diff --git a/Kannada Sahitya/article_10.txt b/Kannada Sahitya/article_10.txt new file mode 100644 index 0000000000000000000000000000000000000000..0f8c1333168d88291d1202c0af498db851d39b21 --- /dev/null +++ b/Kannada Sahitya/article_10.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ ಸ್ಥಿತಿಯಂತೂ ಯಾವಾಗಲೂ ಸೃಷ್ಟಿಯಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ‘ಸರ್ವಾಧಿಕಾರ ಏಕಾರ್ಥ’ದ ಪಠ್ಯ ಎಂಬ ಸ್ಥಿತಿ ಯಾವಾಗಲೂ ಉಂಟಾಗಲಿಲ್ಲ. ಹೀಗಾಗಿ, ವೇದ ಎನ್ನುವುದಕ್ಕೆ ವ್ಯಾಖ್ಯಾನ ಮುಕ್ತತೆಯೇ ಮೂಲಭೂತ ಸ್ವಭಾವವಾಗಿದ್ದು, ವೇದಾಧಾರಿತ ಧರ್ಮಗಳು ಅವನ್ನು ಅನೇಕ ಸಾರಿ ಅಪಾರ ಏಕಾಗ್ರತೆಯಿಂದ ಸರ್ವಾಧಿಕಾರೀ ಏಕಾರ್ಥಕ್ಕೆ ತಿರುಗಿಸಲು ಪ್ರಯತ್ನಿಸಿದವು. ಉದಾಹರಣೆಗೆ, ಭಾರತೀಯ ಸನ್ನಿವೇಶದಲ್ಲಿ ಪಾಷಂಡಿತನದ ವ್ಯಾಖ್ಯೆಗೆ ವೇದಪ್ರಾಮಾಣ್ಯವನ್ನೇ ಬಳಸಲಾಯಿತು. ಫ್ಲಾಹರ್ಟಿ ‘ಹಿಂದೂ ಧರ್ಮದಲ್ಲಿನ ಪಾಷಂಡಿತನದ ಸ್ವರೂಪ’ ಎಂಬ ಲೇಖನದಲ್ಲಿ ಪಾಷಂಡಿತನದ ಪಟ್ತಿ ನೀಡುತ್ತಾಳೆ. ಯಾರು ಪಾಷಂಡಿಗಳಲ್ಲ? ಶಿವಾರಾಧಕರಲ್ಲಿ ಅನೇಕ ಪಂಥಗಳು ಪಾಷಂಡಿ. ವಿಷ್ಣು ಭಕ್ತಿಯ ಪಂಥಗಳಲ್ಲಿ ಅನೇಕವು ಪಾಷಂಡಿ. ಅವರು ಇವರನ್ನು ಅ-ವೈದಿಕ ಎನ್ನುತ್ತಿದ್ದರು. ಇವರು ಅವರನ್ನು ಅ-ವೈದಿಕ ಎನ್ನುತ್ತಿದ್ದರು. ಆದರೆ, ಅವೆಲ್ಲ ತುಂಬ ಪರಿಷ್ಕೃತವಾದ ತರ್ಕ-ವಿವಾದಗಳಾಗಿ ಮಾತ್ರ ಮುಗಿಯುತ್ತಿದ್ದೇವೆಯೇ ಹೊರತು, ಇಡೀ ಸಮಾಜವನ್ನು ನಿಯಂತ್ರಿಸುವ ಏಕತ್ರ ಲೌಕಿಕ ಶಕ್ತಿಗಳಾಗಿ ಬೆಳೆಯಲಿಲ್ಲ. ಅದಕ್ಕಾಗಿಯೇ ‘ವೇದವೆಂಬುದು ಓದಿನ ಮಾತು’ ಎಂಬ ಉಗ್ರ ಮಾತು ಉಡಾಫೆಯ ಮಾತಾಗದೆ ಗಂಭೀರ ತತ್ವದ ಮಾತಾಗಿ ಉಳಿದು ಬಂದಿತ್ತು. ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ವೇದಗಳ ಆಪ್ತ ರಹಸ್ಯಾತ್ಮಕತೆ ಮುಂದೆ ಸಾಮಾಜಿಕ ನಿಷಿದ್ಧವಾಗಿ ಬೆಳೆದಂತೆ, ಅವುಗಳ ಅನುಭಾವಿ ಮತ್ತು ದಾರ್ಶನಿಕ ಸೃಜನಶೀಲತೆ ಕಡಿಮೆಯಾಗುತ್ತ ಬಂತು. ಜಾತಿಪದ್ಧತಿಯ ಕಾರಣಕ್ಕಾಗಿ ವೇದದ ಲಭ್ಯತೆ ಸ್ತ್ರೀ ಮತ್ತು ಶೂದ್ರರಿಗೆ ಇಲ್ಲವಾದದ್ದೆ ಅದರ ಶಕ್ತಿಯೂ ಸೀಮಿತವಾಗಿಬಿಟ್ಟಿತು. ಹೀಗಾಗಿ, ಮುಂದೆ ಬಂದ ಭಕ್ತಿ ಮುಂತಾದ ಆಂದೋಲನಗಳಲ್ಲಿ ವೇದದ ಸೃಜನಶೀಲ ಉಪಯುಕ್ತತೆಯೇ ತುಂಬ ಗೌಣ ಎಂದಾಗಿಬಿಟ್ಟಿತು. ವೇದಗಳು ಜನತೆ ತಲುಪಲಾರದ, ಮುಖಾಮುಖಿಯಾಗಲಾರದ ಒಂದು ಅಧಿಕಾರದ ರಹಸ್ಯಾತ್ಮಕ ನಿಯಂತ್ರಣದಲ್ಲಿವೆ ಎಂಬ ಸ್ಥಿತಿ ಭಾರತೀಯ ದರ್ಶನಗಳ ಮೇಲೆ ಉಂಟುಮಾಡಿದ ಪರಿಣಾಮ ಊಹಾತೀತ. ಆಪ್ತ ರಹಸ್ಯಾತ್ಮಕತೆ ಮತ್ತು ಸಾಮಾಜಿಕ ನಿಷೇಧಗಳ ನಡುವೆ ವ್ಯತ್ಯಾಸ ಮಾಯವಾಗಿದ್ದರ ಬಗ್ಗೆ ಸಾಂಪ್ರದಾಯಿಕ ಆಚಾರ್ಯರಲ್ಲಿ ಅನೇಕರಿಗೆ ಕೋಪವಿತ್ತು. ರಾಮಾನುಜಾಚಾರ್ಯರು ಬಂಡೆದದ್ದೇ ಈ ರಹಸ್ಯಾತ್ಮಕತೆ ಜಾತಿ ನಿಷೇಧವಾಗಿ ಪರಿವರ್ತನೆಯಾಗಿದ್ದರ ಬಗ್ಗೆ. +ವೇದಗಳಿಗೆ ಇವುಗಳಿಂದ ನಷ್ಟವಾಯಿಯೆ? ಅಥವಾ ಭಾರತೀಯರ ದಾರ್ಶನಿಕ ಸೃಜನಶೀಲತೆಗೂ? ಈ ಪ್ರಶ್ನೆಗೆ ಉತ್ತರ ಕೊಡುವುದು ತುಂಬ ಕಷ್ಟ. ಜನರಿಗೆ ವಿಶಾಲ ಲಭ್ಯತೆ ಇರದಿದ್ದರೆ ದೇವರೂ ಕ್ಷೀಣಿಸುತ್ತಾನೆ. ಅಥವಾ ಜನರ ನಡುವೆ ಬಾಳಿ ಬೆಳೆಯದಿದ್ದರೆ ದೈವೀಗ್ರಂಥಗಳೂ ನೆಲ ಕಾಣದ ಬೀಜವಾಗುತ್ತವೆ. ಆತ್ಮಕ್ಕೆ ಒಡಲಿರದಿದ್ದರೆ ಅದೂ ಅಶರೀರಿಯಾಗಿಬಿಡುತ್ತದೆ. ನೆರೂದ ಇದನ್ನು ತನ್ನ ಮಾರ್ಮಿಕ ಕವನವೊಂದರಲ್ಲಿ ಶೋಧಿಸುತ್ತಾನೆ. ಕುಡುಕರ ನಡುವೆ ಮತ್ಸ್ಯಕನ್ಯೆಯೊಬ್ಬಳು ಜಲಜಗತ್ತಿನಿಂದ ತೇಲಿ ಬರುತ್ತಾಳೆ. ಅವಳನ್ನು ಗುರುತಿಸದ ಕುಡುಕರು ಆಕೆಯ ಮೇಲೆ ಉಗುಳುತ್ತಾರೆ. ಸಿಗರೇಟಿನಿಂದ ಸುಡುತ್ತಾರೆ. ಆಕೆ ಮತ್ತೆ ಸಾಗರಕ್ಕೆ ವಾಪಸಾಗುತ್ತಾಳೆ. ನೆರೂದ ಇಲ್ಲಿ ಬರೆಯುವ ಸಾಲು ತುಂಬ ಮುಖ್ಯ: ‘ಆಕೆ ಮತ್ತೆ ಸಾವಿನ ಕಡೆಗೆ ತೇಲಿದಳು. ’ ಆಕೆ ಸಾವಿನ ಕಡೆಗೆ ತೇಲಿದಳೆ? ಆಕೆ ದೈವವೇ ಆಗಿದ್ದರೂ ಮರ್ತ್ಯರ ನಡುವೆ ಮಾತ್ರ ಆಕೆ ಸಮೃದ್ಧವಾಗಿರಬಲ್ಲಳು. ಅದು ಬೇರು-ಕೊಂಬೆಗಳ ಸಂಬಂಧ. ಹೀಗೆ ಅಮೂರ್ತವಾಗಿ ಹೇಳುವುದಾದರೆ, ವೇದಗಳ ಲಭ್ಯತೆಯ ವಿಸ್ತರ ಕಡಿಮೆಯಾದ್ದರಿಂದ ಅವುಗಳ ದಾರ್ಶನಿಕ ಸಮೃದ್ಧತೆಯೂ ಕಡಿಮೆಯಾಗಿದೆ. ಅದು ಆ-ಚಾರಿತ್ರಿಕ ಎಂಬ ಮಾತು ಸರಿ. ಆದರೆ, ಚರಿತ್ರೆಯಲ್ಲಿ ಅವು ಬೆಳೆಯುವಲ್ಲಿ ವೈವಿಧ್ಯತೆಯೂ ಇಲ್ಲವಾಯಿತು. ಅವು ಮತ್ತೆ ಲೌಕಿಕ ಸಾಮಾನ್ಯರ ಜೀವನದಲ್ಲಿ ಇಳಿದು ಬಂದಾಗ ಏನಾಗುತ್ತದೆ? ಮಾರ್ಕ್ವೆಜ್‌ನ ಕಥೆಯೊಂದರಲ್ಲಿ ರೆಕ್ಕೆಗಳಿರುವ ಅಲೌಕಿಕ ಮುದುಕ ಬರುತ್ತಾನೆ. (ನರಹಳ್ಳಿ ಬಾಲಸುಬ್ರಹ್ಮಣ್ಯರ ಮಾರ್ಕ್ವೆಜ್‌ನ ಅನುವಾದಿತ ಕಥೆಗಳ ಸಂಗ್ರಹದಲ್ಲಿದೆ ಈ ಕೃತಿ). ಆತ ಅಲೌಕಿಕ, ಆ ಆ-ಸಾಮಾನ್ಯ. ಆದರೆ ಅವನೂ ಕ್ಷೀಣವಾಗುತ್ತಾನೆ. ಲಯವಾಗುತ್ತಾನೆ. ಹೀಗೆ, ವೇದಗಳೂ ಕೂಡಾ ಭಾರತೀಯರ ಮಟ್ಟಿಗೆ ಜೀವನ ವಿದೂರವಾಗಿ ಲಯವಾಗಿ ಬಿಟ್ಟಿವೆ. +ವೇದಗಳು ಈಗ ರೆಕ್ಕೆಗಳಿರುವ ಅಲೌಕಿಕ ಮುದುಕ. ಕುಡುಕರ ನಡುವೆ ತೇಲಿದ ಸ್ವಪ್ನ ಕನ್ಯೆ: ಪರಸ್ಪರ ನಷ್ಟ, ಪರಸ್ಪರ ಲಯ. +– ೨ – +ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ನಂತರದ ಆದರ್ಶವಾದಿ ದಿನಗಳಲ್ಲಿ ಸಾಂಪ್ರದಾಯಿಕ ಸಂಸ್ಕೃತ ವಿದ್ವತ್ತಿಗೂ ಪ್ರಗತಿಪರ ಆದರ್ಶಗಳಲ್ಲಿ ಪರಂಪರೆಯನ್ನು ಅರ್ಥೈಸುವ ಹಠವಿತ್ತು. ವಿಜ್ಞಾನ ಮತ್ತು ಪಾಶ್ಚಾತ್ಯ ಸಂಸ್ಕ್ರಿತಿಗಳ ಬೆಳಕಿನಲ್ಲಿ ತೌಲನಿಕವಾಗಿ ಭಾರತೀಯ ಸಂಸ್ಕೃತಿಯನ್ನು ವಿಶ್ಲೇಷಿಸುವ ಕ್ರಮ ಆಗ ಬೆಳೆದಿತ್ತು. ವೇದಗಳಲ್ಲಿ ಎಲ್ಲವೂ ಇವೆ ಎಂಬ ಅಪ್ರಬದ್ಧ ಉತ್ಸಾಹ ಒಂದು ಕಡೆಗೆ. ಇನ್ನೊಂದು ಕಡೆಗೆ “ವೈದಿಕ ಸಂಸ್ಕ್ರಿತಿ ಮಾನವನ ಸಂಸ್ಕೃತಿಯ ಶೈಶವಾವಸ್ಥೆಯದು” ಎಂಬ ಅಭಿಪ್ರಾಯ. ಈ ಎರಡು ಅತಿಗಳ ಮಧ್ಯೆ ಮಾನವ ಬದುಕಿನ ಮೂಲಭೂತ ಸತ್ಯಗಳನ್ನು ಕಾಣುವ ಒಂದು ನಿರ್ದಿಷ್ಟ ಕ್ರಮವಾಗಿ ವೇದಾಧ್ಯಯನ ಮಾಡಿದ ವೇದಪಂಡಿತರ ಒಂದು ಪರಂಪರೆ ಇತ್ತು. ಆ ಪರಂಪರೆ ಕನ್ನಡದಲ್ಲಿ ಸಾಕಷ್ಟು ಸೃಜನಶೀಲವಾದ ಕೆಲಸ ಮಾಡಿತ್ತು. ಪಶ್ಚಿಮೇತರ ದಾರ್ಶನಿಕ ನೆಲೆ ತಿಳಿಯುವುದಕ್ಕೆ ಇದು ತುಂಬ ಅವಶ್ಯ. +ವೇದಗಳ ಬಗ್ಗೆ ನನಗಿರುವ ಆಸಕ್ತಿ ಮೂಲತಃ ಸೌಂದರ್ಯಾತ್ಮಕ ಮತ್ತು ತಾತ್ವಿಕ. ಅದನ್ನು ದಿವ್ಯದರ್ಶನಸಾರ ಎಂದು ನನ್ನ ವೈದಿಕೇತರ ಮನಸ್ಸು ಒಪ್ಪಲಾರದು. ಆದರೆ, ಈ ಅನುಮಾನ, ಕಟ್ಟೆಚ್ಚರಗಳು ವೈದಿಕ ವಾಕ್ಯ ಸಾಗರದಲ್ಲಿ ಕಾಲಿಟ್ಟಾಗ ಹಾಗೇ ಕರಗಿ ಹೋಗುತ್ತವೆ. ಬೌದ್ಧದರ್ಶನ-ಅದರಲ್ಲೂ ಮುಖ್ಯವಾಗಿ ನಾಗಾರ್ಜುನ-ವೈದಿಕ ಸಾಹಿತ್ಯಸಮೂಹವನ್ನು ದಟ್ಟವಾಗಿ ಅನುಮಾನಿಸಿದ್ದು, ನಿರಾಕರಿಸಿದ್ದು ಈ ಕಾರಣಕ್ಕಾಗಿಯೇ. ಇವೆಲ್ಲ ‘ಮೆಟಫಿಸಿಕಲ್ ಸ್ಪೆಕ್ಯುಲೇಷನ್’ ಎಂದು, ಅಧ್ಯಾತ್ಮಿಕ ಊಹಾಪೋಹಗಳು ಎಂದು ಬೌದ್ಧರು ಉಗ್ರವಾಗಿ ಟೀಕಿಸಿದರು. +ಆದರೆ, ಆಧ್ಯಾತ್ಮಿಕಾನುಭವದಲ್ಲಿ ಸೌಂದರ್ಯಾತ್ಮಕ ಪ್ರಯಾಣ ಸಲ್ಲದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡಿದೆ. ಪಶ್ಚಿಮದ ಸಮಾಜ ವಿಜ್ಞಾನ ಮತ್ತು ವೇದಾಧ್ಯಯನ ಕ್ರಮದ ಒಂದು ಮಾದರಿ ವೇದದ ರಹಸ್ಯಾತ್ಮಕ ಪ್ರತಿಮೆಗಳನ್ನು ನೈಸರ್ಗಿಕ ವ್ಯಾಪಾರದ ಅಭಿನಯ ಎಂದು ಕರೆದವು. ಮಾರ್ಕ್ಸ್‌ವಾದಿ ವಿದ್ವಾಂಸ ಕೋಶಾಂಬಿಯಂಥವರು ಕೂಡಾ ಇದಕ್ಕೆ ಬಲಿಯಾದರು. ಆದರೆ, ವೇದಗಳಲ್ಲಿ ಪ್ರತಿಮಾರೂಪದ ಆಶ್ಚರ್ಯಕರ ಚಿಂತನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸರಳ ತಾತ್ವಿಕ ಸೂತ್ರಕ್ಕೆ ಹೊದಲಾರದ ಬಹುಮುಖೀ ವೈವಿಧ್ಯತೆ ಇದೆ. ಇಲ್ಲಿ ಭೌತವಾದೀ ದನಿಗಳಿವೆ. ಜಗತ್ತು ಅಂತಿಮವಾಗಿ ನಿರ್ನಾಮವಾಗುವ ಒಂದು ಉದ್ದೇಶಹೀನ ಚಲನೆ ಎನ್ನುವ ಉಚ್ಛೇದವಾದಿಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ವೈತದ ದನಿ ಇದೆ. ಬೌದ್ಧ, ಜೈನರ ಛಾಯೆಗಳೂ ಕಾಣುತ್ತವೆ. ಆದರೆ ಈ ಕೃತಿಯ ಮಿತಿ ಎಂದರೆ ಒಂದು ನಿರ್ದಿಷ್ಟ ‘ಸಾಮರಸ್ಯ’ ತತ್ವದ ಹಿನ್ನೆಲೆಯಲ್ಲಿ ಋಗ್ವೇದವನ್ನು ಸಂಗ್ರಹಿಸಿರುವುದು. ಈ ಚೌಕಟ್ಟಿನಾಚೆಗಿನ ಪ್ರತಿಮೆಗಳು, ದೃಶ್ಯಗಳು ವೇದದಲ್ಲಿವೆ. ವೇದದ ಮುಖ್ಯಗುಣ ಅದರ ಬಹುಮುಖತೆ. ಆದರೆ ಇವೆಲ್ಲವೂ ಅಡಕವಾಗಿರುವುದು ನಾನು ಮೊದಲೇ ಹೇಳಿದ ಹಾಗೆ ಪ್ರತಿಮಾ ಮಾರ್ಗದ ಚಿಂತನೆಯಲ್ಲಿ. +ಪ್ರತಿಮಾಮಾರ್ಗ ಎಂದರೇನು? ಉದಾಹರಣೆಗೆ, ಚಕ್ರದ ಪ್ರತಿಮೆಯನ್ನೇ ತೆಗೆದುಕೊಳ್ಳಿ ಅದು ಋತ. ಲೋಹಿಯಾರ ಇತಿಹಾಸಚಕ್ರ ದರ್ಶನದ ಬೇರುಗಳು ಇಲ್ಲೇ ಇವೆ ಎನ್ನುವುದು ಆಶ್ಚರ್ಯಕಾರಿಯಾದರೂ ಸತ್ಯ. ಈ ಚಕ್ರದ ಚಲನ ನಿಸರ್ಗದಲ್ಲಿದೆ. ಪಶು-ಪಕ್ಷಿ, ಪ್ರಾಣಿಗಳ ಪ್ರಾಣ ವ್ಯಾಪಾರದಲ್ಲಿದೆ. ದೇವತೆಗಳ ಕ್ರಿಯೆಯಲ್ಲೂ ಚಕ್ರದ ಚಲನೆ ಇದೆ. ಮಾನವನ ಧೀಃಶಕ್ತಿ ಮೂಲಭೂತ ಸತ್ಯದ ಹುಡುಕಾಟದಲ್ಲಿ ಪ್ರತಿಮೆಗಳನ್ನು ಮಾತ್ರ ಸೃಷ್ಟಿಸುತ್ತದೆ. ಹಾಗೆಯೇ ಚಕ್ರದ ಜತೆಗೆ ನದಿಯ, ಜೀವನದಿಯ ಪ್ರತಿಮೆಯೂ ಒಟ್ಟಿಗೇ ಉಕ್ಕುತ್ತದೆ. ಈ ಪ್ರತಿಮೆಗಳು ಸಮಷ್ಟಿ, ನಿಸರ್ಗ, ವೈಯಕ್ತಿಕ ಹೀಗೆ ಮೂರು ಪಾತಳಿಗಳಲ್ಲಿ ಹಬ್ಬಿ ಬೆಳೆಯುತ್ತವೆ. “ವಿಶ್ವಕರ್ಮ ವಿಶ್ವ ಯಜ್ಞವೆಂಬ ಗಾನಾತ್ಮಕವಾದ ವಸ್ತ್ರವನ್ನು ಹೆಣೆಯುತ್ತಾನೆ” ಎಂಬ ರೀತಿಯ ವಾಕ್ಯಗಳ ಬಗ್ಗೆ ಬೃಹತ್ ಪುಸ್ತಕಗಳನ್ನು ಬರೆಯಬಹುದು. +ನಿಸರ್ಗದ ಶಕ್ತಿಗಳೇ ಪ್ರತಿಮೆಗಳಾಗುತ್ತವೆ. ಆದರೆ, ಈ ಪ್ರತಿಮೀಕರಣದಲ್ಲಿ ನಿಸರ್ಗದ ವ್ಯಾಪಾರದ ಸರಳ ಪ್ರತಿಫಲನವಿಲ್ಲ. ಅಗ್ನಿ ಎನುವುದು ಬರೀ ಬೆಂಕಿಯಲ್ಲ. ಅಗ್ನಿ ಎನ್ನುವುದು ನಿತ್ಯವಾದ ಇಳಾರೂಪಿ. ಅದು ಸರಸ್ವತಿ ರೂಪವೂ ಹೌದು. ಆತ ಕವಿ. ಅಗ್ನಿ ಯಾಕೆ ಕವಿ? ಅಥವಾ ಕವಿ ಯಾಕೆ ಅಗ್ನಿ? ವೈದಿಕ ಕಾವ್ಯ ಮೀಮಾಂಸೆಯ ಬಹುಮುಖ್ಯ ಹೊಳಹುಗಳು ಇಲ್ಲಿ ಸಿಗುತ್ತವೆ. ಕವಿಗಳು “ಋತದ ಪಥವನ್ನು ಪ್ರವೇಶಿಸಿ ಅತ್ಯಂತ ಗೂಢವಾದುದೂ ಅತ್ಯುತ್ತಮವಾದದೂ ಆದ ರಹಸ್ಯವನ್ನು ಅರಿಯುತ್ತಾರೆ”. ಹಾಗೆಯೇ ಛಂದಸ್ಸಿನ ಬಗ್ಗೆಯೂ ಇರುವ ವೈದಿಕ ಉಪನಿಷತ್ ವಿಚಾರ ಒಂದು ಹೊಸ ತಾತ್ವಿಕ ಪ್ರಸ್ಥಾನವನ್ನು ತೆರೆಯಬಲ್ಲದು. ಇದನ್ನು ಪ್ರೊ. ಚಕ್ರವರ್ತಿ ತಮ್ಮ ಇನ್ನೊಂದು ಇಂಗ್ಲಿಷ್ ಕೃತಿಯಲ್ಲಿ ವಿವರಿಸಿದ್ದಾರೆ. +ಸಾವಿನಿಂದ ಭೀತರಾದ ದೇವತೆಗಳು ಛಂದಸ್ಸಿನ ಮುಸುಕು ಧರಿಸುತ್ತಾರೆ. ವೇದತ್ರಯದ ಛಂದಸ್ಸಿನ ಪರದೆಯಲ್ಲಿ ಮರೆಯಾಗುತ್ತಾರೆ. ‘ಛದ್’ ಎಂದರೆ ಪರದೆ, ಮರೆ ಎಂಬರ್ಥವೂ ಇವೆ. ಸಾವಿನಿಂದ ಪಾರಾಗುವ ಆಸೆ ಛಂದಸ್ಸಿನ ಕಲ್ಪನೆಯ ಹಿನ್ನೆಲೆಯಲ್ಲಿ ಇದೆ ಎಂಬ ವಿಚಾರ ಕಾವ್ಯ ಮೀಮಾಂಸೆಯ ದೃಷ್ಟಿಯಿಂದ ರೋಮಾಂಚಕಾರಿ. ಆದರೆ, ಛಂದಸ್ಸಿನ ಮರೆ ಕೂಡಾ ದೋಷಪೂರ್ಣ. ದೇವತೆಗಳನ್ನು ಸಾವು ಮತ್ತೆ ಬಂದು ಕಾಡುತ್ತದೆ. ಗಾಯತ್ರಿ ಎಂಬ ದೈವತಕ್ಕೆ ಇಷ್ಟೆಲ್ಲಾ ಆಯಾಮಗಳು ಮಿಂಚುತ್ತಾ ಹೋಗುತ್ತವೆ. ಛಂದಸ್ಸಿನ ವಿಶ್ಲೇಷಣೆಗೆ ಆಧ್ಯಾತ್ಮಿಕ ಆಯಾಮ ಬಂದುಬಿಡುತ್ತದೆ. +ಈ ಚರ್ಚೆಯನ್ನು ಸಮಕಾಲೀನ ಕನ್ನಡ ಸಂಸ್ಕೃತಿಯ ವಿವೇಚನೆಗೆ ತಂದು ನಿಲ್ಲಿಸಲು ಸಾಧ್ಯ. ಕನ್ನಡ ಸಂಸ್ಕೃತಿ ರೂಪುಗೊಂಡಿರುವುದೇ ವೈದಿಕ-ವೈದಿಕೇತರ ಧಾರೆಗಳ ಮಿಲನ ಮತ್ತು ಸಂಘರ್ಷದಿಂದ. ವೈದಿಕಾಧ್ಯಯನದ ಅತ್ಯುತ್ತಮವನ್ನು ವೈದಿಕೇತರ ಅತ್ಯುತ್ತಮ ಎದುರಾದಾಗಲೇ ಕನ್ನಡ ಸಂಸ್ಕೃತಿ ತನ್ನ ಶಕ್ತಿ, ಸೌಂದರ್ಯವನ್ನು ಪಡೆದಿರುವುದು. ಹಳ್ಳಿ ಹೆಂಗಸಿನ ಹಾಡಿನಲ್ಲಿ ಕಾಣುವ ದೇವಿ ಹಾಗೂ ವೈದಿಕ ಋಷಿಗಳ ಅದಿತಿ ಎದುರುಬದುರಾಗಿಯೇ ಕನ್ನಡದ ಅನನ್ಯ ಸೌಂದರ್ಯ ಹುಟ್ತಿದೆ. ಆದರೆ ಇಂದು ಕನ್ನಡ ಸಂಸ್ಕೃತಿಯಲ್ಲಿ ಅಥವಾ ಕನ್ನಡ ಭಾಷೆಯೊಳಗೆ ಅತ್ಯುತ್ತಮ ವೈದಿಕ ಸಾಧನೆಗಳೇ ಕಾಣುತ್ತಿಲ್ಲ. ಹಿಂದೂ ಮತಾಂಧ ರಾಜಕಾರಣ ವೈದಿಕ ಸಂವೇದನೆಯನ್ನೂ ಹಿಗ್ಗಿಸುವುದಿಲ್ಲ. ಕನ್ನಡವನ್ನೂ ಹಿಗ್ಗಿಸುವುದಿಲ್ಲ. +ಜತೆಗೆ ಋಕ್‌ಸಂಹಿತ ಸಾಹಿತ್ಯ ಸಮೂಹದಲ್ಲಿ ಇರುವ ಜಾತ್ಯಾತೀತವಾದ, ಪ್ರಗತಿಪರವಾದ ಸಂವೇದನಾಕ್ರಮಗಳಿಗೆ ನಾವೂ ಮುಖಾಮುಖಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯಲ್ಲಿ ಹರಿದುಬಂದಿರುವ ಹಲವು ಪ್ರಾಣಧಾರೆಯಲ್ಲಿ ಯಾವುದೂ ಊನವಾಗದ ಹಾಗೆ, ಅಂಗವಿಕಲವಾಗದ ಹಾಗೆ ನಾವಿಂದು ನೋಡಿಕೊಳ್ಳಬೇಕಾಗಿದೆ. ಅದಾಗದಿದ್ದರೆ ಪಶ್ಚಿಮದಿಂದ ಬರುವ ಅಪಾಯಕಾರಿ ಖಡ್ಗಧಾರೆಗಳಿಂದಾಗಿ ನಾವು ನುಚ್ಚುನೂರಾದೇವು. ಇಲ್ಲ, ಒಳಗಿಂದಲೇ ಹುಟ್ಟುವ ಅಪಾಯಕಾರೀ ಹಿಂದೂ ಮತಾಂಧರ ಹೊದೆತಕ್ಕೆ ನಾಶವಾದೇವು. ಮತ್ತೆ ಸಾಂಸ್ಕೃತಿಕ ದೇಶೀವಾದ ಸಮಾಜವಾದಿ ಮೌಲ್ಯಗಳನ್ನು ಒಳಗೊಳ್ಳಬಲ್ಲದು ಎಂಬುದನ್ನು ನಮ್ಮ ಸಂಸ್ಕೃತಿ ಸಾಧಿಸಲು ಸಾಧ್ಯವಾದಾಗ ಮಾತ್ರ ಕನ್ನಡ ಸಂಸ್ಕೃತಿ ಬೆಳೆಯುತ್ತದೆ. +ಸಾಂಸ್ಕೃತಿಕ ವಿನಾಶ ಎಂದರೆ ಒಂದು ವಿಶೇಷ ಪರಿಣಿತಿಯನ್ನು ಕಣ್ಮರೆಯಾಗಲು, ಕರಗಿಹೋಗಲು ಅವಕಾಶಕೊಡುವುದು. ಈ ವಿಶೇಷ ಪರಿಣಿತಿಯ ಮಾತು ಎಲ್ಲ ರಂಗಗಳಿಗೂ ಸಲ್ಲುತ್ತದೆ. ಒಬ್ಬ ಬಿದಿರು ಕೆಲಸದಾತ, ಒಬ್ಬ ಬೆಳ್ಳಿ-ಬಂಗಾರ ಕೆಲಸದಾತ, ಒಬ್ಬ ಬಡಗಿ, ಒಬ್ಬ ಚಿತ್ರಕಾರ, ಒಬ್ಬ ನೃತ್ಯಗಾರ, ಒಬ್ಬ ಗಮಕಿ, ಒಬ್ಬ ನೇಕಾರ, ಒಬ್ಬ ಬಣ್ಣಗಾರ ಮರೆಯಾಗುವುದು ಎಷ್ಟು ವಿಷಾದದ ಸಂಗತಿಯೋ, ಹಾಗೆಯೇ ಒಬ್ಬ ಸಂಪ್ರದಾಯಸ್ಥ ಪಂಡಿತನ ಪರಿಣಿತಿ ನಿರುಪಯುಕ್ತವಾಗುವುದೂ ಕೂಡ. +(ಪ್ರೊ. ಜಿ. ಎನ್. ಚಕ್ರವರ್ತಿಯವರ ‘ಧರ್ಮಚಕ್ರ’ ಕೃತಿಗೆ ಬರೆದ ಸಂಪಾದಕೀಯ). (೧೯೯೩) +***** +ಕೀಲಿಕರಣ: ಸೀತಾಶೇಖರ್ +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_100.txt b/Kannada Sahitya/article_100.txt new file mode 100644 index 0000000000000000000000000000000000000000..7c732028b88ba65adca3760ecb05a4bc078d8cdf --- /dev/null +++ b/Kannada Sahitya/article_100.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ +ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ +ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ +ಹರಿವರಿದು ಬರುವ ಗಂಧೋದಕದಿ ಮಿಂದ ತಂ- +ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! +ದಿವ್ಯಾನುಭೂತಿಯಲಿ ರಸದ ಪಾವಿತ್ರ್ಯದಲಿ +ಬಾಳ ತೊಳೆಯುವ ಬದುಕ ಸಿಂಗರಿಪ ಮಂತ್ರಮಿದೆ; +ರಸಾಹ್ಲಾದಿನಿ ಪರಾಪ್ರಕೃತಿ ಸಂಜೀವಿನಿ! +ಹೊತ್ತು ಹೋದರೆ ಮತ್ತ ಬಾರದೀ ಸಿರಿಯೊಸಗೆ +ಏಳು ಎಚ್ಚರಗೊಂಡು ನೆನೆ ಮನವೆ, ಇಂಥ ತಣ್- +ಪೊತ್ತಿನಲಿ ಜಗದೆಲ್ಲ ಉತ್ತಮ ವಿಭೂತಿಗಳ, +ಎದೆಗುಡಿಯ ಗದ್ದುಗೆಯಲಿರಿಸವರ ಶ್ರೀಪಾದ +ಪದ್ಮಗಳ, ಪೂಜೆಗೆಯ್, ನಿನ್ನ ನೀನಿಲ್ಲಗೆಯ್ +ಅಲ್ಪತೆಯು ಮಹದಲ್ಲಿ ಕರಗಿ ಒಂದಾಗಲಿ! +***** +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_101.txt b/Kannada Sahitya/article_101.txt new file mode 100644 index 0000000000000000000000000000000000000000..072e803ac6a2f322cce8ea80009f42e41c6fe791 --- /dev/null +++ b/Kannada Sahitya/article_101.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ ಇವೆಯೇ ಎಂದು ಯೋಚಿಸುತ್ತಿದ್ದ. ಒಂಟಿಯಾಗಿರಬಹುದು, ಒಂಟಿಯಾಗಿರಬೇಕು ಎನ್ನುವ ಅನಿಸಿಕೆಗಿಂತ ಹೆಚ್ಚಿನ ಕಾರಣ ಬೇಕಿಲ್ಲವೆಂದೆನಿಸಿತು. ಒಂದು ಕಾಗದದ ಮೇಲೆ, ಸಮಾಜಕ್ಕೆ ಹಾಗೂ ಗೀತಳಿಗೆ ತಾನು ಕೊಡಬಹುದಾದ ನೆಪದಂಥ ಕಾರಣ ಹಾಗೂ ಒಂದುಪಕ್ಷ ಕಾನೂನಿನ ರೀತಿ ಹೋಗಬೇಕಾಗಿ ಬಂದಲ್ಲಿ ಕೋರ್ಟು ಒಪ್ಪುವಂಥ ಒಂದು ನಾಲ್ಕು ಸಾಲನ್ನು ಪಟ್ಟಿಮಾಡಬೇಕೆನಿಸಿತು. +೧. ಇನ್‌ಕಂಪ್ಯಾಟಿಬಲಿಟಿ +೨. ಪರಸ್ಪರರಲ್ಲಿ ನಂಬಿಕೆಯ ಅಭಾವ. +೩. ನಾನು ಮಾಡುತ್ತಿರುವ ಕೆಲಸದಲ್ಲಿ ಆಕೆಗಿರುವ ಅಸಡ್ಡೆ. +೪. ಆಕೆಯ ಕೆಲಸದಲ್ಲಿ ಆಕೆ ತನ್ನನ್ನು ತೀವ್ರವಾಗಿ ತೋಡಗಿಸಿಕೊಂಡಿರುವುದರಿಂದ ಆಕೆಯಿಂದ ಮಗುವೊಂದನ್ನು ತಾನು ಪಡೆಯಬಹುದು ಅನ್ನುವ ನಂಬಿಕೆಯನ್ನು ತಾನು ಕಳೆದುಕೊಂಡಿರುವುದರಿಂದು, ಹಾಗೂ ಹಾಗೇನಾದರೂ ಒಂದುಪಕ್ಷ ಪಡೆದರೂ ಆ ಮಗುವಿಗೆ ಗೀತ ಅಮ್ಮಳಾಗುತ್ತಾಳೆ ಅನ್ನುವ ವಿಶ್ವಾಸವನ್ನು ತಾನು ಕಳೆದುಕೊಂಡಿರುವುದು. +ಕಾರಣಗಳು ಕ್ಷುಲ್ಲಕ ಎನ್ನಿಸಿದವು. ಇವಕ್ಕೆ ಇನ್ನೊಂದೆರಡು ಸೇರಿಸಬೇಕು, ಪಕ್ಕಾ ಆಗಬೇಕಾದರೆ ಎಂದುಕೊಂಡ. ಪಕ್ಕಾ ಎಂದರೇನು ಎನ್ನುವುದಕ್ಕೆ ಸರಿಯಾದ ಅರ್ಥ ತಿಳಿಯಲಿಲ್ಲ. ಇರಲಿ, ಎಂದು ಚೀಟಿಯನ್ನು ಜೇಬಿನಲ್ಲಿ ಇಟ್ಟುಕೊಂಡ. +ಮನೆಗೆ ಬಂದು ಬಾಗಿಲು ತೆಗೆದು ಕೈಯಲ್ಲಿದ್ದ ಬ್ಯಾಗನ್ನು ಬೆಡ್ಡಿನ ಮೇಲೆ ಎಸೆದು ಫ್ರಿಜ್ಜಿನ ಒಳಗೆ ಏನಿದೆ ಎಂದು ನೋಡಿದ. ಮಿಕ್ಕಿದ್ದ ಕಿತ್ತಳೆಹಣ್ಣಿನ ಜ್ಯೂಸನ್ನು ಒಂದು ಗ್ಲಾಸಿಗೆ ಬಗ್ಗಿಸಿಕೊಂಡು ಹೊರಗೆ ಹೊರಟ. ಹೋಗುವಾಗ ಬಾಗಿಲಪಕ್ಕದ ಗೋಡೆಗೆ ಆನಿಸಿದ್ದ ಆನ್ಸರಿಂಗ್ ಮಶೀನಿನ ಮಿನುಗುತ್ತಿದ್ದ ಗುಂಡಿಯನ್ನೊಮ್ಮೆ ಒತ್ತಿದ.”ರಾತ್ರಿ ಬರುವುದು ತಡವಾಗುತ್ತದೆ. ಆಫೀಸಿನವರೊಂದಿಗೆ ಊಟಮಾಡಿ ಬರುತ್ತೇನೆ, ನನಗಾಗಿ ಕಾಯಬೇಡ. ಲವ್ ಯು” ಗೀತಳ ಧ್ವನಿ. ಆ ಕ್ಷಣದಲ್ಲಿ ಯಾಕೋ ಕಿತ್ತಳೆ ಜ್ಯೂಸು ಕುಡಿಯಲು ಮನಸ್ಸು ಬರಲಿಲ್ಲ. ಸಿಂಕಿನಲ್ಲಿ ಚೆಲ್ಲಿ ಫ್ರಿಜ್ಜಿನ ಮೇಲಿದ್ದ ಜ್ಯಾಕ್ ಡೇನಿಯಲ್ ಬಗ್ಗಿಸಿದ. ಫ್ರಿಜ್ಜಿನ ಬಾಗಿಲು ತೆರೆದು ಸ್ವಲ್ಪ ಐಸ್ ಸುರಿದುಕೊಂಡ. ಪೀಠವಿರುವ ಗಾಜಿನ ಲೋಟ ವೈನ್ ಕುಡಿಯುವುದಕ್ಕೆ ಚೆಂದ ಅನ್ನಿಸಿತು. ಜ್ಯಾಕ್ ಡೇನಿಯಲ್ ಪಕ್ಕದಲ್ಲಿರುವ ಗೀತಳ ಮೆಚ್ಚಿನ ಮರ್ಲೋ ಇತ್ತು. ನೋಡಿ ಸುಮ್ಮನಾದ. +ಹೊರಗೆ ಕತ್ತಲಿನ್ನೂ ಆಗಿರಲಿಲ್ಲ. ಕತ್ತಲು ಕಮ್ಮಿಯಾದಷ್ಟೂ ತಾನು ಜಾಸ್ತಿ ಒಂಟಿಯಾಗುತ್ತಿದ್ದೇನೆ ಅನ್ನಿಸಿತು. ಕತ್ತಲಲ್ಲಿ ಕಿಟಕಿಯಿಂದ ಹೊರಗಿಣುಕಿ ಕಾಣುವ ಕಪ್ಪನ್ನೇ ನಿಜವಾದ ಜಗತ್ತು, ಅದು ನನ್ನಿಂದ ಹೆಚ್ಚೇನೂ ಬೇರೆಯೇನಿಲ್ಲ ಅಂದುಕೊಳ್ಳುವಾಗ ಆನಂದವಾಗುತ್ತಿತ್ತು. ದಿನಗಳು ದೊಡ್ಡವಾದಾಗ ನಗುವ ಜಗತ್ತು ತನ್ನನ್ನು ಗೇಲಿಮಾಡುವುದಕ್ಕೇ ಅನ್ನುವುದನ್ನು ಬಲವಾಗಿ ನಂಬುವುದಕ್ಕೆ ಇತ್ತೀಚೆಗೆ ಶುರುಮಾಡಿದ್ದ. ಲಾನಿನ ಮೇಲೆ ಹಾಕಿಕೊಂಡಿದ್ದ ಕುರ್ಚಿಯಮೇಲೆ ಕೂತಿದ್ದ ರವಿಯನ್ನು ಕಂಡು ಪಕ್ಕದ ಮನೆಯ ಮುದುಕಿ ಬಂದು” ಕುಡಿಯುತ್ತಿದ್ದೀಯ ರ್ಯಾವಿ” ಕೇಳಿದಳು, ನಗುತ್ತಾ. ಸುಮ್ಮನೆ ಮುಗುಳ್ನಕ್ಕ. “ಸೊಗಸಾದ ದಿನ” ಎಂದಳು ಆಕಾಶ ನೋಡುತ್ತಾ. +” ಹೌದು” ಎಂದ. ಗೀತಾ ಎಲ್ಲಿ ಅನ್ನುವಂತೆ ನೋಡಿದಳು. “ಇನ್ನೂ ಬಂದಿಲ್ಲ” ಪ್ರಶ್ನೆ ಬರುವ ಮೊದಲೇ ಉತ್ತರಿಸಿದ. ” ಇಲ್ಲೇ ಪಾರ್ಕಿನಲ್ಲಿ ಜುಲೈ ನಾಲ್ಕರ ಪಟಾಕಿ ಹಾರಿಸುತ್ತಾರಂರೆ, ಬರುತ್ತೀಯಾ. ಡೇವಿಡ್ಡೂ ಬರುತ್ತಾನೆ” ಎಂದಳು. ” ಇಲ್ಲ, ನನಗೆ ಸ್ವಲ್ಪ ಕೆಲಸವಿದೆ, ಮನೆಯಲ್ಲಿ. ಸಾರಿ, ಆದರೆ ಥ್ಯಾಂಕ್ಸ್” ಎಂದ. ” ಪರವಾಗಿಲ್ಲ, ನಾವು ಬರುತ್ತೇವೆ, ಗುಡ್‌ನೈಟ್” ಎಂದು ಒಳಗೆ ಹೋದಳು. ಎದುರುಮನೆಯ ಜೋಡಿ ತಮ್ಮ ಅವಳಿಗಳನ್ನು ತಳ್ಳುಗಾಡಿಯಲ್ಲಿ ಕುಳ್ಳಿರಿಸಿ ತಮ್ಮ ಬೈಸಿಕಲ್ಲುಗಳ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಹೋಗುವಾಗ ರವಿಗೆ ಕೈ ಬೀಸಿದರು. ಕೈಯಲ್ಲಿದ್ದ ಗಾಜಿನ ಲೋಟವನ್ನೇ ಅಲ್ಲಾಡಿಸಿ ನಕ್ಕ, ರವಿ. +ತಮ್ಮ ಜೋಡಿಯೂ ಸರಿಯಾಗೇ ಇತ್ತು ಅಂದುಕೊಂಡ. ಆದರೆ, ಈಗ ತಾನು ಒಬ್ಬನೇ ಕೂತು ಸುತ್ತಲಿನ ಜೋಡಿಗಳನ್ನನುಭವಿಸುವಷ್ಟು ಗೀತಳ ಜೊತೆಜೊತೆಗೂ ಅನುಭವಿಸಲಾಗುತ್ತಿಲ್ಲವಲ್ಲ ಎನಿಸಿದಾಗ ನೋವೆನಿಸಿತ್ತಿತ್ತು. ಅದನ್ನಾಕೆ ಅರಿತುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾಳೆ ಅನ್ನುವುದರ ಬಗೆಗೆ ರವಿಗೆ ನಂಬಿಕೆಯಿರಲಿಲ್ಲ. ಸವೆಯುವ ಚಪ್ಪಲಿಯಂತೆ ಹಳತಾಗುತ್ತಿದ್ದೇವೆ ಒಬ್ಬರಿಗೊಬ್ಬರು, ಅನ್ನಿಸುತ್ತಿತ್ತು ರವಿಗೆ. ಈ ಹಳಸಿನಲ್ಲಿ ಹೊಸತನ್ನು ಕತ್ತಲೆಯಲ್ಲಿ ಮಿಂಚನ್ನು ಅರಳಿಸಲು ಅರಿತೂ ಅರಿತೂ ಪ್ರಯತ್ನ ಪಡಬೇಕು, ಸಂಬಂಧ ಪುಕ್ಕಟೆಯಲ್ಲ, ಹಾಗೆ, ಹೀಗೆ ಅಂದುಕೊಂಡ. ಆದರೆ, ಗೀತಳಿಗೆ ತನಗನ್ನಿಸಿದಂತೆ ಅನ್ನಿಸುತ್ತದೆ ಎಂದು ತನಗನ್ನಿಸುವುದಿಲ್ಲ. ಆಕೆ ಕಾಲದ ಜತೆ ಸವೆಯುವ ಪ್ರಾಕೃತಿಕ ಕ್ರಿಯೆಯಂತೆ ಏನನ್ನೂ ಉಳಿಸುವ ಗೋಜಿಗೇ ಹೋಗಿತ್ತಿಲ್ಲವಲ್ಲ. ಹಾಗಾದರೆ ಐವತ್ತೈವತ್ತು ವರ್ಷ ಜೊತೆಯಾಗಿ ಸಂಸಾರ ಮಾಡುವವರು ಹೇಗೆ ಸುಖವಾಗಿರುತ್ತಾರೆ, ಎಂದನ್ನಿಸಿತು. +ಒಂದು ಬಾರಿ ಗ್ಲಾಸಿನಲ್ಲಿದ್ದನ್ನು ಒಮ್ಮೆಲೇ ಗಂಟಲಿಗೆ ಸುರಿದುಕೊಂಡು ಒಳಗೆ ಬಂದು ಡೆಸ್ಕಿನ ಮುಂದೆ ಕೂತು ಕಂಪ್ಯೂಟರನ್ನು ಆನ್ ಮಾಡಿದ.”ನಿನಗೆ ಮೈಲ್ ಇದೆ” ಎಂದು ಹೇಳುವ ಕಂಪ್ಯೂಟರಿನ ಧ್ವನಿಯೇ ತನ್ನನ್ನು ನಿಮಿರಿಸುವುದು ಅನ್ನಿಸಿತು. ಹೋಗಿ ’ಇನ್‌ಬಾಕ್ಸ್ ’ ತೆಗೆದ. ಯಾರೋ ಇಬ್ಬರು ಅಂತರ್ಜಾಲದ ಅಪ್ಸರೆಯರು ರವಿಯ ಮನಸ್ಸನ್ನು ಅರ್ಥಮಾಡಿಕೊಂಡಂತೆ ’ಕಮ್’ ’ಹಾರ್ಡ್’ ಇತರ ಮಿರುಮಿರುಗುವ ಪದಗಳಿರುವ ಮೈಲ್ ಕಳಿಸಿದ್ದರು. ಅವನಿಗರಿವಿಲ್ಲದಂತೆ ಒಂದನ್ನು ಅವನ ಮೌಸ್‌ನ ಮೇಲಿದ್ದ ಬೆರಳು ಕ್ಲಿಕ್ಕಿಸಿತು. ಒಂದು ನಿಮಿಷವೂ ಯೋಚಿಸದೆ ಇಂಥವುಗಳನ್ನೆಲ್ಲಾ ಚೆಕ್‌ಮಾರ್ಕೊತ್ತಿ ಡಿಲೀಟಾಗಿಸುತ್ತಿದ್ದ ಅರಿವೆಗೆ ಬಾರದ ರಿಫ್ಲೆಕ್ಸೂ ಅರಿವೆಗೆ ಬರದಂತೆ ಬದಲಾಗಿರುವುದನ್ನು ಕಂಡು ಹೆದರಿಕೆಯಾಯಿತು. ಕಂಪ್ಯೂಟರಿನ ಪಕ್ಕದಲ್ಲಿದ್ದ ಗೀತಳ ಪಕ್ಕದಲ್ಲಿದ್ದ ತನ್ನ ಮದುವೆಯ ಫೋಟೋದಲ್ಲಿದ್ದ ತಾನೇ ಈಗಿನ ತನ್ನನ್ನು ನೋಡಿ ನಗುತ್ತಿರುವಂತೆ ಅನ್ನಿಸಿತು. ಒಂದುಕ್ಷಣ ಹೆದರಿಕೆಯೆಂತೆನಿಸಿ ಕಂಪ್ಯೂಟರ್ ಅರಿಸಿಬಿಟ್ಟ. +ಫೋಟೊವನ್ನೊಮ್ಮೆ ದಿಟ್ಟಿಸಿ ನೋಡಿದ. ಆರುವರ್ಷಗಳ ಹಿಂದೆ ತೆಗೆದ ಫೋಟೋ ಅದು. ಜೀವನದ ಎಲ್ಲ ಸುಖದುಃಖಗಳಲ್ಲಿ ಸಮಭಾಗಿಗಳಾಗಿರುತ್ತೇವೆ ಎಂದು ಸಪ್ತಪದಿ ತುಳಿದ ದಿನ. ಒಮ್ಮೆಯೂ ನೋಡದಿದ್ದ ಸಾವಿರಾರು ಮೈಲಿ ದೂರವಿರುವ ತಾವಿಬ್ಬರೂ ಪರಸ್ಪರರನ್ನು ಇಂಥ ದೊಡ್ಡ ಕಮಿಟ್‌ಮೆಂಟಿಗೆ ಒಳಗಾಗಿಸಿಕೊಂಡಿದ್ದು ಹೇಗೆ.ಅಮ್ಮ ಕಳಿಸಿದ ಮೂರು ಹುಡುಗಿಯರ ಫೋಟೋಗಳಲ್ಲಿ ಗೀತಳನ್ನು ಇಷ್ಟಪಟ್ಟಿದ್ದ, ರವಿ. ಹದಿನೈದು ದಿನದ ರಜೆಯಲ್ಲಿ ನೋಡಿಬಂದ. ನಂತರ ಆದದ್ದು ಮಾಮೂಲಿ. ವಾರಕ್ಕೆರಡರಂತೆ ಫೋನ್‌ಗಳ ಸುರಿಮಳೆ. ಆರುತಿಂಗಳ ನಂತರ ಬೆಂಗಳೂರಲ್ಲಿ ಭಾರಿ ಮದುವೆ. ವಿಮಾನದಲ್ಲಿ ಒಟ್ಟಿಗೇ ಅಂಟಿಕೊಂಡು ಹದಿನೆಂಟುಗಂಟೆಯ ದೀರ್ಘ ಪ್ರಯಾಣದಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿದ್ದು, ಬಾಯಿತುಂಬಾ ಮಾತಾಡಿದ್ದು. ಮೊಟ್ಟಮೊದಲ ಬಾರಿಗೇ ಫೋನಿನಲ್ಲಿ ಕೇಳಿದ ಧ್ವನಿ ತನ್ನೆದುರಿನ ಹುಡುಗಿಯದಲ್ಲವೇನೋ ಅನ್ನಿಸಿದಾಗ ಅಪಶಕುನವೆನ್ನಿಸಿದಂತೆ ವಿಮಾನದ ಟಾಯ್ಲೆಟ್ಟಿಗೆ ಹೋಗಿ ಕೆನ್ನೆ ಬಡಿದುಕೊಂಡು ಬಂದಿದ್ದ. ವಾಲೆಟ್ಟಿನಲ್ಲಿರುವ ದೇವರುಗಳನ್ನೆಲ್ಲಾ ಕಣ್ಣಿಗೊತ್ತಿಕೊಂಡಿದ್ದ. ” ನಾನೂ ಕೆಲಸ ಮಾಡಬೇಕು” ಅನ್ನುವ ವ್ಯಾವಹಾರಿಕ ಮಾತುಕತೆಗೆ ಮದುವೆಯ ಮೊದಲ ದಿನವೇ ಇಳಿದಿದ್ದಳು ಮಡದಿ. ಅದು ಪ್ರೀತಿ ಉಕ್ಕಿಸುವ ಮುಗ್ಧ ದೇಸೀ ಹೆಣ್ಣಿನ ಬೇಜಾರುಕಳೆಯುವ ಹವ್ಯಾಸದಂತೆ ಕಾಣಿಸಲಿಲ್ಲ.ತನ್ನ ಪುಟ್ಟಮನೆಯಲ್ಲಿ ತಾವಿಬ್ಬರೇ ಇದ್ದಾಗ ಬೆಚ್ಚನೆಯ ನೀರಿನ ಸ್ನಾನ ಮಾಡಿ, ಒಳಲಂಗದ ಮೇಲೆ ಟವಲ್ ಕಟ್ಟಿ, ನಿಲುವುಗನ್ನಡಿಯ ಮುಂದೆ ಕೂದಲು ಒಣಗಿಸಿಕೊಳ್ಳುತ್ತಾ ನಿಂತಿರುವ ಹೊಸ ಹೆಂಡತಿಯನ್ನು ಹಿಂದಿನಿಂದ ಬಂದು ’ಭೂ” ಮಾಡಿ ಹರಿಣಿಯಂತೆ ಹೆದರಿದಾಕೆ ಓಡಿಬಂದು ತನ್ನ ಎದೆಗೊರಗುವುದು ಮಣಿರತ್ನಂನ ಚಿತ್ರಗಳಲ್ಲಿ ಮಾತ್ರವೇನೋ ಎನ್ನುವ ಅನುಮಾನ ಮೂಡಿತ್ತು. ಅಥವಾ ಸ್ನಾನವಾದಮೇಲಿನ ಗಂಡಹೆಂಡಿರ ಸಂಬಂಧವನ್ನು ಮಣಿರತ್ನಂ ತನ್ನ ಯಾವಚಿತ್ರದಲ್ಲಿಯೂ ಹೇಳಿಲ್ಲ ಎಂದು ರವಿಗೆ ಸಮಾಧಾನದ ತರಹದ ಬೇಜಾರಾಗಿತ್ತು. +ಎರಡು ಬಾರಿ ಜ್ಯಾಕ್ ಡೇನಿಯಲ್ ಗ್ಲಾಸಿಗೆ ಬಗ್ಗಿಸಿದ್ದ. ಬೆಡ್‌ರೂಮಿಗೆ ಹೋಗಿ ಮಂಚದ ಮೇಲೆ ಕೂತು ಟೀವಿ ಹಾಕಿದ. ಚ್ಯಾನಲ್‌ಗಳನ್ನು ಸುಮ್ಮನೇ ಬದಲಾಯಿಸುತ್ತಿದ್ದ. ಈ ಚ್ಯಾನಲ್‌ಗಳಂತೆ ಮನಸ್ಸಿನ ಪದರಗಳನ್ನೂ ಏಕೆ ಒಬ್ಬನೇ ಕೂತಾಗ ಬದಲಾಯಿಸಲಾಗುವುದಿಲ್ಲ ಎನ್ನಿಸಿತು.ಬೆಡ್‌ರೂಮಿನ ಗೋಡೆಯ ಮೇಲೆ ಆರುವರ್ಷದ ಹಿಂದೆ ತೆಗೆಸಿದ ಗೀತಳ ಆಳೆತ್ತರದ ಫೋಟೊವೊಂದನ್ನು ಹಾಕಿದ್ದ. ಗೀತಳಿಗಿಂತ ಎತ್ತರವಾದ ಈ ಫೋಟೋ ಆತ ಗೀತಳಿಗೆ ಕೊಟ್ಟ ಮೊದಲ ’ಸರ್‌ಪ್ರೈಸ್” ಹೀಗೆಯೇ ಇರಬೇಕೆಂದು ಒಲ್ಲದ ಆಕೆಯನ್ನು ಬೈತಲೆಬೊಟ್ಟು, ಮೂಗುತಿಯಿಂದ ತನ್ನಿಷ್ಟ ಬಂದಂತೆ ಸಿಂಗರಿಸಿ ಬೆಂಗಳೂರಿನಲ್ಲಿ ತೆಗೆಸಿದ ಆ ಫೋಟೋವನ್ನು ಇಲ್ಲಿ ದೊಡ್ಡದಾಗಿಸಿದ್ದ. ಸ್ಟುಡಿಯೋದಲ್ಲಿ ಆ ಫೋಟೋದ ಜೊತೆಗೇ ತನ್ನ ಸಂಸಾರದ ಕನಸೂ ಹಿಗ್ಗುತ್ತಿತ್ತು. ಜೊತೆಗೆ ಎರಡಕ್ಕೂ ಮಿತಿಯಾದ ತನ್ನ ಜೇಬಿನ ವೈಶಾಲ್ಯ ಅದಕ್ಕೊಂದು ರೂಪು ಕೊಟ್ಟಿತ್ತು. ಮದುವೆಯ ಮುಂಚಿನ ದಿನಗಳಲ್ಲಿ ಗೀತಳ ನೆನಪು, ಪ್ರೇಮ, ಕಾಮ ಎಲ್ಲವನ್ನೂ ಪೂರೈಸಿತ್ತು ಆ ಫೋಟೋ. ತುಟಿಯೆಲ್ಲಿ, ಕಣ್ಣೆಲ್ಲಿ, ಎದೆಯೆಲ್ಲಿ ಎಂದು ಕಣ್ಣುಮುಚ್ಚಿ ಕೈಯಾಡಿಸಿದರೂ ಹೇಳಬಲ್ಲೆ ಎಂದು ಮುಂಚೆ ಫೋನಿನಲ್ಲಿ ಪೋಲಿಪೋಲಿಯಾಗಿ ಮಾತನಾಡುತ್ತಿದ್ದ. ಇಂದೂ ಹೇಳಬಲ್ಲೆ ಅನ್ನಿಸಿತು. ಮತ್ತೊಮ್ಮೆ ಇವತ್ತು ಬಹಳದಿನದ ಮೇಲೆ ಆ ಫೋಟೋವನ್ನು ಮೇಲಿನಿಂದ ಕೆಳಗಿನವರೆಗೆ ಸವರಿದ. ಚುಳ್ಳೆಂದು ಕೆಳಗೆ ಫೋಟೋದ ಅಂಚು ಚುಚ್ಚಿತು. ಅಂಚಿನವರೆಗೂ ಹೋದ ಕೈಬೆರಳಿನಿಂದ ರಕ್ತ ಬಂತು. ಪಕ್ಕದಲ್ಲೇ ನೋಡಿದ. ಇತ್ತೀಚೆಗೆ ತೆಗೆಸಿದ ಗೀತಳ ಇನ್ನೊಂದು ಫೋಟೋ. ನೋಡಿದ. ಕೂದಲು ಕತ್ತರಿಸಿದೆ. ಹುಬ್ಬಿಗೆ ಆಕಾರ ಬಂದಿದೆ.ತುಟಿಗೆ, ಕೆನ್ನೆಗೆ ಬಣ್ಣ ಬಂದಿದೆ. ಸೀರೆಯಬದಲು ಜೀನ್ಸ್ ಪ್ಯಾಂಟು ಬಂದಿದೆ. ಯಾವುದೂ ತಪ್ಪಲ್ಲವೆನ್ನಿಸಿತು. ಪ್ರಾಯಶಃ ಆಕೆಯ ಬದಲಾವಣೆಗೆ ತಾನು ಸ್ಪಂದಿಸುತ್ತಿಲ್ಲ ಅನ್ನಿಸಿತು. ಅಥವಾ ತನ್ನ ಕಲ್ಪನೆಗೂ ಮೀರಿ ಈಕೆ ಬೆಳೆಯುತ್ತಿದ್ದಾಳೆಯೇನೋ ಅನ್ನಿಸಿತು. ರೂಪವಂತೆ ಅನ್ನುವ ಮೊದಲ ಕಾರಣಕ್ಕೆ ಗೀತಳನ್ನು ಆರಿಸಿದ್ದ ರವಿ. . ಮದುವೆಯ ಹೊಸದರಲ್ಲಿ ಈ ಬಣ್ಣ, ಬಳುಕೆಲ್ಲಾ ಗೀತಳ ಸೌಂದರ್ಯಕ್ಕೆ ಮೆರುಗುಕೊಡುವುದಕ್ಕೆ ಮಾತ್ರ ಬೇಕು ಎಂದನಿಸಿತ್ತು. ಆದರೆ ಈಗ ಯಾಕೋ ಈ ಲಿಪ್‌ಲೈನರು ಐಲೈನರುಗಳೆಲ್ಲಾ ಗೀತಳನ್ನು ವಿವರಿಸಲಿಕ್ಕೇ ಬೇಕಾಗುತ್ತಿದೆ ಎನ್ನಿಸಿತು. ಹೆಂಡತಿಯ ಬದಲಾವಣೆಯ ಸ್ವಗತವೂ ಜಂಪಾಲಹಿರಿಯ ಸಾಲನ್ನು ಅವಲಂಬಿಸಿರುವುದು ತನ್ನ ಸಂವೇದನೆಗಳ ಬ್ಯಾಂಕ್ರಪ್ಟ್ಸಿಯನ್ನು ವಿಷದವಾಗಿ ತನಗೇ ಬಿಡಿಸಿಹೇಳುತ್ತಿದೆ ಅನ್ನಿಸಿ ಸಂಕಟವಾಯಿತು, ರವಿಗೆ. +ಇಲ್ಲಿಗೆ ಬಂದಾಕ್ಷಣ ಸ್ಕೂಲ್ಲಿಗೆ ಸೇರುತ್ತೇನೆಂದಳು. ಬೇಡ ಅನ್ನಲಾರದೇ ಒಪ್ಪಿದ್ದ. ಹೆಣ್ಣು ಯಾಕೆ ಕೆಲಸಮಾಡಬಾರದೆಂಬ ಅವಳ ಎರಡನೆಯ ತಿಂಗಳಿನ ಪ್ರಶ್ನೆಗೆ ಉತ್ತರ ಕೊಟ್ಟರೆ ಪುರುಷವಾದಿ ಎಂದುಕೊಳ್ಳುತ್ತಾಳೆ , ಮನೆಯಲ್ಲಿ ಸೆಕ್ಷುಯಲ್ ಹರಾಸ್ಮೆಂಟ್ ಎಂಬ ಕಾರ್ಪೋರೇಟ್ ಬೆಳವಣಿಗೆಯಾಗಬಾರದೆಂದು ಉತ್ತರವನ್ನು ತನ್ನಲ್ಲೇ ಅದುಮಿಟ್ಟುಕೊಳ್ಳುತ್ತಾ ಹೋದ.ಒಂದಾದ ನಂತರ ಒಂದು ಪ್ರಶ್ನೆ ಕೇಳುತ್ತಾ ಹೋದಳು, ಗೀತ. ಈತ ಉತ್ತರ ಕೊಡುತ್ತಲೇ ಹೋದ. ಬಹುಮಟ್ಟಿನ ಉತ್ತರ ಕ್ರಿಯೆಯಲ್ಲಿಯೇ ಇತ್ತು. ಅವಳ ಸ್ಕೂಲಿನ ಸಮಯಕ್ಕನುಕೂಲವಾಗುವಂತೆ ಮನೆ ಬದಲಿಸಿದ, ಕೆಲಸವನ್ನೂ ಬದಲಿಸಿದ. ಈಗ ಸದ್ಯಕ್ಕೆ ಮಗು ಬೇಡ ಅಂದಳು. ಆಯಿತು ಎಂದ. ತನ್ನ ವಾರ್ಡ್‌ರೋಬು ಪಾಲಿಸ್ಟರ್‌ನಿಂದ ಹಂಡ್ರೆಡ್ ಪರ್ಸೆಂಟ್ ಕಾಟನ್ ಆಗಲಿ ಅಂದಳು, ಆಯಿತು. ಪ್ರತಿಯೊಂದಕ್ಕೂ ಆತ ಕೊಟ್ಟುಕೊಳ್ಳುತ್ತಿದ್ದ ಉತ್ತರ- ಸಂಬಂಧಗಳು ಒಂದು ವ್ಯಾವಹಾರಿಕ ಒಪ್ಪಂದ. ಎರಡು ವ್ಯಕ್ತಿತ್ವಗಳು ಒಂದಕ್ಕೊಂದು ಸಮಾನಾಂತರವಾಗಿಯೇ ಹೋದರೆ ಆ ಸಂಬಂಧ ಒಂದಕ್ಕೊಂದು ಸೇರುವುದೂ ಇಲ್ಲ, ದೂರವಾಗುವುದೂ ಇಲ್ಲ. ಹಾಗಿದ್ದರೆ ಮಾತ್ರ ಅದು ಆರೋಗ್ಯಕರ. ಇದು ಅವನ ದೌರ್ಬಲ್ಯವೋ ಅಥವಾ ಆಫೀಸಿನ ಕಾರ್ಪೋರೇಟ್ ಬೈಲಾಗಳನ್ನು ಮನೆಗೆ ಅಳವಡಿಸಿದ್ದಕ್ಕೋ ಏನೋ ಎರಡೂ ಕಡೇ ಆತನಿಗೆ ಲಾಭವಾಗಿತ್ತು. ಆತನ ಕಂಪೆನಿ ಪಬ್ಲಿಕ್ಕಿಗೆ ಹೋಗಿತ್ತು. ಆದರೆ ಆತನ ಕೈಕೆಳಗಿನವರು ಇಪ್ಪತ್ತು ಜನ ಕೆಲಸ ಕಳೆದುಕೊಂಡಿದ್ದರು. ಗೀತ ತನ್ನ ಸ್ಕೂಲು ಮುಗಿಸಿ ಇವನಷ್ಟೇ ಒಳ್ಳೆಯ ಕೆಲಸವನ್ನು ಬೇರೆ ಕಂಪೆನಿಯಲ್ಲಿ ಪಡೆದಿದ್ದಳು. ರಾತ್ರಿ ಲೇಟಾಗಿ ಮನೆಗೆ ಬರುತ್ತಿದ್ದಳು. ಬರುತ್ತಲೇ ವೈನು ಕುಡಿಯುತ್ತಿದ್ದಳು. ಬರೀ ಬೀರು ಕುಡಿಯುತ್ತಿದ್ದ ರವಿ ಈಗ ಜ್ಯಾಕ್ ಡೇನಿಯಲ್ ಕುಡಿಯತೊಡಗಿದ್ದ. +ಬಾಗಿಲು ತೆರೆದ ಶಬ್ದವಾಯಿತು. ಗೀತ ಬಂದಳೆಂದುಕೊಂಡ. ’ಹಾಯ್’ ಎನ್ನುತ್ತಲೇ ಉತ್ತರಕ್ಕೆ ಕಾಯದೇ ತನ್ನ ಪರ್ಸನ್ನು ಸೋಫಾದ ಮೇಲೆ ಎಸೆದು ಬಚ್ಚಲಿಗೆ ಹೋದಳು. ರವಿ ತನ್ನಪಾಡಿಗೆ ತಾನು ಟೀವಿ ನೋಡುತ್ತಿದ್ದ. ಗ್ಲಾಸು ಮೂರನೇ ಸುತ್ತು ಮುಗಿದಿತ್ತು. +“ಊಟ ಆಯ್ತಾ” ಬಂದು ಪಕ್ಕದಲ್ಲಿ ಮಂಚದ ಮೇಳೆ ಉರುಳುತ್ತಾ ಕೇಳಿದಳು. ಆಗತಾನೆ ಸ್ನಾನ ಮಾಡಿದ್ದರಿಂದ ಮೂಗಿಗೆ ಸೋಪಿನ ವಾಸನೆ ಹಿತವಾಗಿ ಬರುತ್ತಿತ್ತು. ಬರೀ ಗೌನಿಗೆ ಮರುಳಾಗುವ ತನ್ನ ದೌರ್ಬಲ್ಯವನ್ನು ಕೊಂಚಹೊತ್ತಾದರೂ ದೂರವಿಡಬೇಕೆಂದು ಈ ಕಡೆ ತಿರುಗಿ ಮಲಗಿದ, ರವಿ. +ಟೀವಿಯ ರಿಮೋಟ್ ತೆಗೆದುಕೊಂಡು ಚಾನಲ್ ಬದಲಾಯಿಸತೊಡಳು. ಲೈಫ್‌ಟೈಂಗೆ ನಿಲ್ಲಿಸಿ ಆಸಕ್ತಿಯಿಂದ ನೋಡತೊಡಗಿದಳು. ಸಿಟ್‌ಕಾಮಿನಲ್ಲಿ ಎಲ್ಲೆಲ್ಲಿ ನಗಬೇಕೆಂದು ಹೇಳಿಕೊಡುವ ನಗುವ ಧ್ವನಿಗಳಿಗೆ ಪೈಪೋಟಿ ಕೊಡುವಂತೆ ನಗತೊಡಗಿದಳು. ದಿಂಬಿಗೊರಗಿ ಕಾಲೆತ್ತಿ ರವಿಯ ಮೇಲೆ ಹಾಕಿದಳು. ಮೈಮುರಿದು ಎದ್ದು ಕೆಳಗೆ ಕಾರ್ಪೆಟ್ಟಿನ ಮೇಲೆ ಕೂತಳು. “ಸ್ವಲ್ಪ ಬೆನ್ನು ಒತ್ತುತ್ತೀಯ” ಎಂದು ಕೇಳಿದಳು. ಇವೆಲ್ಲ ಆದದ್ದು ಕೇವಲ ಮೂರು ನಿಮಿಷದಲ್ಲಿ. +ಬೆನ್ನು ಒತ್ತುತ್ತಾ ” ನಾನು ಟೀವಿ ನೋಡುತ್ತಿದ್ದೆ.” ಎಂದ ರವಿ. ” ಇರಲಿ, ಲೈಫ್‌ಟೈಂ ನೋಡು, ಚೆನ್ನಾಗಿದೆ” ನಗುವಿನ ನಡುವೆ ರವಿಯ ಕೈಯನ್ನು ತನಗೆ ಬೇಕಾದ ಭುಜದ ಟ್ರಿಗರ್ ಪಾಯಿಂಟುಗಳ ಮೇಲೆ ಒತ್ತಿಸಿಕೊಳ್ಳುತ್ತಾ ಹೇಳಿದಳು. +“ನಾನು ವಿಂಬಲ್ಡನ್ ನೋಡಬೇಕೆಂದಿದ್ದೆ.” ಮತ್ತೆ ಸಂಕೋಚ ಅಂಟಿದ್ದ ಪಿರಿಕು. ತಾನು ಏನನ್ನೂ ನೇರವಾಗಿ ಹೇಳದೇ ಇದ್ದಿದ್ದೇ ಇದು ಇಲ್ಲಿಯತನಕ ಬರಲು ಕಾರಣವಾಗಿದೆ. ಇವತ್ತು ನಿಷ್ಠುರವಾಗಿಯೇ ಇರಬೇಕು ಅಂದುಕೊಂಡ. +“ಹೊರಗೆ ಲಿವಿಂಗ್ ರೂಮಿನಲ್ಲಿ ನೋಡಪ್ಪ. ಇದು ನನ್ನ ಫೇವರಿಟ್ ಶೋ.” ಕೈಗೊಂದು ಮುತ್ತಿಕ್ಕಿ ಹೇಳಿದಳು ಗೀತ. +“ಇಲ್ಲ, ನಾನು ಇಲ್ಲಿಯೇ ನೋಡುತ್ತೇನೆ, ನೀನು ಹೊರಗೆ ಹೋಗು” ಕಣ್ಣು ಮುಚ್ಚಿ ಹೇಳಿದ ರವಿ. ಧ್ವನಿ ನಡುಗುತ್ತಿತ್ತು. +” ನಾನು ಹೊರಗೆ ಹೋಗಬಹುದು ಎಂದು ನಂಬುವ ಧೈರ್ಯ ಯಾಕೆ ಮಾಡಿದ್ದೀಯ ನೀನು” ಕೇಳಿದಳು ಗೀತ. ಸಣ್ಣ ವಿಷಯವನ್ನು ದೊಡ್ಡದುಮಾಡಲು ಇಬ್ಬರಿಗೂ ತವಕವಾಗುತ್ತಿತ್ತು. +“ಯಾಕೆಂದರೆ, ಇದು ನನ್ನ ಮನೆ.” ಅಂದಮೇಲೆ ಜಾಸ್ತಿಯಾಯ್ತು ಅನ್ನಿಸಿತು. ಆದರೆ ಅಂದಾಗಿಬಿಟ್ಟಿತ್ತು. +“ಓಹೋ,” ಟಿವಿ ಆರಿಸಿದಳು. ಕಣ್ಣು ಮುಚ್ಚಿ ಬರುವ ಸಿಟ್ಟನ್ನು ತುಟಿಕಚ್ಚಿ ತಡೆದು ” ಇನ್ನೊಮ್ಮೆ ಹೀಗೆ ಮಾತಾಡಬೇಡ. ಸಂಬಳದ ಚೆಕ್ಕನ್ನು ನೋಡು. ಯಾರು ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂದು. ಸುಮ್ಮನೆ ಮಾತು ಬೆಳೆಸಿ ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳಬೇಡ.” +“ಈ ಎರಡು ವರ್ಷದಿಂದ ಮಾತ್ರ.” ರವಿ ಬಿಡಲಿಲ್ಲ.” ಅದಕ್ಕೆ ಯಜಮಾನಿಯ ರೀತಿ ಆಡುವುದು ಸರಿಯಲ್ಲ” +“ನೀನಿರುವುದು ಭಾರತದಲ್ಲಲ್ಲ. ಇದ್ದರೂ ಅಲ್ಲಿಯೂ ನಿನ್ನ ಹಾಗೆ ಯಾರೂ ಅಡುವುದಿಲ್ಲ. ನಾನು ಹೆಣ್ಣಾದ ತಕ್ಷಣ ಮಟ್ಟಿಸಿಕೊಳ್ಳುವಳೇ ಆಗಬೇಕೆಂದು ಏನೂ ನಿಯಮವಿಲ್ಲ. ಒಂದೇ ಒಂದು ದಿನ ಮನೆಯಕೆಲಸ ಮಾಡುತ್ತೀಯಾ ನೀನು?” +” ನಾನ್ಯಾಕೆ ಮಾಡಬೇಕು. ಬೇಕಾದಷ್ಟು ಮಾಡಿದ್ದೇನೆ, ಈ ಮನೆಗೆ. ನೀನು ನಿನ್ನ ಕೆಲಸದ ಜೊತೆಗೆ ಮನೆಕೆಲಸ ಮಾಡಿದರೆ ಅದೇನು ತಪ್ಪು” ಮಾತು ತಾನೇ ಹಾಕಿಕೊಂಡ ಬೈಲಾಗಳನ್ನು ಎಲ್ಲೋ ಮೀರುತ್ತಿದೆ ಅನ್ನಿಸಿದರೂ, ಮನಸ್ಸಿನ ಯಾವುದೋ ಒಂದು ಭಾಗಕ್ಕೆ ಖುಷಿ ಸಿಕ್ಕುತ್ತಿದ್ದರಿಂದ ಹೀಗೆಯೇ ಮುಂದುವರಿಸೋಣವೆಂದೆನ್ನಿಸಿತು.” ನೀನು ಆಫೀಸಿನ ಪವರ್ ರಾಜಕೀಯಾನ ಮನೆಗೆ ತರಬೇಡ.ಮನೆಯಲ್ಲಿ ನಾನು ನಾನೇ.ನೀನು ನೀನೇ.” ಮಾತುಗಟ್ಟಿಯಾಗತೊಡಗಿತ್ತು, ಅವನಿಗೇ ಅಚ್ಚರಿಯಾಗುತ್ತಿತ್ತು, ಸಣ್ಣ ವಿಚಾರಗಳು ದೊಡ್ಡವಾಗುವ ಕ್ರಿಯೆ ಕೆಲವೊಮ್ಮೆ ಆ ವಿಷಯಗಳೊಂದಿಗೇ ಹಾಸುಹೊಕ್ಕಾಗಿರುತ್ತವೆಯೋ ಏನೋ, ಆದರೆ ಎಲ್ಲವಕ್ಕೂ ಕಾಲಕೂಡಿಬರಬೇಕು ಎಂದನ್ನಿಸಿತು, ಇಬ್ಬರಿಗೂ. ಇದು ಹೋಗುತ್ತಿರುವ ವೇಗ ಇಬ್ಬರಿಗೂ ಇಷ್ಟವಾಗದಿದ್ದರೂ ಉತ್ಕರ್ಷ ಕೆಟ್ಟ ಖುಶಿಯನ್ನು ರವಿಗಂತೂ ತರುತ್ತಿತ್ತು, ಅಥವಾ ಹಾಗಂದುಕೊಂಡಳು ಗೀತ. ಮಾತಾಡಬಾರದು, ಅದು ಈಡಿಯಸಿ ಎಂದೆನ್ನಿಸಿ ಸುಮ್ಮನಿದ್ದಳು. ಆದರೆ,ಇಂದು ಮಾತಾಡಲೇಬೇಕೆಂದು ನಿಶ್ಚಯ ಮಾಡಿದ್ದ, ರವಿ. +” ನೀವು ಹೆಂಗಸರು, ನನ್ನಂಥ ಗಂಡಂದಿರುವವರೆಗೆ ಈ ರೀತಿಯ ಧೋರಣೆಗಳಿಟ್ಟುಕೊಂಡು, ಅದಕ್ಕೆ ಸ್ತ್ರೀವಾದ, ಶೋಷಣೆ, ವಿಮೋಚನೆ ಇನ್ನೂ ಏನೇನನ್ನೋ ದೊಡ್ಡದೊಡ್ಡದಾಗಿ ಮಾತಾಡುತ್ತೀರಿ. ಆದರೆ ನಿನಗೂ ಗೊತ್ತಿರುವ ನಿಜವೇನು ಗೊತ್ತಾ, ಹೆಣ್ಣಿಗೆ ವಾದ ಮಾಡಬೇಕು ಅನ್ನಿಸಿದ್ದು ಆಕೆ ಬಲಿಷ್ಟೆಯಾದದ್ದರಿಂದಲ್ಲ. ನನ್ನಂಥ ನಾಮರ್ದಗಳು ದುರ್ಬಲರಾದ್ದರಿಂದ. ನನ್ನಂಥವರುಗಳನ್ನು ಮುಂದಿಟ್ಟುಕೊಂಡು ನಿನ್ನನ್ನು ನೀನು ಫೆಮಿನಿಸ್ಟ್ ಅಂತ ಕರಕೋತೀಯ. ಅಷ್ಟೆ.” +” ಅದು ತಪ್ಪೇನಿಲ್ಲ, ಪ್ರಪಂಚದಲ್ಲಿ ಪೂರ ಸತ್ಯ ಯಾವುದೂ ಇಲ್ಲ. ಮತ್ತೆ ನೀನು ಮಾಡುತ್ತಿರುವುದು ಒಂದು ತೀರ ದುರ್ಬಲವಾದ ವಾದ, ಕ್ಲಿಶೆ. ಅದು ಎಲ್ಲೂ ಗೆಲ್ಲುವುದಿಲ್ಲ. ಚೆನ್ನಮ್ಮನ ಕಾಲದಿಂದ ಇಲ್ಲಿನವರೆಗೂ ನಾವು ಇದ್ದೇ ಇದೀವಿ. ಇರುತ್ತಲೇ ಹೋಗುತ್ತೀವಿ.ಅದನ್ನು ಒಪ್ಪಿಕೊಳ್ಳೋ ಧೈರ್ಯ ನಿನ್ನಲಿಲ್ಲ. ನೀನು ನಿನ್ನನ್ನು ದುರ್ಬಲ, ನಾಮರ್ದ ಅಂತ ಕರಕೊಳ್ಳೋದು ಒಂದು ರೀತಿಯ ಡಿಫೆನ್ಸು, ಆತ್ಮರಕ್ಷಣೆ. ನಮ್ಮನ್ನೂ ನಾವು ವೀಕ್ ಅಂತ ತಿಳಕೊಳ್ಳಲಿ ಅನ್ನೋ ಭಾವನೆಯನ್ನು ನಮ್ಮಲ್ಲಿ ಮೂಡಿಸೋದಕ್ಕೆ ಎಸಿತಾ ಇರೋ ಕಟ್ಟ ಕಡೆಯ ಒಂದು ಹೊಲಸು ಅಸ್ತ್ರ. ಅದು ಯಾವತ್ತೂ ಕೆಲಸ ಮಾಡುವುದಿಲ್ಲ. ನಿನ್ನನ್ನಿಳಿಸಿಕೊಂಡು ನನ್ನನ್ನೇರಿಸಬೇಕಾಗಿಲ್ಲ. ನೀನು ಎಲ್ಲಿದ್ದೆಯೋ ಅಲ್ಲೇ ಇದ್ದೀಯಾ. ನಾನು ಮೇಲೆ ಹೋಗ್ತಾ ಇದೀನಿ, ಅದನ್ನು ಸುಮ್ಮನೆ ಒಪ್ಕೋ.” ಪಟ್ಟು ಬಿಡದೆ ಹೇಳಿದಳು ಗೀತ. +” ಹಾಗಾದ ತಕ್ಷಣ ನಿನ್ನ ಸುತ್ತ ಇರೋದೆಲ್ಲ ತುಚ್ಚ ಅಂತ ನೋಡೋದು ಎಷ್ಟು ಸರಿ” ಧ್ವನಿಯಲ್ಲಿ ಹತಾಶೆಯಿತ್ತು, ರವಿಯಲ್ಲಿ. +” ಹಾಗೆ ನಾನ್ಯಾವತ್ತೂ ಅಂದುಕೊಂಡಿಲ್ಲ. ನನ್ನ ದಿನಚರಿ, ಹೊರಗೆ ಕೆಲಸ ಮಾಡುತ್ತಿರುವ ಯಾವ ವ್ಯಕ್ತಿಯ ದಿನಚರಿಗಿಂತಾ ಏನೂ ಬೇರೆಯಾಗಿಲ್ಲ. ಆದ್ರೆ ಅದನ್ನು ನೋಡೋ ನಿನ್ನ ದೃಷ್ಟಿ ಸರಿಯಾಗಿಲ್ಲ ಅಷ್ಟೆ. ನನ್ನನ್ನು ಶೋಕೇಸಿನ ಬೊಂಬೆಯ ತರ ನೋಡೋದನ್ನು ಕಡಿಮೆ ಮಾಡಿ, ಸರೀಕಳ ಹಾಗೆ ನೋಡಲು ಪ್ರಯತ್ನ ಮಾಡು. ಆಗ ನಿನಗೇ ಅರ್ಥವಾಗುತ್ತದೆ. ಆದರೆ ಅದಕ್ಕೆ ನೀನು ರೆಡಿಯಾಗಿಲ್ಲ, ಅಷ್ಟೆ. ನಾನು ನಿನಗಿಂತ ಯಾಕೆ ಕಡಿಮೆ ಅನ್ನುವುದಕ್ಕೆ ಒಂದು ಒಳ್ಳೆಯ ಕಾರಣ ಕೊಡು.” +” ಯಾಕೆ ಕಡಿಮೆಯಾ, ನಿನ್ನನ್ನು ನೀನು ಕೇಳಿಕೋ. ಊರು ಕೇರಿ ಗೊತ್ತಿಲ್ಲದ ನನ್ನನ್ನು ಮದುವೆ ಮಾಡಿಕೊಂಡು ದೇಶ ಹಾರಿಬಂದರೆ ಕನಸೇ ಬೀಳದ ನಿನ್ನ ಕಣ್ಣುಗಳಿಗೂ ಕನಸುಬಿದ್ದು ಅವುಗಳನ್ನು ನನಸು ಮಾಡ್ಕೋಬಹುದು ಅನ್ನೋದನ್ನು ಯೋಚನೆ ಮಾಡುವುದಕ್ಕೆ ನಿನಗೆ ಸಾಧ್ಯವಾಗುವುದಕ್ಕೆ. ನಿನ್ನ ಓದು ಮುಗಿಯುವತನಕ ಅಥವಾ ಓದದಿದ್ದರೆ ಕೊನೆಯತನಕ ನಾನು ನೋಡ್ಕೋತೀನಿ ಅನ್ನೋ ಟೇಕನ್ ಫಾರ್ ಗ್ರಾಂಟೆಡ್ ನಂಬಿಕೆಗೆ, ನಿನ್ನನ್ನು ಸಾಯೋವರೆಗೂ ನೋಡ್ಕೋತೀನಿ ಅಂತ ನೀನು ನಿನ್ನ ಮನೆಯವರು ತಿಳ್ಕೊಂಡಿದೀರಲ್ಲ, ಆ ಗ್ಯಾರಂಟಿಗೆ. ನಿನಗೆ ಹುಶಾರಿಲ್ಲದಿದ್ದರೆ, ಮನೇಲಿ ಸಾಮಾನು ಕೆಟ್ಟರೆ ಡಾಕ್ಟರನ್ನೋ ರಿಪೇರಿಯವನನ್ನೋ ಕರೆಯುವ ಮುಂಚೆ ನನ್ನನ್ನು ಕರೀತಿಯಲ್ಲ, ನನ್ನ ಡೀ ಫಾಲ್ಟ್ ವ್ಯಕ್ತಿತ್ವಕ್ಕೆ. ಈಗ ನೀನು ಬಲಮಿದುಳಿಗೆ ಗೊತ್ತಾಗದಂತೆ ಎಡಮಿದುಳಿಗೆ ಯೋಚನೆಮಾಡಲು ಕಲಿಸಿದ್ದೀಯಲ್ಲ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ.” ರವಿ ಏನೇನು ಹೇಳಬೇಕೆಂದುಕೊಂಡಿದ್ದನೋ ಎಲ್ಲವನ್ನೂ ಒಟ್ಟಿಗೇ ಹೇಳಿ ಮುಗಿಸಿದ್ದ. +” ಸುಮ್ಮನೆ ಕೂಗಾಡಬೇಡ. ನೀನು ಏನೇ ಹೇಳು. ನನಗೆ ನಿನ್ನ ಮೇಲೆ ಏನು ನಂಬಿಕೆಗಳು, ಸಂಶಯಗಳು, ಇಶ್ಯೂಗಳು ಇದ್ದವೋ ನಿನಗೂ ಅವೇ ಇದ್ದವು, ನನ್ನ ಮೇಲೆ. ಇಲ್ಲದಿದ್ದರೆ ನನ್ನನ್ಯಾಕೆ ಅರ್ರಿಸುತ್ತಿದ್ದೆ. ನೀನಿಲ್ಲದಿದ್ದರೆ ನನಗೆ ಇನ್ನೊಬ್ಬ ಸಿಗುತ್ತಲೇ ಇದ್ದ. ನಿನಗೂ ಅಷ್ಟೆ. ಈಗಲೂ ಅಷ್ಟೆ. ಯಾರೂ ಯಾರಿಗೂ ಎಕ್ಸ್‌ಕ್ಲ್ಯೂಸಿವ್ ಅಲ್ಲ. ಎರಡು ವರ್ಷದ ಹಿಂದೆ ನಾನು ನಿನ್ನನ್ನು ಅವಲಂಬಿಸಿದ್ದೆ ನಿಜ, ಅದು ಜೀವನ ಪೂರ್ತಿ ನಾನು ಇನ್ನೊಬ್ಬನ ಹಂಗಿನಲ್ಲಿರಬಾರದೆಂದು ನನಗೆ ನಾನೇ ಮಾಡಿಕೊಂಡ ಹೊಂದಾಣಿಕೆ. ಅದಕ್ಕೆ ನನ್ನಿಂದ ನಿನಗೆ ಏನು ಸಿಕ್ಕಿದೆ ಅಂತ ನೀನೇ ಕೇಳಿಕೋ. ಎಲ್ಲವನ್ನೂ ದುಡ್ಡಿನ ಮೂಲಕ ಅಳೆಯೋದಾದ್ರೆ, ನನಗೂ ಲೆಕ್ಕ ಬರುತ್ತೆ” ಮುಖಕ್ಕೆ ಹೊಡೆದಂತೆ ಹೇಳಿ ಪಕ್ಕಕ್ಕೆ ತಿರುಗಿ ಮಲಗಿದಳು. +ರಾತ್ರಿ ಎಷ್ಟು ಹೊತ್ತೋ ಗೊತ್ತಿಲ್ಲ, ಗೀತಳ ಕೈ ರವಿಯ ಬೆನ್ನಮೇಲೆ ಬಿದ್ದಿತ್ತು, ಬೆಳಿಗ್ಗೆ ಎದ್ದಾಗ ರವಿಯ ಕೈಗಳೂ ಗೀತಳ ಮೇಲೆ ಬಿದ್ದಿದ್ದವು. ಎದ್ದು ರವಿಯ ಮುಖನೋಡಿ ನಗುತ್ತಾ ಹೋದಳು, ಗೀತ. ಕಾಮ ಗೀಳಾಗುವುದು, ಪ್ರೇಮ ಬೋಳಾಗಿ ಗೋಳಾದಾಗ ಮಾತ್ರ, ಬೇರೆ ಬರೆದ ಕವಿಗೆ ತಲೆಯಲ್ಲಿ ಬುದ್ಧಿಯಿಲ್ಲ ಅಂದುಕೊಂಡ ರವಿ. +ಆ ಫೀಸಿನಲ್ಲಿ ಸಿಕ್ಕಿದ್ದ ಬಿಲ್ಲಿ. “ನನ್ನ ಹೆಂಡತಿಯಿಂದ ಡೈವೋರ್ಸ್ ಸಿಕ್ಕಿತು” ಎಂದು ಖುಷಿಯಾಗಿ ಹೇಳಿದ. ಡೈವೋರ್ಸ್‌ಗೆ ಪ್ರಯತ್ನ ಮಾಡುತ್ತಿದ್ದಾನೆಂದು ರವಿಗೂ ಗೊತ್ತಿತ್ತು. ಆದರೆ ಮುಕ್ತಿಯಲ್ಲಿ ಇಷ್ಟೊಂದು ಸಂತೋಷವಿರುತ್ತದೆ ಎಂದು ಆತನಿಗೆ ಗೊತ್ತಿರಲಿಲ್ಲ. “ಒಟ್ಟು ಎಪ್ಪತ್ತು ಸಾವಿರ ಡಾಲರ್ ಕೈಬಿಟ್ಟಿತು.” ಅಂದ. ಒಂದು ಕ್ಷಣ ಆಶ್ಚರ್ಯವಾಯಿತು ರವಿಗೆ. “ಯಾಕೆ, ಆಕೆಯೂ ಕೆಲಸ ಮಾಡುತ್ತಿದ್ದಳು ಅಲ್ಲವೇ. ಅಲಿಮೊನಿ ಏನೂ ಕೊಡಬೇಕಾಗಿರಲಿಲ್ಲ ಅಲ್ಲವೇ.” ರವಿ ಮನಸ್ಸಿನಲ್ಲಿದ್ದ ಚಿಂತೆಯನ್ನು ಕೇಳಿಕೊಂಡ. +“ಚಮಚದಿಂದ ಎಲ್ಲವನ್ನೂ ಹಂಚಿಕೊಂಡಳು, ಮಾಯಾಂಗಿನಿ.ಐದುವರ್ಷ ಸಂಸಾರ ಮಾಡಿದ ಒಂದುಕಾರಣವೇ ಸಾಕು. ಮನೆಯ ಮೇಲೆ ಆಕೆ ಅಧಿಕಾರ ಪಡೆಯಲು. ಕೆಲಸಮಾಡಲಿ, ಬಿಡಲಿ. ಮನೆ, ಮನೆಯಲ್ಲಿರೋ ಸಾಮಾನುಗಳೇ ಸಾಕು ನನ್ನನ್ನು ದಿವಾಳಿ ಏಳಿಸಲು. ಯಾರೋ ಸರಿಯಾದ ಲಾಯರ್‌ನೇ ಹಿಡಿದಿದ್ದಾಳೆ. ನನ್ನ ಮನೆಯಲ್ಲಿ ನನ್ನನ್ನೇ ಇರದಹಾಗೆ ಮಾಡಿದಳು. ಮನೆಗೆ ದುಡ್ಡು ಕೊಟ್ಟವ ಮಾತ್ರ ನಾನಾದೆ. ಮನೆಯನ್ನು ಬೇಳೆಸಿ ಅದಕ್ಕೆ ರೂಪು ಕೊಟ್ಟಿದ್ದು ಆಕೆ, ಆದ್ದರಿಂದ ಮನೆ ಆಕೆಗೆ ಹೋಗಬೇಕು ಎಂದು ವಾದಿಸಿ ಗೆದ್ದಳು. ಆಕೆ ಇಷ್ಟೊಂದು ವ್ಯವಹಾರಸ್ಥೆ ಎಂದು ಗೊತ್ತಿದ್ದರೆ ಇನ್ನೊಂದೆರಡು ವರ್ಷ ಪ್ಲಾನ್ ಮಾಡಿ ಆಮೇಲೆ ಬಿಡುತ್ತಿದೆ.” ಎಂದ ಬಿಲ್ಲಿ. +” ಎನಿವೇ, ಕಂಗ್ರಾಟ್ಸ್ ಹೇಳಬೇಕೋ ಏನೋ ಗೊತ್ತಾಗುತ್ತಾ ಇಲ್ಲ. ಮುಂದಿನದೇನು ಪ್ಲಾನ್. ಡೇಟು, ಊಟ, ಪ್ರಪೋಸಲ್ಲು… ಮತ್ತೆ ಮೊದಲ ಮನೆಗೇ ವಾಪಸ್ಸು. ನಿಮ್ಮಗಳವ್ಯಾಪಾರವೇ ಅರ್ಥ ಆಗೋಲ್ಲ. ಎಲ್ಲ ಅನುಭವಿಸಿದ ಮೇಲೂ ಮತ್ತೆ ಯಾಕೆ ಇನ್ನೊಮ್ಮೆ ಮದುವೆ ಬೇಕು” +“ಮತ್ತೆ ಮದುವೆ ಆಗ್ತಾರೆ ಅಂದದ್ದು ಯಾರು” +” ಇದು ನಿನ್ನ ಎಷ್ಟನೇ ಮದುವೆ, “ಕೇಳಿದ ರವಿ. +“ಎರಡನೆಯದು. ಸಾಕಷ್ಟು ಬುದ್ಧಿ ಬಂದಿದೆ. ಮತ್ತೆ ಮದುವೆ ಅನ್ನೋ ಬಾವೀಲಿ ಬೀಳೋದಿಲ್ಲ. ಇನ್ನೇನಿದ್ದರೂ ಮದುವೆಯ ಹೊರಗಿನ ಸಂಬಂಧ ಮಾತ್ರ. ಯಾವಳಾದ್ರೂ ಸಿಕ್ಕರೆ. ನನ್ನ ಜೀವನ ನನ್ನದು, ಆಕೆಯದು ಆಕೆಗೆ. ಚೆನ್ನಾಗಿದ್ದರೆ ಮುಂದಿನ ಹಂತ. ಇಲ್ಲದಿದ್ದರೆ ಆಡಿಯೋಸ್” +“ಎಲ್ಲಿಯವರೆಗೆ” ಕುತೂಹಲದಿಂದ ಕೇಳಿದ ರವಿ. +” ಕೊನೆಯವರೆಗೆ” +“ಅಂಥವಳು ಸಿಗಬೇಕಲ್ಲ” +“ಹುಡುಕಿದರೆ ಸಿಕ್ಕೇ ಸಿಗ್ತಾರೆ, ರವಿ. ಇಬ್ಬರು ವ್ಯಕ್ತಿಗಳ ಸಂಬಂಧ ಒಂದು ವ್ಯವಸ್ಥೆ ಆಗೋದು ಮದುವೆಯಿಂದಲೇ. ಅದೊಂದು ವ್ಯವಸ್ಥೆ ಆದಮೇಲೆ ಅಲ್ಲಿ ಮೇಲಿನವ, ಕೆಳಗಿನವ, ನಿಯಮಗಳು ಎಲ್ಲಾ ಶುರೂ ಆಗ್ತವೆ. ಸರಕಾರ ತನ್ನ ಮೂಗು ತೂರಿಸುತ್ತೆ. ಐ‌ಆರ್‌ಎಸ್ ಒಟ್ಟಿಗೇ ತೆರಿಗೆ ಕೇಳುತ್ತೆ. ಎರದೂ ವ್ಯಕ್ತಿಗಳ ಹೆಸರು ಒಂದೇ ಚೆಕ್ಕಿನ ಮೇಲೆ ಬಂದಾಗ ಆಗೋ ರೋಮಾಂಚನ ಮೊದಲ ಮೂರು ದಿನಗಳು ಮಾತ್ರ. ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ತಲೆಕೆಟ್ಟರೂ ಸಾಕು, ಯಾವನೋ ಒಬ್ಬ ಒಳ್ಳೇ ಲಾಯರು ಬರ್ತಾನೆ. ಇಬ್ಬರೂ ಒಟ್ಟಿಗೆ ಇದ್ದಾಗ ಧಂಡಿಯಾಗಿ ಇದೆ ಅನ್ನಿಸಿದ್ದು ಸಮನಾಗಿ ಹೊಂಚಿಕೊಂಡರೆ ಎಲ್ಲ ಕಳಕೊಂಡಿದೀವಿ ಅನ್ನೋ ಭಾವನೆ ಇಬ್ಬರಿಗೂ ಬರುತ್ತದೆ. ಸರಕಾರ ಒಂದಿಷ್ಟು, ಲಾಯರ್ ಒಂದಿಷ್ಟು ಕಿತ್ಕೋತಾರೆ. ಪ್ರಾಕ್ಟಿಕಲ್ಲಾಗಿ ನೋಡಿದರೆ ಮದುವೆ ಅಷ್ಟು ಒಳ್ಳೇ ಬಿಸಿನೆಸ್ ಡಿಸಿಷನ್ ಅಲ್ಲ ಅನ್ನಿಸುತ್ತದೆ. ಮತ್ತೆಲ್ಲಾ ಆದಮೇಲೆ, ನಷ್ಟಕ್ಕೆ ಎಮೋಷನಲ್ ಬಣ್ಣ ಬೇರೆ. ಆದ್ದರಿಂದ ಇನ್ಮೇಲೆ ಯಾರಹತ್ತಿರಾನಾದ್ರೂ ಸಂಬಂಧ ಬೆಳೆಸಿದರೆ, ಅದು ಈ ಸಿಸ್ಟಂನ ಹತ್ತಿರ ಬರುತ್ತಿದೆ ಅನ್ನೋ ಹೊತ್ತಿಗೆ ನುಣುಚಿಕೊಳ್ಳುವಷ್ಟು ಜಾಣ್ಮೆ ಕಲಿಸ್ತಾ ಇದೆ. ಅದೇನಿದ್ರೂ ಒಂಥರಾ ವೃತ್ತಿಪರತೆ ಇದಹಾಗೆ. ನಿನ್ನ ಜೊತೆ ಇದೆಯಲ್ಲ ನನ್ನ ಸಂಬಂಧ, ಹಾಗೆ. ಅದು ವ್ಯವಸ್ಥಿತವಾಗೋದಕ್ಕೆ ಸಾಧ್ಯವೇ ಇಲ್ಲ. ಅನ್ಲೆಸ್……” ಎಂದು ಕಣ್ಣು ಹೊಡೆದ ಬಿಲ್ಲಿ. +ಎರಡೂ ಕೈ ಮೇಲೆತ್ತಿ ಭುಜ ಮೇಲೆ ಕುಣಿಸಿ ಬೆಳ್ಳನೆಯ “ಅಯ್ಯೋ” ಮಾಡಿದ, ರವಿ. ಅದರಲ್ಲಿ ಆಶ್ಚರ್ಯ, ಭಯ, ಚೇಷ್ಟೆ ಹಾಗೂ ನಿರಾಕರಣೆ ಎಲ್ಲವೂ ಕ್ರಮವಾಗಿದ್ದವು. +ರಾತ್ರಿ ಮನೆಗೆ ಬಂದ ರವಿ. ಗೀತ ಇನ್ನೂ ಮನೆಗೆ ಬಂದಿರಲಿಲ್ಲ. ಕೈ ಫ್ರಿಜ್ ಮೇಲಿನ ಜ್ಯಾಕ್ ಡೇನಿಯಲ್‌ಗೆ ಹೋದದ್ದು ಏಕೋ ತಡೆಯಿತು. ಪಕ್ಕದಲ್ಲಿದ್ದ ಮರ್ಲೋ ಬಗ್ಗಿಸಿಕೊಂಡ. ಫ್ರಿಜ್ಜಿನಲ್ಲಿದ್ದ ಹಸಿರು ಈರುಳ್ಳಿ ಹೆಚ್ಚತೊಡಗಿದ. +ಅವನಂದುಕೊಂಡಿದ್ದಕ್ಕಿಂತಾ ಸ್ವಲ್ಪ ಬೇಗಲೇ ಬಂದಳು, ಗೀತ. ರವಿಯ ಗ್ಲಾಸ್ ನೋಡಿ ನಕ್ಕಳು. ತಾನೂ ಮರ್ಲೋ ಬಗ್ಗಿಸಿಕೊಂಡಳು. ” ಅಡಿಗೆ ಮಾಡ್ತಿದೀಯ” ಕೇಳಿದಳು. +ಹೌದು ಎಂದು ನಕ್ಕ. +” ನಾನು ಚೈನೀಸ್ ತಂದಿದ್ದೇನೆ. ತಿಂತೀಯ. ನನಗೆ ಇಷ್ಟಾಂತ ತಂದೆ, ನನಗ್ಗೊತ್ತು, ನಿನಗೆ ಅಷ್ಟೊಂದು ಇಷ್ಟ ಇಲ್ಲಾ ಅಂತ. ” ಅಂದಳು. +” ಮತ್ಯಾಕೆ ತಂದೆ” +” ನನಗೋಸ್ಕರ” +” ನಾನೂ ಅಭ್ಯಾಸ ಮಾಡ್ಕೊಂಡರೆ” +” ನಾಳೆಯಿಂದ ಪ್ರಯತ್ನಪಡು ಬೇಕಾದರೆ. ಇವತ್ತು ನನಗೊಬ್ಬಳಿಗೆ ಸಾಕಾಗುವಷ್ಟು ತಂದಿದ್ದೀನಿ. ಬೇಕಾದರೆ ರುಚಿ ನೋಡು” ಎಂದು ತಂದಿದ್ದ ಅರ್ಧಕ್ಕಿಂತ ಜಾಸ್ತಿಯೇ ರವಿಯ ತಟ್ಟೆಗೆ ಹಾಕಿದಳು. +” ರುಚಿ ತುಂಬಾ ಚೆನ್ನಾಗಿದೆ.” ಹೇಳಿದ ರವಿ. +“ನಾನು ಮಲಗುತ್ತೇನೆ. ಸುಸ್ತಾಗಿದೆ.” ಹೇಳಿ ರೂಮಿಗೆ ಹೋದಳು. +” ನಾನೂ ಬಂದೆ.” ಬಾತ್‌ರೂಮಿಗೆ ಹೋಗಿ ಕೈಕಾಲು ತೊಳೆದು ದೇವರಪಟವನ್ನು ಕಣ್ಣಿಗೊತ್ತಿಕೊಂಡ. ತನ್ನ ಅವಸ್ಥೆ ನೋಡಿ ತನಗೇ ನಗು ಬಂತು. ಕೆಲವೊಂದು ಅಭ್ಯಾಸಗಳು, ಒಳ್ಳೆಯವೋ ಕೆಟ್ಟವೋ ಸುಲಭವಾಗಿ ಹೋಗುವುದಿಲ್ಲ ಅನ್ನಿಸಿತು. ಜೇಬಿನಲ್ಲಿ ಹಿಂದಿನ ದಿನ ಬರೆದಿಟ್ಟ ಚೀಟಿಯನ್ನೊಮ್ಮೆ ಬಿಡಿಸಿ ನೋಡಿದ. ಇದೇ ನಾಲ್ಕು ಕಾರಣಗಳನ್ನು ಸ್ವಲ್ಪ ತಿರುಚಿದರೆ ಆರಾಮಿರುತ್ತದೆ ಅಂದುಕೊಂಡ. ದೇವರಗೂಡಿನಲ್ಲಿ ಹೊರನಾಡ ಅನ್ನಪೂರ್ಣೇಶ್ವರಿಯ ಚಿತ್ರದ ಪಕ್ಕ ಹಳೇ ಇಂಗ್ಲಿಷ್ ಲಿಪಿಯಲ್ಲಿರುವ, ಗೀತ ಹಾಕಿದ್ದ ಬಿಬ್ಲಿಕಲ್ ಹೌದೋ ಅಲ್ಲವೋ ಗೊತ್ತಿಲ್ಲದ ಸುಭಾಷಿತವೊಂದನ್ನು ನೋಡಿದ. ಸರ್ವಧರ್ಮಸಮನ್ವಯವೆನ್ನುವ ಕಾನ್ಸೆಪ್ಟಿಗೆ ಹತ್ತಿರ ಬರುವ ಗೀತಳ ಪ್ರಯತ್ನವದಾಗಿತ್ತು. +“God +Grant me the serenity +to accept things that +I cannot change….. +courage to +change things that I can…. and +the wisdom to know the +difference.” +ಗಟ್ಟಿಯಾಗಿ ಓದಿದ. ಮೆದುವಾಗಿ “ಏಮನ್” ಅಂದ. +***** +ಜುಲೈ ೯, ೨೦೦೨ +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ. ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ. ನಾನು ವಾಸಕ್ಕಿದ್ದ ಮನೆಯ […] +ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_102.txt b/Kannada Sahitya/article_102.txt new file mode 100644 index 0000000000000000000000000000000000000000..b9435600ccd72db7867b10c5fc42a395b8a874a3 --- /dev/null +++ b/Kannada Sahitya/article_102.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? +ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? +ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? +ದೊರೆ, ಚರಾಚರ ರೂಪಗಳ ಈ ಬೆಳಕು ಯಾವ ಸೀಮೆಯದು? +ಆಶ್ಚರ್ಯ! ದೊರೆ, ಈ ಸದ್ದು ದೇವತೆಗಳ ಸೈನ್ಯದ್ದೆ? +ಅದ್ಭುತ! ದೊರೆ, ಎದ್ದ ಈ ನಗುವಿನ ಅಲೆ ಸ್ವರ್ಗದಪ್ಸರೆಯರದೆ? +ಯಾವ ದಿವ್ಯಗಾನವಿದು? ಆತ್ಮ ಹುಚ್ಚೆದ್ದು ಕುಣಿದಿದೆ +ಯಾವ ಶಿಳ್ಳೆಯದು? ಎದೆಯ ಹಕ್ಕಿ ರೆಕ್ಕೆ ಬಿಚ್ಚಿ ಚಡಪಡಿಸಿದೆ +ಯಾವ ಮದುವೆಯೂಟವಿದು? ಎಂಥ ಮದುವೆ? +ಸ್ವರ್ಗವೇ ಅಂತಃಪಟವಾದಂತೆ, ಬಂಗಾರ ಹರಿವಾಣದ ಚಂದ್ರನೇ ಬಂದಂತೆ +ಎಂಥಾ ಬೇಟೆ ಇದು? ವಿಧಿಯ ಬಾಣವೇ ಹಾರುತ್ತಿದೆ +ಅಲ್ಲವೆಂದರೆ ಈ ದಿವ್ಯ ಗಾಂಡೀವವೇಕೆ ಮಿಡಿದಿದೆ +ಬೆಸಗೊಳ್ಳಿರಿ, ಸಖಿಯರೆ, ಸುಭಸುದ್ದಿ +ತಟ್ಟಿ ಚಪ್ಪಾಳೆ, ಮಿಕ್ಕು ಮೀರಿ ಹೋಹ ಚಪ್ಪಾಳೆಯೊಡನೆ ಬಂದ +ಆಕಾಶಗಳ ಕೋಟೆಯಿಂದ ಅಭಯದ ದನಿ ಕೇಳಿದೆ +ಕಡಲ ತೆರೆಗಳ ಮಧ್ಯದಿಂದ ಎಂಥದೋ ಭಯ ಮೊರೆದಿದೆ +ಶ್ರೀಮಂತ ನಯನಗಳಿಗೆ ಸೊಕ್ಕೇರಿದೆ ನಿನ್ನ ದರ್ಶನದಿಂದ +ಕಣ್ಣಾರೆ ಕಂಡದ್ದಕ್ಕೆ ಸ್ವತಃ ಸಾಕ್ಷಿ ಹೇಳಿದೆ +ಬರಗಾಲದ ಬದುಕಿನಿಂದ ಹಾರಿ ಹೋಗು +ಅಗುಳಿಗಾಗಿ ಆತ್ಮಘಾತವಾಗುವ ಕಡೆಯಿಂದ ದೂರ ಸಾಗು +ಜೀವನಕ್ಕಿಂತ ಯಾವುದು ಸುಂದರ? +ಜೀವ ಹಾರಿತೆ, ಭಯವಿರಲಿ ದೂರ +ಜೀವ ಹಾರಿದ್ದಕ್ಕೆ ಅಳುವೇಕೆ? +ಜೀವದಾಗಮನಕ್ಕಿಂತ ಅದು ಒಳಿತಲ್ಲವೆ? +ಪ್ರತಿಯೊಬ್ಬನೂ ಎಂಥದಕ್ಕೂ ವಿಸ್ಮಯ ಶೀಲ +ನನ್ನ ವಿಸ್ಮಯದ ಮೂಲ! ಈತ ನಡುಮಧ್ಯವಿದ್ದೂ ಇಲ್ಲವಲ್ಲ +ಇದೇ ಶೂನ್ಯ, ನಾನು ವಿವರಿಸುವುದಿಲ್ಲ +ಏನು ವಿವರಿಸುತ್ತಿದ್ದಿ? +ಅಗೊ ವಿವರಗಳಾತ್ಮವೇ ಬಂದ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_103.txt b/Kannada Sahitya/article_103.txt new file mode 100644 index 0000000000000000000000000000000000000000..8c29a6f53f94878e8aadac6ae65204df7c636cef --- /dev/null +++ b/Kannada Sahitya/article_103.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ +ಈ ಗೀತೆ ಪ್ರತಿವರ್ಷವೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಚಿತ್ರರಂಗದ ಅನವಶ್ಯಕವಾದ ವಿವಾದಗಳನ್ನು, ಬಾರದ ಟೀಕೆ ಟಿಪ್ಪಣಿಗಳನ್ನು ಕೇಳಿ ಕೇಳಿ ಸಾಕಾಗಿದೆ. +ವಾದ ಬೆಳಸಿ ಯಾವ ಲಾಭ +ಸಾಕು ನಿಲ್ಲಿಸು ಮಾತನು +ಒಡೆದ ಮುತ್ತು ಕೊಡಬಹುದೆ? +ಒಲಿದು ಒಲಿಸಿ ಸೋತೆನು +ಯಾರು ಯಾವುದೇ ಬಗೆಯ ಚಿತ್ರ ತೆಗೆಯಲಿ, ಅದು ಸದಭಿರುಚಿಯಿಂದ ಕೂಡಿದ್ದು ಮನೆಮಂದಿ ಎಲ್ಲ ಒಟ್ಟಿಗೆ ನೋಡುವಂತಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನು ಬೇಕು? ಇದು ವ್ಯಾಪಾರೀ ಚಿತ್ರ – ಅದು ಕಲಾತ್ಮಕ ಚಿತ್ರ ಇನ್ನೊಂದು ಎಡಬಿಡಂಗಿ ಚಿತ್ರ ಎಂದು ವಾದ – ಪ್ರತಿವಾದ ಹೂಡುವುದರಲ್ಲೇ ಜೀವ ಸವೆಸುವುದರಲ್ಲಿ ಅರ್ಥವಿದೆಯೆ? +ಹೊಸ ಮುಖಗಳು ಬರುತಲಿವೆ +ಚಿತ್ರರಂಗದಲ್ಲಿ +ಅವರ ಮೆಚ್ಚೊ ಅಭಿಮಾನಿಗಳು +ಬೇಕು ಹೆಚ್ಚು ಸಂಖ್ಯೆಯಲ್ಲಿ +ನಿಜ….ಕನ್ನಡ ಚಿತ್ರರಂಗದಲ್ಲಿ ಈಗೊಂದಷ್ಟು ಹೊಸ ಮುಖಗಳು ಬರುತ್ತಿವೆ. ಸುದೀಪ್ ಸಂಜೀವ್, ರೇಖಾ, ಪ್ರಭುದೇವ ಸೋದರ ಪ್ರಸಾದ್, ಮತ್ತೊಬ್ಬಳು ರೇಖಾ, ಬಿ.ಸಿ.ಪಾಟೀಲ್, ಎಸ್. ಮಹೇಂದರ್‍, ಹೇಮಂತ್ ಹೆಗಡೆ, ಮುಂತಾದವರು ಚಿತ್ರ ನಟರಾಗಿ ತೆರೆಯ ಮೇಲೆ ಬಂದರೆ, ಮುನ್ನುಡಿ ಶೇಷಾದ್ರಿ, ಕವಿತಾ ಲಂಕೇಶ್, ಟಿ.ಎನ್. ಸೀತಾರಾಂ, ರಾಮದಾಸ ನಾಯಿಡು, ಅಶೋಕ್ ಪಾಟೀಲ್ ಮುಂತಾದವರು ನಿರ್ದೇಶನದಲ್ಲಿ ಹೊಸತನ ಚುಮುಕಿಸುತ್ತಿದ್ದಾರೆ. ವ್ಯಾಪಾರಿ ಚಿತ್ರಗಳಲ್ಲಿ ಅನೇಕ ನಟನಟಿಯರು ಮಿಂಚಿ ಅನುಪ್ರಭಾಕರ್‍ ಜನಪ್ರಿಯ ನಟಿ ಎನಿಸಿ, ಪ್ರೇಮಾ, ಶೃತಿ ಮುಂತಾದವರ ಪಕ್ಕಾ ಬಂದು ನಿಲ್ಲುತ್ತಿದ್ದಾಳೆ. ಹೊಸ ಪ್ರತಿಭೆಗಳು ಹೆಚ್ಚಬೇಕಿದ್ದಲ್ಲಿ ಚಿತ್ರರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹ ನೀಡಬೇಕು. ಟಿ.ವಿ. ಮುಂದೆ ಕೂರುವುದು ಬಿಟ್ಟು ಚಿತ್ರಮಂದಿರಗಳತ್ತ ಟಿಕೇಟ್ ಕೊಳ್ಳಲು ತೆರಳಬೇಕು. +ಚಿತ್ರರಂಗದವರಿಗೀಗ +ಆಲ್ ಇನ್ ಆಲ್ ಹುಚ್ಚು +ಶ್ರದ್ಧೆ-ಭಕ್ತಿ-ಇದ್ದರೆ ಮಾತ್ರ +ಚಿತ್ರ ಅಚ್ಚುಮೆಚ್ಚು +ಯುಗಾದಿ ಅನಿಸಿಕೆಯೂ ತುಂಬಾ ಅರ್ಥಪೂರ್ಣ. ರವಿಚಂದ್ರನ್ ನಿರ್ಮಾಪಕರಾಗಿ ನಟರಾಗಿ ನಿರ್ದೇಶಕರಾಗಿ ಹೆಸರಾಗಿ ಕನ್ನಡ ಚಿತ್ರರಂಗಕ್ಕೆ ಗ್ರಾಂಜರ್‍ ತಂದರು. ಅನಂತರ ಅವರೇ ಸಂಗೀತ ನಿರ್ದೇಶಕರೂ ಆಗಿ ಹಾಡುಗಳನ್ನು ಬರೆಯ ಹೊರಟರು. ಸ್ಟುಡಿಯೋ ಓನರ್‍ ಆಗಿ ಎಲ್ಲ ಇಲ್ಲೇ ಬರಬೇಕೆಂದು ಒತ್ತಾಯವೂ ಹಾಕಿ ಆಲ್ ‘ಇನ್ ಆಲ್’ ಆಗಲು ಯತ್ನಿಸಿದರು. ನಟ ನಿರ್ಮಾಪಕರಾಗಿದ್ದ ಬಿ.ಸಿ.ಪಾಟೀಲ್ ನಿರ್ದೇಶಕನೂ ಆಗಲೂ ಮುಂದಾದರು. ಎಸ್.ಮಹೇಂದರ್‍ ನಿರ್ದೇಶಕನಾದ ನಾನು ಹೀರೋ ಕೂಡ ಆಗಬಲ್ಲೆ ಎಂದು ಗಟ್ಟಿಮೇಳ ತೆರೆಗಿತ್ತರು. ನಟರಾಗಿ ಜನಪ್ರಿಯರಾದ ವಿಷ್ಣು ಹೀರೋ ಪಾತ್ರದ ಜತೆ ವೃದ್ಧನ ಪಾತ್ರವೂ ಇರಲೆಂದು ಡಬ್ಬಲ್ ರೋಲ್ ಕಥೆಗಳನ್ನೇ ಆರಿಸತೊಡಗಿದ್ದರು. ದಿನೇಶ್ ಬಾಬು ಕಥೆ ಚಿತ್ರಕಥೆ-ಸಂಭಾಷಣೆ. ಕ್ಯಾಮರಾ ನಿರ್ದೇಶನ ಎಲ್ಲಕ್ಕೂ ಕೈಚಾಚಿದರು. ನಟ-ನಿರ್ಮಾಪಕ ಎಸ್. ನಾರಾಯಣ್ ಹೀರೋ ಆಗಿ ಮಿಂಚುತ್ತಾ ಟಿ.ವಿ. ಸೀರಿಯಲ್ ಮೆಗಾ ಧಾರವಾಹಿ ನಿರ್ದೇಶಕರಾಗಿ ಮುಂದುವರೆಯುತ್ತಾ ಟಿ.ವಿ. ಸೀರಿಯಲ್ ಮಾತ್ರ ಸಬ್‌ಕಾಂಟ್ರಾಕ್ಟ್ ಕೊಡತೊಡಗಿದರು. +ನಾಗಾಭರಣ, ಡಿ.ರಾಜೇಂದ್ರಬಾಬು, ನಾಗತಿಹಳ್ಳಿ ಸಹಾ ಹಿರಿ ಮತ್ತು ಕಿರುತೆರೆಯಲ್ಲಿ ‘ಆಲ್ ಇನ್ ಆಲ್’ ಆಗಲು ಹೊರಟಿದ್ದಾರೆ. ಜಗ್ಗೇಶ್ ನಟರಾದರು – ನಿರ್ಮಾಪಕರಾದರು, ಗಾಯಕರಾದರು ಈಗ ಅವರಿಗೆ ನಿರ್ದೇಶಕರಾಗುವ ಹುಚ್ಚು. ಚಿತ್ರ ಜನರಿಗೆ ಅಚ್ಚುಮೆಚ್ಚು ಎನಿಸುವುದು ‘ಸಿನ್ಸಿಯಾರಿಟಿ’ ಇದ್ದಾಗ ಮಾತ್ರ. +ಗೆಲ್ಲುವ ಕುದುರೆ ಬಾಲಕ್ಕೇ +ಎಲ್ಲ ಹಣವನು ಕಟ್ಟುವರು +ಸೋತ ಕುದುರೆಯನ್ನು +ಎಲ್ಲ ಕಸದ ತೊಟ್ಟಿಗೆ ತಳ್ಳುವರು +ಚಿತ್ರರಂಗಕ್ಕಂತೂ ಈ ಸಾಲುಗಳು ತುಂಬಾ ಸೂಕ್ತ. ಓಂ ಪ್ರಕಾಶ್‌ರಾವ್ ಎ.ಕೆ.೪೭ ನಿರ್ದೇಶಿಸಿದಾಗ ಎಲ್ಲ ‘ಆಹಾ’ ಎಂದರು. ‘ವಂದೆ ಮಾತರಂ’ ಅಡ್ರೆಸ್‌ಗಿಲ್ಲದೆ ಮಲಗಿದಾಗ ‘ಛೀ-ಥೂ’ ಎಂದರು. ಆಗಲೇ ಓಂ ಪ್ರಕಾಶ್ ‘ಪೊಲೀಸ್ ಡೈರಿ’ ಸೀರಿಯಲ್ ಮಾಡ ಹೊರಟಿದ್ದು, ಹೇಗೋ ಏನೋ ‘ಸೇತು’ ಅವರ ಕೈಸೇರಿ ‘ಹುಚ್ಚ’ ಆಯಿತು. ‘ಹುಚ್ಚ’ ನಂತರ ಭವ್ಯ ಪಮ್ಮೆಯ್ಯಳೊಂದಿಗೆ ೨ನೇ ಮದುವೆಯೂ ಆಯಿತು. ಈಗ ಹುಚ್ಚನ ಕಥೆ ಮುಗಿದಿದೆ ‘ಜಿಲ್ಲಾಧಿಕಾರಿ’ ಎನ್ನುತ್ತಿದ್ದಾರೆ ರಾಮು. +‘ಹಾಲಿವುಡ್’ ನಿರ್ದೇಶನದ್ದು ಹಲವು ಹಗರಣಗಳಾದುವು. ಧನರಾಜ್ ಚಿತ್ರದಲ್ಲಿ ಉಪೇಂದ್ರ ಪ್ರಭುದೇವ ಅಭಿನಯಿಸುವ ಸಂದರ್ಭ ಬಂದಾಗ ಹೊಸ ನಿರ್ದೇಶಕರಿಬ್ಬರು ಬಂದರು. ಯಜಮಾನ ಅದ್ಭುತ ಯಶಸ್ಸು ಗಳಿಸಿತು. ಆದರೆ ಪಾಪ! ನಿರ್ದೇಶಕ ಶೇಷಾದ್ರಿ ತೀರಿಕೊಂಡರು. ಅದೃಷ್ಟ ಕಾಲನೊಡನೆ ಪೈಪೋಟಿಗಿಳಿದಾಗ ಯಾರು ಯಾರ ಮೇಲೆ ಯಾವಾಗ ಸವಾರಿ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. +ಕತೆ, ಕಾದಂಬರಿ ಮರೆತಿಹರೆಲ್ಲ +ಕ್ಯಾಸೆಟ್ ಸಂಸ್ಕೃತಿ ಹೆಚ್ಚಿದೆಯಲ್ಲ +ಕನ್ನಡದಾ ಕಂಪು +ಮಾಯವಾಯಿತಲ್ಲ. +ನಿಜ. ಈಗ ೨೦ಕ್ಕೂ ಹೆಚ್ಚು ರೀಮೇಕ್ ಚಿತ್ರಗಳು ಬರಲಿವೆ. ಕ್ಯಾಸೆಟ್ ಸಂಸ್ಕೃತಿಯದೇ ರಾಜ್ಯಭಾರವಾದಾಗ ಕನ್ನಡ ನೆಲ-ಜಲ-ಸಂಸ್ಕೃತಿ ಮಣ್ಣುಪಾಲಾದಂತೆಯೇ! +‘ಮಕ್ಕಿಕಾ ಮಕ್ಕಿ, ಜೆರಾಕ್ಸ್ ಕಾಪಿ ಆದಾಗ ಸೃಜನಶೀಲತೆ ಎಲ್ಲಿ ಸಾಧ್ಯ?’ ಅಂದರು ಸುನೀಲ್ ಕುಮಾರ್‍ ದೇಸಾಯಿ. ಎಂಥ ಸತ್ಯದ ಮಾತು. +ಮೂಢನಂಬಿಕೆ ಬಿತ್ತುವರೆಲ್ಲ +ಪವಾಡ ಪ್ರಿಯರೆ ಆಗಿಹರೆಲ್ಲ +ಗ್ರಾಫಿಕ್ಸ್ ಹೆಸರಲಿ ಗೆಲ್ಲುವ ಕನಸು +ಮೋಸದ ಆಟ ಎಲ್ಲೆಲ್ಲು ಹುಲುಸು +‘ದುರ್ಗಾಶಕ್ತಿ, ನಾಗದೇವತೆ, ಗ್ರಾಮದೇವತೆಯಂಥ ಚಿತ್ರಗಳೇ ಈ ಮಾತಿಗೆ ಸಾಕ್ಷಿ. ನೀಲಾಂಬರಿಯೂ ಈ ದಿಕ್ಕಿನಲ್ಲೇ ಚಲಿಸೀತೇನೋ ಎಂಬ ಗುಮಾನಿ ಇದೆ. ನಿರ್ಮಾಪಕ, ನಟ, ನಿರ್ದೇಶಕರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದಲ್ಲಿ ಚಿತ್ರಗಳು ಹಣ ಕಸಿಯುವುದನ್ನೇ ಗುರಿ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ. +ಫೈಟಿಂಗ್ ಹೆಸರಲಿ ಮಾರಣ ಹೋಮ +ಭ್ರಷ್ಟಾಚಾರದ ಬಗೆ ಬಗೆ ಡ್ರಾಮ +ಆದರ್ಶ ಮೌಲ್ಯಕ್ಕೆ ಎಳ್ಳುನೀರು +ಎಲ್ಲಿದೆ ಪ್ರೀತಿ-ಪ್ರೇಮಗಳ ಸ್ನೇಹದ ಖೀರು +ಆಕ್ಷನ್ ಫಿಲಂ ಹೆಸರುಗಳಲ್ಲಿ ಬರುವ ರಾಷ್ಟ್ರಗೀತೆಯಂಥ ಚಿತ್ರವನ್ನು, ಪೊಲೀಸ್‌ನವರು ಭ್ರಷ್ಟಾತಿಭ್ರಷ್ಟರೆಂದು ಸಾರುವ ಚಿತ್ರಗಳು ಯುವ ಜನಾಂಗಕ್ಕೆ ಯಾವ ಆದರ್ಶ ಮೌಲ್ಯಗಳನ್ನು ಸಾರೀತು. +ಅವನನ್ನು ಇವನು ತುಳಿದು +ಇವನನ್ನು ಅವನು ತುಳಿದು +ತಾನು ಮಾತ್ರ ಮಿಂಚುವಂಥ +ವೀರಾಗ್ರಣಿಗಳೆ ಎಲ್ಲೆಲ್ಲೂ +ಚಿತ್ರರಂಗದವರೆಲ್ಲ ಮೈಕ್ ಮುಂದೆ ‘ನಾವೆಲ್ಲ ಒಂದು ಕುಟುಂಬದವರು’ ಎನ್ನುತ್ತಾರೆ. ಚಿತ್ರ ಬಿಡುಗಡೆ ಸಮಯದಲ್ಲಿ ಪೈಪೋಟಿ ಪ್ರಾರಂಭ. ಚಿತ್ರ ಮಂದಿರದ ಮಾಲೀಕರ ಮರ್ಜಿಗನುಗುಣವಾಗಿ ಈ ಚಿತ್ರವನ್ನು ಆ ಚಿತ್ರ, ಆ ಚಿತ್ರವನ್ನು ಈ ಚಿತ್ರ, ಕಡೆಗೆ ನಾಯಕ-ನಾಯಕಿಯರ ಅವರವರದೇ ಚಿತ್ರ ಫೈಟಿಂಗ್‌ಗಿಳಿವ ದಿನಗಳಿವು. ಮುಂದಿನ ಯುಗಾದಿಯ ಹೊತ್ತಿಗೆ ಚಿತ್ರ ಬದಲಾಗಿ-ಬ್ರೈಟ್ ಫ್ಯೂಚರ್‍ ಬೆಳಗಲಿ ಎಂಬುದು ಈ ಯುಗಾದಿ ಅಂಬೋಣ. +***** +(೨೩-೩-೨೦೦೧) +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ. […] +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_104.txt b/Kannada Sahitya/article_104.txt new file mode 100644 index 0000000000000000000000000000000000000000..a89e9870cf7ed31b2134d86cdb65a34470c01dc7 --- /dev/null +++ b/Kannada Sahitya/article_104.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವರು ಹೀಗಿರುವುದು ನಮ್ಮ ಅದೃಷ್ಟ, +ಹೀಗಿರದೇ ಹಾಗೆ – +’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! +ಬೇಕಾದ್ದು ಮಾಡಬಹುದು +ಎಂದೂ ಏನೂ ಅಂದಿಲ್ಲ. +ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, +ಪುರಸೊತ್ತ೦ತು ಮೊದಲೇ ಇಲ್ಲ. +ನಮಗಂತೂ ಅವರ ಪಕ್ಕದಲ್ಲೇ ಜಾಗ. +ಅತ್ತ ಮೇಜು, ಕುರ್ಚಿ, ಟಿವಿ; ಇತ್ತ ನಾವು! +ಮತ್ತೆಲ್ಲ ಕಡೆ ರಾಶಿ ರಾಶಿ ಸಾಮಾನು. +ಸಂಜೆಗೆ ತಂಗಲೊಂದು ಮನೆ, +ರುಚಿಗೆ ತಕ್ಕ ಊಟ, ಮಲಗಲೊಂದಷ್ಟು ಜಾಗ… +ಮೂಲಭೂತ ಬೇಕುಗಳಲ್ಲೇ ಸಂತೃಪ್ತ. +ಸರ್ವೇಜನಾ ಸುಖಿನೋಭವಂತು! +ಬುದ್ಧನ ಅಪರಾವತಾರ. +ಆಸೆ ಇಲ್ಲ, ಅಹಂಕಾರವಿಲ್ಲ, ಕಾಮ ಮೋಹಗಳಿಲ್ಲ, +ಈ ಇಲ್ಲಗಳ ಬಾಲಗೋಚಿ ಅಳೆದು ನೋಡಿದರೆ, +ಕಡೆಗೆ ಏನೂ ಇಲ್ಲ. +ಸ್ವಯಂಕೇಂದ್ರಿತ ಅಹುದುಗಳಿಗೆ ಅಹುದೆನ್ನವ +ಕೂಪಮಂಡೂಕ. +ಬಟ್ಟೆ, ಪಾತ್ರೆ, ಅಡಿಗೆ… +ನಾವು ಮಾಡುವುದು ನಿತ್ಯಕರ್ಮ! +ಹುಣ್ಣಿಮೆಗೋ ಅಮಾವಾಸ್ಯೆಗೋ +ತಮ್ಮ ನಾಲಿಗೆ ರುಚಿಗೆ ತಾವು ಬೇಯಿಸಿಕೊಂಡದ್ದು +ನಮಗೆ ಮಾಡಿದ ಉಪಕಾರ? +ತಿಳಿದೇ ಇರಲಿಲ್ಲ ಇಂಥದ್ದನ್ನೆಲ್ಲಾ ಗಮನದಲ್ಲಿಡಬೇಕೆಂದು. +ಅವರು ಹೀಗಿರುವುದು ನಮ್ಮ ಅದೃಷ್ಟ, +ಹೀಗಿರದೇ “ಹಾಗೆ”- +`ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! +ಛೆ! +ಎಷ್ಟು ದುರಹಂಕಾರ ನಮಗೆ!! +***** +ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […] +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_105.txt b/Kannada Sahitya/article_105.txt new file mode 100644 index 0000000000000000000000000000000000000000..79e286663a63c38d19d9ceed826070e60dbb75e8 --- /dev/null +++ b/Kannada Sahitya/article_105.txt @@ -0,0 +1,202 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. +“ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” +“ನಿಮ್ಮನ್ನ ಬಿಟ್ಟು ಅವರೆಲ್ಲಿ ಹೋಗತಾರ ತಡೀರಿ; ಈಗ ಹೇಳಿ ಕಳಸ್ತಾರ” ಅಂದ. ಅದೂ ನಿಜವೇ. ಗೌಡನಿಗೆ ತಾನು ವಕೀಲಿ ಪಾಸಾದದ್ದು ಗೊತ್ತಿಲ್ಲವೆ? ಏನು ಮಾಡೋಣವೆಂದು ಕೇಳಲಿಕ್ಕೆ ಬಂದೇ ಬರುತ್ತಾನೆ. ಬಂದಾಗ ಹೋದರಾಯಿತು ಎಂದುಕೊಂಡು ಕುತೂಹಲ ತಾಳಿಕೊಂಡು ಸುಮ್ಮನೇ ಕೂತ. +ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌಡನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತುಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಟಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೆ ಮಲಗಿದ್ದ ಮಗ ಕಾಣದಷ್ಟು ಕುರುಡಾಗೋದಂದರೇನು? ಮನುಷ್ಯ ಸಹನೆಗೂ ಮಿತಿ ಇಲ್ಲವೆ? ಇಷಲ್ಲದ ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು ಸಿಟ್ಟು ನಿಂಗೂನ ಕಣ್ಣು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು? +ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು, ಹೋಗುವ ಮುನ್ನ ಗೌಡನಿಗೆ ನಮಸ್ಕಾರ ಮಾಡಿ ಅವನಿಂದ ಕಾಯಿ ತಗೊಂಡು ಹೋಗುವದು ಪದ್ಧತಿ. ಅವರು ಗೌಡನ ಮನೆಗೆ ಹೋಗೋಣ, ಗೌಡ ಇಲ್ಲದಿರೋಣ, ಏನೇನೋ ಸಂಶಯಗಳೇಳೋಣ. ಆಗಲೇ ಈ ಸುದ್ದಿ ಎಷ್ಟು ಮಂದಿಗೆ ಗೊತ್ತಾಗಿದೆಯೋ, ಗೊತ್ತಾಗುವ ಮುನ್ನವೇ ಇದಕ್ಕೊಂದು ಮುಕ್ತಾಯ ಕೊಡಬೇಕೆಂದು ಇಬ್ಬರ ತವಕ. ಯೋಚಿಸುತ್ತ ಹೆಣ ಕಾಯುತ್ತ ಇಬ್ಬರೂ ಕೂತರು. ನಿಂಗೂ ಇನ್ನೂ ಬಂದಿರಲಿಲ್ಲ. +ಅಷ್ಟರಲ್ಲಿ ನಿಂಗೂ ಗುಡಸೀಕರ ಮತ್ತು ಕಳ್ಳ ಸಿದ್ದರಾಮನೊಂದಿಗೆ ಬಂದ. ದತ್ತಪ್ಪನ ಮೈಮುರಿಯಿತು. ಏನೋ ಮಾಡಿ ಈ ಮಗನ್ನ ಪಾರು ಮಾಡೋಣವೆಂದರೆ ಇದ್ದದ್ದೂ ಹೋಗಿ ಗುಡಸೀಕರನನ್ನು ಕರೆತಂದನಲ್ಲಾ ಎಂದುಕೊಂಡು ‘ಛೀ’ ಅಂದ. ಗೌಡನಿಗೆ ಅರ್ಥವಾಯಿತು. ಆದರೆ ಅವನಿಗೆ ಮನುಷ್ಯರ ಮೇಲೆ ಭಾರೀ ವಿಶ್ವಾಸ, “ಬಾ ಹುಡುಗಾ ನೀನೂ ಬಂದಿ, ಛೆಲೋ ಆತು” ಅಂದ. ಗುಡಸೀಕರ ನಿರ್ಲಕ್ಷ್ಯ ಮಾಡಿ ಗುಡಿಸಲು ಬಾಗಿಲು ತೆಗೆದು ಒಳಕ್ಕೆ ನೋಡಿ, ನೋಡಲಾರದೇ ಹೊರಗೆ ಬಂದ. ಗೌಡ, “ಕೂಡ ಬಾ” ಅಂದ. ಹೋಗಿ ಕೂತ. ಕಳ್ಳನಿಗೆ ಬಾಗಿಲು ಹಾಕಲಿಕ್ಕೆ ಹೇಳಿದರು, ಹಾಕಿದ. ಗುಡಸೀಕರನೂ ಹೆಣ ನೋಡಿ ಬೆವರಿದ್ದ. ಹತ್ತು ನಿಮಿಷ ಯಾರೂ ಮಾತಾಡಲಿಲ್ಲ. ನಿಂಗೂವನ್ನು ಬಿಟ್ಟು ಉಳಿದವರೆಲ್ಲ ನಿಶ್ಚಲರಾಗಿ ಕಲ್ಲಿನಂತೆ ಕೂತುಬಿಟ್ಟರು. ನಿಂಗೂ ಮಾತ್ರ ಅವನ ಮುಖವನ್ನೊಮ್ಮೆ ಇವನ ಮುಖವನ್ನೊಮ್ಮೆ ನೋಡುತ್ತ ಕಣ್ಣೀರು ಸುರಿಸುತ್ತ ದೀನನಾಗಿ, ಹೆದರಿ ತನ್ನ ಗತಿಯೇನಾಗುವುದೋ ಎಂದು ಚಡಪಡಿಸುತ್ತಿದ್ದ. +ಕೊನೆಗೆ ಗೌಡನೇ ಬಾಯಿಬಿಟ್ಟ- +“ದತ್ತೂ ಗುಡಿಸಲಕ ಬೆಂಕಿ ಹಚ್ಚಿದರ ಹೆಂಗ?” +“ಬರೋಬರಿ” ಅಂದ ದತ್ತಪ್ಪ. +ದತ್ತಪ್ಪ ಸೈ ಅಂದರಾಯ್ತು. ಅದು ಸರಿಯಾದ ತೀರ್ಮಾನವೆಂದೇ ಗೌಡನ ಲೆಕ್ಕ. “ನಿಂಗ್ಯಾ ಹೆಣ ಹೊರಗ ತಗೀಬ್ಯಾಡ. ಇಂದ ರಾತ್ರಿ ಗುಡಿಸಲಕ ಬೆಂಕಿ ಹಚ್ಚು. ಯಾರಿಗೇನೂ ಹೇಳಬ್ಯಾಡ. ಬೆಳಿಗ್ಗೆದ್ದ ಇಬ್ಬರೂ ಗುಡಿಸಲದಾಗ ಸುಟಗೊಂಡ ಸತ್ತರಂತ ಮಂದಿಗೆಲ್ಲಾ ಹೇಳು.” +ಗುಡಸೀಕರನಿಗೆ ಸಿಡಿಲು ಬಡಿದಂತಾಯ್ತು. ಇದು ಹೇಳಿ ಕೇಳಿ ಖೂನಿ ಕೇಸು. ಇದರಲ್ಲಿ ತಾನಲ್ಲದೇ ಇನ್ನು ಯಾರು ಸಲಹೆ ಕೊಡಬಲ್ಲರು? ಅದು ಬಿಟ್ಟು ಹಳ್ಳಿಯ ಗಮಾರ ಮುದಿಯರಿಬ್ಬರು ತಾವೇ ಕಾನೂನು ಬಲ್ಲವರಂತೆ ಕೇಸು ಮುಚ್ಚುತ್ತೇವೆಂದರೆ ದಡ್ಡತನಕ್ಕೊಂದು ಮಿತಿ ಬೇಡವೆ? ಗೌಡನಿಗೆ ಬುದ್ಧಿ ಬೇಡವೆ? ತಾನು ಮನೆಯಲ್ಲಿ ಕೂತಿದ್ದರೆ ಕರೆಸಲೇ ಇಲ್ಲ. ಹೋಗಲಿ, ಹೆಂಗೋ ಕಳ್ಳನೇ ನಿಂಗೂನನ್ನು ಬಳಿಗೆ ಕರೆತಂದ. ತಾನಿಲ್ಲಿಗೆ ಬಂದದ್ದಾಯಿತು. ಬಂದ ಮೇಲೂ ತನ್ನ ಬಗ್ಗೆ ಈ ನಿರ್ಲಕ್ಷ್ಯವೇ? ಈ ಹದ್ದುಗಳು ತನ್ನನ್ನೊಂದು ಹುಲ್ಲುಕಡ್ಡಿಗೆ ಸಮನ ಮಾಡುವುದೆಂದರೇನು? ಖೂನಿ ಅಂದರೇನು! ಸಣ್ಣ ಬಾಬತ್ತೆ? ಕೋರ್ಟಿದೆ, ಕಾನೂನಿದೆ, ಕಾಯ್ದೆ ಕಣ್ಣಲ್ಲಿ ಮಣ್ಣೆರೆಚುವ ಕೆಲಸವನ್ನು ಹಾಡಹಗಲೇ ಮಾಡುತ್ತಾನಲ್ಲ ಇವನ ಮುದಿ ಧೈರ್ಯ ಎಷ್ಟು? ಹೋಗಲಿ ತನ್ನನ್ನಾದರೂ ಕೇಳಿದನೆ? ದತ್ತೂನನ್ನು ಕೇಳಿದನಲ್ಲ! ಇವರಿಗೆ ಬುದ್ಧಿ ಕಲಿಸಬೇಕೆಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಬಿಟ್ಟ ಗುಡಸೀಕರ. +“ಬೆಂಕಿ ಹಚ್ಚಿ ಕಾಯ್ದೆ ಕಾನೂನು ಯಾಕ ಮೈಮ್ಯಾಲ ಹಾಕ್ಕೋತೀರಿ? ಸುಮ್ಮನೆ ಪೋಜುದಾರನ್ನ ಕರಸಿ ಪಂಚನಾಮೆ ಮಾಡಸರಿ” ಅಂದ. +“ಕಾಯ್ದೇ ಕಾನೂನು ನಮಗೂ ಗೊತ್ತವ ಏನಪಾ,-ಆದರ….” +ಎಂದು ದತ್ತಪ್ಪ ಬಾಯಿ ಹಾಕಿದ. ಗೌದ ಅಷ್ಟಕ್ಕೇ ತಡೆದು +“ಕಾಯ್ದೆ ಕಾನೂನಂದರ ಸಣ್ಣ ಮಾತಲ್ಲಪಾ, ಕೆಟ್ಟ ಇಂಗರೇಜಿ ಸರಕಾರ, ಕೇಸ ಬೆಳಗಾಂವಿಗೆ ಹೋದರ ನಿಂಗೂ ಉಳಿಯಾಣಿಲ್ಲ. ಸುಮ್ಮನ ಎಲ್ಲಾರೂ ಕೂಡಿ ಒಬ್ಬಗ ತಿಳಿತು, ತಿಳೀಲಿಲ್ಲ ಅಷ್ಟರಾಗ ಮುಗಿಸಿಬಿಡೋಣ.” +“ನಿಂಗೂ ಯಾಕ ಉಳಿಯಾಣಿಲ್ಲ?” +“ಯಾಕಂದರ ತಪ್ಪು ಮಾಡ್ಯಾನ-ಅದಕ್ಕ” +“ತಪ್ಪು ಮಾಡಿದ್ದಽ ಖರೆ ಆದರ ಅನುಭವಿಸಲಿ” +“ಅಂದರೇನು ನಿಂಗೂನ ಜೈಲಿಗೆ ಕಳಿಸೋಣಂತೀಯೇನು?” +“ಜೇಲಿಗೆ ಯಾಕ ಹೋಗಬೇಕು? ಅವನ ಪರವಾಗಿ ನಾ ವಕೀಲಿ, ಹಿಡೀತೀನಿ” ಎಂದ ಗುಡಸೀಕರ, ತನ್ನ ಮಾತಿನಲ್ಲಿಯ ವಿರೋಧ ಗುರುತಿಸಿದ. ಈ ಹುಡುಗ ಯಾರ ಪರವಾಗಿದ್ದಾನೆಂದು ದತ್ತಪ್ಪನಿಗೆ ತಿಳಿಯದಾಯ್ತು. +“ನೋಡಪಾ ಗುಡಸೀಕರ, ನೀ ವಕೀಲ್ಕಿ ಹಿಡೀತೀನಂತೀಯಲ್ಲಾ, ಬರೋಬರಿ. ಹಿಡಿದ ಏನ್ ಮಾಡತಿ? ವಾದಾ ಮಾಡಿ ನಿಂಗೂನ ಉಳಿಸಬೇಕಂತಿ! ಇಲ್ಲೇ ಈಗಽ ಉಳಿಸಲ್ಲ. ಹಾಂಗಽ ನೋಡಿದರ ಕೋರ್ಟಿಗೆ ಹೋದಮ್ಯಾಲ ಹೇಸ ಹಾಂಗ ಆದೀತು, ಹೀಂಗ ಆದೀತು-ಅಂತ ಹೇಳಾಕ ಬರತೈತೇನು? ನಿನ್ನ ಕೈಗೂ ಮೀರಿದ್ದದು. ವಾದಾ ಮಾಡತಿ, ಕೂರತಿ. ನಿಂಗೂಗ ಏನ ಮಾಡಬೇಕಂತ ಹೇಳವರು ಯಾರು? ಜಜ್ಜ ಸಾಹೇಬನ? ನೀನ? ಖೂನಿ ಮಾಡ್ಯಾನಂದಮ್ಯಾಲ ಫಾಸಿ ಶಿಕ್ಷಾ ಆಗಬೇಕಂತ ಅಂದರ? ಆಗ ಏನ ಮಾಡತಿ?” +“ಹಾಂಗಂತ ಕಾಯ್ದೆ ಕಾನೂನು ಮೀರಾಕ ಆದೀತೇನ್ರಿ?” +“ಮೀರಾಕ ನಾವೇನೀಗ ಅನ್ಯಾಯ ಮಾಡಕ ಹತ್ತೀದೇವು?” +“ಹಾಂಗಂದರ ಖೂನಿ ಮಾಡಿದವರ್‍ನೆಲ್ಲಾ ನೀವು ಹೀಂಗ ಬಚಾವ ಮಾಡಿಕೋತ ಹೋದರ ನ್ಯಾಯ ನೀತಿ ಉಳಿದಾವು ಹೆಂಗ?” +“ಅಂದರ ಒಟ್ಟು ನಿಂಗೂಗ ಫಾಸಿ ಶಿಕ್ಷಾ ಆಗಲೆಂದೇನು?” +ಗುಡಸೀಕರ ನಿರುತ್ತರನಾದ. ಇವರ ಈ ಅನಿರೀಕ್ಷಿತ, ಸ್ವಚ್ಛಂದ ವಾದಕ್ಕೆ ಹೇಗೆ ಉತ್ತರ ಕೊಡಬೇಕೆಂಬುದೇ ತಿಳಿಯದಾಯ್ತು. ಕೋರ್ಟಿನಲ್ಲಿ ಆಗುವ ವಾಗ್ವಾದಕ್ಕಿಂತ ಬೇರೆಯದೇ ಆದ, ವಿಚಿತ್ರ ವಾದವಿದು. ಈ ವಾದ ಮುಂದುವರಿಸಬೇಕಾದರೆ ಮೊದಲು ತಾನೆಲ್ಲಿ ನಿಂತಿದ್ದೇನೆ ಅನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಬರೀ ನ್ಯಾಯ ನೀತಿ ಎಂದರೆ ನಿಂಗೂ ಜೇಲಿಗೆ ಹೋಗಬೇಕು, ಆದರೆ ಅದು ಬೇಕಿಲ್ಲ. ಹಾಳಾಗಿ ಹೋಗಲೆಂದರೆ ಈ ಮುದಿ ನರಿಗಳು ಕಾನೂನನ್ನು ತಮ್ಮ ಕೈಯಲ್ಲಿ ತಕ್ಕೊಂಡು ತಮಗ ಬೇಕಾದಂತೆ ಅರ್ಥೈಸುತ್ತ ಊರಿಗೆಲ್ಲ ಹುಸಿ ಪುಡಾರಿಗಳಾಗುತ್ತಿದ್ದಾರೆ! +“ನೋಡ್ರಿ ನಿಂಗೂ ಉಳೀತಾನೋ ಬಿಡತಾನೊ; ಆದರ ಕಾಯ್ದೆ ಕಾನೂನಂದರ ನಿಮ್ಮ ಕೈಯಾಗಿನ ಜನಿವಾರವಲ್ಲ.” ಎಂದು ದತ್ತಪ್ಪನಿಗೆ ಹೇಳಿಬಿಟ್ಟ. ಜಾತಿ ಆಡಿದನಲ್ಲಾ ಎಂದು ಗೌದನಿಗೂ ವ್ಯಸನವಾಯಿತು. ಇನ್ನು ಸುಮ್ಮನಿದ್ದರೆ ದತ್ತಪ್ಪನ ಬಾಯಿ ಮುಚ್ಚುವುದು ಕಷ್ಟ. ನಿಂಗೂನಿಗಾಗಲೇ ಗುಡಸೀಕರನ ಮೇಲೆ ಸಿಟ್ಟುಬಂದಿತ್ತು. ಇದೇನಿದು? ದಾರಿಯ ಪೀಡೆ ತಂದು ಮೈಮೇಲೆ ತೂರಿಸಿಕೊಂಡಂತಾಯಿತಲ್ಲಾ ಎಂದುಕೊಂಡ. ಸ್ವಥಾ ಪಂಚಾಯ್ತಿ ಮೆಂಬರ ಕಳ್ಳನಿಗೂ ಅಸಮಧಾನವಾಯ್ತು. +“ಆಯ್ತಪ್ಪಾ ಈಗೇನ ಮಾಡೋಣಂದಿ?” +“ಏನಂದರ ಪೋಜುದಾರ್‍ನ ಕರಸಿ ಪಂಚನಾಮೆ ಮಾಡ್ರಿ” ಈ ಹುಡುಗನಿಗೊಮ್ಮೆ ಕೊನೆಯ ಬಾರಿ ಬುದ್ಧಿ ಹೇಳಿ ನೋಡೋಣ ಅನ್ನಿಸಿತು ಗೌಡನಿಗೆ, +“ನೋಡಪಾ, ನಿಮ್ಮ ಶಹರದಾಗಿನ ಕಾಯ್ದೆ ಬ್ಯಾರೆ, ನಮ್ಮ ಹಳ್ಳಿ ಕಾಯ್ದೆ ಬ್ಯಾರೆ. ನಮ್ಮದು ನಿನಗೂ ಗೊತ್ತಿದ್ದಾಂಗ ಭಾಳ ಸರಳ. ಇಲ್ಲಿ ಜಗಳಾದರ ಇಲ್ಲೇ ನ್ಯಾಯ ಸಿಗಬೇಕು. ಇಲ್ಲೀ ಜಗಳದ ಮ್ಯಾಲ ಬೆಳಗಾಂವಿ ತೀರ್ಪು ತಂದ ಹೇರತೀನಂತಿ, ಹೆಂಗ ಹೇಳು?” +“ಕಾಯ್ದೆದೊಳಗ ಹಳ್ಳಿದೊಂದು ಶಹರದೊಂದು ಅಂತ ಎರಡಿಲ್ಲರಿ” +“ಇಲ್ಲದಿದ್ದರ ಮಾಡಬೇಕಪಾ. ಮತ್ತ ಖರೇ ಸಿಕ್ಕೀತು ಹೆಂಗ ಹೇಳು? ಇಷ್ಟಽ ತಿಳಿ: ಇಲ್ಲಿಂದ ಬೆಳಗಾಂವಿಗೆ ಕೇಸ ಒಯ್ತಿ. ನಿಂಗೂ ದೇವರಾಣಿ ಮಾಡಿ ಸುಳ್ಳ ಹೇಳತಾನ, ಹೇಳಸ್ತಾನ, ಆ ಸಾಕ್ಷಿ ನಂಬಿ ನೀ ವಾದ ಮಾಡತಿ. ನಿನ್ನ ವಾದ ಕೇಳಿ ಜಜ್‌ಸಾಬ ಜಜ್‌ಮೆಂಟ ಬರೀತಾನ. ಬಡ್ಡ್ಯಾಗ ಸುಳ್ಳ ಐತಿ, ತುದ್ಯಾಗ ಕುಂತವಗ ಖರೆ ಹೆಂಗ ಕಂಡೀತು ಹೇಳು?” +ಯಾವ ಬದಿಯಿಂದ ನೋಡಿದರೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗೆ ಅನ್ನಿಸಿತು . ದತ್ತಪ್ಪನಿಗೆ ಗೌಡನ ಅನುಭವ ಹೊಸದಲ್ಲ. ಗೌಡನ ಮಾತಿಗೆ ಮನಸ್ಸಿನಲ್ಲೇ ಭಲೇ ಅಂದ. ಗೌಡ ಮುಂದುವರೆಸಿದ- +“ನಾವೆಲ್ಲಾ ಮುದುಕರಾದಿವಪಾ; ನಮ್ಮ ಕಾಲ ಮುಗೀತು. ಇನ್ನ ಹಳ್ಳೀ ಕಾರಭಾರ ನೋಡಿಕೋಬೇಕಾದವ ನೀನು. ನಮ್ಮ ಕಾಲದ ಮಂದಿ ಸರಳ ಇದ್ದರು. ಹೇಳಿದ್ದ ಕೇಳತಿದ್ದರು. ನಮ್ಮ ಕಾಲದಾಗಂತೂ ನಾವು ಕೋರ್ಟು ಕಛೇರಿ ಕಟ್ಟಿ ಹತ್ತಲಿಲ್ಲ. ನೀ ವಕೀಲಿ ಪಾಸ ಮಾಡೀದಿ ಅಂತ ಈ ಮಂದೀನೆಲ್ಲಾ ಕೋರ್ಟಿಗೆ ಎಳೆದರ ಹೆಂಗ, ನೋಡು? ನರ ಮನಶ್ಯಾ ತಪ್ಪ ಮಾಡ್ತಾನ ಮನಶ್ಯಾ ಮಾಡದ ಇನ್ನೇನ ದೇವರ ತಪ್ಪ ಮಾದಾಕಾಗತೈತಿ? ತಪ್ಪು ಮಾಡಿದಾ ಅಂತ ಏಕದಂ ಕೊಲ್ಲಾಕ ನೀ ಯಾರು ಹೇಳು? ಮನಶ್ಯಾ ಬರೀ ಸಾಯಾಕಽ ಹುಟ್ಟಲಿಲ್ಲಪ್ಪಾ. ಬದುಕಾಕೂ ಹುಟ್ಯಾನ. ದೇವರ್‍ನ ನೋಡಲ್ಲ. ನಾವು ಮಾಡಿದ ತಪ್ಪ ನೋಡಿದರ ಒಂದಽ ಒಂದು ದಿನ ನಮ್ಮನ್ನ ಈ ಭೂಮಿ ಮ್ಯಾಗಿಡಬಾರದು. ಆದರೂ ಕರಿಮಾಯಿ ನಮ್ಮನ್ನೆಲ್ಲಾ ಇಟ್ಯಾಳಲ್ಲ? ಯಾಕ ಹೇಳು? ಯಾಕಂದರ ಸಾವಿನಕಿಂತ ಬದುಕ ದೊಡ್ಡದಪಾ….?” +ಇವರು ಅಂತಿಂಥ ವಾದಕ್ಕೆ ಮಣಿಯುವುದಿಲ್ಲವೆಂದು ಗುಡಸೀಕರನಿಗೆ ಖಾತ್ರಿಯಾಯ್ತು. ಇವರ ವಾದದಲ್ಲಿ ಹುರುಳಿಲ್ಲ. ನಿಜ, ಆದರೆ ಪ್ರತಿವಾದ ಹೇಗೆ ಹೂಡಬೇಕೆಂದು ತಿಳಿಯದಾಯ್ತು. +“ನೋಡರೀ, ಇಂದಿಲ್ಲ ನಾಳೆ ಈ ಸುದ್ದಿ ಪೋಲೀಸರಿಗೆ ಸಿಗೋದಽ. ಸಿಕ್ಕಿತು ಅಂದರ ನಿಂಗೂನ ಗತಿ ಬಿಡರಿ, ನೀವಿಬ್ಬರೂ ಈ ಕೇಸಿನ್ಯಾಗ ಸಿಗಬೀಳ್ತಿರಿ. ಈ ವಯಸ್ಸಿನಾಗ ನಿಮಗ ಜೇಲಾಗೋದಂದರ ಚೆಲೋ ಅಲ್ಲ; ತಿಳಿದ ನೋಡ್ರಿ.” +ದತ್ತಪ್ಪ ಈ ತನಕ ಬಾಯಿ ಮುಚ್ಚಿದ್ದೇ ಹೆಚ್ಚು. +“ಆತಪಾ ನಾವು ಜೇಲಿಗೂ ಹೋಗಾಕ ತಯಾರ. ಆದರ ನಿಂಗೂನ್ನ ಬಿಟ್ಟು ಕೊಡಾಕ ನಾವು ತಯಾರಿಲ್ಲ. ನಿಂಗೂ ಖೂನಿ ಮಾಡಬೇಕಂತ ಮಾಡಿಲ್ಲ. ಇನ್ನ ಮುಂದ ಮಾಡಾವನೂ ಅಲ್ಲ. ಏನೋ ಅಚಾನಕ ಆದದ್ದು. ನಾವಿಬ್ಬರೂ ಅವನ ಬೆನ್ನಿಗೆ ನಿಂದರಾವರಽ. ಬೇಕಂದರ ನೀ ಹೋಗಿ ಪೋಲೀಸರಿಗಿ ಹೇಳಿಕೊ ಹೋಗು.” +ಹಸಿ ಗೋಡೆಯಲ್ಲಿ ಹರಳು ನಟ್ಟಂತೆ ದತ್ತಪ್ಪನ ಈ ಮಾತು ಗುಡಸೀಕರನ ಎದೆಯಲ್ಲಿ ನಾಟಿಬಿಟ್ಟಿತು. ಈ ಮುದಿಯರಿಗೆ ಈ ಧೈರ್ಯವೇ? ಮಾತು ಬಿರುಸಾದ್ದು ಗೌಡನಿಗೂ ತಿಳಿದಿತ್ತು. ಕೂಡಲೇ ಹೇಳಿದ. +“ಆಯ್ತಪಾ; ನೀ ಅದೆನು ಶಿಕ್ಷೆ ಕೊಡ್ತಿ ಕೊಡು. ನೀ ಹೇಳಿದಾಂಗ ಕೇಳಾಕ ಹಚ್ಚತೀವಿ. ತಪ್ಪಿಗಿ ಶಿಕ್ಷಾ ಇಲ್ಲ ಅನಬ್ಯಾಡ. ಆದರ ಬೆಳಗಾಂವಿ ಮಂದಿ ನಮ್ಮ ಊರಿನ ಮನಶ್ಯಾಗ ಶಿಕ್ಷಾ ಕೊಡೋದು ಶಕ್ಯಿಲ್ಲ. ಏನಂತಿ?” +“ನಾ ಜಜ್ ಅಲ್ಲ.” +“ನಾವಽ ಮಾಡತೀವಲ್ಲ. ಬೇಕಂದರ ನಮಗೂ ಶಿಕ್ಷಾ ಕೊಡು. ನೀ ಹೇಳಿದ್ದಕ್ಕ ಎರಡೆಂದರ ನಮ್ಮ ನಾಲಿಗಿ ಕಳಚಿ ಬೀಳಲಿ; ಕರಿಮಾಯಿ ಆಣಿ, ಮತ್ತೇನೈತಿ?” +ಈ ತನಕ ನಿಂಗೂ ಬಾಯಿ ಮುಚ್ಚಿದನಲ್ಲ. ಈಗ ತಡೆದುಕೊಳ್ಳಲಾರದೇ ತೆರೆದೇಬಿಟ್ಟ. “ನೋಡೋ ಗುಡಸ್ಯಾ! ನಿನ್ನ ಮನಸ್ಸಿನ್ಯಾಗೇನೈತಿ ನಂಗೂ ತಿಳೀತು. ಇವರಿಬ್ಬರದೂ ಒಂದಽ ಒಂದ ಕೂದಲು ಕೊಂಕಿದರ, ಆಮ್ಯಾಲ ನೀ ಈ ಊರಾಗ ಬಾಳ್ವೆ ಮಾಡಾಕ ಆಗಾಣಿಲ್ಲ. ಮೊದಲಽ ಹೇಳಿರತೇನ.” +ನಿಂಗೂ ಇಂಥಾ ಮಾತಾಡಿದ್ದೇ ಮೊದಲು. ಬೇರೆ ಸಮಯದಲ್ಲಾಗಿದ್ದರೆ ಇದನ್ನು ನಿರ್ಲಕ್ಷ್ಯಿಸಬಹುದಿತ್ತು. +“ಬಲ್ಲಿನೋ ಮಗನ ನಿನ್ನ ಕುವ್ವತ್ತ. ನೀ ಏನಾದರೂ ಉಳುಯೋದಾದರ ಅದು ನನ್ನ ದಯದಿಂದ; ತಿಳಕೋ.” +“ಹೋಗಲೇ, ನನಗ ನಿನ್ನ ದಯಾಮಾಯಾ ಬ್ಯಾಡ. ಅದೇನ ಮಾಡ್ತಿ ಮಾಡಿಕೋ ಹೋಗ. ಮೊದಲ ನನ್ನ ಹೊಲದಾಗಿಂದ ಕಾಲ್ತಗಿ.” +ಇಷ್ಟು ಕೇಳಿದ್ದೇ ಗುಡಸೀಕರ ನೆಲ ಒದೆಯುತ್ತ ಊರ ಕಡೆ ಹೊರಟುಬಿಟ್ಟ. ನಿಂಗೂ ಹೀಗೆ ಹೇಳಿದ್ದು ಸರಿಯೆನಿಸಿತು ದತ್ತಪ್ಪನಿಗೆ. ಆದರೆ ಗೌಡನಿಗೆ ಅಸಮಧಾನವಾಯ್ತು. ಸುಮ್ಮನೇ ಕೂತ. ಮುಂದಾಗಬಹುದಾದ್ದನ್ನು ಮನಸ್ಸಿನಲ್ಲೇ ಧೇನಿಸಿದ. ಸರಪ,ಚ ಆದಾಗಿನಿಂದ ಗುಡಸೀಕರನನ್ನು ಗಮನಿಸುತ್ತ ಬಂದಿದ್ದ. ಹುಡುಗನ ಮನಸ್ಸು ಆರೋಗ್ಯದಿಂದಿಲ್ಲವೆಂದು ಆಗಲೇ ಖಾತ್ರಿಯಾಗಿತ್ತು. ದತ್ತಪ್ಪನಂತೂ ಇವನ ಬಗ್ಗೆ ಎಂದೋ ತೀರ್ಮಾನ ತಗೊಂಡುಬಿಟ್ಟಿದ್ದ. ಈ ಹುಡುಗನ ಕಣ್ಣಲ್ಲಿ ಬರೇ ಸ್ವಯಂಪ್ರತಿಷ್ಟೆಯೇ ಹೊರತು ಊರು ಮೂಡುತ್ತಿರಲಿಲ್ಲ. ಪ್ರತಿಷ್ಠೆಗಾಗಿ ಬೇಕಾದರೆ ಈತ ಊರನ್ನೇ ಬಲಿ ಕೊಡುವನೆಂದು ಹೇಳುತ್ತಿದ್ದ. ಆದರೆ ಗೌಡ ನಂಬಿಕೆ ಕಳೆದುಕೊಂಡಿರಲಿಲ್ಲ. ಇಂದಿಲ್ಲ ನಾಳೆ ಹಾದಿಗೆ ಬಂದಾನೆಂದುಕೊಂಡಿದ್ದ. ಆದರೆ ಇಂದಿನ ಮಾತುಕತೆಯಿಂದ ಗೌಡನಿಗೂ ನಿರಾಸೆಯಾಯಿತು. ಈ ಹುಡುಗ ಅಪಾಯಕಾರಿ ಎನ್ನಿಸಿತು. ಹಾಗೇ ಬಿಟ್ಟಿದ್ದರೆ ಎಷ್ಟು ಹೊತ್ತು ಯೋಚಿಸುತ್ತಿದ್ದನೋ, ದತ್ತಪ್ಪ ಎಚ್ಚರಿಸಿದ. +“ಈಗ ಬ್ಯಾಟಿ ಹುಡುಗೋರ ಹೊಂಡೊ ಯಾಳೆ ಆಯ್ತಲ್ಲಾಪಾ” +“ದತ್ತೂ ಇದ್ಯಾಕೋ ಬರೋಬರಿ ಆಗಲಿಲ್ಲಪಾ” +“ನೋಡೋಣಂತ ನಡಿ, ಹೊತ್ತ ಮುಳುಗಾಕ ಹತ್ತೇತಿ.” +ದತ್ತಪ್ಪನಿಗೆ ಗುಡಸೀಕರನ ಅಪಾಯದ ಬಗ್ಗೆ ಕಾಳಜಿ ಇತ್ತು. ಗೌಡನೇ ನಿಂಗೂನಿಗೆ ಹೇಳಿದ. +“ನಿಂಗೂ, ಈಗ ಗುಡಿಸಲಾ ಕೀಲಿ ಹಾಕು. ನೀ ಲಗುಮಿ ಮನ್ಯಾಗ ಇರು. ಗಾಬರಿಯಾಗಬ್ಯಾಡ. ಕರಿಮಾಯಿ ನೋಡಿಕೋತಾಳ. ಸಿದ್ರಾಮ ನೀನೂ ಯಾರ ಮುಂದೂ ಬಾಯಿ ಬಿಡಬ್ಯಾಡ. ಬಿಟ್ಟರ ನಾವಷ್ಟಽ ಅಲ್ಲ. ನೀನೂ ಕುಡಗೋಲ ನುಂಗಬೇಕಾಗತೈತಿ.” +ಎಂದು ಹೇಳಿ ಗೌಡ ಎದ್ದ. +ಗೌಡನೆಂದೂ ಈ ರೀತಿ ಚಿಂತಿ ಮಾಡಿದವನಲ್ಲ. ಮನೆಗೆ ಬಂದ ಮೇಲೂ ಜೀವ ಹಳಹಳಿಸತೊಡಗಿತ್ತು. ಪಂಚರನ್ನು ಈಗಲೇ ಕರೆಸೋಣವೆಂದುಕೊಂಡ. ಬೇಟೆಗಾರ ಹುಡುಗರ ಜೊತೆಗೆ ಬರುತ್ತಾರಲ್ಲ ಬರಲಿ ಎಂದು ಸುಮ್ಮನಾದ. ಆದರೂ ಮನಸ್ಸಿಗೆ ಸಮಾಧಾನವಾಗಲೊಲ್ಲದು. ಅಷ್ಟರಲ್ಲಿ ದತ್ತಪ್ಪ ಮತ್ತೆ ಅವಸರದಿಂದ ಬಂದ. ಮತ್ತೆ ಬಂದನಲ್ಲ ಯಾಕಿರಬಹುದೆಂದು ಗೌಡನಿಗೆ ದಿಗಿಲಾಯಿತು. ಬಂದ ಉಸಿರಿನಲ್ಲಿಯೇ ದತ್ತಪ್ಪ- +“ಹಬ್ಬ ಮಾಡೋಣಂದ್ಯೋ, ಬ್ಯಾಡಂದ್ಯೋ?” +ಎಂದ. ಹೌಂದಲ್ಲ! ಎಷ್ಟೇ ಮುಚ್ಚಿಟ್ಟರೂ ಹೆಣದ ವಾಸನೆ ಜನರ ಮೂಗಿಗೆ ಬಡಿಯೋದೇ. ಗೊತ್ತಾದರೆ ಯಾರ ಮನಸ್ಸೂ ಹಗುರವಾಗಿರದು. ಹ್ಯಾಗೊ ಸೂತಕವಾಗಿದೆ. ನಿಲ್ಲಿಸಿ ಬಿಡುವದೇ ಮೇಲೆಂದು ಯೋಚಿಸಿದ. ಬೇಡವೆಂದರೆ ಕುತೂಹಲ ಕೆರಳಿಸಿದಂತೆ. ಅದಕ್ಕೊಂದು ಸಮಾಧಾನ ಕೊಡಲೇಬೇಕು. ಏನೋ ಹೊಳೆಯಿತು. +“ದತ್ತೂ, ನಿನ್ನ ಚಿಂತಾಮಣಿ ಏನ ಹೇಳತೈತಿ?” ಅಂದ. ದತ್ತಪ್ಪ ಆಗಲೇ ನೋಡಿ ಬಂದಿದ್ದನೋ ಏನೋ- +“ತಾಯೀನ ಕೇಳಂತೈತಿ.” ಅಂದ. +“ಹೋಗಿ ಬಾ ಹಂಗಾದರ. ನೀ ಬರೋತನಕಾ ಹುಡುಗರನ್ನ ಇಲ್ಲೇ ನಿಲ್ಲಿಸ್ರ್ತೀನಿ” ಅಂದ. ದತ್ತಪ್ಪ ಓಡಿದ. +ಬೇಟಿಯ ಹುಡುಗರು ವಾದ್ಯಗಳೊಂದಿಗೆ ಬಂದರು. ಬಸೆಟ್ಟಿ, ಬಾಳು ಮೆರವಣಿಗೆಯ ಜೊತೆಯಲ್ಲಿಯೇ ಬಂದರು. ಗೌಡ ಎಂದಿನಂತೆ ಲವಲವಿಕೆಯಿಂದ ಇರಲಿಲ್ಲವೆಂದು ಎಲ್ಲರಿಗೂ ತಿಳಿಯಿತು. ಒಬ್ಬಿಬ್ಬರು “ಮೈಯಾಗ ಆರಾಮಿಲ್ಲೇನ್ರೀ” ಎಂದು ಕೇಳಿಯೂ ಬಿಟ್ಟರು. ಶುಂಠಿಯ ಕಾಡೆ(ಕಷಾಯ)ಇಂಥದ್ದಕ್ಕೆಲ್ಲ ಬಹಳ ಒಳ್ಳೆಯದೆಂದು ಬಸೆಟ್ಟಿ ಮದ್ದನ್ನೂ ಸೂಚಿಸಿದ. +ಗೌದ ಎಲ್ಲರಿಗೂ ಕೂರಲಿಕ್ಕೆ ಹೇಳಿದ. ಕೂತರು. ದತ್ತಪ್ಪ ಇನ್ನೂ ಬಂದಿರಲಿಲ್ಲ. ಮಂದಿಗೆ ಕೂರಲಿಕ್ಕೆ ಹೇಳಿ ಏನಾದರೂ ಮಾತಡಬೇಕಿತ್ತು. ಗೌಡ ಮಾತಾಡಲಾಗಲಿಲ್ಲ. ಮೈಯಲ್ಲಿ ಹುಷಾರಿಲ್ಲವಲ್ಲ ಎಂದುಕೊಂಡ ಜನ್ ತಮ್ಮಲ್ಲಿ ತಾವೇ ಮಾತಾಡಕೊಳ್ಳತೊಡಗಿದರು. ಶಿವನಿಂಗ ಬೇಟೆಯ ಹುಡುಗರಲ್ಲಿದ್ದ. ಅವನಿನ್ನೂ ಬೆಳ್ಳಂಬೆಳತನಕ ಅಡವಿಯಲ್ಲಿ ಅಲೆದಾಡಬೇಕು. “ಈ ಸಲ ಬೇಡ” ಎಂದ. ದತ್ತಪ್ಪ ಇನ್ನೂ ಬರಲಿಲ್ಲ. ಸಾಮಾನ್ಯವಾಗಿ ಗೌಡನ ಮನೆಯಲ್ಲಿ ತಡವಾಗುವುದಿಲ್ಲ. ಕಾಯಿ ತರಿಸಿ ತರುಣರಿಗೆ ಕೊಡುವುದೆಷ್ಟೋ ಅಷ್ಟೇ. ಆದರೆ ಗೌಡ ತರಾತುರಿ ಮಾದಲಿಲ್ಲ. ಶಿವನಿಂಗ ಕಾಯಿ ತಂದು ಆಗಲೇ ಗೌಡನ ಮುಂದೆ ಇಟ್ಟಿದ್ದ. ರಾತ್ರಿ ಬೇರೆ ಆಗುತ್ತಿತ್ತು. ಬೆಳ್ದಿಂಗಳಿತ್ತು ನಿಜ. +ಅಷ್ಟರಲ್ಲಿ ದತ್ತಪ್ಪ ಬಂದ. ಮುಖದಲ್ಲಿ ಉದ್ವಿಗ್ನತೆಯಿತ್ತು. ಬಂದವನೇ ಗೌಡನ ಕಿವಿಯಲ್ಲಿ “ಗುಡಸ್ಯಾ ಮೂರುಸಂಜಿ, ಬೆಳಗಾಂವಿಗೆ ಹೋದನಂತೆ” ಎಂದ. +“ತಾಯಿ ಏನು ಹೇಳಿದಳು?” +“ಹಬ್ಬಾ ಬಿಡಬ್ಯಾಡಂದ್ಲು.” +ಇಷ್ಟು ಕೇಳಿದ್ದೇ ಕಾಯಿ ತಗೊಂಡು ಬೇಟೆಯ ಹುಡುಗರ ನಾಯಕನಿಗೆ ಕೊಟ್ಟ. ಅನೇಕರಿಗೆ ಅನೇಕ ಬಗೆಯ ಅನುಮಾನಗಳು ಸುಳಿದರೂ ಕೇಳಲಾರದೇ ಎದ್ದು ಬೇಟೆಗೆ ಹೊರಟರು. ಗೌಡ ನಾಲ್ಕು ಜನ ವಿಶ್ವಾಸಿ ಹುಡುಗರನ್ನು ಕರೆದು ಬೇಟೆಗೆ ಹೋಗಬೇಡಿರೆಂದು ಹೇಳಿ, ಊಟ ಮಾಡಿ ಬರ್ರೆಂದು ಪಂಚರನ್ನು ಅಲ್ಲೇ ಕೂರಿಸಿಕೊಂಡ. +ಕರಿಬೇಟೆ +ಬೆಳಗಾಯಿತು. ಆದಿನ ಊರವರು ದಿನಕ್ಕಿಂತ ಹೆಚ್ಚು ಖುಷಿಪಡಬೇಕಾಗಿತ್ತು. ಯಾಕೆಂದರೆ ಕರಿಬೇಟೆಯ ದಿನ. ಕರಿಬೇಟೆ ಕ್ಷತ್ರಿಯ ನಾಯಕರ ಹಬ್ಬ. ಗೌಡನೂ ಅದೇ ಕುಲದವನು. ತರುಣ ನಾಯಕರೆಲ್ಲ ನಿನ್ನೆಯೇ ಬೇಟೆಯಾಡಲಿಕ್ಕೆ ಹೋಗಿದ್ದರಲ್ಲ. ಈ ಹೊತ್ತು ಅವರು ಬಂದೊಡನೆ ಬೇಟೆಯ ಮೆರವಣಿಗೆ ಮಾಡಿ, ಗೌಡನಿಗೊಂದು ಪಾಲು ಕೊಟ್ಟು ಮನೆಗಳಿಗೆ ಹೋಗುತ್ತಾರೆ. ಇಂದು ರಾತ್ರಿ ನಾಯಕರ ಮನೆಗಳಲ್ಲೆಲ್ಲ ಮಾಂಸದ ಅಡಿಗೆ. ಊಟ ಮಾಡಿ ಎಲ್ಲರೂ ಕರಿಮಾಯಿಯ ಗುಡಿಯಲ್ಲಿ ಸೇರುತ್ತಾರೆ. ತಾಜಾ ಭಟ್ಟಿಸೆರೆ ಕುಡಿಯುತ್ತ ಸೂಳೆಯರ ಬೇಟೆ ಹಾಡುಗಳಿಗೆ ತಕ್ಕಂತೆ ಕುಣಿಯುತ್ತಾ ವಿನೋದದಿಂದ ಕಾಲ ಕಳೆಯುತ್ತಾರೆ. ನಾಯಕರನ್ನು ಬಿಟ್ಟು ಬೇರೆಯವರು ಕುಣಿಯುವುದಿಲ್ಲ. ಆದರೆ ಉಳಿದವರು ವಿನೋದ ನೋಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. +ಹಾಡುಗಳ ತುಂಬ ಬೇಟೆಯ ಸಾಹಸದ ವರ್ಣನೆಗಳೇ, ಅವೆಲ್ಲ ಪದ್ಧತಿಯ ಹಾಡುಗಳು. ಹುಡುಗರು ಬೇಟೆಯಲ್ಲದ ಹಸಿಗಾಯಗಳುಳ್ಳ ಕರಿಯ ಬರಿ ಮೈಗಳನ್ನು ಉಬ್ಬುಬ್ಬಿಸಿ ತೋರುತ್ತಮದ ಉಕ್ಕುವ ಎಳೇ ಸೂಳೆಯಯರ ಸಂದಿಗೊಂದಿಗಳನ್ನು ಕಣ್ಣಿನಿಂದ ಬಗಿಯುತ್ತ, ಸೆರೆಯ ನಶೆಯಲ್ಲಿ ಸೊಂಟ ತೇಲಿಸುತ್ತ ಕುಣಿಯುತ್ತಿದ್ದರೆ ನೋಡುವ ಹೆಣ್ಣು ಕಣ್ಣುಗಳೆಲ್ಲ ಕನಸುಗಳನ್ನು ಹಡೆಯುತ್ತವೆ. ಅಷ್ಟೊಂದು ಹಸಿದ ಕಣ್ಣುಗಳಿಗೆ ಗುರಿಯಾಗುವ ಅವಕಾಶವನ್ನು ಯಾವ ಮತಿವಂತ ಸೂಳೆ ತಪ್ಪಿಸಿಕೊಂಡಾಳು? ಪರ ಊರಿನ ಸೂಳೆಯರನ್ನು ಎಲೆಯಡಿಕೆ ಕೊಟ್ಟು ಆಮಂತ್ರಿಸುವ ಪರಿಪಾಠವೂ ಇದೆ. ಈ ಸಲ ಯಾರು ಬಂದಿದ್ದಾರೆ, ಹ್ಯಾಂಗಿದ್ದಾರೆ, ಎಂಬೆಲ್ಲ ಕುತೂಹಲಗಳು ನೋಡುವವರಲ್ಲಿ ಇರುತ್ತಿದ್ದವು. ಅಷ್ಟೇ ಅಲ್ಲ, ಇನ್ನೂ ಹದಿನೈದು ದಿನ ಹಬ್ಬ ಇರುವಾಗಲೇ ನಾಯಕರ ಹುಡುಗರು ಭೇಟಿಯಾದರೆ “ಏನಪಾ ನಾಯಕಾ, ಈ ವರ್ಷ ಯಾ ಊರ ಸೂಳೇರ್‍ನ ಕರಸ್ತೀರೋ?” ಎಂದೆಲ್ಲ ಕೇಳುತ್ತಿದ್ದರು. +ಆದರೆ ಈ ದಿನ ಕೊನೇ ಪಕ್ಷ ಸುದ್ದಿ ತಿಳಿದವರಿಗಂತೂ ಆ ಉತ್ಸಾಹ ಉಳಿದಿರಲಿಲ್ಲ. ಗೌಡ ಎಂದಿನಂತೆ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಕರಿಮಾಯಿಗೆ ಕೈ ಮುಗಿದು ಮನೆಗೆ ಬಂದ. ನ್ಯಾರೆ ಮಾಡಿ ತೋಟದ ಕಡೆ ಹೊಂಟವನು ನಿಂಗೂನ ತೋಟಕ್ಕೆ ಹೋದ. ಹುಡುಗರ ಕೆಲಸ ನೋಡಿ ‘ಭಲೆ’ ಎಂದುಕೊಂಡು ಹಾಗೇ ತನ್ನ ತೋಟಕ್ಕೆ ಹೋದ. ಲಗಮವ್ವನನ್ನು ಕರೆಸಿದ. ಅವಳಿಂದ ಒಂದು ಕಾಯಿ ಸೆರೆ ತರಿಸಿ ಕುಡಿದು ಹೊರಸಿನ ಮೇಲೆ ಕೂತ. ಶಿವಸಾನಿ ಮಾತಾಡಿಸಿದ್ದು ಅವನ ಗಮನಕ್ಕೆ ಬರಲಿಲ್ಲ. +ಹೊತ್ತು ಮೇಲೇರಿತು. ಮಧ್ಯಾಹ್ನವಾಗಿ ಇಳಿಹೊತ್ತಾಯಿತು. ಹೊತ್ತು ಹೆಚ್ಚಾದಂತೆ ಹೆಚ್ಚು ಹೆಚ್ಚು ಮಂದಿಗೆ ಸುದ್ದಿ ಗೊತ್ತಾಯಿತು. ಕೆಲವರು ಕುತೂಹಲ ತಾಳದೇ ನಿಂಗೂನ ತೋಟದ ಕಡೆ ಹೋಗಿ ಬಂದರು. ನೀರು ತರುವ ಹೆಂಗಸರು ಗುಸುಗುಸು ಮಾತಾಡಿದರು. ಯಾರು ಸಿಕ್ಕರೂ “ಸುದ್ದಿ ಖರೆಯೇನಽ? ಹೆಂಗಾತಂತ?” ಎಂದು ಕೇಳುವ, ಹೇಳುವ ಆತುರ ಇರುತ್ತಿತ್ತು. ಎಲ್ಲರಿಗೂ ಈ ದಿನ ಮಾತಾಡುವ ಚಪಲ. ಗೌಡನಿಗೂ, ಗುಡಸೀಕರನಿಗೂ ಮಾರಾಮಾರಿಯಾಯಿತೆಂದೂ ಕೈ ಕೈ ಹತ್ತಿತೆಂದೂ, ಗೌಡನನ್ನು, ದತ್ತಪ್ಪನನ್ನು ಜೇಲಿನಲ್ಲಿ ಇಡದಿದ್ದರೆ ತನ್ನ ಹೆಸರು ಗುಡಸೀಕರನೇ ಅಲ್ಲವೆಂದು, ಗುಡಸೀಕರ ಕರಿಮಾಯಿಯ ಮೇಲೆ ಆಣೆ ಇಟ್ಟಿದ್ದಾನೆಂದೂ-ಹೀಗೆ ಯದ್ವಾ ತದ್ವಾ ಊಹೆಗಳಾಗಿ, ಊಹೆಗಳು ಕಥೆಯಾಗಿ, ಕಥೆಗಳೇ ನಿಜಘಟನೆಗಳಾಗಿ ಸಾಯಂಕಾಲವಾಗುವುದರೊಳಗೆ ನಿಂಗೂ ಕಥಾನಾಯಕನಾಗಿ, ಅವನ ಸುತ್ತ ಕಥೆ ಹಬ್ಬಿ, ಆ ಕಥೆಯ ನೂರಾರು ಪಾಠಾಂತರಗಳು ನಾನಾ ನಮೂನೆಯ ಹೊಸ ಹೊಸ ವಿವರಗಳೊಂದಿಗೆ ಬಾಯಿಗೊಂದು ಬಣ್ಣ ತಳೆಯುತ್ತ ಹಬ್ಬತೊಡಗಿದವು. +ಆದರೆ ಹಬ್ಬ ನಿಲ್ಲಿಸಬೇಕೆಂದು ಕೆಲವರು ಅಂದುಕೊಂಡರು. ಈಗ ಹೇಳಿದ್ದರೆ ನಾಯಕರ ಹುಡುಗರು ಸಿದ್ಧರಾಗುತ್ತಿದ್ದರೋ ಇಲ್ಲವೋ. ಯಾಕೆಂದರೆ ಈ ದಿನ ಊರ ವತಿಯಿಂದ ದುರ್ಗಿ ಕುಣಿಯುವವಳಿದ್ದಳು. ಪಕ್ಕದ ಪಾಶ್ಚಾಪುರದಿಂದ ಸುಂದರಿ ಬಂದಿದ್ದಳು. ಸತ್ತವರು ಯಾವ ದೊಡ್ಡ ಸಜ್ಜರರೆಂದು ಹಬ್ಬ ನಿಲ್ಲಿಸಬೇಕು? ಅಲ್ಲದೇ ನಿಲ್ಲಿಸುವದಾಗಿದ್ದರೆ ಗೌಡ ಹೇಳುತ್ತಿದ್ದ. ಕರಿಮಾಯಿಯ ವಾಕ್ಯ ಆಗುತ್ತಿತ್ತು. ಹೀಗೆ ಅವರ ತಲೆಯಲ್ಲಿ ವಿಚಾರ ಹೊಳೆಯುತ್ತಿರುವಾಗಲೇ ಬೇಟೆಗಾರರು ಮೆರವಣಿಗೆಯಲ್ಲಿ ಬಂದರು. +ಉಂಡು ಮಲಗುವ ಹೊತ್ತಿಗೆ ಎಲ್ಲರೂ ಬಂದು ಗುಡಿಯ ಪೌಳಿಯಲ್ಲಿ ಸೇರಿದರು. ಮುದಿ ನಾಯಕರಿಗೆ ಎಷ್ಟೂ ಉತ್ಸಾಹವಿರಲಿಲ್ಲ. ಹಿಂದಿನ ಹಬ್ಬಗಳಲ್ಲಾಗಿದ್ದರೆ ಸ್ವಥಾ ಲಗಮವ್ವ ಉಟ್ಟ ಸೀರೆಯ ನೆರಿಗೆಗಳನ್ನು ಮುಂಗೈಯಲ್ಲಾಡಿಸುತ್ತ ಬೇಟೆಯ ಪದ ಹಾಡತೊಡಗಿದರೆ, ರಂಗೇರಿದಂತೆ ಆಕೆಯ ಮೈಯ ಹಿಂದು ಮುಂದಿನ ಉಬ್ಬುಗಳನ್ನು ತುಳುಕುತ್ತ ಹೆಜ್ಜೆ ಹಾಕುತ್ತಿದ್ದರೆ, ಬಚ್ಚಬಾಯಿಯ ಮುದುಕರೂ ತೆರೆದ ಬಾಯಿ ತೆರೆದಂತೆಯೇ ಕುಣಿಯತೊಡಗುತ್ತಿದ್ದವು. ಮುದಿ ಮೈಗಳಲ್ಲೂ ಲಯ ತುಳುಕಿಸುತ್ತಿದ್ದಳು ಲಗುಮವ್ವ ತನ್ನ ಹಾಡುಗಾರಿಕೆಯಿಂದ. ಆದರೆ ಇಂದು ಗೌಡನೇನೋ ಬಂದಿದ್ದ; ಸುಮ್ಮನೇ ಕೂತಿದ್ದನಷ್ಟೆ. ಅವನ ನಗೆಯ ಮಜ ಮಾಯವಾಗಿತ್ತು. ಒಂದು ವಿಶೇಷವೆಂದರೆ ಸಾಮಾನ್ಯವಾಗಿ ಈ ಹಬ್ಬಕ್ಕೆ ದತ್ತಪ್ಪ ಬರುತ್ತಿರಲಿಲ್ಲ. ಇಂದು ಅವನೂ ಬಂದಿದ್ದ. ಇದರಿಂದಾಗಿ ವಾತಾವರಣದ ಗಾಂಭೀರ್ಯ ಉಸಿರುಗಟ್ಟುವಂತಾಗಿತ್ತು. +ದುರ್ಗಿಯ ಹಾಡುಗಾರಿಕೆ ಸುರುವಾಯ್ತು. ಬೆಳ್ದಿಂಗಳ ಸುಖದ ಮದ ಈಗಷ್ಟೇ ಹುಡುಗರ ಮೈಗೆ ತಾಗತೊಡಗಿತ್ತು. ಅಷ್ಟರಲ್ಲಿ ಗೌಡ, ದತ್ತಪ್ಪ ಮೊದಲೇ ನಿರೀಕ್ಷಿಸಿದ್ದಂತೆ ಪೋಲೀಸ್ ಜೀಪಿನ ಬೆಳಕು ಗುಂಪಿನ ಮೇಲೆ ಬಿತ್ತು. ಸ್ತಬ್ಧರಾಗಿ ಕೂತವರೆಲ್ಲ ಎದ್ದುನಿಂತರು. ಗೌಡನೂ ಅವನ ಹಿಂದಿನಿಂದ ದತ್ತಪ್ಪನೂ ಎದ್ದು ಮುಂದೆ ಬರುವದರೊಳಗಾಗಿ ಜೀಪು ಗುಡಿಯ ಹತ್ತಿರವೇ ಬಂದು ನಿಂತಿತು. +ನಡುವಯಸ್ಸಿನ ಫೌಜುದಾರನೊಬ್ಬ ಇಬ್ಬರು ಪೋಲೀಸ್‌ರೊಂದಿಗೆ ಇಳಿದು ಬಂದ. ಜನ ಗಾಬರಿಯಾಗಿ ಮಿಕಿಮಿಕಿ ಇವರನ್ನೇ ನೋಡುತ್ತಿದ್ದರು. ಗೌಡ, ದತ್ತಪ್ಪ ಮುಂದೆ ಬಂದು ನಮಸ್ಕರಿಸಿದರು. ತಾವಿಬ್ಬರೂ ಗೌಡ, ಕುಲಕರ್ಣಿ ಎಂದು ಪರಿಚಯಮಾಡಿಕೊಟ್ಟರು. ಇವರ ಮಾತು ನಿಲ್ಲಿಸಿ “ಈ ಮಂದಿ ಇಲ್ಯಾಕ ಸೇರ್‍ಯಾರ?” ಎಂದು ಫೌಜುದಾರ ಕೇಳಿದ. +“ಇಂದ ಕರಿಬ್ಯಾಟಿ ಹಬ್ಬ; ಕುಣ್ಯಾಕ ಹತ್ಯಾರರಿ.” +“ಹಬ್ಬ?” +“ಹೌಂದರಿ.” +“ಇಂದೇನ ಹಬ್ಬ ಮಾಡೋ ಜರೂರಿಲ್ಲ.” +ಇಷ್ಟು ಹೇಳಿ ಪೋಜುದಾರ ತಿರುಗಿದ. ಕೂಡಲೇ ದತ್ತಪ್ಪ ಸಣ್ಣದಾಗಿಸಿದ ಲಾಟೀನು ದೊಡ್ಡದು ಮಾಡಿ ಮುಂದೆ ಮುಂದೆ ಚಾವಡಿಯ ಕಡೆ ನಡೆದ. ಪೋಜುದಾರ, ಅವನ ಹಿಂದೆ ಪೋಲೀಸರು ನಡೆದರು. ಗೌಡ ಒಂದಿಬ್ಬರನ್ನು ಕರೆದು ಇನ್ನೇನೋ ಹೇಳಿ ಮುಂದೆ ಹೋಗುತ್ತಿದ್ದ ಪೋಜುದಾರನನ್ನು ಕೂಡಿಕೊಂಡ. +ಶಿವಪೂಜೆಯಲ್ಲಿ ಕರಡಿ ಬಿಟ್ಟಂತಾಯ್ತು ನಾಯಕರ ಹುಡುಗರಿಗೆ. ಇನ್ನು ಕೆಲವರಿಗೆ ಇದು ಗುಡಸೀಕರನ ಕರಾಮತಿಯೆಂದು ಗೊತ್ತಾಯಿತು. ಗೌಡ, ದತ್ತಪ್ಪನನ್ನು ಜೇಲಿಗೆ ಒಯ್ಯುತ್ತಾರೆಂದು ಕೆಲವರೆಂದರು. “ಯಾಕೆ? ಊರಾಗೇನ ಗಂಡಸರಿಲ್ಲೇನ?” ಎಂದು ಹುಡುಗರೆಂದರು. ತಮತಮಗೆ ಗುಜುಗುಜು ಮಾತಾಡಕೊಳ್ಳತೊಡಗಿದರು. +ಚಾವಡಿಗೆ ಹೋದೊಡನೆ ಪೋಜುದಾರ ನಿಂಗೂನನ್ನು ಕರೆತರುವಂತೆ ಹೇಳಿದ. ಊರಲ್ಲಿ ಖೂನಿ ಆಗಿದ್ದರೂ ಹಬ್ಬ ಮಾಡುತ್ತಿದ್ದುದಕ್ಕೆ ಛೀಮಾರಿ ಹಾಕಿದ. ಖೂನಿ ಗೀನಿ ಏನೂ ಆಗಿಲ್ಲವೆಂದೂ, ಆಗಿದ್ದರೆ ತಾನು ಸುಮ್ಮನಿರಲಿಕ್ಕಾಗುತ್ತಿತ್ತೆ? ಹಬ್ಬ ಮಾಡಲಿಕ್ಕಾಗುತ್ತಿತ್ತೆ? ಗೌರಿ ಗಟಿವಾಳಪ್ಪ ಸತ್ತು ಹದಿನೈದು ದಿನವಾಯಿತೆಂದೂ, ಹೋರಿ ಗರ್ಭಕ್ಕೆ ಇರಿದು ಗೌರಿ ಸತ್ತಳೆಂದೂ ಒಂದೆರಡು ದಿನ ಜ್ವರ ಅಂತ ಮಲಗಿದವನು ಗಟಿವಾಳಪ್ಪ ಮೇಲೇಳಲೇ ಇಲ್ಲವೆಂದು ಗೌಡ ಹೇಳಿದ. ದತ್ತಪ್ಪ ಮಧ್ಯ ಮಧ್ಯ ಹೌದು ಹೌದೆಂದು ಸೇರಿಸಿ, ತನ್ನ ಧಫ್ತರಿನಲ್ಲಿ ನಮೂದಿಸಿದ್ದಾಗಿ ಹೇಳಿದ. +ನಿಂಗೂ ಚಾವಡಿಗೆ ಬಂದಾಗ ಪೋಜುದಾರನಿಗೇನು, ಗೌಡ ದತ್ತಪ್ಪನಿಗೂ ದೂರ ನಿಂತಿದ್ದ ಜನಕ್ಕೂ ಹೊಯ್ಕಾಯಿತು. ಅವನಾಗಲೇ ಸೀರೆ ಉಟ್ಟು, ಕೈ ಬಳೆ ತೊಟ್ಟಿದ್ದ. ಅವನೂ ಬಂದು ಗೌಡ ಹೇಳಿದಂತೆ ಹೇಳಿದ. ಫೌಜುದಾರ ಪೇಚಿನಲ್ಲಿ ಸಿಕ್ಕ. ಈ ನಪುಂಸಕ ಹುಡುಗ ಖೂನಿ ಮಾಡುವದು ಸಾಧ್ಯವಿಲ್ಲೆಂದು ಅವನ ಅನುಭವ ಸಾರಿ ಸಾರಿ ಹೇಳಿತು. ತನಗೆ ಬಂದ ಸುದ್ದಿಯಲ್ಲಿ ಏನೋ ಐಬಿದೆಯೆಂದು ಅನ್ನಿಸಿತು. ಅಷ್ಟರಲ್ಲಿ ನಾಯಕರ ಹಿರಿಯನೊಬ್ಬ ಹಬ್ಬ ಆಚರಿಸಲು ಪರವಾನಗಿ ಕೇಳಲು ಬಂದ. ಪೋಜುದಾರ ಅವನನ್ನು ಕೇಳಿದ. ಅವನು “ಛೇ ಛೇ ಖೂನಿ ಆಗಿದ್ದರೆ ಸೂತಕ ಆಗುತ್ತಿತ್ತು. ಸೂತಕದಲ್ಲಿ ಕರಿಬೇಟೆ ಹಬ್ಬ ಆಚರಿಸಲು ಬರುವುದಿಲ್ಲವೆಂದು, ಊರಲ್ಲಿ ಸೂತಕ ಇಟ್ಟುಕೊಂಡು ಕರಿಬೇಟೆಯ ನೈವೇದ್ಯವನ್ನು ಕರಿಮಾಯಿಗೆ ನೀಡಿದರೆ “ತಾಯಿ ಸುಮ್ಮನಿದ್ದಾಳೇನ್ರೀ ಸಾಹೇಬರಽ” ಎಂದೂ ಅಂದ. ಕರಿಮಾಯಿ ಬೆಂಕಿ ಕೆಂಡದಂಥವಳು. ಹೈಗೈ ಆದರೆ ನಾವೂ ಇಲ್ಲ ನೀವೂ ಇಲ್ಲ. “ಈಗ ನಿಂಗೂನ ಗುಡಿಸಲ ನೋಡಬೇಕು” ಎಂದ. ನಾಳೆ ಮುಂಜಾನೆ ಹೋಗೋಣವೆಂದು ಗೌಡ, ಈಗಲೇ ಹೋಗಬೇಕೆಂದು ಫೌಜದಾರ ಎದ್ದ. +ರಾತ್ರಿಯೇ ತೋಟಕ್ಕೆ ಹೋದರು. ಹಿಂಡು ಜನ ಬೆನ್ನುಹತ್ತಿದರು. “ಬೆಂಕೀ ಹಚ್ಚಿದ ಗುಡಿಸಲೆಲ್ಲಿ” ಎಂದು ಪೋಜುದಾರ ಕೇಳಿದ. ಎಲ್ಲೀ ಬೆಂಕಿ ಏನು ಕತೆ? ಇದೇ ನಿಂಗೂನ ತೋಟ, ಇದೇ ಗುಡಿಸಲು ಎಂದು ಗೌಡ ಹೇಳಿದ. ಪೋಜುದಾರನಿಗೆ ಇದ್ದದೂ ಹಣಕಲಾಯಿತು, ತಿರುಗಿ ಬಂದರು. +ಗೌಡನ ಮನೆಯಲ್ಲಿ ಊಟಕ್ಕೆ ಕೂತರು. ಹ್ಯಾಗೂ ಬೇಟೆಯ ಪಲ್ಯ ಇತ್ತು. ಅಸಲ ಸೆರೆಯಿತ್ತು. ಅದು ಒಳಕ್ಕೆ ಇಳಿಯಲಾರಂಭಿಸಿದಂತೆ ಪೋಜುದಾರನ ತಲೆ ತೂಗಲಾರಂಭಿಸಿತು. ಇತ್ತ ಹುಡುಗರ ಹಾಡು, ಕುಣಿತ ಸುರುವಾಯಿತು. ಬಹುಶಃ ನಿರಾಸೆಯಿಂದಿರಬೇಕು. ಪೋಜುದಾರನ ತಲೆ ತಿರುಗಿತು. “ನಿಲ್ಲಿಸ್ರಿ ಅದನ್ನ” ಎಂದು ಊಟ ಮಾಡುತ್ತಲೇ ಕಿರುಚಿದ. ಗೌಡ ನಿಧಾನವಾಗಿಯೇ ಹೇಳಿದ. +“ಅದನ್ನ ನಿಲ್ಲಿಸಾಕ ನಾನಾಗಲಿ ನಿಮಗಾಗಲಿ ಹಕ್ಕಿಲ್ಲರೀ ಸಾಹೇಬರ” +“ಏ, ಗೌಡಾ, ನನಗೆ ಕಾಯ್ದೆ ಹೇಳಿಕೊಡ್ತಿ ಏನಲೇ? ಊರ ಗೌಡಾಗಿ, ಊರಾಗ ದೋ ಪಾರ್ಟಿ ಇಟಗೊಂಡು ಖೂನಿ ಮಾಡಿಸಿಕೊಂತ…. +“ಯಾವ ದೋ ಪಾರ್ಟಿ? ಎಲ್ಲಿ ಖೂನಿ? ಏನ ಸಾಹೇಬರ, ಏನಂಬೋ ಮಾತಿದು?” +“ನನಗ್ಗೊತ್ತಲೇ ಚೇರ್ಮನ್ ಪಾರ್ಟಿ ಮಂದೀನ ಇಂದ ಹಬ್ಬದ ನೆವದಾಗ ನಾಯಕರ ಹುಡುಗರ ಕಡಿಂದ ಬಡಸಬೇಕಂತ….” +ಎಲ್ಲ ಅರೆಮಾತುಗಳಾಗಿದ್ದರಿಂದ ಗುಡಸೀಕರ ಏನೇನು ಹೇಳಿದ್ದಾನೋ ಎಂದು ಗೌಡನಿಗೂ ದಿಗಿಲಾಯಿತು. ಕ್ರಮಬದ್ಧವಾಗಿ ಪೋಜುದಾರನ ಜೊತೆಮಾತಾಡುವುದೂ ಸಾಧ್ಯವಿರಲಿಲ್ಲ. ಮತ್ತೆ ಪೋಜುದಾರನೇ ಬಾಯಿಬಿಟ್ಟ- +“ನೋಡಾ ಗೌಡಾ, ಊರಾಗ ಹೊಡೆದಾಟ ಆಗೋ ಛಾನ್ಸ್ ಇದ್ದಾಗ ಇಂತಾ ಹಬ್ಬಾ ಮಾಡಾಕ ಕೊಡಬಾರದಂತ ಗೊತ್ತಿಲ್ಲ ನಿನಗ? ನಿಲ್ಲಿಸ ಮೊದಲ….” +“ಸಾಹೇಬರ ಹೊಡೆದಾಟ ಬಡಿದಾಟ ಅದರ ಆ ಜವಾಬ್ದಾರೀ ನಂದು. ತಮ್ಮ ಪಾಡಿಗೆ ತಾವ ಹಾಡಿಕೊಂಡ ಕುಣೀತಾವ. ನೀವು ಆರಾಮ ನಿದ್ದೀ ಮಾಡರಿ.” +ಎಂದ ಗೌಡ. ಪೋಜುದಾರನ ನೆತ್ತರು ಕುದಿಯಲಾರಂಭಿಸಿತು. ಒಳಗಿನ ದೇಸೀ ದೇವಿ ತುಳುಕಲಾರಂಭಿಸಿದಳು. ತನ್ನ ಮುಂದೆ ಈ ಹಳ್ಳೀ ಗೌಡನ ಸೊಕ್ಕೆಷ್ಟು ಅಂದ. ಕೈತೊಳೆದು ಎದ್ದವನೇ ತೂರಾಡುತ್ತ ಬಾಗಿಲು ತೆಗೆಯಹೋದ. ಹೊರಗಡೆಯಿಂದ ಚಿಲಕ ಹಾಕಿದ್ದರು. ಬಾಗಿಲು ಎಳೆದ, ಜಗ್ಗಿದ, ಒದ್ದ, ಕಾಲಿಗೆ ಪೆಟ್ಟು ತಾಗಿ ತಿರುಗಿ ಎಲ್ಲೇ ಇದ್ದ ಹಾಸಿಗೆಯ ಮೇಲೆ ಕೂತ. ‘ಬಾಗಲಾ ತೆಗಿಸಲೇ’ ಎಂದು ಒಂದೆರಡು ಬಾರಿ ಕಿರಿಚಿದ. ಪೋಲೀಸರಿಬ್ಬರೂ ಅತ್ತಿತ್ತ ಅಲೆದಾಡಿ ಹೊರಕ್ಕೆ ಹೋಗಲು ದಾರಿಯಿದೆಯೇ ನೋಡಿದರು. ಯಾರಾದರೂ ಹಾದಾಡುತ್ತಿದ್ದರೆ ಕರೆಯಬೇಕೆಂದು ಕಿಟಿಕಿಯಿಂದ ಇಣಿಕುತ್ತ ಚಡಪಡಿಸಿದರು. +ಗೌಡ ಇವರ ಒದ್ದಾಟ ನೋಡದಾದ. ಇವನ ನೆಮ್ಮದಿ ನೋಡಿ ಪೋಜುದಾರನ ನೆಮ್ಮದಿ ಹದಗೆಟ್ಟಿತು. +“ಏ ಗೌಡಾ, ನಾ ಇರೋವಾಗ ಇವರು ಹೆಂಗ ಹಬ್ಬ ಮಾಡತಾರ ನೋಡತೀನಿ, ನಿನ್ನೂ ನೋಡಿಕೋತೀನಿ….” +ಗೌಡ ಅದೇ ಸಮಾಧಾನದಿಂದ ಹೇಳಿದ- +“ಸಾಹೇಬರ, ಈ ಊರಿನ ನರ ನಿಮಗ್ಗೊತ್ತಿಲ್ಲರಿ” +“ಏ, ಇದು ನನ್ನ ಆಳಿಕಿ ಊರೋ…” +“ಅಲ್ಲ ಸಾಹೇಬರ, ನನ್ನ ಆಳಿಕೀದು. ನಾವೇನಾದರೂ ತಪ್ಪು ಮಾಡಿದರ ನಿಮ್ಮ ಆಳಿಕಿ. ಈಗ ಹಂತಾ ತಪ್ಪೇನು ಆಗಿಲ್ಲ. ಅಷ್ಟೂ ಮೀರಿ ನಿಮ್ಮ ಆಳಿಕಿ ತೋರಸ್ತೇವಂದರ, ನೋಡ್ರೀ, ಮೊದಲ ಹೇಳಿರತೀನಿ. ಅವು ಮೊದಲ ಹರೇದ ಸೊಕ್ಕೇರಿದ ಹುಡುಗರು, ಕಾಡ ಅಡ್ಡಾಡಿ ಬ್ಯಾಟಿ ತಂದಾವ, ಕುಡದ್ದಾವ. ಊರ ಸೂಳೇರಾಗಿದ್ದರ ಹೆಂಗೋ ನಡೀತಿತ್ತು; ಪರವೂರ ಸೂಳೇರ ಬಂದಾರ, ಅವರ ಮುಂದ ಕುಣ್ಯಾಕ ಹತ್ಯಾವ. ಅವರನ್ನ ನೀವು ಹೋಗಿ ತಡವಿದರ, ಖರೇ ಹೇಳತೀನ್ರಿ-ಮುಂದಿನ ಹೋನಾರಕ್ಕ ನಾನಂತೂ ಜವಾಬ್ದಾರಲ್ಲ.” +-ಅಂದ. ಪೋಜುದಾರನ ಬಾಯಿ ಬಂದಾಯಿತು, ಮಲಗಿದ. ಅಷ್ಟರಲ್ಲಿ ಪೋಜುದಾರ ನಿದ್ದೆ ಮಾಡುವುದನ್ನು ನೋಡಿದ ಪೋಲೀಸರು ತಾವೂ ಮಲಗಿಕೊಂಡರು. ಗೌಡ ಅವರನ್ನು ನೋಡಿ ಒಳಗೊಳಗೇ ನಕ್ಕ. ಎದ್ದು ಬಂದು ಕಿಟಕಿಯಲ್ಲಿ ಹಣಕಿ ಹಾಕಿದ. ದೂರದಿಂದ ಲಗುಮವ್ವನ ದನಿ ಹುಡುಗರ ಹುಯ್ಲಿನೊಂದಿಗೆ ಕೇಳಿ ಬರುತ್ತಿತ್ತು: +ಬ್ಯಾಟಿ ಬ್ಯಾಟಿಯನಾಡಿದಾ | +ಬ್ಯಾಡರ ಹುಡುಗ +ಕಾಡ ಬ್ಯಾಟಿಯನಾಡಿದ || +ಇಲ್ಲಿ ನಿಂತುಕೊಂಡೇ ಅವಳ ತುಳುಕಾಟ ಊಹಿಸಿದ. ಸೆರೆ ಸುರಿದ ಹಾಗೆ ಊರೆಲ್ಲ ಬೆಳ್ದಿಂಗಳಿಂದ ತೊಯ್ದು ಹೋಗಿತ್ತು. ಕೈಕಾಲು ಅಲುಗಿಸಲೂ ಆಗದಷ್ಟು ನಶೆಯೇರಿ ತೇಲುಗಣ್ಣ ಜೋಕಾಲಿಯಲ್ಲಿ ತೇಲುತ್ತ ಹಳ್ಳಿಗೆ ಹಳ್ಳೀಯೇ ಬಾಯಿಂದ ಸೆರೆ ಸಾಕಾಗಿ, ಈಗ ಕಿವಿಯಿಂದ ಹಾಡನ್ನು ಕೇಳುವಂತಿತ್ತು. ಪೋಜುದಾರ ಬಂದಾಗ ಊರು ಗಾಬರಿಯಾದದ್ದು ನಿಜ, ಬೆರಗಾದದ್ದು ನಿಜ. ಆದರೆ ಕುಡಿದ ಬೆಳ್ದಿಂಗಳು ಅಂಗಾಲಿನ ತನಕ ಇಳಿದ ಮೇಲೆ ಮತ್ತೆ ಮೊದಲಿನ ತನ್ನ ಸಹಜ ಸ್ಥಿಗೆ ತಲುಪಿತು. ಬದುಕಿನ ಬಗೆಗಿನ ಅದೇ ಉತ್ಸಾಹ ಉಕ್ಕತೊಡಗಿತು. ಪೋಲೀಸರು ಈ ಹಳ್ಳಿಗೆ ಬಂದುದು ಇದೇ ಪ್ರಥಮ ಸಲವೂ ಅಲ್ಲ. ಹಿಂದೆ ಎರಡು ಮೂರು ಬಾರಿ ಸ್ವಾತಂತ್ರ್ಯ ಚಳುವಳಿಗಾರರನ್ನು ಹುಡುಕುವ ನೆಪದಲ್ಲಿ ಬಂದಿದ್ದರು. ಹೇಗೆ ಬಂದರೂ ಹೊರಗಿನವರು ಹೊರಗೇ ಉಳಿದಿದ್ದರು. +ಪೋಜುದಾರನಿಗೆ ಎಚ್ಚರಾದಾಗ ಮುಂಜಾನೆ ಬೆಳ್ಳಂಬೆಳಗಾಗಿತ್ತು. ಎದ್ದ, ಬಾಗಿಲು ತೆರೆದಿತ್ತು. ‘ಗೌಡ, ಕುಲಕಣ್ಣಿ ಎಲ್ಲಿ?’ ಎಂದು ಹಳಬನನ್ನು ಕೇಳಿದ. ಚಾವಡಿಯಲ್ಲಿ ತಮ್ಮಗಾಗಿ ಕಾಯುತ್ತಿದ್ದಾರೆ ಎಂದನವ. ಬೆಳಗಿನ ವಿಧಿಗಳನ್ನು ಪೂರೈಸಿ ಚಾವಡಿಗೆ ಹೋದ. ಆಗಲೇ ಗೌಡ ನಿನ್ನೆ ರಾತ್ರಿ ಮನೆಯಲ್ಲಿ ನಡೆದುದನ್ನು ದತ್ತಪ್ಪನಿಗೆ ಹೇಳಿ ನಗಾಡುತ್ತಿದ್ದ. ಪೋಜುದಾರ ಬಂದವನೇ ಅವರನ್ನು ಕರೆದುಕೊಂಡು ಇನ್ನೊಮ್ಮೆ ನಿಂಗೂನ ತೋಟಕ್ಕೆ ಹೋದ. ಅದೇ ನಿಂಗೂನ ಗುಡಿಸಲು ಎಂದು ಖಾತ್ರಿ ಮಾಡಿಕೊಂಡ. +ಅದೆ ಗುಡಿಸಲು ಹಾಗೇ ಇತ್ತು. ಗುಡಸೀಕರ ಬೆಳಗಾಂವಿಗೆ ಹೋದೊಡನೆ ಗೌಡ ಗುಡಿಸಲನ್ನು ಸುಡಿಸದೆ ಹಾಗೇ ಇಟ್ಟಿದ್ದ. ಹೆಣ ಮಣ್ಣು ಮಾಡಿಸಿದ್ದ. ಗುಡಿಸಲನ್ನು ಹಸನು ಮಾಡಿಸಿ ಯಥಾಸ್ಥಿತಿಗೆ ತಂದಿದ್ದ. ಅದೀಗ ಎಷ್ಟು ಸಹಜವಾಗಿತ್ತೆಂದರೆ ಅಲ್ಲಿ ಖೂನಿಯಾಯಿತೆಂದು ಪೋಜುದಾರನಿಗೇನು, ಸ್ವತಃ ಆ ಊರಿನವನೂ ನಂಬಲಾಗುತ್ತಿರಲಿಲ್ಲ. +ತಿರುಗಿ ಚಾವಡಿಗೆ ಬಂದು ಗುಡಸೀಕರನಿಗೆ ಬುಲಾವ್ ಕಳಿಸಿದ. ಅವನು ಇಲ್ಲವೆಂದು ತಿಳಿಯುತ್ತಲೂ ನಿನ್ನೆಯ ಸಿಟ್ಟೆಲ್ಲ ಅವನ ಮೇಲೆ ತಿರುಗಿತು. ಅವನೇ ಬಂದು ಊರಲ್ಲಿ ದೋ ಪಾರ್ಟಿ ಉಂಟೆಂದೂ, ತನ್ನ ಪಾರ್ಟಿಯವನನ್ನು ಗೌಡನ ಪಾರ್ಟಿಯ ನಿಂಗೂ ಕೊಂದು ಗುಡಿಸಲಲ್ಲಿಟ್ಟು ಬೆಂಕೀ ಹಚ್ಚಿ ಸುಟ್ಟನೆಂದೂ ಇದಕ್ಕೆ ಗೌಡನ ಬೆಂಬಲವಿತ್ತೆಂದೂ, ಇಂದಿನ ಹಬ್ಬದ ದಿನ ಅನೇಕರ ಖುನಿ ಆಗಲಿವೆಯೆಂದೂ ವಕೀಲಿ ಓದಿದ್ದರೂ ದಡ್ಡತನದಿಂದ ಬಾಯಿಗೆ ಬಂದದ್ದನ್ನೆಲ್ಲ ಒದರಿ ಬರೆದುಕೊಟ್ಟಿದ್ದನಂತೆ. ಅದನ್ನೆಲ್ಲ ಹೇಳಿ ಪೂಜುದಾರ, ಅವನೇನು ಕಮ್ಮಿ?- ಬಾಯಿಗೆ ಬಂದ ಹಾಗೆ ಬಯ್ದು ಹೊರಟ. ಹಾಲು ಕುಡಿದು ಹೋಗಬೇಕೆಂದು ಗೌಡ ವಿನಂತಿಸಿಕೊಂಡ. ನಾಲ್ಕೈದು ತತ್ತೀ ಒಡೆದು ತಿಂದು ಚರಿಗೆ ಹಾಲು ಕುಡಿದು ಪೋಜುದಾರ ಜೀಪು ಹತ್ತಿದ. ಪೀಡೆ ಹೋಯಿತು. ಅವನು ಅತ್ತ ಹೋದೊಡನೆ ಸೀರೆ ಉಟ್ಟ ನಿಂಗೂನ್ನ ನೋಡಿ ಗೌಡ, ದತ್ತಪ್ಪ “ಹೋ, ಹೋ’ ಎಂದು ನಕ್ಕರು. +ನಿನ್ನೆ ನಿಂಗೂನ್ನ ಚಡಪಡಿಕೆ ನೋಡಲಾರದೆ ಲಗಮವ್ವ “ಕರಿಮಾಯಿಗೆ ಬೇಡಿಕೊ. ಪಾರ ಮಾಡುತಾಳು” ಎಂದಿದ್ದಳಂತೆ. ನಿಂಗೂ ಅವಳು ಹೇಳಿದಂತೆಯೇ “ಹಡದವ್ವಾ, ಇದರಿಂದ ನನ್ನ ಪಾರುಮಾಡು, ಸೀರೀ ಉಟ್ಟ ನಿನ ಮುಂದ ಕುಣಿತೀನು” ಎಂದು ಬೇಡಿಕೊಂಡನಂತೆ. ಹೀಗೆ ಹರಕೆ ಹೊತ್ತವನು ಕರಿಮಾಯಿ ಪಾರುಮಾಡುವ ತನಕ ಕೂಡ ಕಾಯದೆ ಸೀರೆ ಉಟ್ಟುಬಿಟ್ಟಿದ್ದ. ಕರಿಮಾಯಿಯ ಮಹಿಮೆಗೆ ಏನೆನ್ನೋಣ! ಅದರಿಂದ ಅವನಿಗೆ ಲಾಭವೇ ಆಗಿತ್ತು. +ಹೊರಗಿನ ಪೀಡೆ ಹೋಯಿತೇನೋ ನಿಜ. ಆದರೆ ಗುಡಸೀಕರನ ಮನಸ್ಸಿನಲ್ಲಿ ಸೇಡುಳಿಯಿತು. ಆ ದಿನ ಪೋಜುದಾರನೊಂದಿಗೆ ಅವನೂ ಜೀಪಿನಲ್ಲಿ ಬಂದಿದ್ದ. ಆದರೆ ಜನಗಳನ್ನು ಎದುರಿಸಲಾರದೆ ದೂರದಲ್ಲೇ ಇಳಿದು ಕಳ್ಳದಾರಿಯಿಂದ ಮನೆಸೇರಿದ್ದ. ಮಾರನೇ ದಿನ ಮುಂಜಾನೆ ಪೋಜುದಾರನ ಬುಲಾವ್ ಬಂದಾಗ ಮನೆಯಲ್ಲಿದ್ದರೂ ಇಲ್ಲವೆಂದು ತಂಗಿಯಿಂದ ಹೇಳಿಸಿದ್ದ. ಅಂದೇ ರಾತ್ರಿ ತಲೆಮರೆಸಿಕೊಂಡು ಬೆಳಗಾವಿಗೆ ಹೋಗಿ ಎಂಟು ದಿನ ಇದ್ದು ಊರಿಗೆ ಬಂದ. ಅವಮಾನದಿಂದ ವಿಕಾರಗೊಂಡ ಅವನ ಮುಖವನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಂದಮೇಲೂ ತಾನೇನೂ ಮಾಡಿಲ್ಲದವನಂತೆ ಭಂಡತನದಿಂದಲೇ ಇದ್ದ. ಜನ ಅನ್ನುವಷ್ಟು ಅಂದು ಸುಮ್ಮನಾದರು. +ಗೌಡ ಗುಡಸೀಕರನ ಬಗ್ಗೆ ಯೋಚಿಸಲೇಬೇಕಾಗಿತ್ತು. ಹುಡುಗ ಯಾವುದನ್ನೂ ತನ್ನ ಮೂಗಿನ ನೇರದಿಂದಲೇ ನೋಡುತ್ತಿದ್ದ. ಹಾಗೆ ನೋಡಿದಾಗ ಎದುರಿಗೆ ಏನಿದ್ದರೂ, ಊರು ಸಹ ಎರಡಾಗಿ ಕಾಣಿಸುತ್ತಿತ್ತು. ನಂತರ ಬಂದ ಹೋಳಿ ಹಬ್ಬದಲ್ಲಿ ಇದು ಗೌಡನಿಗೂ ಖಾತ್ರಿಯಾಗಿ ಬಿಟ್ಟಿತು. +ಹೋಳೀ ಹಬ್ಬ +ಶಿವಪುರದ ಪಾಲಿಗೆ ಗಂಡಸರ ಹಬ್ಬವೆಂದರೆ ಇದೊಂದೇ. ಈ ಊರ ಹೋಳಿಹುಣ್ಣೀಮೆಯೆಂದರೆ ಸುತ್ತ ಹದಿನಾಲ್ಕು ಹಳ್ಳಿಗೆಲ್ಲ ಪ್ರಸಿದ್ಧವಾಗಿತ್ತು. ಗಂಡಸರು ಸಂಕೋಚವಿಲ್ಲದೆ ಹಿರಿನಿಂಗ ಕಿರಿನಿಂಗನ್ನೋ ಬೇಧವಿಲ್ಲದೆ ಹಬ್ಬದಲ್ಲಿ ಭಾಗವಹಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು ಅಥವಾ ಊರಿನ ಮದುವೆಯಾಗದ ಉಡಾಳರಿಗೂ, ಸೂಳೆಯರ ತಂಡಕ್ಕೂ ಹಾಡಿನ ಜಿದ್ದಾ ಜಿದ್ದಿ ಸ್ಪರ್ಧೆಯಾಗುತ್ತದಲ್ಲ ಅದಕ್ಕಿರಬಹುದು. ಅಥವ ಹೀಗೂ ಇರಬಹುದು; ಗೋಕಾವಿ ಕರದಂಟು, ತುಕೋಳ ತಂಬಾಕು, ನಿಪ್ಪಾಣಿಬೀಡಿ- ಹೀಗೆ ಒಂದೊಂದೂರು ಒಂದೊಂದಕ್ಕೆ ಪ್ರಸಿದ್ಧವಾದಂತೆ ಶಿವಪುರದ ಸೂಳೆ ಎಂಬ ಮಾತು ಇರೋಣದರಿಂದ ಸಹಜವಾಗಿಯೇ ಇಲ್ಲಿಯ ಸೂಲೆಯರು ಚೆಲುವೆಯರು. ಅಷ್ಟೇ ಯಾಕೆ ಒಬ್ಬ ಜನಪದ ಕವಿಯ ಪ್ರಕಾರ- +ಇಡೀ ಜಗತಾಗ ಎಲ್ಲೂ ಇಲ್ಲರಿ +ಇಂಥಾ ಮೋಜಿನ ಹುಡುಗೇರಾ || +ತುಂಬ ನಿತಂಬಾ ಹುಬ್ಬ ಕುಣಿಸತಾರ +ನಿಂತಲ್ಲೆ ಬೆವರ್‍ಯಾರ ಪೈಲ್ವಾನರಾ || +ತೊಡಿಗೋಳ ಹುರಿಮಾಡಿ ಉಸರ ಹಾಕತಾರ +ಬಾಸಿಂಗ ಕಾಣದ ಹುಡುಗೋರಾ || +ಏನಂತ ಹೇಳಲಿ ಶಿವಾಪುರ ಸೂಳೇರ +ಅಸಲ ಸೊಂಟದ ಸಡಗರಾ || +-ಎಂದೂ ಇರುವುದರಿಂದ ಇದೂ ಕಾರಣವಾಗಿರಬಹುದು. ಅಥವಾ ಬೇರೆ ಕಾರಣಗಳು ಇರಬಹುದು. ಅಂತೂ ಈ ಊರ ಹೋಳೀ ಹಬ್ಬ ಪ್ರಸಿದ್ಧವೆಂಬುದಂತೂ ನಿಜ. +ಇದು ಈ ಊರವರಿಗೂ ತಿಳಿದದ್ದೆ. ಆದರಿಂದಲೇ ಹೋಳೀ ಹುಣ್ಣಿಮೆ ಇನ್ನೂ ಹತ್ತು ಹನ್ನೆರಡು ದಿನ ಇರುವಾಗಲೇ ಊರಿನ ಜನ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ. ತದಿಗೆಯ ಚಂದ್ರನನ್ನು ನೋಡಿದೊಡನೆ ಮಕ್ಕಳೆಲ್ಲ ಓಣಿಯಲ್ಲಿ ಸೇರಿ ಹೊಯ್ಕೊಳ್ಳತೊಡಗುತ್ತವೆ. ಒಂದೆರಡು ಗಂಟೆ “ಹೊಯ್ಕೊಳ್ಳುವ ಸೇವೆ” ಮಾಡಿ, ಮಂದಿ ಮಲಗಿದ ಮೇಲೆ ಪಕ್ಕದ ಹಿತ್ತಲಗಳಿಗೆ ಹಾರಿ ಕುಳ್ಳು (ಬೆರಣಿ) ಕಟ್ಟಿಗೆ ಕದ್ದು ಹಾಳು ಮನೆಯಲ್ಲಿ ಸಂಗ್ರಹಿಸಿ ಮಲಗಲಿಕ್ಕೆ ಹೋಗುತ್ತವೆ. ಹುಣ್ಣಿಮೆ ಬರುವವರೆಗೆ ಪ್ರತಿರಾತ್ರಿ ಈ ಕಾರ್ಯಕ್ರಮ ಚಾಚೂ ತಪ್ಪದೆ ನಡೆಯುತ್ತದೆ. +ವಯಸ್ಸಿನಲ್ಲಿ ಇವರಿಗಿಂತ ದೊಡ್ಡ ಹುಡುಗರು, ಆದರೆ ಮದುವೆಯಾಗದವರು, ಕರಿಮಾಯಿಯ ಗುಡಿಯಲ್ಲಿ ರಾತ್ರಿ ಸೇರಿ ಹಳೆಯ ಹೋಳೀ ಪದ ಜ್ಞಾಪಿಸಿಕೊಳ್ಳುತ್ತ, ಹೊಸ ಪದ ಹೊಸೆಯತೊಡಗುತ್ತಾರೆ. ಈ ಹಬ್ಬವನ್ನು ಒಟ್ಟು ಎರಡು ದಿನ ಆಚರಿಸುತ್ತಾರೆ. ಹುಣ್ಣಿಮೆಯ ದಿನ ಗೌಡನ ನೇತೃತ್ವದಲ್ಲಿ ಹಿರಿಯರು, ಪಂಚರು ವಾದ್ಯ ಸಮೇತ ಕಾಡಿಗೆ ಹೋಗಿ ಎಸಳಾದ ಮರದ ಟೊಂಗೆಯೊಂದನ್ನು ಕಡಿದು ತಂದು ಕರಿಮಾಯಿಯ ಗುಡಿಯ ಮುಂದೆ ನಿಲ್ಲಿಸುತ್ತಾರೆ. ಮಕ್ಕಳು ಕದ್ದು ತಂದ ಕುಳ್ಳು ಕಟ್ಟಿಗೆಗಳನ್ನೆಲ್ಲ ತಂದು ಅದರ ಸುತ್ತ ಗುಂಪಿ ಹಾಕುತ್ತಾರೆ. ಆ ದಿನ ಮನೆಯಲ್ಲಿ ಹೋಳಿಗೆಯೂಟ, ರಾತ್ರಿ ಊರಿನ ಉತ್ಸಾಹಿಗಳು ತಯಾರು ಮಾಡಿದ ಆಟ, ಮೋಜು, ಸೋಗು ನಡೆಯುತ್ತವೆ. +ಮಾರನೇ ದಿನವೇ ಧೂಳವಾಡ. ಹೊತ್ತು ಹುಟ್ಟುವ ಮುಂಚೆಯೇ ಗೌಡನ ನೇತೃತ್ವದಲ್ಲಿ ಜನರೆಲ್ಲ ಕಾಮನನ್ನು, ಅರ್ಥಾತ್ ಮರದ ಟೊಂಗೆಯನ್ನು ನಿಲ್ಲಿಸಿದ ಸ್ಥಳಕ್ಕೆ ವಾದ್ಯ ಸಮೇತ ಬರುತ್ತಾರೆ. ಅವರೆಲ್ಲ ಕಾಮನ ಸುತ್ತ ಗಿಹಿಗಿಟ್ಟುತ್ತ ನಿಂತ ದೃಶ್ಯ ನೋಡಬೇಕು. ಒಬ್ಬರ ಮೈಮೇಲೂ ಸರಿಯಾಗಿ ಬಟ್ಟೆ ಇರುವುದಿಲ್ಲ. ಒಬ್ಬೊಬ್ಬರೂ ಈ ಹಬ್ಬಕ್ಕೆಂದೇ ಇಟ್ಟ ಹಳೇ, ಹರಿದ ಚಿಂದಿ ಬಟ್ಟೆಗಳನ್ನು ಹೊರತೆಗೆದು ಹಾಕಿಕೊಂಡಿರುತ್ತಾರೆ. ಸೊಂಟದ ಸುತ್ತ ಚಿಂದಿ ಬಟ್ಟೆಯ ಹಿಂಡು ಹಿಂಡು ಗಂಡಸರು ಬಾಯ್ಗೆ ಕೈ ಒಯ್ಯುವ ಅವಸರದಲ್ಲಿರಲು, ಮುದುಕರು ಲಗಮವ್ವನ ನಿತಂಬಗಳನ್ನೇ ನೋಡುತ್ತ ಹಳೆಯ ಕಾಲ ನೆನಪಿಸಿಕೊಂಡು ಸಂಭ್ರಮದಲ್ಲಿರಲು, ನೋಟ ಕಾಣದೆ ಅವಕಾಶ ಸಿಕ್ಕಲ್ಲಿ ನುಸುಳುತ್ತ ಸಣ್ಣ ಮಕ್ಕಳು ಚಡಪಡಿಸುತ್ತಿರಲು ಗೌಡ ಕಾಮನ ಗುಂಪಿಗೆ ಬೆಂಕಿ ಹಚ್ಚುತ್ತಾನೆ. ಕೂಡಲೇ ಎಲ್ಲರೂ ಅಕ್ಷರಶಃ ದನಿ ಮುಗಿಲು ಮುಟ್ಟುವ ಹಾಗೆ ಲಬೋ ಲಬೋ ಅಂತ ಹೊಯ್ಕೊಳ್ಳುತ್ತಾರೆ. ವಾದ್ಯದವರು ವಾದ್ಯ ಬಾರಿಸುತ್ತಾರೆ. ಅವರು ಹೊಯ್ಕೊಳ್ಳುವುವುದರ ಮೇಲಿಂದಲೇ ಬೇಕಾದರೆ ಅವರವರ ವಯಸ್ಸು ಹೇಳಿ ಬಿಡಬಹುದು. ಮುದುಕರು ಒಂದೆರಡು ಸಲ ಹೊಯ್ಕೊಂಡು ಸುಮ್ಮನಾದರೆ ನಡು ವಯಸ್ಸಿನವರು ಅವರಿಗಿಂತ ಹೆಚ್ಚು, ಮದುವೆಯಾಗದ ಹುಡುಗರು ಇನ್ನೂ ಹೆಚ್ಚು. ಮಕ್ಕಳು ನಿಲ್ಲಿಸುವುದೇ ಇಲ್ಲ. +ಅದೆಲ್ಲ ಸುಟ್ಟು ಬೂದಿಯಾದ ಮೇಲೆ ಲಗಮವ್ವ ಒಂದು ಹರಿವಾಣದಲ್ಲಿ ಬೂದಿ ತುಂಬಿಕೊಂಡು ಊರ ಸೀಮೆಯಗುಂಟ ಸಿಂಪಡಿಸಿ ಬರುತ್ತಾಳೆ. ಅಂದರೆ ಸೀಮೆಯಾಚೆಯ ರೋಗ-ರುಜಿನಾದಿಗಳು ಊರಿಗೆ ಬರುವುದಿಲ್ಲವೆಂದೂ, ಆ ಭಾಗ ಧನ-ಧಾನ್ಯಗಳಿಂದ ತುಂಬಿ ತುಳುಕುವಿದೆಂದೂ ನಂಬಿಕೆ. ಇಷ್ಟೊತ್ತಿಗಾಗಲೇ ಹೊತ್ತು ಮೂರು ಮಾರು ಏರಿರುತ್ತದೆ. ಸೀಮೆ ಕಟ್ಟಿದ ಲಗಮವ್ವ ಸೀದಾ ಹೊಲಗೇರಿಗೆ ಹೋಗಿ ಸೂಳೆಯರನ್ನೆಲ್ಲ ಕಲೆಹಾಕಿ ಗುಡಿಗೆ ಹೊರಡುತ್ತಾಳೆ. ಹಾಡಿನ ಜಿದ್ದಾದ ಮೇಲೆ ಬಣ್ಣ ಗೊಜ್ಜಾಡಬೇಕಲ್ಲ, ಸೂಳೆಯರು ಸಾಮಾನ್ಯವಾಗಿ ಹರಕು ಸೀರೆ ಉಟ್ಟಿರುತ್ತಾರೆ. ಅವರ ಸೀರೆ ಎಷ್ಟೆಷ್ಟು ಹರಿದಿದ್ದರೆ ರಸಿಕರ ಬಾಯಿ ಅಷ್ಟಷ್ಟು ತೆರೆದಿರುತ್ತವೆ. +ಹಾಗೆ ಇವರ ತಂಡ ಗುಡಿಯ ಕಡೆ ಹೊರಟಾಯಿತು. ಹುಡುಗರು ತಂಡತಂಡವಾಗಿ ಹೊಯ್ಕೊಳ್ಳುತ್ತ ಬೆನ್ನು ಹತ್ತುತ್ತಾರೆ. ಮಧ್ಯೆ ಮಧ್ಯೆ ಅವರಿಗೂ ಇವರಿಗೂ ಹ್ಯಾವದ ಮಾತು, ದೀಡೀ ದಿಕ್ಕಟ್ಟು, ಕುಚೇಷ್ಟೆಗಳು, ಕೊಡುಕೊಳೆ ನಡೆದಿರುತ್ತದೆ, ಉದಾ: “ಏಳೂರು ನೀರು ಕುಡಿದಲ್ಲದ ಈ ಮಣಕಿನ ಬೆದಿ ನಿಲ್ಲಾಣಿಲ್ಲಲೇ” ಎಂದು ಗಂಡು ಹಿಂಡಿನಿಂದ ಮಾತು ಬಂದರೆ “ಅಯ್ಯ, ತೊಯ್ಸಿಕೊಂಡ ಕಾಗೀ ಹಾಂಗ ಮಾರಿ ಮಾಡಿಕೊಂಡ ಎಷ್ಟ ಮಾತಾಡತೈತಿ ನೋಡಽ” ಎಂದು ಆ ಕಡೆಯಿಂದ ಬರುತ್ತದೆ. “ಹಿಡಿದ ಹಿಂಡಿದರ ಮೈಯಾಗ ತಟಕ ರಸ ಇಲ್ಲ; ಬಾಯಿ ನೋಡ ವಟ ವಟಾ” ಎಂದು ಈ ಕಡೆಯಿಂದ ಬಂದರೆ “ಸೀರೀ ಮರೀಗಿ ಸಿಂಬಳಾ ಒರಸತಾಳ, ಗಲ್ಲ ಕಡದರ ಗುಲ್ಲ ಮಾಡತಾಳ, ಯಾರಲೇ ಹುಡುಗಾ?” ಎಂದೊಂದು ಚಿಗುರು ದನಿ ಮೂಡಿದರೆ ಉಳಿದ ಹಿಂಡೆಲ್ಲ ಅವರಲ್ಲಿನ ಒಬ್ಬಳ ಹೆಸರು ಹೇಳಿ ಹೊಯ್ಕೊಳ್ಳತೊಡಗುತ್ತಾರೆ. ಹೀಗೆ ಸಭ್ಯತೆಯಿಂದ ಸುರುವಾದದ್ದು ಯಾವ ಕೊನೆ ತಲುಪೀತೆಂದು ಹೇಳಲಿಕ್ಕಾಗುವುದಿಲ್ಲ. ಗುಡಿಯ ತನಕ ಇಂಥ ಕೊಂಕು ಬಾಣಗಳ ಸುರಿಮಳೆ ಹಾಗೇ ಸಾಗೇ ಇರುತ್ತದೆ. +ಪ್ರತಿಯೊಬ್ಬ ಸೂಳೆಯ ಕೈಯಲ್ಲಿ ಈ ದಿನ ಆತ್ಮರಕ್ಷಣೆಗೆ ಒಂದೊಂದು ಮುಳ್ಳಿನ ಸಿಂಧೀ ಝಳಿಕಿ ಇರುತ್ತದೆ. ಯಾಕೆಂದರೆ ಬಣ್ಣ ಗೊಜ್ಜುವಾಗ, ಹೇಳಿ ಕೇಳಿ ಶಿವಾಪುರದ ಹುಡುಗರಾದ್ದರಿಂದ ಸೊಂಟದ ವಿಷ ಇಳಿಯುವತನಕ ಅವಕ್ಕೆ ಮನುಷ್ಯರ ಮಾತೇ ತಿಳಿಯುವುದಿಲ್ಲವಾದ್ದರಿಂದ ಏನಾದೀತು, ಏನಾಗಲಿಕ್ಕಿಲ್ಲ ಎಂದು ಹೇಳಬರುವಂತಿಲ್ಲ. ಈ ಹೊತ್ತು ಯಾರೇನು ಮಾಡಿದರೂ, ಯಾರೂ, ಸ್ವತಃ ದೇವರೂ ಕೇಳಬಾರದು. ಮುದಿ ಸೂಳೆಯರಿಗಂತೂ ಕೈಕೊಟ್ಟ ಹಳೇ ಮಿಂಡರ ಸೇಡು ತೀರಿಸಿಕೊಳ್ಳುವುದಕ್ಕೆ ಇದು ಒಳ್ಳೇ ಸಂಧರ್ಭ. ಜನಗಳಲ್ಲಿ ಹಿಗ್ಗಿ ನುಗ್ಗಿ ಮೈ ನೆತ್ತರಾಡುವ ಹಾಗೆ ಸಿಂಧೀ ಝಳಕಿಯಿಂದ ಬಾರಿಸುತ್ತಾರೆ. ಅವರು ತಾಕತ್ತಿದ್ದರೆ ಎದುರಿಸುತ್ತಾರೆ; ಇಲ್ಲವೆ ಹುಡುಗರ ಹಿಂದೆ ಅಡಗಿ ಅಡಗಿ ಓಡಿಹೋಗುತ್ತಾರೆ. ಇದು ಅವರವರ ಪ್ರೀತಿ, ಸೊಕ್ಕು, ಧಿಮಾಕು, ದಿಗರಿಗೆ ಸೇರಿದ್ದು. ಯಾಕೆಂದರೆ ಏಟು ತಿಂದಷ್ಟೂ ಅದು ಹೆಮ್ಮೆ ಪಡುವ ವಿಷಯ-ಗಂಡಸರಿಗೆ. +ಗುಡಿಯ ಕಟ್ಟೆಗೆ ಬಂದಾದ ಮೇಲೆ ಹಾಡುವ ಎರಡು ತುಂಡುಗಳೂ ಎದುರು ಬದುರು ನಿಲ್ಲುತ್ತವೆ. ಮಧ್ಯದಲ್ಲಿ ಹಲಗೆಯವರು ಅರೆ ನಗ್ನರಾದ ತೆರೆಬಾಯಿ ಗಂಡು ಹಿಂಡು ಸುತ್ತ ಸೇರುತ್ತದೆ. ಚಾವಡಿ ಕಟ್ಟೆಯ ಮೇಲೆ ಗೌಡ, ಅವನ ಸುತ್ತ ಹಕ್ಕಿನವರು, ಅಂದರೆ ಪಂಚರು, ಕುಲಕಣ್ಣಿ-ಕೂರುತ್ತಾರೆ. ಗೌಡ ಹಾಡುಗಾರಿಕೆ ಸುರುವಾಗಲೆಂದು ಅಪ್ಪಣೆ ಕೊಟ್ಟ ಕೂಡಲೇ ಎರಡೂ ತಂಡದ ನೇತಾರರು ಗೌಡನಿಗೂ, ಪಂಚರಿಗೂ ನಮಸ್ಕರಿಸಿ ಸುರುಮಾಡುತ್ತಾರೆ. +ಅವರ ಮೇಲೆ ಇವರು, ಇವರ ಮೇಲೆ ಅವರು ವ್ಯಂಗ್ಯದ ಪದ ಹೇಳುತ್ತ ನಡು ನಡುವೆ ರಸಿಕರ ಕೇಕೆ, ವವ್ವಾ, ಭಲೆಗಳೊಂದಿಗೆ ಹಾಡಿನಂತ್ಯದ ಹುಡುಗರ ಹೊಯ್ಕೊಳ್ಳುವುದರೊಂದಿಗೆ ಹಾಡುಗಾರಿಕೆ ಒಂದೆರಡು ತಾಸು-ಹಾಗೆ ರಂಗೇರಿದರೆ ಇನ್ನೂ ಒಂದೆರಡು ತಾಸು ಮುಂದುವರಿಯುತ್ತದೆ. ಮುಗಿದಾದ ಮೇಲೆ ಗೌಡ ಇಬ್ಬರಿಗೂ ಖುಷಿಯಾಗಲಿ ಅಂದರೆ ಒಂದೊಂದು ರೂಪಾಯಿ ಕೊಡುತ್ತಾನೆ. ಪಂಚರೂ ಕೊಡುತ್ತಾರೆ. ಅಲ್ಲಿಗೆ ಹಿರಿಯರ ಭಾಗ ಮುಗಿಯಿತು. ಮುಂದೆ ಹುಡುಗರದೇ ಆಟ. ಸೂಳೆಯರಿಗೆ ಬಣ್ಣ ಗೊಜ್ಜುತ್ತ ಅವರಿಂದ ಸಿಂಧೀ ಗರಿಯ ಏಟು ತಿನ್ನುತ್ತ ಆಟವಾಡುತ್ತಾರೆ. ಇದು ತಲೆತಲಾಂತರದಿಂದ ನಡೆದು ಬಂದ ಪದ್ಧತಿ. +ಆದರೆ ಈ ಸಲ ಹಾಗಾಗಲಿಲ್ಲ. ಗೌದನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಬಂದಾಗಿತ್ತು. ಗುಡಿಯ ಕಟ್ಟೆಯ ಮೇಲೆ ಹಕ್ಕಿನವರು ಕುಳಿತುಕೊಂಡು ಗೌಡನಿಗಾಗಿ ಕಾಯುತ್ತಿದ್ದರು. ಹಾಡಿನ ತಂಡದವರು ತಂತಮ್ಮಲ್ಲೆ ಹಾಡಲಿರುವ ಪದಗಳ ಹೊಳಹು ಹಾಕುತ್ತ ಸೇರಿಸಬೇಕಾದ ವಿವರಗಳನ್ನು ಚರ್ಚಿಸುತ್ತ ಗುಂಪಿನ ಮೇಲೆ ಅದರಿಂದಾಗಬಹುದಾದ ಪರಿಣಾಮಗಳನ್ನು ಕಲ್ಪಿಸಿಕೊಳ್ಳುತ್ತ ಸಂತೋಷಿಸುತ್ತಿದ್ದರು. ನಾಯೆಲ್ಯಾ ಹಲಗಿ ಕಾಸಿ ಅದರ ನಾದ ಹದ ಮಾಡತೊಡಗಿದ್ದ. ಈ ವರ್ಷ ಸೂಳೆಯರ ತಂಡದಲ್ಲಿ ದುರ್ಗಿಯಿದ್ದುದೊಂದು ವಿಶೇಷ ಆಕರ್ಷಣೆಯಾಗಿತ್ತು. ಕೆಲವರು ಆಗಾಗ ದೀಡಿ ಮಾತು ಹೇಳಿ ದುರ್ಗಿಯ ಗಮನ ತಮ್ಮ ಕಡೆ ಸೆಳೆಯುತ್ತಲೂ, ಸೆಳೆದದ್ದಕ್ಕೆ ಹೆಮ್ಮೆಪಡುತ್ತಲೂ ಇದ್ದರು. ಮಾತು ಹೊಳೆಯದ ಮಂದಮತಿಗಳು ಎಲ್ಲರಿಗಿಂತ ಜೋರಾಗಿ ನಕ್ಕು, ಹಾಗೆ ನಕ್ಕರಾದರೂ ದುರ್ಗಿಯ ಗಮನ ತಮ್ಮ ಕಡೆ ಹರಿಯುವಂತೆ ಮಾಡಲು ಖಟಪಟಿ ಮಾಡುತ್ತಿದ್ದರು. ತಡವಾದದ್ದಕ್ಕೆ ತಡೆಯದೆ ಒಂದೆರಡು ಎಳೇ ಹಸುಳೆಗಳು ತಮಗಾಗಿ ಕಾದಿರುವಂತೆ ಹೊಯ್ಕಳ್ಳಲಾರಂಭಿಸಿ ಹಿರಿಯರ “ಬಾಯ್ಮುಚ್ರೆಲೇ, ಛೀ, ಥೂ”ಗಳಿಗೆ ಪಕ್ಕಾಗಿ ಸುಮ್ಮನಾದವು. +ಅಷ್ತರಲ್ಲಿ ಗುಡಸೀಕರನ ಸವಾರಿ ಆಗಮಿಸಿತು. ಕಳ್ಳ ಸಿದ್ರಾಮ ಕೂತ, ನಿಂತ ಮಂದಿಯನ್ನು ಬದಿಗೆ ಸರಿಸಿ ಹಾದಿ ಮಾಡುತ್ತ ಮುಂದೆ ಮುಂದೆ ಬಂದ. ಹಿಂದೆ ಗುಡಸೀಕರನೂ, ಅವನ ಹಿಂದೆ ಮೆಂಬರರೂ ಬರುತ್ತಿದ್ದರು. ಬಂದವರು ಇವರೇ ಎಂದು ಗೊತ್ತಾಗಿ ಜನ ಮತ್ತೆ ಮೊದಲಿನಂತಾದರು. ಕಳ್ಳ ಸಿದ್ರಾಮನನ್ನೂ ದಾಟಿ ಗುಡಸೀಕರ ನೇರವಾಗಿ ಕಟ್ಟೆಯ ಕಡೆ ನಡೆದ. ಕಟ್ಟೆಯಾಗಲೇ ಹಕ್ಕಿನ ಕುಳಗಳಿಂದ ಭರ್ತಿಯಾಗಿತ್ತು. ಗೌಡನಿಗಾಗಿ ಜಮಖಾನೆ ಹಾಸಿ, ಹಿಂದೊಂದು ತೆಕ್ಕೆಯಿಟ್ಟು ಒಬ್ಬರು ಕೂರುವಷ್ಟು ಮಾತ್ರ ಜಾಗ ಖಾಲಿಬಿಟ್ಟಿದ್ದರು. ಗುಡಸೀಕರ ನೆಟ್ಟಗೆ ಕಟ್ಟೇಯೇರಿ ಕುಳಿತ ಕುಳಗಳನ್ನು ದಾಟಿ ಗೌಡನ ಜಾಗದಲ್ಲೇ ಕೂತುಬಿಟ್ಟ! +ಕೂತ ನಿಂತವರೆಲ್ಲ ಒಮ್ಮೆಲೇ ಒಂದು ಕ್ಷಣ ಸ್ತಬ್ಧರಾಗಿ ಆ ಕಡೆ ನೋಡತೊಡಗಿದರು. ಮೆಲ್ಲಗೆ ತಮ್ಮತಮ್ಮಲ್ಲೇ ಗುಸುಗುಸು ಸುರುಮಾಡಿದರು. ಜನ ಇದನ್ನು ನಿರೀಕ್ಷಿಸಿರಲಿಲ್ಲ. ಆಗಬಾರದ್ದು ಆಗಿಹೋದಂತೆ ಹಿರಿಯರು ಕೈ ಕೈ ಹಿಸುಕಿಕೊಂಡರು. ನಾಯೆಲ್ಯಾ ಹಲಗೆ ಹದಮಾಡುವುದನ್ನು ಬಿಟ್ಟು ಕಾಲೆತ್ತರಿಸಿ ಗೌಡನ ಸ್ಥಳದಲ್ಲಿ ಕೂತ ಸರಪಂಚನನ್ನು ನೋಡಿದ. ದತ್ತಪ್ಪನ ಮುಖದ ಮೋಜು ಮಾಯವಾಯಿತು. +ಎಲ್ಲರ ಕಣ್ಣು ತನ್ನನ್ನೇ ಇರಿಯುತ್ತಿದ್ದುದು, ಎಲ್ಲರ ಪಿಸು ನುಡಿಗೆ ತಾನೇ ವಸ್ತುವಾದದ್ದು ಸರಪಂಚನಿಗೂ ತಿಳಿಯಿತು. ತನ್ನ ಪಾಡಿಗೆ ತಾನು ಏನನ್ನೂ ಗಮನಿಸಿಲ್ಲವೆಂಬಂತೆ ಸುಮ್ಮನಿರಲು ಯತ್ನಿಸಿದ. ಸಾಧ್ಯವಾಗಲಿಲ್ಲ. “ಎಲಡಿಕಿ ಚೀಲ ತಂದಿಯೇನಲೇ ನಿಂಗೂ?” ಎಂದು ಕಟ್ಟೆಯ ಹತ್ತಿರ ಕೈಕಟ್ಟಿ ನಿಂತ ನಿಂಗೂನನ್ನು ಕೇಳಿದ. ಅದನ್ನವನು ಸಾಮಾನ್ಯವೆಂಬಂತೆ ಹೇಳಿದರೂ ಅದು ಎಲ್ಲರಿಗೂ ಕೇಳಿಸುವಷ್ಟು, ಹೆದರಿದ ಹುಡುಗರು ಜೋರಾಗಿ ಮಾತಾಡುವಂತೆ ದನಿ ಎತ್ತರವಾಗಿತ್ತು.ತನ್ನ ಮಾತಿಗುತ್ತರವಾಗಿ ಯಾರಾದರೂ ಮಾತಾಡಬೇಕೆಂಬ ಆಸೆಯಿತ್ತು. ಅಲ್ಲಿ ಕೂರಬಾರದು, ಏಳಬಾರದು, ಕೂತರೆ ಎಲ್ಲರ ಕಣ್ಣು ಎದುರಿಸಬೇಕು, ಎದ್ದರೆ ಅವಮಾನ. ಏನಾದರೂ ಮಾಡುತ್ತಾನೆಂದರೆ ನಿಂಗೂ ಏನೂ ಹೇಳಲಾರದೆ ಒಂದು ಬಾರಿ ಹಲ್ಲು ಕಿಸಿದು ಜನಗಳನ್ನು ನೋಡಿದ ಅಷ್ಟೆ. +ದತ್ತಪ್ಪನ ಚಡಪಡಿಕೆ ಸ್ಪಷ್ಟವಾಗಿತ್ತು. ಆದರೆ ಬಾಯಿಬಿಟ್ಟು ಹೇಳಲೊಲ್ಲ. ಇಷ್ಟರಲ್ಲೇ ಗೌಡ ಬರಬಹುದು. ಅವನನ್ನೆಲ್ಲಿ ಕೂರಿಸಬೇಕು? ಹಾಗೇ ಕೂತ, ನಿಂತವರ ಅಸಮಧಾನವೂ ಸ್ಪಷ್ಟವಾಗಿತ್ತು. ಪಂಚಾಯ್ತಿ ಮೆಂಬರರು, ತಾವೇ ತಪ್ಪುಮಾಡಿದಂತೆ, ಅದನ್ನು ತೋರಗೊಡದೆ ಹರಕಂಗಿಯ ಜೇಬುಗಳಲ್ಲಿ ಏನೋ ಹುಡುಕುತ್ತಿದ್ದಂತೆ, ಮರೆತವರು, ಏನೋ ಜ್ಞಾಪಿಸಿಕೊಳ್ಳುತ್ತಿದ್ದಂತೆ ಅಭಿನಯಿಸತೊಡಗಿದರು. ಕೊನೆಗೆ ಕಳ್ಳ ತನ್ನ ಅಭಿನಯ ಸಾಲದೆಂದು ಕಂಡುಕೊಂಡು ಎದುರಿಗಿದ್ದ ಬಾಳೂನಿಗೆ “ಏ ಬಾಳೂ, ಎಲಡಿಕೆ ಚಂಚಿ ತಂದಿಯೇನಲಾ?” ಎಂದು ಕೇಳಿದ. ಕೊನೇ ಪಕ್ಷ ಅವನು ಇಲ್ಲವೆಂದಾದರೂ ಹೇಳಿಯಾನೆಂದು, ಬಾಳೂ ಎಲಡಿಕೆ ತಿನ್ನುತ್ತಿದ್ದವನು ಚಂಚಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈ ಬೆರಳುಗಳನ್ನು ತುಟಿಗಂಟಿಸಿ ಪಿಚಕ್ ಎಂದು ಎಲ್ಲರಿಗೂ ಕೇಳಿಸುವಂತೆ. ಉಗುಳಿ ಇಲ್ಲವೆಂಬಂತೆ ಕೈಮಾಡಿದ. ಕಳ್ಳ, ಅವನು ತನ್ನ ಮೇಲೆ ಉಗುಳಿದ ಹಾಗೆ ಮುಖ ಸಿಂಗರಿಸಿಕೊಂಡು ಮಂದಿ ನೋಡಿದರೇನೋ ಎಂಬಂತೆ ಸುತ್ತ ನೋಡಿದ. +ಲಗಮವ್ವನಿಗೆ ಸುತ್ತ ಬಿಗಿದ ಮೌನ ತಡೆಯಲಾಗಲಿಲ್ಲ. “ಇಲ್ಲಿ ಯಾರೂ ಗಂಡಸರಽ ಇಲ್ಲೇನ್ರಿ?” ಎನ್ನುತ್ತ ಎದ್ದು ನಿಂತು ಏನೋ ಹೇಳಬೇಕೆಂದಿದ್ದಳು. ಅಷ್ಟರಲ್ಲಿ ಚೇರ್‍ಮನ್ ಇಡೀ ಸಭೆಗೆ ತಾನೇ ಹಿರಿಯನೆಂಬಂತೆ ತನ್ನ ಅಪ್ಪಣೆಗಾಗಿ ಎಲ್ಲರೂ ಕಾಯುತ್ತಿದ್ದಂತೆ- +“ಹೂ ಲಗಮವ್ವಾ, ಇನ್ನು ಸುರುಮಾಡಿರಿ” ಎಂದ. ನಿಂಗೂ ಸ್ವಲ್ಪ ಧೈರ್ಯ ತಾಳಿ- +“ಅದು ಗೌಡ್ರು ಕೂರೋ ಜಾಗ; ಅವರು ಬರೋ ಹೊತ್ತಾತು, ಆ ಜಾಗಾ ಬಿಟ್ಟ ಇಳೀತಿ?” +-ಎಂದು ಹೇಳುತ್ತಿರುವಂತೆಯೇ- +“ಬರಲಿ ಬರಲಿ, ಅವರಿಗೂ ಇಲ್ಲೇ ಜಾಗ ಮಾಡಿ ಕೊಡೋಣ; ಅದಕ್ಯಾಕಿಷ್ಟ ತಲೀ ಕೆಡಿಸಿಕೊಳ್ತಿ?” +-ಎಂದು ನಿರ್ಲಕ್ಷ್ಯ ನಟಿಸುತ್ತಾ ಹೇಳಿ, +“ಹೂ ಲಗಮವ್ವಾ, ಸುರು ಮಾಡರಿನ್ನ” +-ಎಂದ. ಲಗಮವ್ವ ಇವನ ಕಡೆ ಬೆನ್ನ ತಿರುಗಿಸಿ ಕೂತಳಷ್ಟೆ. ಎಲ್ಲೇ ನಿಂತಿದ್ದ ರಮೇಶ, ಇವನೂ ಒಬ್ಬ ಮೆಂಬರನೇ, ಸಂಧರ್ಭದ ಗಾಂಭೀರ್ಯ ಮುರಿಯುತ್ತ- +“ಸುರು ಮಾಡವಾ ಲಗಮವ್ವಾ, ಊರ ಚೇರ್ಮ್ಮರಽ ಹೇಳತಾರಂದರ ಕಿಮ್ಮತ್ತಿಲ್ಲೇನ? ಏ ನಾಯೆಲ್ಯಾ ಬಾರಿಸಲೇ ಹಲಗಿ” +-ಎಂದು ಚೇರ್‍ಮನ್ನರ ಅಭಿಮಾನದ ಪರವಾಗಿ ಮಾತಾಡಿದ. ತನ್ನನ್ನೇ ಕುರಿತು ರಮೇಶ ಹೇಳಿದ್ದರಿಂದ ಏನೂ ಮಾಡಲೂ ತೋಚದೆ ನಾಯೆಲ್ಯಾ ಎದ್ದು ನಿಲ್ಲುತ್ತಿದ್ದ; ಅಷ್ಟರಲ್ಲಿ ಲಗಮವ್ವ ಕೂತಲ್ಲಿಂದಲೇ- +“ನಮಗೇನೂ ಅವಸರಿಲ್ಲರೀ. ಗೌಡ ಬರಲಿ, ಸಾವಕಾಶ ಸುರು ಮಾಡೋಣಂತ” ಎಂದಳು. ಇದನ್ನು ಕೇಳಿ ನಾಯೆಲ್ಯಾ ಕುಕ್ಕರಿಸಿದ. ಸರಪಂಚನ ಮುಖ ಇಷ್ಟಿದ್ದದ್ದು ಇಷ್ಟಾಯಿತು. ಈ ಒರಟುತನ ಅವನ ನಿರೀಕ್ಷೆಗೆ ಮೀರಿದ್ದು. ಹೇಗೆ ಎದುರಿಸಬೇಕೆಂದು ಗೊತ್ತಾಗದೆ ಚಡಪಡಿಸಿದ. ಅವನ ಮುಖದಲ್ಲಿ ಚಡಪಡಿಕೆ ಅವನ ಮೂಗಿನಷ್ಟೇ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಎಲ್ಲರ ಕಣ್ಣುಗಳು ತನ್ನನ್ನು ಇರಿಯುವಂತೆ ಅನ್ನಿಸಿತು. ಎಲ್ಲರ ಮನಸ್ಸುಗಳಲ್ಲಿ ತಾನು ರಾಡಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿರುವಂತೆ ಅನ್ನಿಸಿತು. ಎದುರಿಸಲಾರದೆ ಕಿಸೆಗೆ ಕೈಬಿಟ್ಟು ಸಿಗರೇಟು ತೆಗೆದು ಹೊತ್ತಿಸಿ ಪುಸ್ ಪುಸ್ ಎಂದು ಹೊಗೆ ಬಿಟ್ಟ. ಬೇರೆ ಸಂದರ್ಭದಲ್ಲಾಗಿದ್ದರೆ ಜನ ಆ ಸಿಗರೇಟು, ಆ ಹೊಗೆ, ಅದರ ವಾಸನೆಯೊಂದಿಗೆ ಆಟವಾಡಬಹುದಿತ್ತು. +ಆಶ್ಚರ್ಯವೆಂದರೆ ದತ್ತಪ್ಪ ಸುಮ್ಮನೇ ಕೂತಿದ್ದ. ತಾನು ತೋರಬೇಕಾದ ಪ್ರತಿಕ್ರಿಯೆ ಜನರೇ ತೋರುತ್ತಿದ್ದಾರೆಂದೋ, ಗೌಡ ಬರಲಿ, ನೋಡಿಕೊಳ್ಳೋಣವೆಂದೋ-ಅಂತೂ ಸುಮ್ಮನಿದ್ದ. ಪರಿಸ್ಥಿತಿಯನ್ನು ಗಮನಿಸಿ ಒಬ್ಬ ಎಳೇ ಬಾಲಕ ಲಬೊ ಲಬೊ ಹೊಯ್ಕೊಂಡ. ಎಲ್ಲರೂ ಹೊಯ್ಕೊಂಡರು. ಇದು ತನ್ನನ್ನು ಕುರಿತಾಗಿಯೇ ಎಂದು ಗುಡಸೀಕರ ಬಲ್ಲ. ಅಷ್ಟರಲ್ಲಿ ಗುಂಪಿನಂಚಿನ ಒಬ್ಬ “ಗೌಡರು ಬಂದರು, ಬಂದರು” ಎಂದ. ಎಲ್ಲರೂ ಆ ಕಡೆ ಮುಖ ಹೊರಳಿಸಿದರು. ಗೌಡ ಅವಸರವಸರವಾಗಿ ಬರುತ್ತಿದ್ದ. ಇಂದಿನ ಹಾಡುಗಾರಿಕೆ ನಿರಂಬಳ ಸಾಗೀತೆಂದು ಯಾರಿಗೂ ಅನಿಸಲಿಲ್ಲ. ಗೌಡನಿಗೂ ಸರಪಂಚನಿಗೂ ಜಗಳವಾಗಬಹುದೆಂದು ಕೂಡ ಕೆಲವರು ಕಲ್ಪಿಸಿದರು. ಎಲ್ಲರ ಕಣ್ಣಲ್ಲಿ ವಿಚಿತ್ರ ಕುತೂಹಲ ಚಂಚಲಿಸಿತು. +ಜನ ಎದ್ದು ಗೌಡನಿಗೆ ಹಾದೀ ಮಾಡಿಕೊಟ್ಟರು. ಕೆಲವರು “ಶರಣ್ರೀಯೆಪ್ಪ” ಎಂದರು. ಗೌಡ ಪ್ರತಿ ನಮಸ್ಕರಿಸುತ್ತ ನಡೆದ. ತನ್ನ ಸ್ಥಳದಲ್ಲಿ ತೆಕ್ಕೆಗೆ ಆಧಾರವಾಗಿ, ತನ್ನತ್ತ ನೋಡದೆ, ಸಿಗರೇಟು ಸೇದುತ್ತ ಕೂತ ಸರಪಂಚನನ್ನು ನೋಡಿದ. ಎದ್ದು ನಿಂತ ದತ್ತಪ್ಪನ ಮುಖ ನೋಡಿದ. ಪರಿಸ್ಥಿತಿಯ ಅರಿವಾಗಿ ಹೋಯ್ತು. ಅವರಿವರನ್ನು ಹೆಸರುಗೊಂಡು ಕರೆದು “ಕೂಡ್ರಿ ಕೂಡಪಾ,” ಎನ್ನುತ್ತ ನೇರ ಕಟ್ಟೆಗೆ ಹೋದ. “ಶರಣರೀ ಸರಪಂಚರ” ಅಂದ, ದತ್ತಪ್ಪನ ಪಕ್ಕದಲ್ಲೇ ಸ್ಥಳ ಮಾಡಿಕೊಂಡು ಕೂರುತ್ತ “ಹೂ ಲಗಮವ್ವ ನೋಡೋಣ ಈ ವರ್ಷ ಏನೇನ ಹಾಡ ಕಟ್ಟೀರಿ, ಸುರುಮಾಡರಿ” ಅಂದ. ಏನೂ ಆಗಿಲ್ಲವೆಂಬಂತೆ. ಗೌಡನ ಮಾತು ಕೇಳಿ ದತ್ತಪ್ಪ ತಲೆ ಭಾರ ಇಳಿವಿದಷ್ಟು ಹಗುರಾದ. ಜನರಲ್ಲಿ ಗುಜು ಗುಜು ಇತ್ತು. ಅವರ ಮಾತು ಕೇಳಿಸುತ್ತಿರಲಿಲ್ಲ ನಿಜ; ಅವರ ಕೈ ಬಾಯಿ ನೋಡಿಯೇ ಹೇಳಬಹುದಿತ್ತು: ಅವರು ತಕರಾರು ತೆಗೆಯುತ್ತಿದ್ದಾರೆಂದು. ಗೌಡನಿಗೆ ಅರಿವಾಗಿ ದನಿದೋರಿದ: +“ನಮ್ಮ ಲಗಮವ್ವ ವರ್ಷಕ್ಕೊಂದು ಏನಾರ ಹೊಸಾ ಚೀಜ ತಂದಽ ಇರತಾಳ ನೋಡ, ದತ್ತೂ” ಎಂದು ಪಂಚರತ್ತ ನೋಡಿ ದುರ್ಗಿಯತ್ತ ಗಮನ ಸೆಳೆದ. “ಅಯ್ಯಽ ಇದು ಅಬಾಯೀ ಮಗಳ್ರಿ” ಎಂದು ಹೇಳಿ ‘ಹೋಗಽ ಗೌಡನ ಪಾದ ಹಿಡದ ಬಾ” ಎಂದು ಎದ್ದು ತಲೆಬಾಗಿ ನಿಂತ ದುರ್ಗಿಗೆ ಹೇಳಿದಳು. ದುರ್ಗಿ ಅಷ್ಟೂ ಜನರ ಕಣ್ಣಿಗೆ ಗುರಿಯಾಗಿ, ಎಳಕರ ಮನಸ್ಸಿಗೆ ಮುದವಾಗಿ, ಮದವಾಗಿ, ಆದ್ದರಿಂದ ನಾಚುತ್ತ, ಅದನ್ನು ಸಂತೋಷಿಸುತ್ತ ತಲೆ ತುಂಬ ಸೆರಗು ಹೊತ್ತು ಗೌಡನತ್ತ ಹೊರಟಳು. ಹೋಗಿ ಕಾಲು ಮುಟ್ಟಿ ನಮಸ್ಕರಿಸಿದಳು. ಪಕ್ಕದ ಹಿರಿಯರ ಕಾಲು ಮುಟ್ಟಿದಳು. ಅಥವಾ ನಾಚಿಕೆಯ ಅತಿಶಯದಲ್ಲಿ ಯಾರ್‍ಯಾರದೋ ಕಾಲು ಮುಟ್ಟಿ ಬೆದರಿದ ಮಣಕಿನಂತೆ ಓಡಿಬಂದಳು. ಹಾಡುಗಾರಿಕೆ ಸುರುವಾಯಿತು. ಲಗಮವ್ವ ಎದ್ದು ನಿಂತು, +ಕಲಿಯುಗ ಕಾಲಿಟ್ಟಿತು ಧರ್ಮ +ಉಳಿಯಲಿಲ್ಲ ಚೂರಾ | +ಕಲಿತವರ ಕಾಲಾಗ ಲೌಕಿಕವೆಂಬೋದು +ಅಧರ್ಮವಾಯಿತು ಪೂರಾ || +-ಎಂದು ಸುರುಮಾಡಿ “ಕಲಿತ ಕೋತಿ”ಗಳ ಭಂಡತನವನ್ನು ಬಯಲಿಗೆಳೆದಳು. ಇದು ಎದುರು ತಂಡಕ್ಕೆಸೆದ ಸವಾಲಾಗಿರಲಿಲ್ಲ. ಆದರೆ ಜನ ಈ ಹಾಡಿನಿಂದ ಎಷ್ಟು ಖುಷಿಪಟ್ಟರೆಂದರೆ ಹಾಡಿನಂತ್ಯದ ಹೊಯ್ಕೊಳ್ಳುವಿಕೆಗೆ ಮುದುಕರೂ ಸೇರಿದರು. ಆ ಹಾಡನ್ನು ತಾವೇ ಹೇಳಿದಂತೆ ಆನಂದಪಟ್ಟರು. ಹಾಡು ಯಾರನ್ನು ಕುರಿತದ್ದೆಂದು ಇವರಿಗೆ ಹೇಳಿಕೊಡಬೇಕೆ? ಗುಡಸೀಕರನ ಮುಖ ಇನ್ನೂ ಅಸಭ್ಯವಾಯಿತು. ಒಳಗೆ ಕತ ಕತ್ ಕುದಿಯುತ್ತಿದ್ದನೆಂಬುದನ್ನು ಅವನ ಕಣ್ಣ ಜ್ವಾಲೆಗಳೇ ಹೇಳುತ್ತಿದ್ದವು. ಗೌಡ ಮುಗುಳ್ನಕ್ಕು ಸುಮ್ಮನಾದರೆ, ದತ್ತಪ್ಪ ಜೋರಾಗಿಯೇ ನಕ್ಕ. ಜನ ಸಿಳ್ಳು ಹಾಕಿ ನಕ್ಕರು. ಕೆಲವರು ರುಂಬಾಲು ಹಾರಿಸಿ ನಕ್ಕರು. ಈ ಥರಾವರಿ ನಗೆಗಳನ್ನು ಸಂಯಮಿಸುವುದು ಗೌಡನಿಂದಲೂ ಸಾಧ್ಯವಿರಲಿಲ್ಲ. +ಪಂಚಾಯ್ತಿ ಮೆಂಬರರೆಲ್ಲ ಮುರುಟಿದ್ದರು. ಈ ನಗೆಗಳು ಗುಡಸೀಕರನ ಒಳಗಿನ ಬೆಂಕಿಗೆ ಹುಲ್ಲಾದವು. ಭಗ್ಗನೇ ಎದ್ದು ಕಟ್ಟೆಯಿಳಿದು, ಈಗಷ್ಟೇ ಹೊತ್ತಿಸಿದ ಸಿಗರೇಟನ್ನು ನೆಲಕ್ಕೆಸೆದು ತುಳಿದು, ಹೊಸಕಿ, ಬಿಟ್ಟ ಬಾಣದ ಹಾಗೆ ಹಿಂಡಿನಿಂದ ಮರೆಯಾದ. ಪಂಚಾಯ್ತಿ ಮೆಂಬರರು ಒಬ್ಬೊಬ್ಬರಾಗಿ ಬಾಲದ ಹಾಗೆ ಸಾಲಾಗಿ ಹಿಂಬಾಲಿಸಿದರು. +ಸಣ್ಣ ಮಗನ ಮೇಲೆ ಕೈಮಾಡಿದ +ಗುಡಸೀಕರ ತಾನೇನು ಮಾಡುತ್ತಿದ್ದೇನೆಂದು ಅರಿವಿಲ್ಲದೆ ತನಗೆ ಬಣ್ಣ ಎರಚಬಂದ ಬಾಳೂನ ಸಣ್ಣ ಮಗನನ್ನು ಹಿಂದುಮುಂದು ನೋಡದೆ ದನ ಬಡಿದಂತೆ ಬಡಿದ. ಅದು ನಡೆದದ್ದು ಹೀಗೆ- +ಲಗಮವ್ವನ ಹಾಡು ಕೇಳಿ, ಅಲ್ಲಿ ಕೂರಲಾರದೆ ಎದ್ದು ಬಂದನಲ್ಲ, ಸೀದಾ ಮನೆ ಹೊಕ್ಕ. ಹೊಕ್ಕವನೇ ದಡ ದಡ ಜಿನೆಯೇರಿ ಮಹಡಿ ಹತ್ತಿದ. ಹತ್ತಿದವನೇ ಅತ್ತಿತ್ತ ಅಲೆದಾಡಿದ. ಸಿಗರೇಟು ಹೊತ್ತಿಸಿದ. ಅಲ್ಲೇ ಇದ್ದ ಪಲ್ಲಂಗದ ಮೇಲೆ ಕುಕ್ಕರಿಸಿದ. ಕೂತಿರಲಾರದೆ ನಿಂತ. ನಿಂತಿರಲಾರದೆ ಅಡ್ಡಾಡಿದ. ಮತ್ತೆ ಕೂತ. ಮತ್ತೆ ನಿಂತ. ಸಿಗರೇಟು ಸೇದಿದ. ಎಸೆದ, ನಿಂತ, ಕೂತ. +ಮೆಂಬರರು, ಅದೇ ಹಿಂಬಾಲಕರು, ಸಪ್ಪಳ ಮಾದದೆ ಜಿನೆಹತ್ತಿ ಹಾಸಿದ್ದ ಜಮಖಾನದ ಮೇಲೆ ಗುಂಪಾಗಿ, ತುಟಿ ಎರಡು ಮಾಡದೆ, ಮುದುಡಿ ಇಷ್ಟಿದ್ದವರು ಇಷ್ಟಿಷ್ಟೇ ಆಗಿ, ಚಲಿಸದೆ ಕಲ್ಲಿನ ಗೊಂಬೆಗಳ ಹಾಗೆ ಕೂತರು. ಗುಡಸೀಕರ ಬಹಳ ಹೊತ್ತಿನ ತನಕ ಇವರನ್ನು ಗಮನಿಸದಂತೆ ಅಡ್ಡಾಡಿದ. ಕೂತು ಸಿಗರೇಟು ಹೊತ್ತಿಸುವಾಗ ಥಟ್ಟನೇ ತನ್ನ ಕಾಲಿಗೂ ನಮಸ್ಕರಿಸಿದ ದುರ್ಗಿಯ ನೆನಪಾಯಿತು. ಕಿಸೆಯಿಂದ ಐದರ ಎರಡು ನೋಟು ತೆಗೆದು ಕಳ್ಳನ ಕೈಗಿಡುತ್ತ “ಹೋಗು, ಸರಪಂಚ ಸಾಹೇಬರ ಕೊಟ್ಟಾರಂತ ಹೇಳಿ ದುರ್ಗಿಗೆ ಕೊಟ್ಟ ಬಾರಲೇ” ಎಂದ. ಸಿದರಾಮ ಓಡಿಹೋಗಿ ಹತ್ತು ರೂಪಾಯಿ ತಗೊಂಡು ಹೊರಟ. ಅವನು ಇನ್ನೂ ಇಪ್ಪತ್ತು ಹೆಜ್ಜೆ ಹೋಗಿರಲಾರ. ಅಂಡೂರಾಮೂ, ಉರ್ಪ್‌ರಮೇಶ ಎದ್ದು “ಅವ ಮೊದಲಽ ಕಳ್ಳ. ಕೊಡತಾನೋ ಇಲ್ಲೋ ನೋಡಿ ಬರತೇನ್ರೀ” ಎಂದು ಹೇಳುತ್ತ ಹೋಗಿಬಿಟ್ಟ. ಜಿಗಸು ಸಾತೀರ ಎದ್ದು “ಛೇ, ಛೇ, ಅವ ಮೊದಲ ಕುಡಕಽ ಏನ ಮಾಡತಾನೋ ನೋಡತೇನ್ರಿ” ಎಂದು ಅವನೂ ಹೋದ. ಕೊನೆಯವ ಆಯೀಮೆರೆ ಮಿಂಡ ಏನೂ ಹೇಳದೆ, ಯಾಕೆಂದರೆ ಏನೂ ಹೊಳೆಯದೆ ಕಳಚಿಕೊಂಡ. +ಗುದಸೀಕರನಿಗೆ ಇವರು ಬೇಕೂ ಆಗಿರಲಿಲ್ಲ. ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ದಾರಿ ತೋಚದೆ ಒಂದೇ ಸಮನೆ ಒದ್ದಾಡುತ್ತಿದ್ದ. ಹೊಯ್ಕೊಂಡ ಎಲ್ಲರ ನಾಲಿಗೆ ಸೀದು ಹೋಗುವ ಹಾಗೆ ಮಾಡುವ ಮಾಂತ್ರಿಕ ತಾನಾಗಿದ್ದರೆ, ಗೌಡ, ದತ್ತಪ್ಪ, ಲಗಮಿಯರನ್ನು ಜೇಲಿಗೆ ಕಳಿಸುವ ಅಧಿಕಾರಿ ತಾನಾಗಿದ್ದರೆ-ಅಂದುಕೊಂಡ. ತಕ್ಷಣ ಇನ್ನೊಂದು ಹೊಳೆಯಿತು: ಅರರೇ, ದುರ್ಗಿಗೆ ಈಗಷ್ಟೇ ಕೊಟ್ಟುಕಳಿಸಿದ ದುಡ್ಡನ್ನು ತುಂಬಿದ ಸಭೆಯಲ್ಲಿ ಆಗಲೇ ಕೊಟ್ಟಿದ್ದರೆ ಈ ಮಕ್ಕಳು ಕೊಡುವ ನಾಕಾಣೆ, ಎಂಟಾಣೆಗಿಂತ ಆ ಹತ್ತು ರೂಪಾಯಿ ಎಲ್ಲರ ಕಣ್ಣಲ್ಲಿ ಹೊಳೆಯುತ್ತಿತ್ತು. ಲಗಮವ್ವನಿಗೆ. ಗೌಡನಿಗೆ, ದತ್ತೂನಿಗೆ, ಹೊಯ್ಕಂಡ ಬಿಕನಾಸಿಗಳಿಗೆ ಎಲ್ಲರಿಗೂ ತನ್ನ ಬೆಲೆ ತಿಳಿಯುತ್ತಿತ್ತು. ಮಾತು ಮಿಂಚಿಹೋಗಿತ್ತು. ಅಷ್ಟರಲ್ಲಿ ತಂಗಿ ಗಿರಿಜವ್ವ ಊಟಕ್ಕೆ ಕರೆದಳು. +ಇಳಿ ಹೊತ್ತಾಗಿತ್ತು. ಓಣಿಯಲ್ಲಿ ಎಳೇ ಹುಡುಗರು ಬಣ್ಣ ಎರಚುತ್ತ ಹೊಯ್ಕಳ್ಳುತ್ತ, ನಗಾಡುತ್ತ ಗದ್ದಲ ಮಾಡುತ್ತಿದ್ದವು. ಅದನ್ನು ಕೇಳಿ ಉಂಡು ಮಲಗಿದ್ದ ಗುಡಸೀಕರನಿಗೆ ಎಚ್ಚರವಾಯಿತು. ಗದ್ದಲ ಸಮ ಸಮೀಪ ಬಂದು ತನ್ನ ಮನೆಯ ಮುಂದೆಯೇ ನಡೆಯುತ್ತಿರುವುದು ಗೊತ್ತಾಯಿತು. ಕೂಡಲೇ ಧಡಫಡ ಕೆಳಗಿಳಿದು ಹೋದ. +ಗಿರಿಜವ್ವ ಬಾಗಿಲಲ್ಲಿ ನಿಂತುಕೊಂಡು ಹುಡುಗರ ಬಣ್ಣದಾಟ ನೋಡಿ, ಎಲ್ಲರಿಗೂ ಕೇಳಿಸುವಂತೆ ನಗುತ್ತಿದ್ದಳು. “ನಾಚಿಕಿ ಬರಾಣಿಲ್ಲ? ಗಂಡ ಹುಡುಗೋರ್‍ನ ನೋಡಿಕೋತ ನಿಂತೀದಿ, ನಡಿ ಒಳಗ” ಎಂದು ಗದರಿಸಿ, ಒಳಗೆ ಕಳಿಸಿ ಆ ಸ್ಥಳದಲ್ಲಿ ತಾನು ನಿಂತುಕೊಂಡ. ಹುಡುಗರು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗಿ ಬಣ್ಣ ಹಚ್ಚುತ್ತಿದ್ದರು. ಓಡಿಹೋದವನು ಸಿಕ್ಕೊಡನೆ ಹೋಹೋಽ ಹೋ ಹೊಯ್ಕೊಳ್ಳುತ್ತ ಬಣ್ಣ ಜೊಗ್ಗುತ್ತಿದ್ದರು. ಒಬ್ಬ ಹುಡುಗ, ಬಾಳೂನ ಸಣ್ಣ ಮಗ- ಗುಡಸೀಕರ ನಿಂತುದನ್ನು ನೋಡಿ, “ಸರಪಂಚ ಸಿಕ್ಕನ ಬರ್ರ್ಯೋ” ಎಂದು ಹೊಯ್ಕೊಳ್ಳುತ್ತ ಬಣ್ಣ ಎರಚಿದ. ಉಳಿದವರೂ ಬಂದು ಎರಚಿದರು. ಗುಡಸೀಕರ ಕೆಂಡಕೆಂಡವಾದ. ತಾನೇನು ಮಾಡುತ್ತಿದ್ದೇನೆಂದು ಅರಿವು ಬಿಟ್ಟು ಓಡಿಹೋಗಿ ಎಳೇ ಹುಡುಗನ್ನ ಹಿಡಿದೆಳೆದು ಎಲ್ಲೆಂದರಲ್ಲಿ ಕೈ ಬಾಯಿ ಎನ್ನದೆ ದನ ಬಡಿದಂತೆ ಬಡಿಯತೊಡಗಿದ. ಹುಡುಗ ಕಿರುಚಿ, ಕೂಗಿ ಒದರಿದರೂ ಬಿಡಲಿಲ್ಲ. ತಪ್ಪಿಸಿಕೊಂಡು ನಿಂತ ಎಳೆಯರ ಹಿಂಡಿನಲ್ಲಿ ಅಡಗಿದರೆ ಅಟ್ಟಿಸಿಕೊಂಡು ಓಡಿಹೋಗಿ ಹೊಡೆದ. ಕೈ ಸೋತು ಒದ್ದ. ಕಾಲು ಸೋತು ಹೊಡೆದ. ಹುಡುಗ “ಸತ್ತಿನ್ರೋ ಎಪ್ಪಾ” ಎಂದು ಆರ್ತನಾಗಿ ಕೂಗಿದ. ಉಳಿದ ಹುಡುಗರು ಗಾಬರಿಯಾಗಿ ಬಿಡಿಸಿಕೊಳ್ಳಲಾರದೆ, ಓಡಲಾರದೆ, ಕೂಗಲಾರದೆ ಒಂದರ ಹೊಂದೊಂದು, ಒಂದರ ಆಶ್ರಯದಲ್ಲಿನ್ನೊಂದು ಮುದುಡಿ ನಿಂತವು. ದೂರದಲ್ಲಿ ಹೊರಬಂದ ಹೆಂಗಸರ ಗುಂಪು ಬಂದು ಬಿಡಿಸಿಕೊಳ್ಳಲು ಧೈರ್ಯಸಾಲದೆ ಮರುಗುತ್ತಿದ್ದರು. ಸುದೈವದಿಂದ ನಿಂಗೂ ಓಡಿಬಂದು ಹುಡುಗನ್ನ ಬಿಡಿಸಿಕೊಂಡ. +“ಎಳೇ ಹುಡುಗನ ಮ್ಯಾಲ ಕೈ ಮಾಡ್ತೀ, ಬುದ್ಧಿ ಎಲ್ಲಿಟ್ಟಿಯೋ ನಮ್ಮಪ್ಪಾ?” ಎಂದ. ತಾನು ಮಾಡಿದ್ದು ತಪ್ಪೆಂದು ಅರಿವಾಯ್ತೋ ಏನೊ? ಗುಡಸೀಕರ ಮನೆಯೊಳಕ್ಕೆ ಸುಮ್ಮನೆ ನಡೆದ. ನಿಂಗೂ ಸುಮ್ಮನಾಗಲಿಲ್ಲ. “ಕನ್ನಡಿ ನೋಡಿಕೊಳ್ಳೋ ನಮ್ಮಪ್ಪಾ” ಅಂದ, ನಿಜ. ಗುಡಸೀಕರ ಆವೇಶದಲ್ಲಿ ಕೂದಲು ಕೆದರಿಕೊಂಡು ಅಸಹ್ಯವಾಗಿದ್ದ. ನಿಂಗೂನ ಮಾತು ಕೇಳಿ ಹೋಗುತ್ತಿದ್ದವನು ನಿಂತು: +“ಯಾಕಲೇ?” ಅಂದ. +“ಆ ಹುಡುಗನ ಮ್ಯಾಲ ಕೈ ಎತ್ತಿಧಾಂಗ ನನ್ನ ಮ್ಯಾಲ ಎತ್ತಬಾರದ? ತೋರಿಸ್ತೀನಿ” ಎಂದು ನಿಂಗೂ ಸವಾಲು ಹಾಕಿದ. ಗುಡಸೀಕರನಿಗೆ ಅಷ್ಟು ಸಾಕಾಯ್ತು. ಏನೋ ಮಾಡಲು ಹೋಗಿ ಏನೋ ಮಾಡಿದ್ದ. ಯಾರದೋ ಮೇಲಿನ ಸಿಟ್ಟನ್ನ ಯಾರದೋ ಮೇಲೆ ಹಾಕಿದ್ದ. ಅದನ್ನು ನಿಂಗೂ ಗಮನಿಸಿದ್ದ. ಇವನಿಗೂ ಅದು ತಿಳಿಯಿತು. ಸಣ್ಣವನಾಗಿ, ತಿರುಗುತ್ತರ ಕೊಡದೆ ಒಳಕ್ಕೆ ಹೋದ. +ಹುಡುಗನ ಮೈತುಂಬಾ ಬಾಸಳ ನೋಡಿ ಬಾಳೂ ವೀರಾವೇಶ ತಾಳಿದ. ದತ್ತಪ್ಪ ಬುದ್ಧಿ ಹೇಳಿ ಬಿಡಿಸಬೇಕಾದರೆ ಬೆವರು ಇಳಿಯಿತು. ಎಲ್ಲ ಕೇಳಿ “ಇವ ತನ್ನ ಗೋರಿ ತಾನಽ ತೋಡಿಕೊಳ್ಳಾಕ ಹತ್ಯಾನ” ಎಂದು ಗೌದ ಹೇಳಿದರೆ “ಇಲ್ಲಾ ಊರ ಗೋರಿ ತೋಡಾಕಹತ್ಯಾನೆಂದು” ಬಾಳೂ ಸಿಟ್ಟಿನಲ್ಲಿ ಅಂದ. +ಚತುಷ್ಟಯರು +ಗುಡಸೀಕರ ಕೊಟ್ಟ ಹತ್ತರ ಹಗರಣ ಸೇರೇದಂಗಡಿ ತೆಗೆಯಬೇಕೆಂಬ ನಿರ್ಧಾರದಲ್ಲಿ ಕೊನೆಗೊಂಡಿತು. +ಗುಡಸೀಕರನ ಹಿಂಬಾಲಕರು, ಅಂದರೆ ಗ್ರಾಮ ಪಂಚಾಯಿತಿಯ ಇತರೇ ಮೆಂಬರರೆಂದರೆ-ಕಳ್ಳ ಸಿದರಾಮ, ಅಂಡೂರಾಮಯ್ಯ, ಜಿಗಸೂ ಸಾತೀರ ಹಾಗೂ ಆಯೀ ಮೆರಿಮಿಂಡ, ಇವರೂ ಗುಡಸೀಕರನ ಸರಿಕರೆ, ಕೂಡಿ ಕಲಿತವರೆ. ಆದರೆ ಗುಡಸೀಕರ ಬೆಳಗಾವಿಗೆ ಹೆಚ್ಚಿನ ಶಿಕ್ಷಣಕ್ಕೆ ಹೋದ. ಇವರು ಹೋಗಲಿಲ್ಲ, ಅಷ್ಟೆ. ಇವರನ್ನು ದತ್ತಪ್ಪ ಒಮ್ಮೆ “ಚತುಷ್ಟಯರು” ಎಂದು ಕರೆದ; ಬಹುಶಃ ಮಹಾಭಾರತದ ದುಷ್ಟ ಚತುಷ್ಟಯದ ನೆನಪಾಗಿ. ಈಗಲೂ ಅವನು ನಾಲ್ವರನ್ನೂ ಒಟ್ಟಾಗಿ ಕರೆಯುವುದು ಹೀಗಯೇ. ನಾವು ಇನ್ನು ಮೇಲೆ ನಮ್ಮ ಕಥೆಯಲ್ಲಿ ಅವರನ್ನು ಹಾಗೇ ಕರೆಯೋಣ. +ಆದರೆ ದುಷ್ಟ ಚತುಷ್ಟಯಕ್ಕೂ ಇವರಿಗೂ ಅರ್ಥಾತ್ ಸಂಬಂಧವಿಲ್ಲ. ಮೊದಲನೆಯದಾಗಿ ಇವರು ದುಷ್ಟರಲ್ಲ. ಊರಿನ ಇತರೆಯವರಿಗಿಂತ ಭಿನ್ನರಲ್ಲ. ಅಷ್ಟಿಷ್ಟು ಕಲಿತದ್ದರ ಬಗ್ಗೆ ಸ್ವಲ್ಪ ಸೊಕ್ಕಿದೆ. ಅಷ್ಟೂ ಇಲ್ಲದಿದ್ದರೆ ಹ್ಯಾಗೆ? ಇನ್ನೊಬ್ಬರು ಹಿಂದೆ ಒತ್ತದ ಹೊರತು ಮುಂದೆ ಹೆಜ್ಜೆ ಹಾಕುವವರಲ್ಲ. ಹೆಜ್ಜೆ ಹಾಕಿದ ಮೇಲೆ ಒದಗುವ ಪರಿಣಾಮಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರೂ ಅಲ್ಲ. ಕಂದಕವೋ, ದಿನ್ನೆಯೋ, ಹೆಜ್ಜೆ ಹಾಕಿದರಾಯ್ತು, ಕಣ್ಣು ಮುಚ್ಚಿಕೊಂಡು. ಚತುಷ್ಟಯರೆಂದು ಒಟ್ಟಾಗಿ ಕರೆದರೂ ಇವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದುದನ್ನು ನಿರಾಕರಿಸಲಾಗದು. +ಇವರಲ್ಲೆಲ್ಲ ಕಳ್ಳಸಿದರಾಮ ನೋಡುವುದಕ್ಕೂ ಧಾಂಡಿಗನಾದವನು. ಚಿಕ್ಕಂದಿನಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು ತನ್ನ ಹೆಸರಿಗೆ ಆ ವಿಶೇಷಣ ಅಂಟಿಸಿಕೊಳ್ಳಬೇಕಾಯಿತು. ಆದರೆ ಅದಲ್ಲ ಅವನ ವೈಶಿಷ್ಟ್ಯ. ಅಂಗಾಲಿನಿಂದ ನೆತ್ತಿಯ ತನಕ ಅವನ ಹಟ. ಯಾವುದೇ ನೀರಸ ಘಟನೆಯನ್ನು ರಸವತ್ತಾಗಿ, ನಾಟಕೀಯವಾಗಿ ಕೇಳುವವರ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲವನಾಗಿದ್ದ. ಒಮ್ಮೆ ಗುಡಸೀಕರ ದಿನಪತ್ರಿಕೆ ಓದಿ “ನೋಡೋ ಕಳ್ಳಾ; ಜಿನ್ನಾ ಬಂದು ಗಾಂಧೀಜಿಗೆ ಭೇಟ್ಯಾಗಿದ್ದನಂತ. ಮುಸಲ್ಮಾನರಿಗೇ ಒಂದು ಪ್ರತ್ಯೇಕ ದೇಶ, ಪಾಕೀಸ್ತಾನ ಬೇಕಂತ ಕೇಳಿದಾನಂತ” ಎಂದು ಹೇಳಿದ. ಹತ್ತೇ ಹತ್ತು ಶಬ್ದದ ಈ ಸಂಗತಿಯನ್ನು ಕಳ್ಳ ಮೆರೆಮಿಂಡನಿಗೆ ಹೇಳಿದ್ದು ಹೀಗೆ: +ದೇಶದಾಗ ಏನೇನ ನಡದೈತಿ ಗೊತ್ತೈತೇನಲೇ? ಮೊನ್ನಿ ಮಂಗಳವಾರ ದಿನ ಗಾಂಧೀ ಗುಡಿಸಲದಾಗ ಕುಂತಿದ್ನಂತ, ಸೇಂಗಾ ತಿನ್ನಕೋತ. ಅಷ್ಟೊತ್ತಿಗೆ ಜಿನ್ನಾ ಬಂದ. “ಶರಣರೀ ಗಾಂದೆಪ್ಪ” ಅಂದ. +“ಬಾರೋ ಜಿನ್ನಾ ಸಾಬ, ಬಾ ಕುಂದರ ಬಾ. ಎಲ್ಲಾ ಆರಾಮ? ಮಳಿ ಬೆಳಿ ಹೆಂಗ ನಿಮ್ಮ ಕಡೆ?” +-ಅಂದ(ಗಾಂಧೀಜಿ) +(ಜಿನ್ನಾ)”ಎಲ್ಲಾ ಆರಾಮೈತಿ ಖರೆ: ನಮ್ಮ ಹುಡುಗೋರು ಭಾಳ ತಕರಾರ ತಗ್ಯಾಕ ಹತ್ಯಾವರಿ. ನೂರ ವರ್ಷ ಕೂಡಿದ್ದರೂ ಅಣ್ಣಾ ತಮ್ಮಾ ಬ್ಯಾರ್‍ಯಾಗೋದೇನೂ ತಪ್ಪಾಣಿಲ್ಲಾ, ಅದಕ್ಕ ಈಗಽ ದೇಶದಾಗ ನಮಗಷ್ಟ ಪಾಲಾ ಕೊಡಸಂತ ಗಂಟುಬಿದ್ದಾರ.” +“ನಿನಾಪ್ನ! ಬ್ಯಾರ್‍ಯಾಗಿ ಏನ ಸುಖ ಉಣತೀರಿ? ನೆರಿ ಹೊರಿ ನಾಕ ಮಂದಿ ಹೆದರತಾರ, ಏನಪಾ. ಕೂಡಿದ್ದ ಅಣ್ಣತಮ್ಮರಿಗೆ ಹುಲಿ ಹಾದಿ ಬಿಡತೈತಿ. ಇಂದಽ ಬ್ಯಾರೆ ಆದರ ಇಲೀ ಹಂತಾ ಇಲಿ ಅಂಜಾಕಿಲ್ಲಾ. ಅಕ್ಕಪಕ್ಕ ನಿಮ್ಮನ್ನ ನುಂಗಿ ನೀರು ಕುಡೀತಾರ. ಎಚ್ಚರಲೆ ಪಾಲಾ ಬೇಡಂತ ಹೇಳವರಿಗೆ. ಇಲ್ಲದಿದ್ದರ ಕರತಾ, ಬುದ್ಧೀ ರೀತಿ ಹೇಳೋಣು.” +-ಎಂದರಂತ ಗಾಂಧೀಜಿ! ಈ ಕಳ್ಳ ಸಿದರಾಮ ನಟ ಭಯಂಕರನೆನ್ನುವುದು ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ? +ಬಯಲಾಟದಲ್ಲಿ ಖಳನಾಯಕರ, ಅದರಲ್ಲೂ ರಾಕ್ಷಸ ಪಾತ್ರ ವಹಿಸುವುದೆಂದರೆ ಅವನಿಗೆ ಬಲು ಸುಖ. ಆ ಪಾತ್ರ ವಹಿಸಿದ ಒಂದಿಬ್ಬರು ಹಳೇ ನಟರು ಅಟ್ಟದ ಮೇಲೆ ಬಂದು ಗರ್ಜಿಸಿದಾಗ, ಗರ್ಭಿಣಿಯರ ಗರ್ಭಪಾತವಾಯಿತೆಂಬಂತೆ ಕಥೆ ಕೇಳಿದ್ದ. ತನ್ನ ಜೀವಮಾನದಲ್ಲಿ ತನ್ನ ಪಾತ್ರ ನೋಡಿ ಕೊನೇ ಪಕ್ಷ ಒಬ್ಬ ಗರ್ಭಿಣಿಯಾದರೂ ಗರ್ಭಪಾತ ಮಾಡಿಕೊಳ್ಳುವ ಹಾಗಾಗಬೇಕೆಂದು ಇವನ ಆಸೆ. ಅದಕ್ಕಾಗಿ ಒಬ್ಬನೇ ಇದ್ದಾಗಲೆಲ್ಲ ಅಂಥ ಗರ್ಜನೆಯನ್ನೇ ಅಭ್ಯಾಸ ಮಾಡುತ್ತಿದ್ದ! ಬಂಜೆಯರಿಗೆ ಗೆಜ್ಜೆ ಕಾಲಿನ ಮಕ್ಕಳನ್ನು ಕೊಡುವ ಕರಿಮಾಯಿ ಅವನ ಆಸೆ ಈಡೇರಿಸದಿರಲಿ. +ಎರಡನೆಯವನೇ ಅಂಡೂರಾಮಯ್ಯ ಉರ್ಫ್‌ರಮೇಸ. ಇವನ ಮೂಲ ನಾಮಾಂಕಿತ ರಾಮಯ್ಯ ಎಂದು. ಅವನು ಅಂಡು ಇರಬೇಕಾದ ಪ್ರಮಾಣಕ್ಕಿಂತ ದೊಡ್ಡದಾಗಿರುವುದರಿಂದ ಈ ವಿಶೇಷಣ ಸೇರಿಕೊಂಡಿತ್ತು. ಗುಡಸ್ಯಾಗೋಳ ಹೋಗಿ ಗುಡಸೀಕರ ಆದಂತೆ ಪಂಚಾಯ್ತಿ ಮೆಂಬರ್ ಆದ ಮೇಲೆ ಇವನೂ ಅಂಡೂ ರಾಮಯ್ಯ ಹೋಗಿ ರಮೇಸ ಆದ. ಹಾಗೇ ಸಹಿ ಕೂಡ ಮಾಡುತ್ತಿದ್ದ. ಗುಡಸೀಕರನಿಗೆ ಜನ ಹೆದರುತ್ತಿದ್ದರು. ಹಾಗೆಂದು ಕರೆದರು. ಇವ ಹೆಸರು ಬದಲಾಯಿಸಿದರೂ ಜನ ಮಾತ್ರ ಇವನನ್ನು ಅಂಡೂ ರಾಮಯ್ಯ ಎಂದೇ ಕರೆಯುತ್ತಿದ್ದರು. ಇಂಗ್ಲಿಷ್ ಕಲಿತವನಲ್ಲ. ಆದರೂ ಮಾತಿಗೊಮ್ಮೆ “ಎಸೆಸ್” ಎನ್ನುತ್ತಿದ್ದ. ಮತ್ತು ಹಾಗೆ ಎಸೆಸ್ ಎನ್ನುವ ಅವಕಾಶಕ್ಕಾಗಿ ತನ್ನ ಯಾವುದೇ ಅಭಿಪ್ರಾಯ ಬದಲಿಸಲೂ ಸಿದ್ಧನಿದ್ದ. +ಮೂರನೆಯವ ಆಯೀ ಮರೆಮಿಂಡ. ಇವನ ಎಡಗಣ್ಣು ಸಣ್ಣದಾಗಿ ಆಗಾಗ ಕಣ್ಣೀರು ಸುರಿಸುತ್ತಿದ್ದುದರಿಂದ ಒಂದು ಕಣ್ಣಿನಿಂದ ಅತ್ತಂತೆಯೂ ಇನ್ನೊಂದರಿಂದ ನಕ್ಕಂತೆಯೂ ಕಾಣಿಸುತ್ತಿದ್ದುದೊಂದೇ ಇವನ ವಿಶೇಷ. ಕೊನೆಯವ ಜಿಗಸು ಸಾತೀರ. ಇವನ ತಾಯಿ ನಡೆಯುವಾಗ ಹೆಜ್ಜೆ ಗತಿಗೆ ತಕ್ಕಂತೆ ಅವಳ ಜೋಡೆದೆ ಟನಕ್ ಟನಕ್ ಜಿಗಿಯುತ್ತಿದ್ದವು. ಆದ್ದರಿಂದ ಅವಳಿಗೆ ಮಂದಿ ಮೂಲ ಹೆಸರು ಬಿಟ್ಟು ಕೊನೆಗೆ ಮರೆತು, ಜಿಗಸೂ ಎಂದೇ ಕರೆಯುತ್ತಿದ್ದರು. ತಾಯಿಯಿಂದ ಮಗನಿಗೂ ಜಿಗಸೂ ಸಾತೀರನೆಂದೇ ಹೆಸರು ಬಂತು. ಇದ್ದ ನಾಲ್ವರಲ್ಲಿ ಕಚ್ಚೆ ಹರುಕುತನದ ಖ್ಯಾತಿ ಇವನೊಬ್ಬನಿಗೇ ಇತ್ತು. ಅದು ಹೀಗೆ: ಎಳೆಯರ ಕಳ್ಳ ಹಾದರದ ಕೇಸುಗಳನ್ನು ಹ್ಯಾಗೋ ಹೊಂಚಿ ಪತ್ತೆ ಹಚ್ಚುತ್ತಿದ್ದ. ಅವರು ಕ್ರಿಯೆಯಲ್ಲಿ ಸಿಕ್ಕಿಬಿದ್ದೊಡನೆ ಹುಡುಗಿಯೊಬ್ಬಳನ್ನೇ ಪ್ರತ್ಯೇಕಿಸಿ, ಅವಳ ತಂದೆ-ತಾಯಿಗಳಿಗೆ ಹೇಳುವುದಾಗಿ ಬೆದರಿಸುತ್ತಿದ್ದ. ಹಾಗೂ ಅದರ ಪ್ರಯೋಜನವನ್ನು ಚಕ್ರಬಡ್ಡಿ ಸಮೇತ ಪಡೆಯುತ್ತಿದ್ದ. +ಇವರಿಗೆಲ್ಲ ಒಂದು ಸಾಮಾನ್ಯ ವಿಷಯವೆಂದರೆ ಊರಿನ ಎಲ್ಲರಂತೆ ಇವರೂ ಹಣವಂತರಲ್ಲ. ಹಣ ಅಕಸ್ಮಾತ್ ಕಂಡರೋ ಬೆಳಗಾವಿಯ ಕನಸುಗಳಿಂದ ಉದ್ರಿಕ್ತರಾಗುತ್ತಿದ್ದರು. ಗುಡಸೀಕರ ಈ ದಿನ ಕೊಟ್ಟ ಹತ್ತು ರೂಪಾಯಿಗಳಿಂದ ಹುಚ್ಚುಹತ್ತುವಷ್ಟು ಪರವಶವಾದದ್ದು ಈ ಕಾರಣಕ್ಕೇ. +ಕಳ್ಳಸಿದರಾಮ ಗುಡಸೀಕರ ಕೊಟ್ಟ ಹತ್ತು ರೂಪಾಯಿಗಳನ್ನು ತಗೊಂಡು ಹೊರಬಿದ್ದು ಇನ್ನೂ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಅಂಡೂರಾಮಯ್ಯ ಉರ್ಫ್‌ರಮೇಸ ಬಂದು ಕೂಡಿಕೊಂಡ. ಬಂದವನು ಐದು ರೂಪಾಯಿ ದುರ್ಗಿಗೆ ಕೊಟ್ಟು ಇನ್ನೈದು ಕುಡಿಯೋಣವೆಂದು ಸೂಚನೆ ಕೊಟ್ಟ. “ಹೀಂಗ ಹೇಳ್ತೀಯೇನೋ? ಸರಪಂಚಗ ಹೇಳ್ತಿನ್ನೋಡು” ಎಂದು ಸಿದರಾಮ ಹೇಳಿದೊಡನೆ “ಎಸೆಸ್” ಎನ್ನುತ್ತ ತಣ್ಣಗಾದ. ಅಷ್ಟರಲ್ಲಿ ಜಿಗಸೂ ಸಾತೀರ ಇವರನ್ನು ಕೂಡಿಕೊಂಡು “ನೀವಿಬ್ಬರೊಳಗ ಒಬ್ಬನೂ ನಂಬಿಗಸ್ತನಲ್ಲಂತ: ಒಬ್ಬ ಕಳ್ಳ, ಇನ್ನೊಬ್ಬ ಕುಡುಕ. ನನ್ನ ಕೈಗಿ ಕೊಡು. ನಾನಽ ದುರ್ಗಿಗೆ ಕೊಡತೀನಿ” ಎಂದು ಹೇಳಿದ. ಉಳಿದಿಬ್ಬರು ಏಳರಲ್ಲಿ ಹುಟ್ಟಿದವರೆ? “ನಾನೇ ಕೊಡುತ್ತೇನೆಂದು ಕಳ್ಳ ಹೇಳಿದ. ಎಸೆಸ್ ನಾನು ಸಾಕ್ಷಿ ಹೇಳುತ್ತೇನೆಂದು ರಮೇಶ ಹೇಳಿದ. ಅಷ್ಟರಲ್ಲಿ ಆಯೀಮೆರೆಮಿಂಡನೂ ಅವರನ್ನು ಕೂಡಿಕೊಂಡ. “ಏ, ನಿಮ್ಮ ಮ್ಯಾಲ ಸರಪಂಚಗ ನಂಬಿಕಿಲ್ಲಂತ. ನೀನಽ ಇಸಕೊಂಡ ಹೋಗಿ ದುರ್ಗಿಗೆ ಕೊಡಂತ ಹೇಳ್ಯಾರ, ಕೂಡಲೇ ಕಳ್ಳ” ಎಂದ. +“ಬಂದ ನೋಡ್ರಲೇ ನಂಬಿಗಸ್ಥ! ಅಲ್ಲಪಾ, ನಿನ್ನ ಮ್ಯಾಲ ಅಷ್ಟ ವಿಶ್ವಾಸ ಇದ್ದಿದ್ದರ ನಿನ್ನ ಬಿಟ್ಟ ನನ್ನ ಕೈಯಾಗ ಯಾಕ ಕೊಡುತ್ತಿದ್ದರು ರೊಕ್ಕಾನ? ಹೋಗ ಹೋಗಲೇ” ಎಂದ ಕಳ್ಳ. +ಯಾರೊಬ್ಬರೂ ಸಿದರಾಮನನ್ನು ಬಿಟ್ಟು ಅಗಲಲೊಲ್ಲರು. ಕಳ್ಳನಂತೂ ಅಷ್ಟೂ ಹಣ ದುರ್ಗಿಗೆ ಕೊಡುವುದಿಲ್ಲವೆನ್ನುವುದು ಖಾತ್ರಿ. ಯಾಕೆಂದರೆ ಅವರ ದೇವರ ಗುಣ ಅವರಿಗೆ ಗೊತ್ತಿಲ್ಲವೆ? ಹ್ಯಾಗೋ ಮಾಡಿ ಕಳ್ಳ ಉಳಿಸಿಕೊಳ್ಳುವ ದುಡ್ಡಿನಲ್ಲಿ ನಾಲ್ವರೂ ಕುಡಿಯಬೇಕೆಂದು ಮೂವರ ಹಂಚಿಕೆ. ಎಷ್ಟೆಂದರೂ ಸರಪಂಚ ದುರ್ಗಿಯ ಹತ್ತಿರ ಹೋಗಿ ದುಡ್ಡಿನ ಬಗ್ಗೆ ವಿಚಾರಿಸಲಾರ. ಅಷ್ಟಾಗಿ ಎಂದೋ ವಿಚಾರಿಸಿದರೆ ಅವಳು ಸುಳ್ಳು ಹೇಳಿದಳೆಂದೋ, ಮರೆತಿದ್ದಾಳೆಂದೋ ಹೇಳಿ ಪಾರಾಗಬಹುದು. ಎಷ್ಟೆಲ್ಲ ಕಲ್ಪಕ ಶಕ್ತಿಯಿದ್ದವರು ಒಂದು ಹುಸಿ ಹೇಳಲಿಕ್ಕಾಗುವುದಿಲ್ಲವೆ? +ಆದರೆ ಕಳ್ಳನ ತರ್ಕವೇ ಬೇರೆ. ಈ ನರಿಗಳನ್ನು ಓಡಿಸಿ ತಾನೊಬ್ಬನೇ ದುರ್ಗಿಯ ಹತ್ತಿರ ಹೋಗಿ ಐದು ಕೊಟ್ಟು ಮಿಕ್ಕ ಐದರಲ್ಲಿ ಬೆಳಗಾವಿಗೆ ಹೋಗಿ ಮಜಾ ಮಾಡಿ ಬರಬೇಕೆಂದು ಅವನ ಉಪಾಯ. ಆದರೆ ಅವರೋ ಬಿಟ್ಟು ಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನಾ ಮಾತಿಗೊಮ್ಮೆ “ಕಳ್ಳ, ಕಳ್ಳ” ಎನ್ನುತ್ತಿದ್ದವರು ಇಂದು ಬಾಯ್ತುಂಬ “ಸಿದರಾಮಾ” ಎಂದು ಕರೆದರು. ಇಲ್ಲದ ಸದ್ಗುಣಗಳನ್ನು ಅವನ ಮೇಲೆ ಹೇರಿದರು. ಹಿಂದಿನ ಅನೇಕ ಘಟನೆಗಳಲ್ಲಿ ಹಾಸ್ಯಾಸ್ಪದನಾಗಿದ್ದ ಅವನನ್ನು ನಾಯಕನನ್ನಾಗಿಸಿ ಬಣ್ಣಕಟ್ಟಿ ವರ್ಣಿಸಿದರು. ಜಿಗಸು ಸಾತೀರ ಸಿದರಾಮನನ್ನು ಬೆಳಗಾವಿಗೆ ಕರೆದೊಯ್ದು ಅಲ್ಲಿ ತನ್ನ ಖರ್ಚಿನಲ್ಲಿ ಸಿನಿಮಾ ತೋರಿಸುವುದಾಗಿ ಭರವಸೆ ಕೊಟ್ಟ. ಬೆಳಗಾವಿಯ ಹುಡುಗಿಯರ ಜೋಡು ಹೆಳಲುಗಳನ್ನೂ, ಹೆಳಲಿನ ಕೊನೆಯ ಟೇಪುಗಳನ್ನೂ ವರ್ಣನೆ ಮಾಡಿದ. ನಿಜ ಹೇಳಬೇಕೆಂದರೆ ಅವನು ಒಂದು ಬಾರಿಯೂ ಬೆಳಗಾವಿ ಕಂಡವನಲ್ಲ. ಆ ಹತ್ತು ರೂಪಾಯಿಗೆ ಕಳ್ಳನಂತೂ ಬಿಡಿಸಲಾರದ ಗಂಟು. ಯಾಕೆಂದರೆ ಹಣ ಅವನಲ್ಲೇ ಇದೆ. ಆತ ತನ್ನನ್ನೂ ಖರ್ಚು ಮಾಡುವುದರಲ್ಲಿ ಸೇರಿಸಿಕೊಳ್ಳಬೇಕೆಂದು ಮೂವರ ಹವಣಿಕೆ. ದಿನಾ ಬೆಳಗ್ಗೆದ್ದು ಪರಸ್ಪರ ಮುಖ ನೋಡುವವರು, ಅವರವರ ಗೆರೆ ಅವರವರಿಗೆ ಗೊತ್ತಿಲ್ಲವೆ? ಸದರಿ ಮಾತುಗಳನ್ನು ಹೇಳುವವರೂ ನಂಬಿರಲಿಲ್ಲ. ಸಿದರಾಮ ಮೊದಲೇ ಕಳ್ಳ; ಅವನ್ಯಾಕೆ ನಂಬುತ್ತಾನೆ? ಅವರಿಂದ ಪಾರಾಗುವುದಕ್ಕಾಗಿ. +“ತಗಿ, ತಗಿಯೋ, ಈಗಽ ಹೋಗಿ ದುರ್ಗಿಗೆ ಕೊಟ್ಟ ಬರ್‍ತೀನಿ.” +ಎಂದು ದಾಪುಗಾಲು ಹಾಕಿ ನಡೆದ. ಆದರೆ ಅವರ್‍ಯಾರೂ ತಿರುಗಲಿಲ್ಲ, ಬೆನ್ನುಹತ್ತಿದರು. +ಹಾಗೇ ನಡೆದುಕೊಂಡು ಸಿದರಾಮನ ಮನೆಯ ತನಕ ಬಂದರು. ಸಿದರಾಮ ನಟನಲ್ಲವೆ?-ಮನಸ್ಸು ಬದಲಿಸಿದಂತೆ ಮಾಡಿ- +“ಛೇ, ಹಸವಾಗೇತಿ, ಊಟ ಮಾಡಿ ಆಮ್ಯಾಲ ದುರ್ಗಿಗೆ ಕೊಟ್ಟ ಬರ್ತೀನಿ” ಎಂದು ಹೇಳಿ ಮನೆಯೊಳಕ್ಕೆ ನಡೆದ. ಅಂಡೂ ರಾಮಯ್ಯ ಉರ್ಫ್ ರಮೇಸನಿಗೆ ಸಿಟ್ಟು ಬಂತು. +***** +ಮುಂದುವರೆಯುವುದು +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_106.txt b/Kannada Sahitya/article_106.txt new file mode 100644 index 0000000000000000000000000000000000000000..4101e85259adf6b7f97600e05eab3ea90983d7c8 --- /dev/null +++ b/Kannada Sahitya/article_106.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಮುಖಾರಿ +ತಾಳ — ಛಾಪು +ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | +ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| +ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | +ಪರಿಪರಿಯಲಿ ವಿದ್ಯೆ ಕಲಿತರಿಲ್ಲ || +ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ | +ಅರಿಯದೆ ಹಲವ ಹಂಬಲಿಸಿದರಿಲ್ಲ ||೧|| +ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ | +ಕಂಡಕಂಡವರಿಗೆ ಕೈಮುಗಿದರಿಲ್ಲ || +ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ – | +ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ||೨|| +ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ | +ಬೆಟ್ಟಗಳನು ಕಿತ್ತಿ ಇಟ್ಟರಿಲ್ಲ || +ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ | +ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ ||೩|| +***** +ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] +ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […] +ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_107.txt b/Kannada Sahitya/article_107.txt new file mode 100644 index 0000000000000000000000000000000000000000..13496aa1b0da1a17d75606896ccec72af44638ae --- /dev/null +++ b/Kannada Sahitya/article_107.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು +ಫಳ್ಳನೆ ಮಿಂಚುವ ಮಿಂಚು +ಪ್ರಬುದ್ಧ ಮಳೆ ತೊನೆಯುತ್ತ +ಇಳೆಗೆ ಇಳಿಯುವ ಕುರುಹು +ನೆಲದ ಮೈತುಂಬ ಸಂಭ್ರಮ ಕಾತರ. +ಎಂದಿನದೇ ತೊಯ್ಯುವಿಕೆ +ಮರಳಿ ಸುರಿಯುವದೆಂದು +ಬಿಸಿಲು ಕಾರುವ ಹಸಿರು ಹೊಳಪು ಸಸಿಗಳಿಗೆಲ್ಲ +ಒನಪು ವೈಯಾರ +ಪುಳಕಿತ ಸ್ನಾನಕ್ಕಾಗಿ +ಮಮ್ಮಲ ತುಡಿಯುತ್ತಿರುವ +ಹೂ ಜಿಗ್ಗು ಮಣ್ಣು ಮೊಳೆತ ಗರಿಕೆಗಳ +ಮಿರಿಮಿರಿವ ಕಣದಲ್ಲು ಬಿರಿಬಿರಿವ ಮನದಲ್ಲು +ಸಂದಿಗೊಂದಿಗಳಲ್ಲು +ಕಚಗುಳಿಯ ಮೈ ಬೆವರು. +ಹಾಲಿನ ಹಾಡಿನ ಜತೆಗೆ ಸಂತಸದ ಹೊಗರು +ಹೂ ಬಿಲ್ಲು ಚುಂಬನದ +ಸವಿಯ ರೋಮಾಂಚನಕ್ಕಾಗಿ +ಹಸಿರುಗಳ ಒಕ್ಕೊರಲ ಜೀವಂತ ಕಾದಾಟ +ಆ ತನಕ ಆತಂಕ +ಆದರೆ +ಇನ್ನೂ ತಿಂಗಳು ತುಂಬದ ಹೊಸ +ಹೊಚ್ಚ ಸಸಿಗಳಿಗೆ ಹಸಿ ಹುಲ್ಲು ಮರಿಗಳಿಗೆ +ಹಸಿರುಗಟ್ಟುತ್ತಿರುವ +ಎಳೆ ಪಾಚಿಗರಿಗಳಿಗೆ ಮಾತ್ರ +ಎಲ್ಲವೂ ಅನಿರೀಕ್ಷಿತ +ಹೆದರುಗಟ್ಟುವ ಬೆವರು. +ಒಳಗೊಳಗೇ ನಡುಕ. +ಮಾತ್ರ ಕಣ್ಣು ಪಿಳುಕಿಸುತಿರುವ +ಚಿಗಿತ ಎಳೆ ಸಸಿಗಳಿಗೆ +ಹೊಸತೊಂದೆ ಅನುಭವದ ಬದ್ಧ ಕಾತರಿಕೆ +ಅಪ್ರಬುದ್ಧ ತಿಳುವಳಿಕೆ +ಏನೋ ಆಗಬಾರದ್ದು ಆಗಿ ಹೋಗಲಿರುವುದ +ಥರಗುಟ್ಟುವ ಮುಗಿಲು +ಮೈಮೇಲೆರಗುವುದ +ನೆನೆದೇ ಮೈ ಮುರಿ ಚೂಪು +ಕೊನೆಗೊಮ್ಮೆ +ಪುಟಪುಟಿಸಿ ಪುಳಕಿತ ಧಾರಾವರ್ಷ +ಹೂ ಎಸಳು ತಿಳು ಮೊಗ್ಗು ಚಿಗುರುಗಳ ತೊಯ್ಸುತ್ತ +ಪರಿಮಳದ ತಂಪನ್ನು ಕರಡುತ್ತ ಹರಡುತ್ತ +ಗಳಗಳಿಸಿ ಇಳಿದಾಗ +ಓರೆಕೋರೆಗಳಲ್ಲಿ ಮಡುವುಗಟ್ಟುವ ಹರುಷ +ಎಲ್ಲೆಲ್ಲು ನಿಟ್ಟುಸಿರು ತಂಪು ಸ್ಪರ್ಶ +ಮತ್ತು….. ಮತ್ತು….. +ನೆಲೆ ನಿಂತ ನೀರಿಂದ ಹೊರಗೆ ಚಿಮ್ಮುತ್ತಿರುವ +ಏನೋ ಸಹಿಸಿದೆನೆಂಬ +ಏನೋ ಸಹಿಸುವೆನೆಂಬ +ಪುಟಾಣಿ ಹಸಿರು ತಲೆಗಳ ಖುಷಿ +ಮುದ್ದು ಧಿಮಾಕು +***** +ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […] +ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_108.txt b/Kannada Sahitya/article_108.txt new file mode 100644 index 0000000000000000000000000000000000000000..37e0b91d7d701ada16df0a5f25bd7297a2173c0e --- /dev/null +++ b/Kannada Sahitya/article_108.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ ಒಂದು ವಿಚಾರಸಂಕಿರಣಕ್ಕೆ ಡಾ. ವಿಜಯಾ, ಮಧುರೈ ವಿಶ್ವವಿದ್ಯಾಲಯದ ಡಾ. ಹರೀಶ್‌ಭರಣಿ, ಕುಂ ವೀರಭದ್ರಪ್ಪ ಹಾಗು ನಾನು ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದೆವು. +ಉಪನ್ಯಾಸದನಂತರ ಕಲಬುರ್ಗಿಯವರು ಉಪಹಾರಕ್ಕೆಂದು ತಮ್ಮ ಮನೆಗೆ ಉಪನ್ಯಾಸಕರನ್ನು ಆಹ್ವಾನಿಸಿದರು. ಉಪಹಾರದನಂತರ ಸಹಜವಾಗಿಯೇ ಮಾತು ಸಿನಿಮಾ ಕುರಿತಂತೆ ಹೊರಳಿತು. ವಿಶ್ವವಿದ್ಯಾಲಯಗಳು ಸಿನಿಮಾ ಬಗೆಗೆ ತೋರುತ್ತಾ ಬಂದಿರುವ ಉಪೇಕ್ಷೆಯ ಬಗೆಗೆ ನಾನು ಮಾತನಾಡುತ್ತಾ ‘ಸುಮಾರು ೫೦ ರಿಂದ ೬೦ ಕೋಟಿ ನಿರ್ಮಾಣ ವಹಿವಾಟುಳ್ಳ ಒಂದು ಕ್ಷೇತ್ರ, ಅದರ ಸಾಮಾಜಿಕ ಪರಿಣಾಮ, ಸೃಜನಶೀಲತೆ, ವಿಮರ್ಶೆ, ಇತ್ಯಾದಿ ಒಳನೋಟವುಳ್ಳ ವಿಶ್ಲೇಷಣೆ/ಮಾಹಿತಿಯ ಕೊರತೆ ಕುರಿತಂತೆ ಕಲಬುರ್ಗಿಯವರ ಗಮನ ಸೆಳೆದಾಗ ‘ನೀವು ಯಾರಾದರೂ ಮುಂದೆ ಬಂದು ಕೆಲಸ ಮಾಡಿದರೆ ಅದನ್ನು ವಿಶ್ವವಿದ್ಯಾನಿಲಯ ಪ್ರಕಟಿಸುವ ಜವಬ್ದಾರಿ ಹೊರಲು ತಯಾರಿದೆ’ ಎಂದು ಸ್ಥಳದಲ್ಲೇ ಘೋಷಿಸಿದರು. ‘ಇದೊಂದು ಉಪಾಹಾರದ ಸಂದರ್ಭದಲ್ಲಿನ ಘೊಷಣೆ ಎಂದಂದು ಕೊಂಡು ನಾನು ಸುಮ್ಮನಾದೆ. ಜೊತೆಗೆ ಕನ್ನಡ ಸಿನಿಮಾ ರಂಗದವರೊಡನೆ ಮುಂಚಿನಿಂದಲೂ ನನ್ನದು ಒಂದು ರೀತಿಯ ಅಂಟಿಯೂ ಅಂಟದಂತಹ ನಂಟು. ಸಂಘಟಿಸುವ ಚೈತನ್ಯದ ಕೊರತೆ ನನ್ನಲ್ಲಿದ್ದುದರಿಂದಲೂ ನಾನು ಸುಮ್ಮನಾಗಬೇಕಾಯಿತು. +ನಂತರದ ಕೆಲವು ದಿನಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಕನ್ನಡ ಚಲನಚಿತ್ರ ಇತಿಹಾಸ ಕುರಿತಂತೆ ಸಮಗ್ರ ಮಾಹಿತಿಯುಳ್ಳ ಕೃತಿಗಳ ರಚನೆ ಹಾಗು ಪ್ರಕಟಣೆಯ ಕಾರ್ಯ ಕೈಗೊಂಡಿರುವುದರ ಬಗೆಗೆ ಅಲ್ಲಲ್ಲಿ ವರದಿಗಳನ್ನು ಓದಿದೆ. +‘ಕನ್ನಡ ಚಲನಚಿತ್ರ ಇತಿಹಾಸ’ ಇದರ ಪ್ರಧಾನ ಸಂಪಾದಕರಾದ ಡಾ. ವಿಜಯಾರವರು ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿರುವವರು, ಚಲನಚಿತ್ರದ ಬಗೆಗೆ ಗಂಭೀರ ಆಸಕ್ತಿ ಉಳ್ಳವರು ಮತ್ತು ಹಿರಿಯರು. ನಿಷ್ಠುರವಾದ, ವಸ್ತುನಿಷ್ಠವಾದ ವಿಮರ್ಶೆ, ಲೇಖನ, ವರದಿಗಳನ್ನು ಪ್ರಕಟಿಸಿ ಗೌರವಾನ್ವಿತ ಸ್ಥಾನಗಳಿಸಿರುವವರು. +ಈಗ ‘ಕನ್ನಡ ಚಲನ ಚಿತ್ರ ಇತಿಹಾಸ’ ೨೩ ಲಕ್ಷ ರೂ.ಗಳ ವೆಚ್ಚದನಂತರ ಬಿಡುಗಡೆಯಾಗಿ, ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಅಂದರೆ ಪರೋಕ್ಷವಾಗಿ ಹಿಂದಕ್ಕೆ ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಈ ‘ವಾಪಸಾತಿಗೆ’ ಸೂಕ್ತ ಕಾರಣಗಳನ್ನು ನೀಡೀಲ್ಲ. ೨೩ ಲಕ್ಷ ರೂ. ಗಳನ್ನು ವ್ಯಯ ಮಾಡಿ ಪ್ರಕಟಿಸಿದ ಕೃತಿಯನ್ನು ಹಿಂದಕ್ಕೆ ಪಡೆಯುವ ಅವಶ್ಯಕತೆ ಏನಿತ್ತು? ಬರಿ ಗುಣಮಟ್ಟದ ಕೊರತೆಯೊಂದೇ ಆಗಿದ್ದರೆ ಅದನ್ನು – ಪರಿಷ್ಕರಣದಲ್ಲಿ ಸರಿ ಮಾಡುವ, ಈಗಾಗಲೇ ಖರೀದಿಸಿರುವವರಿಗೆ ‘ಹೆಚ್ಚಿನ’ ರಿಯಾಯ್ತಿ ಮಟ್ಟದಲ್ಲಿ ನೀಡುವ ಸರಳ ಪರಿಹಾರವಿತ್ತು. ಆದರೆ ಅದ್ಯಾವುದನ್ನೂ ಯೋಚಿಸದೆ ’ತಟಕ್ಕನೆ’ ಹಿಂದಕ್ಕೆ ಪಡೆಯಲಾಗಿದೆ. +ಹಿಂದಕ್ಕೆ ಪಡೆದುದರ ಹಿನ್ನೆಲೆ: +ಚಲನಚಿತ್ರ ವಾಣಿಜ್ಯ ಮಂಡಳಿ ಹಾಗು ಕನ್ನಡ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿನ ‘ಕನ್ನಡ ಚಲನಚಿತ್ರ ಇತಿಹಾಸ’ ಕೃತಿ ಯೋಜನೆ ಅನುಷ್ಠಾನಕ್ಕೆ ತರಲು ಆಸ್ಥಿತ್ವಕ್ಕೆ ಬಂದ ಸಂಪಾದಕೀಯ ಮಂಡಲಿಯಲ್ಲಿ ಗಂಗಾಧರ್ ಮೊದಲಿಯಾರ್ ಸೇರಿದಂತೆ ಸಾಕಷ್ಟು ಜನರಿದ್ದರು. ಪ್ರಧಾನ ಸಂಪಾದಕರಾಗಿ ಡಾ.ವಿಜಯಾರವರಿದ್ದರು. +ಸಾಕಷ್ಟು ಕಾಲ ಸಭೆಗಳಾದವು. ಲೇಖಕರನ್ನು ಸಂಪರ್ಕಿಸಲಾಯಿತು. ಕೆಲಸ ಮುಂದುವರಿಯುತ್ತಿದ್ದ ರೀತಿಗೆ ಅತೃಪ್ತರಾದ ಗಂಗಾಧರ್ ಮೊದಲಿಯಾರ್ ಸಂಪಾದಕೀಯ ಮಂಡಳಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರು. ರಾಜಿನಾಮೆ ಸ್ವೀಕರಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯವರು ಗಂಗಾಧರ್‌ಮೊದಲಿಯಾರ್‌ರ ರಾಜಿನಾಮೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸೂಚಿಸಲಿಲ್ಲ. ಡಾ. ವಿಜಯಾ ಹಾಗು ಗಂಗಾಧರ್ ಮೊದಲಿಯಾರ್ ರ ನಡುವೆ ಅನೇಕ ಭಿನ್ನಾಭಿಪ್ರಾಯ/ವೈಮನಸ್ಯಗಳಿದ್ದು ಆ ಕಾರಣಕ್ಕೆ ‘ಇಬ್ಬರೂ ಸೂಕ್ತ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಿಲ್ಲ’ ಎಂಬ ಒಳಕಾರಣದಿಂದಾಗಿ ಸುಮ್ಮನಾಗಿರಬೇಕು. +ಗಂಗಾಧರ್‌ಮೊದಲಿಯಾರ್ ರಾಜಿನಾಮೆ ನೀಡಿದನಂತರದ ವರ್ಷಕ್ಕೆ ಈಗ ‘ಕನ್ನಡ ಚಲನಚಿತ್ರ ಇತಿಹಾಸ’ ಬಿಡುಗಡೆಯಾದ ವೇಗದಲ್ಲೇ ನಿಷೇಧಕ್ಕೊಳಗಾಗಿದೆ. ಯಾವ ಕಾರಣಗಳಿಗಾಗಿ ಈ ನಿಷೇಧ ಎಂಬ ಬಗೆಗೆ ಆಲೋಚಿಸಿದಾಗಲೇ ’ಈ ಎಲ್ಲರ/ಎಲ್ಲದರ’ ಬಗೆಗೆ ಅಸಹ್ಯವುಂಟಾಗುತ್ತದೆ. ಕೃತಿಯಲ್ಲಿ ಕೆಲವರಿಗೆ ‘ಅಸಮಾಧಾನ’ ವುಂಟಾಗುವ ಸಾಲುಗಳಿವೆ (ಅವು ಐತಿಹಾಸಿಕವಾಗಿ ನಿಜವಿರಬಹುದು ಅಥವ ಕೃತಿಯಲ್ಲಿ ಅತಿಶಯೋಕ್ತಿಯ ಟೀಕೆಗಳಾಗಿರಬಹುದು) ಎಂಬ ಕಾರಣಕ್ಕೆ ವಿನಾಕಾರಣ ಕೃತಿಯೊಂದನ್ನು ನಿಷೇಧಕ್ಕೊಳಪಡಿಸಿಬಿಡುವಂತಹ ‘ಇಕ್ಕಟ್ಟಿನ ಪರಿಸ್ಥಿತಿಯನ್ನು ಸರ್ಕಾರಕ್ಕೂ’ ಉಂಟು ಮಾಡಿದರೆಂಬ ಮಾತುಗಳು ಸಹ ಕೇಳಿ ಬರುತ್ತಿವೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಮೇಲೆ ಸರ್ಕಾರ ಪರೋಕ್ಷವಾಗಿ ಒತ್ತಡ ಹೇರಿತ್ತು ಎಂಬ ಮಾತುಗಳು ಇದ್ದರೆ ಅವು ಅತಿಶಯೋಕ್ತಿಯೇನಲ್ಲ. ಜೊತೆಗೆ ಏಕಪಕ್ಷೀಯವಾಗಿ ಸಿಂಡಿಕೇಟ್ ‘ತಾತ್ಕಾಲಿಕ ಹಿಂತೆಗೆತದ’ ನಿರ್ಣಯ ಕೈಗೊಂಡಿತು. ಪರಿಷ್ಕರಣೆಗೆ ಇನ್ನೊಂದು ಸಮಿತಿಯ ನಿರ್ಧಾರವೂ ಆಗಿದೆ. ಒಳ್ಳೆಯ ಪ್ರಯತ್ನ ಅನೇಕ ವ್ಯಕ್ತಿಪ್ರತಿಷ್ಠೆಗಳಿಂದ ಗಟಾರಕ್ಕಿಳಿದಿದ್ದು ಕರ್ನಾಟಕದ, ಕನ್ನಡದ ಬೌದ್ಧಿಕ ದಿವಾಳಿತನವನ್ನಷ್ಟೆ ತೋರುತ್ತಿದೆ. ಇದೆಲ್ಲದರ ಪರಿಣಾಮವೆಂದರೆ ಸಾರ್ವಜನಿಕ ಹಣವೂ ಸೇರಿದಂತೆ ಒಟ್ಟು ೨೩ ಲಕ್ಷ ರೂಗಳನ್ನು ಗಟಾರಕ್ಕೆ ಸುರಿದಂತಾಗಿದೆ. ಐತಿಹಾಸಿಕ ವಸ್ತುನಿಷ್ಠತೆಯಿಂದ ಯಾವುದೇ ಸಂದರ್ಭವನ್ನೂ ನೋಡಬೇಕಾದ ವೈಚಾರಿಕ ಸ್ವಾತಂತ್ರ್ಯಕ್ಕೆ ಕೆಲವೇ ಕೆಲವು ಮಂದಿ ಅಡ್ಡಿಯಾದರೆ ಸಾರ್ವಜನಿಕರೂ ಸಹ ‘ಸುಮ್ಮನಿದ್ದು’ ಒಂದು ರೀತಿಯ ಭಯಾನಕ ವಾತಾವರಣ ಸೃಷ್ಟಿಯಾಗಿರುವುದು ಯಾರಿಗೂ ಹೆಮ್ಮೆಯ ವಿಷಯವಲ್ಲ. +ಈ ಕೆಲವೇ ಕೆಲವು ಮಂದಿಯ ಒತ್ತಡಕ್ಕೆ ಸರ್ಕಾರವೂ ಮಣಿದು ‘ಹೇಳಿಕೆ’ ನೀಡಿದರೆ ಆಶ್ಚರ್ಯವಿಲ್ಲ. +-ಶೇಖರ್‌ಪೂರ್ಣ +***** +೦೨ ಮೇ ೨೦೦೨ +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […] +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_109.txt b/Kannada Sahitya/article_109.txt new file mode 100644 index 0000000000000000000000000000000000000000..e190fd3270548ea317ef719395b12c63ee37ee4d --- /dev/null +++ b/Kannada Sahitya/article_109.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕತ್ತಲು ಅವಚುತ್ತಿರುವಂತೆ +ಅವಳ ಮಾಂಸಖಂಡದೊಳಗೆ +ಸತ್ಯ ಕುಕ್ಕಿದಂತೆ +ಬೆಚ್ಚಿಬಿದ್ದೆ-ನನ್ನ +ಕಂಡುಕೊಂಡೆ +***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_11.txt b/Kannada Sahitya/article_11.txt new file mode 100644 index 0000000000000000000000000000000000000000..3075b25366e1b6c7ffa7e3854b23bc089a3187a5 --- /dev/null +++ b/Kannada Sahitya/article_11.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. +ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ ಅವನ ಮಾತಿನ ಧಾಟಿ, ಪರಿಚಯದ ವೈಖರಿ ಕಂಡವರೆಲ್ಲ ಅವನನ್ನೊಬ್ಬ ಭಾರಿ ಜರ್‍ನಲಿಸ್ಟ್ ಎಂದು ಭ್ರಮಿಸುತ್ತಿದ್ದರು. +“ಏನು ಮರಿ ಈಚೆಗೇನು ಬರೆದ್ರಿ?” ಎಂದೆ. +“ಬರೆದಿದ್ದಕ್ಕಿಂತ ನಾನು ಮರೆತಿದ್ದೇ ಜಾಸ್ತಿ. ಅದರಿಂದ್ಲೇ ನಮ್ಮ ಪೇರೆಂಟ್ಸ್ ‘ಮರಿ’ ಅಂತ ಹೆಸರಿಟ್ಟಿರಬೇಕು” ಎಂದು ತನ್ನ ಜೋಕಿಗೆ ತಾನೇ ನಕ್ಕ. +“ನಿಮ್ಮ ಪೇಪರಿಗೆ ‘ಫಿಲ್ಮಿ ಸರ್ಕಸ್’ ಎಂದು ಯಾಕೆ ಹೆಸರಿಟ್ಟಿದೀರಿ’ ಅಂದೆ. +‘ಸಿನಿಮಾಗಳಿಗಿಂತ ಸರ್ಕಸ್ಸುಗಳೇ ಜಾಸ್ತಿ ಅಲ್ಲಿ – ‘ಕನ್‌ವಿಕ್ಷನ್ಸ್’ಗಿಂತ ಕಾಂಟ್ರವರ್ಸಿಗಳೇ ಜಾಸ್ತಿ ಮಾಡೋದೂ ಒಂದು ಸರ್ಕಸ್ ಅಲ್ವೇ” ಎಂದು ದುರು ದುರು ನೋಡಿದ ನನ್ನತ್ತ. +ಆ ಹೊತ್ತಿಗೆ ರಾಜಕೀಯ ಪುಡಾರಿಗಳು, ಮಠಾಧೀಶರು-ಸಿನಿರಂಗದ ಗ್ಲಾಮರಸ್ ನಟ-ನಟಿಯರು ಹಾಜರಾದರು. ಬೆಲ್ಲಕ್ಕೆ ಇರುವೆ ಮುತ್ತಿದ್ದಂತೆ ಅಭಿಮಾನಿಗಳ ಮಹಾಪೂರವೇ ಹರಿಯಿತು ಅಲ್ಲಿ. ಆರಾಮವಾಗಿ ಕುರ್ಚಿಯ ಮೇಲೆ ಕೂತಿದ್ದ ಪತ್ರಕರ್ತರು ಪೆಚ್ಚಾಗಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಅವರಿಗೆ ಕಾಣುತ್ತಿದ್ದುದೆಂದರೆ ಜನಗಳ ಬೆನ್ನು ಮಾತ್ರ. +“ಏನಾಗ್ತಿದೆ ಮರಿ ಅಲ್ಲಿ” ಎಂದೆ. +“ಅದ್ಯಾಕಯ್ಯ ಮೆಗಾಫೋನ್ ತಗೊಂಡೆ” ಎಂದರು ಪ್ರೆಸ್‌ನವರು ಕೋರಸ್‌ನಲ್ಲಿ. +“ಏನು ನಡೀತಿದೆ ಅಲ್ಲಿ ಎಂಬುದರ ರನ್ನಿಂಗ್ ಕಾಮೆಂಟ್ರಿ ಕೊಡ್ತೀನಿ” ಅಂತ ಶುರು ಹಚ್ಕೊಂಡ ತನ್ನ ಮಾತಿನ ಪ್ರವಾಹ – ಅದು ನಾನ್‌ಸ್ಟಾಪ್ ಬಸ್‌ನಂತಿತ್ತು. ಮಧ್ಯೆ ಮಧ್ಯೆ ಉದ್ಗಾರ-ಚೀತ್ಕಾರ. +“ಹಾ…. ಈಗ ನಿರ್ಮಾಪಕರು ಮಠಾಧೀಶರನ್ನು ಜ್ಯೋತಿ ಬೆಳಗಕ್ಕೆ ಆಹ್ವಾನಿಸಿದರು. ಬಂದ್ರು ಅವರು. ದೀಪ ಹಚ್ಚಕ್ಕೆ ಮ್ಯಾಚ್ ಬಾಕ್ಸ್ ಇಲ್ಲ. ಆ ಕಡೆ-ಈ ಕಡೆ ನೋಡ್ತಿದ್ದಾಗ ನಿರ್ದೇಶಕರು ಮ್ಯಾಚ್ ಬಾಕ್ಸ್ ಕೊಟ್ಟರು. ಮಠಾಧೀಶರು ಕಡ್ಡಿ ಗೀರ್‍ತಿದ್ದಾರೆ. ಅದು ಹತ್ಲಿಲ್ಲ. ಅರೆ….! ನಿನ್ನೆ ಮಳೇಲಿ ನೆಂದಿರಬೇಕು. ಅಂದಾಗ…. ಹ್ಯಾಂಡ್‌ಸಂ ಹೀರೋ ಸ್ಟೈಲಿಷ್ ಆಗಿ ಕಡ್ಡಿಪೆಟ್ಟಿಗೆ ತೆಕ್ಕೊಟ್ರು. ಹತ್ತಿತು ಕಡ್ಡಿ. ಜ್ಯೋತಿ ಬೆಳಗಿಸಿದರು. ಒಬ್ಬೊಬ್ಬರಾಗಿ ದಿಢೀರ್‍ ದಿಢೀರ್‍ ಅಂತ ಸ್ವಾಮಿಗಳ ಕಾಲಿಗೆ ಬೀಳ್ತಿದಾರೆ. ಕೂಲಿ ಹೊತ್ಕಂಬಂದ ಹಾಗೆ ೮ ಜನ ಒಂದು ಭಾರಿ ಹಾರ ಹೊತ್ತು ತಂದ್ರು. ಅದನ್ನು ನೋಡಿದ್ದೇ ಸಾಕು ಸ್ವಾಮೀಜಿ ಭಯಾನಕ ಎಕ್ಸ್‌ಪ್ರೆಷನ್ ಕೊಟ್ಟರು. ಹೀರೋ-ಹೀರೋಯಿನ್‌ಗೆ ಭಯ. ಎಲ್ಲಿ ಸ್ವಾಮೀಜಿ ಕುಸಿದು ಬೀಳ್ತಾರೋ ಅಂತ. ಅದರಿಂದ ಸ್ವಾಮೀಜಿನ ಬಲವಾಗಿ ಹಿಡಕೊಂಡ್ರು. ಕ್ಯಾಮರಾಗಳು ‘ಕ್ಲಿಕ್’ ‘ಕ್ಲಿಕ್’ ಅಂದವು. +ಈಗ ಮಂತ್ರಿವರೇಣ್ಯರು ಕೈಗೆ ಕ್ಲಾಪ್ ಬೋರ್ಡ್ ಕೊಟ್ಟರು. ಚಿತ್ರದ ಹೆಸರು ‘ಮಹಾಮೋಸ’ ಅಂತ ಅದರ ಮೇಲೆ ಬರೆದಿದ್ದಾರೆ. ಕ್ಯಾಮರಾಮನ್ ಕಪಿನಿ ಸರಸರ ಓಡ್ತಿದಾರೆ…. ಯಾಕೆ ಓಡ್ತಿದ್ದಾರೆ ಅಂತ ಎಲ್ಲ ಗಾಬರಿಯಿಂದ ಅವರ ಕಡೆ ನೋಡ್ತಿದಾರೆ. ಅವರು ಸೀದಾ ಜನ ಜಂಗುಳಿಯಲ್ಲಿ ಹಿಂದಕ್ಕೆ ತಳ್ಳಲ್ಪಟ್ಟಿದ್ದ ವಿತರಕ ವೀರೇಂದ್ರಕುಮಾರ್‌ನ-ಪೊಲೀಸ್ ಕಳ್ಳನನ್ನು ಎಳ್ಕೊಂಬಂದಂತೆ ಎಳತಂದು ಕ್ಯಾಮರಾ ಸ್ವಿಚಾನ್ ಮಾಡಿ ಅಂತ ಕರ್‍ಕೊಂಬಂದಿದಾರೆ ಕಪಿನಿ. +ಹಾ….ಈಗ ಹೀರೋಯಿನ್ ಹಿಮಾನಿ ತೆಳು ಸೀರೆಯುಟ್ಟು ಬಳ್ಳಿಯಂತೆ ಬಳುಕುತ್ತಾ – ಕುಲುಕುಲು ಎಂದು ಸೊಂಟ ಕುಲುಕಿಸುತ್ತ ಬರುತ್ತಿದ್ದಾಳೆ. ಇನ್ನೊಂದು ಪಕ್ಕದಿಂದ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ ಧ್ರುವಕುಮಾರ್‍-ರವಿಚಂದ್ರನ್ ಸ್ಟೈಲ್‌ನಲ್ಲಿ ಎಂಟ್ರಿಕೊಟ್ಟು “ನಿನ್ನ ಬಿಟ್ಟು ನಾನಿರಲಾರೆ” ಎಂದು ಹೇಳಿ ಅಪ್ಪಿಕೋ ಚಳವಳಿ ನೆನಪಿಸಿಕೊಂಡು – ಹೀರೋಯಿನ್‌ನ, ಬ್ಯಾಚಲರ್‌ಗಳು ದಿಂಬು ತಬ್ಬಿಕೊಳ್ಳುವಂತೆ ಬಲವಾಗಿ ತಬ್ಬಿ ಕೂತಿದ್ದಾನೆ. ‘ಹಾಯ್ ನನ್ನ ರಾಜಾ’ ಎಂದ ಹಿಮಾನಿ ಆ ಅಪ್ಪುಗೆಯ ಸವಿ ಘಳಿಗೆ ಸೊಗಸಾಗಿ ಬಿಂಬಿಸಿದ್ದಾಳೆ ಮೊಗದಲ್ಲಿ. ‘ಕಟ್’ ಅಂತಾರೆ ಡೈರೆಕ್ಟರ್‍. +ಹೀರೋ ಸಪ್ಪಗೆ ನಿಲ್ಲುವ. ಆಗ ಪ್ರಚಂಡ ಕರತಾಡನ. +ಸಿಹಿ ಡಬ್ಬಾ ಬಂತು. ಬೇಕ್‌ಬೇಕಾದವರು ತಮಗೆ ಇಷ್ಟವಾದವರಿಗೆ ಸಿಹಿ ತಿನ್ನಿಸ್ತಿದಾರೆ. ಕ್ಲಾಪ್ ಅಂಡ್ ಸ್ವಿಚಾನ್ ಮುಗೀತು. ಈಗ ಹಾರಗಳ ಹಾವಳಿ. ಹೀರೋ-ಹೀರೋಯಿನ್ ಹೊರಟರು. ಜನ ಚದುರ್‍ತಾ ಇದಾರೆ. ಇಲ್ಲಿಗೆ ಮುಹೂರ್ತ ಸಮಾರಂಭ ಮುಕ್ತಾಯವು. ಇದು ಯಾರಿದು ನನ್ನ ಹತ್ರ ಓಡಿ ಬರ್‍ತಿದಾನೆ….ಬಂದ….ವಿಚಾರಿಸಿದೆ ಅವನ್ನ….ಸಾರಿ….ಪತ್ರಕರ್ತ ಮಿತ್ರರಲ್ಲಿ ವಿನಂತಿ. ದಯಮಾಡಿ ಎಲ್ಲ ಬೇಗ ಬೇಗ ಆಚೆ ತೋಟದಲ್ಲಿ ಕೂರಬೇಕಂತೆ. ಇಡ್ಲಿ-ವಡೆ-ಸಾಂಬಾರ್‍ ತಣ್ಣಗಾಗೋದ್ರಲ್ಲಿ ತಿನ್ನಬೇಕಂತೆ” ಎಂದು ಮೆಗಾ ಫೋನ್ ಕೆಳಗಿಟ್ಟು ನಡೆದ. +ತಕ್ಷಣ ಮರಿ ಬಳಿ ಓಡೋಡಿ ಬಂದ ಒಬ್ಬ ಟಿಪ್‌ಟಾಪ್ ಸೂಟುಧಾರಿ. +‘ಸಾರ್‍-ತಾವು ತುಂಬಾ ಸೊಗಸಾಗಿ ರನ್ನಿಂಗ್ ಕಾಮೆಂಟ್ರಿ ಕೊಟ್ರಿ. ನಾವು ಹೀಗೆ ನಿರರ್ಗಳವಾಗಿ ಮಾತಾಡೋ ಒಬ್ಬ ಮಾತುಗಾರನ್ನ ಹುಡುಕ್ತಿದ್ವಿ. ಅಚಾನಕ್ಕಾಗಿ ಇವತ್ತು ನಿಮ್ಮ ಪ್ರತಿಭೆ ಪರಿಚಯವಾಯಿತು. ಅದರಿಂದ ಹೊಸದಾಗಿ ಓಪನ್ ಆಗ್ತಿರೋ ನಮ್ಮ ಚಾನೆಲ್‌ಗೆ ನೀವು ಆಂಕರ್‍” ಆಗಿ ಬರಬೇಕು. +‘ಆಂಕರ್‌ಗೋ-ಆಕ್ಟರಾಗೋ’ +“ಆಂಕರ್‍ ಅಂದ್ರೆ ನಿರೂಪಣೆ ಮಾಡೋದು-ಕಾರ್ಯಕ್ರಮ ನಡೆಸಿಕೊಡೋದು” +“ಸರಿ…. ಅಂದ್ರೆ” ಫಿಲ್ಮಿ ಸರ್ಕಸ್ ಅಂತನ್ನೋ ಪತ್ರಿಕೆ ನಡೆಸ್ತಿದೀನಿ ನಾನು. ಅದರ ಸಂಪಾದಕ ಮರಿ ನಾನು. ಈ ಕೆಲಸ ಹ್ಯಾಗೆ ಬಿಡ್ಲಿ” +“ಆ ಪೇಪರ್‍ ನಿಲ್ಸಿ ಅಂತ ಹೇಳ್ತಿಲ್ಲ ಮಿ.ಮರಿ. ನೀವು ನಮ್ಮಲ್ಲಿಗೆ ಬಂದ್ರೆ ತಿಂಗಳಿಗೆ ೧೦ ಸಾವಿರ ಸಂಬಳ ಕೊಡ್ತೀವಿ ಅಂತ ಓಪನ್ ಆಫರ್‍ ಕೊಡ್ತಿದೀವಿ” +“೧೦ ಸಾವಿರ ತಿಂಗಳಿಗೆ ಕೊಟ್ರೆ ಆ ಪೇಪರ್‍ ತಕರಾರು ಬೇಡವೇ ಬೇಡ ನಂಗೆ” +“ಹಾಗಾದರೆ ನೀವು ಒಪ್ಪಿದಿರಿ ಅಂತ ನಮ್ಮ ಬಾಸ್‌ಗೆ ಹೇಳಲಾ” +“ಖಂಡಿತಾ ಹೇಳಿ, ಇವತ್ತಿನ ಪ್ರೆಸ್ ಮೀಟೇ ನನ್ನ ಲಾಸ್ಟ್ ಪ್ರೆಸ್ ಮೀಟ್” +“ಹಾಗೆ ಯಾಕೆ ಅಂತೀರಿ. ಇನ್ನು ಮುಂದೆ ಪ್ರೆಸ್‌ಮೀಟ್ ೧೫ ದಿನಕ್ಕೊಂದು ಸಲ ಏರ್ಪಾಟು ಮಾಡ್ತಿರತೀವಿ. ಅಲ್ಲಿ ನೀವೇ ಆ ಪ್ರೆಸ್ ಮೀಟು ಕಂಡಕ್ಟ್ ಮಾಡಬೇಕು”. ಎಂದಾಗ ಮರಿ ಹಿರಿಹಿರಿ ಹಿಗ್ಗಿದ. ಅನಂತರ ‘ಮಹಾಮೋಸ’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ನನ್ನ ಪಕ್ಕವೇ ಕುಳಿತು +“ಮಿಸ್ಟರ್‍ ಮೂರ್ತಿ ಇದೇ ನನ್ನ ಕಡೇ ಪ್ರೆಸ್‌ಮೀಟ್” ಎಂದ. +“ಯಾಕೆ? ಸೂಸೈಡ್ ಮಾಡ್ಕೋಬೇಕು ಅಂತ ಯೋಚನೆ ಮಾಡಿದೀರಾ?” +“ಒಬ್ಬ ಇಂಡಿವಿಷುಯಲಿ ಒಂದು ಪತ್ರಿಕೆ ತರಬೇಕಾದರೆ ಎಷ್ಟು ಮೈ ಹಿಡಿಮಾಡ್ಕೊಂಡು ಬದುಕಬೇಕು ಅಂತ ನನಗೆ ಗೊತ್ತು. ಆ ಕಾರಣಕ್ಕೆ ಎಷ್ಟೋ ಬಾರಿ ‘ಸೂಸೈಡ್’ ಮಾಡ್ಕೋಬೇಕು ಅಂತ ಯೋಚ್ನೆ ಮಾಡ್ತಿದ್ದದ್ದು ನಿಜ. ಆದರೆ ಇವತ್ತು ಮೆಗಾಫೋನ್ ಕೈಗೆ ಸಿಕ್ಕಿದ್ದು ನನ್ನ ಅದೃಷ್ಟದ ಬಾಗಿಲು ತೆಗೆದ ಹಾಗಾಯಿತು” ಎಂದ. +“ನೀವು ಏನು ಹೇಳ್ತಿದೀರಿ ಅರ್ಥವಾಗಲಿಲ್ಲ” ಅಂದೆ. +“ನನ್ನ ರನ್ನಿಂಗ್ ಕಾಮೆಂಟ್ರಿ ಕೇಳಿ ಹೊಸಾ ಚಾನೆಲ್‌ನವರು ಸಖತ್ ಖುಷಿಯಾಗಿ ತಿಂಗಳಿಗೆ ಹತ್ತು ಸಾವಿರ ಸಂಬಳ ಕೊಡ್ತೀವಿ-ಬರಬೇಕು ಅಂದ್ರು. ಹಿಂದೂ-ಮುಂದೂ ನೋಡದೆ ‘ಎಸ್’ ಅಂದಬಿಟ್ಟೆ ಎಂದ ಖುಶಿಯಾಗಿ. +“ಚಿತ್ರ ಮಹಾಮೋಸವಾಗಬಹುದು. ಆದ್ರೆ ನಿಮಗೇನು ಮೋಸವಾಗಲಿಲ್ಲ ಬಿಡಿ” ಎಂದೆ. +“ಅಷ್ಟೆ ಮೂರ್ತಿ ಸರ್‍-ಯಾವಾಗ್ಲೂ ನಾವು ಅನ್ಕೋಳ್ಳದೇ ಒಂದು – ಆಗೋದೇ ಇನ್ನೊಂದು” ಎಂದ. +-ಇದಾದ ಒಂದು ತಿಂಗಳೂ ಇಲ್ಲ. ರಸ್ತೆಯಲ್ಲಿ ಬರುತ್ತಿದ್ದಾಗ ಕಾರೊಂದು ನಿಂತಿತು ನನ್ನ ಪಕ್ಕ. ಗ್ಲಾಮರಸ್ ಹೀರೋನೂ ಮೀರಿಸಿದಂತೆ ಫುಲ್ ಸೂಟಿನಲ್ಲಿದ್ದ ಮರಿ. +ಮಾತು-ನಡಿಗೆ-ವೇಷ-ಭೂಷಣ-ಸ್ಟೈಲ್ ಎಲ್ಲ ಬದಲಾಗಿತ್ತು. +‘ತಗೊಳ್ಳಿ ಮಿಸ್ಟರ್‍ ಮೂರ್ತಿ’ ಅಂತ ವಿಸಿಟಿಂಗ್ ಕಾರ್ಡ್ ಕೊಟ್ಟ, ಅದರಲ್ಲಿನ ‘ಎಂಬ್ಲಂ’ ಮೆಗಾಫೋನ್ ಆಗಿತ್ತು. ಇದೇಕೆ ಮೆಗಾಫೋನ್ ಎಂದೆ. ನನ್ನ ಬದುಕು ಬಂಗಾರವಾಗಿಸಿದ ‘ಮೆಗಾಫೋನ್’ ಎಲ್ಲಾದರೂ ಮರೆಯುವುದು ಸಾಧ್ಯವೆ? ಅಬ್ಬಯ್ಯನಾಯಿಡು ‘ಕರಣೆ’ ಹಿಡಿದು ಬಂದು ‘ಕರಣೆಯೇ’ ತಮ್ಮ ಲಾಂಛನ ಮಾಡಿಕೊಂಡರು. +ಹಾಗೆ ನನಗೆ ಈ ಮೆಗಾ ಫೋನ್ ಎಂದ. +“ಭೇಷ್! ಅಷ್ಟರ ಮಟ್ಟಿನ ಕೃತಜ್ಞತೆ ಇರುವವರೂ ಈ ಕಾಲದಲ್ಲಿದ್ದಾರಲ್ಲ ಎಂದು ಸಂತಸಪಟ್ಟೆ. +(೭-೭-೨೦೦೦) +ಕೀಲಿಕರಣ: ಕಿಶೋರ್‍ ಚಂದ್ರ +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […] +ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್‍ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_110.txt b/Kannada Sahitya/article_110.txt new file mode 100644 index 0000000000000000000000000000000000000000..aa1232efe3a1a421e0d949f3fc80e5ab7dcf7250 --- /dev/null +++ b/Kannada Sahitya/article_110.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಮೋಹನ +ತಾಳ — ಅಟ್ಟ +ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ | +ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| +ವಿತ್ತವುಳ್ಲವನ ಕುಲ ಎಣಿಸುವುದುಂಟೆ | +ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| +ಅತ್ತೆಮನೆ ಸೇರುವಗೆ ಅಭಿಮಾನವುಂಟೆ | +ಬತ್ತಲೆ ತಿರುಗುವಗೆ ಭಯವು ಇನ್ನುಂಟೆ? ||೨|| +ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆ | +ಮರ್ತ್ಯದೊಳನ್ಯ ದೇವರು ಸರಿಯುಂಟೆ? ||೩|| +ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […] +ಶಂಕರಾಭರಣ ಚಾಪು ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯ್ತಾನಂತನ ಪ ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಅ ನಾಗಲ್ಕದ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣಿ ಪಿಡಿದುಕೊಂಡು ಬೇಗನೆ […] +ಶಂಕರಾಭರಣ ಆದಿ ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ಪ ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು ೧ ವೇಣುವಿನೊದನ ಪ್ರಾಣ ಪ್ರಿಯನ ಜಾಣೆಯರರಸನ ಕರೆಯ ಬಂದವರು ೨ ಕರಿರಾಜವರದನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_111.txt b/Kannada Sahitya/article_111.txt new file mode 100644 index 0000000000000000000000000000000000000000..be2275b7ba8857a3143a97e1b82a631e9d9ef887 --- /dev/null +++ b/Kannada Sahitya/article_111.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […] +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು […] +ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_112.txt b/Kannada Sahitya/article_112.txt new file mode 100644 index 0000000000000000000000000000000000000000..ac3d8355f275e6e0051de5d4b7898267284c02f2 --- /dev/null +++ b/Kannada Sahitya/article_112.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಇದೋ ಕಡಲು ! +ಅದೋ ಮುಗಿಲು ! +ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! +ಎನಿತೆನಿತೋ ಹಗಲು ಇರುಳು +ತೆರೆಗಳ ಹೆಗಲೇರಿ ಬರಲು +ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! +ಋತು ಋತುಗಳು ಓತು ಬಂದು +ನದೀ ಮುಖದಿ ಕೂಗಿವೆ! +ಬೆಟ್ಟ ಬೆಟ್ಟ ಬೆಂಬಳಿಸಿವೆ- +ಗುಟ್ಟನರಿಯದಂತಿವೆ; +ಘಟ್ಟವೇರಿ ಘಟ್ಟವಿಳಿದು ಹಸಿರು ಪಟ್ಟವೇರಿದೆ ! +ಬಾನಿನೆದೆಯ ಭವ್ಯತೆಗಿದೋ +ಕಡಲು ಹಿಡಿದ ಕನ್ನಡಿ ! +ಬೇಡ ಬೇರೆ ಮುನ್ನುಡಿ. +೨ +ಅಗೋ ಅಲ್ಲಿ ! +ಉಸಿರ್ಕಟ್ಟಿ ದ್ವೀಪ ಮೇಲಕೆದ್ದಿವೆ +ನೀಲನಿದ್ದೆಗೈದಿವೆ. +ಹಾಯಿ ಬಿಚ್ಚಿ ಹಾಯಾಗಿವೆ ; +ದೋಣಿ ತೆರೆಯನೇರಿವೆ +ನೀರಿನಲ್ಲಿ ರಂಟೆ ಹೊಡೆದು ಹಡಗು ಕ್ಷಿತಿಜವನಡರಿದೆ ! +ಕೊರೆದ ಹರಿದ ನೀರಘಾಯ +ಮಟಮಾಯವಾಗಿದೆ. +ಈ ಪಡುವಣ ತೀರದಲ್ಲಿ +ತೀರದಂಥ ಮೊರೆತವೊ! +ಆಖಾತವೊ ಭೂಶಿರವೊ +ತೇಲುತಿರುವ ತೆಪ್ಪವೊ +ದೇಶಾಂತರದಾಸೆವೀಚಿ ಇದರುದರದಿ ಬೆರೆತವೊ ! +ತೆರ ತೆರೆಗಳು ಬಂದರದಲಿ ನೊರೆಯ ತೂರಿ ತೂರಿ +ಬರೆಯುತ್ತಿವೆ ದಿನಚರಿ! +೩ +ಅಲೆ ಅಲೆ ಅಲೆ ತೇಲಿಬರುವದಲ್ಲ ದೋಣಿ ಬಿನದ! +ಅಂಬಿಗರುಲಿ ನಿನದ; +ತುಣುಕು ಮೀನು +ಮಿಣುಕು ಮೀನು +ಅಣಕಿಸಿ ಪಾರಾದವೇನು? +ಬಿದ್ದವದೋ ಬುಟ್ಟಿಗೆ +ರಾಶಿ ರಾಶಿ ಒಟ್ಟಿಗೆ ! +ಮೀಂಬುಲಿಗನ ಹಕ್ಕಿ ಕೊಕ್ಕಿನಲ್ಲಿ ಕಚ್ಚಿ ಹಾರಿತು +ಬಲೆಗೆ ಬಿದ್ದ ಮೀನು ಮಾತ್ರ ವಿಲಿವಿಲಿ ಒದ್ದಾಡಿತು ! +ಬೊಕ್ಕುದಲೆಯ ಬರಿಮೈಯ +ಮಕ್ಕಳು ಮುಗಿಬಿದ್ದಿವೆ. +ಅವರ ಪಾಲಿಗಷ್ಟು ಇಷ್ಟು ಕಡಲು ಕೊಟ್ಟ ಕಾಣಿಕೆ +ಮತ್ಸ್ಯಗಂಧಿ ಯೋಜನಸುಗಂಧಿಯಾದಳೆಂಬ ವಾಡಿಕೆ ! +೪ +ಮೊನ್ನೆ ಮೊನ್ನೆ ಯುದ್ಧವಾಯ್ತು ಮನುಕುಲದುದ್ದಾರಕೆ! +ಕಳೆಯಲೆಂದೆ ಬಂದಿತೆನ್ನಿ +ದೇಶ ದಿಗ್ದೇಶಗಳ +ಶಾಂತಿಯ ಬಾಯಾರಿಕೆ ; +ನೆಲ ಬಾನ್ಗಳು ಸಾಲಲಿಲ್ಲ +ಕಡಲಿಗು ಕಿಡಿ ಸಿಡಿಯಿತು +‘ಉದ್ಧರೇದಾತ್ಮನಾತ್ಮಾನಂ’ +ಜಲಸುರಂಗ ಹಬ್ಬಿತು! +ಹಡಗು ಹಡಗು ಬುಡಮೇಲು +ಸುತ್ತು ತೋಪುಗಾವಲು; +ನಾಗರಿಕತೆ ಮುಗಿಲಿಗೇರಿ +ಬಾಂಬಿನ ಮಳೆಗರೆಯಿತು +ಆಗಸವೇ ಅದುರಿತು! +ಕಡಲು ದಂಡೆಗಪ್ಪಳಿಸಿತು +ಚಪ್ಪರಿಸಿತು ನಾಲಗೆ +ಈ ಯುದ್ದದ ಮದ್ದು ಗುಂಡು +ಸಾಲಬೇಕು ಅದರ ಯಾವ ಮೂಲೆಗೆ ? +೫ +ಇದೋ ಕಡಲು +ಅದೋ ಮುಗಿಲು +ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು +ಉರುಳುತ್ತಿಹ ಭೂಗೋಲದ ಆಯುಷ್ಯವು ತೀರಲು +ಅದೂ ಬೊಕ್ಕು ಬೋರಲು ! +***** +ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ ಚಿಮ್ಮಿ […] +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_113.txt b/Kannada Sahitya/article_113.txt new file mode 100644 index 0000000000000000000000000000000000000000..8d41ebcaff2080974d00979ce33bca6d78c37eee --- /dev/null +++ b/Kannada Sahitya/article_113.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; +“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. +ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ +ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ +ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ ಚಾಮುಂಡೀ. +ತಾಂಡವಕ್ಕೆ ಹಾಸ್ಯ ಲಾಸ್ಯ ಬೆರೆಸುವ ರಣಚಂಡೀ. +“ದಿಕ್ಕು ದಿಕ್ಕು ಕತ್ತಲಿಸಿತು ಪ್ರಳಯವೇ ಇದು ಬಂತೆ +ಮುಳುಗಿಸುವುದೋ ತೇಲಿಸುವುದೊ ಕಾಲವೆ ಎಂಬಂತೆ.” +” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ +ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ +ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ +ಋತುರಾಜನ ಋತುಜಾತದ ಜೀವನದಲಿ ಋಣವಿದೋ +ಓ ಕುಮಾರ, ಬೇಗ ಬಾರ, ತುಂಬಿ ತಾರ, ಬೆಳೆಯನು. +ಕಾರ್ತಿಕದಲಿ ಭೂಮಿ ಕಾಂಬ ಶಾರದೀಯ ತಳೆಯನು +ಆಹಾ ಸಖಿ, ಆಹಾ ಸುಖಿ, ಸಾವಿರ ಶಿಖಿ ಹೊತ್ತಿವೆ.” +“ಕುಣಿಯೊ ಕುಣಿ ಸಹಸ್ರ ಮುಖಿ ಆಸೆ ತಲೆಯನೆತ್ತಿದೆ +ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು +ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು +ತಾರಕ ಸಂಹಾರಕನಾಗುತ ಅಗೊ ಕಂದರ್ಪ +ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ.” +“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ +ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ. +ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ +ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ. +ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ +ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.” +“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ +ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”. +ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು +ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು +ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ +ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ. +ಅಕ್ಷರದೀ ಬ್ರಹ್ಮಕೃತ್ಯ ನಿತ್ಯದ ಈ ನೃತ್ಯ +ಚಿತ್ರದಲಿ ಚಿತ್ರಿಸುತಿರೆ ಮರ್ತ್ಯವಹುದಮರ್ತ್ಯ. +ಪುರಷನಿದಿರು ಪ್ರಕೃತಿ ಕುಣಿವುದೆಂದು ಸಾಂಖ್ಯಸೂತ್ರ +ಪ್ರಕೃತಿ ಸಾಕ್ಷಿ ಪುರುಷ ನಾಟ್ಯ ನವೋನವ ವಿಚಿತ್ರ. +ಇದೆ ಪೌರುಷ, ಇದೇ ಸೌರಸ, ಇದೇ ಚೌರಸವೆಂದು +ನೆತ್ತಿ ಹೊತ್ತ ಆತ್ಮಶಿಖಿಯ ಪ್ರಣಾಮವ ಕಂಡು +ಬೇಸಗೆ ಸೆಖೆ ಶಿಖೆಗಂಡಿತು ಶತದಳ ಮುಖ ಉರಿಯೇ +ಹುಬ್ಬಿನ ಮಬ್ಬಿನ ಬಸಿರ್ ಬಂಗಾರದ ಬಾಯ್ದೆರೆಯೇ +ಗೌರೀಶಂಕರ ತಲೆಯೆತ್ತಿದೆ ಸೇತುವೆ ಎಂದೋ +ಧಿಮಕಿಡುತಿದೆ ಆ ಕುಮಾರಿ ಆ ಸೇತುವೆಯಿಂದೋ? +ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ +ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ. +(`ಅರಳು ಮರಳು’ ಸಂಕಲನದಿಂದ) +ನೃತ್ಯ ಯಜ್ಞ: ಕಾವ್ಯ ಬರಿ ವಿಲಾಸವಲ್ಲ. +ಕೆಲವು ಕವನಗಳು ಸಹೃದಯನಿಗೆ ಬೇಗ ಒಲಿಯುತ್ತವೆ. ತಮ್ಮೆಲ್ಲ ಅರ್ಥವನ್ನು ಬೇಗ ಬಿಚ್ಚಿಕೊಡುತ್ತವೆ. ಆದರೆ ಈ ರೀತಿಯ ಕವನ ಬೇರೆ ರೀತಿಯದು. ಎಷ್ಟೇ ಏಕಾಗ್ರತೆಯಿಂದ ಪ್ರಯತ್ನಿಸಿದರೂ ಪೂರ್ಣ ಕೈಗೆ ಸಿಗದಂಥದು. ಮೈಯೊಳಗೆ ಮಿಂಚು ಇಳಿದರೂ ಶರೀರ ಸಿಗದೆ ಮಾಯವಾಗಿ ಹೋಗುತ್ತದೆ. ಮಣಿಮಿಂಚಿನ ಬಿತ್ತನೆ ಇದು. ಇಂಥ ಕವನಗಳನ್ನು ಬೆನ್ನಟ್ಟಿ ಹೋಗುವ ವಿಮರ್ಶಕ ಆ ಪ್ರಯಾಣದಲ್ಲೆ ತಾನೂ ಬೆಳೆಯುತ್ತಾ ಹೋಗುತ್ತಾನೆ. +ಕುರ್ತಕೋಟಿಯವರ ಎರಡು ಪುಟದ ಬರವಣಿಗೆ, ಮೊಕಾಶಿಯವರಲ್ಲಿ ಸಣ್ಣ ಉಲ್ಲೇಖ ಬಿಟ್ಟರೆ ಕನ್ನಡ ವಿಮರ್ಶೆ ಅಷ್ಟಾಗಿ ಪ್ರಾಧಾನ್ಯ ನೀಡಿಲ್ಲದ ಈ ಕವನ ಬೇಂದ್ರೆಯವರ ಅತ್ಯುತ್ತಮ ಕವನಗಳಲ್ಲೊಂದು. ಎಪ್ಪತ್ತೇಳರ ರಾತ್ರಿಯಲ್ಲೊಂದರಲ್ಲಿ ಕಂಡ ಈ ನವಿಲನ್ನು ಅನೇಕ ಬಾರಿ ಬೆನ್ನಟ್ಟಿ ಹೋಗಿದ್ದರೂ, ಅದರ ಪೂರ್ಣ ಅನುಭವ ಸಿಕ್ಕಿಲ್ಲ. ಆದರೂ ರಿಲೇಕೋಲನ್ನು ಮುಂದೆ ಒಯ್ದಿದ್ದೇನೆ. +ಶ್ರದ್ದಾಂಜಲಿಯ ಪ್ರಯತ್ನ ಈ ನವಿಲಿನ ಕಡೆಗೆ ಮತ್ತೆ ಹೀಗುವಂತೆ ಮಾಡಿದೆ. +– ೨ – +ಬೇಂದ್ರೆಯವರ ಕಾವ್ಯದಲ್ಲಿ ನವಿಲು ಬಹುಮುಖೀ ಪ್ರತಿಮೆ. ಮುಖ್ಯವಾಗಿ ಅದು ಜೀವಚೈತನ್ಯವನ್ನು, ಕಲೆಯನ್ನು, ಪ್ರೇಮವನ್ನು ಸೂಚಿಸುತ್ತದೆ. ಹಾಗೆ ನೋಡಿದರೆ, ಪ್ರೇಮ ಬೇಂದ್ರೆ ಕಾವ್ಯದ ಪ್ರಮುಖ ವಸ್ತು; ಇದು ಉನ್ನತ ಸ್ಥಿತಿಯಲ್ಲಿ ಅವರ ಮಹತ್ವದ ಜೀವನ ದರ್ಶನವೂ ಹೌದು. ಈ ಕವನದ ಪ್ರಾರಂಭವೇ ನವಿಲಿನ ಕುಣಿತದಿಂದ. ಅದೂ ಪ್ರಣಯಾವೇಶದ ಕುಣಿತದಿಂದ. ಹೆಣ್ಣು ನವಿಲಿನ ಒಲವಿನ ಆಹ್ವಾನದಿಂದ ರೋಮಾಂಚನಗೊಂಡು ಗಂಡು ನವಿಲಿನ ಕುಣಿತ ಅದು. +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; +“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. +ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ +ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ +ಈ ಹಂತದಲ್ಲೇ ಕವನದುದ್ದಕ್ಕೂ ಹರಿದು ಬರುವ ಒಂದು ಮುಖ್ಯ ಸಂಗತಿಯನ್ನು ಗಮನಿಸಬೇಕಾದ ಅಗತ್ಯವಿದೆ. ಈ ಕವನ ಶಿಲ್ಪ ಡೈಲೆಕ್ಟಿಕಲ್ ಎಂದು ಕರೆಯಬಹುದಾದ ಸಂಯೋಜನೆಯೊಂದ ನಿರ್ಮಾಣಗೊಂಡಿರುವಂಥದು. ಇಡೀ ಕವನ ದ್ವಂದ್ವಮಾನ ಶಕ್ತಿಗಳ ಅಂತರ-ಪ್ರಕ್ರಿಯೆಯಾಗಿಯೇ ಬೆಳೆಯುತ್ತಾ ಹೋಗುತ್ತದೆ. ಗಂಡು – ಹೆಣ್ಣು, ಸಮಷ್ಟಿ-ವ್ಯಷ್ಟಿ, ಮಳೆ- ಉರಿ, ನವಿಲು-ಸರ್ಪ, ಮರ್ತ್ಯ-ಅಮರ್ತ್ಯ ಹೀಗೆ, ಈ ದ್ವಂದ್ಯಗಳು ಉದ್ದಕ್ಕೂ ಕವನದ ಪ್ರತಿಮಾಶರೀರವನ್ನು ನಿರ್ಮಿಸಿವೆ. ಅತ್ಯಂತ ಆಳದಲ್ಲಿಇದು ಕವಿಯ ತಾತ್ವಿಕತೆಯೂ ಹೌದು. ಈ ದ್ವಂದ್ವ ಪ್ರತಿಮಾನಿರ್ಮಾಣಗಳೇ ಈ ಕವನಕ್ಕೆ ಅದ್ಭುತವಾದ ಸಕ್ತಿಯನ್ನು ನೀಡಿರುವುದು. +ಕವನದ ಉದೃತ ಭಾಗ ಮತ್ತು ಅದರ ಮುಂದಿನ ಬೆಳವಣಿಗೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಬೇಂದ್ರೆಯವರ ಜೀವನ ಮೀಮಾಂಸೆಯ ಕೆಲವು ಮುಖ್ಯ ನೆಲೆಗಳನೆರವನ್ನೂ ಪಡೆಯಬೇಕಾಗುತ್ತದೆ. ಈ ಕವಿಯ ಪ್ರಕಾರ ಪ್ರೇಮ ಯಾವಾಗಲೂ ಸೃಜನಶೀಲತೆಯ ಮೂಲಭೂತ ಅಗತ್ಯತೆ. ಜೀವನದ ಇತ್ಯಾತ್ಮಕ ಶಕ್ತಿಗಳನ್ನು ಕ್ರಿಯಾಶೀಲವನ್ನಾಗಿ ಮಾಡಬಲ್ಲ ಶಕ್ತಿ ಇರುವುದು ಅದೊಂದಕ್ಕೆ ಮಾತ್ರ. `ಸಖೀಗೀತ’ದ ಆಶಯ ಇದೇ. +ಈ ಸಾಲುಗಳಲ್ಲಿ ಅದನ್ನು ನೋಡಬಹುದು. +ಅದು ಇದೆ ಎದೆಯಲ್ಲಿ ಬೆಳಕಿನ ಬದಿಯಲ್ಲಿ +ರಸಗಂಗಾ ನದಿಯಲ್ಲಿ ಅದರುಗಮ +ಹೆಸರದಕೆ ಪ್ರೀತಿಯ ಹಿಗ್ಗಿನ ರೀತಿಯ ಆತ್ಮದ ನೀತಿಯ ಮ್ಧುಸಂಗಮ +(ಸಖೀಗೀತ) +ಇದು ಮುಗ್ಧ ಅಥವಾ ಲೋಲುಪ ಪ್ರೇಮದ ಆರಾಧನೆಯಲ್ಲ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. `ನೃತ್ಯಯಜ್ಞ’ ಕವನದ ನವಿಲಿನ ಪ್ರಣಯ ನೃತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯಲ್ಲಿಯೇ. ಈ ಮೊರೆವ ಕತ್ತಲು, ಮಳೆ, ಪ್ರಳಯವನ್ನು ನೆನಪಿಸುವ ಈ ವಾಸ್ತವದಿಂದ ಪ್ರಣಯ ಮಾತ್ರ ಅವರಿಬ್ಬರನ್ನು ಕಾಡಿದೆ. ಸೃಜನಶೀಲತೆಯತ್ತ ಒಯ್ದಿದೆ. ಕವನದ ಅನೇಕ ದ್ವಂದ್ವಮಾನ ಪ್ರತಿಮೆಗಳಲ್ಲಿ ಒಂದರ ಹಿಂದೆ ಸುಂದರ ಲಾಸ್ಯವನ್ನು ಇಲ್ಲಿ ಕಾಣಬುದುದು. ಪ್ರಳದಂತಿದ್ದ ಸ್ಥಿತಿ ಮುಂದಿನ ಸಾಲುಗಳಲ್ಲಿ ಶುಷ್ಟಿಗೆ ತಿರುಗುತ್ತದೆ. ( ೧೯೩೮ ರ `ಉಯ್ಯಾಲೆ’ ಸಂಕಲನದ `ಪ್ರಳಯ-ಸೃಷ್ಟಿ’ ಸಾನೆಟ್ಟಿನಲ್ಲಿ ಈ ಡಲೆಕ್ಟಿಕಲ್ ಪ್ರತಿಮೆ ಬೇರಿದೆ. ಅಲ್ಲಿ ಕೂಡ ನವಿಲಿನದೇ ಚಿತ್ರ). ಈ ಸ್ಥಿತಿ ಹಸಿರನ್ನು, ಸ್ಮೃದ್ಧತೆಯನ್ನು ತರುತ್ತದೆ. ಆದ್ದರಿಂದಲೇ, ಮಳೆಯ ಕುಣಿತ ಎರ್ರಾಬಿರ್ರಿಯಾಗದೆ ನೃತ್ಯದ ಲಯಕ್ಕೆ ತಿರುಗುತ್ತದೆ. ರೋಮಾಚಕಾರಿ ಚಿತ್ರಣ ಈ ಸಾಲುಗಳಲ್ಲಿದೆ. +” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ +ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ +ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ +ಋತುರಾಜನ ಋತುಜಾತದ ಜೀವನದಲಿ ಋಣವಿದೋ +ಹಾಗಾದರೆ ಮೊದಲ ಸಾಲುಗಳಲ್ಲಿ ಕಂಡ ವಿರೋಧದ ಸ್ತಿತಿ ಮಾಯವಾಗಿ ಪೂರ್ಣ ಸಾಮರಸ್ಯ ಮೂಡುವುದೇ? ಮೇಲೆ ಉದ್ಧರಿಸಿದ ಸಾಲುಗಳಲ್ಲಿ ಈ ಸೂಚನೆಯೇನೊ ಸಿಗುತ್ತದೆ. ಪ್ರಳಯ-ಸೃಷ್ಟಿಗಳ ಮುಖಾಮುಖಿಯೇನೊ ಆಯಿತು. ಆದರೆ ಕವನದ ಮೊದಲಲ್ಲೇ ಕಂಡ ನವಿಲಿನ ಪ್ರತಿ-ಪ್ರಹಿಮೆ ಎಲ್ಲಿ? ಈ ಸಾಲುಗಲ್ಲಿ ಮೂಡುವ ಪ್ರತಿಮೆ ಸರ್ಪದ್ದೇ. +ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು +ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು +ತಾರಕ ಸಂಹಾರಕನಾಗುತ ಅಗೊ ಕಂದರ್ಪ +ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ +– ಈ ವಿರೊಧದ ನಾಟ್ಯ ಕೂಡಾ ಬೇಂದ್ರೆ ತಾತ್ವಿಕತೆಗೆ ಸಹಜವಾದದ್ದು. ಜೀವನ ಬರೀ ನವಿಲಿನ, ನಲಿವಿನ ಕುಣಿತ ಎಂದು ನಂಬುವಷ್ಟು ಅಶಿಕ್ಷಿತ ಮುಗ್ದತೆ ಬೇಂದ್ರೆಯವರಿಗಿಲ್ಲ. `ಕೋಲುಸಖಿ ಚಂದ್ರಮುಖಿ, ಕೋಲೆ ನಾದ ಲೀಲೆ” ಎಂದು ಕುಣಿವಾಗಲೇ “ ಅತ್ತಣಿಂದ ಬೇಟೆಗಾರ ಬರುವ” ಸಂಜ್ಞೆಯೂ ಕೆಲಸ ಮಾಡುತ್ತಿರುತ್ತದೆ. ಇಲ್ಲಿಯೂ ಅಷ್ಟೆ, ನವಿಲಿನ ಜೊತೆಗೆಯೇ ಸರ್ಪ. ಇವಿಲ್‌ನ ಅನಿವಾರ್ಯ ಅಸ್ತಿತ್ವವನ್ನು ಈ ಭಾಗ ಅತ್ಯಂತ ನಾಟಕೀಯವಾಗಿ ಪ್ರತಿನಿಧಿಸುತ್ತದೆ. ಅದಕ್ಕೆ ಮುಖಾಮುಖಿಯಾಗಲೇಬೇಕು. ಹೋರಾಡಲೇ ಬೇಕು. “ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು” ಎಂಬ ಸಾಲು ಸ್ವಾರಸ್ಯಕರವಾದದ್ದು. ಜೀವನದಲ್ಲಿ ಸೃಷ್ಟಿಶೀಲತೆಗೆ ಯಾವಾಗಲೂ ಪರಮವಿರೋಧಿಯಾದವುಗಳೆಂದರೆ ಬಡತನ, ಹಸಿವು. ಈ ಸಾಲಿನಲ್ಲಿ ಸಣ್ಣಗೆ ಮಿಂಚಿ ಹೋದ ಸಾಮಾಜಿಕ ನಿಲುವು ಮತ್ತೆ ಕೊನೆ ಸಾಲಿನಲ್ಲಿ ವಾಪಸಾಗುತ್ತದೆ. +ಆದರೆ ನವಿಲು ತಾನೇ ಸರ್ಪವನ್ನು ಕೊಲ್ಲಲಾರದಲ್ಲ. ಪ್ರೇಮ ಉನ್ನತ ಶಕ್ತಿಯಾಗಿ ಪರಿವರ್ತನೆಯಾದಾಗ ಮಾತ್ರ ಅದಕ್ಕೆ ಆ ಶಕ್ತಿ ಬರುತ್ತದೆ. ಇದಾಕಾಗಿಯೇ ಬೇಂದ್ರೆವರಲ್ಲಿ ಪ್ರೇಮಿ-ಕವಿ-ಭಕ್ತ ಈ ಮೂವರನ್ನೂ ರೂಪಿಸುವುದು ಒಂದೇ ದ್ರವ್ಯ. ಈ ಕಾಮ “ಮನದಾಚೆಗೇನೊ ಅರಿತು” ಚಿರಭಕ್ತಿಯಾಗಿ ಪರಿವರ್ತಿತವಾಗುತ್ತದೆ. ಈ ತಾತ್ವಿಕತೆಯನ್ನು ಬೇಂದ್ರೆ “ಕನ್ನಡ ಮೇಘದೂತ”ದ ಪೀಠಿಕೆಯಲ್ಲಿ ಹೇಳುತ್ತಾರೆ. ದಿವ್ಯಶಕ್ತಿಯ ಗಳಿಕೆ ಆ ಪ್ರಕ್ರಿಯೆ. +ನವಿಲು ಸಹಜವಾಗಿ ಆ ಸರ್ಪವನ್ನು ಕೊಲ್ಲಲು ತನಗಿಂತ ದೊಡ್ಡದಾದ ಇನ್ನೊಂದು ಶಕ್ತಿಯೊಂದಕ್ಕೆ ಪ್ರಾರ್ಥಿಸುತ್ತದೆ. ಪ್ರೀತಿಯ, ಆರ್ತತೆಯ, ಗಾಢಶ್ರದ್ಧೆಯ ಪ್ರಾರ್ಥನೆ ಅದು.ನವಿಲಿನ ಒಡೆಯನಾದ ಕುಮಾರಸ್ವಾಮಿಗೆ ಆಹ್ವಾನ. ನವಿಲು ಕುಣಿಯುತ್ತದೆ. ಒಲಸ್ವು ಉನ್ನತ ಸ್ಥಿತಿಗೇರುವ ಸೂಚನೆ. +“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ +ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ. +ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ +ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ. +ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ +ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.” +– ೩ – +ಕವನ ಮೈಝುಮ್ಮೆನ್ನುವಂಥ ನೆಲೆಗೆ ಹಾರುವುದು ಮುಂದಿನ ಸಾಲಿನಿಂದ. ಅಥವಾ ಇಲ್ಲಿಯತನಕ ಬೇರೆ ಬೇರೆ ರೂಪಗಳಲ್ಲಿ ಹರಿದು ಬರುತ್ತಿದ್ದ ಆಶಯವೊಂದು ಥಟ್ಟನೆ ನಿರ್ದಿಷ್ಟ ರೂಪವನ್ನು ತಳೆಯುತ್ತದೆ. ಇಲ್ಲಿಯತನಕ, ಜೀವನದ ಒಟ್ಟಾರೆ ಪ್ರತಿಮೆಯನ್ನು ಅನುಭವಿಸುತ್ತ ಬಂದ ನಾವು ಮುಂದಿನ ಸಾಲುಗಳಲ್ಲಿ ಥಟ್ಟನೆ ಕಲಾಮಯೂರವನ್ನು ಕಾಣುತ್ತೇವೆ. ಅದು ಕಾಣಿಸುವ ಪರಿಯಂತೂ ಅನನ್ಯವಾದದ್ದು. +“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ +ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”. +ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು +ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು +ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ +ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ. +ಮಳೆಯೆಂಬ ವೀಣೆಯನ್ನು ಸಾವಿರ ಉಗುರುಗಳಲ್ಲಿ ಬಾರಿಸಲಾಗುತ್ತಿದೆಯಂತೆ. ಇಲ್ಲಿ ಬರುವ ವೀಣೆಯಿಂದಾಗಿ ಕವನ ನಿರ್ದಿಷ್ಟವಾಗಿ ಕಲೆಯ ಚಿಂತನೆಯ ಕಡೆಗೆ ತಿರುಗಿದೆಯೆಂದು ಹೇಳಬಹುದಾದರೂ, ಇದರ ಸೂಚನೆ ಹಿಂದಿನ ಸಾಲುಗಳಲ್ಲೇ ಇದೆ.ಅಥವಾ ಈ ಸಾಲುಗಳ ಬೆಳಕಿನಿಂದ ಹಿಂದಿನ ಸಾಲುಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು. ಕಲೆಯೆಂಬ, ಕಾವ್ಯವೆಂಬ ನವಿಲು ತನಗಿಂತ ಉನ್ನತ ಶಕ್ತಿಯೊಂದರ ವಾಹನವಾಗಬೇಕು. ಅದು ತಾನೇ ಸ್ವಯಂಪೂರ್ಣವಲ್ಲ. ಕಾವ್ಯ ಅಗ್ನಿದೇಹಿ, ಆತ್ಮಸ್ನೇಹಿ ಆಗುವುದು ಆಗಲೇ. ಅದು ಆಯುಧವೂ ಆಗುತ್ತದೆ. ಪ್ರಾಣಸ್ನೇಹಿತನೂ ಆಗುತ್ತದೆ. ಈ ಕವನದ ಬಗ್ಗೆ ಒಂದೇ ಸಾಲಿನ ವಿವರಣೆ ಕೊಟ್ಟಿರುವ ಕವಿ ಹೇಳುತ್ತಾರೆ “ ಸಾಹಿತ್ಯ-ಕಾವ್ಯ ಬರೀ ವಿಲಾಸವಲ್ಲ. ಅದು ಕಲ್ಯಾಣ ಕರೆಯುವ ಮಯೂರ ನೃತ್ಯ ಯಜ್ಞರೂಪ.” +ಮೇಲೆ ಉದ್ಧರಿಸಿರುವ ಪದ್ಯಭಾಗದಲ್ಲಿ ಬೇಂದ್ರೆಯವರ ಕಾವ್ಯದರ್ಶನದ ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಕಾಣಬಹುದು. ಕಾವ್ಯದ ಬೇರು ಇರುವುದೇ ಸಮಷ್ಟಿ-ವ್ಯಷ್ಟಿಗಳು ಬೆರೆವ ನೆಲೆಯಲ್ಲಿ; ಕಾವ್ಯ ಅತ್ಯಂತ ಎತ್ತರದ ಅನುಭವ ಲೋಕಗಳನ್ನು ಒಳಗೊಳ್ಳುವುದು ಸುಪ್ತಪ್ರಜ್ಞೆಯಲ್ಲಿ ಹುದುಗಿರುವ ಶಕ್ತಿಯನ್ನು ಕೂಡಿಕೊಂಡಾಗ. ಆ ಶಕ್ತಿಯ ತುರಾಯಿ ಕುಣಿದಾಗಲೇ ಕಾವ್ಯಕ್ಕೊಂದು ಹೊಸ ತೇಜಸ್ಸು. ಅಕ್ಷರದ ಈ ಬ್ರಹ್ಮಕೃತ್ಯದ ಈ ನಿತ್ಯನೃತ್ಯ ನಡೆದರೆ ಮರ್ತ್ಯವೇ ಅಮರ್ತ್ಯವಾಗುತ್ತದೆ. ಈ ಪುರುಷ ನಾಟ್ಯವನ್ನು ಪ್ರಕೃತಿ ಬೆರಗಿನಿಂದ ನೋಡುತ್ತದೆ. ಮತ್ತೆ ಅದೇ ಗಂಡು-ಹೆಣ್ಣಿನ ಪುನರಾವರ್ತನೆ. ಕಾವ್ಯಸೃಷ್ಟಿ ಮತ್ತು ಜೀವನಕ್ಕೆ ಸಂಬಂಧಿಸಿದ ಹಾಗೇ ಅತ್ಯಂತ ಸೂಕ್ಷ್ಮವಾದ, ಸಂಕೀರ್ಣವಾದ ಅನುಭವಗಳಿಗೆ ಇದು ಶರೀರ ನೀಡಿದೆ ಎಂಬುದು ಸ್ಪಷ್ಟ. +– ೪ – +ಇಷ್ಟಕ್ಕೆ ನಿಂತಿದ್ದರೆ ಅಥವಾ ಇದೇ ವಿನ್ಯಾಸದಲ್ಲಿ ಮುಂದುವರಿದಿದ್ದರೆ ಈ ಕವನ ಬಹುಶಃ ಇಷ್ಟೊಂದು ಮಹತ್ವದ ಸ್ಥಾನವನ್ನು ಪಡೆಯುತ್ತಿರಲಿಲ್ಲ. ಏಕೆಂದರೆ ಇಲ್ಲಿಯತನಕ ಕವನದ ವಿನ್ಯಾಸ ಕ್ರಮ ಬೇಂದ್ರೆಯವರ ಶ್ರೇಷ್ಠ ಪ್ರಾತಿನಿಧಿಕ ಕವನಗಳ ವಿನ್ಯಾಸವೇ ಆಗಿದೆ. ಅದರ ಲಕ್ಷಣ – ಜೀವನದಲ್ಲಿ ಪರಸ್ಪರ ವಿರುದ್ಧದ ಶಕ್ತಿಗಳನ್ನು, ದ್ವಂದ್ವಗಳನ್ನು ತೀವ್ರವಾಗಿ ಮುಖಾಮುಖಿಯಾಗಿಸುವುದು. ನಂತರ ಈ ಘರ್ಷಣೆ ಪರಿವರ್ತನೆಯಾಗುತ್ತದೆ. `ಬೇಟೆಯಲ್ಲ, ಬೇಟವೆಲ್ಲ, ಬೇಟದ ಬಗೆ’ ಎಂಬ ಅರಿವು ಮೂಡಿ ಅದು ಮೂಲ ಪ್ರೇಮದಲ್ಲಿ ಒಂದಾಗುತ್ತದೆ. ಚಕ್ರ ತಿರುಗಿ ಸಾಮರಸ್ಯಕ್ಕೆ ನಿಲ್ಲುತ್ತದೆ. ಕುತೂಹಲದ ಸಂಗತಿ ಎಂದರೆ, ಈ ವಿನ್ಯಾಸಕ್ಕೆ ವಿರುದ್ಧವಾದ ಕವನಗಳೂ ಬೇಂದ್ರೆಯವರಲ್ಲಿ ಸಾಕಷ್ಟಿವೆ. ಅಂಥ ಒಂದು ವಿಶಿಷ್ಟಕೃತಿ ಇದು. +ಮೇಲೆ ಉದಾಹರಿಸಿದ ಭಾಗದಿಂದಾಚೆಗೆ ಈ ಕವನ ನಿಗೂಢವಾಗಿ ಬೆಳೆಯತೊಡಗುತ್ತದೆ. ಕುಮಾರಸ್ವಾಮಿಯ ಅವತಾರದ ಮೇಲೆ ಮೂಡಿದ್ದ ಸಾಮರಸ್ಯ ಒಡೆದು ಹೋಗುತ್ತದೆ. ಇಲ್ಲಿ ಕೆಲವು ಸಾಲುಗಳ ನಿರ್ದಿಷ್ಟ ಅರ್ಥಪೂರ್ಣವಾಗಿ ಈ ಲೇಖಕನಿಗೆ ದೊರೆತಿಲ್ಲ. ಆದರೂ ಸಮರಸದ ಜೀವನ ಮಾಯವಾಗಿದೆ ಎಂಬುದಂತೂ ಸ್ಪಷ್ಟವಗಿ ಅನುಭವಕ್ಕೆ ಬರುತ್ತದೆ. ಮತ್ತೆ ಜೀವನದ ಮೂಲಸ್ವರೂಪದ ಕಡೆಗೆ ಕವನ ತೀವ್ರತೆಯತ್ತ ಧಾವಿಸುತ್ತದೆ. ಅಲ್ಲಿ ಕಂಡಿದ್ದೇನು? ಕೊನೆಯ ಈ ಎರಡು ಸಾಲುಗಳ ಶಬ್ಧವಂತೂ ರುದ್ರಸೌಂದರ್ಯದ ಶೃಂಗ. +ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ +ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ. +ಅಶಿಕ್ಷಿತ ಆಶಾವಾದತ್ತ ಜಾರಬಹುದಾಗಿದ್ದ ಸ್ಥಿತಿ ಈಗ ಇಲ್ಲವಾಗಿದೆ. ಭೀತಿ, ಆತಂಕ ಇಲ್ಲಿ ದೊರೆಯುತ್ತದೆ. ಆದರೆ ಹಾಗೆಂದು ನಿರಾಶಾವಾದವೂ ಇದಲ್ಲ. ನೀಷೆ ಹೇಳಿದ: ಸರಳ ಆಶಾವಾದ ಪೊಳ್ಳು ಮನಸ್ಸಿನದು. ನಿರಾಶಾವಾದ ಶಿಥಿಲ ಮನಸ್ಸಿನದು. ಅತ್ಯಂತ ಗಟ್ಟಿ ಮನಸ್ಸಿನ ಸ್ಥಿತಿ ಎಂದರೆ ರುದ್ರ ಆಶಾವಾದ. ಈ ರೀತಿಯ ಸ್ಥಿತಿಯನ್ನು ನಾವಿಲ್ಲಿ ಕಾಣುತ್ತೇವೆ. ಮನುಷ್ಯ ಜೀವನದ ಅದು ಮಿತಿಗಳೆಂದರೆ ಆಹಾರ, ಭಯ, ನಿದ್ರೆ,ಚಿಂತೆ, ಮೈಥುನ. ಇವುಗಳನ್ನು ಮೂಲರೂಪದಲ್ಲಿ ಎದುರಿಸಿದಾಗ ಮನುಷ್ಯ ಚೇತನ ತತ್ತರಿಸಿ ಹೋಗುತ್ತದೆ, ಮಂಕು ಹಿಡಿದು ಕೂರುತ್ತದೆ. ಇವುಗಳ ಜೊತೆಗೆ ರೌದ್ರ ಹಾಗು ಹೇಸಿಗೆಗೆಗಳ ಹೊಡೆತ ಬೇರೆ. ಇವುಗಳ ವಿರುದ್ಧ ಹೋರಾಡುವಾಗ ಜೀವನದಲ್ಲಿ ಸಾಮರಸ್ಯ ಎಲ್ಲಿರಲು ಸಾಧ್ಯ? ಈ ರೌದ್ರದ ಮೊರೆ ಹೇಸಿಗೆ ಹೊರೆಯ ಮುಂದೆ ಮಾನವ ಹೂವಿನ ಎಸಳಿದ್ದಹಾಗೆ. ಈ ಸುಕುಮಾರ ಹೂವೆತ್ತ ನಿಲ್ಲಬಲ್ಲದು! ಭೀತಿಯ ನೀರಿನಲ್ಲಿ ಪೂರಾ ಮುಳುಗಿದ ಹಾಗೆ, ಉಸಿರು ಕಟ್ಟುವ ಸ್ಥಿತಿ. ಅದರ `ಮಾನವದಳವೋ’ ಎಂಬ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಇವೆರಡರ ಮುಂದೆ ಮಾನವ ದಳ ಅಂದರೆ ಸೇನೆ ಸಜ್ಜಾಗಿ ನಿಂತಿದೆ. ಹೋರಾಟ ನಡೆಯುತ್ತಲೇ ಇರುತ್ತದೆ. +ಈ ಸೃಷ್ಟ್ಯಾತ್ಮಕ ಸಂಧಿಗ್ಧತೆ ಕೊನೆಯ ಸಾಲಿನಲ್ಲಿ ಮೂಡಿ ಬಂದು ಇಡೀ ಕವನದ ಬೆಳವಣಿಗೆಯನ್ನು ಇನ್ನೊಂದು ನಿಟ್ಟಿನಿಂದ ನೋಡಲು ಸಾಧ್ಯವಾಗುವಂತೆ ಮಾಡುತ್ತದೆ. +***** +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […] +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_114.txt b/Kannada Sahitya/article_114.txt new file mode 100644 index 0000000000000000000000000000000000000000..c0bde0467fb0f631e2b286862a3ab4afd9f88190 --- /dev/null +++ b/Kannada Sahitya/article_114.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. +ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. +“ಆದರೆ ನಟರನ್ನು ಸೂತ್ರದ ಬೊಂಬೆಗಳು ಎನ್ನುವುದು ಹೇಗೆ? ಅವರ ಕೈ ಕಾಲಿಗೆ ಯಾರೂ ದಾರ ಕಟ್ಟಿರುವುದಿಲ್ಲವಲ್ಲ” ಎಂಬ ಪ್ರಶ್ನೆಯೊಂದು ಛಂಗನೆ ಜಿಂಕೆಯಂತೆ ಎಗರಿತು. +“ಸಿನಿಮಾ ಆದಾಗ ನಿರ್ದೇಶಕ ಸೂತ್ರಧಾರನ ಸ್ಥಾನದಲ್ಲಿ ನಿಂತು ತನಗೆ ಬೇಕಾದಂತೆ ಕಲಾವಿದರನ್ನು ರೂಪಿಸುತ್ತಾನೆ. ಬೊಂಬೆ ಆಟದಲ್ಲಿ ಸೂತ್ರಗಳು ಕಾಣುತ್ತವೆ-ಆದರೆ ಕಾಣದ ಸೂತ್ರಗಳನ್ನು ಹಿಡಿದು ನಿರ್ದೇಶಕ ನಾನಾ ಸರ್ಕಸ್ ಮಾಡಿ ಭಾವ-ಭಂಗಿ, ಚಲನ-ವಲನ ಹೀಗೆ ಇರಬೇಕೆಂದು ನಿರ್ದೇಶಿಸುವ ಸಿನಿಮಾದಲ್ಲಿ” ವೆಂಕಣ್ಣನ ಮನಸಿನಂಗಳದಲ್ಲಿ ಹೀಗೆ ಪ್ರಶ್ನೋತ್ತರದ ಬಾಕ್ಸಿಂಗ್ ನಡೆಯುತ್ತಲೆ ಇತ್ತು. ಆಗ ನೇರವಾಗಿ ನಟರಿದ್ದಲ್ಲಿಗೇ ಹಾರಿ ಕಾಲ್ಪನಿಕ ಸಂದರ್ಶನ ಮಾಡುನ ಮನ ಮಾಡಿದ. ಯಾವುದೇ ಸಂಸ್ಥೆ ಆರಂಭಿಸಲಿ ಕಾರ್ಯಕ್ರಮವಾಗಲಿ ಮೊದಲು ಗಣೇಶನ ಪೂಜೆ ಮಾಡುವುದು ಸಂಪ್ರದಾಯ. ಹಾಗೆ ಹೊಸ ಪತ್ರಿಕೆಯಾಗಲಿ ಹೊಸ ಛಾನೆಲ್ ಆಗಲಿ ಮೊದಲು ಸಂದರ್ಶನಕ್ಕಾಗಿ ಮೊದಲಿಗೆ ಓಡುವುದು ಡಾ.ರಾಜ್‌ಕುಮಾರ್ ಬಳಿ. ಅದಕ್ಕೆ ವೆಂಕಣ್ಣನೂ ಹಾರಿದ ಅಲ್ಲಿಗೆ. +ಒಂದೂ ಕಪ್ಪು ಚುಕ್ಕಿ ಇಲ್ಲದ ಫ್ಯೂರ್ ವೈಟ್ ಡ್ರೆಸ್‌ನಲ್ಲಿದ್ದರು ಡಾ. ರಾಜ್. +ಡಾ. ರಾಜ್: “ಏನೇ ಮಾಡಿದ್ರೂ ಅದು ನಾವು ಮಾಡಿದ್ದು ಅಂತ ಹೇಳೋ ಹಾಗಿಲ್ಲ. ಕಾಣದ ಕೈಯೊಂದು ನಮ್ಮನ್ನು ನಿಯಂತ್ರಿಸ್ತಿರತ್ತೆ. ಇಂತಿಂಥ ವೇಳೆ ಇಂತಿಂತಹದೇ ಆಗ್ಲೇಬೇಕೂಂತಿರುತ್ತೆ. ಹಾಗೆ ನಡಿಯೋದು ಎಲ್ಲ. ‘ಶಬ್ದವೇಧಿ’ ಆಯಿತು ಈಗ ಅಂಬರೀಶ ಮಾಡಕ್ಕೆ ಹೊರಟಿದೀವಿ. ಸೆಟ್‌ಮೇಲೆ ಹೋದಾಗ ಹೀಗೆ ಹೀಗೆ ಅಭಿನಯಿಸಿ ಅಂತ ನಮ್ಮನ್ನು ನಿಯಂತ್ರಿಸೋರು ನಿರ್ದೇಶಕರು. ಅದಕ್ಕೆ ‘ನಿನ್ನ ಕೈಲಾಡೋ ಬೊಂಬೆ ನಾನಯ್ಯ’ ಅಂದಿರೋದು ಅಲ್ಲವೆ? ಈ ಸಾರಿ ನಮ್ಮ ಹುಟ್ಟುಹಬ್ಬ ಅಭಿಮಾನಿಗಳು ಭರ್ಜರಿಯಾಗಿ ನಡೆಸಿಕೊಟ್ರು. ಪ್ರೀತಿಯ ಹೊಳೆಹರಿಸಿದರಲ್ಲ ನಮ್ಮ ಮೇಲೆ ಅದಕ್ಕೆ ಕಾರಣವೇನು? ಯಾರ ಕೃಪೆಯಿಂದ ಇವೆಲ್ಲ ಆಯಿತು. ಹಿಂದೆ ನಾವು ರಾಘವೇಂದ್ರಸ್ವಾಮಿ ಪಾತ್ರ ಚಿತ್ರದಲ್ಲಿ ಮಾಡೋ ಸುದ್ದಿ ಬಂದಾಗ ಆ ಪಾತ್ರವನ್ನು ಡಾ. ರಾಜ್ ಮಾಡೋಕೆ ಸಾಧ್ಯವೆ? ಅನ್ನೋ ಅಪಸ್ವರ ಬಂತು. ಅವಾಗ ನಾವು ಮಾಡಲ್ಲ ಅಂದೆವು. ಅದಕ್ಕೆ ಜಿ.ವಿ. ಅಯ್ಯರ್ ‘ನಾಲ್ಕೈದು ಜನರ ಕೈಲಿ ಚೀಟಿ ಎತ್ತಿಸಿದೆವು. ನಿಮ್ಮ ಹೆಸರೇ ಬಂತು’ ಅಂದ್ರು. ಹಾಗಾರೆ ಸರಿ ಅಂತ ಮಾಡೇಬಿಟ್ಟೆವು. ಆ ಚೀಟಿಲೀ ನನ್ನ ಹೆಸರು ಬರೋ ಹಾಗೆ ಮಾಡಿದೋರು ಯಾರು? ಅದೊಂದು ಕಾಣದ ಶಕ್ತಿ. ಆ ಸೂತ್ರಧಾರ ಕಾಣಲ್ಲ. ಆದರೆ ತನಗೆ ಬೇಕಾದ ಹಾಗೆ ನಮ್ಮನ್ನು ಬೊಂಬೆಯಂತೆ ಕುಣಿಸ್ತಾನೆ’ ಅಂದರು ಡಾ.ರಾಜ್. ನಂತರ ವೆಂಕಣ್ಣ ಹಾರಿದ್ದು ವಿಷ್ಣು ಬಳಿ. +ವಿಷ್ಣು: ವಿಷ್ಣು ವೀರಪ್ಪನಾಯಕನ ವೇಷಭೂಷಣದಲ್ಲಿ ಮಿಂಚುತ್ತಿದ್ದರು. ಅವರನ್ನು ಮಾತನಾಡಿಸುವ ಮುನ್ನವೇ ಹೇಳಿದರು. +“ನಟ ನಿರ್ದೇಶಕನ ಕೈಗೊಂಬೆ ಅಂತ ನಾನು ಬಹಿರಂಗವಾಗಿ ಹೇಳಿ ಆಗಿದೆ. ನಿರ್ದೇಶಕ ಕಣಗಾಲ್ ಪುಟ್ಟಣ್ಣ ಇಲ್ಲಾ ಅಂದ್ರೆ ನಾನೆಲ್ಲಿರ್‍ತಿದ್ದೆ. ಕುಮಾರನ್ನ ಒಬ್ಬರು ವಿಷ್ಣುವರ್ಧನ ಮಾಡಿದ್ರು. ಮತ್ತೊಬ್ಬರು ಸಾಹಸ ಸಿಂಹ ಮಾಡಿದರು. ಮಗದೊಬ್ಬರು ವೀರಪ್ಪನಾಯಕ ಮಾಡಿದರು. ಹೀಗಾಗಿಯೇ ಅಲ್ಲವೆ ನಾನು ಸುದ್ದಿ ‘ಸೂರಪ್ಪ’ನಾದ್ದು. ನಿರ್ದೇಶಕನೇ ಶಿಲ್ಪಿ. ನಾವು ಅವನಿಂದ ಕೆತ್ತಲ್ಪಡೋ ಸುಂದರ ಶಿಲ್ಪಗಳು.” +ನಂತರ ವೆಂಕಣ್ಣ ಹಾರಿದ್ದು ಅಂಬರೀಶ್ ಬಳಿ, ಅಂಬಿ ರಾಜಕಾರಣಿಗಳ ಸಭೆಯಲ್ಲಿದ್ದರು. +ಅಂಬರೀಶ್: “ನಿರ್ದೇಶಕ ನಿಜವಾದ ಪಪೆಟಿಯರ್, ಸಿನಿಮಾ ಮಾತ್ರ ಅಂತಲ್ಲ ಈಗ ನಾನು ರಾಜಕೀಯದಲ್ಲಿ ಇರುವುದರಿಂದ ಅದರ ಬಗ್ಗೆಯೂ ಹೇಳಬಲ್ಲೆ. ಡೆಲ್ಲೀಲಿ ಕೂತು ನಮ್ಮನ್ನು ಬೊಂಬೆಗಳಂತೆ ಕುಣಿಸೋದು ಹೈಕಮಾಂಡ್, ಸೂತ್ರ ಇಲ್ಲಿ-ಸೂತ್ರಧಾರ ಅಲ್ಲಿ. ಸೆಟ್‌ಮೇಲೆ ಬಂದಾಗ ನಿರ್ದೇಶಕ ತನಗೆ ಬೇಕಾದ ರೀತಿ ನಮ್ಮನ್ನು ಕುಣಿಸ್ತಾರೆ. ನಾವು ಅವನು ಹೇಳಿದ ಹಾಗೆ ಕುಣೀತೀವಿ. ಚುನಾವಣೇಲಿ ಫಲಿತಾಂಶ ಹೇಳೋರು ಮತದಾರರು. ಚಿತ್ರ ರಿಲೀಸ್ ಆದಾಗ ನಮ್ಮ ಹಣೆಬರಹ ಬರೆಯೋದು ಚಿತ್ರ ರಸಿಕರು” ಎಂದು “ಕುಡಿಯೋಕೆ ಏನಾರು ತನ್ನಿ ಎಂಕಣ್ಣನಿಗೆ” ಎಂದು ಆರ್ಡ್‌ರ್ ಮಾಡಿದರು. +ನಂತರದ ಸರದಿ ಉಪೇಂದ್ರ ಅವರದು. +ಉಪೇಂದ್ರ: “ಫುಲ್ ಕಂಟ್ರೋಲ್ ಇರೋದು ನಿರ್ದೇಶಕನಿಗೆ. ನಟ-ನಟಿಯರು ಬೊಂಬೆಗಳು ಇದ್ದ ಹಾಗೆ. ಸ್ಟಾಂಡ್ ಅಂದ್ರೆ ನಿಂತ್ಕೋಬೇಕು-ಸಿಟ್ ಅಂದ್ರೆ ಕೂರಬೇಕು. ಡ್ಯಾನ್ಸ್ ಅಂದಾಗ ಕುಣೀಬೇಕು. ನನ್ನ ಲೆಕ್ಕದಲ್ಲಿ ಪಪೆಟಿಯರ್‌ನೂ ಮೀರಿಸಿದ ಡೈರೆಕ್ಟರ್ ಒಂದು ರೀತಿ ಡಿಕ್ಟೇಟರೂ ಹೌದು. +ಚಿತ್ರ ಹಣ ಮಾಡೋದು ಮುಖ್ಯ ಮಿಕ್ಕಿದ್ದೆಲ್ಲ ‘ಓಳು ಬರಿ ಓಳು’ ಎಂದು ಡಾನ್ಸೇ ಮಾಡಿಬಿಟ್ಟರು ಉಪೇಂದ್ರ. +ದೀಪಾವಳಿಯಲ್ಲಿ ವಿಷ್ಣು ಜತೆ ಅಭಿನಯಿಸಿದ ಖುಶಿಯಲ್ಲಿದ್ದ ರಮೇಶ್ ಬಳಿಗೆ ಹಾರಿದ ವೆಂಕಣ್ಣ. ‘ಹೂಂ ಅಂತೀಯಾ ಉಹುಂ ಅಂತೀಯಾ?’ ಎಂದು ಮೂವರು ನಾಯಕಿಯರನ್ನು ಪ್ರಶ್ನಿಸುತ್ತಿದ್ದ ರಮೇಶ್ ಸಡನ್ ಆಗಿ ವೆಂಕಣ್ಣನತ್ತ ತಿರುಗಿ. +ರಮೇಶ್: “ಚಿತ್ರಕ್ಕೆ ಡೈರಕ್ಟ್ರೇ ಕ್ಯಾಪ್ಟನ್ ಆಫ್ ದಿ ಷಿಪ್. ಅವರನ್ನು ನಂಬಿ ಗುಡ್‌ಫೇತ್ ಮೇಲೆ ಪಾರ್ಟು ಮಾಡಿ ಕೆಲವು ಸಲ ಏಟು ತಿಂದಿದೀನಿ ಅಂತ ಈಗ ಅರ್ಥವಾಗ್ತಿದೆ. ಡೈರಕ್ಟರ್ ಮನಸ್ಸು ಮಾಡಿದರೆ ನಮ್ಮನ್ನು ಅದ್ಭುತವಾಗಿ ಚಿತ್ರಿಸಬಲ್ಲ-ಬೇಡಾಂದ್ರೆ ಇವತ್ತು ಬಂದ ಹೊಸಬರನ್ನು ಆಕಾಶಕ್ಕೆ ಎತ್ತಿಹಿಡಿಬಲ್ಲ. ಇನ್ನು ಮುಂದೆ ನಂಗೆ ಪಪೆಟ್ ಆಗಕ್ಕೆ ಇಷ್ಟವಿಲ್ಲ. ಸೂತ್ರಧಾರ ಯಾವಾಗ್ಯಾವಾಗ ಯಾವ್ಯಾವ ಸೂತ್ರ ಎಳೀತಾನೆ ಗಮನಿಸಲೇಬೇಕು ಅನ್ನಿಸಿದೆ. ಇಲ್ಲಾ ಅಂದ್ರೆ ನಾವು ಕಲಾವಿದರಾಗಲ್ಲ ಕಲಾವಿದರ ನೆರಳಾಗ್ತೀವಿ” +ಎಂದು ನೊಂದು ನುಡಿದ ನಂತರ ರವಿಚಂದ್ರನ್ ಡಿಟಿ‌ಎಸ್ ಸ್ಟುಡಿಯೋಗೆ ಹಾರಿದ ವೆಂಕಣ್ಣ. +ಸಾಂಗ್ ಕಂಪೋಸಿಂಗ್‌ನಲ್ಲಿದ್ದ ರವಿಚಂದ್ರನ್ ಅಲ್ಲಿಗೆ ಬ್ರೇಕ್ ಕೊಟ್ಟು ಮಾತಿಗೆ ನಿಂತರು. +ರವಿಚಂದ್ರನ್: “ನಟನಿಗಿಂತ ನಿರ್ದೇಶಕನೇ ಗ್ರೇಟ್ ಅನ್ನೋನು ನಾನು. ರೀಮೇಕಾದ್ರೇನು – ಸ್ವಮೇಕ್ ಆದ್ರೇನು ಚಿತ್ರ ಚೆನ್ನಾಗಿದ್ದರೆ ಜನ ಬಂದೇ ಬರ್‍ತಾರೆ. ಎಲ್ಲ ನಟರೂ ನಾನು ಹೇಳಿದ ಹಾಗೆ ಅಭಿನಯಿಸಬೇಕು ಅನ್ನೋನು ನಾನು. ಎಲ್ಲ ಪಾತ್ರಗಳ ಸೂತ್ರವೂ ನನ್ನ ಕೈಲಿರುತ್ತೆ. ಓ.ಕೆ. ಎಂದು ಸ್ಟೈಲಿಷ್ ಆಗಿ ಸ್ಟುಡಿಯೋಗೆ ನಡೆದರು. +ಆನಂತರ ಹಾರಿದ್ದು ಅನಂತ್‌ನಾಗ್ ಬಳಿ. ಸಂಕೇತ್ ಬಗೆಗಿನ ಚಿತ್ರ ವಿಚಿತ್ರ ಹೇಳಿಕೆಗಳಿಂದ ನೊಂದಿದ್ದ ಅವರು ಹೇಳಿದರು. +ಅನಂತ್‌ನಾಗ್: “ಅಲ್ಲಿ ಸಲ್ತೀನಿ ಅಂತ ರಾಜಕೀಯಕ್ಕೆ ಹೋದೆ. ಅಲ್ಲಿ ಅವರು ನಮ್ಮನ್ನು ತನಗೆ ಬೇಕಾದ ಹಾಗೆ ಕುಣಿಸ್ತಾನೆ ನಾಯಕ. ಜನರ ಕೈಲಿ ಒಂದು ಸೂತ್ರ ನಾಯಕನ ಕೈಲಿ ಒಂದು ಸೂತ್ರ. ಅಲ್ಲಿನ ಜಗ್ಗಾಟ ವಿಚಿತ್ರ. ಹಾಗೆ ನೋಡಿದರೆ ಸಿನಿಮಾನೇ ವಾಸಿ. ಇಲ್ಲಿ ಡೈರೆಕ್ಟರ್ ಒಬ್ಬನೇ ಸೂತ್ರಧಾರ. ಅವನು ಹೇಳಿದ ಹಾಗೆ ನಾವು ಬೊಂಬೆಗಳಂತೆ ಕುಣಿದರೆ ಆಯಿತು. ಮಿಕ್ಕ ಹಣೆಬರಹ ಅವರದು” ಎಂದು ನಕ್ಕರು. +ಶಿವರಾಜ್‌ಕುಮಾರ್: ಮಾರಿಷಸ್‌ನಿಂದ ಬಂದಿದ್ದಾರೆ ಅಂತ ತಿಳಿದಿದ್ರಿಂದ ವೆಂಕಣ್ಣ ಹಾರಿದ ಅಲ್ಲಿಗೆ. “ಅರೆರೆ? ನಾವು ಪ್ಲೇನಲ್ಲಿ ಹಾರಿ ಬಂದೆವು. ನೀವು ಹ್ಯಾಗೆ ಹಾರಿ ಬಂದಿದೀರಿ ವೆಂಕಣ್ಣ” ಎಂದು ನಗೆಮೊಗದಿಂದ ಸ್ವಾಗತಿಸಿದರು ಶಿವು. +“ನಾನಂತೂ ಒಂದೊಂದು ಚಿತ್ರದಲ್ಲಿ ಮಾಡೋವಾಗ್ಲೂ ನಿರ್ದೇಶಕ ಯಾವ ರೀತಿ ಹೇಳ್ತಾನೋ ಹಾಗೆ ಅಭಿನಯಿಸ್ತಾ ಬಂದಿದೀನಿ ಅದರಿಂದಾನೆ ವೆರೈಟಿ ಕೊಡೋದು ಸಾಧ್ಯವಾಗಿದೆ. ನಾವು ಏನೋ ಅನ್ಕೋತೀವಿ ಆದ್ರೆ ಅದೇನೋ ಆಗುತ್ತೆ. ಮ್ಯಾನ್ ಪ್ರೊಪೋಸಸ್ ಗಾಡ್ ಡಿಸ್‌ಪೋಸಸ್ ಅನ್ನೋ ಹಾಗೆ. ‘ಪ್ರೀತ್ಸೆ’ ಹಾಗೆ ‘ಇಂದ್ರ ಧನುಷ್’ ಹೋಗತ್ತೆ ಅಂದ್ಕೊಂಡೆ. ‘ಹಗಲು ವೇಷ’ ತುಂಬ ಡಿಫರೆಂಟ್ ಆಗಿ ಕ್ಲಿಕ್ ಆಗುತ್ತೆ ಅನ್ಕೊಂಡೆ. +‘ಕೃಷ್ಣಲೀಲೆ’ ಜನಕ್ಕೆ ಒಂದು ರೀತಿ ಮಜಾ ಕೊಟ್ಟು ಹಿಟ್ ಆಗಬಹುದು ಅಂತ ಭಾವಿಸಿದೆ. ಈಗ ದೇವರ ಮಗ, ಗಲಾಟೆ ಅಳಿಯಂದಿರು- +ರಾಮಾನಾಯಿಡು ಚಿತ್ರ ಕ್ಲಿಕ್ ಆಗ್ಲಿ ಅಂತ ಅಶಿಸಬೇಕಷ್ಟೆ. ಯಾರು ಏನೇ ಹೇಳಲಿ ಡೈರಕ್ಟರ್ ಸುಪ್ರೀಂ. ನಾವು ಆತನ ಮುಂದೆ ‘ಪಪೆಟ್ಸ್’ ಎಂಬುದರಲ್ಲಿ ಅನುಮಾನವಿಲ್ಲ. ಎಷ್ಟೇ ಫಸ್ಟ್‌ಕ್ಲಾಸ್ ಫಿಲಂ ಮಾಡಿದ್ರೂ ವಿಧಿ-ಅದೃಷ್ಟದ ಕೈವಾಡದ ಮೇಲೆ ಎಲ್ಲಾ ನಿಂತಿರೋದು” ಎಂದು ಫಿಲಾಸಫಿ ಮಾತನಾಡತೊಡಗಿದರು ಶಿವು. +-ಇದಿಷ್ಟನ್ನೂ ದಾಖಲಿಸಿಕೊಂಡ ವೆಂಕಣ್ಣ ಅದನ್ನೇ ಒಂದು ಲೇಖನ ಮಾಡಿ ಪೋಸ್ಟ್ ಮಾಡಿದ. +ಈ ಬಗ್ಗೆ ನೀವೇನಂತೀರಿ ಅಂತ ಈಗ ಕೇಳಬಹುದಲ್ಲ. +***** +೧೨-೫-೨೦೦೦ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_115.txt b/Kannada Sahitya/article_115.txt new file mode 100644 index 0000000000000000000000000000000000000000..75ba7675f02200e2a718691a118d77e687275dae --- /dev/null +++ b/Kannada Sahitya/article_115.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿದ್ದೆ ಮಡಿಲೊಳು ದಣಿದು ಮಲಗಿಹುದು +ಜಗದ ಬಾಳು ; +ಹಗಲಿನ ಅಪಸ್ವರಗಳೆಲ್ಲ ಮೌನದಲಿ +ಮರೆತಿಹವು ನೂರಾರು ಮೇಲುಕೀಳು ! +ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? +ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ ಬಿರುಸು ?! +ಕತ್ತಲೆಯ ಆಳದಲಿ +ಕೊರತೆಗಳನೆಲ್ಲವನು ಹೂಳು ಹೂಳು ! +* * * * +ಹರಿದು ತಿನ್ನುವ ಹದ್ದು +ತನ್ನ ಗೂಡೊಳು ಮಲಗಿ ನಿದ್ದೆಗೈದಿರುವ ಹೊತ್ತು +ಬಾನಿನೆದೆಯೊಳದಾವುದೋ ನೋವು ಮೆಲ್ಲನೆ ಹರಿದು +ಸುರುಳಿ ಸುತ್ತುತ ಕೊರಳ ಬಿಗಿಯುತಿತ್ತು ; +ಚಿಕ್ಕೆಗಣ್ಣುಗಳಿಂದ ಕಂಬನಿಗಳುರುಳುರುಳಿ +ಮಂದ ಬೆಳಕೂ ಕೂಡ ನಂದಿ ಹೋಗುತಲಿತ್ತು ! +ನರನರಗಳಲ್ಲಿ ವೇದನೆ ತುಂಬಿ ತುಡಿದಂತೆ +ಗಾಳಿ ನರಳಿತ್ತು ! +* * * * +ಕಣ್ದೆರೆಯುತಿದೆ ನಸುಕು +ಬಾನಬಸುರಿಂದೊಗೆದ ಕೂಸು ! +ಉಷೆಯ ತಾವರೆಗೈಗಳಲ್ಲಿ ಮಿಸುಕಾಡುತಿದೆ ! +ಹೊಂಬೆಳಕಿನಾನಂದ +ದಿಕ್ಕು ದಿಕ್ಕುಗಳನೊಂದೆ ತೆಕ್ಕೆಯೊಳು ಬಿಗಿದು +ಜೀವ ಜೀವದ ಹೂವ ಅರಳಿಸಿಹುದು ! +ಹೂವಿನೆಸಳಿನ ಮೇಲೆ ಚಿಕ್ಕೆಗಂಬನಿ ಜಾರಿ +ಮಿರುಗುತಿದೆ ಅಮೃತಬಿಂದು! +***** +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +(೧)ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತಜಾವ ಜಾವಕೆ ಹಾಡಿನೆಳೆಯ ಜಗ್ಗಿದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳುಇರುಳಬಾನಿಗೆ ಚಂದ್ರ ತಾರೆಯಾಗಿ ! ನೀರು ತುಂಬಿದ ಕೆರೆಯ ಹೃದಯಾಂತರಾಳದಲಿಆ ನೀಲಿ ಆ ಮೋಡವೆಲ್ಲ ಮೂಡಿಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗುಯಾವುದೋ ಮಾಯೆಯಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_116.txt b/Kannada Sahitya/article_116.txt new file mode 100644 index 0000000000000000000000000000000000000000..6e7a33ee7b6f75d672e4756f154b13f363ba6ec7 --- /dev/null +++ b/Kannada Sahitya/article_116.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು +ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು +ವಿಷ್ಣು ಎಲ್ಲೇ ಹೋದರೂ ಈಗ +ಜನ ಜನ ಜನ +ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ +ದಿನಾ ದಿನಾ ದಿನಾ +ಇತಿಹಾಸ: ಯಜಮಾನ ‘ವಾನತ್ತ ಪೋಲಾ’ ಚಿತ್ರದ ರೀಮೇಕ್ ಎಂಬುದು ನಿಜ. ತಮಿಳು ಹಾಡುಗಳ ಕನ್ನಡ ಅವತರಣಿಕೆ ನಿಜ. ಟ್ಯೂನ್ ಸಹಾ ಜೆರಾಕ್ಸ್ ಕಾಪಿ ನಿಜ. ಆದರೂ ವಿಕ್ರಮ್‌ನ ಅವರ ಒಟ್ಟು ಕುಟುಂಬದ ಕಥೆಯನ್ನು ಕನ್ನಡದ ಜನ ಬಹು ಇಷ್ಟಪಟ್ಟು ‘ವಿಷ್ಣು’ಗೆ ಜಯಕಾರ ಹಾಕಿದ್ದಾರೆ. ಚಿತ್ರ ನೂರೆಪ್ಪತ್ತೈದು ದಿನ ಓಡಿ ಚಿತ್ರ ಚರಿತ್ರೆಯಲ್ಲೇ ಒಂದು ಇತಿಹಾಸ ಸೃಷ್ಟಿಸಿದೆ. +ರೆಹಮಾನ್: ಈ ಯಶಸ್ಸಿನ ಅಮಲು ತಲೆಗೇರಿರುವುದು ವಿಷ್ಣುವರ್ಧನ್‌ಗಲ್ಲ ನಿರ್ಮಾಪಕ ರೆಹಮಾನ್‌ಗೆ. ಹುಚ್ಚನೂ ಹೀಗೆ ಗೆಲ್ಲುವನೆಂದು ಕನಸು ಕಾಣುತ್ತಿರುವ ರೆಹಮಾನ್ ಈಗ ತಾವೇನು ಮಾಡಿದರೂ ಜನ ಅದನ್ನು ಒಪ್ಪುತ್ತಾರೆ ಎಂಬ ಭ್ರಮೆಯಿಂದ ‘ಹಾಲಪ್ಪ’ ಈಗ ಬಿಡುಗಡೆ ಮಾಡಿ ‘ಮುಂದೇನಪ್ಪ’ ಎನ್ನುವ ಸ್ಥಿತಿ ತಂದುಕೊಂಡಿದ್ದಾರೆ. +ಸಿಲ್ವರ್‍ ಜ್ಯುಬಿಲಿ: ಯಜಮಾನದ ಸಂಭ್ರಮ ಉಣಬಡಿಸಲು ಕಂಠೀರವ ಸ್ಟೇಡಿಯಮ್ ಒಳಾಂಗಣದಲ್ಲಿ ವೈಬವೋಪೇತ ಕಾರ್ಯಕ್ರಮವೊಂದು ರೂಪಿಸಿದ್ದರು ರೆಹಮಾನ್, ಆ ಕಾರ್ಯಕ್ರಮ ‘ನಭೂತೋ’ ಎನುವಂತಿರಬೇಕು ಎಂಬುದು ವಿಷ್ಣು ಆಶಯವಾಗಿತ್ತು. ಅದಕ್ಕೆ ನಾಯಕ ಅತೀವ ಕಾಳಜಿವಹಿಸಿದ್ದು ನಿಜ. ಅದನ್ನೊಂದು ಅಭೂತಪೂರ್ವ ಈವೆಂಟ್ ಆಗಿಸಲು ಮಧು ಬಂಗಾರಪ್ಪ ಸಹಾ ತಮ್ಮ ಕ್ರಿಯೇಟಿವಿಟಿಗೆ ಇದೊಂದು ಚಾಲೆಂಜ್’ ಎಂದು ಸ್ವೀಕರಿಸಿ ವೇದಿಕೆ, ಬೆಳಕು ವಿನ್ಯಾಸ ‘ಆಹಾ’ ಎನ್ನುವಂತೆ ಮಾಡಿದ್ದರು. ರೆಹಮಾನರ ಬೇಜವಾಬ್ದಾರಿತನದಿಂದಾಗಿ ಇಡೀ ಕಾರ್ಯಕ್ರಮ ಹೊಳೆಯಲ್ಲಿ ಹುಣಸೇಹಣ್ಣು ಕಿವಿಚಿದಂತಾಗಿ ಇಡೀ ಕಾರ್ಯಕ್ರಮ ವ್ಯವಸ್ಥೆ ಒಂದು ಕಪ್ಪು ಚುಕ್ಕೆಯಾಯಿತು. +ಪತ್ರಕರ್ತರಿಗೆ ಪೆಟ್ಟು: ಪೊಲೀಸರ ದಬ್ಬಾಳಿಕೆಗೆ ಪತ್ರಕರ್ತರು ಬಲಿಯಾದರು ಲಾಠಿ ಏಟು ತಿಂದರು. +‘ಹೋಗಾಚೆ’ ಎಂದು ಗದರಿಸಿಕೊಳ್ಳಬೇಕಾದ ಪ್ರಸಂಗ ಬಂತು. ಪ್ರಕರ್ತರಿಗೆ ಮೀಸಲಾದ ಕುರ್ಚಿಗಳಲ್ಲಿ ಮೀಸೆ ಬಂದವರು, ಮೀಸೆ ಇನ್ನೂ ಚಿಗುರಿಲ್ಲದಿದ್ದವರು, ರಫ್ ಅಂಡ್ ಟಫ್ ಗಡ್ಡ ಬಿಟ್ಟ ರೌಡಿ ಗ್ಯಾಂಗಿನ ಪಡ್ಡೆ ಹುಡುಗರು, ಹೆಂಗಸರು ಮಕ್ಕಳು ಮಧ್ಯಾಹ್ನವೇ ಬಂದು ಕುರ್ಚಿಗಳನ್ನು ಆಕ್ರಮಿಸಿದ್ದರು. +ನಾವು ಪತ್ರಕರ್ತರು ಎಂದವರಿಗೆ ಪೊಲೀಸರು ‘ನಿಮ್ಮ ಕೆಲಸ ಬರೆಯೋದು. ನಮ್ಮ ಕೆಲಸ ಲಾಠಿ ತಿರುಗಿಸುವುದು’ ಎಂದು ಮೀಸೆ ತಿರುವಿದರು. +‘ಇದೇನ್ರಿ ರೆಹಮಾನ್ ಇಂಥ ದರಿದ್ರ ಏರ್ಪಾಡು ಮಾಡಿದೀರಿ ಹೇಳಿ ಬನ್ನಿ ಪೊಲೀಸರಿಗೆ’ ಎಂದವರಿಗೆ ‘ಹಹಹ, ನಾನೇನ್ರೀ ಮಾಡ್ಲಿ-ನನ್ನ ಒಳಕ್ಕೆ ಬಿಟ್ಟಿದ್ದೇ ಹೆಚ್ಚು-ನನ್ನೇ ತಡೆದರು. ನಾನೇನು ಮಾಡ್ಲಿ’ ಎಂದು ರಿಂಗಾದ ಮೊಬೈಲ್‌ನಲ್ಲಿ ಆರಾಮವಾಗಿ ಮಾತನಾಡುತ್ತ’ ಏನು ಬಂದೇ ಇಲ್ಲ. ಭರ್ಜರಿ ಫಂಕ್ಷನ್ ಬನ್ನಿ ಬನ್ನಿ’ ಎಂದು ಆಹ್ವಾನಿಸುತ್ತಿದ್ದರು. +ಆ ಹೊತ್ತಿಗೆ ಎಲ್ಲ ಬಾಗಿಲಿಗೂ ಬೀಗ ಹಾಕಿಯಾಗಿತ್ತು. +ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಬೇಕಿತ್ತು ಎಂಬ ಸಾಮಾನ್ಯ ಜ್ಞಾನವೂ ರೆಹಮಾನರಿಗೆ ಇಲ್ಲದೆ ಹೋದದ್ದು ದುರಂತ. ‘ಅಯ್ಯೋ ಹೀಗಾಯಿತೆ ಪಾಪ’ ಎನ್ನುವ ಸೌಜನ್ಯವೂ ಅವರಿಗಿರಲಿಲ್ಲ. +ಪ್ರಶಸ್ತಿ ವಿಜೇತರ ಜಾಗದಲ್ಲಿ ಕುಳಿತ ವಿಷ್ಣು ಅಭಿಮಾನಿಗಳು ಆ ಕುರ್ಚಿಗಳು ಅವರಪ್ಪನ ಜಹಗೀರು ಎಂಬ ಧೋರಣೆಯಲ್ಲಿ ಮಾತನಾಡುತ್ತಿದ್ದರು. +ಎಲ್ಲ ನೆಲದ ಮೇಲೆ: ಚಿತ್ರದ ತಂತ್ರಜ್ಞರು ವಿಧಿಯಿಲ್ಲದೆ ನೆಲದ ಮೇಲೆ ಕುಳಿತರು. ಪ್ರೇಮಾ, ಅಭಿಜಿತ್, ರಮೇಶ್ ಭಟ್, ಶಿವರಾಂ, ಅವಿನಾಶ್, ಮಾಳವಿಕ ಮುಂತಾದವರೆಲ್ಲ ಸೈಡ್‌ವಿಂಗ್‌ನಲ್ಲಿ ನಿಲ್ಲಬೇಕಾದದ್ದು ಅನಿವಾರ್ಯವಾಯಿತು. ಚಿತ್ರಶ್ರೀ, ದೇವಿಕಾ ಹಾಗೂ ಶಂಕರ್‌ಪ್ರಕಾಶ ನಿರೂಪಣೆಯ ಹೊಣೆ ಹೊತ್ತಿದ್ದರು. +ನಿರೂಪಕರು: ತುಂಬ ಸೊಗಸಾಗಿ ವಿಷ್ಣುವರ್ಧನ್ ಪರಿಚಯಿಸಿದ ಚಿತ್ರಶ್ರೀ ಮಾತೇ ಅಂದಿನ ಹೈಲೈಟ್. ದೇವಿಕಾ ಎಲ್ಲ ‘ಹಾಸನದಲ್ಲಿ ಕುಳಿತುಕೊಳ್ಳಬೇಕು’ ಎಂದಾಗಲಂತೂ ಎಲ್ಲ ಅಂಡು ಬಡಿದುಕೊಂಡು ಮುಸಿಮುಸಿ ನಕ್ಕರು. ಶಂಕರ್‍ ಪ್ರಕಾಶ್ ಧ್ವನಿ ತುಂಬಿಕೊಂಡಿತ್ತು ಎನ್ನುವುದು ನಿಜ. ಆದರೆ ಆ ವ್ಯಕ್ತಿಗೆ ಫಲಕ ಸ್ವೀಕರಿಸಿ ಕಲಾವಿದರು ತಾಂತ್ರಿಕ ತಜ್ಞರ ಬಗ್ಗೆ ಗೌರವವೇ ಇದ್ದಂತಿರಲಿಲ್ಲ. ಅವರೆಲ್ಲರನ್ನೂ ಅವರು ಸಂಬೋಧಿಸುತ್ತಿದ್ದ ರೀತಿ ಗದರಿದ ಕ್ರಮ ಹೇಸಿಗೆ ಹುಟ್ಟಿಸಿತು. +ಕಾರ್ಯಕ್ರಮ ನಡೆದ ಬಗೆ: ಚಿತ್ರದ ಬಗ್ಗೆ ಗಂಭೀರವಾಗಿ ವಿಶ್ಲೇಷಿಸುವ ಒಂದು ಸಾಲುಮಾತನಾಡುವವರೂ ಅಲ್ಲಿರಲಿಲ್ಲ. ಹಾರ-ತುರಾಯಿಗಳ ಸಂಭ್ರಮ ಅತಿಯಾಗಿ ‘ಬೇಕಿತ್ತೆ ಇಷ್ಟು ಅವಾಂತರ ಎನ್ನವಂತಾದದ್ದು ದುರ್ದೈವ. ಗುಜರಾತಿ ನೃತ್ಯವೊಂದು ಸಾಕಿತ್ತು. ಯಜಮಾನ ಚಿತ್ರದ ಹಾಡುಗಳ ಕುಣಿತ, ರಾಜೇಶ್ ರಾಮನಾಥ್ ನೃತ್ಯ ಮುಗಿದರೆ ಸಾಕೆ ಎನ್ನುವಂತಾಯಿತು. +ವಿಷ್ಣು ಎಂಟ್ರಿ ಗ್ರಾಂಡ್ ಎಂದು ಒಪ್ಪಲೇಬೇಕು. +ಫಲಕ ವಿತರಣೆಗೆ ಅತಿಥಿಗಳನ್ನು ಆಹ್ವಾನಿಸಿದ ನಂತರ ವೇದಿಕೆ ಸಿಟಿ ಮಾರ್ಕೆಟ್ ಕೊಂಪೆಯಾಯಿತು. ನಾನು ಎಷ್ಟೋ ಕಾರ್ಯಕ್ರಮಗಳನ್ನ, ಶತದಿನೋತ್ಸವಗಳನ್ನು ಕಂಡಿದ್ದೇನೆ ನಿರೂಪಿಸಿದ್ದೇನೆ. ಆದರೆ ಇಂಥ ಗೊಂದಲ ನಾನೆಲ್ಲೂ ಕಂಡಿರಲಿಲ್ಲ. ಕಡೆ ಕಡೆಗೆ ಯಾರು ಬೇಕಾದರೂ ಹೋಗಿ ಫಲಕ ಪಡೆದು ಬರಬಹುದಾದ ಸ್ಥಿತಿ ಉದ್ಭವವಾಗಿ ಅದೊಂದು ಗೊಂದಲಾಪುರವಾಯಿತು. ವಿಷ್ಣು ಹಾಡಿದ್ದೊಂದೇ ಅಂದಿನ ಹೈಲೈಟ್. ಅಂಥ ಸಭೆಗೆ ಗಾಂಭೀರ್ಯ ತರುವಂತಿರಲಿಲ್ಲ ಅಂಬರೀಶ್ ಮಾತುಗಳು. ಅಲ್ಲಿ ಬಂದ ಮಂದಿಗೆ ರಾಜಕಾರಣಿಗಳು ಬೇಕಿರಲಿಲ್ಲ. ಅಂಥವರನ್ನೆಲ್ಲ ಕೂರಿಸಿ ಆರಂಭಕ್ಕೆ ಮಾತನಾಡಿದ ರೆಹಮಾನ್‌ಗೆ ಸ್ವಾಗತಕ್ಕೂ, ವಂದನಾರ್ಪಣೆಗೂ, ಪರಾಕು ಪಂಪಿಗೂ ವ್ಯತ್ಯಾಸವೇ ತಿಳಿದಂತಿರಲಿಲ್ಲ. +ನೆನಪು: ಈ ಸಂಪತ್ತಿಗೆ ಈ ಕಾರ್ಯಕ್ರಮ ಹೇಗೆ ಮಾಡಬೇಕೆಂದು ತಿಳಿಯಲೆಂದೇ ಒಂದು ಪ್ರಸ್‌ಮೀಟ್ ರೆಹಮಾನ್ ಅವರು ಮಾಡಿದ್ದದ್ದೂ ಆಗ ನೆನಪಾಯಿತು. ‘ವಂಡರ್‌ಫುಲ್’ ಎನಿಸಿಕೊಳ್ಳಬಹುದಾಗಿದ್ದ ಕಾರ್ಯಕ್ರಮ ‘ಹಾರಿಬಲ್’ ಎನಿಸಿಕೊಳ್ಳಲು ರೆಹಮಾನ್ ಮುಖ್ಯ ಕಾರಣರಾದರು. +ವಿಷ್ಣು ಕಾರ್ಯಕ್ರಮ ಹೀಗಾಗದಂತೆ ನೋಡಿಕೊಳ್ಳುವ ಹೊಣೆ ಅಭಿಮಾನಿ ಸಂಘದ ಪ್ರಸನ್ನ ಅವರದೂ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ. +ನಾಗೇಶ್ ಕುಮಾರ್‍ ತ್ಯಾಗರಾಜ್ ಎಲ್ಲ ತೆಪ್ಪಗಿದ್ದರು ಅಂದು. +ನಾಟಕ ಅಕಾಡಮಿ ಪ್ರಶಸ್ತಿ ಕಾರ್ಯಕ್ರಮ ಹೂವಿನ ಹಡಗಲಿಯಲ್ಲಿ: +ಅಲ್ಲಿಗೆ ಬರುವ ಹಿಂದಿನ ದಿನ ನಾಟಕ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆಂದು ಹೂವಿನ ಹಡಗಲಿಗೆ ಹೋಗಿ ಬಂದಿದ್ದೆ. ಅಲ್ಲಿ ಹತ್ತು ಕಲಾಕ್ಷೇತ್ರಕ್ಕಾಗುವ ಗ್ರಾಮೀಣ ಮಂದಿ ಇದ್ದರು. ಹತ್ತುಸಾವಿರಕ್ಕೂ ಹೆಚ್ಚು ಜನರ ಪಿನ್ ಡ್ರಾಪ್ ಸೈಲೆನ್ಸ್ ಇತ್ತು ಅಲ್ಲಿ. ಶಿಸ್ತು ಸಂಭ್ರಮ ಆ ಮಂದಿಯಿಂದ ಕಲಿಯಬೇಕು ಎನಿಸಿತು. ಅಲ್ಲೂ ಯಥಾಪ್ರಕಾರ ತೋಪಾದದ್ದು ಕನ್ನಡ ಓದಲೂ ಬಾರದವರನ್ನು ನಿರೂಪಣೆಗೆ ಬಿಟ್ಟಿದ್ದದ್ದು. ‘ಹ್ಯಾಮ್ಲೆಟ್ ನಾಟಕವನ್ನು ಹೆಲ್ಮೆಟ್’ ಎನ್ನುವಂತಹ ಮಹಿಳಾಮಣಿ ನಾಟಕ ಅಕಾಡೆಮಿ ಸದಸ್ಯೆ. ಹೊಸ ಅಕಾಡೆಮಿಯಲ್ಲಿ ಎಂಥವರಿರಬಾರದು ಎಂಬುದಕ್ಕೆ ಅದೊಂದು ಸಾಕ್ಷಿ ಎನ್ನುವಂತಿತ್ತು. +ಸಂಘಟನೆಗೆ ಹೆಸರಾದ ನಾಟಕ ಅಕಾಡಮಿ ಅಧ್ಯಕ್ಷ ಸಿ.ಜಿ.ಕೆ. ವೇದಿಕೆ ಕಲಾತ್ಮಕವಾಗಲು, ಊರವರಲ್ಲಿ ಸಂಭ್ರಮ ತುಂಬಲು-ರಂಗಾಸಕ್ತರನ್ನು ಕಲೆಹಾಕಿ ಅದ್ಭುತ ಸಮಾವೇಶ ಮಾಡಲು ಕಾರಣರಾಗಿದ್ದರು ಎಂಬುದು ಸಂತೋಷ. ಆದರೆ ಜೀವಮಾನದಲ್ಲಿ ಒಮ್ಮೆ ಬರುವ ಪ್ರಶಸ್ತಿ ಸ್ವೀಕಾರದ ಸಮಯದಲ್ಲಿ ಪ್ರಶಸ್ತಿ ವಿಜೇತರ ಹೆಸರುಗಳನ್ನು ಸರಿಯಾಗಿ ಹೇಳಲು ಬಾರದವರನ್ನು ಸದಸ್ಯರು ಎಂಬ ಒಂದೆ ಕಾರಣಕ್ಕೆ ವೇದಿಕೆಯ ಮೇಲೆ ಶೋಭಿಸಿ ಟಿ.ವಿ. ಕ್ಯಾಮರಾ ಎದುರು ಮಿಂಚಲು ಅವಕಾಶ ಮಾಡಿದ್ದದ್ದು ಘನಘೋರ ಅಪರಾಧವೆನಿಸಿತ್ತು. +ಅಂಥ ದೂರದೂರಿನ ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಮೀರಿ ಸೊಗಸಾಗಿ ಏರ್ಪಾಟು ಮಾಡಲು ಕಾರಣರಾಗಿದ್ದ ಎಂ.ಪಿ.ಪ್ರಕಾಶರನ್ನು ಹೊಗಳಲೇಬೇಕೆನಿಸಿದ್ದು ನಿಜ. +ರವಿಚಂದ್ರನ್: ಆಗಲೇ ರವಿಚಂದ್ರನ್ ನನಗೆ ನೆನಪಾದದ್ದು. ತೆರೆ ಏಳುವ ಮುನ್ನವೇ ತಮ್ಮ ಸಿನಿಮಾದ ನಟ-ನಟಿಯರನ್ನು ತಾಂತ್ರಿಕ ತಜ್ಞರನ್ನು ಅವರವರ ಕುರ್ಚಿಯಲ್ಲಿ ಕುಳ್ಳಿರಿಸಿ ಎಲ್ಲರ ಕೈಗೂ ಅವರವರ ಫಲಕ ನೀಡಿ ತೆರೆ ಸರಿಸಿದಾಗ ಸಂಭ್ರಮ ತಾಂಡವಾಡಿತ್ತು. +ಒಂದೇ ಕ್ಷಣದಲ್ಲಿ ಫಲಕ ವಿತರಣೆ ಮುಗಿದ ಖುಶಿ ಎಲ್ಲರಿಗೂ. ಆ ಚಿತ್ರ ‘ರಣಧೀರ’ ಎಂದು ನೆನಪು. ಚೌಡಯ್ಯ ಮೊಮೋರಿಯಲ್ ಹಾಲ್‌ನಲ್ಲಿ ನಡೆದ ಸೊಗಸಾದ ಕಾರ್ಯಕ್ರಮವದು. +ಆ ಕಾಲ: ಸಿಲ್ವರ್‍ ಜ್ಯೂಬಿಲಿ ಕಾರ್ಯಕ್ರಮಗಳು ಶತದಿನೋತ್ಸವಗಳು, ಪ್ಲಾಟಿನಂ ಜ್ಯೂಬಿಲಿಗಳು ಹಿಂದ ಸಾಕಷ್ಟಾಗಿವೆ. ಅಲ್ಲಿ ಚಿತ್ರದ ಬಗ್ಗೆ ಗಂಭೀರವಾಗಿ ಮಾತನಾಡುವ ಜನರೂ ಇರುತ್ತಿದ್ದರು. ಫಲಕ ಸ್ವೀಕಾರ ಒಂದು ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು. ಪರಿಚಯದ ಸಿಹಿ ನುಡಿಗಳಿಂದ ಕಲಾವಿದರು ತಾಂತ್ರಿಕ ತಜ್ಞರು ಹಿರಿಹಿರಿ ಹಿಗ್ಗಲು ಕಾರಣವಾಗಿರುತ್ತಿತ್ತು. +ಈಗೇಕೆ ಹೀಗೆ: ಯಾರೋ ಒಬ್ಬ ನಟನನ್ನು-ನಟಿಯನ್ನು ವಿಜೃಂಭಿಸುವುದೇ ಮುಖ್ಯವಾಗಿ ಮುಂದೆ ಅವರ ಕಾಲ್‌ಷೀಟ್ ಪಡೆಯುವುದೇ ಗುರಿ ಎನಿಸಿದಾಗ ಜನರನ್ನು ತಾತ್ಸಾರ ಮಾಡಿ ನಟರನ್ನು ಓಲೈಸುವುದೇ ಮುಖ್ಯವಾಗಿ ಮಿಕ್ಕವರೆಲ್ಲ ನಗಣ್ಯರಾಗುತ್ತಾರೆ. +ಇಂಥ ಅದ್ಧೂರಿ ಕಾರ್ಯಕ್ರಮಗಳು ಎಡವಟ್ಟಿನ ಸರಮಾಲೆಯಾದಾಗ ವಿಷ್ಣುವರ್ಧನ್ ಅಂತಹ ನಟರೂ ಕಾರ್ಯಕ್ರಮ ರೂಪಿಸುವಾಗ ಸೂಕ್ತ ಸಲಹೆ-ಸೂಚನೆ ನೀಡುವುದು ಅಗತ್ಯ. +ಒಂದು ವಿನಂತಿ: ಪ್ರಿಯ ವಿಷ್ಣು, ನೀವೀಗ ಎತ್ತರೆತ್ತರ ಬೆಳೆದಿದ್ದೀರಿ. ಕಾಲ್‌ಷೀಟ್ ಕೊಡುವ ಮುನ್ನ ಕಥೆಯ ಬಗ್ಗೆ ತುಂಬ ಎಚ್ಚರ ವಹಿಸುತ್ತೀರಿ-ಗ್ರಾಮದೇವತೆ, ಕೆರೆಗೆ ಹಾರ ಎಂದಾಗ ‘ನೋ’ ಎಂದು ಖಂಡಿತವಾಗಿ ಹೇಳುತ್ತೀರಿ. +ಪ್ರತಿಭಾವಂತ ನಟರನ್ನು, ಸಹಕಲಾವಿದರನ್ನು ಮುಕ್ತಕಂಠದಿಂದ ಮೆಚ್ಚಿ ಧಾರಾಳವಾಗಿ ಹೊಗಳುತ್ತೀರಿ. ಈಗ ನಿಮ್ಮ ಹಿಂದೆ ಮುಂದೆ ಓಡಾಡುತ್ತ ‘ಜೈ’ ಎನ್ನುವವರು ಏಕೆ ಪರಾಕು ಪಂಪು ಒತ್ತುತ್ತಾರೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಕುಮಾರ್‍, ವಿಷ್ಣುವರ್ಧನ್ ಆಗುವುದಕ್ಕಿಂತ ಮುಂಚಿನ ಮಿತ್ರರನ್ನು ಅದೇ ಪ್ರೀತಿಯಿಂದ ಮಾತನಾಡಿಸುತ್ತೀರಿ. +ಹಾಗೆ ಮುಂದೆ ಇಂಥ ಕಾರ್ಯಕ್ರಮಗಳನ್ನು ರೂಪಿಸುವ ದಿನ ಬಂದಾಗ ಅದರ ಯಶಸ್ಸಿಗೂ ಎಚ್ಚರವಹಿಸಬೇಕೆಂಬ ಮಾತನ್ನು ನೀವು ನಿರ್ಮಾಪಕರಿಗೆ ಮಾತ್ರವಲ್ಲ, ಪ್ರಸನ್ನರಿಗೂ ತಿಳಿಸುವುದು ಅಗತ್ಯವಲ್ಲವೆ? +***** +(೨೫-೫-೨೦೦೧) +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್‍ […] +ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_117.txt b/Kannada Sahitya/article_117.txt new file mode 100644 index 0000000000000000000000000000000000000000..5334eb7833911d956ec953723625d669bb8cab28 --- /dev/null +++ b/Kannada Sahitya/article_117.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ +ಮಾತು ಮಾತಿನ ಮೊನೆಯ ಮಸೆಯಿತೆಂತು? +ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! +ಮೌನದೇವತೆ ಶಾಪವಿತ್ತಳೆಂತು? +ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? +ಪ್ರೀತಿ ಅಂತಃಕರಣ ನಿನ್ನದಿದೆಕೊ! +ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! +ತೆರೆದ ಹೃಯದೊಳದನೆ ಬರಮಾಡಿಕೊ! +ಬಿಡಿಸಿದಷ್ಟೂ ಬಾಳು ಬರಿ ಗುಂಜು ತೊಡಕು +ಕಂಡಕಂಡೆಡೆಯಲ್ಲಿ ಕರುಣೆಯನೆ ಹುಡುಕು; +ಅವರಿವರ ಅಲ್ಪತನಕಿನ್ನೇನು ಬೇಕು? +ನಿನ್ನ ನೋವಿಗೆ ನಿನ್ನ ಕಂಬನಿಯೆ ಸಾಕು! +***** +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […] +ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […] +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_118.txt b/Kannada Sahitya/article_118.txt new file mode 100644 index 0000000000000000000000000000000000000000..29ad2ca369651735bef66b42e96b1a1f5191bfd1 --- /dev/null +++ b/Kannada Sahitya/article_118.txt @@ -0,0 +1,158 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ. +ಅರ್ಧದಷ್ಟು ಮೆಟ್ಟಿಲಿಳಿದವನು ಮರದ ತುಂಬ ಕೂತಿದ್ದ. ಹಾರಾಡುತ್ತಿದ್ದ. ಸುಮ್ಮನೆ ನೋಡುತ್ತಿದ್ದ, ಮೈ ಕೆರೆದುಕೊಳ್ಳುತ್ತಿದ್ದ ಕೋತಿಗಳನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ಮೆಟ್ಟಿಲು ಹತ್ತಿ ಬಂದೆ. ನಾನು ಕೆಲಸ ಮಾಡುವ ಪ್ರೆಸ್ಸು ಬಾಗಿಲು ಹಾಕಿದೆ. ಗುರುಮಂದಿರದಲ್ಲಿ ಒಬ್ಬರೋ ಇಬ್ಬರೋ ಬಿಕೋ ಅಂತ ಸುಮ್ಮನೆ ಕೂತಿದ್ದಾರೆ. ಗಾಳಿ ಚಳಿಯಾಗಿದೆ. ತುಂತುರು ಬೀಳುತ್ತಿದೆ. +ನಾನು ಚಿಕ್ಕಮ್ಮನ ತಂಗಿಯ ಮದುವೆಗೆ ಗುಬ್ಬಿಗೆ ಹೋಗಿದ್ದೆ. ಆಗಿನ್ನೂ ನನಗೆ ಇಪ್ಪತ್ತು ವರ್ಷ. ಮದುವೆ ಮುಗಿದ ರಾತ್ರಿ. ಬೆಂಗಳೂರು ರಸ್ತೆಯಲ್ಲಿ ಮನೆಯ ಕಡೆ ಹೊರಟಿದ್ದಾಗ ಒಂದು ಲಾರಿ ಬಂತು. ಬೆಳಕು ಕೋರೈಸುತ್ತಿತ್ತು. ಕಣ್ಣು ಮುಚ್ಚಿಕೊಂಡೆ. ಮುಚ್ಚಿಕೊಂಡ ಕಣ್ಣಿನೊಳಗೆ, ರೆಪ್ಪೆಯ ನರಗಳೂ ಕಾಣುವಂತೆ, ಬೆಳಕು ಲಾರಿ ಹೊರಟುಹೋಯಿತು. ಜೋರಾಗಿ ಶಬ್ದ ಮಾಡುತ್ತಾ. ಆಗ ಒಂದು ಕ್ಷಣ ಅನ್ನಿಸಿತು: ನನ್ನ ಮೇಲೇ ಈ ಲಾರಿ ಹೋದರೆ. ಸತ್ತರೆ ಹೇಗಿರುತ್ತೆ? ಕಣ್ಣು ತೆರೆದರೆ ಕತ್ತಲು. ಮುಂದೆ ಹೋಗುತ್ತಿರುವ ಲಾರಿಯ ಬೆಳಕು ದಾರಿ ಪಕ್ಕದ ಆಲದ ಮರದ ಬಿಳಿಲುಗಳ ಮೇಲೆ ಬಿದ್ದು ಅದು ಆಲದ ಮರವೇ ಅಲ್ಲ ಅನ್ನುವ ಹಾಗೆ ಕಾಣುತ್ತಿತ್ತು. ಚಿಕ್ಕಪ್ಪನ ಜೊತೆ ಮಾತನಾಡುತ್ತಾ ಮನೆಗೆ ಬಂದೆ. +ಮನೆಯ ಮುಂದೆ ರಾತ್ರಿ ಬಹಳ ಹೊತ್ತು ಚಿಕ್ಕಮ್ಮನ ತಂಗಿಯರ ಜೊತೆ ಹರಟೆ ಹೊಡೆದು, ತಮಾಷೆ ಮಾಡಿ, ಜೋಕು ಹೇಳಿ ನಕ್ಕು ನಗಿಸಿ ಮಲಗಿಕೊಂಡೆ. ಬೆಳಗಿನ ಜಾವ ಸುದ್ದಿ ಬಂತು. ಫೋನು ಮಾಡಿದ್ದರಂತೆ. ಕೂಡಲೆ ನಾನು ಮೈಸೂರಿಗೆ ಹೋಗಬೇಕಂತೆ. +ಹೋದೆ. ಅಪ್ಪ ಸತ್ತಿರಬಹುದೆ? ಬಸ್ಸಿನಲ್ಲಿ ಯಾರೋ ಕಾಲೇಜು ಹುಡುಗಿಯರು. ಒಬ್ಬ ಮುಸ್ಲಿಂ ಹುಡುಗಿ. ಕಪ್ಪು ದಾವಣಿ ಹಾಕಿಕೊಂಡು ತೊಡೆ ಮೇಲೆ ಎರಡು ನೋಟು ಬುಕ್ಕು ಇಟ್ಟುಕೊಂಡು ಕೂತಿದ್ದಳು. ಅವಳು ನನ್ನ ಪಕ್ಕ ಕೂತಿದ್ದರೆ, ಅವಳ ತೋಳು ನನಗೆ ತಗಲುವಂತಿದ್ದರೆ ಅಂತ ಅಂದುಕೊಳ್ಳುತ್ತ ಅಪ್ಪ ಸತ್ತು ಹೋಗಿದ್ದರೆ ಅಂತ ಆಗಾಗ ಅಂದುಕೊಳ್ಳುತ್ತ-ಬಸ್ಸು ಮೈಸೂರು ತಲುಪಿತು. +ಆಟೋ ನಮ್ಮ ಮನೆಯ ತಿರುವಿಗೆ ಬಂದಿತು. ನಮ್ಮ ಮಹಡಿಯ ಅಂಗಳದ ತುಂಬ, ಗೇಟಿನ ಹತ್ತಿರ ಕೂಡ ಜನ ಸೇರಿದ್ದರು. ಅಪ್ಪ ಸತ್ತಿದ್ದಾರೆ ಅನ್ನಿಸಿತು. +ಎರಡು ದಿನದ ಹಿದೆ ಮದುವೆಗೆ ಹೋಗುವಾಗ ಷಡಕ್ಷರ ಮಹಾಕವಿಯೇ ಅಲ್ಲ ಅಂತ ಅಪ್ಪನ ಜೊತೆ ವಾದ ಮಾಡಿ ಹೋಗಿದ್ದೆ. ನಾನು ಮತ್ತು ಪಂಡಿತಾರಾಧ್ಯ ರಸ್ತೆ ತಿರುವಿನಲ್ಲಿ ಮರೆಯಾಗುವವರೆಗೆ ಅಪ್ಪ ನಮ್ಮನ್ನೇ ನೋಡುತ್ತ ನಿಂತಿದ್ದರು. ಸುಮ್ಮನೆ ಹಿಂದಿರುಗಿದಾಗ ಕಂಡದ್ದು ಅಷ್ಟೆ. ನಾವು ನೋಡಿದೆವೆಂದು ಅಪ್ಪನಿಗೆ ತಿಳಿಯಲೆ ಇಲ್ಲ. ‘ಯಾಕೋ ಅವನು ತಿರುಗಿ ನಮ್ಮತ್ತ ನೋಡಲೇ ಇಲ್ಲ ಕಣೆ’ ಅಂತ ಅಮ್ಮನ ಹತ್ತಿರ ಪೇಚಾಡಿದ್ದರಂತೆ. +ನಾನು ಮತ್ತೆ ಮೆಟ್ಟಿಲಿಳಿದು, ರಸ್ತೆ ದಾಟಿ, ಮತ್ತಷ್ಟು ಮೆಟ್ಟಿಲಿಳಿದು ಗಂಗಾನದಿಯ ದಡಕ್ಕೆ ಹೋದೆ. ನೆಲಕ್ಕೆ ಸಿಮೆಂಟಿನ ಹಾಸು ಇತ್ತು. ಟೇಲಿಫೋನು ಕಂಬದ ವೈರು ಹಿಡಿದು, ಅದರ ಮೇಲೆ ಭಾರ ಬಿಟ್ಟು ಸುಮ್ಮನೆ ನದಿ ನೋಡುತ್ತ ನಿಂತೆ. ರಾಮಝೂಲಾದ ಮೇಲೆ ಜನ ಓಡಾಡುತ್ತಿದ್ದರು. ನನ್ನ ಬೆನ್ನ ಹಿಂದೆ, ಮೇಲೆ, ಆಸ್ಪತ್ರೆಯ ಕಿಟಿಕಿಯ ಹತ್ತಿರ ಲೀಲಾ ನಿಂತಿದ್ದಳು. ಲೀಲಾ ಮಧ್ಯ ಪ್ರದೇಶದ ಯಾವುದೋ ಪುಟ್ಟ ಊರಿನವಳು. ಸ್ಕೂಲಿನಲ್ಲಿ ಮೇಡಂ ಅಂತೆ. ದಿನಾ ಸಂಜೆ ಹದಿನೈದು ದಿಮದಿಂದ ಸಂಜೆಯ ‘ಅನುಭವಾಮೃತ’ದ ತರಗತಿಗಳಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದಳು. ಜ್ಞಾನದೇವನ ಅನುಭವಾಮೃತದ ಇಂಗ್ಲಿಷ್ ಅನುವಾದ ಅವಳ ಹತ್ತಿರ ಇರಲಿಲ್ಲ. ನನ್ನ ಪುಸ್ತಕವನ್ನೆ ನೋಡುತ್ತಿದ್ದಳು. ಅವಳ ಅಕ್ಷರ ತುಂಬ ಮುದ್ದಾಗಿತ್ತು. ಆಶ್ರಮದಲ್ಲಿದ್ದಷ್ಟು ದಿನ ಅವಳು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಬ್ರಹ್ಮಾನಂದರ ನೇರ ಎದುರಿಗೆ ಮೂಲೆಯಲ್ಲಿ ನನನ್ ಜಾಗ, ನನ್ನ ಪಕ್ಕದಲ್ಲಿ ಲೀಲಾ. ಕೆಲವು ದಿನ ಬ್ರಹ್ಮಾನಂದರ ತರಗತಿಯಲ್ಲಿ ಜನ ಜಾಸ್ತಿ ಆದಾಗ ಚಕ್ಕಂಬಟ್ಟಲು ಹಾಕಿ ಕುಳಿತ ನಮ್ಮ ಮಂಡಿಗಳು ಸ್ಪರ್ಶಿಸುತ್ತಿದ್ದವು. ಅವಳೊಡನೆ ಹೆಚ್ಚು ಮಾತೇ ಆಡಲಿಲ್ಲ. ಆಡಿದ್ದು ಒಂದೇ ದಿನ, ಸಂಜೆ. ಕೃಷ್ಣಾನಂದರೊಡನೆ ಧ್ಯಾನ ಮಾಡಿ ನಮ್ಮ ನಮ್ಮ ಕೋಣೆಗಳಿಗೆ ಹೋಗುವಾಗ ಕೇಳಿದೆ- +“ಇದೇ ಮೊದಲಾ ನೀವು ಇಲ್ಲಿಗೆ ಬಂದದ್ದು?” +“ಹೌದು.” +“ನೀವು?” ಅಂತ ಕೇಳಿದಳು. +“ಇಲ್ಲೇ ಇರುವವನು.” +“ಯಾವ ಊರು?” +“ಬೆಂಗಳೂರು. ನಿಮ್ಮದು?” +ಇಂದೂರಿನ ಹತ್ತಿರ ಒಂದು ಹಳ್ಳಿಯ ಹೆಸರು ಹೇಳಿದಳು. +“ನೀವು ಸ್ಕೀಲಿನಲ್ಲಿ ಮೇಡಂ ಇರಬೇಕು. ಅಲ್ಲವಾ?” +“ಹೌದು. ನೀವು ತುಂಬ ಜಾಣರು” ಅಂದಳು. +ಅಷ್ಟೆ. ಆದರೂ ಅಲ್ಲಿರುವಷ್ಟು ದಿನ ಅವಳನ್ನು ಗಮನಿಸುತ್ತಲೇ ಇದ್ದೆ. +ಈಗ ಲೀಲ ನನ್ನ ಬೆನ್ನ ಹಿಂದೆ. ಅಲ್ಲಿ ಮೇಲೆ, ನಿಂತಿದ್ದಳು. ನನ್ನ ಬೆನ್ನು. ಜೋರಾಗಿ ಬೀಸುವ ಗಾಳಿಗೆ ಹಾರಾಡುವ ನನ್ನ ಕೂದಲು ಇವೆಲ್ಲ ಅವಳಿಗೆ ನನ್ನ, ನಿಶ್ಚಲವಾಗಿ ನಿಂತ ನನ್ನ ಮನಸ್ಸಿನ ವಿಷಾದವನ್ನು ತಲುಪಿಸುತ್ತಿರಬಹುದು ಅಂದುಕೊಂಡೆ. ಇನ್ನೇನು ಈಗ ಸಂಸ್ಕಾರ ಶುರುವಾಗುತ್ತದೆ. +ಹೋದತಕ್ಷಣ ನನಗೆ ಎಲ್ಲರೂ ಜಾಗ ಬಿಟ್ಟರು. ಹಾಲಿನಲ್ಲಿ ನಮ್ಮಪ್ಪ ಮಂಚದ ಮೇಲೆ ಮಲಗಿಬಿಟ್ಟಿದ್ದರು. ಅಮ್ಮ ಅಳುತ್ತಿದ್ದರು. ನಾನು ಅಮ್ಮನ ತೊಡೆಯಲ್ಲಿ ತಲೆ ಇಟ್ಟೆ. ಅಳು ಬರಲಿಲ್ಲ. ಅಥವ ಅಳಲು ಆಗಲಿಲ್ಲ. +ಹೊರಗೆ ಕರೆದುಕೊಂಡು ಬಂದರು. ವರಾಂಡದಲ್ಲಿ ಕೂತೆ. ಕೆಂಪು ಸಿಮೆಂಟಿನ ನೆಲದಲ್ಲಿ ಕೊರೆದಿದ್ದ ಎರಡು ನೇರ ಸರಳರೇಖೆಗಳ ನಡುವಿನ ಜಾಗವನ್ನು ಸುಮ್ಮನೆ ನೋಡುತ್ತ ಕುಳಿತೆ. ವಿಷಾದ ಖಾಲಿ. ನಾನು ಇರಲೇ ಇಲ್ಲವೋ ಏನೋ. +ಆ ಸನ್ಯಾಸಿ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವನಿಗೆ ಹುಚ್ಚು ಹಿಡಿದಿತ್ತಂತೆ. +ಆಗಾಗ ಹಿಡಿಯುತ್ತಿತ್ತಂತೆ. ಅವನನ್ನು ಮಂಚಕ್ಕೆ ಕಟ್ಟಿಹಾಕಿದ್ದರಂತೆ. ಅವನು ರಾತ್ರಿ ಹೊತ್ತು ತಪ್ಪಿಸಿಕೊಂಡು ಓಡಿಹೋಗುತ್ತಿದ್ದನಂತೆ. ಚೆನ್ನಾಗಿದ್ದಾಗ ಅವನು ಆಸ್ಪತ್ರೆಯ ರೋಗಿಗಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಅಡುಗೆ ಮನೆಯ ಸ್ಟೋರಿನಲ್ಲೂ ಕೆಲಸ ಮಾಡುತ್ತಿದ್ದನಂತೆ. ಅವನು ಸಾಯಲಿಲ್ಲವಂತೆ. ಅಳುತ್ತಿದ್ದನಂತೆ. ಆತ್ಮಹತ್ಯೆ ಮಾಡಿಕೊಂಡನಂತೆ. ನಾನು ನೋಡದ ಸನ್ಯಾಸಿಯ ಕೇಳಿದ ಬದುಕು. ನಾನು ಹೀಗೆ ಇಲ್ಲೇ ಇದ್ದುಬಿಡಲೇ. +ನಮ್ಮಪ್ಪನಿಗೆ ಕೊನೆಯ ಸ್ನಾನ ಮಾಡಿಸುತ್ತಿದ್ದರು. ಮನೆಯ ಹೊರಗೆ, ಸಾಯಂಕಾಲ. ಪಂಡಿತ ಹೇಳಿದ-“ನಿನಗೆ ಅಪ್ಪಾಜಿ ಸತ್ತುಹೋಗಿರಬಹುದು ಅನ್ನಿಸಿತ್ತಾ?” ಲಾರಿ ಜ್ಞಾಪಕ ಬಂತು ರಾತ್ರಿ ಊಟ ಮಾಡಿ, ಹಾಲು ಕುಡಿದು, ಅಮ್ಮ ವೀಣೆ ನುಡಿಸಿದ್ದು ಕೇಳುತ್ತಾ ಮಲಗಿ ಹಗೇ ಸತ್ತುಹೋದರಂತೆ. ಅಪ್ಪನಿಗೆ ಸ್ನಾನ ಮಾಡಿಸುವುದು ನೋಡಿ ತುಂಬ ಅಳು ಬಂತು. ಪಂಡಿತನ ಭುಜಕ್ಕೆ ಒರಗಿ ಅತ್ತುಬಿಟ್ಟೆ. +ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ನಾಲ್ಕು ಜನ ಸನ್ಯಾಸಿಗಳು ಸತ್ತ ಸನ್ಯಾಸಿಯ ಹೆಣ ಅದರಲ್ಲಿಟ್ತರು. ಗಂಗಾ ನದಿಯಲ್ಲಿ ದೋಣಿ ಡರ್ ರ್ ಮೋಟರು ಸದ್ದು ಮಾಡುತ್ತ ಹೊರಟಿತು. ಗಂಗೆಯಲ್ಲಿ ನೇರ ಹೊರಟು ನಟ್ಟನಡುವೆ ನಾಲ್ಕೋ ಆರೋ ಪ್ರದಕ್ಷಿಣೆ ಹಾಕಿತು. ಇದ್ದಕ್ಕಿದ್ದಂತೆ, ಗಂಗೆಯ ನಟ್ಟನಡುವೆ ಸನ್ಯಾಸಿಯ ಹೆಣವನ್ನು ಡುಬಕ್ಕನೆ ನದಿಗೆ ಹಾಕಿಬಿಟ್ಟರು. ಸ್ವಲ್ಪ ನೀರು ಚಿಮ್ಮಿ ಹೆಣ ಮುಳುಗಿ ಹೋಯಿತು. +ನಾನು ತೀರ ಚಿಕ್ಕವನಿದ್ದಾಗ ಅಪ್ಪನೊಡನೆ ಉಲ್ಲಾಳಕ್ಕೆ ಹೋಗಿದ್ದೆ. ದೋಣಿಯಲ್ಲಿ ಹೋದೆವು. ಹುಟ್ಟುಹಾಕುವ ದೋಣಿ. ನೇತ್ರಾವತಿಯಲ್ಲಿ ಹೋಗುತ್ತಿದ್ದಾಗ ನನ್ನ ಎದುರಿಗೇ ಒಂದು ನಾಯಿಯ ಹೆಣ ತೇಲಿಕೊಂಡು ಬರುತ್ತಿತ್ತು. ಅದರ ತಲೆ ಮುಳುಗಿತ್ತು. ಹಿಂದಿನ ಎರಡು ಕಾಲು ಮಾತ್ರ ನದಿಯ ಮೇಲೆ ಆಕಾಶ ನೋಡುತ್ತ ಎತ್ತಿಕೊಂಡಿದ್ದವು. ನಮ್ಮ ದೋಣಿಯನ್ನು ದಾಟಿ ಸತ್ತ ನಾಯಿ ಸಮುದ್ರದ ಕಡೆ ತೇಲಿಕೊಂಡು ಹೋಯಿತು. ವರ್ಷಗಳೆಷ್ಟೋ ಕಳೆದ ಆಮೇಲೂ ಕನಸಿನಲ್ಲಿ ಶಿವಮೊಗ್ಗೆಯ ತುಂಗೆಯಲ್ಲಿ ಆ ನಾಯಿಯ ಹೆಣ ತೇಲಿಬಂದಂತೆ ಕಂಡದ್ದಿದೆ. ಅವತ್ತು ಸಾಯಂಕಾಲ ಸ್ಮಶಾನದಲ್ಲಿ ಅಪ್ಪನ ತಲೆಯ ಮೇಲೆ ಒಬ್ಬ. ನನ್ನ ವಿದ್ಯಾರ್ಥಿಯೇ ಆಗಿದ್ದ. ಸ್ವಾಮಿಯ ಪಾದಗಳನ್ನು ತೊಳೆಯುವಾಗ ತುಂಬ ಸಿಟ್ಟು ಬಂದಿತ್ತು. ಅವನು ಸ್ವಾಮಿಯಾದರೂ ಯಾವ ಥರದಲ್ಲೂ ಅಪ್ಪನಿಗಿಂತ ದೊಡ್ಡ ಮನುಷ್ಯ ಅಲ್ಲ ಅನ್ನುವ, ಅವನ ಕಾಲು ತೊಳೆಯಬೇಕಲ್ಲ ಅನ್ನುವ ಸಿಟ್ಟು. ಜೊತೆಗೆ ಇನ್ನೆಂದೂ ಅಪ್ಪನ ಮುಖ ನೋಡಲಾರೆ ಅನ್ನುವ ಅಳು. +ನಾನು ಇಲ್ಲೆ ಇದ್ದರೆ ನನ್ನ ಸಾವೂ ಹೀಗೇ ಆದೀತೇನೋ. ಏನೂ ಸಂಬಂಧ ಇಲ್ಲದ ಯಾರೋ ಒಬ್ಬ ಹೀಗೇ ನನ್ನ ಗಂಗೆ ಪಾಲು ಮಾಡುವುದು ನೋಡುತ್ತ ನಿಂತಿರುತ್ತಾನೋ ಏನೋ. ಅವನ ಹಿಂದೆ ಇನ್ನು ಯಾರೋ ಹುಡುಗಿ…. +ಅಪ್ಪ ಸತ್ತು ಇಪ್ಪತ್ತು ವರ್ಷ ಆಯಿತು. ತಾನು ಒಪ್ಪದ ಹುಡುಗಿಯನ್ನು ಮದುವೆ ಆದರೆ ಸಾಯುವುದಾಗಿ ಹೆದರಿಸಿದ ಅಮ್ಮ ಮತ್ತು ಅಮ್ಮನನ್ನು ಎದುರಿಸಿ ಮದುವೆಯಾದ ನಾನು ಇನ್ನೂ ಇದ್ದೇವೆ. ನಾನು ಮದುವೆಯಾದ ಹುಡುಗಿ ಈಗ ನಾನು ಇಲ್ಲಿರುವುದು ಗೊತ್ತೇ ಇಲ್ಲದೆ ಅಲ್ಲಿ ಇದ್ದಾಳೆ. ಅವರಿಗೆ ನಾನು ನನಗೆ ಅವರು ಸತ್ತುಹೋಗಿಲ್ಲವೇ? ಇಲ್ಲೇ ಇದ್ದುಬಿಟ್ಟರೆ ಏನಂತೆ? ಇದ್ದರೆ ಆಯಿತು. +ಮತ್ತೆ ಆರನೆಯ ದಿನವೇ ಬರೆದದ್ದು +ಎಂಥ ಕಣ್ಣು ಎಂಥಾ ಕಣ್ಣು ನಿನ್ನವೇ. ಕಣ್ಣುಗಳ ನೆನಪು ನಾಡಿನಲ್ಲಿ ಅಕ್ಷರಶಃ ಮೈಮರೆತು ಅಲೆದಿದ್ದೆ. ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು. ಕಣ್ಣುಗಳು ನನ್ನನ್ನು ಸುಳಿಯಲ್ಲಿ ಮುಳುಗಿಸಿ ಹೀಗೆ ಇಲ್ಲಿ ಹೃಷಿಕೇಶದ ಗಂಗೆಯ ದಡದಲ್ಲಿ ತೇಲಿಸಿವೆ. +ಸುಳ್ಳು. ಅದು ಒಂದು ಕರಣ. ಅದೊಂದು ಕಾರಣ ಅಲ್ಲ. ಕಾರಣ ಅಥವ ಕಾರಣಗಳು ಏನಿದ್ದರೂ ನಾವು ಸುಮ್ಮನಿರಲಾರದೆ ಆಮೇಲೆ ಹುಡುಕಿಕೊಂಡವುಗಳು. +ಗಣೇಶಪುರಿ ಬಂದಿದ್ದಾರೆ. ನಾಳೆ ಬರುತ್ತಾರೆ. ಅಂದಾಗ ಸಾಧಕ ನಿವಾಸದಲ್ಲೆಲ್ಲ ಹುರುಪು. ನನಗೆ ತಳಮಳ ಆಗುತ್ತಿತ್ತು. ಅವರೆದುರು ಏನು ಹೇಳಲಿ ಹೇಗೆ ಹೇಳಲಿ. ಗುಜರಾತಿನ ಮುದುಕ ಸಂತೋಷವಾಗಿದ್ದ. ಸದ್ಯ ನಾಳೆ ಗುರುವಿನ ದರ್ಶನ ಪಡೆದು ಊರಿಗೆ ಹೋಗಬಹುದು. ಮನೆ ಬಿಟ್ಟು, ಅಂಗಡಿ ಬಿಟ್ಟು ತಿಂಗಳಾಯಿತು. ಸದ್ಯ ಈ ಸಾರಿ ಯಾತ್ರೆ ಚೆನ್ನಾಗಿ ಆಯಿತು. ಹೀಗಂದ, ಬಿಳೀ ಸೀರೆ ಉಟ್ಟ ಹೆಂದಸು ತನ್ನ ರೂಮಿನ ಮುಂದೆ ಓಡಾಡುತ್ತಿದ್ದಳು. ದಿನಾ ಊಟ ಅವಳಿದ್ದ ರೂಮಿಗೇ ಹೋಗುತ್ತಿತ್ತು. ಯಾರೋ ಅವಳು. ಆ ಆಶ್ರಮಕ್ಕೆ ತುಂಬ ಹಣ ಕೊಟ್ಟವಳೋ? ತುಂಬ ದುಃಳಿತಳೋ? ಹಣೇಸ್ಗಪುರಿ ಒಪ್ಪಿದರೆ. ನಾನು ಇಲ್ಲೇ ಇರುವಂತಾದರೆ ಅವಳು ನನ್ನ ಬಗ್ಗೆ ಏನೆಂದುಕೊಳ್ಳಬಹುದೋ? +ಒಂದು ವಾರದ ಹಿಂದಷ್ಟೆ ಸಾಧಕನಿವಾಸದಲ್ಲಿ ದೊಡ್ಡ ಭಂಡಾರ. ಅಂದರೆ ವಿಶೇಷ ಊಟ. ಎಂಥದೋ ಪೌರ್ಣಮಿಯ ನೆಪ. ಅಲ್ಲಿದ್ದ ನಮಗೆಲ್ಲ ಒಂದೊಂದು ಕೆಲಸ. ನನಗೆ ನೀರು ಹಂಚುವ ಕೆಲಸವಂತೆ. ಅವರು ಹಿಂದಿಯಲ್ಲಿ ಎಂಥದೋ ಪದ ಬಳಸಿ ಹೇಳಿದರು. ಅರೆಬರೆ ಇಂಗ್ಲೀಷು ಗೊತ್ತಿದ್ದ ಬೊಂಬಾಯಿಯ ಗಡ್ಡದ ಸನ್ಯಾಸಿಯನ್ನು ಕೇಳಿ ಖಚಿತಮಾಡಿಕೊಂಡೆ. ಗೀತಾಜಯಂತಿಯಂತೆ. +ಮಡಕೆಯ ತಟ್ಟೆಗಳು. ಮಣ್ಣಿನ ಕುಡಿಕೆಗಳು. ಸಿಹಿ, ಪೂರಿ, ಪಲ್ಯ, ಅನ್ನ, ಸಾರು. ಹರಿದ್ವಾರದ ಬಹುಶಃ ಎಲ್ಲ ಸನ್ಯಾಸಿಗಳೂ ಸೇರಿದ್ದರು. ಅವರ ಕೈಯಲ್ಲೆಲ್ಲ ಭಂಡಾರದ ಒಂದೊಂದು ಪಾಸು. “ಪಾನೀ, ಪಾನೀ.” ತಪ್ಪು. ಪಾನಿ ಅನ್ನಬಾರದು ನೀರನ್ನು. “ಜಲ” ಅನ್ನಬೇಕಂತೆ. ಮಧ್ಯಾಹ್ನದ ಬಿಸಿಲಿನಲ್ಲಿ ಒಮ್ಮೆಗೆ ಇನ್ನೂರರಂತೆ ನಾಲ್ಕೈದು ಪಂಕ್ತಿ ಊಟ. ಊಟ ಬಡಿಸಲು ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಎಲ್ಲರಿಗೂ ಜಲ ಕುಡಿಸಿ, ಪೆಕರನಂತೆ ಬಿಸಿಲು ಮಚ್ಚು ಹತ್ತುತ್ತ ಇಳಿಯುತ್ತ ಹತ್ತುತ್ತ ಕೇಳಿದವರಿಗೆಲ್ಲ ನೀರು ಕುಡಿಸುತ್ತ ಸುಸ್ತಾದೆ. ಬಿಳೀ ಸೀರೆಯ ಹೆಂಗಸು ಮಹಿಳೆಯರ ಪಂಕಿಯಲ್ಲಿ ಎದ್ದುಕಾಣುತ್ತಿದ್ದಳು. ನಾನೂ ಅವರ ಮಠದವನೇ ಆಗಿಬಿಟ್ಟೆನೋ. ಕೆಲಸ ಮಾಡುತ್ತಿದ್ದೇನಲ್ಲ ಅಂತ ಆಶ್ಚರ್ಯಪಟ್ಟಹಾಗಿತ್ತು. ಊಟ ಮಾಡಿದವರಿಗೆಲ್ಲ ಹತ್ತು ರೂಪಾಯಿ ತಲಾ ದಕ್ಷಿಣೆ ಹಂಚುತ್ತ ಬಂದರು. ಕೆಲವರಿಗೆ ಐದು. ಕಡಿಮೆ ಸಿಕ್ಕವರು ಜಾಸ್ತಿ ಸಿಕ್ಕಬೇಕೆಂದು ಜಗಳ ತೆಗೆದರು. ಹೊರಗೆ ಭಂಡಾರದ ಪಾಸು ಸಿಗದವರು ನಮಗೆ ಯಾಕೆ ಪಾಸು ಇಲ್ಲ ಅಂತ ಗಲಾಟೆ ಮಾಡುತ್ತಿದ್ದರು. ಇನ್ನೂ ಕೆಲವು ಭಿಕ್ಷುಕರು ಊಟ ಮುಗಿಯುವುದನ್ನು ಕಾಯುತ್ತಿದ್ದರು. ನನಗೆ ಮತ್ತು ಊಟ ಬಡಿಸಿದ ಹುಡುಗರಿಗೆ ಇಪ್ಪತ್ತು ರೂಪಾಯಿ ಕೊಟ್ಟರು. ನಮ್ಮ ಕೆಲಸದ ಋಣ ಬೇಡವೆಂದೆ? ದಕ್ಷಿಣೆ ಎಂದೆ? ಕೂಲಿ ಎಂದೆ? ನನ್ನ ಖರ್ಚಾಗುತ್ತಿದ್ದ ಹಣಕ್ಕೆ ಇಪ್ಪತ್ತು ರೂಪಾಯಿ ಬಂದು ಸೇರಿತಲ್ಲ ಎಂದು ಸಂತೋಷವೂ ಆಯಿತು. +ಗಣೇಶಪುರಿ ಬಂದಿದ್ದಾರೆ. ಬೆಳಗಿನ ಜಾವ ಕಾಣಲಿಲ್ಲ. ಅಲ್ಲಿನ ಪ್ರಧಾನಮಂತ್ರಿಯನ್ನು ಕೇಳಿದೆ. ಎಂಟುಗಂಟೆಗೆ ಬಂದು ನೋಡು ಅಂದ. +ಮತ್ತೆ ಬರವಣಿಗೆಯ ಏಳನೆಯ ದಿನ +ಅದಕ್ಕೇ ಮುಳುಗುವುದಕ್ಕೆ ಭಯ ನನಗೆ. ನೆನಪು ಆಗಿ ಉಳಿದುಕೊಂಡಿದೆ ಎಂದೇ ಗೊತ್ತಿಲ್ಲದಿದ್ದ ಅಸಂಖ್ಯಾತ ವಿವರಗಳು ಒಮ್ಮೆಲೇ, ಅವೆಲ್ಲ ಈಗಲೇ ಆಗುತ್ತಿವೆಯೇನೋ ಎಂಬಂತೆ ಘಾತಿಸುತ್ತವೆ – ಬದರಿಯ ಬಳಿ, ಇಂಡಿಯಾದ ಕೊನೆಯ ಹಳ್ಳಿ ಮಾನಾವನ್ನು ದಾಟಿದಮೇಲೆ ಸಿಗುವ ಭೀಮಫೂಲ್‌ನ ಆರ್ಭಟಿಸುವ, ಆ‌ಆರ್ಭರ್ಭಟಿಸುವ ಪ್ರಚಂಡ ಭಯಂಕರ ವೇಗದ ಜಲಪಾತದ ಹಾಗೆ. ತುಂಬಿ ಮೊರೆಯುವ ನೂರು ಜೋಗ್ ಗಳನ್ನು ನಲವತ್ತು ಅಡಿಯ ಇಕ್ಕಟ್ಟಿನಲ್ಲಿ ಇರುಕಿಸಿದಹಾಗೆ ಅದು. +ಪಾಂಡವರು ಇಲ್ಲಿಂದ ಸ್ವರ್ಗಕ್ಕೆ ಹೋದರಂತೆ. ದಾರಿಗಡ್ಡವಾದ ಜಲಪಾತ. ದ್ರೌಪದಿಯೋ ಮಿಕ್ಕ ಪಾಂಡವರೋ ದಾಟಲೆಂದು ಭೀಮ ಎರಡೂ ದಂಡೆಗೆ ಅಡ್ಡಮಲಗಿದನಂತೆ. ಹಾಗೇ ಕಲ್ಲಾಗಿಬಿಟ್ಟನೋ! ಒಂದು ಕಲ್ಲು ಸೇತುವೆಯ ರೂಪದಲ್ಲಿ ಅಡ್ಡಾದಿಡ್ಡಿಯಾಗಿ ಜಲಪಾತದ ಬಳಿ ಇದೆ. ನಮ್ಮವರೆ ಯಾರೋ ವಿಚಾರಿಸಿ ತಂದ ಮಾಹಿತಿ ಅದು. ಅದು ಸರಸ್ವತಿ ನದಿಯಂತೆ. ಸ್ಫೂರ್ತಿಯೋ ನೆನಪೋ ಅವುಗಳ ದೇವತೆ ಸರಸ್ವತಿಯೋ ಈ ವೇಗದಲ್ಲಿ ಘಾತಿಸಿದರೆ ಗತಿಯೇನು? +ಎರಡೂ ಬದಿಗಳಲ್ಲಿ ಬಂಡೆ. ಬಂಡೆಗಳು. ಕಪ್ಪು ಕಪ್ಪು, ಆನೆ ಬಂಡೆಗಳು. ಭೀಮ ಬಂಡೆಗಳು. ಬೃಹತ್, ಕಠಿಣ, ಕ್ರೂರ, ಬಂಡೆಗಳು. ದುರ್ದಮ್ಯ. ಯಾವುದು? ಕಲ್ಲೋ ನೀರೋ? ತಟ್ಟನೆ ಪ್ರತ್ಯಕ್ಷವಾದಂತೆ ಕಾಣುವ, ನಮ್ಮ ಮೈಯೆಲ್ಲ ಕಂಪಿಸುವ ಕಿವಿಯೇ ಆಗಿಬಿಟ್ಟಿದೆ ಅನಿಸಿಬಿಡುವ, ಗೋಡೆಯಂತ ಬೆಟ್ಟದ ಮೇಲಿಂದ ಬೀಳುವ ವೇಗದಲ್ಲಿ ಕ್ಷಣಕ್ಷಣಕ್ಕೂ ರಭಸ ನೂರ್ಮಡಿಯಾಗುತ್ತ, ಮಣ್ಣನ್ನು ಕೊಚ್ಚಿ, ಬಿಳುಪು ಕೆಂಪಾಗಿ, ಕೆಂಪು ನೀರಿನ ಬಿಳುಪನ್ನು ಪೂರ್ತಿ ಮರೆಮಾಡದೆ, ನಿಷ್ಕರುಣೆಯಿಂದೆಂಬಂತೆ, ಅಲ್ಲ, ಸಹಜವಾಗಿ, ಕರುಣೆ ನಿಷ್ಕರುಣೆಯೇನೇನೂ ಅಲ್ಲದ, ತಾನು ವೇಗ ಮಾತ್ರ, ಬೀಳುತ್ತಿರುವ ನೀರು ಮಾತ್ರ, ಚಿಮ್ಮುವ ಹನಿ ಹೊಗೆ ಮಾತ್ರ, ಆರ್ಭಟ ಮಾತ್ರ ಎಂಬಂತೆ ಧುಮುಕುವ ಜಲದ ಅನಿವಾರ್ಯ ಪತನ ಪತನದ ಆಘಾತ. ಎಷ್ಟು ಲಕ್ಷ ವರ್ಷಗಳಿಂದ ಈ ಬಂಡೆಗಳನ್ನು ಅಪ್ಪಳಿಸಿದೆಯೋ. ನುಗ್ಗಿ ಬಿದ್ದು ನುಗ್ಗಿ ಹರಿಯುವ ದಿಕ್ಕಿಗೆ ವೇಗಕ್ಕೆ ಅನುಗುಣವಾಗಿ ಬಂಡೆಗಳು ಸವೆದು ಸವೆದು ನುಣ್ಣಗಾಗಿ, ಕಲ್ಲೆಲ್ಲ ಬೆಣ್ಣೆಯಾಗಿಬಿಟ್ಟಂತೆ ವಿಚಿತ್ರ ವಿನ್ಯಾಸಗಳು. ತೀರ್ಥಹಳ್ಳಿಯ ಹತ್ತಿರ ನದಿಯಲ್ಲಿ ಬಂಡೆಗಳು ಹೀಗೇ ಹರಿವ ನೀರಿಗೆ ಸಿಕ್ಕಿಬಿದ್ದು ನಮ್ಮ ಮನಸ್ಸಿನ ವಿಚಿತ್ರಗಳಿಗೇ ಆಕಾರ ಕೊಟ್ಟಂತೆ ಆಗಿಬಿಟ್ಟಿವೆಯಲ್ಲ ಅದನ್ನೆ ನೂರು ಪಟ್ಟು ಹೆಚ್ಚಿಸಿ ದೊಡ್ಡ ಭೂತಗನ್ನಡಿಯ ಆಚೆ ಬದಿ ನಿಂತು ನೋಡಿದಂತೆ ಆಗುತ್ತದೆ ಇಲ್ಲಿ. ಘರ್ಷಣೆ ಎಂದರೆ ಇದು. ಲಕ್ಷ ಲಕ್ಷ ವರ್ಷಗಳಿಂದ, ಒಂದು ಅರೆ ಕ್ಷಣವೂ ತಪ್ಪದಂತೆ, ಹೀಗೆ ಇಲ್ಲಿ ಈಗ ಬರೆಯುತ್ತಿರುವ ಹೊತ್ತಿನಲ್ಲೂ ಅಲ್ಲಿ ನಡೆದೇ ಇರುವ ಘರ್ಷಣೆ. ಗೊತ್ತು ಇಲ್ಲದ, ಗುರಿ ಇಲ್ಲದ, ಆಗುತ್ತಿರುವ, ಆಗುತ್ತಲೇ ಇರುವ ಘರ್ಷಣೆ. +ಹೇಮಕುಂಡದ ನೀರು ಪ್ರಶಾಂತವಾಗಿತ್ತು-ಮೇಲೆಲ್ಲ ಹೆಪ್ಪುಗಟ್ಟಿ ಚಳಿಯಲ್ಲಿ ನೀರ ಪದರದ ಮೇಲೆಲ್ಲ ಹಬೆಯಾಡುತ್ತ, ಹಿಮದ ತೆಳು ಹಲಗೆಗಳು ಒಡೆದು ತೇಲುತ್ತ, ನನ್ನ ಬೆರಳು ಮಾತ್ರ ನೀರನ್ನು ಮುಟ್ಟಿದವು. ಬಹುಶಃ ಸುತ್ತ ಇರುವ ಏಳು ಶಿಖರಗಳಷ್ಟೆ ಆಳ ಇದೆಯೋ? ಮುಟ್ಟಲಾಗದ ನೀರು. ಒಳಕ್ಕೆ ಬಾ ಎಂದು ಕರೆಯುವ, ಅಂಚನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಖಾತರಿಯಾಗಿ ಇಲ್ಲವಾಗಿಸಿಬಿಡುವ ಸಾಯಿಸಿಬಿಡುವ ನೀರು. +ಪ್ರವಾಸಿಯಾಗಿ ಹೋಗಿ. ಗೆಳೆಯರೊಡನೆ ನಿಂತು. ಆಹಾ ಅಂದು ಓಹೋ ಅಂದು. ಕ್ಯಾಮರಾದಲ್ಲಿ ಫೊಟೋ ಹಿಡಿದು, ಮಾತಿನಲ್ಲಿ ವಿವರಿಸಿ ತಿಳಿದುಬಿಟ್ಟೆ. ತಿಳಿಸಿಬಿಟ್ಟೆ ಎಂಬುದೆಲ್ಲ ಬರೀ ಭ್ರಮೆ, ಸುಳ್ಳು. ಗೊತ್ತಿದೆ ಗುರಿಯಿದೆ ಅಂತೆಲ್ಲ ನಂಬಿಕೊಂಡಾಗ ಆಗುವುದೇ ಹಾಗೆ. ಸುಮ್ಮನೆ ಇರುವ ಅಗಾಧ ಶಕ್ತಿ ಮತ್ತು ಅದರ ಎದುರಿಗೆ ನಿಶ್ಯಕ್ತ ಮೈ. ನಿಶ್ಯಕ್ತ ಬುದ್ಧಿ, ನಿಶ್ಯಕ್ತ ಮನಸ್ಸು. +ಎರಡು ದಿನದಿಂದ ನೆನಪು ನಿಶ್ಯಕ್ತಿ ತಂದಿದೆ. ಅಥವ ಗೊತ್ತುಗುರಿ ಇಲ್ಲದ ನಿಶ್ಯಕ್ತಿ. ಸ್ವಲ್ಪ ಪಾದ ಮುಳುಗಿದರೂ ಸಾಕು, ಪಾದದ ಬೆರಳು ಸೋಕಿದರೂ ಸಾಕು, ಇಡೀ ಮುಳುಗಿದಂತೆಯೇ. ಇಷ್ಟುವರ್ಷ ಆದಮೇಲೂ ಈಗ ಮೈಗೆಲ್ಲ ನೆನಪು ಮೆತ್ತಿಕೊಂಡು ಒರೆಸಿಕೊಳ್ಳುವುದಕ್ಕೆ ಒಣಗಿಸಿಕೊಳ್ಳುವುದಕ್ಕೆ ಆಗದೆ ಮನಸ್ಸಿನ ಹೊಂಡದಲ್ಲಿ ಸುಮ್ಮನೆ ಬಿದ್ದಿರುವ ಆಸೆ ಆಗುತ್ತಿದೆ. +ಮೈಸೂರಿನಲ್ಲಿ ಸ್ಮಶಾನದಿಂದ ನಡೆದುಕೊಂಡು ಬರುತ್ತಿದ್ದೇನೆ. ಕತ್ತಲಾಗುತ್ತಿದೆ. ಜೊತೆಗೆ ಯಾರೋ ಇದ್ದಾರೆ. ಎದುರಿಗೆ ಇನ್ಯಾರೋ ಸಿಕ್ಕರು. “ಏನು ಈ ಕಡೆ? ನಿಮ್ಮ ತಂದೆಯವರನ್ನು ನೋಡದೆ ಬಹಳ ದಿನ ಆಯಿತು. ಊರಲಿಲ್ಲವೇ?” ಅಂತ ಕೇಳಿದರು. “ಹೋಗಿಬಿಟ್ಟರು” ಅಂದೆ. ಆಘಾತವಾದಂತಾಗಿ ನಿಂತುಬಿಟ್ಟರು. ನಾನೂ ನಿಂತೆ. ಆಮೇಲೆ ಸುಮ್ಮನೆ ಹೋದೆ. ಮನೆಗೆ ಹೋದಮೆಲೆ ಬಿಸಿನೀರಿನ ಸ್ನಾನ ಹಿತ ಅನ್ನಿಸಿತು. ಹುಳಿಯನ್ನದ ರುಚಿ ನಾಲಗೆಗೆ ತಿಳಿಯಿತು. ರಾತ್ರಿ ಒಂದು ಹೊತ್ತಿನಲ್ಲಿ ಅಮ್ಮ ಎದ್ದು ಅಳುತ್ತ ಕೆದರಿದ ತಲೆಗೂದಲನ್ನು ಸರಿಯಾಗಿ ಗಂಟುಹಾಕಿಕೊಂಡಾಗ ಪರವಾಗಿಲ್ಲ, ಮತ್ತೆ ಮಾಮೂಲಾಗುತ್ತಿದ್ದಾರೆ ನಿಧಾನವಾಗಿ ಅಂತ ಸಮಾಧಾನವಾಯಿತು. +ಎಂದಿನಂತೆ ಬೆಳಗಿನ ಜಾವ ನಾಲ್ಕೂವರೆಗೇ ಎಚ್ಚರವಾಯಿತು. ನನ್ನ ಸಹ-ವಾಸಿ, ತಮಿಳುನಾಡಿನ ಕೃಷ್ಣಮೂರ್ತಿ ಇನ್ನೂ ಬಿಗಿಯಾಗಿ ಹೊದ್ದು ಮಲಗಿದ್ದ. ಎಂದಿನಂತೆ. ಹಿಮಾಲಯದ ಚಳಿಗಾಲ. ಆಶ್ರಮದ ಜನರಿಗೆಲ್ಲ ನೀರು ಕಾಯಿಸುವ ಬಚ್ಚಲಮನೆಗೆ ಹೋದೆ. ಒಬ್ಬ ಮನುಷ್ಯ ದಿನಾ ಬೆಳಗಿನ ಮೂರು ಗಂಟೆಗೇ ಬಂದು ನೀರೊಲೆಗೆ ದೊಡ್ಡದಿಮ್ಮಿ ಒಡ್ಡಿ ನೀರು ಕಾಯಿಸುತ್ತ ಕೂತಿರುತ್ತಿದ್ದ. ನೀರೊಲೆಯ ಮುಂದೆ ಬೆಂಕಿಯ ಝಳ ಹಿತವಾಗಿತ್ತು. ಎಂದಿನಂತೆ. ಎಂದಿನಂತೆ ಅಲ್ಲಿ ಸ್ವಲ್ಪ ಹೊತ್ತು ಕೂತು ಸ್ನಾನಕ್ಕೆ ಮೊದಲು ಮೈ ಕಾಯಿಸಿಕೊಂಡೆ. ಆಶ್ರಮದ ಜನರಿಗೆ ಅಡುಗೆ ಮಾಡುವ ತೆಲುಗ ಮುದುಕ ಸ್ತೋತ್ರ ಹೇಳುತ್ತ ಸ್ನಾನ ಮಾಡುತ್ತಿದ್ದ. ಎಂದಿನಂತೆ. ಇನ್ನೊಂದು ಬಕೆಟ್ಟು ಬಿಸಿನೀರು ಕೃಷ್ಣಮೂರ್ತಿಗೆ ಒಯ್ದೆ. ಐದು ಗಂಟೆ. ರಾಧಾಕೃಷ್ಣಾನಂದ ಬೆಳಗಿನ ಧ್ಯಾನಕ್ಕೆ ಗುರುಮಂದಿರಕ್ಕೆ ಬಂದಿದ್ದರು. ಎಂದಿನಂತೆ. ಮಂದಪ್ರಕಾಶದ ಒಂದು ದೀಪ ಉರಿಯುತ್ತಿತ್ತು. ಎಂದಿನಂತೆ. ಕೆನಡಾದ ಮುದುಕ, ಅವನನ್ನು ಎಲ್ಲರೂ ಬಿಲ್ಲಿ ಅನ್ನುತ್ತಿದ್ದರು. ತನ್ನದೇ ಪುಟ್ಟ ಜಮಖಾನ ಹಾಸಿ ಕುಳಿತು ಧ್ಯಾನ ಮಾಡುತ್ತಿದ್ದ. ನಾವು ನಾಲ್ಕೇ ಜನ. ಮೌನ, ನಿಶ್ಯಬ್ಧ, ಕಣ್ಣು ಮುಚ್ಚಿ ಶಾಂತವಾಗಿ ಕೂತಿರುವಾಗ ಹೊರಗೆಲ್ಲ ಚಳಿಗಾಲದ ಬೆಳಗು ಆಗುತ್ತಿರುವುದು. ಕ್ಷಣ ಕ್ಷಣ ಆಗುತ್ತಿರುವ ಬದಲಾವಣೆಗಳು ಗೊತ್ತಿಲ್ಲದಂತೆಯೇ ಗೊತ್ತಾಗುತ್ತಿದ್ದವು. ವಿಶ್ವನಾಥಮಂದಿರದಲ್ಲಿ ಬೆಳಗಿನ ಪೂಜೆಯ ಗಂಟೆ ಬಾರಿಸಿತು. ರಾಜುಗಾರು, ಇನ್ನೊಬ್ಬ ತೆಲುಗು ಹುಡುಗ ಅಶೋಕ, ಹೃದಯ ರೋಗದಿಂದ ನರಳುತ್ತಿರುವ ಚಂಡೀಗಢದ ಮುದುಕಿ ಆಗಲೇ ಬಂದು ಪ್ರದಕ್ಷಿಣೆಹಾಕಿ, ನಮಸ್ಕಾರ ಮಾಡಿ, ಪ್ರಸಾದದ ಮಿಠಾಯಿ ಇಸಿದುಕೊಂಡು ತಿನ್ನುತ್ತಿದ್ದರು. ಎಂದಿನಂತೆ. ಊಟದ ಮನೆಯಲ್ಲಿ ಅವಲಕ್ಕಿ, ಚಹಾ ರೆಡಿಯಾಗಿತ್ತು. ನಕ್ಕು, ತಲೆದೂಗಿ, ಮಾತಾಡಿಸಿ ಒಬ್ಬರನ್ನಿನ್ನೊಬ್ಬರು, ತಿಂಡಿ ತಿಂದು ಎಲ್ಲರೂ ಹಿಂದಿರುಗಿದೆವು. ಎಂದಿನಂತೆ. ಬ್ರಹ್ಮಾನಂದರು ನಡೆಸುವ ಬೆಳಗಿನ ತರಗತಿ ಶುರುವಾಯಿತು. ಜ್ಞಾನದೇವನ ಅನುಭವಾಮೃತ, ನೇರ ಅವರೆದುರಿನ ಗೋಡೆಯ ಮೂಲೆಗೊರಗಿ ಕುಳಿತೆ. ನನ್ನ ಎಂದಿನ ಜಾಗದಲ್ಲಿ. ಲೀಲಾ ಬಂದು ನನ್ನ ಪಕ್ಕ ಕುಳಿತಳು. ಎಂದಿನಂತೆ. ಎಂಭತ್ತರ ಅಂಚಿನ ಬ್ರಹ್ಮಾನಂದರ ಮಾತು, ಕೇಳಿಸಿಕೊಂಡರೆ, ಎಂಥ ಕೆರಳಿದ ಮನಸ್ಸಿಗೂ ಅದ್ಭುತವಾದ ಸೆಡೆಟಿವ್. ಆಮೇಲೆ ನಾನು ಪ್ರೆಸ್ಸಿಗೆ ಹೋದೆ. ಎಂದಿನಂತೆ. ಫ್ರೂಫ್‌ಗಳು ಬಂದಿದ್ದವು, ಎಂದಿನಂತೆ. ಎಂದಿನಂತೆ. ನಿನ್ನೆ ಸತ್ತುಹೋದ ಸನ್ಯಾಸಿ ದೈನಿಕಗಳಲ್ಲಿ ಮರೆತುಹೋಗುತ್ತಿದ್ದ. ಇಡೀ ಆಶ್ರಮ ಅವನು ಇರಲೇ ಇಲ್ಲವೇನೋ ಅನ್ನುವ ಹಾಗೆ ಎಂದಿನಂತೆ ಇನ್ನೊಂದು ದಿನಕ್ಕೆ ಬಂದುಬಿಟ್ಟಿತ್ತು. +ನಮ್ಮ ಮನೆಯ ಹಿಂದೆ ದೊಡ್ಡಕೆರೆಯ ಏರಿ ಇತ್ತು. ಅದರ ಮೇಲೆ ಬೆಳಗಿನ ಜಾವದಲ್ಲಿ, ನಂಜನಗೂಡಿನ ಕಡೆಯಿಂದ ಸಾಲಾಗಿ ಎತ್ತಿನಗಾಡಿಗಳು ಲಾಟೀನು ಹಚ್ಚಿಕೊಂಡು ಬರುತ್ತಿದ್ದವು. ಮನೆಯ ಪಕ್ಕದಲ್ಲಿ ಎಲೆಯ ತೋಟವಿತ್ತು. ಅಲ್ಲಿ ಒಂದು ನಲ್ಲಿ ಇತ್ತು. ನಲ್ಲಿಯ ಮುಂದೆ ಹೆಂಗಸರು ಜಗಳವಾಡುತ್ತಿದ್ದರು. ಎಲ್ಲ ಎಂದಿನಂತೆ. ಅಪ್ಪ ನೆನಪು ಮಾತ್ರ ಆಗಿಬಿಟ್ಟಿದ್ದರು. +ಆಗಾಗ ಅನಿರೀಕ್ಷಿತವಾಗಿ, ನನ್ನ ಕನಸಿನಲ್ಲಿ ಜಡೆಹಾಕಿಕೊಂಡ ಅಪ್ಪನಾಗಿ, ಅಳುವ ಅಪ್ಪನಾಗಿ, ವಾದಮಾಡುವ ಅಪ್ಪನಾಗಿ, ಹೆದರಿಸುವ ಅಪ್ಪನಾಗಿ, ನಗುತ್ತ ಸಮಾಧಾನ ಹೇಳುವ ಅಪ್ಪನಾಗಿ, ಬಂದುಹೋಗುತ್ತಿದ್ದರು. ಮನೆ ಬದಲಾಯಿಸಿದೆವು. ಊರು ಬದಲಾಯಿಸಿದೆವು. ಬೇರೆ ಊರುಗಳಲ್ಲಿ ಬೇರೆ ಬೇರೆ ಮನೆಗಳಿಗೆ ಹೋದೆವು. ಊರು ಬದಲಾಗುತ್ತ, ಮನೆಬದಲಾಗುತ್ತ, ಜನ ಬದಲಾಗುತ್ತ, ನಾನು ಹೃಷಿಕೇಶಕ್ಕೆ ಬಂದೆ. +ಮುಗಿಸಬೇಕೆಂಬ ಆಸೆಯ ಬರವಣಿಗೆ +ಇದೇ ಮೊದಲ ಬಾರಿಗೆ ನನ್ನ ಹಿಮಾಲಯವನ್ನು ಕುರಿತು ನನ್ನದೇ ಕಂಪ್ಯೂಟರಿನಲ್ಲಿ ಬರೆಯುತ್ತಿದ್ದೇನೆ. ಹೃಷಿಕೇಶದಲ್ಲಿ ಆತ್ಮಾನಂದ ಕಲಿಸಿಕೊಟ್ಟ ವಿದ್ಯೆ ಈಗ ಉಪಯೋಗಕ್ಕೆ ಬರುತ್ತದೆ ಅಂದುಕೊಂಡಿರಲಿಲ್ಲ. ಆಗ. ಕೃಷ್ಣಾನಂದರು ನನ್ನ ಮೂರು ದಿನ ಸುಮ್ಮನೆ ಇರಲು ಬಿಟ್ಟು ಆಮೇಲೆ ಕೇಳಿದರು-“ನೀನು ಇಲ್ಲಿದ್ದು ಏನು ಮಾಡುತ್ತೀ?” ನನಗೆ ಉತ್ತರ ಹೇಳಲು ತೋರಲಿಲ್ಲ. ನಾನು ಇಷ್ಟು ವರ್ಷ ಕಲಿತ ವಿದ್ಯೆ. ನನ್ನ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು, ಒಂದಷ್ಟು ಹೆಸರು ಕೊಟ್ಟು, ನಾನೆಂದರೆ ಏನೇನೋ ಅನ್ನುವ ಭ್ರಮೆ ಹುಟ್ಟಿಸಿದ್ದ ವಿದ್ಯೆ ಈಗ ಏನೇನೂ ಅಲ್ಲ ಅನ್ನಿಸಿಬಿಟ್ಟಿತ್ತು. ಓದು ಬರಹ ಮಾತು-ಇಷ್ಟು ಬಿಟ್ಟು ಇನ್ನೇನು ಮಾಡಬಲ್ಲೆ ನಾನು? ನನ್ನ ವಿದ್ಯಾರ್ಥಿಗಳಿಗೆ ಕಂಡಹಾಗಲ್ಲ. ನಮ್ಮ ಬಾಡಿಗೆ ಮನೆಯ ಯಜಮಾನನಿಗೆ ಕಂಡಹಾಗಲ್ಲ. ನನ್ನ ಹೆಂಡತಿಗೆ ಕಂಡಹಾಗಲ್ಲ. ನನ್ನ ಪ್ರೀತಿಸಿದ ಹುಡುಗಿಗೆ ಕಂಡಹಾಗಲ್ಲ. ನಾನು ಏನೇನೋ ಎಂದು ನನ್ನ ಕಲ್ಪನೆಯಲ್ಲಿ ನನಗೇ ಕಂಡ ಹಾಗೂ ಅಲ್ಲ ಧತ್ ಅಂತ ಪ್ರಶ್ನೆ ಎದುರು ನಿಂತಿತು. ನಾನು ಏನು ಮಾಡಬಲ್ಲೆ? ನಾನು ಮಾತಾಡುವ ಕ್ಷಣದಲ್ಲೇ ನನ್ನ ಉತ್ತರ ಪೆದ್ದು ಅನ್ನಿಸುತ್ತಿದ್ದರೂ, ನನಗೇ ಕೇಳಿಸದಷ್ಟು ದುರ್ಬಲ ಧ್ವನಿಯಲ್ಲಿ. ಏನೇನೂ ವಿಶ್ವಾಸ ಇಲ್ಲದೆ ಹೇಳಿದೆ: “ನನಗೆ ಕನ್ನಡ ಬರುತ್ತೆ, ಇಂಗ್ಲಿಷ್ ಬರುತ್ತೆ, ಇಲ್ಲಿನ ಗುರುಗಳ ಪುಸ್ತಕಗಳು ಇವೆಯಲ್ಲ ಅವನ್ನು ಅನುವಾದ ಮಾಡಬಲ್ಲೆ.” ತಟ್ಟನೆ ಕೇಳಿದರು: “ಯಾರು ಓದುತ್ತಾರೆ ಅವನ್ನೆಲ್ಲ?” ಕೃಷ್ಣಾನಂದರಿಗೆ ಸಂಸ್ಕೃತ, ಕನ್ನಡ, ತಮಿಳು, ಮಲೆಯಾಳಂ, ಇಂಗ್ಲಿಶ್ ಇಷ್ಟೂ ಚೆನ್ನಾಗಿ ಓದಲು, ಮಾತಾಡಲು, ಬರೆಯಲು ಬರುತ್ತಿತ್ತು. ವಿದ್ವಾಂಸ, ಮೊನಚು ಮಾತಿನ ಮೃದು ಹೃದಯದ ಖಂಡಾಖಂಡಿತವಾದ ಆದರೆ ನಿರ್ಲಿಪ್ತವಾದ ವರ್ತನೆಯ ವೃದ್ಧ, ಗುರು. ಹರಿದ್ವಾರದ ಪ್ರೊಫೆಷನಲ್ ಸನ್ಯಾಸಿಗಳಲ್ಲಿ ಇರದ ಏನೋ ಇವರಲ್ಲಿತ್ತು-ಅದು ಪ್ರಾಮಾಣಿಕತೆ, ನೋವು ಕೊಡದ, ನೋವು ಪಡದ ನಿರ್ಲಿಪ್ತ ಕಠಿಣ ಪ್ರೀತಿ. +ಹರಿದ್ವಾರದಿಂದ ಏಟು ತಿಂದ ಬೀದಿನಾಯಿಮರಿಯ ಹಾಗೆ ಹೃಷಿಕೇಶಕ್ಕೆ ಬಂದಿದ್ದೆ. ಗಣೇಶಪುರಿಯವರ ಎದುರಿನಲ್ಲಿ ಮಾತಾಡಲು ಆಗಲಿಲ್ಲ. ಅಥವ ನನ್ನ ಮನಸ್ಸು ಅವರಿಗೆ ತಿಳಿಯಲಿಲ್ಲ. ಅಥವ ಅವರಿಗೆ ನಾನು ಸುಳ್ಳು ಹೇಳಿದೆ. ಗಣೇಶಪುರಿ ಕೇಳಿದರು, ಹಿಂದಿಯಲ್ಲಿ-“ಹೇಳು, ನೀನು ಯಾರು, ಬಂದದ್ದು ಯಾಕೆ, ನಮ್ಮಿಂದ ಏನಾಗಬೇಕು?” “ ನನಗೆ ಹಿಂದಿ ಬರಲ್ಲ. ಮಾತಾಡುವುದು ಕಷ್ಟ” ಅಂದೆ. “ಪರವಾಗಿಲ್ಲ, ಭಾವ್ ಸಮಝ್ ತೇ ಹೈ, ಹೇಳು” ಅಂದರು. ದಿನಾ ಸಂಜೆ ಬೆಳಿಗ್ಗೆ ಬ್ರಾಹ್ಮಣ ಪಂಡಿತರ ಮಾತು ಕೇಳುತ್ತಿದ್ದ ಅಂಗಳದಲ್ಲಿ ಗಣೇಶಪುರಿ, ಅಲ್ಲಿನ ಮುಖ್ಯಮಂತ್ರಿ ಮತ್ತು ನಾನು ಇಷ್ಟೇ ಜನ ಇದ್ದದ್ದು. ಬೆಳಗಿನ ಬಿಸಿಲು ಇತ್ತು. ಚಳಿ ಇತ್ತು. ಇದುವರೆಗೆ ಅಲ್ಲಿನ ಮುಖ್ಯಸ್ಥರಂತಿದ್ದವರೆಲ್ಲ ಈಗ ಗಣೇಶ ಪುರಿ ಹಿಂದಿರುಗಿದ ಮೇಲೆ ಅಡಗಿಕೊಂಡಂತಿದ್ದರು. ಇಡೀ ಆಶ್ರಮ ನಿಶ್ಯಬ್ಧವಾಗಿತ್ತು. ನಾನು ಕಾಯುತ್ತಿದ್ದೇನೆ ಅಂದುಕೊಂಡಿದ್ದ ಕ್ಷಣ ಬಂದುಬಿಟ್ಟಿತ್ತು. ನನಗೆ ನಾನೇ ಹೇಳಿಕೊಂಡಿರದ ಮಾತನ್ನು ಈಗ ಗುರುವಿನ ಎದುರು ಹೇಳುವುದು ಹೇಗೆ? ನಾನು ಯಾರು ಅನ್ನುವುದಕ್ಕೆ ಸುಲಭವಾಗಿ ಇಂಥವನು. ಇಂಥ ಹೆಸರು, ಇಂಥ ಕೆಲಸ ಅಂತ ಹೇಳಿಬಿಟ್ಟೆ. ಯಾಕೆ ಬಂದದ್ದು ಅನ್ನವುದಕ್ಕೆ ತಡವರಿಸಿ, ನೆಲನೋಡಿ, ಮಾತು ಬರದೆ, ನಿಜ ಹೇಳಬೇಕೆನಿಸಿ ಆದರೆ ಹೇಳಲಾರದೆ, ಏನು ಬೇಕು ಎಂದು ತಿಳಿಯದೆ ನನಗೇ ಕೇಳಿಸದಷ್ಟು ಮೆಲ್ಲನೆ ಧ್ವನಿಯಲ್ಲಿ ಮಾತಾಡಿದೆ. +“ನನ್ನ ಹೆಂಡತಿ ನನ್ನ ದೂರ ಮಾಡಿದ್ದಾಳೆ.” +ಸುಳ್ಳು, ಹಾಗೆ ಹೇಳುತ್ತಿರುವ ಕ್ಷಣದಲ್ಲೆ ನನ್ನ ಬಗ್ಗೆಯೇ ಅ-ಸಹ್ಯ ಅನ್ನಿಸಿತು. ನಿಜ ಯಾವಾಗಲೂ ಯಾರಿಗೆ ಬೇಕಾದರೂ ಹೇಳಿಬಿಡುತ್ತೇನೆ ಅಂದುಕೊಂಡಿದ್ದೆ. ಅಲ್ಲ. ಹೇಳಬೇಕಾದ ಕ್ಷಣ ಬಂದಾಗ ಸಮರ್ಥನೆಯ ಗುಟ್ಟಾದ ಆಸೆ ನನ್ನ ತಪ್ಪೇನೂ ಇಲ್ಲ ಅನ್ನುವ ಹಾಗೆ. ನನಗೇ ಅನ್ಯಾಯ ಆಗಿದೆ ಎಂದು ತೋರಿಸಿಕೊಳ್ಳುವ ಹಾಗೆ, ಹೀಗೆ ನುಡಿಸಿಬಿಟ್ಟಿತು. +ಭಾವ ತಿಳಿಯಿತು ಎಂದು ಕಾಣುತ್ತದೆ. +“ಈಗ ಏನು ಮಾಡಬೇಕೆಂದಿದ್ದೀ?” +“ಇಲ್ಲೆ ಇರಬೇಕೆಂದಿದ್ದೇನೆ.” +“ಸಾಧ್ಯ ಇಲ್ಲ.” +“ಏನಾದರೂ ಕೆಲಸ ಮಾಡಿಕೊಂಡಿರುತ್ತೇನೆ.” +“ಇಲ್ಲಿ ನಾವು ಯಾರನ್ನೂ ಕೆಲಸಕ್ಕೆ ಇಟ್ಟುಕೊಳ್ಳಲ್ಲ.” +ಮಾತಾಡದೆ ಸುಮ್ಮನಿದ್ದೆ. +“ನಿನಗೆ ಏನು ಬೇಕು ಎಂದು ನಿನಗೆ ತಿಳಿದಿಲ್ಲ. ಅದು ಸ್ಪಷ್ಟ ಆದಾಗ ಬಾ. ನಮ್ಮಲ್ಲಿ ನಿನಗೆ ಕೊಡಲು ಏನೂ ಕೆಲಸ ಇಲ್ಲ.” +ಮಾತಾಡದೆ ಸುಮ್ಮನಿದ್ದೆ. +ಅವರೂ. +ಅತ್ತ ಇತ್ತ, ಬೆನ್ನಹಿಂದೆ ಕೈ ಕಟ್ಟಿಕೊಂಡು, ಆಗ ತಾನೇ ಸ್ನಾನ ಮಾಡಿಬಂದ ಮೈ ಹೊತ್ತುಕೊಂಡು, ಶತಪಥ ತಿರುಗಿದರು. +“ನೀನು ಈಗಲೇ ಇಲ್ಲಿಂದ ಹೊರಟುಹೋಗು. ಹೃಷಿಕೇಶಕ್ಕೆ ಹೋಗು. ಅದು ನಿನಗೆ ಸರಿಯಾದ ಜಾಗ ಅನ್ನಿಸುತ್ತೆ. ನಿಮ್ಮ ಭಾಷೆ ಮಾತಾಡುವವರು ಅಲ್ಲಿದ್ದಾರೆ. ನಿನಗೆ ಏನುಬೇಕು ಎಂದು ಸ್ಪಷ್ಟವಾಗಿ ತಿಳಿದಾಗ ಇಲ್ಲಿಗೆ ಬಾ.” ಅಂತ ಮಾತು ಮುಗಿಸಿದರು. ಹೃಷಿಕೇಶದಲ್ಲಿ ಯಾರನ್ನು ನೋಡಬೇಕೆಂದು ವಿಳಾಸ ಹೇಳಿದರು. +ಹೋಗು ಎಂದಮೇಲೆ, ಈಗಲೇ ಹೋಗು ಎಂದಮೇಲೆ ಇರುವುದು ಹೇಗೆ. ನಮಸ್ಕಾರ ಮಾಡಿ ಬಂದೆ. ಗುಜರಾತಿನ ಮುದುಕನ ಹತ್ತಿರ ಹೋಗಿ ಸ್ವಾಮಿಗಳ ದರ್ಶನ ಆಯಿತು. ಹೃಷಿಕೇಶಕ್ಕೆ ಹೋಗುವಂತೆ ಹೇಳಿದ್ದಾರೆ. ಹೊರಟೆ ಅಂತಹೇಳಿದೆ. ತಮಗಿಂತ ಮುಂಚೆ ಗುರುವನ್ನು ನಾನು ಅಷ್ಟು ಬೆಳಗ್ಗೆಯೇ ಕಂಡಿದ್ದಕ್ಕೆ ಆಶ್ಚರ್ಯ ಆಗಿತ್ತು ಅವರಿಗೆ. +“ಯಾವಾಗ ಹೋಗುತ್ತೀ?” +“ಈಗಲೇ.” +“ನಾವೂ ಇವತ್ತು ಸ್ವಾಮಿಗಳನ್ನು ನೋಡಿಕೊಂಡು, ಅವರು ಹೇಳಿದ ಮೇಲೆ ಊರಿಗೆ ಹೋಗುತ್ತೇವೆ. ನಮ್ಮ ಊರಿಗೆ ತಪ್ಪದೆ ಬಾ.” ವಿಳಾಸ ಕೊಟ್ಟರು. ಕಳೆದುಬಿಟ್ಟೆ. ಈಗ ಅವರ ನೆನಪು ಇದೆ. +ಹತ್ತು ನಿಮಿಷದಲ್ಲಿ ನನ್ನ ಇದ್ದ ಒಂದು ಚೀಲ ಸಿದ್ಧವಾಯಿತು. ನಾನು ಅಲ್ಲಿಗೆ ಮೊದಲು ಬಂದಾಗ ಸ್ವಾಗತಿಸಿದ್ದ ದಿನಾ ಶಾಂತಿ ಪಾಠ ಹೇಳುತ್ತಿದ್ದ ವೃದ್ಧನನ್ನು ಹುಡುಕಿದೆ. ಗಣೇಶ ಪುರಿ ಹೀಗೆ ಹೃಷಿಕೇಶಕ್ಕೆ ಇಂಥಲ್ಲಿಗೆ ಹೋಗಲು ಹೇಳಿದರು. ಹೋಗಿ ಬರುತ್ತೇನೆ. ನಿಮ್ಮ ಆಶ್ರಮಕ್ಕೆ ಏನಾದರೂ ಕೊಡಬೇಕನ್ನಿಸುತ್ತೆ. ಆದರೆ ಹಣ ಜಾಸ್ತಿ ಇಲ್ಲ. ಈ ಐವತ್ತು ರೂಪಾಯಿ ಇಟ್ಟುಕೊಳ್ಳು ಅಂದೆ. ನಿಮ್ಮ ಬಾಯಲ್ಲಿ ಕೊಡಬೇಕು ಅನ್ನುವ ಮಾತು ಬಂತಲ್ಲ, ಅಷ್ಟು ಸಾಕು. ಕೊಟ್ಟಂತೆಯೇ ಆಯಿತು. ನಿಮ್ಮ ಸಮಯಕ್ಕೆ ಆಗುತ್ತೆ. ನೀವೇ ಇಟ್ಟುಕೊಳ್ಳಿ ಅಂದ. ಆದರೂ ಕೊಟ್ಟೆ, ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡ. ನಿಮಗೆ ಶಾಂತಿಸಿಗಲಿ. ಹೋಗಿಬನ್ನಿ, ಒಳ್ಳೆಯದಾಗುತ್ತದೆ ಅಂದ. +ತೀರ ಸಂತೋಷವಾಗಿ, ಹೋಗಲು ಇನ್ನೊಂದು ಗುರಿ ಸಿಕ್ಕಿತು ಅಂದುಕೊಂಡು ಬೆಳಗಿನ ಬಿಸಿಲಲ್ಲಿ ಹೊರಟುಬಿಟ್ಟೆ. ಗಂಗೆಯ ಸೇತುವೆ ದಾಟಿದೆ. ಇನ್ನಷ್ಟು ಮೇಲೆ, ಗಂಗೆಯ ತಡಿಯ ಇನ್ನೊಂದು ಊರಿಗೆ, ಹಿಮಾಲಯದ ಬೆಟ್ಟಗಳ ತಪ್ಪಲಿಗೆ. ಅಲ್ಲಿ ಹೀಗೆಲ್ಲ ಇರುತ್ತೇನೆಂದು ಅಂದುಕೊಂಡಿರಲಿಲ್ಲ. +ಮತ್ತೆ ಬರವಣಿಗೆಯ ಎಂಟನೆಯ ದಿನ +ಇನ್ನು ಹದಿನೈದು ಇಪ್ಪತ್ತು ದಿನಗಳಲ್ಲಿ ಬಹುಶಃ ಮತ್ತೆ ಹೃಷಿಕೇಶಕ್ಕೆ ಹೋಗುತ್ತೇನೆ. ಹಾಗಂದುಕೊಂಡಾಗ ಹುಮ್ಮಸ್ಸು, ಉತ್ಸಾಹ, ಅಲ್ಲಿನ ಜನ, ನದಿ, ಮೆಟ್ಟಿಲು, ಮರ, ಕೋತಿ, ಪ್ರೆಸ್ಸು, ಲೈಬ್ರರಿಯ ಮಾತಾಜಿ, ನರಸಿಂಹನ್, ಕೃಷ್ಣಮೂರ್ತಿ, ಜಯಕುಮಾರ, ಬ್ರಹ್ಮಾನಂದ….. ಕೊನೆಯಿಲ್ಲದಂತೆ ಬೆರೆತುಕೊಂಡ ಒಂದರೊಳಗೊಂದರೊಳಗೊಂದು ಚಿತ್ರಗಳು. ನಿಜದಲ್ಲೂ ಕನಸಿನಲ್ಲೂ. ಬೆಂಗಳೂರಿನ ನಮ್ಮ ಮನೆಯಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದೇನೆ, ಕನಸಿನಲ್ಲಿ. ‘ಸ್ಪಿರಿಚ್ಯು‌ಅಲ್ ಇಂಪೋರ್ಟ್ ಆಫ್ ರಿಲಿಜಿಯಸ್ ಫೆಸ್ಟಿವಲ್’ ಪುಸ್ತಕ ಸಿಗುತ್ತಲೇ ಇಲ್ಲ. ಅದರಲ್ಲಿ ಆಶ್ರಮದ ಫೋನು ನಂಬರು ಬರೆದಿಟ್ಟಿದ್ದೇನೆ. ಸಿಗುತ್ತಲೇ ಇಲ್ಲ. ಇನ್ನೊಂದು. ಉದ್ದವಾದ ರೈಲ್ವೆ ಪ್ಲಾಟ್ ಫಾರಂ. ಖಾಲಿ ಕಂಬಿಗಳು. ನಾನು ಹತ್ತಬೇಕಾದ ರೈಲು ಅಲ್ಲಿಲ್ಲ. ಬೇರೆ ಕಡೆ ಬರುತ್ತದಂತೆ. ಓಡಿದೆ. ರೈಲಿನ ಕೊನೆಯ ಬೋಗಿ ಹೋಗುತ್ತಿರುವುದು ಕಾಣುತ್ತಿದೆ, ದೂರದಲ್ಲಿ. ಇನ್ನೊಂದು. ಎರಡೇ ಬೋಗಿಗಳ ರೈಲು. ಹತ್ತಿದರೆ ಮಲಗಲು ಜಾಗವೇ ಇಲ್ಲ. ಇನ್ನೊಂದು. ಇಳಿಜಾರಲ್ಲಿ ಸಾಗುವ ರೈಲು ಕಂಬಿಗಳು. ದೊಡ್ಡ ದೊಡ್ಡ ಬಿಳೀ ಜಲ್ಲಿ ಕಲ್ಲುಗಳು. ಎರಡು ದಿಕ್ಕಿಗೆ ಎರಡು ದಾರಿ. ಹೋಗುತ್ತಿರುವ ರೈಲು ಬಸ್ಸಾಗಿದೆ. ನಾನು ರೈಲಿನೊಳಗಿದ್ದು ಕಂಬಿ, ಜಲ್ಲಿ ನೋಡುತ್ತಿದ್ದಂತೆ ನಾನು ಹೊರಗಿದ್ದು ರೈಲು ಹೋಗಿಬಿಡುತ್ತಿದೆ. ಕನಸು. ಕನಸು. ಸ್ಟೇಷನ್ನು. ರೈಲು ಬದಲಾಯಿಸಬೇಕು. ಟಿಕೀಟುಕೊಡುವವನು ಇಲ್ಲ. ಇದಾನೆ. ನನ್ನ ಮಾತು ತಿಳಿಯುತ್ತಿಲ್ಲ. ಎಷ್ಟೊಂದು ದೊಡ್ಡ ರೈಲು ಬಂದು ಹೊರಟೇ ಬಿಡುತ್ತಿದೆ. ಸಾಯಂಕಾಲ. ಕತ್ತಲಾದರೂ ಕಬ್ಬಿಣದ ಗೇಟಿನ ಹತ್ತಿರ ಟಿಕೀಟು ಕೊಡುವ ಗೂಡನ್ನೇ ನೋಡುತ್ತ ಸುಮ್ಮನೆ ನಿಂತಿದ್ದೇನೆ. ನೀಲಿ ಬಣ್ಣದ ಕಂಬಗಳಿರುವ ಮಾಳಿಗೆ ಮನೆ. ಬೊಚ್ಚುಬಾಯಿ ರಾಜುಗಾರು ಜೊತೆಗೆ ಯಾರುಯಾರೋ ಸ್ವಾಮಿಗಳು. ‘ಕೃಷ್ಣಾನಂದರು ಎಲ್ಲಿ?’ ಅಂದೆ. ಯಾರೂ ಮಾತಾಡಲಿಲ್ಲ. ಹೃಷೀಕೇಶದ ಬೀದಿಗಳಲ್ಲಿ ಅಲೆದೆ. ಗಂಗೆಯ ಆಚೆ ದಡದ ಆಶ್ರಮ. ಹುಲ್ಲುಗಾವಲು. ಕಟ್ಟಡಕ್ಕೆ ದೀಪಮಾಲೆಗಳ ಅಲಂಕಾರ. ಸಾಲು ಸಾಲು ಕೋಣೆಗಳು. ಅಯ್ಯೋ. ಹಾಳಾಗಿಬಿಟ್ಟಿವೆ. ಎಷ್ಟೊಂದು ಜನ. ಯಾವುದೋ ಸಾವಿನ ಮನೆಯ ಥರ? ಯಾರೂ ನನ್ನ ಗುರುತು ಹಿಡಿಯುತ್ತಿಲ್ಲ. ಮಂಚಗಳ ಮೇಲೆ ಕೂತು ಹರಟೆ ಹೊಡೆಯುತ್ತಿದ್ದಾರೆ. ಸ್ನಾನ ಮಾಡಿ ಬರುತ್ತಿದ್ದಾರೆ. ಪ್ರೆಸ್ಸಿನ ಹಳೇ ಟೈಪ್ ರೈಟರ್ ಸುಮ್ಮನೆ ಇದೆ. ಪ್ರೆಸ್ಸಿನ ಪಕ್ಕದ ಗುರುಭವನದ ಮೆಟ್ಟಿಲಿಗೆ ಹಾಕಿರುವ ಹಿತ್ತಾಳೆ ತಗಡು ಬಿಸಿಲಲ್ಲಿ ಫಳಫಳ. +ಕನಸು ಬರೀ ಅನುಭವ. ಅದಕ್ಕೆ ಅರ್ಥದ ಗೊಡವೆ ಇಲ್ಲ. ಎಚ್ಚರದ ನೆನಪಿನಲ್ಲಿ ಒಂದೊಂದಕ್ಕೂ ಎಷ್ಟೊಂದು ಅರ್ಥ ಎಷ್ಟೊಂದು ವ್ಯಾಖ್ಯಾನ. ಎಲ್ಲ ನಿಜ, ಎಲ್ಲ ಸುಳ್ಳು, ಎಲ್ಲ ಹೌದು, ಎಲ್ಲ ಅಲ್ಲ, ಎಲ್ಲವೂ ಎಲ್ಲಾನೂ ಆಗಿರುವಾಗ ಯಾವುದೋ ಒಂದು ಹೌದು ಇನ್ನೊಂದು ಅಲ್ಲ ಅನ್ನುವ ಹಾಗೆ ಮಾತ್ರ ಮಾತಾಡಲು ಸಾಧ್ಯವಿರುವುದು ದುರಂತವೋ ಅತೃಪ್ತಿಯೋ. ಇಂಥದೇ ತೊಡಕು ಅವತ್ತು ಬೆಳಗ್ಗೆ ಎಂಟು ಗಂಟೆಯ ಹೊತ್ತಿನಲ್ಲಿ ಗಣೇಶಪುರಿಯವರ ಎದುರು ನನಗೆ ಎದುರಾಗಿತ್ತು. ಕೃಷ್ಣಾನಂದರ ಇದುರಿನಲ್ಲೂ ಅಷ್ಟೆ. +ಗಣೇಶಪುರಿ ಎತ್ತರವಾದ ಆಳು. ಏನನ್ನೂ ನೋಡದಿರುವಂಥ ಕಣ್ಣುಗಳು. ಸುಮ್ಮನೆ ಬೆನ್ನಹಿಂದೆ ಕೈಕಟ್ಟಿಕೊಂಡು ಓಡಾಡುತ್ತಿದ್ದರು. ಅವರನ್ನು ನೋಡಲೆಂದೆ ನಾನು ಹದಿನೈದು ದಿನ ಕಾದಿದ್ದೆ. ಅವರು ಎದುರು ನಿಲ್ಲುವ ಕ್ಷಣ ಬಂದಿತ್ತು. ಅವರೊಡನೆ ಮಾತಾಡುವ ಮೊದಲೇ ಯಾಕೋ ನಾನು ಅಲ್ಲಿರುವ ದಿನಗಳು ಮುಗಿದವು ಅನ್ನಿಸುತ್ತಿತ್ತು. +ಅಂಜುತ್ತ, ಅವರು ಕೇಳಬಹುದಾದ ನಿರೀಕ್ಷಿತ ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರ ಕೊಡಲಾರೆನೆಂದು ಗೊತ್ತಿದ್ದರಿಂದ ಅಳುಕುತ್ತ, ಒಳಗೇ ಕುಗ್ಗಿ, ಮಾತಿನಲ್ಲಿ ವಿವರಿಸಲಾರೆನೆಂದು ಮಾತಿನಲ್ಲಿ ಹೇಳಲಾಗದೆ ಇದ್ದರೆ ನಾನು ಇಲ್ಲವೇ ಆಗುತ್ತೇನೆಂದು ಬೆದರಿ ಅದೃಢನಾಗಿ….. +ಮುಗಿಸಬೇಕೆಂಬ ಅವಸರ, ಎರಡನೆಯ ದಿನ +ನನಗೆ ನೆನಪಿರುವ ಚಿಕ್ಕಂದಿನಿಂದಲೂ ಅಷ್ಟೆ. ನಾನು ಬೇರೆ ಎಲ್ಲೋ ಇರಬೇಕಿತ್ತು. ಬೇರೆ ಯಾವುದೋ ಮನೆಯಲ್ಲಿ ಇರಬೇಕಿತ್ತು. ನನ್ನ ಜೊತೆಯಲ್ಲಿ ಇರುವವರಿಗಿಂತ ಬೇರೆ ಯಾರೋ ನನ್ನ ಜೊತೆಯಲ್ಲಿ ಇರಬೇಕಿತ್ತು ಹೀಗೆಲ್ಲ ಅನ್ನಿಸುತ್ತಿತ್ತು. ಆದರೆ ಹಿಮಾಲಯದಲ್ಲಿ ಮೊದಲ ಬಾರಿ ಹೋದಾಗ, ಇನ್ನೊಮ್ಮೆ ಹೋಗಿ ಇದ್ದಾಗ, ಮತ್ತೆ ಮೂರನೆಯ ಬಾರಿ ಪ್ರವಾಸಿಯಾಗಿ ಕೆಲವೇ ದಿನದ ಮಟ್ಟಿಗೆ ಹೋದಾಗ ಇಲ್ಲಿ ಬಿಟ್ಟು ಇನ್ನೆಲ್ಲೂ ಇರಬಾರದು ಅನ್ನಿಸಿತ್ತು. ಜೊತೆಗೆ ಯಾರೂ ಬೇಡ ಅನ್ನಿಸಿತ್ತು. ಹಸಿವಿಗಷ್ಟು ಅನ್ನ, ನಿದ್ದೆಗಷ್ಟು ಬೆಚ್ಚನೆ ಜಾಗ ಇದ್ದರೆ ಸಾಕು ಅನ್ನಿಸಿತ್ತು. ಈ ಬರೆವಣಿಗೆಯಾದರೂ ಅಷ್ಟೆ. ಇದರಲ್ಲಿ ತೊಡಗಿರುವಷ್ಟು ಹೊತ್ತು ಇದು ಮಾತ್ರ ನಿಜ ಅನ್ನಿಸುತ್ತದೆ. ಸುಮಾರು ಒಂಬತ್ತು ವರ್ಷ ಆಯಿತಲ್ಲ ಬರೆಯಲು ತೊಡಗಿ, ಬರೆದದ್ದು ಕಳೆದು, ಮತ್ತೆ ಬರೆದು, ನಿಲ್ಲಿಸಿ, ಮತ್ತೆ ಹಿಮಾಲಯಕ್ಕೆ ಹೋಗಿ, ಇದ್ದು. ಬಂದು, ಮತ್ತೆ ಬರೆದು ಒಂದಷ್ಟು, ಆಮೇಲೆ ಮತ್ತೆ ಮೂರನೆಯ ಬಾರಿಗೆ ಹೋಗಿ ಬಂದು, ಈಗ ತಿರುಗಿ ಬರೆಯುತ್ತ-ನಾನು ಇದನ್ನು ಮುಗಿಸುವುದೇ ಇಲ್ಲವೇನೋ ಅನ್ನಿಸುತ್ತಿದೆ. ಮುಗಿಸುವುದೆಂದರೆ ಇದಕ್ಕೆ ಒಂದು ಆಕಾರ ಕೊಟ್ಟು ಅಥವ ಕೊಟ್ಟ ಆಕಾರ ಪೂರ್ಣವೆಂದು ಭಾವಿಸಿ, ನನ್ನನ್ನು ಬಲ್ಲ ಅಥವ ಅರಿಯದ ಯಾವುಯಾವುದೋ ಮನಸ್ಸುಗಳಿಗೆ ಒಪ್ಪಿಸುವ ಕೆಲಸ. ಧೈರ್ಯವಿಲ್ಲದೆ ಅದಕ್ಕೆ ಮುಗಿಸಲು ಆಗುತ್ತಿಲ್ಲವೋ ಏನೋ. +ಹೃಷಿಕೇಶಕ್ಕೆ ಬಂದಾಗ ಬೆಳಿಗ್ಗೆ. ಸೀದಾ ಗಣೇಶಪುರಿ ಹೇಳಿದ ವಿಳಾಸಕ್ಕೆ ಹೋದೆ. ಅಲ್ಲಿ ಒಬ್ಬ ಬಿಳಿ ಉಡುಪಿನ, ಕಪ್ಪು ಮುಖದ ಏಸುಕ್ರಿಸ್ತನ ಫೊಟೋತರಹದ ಮುಖ ಮತ್ತು ಉದ್ದಕೂದಲಿನ ಮಲೆಯಾಳಿ ಕುಳಿತಿದ್ದ. “ಏನು ಬೇಕು?” ಅಂದ. ಇಂಗ್ಲಿಷಿನಲ್ಲಿ ಕೇಳಿದ್ದರಿಂದ ಒಂದು ಥರ ಸಮಾಧಾನ ಆಯಿತು. ಹೇಳಿದೆ-ಇಲ್ಲಿ ಉಳಿಯುವುದಕ್ಕೆ ಜಾಗ ಬೇಕು. ಸಾಧ್ಯ ಇಲ್ಲ. ನೀವು ಬರುವುದು ಮೊದಲೇ ತಿಳಿಸಿದ್ದರೆ ಮಾತ್ರ ಉಳಿಯಲು ಜಾಗ ಸಿಗುತ್ತದೆ ಅಂದ. ನಾನು ಹಾಗೆ ಪ್ರವಾಸಕ್ಕೆ ಬಂದಿಲ್ಲ. ಇದ್ದ ಕೆಲಸಕ್ಕೆ ರಾಜಿನಾಮೆ ಕೊಟ್ಟು ಇಲ್ಲೇ ಇರಲು ಬಂದಿದ್ದೇನೆ ಅಂದೆ. ಹಾಗೋ, ನೀವು ಸ್ಪಿರಿಚಿಯಲ್ ಲೈನಿಗೆ ಸೇರಬೇಕೆಂದಿದ್ದೀರಾ? ಅದಕ್ಕೆ ಕೃಷ್ಣಾನಂದರು ಒಪ್ಪಿಗೆ ಕೊಡಬೇಕು. ಅವರನ್ನು ಕಂಡುಬನ್ನಿ ಅಂದ. ಒಂದು ನಿಮಿಷ ವಿಚಿತ್ರವಾದ ಸಿಟ್ಟು, ತಮಾಷೆ ಆತಂಕ ಎಲ್ಲ ಅನ್ನಿಸಿತು. ಸಿನಿಮಾಲೈನು, ಬಿಸಿನೆಸ್‌ಲೈನು ಅನ್ನುವ ಹಾಗೆ ಅವನು ನನ್ನನ್ನು ಆಧ್ಯಾತ್ಮದ ಲೈನಿಗೆ ಬಂಡವಾಳ ಹೂಡಲು ಬಂದವನಂತೆ ಅಥವ ಆಧ್ಯಾತ್ಮದ ಲೈನಿನಲ್ಲಿ ಅಂಗಡಿ ತೆರೆಯಲು ಬಂದವನಂತೆ ನನ್ನ ಮಾತಾಡಿಸಿದಾಗ ಏನೂ ಹೊಳೆಯಲಿಲ್ಲ. ಆದರೂ ಉಳಿಯಲು ಜಾಗ, ಮಾಡಲು ಕೆಲಸ ಬೇಕಿತ್ತಲ್ಲ. ಕೃಷ್ಣಾನಂದರನ್ನು ನೋಡಿಯೇಬಿಡುವುದು ಅಂತ ಹೊರಟೆ. +ಅದು ಆಸ್ಪತ್ರೆ. ಮಹಡಿ ಮೇಲೆ ಕೆಲವು ಬೆಡ್ಡುಗಳ ಮೇಲೆ ಮಲಗಿ ನರಳುತ್ತಿರುವ ರೋಗಿಗಳು. ರೋಗಿಗಳ ವಾರ್ಡು ದಾಟಿದ ನಂತರ ಒಂದು ಪುಟ್ಟ ಪಡಸಾಲೆ. ಅಲ್ಲಿ ಮೂಲೆಗೆ ಒಂದು ಕುರ್ಚಿ. ಖಾಲಿ. ಕುರ್ಚಿಯ ಹಿಂದೆ ಚಚ್ಚೌಕ ಮೆಷ್ಷಿನ ಉದ್ದನೆ ಕಿಟಕಿ. ಒಂದು ಹತ್ತು ಹದಿನೈದು ಜನ ಕಾಯುತ್ತ ನೆಲದ ಮೇಲೆ ಹಾಸಿದ್ದ ಚಾಪೆಗಳಲ್ಲಿ ಕೂತಿದ್ದರು. ಮುದುಕರು, ವಿದೇಶದವರಂತೆ ಕಾಣುವ ಕೆಲವು ಮಧ್ಯವಯಸ್ಕರು, ಸುಮ್ಮನೆ ಗೋಡೆಗೆ ಒರಗಿ ಕಣ್ಣು ಮುಚ್ಚಿದ್ದವರು, ಅವರೆಲ್ಲ ಎಷ್ಟೋ ಕಾಲದಿಂದ ಅಲ್ಲೇ ಇದ್ದುಬಿಟ್ಟವರಂತೆ, ನಿರಿಮ್ಮಳವಾಗಿ ಕೂತಿದ್ದರು. ಕೆಲವು ಕಾವಿ ಹಾಕಿದ ಸನ್ಯಾಸಿಗಳು ಕುರ್ಚಿಯ ಎದುರು ಮುಚ್ಚಿದ್ದ ಬಾಗಿಲನ್ನು ಭಯ ಗೌರವಗಳಿಂದ ತೆಗೆದು ಸ್ವಲ್ಪವೇ ತಲೆ ಒಳಗೆ ಇಣುಕಿಸಿ, ಆಮೇಲೆ ಪೂರ್ತಿ ಒಳಹೊಕ್ಕು ಬರುತ್ತಿದ್ದರು. ನಾನು ಇರುವುದು ನನಗೇ ತಿಳಿಯುವಂತೆ ಆತಂಕದಿಂದ, ಏನು ನಿರೀಕ್ಷಿಸಬೇಕು ತಿಳಿಯದ ಗೊಂದಲದಿಂದ, ಹೇಗೆ ಮಾತಾಡಬೇಕು ಎಂಬ ಸಿದ್ಧತೆ ಇಲ್ಲದ ಖಾಲಿತನದಿಂದ ಚಾಪೆಯ ಡಿಸೈನು, ಮುಚ್ಚಿದ ಬಾಗಿಲ ಚಿಲಕ, ಗೋಡೆಯ ಬಣ್ಣ ಇಂಥವನ್ನು ನೋಡುತ್ತ ಸುಮ್ಮನೆ ಕೂತಿದ್ದೆ. ಆಗ ಅವಳನ್ನು ನೋಡಿದೆ. +ಅಲ್ಲಿದ್ದ ನಾಲ್ಕಾರು ತಿಂಗಳು ಅವಳನ್ನು ದಿನವೂ ನೋಡುತ್ತಿದ್ದೆ. ಅಂಥ ಹೆಂಗಸರು ಬಹಳ ಮಂದಿ ಇರಲಾರರು. ಹರಿದ್ವಾರದಲ್ಲಿ ಬಿಳೀ ಸೀರೆಯ ಹೆಂಗಸಿನ ಮುಖದಲ್ಲಿದ್ದ ನೋವೋ, ಚಿಪ್ಪಿನೊಳಗೆ ಸೇರಿಕೊಂಡು ತನ್ನ ಪಾಡಿಗೆ ತಾನಿದ್ದೇನೆಂಬ ಭ್ರಮೆಯೋ ಇವಳಲ್ಲಿರಲಿಲ್ಲ. ಕಾವಿಯ ಲುಂಗಿ ಉಟ್ಟು ಕಾವಿಯ ಜುಬ್ಬಾ ಧರಿಸಿ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡಿದ್ದಳು. ಅವಳಿಲ್ಲದೆ ಹೃಷಿಕೇಶದ ಆ ಭಾಗವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಹೆಂಗಸರು ಅವಳಷ್ಟು ದೃಢವಾಗಿ ಹೆಜ್ಜೆ ಇಡುವುದನ್ನು ನಾನು ನೋಡಿಲ್ಲ.ಆರೋಗ್ಯವಂತ ಕೆಂಪು ಹದವಾಗಿ ಮಿಶ್ರಗೊಂಡ ಬಿಳಿಯ ಮೈಬಣ್ಣ. ಗಂಟು ಹಾಕಿದ ಕೆಂಚು ಕೂದಲು. ಉದ್ದನೆಯ ಕೈಬೆರಳು. ಅವಳು ಮಾತಾಡಿದ್ದು ಬಹಳ ಅಪರೂಪ. ಆಡಿದರೂ ಕೃಷ್ಣಾನಂದರಿಗೆ ಮಾತ್ರ ಕೇಳುವಷ್ಟು ಮೃದುವಾಗಿ. ಯಾವ ದೇಶದವಳೋ. ಹೆಸರು ಕೂಡ ತಿಳಿಯಲಿಲ್ಲ. ಅವಳ ಮುಖದಲ್ಲಿ ಮುಗುಳು ನಗೆ ಇರುತ್ತಿತ್ತು. ಆದರೆ ಅದು ನನಗೆ ಅನಿಸುತ್ತಿರಲಿಲ್ಲ. ಅವಳು ಸುಮ್ಮನಿದ್ದರೂ ಸುಮ್ಮನಿದ್ದಾಳೆ ಅನ್ನಿಸುತ್ತಿರಲಿಲ್ಲ. ಏನೆಲ್ಲ ತೀರ ಸೂಕ್ಷ್ಮಗಳನ್ನು ಗಮನಿಸಿಯೂ ಎಷ್ಟೊಂದು ನಿರ್ಲಿಪ್ತಳಂತೆ ಸುಮ್ಮನಿರುತ್ತಿದ್ದಳು. ಅವಳಿದ್ದರೂ ಇದ್ದಾಳೆ ಅನ್ನಿಸುತ್ತಿರಲಿಲ್ಲ. ಆದರೆ ಇಲ್ಲದಿದ್ದರೆ ಮಾತ್ರ ಅವಳು ಇಲ್ಲ ಅಂತ ಥಟ್ಟನೆ ಗೊತ್ತಾಗಿಬಿಡುತ್ತಿತ್ತು. ಅವಳು ಎಲ್ಲಿದ್ದರೂ ಏನು ಮಾಡುತ್ತಿದ್ದರೂ ಕೃಷ್ಣಾನಂದರೇ ಅವಳ ಮನಸ್ಸಿನಲ್ಲಿ ತುಂಬಿದ್ದಾರೆ ಅನ್ನಿಸುತ್ತಿತ್ತು. ಕೃಷ್ಣಾನಂದರ ಕಾಲಬಳಿ, ನೆಲದ ಮೇಲೆ ಸ್ಥಿರವಾಗಿ ಚಕ್ಕಂಬಟ್ಟಲು ಹಾಕಿ, ಕೈಗಳನ್ನು ಮಡಿಲಲ್ಲಿ ಒಂದರಮೇಲೊಂದು ಇಟ್ಟುಕೊಂಡು, ಕತ್ತನ್ನು ತುಸುವೇ ಎತ್ತಿ, ಕಣ್ಣನ್ನು ಯಾವ ಸಂಕೋಚವೂ ಇಲ್ಲದೆ ಪೂರ್ಣವಾಗಿ ತೆರೆದು, ಕೃಷ್ಣಾನಂದರನ್ನೇ ಎವೆ ಇಡದೆ ನೋಡುತ್ತ ಕೂರುತ್ತಿದ್ದಳು. ಅವರನ್ನು ಕಾಪಾಡುವವಳಂತೆ, ಅವರ ಮನಸ್ಸಿನಲ್ಲಿ ಮೂಡಬಹುದಾದ ಯಾವುದೇ ಕೋರಿಕೆಯನ್ನು ಅದು ಮೂಡುತ್ತಿದ್ದಂತೆಯೇ ಗಮನಿಸಿಕೊಳ್ಳಲು ಸಿದ್ಧವಾಗಿರುವವಳಂತೆ, ತನ್ನ ಮಗುವಿಗೆ ಯಾವ ಭಾವ ಭಂಗಿಯೂ ಗಮನದಿಂದ ತಪ್ಪಿಸಿಕೊಂಡು ತನ್ನ ಭಾವಸಂಪತ್ತಿಗೆ ನಷ್ಟಮಾಡಿಕೊಳ್ಳಲು ಬಯಸದ ಹೊಸ ತಾಯಿಯಂತೆ, ತನ್ನ ಆರಾಧ್ಯ ದೈವದ ಸಾಮೀಪ್ಯ ಸದಾ ಸಾಮೀಪವಾಗೇ ಇರಬೇಕೆಂದು ಬಯಸುವವಳಂತೆ-ಸರಿ, ಇದೆಲ್ಲ ನನಗೆ ಅನ್ನಿಸಿದ್ದು. ಜೊತೆಗೇ ಕೆಲವು ಬಾರಿ ಯಾಕೋ ಅವಳು ಹುಲಿ. ತನ್ನನ್ನ ಪಳಗಿಸಿಕೊಂಡು ಸಾಕಿದ ಬೆಕ್ಕು ಆಗಿದ್ದಾಳೆ ಅಂತಲೂ ಅನ್ನಿಸುತ್ತಿತ್ತು. ಅಲ್ಲ, ಅವಳು ಓಡಾಡುವ ನಿರ್ಭಯ ಮೌನ ಅನ್ನಿಸುತ್ತಿತ್ತು. ತನ್ನದೇ ಲೋಕ ಕಟ್ಟುಕೊಂಡು ಇದ್ದಾಳೆಯೋ? ಬಹುಶಃ ಇಲ್ಲ. ಹಾಗಿದ್ದಿದ್ದರೆ ಅವಳು ಸಹಸ್ರಾರು ಜನ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ಹರಿದ್ವಾರದಲ್ಲಿದ್ದವಳು ಅಂತವಳು. ತನ್ನನ್ನು ಗಮನಿಸಲಿ ಲೋಕ ಎಂಬ ಆಸೆ ಇದೆಯೋ? ಬಹುಶಃ ಇಲ್ಲ, ಹಾಗಿದ್ದಿದ್ದರೂ ಅಸಂಖ್ಯಾತ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ತನ್ನ ಸುತ್ತಲ ಲೋಕ ನೋಡುತ್ತ, ಆದರೆ ಅದರಿಂದ ತನಗೇನೂ ಆಗಬೇಕಾಗಿಲ್ಲವೆಂಬಂತೆ, ತಾನು ಮಾಡಬೇಕಾದ ಯಾವುದನ್ನು ಮಾಡಲೂ ಇಷ್ಟಿಷ್ಟೂ ಹಿಂಜರಿಯದೆ, ಯಾರಿಂದಲೂ ಏನೂ ಬಯಸದೆ, ಈಗಿರುವುದನ್ನೆಲ್ಲ ಬೇಕಾದರೆ ಈಗಲೇ ಬಿಟ್ಟು ಹೊರಡಲು ಸಿದ್ಧವಾದವಳಂತೆ, ಗುರುವಿಗೆ ಪೂರ್ಣ ಶರಣಾದವಳಂತೆ ಆದರೆ ಸಂಪೂರ್ಣ ಸ್ವತಂತ್ರಳಂತೆ,-ಯಾವ ನಂಬಿಕೆ, ಯಾವ ಸಾಧನೆ, ಅದೇನು? ತಾನು ಹೀಗೆ ಇರಬೇಕೆಂದು ಹಂಬಲಿಸಿ ಬಯಸಿ ಹೀಗಾಗಿದ್ದಾಳೋ? ಎಷ್ಟೋ ದಿನದ ನಂತರ ಕೃಷ್ಣಾನಂದರ ಸಮೀಪದ ಜಯಕುಮಾರ ನನಗೆ ಪರಿಚಿತನಾಗಿ ಅಕಸ್ಮಾತ್ತಾಗಿ ಹೇಳಿದ ಒಂದು ವಾಕ್ಯ ನೆನಪಿದೆ, ಕಾಡು ಬೆಕ್ಕಿನ ಹಾಗಿದ್ದಳು. ಕೃಷ್ಣಾನಂದರು ಅವಳನ್ನು ಈ ಸ್ಥಿತಿಗೆ ತಂದ ಮಹಾತ್ಮರು. ಗೊತ್ತಿಲ್ಲ. ಅವಳೊಳಗಿನದೇ ಸ್ವಭಾವದ ಸಾಧ್ಯತೆ ಅರಳಿಕೊಂಡು ಹಿಗಾಗಿದ್ದಾಳೋ ಏನೋ. ನಾನು ಅಂಥವಳೊಬ್ಬಳನ್ನು ಕಂಡೇನು ಅಂದುಕೊಂಡಿರಲಿಲ್ಲ. ಹಿಮಾಲಯಕ್ಕೆ ನಮಸ್ಕಾರ. +ಮುಗಿಸಬೇಕೆಂಬ ಅವಸರ, ಮೂರನೆಯ ದಿನ +ಸಮರ್ಥನೆಯಲ್ಲದ ರೀತಿಯಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಹೇಗೆ? ಗಣೇಶಪುರಿ ನನ್ನ ಮಾತಾಡಿಸಿದ ರೀತಿ ನಾನು ಅವರಿಗೆ ಉತ್ತರ ಹೇಳಿದ ರೀತಿ ಬೇರೆ, ಹ್ಯಾನ್ಸ್ ನೊಡನೆ ಹೇಳಿಕೊಂಡದ್ದು ಬೇರೆ. ರಾಮು ಜೊತೆ ಹೇಳುವುದೇ ಬೇರೆ. ಕೃಷ್ಣಾನಂದರು ನನ್ನ ಹಾಗೆ ಮಾತಾಡಿಸುತ್ತಾರೆ. ನಾನು ಹಾಗೆ ಹೇಳಿಕೊಳ್ಳುತ್ತೇನೆ ಅಂತ ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದವರಿಗೆ ತೀರ ಕಡಿಮೆ ಮಾತಿನಲ್ಲಿ, ಸಾಧ್ಯವಿದ್ದಷ್ಟೂ ರೂಕ್ಷವಾಗಿ ಹೇಳಿಬಿಡುವುದೇ ಒಳ್ಳೆಯದೆಂದು. ವಿವರಗಳನ್ನೆಲ್ಲ ಅವರೇ ತುಂಬಿಕೊಳ್ಳುತ್ತಾರೆ. ಅಯ್ಯೋ ನಾನು ಹೀಗೆ ಹೀಗೆ ಮಾಡಿದ್ದಕ್ಕೆ ಇಂಥ ಇಂಥ ಕಾರಣ ಇದೆ, ಅರ್ಥ ಆಗುತ್ತೋ ಇಲ್ಲವೋ, ಹೇಗೆ ಹೇಳಲಿ ಎಂದು ಹೇಳುವ ರೀತಿಯ ಬಗ್ಗೆಯೇ ಯೋಚನೆಮಾಡಿದಷ್ಟೂ ಮಾತು ಸುಳ್ಳು ಮತ್ತಷ್ಟು ಸುಳ್ಳು ಆಗುತ್ತ ಹೋಗುತ್ತದೆ. +ಕೃಷ್ಣಾನಂದರು ಬಂದರು. ಕುಳ್ಳದೇಹ. ವಯಸ್ಸಾದ ಹಣ್ಣಾದ ಮೈ. ತೆಳ್ಳನೆ ಕಾವಿ ಪಂಚೆ, ಕಾವಿಯ ಮೇಲು ಹೊದಿಕೆ, ತಟ್ಟನೆ ಕೂತವರೆಲ್ಲ ಎದ್ದು ನಿಂತರು. ನೆಲಕ್ಕೆ ಹಣೆ ಮುಟ್ಟಿಸಿ ನಮಸ್ಕಾರ ಮಾಡಿದರು. ನಾನೂ, ಕಡಿಮೆ ಎತ್ತರದ ಕುರ್ಚಿಯ ಮೇಲೆ, ಕಾಲುಗಳನ್ನು ಮಡಿಸಿಕೊಂಡು ಕುಳಿತರು. ಸುಮ್ಮನೆ ಇದ್ದರು. ಕಣ್ಣು ಮುಚ್ಚಿದ್ದರು. ಮೌನ, ಬಹಳ ಹೊತ್ತು. ನನ್ನ ಸುತ್ತಲೂ ಇದ್ದವರು ಕಣ್ಣು ಮುಚ್ಚಿ ಕುಳಿತಿದ್ದರು. ನಾನೂ ಕಣ್ಣು ಮುಚ್ಚಿ ಕುಳಿತೆ. ತುಂಬ ಹೊತ್ತು ಹಾಗಿರಲು ಆಗಲಿಲ್ಲ. ಕಣ್ಣು ಬಿಟ್ಟೆ. ಕೃಷ್ಣಾನಂದರೂ ಉಳಿದವರೂ ಇನ್ನೂ ಸುಮ್ಮನೆ ಕಣ್ಣು ಮುಚ್ಚಿಯೇ ಕುಳಿತಿದ್ದರು. ನಾನೂ ಮತ್ತೆ ಕಣ್ಣು ಮುಚ್ಚಿದೆ, ತೆರೆದೆ. ಸುಮ್ಮನೆ ಕೂತೆ. ಕೃಷ್ಣಾನಂದರು ನಿಧಾನವಾಗಿ ಕಣ್ಣುತೆರೆದರು. ಸುಮ್ಮನೆ ಎಲ್ಲರನ್ನೂ ನೋಡಿದರು. ಹಿಂದಿಯಲ್ಲಿ ಮಾತಾಡಿದರು. +“ಅಲ್ಲಿ. ಕೆಂಪು ಉಲ್ಲನ್ ಟೋಪಿ, ಯಾರು ಅದು?” +ನನ್ನನ್ನೆ ಕುರಿತದ್ದು ಎಂದು ನನಗೆ ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. “ನಾನೇ?” ಅಂದೆ. +“ಹೌದು, ನೀನೇ. ಯಾರು?” +ನನ್ನ ಹೆಸರು ಹೇಳಿದೆ. +“ಎಲ್ಲಿಂದ ಬಂದೆ?” +“ಬೆಂಗಳೂರು.” +“ನಿನ್ನ ಮಾತು ಕೇಳಿಸಲ್ಲ. ಬಾ ಇಲ್ಲಿ.” +ಹತ್ತಿರ ಹೋದೆ. ಅವರ ಮುಂದೆ ಕುಳಿತೆ. ಆಮೇಲೆ ಬೇರೆ ಯಾರನ್ನೋ ಏನೇನೋ ಕೇಳಿದರು. ಉತ್ತರ ಕಾಶಿಯಲ್ಲಿ ಭೂಕಂಪಕ್ಕೆ ಸಿಕ್ಕವರಿಗೆ ಏನೋ ನೆರವು ಕೊಡಲು ಹೋದವರು ಬರಲಿಲ್ಲವೇ ಅಂತ ಇರಬೇಕು. ಇನ್ನು ಯಾರನ್ನೋ ಇವತ್ತಿನ ಪೇಪರಿನಲ್ಲಿ ಏನು ಸುದ್ದಿ? ಒಳ್ಳೆಯದು ಏನೂ ಇಲ್ಲವೆ? ಯಾಕೆ ಓದುತ್ತೀರಿ ಹಾಗಾದರೆ ಪೇಪರನ್ನು ಅಂತ ಅಂದರು. ಆಮೇಲೆ ತಟ್ಟನೆ ನನ್ನ ಕುರಿತು +“ಯಾಕೆ ಬಂದದ್ದು?” ಎಂದು ನಿರೀಕ್ಷಿತ ಪ್ರಶ್ನೆಯನ್ನು ಅನಿರೀಕ್ಷಿತವಾಗಿ, ಖಚಿತ ಉತ್ತರ ಬಯಸುವ ಹಾಗೆ. ಚಾಟಿ ಏಟಿನ ದನಿಯಲ್ಲಿ, ಇಂಗ್ಲಿಷಿನಲ್ಲಿ ಕೇಳಿದರು. +“ನಾನು….ಕಾಲೇಜಿನಲ್ಲಿ….ಮೇಷ್ಟರಾಗಿದ್ದೆ….ಇಪ್ಪತ್ತು ವರ್ಷ ….ಕೆಲಸಮಾಡಿದೆ.” ಸುಮ್ಮನಾದೆ. ಹೊಳೆಯಲಿಲ್ಲ. +ಅವರೂ ಸುಮ್ಮನಿದ್ದರು. ಮತ್ತಷ್ಟು ಕಠಿಣ ದನಿಯಲ್ಲಿ “ಯಾಕೆ ಬಂದದ್ದು?” +“ಈಗ ಮನೆ ಬಿಟ್ಟು ಬಂದುಬಿಟ್ಟಿದ್ದೇನೆ.” +“ಯಾಕೆ?” +“ಬೇಜಾರಾಯಿತು.” +“ಯಾಕೆ?” +“ನಾನು ಪುಸ್ತಕ ಬರೆದೆ….ಹೆಸರು ಮಾಡಿದೆ….ಬಹುಮಾನಗಳು ಬಂದವು….ಕಾಂಪಿಟೀಷನ್ನು ಇಂಥವೆಲ್ಲ ನನಗೆ ಬೇಜಾರಾಯಿತು….” +“ಕಾಂಪೀಟ್ ಮಾಡು ಅಂತ ಯಾರು ಹೇಳಿದರು?” +ಸುಮ್ಮನಿದ್ದೆ. +ನಾನು ನಿಜ ಹೇಳುತ್ತಿಲ್ಲ ಎಂದು ತಿಳಿಸರೆಂಬಂತೆ ಕೇಳಿದರು. +“ಮದುವೆ ಆಗಿದೆಯಾ?” +“ಹೌದು.” +“ಮಕ್ಕಳು?” +“ಇಲ್ಲ.” +“ಕಾಲೇಜಿನಲ್ಲಿ ಏನು ಕಲಿಸುತ್ತಿದ್ದೆ?” +“ಇಂಗ್ಲಿಷು.” +“ಮನೆಯಲ್ಲಿ ಇನ್ನು ಯಾರಿದ್ದಾರೆ?” +“ಅಮ್ಮ.” +“ತಂದೆ?” +“ಇಲ್ಲ. ತೀರಿಹೋದರು.” +“ಅಣ್ಣ, ತಮ್ಮ?” +“ಯಾರೂ ಇಲ್ಲ.” +“ನೀನು ಮನೆ ಬಿಟ್ಟು ಬಂದಿದ್ದಕ್ಕೆ ನಿಮ್ಮ ಅಮ್ಮ, ನಿನ್ನ ಹೆಂಡತಿ ಇವರಿಗೆಲ್ಲ ದುಃಖ ಆಗಲ್ಲವಾ? ಕಷ್ಟ ಆಗಲ್ಲವಾ?” +“ಬೇಜಾರಾಗತ್ತೆ, ಕಷ್ಟ ಬಹುಶಃ ಆಗಲಾರದು. ಹೆಂಡತಿ ಕೆಲಸದಲ್ಲಿದ್ದಾಳೆ. ಇರುವುದಕ್ಕೆ ಸ್ವಂತ ಮನೆ ಇದೆ. ದುಃಖ ಆಗತ್ತೆ. ಆದರೆ ನಾನು ಅವರೆಲ್ಲರ ಜೊತೆ ಇರಲು ಆಗಲ್ಲ ಅನ್ನಿಸಿತು. ಹಾಗಂತ ಸನ್ಯಾಸಿ ಆಗೋಕೆ ಇಷ್ಟ ಇಲ್ಲ.” +ಅವರಿಗೆ ತುಂಬ ಸಿಟ್ಟು ಬಂತು. ಷಟ್ ಅಪ್ ಅನ್ನಲಿಲ್ಲ ಆದರೆ ಅದೇ ಧ್ವನಿಯಲ್ಲಿ, ಗದರಿಸುವಂತೆ “ಹಾಗೆಲ್ಲ ಮಾತಾಡಬಾರದು. ನೀನು ಬಂದದ್ದು ಯಾಕೆ?” +ಸಂಕೋಚದಿಂದ ತಲೆ ಬಗ್ಗಿಸಿ. ದನಿ ಕುಗ್ಗಿ ಹೇಳಿದೆ “ನಾನು ತಪ್ಪು ಮಾಡಿದೆ.” +“ಏನು ತಪ್ಪು?” ತಟ್ಟನೆ ಕನ್ನಡದಲ್ಲಿ ಕೇಳಿದರು. ಸುಮ್ಮನಿದ್ದೆ. +“ಹೇಳಬೇಕು.” +ಆಜ್ಞೆಯಂಥ ದನಿ. +ನನಗೂ ಕೇಳಿಸದಷ್ಟು ಮೆಲುವಾಗಿ ಹೇಳಿದೆ “ಬಹುಶಃ ಹೆಂಡತಿ ಒಪ್ಪಿಕೊಳ್ಳಲಾರದಂಥ ತಪ್ಪು.” +ತಲೆ ತಗ್ಗಿಸಿದ್ದೆ. ಬಹುಶಃ ನನ್ನ ನೋಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ “ಸರಿ. ಮೂರು ದಿನ ಇಲ್ಲಿರಿ. ನೋಡೋಣ. ದಿನಾ ಬೆಳಿಗ್ಗೆ ಸಂಜೆ ಬಂದು ನನ್ನ ನೋಡುತ್ತಿರಿ” ಅಂದು ಯಾರಿಗೋ ಫೋನು ಮಾಡಿ, “ಹೋಗಿ, ಕೆಳಗೆ ಮೈಕಲ್ ಅಂತ ಇದ್ದಾರೆ. ಅವರನ್ನು ನೋಡಿ. ನಿಮಗೆ ಇರಲು ಜಾಗ ಕೊಡುತ್ತಾರೆ ಅಂದು ಮಾತು ಮುಗಿಸಿದರು. +ಮುಗಿಸಬೇಕೆಂಬ ಆಸೆ, ನಾಲ್ಕನೆಯ ದಿನ +ಎಲ್ಲರೂ ಏನಾದರೂ ಕೆಲಸದಲ್ಲಿ ತೊಡಗಿರುವ, ನನ್ನ ನನ್ನ ಪಾಡಿಗೇ ಬಿಟ್ಟಿದ್ದಂತೆ, ಆದರೆ ನನ್ನ ಅಗತ್ಯಗಳನ್ನು ಗಮನಿಸಿಕೊಳ್ಳುತ್ತಿದ್ದ ಆಶ್ರಮದಲ್ಲಿ ಒಂದು ವಾರ ಸುಮ್ಮನೆ ಇದ್ದೆ. ಸುಮ್ಮನೆ ಇರುವುದು ಎಷ್ಟು ಕಷ್ಟ ಎಂದು ತಿಳಿಯಿತು. +ಸುಮ್ಮನಿರುವುದು ಎಷ್ಟು ಕಷ್ಟ. ಮನಸ್ಸು ಹಿಡಿದುಕೊಳ್ಳಲು ಏನಾದರೂ ಸಿಕ್ಕೀತೆ ಎಂದು ಬಯಸುತ್ತಿತ್ತು. ಹುಡುಕುತ್ತಿತ್ತು, ಹಂಬಲಿಸುತ್ತಿತ್ತು. ನೆನಪು, ನೋವು, ಸಮರ್ಥನೆ, ಹಿಂಜರಿಕೆ, ದೈನ್ಯ ಇಂಥವೆಲ್ಲ ಆಗ ನನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿದ್ದಿರಬಹುದೆಂದು ಈಗ ಅನ್ನಿಸುತ್ತದೆ. ಆಗ. ಆಯಾ ಕ್ಷಣವನ್ನು ತುಂಬಿಕೊಳ್ಳಲು ಏನಾದರೂ ಸರಿ ಅನ್ನಿಸಿತ್ತು. ಓದುತ್ತಿದ್ದೆ. ಮೊದಲು ಉದ್ಯೋಗಕ್ಕೆ ಓದಿದ ಹಾಗಲ್ಲ. ಕೆಲಸ ಸಿಕ್ಕಮೇಲೆ ಓದುವುದೇ ಕೆಲಸವಾಯಿತಲ್ಲ. ಹಾಗೂ ಅಲ್ಲ. ನನಗೇ ಸ್ಪಷ್ಟವಾಗಿರದಿದ್ದ ಪ್ರಶ್ನೆಗೆ ಖಚಿತ ಉತ್ತರ ಸಿಗಬೇಕೆಂಬ ಅಪೇಕ್ಷೆಯ ಓದು. ಆದರೆ, ಬುದ್ಧಿ ಓದಿದ್ದನ್ನೆಲ್ಲ ಅಭ್ಯಾಸ ಬಲದಿಂದ ಪ್ರಶ್ನಿಸುತ್ತ ತಿರಸ್ಕರಿಸುತ್ತ ಅಹಂಕಾರವನ್ನು ಇನ್ನಷ್ಟು ಬೆಳೆಸುತ್ತಿತ್ತೆಂದು ಕಾಣುತ್ತದೆ. ಮನಸ್ಸು ನೊಣದ ಹಾಗೆ ಕೆಲವೇ ನೆನಪುಗಳ ಸುತ್ತ ಹಾರಿ ಹಾರಿ ಕೂರುತ್ತ. ನಾನು ನಡೆದುಕೊಂಡ ರೀತಿಗೆ ಬುದ್ಧಿ ಸಮರ್ಥನೆ ನೀಡಲೆಂದು ಬಯಸುತ್ತಿತ್ತೆಂದು ಕಾಣುತ್ತದೆ. ನನ್ನಮೈ ದಿನ ದಿನ ಹೊತ್ತಿಗೊತ್ತಿಗೆ ಸಿಗುವ ಊಟ ನಿದ್ದೆಗಳಿಗೆ ಹೊಂದಿಕೊಳ್ಳುತ್ತ ನಿಧಾನವಾಗಿ ಹಿತವಾಗಿ ಸಡಿಲಾಗಲು ಸಿದ್ಧವಾಗುತ್ತಿತ್ತು. ನಾನು ನನ್ನದೇ ಆದ ಒಂದು ಥಿಯರಿ ರೂಪಿಸಿಕೊಂಡೆ: ನನ್ನ ಬುದ್ಧಿ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಪೇಕ್ಷೆಗಳನ್ನು ಹೊಂದಿವೆ, ಅವಕ್ಕೆ ತಾಳ-ಮೇಳ ಇಲ್ಲ. ಯಾಕೆ ಹೀಗೆ ಅಂತ ತಿಳಿಯುವುದೇ ನನ್ನ ಗುರಿ ಅಂತ. ಆದರೆ ಕೆಲವು ದಿನಗಳ ಪರಿಚಯದ ನಂತರ ಕೃಷ್ಣಾನಂದರ ಡ್ರೈವರಾಗಿದ್ದ ಜಯಕುಮಾರನ ಬಳಿ ಹೀಗೆಂದಾಗ ಅವನು ಜೋರಾಗಿ ನಕ್ಕು ನನ್ನ ಥಿಯರಿಯನ್ನು ಉಫ್ ಅಂದುಬಿಟ್ಟ. “ನಿಮ್ಮಲ್ಲಿ ಅಂಥ ಸ್ಪ್ಲಿಟ್ ಇದ್ದಿದ್ದರೆ ನೀವು ಒಂದು ಕ್ಷಣವೂ ಬದುಕಿರುತ್ತಿರಲಿಲ್ಲ. ನೀವು ತಿಳಿದದ್ದು ಜೀರ್ಣ ಆಗುತ್ತಿರಲಿಲ್ಲ. ಮೈ. ಮನಸ್ಸು, ಬುದ್ಧಿಗಳ ಸಂಬಂಧ ಅಷ್ಟು ಸುಲಭವಾಗಿ ಬೇರ್ಪಡುವುದಿಲ್ಲ.” +ಮುಗಿಸಬೇಕೆಂಬ ಆಸೆ ಐದನೆಯ ದಿನ +ತಿರುವನಂತಪುರದ ರೇಲ್ವೇ ಸ್ಟೆಷನ್ನಿನಲ್ಲಿ ಅವತ್ತು ರಾತ್ರಿ ಮಲಗಿದ್ದೆ. ಆಗಿನ್ನೂ ನಾನು ಹಿಮಾಲಯಕ್ಕೆ ಹೀಗೆ ಹೋಗಿ ಆಶ್ರಯ ಪಡೆದೇನು ಎಂದು ಗೊತ್ತಿರಲಿಲ್ಲ. ಡಾರ್ಮಿಟರಿ ಮಹಡಿಯ ಮೇಲೆ ಇತ್ತು. ನೈಟುಗೌನು ಹಾಕಿಕೊಂಡ ಒಬ್ಬ ಮಹಿಳೆ ಬೆತ್ತದ ಕುರ್ಚಿಯಮೇಲೆ ಸುಮ್ಮನೆ ರಾತ್ರಿ ಹತ್ತುಗಂಟೆಯ ನಿಯಾನ್ ಬೆಳಕಿನ ಸ್ಟೇಷನ್ ಆಚೆಯ ರಾತ್ರಿಯನ್ನು ನೋಡುತ್ತಿದ್ದಳು-ನನ್ನ ಹಾಗೇ. +ನನಗೆ ಕನ್ಯಾಕುಮಾರಿಗೆ ಹೋಗಬೇಕೆನಿಸಿತ್ತು. ತೀರ ಎಳವೆಯ ಅಪ್ಪ. ಅಮ್ಮನೊಡನೆ ಅಲ್ಲಿಗೆ ಹೋಗಿದ್ದೆ. ಆಗ ಅದು ಪುಟ್ಟ ಹಳ್ಳಿ. ವಿಶಾಲವಾದ ಮರಳ ಹಾಸು. ಎಲ್ಲಿಂದ ನೋಡಿದರೂ ಕಾಣುತ್ತಿದ್ದ ಕೆಂಪುಬಿಳಿ ಪಟ್ಟೆಗಳ ದೇವಸ್ಥಾನದ ಗೋಡೆ. ಒಂದು ಪುಟ್ಟ ಗಾಂಧಿ ಸ್ಮಾರಕ. ದಕ್ಷಿಣದ ನೆಲದ ತುದಿ ಸಮುದ್ರದ ಮೊರೆತ ಬಿಟ್ಟರೆ ಉಳಿದಂತೆ ನಿರ್ಜನ, ನಿಶ್ಯಬ್ಧ. ದೂರದಲ್ಲಿ ಇನ್ನೂ ವಿಕಾರ ಆಕಾರದ ಸ್ಮಾರಕ ಭವನ ಕಟ್ಟಿಕೊಳ್ಳದೆ, ಅಥವ ಅಂಥ ಅಪೇಕ್ಷೆಯೂ ಜನರಲ್ಲಿ ಮೂಡದೆ. ಅಗೋ ಅದು ವಿವೇಕಾನಂದ ತಪಸ್ಸು ಮಾಡಿದ ಕಲ್ಲು ಅಂತ ಬಾಯಿಮಾತಿನಲ್ಲಿ ಅವರಿವರು ತೋರುತ್ತಿದ್ದ ಸಹಜ ಬಂಡೆ. ಕನ್ಯಾಕುಮಾರಿಯ ನೆನಪು ಉಳಿದದ್ದು ಅಂದು ತುಂಬ ನಿರ್ಮಲ. ತುಂಬ ಪ್ರಶಾಂತ ಅನ್ನಿಸಿದ್ದಕ್ಕೆ ಮತ್ತು ಅಲ್ಲಿ ಭಯವಾಗಿದ್ದಕ್ಕೆ ಮತ್ತು ಅಲ್ಲಿ ಧುಃಖ ಅಲ್ಲ ನೋವು ಆಗಿದ್ದಕ್ಕೆ. +ಸಂಜೆ ಸೂರ್ಯ ಮುಳುಗಿದ ಮೇಲೆ ನಾನು, ಅಪ್ಪ ಮತ್ತು ಅಮ್ಮ ಮಾತ್ರ ಬರುತ್ತಿದ್ದೆವು. ಬೆಳಕು ಮಬ್ಬಾಗಿತ್ತು. ಸಮುದ್ರದ ಅಲೆಗಳಿಗೆ ಉಕ್ಕು ಬಂದಿತ್ತು. ಎತ್ತರಕ್ಕೆ ಹಾರಿ, ಮಬ್ಬಿನಲ್ಲಿ ಇಷ್ಟೆ ಹೊಳೆಯುವ ಬಿಳುಪು ನೊರೆಯ ಉದ್ದ ದಪ್ಪಗೆರೆಯಾಗಿ, ಅಲೆಯ ನೀಲಿ ಆಗುತ್ತಿರುವ ಕತ್ತಲ ಬಣ್ಣದ ಜೊತೆ ಬೆರೆತು. ಏರಿದ ಅಲೆಯ ಶಿಖರ ನೆಲಕ್ಕೆ ಆರ್ಭಟಿಸಿ ಬಡಿದು ನೀರಿನ ವಕ್ರಗೆರೆಗಳ ವಿನ್ಯಾಸವಾಗಿ ಮುಂದೆ ಬರುತ್ತಿದ್ದಂತೆಯೇ ಹಿಂದೆಸರಿಯುತ್ತ ಸರಿಯುವ ಮೊದಲೇ ಇನ್ನೊಂದಿ‌ಉ ಅಲೆಯ ಆರ್ಭಟ ಕಿವಿ ತುಂಬಿ, ಕಣ್ಣಿಗೆ ಒಂದರ ಹಿಂದೊಂದೊಂದು ಬರುತ್ತಲೇ ಇರುವ ಅಲೆಗಳ ಸಾಲು ಕಂಡು, ಬಿಳಿಯಾಗಿದ್ದ ಅಪ್ಪನ ತಲೆಗೂದಲು, ಗಾಳಿಗೆ ಹಾರಾಡುತ್ತಿದ್ದ ಬಿಳಿಯ ಪಂಚೆ, ಬಿಳಿಯದಾಗುತ್ತಿದ್ದ ಅಮ್ಮನ ಜಡೆ, ಯಾರ ಮಾತೂ ಕೇಳಿಸದ ಸಮುದ್ರದ ಮೊರೆತ, ಹೆಚ್ಚುತ್ತಿದ್ದ ಮಬ್ಬು ಎಲ್ಲ ಸೇರಿ ನನಗೆ ತುಂಬ ಭಯವಾಗಿತ್ತು. ಅವತ್ತು ರಾತ್ರಿ ದೇವಾಲಯದ ಮೆಟ್ಟಿಲು ಏರುವಾಗ ಬೆಳದಿಂದಳಿದ್ದರೂ ಆಬೆಳಕಿನಲ್ಲಿ ಸಮುದ್ರದ ಭಯ ಹೆಚ್ಚಾಯಿತು. ಅದು ಕಣ್ಣಿಗೆ ಬೀಳದಂತೆ ಪಾವಟಿಗೆಯ ಗೋಡೆ ಮಗ್ಗುಲಲ್ಲಿ ಅಂಬೆಗಾಲಿಡುವವನಂತೆ ಬಗ್ಗಿ. ಕಿವಿ ಮುಚ್ಚಿಕೊಂಡು ನಡೆದಿದ್ದೆ. ಕನ್ಯಾಕುಮಾರಿಯ ಎಲ್ಲರೂ ಸುಂದರವೆಂದು ಕರೆಯುವ ವಿಗ್ರಹದ ನೆನಪು ನನಗೆ ಉಳಿದೇ ಇಲ್ಲ. ಯಾಕೆಂದರೆ ನಾನು ಅದನ್ನು ನೋಡಲೇ ಇಲ್ಲ. ದೇವಸ್ಥಾನದಲ್ಲಿ ಇದ್ದರೂ ನನ್ನ ಗಮನವೆಲ್ಲ ಅಪ್ಪನ ಮೇಲಿತ್ತು. ಅವರು ತುಂಬ ಅಳುತ್ತಿದ್ದರು. ಯಾಕೆಂದು ತಿಳಿಯಲಿಲ್ಲ. ಅವರು ಆಡಿದ ಮಾತಿನ ತುಣುಕಿನಲ್ಲಿ ‘ಗರಗಸ’ ಅನ್ನುವುದು ಮಾತ್ರ ಉಳಿದಿದೆ. ಅಮ್ಮನನ್ನು ಹಾಗೆಂದರೆಂದು ನನಗೆ ಅನ್ನಿಸಿತು. ಅಪ್ಪನ ಕಣ್ಣಿರು ನೋಡಿ ನನಗೆ ದುಃಖಕ್ಕಿಂತ ನೋವು ಬಹಳ ಆಯಿತು. +ಮತ್ತೆ ಅದೆ ಕನ್ಯಾಕುಮಾರಿಗೆ ಸಾಕಷ್ಟು ಬೆಂದು ಹೋಗುತ್ತಿದ್ದೇನೆ. ನಾಳೆ ಬೆಳಿಗ್ಗೆ. ಈಗ ತಿರುವನಂತಪುರದ ಸ್ಟೇಷನ್ನಿನ ಮಹಡಿ ಮೇಲೆ ನಿಂತು ಸುಮ್ಮನೆ ನೋಡುತ್ತಿದ್ದೆ. ನೈಟ್ ಗೌನಿನ ಮಹಿಳೆಯ ಮಗಳು ಬಂದು ತಾಯಿಯ ಪಕ್ಕ ಕುಳಿತಳು. ಸ್ವಲ್ಪ ಹೊತ್ತಿನ ನಂತರ ಎದ್ದು ಹೋದರು. ತಿರುವನಂತಪುರ ಮಲಗುತ್ತಿತ್ತು. ಕೆಲವರು ಹೊಸದಾಗಿ ಎದ್ದಿದ್ದರು. ನಾನು ನಿಂತ ಎರಡನೆಯ ಮಹಡಿಯಿಂದ ಕಳ್ಳತನದಿಂದೆಂಬಂತೆ ಬಂದು ನಿಲ್ಲುವ ಟ್ಯಾಕ್ಸಿಗಳು. ಟ್ಯಾಕ್ಸಿಯಿಂದ ಸೊಂಟಕ್ಕೆ ಮೇಲೆತ್ತಿ ಕಟ್ಟಿದ ಬಿಳಿಪಂಚೆಯ ಒಬ್ಬ-ಇಬ್ಬ ಗಂಡಸರು. ಸೈಕಲ್ಲು ತಳ್ಳಿಕೊಂಡು ಬರುವ ಟೀ ಷರ್ಟಿನೊಡನೆ ಬರುವ ಹೆಂಗಸರು. ಇನ್ನೆಲ್ಲೊ ಕಂಬಕ್ಕೆ ಒರಗಿ ನಿಂತ ಹೆಂಗಸರು. ಒಬ್ಬನೇ ಒಬ್ಬ ಹೂ ಮಾರುವವ. ಕುದುರುವ ಕುದುರದಿರುವ ವ್ಯಾಪಾರ. ಗಟ್ಟಿಯಾಗಿಬಿಡುವ ದನಿಯನ್ನು ಪ್ರಯತ್ನ ಪೂರ್ವಕವಾಗಿ ಮೆಲುವಾಗಿಸುವ ಯತ್ನ. ಯಾರ ಮುಖವೂ ಕಾಣದೆ ಕೇವಲ ಗಂಡು-ಹೆಣ್ಣು ಆಕಾರಗಳ ಚಲನೆಯನ್ನು ಮಾತ್ರ ಕಾಣುತ್ತ ಬೆನ್ನಹಿಂದಿನ ಸ್ಟೇಷನ್ನಿನಲ್ಲಿ ನಿರಂತರವಾಗಿ ಕೇಳುತ್ತಲೇ ಇದ್ದ ದಡಕ್ ದಡಲ್ ದಡದಡಕ್ ಕ್ರೀಚ್-ಮನಸ್ಸಿನಲ್ಲಿ ಮುಖವಿಲ್ಲದ ಬತ್ತಲೆ ಗಂಡುಹೆಣ್ಣುಗಳು. +ಅಂದು ರಾತ್ರಿ ನನ್ನ ಜೊತೆಗಾರನಾಗಿದ್ದವನು ಕೇಳಿದ: “ಏನು, ನೀವು ತೀರ್ಥಯಾತ್ರೆ ಹೋಗುತ್ತಿದ್ದೀರಾ?” ಹೌದೆಂದು ಉತ್ತರಿಸಿ ಮಲಗಿದೆ. ಗಾಢವಾದ ನಿದ್ರೆ ಬಂದಿತು. ಮಧುರೆಯಿಂದ ಕ್ವಿಲಾನಿಗೆ ಬರುವಾಗ ಕಂಡ ದಟ್ಟಕಾಡು, ಬಿಸಿಲಿಗೆ ಹೊಳೆವ ದೊಡ್ಡ ಒದ್ದೆ ಬಂಡೆಗಳು. ಜಟಿಲ ಆಕಾರದ ನಿಬಿಡ ವೃಕ್ಷಗಳು, ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕುಟುಂಬದ ಪುಟ್ಟ ಹುಡುಗಿ, ತಮಿಳುಮಾತುಗಳು, ಕ್ವಿಲಾನಿನಲ್ಲಿ ಇಲ್ಲಿಗೆ ಬರುವ ಇನ್ನೊಂದು ರೈಲಿಗಾಗಿ ಸುಮ್ಮನೆ ಖಾಲಿ ಪ್ಲಾಟ್ ಫಾರ್ಮಿನಲ್ಲಿ ಕಾದು ಕಳೆದ ಮೂರು ಗಂಟೆಗಳು, ಬಂದ ರೈಲಿನ ತುಂಬ ಇದ್ದ ಆಫೀಸು ಮಹಿಳೆಯರು, ಕಿಟಿಕಿಯಾಚೆಯ ಕಡಲ ಹಿನ್ನೀರ ದಡದ ಒಂದರ ನಂತರ ಒಂದು ಬಂದೇ ಬರುವ ಹಳ್ಳಿಗಳು, ಮನಸ್ಸಿಗೆ ಇಳಿಯದ ಸಾವಿರದೆಂಟು ಮುಳಗಳು ಬಹುಶಃ ಆಯಾಸ. ಗಾಢವಾದ ನಿದ್ದೆ. +ಯಾವಾಗಲೋ ಒಮ್ಮೆ ತಟ್ಟನೆ ಎಚ್ಚರ. ಎಚ್ಚರವಾದ ಕ್ಷಣ ಇನ್ನೂ ಮುಂದುವರಿದಿದೆ ಅನ್ನಿಸುವಂತ ಗಾಢವಾದ ಕನಸು. ನೆನಪಿಗೆ ಬಂದಿತೋ ಅಥವ ನಿಜವೇ ಅನ್ನಿಸಿತೋ ಗೊತ್ತಿಲ್ಲ. ಅವಳ ಮನೆ, ಶಿವಮೊಗ್ಗದ ಪುಟ್ಟ ಮನೆ, ಪುಟ್ಟದಾದ್ದರಿಂದಲೇ ಬಟ್ಟೆಯಲ್ಲಿ ಒತ್ತಿ ಒತ್ತಿ ಒರೆಸಿದ ನೆಲದ ನೀರು ವಾಸನೆ, ಬಚ್ಚಲ ಬಳಿ ಅಂಗಳದಲ್ಲಿ ಒಗೆದು ಒಣ ಹಾಕಿದ ಉಡುಪುಗಳ ಸೋಪುನೀರು ಮಿಶ್ರಿತ ವಾಸನೆ, ಅಡುಗೆ ಮನೆಯಲ್ಲಿ ಅವಳು ಮಾಡುತ್ತಿರುವ ಅಡುಗೆಯ ವಾಸನೆ, ಸ್ಟೀಲಿನ ಪಾತ್ರೆಗಳು ಪರಸ್ಪರ ತಗುಲಿದ, ಒಲೆಯ ಮೇಲಿಟ್ಟ, ನೆಲದ ಮೇಲಿಟ್ಟ ಸದ್ದುಗಳು. ಮೂಲೆಯಲ್ಲಿ ಸಾಲಿಡೆರ್ ಕಪ್ಪು ಬಿಳುಪು ಟಿವಿ. ಸೋಫಾದಮೇಲಿನ ಸ್ವಲ್ಪ ಜಾರಿದ ಹೊದಿಕೆ ಬೆಡ್ ಶೀಟು. ದುಂಡನೆ ಬೆತ್ತದ ಕುರ್ಚಿ. ಅಂಗಳದ ತುಂಬ ಪ್ರೀತಿಯಿಂದ ಬೆಳೆಸುತ್ತಿರುವ ತೆಂಗಿನ, ಪರಂಗಿಯ, ಗೊರಟೆ ಹೂವಿನ, ಹೀರೆಯ ಸಸಿಗಳ ಕಂಪು, ನನ್ನೊಡನೆ ಮಾತಾಡುವಾಗಲೆಲ್ಲ ಉತ್ಕಂಠಿತವಾಗುತ್ತಿದ್ದ ಅವಳ ದನಿ, ಬೆಚ್ಚಗಾಗುತ್ತಿದ್ದ ಅವಳ ನೋಟ, ನನ್ನನ್ನು ಇನ್ನು ಯಾರೂ ಕರೆಯದಷ್ಟು ಮೃದುವಾದ ಅಕ್ಕರೆ ತುಂಬಿದ ಎಳೆಯದನಿಯಲ್ಲಿ ‘ಮಾವಾ ಮಾವಾ’ ಅಂತ ಮಾತು ಮಾತಿಗೆ ಕರೆದು ಮಾತನಾಡುತ್ತ, ದಿನವೆಲ್ಲ ನಡೆದದ್ದನ್ನೆಲ್ಲ ಹೇಳುತ್ತ, ಪುಟ್ಟ ಮೃದು ತೋಳುಗಳಲ್ಲಿ ಆಗಾಗ ನನ್ನ ತೋಳು ಬಳಸುತ್ತ, ಹೊಸದಾಗಿ ಕಲಿತ ಹಾಡು ಹಾಡಿ ತೋರುತ್ತ, ಚಿಗರೆ ಹಾಗೆ ಚಿಮ್ಮಿ ಓಡಿಬಂದು ನನ್ನ ಕೈಹಿಡಿದು ನನ್ನ ಕೈಹಿಡಿದು ಮನೆಗೆ ಕರೆಯುತ್ತ, ನನ್ನ ಪುಟ್ಟ ಮಗಳೇ ಎಂಬಂತೆ ಪ್ರೀತಿಯನ್ನು ತೋರುತ್ತಿದ್ದ ಅವಳ ಮಗಳು. +ಕನಸೋ ಎಚ್ಚರವೋ. ಅವಳ ಮನೆಯಂಗಳದಲ್ಲಿ ಬೆಳದಿಂಗಳಿತ್ತು. ಮೆಟ್ಟಿಲ ಮೇಲೆ ಚಂದ್ರ ಮತ್ತು ಅವಳು ಮಾತನಾಡುತ್ತ ಕೂತಿದ್ದರು. ನಾನು ಬಂದೆ. ಉಣುಗೋಲು ತೆಗೆದೆ. ದುಂಡನೆಯ ಬೆತ್ತದ ಕುರ್ಚಿಯ ಮೇಲೆ ಕುಳಿತೆ. ಟಿವಿಯಲ್ಲಿ ಚಿತ್ರಗೀತೆ ಬರುತ್ತಿತ್ತು. ಮಗಳು ಲೆಕ್ಕ ಮಾಡುತ್ತಿದ್ದಳು. ತುಂಬ ಸಂತೋಷದಿಂದ ಮಾತನಾಡಿದೆವು. ಚಂದ್ರಳಿಗೆ ತಿಳಿಯದಂತೆ ಅವಳು ನನ್ನಬಳಿ ಬಂದು ತುಟಿಗಳ ಮೇಲೆ ಒದ್ದೆಯ ತೇವದ ಬೆಚ್ಚನೆಯ ಒತ್ತು ಮುತ್ತು ಕೊಟ್ಟಳು. ನನ್ನ ಎದೆಯಮೇಲೆ ಹಿತವಾದ ಮೃದು ಭಾರ. +ನೆನಪಿನಲ್ಲಿ ಉಳಿಯುವ ಈ ಇನ್ನೊಂದು ಕನಸನ್ನು ಜೋಪಾನ ಮಾಡಿಕೊಂಡು ಕನ್ಯಾಕುಮಾರಿಗೆ ಹೋದೆ. ಒಂದು ದಿನವೂ ಉಳಿಯದೆ ಇದು ನಾನು ಬಯಸಿದ ಕನ್ಯಾಕುಮಾರಿಯಲ್ಲ ಎಂದು ಹಿಂದಿರುಗಿಬಿಟ್ಟೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿ. ಸಿಟಿ ಮಾರ್ಕೆಟ್ಟಿನ ಬಳಿ ಫುಟ್ ಪಾತಿನ ಮೇಲೆ ಇರುವಂಥ ಅಸಂಖ್ಯಾತ ಡಬ್ಬದಂಗಡಿಗಳು; ವ್ಯಾಪಾರಕ್ಕಿಟ್ಟ ವಿವೇಕಾನಂದ; ಸಮುದ್ರಭಯವನ್ನೂ ಹುಟ್ಟಿಸದೆ, ನೋವೂ ಕೊಡದೆ, ಪ್ರೀತಿಯನ್ನೂ ಮೂಡಿಸದೆ ಯಾರದೋ ಪಿಕ್ನಿಕ್ಕಿನಲ್ಲಿ ಅನಾಹ್ವಾನಿತನಾಗಿ ಇಲ್ಲಿಗೇಕೆ ಬಂದೆ ಅಂತನ್ನಿಸಿ ತಟ್ಟನೆ ಹಿಂದಿರುಗಿಬಿಟ್ಟೆ. +ಆತ್ಮಾನಂದ ನನಗೆ ಒಬ್ಬ ಗುರುವಾದ. ಕನ್ನಡ ಇಂಗ್ಲಿಷು ಹಿಂದಿಯನ್ನೆಲ್ಲ ಒಂದೇ ಭಾಷೆಯೆಂಬಂತೆ ಬೆರೆಸಿ ಸಹಜವಾಗಿಮಾತನಾಡುವ, ಮನಸ್ಸು ತುಂಬಿದ್ದಾಗ ಹಾರ್ಮೋನಿಯಂ ಹಿಡಿದು, ತಲೆ ಎತ್ತಿ, ಕಣ್ಣು ಅರ್ಧಮುಚ್ಚಿ, ಮನಸ್ಸನ್ನೇ ಹಾಡಾಗಿಸಿಬಿಡುವ, ಯಂತ್ರಗಳ ಭಾಷೆಯನ್ನು ಯಂತ್ರಗಳಿಗಿಂತ ಚೆನ್ನಾಗಿ ಬಲ್ಲ, ತೆಳ್ಳನೆಯ ಮೈಯ, ತಾನೇ ಉದುರಿಸಿಕೊಂಡ ಮುಂದಿನೆರಡು ಹಲ್ಲುಗಳನ್ನು ಕಟ್ಟಿಸಿಕೊಂಡು ಬೇಕೆಂದಂತೆ ಅವನ್ನು ನಾಲಗೆಯಿಂದ ಹೊರದಬ್ಬಿ ಒಳಗೆ ನುಂಗಿ ತಮಾಷೆ ಮಾಡುವ, ಕಪ್ಪು ದಟ್ಟ ಉದ್ದ ಕೂದಲ, ಗಡ್ಡದ ಹಳದಿ ಉಡುಗೆಯ ಯುವ ಬ್ರಹ್ಮಚಾರಿ ಪರಿಣಿತ. ಮೂರು ದಿನ ನಾಲ್ಕುದಿನ ನಿದ್ದೆಯಿಲ್ಲದೆ, ಊಟ ನೀರು ಏನೂ ಬಯಸದೆ ಸುಮ್ಮನೆ ದುಡಿಯುತ್ತಲೇ ಇರುವ ಅಥವ ನಾಲ್ಕುದಿನ ಮೈಮೇಲೆ ಎಚ್ಚರವೇ ಇಲ್ಲದೆ ಮಲಗಿಬಿಡುವ ಮನುಷ್ಯ, ಆಶ್ರಮದ ಯಾವ ಹಿರಿಯನನ್ನೂ ಅವನ ವರ್ತನೆ ಹಿಡಿಸದಿದ್ದರೆ ಮುಲಾಜಿಲ್ಲದೆ ಟೀಕಿಸುತ್ತಿದ್ದ. ಯಾರಾದರೂ ಭಯವಾಗುವುದಿಲ್ಲವೇ ಅಂದರೆ “ಮನೆಯನ್ನೇ ಬಿಟ್ಟುಬಂದವನಿಗೆ ಆಶ್ರಮ ಬಿಟ್ಟು ಹೋಗುವುದಕ್ಕೆ ಎಂಥ ಭಯ?” ಅನ್ನುತ್ತಿದ್ದ. +“ನೀನು ಸುಮ್ಮನೆ ಪ್ರಸ್ಸಿನಲ್ಲಿ ಯಾಕೆ ಫೂಫು ತಿದ್ದುತ್ತ ಕೂಡುತ್ತೀ? ನನ್ನ ಜೊತೆ ಬಾ. ನಿನಗೆ ಕಂಪ್ಯೂಟರ್ ಕಲಿಸುತ್ತೇನೆ.” ಅಂದ. ಹ್ಞೂಂ ಅಂದೆ. ಪ್ರಸ್ಸಿನ ದೇವಾನಂದರೂ ಕೃಷ್ಣಾನಂದರೂ ಒಪ್ಪಿದರು. ಕಂಪ್ಯೂಟರ್ ರೂಮಿಗೆ ಬಂದೆ. +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […] +ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […] +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_119.txt b/Kannada Sahitya/article_119.txt new file mode 100644 index 0000000000000000000000000000000000000000..1d5d41fa2c5dc6da293b00992e02d2ddbff5c2c1 --- /dev/null +++ b/Kannada Sahitya/article_119.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ದಿನ ಭಾನುವಾರ- +ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ +ನನ್ನ ದಡದಲ್ಲಿರುವ ಗಿಡಮರ ಬಳ್ಳಿ +ಪ್ರತಿಫಲಿಸಿ, +ಏನೋ ಸಮಾಧಾನ. +ಅಂಥ ಅವಸರವಿಲ್ಲ, +ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ +ಕೊಡಬಹುದು. +ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು +ಕಾಯಬಹುದು. +ಈ ಒಂದು ದಿನವಾದರೂ +ಬರುವ ಹೋಗುವ ಅವಸರದ ಹೆಜ್ಜೆಗಳ, +ಬೆಳೆವ ಕ್ಯೂ ಬಾಲಗಳ, ಉರುಳು ಗಾಲಿಗಳ, +ಫೋನುಗಳ, ಫೈಲುಗಳ ರಗಳೆಯಿಲ್ಲದ ಹಾಗೆ +ಬಿದ್ದಲ್ಲೇ ಬಿದ್ದು ನಾನೇ ನಾನಾಗಬಹುದು. +ಈ ನಾನು +ಪರಕ್ಕೆ ಟಿಕೆಟ್ಟು ತೆಗೆದಿರಿಸಿ +ಇಹದ ವೆಯಿಟಿಂಗ್ ರೂಮಿನಲ್ಲಿ +ರೈಲಿಗೆ ಕಾಯುತ್ತಿಲ್ಲ. +ನನ್ನ ಉದ್ಧಾರಕ್ಕೆ +ಯಾವ ದೇವರಿಗೂ ಲಂಚ ಕೊಡಬೇಕಾಗಿಲ್ಲ. +ಸಾಧ್ಯವಾದಷ್ಟು ಈ ಬೀದಿಗಳ ಮೇಲೆ +ನನ್ನ ಗಾಲಿಗಳನ್ನು ಉಜ್ಜಿ ಸವೆಸಿದ್ದೇವೆ; +ಈ ಒಂದು ದಿನ, ನಿಂತ ಗಾಲಿಗಳ ಕೀಲುಗಳಿಗೊಂದಿಷ್ಟು +ಎಣ್ಣೆ ಹೊಯ್ಯುತ್ತೇನೆ. +ಎಂಥ ಸೊಗಸಾಗಿದೆ ಕಿಟಕಿಯಾಚೆಗೆ +ನೀಲಿಯಲ್ಲಿ ತೆಳ್ಳಗೆ ತೇಲುವ ಮೋಡ, +ಕೆಳಗೆ ಒಂದೇ ಗುಡ್ಡ, ಗುಡ್ಡದ ಮೇಲೆ +ತಲೆಗೆದರಿ ನಿಂತ ಒಂದೇ ಮರ. +ಎಲ್ಲವೂ ರಜಾ ತೆಗೆದುಕೊಂಡಂತಿದೆ +ಈ ವಿರಾಮ! +ಇಂಥ ಭಾನುವಾರದ ಒಂದು ಕ್ಷಣವನ್ನೆ +ನಿತ್ಯವಾಗಿಸಿಕೊಂಡಿರಬಹುದೆ +ಸಂತ-ಸಿದ್ಧರ ಮನಸ್ಸು? +ಹಾಗೆ ನೋಡಿದರೆ, ಈ ಒಂದು ಕ್ಷಣ +ನಾನು ಒಬ್ಬ ಸಿದ್ಧ +ಅಥವಾ ಸ್ವಲ್ಪ ಕೆಳಗಿನ ಬುದ್ಧ! +***** +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […] +ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_12.txt b/Kannada Sahitya/article_12.txt new file mode 100644 index 0000000000000000000000000000000000000000..2e5e6718d6a3b981258b903a749f177a11131083 --- /dev/null +++ b/Kannada Sahitya/article_12.txt @@ -0,0 +1,402 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ನಾಗೇಶಾ – ನಾಗೇಶಾ” +ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ ಸೇವೆ ಮಾಡಿದ್ದ -ಈಗ ಎಂಜಿನಿಯರ್ ಆಗಿದ್ದಾನೆ -ವರ್ಗ ಮಾಡಿಸಿಕೊಡಿರೆಂದು ಕೇಳಲು ಬಂದಿದ್ದ. ನಾಗೇಶ ಬಂದು ನಿಂತಾಗ ಯಾಕೆ ಕರೆದದ್ದು ಎಂಬುದೇ ಮರೆತುಹೋಗುತ್ತದೆ. ಅವನೇ ಕೇಳುತ್ತಾನೆ; +“ಪೇಪರ್ ಓದಬೇಕ ಗೌಡರೆ? ಇವತ್ತೇನೂ ಮುಖ್ಯ ಸುದ್ದಿ ಇರುವಂತಿಲ್ಲ” +“ಈ ದೇಶದಲ್ಲಿ ಅದೇನು ಸುದ್ದಿ ಇರುತ್ತೊ?” +ಕೃಷ್ಣಪ್ಪ ಕಿಟಕಿಯಾಚೆ ನೋಡುತ್ತ ಹೇಳಿದ. ತನ್ನಿಂದ ಪ್ರತಿಕ್ರಿಯೆ ಬಯಸಿ ಗೌಡರು ಮಾತಾಡಿಲ್ಲವೆಂದು ಅರಿತ ನಾಗೇಶ ಸುಮ್ಮನೆ ನಿಂತ. ಮಾತಿನ ಅಗತ್ಯ ಯಾವಾಗ ಇಲ್ಲವೆಂದು ತಿಳಿದ ಈ ನಾಗೇಶನಂಥವರು ರಾಜಕೀಯ ಕ್ಷೇತ್ರದಲ್ಲಿ ದುರ್ಲಭವೆಂದು ಕೃಷ್ಣಪ್ಪನಿಗೆ ಅವನೆಂದರೆ ಇಷ್ಟ. +“ಸೀತ ಬ್ಯಾಂಕಿಗೆ ಹೋದಲೇನೊ?” +“ಹೋದರು ಗೌಡರೆ, ವೀರಣ್ಣನವರು ಅವರಿಗೆ ಕಾರ್ ಕಳಿಸಿದ್ದರು. ಗೌರೀನೂ ನರ್ಸರಿಗೆ ಹೋದಳು.” +“ಬೆಳಗಾತ ಅದೇನೊ ರಂಪ ಹಿಡಿದಿತ್ತು….” +“ಸ್ಕೂಲಿಗೆ ಹೋಗಲ್ಲ ಅಂತ -” +ಕೃಷ್ಣಪ್ಪನ ಮುಖ ಮೃದುವಾಯಿತು! +“ನಂಗೂ ಅವಳ ವಯಸ್ಸಲ್ಲಿ ಸ್ಕೂಲಿಗೆ ಹೋಗಕ್ಕೆ ಇಷ್ಟವಿರಲಿಲ್ಲ ಮಾರಾಯ. ಜೋಯಿಸರು ಭಾರತ ಓತ್ತೀನಿ ಕಣೊ ಅಂತ ಪುಸಲಾಯಿಸಿ ಕರಕೊಂಡು ಹೋಗ್ತಿದ್ದರು.” +ನಾಗೇಶ ಕುರ್ಚಿಯನ್ನೆಳೆದು ಕೂತುಕೊಂದ. +“ಹೇಳ್ತೀರ. ಬರಕೋತೀನಿ” ಎಂದು ಒತ್ತಾಯವಿಲ್ಲದ ಧ್ವನಿಯಲ್ಲಿ ಕೇಳಿದ. +“ಬರಕೊಳ್ಳುವಿಯಂತೆ. ಇವತ್ತೇನೂ ಹೇಳಬೇಕೂಂತಲೆ ಅನ್ನಿಸಲ್ಲೊ ನಾಗೇಶ. ಕಾಲನ್ನ ಇನ್ನಷ್ಟು ಎತ್ತಬಹುದು ಅನ್ನಿಸ್ತು. ಪ್ರಯತ್ನ ಮಾಡಿದೆ. ಆಗತ್ತೆ ಅನ್ನೋದು ಭ್ರಮೆಯೋ ನಿಜವೋ ಅಂತ ನಿನ್ನ ಕೇಳಾಣ ಅಂತ ಕರೆದೆ -ನೋಡು.” +ಕೃಷ್ಣಪ್ಪ ಪಾದವನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತ ಏಕಾಗ್ರನಾದ. +“ನಿನ್ನೆಗಿಂತ ಹೆಚ್ಚು ಎಳಕೋತಿದೀನ ನಾಗೇಶ?” +ಸುಳ್ಳು ಹೇಳಿದರೆ ಕೃಷ್ಣಪ್ಪನಿಗೆ ಪ್ರಿಯವಾಗುವುದಿಲ್ಲವೆಂದು ತಿಳಿದ ನಾಗೇಶ -“ನನಗೆ ಹಾಗನ್ನಿಸಲ್ಲ ಗೌಡರೆ, ಕೈ ಹೇಗಿದೆ?” ಎಂದ. +“ಕೈಯಿ” ಎಂದು ಕೃಷ್ಣಪ್ಪ ನಾಗೇಶ ಕೊಟ್ಟ ರಬ್ಬರ್ ಬಾಲಿನ ಸುತ್ತ ಬೆರಳುಗಳನ್ನೆಲ್ಲ ಮಡಿಸಲು ಪ್ರಯತ್ನಿಸಿದ. ತನ್ನ ಪ್ರಾಣವನ್ನೆಲ್ಲ ತೀವ್ರವಾಗಿ ಬೆರಳುಗಳಲ್ಲಿ ನೂಕುತ್ತ ಅವಡುಕಚ್ಚಿದ. ಬಾಲಿನ ತಂಪಾದ ನುಣುಪಾದ ಹೊರಮೈ ಸುತ್ತ ಬೆರಳುಗಳು ಮಡಚಿಕೊಂಡವು. ಮೃದುವಾಗಿ ಬಾಲನ್ನು ಅಮುಕುವ ಅಪೇಕ್ಷೆ ದೇಹದಲ್ಲೆಲ್ಲ ಹುರಿಯಾಗಿ ಬೆರಳುಗಳಿಗೆ ಇಳಿಯಿತು. ಬಾಲು ಮುಷ್ಟಿಗೆ ದಕ್ಕುತ್ತಿದೆ ಎನ್ನಿಸಿ ಗೆಲುವಾಯಿತು. ಈ ಗೆಲುವು ನಾಗೇಶನ ಕಣ್ಣುಗಳಲ್ಲೂ ಮಿಂಚಿದ್ದರಿಂದ ಕೃಷ್ಣಪ್ಪನಿಗೆ ಹರ್ಷವಾಯಿತು. ಹಾಗೆ ಬಾಲನ್ನು ಹಿಡಿದು ತನ್ನ ಹಠಕ್ಕೆ ಅದರ ಮೃದುವಾದ ವಿರೋಧವನ್ನೂ ಒಪ್ಪಿಗೆಯನ್ನೂ ಸವಿಯುತ್ತ, +“ನಾನು ತುಂಬ ಚನ್ನಾಗಿ ಬುಗುರಿ ಬಿಡುತ್ತಿದ್ದೆ ಕಣೊ” ಎಂದ. ವಾರಂಗಲ್‌ನಿಂದ ಹಿಂದಿರುಗಿದ ಮೇಲೆ ಗದ್ದೆಯ ಕೆಸರಿನಲ್ಲಿ ಕೈಗಳನ್ನು ಹುಗಿದು ನೆಟ್ಟಿಯ ಸಮಯದಲ್ಲಿ ಭತ್ತದ ಸಸಿಯನ್ನು ನೆಡುತ್ತಿದ್ದುದು ನೆನಪಾಯಿತು. ಹಳ್ಳಿಗೆ ಹೋಗುವ ಮುಂಚೆ ಮಹೇಶ್ವರಯ್ಯನ ಜೊತೆ ಗೌರಿ ದೇಶಪಾಂಡೆಯನ್ನು ನೋಡಲು ಹೋಗಿದ್ದ. ಪರೀಕ್ಷೆಗೆಂದು ಓದುತ್ತಿದ್ದವಳು ಹೊರಗೆ ಬಂದು ಸ್ವಾಗತಿಸಿದ್ದಳು. ಅವಳ ತಲೆ ಬಾಚದೆ ಕೆದರಿಕೊಂಡಿತ್ತು. ಓದುತ್ತಿದ್ದುದರಿಂದ ಮುಖ ಬಾಡಿತ್ತು. ನಿಸ್ಸಹಾಯಕಳಾಗಿ ಸುಂದರಳಾಗಿ ಕಂಡಿದ್ದಳು. ನರಕದಿಂದ ಬಂದಿದ್ದ ಕೃಷ್ಣಪ್ಪ ಏನೂ ಮಾತಾಡಲಾರದೆ ಅವಳನ್ನು ನೋಡುತ್ತ ನಿಂತ. ತನ್ನ ಈಗಿನ ಅನುಭವಗಳಿಂದಾಗಿ ಅವಳಿಗೆ ಭಾರವಾಗುತ್ತೇನೆಂದು ಅನ್ನಿಸಿ ಮನಸ್ಸು ಕಲ್ಲಾಯಿತು. +“ಇವರು ಮಹೇಶ್ವರಯ್ಯ. ಹಳ್ಳಿಗೆ ಹೋಗೋ ಮುಂಚೆ ನಿಮ್ಮನ್ನು ಬಂದು ನೋಡಾಣ ಅನ್ನಿಸ್ತು” ಎಂದ. +ಅನಸೂಯಾಬಾಯಿ ಕಾಫ಼ಿಯನ್ನು ತಂದು ಉಪಚರಿಸಿದಳು. ಕೃಷ್ಣಪ್ಪ ಇಳಿದು ಕಂದಿದ್ದರ ಕಾರಣ ಕೇಳಿದರು. ಮಹೇಶ್ವರಯ್ಯನೇ ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಆದದ್ದನ್ನು ವಿವರಿಸಿದರು. ತೇವವಾದ ಕಾತರವಾದ ಕಣ್ಣುಗಳಿಂದ ಗೌರಿ ತನ್ನನ್ನು ಆಗ ನೋಡುತ್ತ ಕೂತಿದ್ದಳಲ್ಲವೆ? +“ಪರೀಕ್ಷೆ ಮುಗಿಸಿ ನಮ್ಮ ಹಳ್ಳಿಗೆ ಬಂದು ಹೋಗಿ” +ಕೃಷ್ಣಪ್ಪ ಉಪಚಾರದ ಧ್ವನಿಯಲ್ಲಿ ಹೇಳಿದ್ದ. ಯಾಕೆ ಒತ್ತಾಯಪೂರ್ವಕವಾಗಿ ಹೇಳಲಾಗಲಿಲ್ಲ ತನಗೆ? ಗೌರಿ ತನ್ನ ಹಗುರಾದ ಮಾತಿನಿಂದ ನಿರಾಶಳಾದಂತೆ ಕಂಡಳು ಅಲ್ಲವೆ? ಈ ಸೂಕ್ಷ್ಮಗಳೆಲ್ಲ ಈಗ ಕೃಷ್ಣಪ್ಪನನ್ನು ಬಾಧಿಸುತ್ತವೆ. ನನ್ನ ಜೀವನ ಹೊರಳಿಕೊಳ್ಳುವ ಸಮಯದಲ್ಲಿ ಎಲ್ಲ ಸಾಧ್ಯತೆಗಳಿಗೂ ತಾನು ಪೂರ್ಣ ಎಚ್ಚರದಿಂದ ತೆರೆದುಕೊಂಡಿದ್ದೆನೋ ಇಲ್ಲವೋ ಎಂದು ಅನುಮಾನವಾಗುತ್ತದೆ. ಯಾವ ಕಾರಣದಿಂದ ತಾನು ಆಗ ಆಡಬೇಕಾದ್ದನ್ನು ಆಡಲಾರದೆ ಹೋದೆ? ನೀನು ಬೇಕು ಎಂದು ಹೇಳಿಕೊಳ್ಳಲಾಗದ ಗರ್ವವೆ? ಒಡನಾಡಿಗಾಗಿ ಹಾತೊರೆಯಬಾರದೆಂಬ ತನ್ನ ನಿಷ್ಠುರ ವ್ರತವೆ ಅಥವಾ ವಾರಂಗಲ್‌ನ ಪೋಲೀಸ್ ಠಾಣೆಯ ನರಕದಿಂದ ಎದ್ದು ಬಂದ ತಾನು ಪ್ರೇತದಂತಿದ್ದೆ ಎಂದು ಅನ್ನಿಸಿದ್ದೆ? ಹೌದು -ತನ್ನ ದೇಹ ಮಲಿನವಾಗಿದೆ ಎನ್ನಿಸಿತ್ತು -ಶುಭ್ರವಾದ ಕಾಂತಿಯ ಕೆದರಿದ ತಲೆಯ ಗೌರಿಯನ್ನು ನೋಡುತ್ತ ನಿಂತಂತೆ. ಅವಳು ಮೂಕವಾಗಿ ನಿಂತದ್ದು ನೋಡಿ, +“ನೀವೇನು ಮುಂದೆ ಮಾಡ್ತೀರಿ?” +ಎಂದು ಕೃಷ್ಣಪ್ಪ ಕೇಳಿದ್ದ. ಪ್ರಾಯಶಃ ತನ್ನ ಪ್ರಶ್ನೆಯ ಗತ್ತು ಲೋಕಾಭಿರಾಮವಾಗಿತ್ತೆಂದು ಗೌರಿಗೆ ದುಃಖವಾಗಿರಬೇಕು. ಅವಳೇನೂ ಅದಕ್ಕೆ ಉತ್ತರಕೊಡಲಿಲ್ಲ. +“ಯಾಕೋ ನಾಗೇಶ, ನಾವು ತೀವ್ರವಾಗಿ ಪ್ರೀತಿಸಿದ್ದನ್ನು ಪಡೆಯೋ ಧೈರ್ಯ ಮಾಡಲ್ಲ? ಪಡೆದ ಮೇಲೆ ಅದು ಅಷ್ಟೇ ಅಮೂಲ್ಯವಾಗಿ ಉಳಿಯಲ್ಲ ಅಂತ ಭಯವ?” +ನಾಗೇಶನ ಅಳವಿಗೆ ಈ ಪ್ರಶ್ನೆ ಮೀರಿತ್ತು. ಆದರೆ ಕೃಷ್ಣಪ್ಪ ಏನು ಯೋಚಿಸುತ್ತಿರಬಹುದೆಂದು ಊಹಿಸಿ ಹೇಳಿದ. +“ಗೌರಿ ದೇಶಪಾಡೆಯವರಿಗೆ ಬರಲಿಕ್ಕೆ ಬರ್ದಿದೀನಿ ದೆಹಲಿ ವಿಳಾಸಕ್ಕೆ” +ಕೃಷ್ಣಪ್ಪ ಕಾತರವಾದ ಕಣ್ಣುಗಳಿಂದ ನಾಗೇಶನನ್ನೇ ನೋಡಿ ದೀರ್ಘವಾಗಿ ಉಸಿರಾಡಿದ. ಅವಳು ಬರುವ ಮುಂಚೆ ಕಾಲು ಕೈಗಳು ಇನ್ನಷ್ಟು ಚಲಿಸುವಂತಾದರೆ ಎಂದು ಆಸೆಯಾಯಿತು. ಚಲಿಸುವಂತಾದರೆ ಮತ್ತೆ ಹಳ್ಳಿಗೆ ಹೋಗುವೆ. ಕೆಸರಿನಲ್ಲಿ ಕಾಲನ್ನ ಹುಗಿದು ಮತ್ತೆ ಭತ್ತದ ಸಸಿಗಳನ್ನ ನಡುವೆ. ದನ ಮೇಯಿಸುತ್ತ ಕೂತಿರುತ್ತಿದ್ದ ಅಶ್ವತ್ಥದ ಮರದ ಬುಡದಲ್ಲಿ ಮತ್ತೆ ಕೂರುವೆ. ಎದುರಿನ ಪೇರಳೆ ಗಿಡಕ್ಕೆ ಮತ್ತೆ ಪಂಚವರ್ಣದ ಗಿಣಿಗಳು ಬರುವುದಕ್ಕಾಗಿ ಕಾಯುವೆ. +“ಮಹೇಶ್ವರಯ್ಯನು ಬಂದಿದ್ರೆ ಚೆನ್ನಾಗಿರ್ತಿತ್ತೊ” +“ಬರೆಯೋಣ ಅಂದ್ರೆ ಅವರ ವಿಳಾಸವೇ ಇಲ್ವಲ್ಲ.” +“ಅವರು ಹಾಗೇನೇ. ಇದಕಿದ್ದಂತೆ ಬಂದುಬಿಡ್ತಾರೆ. ಮಾರಾಯ್ರಿಗೆ ಈಗ ರೇಸಿನ ಹುಚ್ಚು ಹಿಡಿದುಬಿಟ್ಟಿದೆ. ಬೆಂಗಳೂರಲ್ಲಿ ನಾಳೇಂದ ಸೀಸನ್ ಅಲ್ವ -ಬಂದರೂ ಬಂದರೆ…..” ಎಂದು ಕೃಷ್ಣಪ್ಪ ಮಗ್ಗುಲಾಗಲು ಇಚ್ಛಿಸುತ್ತ ಮಲಗಿದ. ಯಾವತ್ತು ಹೊರಳುವಷ್ಟು ಶಕ್ತಿ ಈ ದೇಹಕ್ಕೆ ಬರುತ್ತದೊ? ಅಷ್ಟರಲ್ಲಿ ಇನ್ನೊಂದು ಸ್ಟ್ರೋಕ್ ಹೊಡೆದು ಸಾಯಲೂ ಬಹುದು. ಎಲ್ಲೋ ಒಂದು ರಕ್ತದ ಬಿಂದು ಸಿಕ್ಕಿಬಿದ್ದಿದೆ. ಅದು ತಾನಾಗಿಯೇ ಚಲಿಸಲೂ ಬಹುದು, ಚಲಿಸದೆ ಅಲ್ಲೆ ನಿಂತುಬಿಡಲೂ ಬಹುದು. ಪ್ರತಿಕ್ಷಣ ಪ್ರಜ್ಞಾಪೂರ್ವಕವಾಗಿ ಬದುಕುವುದಷ್ಟೇ ಈಗ ನನಗೆ ಉಳಿದದ್ದು. ಅನಾಮತ್ತಾಗಿ ಈ ದೇಹ ಈ ಸ್ಥಿತಿಗೆ ಬಂದಿದೆ. ಹೇಳದೆ ಕೇಳದೆ ಎಚ್ಚರಿಕೆ ಕೊಡದೆ. +ಕೃಷ್ಣಪ್ಪನ ಜೀವನದಲ್ಲಿ ಪ್ರವೇಶಿಸಿದ ಯಾರು ಇಡಿಯಾಗಿ ಉಳಿದಿದ್ದಾರೆ, ಯಾರು ಇಲ್ಲ -ಅವನಿಗೆ ತಿಳಿಯುವುದಿಲ್ಲ. ಬಾಹ್ಯದಲ್ಲಿ ನೋಡಿ ಯಾರು ಹೇಗೆ ಎಂದು ಹೇಳುವುದು ಶಕ್ಯವಲ್ಲ. ಉದಾಹರಣೆಗೆ ಉಮೆ? ಅಣ್ಣಾಜಿಯ ಸಾವಿನಿಂದ ಅವಳಿಗೆ ಆದ ಆಘಾತ ಕೃಷ್ಣಪ್ಪನಿಗೆ ಮಾತ್ರ ಗೊತ್ತು. ಅವಳು ಯಾರಿಗೂ ಹೇಳಿಕೊಳ್ಳಲಾರದೆ ಆರೋಗ್ಯವಿಲ್ಲೆಂಬ ನೆವ ಹೂಡಿ ತವರಿಗೆ ಹೋಗಿದ್ದಳು. ಆಗ ಅವಳು ಬಸುರಿ. ಅಂದರೆ ಅಣ್ಣಾಜಿಯ ಮಗ ಈಗ ಬೆಳೆದಿದ್ದಾನೆ. ಮೋಟಾರ್ ಸೈಕಲ್ ಮೇಲೆ ಹಿಪ್ಪಿಯ ಹಾಗೆ ಕೂದಲು ಬಿಟ್ಟು ಅವನು ವಿಜೃಂಭಿಸುವುದನ್ನು ಕೃಷ್ಣಪ್ಪ ಕಂಡಿದ್ದಾನೆ. ಅವನಾದ ಮೇಲೆ ಉಮೆಗೆ ಇನ್ನೆರಡು ಮಕ್ಕಳಾಗಿದ್ದಾವಂತೆ. ಅವಳ ಗುಟ್ಟನ್ನು ಇಷ್ಟು ದಿನ ಕೃಷ್ಣಪ್ಪ ಮುಚ್ಚಿಟ್ಟುಕೊಂಡಿದ್ದಾನೆ. ತನ್ನ ಜೀವನಚರಿತ್ರೆ ಬರೆಸುವಾಗ ಈ ಘಟನೆಯನ್ನು ನಾಗೇಶನಿಗೂ ಅವನು ಹೇಳಿಲ್ಲ. ಪ್ರಾಯಶಃ ಅಣ್ಣಾಜಿಯ ಮನಸ್ಸು ರಾಜಕೀಯದಿಂದ ವಿಮುಖವಾಗಿ ದಾಂಪತ್ಯದ ನೆಮ್ಮದಿಯನ್ನು ಬಯಸಿದ್ದಾಗ ಅವನನ್ನು ಕೊಂದರು. ಅವನ ಆಯ್ಕೆಯಾದರೂ ಪ್ರಜ್ಞಾಪೂರ್ವಕವಾಗಿತ್ತೆ ಎಂದು ಅನುಮಾನವಾಗುತ್ತದೆ. ಆದರೆ ಸತ್ತಿದ್ದರಿಂದ ಅವನು ತನ್ನ ಪ್ರಶ್ನೆ ಅನುಮಾನಗಳಿಗೆ ಅತೀತನಾಗಿ ನಿಂತಂತೆಯೂ ಅನ್ನಿಸುತ್ತದೆ. ತಾನು ಕಂಡ ಒಬ್ಬ ದ್ರಷ್ಟಾರನೆಂದರೆ ಅವನೇ. ಎಷ್ಟೊಂದು ಕ್ಷುಲ್ಲಕತೆಗೆ ಒಳಗಾಗಿದ್ದರೂ ಅವನ ಬುದ್ಧಿ ಮಾತ್ರ ಪ್ರಖರವಾಗಿ ಬೆಳಕು ಬೀರುತ್ತಿತ್ತು. ಅವನು ಬದುಕಿದ್ದಾಗ ಪ್ರಾಮಾಣಿಕತೆಯ ಪ್ರಶ್ನೆ ಕೃಷ್ಣಪ್ಪನನ್ನು ಬಾಧಿಸಿದ್ದರೂ ಈಗ ಅಣ್ಣಾಜಿ ತನಗೆ ಮೀರಿದ್ದಕ್ಕಾಗಿ ದುಡಿದು ಸತ್ತವನಂತೆ ಕಾಣುತ್ತಾನೆ. ಉಮೆ? ಅವಳು ತನಗೆ ಎದುರಾದ್ದನ್ನು ಒಪ್ಪಿಕೊಂಡು ಬದುಕಿದಂತಿದೆ. +ಇನ್ನು ಆ ಬೈರಾಗಿ. ಅವನ ಬಗ್ಗೆ ಮಾತ್ರ ಕೃಷ್ಣಪ್ಪನಿಗೆ ಈಗಲೂ ಅರ್ಥವಾಗುವುದಿಲ್ಲ. ಅವನ ಒಳಬಾಳು ಉಜ್ವಲವಾಗಿ ಉರಿಯುತ್ತಿತ್ತೋ, ಅಥವಾ ಅವನೊಂದು ಠೊಳ್ಳು ತಿರುಳಿನ ತರಕಾರಿಯಂತವನೋ ಹೇಳುವುದು ಹೇಗೆ? ಜನ ಮಾತ್ರ ಅವನನ್ನು ಬಿಡಲಿಲ್ಲ. ಅವನು ಇದ್ದಲ್ಲಿ ಒಂದು ದೇವಸ್ಥಾನ ಕಟ್ಟಿದ್ದಾರೆ. ಕನಸಿನಲ್ಲಿ ಅವನು ಬಂದು ಪ್ರಶ್ನೆಗಳಿಗೆ ಉತ್ತರ ಹೇಳುವನೆಂದು ಪ್ರತೀತಿ ಹಬ್ಬಿ ಎಲ್ಲೆಲ್ಲಿಂದಲೋ ಜನರು ಬರತೊಡಗಿದ್ದಾರೆ. ಅವನು ಮಾತ್ರ ಯಾರ ಹತ್ತಿರವೂ ಮಾತಾಡುವುದಿಲ್ಲ. ನಿತ್ಯ ವಿಧಿಯಂತೆ ಬೆಳಿಗ್ಗೆ ಎದ್ದು ಅವನು ಬೀದಿ ತುದಿ ನಿಂತು ಭಗವದ್ಗೀತೆ ಹಾಡುತ್ತಾನೆ. ತನ್ನ ಆಹಾರ ಸಂಪಾದಿಸಿ ಬೇಯಿಸಿಕೊಂಡು ತಿನ್ನುತ್ತಾನೆ. ಇದು ನಿಂತಿಲ್ಲ. ಆದರೆ ಇದು ಹಿಂದಿನಂತೆ ಸರಳವಾಗಿ ಉಳಿದಿಲ್ಲ. ಅವನು ಹೋಗುವ ಬೀದಿಗೆ ತೋರಣ ಕಟ್ಟಿರುತ್ತದೆ. ಅವನು ಗೀತೆಯನ್ನು ಓದಲು ನಿಲ್ಲುವ ಜಾಗದಲ್ಲಿ ಪ್ಲಾಟ್‌ಫ಼ಾರಮ್ ಹಾಕಿ ಮೈಕನ್ನು ಇಟ್ಟಿರುತ್ತಾರೆ. ಬೈರಾಗಿಯನ್ನು ಸಿದ್ಧೇಶ್ವರ ಎಂದು ಕರೆಯುತ್ತಾರೆ. ಏನನ್ನೂ ಬೈರಾಗಿ ನಿರಾಕರಿಸುವುದಿಲ್ಲ. ಬೇಕೆಂದು ಕೇಳುವುದೂ ಇಲ್ಲ. ಆದರೆ ಜನರ ಅಗತ್ಯ ತನ್ನಿಂದ ಹೀಗೆ ಪೂರೈಕೆಯಾಗುತ್ತಿರುವುದಕ್ಕಾಗಿ ಅವನು ಸಂತೋಷ ಪಡುವಂತೆ ಕಾಣುತ್ತದಲ್ಲವೆ? ಅವನು ಮೈ ಕೈ ತುಂಬಿಕೊಳ್ಳುತ್ತ ಹೋದದ್ದನ್ನು ನೋಡಿದರೆ. ಇಕ್ಕಿದ್ದನ್ನು ಸ್ವೀಕರಿಸುವೆನೆಂಬ ಅವನ ವ್ರತವೇ ವಿಶೇಷವಾದ ಪೌಷ್ಟಿಕ ಆಹಾರ ಅವನಿಗೆ ದೊರೆಯುವಂತೆಯೂ ಮಾಡಿರಬೇಕು. +ಅವನಿಗೆ ಉತ್ತರ ಕೊಡಬೇಕೆನ್ನಿಸುವಂಥ ಪ್ರಶ್ನೆಯನ್ನು ಕೇಳಲು ತನಗೆ ಹೊಳೆಯಲೇ ಇಲ್ಲವೆಂದು ಬಹಳ ಸಾರಿ ಕೃಷ್ಣಪ್ಪ ತನ್ನ ಆಗಿನ ಮನಸ್ಥಿತಿಯ ಬಗೆ ಸಂಶಯಪಡುವುದುಂಟು. ಆಗ ವ್ಯಗ್ರನಾಗಿದ್ದದ್ದು ನಿಜ. ಆದರೆ ಅದಕ್ಕೆ ಕಾರಣವೆಂದು ತನಗೆ ಹೊಳೆಯುತ್ತಿದ್ದುದೆಲ್ಲ ಪೊಳ್ಳಿರಬಹುದು. ಆದ್ದರಿಂದಲೇ ಬೈರಾಗಿ ಹತ್ತಿರ ಪ್ರಶ್ನೆ ಕೇಳಲಾರದೆ ಹೋದೆ ಎಂದುಕೊಳ್ಳುತ್ತಾನೆ. ಬೈರಾಗಿ ಒಂದು ಬಗೆಯಲ್ಲಿ ಕೃಷ್ಣಪ್ಪನಿಗೆ ಹೀಗೆ ತನ್ನನ್ನು ಅಳೆಯುವ ಮಾನದಂಡವಾಗಿ ಕಂಡರೆ ಸರ್ಪ ಅವನ ಗುಹೆಯನ್ನು ಹೊಕ್ಕಾಗ ಅವನಿಗೆದುರಾದ ಹಿಂಸೆಯನ್ನು ಅವನು ತಾಳಲಾರದೆ ಹೋದ ಎಂಬುದು ಕೂರ್ಮರೂಪದ ಅವನ ತಪಸ್ಸಿನ ಬಗ್ಗೆ ಆಳವಾದ ಅನುಮಾನವನ್ನು ಹುಟ್ಟಿಸುತ್ತದೆ. ಎಲ್ಲ ಸಾಧ್ಯತೆಗಳಿಗೂ ಚುರುಕಾಗಿ ಸ್ಪಂದಿಸುತ್ತ ಬದುಕಬೇಕೆನ್ನುವ ಕೃಷ್ಣಪ್ಪನ ಆದರ್ಶಕ್ಕೆ ಅವನು ಕಂಡಿದ್ದರಲ್ಲಿ ಯಾವುದೂ ಸರಿಸಾಟಿಯಿಲ್ಲವೆನಿಸುತ್ತದೆ. +ತನ್ನಲ್ಲಿ ಬಿರುಕು ಎಲ್ಲಿ, ಹೇಗೆ ಕಾಣಿಸಿಕೊಂಡಿತು? ಸಾಯುವ ಮುಂಚೆ ಇದನ್ನು ತಿಳಿಯಬೇಕು. ಅಷ್ಟೇ ಉಳಿದದ್ದು ತನ್ನ ಪಾಲಿಗೆಂದು ಯೋಚಿಸುತ್ತಲೇ ತನ್ನ ಪಾರ್ಶ್ವಕ್ಕೆ ಪ್ರಾಣ ಶಕ್ತಿಯನ್ನು ಹರಿಸಲು ಉದ್ಯುಕ್ತನಾಗುತ್ತಾನೆ. +“ನಾಗೇಶ ನನ್ನ ಅಮ್ಮನನ್ನು ಕರಕೊಂಡು ಬರಕ್ಕೆ ಯಾರನ್ನಾದರೂ ಕಳಿಸಬೇಕಲ್ಲೊ -” +“ನಾನೇ ಹೋಗಿ ಬರಲ ಗೌಡರೆ?” +“ಬೇಡ ನೀನಿಲ್ಲಿ ಇರೋದು ಅಗತ್ಯ. ನಿನ್ನ ಸ್ನೇಹಿತರಲ್ಲಿ ಯಾರನ್ನಾದರೂ ಕಳಿಸು.” +* +* +* +ಮನೆಯ ಹೊರಗೆ ಕಾರು ಬಂದು ನಿಂತಿತು. ಅದರಿಂದ ವೀರಣ್ಣ ಇಳಿದ. ಖಾದಿ ಸಿಲ್ಕಿನ ಕ್ಲೋಸ್ ಕಾಲರ್ ಕೋಟು ಪ್ಯಾಂಟು ತೊಟ್ಟ ವೀರಣ್ಣನಿಗೆ ಸುಮಾರು ಅರವತ್ತು ವರ್ಷಗಳಿರಬಹುದು. ಬೆಂಗಳೂರಿನ ಎರಡು ದೊಡ್ಡ ಹೋಟೆಲುಗಳ, ಮೂರು ಥಿಯೇಟರುಗಳ ಮಾಲಿಕ ಈ ವೀರಣ್ಣ. ಅವನ ತಂದೆ ಒಬ್ಬ ಸಣ್ಣ ಕಂಟ್ರಾಕ್ಟರ್ ಆಗಿದ್ದವನು. ವೀರಣ್ಣ ತನ್ನ ಚಾಕಚಕ್ಯತೆಯಿಂದ ಲಕ್ಷಾಧೀಶನಾಗಿ ಬೆಳೆದಿದ್ದ. ತಿರುಪತಿಯ ವೆಂಕಟರಮಣನ ಪರಮಭಕ್ತನಾದ ವೀರಣ್ಣ ದೇಶವಿದೇಶಗಳಲ್ಲಿ ಅವನ ದೇವಾಲಯಗಳನ್ನು ಕಟ್ಟಿಸುವುದಕ್ಕೆ ಮುಂದಾಗಿದ್ದ. ಸೋಷಲಿಸ್ಟ್ ನಾಯಕನೆಂದೂ, ಶ್ರೀಮಂತವರ್ಗದ ವಿರೋಧಿಯೆಂದೂ ಹೆಸರಾದ ಕೃಷ್ಣಪ್ಪನನ್ನು ಈ ವೀರಣ್ಣ ಆರಾಧಿಸುವುದನ್ನು ಕಂಡು ಎಲ್ಲರೂ ಬೆರಗಾಗಿದ್ದರು. ಎಂಥೆಂಥ ಮಂತ್ರಿಗಳೂ ವೀರಣ್ಣನ ಕೃಪೆಗೆ ಕೈಯೊಡ್ಡುವಾಗ, ಯಾವುದನ್ನೂ ಯಾರ ಹತ್ತಿರವೂ ಬೇಡದ ಗರ್ವಿಷ್ಠ, ಕೃಷ್ಣಪ್ಪನ ಬಳಿ ಮಾತ್ರ ವೀರಣ್ಣ ಅತ್ಯಂತ ವಿನಯದಿಂದ ನಡೆದುಕೊಳ್ಳುವನು. ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ಅವನು ವಾಸವಾಗಿದ್ದುದು ಗಾಂಧೀ ಬಜ಼ಾರಿನ ಹತ್ತಿರವಿದ್ದ ಒಂದು ಹಳೆಯ ಮನೆಯಲ್ಲಿ. ರೆಂಟ್ ಕಂಟ್ರೋಲಿಂದ ಪಡೆದಿದ್ದ ಮನೆ ಅದು. ತಿಂಗಳಿಗೆ ಒಂದು ನೂರು ರೂಪಾಯಿ ಬಾಡಿಗೆ. ಮನೆಯಿಂದ ಹೊರಕ್ಕೆ ಕಕ್ಕಸು. ಕೃಷ್ಣಪ್ಪನಿಗೆ ಇದು ತೀರಾ ಅನಾನುಕೂಲವೆಂದು ವೀರಣ್ಣ ಸದಾಶಿವನಗರದಲ್ಲಿರುವ ತಾನು ಬಾಡಿಗೆಗೆ ಕೊಟ್ಟಿರುವ ಫ಼್ಲಾಟುಗಳಲ್ಲಿ ಒಂದನ್ನು ತೆಗೆದುಕೊಳ್ಳುವಂತೆ ಬೇಡಿಕೊಂಡ. ಕೃಷ್ಣಪ್ಪನ ಹೆಂಡತಿ ಸೀತೆಯೂ ಅದು ತನ್ನ ಬ್ಯಾಂಕಿಗೆ ಹತ್ತಿರವೆಂದು ವಾದಿಸಿದಳು. ಆದರೆ ತನಗೆ ಎಂ.ಎಲ್.ಎ ಆಗಿ ಬರುವ ಸಂಬಳದಲ್ಲಿ ನೂರು ರೂಪಾಯಿಗಿಂತ ಹೆಚ್ಚಿನ ಬಾಡಿಗೆಯ ಮನೆಯಲ್ಲಿ ಇರುವುದು ಸಾಧ್ಯವೇ ಇಲ್ಲವೆಂದು ಕೃಷ್ಣಪ್ಪ ನಿರಾಕರಿಸಿದಾಗ – +“ಹಾಗಾದರೆ ನೂರೇ ನನಗೆ ಬಾಡಿಗೆ ಕೊಡಿ -ಸಾಕು” +ಎಂದು ವೀರಣ್ಣ ಪ್ರಾರ್ಥಿಸಿದ. +“ಆದರೆ ಅದಕ್ಕೆಷ್ಟು ಬಾಡಿಗೆ? ಏಳುನೂರು ಅಲ್ವ ವೀರಣ್ಣ?” +“ನಾನೇನು ಮಾಡ್ಬೇಕಾಗಿದೆ ಅಷ್ಟು ದುಡ್ಡು ತಗೊಂಡು? ನಾನೇನು ನಿಮಗೆ ಪುಗಸಟ್ಟೆಗೆ ಕೊಡ್ತ ಇಲ್ವಲ್ಲ?” +ಕೃಷ್ಣಪ್ಪ ತಾನಿದ್ದ ಅಸಹಾಯಕ ದೈಹಿಕ ಪರಿಸ್ಥಿತೀಲಿ ಫ಼್ಲಾಟಿಗೆ ಒಲ್ಲದ ಮನಸ್ಸಿಂದ ಬಂದಿದ್ದ. ಸೀತೆ ಪ್ರತಿನಿತ್ಯ ರಗಳೆ ಮಾಡುವುದು ತಪ್ಪುವುದಲ್ಲ ಎಂಬುದೂ ಹೀಗೆ ಬರಲು ಕಾರಣವಾಗಿತ್ತು. ಗೌರಿಗೆ ಹತ್ತಿರದಲ್ಲೇ ಇಂಗ್ಲಿಷ್ ನರ್ಸರಿ ಬೇರೆ ಇತ್ತೆಂದು ಸೀತೆಗೆ ಸಂತೋಷವಾಗಿತ್ತು. +ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ದೇಶದಲ್ಲಿ ಅವನೆಷ್ಟು ದೊಡ್ಡ ಮನುಷ್ಯನೆಂಬುದು ಎಲ್ಲರಿಗೂ ಪ್ರತ್ಯಕ್ಷವಾಗಿ ಗೊತ್ತಾಗಿತ್ತು. ರಾಜ್ಯಪಾಲರೇ ಸ್ವತಃ ಹಾಸ್ಪಿಟಲ್‌ಗೆ ಬಂದು ಅವನನ್ನು ನೋಡಿದ್ದರು. ಕೃಷ್ಣಪ್ಪ ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಮುಖ್ಯಮಂತ್ರಿ ಬೊಂಬಾಯಿಂದ ಒಬ್ಬ ಸ್ಪೆಶಲಿಸ್ಟನ್ನು ಕರೆಸಿದ್ದ. ದೇಶದ ಎಲ್ಲ ವಿ.ಐ.ಪಿಗಳೂ ಆಸ್ಪತ್ರೆಗೆ ಬಂದು ಅವನನ್ನು ನೋಡಿದ್ದರು. +ತಾನು ಏನನ್ನೂ ಬೇಡದೆ ಎಲ್ಲವೂ ತನಗೆ ದಕ್ಕುತ್ತಿರುವುದನ್ನು ಕಂಡು ಕೃಷ್ಣಪ್ಪನೇ ಬೆರಗಾಗಿದ್ದ. ಯಾವ ಫಲಾಪೇಕ್ಷೆಯೂ ಇಲ್ಲದೆ ವೀರಣ್ಣ ತನ್ನ ಸೇವೆ ಮಾಡುತ್ತಿದ್ದಾನೆಂದು ಕೃಷ್ಣಪ್ಪ ತಿಳಿದ. ಅವನಿಗೆ ತಾನೇನು ಹೆಚ್ಚು ಮಾಡಬಲ್ಲೆ? ಅಲ್ಲದೆ ಕೃಷ್ಣಪ್ಪ ವಿರೋಧಿಸುತ್ತಿದ್ದುದು ವ್ಯವಸ್ಥೆಯನ್ನೇ ಹೊರತಾಗಿ ವ್ಯಕ್ತಿಗಳನ್ನಲ್ಲವಲ್ಲ. ವೀರಣ್ಣ ಕೂಡ ಈ ವ್ಯವಸ್ಥೆಯಲ್ಲಿ ಎಲ್ಲರಂತೆ ಒಬ್ಬನಲ್ಲವೆ? +ಆದರೆ ಹೀಗೆಲ್ಲ ತರ್ಕ ಹೂಡಿಕೊಂಡು ತಾನು ವೀರಣ್ಣನನ್ನು ಒಪ್ಪಿಕೊಳ್ಳತೊಡಗಿದ್ದೆ ಎಂಬುದೇ ಕೃಷ್ಣಪ್ಪನನ್ನು ಆಗೀಗ ಬಾಧಿಸುವುದುಂಟು. ಅವನ ವಿನಯ ಧೂರ್ತಲಕ್ಷಣ ಎಂದು ಅನುಮಾನಿಸುವನು. ಅವನ ಕ್ಷೌರ ಮಾಡಿದ ನುಣುಪಾದ ಮುಖ, ಕಿವಿಯ ಮೇಲಿನ ಕೂದಲು, ಮೂಗಿನ ಮೇಲೆ ಕೂಡಿಕೊಂಡ ಪೊದೆ ಹುಬ್ಬು, ದಪ್ಪವಾದ ಕತ್ತು, ಹತ್ತಿರ ಹತ್ತಿರ ಹೆಜ್ಜೆಯಿಡುತ್ತ ತನ್ನ ಸುತ್ತಲೂ ಅವನು ನಡೆದಾಡುವ ರೀತಿ, ’ಅಮ್ಮ’ ’ಅಮ್ಮ’ ಎಂದು ಸೀತೆಯನ್ನು ಕರೆದು ಅವಳಿಗೆ ತಾನು ಮಾರ್ಕೆಟ್ಟಿಂದ ಕಟ್ಟಿಸಿ ತಂದ ತರಕಾರಿ ಬುಟ್ಟಿಯನ್ನು ಕೊಡುತ್ತ ಅವಳ ಮೆಚ್ಚುಗೆ ಪಡೆಯುವ ಮಾತಿನ ಸೇಳೆ -ಎಲ್ಲವೂ ಕೃಷ್ಣಪ್ಪನಿಗೆ ಕಿರಿಕಿರಿಯನ್ನುಂಟುಮಾಡುವುದು. ತನ್ನ ಕ್ರಾಂತಿಕಾರೀ ವ್ಯಕ್ತಿತ್ವಕ್ಕೆ ಒಲಿದ ನಾಗೇಶನಂಥ ಯುವಕರು ತನ್ನ ಬಳಿ ಇದ್ದಾಗ ಪರಮಾಪ್ತನಂತೆ ಬಂದು ವೀರಣ್ಣ ನಡೆದುಕೊಳ್ಳುವುದು ಕೃಷ್ಣಪ್ಪನಿಗೆ ತುಂಬ ಮುಜುಗರವಾಗಿಬಿಡುವುದು. +“ಹೇಗಿದೀರಿ ಗೌಡರೆ” ಎನ್ನುತ್ತ ವೀರಣ್ಣ ಒಳಗೆ ಬಂದು “ದಿನೇ ದಿನೇ ಇಂಪ್ರೂವ್ ಆಗ್ತಿದೀರಿ ನಮ್ಮ ದೇಶದ ಪುಣ್ಯ” ಎಂದು ಕುರ್ಚಿಯನ್ನೆಳೆದುಕೊಂಡು ಕೂತ. ತನ್ನ ದೇಹಸ್ಥಿತಿ ಬಗ್ಗೆ ಬಂದವರೆಲ್ಲ ಸಾಮಾನ್ಯವಾಗಿ ಸುಳ್ಳನ್ನೇ ಹೇಳುತ್ತಿದ್ದರು. ಕೃಷ್ಣಪ್ಪ ಇಂಥ ಔಪಚಾರಿಕ ಮಾತಿಗೆ ಉತ್ತರ ಕೊಡುವುದಿಲ್ಲ. +“ಸುಮ್ಮನೇ ನೋಡಿ ಹೋಗೋಣ ಅಂತ ಬಂದೆ ಗೌಡರೆ, ಇವತ್ತು ಮಧ್ಯಾಹ್ನ ದೆಹಲೀಂದ ಒಬ್ಬರು ಸ್ಪೆಶಲಿಸ್ಟ್ ಬಂದಿದಾರೆ -ಅವರನ್ನ ಕರ್ಕೊಂಡು ಬಂದು ನಿಮ್ಮನ್ನ ತೋರಿಸ್ತಿದೀನಿ -ಎಕ್ಸ್‌ಪರ್ಟ್ ಒಪೀನಿಯನ್‌ಗೆ. ಅಮ್ಮಾವರೀಗೆ ಕಷ್ಟವಾಗ್ತಿದೇಂತ ನಾಳೇಂದ ಒಬ್ಬರು ನರ್ಸಮ್ಮ ಬಂದು ನಿಮ್ಮನ್ನು ನೋಡ್ಕೊಂಡು ಹೋಗ್ತಾರೆ. ಈಗ ನಾನು ಹೋಗಲ?” +ವೀರಣ್ಣ ಎದ್ದು ನಿಂತು ಹೊರಟ. ರೂಮಿಂದ ಹೊರಗೆ ಹೋದವನು ಏನೋ ನೆನೆಸಿಕೊಂಡು ಹಿಂದಕ್ಕೆ ಬಂದ. +“ಮರೆತೇ ಬಿಟ್ಟೆ ಗೌಡರೆ. ನಿಮಗೊಂದು ಕಾರು ಬೇಕೇ ಬೇಕು. ಅಮ್ಮಾವ್ರಿಗೆ ಮನೆಕೆಲಸಮುಗಿಸಿ ಬ್ಯಾಂಕಿಗೆ ಹೋಗಬೇಕು. ಅಸೆಂಬ್ಲಿ ಶುರುವಾದ ಮೇಲೆ ನಿಮ್ಮನ್ನ ಕರ್ಕೊಂಡು ಹೋಗ್ಲಿಕ್ಕೆ ಬೇಕು. ಟ್ಯಾಕ್ಸಿಗೆ ತುಂಬ ಖರ್ಚಾಗತ್ತೆ. ನನ್ನ ಕಾರಿದೆ ಅನ್ನಿ. ಆದರೆ ಸಮಯಕ್ಕದು ಇರಬೇಕಲ್ಲ? ಆದ್ರಿಂದ ಈ ಫ಼ಾರಂಗೆ ಒಂದು ಸೈನ್ ಮಾಡಿ. ನಿಮಗೊಂದು ಫ಼ಿಯಟ್ಟನ್ನ ಸರ್ಕಾರ ಕೂಡ್ಲೆ ಮಂಜೂರು ಮಾಡಬೇಕು. ಎಂ.ಎಲ್.ಎ ಆಗಿ ನಿಮ್ಮ ಹಕ್ಕು ಅದು…..” +ವೀರಣ್ಣ ಭರ್ತಿ ಮಾಡಿದ್ದ ಅಪ್ಲಿಕೇಶನ್ನನ್ನು ಪೆನ್ನನ್ನು ರೆಡಿಮಾಡಿಕೊಂಡು ಕೃಷ್ಣಪ್ಪನ ಸಹಿ ತೆಗೆದುಕೊಳ್ಲಲು ಅವನ ಮಂಚದ ಮೇಲ್ಭಾಗವನ್ನು ಎತ್ತಲು ಹೋದ. +“ಬೇಡ ವೀರಣ್ಣನೋರೆ. ಕಾರು ತೆಗೆದುಕೊಳ್ಳುವಷ್ಟು ದುಡ್ಡು ನನ್ನ ಹತ್ರ ಇಲ್ಲ.” +“ಅಯ್ಯೋ ದುಡ್ಡು ದುಡ್ಡು. ಯಾಕೆ ಯಾವಾಗ್ಲೂ ದುಡ್ಡಿನ ವಿಷ್ಯ ಮಾತಾಡ್ತೀರಿ? ಅದನ್ನ ನನಗೆ ಬಿಡಿ.” +“ಅದೆಲ್ಲ ಸಾಧ್ಯವಿಲ್ಲ. ಸಾಲ ಮಾಡೋಕೆ ನನಗೆ ಇಷ್ಟವಿಲ್ಲ.” +“ಬ್ಯಾಡ. ಸಾಲ ಮಾಡೋದು ಬ್ಯಾಡ. ನಿಮ್ಮ ಕಾರನ್ನ ನಾನೇ ಕೊಂಡಿಟ್ಟುಕೋತೇನೆ. ನನ್ನ ಮಗನೂ ಒಂದು ಫ಼ಿಯಟ್ಟು ಬೇಕೂಂತ ಸತಾಯಿಸ್ತ ಇದಾನೆ. ಅಷ್ಟುಪಕಾರ ನೀವು ಮಾಡಿದ್ದಕ್ಕೆ ನಾನು ಬೇಕಾದಾಗ ನಿಮಗೆ ಉಪಯೋಗಿಸಿಕೊಳ್ಳಕ್ಕೆ ಕಾರನ್ನ ಕೊಡಬಹುದಲ್ಲ……” +ನಾಗೇಶ ರೂಮಿಂದ ಎದ್ದು ಹೋದ. ತನ್ನ ಮನಸ್ಸು ಈ ವೀರಣ್ಣನ ಉಪಕಾರಕ್ಕೆ ಕೃತಜ್ಞತೆಯಲ್ಲಿ ದುರ್ಬಲವಾಗೋದನ್ನ ಅವನು ಗಮನಿಸಿದ್ದಾನೆ. ತನಗೆ ಸುಲಭವಾಗಲೆಂದು ಅವನು ಹೊರಗೆ ಹೋಗಿದ್ದಾನೆ. +ಕೃಷ್ಣಪ್ಪ ಬೇಡವೇ ಬೇಡ ಎಂದು ತಲೆಯಲ್ಲಾಡಿಸುತ್ತ ವೀರಣ್ಣನಿಗೆ ಹೇಳಿದ. +“ಹೋಗ್ಲಿ ನಿಮಗೆ ಬೇಡ. ಆದರೆ ನನಗೊಂದು ಉಪಕಾರ ಮಾಡಬಹುದಲ್ಲ ನೀವು?” +ಲಕ್ಷಾಧೀಶನಾದ ವೀರಣ್ಣನಿಗೆ ಹತ್ತೋ ಹನ್ನೆರಡೊ ಸಾವಿರ ಕೊಟ್ಟು ಒಂದು ಫ಼ಿಯಟ್ಟನ್ನ ಕೊಳ್ಳುವುದು ಕಷ್ಟವೆ? ಅಷ್ಟಕ್ಕಾಗಿ ಅವನು ತನಗೆ ಕೈಯೊಡ್ಡುವ ಮನುಷ್ಯನೆ? ಆದರೂ ಉಪಕಾರ ಮಾಡಿ ಅನ್ನುವ ರೀತಿಯಲ್ಲಿ ಬೇಡುತ್ತಿದ್ದಾನೆ ಎಂದು ಕೃಷ್ಣಪ್ಪ, ಮೃದುವಾಗಿ ಫ಼ಾರಂಗೆ ಸೈನ್ ಮಾಡಿದ. ವೀರಣ್ಣ ಹೊರಟುಹೋದ ಮೇಲೆ ನಾಗೇಶ ಒಳಗೆ ಬಂದ. +“ಇದೂ ಕೂಡ ಕರಪ್ಶನ್ ಕಣೋ ನಾಗೇಶ. ವೀರಣ್ಣ ಹತ್ತು ಸಾವಿರವಾದ್ರೂ ಈ ಕಾರಿಂದ ಲಾಭ ಮಾಡಿಕೋತಿದಾನೆ. ನನಗೋಸ್ಕರ ಕೊಳ್ತಿದೀನಿ ಅಂತಾನೆ. ನಿಜವಿದ್ರೂ ಇರಬಹುದು……” +“ಬಿಡಿ ಗೌಡರೆ. ಆ ಕಾರೇನು ಅವನಿಗೆ ದೊಡ್ಡದ? ನಿಮ್ಮ ಅಗತ್ಯಕ್ಕೇಂತ ಕೊಳ್ತಿದಾನೆ. ಅಂಥವರು ಮಾಡಬೇಕಾದ ಡ್ಯೂಟಿ ಅದು.” +ನಾಗೇಶನ ಮಾತಿನಿಂದ ಕೃಷ್ಣಪ್ಪನಿಗೆ ಸಮಾಧಾನವಾಯಿತು. ಆದ್ದರಿಂದಲೇ ಕಟುವಾಗಿ ಮಾತಾಡುವುದು ಅವನಿಗೆ ಸುಲಭವಾಯಿತು. +“ನಿಂಗಿನ್ನೂ ಅನುಭವ ಸಾಲದು ನಾಗೇಶ. ನಾನು ಮೆತ್ತಗಾಗ್ತ ಆಗ್ತ ಬಂದಿದೀನಿ. ಒಳಗಿಂದ ಕೊಳೀತ ಇದೀನಿ. ಹತ್ತು ವರ್ಷಗಳ ಹಿಂದೆ ಇಂಥವರ ನೆರಳೂ ನನ್ನ ಹತ್ರ ಸುಳೀತ ಇರ್ಲಿಲ್ಲ” +ಈ ಮಾತಿಂದ ನಾಗೇಶನ ಮೆಚ್ಚುಗೆ ಇನ್ನಷ್ಟು ಹೆಚ್ಚಿದ್ದು ಕಂಡು ತನ್ನ ಬಗ್ಗೆ ಹೇಸಿಗೆ ಪಡುತ್ತ ಕೃಷ್ಣಪ್ಪ ಕಣ್ಣು ಮುಚ್ಚಿ – +“ನನ್ನ ವೀಲ್‌ಚೇರಿನ ಮೇಲೆ ಕೂರಿಸ್ತೀಯ ನಾಗೇಶ. ಹೊರಗ್ಯಾರೋ ಇದಾರೆ ಅವರನ್ನೂ ಕರಕೊ ಸಹಾಯಕ್ಕೆ” ಎಂದ. +* +* +* +ಅಕ್ಟೋಬರ್ ತಿಂಗಳಿನ ಹವೆ ಬೆಂಗಳೂರಿನಲ್ಲಿ ಹಿತವಾಗಿತ್ತು. ಸಿಮೆಂಟಿನ ಅಂಗಳದ ಬಿಸಿಲಲ್ಲಿ ಬರಿದಾದ ಕಾಲನ್ನೂ ಕೈಗಳನ್ನೂ ಕಾಯಿಸಿಕೊಳ್ಳುತ್ತ ಅವುಗಳಲ್ಲಿ ರಕ್ತ ಹರಿಯುವುದನ್ನು ಕಲ್ಪನೆಯಲ್ಲಿ ಅನುಭವಿಸಲು ಯತ್ನಿಸುತ್ತ ಕೃಷ್ಣಪ್ಪ ಕೂತ. +ವಾರಂಗಲ್‌ನಿಂದ ಹಳ್ಳಿಗೆ ಹಿಂದಕ್ಕೆ ಬಂದ ಮೇಲೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಮಾವನಿಂದ ತನ್ನ ತಂದೆಗೆ ಸೇರಿದ್ದ ಗದ್ದೆಗಳನ್ನು ಬಿಡಿಸಿಕೊಂಡು ತಾಯಿಯ ಜೊತೆ ಸಂಸಾರ ಹೂಡಿದ್ದ. ಕೊಟ್ಟಿಗೆಯಲ್ಲಿ ಹಾಲು ಕರೆಯುವ ಎರಡು ದನಗಳಿದ್ದವು. ಹೊತ್ತಾರೆ ಎದ್ದು ಕೃಷ್ಣಪ್ಪನೇ ಹಾಲು ಕರೆಯುವುದು. ಈಗ ಜೀವವಿಲ್ಲದಂತಿರುವ ಬೆರಳುಗಳು ಆಗ ದನದ ಮೊಲೆಗಳನ್ನು ಪುಸಲಾಯಿಸಿ ಹಾಲಿಳಿಸಿಕೊಂಡು, ಮೇಲಿನಿಂದ ಕೆಳಕ್ಕೆ ಎರಡೂ ಕೈಗಳಲ್ಲೂ ಎರಡು ಮೊಲೆಗಳನ್ನೂ ಲಯಬದ್ಧವಾಗಿ ಒತ್ತಾಯಪೂರ್ವಕವಾಗಿ, ಆದರೆ ಮೃದುವಾಗಿ ಜಗ್ಗುತ್ತಿದ್ದುದು, ಮೊದಮೊದಲು ಕೈ ಬೇಗ ಬತ್ತುತ್ತಿತ್ತು. ಕ್ರಮೇಣ ಕಪ್ಪು ಬಿಳಿ ಚುಕ್ಕೆಗಳ ಕಾವೇರಿ ಹಿಂಗಾಲನ್ನು ಅಗಲಿಸಿ ನಿಂತು ತನ್ನ ಕೆಚ್ಚಲಿನ ಭಾರ ಕೃಷ್ಣಪ್ಪನ ಲಯಬದ್ಧವಾದ ಎಳೆತಕ್ಕೆ ಧಾರೆಧಾರೆ ಇಳಿಯುವುದನ್ನು ಸುಖಿಸುತ್ತ ದೀರ್ಘವಾಗಿ ಉಸಿರಾಡುತ್ತಿತ್ತು. ಒತ್ತುವಾಗ ಕ್ರಮೇಣ ಮೃದುವಾಗುತ್ತ ಹಾಲಿನಿಂದ ಸೆಟೆದೂ ತರಿತರಿಯಾಗಿಯೂ ಇರುತ್ತಿದ್ದ ಕೆಚ್ಚಲು. ತಾಯಿ ಕಾಯಿಸಿಕೊಟ್ಟ ಹಾಲು ಕುಡಿದು ಕೃಷ್ಣಪ್ಪ ಗದ್ದೆಗೆ ಹೋಗುವನು. ಬೇಸಗೆಯಲ್ಲಿ ಬಾವಿ ಬತ್ತಿ ಕಾಲು ಮುಳುಗುವಷ್ಟು ಮಾತ್ರ ನೀರಿದ್ದಾಗ ಬಾವಿಗೆ ಇಳಿಯುವನು. ಕೆಸರನ್ನು ಬಾಚಿ ಬಾಚಿ ಬಕೆಟ್ಟಿನಲ್ಲಿ ತುಂಬಿದರೆ ಮೇಲಿನಿಂದ ಶೇಷಪ್ಪ ಹಗ್ಗದಲ್ಲದನ್ನು ಎತ್ತಿಕೊಳ್ಳುವನು. ಉಸಿರು ಕಟ್ಟಿದ ಚಿಲುಮೆಗಳನ್ನು ಮುಟ್ಟಿ ಎಬ್ಬಿಸಲು ಕೈಗಳು ಕೆಸರು ಬಾಚುತ್ತ ಬಾಚುತ್ತ ಹಾತೊರೆಯುವುವು. ಮೊರಿಗೆಯಿಂದ ಹೀಗೆ ಕೆಸರು ನೀರು ಎತ್ತುವಾಗ ತಣ್ಣನೆಯ ನೀರಿನ ಚಿಲುಮೆ ಥಟ್ಟನೆ ಪುಟಿದು ಬೆರಳ ತುದಿಗಳಿಗೆ ತಾಕಿ ಇಡೀ ದೇಹವನ್ನು ರೋಮಾಂಚಗೊಳಿಸುವುದು. +“ಯಾಕ್ರೋ ಈ ಕಲ್ಕುಟುಕನ ಪೂಜೆ ಮಾಡ್ಕೊಂಡು ಮಂಕಾಗಿ ಕೂತಿದೀರಿ. ಅದೊಂದು ಕಲ್ಲು ಅಲ್ವ? ಎತ್ತಿ ಬಿಸಾಕಿ. ನಿಮ್ಮನ್ನು ಕಾಡೋ ದೆವ್ವ ಮಠದ ಏಜೆಂಟ್ ನರಸಿಂಹಭಟ್ಟ. ನೀವು ಗೆಯ್ದಿದ್ದನ್ನೆಲ್ಲ ಬಂದು ತಗೊಂಡು ಹೋಗ್ತಾನೆ -” +ಕೃಷ್ಣಪ್ಪ ತನ್ನ ಸುತ್ತಲಿನ ರೈತರಿಗೆ ಹೇಳುವನು. ಇದು ಜೋಯಿಸರ ಕಿವಿ ಮುಟ್ಟುವುದು. +“ಕಿಟ್ಟಪ್ಪ” ಎಂದು ಬಾಳೆಲೆ ಕೇಳುವ ನೆಪದಲ್ಲಿ ಜೋಯಿಸರು ಬಂದು ಚಾವಡಿಯ ಮೇಲೆ ಕೂತು, ಕೃಷ್ಣಪ್ಪ ಕೊಟ್ಟ ಹಾಲು ಕುಡಿದು ಅದೂ ಇದೂ ಮಾತಾಡುತ್ತ, “ಏನೋ ಕಿಟ್ಟಪ್ಪ? ಕಲ್ಕುಟಕ ಬರೀ ಕಲ್ಲು, ಎಸೀರಿ ಅಂದಿಯಂತೆ ಹೌದ?” ಎನ್ನುವರು. +ಜೋಯಿಸರ ಕೃಶವಾದ ಮೈಯನ್ನೂ, ಅವರ ಕುರುಚಲು ಬಿಳಿಗಡ್ಡ ದೊಡ್ಡ ಜುಟ್ಟುಗಳ ಮುಖದಲ್ಲಿ ಯಾವಾಗಲೂ ಸೌಮ್ಯವಾಗಿರುವ ಕಣ್ಣುಗಳನ್ನೂ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಹೇಳುವನು. ಜೋಯಿಸರು ಬಂದರೆಂದು ಎಲೆಯಡಿಕೆ ಮೆಲ್ಲುತ್ತ ತಾಯಿಯೂ ಚಾವಡಿಯಲ್ಲಿ ಕೂತಿರುವಳು. +“ನೀವೂ ನರಸಿಂಹ ದೇವರ ಒಕ್ಕಲಾಗಿದ್ದಿರಿ ಅಲ್ವ? ಅದು ಹೇಗೆ ನಿಮ್ಮ ತೋಟ ಕಳಕೊಂಡಿರಿ ಹೇಳಿ, ಯಾರು ಅದಕ್ಕೆ ಕಾರಣ?” +“ಇರೋದು ನಾನು ನನ್ನ ಹೆಂಡತಿ. ಒಂದಷ್ಟು ಪೆನ್ಶನ್ ಸಿಗುತ್ತೆ. ನಿನ್ನ ಮಾವ ಮತ್ತು ನಾಲ್ಕೈದು ಗೌಡರ ಮನೇವ್ರು ಏನೋ ಜ್ಯೋತಿಷ್ಯ ಹೇಳ್ತಾನಲ್ಲ, ಊರಲ್ಲೊಬ್ಬ ಬ್ರಾಹ್ಮಣ ಇರಲಿ ಅಂತ ಮನೇಗೆ ಬೇಕಾದ ಸೌದೆ, ಅಕ್ಕಿ, ತರಕಾರಿ, ಬಾಳೆಲೆ, ಹಣ್ಣು ಹಂಪಲು ಒದಗಿಸ್ತೀರಿ. ನಂಗೆ ಯಾಕೆ ತೋಟ ಬೇಕು ಹೇಳು?” +“ಸರಿ ಜೋಯಿಸ್ರೆ. ನರಸಿಂಹ ದೇವರ ಮಠದ ಏಜೆಂಟ್ ಭಟ್ಟ ಇದಾನಲ್ಲ ಅವ ಅಲ್ವ ನಿಮ್ಮನ್ನ ತೋಟದಿಂದ ಬಿಡಿಸಿ ತನ್ನ ಸ್ವಂತ ಸಾಗುವಳೀಂತ ಇಟ್ಟುಕೊಂಡದ್ದು?” +“ಗೇಣಿ ಸಂದಾಯ ಆಗ್ಲಿಲ್ಲಾಂತ ಇಟ್ಕೊಂಡ. ಸರಿ. ಅದನ್ನ ತಪ್ಪಿಸಕ್ಕಾಗತ್ತ?” +“ಆಗತ್ತೆ ಜೋಯಿಸ್ರೆ.” +“ಈಗಿನ ಕಾನೂನುಗಳು ನನಗೆ ಗೊತ್ತಿಲ್ಲಪ್ಪ. ಆದರೆ ಕೋರ್ಟು ಮೆಟ್ಟಿಲು ಹತ್ತಿ ಉದ್ಧಾರವಾದವ್ರನ್ನ ನಾನು ಕಾಣೆ. ನಾನು ಕೇಳಿದ ಪ್ರಶ್ನೆಗೂ ನಿನ್ನ ಈ ಪಾಟೀಸವಾಲಿಗೂ ಯಾಕೋ ನನಗೆ ಸಂಬಂಧಾನೇ ಹೊಳೀಲಿಲ್ಲ.” +“ಸಂಬಂಧ ಇದೆ -” +“ಹಾಗಾದರೆ ಹೇಳು ಮಾರಾಯ. ಶಿಷ್ಯಾದಿಚ್ಛೇತ್‌ಪರಾಜಯಂ ಅಂತಾರೆ” +“ಹೇಗೇಂದ್ರೆ ಜೋಯಿಸರೆ -ಇಗ ನೋಡಿ ಕಲ್ಕುಟಕನ್ನ ನಂಬಿಕೊಂಡು ಈ ನಮ್ಮ ಮೂರ್ಖ ಶೂದ್ರ ಜನ ಆ ನರಸಿಂಹ ಭಟ್ಟನಿಗೆ ಹೆದರ್ತಾರೆ. ತಮ್ಮ ಐಹಿಕ ಪಾಡಿನಲ್ಲಿ ಏನೂ ಮಾರ್ಪಾಟಾಗಲಿಕ್ಕೆ ಸಾಧ್ಯವಿಲ್ಲ ಅಂದುಕೋತಾರೆ. ಆ ಕುರಿ ಕೋಳೀ ತಿನ್ನೊ ಕಲ್ಕುಟಕನೇ ತಮ್ಮನ್ನ ಉದ್ಧಾರ ಮಾಡಬೇಕೂಂತ ತಿಳೀತಾರೆ.” +“ನಿಮ್ಮ ಜನಾನೂ ನಿರಾಕಾರ ನಿರ್ಗುಣ ಬ್ರಹ್ಮನನ್ನು ಅರಿಯೋ ಮಟ್ಟಕ್ಕೆ ಬರಬೇಕೂಂತ ಅನ್ನೋದನ್ನ ನಾನೂ ಒಪ್ತೀನೋ ಕಿಟ್ಟಣ್ಣ. ಧರ್ಮಕರ್ಮಗಳ ಮುಖೇನ ಅವರು ಮೇಲಕ್ಕೆ ಬರಬೇಕೇ ವಿನಹ -” +“ಅದಲ್ಲ ನಾನು ಹೇಳ್ತಿರೋದು ಜೋಯಿಸ್ರೆ -ಕೇಳಿ. ನರಸಿಂಹಭಟ್ರನ್ನ ಎದುರಿಸಿ ಅವರು ತಮ್ಮ ಐಹಿಕ ಬದುಕನ್ನ ಊರ್ಜಿತಗೊಳಿಸಿಕೊಂಡರೆ ಕ್ರಮೇಣ ಈ ಕುರಿಕೋಳಿ ತಿನ್ನೊ ದೆವ್ವಗಳ ಪೂಜೇಂದ ಮುಕ್ತರಾಗ್ತಾರೆ. ಆದರೆ ನರಸಿಂಹಭಟ್ಟನನ್ನ ಧಿಕ್ಕರಿಸಿ ನಡಕೊಳ್ಳೋಕೆ ಈ ಕಲ್ಕುಟಕನಲ್ಲಿರೋ ನಂಬಿಕೆ ಅಡ್ಡ ಬರತ್ತಲ್ಲ ಹೇಳಿ. ಆದ್ರಿಂದ ನಂಗೆ ಎದ್ದಿರೋ ಪ್ರಶ್ನೆ ಕಲ್ಕುಟಕನನ್ನ ಅವರು ಕಿತ್ತೆಸೆದು, ಅದ್ರಿಂದ ಬಂದ ಧೈರ್ಯದಿಂದ ನರಸಿಂಹ ಭಟ್ಟನ ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೋ, ಅಥವಾ ಎರಡನೇದನ್ನ ಮೊದಲು ಮಾಡಿ ಕಲ್ಕುಟಕನ್ನ ಪೂಜಿಸೋ ಸ್ಥಿತೀಂದ ಮೇಲೇಳಬೇಕೋ….” +ನರಸಿಂಹಭಟ್ಟನನ್ನ ಏಕವಚನದಲ್ಲಿ ತಾನು ಹೀಯಾಳಿಸಿದ್ದರಿಂದ ಬ್ರಾಹ್ಮಣರಾದ ಜೋಯಿಸರಿಗೆ ಖೇದವಾದದ್ದನ್ನ ಕೃಷ್ಣಪ್ಪ ಗಮನಿಸುತ್ತಾನೆ. ಜೋಯಿಸರೇ ಸ್ವತಃ ನರಸಿಂಹಭಟ್ಟನ ಲೋಭವನ್ನ ಬೇಸರದಿಂದ ಜರೆಯುತ್ತ ಮಠವೇ ಧರ್ಮದ ದಾರಿ ಬಿಟ್ಟ ಮೇಲೆ ಏನು ಗತಿಯೆಂದು ಕೃಷ್ಣಪ್ಪನ ಎದುರು ನಿಟ್ಟುಸಿರಿಟ್ಟದ್ದಿದೆ. ಮಠದ ಸ್ವಾಮಿ ಸೂಳೆಯನ್ನಿಟ್ಟುಕೊಂಡು, ವ್ಯವಹಾರವನ್ನು ತನ್ನ ತಮ್ಮನಾದ ಈ ಭಟ್ಟನ ಕೈಯಲ್ಲಿ ಕೊಟ್ಟು ಜೋಯಿಸರಂಥ ಧರ್ಮಭೀರುಗಳಿಗೆ ಅಸಹ್ಯವಾಗುವಂತೆ ಮಾಡಿದ್ದ. ಅಣ್ಣಾಜಿ ತನ್ನಲ್ಲಿ ಬಿತ್ತಿದ ವಿಚಾರಗಳನ್ನಾಗಲೀ, ಅಥವಾ ತಾನು ವಾರಂಗಲ್ ಠಾಣೆಯಲ್ಲಿ ಕಂಡಿದ್ದ ನರಕವನ್ನಾಗಲೀ ಈ ಬ್ರಾಹ್ಮಣನೆದುರು ಹೇಳಿ ಅವರಿಗೆ ಮನದಟ್ಟು ಮಾಡುವುದು ಅಸಾಧ್ಯವೆಂದು ಕೃಷ್ಣಪ್ಪ ಕೈಬಿಟ್ಟಿದ್ದ. ಆದರೂ ಜೋಯಿಸರು ಮತ್ತು ಅವರ ಹೆಂಡತಿ ಕೃಷ್ಣಪ್ಪನಲ್ಲಿ ತನ್ನವರು ಎಂಬ ಭಾವನೆ ಹುಟ್ಟಿಸುವರು. ಹಳ್ಳಿಗೆ ಬಂದ ಪ್ರಾರಂಭದಲ್ಲಿ ಜೋಯಿಸರು ಚಳಿಯಲ್ಲಿ ಬರೀ ಪಂಚೆಯುಟ್ಟು ಧೋತ್ರ ಹೊದ್ದಿರುವುದನ್ನು ಕಂಡು ಕೃಷ್ಣಪ್ಪ ಅವರಿಗೊಂದು ಉಣ್ಣೆಯ ಶಾಲು ತಂದುಕೊಟ್ಟು ರುಕ್ಮಿಣಿಯಮ್ಮನ ಕಣ್ಣುಗಳಲ್ಲಿ ಬೆಳಕನ್ನೂ ನೀರನ್ನೂ ಉಕ್ಕುವಂತೆ ಮಾಡಿದ್ದ. +ಮಾಂಸ ತಿನ್ನದ್ದರಿಂದ ಕೃಷ್ಣಪ್ಪ ಜೋಯಿಸರಿಗೆ ಇನ್ನಷ್ಟು ಆತ್ಮೀಯನಾಗಿದ್ದ. ಈ ಲೋಕದಲ್ಲಿ ಈಗಲೂ ಮಳೆ ಬೆಳಯಾಗುತ್ತಿರುವುದು ಕೆಲವೇ ಕೆಲವು ಬ್ರಾಹ್ಮಣರಾದರೂ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿರುವುದರಿಂದ ಎಂಬ ಜೋಯಿಸರ ತಿಳುವಳಿಕೆಯನ್ನು ಪ್ರೀತಿಯಿಂದ ಕೃಷ್ಣಪ್ಪ ಸಹಿಸಿಕೊಳ್ಳುವನು. ತನ್ನ ಜಪತಪಾದಿಗಳಿಂದ ಕೃಷ್ಣಪ್ಪ ಶ್ರೇಯೋವಂತನಾಗುತ್ತಿದ್ದಾನೆ ಎಂದು ಜೋಯಿಸರು ತಿಳಿದಿದ್ದಾರೆಂದು ಕೃಷ್ಣಪ್ಪನಿಗೆ ಗೊತ್ತು. ಅದನ್ನೂ ಅವನು ಸಹಿಸಿಕೊಳ್ಳುವನು. ಅವರ ಜಪತಪದ ಫಲವಾದ ಈ ತಾನು ನರಸಿಂಹ ಭಟ್ಟ ಎಷ್ಟೇ ಕೊಳಕನಾದರೂ ಅವನಿಗೆ ಪೂರ್ವಜನ್ಮದ ಪುಣ್ಯದಿಂದ ಲಭಿಸಿದ ಬ್ರಾಹ್ಮಣ್ಯಕ್ಕೆ ಚೂರೂ ಮರ್ಯಾದೆ ಕೊಡದೇ ಇರುವುದು ಜೋಯಿಸರಿಗೆ ಸಮಸ್ಯೆಯಾಗಿದೆ ಎಂದೂ ಅವನಿಗೆ ಗೊತ್ತಿದೆ. +ವಸೂಲಿಯ ಕಾಲ ಬಂತೆಂದರೆ ನರಸಿಂಹಭಟ್ಟ, ಅವನ ಕಡೆ ಅಮೀನ, ಅವನ ಶಾನುಭೋಗ ಹಳ್ಳಿಯ ರೈತರಿಗೆ ಸಿಂಹಸ್ವಪ್ನವಾಗಿಬಿಡುವರು. ಈ ಸಾರಿ ಒಂದು ಘಟನೆ ನಡೆಯಿತು. ಸಂದಾಯವಾಗಬೇಕಿದ್ದ ಗೇಣಿಯನ್ನು ಕೊಡಲಿಲ್ಲೆಂದು ಬೀರೇಗೌಡ ಎಂಬ ರೈತನ ಮನೆಯನ್ನು ನರಸಿಂಹಭಟ್ಟ ತನ್ನ ಜವಾನರ ಜೊತೆಗೆ ಸ್ವತಃ ನುಗ್ಗಿದ. ಬೀರೇಗೌಡನ ಮಗುವಿಗೆ ಜ್ವರ ಬಂದಿತ್ತು. ಅವನ ಹೆಂಡತಿ ಮಗುವಿಗೆಂದು ಕಂಚಿನ ಪಾತ್ರೆಯಲ್ಲಿ ಹಾಲನ್ನು ಕಾಯಿಸುತ್ತಿದ್ದಳು. ಒಳಗೆಲ್ಲೋ ಅಡಿಕೆಯನ್ನು ಬೀರೇಗೌಡ ಬಚ್ಚಿಟ್ಟಿದ್ದಾನೆ ಎಂಬ ಗುಮಾನಿಯಿಂದ ಒಳಗೆ ನುಗ್ಗಿದ ಭಟ್ಟನಿಗೆ ಬರಿದಾದ ಮನೆ ಕಂಡು ಕಡುಕೋಪ ಬಂತು. ಇನ್ನೆಲ್ಲೊ ಅಡಿಕೆಯನ್ನು ಈ ಗೌಡ ಸಾಗಿಸಿದ್ದಾನೆ ಎಂದು ಕಟಕಟನೆ ಹಲ್ಲುಕಡಿಯುತ್ತ ಭಟ್ಟ ಒಳಗಿದ್ದುದನ್ನೆಲ್ಲ ಅಂಗಳಕ್ಕೆ ಎಸೆಯಲು ಜವಾನರಿಗೆ ಹೇಳಿ, ಗೌಡನ ಹೆಂಡತಿ ಕಾಲು ಹಿಡಿದುಕೊಂಡರೂ ಕರಗದೆ, ಒಲೆಯ ಮೇಲಿದ್ದ ಹಾಲನ್ನೂ ಎತ್ತಿಸಿ ಅಂಗಳದಲ್ಲಿ ಚೆಲ್ಲಿಸಿದ್ದ. ಈ ಘಟನೆ ಹಳ್ಳಿಯ ಜನರನ್ನು ಅವಾಕ್ಕಾಗಿಸಿತ್ತು. ಕಿವಿಯಲ್ಲಿ ಒಂಟಿ ತೊಟ್ಟು, ಹಣೆಗೆ ವಿಭೂತಿಯಿಟ್ಟು, ಕಚ್ಚೆಪಂಚೆಯ ಮೇಲೆ ಕರಿಯ ಸರ್ಜ್‌ಕೋಟನ್ನು ಹಾಕಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ನಿಂತ ಉಬ್ಬು ಹಲ್ಲಿನ ಕಡುಕಪ್ಪು ಬಣ್ಣದ ಈ ಭಟ್ಟ ಬೀರೇಗೌಡನಿಗೆ ಯಮನಂತೆ ಕಂಡಿದ್ದ. ಅವತ್ತು ಸಂಜೆಯೇ ಜ್ವರ ಬಂದಿದ್ದ ಮಗು ಸತ್ತಿತು ಬೇರೆ. +ವಾರಂಗಲ್ ಠಾಣೆಯ ಹಿಂಸೆಯ ಬೇರುಗಳನ್ನು ತನ್ನ ಸುತ್ತಮುತ್ತಲೆಲ್ಲ ಕಂಡಿದ್ದ ಕೃಷ್ಣಪ್ಪ ಬೀರೇಗೌಡನ ಮಗುವನ್ನು ಹೂಳಲು ತಾನೇ ಹೋದ. ಅಲ್ಲಿ ನೆರೆದಿದ್ದ ರೈತರಿಗೆ ಹೇಳಿದ: ಮಠದ ಭಟ್ಟ ಪ್ರತಿ ವರ್ಷ ಹೆಚ್ಚು ಹೆಚ್ಚು ಗೇಣಿಯನ್ನು ಪಡೆಯುತ್ತಿದ್ದಾನೆ. ಅವನು ಗೇಣಿಯನ್ನು ಅಳೆಯಲು ತರುತ್ತಿರುವ ಕೊಳಗ ವರ್ಷೇ ವರ್ಷೇ ದೊಡ್ಡದಾಗುತ್ತ ಹೋಗಿದೆ. ಹಿಂದಿನ ಕೊಳಗದಲ್ಲಿ ಮಾತ್ರ ನೀವು ಗೇಣಿ ಅಳೆಯುತ್ತೀರೆಂದು ಹಠ ಮಾಡಿ. ಅವನು ಹಿಂಸೆ ಮಾಡಲು ಬರುತ್ತಾನೆ. ಮೊದಲೇ ನಿಮ್ಮ ಮನೆ ಹೆಂಗಸರಿಗೆ ಒಂದು ಪಾತ್ರೆ ಸಗಣಿ ನೀರನ್ನು ಬೆರೆಸಿ ಅದರಲ್ಲಿ ಪೊರಕೆ ಅದ್ದಿಡಲು ಹೇಳಿ. ಭಟ್ಟ ಒಳನುಗ್ಗಿದರೆ ಪೊರಕೆಯಲ್ಲಿ ಅವನಿಗೆ ಹೊಡೆಯಿರಿ. ಬ್ರಾಹ್ಮಣ ಇದರಿಂದ ಕಂಗಾಲಾಗುತ್ತಾನೆ. +ಮಾರನೇ ದಿನವೇ ಒಬ್ಬ ಬಡಗೌಡನ ಮನೆಯಲ್ಲಿ ಭಟ್ಟನ ಬಿಳಿ ಅಂಗಿ ಸರ್ಜ್‌ಕೋಟಿನ ಮೇಲೆ ಸಗಣಿ ನೀರದ್ದಿದ ಪೊರಕೆಯ ಪ್ರಕ್ಷಾಳನ ನಡೆಯಿತು. ಈ ಸುದ್ದಿ ತಾಲ್ಲೂಕಿನಲ್ಲೆಲ್ಲಾ ಹಬ್ಬಿತು. ಈ ಘಟನೆಯಿಂದ ಅನೇಕ ಬೆಳವಣಿಗೆಗಳಾದುವು. +ಪೋಲೀಸ್ ಸಹಾಯ ಪಡೆದು ಭಟ್ಟ ಒಕ್ಕಲೆಬ್ಬಿಸಲು ಶುರು ಮಾಡಿದ. ರೈತರು ಸಂಘಟಿತರಾಗಿ ತಮ್ಮ ಹೊಲವನ್ನು ಉಳಲು ಹೋದರು. ಅವರನ್ನು ಕಾನೂನಿನ ಪ್ರಕಾರ ಬಂಧಿಸಲಾಯಿತು. ಈ ಸುದ್ದಿ ಹರಡಿ ದೇಶದ ಅನೇಕ ಕಡೆಗಳಿಂದ ಸಮಾಜವಾದಿಗಳು ಬಂದು ಕೃಷ್ಣಪ್ಪನ ಹುಲಿಯೂರಲ್ಲಿ ದಸ್ತಗಿರಿಯಾಗತೊಡಗಿದರು. ಹುಲಿಯೂರು ಇಂಡಿಯಾದಲ್ಲೆಲ್ಲ ಈ ಘಟನೆಯಿಂದ ಕರ್ನಾಟಕದ ತೆಲಂಗಾಣವೆಂದು ಪ್ರಸಿದ್ಧವಾಯಿತು. +ರೈತರು ತಮ್ಮ ಹೋರಾಟದಲ್ಲಿ ಸಂಪೂರ್ಣ ಗೆಲ್ಲದಿದ್ದರೂ ಮಠ ಸ್ವಲ್ಪ ತಣ್ಣಗಾಯಿತು. ಕೊಳಗದ ಗಾತ್ರ ಹಿಗ್ಗುವುದು ನಿಂತು ಐದು ವರ್ಷಗಳ ಹಿಂದಿನ ತನ್ನ ಗಾತ್ರಕ್ಕೆ ಮರಳಿತು. ಈ ಘಟನೆ ಮೂಲಕ ರೈತರೆಲ್ಲರೂ ಸಂಘಟಿತರಾದರು. ಜನರ ಒತ್ತಾಯಕ್ಕೆ ಸಿಕ್ಕಿಬಿದ್ದು ಕೃಷ್ಣಪ್ಪ ಚುನಾವಣೆಗೆ ನಿಂತು ಗೆದ್ದು ಬಂದ. ಇದು ಮೂರನೇ ಬಾರಿ ಅವನು ಅಸೆಂಬ್ಲಿಗೆ ಆಯ್ಕೆಯಾಗಿರುವುದು. ಇಷ್ಟಿಷ್ಟೇ ರೈತರ ಸಮಸ್ಯೆಗಳು ಬಗೆ ಹರಿಯುತ್ತ ಬಂದಿದ್ದರಲ್ಲಿ ಅವನ ಪಾತ್ರ ಮಹತ್ವದ್ದೆಂದು ದೇಶದಲ್ಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೊದಲು ಬ್ರಾಹ್ಮಣರ ವಿರುದ್ಧವಿದ್ದ ಸರ್ಕಾರ ಇನಾಂದಾರಿಯನ್ನು ರದ್ದು ಮಾಡಿತು. ಆದರೆ ಜಮೀಂದಾರ ವರ್ಗವಾದ ಒಕ್ಕಲಿಗ ಲಿಂಗಾಯತರು ಅಧಿಕಾರದಲ್ಲಿದ್ದುದರಿಂದ ಭೂ ಹಿಡುವಳಿಗೆ ಸೀಲಿಂಗ್ ಹಾಕುವ ಹೋರಾಟ ಉಗ್ರವಾಗುತ್ತ ಹೋಗಬೇಕಾಯಿತು. ಉಳುವವನೇ ಹೊಲದೊಡೆಯ ಎಂಬ ಸ್ಲೋಗನನ್ನು ಮಾತಿನ ಮಟ್ಟದಲ್ಲಾದರೂ ಸರ್ಕಾರ ಈಗ ಒಪ್ಪಿಕೊಳ್ಳುತ್ತಿದೆ. ಆದರೆ ಎಲ್ಲಾ ಉಳುವವರೂ ಹೊಲದೊಡೆಯರಾಗಿಲ್ಲ. ಈಚೀಚೆಗೆ ಆದವರು ಉಳಿದವರು ಆಗುವುದನ್ನು ಇಷ್ಟಪಡುವುದಿಲ್ಲ. +ಮನುಷ್ಯನ ಸ್ವಾಭಿಮಾನ ಬೆಳೆಯಲು ಈ ಆಸ್ತಿಯ ಹೋರಾಟ ಅಗತ್ಯವೆಂದು ಅಣ್ಣಾಜಿ ಹೇಳಿದ್ದು ಕೃಷ್ಣಪ್ಪ ಗೌಡನ ಅನುಭವಕ್ಕೆ ಬಂದಿದೆ. ಆದರೆ ತಾನು ಮುಳುಗಿರುವ ರಾಜಕೀಯ ಹೋರಾಟ ಕ್ರಮೇಣವಾಗಿ ಮನುಷ್ಯನನ್ನು ಕ್ಷುಲ್ಲಕವಾದ್ದರಿಂದ ಬಿಡುಗಡೆ ಮಾಡುತ್ತದೆನ್ನುವುದರಲ್ಲಿ ಅವನಿಗಿನ್ನೂ ಅನುಮಾನ ಉಳಿದಿದೆ. ಮೂರು ಹೊತ್ತೂ ಜನರ ಮಧ್ಯವಿದ್ದು ಅವರ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಲೇ ಇರುವುದರಿಂದ ಅವನಿಗೆ ಸುಸ್ತಾಗುತ್ತದೆ. ಒಂಟಿಯಾಗಿರಬೇಕೆಂಬ ಆಸೆ ಮೊಳೆಯುತ್ತದೆ. ಸದಾ ಹೋರಾಟದಲ್ಲಿ ಮಗ್ನನಾಗಿರುವ ತನಗೆ ಪ್ರತಿಕ್ಷಣವೂ ಎಲ್ಲೆಲ್ಲೊ ಸದಾ ಫಲಿಸುತ್ತಲೇ ಇರುವ ಜೀವನದ ಸಣ್ಣ ಖುಷಿಗಳು ಕಾಣದೇ ಹೋಗುತ್ತಿವೆ ಎಂದು ಆತಂಕವಾಗುತ್ತದೆ. ಅವನು ಬಾಡಿಗೆಗಿದ್ದ ಗಾಂಧೀ ಬಜ಼ಾರಿನ ಬಡಾವಣೆಯಲ್ಲಿ ಯಾವತ್ತಾದರೂ ಸಂಜೆ ಒಂಟಿಯಾಗಿರುವುದು ಸಾಧ್ಯವಾದಾಗ ಹೊರಗೆ ಕಾಂಪೌಂಡಿನಲ್ಲಿ ಕೂತು ನೋಡುತ್ತಾನೆ. ಉದ್ದೇಶರಹಿತ ಸಂಭ್ರಮದಲ್ಲಿ ಉದ್ದ ಲಂಗ ತೊಟ್ಟ ಹುಡುಗಿಯರು ಓಡಾಡುವುದು ಕಂಡು ಅಸೂಯೆಯಾಗುತ್ತದೆ. ಜೀವನದಲ್ಲಿ ಮುಂದೆ ಬರುವ ಸಂದಿಗ್ಧಗಳು, ಮಧ್ಯಮವರ್ಗದ ತಾಯಿತಂದೆಯರ ಆತಂಕಗಳು ಅವರನ್ನು ಬಾಧಿಸುವಂತೆ ಕಾಣುವುದಿಲ್ಲ. ಜಡೆಗಳಿಗೆ ಮಲ್ಲಿಗೆ ಮುಡಿದು ಗುಂಪಾಗಿ ಗಲಿಬಿಲಿ ಮಾಡುತ್ತ ದೀಪಗಳ ಕೆಳಗೆ ಮರಗಳ ಕೆಳಗೆ ಅವರ ಒಯ್ಯಾರದ ಅರ್ಧ ತಾಸನ್ನು ಕೃಷ್ಣಪ್ಪ ಅಕ್ಕರೆಯಿಂದ ಗಮನಿಸುತ್ತಾನೆ. ಹುಡುಗರನ್ನು ಕಂಡರೆ ನಾಚುವ ಹುಡುಗಿಯರು ಹಲವರಾದರೆ, ಅವರನ್ನು ಚುಡಾಯಿಸುವವರೂ ಕೆಲವರು. ಕೃಷ್ಣಪ್ಪನನ್ನೆ ಅವನ ಜೊತೆ ಹುಡುಗಿಯರು ಆಫ಼್ರಿಕನ್ ಪ್ರಿನ್ಸ್ ಎನ್ನುತ್ತಿರಲಿಲ್ಲವೆ? ಆದರೆ ಯಾವತ್ತೂ ತಾನು ಮಾತ್ರ ಬಿಗಿ. +ಗೌರಿ ದೇಶಪಾಂಡೆ ಫ಼ಿಲಡೆಲ್ಫಿಯಾದಲ್ಲಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾನೆ. ಅವಳಿಂದ ಕಾಗದವಿಲ್ಲದೆ, ತಾನು ಬರೆಯದೆ ಬಹಳ ದಿನಗಳಾದವು. ಅವಳೂ ಈಚೆಗೆ ರಾಜಕೀಯದಲ್ಲಿ ಆಸಕ್ತಳಾಗಿದ್ದಾಳಂತೆ. ಅವಳ ಜೊತೆಗಾರ ಮಾರ್ಕ್ಸ್‌ವಾದಿ ಸೋಶಿಯಾಲಜಿಸ್ಟ್ ಅಂತೆ. ಪಾರ್ಲಿಮೆಂಟರಿ ರಾಜಕೀಯದಿಂದ ಇಂಡಿಯಾಕ್ಕೆ ಸುಖವಿಲ್ಲವೆಂದು ಅವಳು ವಾದಿಸುತ್ತಾಳೆ. ಗೌರಿ ಹಿಂದೆ ಹೀಗಿರಲಿಲ್ಲ. ಈಗಿನ ನಿಲುವು ಅವಳು ಕಡ ಪಡೆದದ್ದೋ -ಅಥವಾ ನಿಜವೋ ತಿಳಿಯುವುದಿಲ್ಲ. ಅಂತೂ ಅವಳನ್ನು ಮದುವೆಯಾಗೆಂದು ತಾನು ಕೇಳಲೇ ಇಲ್ಲ ಎಂದು ನೋವಾಗುತ್ತದೆ. ತಾನು ಮದುವೆಯಾಗೆಂದು ಕೇಳಿದ ಲೂಸಿನಾ ಅದನ್ನು ಗಂಭೀರವಾಗಿ ಮನಸ್ಸಿಗೆ ತಂದುಕೊಳ್ಳಲೇ ಇಲ್ಲ. ಆದರೆ ಈ ನೋವುಗಳೂ ಈಗ ತೀವ್ರವಾಗಿ ಉಳಿದಿಲ್ಲ. ಖಾಸಗಿ ವ್ಯಕ್ತಿಯಾಗಿ ತಾನು ಖಾಲಿಯಾಗುತ್ತ ಹೋಗುತ್ತಿದ್ದೇನೆಂದು ಭಯವಾಗುತ್ತದೆ. ಇಲ್ಲವಾದಲ್ಲಿ ನನಗೊಂದು ಒಳಬಾಳು ಇದೆ ಎಂಬುದನ್ನೂ ಚೂರೂ ಅರಿಯಲಾರದ ಸೀತೆಯನ್ನು ಮದುವೆ ಮಾಡಿಕೊಳ್ಳುತ್ತಿದ್ದೆನೆ ಎಂದು ಕಸಿವಿಸಿಯಾಗುತ್ತದೆ. ಗೋಪಾಲ ರೆಡ್ಡಿ ಸತ್ತ ಮೇಲೆ ಒಂಟಿಯಾಗಿರುವುದು ಅಸಾಧ್ಯವೆನ್ನಿಸಿ ಮದುವೆ ಆದದ್ದಲ್ಲವೆ? ಅವನ ಹಿತೈಷಿಗಳು ಊಟ ಉಪಚಾರಗಳನ್ನು ನೋಡಿಕೊಳ್ಳಬಲ್ಲ ಹೆಣ್ಣೆಂದು ಸೀತೆಯನ್ನು ಮದುವೆ ಮಾಡಿಕೊ ಎಂದಾಗ ಅಷ್ಟಕ್ಕೇ ಲಾಯಕ್ಕಾದವಳನ್ನು ಮಾಡಿಕೊಳ್ಳುವುದನ್ನು ಅವನು ಕೂಡ ಬಯಸಿದ್ದ. ಅಂದರೆ ಹೆಣ್ಣಿನ ಸಂಗದಲ್ಲಿ ತೀವ್ರತೆಗೆ ಹೆದರಿ ಸೀತೆಯಂಥವಳನ್ನು ಮದುವೆಯಾಗಿ, ಆಮೇಲೆ ತೀವ್ರತೆ ಬೇಕೆಂದು ಬಯಸುವ ತನ್ನ ವ್ಯಕ್ತಿತ್ವದಲ್ಲಿ ಎಲ್ಲೋ ಕೊರತೆಯಿರಲೇಬೇಕು. ಪ್ರಾಯಶಃ ಅಣ್ಣಾಜಿ ಹೇಳಿದಂತೆ ನಾನು ಫ಼್ಯೂಡಲ್, ಮದುವೆಯ ಅಗತ್ಯವಿಲ್ಲೆಂದು ಕಂಡದ್ದರಿಂದಲೇ ಲೂಸಿನಾ ಜೊತೆ ತೀವ್ರವಾದ ಪ್ರಣಯ ತನಗೆ ಸಾಧ್ಯವಾಗಿದ್ದಿರಬಹುದು. ಮದುವೆಯಲ್ಲಿ ತೊತ್ತನ್ನು ಬಯಸಿದೆನೇ ವಿನಹ ಸಖಿಯನ್ನಲ್ಲ. ಆದ್ದರಿಂದಲೇ ಬಹುಶಃ ಗೌರಿಯನ್ನು ಕಳಕೊಂಡೆ ಎಂದು ಸಿಗರೇಟ್ ಹತ್ತಿಸುತ್ತಾನೆ. ಹುಡುಗರು ಹುಡುಗಿಯರೆಲ್ಲ ಬೀದಿಯಿಂದ ಮರೆಯಾಗುತ್ತಾರೆ. ಪಕ್ಕದ ಮನೆಯಲ್ಲಿ ಮಗು ಮಗ್ಗಿ ಕಲಿಯುತ್ತಿದೆ. ಒಳಗೆ ಸೀತೆ ಏನೋ ಪರಚಿಕೊಳ್ಳುತ್ತಿದ್ದಾಳೆ. ಗಂಡ ಒಂಟಿಯಾಗಿ ಸಿಗೋದೇ ದುರ್ಲಭವಾದ್ದರಿಂದ ಸಿಕ್ಕಿದ ಈ ಸಮಯದಲ್ಲಿ ತನ್ನ ಸಿಟ್ಟನ್ನೆಲ್ಲ ಅವನ ಕಿವಿಗೆ ತಲ್ಪಿಸುತ್ತಿದ್ದಾಳೆ. ಕೃಷ್ಣಪ್ಪ ಒಳಗೆ ಹೋಗಿ ಪ್ರತಿ ಸಂಜೆ ತಾನು ಕುಡಿಯುವ ಕ್ವಾರ್ಟರ್ ವ್ಹಿಸ್ಕಿಯನ್ನು ಎದುರಿಗಿಟ್ಟುಕೊಂಡು ಮೇಜಿನ ಎದುರು ಕೂರುತ್ತಾನೆ. +ಇವತ್ತಾದ್ದು ನಾಳೆ ನೆನಪಿರುವುದಿಲ್ಲ. ದಿನಗಳ ಮೇಲೆ ದಿನಗಳು ಉರುಳುತ್ತವೆ. ಅಸೆಂಬ್ಲಿಯಲ್ಲಿ ಉಗ್ರಭಾಷಣ, ಹೊರಗೆ ಉಗ್ರಭಾಷಣ, ಅದರ ವಿರುದ್ಧ ಇದರ ವಿರುದ್ಧ ಪ್ರತಿಭಟನೆ, ಬೆಳಗಾದರೆ ಅದು ಬೇಕು ಇದು ಬೇಕು ಎಂದು ಬರುವ ಜನ, ಅದನ್ನು ಖಂಡಿಸಿ ಸಹಿ, ಇದನ್ನು ಸಮರ್ಥಿಸಿ ಸಹಿ -ತೇಯುತ್ತಾ ಹೋಗುತ್ತಾನೆ. ಈ ಮಧ್ಯೆ ಕೃಷ್ಣಪ್ಪನಿಗೆ ಆಗರ್ಭ ಶ್ರೀಮಂತನೊಬ್ಬ ಸ್ನೇಹಿತನಾಗಿದ್ದ. ಕೋಲಾರದ ಕಡೆಯಿಂದ ಆಯ್ಕೆಯಾದ ಈ ಗೋಪಾಲರೆಡ್ಡಿ ಶ್ರೀಮಂತನಾದರೂ ಮಾರ್ಕ್ಸ್‌ವಾದಿ. ಶುಭ್ರವಾದ ಬಿಳಿಪಂಚೆಯನ್ನು ಕಚ್ಚೆ ಹಾಕಿ ಉಟ್ಟು, ತೆಳುವಾದ ಜುಬ್ಬ ತೊಟ್ಟು ಬೆನ್ಸ್ ಕಾರಲ್ಲಿ ಓಡಾಡಿಕೊಂಡಿದ್ದ ಸಪುರ ಮೈ ನೀಳವಾದ ಮುಖಗಳ ಈ ಮಾರ್ಕ್ಸ್‌ವಾದಿ ತನ್ನ ವರ್ಗದ ನಾಶವನ್ನು ಬಯಸುವ ಉತ್ಕಟತೆಗೆ ಕೃಷ್ಣಪ್ಪ ಮಾರುಹೋಗಿದ್ದ. ಗೋಪಾಲರೆಡ್ಡಿ ಒಮ್ಮೆ ತನ್ನ ಸಂಗಡ ಜೈಲಿನಲ್ಲಿದ್ದಾಗ ಅವನ ಲವಲವಿಕೆ ಕಷ್ಟಸಹಿಷ್ಣುತೆ ಗಮನಿಸಿ ಚಕಿತನಾಗಿದ್ದ. ಹಣ, ಆಸ್ತಿ, ಸ್ಥಾನಗಳನ್ನು ಅಸಡ್ಡೆಯಿಂದ ಕಾಣುವ ಗೋಪಾಲರೆಡ್ಡಿ ಸಿನಿಮಾ, ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಅತ್ಯುತ್ಕೃಷ್ಟವಾದದ್ದನ್ನು ಬೆನ್ನು ಹತ್ತಿದವ. ಕಲ್ಕತ್ತದಲ್ಲಿ ಅಲಿ ಅಕ್ಬರನ ಕಛೇರಿಯಿದೆ ಎಂದು ಪೇಪರಿನಲ್ಲಿ ಓದಿ ಕೃಷ್ಣಪ್ಪನನ್ನು ವಿಮಾನದಲ್ಲಿ ಕಲ್ಕತ್ತೆಗೆ ಕರೆದುಕೊಂಡು ಹೋದಂಥ ಹುಚ್ಚು ಅವನದು. ಬೊಂಬಾಯಿಯ ತಾಜ್‌ನಲ್ಲಿರುವಷ್ಟೇ ಸಲೀಸಾಗಿ ಸುಖವಾಗಿ ಗುಡಿಸಲಲ್ಲೂ, ಜೈಲಲ್ಲೂ ಅವನು ಇರಬಲ್ಲ. ಹಚ್ಚಿಕೊಳ್ಳದಂತೆ ಭೋಗಿಸಬಲ್ಲ. ಬೈನೆ ಮರದ ಹೆಂಡ ಮೆಣಸಿನಕಾಯಿ ಬೋಂಡಗಳು ಸ್ಕಾಚ್ ಮತ್ತು ಚೀಸಿನಷ್ಟೇ ಅವನಿಗೆ ಪ್ರಿಯ. ಅಪಾರವಾದ ಐಶ್ವರ್ಯ ಬದುಕಿಗಷ್ಟು ಮೆರುಗು ಮಾತ್ರ ತರುತ್ತದೆ ಎಂಬ ಕೃಷ್ಣಪ್ಪನ ಅಭಿಪ್ರಾಯ ಗೋಪಾಲರೆಡ್ಡಿಯ ಸಹವಾಸದಲ್ಲಿ ಬದಲಾಯ್ತು -ಐಶ್ವರ್ಯವಿದ್ದಲ್ಲಿ ಜೀವನದ ಗುಣಲಕ್ಷಣಗಳೇ ಭಿನ್ನವಾಗಿರುತ್ತವೆ ಎಂಬುದನ್ನು ಕಂಡ. ಕೃಷ್ಣಪ್ಪನ ಚುನಾವಣೆಗೆ ಹುಲಿಯೂರಿಗೆ ಬಂದು ಯಾವ ರೈತನ ಚಾವಡಿಯಲ್ಲಾದರೂ ಮಲಗಿ ಬೆಳಿಗ್ಗೆ ಬಾಳೆಲೆ ಮೇಲೆ ಬಡಿಸಿದ ಗಂಜಿಗೆ ಮಾವಿನ ಮಿಡಿ ಉಪ್ಪಿನಕಾಯನ್ನು ಬಡಿಸಿಕೊಂಡು ಅತ್ಯಂತ ರುಚಿಯಿಂದ ತಿನ್ನಬಲ್ಲ ಕೌಶಲ ಅವನದು. ಹುಲ್ಲಿನ ಚಾಪೆ, ಹಾಳೆಯ ಟೊಪ್ಪಿ, ಗೊರಬು, ಹಲಸಿನ ಹಣ್ಣಿನ ಕಡುಬು, ಬಿದಿರಿನ ಉಣಗೋಲು -ದೈನಿಕದಲ್ಲಿ ನಿಕೃಷ್ಟವೆನ್ನಿದ್ದೆಲ್ಲವೂ ಅವನ ನಿರ್ಲಿಪ್ತ ಮೆಚ್ಚುಗೆಯಲ್ಲಿ ಹಾಡುತ್ತಿದ್ದವು -ಅವನು ಭೋಗಿಸುವ ಹೆಣ್ಣಿನ ದೇಹ ಹಾಡಿದಂತೆ. +ಗೋಪಾಲ ರೆಡ್ಡಿಯ ಊರಿಗೇ ಹೋದಾಗ ಮಾತ್ರ ಕೃಷ್ಣಪ್ಪ ತನ್ನ ಗೆಳೆಯನ ಮಿತಿಯನ್ನು ಅರಿತದ್ದು. ಅಲ್ಲಿ ಅವನು ಧಣಿ. ಅವನ ಅಪ್ಪ ಟೈರೆಂಟ್. ಜವಾನರು ಬೆನ್ನು ತೋರಿಸಿ ನಡೆಯುವುದಿಲ್ಲ. ಅರಮನೆಯಂಥ ಅವನ ಮನೆಯಲ್ಲಿ ಮಕ್ಕಳು ಅಳುವುದು ಕೇಳುವುದಿಲ್ಲ. ಹೆಂಗಸರು ನಗುವುದು ಕೇಳುವುದಿಲ್ಲ. ರೆಡ್ಡಿಯ ಅಪ್ಪ ನಿಂತಲ್ಲಿ ಕೂತಲ್ಲಿ ಎಲ್ಲವೂ ಸ್ತಬ್ಧವಾಗಿರುತ್ತಿತ್ತು. ಗೋಪಾಲರೆಡ್ಡಿ ತುಂಬ ಮುಜುಗರದಿಂದ ಕೃಷ್ಣಪ್ಪನನ್ನು ಒಂದು ದಿನ ಮಾತ್ರ ಅಲ್ಲಿರಿಸಿಕೊಂಡಿದ್ದ -ಅಷ್ಟೆ. ತನ್ನ ಶ್ರೀಮಂತಿಕೆಯಿಂದ ಕೃಷ್ಣಪ್ಪ ಹೇಸಿದ್ದು ಕಂಡು ಗೋಪಾಲರೆಡ್ಡಿಗೆ ಅವನ ಮೇಲೆ ಅಭಿಮಾನ ಹೆಚ್ಚಿತು. ಇಂಥದನ್ನು ರಕ್ಷಿಸಲೆಂದೇ ವಾರಂಗಲ್‌ನಲ್ಲಿ ಕಂಡಂಥ ಪೋಲೀಸ್ ಠಾಣೆಗಳು ಇದ್ದಾವೆಂಬುದು ಗೋಪಾಲರೆಡ್ಡಿಗೆ ತಿಳಿಯದ ವಿಚಾರವೆ? +ಗೋಪಾಲರೆಡ್ಡಿಯ ವ್ಯಾಪಕವಾದ ಅಭಿಮಾನದಲ್ಲಿ ಕೃಷ್ಣಪ್ಪ ಸಡಿಲವಾದ, ಹಿಗ್ಗಿದ, ತೇಲಿದ, ಕುಡಿಯುವುದನ್ನು ಕಲಿತ. ಹುಡುಗಿಯರ ಜೊತೆ ಮಲಗಿದ. ದೇಹದ ಬೆವರಿನಂತೆ ವ್ಯಕ್ತವಾಗುತ್ತಿದ್ದ ಕೃಷ್ಣಪ್ಪನ ವ್ಯವಸ್ಥೆಯ ವಿರುದ್ಧದ ಕೋಪ, ಅದರ ಮೊದಲಿನ ತೀವ್ರತೆ, ಮಿತಿಗಳನ್ನು ಕಳೆದುಕೊಂಡು ಇಡಿಯಾಗಿ ಕಾಣಬಲ್ಲ ವಿಚಾರಗಳಾದವು. ಗೋಪಾಲರೆಡ್ಡಿ ಸದಾ ಕೃಷ್ಣಪ್ಪನ ವಿಪ್ಲವಕಾರಕ ಆರ್ತತೆಗೆ ತನ್ನ ಚುರುಕಾದ ವಿಚಾರವನ್ನೂ ಬೆಸೆಯುತ್ತಿದ್ದುದರಿಂದ, ಒಂದು ಇನ್ನೊಂದರಿಂದ ಕುಮ್ಮಕ್ಕು ಪಡೆದು ಬೆಳೆಯುತ್ತ ಹೋಗುತ್ತಿದ್ದುದರಿಂದ ಹೆಣ್ಣು, ವ್ಹಿಸ್ಕಿ, ಸಂಗೀತ ಕಛೇರಿಗಳು, ವಿಮಾನ ಸಂಚಾರಗಳು ಕೃಷ್ಣಪ್ಪನನ್ನು ನೈತಿಕವಾಗಿ ಬಾಧಿಸಲಿಲ್ಲ. ಕ್ಷುಲ್ಲಕ ವಿಷಯಗಳಿಂದ ಅಬಾಧಿತನಾಗಿರುವುದು, ಹಣಕ್ಕಾಗಿ ಪರಿದಾಡದಿರುವುದು, ನಿಷ್ಠುರವಾಗಿ ಮಾತಾಡುವುದು, ದೇಹವನ್ನು ಹೆಣ್ಣು ಊಟ ವ್ಹಿಸ್ಕಿಗಳಿಂದ ತಣಿಸಿಕೊಳ್ಳುವುದು, ಹಾತೊರೆಯದೆ ಬೇಕೆನಿಸಿದ್ದನ್ನ ಪಡೆಯುವುದು -ಎಲ್ಲವೂ ಒಟ್ಟಿಗೆ ಏಕಕಾಲದಲ್ಲೆ ಸಿಕ್ಕಿದ್ದರಿಂದ ಕೃಷ್ಣಪ್ಪ ತೇಲಿದ. ತಾನು ಅತ್ಯುನ್ನತ ಶಿಖರದಲ್ಲಿದ್ದೇನೆಂದು ಭಾವಿಸಿದ. ನಿನ್ನೆ ಯಾವ ಹುಡುಗಿಯ ಜೊತೆ ರಮಿಸಿದ್ದು ಎಂಬುದು ಇವತ್ತು ಮರೆಯುವುದೂ ಇತ್ತು. ಅಚ್ಚಳಿಯದೆ ಉಳಿದಿರುವುದೆಂದರೆ ಚಿರತೆಯ ಸೌಂದರ್ಯವನ್ನು ನೆನಪಿಗೆ ತರುವ ಲೂಸಿನಾ ಮಾತ್ರ. ಈಗೀಗ ವಾರಂಗಲ್ ಠಾಣೆಯಲ್ಲಿ ಕಳೆದ ಹಗಲು ರಾತ್ರೆಗಳು ನೆನಪಾಗುವುದಿತ್ತು. ಆದರೆ ಜೀವನವನ್ನು ಕಳೆಗುಂದಿಸುವ ಕ್ಷುಲ್ಲಕ ವಿಷಯಗಳನ್ನು ಅಪಾರವಾದ ಐಶ್ವರ್ಯ ಮತ್ತು ಔದಾರ್ಯಗಳ ಸಹಾಯದಿಂದ ಸುಡಬಲ್ಲ ಕೌಶಲ ಗೋಪಾಲರೆಡ್ಡಿಗೆ ಸಾಧಿಸಿತ್ತಲ್ಲವೆ? ಆಸ್ತಿಪಾಸ್ತಿಗಳಿಂದ ಅಬಾಧಿತವಾದ ತನ್ನ ಕನಸಿನ ಭವಿಷ್ಯದ ಹೊಸ ಬದುಕು ಅದರ ದೈನಿಕ ಸ್ವರೂಪದಲ್ಲಿ ಹೀಗೆ ನಿರಂಬಳವಾಗಿರುತ್ತದೆಂದು ಕೃಷ್ಣಪ್ಪ ಭಾವಿಸಿದ. +ಮಹೇಶ್ವರಯ್ಯ ಒಮ್ಮೆ ಬಂದವರು ಇಬ್ಬರನ್ನು ಒಟ್ಟಿಗೇ ಕಂಡು ಏನನ್ನೊ ನುಂಗಿಕೊಂಡಂತೆ ಅನ್ನಿಸಿತು. ಹೆಣ್ಣೆಂದರೆ ಲಂಪಟಪಡುವ ಅವರು ತಾನು ಪಡುತ್ತಿದ್ದ ಸುಖವನ್ನು ಜರೆದಿರಲಾರರು. ಹಾಗಾದರೆ ಮತ್ತೇನೆಂದು ಅವರನ್ನು ಪೀಡಿಸಲು “ಕೃಷ್ಣಪ್ಪ ಇದು ಬಹಳ ಕಾಲ ಉಳಿಯಲ್ಲೊ -ನಿನಗೆ ಮತ್ತೆ ಅಶ್ವತ್ಥಮರದ ಕೆಳಗೆ ದನಗಳನ್ನು ಕಾಯುತ್ತ ಕೂರಬೇಕೆನ್ನಿಸುತ್ತೊ” ಎಂದಿದ್ದರು. ಹೌದು ಅವರೆಂದಂತೆ ಇದು ಉಳಿಯಲಿಲ್ಲ. ಗೋಪಾಲರೆಡ್ಡಿ ಕ್ಯಾನ್ಸರ್ ಆಗಿ ಸತ್ತ. ಆಮೇಲೆ ಕೃಷ್ಣಪ್ಪ ಬಹಳ ದಿನ ಮಂಕಾಗಿದ್ದು ಹಿತೈಷಿಗಳ ಒತ್ತಾಯಕ್ಕೆ ಒಪ್ಪಿ ಸೀತೆಯನ್ನು ಮದುವೆಯಾದದ್ದು. +ಗೋಪಾಲರೆಡ್ಡಿಯಿಂದ ಪಡೆದ ಸಖ್ಯ ಈಗ ಭ್ರಮೆಯೆನ್ನಿಸುತ್ತದೆ. ತನಗಿಂದ ಹೆಚ್ಚು ಓದಿದ್ದ ಜ್ಞಾನಿ ಅವನು. ಒಳ್ಳೆಯ ಆಟಗಾರ. ಸಂಗೀತದಲ್ಲಿ ಸೂಕ್ಷ್ಮವಾದ ಅಭಿರುಚಿಯಿದ್ದವ. ಜೊತೆಗಿರುವ ಹೆಣ್ಣು ದುಡ್ಡುಕೊಟ್ಟು ಪಡೆದವಳು ಎಂಬುದು ಹೆಣ್ಣಿಗೇ ಮರೆಯುವಂತೆ ಮಾಡಬಲ್ಲ ಕೌಶಲಿ. ಅವನ ಶ್ರೀಮಂತಿಕೆಗೆ ತಾನು ಅವಾಕ್ಕಾಗುವಂಥವನಲ್ಲೆಂದು ಗೊತ್ತಾದ್ದರಿಂದಲೇ ಅವನು ತನ್ನ ಸಖ್ಯ ಬಯಸಿದ್ದಿರಬೇಕು. ತನ್ನಂಥವನ ಸಾಕ್ಷಿಯಲ್ಲಿ ಅವನಿಗೆ ಹಣವನ್ನು ಯಃಕಶ್ಚಿತ್ ಆಗಿ ಸುಡುವುದರಲ್ಲಿ ತೀವ್ರವಾದ ಬಿಡುಗಡೆಯ ಸುಖ ಸಿಕ್ಕಿರಬೇಕು. ಸಖನಾಗಿದ್ದೂ ತನ್ನನ್ನು ಅವನು ಒಂದು ಬಗೆಯ ಆರಾಧನಾಭಾವದಿಂದ ಕಾಣುತ್ತಿದ್ದ. ತನ್ನ ಬಿಗಿಗಳು ಸಡಿಲವಾಗಲು ಅಂಥ ಕಣ್ಣುಗಳು ಅಗತ್ಯವಾಗಿದ್ದವು. ಮಹೇಶ್ವರಯ್ಯ, ಅಣ್ಣಾಜಿ, ಗೌರಿಗಳಂತೆಯೇ ಇವನೂ ತನ್ನಲ್ಲಿ ಏನೋ ದಿವ್ಯವಾದ್ದಿದೆ ಎಂದು ಕಂಡಿದ್ದ. ಒಳಗೇ ಉಜ್ಜಿ ತನ್ನಲ್ಲಿ ಉರಿಯುತ್ತಿದುದರಲ್ಲಿ ಅವನು ಮೈಕಾಯಿಸಿಕೊಂಡಿದ್ದ. ಅಮುಕುತ್ತಿದ್ದ ತನ್ನ ತೀವ್ರತೆಯ ಬಾಧೆಗಳನ್ನು ಅವನ ಸಖ್ಯದಲ್ಲಿ ಹಾಡುವಂತೆ ಮಾಡಿದ್ದ. ಇದರಿಂದ ಕೃಷ್ಣಪ್ಪನಿಗೆ ತನ್ನ ಒಳಬಾಳಿನಲ್ಲಿ ತನಗೇ ಹೊಮ್ಮುತ್ತಿದ್ದ ಚೊಗರಿನಂಥ ಒಂದು ವಿಶೇಷವಾದ ರುಚಿ -ಅದರ ಅಸಹನೀಯ ಉತ್ಕಟ ರುಚಿ -ಕಡಿಮೆಯಾಗುತ್ತ ಹೋಯಿತು. ಗೋಪಾಲರೆಡ್ಡಿ ಸತ್ತಿದ್ದೇ ತಾನು ತಬ್ಬಲಿಯಾದೆನೆನ್ನಿಸಿತು. +“ನಾಗೇಶಾ” +ತನ್ನನ್ನು ಬಿಸಿಲಿನಲ್ಲಿ ಬಿಟ್ಟು ಒಳಗೆ ಕೂತಿದ್ದ ನಾಗೇಶ ಬಂದು ನಿಂತ. +“ಒಳಗೆ ಹೋಗೋಣ ಬಿಸಿಲು ಹೆಚ್ಚಾಯ್ತು” +ನಾಗೇಶ ತಳ್ಳಿಕೊಂಡು ರೂಮಿಗೆ ಕರೆದುಕೊಂಡು ಹೋದ. +“ಡ್ರಾನಲ್ಲಿ ಪರ್ಸಿದೆ ಕೊಡು” +ನಾಗೇಶ ಎತ್ತಿಕೊಟ್ಟ ಪರ್ಸಿಂದ ಇನ್ನೂರು ರೂಪಾಯಿಗಳನ್ನು ತೆಗೆದು ಅವನಿಗೆ ಕೊಟ್ಟ. ನಾಗೇಶ ಅರ್ಥವಾಗದೆ ಕೃಷ್ಣಪ್ಪನ ಮುಖ ನೋಡಲು, +“ನಿನ್ನ ಹತ್ತಿರ ಇನ್ನೊಂದು ಜೊತೆ ಬಟ್ಟೆ ಇರೋ ಹಾಗೆ ಕಾಣಿಸಲ್ಲ. ಹೊಲಿಸಿಕೊ” ಎಂದ. +“ಬೇಡ ಗೌಡರೆ -” +“ತಗೊಳ್ಳೊ. ನನ್ನ ಹತ್ತಿರ ಬಡಿವಾರ ಮಾಡಬೇಡ.” +“ನಿಮ್ಮ ಪರ್ಸಲ್ಲಿ ಇಷ್ಟೇ ಇರೋದು.” +“ನೋಡು ನಾಗೇಶ, ಬಲಗೈ ಇನ್ನೂ ಚಲಿಸ್ತ ಇದೆ. ಅದಕ್ಕೂ ಸ್ಟ್ರೋಕ್ ಹೊಡಿಯೋ ಮುಂಚೆ….” +ತಾನು ನಗುತ್ತ ಹೇಳಿದ ಈ ಮಾತಿನಿಂದ ನಾಗೇಶ ಖಿನ್ನನಾದ್ದು ಕಂಡು – +“ಹುಚ್ಚಪ್ಪ -ನಿಂಗೊತ್ತಿಲ್ಲ. ನನ್ನ ಹೆಂಡತಿ ಇದಾಳಲ್ಲ, ಮಹಾ ಜಿಪುಣಿ, ನನ್ನ ಸಂಬಳದಲ್ಲಿ ಉಳಿಸೀ ಉಳಿಸೀ ಬ್ಯಾಂಕಲ್ಲಿ ಹತ್ತು ಸಾವಿರ ಕೂಡಿಟ್ಟಿದ್ದಾಳೆ. ತಗೋ ಈ ಹಣಾನ್ನ ನೀನು ಬಾಯಿ ಮುಚ್ಚಿಕೊಂಡು -” ಎಂದ. +ಕೃಷ್ಣಪ್ಪನಿಗೆ ನಾಗೇಶನ ಹಿನ್ನೆಲೆ ಗೊತ್ತಿತ್ತು. ಬಡ ಬ್ರಾಹ್ಮಣ ಕುಟುಂಬ. ಅಪ್ಪ ಸದಾ ವ್ಯಗ್ರನಾಗಿರುತ್ತಿದ್ದ ಗುಮಾಸ್ತ. ಅಣ್ಣನೊಬ್ಬ ಇಂಜಿನಿಯರ್. ಅವನ ಹೆಂಡತಿ ಜಿಪುಣಿಯಾದ್ದರಿಂದ ಅವನಿಂದಾಗುವ ಸಹಾಯ ಅಷ್ಟಕ್ಕಷ್ಟೇ. ಆರು ಮದುವೆಯಾಗದ ಅಕ್ಕತಂಗಿಯರು. ಮಗ ಅರ್ಧಕ್ಕೆ ಓದು ನಿಲ್ಲಿಸಿ, ಮೆರವಣಿಗೆ ಮಣ್ಣು ಮಸೀ ಅಂತ ರಾಜಕೀಯದಲ್ಲಿ ಕಾಲ ಕಳೀತಾನೇಂತ ತಾಯಿಗೆ ದುಗುಡ. ನಾಗೇಶ ಮಲಗೋದು ಪಾರ್ಟಿ ಆಫ಼ೀಸಲ್ಲಿ. ಉಣ್ಣೋದು ಅಲ್ಲಿ ಇಲ್ಲಿ. ಕಾಫ಼ಿಗೆ ಸಿಗರೇಟಿಗೆ ಕಾಸಾದರೆ ಸಾಕು ಅವನಿಗೆ. ಬರಲಿರುವ ಸಮತಾ ವ್ಯವಸ್ಥೇಲಿ ತನ್ನ ಪಾಡು ಸುಧಾರಿಸುತ್ತದೆ ಎಂದು ಅವನು ಕನಸು ಕಟ್ಟುತ್ತಾನೆ. ಕಾಲಹರಣ ಮಾಡೋದು ಅವನಿಗೆ ಒಗ್ಗಿಹೋಗಿದೆ. ಎಚ್.ಎಂ.ಟೀಲಿ ಕೆಲಸ ಕೊಡಿಸಲೇನಯ್ಯ ಎಂದು ಕೇಳಿದರೆ ಬೇಡವೆನ್ನುತ್ತಾನೆ. ಹಾಗೆ ಕೇಳಿದ್ದರಿಂದ ಅವಮಾನವಾಗಿ ಸಿಟ್ಟಾಗುತ್ತಾನೆ; ಎಲ್ಲರಂತೆ ಉದ್ಯೋಗಿಯಾಗಿ ಬದುಕೋದು ಕಳಪೇಂತ ಅವನ ಅಭಿಪ್ರಾಯ. ಅಂಥ ಪ್ರತಿಭಾಶಾಲಿಯೂ ಅಲ್ಲ. ಆದರೆ ಕೃಷ್ಣಪ್ಪನ ವ್ಯಕ್ತಿತ್ವದ ಪ್ರಭೆಗೆ ಮರುಳಾದ ಯುವಕರಲ್ಲಿ ಇವನೂ ಒಬ್ಬ. ತನ್ನ ರಾಜಕೀಯ ವಿಚಾರ, ಜೀವನ ಕ್ರಮ ಇಂಥ ಮೋಡಿಯಲ್ಲಿ ಹಲವು ಯುವಕರನ್ನು ಸಿಕ್ಕಿಸಿದೆ ಎಂದು ಕೃಷ್ಣಪ್ಪನಿಗೆ ಪಶ್ಚಾತ್ತಾಪವಾಗುತ್ತದೆ. ಇಂಥವರಿಗೆ ವಯಸ್ಸಾಗುವುದನ್ನು ನೆನೆದರೆ ಹೆದರಿಕೆಯಾಗುತ್ತದೆ. +“ನಾಗೇಶ ನಿಂಗೊಂದು ಕಥೆ ಹೇಳ್ತೇನೆ” ಎಂದು ಜೋಯಿಸರ ವಿಷಯ ಥಟ್ಟನೆ ನೆನಪಿಗೆ ಬಂದು ಕೃಷ್ಣಪ್ಪ ಶುರು ಮಾಡುತ್ತಾನೆ. ನಾಗೇಶ ನೋಟ್‌ಬುಕ್ ಇಟ್ಟುಕೊಂಡು ಇವನ್ನೆಲ್ಲ ಗುರುತು ಮಾಡಿಕೊಳ್ಳುತ್ತ ಹೋಗುತ್ತಾನೆ. +ಹುಲಿಯೂರಿನ ರೈತರು ಪೊರಕೇನ್ನ ಸಗಣಿಯಲ್ಲದ್ದಿ ಭಟ್ಟನನ್ನು ಅಟ್ಟಲು ಶುರು ಮಾಡಿದಾಗ ಪ್ರತಿದಿನ ಅವನು ಜನಿವಾರ ಬದಲಾಯಿಸಬೇಕಾಗಿ ಬಂತು. ಬ್ರಾಹ್ಮಣನ ಮೇಲೆ ಇಂಥ ಹಲ್ಲೆ ಮಾಡುವುದನ್ನು ತಾಳಲಾರದೆ ದುಃಖಿತರಾದ ಜೋಯಿಸರಿಗೆ, “ನೀವು ಮಾಡೊ ಜನಿವಾರ ಈಗ ಹೆಚ್ಚು ಮಾರಾಟವಾಗ್ತಾ ಇದೆಯಲ್ಲ -ನೀವು ಯಾಕೆ ದುಃಖಪಡಬೇಕು” ಎಂದು ಗೇಲಿ ಮಾಡಬೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ. ಕೃಷ್ಣಪ್ಪನ ತಾಯಿಯೂ ಇದರಿಂದ ಭಯಪಟ್ಟಿದ್ದರಿಂದ ಕೃಷ್ಣಪ್ಪ ನಿಧಾನವಾಗಿ ಕೇಳಿದ. +“ನಾನು ನಿಮ್ಮ ಮಗ ಇದ್ದ ಹಾಗೆ ಅಂತ ನೀವು ತಿಳಿದಿದ್ದೀರಿ ಅಲ್ಲವ ಜೋಯಿಸ್ರೆ -” +“ಅದೆಂಥ ಪ್ರಶ್ನೆ ನೀನು ಕೇಳೋದು? ಇಲ್ದಿದ್ರೆ ನಾನು ನಿನಗೆ ಬುದ್ಧಿವಾದ ಹೇಳಕ್ಕೆ ಬರ್ತಿದ್ನ?” +“ಸಾಯ್ತಾ ಇರೋ ಮಗೂಗೇಂತ ಇಟ್ಟ ಹಾಲನ್ನ ಎಸೆಯೋದು ಹೆಚ್ಚು ತಪ್ಪೋ, ಅಥವಾ ಅಂಥ ಬ್ರಾಹ್ಮಣನ್ನ ಪೊರಕೇಲಿ ಹೊಡೆಯೋದೊ?” +“ಎರಡೂ ತಪ್ಪು. ಭಟ್ಟ ಅವನು ಮಾಡಿದ ಪಾಪಕ್ಕೆ ನರಕಕ್ಕೆ ಹೋಗ್ತಾನೆ. ಆದರೆ ಅದು ಬ್ರಾಹ್ಮಣ ಜನ್ಮವಲ್ವ? ಅವನನ್ನ ಪೊರಕೇಲಿ ಹೊಡೆಸಿ ನೀನು ಯಾಕೆ ಪಾಪ ಕಟ್ಟಿಕೋಬೇಕು?” +ಕೃಷ್ಣಪ್ಪನ ತಾಯಿಯೂ ಜೋಯಿಸರ ಮಾತು ಕೇಳಿಸಿಕೊಳ್ಳುತ್ತ ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಬಾಯಿಗೆ ಹಾಕಿಕೊಂಡು ಆತಂಕದಿಂದ ತನ್ನ ಒಪ್ಪಿಗೆ ಸೂಚಿಸಿದಳು. ಇವರ ಹತ್ತಿರ ಮಾತು ಅಸಾಧ್ಯವೆನ್ನಿಸಿತ್ತು. ಉಪನಿಷತ್ತುಗಳನ್ನೆಲ್ಲ ಓದಿದ್ದ ಈ ಕಡು ಬಡವ ಬ್ರಾಹ್ಮಣನೂ ಎಷ್ಟು ಮೂರ್ಖನಾಗಬಲ್ಲನೆಂದು ಕೃಷ್ಣಪ್ಪನಿಗೆ ದುಃಖವಾಗಿತ್ತು. +“ನೀವೂನೂ ಜಾತಿ ಅನ್ನೊ ಕಾರಣಕ್ಕೆ ಭಟ್ಟನ ಪರವಾಗಿ ಮಾತಾಡೋದು ಕಂಡ್ರೆ ದುಃಖವಾಗತ್ತೆ ಜೋಯಿಸ್ರೆ -” +ಕೃಷ್ಣಪ್ಪ ನಿಜವಾಗಿ ವ್ಯಥೆಯಿಂದ ಮಾತಾಡಿದ್ದು ಕೇಳಿ ಜೋಯಿಸರು ತಬ್ಬಿಬ್ಬಾಗಿದ್ದರು. +“ಈ ಮಾಯಾಪ್ರಪಂಚದಲ್ಲಿ ಸಿಕ್ಕಿರೋ ತನಕ ಜಾತಿ ಗೀತಿ ಎಲ್ಲ ನಿಜವೇ ಅಲ್ವೇನಪ್ಪ?” +“ಹಾಗಾದ್ರೆ ನಾನೇನು ಪಾಪ ಮಾಡಿ ಶೂದ್ರನಾಗಿ ಹುಟ್ಟಿದೇಂತ ನಿಮ್ಮ ಭಾವನೆಯೋ? ನನ್ನ ಕಂಡರೆ ನಿಮಗೂ ದೊಡ್ಡವ್ವನಿಗೂ ಯಾಕೆ ಹಾಗಾರೆ ಮಗಾಂತ ಅನ್ನಿಸತ್ತೆ ಹೇಳಿ -” +ರುಕ್ಮಿಣಿಯಮ್ಮನನ್ನ ಕೃಷ್ಣಪ್ಪ ದೊಡ್ಡವ್ವ ಅನ್ನೋದು. +“ಭಟ್ಟನಂಥ ಪಾಷಂಡಿಗಳಿಂದ ನಮ್ಮ ಪೂರ್ವಜರು ಮಾಡಿದ ಪುಣ್ಯವೆಲ್ಲ ನೀರಲ್ಲಿ ಹೋಮಮಾಡಿದಂತಾಯ್ತು. ನಿನ್ನ ಅಂದೇನು ಪ್ರಯೋಜನ ಹೇಳು? ಸ್ವತಃ ಆದಿಶಂಕರರೇ ಕಾಲಟಿಯಿಂದ ಬದರಿಗೆ ಹೋಗೋ ಮಾರ್ಗದಲ್ಲಿ ದಿವ್ಯವಾದ್ದೊಂದು ಪ್ರಭೆಯನ್ನು ಕಂಡು ಈ ನರಸಿಂಹದೇವರನ್ನ ಸ್ಥಾಪಿಸಿದರು ಅಂತ ಐತಿಹ್ಯ ಇದೆ. ಹೇಗಿದ್ದ ಮಠ ಈಗ ಹೇಗಾಗಿಬಿಡ್ತು? ಮೂಕ ಪಶು ಪಕ್ಷಿಗಳನ್ನೂ ಹಿಂಸೆ ಮಾಡಬಾರ್ದು ಅಂತ ವೈದಿಕ ಧರ್ಮ ಹೇಳುತ್ತೆ….” +ಜೋಯಿಸರ ಕಣ್ಣುಗಳು ಒದ್ದೆಯಾದುವು. ಅವರು ರುದ್ರಾಕ್ಷಿ ಧರಿಸಿದ ಎಲುಬುಗಳು ಕಾಣುವ ಎದೆಯನ್ನು ನೋಡುತ್ತ ಕೃಷ್ಣಪ್ಪನ ಮನಸ್ಸು ಕರಗಿತು. +“ದೂರದಿಂದ ನೋಡಿದಾಗ ಹಿಂಸೆಯಷ್ಟೇ ಪ್ರತಿಹಿಂಸೆಯೂ ಕೊಳಕಾಗಿ ಕಾಣತ್ತೆ ಜೋಯಿಸರೆ. ಆದರೆ ಪೊರಕೇಲಿ ಹೊಡೆಯೋದಕ್ಕೂ ತಯಾರಾದಾಗ ಅವರಲ್ಲೆಷ್ಟು ಸ್ವಾಭಿಮಾನ ಬೆಳೆದಿರತ್ತೆ ನಿಮಗೆ ಕಾಣಿಸ್ತ ಇಲ್ಲ. ಅವರೆಲ್ಲ ಹುಳಗಳಂತೆ ಸಹಿಸ್ತ ಇದ್ದಿದ್ರಿಂದೇನೇ ಮಠಾನೂ ಕೊಳೀತ ಬಂತು. ನಿಮ್ಮ ಭಟ್ಟಾನೂ ಸಣ್ಣ ಹುಳಾನ ತಿನ್ನೋ ದೊಡ್ಡ ಹುಳ ಆಗೋದು ಸಾಧ್ಯ ಆಯ್ತು” +ಜೋಯಿಸರು ಮಂಕಾಗಿ ಎದ್ದು ನಿಂತರು. ಕೃಷ್ಣಪ್ಪ ಹಾಸ್ಯದ ಧಾಟಿಯಲ್ಲಿ ಅವರನ್ನು ಒಲಿಸಲು ಪ್ರಯತ್ನಿಸಿದ. +“ಬ್ರಾಹ್ಮಣರು ಅಂದ್ರೆ ನಮ್ಮ ಜನಕ್ಕೆ ಇನ್ನೂ ಗೌರವ ಉಳಿದಿದೆ ಜೋಯಿಸ್ರೆ. ಪೊರಕೇಲಿ ಹೊಡೀತಾರೆ ನಿಜ. ಆದ್ರೆ ಒಳಗೆ ಮನಸ್ಸಲ್ಲೆ ಕಲ್ಕುಟಕನಿಗೆ ತಪ್ಪು ಕಾಣಿಕೇನೂ ಕಟ್ತಾರೆ…..” +“ನೀನು ಧರ್ಮಿಷ್ಠಾಂತ ನನಗೆ ಗೊತ್ತಪ್ಪ. ಆ ಭಟ್ಟ ಎಲ್ಲಿ -ನೀನೆಲ್ಲಿ? ಆದರೆ………” +ಜೋಯಿಸರಿಗೆ ಮಾತು ಹೊಳೆಯದೆ ಎದ್ದು ಹೋಗಿದ್ದರು. ಕೃಷ್ಣಪ್ಪ ಈ ಘಟನೆಯನ್ನು ಮರೆಯಲಾರ. ತನ್ನ ಆರೋಗ್ಯಕ್ಕಾಗಿ ಊರಿನ ಜನ ಕಲ್ಕುಟಕನಿಗೆ ಕೋಲ ಕಟ್ಟಿಸುವ ಹರಕೆ ಹೊತ್ತ ಸುದ್ದಿ ಕೇಳಿ ಪ್ರಾಯಶಃ ತನಗೆ ಇವತ್ತು ಎಲ್ಲ ನೆನಪಾಗುತ್ತಿರಬಹುದು. +ನಾಗೇಶ ಹೇಳಿದ: +“ಇನ್ನಷ್ಟು ಒದೀಬೇಕು ಗೌಡರೆ ಬ್ರಾಹ್ಮಣರನ್ನ. ಆಗಲೇ ಈ ಜಾತಿವ್ಯವಸ್ಥೇನ್ನ ನಾಶ ಮಾಡೋದು ಸಾಧ್ಯ.” +ಕೃಷ್ಣಪ್ಪ ನಗತೊಡಗಿದ. ನಾಗೇಶ ತಬ್ಬಿಬ್ಬಾಗಿ ಯಾಕೆಂದು ಕೇಳಿದ: +“ಹಂದಿ ಕುರಿ ತಿನ್ನೋ ನಮ್ಮ ಗೌಡರು ನಿನ್ನಂಥ ಒಬ್ಬ ಪುಳಚಾರು ತಿನ್ನೊ ಬಡಪಾಯಿಯನ್ನು ಒದೀಬೇಕು ಅಂತೀಯಲ್ಲ -ಅದನ್ನು ಕಲ್ಪಿಸಿಕೊಂಡು ನಗು ಬಂತು. ನಮ್ಮ ಜಾತಿ ಜಮೀಂದಾರರೇನು ಯೋಗ್ಯರು ಅಂತ ನೀನು ತಿಳ್ದಿರೋದ?” +* +* +* +“ಏ ನಾಗೇಶ -ಈ ಸಾರಿಯ ಇಲಸ್ಟ್ರೇಟೆಡ್ ವೀಕ್ಲಿ ಆಫ಼್ ಇಂಡಿಯಾ ಓದಿದ್ದಿಯ?” +ಕೃಷ್ಣಪ್ಪ ಸಂಭ್ರಮದಿಂದ ಕೇಳುತ್ತಾನೆ. ಸಾಯಂಕಾಲದ ಹೊತ್ತಲ್ಲಿ ಕೃಷ್ಣಪ್ಪನನ್ನು ನೋಡಲೆಂದು ಬಂದ ಅವನ ಪಕ್ಷದ ಇಪ್ಪತ್ತು ಎಂ.ಎಲ್.ಎಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತ ವರಾಂಡದಲ್ಲಿ ಕೂತ ನಾಗೇಶ “ಯಾಕೆ ಗೌಡರೆ” ಎಂದು ಕೋಣೆಯೊಳಗೆ ಬರುತ್ತಾನೆ. +“ನೋಡು” ಎಂದು ಮಡಿಸಿದ ವೀಕ್ಲಿಯನ್ನು ಕೊಡುತ್ತಾನೆ. ಕೃಷ್ಣಪ್ಪನ ಮುಖ ಮೋಜಿನಿಂದ ಹಿಗ್ಗಿದ್ದನ್ನು ನಾಗೇಶ ಗಮನಿಸಿ ಓದಲು ಶುರುಮಾಡುತ್ತಾನೆ. +ಕೌಪೀನಧಾರಿಯಾದ ಬೈರಾಗಿಯ ದೊಡ್ಡದೊಂದು ಚಿತ್ರದ ಕೆಳಗೆ ಸರ್ಪಸಿದ್ಧೇಶ್ವರಾನಂದನೆಂದು ಬರೆದಿತ್ತು. ಬೈರಾಗಿಗೆ ಉದ್ದವಾದ ಬಿಳಿ ಗಡ್ಡ ಜಟೆಗಳು ಬೆಳೆದಿದ್ದವು. ಅವನು ಈ ಚಿತ್ರದಲ್ಲಿ ನಗುತ್ತಿದ್ದ. ಇನ್ನೊಂದು ಚಿತ್ರವಿತ್ತು -ಅದರಲ್ಲಿ ಬೈರಾಗಿ ಮರದ ಕೊಂಬೆಯೊಂದರ ಮೇಲೆ ಕೂತು ಮೈ ಕೆರೆದುಕೊಳ್ಳುತ್ತಿದ್ದ ಕಪಿಯಂತಿದ್ದ. ಹಲ್ಲು ಬಿದ್ದ ಬಾಯನ್ನು ಇಷ್ಟಗಲ ತೆಗೆದು ಪರಮ ಸುಖಿಯಂತೆ ಕಾಣುತ್ತಿದ್ದ. +“ನಾನು ಹೇಳ್ತ ಇದ್ದನಲ್ಲ -ನಮ್ಮ ಜಿಲ್ಲೆಯ ಬೈರಾಗಿ, ಮೌನಿ ಇವನೇ. ಗಟ್ಟಿಯಾಗಿ ಓದು” +ಬರೆದವನು ಉಪ್ಪು ಖಾರ ಬೆರೆಸಿರಬಹುದೆಂದು ಸಂಶಯವಾದರೂ ಲೇಖನ ಕೃಷ್ಣಪ್ಪನನ್ನು ಆಕರ್ಷಿಸಿತು. ಗೀತಾ ಪಠನಕ್ಕಾಗಿ ಮಾತ್ರ ತನ್ನ ಮೌನವನ್ನು ಮುರಿಯುತ್ತಿದ್ದ ಬೈರಾಗಿ ಕ್ರಮೇಣ ಪ್ರಸಿದ್ಧನಾದ ಕಥೆ ಲೇಖನದಲ್ಲಿತ್ತು. ಭಕ್ತರ ಮನಸ್ಸಿನಲ್ಲಿ ಕಾಣಿಸಿಕೊಂಡು ಮಾತಾಡುವನೆಂಬ ಪ್ರತೀತಿ ಹುಟ್ಟಿ ಜನ ಜಮಾಯಿಸುವುದು ಹೆಚ್ಚಾದಂತೆ ಒಂದು ದಿನ ಬೈರಾಗಿ ಗುಹೆ ಸೇರಿಬಿಟ್ಟ. ಹೊರಕ್ಕೆ ಬರಲೇ ಇಲ್ಲ. ಎರಡು ಮೂರು ದಿನಗಳಾದ ಮೇಲೆ ಬೆಟ್ಟದಲ್ಲಿ ನೆರೆದಿದ್ದ ಜನಸಮೂಹದಲ್ಲಿ ಒಬ್ಬಾತ ಈ ಮಹಿಮರೇನು ಮಾಡುತ್ತಿದ್ದಾರೆಂದು ನೋಡಲು ಗುಹೆಯಲ್ಲಿ ಇಣುಕಿದ. ಸರ್ಪದೋಪಾದಿಯಲ್ಲಿ ಬುಸ್ಸೆನ್ನುವ ಶಬ್ದ ಗುಹೆಯಿಂದ ಕೇಳಿಸಿತು. ಮಹಾತ್ಮರು ಈಶ್ವರನ ಶಿರಸ್ಸಿನ ಮೇಲೆ ಸರ್ಪದ ಭಾವ ತಾಳಿ ತಪಸ್ಸಿನಲ್ಲಿದ್ದಾರೆಂದು ಅವನು ನೆರೆದಿದ್ದ ಜನರಿಗೆ ಸಾರಿದ. ಪ್ರತಿ ದಿನ ಅವರು ನೈವೇದ್ಯವನ್ನು ಗುಹೆಯ ಬಾಯಲ್ಲಿ ತಳ್ಳಿ ಕಾಯುವರು. ಒಂದಷ್ಟನ್ನು ತಿಂದು ಉಳಿದದ್ದನ್ನು ಬೈರಾಗಿ ಹೊರಗೆಸೆಯುವನು. ಆ ಪ್ರಸಾದವನ್ನು ಭಕ್ತರೆಲ್ಲ ಒಂದೊಂದು ಅಗಳಾಗಿ ಹಂಚಿಕೊಳ್ಳುವರು. ಕೆಲವು ದಿನ ನೈವೇದ್ಯವನ್ನು ಬೈರಾಗಿ ಸ್ವೀಕರಿಸುತ್ತಿಲ್ಲವೆಂಬುದನ್ನು ಕಂಡ ಜನ ಗುಹೆಯ ಬಾಯಿಗೆ ಹೋಗಿ ಇಣುಕಿದರು. ಕತ್ತಲಲ್ಲಿ ಏನೂ ಕಾಣಲಿಲ್ಲ. ಆದರೆ ಬುಸ್ಸೆಂಬ ಶಬ್ದ ಜೋರಾಗಿ ಬಂತು -ಸಿಟ್ಟಿನಲ್ಲಿ ಇಣುಕಿದವರನ್ನು ಅಟ್ಟುವ ಥರ. ಮಹಾತ್ಮರು ಈಗ ಸರ್ಪವೇ ಆಗುದ್ದಾರೆಂದು ಭಕ್ತಾದಿಗಳೆಲ್ಲ ತಿಳಿದರು. ಆಮೇಲಿಂದ ಹಾಲನ್ನಿಡಲು ಶುರು ಮಾಡಿದರು. +ಹೀಗೆ ಮೂರು ಪಕ್ಷಗಳು ಕಳೆದ ಮೇಲೆ ಗುಹೆಯಿಂದ ಉಜ್ವಲವಾದ ಪ್ರಕಾಶದ ಮಹಿಮರು ಹೊರಗೆ ಬಂದರು. ಈಗವರು ಗೀತೆಯನ್ನು ಓದುವುದಿಲ್ಲ. ಮಾತೂ ಆಡುವುದಿಲ್ಲ. ಒಮ್ಮೊಮ್ಮೆ ಗಹಗಹಿಸಿ ನಗುವುದುಂಟು. ಅಥವಾ ಮರಹತ್ತಿ ಕೂತಿರುತ್ತಾರೆ. +ಸಹಸ್ರ ಸಂಖ್ಯೆಯಲ್ಲಿ ಪ್ರತಿನಿತ್ಯ ಈ ಸರ್ಪಸಿದ್ಧೇಶ್ವರಾನಂದರ ದರ್ಶನ ಪಡೆಯಲು ದೇಶಾದ್ಯಂತ ಜನ ನೆರೆಯುತ್ತಿದ್ದಾರೆ. ಇಲ್ಲಿ ಅನೇಕ ಪವಾಡಗಳು ನಡೆಯುತ್ತಾವೆಂಬ ಕಥೆಗಳಿವೆ. ಕೆಲವು ಸಾರಿ ಸರ್ಪಸಿದ್ಧೇಶ್ವರಾನಂದರು ಮತ್ತೆ ಗುಹೆ ಸೇರಿಬಿಡುತ್ತಾರೆ -ತಮ್ಮ ಸರ್ಪಸ್ವರೂಪಕ್ಕೆ ಮರಳಲೆಂದು. ಸರ್ಪರೂಪದಲ್ಲಿರುವ ಅವರನ್ನು ನೋಡಕೂಡದೆಂದೂ ನೋಡಿದರೆ ಸಾವು ಖಂಡಿತವೆಂದೂ ಜನರ ತಿಳುವಳಿಕೆ. ಕೆಲವು ದಿನ ಕಳೆದ ಮೇಲೆ ಮಹಿಮರೇ ಹೊರಬರುತ್ತಾರೆ -ನಗುತ್ತಾರೆ. ಮರ ಹತ್ತಿ ಕೂತಿರುತ್ತಾರೆ. +“ಏನನ್ನಿಸತ್ತೊ ನಿಂಗೆ?” +ಕೃಷ್ಣಪ್ಪ ಕುತೂಹಲದಿಂದ ಕೇಳುತ್ತಾನೆ. +“ಮೂಢನಂಬಿಕೆ ಅಷ್ಟೆ” +“ಈ ಬೈರಾಗಿ ಹುಚ್ಚನೂ ಇರಬಹುದು, ದೊಡ್ಡ ದ್ರಷ್ಟಾರನೂ ಇರಬಹುದು ಅಂತ ಅನುಮಾನ ನಿನಗಾಗಲ್ವ, ನಾಗೇಶ?” +“ಇಂಥದನ್ನು ನಂಬಿಕೊಂಡೇ ನಮ್ಮ ದೇಶ ಹೀಗಾಗಿದ್ದು” +“ಸರಿ” +“ನಮಗೆ ಬೇಕಾಗಿರೋದು ಅನ್ನ -ಅಧ್ಯಾತ್ಮ ಅಲ್ಲ” +ಕೃಷ್ಣಪ್ಪ ಸುಮ್ಮನಾದ್ದು ಕಂಡು ನಾಗೇಶ ಅವನನ್ನು ಹಾಸ್ಯ ಮಾಡುವ ಧೈರ್ಯ ತೋರಿಸುವನು! +“ಯಾಕೋ ಇತ್ತೀಚೆಗೆ ಗೌಡರು ಹಾಸಿಗೆ ಹಿಡಿದ ಮೇಲೆ ಈ ಮುಟ್ಠಾಳ ಢಾಂಬಿಕರನ್ನು ನಂಬೋ ಹಾಗೆ ಕಾಣುತ್ತೆ” +“ಅಣ್ಣಾಜೀನೂ ಹಾಗೆ ಹೇಳ್ತ ಇದ್ದ ಕಣಯ್ಯ” +ಕೃಷ್ಣಪ್ಪ ಆಲೋಚನೆಯಲ್ಲಿ ಮಗ್ನನಾಗಿದ್ದು, ಮೆಲ್ಲಗೆ ಹೇಳುವನು: +“ನೋಡು ನಾಗೇಶ, ದೇವರು ಇದ್ದೇ ಇದಾನೆ ಅಂತ ಒಬ್ಬನಿಗೆ ಗೊತ್ತು ಅನ್ನು. ನಂಬಿಕೆಯಲ್ಲ ನಾನು ಹೇಳೋದು -ನಿಶ್ಚಯವಾಗಿ ಗೊತ್ತು ಅನ್ನು. ಹಾಗೆ ಗೊತ್ತಿರೋದು ಸಾಧ್ಯವಿದ್ದರೆ ಅಂಥವನು ರಿಲಿಜಸ್ ಆಗೋದು ದೊಡ್ಡ ವಿಷಯ ಅಲ್ಲವೋ. ಬ್ಯಾಂಕಲ್ಲಿ ದುಡ್ಡಿಟ್ಟ ಹಾಗೆ ಅದು -ಬಡ್ಡಿ ಗ್ಯಾರಂಟಿ. ಆದರೆ ದೇವರು ಇದಾನೊ ಇಲ್ವೊ ಅನ್ನುವ ಆತಂಕದಲ್ಲೂ ದೇವರನ್ನ ನಂಬೋ ನಿರ್ಧಾರ ಮಾಡೋದಿದೆ ನೋಡು -ಅದು ನಿಜವಾದ ಶೌರ್ಯ. ಹಾಗೇನೇ ರಾಜಕೀಯದಲ್ಲಿ ನಮ್ಮ ಹೋರಾಟದಿಂದ ಪ್ರಗತಿಯಾಗತ್ತೆ, ಈ ಪ್ರಗತೀಂದ ಎಲ್ಲ ಒಳ್ಳೆದೇನೆ ಸಲೀಸಾಗಿ ಆಗ್ತ ಆಗ್ತ ಹೋಗತ್ತೆ ಅಂತ ತಿಳಿದು ಬಡವರ ಪರ ನಿಂತು ಕ್ರಾಂತಿಗೆ ಕೆಲಸ ಮಾಡೋದು ಒಂದು ವಿಧ. ಬಹಳ ಜನರ ಮಾರ್ಗ ಅದು. ಆದರೆ ನಾನು ವಾರಂಗಲ್‌ನಿಂದ ಹಿಂದೆ ಬಂದ ಮೇಲೆ ರಾಜಕೀಯಕ್ಕೆ ಧುಮುಕೋ ಮುಂಚೆ ನಾವು ತರೋ ಪ್ರಗತಿಯೆಲ್ಲ ಒಳ್ಳೇದನ್ನೆ ಮಾಡ್ತಾ ಹೋಗತ್ತೆ ಅಂತ ನಿಶ್ಚಯವಾಗಿ ತಿಳಿಯೋದು ನನಗೆ ಸಾಧ್ಯವಾಗ್ತಿರ್ಲಿಲ್ಲ. ಈಗಲೂ ಸಾಧ್ಯವಾಗ್ತಿಲ್ಲ. ಆದರೆ ಸುತ್ತಮುತ್ತಲಿನ ಕ್ಷುದ್ರತೆ, ದುಃಖ ಕಂಡಾಗ ಇದರ ವಿರುದ್ಧ ಹೋರಾಡೋದು ಅಗತ್ಯ ಅನ್ನೋದು ಮಾತ್ರ ನನಗೆ ಸ್ವಯಂಸಿದ್ಧ. ದೈನಿಕ ಜೀವನವೇ ಹೊಳೀಬೇಕು ಅಂತ ನನಗಿದ್ದ ಆಸೆ ಮಾತ್ರ ಸಫಲವಾಗಿಲ್ಲ. ನನ್ನ ಪ್ರಯತ್ನದಿಂದ ಅವತ್ತು ಒದೆಸಿಕೋತಿದ್ದ ಬೀರೇಗೌಡ ಇವತ್ತು ಇನ್ನೊಬ್ಬನನ್ನ ಒದೀತಿದಾನೆ. ಆದರೆ ಈ ಮಾತನ್ನು ಹೇಳೋವಾಗ ಸಮಾಜ ಚಲಿಸೋದರಲ್ಲಿ ಏನೂ ಅರ್ಥವಿಲ್ಲ ಅನ್ನೋ ಧ್ವನಿ ಹೊರಟರೆ ಅದೂ ಕೂಡ ಬಹಳ ಸುಲಭವಾದ ಸಲೀಸಾದ ಮಾತಾಗಿಬಿಡತ್ತೆ. ಏನನ್ನೂ ಮಾಡಲಾರದ ಮುಟ್ಠಾಳನೂ, ಏನೂ ಮಾಡಕೂಡದು ಅಂತ ವ್ಯವಸ್ಥೇನ್ನ ಕಾಪಾಡೋ ಕ್ರೂರಿಯೂ ಇದೇ ಮಾತಾಡ್ತಾನೆ ಅಲ್ವ? ಅಂದ್ರೆ ನಾನು ಹೇಳಬೇಕೂಂತಿರೋದು ನಾಗೇಶ……….” +ನಾಗೇಶ ಅರ್ಥವಾಗದೆ ಕೃಷ್ಣಪ್ಪನನ್ನು ನೋಡುತ್ತಾನೆ. ಬರಕೊಳ್ಳಲು ಪೆನ್ಸಿಲ್ ಎತ್ತಿಕೊಂಡದ್ದು ನೋಡಿ ಕೃಷ್ಣಪ್ಪ ಕಣ್ಣಿಂದ ಅದನ್ನು ತಡೆದು ಹೇಳುತ್ತಾನೆ: +“ಅಪಾರ್ಥಕ್ಕೆ ಎಡೆಗೊಡದೆ ನಾನು ಹೇಳಬೇಕೂಂತ ಇರೋದನ್ನ ಹೇಳಕ್ಕೆ ಆಗಲ್ವೊ ನಾಗೇಶ. ಹುಟ್ಟಿದ ಮೇಲೆ ಕರ್ಮದಲ್ಲಿ ತೊಡಗಲೇಬೇಕು, ಹೋರಾಡಲೇ ಬೇಕು. ಜೀವನಾನ ಕ್ಷುದ್ರಗೊಳಿಸೋ ತಮಸ್ಸನ್ನ ನೂಕತಾನೇ ಇರಬೇಕು. ಅಂದರೆ ನಮ್ಮ ಕ್ರಿಯೆಗಳ ಪರಿಣಾಮ ಹೀಗೂ ಆಗಬಹುದು ಹಾಗೂ ಆಗಬಹುದು ಅನ್ನೋ ಆತಂಕಾನ ಕಳಕೊಳ್ಳದಂತೆ…..” +ಕೃಷ್ಣಪ್ಪ ಮಾತು ಮುಗಿಸದೆ ಮುಖ ತಿರುಗಿಸಿ, +“ಹೊರಕೂತವರನ್ನ ಬರಹೇಳು” ಅನ್ನುತ್ತಾನೆ. +ಸದ್ಯದಲ್ಲೇ ಆಗಬಹುದಾದ ಪಕ್ಷಾಂತರದ ಗಲಿಬಿಲಿಯಲ್ಲಿ ತಾವು ಯಾವ ಪಾತ್ರ ವಹಿಸಬೇಕೆಂದು ಚರ್ಚಿಸಲು ಅವನ ಪಕ್ಷದ ಎಂ.ಎಲ್.ಎಗಳು ಬಂದಿದ್ದರು. ಅವರಲ್ಲಿ ಕೆಲವರು ಆಳುವ ಪಕ್ಷದಲ್ಲಿರುವ ಒಡಕು ತಮಗೆ ಅಸಂಬದ್ಧವೆಂದೂ ತಮ್ಮ ಕ್ರಾಂತಿಯ ಹಾದಿಯಲ್ಲಿ ಯಾರನ್ನೂ ಜೊತೆಗೆ ಕಟ್ಟಿಕೊಳ್ಳದೆ ಸಾಗಬೇಕೆಂದೂ ವಾದಿಸುವ ಉಗ್ರಧೋರಣೆಯವರು. ಹಲವರು ಆಳುವ ಪಕ್ಷದ ಒಡಕನ್ನು ಉಪಯೋಗಿಸಿಕೊಂಡು ಬೇರೊಂದು ಮಂತ್ರಿಮಂಡಲದ ರಚನೆಗೆ ತಾವು ಬೆಂಬಲ ಕೊಡಬೇಕೆಂದೂ ಹೀಗೆ ಬೆಂಬಲಿಸುವಾಗ ಒಂದು ಟೈಮ್ ಬೌಂಡ್ ಮಿನಿಮಮ್ ಪ್ರೋಗ್ರಾಂ ಗೆ ಬದ್ಧರಾಗಬೇಕೆಂದೂ ವಾದಿಸುವವರು. ಇವರಲ್ಲೂ ಈಗಿರುವ ಮುಖ್ಯಮಂತ್ರಿಗೇ ಬೆಂಬಲ ಕೊಡಬೇಕೆಂದು ಕೆಲವರ ವಾದ. ಮುಖ್ಯಮಂತ್ರಿಯ ಪ್ರತಿಸ್ಪರ್ಧಿಗೇ ಬೆಂಬಲ ಕೊಡಬೇಕೆಂದು ಉಳಿದವರ ವಾದ. ಮುಖ್ಯಮಂತ್ರಿಯ ಜೊತೆ ಈಗಾಗಲೇ ಮಾತಾಡಿರಬೇಕೆಂದು ’ಆ’ ಗುಂಪಿನ ಮೇಲೆ ’ಈ’ ಗುಂಪಿಗೆ ಸಂಶವಾದರೆ, ಭಯಂಕರ ದುಡ್ಡು ಚೆಲ್ಲುತ್ತಿರುವ ಪ್ರತಿಸ್ಪರ್ಧಿಯ ಜೊತೆ ಒಪ್ಪಂದವಾಗಿರಬೇಕೆಂದು ’ಈ’ ಗುಂಪಿನ ಮೇಲೆ ’ಆ’ ಗುಂಪಿನ ಸಂಶಯ. ವೀರಣ್ಣ ಕೃಷ್ಣಪ್ಪನ ಮೇಲೆ ತನಗಿರುವ ಪ್ರಭಾವ ಉಪಯೋಗಿಸಿ ’ಆ’ ಗುಂಪಿಗೆ ಬೆಂಬಲ ಕೊಡುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಈ ರಾಜಕೀಯವೇ ಅಸಂಬದ್ಧ ಎನ್ನುವ ಉಗ್ರರು ಹೆಚ್ಚಾಗಿ ಮಾತಿನ ಚಟದವರು. ಅಪಕ್ವ ಯುವಕರು, ಆದರೆ ಆದರ್ಶವಾದಿಗಳು; ಉಳಿದವರು ಜನಹಿತಕ್ಕಾಗಿ ನಿಜವಾಗಿ ದುಡಿದವರು, ದುಡಿದು ಸುಸ್ತಾದವರು; ಖದೀಮರು. ಕ್ರಾಂತಿಯ ಆಸ್ಫೋಟದಲ್ಲಿ ಮಾತ್ರ ಬದಲಾವಣೆ ಸಾಧ್ಯವೆಂದು ಒಬ್ಬರ ವಾದವಾದರೆ, ಆಡಳಿತದಲ್ಲಿ ಭಾಗವಹಿಸುವುದರ ಮೂಲಕ ಜನರನ್ನು ಕ್ರಾಂತಿಯ ದಿಕ್ಕಲ್ಲಿ ಹಚ್ಚಬಹುದೆಂದು ಇನ್ನೊಬ್ಬರ ವಾದ. +ಇವತ್ತು ಕೃಷ್ಣಪ್ಪನಲ್ಲಿ ಈ ವಾದ ವಿವಾದದಲ್ಲಿ ಭಾಗವಹಿಸುವ ಉಮೇದಿಲ್ಲದಿದ್ದರೂ ಅವರ ಜೊತೆ ಚರ್ಚಿಸಲು ಸನ್ನದ್ಧನಾದ. +* +* +* +ಸಹೋದ್ಯೋಗಿಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ತನ್ನ ಮಾತು ಅವರು ಮೀರುವುದಿಲ್ಲೆಂದು ಕೃಷ್ಣಪ್ಪನಿಗೆ ಸಮಾಧಾನವಾಗಿತ್ತು. ಬದುಕು ಮತ್ತು ಸಾವಿನ ಹೊಸ್ತಿಲಲ್ಲಿದ್ದೂ ತನ್ನ ವರ್ಚಸ್ಸು ಕುಗ್ಗಿರಲಿಲ್ಲ. ದೆಹಲಿಯ ಡಾಕ್ಟರ್ ಪರೀಕ್ಷೆ ಮಾಡಿ ಎಕ್ಸ್‌ಟೆಂನ್ಸಿವ್ ಡ್ಯಾಮೇಜ್ ಆಗಿಲ್ಲ -ಫ಼ಿಸಿಯೋಥೆರಪಿ ಈಗ ಮುಖ್ಯ ಎಂದಿದ್ದರು. ಕೃಷ್ಣಪ್ಪ ಒಟ್ಟಿನಲ್ಲಿ ಈ ಎಲ್ಲದರಿಂದ ಗೆಲುವಾಗಿದ್ದಾಗ ರಾತ್ರೆ ಗೌರಿ ದೇಶಪಾಂಡೆಯ ಟೆಲಿಗ್ರಾಂ ಬಂತು -ನಾಡಿದ್ದು ಭಾನುವಾರ ಸಂಜೆ ವಿಮಾನದಲ್ಲಿ ಬರುತ್ತಿದ್ದೇನೆಂದು. ಅವಳು ದೆಹಲಿಗೆ ಅಮೆರಿಕಾದಿಂದ ಬಂದು ಆರು ತಿಂಗಳು ಮೇಲಾಗಿತ್ತು. ಅವಳನ್ನು ನೋಡಿ ಎಷ್ಟೋ ವರ್ಷಗಳಾಗಿಬಿಟ್ಟಿದ್ದುವು. ಈಗ ಹೇಗೆ ಕಾಣುವಳೊ. ದೆಹಲಿಗೆ ಬಂದವಳೇ ತನ್ನನ್ನು ನೋಡುವಳೆಂದು ಆಸೆಪಟ್ಟಿದ್ದ. ಬರಲಿಲ್ಲವಾದ್ದರಿಂದ ಅವಳು ತನ್ನ ಬಗ್ಗೆ ತಣ್ಣಗಾಗಿರಬಹುದೆಂದು ಭಾವಿಸಿದ್ದ. ಈಗ ಬರುತ್ತಿದ್ದಾಳೆ; ಎರಡು ದಿನ ಕಳೆದು. ಅಂದರೆ ಅವಸರಪಡದೆ, ಖಾಯಿಲೆ ಹಿಡಿದು ಮಲಗಿದ ಮೇಲೆ ತನ್ನ ಆತ್ಮರತಿ ಉಲ್ಬಣವಾಗಿದ್ದರಿಂದ ಹೀಗೆ ಯೋಚಿಸುತ್ತಿದ್ದೀನಲ್ಲವೆ ಎಂದು ಹೇಸಿಗೆಪಟ್ಟ. +ಸೀತೆ ತಂದಿಟ್ಟ ಪ್ಯಾನ್‌ನಲ್ಲಿ ಬೆಳಗಿನ ತನ್ನ ವಿಸರ್ಜನೆಗಳಲ್ಲಿ ತೊಡಗಿದ್ದಾಗ ಮಹೇಶ್ವರಯ್ಯ ಬಂದುಬಿಟ್ಟರು. ಕೃಷ್ಣಪ್ಪ ಆವೇಗದಿಂದ ಉಸಿರಾಡುತ್ತ ಹೊರಗೆ ಅವರು ಮಾತಾಡುವುದನ್ನು ಕೇಳಿಸಿಕೊಂಡ. ನಾಗೇಶ ಖಾಹಿಲೆ ವಿಷಯ ಹೇಳುತ್ತಿದ್ದಾನೆ. ಮಹೇಶ್ವರಯ್ಯ ಮಾತಾಡುವುದೇ ಇಲ್ಲ. ತನ್ನ ಭಾವವನ್ನು ತೋರಿಸಿಕೊಳ್ಳುವ ಮನುಷ್ಯನೂ ಅಲ್ಲ ಅವರು, ಅವರಿಗಾಗಿರುವ ಆಘಾತ ಊಹಿಸುತ್ತ ಕೃಷ್ಣಪ್ಪನಿಗೆ ಸಂಕಟವಾಯಿತು. ಎಪ್ಪತ್ತರ ಅವರ ವಯಸ್ಸಲ್ಲಿ ತನ್ನಿಂದ ಈ ದುಃಖ ಅವರಿಗಾಗಬಾರದಾಗಿತ್ತು. +ಬಿಸಿನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಸೀತೆ ಕೃಷ್ಣಪ್ಪನ ಮೈಯನ್ನು ಒರೆಸುತ್ತಿದ್ದಳು. ನಾಳೆಯಿಂದ ಈ ಕೆಲಸ ಮಾಡಲು ನರ್ಸ್ ಬರುತ್ತಾಳೆ. ಕಿರಿಕಿರಿಪಡುತ್ತ ಬ್ಯಾಂಕಿಗೆ ಹೋಗುವ ಅವಸರದಲ್ಲಿ ಸೀತೆ ಮಾಡುವ ಸೇವೆ ಕೃಷ್ಣಪ್ಪನಿಗೆ ಇಷ್ಟವಾಗುವುದಿಲ್ಲ. ಇವತ್ತು ಅವಳ ಮುಖದಲ್ಲಿ ಉರಿಯುವಂತೆ ಕಂಡ ದುಗುಡಕ್ಕೆ ಬೇರೆ ಕಾರಣವಿದೆ. ತನಗೆ ತುಂಬ ಪ್ರಿಯರಾದವರು ಯಾರು ಮನೆಗೆ ಬಂದರೂ ಅವಳಿಗೆ ಕರೆಕರೆ -ಅಭದ್ರ ಭಾವನೆ. +“ಕುದುರೆ ಬಾಲಾನ ಅಟ್ಟಿಕೊಂಡು ಬಂದಿರ್ಬೇಕು. ಈವಯ್ಯನ ಮುಖ ಕಂಡು ವರ್ಷದ ಮೇಲಾಯ್ತು” ಬೆನ್ನನ್ನು ಒರೆಸುತ್ತ ಸೀತೆ ಹೇಳುತ್ತಾಳೆ. +ಕೃಷ್ಣಪ್ಪನಿಗೆ ರುಮ್ಮನೆ ಸಿಟ್ಟು ಬಂತು. ತಾನೇನೆಂದು ಮಾಡುತ್ತಿದ್ದೇನೆಂದು ತಿಳಿಯೋದರ ಒಳಗೆ ಇನ್ನೂ ಶಕ್ತಿಯಿದ್ದ ತನ್ನ ಬಲಗೈಯಿಂದ ಅವಳನ್ನು ಗುದ್ದಿದ. ಅವಳು ಆದ ನೋವಿಗಿಂತ ಹೆಚ್ಚು ಸಂಕಟಪಡುತ್ತ “ಅಯ್ಯೋ” ಎಂದು ಕೂತು ಅಳತೊಡಗಿದಳು. ಕೃಷ್ಣಪ್ಪನಿಗೆ ತನ್ನ ಬಗ್ಗೆ ಅವಳ ಬಗ್ಗೆ ಹೇಸಿಗೆಯಾಗಿ ಸತ್ತುಬಿಡಬೇಕೆನ್ನಿಸಿತು. “ಹೆಣ್ಣುಹೆಂಗಸಿನ ಮೇಲೆ ಕೈ ಮಾಡೋ ಇವರು ಕ್ರಾಂತಿ ಮಾಡ್ತಾರಂತೆ-” ಶುರುವಾಯಿತು ಸೀತೆಯ ಗೊಣಗಾಟ. ಹೊಡೆದ ಮೇಲೆ ಅವನಿಗೆ ಕೂಡ ಹಾಗೆನ್ನಿಸುವುದರಿಂದ ಮಂಕಾಗಿ ಕೂತು ಕಾದ. ಅವಳೇ ಬಟ್ಟೆ ತೊಡಿಸಬೇಕು ಇನ್ನು. ಅವನ ಒಂದು ತಿಂಗಳ ಬಿಳಿಕಪ್ಪು ಮಿಶ್ರವಾದ ಗಡ್ಡದಲ್ಲಿ ಬಲಗೈಯ ಬೆರಳಾಡಿಸುತ್ತ ಸುಮ್ಮನೆ ಕೂರುತ್ತಾನೆ. ಸ್ಟ್ರೋಕ್ ಹೊಡೆದ ಮೇಲೆ ಬೆಳೆದ ಗಡ್ಡ ಇದು. ಈ ಗಡ್ಡ ಮೆಚ್ಚಿಗೆಯಾಗಿರೋದು ತನ್ನನ್ನು ಲೆನಿನ್ನಾಗಿ ನೋಡಲು ಬಯಸುವ ನಾಗೇಶನೊಬ್ಬನಿಗೇ. ಹೀಗೆ ಏನೇನೋ ಯೋಚಿಸುತ್ತ ಮೂಗನ್ನು ಸೀನಿಕೊಂಡು ಅಳುತ್ತ ಕೂತ ಸೀತೆಯನ್ನು ಮರೆಯಲು ಪ್ರಯತ್ನಿಸುತ್ತಾನೆ. ಆಗಲ್ಲ, ಅವಳು ಗೊಣಗುತ್ತ ಪಂಚೆಯುಡಿಸಿ ಜುಬ್ಬ ಹಾಕಿ ತಲೆ ಬಾಚಿಕೊಳ್ಳಲು ಬಾಚಣಿಗೆಯನ್ನು ಬಲಗೈಯಲ್ಲಿ ಇಡುತ್ತಾಳೆ. ಅವನು ಕೂತಿದ್ದ ವೀಲ್‌ಚೇರನ್ನು ರೂಮಿಗೆ ತಳ್ಳಿ ಗೊಣಗುತ್ತಲೇ ಅಡಿಗೆ ಮನೆಗೆ ಹೋಗುತ್ತಾಳೆ. ಅಡಿಗೆ ಮನೆಯಲ್ಲಿ ಮಗಳು ಗೌರಿ ವರಾತ ಹಿಡಿದಿದ್ದಾಳೆ. ಈಗ ಅವಳಿಗೆ ದಬದಬನೆ ಏಟು ಬೀಳುವುದಿದೆ. +ಮಹೇಶ್ವರಯ್ಯ ಒಳಗೆ ಬಂದು ಕೂತರು. ಮಾತಾಡಲಿಲ್ಲ. ಒಂದು ವರ್ಷದಲ್ಲೇ ಎಷ್ಟು ಮುದಿಯಾಗಿಬಿಟ್ಟಿದ್ದಾರೆಂದು ಅವರ ಮುಖವನ್ನೆ ದಿಟ್ಟಿಸಿದ. ಅವರ ನಡಿಗೆಯಲ್ಲಿ ಮುಖದಲ್ಲಿ ಹಿಂದಿದ್ದ ಧೃಡತೆ ಇರಲಿಲ್ಲ. ಕಣ್ಣಿಗೆ ಕೆಳಗೆ ಗಲ್ಲದ ಬಳಿ ಚರ್ಮ ಜೋತು ಬಿದ್ದಿತ್ತು. ಉಟ್ಟಬಟ್ಟೆಯಲ್ಲಿ ಹಿಂದಿನ ಶುಚಿ ಇರಲಿಲ್ಲ. ಹಣೆಯ ಮೇಲೆ ಕುಂಕುಮವಿರಲಿಲ್ಲ. +“ಎಲ್ಲಿ ಉಳ್ಕೊಂಡಿದೀರಿ?” +“ಅದೇ ನಿನ್ನ ಹಿಂದಿನ ಮನೆ -ಗಾಂಧೀ ಬಜ಼ಾರಿನಲ್ಲಿ ಇದ್ದದ್ದು -ಅಲ್ಲಿಗೆ ಹೋದೆ. ಅಲ್ಲಿಂದ ನೀನೇ ಬಿಟ್ಟದ್ದು ತಿಳಿದು ದಾರೀಲಿ ಸಿಕ್ಕ ಒಂದು ಹೋಟೆಲಲ್ಲಿ ಟ್ರಂಕನ್ನಿಟ್ಟು ಸ್ನಾನ ಮಾಡಿ ಬಂದೆ” ಎಂದು ಕೃಷ್ಣಪ್ಪನನ್ನು ಅಕ್ಕರೆಯಿಂದ ನೋಡಿದರು. +“ಆದರೆ ಅಲ್ಲಿ ಬರ್ತಿದ್ದವರು ಯಾರೂ ಇಲ್ಲಿಗೆ ಬರಲ್ಲ. ರೈತಾಪಿ ಜನಕ್ಕೆ ಇಲ್ಲಿಗೆ ಬರೋದಕ್ಕೆ ಬಸ್ಸಿನ ಸೌಕರ್ಯ ಸಾಲದು. ದೊಡ್ಡ ಜನರಿರೋ ಜಾಗವಲ್ವ? ಬಂದರೂ ದಂಗು ಬಡಿದು ನಿಲ್ಲುತ್ತಾರೆ. ಹಿಂದಿನಂತೆ ನೆಲದ ಮೇಲೆ ಕೂತು ಮಾತಾಡಲ್ಲ….” +ಕೃಷ್ಣಪ್ಪ ಕೊರಗುತ್ತ ಮಾತಾಡಿದ್ದನ್ನು ಕೇಳಿಸಿಕೊಳ್ಳುತ್ತ ಮಹೇಶ್ವರಯ್ಯ +“ಈಗ ನಿನಗೆ ಇಷ್ಟಾದರೂ ಸೌಕರ್ಯ ಬೇಡವೆ?” ಎಂದು ಅವನ ಮಾತನ್ನು ತಳ್ಳಿಹಾಕಿದರು. ಮತ್ತೆ ಇಬ್ಬರೂ ಮೌನವಾಗಿ ಕೂತರು. ಗೌರಿ ದೊಡ್ಡದಾಗಿ ಅಳುತ್ತ ಕೋಣೆಗೆ ಓಡಿಬಂದು ಅಲ್ಲಿ ಮಹೇಶ್ವರಯ್ಯನನ್ನು ಕಂಡು ಅಳು ನಿಲ್ಲಿಸಿ ಅಪ್ಪನ ಪಕ್ಕದಲ್ಲಿ ನಿಂತು ಬಿಕ್ಕಿದಳು: ಮಹೇಶ್ವರಯ್ಯ ಕೈಚೀಲದಿಂದ ದೊಡ್ಡದೊಂದು ಚಾಕಲೇಟುಗಳನ್ನು ಕಟ್ಟಿದ ಪೊಟ್ಟಣವನ್ನು ಅವಳ ಕೈಯಲ್ಲಿತ್ತು, “ಅಮ್ಮನ ಹತ್ತಿರ ಕೊಡು. ಈಗ ನೀನೊಂದು ತಿನ್ನು” ಎಂದು ಒಂದು ಚಾಕಲೇಟನ್ನು ಸುಲಿದು ಅವಳ ಬಾಯಲ್ಲಿಟ್ಟರು. +ಮಹೇಶ್ವರಯ್ಯ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವಂತೆ ಕಂಡಿತು. ಅವರು ನಿಶ್ಚಲರಾಗಿ ಕೂತು ಯಾವುದಾದರೊಂದು ವಸ್ತುವನ್ನು ದುರುಗುಟ್ಟಿ ನೋಡತೊಡಗಿದರೆ ಏನನ್ನೋ ಹೇಳಲು ಸಿದ್ಧರಾಗುತ್ತಿದ್ದಾರೆ ಎಂದು ಅರ್ಥ. ಈಗ ಏನನ್ನಾದರೂ ಹೇಳಬೇಕಾದ ತನ್ನ ಒತ್ತಾಯ ಅವರ ಮೇಲಿಲ್ಲವೆಂದು ಸೂಚಿಸಲು ಕೃಷ್ಣಪ್ಪ ಬೇಳಗಿನ ಪತ್ರಿಕೆಯನ್ನು ಓದುತ್ತ ಕೂತ. ಕೈಕಾಲುಗಳನ್ನು ಎತ್ತಲು ಪ್ರಯತ್ನಿಸುವ ವ್ಯಾಯಾಮ ಕೂಡ ಅವರ ಏಕಾಗ್ರತೆಗೆ ಭಂಗ ತರುವಂತೆ ವಾತಾವರಣದಲ್ಲಿ ಒತ್ತಡವನ್ನುಂಟು ಮಾಡೀತು. +ಮೈಯೆಲ್ಲ ಕಿವಿ ಕಣ್ಣುಗಳಾಗಿ ಕೂರುವ ಹಕ್ಕಿಯನ್ನು ತೋರಿಸಿ ಮಹೇಶ್ವರಯ್ಯ ಅನ್ನುತ್ತಿದ್ದರು -“ಹಾಗಿರಬೇಕು ನಾವು” “ಪ್ರಪಂಚ ಸದಾ ನಮ್ಮ ಕಣ್ಣೆದುರಿಗಿರುತ್ತೆ. ಆದರೆ ಏನನ್ನೂ ನೋಡಲ್ವೊ ನಾವು. ನೋಡೋದೂಂದ್ರೆ ಪ್ರವೇಶ – ಹಿಡಿಯೋದು -ಗಪ್ಪಂತ ಹಿಡಿಯೋದು.” ಪೇಪರ್ ಓದುತ್ತ ಮಹೇಶ್ವರಯ್ಯ ಅಂದಿದ್ದ ಮಾತುಗಳನ್ನು ನೆನೆಯುತ್ತಿದ್ದಂತೆ ಯಾರೋ ಕೋಣೆಯೊಳಗೆ “ನಮಸ್ಕಾರ ಗೌಡರೆ” ಎಂದು ದೊಡ್ಡದಾಗಿ ಮಾತಾಡುತ್ತ ವಕ್ಕರಿಸಿದರು. ಮಹೇಶ್ವರಯ್ಯ ಕೃಷ್ಣಪ್ಪ ಬೆಚ್ಚಿ ನೋಡಲು ಎದುರು ಪಂಚಲಿಂಗಯ್ಯ ನಿಂತಿದ್ದರು. ಚಿಕ್ಕಮಗಳೂರಲ್ಲಿ ಕಾಫ಼ಿ ತೋಟದ ಮಾಲೀಕರು. +“ಏನು ಗೌಡರೆ -ಛೇ ಛೇ ಇದೇನು ನಿಮಗಾಗಿದ್ದು? ಎಷ್ಟು ಗಟ್ಟಿಮುಟ್ಟಾಗಿದ್ದಿರಿ?” +ಕೃಷ್ಣಪ್ಪ ಕುಗ್ಗುತ್ತ ಕೂತ. +“ಇಲ್ಲೊಬ್ರು ಸ್ಪೆಶಲಿಸ್ಟ್ ನಂಗೆ ಗುರ್ತಿದಾರೆ. ಕಾರಲ್ಲಿ ಹೋಗಿ ಕರ್ಕೊಂಬರ್ತೀನಿ.” +ಪಂಚಲಿಂಗಯ್ಯನ ಒತ್ತಾಯವನ್ನು ತಳ್ಳುತ್ತ, “ಬೇಡಿ -ಪರೀಕ್ಷೆ ಮಾಡಿಸಿಕೊಂಡಿದೀನಿ. ಏನು ಬಂದರಲ್ಲ?” ಎಂದು ಕೃಷ್ಣಪ್ಪ ಕೇಳಿದ. +“ಉಡುಪೀಲೊಂದು ಮೆಡಿಕಲ್ ಕಾಲೇಜಿದೆಯಲ್ಲ -ಅದನ್ನ ನಡೆಸೋವ್ರಿಗೆ ನೀವೂಂದ್ರೆ ಭಾರಿ ಗೌರವವಂತೆ. ಎಷ್ಟು ಡೊನೇಶನ್ ಕೇಳಿದರೂ ಕೊಡ್ತೀನಿ ಮಾರಾಯ್ರೆ -ಆದ್ರೂ ನಿಮ್ದೂ ಒಂದು ಮಾತು ಬೇಕು ನೋಡಿ ನನ್ನ ಮಗನಿಗೆ ಸೀಟ್ ಸಿಗಾಕೆ. ಎಲ್ಲ ಹೇಳ್ತಾರೆ -ಗೌಡರು ಜಪ್ಪಯ್ಯಾಂದ್ರೂ ಹೇಳಲ್ಲ ಅಂತ. ಅದಕ್ಕೇ ನಿಮ್ಮ ಮಾತಿಗಷ್ಟು ಬೆಲೆ ನೋಡಿ………ಹೌದ? ಒಂದು ಸುದ್ದಿ ಕೇಳಿ ಬಾಳ ಸಂತೋಷ ಆತು. ಆದರೆ ನೀವು ಹೀಗೆ ಮಲಗಿಬಿಟ್ಟಿದ್ದೀರಲ್ಲ?” +ಕೃಷ್ಣಪ್ಪ ಅವರ ಮಾತು ತನಗರ್ಥವಾಗಲಿಲ್ಲೆಂದು ಪ್ರಶ್ನಾರ್ಥಕವಾಗಿ ನೋಡಿದ. ಪಂಚಲಿಂಗಯ್ಯ ನಕ್ಕರು. ತಮ್ಮ ಹಿಂದೆ ನಿಂತ ಮಗನನ್ನು ತೋರಿಸಿ -“ಇವನೇ ಫ಼ಸ್ಟ್ ಅಟೆಂಪ್ಟಲ್ಲೇ ಪಾಸಾಗಿದಾನೆ. ಪರೀಕ್ಷೇಲಿ ಸ್ವಲ್ಪ ಮೈ ಸರಿಯಿರಲಿಲ್ಲ. ಇಲ್ದಿದ್ರೆ ಫ಼ಸ್ಟ್ ಕ್ಲಾಸ್ ತೊಗೋತಿದ್ದ. ನನ್ನ ಹತ್ತಿರ ಇರೋ ದುಡ್ಡನ್ನ ಕಟ್ಟಿಕೊಂಡು ಸಾಯಲಾ ನಾನು? ಇರೋನು ಒಬ್ಬನೇ ಮಗ. ಫ಼ಾರಿನ್‌ಗೆ ಹೋಗಬೇಕೂಂತ ಆಸೆ. ಮೆಡಿಕಲ್ ಮೆಡಿಕಲ್ ಅಂತ ದುಂಬಾಲು ಬಿದ್ದಿದ್ದಾನೆ. ಏನು ಮಾಡಬೇಕು ಹೇಳಿ ದುಡ್ಡನ್ನ? ನಿಮ್ಮಂಥೋರು ಮಾಡೋ ಒಳ್ಳೆ ಕೆಲಸಕ್ಕೋ ವಿದ್ಯೆಗೋ ಅದನ್ನೆಲ್ಲ ಚೆಲ್ಲೋದೂಂತ ಮನಸ್ಸು ಮಾಡಿದೀನಿ……..ಹೌದ? ನಿಮಗೆ ಗೊತ್ತೇ ಇಲ್ಲವ? ಇಡೀ ಬೆಂಗಳೂರೇ ಮಾತಾಡ್ಕೋತಿದೆ. ನಿನ್ನೆ ಗಾಲ್ಫ್ ಕ್ಲಬ್ಬಲ್ಲಿ ಅದೇ ಮಾತು. ನಿಮಗೇ ಗೊತ್ತಿಲ್ಲಾಂದ್ರೆ ಆಶ್ಚರ್ಯ ಮಾರಾಯ್ರ. ನೀವೇ ಮುಖ್ಯಮಂತ್ರಿ ಆಗ್ತೀರೀಂತ ಸುದ್ದಿ ಇದೆ. ಸಂತೋಷ. ಆದರೆ ನಿಮ್ಮನ್ನ ಆಮೇಲೆ ಹಿಂಗೆ ಮಾತಾಡಿಸಾಕೆ ಸಾಧ್ಯವೇ ಇಲ್ಲ….ಏನೋ ಮಾತಾಡ್ತ ಇದ್ರಿ. ಸಾಯಂಕಾಲ ಬಂದು ನೋಡ್ತೀನಿ. ಈಗ ನೀವು ಹೂಂತ್ಲೂ ಅನ್ನಬೇಡಿ ಉಹೂಂತ್ಲೂ ಅನ್ನಬೇಡಿ. ನೀವೇ ಖುದ್ದು ಹೇಳೋದೂ ಕೂಡದು. ಚೀಪಾಗಿ ಬಿಡ್ತದೆ -ನಂಗೊತ್ತು. ಅದಕ್ಕೊಂದು ಬೇರೆ ಮಾರ್ಗ ಇದೆ. ವೀರಣ್ಣನ ಹತ್ರ ಮಾತಾಡ್ತೀನಿ -ಸಾಯಂಕಾಲ ನೋಡಾನ…..ಬಾಳ ಒಳ್ಳೆ ಡಾಕ್ಟ್ರು ಅವರು ಮಾರಾಯ್ರ. ಸಾಯಂಕಾಲ ಕರ್ಕೊಂಬರ್ತೀನ್ರಿ…….” ಎಂದು ಪಂಚಲಿಂಗಯ್ಯ ನಮಸ್ಕಾರ ಮಾಡಿ ನಗುತ್ತ ಮಗನ ಜೊತೆ ಕೋಣೆಯಿಂದ ಹೊರಬಿದ್ದರು. +“ನೋಡಿ ಇಂಥವ್ರೆ ನನ್ನ ಹತ್ರ ಬರೋದು ಈಗ” +ಕೃಷ್ಣಪ್ಪ ದುಃಖದಿಂದ ಮಾತಾಡಿದ್ದು ಕೇಳಿ ಮಹೇಶ್ವರಯ್ಯ +“ನನಗೆ ಈಚೆಗೆ ಮನಸ್ಸನ್ನ ಒಂದು ಕಡೆ ನಿಲ್ಲಿಸೋಕೇ ಸಾಧ್ಯ ಆಗ್ತಾ ಇಲ್ಲ ಕಣಯ್ಯ. ಕಚ್ಚೆ ಹರಕನಂತೆ ಸುಮ್ಮನೆ ಅಲೆಯುತ್ತೆ ದರಿದ್ರದ್ದು” ಎಂದು ನಕ್ಕರು. ಕ್ಷಣ ಮೌನವಾಗಿದ್ದು, +“ನಿಂಗೆ ಮತ್ತೆ ಆ ಮರದ ಕೆಳಗೆ ಕೂತಿರಬೇಕೂಂತ ಅನ್ನಿಸತ್ತೆ ಕಣಯ್ಯ. ಪೇರಳೇ ಗಿಡದ ಮೇಲೆ ಬರೋ ಹಕ್ಕಿಗಳಿಗಾಗಿ ಕಾಯ್ತಾ ಕೂತಿರಬೇಕೂಂತ ಹಂಬಲಿಸಲಿಕ್ಕೆ ಶುರು ಮಾಡ್ತಿ ನೀನು. ಅದೇನು ಹೇಳಬೇಕೂಂತ ಇದ್ದೆ ಗೊತ್ತಾ? ಹೀಗೇ ನಾನು ಯೋಚಿಸ್ತಾ ಇದ್ದೆ! ನಿನಗೆ ಸ್ಟ್ರೋಕ್ ಆದಾಗ ನನಗೆ ಏನಾದರೂ ಅನ್ನಿಸಬೇಕಿತ್ತಲ್ಲ ಅಂತ. ಆದರೆ ನೋಡು ಈಗ ನನ್ನ ಮನಸ್ಸಿಗೆ ಕುದುರೆ ಚಪಲ ಹತ್ತಿಕೊಂಡಿದೆ. ಯಾವಾಗಲೂ ಏನಾದರೂ ಉದ್ರೇಕ ಬೇಕು ಅನ್ನಿಸತ್ತೆ. ಕುಡೀಲಿಕ್ಕೆ ಶುರು ಮಾಡಿದ್ರೆ ದಿನವಿಡೀ ಕುಡೀತ ಕೂತಿರ್ತೀನಿ. ಇಲ್ಲ ಹೀಗೆ ಅಲೀಲಿಕ್ಕೆ ಶುರುಮಾಡ್ತೀನಿ. ನೋಡು -ಈಗ್ಲೇ ನೋಡು ನನ್ನ -ಹೇಗೆ ಮನಸ್ಸು ಅಲೀತಿದೆ ಅಂತ. ಈಗ ಯೋಚಿಸ್ತ ಯೋಚಿಸ್ತ ಏನೋ ಹೇಳಬೇಕೂಂತಿದ್ದಾಗ ಆ ನಾಲ್ಕು ಬೆರಳಿಗೂ ಉಂಗುರ ಹಾಕ್ಕೊಂಡವರು ಬಂದು ಬಿಟ್ರು……ಅದೇನಿಲ್ಲ -ನೀನು ಹುಷಾರಾಗ್ತಿ ಅಂತ ಕಾಣಿಸುತ್ತೆ ನಂಗೆ -ಅದನ್ನೇ ಹೇಳಲಿಕ್ಕೆ ಹೋಗಿದ್ದೆ.” +ಕೊನೆಯ ವಾಕ್ಯವನ್ನು ಸಪ್ಪೆಯಾದ ಧ್ವನಿಯಲ್ಲಿ ಹೇಳಿದರು. +“ನನ್ನ ಸಮಾಧಾನಕ್ಕಲ್ಲವಲ್ಲ ನೀವು ಹೇಳೋದು?” +ಮಹೇಶ್ವರಯ್ಯ ಕೃಷ್ಣಪ್ಪನನ್ನು ನೋಡುತ್ತ ಗಂಭೀರವಾಗಿ “ಅಲ್ಲ” ಎಂದರು. ಸ್ವಲ್ಪ ತಡೆದು ಗೆಲುವಾಗಿ “ನೋಡಯ್ಯ ಈ ಕುದುರೆ ವ್ಯವಹಾರದಲ್ಲಿ ಮಾತ್ರ ನಂದೇ ನನಗೆ ಕಾಣಿಸಲ್ಲ: ಏನೂಂದ್ರೆ ಏನೂ ಕಾಣಿಸಲ್ಲ. ಒಟ್ಟಿನಲ್ಲಿ ಬುದ್ಧಿ ತೆಳ್ಳಗಾಗಿಬಿಟ್ಟಿದೆ. ಈಗ ಆದ್ದು ಮುಂದಿನ ಕ್ಷಣ ಮರೆತು ಹೋಗಿರುತ್ತೆ” +“ನೀವು ಇಲ್ಲೆ ಬಂದಿರಿ -” +“ನಿನ್ನ ಹೆಂಡತಿಗೆ ತೊಂದರೆಯಾಗಬಹುದು ಕಣೊ -” +“ಬನ್ನಿ” +ಆಗಲೆಂದು ಮಹೇಶ್ವರಯ್ಯ ಎದ್ದು ನಿಂತು – +“ಇವತ್ತು ನನ್ನ ಅದೃಷ್ಟ ಪರೀಕ್ಷೆ ಮಾಡಿಕೋತೀನಿ. ರಾತ್ರೆ ಬರ್ತೀನಿ” ಎಂದು ಹೋದರು. +ಕೃಷ್ಣಪ್ಪನಲ್ಲಿ ತುಂಬ ಲವಲವಿಕೆ ಮೂಡಿತು. ಖುಷಿಯಿಂದ “ನಾಗೇಶಾ” ಎಂದು ಕರೆದ. ನಾಗೇಶ ಸಪ್ಪಗಿರೋದು ಕಂಡು “ಯಾಕೋ” ಎಂದ. “ಯಾಕಿಲ್ಲ ಗೌಡರೆ” ಎಂದದ್ದಕ್ಕೆ “ಹೇಳೋ” ಎಂದು ಒತ್ತಾಯ ಮಾಡಿದ. +“ಅದೇ ನನ್ನ ಅಕ್ಕ ಕ್ಲಾರ್ಕ್ ಆಗಿದ್ದಳಲ್ಲ ಅವಳ ಕೆಲಸ ಹೋಯ್ತಂತೆ” +“ಅದಕ್ಯಾಕೆ ಯೋಚಿಸ್ತಿ. ವೀರಣ್ಣನಿಗೆ ಹೇಳಿ ಅವರ ಥಿಯೇಟರಿನಲ್ಲಿ ಕೊಡಿಸ್ತೀನಿ” +“ನಿಮ್ಮ ಹತ್ರ ಇಂಥ ಕೆಲಸ ಮಾಡಿಸೋಕೆ ಇಷ್ಟವಿಲ್ಲ ನಂಗೆ ಗೌಡ್ರೆ” +“ಭೇಷ್ ನಿಂಗೊಬ್ಬನಿಗಾದ್ರೂ ಹಾಗನ್ನಿಸತ್ತಲ್ಲ. ಗೌರಿ ದೇಶಪಾಂಡೆ ನಾಳೆ ರಾತ್ರೆ ಬರೋದು ಅಲ್ವೇನೊ?” +“ಹೌದು” +“ಅವಳನ್ನೆಲ್ಲಿ ಇಳಿಸುವುದೆಂದು ಚಿಂತೆಯಾಯ್ತು. ಮನೆಯಲ್ಲೆ ಇಳಿಸಬಹುದು. ಆದರೆ ಸೀತೆ ರಂಪ ಮಾಡಿಯಾಳು. ಹೋಟಲಲ್ಲಿ ಒಬ್ಬಳೇ ಇರೂಂತ ಹೇಗೆ ಹೇಳೋದು? ಎಲ್ಲಿ ಇಳಿಸೋದೋ ಅವಳನ್ನ?” +“ವೀರಣ್ಣನೋರ ಗೆಸ್ಟ್ ಹೌಸ್ ಇದೆಯಲ್ಲ ಗೌಡರೆ” +“ನೋಡಿದೆಯಾ ಹೇಗೆ ಕ್ರಮೇಣ ನಾನು ವೀರಣ್ಣನೋರ ಬಲೇಲಿ ಸಿಕ್ಕಿ ಹಾಕಿಕೋತಿದೀನಿ ಅಂತ.” +“ನಿಮ್ಮನ್ನ ಯಾರಿಗೆ ಕಟ್ಟಿಹಾಕಲಿಕ್ಕೆ ಸಾಧ್ಯ?” +“ನಿಂಗೊತ್ತಿಲ್ಲ ಅಷ್ಟೆ -ಇವೆಲ್ಲ ನನ್ನ ಅವನತಿಯ ಚಿಹ್ನೆಗಳು” +ನರ್ಸ್ ಬಂದಳು. ವೀರಣ್ಣ ಒಬ್ಬಳು ಮೃದುವಾದ ಕಣ್ಣುಗಳ ಹುಡುಗಿಯನ್ನೆ ಗೊತ್ತು ಮಾಡಿದ್ದ. ಅವಳು ಸದ್ದುಗದ್ದಲವಿಲ್ಲದೆ ಕ್ಯಾನ್‌ವಾಸ್ ಶೂಸಿನ ಮೇಲೆ ಓಡಾಡುತ್ತ ಕೃಷ್ಣಪ್ಪನ ಎಡಗೈ ಎಡಗಾಲುಗಳನ್ನು ನಾನಾ ವಿಧಗಳಲ್ಲಿ ತಿಕ್ಕಿದಳು. ಪೆಟ್ಟಾಗದಂತೆ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ತಾಡನ ಮಾಡಿದಳು. ವೀಲ್‌ಚೇರನ್ನು ತಳ್ಳುತ್ತ ಎಷ್ಟು ಬೇಕೋ ಅಷ್ಟು ಮಾತಾಡಿ ನೆಮ್ಮದಿಯಾಗುವಂತೆ ಮಾಡಿದಳು. +ಕೃಷ್ಣಪ್ಪನಿಗೆ ಗೋಪಾಲರೆಡ್ಡಿಯ ಸಖ್ಯದಲ್ಲಿ ತನಗೆ ಒಂದಿಡೀ ವರ್ಷ ಜೊತೆಗಾತಿಯಾಗಿದ್ದ ಲೂಸಿನಾಳ ನೆನಪಾಗುತ್ತದೆ -ಮತ್ತೆ, ಮತ್ತೆ. ಲೂಸಿನಾ ದೆಹಲಿಯಲ್ಲಿ ನರ್ಸ್ ಶಿಕ್ಷಣ ಪಡೆಯುತ್ತಿದ್ದಳು. ಅವಳ ಕಥೆ ದಾರುಣವಾಗಿತ್ತು. ಮಧ್ಯಮವರ್ಗದ ಮನೆ ಹುಡುಗಿ ಅವಳು. ವರ್ತಕನ ಮಗನೊಬ್ಬ ಅವಳನ್ನು ನಂಬಿಸಿ ಕಲ್ಕತ್ತದಿಂದ ದೆಹಲಿಗೆ ಕರೆದುಕೊಂಡು ಬಂದು ಮದುವೆಯಾಗುವೆನೆಂದು ಮೋಸ ಮಾಡಿ ತನ್ನ ಗೆಳೆಯರಲ್ಲಿ ಅವಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ. ಇದನ್ನು ಕೆಲವು ದಿನ ಸಹಿಸಿ, ಅದು ಅತಿರೇಕಕ್ಕೆ ಹೋದಾಗ ಅವನ ಬಂಧನದಲ್ಲಿದ್ದ ಲೂಸಿನಾ ಒಂದು ರಾತ್ರಿ ತಪ್ಪಿಸಿಕೊಂಡು ಎಲ್ಲಿ ಹೋಗುವುದೆಂದು ತಿಳಿಯದೆ ಪಾರ್ಲಿಮೆಂಟ್ ಸದಸ್ಯರ ನಿವಾಸದಲ್ಲಿ ಇಳಿದುಕೊಂಡಿದ್ದ ಗೋಪಾಲರೆಡ್ಡಿ ಕೃಷ್ಣಪ್ಪರ ಬಾಗಿಲು ತಟ್ಟಿದಳು. ಭೀತಳಾಗಿ ನಿಂತ ಹುಡುಗಿಯನ್ನು ರೆಡ್ಡಿ ಸಮಾಧಾನಪಡಿಸಿ ತಾವಿದ್ದ ಬಂಗಲೆಯ ರೂಮೊಂದರಲ್ಲಿ ಮಲಗುವಂತೆ ಹೇಳಿದ. ಲೂಸಿನಾ ಇಡೀ ರಾತ್ರೆ ಇಬ್ಬರಲ್ಲಿ ಒಬ್ಬ ತನ್ನ ಕೋಣೆಗೆ ಬರಬಹುದೆಂದು ಹೆದರಿಕೊಂಡು ಕಾದಿದ್ದಳು. ಬೆಳಗಾಯಿತು. ಅವಳು ಕೃತಜ್ಞಳಾಗಿ ಇವರನ್ನು ಹುಡುಕಿಕೊಂಡು ಡೈನಿಂಗ್ ಹಾಲಿಗೆ ಬಂದು ಅತ್ತಳು. ರೆಡ್ಡಿ ಅವಳನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿದ. ಕ್ರಮೇಣ ಅವಳಿಗೆ ಕೃಷ್ಣಪ್ಪನ ಮೇಲೆ ಮನಸ್ಸಾಯಿತು. ಕೃಷ್ಣಪ್ಪನಿಗೂ ಅವಳೆಂದರೆ ಇಷ್ಟವಾಯಿತು. ಆದರೆ ರೆಡ್ಡಿಯ ಋಣದಲ್ಲಿದ್ದೇನೆಂಬ ಕಾರಣಕ್ಕಾಗಿ ಅವಳು ತನ್ನನ್ನು ಇಷ್ಟಪಡುವುದೊ ಎಂದು ಸಂಕೋಚವಾಗಿ ಅವನು ಆಕೆಯನ್ನು ದೂರವಿರಿಸುತ್ತಲೇ ಇದ್ದ. ರಜೆಯಲ್ಲಿ ಒಮ್ಮೆ ಅವಳು ಅವನಿಗೆ ಬರೆದು ಬೆಂಗಳೂರಿಗೆ ಬಂದಳು. ರೆಡ್ಡಿಯ ಬಂಗಲೆಯಲ್ಲಿ ಆಗ ಕೃಷ್ಣಪ್ಪ ವಾಸವಾಗಿದ್ದುದು. ಒಂದು ರಾತ್ರೆ ಲೂಸಿನಾ ಬಾಗಿಲನ್ನು ಮೆತ್ತಗೆ ತೆರೆದು ಕೃಷ್ಣಪ್ಪನ ಮಗ್ಗುಲಲ್ಲಿ ಬಂದು ಮಲಗಿದಳು. +“ಯಾಕಿದನ್ನ ನೀನು ಮಾಡ್ತಿದಿ?” ಎಂದು ಕೇಳಿದ. +“ನಿನ್ನ ಮೇಲೆ ಇಷ್ಟ ನನಗೆ. ಅಷ್ಟೂ ನಿಂಗೆ ಗೊತ್ತಾಗಲ್ವಲ್ಲ?” +“ನನ್ನ ಮದುವೆಯಾಗ್ತೀಯೇನು ಹಾಗಾರೆ?” +“ಮುಂದೆ ಓದಕ್ಕೆ ಇಂಗ್ಲೆಂಡಿಗೆ ಹೋಗೋ ಆಸೆ ನನಗೆ. ನೀನು ಒತ್ತಾಯ ಮಾಡಿದ್ರೆ ಆಗ್ತೀನಿ.” +ಅವಳನ್ನು ತಬ್ಬಿಕೊಂಡ ಕೃಷ್ಣಪ್ಪನಿಗೆ ನಗು ಬಂತು. +“ಬೇರೆ ಹುಡುಗಿಯರ ಜೊತೆ ನಾನು ಮಲಗ್ತೀನೀಂತ ನಿನಗೆ ಗೊತ್ತಲ್ವ?” +“ಗೊತ್ತು. ಆದ್ರೆ ನಿನ್ನೆ ಬಂದಿದ್ದಳಲ್ಲ -ಅವಳೇನು ಚೆನ್ನಾಗಿದಾಳೇಂತ ನೀನು ಅವಳ ಜೊತೆ ಮಲಗಿದ್ದು?” ಮುನಿಸಿನಿಂದ ಲೂಸಿನಾ ಅವನ ಕೆನ್ನೆಗೆ ಹೊಡೆದಳು. +“ನೀನು ಮಹಡಿ ಮೇಲೆ ಮಲಗಿದ್ದೀಯಲ್ಲ -ನಿಂಗೆ ಗೊತ್ತಿರಲಿಲ್ಲ ಅಂತ ತಿಳ್ಕೊಂಡಿದ್ದೆ.” ಇಷ್ಟು ಸಲಿಗೆಯಿಂದ ಯಾವ ಹುಡುಗಿಯೂ ಅವನನ್ನು ಮಾತಾಡಿಸಿದ್ದಿಲ್ಲ. +“ನಾನೇನೂ ಪೆದ್ದಲ್ಲ. ಈಗ ನಾನಿಲ್ಲಿ ಇರೋ ತನಕ ನೀನು ಯಾರನ್ನೂ ಹತ್ತಿರ ಸೇರಿಸ್ಬಾರ್ದು. ನಾನು ನರ್ಸಿಂಗ್ ಸೇರಿದ ಮೇಲೆ ನಿನ್ನ ಮೇಲೆ ಆಸೆಯಾದ ದಿನದಿಂದ ಯಾರನ್ನೂ ನನ್ನ ಹತ್ತಿರ ಸೇರಿಸಿಲ್ಲ. ಗೊತ್ತ?” +“ಗೊತ್ತು” +ಅವಳೂ ತನ್ನಿಂದ ಸುಖಪಡುವುದನ್ನು ಕಂಡಿದ್ದರಿಂದ ಅವನನ್ನು ಪಾಪಭಾವನೆ ಕಾಡಿಸಲಿಲ್ಲ. ಹಿಂದೆ ಹೆಣ್ಣಿನ ಸಂಗಕ್ಕೆ ಮುಂಚೆ ಅವನು ಚೆನ್ನಾಗಿ ಕುಡಿದಿರುತ್ತಿದ್ದ. ಮತ್ತಿನಲ್ಲಿ ತನ್ನ ದೇಹದ ಬಯಕೆಯನ್ನು ಕಳೆದುಕೊಂಡು ಬೆಳಿಗ್ಗೆ ರಾತ್ರಿಯ ವ್ಯಭಿಚಾರಗಳನ್ನು ಮರೆಯಲೆಂದೇ ತೀವ್ರವಾಗಿ ರೆಡ್ಡಿಯ ಜೊತೆ ಏನೇನೋ ಅಮೂರ್ತ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದ. ಆದರೆ ಲೂಸಿನಾ ಬರಿ ಇರುವುದೇ ಸುಖವೆನ್ನಿಸಿದ್ದಳು. ತನ್ನ ಗಾಂಭೀರ್ಯವನ್ನು ಸಂಭೋಗದಲ್ಲೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಿಂದಿನ ತಾನು ಎಂಥ ಹಾಸ್ಯಾಸ್ಪದ ವ್ಯಕ್ತಿಯೆಂದು ಈಗ ತಿಳಿಯತೊಡಗಿತು. ಅವಳ ಮೃದುವಾದ ಬೆಚ್ಚಗಿನ ಯೋನಿ, ಪುಟ್ಟಗಿದ್ದರೂ ದೃಢವಾದ ಮೊಲೆಗಳು, ಸ್ವಲ್ಪ ದಪ್ಪವಾದ ತುಟಿಗಳು, ಎಣ್ಣೆಗೆಂಪು ಬಣ್ಣದ ಚರ್ಮ, ಅವಳ ಅಂಡಿನ ಮೇಲಿದ್ದ ಮಚ್ಚೆ, ಅವಳ ಪ್ರಶಾಂತ ಕಣ್ಣುಗಳು, ಬೆನ್ನಿಡೀ ಚೆಲ್ಲುವಷ್ಟು ಉದ್ದದ ಅವಳ ಕಪ್ಪು ಕೂದಲು -ಎಲ್ಲವನ್ನೂ ವಾರಂಗಲ್ ಠಾಣೆಯಲ್ಲಿ ಅವನು ಧ್ಯಾನ ಮಾಡುತ್ತಿದ್ದ ದೇವಿಯ ನಖಶಿಖಾಂತದ ವರ್ಣನೆಯ ಜೊತೆ ಹೋಲಿಸುವನು. ಸಂಸ್ಕೃತದ ಆ ಶ್ಲೋಕಗಳನ್ನು ಮೃದುವಾಗಿ ಹಾಡಿ ಅವಳಿಗೆ ಮೋಜೆನ್ನಿಸುವಂತೆ ಮಾಡುವನು. ಸಂಭೋಗವೆಂದರೆ ಅವಸರದ ವಿಸರ್ಜನೆಯೆಂದು ತಿಳಿದಿದ್ದ ಕೃಷ್ಣಪ್ಪನಿಗೆ ದೇಹದ ಎಲ್ಲ ಭಾಗಗಳು ಅಪೇಕ್ಷೆ, ಉದ್ರೇಕ, ತಣಿವುಗಳ ಬುಗ್ಗೆಯೆಂಬುದನ್ನು ಲೂಸಿನಾ ಕಲಿಸಿದಳು. ಸಂಭೋಗ ಮೈಥುನವಾಯಿತು. ಎಷ್ಟೆಂದರೆ ಅಷ್ಟು ವಿಸ್ತರಿಸುವ ಹಾಡಾಯಿತು. +ಆದರೆ ಕ್ರಮೇಣ ಅವಳನ್ನು ತಾನು ಬಿಟ್ಟಿರಲಾರೆ ಎಂಬ ವ್ಯಾಮೋಹ ಹುಟ್ಟಿಕೊಂಡಿತು. ಅದರಿಂದ ಅವನ ಹಿಗ್ಗಿನ ತೀವ್ರತೆಯೂ ಇಳಿಯುತ್ತ ಬಂತು. ಅವಳು ಯಾಕೆ ತನ್ನ ತಂದೆಯನ್ನು ದ್ವೇಷಿಸುತ್ತಾಳೆಂದು ಅವನ ಕುತೂಹಲ ಬೆಳೆಯುತ್ತ ಹೋದಂತೆ ಇದರಿಂದ ಅವಳಿಗೆ ಕರೆಕರೆಯಾಗುವುದನ್ನು ಗಮನಿಸಿದ. ಒಂದು ದಿನ ಅವಳು ತನ್ನ ತಂದೆಯೇ ತನ್ನನ್ನು ಬಯಸುತ್ತಿದ್ದ ಅದರಿಂದಾಗಿ ತಾಯಿ ತನ್ನನ್ನು ದ್ವೇಷಿಸುತ್ತಿದ್ದಳು -ಮನೆ ನರಕವಾಗತೊಡಗಿತ್ತು ತನಗೆ ಎಂದು ಹೇಳಿದಳು. ಅವಳ ತಂದೆ ಹಾಗಾದರೆ ಅವಳ ಜೊತೆ ಮಲಗಿದ್ದನೊ? ಅದನ್ನು ಕೇಳುವುದು ಹೇಗೆ? ಈ ಬಗೆಯಲ್ಲಿ ಕೃಷ್ಣಪ್ಪ ಕೊರಗುವುದು ಕಂಡು ಲೂಸಿನಾ, +“ನೀನು ಬೇರೆ ಥರದ ಗಂಡಸೂಂತ ತಿಳಿದಿದ್ದೆ” ಎಂದು ನಿರಾಶೆಯಲ್ಲಿ ಒಮ್ಮೆ ಹೇಳಿದಳು. +“ಬೇರೆ ಥರಾ ಅಂದ್ರೆ……” +“ಈ ಕ್ಷಣ ನಿನಗೆ ಸಾಲದ? ನನ್ನ ಭೂತ ಯಾಕೆ ನಿನಗೆ?” +“ನಿನ್ನ ನಾನು ಮದುವೆಯಾಗಬೇಕು -ಅದಕ್ಕೇ” +“ನಾನು ಮದುವೇಂದ್ರೆ ದ್ವೇಷಿಸ್ತೇನೆ” +“ಗೌರಿನೂ ಹೀಗೇ ಹೇಳ್ತ ಇದ್ದಳು,” ಕೃಷ್ಣಪ್ಪ ಚಿಂತಾಕ್ರಾಂತನಾಗಿ ಮಾತಾಡಿದರೆ ಲೂಸಿನಾ ಇನ್ನೇನೋ ಭಾವಿಸುವಳು. +“ಅವಳಿಗೆ ಹೀಗೆಲ್ಲಾ ನಿನ್ನ ಜೊತೆ ಮಾಡ್ಲಿಕ್ಕೆ ಬರ್ತಿತ್ತ?” +ಲೂಸಿನಾಳ ಮೊಗ್ಗಿನಂತಹ ಮೊಲೆಗಳಿಗೆ ಮುತ್ತಿಡುತ್ತ ಕೃಷ್ಣಪ್ಪ ಅವಳ ಮಾತಿನ ಧಾಟಿಯಲ್ಲಿದ್ದ ತುಂಟತನವನ್ನು ಕಂಡು, +“ನೀನು ಗೌರಿ ಹಾಗೇನೇ. ಆದರೆ ಅವಳು ಸೀರಿಯಸ್ಸಾಗಿಯೂ ಇರ್ತ ಇದ್ದಳು. ನೀನು ಮಾತ್ರ ಚೆಲ್ಲು ಹುಡುಗಿ” ತನಗಾಗಿದ್ದ ನಿರಾಸೆಯನ್ನು ಮರೆಯಲು ಕೃಷ್ಣಪ್ಪ ಪ್ರಯತ್ನಿಸುತ್ತಿದ್ದ. +“ಇದನ್ನೆಲ್ಲ ಮಾಡ್ತಾ ರಾಜಕೀಯಾನ್ನೂ ಚರ್ಚಿಸೋ ಹುಡುಗಿ ನಿನಗೆ ಬೇಕ?” +“ನಾನು ಹೇಳೋದು ನಿನಗೆ ಅರ್ಥವಾಗಲ್ಲ.” +ಈ ಲೂಸಿನಾ ಇವನ್ನೆಲ್ಲ ಎಲ್ಲಿ ಕಲಿತಳೆಂದು ಕೃಷ್ಣಪ್ಪನಿಗೆ ಅಸೂಯೆಯಾಗುತ್ತದೆ. ಯಾವ ಗಂಡು ಇವಳಿಗಿದನ್ನು ಕಲಿಸಿದ? +“ಮದುವೆ ಮಾತು ನೀನು ಶುರು ಮಾಡಿದ ಮೇಲೆ ನಿನ್ನ ದೇಹದಲ್ಲಿದ್ದ ಪುಳಕವೆಲ್ಲ ಬತ್ತಿ ಹೋಯ್ತು. ನಂದೂ ಹೋಯ್ತು.” +ಲೂಸಿನಾ ಎದ್ದು ಶವರ್ ತೆಗೆದುಕೊಳ್ಳಲು ಹೋಗುವಳು. ಕೃಷ್ಣಪ್ಪನೂ ಅವಳ ಹಿಂದೆ ಹೋಗಿ ಅವಳ ಜೊತೆ ಶವರ್‍ನ ತಂಪಾದ ನೀರಲ್ಲಿ ನಿಂತು ಅವಳ ಮೈಗೆ ಸೋಪನ್ನು ಬಳಿಯುವನು. ಮತ್ತೆ ಚುರುಕಾಗುವನು. ಇವಳ ನಿಸ್ಸಹಾಯಕತೆಯನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿದ್ದೇನೆಯೇ ಎಂಬ ಸಂಶಯವನ್ನು ತಳ್ಳಲು ಅವಳನ್ನು ಮುತ್ತಿಡುತ್ತ ಆರಾಧಿಸುವನು. ಈ ಹೆಣ್ಣು ಗಂಡಿನ ಸಂಬಂಧದಲ್ಲಿ ಸಮತೋಲ ಸಾಧ್ಯವೇ ಇಲ್ಲವೆ ಎಂದು ಯೋಚಿಸುತ್ತ ಅಣ್ಣಾಜಿಯ ವಿವರಣೆಯನ್ನು ನೆನೆಯುವನು. ತನ್ನನ್ನು ಪ್ರವೇಶಿಸಿದ ಕೃಷ್ಣಪ್ಪ ಬೇರೇನೋ ಯೋಚಿಸುತ್ತಿರುವುದು ಕಂಡು ಲೂಸಿನಾ ಸಿಟ್ಟಾಗುವಳು. ಈ ಪ್ರೀತಿಯನ್ನು ಮೀರಿದ್ದು ತನ್ನಲ್ಲಿದೆ ಎಂದು ಲೂಸಿನಾಗೆ ತಿಳಿಯುವಂತೆ ಮಾಡುವ ದಾರಿ ಕಾಣದೆ ಕೃಷ್ಣಪ್ಪ ತಬ್ಬಿಬ್ಬಾಗುವನು. +ನಾನು ಅಣ್ಣಾಜಿಗೆ ಈಗ ನಿಜವಾಗಿ ಹತ್ತಿರವಾದೆ ಎಂದು ಕೃಷ್ಣಪ್ಪನಿಗೆ ಈ ದಿನಗಳಲ್ಲಿ ಖುಷಿಯೂ ಇತ್ತು. ಆದರೆ ಲೂಸಿನಾ ಎಷ್ಟು ಸಂಭ್ರಮದಲ್ಲಿ ತನ್ನ ದೇಹವನ್ನು ಹಾಡಿಸಿದ್ದಳೊ ಅಷ್ಟೇ ಸಂಭ್ರಮದಲ್ಲಿ ಇಂಗ್ಲೆಂಡಿಗೆ ಹೋದಳು. ಒಂದು ವರ್ಷದ ನಂತರ ತಾನು ಮದುವೆಯಾಗಿರುವುದಾಗಿ ಬರೆದು ತಮ್ಮಿಬ್ಬರ ಸಂಬಂಧ ಗೊತ್ತಿದ್ದ ತಾನು ಮದುವೆಯಾದ ಡಾಕ್ಟರ್ ಎಡ್ಡಿ ಗ್ರೀನೊ ಎಷ್ಟು ಉದಾರಿಯೆಂದು ಹೊಗಳಿದಳು. ಕೃಷ್ಣಪ್ಪ ಇದನ್ನೆಲ್ಲ ನೆನೆಯುತ್ತ ಚಕಿತನಾಗಿ ಶುದ್ಧ ಪತಿವ್ರತೆಯಾದ ಸೀತೆ ಎಷ್ಟು ಬರಡೆಂದು ಕೊರಗುತ್ತಾನೆ. ಪ್ರಾಯಶಃ ಮದುವೆಯಾಗಿದ್ದರೆ ಲೂಸಿನಾಳೂ ಹೀಗೆ ಆಗುತ್ತಿದ್ದಳೊ ಏನೊ -ಹೇಳುವುದು ಹೇಗೆ? +ನರ್ಸಿನ ಕಡೆ ನೋಡುತ್ತ “ನಿಮ್ಮ ಹೆಸರು? ಮರೆತೇ ಬಿಟ್ಟೆ” ಎನ್ನುತ್ತಾನೆ. +“ಜ್ಯೋತಿ” -ಅವಳು ಮುಗುಳ್ನಗುತ್ತ ಹೇಳುತ್ತಾಳೆ. +“ನಿಮಗೆ ಮದುವೆಯಾಗಿದೆಯಾ? ನನ್ನ ಕುತೂಹಲವನ್ನ ಕ್ಷಮಿಸಿ” +ಹೀಗೆ ಹೆಣ್ಣಿನ ಹತ್ತಿರ ಸಭ್ಯವಾಗಿ ಮಾತಾಡುವ ಕಲೆಯನ್ನು ಕೃಷ್ಣಪ್ಪ ಗೋಪಾಲರೆಡ್ಡಿಯಿಂದ ಕಲಿತದ್ದು. ಸಭ್ಯತನದಲ್ಲಿ ತೀವ್ರತೆ ಕುಗ್ಗುತ್ತದೆ ಎಂಬ ಅವನ ಭಾವನೆಯನ್ನು ಹಾಸ್ಯಮಾಡಿ ಮಾಡಿ ಗೋಪಾಲರೆಡ್ಡಿ ಹೆಚ್ಚು ಕಮ್ಮಿ ಹೋಗಲಾಡಿಸಿದ್ದ. +“ಇಲ್ಲ ಆಗಬೇಕೂಂತ ಇದೀನಿ. ನನ್ನ ಬಾಯ್‌ಫ಼್ರೆಂಡ್ ಎಂಜಿನಿಯರ್ ಪರೀಕ್ಷೆ ಮುಗಿಸಿ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೀತ ಇದಾನೆ. ಐದು ವರ್ಷಗಳಿಂದ ನಾವು ಕಾದಿದೇವೆ. ಕೆಲಸ ಸಿಕ್ಕದೆ ಮದುವೆಯಾಗಲ್ಲ ಅಂತಾನೆ ಅವನು.” +ಹೆಣ್ಣು ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಈ ದೇಹಕ್ಕೆ ಜೀವಸಂಚಾರ ತರುತ್ತಾಳೆಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಜ್ಯೋತಿಯ ಚಿಕಿತ್ಸಕ ಸ್ಪರ್ಶಕ್ಕೆ ಮೈಯನ್ನು ಒಡ್ಡುತ್ತಾನೆ. +“ನಾನು ಅವನಿಗೆ ಕೆಲಸ ಕೊಡಿಸಲಿಕ್ಕೆ ಪ್ರಯತ್ನ ಮಾಡಲ?” +ಬೆರಳುಗಳನ್ನು ಮೃದುವಾಗಿ ಮಡಿಸಲು ಕಲಿಸುತ್ತಿದ್ದ ಜ್ಯೋತಿಯ ಮುಖ ಖುಷಿಯಿಂದ ಅರಳಿದ್ದನ್ನು ಕಂಡು ಕೃಷ್ಣಪ್ಪನಿಗೆ ಅವಳ ಬಗ್ಗೆ ತೀವ್ರವಾದ ವಾತ್ಸಲ್ಯ ಮೂಡುತ್ತದೆ. +“ವೀರಣ್ಣ ಅಂತ ಒಬ್ಬ ದೊಡ್ಡ ಕಾಂಟ್ರಾಕ್ಟರ್ ನನ್ನ ಸ್ನೇಹಿತರಿದ್ದಾರೆ. ಅವರೇ ನಿಮ್ಮನ್ನ ಗೊತ್ತು ಮಾಡಿದ್ದು. ಅವರ ಹತ್ರಾನೇ ನಿಮ್ಮ ಬಾಯ್‌ಫ಼್ರೆಂಡಿಗೆ ಕೆಲಸ ಕೊಡಿಸ್ತೇನೆ -ಆಗಬಹುದ” +ಜ್ಯೋತಿಯ ಕಣ್ಣುಗಳು ಒದ್ದೆಯಾಗುತ್ತವೆ! +“ಅವನ ಕಾನ್ಫಿಡೆನ್ಸೇ ಹೊರಟು ಹೋಗಿದೆ ಗೊತ್ತ ಕೆಲಸ ಸಿಗ್ದೆ? ತಿಂಗಳಿಗೆ ಮುನ್ನೂರಾದರೂ ಸಾಕು ನಮಗೆ. ದಯವಿಟ್ಟು………” +ಕೃಷ್ಣಪ್ಪ ಅವಳ ಮುಂದಿನ ಮಾತನ್ನು ತಡೆಯುತ್ತಾನೆ. +* +* +* +ನಿನ್ನ ಸಂಗದಲ್ಲಿ ಅವನ ದೇಹ ಅರಳುವಂತಾಗಲಿ ಎಂದು ಮನಸ್ಸಲ್ಲೆ ಹಾರೈಸುತ್ತಾನೆ. ಕಾಮದ ಸಂದರ್ಭದಲ್ಲಿ ಇನ್ನೊಬ್ಬ ಗಂಡೂ ಸುಖಪಡಬೇಕೆಂದು ತನಗೀಗ ಹಠಾತ್ತನೆ ಅನಿಸಿದ್ದಕ್ಕಾಗಿ ಚಕಿತನಾಗುತ್ತಾನೆ. ಈ ತನಕ ಅವನು ಬೇರೊಬ್ಬ ಕಾಮದಲ್ಲಿ ಸಾರ್ಥಕವಾಗಬೇಕೆಂಬ ಆಸೆ ಮೂಡಲಾರದಂಥ ಅಸೂಯೆ ತನ್ನಲ್ಲಿನ್ನೂ ಉಳಿದಿರಬಹುದೆಂದು ಎಂದು‌ಒಕ್ಂಡಿದ್ದ. ಆದರೆ ಈಗ ತನ್ನ ಎದುರು ಸುಂದರವಾಗಿ ನಿಂತ ಹೆಣ್ಣು ಇನ್ನೊಬ್ಬನಿಂದ ಸುಖಪಡಲೆಂಬ ಆಸೆ ತನ್ನಲ್ಲಿ ಉಕ್ಕಿತೆಂದು ಸಂತೋಷಪಟ್ಟ. +* +* +* +ಅವತ್ತು ರಾತ್ರೆ ಮಹೇಶ್ವರಯ್ಯ ಮನೆಗೆ ಬಂದವರು ಊಟ ಬೇಡವೆಂದು ಮುಸುಕು ಹೊದ್ದು ಮಲಗಿದ್ದರು. ನಾಗೇಶನಿಂದ ವೀಲ್‌ಚೇರನ್ನು ತಳ್ಳಿಸಿಕೊಂಡು ಅವರ ರೂಮಿಗೆ ಹೋಗಿ, ನಾಗೇಶನನ್ನು ಹೊರಗೆ ಕಳಿಸಿ ಬಾಗಿಲು ಹಾಕಿಸಿಕೊಂಡು ಅವರನ್ನು ಎಬ್ಬಿಸಿದ. ಮಹೇಶ್ವರಯ್ಯ ಕುಡಿದಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು. ಮುಖ ಕಳೆಗುಂದಿತ್ತು. ಬೆಳಿಗ್ಗೆಯೇ ಅವರ ಕೈಗಳು ನಡುಗುವುದನ್ನು ಕೃಷ್ಣಪ್ಪ ಗಮನಿಸಿದ್ದ. +“ಏನು ವಿಷಯ? ಯಾಕೆ ಹೀಗಾಗಿದೀರಿ ನೀವು?” ಎಂದ. +ಅವರಿಗೆ ಕೇಳಿದ ಪ್ರಶ್ನೆ ತಾನೇ ಕೇಳಿಕೊಂಡ ಪ್ರಶ್ನೆ ಎನ್ನಿಸುವಂಥ ಧಾಟಿಯಲ್ಲಿ ಕೃಷ್ಣಪ್ಪ ಮಾತಾಡಿದ್ದ. ಸಹಾನುಭೂತಿ ಕನಿಕರಗಳ ಧಾಟಿಯಲ್ಲಿ ಅವರ ಜೊತೆ ಮಾತಾಡುವುದು ಕೃಷ್ಣಪ್ಪನಿಗೆ ಸಾಧ್ಯವೇ ಇರಲಿಲ್ಲ. ಅಂಥ ಭಾವನೆಗಳನ್ನು ತನ್ನಲ್ಲಿ ಉಂಟುಮಾಡುತ್ತಿದ್ದೇನೆಂದು ಮಹೇಶ್ವರಯ್ಯ ತಿಳಿದರೆ ಅವರಿಗೆ ನೋವಾಗುತ್ತದೆಂದು ಕೃಷ್ಣಪ್ಪನಿಗೆ ಗೊತ್ತು. ತನ್ನೆದುರು ಅವರು ಇದರಿಂದ ಸಣ್ಣವರಾದಂತೆ ಎಂಬುದೂ ಅಲ್ಲ ಇದಕ್ಕೆ ಕಾರಣ. ತನಗಿರುವಂತೆ ಮಹೇಶ್ವರಯ್ಯನಿಗೆ ತಾನು ಯಾವಾಗಲೂ ಗಟ್ಟಿ ದೃಢ ಎಂದು ತೋರಿಸಿಕೊಳ್ಳುವ ಅಗತ್ಯವಿರಲಿಲ್ಲ. “ಬೆಟ್ಟದಡಿ ಹುಲ್ಲಾಗು” ಎಂಬ ಮಂಕುತಿಮ್ಮನ ಕಗ್ಗದ ಸಾಲು ಅವರಿಗೆ ತುಂಬ ಪ್ರಿಯೆವೆಂದು ಕೃಷ್ಣಪ್ಪನಿಗೆ ಗೊತ್ತು. ಯಾರ ಕಣ್ಣಿಗೂ ಬೀಳದಂತೆ ಪುಟ್ಟಗೆ, ಸಣ್ಣಗೆ, ಯಾವ ಸ್ಪಷ್ಟ ಬಣ್ಣವೂ ಇಲ್ಲದೆ ತನ್ನೊಳಗೇ ಹಾಡಿಕೊಳ್ಳುತ್ತ ಇರುವ ಹಕ್ಕಿಯಂತೆ ಇರಬೇಕೆಂಬುದು ಅವರ ನಿಲುವು. ಯಕ್ಷಗಾನದ ಕೋಡಂಗಿಯಂತೆ ಬಳುಕುತ್ತ, ಬಾಗುತ್ತ, ಲಾಗ ಹಾಕಿ ನಗಿಸುತ್ತ ಕೊಬ್ಬಿದವನ ಎದುರು ಕಣ್ ಕಣ್ ಬಿಡುತ್ತ ತನ್ನ ಒಳಗನ್ನು ರಕ್ಷಿಸಿಕೊಳ್ಳಬೇಕೆಂಬ ಜೀವನ ಕಲೆಯ ತತ್ತ್ವ ಅವರದ್ದು. ವಾರಂಗಲ್ ಠಾಣೆಯಲ್ಲಿ ದಪ್ಪ ಮೋರೆಯ ಅಧಿಕಾರಿ ಕೃಷ್ಣಪ್ಪನ ಬಿಡುಗಡೆಯನ್ನು ಮುಂದೂಡಲು ನೆವಗಳನ್ನೊಡ್ಡಿದಾಗ ಅವನಿಗೆ ಹ್ಯಾಪಮೋರೆಯಲ್ಲಿ ಕೈಮುಗಿದು ತಾನೊಬ್ಬ ಕ್ಷುದ್ರ ಜಂತು ಎಂಬ ಭಾವನೆ ಹುಟ್ಟಿಸಿ ಅವನನ್ನಿಷ್ಟು ಕೊಬ್ಬಿಸಿ ತೃಪ್ತಿಪಡಿಸಿ ಕೃಷ್ಣಪ್ಪನನ್ನು ಬಿಡಿಸಿಕೊಂಡಿದ್ದರಂತೆ. ಠಾಣೆಯ ಅನುಭವ ಕೃಷ್ಣಪ್ಪನನ್ನು ಮಂಕಾಗಿಸಿದ್ದ ದಿನಗಳಲ್ಲಿ ದಪ್ಪಮೋರೆಯ ಅಧಿಕಾರಿಯನ್ನು ರಾಕ್ಷಸನನ್ನಾಗಿಯೂ, ತನ್ನನ್ನು ವಿದೂಷಕನನ್ನಾಗಿಯೂ ಮಾಡಿಕೊಂಡು ತಾನು ಉಪಾಯದಲ್ಲಿ ಅವನನ್ನು ಗೆದ್ದುದನ್ನು ಯಕ್ಷಗಾನದ ರೀತಿಯಲ್ಲಿ ಅಭಿನಯಿಸಿ ತೋರಿಸಿ ಕೃಷ್ಣಪ್ಪನನ್ನು ನಗಿಸಿದ್ದರು. ಕೃಷ್ಣಪ್ಪನ ಮೂಲದಲ್ಲಿದ್ದ ಆತ್ಮಾಭಿಮಾನವನ್ನು ನಾಶ ಮಾಡಲು ಪ್ರಯತ್ನಿಸಿದ್ದ ಕ್ರೌರ್ಯ ಮಹೇಶ್ವರಯ್ಯನ ಅಭಿಪ್ರಾಯದಲ್ಲಿ ಕಾಲಾನುಕಾಲದಿಂದಲೂ ಉಬ್ಬುತ್ತ ಹೋಗುವುದರಿಂದಲೇ ಒಡೆಯುವ ಒಂದು ರಾಕ್ಷಸ ಬಣ್ಣದ ವೇಷವಾಗಿ ಮಾತ್ರ ಕಂಡು, ಕೃಷ್ಣಪ್ಪ ತನ್ನ ಜೀವದ ಸೂಕ್ಷ್ಮ ಬೇರುಗಳಿಗಾಗಿದ್ದ ಆಘಾತದಿಂದ ಚೇತರಿಸಿಕೊಂಡಿದ್ದ. ಮಹೇಶ್ವರಯ್ಯ ಉಮೇದು ಬಂದಾಗ ಮಾಡುವ ಈ ವಿದೂಷಕ ಅಭಿನಯ ಕಂಡು ಗೋಪಾಲರೆಡ್ಡಿ ಕೃಷ್ಣಪ್ಪನಿಗೆ ಹೇಳಿದ್ದ: “ಕೋಡಂಗಿ ನೋಡು -ಹೇಗೆ ನೀನು ಹೇಳೋ ಒಳಗೆ ಉರಿಯೋ ದೀಪಾನ ಉಳಿಸಿಕೋತಾನೆ! ಅಂದ ಹಾಗೆ ನಮ್ಮೂರಿನ ರೈತರಲ್ಲೂ ಈ ಗುಣ ಕಂಡಿದೀನಿ ನಾನು. ನನ್ನ ಅಪ್ಪನ ಕಣ್ಣಿಗೇ ಬೀಳದಂತೆ ಇದ್ದುಬಿಡ್ತಾರೆ. ಬಿದ್ದರೂ ತಾವು ಅಲ್ಪರು ಅನ್ನೋ ಹಾಗೆ ನಟಿಸ್ತಾರೆ……” ಕೃಷ್ಣಪ್ಪ ಈ ವಿಧಾನವನ್ನು ಒಪ್ಪುವುದಿಲ್ಲ. ಅವನ ಮನೋಧರ್ಮಕ್ಕೆ ಅದು ವಿರುದ್ಧವಾದದ್ದು. +ಮಹೇಶ್ವರಯ್ಯ ಸೋಲುವರಲ್ಲ ಎಂದು ಕೃಷ್ಣಪ್ಪ ತಿಳಿದಿದ್ದ. ಖಾಹಿಲೆಯಿಂದ ಮಲಗಿದ ಮೇಲೆ ತನ್ನ ಹಾದಿ ದುರ್ಗಮವೆನ್ನಿಸತೊಡಗಿದ್ದರಿಂದ ಮಹೇಶ್ವರಯ್ಯನೂ ಹಿಗೆ ಕಳೆಗುಂದಿರುವುದು ಅವನಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ಮಹೇಶ್ವರಯ್ಯನನ್ನು ಅವನು ಪ್ರಶ್ನಿಸಿದಾಗ ಅವರಿಗೆ ತಮ್ಮ ಸ್ಥಿತಿಯ ಮೇಲೆ ಇನ್ನೂ ಪೂರ್ಣ ಸ್ವಾಮ್ಯವಿದೆಯೆಂದು ತಿಳಿದಿದ್ದ. +ಮಹೇಶ್ವರಯ್ಯ ಎದ್ದು ಕೂತು ಸ್ವಲ್ಪ ಆಲೋಚಿಸಿ ಹೇಳಿದರು: +“ಬೇಡ ನಿನಗೆ ಹೇಳಬಾರದು ನಾನು. ನಿನಗದರಿಂದ ತೊಂದರೆಯುಂಟು.” +ಕೃಷ್ಣಪ್ಪನಿಗೆ ಥಟ್ಟನೇ ಮಹೇಶ್ವರಯ್ಯ ಅಸಹಾಯಕರಾಗಿದ್ದಾರೆಂದು ಗೊತ್ತಾಯಿತು. ತನ್ನ ಸಹಾಯ ಅವರಿಗೆ ಅಗತ್ಯವಿದ್ದರೂ ಕೇಳುತ್ತಿಲ್ಲ. ಇದರಿಂದ ಅವನಿಗೆ ಅವಮಾನವಾದಂತೆ ಅನ್ನಿಸಿತು. ಸಿಟ್ಟುಬಂತು. +“ನನಗೆ ಅವಮಾನವಾಗುವಂತೆ ಮಾಡ್ತಿದೀರಿ ನೀವು” +ಮಹೇಶ್ವರಯ್ಯ ತಲೆಯಲ್ಲಾಡಿಸುತ್ತ ಕನಿಕರದಿಂದ ಅವನನ್ನು ನೋಡುತ್ತ ಹೇಳಿಕೊಂಡರು. +ಈಚೀಚೆಗೆ ಅವರಿಗೆ ಜೂಜಿನ ಉದ್ರೇಕವಿಲ್ಲದೆ ಬದುಕುವುದೇ ಸಾಧ್ಯವಾಗುತ್ತಿರಲಿಲ್ಲ. ದೇವಿಯ ಪೂಜೆಗೆ ಎಷ್ಟೋ ಬಾರಿ ಕೂತು ನೋಡಿದರು. ಓಡುವ ಕುದುರೆಯೇ ಅವರಿಗೆ ಕಾಣುವುದು. ತಮಗಿದ್ದ ಆಸ್ತಿಯೆಲ್ಲ ಇದರಿಂದ ಕರಗಿತು. ಜೀವನ ದುಸ್ತರವಾಗುತ್ತ ಹೋಯಿತು. ಮೊನ್ನೆ ಯಾರ್ಯಾರೋ ಮಿತ್ರರಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದು ಬಂದರು. ತಾನು ಕಳಕೊಂಡದ್ದನ್ನೆಲ್ಲ ಗೆಲ್ಲುವೆನೆಂದು ಖಾತ್ರಿಯಾಗಿ ನಂಬಿ ಜೂಜಾಡಲು ಬಂದಿದ್ದರು. ಆದರೆ ತಂದಿದ್ದ ಹಣವನ್ನೆಲ್ಲ ಕಳೆದುಕೊಂಡರು. +“ಅಷ್ಟೇನಾ? ನಿಮಗೆ ಆ ಹತ್ತು ಸಾವಿರ ನಾನು ಕೊಡ್ತೇನೆ.” +ಕೃಷ್ಣಪ್ಪನಿಗೆ ತಾನಿಷ್ಟು ಮಾಡಬಹುದೆಂದು ತುಂಬ ಖುಷಿಯಾಗಿತ್ತು. ಮಹೇಶ್ವರಯ್ಯ ತನ್ನ ಮೇಲೆ ಸುರಿದ ಹಣಕ್ಕೆ ಲೆಕ್ಕವಿರಲಿಲ್ಲ. ಅವನು ಈ ತನಕ ಅವರಿಗೆ ಒಂದೇ ಒಂದು ಕಾಸು ಕೊಟ್ಟಿರಲಿಲ್ಲ. +“ಕೊಡ್ತೀಯಾಂತ ನನಗೆ ಗೊತ್ತು. ಆದರೆ ಆ ಹಣಾನ್ನೂ ನಾನು ನಾಳೆ ಜೂಜಾಡ್ತೀನಲ್ಲ?” +“ಆಡಿ. ನೀವು ಗೆಲ್ಲಲೂಬಹುದಲ್ಲ?” +ಮಹೇಶ್ವರಯ್ಯನ ಕಣ್ಣುಗಳು ಭರವಸೆಯಲ್ಲಿ ಹೊಳೆದವು! +“ಹೌದು. ಆದರೆ ಸೋಲಲೂಬಹುದು -” +“ಸೋಲಿ -” ಕೃಷ್ಣಪ್ಪ ನಗುತ್ತ ಹೇಳಿದ. +“ಇಲ್ಲ -ಧಾರವಾಡದ ಹತ್ತಿರ ಒಂದು ಹಳ್ಳೀಲಿ ನನಗೆ ಸ್ವಲ್ಪ ತೋಟವಿದೆ. ಒಂದು ಗುಡಿಸಿಲಿದೆ. ಅಲ್ಲಿ ನನ್ನ ಉಳಿದ ಕಾಲವನ್ನು ಕಳೆಯೋಣ, ಈ ಜೂಜನ್ನ ಬಿಟ್ಟುಬಿಡೋಣ ಅಂತಿದ್ದೆ -” +“ನಾಳೆ ಸೋತರೆ ಹಾಗೇ ಮಾಡಿ -” +ಮಹೇಶ್ವರಯ್ಯ ತುಂಬ ಗೆಲುವಾಗಿಬಿಟ್ಟದ್ದು ಕಂಡು ಕೃಷ್ಣಪ್ಪನಿಗೆ ಸಂತೋಷವಾಯಿತು. ಇಬ್ಬರೂ ಹಿಂದಿನಂತೆಯೇ ಪರಸ್ಪರ ನೋಡಿ ನಕ್ಕರು. ಆದರೆ ಕ್ಷಣ ಕಳೆದು ಮಹೇಶ್ವರಯ್ಯ ಚಿಂತಾಕ್ರಾಂತರಾಗಿ “ಭೋ” ಎಂದು +“ನಿನಗೆ ಇದರಿಂದ ತೊಂದರೆಯುಂಟು” ಎಂದು ಎದುರಿಗಿದ್ದ ಬಾಗಿಲನ್ನು ದುರುಗುಟ್ಟಿದರು. +“ಇರಲಿ ಬಿಡಿ” ಎಂದು ಕೃಷ್ಣಪ್ಪ ನಾಗೇಶಾ ಎಂದು ಕರೆದು ತನ್ನ ವೀಲ್‌ಚೇರನ್ನು ರೂಮಿಗೆ ತಳ್ಳಿಸಿಕೊಂಡು ಹೋಗಿ ಹೆಂಡತಿಯನ್ನು ಬರಹೇಳಿದ. ಬಾಗಿಲು ಮುಚ್ಚುವಂತೆ ಹೇಳಿ, +“ಸೀತ ಬ್ಯಾಂಕಲ್ಲಿ ನಿನ್ನ ಹೆಸರಲ್ಲಿ ಹತ್ತು ಸಾವಿರ ಇದೆಯಲ್ಲ -ಅದು ನಾಳೆ ಬೆಳಗ್ಗೆ ನನಗೆ ಬೇಕು” +ಹೆಂಡತಿಯನ್ನು ಹೆಸರು ಹಿಡಿದು ಕೃಷ್ಣಪ್ಪ ಕರೆಯುವವನಲ್ಲ. ಅವಳಿಗೆ ಆಶ್ಚರ್ಯವಾಗಿತ್ತು. +“ಯಾಕೆ?” ಎಂದಳು. +“ಮಹೇಶ್ವರಯ್ಯನಿಗೆ ಕೊಡಬೇಕಿತ್ತು.” +“ನೀವು ಸೋಷಲಿಸ್ಟ್ ಆಗಿ ಕುದುರೆಯ ಬಾಲಕ್ಕೆ ಹಣ ಕಟ್ಟೋದನ್ನ …” +“ಅದೆಲ್ಲ ಬೇಡ ಕೊಡು” ಕೃಷ್ಣಪ್ಪ ಗುಡುಗಿದ. +“ಇಲ್ಲ -ಕೊಡೋಕೆ ದುಡ್ಡಿಲ್ಲ -” +ಕೃಷ್ಣಪ್ಪ ಕೈ ಎತ್ತಿದ್ದು ನೋಡಿ ದೂರ ಸರಿದಳು. +“ಇದೆ -ಕೊಡು” +ಅವನ ಮನಸ್ಸು ನೆಗೆದು ಅವಳ ಕೈ ಹಿಡಿದು ಜಗ್ಗುವ ಸನ್ನಾಹ ಮಾಡಿತು. ಆದರೆ ದೇಹ ಹಂದಲಿಲ್ಲ. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರು ಉಕ್ಕಿ ತುಟಿಗಳು ಅದುರತೊಡಗಿದುವು. +ಸೀತೆ ಮೆತ್ತಗಾಗಿ ಹೇಳಿದಳು: +“ಜಯಮಹಲ್ ಬಡಾವಣೆಯಲ್ಲಿ ಟ್ರಸ್ಟ್ ಬೋರ್ಡು ನನಗೊಂದು ಸೈಟ್ ಸ್ಯಾಂಕ್ಷನ್ ಮಾಡಿದೆ. ಅದನ್ನ ಕೊಳ್ಳೋಕೆ ಆ ಹಣ ಇಟ್ಟಿದೀನಿ….” +ಕೃಷ್ಣಪ್ಪನ ಕಣ್ಣುಗಳಲ್ಲಿ ನೀರಿಳಿದುವು . ಬಲಗೈಯಿಂದ ಒರೆಸಿಕೊಳ್ಳುತ್ತ – +“ಯಾವ ಸೈಟು” ಎಂದು ಬಿಕ್ಕಿದ. +“ವೀರಣ್ಣ ಅಪ್ಲಿಕೇಶನ್ ಹಾಕ್ಸಿದ್ರು. ಸ್ಯಾಂಕ್ಷನ್ ಆಯ್ತು” +ಸೀತೆ ಮೃದುವಾಗಿ ಹೇಳಿ ತಲೆ ತಗ್ಗಿಸಿದಳು. ಈ ಜಯಮಹಲ್ ಸೈಟುಗಳ ಬಗ್ಗೆ ಅಸೆಂಬ್ಲಿಯಲ್ಲಿ ಕೃಷ್ಣಪ್ಪ ಗಲಾಟೆ ಮಾಡಿದ್ದ. ಓಪನ್ ಮಾರ್ಕೆಟ್ಟುಗಳಲ್ಲಿ ನಲವತ್ತು ಐವತ್ತು ಸಾವಿರ ಬೆಲೆಬಾಳುವ ಸೈಟುಗಳನ್ನು ಏಳೆಂಟು ಸಾವಿರಕ್ಕೆ ನಿಗದಿ ಮಾಡಿ ಪೇಪರಿನಲ್ಲಿ ಪ್ರಕಟವಾದ್ದು ಕಂಡು ಕೃಷ್ಣಪ್ಪ ಈ ಸೈಟುಗಳನ್ನು ಮಂತ್ರಿಗಳು ತಮ್ಮಲ್ಲಿ ತಮ್ಮ ಬಳಗದವರಲ್ಲಿ ಹಂಚಿಕೊಳ್ಳಬಹುದೆಂದು ಗುಮಾನಿಪಟ್ಟಿದ್ದ. ಈಗ ಮಂತ್ರಿಮಂಡಳ ತನ್ನ ಹೆಂಡತಿಗೂ ಒಂದು ಸೈಟ್ ಕೊಟ್ಟು ತನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ತನ್ನ ಉಮ್ಮಳವನ್ನು ಹತ್ತಿಕ್ಕಿಕೊಂಡು ಕೃಷ್ಣಪ್ಪ ಹೇಳಿದ, “ಸೀತ -ನೀನು ಈ ಸೈಟನ್ನು ಕೊಂಡುಕೋಬಾರದು.” +“ಯಾಕೆ? ನೀವೇನೂ ನನಗೆ ಮಾಡಬೇಡಿ. ಆದರೆ ಸೈಟ್ ಕೊಳ್ಳೋದು ನನ್ನ ಹಕ್ಕು. ಅದಕ್ಕೆ ಅಡ್ಡ ಬರಬೇಡಿ.” +“ಸೀತ, ಈ ಸೈಟು ನಮಗೆ ಬೇಡ. ನಾನು ಬೇರೆ ನಿನಗೆ ಕೊಂಡುಕೊಡ್ತೀನಿ” ಕೃಷ್ಣಪ್ಪ ಸಮಾಧಾನದಿಂದ ಹೇಳಿದ. +“ಕೊಡ್ತೀರಿ. ಕೊಡ್ತೀರಿ. ನಾಳೆ ನಿಮಗೆ ಏನಾದರೂ ಆದರೆ ನಾನು ನಿಮ್ಮ ಮಗಳು ಬಾಯಿಗೆ ಮಣ್ಣು ಹಾಕಿಕೋಬೇಕ?” +ಕೃಷ್ಣಪ್ಪ ಕಣ್ಣುಗಳನ್ನು ಮುಚ್ಚಿದ. +“ಹೋಗು. ಹೋಗು. ನನ್ನ ಹತಿರ ಸುಳೀಬೇಡ ಹೋಗು” ಎಂದು ಸಣ್ಣದನಿಯಲ್ಲಿ ಕರ್ಕಶವಾಗಿ ಕಿರುಚಿದ. +ಅವಳು ಹೋದ ಮೇಲೆ “ನಾಗೇಶ ” ಎಂದು ಕೂಗಿದ. ಕಣ್ಣುಗಳನ್ನು ಮುಚ್ಚಿದ್ದೇ ಹೇಳಿದ. +“ಈಗಲೇ ಹೋಗಿ ವೀರಣ್ಣನ ಹತ್ತಿರ ಹತ್ತು ಸಾವಿರ ಬೇಕೂಂತ ಕೇಳಿ ತಗೊಂಬಾ. ಆಟೋ ಮಾಡಿಕೊಂಡು ಹೋಗು. ಪರ್ಸಲ್ಲಿ ದುಡ್ಡೀರಬೇಕು ತಗೋ” +ನಾಗೇಶ ತನ್ನಲ್ಲಿ ಹಣವಿದೆಯೆಂದು ಹೋದ. ಮುಕ್ಕಾಲು ಗಂಟೆಯಲ್ಲಿ ಹಿಂದಕ್ಕೆ ಬಂದು ದೊಡ್ಡದೊಂದು ಕವರನ್ನು ಕೃಷ್ಣಪ್ಪನಿಗೆ ಕೊಟ್ಟ. ವೀರಣ್ಣ ದುಡ್ಡಿನ ಜೊತೆ ಒಂದು ಚೀಟಿಯನ್ನಿಟ್ಟಿದ್ದ. +“ಇದರಲಿ ಹದಿನೈದು ಸಾವಿರವಿದೆ. ಹೆಚ್ಚು ಬೇಕಾದರೆ ನಾಳೆ ಹೇಳಿಕಳಿಸಿ. ತಮ್ಮ ವಿಧೇಯ, ವೀರಣ್ಣ.” +“ತಳ್ಳು” ಎಂದು ಮಹೇಶ್ವರಯ್ಯನ ಕೋಣೆಗೆ ಹೋದ. ಅವರು ಎದ್ದು ಕೂತು ತಾನು ಬರುವ ಮುಂಚೆ ಧ್ಯಾನದಲ್ಲಿದ್ದಂತೆ ಕಂಡಿತು. +“ಹದಿನೈದು ಸಾವಿರ ಇದೆ. ನಾಳೆ ಬೇಕಾದರೆ ಇನ್ನಷ್ಟು ಕೊಡ್ತೇನೆ” ಎಂದು ಅವರ ಉತ್ತರಕ್ಕೆ ಕಾಯದೆ ನಾಗೇಶನಿಂದ ತಳ್ಳಿಸಿಕೊಂಡು ರೂಮಿಗೆ ಹೋಗಿ ಮಲಗಿದ. +* +* +* +ಕೃಷ್ಣಪ್ಪ ಸೀತೆಯ ಜೊತೆಗೆ ಜಗಳವಾಡಿದಾಗ್ಗೆಲ್ಲ ಮಗುವಿಗೆ ಹೇಗೋ ಅದು ಗೊತ್ತಾಗಿಬಿಡುವುದು. ಮಗಳು ತುಟಿಪಿಟಕ್ಕೆನ್ನದೆ ಕೊಟ್ಟದ್ದನ್ನು ತಿಂದು, ತಾಯಿ ತಲೆಯ ಸಿಕ್ಕು ಬಿಡಿಸುತ್ತ ಬಾಚಣಿಗೆಯಿಂದ ಅವಸರದಲ್ಲಿ ಜಗ್ಗುವಾಗ ಚೂರೂ ಪ್ರತಿಭಟಿಸದೆ ಮಂಕಾಗಿ ಕೂತಿದ್ದನ್ನು ಕಂಡು ಕೃಷ್ಣಪ್ಪನಿಗೆ ದುಃಖವಾಯಿತು. ನೀಟಾಗಿ, ಎರಡು ಜಡೆ ಹಾಕಿಕೊಂಡು ಯೂನಿಫ಼ಾರಂ ಧರಿಸಿ ಸ್ಕೂಲಿಗೆ ಹೊರಟ ಗೌರಿಯನ್ನು “ಗೌರಾ” ಎಂದು ಕರೆದ. ತನ್ನ ಹತಿರ ಬರಲು ಮಗಳು ಅಂಜುತ್ತಿದ್ದಾಳೆಂದು ಅನುಮಾನವಾಯಿತು. ಇನ್ನೊಮ್ಮೆ ಕರೆದ. ಹತ್ತಿರ ಬಂದು ನಿಂತಳು. ಅವಳ ಬೆನ್ನಿನ ಮೇಲೆ ಕೈಯಿಟ್ಟು ತಡವಿದ. ತಿರುಗಿಸಿ ನಿಲ್ಲಿಸಿಕೊಂಡು ಅವಳ ಮುಖ ನೋಡಿದ. ತನ್ನ ಕಣ್ಣುಗಳು -ಆದರೆ ತಾಯಿಯ ಗುಜ್ಜು ಮೂಗು. ತಾಯಿ ಕೋಪದಲ್ಲಿ ಹರಿದು ಬಾತುಕೊಂಡಿದ್ದ ತುಟಿ ಈಗ ಸರಿಹೋಗಿದೆ. ಮೂಗಿನಲ್ಲಿ ಸಿಂಬಳ ಸುರಿಯುತ್ತಿಲ್ಲ. ನಿರ್ಭಾವದಲ್ಲಿ ನಿಂತ ಎಳೆ ಮಗುವಿನ ಮುಖದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೂಡಿದಂತೆ ಕಂಡು ಅವನಿಗೆ ಕಸಿವಿಸಿಯಾಯಿತು. ಮಗು ಒಂಟಿಕಾಲಿನಲ್ಲಿ ಕುಣಿಯುತ್ತಲೋ ಬೀರುವಿನಲ್ಲಿದ್ದುದನ್ನು ಎಳೆದು ಬೀಳಿಸಿ ತಾಯಿಯಿಂದ ಬೈಸಿಕೊಂಡು ಎಗ್ಗಿಲ್ಲದೆ ಓಡುತ್ತಲೋ ಇರುವುದನ್ನು ಕಂಡು ಬಹಳ ದಿನಗಳಾದುವು ಎನ್ನಿಸಿತು. +ಗೌರಿ ಸ್ಕೂಲಿಗೆ ಹೋದ ಮೇಲೆ ಶುಭ್ರವಾದ ಸಿಲ್ಕ್ ಜುಬ್ಬ ಧರಿಸಿ ಹಣೆಗೆ ವಿಭೂತಿಯಿಟ್ಟು ಬಂದ ವೀರಣ್ಣ ಅದೊಂದು ಸಾಮಾನ್ಯ ಪ್ರಶ್ನೆ ಎನ್ನುವಂತೆ +“ಇನ್ನಷ್ಟು ಬೇಕ?” ಎಂದ. +ಬೇಡವೆಂದ ಕೃಷ್ಣಪ್ಪ, ಅವತ್ತು ರಾತ್ರೆ ಬರುವ ಗೌರಿ ದೇಶಪಾಂಡೆಯನ್ನು ನಿಲ್ದಾಣದಿಂದ ಕರೆತಂದು ಅವರ ಗೆಸ್ಟ್‌ಹೌಸಿನಲ್ಲಿ ಇಳಿಸಬೇಕೆಂದೂ, ಜ್ಯೋತಿಯ ಬಾಯ್‌ಫ಼್ರೆಂಡಿಗೂ ನಾಗೇಶನ ಅಕ್ಕನಿಗೂ ಕೆಲಸದ ವ್ಯವಸ್ಥೆ ಮಾಡಬೇಕೆಂದೂ ಹೇಳಿದ. ಅದೇನು ಮಹತ್ವದ ವಿಷಯವಲ್ಲವೆನ್ನುವಂತೆ “ಆಗಲಿ” ಎಂದ ವೀರಣ್ಣ. ಪಂಚಲಿಂಗಯ್ಯ ಬಂದಿದ್ದರೆಂದೂ ಗೌಡರ ಹತ್ತಿರ ಅಂಥ ಕೆಲಸ ಮಾಡಿಸಕೂಡದೆಂದೂ ಹೇಳಿ ತಾನೇ ಸೀಟಿಗೆ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದಾಗಿಯೂ ತಿಳಿಸಿ, +“ನೀವು ಬೇಗ ಗುಣವಾಗಬೇಕು” +ಎಂದ. ಹೇಳಿದ ಮಾತು ಸಾಮಾನ್ಯವಾದರೂ ಹೇಳಿದ ರೀತಿ ಅರ್ಥಗರ್ಭಿತವಾಗಿತ್ತು. ಕೃಷ್ಣಪ್ಪ ಕೇಳಿದ: +“ನಿಮ್ಮ ಮನಸ್ಸಲ್ಲೇನೋ ವಿಶೇಷವಿದೆ. ಹೇಳಿ” +“ನಿಮ್ಮ ತಲೆ ಕೆಡಿಸಬಾರದೆಂದು ನಿಮ್ಮ ಹತ್ತಿರ ಹೇಳ್ತಾ ಇಲ್ಲ. ನೀವು ತುಂಬ ದೊಡ್ಡ ಜವಾಬ್ದಾರಿ ಹೊರೋ ಕಾಲ ಬಹಳ ದೂರವೇನೂ ಇಲ್ಲ.” +“ನಾನೂ ಅದನ್ನ ಕೇಳಿಸಿಕೊಂಡೆ. ಆದರೆ ಪಕ್ಷಾಂತರ ಮಾಡೋವ್ರ ಜೊತೆ ನಾನು ಸೇರಲ್ವಲ್ಲ” +“ಸೇರಬೇಡಿ. ನೀವೇ ಮಂತ್ರಿಮಂಡಳ ರಚಿಸಿ. ನಿಮಗೆ ಹೊಸ ಗೇಣಿ ಶಾಸನ ತರಲಿಕ್ಕೆ ಇಷ್ಟ ಅಲ್ವ? ತನ್ನಿ. ಬೆಂಬಲ ಕೋಡೋವರು ಕೊಡ್ತಾರೆ. ಬೆಂಬಲ ಸಿಗಲಿಲ್ಲ ಅನ್ನಿ. ರಾಜೀನಾಮೆ ಕೊಟ್ಟರಾಯ್ತು….ಏನೇನೋ ತಮಗೆ ಬುದ್ಧಿವಾದ ಹೇಳೋ ಹಾಗೆ ಮಾತಾಡ್ತಿದೀನಿ. ಕ್ಷಮಿಸಬೇಕು” +“ವೀರಣ್ಣ -ಒಂದು ಮಾತು. ಅದು ಯಾಕೆ ಸೀತೆ ಹತ್ತಿರ ನೀವು ಸೈಟಿಗೆ ಅಪ್ಲೈ ಮಾಡಿಸಿದ್ರಿ?” +“ಒಳ್ಳೆ ತಮಾಷೆಯಾಯ್ತು ನೀವು ಹೇಳೋದು, ಆಕೆಯೇನು ಈ ದೇಶದ ಪ್ರಜೆ ಅಲ್ವ?” +ವೀರಣ್ಣ ನಕ್ಕು ಕೃಷ್ಣಪ್ಪನ ಮುಖ ಗಂಭೀರವಾಗಿರುವುದನ್ನು ಕಂಡು ಅವನೂ ಗಂಭೀರನಾಗಿ ಹೇಳಿದ: +“ಗೌಡರೆ ನೀವು ಎಷ್ಟೇ ದೊಡ್ಡವರಾಗಿರಿ ಹೆಂಗಸರಿಗೆ ಅದು ಗೊತ್ತಾಗೋದು ಇಂಥದೇನಾದ್ರೂ ಸಿಕ್ಕಾಗ. ಅವರನ್ನ ದೂರಿ ಏನು ಪ್ರಯೋಜನ ಹೇಳಿ? ಅವರಿಗಾಗಿ ಅದನ್ನವರು ಬಯಸ್ತಾರ? ಹೆಣ್ಣಿನ ಮೇಲೆ ಗೂಡುಕಟ್ಟೋ ಜವಾಬ್ದಾರಿ. ನಿಮಗೆ ವಿಶಾಲ ಆಕಾಶದಲ್ಲಿ ಹಾರಾಡೋ ಕೆಲಸ -ಇದು ಧರ್ಮ ಅಲ್ಲವ?” +“ಏನೇ ಹೇಳಿ -ಇದು ಕೂಡ ಕರಪ್ಷನ್” +“ಶಿವನೇ ನಿಮ್ಮ ಮಾತು ಚೆನ್ನಾಯ್ತು. ನಿಮ್ಮ ಹೆಂಡ್ತಿ ಕಷ್ಟಪಟ್ಟು ದುಡಿದ ಹಣದಲ್ಲೊಂದು ಸೈಟ್ ತಗೊಂಡರೆ ಕರಪ್ಷನ್ ಆದರೆ, ಸ್ಪೀಡ್‌ಮನಿ ಮಣ್ಣು ಮಶಿ ಅಂತ ಕೊಟ್ಕೊಂಡು ನಮ್ಮಂಥೋರು ಬಿಸಿನೆಸ್ ಮಾಡಬೇಕಲ್ಲ ಅದಕ್ಕೇನು ಅಂತೀರಿ ನೀವು. ಅವರವರಿಗೆ ಅವರವರ ಧರ್ಮ ಸರಿ ಅಲ್ಲವ?” +“ಇಲ್ಲ ನೀವು ಮಾಡ್ತಿರೋದೂ ತಪ್ಪೂಂತ ನಾನು ಅನ್ನೋದು” +“ತಪ್ಪಾದರೆ ತಪ್ಪು ಬಿಡಿ. ಅದು ಸರಿಹೋಗೋದು ಹೇಗೆ? ನಾನು ಸರಿಯಾದಾಗ್ಲ? ಅಥವಾ ದೇಶ ಸರಿಯಾದಾಗ್ಲ? ಈಗ ಪಿ.ಡಬ್ಲ್ಯು.ಡಿ ಇದೆ -ಅದು ಸರಿಹೋಗ್ದೆ ನಾನು ಸರಿಹೋಗೋದು ಸಾಧ್ಯಾನ? ಹೇಳಿ ನೀವೆ. ಯಾರು ಇದನ್ನೆಲ್ಲ ಕೂಲಂಕುಶ ಸರಿ ಮಾಡೋವ್ರು? -ನಿಮ್ಮಂಥವರು. ಅದಕ್ಕೇ ನಾನು ಹೇಳಿದ್ದು -ನೀವು ನಾಯಕರಾಗಬೇಕು, ಮಂತ್ರಿಮಂಡಳ ರಚಿಸಬೇಕೂಂತ. ಥಿಯೇಟರ್ ಹತ್ರ ಕೆಲಸವಿದೆ. ಹೋಗಬೇಕು ಬರ್ಲ ನಾನು?” +ವೀರಣ್ಣ ಹೊರಟು ಹೋದ. ತನ್ನನ್ನು ಹೊಗಳುವಾಗಲೂ, ಕೈಕಟ್ಟಿ ವಿನಯದಿಂದ ನಿಂತಾಗಲೂ ವೀರಣ್ಣ ತನ್ನನ್ನು ಸಂಪೂರ್ಣ ವಹಿಸಿಕೊಂಡವನಂತೆ ಕಾಣುತ್ತಿದ್ದ. ತನ್ನ ನಿರಾಕರಣೆಗೆ, ಅಸಹನೆಗೆ, ಕೋಪಕ್ಕೆ ಕೂಡ ಅವಕಾಶ ಕೊಟ್ಟು, ಆ ಮೂಲಕ ಉಬ್ಬಿಸಿ, ಅದನ್ನೇ ಹೊಗಳಿ ಕೊನೆಗೆ ಗೆಲ್ಲುವ ಸನ್ನಾಹ ಮಾಡಿದ್ದ. ಅವನ ಸ್ವಂತಕ್ಕಾಗಿ ಮಾತ್ರ ಇದನ್ನೆಲ್ಲ ಮಾಡುತ್ತಿದ್ದಾನೆಂದು ಹೇಳುವುದೂ ಕೃಷ್ಣಪ್ಪನಿಗೆ ಸಾಧ್ಯವಿರಲಿಲ್ಲ; ಈಗಿರುವ ಮುಖ್ಯಮಂತ್ರಿಯಿಂದಲೇ ಅವನು ಜಲಾಶಯ ಯೋಜನೆಯೊಂದರ ಕಾಂಟ್ರ್ಯಾಕ್ಟ್ ಪಡೆದಿದ್ದನಲ್ಲವೆ? ವೀರಣ್ಣನಲ್ಲದಿದ್ದರೆ ಇನ್ನೊಬ್ಬ ಪಡೆಯಬಹುದಾಗಿದ್ದ ಕಾಂಟ್ರ್ಯಾಕ್ಟ್ ಅದು. +ಕೃಷ್ಣಪ್ಪನಿಗೆ ವೀರಣ್ಣನ ಆಳ ಅಗಲ ತಿಳಿಯಲಾರದೆ ತಬ್ಬಿಬ್ಬಾಗಿ ವೀಲ್‌ಚೇರಿನ ಮೇಲೆ ಕೂತಿದ್ದಾಗ ಜ್ಯೋತಿ ಬಂದಳು. ಸದ್ದಿಲ್ಲದೆ ಅವನ ಸುತ್ತ ಸುಳಿದಾಡುತ್ತ ಹಾಸಿಗೆಗೆ ಹೊಸ ಶೀಟ್ ಹೊದೆಸಿ, ತಾನು ತಂದ ಗುಲಾಬಿ ಹೂಗಳನ್ನು ಕುಂಡದಲ್ಲಿ ಸುಂದರವಾಗಿ ಜೋಡಿಸಿ ಕೃಷ್ಣಪ್ಪನನ್ನು ತುಂಬ ಕೌಶಲದಿಂದ ಎಬ್ಬಿಸಿ ಮಲಗಿಸಿದಳು. ದೇಹವನ್ನು ಮಸಾಜ್ ಮಾಡುತ್ತ ಗೆಲುವಾಗಿ ತಾನು ರಾತ್ರಿ ನೋಡಿದ ಸಿನಿಮಾದ ಕಥೆ ಹೇಳತೊಡಗಿದಳು. ಸಿನಿಮಾ ನಾಯಕರ ವಿರಹದ ಕಥೆಯನ್ನು ಹೇಳುವ ಕ್ರಮದಲ್ಲೆ, ತನ್ನ ಒಳಗನ್ನೂ ಅಲ್ಲಿ ಸೊರಗುತ್ತಿದ್ದ ತನ್ನ ಸುಖದ ಅಪೇಕ್ಷೆಯನ್ನೂ ಸೂಚಿಸಿದಳು. ಕೆಲಸ ಸಿಗುವ ತನಕ ತನ್ನ ನಾಯಕನಿಗೆ ಅರಳದ ಮೊಗ್ಗಾಗಿ ಉಳಿದಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾಳೆಂದು ಚಕಿತನಾದ. ಬಾಯ್‌ಫ಼್ರೆಂಡಿಗೆ ಕೆಲಸ ಸಿಗುತ್ತಿದೆಯೆಂದು ಅವಳು ಇವತ್ತು ಖುಷಿಯಾಗಿದ್ದಳು. ಪ್ರಾಯಶಃ ಇವತ್ತು ರಾತ್ರಿ ಅವನಿಗೆ ಅರಳುತ್ತಾಳೆ. ಅವಳ ಸಂಭ್ರಮ ಅವಳ ಮೃದುವಾದ ಕೈಗಳಿಂದ ತನ್ನ ಬಡವಾದ ಭುಜ, ತೋಳು, ಪಕ್ಕೆ, ಸೊಂಟ, ತೊಡೆ, ಕಾಲು, ಬೆರಳುಗಳಿಗೆ ಲಯಬದ್ಧವಾಗಿ ಇಳಿಯುತ್ತಿತ್ತು. ತನ್ನ ಸುತ್ತಮುತ್ತಲಿನ ಆರೋಗ್ಯವನ್ನೆಲ್ಲ ತಾನು ಹೀರುತ್ತಿದ್ದೇನೆಂದು ಕೃಷ್ಣಪ್ಪನಿಗೆ ಅನ್ನಿಸಿತು. +ಕುಂಡದಲ್ಲಿ ಸೊಕ್ಕಿ ಉಳಿದವಕ್ಕಿಂತ ಮೇಲೆ ನಿಂತ ಅರಳುತ್ತಿದ್ದ ಗುಲಾಬಿ ಹೂವೊಂದು ಅವನ ಕಣ್ಣು ಸೆಳೆಯಿತು. ಒದ್ದೆ ಆದ್ದರಿಂದ ಹೊಳೆಯುವ ದಳಗಳ ಕಟುವಾದ ಕೆಂಪು; ದೃಷ್ಟಿಯನ್ನು ಒಳಕ್ಕೆಳೆದುಕೊಳ್ಳುವಂತೆ ಅಂಚಿನಲ್ಲಿ ಮುರಿಯುತ್ತ, ತಿರುವಿಕೊಳ್ಳುತ್ತ ಸಣ್ಣದಾಗುತ್ತ, ಕೇಂದ್ರವನ್ನು ಬಚ್ಚಿಟ್ಟುಕೊಳ್ಳುವ ಈ ದಳಗಳ ಮೃದು ಮತ್ತು ಬಿಗಿ; ಆಹ್ವಾನ ಮತ್ತು ರಹಸ್ಯ; ಈ ಬಣ್ಣ ಈ ಬೆಡಗಿಗೂ ಒರಟಾದ ಎಲೆ, ಚೂಪು ಮುಳ್ಳುಗಳ ಹುರಿಯಾದ ಕಾಂಡ -ಹೀಗೇ ಏಕಾಗ್ರವಾಗಿ ಗುಲಾಬಿಯನ್ನು ನೋಡುತ್ತ ಜ್ಯೋತಿಯ ಇಂಪಾದ ಹರಟೆಗೆ ಕಿವಿಯನ್ನು ಒಡ್ಡಿದ, ತಣ್ಣಗೆ ಉರಿಯುವ ಜ್ವಾಲೆಯಂತಿತ್ತು ಗುಲಾಬಿ. ಏನೋ ಹೇಳುತ್ತ ಏನೋ ಬಚ್ಚಿಡುತ್ತ ಇರುವಂತೆ ಅದು ಇದ್ದುದರಿಂದ ಕೃಷ್ಣಪ್ಪನಿಗೆ ಅದನ್ನು ನೋಡುವುದು ಕಷ್ಟವಾಗತೊಡಗಿತು. ಜ್ಯೋತಿಯ ಮುಖವನ್ನು ನೋಡಿದ. ಆಯಾಸ ಪಡದೆ ಅವಳು ತನ್ನನ್ನು ಒತ್ತುತ್ತ ತೀಡುತ್ತ ತನ್ನ ಮಾತಿಗೆ ತಾನೇ ಹಸನ್ಮುಖಿಯಾಗಿರುವಂತೆ ಕಂಡಳು. ಅನಾಯಾಸೇನ ಮರಣಂ ಎಂದು ತಾನು ಆಗೀಗ ಬಯಸಿದ್ದನ್ನು ನೆನೆದ. ಇಲ್ಲ -ಈಗ ಜಡವಾಗಿದ್ದ ದೇಹವನ್ನು ಹುರಿದುಂಬಿಸಬೇಕೆನ್ನಿಸುತ್ತದೆ. ಮರ ಹತ್ತಬೇಕು, ಬಾವಿಯಲ್ಲಿಳಿದು ಕೆಸರು ತೋಡಬೇಕು, ಈಜಬೇಕು, ಗದ್ದೆಯಲ್ಲಿ ಸಸಿ ನೆಡಬೇಕು, ಹೂವಿನಂಥ ಪುಟ್ಟ ಕೋಳಿಮರಿಗಳನ್ನು ಅಂಗೈ ಮೇಲೆ ಇರಿಸಿಕೊಳ್ಳಬೇಕು -ಹೀಗೆ ಏನೇನೋ ಚಪಲಗಳು ಮೂಡುತ್ತವೆ. ವೀರಣ್ಣ ಹೇಳಿದ್ದನ್ನು ತಾನು ಕಿವಿಗೆ ಹಚ್ಚಿಕೊಳ್ಳದಂತೆ ಇದ್ದದ್ದು ಬರಿ ನಟನೆಯಲ್ಲವೆ? ಅಧಿಕಾರದಲ್ಲಿ ಈ ಜಡವಾದ ದೇಹ ಮತ್ತೆ ಚೈತನ್ಯದ ಬುಗ್ಗೆಯಾದೀತೆಂದು ಆಸೆಯಾಗುತ್ತದೆ. ತಾಯಿ ಅವಳ ಮಡಿಲಲ್ಲಿ ಹಲಸಿನ ಹಣ್ಣಿನ ಕಡುಬನ್ನು ಕದ್ದು ತಂದು ಕೊಡುತ್ತಿದ್ದುದು ನೆನಪಾಗುತ್ತದೆ. +ನಾಗೇಶ ವಿಷಣ್ಣನಾಗಿ ತನ್ನೆದುರು ಸುಳಿದದ್ದನ್ನು ಕಂಡು “ಅದೇನೋ ನಾಗೇಶ” ಎಂದ. ಜ್ಯೋತಿ ಸಂಜೆ ಬರ್ತೇನೆ ಎಂದು ಹೊರಟಳು. ನಾಗೇಶ ಉತ್ತರ ಕೊಡಲಿಲ್ಲ. ತನ್ನ ಕಣ್ಣು ತಪ್ಪಿಸಿಕೊಳ್ಳುವ ಅವನ ಹವಣಿಕೆಯಿಂದ ಕಿರಿಕಿರಿಯಾಗಿ ಮತ್ತೆ ಕರೆದ. ನಾಗೇಶ ದುಗುಡದಿಂದ ಕೃಷ್ಣಪ್ಪನಿಗೆ ಅವನು ಜೇಬಿನಲ್ಲಿ ಮಡಿಸಿಟ್ಟಿದ್ದ ಹತ್ತು ಪೈಸದ ಕಿಡಿ ಎಂಬ ಪತ್ರಿಕೆಯನ್ನು ಕೊಡುತ್ತ “ನಾಯಿ ಸೂಳೇಮಕ್ಕಳು. ಏನೋ ಬರೆದಿದ್ದಾವೆ. ಮನಸ್ಸಿಗೆ ಹಚ್ಚಿಕೋಬೇಡಿ” ಎಂದ. +ಕೃಷ್ಣಪ್ಪ ಓದಿದ: ಇಂಥ ಆಪಾದನೆಯನ್ನು ಯಾರೂ ಈವರೆಗೆ ಅವನ ಮೇಲೆ ಹೊರಿಸಿದ್ದಿಲ್ಲ. ’ಮುಖ್ಯಮಂತ್ರಿಯಾಗಲು ಕೃಷ್ಣಪ್ಪಗೌಡರ ಸಂಚು’ ಎಂಬ ಶಿರೋನಾಮೆಯಲ್ಲಿ ಆಪಾದನೆಗಳ ಪಟ್ಟಿಯಿತ್ತು. ಹೆಂಡತಿಯ ಹೆಸರಿನಲ್ಲಿ ಜಯಮಹಲ್ ಬಡಾವಣೆಯಲ್ಲಿ ಸೈಟ್ ಪಡೆದದ್ದು; ವೀರಣ್ಣನೆಂಬ ಕಂಟ್ರ್ಯಾಕ್ಟರ್‍ಗೆ ಪ್ರಸ್ತುತ ಸರ್ಕಾರ ಕೋಟಿಗಟ್ಟಲೆ ಲಾಭವಿರುವ ಜಲಾಶಯದ ಕಾಮಗಾರಿಯನ್ನು ಟೆಂಡರ್ ತಿದ್ದಿಕೊಟ್ಟಿದ್ದರೂ ಆ ಬಗ್ಗೆ ಗೌಡರು ಯಾಕೆ ಸೊಲ್ಲೆತ್ತಿಲ್ಲ? ಗತಿಸಿದ ಭಾರೀ ಜಮೀಂದಾರ ಗೋಪಾಲರೆಡ್ಡಿ, ದುಡ್ಡಿನ ಚೀಲದ ವೀರಣ್ಣ ಇಂಥವರೇ ಯಾಕೆ ಗೌಡರಿಗೆ ಆಪ್ತರು? ತನ್ನ ಹೆಸರಿನಲ್ಲಿ ಫ಼ಿಯೆಟ್ ಪಡೆದು ಅದನ್ನು ವೀರಣ್ಣನ ವ್ಯಭಿಚಾರೀ ಪುತ್ರನ ನಿಶಾಚರ ವೃತ್ತಿಗಳಿಗೆ ಕೊಟ್ಟಿರುವುದು ನಿಜವೆ? ಗೌಡರ ಹೆಂಡತಿ ಬ್ಯಾಂಕೊಂದರಲ್ಲಿ ಗುಮಾಸ್ತೆಯಾಗಿದ್ದವರು ಮ್ಯಾನೇಜರ್ ಸ್ಥಾನಕ್ಕೇರುತ್ತಿರುವುದು ಬರೀ ಗುಸುಗುಸು ಸುದ್ದಿಯೆ? ಆಳುವ ಪಕ್ಷ ಒಡೆಯುತ್ತಿರುವಾಗ ಸದ್ಯದ ಮುಖ್ಯಮಂತ್ರಿಯ ಗುಂಪು ಕ್ರಾಂತಿಕಾರನೆಂದು ಪ್ರತೀತಿ ಪಡೆದ ಗೌಡರನ್ನು ನಾಯಕನನ್ನಾಗಿ ಆರಿಸಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ನಾಟಕದ ಹಿನ್ನೆಲೆಯಲ್ಲಿ ವೀರಣ್ಣ ಎಂ.ಎಲ್.ಎ ಗಳನ್ನು ಎಷ್ಟೆಷ್ಟು ಹಣ ಕೊಟ್ಟು ಕೊಳ್ಳುತ್ತಿದ್ದಾನೆ; ಮುಖ್ಯಮಂತ್ರಿಗೆ ವಿರೋಧವಾದ ಎಡಪಂಥೀಯರ ಜೊತೆ ಸೇರಬೇಕೆನ್ನುವ ಗೌಡರ ಪಕ್ಷದ ಗುಂಪನ್ನೂ ಹೆಚ್ಚು ದುಡ್ಡು ಕೊಟ್ಟು ವೀರಣ್ಣ ಕೊಳ್ಳುತ್ತಿರುವುದು ನಿಜವೆ? ವಿಚಾರವಾದಿಯೆಂದು ಖ್ಯಾತರಾದ ಗೌಡರು ರಹಸ್ಯದಲ್ಲಿ ಮಹೇಶ್ವರಯ್ಯ ಎಂಬ ಶಾಕ್ತ ಸಂಪ್ರದಾಯದವನ ಮೂಲಕ ವಾಮಾಚಾರದ ಪೂಜೆಗಳನ್ನು ಮಾಡಿಸಿ ಮುಖ್ಯಮಂತ್ರಿತ್ವ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿಜವೆ? ಹೆಂಡತಿಗೆ ಹೊಡೆಯುವುದು, ಆರ್ತರಾದ ಹೆಣ್ಣುಮಕ್ಕಳನ್ನು ಭೋಗಿಸುವುದು, ಕುಡಿಯುವುದು, ಕೋಪಾವೇಶದ ಭಂಗಿಗಳಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡು ಅದನ್ನು ಕರಪ್ಟ್ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಬಳಸುವುದು -ಇವೆಲ್ಲ ಕ್ರಾಂತಿಕಾರನ ಲಕ್ಷಣಗಳೆ? ಒಂದಾನೊಂದು ಕಾಲದಲ್ಲಿ ನಿಜವಾಗಿಯೂ ಗೇಣಿದಾರರಾಗಿ ಶ್ರಮಿಸಿದ ರೈತ ಕುಟುಂಬದಲ್ಲಿ ಹುಟ್ಟಿದವನೊಬ್ಬ ಹೀಗೆ ಭ್ರಷ್ಟಾಚಾರಿಗಳ ಕೈಗೊಂಬೆ ಆದದ್ದಾದರೂ ಹೇಗೆ? -ಲೇಖನ ಕೊನೆಯಲ್ಲಿ ತುಂಬ ವ್ಯಥೆಯಿಂದ ಕೊನೆಯಾಗಿತ್ತು. ಕೊನೆಯ ವಾಕ್ಯ ಮಾರ್ಮಿಕವಾಗಿ ಗೌಡರ ಅನಾರೋಗ್ಯವೇ ಹೇಗೆ ಜನ ಶತ್ರುಗಳಿಗೂ ಗೌಡರಿಗೂ ಜನರ ಭಾವನೆಯನ್ನು ದೋಚುವ ಸಾಧನವಾಗಿದೆ ಎಂಬುದನ್ನು ದಪ್ಪಕ್ಷರದಲ್ಲಿ ವಿವರಿಸಿತ್ತು. +ಕೃಷ್ಣಪ್ಪನ ಮುಖ ಲೇಖನವನ್ನು ಓದುತ್ತ ಕಾಂತಿಹೀನವಾದ್ದನ್ನು ಕಂಡು ನಾಗೇಶ ಅವನಿಗೆ ಹುರುಪು ತುಂಬಲು ಪ್ರಯತ್ನಿಸಿದ: +“ನಾಗರಾಜ್ ಇದನ್ನು ಬರೆಸಿದ್ದು ಗೌಡರೆ.” +“ನಾಗರಾಜ್ ನನ್ನ ವಿರೋಧಿಸ್ತಾನೆ ನಿಜ. ಆದರೆ ಹೆಸರು ಹಾಕದೇ ಬರೆಯುವ ವ್ಯಕ್ತಿಯಲ್ಲ” +ಕೃಷ್ಣಪ್ಪ ಗಂಭೀರವಾಗಿ ಹೇಳಿದ. +“ಅವನೇ ಬರೆದದ್ದು. ಬೆಳ್ಳಗಿರೋದೆಲ್ಲ ಹಾಲೂಂತ ನೀವು ತಿಳೀತೀರಿ….” +“ಅವರನ್ನು ಬರಹೇಳು. ಹೋಗೋಕೆ ಮುಂಚೆ ಪ್ಯಾಡು ಪೆನ್ನು ಕೊಡು” +ನಾಗರಾಜ್ ತನ್ನ ಹರೆಯದ ದಿನಗಳನ್ನು ನೆನಪು ಮಾಡುವಂತಿದ್ದ -ಅವನ ಉಗ್ರವಾದ ನಿಷ್ಠುರವಾದ ನಿಲುವಿನಲ್ಲಿ. ಅವನ ಅಸಹನೆಯಲ್ಲಿ. ವ್ಯತ್ಯಾಸವೆಂದರೆ, ತಾನು ರಾಜಕೀಯಕ್ಕೆ ಇಷ್ಟವಿಲ್ಲದೇ ಬಂದಿದ್ದೆ, ಜೀವನ ಸಫಲವಾಗಲು ಬೇರೆ ದಿಕ್ಕು ಕಾಣದೆ. ನಾಗರಾಜ್‌ಗೆ ರಾಜಕೀಯವಲ್ಲದೆ ಬೇರೇನೂ ಕಾಣಿಸುವುದೇ ಇಲ್ಲ. ಕ್ರಾಂತಿಯಲ್ಲಲ್ಲದೇ ಜೀವನ ಸಫಲವಾಗುವ ಬೇರೆ ಮಾರ್ಗಗಳೇ ಇಲ್ಲವೆಂದು ತಿಳಿದಿದ್ದಾನೆ. ಒಂದರ ಮೇಲೆ ಒಂದು ಚಾರ್ಮಿನಾರ್ ಸೇದುತ್ತ ಎಲ್ಲರೂ ತನ್ನ ಮೇಲೆ ಉರಿದು ಬೀಳುವಂತೆ ಮಾತಾಡುತ್ತಾನೆ. ತಾನು ಅದೇ ಮಾತನ್ನು ಅದೇ ಧಾಟಿ ತೀವ್ರತೆಗಳಲ್ಲಿ ಮಾತಾಡಿದಾಗ ಸಹಿಸಿಕೊಳ್ಳುವ ಸಹೋದ್ಯೋಗಿಗಳು ನಾಗರಾಜ್ ಬಾಯಿ ತೆರೆದದ್ದೇ ಆದರೆ ಅವನ ಮೇಲೆ ಬೀಳುತ್ತಾರೆ. ಅವನು ಒಬ್ಬ ಶ್ರೀಮಂತ ಕ್ರಿಮಿನಲ್ ವಕೀಲರ ಮಗ -ಡೆಲ್ಲಿ ಸ್ಕೂಲ್ ಅಫ಼್ ಎಕನಾಮಿಕ್ಸ್ ನಲ್ಲಿ ಓದುತ್ತ ಮಾರ್ಕ್ಸಿಸ್ಟ್ ಆಗಿ, ಕಮ್ಯುನಿಸ್ಟ್ ಪಕ್ಷದ ರಷ್ಯಾ ಪರ ನೀತಿಗೆ ವಿರೋಧಿಯಾಗಿ ಬೇರೆ ಮಾರ್ಗ ಕಾಣದೆ -ಸೋಷಲಿಸ್ಟ್ ಬಣವನ್ನು ಸೇರಿದವ. ಸೋಷಲಿಸ್ಟರೆಂದರೂ ಅವನಿಗೆ ಅಲರ್ಜಿ. ತಾನು ಸದ್ಯಕ್ಕೆ ಮಾತ್ರ ಇಲ್ಲಿದ್ದೇನೆ ಎಂದು ಮುಚ್ಚುಮರೆ ಮಾಡದೆ ಹೇಳುತ್ತಿದ್ದ. ತುಮಕೂರಿನ ರೈತರ ಕ್ಷೇತ್ರದಿಂದ ಭಾರಿ ಬೆಂಬಲ ಪಡೆದು ಗೆದ್ದು ಬಂದಿದ್ದನೆಂದು ಉಳಿದವರು ಅವನನ್ನು ಸಹಿಸುತ್ತಾರೆ. ಕೃಷ್ಣಪ್ಪನ ನಾಯಕ ಸ್ಥಾನಕ್ಕೆ ಆತ ಪ್ರತಿಸ್ಪರ್ಧಿಯೆಂದು ಉಳಿದವರು ಯಾವಾಗಲೂ ಕೃಷ್ಣಪ್ಪನಿಗೆ ಚಾಡಿ ತರುತ್ತಾರೆ. ತನಗೆ ಯಾರೂ ಸಮವಲ್ಲವೆನ್ನುವಂತೆ ಕೃಷ್ಣಪ್ಪ ನಡೆದುಕೊಳ್ಳುವ ಠೀವಿಯನ್ನು ನಾಗರಾಜ್ ಸಹಿಸುವುದಿಲ್ಲ. ಪಕ್ಷದ ಸಭೆಯಲ್ಲಿ ಅವನು ಕೃಷ್ಣಪ್ಪನನ್ನು ಫ಼್ಯೂಡಲ್ ಎಂದು ಜರೆದದ್ದಿದೆ. ಆಡಳಿತದ ಜೊತೆ ಯಾವ ಒಪ್ಪಂದಕ್ಕೂ ತಯಾರಿಲ್ಲದ ಅವನಿಗೆ ಕೃಷ್ಣಪ್ಪ ಹೇಳುವುದುಂಟು: “ಆಕಾಶ ಹಂಚಿಕೊಳ್ಳೋ ತನಕ ಭೂಮಿ ಹಂಚಿಕೊಂಡೇನು ಪ್ರಯೋಜನ ಅಂದ ಹಾಗಾಗತ್ತೆ -ನಿಮ್ಮ ವಾದದ ಕ್ರಮದಲ್ಲಿ.” ನಾಗರಾಜ್ ಕಟುವಾಗಿ ಹಂಗಿಸುತ್ತಾನೆ; “ಮಾವೋ ಹೇಳೋದು ನಿಜ; ಎನಿಮಿಗಿಂತ ರಿವಿಷನಿಸ್ಟ್ ಹೆಚ್ಚು ಅಪಾಯಕಾರಿ.” ಈ ನಾಗರಾಜ್ ಕ್ರಮೇಣ ಮೆದುವಾಗಿ ಒಪ್ಪಂದದ ದಾರಿ ಹಿಡಿದು ತಪ್ಪುಗಳನ್ನು ಮಾಡಿಯಾನೆಂದು ಗುಪ್ತವಾಗಿ ಕೃಷ್ಣಪ್ಪ ಬಯಸಿದ್ದಿದೆ. ಆದರೆ ಸುಖ, ಸವಲತ್ತು, ದಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈ ವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ತನ್ನ ತತ್ವಗಳಿಗೆ ಆತುಕೊಂಡು, ತನ್ನ ವ್ಯಕ್ತಿತ್ವವನ್ನು ತೀವ್ರವಾಗಿ ಒಂದೇ ಗುರಿಗೆ ಮಿತಗೊಳಿಸಿ, ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ. ಕೃಷ್ಣಪ್ಪನಿಗೆ ಅವನನ್ನು ಕಂಡು ಅಸೂಯೆಯಾಗುತ್ತಿತ್ತು; ಅವನ ಅಪಕ್ವತೆ ಕಂಡು ಗೊಂದಲವಾಗುತ್ತಿತ್ತು. +ಕೃಷ್ಣಪ್ಪ ಬರೆದದ್ದನ್ನು ಇನ್ನೊಮ್ಮೆ ಓದಿ, ಅದರ ಮೇಲೆ ಪ್ಯಾಡಿಟ್ಟು ನಾಗರಾಜ್‌ಗೆ ಕಾದ. ಇಸ್ತ್ರಿಯಿಲ್ಲದ ಜುಬ್ಬ ತೊಟ್ಟು ಪ್ಯಾಂಟ್ ಹಾಕಿದ ನಾಗರಾಜ್ ಕೆದರಿದ ತಲೆಯನ್ನು ತುಸು ತಗ್ಗಿಸಿ, ಕೆಂಪುಕಣ್ಣುಗಳಲ್ಲಿ ದುರುಗುಡುತ್ತ, ಒಳಗೆ ಬಂದು, ಕುರ್ಚಿ ಎಳೆದು ಕೂತ. ನಾಗೇಶನಿಗೆ ಬಾಗಿಲು ಹಾಕಿಕೊಂಡು ಹೋಗುವಂತೆ ಕೃಷ್ಣಪ್ಪ ಕಣ್ಸನ್ನೆ ಮಾಡಿದ. +“ನಿಮ್ಮ ಆರೋಗ್ಯ ಹೇಗಿದೆ?” ಎಂದು ಕೂಡ ನಾಗರಾಜ್ ಕೇಳಲಿಲ್ಲ. ನಿಜವಾಗಿಯೂ ಇವನು ತನ್ನ ಹರೆಯದ ವ್ಯಂಗ್ಯ ಚಿತ್ರವೇ. ಕೃಷ್ಣಪ್ಪ ತನ್ನ ಮೇಲೆ ಬಂದ ಲೇಖನವನ್ನು ನಾಗರಾಜ್‌ಗೆ ಕೊಟ್ಟ. +“ನೋಡಿದ್ದೇನೆ” ಎಂದ ನಾಗರಾಜ್. +“ನೀವೇ ಇದನ್ನು ಬರೆಸಿದ್ದು ಅಂತ ಉಳಿದವರು ನನಗೆ ಹೇಳಿಯಾರು.” +“ನೀವದನ್ನ ನಂಬದಿದ್ದರೆ ಸಾಕು” +ನಾಗರಾಜ್ ಬಹು ಸರಳವಾಗಿ ನೇರವಾಗಿ ಮಾತಾಡಿದ್ದ. ಅವತ್ತಿನ ರಾತ್ರೆಯ ಮೀಟಿಂಗಲ್ಲೂ ಕೊನೆಯ ತನಕ ಸುಮ್ಮನಿದ್ದು, +“ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸೋದು ಸಾಧ್ಯವಲ್ಲ. ಈ ಸ್ಟೇಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನ ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ” ಎಂದಿದ್ದ. ಅದರಿಂದ ರೇಗಿದ ಉಳಿದವರು +“ನೀವೇನು ಮಾಡುತ್ತಿದ್ದೀರಿ ಹಾಗಾದರೆ?” ಎಂದು ಮೇಲೆ ಬಿದ್ದಿದ್ದರು. +“ನಾನಾ? ನಮ್ಮ ಪಕ್ಷ ಸರ್ಕಾರ ರಚಿಸುವಾಗ ನಾನು ಅದರಿಂದ ಹೊರಗುಳಿತೇನೆ. ಪ್ರಾಯಶಃ ಅಸೆಂಬ್ಲಿ ಸದಸ್ಯತ್ವಕ್ಕೂ ರಾಜೀನಾಮೆ ಕೊಡ್ತೇನೆ. ಆ ಬಗ್ಗೆ ಇನ್ನೂ ನನ್ನ ಧೋರಣೆ ಸ್ಪಷ್ಟವಾಗಿಲ್ಲ” ಎಂದಿದ್ದ. +“ಪಾರ್ಲಿಮೆಂಟರಿ ರಾಜಕೀಯದ ಬಗ್ಗೆ ನಿಮ್ಮ ಧೋರಣೆ ಹಾಗಿದ್ದರೆ ಹೀಗೆ ಹೊಂಚು ಹಾಕ್ಕೊಂಡು ಇರೋದು ನೈತಿಕವಾಗಿ ಸರಿಯಲ್ಲ. ನಿಮ್ಮನ್ನೆ ನೀವು ಮೋಸ ಮಾಡ್ಕೋತಿದೀರಿ” ಎಂದು ಕೃಷ್ಣಪ್ಪ ಆಗ ಕೆಣಕಿದ್ದ. +“ನೀವು ಹೇಳ್ತಿರೋದ್ರಲ್ಲಿ ನಿಜವಿದೆ. ನನ್ನ ವರ್ಗದ ಭ್ರಾಂತಿಗಳಿಂದ ಇನ್ನೂ ನಾನು ಬಿಡುಗಡೆ ಪಡೆದಿಲ್ಲ” ಎಂದು ನಾಗರಾಜ್ ಸರಳವಾಗಿ ಹೇಳಿದಾಗ ಉಳಿದವರು ನಕ್ಕಿದ್ದರು. ಆದರೆ ಕೃಷ್ಣಪ್ಪನನ್ನ ಒಳಗಿನಿಂದ ಆ ಮಾತು ಮುಟ್ಟಿತ್ತು. ಮತ್ತೆ ಮತ್ತೆ ನೆನಪಾಗಿತ್ತು. +ಈಗಲೂ ಅದನ್ನು ನೆನೆದು ಕೃಷ್ಣಪ್ಪ ಉದ್ರೇಕಗೊಳ್ಳದೆ ಹೇಳಿದ: +“ನಾಗರಾಜ್ ಈ ಲೇಖನ ಓದಿದ ಮೇಲೆ ನಿಮ್ಮನ್ನು ಕೇಳಬೇಕೂಂತ ಅನ್ನಿಸ್ತು. ನನ್ನ ಬಗ್ಗೆ ನಿಮಗೂ ಹೀಗನ್ನಿಸತ್ತ? ನನಗೇ ಗೊಂದಲವಾದ್ರಿಂದ ಕೇಳ್ತಾ ಇದೀನಿ.” +“ವ್ಯಕ್ತಿಗಳ ಪ್ರಶ್ನೆ ಇಲ್ಲಿ ಮುಖ್ಯವಲ್ಲ. ಈ ವ್ಯವಸ್ಥೇಲಿ ಯಾರು ಎಷ್ಟು ಪ್ರಾಮಾಣಿಕರೂಂತ ಅನ್ನೋದು ರಿಲೇಟಿವ್ ಅಷ್ಟೆ. ನಿಮ್ಮನ್ನು ಈ ವ್ಯವಸ್ಥೆ ತನ್ನ ಬಲೇಲಿ ಸಿಕ್ಕಿಸ್ತ ಇದೇಂತ ನನಗೂ ಅನ್ನಿಸತ್ತೆ. ನಿಮಗೊಂದು ಇಮೇಜ್ ಇದೆ. ಆ ಇಮೇಜ್ ಈ ವ್ಯವಸ್ಥೇಲಿ ಈಗ ಅಗತ್ಯವಾಗಿದೆ -ತನ್ನನ್ನ ಕಾಪಾಡಿಕೊಳ್ಳೋಕೆ.” +“ಹಾಗಾದರೆ ಏನು ಮಾಡಬೇಕು ನಾನು ನಿಮ್ಮ ಪ್ರಕಾರ? ನಿಮ್ಮ ವಿಚಾರಾನ್ನ ನಾನು ಒಪ್ಪಲ್ಲ. ಆದರೆ ನಿಜವಾಗಿಯೂ ನಿಮ್ಮ ಅಡ್ವೈಸ್ ನನಗೆ ಬೇಕಾಗಿದೆ.” +“ನಮ್ಮ ಪಕ್ಷದ ರಾಜಕೀಯದ ಮಾರ್ಗ ಈವರೆಗೆ ಸರಿಯಾಗಿ ಇದ್ದಿದ್ರೆ ನಿಮ್ಮನ್ನ ಸೀಕ್ ಮಾಡಬೇಕೂಂತ್ಲೇ ವೀರಣ್ಣನಂಥೋರಿಗೆ ಅನ್ನಿಸ್ತ ಇರಲಿಲ್ಲ -ಅಲ್ಲವ?” +ಕೃಷ್ಣಪ್ಪನಿಗೆ ಥಟ್ಟನೆ ಸಿಟ್ಟು ಬಂತು: +“ನಾಗರಾಜ್ -ವೀರಣ್ಣ ನನಗೆ ಸಹಾಯ ಮಾಡಿರೋದು ನಿಜ, ಆದರೆ ಅದಕ್ಕೆ ನಾನು ಕೈಯೊಡ್ಡಲಿಲ್ಲ. ನೀವು ಶ್ರೀಮಂತರ ಮನೇಲಿ ಹುಟ್ಟಿದವ್ರು. ನನ್ನ ಹಾಗೆ ಹುಟ್ಟಿ ಬೆಳೆದಿದ್ರೆ ನೀವು ನನ್ನಷ್ಟು ಪ್ರಾಮಾಣಿಕರಾಗಿ ಉಳೀತಿದ್ರೋ ನೋಡ್ತಿದ್ದೆ.” +ನಾಗರಾಜ್ ಸಿಟ್ಟಾಗಲಿಲ್ಲ: +“ನೀವು ವ್ಯಕ್ತಿವಾದಿಯಾಗಿ ಮಾತಾಡ್ತೀರಿ. ನಿಮಗೆ ತಾತ್ವಿಕ ಕ್ಲಾರಿಟಿ ಇಲ್ಲ. ನಾನು ಆ ಪ್ರಶ್ನೇನ್ನ ಎತ್ತಲೇ ಇಲ್ಲ. ನಾನು ಪ್ರಾಮಾಣಿಕನಾಗಿದ್ರೆ ಇಲ್ಲಿ ಇರ್ತಿದ್ನ ಹೇಳಿ?” +“ದೇಶದ ಪ್ರಧಾನಿ ಡಿಕ್ಟೇಟರ್ ಆಗಲಿಕ್ಕೆ ನೋಡ್ತಿದಾರೆ, ಪ್ರಧಾನಿ ಗುಂಪಿನವರು ಇಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಈಗಿರೋ ಸಿವಿಲ್ ರೈಟ್‌ಗಳೂ ನಾಶವಾಗ್ತಾವೆ. ಈಗಿರೋ ಮುಖ್ಯಮಂತ್ರಿ ರಿಯಾಕ್ಷನರಿ ನಿಜ. ಆದರೆ ಅವನ ಬೆಂಬಲದಲ್ಲಿ ನಾವು ಮಿನಿಮಮ್ ಟೈಮ್ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದ್ರೆ ಅಲ್ಪಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನು ಹಾಗಾದ್ರೆ…..” +“ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಮ್ ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗತ್ತೆ. ತೇಪೆ ಹಾಕೋ ಕೆಲಸ ನನಗಿಷ್ಟವಿಲ್ಲ.” +ಕೃಷ್ಣಪ್ಪ ಒಂದು ನಿಮಿಷ ಸುಮ್ಮನಿದ್ದು ಹೇಳಿದ: +“ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು. ಆದರೆ ವೈಯಕ್ತಿಕವಾಗಿ ನನಗೆ ಕೆಲವು ಸಮಸ್ಯೆಗಳಿವೆ -ಅವು ನನ್ನ ಪ್ರಾಮಾಣಿಕತೆಗೆ ಸಂಬಂಧಪಟ್ಟದ್ದು. ಅದಕ್ಕಾಗಿ ನಿಮಗೆ ಹೇಳಿಕಳಿಸಿದೆ. ನಾನು ಯಾರದೋ ಬಲೇಲಿ ಸಿಕ್ಕಿಹಾಕಿಕೋತಿದೀನಿ ಅಂತ ನಿಮಗೂ ಅನ್ನಿಸಿದ್ರೆ ಇಕೊಳ್ಳಿ ಈ ಕಾಗದಕ್ಕೆ ಅಸೆಂಬ್ಲಿ ಸದಸ್ಯತ್ವಕ್ಕೇ ನನ್ನ ರಾಜೀನಾಮೆ ಬರ್ದಿದೀನಿ. ಇದನ್ನ ತಗೊಂಡು ಹೋಗಿ. ಒಂದು ಗಂಟೆ ನೀವೇ ಕೂಲಾಗಿ ವಿಚಾರ ಮಾಡಿ. ನಿಮಗೂ ಹಾಗನ್ನಿಸಿದರೆ ಈ ಕಾಗದಾನ್ನ ಸ್ಪೀಕರ್‍ಗೆ ಪೋಸ್ಟ್ ಮಾಡಿ.” +ಎಂದು ಕಾಗದ ಕೊಟ್ಟ. ನಾಗರಾಜ್ ಎದ್ದು ನಿಂತು ಯಾವ ಭಾವನೆಯನ್ನೂ ತೋರಿಸಿಕೊಳ್ಳದೆ ಹೇಳಿದ: +“ನೀವು ವ್ಯಕ್ತಿವಾದಿಯಾದ್ರಿಂದ ಪ್ರಾಮಾಣಿಕತೆ ಅಂತ ವಿಪರೀತ ಬಾದರ್ ಮಾಡ್ಕೋತೀರಿ. ಇದೊಂದು ಥರದ ಸಿಕ್ಲಿ ಇಂಡಲ್‌ಜನ್ಸ್….ಪ್ರಾಮಾಣಿಕತೆ ಪ್ರಶ್ನೆ ಬಂದರೆ…ನೀವು ನನಗಿಂತ ದೊಡ್ಡವರು….ಜನರಿಗೆ ನೀವೇ ನನಗಿಂತ ಹತ್ತಿರ. ಅದಕ್ಕೇ ನಿಮ್ಮ ವ್ಯಕ್ತಿತ್ವ ಮುಖ್ಯ ನನಗೆ. ಆದ್ದರಿಂದ ನೀವು ಶುದ್ಧವಾಗಿ ಉಳ್ದಿದೀರೋ ಇಲ್ಲವೋ ಅನ್ನೋ ಕಾರಣಕ್ಕಾಗಿ ರಾಜೀನಾಮೆ ಕೊಡೋದು ನನ್ನ ದೃಷ್ಟಿಯಲ್ಲಿ ಇರ್ರೆಲವೆಂಟ್. ಬೂರ್ಶ್ವಾ ಸಮಾಜದಲ್ಲಿ ಶುದ್ಧವಾಗಿರೋಕೆ ಎಲ್ಲಿ ಸಾಧ್ಯ? ಪಾರ್ಲಿಮೆಂಟರಿ ಹಾದಿ ಸರಿಯೋ ಅಲ್ವೋ ಅನ್ನುವ ವಿಚಾರದಲ್ಲಿ ನಮಗೀಗ ಕ್ಲಾರಿಟಿ ಬೇಕು.” +ನಾಗರಾಜ್ ಕೃಷ್ಣಪ್ಪ ಕೊಟ್ಟ ಕಾಗದವನ್ನು ಹಿಂದಕ್ಕೆ ಕೊಡುತ್ತ ಸಪ್ಪೆಯಾದ ಧಾಟಿಯಲ್ಲಿ ಮುಂದುವರಿಸಿದ: +“ನಿಮ್ಮ ಅನುಭವ ಅದಕ್ಕೇ ಮುಖ್ಯ. ನಾನಿನ್ನೂ ಹಸಿ ಮನುಷ್ಯ. ನೀವು ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದಾಗ ನನಗೆ ಹೇಳಿಕಳಿಸಿ. ತಾತ್ಕಾಲಿಕವಾಗಿ ಫ಼್ಯಾಸಿಸ್ಟರನ್ನು ತಡೆಯೋಕೆ ಪಾರ್ಲಿಮೆಂಟರಿ ಮಾರ್ಗ ಅಗತ್ಯ ಅಂತ ನಿಜವಾಗಿ ನಿಮಗನ್ನಿಸುತ್ತ? ಯಾಕೇಂದ್ರೆ ನನ್ನ ಅಸಹನೆ ಕೂಡ ಅಡ್‌ವೆಂಚರಿಸ್ಟ್ ಇಂಡಲ್‌ಜನ್ಸ್ ಇರಬಹುದು. ಆದ್ದರಿಂದ ಜನರೊಡನೆ ಒಡನಾಡಿದ ನಿಮ್ಮ ನಿರ್ದೇಶನ ಈಗ ಬೇಕು.” +ನಾಗರಾಜ್ ಮಾತಾಡುತ್ತ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಂತೆ ಅನ್ನಿಸಿತು. ಹಾಗೇ ನಿಂತಿದ್ದು, ಹೋಗುತ್ತೇನೆಂದೂ ಹೇಳದೆ ಅವನು ಹೊರಟು ಹೋದ. +ನಾಗರಾಜ್‌ನ ಮಾತುಗಳು ಕೃಷ್ಣಪ್ಪನನ್ನು ತೀವ್ರವಾಗಿ ಬಾಧಿಸಿದುವು. ಸಾವು ಬದುಕಿನ ಹೊಸ್ತಿಲಲಿರುವ ತಾನೀಗ ನಿಶ್ಚಯ ಮಾಡಬೇಕು; ತಾನು ದೇಶದ ಮುಖ್ಯಮಂತ್ರಿಯಾಗುವುದು ಫ಼್ಯಾಸಿಸ್ಟರ ಸಂಚನ್ನು ಮುರಿಯಲು ಅಗತ್ಯವೆ? ಅಂಥ ಬಯಕೆ ತನ್ನಲ್ಲಿ ಈಗ ಹುಟ್ಟಿದ್ದಕ್ಕೆ ಅದಕ್ಕೆ ಕಾರಣ ಸಾಯುತ್ತಿರುವ ತನಗೆ ಅಧಿಕಾರದ ಮೂಲಕ ಚೈತನ್ಯವನ್ನು ಪಡೆಯಬೇಕೆಂಬ ಇಚ್ಛೆಯೆ? ಅಥವಾ ವಾರಂಗಲ್ ಠಾಣೆಯಲ್ಲಿ ಕಂಡ ಅಧಿಕಾರದ ಕ್ರೂರ ಸ್ವರೂಪವನ್ನು ನಾಶಮಾಡಬೇಕೆಂಬ ಆಸೆಯೆ? ವೀರಣ್ಣನ ವರ್ಗ ಹಿತದ ಮೂಲಕವೂ ಫ಼್ಯಾಸಿಸ್ಟರನ್ನು ವಿರೋಧಿಸುವುದು ಸಾಧ್ಯವೆ? ಹೀಗೆ ತಾನು ಪ್ರಶ್ನೆ ಕೇಳುವಾಗ ತನ್ನ ವೈಯಕ್ತಿಕ ಹಿತಕ್ಕೆ ವೈಚಾರಿಕ ಕುಮ್ಮಕ್ಕು ಕೊಡುತ್ತಿದ್ದೇನೆಯೆ? +“ನಾಗರಾಜ್ -ನೀನು ಮೂರ್ಖ; ದೊಡ್ಡ ಮೂರ್ಖ; ನಿನಗೆ ಬದುಕಿನ ಸಂಕೀರ್ಣ ರೂಪವೇ ತಿಳಿಯದು; ಇವತ್ತು ರಾತ್ರೆ ಜ್ಯೋತಿ ಮತ್ತು ಅವಳ ಗೆಳೆಯ ತಮ್ಮ ದೇಹಗಳ ರಹಸ್ಯ ಸುಖಗಳನ್ನು ಅನುಭವಿಸಲಿ ಎಂದೇ ನಾನು ವೀರಣ್ಣನ ’ವರ್ಗಹಿತ’ಗಳನ್ನು ಅಲಕ್ಷ್ಯದಿಂದ ಕಂಡೇನು” ಎಂದೆಲ್ಲ ಕಿರುಚಿಕೊಳ್ಳಬೇಕೆನ್ನಿಸಿತು. “ಉಣ್ಣುವುದು, ನಿದ್ದೆ ಮಾಡುವುದು, ಸಂಭೋಗದಲ್ಲಿ ಮೈಗಳನ್ನು ಬೆಸೆಯುವುದು, ದೇವಿಯೋ ದಿಂಡೆಯೋ ಯಾವುದೋ ನೆವದಲ್ಲಿ ಅವ್ಯಕ್ತಕ್ಕೆ ಲಗ್ಗೆ ಹಾಕುವುದು, ಈ ಕ್ಷಣಿಕವಾದ ಬದುಕಿನಲ್ಲಿ ಸೊಂಟದಲ್ಲಿರುವ ಅಯ್ಯ ಮೆತ್ತಗಾದಾಗ ಕುದುರೆಬಾಲ ಹಿಡಿದು ಅಲೆಯುತ್ತ ಉದ್ರೇಕಗೊಳ್ಳುವುದು -ಇವನ್ನೆಲ್ಲ ಬಿಟ್ಟು ಇನ್ನೇನು ಇದೆಯೋ ಮೂರ್ಖ?” -ಜ್ಯೋತಿ ತೀಡಿದ್ದ ಕಾಲನ್ನು ಎತ್ತಲು ಪ್ರಯತ್ನಿಸುತ್ತ ಕೃಷ್ಣಪ್ಪ ಉಸಿರು ಕಟ್ಟಿದ. +* +* +* +ಈಗ ಐದೂವರೆ. ಆರು ಗಂಟೆಗೆ ವಿಮಾನದಿಂದ ಗೌರಿ ಇಳಿದಿರುತ್ತಾಳೆ. ನಾಗೇಶ ಅವಳು ಬಿಳಿಸೀರೆಯುಟ್ಟಿದ್ದ ಚಿತ್ರ ನೋಡಿದ್ದಾನೆ. +***** +ಮುಗಿಯಿತು +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ಹದ್ದುಗಳನ್ನು ಓಡಿಸಿದ ಬ್ರಾಹ್ಮಣರು ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_120.txt b/Kannada Sahitya/article_120.txt new file mode 100644 index 0000000000000000000000000000000000000000..35ca9821e474311a0b382b2f8221e5bff3e2ae5d --- /dev/null +++ b/Kannada Sahitya/article_120.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ +ಆಶೆ ಬೀಜಗಳೆನಿತೊ ಮಡಿಲೊಳಿರಿಸಿ +ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ +ಹೊತ್ತು ನಿಂತಿಹಳಮಿತ ವೃಕ್ಷರಾಶಿ. +೨ +ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು +ಹುಣಿಸೆ ಹುಲುಗಲ ತಾಳೆ ಬಾಳೆಯಂತೆ +ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ +ಸೀತಾಳಿ ಬಕುಳ ಸಂಪಿಗೆಗಳಂತೆ! +೩ +ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ +ತೊಟ್ಟಿಲವ ತೂಗಿ ಹೆಸರಿಟ್ಟರೇನೊ! +ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ +ಜುಮ್ಮೆಂದು ಮನಸೋತು ಬಿಟ್ಟರೇನೊ! +೪ +ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯು +ಅಲ್ಲಿ ಹಣ್ಣಿನ ಗೊನೆಗೆ ಗಿಣಿಗಳೆರಡು +ಸೀಳುದಾರಿಯ ಬದಿಗೆ ಸಾಲು ಮರಗಳ ನೆಳಲು +ಗಾಳಿಯೂದುವ ಕೊಳಲು-ಹಕ್ಕಿ ಹಾಡು, +೫ +ಜಗದ ನೂರೆಂಟು ತರ ಕಲಹ ಕಂಟಕಗಳಿಗೆ +ತಾವು ಕಾರಣವಲ್ಲವೆಂಬ ಹಾಗೆ +ಹುಲ್ಲು ಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ +ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ, +೬ +ನಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ +ದೂರ ದೂರದ ತನ್ನ ಮನೆಯ ನೆನೆದು, +ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು +ಎಲ್ಲ ಬಲ್ಲವರಂತೆ ಸುಮ್ಮನಿಹುದು. +೭ +ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ +ಮರದ ತಣ್ಣೆಳಲೊಂದೆ ನಿನಗಾಸರು- +ಇಲ್ಲಿ ದಣಿವಾರಿ ಮನ ಶಾಂತಿ ಸಂತಸ ಪಡೆಯೆ +ಮುಂದೆ ನಡೆಯುವ ದಾರಿ ಎನಿತು ಹಗುರು! +೮ +ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು +ಅದನು ತಣಿ ಹೀರದೆಯೆ ಸಾಗಬಹುದೆ? +ಯಾರಿಗೀ ಸುಂದರತೆ? ಯಾರಿಗೀ ಪರವಶತೆ? +ಯಾರ ಸುಖಕೀ ಸೃಷ್ಟಿ ನಿನಗಲ್ಲದೆ? +***** +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_121.txt b/Kannada Sahitya/article_121.txt new file mode 100644 index 0000000000000000000000000000000000000000..2649fe13b25d6d4622c06176173161a3d0169c82 --- /dev/null +++ b/Kannada Sahitya/article_121.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾನಿನೊಂದೆಡೆ ತಮದ ರುಂದ್ರ ಪಾತ್ರೆಯಲಿಳಿದು +ದೀನ ಮೊಗದಲಿ ಕಿರಣ ತಾನ ಸೋಪಾನದಲಿ +ನಿರ್‍ನಿಮೇಷಾಕ್ಷಿಯೊಳಗೇನನೀಕ್ಷಿಸುತಿರುವೆ ಲಲಿತಾಂಗಿ ನಕ್ಷತ್ರವೆ? +ಉನ್ನತದ ತಾರಕಿತ ಗಗನದೊಳು ಏಕಾಕಿ +ಬಿನ್ನಗಾಗುತ ಮೌನವ್ರತಧಾರಿಯಾಗಿರಲು +ಪನ್ನತಿಕೆ ಬಹುದೆಂದು? ಎದ ಭಾರವನು ಇಳುಹಲಾರದೆಯೆ ಕೊರಗುತಿರುವೆ! +ಭವದ ಬಾಳಿನೊಳಿಲ್ಲಿ ದಿವದ ಕನಸನು ಕಂಡು +ಜೀವನದ ಪಾವನಂಗೊಳಿಪ ಹಂಬಲದೊಳಿರೆ +ಆವ ನೋವಿನ ಕಾವು ಕೆಂಗುಲಿಮೆಯಲಿ ಕುದಿಸಿ ನಿನ್ನ ದಿಗ್ಬಲಿ ಹೊಡೆಯಿತೊ! ಭಾವುಕರಿಗಾತ್ಮಾಭಿರಾಮ ಧೀಮಂತರಿಗೆ +ನೋವಿನೊಡ ಹುಟ್ಟಿ ಮೃದು ಹೂವಾಗಿ ಪ್ರೇಮದಲಿ +ನವೆದ ಸತ್ಯಾಶ್ರಯರಿಗೀ ಜಗದೊಳುಳಿಗಾಲ ಬೆಳೆಗಾಲವಿಲ್ಲವೇನೊ! +ನೊಂದವರ ಕಣ್ಣೀರ ಬಿಂದುಬಿಂದುವು ಜಿನುಗಿ +ಕುಂದದಮರ ಪ್ರೇಮ ಬಾನಾಳ್ಮೆಯಲಿ ಮಿನುಗಿ- +ಅಂದಗೆಟ್ಟಿಹ ಬಾಳೊಳಾವ ಸಂದೇಶವನು ತಂದಿರುವೆ ಕಿರುತಾರಗೆ? +ಅಂಧಕಾರವು ಕಣ್ಣ ತಿವಿದು ನಿನ್ನದಗುದಿಗೆ +ಇಂಧನವನೊಟ್ಟಿ ಹಸಿ ಹೆಣವ ಬೇಯಿಸುತಲಿದೆ! +ಬಂಧಮುಕ್ತಿಯ ಪಡೆದ ಚೊಕ್ಕ ಬೆಳಕಿನ ಚಿಕ್ಕೆ ಮುಂದಾವ ಗುರಿಯು ನಿನಗೆ? +***** +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_122.txt b/Kannada Sahitya/article_122.txt new file mode 100644 index 0000000000000000000000000000000000000000..a7b24547140c3eb6cab28a26803f51571cc064be --- /dev/null +++ b/Kannada Sahitya/article_122.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಿಟ್ಟೋ ಸೆಡವೋ ಹಠವೋ ಜ್ವರವೋ +ತನಗೇ ತಿಳಿಯದೇ ಧುಮುಗುಡುವ ಸೂರ್ಯ, +ಕರಗುವುದ ಮರೆತು ಬಿಳುಚು ಹೊಡೆದು +ಹಿಂಜಿದ ಹತ್ತಿಯಂತಹ ಮೋಡಗಳು, +ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, +ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ… +ಬಿರುಬೇಸಿಗೆಯ ನಡು ಮಧ್ಯಾಹ್ನಗಳು +ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಚಿತೆ; +ಇಂಥ ಮಧ್ಯಾಹ್ನ +ಪುಟ್ಟ ಬೆರಳಲಿ ಬಾಗಿಲು ತೆರೆದು +ಗೇಟು ಸಂಧಿಯಲಿ ತೂರಿಕೊಂಡು +ಮಗುವೊಂದು ಓಡುತಿದೆ ರಸ್ತೆಯಲಿ +ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು +ಯಾವುದೋ ಕರೆಯ ಬೆನ್ನತ್ತಿದಂತೆ, +ಮಗು ಎದುರು ಮನೆಯ ಬಾಗಿಲು ಬಡಿಯುತಿದೆ +ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು.. +ತೆಕ್ಕೆ ಬಡಿದ ಬಾಹುಗಳಲಿ +ಪುಟ್ಟ ಮಗುವಿನ ಕೇಕೆ.. +ಇಂಥ ಮಧ್ಯಾಹ್ನ +ನನ್ನೊಳಗೆ ಬೆಂಕಿಹೂಗಳ ಅರಳಿಸಿ +ತಟಸ್ಥ ನಿಂತ ಕೆಂಡಸಂಪಿಗೆ ಮರ +ಧ್ಯಾನಿಸುತಿದೆ ಮಳೆಯ ಸಂಜೆಯನು, +ಮಾಗಿಯ ಬೆಳಗನು, ಆಳದ ಮೌನವನು, +ಅನವರತ ಕನವರಿಸುತಿದೆ +ತುಕ್ಕು ಹಿಡಿದ ಗೇಟಿನ ಬಳಿ +ಕೇಳಲಿರುವ ಅಂಚೆಯವನ ಕರೆಯನು. +***** +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_123.txt b/Kannada Sahitya/article_123.txt new file mode 100644 index 0000000000000000000000000000000000000000..531d1cb6abad1d85836c5ba8f238759c5f9eaf85 --- /dev/null +++ b/Kannada Sahitya/article_123.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲ ತಿಳಿಸುವ, +ಎಲ್ಲ ತಿಳಿದಿರುವ, +ಮಡಿಲ ಮೇಲಿನ ಗಣಕವೇ, +ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ +ಏನೇ ಬೇಡಿಕೆ, ಏನೇ ಹಂಬಲ, +ಬೇಕಾದರು, ಏನೇ ಬೆಂಬಲ +ಮೊರೆಹೋಗುವೆ ನಿನ್ನ, ನಾ ದುರ್ಬಲ! +ಜೀವಾತ್ಮದ ಸಂಚಯದ, +ಪರಮಾತ್ಮನ ಪರಿಚಯದ +ಬೇನೆ ಪರಿಹರಿಸುವೆಯ? +***** +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […] +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_124.txt b/Kannada Sahitya/article_124.txt new file mode 100644 index 0000000000000000000000000000000000000000..362b1b07fe59f2a0e99bd2a0eef306c00414d6d6 --- /dev/null +++ b/Kannada Sahitya/article_124.txt @@ -0,0 +1,75 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ +ಸಂಜೆಯ ಕೆಂಪು ಕರಗುವ ಹೊತ್ತು, +ಮರದ ಬೊಡ್ಡೆಗೆ ಆತು +ಕೂತಿದ್ದ ಪುಟ್ಟ ಹುಡುಗ. +ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ +ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ +ಸಂಜೆಯಾಕಾಶಕ್ಕೆ ಗೆರೆ ಬರೆದ +ಗಿರಿಶಿಖರಗಳ ನೆರಳು. +ಈ ನೆರಳುಗಳ ನಡುವೆ +ನೆರ್ಳಾಗಿ ಕೂತವನನ್ನು +‘ಯಾಕೋ ಕೂತಿದ್ದೀಯಾ?-’ +ಅಂದೆ. +ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೆಲೆ +ಹರುಕು ಚಿಂದಿಯ, ಜೋಲು ಮೋರೆಯ, +ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು; +ಅಳು ಬೆರೆತ ಮಾತು; +‘ನಾನು ಬರಲಿಲ್ಲ, ಮನೆಯಲ್ಲಿ +ಒಡೇರು ಒದೀತಾರೆ…ಅದಕ್ಕೆ ಇಲ್ಲಿ…’ +ಸುತ್ತ ಕತ್ತಲ ಕಾಡು; ಆ ಬಗ್ಗೆ +ಭಯವಿಲ್ಲ ಇವನಿಗೆ +ತಪ್ಪಿಸಿಕೊಂಡ ದನ ಬಾರದ್ದಕ್ಕೆ +ತನಗೆ ಬೀಳುವೇಟಿನ ಭಯಕ್ಕೆ +ಇಲ್ಲಿ, ಸದ್ದಿರದೆ ಕೂತಿದ್ದಾನೆ. +ದನ ಬಾರದ್ದು ಇವನ ತಪ್ಪಲ್ಲ; +ಆದರೂ ದನ ಬಾರದೆ ಇವನು +ಹಿಂದಿರುಗುವಂತಿಲ್ಲ; ಹಿಂದಿರುಗಿದನೊ +ಏಟು ತಪ್ಪುವುದಿಲ್ಲ. ಹಾಗಂತ +ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು +ಹಬ್ಬುವುದು ನಿಲ್ಲುವುದಿಲ್ಲ; ಕಪ್ಪೆಗಳ +ವಟ ವಟ, ಚಿಕೆಗಳ ಮಿಣ ಮಿಣ- ಯಾವುದೂ +ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ +ಕಾದಿದ್ದಾನೆ ಒಡೆಯ. +ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ +ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ +ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ +ಈ ದಟ್ಟ ಕಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ. +ಕವನ ಜಿ ಎಸ್ ಶಿವರುದ್ರಪ್ಪ +ವ್ಯರ್ಥ +ಇಲ್ಲ, ನಾವೂ ನೀವೂ ಸೇರಲೇ ಇಲ್ಲ; +ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು +ಮಾತಾಡಲೇ ಇಲ್ಲ. +ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು; +ತಂತಿ ಕಂಬಗಳುರುಳಿ, +ಇದ್ದ ಸೇತುವೆ ಮುರಿದು +ಅಲ್ಲಿನ ಗಾಡಿ ಅಲ್ಲೇ +ಇಲ್ಲಿನ ಗಾಡಿ ಇಲ್ಲೇ. +ಮುಚ್ಚಿದ್ದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ +ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ, +ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ, +ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ +ಹತ್ತಿದ ಹಣತೆಗಳನ್ನು ನಂದಿಸುತ್ತ +ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ, +ರಾಂಗ್ ನಂಬರಿಗೆ ಟೆಲಿಫೋನು ಮಾಡಿ +ಉತ್ತರಕ್ಕೆ ಕಾಯುತ್ತ ಕೂರುತ್ತೇವೆ. +***** +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_125.txt b/Kannada Sahitya/article_125.txt new file mode 100644 index 0000000000000000000000000000000000000000..7b31e47cc6855a9889110d27bc731bab76849d38 --- /dev/null +++ b/Kannada Sahitya/article_125.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಂದ್ರ ಹಂದಿ, +ಅವಳು ಗುಟುರುವುದು ನನ್ನ ಗಂಟಲಿನಿಂದ +ನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆ +ಅಂತರಾಳದ ನನ್ನ ಕೆಸರು ಸಂಭ್ರಮಿಸಿ +ಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ +ನಾನು ಗಂಡು ಹಂದಿ +ಮತ್ತು ಕವಿ +ಅವಳು ತನ್ನ ಧವಳ ತುಟಿಗಳ ತೆರೆದು +ನನ್ನನ್ನು ನುಂಗಲೆಂದು ಅಗಲಿಸಿದಾಗ +ನಾನು ಅವನ್ನು ಕಚ್ಚಿಬಿಡುತ್ತೇನೆ +ಆಗ ಚಂದ್ರಲೋಕದಲ್ಲಿ ಹರ್ಷೋದ್ಘಾರ. +ಬಯಕೆಯ ನಿಶೆಯಲ್ಲಿ ನಾವಾಗ ತುಯ್ದಾಡುವುದು +ಗುಟುರುವುದು +ಗುಟುರುತ್ತಾ ಹೊಳೆಯುವುದು. +(Denis Levertov(೧೯೨೩-೧೯೯೭) ಅಮೆರಿಕಾದ ಈ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ನಾನು ೮೦ರ ದಶಕದಲ್ಲಿ ಬಾಸ್ಟನ್ ಟಿಪ್ಟ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಈಕೆ ತಮ್ಮ ಮನೆಯಲ್ಲಿ ಯುವಕ ಯುವತಿಯರಿಗೆ ಸತ್ಯಾಗ್ರಹ ಮಾಡುವುದು ಹೇಗೆ, ಹಿಂಸೆಗೆ ಪ್ರತಿಹಿಂಸೆ ಮಾಡದಂತೆ, ಜೀವನ ಪ್ರೀತಿ ಉತ್ಸಾಹ ಕಳೆಯದಂತೆ ಬದುಕುವುದು ಹೇಗೆ, ಪೊಲೀಸರ ಬಲಾತ್ಕಾರಕ್ಕೆ ಜಗ್ಗದಂತೆ ಕೂತಲ್ಲೇ ಕೂತಿರುವುದು ಹೇಗೆ ಇತ್ಯಾದಿಗಳನ್ನು ಕಲಿಸುವ ಶಾಲೆಯನ್ನು ನಡೆಸುತ್ತಿದ್ದರು. ಯೋಗ, ಹಾಡು, ಕವಿತೆ, ಕಥನ-ಇವೇ ಸತ್ಯಾಗ್ರಹ ಶಾಲೆಯ ಪಠ್ಯಗಳು, ಅಪ್ಪಟ ಗಾಂಧಿವಾದಿಯಾದ ಇವರು ಮಾರ್ಟಿನ್ ಲ್ಯೂಥರ್ ಕಿಂಗ್‌ನ ಚಳುವಳಿಯಲ್ಲೂ ವಿಯಟ್ನಾಂ ಮೇಲಿನ ಯುದ್ಧದ ವಿರೋಧಿಯಾಗಿಯೂ ತನ್ನ ಗಂಡನ ಜೊತೆ ಸಕ್ರಿಯರಾಗಿದ್ದವರು. ಇವರು ಯಾವ ಶಾಲೆಗೂ ಹೋಗದೆ, ಯಾವ ಡಿಗ್ರಿಯನ್ನು ಪಡೆಯದೆ ಸ್ವಾಧ್ಯಾಯನಿರತರಾಗಿ ಬೆಳೆದವರು. ತನ್ನ ಅನುಭಾವಿ ಅಪ್ಪನ ಮಾರ್ಗದರ್ಶನದಲ್ಲಿ ಬೆಳೆದ ಇವರು ರಾಜಕೀಯವಾಗಿ ಕ್ರಿಯಾಶೀಲರಾದರೂ, ಅವರ ಕಾವ್ಯ ಅನುಭಾವದ ನೆಲೆಯದು- ಘೋಷಣೆಯದಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ತುಂಬ ಪ್ರಭಾವ ಬೀರಿದವರಲ್ಲಿ ಅಪ್ಪಟವಾದ ಸಂವೇದನಾಶೀಲರಾದ ನಿರ್ಭಯರೂ ನಿರಹಂಕಾರಿಯೂ ಆದ ಇವರೊಬ್ಬರು.) +ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! ***** +ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […] +ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – ಕೊಂಬೆಗಳೆಲ್ಲ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_126.txt b/Kannada Sahitya/article_126.txt new file mode 100644 index 0000000000000000000000000000000000000000..6ee306f4172e7d1fcbd8d04f8d473298e2bd5b68 --- /dev/null +++ b/Kannada Sahitya/article_126.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರವಿ +ಕೂತಿದ್ದಾನೆ +ಪಡುವಣದ ಅಂಗಡಿಯಲ್ಲಿ +ಸೀರೆಗಳ +ಹ +ರವಿ. +***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_127.txt b/Kannada Sahitya/article_127.txt new file mode 100644 index 0000000000000000000000000000000000000000..0b8fe65549727dbfc511793f7c1621addefcb44c --- /dev/null +++ b/Kannada Sahitya/article_127.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೨೧ನೇ ಜುಲೈ ೨೦೦೧) +ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ ನನ್ನನ್ನು ನಾನು ಒಡ್ಡಿಕೊಂಡಾಗಿನಿಂದ. ಸರಳವಾಗಿ ಈ ಬುದ್ಧಿ ತನ್ನ ಅತೀವ ಖಾಸಗೀ ಸ್ವಾಯತ್ತತೆಯನ್ನು ಅನುಭವಿಸತೊಡಗಿದಂದಿನಿಂದ. ಈವರೆಗಂತೂ ಸಿಕ್ಕಿಲ್ಲ. ನಿಮ್ಮಲ್ಲಿದ್ದರೆ ಹೇಳಿ. ಸದ್ಯದ ಜೀವಿತದಲ್ಲಿ ಸಿಕ್ಕ ಸಿಕ್ಕ ಇಂಗ್ಲಿಷ್- ಕನ್ನಡ ನಿಘಂಟುಗಳನ್ನು ತೆಗೆದು ‘ಲೆಗೆಸಿ’ಗೆ ಕನ್ನಡದ ಪರ್ಯಾಯವನ್ನು ತಡಕಿದ್ದೂ ಒಂದು ಪ್ರತೀತಿ. ಪಿತ್ರಾರ್ಜಿತ ಅನ್ನುವುದು ಎಲ್ಲೂ ಸಿಗುವ ಸಾಮಾನ್ಯ ಅರ್ಥವಾದರೂ ನನಗೆ ಅದೇಕೋ ಸೂಕ್ತ ಅಂತನ್ನಿಸುವುದಿಲ್ಲ. ಇದರಲ್ಲಿ ಅಡಕಗೊಂಡಿರುವ ಸೊತ್ತು. ಆಸ್ತಿಪಾಸ್ತಿ, ಎಂಥದೋ ನಿರಾಯಾಸದ ಗಳಿಕೆ… ಇಂಥ ಲಗತ್ತುಗಳು ನನಗೆ ಎಂದಿದ್ದರೂ ಹೇಸಿಗೆಯೇ. ನಾನು ಇಂಥವರ ಮಗ, ಇಂಥವಳ ಗಂಡ, ಇವರಿಗೆ ಅಳಿಯ, ಅವನಿಗೆ ಷಡ್ಡಕ… ಇವುಗಳೆಲ್ಲ ಒಂದು ನಮೂನೆ ಪಿಡುಗಿದ್ದ ಹಾಗೆ. ಸತ್ತು ವೈತರಣಿ ದಾಟಿಯೂ ಉಳಿದೇಬಿಡುವ ಸೋಂಕು. ಕಳಚಿಕೊಳ್ಳಲು ಸಾಧ್ಯವಿದ್ದಿದ್ದಲ್ಲಿ ಯಾತರದ್ದೂ ಹಂಗಿಲ್ಲದ ನಿರ್ವಾಣ ನನಗೆ ಪರಮಪ್ರಿಯ. ಮೊನ್ನೆ ಸುಮ್ಮನೆ ಖುಷಿಗೆಂದು ವಾರುಣಿಯೊಟ್ಟಿಗೆ ಗರುಡ ಮಾಲಿಗೆ ಹೋಗಿದ್ದೆ. ನನ್ನ ೨೮ನೇ ಹುಟ್ಟಿನ ತೇದಿಯ ಮುನ್ನಾ ದಿನ. ಉಡುಗೊರೆಯ ನೆವದಲ್ಲಿ ತಲೆಯಿಂದ ಕಾಲಿನವರೆಗೆ ಹೊಸ ತೊಡಿಕೆಗಳ ಖರೀದಿ. ನನಗೆಂದು ೧೦ ಸಾವಿರಕ್ಕೂ ಮೀರಿ ಕಾರ್ಡು ಉಜ್ಜಿದ್ದಳು. ಮರುದಿನ ಎಲ್ಲವನ್ನೂ ತೊಟ್ಟು ಅವಳೊಟ್ಟಿಗೆ ಹೊರಟಾಗ ಹತ್ತೆಂಟು ಬ್ರ್ಯಾಂಡುಗಳ ನಡೆದಾಡುವ ಜಾಹಿರಾತಿನಂತಾಗಿಬಿಟ್ಟಿದ್ದೆ. ಸಂಜೆ ಎಬೋನಿಯಲ್ಲಿ ವೈನ್ ಗುಟುಕಿಸುತ್ತ, ಊeಥಿ, I ಜಿeeಟ- I hಚಿve beಛಿome ಚಿ mಚಿಟಿiquiಟಿe ಡಿessuಡಿeಛಿಣeಜ!!! ಒಳ್ಳೇ ನಡೆದಾಡೋ ಅಡ್ವರ್ಟೈಸ್‌ಮೆಂಟ್ ಥರಾ ಮಾಡಿಬಿಟ್ಟಿದ್ದೀ… ಅಂತ ಮುನಿಸು ತೋರಿದ್ದೆ. ‘ಇನ್ನೆನು ಡೆಸರ್ಟಿನ ಹೊತ್ತಿಗೆ ಕಳಚುವುದು ಇದೆಯಲ್ಲ?’- ಅಂತ ಕಣ್ಣು ಮಿಟುಕಿಸಿದ್ದಳು. ‘ನನಗೆ ಈ ಹೆಸರುಗಳನ್ನು ಕುರಿತಾಗಿ ಮೊದಲಿನಿಂದಲೇ ಜಿಗುಪ್ಸೆ, ಅಡಿಡಾಸ್, ರೀಬಾಕ್, ಲೀ, ಜಾಕೀ, ಲೀ ಕೂಪರ್… ಅಸಹ್ಯ ಅನ್ನಿಸುತ್ತೆ, ವಾರೀ!!’ ಅಂದಾಗ ಹಾಗೇ ನಕ್ಕಿದ್ದಳು. ಸುಂದರ ಸಂಜೆ ಸರಿರಾತ್ರಿಯಲ್ಲಿ ಹೊರಳುವಾಗ ಇಬ್ಬರೂ ಅವಳ ಮನೆ ಸೇರಿದ್ದೆವು. ನನ್ನ ತೊಡಿಕೆಗಳನ್ನು ಒಂದೊಂದೇ ಕಳಚುತ್ತ ಮದುವೆ ವಿಷಯ ಪ್ರಸ್ತಾಪಿಸಿದ್ದಳು. ಲಗತ್ತುಗಳಿರದೆಯೇ ಬದುಕಬೇಕು ಎನ್ನುವ ನನ್ನ ಅಭಿಮತವನ್ನು ಮತ್ತೊಮ್ಮೆ ಖಡಾಖಂಡಿತ ಹೇಳಿದ್ದೆ. We ಚಿಡಿe ಣogeಣheಡಿ ಚಿs ಟoಟಿg ಚಿs ತಿe ಚಿಡಿe ಛಿomಜಿoಡಿಣಚಿbಟe ತಿiಣh eಚಿಛಿh oಣheಡಿ, hoಟಿeಥಿ! ಎಲ್ಲ ಕಳಚಿದ ಮೇಲೂ ತೊಟ್ಟ ಕಾಮಸೂತ್ರದ ಎಸಳನ್ನು ಕಂಡು ನಕ್ಕವಳು ಖಿhis is ಚಿ bಡಿಚಿಟಿಜ ಣoo!!ಎಂದು ಛೇಡಿಸಿದ್ದಳು. +ನಾನು ಹೀಗೇ. ನಾಗರಿಕತೆಗೆ ರೇಖೆಗಳ ರೂಪು ಹಚ್ಚುತ್ತ ಮನೆ ಮಠ ಊರು ಕಟ್ಟುವ ನಮ್ಮಂತಹವರೆಲ್ಲ ಪ್ರಾಯಶಃ ಹೀಗೆಯೇ ಏನೋ. ನಮ್ಮದು ಗೆರೆ ಬರೆಯುವ ಜಾಯಮಾನ. ಐ-ಬಾರಿನಲ್ಲಿ ಹೆಣ್ಣು ಹಬ್ಬಿ ತೊನೆದಷ್ಟೇ ಸರಾಗ ರಾಮನವಮಿಯ ಕಲ್ಯಾಣಿಗೆ ತಲೆದೂಗುವುದು. ಬರ್ಮ್ಯುಡಾಸ್ ಬಿಗಿದು ಮಾಲ್ ಹೊಕ್ಕಷ್ಟೇ ಸುಲಭ ಪಂಚೆ ಶಲ್ಯಕ್ಕೆ ಮೈಯಾಗುವುದು. ಒಮ್ಮೊಮ್ಮೆ ನಮ್ಮಷ್ಟು ಉಸಾಬರಿಯಿರುವ ಮಂದಿಯೇ ಇಲ್ಲ ಅನುಭವ ಹಾಗೆ… We ಜoಟಿಣ ಟಿeeಜ ಟಿo eಜuಛಿಚಿಣioಟಿ; We ಜoಟಿಣ ಟಿeeಜ ಟಿo seಟಜಿಛಿoಟಿಣಡಿoಟ- ಅಂತ ಓದು ದಿಕ್ಕರಿಸಿದರೂ ಪಿಂಕ್ ಪ್ಲಾಯ್ಡ್ ಮನಸ್ಸಿಗೇ ಮೂಗು ಹಿಡಿದು ಪ್ರಣವಸ್ಯ ಪರಬ್ರಹ್ಮ ಋಷಿ ಅಂತ ದೇಸೀ ಸಂಕಲ್ಪ! ಬರುಗುವ ಬಿಯರು ಉಕ್ಕಿ ಗಾಜಿನ ಅಂಚು ಮೀರಿದರೆ ಗುಟುಕು ಗುಟುಕಿನ ನಡುವೆ ಯೋನಿ ಚಕ್ರದ ವಿವರ! ಕಾಫೀ ಷಾಪಿನ ಟಿಷ್ಯೂ ಚೌಕದ ಮೇಲೆ ಗೀಚಿದ್ದೂ ವಿನ್ಯಾಸ. ಎಂಥದೋ ಪ್ರಣಾಳಿ ಅಂತೆಲ್ಲ ಅರ್ಥ. ಬಿಯರು ಮಗ್ಗಿನ ಭರ್ತಿ ಭಗವದ್ಗೀತೆಯ ನಿಷ್ಕರ್ಷೆ. ಬರೆದ ಗೆರೆಯೆಲ್ಲ ಬ್ರಹ್ಮ. ಬರೆಸಿಕೊಂಡ ಚೌಕ ಪರಬ್ರಹ್ಮದ ತುಣುಕು. ಬತ್ತಲಾದಾಗ ಕಾಂಡೋಮ್ ತೊಡಿಕೆ. ಅದೇ ಬ್ರಹ್ಮ ಸಾಕ್ಷಾತ್ಕಾರ. ಕೆಲವೊಮ್ಮೆ ಅಷ್ಟೇ ಸಲೀಸು ಮಾತು… ಮೊಹರುಗಳಿಲ್ಲದೆಯೆ… +ತಾಮರಸ ಜಲದಂತೆ- ಅಂತ ಅಮ್ಮ ಯಾವುದೋ ದಾಸಯ್ಯನ ಮಾತನ್ನು ದೇವವಾಣಿ ಅಂತ ನಂಬಿ ಬದುಕಿದ್ದಿದೆ. ಈಗಲೂ ಬದುಕುತ್ತಿದ್ದಾಳೆ. ಆವಳಿಗೆ ಹಾಗೆ ಮಾಡದೆ ಬೇರೆ ವಿಧಿಯೇ ಇರಲಿಲ್ಲ. ಆ ಮಾತು ಬೇರೆ. ಸೋಕಿದ್ದೂ ಸೋಕಿರದ ಹಾಗೆ ಬದುಕುವುದಿದೆಯಲ್ಲ- ಅದನ್ನೆ ನಾನು ಲಗತ್ತುಗಳಿಲ್ಲದೆಯೆ ಅನ್ನುವುದು. ಕಾಂಡೋಮ್ ಸಹಿತದ ಮೈಥುನವಿದ್ದ ಹಾಗೆ. ನನ್ನ ಹೆಸರಿನೊಟ್ಟಿಗಿರುವ ಈ ಕಡಿದಾಳ್ ಎಂಬ ಬಾಲವನ್ನು ನೋಡಿ. ಏನನ್ನಬೇಕು? ಕೆಲವೊಮ್ಮೆ ಅದು ಹೊರೆ ಅನಿಸಿಬಿಟ್ಟಿದೆ. ಈ ನಾಗರಿಕತೆಯಲ್ಲಿ ಅದು ಸದ್ಯಕ್ಕಂತೂ ಅನಿವಾರ್ಯದ ಅಳವಡಿಕೆ. ನನ್ನ ಆರ್ಕಿಟೆಕ್ಚರಿನ ಓದಿನ ದಿನಗಳಲ್ಲಿ ಮೊಟುಕುಗೊಂಡು ಒಂದು ನಮೂನೆಯ ಅಡ್ಡ ಹೆಸರಾಗಿ ಅದು ಮತ್ತಷ್ಟು ಜಗ್ಗಿಕೊಂಡಿದೆ. ನನ್ನ ಓರಗೆಯ ಗೆಳೆಯರೆಲ್ಲ ನನ್ನನ್ನು ‘ಕಡೀ’ ಅಂತಲೇ ಕರೆಯುವುದು. ಇನ್ನು ಅಮ್ಮ ಇಟ್ಟ ಹೆಸರೇನು? ನಾನು ಅವಳ ಬದುಕಿನ ಒಟ್ಟಾರೆ ಅಭೀಪ್ಸೆ ಅಂತ ಇಟ್ಟಿದ್ದು. ಈ ಔದ್ಯೋಗಿಕ ನಾಗರಿಕತೆಯಲ್ಲಿ, ಎರಡೂವರೆ ಬೆರಳಗಲದ ಬಿಸಿನೆಸ್ ಕಾರ್ಡಿನಲ್ಲಿ ನಾನು ಅಭೀಪ್ಸಾ ಕಡಿದಾಳ್!! ಕೆಲವರು ನನ್ನನ್ನು ಬಿಪ್ಸ್ ಎಂದೂ ಕರೆಯುವುದಿದೆ. ಅದೇನೇ ಇರಲಿ, ಈಗ ನನ್ನ ದಾವೆಯೇನಿದ್ದರೂ ನನ್ನ ಬೆನ್ನಿನಲ್ಲಿರುವ ಈ ಕಡಿದಾಳ್ ಎಂಬುದರ ಲೆಗೆಸಿಯನ್ನು ಕುರಿತು. +ತೊಂಬತ್ತೈದರ ಡಿಸೆಂಬರ್, ಸ್ಕೂಲ್ ಆಫ್ ಪ್ಲ್ಯಾನಿಂಗ್ ಎಂಡ್ ಆರ್ಕಿಟೆಕ್ಚರಿನಲ್ಲಿ ದಾಖಲಾದ ಸಂದರ್ಭ. ಪೀಯೂಸಿ ಮುಗಿಸಿದ್ದ ನನ್ನನ್ನು ಅಮ್ಮ ಡೀನ್ ಅನಂತಕೃಷ್ಣ ಅವರನ್ನು ಭೇಟಿಯಾಗಲು ಕರೆತಂದಿದ್ದಳು. ನನ್ನ ಮೇಲೆ ಎಷ್ಟೆಲ್ಲ ಭರವಸೆಯಿತ್ತು ಅವಳಿಗೆ. ನನ್ನ ಹೆಸರು ಓದಿದ ಡೀನ್, ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರು ಆರ್ಕಿಟೆಕ್ಟ್ ಇದ್ದರು. ಅವರು ನನಗೆ ಚೆನ್ನಾಗಿ ಗೊತ್ತು. ಜೆ.ಜೆ. ಸ್ಕೂಲಿನಲ್ಲಿ ನನಗೆ ಕೆಲಕಾಲ ಮೇಷ್‌ಟ್ರರಾಗಿದ್ದರು. ನಿಮಗೆ ಗೊತ್ತೆ?- ಅಂತ ಕೇಳಿದ್ದರು. ಅಮ್ಮನಲ್ಲಿ ಕಸಿವಿಸಿ ತೊಟ್ಟಿಕ್ಕಿತ್ತು. ’ಅವರು ಇವನಿಗೆ ತಂದೆಯಾಗ…‘ ನಾಲಗೆಯಲ್ಲೇನೋ ಬೇವಾರಸಿ ತೊಡರು. ನನ್ನೊಳಗೂ ಮೂಕ ತಲ್ಲಣ. ’ಏನ್ರೀ ಹೀಗಂತೀರಿ? ನನಗೆ ಗೊತ್ತಿರೋ ಹಾಗೆ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದವು. ಈಗ ಅಮೆರಿಕಾದಲ್ಲೆಲ್ಲೋ ಇದ್ದಾರೆ ಅಂತ ಕೇಳಿದ್ದೀನಿ…’ ಅಮ್ಮನಿಗೆ ಆಗ ಮಾತು ಹೊರಳಿರಲಿಲ್ಲ. ಊe ತಿಚಿs ಚಿ gಡಿeಚಿಣ mಚಿಟಿ. ಂಟಿಥಿತಿಚಿಥಿs, iಜಿ ಥಿouಡಿ soಟಿ ಜಿಚಿಡಿes ತಿeಟಟ iಟಿ eಟಿಣಡಿಚಿಟಿಛಿe ಣesಣ ತಿe shಚಿಟಟ ಛಿeಡಿಣಚಿiಟಿಟಥಿ ಣuಡಿಟಿ him iಟಿ!! ಡೀನ್‌ಗೆ ಎಂಥದೋ ಅನುಮಾನ, ಗುಮಾನಿ. ಹುರುಳಿಲ್ಲದ್ದೇನಲ್ಲ. ಅಮ್ಮ ಅವಮಾನದಿಂದ ತೊಪ್ಪೆಯಾಗಿದ್ದಳು. ಹೊಸತೇನಲ್ಲವಲ್ಲ. ಅವಳು ಬದುಕಿಗೆ ಹೆದರಿದ್ದಿದ್ದರೆ ನಾನು ಈ ಹಂತವನ್ನು ತಲುಪುತ್ತಲೇ ಇರಲಿಲ್ಲ. ‘ಕಂದ! ಇನ್ನೆಲ್ಲ ನಿನ್ನ ಕೈಯಲ್ಲಿದೆ. ನೀನು ನಿನ್ನ ವಾರಸಿಕೆಗೆ ಪುರಾವೆಯಾಗಬೇಕು.’ ಮನೆಗೆ ಬಂದಾಗ ಸಂಜೆ ಕರೆಯುತ್ತಿತ್ತು. ಮದರಾಸಿನ ಸೈಕ್ಲೋನ್ ಸುರಿತ. ಕತ್ತಲು ಜಿಟಿಪಿಟಿಸುತ್ತಿತ್ತು. ‘ಮಾಮ್! ಅವರೇಕೆ ನಮ್ಮ ಜತೆ ಇರಲೇ ಇಲ್ಲ?’ ಅದೇ ರೇಜಿಗೆಯ ಜಿಟಿಪಿಟಿ. ತನಿಖೆ. ‘ಅವರ ಹೆಂಡತಿ ಅವರಿಗೆ ಡಿವೋರ್ಸ್ ಕೊಡಲೇ ಇಲ್ಲವಲ್ಲ, ಅಭೀ…!!’ ಅವಳದ್ದು ವಾರಸು ಇರದ ನೋವು. +ಹಳೆಯ ತಲೆಮಾರಿನವರು ಅವರಿವರು ನನಗೆ ಸಿಕ್ಕಾಗ ಎಂಥದೋ ಶಂಕೆಯಿಂದ ‘ಹಿಂದೊಮ್ಮೆ ಕಡಿದಾಳ್ ಮಂಜಪ್ಪ ಅಂತ ಚೀಫ್ ಮಿನಿಸ್ಟರ್ ಆಗಿದ್ದರು. ಅವರೇನಾದರೂ…’ ಅಂತ ಸುರು ಹಚ್ಚಿದರೆ ಅವರ ಮಾತಿಗೆ ನಾನು ಎಡೆ ಕೊಡುವುದು ಕಡಿಮೆ. ‘ಹಾಗಂತ ನಾನೂ ಕೇಳಿದ್ದೇನೆ. ನನ್ನ ತಂದೆ ಅದೇ ಊರಿನವರಂತೆ.’ ಹಿಂದೆಯೇ ಮತ್ತೊಂದು ವರಸೆ. ‘ನಿಮ್ಮನು? ನೋಡಿದರೆ ಕನ್ನಡದವರು ಅಂತ ಅನಿ?ಸೋದೇ ಇಲ್ಲ…?’ ನನ್ನದೋ ?ವಾರಸಿ ಚರ್ಯೆ. ಪಂಜಾಬಿನ ಅಮ್ಮನನೆ? ಹೆಚ್ಚು ಹೊತ್ತುಕೊಂಡವ. ತಪ್ಪು ನನ್ನದಲ್ಲ. ಅಮ್ಮನೋ- ನನ್ನೊಳಗೆ ಈ ನೆಲದ ಕಸುವು ಹೂಡುವಲ್ಲಿ ಮಾಡದ ಪ್ರಯತ?ವೇ ಇಲ್ಲ. ಮಣ್ಣಿನ ವಾಸನೆ, ಮಾತು ಮನುಷ್ಯನಿಗೆ ಮುಖ್ಯ ಅಂತ ಅಪ್ಪ ಹೇಳುತ್ತಿದ್ದರಂತೆ. ‘ಎಷ್ಟು ಚಂದ ಕನ್ನಡ ಬರೀತೀಯೋ?’ ಅವರಿದ್ದಿದ್ದರೆ ಖುಷಿ ಪಡ್ತಾ ಇದ್ದರು… ಏನೇ ಆದರೂ ಸಂಧ್ಯಾವಂದನೆಯನ್ನು ಮಾತ್ರ ತಪ್ಪಿಸಬೇಡ…’ ಈಗ ಈ ಊರಿನಲ್ಲಿ ನನ್ನದೇ ಆದ ಉದ್ಧಿಮೆಯಿದೆ. ಅಕ್ಷ ಕಾನ್‌ಫ್ಲುಯೆನ್ಸ್! ಇದು ಅಮ್ಮನೇ ಕೊಟ್ಟ ಹೆಸರು. ‘ಅವರ ನೆನಪಾಗಿಯೂ ಇರುತ್ತೆ!!’ ತನ್ನ ಪ್ರೀತಿಗೆ ಬಹಿರಂಗದ ವಾರಸಿಕೆಯನ್ನು ಕೊಡದ ವ್ಯಕ್ತಿಯ ಮೇಲೆ ಅದೆಷ್ಟು ವಾಂಛೆ ಗೊತ್ತೆ ಅವಳಿಗೆ? ನನಗೆ ಸುತರಾಂ ಒಗ್ಗದಂಥದ್ದು. ಪ್ರೀತಿಯನ್ನು ಆ ಹೆಸರಿನಿಂದ ಗುರುತಿಸಲೂ ನನಗೆ ಸರಿ ಅನಿಸುವುದಿಲ್ಲ. ಒಮ್ಮೆಮ್ಮೆ ವಾರುಣಿಯನ್ನೂ ಇಂಥದೇ ಪ್ರೀತಿಯ ಗದ್ಗದ ಭಾವುಕಳನಾಗಿಸುತ್ತದೆ. I hಚಿಣe ಣhose ಜಿouಡಿ ಟeಣಣeಡಿs, mಚಿಟಿ. ಙou ಛಿಚಿಟಟ ಣhಚಿಣ ಚಿಟಿಥಿಣhiಟಿg, buಣ ಟove!! ನಗೆ ಯಾವ ಲಗತ್ತುಗಳೂ ಸರಿಯೆನಿಸುವುದಿಲ್ಲ. ಚಡಪಡಿಕೆಗೆ ಹೆಸರು ಮೊಹರು ಬೇಕಿಲ್ಲ. +ತಹತಹ ವಿರಹವಲ್ಲ. +* +* +* +(೧೮ನೇ ಅಕ್ಟೋಬರ್ ೨೦೦೧) +ಕೆಲವು ತಿರುವುಗಳು ಬದುಕಿನ ಮೂಲಭೂತ ನಂಬಿಕೆಗಳನ್ನೆ ಅಲುಗಿಸಿಬಿಡಬಹುದು – ಈವರೆಗಿನದೆಲ್ಲ ಪೊಳ್ಳು ಅನಿಸಿಬಿಡುವಷ್ಟು. ಬದುಕಿದ್ದೇ ಸುಳ್ಳು ಅನಿಸುವಷ್ಟು. ಈ ತನಕದ ಸತ್ಯವನು? ತತ್ಕಾಲದ ಸತ್ಯ ಕೊಚ್ಚಿ ತೊಳೆದುಬಿಡಬಹುದು. ನ್ಯೂಟನ್ನನ್ನು ಐನ್‌ಸ್ಟೀನ್, ಐನ್‌ಸ್ಟೀನ್‌ನನ್ನು ಹಾಕಿನ್ಸ್, ಡಾರ್ವಿನ್‌ನನ್ನು? ಮತ್ತೊ? …. ಹೀಗೆ. ಭೌತವಿಜ್ಞಾನ ತನ್ನ ನೆಲಗಟ್ಟನ್ನು ಪುನರ್ವಿಮರ್ಶಿಸಿಕೊಂಡಾಗಲೆಲ್ಲ ತತ್ತ್ವಜ್ಞಾನವೂ ತನ್ನ ನೆಲೆಯನ್ನು ಮತ್ತೊಮ್ಮೆ ರೂಪಿಸಿಕೊಳ್ಳುತ್ತದೆಯಂತೆ. ಹಾಗೆಯೇ ಸಾಮಾಜಿಕ ನೆಲೆಗಳೂ… Phಥಿsiಛಿs ಚಿಟಿಜ Phiಟosoಠಿhಥಿ ಚಿಡಿe iಟಿಣeಡಿಜeಠಿeಟಿಜeಟಿಣ. So is ಂಡಿಛಿhiಣeಛಿಣuಡಿe – ಣhಚಿಣ ಜeಠಿeಟಿಜs oಟಿ boಣh. ಮೊನ್ನೆ ಸ್ಕೂಲಿನಲ್ಲಿ ಇದೇ ಚರ್ಚೆಯಲ್ಲಿ ಹುಡುಗರನ್ನು ತೊಡಗಿಸಿದ್ದೆ. ನಮ್ಮ ಪ್ರಸಕ್ತ ನಾಗರಿಕತೆಯ ಎರಡು ಮುಖ್ಯ ಅಂಶಗಳಾದ ಮಾಹಿತಿ ಮತ್ತು ವೇಗಗಳನ್ನು ಕುರಿತಾಗಿ ಮಾತು. ನಮ್ಮನ್ನು ನಮಗರಿವಿಲ್ಲದೆಯೆ ತನ್ನಲ್ಲಿ ಅದ್ದಿಕೊಂಡಿರುವ ಅಪಾರ ಮಾಹಿತಿ ಮತ್ತು ವೇಗಾಂಶಗಳನ್ನು ಹೊಂದಿರುವ ಧಾತುವಿದೆಯಲ್ಲ – ಅದನ್ನು ಏನೆಂದು ಕರೆಯುವುದು? ಅದು ಆಕಾಶ ತತ್ವವಿದ್ದ ಹಾಗೆ. ಈ ಶತಮಾನದ ನಾಗರಿಕತೆ ನಮಗೆ ಕೊಟ್ಟಿರುವ ತತ್ವ. ಹೊಸ ಮಾಹಿತಿಯನ್ನು ದಕ್ಕಿಸಿಕೊಂಡಾಗ. ಮೈ-ಮನಸ್ಸಿಗೆ ವೇಗಸ್ಪರ್ಶವುಂಟಾದಾಗ ಪ್ರಪಂಚವನ್ನು ನೋಡುವ ಸಾಧಾರಣ ಕಣ್ಣಿಗಿರುವ ವೇಗ, ಒದಗುವ ಮಾಹಿತಿ ಅದೆಂಥದ್ದಿರಬಹುದು? ಹಿಮಾಂಶು ಅಂತ ನನ್ನ ಸ್ಟೂಡೆಂಟ್ ಒಬ್ಬನಿದ್ದಾನೆ. ಎಷ್ಟು ಚೆನ್ನಾಗಿ ವಾದಿಸಿದ ಗೊತ್ತೆ? Uಟಿಛಿಟಚಿimeಜ ಟiಟಿes – ಅಂತ ಕೊಲಾಜೊಂದನ್ನು ಡಿಸೈನ್ ಕ್ಲಾಸಿನಲ್ಲಿ ನಮ್ಮ ಮುಂದಿಟ್ಟಿದ್ದ. ಆಗಲೇ ನನ್ನ ನೋಟ್‌ಪ್ಯಾಡಿನಲ್ಲಿ ‘ಈ ಗೆರೆಗೆ ವಾರಸುಗಳಿಲ್ಲ.’ ಅಂತ ಗೀಚಿಕೊಂಡಿದ್ದೆ. ಅ?! ಎಂತಹ ಮೆಟಫರು ಅದು. ತಲೆಕೆಳಗಾಗಿ ನಿಂತು ಪ್ರಪಂಚವನ್ನು ನಿಟ್ಟಿಸಿದರೆ ಭೂಮಿ ಮೇಲೆ ಆಕಾಶ ಕೆಳಗೆ – ಅಂತ ಹೇಳಿ ಹೊಸನಿಟ್ಟಿನಲ್ಲಿ ನೋಡಿದಾಗ ಅರ್ಥವೆಲ್ಲ ಅನರ್ಥ ಅಂದ. ನಾನು ಈವರೆಗಿನ ಅರ್ಥವೆಲ್ಲ ಈಗ ಅನರ್ಥ ಅಂತ ತಿದ್ದುಪಡಿ ಮಾಡಿದೆ. ನಮ್ಮ ಕಾಲದ ತಂತ್ರಜ್ಞಾನ ರೂಢಿಸಿರುವ ಕಾಳಜಿಗಳೆ ಇಂಥವು. ಈವರೆಗಿನ ಓರೆಯೆಲ್ಲ ಸದ್ಯಕ್ಕಂತೂ ನೇರ. ನಿಖರವಾಗಿ ಸತ್ಯ ಅಂತ ಯಾವುದೂ ಇಲ್ಲ. ಎಲ್ಲವೂ ತಾತ್ಕಾಲಿಕ. ಸುಳ್ಳೇ ಪರಮಾರ್ಥ. +ಅಂದು ಎರಡರ ಸುಮಾರಿಗೆ ಸ್ಕೂಲಿನಿಂದ ‘ಅಕ್ಷ’ಗೆ ಬಂದೆ. ಮೇಜಿನ ಮೇಲೆ ಸ್ಪೆಕ್‌ಟ್ರಮ್ ಫೌಂಡೇಷನಿ?ನ ಟಪಾಲೊಂದು ಇತ್ತು. ಅದು ನನ್ನ ಜೀವಿತದ ನಂಬಿಕೆಗಳನ್ನು ಬುಡಮೇಲು ಮಾಡ ಬಹುದೆಂದು ಅಂದುಕೊಂಡಿರಲಿಲ್ಲ. ಅಥವಾ ಅದು ತಾತ್ಕಾಲಿಕ ಸತ್ಯದ ಸೆಳಕಷ್ಟೆಯೆ? ಲಕೋಟೆಯನ್ನು ಒಡೆಯುತ್ತಿರುವಾಗಲೇ ಸೌಮಿತ್ರೋ ಫೋನು ಬಂತು. ‘ಕಂಗ್ರಾಚುಲೇಷನ್ಸ್ ಬಿಪ್ಸ್! ನನಗೆ ತುಂಬ ಖುಷಿಯಾಗಿದೆ. ಗಿeಡಿಥಿ ಜeseಡಿviಟಿg ಛಿhoiಛಿe! ನಾನು ಫೌಂಡೇಷನ್ನಿನ ಮೂರು ಪುಟದ ವರದಿಯಲ್ಲಿ ಎದ್ದು ಕಾಣುವಂತೆ ‘ಅಕ್ಷ ಕಾನ್‌ಫ್ಲುಯೆನ್ಸ್’ನ ಹೆಸರು ನೋಡಿದಾಗಲೇ ನನಗೆ ಅರ್ಥವಾದದ್ದು – ನನಗೆ ಅಂದರೆ ನಮ್ಮ ಡಿಸೈನ್ ಪ್ರ್ಯಾಕ್ಟೀಸಿಗೆ ಒಂದು ರಾಷ್ಟ್ರೀಯ ಪುರಸ್ಕಾರ ಬಂದಿದೆಯೆಂದು! ಆ ಬಳಿಕ ಹತ್ತಾರು ಓರಗೆಯವರ ಕರೆಗಳು. ಖುಷಿಯ ಹಂಚಿಕೆ. ಸಂಜೆ ಐದರ ಸುಮಾರಿಗೆ ಅನೂಪ ಮೊದಲಿಗೆ ಕರೆದಾಗ ಮತ್ತೊಂದು ಅನಿರೀಕ್ಷಿತ ಕಾದಿತ್ತು. ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರಿಗೆ ಪಾಸ್ಥ್ಯುಮಸ್ ಲೈಫ್‌ಟೈಮ್ ಅವಾರ್ಡ್ ಕೊಟ್ಟಿದ್ದಾರೆ. ಅವರು ನಿನಗೆ ಗೊತ್ತಾ?’ ನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆ. ನನ್ನನ್ನು ಫಲಿಸಿದ ವೀರ್ಯವಂತನಿಗೆ ಮರಣೋತ್ತರ ಪ್ರಶಸ್ತಿ! ಸಮಗ್ರ ಜೀವಿತ ಸಾಧನೆಯನು? ಪರಿಗಣಿಸಿ!! ಅಮ್ಮನಿಗೆ ಕೂಡಲೇ ಫೋನಿಸಿದೆ. ಅವಳ ಸಂತೋಷದ ಎಣೆಯೊಳಗೆ ನಾನಿದ್ದೇನೆಯೆ ಅಂತ ಕೊಂಚ ಗುಮಾನಿಯಾಯಿತು. +– ೪ – +‘ಅಭೀ! ನನಗೆ ಇವೊತ್ತು ತುಂಬ ಖುಷಿಯಾಗಿದೆ ಗೊತ್ತಾ? ಅವರಿದ್ದಾಗ ಅವರಿಗೆ ಹೀಗೆಲ್ಲ ರೆಕಗ್ನಿಷನ್ ಬರಲೇ ಇಲ್ಲ. ಅದಕ್ಕಂತ ಅವರು ಹಪಹಪಿಸಿದವರೂ ಅಲ್ಲ. ಅವರಿದ್ದಿದ್ದರೆ ನಿನ್ನ ಬಗ್ಗೇನೂ ತುಂಬ ಹೆಮ್ಮೆ ಪಡುತ್ತಾ ಇದ್ದರು.’ ರಾತ್ರಿ ಊಟಕ್ಕೆ ಕುಳಿತಾಗ ಅಮ್ಮನೇ ಮಾತು ಹೆಕ್ಕಿದ್ದಳು. ‘ಯಾಕಿಷ್ಟು ಬೇಜಾರಿನಲ್ಲಿದ್ದೀ? ಖುಷಿಯಲ್ಲಿರಬೇಕು ನೀನು!‘ ನಾನು ಮಾತನಾಡಲಿಲ್ಲ. ’ಅವರನ್ನೆ ಹೊತ್ತುಕೊಂಡುಬಿಟ್ಟಿದ್ದೀ ಸ್ವಭಾವದಲ್ಲಿ. ತಿಂಗಳಿಗೊಮ್ಮೆ ಬರುತ್ತಿದ್ದರು. ಬರುವಾಗ ಜತೆಗೆ ಒಂದಷ್ಟು ಬೇಸರ ಹೊತ್ತು ತರುತ್ತಿದ್ದರು. ಕೊನೆ ಕೊನೆಗಂತೂ ಏನೂ ರುಚಿಸುತ್ತಿರಲಿಲ್ಲ ಅವರಿಗೆ.’ ನಾನು ಅಸಹನೆ ಸಿಡಿಸಿದೆ. ಔh ಒom! Wiಟಟ ಥಿou sಣoಠಿ iಣ ಠಿಟeಚಿse?! ಅಮ್ಮ ಮೇಜಿನ ಮೂಲೆಗೆ ಮುಖವನ್ನಾತುಕೊಂಡು ಮುಸುಮುಸುವಿನಲ್ಲಿ ತೊಡಗಿದಳು. ನಾನು ಅವಳನ್ನು ಸಮಾಧಾನಪಡಿಸಲಿಲ್ಲ. ವಾಸ್ತವದಲ್ಲಿ ನನ್ನ ಅಸಮಾಧಾನಕ್ಕೆ ನನ್ನಲ್ಲಿ ಯಾವ ಕಾರಣವೂ ಇರಲಿಲ್ಲ. +ಆ ರಾತ್ರಿಯ ಆಳದವರೆಗೆ ಇಂಟರ್‌ನೆಟ್‌ನಲ್ಲಿ ಹುದುಗಿದ್ದೆ. ಒಂದೂವರೆಯ ಸುಮಾರಿಗೆ ಶಶಾಂಕ ಕೆಲಿಫೋರ್ನಿಯಾದಿಂದ ಮೆಸೇಜ್ ಮಾಡಿ ಕೂಡಲೇ ಮೇಯ್ಲ್ ಚೆಕ್ ಮಾಡುವಂತೆ ಹೇಳಿದ. ಅವನ ಅಂಚೆಯೊಟ್ಟಿಗೆ ಮೂರು ಪುಟದ ಲಗತ್ತು ಇತ್ತು. ಅದು ಅಕ್ಷೋಭ್ಯ ಕಡಿದಾಳ್ ಬಗೆಗಿನ ಬರೆಹ. ಅದರಲ್ಲಿ ಸಿಕ್ಕ ಕೆಲವು ಮಾಹಿತಿ ಸುತ್ತಲಿನ ಉದಾಸದ ಕೋಶವನ್ನು ಹರಿದುಬಿಟ್ಟಿತು. ಹತ್ತೊಂಭತ್ತು ನೂರ ಐವತ್ತರ ಸುಮಾರಿನಲ್ಲಿ ದೇಶವಿನ್ನೂ ಆಧುನಿಕತೆಯ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಂತಹ ಸಂದರ್ಭ. ಕಾಂಕ್ರೀಟ್ ತಂತ್ರಜ್ಞಾನವನ್ನು ಅದರ ನೇರ ರೂಪದಲ್ಲಿ ದುಡಿಸಿಕೊಂಡ ಪ್ರಪಂಚದ ಕೆಲವೇ ವಿನ್ಯಾಸಕಾರರಲ್ಲಿ ಒಬ್ಬರು. ಪಶ್ಚಿಮ ಭಾರತದ ಮುಂಬಯಿಯ ಆಸುಪಾಸಿನಲ್ಲಿ ಕೆಲವಷ್ಟು ವಿನ್ಯಾಸಗಳ ರಚನೆ. ಗೋಲ್ಕೋನ್ ಹೆಸರಿನ ವಿದ್ಯಾರ್ಥಿ ವಸತಿಯ ವಿನ್ಯಾಸ ಸಂಪೂರ್ಣ ಕಾಂಕ್ರೀಟಿನಿಂದ ಮಾಡಲಾಗಿದ್ದು ಐವತ್ತು ವರ್ಷಗಳ ಬಳಿಕವೂ ಕಾಲಾತೀತವೆನಿಸುವಂತಹ ರಚನೆ. Iಣ is ಣimeಟess! ಊe ತಿಚಿs ಚಿ ಣಡಿue mಚಿsಣeಡಿ oಜಿ soಡಿಣs iಟಿ ಣhe subಛಿoಟಿಣiಟಿeಟಿಣ.. ಈತನ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳೂ ಕಡಿಮೆ… ಮತ್ತಿತರೆ, ಮತ್ತಿತರೆ… ಒಕ್ಕಣೆಯ ಕೊನೆಯಲ್ಲಿ ಒಂದು ಚಿಕ್ಕ ಅಡಿಬರೆಹ. ಸ್ಪೆಕ್‌ಟ್ರಂ ಫೌಂಡೇಷನ್ ಇವರ ಸಾಧನೆಯನ್ನು ಒಟ್ಟಾರೆ ಪರಿಗಣಿಸಿ ಅವರ ಎಲ್ಲ ಕೃತಿಗಳ ದಾಖಲಾಗಬೇಕೆಂದು ಒತ್ತು ಕೊಡುತ್ತದೆ. ನನಗೋ ಒಂದು ನಮೂನೆ ನವಿರೆದ್ದಂತಾಯಿತು. ಗೊತ್ತಿಲ್ಲದೆ ಕಣ್ಣುಕ್ಕಿದ್ದವು. ಅಟ್ಯಾಚ್‌ಮೆಂಟನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ತೆಗೆದುಕೊಂಡು ಮತ್ತೆ ಮತ್ತೆ ಓದಿದೆ. +ಈ ನಾಗರಿಕತೆಯ ಗಂಟಲಿನ ಹುಮ್ಮಸ್ಸನ್ನು ನೋಡಿ. ನಾಗಾಲೋಟದ ಭರದಲ್ಲಿ ತನ್ನನ್ನು ರೂಪಿಸಿದವರನ್ನೆಲ್ಲ ನುಂಗಿಬಿಡುತ್ತದೆ. ನೆನಪಿಗೆಂದೂ ತೇಗುವುದಿಲ್ಲ ಕೆಲವೊಮ್ಮೆ. ಅದೃಷ್ಟವಿದ್ದಲ್ಲಿ ಕೆಲವರು ತಮ್ಮ ಜೀವಿತದಲ್ಲಿಯೇ ದಂತಕತೆಯಾಗುತ್ತಾರೆ. ಕೆಲವರು ಸತ್ತ ಇಪ್ಪತ್ತು ವರ್ಷಗಳ ಬಳಿಕ ಅಚಾನಕ್ಕು ಬೆಳಕಿಗೆ ಬರುತ್ತಾರೆ. ಕೆಲವು ಗೆರೆಗಳಿಗೆ ವಾರಸುಗಳಿಲ್ಲ. ಅವು ಕಟ್ಟುವ ಆವರಣಕ್ಕೂ, ಅವುಗಳಾಚೆಗಿನ ಅರ್ಥಕ್ಕೂ… ಐiಟಿes- uಟಿಛಿಟಚಿimeಜ ಹಿಮಾಂಶುವಿನ ಸಾಲುಗಳು ನೆನಪಾದವು. +* +* +* +(೨೨ನೇ ಅಕ್ಟೋ?ರ್ ೨೦೦೧) +ಈ ಅಕ್ಷೋಭ್ಯ ಕಡಿದಾಳ್ ಎಂಬ ವ್ಯಕ್ತಿ ಎಲ್ಲಿಯವನು ಅಂತ ಎಷ್ಟೋ ಮಂದಿಗೆ ಗೊತ್ತಿರಲಿಲ್ಲವಂತೆ. ಮಾತು ಕಡಿಮೆ. ಎಷ್ಟು ಬೇಕೋ ಅಷ್ಟು. ತನ್ನ ಬಗ್ಗೆ ಯಾರೊಟ್ಟಿಗೂ ಹೇಳಿಕೊಂಡಿರದ ವ್ಯಕ್ತಿ. ಅಮ್ಮನಿಗೂ…. ಅಮ್ಮನ ಅಪ್ಪ ಸುಖ್‌ವೀರ್ ಸಿಂಗ್ ಬಾದಲ್ ದಿಲ್ಲಿಯಲ್ಲಿ ಹೆಸರಾಂತ ಉದ್ದಿಮೆದಾರನಿದ್ದಂತೆ. ತಾನು ಕಟ್ಟಲಿಕ್ಕಿದ್ದ ಹೊಸಮನೆಯ ವಿನ್ಯಾಸಕ್ಕೆ ದಕ್ಷಿಣದ ಆಕ್ಷೋಭ್ಯ ಕಡಿದಾಳ್‌ನನ್ನು ಅಪಾಯಿಂಟ್ ಮಾಡಿಕೊಂಡಿದ್ದು ನನ್ನ ಬದುಕಿನ ಕಥನಕ್ಕೆ ಪೀಠಿಕೆ. ಹತ್ತು ಸಾವಿರದ ಮುಂಗಡಕ್ಕೆ ರಸೀತಿಯನ್ನೂ ಕೊಡದೆ ಕಡಿದಾಳ್ ಆರು ತಿಂಗಳು ಸತಾಯಿಸಿದನಂತೆ. ಒಮ್ಮೆ ಒಳಗೊಳಗೇ ಆಗುತ್ತಿದ್ದ ಹಿಂಸೆಯನ್ನು ತಡೆಯಲಾರದೆ ಲೋನಾವಲಾಕ್ಕೆ ಫೋನು ಹಚ್ಚುತ್ತಿರುವಾಗ ಕಿಟಕಿಯಾಚೆಗಿನ ಅಂಗಳದ ಮೂಲೆಯಲ್ಲಿ ಅಕ್ಷೋಭ್ಯ ಒಬ್ಬನೇ ಕುಳಿತು ಏನೋ ಮಾಡುತ್ತಿರುವುದು ಕಣ್ಣಿಗೆ ಬಿತ್ತಂತೆ. ಸುಖ್‌ವೀರ್ ಆಚೆಗೆ ಬಂದವನೇ ಬಾಯಿಗೆ ಬಂದಂತೆ ಅಬ್ಬರಿಸಿದನಂತೆ. ಎರಡು ಮೂಟೆಗಳಷ್ಟು ಕಪ್ಪೆಚಿಪ್ಪನ್ನು ಸುರುವಿಕೊಂಡು ಕೈಕೆಲಸದಲ್ಲಿ ತೊಡಗಿದ್ದವನು ಇವನತ್ತ ಸುಮ್ಮನೆ ಒಮ್ಮೆ ಕೆಕ್ಕರಿಸಿಕೊಂಡು ನೋಡಿದ್ದಷ್ಟೆ. ಮರುಮಾತೇ ಇಲ್ಲ. ಎರಡು ಹಗಲು ಮೂರು ರಾತ್ರಿಗಳಲ್ಲಿ ಎಡೆಬಿಡದೆ ಕೈಗೂಡಿಸಿ ನಾಲ್ಕನೆಯ ಮುಂಜಾವಿನಲ್ಲಿ ತನ್ನ ಗಿರಾಕಿಯನ್ನು ಭೆಟ್ಟಿ ಮಾಡಿ ಕಪ್ಪೆಚಿಪ್ಪಿನಿಂದ ತೆಗೆದ ಅದ್ಭುತ ಕಲಾಕೃತಿಯನ್ನು ಕೊಟ್ಟು- ‘ಇಗೋ! ಇದಿನ್ನೂ ಶುರುವಾತು’ ಅಂತ ಕೈಕಟ್ಟಿ ನಿಂತಾಗ ಸುಖ್‌ವೀರ್‌ಗೆ ಮಾತೇ ಹೊರಳಲಿಲ್ಲವಂತೆ. ಇನ್ನೂ ಇಪ್ಪತ್ತೆರಡರ ಸುಮಾರಿನಲ್ಲಿದ್ದ ಜಸ್ ಪ್ರೀತ್ – ಸುಖ್‌ವೀರನ ಮಗಳಿಗೆ ಅಕ್ಷೋಭ್ಯನ ಕಲಾವಂತಿಕೆಗೆ ದಂಗುಬಡಿದಂತಾಯಿತಂತೆ. +ಓoಛಿಣiಟuಛಿಚಿ — ಶಂಖುವಿನ ಆಕೃತಿಯ ಅದರಲ್ಲಿ ಬೆಳಕು ಇಳಿಬಿಟ್ಟಿದ್ದೇ ಅದರ ರಂಧ್ರಗಳಿಂದ ಸೋರುವ ನೆಳಲಿನ ಚಿತ್ತಾರದಲ್ಲಿಯೇ ತನ್ನ ಭವಿಷ್ಯದ ಟಿಸಿಲುಗಳನು? ಕಂಡುಕೊಂಡಿದ್ದಳಂತೆ. +ಇವೆಲ್ಲ ನಡೆದದ್ದು ಮೂವ್ವತ್ತು ವರ್ಷಗಳ ಹಿಂದೆ ಅಂತ ಅಮ್ಮ ಸ್ಮೃತಿಯ ಹಂದರದಲ್ಲಿ ಆಗಾಗ್ಗೆ ಜೀಕುತ್ತಿರುತ್ತಾಳೆ. ನಮ್ಮ ಮನೆಯ ಹಜಾರದ ?ಳುಗೋಡೆಯ ಮೇಲೆ ಆ ದೀಪಶೃಂಖಲೆಯ ಆಳೆತ್ತರದ ಪಟವಿದೆ. ಅದು ಅಪ್ಪನೇ ತೆಗೆದ ಚಿತ್ರವಂತೆ. ಕಪ್ಪುಬಿಳುಪಿನ ಪಟ. ಒಳಗಿನಿಂದ ಒಡೆದ ಬೆಳಕಿನ ಚೆಲ್ಲಾಪಿಲ್ಲಿಯ ನೆರಳುಗಳಾಗಿ ಕಟ್ಟುವ ಸಂಯೋಜನೆ ಬೆರಗಿನದ್ದು. ಅಷ್ಟೇ ಜಟಿಲ ಸಹ. ‘ಅಕ್ಷೋಭ್ಯ ಈ ಬೆಳಕಿನ ಗುಡ್ಡೆ. ಇಲ್ಲಿನ ಛಾಯೆಯೆಲ್ಲ ನಾನು!’ ಅಮ್ಮ ಹೇಳುವಾಗ ಅವಳ ಕಣ್ಣುಗಳಲ್ಲಿ ಅದೇ ಬೆಳಗಿನ ತುಳುಕು. ಅದೇ ನೆಳಲ ಚಿತ್ತಾರ. ಅಷ್ಟೇ ಜಟಿಲವಾದದ್ದು. ಹಾಗೆ ನೋಡಿದರೆ ಅವಳ ಪ್ರೀತಿಯ ಜಾಡೂ ಅಷ್ಟೆ. ಮರದ ನೆರಳಿನ ಹಾಗೆ ಅಸ್ಪಷ್ಟ. ‘ನೆರಳಿದ್ದರಷ್ಟೆ ಬೆಳಕಿಗೆ ಬೆಲೆ, ಅಭೀ!’ ಎಂದು ತನ್ನ ಬದುಕೂ – ನೆರಳು ಬೆಳಕಿನ ಸರಣಿ ಅಂತ ಮತ್ತೆ ಮತ್ತೆ ಕಣ್ಣು ತುಂಬಿಕೊಳ್ಳುತ್ತಾಳೆ. ಒom, ಣheಡಿe is ಟಿo ಛಿಟಚಿimಚಿಟಿಣ ಜಿoಡಿ ಥಿouಡಿ ಟove – ಒom! Iಣs ಟiಞe ಚಿ bಚಿggಚಿge ಟeಜಿಣ behiಟಿಜ ಚಿಣ ಚಿ ಡಿಚಿiಟ sಣಚಿಣioಟಿ ಚಿಟಿಜ eಣeಡಿಟಿಚಿಟಟಥಿ uಟಿಛಿಟಚಿimeಜ!! ನಿನ್ನ ಪ್ರೀತಿಗೆ ವಾರಸೇ ಇಲ್ಲವಲ್ಲಮ್ಮಾ? ನನ್ನ ಹುಟ್ಟಿಗೂ ಸಹ…!!’ ನಾನು ಬಿಕ್ಕಿದ್ದಿದೆ. ಹಾಗಂದಾಗಲೆಲ್ಲ ಅಮ್ಮ ಜಟಿಲವಾದ ನೆಳಲು ಚೆಲ್ಲುತ್ತಾಳೆ. ತನ್ನ ಡಯರಿಯಲ್ಲಿ ಅವರು ಬರೆದು ಕೊಟ್ಟ ಪದ್ಯವೊಂದನು? ಮುಂದಕ್ಕೆ ಹಿಡಿಯುತ್ತಾಳೆ. ‘ಎಲೆಯ ವಂದರಿಯಲ್ಲಿ ಬಿಸಿಲಿನ ಜರಡಿ. ನುಣ್ಣನೆ ಬೆಳಕು ಮಣ್ಣಾಗುವ ಮೊದಲು ಸೆರಗೊಡ್ಡಿ ಕಟ್ಟಿಕೋ ತುಂಬ ಉಡಿಯಷ್ಟು. ಅದೋ ಕೊಬ್ಬಿದ ಮೋಡ ಬಿಸಿಲು ಮಾಚಿದರಂತೂ ನಿನ್ನ ಜೋಳಿಗೆ ತುಂಬ ನಾನು ಮಬ್ಬಿದ ಹಗಲು…’ ಹಾಳೆಯ ಮೇಲೆ ನನ್ನ ವಯಸ್ಸನ್ನೂ ಮೀರಿದ ಮಾಸಲು. ಸುಂದರ ಕೈ ಬರೆಹ. ಕೊನೆಗೆ ಅಕ್ಕಿ – ಎಂದು ಸಹಿ. ಸಹಿಯಲ್ಲಿ ಎಂಥದೋ ಉದಾಸ. ‘ಅವರಿಲ್ಲ ರುಜು ಮಾಡಿದ್ದು ಒಲ್ಲದ ಮನಸ್ಸಿನಿಂದ. ನನ್ನ ಒತ್ತಾಯಕ್ಕೆ. ಅವರ ಪದ್ಯ, his ತಿoಡಿಞ oಜಿ ಚಿಡಿಣ… ಕೊನೆಗೆ eveಟಿ his ಚಿಡಿಛಿhiಣeಛಿಣuಡಿe ಎಲ್ಲ ದಾಖಲನ್ನು ಮೀರಬೇಕು ಅಂತಲೇ ಅವರಿಗೆ ಇಷ್ಟ. ಪದ್ಯ ಬರೆಸಿಕೊಳ್ಳುವವರೆಗೆ ಮಾತ್ರ ನನ್ನದು. ಆಮೇಲೆ ನನ್ನದಲ್ಲ ಅಂತಾ ಇದ್ರು. ಅವರ ಕಟ್ಟಡಗಳ ದಾಖಲೆಯೇ ಅವರ ಹತ್ತಿರ ಇರಲಿಲ್ಲ. ಅವರ ಸಾವಿಗೂ ಅವರದ್ದೇ ಅಂತ ಪುರಾವೆಯಿರಲಿಲ್ಲ ಗೊತ್ತಾ?’ ವಿಚಿತ್ರವಲ್ಲವೆ? ನನ್ನ ಹುಟ್ಟಿಗೂ ನಾನು ಅವರಿಂದ ಅನ್ನುವ ಪುರಾವೆಯಿಲ್ಲ. +ನಾನು ಹುಟ್ಟುವಾಗ ಅಮ್ಮನಿಗೆ ಇಪ್ಪತ್ತೈದಾಗಿತ್ತಂತೆ. ಅವರಿಗೆ ಅರವತ್ತೆರಡು. ಹುಬ್ಬೇರಿತಲ್ಲವೆ? ನಾನು ಹುಟ್ಟಿದಾಗ ಅಮ್ಮನನು? ಆರೈಸುತ್ತಿದ್ದ ಮಿಷನರಿಯ ನನ್? ಅಮ್ಮನ ಜತೆಗಿದ್ದ ಅವರ ಚಿತ್ರವನು? ನೋಡಿ ನಕ್ಕಿದ್ದಳಂತೆ. ಔh! ಊe musಣ be ಚಿ ಡಿeಚಿಟ mಚಿಟಿ!! ಬಿನ್ನಿಸ್ಟನ್ ಗಾರ್ಡನ್ನಿನ ಬಲಮೂಲೆಯ ಚಿಕ್ಕ ಬಂಗಲೆಯಲ್ಲಿ ನಮ್ಮ ಆಗಿನ ಮನೆ. ನಾನು ಅಪ್ಪನನ್ನು ನೋಡಿದ್ದೇ ಕಡಿಮೆ. ತಿಂಗಳಿಗೊಮ್ಮೆ ಬಂದರೂ ಒಂದೋ ಎರಡು ದಿನಗಳ ಜತೆ ಅಷ್ಟೆ. ‘ಇರೋಣ ಅಂತಾನೇ ಬಂದದ್ದು. ಕೆಲಸದ ಒತ್ತಡ. ಲೋನಾವಾಲಕ್ಕೂ ಹೋಗಿ ಎಷ್ಟು ದಿನ ಆಯಿತು ಗೊತ್ತೆ? ಸರಿತೆಯೂ ಈಗೀಗ ನನ್ನನ್ನು ತುಂಬ ಹಚ್ಚಿಕೊಂಡು ಬಿಟ್ಟಿದ್ದಾಳೆ. ಉiಡಿಟs hಚಿve ಣo be mಚಿಡಿಡಿieಜ -ಅಂತ ಒಂದೇ ಸಮ ದುಂಬಾಲು. ಏನೋ ಜವಾಬ್ದಾರಿಯೆಲ್ಲ ಮುಗಿದ ಮೇಲೆ ನಿನ್ನ ಜತೆಯೇ ಉಳಿದ ಬದುಕು…’ ಆ ಬಾರಿ ಬಂದಾಗ ಅವರಂದದ್ದು ಮಸುಕಾಗಿ ನೆನಪು. ನನಗೆ ಆಗ ಹತ್ತು ವಯಸ್ಸು. ಅವರು ಹೊರಟು ನಿಂತಾಗ ನಾನು ಹಾಳೆಯ ಮೇಲೆ ಏನನ್ನೊ ಗೀಚುತ್ತಿದ್ದೆನಂತೆ. ಅವರು ಅದನ್ನು ನೋಡಿ ಏನನ್ನಿಸಿತೋ – ‘ಜಸ್! ನಿನ? ಮಗ ನನ್ನನ್ನೂ ಮೀರಿ ಬೆಳೆಯುತ್ತಾನೆ’ ಅಂತ ನನ?ನು? ಮುದ್ದಿಸಿ ಕಾಗದದ ಹಾಳೆಯನು? ಮಡಿಚಿ ಕೋಟಿನಲ್ಲಿ ಹಾಕಿಕೊಂಡಿದ್ದರಂತೆ. ನನಗೋ ಎಲ್ಲ ಮಸುಕು ಮಸುಕು. ನನ್ನ ವಯಸ್ಸು ಆಗ ಹತ್ತು ಇದ್ದಿರಬೇಕು…. +* +* +* +(೨೬ ಅಕ್ಟೋಬರ್ ೨೦೦೧) +ನಾನು ಡಯರಿನಲ್ಲಿ ಇವುಗಳನ್ನು ಬರೆದುಕೊಳ್ಳುವುದು ನನಗಾಗಿ ಅಷ್ಟೆ. ಇವೆಲ್ಲ ನಾನು ನನ್ನೊಟ್ಟಿಗೆ ನಡೆಸಿಕೊಳ್ಳುವ ತನಿಖೆ. ಕೆಲವಷ್ಟು ಉತ್ಖನನ. ಒಳಗಿನ ಆಳ ತಿಳಿಯಲು ಒಂದು ದಾರಿ. ಕೊರೆದಷ್ಟೂ ಆಳ. ಸಿಗುತ್ತಿಲ್ಲ. ಹಾಗಾಗಿ ತಳವಿಲ್ಲ. ಇದು ಯಾರಿಗಾದರೂ ಓದಸಿಕ್ಕಿದರೆ ಅಲ್ಲಿ ನನ್ನ ಯಜಮಾನಿಕೆಯಿಲ್ಲ. +ಅಮ್ಮ ಬೆಳಿಗ್ಗೆ ಅಪ್ಪನ ಸಾವಿನ ಬಗ್ಗೆ ಹೇಳಿದಳು. ಒಂದು ನಮೂನೆ ಝಿಲ್ಲೆಂದಿತು ಮನಸ್ಸು. ಅವರ ಬಗ್ಗೆ ಮೊದಲ ಸಲ ಮೌನ ಸೆಳಕಿತು. ಎಂಭತ್ತಮೂರರ ಏಪ್ರಿಲ್ಲಿನ ಆ ಭಾನುವಾರ. ಹೌರಾ ಸ್ಟೇಶನ್ನಿನ ಬೋಗಿಯೊಂದರಲ್ಲಿ ಒಂದು ಶವ ಸಿಕ್ಕಿತಂತೆ. ಸೂಟುಬೂಟು ಹಾಕಿಕೊಂಡಿದ್ದ ದೇಹ. ಸತ್ತು ನಾಲ್ಕು ದಿನವಾಗಿರಬೇಕು ಅಂತ ತಪಾಸಣೆಯ ವರದಿ. ಗುರುತಿಗೆ ಯಾವ ಸುಳಿವೂ ಇರಲಿಲ್ಲವಂತೆ. ಕೋಟಿನ ಮುಂಗಿಸೆಯಲ್ಲಿ ಒಂದು ಮಡಿಚಿದ ಕಾಗದದ ಚೌಕ ಸಿಕ್ಕಿತಂತೆ. ಅದರ ಮೇಲೆ ಟiಟಿe is ಟಿeveಡಿ oತಿಟಿeಜ – ಅಂತ ಕೈಬರೆಹ. ಅದರ ನಕಲುಗಳನ್ನು ಎಲ್ಲ ರೈಲ್ವೆ ಸ್ಟೇಷನ್ನುಗಳಲ್ಲಿ ಹಾಕಲಾಯಿತಂತೆ. ಜೇಜೇ ಸ್ಕೂಲಿನ ಸುದೀಪ್ತೋ ಮುಖರ್ಜಿ ಬೊರಿವಿಲ್ಲಿ ಸ್ಟೇಷನ್ನಿನಲ್ಲಿ ಅದರಲ್ಲಿನ ಬರೆವಣಿಗೆಯನ್ನು ನೋಡಿ – ಅಕ್ಷೋಭ್ಯ ಕಡಿದಾಳ್ ಅಂತ ಗುರುತು ಹಚ್ಚಿದರಂತೆ. ಒಂದು ತಿಂಗಳಿನ ಬಳಿಕ. +ನನ್ನೊಳಗಿನಿಂದ ಉಕ್ಕಿದ ಅಳಲನ್ನು ಹತ್ತಿಕಲಾಗಿಲ್ಲ. ಅಮ್ಮನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. +ಗೆರೆಗೆ ವಾರಸುಗಳಿಲ್ಲ. ನೋವಿಗೂ… +* +* +* +(೨೮ನೇ ನವೆಂಬರ್ ೨೦೦೧) +ಪ್ರಶಸ್ತಿ ಪ್ರದಾನ ಸಭೆಯಲ್ಲಿ ಡೀನ್ ಸಿಕ್ಕಿದ್ದರು. ನನನ್ನು? ನೋಡಿದವರೇ ಅಪ್ಪಿಕೊಂಡರು. ಅವರ ಕಣ್ಣುಗಳು ಮಬ್ಬಾಗಿದ್ದವು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’- ಲೈಫ್‌ಟೈಂ ಅಚೀವ್‌ಮೆಂಟ್ ಅವಾರ್ಡಿನ ಮರಣೋತ್ತರ ಪ್ರಕಟಣೆಯನ್ನು ಮಾಡಿದಾಗ ಶ್ರೀಮತಿ ಸರಿತಾ ಕಡಿದಾಳ್ ವೇದಿಕೆಗೆ ಹೋದರು. ಏನೋ ಮಾತನಾಡಿದರು. ಮಾತಿನ ತುಂಬ ಗದ್ಗದ. ಅದರಲ್ಲೂ ವಾರಸಿಕೆ. ಅಮ್ಮನ ಕಣ್ಣು ತುಂಬಿದ್ದವು. ಯಂಗ್ ಅಚೀವರ್ಸ್ ಅವಾರ್ಡಿನ ಸೈಟೇಷನ್ ಓದಿದಾಗ ಸಭೆ ನನ್ನ ಹೆಸರಿನ ಬಲವನ್ನು ಅಕ್ಷೋಭ್ಯ ಕಡಿದಾಳ್‌ರೊಟ್ಟಿಗೆ ತಾಳೆ ಹಾಕುತ್ತಿರಬಹುದೆ ಎಂಬ ಸಂದೇಹ. ಚಪ್ಪಾಳೆ ಎಲ್ಲವನ್ನೂ ಒತ್ತರಿಸಿ ಬಿಟ್ಟಿತ್ತು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’ ಅಂತ ಪ್ರಶಸ್ತಿಯನ್ನು ಪಡೆದ ಬಳಿಕ ಮೈಕಿನಲ್ಲಿ ಹೇಳಿದೆ. ಗೆರೆಗಳಿಗೆ ನೋಡಿ ಯಜಮಾನಿಕೆಯಿಲ್ಲ. +ಗೆರೆಗೆ ವಾರಸುಗಳು ಬೇಡ. ಹಾಗೇ ಈ ಟಿಪ್ಪಣಿಗೂ. +***** +ಕೃಪೆ: ಕನ್ನಡಪ್ರಭ-೨೨-೦೧-೨೦೦೬ +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […] +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_128.txt b/Kannada Sahitya/article_128.txt new file mode 100644 index 0000000000000000000000000000000000000000..2fcd2cfb86bdb4468bf06d8f1980b67607d955e0 --- /dev/null +++ b/Kannada Sahitya/article_128.txt @@ -0,0 +1,133 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸರಸ ಚಿಕ್ಕಿಯೊಡನೆ ಆ ಹೆಬ್ಬಾಗಿಲು ಹೊಗ್ಗುವಾಗ ‘ಓ ಅಲ್ಲಿ ಹೊಡಿ ಮಣಿ’ ಎಂಬ ಸ್ವರ ಕೇಳಿಸಿತು. ಪಕ್ಕ ಹಿಂದಿರುಗಿ ನನ್ನನ್ನು ನೋಡಿದಳು ಚಿಕ್ಕಿ. “ಅಗ! ಮೀನಾಶ್ಚತ್ತೆ ಕತಿ! ಈಗೆಲ್ಲ ಇಷ್ಟೇ”-ಎಂಬಂತೆ. ಮುಖದಲ್ಲಿ ದುಃಖವೇನೂ ಇರಲಿಲ್ಲ. ಸಣ್ಣದೊಂದು ನಗೆ ಇತ್ತು. ‘ಆಚೆ ಹೋದ’ ಜೀವದ ‘ಈಚೆ ಸ್ವರ’ವನ್ನು ಹೆದರುತ್ತ ಹಿಲುಗಾರಿಕೆ ಮಾಡಿದಂತೆ. +ದೊಡ್ಡ ಅಂಗಳ ದಾಟಿ ಚಾವಡಿಗೆ ಬಂದೆವು. +ಒಂದು ಮೂಲೆಯಲ್ಲಿ ಹಾಸಿಗೆ ತುದಿಯಲ್ಲಿ ಕುಳಿತಿದ್ದರು ಮೀನಾಕ್ಷತ್ತೆ. ಎಂಥ ಚಾವಡಿ-ಕಳೆದ ಜೀವಗಳ ದೊಡ್ಡ ದೊಡ್ಡ ಪೋಟೋ, ಗೋಡೆಗೆ ಅಂಟಿಕೊಂಡು ಮುಂದೆ ನೀಡಿಕೊಂಡ ಕೊಂಬುಗಳು. ಜಿಂಕೆಯದು ಕಾಡುಕೋಣದ್ದು – ಹುಲಿ ಚರ್ಮ, ಮತ್ತೆ ಯಾವ ಕಾಲದ್ದೋ ಫ್ರೇಂ ಹಾಕಿ ಇಟ್ಟ ಒಂದು ಕ್ಯಾಲೆಂಡರ್‍ ಸುಂದರಿ. ಕೆಳಗೆ ಮೀನಾಕ್ಷತ್ತೆ ಕೂಗುತ್ತಿದ್ದರು. +“ಓ ಅಲ್ಲಿ – ಪಡು ಹೆಬ್ಬಾಗಿಲ ಅಜ್ಜಯ್ಯ ಬಂದಿದ್ರ್‍ ಕಾಣ್. ಈಗ ಯಾಕೆ ಬಂದ್ರಿ? ಬಂದ್ ದಾರಿಗೆ ಸುಂಕ ಇಲ್ಲೆ, ನಡೀನಿ ಅನ್” +ಮಾಣಿ ಪಕ ಪಕ ನಕ್ಕಿತು. “ಅಲ್ಲಿ ಅಜ್ಜಯ್ಯ ಇಲ್ಲೆ ಅಜ್ಜಿ-ಬೇರೆ ಯಾರೋ ಬಯಿಂದೋ-” ಅಂತು. +ಒಳಗಿಂದ ಸ್ವರ ಕೇಳಿತು. “ಮಾಣಿ ಪ್ರಕಾಶ, ಅಜ್ಜಿ ಹತ್ರ ಯಂತ ತರ್ಕ ಮಾಡ್ತೆ? ಅವರು ಹೇಳಿದ ಹಾಂಗೆ ಕೋಲು ಬೀಸುಕಾತ್ತಿಲ್ಯ?” +ತಲೆ ಎತ್ತಿ ನೋಡಿದರೆ ಮುಚ್ಚಿಗೆಯಲ್ಲಿ ಚಾಪೆ ಇಡುವ ಅಡ್ಡ. ಆ ಚಾಪೆಗಳ ಮೇಲೆ ಯಾರೆಲ್ಲ ಕೂತೆದ್ದು ಹೋದರೋ. ಈಗಂತೂ ಗಿಲಿಗಿಲಿ ಅವಸ್ಥೆ. ಎದುರು ಒಂದು ಕಂಡಿ ಇದೆ. ಅದರೊಳಗೆ ಇಣುಕಿದರೆ ದೇವರ ಕೋಣೆ. “ದೇವರ ಪೂಜೆ ಆಪತಿಗೆ ನಾವೆಲ್ಲ ಇಲ್ಲಿಂದ್ಲೇ ನೀಕುತ್ತಿದ್ದದ್ದು. ನೀನೂ ಇಣುಕು. ‘ಮನೆ ದೇವರು’, ಅಡ್ಡಬೀಳು.” ಎಂದಳು ಸರಸ ಚಿಕ್ಕಿ. +ನಾ ಇಣುಕಿದೆ. ಒಳಗೆ ಮರದ ಗೂಡಲ್ಲಿ ದೇವರು ತುಂಬಿಹೋಗಿತ್ತು. ಬೆಳಿಗ್ಗೆ ಪೂಜೆ ಮಾಡಿ ಹೋದದ್ದು ಹೋದ ಹಾಗೆಯೇ ಇತ್ತು. ನಿತ್ಯದ ಹಿತ್ತಾಲೆ ಆರತಿ ತಟ್ಟೆಯೂ. “ಶ್ಶೀ, ನೀ ಏನೇ ಹೇಳು. ಮುಂಚಿನ ಗಂಡಸ್ರ್‍ ಗಮ್ಮತಿಗೆ ಗಮ್ಮತೂ ಹೊಡೀತಿದ್ದೊ. ಪೂಜೆಗೆ ಪೂಜೆಯೂ ಮಾಡ್‌ತಿದ್ದೊ. ಈಗಿನವು ಯಂತಕ್ಕೂ ಆಗ. ಇದು ಅಪ್ಪಣ್ಣಯ್ಯನ ಕಾಲದ ದೇವರ ಕೋಣೆಯಾ?” ಎನ್ನುತ್ತಾ ಹಿಂಗಾಲು ಕತ್ರಿಯಿರಿಸಿ ಈಚೆಯಿಂದಲೇ ಅಡ್ಡಬಿದ್ದಳು ಚಿಕ್ಕಿ. ನಾನೂ. +“ಮಣಿ, ನಿಂಗ್ ಕಾಂತಿಲ್ಯ ಹಂಗರೆ? ಎಲ್ಲ ಬಂದ್ ಪಾಗಾರದ ಮೇಲೆ ಕೂತಿದ್ದೋ. ವಿಶಾಲು, ಗಿರಿಜಾಮಣಿ, ಕಾಶಿ, ಗುಲಾಬಿ… ಹೇಳು ಅವ್ರಿಗೆಲ್ಲ. ಅಜ್ಜಿಯನ್ನು ವಾಪಸು ಕಳ್ಸಿ ಆಯ್ತು ಅಂತೆಳಿ. ಕಾಶಿ ಊರು ಬಿಟ್ಟವಳು ಎಲ್ಲಿಗೆ ಹೋದ್ಲ್? ಸೀದಾ ಲಂಕಾ ಪಟ್ಣಕ್ಕೇ ಹಾರಿಳಾ-ಕೇಣ್ ಮಣೀ-” +“ಅತ್ಯಾ ಅದು ಯಾವ್ ಕಾಲದ್ ಕತಿ ತೆಕ್ಕಂತ್ರಿ? ಸುಮ್ನೆ ಮನ್ಕಣಿ ಕಾಂಬೋ. ದಿವ್ಸ ಹೋದ ಹಾಂಗೆ ಮರ್‍ಳ್ ಹರ್‍ಕಂಡ್ ಬೀಳತ್ತಾ ಕಾಂತ್-” – ಸೊಸೆಯ ಸ್ವರ ಮತ್ತೆ. +ಪ್ರಕಾಶಮಾಣಿ ಬಾಯಿ ತೆರೆದು ನಿಂತೇ ಇದ್ದದ್ದು ಮತ್ತೆ ಹೇಳಿತು. “ಅಜ್ಜೀ, ಯಾರೋ ಬಯಿಂದೋ-” +ಯಾರ್‍? ಯಾರ್‍ ಕೇಣ್. ನೀನ್ಯೆಂಥ ಗಂಡ್ಸ್ ಮತ್ತೆ!” +ಸರಸ ಚಿಕ್ಕಿ ಹೋಗಿ ಮೀನಾಕ್ಷತ್ತೆಯ ಎದುರು ಕುಳಿತು “ನಾನಲ್ದ ಮೀನಾಶ್ಚತ್ತೆ? ಸರಸ” ಎಂದಳು. +ಮೀನಾಕ್ಷತ್ತೆಯ ಕಣ್ಣು ಮಂದ ದೀಪದಂತೆ ಬೆಳಗಿತು. ಸರಸ ಚಿಕ್ಕಿಯ ತಲೆ ಬೆನ್ನು ಎಲ್ಲ ಸವರಿ “ಹೌದಲೆ! ಸರಸ! ಇಷ್ಟು ದಿವ್ಸದ್ ಮೇಲೆ ಬಪ್ಪ ಅಂತೆಳಿ ಕಾಂತಾ ಹೆಣೆ ನಿಂಗೆ? – ಅದ್ಯಾರ್‍ ನಿನ್ನೊಟ್ಟಿಗೆ?” +“ಕೊಕ್ಕರ್ಣೆ ಮಾವಯ್ಯನ್ ಮಗಳು. ನಿಮ್ಮನ್ನೆಲ್ಲ ಕಾಣ್ಕ್ ಅಂದ್ಲ್. ಕರ್‍ಕಂಡ್ ಬಂದೆ” +“ಬಾಳ ಸಾಪಾಯ್ತ್. ಕೂಕೋ ಮಗ. ನಿನ್ ಹೊಸರು ಯಂತ? ಅಬ್ಬೆ ಅಪ್ಪ ಎಲ್ಲ ಹುಶಾರಾ?-” ಮಾತಾಡುತ್ತ ಆಡುತ್ತ ಮೀನಾಶ್ಚತ್ತೆ ಥಟೆಂತ ಕಂಬಕ್ಕೊರಗಿ ಕಿವಿಗೆ ಕಡ್ಡಿ ಹಾಕಿ ರೊಂಯ್ಯ ತಿರುಗಿಸುತ್ತ ಹಾಯೆಂಬಂತೆ ಬಾಯಿ ವಾರೆ ಮಾಡಿಕೊಂಡು ನಮ್ಮನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದ ಪ್ರಕಾಶ ಮಾಣಿಯತ್ತ ತಿರುಗಿ. +“ಆಗ ಮಣಿ-ಅಲ್ಲಿ ಅ ಮೂಲೆಯೊಳ್ಗೆ! ಶೂ-ಓಡ್ಸು” ಪ್ರಕಾಶ ಮಾಣಿ ಹಿಡಿ ಕಡ್ಡಿ ಬಿಸುಟು ಹತ್ತಿರದಲ್ಲಿಟ್ಟುಕೊಂಡ ಕೋಲನ್ನೆತ್ತಿಕೊಂಡು ಬಾಲ ಎತ್ತಿಕೊಂಡು ಓಡುವ ಕರುವಿನಂತೆ ಓಡಿತು. ಗಾಳಿಯಲ್ಲಿ ಕೋಲು ಬೀಸಿತು. ಓಡಿ ಬಂತು. ಅತ್ತ ನೋಡಿದರೆ ಯಾರೂ ಇರಲಿಲ್ಲ. ಅಷ್ಟೊತ್ತಿಗೆ ಸೊಸೆ ಹೊರಗೆ ಬಂದಳು. +ಕೈಯಲ್ಲಿದ್ದ ಮಗು ಎಂತದೋ ಕಚ್ಚಿಸಿಕೊಂಡು ಬೊಬ್ಬೆ ಹೊಡೆಯುತ್ತಿತ್ತು. ಅದನ್ನು ನೀವುತ್ತ “ಕಟ್ಟೆ ಕಚ್ಚಿತಾ ಕಾಂತ್-ನೀವು ಈಗ ಬಪ್ಪ ಭರವ? ಇದ್ ಯಾರು?” ಅಂದೆಲ್ಲ ಸ್ನೇಹದ ನಗೆ ಬೀರಿದಳು. “ಬರೀ ನೆಲದ ಮೇಲೆ ಕೂಕಂಡಿದ್ರ್‍ಯಲೆ!” ಎನ್ನುತ್ತಾ ಚಾಪೆ ಅಡ್ಡದಿಂದ ಒಂದು ಚಾಪೆ ಎಳೆಯಹೋದಳು. ನಾವು ಬೇಡ ಅಂದದ್ದೇ ಕೈ ಬಿಟ್ಟಳು. ಸರಸ ಚಿಕ್ಕಿ ಬರಲಿಕ್ಕೆ ಮುಂಚೆ ಹೇಳಿದ್ದು ಸಮನೆ. ಗಂಟೆ ಹನ್ನೊಂದಾದರೂ ಮೈ ಮುಖ ಚೊಕ್ಕ ಮಾಡಿಕೊಂಡಂತೆ ಕಾಣುತ್ತಿರಲಿಲ್ಲ. ಮನೆ ಕೆಲಸದ ಮೇಲೆಯೇ ಬಿದ್ದುಕೊಂಡಂತೆ ಇದ್ದಳು. “ಹೈತ್, ನಮ್ ಮೇಲೆ ಕೆಲ್ಸ ಇತ್ತ, ಕೆಲ್ಸದ ಮೇಲೆ ನಾವಾ?” ಎಂದು ನನ್ನನ್ನು ಗುಟ್ಟಲ್ಲಿ ಚಿವುಟಿದ ಸರಸ ಚಿಕ್ಕಿಯ ಗುಣುಗಿಗೆ ಸರಿಯಾಗಿ ಸೊಸೆ ತಾರಾಮತಿಯೂ ನುಡಿದಳು. +“ಯಲ್ಲರಿಗೂ ಮನೆ ಕೆಲ್ಸ ಮುಗೀತ್ತಂಬ್ರಪ್ಪ. ನಂಗೊಬ್ಳಿಗೆ ಮುಗಿಯುವುದಂತೆಳಿ ಇಲ್ಲೆ. ಮಾಡತ್ ಯಂತ ಕೇಂತ್ರಿಯಾ? ಯಂತದೂ ಇಲ್ಲೆ. ಈಗ ಇದೊಂದ್ ಮಾಣಿ ಹಟ ತೆಕ್ಕಂತಲೆ!”- ಎನ್ನುತ್ತಾ ಅದನ್ನು ತಿವಿದಳು. ಅದು ಇನ್ನಷ್ಟು ಜೋರು ಹಟ ಹರಡಿಕೊಂಡಿತು. “ಏ ನಾಗೂ ಬಾ ಇಲ್ಲಿ, ಇದನ್ನ ಆಚೆ ಕರ್‍ಕಂಡ್ ಹೋಗ್”-ಎನ್ನಲು ನಾಗ ಎಂಬವಳು ಬಂದು ಮಗುವನ್ನು ಆಚೆಗೆ ಕರೆದುಕೊಂಡು ಹೋದಳು. “ಕೂಕಣಿ….ಕಾಫಿ ಮಾಡುದಾ ಬೊಂಡ ತೆಗ್ಸುದಾ? ಊಟಕ್ಕೆ ಮನೆಗೇ ಹೋಯ್ಕೋ ಏನೋ ಅಲ್ದಾ?” +-ಅಡ್ಡಿಲ್ಲ, ಹೆಣ್ಣು ಒಳ್ಳೆಯ ಉಪಚಾರವನ್ನೇ ಮಾಡುತ್ತಿದೆ ಎಂಬಂತೆ ನಕ್ಕಳು ಸರಸ ಚಿಕ್ಕಿ. ಒಳಗೆ ಸರಿಯುವ ತಾರಾಮತಿಯ ಹೆಜ್ಜೆಗಳಲ್ಲಿ ಉಮೇದಿನ ಕೆತ್ತೆ ಸಹ ನನಗೆ ಕಾಣಲಿಲ್ಲವಾಗಿ ಸರಸ ಚಿಕ್ಕಿಯಷ್ಟು ಸಲೀಸಾಗಿ ನನಗೆ ನಗಲಾಗಲಿಲ್ಲ. +* * * * +ಅಪ್ಪಣ್ಣಜ್ಜಯ್ಯನ ಮನೆ ಉಪಚಾರ ಈ ಮಟ್ಟಕ್ಕೆ ಬಂದು ನಿಂತಿತೇ? ದೊಡ್ಡಮ್ಮ ಹೇಳಿದ ಚಿತ್ರ ಆಗಲೇ ಮಸುಕಾಗಿತ್ತು…. +ಅಪ್ಪಣ್ಣಜ್ಜಯ್ಯನ ಮನೆಯೆಂದರೆ ಯಾರು ಬಂದರೂ ಹೆಚ್ಚಲ್ಲ, ಹೋದರೆ ಕಡಿಮೆಯಲ್ಲ, ಬಂದು ಚಾವಡಿಯಲ್ಲಿ ಹಾಸಿದ ಚಾಪೆಯಲ್ಲಿ ಕುಳಿತರೆಂದರೆ ಕಾಟು ಮಾವಿನಹಣ್ಣಿನ ಪಾನಕವೋ, ಕಸೆ ಹಣ್ಣಿನ ಹೋಳೋ, ಬೆರೆಸಿದ ಮಜ್ಜಿಗೆಯೋ, ನೀರು ಮತ್ತು ಬೆಲ್ಲವೋ, ಕಾಫಿ ಮತ್ತು ಹುರುಳಿ ಹಪ್ಪಳವೋ…. ಆಯಾಯ ಕಾಲಕ್ಕೆ ತಕ್ಕಂತೆ ಬಂದವರೆದುರು ಬರುತ್ತವೆ. ಊಟಕ್ಕೇಳಿ ಎಂಬ ಉಪಚಾರ ಬೇರೆ. ಮೀನಾಕ್ಷತ್ತೆ ಮನೆಯ ಈ ಸಂಪ್ರದಾಯವನ್ನು ಪಾಲಿಸಿಕೊಂಡೇ ಬಂದವಳು. ಪಾಲಿಸಿಕೊಂಡು ಬಂದದ್ದು ಇದು ಮಾತ್ರವೇ? ಅಲ್ಲ, ಮನೆಯಲ್ಲಿ ಎಷ್ಟು ದೊಡ್ಡ ವಿಶೇಷಗಟ್ಟಲೆಗೂ ಸಾಕಾಗುವಷ್ಟು ಪಾತ್ರೆಗಳಿವೆ. ಅಲ್ಲದೆ….ಓಬೀರಾಯನ ಕಾಲದ ಒಂದು ಆರತಿ ತಟ್ಟೆಯೂ, ದಿನನಿತ್ಯದ ಬಳಕೆಗೆ ಯಾವುದು ಬೇಡವೋ ಅದೆಲ್ಲವೂ ಊರ ಉಪಕಾರಕ್ಕೆ ಎಂಬುದನ್ನೂ ಪಾಲಿಸಿಕೊಂಡು ಬಂದಾಕೆ. ಯಾರು ಯಾವ ಹೊತ್ತಿಗೆ ಬಂದು ಕೇಳಿದರೂ ಕೊಡುವುದೇ ಹೆಗ್ಗಳಿಗೆ ಎಂದು ತಿಳಿದವಳು. +ಒಂದು ಬೆಳ್ಳಿ ಆರತಿ ತಟ್ಟೆಯಂದರೆ….! ಅದರ ಕುಸುರಿ ಗೋಪುರಗಳು, ತಲೆಯ ಮೇಲೊಂದು ನಕ್ಷತ್ರ ಹರಳು, ನುಣುಪಾಗಿ ಒಪ್ಪವಾಗಿರುವ ಸುಳಿಯುಂಡೆಗಳು… ನೋಡಲು ಎರಡು ಕಣ್ಣು ಎತ್ತ ಸಾಕು? ಊರಿನ ಸೊಸೆಯಂದಿರೆಲ್ಲ ಅಂತಹದೊಂದು ತಟ್ಟೆ ತಮ್ಮ ಮನೆಯಲ್ಲಿದ್ದಿದ್ದರೆ ಎಂದು ಆಸೆಪಟ್ಟವರು. ಅಗ್ಗ ಸುಗ್ಗಿಯ ಕಾಲದಲ್ಲಿ ಅಷ್ಟನ್ನು ಮಾಡಿಸಿಡದ ತಮ್ಮ ಅತ್ತೆ ಮಾವ ಬರೀ ಬೂಸು ಎನ್ನುತ್ತ ಮಾಡಿಸಿಟ್ಟುಕೊಳ್ಳಬೇಕೆಂಬ ಬಯಕೆಯನ್ನು ಗಂಡಂದಿರ ಹತ್ತಿರ ಕೊಡವಿದವರು…. ಆದರೆ… +“ನಮ್ಮ ಕಾಲದ ಗಂಡಸರು ಈ ಕಾಲದ ಗಂಡಸರ ಹಾಂಗ? ಈಗಿನವು ಯಂತ ಕ್ಕಾಪೊ? ಹೆಂಡ್ರ್‍ ಹಲ್ಲು ಚಿರಿದ್ರೆ ತಾವೂ ಚಿರಿತೋ. ಸಾಲ ಸೋಲ ಮಾಡಿಯಾರೂ ಹೆಂಡ್ರ್‍ ಕೇಂಡದ್ ತಂದ್ ಹಾಕ್ತೊ….ಆಗಿನ ಗಂಡಸ್ರ್‍ ಸತ್ಯಕ್ಕೂ ಗಂಡಸ್ರೇ….” ದೊಡ್ಡಮ್ಮ ಹೇಳಿದ್ದಳು. ಯಾಕೆಂದರೆ ಹೆಂಡಂದಿರ ಮಾತಿಗೆ “ನಿಮಗೆಲ್ಲ ಯಂತ ಗೊತ್ತಿತ್ತಂತೆಳಿ ಬೇಕಲೆ. ಅದ್ಯೇನ್ ಸ್ವಲ್ಪದುಡ್ಡಿಂದ?” ….ಎಂದು ಕೆಲವರೂ “ಕಾಂಬ, ಕಾಂಬ, ಮನಿ ಉಸಾಬರಿ ನಿಮ್ಮ ಕೈಯಾಗ್ ಕೊಟ್ಟದ್ ಯಾರ್‍? ನಾನಿದ್ದೆ, ಕಂಡ್ಕಂತೆ” ಎಂದು ಮತ್ತೆ ಕೆಲವರೂ “ನಿನ್ ಅಪ್ಪ್‌ನ ಮನಿಯಿಂದ ತಂದ ಬೆಳ್ಳಿ ಇದ್ದಿದ್ರೆ ಈ ಕ್ಷಣ ಮಾಡಿಸ್ತಿದ್ದೆ”-ಎಂದು ಇನ್ನೂ ಕೆಲ ಗಂಡಸರೂ ಬರೆ ಕೊಟ್ಟದ್ದುಂಟು. +ಸಂಪಾದನೆಯೆನ್ನುವುದು ಕೇವಲ ಗಂಡಸೊಬ್ಬನಿಂದಲೇ ನಡೆದು ಮನೆ ವಾರ್ತೆಯ ರಥ ತಾನಿಲ್ಲದಿದ್ದರೆ ನಿಂತಲ್ಲೇ ನಿಲ್ಲುತ್ತದೆ ಎಂಬುದನ್ನು ಕಂಡುಕೊಂಡ ಯಾವ ಗಂಡಸೂ ಹುಲುಮೀಸೆಗೂ ಹುರಿ ಕೊಟ್ಟಾನು. ಸ್ಥಿತಿ ಹೀಗೇ ಇದ್ದದ್ದೇ ಹೌದಾದರೆ ಯಾವ ಕಾಲಕ್ಕೂ ಪ್ರಪಂಚದ ಯಾವ ಮುಲ್ಲೆಗೆ ನಡೆದರೂ ಗಂಡಸು ಹಾಂಗೇ ಹೆಂಗಸು ಹೀಂಗೇ ಅಂತೆಲ್ಲ ದೊಡ್ಡಮ್ಮನ ಹತ್ತಿರ ಹೇಳಿದರೆ ಅವಳು ಕೇಳುವವಳಲ್ಲ. ಅವಳ ಮಟ್ಟಿಗೆ ಹೆಂಗಸೆಂದರೆ ಆರತಿ ತಟ್ಟೆಯಂತೆಯೆ. ಎತ್ತಿದವರು ಹೇಳಿದಂತೆ ಸುತ್ತು ಹೊಡೆಯುವುದು ಮಾತ್ರ. ಸ್ವಂತ ಬುದ್ಧಿ ಸಲ್ಲ. “ಮಗೂ ಮೀನಾಶ್ಚತ್ತೆ- ಹಾಂಗಿದ್ದದ್ದಕ್ಕೆ ಗಂಡನ ಹತ್ತಿರ ಒಂದ್ ಜಗಳ ಮಾಡ್ಲಿಲ್ಲೆ, ಮಿಣ್ಣಗೆ ಅವಳಿಗಂತವೇ ಇದ್ ಕೆಲ್ಸ ಮಾಡಿಳ್, ಸುಮ್ನೆ ಕೂಕಂಡ್ಲ್”… ಮತ್ತೆ ತಟ್ಟಯನ್ನು ಒರೆಸಿಡುತ್ತಿದ್ದ ಕಾಶಿ-? +ಆರತಿ ತಟ್ಟೆಯನ್ನು ಕೇಳಲು ಯಾರು ಬಂದರೂ ಕಾಶಿಗೆ ಹೊರಗಿಣುಕದೆ ತಡೆಯದು. ಮೀನಾಕ್ಷತ್ತೆ ಜಾಗ್ರತೆಯಿಂದ ಖಾಕಿ ಚೀಲದೊಳಗೆ ಬಿಳಿ ಮಲ್ಲಿನಲ್ಲಿ ಮುಚ್ಚಿಟ್ಟ ಗಂಟನ್ನು ಅವರಿಗೆ ಹಸ್ತಾಂತರಿಸುವಾಗ ಹಿಂದು ಮುಂದಿಲ್ಲದ ಒಂದು ನಗೆಯಾಡುವವಳು ಕಾಶಿ. ಎಷ್ಟೋ ಸಲ ಮೀನಾಕ್ಷತ್ತೆ “ಅದ್ಯೆಂತ ಹಸೀ ಹಾದರಗಿತ್ತಿ ನಗಿ!” ಅಂತ ಹೇಳಿ ಗದರಿಸಿದ್ದುಂಟು, ಮೀನಾಕ್ಷತ್ತೆ ಗಂಟು ಸಮೇತ ಕೊಟ್ಟರೆಂದರೆ ಬಂದವರು ಅದನ್ನು ಬಿಚ್ಚಿ ಎಲ್ಲ ಸರಿಯುಂಟೇ ಕಾಂಬವರಲ್ಲ. ಮತ್ತೆ ವಾಪಾಸು ಬಂದ ಮೇಲೆ ಮೀನಾಕ್ಷತ್ತೆಯೂ ಕಾಂಬವರಲ್ಲ, ಪಡಸಾಲೆಯಲ್ಲಿ ಸದ್ಯಕ್ಕೆ ಒಂದು ಮರದ ಕಪಾಟಿನೊಳಗೆ ಸ್ವಲ್ಪ ದಿನ ಇದ್ದು ಕೈ ಬಿಡುವಾದಾಗ ಒರೆಸಿ ಚಿನ್ನ ಬೆಳ್ಳಿಯ ಟ್ರೆಜರಿಯಲ್ಲಿಡುವುದು ರೂಢಿ. ಹಾಗೆ ಒರೆಸಿಡುವ ಕೆಲಸವನ್ನು ಎಷ್ಟೋ ಸಲ ಕಾಶಿಯೇ ಮಾಡಿದ್ದುಂಟು. ಆಗ ಆಕೆ ಅದರೊಡನೆಯೇ ಮಾತಾಡಿದಂತೆ ಕಟ್ಟಿದ ಹಾಡುಗಳು ಎಷ್ಟೋ. ಆದರೆ ಕಾಶಿಯ ಹಾಡುಗಳನ್ನು ಯಾರೂ ಮದುವೆ ಮನೆಗಳಲ್ಲಿ ಹಾಡುವುದಿಲ್ಲ. “ಯಾಕೆಂದ್ರೆ ಅವೆಲ್ಲ ಬರೀ ಭಂಡು ಹಾಡುಗಳು…. ‘ಗಂಡನ ಕೊಳ್ಳಲು ಬೇಕು ಆರತೀ…ನೀನು ಮಿಂಡಽಗೆಂದೂ ಬೇಡ ಆರತೀ’…ಹೀಂಗಿಂದೇ” +-ಎಲ್ಲ ದೊಡ್ಡಮ್ಮನ ಪುರಾಣ. +* * * * +ಮೀನಾಕ್ಷತ್ತೆ ನಮ್ಮನ್ನೇ ಬಿಳೀಗಣ್ಣುಗಳಿಂದ ನೋಡುತ್ತಿದ್ದರು. ತುಟಿ ಆಗ ನೋಡಿ ನಕ್ಕದ್ದು ಈಗಲೂ ಉದ್ದವಾಗಿ ಹಾಗೆಯೇ ಇತ್ತು. ನಗೆ ಮುಗಿದುದರ ಅರಿವೇ ಇಲ್ಲದಂತೆ. ಈಗ ಅರಿವು-ಮರೆವಿನ ಸಮ್ಮಿಶ್ರವಾಗಿರುವ ಈ ಮೀನಾಕ್ಷತ್ತೆಯನ್ನು ಬಿಟ್ಟಗಣ್ಣಿಂದ ನೋಡುತ್ತಿದ್ದ ಹಾಗೆ ಸರಸ ಚಿಕ್ಕಿ ನುಡಿದಳು. “ಈ ಮೀನಾಶ್ಚತ್ತೆಯ ಅಣ್ಣ ಬಹಳ ದೊಡ್ಡಜನ. ಮಿಲ್ಟ್ರಿಯಲ್ಲಿ ಡಾಕ್ಟ್ರ್‍ ಆಯಿದ್ರ್‍… ಅವಾಗೆಲ್ಲ ಹಾಂಗೇಯಲೆ. ಹೆಣ್ಮಕ್ಳನ್ನ ಎಲ್ಲಿ ಶಾಲೆಗೆ ಕಳಿಸ್ತಿದ್ದೋ? ಹಾಂಗಂದ್ ಮೀನಾಶ್ಚತ್ತೆಯ ಯೋಗ್ಯತೆಯೇನು ಕಡೆಮೆಯ? ಎಲ್ಲಿ ಹೋದ್ರೂ ಆರ್ತಿ ಎತ್ತುಕೆ ಮೀನಾಶ್ಚತ್ತೆಯೇ ಆಯ್ಕ್. ಅಂಥಾ ಸಿರಿ ಮುತ್ತೈದೆ. ತಟ್ಟೆಯೂ ಹ್ಯಾಂಗೂ ಅವಳ ಮನೇದೇ ಅಲೆ! ನಾ ಕಂಡದ್ದೆ ಅದನ್ನ. ಒಂದು ತಟ್ಟೆ ಅಂದ್ರೆ! ಈ ಭಾರ!” ಹೇಳುತ್ತಿದ್ದಂತೆ ಭಾರವಾಗಿ ಅಂಗೈಯನ್ನು ಗಾಳಿಯಲ್ಲಿ ಎತ್ತಿ ಇಳಿಸಿದಳು. +ಹೋದಲ್ಲಿವರೆಗೂ ಆರತಿ ಮಾಡುವವಳೂ ಇವಳೇ. ಆರತಿ ತಟ್ಟೆಯೂ ಇವಳದೇ ಎಂದರೆ? ಹಾಗೆ ಒಮ್ಮೆ ತಿಮ್ಮಪ್ಪಣ್ಣಯ್ಯನ ಮಗಳ ಮದುವೆಯಲ್ಲಿ ಗಲಾಟೆ ಎದ್ದದ್ದಲ್ಲವೇ? (ಸರಸ ಚಿಕ್ಕಿಯ ಹತ್ತಿರ ಕೂತರೆ ಹೀಗೇ. ಕಿವಿ ಬಾಡಿಗೆಗೆ ಕೊಡಬೇಕು.) +“ನೀನೇ ಹೇಳು ಇವಳೇ. ತಿಮ್ಮಪ್ಪಣ್ಣಯ್ಯನ ಮನಿಗೂ ಈ ಮನಿಗೂ ಏನು ಸಂಬಂಧ? ಆರ್ತಿ ಮಾಡುವ ಹಕ್ಕು ಮೀನಾಶ್ಚತ್ತೆಗೆ ಹ್ಯಾಂಗೆ ಬಪ್ಪು? ಅದು ತಿಮ್ಮಪ್ಪಣ್ಣಯ್ಯನ ತಂಗಿಯಂದಿರದು. ಹಾಂಗಾಯ್ಲಿಲ್ಲೆ. ತಿಮ್ಮಪ್ಪಣ್ಣಯ್ಯನ ಹೆಂಡ್ತಿ ಮೀನಾಕ್ಷತ್ತೆಯನ್ನ ಎಬ್ಬಿಸಿದ್ಲು.” +…ಇವಳಾದರೂ ಎಂಥವಳು? ಕರೆದೊಡನೆ ಎರಡು ಸಲ ಒಲ್ಲೆ ಎಂಬಳು. ಮೂರನೆಯ ಸಲ ಎದ್ದೇ ಬಿಡುವಳು. ಮೀನಾಶ್ಚತ್ತೆ ಎದ್ದು ಮಂಟಪಕ್ಕೆ ತೆರಳಿದ್ದಾಳೆ…ಈಚೆ ಗುಸುಗುಸು ಮರಕುವ ಶಬ್ಧ. ಯಾರದೆಂತ ಮಾಡಿದೆ. ತಿಮ್ಮಪ್ಪಣ್ಣಯ್ಯನ ತಂಗಿ ವಿಶಾಲು! ಇಡೀ ದಿನ ಮೀನಾಶ್ಚತ್ತೆಯನ್ನು ಕರುಬುತ್ತಿದ್ದಳಲ್ಲ. ಮೀನಾಶ್ಚತ್ತೆ ಮನೆಯಲ್ಲಿ ಅದ ಹಾಂಗೇ ತನ್ನ ಮನೆಯಲ್ಲೂ ಆಗಬೇಕು ಅಂತ ಹಟ ಹಿಡಿಯುತ್ತಿದ್ದಳಲ್ಲ, ಅದೇ ನಮೂನೆ ಬಟಾಣಿ ಗೋಧಿಮಣಿ ಸರ, ಚಕ್ರ ಸರ, ಮಾವಿನಮಿಡಿ ನೆಕ್‌ಲೇಸ್….ಎಲ್ಲ ಎಲ್ಲ… ಅದೇ ನಮೂನೆ. ಗಂಡ ಮಾತ್ರ ಬೇರೆ, ಹುಟ್ಟುವಳಿ ಬೇರೆ. ಅಷ್ಟೇ ಹುಟ್ಟುವಳಿಯೊಳ್ಗೆ ಅಷ್ಟೆಲ್ಲ ಹ್ಯಾಂಗ್ ಮಾಡ್ಕಂಡ್ಲೋ… ಆ ವಿಶಾಲು, ಎಂತವಳೇ ಇರಲಿ. ಅಣ್ಣನ ಮನೆ ಮದುವೆಯಲ್ಲಿ ಮಾತ್ರ ಹಕ್ಕಿನ ವಿಶಾಲು ಅಲ್ಲವೇ? ಅಯ್ಯೋ ಒಂದು ಮರಕಿದ್ದಂದ್ರೆ “ನಾವು ಸತ್ ಲೆಕ್ಕ ಮಾಡಿಯ ಅಣ್ಣಯ್ಯ…” ಎಂಬ ಒಂದೇ ರಾಗ. +“ಪಾಪ ಮಾರಾಯ್ತಿ. ಆ ತಿಮ್ಮಪ್ಪಣ್ಣಯ್ಯಂಗೆ ಇದೆಲ್ಲಯಂತ ತೆಳಿತ್ತ? ಗಂಡಸಪ್ಪ. ಆರತಿ ವಿಚಾರಕ್ಕೂ ಮಂಡೆ ಹಾಕ್ಕಂಡ್ ಬಪ್ನಾ? …. ಎಲ್ಲ ಕಿತಾಪತಿ ಅವ್ನ ಹೆಂಡ್ತಿದು”… +ವಿಶಾಲುಗೂ ಅವಳಿಗೂ ಮುಂಚಿನಿಂದಲೂ ಅಷ್ಟಕಷ್ಟೇ. ವಿಶಾಲು ತನ್ನ ಮಗನ ಉಪನಯನಕ್ಕೆ ಹೇಳಿಕೆ ಮಾಡಲಿಕ್ಕೆ ಬಂದವಳು ತಿಮ್ಮಪ್ಪಣ್ಣಯ್ಯನ ಕಾಲಿಗೆ ಮಾತ್ರ ನಮಸ್ಕಾರ ಮಾಡದಳಂತೆ. ಇವಳ ಕಾಲಿಗೆ ಮಾಡಲಿಲ್ಲವಂತೆ. ಸುಮ್ನೆ ಯಾರದರೂ ಹೋದಳೇ? ನೀನ್ ನಂಗಿಂತ್ಲೂ ಸಣ್ಣವ್ಳು. ನಮಸ್ಕಾರ ಮಾಡ್ಕಂತೆಳಿ ಇಲ್ಲೆ” ಎಂದಳಂತೆ. ಎಷ್ಟೆಂದರೂ ಅತ್ತಿಗೆ ಅಲ್ಲವೇ? ಅತ್ತಿಗೆ ಸ್ಥಾನಕ್ಕೆ ಇವಳು ನಮಸ್ಕಾರ ಮಾಡಲೇಬೇಕಿತ್ತು…. ಗಂಟೇನು ಹೋಗುತ್ತಿರಲಿಲ್ಲ… +ಹೀಗೆ ಸರಸ ಚಿಕ್ಕಿ ಮಾತಾಡುತ್ತಿದ್ದಂತೆ ಒಮ್ಮಿಂದೊಮ್ಮೆ ನ್ಯಾಯಾಧೀಶರಂತೆ ಮಾತಾಡುವವಳು. ಅಲ್ಲಲ್ಲೇ ತೀರ್ಪು ಕೊಡುತ್ತ ಸಾಗುವವಳು…. “ತಕೋ, ತಿಮ್ಮಪ್ಪಣ್ಣಯ್ಯನ್ ಹೆಂಡ್ತಿ ಸಿಟ್ ತೀರ್‍ಸ್‌ಕಂಡದ್ ಹೀಂಗೆ.” +ವಿಶಾಲು ತನ್ನ ಗಂಡ ಮಕ್ಕಳನ್ನು ಕರೆದುಕೊಂಡು ಊಟಕ್ಕೆ ನಿಲ್ಲದೆ ಹರಟುಹೋದಳಲ್ಲ…. ಅಲ್ಲ, ಈ ಮೀನಾಶ್ಚತ್ತೆಗಾದರೂ ಬುದ್ಧಿ ಬೇಕಿತ್ತು ಹೌದನ? ಕರೆದರು ಅಂತ ಹೇಳಿ ಮಂಟಪಕ್ಕೆ ನುಗ್ಗುದೆಯ? ಅದು ತನ್ನ ಜಾಗ ಹೌದಾ ಅಲ್ದ ಕಾಂಬ ಪಂಚಾತಿಕೆ ಬೇಡವ? +“ಆರತಿಗೊಬ್ಬಳು ಮೀನಾಶ್ಚತ್ತೆ ಅಂತೆಳಿ ನಾವು ಒಂದಿಷ್ಟ್ ಮಂದಿ ಎದುರೆದುರೇ ತಮಾಷೆ ಮಾಡಿರೂ ಗೆರೆ ಮುಟ್ಕಂಬ ಜನ ಅಲ್ಲ ಕಾಣ್ ಈ ಹೆಂಗ್ಸ್…” +“ಆಂ… ಏನಾಂದೇ?….ಈಗೀಗ ಕೆಮಿ ಸಮ ಕ್ಯೇಂತಿಲ್ಲೆ ಮಾರಾಯ್ತಿ”…ಪಾಪ ಸರಸ ಚಿಕ್ಕಿಯ ಪಿಸುಮಾತು ಕೇಳಿಸದರೆ ಮೀನಾಶ್ಚತ್ತೆ ಕುಳಿತಲ್ಲೇ ಮುಂದೆ ಬಾಗಿದರು. ಮಾತು ಕೇಳುವ ಆಡುವ ಆಸೆಯೊಂದು ನಡುಗುತ್ತ ಮುಂದೆ ಬಾಗಿದಂತೆ. ದೊಡ್ಡ ಸ್ವರದಲ್ಲಿ ಕೇಳಿದರು. +“ಅಲ್ದನ ಸರಸಾ. ಆ ಕಾಶಿ ಯಂತ ಆದ್ಲಾ? ಊರ್‍ ಬಿಟ್ಟ ಮೇಲೆ ಕಂಡದ್ದೇ ಇಲ್ಲೆ ಕಾಣ್. ಸತ್ ಹೋಯಿಪ್ಳ?” +ಸರಸ ಚಿಕ್ಕಿ ಕೂಗಿ ಹೇಳಿದಳು… ಕಾಶಿ ಸತ್ತಿಲ್ಲ. ದೂರದ ಯಾವುದೋ ಊರಲ್ಲಿ ಇದ್ದಾಳೆ. ಈಗ ಯಾವುದಕ್ಕೂ ಕಡಿಮೆಯಿಲ್ಲವಂತೆ. ಮಗ ಮಸ್ತು ದುಡ್ಡು ಮಾಡಿದ್ದಾನಂತೆ… +“ಯಂತ ಮಾಡ್ರ್‍ ಏನ್? ಗಂಡ ಪೋಂಕಲೆ!” ಈ ಕ್ಷಣ ಸಾಯಬಹುದಾದ ಮೀನಾಕ್ಷತ್ತೆ ನಕ್ಕ ರೀತಿಯೆಂದರೆ! ಖಾಲಿ ಆರತಿ ತಟ್ಟೆ ಹೀಗೆ ನಗಲಾರದು. +ಸರಸ ಚಿಕ್ಕಿ ಎಂದಳು…. +“ತಮಾಷೆ ಮಾಡಿರೂ ಈ ಮೀನಾಶ್ಚತ್ತೆ ಗೆರೆ ಮುಟ್ಕಣ್ಲಿಲ್ಲೆ ಅಂದ್ನಲೆ. ಒಂದ್ನಮೂನೆ ಪಾಪದವಳು ಮಾರಾಯ್ತಿ” ಎನ್ನುತ್ತಾ “ಮೀನಾಶ್ಚತ್ತೇ… ಈಗ ಬತ್ತೊ. ಇವ್ಳಿಗೆ ಮನಿ ಕಾಣ್ಕಂಬ್ರ್‍” – ಸರಸ ಚಿಕ್ಕಿ ಪಡು ಹೆಬ್ಬಗಿಲತ್ತ ನಡೆದಳು. ಅವಳ ಹಿಂದೆ ನಾನು. “ಹೋಯಿಬನ್ನಿ… ಅಲ್ಲಿ ಮಂಡೆಕಾಕೆಗಳಿದ್ದೋ. ಕಾಂತ ಇದ್ಹಂಗೆ ತಲೀಗೇ ಬಂದ್ ಕುಕ್ತೋ. ಜಾಗ್ರತೆ” – ಎಂದಳು ಮೀನಾಕ್ಷತ್ತೆ. +ಹೆಬ್ಬಾಗಿಲ ಕೋಣೆ ಹೊರಗಿಂದ ಚಿಲಕ ಹಾಕಿತ್ತು. ಸರಸ ಚಿಕ್ಕಿ ಮೆಲ್ಲ ತೆಗೆದಳು. ಒಳಗೆ ಗಾಳಿ ಮರಕಟ್ಟಿದಂತಿತ್ತು. ಧೂಳು ಹಾಸಿ ಅಪ್ಪಳಿಸಿತ್ತು. ಹೀಂಗೂ ಇರಸ್ತಿಕೆಯ? ಏನೇ ಹೇಳು ಮೀನಾಕ್ಷತ್ತೆಯ ಮಾಣಿ ನರಸಿಂಹನ ವಹಿವಾಟು ಏನೂ ಸಾಲದು. ಎಂದು ಅವಳೆಂದಾಗ ತಾರಾಮತಿಯ ಉಮೇದಿಲ್ಲದ ಹೆಜ್ಜೆಗಳು ಕಣ್ಣೆದುರು ಬಂದವು. +“ಇಗ-ಇದೇ ಕೋಣಿ. ರಾತ್ರಿಯಾಯಿತಾ? ಗುಲಾಬಿ ಬಂದಳೆಂದೇ. ಹ್ಯಂಗೆ? ಒಳ್ಳೇ ವೀಳ್ಯದೆಲೆ ಹಾಕ್ಕಂಡ್, ತಲಿ ಬಾಚ್ಕಂಡ್, ಪೌಡರ್‍ ಹಾಕ್ಕಂಡ್, ಎದೆ ಕಣ್ಣು ಕಾಂಬ ಹಾಂಗಿನ ಒಂದು ರವಿಕೆ. ಮೇಲೊಂದ್ ತೆಳೂ ಸೀರಿ ಉಟ್ಕಂಡ್ ಅದ್ಕೇ ಅಲ್ದ ಇವತ್ತಿಗೂ ರಾತ್ರಿ ಕನ್ನಡಿ ಕಂಡ್ರೆ ‘ನೀನೇನ್ ಸೂಳಿಯಾ?’ ಅಂತೆಳಿ ದೊಡ್ಡವ್ರ್‍ ಬೈಯುದ್?…” +“ಹ್ಹಂ, ಮುಂದೆ ಹೇಳು” +“ನಮ್ ಊಟದ ಪಂಕ್ತಿ ಎಲ್ಲ ಮುಗಿದು ಹಾಸಿಗೆ ಹಾಕಂಬ ಗಲಾಟೆ. ಒಂದೆರಡ್ ಜನರಾ ಒಂದೆರಡ್ ಹಾಸಿಗಿಯಾ? ಈ ಗಲಾಟೆಯೊಳ್ಗೆ ಗುಲಾಬಿ ಬಂದದ್ ಗೊತ್ತಾಪುದು ಮೀನಾಶ್ಚತ್ತೆಗೆ ಮಾತ್ರ. ಅಡುಗೆ ಕೋಣೆ ಕಿಟಕಿಯಿಂದ್ಲೇ ಅವಳನ್ನು ಕಂಡಾಯ್ತ್. ತಕ್ಕಷಣ ಒಂದ್ ಲೋಟೆ ಹಾಲ್ ಬಗ್ಸಿ ಆಯ್ತ್, ನಮ್ಮನ್ ಯಾರನ್ನಾದ್ರೂ ಕರ್‍ದ್ ‘ಕೊಟ್ ಬಾ’ ಅಂತೆಳಿ ಕಳ್ಸಿಯಾಯ್ತ್… ಅಂಥಾ ಪಾಪದ್ ಹೆಂಗ್ಸ್ ಈ ಮೀನಾಶ್ಚತ್ತೆ…ಪ್ರಪಂಚದಗೆ ಇಂಥ ಹೆಂಗ್ಸ್ ಸಿಕ್ಕುವನ?” +-ಸರಸ ಚಿಕ್ಕಿ ಮುಂದುವರಿಸಿದಳು. ಪಾಪ ಎಷ್ಟು ಮಾಡಿದರೆ ಏನು? ಹೆಬ್ಬಾಗಿಲ ಕೋಣೆಯಲ್ಲಿ ಇರುವೆ. ಎಲ್ಲ್‌ಕಂಡ್ರೂ ಇರುವೆ. ಒಂದು ದಿನ ರಾತ್ರಿಯಂತೂ ಅಪ್ಪಣ್ಣಯ್ಯ ಮತ್ತು ಗುಲಾಬಿ ಅರ್ಧ ರಾತ್ರಿಯಲ್ಲಿ ಹಾಸಿಗೆ ಹೊತ್ತುಕೊಂಡು ಉಪ್ಪರಿಗೆ ಕೋಣೆಗೆ ಓಡಿದರು. ಸ್ವಲ್ಪ ಹೊತ್ತಾಗಲಿಕ್ಕೂ ಅಲ್ಲಿಯೂ ಇರುವೆ. ರಾತ್ರಿಯಿಡೀ ಗುಲಾಬಿಗೆ ಹಾಸಿಗೆ ಕೊಡಕುವ ಕೆಲಸ ಬಿಟ್ಟು ಬೇರೆ ಇಲ್ಲ. ಪ್ರತಿದಿನ ಇರುವೆ ಕಚ್ಚಿಸಿಕೊಳ್ಳುವುದಕ್ಕೆ ಅವಳಿಗೇನು ಗ್ರಾಚಾರವಾ? +“ಗಣಪತಿ ಶಾಪ ಇದ್ರೆ ಯರು ಬತ್ ಅಂಬ್ರಲೆ. ನಾನ್ ಇಲ್ಲಿಗ್ ಬಪ್ಪುದ್ ಗಣಪತಿ ದೇವ್ರಿಗೆ ಸಮಾಧಾನ ಇಲ್ಲೆ ಕಾಂತ್” ಅಂತೆಳಿ ಗುಲಾಬಿ ಮನೆಗೆ ಬರುವುದನ್ನೇ ಬಿಟ್ಟಳು. +-ಚಾವಡಿಯಲ್ಲಿ ಕುಳಿತಿದ್ದ ಮೀನಾಕ್ಷತ್ತೆ ಕಣ್ಣು ಹೊರಳಿಸುತ್ತ ಶೂನ್ಯದಲ್ಲಿದ್ದಂತೆ ಕಾಣುತ್ತಿದ್ದಳು…. ಅಥವಾ ಶೂನ್ಯದಲ್ಲಿ ನಮ್ಮನ್ನು ಹುಡುಕುತ್ತಿರಬಹುದೆ? ದೊಡ್ಡಮ್ಮ ಹೇಳುತ್ತಿದ್ದರು…. ಮೀನಾಕ್ಷತ್ತೆಯೆಂದ್ರೆ ಒಬ್ಬರಿಗೆ ಒಂದು ನೋವು ಮಾಡದವಳು. ಮಾತೆಂದರೆ ಇರುವೆಗೂ ನೋವಾಗ. ಅಂಥ ನಯ… ರಾಗ… ಮಿಣ್ಣಗೆ ತಾನಾಯ್ತ್ ತನ್ನ ಕೆಲಸ ಆಯ್ತ್… +ನೆನಪಾದಂತೆ ನಗೆ ಬಂತು. ಎಲಾ ಮೀನಾಕ್ಷತ್ತೇ, ನೀನೆಷ್ಟು ಮಿಣ್ಣಗೆ! ಬಣ್ಣವೇ ತಿಳಿಯದಂತೆ! ಅತ್ತ ಹಾಲೂ ಕೊಟ್ಟು ಇತ್ತ ಇರುವೆಯನ್ನೂ ಬಿಟ್ಟು! +-ಸರಸ ಚಿಕ್ಕಿ ಕೋಣೆ ಬಾಗಿಲು ಚಿಲಕ ಹಾಕಿ ಹತ್ತಿರದ ಜಗಲಿಗೆ ಬಂದು ಬದಿಯ ಕಂಬಕ್ಕೊರಗಿ ಕುಳಿತಳು…. ಈ ಸಾಲು ಕಂಬದಗೆ ನಾವು ಎಷ್ಟು ಸಲ ಕಂಬದಾಟ ಆಡಿದ್ದೆವೋ ಈಗಿನ ಮಕ್ಕಳಿಗೆ ಇಂತಹ ಆಟವೆಲ್ಲ ತಾಗುತ್ತದೆಯೇ? ಕಳೆದದ್ದು ಕಳೆಯಿತು… ಇನ್ನು ಬರುವುದಿಲ್ಲ. ಎನ್ನುತ್ತಾ ಒಂದು ಕಾಲು ಜಗಲಿ ಮೇಲಿಟ್ಟು ನೆನವರಿಕೆಯಲ್ಲಿ ಕುಳಿತಳು. +“ಇಂಥ ಕಂಬಕ್ಕೆಲ್ಲ ಗೇಣಿಕೊಡದ ಒಕ್ಕಲನ್ನು ಕಟ್ಟಿಹಾಕಿ ಹೊಡೀತಿದ್ದೋ ಅಂಬ್ರಲೇ….” ಅವಳ ಮೌನವನ್ನು ಮುರಿಯಲು ಕೇಳಿದೆ ನಾನು. +“ಅದೆಲ್ಲ ನಾನು ಕಂಡದ್ದಿಲ್ಲೆ. ಅರೆ ಈ ಕಂಬಕ್ಕೆ ಆರತಿ ತಟ್ಟೆ ನೆಪ ಮಾಡ್ಕಂಡ್ ಕಾಶಿಯನ್ನು ಕಟ್ಟಿಹಾಕಿ ಹೊಡ್ದದ್ ಗೊತ್. ನಾನೇ ಸ್ವತಃ ಕಂಡಿದ್ನಲೆ. ಅದೊಂದು ಮಾರಾಶಿಮಾತು…ಅಲ್ಲ. ‘ಗಂಡ ಪೋಂಕಲೆ’ ಅಂತೆಳಿ ರಾಗ ಎಳೆದ್ಲ್ ಮೀನಾಕ್ಷತ್ತೆ ಈಗ! ಪೋಂಕಿನೊಟ್ಟಿಗೆ ಮದುವೆ ಮಾಡ್ಸು ಸಮಿಗೆ ‘ಆಯ್ಲಿ ಒಳ್ಳೇ ಸಂಬಂಧ’ ಅಂದವ್ಳೂ ಅವ್ಳೇ. ಆರತಿ ಎತ್ತಿದವ್ಳೂ ಅವ್ಳೇ. ಆರತಿಗೇನೋ ಬುದ್ಧಿ ಇಲ್ಲೆ ಹೌದು. ಯಾರಿಗೆ ಬೇಕಾರೂ ಎತ್ತತ್-ಮಂಗಳಾರತಿಯನ್ನೂ ಮಾಡತ್. ಮಾಡುವವರಿಗೆ ಬುದ್ಧಿ ಬೇಕಾ ಬೇಡ್ದ….?” ಮಾತಿಗೊಂದು ನಗೆಯ ಬುರುಗು ಕೊಟ್ಟು ನಿಧಾನವಾಗಿ ಕಂಬ ಸವರಿದಳು ಸರಸ ಚಿಕ್ಕಿ. ಮುಂದುವರಿಸಿದಳು. +-ಗೊತ್ತುಂಟಲ್ಲ, ಆರತಿ ತಟ್ಟೆ ಬೇಕು ಅಂತ ಬಂದವರಿಗೆ ಇಲ್ಲ ಅನ್ನಲಾರದವಳು ಮೀನಾಕ್ಷತ್ತೆ. ಮದುಮಕ್ಕಳು ಅಂದರೆ ಏನು? ಸಾಕ್ಷಾತ್ ಲಕ್ಷ್ಮೀನಾರಾಯಣ ಸ್ವರೂಪರು. ವಟು ಅಂದರೆ ಭಗವಂತನ ಬಾಲಸ್ವರೂಪ ಬ್ರಹ್ಮಚಾರಿ. ಮತ್ತೆ ಬಸುರಿಗಾದರೆ….ಮತ್ತೂ ಒಂದು ಕೈ ಹೆಚ್ಚು ವಿಶೇಷ. ಈ ಯಾರಿಗೆ ಆರತಿ ಎತ್ತಿದರೂ ತನ್ನ ಮನೆ ಲಕ್ಷಣ ಉಕ್ಕಿ ಬರುತ್ತದೆ ಎಂದೇ ತಿಳಿದಾಕೆ. ಕೇಳಲು ಬಂದವರನ್ನು ಕೆಲ ಕಾಲ ಕೂಡಿಸಿಯಾಳು. ಕುಡಿಯಲು ಕೊಟ್ಟು ಮದುವೆಯೋ ಮುಂಜಿಯೋ ಸೀಮಂತವೋ ವಿಚಾರಿಸಿಯಾಳು. +“ಮಧ್ಯೆ ಆಯ್ಲಿಯಪ್ಪಾ ಆಯ್ಲಿ. (ಆಗಲಪ್ಪಾ ಆಗಲಿ) ಅಂಬ್‌ದು ಇದೇ ಅತ್ತೆಯಲ್ಲವೇ?” +“ಹ್ಞೂಂ-ಇದೇ ಅತ್ತೆ. ಅಡ್ಡಿಲ್ಲೆ, ನಿನ್ನ ದೊಡ್ಡಮ್ಮ ಸುಮಾರು ಹೇಳಿಟ್ಟಿದ್ಲ್! ಅದ್ಯೆಂಥಾ ‘ಆಯ್ಲಿಯಪ್ಪಾ ಆಯ್ಲಿ! ಎಂಬ ಭರವೋ ಮಾರಾಯ್ತಿ…” +“ಹುಡುಗ ಕಪ್ಪು, ಕಣ್ಣು ವಾರೆ… ಹುಟ್ಟುವಳಿ ಸಾಕೂ ಸಾಲದು. ಆದರೇನು? ಹೆಣ್ಣೂಕೊಡುವುದೆಂದೇ ತೀರ್ಮಾನಿಸಿದೆ-ನಾಳೆ ಒಳ್ಳೆಯದಾಗಲಿಕ್ಕಿಲ್ಲ ಅಂತ ಏನು ಗ್ಯಾರಂಟಿ?” ಎಂದರೂ “ಆಯ್ಲಿಯಪ್ಪಾ ಆಯ್ಲಿ. ರೂಪ ಏನು ಅನ್ನಹಾಕತ್ತಾ?” ಎಂದಾಳು. “ಹುಡುಗಿ ಮತ್ತೆ ಹುಡುಗಿಯ ತಾಯಿ ಕೊಂಯ ಕೊಂಯ ಅಂದರು. ನಾನು ಬಾಯಿ ಬಡಿದು ಕೂಡಿಸಿದೆ”-ಎಂದರೂ ‘ಆಯ್ಲಿಯಪ್ಪಾ ಆಯ್ಲಿ ಹೆಂಗಸ್ರ ಹತ್ರ ಕೇಂಡ್ ಕೆಲಸ ಆಯ್ತ್ ಅಂತೆಳಿ ಇತ್ತಾ? ಅವಕ್ಕೆಯಂತ ತೆಳಿತ್? ಮದ್ವೆಯಾದಂವ ಹೆಂಡ್ತೀನ ಚಂದವಾಯಿ ಕಂಡ ಅಂದ್ರೆ ಅವನೇ ಚಂದಗೋಪ…’ ಎಂದಾಳು. ಈ ಮಾತು ಹೆಕ್ಕಿಕೊಂಡು ತಂದೆಯಾದಂವ ಯಜಮಾನಿಕೆಯ ಬೀಗಿನಿಂದ ಮನೆಗೆ ಮರಳಿ ಆರತಿ ತಟ್ಟೆಯನ್ನು ಒಳಗಿಡುತ್ತ “ನೀವೆಲ್ಲ ಯಂತಕ್ಕಾಪ್ರಿ? ಆ ಮೀನಾಶ್ಚತ್ತೆ ಹೇಳುವ ಮಾತ್ ಕೇಣಿ. ಲೋಕ ಅನುಭವ ಇದ್ದವಳು. ಅವಳ ಕಾಲು ಕೆಳ್ಗೆ ನುಸುಳಿ ಬಂದ್ರೆ ನಿಮ್‌ಗೆಲ್ಲ ಬುದ್ಧಿಬಕ್” ಎಂದು ಹೇಳದೆ ಬಿಡ. +ಹೇಳುತ್ತಿದ್ದಂತೆ ಸರಸ ಚಿಕ್ಕಿಯ ದನಿ ಕಾದಿತು. ಕಂಬಕ್ಕೊರಗಿ ಕುಳಿತೇ ಬಿಟ್ಟಳು. “ಸರಸ ಚಿಕ್ಕೀ, ಯಂತದ?” “ಯಂತ ಇಲ್ಲೆ…ಸುಮ್ನೆ ಏನೋ ನೆನಪಾದ ಹಂಗೆ ಆಯ್ತ್…” -ಸರಸ ಚಿಕ್ಕಿಯ ಕಣ್ಣು ಮನೆಯ ಮಾಡು ಮೀರಿ ಕಾಣುವ ದೂರದ ಗೋಳಿಮರದ ತಲೆ ಕಾಣುತ್ತಿತು. ಮೆಲ್ಲ ನುಡಿದಳು. +-ಅಲ್ಲ, ಹೆಂಡತಿಯನ್ನು ಚಂದವಾಗಿ ಕಮಡವ ಚಂದಗೋಪ ಅಂದಳು ಮೀನಾಕ್ಷತ್ತೆ. ಚಂದವಾಗಿ ಕಾಣುವುದೆಂದರೆ? ಒಂದು ದೊಡ್ಡ ಪ್ರಶ್ನೆಯಲ್ಲವೇ? +-ಈ ಸರಸ ಚಿಕ್ಕಿ ಕನ್ನಡ ಪಂಡಿತರ ಮಗಳು. ಒಮ್ಮೊಮ್ಮೆ ಸ್ಪಷ್ಟ ಕನ್ನಡದಲ್ಲಿ ದೊಡ್ಡ ಪ್ರಶ್ನೆಯನ್ನೇ ಹರಡಿ ವೇದಾಂತಿಯಂತೆ ಕುಳಿತುಬಿಡವವಳು. +“ಈ ಪ್ರಶ್ನೆ ಯಾಕೆ ಬಂತು ಈಗ?” +“ಯಂತಕ್ಕಿಲ್ಲೆ….ನಂಗೇನು ಕಡಿಮೆ ಆಯಿತ್ ಅಂತೆಳಿ ತಿಳ್ಕಂಬೇಡ. ಮಾತಿನಂಶ ಅಂದೆ…ನನ್ ವಿಷ್ಯಕ್ಕಲ್ಲ…” – ಥಟ್ಟನೆ ಸರಸ ಚಿಕ್ಕಿ ನುಡಿದು ಗುಟ್ಟು ನುಂಗಿದವಳಂತೆ ಉಗುಳು ನುಂಗಿದಳು. ಕಡಿಮೆ ಇಲ್ಲ ಎನ್ನಲು ಜಗತ್ತಿನಲ್ಲಿ ಎಲ್ಲರ ಮನಸ್ಸು ಎಷ್ಟು ತವಕಿಸುತ್ತಿರುತ್ತದೆ!….ದೊಡ್ಡಮ್ಮ ಹೇಳಿದ್ದರು ಒಮ್ಮೆ. ಈ ಸರಸ ಚಿಕ್ಕಿ ಮದುವೆ ನಿಶ್ಚಯ ಆಗಿದ್ದೇ ಆಗಿದ್ದು ಪೂರ್ತಿ ಇಳಿದುಹೋದಳಂತೆ. ಮತ್ತೆ ಅವಳಿಗೆ ಮುಂಚಿನ ಮೈ ಬರಲೇ ಇಲ್ಲವಂತೆ… +ಸರಸಿ ಚಿಕ್ಕಿ ಅತ್ತ ತಿರುಗಿ ಕಣ್ಣಿಗೆ ಕಸ ಬಿದ್ದಂತೆ ಒರೆಸಿಕೊಂಡು ಇತ್ತ ತಿರುಗಿದಳು. +“ಮೀನಾಶ್ಚತ್ತೆ ಮಟ್ಟಿಗೆ ಚಂದವಾಗಿ ಕಾಂಬುದೆಂದರೆ ಯಂತಂತ ಮಾಡಿಯೆ? ಉಂಡಿಯ? ತಿಂದಿಯ? ಅಂತೆಳಿ ಗಂಡ ಕೇಂತಿದ್ರೆ ಸೈ. ಅವ ಚಂದಗೋಪ. ರಾತ್ರಿ ಗುಲಾಬಿ ಬಂದ್ ಹೆಬ್ಬಾಗಿಲು ಕೋಣೆಯಾಗೆ ಪ್ರತಿಷ್ಠಾಪನೆ ಆಪ್ಸಮಿಗೆ ಮೀನಾಶ್ಚತ್ತೆ ಕೆಲ್ಸ ಮುಗ್ಸಿ ಒಲೆಗೆ ಸೆಗಣಿ ಬಳಿಯೂ ಹೊತ್ತು. ಅಪ್ಪಣ್ಣಯ್ಯ ಒಳಗೆ ಬಂದ್ ‘ಇದ್ಕೆಲ್ಲ ಜನ ಇಟ್ಕಂಬುಕಾಗ್ದಾ? ಇನ್ನೂ ಇನ್ನೂ ನೀನೇ ಯಾಕೆ ಮಾಡುದು?’ ಅಂಬರು. ‘ಈಗ ಬೆನ್ ನೋವ್ ಹ್ಯಾಂಗಿತ್? ಅಡ್ಡಿಲ್ಯ? ಬೇಕಾರೆ ನಾಳೆ ಡಾಕ್ಟ್ರನ್ ಕರ್‍ಸುವ’ ಅಂಬರು. ಆಗ ಮೀನಾಶ್ಚತ್ತೆಯ ಮುಖ ಕಾಣ್ಕ್. ಅಗಲ ಆರತಿ ತಟ್ಟೆಯೇ…ಅದು ಯಂಥಾ ಖುಶಿಯೋ. ಮುಚ್ಚಿಟ್ಟಿದ್ ಒಂದ್ ಗಿಂಡಿ ಹಾಲು ಕೊಟ್ ‘ಕುಡ್ಕಂಡೇ ಹೋಪಿರಲೆ. ಅವ್ಳು ಬಂದ್ ಎಷ್ಟ್ ಹೋತ್ತಾಯ್ತ್!’ ಅಂಬಳು. ‘ಅವ್ಳಿಗೂ ಕಳ್ಸಿ ಕೊಟ್ಟೆ….’ ಅಂತೆಳಿ ನಾಚಿ ನಿಂತ್ಕಬ್ಳ್. ಅಪ್ಪಣ್ಣಯ್ಯ ಬೊರ್‍ರ ಹಾಲು ಕುಡ್ದ್ ಅಲ್ಲಿಂದ ಹೊರಡ್ತಿದ್ರ್‍. (ಅಲ್ಲಿದ್ ಇರುವೆ ಕತೆ ಅಲ್ಯಾದ) ಒಟ್ಟಾರೆ ಮೀನಾಶ್ಚತ್ತೆ ಮಟ್ಟಿಗ್ ಅವ್ನೇ ಚಂದಗೋಪ…ಸುಳ್ಳ?” +ಸರಸ ಚಿಕ್ಕೀ ಎಲ್ಲಿಂದ ಎಲ್ಲಿಗೆ ಹೋಗುತ್ತೀ! +ಪ್ರಕಾಶ ಮಾಣಿ ದೂರದಿಂದ ಕೋಲು ಬೀಸುವುದು ಕಾಣಿಸುತ್ತಿತ್ತು ‘ಅಲ್ಲ ಮಾರಾಯ್ತ್ಯ, ಆ ಸೊಸಿ ಇನ್ನೂ ಕಾಪಿ ಮಾಡಿಯೇ ಮುಗಿಸ್‌ಲಿಲ್ಯ? ಯಂಥಾ ಸುಟ್ ಕೆಲಸ ಹೇಳ್ ಹಂಗರೆ…’ ನಕ್ಕಳು ಸರಸ ಚಿಕ್ಕಿ. ಕಣ್ಣೊರಸಿಕೊಂಡು. +“ಯಂತದೋ. ಅವ್ಳ್ ಸುಮ್ನೆ ನಿಧಾನ ಅಂತೆಳಿ ಕಾಣತ್ತಾ ನಿಂಗೆ?” ನಾನಂದೆ. +“ಅದೂ ಸಮನೇ ಅನ್. ಅವ್ಳ್ ಹೊಟ್ಯೊಳ್ಗೆ ಯಾವ ಕೆಂಡ ಇತ್ತೋ. ಕೈ ಹಾಕಿ ಕಾಂಬುಕಾತ್ತಾ ನಮ್ಗೆ?… ನಾ ಯಂತ ಅಂತಿದ್ದೆ? ಈ ಕಂಬಕ್ಕೆ ಕಾಶಿನ್ನ ಕಟ್ಟಿ ಹಾಕಿ ಹೊಡ್‌ದ್ರ್‍ ಅಂತೆಳಿ ಅಲ್ದ? ಹ್ಞಾಂ…ಕೇಣ್. ಕಾಶಿ ಗಂಡ ಪೋಂಕು ಮಾರಾಯ್ತಿ. ಪೋಂಕಂದ್ರೆ ಬರೀ ಪಾಪದ್. ಇಲ್ಲಿ ಕೂಕೋ ಅಂದ್ರೆ ಅಲ್ಲೇ. ಮತ್ತೆ ಏಳ್ ಅಂಬಲ್ಲಿವರೆಗೂ. ಹಾಂಗಂಥ ಹ್ಯೆಂಡ್ತೆ ಮಾತ್ರ ಹತ್ರವೇ ಇರ್ಕ್! ಎಲ್ಲಿ ಹೋಪ್ದಾದ್ರೂ ಕಾಶಿ ಹಿಂದೇ ಬಪ್ಪ. ಅವ್ಳ್ ಹೇಳಿದ್ ಕೆಲ್ಸ ಮಾಡ್ವ. ಜಯದ್ರಥನಂಥವ. ನಾಲ್ಕು ಸೌದೆ ಜಪ್ಕಂಡ್ ಬಾ ಅಂದ್ರೂ ಭಾರೀ ಖುಶಿ. ಒಟ್ಟಾರೆ ಜಪ್ಪುದಂದ್ರೆ ಖುಶಿ ಕಾಣ್…ಒಂದಿನ ಏನಾಯ್ತಂತೆ?…”ಸರಸ ಚಿಕ್ಕಿ ಸರ್ತ ಕುಳಿತುಕೊಂಡು ಮುಂದುವರಿಸಿದಳು. +ಸೂರಪ್ಪ ಗೊತ್ತಲ್ಲ ನಿಂಗೆ? ನಾಚಿಕೆ ಮುದ್ದೆ. ಅಂಥಾ ಗಂಡಸನ್ನ ಯಾರೂ ಕಂಡಿರಲಿಕ್ಕಿಲ್ಲ. ಹೆಣ್ಣು ಮಕ್ಕಳು ಎದುರು ಬಂದರೆಂದರೆ ತಲೆ ಅಡಿ ಹಾಕಿಕೊಂಡು ಹೋಪಂಥವ. ಅವನಿಗೊಂದು ಹೆಂಡತಿ ಸಿಕ್ಕಿದ್ದೋ! ಹೆಸರು ಗಿರಿಜಾಮಣಿ. ತಲೆ ತಗ್ಗಿಸಿ ನಡೆಯುವವರನ್ನ ಹೆಚ್ಚಿಗೆ ನಂಬಲಿಕ್ಕಾಗುವುದಿಲ್ಲ-ಎಂಬ ಒಂದೇ ಮಂತ್ರ ಅವಳದ್ದು. ಗಂಡನ್ನ ಕಾಯುವುದೆಂದರೆ! ಅಂವ ಪಾಪ ಎಳೆದು ಸೂಳೆಮನೆಗೆ ತಂದು ಬಿಟ್ಟರೂ ಹೆದರಿ ಓಡಿ ಬಪ್ಪಂಥ ಪುಕ್ಕ… +(ಪುಕ್ಕ ಅಂದೇಕೆ ಹೇಳಿದಳು ಈ ಸರಸ ಚಿಕ್ಕಿ? ಹಾಗಾದರೆ ಓಡಿ ಬಾರದವ ಅಲ್ಲೇ ನಿಲ್ಲುವವ ಧೈರ್ಯಸ್ಥ ಅಂತವೇ? ಚಂದಗೋಪ ಯಾರು? ಪುಕ್ಕ ಯಾರು? ಈ ಸರಸ ಚಿಕ್ಕಿ ಅನೇಕ ಸಲ ಅರ್ಥವೇ ಆಗುವುದಿಲ್ಲ….) +ಈ ಸೂರಪ್ಪನ ಮಗಳ ಮದುವೆ. ಆರತಿ ತಟ್ಟೆ ಒಯ್ದ. ವಾಪಸು ತಂದು ಕೊಡುವಾಗ ಅದರಲ್ಲಿನ ಸುಳಿಯುಂಡೆ ಕಣ್ಣು ಮಾಯಕ! ಅದಾದರೂ ಅವ ತಂದು ಕೊಟ್ಟ ಕೂಡಲೆ ತಿಳಿಯಿತೇ? ಇಲ್ಲ. ಯಾವಾಗಲೂ ಅಷ್ಟೆ. ಮೀನಾಕ್ಷತ್ತೆ ತಕ್ಷಣ ನೋಡುವವರಲ್ಲವಲ್ಲ. ಎಷ್ಟೋ ದಿನದ ಮೇಲೆ ಹಳೆಯ ಮರದ ಕಪಾಟಿನಿಂದ ಗಂಟು ಹೊರತೆಗೆದು ಒರೆಸಿ ಒಳಗಿಡುವ ಅಂತ ಬಿಚ್ಚಿದಳು. ಅದರಲ್ಲಿ ಸುಳಿಯುಂಡೆಗಳೇ ಇರಲಿಲ್ಲ. ಹ್ಞಾಂ ಎಂದು ಎದೆ ನಿಂತುಹೋದ ಹಾಗೆ ಕ್ಷಣಕಾಲ ಕುಳಿತೇ ಬಿಟ್ಟಳು. ಸೂರಪ್ಪನಿಗಿಂತ ಹಿಂದೆ ಶಿವರಾಮನ ಮನೆಗಲ್ಲವೇ ಕೊಟ್ಟದ್ದು? ಅವನ ಮನೆಯಿಂದ ಬಂದ ಮೇಲೆ ವರೆಸಿ ಇಡುವಾಗ ಎಲ್ಲ ಸರಿಯಾಗಿಯೇ ಇತ್ತಲ್ಲವೇ? ಕಾಶಿ ಇದ್ದಳು. ಹೌದು ವರೆಸಿ ಇಟ್ಟದ್ದು ಅವಳೇ…ಹಾಗಾದರೆ ಈಗ ಯಾರು ಕದ್ದರು? +ಸುದ್ದಿ ಕೇಳಿ ಅಪ್ಪಣ್ಣಯ್ಯ ಹೊಟ್ಟೆ ಕುಲುಕಿ ಜರ್ಬಿನಿಂದ ಗಟ್ಟಿಯಾಗಿ ಒಂದು ಹೂಂಗುಟ್ಟಿದರು. ಒಂದು ದಿನ ಹೀಗಾಗುತ್ತದೆಂತ ತನಗೆ ತಿಳಿದಿದೆ ಅಂಬ ಹಾಗೆ. ಒಕ್ಕಲನ್ನು ಕರೆದು “ಕೂಡಲೇ ಸೂರಪ್ಪ ಬರಲಿ” ಎಂದರು. +ಸೂರಪ್ಪ ಬಂದ. ಸುದ್ದಿ ತಿಳಿದು ಕಂಗಾಲಾಗಿ ಒಂದು ಕ್ಷಣ ಬಾಯಿಕಳೆದು ನಿಂತೇಬಿಟ್ಟ. ಒಳಗಿನಿಂದ ತನ್ನ ಕೈಗೆ ಬಂದ ಗಂಟನ್ನ ಹಾಗೆಯೇ ತಂದು ಕೊಟ್ಟೆನಲ್ಲ. ಬಿಚ್ಚಿನೋಡಲಿಲ್ಲ ನಿಜ. ಆದರೆ ಅದು ಮತ್ತೆ ಯಾರ ಕೈ ದಾಟಲೂ ಇಲ್ಲ. ಹೆಂಡತಿ ಕೈಯಿಂದ ಬೀಗದ ಕಪಾಟಿಗೆ, ಬೀಗದ ಕಪಾಟಿನಿಂದ ಮಂಟಪಕ್ಕೆ, ಮಂಟಪದಿಂದ ದೇವರ ಕೋಣೆಗೆ, ಮತ್ತೆ ಸೀದಾ ಹೆಂಡತಿಯ ಕೈಗೆ-ತನಗೆ. ಹಾಗಾದರೆ ಕದ್ದದ್ದು ಯಾರು, ಭೂತವೇ?-ಎಂದು ತಾನೇ ಆಕ್ಷೇಪದ ಪ್ರಶ್ನೆ ಕೇಳಿಕೊಂಡ. +ಸೂರಪ್ಪನನ್ನು ಕೇಳಿದ್ದೆಂದರೆ ಗಿರಿಜಾಮಣಿ ಬಾಯಿಗೆ ಕೋಲು ಹಾಕಿದಂತೆಯೇ ಅಲ್ಲವೇ? ಅವ ಹೋದ ಸ್ವಲ್ಪ ಹೊತ್ತಿಗೆಲ್ಲ ಅವಳು ಓಡೋಡಿ ಬಂದಳು. ಸುದ್ದಿ ತಿಳಿದು ತನಗೆ ಇಂಥದ್ದಾಯಿತೆಂತ ತಿಳಿಯಲಿಲ್ಲ ಎಂದು ಹಲುಬುತ್ತಲೇ ಮೆಟ್ಟಲು ಏರಿದಳು. ತನ್ನ ಮನೆಯಲ್ಲಿಯೇ ಕಳವು ಆಗಬೇಕೆ? ಏಳೂವರೆ ಶನಿ ಬಿಡುವ ಕಾಲವಂತೆ- ತೋರಿಸಿಯೇ ಬಿಟ್ಟಿತು ಕಾಣಿ ಎಂಬೆಲ್ಲ ಮಾತಿನ ಮೇಲೆ ಜವಾಬ್ದಾರಿಯನ್ನು ಜಾರಿ ಬಿಡಲು ಪ್ರಯತ್ನಿಸಿದಳು. +ಮೀನಾಕ್ಷತ್ತೆಗೂ ಅವಳ ಅವಸ್ಥೆ ಕಂಡು ಬೇಸರವೇ. ಆದರೇನು? ಕಳೆದು ಹೋದವು ಬೆಳ್ಳಿಯವು. ಆದಿಕಾಲದವು. “ಇರಲಿ ಬಿಡು” ಎನ್ನುವಂತಿಲ್ಲ. +ಮದುವೆಗೆ ಹೊರಡುವ ಮೊದಲು ಮನೆದೇವರಿಗೆ ಕಾಯಿ ಇಡಲು ನೆನಪು ಹೋಯಿತು. ಅದಕ್ಕೇ ಹೀಗಾಗಿರಬಹುದೇ?-ಎಂಬಿತ್ಯಾದಿ ತನಗೇ ಕೇಳಿಕೊಳ್ಳುತ್ತಾ ಕುಳಿತಲ್ಲೇ ಪುಕು ಪುಕು ಎಂದು ವಿಲಿಗುಟ್ಟುತ್ತಾ ಕುಳಿತಿದ್ದ ಗಿರಿಜಾಮಣಿಗೆ ಕಂಡದ್ದು ಹುಣಿಸೆಕೋಡು ಒಡೆಯುತ್ತ ಒಂದು ಮೂಲೆಯಲ್ಲಿ ಕುಳಿತಿದ್ದ ಕಾಶಿ! +ಕೈಯೂರಿ ಕುಳಿತೇಬಿಟ್ಟಳು ಗಿರಿಜಾಮಣಿ. ತನ್ನ ಮಗ ರವಿಯ ಉಪನಯನದಲ್ಲಿ ಇದೇ ಕಾಶಿ ಮಾಡಿದ್ದು ಮರೆಯುವ ಮಾತೇ…? ಎಂದು ವರ್ಣಿಸಲು ಶಬ್ದ ಹುಡುಕುತ್ತ. ಆಗಿನ್ನೂ ತನ್ನ ಕೊನೆಯ ಮಗಳು ರತ್ನ ಮೂರು ವರ್ಷದ್ದು. ವರ್ಷ ಮೂರಾದರೂ ಮಾತು ಬಂದದ್ದು ತಡ. ಚಂದ ಕಾಣಲಿ ಎಂದು ಚಕ್ರದ ಸರ ಹಾಕಿಬಿಟ್ಟಿದ್ದೆ, ದೃಷ್ಟಿ ತಾಗುವ ಹಾಗೆ ಚಪ್ಪರದಲ್ಲಿ ಓಡಾಡುತ್ತಿತ್ತು ಹೆಣ್ಣು. ಒಂದು ಗಂಟೆಯೂ ಆಗಿರಲಿಕ್ಕಿಲ್ಲ, ಮರಕುತ್ತ ಬಂತು. ಎಂತ ಹೆಣೆ? ಎಂದರೆ ಕುತ್ತಿಗೆ ತೋರಿಸುತ್ತದೆ. ಕೈ ತಿರುಗಿಸಿ ತಾರಮ್ಮಯ್ಯ ಮಾಡುತ್ತದೆ. ತನಗೆ ಧಾತು ತಪ್ಪುವುದೊಂದು ಬಾಕಿ. +ಎದ್ದು ಹುಡುಕುವ ಎಂದರೆ ಮಂಟಪದಲ್ಲಿ ಬ್ರಹ್ಮೋಪದೇಶ ಮುಹೂರ್ತ. ವಟುವನ್ನು ಅಪ್ಪನ ತೊಡೆಯ ಮೇಲೆ ಕೂಡಿಸಿ ಮುಸುಕು ಹಾಕಿಬಿಟ್ಟರು! ಆ ಮುಸುಕಿನೊಳಗೆ ನನಗೆ ಉಸಿರು ಕಟ್ಟಿದ್ದಲ್ಲವೆ? ಅಂತೂ ಎಲ್ಲ ಮುಗಿದು ಬಂದು ನೋಡಿದರೆ ನೋಡುವುದೆಲ್ಲಿ? ಕೇಳುವುದು ಯಾರನ್ನು? ಎಲ್ಲರೂ ಅಪ್ಪಂಥವರೇ. +ಸಾಯಂಕಾಲ ಹೋದವರೆಲ್ಲ ಹೋಗಿ ಉಳಿದವರು ಪಟ್ಟಾಂಗ ಹೊಡಿಯುತ್ತಾ ಕುಳಿತಿದ್ದಾಗ ತಾನು ಕೇಳಿಯೇಬಿಟ್ಟೆ-ಹಾಗಾದರೆ ಆ ಹೆಣ್ಣಿನ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತವರು ಯಾರು? ಯಾರೇ ಆಗಲಿ, ಅವರು ಊರಲಿಲ್ಲದ ಕಾಯಿಲೆ ಹಿಡಿದು ಕರಗಿ ಹೋಯಿಯಾರು. ಹೊಟ್ಟೆಬಾಯಿ ಕಟ್ಟಿ ಮಾಡಿಸಿದ ಸರ ಅದು. ಪುಗಸಟ್ಟೆ ಅಲ್ಲ. ಗಿರಿಜಾಮಣಿ ಸೆರಗಿನಲ್ಲಿ ಮುಖಮುಚ್ಚಿಕೊಂಡಳು. +“ನಾನು ಹೇಳಿದ್ ಇಷ್ಟೇ. ಒಂದಕ್ಷರ ಹೆಚ್ಚಿಗೆ ಹೇಳ್ಲಿಲ್ಲೆ ಮೀನಾಶ್ಚಮ್ಮ. ಇಂಥವರಿಗೇ ಅಂತೆಳಿ ಬೊಟ್ಟುಮಾಡಿ ಹೇಳ್ಲೂ ಇಲ್ಲೆ. ಅದಕ್ಕೆ ಈ ಶೂರ್ಪನಖಿ ಕಾಶಿ, ಕವುಂಚಿ ಮಲಗಿ ತಲೆ ಎತ್ತಿ ಎಲ್ಲ ಸಂಗ್ತಿ ಕೇಂಡವಳು, ಧಡಕ್ಕನೆ ಕೂತ್ಕಂಡ್ ‘ಏನೇ ಹೇಳಿ ನೀವು ಮಗುವಿಗ್ ಅಂಥಾ ದೊಡ್ ನಗ ಹಾಕಿಬಿಟ್ಟಿದ್ದೇ ತಪ್’-ಅಂದ್ಲ್ ಯಾಕೆ? ಯಾಕೆ ಬೇಕಿತ್ತ್ ಇವ್ಳಿಗೆ? ಇದ್ದವರ ಮನಿಕೂಳು ಹೆಕ್ಕಿ ತಿಂಬ ಪ್ರಾಣಿಗೆ?-ಮಾತಿಗೊಂದ್ ಮಾತಯ್ತ್. ಒಂದಾ, ಎರಡಾ? ಅವ್ಳೂ ಬಿಡಲಿಲ್ಲೆ. ನಾನೂ ಹೇಳಿಯೇಬಿಟ್ಟೆ. “ನೀನೇ ಕಳ್ಳೆ. ಮತ್ಯಾರೂ ಅಲ್ಲ-” ಅದಕ್ಕವ್ಳು ಹೇಳಿದ್ ಮಾತ್-ಅಯ್ಯೋ ಮೀನಾಶ್ಚಮ್ಮ-ಈಗ ನೆನಸಿಕಂಡ್ರೂ ಕೆರಿ ಬಾಮಿ ಕಾಣ್ಕ್ ನಾನ್-“ಬಿಕ್ಕಿದಳು. +“ಯೇ ಅಳೇ. ಅದ್ನೆಲ್ಲ ಈಗ ಯಾಕೆ ನೆನ್ಸ್‌ಕಂತೆ? ಹಾಂಗ್ ನೆನ್ಸುಕೆ ಹೋದ್ರೆ ನಾನೀಗ ಆ ಗುಲಾಬಿ, ಸೂರು, ನಾಗು ಎಲ್ಲರನ್ನೂ ನೆನೀತ ಮರ್‍ಕ್‌ತ ಕೂತ್ಕಂಕ್. ಅದೆಲ್ಲ ಒಂದು ಕಾಲ, ಒಂದು ಚಟ, ಕಡೀಗೆ ಗಂಡಸ್ರ್‍ ಅದ್ನೆಲ್ಲ ಬಿಡ್ತೊ-ಅದನ್ ದೊಡ್ದ್ ಮಾಡುಕಾಗ” ಎಂದು ಧೈರ್ಯ ಹೇಳಿದರು ಮೀನಾಕ್ಷತ್ತೆ. ಆದರೂ ಗಿರಿಜಾಮಣಿಯ ಕಣ್ಣುಗಳಿಂದ ಹರಿಯುವ ನೀರು ನಿಲ್ಲುವುದಿಲ್ಲ. +ಹೌದು, ಮರೆತುಬಿಡು ಅನ್ನುತ್ತೀರಿ. ಆದರೆ ಆಗ ಹೋದ ನಗ ಮರಳಿ ಬಂತೇ? ಬರಲಿಲ್ಲ. ಹೇಳಿ ನೀವೇ. ನಮ್ಮದು ಅನ್ನುವ ವಸ್ತು ಕಳೆದುಹೋದ ಮೇಲೆ ಮತ್ತೆ ಸಿಕ್ಕುವುದೆಂದು ಉಂಟೇ?-ಇತ್ಯಾದಿ ಎರಡು ಬದಿಯ ಮಾತಾಡಿ ದುಃಖದ ಕಡಲಾದಳು. +-ಸುಳಿಯುಂಡೆ ಕದ್ದದ್ದು ಮತ್ತೆ ಯಾರಲ್ಲ ಕಾಶಿಯೆ. ನಾ ಅವಳಿಗೆ ಮದುವೆಗೆ ಹೇಳಿರಲಿಲ್ಲ, ಆದರೂ ಬಂದಳು ಹೇಗೆ? ನನ್ನ ಗಂಡ ಹೇಳಿರಬಹುದೇ?-ಹಾಗೆ ಹೇಳದೆ ಅವಳು ಬರುವಳೇ? ಛಿ! ಮದುವೆಗೆ ಬಂದಳು-ಸುಳಿಯುಂಡೆ ಕದ್ದಳು-ನಾನು ಒಬ್ಬಳು ಸತ್ಯಂಭಟ್ಟೆ. ಎಲ್ಲ ಕವುಂಚಿ ಹೋದ ಮೇಲೆಯೇ ಗೊತ್ತಾಪವಳು-ಹಾಗಾದರೆ ನಾನು ಹೇಳದಿದ್ದರೂ ಖುಶಿ ಬಂದವರು ನಮ್ಮ ಮನೆಗೆ ಬರಬಹುದು ಅಂತಾಯಿತಲ್ಲ…. +-ಹೀಗೆ ಆಕೆ ನುಡಿಯುತ್ತಿದ್ದಂತೆಯೇ ಗಂಡನ ಜೊತೆಗೂಡಿ ತಗ್ಗಿಸಿದ ತಲೆ ಎತ್ತದೆ ಹುಣಿಸೆಕೋಡು ಗುದ್ದಿ ಹಣ್ಣು ತೆಗೆಯುತ್ತಿದ್ದ ಕಾಶಿ ಸಟಕ್ಕನೇ ಎದ್ದು ಬಂದಳು. ಹೊಡೆಯಲು ಬಂದಂತೆ. ಸುಡು ಜ್ವಾಲೆಯಂತೆ. +“ಹೌದ್, ನೀ ಹೇಳಿದ್ ಸಮನೇ ಗಿರಿಜಾಮಣಿ. ನಿನ್ ಗಂಡ ನನ್ನ ಮಿಂಡ ಕಾಣ್. ನಂಗೆ ಆ ಸುಳಿಯುಂಡೆ ಮುಚ್ಚಿ ಕೊಟ್ಟ. ನಾ ತಕಂಡ್ ಬಂದೆ. ಇನ್ ನನ್ನ ಎರಡು ಪೀಳಿಗೆವರೆಗೆ ಚಿಂತೆ ಇಲ್ಲೆ…” – ಎಂದವಳೇ ಚಾಡಿಯಂತೆ ಕೈ ಬೀಸುತ್ತ ಮತ್ತೆ ನಡೆದು ಇತ್ತಕಾಣದೆ ಕೆಲಸ ಸಾಗಿಸುತ್ತಿದ್ದ ಗಂಡನ ಪಕ್ಕ ಹೋಗಿ ಕುಳಿತು ಒಂದು ಕೋಡನ್ನು ಅಪ್ಪಚ್ಚಿಯಾಗುವಂತೆ ಗುದ್ದಿದಳು. +ಸಾಕೇ ? ಚಾಡಿಯೇಟು ಬೇರೆ ಬೇಕೆ? +ಈ ಉತ್ತರವನ್ನೇ ಕಾಯುವಂತಿದ್ದ ಗಿರಿಜಾಮಣಿ ಬೋರಲು ಬಿದ್ದಳು. +ಯಾವ ಜನ್ಮದಲ್ಲಿ ಯಾರನ್ನ ಒಳಗೆ ಹಾಕಿಕೊಂಡಿದ್ದೀಯೋ, ಅದಕ್ಕೇ ಈ ಜನ್ಮದಲ್ಲಿ ನಿಂಗೆ ಪೋಂಕು ಗಂಡ. ಇನ್ನು ಏಳೇಳು ಜನ್ಮಕ್ಕೂ ನಿಂಗೆ ಅವನೇ ಸಿಗಲಿ-ಎನ್ನುತ್ತ ಬಿಕ್ಕತೊಡಗಿದ ಗಿರಿಜಾಮಣಿ ಮಾತಾಡುತ್ತ ಆಡುತ್ತ ಗಂಡ ಪೋಂಕು ಅಂತ ಕಾಶಿ ಸೂರಪ್ಪನ ಹತ್ತಿರ ಬಂದಳೋ, ಇಲ್ಲ ಸೂರಪ್ಪನ ಹತ್ತಿರ ಅವಳು ಬಂದಳೆಂತ ಅವ ಸೋಕಾದನೋ ಎಂದು ಸಸೆಯತೊಡಗಿದಳು. ಆರತಿ ತಟ್ಟೆಗೆ ಕಿಚ್ಚೊಟ್ಟಿತು. ಸುಳಿಯುಂಡೆ ಸಿಕ್ಕದಿದರೆ ಅಷ್ಟೇ ಹೋಯಿತು. ನನ್ನ ಗಂಡನ್ನ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗದೇ ಹೋದೆನಲ್ಲ-ಎಂದು ಬಾಯಿ ಬಾಯಿ ಬಡಿದುಕೊಂಡಳು. +ಸುಳಿಯುಂಡೆ ಸಿಕ್ಕದಿದ್ದರೆ ಅಷ್ಟೇ ಹೋಯಿತು ಎಂದರೆ ಎಷ್ಟು ಹೋಯಿತು? ಮೇನಾಕ್ಷತ್ತೆ ಬಿಡವವಳೇ! +ಹಿರಿಯರಿಂದ ಬಂದದ್ದು ನಮ್ಮ ಕಾಲದಲ್ಲಿ ಕಳೆದುಹೋದ ಹಾಗಾಯತ್ತಲ್ಲ ಎಂಬ ವಾಂಛೆಯಿಂದ ಕೂಡಿದ ವೇದನೆಯನ್ನು ತಿರುಗಿಸಿ ತಿರುಗಿಸಿ ನೋವಾಗದಂತೆಯೂ ವಿಷಯ ತಿಳಿಯುವಂತೆಯೂ ಹೇಳುವಾಗ ಗಿರಿಜಾಮಣಿಯ ಹಲುಬುವಿಕೆ ಹೆಚ್ಚುತ್ತಾ ಹೋಗಿ ಕಡಿಮೆಯಾಗಿ ಇಳಿದು ಮುಗಿದು ಹಾಗಾದರೆ ಮುಂದಿನ ತಿಂಗಳೊಳಗೆ ಮಾಲಿಂಗಾಚಾರಿಯ ಹತ್ತಿರ ಹೇಳಿ ಮಾಡಿಸಿಕೊಡುತ್ತೇವೆ: ಮಾಡಿಸಿಕೊಟ್ಟೇ ಶುದ್ಧ – ಎಂದು ಕಡ್ಡಿ ಮುರಿದಂತೆ ಹೇಳಿ ಮೇಲಕ್ಕೆದ್ದಳು. +“ಗಿರಿಜಾಮಣೀ, ಇನ್ ಮನಿಗ್ ಹೋಯಿ ಗಂಡ್‌ನೆದ್ರು ರಾಮಾಯ್ಣ ತೆಗೀ ಬೇಡ. ನಮ್ ಆರತಿ ತಟ್ಟೆ ಕಂಡ್ ಕರುಬಿದವ್ರಿಗೇನ್ ಈ ಊರಗೆ ಕಮ್ಮಿಯಿಲ್ಲೆ. ಹಾಂಗೆ ಕರುಬಿದವ್ರೆ ಸುಳಿಯುಂಡೆ ಕದ್ದ್, ತಟ್ಟೆ ಮುಕ್ ಮಾಡಿಪ್ರ್‍. ಹ್ಯಾಂಗ್ ಹೇಳುದ್ ಅಲ್ಲ ಅಂತೆಳಿ?” – ಎಂದು ಮೀನಾಕ್ಷತ್ತೆ ಕೊನೆಯ ಮಾತು ಹೇಳಿದಾಗ ಇದು ವಿಶಾಲುವಿಗೇ ಇಟ್ಟ ಬತ್ತಿ ಎಂದು ಗಿರಿಜಾಮಣಿಗೆ ತಿಳಿದುಹೋಯಿತು. +ಅಲ್ಲಿಂದ ಹೊರಟವಳು ಅವಳು ಹೋದದ್ದು ತನ್ನ ಮನೆಗಲ್ಲ. ವಿಶಾಲು ಮನೆಗೆ. ಬಂದದ್ದು ಮಾಲಿಂಗಾಚಾರಿಯ ಹತ್ತಿರ ಹೊಸದಾಗಿ ಹೇಳಿ ಮಾಡಿಸಿದ ಸುಳಿಯುಂಡೆಗಳಲ್ಲ. ಬದಲು-ಅಷ್ಟೈಶ್ವರ್ಯದ ಐರಾವತದ ಮೇಲೆ ಕೂತರೂ ಆಸೆ ಪಿನಾರಿತನ ಬಿಡಲಿಲ್ಲ. ನಾನು ಅವರಷ್ಟಿದಿದ್ದರೆ ಕಳೆದುಹೋದದ್ದನನ್ನು ನನ್ನ ಹುರುಕಿಗೆ ಸಮ ಮಾಡುತ್ತಿದ್ದೆ… ಮನೆಯೊಳಗೆ ಕಾಶಿಯಂಥವರನ್ನು ಇಟ್ಟುಕೊಂಡು….-ಇತ್ಯಾದಿ ಮಾತುಗಳು. +ಅಷ್ಟಕ್ಕೆ ಮುಗಿಯಿತೇ? “ನಮಗೆ ಬೇಕಾ ಇವಳ ಮನೆ ಸುಳಿಯುಂಡೆ? ಅದು ಯಾವ ಭೂತ ನುಂಗ್ತೋ ಅದರಿಂದ ಕಾರಿಸ್ತೆ”-ಎಂದು ಕೂಗುತ್ತಾ ಬಂತ್ತಯ್ಯ ವಿಶಾಲು ಸವಾರಿ. ಹಿಂದೆಯೇ ಗಿರಿಜಾಮಣಿ, ಅಕ್ಷರಶಃ ಸೂರಪ್ಪನ ಕೈಹಿಡಿದು ಎಳೆದುಕೊಂಡೇ. ಮತ್ತೂ ಹಿಂದ ಬೇಕಾದವರು ಬೇಡದವರು. ಅಂತೂ ಒಂದು ದಿಬ್ಬಣವೇ ಹೆಬ್ಬಾಗಿಲು ಹೊಕ್ಕಿತು. +ನಾಲ್ಕು ದಿನದಿಂದ ಒಂದೇಸಮ ಗುದ್ದಿದರೂ ಕರಗದ ಹುಣಿಸೆ ಕೋಡುಗಳ ರಾಶಿಯೆದುರು ಕುಳಿತು ಕೆಲಸದಲ್ಲಿ ಮಗ್ನನಾಗಿದ್ದ ಕಾಶಿಯ ಗಂಡನ ಬಳಿಯೇ ಬಂದಳು ವಿಶಾಲು-ಜಮಧೈರ್ಯದವಳು. ಅವನ ಬೆನ್ನ ಮೇಲೆ ಒಂದು ಗಟ್ಟಿ ತಟ್ಟಿದಳು. ಕಾಶಿ ಕಣ್ಣು ಬಿಟ್ಟು ನೋಡುತ್ತಿರುವಂತೆಯೇ “ಹ್ಹೆ! ನೀನೊಂದು ಗಂಡ್ಸನ? ಕಳ್ಳೆ ಹೆಂಡ್ತಿಗೆ ನಾಲ್ಕು ಸಮಾ ಹಾಕುದು ಬಿಟ್ಟು. ಇದ್ದವರ ಮನೆ ಗಂಡಸ್ರಗೆ ಸೆರಗು ಹಾಸುದು. ಚಿನ್ನ ಬೆಳ್ಳಿ ಹಾರ್‍ಸುದು-ನಿಂಗ್ಯೆಂತ ಗೊತ್ತಾತ್ತಿಲ್ಲೆ ಕಾಣ್. ಅದ್ಕೇ ಲಾಯ್ಕಾಯ್ತ್ ಅವ್ಳಿಗೆ”-ಎಂದಳು. +ಪೋಂಕು ತೋಳಿನಿಂದ ಮುಖ ವರೆಸಿಕೊಂಡಿತು. ಕಿವಿಯೆಲ್ಲ ಟಪಟಪೆಂದು ಕುಣಿಯುವಂತೆ ತಲೆ ಕೊಡವಿಕೊಂಡಿತು. ಎದ್ದು ನಿಂತಿತು. ಹೇಳಿದೆನಲ್ಲ. ಮೊದಲೇ ನೋಡಲು ಜಯದ್ರಥನಂತೆ. ಸಿಟ್ಟು ಬಂದರಂತೂ ದುಶ್ಯಾಸನನೇ. ಕಾಶಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಅವಳ ಜುಟ್ಟಿಗೆ ಕೈ ಹಾಕಿ ದರದರ ಎಳೆದುಕೊಂಡು ಬಂತು. ಇದೇ ಕಂಬಕ್ಕೆ ಕಟ್ಟಿ ಹಾಕಿತು-ಆಕೆ ದೊಡ್ಡ ಕಳ್ಳೆ ಎಂಬಂತೆಯೇ ಸಮಾ ಬೀಸಿತು. “ಹೇಳು-ಬಾಯಿ ಬಿಡು” – ಎಂಬುದು ಬಿಟ್ಟರೆ ಬೇರೆ ಇಲ್ಲ. ‘ನಾನಲ್ಲ’-ಅಂದರೆ ಮತ್ತೆ ನಾಲ್ಕು ಬಿಗಿತ. ಬೆಪ್ಪುಗಟ್ಟಿದ ಸೂರಪ್ಪನನ್ನು ದೂಡಿ ದೂಡಿ ನಗುತ್ತಿದ್ದ ಗಿರಿಜಾಮಣಿಯನ್ನು ಕಂಡು ಮತ್ತಷ್ಟು ಒದೆಯಿತು. ಎಲೆ ಜಗಿಯುತ್ತ ಬಂದ ಸೂರಪ್ಪ ಅದನ್ನು ಉಗಿಯಹೋದರೂ ಗಿರಿಜಾಮಣಿ ಜೊತೆಯಲ್ಲಿಯೇ ಹೋದಳು; ಅವನ ಹಿಂದೆಯೇ ವಾಪಸು ಬಂದಳು-ಅಯ್ಯಬ್ಬ ಎಷ್ಟು ಹೊಡೆಯಿತು ಅಂತಿಲ್ಲ. ಈಗ ನೆನೆಸಿದರೂ ಮೈ ಭಿಂಗರಿಸುತ್ತದೆ. ಕಡೆಗೆ ವಿಶಾಲುವೇ “ಸಾಕ್ ಮಾರಾಯ. ಕಡೆಗೆ ಸತ್‌ಗಿತ್ ಹೋದ್ರೆ ನಾವೆಲ್ಲ ಜೈಲಿಗ್ ಹೋಯ್ಕಾಯಿ ಬಕ್.” ಎಂದು ಹೊಸಿಲ ಮೇಲೆ ಹೆಬ್ಬರಸಿಯಂತೆ ಕುಳಿತು ಹೇಳಿದ ಗತ್ತು ಕಾಣಬೇಕಿತ್ತು. +“-ಅದ್ಯೇನ್ ಸರಸಚಿಕ್ಕೀ – ಮೀನಾಕ್ಷತ್ತೆ ಮನೆಯಗೆ ಇವರದ್ದೆಲ್ಲ ಯಂತ ಕಾರುಭಾರು? ವಿಶಾಲು ಹೊಸಿಲ ಮೇಲೆ ಹಾಂಗ್ ಕೂಕಂಡ್ ಅಧಿಕಾರ ನಡೆಸುವಷ್ಟ್ ಸಲಿಗೆ ಕೊಟ್ಟವ್ರ್‍ ಯಾರ್‍?-ಆದರೂ ಕಾಂತ್. ಕಾಶಿಗೆ ಅಷ್ಟ್ ಹೊಡ್ದ್ರೂ ಮೀನಾಕ್ಷತ್ತೆ ಏನೂ ಮಾತಾಡ್ಲಿಲ್ಲೆ-?” +“ಇಲ್ಲಪ್ಪಾ-ಪಾಪ. ಹೆದ್ರಿ ಒಳ್ಗೇ ಇದ್ಲ್-ಇದೇ ದೇವರ ಕೋಣೆಯೊಳ್ಗೆ ನಿಂತ್ಕಂಡ್ ಕಿಟಕಿಯೊಳಗಿಂದ ಕಾಽಂತ ನಿಂತಿದ್ಲ್ – ಕಾಶಿ ಗಂಡ ಹೊಡೆಯೂ ರೀತಿ ಕಂಡ್ ನಡು ನಡು ಮಿಣ್ಣಗೆ ನಗೆ-ಏನೇ ಹೇಳ್. ಯಾರನ್ನಾದ್ರೂ ಹೊಡಿಯುವುದು ಕಾಂಬೂಕೆ ಒಂಥರಾ ಲಾಯ್ಕ್ ಅಲ್ದ?” +ಅಪ್ಪಣ್ಣಯ್ಯ ಮಾತ್ರ ಅಷ್ಟು ರಾಷ್ಟ್ರದೊಳ್ಗೇ ಇರ್‍ಲಿಲ್ಲೇ ಕಾಣ್. ಕಡೆಗೂ ತನ್ನ ಅಂಗ್ಳದೊಳ್ಗೆ ಇಷೆಲ್ಲ ಗಲಾಟೆ ಯಾಕೆ ಮಡಿದ್ ಅಂತೇಳಿ ಸಾ! ಇರ್‍ಲಿ. ತಂಗಿ ಹೀಂಗೆಲ್ಲ ಮಾಡಿಳ್ ಅಂತೆಳಿ ತಿಮ್ಮಪ್ಪಣ್ಣಯ್ಯ ನಾಚ್ಕಂಡ ಅಂಬ್ರ್‍-ತಿಮ್ಮಪ್ಪಣ್ಣಯ್ಯನ ಹೆಂಡತಿಯಾ? ಮೊದಲೇ ಬಾಯಿ ಹೋದ ಕೊಡಲಿ. ’ಅಲ್ಲ ವಿಶಾಲತ್ತಿಗೆಗೆ ಅಂಥಾ ಸಿಟ್ ಯಾಕ್ ಬಂತ್? ಅಪ್ಪಣ್ಣಯ್ಯ ಆರತಿ ತಟ್ಟೆ ತನಗೆ ಕೊಡೂದು ಬಿಟ್ಟು ಕಾಶಿಗೆ ಕೊಡ್ತ ಅಂತೇಳಿ ಹೆದರಿಕೆಯ್ತ, ಹೊಟ್ಟೆಕಿಚ್ಚಾಯ್ತ? ಅಡ್ಡಿಲ್ಲೆ, ಮೀನಾಕ್ಷತ್ತೆ ಒಳ್ಳೇ ಜನನ್ನ ಎತ್ತಿಕಟ್ಟಿರು. ಇಲ್ದಿದ್ರೆ ಗಿರಿಜಾಮಣಿಗೋಸ್ಕರ ವಿಶಾಲತ್ತೆಗೆ ಏಳುವವಳಾ? ಅಂದ್‌ಬಿಟ್ಲ್-ತಕೋ-ಮತ್ ಅವ್ರವ್ರೊಳ್ಗೆ ಹಿಡ್ಕಂತ್-ನೀನೇ ಹೇಳ್. ಈ ಮೀನಾಕ್ಷತ್ತೆ ಪಾಪ ಅದ್ದಕ್ಕಲ್ದ ಇಷೆಲ್ಲ ಆದ್?-” +“ಆದರೂ ಸರಸ ಚಿಕ್ಕಿ ನಂಗೆ ನೀ ಹೇಳುವಷ್ಟು ಸುಲಭ ಕಾಂತಿಲ್ಲೆ. ಕದಿಯುವುದೇ ಹೌದಾದ್ರೆ ಬರೀ ಎರಡು ಸುಳಿಯುಂಡೆ ಕದೀತ್ರಾ? ಇಡೀ ತಟ್ಟೆಯೇ ಇಪ್ಸಮಿಗೆ? ಅಷ್ಟ್ ಸುಳಿಯುಂಡೆಯಾಗೆ ಯಂತ ಸಿಕ್ಕು? ಇಲ್ಲೆಂತದೋ ಹಿಕ್ಮತ್ ಇತ್ತ್” – +ಎಷ್ಟು ಕೇಳಿದರೂ ಸರಸ ಚಿಕ್ಕಿಯದು ಒಂದೇ ಉತ್ತರ “ಹೆಂಗಸರ ಪಂಚಾತಿಕೆ ಎಷ್ಟು ಬುಡ ಹರಡಿದರೂ ಎಂದಿಗೂ ಅರ್ಥ ಆಪಂಥದಲ್ಲಿ – ಅವು ಗಂಡಸ್ರ ಹಂಗಲ್ಲ. ಗಂಡಸರು ಸೀದ” – ತಾನೂ ಒಬ್ಬ ಗಂಡಸೇ ಎಂಬಷ್ಟು ದೃಢವಾಗಿ ಈ ಮಾತು ನುಡಿದಳು ಸರಸ ಚಿಕ್ಕಿ. +“ಕಾಪಿಗೆ ಬಪ್ಪಿರಲೆ” ಕರೆದಳು ತಾರಾಮತಿ. ಆಗ ಮೀನಾಕ್ಷತ್ತೆಯ ಮಗ ನರಸಿಂಹನೂ ಬಂದ. “ಓ ಹೋ ಹೋ ಏನಂಬ್ರ್‍” ಎನ್ನುತ್ತ ನಮ್ಮ ಜೊತೆಗೇ ತಾನೂ ಜಗಲಿ ಏರಿದ. “ನಮಗೂ ಲೋಟ ಕಾಪಿ ಬರಲೀ” ಎಂದ. ಅವನಿಗೂ ಒಂದು ಲೋಟ ಕಾಪಿ ಬಂತು. +ಒಣಗಿ ಸುರುಟಿಹೋಗಿದ್ದ ನರಸಿಂಹ. “ಏನು ಮಣಿ, ಹ್ಯಾಂಗಿದ್ದೆ?” – ಎಂದ ಸರಸ ಚಿಕ್ಕಿಯ ಪ್ರಶ್ನೆಗೆ “ಹೀಂಗಿದ್ನಲೆ!” – ಎಂದ. ನಾ ತಟ್ಟನೆ ತಾರಾಮತಿಯ ಮುಖ ನೋಡಿದೆ. ಅವಳು ಕಂತಿದ ಮುಖದಲ್ಲಿ ಮುಚ್ಚಿಗೆ ನೋಡುತ್ತಿದ್ದಳು. +“ನರಸಿಂಹನಾ? ಗಡ್ಡ ಬಿಟ್ಕಂಡ್ ಹಡೆ ತಿರ್‍ಗತ್. ಇದ್ದವರ ಮನೆ ಜಗಲಿ ಹತ್ತತ್ ಅಳೀತ್ ಇಳೀತ್. ತನ್ನ ಮನೆಯಗೆ ಚಿನ್ನ ಬೆಳ್ಳಿ ಅಷ್ಟಿದ್ದಿತ್ ಇಷ್ಟಿದ್ದಿತ್ ಆರತಿ ತಟ್ಟೆಯೂ ಇದ್ದಿತ್ ಅಂತೇಳಿ ಕೊಚ್ಚಿ ಇಳ್ಸತ್-” ಎಂದಿದ್ದರು ದೊಡ್ಡಮ್ಮ. ಮಾತಾಡುತ್ತ ಸರಸ ಚಿಕ್ಕಿ ಮೆಲು ದನಿಯಲ್ಲಿ “ಮಣಿ, ಆರತಿ ತಟ್ಟಿನ್ನೂ ಮಾರಿಯೆ ಅಂಬ್ರಲೇ. ಎಂಥಾ ಆದಿಕಾಲದ ತಟ್ಟಿ ಅದ್-” ಎಂದರೆ “ನಿಂಗೆ ಭ್ರಾಂತು ಅಲ್ದ ಸರಸ ಚಿಕ್ಕಿ? ಆದಿಕಾಲದ ತಟ್ಟಿ ದೊಡ್ಡಜ್ಜಯ್ಯನ ಕಾಲ್ದಾಗೇ ಹೊಸಲು ದಾಟಿ ಸೂಳಿಮನೆಗೆ ಹೋಯಾಯ್ತ್. ಅದೇ ತರದ್ದೇ ದೊಡ್ಡಜ್ಜಯ್ಯ ಹೊಸ್ತ್ ಮಾಡಿಸಿದ್ ಅಂಬ್ರ್‍ – ಕೇಣ್ – ಮುದ್ಕ ಮಾಲಿಂಗಾಚಾರಿ ಹತ್ರ. ಎಲ್ಲ ಕತಿ ಹೇಳ್ತ. ಆದಿಕಾಲದ್ ಯಾವುದ್ ಉಳೀತ್ ಹೇಳ್. ನಾನೂ ಇಲ್ಲೇ ನೀನೂ ಇಲ್ಲೆ. ಪ್ರಪಂಚವೇ ಹೊಸ್ತ್ ಆತಾ ಇರತ್. ಈ ಅಮ್ಮನಂಥವ್ರಿಗೊಂದು ಭ್ರಮೆ. ಮುಂಚಿಂದೆ ಉಳ್‌ಸ್ತೋ ಅಂತೆಳಿ. ಆರ್ತಿ ತಟ್ಟಿ ಮಾರಿ ವಿಷ್ಯ ಅಮ್ಮಂಗ್ ನಾನಿನ್ನೂ ಹೇಳ್ಲಿಲ್ಲೆ. ಹೇಳಿರೆ ಹಾಟ್ ಫೇಲ್ ಆಪು” – ಎಂದು ಉದ್ದ ವೇದಾಂತ ಬಿಡುತ್ತ “ಸಾಗುವಳಿಯೆಲ್ಲ ಒಕ್ಕಲಿಗಾದ ಮೇಲೆ ಇನ್ಯಂತ ಉಳೀತ ಸರಸ ಚಿಕ್ಕಿ?” – ಎಂದು ಬೀಡಿ ಹಚ್ಚಿ ಹೊಗೆಯ ಅಡ್ಡ ಸರಿದುಕೊಂಡ – ಅಬ್ಬೆಗೆ ಹಾರ್ಟ್‌ಫೇಲ್ ಆಗದಂತೆ ತಡೆದು ನಿಲ್ಲಿಸಿದ ಘನವಂತ ಮಗ! +“ತಕಣಿ, ಕಾಪಿ ತಕಣಿ ಎಲ್ಲ. ಬಪ್ಪುದೇ ಅಪರೂಪ. ಬಂದ್‌ಕೂಡ್ಲೆ ತಿರುಗುಕೆ. ಎದ್ದದ್ದಾ? ಹೆಣೇ ಸರಸಾ, ಇವತ್ತು ಉಂಡ್ಕಂಡೇ ಹೋಯ್ಕ್ ನೀವಿಬ್ರೂ-ಇವಳ ಹೊಸರು ಯಂತ ಅಂದೇ? – ಅಲ್ಲ ಕಾಶಿ ಮೇಲಿನೂರಿಗೆ ಹೋದ್ಲ್ ಅಂದ್ಯ? ಹೋಗ್ದೆ ಮತ್ತೆ? ಇನ್ಯಾರ್‍ ಈ ಊರಗೆ ಅವಳ್ನ ಸಾಂಕ್ತೊ? ಪೋಂಕು ಇತ್ತಾ, ಗಾಡಿ ಕಟ್ತಾ? ಪಾಪ. ಸಮಾ ಹೊಡೀತ್ ಹ್ಯೆಂಡ್ತೆಗೆ-ಹೊಡ್ದದ್ದಂದ್ರೆ! ಹಾಂಗನ! ಆ ನಮೂನಿ! ಒಂದ್ ಜನ ಸೇರಿದ್ದಂದ್ರೆ-ಗದ್ದೆ ಕೆಲ್ಸ ಬಿಟ್ ಎಲ್ಲ ಇಲ್ಲೇ- ಆವಾಗ ನೀನಿದ್ದೆ. ಸುಳ್ಳ? – ನಿಂಗಿನ್ನೂ ಮದಿ ಆಯಿರ್‍ಲಿಲ್ಲೆ.” ಚಪ್ಪರಿಸಿ ಚಪ್ಪರಿಸಿ ನುಡಿಯುತ್ತಿದ್ದಂತೆ ಮೀನಾಕ್ಷತ್ತೆ ಮತ್ತೆ ಚಡಪಡಿಸಿದರು. +“ಆ ಪ್ರಕಾಶ ಮಾಣಿ ಎಲ್ಲಿ ಸತ್ತ್‌ತ? ಜಗಲಿ ಮೇಲೆಲ್ಲ ಕಾಕಿಯಪ್ಪ. ಎಷ್ಟ್ ಓಡಿಸಿರೂ ಬತ್ತೋ. ಕರಾ ಕರಾ ಕರಾ ಅಂತೋ”- +ಪ್ರಕಾಶ ಮಾಣಿ ಅಲ್ಲೆಲ್ಲೂ ಕಾಣಿಸಲಿಲ್ಲವಾಗಿ ನರಸಿಂಹನೇ ನಮ್ಮತ್ತ ತಿರುಗಿ ಇದೊಂದು ಪ್ರಾರಬ್ಧ ಎಂಬಂತೆ ಹಣೆ ಏರಿಳಿಸಿ, ಜೋರಾಗಿ ಕೈ ಬೀಸಿದ. +ಚಿಟಿ ಚಿಟಿ ನಕ್ಕರು ಮೀನಾಕ್ಷತ್ತೆ…. “ಒಂದು ಬೀಸಿದ್ದೇ, ಎಲ್ಲ ಎಲ್ಲಿದ್ದೋ? ಪುಡ್ಚೋ!” +ಮಾಣಿ ಎಲ್ಲಿ ಎಂದು ಅರಸಿದೆ. ಪಡು ಹೆಬ್ಬಾಗಿಲಲ್ಲಿ ಹಿಡಿಕಡ್ಡಿಯ ಬಿಲ್ಲಿನಲ್ಲಿ ಹಿಡಿಕಡ್ಡಿಯ ಬಾಣ ಬಿಡುತ್ತ ನಿಂತಿತ್ತು. ಈಚೆ ಪೂರ ಮರೆತೇಬಿಟ್ಟಿತ್ತು. +**** +ಕೀಲಿಕರಣ : ಕಿಶೋರ ಚಂದ್ರ +ಕೀಲಿಕರಣ ದೋಷ ತಿದ್ದುಪಡಿ : ರಾಮಚಂದ್ರ ಎಮ್ +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_129.txt b/Kannada Sahitya/article_129.txt new file mode 100644 index 0000000000000000000000000000000000000000..27161f75019bc66f2b826516421c4b3ba1f37da6 --- /dev/null +++ b/Kannada Sahitya/article_129.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ +ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ. +ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ +ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ. +ಚಿಕ್ಕೆ ಚಕ ಚಕ ಜೊನ್ನ ಪೂರದಿ ತೇಲಿಮುಳುಗಿವೆ ಮೋಹನ +ಜಗದ ಜಡ ಬಡ ಜೀವಗೇಹದಿ ಶಾಂತಿಯಮೃತದ ಸೇಚನ. +ಬಾನ ಮೂಲೆಯ ಮೋಡಪಡೆ ಮುದಗೊಂಡು ಬರುತಿದೆ ತೇಲುತ +ಮದುಮಗನ ಸ್ವಾಗತಿಸೆ ನಿಬ್ಬಣ ಹೊರಟ ಸಂಭ್ರಮ ಹೋಲುತ. +ಶಾಂತಿ ಬೆಳುದಿಂಗಳಿನ ಹಾಲಲಿ ಕರಗಿದಂತಿದೆ ತಿಂಗಳ +ಸುಯ್ಯೆಲರು ಹಾಯಾಗಿ ತೀಡಿದೆ ಹದುಳವೆನೆ ಶುಭಮಂಗಳ. +ದೂರದಿಂದಲಿ ಕೇಳಬರುತಿದೆ ಕೊಳಲ ಕೊರಳಿನ ಗಾಯನ +ಸುಗ್ಗಿಯಲಿ ಹಿರಿಹಿಗ್ಗಿ ರಿಂಗಣಗುಣಿದು ಹಾಡಿದೆ ಜನಮನ. +ಇಂಥ ಸಮಯದಿ ಹಂಬಲದಿ ಬಾಯ್ದೆರೆದ ಸಿಂಪಿದು ಭಾವನ +ತರಗೆಲೆಯು ಗಿರುಕೆನಲು ಮೌನವೆ ಬಿಕ್ಕಿದೊಲು ಬರಿ ಕಲ್ಪನ. +***** +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […] +ಎಗ್ಗಿಲ್ಲದ ಪ್ರಣಯಿ ಯಾಕೆ? ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ- ದಿಟ್ಟರು, ಮೊಂಡರು, ಮೋಟುಮರ ಗಾಳಿಮಿಂಡ ಅಂತಾರಲ್ಲ ಹಾಗೆ ಜಗಭಂಡರು ಸೊಂಪಾಗಿ ಸುಮ್ಮನೇ ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ ರೂಢಿಸಿಕೊಂಡು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_13.txt b/Kannada Sahitya/article_13.txt new file mode 100644 index 0000000000000000000000000000000000000000..1aec9744e4cd54cd00b8bbe09992b3aa061a3f45 --- /dev/null +++ b/Kannada Sahitya/article_13.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” +ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! +ಒಳಿತಿದನು ಅರಿತು ಆಚರಿಪಂಗೆ +ದಿಟವೆಂದು ನಂಬುವಗೆ, +ಹಂಬಲಿಸಿ ಹರಿದೋಡುವಂಗೆ, +ಶೋಕಕೆದೆಗೊಟ್ಟವಗೆ, +ಲೋಕಹಿತಗೈವಂಗೆ +ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! +ಹಿರಿಯಾಸೆ ಹೊದ್ದವಗೆ +ಬಿದ್ದು ಎದ್ದವಗೆ, – +ಮುಂದೋಡಿ ಹಿಂದೆ ನೋಡಿ, ಕೈಬೀಸಿ ಕರೆದು ಬೇಡಿ +ಕತ್ತೆತ್ತಿ ಮುನ್ನಡೆವ ಧೀರನೆ ಧುರೀಣ! +ಸಣ್ಣತನ ಸ್ವಾರ್ಥ ದಿಗ್ಭಂಧನವೆನುಚ್ಚಳಿಸಿ +ಎಸೆಯೊ ಪೊಸಮಸೆಯ ಬಾಣ +ಅದರಾಚೆ ನಮ್ಮ ತಾಣ, +ಸುವಿಶಾಲ ಪರಿಧಿ ಕಾಣ! +೨ +ದೇಶದಿಗ್ದೇಶಗಳ ಹೊಸ ಗಾಳಿ ಬೆಳಕು +ತನುಮನವನೆಳ್ಚರಿಸಿ ಬಾಳ ತೊಳೆಯುವ ಸೆಳಕು +ಇಂದಿಂದೆ ಬೇಕು +ಬಲಗೊಳಲಿ ಬದುಕು, +ಈಸು ದಿನ ಬೆದರಿ ಬೆದರಿ, ತನ್ನಲ್ಲೆ ಮುದುರಿ ಮುದುರಿ +ಬೂದಿಯಲಿ ಉರುಳಿ ಹೊರಳಿ +ತನಿಗೆಂಡದಂತ ನರಳಿ +ಮಲಗಿರುವ ಹೆಬ್ಬಯಕೆ ಮೈಕೊಡವಿ ಮೇಲೆದ್ದು +ಮೇರುಗಿರಿ ಗೆಲ್ಗೆ! +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!!” +***** +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_130.txt b/Kannada Sahitya/article_130.txt new file mode 100644 index 0000000000000000000000000000000000000000..a3610d43d1fb56ce6132e96bd20984c98b5b535a --- /dev/null +++ b/Kannada Sahitya/article_130.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ +ಇರುಳ ಸವಿಗನಸಿನಾಮೋದದಲಿ ಮೈಮರೆದು +ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು +ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ +ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ +ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ +ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, +ಚಿಗುರು ಚೆಂಗುಡಿಗಳಿಗೆ ಪನ್ನೀರ ಚಿಮುಕಿಸುತ +ಮೂಡಣದ ಹೊಸತಿಲಿಗೆ ಹೊಂಬಣ್ಣ ನೀರಿನಲಿ +ಸಾರಣೆಯ ಕಾರಣೆಯಗೈದು, ಕುಂಕುಮದಿಂದ +ಬೊಟ್ಟಿಟ್ಟು ತಳತ್ಥಳಿಸಿ, ಸಂತಸ ಶುಭೋದಯದ +ಝಣಿಝಣಿರು ಚಕಮಕಿತ ಭೂನಭೋರಂಗದಲಿ +ಉನ್ಮತ್ತರಾಗಿಣಿಯು, ಜಗದುದಯ ಕಾರಿಣಿಯು +ಚೆಲುವೆ, ಶುಭದರ್ಶಿನಿಯು-ಹೋ! ನರ್ತಿಸಿದಳುಷೆಯು. +***** +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +ನಮ್ಮ ಮನೆಯ ಕನ್ನಡಿ ಯಲಿ ಮಾತ್ರ ನನಗೆ ನಾ ಚಂದ ಉಳಿದಲ್ಲಿ ಪ್ರೇತ ನರಪೇತಲ ಊದಿಕೊಂಡ ಗಲ್ಲ ಚಿಂತೆ ತುರಿಸುವ ಮೂಗು ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ ನ ರೂಪ […] +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_131.txt b/Kannada Sahitya/article_131.txt new file mode 100644 index 0000000000000000000000000000000000000000..d8e6cde104c538cf8d6fc21818c6f5aa2ddd02b9 --- /dev/null +++ b/Kannada Sahitya/article_131.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ +ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ +ಮತ್ತೆ ಮತ್ತೆ ನಡೆದು, +ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ +ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. +ರಾತ್ರಿ ಮಲ್ಲಿಗೆ ಹೂವ, +ಕಂಪು ಸುರಿಸಿದ ಮಳೆಯ +ಹುಣ್ಣಿಮೆಯ ಹೊನ್ನ ನೆನಪು, +ನೀವು ಜೊತೆಗಿದ್ದರೆ; +ಹರಿವ ನದಿಗೆ ಮೈ ಕೊಟ್ಟು +ಆಕಾಶಕ್ಕೂ ಮುತ್ತಿಟ್ಟು +ವಿಶಾಲ ವೃಕ್ಷದ ತಂಪಿನಲಿ ತಂಗಬೇಕು +ಕೊಂಚ ಮರೆಯಬೇಕು +ದಿನನಿತ್ಯ ತಿಂದು, ತೇಗಿ, ಮಲಗುವುದು. +ಕೊರೆವ ಛಳಿ, ಸುರಿವ ಮಳೆ +ಸುಮ್ಮನೆ ಜೊತೆಗಿದ್ದು ಭುಜಕ್ಕೆ ಭು ತಾಗಿಸಿ +ತಿಳಿಸಿದರೆ ಸಾಕು. +ಮುತ್ತುಗಳು ಮತ್ತುಗಳು ಸತ್ತು ಹೋಗಲಿ ಎಲ್ಲ +ಸುಟ್ಟು ಹೋಗಲಿ ಸ್ವಪ್ನ ಸಿಡಿಲಿನಲ್ಲಿ. +ಯಾವ ದೀಪದ ಬೆಳಕೊ +ಯಾವ ಚುಕ್ಕಿಯ ಹೊಳಪೊ +ಯಾವ ಬೆಂಕಿಯ ಕಾವೊ +ತಣ್ಣಗೆ ಎದೆ ಸುಟ್ಟು, +ಅಲ್ಲಿ ಹುಟ್ಟಲಿ ಮತ್ತೆ +ಹೊಸದೊಂದು ಪುಟ್ಟ ಹಾಡು. +***** +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_132.txt b/Kannada Sahitya/article_132.txt new file mode 100644 index 0000000000000000000000000000000000000000..8f23d6d48105d0aaefd2a190f28efe29f8d845aa --- /dev/null +++ b/Kannada Sahitya/article_132.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗಜ್ಯೋತಿ ಎನ್ನಿಸಿದ +ಮಹಾ ಜಾತ್ಯತೀತ ಚೇತನವನ್ನು +ಅನುಯಾಯಿಗಳು +‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು +ಬಸವ +ಳಿದುಹೋದ; +ತನ್ನ ದಿವ್ಯ ಸಂದೇಶಗಳ ಪಾಲಿಗೆ +ಬಸವ +ಅಳಿದು ಹೋದ. +***** +ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ ***** +ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. ***** +ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_133.txt b/Kannada Sahitya/article_133.txt new file mode 100644 index 0000000000000000000000000000000000000000..23eadbfa1f9d2f855c9cf8b4de8e30863b76e276 --- /dev/null +++ b/Kannada Sahitya/article_133.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ ಹೃದಯ. ಈ ಹೃದಯದಲ್ಲಿ ನನಗೂ ಒಂದು ಪಾತ್ರವಿದೆ. ನನಗೂ ಅದಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವೊಂದಿದೆ. ಅಂತಹ ಸಂಬಂಧವನ್ನು ಕಡಿದು ಕೊಳ್ಳುವುದು ಎಂದರೆ ಸಾಮಾನ್ಯವಾದ ಮಾತಲ್ಲ. ದೇವರಾಜ ಮಾರ್ಕೆಟ್ಟಿಗೂ ನನಗೂ ಇರುವುದು ಬಾಲ್ಯದ ಗೆಳೆತನಾ ಸ್ವಾಮಿ. ಅವನು ನನ್ನ ಆಪ್ತಮಿತ್ರ ಸ್ವಾಮಿ. ಕುಮಾರವ್ಯಾಸನಿಗೆ ವೀರನಾರಾಯಣ, ಕುವೆಂಪು ಅವರಿಗೆ ಕವಿಶೈಲ್ಲ, ಪುತಿನ ಅವರಿಗೆ ಯದುನಾರಾಯಣ, ಬೇಂದ್ರೆ ಅವರಿಗೆ ಧಾರವಾಡ. ನನಗೆ ಮಾತ್ರ ದೊಡ್ಡ ಮಾರ್ಕೆಟ್. ಎಲ್ಲರೂ ಅದನ್ನು ದೇವರಾಜ ಮಾರ್ಕೆಟ್ ಎಂದೇ ಕರೆಯಲ್ಲಿ. ನಾನು ಮಾತ್ರ ಅದನ್ನು ಕರೆಯುವುದು ದೊಡ್‌ಮಾರ್ಕೆಟ್ ಎಂದೇ. ಮೈಸೂರಿನಲ್ಲಿ ಎಲದಕ್ಕೂ ಈ ಪದ ಬಳಸುವುದು ಸಾಮಾನ್ಯ. ದೊಡ್ಡದಾಗಿರುವ ಮಾರ್ಕೆಟ್‌ಗೆ ದೊಡ್‌ಮಾರ್ಕೆಟ್ ಎಂತಲೂ, ಸರ್ಕಾರಿ ಆಸ್ಪತ್ರೆಗೆ ದೊಡ್ಡಾಸ್ಪತ್ರೆ ಎಂತಲೂ, ಅತಿ ದೊಡ್ಡ ಗಣೇಶ ವಿಗ್ರಹವಿದ್ದರೆ ದೊಡ್‌ಗಣೇಶ ಎಂದೂ ಕರೆಯುವುದು ವಾಡಿಕೆ. ಬಹುಶಃ ದೊಡ್ಡೇಗೌಡರು ಎಂಬ ನಾಮಧೇಯವೂ ಈ ರೀತಿಯೇ ಬಂದಿರಬೇಕು. +ಮೈಸೂರಿನಲ್ಲಿ ದೊಡ್ಡ ಮಾರ್ಕೆಟ್ಟಿಗೂ ಒಂದು ಇತಿಹಾಸವಿದೆ. ಚಿಕ್ಕ ಮಾರುಕಟ್ಟೆಗೂ ಒಂದು ಇತಿಹಾಸವಿದೆ . ನೆಲಸಮ ಪ್ರಕ್ರಿಯೆಯೇ ಇಲ್ಲದೆ ತನ್ನಿಂತಾನೆ ಕಣ್ಮುಚ್ಚಿರುವ ವಾಣಿವಿಲಾಸ ಮಾರುಕಟ್ಟೆಗೂ ಒಂದು ಇತಿಹಾಸವಿದೆ. ಇದು ಮೈಸೂರಿನ ಹೃದಯಾ ಸ್ವಾಮಿ. ನನ್ನ ಬಾಲ್ಯದ ಗೆಳೆಯಾ ಸ್ವಾಮಿ. ನನಗೆ ಬದುಕುವ ವ್ಯವಹಾರ, ಗಣಿತದ ಲೆಕ್ಕಾಚಾರ, ಚೌಕಾಶಿಯ ವ್ಯಾಪಾರ ಎಲ ಕಲಿಸ್ದಿದೇ ಈ ಮಾರ್ಕೆಟ್ ಸ್ವಾಮಿ. ಅಂತಹ ಒಬ್ಬ ಆಪ್ತಮಿತ್ರ ಇನ್ನ್ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತ್. ಮೈಸೂರಿಗೆ ಮುಂದೊಂದು ದಿನ ಹೋದಾಗ ಸಯ್ಯಾಜಿರಾವ್ ರಸ್ತೆಯಲ್ಲಿ ಓಡಾಡುವಾಗ ೧೧೦ ವರ್ಷಗಳಿಂದ ಎಷ್ಟೋ ಜನರ ಒಡನಾಟಕ್ಕೆ ಸಾಕ್ಷಿಯಾಗಿ ನಿಂತಿದ್ದ ಆ ಮಿತ್ರ ಅಲ್ಲಿರದೇ ಹೋದಾಗ, ವೇ ಮೊದಲ ರೂಪದ ರೋಮನ್ ಶೈಲ್ಲಿಯ ರಾಜಪರಂಪರೆಯ ಊರು ಎಂಬುದನ್ನು ಪದೇಪದೇ ಸಾಬೀತು ಪಡಿಸುತ್ತಾ ನಿಂತಿರುವ ಕಟ್ಟಡವನ್ನು ಕಾಣದಿದ್ದರೆ ಏನನ್ನೋ ಕಳೆದುಕೊಂಡಂತಾಗುವುದು ನಿಶ್ಚಿತ. ಏಕೆಂದರೆ ಮೈಸೂರಿನ ಹೃದಯಭಾಗವಾದ ಸಯ್ಯಾಜಿರಾವ್ ರಸ್ತೆಯ ಉದ್ದಕ್ಕೂ ಈ ಮಾರುಕಟ್ಟೆ ಮೈಚಾಚಿಕೊಂಡಿದೆ. ಎಲರ ಬದುಕಿನ ಉದಕ್ಕೂ ಒಂದ್ಲಲಾ ಒಂದು ರೀತಿಯಲ್ಲಿ ಕೈಚಾಚಿದೆ. ಒಂದು ತುದಿಯ ಗುರುಸ್ವೀಟ್ಸ್‌ನಲ್ಲಿ ಸಿಗುವ ಮೈಸೂರುಪಾಕು ಆಗಿರಬಹುದು, ಟಿಫಾನಿಸ್‌ನ ಸಮೋಸಾವೇ ಆಗಿರಬಹುದು, ಪ್ರಭಾತ್ ಬೇಕರಿಯ ಬ್ರೆಡ್ ಆಗಿರಬಹುದು. ರಾಚಯ್ಯ ಮಾರುವ ಪೆನ್ನೇ ಆಗಿರಬಹುದು, ಸಯ್ಯಾಜಿರಾವ್ ರಸ್ತೆಯ ಕಡೆಯಿಂದ ಸೆಳೆಯುತ್ತದೆ. ನಾಲ್ಕೂ ಕಡೆ ಸುತ್ತುವರೆದಿರುವ ರಸ್ತೆಗೆ ಇಳಿಯಲು ೧೫೪.೮ ಚದರ ಅಡಿ ವಿಸ್ತಾರದ ಈ ಮರುಕಟ್ಟೆ ಆರು ದ್ವಾರಗಳನ್ನು ಹೊಂದಿದೆ. ಆರೂ ದ್ವಾರಗಳೂ ಆರು ಕತೆಯನ್ನೊಳಗೊಂಡಿವೆ. ಆರೂ ದ್ವಾರದ ಚಿತ್ರ ವಿಭಿನ್ನವೇ. ಅಲ್ಲದೆ ಮಾರುಕಟ್ಟೆಯ ಪಕ್ಕದಲ್ಲೇ ಇದರೂ ಅದರ ಅವಿಭಾಜ್ಯ ಅಂಗವಾಗಿರುವ ಬೋಟಿ ಬಜಾರ್‌ನ ಮಹಿಮೆಯನ್ನು ಏನೆಂದು ಬಣ್ಣಿಸಲ್ಲಿ? ದೇವರಾಜ ಪೊಲೀಸ್ ಸ್ಟೇಷನ್ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುವವರಿಗೆ ಹೂ, ಹಣ್ಣು ಮಾರುವ ವಿಭಾಗವೇ ಅಂತ್ಯ. ಹೂ, ಹಣ್ಣು ಮಾರುವ ಕಡೆಯಿಂದ ಪ್ರವೇಶಿಸಿದರೆ, ಕೊತ್ತಂಬರಿ ಸೊಪ್ಪಿನ ಕಟ್ಟು ಮಾರುವ ಪೊಲೀಸ್ ಸ್ಟೇಷನ್ ಎಂಟ್ರಿ ಅಂತ್ಯ. ಬಹುಶಃ ಇಷ್ಟು ಅಚ್ಚುಕಟ್ಟು, ಇಷ್ಟು ಕರಾರುವಾಕ್ ವಿಂಗಡಣೆಯಾಗಿರುವ ಮಾರುಕಟ್ಟೆಯನ್ನು ನಾನು ಬೇರೆಲ್ಲೂ ನೋಡ್. ನಾನು ಮೈಸೂರಿನವನು ಎಂಬ ಕಾರಣಕ್ಕೆ ಈ ರೀತಿ ಜಂಭ ಹೊಡೆಯುತ್ತಿದ್ದೇನೆ ಎಂದು ಭಾವಿಸಬೇಡಿ, ಸಣ್ಣವಯಸ್ಸಿನಲ್ಲಿ ನಿಕ್ಕರ್ ಜೇಬಿನಲ್ಲಿ ಕೈ ಇಳಿಬಿಟ್ಟುಕೊಂಡು ಮಾರುಕಟ್ಟೆಯ ಮೂಲೆಮೂಲೆಯಲ್ಲೂ ಕುತೂಹಲದ ಕಣ್ಣುಗಳಿಂದ ಅಡ್ಡಾಡಿದವನಾಗಿರುವುದರಿಂದ ಅಂತಿಂಥ ಮಾರ್ಕೆಟ್ ಇದಲ್ಲಾ ಎಂಬ ಭಾವನೆಯೇ ನನ್ನೊಳಗೆ ಈಗಲೂ ಇದೆ. ಇದನ್ನು ಜಂಭಾ ಎಂದಾದರೂ ಕರೆಯಿರಿ, ಪೂರ್ವಗ್ರಹ ಎಂದಾದರೂ ಕರೆಯಿರಿ ನಾನು ದೇವರಾಜ ಮಾರ್ಕೆಟ್ ಪರ. +ಮರಿಮಲ್ಲಪ್ಪ ಶಾಲೆಯಲ್ಲಿ ಓದುತ್ತಿರುವಾಗ, ಒಂದು ನೋಟ್ ಬುಕ್ ಬೇಕಾದರೆ, ಟೆಕ್ಸ್ಟ್‌ಬುಕ್ ಬೇಕಾದರೆ, ಮಾರುಕಟ್ಟೆಯ ಮುಖ್ಯದ್ವಾರ ಎನ್ನಲಾಗುವ, ಚಿಕ್ಕಗಡಿಯಾರದ ಮುಂದಿರುವ ಬುಕ್ ಡಿಪೋಗೆ ಬರುವುದೇ ಒಂದು ಸಂಭ್ರಮ . ಇವೆಲ್ಲಾ ಮಾರುಕಟ್ಟೆಯ ಅವಿಭಾಜ್ಯ ಅಂಗ. ಆ ತುದಿಗೆ ಇರುವ ಫೋಟೋ ಫ್ರೇಮ್ ಅಂಗಡಿಗಳಲ್ಲಿ ಜಗಮಗಿಸುತ್ತಾ ಕುಳಿತಿರುವ ದೇವರ ಫೋಟೋಗಳನ್ನು ನೊಡುತ್ತಾ ಸಾಗಿದರೆ, ಕಳಾನಿಧಿ ಪ್ಯಾಕೆಟ್ ಕ್ಯಾಲೆಂಡರ್, ಮ್ಯಾಗಜೈನ್‌ಗಳನ್ನು ಕೈಯಲ್ಲಿ ಹೊತ್ತು ಮಾರುವವರ ದಂಡು, ವಿವಿಧ ಬ್ಯಾಗುಗಳನ್ನು ಹೆಗಲ್ಲಲೂ, ಕೈಯ್ಲಲೂ, ಮೈತುಂಬವೂ ಹೇರಿಕೊಂಡು ಮಾರುತ್ತಾ ಸುಳಿದಾಡುವವರ ಹಿಂಡು, ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ರೂಪಾಯಿಗೆ ಐದೋ, ನಾಲ್ಕೋ ಎಂದು ಕೂಗುತ್ತಾ ಬೊಬ್ಬೆ ಹಾಕುವ ವ್ಯಾಪಾರಿಗಳು ಮನಸ್ಸಿಗೆ ಜಾತ್ರೆಯ ವೈಭೋಗವನ್ನು ತುಂಬುತ್ತಾರೆ. ಮಾರ್ಕೆಟ್ ಬಾಗಿಲ್ಲ್ಲಲೇ ನಮ್ಮನ್ನು ಒಂದು ಆಹ್ಲಾದಕರ ವಾತಾವರಣಕ್ಕೆ ಮಾನಸಿಕವಾಗಿ ತಯಾರು ಮಾಡಿ ಒಳಕ್ಕೆ ಕಳುಹಿಸುವ ವಿಧಾನವೇನೋ ಇದು ಎನಿಸುತ್ತದೆ. ಒಳಗೆ ಕಾಲಿಟ್ಟರೆ ಮಧ್ಯದ ಸಾಲು ಹಣ್ಣುಗಳ ಮಳಿಗೆ, ಎಡಕ್ಕೆ ಎಲೆ, ಅಡಿಕೆ,ಅಂಗಡಿಗಳ ಸಾಲು, ಜತೆಗೆ ಕುಂಕುಮ ಹರಿಶಿನ, ಗ್ರಂದಿಗೆ ಅಂಗಡಿ, ಬಲಕ್ಕೆ ತೆಂಗಿನಕಾಯಿ ಅಂಗಡಿಗಳ ಸಾಲು, ಸ್ವಲ್ಪ ಮುಂದೆ ಹೋದರೆ ಹೂವಂಗಡಿಗಳದೇ ಒಂದು ಸಾಲು, ಜೋಡಿಸಿಟ್ಟ ಬೆಲ್ಲಗಳ ಪಿಂಡಿ ,ಅಚ್ಚುಬೆಲ್ಲ, ಉಂಡೆಬೆಲ್ಲಗಳ ಅಂಗಡಿಗಳ ಸಾಲುಸಾಲು, ಕಳ್ಳೇಪುರಿ ಅಂಗಡಿಗಳ ಆಕರ್ಷಣೆ….ನಿಮಗೆ ಪೊರಕೆ ಬೇಕೆ, ಇಲ್ಲಿ ಹಿಡಿಯುವ ಬೋನು ಬೇಕೆ? ಗೋಡೆ ಸುಣ್ಣ ಬೇಕೆ? ಇಲ್ಲಿ ಎಲ್ಲಾ ಇದೆ. ಮಾರುಕಟ್ಟೆಯ ವ್ಯವಸ್ಥೆಯೇ ಎಷ್ಟು ಅಚ್ಚುಕಟ್ಟು ನೋಡಿ, ಎಷ್ಟು ಸುಸಂಗತ ಸಂಧಾನ ನೋಡಿ, ಪೂಜಾ ಸಾಮಗ್ರಿಗಳೆಲ್ಲಾ ಒಂದೇ ಕಡೆ ಸಿಗುವ ಸುವ್ಯವಸ್ಥಿತ ವಿಂಗಡಣೆಯೇ ಒಂದು ರೀತಿಯಲ್ಲಿ ಮನಸ್ಸಿಗೆ ಹಿತ ನೀಡುತ್ತದೆ. +ನಾವು ಚಿಕ್ಕವರಿದ್ದಾಗ ಮೈಸೂರಿನಲ್ಲಿ ಸುತ್ತಾಡಲು ಏನಿತ್ತು? ರಜೆ ದಿನ ಬಂದರೆ ಕಾಲಕಳೆಯಲು ಯಾವ ಫನ್‌ವರ್ಲ್ಡ್ ಇತ್ತು? ಯಾವ ಮೆಟ್ರೊ ಇತ್ತು? ಎಷ್ಟು ಮಾಲ್‌ಗಳಿದ್ದವು? ಸಂಜೆಯಾಯಿತೆಂದರೆ, ಟೌನ್‌ಹಾಲ್ ಮೈದಾನಕ್ಕೆ ಹೋಗಿ, ನಾಲ್ಕಾಣೆಗೆ ಕಳ್ಳೇಕಾಯಿ ತೆಗೆದುಕೊಂಡು, ಟೌನ್‌ಹಾಲಿನ ತುದಿಯಲ್ಲಿ ತೂಗುಹಾಕಿರುವ ಲೌಡ್‌ಸ್ಪೀಕರ್‌ನಿಂದ ಬರುವ ವಾರ್ತೆಗಳು, ಚಿತ್ರಗೀತೆಗಳನ್ನು ಕೇಳುತ್ತಾ, ಕತ್ತಲೆಯಾದ ಮೇಲೆ, ಅದೇ ಮಂಕುಕವಿದ ದೀಪದ ರಸ್ತೆಗಳ ಮೂಲಕ ಮನೆಗೆ ಮರಳುವುದು..ನಿತ್ಯದ ದಿನಚರಿಯಾಗಿರುತ್ತಿತ್ತು. ಆದರೆ ಒಂದು ಬ್ಯಾಗು ಹಿಡಿದು ಕೊಂಡು ದೇವರಾಜ ಮಾರುಕಟ್ಟೆ ಪ್ರವೇಶಿಸಿದರೆ ಸಾಕು ಒಂದು ಹೊಸ ಕಿನ್ನರಲೋಕವೇ ಅಲ್ಲಿ ತೆರೆದುಕೊಳ್ಳುತ್ತಿತ್ತು. ಅದೊಂದು ಹತ್ತುಹಲವು ಬಗೆಯ ಬದುಕುಗಳ ಮತ್ತೊಂದು ಲೋಕ. ಅಂಗಡಿ-ಮುಂಗಟ್ಟು ಇಟ್ಟವರು ಗಂಟುಮೂಟೆ ಕಟ್ಟುವುದನ್ನು ನೋಡಿಯೇ ರಾತ್ರಿ ಹೊತ್ತಾಗುತ್ತಿದೆ ಎಂಬುದನ್ನು ತಿಳಿಯಬೇಕಿತ್ತು. ಈ ಮಾರುಕಟ್ಟೆ ಎಂತೆಂಥಾ ವ್ಯವಹಾರಗಳನ್ನು ನನಗೆ ಕಲಿಸಿದೆ ಅಂತೀರಾ? ಶಾಲೆಯಲ್ಲಿ ಪಾಠ ಕಲಿತೆ, ಮಾರುಕಟ್ಟೆಯಲ್ಲಿ ಬದುಕು ಕಲಿತೆ. ಅಂತಹ ಜಗತ್ತು ಇದು. +ಮೊದಲೇ ಹೇಳಿದೆನಲ್ಲಾ..ಚಿಕ್ಕ ಗಡಿಯಾರದ ವೃತ್ತದ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಎತ್ತರಕ್ಕೆ ಇರುವ ವಿವಿಧ ಹಣ್ಣುಗಳ ಅಂಗಡಿಗಳ ಸಾಲು ಘಮ್ ಎನ್ನುತ್ತದೆ. ನೇತು ಹಾಕಿರುವ ತಟ್ಟೆಗಳ ತಕ್ಕಡಿಯೇ ನಮ್ಮನ್ನು ಸ್ವಾಗತಿಸುತ್ತದೆ. ಬಹುಪಾಲು ಅಂಗಡಿಗಳಲ್ಲಿ ಮಲಯಾಳಿಕಾಕಾಗಳು ಕಾಣಬರುತ್ತಾರೆ. ಮುಸ್ಲೀಮರೂ, ಕನ್ನಡಿಗರೂ ಸರಿಸಮವಾಗಿದ್ದಾರೆ. ಮಲಯಾಳಿಗಳ ಕನ್ನಡವೂ ವಿಚಿತ್ರವೇ. ಇವರ ವ್ಯಾಪಾರದ ರಹಸ್ಯ ಎಷ್ಟು ಗಟ್ಟಿ ಎಂಬುದನ್ನು ಅವರನ್ನು ನೋಡಿಯೇ ತಿಳಿಯಬೇಕು. ವ್ಯಾಪಾರ ಮಾಡಲು ಬಂದವರು ಯಾರೂ ಮನಸೆಳೆಯುವ ಸೇಬನ್ನೋ, ಮೂಸಂಬಿಯನ್ನೋ, ಕಿತ್ತಳೆಯನ್ನೋ ಮುಟ್ಟುವ ಅವಕಾಶವೇ ಇರುತ್ತಿರಲ್ಲ್. ಚೌಕಾಶಿಯ ನಂತರ ಕೈ ಬೆರಳಿಂದ ಏನು ಬೇಕು ಎಂಬುದನ್ನು ತೋರಿಸಿದರೆ, ಆತ ಅದರಿಂದ ತೆಗೆದು ಕೈಗೆಟುಕದ ಎತ್ತರಕ್ಕೆ ಕಟ್ಟಿರುವ ನೇತಾಡುವ ತಕ್ಕಡಿಯ ತಟ್ಟೆಗೆ ಅದನ್ನು ಹಾಕುತ್ತಾನೆ. ಆ ತಕ್ಕಡಿಯನ್ನು ಅವನ ನೆತ್ತಿಯಿಂದ ಮೇಲಕ್ಕೆ ಬರುವ ಹಾಗೆ ಏಕೆ ಕಟ್ಟಿದ್ದಾನೆ ಎಂಬುದರ ರಹಸ್ಯ ಒಡೆದರೆ, ನಿಮಗೆ ಅವನ ವ್ಯಾಪಾರದ ಗುಟ್ಟು ಗೊತ್ತಾಗುತ್ತದೆ. ತಕ್ಕಡಿ ಸರಿಯಾಗಿ ತೂಗುವುದ್. ತೂಕದ ಬಟ್ಟು ಇಡುವ ಕಡೆ ಅವನು ಎಷ್ಟು ಗ್ರಾಂನ ಬಟ್ಟು ಇಟ್ಟಿದ್ದಾನೋ? ಈ ಅನುಮಾನ ನಮಗೆ ಕಾಡಿದರೂ ಅವನು ಏನು ತಿಳಿದುಕೊಳ್ಳುತ್ತಾನೋ ಎಂಬ ಹಿಂಜರಿಕೆಯಲ್ಲಿ ಪ್ರಶ್ನಿಸಲು ಹೋಗುವುದ್. ಅವನು ಹಾಕಿದ ಹಣ್ಣು ಕೂಡಾ ಅರ್ಧ ಕೆಟ್ಟಿರುತ್ತದೆ ಇನ್ನರ್ಧ ಚೆನ್ನಾಗಿರುತ್ತದೆ. ಅವನು ಹಣ್ಣುಗಳನ್ನು ತಕ್ಕಡಿಯಿಂದ ತೆಗೆದು ಅದ್ಯಾವ ಮಾಯದಲ್ಲಿ ಹಣ್ಣುಗಳನ್ನು ಕವರಿಗೆ ತುಂಬಿ, ನಿಮ್ಮ ಕೈಯಲ್ಲಿಡುತ್ತಾನೋ ಆ ಶಿವನೇ ಬಲ್ಲ. ಒಮ್ಮೆ ವ್ಯಾಪಾರ ಮಾಡಿದವರು ಮತ್ತೊಮ್ಮೆ ಬರುವಷ್ಟರಲ್ಲಿ ಹುಷಾರಾಗಿ ವ್ಯಾಪಾರ ಮಾಡಬೇಕಾದ ವಿದ್ಯೆಯನ್ನು ಈ ವಿಭಾಗ ನಮಗೆ ಕಲಿಸುತ್ತದೆ. ಮೈಸೂರಿನಲ್ಲೇ ಏಕೆ ಇದು ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಮಾಮೂಲು. ಅದರ್‍ಲಲೂ ಬಸ್‌ನಿಲ್ದಾಣಗಳ ಮುಂದೆ ತಳ್ಳುಗಾಡಿಯಲ್ಲಿ ರಾಶಿ ಪೇರಿಸಿಕೊಂಡು ನಿಂತಿರುವ ಹಣ್ಣು ಮಾರಾಟಗಾರರು ಇಂತಹ ವ್ಯಾಪಾರದಲ್ಲಿ ನಿಷ್ಣಾತರು. ಕೊಳೆತ ಹಣ್ಣುಗಳನ್ನು ಮೊದಲೇ ಕವರ್‌ಗಳಲ್ಲಿ ತುಂಬಿ ಗಾಡಿಯ ಕೆಳಭಾಗದ್ಲಲೋ, ನಮ್ಮ ಕಣ್ಣಿಗೆ ಕಾಣದಂತೆಯೋ ಇಟ್ಟುಕೊಂಡಿರುತ್ತಾರೆ. ಬಸ್ ಏರುವ ತವಕದಲ್ಲಿ ವ್ಯಾಪಾರ ಮಾಡಿ, ನಾವು ಎತ್ತಿಕೊಟ್ಟ ಹಣ್ಣನ್ನೇ ಆತ ತಕ್ಕಡಿಗೆ ಹಾಕಿ ತೂಗಿರುತ್ತಾನೆ. ಕೈಯಲ್ಲಿ ಕವರಿಟ್ಟ ತಕ್ಷಣ ಅವನಿಗೆ ಹಣ ನೀಡಿ, ಚ್ರೆ ಪಡೆದು, ಜಾಗ ಖಾಲಿ ಮಾಡಿ,ಮನೆಗೆ ಬಂದಮೇಲಷ್ಟೇ ಆ ಕವರಿನ ಹೂರಣದ ಮರ್ಮ ಗೊತ್ತಾಗುವುದು. ಅದ್ಯಾವ ಕೈಚಳಕವೋ, ಕಣ್ಕಟ್ಟೋ? ಅದೇನು ವಿದ್ಯೆಯೋ? ಕ್ಷಣಮಾತ್ರದಲ್ಲಿ ನಮ್ಮನ್ನು ಆತ ಡೂಪ್ ಮಾಡಿರುತ್ತಾನೆ +* +* +* +ಮಾರುಕಟ್ಟೆಯಲ್ಲಿ ಎಲೆ ಅಡಿಕೆ ಜಗಿಯುವರಿಗಾಗಿಯೇ ಒಂದು ಪ್ರತ್ಯೇಕ ವಿಭಾಗವೇ ಇದೆ. ವೀಳ್ಯೆದೆಲೆಯನ್ನು ಅಲಂಕಾರಿಕವಾಗಿ ಜೋಡಿಸಿ ಇಟ್ಟಿರುವ ಪರಿಯನ್ನು ನೋಡಿಯೇ ಆನಂದಿಸಬೇಕು. ಹೋಲ್‌ಸೇಲ್‌ನಲ್ಲಿ ಮಾರುವವರು ದೊಡ್ಡ ಪಿಂಡಿಯನ್ನು ವೃತ್ತಾಕಾರವಾಗಿ ಜೋಡಿಸಿರುವ ರೀತಿಯೇ ಆಕರ್ಷಕ. ಸುತ್ತಮುತ್ತ ಎಲೆ ತೋಟದ ಹಳ್ಳಿಯವರು ನಿತ್ಯ ತಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಲ್ಲೇ ಕುಳಿತು ಮಾರಾಟ ಮಾಡಿ ರಾತ್ರಿ ತಮ್ಮ ಊರಿಗೆ ಹಿಂದಿರುಗುತ್ತಾರೆ. ತಂದಿರುವ ಎಲೆಯನ್ನೇ ವಿಂಗಡಿಸಿ ಮೂರು ವಿಧವಾಗಿ ಬುಟ್ಟಿಯಲ್ಲಿ ಇಟ್ಟಿರುತ್ತಾರೆ. ತರುವುದೆಲ್ಲಾ ಮೈಸೂರು ಎಲೆಯೇ. ಅದರಲ್ಲೇ ಮೂರು ವಿಧ! ಇದನ್ನು ಯಾವ ಸಸ್ಯ ಶಾಸ್ತ್ರಜ್ಞನೂ ಹೇಳಿದ್ದಲ್ಲ. ಎಲೆ ಮಾರುವಾಕೆಯದೇ ಅದರ ಪೇಟೆಂಟ್. +ಮೈಸೂರು ಎಲೆ ಎಂದರೆ ಅದರ ಸೊಗಡೇ ಬೇರೆ. ಅದರಲ್ಲಿ ಕಪ್ಪನೆಯ ಎಲೆಯದೇ ಒಂದು ಗುಂಪು. ತಿಳಿ ಹಸಿರು ಬಣ್ಣದಲ್ಲಿ ಮಿರ ಮಿರ ಮಿಂಚುತ್ತಿದ್ದರೆ ಅದೇ ಬೇರೆ ವರ್ಗ. ಅದರ ರೇಟೇ ಬೇರೆ. ಇನ್ನು ಇದೇ ಜಾತಿಯ ಎಲೆಯಲ್ಲೇ ಚಿಕ್ಕ ಚಿಕ್ಕ ಎಲೆಗಳನ್ನೇ ಬೇರೆ ಇಟ್ಟು ಚಿಗುರೆಲೆ ಎಂದು ವರ್ಗೀಕರಿಸಿ ಅದರ ರೇಟನ್ನೇ ಬೇರೆ ನಿಗದಿಪಡಿಸುತ್ತಾರೆ. ಇನ್ನು ಅಂಬಾಡಿ ಎಲೆಯದೇ ಬೇರೆ ಕತೆ. ಅಂಬಾಡಿ ಎಲೆಯನ್ನು ಬರೀ ಮದ್ರಾಸಿಗಳೇ ತಿನ್ನುತ್ತಾರೆ ಎಂಬ ಭಾವನೆ ಹೆಚ್ಚಾಗಿರುವುದರಿಂದ, ಸುತ್ತಲ ಹಳ್ಳಿಯ ಹೆಂಗಸರು ತಂದು ಮಾರುವ ಎಲೆ ಕಟ್ಟಿನಲ್ಲಿ ಅಂಬಾಡಿ ಸಿಗುವುದ್. +ಮೈಸೂರು ಎಲೆಗಿಂತ ಅಂಬಾಡಿ ಎಲೆ ಸ್ವಲ್ಪ ಅಗ್ಗ. ಮೈಸೂರಿನಲ್ಲಿ ಬಹಳ ಜನ ತಿನ್ನುವುದು ಚಿಗುರೆಲೆ ಇಲ್ಲವೇ ತಿಳಿ ಹಸಿರಿನ ಎಲೆ. ಕಪ್ಪು ಮಿಶ್ರಿತ ಹಸಿರು ಅಂದರೆ ಗಟ್ಟಿ ಹಸಿರು ಬಣ್ಣದ ವೀಳ್ಯೆದೆಲೆ ಸ್ವಲ್ಪ ಖಾರ ಜಾಸ್ತಿ. ಆದರಿಂದ ಅದನ್ನು ಮ್ಲೆಲುವವರು, ಸುದೀರ್ಘ ಕಾಲದಿಂದ ಅಡಿಕೆ ಎಲೆ ಸುಣ್ಣ ಹಾಕಿ ಹಾಕಿ ನಾಲಿಗೆ ಮಂದವಾಗಿದ್ದವರೇ ಆಗಬೇಕು. ಇಲ್ಲದಿದ್ದರೆ ಮೊದಲನೆಯ ಬಾರಿ ಈ ಎಲೆ ಬಾಯಿಗೆ ಹಾಕಿಕೊಂಡು ಅಗಿದವರು, ನಾಲಗೆ ದಪ್ಪವಾಗುತ್ತದೆ. ಮುಂದೆ ಅವರು ಆಡುವ ಮಾತು ಸ್ಪಷ್ಟವಾಗಿ ಕೇಳಬೇಕೆಂದರೆ ಸ್ವಲ್ಪ ದಿನಗಳೇ ಆಗಬೇಕಾಗುತ್ತದೆ. +ಆದರೆ ಇತ್ತೀಚೆಗೆ ಪಾನ್ ಬೀಡಾ ಹಾಕುವವರು, ಮದ್ರಾಸ್ ಎಲೆ ಹಾಕು, ಬನಾರಸಿ, ಕಲ್ಕತ್ತಾ ಎಲೆ ಹಾಕು…. ಎಂದು ತಮ್ಮ ಆಯ್ಕೆಯನ್ನು ಹೇಳುತ್ತಾರೆ. ಯಾವುದರ ರುಚಿ ಹೇಗಿರುತ್ತದೆ ಎಂಬುದು ಅವರ ನಾಲಗೆಗೆ ಚೆನ್ನಾಗಿಯೇ ಗೊತ್ತಾಗುತ್ತದೆ. ಅದೇ ರೀತಿ ಮೈಸೂರಿನ ವೀಳ್ಯೆದೆಲೆ ರುಚಿ ಬಲ್ಲವರಿಗೆ ಮತ್ಯಾವ ಎಲೆಯ ರುಚಿಯೂ ಒಗ್ಗದು. ದೇವರಾಜ ಮಾರುಕಟ್ಟೆಯಲ್ಲಿ ಎಲೆ ಮಾರುವವರ ವ್ಯಾಪಾರವೆಲ್ಲಾ ಕವಳಿಗೆ ಲೆಕ್ಕ. ಒಂದು ಕವಳಿಗೆಗೆ ಅಂದು ಒಂದೇ ರೂಪಾಯಿ. ಈಗ ಅದು ಎಂಟು ರೂಪಾಯಿ. ಒಂದು ಕವಳಿಗೆಯಲ್ಲಿ ಇಪ್ಪತ್ತು ಎಲೆಗಳು ಇರುತ್ತವೆ. ನೀವು ನಿತ್ಯ ಹೋಗುವ ಮಾಮೂಲಿ ‘ಗಿರಾಕಿ’ ಆಗಿದ್ದು, ಎಲೆ ಮಾರುವ ಅಮ್ಮನ ಪರಿಚಯಸ್ಥರಾದರೆ ಕವಳಿಗೆಯಲ್ಲಿ ಇನ್ನೆರಡು ಎಲೆ ಜಾಸ್ತಿಯೂ ಇರಬಹುದು. ಅದು ನಿಮ್ಮನ್ನು ಮೆಚ್ಚಿ ಕೊಡುವ ಕೊಸರು. ನೀವು ಹೊಸಬರಾಗಿದ್ದು, ಸಿಕ್ಕಾಪಟ್ಟೆ ಚೌಕಾಸಿ ಮಾಡಿ ವ್ಯಾಪಾರ ಮಾಡಿದರಾದರೆ, ನೀವು ಕೊಂಡು ಹೋದ ‘ಕವಳಿಗೆ’ ಕಟ್ಟಿನಲ್ಲಿ ಹದಿನೈದೇ ಎಲೆ ಇರಬಹುದು! ನಿಮಗೆ ತೋರಿಸಿದ ವೀಳ್ಯೆದೆಲೆ ಕಟ್ಟು ಬೇರೆ, ನೀವು ಮನೆಗೆ ತಂದ ಕಟ್ಟು ಬೇರೆಯೇ ಆಗಿರಬಹುದು. +ಎಲೆಯನ್ನು ಸುತ್ತಲು ದಾರ ತೆಗೆಯುವ ಕ್ಷಣದಲ್ಲಿ ಕಟ್ಟಿನ ಹಲವು ಎಲೆಗಳು ಮಾರುವವರ ತೊಡೆಯ ಕೆಳಗೆ ಕಳಚಿಕೊಳ್ಳುವ ಕಣ್ಕಟ್ಟು ವಿದ್ಯೆಯನ್ನು ಕಲಿಯುವುದು ಸ್ವಲ್ಪ ಕಷ್ಟವೇ. ಅದನ್ನು ಆ ಗದ್ದಲದಲ್ಲಿ ಕಂಡುಹಿಡಿಯುವುದೂ ಕಷ್ಟ. ಮಾರುಕಟ್ಟೆಗೆ ಹೋದಾಗ ಮನಸ್ಸು ನೂರೆಂಟು ಕವಲುಗಳಲ್ಲಿ ಚದುರಿ ಹೋಗುವುದರಿಂದ ಅಲ್ಲಿ ಮನಸ್ಸಿಗೆ ಕಡಿವಾಣ ಹಾಕುವುದು ಕಷ್ಟ. ಆದರೆ ಚಾಣಾಕ್ಷತನ ಬೇಕೆನ್ನುತ್ತದೆ ಈ ಮಾರುಕಟ್ಟೆ. ಅಲ್ಲದೆ ಅದನ್ನು ಕಲಿಸುತ್ತದೆ ಕೂಡಾ. ಈ ಮಾರುಕಟ್ಟೆ ಬದುಕನ್ನು ಕಲಿಸುತ್ತದೆ. ಬದುಕಿನ ದಾರಿಯನ್ನು ಹೇಳಿಕೊಡುತ್ತೆ. ಎಲ್ಲವನ್ನು ಎದುರಿಸಿ, ಜೀವನದಲ್ಲಿ ಮುಂದು ಬರಬೇಕು ಎನ್ನುವವರು ಈ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲೇ ಬೇಕು. ಸುತ್ತಿಕೊಟ್ಟ ಎಲೆಯನ್ನು ಅಲ್ಲೇ ಎಣಿಸುವಂತ್. ಹಾಗೆ ಮಾಡಿದರೆ, ಮಾರುವಾಕೆಯ ಗ್ರಾಮ್ಯ ಸೊಗಡಿನ ಬೈಗುಳಗಳ ಪ್ರಹಾರವನ್ನೇ ಎದುರಿಸಬೇಕಾಗುತ್ತದೆ. ಅವಳು ಎದ್ದು, ನಿಮ್ಮ ಕೈಯಿಂದ ಎಲೆಕಟ್ಟನ್ನು ಕಿತ್ತುಕೊಂಡರೂ ಆಶ್ಚರ್ಯವ್. ಅವರ ಬಾಯಿಗಂಜಿ ಪರಾರಿಯಾಗಬೇಕಾಗುತ್ತದೆ. ಎಲೆ ಮಾರುವವವರು ಕುಳಿತುಕೊಳ್ಳುವ ರಸ್ತೆಗೆ ಅಂಟಿಕೊಂಡಂತಿರುವ ಮಳಿಗೆಗಳು ಅಡಿಕೆ ಅಂಗಡಿಗಳು. ಒಂದಕ್ಕೊಂದು ಪೂರಕ. ಅಡಿಕೆ ಅಂಗಡಿಗೆ ಹೋದರೆ, ಅಲ್ಲಿ ಅಡಕೆಯದೇ ಹಲವಾರು ವಿಧ. ಚೂರು ಅಡಿಕೆ. ಬಟ್ಲಡಿಕೆ, ಕೆಂಪು ಅಡಿಕೆ, ಕಾಯಿ ಅಡಿಕೆ, ಗೋಟಡಿಕೆ ಹೀಗೆ ನೀವು ಯಾವ ರುಚಿ ಬಲ್ಲಿರೋ ನಿಮಗೆ ಬೇಕಾದ ಆಯ್ಕೆ ಅಲ್ಲಿರುತ್ತದೆ. ಅಲ್ಲದೆ, ತಂಬಾಕುಗಳಿಗೂ ಬರವ್. ಕಡ್ಡಿಪುಡಿಗೂ ಕೊರತೆಯೆ… +* +* +* +ನನ್ನ ಗೆಳೆಯರು ಮಾರುಕಟ್ಟೆಗೆ ಹೋಗುವಾಗಲೆಲ್ಲಾ ನನ್ನನ್ನೂ ಹುಡುಕಿ ಕರೆದುಕೊಂಡು ಹೋಗುತ್ತಾರೆ. ನಾನು ವ್ಯಾಪಾರದಲ್ಲಿ ನಿಷ್ಣಾತ ಆಗಿರುವುದರಿಂದ ಸ್ನೇಹಿತರು ಹೀಗೆ ಮಾಡುತ್ತಾರೆ ಎಂದು ಯಾರಾದರೂ ತಿಳಿದರೆ ಅದು ತಪ್ಪು. ನನಗೂ ಮೊದಮೊದಲು ಹೀಗೇ ಅನಿಸಿತ್ತು. ಗೆಳೆಯರಿದ್ದರೆ ಇಂಥವರು ಇರಬೇಕು ಎಲ್ಲಿ ಹೋಗಬೇಕಾದರೂ ನನ್ನನ್ನು ಕರೆಯುತ್ತಾರೆ, ಎಂತಹ ಆತ್ಮೀಯ ಸ್ನೇಹ! ಎಂದು ಹೆಮ್ಮೆಯಿಂದ ಬೀಗಿದ್ದಿದೆ. +ಮಾರುಕಟ್ಟೆ ಒಳಗೆ, ಹೂವಿನ ಅಂಗಡಿ ಮುಂದೆ ವ್ಯಾಪಾರಕ್ಕೆ ನಿಂತಾಗ ಸ್ನೇಹಿತರ ಸ್ನೇಹದ ಗುಟ್ಟು ಬಹಿರಂಗವಾಗಿತ್ತು. ಅಲ್ಲಿ ಮಲ್ಲಿಗೆ ಹೂಗಳನ್ನು ‘ಮಾರು’ ಲೆಕ್ಕದಲ್ಲಿ ಮಾರುತ್ತಾರೆ. ನಮ್ಮ ಎರಡೂ ಕೈಗಳನ್ನು ಚಾಚಿದರೆ ಅದು ಎಷ್ಟು ಉದ್ದ ಬರುತ್ತದೋ ಅಷ್ಟುದ್ದ ಒಂದು ‘ಮಾರು’. ಮುನ್ಸಿಪಾಲಿಟಿಯವರು ಮೀಟರ್ ಲೆಕ್ಕದಲ್ಲಿ ಅಳತೆ ಮಾಡಬೇಕು ಎಂದು ಕಡ್ಡಾಯ ಮಾಡಿದ್ದರೂ, ಹೂ ಮಾರುವವರಿಗೆ ಕೈಯೇ ಮೀಟರ್. ಯಾರು ಪಾಲಿಸಬೇಕು ಸರ್ಕಾರದ ಆದೇಶ? +ಈಗ ಮಾರಿನ ಲೆಕ್ಕ ಕಣ್ಮರೆ ಆಗುತ್ತಿದೆ. ‘ಮೊಳ’ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಹೂ ಎಷ್ಟು? ಎಂದು ಪ್ರಶ್ನಿಸಿದರೆ, ಮೊಳ ಐದು ರೂಪಾಯಿ ಎನ್ನುತ್ತಾರೆ. ಮೊಳ ಎಂದರೆ ಅರ್ಧ ಕೈ. ಅಳೆದು, ಎಳೆದು ಕಟ್ ಮಾಡುವಷ್ಟರಲ್ಲಿ ಅದು ಅಂಗೈಯಷ್ಟೇ ಉದ್ದವಾಗಿರುತ್ತದೆ. ಮಾರು ಅಳೆಯುವಾಗಲೂ ಹೂವಾಡಗಿತ್ತಿಯರು ಕಟ್ಟಿರುವ ಹೂವನ್ನು ಎಳೆದುಬಿಡುತ್ತಿದ್ದರು. ಹೀಗಾಗಿ ಒಂದು ಮಾರು ಹೂ ಅರ್ಧ ಮಾರಿಗೆ ಬಂದು ನಿಲ್ಲುತ್ತಿತ್ತು. ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತರು ಹೂ ವ್ಯಾಪಾರ ಮಾಡುವಾಗ, ಮಾರಿಗೆ ಇಷ್ಟು ಎಂದು ಹೇಳಿದರೆ, ಅಳತೆ ‘ನಮ್ಮ ಕೈಯಳತೆ’ ಎಂದು ವಾದಿಸುತ್ತಿದ್ದರು. ಕೆಲವರು ಒಪ್ಪುತ್ತಿದ್ದರು. ಕೆಲವರು ಬೈಗುಳಗಳ ಮಳೆಯನ್ನೇ ಹರಿಸುತ್ತಿದ್ದರು. +ಹೂ ಮಾರುವವರು ‘ನೀವೇ ಅಳ್ಕಳ್ಳಿ’ ಎಂದು ಹೇಳಿದ ತಕ್ಷಣ ನನ್ನ ಸ್ನೇಹಿತ, ‘ಇವರ ಕೈಗೆ ಹೂ ಕೊಡು’ ಎಂದು ನನ್ನನ್ನು ತೋರಿಸಿದ. ನನ್ನನ್ನು ನೋಡುತ್ತಲೇ ಹೂ ಮಾರುವವಳು, ಬೆಚ್ಚಿಬಿದ್ದು ‘ಹೂನೂ ಇಲ್ಲ, ಏನೂ ಇಲ್ಲ ಮುಂದಕ್ ನಡೀರಿ’ ಎಂದು ಬೈದು ನಿಮ್ಮಂತಹವರು ನಾಲ್ಕು ಜನ ಬಂದರೆ, ಮನೆ ಎಕ್ಕುಟ್ಟೋಗುತ್ತೆ” ಎಂದು ಗೊಣಗಿದಳು. ಮತ್ತೊಬ್ಬರ ಹತ್ತಿರವೂ ಇದೇ ತರಹದ ಮಂಗಳಾರತಿ ಆಯಿತು. ಕೆಲವರು ನಮ್ಮದೇ ಮಾರು ಆದರೆ, ಈ ರೇಟು, ನಿಮ್ಮದಾದರೆ ಡಬ್ಬಲ್ ಎಂದು ಹೇಳಿ ಸಾಗಹಾಕಿದರು. ನಾನು ಎಲ್ಲರಿಗಿಂತ ಸ್ವಲ್ಪ ಉದವಿದ್ದೆ. ನನ್ನ ಕೈಗಳೂ ಸ್ವಲ್ಪ ಲಂಭವೇ. ನಾನು ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದು, ಹೂ ಮಾರುವವರು ಅಳತೆ ಮಾಡಿಕೊಡುವ ಒಂದು ಮಾರು, ನನ್ನ ಕೈಲೆಕ್ಕದಲ್ಲಿ ಎರಡಾಗುತ್ತಿತ್ತು. ನನ್ನ “ಆಪ್ತ” ಸ್ನೇಹಿತರು ನನ್ನನ್ನು ಎಲ್ಲಿದ್ದರೂ ಹುಡುಕಿ ದೇವರಾಜ ಮಾರುಕಟ್ಟೆಗೆ ಕರೆದುಕೊಂಡು ಹೋಗುವ ರಹಸ್ಯ ಈಗ ನಿಮಗೆ ಗೊತ್ತಾಯಿತಲ್ಲ.! +* +* +* +ಹಬ್ಬದ ದಿನಗಳು ಬಂತೆಂದರೆ ಈ ಮಾರ್ಕೆಟ್ ತುಂಬಿ ತುಳುಕುತ್ತದೆ. ಅದು ಸಂಭ್ರಮದ ಕ್ಷಣ. ಜನ ತಳ್ಳಿಕೊಂಡೇ ಓಡಾಡುವಷ್ಟು ವಿಪರೀತದ ಜನಸಂದಣಿ. ಹೂ, ಹಣ್ಣುಗಳ ಅಂಗಡಿಗಳಿಗಂತೂ ಜನರ ಮುತ್ತಿಗೆ . ಆಗ ಮಾರಾಟಗಾರರ ಸಂಖ್ಯೆಯೂ ಹೆಚ್ಚು. ಪಚ್ಚೆಬಣ್ಣದ ತುಳಸಿಹೂ, ತುಳಸಿ ಹಾರದ ಸೊಗಸು, ಕಂತೆ ಕಂತೆಯಾಗಿ ಕೈಯಲ್ಲಿಡಿದು ಮಾರುವ ಘಮಘಮಿಸುವ ದವನ, ಮೈಸೂರು ಮಲ್ಲಿಗೆಯ ರಾಶಿರಾಶಿ, ಕೆಜಿ ಲೆಕ್ಕದಲ್ಲೂ ಲಭ್ಯ, ಮಾಲೆಯಾಗಿಯೂ ಸಿದ್ಧ. ಆ ಸಡಗರಕ್ಕೆ ಎಲ್ಲಿದೆ ಅಂತೀರಿ? +ತರಕಾರಿ ಮಾರುವವರ ಬಳಿ ವ್ಯಾಪಾರ ಮಾಡುವಾಗ ಬಹಳ ಹುಷಾರಾಗಿರಬೇಕು. ನಗರದಲ್ಲಿರುವ ವ್ಯಾಪಾರಿಗಳು, ಬೆಳೆಗಾರರಿಂದ ಖರೀದಿಸಿ ಇಲ್ಲಿ ತಂದು ಮಾರುತ್ತಾರೆ. ಅವರ ಬಳಿ ಎಲಾ ಒಂದೇ ದರ. ವ್ಯಾಪಾರವೂ ನಿಖರ. ಕೆಜಿ ಲೆಕ್ಕದಲ್ಲಿ ಹೆಚ್ಚು ಹೇಳುವುದು ಬೇರೆ. ಆದರೆ, ನೆಲದಲ್ಲಿ ಕುಳಿತು, ಕುಕ್ಕೆಯಲ್ಲಿ ಹೊತ್ತುತಂದ ತೋಟದ ತರಕಾರಿಗಳನ್ನು ಗುಡ್ಡೆ ಹಾಕಿಕೊಂಡೋ, ಇಲ್ಲವೆ ತಕ್ಕಡಿಯಲ್ಲಿ ತೂಗಿ ಸುರಿಯುವವರೋ ಬಹಳ ಡೇಂಜರಸ್. ಅವರು ಹೇಳಿದ್ದಕ್ಕೆಲ್ಲಾ ಒಪ್ಪಿ ನೀವು ತರಕಾರಿ ಕೊಂಡರೆ ಎಲ್ಲಾ ಸರಿ. ಇಲ್ಲವೇ ಅವರ ಸಿಟ್ಟು ಆಕಾಶಕ್ಕೇರುತ್ತದೆ. ನಾನೊಂದು ಬಾರಿ ಬೆಳಿಗ್ಗೆಯೇ ಮಾರುಕಟ್ಟೆಗೆ ಹೋದೆ. ಸಾಮಾನ್ಯವಾಗಿ ಒಂಬತ್ತುಗಂಟೆಯ ನಂತರವೇ ಮಾರ್ಕೆಟ್ಟಿನಲ್ಲಿ ಚಟುವಟಿಕೆ ಆರಂಭ. ಆಗ ತಾನೇ ಎಲ್ಲರೂ ಬಂದು ತಮ್ಮತಮ್ಮ ಜಗಲಿಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ತಾವು ತಂದ ವಸ್ತುಗಳನ್ನು ಹರಡಿಕೊಳ್ಳುತ್ತಿರುತ್ತಾರೆ. ಅಂಥ ಸಮಯದಲ್ಲಿ ನಾನೊಂದು ದಿನ ಅಲ್ಲಿ ವ್ಯಾಪಾರಕ್ಕೆ ನಿಂತೆ. ಹಳ್ಳಿ ಹೆಂಗಸೊಬ್ಬಳು ಆಗ ತಾನೆ ತಂದಿದ್ದ, ನಳನಳಿಸುವ ಕೊತ್ತಂಬರಿ ಸೊಪ್ಪನ್ನ್ನು ಕಟ್ಟುಕಟ್ಟಾಗಿ ಪೇರಿಸುತ್ತಿದ್ದಳು. “ಇದು ಎಷ್ಟಮ್ಮಾ” ಎಂದು ಪ್ರಶ್ನಿಸುತ್ತಲೇ ನಾನು ಬಲಗೈಯಲ್ಲಿ ಬ್ಯಾಗಿದ್ದ ಕಾರಣ ಎಡಗೈಯಿಂದ ಕಟ್ಟನ್ನು ಎತ್ತಿಕೊಂಡೆ. ತಕ್ಷಣವೇ ನನ್ನ ಮೇಲೆ ಹಾರಿ ಬಿದ್ದ ಮಹಿಳೆ “ಇನ್ನು ಬೋಣೀನೇ ಆಗಿಲ್ಲಾ, ಬೆಳ್‌ಬೆಳಗ್ಗೆ ಬಂದು ಎಡಗೈಯಿಕ್ಕ್ದಿದೀಯಾ… ನಿನ್‌ಮನೆ ಕಾಯ್ವೊಗಾ…” ಎಂದೆಲ್ಲಾ ಆರಂಭಿಸಿ, ರಂಕಲು ತೆಗೆದಳು. ಅವಳ ಬಾಯಿಯಿಂದ ನುಗ್ಗಿದ ಬಿರುಗಾಳಿಯ ಹೊಡೆತಕ್ಕೆ ನಾನು ಕೆಲ ಕಾಲ ಕಕ್ಕಾವಿಕ್ಕಿಯಾದೆ. ಪರಿಸ್ಥಿತಿಯನ್ನು ಹೇಗಾದರೂ ನಿಭಾಯಿಸಲೇ ಬೇಕಾಗಿತ್ತು. ಆಗ ನನ್ನ ಎಡಗೈಯಲ್ಲಿರುವ ಆರನೇ ಬೆರಳು ನನ್ನ ನೆರವಿಗೆ ಬಂದಿತು. ನಾನು ಎಡಗೈನಲ್ಲಿ ಸೊಪ್ಪು ಮುಟ್ಟಿದೆ ಎಂಬ ಚಿಂತೆ ಬೇಡಾ ಕಣಮ್ಮಾ..ಅದು ಅದೃಷ್ಟದ ಕೈ…ನೋಡು ನನ್ನ ಎಡಗೈಯಲ್ಲಿ ಆರುಬೆರಳಿದೆ.. ಎಂದು ಅವಳಿಗೆ ತೋರಿಸಿದಾಗ ಅವಳು ಹಸನ್ಮುಖಿಯಾದಳು. ಮತ್ತೊಮ್ಮೆ ಆರುಬೆರಳನ್ನೆ ನಿಟ್ಟಿಸಿದಳು, ಅಯ್ಯೋ ಶಿವನೆ, ಎನ್ನುತ್ತಾ.. ಕೊತ್ತಂಬರಿ ಸೊಪ್ಪನ್ನು ಉಚಿತವಾಗಿಯೇ ಬ್ಯಾಗಿಗೆ ಹಾಕಿ ಕಳುಹಿಸಿಕೊಟ್ಟಳು. ರಾತ್ರಿಯವರೆಗೆ ಅವಳ ವ್ಯಾಪಾರ ಹೇಗಾಯಿತೋ ಗೊತ್ತಿಲ್ಲ. ಮತ್ತೆ ಆ ಕಡೆ ಹೋಗಿದ್ದರೆ ಕೇಳಿ. ಹೀಗೆ ನನ್ನನ್ನು ಅಪಾಯದಿಂದ ಪಾರು ಮಾಡಿದ ಎಡಗೈಯಲ್ಲಿರುವ ಆರನೇ ಬೆರಳಿನ ಬಗ್ಗೆ ಒಂದು ಜಿಜ್ಞಾಸೆ ಇದೆ. ಶಾಲಾದಿನಗಳಲ್ಲಿ ಅದು ಸ್ನೇಹಿತರು ಚುಡಾಯಿಸುವ ಅಂಗವಾಗಬಹುದು ಎಂಬ ಕಾರಣಕ್ಕೆ ಆಪರೇಷನ್ ಮಾಡಿ ತೆಗೆದು ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದದುಂಟು. ಮಾರ್ಕೆಟ್ಟಿನಲ್ಲಿ ಅದು ನನ್ನ ರಕ್ಷಣೆಗೆ ಧಾವಿಸಿದ ನಂತರ ಅದು ನನ್ನ ಜತೆಜತೆಯೇ ಇರಲಿ ಎಂದು ನಾನು ಖಚಿತ ನಿರ್ಧಾರಕ್ಕೆ ಬಂದೆ. ಈಗ ಹೃತಿಕ್ ರೋಷನ್ ಸಿನಿಮಾಗಳು ಬಹಳ ಬಂದು, ಅವನ ಅಭಿಮಾನಿ ವೃಂದ ಜಾಸ್ತಿಯಾದ ಮೇಲೆ, ಮತ್ತೆ ನನ್ನ ಆರನೇ ಬೆರಳಿನತ್ತ ಜನರ ಗಮನ ಹರಿದಿದೆ. ಇವರಿಗೂ ಹೃತಿಕ್‌ರೋಷನ್ ತರಹ ಆರು ಬೆರಳಿದೆ ಎಂದು ಎಲ್ಲರೂ ಹೇಳುತ್ತಾರೆ. ನ್ಯಾಯವಾಗಿ ಅವನಿಗಿಂತ ನಾನೇ ಸೀನಿಯರ್ ಅಲ್ಲವೇ? ನನ್ನ ತರಹವೇ ಅವನಿಗೂ ಆರುಬೆರಳಿದೆ ಎಂದು ಹೇಳುವುದೇ ತರವಲ್ಲವೇ? +* +* +* +ದೇವರಾಜ ಮಾರುಕಟ್ಟೆಯ ಜತೆಜತೆಯ್ಲಲೇ ಅರಳಿ, ಕಮರಿದ ಬದುಕೊಂದು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ತಳ ಊರಿ ಕಾಡುತ್ತಲೇ ಇದೆ. ಅವನು ಚನ್ನಯ್ಯ. ಅವನ ನೆನಪು ಭೂತವಾಗಿ ಕಾಡುತ್ತಿರುವುದು ಏಕೆ? ಎಂಬುದು ನನಗಂತೂ ಚಿದಂಬರ ರಹಸ್ಯ. ಅದು ಬದುಕಿನ ರಹಸ್ಯವಲ್ಲವೇ? ನನಗೂ ಅವನಿಗೂ ಯಾವ ಪರಿಚಯವೂ ಇಲ್ಲ. ಅವನನ್ನು ನಾನು ಮಾತನಾಡಿಸಿಯೂ ಇಲ್ಲ. ಅವನ ಬಳಿ ಹೋಗಿ ಅವನು ಮಾರುತ್ತಿದ್ದ ಗುಡ್ಡೆ ತರಕಾರಿಗಳ ವ್ಯಾಪಾರವನ್ನೂ ನಾನು ಎಂದೂ ಮಾಡಿದವನೂ ಅಲ್ಲ. ಆದರೆ ಅತ ಆಗಾಗ ಕಾಡುತ್ತಾನೆ. ಅವನ ಬದುಕು ಹೆಜ್ಜೆ ಹೆಜ್ಜೆಗೂ ನನ್ನ ಚಿತ್ತವನ್ನು ಕಲಕಿದ್ದಲ್ಲದೆ, ಬದುಕಿಗೆ ಯಾವ ಅರ್ಥವಿದೆ ಎಂದು ಹಲವಾರು ಬಾರಿ ನನ್ನಲ್ಲೇ ನಾನು ಚರ್ಚಿಸುವಂತಾಗಿದೆ. ಧನ್ವಂತರಿ ರಸ್ತೆಯ ಕಡೆಯಿಂದ ಮಾರುಕಟ್ಟೆ ಪ್ರವೇಶಿಸಿದರೆ, ಅಂತಹ ಒಳ್ಳೆಯ ದೃಶ್ಯವೇನೂ ಕಾಣಿಸುವುದಿಲ್ಲ. ಒಳಗೆ ಹೆಜ್ಜೆ ಇಟ್ಟು ಮೆಟ್ಟಲು ಇಳಿಯುತ್ತಿದ್ದಂತೆಯೇ, ಎಡಕ್ಕೆ ಮಾರುಕಟ್ಟೆ ಕಚೇರಿ, ಎಡಭಾಗದ ತುದಿಯಲ್ಲಿ ಒಂದು ಶೌಚಾಲಯವಿದೆ. ಶೌಚಾಲಯ ಎಲ್ಲಿದೆ ಎಂದು ಕೇಳುವ ಅವಶ್ಯಕತೆ ಯಾರಿಗೂ ಬರುವುದಿಲ್ಲ. ಏಕೆಂದರೆ ಅದರ ದುರ್ವಾಸನೆಯೇ ಅದರ ಇರುವಿಕೆಯನ್ನು ಒತ್ತಿ ಒತ್ತಿ ಸಾರುತ್ತದೆ. ಪುರುಷರು ಎಂಬ ಮಸುಕು ಮಸುಕಾದ ಬೋರ್ಡ್ ಇರುವ ಸ್ಥಳದಲ್ಲಿ ನಿಂತುಕೊಂಡು, ಅಲ್ಲಿಗೆ ಹೋಗುವವರಿಗೆ ಒಂದು ಡಬ್ಬಾದಲ್ಲಿ ನೀರು ಕೊಟ್ಟು, ಅವರಿಂದ ಒಂದು ರೂಪಾಯಿ ವಸೂಲು ಮಾಡುತ್ತಾ ನಿಂತಿರುವವನೇ ಚನ್ನಯ್ಯ, ಮತ್ತೊಂದು ತುದಿಯಲ್ಲಿ ಮಹಿಳೆಯರು ಎಂಬ ಬೋರ್ಡ್ ಇದಕಡೆ ನಿಂತಿದ್ದವಳು ಅವನ ಹೆಂಡತಿ. ಇಬ್ಬರ ವೃತ್ತಿಯೂ ಒಂದೇ. ಚನ್ನಯ್ಯ ತೆಲುಗಿನವನು. ಅವನ ಹೆಂಡತಿ ತಮಿಳಿನವಳು. ಇಬ್ಬರೂ ತಮ್ಮ ತಮ್ಮ ಮಾತೃ ಭಾಷೆಯನ್ನು ಮರೆತು, ಕನ್ನಡದಲ್ಲೇ ವ್ಯಹರಿಸುತ್ತಿದ್ದರು. ಕನ್ನಡವೇ ಅವರ ಜೀವನೋಪಾಯವಾಗಿತ್ತು. ಇಬ್ಬರದೂ ಪ್ರೇಮ ವಿವಾಹವಂತೆ, ಇಬ್ಬರೂ ಯಾವುದೋ ಊರಿನಿಂದ ವಲಸೆ ಬಂದು, ಬದುಕುವ ದಾರಿಗಾಗಿ ಮಾರುಕಟ್ಟೆಯನ್ನು ಆಶ್ರಯಿಸಿದವರು. ಗುರಿ ಒಂದೇ ಆಗಿದ್ದುದರಿಂದ ಇಬ್ಬರ ಮನಸ್ಸೂ ಒಂದಾಯಿತು. ಒಬ್ಬರಿಗೊಬ್ಬರು ಆಸರೆಯಾಗಲು ಮನಸ್ಸು ಮಾಡಿ, ಮದುವೆ ಮಾಡಿಕೊಂಡರಂತೆ. ಇಬ್ಬರೂ ಗತಿ ಇಲ್ಲದವರಾಗಿದ್ದರಿಂದ ಅದು ಮನಸ್ಸಿನ ಮದುವೆ ಆಗಿರಬಹುದು. ಒಟ್ಟಿನಲ್ಲಿ ಒಂದು ಸಂಸಾರವನ್ನು ಸಾಕುವ ಹೊಣೆಯನ್ನು ಈ ಮಾರುಕಟ್ಟೆ ಮೌನವಾಗಿಯೇ ವಹಿಸಿಕೊಂಡಿತು. ಈ ವಿಶಾಲ ಮಾರುಕಟ್ಟೆಯ ಒಡಲೊಳಗೆ ಎಷ್ಟೊಂದು ಸಂಸಾರಗಳ ತೊಟ್ಟಿಲು ತೂಗುತ್ತಿದೆಯೋ? ಎಂಥೆಂಥ ಜೀವನಕತೆಗಳು ಅಡಗಿದೆಯೋ? +ಶೌಚಾಲಯ ತೊಳೆಯುವುದರಿಂದ ದೊರಕುವ ಒಂದೊಂದು ರೂಪಾಯಿಯಲ್ಲಿ ಸಂಸಾರ ಸಾಗಿಸುವುದಾದರೂ ಹೇಗೆ? ಚನ್ನಯ್ಯನ ಫ್ಯಾಮಿಲಿ, ಶೌಚಾಲಯದ ಎದುರೇ ಒಂದು ಆಯಕಟ್ಟಿನ ಜಾಗ ನೋಡಿ, ತರಕಾರಿ ಗುಡ್ಡೆ ಹಾಕಿಕೊಂಡು ಮಾರುವ ವೃತ್ತಿಯನ್ನು ಜೊತೆ ಜೊತೆಗೇ ಆರಂಭಿಸಿತು. ಸಂಜೆಯಾದ ಮೇಲೆ ಗಂಡ- ಹೆಂಡತಿ ಇಬ್ಬರೂ ಅಕ್ಕಪಕ್ಕ ಮಬ್ಬು ಬೆಳಕಿನಲ್ಲಿ ಕೂತು, ಕೂಗಿ ಕೂಗಿ ಜನರನ್ನು ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಒಂದು ದಿನವೂ ಅವರು ಮಾರುವ ತರಕಾರಿ ಕೊಳ್ಳುವ ಮನಸ್ಸು, ಧೈರ್ಯ ಮಾಡುತ್ತಿರಲಿಲ್ಲ. ಮಾರ್ಕೆಟ್‌ನಲ್ಲಿ ಇಂತಹ ಗುಡ್ಡೆ ವ್ಯಾಪಾರಿಗಳು ಬಹಳ ಜನ ಇದಾರೆ. ಅವರ ಬಳಿ ವ್ಯಾಪಾರ ಮಾಡುವ ಜನರ ವರ್ಗವೇ ಬೇರೆ ಇದೆ. ಅಂತಹ ವ್ಯಾಪಾರ ಮಾಡುವವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಬಂಡವಾಳ ಹಾಕಿ ಹೋಲ್‌ಸೇಲ್‌ನಲ್ಲಿ ತರಕಾರಿ ಕೊಂಡು ತಂದು ಮಾರುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಅಲ್ಲಲ್ಲಿ ಬಿಸಾಡಿದ ತರಕಾರಿಗಳನ್ನು ತಂದು ಗುಡ್ಡೆಹಾಕಿಕೊಂಡು ಮಾರುತ್ತಾರೆ ಎಂಬ ಆಪಾದನೆಯೂ ಅವರ ಮೇಲಿದೆ. ಹೋಲ್‌ಸೇಲ್ ಅಂಗಡಿಗಳ ಮುಂದೆ ಬಿದ್ದಿರುವ ತರಕಾರಿ ಮೂಟೆಗಳನ್ನು ಮಾಲೀಕರಿಗೇ ಗೊತ್ತಿಲ್ಲದಂತೆ ಕೂಯ್ದು, ಅದನ್ನು ಕದ್ದುತಂದು ಮಾರುತ್ತಾರೆ ಎಂಬ ದೂರೂ ಇಂತಹ ಚಿಲ್ಲರೆ ವ್ಯಾಪಾರಿಗಳ ಮೇಲಿದೆ. ಸಣ್ಣ ಸಣ್ಣ ಹೊಟೇಲ್ ಇಟ್ಟುಕೊಂಡಿರುವವರಿಗೆ ಇಂತಹ ವ್ಯಾಪಾರ ಮಾಡುವವರಿಂದಲೇ ಹೆಚ್ಚು ಲಾಭ. ಅವರು ಗೋಣಿಚೀಲವನ್ನೇ ತಂದು ಎಲ್ಲ ತರಕಾರಿಗಳನ್ನು ತುಂಬಿಕೊಂಡು ಹೋಗಿ ಬಿಡುತ್ತಾರೆ. ಆ ಹೊಟೇಲಿನಲ್ಲಿ ತಿನ್ನುವವನು ಅದೃಷ್ಟಶಾಲಿಯಾಗಿರಬೇಕು! +ಇದೆಲ್ಲಾ ವ್ಯಾಪಾರದ ರಹಸ್ಯಗಳನ್ನು ಚನ್ನಯ್ಯ ಅರಿಯದವನೇನಲ್ಲ. ಅಲ್ಲೇ ಬಹಳ ದಿನಗಳಿಂದ ತಳ ಊರಿರುವ ಆತನಿಗೆ ಇದು ಏಕಲವ್ಯ ವಿದ್ಯೆ. ಇತರರನ್ನು ನೋಡಿ ತಾನೇ ಕಲಿತದ್ದಾಗಿರಬಹುದು. ಅದಕ್ಕೆ ಅವನು ಹೆಂಡತಿಯ ಸಹಯೋಗದೊಂದಿಗೆ ಈ ವ್ಯಾಪಾರ ಆರಂಭಿಸಿದ್ದ. ನಿತ್ಯ ಈ ವ್ಯಾಪಾರವೂ ನಡೆಯುತ್ತಿತ್ತು. ಜತೆಗೆ ಆಗಾಗ ಕೂಗಾಡುವುದು, ಬೈದಾಡುವುದು, ನಡದೇ ಇರುತ್ತಿತ್ತು. ಒಂದು ರಾತ್ರಿಯಂತೂ ಗಂಡ- ಹೆಂಡತಿ ಇಬ್ಬರೂ ಪರಸ್ಪರ ಬೈದಾಡಿಕೊಳ್ಳುತ್ತಿದ್ದರು. ಸುತ್ತ ಮುತ್ತಲ ಅಂಗಡಿಯವರು ಏನೂ ಆಗಿಯೆ ಇಲ್ಲವೇನೋ ಎಂಬಂತೆ ಅವರವರ ಪಾಡಿಗೆ ಅವರವರು ತಮ್ಮ ತಮ್ಮ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಎಷ್ಟೊಂದು ಆರ್ತನಾದ, ಎಷ್ಟೊಂದು ನೋವು, ಯಾವ ಪರಿಯ ಹಸಿವು ಈ ಮಾರುಕಟ್ಟೆಯ ಗರ್ಭದೊಳಗೆ ಹೂತು ಹೋಗಿವೆಯೋ. +ನಾನು ಎಂದೇ ಮಾರುಕಟ್ಟೆ ಪ್ರವೇಶಿಸಿದರೂ ಮೊದಲು ಕಣ್ಣಿಗೆ ಬೀಳುತ್ತಿದ್ದುದೇ ಚನ್ನಯ್ಯ. ಅವನು ಕುಳಿತುಕೊಳ್ಳುತ್ತಿದ್ದ ಜಾಗ ಆ ರೀತಿ ಇತ್ತು. ಗೇಟಿನ ಎದುರೇ ಜಾಗ ಹಿಡಿದು ಕುಳಿತುಕೊಂಡುಬಿಡುತ್ತಿದ್ದ. ಅವನೂ, ಅವನ ಹೆಂಡತಿಯೂ ಅಕ್ಕಪಕ್ಕ ಕುಳಿತು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ನಾನು ಬೇಡವೆಂದರೂ ಆ ನೋಟದಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಒಮ್ಮೊಮ್ಮೆ ಅವರಿಬ್ಬರೂ ಜಗಳ ಆಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು ಎಂದೆನಲ್ಲ, ಅಂದೂ ಹಾಗೇ ಆಯಿತು. ಅದು ರಾತ್ರಿ ೮ರ ನಂತರದ ಜಗಳ. ಉಂಡು ಮಲಗುವುದಕ್ಕೆ ಮುನ್ನ ಇರಬಹುದು. ಇಲ್ಲಾ ಉಣ್ಣುವುದಕ್ಕೆ ಮೊದಲೇ ಆಗ್ದಿದಿರಬಹುದು. ಇಬ್ಬರೂ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬೈದಾಡಿಕೊಳ್ಳುತ್ತಿದ್ದರೆ, ಸುತ್ತ ವ್ಯಾಪಾರ ಮುಗಿಸಿದವರು, ಕೆಲಸವ್ದವರು ಶ್ರೋತೃಗಳಾಗಿ ನಿಂತು ಬೀದಿ ನಾಟಕ ನೋಡುವಂತೆ ನಿಂತಿರುತ್ತಿದ್ದರು. ಅವಳ ತಂದೆ ತಾಯಿಗಳನ್ನು ಚನ್ನಯ್ಯ ನೋಡಿಯೇ ಇರಲಿಲ್ಲ. ಅವರು ಹೇಗಿದ್ದರು ಎಂಬುದನ್ನು ಕೂಡ ಕಲ್ಪಿಸಿಕೊಂಡಿದ್ದನೋ ಇಲ್ಲವೋ, ಅವಳಿಗೂ ಅಷ್ಟೇ ಚನ್ನಯ್ಯನ ತಂದೆ ತಾಯಿ ಇರಲಿಲ್ಲ, ಕುಲಬಾಂಧವರಾರೆಂಬ ಕಲ್ಪನೆಯೂ ಇದಿರಲ್ಲಿಕ್ಕಿಲ್ಲ. ಆದರೆ ಬೈಗುಳದಲ್ಲಿ ಅವರೆಲ್ಲ ಧಾರಾಳವಾಗಿ ಬಂದು ಬಂದು ಹೋಗುತ್ತಿದ್ದರು! ಜಗಳ ಯಾರ ಮನೆಯಲಿಲ್ಲ. ಅದು ಶ್ರೀಮಂತರನ್ನೂ ಬಿಟ್ಟಿಲ್ಲ. ಬಡವರನ್ನೂ ಬಿಟ್ಟಿಲ್ಲ. ಇದು ಮನಸ್ಸುಗಳ ತಾಳಮೇಳಕ್ಕೆ ಸಂಬಂಧಪಟ್ಟ ವಿಷಯವಲ್ಲವೇ? ಹೀಗಾಗಿ ಚನ್ನಯ್ಯನ ಬದುಕಿನಲ್ಲಿ ಏಕತಾನತೆಯನ್ನು ಕಳೆಯುತ್ತಿದ್ದುದು ಜಗಳವೊಂದೇ ಅನಿಸುತ್ತದೆ. ಒಂದು ದಿನ ಇಬ್ಬರೂ ಬಡಿದಾಡಿಕೊಂಡು ಸಾಯುತ್ತಾರೇನೋ ಎನ್ನುವಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದ್ದ ಜಗಳ ಎಷ್ಟು ಹೊತ್ತಾದರೂ ಬಗೆಹರಿದಿರಲಿಲ್ಲ. ನಾನೂ ಎಷ್ಟು ಹೊತ್ತು ಅಲ್ಲಿ ಇರಲು ಸಾಧ್ಯ? ತರಕಾರಿ ಮೂಟೆ ಹೊತ್ತುಕೊಂಡು ನಾನೂ ಕತ್ತಲಲ್ಲಿ ಮನೆ ಸೇರಬೇಕಲ್ಲವೇ? ಚನ್ನಯ್ಯನಿಗೂ ಅವನ ಹೆಂಡತಿಗೂ ಮನೆಯೂ ಅದೇ, ‘ಆಫೀಸೂ’ ಅದೇ, ಹೀಗಾಗಿ ಅವರು ನಿದ್ರೆ ಬರುವ ತನಕ ಜಗಳವಾಡಿ ನಂತರ ಅಲೇ ಬಿದ್ದುಕೊಳ್ಳಬಹುದು. ಆದರೆ ನನ್ನ ಕಥೆ ಅದಲ್ಲವಲ್ಲ. ಆದರೂ ಅವರ ಕಥೆ ಏನಾಯಿತು ಎಂಬ ತವಕದಲ್ಲೇ ಇಡೀ ದಿನ ಕಾದೆ. ಮರುದಿನ ರಾತ್ರಿ ಮತ್ತೆ ಮಾರ್ಕೆಟ್ಟಿಗೆ ಹೋದಾಗ ಹಿಂದಿನ ದಿನ ರಾತ್ರಿ ಏನೂ ಆಗದವರಂತೆ ಚನ್ನಯ್ಯನೂ ಅವನ ಹೆಂಡತಿಯೂ ವ್ಯಾಪಾರದಲ್ಲಿ ನಿರತರಾಗಿದ್ದುದು ನನಗೆ ಬದುಕಿನ ಹಲವು ಅಚ್ಚರಿಗಳಲ್ಲಿ ಒಂದಾಗಿತ್ತು. ವ್ಯಾಪಾರದ ಮಧ್ಯೆ ಮಧ್ಯೆ ಇಬ್ಬರೂ ಏನೋ ಮಾತನಾಡಿಕೊಳ್ಳುತ್ತಾ, ಪರಸ್ಪರ ಗಿಲ್ಲುತ್ತಾ, ಸರಸ ಬೇರೆ ನಡೆಸುತ್ತಿದ್ದುದು ನನಗೆ ಒಂದು ಚೋದ್ಯವಾಗಿಯೇ ಉಳಿದಿದೆ. +ಇವೆಲ್ಲಾ ಕ್ಷಣಿಕ ಎಂಬುದು ಆಗ ನನಗೆ ತಿಳಿದಿರಲ್ಲ. ಆರು ತಿಂಗಳ ನಂತರ ನಾನೊಂದು ದಿನ ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚೆನ್ನಯ್ಯನೊಬ್ಬನೇ ಇದ್ದ. ಅವನ ಹೆಂಡತಿ ಇರಲಿಲ್ಲ. ಅದರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಸುಮ್ಮನಾದೆ. ಎಲ್ಲೋ ಹೋಗಿರಬೇಕಲ್ಲವೇ? ಸ್ವಲ್ಪ ದಿನಗಳ ನಂತರ ಮತ್ತೆ ಹೋದಾಗ, ಅಲ್ಲಿ ಸಣ್ಣ ಮಗುವೊಂದನ್ನು ಹಿಡಿದುಕೊಂಡು ಚನ್ನಯ್ಯನ ಹೆಂಡತಿ ವ್ಯಾಪಾರದಲ್ಲಿ ನಿರತಳಾಗಿದ್ದಳು. ಮಾರ್ಕೆಟ್‌ನಲ್ಲಿ ಮುಂದಿನ ದಿನಗಳ ವ್ಯಾಪಾರಿಯೊಬ್ಬ ಜನಿಸಿದ್ದ. ಯಾರಿಗೆ ಗೊತ್ತು? ಮುಂದೆ ಅವನೇ ಅಲ್ಲಿ ಅತಿ ದೊಡ್ಡ ವ್ಯಾಪಾರಿಯಾಗಲೂಬಹುದು. ಇವೆಲ್ಲಾ ಸಹಜ ಕ್ರಿಯೆ ಎಂಬಂತೆ ಅವರಿಬ್ಬರೂ ಎಂದಿನ ವ್ಯಾಪಾರದಲ್ಲಿ ಮುಳುಗಿದ್ದರು. ಅಲ್ಲಿ ಬಾಣಂತನವಾಗಲಿ, ಬಾಣಂತಿಯ ಶುಶ್ರೂಷೆಯಾಗಲಿ ಯಾವುದೂ ಕಾಣಲಿಲ್ಲ. ನನಗೆ ಆಶ್ಚರ್ಯವಾದುದೇನೆಂದರೆ, ಮತ್ತೆ ಕೆಲದಿನಗಳಲ್ಲೇ ಅವರಿಬ್ಬರೂ ಮತ್ತೆ ಜಗಳವಾಡಲಾರಂಭಿಸಿದ್ದರು, ಸುತ್ತಲ್ಲಿನ ವ್ಯಾಪಾರಿಗಳಿಗೂ, ಓಡಾಡುವ ಜನರಿಗೂ ಬಿಟ್ಟಿ ಮನರಂಜನೆ. ಅವನು ಶೌಚಾಲಯದ ಹಿಂಭಾಗದ ರಸ್ತೆಯಲ್ಲಿರುವ ಬೋಟಿ ಬಜಾರ್‌ಗೆ ಹೋಗಿ, ಸಾಕಷ್ಟು ಸಾರಾಯಿ ಕುಡಿದೇ ಬರುತ್ತಿದ್ದ ಕಾರಣ ಜಗಳದ ಸ್ವರೂಪ ಬಯಲಾಟವಾಗಿ ಪರಿವರ್ತನೆಯಾಗಿತ್ತು. ತರಕಾರಿಯೇ ಅಲ್ಲದೆ, ಕತ್ತಿ, ಬಟ್ಟೆಬರೆ ಹೀಗೆ ಸಿಕ್ಕಸಿಕ್ಕವೆಲ್ಲವೂ ರೊಂಯ್ಯನೆ ಹಾರುತ್ತಿದ್ದವು. +ಬಹಳ ದಿನಗಳ ನಂತರ ಈ ದೇವರಾಜ ಮಾರ್ಕೆಟ್‌ನಲ್ಲಿ ಕಂಡ ದೃಶ್ಯ ನನ್ನನ್ನು ಸ್ಥಂಭೀಭೂತನನ್ನಾಗಿಸಿತು. ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ, ಚನ್ನಯ್ಯನನ್ನು ಕಂಡೆ, ಆದರೆ ಚನ್ನಯ್ಯನ ಹೆಂಡತಿ ಎಂದಿನಂತಿರಲಿಲ್ಲ. ವಿಕಾರ ರೂಪು, ಸುಟ್ಟ ಮುಖ. ನೋಡಿದರೇ ತಿಳಿಯುತ್ತಿತ್ತು, ಅವಳು ಬೆಂಕಿ ಅನಾಹುತಕ್ಕೆ ಒಳಗಾಗಿ ಪಾರಾಗಿದ್ದಾಳೆ. ಅದರೆ ಸುಟ್ಟು ಹೋದ ಅವಳ ವಿಕಾರ ರೂಪ ಮಾತ್ರ ಅವಳಿಗೆ ನಡೆದ ಘಟನೆಯನ್ನು ಮತ್ತೆಮತ್ತೆ ನೆನಪಿಸುತ್ತಿದೆ. ಅಲ್ಲೇ ಪಕ್ಕದ ಅಂಗಡಿಯವರು ಹೇಳಿದ ಪ್ರಕಾರ, ಚನ್ನಯ್ಯನ ಕುಟುಂಬದ ಕತೆ ನಿತ್ಯ ರಾಮಾಯಣ. ಚನ್ನಯ್ಯ ನಿತ್ಯ ರಾತ್ರಿ ಕುಡಿದು ಬಂದು ಹೆಂಡತಿ ಜತೆ ತಕರಾರು ತೆಗೆಯುವುದು, ಅವಳೂ ಅರಚುವುದು, ದುಡ್ಡಿಗಾಗಿ ಅವನು ಪೀಡಿಸುವುದು, ಅವಳು ಇಲ್ಲಾ ಎಂದು ರಂಪರಾಮಾಯಣ ಮಾಡುವುದು, ಅಲ್ಲಿನವರಿಗೆ ನಿತ್ಯದ ದೃಶ್ಯಗಳು. ಅವರಿಗೆ ಮೊದಮೊದಲು ಅದು ಬೇಸರ ತರುತ್ತಿದ್ದರೂ, ನಂತರ ಅದಕ್ಕೆ ಹೊಂದಿಕೊಂಡು, ಈ ದೃಶ್ಯಕ್ಕೆ ಹೆಚ್ಚಿನ ಮಹತ್ವವನ್ನೇ ನೀಡದೆ, ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಅದೊಂದು ದಿನ ರಾತ್ರಿ ನಿತ್ಯದ ಜಗಳ ವಿಪರೀತಕ್ಕೆ ಹೋಯಿತು. ಅವಳು, ಕೂಗುತ್ತಾ, ಅರಚುತ್ತಾ, ಸೀಮೆ‌ಎಣ್ಣೆ ಡಬ್ಬ ಎತ್ತಿಕೊಂಡು ತಲೆ ಮೇಲೆ ಸುರಿದುಕೊಂಡಳು. ಕಡ್ಡಿ ಗೀರಿದಳು. ಭುಗ್ಗನೆ ಬೆಂಕಿ ಹತ್ತಿಕೊಂಡ ಮೇಲಷ್ಟೇ ಎಲ್ಲರಿಗೂ ಏನಾಗುತ್ತಿದೆ ಎಂಬುದು ಗೊತ್ತಾದದ್ದು. ಅವಳ ಕೂಗು ಆಗ ಬೇರೆ ರೀತಿಯಲ್ಲಿ ಬರಲಾರಂಭಿಸಿತು. ಚನ್ನಯ್ಯನಿಗೂ ಏರಿದ್ದ ಅಮಲು ಇಳಿದು ಅವನೂ ತನ್ನ ಹೆಂಡತಿಯನ್ನು ಬದುಕಿಸುವಂತೆ ಕೂಗಿಕೊಳ್ಳಲಾರಂಭಿಸಿದ. ದೇವರಾಜ ಮಾರ್ಕೆಟ್ಟಿಗೂ ಆಸ್ಪತ್ರೆಗೂ ಅಷ್ಟೇನೂ ದೂರವಿಲ್ಲ. ಎದುರಿಗೇ ಆಸ್ಪತ್ರೆ. ಇತರ ವ್ಯಾಪಾರಿಗಳು ಗುಂಪುಗೂಡಿ, ಅವಳ ಮೇಲೆ ಕಂಬಳಿಹಾಕಿ ಅದುಮಿ, ನೀರು ಸುರಿದು ಅವಳನ್ನು ಆಸ್ಪತ್ರೆಗೆ ಸಾಗಿಸಿದರು. ಅವಳು ಬದುಕುಳಿದಳು. ಅದರೆ ಮೊದಲಿನ ರೂಪ ಅವಳ ಬಳಿ ಉಳಿದಿರಲ್ಲ. ನಾಲ್ಕು ತಿಂಗಳ ನಂತರ ಏನೂ ಆಗೇ ಎಂಬಂತೆ ಆವಳು ಎಂದಿನಂತೆ ಬಂದು ಮತ್ತೆ ವ್ಯಾಪಾರಕ್ಕೆ ಕುಳಿತಳು. ಮಾರುಕಟ್ಟೆ ತಿಮಿಂಗಿಲವಿದ್ದಂತೆ. ಅದನ್ನೂ ನುಂಗಿ ತನ್ನ ವಹಿವಾಟನ್ನು ಮುಂದುವರೆಸಿತು. ಆರೇ ತಿಂಗಳಿಗೆ ಅವಳು ಬಸುರಿ. ಗಂಡ ಹೆಂಡತಿ ಎಂದರೆ ಹೀಗೇ ತಾನೇ? ‘ಅಮರ ಮಧುರ ಪ್ರೇಮ’ ಎಂದು ಸಿನಿಮಾ ಕವಿಗಳೂ ಹಾಡಿರುವುದು ಇದನ್ನೇ ಅಲವೇ? ಚನ್ನಯ್ಯನಿಗೆ ಕಷ್ಟಸುಖ, ದುಃಖ ದುಮ್ಮಾನ ಹೇಳಿಕೊಳ್ಳಲು ಮತ್ಯಾರು ಇದ್ದಾರೆ? ಅವಳಿಗಾದರೂ ಅಷ್ಟೇ ಅಲ್ಲವೇ? ಎಷ್ಟೇ ಬಡಿವಾರಗಳಿದ್ದರೂ ಅವರಿಬ್ಬರೂ ಅಲ್ಲೇ ಕಾಲಹಾಕಬೇಕಲ್ಲ? ಮಕ್ಕಳಿಬ್ಬರೂ ಅವರ ಪಾಡಿಗೆ ಆಟವಾಡುತ್ತಾ, ಅಲ್ಲಿ ಇಲ್ಲಿ ಓಡಾಡುತ್ತಾ ಇರುತ್ತಾರೆ. ಮಾರ್ಕೆಟ್ ಎಂಬ ಪ್ರಪಂಚವನ್ನು ಬಿಟ್ಟರೆ ಅವಕ್ಕೇನೂ ಗೊತ್ತಿಲ್ಲ. ಈ ವಿಶಾಲ ಮಾರ್ಕೆಟ್‌ನ ಹೊರಗೆ ಬೇರೆಯದೇ ಆದ ಜಗತ್ತಿದೆ ಎಂಬುದರ ಯಾವ ಅರಿವು ಇಲ್ಲದೆ ಆ ಪಿಳ್ಳೆಗಳು ಅಲ್ಲಿ ಆಟವಾಡುತ್ತಿರುತ್ತವೆ. ಈಗ ನಮ್ಮೊಂದಿಗೆ, ಮುಂದೆ ಅವಕ್ಕೆ ತೋಚಿದ್ದು ಅವು ಮಾಡಿಕೊಳ್ಳಲಿ ಎಂಬ ದಿವ್ಯ ಉದಾಸೀನದಲ್ಲಿ ಚನ್ನಯ್ಯನೂ ಅವನ ಪತ್ನಿಯೂ ಕಾಲ ಹಾಕುತ್ತಿದ್ದಾರೆ. +ಇತ್ತೀಚೆಗೆ ಬಹಳ ವರ್ಷಗಳ ಅಂತರದ ನಂತರ ಮಾರ್ಕೆಟ್ ಕಡೆ ಹೋಗಿದ್ದೆ. ಹಳೇ ನೆನಪುಗಳನ್ನು ಮತ್ತೆ ಮತ್ತೆ ಕೆದಕಿಕೊಳ್ಳಲು ನನಗೆ ಇಷ್ಟ. ಆದರೆ ಧನ್ವಂತರಿ ರಸ್ತೆಯ ಗೇಟ್‌ನಿಂದ ಮಾರ್ಕೆಟ್ ಪ್ರವೇಶಿಸಿದಾಗ ಮೊದಲಿನಂತೆ ಚನ್ನಯ್ಯನ ದರ್ಶನವಾಗಲೇ ಇಲ್ಲ. ಅವನ ಹೆಂಡತಿ ಕುಳಿತು ವ್ಯಾಪಾರ ಮಾಡುತ್ತಿದ್ದಳು. ಅದೇ ವಿಕಾರ ರೂಪು. ತಲೆಗೂದಲೆಲ್ಲಾ ಬೆಳ್ಳಗಾಗಿ ಮತ್ತಷ್ಟು ಭಯಂಕರವಾಗಿ ಕಾಣುತ್ತಿದ್ದಳು. ಮುದುಕಿಯಾಗಿ ಬಿಟ್ಟಿದ್ದಳು ಎಂಬುದು ತಿಳಿಯುತ್ತಿತ್ತು. ಬಡವರು ಬೇಗ ಮುದುಕರಾಗುತ್ತಾರೆ. ಸ್ವಲ್ಪ ಚನ್ನಯ್ಯನನ್ನೇ ಹೋಲುತ್ತಿದ್ದ ಮಗನೊಬ್ಬ ಅವಳ ಪಕ್ಕ ಕೂತು ವ್ಯಾಪಾರ ಮಾಡುತ್ತಿದ್ದ. ಈಗ ಅವಳನ್ನು ಮಾತನಾಡಿಸುವ ಧೈರ್ಯ ನನ್ನಲ್ಲಿತ್ತು. ಚನ್ನಯ್ಯನ ಬಗ್ಗೆ ವಿಚಾರಿಸಿದೆ. ಯಾವುದೇ ಭಾವನೆಗಳಿಲ್ಲದೆ, “ಅವನಾ.. ಸತ್ತೋದಾ..” ಎಂದು ರಾಗ ಎಳೆದು ಹೇಳಿದಳು. ಆ ಮಾತಿನಲ್ಲಿ ಒಂದು ಚೂರಾದರೂ ಅನುಕಂಪವಾಗಲಿ, ದುಃಖವಾಗಲಿ ಇದ್ದಂತೆ ಅನ್ನಿಸಲಿಲ್ಲ. ನನಗವಳು ಆಗ ಮತ್ತಷ್ಟು ವಿಕಾರವಾಗಿ ಕಂಡಳು. ಬಹುಶಃ ಕುಡಿದೂ ಕುಡಿದೂ ಸತ್ತು ಹೋಗಿರಬೇಕು ಎಂದು ನಾನೇ ಊಹಿಸಿಕೊಂಡೆ. ಇಲ್ಲದಿದ್ದರೆ ಚನ್ನಯ್ಯನಿಗೆ ಸಾವು ಯಾವ ರೀತಿ ಬರಲು ಸಾಧ್ಯವಿತ್ತು? ಮಾರುಕಟ್ಟೆಯಿಂದಾಚೆಗಿನ ಬದುಕನ್ನೇ ಅವನು ನೋಡಿದವನಲ್ಲವಲ್ಲ. ಮಾರ್ಕೆಟ್ ಇಂತಹ ಎಷ್ಟು ಜೀವಿಗಳನ್ನು ಕಂಡಿದೆಯೋ? ಏನೋ. +ಮಾರ್ಕೆಟ್ ನೆಲಸಮವಾದರೆ, ಚನ್ನಯ್ಯನ ಕತೆಯೂ ಅವನ ಸಂಸಾರದ ಕತೆಯೂ ಅದರೊಂದಿಗೇ ಮಣ್ಣುಗೂಡುತ್ತದೆ. ಮುಂದೆ ತಲೆ ಎತ್ತಲಿರುವ ಮಾಡ್ರನ್ ಮಾರ್ಕೆಟ್ ಕಟ್ಟಡದೊಳಗೆ ಜೀವನ ಸಾಗಿಸಲು ಚನ್ನಯ್ಯನ ಮಕ್ಕಳಿಗೆ ಅಧಿಕಾರವಿರುತ್ತದೆಯೇ? ಅಲ್ಲೇ ಉಳಿಯಲು ಅದೇನು ಪಿತ್ರಾರ್ಜಿತವೇ? +***** +ಕೃಪೆ: ಪ್ರಜಾವಾಣಿ ಹಾಗು ಪ್ರೆಸ್ ಕ್ಲಬ್ ಆಫ್ ಬೆಂಗಳೂರು +ಕೀಲಿಕರಣ ದೋಷ ತಿದ್ದುಪಡಿ: ಸೀತಾ ಶೇಖರ್ +ನರಕ, ಯಮಧರ್ಮರಾಯರ ವೈಭವೋಪೇತ ಆಸ್ಥಾನ. ಮುಖ್ಯ ಪೀಠದಲ್ಲಿ ನ್ಯಾಧೀಶನಾಗಿ ಯಮರಾಯರು ಕುಳಿತಿದ್ದಾರೆ. ಅವನ ಪಕ್ಕದಲ್ಲಿ ಚಿತ್ರಗುಪ್ತರು, ಅವನೆದುರು ದೂಡ್ಡ ಒಂದು ಪುಸ್ತಕ. ಅಡ್ಜರಲ್ಲಿ ಮಾನವ ಜೀವಿಗಳ ಇಡೀ ಚರಿತ್ರೆಯೇ ಇದೆ. ಅದನ್ನು ಪರಿಶೀಲಿಸಿ, ಅದರಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_134.txt b/Kannada Sahitya/article_134.txt new file mode 100644 index 0000000000000000000000000000000000000000..0fb645b1e40ecee3c1dbe12eed09fcd49e42db6c --- /dev/null +++ b/Kannada Sahitya/article_134.txt @@ -0,0 +1,174 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ ವಿಷಯವನ್ನು ಪುನರುಚ್ಚರಿಸಿದಾಗ – ಗುಪ್ತಾ ಸಂಸಾರಕ್ಕೆ ಸ್ವಲ್ಪ ಚಿಂತೆ, ಕುತೂಹಲ ಉಂಟಾಯಿತು. ಯಾಕೆಂದರೆ ಮಕ್ಕಳಿಗಲ್ಲಾ ಶಾರದಾ ಮೇಡಂ ಅಂದರೆ ತುಂಬಾ ಇಷ್ಟ. ಆಕೆಯ ಬಳಿ ಅದೇನು ಜಾದೂ ಮಂತ್ರವಿತ್ತೋ ತಿಳಿಯದಾದರೂ ಮಕ್ಕಳು ಮಾತ್ರ ಶಾಲೆಗೆ ಹೋಗಲು ಪ್ರತಿದಿನ ತಹತಹಿಸುತ್ತಿದ್ದರು. ಎಷ್ಟರ ಮಟ್ಟಿಗೆಂದರೆ, ಪ್ರತಿ ಶನಿವಾರ ಗುಪ್ತಾಜಿ ಮತ್ತವರ ಶ್ರೀಮತಿಯವರಿಗೆ ಆಫೀಸಿರುವಾಗ ಮಗುವಿಗೆ ಶಾಲೆಯೇಕಿಲ್ಲವೆಂದು ವಿವರಿಸುವುದು ಕಷ್ಟವಾಗುವಷ್ಟರ ಮಟ್ಟಿಗೆ ಶಾಲೆ ಮತ್ತು ಶಾರದಾ ಮೇಡಂ ಅವರ ಜೀವನವನ್ನಾವರಿಸಿಬಿಟ್ಟಿದ್ದರು. ಎರಡನೇ ವಾರ ಕಳೆದರೂ ಶಾರದಾ ಮೇಡಂ ಶಾಲೆಗೆ ಬರದೇ ಉಳಿದಾಗಂತೂ ಗುಪ್ತಾಗಳಿಗೆ ಚಿಂತೆಯುಂಟಾಗಹತ್ತಿತು. +‘ನಾಳೆಯಿಂದ ನಾನೂ ಸ್ಕೂಲಿಗೆ ಆಬ್ಸೆಂಟಾಗ್ಹೋಗ್ತೀನಿ…. ನನಗೆ ಶೀಲಾಮೇಡಂ ಇಷ್ಟ ಇಲ್ಲ’ ಎಂದು ಮಗ ಪ್ರತಿದಿನ ರಾದ್ಧಾಂತ ಮಾಡಹತ್ತಿದಾಗ ಅವರಿಗೆ ಚಿಂತೆಯುಂಟಾಗುವುದು ಸಹಜವೇ ಇತ್ತು. +ಮಗು ತುಂಬಾ ಖುಷಿಯಿಂದ ಶಾಲೆಗೆ ಹೋಗುತ್ತದೆ ಎಂಬ ಕಾರಣಕ್ಕಾಗಿಯೇ ಅದು ತುಂಬಾ ಒಳ್ಳೆಯ ಶಾಲೆಯೆಂಬ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಎಂದೋ ಬಂದುಬಿಟ್ಟಿದ್ದರು. ಈಗ ಹೀಗೆ ಮಗ ಪ್ರತಿದಿನ ನಾನು ಆಬ್ಸೆಂಟಾಗ್ತೀನಿ ಎಂದು ವರಾತ ತೆಗೆದರೆ, ಬಹುಶಃ ಪೆಟಲ್ಸ್ ಸ್ಕೂಲಿನ ಬಗ್ಗೆಯೇ ಮರುವಿಚಾರ ಮಾಡಬೇಕಾದೀತೆಂದು ಶ್ರೀಮತಿ ಮತ್ತು ಶ್ರೀ ಗುಪ್ತಾ ಸಮಾಲೋಚಿಸಿದರು. ದಿನಬೆಳಗಾದರೆ, ಯೂನಿರ್ಮ್ ಹಾಕಿಕೊಳ್ಳಲು ರಂಪಾಟ ಮಾಡುತ್ತಿದ್ದ ಮಗನಿಂದಾಗಿ – ಶಾಲೆಯ ಬಗ್ಗೆ – ಈಗಿತ್ತಲಾಗಿ, ಇಬ್ಬರೂ ಬಹಳವೇ ರೋಸಿಹೋಗಿದ್ದರು. +(ಆ ಶಾಲೆಗೆ ಪೆಟಲ್ಸ್ ಎಂಬ ಹೆಸರು ಹೇಗೆ ಬಂತೆಂದು ಗೊತ್ತಾಗಿದ್ದರೆ ಬಹುಶಃ ಅಲ್ಲಿಗೆ ಮಗನನ್ನು ಸೇರಿಸುವ ಬಗ್ಗೆ ಗುಪ್ತಾ ದಂಪತಿಗಳು ಪುನರಾಲೋಚಿಸುತ್ತಿದ್ದರೋ ಏನೋ…. ಹತ್ತು ವರ್ಷಗಳ ಹಿಂದೆ ಈ ಶಾಲೆ ಪ್ರಾರಂವಾದಾಗ — ಅಮೆರಿಕೆಯಲ್ಲಿನ ಅನಿವಾಸಿ ರತೀಯ ಶ್ರೀಮಂತ ಹಾಗೂ ಗುಜರಾತಿ, ಮತ್ತು ಇನ್ನೇನೇನೂ.. ಆಗಿದ್ದ – ಭೂಪೇಂದ್ರಯಿ ಪಟೇಲ್ ದೊಡ್ಡ ಮೊಬಲಗನ್ನು ದಾನವಾಗಿ ನೀಡಿದ್ದ. ಹೀಗಾಗಿ ಆ ಶಾಲೆ ಪಟೇಲ್ಸ್ ಸ್ಕೂಲ್ ಆಗಬೇಕಿತ್ತು. ಮುಂದೆ ಸರದಾರ್ ವಲ್ಲಯಿ ಪಟೇಲರ ಟೋ ಹಾಕಿ ತಮ್ಮ ಶಾಲೆಗೆ ಗೌರವದ ಸ್ಧಾನವನ್ನ ದೊರಕಿಸಿಕೊಳ್ಳುವುದು ಶಾಲೆಯ ಮ್ಯಾನೇಜ್‌ಮೆಂಟಿನ ವಿಚಾರವಾಗಿತ್ತು. ಆದರೆ ಶಾಲೆಯ ಬೋರ್ಡನ್ನು ಪೇಂಟ್ ಮಾಡಿದ ಮಹಾಶಯನ ಅಕ್ಷರ ಜ್ಙಾನ ತಕ್ಕಮಟ್ಟಿಗೆ ಇಲ್ಲದ್ದರಿಂದ ಅವನು ಆ ಶಾಲೆಯಲ್ಲಂತೂ ಓದಿರಲಿಲ್ಲವಲ್ಲ – ಸಧ್ಯ! ಪಟೇಲರ ಜಾಗದಲ್ಲಿ ಪೆಟಲ್ಸ್ ಬಂದು ಸ್ಧಾಯಿಯಾಗಿಬಿಟ್ಟಿತ್ತು). +ಎರಡು ವಾರ ಕಳೆದರೂ ಶಾರದಾ ಮೇಡಂ ಆಬ್ಸೆಂಟಾಗಿಯೇ ಉಳಿದಾಗ ವಿಚಾರ ಗಹನವಾಗುತ್ತಿದೆಯೆಂದು ಗುಪ್ತಾ ದಂಪತಿಗಳಿಗೆ ಅನ್ನಿಸಿತು. ಒಮ್ಮೆ ಶಾಲೆಯವರೊಂದಿಗೆ ಮಾತಾಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಬಂದರು. ಆ ನಿರ್ಧಾರದನುಸಾರವಾಗಿ ಅಂದು ಆಫೀಸು ತಲುಪಿದಾಕ್ಷಣ ಗುಪ್ತಾಜಿ ಶಾಲೆಗೆ ನ್ ಹಚ್ಚಿದರು. ಶಾಲೆಯ ನಂಬರ್ ರಿಂಗ್ ಆಗುತ್ತಿದ್ದಂತೆ, ಗುಪ್ತಾಜಿಯ ಮನಸ್ಸಿನಲ್ಲಿ ಅನೇಕ ವಿಚಾರಗಳು ಕುಣಿದಾಡಿದವು – ಬಹುಶಃ ಆಕೆಯ ಆರೋಗ್ಯ ಸರಿಯಿರಲಿಕ್ಕಿಲ್ಲ, ಊರೆಲ್ಲಾ ಸೊಳ್ಳೆಗಳು ಹಬ್ಬಿ ಎಲ್ಲೆಲ್ಲೂ ಮಲೇರಿಯಾದಿಂದ ಜನ ನಡುಗುತ್ತಿದ್ದರು. ಅಥವಾ ಶಾರದಾಮೇಡಂ ಯಾವುದಾದರೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬಹುದು… ಅಥವಾ…. ಅಥವಾ…. ಗುಪ್ತಾಜಿ ಯೋಚಿಸುತ್ತಲೇ ಹೆಡ್‌ಮೇಡಂಗೆ ಹಲೋ ಹೇಳಿದರು. +‘ನಾನು ಅಕ್ಷಯನ ಅಪ್ಪ ಮಾತಾಡ್ತಾ ಇದ್ದೀನಿ. ಶಾರದಾ ಮೇಡಂ ಬರ್ತಾ ಇಲ್ಲಾಂತ ಅಕ್ಷಯ ಹೇಳಿದ, ಹೀಗಾಗಿ ಸ್ವಲ್ಪ ಎನ್‌ಕ್ವಯರಿಸೋಣಾಂತ ನ್ ಮಾಡಿದೆ…’ +‘ಓಹೋ, ಗುಪ್ತಾಜೀ, ನಮಸ್ಕಾರ, ನಮಸ್ಕಾರ.. ನಮಗೂ ಎಲ್ಲಕಡೆಯಿಂದ ನ್ ಬರ್ತಾಯಿದೆ, ಶಾರದಾ ಮೇಡಂ ಬಂದುಬಿಡ್ತಾರೆ, ಆದಷ್ಟು ಬೇಗನೇ ಬಂದುಬಿಡ್ತಾರೆ, ಏನೂ ಯೋಚನೆ ಮಾಡಬೇಡಿ, ಆ ಚಿಂತೆ ನಿಮಗಿಂತ ಹೆಚ್ಚು ನಮಗಿದೆ, ನೀವು ನಿರಾಳವಾಗಿರಿ.’ +‘ಅದಿರಲಿ.. ಆದರೆ ಪ್ರಾಬ್ಲಂ ಏನು? ಆರೋಗ್ಯ, ಆಸ್ಪತ್ರೆ, ಹೀಗೇನಾದರೂ?? ಬೇಕಿದ್ದರೆ ನಾವು ನಮ್ಮ ಕೆಪಾಸಿಟಿಗನುಸಾರ ಹೆಲ್ಪು ಮಾಡಬಹುದೂಂತ….’ +‘ಬಹಳ ಒಳ್ಳೆಯ ವಿಚಾರ. ನಿಮ್ಮಂತಹ ಪೇರೆಂಟ್ಸ್ ಮಕ್ಕಳು ನಮ್ಮ ಶಾಲೆಯಲ್ಲಿ ಓದ್ತಾ ಇರೋದು ನಮ್ಮ ಅದೃಷ್ಚ, ಗ್ಯ. ‘ಕೈಲಾದ ಸಹಾಯ’ ಅನ್ನೋ ವಿಷಯಕ್ಕೆ ಬಂದರೆ, ನೋಡಿ, ನಮ್ಮ ಶಾಲೆಯ ಹೊಸ ಬಿಲ್ಡಿಂಗಿಗಾಗಿ, ನಾವು ಪರದಾಡ್ತಾಯಿರೋದು ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅಲ್ಲಿ ಒಂದು ಪ್ಲಾಟ್ ಕೊಂಡದ್ದಾಗಿದೆ…. ಈಗ ನಿಮ್ಮಂತಹ ಪೇರೆಂಟ್ಸ್ ಸಹಾಯ ಮಾಡಿದರೆ ಒಳ್ಳೆಯ ಕೆಲಸ ಬೇಗ ಆಗುತ್ತೆ. ನೀವೂ ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೆ….. ಇಷ್ಟೂಂತ ಇಲ್ಲ….. ಒಂದು, ಎರಡು, ಐದು, ಹತ್ತು….. ಎಷ್ಟಾದರೂನೂ ಸರಿಯೇ.’ +‘ಮೇಡಂ, ನಾನು ಶಾರದಾ ಮೇಡಂ ವಿಚಾರ ಮಾತಾಡುತ್ತಾ ಇದ್ದೆ..’ +‘ಆ ವಿಚಾರ ಬಿಡಿ. ಅವರ ಚಿಂತೆ ನಮಗಿರಲಿ ನೀವು ಸ್ಕೂಲಿನ ಚಿಂತೆ ಮಾಡಿ ಮಿಸ್ಟರ್ ಗುಪ್ತಾ.’ +‘ಸ್ಕೂಲಿಗೆ ಏನಾದರೂ ಮಾಡೋಣ ಮೇಡಂ…ಆದರೆ ಮಗು ಶಾರದಾ ಮೇಡಂ ಇದ್ದಷ್ಟು ದಿನ ಎವರೆಡಿಯಾಗಿ ಸ್ಕೂಲಿಗೆ ಹೋಗ್ತಾ ಇದ್ದವನು ಈಗ ಎವರಿಡೇ ಪ್ರಾಬ್ಲಂ ಮಾಡ್ತಾ ಇದ್ದಾನೆ……’ +‘ಮಿಸ್ಟರ್ ಗುಪ್ತಾ ಮುಂದಿನ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿನಲ್ಲಿ ಟಿಯಾಗೋಣ. ಶಾಲೆಗೆ ಸಹಾಯ ಮಾಡಲು ಒಪ್ಪಿಕೊಂಡದ್ದಕ್ಕೆ ಬಹಳ ಥ್ಯಾಂಕ್ಸ್. ಆ ದಿನ ನಾನು ಹೈಸ್ಕೂಲಿನ ಪ್ರಿನ್ಸಿಪಾಲರನ್ನೂ ನಮ್ಮಲ್ಲಿಗೆ ಬರಹೇಳುತ್ತೇನೆ. ನಮಗೆ ಚೆಕ್ ಆದರೂ ಆದೀತು. ಕ್ಯಾಷೇ ಬೇಕೂಂತ ನಾವೇನೂ ಇನ್‌ಸಿಸ್ಟ್ ಮಾಡೋದಿಲ್ಲ. ಯಾಕೇಂದ್ರೆ ನಾವು ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡ್ತೇವೆ. ಥಾಂಕ್ಯೂ..’ +ಗುಪ್ತಾಜಿಗೆ ಮಾತುಕತೆ ಹೋದ ದಿಕ್ಕನ್ನು ಕಂಡು ದಿಗ್ಭ್ರಮೆಯಾಯಿತು. ಮಂದೆ ಮಾತೇ ಹೊರಡಲಿಲ್ಲ. ಹೊರಟಿದ್ದರೂ ಪ್ರಯೋಜನವಿರಲಿಲ್ಲ. ಹೆಡ್‌ಮೇಡಂ ಆಗಲೇ ನ್ ಇಟ್ಟಾಗಿತ್ತು. +* +* +* +ಪ್ರತಿಬಾರಿ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿಗೆ ಚಕ್ಕರ್ ಕೊಡುತ್ತಿದ್ದ ಗುಪ್ತಾಜಿ ಈ ಬಾರಿ ಹಾಜರಿ ಹಾಕಬೇಕೆಂದು ನಿರ್ಧರಿಸಿದರು. ಮೂಲತಃ ಶಾರದಾ ಮೇಡಂ ಕಥೆ ಏನೆಂದು ತಿಳಿವ ಕುತೂಹಲ ಪತಿ-ಪತ್ನಿಯರೀರ್ವರಿಗೂ ಇತ್ತು. ಅದೇ ಸಮಯಕ್ಕೆ ಹೆಡ್‌ಮೇಡಂ ಜತೆ ಆದ ಮಾತುಕಥೆಯೆಲ್ಲಿ ‘ಕೈಲಾದ ಸಹಾಯ’ ಹೊಕ್ಕಿದ್ದರಿಂದ ಗುಪ್ತಾಜಿ ಹೋಗಬೇಕೋ ಬೇಡವೋ ಎಂಬ ಡೈಲೆಮಾದಲ್ಲಿ ಬಿದ್ದರು. ಕಡೆಗೆ ಶ್ರೀಮತಿ ಮತ್ತು ಶ್ರೀ ಗುಪ್ತಾರ ಕ್ಯಾಂಪುಗಳ ಮಧ್ಯೆ ನಡೆದ ಎರಡು ರೌಂಡಿನ ಮಾತುಕತೆಯ ನಂತರ ಶ್ರೀಮತಿ ಗುಪ್ತಾ ಶಾಲೆಯ ಮೀಟಿಂಗಿಗೆ ಹೋಗಿ, ಉಪಾಯವಾಗಿ ಇತರ ಟೀಚರುಗಳ ಜತೆ ಮಾತಾಡಿ ಶಾರದಾ ಮೇಡಂ ಬಗ್ಗೆ ಮಾಹಿತಿ ಸಂಗ್ರಹಿಸುವುದೆಂದು ನಿರ್ಧಾರವಾಯಿತು. ಈ ಮೀಟಿಂಗಿನಲ್ಲಿ ಶ್ರೀಮತಿ ಗುಪ್ತಾ ಹೆಡ್‌ಮೇಡಂರನ್ನು ಸಾಧ್ಯವಾದ ಮಟ್ಟಿಗೆ ಟಿಯಾಗದಿರುವುದೇ ಒಳ್ಳೆಯದೆಂಬ ವಿಚಾರವನ್ನು ಇಬ್ಬರೂ ಒಪ್ಪಿದರು. ಮೀಟಿಂಗಿನ ನಂತರ ಮುಂದೇನು ಮಾಡಬೇಕೆಂಬ ಬಗ್ಗೆ ರಣನೀತಿ ತಯಾರಿಸಬೇಕೆಂಬ ನಿರ್ಧಾರವನ್ನು ಗಂಡ ಹೆಂಡಿರಿಬ್ಬರೂ ಸಮರ್ಥಿಸಿದರು. +ಶ್ರೀಮತಿ ಗುಪ್ತಾ ಹೆಡ್‌ಮೇಡಂಗೆ ಹೇಗೆ ಖೊಕ್ ಕೊಡಬೇಕೆಂಬುದರ ಬಗ್ಗೆ ಸಾಕಷ್ಟು ಮಾನಸಿಕ ತಯಾರಿ ನಡೆಸಿದ್ದರು. ಇದಕ್ಕೆ ಸ್ಕೂಲಿನ ನಕ್ಷೆ, ಮೀಟಿಂಗಿನಲ್ಲಿ ಯಾರು ಎಲ್ಲಿ ಕುಳಿತುಕೊಳ್ಳುತ್ತಾರೆಂಬ ಪೂರ್ವ ಮಾಹಿತಿ, ಹಾಗೂ ಶಾಲೆಯ ದ್ವಾರಗಳ ನಿಖರ ಸ್ಥಾನಗಳನ್ನು (ಆತಂಕವಾದಿಗಳ ಯೋಜನೆಯ ರೀತಿಯಲ್ಲಿ) ಅಧ್ಯಯನ ಮಾಡಿರಲಿಲ್ಲ ಎಂಬುದಷ್ಟೇ ಸಮಾಧಾನ ಕೊಡುವ ವಿಚಾರವಾಗಿತ್ತು. +ಶಾಲೆಯ ಆವರಣವನ್ನು ಶ್ರೀಮತಿ ಗುಪ್ತಾ ಪ್ರವೇಶಿಸಿದ ಕೂಡಲೇ ಮೊದಲಿಗೆ ಕಂಡವರು ರೋಹಿಣಿ ಮೇಡಂ. ಅವರ ಬಳಿಗೆ ಹೋಗಿ ಶಾರದಾ ಮೇಡಂ ವಿಚಾರ ಕೇಳುವಷ್ಟರಲ್ಲಿಯೇ ರೋಹಿಣಿ ಒಂದು ಚಮತ್ಕಾರದ ಟೂಥ್‌ಪೇಸ್ಟ್ ಜಾಹೀರಾತಿನ ಮುಗುಳ್ನಗೆ ಬೀರಿ, ದ್ರವಾಗಿ ಕೈಕುಲುಕಿದ್ದಷ್ಟೇ ಅಲ್ಲ – ಆ ಕೈಯನ್ನು ಬಿಡದೆಯೇ ದ್ರವಾಗಿ ಹಿಡಿದು ನಿಂತುಬಿಟ್ಟರು. ಟೂಥ್‌ಪೇಸ್ಟ್ ನಗೆಯ ನಂತರದ ಡಿಶುಂ ಡಿಶುಂ ಆಗಲೇ ಪ್ರಾರಂವಾಯಿತೆನ್ನಿಸುತ್ತದೆ. ಶ್ರೀಮತಿ ಗುಪ್ತಾರ ಮುಂದಿನ ಪ್ರಹಾರವಾಗುವುದಕ್ಕೆ ಮೊದಲೇ ರೋಹಿಣಿ ಮೇಡಂ ಬಲಗೈಯಲ್ಲಿ ಮಾಡಿದ್ದ ಪಾಣಿಗ್ರಹಣವನ್ನು ಬಿಟ್ಟುಕೊಡದೆಯೇ ದೂರದಲ್ಲಿ ನಿಂತಿದ್ದ ಹೆಡ್‌ಮೇಡಂ ಕಡೆಗೆ ಎಡಗೈಯಿಂದ ಸನ್ನೆ ಮಾಡಿದರು. ಶಾರದಾ ಮೇಡಂ ವಿಷಯ ಎತ್ತಬೇಕೆನ್ನುವಷ್ಟರಲ್ಲಿಯೇ ಶ್ರೀಮತಿ ಗುಪ್ತಾ ಹೆಡ್‌ಮೇಡಂ ಕೈಯಲ್ಲಿ ಬಂಧಿಯಾಗಿಬಿಟ್ಟಿದ್ದರು. (ಬಹುಶಃ ಶಾಲೆಯವರ ರಣನೀತಿ ಗುಪ್ತಾ ಸಂಸಾರದ ರಣನೀತಿಗಿಂತ ಉತ್ತಮವಾಗಿತ್ತೆನ್ನಿಸುತ್ತದೆ. ಎಷ್ಟಾದರೂ ಇಂಥಹ ಗುಪ್ತಾಗಳನೇಕರ ವಿಶ್ವಾಸದ ಅಡಿಪಾಯದ ಮೇಲೇ ಕಟ್ಟಿದ್ದ ಈ ಶಾಲೆಯ ಹೆಡ್‌ಮೇಡಂಗೆ, ಇಂಥಹ ಎಷ್ಟೋ ತಂದೆತಾಯಿಯರನ್ನು ನುಂಗಿ ನೀರುಕುಡಿದ ಅನುವವಿದ್ದಿರಲೇ ಬೇಕು.) ಆದರೂ ಶ್ರೀಮತಿ ಗುಪ್ತಾರ ತಲೆಯಲ್ಲಿ ಬೇಕಾದಷ್ಟು ವಿಚಾರಗಳು ಥಕಥೈ ಮಾಡುತ್ತಿದ್ದುವು – ಅಷ್ಟು ಸುಲವಾಗಿ ಸೋಲೊಪ್ಪಿ ಶರಣಾದರೆ ಇನ್ನು ಒಂದು ತಿಂಗಳ ಕಾಲ ಶ್ರೀ ಗುಪ್ತಾರ ಕಿಟಿಕಿಟಿ ರಿಸಬೇಕಾಗುತ್ತದೆ. ಸಾಲದ್ದಕ್ಕೆ ಶಾಲೆಗೆ ಹೋಗುವುದಿಲ್ಲವೆಂಬ ತಮ್ಮ ಮಗನ ಪಿರಿಪಿರಿಗೆ ಒಂದು ಉತ್ತರವನ್ನ ಕಂಡುಹಿಡಿಯದೇ ಹೋಗುವುದು ಆತ್ಮಘಾತುಕವೇ ಆಗಬಹುದು! +ಶ್ರೀಮತಿ ಗುಪ್ತಾ ಹೀಗೆ ಯೋಚನೆ ಮಾಡುತ್ತಿರುವಾಗಲೇ ಹೆಡ್‌ಮೇಡಂ – ‘ನೀವು ಬಂದದ್ದು ಬಹಳ ಸಂತೋಷ, ಗುಪ್ತಾಜಿ ಚೆಕ್ ಕಳಿಸುವುದಾಗಿ ಹೇಳಿದ್ದರು….. ಬನ್ನಿ ಬನ್ನಿ ಪ್ರಿನ್ಸಿಪಾಲರ ರೂಮಿಗೆ ಹೋಗೋಣ…’ ಎನ್ನುತ್ತಾ ಬೇರೆ ಮಾತಿಗೆ ತಾವಿಲ್ಲದಂತೆ ಶ್ರೀಮತಿ ಗುಪ್ತಾರನ್ನು ಒಳಕ್ಕೆ ಒಯ್ದೇ ಬಿಟ್ಟರು. +ಪ್ರಿನ್ಸಿಪಾಲರ ಕೋಣೆಗೆ ಹೊಕ್ಕ ಕೂಡಲೇ ಹೆಡ್‌ಮೇಡಂ ಮೊದಲು ಕೂಲ್‌ಡ್ರಿಂಕಿಗೆ ಆರ್ಡರ್ ಮಾಡಿದರು. ನಂತರ ಶ್ರೀಮತಿ ಗುಪ್ತಾರನ್ನು ಪ್ರಿನ್ಸಿಪಾಲರಿಗೆ ಪರಿಚಯ ಮಾಡಿ – ‘ಮಹಾ ಉದಾರಿಗಳು. ನಮ್ಮ ಹೊಸ ಶಾಲೆಯ ಪ್ರಾಜೆಕ್ಟ್ +ವಿಷಯ ಕೇಳಿದ ಕೂಡಲೇ ಖುಷಿಯಾಗಿ ಹತ್ತು ಸಾವಿರ ಡೊನೇಟ್ ಮಾಡ್ತೀವೀಂತ ತಾವಾಗಿಯೇ ಹೇಳಿದರು. ಈವತ್ತು ಚೆಕ್ ತಂದಿದ್ದಾರೆ…’ +ಶ್ರೀಮತಿ ಗುಪ್ತಾ ಈ ಪ್ರಹಾರಕ್ಕೆ ತಯಾರಾಗಿಯೇ ಇರಲಿಲ್ಲ. ಗುಪ್ತಾ ದಂಪತಿಗಳು ಎರಡು ಗಂಟೆಗಳ ಕಾಲ ತಲೆಗಳನ್ನೊಂದುಗೂಡಿಸಿ ಪೋಣಿಸಿದ್ದ ಸ್ಟ್ರಾಟಜಿಯೆಲ್ಲಾ ತಲೆಕೆಳಗಾಗಿ ಏನು ಹೇಳಬೇಕೆಂದು ತೋಚದೇ ಸೀರೆ ಸೆರಗಿನ ಗಂಟು ಹಾಕಿ ಬಿಚ್ಚ ತೊಡಗಿದರು. ಕಡೆಗೆ ಸಂಳಿಸಿಕೊಂಡು, ಪುಟ್ಟ ಮರುಪ್ರಹಾರ ಮಾಡಿದರು…. ‘ಹತ್ತು ಸಾವಿರಾಂತ ಕಮಿಟ್ ಮಾಡಿರಲಿಲ್ಲ…’ ಇಷ್ಟು ಹೇಳುವಷ್ಟರಲ್ಲಿಯೇ ಹೆಡ್‌ಮೇಡಂ ಮತ್ತೆ ಎರಡನೆಯ ಸುತ್ತಿನ ಪ್ರಹಾರ ಮಾಡಿದರು – ‘ಪರವಾಗಿಲ್ಲ ಪರವಾಗಿಲ್ಲ.. ಒಂದೆರಡು ಸಾವಿರ ಆಚೀಚೆಯಾದರೂ ಅಡ್ಡಿಯಿಲ್ಲ. ನಿಮ್ಮಂತಹ ಪೇರೆಂಟ್ಸ್ ಈ ಯೋಜನೆಯನ್ನ ಪ್ರೋತ್ಸಾಹಿಸುತ್ತೀರೆಂಬುದೇ ನಮಗೆ ತುಂಬಾ ಖುಷಿ ನೀಡಿವ ವಿಚಾರ. ಎಲ್ಲಕ್ಕಿಂತ ದೊಡ್ಡವಿಚಾರವೆಂದರೆ, ಇವರು ಚೆಕ್ಕನ್ನಂತೂ ತಂದಿದ್ದಾರೆ….’ ಎಂದರು. ಶ್ರೀಮತಿ ಗುಪ್ತಾರಿಗೆ ಮಿ ಬಿರಿಯಬಾರದೇ ಅನ್ನಿಸಿತು. ಈ ಗಂಡನೆಂಬ ಪ್ರಾಣಿ ನಲ್ಲಿ ಏನೇನು ವಟಗುಟ್ಟಿ ತನ್ನನ್ನು ಇಲ್ಲಿ ಸಿಕ್ಕಿಹಾಕುತ್ತಿದ್ದಾನೋ ತಿಳಿಯದೇ, ಗಂಡನಿಗೆ ಹಿಡಿಶಾಪ ಹಾಕಿದರು. ಬಹುಷಃ ಬಾಯಿಗೆ ಬಂದದ್ದೆಲ್ಲಾ ಮಾತಾಡಿದ್ದರಿಂದಲೇ ಆತ ಬರದೇ ತನ್ನನ್ನು ಸಾಗಹಾಕಿದ್ದರಬೇಕೆಂದು ಅನ್ನಿಸಿ ಒಂದು ಕ್ಷಣದ ಮಟ್ಟಿಗೆ ಆತನ ಕುತ್ತಿಗೆ ಹಿಸುಕಿ ತಾನು ವಿಧವೆಯಾಗುವುದೇ ಒಳ್ಳೆಯದೆಂಬ ವಿಚಾರ ಬಂದರೂ, ತಮ್ಮನ್ನು ತಾವೇ ಕಂಟ್ರೋಲ್ ಮಾಡಿಕೊಂಡರು. ಗಂಡ ಅಲ್ಲಿ ಇರಲಿಲ್ಲವಾದ್ದರಿಂದ ಕಂಟ್ರೋಲ್ ಮಾಡಿಕೊಳ್ಳದೇ ಬೇರೆ ವಿಧಿಯಿರಲಿಲ್ಲ. +‘ಇಲ್ಲ ನಿಜ ಹೇಳಬೇಕೆಂದರೆ ನಾನು ಚೆಕ್ ತಂದಿಲ್ಲ.. ಯಾಕೆಂದರೆ ಈ ಬಗ್ಗೆ ಅವರು ಸ್ಪಷ್ಟವಾಗಿ ನನಗೆ ಏನೂ ಹೇಳಿರಲಿಲ್ಲ.. ಜತೆಗೆ ಈವತ್ತು ಇಪ್ಪತ್ತನಾಲ್ಕನೇ ತಾರೀಖು… ತಿಂಗಳ ನಾಲ್ಕನೇ ವಾರ, ಎಷ್ಟೇ ಆದರೂ ನಾವೂ ಸ್ಯಾಲರೀಡ್ ಮಿಡಲ್ ಕ್ಲಾಸ್ ನೋಡಿ, ನಿಮಗೆ ನಮ್ಮ ತೊಂದರೆ ಗೊತ್ತೇ ಇರುತ್ತೆ.. ನಿಮಗೆ ತಿಳಿಯದ್ದೇನು……’ +ಇಷ್ಟು ಮಾತು ಹೇಳುವಷ್ಟರಲ್ಲಿಯೇ ಪ್ರಿನ್ಸಿಪಾಲರು ಸ್ವಲ್ಪ ಹುಷಾರಾದರು. ಶ್ರೀಮತಿ ಗುಪ್ತಾ ಈ ಲಾವಾದೇವಿಯಲ್ಲಿ ಮೇಲುಗೈ ಪಡೆದುಬಿಡಬಹುದೆಂಬ ಭೀತಿಯ ಆತುರದಲ್ಲಿಯೇ – ‘ಅರೇ ಅದಕ್ಕೇನಂತೆ, ಚೆಕ್ ಬರೆದಿಲ್ಲ, ಅಷ್ಟೇ ತಾನೆ, ಹೇಗೂ ಫೀಸ್ ಕಟ್ಟಲು ಚೆಕ್‌ಬುಕ್ ತಂದೇ ಇರುತ್ತೀರಿ, ಈ ಟರ್ಮಿನ ಫೀಸಿನ ಜತೆಗೇ ಬರೆದು ಕೊಟ್ಟುಬಿಡಿ. ನಾವು ಬ್ಯಾಂಕಿಗೆ ಎರಡನೇ ತಾರೀಕಿಗೇ ಹಾಕಿದರಾಯಿತು. ಅಥವಾ ಪೊಸ್ಟ್ ಡೇಟೆಡ್ ಆದರೂ ಆದೀತು….’ ಎನ್ನುತ್ತಾ ಹೊಸಧಾಳಿಯ ತಯಾರಿ ನಡೆಸಿದರು. ಶ್ರೀಮತಿ ಗುಪ್ತಾಗೆ ಈ ಎಲ್ಲ ಮಾತುಕತೆ ಪಡೆಯುತ್ತಿರುವ ದಿಕ್ಕಿನ ಬಗೆಗೆ ದಿಗ್ಭ್ರಮೆಯಾಯಿತು. ಶಾರದಾ ಮೇಡಂ ವಿಷಯ ತಿಳಿಯದಿದ್ದರೂ ನಡೆದೀತು, ಆದರೆ ಇಲ್ಲಿಂದ ಹೊರಬಿದ್ದರೆ ಸಾಕು ಅನ್ನುವ ಸ್ಥಿತಿಗೆ ಆಕೆ ಬಂದುಬಿಟ್ಟಿದ್ದರು. ಈಗ ಏನು ಮಾಡಬೇಕು, ಹೇಗೆ ಈ ಪೀಕಲಾಟದಿಂದ ಹೊರಬೀಳಬೇಕು ಅಂತ ಯೋಚಿಸುತ್ತಿರುವಷ್ಟರಲ್ಲಿಯೇ – ಪ್ರಿನ್ಸಿಪಾಲ್ ಮತ್ತು ಹೆಡ್‌ಮೇಡಂ ತಿಂಗಳ ಕೊನೆಯವಾರದಲ್ಲಿ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗ್ ಇಡುವುದರ ಔಚಿತ್ಯದ ಬಗ್ಗೆ ಮತ್ತು ತಿಂಗಳ ಮೊದಲ ವಾರಕ್ಕೆ ಇದ್ದನ್ನು ಮುಂದೂಡುವುದರಿಂದ ಆಗಬಹುದಾದ ಯಿದೆಯ ಬಗ್ಗೆ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳತೊಡಗಿದ್ದರು. +ಕಡೆಗೂ ಶ್ರೀಮತಿ ಗುಪ್ತಾ ಸುಲವಾಗಿ ಇದರಿಂದ ಹೊರಬೀಳಲು ಆಗಲೇ ಇಲ್ಲ. ಚೆಕ್ ಇಲ್ಲ ಅಂದಾದ ಮೇಲೆ, ಕ್ರಡಿಟ್ ಕಾರ್ಡ್ ಆದರೂ ಆದೀತು ಅಂತ ಪ್ರಿನ್ಸಿಪಾಲರು ಹೇಳಿದರು… ಶಾಲೆಯಲ್ಲೂ ಈ ಕಾರ್ಡುಗಳು ಹೊಕ್ಕಿರಬಹುದೆಂದು ಯೋಚಿಸಿರದಿದ್ದ ಶ್ರೀಮತಿ ಗುಪ್ತಾಗೆ ನಿಜಕ್ಕೂ ತಲೆತಿರುಗಿತು. ಕಾರ್ಡನ್ನೂ ತಂದಿಲ್ಲವೆಂಬ ಸುಳ್ಳು ಹೇಳಿದಾಗ – ಎಲ್ಲರೂ ಒಂದು ತುರ್ತು ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯ ಅಂತ ಪ್ರಿನ್ಸಿಪಾಲ್-ಹೆಡ್‌ಮೇಡಂ ದ್ವಯರು ಬಲವಂತ ಮಾಡಿದರು. ಆ ಒಪ್ಪಂದದ ಪ್ರಕಾರ, ಇಂದಿನ ಸಯಲ್ಲಿ ಗುಪ್ತಾ ಸಂಸಾರ ಶಾಲೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ಧನಸಹಾಯ ಮಾಡುವುದಾಗಿ ಘೋಷಣೆ ಮಾಡುವುದೆಂದೂ, ಗುಪ್ತಾ ಸಂಸಾರ ಹೊಸ ಶಾಲೆಗೆ ಕನಿಷ್ಟ ೫೦೦೦ ರೂಪಾಯಾದರೂ ದೇಣಿಗೆ ನೀಡಬೇಕೆಂದೂ, ಇತರ ಮಾತಾಪಿತೃಗಳಿಗೆ ಈ ವಿಚಾರ ತಿಳಿಯಬಾರದೆಂದೂ ಒಪ್ಪಂದವಾದ ನಂತರವೇ ಸ ಪ್ರಾರಂವಾಯಿತು. ಕಡೆಗೂ ಶ್ರೀಮತಿ ಗುಪ್ತಾ ಅಲ್ಲಿಂದ ತಪ್ಪಿಸಿ ಹೊರಬೀಳುವಷ್ಟರಲ್ಲಿ ಆಕೆ ಬಂದ ಉದ್ದೇಶವೇ ತಲೆಕೆಳಗಾಗಿತ್ತು!! ಮತ್ತು ಆಕೆ ಹೊರಡುವಷ್ಟರಲ್ಲಿ ಹೆಡ್‌ಮೇಡಂ ಆರ್ಡರ್ ಮಾಡಿದ್ದ ಶ್ರೀಮತಿ ಗುಪ್ತಾರ ಕೂಲ್ ಡ್ರಿಂಕು ಬರಲೇ ಇಲ್ಲ. ಈ ಎಲ್ಲ ಗಲಯ ಮಧ್ಯೆ ಶಾರದಾ ಮೇಡಂ ಆಬ್ಸಂಟಾಗೇ ಇದ್ದರು. ಯಾರೂ ಆಕೆಯ ಬಗ್ಗೆ ಚಕಾರವೆತ್ತಿರಲಿಲ್ಲ!! +* +* +* +ಮಧುಸೂಧನ ಮೆಹತಾ ಮಾಡಲು ಏನೂ ಕೆಲಸವಿಲ್ಲದವನಾಗಿ ದಯಾಕರನ ಕೋಣೆಗೆ ಹೋದ. ಆಫೀಸಿನಲ್ಲಿ ಯಾರಿಗಾದರೂ ಟೈಂಪಾಸ್ ಮಾಡಬೇಕು ಅನ್ನಸಿದಾಗೆಲ್ಲಾ ಶುವಾಗಿ ಸೋಪು ಹಾಕಿ ಕೈತೊಳೆದು ದಯಾಕರ ಮೆನನ್ ರೂಮಿಗೆ ಹೋಗುತ್ತಿದ್ದರು. ದಯಾಕರನಿಗೆ ಇದ್ದ ಅನೇಕ ಆಸಕ್ತಿಗಳಲ್ಲಿ ಜನರ ಕೈನೋಡುವುದೂ ಒಂದು ಆಸಕ್ತಿಯಾಗಿತ್ತು. ಯಾರಾದರೂ ತನ್ನ ಕೋಣೆಗೆ ಬಂದು ಕೈ ತೋರಿಸಿದರೆ – ಕೈ ಹಿಡಿದು -ಮುಖ ನೋಡಿ, ಗೆರೆಗಳನ್ನು ತಾಳೆಹಾಕಿ ಏನಾದರೂ ಗಮ್ಮತ್ತಾದ ವಿಷಯ ಹೇಳುತ್ತಿದ್ದ. ಕೆಲವೊಂದು ಬಾರಿ ಅವನು ಹೇಳಿದ್ದು ನಡೆಯುತ್ತಿತ್ತು. ಕೆಲವಷ್ಟು ಜನ ತುಂಟತನಕ್ಕೆಂದೇ ‘ನಾನು ಮನೆ ಕೊಂಡುಕೊಳ್ಳುವ ಯೋಗ ಇದೆಯೋ ಹೇಗೆ, ಹೇಳಿ?’ ಎಂದು ಕೇಳುವರು. ಅಕಸ್ಮಾತ್ ದಯಾಕರ ಇಲ್ಲವೆಂದರೆ, ತಕ್ಷಣ – ‘ನಿನ್ನೆಯಷ್ಟೇ ಹೊಸ ಟಿಗೆ ಮುಂಗಡ ಹಣ ಕಟ್ಟಿ ಬಂದೆ.’ ಎಂದು ಅವನ ಕಾಲೆಳೆಯುತ್ತಿದ್ದರು. ದಯಾಕರ ಅದಕ್ಕೆ ಸರಿಯಾಗಿ ಏನಾದರೂ ಉತ್ತರ ತಯಾರಿಡುತ್ತಿದ್ದ. ಲೋನೆಷ್ಟು ತೆಗೊಂಡಿರಿ?.. ನೋಡಿ, ಈ ರೇಖೆ ದೊಡ್ಡ ಸಾಲವನ್ನು ಪ್ರತಿನಿಧಿಸುತ್ತದೆ. ಮನೆಯ ಲಕ್ಷಣ ನಿಮ್ಮ ಕೈಯಲ್ಲಿ ಇದೆಯಾಗಲೀ, ಆ ಮನೆಯಲ್ಲಿ ವಾಸಿಸುವ ಯೋಗ ಈ ಕ್ಷಣಕ್ಕೆ ಇಲ್ಲವಾದ್ದರಿಂದ ಈ ಗೃಹರೇಖೆ ದಿಕ್ಕು ತೋರಿಸುತ್ತಿಲ್ಲ ಎಂದೆಲ್ಲಾ ಹೇಳಿ ಬಚಾವಾಗುತ್ತಿದ್ದ. +ಈಗ ಮಧುಸೂಧನ ಮೆಹತಾ ತನ್ನ ಕೋಣೆ ಹೊಕ್ಕಾಗ, ಅವನು ತನ್ನ ಕೈ ತೋರಿಸಲೆಂದೇ ಬಂದಿದ್ದಾನೆಂದು ದಯಾಕರನಿಗೆ ತಿಳಿಯಿತು. ದಯಾಕರ ಮಧುಸೂಧನನ ಕೈನೋಡಿ, ಸ್ವಲ್ಪ ಅತ್ತ ಇತ್ತ ಯೋಚನೆ ಮಾಡಿ.. ‘ನಿನಗೆ ಗೃಹಯೋಗ ಇದೆ. ಒಂದೆರಡು ವರ್ಷಗಳಲ್ಲಿ ಎಲ್ಲಿಂದಾದರೂ ದೊಡ್ಡ ಮೊತ್ತದ ದುಡ್ಡು ಬಂದು ನೀನು ಮನೆ ಕಟ್ಟುತ್ತೀಯ.’ ಎಂದ. ಮಧುಸೂಧನನಿಗೆ ದಯಾಕರನ ವಿಷ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ನಂಬುಗೆಯೇ ಇತ್ತು. ಹಿಂದೆ ಅವನು ಹೇಳಿದ್ದ ಒಂದೆರಡು ಘಟನೆಗಳು ತನ್ನ ಜೀವನದಲ್ಲಿ ನಿಜಕ್ಕೂ ಘಟಿಸಿದ್ದುವು. ಸ್ವಲ್ಪ ಹೊತ್ತು ಇಬ್ಬರೂ ಕಾಡು ಹರಟೆ ಹೊಡೆಯುತ್ತಿದ್ದರೂ ದಯಾಕರನ ದೃಷ್ಟಿ ಮಧುಸೂಧನನ ಕೈರೇಖೆಯ ಮೇಲೆಯೇ ಓಡಾಡುತ್ತಿತ್ತು. ಇನ್ನೇನು ಮಧುಸೂಧನ ಅಲ್ಲಿಂದ ಹೊರಡಲು ಏಳಬೇಕೆನ್ನುವಷ್ಟರಲ್ಲಿ ದಯಾಕರ ಗುಪ್ತವಾಗಿ ಮಧುಸೂಧನನ ಕೈಯೆಳೆದು ಹೇಳಿದ: +‘ಸ್ವಲ್ಪ ಹುಷಾರಾಗಿರು ಮಧು.. ನನಗನ್ನಿಸುತ್ತೆ – ಈ ಸ್ವಲ್ಪದಿನಗಳಲ್ಲೇ ಯು ಆರ್ ಗೋಯಿಂಗ್ ಟು ಹ್ಯಾವ್ ಎ ನೈಸ್ ಫ್ಲಿಂಗ್. ಯಾವುದಾದರೂ ಹುಡುಗಿ ಕಂಡರೆ ಸ್ವಲ್ಪ ಎಚ್ಚರದಿಂದಿರುವುದು ವಾಸಿ. ಹ್ಯಾವ್ ಎ ನೈಸ್ ಟೈಮ್.’ +ಅಲ್ಲಿಂದ ಏಳಬೇಕೆನ್ನುವಷ್ಟರಲ್ಲಿ ದಯಾಕರ ಎಸೆದ ಅಣುಬಾಂಬು ಮಧುವನ್ನು ವಿಚಲಿತಗೊಳಿಸಿತು. ಮಧುಸೂಧನ ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಯುವಕನೂ ಅಲ್ಲದ ಮುದುಕನೂ ಅಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿದ್ದ ಮಧ್ಯವಯಸ್ಕ. ನಾಲ್ಕು ವರ್ಷಗಳ ಕೆಳಗೆ ರೈಲು ಅಪಘಾತದಲ್ಲಿ ಅವನ ಹೆಂಡತಿ ತೀರಿಕೊಂಡಿದ್ದಳು. ಆ ಪ್ರಯಾಣದಲ್ಲಿ ಅವನೂ ತನ್ನ ಒಂದು ವರ್ಷದ ಮಗಳೂ ಪವಾಡಸದೃಶವಾಗಿ ತಪ್ಪಿಸಿಕೊಂಡಿದ್ದರು. ಅವನು ಕಾಲು ಮುರಿದು ಕೆಲವು ದಿನ ಆಸ್ಪತ್ತ್ರೆಯಲ್ಲಿದ್ದ. ಆದರೆ ಮಗಳಿಗೇನೂ ಆಗಿಯೇ ಇರಲಿಲ್ಲ. ಈ ಎಲ್ಲ ಗಲಾಟೆಯಲ್ಲಿ ಅವನಿಗೆ ಹೆಂಡತಿ ತೀರಿಕೊಂಡ ಸುದ್ದಿ ಮುಟ್ಟಿದರೂ, ಅವಳ ದೇಹ ನೋಡಲು ಸಿಕ್ಕಿರಲಿಲ್ಲ. ಹೆಚ್ಚಿನ ಜನರಿಗೆ ತನ್ನ ಈ ಹಿನ್ನೆಲೆ ಗೊತ್ತಿರಲಿಲ್ಲ. ಸ್ವಂತ ವ್ಯಾಪಾರ ಮಾಡುತ್ತಿದ್ದ ಮಧುವಿಗೆ, ತಾನು ಅತಿಯಾಗಿ ಪ್ರೀತಿಸುತ್ತಿದ್ದ ತನ್ನ ಹೆಂಡತಿ ತೀರಿಕೊಂಡಾಗಿನಿಂದಲೂ ಇದ್ದ ಆಸಕ್ತಿ ಒಂದೇ. ಆಗ ಒಂದು ವರ್ಷದವಳಾಗಿದ್ದ ಈಗ ಐದನೇ ವಯಸ್ಸಿಗೆ ಕಾಲಿಡುತ್ತಿರುವ ತನ್ನ ಮಗಳನ್ನು ಬೆಳೆಸಿ ಒಂದು ಘಟ್ಟ ತಲುಪಿಸುವುದೇ ಜೀವನೋದ್ದೇಶವಾಗಿಬಿಟ್ಟಿತ್ತು. ಅವಳನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ವ್ಯಯಿಸಬೇಕಾದ್ದರಿಂದ, ಸ್ವಂತ ವ್ಯಾಪಾರವಿದ್ದರೆ ಓಡಾಟ ಹೆಚ್ಚಾಗಿ ಅವಳ ಜತೆ ಸಮಯ ಕಳೆಯಲು ಸಾಧ್ಯವಾಗದ್ದರಿಂದ ಈ ಸಂಸ್ಥೆಯಲ್ಲಿ ಅಕೌಂಟ್ಸ್ ವಿಗದಲ್ಲಿ ಕೆಲಸಕ್ಕೆ ಸೇರಿದ್ದ. ಹಳೆಯ ಊರು, ಹಳೆಯ ಜನರ ನಡುವೆ ಮನಸ್ಸಾಗದೇ, ಮುಂಬಯಿಗೆ ಬಂದು ಅನಾಮಿಕವಾದ ಜೀವನ ನಡೆಸುತ್ತಿದ್ದ. +ರೈಲು ಅಪಘಾತದ ನಂತರ ಮಧುವಿನ ಜೀವನ ದೃಷ್ಟಿಯಲ್ಲಿ ಮಹತ್ವದ ಪರಿವರ್ತನೆಯಾಗಿತ್ತು. ಜೀವನವನ್ನ ಲೈಟಾಗಿ ತೆಗೆದುಕೊಳ್ಳಬೇಕು, ಮಹಾ ಗಾಂಭೀರ್ಯದಿಂದ ಸಾಧಿಸುವುದೇನೂ ಇಲ್ಲ ಅಂತ ನಿರ್ಧರಿಸಿದ್ದರಿಂದ, ಎಷ್ಟೆಲ್ಲಾ ದುಃಖ ಕಂಡರೂ, ಯಾವಾಗಲೂ ನಗುನಗುತ್ತಾ, ಚಟಾಕಿ ಹಾರಿಸುತ್ತಾ ಉಡಾಯಿಂದ ಇರುತ್ತಿದ್ದ. ಮಗಳಿಗೆ ಯಾವ ದುಃಖದ ಸೋಂಕೂ ಇರಬಾರದೆಂದು ಅವನು ಹೀಗೆ ವರ್ತಿಸುತ್ತಿದ್ದ ಎನ್ನಿಸುತ್ತದೆ. ಎಂದೂ ಮರುಮದುವೆಯ, ಅಥವಾ ಬೇರಾವ ಉದ್ದ-ಅಥವಾ-ಅಡ್ಡ ದಾರಿಯ ಬಗ್ಗೆ ಯೋಚಿಸಿಯೇ ಇಲ್ಲದ ಮಧುವಿಗೆ ಇದ್ದಕ್ಕಿದ್ದಂತೆ ಈ ಹೊಸ ಸಾಧ್ಯತೆ ಹೊಸದೊಂದು ಬಾಗಿಲನ್ನು ತೆರೆದಂತೆನ್ನಿಸಿ, ಅವನು ಆಗಷ್ಟೇ ಪ್ರೇಮಜಾಲದಲ್ಲಿ ಸಿಕ್ಕಿಬಿದ್ದ ಯುವಕನಂತೆ ಪುಳಕಿತಗೊಂಡ. ಆ ದಿನದಿಂದ, ಆ ಕ್ಷಣದಿಂದ ಯಾವ ಯುವತಿ ಕಂಡರೂ, ಮಧುಸೂಧನ ಅವಳ ಮುಖ ನೋಡುವುದನ್ನ ಬಿಟ್ಟು ತನ್ನ ಕೈರೇಖೆ ನೋಡಿಕೊಳ್ಳುತ್ತಿದ್ದ. ’ನನ್ನ ಕೈ ರೇಖೆಯಲ್ಲಿರುವ ಹುಡುಗಿ ಬಹುಶಃ ಇವಳಾಗಿರಬಹುದೇ………?’ +* +* +* +ಪೆಟಲ್ಸ್ ಶಾಲೆಯ ಹೆಡ್‌ಮೇಡಂಗೆ ಶಾರದಾ ನಾಪತ್ತೆಯಾಗಿದ್ದದ್ದು ನಿಜಕ್ಕೂ ಪೀಕಲಾಟಕ್ಕೆ ಬಂದಿತ್ತು. ಕೆ.ಜಿ. ಸೆಕ್ಷನ್‌ಗೆ ಅನಿವಾರ್ಯ ಗವಾಗಿ ಶಾರದಾ ಬೆಳೆದು ಬಿಟ್ಟಿದ್ದಳು. ಮೂರು ವರ್ಷಗಳ ಹಿಂದೆ ಈ ಮುವ್ವತ್ತರ ಯುವತಿಯನ್ನ ಹೆಡ್‌ಮೇಡಂ ಖುದ್ದಾಗಿ ಸಂದರ್ಶನ ಮಾಡಿ ಶಾಲೆಯಲ್ಲಿ ಕೆಲಸ ಕೊಟ್ಟಿದ್ದರು. ಶಾರದಾ ಎಂ.ಎ ಮುಗಿಸಿದ್ದರೂ ಬಿ.ಎಡ್. ಮಾಡಿರಲಿಲ್ಲವಾದ್ದರಿಂದ ಹೈಸ್ಕೂಲಿಗೆ ಆಕೆಯನ್ನು ತೆಗೆದುಕೊಳ್ಳವುದು ನಿಯಮದ ಪ್ರಕಾರ ಕಷ್ಟವಾಗಿತ್ತು. ಜೊತೆಗೆ ಆಕೆಗೆ ಹಿಂದೆ ಸ್ಕೂಲಿನಲ್ಲಿ ಪಾಠಮಾಡಿದ ಅನುವವೂ ಇರಲಿಲ್ಲ. ಆದರೆ ಅಲ್ಲಿದ್ದುಕೊಂಡೇ ಅಣ್ಣಾಮಲೈ ಯುನಿವರ್ಸಿಟಿಯ ಕರಸ್ಪಾಂಡೆನ್ಸ್ ಬಿ.ಎಡ್ ಮಾಡಿದಲ್ಲಿ ಹೈಸ್ಕೂಲಿಗೆ ಬಡ್ತಿ ನೀಡುವುದಾಗಿ ಹೇಳಿದ್ದರೂ ಶಾರದಾ ಆ ಬಗ್ಗೆ ಆಸಕ್ತಿಯನ್ನೇನೂ ತೋರಿರಲಿಲ್ಲ. ಪುಟ್ಟ ಮಕ್ಕಳ ಮಧ್ಯೆ ನಿರಾತಂಕವಾಗಿ ಕಾಲ ಕಳೆಯಬಹುದೆಂದು ಆಕೆ ಹೇಳಿದ್ದಂತೆ ನೆನಪು. ಸ್ವಲ್ಪ ಕಾಲ ಕಳೆಯುವುದರಲ್ಲಿ ಆಕೆ ಮಕ್ಕಳ ಜತೆ ಹೊಂದಿಕೊಂಡು ಹೋದದ್ದನ್ನ ಕಂಡು ಮತ್ತೆ ಯಾರೂ ಶಾರದಾ ಮೇಡಂ ಹೈಸ್ಕೂಲಿನ ಟೀಚರಾಗುವ ವಿಚಾರವನ್ನ ಎತ್ತಿಯೇ ಇರಲಿಲ್ಲ. ಅಂದಿನಿಂದ ಇತ್ತೀಚಿನವರೆಗೂ ಶಾರದಾ ಎಂದೂ ಹೇಳದೇ ಕ್ಲಾಸ್ ತಪ್ಪಿಸಿದ್ದಿಲ್ಲ. ಈಗ ಎರಡುವಾರಗಳಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆಂದರೆ ಏನೋ ಬಹಳ ವಿಚಿತ್ರವೆನ್ನಿಸಿತು. +ಹೆಡ್‌ಮೇಡಂಗೆ ತಿಳಿದಂತೆ ಶಾರದಾ ತಾನು ಬಾಡಿಗೆಗೆ ಹಿಡಿದಿದ್ದ ಟಿನಲ್ಲಿ ಒಂಟಿಯಾಗಿ ಇದ್ದಳು. ಅವಳ ಹಿನ್ನೆಲೆಯ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಬಹಳಷ್ಟು ಮಟ್ಟಿಗೆ ತನ್ನ ಪಾಡಿಗೆ ತಾನಿರುತ್ತಿದ್ದುದರಿಂದ, ಯಾರೂ ಅವಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ. ‘ಮಕ್ಕಳಿಗೆ ನನ್ನ ಖಾಸಗೀ ಜೀವನದ ಬಗ್ಗೆ ಅನಾವಶ್ಯಕ ಆಸಕ್ತಿಯಿಲ್ಲ ಆದ್ದರಿಂದಲೇ ಮಕ್ಕಳೆಂದರೆ ನನಗೆ ಬಹಳ ಇಷ್ಟ.’ ಅಂತ ಅವಳು ಒಮ್ಮೆ ಹೇಳಿದ್ದದ್ದು ಹೆಡ್‌ಮೇಡಂ ನೆನಪಿಗೆ ಬಂತು. ತನಗೆ ಮದುವೆಯಾಗಿದೆಯೆಂದು ಶಾರದಾ ಒಮ್ಮೆ ಹೇಳಿದ್ದಂತೆ ನೆನಪು. ಆದರೂ ಹೆಡ್‌ಮೇಡಂಗೆ ಆ ಬಗ್ಗೆ ಖಾತ್ರಿಯಿರಲಿಲ್ಲ. ಆದರೆ ಈಗ ಒಂಟಿಯಾಗಿ ಯಾಕೆ ಜೀವನ ಮಾಡುತ್ತಿದ್ದಳೆಂಬುದರ ಬಗ್ಗೆ ಯಾರಿಗೂ ಮಾಹಿತಿಯಿರಲಿಲ್ಲ. ಬಹುಶಃ ಡೈವೋರ್ಸ್ ಆಗಿ, ಆ ಬಗ್ಗೆ ಮಾತಾಡಲು ಇಷ್ಟ ಪಡದೇ ಇರಬಹುದು ಅಂತ ಜನ ಊಹಾಪೋಹ ಮಾಡಿದ್ದರು. ಬಹುಶಃ ಅದೇ ಕಾರಣವಾಗಿ ಅವಳು ತನ್ನ ಹಿಂದಿನ ಊರಾದ ಅಹಮದಾಬಾದಿನಿಂದ ಇಲ್ಲಿಗೆ ಬಂದಿದ್ದಿರಬೇಕು. +ಶಾರದಾ ಮೇಡಂ ಬಗ್ಗೆ ಮಕ್ಕಳಿಗಿರುವ ಪ್ರೀತಿ ಅಭಿಮಾನದ ಬಗ್ಗೆ ಸಾಕಷ್ಟು ಕಥಾವಳಿಗಳು ಆ ಶಾಲೆಯಲ್ಲಿ ಪ್ರತೀತಿಯಲ್ಲಿತ್ತು. ಎಲ್ಲಕ್ಕಿಂತ ಹಚ್ಚಿನ ಪ್ರತೀತಿಯಲ್ಲಿದ್ದ ಕಥೆಯೆಂದರೆ ಕುಸುಮಾಳದ್ದು. ಅದು ಆದದ್ದು ಹೀಗೆ. ಎರಡು ವರ್ಷಗಳ ಹಿಂದೆ ಆಗ ಎರಡನೆಯ ಇಯತ್ತೆಯಲ್ಲಿದ್ದ ಕುಸುಮಾ ಎಂಬ ಒಂದು ಪುಟ್ಟ ಹುಡುಗಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಏನೂ ಬರೆಯದೇ ಖಾಲಿ ಹಾಳೆ ಕೊಟ್ಟಿದ್ದಳು. ಸಾಮಾನ್ಯವಾಗಿ ಓದು ಬರಹದಲ್ಲಿ ಮುಂದಿದ್ದ ಇವಳು ಹೀಗೆ ಖಾಲಿ ಹಾಳೆ ಕೊಟ್ಟದ್ದು ಆಶ್ಟರ್ಯಕರವಾಗಿದ್ದು ಹೆಡ್‌ಮೇಡಂವರೆಗೂ ವಿಷಯ ಹೋಯಿತು. ಆಕೆ ಆ ಹುಡುಗಿಯನ್ನ ಕರೆದು ‘ಯಾಕೆ ಹೀಗೆ ಖಾಲಿ ಹಾಳೆ ಕೊಟ್ಟಿದ್ದೀಯ?’ ಅಂತ ಕೇಳಿದಾಗ – ‘ಇಲ್ಲ ಮೇಡಂ, ನಾನು ಲಾಗಬೇಕು, ಪಾಸಾದರೆ ಥರ್ಢ್ ಸ್ಟಾಂಡರ್ಡ್‌ನಲ್ಲಿ ಶಾರದಾ ಮೇಡಂ ಇರೊಲ್ಲ.. ಅದಕ್ಕೇ..’ ಅಂತ ಉತ್ತರ ಕೊಟ್ಟಿದ್ದಳೆಂದು ಪ್ರತೀತಿ. +ಈಗ ಇದ್ದಕ್ಕಿದ್ದಂತೆ ಇಂಥ ಶಾರದಾ ಮೇಡಂ ’ನೆಲದಿಂದ ಧಗೆ, ಚಿಮಣಿಯಿಂದ ಹೊಗೆ, ಎದ್ದುಹೋಗುವ ಹಾಗೆ…’ ನಾಪತ್ತೆಯಾಗಿದ್ದರೆಂದರೆ ಅದು ಎಲ್ಲರಿಗೂ ಚಿಂತೆಯುಂಟುಮಾಡುವ ವಿಷಯವೇ ಆಯಿತು. ಹೆಡ್‌ಮೇಡಂಗೆ ಎಲ್ಲ ರೀತಿಯಿಂದಲೂ ಇದು ತಲೆನೋವಾಗಿತ್ತು. ಒಂದು ಕಡೆ ಆಕೆ ಇಲ್ಲ, ಆಕೆಯ ಪರವಾಗಿ ಯಾರಾದರೂ ತರಗತಿಗಳನ್ನು ಸಂಳಿಸಬೇಕು. ಕೆ.ಜಿ.ಯ ಎರಡು ಸೆಕ್ಷನ್‌ಗಳನ್ನ ಸೇರಿಸಿ ಶೀಲಾಗೆ ಒಪ್ಪಿಸಿದ್ದಾಗಿತ್ತು. ಆದರೆ, ಈಗ ಶೀಲಾಗೂ ಇದನ್ನು ಸಂಳಿಸುವುದು ಕಷ್ಟವಾಗುತ್ತಿತ್ತು. ಶಾರದಾ ಬರುವುದೇ ಇಲ್ಲವೆಂದಾದರೆ, ಇದಕ್ಕೆ ಏನಾದರೂ ಒಂದು ಸ್ಥಾಯಿ ಏರ್ಪಾಟು ಮಾಡಬಹುದಿತ್ತು… ಆದರೆ ಯಾವುದೂ ನಿಖರವಾಗಿ ತಿಳಿದಿರಲಿಲ್ಲ. ಇನ್ನೊಂದು ಕಡೆ ಮಕ್ಕಳಿಗೆ ಈ ಏರ್ಪಾಟು ಇಷ್ಟವಾಗಿರಲಿಲ್ಲ. ಮಕ್ಕಳಿಗೆ ಹಿಡಿಸದೇ ಹೋದರೆ ಅವರು ಇದನ್ನ ತಮ್ಮ ತಂದೆತಾಯಂದರಿಗೆ ಹೇಳುವುದು ಖಂಡಿತ. ಹೀಗಾಗಿ ಮಕ್ಕಳ ತಂದೆತಾಯಿಯರ ತಪಾಸಣೆಯ ನು. ಈವರೆಗೂ ಆಕೆ ನಾಪತ್ತೆಯೆಂದು ಯಾರಿಗೂ ಹೇಳಿರಲಿಲ್ಲ. ಆದರೂ ಈ ಗುಟ್ಟನ್ನ ಎಷ್ಟುದಿನ ಗುಟ್ಟಾಗಿಡುವುದು? ಜತೆಗೆ ಶಾರದಾ ಪತ್ತೆಯಿಲ್ಲವೆಂದು ಪೋಲಿಸ್ ಕಂಪ್ಲೇಂಟ್ ಕೊಡಬೇಕೇ? ಹೀಗೆ ಏನೇನೋ ವಿಚಾರಗಳು ಹೆಡ್‌ಮೇಡಂ ತಲೆಯಲ್ಲಿ ಸುಳಿದಾಡಿದರೂ ಒಂದಕ್ಕೂ ಉತ್ತರವಿರಲಿಲ್ಲ. ಒಂದು ಕೊಂಡಿಯಿಂದ ಮತ್ತೊಂದಕ್ಕೆ ವಿಷಯ ಬೆಳೆಯುತ್ತಾ ಹೋಗಿ ಹೆಡ್‌ಮೇಡಂ ಒಂದು ದೊಡ್ಡ ಜಾಲದಲ್ಲಿ ಸಿಕ್ಕಿ ದಿಕ್ಕು ತೋರದೇ ನಿಂತುಬಿಟ್ಟಿದ್ದರು. +ಸ್ಕೂಲಿನ ಮಿಕ್ಕ ಮೇಡಂಗಳೆಲ್ಲಾ ಶಾರದಾಳ ಮನೆಯ ಬಳಿ ಸುಳಿದು ಬಂದರೂ ಬಾಗಿಲು ಬಡಿದಾಗ ಉತ್ತರ ಸಿಗದೇ ವಾಪಸಾಗಿದ್ದರು. ಈ ಗಹನ ವಿಚಾರದ ಬೀಗಕ್ಕೆ ಕೀಲಿಕೈ ಸಿಕ್ಕಿರಲಿಲ್ಲ. ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದವರೂ ಉಂಟು. ಆದರೆ ಸಮಾಧಾನಕರ ಉತ್ತರವಾಗಲೀ ಸುಳಿವಾಗಲೀ ಎಲ್ಲೂ ಸಿಗಲಿಲ್ಲ. +ಯಾವುದಕ್ಕೂ ಹತ್ತಿರದ ಠಾಣೆಗೆ ಹೋಗಿ ಇಂಥ ಕೇಸಿನಲ್ಲಿ ಏನು ಮಾಡಬೇಕೆಂದು ಕೇಳಿಬರುವುದು ವಾಸಿ ಅಂತ ಹೆಡ್‌ಮೇಡಂಗೆ ಅನ್ನಿಸಿತು. ಪೋಲೀಸರಿಗೆ ವಿಷಯ ತಿಳಿಸುವುದರಲ್ಲಿ ತೊಂದರೆಯೇನು? ತಾನೇನು ಶಾರದಾ ದುಡ್ಡು ಕಾಸು ಕದ್ದು ಹೋಗಿದ್ದಾಳೆಂದು ಫಿರ್ಯಾದು ಮಾಡುತ್ತಿಲ್ಲವಲ್ಲ!! ಹೀಗೆ ಯೋಚಿಸಿದ ಹೆಡ್‌ಮೇಡಂ ಹೈಸ್ಕೂಲಿನ ಪ್ರಿನ್ಸಿಪಾಲರ ಜತೆ ಹಾಗೂ ಪೆಟಲ್ಸ್ ಸ್ಕೂಲಿನ ಮುಖ್ಯ ಟ್ರಸ್ಟಿಯ ಜತೆ ಮಾತನಾಡಿ ಕಡೆಗೂ ಠಾಣೆಗೆ ಒಂದು ಪತ್ರ ಬರೆದು ಹಾಕಬೇಕೆಂದು ನಿರ್ಧರಿಸಿದರು. +* +* +* +ಶ್ರೀಮತಿ ಗುಪ್ತಾ ಮನೆಗೆ ಬಂದು ಸ್ಕೂಲಿನಲ್ಲಾದ ಘಟನೆಯನ್ನು ಗುಪ್ತಾಜಿಗೆ ವಿವರಿಸಿದಾಗ ಗುಪ್ತಾಜಿ ಕೆಂಡಾಮಂಡಲ ಆದರು. ಒಂದು ಕ್ಷಣಕ್ಕೆ ಹೆಡ್‌ಮೇಡಂ ಅನುಸರಿಸಿದ ಪದ್ಧತಿಯ ಬಗ್ಗೆ ಗೌರವ ಬಂದು ಅದನ್ನು ತಮ್ಮ ಕಂಪನಿಯ ಸಾಲಗಾರರ ಮೇಲೆ ಪ್ರಯೋಗಿಸಬೇಕೆಂಬ ಅದ್ಭುತ ಐಡಿಯಾ ಬಂದಿತಾದರೂ, ಬಹಿರಂಗವಾಗಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ದೇಣಿಗೆ ಕೊಡುವುದಾಗಿ ಅನೌನ್ಸ್ ಮಾಡಿಸಿದ್ದರಿಂದ ಉಂಟಾಗುವ ಹಾನಿಯ ಬಗ್ಗೆ ಯೋಚಿಸಬೇಕಾಯಿತು. ಇನ್ನು ಬೇಕಾದವರು ಬೇಡವಾದವರು ದೇಣಿಗೆ ಕೇಳುತ್ತಾ ಮನೆಗೆ ಹಾಜರಿ ಹಾಕುತ್ತಾರೆ. ಜನ ತನ್ನಲ್ಲಿರಬಹುದಾದ ಹಣದ ಬಗ್ಗೆ ಊಹಾಪೋಹದ ಮಾತುಗಳನ್ನಾಡುತ್ತಾರೆ. ಹಾಗೂ ಇದೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಶಾರದಾ ಮೇಡಂ ಬಗ್ಗೆ ಸುಳಿವು ಕೊಡದೇ ಸತಾಯಿಸುತ್ತಿರುವ ಶಾಲೆಯ ಸ್ಟ್ರಾಟಜಿ ಏನಿರಬಹುದು ಎಂಬ ವಿಚಾರ ಗುಪ್ತವಾಗಿಯೇ ಉಳಿದಿತ್ತು. ಎರಡು ದಿನಗಳ ಕಾಲ ಯೋಚನೆ ಮಾಡಿದರೂ ಇದರಲ್ಲಿರುವ ಗಹನವಾದ ವಿಚಾರದ ಸುಳಿವು ಗುಪ್ತಾಜಿಗೆ ಕೈಗೆಟುಕದೇ ಹೋದಾಗ ಆತ, ತಮ್ಮ ಪೋಲೀಸು ವಲಯದ ಮಿತ್ರರು ಯಾರಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳತೊಡಗಿದರು. +ಅಷ್ಟರಲ್ಲಿ ರಂಗಾರೆಡ್ಡಿಯ ನು ಬಂತು. ಸಾಮಾನ್ಯ ಪರಿಸ್ಥಿತಿಯಲ್ಲಿ ಗುಪ್ತಾಜಿ ಈ ಕಾಕತಾಳೀಯದ ಬಗ್ಗೆ ಸುಮಾರಷ್ಟು ಹೊತ್ತು ಯೋಚಿಸುತ್ತಿದ್ದುದುಂಟು. ಆದರೆ ಈಗ ಈ ಶಾರದಾ ಮೇಡಂ ಬಗೆಗಿನ ಕುತೂಹಲ ಆತನನ್ನು ಆವರಿಸಬಿಟ್ಟಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ರಂಗಾರೆಡ್ಡಿ ಕರೆ ಕೊಟ್ಟದ್ದು ಯಾವ ದೇವಲೀಲೆಯೋ ಯಾರಿಗೆ ಗೊತ್ತು? +ರಂಗಾರೆಡ್ಡಿ ನ್ ಮಾಡಿದ್ದೇ ತನ್ನ ಗೊಗ್ಗರು ಧ್ವನಿಯಲ್ಲಿ ಪ್ರಾರಂಭಿಸಿದ: ’ಏ ಗುಪ್ತಾ.. ನಿನ್ನ ಮಗನನ್ನ ಆ ಪೆಟಲ್ಸ್ ಸ್ಕೂಲಿಗೆ ಕಳಿಸ್ತಾ ಇದ್ದೀ ತಾನೇ, ನನಗೆ ಅಲ್ಲಿನ ಒಬ್ಬ ಮೇಡಂ ಬಗ್ಗೆ ಸ್ವಲ್ಪ ಸುದ್ದಿ ಬೇಕಿತ್ತೋ.. ನಮ್ಮ ಠಾಣೆಗೆ ಒಂದು ಕಂಪ್ಲೇಂಟ್ ಬಂದಿದೆ…’ +ಗುಪ್ತಾಜಿ ತಕ್ಷಣಕ್ಕೆ ಚುರುಕಾದರು. ‘ಯಾರು, ಶಾರದಾ ಮೇಡಂ ಅನ್ನೋ ಲೇಡಿ ವಿಷಯಾನಾ? ಇದ್ದಕ್ಕಿದ್ದಹಾಗೆ ಈ ಲೇಡಿ ಹಾಲಿಡೇ ಮೇಲೆ ಹೋಗಿಬಿಟ್ಟಿದ್ದಾರಲ್ಲಾ?’ +‘ಹೌದು ಕಣಯ್ಯಾ, ಜೀವನದಲ್ಲಿ ಒಂದು ಸರ್ತಿನಾದರೂ ನಿನ್ನ ತಲೆ ಪೋಲೀಸರ ತಲೆಯ ವೇಗಕ್ಕನುಸಾರವಾಗಿ ನಡೀತಾ ಇದೆಯಲ್ಲಾ, ಅದೇ ಆಶ್ಚರ್ಯ..’ +‘ಇಲ್ಲಯ್ಯಾ ಇದೇ ಇಷ್ಯೂ ಬಗ್ಗೆ ನಾನೂ ನಿನಗೆ ನ್ ತಿರುಗಿಸಬೇಕೂಂತ ಇದ್ದೆ. ನೋಡು ಆಕೆ ಎರಡು ವಾರದಿಂದ ಸ್ಕೂಲಿಗೆ ಬರ್ತಾಯಿಲ್ಲಾಂತ ನನ್ನ ಸನ್ನು ಹೇಳ್ತಾ ಇದ್ದಾನೆ. ಆದರೆ ಸ್ಕೂಲಿನವರು ರೀಸನ್ನು ಏನೂಂತ ಹೇಳ್ತಾ ಇಲ್ಲ. ಯಾವಾಗ ಕೇಳಿದರೂ ಘುಮಾಫಿರಾಯಿಸಿ ಉತ್ತರ ಕೊಡುತ್ತಾರೆ..’ +ರಂಗಾರೆಡ್ಡಿಗೆ ಗುಪ್ತಾಜಿಯ ಷಾಪ್ರಯೋಗ ಯಾವಾಗಲೂ ಸೋಜಿಗದ್ದೆನ್ನಿಸುತ್ತಿತ್ತು. ಆದರೂ ಈಗ ಅದನ್ನೆಲ್ಲ ಚರ್ಚಿಸಲು ಸಮಯವಿರಲಿಲ್ಲ. ತಕ್ಷಣಕ್ಕೆ ಈ ಮೇಡಂ ಬಗ್ಗೆ ಮಾಹಿತಿ ಒಂದುಗೂಡಿಸಬೇಕಿತ್ತು. ‘ಅದು ಸರಿ, ಈ ಶಾರದಾ ಬಗ್ಗೆ ನಿನಗೇನೇನು ಗೊತ್ತೋ ಹೇಳು..’ ಅಂದ. +‘ಅರೇ ಬಾಬಾ, ಆ ಕೆಲಸ ಒಪ್ಪಿಸಿರೋದು ನಿನಗೆ. ನನ್ನನ್ನ ಯಾಕೆ ಕೇಳ್ತೀಯ? ಆಕೆ ವಿದ್ಯಾರ್ಥಿಗಳ ಮಧ್ಯ ವರ್ಲ್ಡ್ ಮಸ್ ಆಗಿದ್ದಳೂಂತ ನಾನು ಕೇಳಿದ್ದೀನಿ. ಆಕೆ ಬರದಿದ್ದರೆ ಸ್ಕೂಲಿಗೆ ಡುಬ್ಬಾ ಹೊಡೆದೇ ಹೊಡಿತೀನೀಂತ ಕೂತಿದ್ದಾನೆ ಈ ನನ್ನ ಮಗ. ಅಷ್ಟು ಬಿಟ್ಟರೆ ನನಗೇನೂ ಜಾನ್‌ತಾ ನೈ.’ +‘ಅಲ್ಲಯ್ಯಾ, ಸ್ಕೂಲಿಗೆ ಮಗನನ್ನ ಕಳಿಸ್ತೀಯ, ಅವರಿಗೆ ಇಪ್ಪತ್ತೈದು ಸಾವಿರ ಡೊನೇಷನ್ ಕೊಡ್ತೀಯ, ಎಲ್ಲ ಆದಮೇಲೆ ಅಲ್ಲಿ ನಿನ್ನ ಮಗನ ಟೀಚರ್ ಯಾರು, ಏನು, ಎತ್ತ, ತಿಳೀದೇನೇ ಇಷ್ಟೆಲ್ಲಾ ಮಾಡೋರ್‍ನ ನಾನೆಲ್ಲೂ ನೋಡಿಲ್ಲ.’ +ಗುಪ್ತಾಜಿಗೆ ಈಗ ನಿಜಕ್ಕೂ ರೇಗಿತು. ಆದರೆ ರಂಗಾರೆಡ್ಡಿಯ ಮೇಲೆ ಕೆಂಡಕಾರುವುದರಲ್ಲಿ ಅರ್ಥವಿರಲಿಲ್ಲ. ಈ ಶಾಲೆಯವರೂ ಸರಿ, ಶಾರದಾ ಮೇಡಂ ಗಲಾಟೆಯನ್ನ ಪೋಲೀಸರ ಬಳಿಗೆ ಒಯ್ದರೋ, ಅಥವಾ ಯಾರುಯಾರ ಬಳಿ ಬ್ಲಾಕ್‌ಮೇಲ್ ಮಾಡಿ ಡೊನೇಶನ್ ವಸೂಲಿ ಮಾಡಿದರೋ ಅವರ ಯಾದಿ ಹಿಡಿದು ಓಡಾಡುತ್ತಿದ್ದಾರೋ ತಿಳಿಯದೇ ಪಿರಿಪಿರಿಗೊಂಡರತ್ತ‘ನನ್ನ ವಿಷಯ ಹಾಗಿರಲಿ, ಈಗ ನಿನಗೆ ಬೇಕಾದ್ದು ಏನು?’ ಗುಪ್ತಾಜಿ ಕೇಳಿಯೇ ಕೇಳಿದರು. +ರಂಗಾರೆಡ್ಡಿ ಸೋಲೊಪ್ಪಿದ. ಅವನಿಗೆ ಗುಪ್ತಾಜಿಯಿಂದ ಏನೂ ಮಾಹಿತಿ ಸಿಗುವಂತಿರಲಿಲ್ಲ. ಸರಿ ಇನ್ನೇನು ನ್ ಇಡಬೇಕೆನ್ನುವಷ್ಟರಲ್ಲಿ ಗುಪ್ತಾಜಿಯ ಮರುಪ್ರಹಾರ ಪ್ರಾರಂವಾಯಿತು. +‘ಅದು ಸರಿ ಕಣಯ್ಯ – ಪೋಲೀಸು ಡಿಪಾರ್ಟ್‌ಮೆಂಟಿನಲ್ಲಿದ್ದೀಯ. ನೀನು ಕಡಿದು ಕಟ್ಟೆ ಹಾಕಿದ ಎವಿಡೆನ್ಸು ಏನು?’ +ಈಗ ರಂಗಾರೆಡ್ಡಿಗೆ ನಿಜಕ್ಕೂ ಪೀಕಲಾಟಕ್ಕೆ ಬಂತು. ನಿನ್ನೆ ಈ ವಿಷಯದ ಬಗ್ಗೆ ಕಂಪ್ಲೇಂಟು ಬಂದಾಗಿನಿಂದಲೂ ಈ ವಿಷಯ ಗಹನವಾಗುತ್ತಾ ಹೋಗಿತ್ತು. ಮೊದಲಿಗೆ ರಂಗಾರೆಡ್ಡಿಯ ಠಾಣೆಯಿಂದ ಪೇದೆಯೊಬ್ಬನನ್ನು ಕಳಿಸಿ ಶಾರದಾ ಮೇಡಂ ಅಕ್ಕಪಕ್ಕದ ಟುಗಳಲ್ಲಿ ವಿಚಾರಣೆ ನಡೆಸಿದ. ಅಲ್ಲಿಂದ ಸಿಕ್ಕ ಮಾಹಿತಿಯಿಂದ ಶಾರದಾ ಬಗ್ಗೆ ಕುತೂಹಲ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಸಂಕ್ಷಿಪ್ತವಾಗಿ ರಂಗಾರೆಡ್ಡಿ ಶೇಖರಿಸಿದ ಮಾಹಿತಿ ಇದು: +ರೇನ್‌ಡ್ರಾಪ್ ಅಪಾರ್ಟ್‌ಮೆಂಟಿನ ಮೊದಲ ಮಹಡಿಯ ಟಿಗೆ ಶಾರದಾ ಮೂರು ವರ್ಷಗಳ ಕೆಳಗೆ ಬಂದು ಸೇರಿದಳು. ಆ ಟಿನ ಮಾಲೀಕ – ಮೋಹಿದ್ ಅಲಿ ದುಬಾಯಿಯಲ್ಲಿ ಕೆಲಸದಲ್ಲಿದ್ದ. ತನ್ನ ಹಳೆಯ ಗೆಳೆಯ ಚೌಧರಿ ಅಲ್ಲಿ ಟು ಕೊಳ್ಳವ ಪ್ಲಾನ್ ಹೇಳಿದಾಗ ಮೋಹಿದ್ ಅಲಿಯೂ ಅಲ್ಲಿಯೇ ತನಗೊಂದು ಟನ್ನ ಬುಕ್ ಮಾಡಲು ಹೇಳಿದ್ದ. ನಾಲ್ಕು ವರ್ಷಗಳ ಕೆಳಗೆ ಇಬ್ಬರೂ ಟನ್ನ ಕೊಂಡಿದ್ದರು. ಟಿನ ಮೊದಲ ನಿವಾಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನು ವರ್ಗವಾಗಿ ಹೊರಟುಹೋದಾಗ, ಸ್ವಲ್ಪ ದಿನ ಟು ಖಾಲಿಯಾಗೇ ಇತ್ತು. ಆ ನಂತರ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಾಗ ಶಾರದಾ ಬಂದು ಟನ್ನ ಬಾಡಿಗೆಗೆ ಹಿಡಿದಿದ್ದಳು. ಸ್ಕೂಲ್ ಮೇಡಂ, ಒಂಟಿಯಾಗಿರುತ್ತಾಳೆ ಎಂದು ತಿಳಿದಾಗ ಚೌಧರಿ, ಒಂದು ಕ್ಷಣದ ಮಟ್ಟಿಗೆ ಹಿಂದೇಟು ಹಾಕಿದರೂ, ಕಡೆಗೆ ಪಕ್ಕದಲ್ಲೇ ತಾನಿರುವುದರಿಂದ, ರಿಸ್ಕ್ ಏನೂ ಇಲ್ಲವೆನ್ನಿಸಿ ಬಾಡಿಗೆಗೆ ಕೊಡಲು ಒಪ್ಪಿದ್ದ. ಶಾರದಾ ಬಂದ ಕ್ಷಣದಿಂದಲೂ ಬಹಳ ಮರ್ಯಾದೆಯಾಗಿ ನಡೆದುಕೊಂಡಿದ್ದಳು. ಟಿನ ಬೀಗದಕೈ ಒಂದನ್ನು ಚೌಧರಿಯ ಮನೆಯಲ್ಲಿ ಪರ್ಮನೆಂಟಾಗಿ ಇರಸಿದ್ದು, ಸಮಯಕ್ಕೆ ಸರಿಯಾಗಿ ಬಾಡಿಗೆ ಕೊಡುತ್ತಿದ್ದುದರಿಂದ ಯಾವ ಯೋಚನೆಯೂ ಇರಲಿಲ್ಲ. ಆಕೆ ಅಲ್ಲಿಗೆ ಎಷ್ಟು ಹೊಂದಿಕೊಂಡು ಬಿಟ್ಟಿದ್ದಳೆಂದರೆ, ಚೌಧರಿಯಾಗಲೀ, ಮೋಹಿದ್ ಅಲಿಯಾಗಲೀ, ಮನೆ ಬಾಡಿಗೆ ಹೆಚ್ಚಿಸುವ ವಿಷಯವನ್ನು ಎತ್ತಿಯೇ ಇರಲಿಲ್ಲ. ತನ್ನ ಪಾಡಿಗೆ ತಾನಿರುತ್ತಿದ್ದ ಶಾರದಾ, ಪೆಟಲ್ಸ್ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಳೆಂಬುದನ್ನು ಬಿಟ್ಟು ಯಾರಿಗೂ ಆಕೆಯ ಬಗ್ಗೆ ಹಚ್ಚಿನ ಮಾಹಿತಿಯಿರಲಿಲ್ಲ. ಮಾಹಿತಿ ಶೇಖರಿಸುವ ಅವಶ್ಯಕತೆಯನ್ನೂ ಯಾರೂ ಕಂಡಂತಿರಲಿಲ್ಲ. +ಮೊದಲಿಗೆ ಶಾರದಾ ನಾಪತ್ತೆಯಾದದ್ದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅದಕ್ಕೆ ಕಾರಣವೆಂದರೆ, ಮನೆಯಲ್ಲಿ ದೀಪಗಳು ಉರಿಯುತ್ತಿದ್ದುವು. ಮೇಲಾಗಿ, ಆ ಮನೆಬಾಗಿಲಿಗೇ ಅಡಕವಾಗಿದ್ದ ನೈಟ್‌ಲ್ಯಾಚ್ ಬೀಗವನ್ನು ಆಕೆ ಬಳಸುತ್ತಿದ್ದಳು. ಮಿಕ್ಕ ಮನೆಗಳಲ್ಲಿ ಬಾಗಿಲಿಗೆ ಹೊರಗಿನಿಂದ ಆಯಾ ಮನೆಯ ಮಾಲೀಕರು ಚಿಲಕ ಹಾಕಿಸಿಕೊಂಡಿದ್ದರು. ಆದರೆ ಶಾರದಾಳಿಗೆ ಅದರ ಅವಶ್ಯಕತೆ ಕಂಡಿರಲಿಲ್ಲ. ಶಾಲೆಯವರು ಬಂದು ಒಂದೆರಡು ಬಾರಿ ವಿಚಾರಿಸಿದಾಗ ಮಾತ್ರ ಚೌಧರಿಗೆ ಆಕೆ ಇಲ್ಲವೆಂಬ ವಿಷಯ ತಿಳಿಯಿತು. ಅಷ್ಟರಲ್ಲಿ ಚೌಧರಿಗೆ ಕೆಲಸದ ನಿಮಿತ್ತವಾಗಿ ಒಂದು ವಾರಕಾಲ ಮುಂಬಯಿಗೆ ಹೋಗಬೇಕಾದ್ದರಿಂದ, ಆ ಗಡಿಬಿಡಿಯಲ್ಲಿ ಆತ ಹೊರಟುಬಿಟ್ಟಿದ್ದ. ಎರಡು ದಿನಗಳ ಕೆಳಗಷ್ಟೇ ವಾಪಸಾದಾಗ, ಶಾರದಾ ಇನ್ನೂ ನಾಪತ್ತೆಯಾಗಿದ್ದಾಳೆಂದು ತಿಳಿಯಿತು. ಅಷ್ಟರಲ್ಲಿ ರಂಗಾರೆಡ್ಡಿಯ ವಿಚಾರಣೆಯೂ ಪ್ರಾರಂವಾಗಿ, ತನ್ನ ಮನೆಯಲ್ಲಿದ್ದ ಬೀಗದ ಕೈ ತಂದು ಬಾಗಿಲು ತೆರೆದು ನೋಡಿದ್ದರು. ಮನೆ ಸಾಮಾನ್ಯವಾಗೇ ಇತ್ತು. ಇದ್ದ ಅಲ್ಪ ಸಾಮಾನುಗಳು ಯಥಾಸ್ಥಾನದಲ್ಲಿದ್ದುವು. ಹೀಗೆ ಎಲ್ಲವೂ ನಾರ್ಮಲ್ ಆಗಿದ್ದರಿಂದ ರಂಗಾರೆಡ್ಡಿಗೆ ಈ ಕೇಸು ಗಹನವನ್ನಿಸಿ, ಏನೂ ತೋಚದಂತಾಯಿತು. +ಗುಪ್ತಾಜಿಗೆ ಈ ವಿಷಯಗಳನ್ನೆಲ್ಲ ರಂಗಾರೆಡ್ಡಿ ಹೇಳಿದ. ಆದರೆ ದಪ್ಪ ಚರ್ಮದ ಗುಪ್ತಾಜಿಗೆ ತನ್ನ ಮಗನ ಪ್ರತಿನಿತ್ಯದ ವರಾತವೇ ಮುಖ್ಯವಾಗಿ, ಆ ಬಗ್ಗೆಯೇ ತಲೆಕೆಡಿಸಿಕೊಂಡು, ಈ ವಿಷಯವನ್ನು ಮರೆಯಲು ಪ್ರಯತ್ನಿಸಿದರು. +* +* +* +ಕೈತೋರಿಸುವ ಪ್ರಕ್ರಿಯೆ ಆದ ಒಂದೆರಡು ದಿನಗಳಲ್ಲೇ ಮಧುಸೂಧನ ಮೆಹತಾನಿಗೆ ಮುಂಬಯಿನಿಂದ ಹೊರಗಡೆಗೆ ಹೋಗುವ ಯೋಗ ಕೂಡಿಬಂತು. ಹೈದರಾಬಾದಿನ ಬಳಿಯ ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ತನಗೂ ತನ್ನ ಮಗಳಿಗೂ ಸಂದರ್ಶನಕ್ಕಾಗಿ ಕರೆ ಬಂದಿತ್ತು. ಈ ವರ್ಷದ ಕೊನೆಗೆ ಕೆ.ಜಿ ಮುಗಿಸಿ ಮುಂದಿನ ವರ್ಷ ಒಂದನೇ ತರಗತಿಗೆ ಸೇರಲಿದ್ದ ತನ್ನ ಮಗಳನ್ನು ಯಾವುದಾದರೂ ಒಳ್ಳೆಯ ಬೋರ್ಡಿಂಗ್ ಶಾಲೆಗೆ ಹಾಕಬೇಕೆಂದು ಮಧುಸೂಧನ ನಿರ್ಧರಿಸಿದ್ದ. ಆಫೀಸಿನಲ್ಲಿ ಗೆಳೆಯರೊಬ್ಬರು ಹೈದರಾಬಾದಿನಲ್ಲಿದ್ದ ಈ ಬೋರ್ಡಿಂಗ್ ಸ್ಕೂಲಿನ ವಿಚಾರ ಹೇಳಿದಾಗ, ತನ್ನ ಹೆಂಡತಿ ಹೈದರಾಬದಿನಲ್ಲಿ ವಿದ್ಯಾಸ ಮಾಡಿದ್ದಳು ಎಂಬ ಕಾರಣವಾಗಿಯೇ ಅವನು ಉತ್ಸುಕನಾಗಿದ್ದ. ಒಬ್ಬನಿಗೇ ಆಫೀಸಿನ ಕೆಲಸಗಳ ನಡುವೆ ಮಗಳನ್ನೂ ಸಂಳಿಸುವುದು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಅಡುಗೆಗೆ, ಮಗಳನ್ನು ನೋಡಿಕೊಳ್ಳುವುದಕ್ಕೆ ಬೇರೆ ಬೇರೆ ಇಬ್ಬರು ಕೆಲಸದವರನ್ನು ಅವನು ನೌಕರಿಯಲ್ಲಿ ಇಟ್ಟುಕೊಂಡಿದ್ದನಾದರೂ, ಆಗಾಗ ಕೆಲಸ ಬಿಟ್ಟು ಹೋಗುವ, ಹೊಸ ಕೆಲಸದವರನ್ನು ಹುಡುಕಬೇಕಾದ ಪಿರಿಪಿರಿ ಅವನಿಗೆ ಕಷ್ಟದ್ದೇ ಆಗಿತ್ತು. ಸಾಲದ್ದಕ್ಕೆ ಒಂಟಿ ಗಂಡಸೆಂದ ಮೇಲೆ ಕೆಲಸಕ್ಕೆ ಬರಲು ಕೆಲವರು ಹಿಂಜರಿಯುತ್ತಲೂ ಇದ್ದರು. ಹೀಗಾಗಿ ಮಗಳು ಬೆಳೆಯುತ್ತಾ ಹೋದಂತೆ ಅವಳ ವಾರಗೆಯವರ ಬಳಿ ಇದ್ದು ಆಡಿಕೊಳ್ಳಲಿ ಎಂಬ ಸದ್ವಿಚಾರದೊಂದಿಗೆ ಮಧು ಈ ಯೋಜನೆ ಹಾಕಿದ್ದ. +ಸ್ಕೂಲು ನಿಜಾಮಾಬಾದ್ ರಸ್ತೆಯಲ್ಲಿ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿತ್ತು. ಹೈದರಾಬಾದಿನ ಏರ್‌ಪೋರ್ಟ್‌ನಿಂದ ಅಲ್ಲಿಗೆ ತಲುಪಲು ದಾರಿ ಹುಡುಕುವುದು ಕಷ್ಟವಾಗುತ್ತದಾದ್ದರಿಂದ, ತನಗೆ ವಾಹನ ಸೌಕರ್ಯ ಕಲ್ಪಿಸಲು ಸಾಧ್ಯವೇ ಎಂದು ಶಾಲೆಯವರನ್ನ ಆತ ಪೋನು ಮಾಡಿ ಕೇಳಿದ್ದ. ತಮ್ಮ ಶಾಲೆಗೆ ಬರುವವರೆಲ್ಲ ಸ್ವಲ್ಪ ಶ್ರೀಮಂತರೂ, ಬೇರೆ ಊರಿನವರೂ ಆದ್ದರಿಂದ, ಶಾಲೆಗೆ ಇಂಥ ಒಂದು ಕೋರಿಕೆ ಹೊಸದೇನೂ ಆಗಿರಲಿಲ್ಲ. ಹೀಗಾಗಿ ಅವನ ಕೋರಿಕೆಯನ್ನ ಒಪ್ಪಿದ್ದರು. ಅಲ್ಲದೇ, ಅದಕ್ಕೆ ಆಗುವ ಹಣವನ್ನ ಮಧುಸೂಧನನೇ ಕಟ್ಟಬೇಕೆಂದು ಹೇಳುವುದನ್ನ ಮಾತ್ರ ಮರೆತಿರಲಿಲ್ಲ. ಪ್ಲೇನಿನಿಂದ ಇಳಿದು ಹೊರ ಬಂದಾಗ ಮಧುಸೂಧನನಿಗೆ ಶಾಲೆಯವರು ಕಳಿಸಿದ್ದ ಕಾರಿನ ಚಾಲಕ, ಬೋರ್ಡು ಹಿಡಿದು ನಿಂತಿದ್ದದ್ದು ಕಾಣಿಸಿತು. ಮಗಳನ್ನು ಕರೆದು ಅವನು ಕಾರಿನತ್ತ ಹೊರಟ. ಮಗಳ ಜೊತೆಗೆ ಹಲವು ದಿನಗಳಿಂದ ಹೆಚ್ಚು ಸಮಯ ಕಳೆದಿದ್ದಿರಲಿಲ್ಲ, ಹಾಗೂ ಇಲ್ಲಿ ಅಡ್ಮಿಷನ್ ಸಿಕ್ಕರೆ, ಅವಳು ಹಾಸ್ಟೆಲ್ಲಿನಲ್ಲಿರುತ್ತಾಳೆಂಬ ಪಾಪವನೆಯೂ ಅವನನ್ನು ಕಾಡಿದ್ದರಿಂದ, ಅವನು ಒಂದು ವಾರ ಕಾಲ ರಜೆ ಹಾಕಿದ್ದ. ಶಾಲೆಯ ಸಂದರ್ಶನ ಮುಗಿದ ನಂತರ ಅಲ್ಲಿಯೇ ಇದ್ದು ಹೈದರಾಬಾದಿನ ಸಾಲಾರ್‌ಜಂಗ್, ಮೃಗಾಲಯ, ಚಾರ್‌ಮಿನಾರ, ಗೋಲ್ಕೊಂಡ ಎಲ್ಲವನ್ನೂ ಮಗಳ ಜತೆ ಸುತ್ತಾಡಿ ಮುಂಬಯಿಗೆ ವಾಪಸಾಗುವುದು ಅಂತ ಯೋಚಿಸಿ, ದೊಡ್ಡ ಪ್ಲಾನನ್ನೇ ಹಾಕಿಕೊಂಡು ಬಂದಿದ್ದ. +ಕಾರಿನ ಡ್ರೈವರ್ ತನ್ನ ಲಗೇಜಿನ ಟ್ರಾಲಿಯನ್ನ ಪಡೆದು, ಕಾರಿನತ್ತ ತಳ್ಳಿಕೊಂಡು ಹೋದ. (ಸಾಕುನಾಯಿಯ ಹಾಗೆ ಎಂದು ಮನಸ್ಸಿನಲ್ಲೇ ಅಂದಕೊಳ್ಳುತ್ತಾ) ಮಧುಸೂಧನ ಅವನನ್ನು ಹಿಂಬಾಲಿಸಿದ. ಕಾರಿನ ಬಾಗಿಲು ತೆಗೆದಾಗ ಅಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತಿದ್ದದ್ದು ಕಾಣಿಸಿತು. ಆಕೆ ಸುಮಾರು ಮೂವತ್ತು ಮೂವತ್ತೈದರ ಹೆಣ್ಣು. ಬಹುಶಃ ಶಾಲೆಯಿಂದ ಯಾರನ್ನಾದರೂ ಕಳಿಸಿರಬಹುದೆಂದು ಮಧುಸೂಧನ ಊಹಿಸಿದ. ಲಗೇಜನ್ನು ಡಿಕ್ಕಿಯಲ್ಲಿ ಸೇರಿಸಿ, ಮಗಳನ್ನು ಹಿಂದಿನ ಸೀಟಿಗೆ ಕಳುಹಿಸಿ ತಾನು ಮುಂದಿನ ಸೀಟಲ್ಲಿ ಬಂದು ಕೂತ. ಶಾಲೆಯಿಂದ ಕಳಿಸಿದ್ದರೆ ಆಕೆ ತನ್ನನ್ನು ಮಾತನಾಡಿಸಬೇಕಿತ್ತು. ಬದಲಿಗೆ ಆಕೆ ಮೌನ ಧರಿಸಿದ್ದಳು. ವಿಷಯ ಏನಿರಬಹುದು ಎಂದುಕೊಳ್ಳುತ್ತಲೇ ಮಧು ತನ್ನ ಕೈರೇಖೆಯನ್ನ ಒಮ್ಮೆ ನೋಡಿಕೊಂಡ. ದಯಾಕರ ಮೆನನ್ ತನ್ನ ಕೈ ನೋಡಿದಾಗಿನಿಂದಲೂ ಮಧುಸೂಧನನ ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ಯಾಕೆ ಹೀಗಾಗುತ್ತಿದೆಯೆಂದು ತಿಳಿಯದೆಯೇ ಅನಾವಶ್ಯಕ ಅವನು ರೋಮಾಂಚಿತಗೊಂಡ. ಆಕೆ ಯಾರು ಅಂತ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ತಾನು ಬಾಯಿಬಿಡುವುದಕ್ಕೆ ಮೊದಲೇ ಡ್ರೈವರ್ ಅವಳ ವಿವರಗಳನ್ನು ಕೊಡಲು ಪ್ರಾರಂಭಿಸಿದತ್ತ‘ಸಾಬ್ ಈ ಮೇಡಂ ಸ್ಕೂಲಿಗೆ ನೌಕರಿಗಾಗಿ ಇಂಟರ್‌ವ್ಯೂಗೆ ಬರ್ತಾ ಇದ್ದಾರೆ. ಹೇಗೂ ಹೈದರಾಬಾದಿಗೆ ಹೋಗ್ತಾಯಿದ್ದೀಯ, ಆಕೆಯನ್ನೂ ಕರಕೊಂಡು ಬಾ ಅಂತ ಪ್ರಿನ್ಸಿಪಾಲ್ ಸಾಹೇಬರು ಹೇಳಿದರು. ನಿಮಗೇನೂ ಅಂತರ ಇರಲಾರದು ಅಂತಲೂ ಹೇಳಿದರು….’ +ಮಧುಸೂಧನನಿಗೆ ಸ್ಕೂಲಿನವರ ಉಪಾಯ ತಿಳಿಯಿತು. ಆದರೆ ಕಾರು ಖಾಲಿ ಹೋಗುತ್ತಿರುವಾಗ ಅಲ್ಲಿ ಮತ್ತೊಬ್ಬಾಕೆ ಇದ್ದರೆ ತನ್ನ ಅಂತರವೇನಿದ್ದೀತು? ಬದಲಿಗೆ ದಾರಿಯಲ್ಲಿ ಮಾತಾಡಲು, ಸ್ಕೂಲಿನ ವಿಚಾರ ಇನ್ನಷ್ಟು ತಿಳಿಯಲು ಅವಕಾಶ ಸಿಕ್ಕಂತಾಯಿತು ಎಂದುಕೊಂಡು ಮಧುಸೂಧನ ಒಳಗೊಳಗೇ ಖುಷಿ ಪಟ್ಟ. +ಸಿಟಿಯಿಂದ ಹೈವೇಗೆ ಬರುವವರೆಗೂ ಮಧು ಏನೂ ಮಾತನಾಡಲಾರದವನಾಗಿ ಸುಮ್ಮನಿದ್ದ. ಹಸ್ತರೇಖೆಗಳು ಅವನ ತಲೆಯ ತುಂಬ ಥಕಥೈ ಮಾಡುತ್ತಿದ್ದುದರಿಂದ, ಅವನಿಗೆ ಸಹಜವಾಗಿ ಇರಲು ಸಾಧ್ಯವೇ ಆಗಿರಲಿಲ್ಲ. ಆಕೆಯ ಜತೆ ಮಾತು ಪ್ರಾರಂಭಿಸುವುದಾದರೂ ಹೇಗೆ? ಆಕೆಯಂತೂ ತಾನು ಕಾರಲ್ಲೇ ಇಲ್ಲವೆನ್ನುವ ಹಾಗೆ, ತನ್ನ ಮಗಳ ಜೊತೆ ಮಾತುಕತೆ ಶುರು ಹಚ್ಚಿಕೊಂಡು, ಮಧುಸೂಧನನ ಬಗ್ಗೆ ಶೇಖರಿಸಬೇಕಾದ ಮಾಹಿತಿಯನ್ನೆಲ್ಲಾ ಒಟ್ಟುಗೂಡಿಸುತ್ತಿದ್ದಳು – ತಾವು ಬಂದಿರುವುದು ಎಲ್ಲಿಂದ, ಯಾತಕ್ಕಾಗಿ, ಮುಂಬಯಿಯಲ್ಲಿ ಎಲ್ಲಿ ವಾಸವಾಗಿರುವುದು… ಹೀಗೆ ಎಲ್ಲ ಮಾಹಿತಿಯೂ ಪುಟ್ಟ ಮಗಳ ದೊಡ್ಡ ವಟಗುಟ್ಟುವ ಬಾಯಿಯ ಮೂಲಕ ಆಕೆಗೆ ತಲುಪಿಬಿಟ್ಟಿತ್ತು. +ಮುಂದಿನ ಸೀಟಿನಲ್ಲಿ ಕೂತಿದ್ದ ಮಧುಸೂಧನನಿಗೆ, ತಿರುಗಿ ನೋಡಲೂ ನಾಚಿಕೆಯಾಗಿತ್ತು. ಕಾರು ಹತ್ತಿದ ತಕ್ಷಣಕ್ಕೆ ಒಂದೇ ಒಂದು ಕ್ಷಣದ ಮಟ್ಟಿಗೆ ಅವಳ ಮುಖವನ್ನು ನೋಡಿದ್ದವನಿಗೆ ಅವಳು ಹೇಗಿದ್ದಾಳೋ ನೋಡಬೇಕೆಂಬ ಕುತೂಹಲ. ಆದರೆ ಆಕೆಯ ಧ್ವನಿ ಮಾತ್ರ ಕೇಳಿಸಿ, ಆಕೆ ಒಂದು ವಿಧದ ಅಶರೀರವಾಣಿಯಾಗಿಬಿಟ್ಟಿದ್ದಳು. +ಹೈವೇ ತಲುಪಿದ ನಂತರ ಕಡೆಗೂ ಧೈರ್ಯ ತಂದುಕೊಂಡು ಒಂದು ಢಾಬಾದ ಬಳಿ ಗಾಡಿ ನಿಲ್ಲಿಸಲು ಡ್ರೈವರನಿಗೆ ಹೇಳಿದ. ಕಾರು ನಿಂತ ತಕ್ಷಣವೇ – ‘ದೂರ ಪ್ರಯಾಣ ಮಾಡಿ ಸ್ವಲ್ವ ಸುಸ್ತಾಗಿದೆ, ಒಂದಿಷ್ಟು ಚಾ ಕುಡಿಯಬೇಕು, ನೀವೂ ಬರುತ್ತೀರಾ?’ ಅಂತ ಹಿಂದೆ ತಿರುಗಿ ಆಕೆಯನ್ನ ನೋಡಿ ಕೇಳಿಯೇ ಬಿಟ್ಟ. ಆಕೆ ಒಳ್ಳೆಯ ಮೂಡಿನಲ್ಲಿ ಇದ್ದಂತಿತ್ತು.. ‘ಓಹೋ ಅದಕ್ಕೇನು, ಕುಡಿಯೋಣ, ನನಗೂ ಚಾ ಕುಡೀಬೇಕು ಅಂತ ಅನ್ನಿಸುತ್ತಾ ಇದೆ, ಗಂಟಲು ಒಣಗಿ ಹೋಗಿದೆ. ಅಲ್ಲಿಗೆ ಹೋದಮೇಲೆ ಏನು ಸಿಗುತ್ತೋ ಏನೋ ಯಾರಿಗೆ ಗೊತ್ತು?’ ಎಂದಳಾಕೆ. +ಮೂರೂ, ಮತ್ತೊಂದು ಜನ ಕಾರಿನಿಂದ ಇಳಿದು ಢಾಬಾದ ಒಂದಂಚಿನಲ್ಲಿ ಹಾಕಿದ್ದ ಮೇಜು ಕುರ್ಚಿಗಳತ್ತ ಬಂದು ಕುಳಿತರು. ಮಧು ದೊಡ್ಡವರಿಗೆ ಚಹಾ, ಮಗಳಿಗೆ ಟಿ ಹೇಳಿದ. ‘ಇವಳಿಗೆ ಪೆಪ್ಸಿ ಬಹಳ ಇಷ್ಟ.. ಷಾರುಖ್ ಖಾನ್ ಅದನ್ನೇ ಕುಡೀತಾನೆ ಅಂತ ತುಂಬ ರಂಪ ಮಾಡಿ ತರಿಸಿಕೊಳ್ಳುತ್ತಾಳೆ. ಆದಷ್ಟು ಮಟ್ಟಿಗೆ ನಾನು ಅವಳಿಗೆ ಟ್ ಜ್ಯೂಸೇ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ…’ (ಸ್ಕೂಲ್ ಮೇಡಂಗಳಿಗೆ ಜಂಕ್ ಡ್, ಏರೇಟೆಡ್ ಡ್ರಿಂಕ್ಸ್ ಕಂಡರೆ ಅತೀ ಕೋಪವಿರುತ್ತದೆ ಎಂದು ಊಹಿಸಿ, ಅವಳನ್ನ ಮೆಚ್ಚಿಸಲೆಂದೇ ಟಿ ಹೇಳಿದವನಂತೆ ದೇಶಾವರಿ ನಗೆ ನಕ್ಕ). +ಆದರೆ ಆಕೆ ಇವನಿಗಿಂತ ಒಂದು ಕೈ ಮೇಲಿದ್ದಳು. ‘ವೆಲ್, ನನಗೂ ಪೆಪ್ಸಿಯೇ ಇಷ್ಟ.. ನಿಮಗೆ ಅಂತರವಿಲ್ಲದಿದ್ದರೆ ಚಹಾ ಕ್ಯಾನ್ಸಲ್ ಮಾಡಿಸಿ, ಪೆಪ್ಸಿ ಹೇಳುತ್ತೀರಾ.. ಪ್ಲೀಸ್….’ ಎಂದಳು. ಮಧುಸೂಧನ ಒಂದು ಕ್ಷಣದ ಮಟ್ಟಿಗೆ ದಂಗಾದ!!! +ಮಧುಸೂಧನನಿಗೆ ಮಾತು ಹೇಗೆ ಮುಂದುವರೆಸಬೇಕೋ ತಿಳಿಯದಾಯಿತು. ಇದ್ದಕ್ಕಿದ್ದಹಾಗೆ ‘ಹಾಗಾದರೆ ನಿಮಗೂ ಷಾರುಖ್ ಖಾನ್ ಇಷ್ಟವೇನು? ನಾನಂತೂ, ದಿಲ್ ತೋ ಪಾಗಲ್ ಹೈ ನೋಡಿದಾಗಿನಿಂದ ಅವನ ನ್ ಆಗಿಬಿಟ್ಟಿದ್ದೇನೆ.. ದೇವದಾಸ್‌ನಲ್ಲಿ ಎಷ್ಟು ಚೆನ್ನಾಗಿ ನಟಿಸಿದ್ದಾನೆ, ಅಲ್ಲವೇ? ಏನೇ ಆದರೂ ಘನ ಪಾತ್ರಗಳಿಗಿಂತ ಅವನು ನ್ನಿ ಪಾತ್ರಗಳಲ್ಲೇ ನನಗೆ ಇಷ್ಟ…’ ಎಂದುಬಿಟ್ಟ. ಅವಳ ಮನಸ್ಸಿಗೆ ಇಷ್ಟವಾಗುವ ಮಾತನ್ನು ಸಮಯಸ್ಫೂರ್ತಿಯಿಂದ ಹೇಗೆ ಹೇಳಿದೆ ಎಂದು ತನ್ನೊಳಗೇ ಬೀಗುವಷ್ಟರಲ್ಲಿ ಮಗಳು ಅದಕ್ಕೆ ತಣ್ಣೀರೆರಚಿದಳು. ‘ಅಪ್ಪ ಸುಳ್ಳು ಹೇಳ್ತಾ ಇದ್ದಾರೆ, ಅವರಿಗೆ ಷಾರುಖ್ ಕಂಡರೆ ಆಗುವುದಿಲ್ಲ. ನಾನು ಟಿ.ವಿ ನೋಡಬೇಕೂಂದಾಗೆಲ್ಲಾ ಅವನನ್ನ ಬೈತಾರೆ.’ ಅಂದು ತಾನು ಕಟ್ಟುತ್ತಿದ್ದ ಮಾತಿನ ಸೌಧಕ್ಕೆ ಬೆಂಕಿ ಹಚ್ಚಿದಳು. +ಮೇಡಂ ಸುಮ್ಮನಿರಲಿಲ್ಲ.. ಬಹುಶಃ ಮಧುಸೂಧನನ್ನು ಬಚಾಯಿಸಲೇ ಬೇಕು ಎಂಬಂತೆ, ‘ನನಗೂ ಆತ ಇಷ್ಟ ಇಲ್ಲ ಬಿಡಿ. ಸುಮ್ಮನೆ ತೊದಲುತ್ತಾನೆ. ಪೆಪ್ಸಿ ಇಷ್ಟವೆಂದ ಮಾತ್ರಕ್ಕೆ ಷಾರುಖ್ ಇಷ್ಟವಾಗಬೇಕೆಂದು ಏನೂ ನಿಯಮ ಇಲ್ಲವಲ್ಲ…. ನನಗೆ ಆಮೀರ್ ಇಷ್ಟ.’ ಅಂದಳು. ಮಧುಸೂಧನ ಚೇತರಿಸಿಕೊಂಡು ಮುಂದಿನ ಮಾತಾಡುವಷ್ಟರಲ್ಲಿ ಮತ್ತೆ ಮಗಳು ‘ಅಪ್ಪನಿಗೆ ಆಮೀರ್ ಕೂಡಾ ಇಷ್ಟವಿಲ್ಲ. ಬರೇ ಸುನಿಲ್ ಶೆಟ್ಟಿಯ ಸಿನೇಮಾ ನೋಡುತ್ತಾರೆ ಅಷ್ಟೇ….’ ಅಂದಳು. ಮಧುಸೂಧನನಿಗೆ ತನ್ನ ಲೆಕ್ಕಾಚಾರವೆಲ್ಲ ತಲೆಕೆಳಗಾಗುತ್ತಿದ್ದುದು ಕಂಡಿತು. ಈ ಪರಿಸ್ಥಿತಿಯಿಂದ ಹೊರಬಿದ್ದು ಮಾತುಕತೆ ಮುಂದುವರೆಸುವುದು ಹೇಗೆಂದು ತಿಳಿಯದೇ, ಪೆಕರು ಪೆಕರಾಗಿ ‘ಏ ಸುಮ್ಮನಿರೇ, ಈ ಮಕ್ಕಳಿಗೇನೂ ಗೊತ್ತಾಗೊಲ್ಲ, ಸುನೀಲ್ ಶೆಟ್ಟಿಯ ಆ ಕಾಮೆಡಿ ಹೇರಾರಿ ಇಷ್ಟವಾಗಿತ್ತು ಅಷ್ಟೇ.. ಅಂದಹಾಗೆ….’ +ಅವನು ಮಾತು ಮುಂದುವರೆಸುವುದಕ್ಕೆ ಮೊದಲೇ ಮೇಡಂ ‘ಛೆ ಮಕ್ಕಳನ್ನು ಅನ್ನಬೇಡಿ, ಅವರು ದೇವರಹಾಗೆ. ಯಾವಾಗಲೂ ತಾವು ಕಂಡದ್ದನ್ನೇ ಹೇಳುತ್ತಾರೆ…. ಹಾಂ, ನೀವೇನೋ ಹೇಳುತ್ತಿದ್ದಿರಿ….’ +‘ಏನಿಲ್ಲ, ನೀವು ಏನು ಮಾಡ್ತಾ ಇದ್ದೀರಿ, ಹಾಗೂ ನಿಮಗೆ ಈ ಸ್ಕೂಲಿನ ಬಗೆಗಿನ ಅಭಿಪ್ರಾಯವೇನು? ಯಾಕೆ ನೀವು +ನಿಮ್ಮ ಹಳೆಯ ಸ್ಕೂಲನ್ನು ಬಿಡುತ್ತಿದ್ದೀರಿ? ಈ ಶಾಲೆಗೆ ನೀವು ಸೇರಿದರೆ ನಿಮ್ಮ ಮನೆಯವರನ್ನೆಲ್ಲಾ ಬಿಟ್ಟು ಇಲ್ಲಿಗೇ ಬಂದುಬಿಡುತ್ತೀರಾ? ಈ ವಿಷಯಗಳನ್ನ ತಿಳಿದು ಕೊಳ್ಳೋಣಾಂತ. ನೋಡಿ, ನಾನು ಮುಂಬಯಿಯಿಂದ ಬರುತ್ತಿದ್ದೀನಿ. ನನಗೆ ಈ ಸ್ಕೂಲಿನ ವಿಷಯ ಯಾರೋ ಗೆಳೆಯರು ಹೇಳಿದರು. ಕೆಲ ವರ್ಷಗಳ ಹಿಂದೆ ನನ್ನ ಹೆಂಡತಿ ವಿಚಿತ್ರ ಪರಿಸ್ಥಿತಿಯಲ್ಲಿ ತೀರಿಕೊಂಡಳು. ಹೆಚ್ಚಿನ ಮನಸ್ಸಿಲ್ಲದಿದ್ದರೂ ಮಗಳನ್ನ ಬೋರ್ಡಿಂಗಿಗೆ ಹಾಕಬೇಕಾಗಿದೆ….’ +ಅವನು ಇಷ್ಟು ಹೇಳುವಷ್ಟರವೇಳೆಗೆ ಮೇಡಂ ಗಂಭೀರವಾದ ಮುಖ ಮುದ್ರೆ ಧರಿಸಿ ಸುಮ್ಮನಾದಳು. ಮಧುವಿಗೆ ಇದು ಬಹಳ ವಿಚಿತ್ರವನ್ನಿಸಿತು. ಹುಡುಗಿಯ ಮೂಲಕ ಮಾತಾಡಿದಾಗಲೆಲ್ಲ ಉತ್ಸಾಹದಿಂದ ತನ್ನ ಮಗಳನ್ನೇ ವಹಿಸಿಕೊಂಡು ಬಂದಂತೆ ಆಡಿದ ಈಕೆ, ನೇರ ಮಾತಾಡುವುದರಲ್ಲಿ ಹಿಂಜರಿಯುತ್ತಿದ್ದುದು ಏಕೆ? ಬಹುಶಃ ಮೊದಲ ಏಟಿಗೇ ಬಹಳ ಖಾಸಗೀ ಪ್ರಶ್ನೆಗಳನ್ನು ಕೇಳಿದ್ದರಿಂದ ಮೌನ ಧರಿಸಿದಳೇ? ಮಧುಸೂಧನಿಗೆ ಅರ್ಥವಾಗಲಿಲ್ಲ. ಬಿಲ್ ಕೊಟ್ಟನಂತರ ಕಾರಿನತ್ತ ಕಾಲೆಳೆಯುತ್ತಾ ನಡೆದ. ಅವರು ಎಲ್ಲರೂ ತನ್ನನ್ನ ಹಿಂಬಾಲಿಸಿದರು. ಮೇಡಂ ಮಗಳ ಜತೆ ಮಾತಾಡುತ್ತಿದ್ದಳಾಗಿಲೀ, ತನ್ನತ್ತ ಅಲ್ಪ ಗಮನವನ್ನೂ ಹರಿಸಲಿಲ್ಲ. ಮಧುಸೂಧನ ತನ್ನ ಕೈಗಳನ್ನೇ ನೋಡಿಕೊಳ್ಳುತ್ತಾ ಪ್ರಯಾಣವಿಡೀ ಮೌನವಾಗಿ ಕುಳಿತಿದ್ದ. +* +* +* +ಹೆಡ್‌ಮೇಡಂಗೆ ಶಾರದಾ ತಮ್ಮ ಶಾಲೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತಿದ್ದಳು ಅನ್ನುವುದು ಖಚಿತವಾಗಿ ತಿಳಿಯ ಹತ್ತಿತು. ಒಂದು ವಾರ ಬಂದಿರಲಿಲ್ಲವೆಂದ ಮಾತ್ರಕ್ಕೆ ಗುಪ್ತಾಜಿಯಂತಹ ಅನೇಕ ತಂದೆ ತಾಯಿಗಳ ಬಹಳ ನ್ ಕರೆಗಳು ಬಂದಿದ್ದುವು. ಮೇಲಾಗಿ, ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿನ ದಿನ, ಅನೇಕ ಮಂದಿ ಆಕೆಯ ಬಗ್ಗೆ ವಿಚಾರಿಸದ್ದರೆಂದು ಮಿಕ್ಕ ಟೀಚರುಗಳು ಹೇಳಿದ್ದರು. ಎಲ್ಲರಿಗೂ ಹೆಚ್ಚು-ಕಡಿಮೆ ಎರಡು ಮುಖ್ಯ ಅನುಮಾನಗಳಿದ್ದಂತಿತ್ತು – ಒಂದು: ಶಾರದಾ ಶಾಲೆಯನ್ನು ಬಿಟ್ಟು ಹೋಗಿದ್ದಾಳೆ. ಅದನ್ನ ಸ್ಕೂಲಿನವರು ಮುಚ್ಚಿಡುತ್ತಿದ್ದಾರೆ. ಎರಡು: ಶಾರದಾ ಯಾವುದೋ ಕಾರಣವಾಗಿ ಆಸ್ಪತ್ರೆಯ ಪಾಲಾಗಿರಬೇಕು. ಅದನ್ನು ಇವರು ಯಾರಿಗೂ ಹೇಳುತ್ತಿಲ್ಲ. ಅನುಮಾನ ಏನೇ ಇದ್ದರೂ ಧಕ್ಕೆಯಂತೂ ಶಾಲೆಗೇ ಆಗುತ್ತಿತ್ತು. ಆಕೆಯಂತಹ ಐದಾರು ಟೀಚರುಗಳಿದ್ದರೆ, ಶಾಲೆಯ ಹೊಸ ಬಿಲ್ಡಿಂಗಿಗೆ ಚಂದಾ ಎತ್ತುವುದು ಕಷ್ಟದ ವಿಷಯವೇನೂ ಅಲ್ಲವೆಂದು ಹೆಡ್‌ಮೇಡಂಗೆ ಮನವರಿಕೆಯಾಗುತ್ತಾ ಬಂತು. +ಶಾರದಾಳ ಗೈರುಹಾಜರಿಯನ್ನು ಪೋಲೀಸರಿಗೆ ತಿಳಿಸಿದ್ದರಿಂದ ಸ್ಕೂಲಿಗೆ ಒಳ್ಳೆಯದೇನೂ ಆಗಿರಲಿಲ್ಲ. ದಿನೇ ದಿನೇ ರಂಗಾರೆಡ್ಡಿಯ ಜನ ಬಂದು ಹೋಗುವುದನ್ನ ಮಕ್ಕಳು ಕಂಡು ಹೆದರಿದ್ದರು. ಸಾಲದ್ದಕ್ಕೆ ಇದನ್ನ ತಮ್ಮ ತಂದೆ ತಾಯಂದರಿಗೆ ಹೇಳಿದ್ದರಿಂದ, ಈಗ ಅದಕ್ಕೆ ಸಂಬಂಧಿಸಿದ ನ್ ಕರೆಗಳ ಮಹಾಪೂರ ಉಂಟಾಗಿತ್ತು. +ಇದು ಸಾಲದ್ದೆಂಬಂತೆ ಒಂದು ಬಾರಿ ಪೋಲೀಸರನ್ನ ಕರೆದ ಮೇಲೆ, ತಮ್ಮ ಮೇಲೇ ತಾವು ತರಿಸಿಕೊಳ್ಳಬಹುದಾದ ಅನಾಹುತವನ್ನ ಸ್ಕೂಲಿನವರು ಯೋಚಿಸಿರಲಿಲ್ಲ. ಶಾರದಾ ಬಗ್ಗೆ ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇರಲಿಲ್ಲ. ಹಾಗೆ ನೋಡಿದರೆ ಆಕೆಗೆ ಒಂದು ಅಪಾಯಿಂಟ್‌ಮಂಟ್ ಆರ್ಡರನ್ನ ಕೂಡಾ ಅವರು ಕೊಟ್ಟಿರಲಿಲ್ಲ. (ಕೊಟ್ಟರೆ ಅದನ್ನ ಉಪಯೋಗಿಸಿ ಬೇರೆ ಸ್ಕೂಲುಗಳಲ್ಲಿ ನೌಕರಿ ಪಡೆದುಬಿಡುತ್ತಾರೆಂಬ ವಿಕೃತ ಆಲೋಚನೆ ಸ್ಕೂಲಿನವರಿಗಿದ್ದಂತಿತ್ತು.) ಸಂಬಳವನ್ನೂ ಕ್ಯಾಷಿನಲ್ಲೇ ಕೊಡುತ್ತಿದ್ದರು. ಹೆಡ್‌ಮೇಡಂಗೆ ಈ ಲೇವಾದೇವಿಗಳ ಗಹನ ವಿಚಾರ ನಿಖರವಾಗಿ ತಿಳಿದಿರಲಿಲ್ಲ. ಈ ಎಲ್ಲವೂ ಮ್ಯಾನೇಜ್‌ಮೆಂಟಿನವರ ಆದೇಶದ ಮೇರೆಗೆ ನಡೆಯುತ್ತಿತ್ತು. ರಂಗಾರೆಡ್ಡಿಗೆ ಅವರು ಕೊಡಲು ಸಾಧ್ಯವಾದ ದಾಖಲೆಯೆಂದರೆ, ಪ್ರತಿವರ್ಷ ಮಕ್ಕಳ ಜತೆಗೆ ತಗೆಯುತ್ತಿದ್ದ ಗ್ರೂಪ್ ಟೋ, ಮತ್ತು ಶಾಲೆಯ ವಾರ್ಷಿಕ, ಸ್ಪೋರ್ಟ್ಸ್‌ಡೇ, ಹೀಗೆ ಬೇರೆ ಸಂದಗಳಲ್ಲಿ ತೆಗೆದ ಕಲವು ಟೋಗಳು. ಮಿಕ್ಕಂತೆ ರಂಗಾರೆಡ್ಡಿಗೆ ದೊರತದ್ದು ಊಹಾಪೋಹದ ಕಥೆಗಳು ಮಾತ್ರ. +ಈ ಮಧ್ಯೆ ಹೆಡ್‌ಮೇಡಂಗೆ ತಮ್ಮ ಸ್ವಂತ ದ್ವಂದ್ವಗಳೂ ಇದ್ದುವು. ಶಾರದಾ ನಿಜಕ್ಕೂ ಎಲ್ಲಿಗೆ ಹೋಗಿರಬಹುದು? ಆಕೆ ಈಗ ಈ ಕ್ಷಣ ಪ್ರತ್ಯಕ್ಷವಾದರೆ ಅವಳನ್ನು ಶಾಲೆಗೆ ಮತ್ತೆ ಸೇರಿಸಕೊಳ್ಳಬೇಕೇ? ಆಕೆಗೆ ಏನು ತುರ್ತು ಬಂದಿರಬಹುದು? ಯಾವುದಾದರೂ ಬೇರೆ ಸ್ಕೂಲಿಗೆ ಹೋಗಿ ಸೇರಿರಬಹುದೇ? ಹಿಂದೆ ಒಂದು ಬಾರಿ ಹಾಗೆ ಆಗಿದ್ದದ್ದು ಉಂಟು. ತಾನು ಬೇರೆಡೆಯಲ್ಲಿ ಪ್ರಯತ್ನ ಮಾಡುತ್ತಿರುವುದು ಶಾಲೆಗೆ ಗೊತ್ತಾದರೆ ಶಾಲೆ ಅವಳಿಗೆ ತೊಂದರೆ ಕೊಡಬಹುದೆಂಬ ಯಕ್ಕೆ ಒಬ್ಬ ಟೀಚರು, ಬೇರೆ ಶಾಲೆಯಲ್ಲಿ ನೌಕರಿ ಪಡೆದದ್ದಲ್ಲದೇ, ಅಲ್ಲಿ ಒಂದುವಾರ ಕಾಲ ಕೆಲಸ ಮಾಡಿದ ಮೇಲಷ್ಟೇ ಸ್ಕೂಲಿಗೆ ಬಂದು ರಾಜೀನಾಮೆ ಕೊಟ್ಟು ಹೋಗಿದ್ದಳು. ಆದರೆ ಇಲ್ಲಿ ಶಾರದಾ ತನ್ನ ಮನೆಯಿಂದಲೂ ನಾಪತ್ತೆಯಾಗಿರುವಳಲ್ಲ! ಅಥವಾ ಶಾರದಾಳ ಹಳೆಯ ಗಂಡ ಪ್ರತ್ಯಕ್ಷನಾಗಿರಬಹುದೇ? ಈ ಸಾಧ್ಯತೆ ಹೊಳೆದ ಕೂಡಲೇ ಹೆಡ್‌ಮೇಡಂ ರಂಗಾರೆಡ್ಡಿಗೆ ನ್ ಹಚ್ಚಿ ಶಾರದಾ ಅಹಮದಾಬಾದಿನಿಂದ ಬಂದಿದ್ದಳು, ಅಲ್ಲಿಂದ ಏನಾದರೂ ಸುಳಿವು ಸಿಗಬಹುದು ಅಂತ ಹೇಳಿದಳು. +ರಂಗಾರೆಡ್ಡಿಗೆ ರೇಗಿತ್ತು. ಈಕೆಯನ್ನ ಕಂಡುಹಿಡಿಯಲೇ ಬೇಕೆಂಬ ಆತುರ ಯಾರಿಗೂ ಇದ್ದಂತಿಲ್ಲ. ಮೇಲಾಗಿ ಅಹಮದಾಬಾದಿನಷ್ಟು ದೂರದಿಂದ ಎನ್‌ಕ್ವಯರಿ ಮಾಡುವ ಬಿಟ್ಟಿ ಸಲಹೆ ಬೇರೆ. ತನ್ನ ಮರ್ಜಿಯಲ್ಲಿದ್ದಿದ್ದರೆ ಕೇಸನ್ನ ಇಂದೇ ಮುಚ್ಚಿಬಿಡುತ್ತಿದ್ದೆ ಎಂದು ಒಂದು ಕ್ಷಣದ ಮಟ್ಟಿಗೆ ಅಂದುಕೊಂಡನಾದರೂ ಅವನಲ್ಲಿದ್ದ ಸಹಜ ಪೋಲೀಸು ಕುತೂಹಲ ಈ ಕೇಸಿನ ಬಗ್ಗೆ ಹೆಚ್ಚು ಯೋಚಿಸಲು ಪ್ರಚೋದಿಸಿತು. +ರಂಗಾರೆಡ್ಡಿ ಛಲಬಿಡದ ತ್ರಿವಿಕ್ರಮನಂತೆ, ಕಡೆಗೂ ಹಳೆಯ ಕಾಗದಗಳನ್ನ ತೆಗೆಯಲು ಹೇಳಿ, ಹಾಗೂ ಹೀಗೂ ಸ್ಕೂಲಿನ ಕಡತಗಳಿಂದ ಶಾರದಾಳ ಎಪ್ಲಿಕೇಶನ್ ರಮ್ಮನ್ನ ಹುಡುಕಿಸಿ ತೆಗೆಸಿದ. ಅದರಲ್ಲಿ ಅದೃಷ್ಟವಶಾತ್ತು ಆಕೆ ಹಿಂದೆ ಮಾಡುತ್ತಿದ್ದ ಕೆಲಸದ ವಿವರಗಳು ಇದ್ದದ್ದರಿಂದ ಅಹಮದಾಬಾದಿನಲ್ಲಿ ಈ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಇದು ಒಳ್ಳೆಯ ಪಾಯಿಂಟೆನ್ನಿಸಿ, ರಂಗಾರೆಡ್ಡಿ ಅಹಮದಾಬದಿನ ಪೋಲೀಸು ಇಲಾಖೆಗೆ ಈ ಬಗ್ಗೆ ಮಾಹಿತಿ ಕಳಿಸಬೇಕೆಂದು, ಹಿನ್ನೆಲೆಯನ್ನೆಲ್ಲ ವಿವರಿಸಿ ಒಂದು ಪತ್ರ ಬರೆದು ಹಾಕಿದ. ಎಲ್ಲಿಯಾದರೂ ಈ ಕೇಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇದಕ್ಕೊಂದು ಪರಿಷ್ಕಾರ ಹುಡುಕಬಹುದಿತ್ತು. ಬರಬರುತ್ತಾ ಗಹನವಾಗುತ್ತಿದ್ದ ಈ ಕೇಸು ಅವನ ಮನಸ್ಸಿಗೆ ಕಸರತ್ತನ್ನು ನೀಡಿತ್ತು. ಕಳೆದ ಕೆಲ ವರ್ಷಗಳಲ್ಲಿ ರಂಗಾರೆಡ್ಡಿಯ ಕೈಗೆ ಬರೇ ಸಣ್ಣ ಪುಟ್ಟ ಕೊಲೆ-ಸುಲಿಗೆಯ ಕೇಸುಗಳೇ ಬಂದು ರೋಸಿಹೋಗಿದ್ದವನಿಗೆ ಇದರಲ್ಲಿ ಎಲ್ಲಿಲ್ಲದ ರೊಮಾಂಟಿಕ್ ದೃಷ್ಟಿಕೋನಗಳು ಕಂಡು ಅವನಿಗೆ ರೋಮಾಂಚನವಾಯಿತು.. +* +* +* +ಗುಪ್ತಾಜಿಯನ್ನ ತಮ್ಮ ಬಾಸ್ ಕೋಣೆಯೊಳಕ್ಕೆ ಬರಹೇಳಿದರು. ‘ನಿಮಗೊಂದು ಒಳ್ಳೆಯ ಸುದ್ದಿ, ಗುಪ್ತಾಜಿ, ಯು ಹ್ಯಾವ್ ಬೀನ್ ಕಿಕ್ಡ್ ಅಪ್‌ಸ್ಟೈರ್‍ಸ್ .. ನಿಮ್ಮನ್ನ ನಮ್ಮ ದೆಹಲಿ ವಿಗದ ಜನರಲ್ ಮ್ಯಾನೇಜರ್ ಆಗಿ ಬಡ್ತಿಯ ಮೇಲೆ ಕಳಿಸುತ್ತಿದ್ದೇವೆ..’ ಎಂದು ಹೇಳಿದರು. +ಗುಪ್ತಾಜಿಗೆ ಇದು ಒಳ್ಳೆಯ ಸುದ್ದಿಯೋ ಅಲ್ಲವೋ ತಿಳಿಯಲಿಲ್ಲ. ನೌಕರಿಯ ದೃಷ್ಟಿಯಿಂದ ಇದು ಒಳ್ಳೆಯದೇ ಆಗಿತ್ತು. ದೆಹಲಿ ತಮ್ಮ ಮುಖ್ಯ ಕಾರ್ಯಾಲಯಗಳಲ್ಲಿ ಒಂದಾದ್ದರಿಂದ ಅಲ್ಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವೇ ಆದರೂ, ಗುಪ್ತಾಜಿ ಹೈದರಾಬಾದಿನಲ್ಲಿ ಚೆನ್ನಾಗಿ ಸೆಟಲ್ ಆಗಿಹೋಗಿದ್ದರು. ಬೇಗಂಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಕೊಂಡ ಟಿನಲ್ಲಿ ಗುಪ್ತಾಜೀ ಸಂಸಾರ ಸುಖವಾಗಿತ್ತು. ದಿನನಿತ್ಯ ಸಂಜೆಗೆ ಕಂಟ್ರಿ ಕ್ಲಬ್ಬಿಗೆ ಹೋಗಿ ಸಮಯ ಕಳೆವ ಸುಖಜೀವಿ ಗುಪ್ತಾಜಿಗೆ ಇದನ್ನು ಕಳೆದುಕೊಳ್ಳುವ ಮನಸ್ಸಂತೂ ಇರಲಿಲ್ಲ. ಸಾಲದ್ದಕ್ಕೆ ಶ್ರೀಮತಿ ಗುಪ್ತಾ ಕೂಡಾ ಇಲ್ಲಿ ಒಳ್ಳೆಯ ಕೆಲಸದಲ್ಲಿದ್ದರು. ಈಗ ಈ ಸುಖವನ್ನೆಲ್ಲ ಬಿಟ್ಟು ಹೋಗುವುದು ಕಷ್ಟವೇ ಆಗುತ್ತಿತ್ತು. ಗುಪ್ತಾಜಿ ಈ ಎಲ್ಲ ವಿಚಾರಗಳನ್ನು ತಲೆಯಲ್ಲಿ ಮಥಿಸುತ್ತಲೇ ದೇಶಾವರಿ ನಗೆ ಬೀರಿ, ಬಾಸಿನ ಕೈ ಕುಲುಕಿ, ‘ಥಾಂಕ್ಯೂ’ ಅಂತ ಮೆಲ್ಲನೆ ಉಸುರಿದರು. +ಇದನ್ನ ಹೇಗಾದರೂ ಅರಗಿಸಿಕೊಂಡು ಖುಷಿಯಿಂದ ದೆಹಲಿಗೆ ಹೋಗಬೇಕಿತ್ತು. ಶ್ರೀಮತಿ ಗುಪ್ತಾರ ಕಂಪನಿ ಕೇವಲ ಹೈದರಾಬಾದಿಗೇ ಪರಿಮಿತವಾಗಿದ್ದರಿಂದ ಆಕೆಗೆ ಬೇರೆ ಕೆಲಸ ಹುಡುಕುವ ಅನಿವಾರ್ಯತೆಯೂ ಇತ್ತು. ಹೊಸ ಊರು, ಹೊಸ ಪರಿಸರ – ಯಾವುದು ಹೇಗೆ ಒಗ್ಗುತ್ತದೋ ತಿಳಿಯದೇ ಗುಪ್ತಾಜಿ ವಿಚಲಿತರಾದರು. +ಈ ಎಲ್ಲದರ ಮಧ್ಯೆ ಅವರಿಗೆ ಕಂಡ ಒಂದೇ ಆಶಾಬಿಂದುವೆಂದರೆ, ತಮ್ಮ ಮಗ ಅಕ್ಷಯ.. ಸ್ಕೂಲಿಗೆ ಆಬ್ಸೆಂಟಾಗ್ತೀನಿ ಅಂತ ಇರೋವನಿಗೆ ಧೈರ್ಯವಾಗಿ ‘ಆಗು’ ಅಂತ ಹೇಳಿಬಿಡಬಹುದಿತ್ತು. ಇದರಿಂದಾಗಿ ಪೆಟಲ್ಸ್‌ಗೆ ಕೊಡಬೇಕಾದ ದೇಣಿಗೆಯೂ ಉಳಿತಾಯವಾಗುವುದನ್ನ ಅರಿತ ಗುಪ್ತಾಜಿ – ಈ ಕಾವ್ಯನ್ಯಾಯದ ಬಗ್ಗೆ ಖುಷಿಗೊಂಡರು. ‘ನೀವು ಹೀಗೆಲ್ಲಾ ನಮ್ಮ ಬಗ್ಗೆ ಸುಳ್ಳು ವಿಚಾರಗಳನ್ನು ಹಬ್ಬಿಸುತ್ತಿರುವುದರಿಂದ ಬೇಸತ್ತು ನಿಮ್ಮ ಸ್ಕೂಲಿನಿಂದ ನಮ್ಮ ಮಗನನ್ನು ತೆಗೆದು ಬೇರೆ ಸ್ಕೂಲಿಗೆ ಸೇರಿಸುತ್ತೇವೆ’ ಅಂತೆಲ್ಲಾ ನಾಟಕವನ್ನೂ ಆಡಬಹುದಿತ್ತು. ಈ ವಿಚಾರ ಮನಸ್ಸಿಗೆ ಬಂದಾಗ ಗುಪ್ತಾಜಿಗೆ ಈ ಬಾರಿ ತಾವೇ ಸ್ಕೂಲಿಗೆ ಹೋಗಿ, ಹೆಡ್‌ಮೇಡಂಗೆ ತಮ್ಮ ಮನಸ್ಸಿನ ಮಾತನ್ನು ಹೇಳಿ ಟಿ.ಸಿ. ಪಡೆದು ಬರಬೇಕೆಂಬ ಅದ್ಭುತ ವಿಚಾರವೂ ಹೊಳೆಯಿತು. ತಕ್ಷಣ ತಮ್ಮ ಸೆಲ್ನಿನಿಂದ ಹಂಡತಿಯ ನಂಬರ್ ಘುಮಾಯಿಸಿ ಅವಳಿಗೆ ವಿಚಾರ ತಿಳಿಸಿದರು. +ಶ್ರೀಮತಿ ಗುಪ್ತಾಗೆ ಇಲ್ಲಿನ ಕೆಲಸ ರೋಸಿಹೋಗಿತ್ತು. ಈ ಸುದ್ದಿ ಕೇಳಿದಾಕ್ಷಣ ಆಕೆಯೂ ಖುಷಿ ಪಟ್ಟು ದೆಹಲಿಯಲ್ಲಿ ಆರಾಮವಾಗಿ ಕೆಲಸವಿಲ್ಲದೇ ಕಿಟ್ಟಿ ಪಾರ್ಟಿ ಮಾಡಿಕೊಳ್ಳುತ್ತಾ ಹೇಗೆ ಮನೆಯಲ್ಲಿ ಸಮಯ ಕಳೆಯಬಹುದೆಂದು ಕನಸು ಕಾಣತೊಡಗಿದಳು. +* +* +* +ಮಧುಸೂಧನನಿಗೆ ಹೈದರಾಬಾದಿನಲ್ಲಿ ಸಮಯ ಹೇಗೆ ಕಳೆಯಿತೆಂಬುದೇ ತಿಳಿಯಲಿಲ್ಲ. ಇನ್ನೇನು, ಎರಡು ದಿನಗಳಲ್ಲಿ ತಾನು ಮಗಳೊಂದಿಗೆ ಮುಂಬಯಿಗೆ ವಾಪಸಾಗಬೇಕು. ತಾನು ಈ ೫ ದಿನಗಳ ಖುಷಿಯನ್ನು ವಿವರಿಸಲಾಗದೇ ಚಡಪಡಿಸಿದ. ಅಂದು ಶಾಲೆಗೆ ಹೋಗುವಷ್ಟು ಕಾಲವೂ ಆ ಹುಡುಗಿ (ಮಧುಸೂಧನ ಇದ್ದ ಮನಸ್ಥಿತಿಯಲ್ಲಿ ಆಕೆಯನ್ನು ಹೆಂಗಸು ಎಂದು ಕರೆಯುವುದು ತಪ್ಪಾದೀತು.) ತನ್ನ ಮಟ್ಟಿಗೆ ಮೌನವಾಗಿಯೇ ಇದ್ದಳು. ಆದರೆ ಮಗಳ ಜತೆಮಾತ್ರ ವಟಗುಟ್ಟುತ್ತಲೆ ಮುಂದುವರೆದಳು. ಅವನು ನಿರಂತರ ತನ್ನ ಕೈ ನೋಡಿಕೊಳ್ಳತ್ತಲೇ ಕೈಕೈ ಹಿಸುಕಿಕೊಳ್ಳುತ್ತಲೇ ಪ್ರಯಾಣವನ್ನು ಮುಂದುವರೆಸಿದ. ಶಾಲೆಯಲ್ಲಿ ತಂದೆ ಮಕ್ಕಳ ಸಂದರ್ಶನ ನಡೆಯಿತು. ಬರುವ ವೇಳೆಗಾಗಲೇ ಮಗಳಿಗೆ ಅಡ್ಮಿಶನ್ ಕೊಡುವುದಾಗಿಯೂ, ಹದಿನೈದು ದಿನಗಳೊಳಗಾಗಿ ವರ್ಷದ ಫೀಸನ್ನು ಕಟ್ಟಬೇಕೆಂದೂ ಪ್ರಿನ್ಸಿಪಾಲರು ಹೇಳಿದರು. ದಾರಿಯಲ್ಲಿ ವಾಪಸಾಗುವಾಗಲೂ ಅದೇ ಮೇಡಂ ಮತ್ತೆ ಕಾರಿನಲ್ಲಿ ತಮ್ಮ ಜೊತೆ ಸೇರಿದಳು. ಮತ್ತೆ ಮರುಪ್ರಯಾಣದಲ್ಲೂ ಅದೇ ಕಥೆ ಪುನರಾವೃತಗೊಂಡಾಗ ಮಧುಸೂಧನನಿಗೆ ಚಡಪಡಿಕೆಯುಂಟಾಯಿತು. ಈಕೆ ಬಹಳ ವಿಚಿತ್ರದ ಹೆಂಗಸೆನ್ನಿಸಿ ಅವಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡುಬಿಟ್ಟ. ಆದರೆ ಮಗುವಿನ ಜತೆಗೆ ಆಕೆ ಬೆಳೆಸಿಕೊಂಡ ಗೆಳೆತನ ಅವನ ಗಮನವನ್ನ ತಪ್ಪಿಸಲಿಲ್ಲ. +ಹೈದರಾಬಾದಿಗೆ ಬಂದಾಗ ಮಧುಸೂಧನ ಅವಳನ್ನ ಮನೆಯ ಬಳಿ ಬಿಟ್ಟು ತಾನು ಹೋಟೆಲಿಗೆ ಹೋಗುವುದಾಗಿ ಹೇಳಿದ. ಆಕೆ ಒಪ್ಪಲಿಲ್ಲ. ಬದಲಿಗೆ ಹೋಟೆಲಿನ ಬಳಿ ಇಳಿಸಿ ನಂತರ ತಾನು ಮನೆ ಸೇರುವುದಾಗಿ ಹಠ ಹಿಡಿದಳು. ಮಧುಸೂಧನನಿಗೆ ಅವಳ ಬಳಿ ವಾದ ಮಾಡುವಷ್ಟು ಚೈತನ್ಯವಿರಲಿಲ್ಲ. ಮಂಜಾನೆ ಅಷ್ಟುಹೊತ್ತಿಗೇ ಮುಂಬೈನಿಂದ ಹೊರಟಿದ್ದವನಿಗೆ +ಸುಸ್ತಾಗಿತ್ತು. ಸರಿ ಎಂದು ಸುಮ್ಮನಾಗಿ ಗ್ರೀನ್‌ಪಾರ್ಕ್ ಹೋಟೆಲಿನಲ್ಲಿ ತಮ್ಮನ್ನು ಬಿಡಲು ಹೇಳಿ ಸುಮ್ಮನೆ ಕೂತುಬಿಟ್ಟ. +ಹೋಟೆಲಿನ ಮಹಾದ್ವಾರದ ಬಳಿ ಡ್ರೈವರ್ ಕಾರನ್ನು ನಿಲ್ಲಿಸಿದಾಗ, ಎಲ್ಲರೂ ಕಾರಿನಿಂದ ಇಳಿದರು. ಕಾರಿನ ಬಾಡಿಗೆ ಕೊಡಬೇಕು ಅಂತ ಪರ್ಸ್ ತೆಗೆಯುತ್ತಿರುವಾಗ ತನ್ನ ಮಗಳು, ‘ಆಂಟಿ, ಈವತ್ತು ನಮ್ಮ ಜೊತೇನೇ ಊಟಮಾಡಿ’ ಅಂತ ರಂಪ ಹಿಡಿದಳು. ಮಧುವಿಗೆ ಈ ಪರಿಸ್ಥಿತಿ ವಿಚಿತ್ರ ಅನ್ನಿಸಿತು. ಡ್ರೈವರ್ ಅವಳಿಗಾಗಿ ಕಾದಿರಲು ತಯಾರಿರಲಿಲ್ಲ. ಹಾಗೂ ಹೀಗೂ, ಎಲ್ಲರೂ ಒಟ್ಟಿಗೆ ಊಟ ಮಾಡುವುದೆಂದೂ, ಬೇರೆ ಟ್ಯಾಕ್ಸಿ ಅಥವಾ ಆಟೋ ಹಿಡಿದು ಅವಳು ನಂತರ ಮನೆಗೆ ಹೋಗುವುದೆಂದೂ ನಿರ್ಧಾರವಾಯಿತು. ಹಣ ಕೊಟ್ಟು ಡ್ರೈವರನನ್ನು ಮಧುಸೂಧನ ಕಳಿಸಿಬಿಟ್ಟ. +ಹೊರಗಿನ ಲೌಂಜಿನಲ್ಲಿ ಕುಳಿತಿರಲು ಆಕೆಗೆ ಹೇಳಿ ಮಧುಸೂಧನ್ ಹೋಟೆಲ್ ರೂಮಿಗೆ ಚೆಕಿನ್ ಮಾಡಿ, ಹದಿನೈದು ನಿಮಿಷಗಳಲ್ಲಿ ಮುಖ ತೊಳೆದು, ಬಟ್ಟೆ ಬದಲಾಯಿಸಿ ಅವಳೆದುರಿಗೆ ಹಾಜರಾದ. ಮೂವರೂ ಅಲ್ಲಿನ ರೆಸ್ಟುರಾಗೆ ಹೋಗಿ ಕುಳಿತರು. ಅಲ್ಲಿನ ವೇಟರ್ ಮಗುವಿಗಾಗಿಯೇ ಖಾಸ್ ಎತ್ತರದ ಕುರ್ಚಿ ತಂದು ಹಾಕಿ ಟೇಬಲ್ ಮೇಲಿನ ಕ್ಯಾಂಡಲ್ ಬೆಳಗಿಸಿದ. ಸುಮಾರು ಒಂದೂವರೆ ಘಂಟೆಕಾಲ ಅವಳೊಂದಿಗೆ ಕಳೆದ ನಂತರ ಮಧುವಿಗೆ ಸ್ವರ್ಗ ಕೈಗೆಟುಕುತ್ತಿದ್ದಂತೆ ಕಾಣುತ್ತಿತ್ತು. +ಅವಳ ಜೊತೆ ಮಾತಾನಾಡಿದಾಗ ಮಧುಸೂಧನನಿಗೆ ಅವಳು ಕಾರಿನಲ್ಲಿ ಯಾಕೆ ವಿಚಿತ್ರವಾಗಿ ವರ್ತಿಸಿದಳೆಂದು ಅರ್ಥವಾಯಿತು. ಸ್ಕೂಲಿನ ಪ್ರಿನ್ಸಿಪಾಲರಿಗೆ ತಿಳಿದ ಡ್ರೈವರನಾದ್ದರಿಂದ ತನ್ನ ಬಗ್ಗೆ ಖಂಡಿತವಾಗಿಯೂ ಅವರು ಪ್ರಶ್ನೆಗಳನ್ನು ಕೇಳುವುದು ಖಚಿತವಾದ್ದರಿಂದ, ಹುಷಾರಾಗಿರುವುದು ವಾಸಿ ಎನ್ನಿಸಿ ಸ್ಕೂಲಿನ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾಗಿ ಆಕೆ ಹೇಳಿದಳು. +ಮಾತು ಮುಂದುವರೆದಂತೆ ಮಗಳು ಆಕಳಿಸಿ ನಿದ್ದೆ ಬರುತ್ತಿದೆಯೆಂದು ಹೇಳಿದಳು. ಊಟ ಇನ್ನೂ ಮುಗಿದಿರಲಿಲ್ಲ, ಆದರೆ ಮಗಳಿಗೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಆಕೆ ಕುರ್ಚಿಯಲ್ಲೇ ತೂಕಡಿಸಿ ನಿದ್ದೆ ಮಾಡಿಬಿಟ್ಟಳು. ಅವಳನ್ನ ನಂತರ ಎತ್ತಿಕೊಂಡು ಹೋಗುತ್ತೇನೆಂದ ಮಧುಸೂಧನ ತನ್ನ ಮಾತನ್ನು ಮುಂದುವರೆಸಿದ. ತನ್ನ ಹಿನ್ನೆಲೆಯ ಬಗ್ಗೆ ಅವಳಿಗೆ ಹೇಳಬೇಕೆಂದು ಯಾಕೆ ಅನ್ನಿಸಿತೋ ತಿಳಿಯದು, ಆದರೆ ತನ್ನ ಕಳೆದ ಐದು ವರ್ಷಗಳ ಪರದಾಟವನ್ನು ಆಕೆಯ ಬಳಿ ತೋಡಿಕೊಂಡುಬಿಟ್ಟ. ತನ್ನ ಹೆಂಡತಿ ತೀರಿಕೊಂಡ ಪರಿಸ್ಥಿತಿಯನ್ನು ಅವಳಿಗೆ ಗ್ರಾಫಿಕ್ ಆಗಿ ವಿವರಿಸಿದ. +* +* +* +ನಾಲ್ಕು ವರ್ಷಗಳ ಕೆಳಗೆ ಮಧುಸೂಧನ ತನ್ನ ಸಂಸಾರದೊಂದಿಗೆ ರಜೆಯ ಸಲುವಾಗಿ ಕೇರಳಕ್ಕೆ ಹೊರಟಿದ್ದ. ಅಷ್ಟು ಹೊತ್ತಿಗೆ ಅವನಿಗಾಗಲೇ ಮದುವೆಯಾಗಿ ಆರು ವರ್ಷಗಳಾಗಿದ್ದವು. ಮದುವೆಯಾದಂದಿನಿಂದಲೂ ಪ್ರತಿವರ್ಷ ನವಂಬರ್ ಡಿಸೆಂಬರ್ ತಿಂಗಳಿನಲ್ಲಿ ಎರಡು ವಾರಗಳ ಕಾಲ ಧಂಧೆ ಬಿಟ್ಟು ದೇಶ ಸಂಚಾರ ಮಾಡುವುದು ದಂಪತಿಗಳ ನಿಯಮವಾಗಿತ್ತು. ಹೀಗೆ, ಮದವೆಯಾದಂದಿನಿಂದಲೂ ಇಬ್ಬರೂ ಕೂಡಿ ಮಸೂರಿ, ಶಿಮ್ಲಾ, ಕಲಕತ್ತಾ, ದೆಹಲಿ, ಅಗ್ರಾ, ಜೈಪುರ, ಊಟಿ – ಹೀಗೆಲ್ಲಾ ಅನೇಕ ಊರುಗಳನ್ನು ಸುತ್ತಿ ಬಂದಿದ್ದರು. ಈ ಬಾರಿ ಕೇರಳ ಲಕ್ಷದ್ವೀಪ ನೋಡುವ ಸರದಿಯಾಗಿತ್ತು. ಮುಂದಿನ ವರ್ಷಕ್ಕೆ ಅಂಡಮಾನ್ ಅಂತಲೂ ಪ್ಲಾನ್ ಹಾಕಿಕೊಂಡಿದ್ದರು. +ಮೊದಲು ಗೋವಾಕ್ಕೆ ಹೋಗಿ, ಕೊಂಕಣ್ ರೈಲ್ವೆಯ ಮಾರ್ಗವಾಗಿ ಕೇರಳ ಸುತ್ತಿ ಬರುವುದು ಈ ಬಾರಿಯ ಯೋಜನೆಯಾಗಿತ್ತು. ಅದಕ್ಕೆ ಹಿಂದನ ವರ್ಷ ಮಗು ತುಂಬಾ ಪುಟ್ಟದಾಗಿತ್ತಾದ್ದರಿಂದ ಈ ಪ್ರಯಾಣವನ್ನ ಅವರುಗಳು +ಬೆಳೆಸಿರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ ಪುಟ್ಟ ಮಗುವಿನ ಜೊತೆಗೆ ಇಷ್ಟು ದೊಡ್ಡ ಪ್ರಯಾಣ ಮಾಡುತ್ತಿದ್ದರು. ಗೋವಾ ಸುತ್ತಿ ಕೇರಳಕ್ಕೆ ರೈಲು ಹತ್ತಿದರು. ದಾರಿಯ ಸೌಂದರ್ಯ ಆಸ್ವಾದಿಸುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಕತ್ತಲಾಗಿ ಎಲ್ಲರೂ ಮಲಗಿರುವಾಗಿನ ಗಾಢಾಂಧಕಾರದಲ್ಲಿ ರೈಲು ಒಂದು ದೊಡ್ಡ ಸೇತುವೆಯ ಮೇಲೆ ಹಳಿತಪ್ಪಿ ಕೆಳಕ್ಕೆ ವಾಲಿಬಿಟ್ಟಿತು. +‘ಫಾರ್ ರೆಕಾರ್‍ಡ್ ಸೇಕ್, ಕೊಂಕಣ್ ರೈಲ್ವೆಯ ಮೇಲೆ ಇದೇ ಮೊದಲ ಅಪಘಾತ! ಇನ್ನೂ ಹೆಚ್ಚು ವಿವರ ಬೇಕೆಂದರೆ ನಮ್ಮ ಬೋಗಿಗೆ ಎಲ್ಲಕ್ಕಿಂತ ಹೆಚ್ಚಾದ ಧಕ್ಕೆ ಉಂಟಾಯಿತು – ಆ ಬೋಗಿಯ ಪ್ರಯಾಣಿಕರಲ್ಲಿ ಉಳಿದದ್ದು ನಾನು ಮತ್ತು ನನ್ನ ಮಗಳು ಮಾತ್ರ. ಬಹಳಷ್ಟು ದಿನ ಈ ಅಪಘಾತದ ಚಿತ್ರಗಳು ನನ್ನ ನಿದ್ರೆಯನ್ನ ಕೆಡಿಸಿದೆ.’ +’ಈ ಅಪಘಾತದಲ್ಲಿ ನನ್ನ ಕಾಲು ಮುರಿಯಿತು. ಅದೃಷ್ಟವಶಾತ್ ಮಗಳಿಗೆ ಏನೂ ಆಗಲಿಲ್ಲ, ಹಾಗೂ ಆ ಗಲಯ ಮಧ್ಯದಲ್ಲೂ ಅವಳು ನನ್ನ ಬಳಿಯೇ ಇದ್ದಳಂತೆ. ನನಗೆ ಮಿಕ್ಕ ವಿವರಗಳು ಹೆಚ್ಚು ನೆನಪಿಲ್ಲ. ಬಹುಶಃ ಒಂದು ವಾರ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ನನ್ನನ್ನ ಹೊತ್ತೊಯ್ದರು. ಇಟ್ ವಾಸ್ ಎ ಮೇಜರ್ ಕೇವೊಸ್, ನಾನು ನನ್ನ ಹೆಂಡತಿಗಾಗಿ ಕೂಗಾಡುತ್ತಿದ್ದೆ – ಆದರೆ ಒಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕಡೆಗೂ ಅವರುಗಳು ನನ್ನ ಹೆಂಡತಿ ತೀರಕೊಂಡಳೆಂದು ಹೇಳಿದರು. ನಾನಿದ್ದ ಪರಿಸ್ಥಿತಿಯಲ್ಲಿ ಅವಳ ದೇಹ ನೋಡಿ ಗುರುತಿಸಲೂ ನನಗೆ ಅವಕಾಶ ಸಿಗಲಿಲ್ಲ. ಜೊತೆಗೆ, ಎಷ್ಟೋ ದೇಹಗಳು ಗುರ್ತೇ ಸಿಗದಂತೆ ನಾಶವಾಗಿಬಿಟ್ಟಿದ್ದುವು. ಹೀಗಾಗಿ ಬಹುಶಃ ನಾನು ದೇಹವನ್ನ ಹುಡುಕುವ, ನೋಡುವ ಪ್ರಯತ್ನ ಮಾಡದಿದ್ದದ್ದೇ ಒಳ್ಳೆಯದಾಯಿತೇನೋ. ನನಗೆ ಮತ್ತೆ ನನ್ನ ವ್ಯಾಪಾರಕ್ಕೆ ಹೋಗುವ ಮನಸ್ಸಾಗಲಿಲ್ಲ. ಒಂದೇ ಬಾರಿ ಊರಿಗೆ ಹೋಗಿ ನಾಲ್ಕುದಿನ ಇದ್ದು ಎಲ್ಲವನ್ನೂ ಮಾರಿಹಾಕಿ ಮುಂಬಯಿಗೆ ಬಂದುಬಿಟ್ಟೆ. ಐ ಲೈಕ್ ದಿ ಅನಾನಿಮಿಟಿ ದಟ್ ಒನ್ ಗೆಟ್ಸ್ ದೇರ್, ಹಾಗೂ ಹೀಗೂ ಜೀವನದ ಹಲ ಕೊಂಡಿಗಳನ್ನು ಕೂಡಿಸಿ, ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಂಡು ಜೀವನ ಮಾಡುತ್ತಿದ್ದೇನೆ.’ +ಅವನ ಬಾಕಿ ಸಂಸಾರದ ಬಗ್ಗೆ ಆಕೆ ಕೇಳಿದಳು… ಅದಕ್ಕೆ ಮಧುಸೂಧನ ವಿವರವಾದ ಉತ್ತರವನ್ನೇನೂ ನೀಡಲಿಲ್ಲ. ಇಲ್ಲ ನಮ್ಮದು ಪ್ರೇಮ ವಿವಾಹ.. ಮನೆಯವರಿಗೆ ಇಷ್ಟವಿರಲಿಲ್ಲ. ಮನಸ್ತಾಪವಾಯಿತು. ಅವರೊಂದಿಗೆ ಸಂಪರ್ಕ ಕಡಿದು ಅನೇಕ ವರ್ಷಗಳೇ ಆಗಿವೆ. ಎಂದಷ್ಟೇ ಹೇಳಿ ಅವನು ಸುಮ್ಮನಾಗಿ ಬಿಟ್ಟ. +* +* +* +ಅಹಮದಾಬಾದಿನಿಂದ ಬಂದ ರಿಪೋರ್ಟು ಪ್ರೋತ್ಸಾಹದಾಯಕವಾಗೇನೂ ಇರಲಿಲ್ಲ. ಶಾರದಾ ತನ್ನ ಹಿಂದಿನ ಕೆಲಸವನ್ನ ಹೈದರಾಬಾದಿಗೆ ಬರುವ ಮೂರು ವರ್ಷಗಳ ಹಿಂದೆಯೇ ಬಿಟ್ಟಿದ್ದಳು. ಆ ನಂತರ ಅವಳು ಎಲ್ಲಿ ಹೋದಳೆಂಬ ಬಗ್ಗೆ ಸುದ್ದಿಯಿರಲಿಲ್ಲ. ಬಹುಶಃ ಅಹಮದಾಬಾದಿನ ಪೋಲೀಸು ಇಲಾಖೆ ಈ ಕೇಸಿನ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿರಲಿಲ್ಲವೆಂದು ರಂಗಾರೆಡ್ಡಿ ಊಹಿಸಿದ. ತಾನು ಅವರ ಸ್ಥಾನದಲ್ಲಿದ್ದಿದ್ದರೆ, ಆ ಸಂಸ್ಥೆಯಿಂದ ಆಕೆಯ ಮನೆ ವಿಳಾಸ ಹುಡುಕಿ, ಹೇಗಾದರೂ ಮಾಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ. +ಈ ಎಲ್ಲ ಆಗುವ ವೇಳೆಗೆ ಶಾರದಾ ನಾಪತ್ತೆಯಾಗಿ ಒಂದು ತಿಂಗಳಾಗುತ್ತಾ ಬಂದಿತ್ತು. ರಂಗಾರೆಡ್ಡಿಗೆ ಈ ಕೇಸು ಗಹನವಾಗುತ್ತಾ ಹೋಯಿತು. ಅದು ಹೇಗೆ ಒಂದು ವ್ಯಕ್ತಿಯ ಬಗ್ಗೆ ಇಷ್ಟು ಕಡಿಮೆ ಮಾಹಿತಿಯಿರಬಹುದು ಎನ್ನುವ ವಿಚಾರ ಅವನಿಗೆ ಅರ್ಥವೇ ಆಗಿರಲಿಲ್ಲ. ಬಹುಶಃ ಶಾರದಾಳಿಗೆ ಸ್ಕೂಲು ಬಿಟ್ಟರೆ ಬೇರಾವ ಸಂಪರ್ಕವೂ ಇದ್ದಂತೆ ಕಂಡಿಲ್ಲದ್ದರಿಂದ ಅವಳೂ ಗೈರುಹಾಜರಿ ರಿಪೋರ್ಟ್ ಆಗಲು ತಡವಾಗಿದ್ದಿರಬಹುದು. ಆದರೆ ಸ್ಕೂಲಿನವರಿಗಾದರೂ ಬುದ್ಧಿ ಬೇಡವೇ? ಅಂತ ಅವರಿಗೂ ಮನದಲ್ಲೇ ಶಾಪ ಹಾಕಿದ. +ರಂಗಾರೆಡ್ಡಿಗೆ ಈ ಬಗ್ಗೆ ಅನುಮಾನ ಹೆಚ್ಚಾಗುತ್ತಾ ಹೋದಂತೆ ಅವನು ಕಳೆದ ಒಂದು ತಿಂಗಳಿನಲ್ಲಾಗಿರಬಹುದಾದ ಕೊಲೆ, ಸಾವು, ಅಪಹರಣದ ಕೇಸುಗಳಲ್ಲಿ ಯಾವುದಾದರೂ ೩೦-೩೫ ವರ್ಷದ ಮಹಿಳೆ ಸಿಲುಕಿದ್ದಳೇ ಎಂಬ ಮಾಹಿತಿಯನ್ನ ಸಂಗ್ರಹಿಸಲು ತನ್ನ ಠಾಣೆಯವರಿಗೆ ಹೇಳಿದ. +* +* +* +ಈ ನಾಲ್ಕು ದಿನಗಳಲ್ಲಿ ಮಧುಸೂಧನ ಮೇಡಂ ಜೊತೆ ಅನೇಕ ಬಾರಿ ಟಿ ಮಾಡಿದ್ದ. ಅವನಿಗೆ ಇದೊಂದು ವಿಚಿತ್ರ ಅನುವವಾಗಿತ್ತು. ತನ್ನ ಮೊದಲ ಪ್ರೇಮ ಅಂಕುರಗೊಂಡ ರೀತಿಗೂ ಈ ಹುಡುಗಿಯ ಜೊತೆ ತನ್ನ ಸಂಬಂಧ ಬೆಳೆಯುತ್ತಿದ್ದ ರೀತಿಗೂ ಬಹಳವೇ ಅಂತರವಿತ್ತು. ಜೊತೆಗೆ ಇಲ್ಲಿ ತನ್ನ ಮಗಳಿದ್ದದ್ದರಿಂದ ಯಾವ ಮಾತುಕತೆಯೂ ಸರಾಗವಾಗಿ ನಡೆಯುತ್ತಿರಲಿಲ್ಲ. +ಆದರೆ ಮೊದಲ ಸಂಜೆಯ ಗ್ರೀನ್ ಪಾರ್ಕ್ ಹೋಟೇಲಿನ ಊಟದ ನಂತರ, ಆಕೆಯ ಟಿ ಮತ್ತೆ ಆಗಲಾರದು ಅಂದುಕೊಂಡಿದ್ದ. ಏನಾದರಾಗಲಿ ಎಂದು ‘ನಾಳೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಇವಳನ್ನ ಕರೆದುಕೊಂಡು ಹೋಗ್ತೀನಿ, ನಿಮಗೆ ಸಮಯವಿದ್ದರೆ ಯಾಕೆ ನಮ್ಮ ಜೊತೆ ಬರಬಾರದು?’ ಅಂದ. ಅವಳು ಹೆಚ್ಚು ತೆಲೆಕೆಡಿಸಿಕೊಳ್ಳದೇ ಒಪ್ಪಿದ್ದು ಅವನಿಗೆ ಆಶ್ಚರ್ಯ ನೀಡಿತ್ತು. ‘ಮ್ಯೂಸಿಯಂಗೆ ನನ್ನ ವಿದ್ಯಾರ್ಥಿಗಳನ್ನ ಅನೇಕ ಬಾರಿ ಕರಕೊಂಡು ಬಂದಿದ್ದೀನಿ, ಹೀಗಾಗಿ ನಾನು ಬಂದರೆ ಚೆನ್ನಾಗಿರುತ್ತೆ, ಬರ್ತೀನಿ. ನನಗೂ ಆ ಸ್ಕೂಲಿನಿಂದ ಸುದ್ದಿ ಬರುವವರೆಗೂ ಬೇರೆ ಕೆಲಸವಿಲ್ಲ. ಸೋ…’ ಎಂದು ಅವಳು ಹೇಳಿದಾಗ ಮಧುಸೂಧನನಿಗೆ ವಿಚಿತ್ರ ಅನುತಿಯಾಯಿತು. ಅವನು ತನ್ನ ಕೈರೇಖೆ ನೋಡಿಕೊಂಡ. ಬೆಳಿಗ್ಗೆ ಈ ಸುದ್ದಿಯನ್ನ ಕೇಳಿದ ಮಗಳಿಗಂತೂ ಎಲ್ಲಿಲ್ಲದ ಖುಷಿಯಾಯಿತು. +ಹೀಗೆ ಪ್ರಾರಂವಾದ ಎರಡನೇ ದಿನದ ಕಾರ್ಯಕ್ರಮ, ಮತ್ತೆ ರಾತ್ರೆ ಗ್ರೀನ್‌ಪಾರ್ಕ್‌ನಲ್ಲಿ ಕ್ಯಾಂಡಲ್‌ಲೈಟ್ ಊಟದ ಜೊತೆ ಸಮಾಪ್ತವಾಯಿತು. ಮರುದಿನ ಮತ್ತೆ ಮಧುವೇ ಅವಳನ್ನು ಆಹ್ವಾನಿಸಿದ. ಇಬ್ಬರೂ ಸೇರಿ ಇಡೀ ಹೈದರಾಬಾದನ್ನು ಮಗಳಿಗೆ ತೋರಿಸುವ ನೆವದಲ್ಲಿ ಸುತ್ತಾಡಿದರು. +ನಾಲ್ಕನೇ ದಿನದ ವೇಳೆಗೆ ಅವಳಿಗೆ ಸ್ಕೂಲಿನಿಂದ ನ್ ಬಂತು. ‘ನಿಮಗೆ ನಮ್ಮ ಶಾಲೆಯಲ್ಲಿ ಕೆಲಸ ಕೊಡಲು ನಮಗೆ ಬಹಳ ಖುಷಿಯಾಗುತ್ತಿದೆ. ಆದರೆ ನಮ್ಮದು ರೆಸಿಡೆನ್ಷಿಯಲ್ ಶಾಲೆಯಾದ್ದರಿಂದ, ಹಾಗೂ ಅನೇಕ ಶ್ರೀಮಂತ ಜನರ ಮಕ್ಕಳು ಬರುವುದರಿಂದ ನೀವು ನಿಮ್ಮ ಮನೆಯಿರುವ ಇಲಾಖೆಯ ಪೋಲೀಸು ಠಾಣೆಯಿಂದ ಒಂದು ಸರ್ಟಿಫಿಕೇಟ್ ತರುವುದು ಅವಶ್ಯಕ. ಇದು ನಮ್ಮ ನಿಯಮ.. ದಯವಿಟ್ಟು ತಪು ಅರ್ಥ ಮಾಡಿಕೊಳ್ಳಬೇಡಿ. ಠಾಣೆಯವರು ನಿಮ್ಮ ಜೊತೆ ಸಹಕರಿಸದಿದ್ದರೆ ನನಗೆ ತಿಳಿಸಿ, ನಾನು ಐ.ಜಿ. ಯ ಜೊತೆ ಮಾತಾಡುತ್ತೇನೆ. ಹಿಂದೆ ನಮ್ಮ ಶಾಲೆಗೆ ಹಳೆಯ ಶಾಲೆಯಿಂದ ರಿಸೈನ್ ಮಾಡದೇ ಕ್ಲಿಯರೆನ್ಸ್ ಪಡೆಯದೇ ಜನ ಬಂದಿರುವುದುಂಟು. ನಮಗೆ ಆ ನಂತರ ಸಾಕಷ್ಟು ತೊಂದರೆಯಾಯಿತು. ನೀವು ಆದಷ್ಟು ಬೇಗ ನಿಮ್ಮ ಠಾಣೆಯಿಂದ ಈ ಸರ್ಟಿಫಿಕೇಟ್ ತರಿಸಿಕೊಡಿ. ಯಾವುದಕ್ಕೂ ನನಗೆ ಸಂಜೆಗೆ ನ್ ಮಾಡಿ.’ ಎಂದು ಪ್ರಿನ್ಸಿಪಾಲರು ಹೇಳಿದರಂತೆ. +‘ಹಾಗಾದರೆ ನೀವು ಅಲ್ಲಿಗೆ ಸೇರುತ್ತೀರಾ ಅಂತ ಆಯಿತು. ಇದರಿಂದ ನನ್ನ ಮನಸ್ಸಿಗೂ ನೆಮ್ಮದಿಯಾಯಿತು ಬಿಡಿ. ನನ್ನ ಮಗಳು ನಿಮ್ಮ ನಿಗರಾನಿಯಲ್ಲಿರುತ್ತಾಳೆ. ಬನ್ನಿ, ನೀವು ನನಗೆ ಇಷ್ಟೆಲ್ಲಾ ಹೈದರಾಬಾದು ತೋರಿಸಿದ್ದೀರ, ನಾನೂ ನಿಮ್ಮ +ಜೊತೆಗೆ ಠಾಣೆಗೆ ಬರುತ್ತೇನೆ. ಆ ಸರ್ಟಿಫಿಕೇಟ್ ಏನೋ ಇಂದೇ ತಂದುಬಿಡುವಾ.. ಎಷ್ಟಾದರೂ ನನ್ನ ಆಸಕ್ತಿಯೂ ನೀವು ಆ ಸ್ಕೂಲು ಸೇರುವುದರಲ್ಲೇ ಇದೆ.’ +ಮಧುವಿಗೆ ಈ ಪರಿಚಯವನ್ನು ಮುಂದುವರೆಸುವುದಕ್ಕೆ, ಬೆಳೆಸುವುದಕ್ಕೆ ಅವಕಾಶ ಸಿಕ್ಕದ್ದು ಮನಸ್ಸಿಗೆ ಉಲ್ಲಾಸ ತರಿಸಿತ್ತು. ಈ ನಾಲ್ಕು ದಿನಗಳಲ್ಲಿ ತನ್ನ ಬಗ್ಗೆ ತಾನು ಎಲ್ಲ ಹೇಳಿದ್ದಲ್ಲದೇ ಅವಳ ಬಗ್ಗೆಯೂ ಸಾಕಷ್ಟು ವಿವರಗಳನ್ನ ಮಧು ಒಟ್ಟುಗೂಡಿಸಿದ್ದ. ಈ ಪರಿಚಯ ಎತ್ತ ಸಾಗಬಹುದೋ ಯೋಚಿಸುತ್ತಾ ಮಧುಸೂಧನ ಮತ್ತೆ ತನ್ನ ಕೈ ನೋಡಿಕೊಂಡ. ಠಾಣೆಗೆ ಹೋಗುವಾಗ ಮಗಳನ್ನು ಒಯ್ಯುವುದು ಒಳ್ಳೆಯದಲ್ಲ ಅಂತ ಮಧುವಿನ ಅಭಿಪ್ರಾಯವಾಗಿತ್ತು. ಹೀಗಾಗಿ ಮಗಳನ್ನು ಆಕೆಯ ಗೆಳತಿಯ ಮನೆಯಲ್ಲಿ ಬಿಟ್ಟು ಇಬ್ಬರೂ ಆಟೋ ಹತ್ತಿದರು. +ದಾರಿಯಲ್ಲಿ ಆಕೆ ಹಿಂಜರಿದು ಹಿಂಜರಿದು ಇಫ್ ಯು ಡೋಂಟ್ ಮೈಂಡ್, ನಾನು ನಿಮ್ಮನ್ನ ಒಂದು ಪ್ರಶ್ನೆ ಕೇಳಬಹುದೇ?’ ಅಂದಳು. +ಮಧುಸೂಧನನಿಗೆ ಮಹತ್ವದ ಪ್ರಶ್ನೆಯೊಂದು ಈಗ ತನ್ನ ದಿಕ್ಕಿನಲ್ಲಿ ಬರಬಹುದೆನ್ನಿಸಿ ಮೈ ಜುಂ ಎಂದತು. ಈ ನಾಲ್ಕು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮಗಳಿಲ್ಲದೇ, ಅವರಿಬ್ಬರೇ ಒಂಟಿಯಾಗಿದ್ದರು. ‘ಖಂಡಿತವಾಗಿ ಕೇಳಿ, ಇಷ್ಟು ದಿನಗಳಾದ ಮೇಲೂ ನೀವು ಪ್ರಶ್ನೆ ಕೇಳಬಹುದಾ ಅನ್ನೋ ಪ್ರಶ್ನೆಯನ್ನ ಕೇಳುತ್ತಿದ್ದೀರೆಂದರೆ ನಮ್ಮ ಈ ನಾಲ್ಕು ದಿನದ ಒಡನಾಟಕ್ಕೆ ಅವಮಾನ ಮಾಡಿದಂತೆ. ಪ್ಲೀಸ್, ಏನು ಕೇಳಬೇಕಂತ್ತಿದ್ದೀರೋ ಕೇಳಿ..’ +‘ಏನಿಲ್ಲ.. ಮೊದಲ ದಿನದಿಂದಲೂ ನೋಡುತ್ತಿದ್ದೇನೆ. ನಾನು ನಿಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದಾಗಲೆಲ್ಲ ನೀವು ನಿಮ್ಮ ಕೈ ನೋಡಿಕೊಳ್ಳುತ್ತೀರಿ, ಮತ್ತು ಕೈಯನ್ನ ಒಮ್ಮೆ ಒತ್ತಿಕೊಳ್ಳುತ್ತೀರಿ. ಇದರ ಮಹತ್ವ ಏನೂ ಅಂತ… ಜಸ್ಟ್ ಕುತೂಹಲ ಅಷ್ಟೇ..’ +‘ಓಹ್ ಅದಾ…’ ಮಧೂಸೂಧನ ನಾಚಿದ. ಅವನ ಮುಖ ಕೆಂಪಾಯಿತು, ಹಣೆಯ ಮೇಲೆ ಬೆವರಿನ ಹನಿಗಳು ಬಂದುವು, ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಅವನು ತಬ್ಬಿಬ್ಬಾದ. ಕಡೆಗೂ ಧೈರ್ಯ ತಂದುಕೊಂಡು ಕೇಳಿದ: ‘ನಿಮಗೆ ನಿಜ ಹೇಳಬೇಕೋ ಸುಳ್ಳು ಹೇಳಬೇಕೋ ಹೇಳಿ.’ +’ಇದು ಒಳ್ಳೆಯ ಪ್ರಶ್ನೆಯಾಯಿತು. ಅಫ್‌ಕೋರ್‍ಸ್, ನಿಜವನ್ನೇ ಹೇಳಿ.. ಇದರಲ್ಲಿ ಸುಳ್ಳು ಹೇಳುವಂತಹ ವಿಚಾರ ಏನಿದ್ದೀತು?’ +‘ನೀವು ಸಿಟ್ಟಾಗಬಾರದು ಮತ್ತೆ..’ +‘ಇದರಲ್ಲಿ ಸಿಟ್ಟಾಗುವ ವಿಷಯವೇನಿದೆ? ಅಷ್ಟೂ ಮೆಚ್ಯೂರಿಟಿಯಿಲ್ಲದೇ ಯಾರಾದರೂ ವರ್ತಿಸುತ್ತಾರಾ, ಹೇಳಿ?’ +ಇಷ್ಟು ಆಶ್ವಾಸನೆ ಸಿಕ್ಕ ಕೂಡಲೇ ಮಧುಸೂಧನನಿಗೆ ಧೈರ್ಯ ಬಂತು. ದಯಾಕರ ಮೆನನ್ ಅವನಿಗೆ ಹೇಳಿದ್ದ ವಿಷ್ಯವಾಣಿಯ ಬಗ್ಗೆ ನಾಚುತ್ತಲೇ ಹೇಳಿದ. ಅದನ್ನು ಕೇಳಿದಾಗ ಅವಳ ಮುಖ ಕೆಂಪಾಯಿತು. +‘ಎಲ್ಲಿ, ಇದು ಯಾವ ರೇಖೆಯೋ ತೋರಿಸಿ…’ ಎನ್ನುತ್ತಾ ಅವನ ಪಾಣಿಗ್ರಹಣ ಮಾಡಿ, ಅದನ್ನ ಒಮ್ಮೆ ಒತ್ತಿದಳು. ಈ ಚರ್ಯೆ ಸಾವಿರ ಮಾತುಗಳಿಗಿಂತ ಹೆಚ್ಚಾಗಿತ್ತು. ಈ ಸುಖ ಕ್ಷಣಮಾತ್ರದ್ದಾಗಿತ್ತು. ಯಾಕೆಂದರೆ, ಇಬ್ಬರೂ ಬೇರೆ ಮಾತಾಡುವಷ್ಟರಲ್ಲಿ ಪೋಲೀಸು ಠಾಣೆಯನ್ನ ಆಟೋರಿಕ್ಷಾ ತಲುಪಿಬಿಟ್ಟಿತ್ತು. +* +* +* +ಠಾಣೆಯಲ್ಲಿ ಅವರು ನೇರ ಠಾಣೆದಾರನ ಕೋಣೆಗೆ ಹೋದರು. ಅಲ್ಲಿ ರಂಗಾರೆಡ್ಡಿ ಠೀವಿಯಿಂದ ಕೂತಿದ್ದ. ಇಬ್ಬರೂ ಬಂದದ್ದನ್ನ ನೋಡಿ ಅವರನ್ನ ಬರಮಾಡಿಕೊಂಡು ಎದುರಿನ ಕುರ್ಚಿಗಳಲ್ಲಿ ಕೂಡಿಸಿದ. ಆಕೆ ರಂಗಾರೆಡ್ಡಿಗೆ ತನ್ನ ಹೊಸ ಕೆಲಸದ ಬಗ್ಗೆ, ಸ್ಕೂಲಿನ ಬಗ್ಗೆ, ಹಾಗೂ ಬೇಕಾಗಿರುವ ಸರ್ಟಿಫಿಕೇಟ್ ಬಗ್ಗೆ ಹೇಳಿದಳು. ರಂಗಾರೆಡ್ಡಿ ತಲೆಯಾಡಿಸಿದ. ‘ಹೌದು, ಆ ಸ್ಕೂಲಿನ ಬಗ್ಗೆ ಕೇಳಿದ್ದೇನೆ, ಆಗಬಹುದು ಸರ್ಟಿಫಿಕೇಟ್ ಕೊಡುತ್ತೇನೆ, ನಿಮ್ಮ ವಿಳಾಸ ಇತ್ಯಾದಿ ಈ ಕಾಗದದ ಮೇಲೆ ಬರೆದು ಕೊಡಿ, ಎರಡು ದಿನಗಳಲ್ಲಿ ಎನ್‌ಕ್ವಯರಿ ಮಾಡಿ ಬರಕೊಡುತ್ತೇನೆ. ಅಂದಹಾಗೆ ಇವರು ಯಾರು?’ ಎಂದು ಕೇಳಿದ. +ಠಾಣೆಗೆ ಬರುವಾಗ ತಮಗೆ ಇಂಥ ಪ್ರಶ್ನೆಯೊಂದು ಎದುರಾಗಬಹುದೆಂದು ಇಬ್ಬರೂ ಯೋಚಿಸಿರಲಿಲ್ಲ. ಗೊಣಗುಟ್ಟುತ್ತಾ ಇಬ್ಬರೂ ಟಿಯಾದ ಪರಿಸ್ಥಿತಿಯನ್ನ ವಿವರಿಸಿದರು…. ರಂಗಾರೆಡ್ಡಿಗೆ ಇವರಿಬ್ಬರನ್ನೂ ನೋಡಿ ಅನುಮಾನ ಬಂತು.. ಮೇಜಿನ ಅಡಿಗದಲ್ಲಿದ್ದ ಬೆಲ್ ಒತ್ತಿ ಪೇದೆಯನ್ನು ಕರೆದ. ಅವರ ಮುಖವನ್ನ ನೋಡುತ್ತಲೇ, ಏನೂ ಆಗಿಲ್ಲವಂಬಂತೆ, ‘ಎರಡು ಕಾಫಿ ತೆಗೊಂಡು ಬಾ.. ಹಾಗೇ ಶಾರದಾ ಮೇಡಂ ಲನ್ನ ಕಳಿಸು…’ ಅಂದ. ಇಷ್ಟು ಹೇಳಿ ಪ್ರತಿಕ್ರಿಯೆಗಾಗಿ ಇಬ್ಬರ ಮುಖವನ್ನೂ ನೋಡಿದ. ಯಾವ ಪ್ರತಿಕ್ರಿಯೆಯೂ ಕಾಣಿಸದಾಗ, ಸ್ವಲ್ಪ ನಿರಾಳ ನಿಟ್ಟುಸಿರಿಟ್ಟ.. +‘ನೋಡಿ, ನಮ್ಮ ಠಾಣೆಗೆ ಈ ಮಧ್ಯೆ ಯಾಕೋ ಸ್ಕೂಲ್ ಟೀಚರುಗಳ ಕೇಸುಗಳೇ ಬರ್ತಾ ಇರೋಹಾಗಿದೆ.. ಮೂರು ವಾರಗಳ ಕೆಳಗೆ ಪೆಟಲ್ಸ್ ಸ್ಕೂಲಿನಿಂದ ಒಬ್ಬರು ಮೇಡಂ ನಾಪತ್ತೆಯಾಗಿದ್ದಾರೆ. ಅವರೂ, ಹೇಳದೇ ಕೇಳದೇ ಹೀಗೆ ಯಾವುದಾದರೂ ರೆಸಿಡೆನ್ಷಿಯಲ್ ಶಾಲೆ ಸೇರಿರಬಹುದೂಂತ ನಮ್ಮ ಅನುಮಾನ… ಹೀಗಾಗಿ ಪೋಲೀಸು ವೆರಿಫಿಕೇಶನ್ ಮಾಡಿಸಿಕೊಳ್ಳುವುದು ಒಳ್ಳೆಯದೇ ಅಂತ ನಮ್ಮ ಅಭಿಪ್ರಾಯ. ನೀವೇನಂತೀರಿ?’ ಎಂದು ಒಂದು ದೇಶಾವರಿ ನಗೆ ಬೀರಿದ. +ಇಬ್ಬರೂ ತಲೆಯಾಡಿಸಿದರು. ಮೊದಲಿಗೆ ಲ್ ಬಂತು. ರಂಗಾರೆಡ್ಡಿ ಅದನ್ನ ಒಮ್ಮೆ ಅಮೂಲಾಗ್ರ ನೋಡಿದ. ಅದರೊಳಗಿದ್ದ ಟೋವನ್ನ ಹತ್ತಿರದಿಂದ ನೋಡಿ, ಅವಳನ್ನೊಮ್ಮೆ ನೋಡಿದ.. ಉಹುಂ, ಇದು ಬೇರೆಯದೇ ಕೇಸು ಅಂದುಕೊಳ್ಳುತ್ತಾ ಲನ್ನ ಅವಳತ್ತ ತಿರುಗಿಸಿ – ‘ನೀವೂ ಟೀಚಿಂಗ್ ಪ್ರಷನ್‌ನಲ್ಲಿದ್ದೀರ… ನಿಮಗೆ ಇವರೇನಾದರೂ ಗೊತ್ತೇನೋ ನೋಡಿ ಹೇಳಿ.’ ಅಂದ. +‘ಇಲ್ಲ.’ ಅನ್ನುತ್ತಾ ಅವಳು ಆ ಲನ್ನು ಮಧುವಿಗೆ ಕೊಟ್ಟಳು. ಮಧುಸೂಧನ ಆ ಲನ್ನು ಪಡೆದು ಯಾವ ಆಸಕ್ತಿಯೂ ಇಲ್ಲದವನಂತೆ ನೋಡಿದ. ನೋಡಿದ ಕೂಡಲೇ ಜೋರಾಗಿ ‘ಓಹ್ ಗಾಡ್!!!’. ಅಂತ ಕಿರುಲಿದ. ರಂಗಾರೆಡ್ಡಿ ಮತ್ತು ಆಕೆ ಕೂಡಲೇ ಅವನತ್ತ ನೋಡಿ ಏಕಧ್ವನಿಯಲ್ಲಿ ‘ಏನಾಯಿತು?’ ಅಂದರು. +‘ಇದು… ಇದು… ಇದು ನನ್ನ ಹೆಂಡತಿ ಶಾರದಾ….’ ಎಂದ. +ಆ ಹೊತ್ತಿಗೆ ಸರಿಯಾಗಿ ಒಬ್ಬ ಕಾನ್‌ಸ್ಟೇಬಲ್ ಒಳಕ್ಕೆ ಬಂದ. ‘ಸರ್ ಪಂಜಾಗುಟ್ಟಾ ಠಾಣೆಯಿಂದ ರಿಪೋರ್ಟ್ ಬಂದಿದೆ, ಮೂರು ವಾರಗಳ ಕೆಳಗೆ ಹೂತಿಟ್ಟಿದ್ದ ಹೆಂಗಸಿನ ಶವ ಸಿಕ್ಕಿದೆಯಂತೆ. ನಾವು ಕಳಿಸಿದ ಆ ಮೇಡಂದೇನಾದರೂ ಇರಬಹುದು ಅಂತ ಅವರ ಅನುಮಾನ….’ +ರಂಗಾರೆಡ್ಡಿ ದಂಗಾದ. ಮಧುಸೂಧನ ಕಂಗಾಲಾಗಿ ಕಂಬವಾಗಿಬಿಟ್ಟಿದ್ದ. ಆ ಹುಡುಗಿ ಮಧುಸೂಧನನ ಕೈಯನ್ನು ದ್ರವಾಗಿ ಹಿಡಿದು ಅವನ ಕೈರೇಖೆಗಳನ್ನು ಸವರತೊಡಗಿದಳು. +***** +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_135.txt b/Kannada Sahitya/article_135.txt new file mode 100644 index 0000000000000000000000000000000000000000..8af2ed78f351f925978bdb90cb5dc2f195c4917a --- /dev/null +++ b/Kannada Sahitya/article_135.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಿರುಕನಾಗಿ +ತಿರುಕನಾಗಿ +ಅಥವಾ ಮಾತು ಮಾತು ಮಾತುಗಳ +ಶಬ್ದ ಗುಮ್ಮಟವಾದ ಈ ಪ್ರಪಂಚ +ಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ +ತಲೆಕೆದರಿದ ತಿರುಕಿಯಂತೆ ಕವಿ +ಈ ತಿಪ್ಪೆಯಲ್ಲಿ ಮರೆತು ಬಿಸಾಕಿದ +ಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡು +ಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದ +ಮಗುವಿನ ಬೆಳ್ಳಿ ಒಳಲೆ ಇತ್ಯಾದಿ ವಿಶೇಷ ಹುಡುಕಿ ತೆಗೆದು +ಇಟ್ಟುಕೊಳ್ಳುತ್ತಾನೆ, ಅಥವಾ ರೀಸೈಕಲ್ ಮಾಡುತ್ತಾನೆ, ಅಥವಾ +ಒಡೀ ತಿಪ್ಪೆಯಿಂದ ಬಯೋಗ್ಯಾಸ್ ಮಾಡಿ +ದೀಪವನ್ನೂ ಉರಿಸಬಲ್ಲ ರೈತ ಅವನೆಂದರೂ ಸರಿಯೆ. +ಅಥವಾ ಅದೃಷ್ಟವಶಾತ್ +ಮಣಿಪಾಲದ ನನ್ನ ಗೆಳೆಯ ವಿಜಯನಾಥ ಶೆಣೈರಂತೆ +ಹಕ್ಕಿದ್ದನ್ನು ಹಕ್ಕಿಯಂತೆ ತಂದೂ ತಂದೂ ಜೋಡಿಸಿ +ಮಾಡಿದ ಗೂಡು ಅದ್ಭುತವೆನ್ನಿಸಿಬಿಟ್ಟು +ಏಕಾಂತಕ್ಕೆ ಸಲ್ಲದೆ +ಅಲ್ಲಿ ತಾನೇ ಕಾಣದಂತಾಗಿ +ಎಲ್ಲರಂತೆ ಇನ್ನೊಂದು ಸಾದಾಮನೆ ಬಾಡಿಗೆಗೆ ಹಿಡಿದು +ತಾನು ಕಟ್ಟಿದ್ದನ್ನು ಉಳಿದವರ ಕಣ್ಣಲ್ಲಿ ಕಂಡು ಸುಖಿಸುತ್ತಾನೆ. +೧೦-೧-೯೨ +ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […] +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_136.txt b/Kannada Sahitya/article_136.txt new file mode 100644 index 0000000000000000000000000000000000000000..5781ea282068ef142e7c7494326439cc60379ff9 --- /dev/null +++ b/Kannada Sahitya/article_136.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. +“ಚಿತ್ರರಂಗ ಕುರಿತ ಲೇಖನವಾ?” ಎಂದೆ. +“ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಚಿಂತಿಸಿ ಎಲ್ಲರಿಗೂ ಫೋನಿಸಿದೆ. ಅವರು ಹೇಳಿದ ವಿಷಯಗಳು ಮಹತ್ವದೆನ್ನಿಸಿ ಲೇಖನ ಅಣಿ ಮಾಡಿದೆ” +“ಹೇಳು ಮಹರಾಯ, ಅದೇನು?” “ಡಾ. ರಾಜ್‌ಕುಮಾರ್‍ ಅವರಿಗೆ ಫೋನಿಸಿ ಬಾಂಬ್ ಸ್ಫೋಟದ ಬಗ್ಗೆ ಏನಂತೀರಿ ಅಂದೆ” +“ಭಕ್ತ ಅಂಬರೀಶ ಮಾಡ್ತೀದೀನಲ್ಲ. ಅದರ ಸುದ್ದಿ ಕರ್ನಾಟಕದಲ್ಲಿ ಬಾಂಬ್‌ನಂತೆ ಸ್ಫೋಟಿಸಿತು. ಬರಗೂರು ಗೌತಮ ಬುದ್ಧ ಮಾಡಿ ಅಂದ್ರು. ಯೋಚ್ನೆ ಮಾಡ್ತೀನಿ ಅಂದದ್ದೇ ತಡ ಆ ಸುದ್ದಿಯೂ ಭಾರಿಯಾಗಿ ಸ್ಪೋಟಿಸಿತು. ಈಗ ನಮ್ಮ ರಾಘು-ಪುನೀತ್ ಮೆಗಾ ಧಾರಾವಾಹಿಗಳು ಮಾಡ್ತಿದಾರೆ ಅನ್ನೋದೇ ಎಲ್ಲಾ ಕಡೆ ಡಂ-ಡಮಾರ್‍ ಅಂತ ಸುದ್ದಿ ಮಾಡ್ತಿವೆ” ಎಂದು ನಕ್ಕರು. +ವಿಷ್ಣುವರ್ಧನ್ ಅವರಿಗೆ ರಿಂಗಿಸಿ ಪ್ರಶ್ನಿಸಿದಾಗ “ಕುಮಾರಸ್ವಾಮಿಯವರು ಹೆಲಿಕಾಪ್ಟರ್‍ ಕಳಿಸ್ತೀನಿ ಅಂದ್ರೂ ‘ಸೂರ್ಯವಂಶ’ ರಜತೋತ್ಸವಕ್ಕೆ ಬರಲಿಲ್ಲ ಅನ್ನೋ ಬಾಂಬ್ ಸ್ಫೋಟ ನಂಗೆ ತುಂಬ ಬೇಸರವಾಯಿತು. ಪ್ರಶಸ್ತಿ ಒನ್‌ಬೈಟು ಮಾಡೋದು ಬೇಡ ಅಂದೆ. ಅದು ಅವರ ಪಾಲಿಗೆ ಬಾಂಬ್ ಸ್ಫೋಟ ಅನ್ನಿಸಿರಬಹುದು. ಅದಕ್ಕೆ ನಾನೇನು ಮಾಡಕ್ಕೆ ಆಗಲ್ಲ” +ಶಿವರಾಜ್‌ಕುಮಾರ್‍ ರಿಸೀವರ್‍ ಹಿಡಿದು ಹೇಳಿದರು “ಸುಂದರ್‌ನಾಥ್ ಸುವರ್ಣ ಮನೋಹರ್‍ ಬಗ್ಗೆ ಮಾಡಿದ ಆಕ್ಷೇಪಣೆಗಳು ಬಾಂಬ್ ಸ್ಫೋಟದಷ್ಟೆ ಆಘಾತಕಾರಿಯಾಗಿತ್ತು. +ಇಂದ್ರಧನುಷ್ ಗೆಲುವಿಗೆ ಅಥವಾ ಸೋಲಿಗೆ ನಾನಾ ಕಾರಣಗಳಿರುತ್ತೆ. ಆ ಸಮಸ್ಯೆಗಳಿಗೆ ಬಗೆಹರಿಸಿಕೊಳ್ಳಬೇಕಾದ್ದು ಆಹ್ಲಾದಕರ ವಾತಾವರಣದಲ್ಲಿ. +ಅನಂತ್‌ನಾಗ್-‘ಬಾಂಬ್’ ಎಂದು ನಗುತ್ತ ‘ಸಂಕೇತ್ ಸ್ಟುಡಿಯೋ ಮಾಡಿದ್ದೇ ತಪ್ಪು ಅನ್ನೋ ಹಾಗೆ ಬಾಂಬ್ ಸ್ಫೋಟಿಸಿದರಲ್ಲ ಪತ್ರಿಕೆಗಳಲ್ಲಿ, ಹಣ ಹಾಕಿದೋನು ನಾನು-ಸಾಲ ತೀರಿಸೋನು ನಾನು. ನನ್ನ ಕಷ್ಟ ಯಾರಿಗೆ ಗೊತ್ತಾಗುತ್ತೆ. ಅದಕ್ಕೆ ಕೇಳಿದೋರಿಗೆಲ್ಲ ಕಾಲ್‌ಷೀಟ್ ಕೊಡ್ತಿದೀನಿ. ಇಷ್ಟು ವರ್ಷದ ನನ್ ಅನುಭವದಲ್ಲಿ ‘ಆಂಧ್ರ ಹೆಂಡ್ತೀಲಿ’ ಅಭಿನಯಿಸಿದ ಅನುಭವ ಇದೆಯಲ್ಲ ಅದು ಆಟಂಬಾಂಬಲ್ಲ ಹಾಸ್ಯದ ಹೈಡ್ರೋಜನ್ ಬಾಂಬ್. ಇಂಥಾ ಬಾಂಬ್‌ಗಳಿಂದ ನೋಡೋರಿಗೆ ಸ್ವಲ್ಪ ಕಷ್ಟ ಆಗಬಹುದಷ್ಟೆ-ಹೆಣಗಳು ಬೀಳಲ್ಲ” +ರಮೇಶ್‌ಗೆ ಫೋನಿಸಿದಾಗ “ನನ್ನ ಅನುಪ್ರಭಾಕರ್‌ನ ಒಂದು ಸಾರಿ ಗಾಸಿಪ್ ಕಾಲಂಗೆ ತಂದ್‌ಬಿಟ್ರಲ್ಲ ಪೇಪರ್‌ನವರು ಅಂದು ನಂಗೆ ಅದು ಬಾಂಬ್ ಸ್ಫೋಟ ಅನ್ನಿಸಿತು. ನಾನು ಲೌ-ಡೌ ಗಿವ್ ಎಲ್ಲ ಲಾಕರ್‌ನಲ್ಲಿ ಲಾಕ್ ಮಾಡಿಟ್ ಬಿಟ್ಟಿದ್ದೀನಿ. ಕತೆ ಇದೆ ಅಂತ ಬಂದವರು – ಕಾಲ್‌ಷೀಟ್‌ಗೆ ಕೈ ಚಾಚಿ-ಪ್ರೊಡ್ಯೂಸರ್‌ನೂ ನೀವೇ ಹುಡುಕಿಕೊಡಿ ಅಂದಾಗ ಬಾಂಬ್ ಸ್ಫೋಟವಾದ ಹಾಗೆ ಆಗಿ ನಾನು ಮೂರ್ಛೆ ಹೋಗಿದ್ದೀನಿ. ಇನ್ನು ನಿಜವಾದ ಬಾಂಬ್ ಸ್ಫೋಟವಾದರೆ ಎಷ್ಟು ನೋವಾಗಬೇಡ-ಪ್ರಾಣ ಹಾನಿ ಅಂದ್ರೆ ಹುಡುಗಾಟನೆ-ದಟ್ಸ್ ನಾನ್‌ಸೆನ್ಸ್” ನಿರ್ದೇಶಕ ಕಂ ನಟ ಎಸ್. ನಾರಾಯಣ್‌ಗೆ ಫೋನಿಸಿದ ಮರುಘಳಿಗೆ “ವೀರಪ್ಪನಾಯ್ಕ ಕದ್ದ ಕತೆ ಅಂತ ರವಿಚಂದ್ರನ್ ಹೇಳಿದಾಗ ಬಾಂಬ್ ಬಿದ್ದಾಗ ಆಗುವಷ್ಟೇ ಹಿಂಸೆ ಆಯಿತು. ಅದೇ ಥರಾ ಬಾಂಬ್ ಸ್ಪೋಟವಾದ್ದು ವಿಷ್ಣುವರ್ಧನ್ ತಮಗೆ ಬಂದ ನಟನೆ ಪ್ರಶಸ್ತಿ ನಂಗೆ ಕೊಡು ಅಂತ ನನ್ನ ತಮ್ಮನ ಕೈಲಿ ಕೊಟ್ಟಾಗ, ಇಂತ ಬಾಂಬ್ ಸುದ್ದಿಗಳು ನಂಗೆ ಸಾಮಾನ್ಯ. ನಾನು ನಂಜುಂಡೀಗೆ ತಮಿಳು ರೀಮೇಕ್ ಕನ್ನಡದಲ್ಲಿ ಮಾಡ್ಕೊಡ್ತೀನಿ ಅಂದಾಗ ಧನರಾಜ್ ಪ್ರೆಸ್‌ಮೀಟ್ ಭಾರಿ ಬಾಂಬ್ ಅನ್ನಿಸ್ತು. ಎಲ್ಲಿ ಆ ಬಾಂಬ್ ‘ಠುಸ್’ ಅಂದು ಸಾ.ರಾ.ಗೋವಿಂದು ಕೈಗೆ ಹೋಯಿತಲ್ಲ ಚಿತ್ರ ಮಾಡೋ ಹಕ್ಕು” ಹಂಸಲೇಖಾಗೆ ಫೋನಿಸಿದೆ ನಂತರ, “ಅಸುರ ರೀಮೇಕ್ ಚಿತ್ರಕ್ಕೆ ಒರಿಜಿನಲ್ ಮ್ಯೂಸಿಕ್ ಟ್ರಾಕ್ ಇರಲಿ ಅಂತ ಸಂದೇಶ್ ನಾಗರಾಜ್ ಅಂದಾಗ ಬಾಂಬ್ ಸ್ಫೋಟ ಅಂದ್ರೆ ಇದೇ ಅನ್ನಿಸ್ತು. ಆ ಸದ್ದಿಗೆ ಈಚೆ ಬಂದೋನು ನಾನು. ಈಗಲೂ ಯಾರಾದ್ರೂ ಅಪ್ಪಿ-ತಪ್ಪಿ ‘ಸುಗ್ಗಿ’ ಅಂದ್ರೆ ಸಾಕು ಬಾಂಬ್ ಸ್ಫೋಟವಾಯಿತು ಅನ್ನಿಸತ್ತೆ ನಂಗೆ” ಉಪೇಂದ್ರರನ್ನೆ ಮರೆತರೆ ಹ್ಯಾಗೆ. “ದನರಾಜ್ ಎನ್.ಎಸ್. ಶಂಕರ್‍ ಬೇಡ ಕಾವೇರಿಗೆ ಅಂದಾಗ ತಲೆಮೇಲೆ ಬಾಂಬ್ ಬಿದ್ದ ಹಾಗಾಯಿತು. ‘ಒಕೇಮಾಟ’ ತಲಗು ಚಿತ್ರ ಫ್ಲಾಪ್ ಆದಾಗ್ಲೂ ರಾತ್ರಿ ಕನಸಲ್ಲೆಲ್ಲಾ ಬಾಂಬ್ ಬ್ಲಾಸ್ಟ್ ಆದ ಹಾಗೆ ಆಗೋದು. ಇಂಥ ಬಾಂಬ್ ಸುದ್ದಿಗಳೇ ಬೇಡ ಅಂತ ಹಾಲಿವುಡ್‌ಗೆ ಹಾರ್‍ತಿರೋದು ನಾನು” – ಅಂತ ಹೇಳಿದ್ದು ಕೇಳಿ ಅದನ್ನೆಲ್ಲಾ ಸೇರಿಸಿ ಈ ಲೇಖನ ಮಾಡಿರುವೆ ಎಂದ ಮಿ.ವೆಂಕಣ್ಣ. +“ಸರಿ ಮಿ. ವೆಂಕಣ್ಣ ನಿಜ ಹೇಳಿ ಇವರಿಗೆಲ್ಲ ಫೋನ್ ಮಾಡಿದ್ರಾ ಅವರೆಲ್ಲ ಈ ರೀತಿ ನಿಜವಾಗಲೂ ಉತ್ರ ಕೊಟ್ರಾ” +“ಹೌದು! ಎಲ್ಲಾ ಇದೇ ಸಾಲುಗಳನ್ನೇ ಹೇಳಿದರು ನನ್ನ ಕನಸಲ್ಲಿ” ಎಂದ. +ಆಗ ನನ್ನೆದುರು ಬಾಂಬ್ ಸ್ಫೋಟವಾದಂತಾಯಿತು. +***** +(೨೫-೦೭-೨೦೦೦) +ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […] +ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […] +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_137.txt b/Kannada Sahitya/article_137.txt new file mode 100644 index 0000000000000000000000000000000000000000..d79d3956208672b659217f9d614ea894ea977b96 --- /dev/null +++ b/Kannada Sahitya/article_137.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ +ಅವನ ಮಾಹಿತಿ ಸಿಗುತ್ತದೆ: +ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು +ಪರಾರಿಯಾದದ್ದು +ಭಿಕಾರಿಯಾಗಿ ಅಲೆದದ್ದು, ನರಳಿದ್ದು +ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ ಆಗುತ್ತ +ಸಮಾಜಕ್ಕೆ ಮಾದರಿಯಾದ ಘನವಂತನಾದದ್ದು. +ಮತ್ತೇನು ಮಾಡಿದ ಹೇಳಬೇಕಾಗಿಲ್ಲ, +ಮಾದರಿಯಾದವನು ಮಾಡಬೇಕಾದ್ದನ್ನೆಲ್ಲ ಅವನು ಮಾಡಿದ +ನದಿದಂಡೆಯ ಮೇಲೆ ಗಾಳಹಾಕಿ ಕೂತು ಮೀನು ಹಿಡಿದ +ಅಕ್ಕಪಕ್ಕದವರಂತೆ +ರಜೆಯಲ್ಲಿ ಅಪಾಯ ಲೆಕ್ಕಿಸದೆ ವರ್ಷಕ್ಕೊಮ್ಮೆ ನರಿಗಳ ಬೇಟೆಯಾಡಿದ +ತಲೆ ಸುತ್ತಿದರೂ ಹೊಸ ಬೆಟ್ಟಗಳ ಶಿಖರ ಹತ್ತಿದ. +ಅವನೇ ಪತ್ತೆ ಮಾಡಿ ಹೆಸರು ಕೊಟ್ಟ ಸಮುದ್ರದ ತೀರದ ಜಲರಾಶಿಯೂ +ಒಂದು ಇದೆ. +ಆಮೇಲೆ ಇವನ ಬಗ್ಗೆ ನಡೆದ ಸಂಶೋಧನೆಯಲ್ಲಿ ಹೊಸ ದಾಖಲೆ ಸಿಕ್ಕಿದೆ +ಪ್ರಣಯದಲ್ಲಿ ಘಾತನಾಗಿ ಇವನು +ನಮ್ಮಂತೆ ನಿಮ್ಮಂತೆ +ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜ. +ಇನ್ನೂ ಮುಖ್ಯವಾಗಿ ಸಂಶೋಧನೆಯಲ್ಲಿ ತಿಳಿಯುವುದೆಂದರೆ, +ಸಂಶೋಧಕರಿಗೇ ಅಚ್ಚರಿಯಾಗುವಂತೆ +ನಿಟ್ಟುಸಿರಿಡುತ್ತ ಅವನು ಹಂಬಲಿಸಿದ್ದು ಮಾತ್ರ ಬೇರೊಬ್ಬನಂತಾಗಲು +ಒಂದು ಸರಳವಾದ ಮನೆ +ಇಲ್ಲಿ ತನ್ನ ಪಾಡಿಗೆ ತಾನಿರುವ ಬೇರೊಬ್ಬ +ನಿತ್ಯದ ನಿರ್ವಹಣೆಗೆ ಅಗತ್ಯವಾದ ಬಡಿಗೆ ಕೆಲಸ, ಕಿಟಕಿ ಬಾಗಿಲುಗಳಿಗೆ ಬಣ್ಣ ಹಚ್ಚುವ ಕೆಲಸ, ವಿದ್ಯುತ್‌ ಉಪಕರಣಗಳ ದುರಸ್ತಿ ಕೆಲಸ, ಅಡುಗೆಮನೆಯ ಚಾಕು ಚೂರಿಗಳನ್ನು ಹುಷಾರಾಗಿ ಉಜ್ಜಿ ಹರಿತ ಮಾಡುವ ಕೆಲಸ, ಸವೆದ ಪ್ಯಾಂಟುಗಳಿಗೆ ಸೂಜಿಯಲ್ಲಿ ನೀಟಾಗಿ ತೇಪೆ ಹಾಕುವ ಕೆಲಸ-ಇತ್ಯಾದಿಗಳನ್ನು ಖುಷಿಯಲ್ಲಿ ಸಿಳ್ಳೆ ಹಾಕುತ್ತ ನಾಜೂಕಾಗಿ ತಾನೆ ಮಾಡಿಕೊಳ್ಳುತ್ತಾನೆ. ಕೈದೋಟದಲ್ಲಿ ಕಳೆ ಕೀಳುತ್ತಲೋ, ಸಸಿ ನೆಡುತ್ತಲೋ, ಅದು ಇದು ಮಾಡುತ್ತ ಹೊತ್ತು ಕಳೆಯುತ್ತಾನೆ. ಏನೂ ಮಾಡದೆ ಸುಮ್ಮನೆಯೂ ಇರುತ್ತಾನೆ. +ತನಗೆ ಬಂದ ಉದ್ದುದ್ದನೆಯ ಮೆಚ್ಚುಗೆಯ ಪತ್ರಗಳನ್ನು ಓದಿ ಕೆಲವಕ್ಕೆ +ಉತ್ತರ ಬರೆಯುತ್ತಾನೆ. +ಆದರೆ ಇವನ್ನು ಜೋಪಾನ ಮಾಡಲು ಹೋಗುವುದಿಲ್ಲ. +***** +(ಡಬ್ಲ್ಯು.ಹೆಚ್. ಆಡೆನ್ ಪದ್ಯವೊಂದನ್ನು ಆಧರಿಸಿ, ಮೂಲ: Who’s Who) +ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನುಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆಕೂಡಿ ಇಮ್ಮೈಯಾಗಿ ಪಡೆಯರಂತೆ ಅಲೆಯ ಮೇಲಲೆಯ ಸುಖವಂತೆ ಪಡುವಾಗಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆಕಣ್ ಮುಚ್ಚರಂತೆ ನಮ್ಮಂತೆ […] +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_138.txt b/Kannada Sahitya/article_138.txt new file mode 100644 index 0000000000000000000000000000000000000000..f5c2b88eea40177c78b070325e36420112ed8326 --- /dev/null +++ b/Kannada Sahitya/article_138.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ +ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ +ಹಿಡಿದೆಳೆದು ಒಂಟೆಗಳ ಸಾಲಿಗೆ +ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” +ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ +ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ +ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ +ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ +ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ +ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ +ಒಲಿಸಿ, ಪರಿಪರಿಯಾಗಿ ಹಂಬಲಿಸಿ +ತನ್ನ ಸನ್ನಿಧಿಗೆ ಹಾಜರಾಗಿಸಿ +ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ +ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ +ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ +ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು +ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ +ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ! +ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು +ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು +ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ +ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ +ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ +ಅವನು ಉಪಮಾತೀತ, ಇಲ್ಲಿಗೆ ಸಾಕು. +ಪ್ರಳಯದ ಅಲೆಯು ಮೇಲೆ ನಾನು ಹೊರಟೆ +***** +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_139.txt b/Kannada Sahitya/article_139.txt new file mode 100644 index 0000000000000000000000000000000000000000..485fa6bbc7e64245eefb16cabcc655b1ee8aa05c --- /dev/null +++ b/Kannada Sahitya/article_139.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹುಬ್ಬಿನಂಚಿನಲಿ +ಹೊಕ್ಕಳಿನ ಸುರುಳಿಯಲಿ +ಚುಚ್ಚಿ ಕೆಣಕುವ ರಿಂಗು. +ವಿಷಕನ್ಯೆಯಂತೆ ತುಟಿ +ನೀಲಿ ರಂಗು. +ಬ್ರಹ್ಮಾಂಡ ಜಾರಿಸಲು +ಇನ್ನೇನು ಜಾರುವಂತಿದೆ, +ಹೆಜ್ಜೆ ಒಂದಿರಿಸಿದರೆ +ಪರ್ಸಂಟೇಜ್ ಸೀರೆ. +ಇಂಥವಳ ಅನಿರೀಕ್ಷಿತ +ಲೇಸರ್ ನೋಟಕ್ಕೆ +ತಿರುಗಿದ ಆಸೆಬುಗುರಿ +ಕಣಕಣದಲಿ ಸ್ಥಾಪಿಸಿತು +ಅಣುಸ್ಥಾವರ. +ಅಭಿಸಾರಕ್ಕೆ ಹಾತೊರೆದು +ಅವನಿಲ್ಲದ ಹೊತ್ತು ಅವಳ ಮನೆಯಲ್ಲಿ +ನಗ್ನ ಪರಿಪೂರ್ಣ +ಅನುಭೂತಿಗೋ +ಏಕೋ +ತಾಳಿ ತೆಗೆದಿಟ್ಟು +ನನ್ನೆದುರು +ಅವಳು ಬಯಸಿದ +ಹ್ಯಾಂಡಿಕ್ಯಾಮ್ ಹನಿಮೂನು +ದೇಶ-ವಿದೇಶದಲಿ ಅನಾವರಣ. +***** +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_14.txt b/Kannada Sahitya/article_14.txt new file mode 100644 index 0000000000000000000000000000000000000000..f5c55447c7aa8bdd16d2db2d837877f2c756ced9 --- /dev/null +++ b/Kannada Sahitya/article_14.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಸೂಯೆ +ಬಂದರೆ +ಆಕಳಿಗೆ +`ಹಸೂಯೆ’ +ಅಂದರೆ +ಏನು +ತೊಂದರೆ? +***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. ***** +ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_140.txt b/Kannada Sahitya/article_140.txt new file mode 100644 index 0000000000000000000000000000000000000000..5a8a0b0ad9c1cfae69fb355dd1abbe8629c03281 --- /dev/null +++ b/Kannada Sahitya/article_140.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. +ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ +ನಿಟ್ಟುಸಿರು ಬಿಟ್ಟಹಾಗೆ +ಮುಸುಮುಸು ಅಳುವ ಗಾಳಿ. +ಬಾಗಿಲಿಂದಾಚೆ ಅವನು ಹೋಗುತ್ತಾನೆ. +ಮತ್ತದೇರೀತಿ; +ಕತ್ತಲಾಗುತ್ತದೆ. +ಎಂದಿನಂತೆ ಅಂದೂ, +ಕೈತೋಟದ ಹೂಗಳರಳಿ, +ಏನೋ ಹೊಸದು ಆಗೇಬಿಡುವುದೋ +ಎಂಬಂತೆ ಕಾದು ಕೂರುತ್ತವೆ. +ಮತ್ತೆ ಮಧ್ಯಾಹ್ನಾ; +ಊಟ, ತಿಂಡಿ, ಚಹಾ…… +ನೆನ್ನೆಯ ಹಾಗೇ ಕಂಡರೂ +’ಇಂದು’ ನೆನ್ನೆಯಲ್ಲವೆಂಬಷ್ಟೇ ವ್ಯತ್ಯಾಸ. +ಸಂಜೆಯಾಗುತ್ತಲೇ, +ಸುಟ್ಟಬೊಬ್ಬೆಯ ಹಾಗೆ ಸೂರ್ಯ +ನಿಟ್ಟುಸಿರಿಟ್ಟ ಹಾಗೆ ಗಾಳಿ +ಅವನು ಮಲಗಿದ್ದಾನೆ ಮಂಚದ ಮೇಲೆ +ಮರದ ಬೊಂಬೆಯ ಹಾಗೆ. +ಬಾಗಿಲಿಂದಾಚೆ ಅವಳು ಹೋಗುತ್ತಾಳೆ +ಕತ್ತಲಾಗುತ್ತದೆ. +***** +ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […] +೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […] +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_141.txt b/Kannada Sahitya/article_141.txt new file mode 100644 index 0000000000000000000000000000000000000000..dfd4ca5e69a4424e8dc79feb43147cbf428ca72f --- /dev/null +++ b/Kannada Sahitya/article_141.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, ಪಾರ್ಟನರ್‌ನ ನಡತೆ ಶತ ಸುಳ್ಳು. ಅವನಿಗೆ ಖಂಡಿತ ಯಾವುದೋ ಒಂದು ಭರ್ಜರಿ ನೌಕರಿ ಸಿಕ್ಕಿದೆ. ಕೈತುಂಬ ಸಂಬಳ ಬಂದಿದೆ. ಆದರೆ ಆ ವೈಭವ, ಸಂತಸವನ್ನು ಈ ಜುಜುಬಿ ಹಂಗಾಮಿ ಕಾರ್ಮಿಕನಾದ ನನ್ನೆದುರು ಆತ ಆಡಿ ತೋರಿಸಲಾರ. ಅಂತೆಯೇ ಸುಳ್ಳುಸುಳ್ಳೇ ಜೋಲು ಮೋರೆ ಹಾಕಿಕೊಂಡು ಬರುತ್ತಾನೆ. ಮೆಲ್ಲಗೆ ನನ್ನ ಕಣ್ಣುಗಳಿಂದ ತಪ್ಪಿಸಿಕೊಂಡು ತನ್ನದೇ ಒಂದು ಹೊಸ ಅಂತಸ್ತಿಗೆ ತೀರ ಏಕಾಂಗಿಯಾಗಿ, ಸದ್ದಿಲ್ಲದೆ, ಕಿಂಚಿತ್ತೂ ಸುಳಿವು ಕೊಡದೆ ತೇರ್ಗಡೆ ಹೊಂದುತ್ತಿದ್ದಾನೆ. +ಹಠಾತ್ತನೆ ಹೊಳೆದುಹೋದ ಈ ಸಂಗತಿಯಿಂದ ರೂಪಕ್ ರಾಥೋಡ್ ಹಾಯುವ ವಾಹನಗಳಿಂದ ಸುತ್ತುವರೆದ ಆ ಡಿವೈಡರಿನ ಬಿಂದುವಿನಲ್ಲಿ ಇದ್ದಲ್ಲೆ ಉತ್ತೇಜಿತನಾದ. ಒಂದು ಬಗೆಯ ಅರೆಬರೆ ನಿರುದ್ಯೋಗ ಪರ್ವವನ್ನೆ ಕಳೆದ ಒಂದು ವರುಷದಿಂದ ಜತೆಯಾಗಿ ಅನುಭವಿಸಿ, ಹತ್ತು ಚದುರಡಿಯ ಬಾಡಿಗೆ ಕೋಣೆಯನ್ನು ಹಂಚಿಕೊಂಡು ಬಂದಿರುವ ರೂಂಮೇಟ್ ಅಥವಾ ಪಾರ್ಟನರ್, ರೂಪಕನಿಗಿಂತ ಐದಾರು ವರುಷ ದೊಡ್ಡವನೇ ಇದ್ದಾನು. ಆದರೆ ಕೀಚಲು ದನಿಯಿಂದಾಗಿ ಎಳೆಯನೆಂಬ ಭ್ರಾಂತು ಹುಟ್ಟಿಸುತ್ತಾನೆ. ತನ್ನ ಊರು, ಕಸುಬು ಯಾವುದರ ಬಗ್ಗೂ ಏನನ್ನೂ ಆಡದ ಆತ ರೂಪಕನನ್ನೂ ಆ ಕುರಿತು ಕೇಳಿಲ್ಲ. ಅರೆಬರೆ ನೌಕರಿ, ಒಪ್ಪತ್ತು ಊಟ, ಒಂದಿಷ್ಟು ಸ್ಪಷ್ಟ ಸುಂದರ ಹಸಿ ಸುಳ್ಳು ಮತ್ತು ಪಬ್ಲಿಕ್‌ಪಾರ್ಕಿನ ಗೋಡೆಯ ಮೇಲೆ ಉಳಿದಿರುವ ಹರಿದ ಪೋಸ್ಟರುಗಳಂಥ ಕಾಮನೆಗಳು… ಹೀಗೆ ಇಬ್ಬರ ದಿನಚರಿಗಳಲ್ಲಿ ಅಂಥ ವ್ಯತ್ಯಾಸ, ಗುಟ್ಟು, ನಿಗೂಢಗಳು ಇರಲಿಲ್ಲ. ಹಣದ ಕೊಡುಕೊಳದ ಪ್ರಶ್ನೆ ಇರಲಿಲ್ಲ. ಯಾಕೆಂದರೆ ಹಣವೇ ಇರುತ್ತಿರಲಿಲ್ಲ. ಹೀಗೆ ಮಾತಿನ ಭಾರವಿಲ್ಲದ ಹಗುರಾಗಿದ್ದ ಪಾರ್ಟನರ್ ಯಾಕೋ ಒಂದು ವಾರದಿಂದ ಬಿಗಿಯಾಗಿಬಿಟ್ಟಿದ್ದಾನೆ. ಸೂಟ್‌ಕೇಸಿಗೆ ಪುಟ್ಟ ಬೀಗ ಜಡಿದಿದ್ದಾನೆ. ಏನೋ ನೋವಿದ್ದವನಂತೆ ನಟಿಸುತ್ತಾನೆ. ಸಂಬಳ ಎಷ್ಟು ಅಂತ ತಪ್ಪಿಯೂ ಹೇಳಿಲ್ಲ. ಅಲ್ಲಿಗಲ್ಲಿಗೆ ಆಗುತ್ತದೆ ಅಂತಾನೆ. “ಊಟಕ್ಕೆ ನೀನು ಹೋಗಿ ಬಾ, ನನಗೀಗ ಹಸಿವಿಲ್ಲ”- ಎಂದು ತನ್ನನ್ನು ಮೊದಲು ಕಳಿಸಿ, ನಂತರ ತುಂಬ ತಡವಾಗಿ, ಅಂದರೆ ಚೌಪಾಟಿ ಸಮುದ್ರತೀರದ ಕಾಲ ಖಟ್ಟಾ ಶರಬತ್ತಿನ ತಳ್ಳುಗಾಡಿಗಳು ತಮ್ಮ ವ್ಯಾಪಾರ ಮುಗಿಸಿ ಮನೆಗೆ ಮರಳುವ ಅಪರಾತ್ರಿಗೆ- ಒಬ್ಬನೇ ಹೋಗಿ ಬೇಕಾದುದನ್ನೆಲ್ಲ ತಿಂದು ಪಾನ್ ಮೆಲ್ಲುತ್ತ ಬಂದು ಮಲಗುತ್ತಾನೆ. ಸ್ನಾನದ ಸಾಬೂನಿನಲ್ಲೆ ಗಡ್ಡ ಹೆರೆದುಕೊಳ್ಳುತ್ತಿದ್ದನಲ್ಲ, ಈಗ ಕ್ರೀಮ್ ಸಾಬೂನಿನ ಟ್ಯೂಬನ್ನು ತಂದಿದ್ದಾನೆ. ಗಡ್ಡ-ಸ್ನಾನ ಮುಗಿಸಿ ಪಚ ಪಚ ಅಂತ ಮುಖಕ್ಕೆ ನಾಜೂಕಾಗಿ ಎಸೆದುಕೊಳ್ಳುವ ಪರಿಮಳಭರಿತ ಲೋಶನ್ ತಂದಿದ್ದಾನೆ. ಬೇಕಿದ್ದರೆ ನೀನೂ ಹಚ್ಚಿಕೋ. ಬೇಕಿದ್ದರೆ ನೀನೂ ಬಳಸು. ಹೀಗೆ ಹೇಳುತ್ತಾನೆ ಹೊರತು- ತಗೋ ನೀನೂ ಹಚ್ಚು ಎಂದು ಹೇಳುವುದಿಲ್ಲ. +ಹೌದು ಪಾರ್ಟನರ್‌ನ ಜಗತ್ತು ಬದಲಾಗುತ್ತಿದೆ. ಹೊಸದೊಂದು ಉಪಗ್ರಹಕ್ಕೆ ಉಡ್ಡಾಣಗೈಯ್ಯಲು ಆಯಲ್ಪಟ್ಟವನಂತೆ ಅವನು ಕಂಗೆಟ್ಟಿದ್ದಾನೆ. ಅವನ ಮಾತುಗಳು ಹೊಸ ವೇಷಗಳಿಗಾಗಿ ತಡಕಾಡುತ್ತಿವೆ. ತನ್ನೊಡನೆ ಮೊದಲಿನಂತೆ “ತೇರೆಕು, ಮೇರೆಕು, ಅಬೇ ಸೋಜಾ, ತೇರಿ ಮಾಕಿ…” ಎಂದೆಲ್ಲ ಮಾತಾಡಿದರೆ ಹೊಸ ಭೂಮಿಕೆ ಹಾಳಾಗಿ ಹೋಗುತ್ತದೆ ಎಂಬ ಭಯ ಆತನಿಗೆ. ರೂಪಕನಿಗೆ ಏಕ್‌ದಂ ಪಾರ್ಟನರ್‌ನ ಸಂಕಟ ಅರ್ಥವಾಗತೊಡಗಿತು. ಈಗಷ್ಟೆ ಅರ್ಧಗಂಟೆಯ ಮುನ್ನ ನಡೆದಿದ್ದ ಸನ್ನಿವೇಶ ಈಗ ಬೇರೆಯದೇ ಆಗಿ ತೋರತೊಡಗಿತು. +ಸಾಮಾನ್ಯವಾಗಿ ಒಂದು ಶರ್ಟನ್ನು ಮೂರ್ನಾಲ್ಕು ದಿನ, ಪ್ಯಾಂಟನ್ನು ಒಂದು ವಾರ- ಹೀಗೆ ಹಾಕಿಕೊಳ್ಳುತ್ತಿದ್ದ ಆತ ಈವತ್ತು ಸ್ನಾನ ಮುಗಿಸಿ ಬಂದವನೇ, ನಿನ್ನೆ ಹಾಕಿದ್ದ ಶರ್ಟು ಪ್ಯಾಂಟುಗಳನ್ನು ಮೂಲೆಗೆಸೆದು- ಟೈಮ್ಸ್ ಆಫ್ ಇಂಡಿಯಾದ ಹಾಳೆಯಲ್ಲಿ ನೂಲು ಹಾಕಿ ಕಟ್ಟಿಟ್ಟಿದ್ದ ಇಸ್ತ್ರಿಯ ಹೊಸ ಬಟ್ಟೆ ತೆಗೆದು ಹಾಕಿಕೊಂಡ. ರೂಪಕ ‘ಏನಪ್ಪಾ ಏನ್ ಕಥೆ’ ಎಂಬಂತೆ ನೋಡಿದಾಗ, ಹೊಸ ಆವೇಶ ಬಂದವನಂತೆ “ಅರೆ, ಇಲ್ಲೇ ಇಟ್ಟಿದ್ದೆ, ವಾಚು ಎಲ್ಲಿ ಹೋಯಿತು?” ಎಂದು ದೊಡ್ಡದಾಗಿ ಹುಡುಕಲಾರಂಭಿಸಿದ. ಆತ ತನ್ನ ಮೇಲೆ ಬಿಲ್‌ಕುಲ್ ಅನುಮಾನ ಪಡುತ್ತಿಲ್ಲ ಎಂಬುದು ಖಚಿತವಿದ್ದರೂ- ಅವನು ಹೀಗೆ ಹುಯಿಲೆಬ್ಬಿಸಿ ಹುಡುಕುವ ರೀತಿಯಿಂದ ವಿಚಿತ್ರ ಸಂಕಟಪಟ್ಟ ರೂಪಕ ತಾನೂ ಅಲ್ಲಿ ಇಲ್ಲಿ ಹುಡುಕಹತ್ತಿದಾಗ “ನೀನ್ಯಾಕೆ ಹುಡುಕ್ತಾ ಇದ್ದೀ? ಇಟ್ಟಿದ್ದು ನಾನು, ಡ್ಯೂಟಿ ಮುಗಿಸಿ ಬಂದಿದ್ದಿ. ನಿನಗೆ ತೊಂದ್ರೆ ಆಗ್ತಾ ಇದೆ ಅಂತ ಗೊತ್ತು. ಮಲಗು. ಮಲಗು. ವಾಚು. ಹೊಸ ವಾಚು. ಛೆ”- ಎಂದು ಮಂಚದ ಕೆಳಗೂ ಕೂತು, ಅಲ್ಲಿದ್ದ ರದ್ದಿಯನ್ನೆಲ್ಲ ಎಳೆದು ಜಾಲಾಡತೊಡಗಿದ. ಅತ್ತ ಸಲಿಗೆಯೂ ಇರುಸುಮುರುಸಿನಲ್ಲಿ ಕಂಗೆಟ್ಟ ರೂಪಕ ಸೂಕ್ಷ್ಮ ಅವಮಾನವನ್ನು ತಾಳಲಾರದೆ “ಹೊಸಾ ವಾಚಾಗಿದ್ರೆ ಯಾಕೆ ಅಲ್ಲಿ ಇಲ್ಲಿ ಇಡ್ತೀ? ನಿನ್ನ ವಿ‌ಐಪಿ ಸೂಟ್‌ಕೇಸಿನಲ್ಲಿ ಇಡಬೇಕಿತ್ತು”- ಎಂದು ಗೊಣಗಿದ. ಅದಕ್ಕೆ ಪಾರ್ಟನರ್ ಎರಡೂ ಕೈ ಮೇಲೆತ್ತಿ ರಪ್ಪೆಂದು ಮುಗಿದು “ಅಬ್ಬ! ಸೊರೀ…” ಎಂದು ಬೂಟು ಹಾಕಿಕೊಂಡು, ಬಾಗಿಲೆಳೆದುಕೊಂಡೂ ಹೋಗೇಬಿಟ್ಟ. +ಕೋಣೆಯಲ್ಲಿ ಕವಿದ ಮೂರ್ಖ ನಿಶ್ಶಬ್ದವನ್ನು ತಡೆಯಲಾಗದೆ, ಕೆಲ ಸಮಯದ ನಂತರ ಹೊರಬಿದ್ದು ಬಂದ ರೂಪಕನಿಗೆ ಹಾಯುವ ವಾಹನಗಳೆದುರು ಈ ಡಿಪ್ರೆಸರಿನಲ್ಲಿ ನಿಂತು ನೆನೆಸಿಕೊಂಡಾಗ ಪಾರ್ಟನರ್‌ನ ಎಲ್ಲ ಚಹರೆಗಳೂ ಹಾಸ್ಯಾಸ್ಪದವೂ ದಯನೀಯವೂ ಆಗಿ ತೋರತೊಡಗಿದವು. ಮೊನ್ನೆಯೇ ಹೊಸ ಹ್ಯಾಂಗರುಗಳನ್ನು ಪಾರ್ಟನರ್ ತಂದಿದ್ದ. ಕೋಣೆ ತುಂಬ ಅವ ಸುಳಿದಾಡಿದಲ್ಲೆಲ್ಲ ಒಂದು ಪರಿಮಳ ನಿಲ್ಲುತ್ತಿತ್ತು. ಮತ್ತು ಯಸ್, ಬೆಳ್ಳನೆ ಹೊಸ ಹವಾಯಿ ಚಪ್ಪಲ್. ರೂಪಕನ ಬಳಿ ಇಲ್ಲದ ಯಾವ ಹೊಸ ವಸ್ತುವನ್ನು ತರಲೂ ಪಾರ್ಟನರ್‌ಗೆ ವಿಚಿತ್ರ ಅಳುಕು. ಹೀಗಾಗಿ ಆ ಅಳುಕನ್ನು ಮೆಟ್ಟಿ ನಿಲ್ಲುವಂಥ ಮುಳ್ಳು ಠೇಂಕಾರ ಆ ಹವಾಯಿ ಚಪ್ಪಲಂತೂ ಈ ಪುಟ್ಟ ಕೋಣೆಯಲ್ಲಿ ಹಲ್‌ಚಲ್ ಎಬ್ಬಿಸಿಬಿಟ್ಟಿತು. ಕೋಣೆ ತುಂಬ ಅದನ್ನು ಹಾಕಿ ತಿರುಗುವ ಪಾರ್ಟನರ್, ಮೂಲೆಯ ಮೋರಿಯಲ್ಲಿ ಕೈಕಾಲು ತೊಳೆಯುವಾಗ ಅಥವ ನಡುನಿದ್ರೆಯಲ್ಲಿ ಮೂತ್ರ ಹೊಯ್ಯುವಾಗ ಅದನ್ನು ಹಾಕುತ್ತಾನೆ. ಒದ್ದೆಯಾದಾಗ ಅದು ಹೆಚ್ಚು ದಪ್ಪನೆಯ ಟಪ್ ಟಪ್ ಸದ್ದನ್ನು ಹೊರಡಿಸುತ್ತದೆ. ಹೀಗೆ ಇದ್ದ ಪುಟ್ಟ ಕೋಣೆಯಲ್ಲೂ, ತನ್ನ ಜಗತ್ತನ್ನು ಕಿರಿದುಗೊಳಿಸಲು ಪಾರ್ಟನರ್ ನಡೆಸುತ್ತಿರುವ ಘೋರ ಪ್ರಯತ್ನ ಮತ್ತು ಪಡುತ್ತಿರುವ ಸಂಕಟ ಎರಡೂ ಅಸಂಗತವಾಗಿ ರೂಪಕನಿಗೆ ತೋರತೊಡಗಿದವು. ನಿಷ್ಕಾರಣವಾಗಿ ಆತ ಪಡುತ್ತಿರುವ ಒತ್ತಡಕ್ಕೆ ಅಯ್ಯೋ ಅನಿಸಿತು. ಜಾಸ್ತಿ ಕಸಕಸಿ ಮಾಡಿಕೊಳ್ಳದೇ, ಎಣಿಸಿದ್ದಕ್ಕಿಂತ ಸುಲಭವಾಗಿ ಪಾರ್ಟನರ್‌ಗೆ ಸ್ವಾತಂತ್ರ್ಯ ಕೊಟ್ಟು, ಅವನ ಆ ಕೋಣೆಯಿಂದ ಹೊರಬಿದ್ದು ಹೋಗುವುದೇ ವಿಹಿತ ಅಂದುಕೊಂಡ. ಈವತ್ತೇ ಸಂಜೆ, ಆತ ಕೆಲಸದಿಂದ ಮರಳಿದ್ದೇ, ಅವನೆದುರು ಸಹಜವಾಗಿ, ರೂಮು ಬಿಡುತ್ತೇನೆಂದು ಹೇಳಿಬಿಡುವುದು ಎಂದು ನಿರ್ಧರಿಸಿಬಿಟ್ಟ. +ಡಿವೈಡರಿನಿಂದ ಇಳಿದು ರಸ್ತೆ ದಾಟಿದ ರೂಪಕ ಎಂದಿನ ಗುಡ್‌ಲಕ್ ಕಿರಾಣಿ ಅಂಗಡಿಯಲ್ಲಿ ಕೂತು ಮಸ್ಕಾಪಾವ್ ಮತ್ತು ಎರಡು ಕಪ್ ಚಹಾ ಕುಡಿದು ಬೆಕಲ್‌ವಾಡಿಯ ಕೋಣೆಯತ್ತ ಹೊರಟ. ದಾರಿಯಲ್ಲಿ ಕೆನಡೀ ಬ್ರಿಜ್ಜಿನಲ್ಲಿ ಎರಡು ಕ್ಷಣ ನಿಂತು ಕೆಳಗೆ ಹಾಯುವ ಪೀಕ್ ಅವರ್ ಲೋಕಲ್‌ಗಳನ್ನು ಮತ್ತು ಪಕ್ಕದ ಕಟ್ಟಡದಲ್ಲಿನ ಮೊದಲ ಮಜಲಿನ ಪೀಕ್ ಅವರ್ ಅಲ್ಲದ ನಾಚ್‌ವಾಲೀಗಳ ಕೋಣೆಗಳನ್ನು ನೋಡಿದ. ವಿಶಿಷ್ಟ ತಿಳಿಗುಲಾಬಿ ಬಣ್ಣದ ಪರದೆಗಳು, ಪುಟ್ಟ ಪುಟ್ಟ ರೇಶಿಮೆ ಹೊದಿಕೆಯ ಗೋಲ ದಿಂಬುಗಳು, ಕಸೂತಿಯ ಬಟ್ಟೆ ಹೊದಿಸಿಟ್ಟ ತಬಲಾ, ಹಸ್ತಿದಂತದ ಕುಸುರಿ ಕೆತ್ತನೆಯ ಸಾರಂಗಿ… ಎಲ್ಲವೂ ಈಗ ಹಾಡುಹಗಲಲ್ಲಿ ಹಾಳು ಸುರಿಯುತ್ತಿವೆ. ಯಾರೋ ಕಸ ಹೊಡೆಯುತ್ತಿರಬೇಕು ಅಲ್ಲಿ, ಏಕೆಂದರೆ ಬಿಸಿಲ ಕೋಲುಗಳು ಪ್ರಖರಗೊಳ್ಳುತ್ತಿವೆ. ಕೆಳಗೆ ಬೀದಿಯಲ್ಲಿ ಕೆಲ ಹೆಂಗಸರು ಆಮ್ಲೆಟ್ ಗಾಡಿಯವನ ಚೌಕಾಶಿ ಮಾಡುತ್ತಿದ್ದಾರೆ. ಇಬ್ಬರು ಪರಸ್ಪರ ಹೇನು ಹೆಕ್ಕುತ್ತ ಮೆಟ್ಟಿಲಲ್ಲಿ ಕುಳಿತಿದ್ದಾರೆ. ಇವರೇ ರಾತ್ರಿ ಅಲ್ಲಿ ತುಟಿಗೆ ಗುಲಾಬಿ ಮೆತ್ತಿಕೊಂಡು ಕುಣಿಯುತ್ತಾರೆ. ಪಾರ್ಟನರ್ ಮತ್ತು ರೂಪಕ ಎಷ್ಟೋ ಬಾರಿ ರಾತ್ರಿ ಇಲ್ಲಿ ಅಡ್ಡಾಡಲು ಬಂದು ಈ ಬ್ರಿಜ್ಜಿನ ಮೇಲೆ, ಆ ಗುಲಾಬಿ ಪರದೆಗಳು ಮುಚ್ಚಿದ ಕಿಟಕಿಗಳನ್ನೇ ನೋಡುತ್ತ ನಿಂತಿದ್ದಿದೆ. ಪಾಕೀಜಾ, ಮುಕದ್ದರ್ ಕಾ ಸಿಕಂದರ್, ಉಮ್ರಾವ್ ಜಾನ್‌ಗಳ ಹಾಡುಗಳ ತುಣುಕುಗಳು ಅಲ್ಲಿಂದ ಕೇಳಿ ಬರುತ್ತಿರುವಾಗ ಪಾರ್ಟನರ್… “ಅಲ್ಲಿ ಹೋಗೋದಕ್ಕೆ ಕಿಸೇಲಿ ಮಾಲ್ ಬೇಕು ರೂಪಕಾ… ಈಗ ಇಲ್ಲಿಂದಲೇ ಕೇಳೋಣ”- ಅಂತಿದ್ದ. ನಂತರ ಅವನಿಗಷ್ಟೆ ಏನೋ ಕಾಣುತ್ತಿದೆ ಎಂಬಂತೆ ಜತೆಗಿದ್ದ ತನ್ನನ್ನೂ ಮರೆತವನಂತೆ ಪೂರ್ಣ ತಲ್ಲೀನನಾಗಿ ಆ ಪರದೆ ಮುಚ್ಚಿದ ಗುಲಾಬಿ ಕಿಟಕಿಗಳನ್ನೇ ನೋಡುತ್ತಿದ್ದ. ಇವರು ನಿಂತಿದ್ದು ನೋಡಿದ ಕೆಲವರು ತಾವೂ ನಿಂತು ನೋಡುತ್ತಿದ್ದರು. ಏನೂ ಕಾಣುತ್ತಿರಲಿಲ್ಲ. ಆದರೆ ಎಲ್ಲರೂ ಏನೇನನ್ನೋ ಊಹಿಸಿಕೊಂಡು ನೋಡುತ್ತಿದ್ದರು. ಹಾಡುಗಳ ಚೂರು ಪಾರು ಸೊಲ್ಲಿಗೆ ಕಿವಿ ನಿಮಿರಿಸಿ ಕಣ್ಣು ನೆಟ್ಟು ಹಾಗೇ ಮತಿಭ್ರಷ್ಟರಂತೆ ನಿಲ್ಲುತ್ತಿದ್ದರು. ಈಗ ಎಲ್ಲ ಬೇರೆ ತೋರುತ್ತಿದೆ. ಆದರೆ ಜನ ಬೇರೆಯದೇ ಜಾಗದಲ್ಲಿರುವಂತೆ ಅಂಥದೇನೂ ಖಚಿತ ರೂಪವಿಲ್ಲದ ತಮ್ಮಿಬ್ಬರ ನಂಟಿನಂತೆ. +ಮರಳುತ್ತಿದ್ದಂತೆ ಕೋಣೆಯ ಬಾಗಿಲು ತೆಗೆದೇ ಇದ್ದುದು ಕಂಡು ಬೆಚ್ಚಿಬಿದ್ದ. ಓಡುತ್ತ ಒಳಹೊಕ್ಕರೆ ಅಲ್ಲಿ ಹಾಕಿಕೊಂಡಿದ್ದ ಇಸ್ತ್ರಿ ಉಡುಪಿನಲ್ಲೆ ಪಾರ್ಟನರ್ ಹಾಸಿಗೆಯ ಹೊಟ್ಟೆ ಅವಚಿಕೊಂಡು ಬಿದ್ದಿದ್ದಾನೆ. “ಅರೇ… ಏನಾಯ್ತು?” ಎಂದು ಗಾಬರಿಯಿಂದ ಸಮೀಪಿಸಿದ ರೂಪಕನನ್ನು ನೋಡಿ “ಬೇಡಾ, ಮುಟ್ಟಬೇಡಾ. ಹೊಟ್ಟೆ ಭಯಂಕರ ನೋಯ್ತಾ ಇದೆ” ಎಂದು ಕೂಗತೊಡಗಿದ. ಅವನ ಮುಖ ಬಿಳಿಚಿಕೊಂಡಿತ್ತು. ಧಾರಾಕಾರ ಬೆವರುತ್ತಿದ್ದ. ಅಕ್ಕಪಕ್ಕದವರು ಇಬ್ಬರು ಬಂದು ತಕ್ಷಣ “ಡಾಕ್ಟರ್ ಬಳಿ ಒಯ್ಯಿರಿ ಎಂದು ಅವಸರ ಮಾಡಿದ್ದೇ ಒಂದು ಟ್ಯಾಕ್ಸಿ ತಂದು ಅದರಲ್ಲಿ ಕೂರಿಸಿ ಭಾಟಿಯಾ ಆಸ್ಪತ್ರೆಗೆ ಒಯ್ದು ಓ.ಪಿ.ಡಿ.ಯಲ್ಲಿ ಚೀಟಿ ಮಾಡಿಸಿ ತರುವಷ್ಟರಲ್ಲಿ ಬೆಂಚಿನಲ್ಲಿ ಕೂತಲ್ಲೇ ಪಾರ್ಟನರ್ ಗಳಗಳ ಅಳಲಾರಂಭಿಸಿದ. “ಏಯ್, ಹೆದ್ರಬೇಡಾ. ಏನೂ ಆಗೋದಿಲ್ಲ” ಎಂದು ರೂಪಕ ಸಂತೈಸಿದ್ದೇ ಕೈ ಹಿಡಿದುಕೊಂಡು, ತನ್ನ ಕಿಸೆಯಿಂದ ಒಂದಿಷ್ಟು ಹಣ ತೆಗೆದು ಕೊಟ್ಟ. “ಇರಲಿ ಬಿಡೋ ಮಾರಾಯ. ಅದೆಲ್ಲ ನಂತರ ನೋಡಿದರಾಯ್ತು…” ಎಂದು ಬಾಯಲ್ಲಿ ಹೇಳುತ್ತಿದ್ದರೂ, ಖರ್ಚು ಎಷ್ಟು ಆದೀತೋ ಎಂಬ ಅಂದಾಜಿರದ ಭಯದಲ್ಲಿ ರೂಪಕ ಹಣವನ್ನು ತಕ್ಷಣ ತನ್ನ ಕೈಲಿ ಭದ್ರವಾಗಿ ತೆಗೆದುಕೊಂಡು ಅದರ ಕಡೆ ನೋಡುವ ಧೈರ್ಯವಾಗದೆ ಖಾಲಿ ಕಿಸೆಯಲ್ಲಿಟ್ಟ. ಗಾಲಿ ಖುರ್ಚಿಯಲ್ಲಿ ಕೂತು ಮುಂದೆ ಮುಂದೆ ಸಾಗಿದ ಪಾರ್ಟನರ್‌ನನ್ನು ಹಿಂಬಾಲಿಸಬೇಕೋ ಬೇಡವೋ ತಿಳಿಯದೆ ನಿಂತುಬಿಟ್ಟ. ತಳ್ಳುತ್ತಿದ್ದ ನರ್ಸ್ ಹಿಂತಿರುಗಿ ‘ಬನ್ನಿ’ ಎಂಬಂತೆ ಸನ್ನೆ ಮಾಡಿದಳು. +“ತೀವ್ರವಾದ ಅಪೆಂಡಿಸೈಟಿಸ್ ಆಗಿದೆ. ತಕ್ಷಣ ಆಪರೇಷನ್ ಆಗಬೇಕು” ಎಂದ ಡಾಕ್ಟರು ಯಾವುದೊ ಫಾರ್ಮಿಗೆ ಸಹಿ ಹಾಕಲು ಹೇಳಿದಾಗ ಬೆಚ್ಚಿದ. ‘ಬೇಗ ಬೇಗ’ ಎಂದು ಅವಸರಿಸಿದ ಡಾಕ್ಟರು ರೂಪಕ್ ರಾಥೋಡ್- ಎಂಬ ಹೆಸರು ನೋಡಿ ‘ನೈಸ್ ನೇಮ್’ ಎಂದರು. ಗಾಲಿ ಮಂಚದಲ್ಲಿ ಮಲಗಿದ್ದ ಪಾರ್ಟನರ್ ರೂಪಕನನ್ನೇ ನೋಡುತ್ತಿದ್ದ. ನರ್ಸು ಒಂದು ಕಾಗದ ಕೊಟ್ಟು “ಇವಿಷ್ಟು ಮೆಡಿಸನ್ ತನ್ನಿ” ಎಂದಳು. ಮೆಡಿಸಿನ್ ತಗೊಂಡು ಬಂದಾಗ ಗಾಲಿ ಮಂಚ ಆಪರೇಷನ್ ಥೇಟರಿನ ಬಾಗಿಲಲ್ಲಿ ಇತ್ತು. ಚಡ್ಡಿ, ಬನಿಯನ್ನು ಎಲ್ಲವನ್ನು ಇವನ ಕೈಗೆ ಕೊಟ್ಟಳು. ಶರ್ಟಿನಲ್ಲಿದ್ದ ಕೆಲವು ಕಾಗದದ ಚೂರುಗಳು ಕೆಳಬಿದ್ದವು. ಅದನ್ನು ಹೆಕ್ಕಿಕೊಳ್ಳುವಷ್ಟರಲ್ಲಿ ಮಲಗಿದ್ದರಿಂದಲೇ ಮಂಪರುಗಣ್ಣಲ್ಲಿ ನೋಡುತ್ತಿದ್ದ ಪಾರ್ಟನರ್ “ಇಲ್ನೋಡು… ಬೋರಿವಲಿಯಲ್ಲಿ ನನ್ನ ದೂರದ ಸಂಬಂಧಿ ಇದ್ದಾರೆ. ಸ್ಟೇಷನ್ ಹೊರಗೆ ಅವರ ಝೆರಾಕ್ಸ್ ಅಂಗಡಿಯಿದೆಯಂತೆ. ನಾನೂ ನೋಡಿಲ್ಲ ಅವರನ್ನು. ನನ್ನ ತಾಯಿ ಕಡೆ ಸಂಬಂಧ. ಬಕ್ಕ ತಲೆ…” ಎಂದ. ಅವನ ಕೀಚಲು ದನಿ ಈಗ ಇನ್ನೂ ಬೆಳ್ಳಗಾಗಿತ್ತು. “ರೂಪಕ, ಆಪರೇಷನ್ ಆದ ಮೇಲೆ ಕರೆಯೋಣ ಅವರನ್ನು…” ಎಂದದ್ದೇ “ಅಲ್ಲ… ಅಲ್ಲ… ಕರೆಯೋದು ಬೇಡ. ಅವರಿಗೆ ನಾನ್ಯಾರು ಅಂತ ಗೊತ್ತಿಲ್ಲ. ನೀನು ಕರದ್ರೂ ಬರೋದಿಲ್ಲ ಅವರು. ಅದಲ್ಲ. ಆಪರೇಷನ್‌ನಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ… ಉಳಿದ ಹಣ. ನನ್ನ ಸಾಮಾನು ಎಲ್ಲ ಅವರಿಗೆ ತಲುಪಿಸಿಬಿಡು” ಎಂದ. ಬಾಗಿಲಲ್ಲಿ ನಿಲ್ಲಿಸಿದ ಹಸಿರು ನಿಲುವಂಗಿಯ ಡಾಕ್ಟರು ಕತ್ತಿನಲ್ಲಿದ್ದ ಚಿನ್ನದ ಚೈನು ತೆಗೆಯಲು ಹೇಳಿದರು. ನರ್ಸು ತೆಗೆಯುವಾಗ ಅದು ಅವನ ತಲೆಯಲ್ಲಿ ಸಿಕ್ಕಿಹಾಕಿಕೊಂಡಿತು. ನರ್ಸು ಮತ್ತು ಡಾಕ್ಟರು ಇಬ್ಬರೂ ಪ್ರಯಾಸಪಟ್ಟು ಅದರ ಕೊಂಡಿ ತೆಗೆದು ಚೈನನ್ನು ರೂಪಕನ ಕೈಗೆ ಕೊಟ್ಟರು. ಹಸಿರು ನಿಲುವಂಗಿಯ ಗಾಲಿ ಮಂಚ ಒಳಗೆ ಹೋಯಿತು. +ಆಪರೇಷನ್ ಮುಗಿಯುವ ತನಕ ಹೊರಗೇ ಇರಬೇಕು ಎಂದು ಹೇಳಿದ್ದರಿಂದ ಅಲ್ಲಿಯೇ ಬೆಂಚಿನ ಮೇಲೆ ಕುಳಿತ. ಪಕ್ಕದಲ್ಲಿ ಕೂತ ಹೆಂಗಸೊಬ್ಬಳು ‘ಸೀರೆ ಬಂಪರ್ ರಿಡಕ್ಷನ್ ಸೇಲ್’ನ ಹ್ಯಾಂಡ್‌ಬಿಲ್ಲನ್ನು ತದೇಕಚಿತ್ತಳಾಗಿ ನೋಡುತ್ತ ಕೂತಿದ್ದಳು. ಚೈನು ತಲೆಯಲ್ಲಿ ಸಿಕ್ಕುಬಿದ್ದಾಗ ವಿಚಿತ್ರವಾಗಿ ತಲೆ ಅಲ್ಲಾಡಿಸಿ ಮಂಪರಿನಲ್ಲಿ ನರಳಿದ ಪಾರ್ಟನರ್‌ನ ಮುಖವೇ ರೂಪಕನ ಕಣ್ಣಿಗೆ ಕವಿಯತೊಡಗಿತು. ಕಿಸೆಯಲ್ಲಿದ್ದ ಚೈನು ತೆಗೆದು ಅಂಗೈಲಿಟ್ಟು ನೋಡಿದ. ಅದು ತುಂಬ ಪುಟ್ಟದಾಗಿ ಪಾಪದ್ದಾಗಿ ತೋರಿತು. ಹೆಂಗಸು “ನನ್ನ ಅಕ್ಕನಿಗೂ ಆಪರೇಷನ್. ಬೆಳಿಗ್ಗೆನೇ ಒಯ್ದಿದ್ದಾರೆ. ಅವಳ ಕೈಬಳೆ ತೆಗೆಯೋಕೇ ಆಗಲಿಲ್ಲ. ನಂತರ ಕಟ್ ಮಾಡಿ ತೆಗೆದರು”– ಎಂದಳು. ಪಾರ್ಟನರ್ ಆಪರೇಷನ್‌ನಲ್ಲಿ ನಿಜವಾಗಲೂ ಸತ್ತುಹೋದರೆ? ಏನಿಲ್ಲ. ನಾನೇನೂ ಅವನ ಸಂಬಂಧಿಯಲ್ಲ. ಕೇವಲ ರೂಂಮೇಟು. ನನಗೆ ಏನೂ ಗೊತ್ತಿಲ್ಲ. ಹೊಟ್ಟೆನೋವು ಅಂದ. ತಂದು ಹಾಕಿದೆ ಅಷ್ಟೆ ಎಂದು ಹೇಳಿ ಹೋಗಿಬಿಡುವುದು. ಆದರೆ ಅದು ಸುಲಭವೆ? ಅಥವಾ ಬೋರಿವಲಿಯಲ್ಲಿ ಆ ಹೆಸರಿಲ್ಲದ ಬಕ್ಕತಲೆಯ ರಕ್ತಸಂಬಂಧಿಯನ್ನು ಹುಡುಕುವುದೇ. ಹೆಂಗಸು, “ನಿಮ್ಮನ್ನು ಕರೀತಿದ್ದಾರೆ” ಎಂದಳು. ನರ್ಸು ಗೇಟಿನಾಚೆಯಿಂದ ಕರೆಯುತ್ತಿದ್ದಳು. +ಮೆಲ್ಲಗೆದ್ದು ರೂಪಕ ಹೋದಾಗ ಅವನನ್ನು ಪರದೆಯ ಮರೆಗೆ ಕರೆದರು. “ನೀವು ಪಾರ್ಟಿ ಅಲ್ಲವೆ?” ಅಂದರು. ನಂತರ ಮುಖದ ಹಸಿರು ಪಟ್ಟಿಯನ್ನು ತೆಗೆದಿದ್ದ ಡಾಕ್ಟರೊಬ್ಬರು ಸಣ್ಣ ಬೆಳ್ಳನೆ ಅಲ್ಯೂಮಿನಿಯಂ ತಟ್ಟೆಯಲ್ಲಿ ಹತ್ತಿಯಲ್ಲಿಟ್ಟಿದ್ದ ರಕ್ತಸಿಕ್ತ ಬೆರಳಿನಂಥದ್ದನ್ನು ತೋರಿಸಿದರು. “ನೋಡಿ, ಇದೇ ಅಪೆಂಡಿಕ್ಸ್, ಸೆಪ್ಟಿಕ್ ಆಗಿತ್ತು” ಎಂದರು. ಮಂಕಾಗಿ ಪಿಳಿ ಪಿಳಿ ನೋಡುತ್ತಿದ್ದ ರೂಪಕನನ್ನು ಎಚ್ಚರಿಸುವಂತೆ “ನೋಡಿದಿರಲ್ಲಾ?” ಎಂದು ಕೇಳಿದರು. ಅವನು ಹೌದು ಅನ್ನುವಂತೆ ತಲೆ ಅಲ್ಲಾಡಿಸಿದ. ತಟ್ಟಂತ ಅವರೆಲ್ಲ ಮತ್ತೆ ಒಳಗೆ ಹೊರಟುಹೋದರು. ನರ್ಸ್ ಮತ್ತೆ ಬಂದು “ಪೋಸ್ಟ್ ಆಪರೇಟಿವ್ ವಾರ್ಡ್‌ನಲ್ಲಿ ಒಂದು ದಿನ ಇಡ್ತಾರೆ. ನಾಳೆಯಿಂದ ಹಣ್ಣಿನ ರಸ ಕೊಡಬಹುದು” ಎಂದು ಮತ್ತಷ್ಟು ಮದ್ದುಗಳನ್ನು ಚೀಟಿಯಲ್ಲಿ ಬರೆದುಕೊಟ್ಟಳು. +ಹೊರಬಂದ ರೂಪಕನಿಗೆ ರಸ್ತೆಯಲ್ಲಿ ಓಡಾಡುತ್ತಿರುವ ಜಗತ್ತು ತನಗೆ ಸಂಬಂಧಪಡದಂತೆ ಕಂಡಿತು. ಸಲೂನ್‌ನಲ್ಲಿ ಹೇರ್‌ಕಟ್ ಆದ ಮೇಲೆ ಹಿಂದೊಂದು ದಿನ ಕನ್ನಡಿಯನ್ನು ಹಿಡಿದು ತೋರಿಸುವಂತೆ ಅವರು ಪಾರ್ಟನರ್‌ನ ಕರುಳಿನ ಆ ಪುಟ್ಟ ಬೆರಳನ್ನು ಬೆಳಕಿಗೆ ಹಿಡಿದು ತೋರಿಸಿದ್ದು, ಮತ್ತೆ ಅದಕ್ಕೆ ತಾನು ತಲೆದೂಗಿ “ಪುರಾವೆ ನೋಡಿದೆ” ಎಂಬಂತೆ ಒಪ್ಪಿಗೆ ಕೊಟ್ಟಿದ್ದು ಬೆಳ್ಳನೆ ಪರದೆಯ ಮೇಲೆ ನೋಡಿದ ಚಿತ್ರದಂತೆ ಮತ್ತೆ ಮತ್ತೆ ಕಂಡಿತು. ಅಮ್ಮ ಅಪ್ಪ ಯಾರೋ, ಎಲ್ಲಿದ್ದಾರೋ, ಅವನ ಕುರಿತು ಏನೇನೋ ಗೊತ್ತಿರದ ತಾನು ಅವನ ಒಳಗಿನ ಕರುಳ ತುಣುಕೊಂದನ್ನು ನೋಡಿದ ಕ್ಷಣ ನೆನೆದು ಮೈಜುಮ್ಮೆಂದಿತು. ಕೈಲಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದು ಶರ್ಟು ಪ್ಯಾಂಟು ಬನೀನುಗಳನ್ನೊಮ್ಮೆ ನೋಡಿದ. ಬಾ ಎಂದು ಕರೆಯುತ್ತಿರುವ ಅಪರಿಚಿತನ ಸನಿಹ ಬರಲು ಹಿಂಜರಿಯುತ್ತಿರುವ ಮಕ್ಕಳ ಕಣ್ಣುಗಳಂತೆ ಕಂಡವು. ರೂಪಕನ ಕೈಗಳಲ್ಲಿ ಈಗ ಅವರು ಭದ್ರವಾಗಿದ್ದವು. ಅವಸರದಲ್ಲಿ ಮುದುಡಿ ತುರುಕಿದ್ದ ಅವುಗಳನ್ನು, ಬೆಂಚಲ್ಲಿ ಕೂತು, ಮತ್ತೆ ಹೊರತೆಗೆದು, ಸರಿಯಾಗಿ ಮಡಚಿ ಇಡತೊಡಗಿದ. ಸೀಸನ್ ಪಾಸು, ಬಾಚಣಿಗೆ, ತುದಿ ಮೊಂಡಾಗಿರುವ ಎಷ್ಟೊಂದು ಕಾಗದದ ಮಡಿಕೆಗಳು. ಪ್ಯಾಂಟಿನ ಕಿಸೆಯಲ್ಲಿ ಏನೋ ಗಟ್ಟಿ ಹತ್ತಿದಂತಾಗಿ ಕೈಹಾಕಿದರೆ ಫಳ ಫಳ ಹೊಸ ವಾಚು ಹೊರಬಂತು. ಬೆಳಿಗ್ಗೆ ಇದು ಕಿಸೆಯಲ್ಲಿದೆ ಅನ್ನೋದನ್ನು ಮರೆತೇಬಿಟ್ಟಿದ್ದನೋ, ಅಥವಾ ಬೇಕೆಂದೇ ಅದನ್ನು ಅಡಗಿಸಿಟ್ಟುಕೊಂಡಿದ್ದನೋ- ಇದ್ಯಾವುದೂ ರೂಪಕನನ್ನು ಬಾಧಿಸಲಿಲ್ಲ. ಏಕೆಂದರೆ, ನಾಗರಿಕ ಅವಿಶ್ವಾಸದ ಪರಮ ರೂಪದಂತೆ, ಅಲ್ಯುಮಿನಿಯಂ ತಟ್ಟೆಯ ಬೆಳ್ಳನೆ ಹತ್ತಿಯಲ್ಲಿ ಕೂತಿದ್ದ ಆ ಪುಟ್ಟ ಅಮಾಯಕ ಕರುಳಿನ ಬೆರಳು, ನಿಗೂಢ ನಂಟೊಂದನ್ನು ಅವನಲ್ಲಿ ಅರಳಿಸಿತ್ತು. ಆಟದಲ್ಲಿ ಮಕ್ಕಳು ಕಿಸೆಯಲ್ಲಿ ಬಚ್ಚಿಟ್ಟು ಮರೆತ ಪುಟ್ಟ ಆಟಿಕೆಯಂತಿತ್ತು. ಈ ವಾಚು ಅಚರ ಟಕ್ ಟಕ್ ಸದ್ದೊಂದೇ ಮುದ್ದಾಗಿ ಕೇಳುತ್ತಿತ್ತು. ಅಲ್ಲೇ ಇದ್ದ ಪಬ್ಲಿಕ್‌ಬೂಥಿನಿಂದ “ನಾಲ್ಕು ದಿನ ಬರಲಾಗುತ್ತಿಲ್ಲ” ಎಂದು ತನ್ನ ಕಾರ್ಖಾನೆಗೆ ಫೋನು ಮಾಡಿ… ಔಷಧಿಗಳನ್ನು ಕೊಂಡು, ಕಿಸೆಯಲ್ಲೀಗ ಎಷ್ಟು ಹಣ ಉಳಿದಿದೆ ಎಂಬುದನ್ನು ಸ್ಪಷ್ಟವಾಗಿ ಎಣಿಸಿ ನೋಡಿ, ಪೋಸ್ಟ ಆಪರೇಟಿವ್ ವಾರ್ಡಿಗೆ ಬಂದಾಗ, ಆಗಷ್ಟೆ ಅಲ್ಲಿಗೆ ತಂದಿದ್ದರು. ರಕ್ತ, ಸಲೈನು, ಇಸಿಜಿ ಹೀಗೆ ಎಷ್ಟೆಲ್ಲಾ ನಳಿಗೆ, ವಯರುಗಳ ಮಧ್ಯ ಹಸಿರು ಹಾಸಿಗೆಯಲ್ಲಿ, ಫ್ರಾಕಿನಂಥ ನಿಲುವಂಗಿಯಲ್ಲಿ, ಪಾರ್ಟನರ್ ನಿರುಪಾಯ ನಿದ್ರೆಯಲ್ಲಿದ್ದ. ಎವೆಯಿಕ್ಕದೇ ನೋಡುತ್ತ ನಿಂತ ರೂಪಕನತ್ತ ಮುಗುಳುನಕ್ಕ ನರ್ಸು “ಎಲ್ಲ ಸರೀಗಿದೆ, ನೀವಿನ್ನು ಊಟಮಾಡಿಕೊಂಡು ಬನ್ನಿ” ಎಂದು ಸನ್ನೆಯಲ್ಲೆ ಹೇಳಿದಳು. +***** +ಕೀಲಿಕರಣ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_142.txt b/Kannada Sahitya/article_142.txt new file mode 100644 index 0000000000000000000000000000000000000000..9f5a5a0a5efa49c67d95b979cf13eef8faab9bd4 --- /dev/null +++ b/Kannada Sahitya/article_142.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯಾಕೆ ಸುಮ್ಮನೆ ನಾವು +ಹಾದಿ ಕಾಯುತ್ತೇವೋ +ಬಂದರೂ ಬಾರದ ಹಾಗೇ +ಇರುವಂಥವರ! +ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ +ಕಣ್ಣ ಕೊನೆಯಿಂದ ಕಿಡಿ ಕಾರಿ +ಚಟ ಪಟ ಸಿಡಿದು +ಹೊರಟು ಹೋದವರ +ಕಾಯುತ್ತೇವೆ +ಯಾಕೆ? +– ಹೊಡೆದುಕೊಳ್ಳುವ ಎದೆಯ +ಅಂಗೈಲಿಟ್ಟುಕೊಂಡು. +ಇಲ್ಲವೆ ನಿಮ್ಮಲ್ಲಿ? ಇರಲಿ ಬಿಡಿ, +ಬಂದಾರು; ಸರಿ . . . ಬಂದರೆ ತಿಳಿಸುವೆ +ಬಂದರೆಂದು. +(ಆಚೆ ದನಿಗೇನು ಗೊತ್ತು ಬಾರದೆಯೂ ಇರಬಹುದೆಂದು) +ಯಾವುದೋ ಲಾರಿಯಡಿ! . . ಟ್ರಕ್ಕಿನಡಿ! . . +ಶಿವ ಶಿವಾ! ಒಲ್ಲೆ ಒಲ್ಲೆಂದು +ಹೇಳುವುದಕ್ಕಾಗೇ +ನೋವ ಕಾಯುತ್ತೇವೋ? +ಸಾವ ಕಾಯುತ್ತೇವೋ? +ಕಣ್ಣ ತುಂಬ ತುಂಬಿದ ಭಯ +ಆಚೀಚೆಗೂ ಚೆಲ್ಲಿ ಹನಿ ಹನಿಯಾಗಿ +ಹೆಪ್ಯ್ಪಗಟ್ಟುತದೆ ಕತ್ತಲಿನಲ್ಲಿ. +ಈಗ ಮುಗಿಯುತ್ತದೆ ಕಾದು ಕೂರುವ ಹೊತ್ತು +ಆಗ ಮುಗಿಯುತ್ತದೆ ಕಾದು ಕೂರುವ ಹೊತ್ತು +ಇನ್ನೇನು ಮುಗಿಯುತ್ತದೆ ಕಾದು ಕೂರುವ ಹೊತ್ತು . . +ಯಾರಾದರೂ ಬಂದು, +ಬಾಗಿಲ ಬಡಿದು +ತಿಳಿಸಿಬಿಡಲಿ! +ಏನ ಕಾಯುತ್ತೇವೆ +ಏಕೆ ಕಾಯುತ್ತೇವೆ +ಬರುವುದನ್ನೋ . . . +ಬಾರದಿರುವುದನ್ನೋ ? +ತೆರೆದ ಬಾಗಿಲಿನಿಂದ +ಕತ್ತಲು ನುಗ್ಗಿದ ಹಾಗೆ +ಕಡೆಗೂ +ಬಂದರು +ಬಾರದ ಹಾಗೆ! +ಕಾಯುವ ಮಾತಿನ್ನು +ಮತ್ತೊಂದು ದಿನಕ್ಕೆ +ಮತ್ತೊಂದು ರಾತ್ರಿಗೆ. +***** +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_143.txt b/Kannada Sahitya/article_143.txt new file mode 100644 index 0000000000000000000000000000000000000000..cdea509cfffed3abb0da4ad2848416f700557c1c --- /dev/null +++ b/Kannada Sahitya/article_143.txt @@ -0,0 +1,86 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. ಹೊಲದಲ್ಲಿ ಕೆಲಸ ಮಾಡುವದು, ಮನೆಯಲ್ಲಿ ಆಕಳ ಹಿಂಡುವದು, ಸೆಗಣಿಕಸ ಮಾಡುವದು ಅವನ ಕೆಲಸವಾಗಿತ್ತು. ಕಟ್ಟಡ ಕಟ್ಟುವದು, ಬಾವಿ ತೋಡುವದು ಮೊದಲಾದ ಎಲ್ಲ ಕೆಲಸ ಅವನಿಗೆ ಗೊತ್ತಿತ್ತು. ತಾನು ಮಾಡಿದ ಕೆಲಸದ ಬಗ್ಗೆ ಅವನಿಗೆ ಬಹಳ ಹೆಮ್ಮೆ ಇರುತ್ತಿತ್ತು. +ರಂಗರಾಯರ ಹೆಂಡತಿ ಒಮ್ಮೆ ನೀರು ತರಲಿಕ್ಕೆ ಬಾವಿಗೆ ಹೋದಾಗ ಹಗ್ಗ ಹರಿದು ಕೊಡಪಾನ ಬಾವ್ಯಾಗ ಬಿತ್ತಂತೆ. ಅವರು ಹಿಂದೆ ನೆಲಕ್ಕೆ ಬಿದ್ದರು. ನೋಡಿದ ಜನ ನಕ್ಕರಂತೆ. ಅದನ್ನ ಕೇಳಿದ ರಾಯರಿಗೆ ವಿಪರೀತ ಸಿಟ್ಟು ಬಂತು. +‘ಕಾಶೀಮಾ, ನಿಂತ್ ಕಾಲ್ ಮ್ಯಾಲೆ ನಮ್ಮ ಮನೀ ಹಿತ್ತಲದಾಗ ಒಂದ್ ಬಾವಿ ತೋಡು. ನಮ್ಮ ಹೆಣ್ಣುಮಕ್ಕಳು ಹೊರಗ ಹೋಗೋದು ಬ್ಯಾಡ’ ಅಂದ್ರು. +‘ಆಯಿತೆಪ್ಪ’ ಅಂದು ಎಂಟು ದಿನದಾಗ ಕಾಶೀಮ ರಾಯರ ಹಿತ್ತಲದಾಗ ಬಾವೀ ತೋಡಿ, ಕಟ್ಟಡ ಕಟ್ಟಿದ. +ರ೦ಗರಾಯರಿಗೆ ಮಗ ಹುಟ್ಟಿದ. ಶಾಮಣ್ಣ ಅಂತ ಹೆಸರಿಟ್ಟರು. ಹೆಂಡತಿ ಮಗನೊಡನೆ ಸುಖವಾಗಿ ಕಾಲ ಕಳೆಯುತ್ತಿದ್ದರು. ಆದರೆ ದುರ್ದೈವದಿಂದ ರಾಯರ ಹೆಂಡತಿ ತೀರಿಕೊಂಡರು. ಆಗಿನಿಂದಲೂ ಶಾಮಣ್ಣನನ್ನು ಕಾಶೀಂಸಾಬ ಮತ್ತು ಅವನ ಹೆಂಡತಿ ಕಾಶೀಂಬಿಯೇ ನೋಡಿಕೊಳ್ಳುತ್ತಿದ್ದರು. ಮನೆಗೆ ಕರೆದುಕೊಂಡು ಹೋಗಿ ಬಿಸಿ ರೊಟ್ಟಿ ಬೆಣ್ಣಿ ತಿನ್ನಿಸುತ್ತಿದ್ದರು. ಅದನ್ನು ರಾಯರಾಗಲಿ ಕಾಶೀ೦ಸಾಬನಾಗಲಿ ಯಾರ ಮುಂದೂ ಹೇಳುವಂತಿರಲಿಲ್ಲ. +ಒಮ್ಮೆ ಸಣ್ಣ ರಾಯರು ಏನೋ ಕಾರಣಕ್ಕೆ ಸಿಟ್ಟು ಬಂದು ಸೆಟಗೊಂಡು ಹೋಗಿ ಹನಮ೦ತದೇವರ ಗುಡಿಯ ಹತ್ತಿರಿದ್ದ ಬೇವಿನ ಗಿಡದ ಕಟ್ಟೆಯ ಮೇಲೆ ಮಲಗಿದರಂತೆ. ಅದನ್ನು ನೋಡಿದ ದೊಡ್ಡ ರಾಯರು +‘ಕಾಶೀಮಾ, ಅವಗ ಸಿಟ್ಟು ಬಂದಾಗ ಅಲ್ಲಿ ಇಲ್ಲಿ ಹೋಗಿ ಮಲಗೋದು ಬ್ಯಾಡ. ನಮ್ಮ ಹಿತ್ತಲದಾಗಿನ ಜಾಲೀಗಿಡಾನೆಲ್ಲಾ ಕಡದು ಒಂದು ಸಣ್ಣ ಮನೀ ಕಟ್ಟು. ಸಿಟ್ಟು ಸೆಡವು ಬಂದಾಗ ಅಂವ ಅಲ್ಲೇ ಹೋಗಿ ಮಲಕೊಳ್ಳಲಿ’ ಅಂದರು. +ಕಾಶೀಂಸಾಬನಿಗೆ ಹಿತ್ತಲಲ್ಲಿಯ ಜಾಲಿಗಿಡಗಳ ಮೇಲೆ ಅಪಾರ ಪ್ರೀತಿ. ಜಾಲೀಗಿಡಗಳ ಕಪ್ಪನೆಯ ಬೊಡ್ಡೆಗಳ ಮೇಲಿನ ಬಿಳಿ ಬುಳುಸು, ಹಳದಿ ಅಂಟು ಸೇರಿ ಒಳ್ಳೆ ಕುಸುರಿ ಕೆಲಸ ಮಾಡಿದಂತೆ ಕಾಣುತ್ತಿತ್ತು. ಮೆತ್ತನ್ನ ರೇಶಿಮೆಯಂಥ ಹಳದಿ ಹೂವು, ಮೈತುಂಬ ಬಿಟ್ಟ ಬೂದು ಬಣ್ಣದ ಕಾಯಿ ಇವುಗಳಿಂದ ಸೂಸುವ ಒಂದು ರೀತಿಯ ಪರಿಮಳ ಕಾಶೀ೦ಸಾಬನಿಗೆ ಬಹಳೇ ಇಷ್ಟವಾಗುತ್ತಿತ್ತು. ಅವುಗಳ ಮೇಲೆ ಎಷ್ಟೋ ಗುಬ್ಬಿ ಬಚ್ಚುಗಳು ಕಾಗೆ ಗೂಡುಗಳು ಇದ್ದವು. ಅವು ತಮ್ಮ ತಮ್ಮ ಮರಿಗಳಿಗೆ ಗುಟುಕು ಕೊಡುವ ದೃಶ್ಯ ಕಾಶೀಂಸಾಬನಿಗೆ ತುಂಬಾ ಹಿಡಿಸುತ್ತಿತ್ತು. ಮಧ್ಯಾಹ್ನ ಉಂಡು ಆ ಗಿಡಗಳ ನಡುವೆ ಸುತ್ತಾಡುತ್ತಿದ್ದ. ಅಲ್ಲೇ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಿದ್ದ. +ದೊಡ್ಡ ರಾಯರು ಜಾಲೀಗಿಡಗಳನ್ನೆಲ್ಲ ಕಡಿ ಅಂತ ಹೇಳಿದರೂ ಕಾಶೀ೦ಸಾಬನಿಗೆ ಅವನ್ನು ಕಡಿಯಲು ಮನಸ್ಸು ಬಾರದೆ, ಮುಂದೆ ಇದ್ದ ಸ್ವಲ್ಪ ಬಯಲು ಜಾಗದಲ್ಲೇ ಒಂದು ಸಣ್ಣ ಮನೆ ಕಟ್ಟಿದ. ಜಾಲೀಗಿಡದ ಹಿತ್ತಲಕ್ಕೂ, ಅವನೇ ಕಟ್ಟಿದ ಆ ಮನೆಗೂ ಇದ್ದ ನಂಟಿನಿಂದಾಗಿ ಎಲ್ಲರೂ ಅವನನ್ನು ಹಿತ್ತಲಮನಿ ಕಾಶೀ೦ಸಾಬ ಎಂದೇ ಕರೆಯುತ್ತಿದ್ದರು. +ಮುಂದೆ ಕೆಲವು ದಿನಗಳಲ್ಲಿ ಶಾಮಣ್ಣನಿಗೆ ಮದುವೆಯಾಯಿತು. ರಂಗರಾಯರು ತೀರಿಕೊಂಡದ್ದರಿಂದ ಮನೆಯಲ್ಲಿ ಹಿರಿಯರು ಇಲ್ಲದಂತಾಯಿತಲ್ಲ ಅಂತ ಶಾಮಣ್ಣ ಮತ್ತು ಶಾಂತಾಬಾಯಿಗೆ ಬಹಳ ದುಃಖವಾಯಿತು. ಕಾಶೀಂಸಾಬನೇ ಅವರಿಗೆ ಸಮಾಧಾನ ಹೇಳಿದ. +ಕಾಶೀ೦ಸಾಬ ಯಾವಾಗಲೂ ನಗುನಗುತ್ತ ಎಲ್ಲರಿಗೂ ಕೈಲಾದ ಸಹಾಯ ಮಾಡುತ್ತ ಊರಿಗೇ ಬೇಕಾದವನಾಗಿದ್ದ. ಯಾರಿಗೆ ಏನೇ ಕಷ್ಟ ಬಂದರೂ ಆತನ ಮುಂದೆ ಹೇಳಿಕೊಂಡು ತಮ್ಮ ದುಃಖ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆತನ ಹೆಂಡತಿ ಕಾಶೀಂಬಿಯೂ ಅಂಥ ಸ್ವಭಾವದವಳೇ ಆಗಿದ್ದಳು. +ಅವರಿಗೆ ಮಕ್ಕಳೇ ಇರಲಿಲ್ಲ. ಆದರೂ ಊರಿನ ಮಕ್ಕಳೆಲ್ಲ ಅವರವೇ ಆಗಿದ್ದವು. ಮಕ್ಕಳು ಬಿಡದೇ ಅಳುತ್ತಿದ್ದರೆ ‘ಕಾಶಿಂಬಿ ಹಂತ್ಯಾಕ ಕೊಡ್ರಿಬೆ. ಆಕೀ ಕೈಯಾಗ ಅಂತಾದ್ದೇನೈತೋ ಏನೋ, ಮಕ್ಕಳು ಸುಮ್ಕಾಗಿ ನಿದ್ದಿ ಮಾಡಿಬಿಡತಾವು’ ಅಂತ ಓಣ್ಯಾಗಿನ ಹೆಣ್ಣುಮಕ್ಕಳು ಅನ್ನುತ್ತಿದ್ದರು. +ಇಂಥಾ ಕಾಶೀಂಬಿ ಮುಂದೆ ಬಹಳ ದಿನ ಬದುಕಿ ಉಳಿಯಲಿಲ್ಲ. ಕಾಶೀಂಸಾಬನಿಗೆ ಬಹಳೇ ದುಃಖವಾಯಿತು. ಹೆಂಡತಿ ಇಲ್ಲದ ಮನೆಯಲ್ಲಿ ಇರಲಾಗದೇ ಕಾಶೀಂಸಾಬ ರಾಯರ ಜಾಲೀಗಿಡದ ಹಿತ್ತಲಲ್ಲಿಯೇ ಒಂದು ಗುಡಿಸಿಲನ್ನು ಹಾಕಿಕೊಂಡ. ಲೆಕ್ಕಿಗಿಡಗಳನ್ನು ಸುತ್ತಲೂ ನೆಟ್ಟು ನೆರಿಕಿ ಕಟ್ಟಿದ. ಮೇಲೆ ಇಳಿಜಾರಿನ ಚಪ್ಪರ ಹಾಕಿ ಅದರ ಮೇಲೆ ಬಂದರಿಕಿ ಸೊಪ್ಪು ಹೊದಿಸಿ, ಬಾದೀ ಹುಲ್ಲು ಹರಡಿ, ಮೇಲೆ ಹಗುರವಾಗಿ ಮೇಲ್ಮುದ್ದಿ ಹಾಕಿ ‘ಗಾಳಿಗೆ ಹಾರದ್ಹಾಂಗ, ಮಳೀಗೆ ಸೋರದ್ಹಾಂಗ’ ಚಾಟು ಮಾಡಿಕೊಂಡು ಅಲ್ಲೆ ಇರತೊಡಗಿದ. +ಶಾಂತಾಬಾಯಿಗೆ ಸಾಲಾಗಿ ನಾಲ್ಕು ಹೆಣ್ಣುಮಕ್ಕಳು ಹುಟ್ಟಿದ್ದರಿಂದ ಗಂಡು ಮಗು ಆಗಲಿಲ್ಲವಲ್ಲ ಅಂತ ಶಾಮಣ್ಣ ‘ನಾ ಇನ್ನೊಂದು ಲಗ್ನ ಮಾಡಿಕೋತೀನಿ’ ಅಂತ ಹೇಳಿದರು. ಇದನ್ನು ಕೇಳಿ ಶಾಂತಾಬಾಯಿಗೆ ಚಿಂತೆ ಶುರುವಾಯಿತು. +ತಮ್ಮ ಮನೆಯ ಪಡಸಾಲೆಯಲ್ಲಿ ಕಂಬಕ್ಕೆ ಒರಗಿ ಕುಳಿತು ಯೋಚಿಸುತ್ತಿದ್ದಾಗ ಮನೆಯ ಆಳು ಕಾಶೀಂಸಾಬ ಹೊಲದಿಂದ ಬಂದು +‘ಯಾಕ್ ಅಳಾಕ ಹತ್ತೀರಿ, ಅವ್ವಾರ’ ಅಂತ ಕೇಳಿದ. +‘ಏನ್ ಹೇಳ್ಲೆಪ್ಪ, ಎಲ್ಲಾ ನನ್ನ ಹಣೇಬರಾ. ಬರೇ ನಾಕು ಹೆಣ್ಣು ಹುಟ್ಟಿದವು ಅಂತ ರಾಯರು ಇನ್ನೊಂದ್ ಲಗ್ನ ಮಾಡಿಕೋತೀನಿ ಅಂತಾರ. ಕನ್ಯಾನೂ ನೋಡ್ಲಿಕ್ಕೆ ಹತ್ತ್ಯಾರ. ಅಂದ ಮ್ಯಾಲೆ ನಾ ಅಳದ ಇನ್ನೇನು ಮಾಡ್ಲಿ, ಹೇಳು. ನನಗಂತೂ ಯಾರದೂ ಬಲ ಇಲ್ಲ. ಅವರು ಇನ್ನೊ೦ದ್ ಲಗ್ನ ಮಾಡಿಕೊಂಡ್ ಬಿಟ್ರ ನನ್ನ ಗತಿ ಅಧೋಗತಿ!’ ಅಂತ ತಂದೆಯ ವಯಸ್ಸಿನ ಕಾಶೀಂಸಾಬನನ್ನು ನೋಡಿ ಹೇಳಿದರು. +ಈ ಮಾತು ಕೇಳಿ ಕಾಶೀಂಸಾಬನಿಗೆ ದುಃಖವಾಯಿತು. +‘ಅವ್ವಾರ, ನೀವು ಅಳಬ್ಯಾಡ್ರಿ. ನಾ ಅದೀನಿ. ಸಣ್ಣ ರಾಯರಿಗೆ ಹೇಳ್ತೀನಿ.’ ಅಂತ ಧೈರ್ಯ ಹೇಳಿದ. +‘ನೀ ನನ್ನ್ ಪಾಲಿನ ದೇವರಿದ್ಹಾಂಗ ಇದ್ದೀ ನೋಡಪಾ. ಎಷ್ಟ”ಕಷ್ಟ ಬರ್ಲಿ ಧೈರ್ಯ ಹೇಳ್ತೀ. ಹೇಳಿದ ಹಾಂಗ ಮಾಡಿಯೂ ಮಾಡ್ತೀ. ನಿನ್ನ”ನಂಬೀನಿ. ಇನ್ನೊಂದ್ ಲಗ್ನ ಬ್ಯಾಡ ಅಂತ ಅವರಿಗೆ ಹೇಳು.’ +ಒಂದು ದಿನ ಕಾಶೀಂಸಾಬ ಶಾಮಣ್ಣನ ಹತ್ತಿರ ಮಾತಾಡುತ್ತ +‘ರಾಯರ”ನಂದೊಂದು ಮಾತು ನಡಸಿ ಕೊಡ್ತೀರಾ’ ಅಂತ ಕೇಳಿದ. +‘ಹೇಳಪಾ, ನಿನ್ ಮಾತು ಕೇಳದ ನಾ ಇನ್ಯಾರ ಮಾತು ಕೇಳಬೇಕು’ ಅಂತ ರಾಯರು ಅಂದ ಕೂಡಲೇ +‘ಆಮ್ಯಾಕ ನೀವು ಇಲ್ಲ ಅನಬಾರದು!’ +‘ಇಲ್ಲಪಾ, ಹೇಳು’ +‘ನೀವು ಇನ್ನೊಂದು ಮದಿವಿ ಮಾಡಿಕೊಂತೀರಿ ಅಂತ ಅವ್ವಾರು ಹೇಳಿದ್ರು. ಯಾಕ?’ +‘ಗಂಡು ಮಗ ಬೇಕಂತ ನನಗ ಆಶಾ ಇಲ್ಲೇನು? ನೀನೇ ಹೇಳು ಕಾಶೀಂಸಾಬ’ +‘ನೋಡೆರ”ನೋಡ್ರಿ, ರಾಯರ. ಈ ಬಾರಿ ಅವ್ವಾರ ಹೊಟ್ಟ್ಯಾಗ ಗಂಡು ಮಗ ಆಕ್ಕಾನ. ಈ ಮನಿಗಾಗಿ ನಾ ಈಟೆಲ್ಲ ಮಾಡೀನಿ. ಇದೊಂದು ನನ್ನ ಮಾತು ನಡೀತೈತೋ ಇಲ್ಲೋ ನೋಡೇ ಬಿಡ್ತೀನಿ. ಪ್ರಾಣಾನಾದ್ರು ಕೊಟ್ಟು ನನ್ ಮಾತು ಉಳಿಸಿಕೊಂತೀನಿ. ನೀವು ಇನ್ನೊಂದ್ ಮದಿವಿ ಮಾಡಿಕೊಣ್ಣಾಂಗಿಲ್ಲಾಂತ ನನಗ ವಚನಾ ಕೊಡಬೇಕು.’ +‘ಆಗಲೆಪಾ, ನಿನ್ ಮಾತಿನ್ಹಾಂಗ ನನಗೊಬ್ಬ ಮಗ ಹುಟ್ಟಿದರ ಸಾಕು. ಇನ್ನೊಂದ್ ಲಗ್ನ ಯಾರಿಗೆ ಬೇಕು?’ ಎಂದ ರಾಯರ ಮಾತು ಕೇಳಿ ಕಾಶೀಂಸಾಬನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. +‘ರಾಯರ, ಇದರಾಗ ನಂದೂ ಒಂದ್ ಸ್ವಾರ್ತ್ ಐತಿ. ನನ್ ಮಾತು ಕೇಳಿ ನೀವು ನಗಬ್ಯಾಡ್ರಿ ಮತ್ತ!’ ಅಂದ. +‘ಇಲ್ಲ. ಅದೇನ್ ಹೇಳಪಾ’ ಶಾಮಣ್ಣ ಕೇಳಿದ. +‘ನನಗಂತೂ ಹಿ೦ದಿಲ್ಲ ಮುಂದಿಲ್ಲ. ಮಕ್ಕಳಿಲ್ಲ ಮರಿಯಿಲ್ಲ. ಆದ್ರ ನನ್ ಹೆಸರು ಉಳೀಬೇಕು ಅಂತ ಬಾಳ ಆಶಾ ಐತಿ. ನಿಮಗ ಈಗ ಹುಟ್ಟೋ ಗಂಡು ಮಗ್ಗ ನನ್ನ ಹೆಸರ”ಇಡಬೇಕು. ತೊಟ್ಟಲದಾಗ”ನನ್ ಹೆಸರಿಟ್ಟು ಅಮ್ಯಾಕ ನೀವು ಬ್ಯಾರೆ ಹೆಸರು ಕರಕೊಳ್ರಿ. ಇದೊಂದ್ ಮಾತು ನೀವು ನಡಸಿಕೊಡಾಕ”ಬೇಕು.’ ಅಂತ ಕಾಶೀಂಸಾಬ ಕೈಮುಗಿದು ಕೇಳಿಕೊಂಡ. +‘ಈಗ”ಯಾಕ ನೀ ಸಾಯೋ ಮಾತು ಆಡ್ತೀ? ನೀ ಇನ್ನೂ ಒಂದಿಷ್ಟು ದಿವಸ ಬದಕಬೇಕು. ನಾ ಸಣ್ಣಾಂವಿದ್ದಾಗಿಂದ ನೀ ಜ್ವಾಕಿ ಮಾಡೀದಿ. ನನ್ ಹೊಟ್ಟ್ಯಾಗ”ನೀ ಹುಟ್ಟಿ ಬರತೀದಿ ಅಂದರ ಇದಕಿಂತ ಸಂತೋಷ ಬ್ಯಾರೆ ಏನದ? ನನ್ ಮಗ್ಗ ನಿನ್ ಹೆಸರು ಇಟ್ಟ”ಇಡ್ತೀನಿ.’ ಎಂದು ರಾಯರು ಮಾತು ಕೊಟ್ಟರು. +ಕಾಶೀಂಸಾಬ ಖುಶಿಯಿಂದ ಓಡುತ್ತ ಮನೆಗೆ ಬಂದು ಶಾ೦ತಾಬಾಯಿಯನ್ನು ನೋಡಿ +‘ಅವ್ವಾರ, ರಾಯರು ನನಗ ವಚನಾ ಕೊಟ್ಟಾರ. ನಿಮ್ಮ ಚಿಂತಿ ದೂರಾತು. ಇನ್ನ ಆರಾಂ ಇರ್ರಿ.’ ಅಂತ ಧೈರ್ಯ ಹೇಳಿ ‘ಗಡಾನ ಒಂದ್ ಕಪ್ ಚಾ ಕಾಶಿ ಕೊಡ್ರಿ.’ ಅಂದ. +‘ಎಂಥಾ ಛೊಲೋ ಸುದ್ದೀ ಹೇಳೀದಿ. ನಿನಗ ಬರೇ ಛಾ ಏನು? ಹೋಳಿಗೀ” ಮಾಡಿ ಕೊಡಬೇಕು.’ ಅಂತ ಖುಶಿಯಿಂದ ಶಾಂತಾಬಾಯಿ ಹೇಳಿದರು. +ಮುಂದೆ ಕೆಲವು ದಿನಗಳಲ್ಲಿ ಕಾಶೀಂಸಾಬ ಅರಾಮು ಇಲ್ಲದೆ ಹಾಸಿಗೆ ಹಿಡಿದ. ಅಂಥ ಪರಿಸ್ಥಿತಿಯಲ್ಲೂ +‘ಈ ಮನಿ ಉಳಸಾಕ” ಬೇಕು. ಈ ಮನೀಗೊಂದು ಗಂಡು ಮಗ ಹುಟ್ಟಾಕ” ಬೇಕು. ನನ್ನ ಪ್ರಾಣ ಕೊಟ್ಟರೂ ಸೈ.’ ಅಂತ ಕನವರಿಸುತ್ತಿದ್ದ. +ರಾಯರು, ಅವ್ವಾರು ಅವನ ಗುಡಿಸಲಿನಲ್ಲಿಯೇ ಅವನಿಗೆ ಚಹಾ, ಗಂಜಿ ಒಯ್ದು ಕೊಡುತ್ತಿದ್ದರು. ಆದರೆ ಕಾಶೀಂಸಾಬನ ಆಯುಷ್ಯ ತೀರಿತ್ತು. ಒಂದು ದಿನ ಕಾಶೀಂಸಾಬ ತೀರಿಕೊಂಡು ಬಿಟ್ಟ. +‘ಈ ಮನೀ ಸಲುವಾಗಿ ಕಾಶೀಂಸಾಬ ಅದೆಷ್ಟು ಕಳಕಳಿಯಿಂದ ಸೇವಾ ಮಾಡಿದ! ಸಾಯೋ ತನಕ ಈ ಮನೀ ಉಳಸಬೇಕು ಅಂದುಕೋತಾ” ಪ್ರಾಣಾ ಬಿಟ್ಟ.’ ಅಂತ ರಾಯರಿಗೆ ಬಹಳ ದುಃಖವಾಯಿತು. ಶಾಂತಾಬಾಯಿಯೂ +‘ನನಗ ತಂದೀ ಹಾಂಗ ಕಾಳಜೀ ಮಾಡ್ತಿದ್ದ. ಅಂಥಾವನ್ನ ಕಳಕೊಂಡುಬಿಟ್ಟೆವಲ್ಲ’ ಅಂತ ದುಃಖಿಸಿದಳು. +‘ಈ ಮುದುಕ ನನ್ನ ಕೈಲೆ ವಚನಾ ತೊಗೊಂಡು ಒಳ್ಳೇ ಇಕ್ಕಟ್ಟಿನ್ಯಾಗ ಸಿಗಿಸಿ ಬಿಟ್ಟ. ಅವನ ಮಾತು ಮೀರಿ ಒಂದು ವೇಳೆ ಲಗ್ನ ಮಾಡಿಕೊಂಡರೂ ಗಂಡ” ಹುಟ್ಟತದ ಅಂತ ಏನು ಗ್ಯಾರಂಟಿ? ನನ್ನ ಬಂಗಾರದಂಥಾ ಹೇಣ್ತೀಗೆ ಅನ್ಯಾಯ ಮಾಡಿದ್ಹಾಂಗ ಆಗ್ತದ. ಹೋಗಲಿ ಬಿಡು. ಕಾಶೀಂಸಾಬನ ಮಾತೂ ನಡಸಿ ಕೊಟ್ಟಾಂಗಾಗ್ತದ; ಹೇಣ್ತಿಗೂ ನನ್ ಮ್ಯಾಲೆ ಪ್ರೀತಿ ಉಳೀತದ’ ಅಂತ ಶಾಮಣ್ಣ ಸುಮ್ಮನಾಗಿ ಬಿಟ್ಟ. +ಮುಂದೆ ವರ್ಷ ತು೦ಬುವಷ್ಟರಲ್ಲಿ ಗಂಡಸು ಮಗ ಹುಟ್ಟಿದ. ಇದು ಕಾಶೀಂಸಾಬನ ಆಶೀರ್ವಾದ ಅಂತ ಗಂಡ ಹೆಂಡತಿ ಇಬ್ಬರೂ ತಿಳಿದುಕೊಂಡರು. ಹೆಸರಿಡುವ ಹೊತ್ತಿಗೆ ರಾಯರಿಗೆ ಧರ್ಮ ಸಂಕಟಕ್ಕೆ ಇಟ್ಟುಕೊಂಡಿತು. ವಚನ ಕೊಟ್ಟಂತೆ ಮಗನಿಗೆ ಕಾಶೀಂಸಾಬ ಅಂತ ಹೆಸರು ಇಡೋದು ಹ್ಯಾಂಗ? ‘ಈಗಂತೂ ರಂಗಣ್ಣ ಅಂತ ನಮ್ಮ ಅಪ್ಪನ ಹೆಸರನ್ನಿಡೋಣ’ ಎಂದು ಸಮಾಧಾನ ಹಚ್ಚಿಕೊಂಡರು. +ಆದರೆ ಕಾಶೀ೦ಸಾಬ ರಾಯರ ಮತ್ತು ಅವ್ವಾರ ಕನಸಿನಲ್ಲಿ ಬಂದು ‘ನನ್ ಹೆಸರಿಡೋದು ಮರತ” ಬಿಟ್ರಿ’ ಅ೦ತ ನೆನಪಿಸುತ್ತಿದ್ದ. ರಾಯರು ಅದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ. +ಆದರೆ ಶಾಂತಾಬಾಯಿಗೆ ಮಾತ್ರ ‘ನಾವು ತಪ್ಪು ಮಾಡಿದಿವಿ’ ಅನ್ನಿಸುತ್ತಿತ್ತು. ‘ಇನ್ನೊಂದು ಗಂಡು ಮಗ ಹುಟ್ಟಲಿ. ಅದಕ್ಕ ತಪ್ಪದ ನಿನ್ನ ಹೆಸರ್ನ”ಇಡತೀವಿ.’ ಅಂತ ಮನಸ್ಸಿನಲ್ಲೆ ಕೇಳಿಕೊಳ್ಳುತ್ತಿದ್ದರು. +ಮಗ ಬೆಳೆಯುತ್ತಿದ್ದ, ಆದರೆ ಆರೋಗ್ಯದಿಂದಲ್ಲ. ಯಾವಾಗಲೂ ಜಡ್ಡಿನಿಂದ ನೆರಳುತ್ತಿದ್ದ. +‘ಯಾಕ ಹಿಂಗಾಗ್ತಿದ್ದೀತು? ಕಾಶೀಂಸಾಬ ಏನಾದರೂ ಕಾಡ್ತಿದ್ದಾ”?’ ಅಂತ ಶಾಂತಾಬಾಯಿ ಅಂದಾಗ ರಾಯರಿಗೆ ಸಿಟ್ಟು ಬ೦ತು. +‘ಅಂವ ಯಾಕ ಕಾಡ್ತಾನ? ಅಂಥಾ ಮನಶ್ಯಾ ಅಲ್ಲ. ಅಂವ ದೇವರಾಗಿ ಹೋಗ್ಯಾನ.’ ಅಂತ ಸಮಾಧಾನ ಹೇಳಿದರಾದರೂ ಶಾಂತಾಬಾಯಿಯ ಮನಸ್ಸಿನಲ್ಲಿ ಅಳುಕು ಇದ್ದೇ ಇತ್ತು. +ಮುಂದೆರಡು ವರ್ಷ ಕಳೆಯುವಷ್ಟರಲ್ಲಿ ಶಾಂತಾಬಾಯಿ ಮತ್ತೆ ಬಸಿರಿ ಆದರು. +‘ಈ ಸರ್ತೇ ಗಂಡು ಹುಟ್ಟಿದರ ತಪ್ಪದ”” ಕಾಶೀಂಸಾಬನ ಹೆಸರು ಇಡಲಿಕ್ಕೇ ಬೇಕು. ಅಂವ ಪ್ರಾಣಾ ಕೊಟ್ಟು ತನ್ನ ಮಾತು ಉಳಿಸಿಕೊಂಡಾನ. ನಾವು ನಮ್ಮ ಮಾತು ಉಳಿಸಿಕೊಳ್ಳದಿದ್ದರ ಹ್ಯಾಂಗ? ಇಲ್ಲಾಂದ್ರ ಅವನ ಆಶಾ ತೀರೂದುಲ್ಲ.’ ಅಂತ ಶಾಂತಾಬಾಯಿ ಅಂದಾಗ ರಾಯರು +‘ಹೌದು, ಹೌದು. ಈ ಸರ್ತೀ ಮರೆಯೋ ಹಾಂಗಿಲ್ಲ.’ ಅಂದರು. +ಶಾಂತಾಬಾಯಿಗೆ ದಿನದಾಗ ಬಿತ್ತು. ರಾಯರು ಏನೋ ಅರ್ಜೆಂಟ್ ಕೆಲಸದ ನಿಮಿತ್ತ ಊರಿಗೆ ಹೋಗಬೇಕಾಗಿ ಬಂತು. ‘ದಿನ ತುಂಬಿದ ಬಸಿರಿಯನ್ನ ಬಿಟ್ಟು ಹ್ಯಾಂಗ ಹೋಗೋದು?’ ಅಂತ ಚಿಟಬರಿಸುತ್ತಲೇ ಹೊರಟರು. ಹೋಗುವಾಗ ಸೂಲಗಿತ್ತಿ ಎಲ್ಲವ್ವನಿಗೂ ಹೇಳಿ ಹೋದರು. +ಆದರೆ ಅವತ್ತೇ ರಾತ್ರಿ ಶಾಂತಾಬಾಯಿಗೆ ಹೊಟ್ಟೆನೋವು ಶುರುವಾಯಿತು. ‘ರಾಯರು ಬ್ಯಾರೆ ಊರಾಗಿಲ್ಲ. ಹ್ಯಾಂಗ ಮಾಡ್ಲೆಪ್ಪಾ ದೇವರ”’ ಅಂತ ಸೂಲಗಿತ್ತಿಯನ್ನು ಕರೆತರಲು ಆಳುಮಗನನ್ನು ಕಳಿಸಿದರು. +ಬ್ಯಾನಿ ತಡೆಯಲಾರದೆ ಮನೆಯಲ್ಲೇ ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ನೋವು ಹೆಚ್ಚಾದಂತೆ ಮನೆಯಲ್ಲಿ ನಿಲ್ಲಲಿಕ್ಕೆ ಆಗಲಿಲ್ಲ. ಬ್ಯಾನಿ ತಿನ್ನುತ್ತಲೇ ಹಿತ್ತಲಕ್ಕೆ ಹೋದರು. ಯಾರೋ ಬಂದು ಅವರನ್ನು ಕೈಹಿಡಿದು ಕರೆದುಕೊಂಡು ಹೋದಂತಾಯಿತು. ಹುಣ್ಣಿವೆ ಮುಂದಿನ ಬೆಳದಿ೦ಗಳು ಹಿತ್ತಲ ತುಂಬೆಲ್ಲ ಹಾಲು ಚೆಲ್ಲಿದಂತೆ ಹರಡಿತ್ತು. ತಣ್ಣನ್ನ ಗಾಳಿ ಬೀಸುತ್ತಿತ್ತು. ಇದೆಲ್ಲ ಆಕೆಗೆ ಹಿತವೆನಿಸಿತು. ‘ಎಲ್ಲಾ ಸುಕವಾಗಿ ಆಗ್ತೈತಿ. ದೈರ್ಯವಾಗಿರಿ’ ಅಂತ ಕಾಶೀಂಸಾಬನ ಧ್ವನಿ ಕೇಳಿಸಿದಂತಾಯಿತು. ಶಾಂತಾಬಾಯಿ ಸುತ್ತಲೂ ನೋಡಿದಳು. ಯಾರೂ ಇರಲಿಲ್ಲ. +ನೋವು ಹೆಚ್ಚಾಗಿ ನಿಲ್ಲಲಿಕ್ಕೂ ಆಗದೆ ಜಾಲಿಯ ಗಿಡದ ಕೆಳಗೆ ಕುಳಿತುಕೊಂಡು ಬಿಟ್ಟಳು. +ಸೂಲಗಿತ್ತಿ ಅಡಬರಿಸಿಕೊಂಡು ಬಂದು ‘ಅವ್ವಾರು ಎಲ್ಲದಾರ?’ ಅಂತ ಮಕ್ಕಳನ್ನು ಕೇಳಿದಳು. +‘ಅವ್ವ ಹಿತ್ತಲಕ್ಕ ಹೋಗ್ಯಾಳ.’ ಎಂದು ಮಕ್ಕಳು ಹೇಳಿದ ಕೂಡಲೇ +‘ಅಯ್ಯ ಶಿವನೇ, ಹಿಂತಾ ಹೊತ್ನ್ಯಾಗ ಅಲ್ಲ್ಯಾಕ ಹೋದರ”” ಯವ್ವ?’ ಎಂದು ಓಡುತ್ತ ಹಿತ್ತಲಕ್ಕೆ ಬಂದು ನೋಡುವ ಹೊತ್ತಿಗೆ ಶಾಂತಾಬಾಯಿಗೆ ಸುಖವಾಗಿ ಹೆರಿಗೆ ಆಗಿಯೇ ಹೋಗಿತ್ತು. ಜಾಲಿ ಗಿಡದ ಕೆಳಗೆ ಗಂಡು ಕೂಸು ಹುಟ್ಟಿಯೇ ಬಿಟ್ಟಿತ್ತು. ಸೂಲಗಿತ್ತಿ ಕೂಸು ಬಾಣ೦ತಿಯನ್ನು ಮನೆಯೊಳಗೆ ಕರೆದುಕೊಂಡು ಬಂದಳು. +ಮರುದಿನ ರಾಯರು ಊರಿಂದ ಬಂದು ಕೂಸು ಬಾಣಂತಿಯನ್ನು ನೋಡಿ ನಗುತ್ತ +‘ಅಂತೂ ಕಾಶೀಂಸಾಬ ತನ್ನ ಪ್ರೀತಿಯ ಹಿತ್ತಲದಾಗ”ಹುಟ್ಟಿ ತನ್ನ ಆಶಾ ತೀರಿಸಿಕೊಂಡ ಅನ್ನು.’ ಅಂದರು. +‘ಇನ್ನೂ ಆತನ ಆಶಾ ತೀರಿಲ್ಲ. ತೊಟ್ಟಲದಾಗ ಆತನ ಹೆಸರಿಟ್ಟ ಮ್ಯಾಲ” ಆತನ ಆತ್ಮಕ್ಕ ಶಾಂತಿ ಸಿಗೋದು’ ಶಾಂತಾಬಾಯಿ ಹೇಳಿದರು. +ಕೂಸಿಗೆ ತೊಟ್ಟಿಲದಾಗ ‘ಹಿತ್ತಲಮನಿ ಕಾಶೀಂಸಾಬ’ ಅಂತನ”” ಹೆಸರಿಟ್ಟರು. ಕರೆಯುವದಕ್ಕೆ ಕೃಷ್ಣ ಎಂದು ಇನ್ನೊಂದು ಹೆಸರಿಟ್ಟರು. +ಕಾಶೀಂಸಾಬನ ಆಶೆ ತೀರಿತು. ಅಂದಿನಿಂದ ಮುಂದೆ ಅವನು ಯಾರ ಕನಸಿನಲ್ಲಿಯೂ ಬರಲಿಲ್ಲ. +***** +೦೮-೧೨-೨೦೦೫ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_144.txt b/Kannada Sahitya/article_144.txt new file mode 100644 index 0000000000000000000000000000000000000000..c2239767528b24d0f81a5882f8cfa522f21a33fe --- /dev/null +++ b/Kannada Sahitya/article_144.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪಂಜರ ಬಿಟ್ಟು ಹಾರಿದ ಹಕ್ಕಿಗಳೆ +ಬಂದು ಒಂದು ಕ್ಷಣ ಮುಖದೋರಿರೆ +ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು +ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು +ಮಾಡು ಮುರಿದು ಮತ್ತೆ ಮೂಲ ಸಖನಿಗೆ ವಾಪಸೆ? +ಬಲೆ ಜಾರಿತೆ ಕೈಯಿಂದ ಮತ್ತೆ ಮಿಕ ಮಾಯವೆ? +ನಿಮ್ಮಾತ್ಮದ ಬೆಂಕಿಗೆ ನೀವೆ ತರಗೆಲೆಯೇ? +ಒಳಬೆಂಕಿ ಆರಿತೆ? ನೀವೆ ಭಗ್ಗೆಂದು ಉರಿದ ಬೆಳಕೆ? +ಆ ಗಾಳಿಯೆ ಪೀಡೆಯಾಗಿ ಕಾಡಿತೆ, ಹೋದ ಹೋದಲ್ಲಿ +ಜಿಪ್ಸಿರ್ ಗಾಳಿಯಾಗಿ ಕಾಡಿತೆ? ಅದು ಬಂದ ಬಂದಲ್ಲಿ +ಅಂತಕನ ದೂತರು ಬಂದಾಗ ಹುಟ್ಟಿದವರೆ +ನಿಮಗೀಗ ಮರುಜನ್ಮ, ಹುಟ್ಟಿರೆ, ಮತ್ತೆ ಹುಟ್ಟಿರೆ +ನೀವು ಭವಿಗಳೊ ಭಕ್ತರೊ ಎಂಬುದೀಗ ಮನಕ್ಕೆ ನಿರ್ಣಯವಾಗಲಿದೆ +ಮುಖದ ತೆರೆ ಸರಿಸಿರ +ತಬ್ರೀಜಿನ ಶಂಸ್‌ನ ಕೃಪೆಗೆ ನೀವು ಪಾತ್ರರೆ? +ಶೂನ್ಯ ಸಿಂಹಾಸನದ ಸರದಾರರು ನೀವು, ಅವನ ಅನಂತ ಕರುಣೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_145.txt b/Kannada Sahitya/article_145.txt new file mode 100644 index 0000000000000000000000000000000000000000..fec8d11593cd411d8ed450262fae7c8baa1f1fbf --- /dev/null +++ b/Kannada Sahitya/article_145.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ +ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! +ಹೊಸತು ಆಸೆ ಮೂಡಿದೆ +ಹರುಷ ಲಾಸ್ಯವಾಡಿದೆ +ಓ! ವಸಂತ ನಿನಗನಂತ ಆಲಿಂಗನ ಸಂದಿದೆ +ಸೃಷ್ಟಿ ನೋಂತು ನಿಂದಿದೆ! +೨ +ಎಂದೂ ಅಗಲಿ ಹೋದ ನಿನಗೆ ನಮ್ಮ ನೆನಪು ಬಾರದೆ? +ಮಾಗಿ ಕೊರೆದ ಗಾಯವಿನ್ನು ಇಹುದು ಮನದಿ ಮಾಯದೆ! +ಜೀವ ಕುಲವು ತಪಿಸಿದೆ +ನೂರು ಬಾರಿ ಶಪಿಸಿದೆ +ಪಾದರಸದ ತೆರದಿ ಜಾರಿ ಕಂಡ ಕಡೆಗೆ ಹರಿದಿದೆ +ತನ್ನತನವ ಮರೆದಿದೆ! +೩ +ತಳಿರ ತಳ್ಕೆಯಲ್ಲಿ ಮುದ್ದು ಕೋಗಿಲೆಯದೊ ಕುಳಿತಿದೆ +ಅದರ ಉದರದೊಂದು ಉಸಿರು ಹಾಸಿ ಬೀಸಿ ಬರುತಿದೆ; +ಓಹೊ! +ಎಲ್ಲೊ ಕಂಡ ಹಾಗಿದೆ +ಆಹಾ +ಎಂದೊ ಕೇಳಿದಂತಿದೆ +ಇಂದು ಜಾಡ್ಯ ಹರಿದು ಇಳೆಗೆ ರೋಮಾಂಚನ ತಂದಿದೆ! +-ಸಮರ ತೂರ್‍ಯದಂತಿದೆ! +ಏನು ಅಂದ ಬಿಸವಂದವೊ ನಿನ್ನ ಮಧುರ ಮೈತ್ರಿಯು! +ನೃತ್ಯ ಹಾಡು, ಸೊಗದ ಕೋಡು; ಧನ್ಯಳೀ ಧರಿತ್ರಿಯು; +ಹೇಮಂತನ ತ್ಯಾಗವೂ +ಈ ವಸಂತ ಭೋಗವೂ +ಬದುಕಿಗೆಂದೆ ಬಿಜಯಗೈಯೆ ಪ್ರೀತಿ ಸಮಾಯೋಗವು! +-ಹಾಗು ಹೀಗು ಹೇಗೆಯು. +ಬನದ ಬಯಕೆ ಮಾಗಿದೆ +ಚೈತ್ರೋದಯವಾಗಿದೆ +ಬಾ ವಸಂತ ನಿನಗನಂತ ಅಲಿಂಗನ ಸಂದಿದೆ! +-ಸೃಷ್ಟಿ ನೋಂತು ನಿಂದಿದೆ! +***** +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +ಹಗಲೆಂದರೆ ಇವಳು ಕಾಣುವ ಕನಸು ಹೊತ್ತು ತರಬೇಕು ಇವಳಿದ್ದಲ್ಲಿ, ನಿದ್ದೆ-ಮಂಪರು-ಕನಸು-ಕಂಪನ; ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ ರಾತ್ರಿ ಚಾದರದಡಿಗೆ ದಂಡು ದಂಡು ಮಂದಿ ಬಂದು ಬೀಳುತ್ತಾರೆ ಉಂಡಷ್ಟೂ (ಸಹ) ಭೋಗ ಕೊಂಡಷ್ಟೂ (ಸ)ರಾಗವೆಂದು. ಸಾವಿರ […] +ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_146.txt b/Kannada Sahitya/article_146.txt new file mode 100644 index 0000000000000000000000000000000000000000..b22e1e35d29bd684da2547e374a1ffac97cc70ff --- /dev/null +++ b/Kannada Sahitya/article_146.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ನಾನು’ +ಅಂದರೆ; +ಒಂದು ಜೊತೆ +ಮೆತ್ತಿಗನ ಮೊಲೆ, +ತೊಡೆ ಸಂದಲ್ಲಿ ಅಡಗಿದ +ಕತ್ತೆಲ ಕೋಶ. +***** +ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! ***** +ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. ***** +ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_147.txt b/Kannada Sahitya/article_147.txt new file mode 100644 index 0000000000000000000000000000000000000000..8252c8750274e76dc32f1404d019f259062e17c1 --- /dev/null +++ b/Kannada Sahitya/article_147.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರ +ಈ ಕುಡುಕ ಒಂಟೆಯ ದಾರಿಯಾದರೂ ಎತ್ತ? +ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆ +ಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? +ಅವನ ಬಲೆಯೊಳಗೆ ಬಿದ್ದ ಮೀನು ನಾನು, ದಡದ ಕಡೆಗೆ ಯಾನ +ಬೇಟೆಗಾರನ ಬೇಟಕ್ಕೆ ಹಾತೊರೆದಿದೆ ಹೃದಯದ ಗುಂಗಾನ +ಆಕಾಶದಲ್ಲಿ ಒಂಟೆ ಸಾಲಂತೆ ಮೋಡಗಳು +ಬಾಯಾರಿದ ಬಯಲಿಗೆ ಜಲಧಾರೆ +ಎಳೆದಾಡಿದ ನನ್ನನ್ನು ಬೆಟ್ಟಗಳಲ್ಲಿ +ಕಪ್ಪು ಕತ್ತಲಿನ ನೆಲದಾಳದ ಗವಿಗಳಿಗೆ +ಸುತ್ತ ಹಬ್ಬಿತು ಗುಡುಗಿನ ಮದ್ದಲೆ +ಅಣು ಬ್ರಹ್ಮಾಂಡಗಳಲ್ಲಿ ಹಬ್ಬಿತು ಜೀವದ ಅಲೆ +ಕೊಂಬೆ ಕೊಂಬೆಗೆ ಹಬ್ಬಿತು ವಸಂತ +ಗಂಧ ಗುಲಾಬಿಯ ನಾಳಕ್ಕೂ +ಬೀಜದೊಳಗೆ ಬಯಲ ವಿಸ್ತಾರದ ರೂಹು +ಸೃಷ್ಟಿಸಿದಾತನ ಕ್ರಿಯೆಯೆ ಈ ಹಣ್ಣು +ಮರದೊಳಗಣ ರಹಸ್ಯ ಬಚ್ಚಿಟ್ಟು ಬಯಲಿಗೆ +ಕೂಗಿ ಹೇಳಿದ್ದಾನೆ ಈಗ ತೂಗಾಡುವ ನೇಣಿಗೆ +ವಸಂತದ ಅಲೆಯ ವನದ ವಾಕರಿಕೆಗೆ ಪರಿಹಾರ +ಉಕ್ಕುತ್ತಿದೆ ವಾಂತಿ, ಚಳಿಯ ಗಡಗುಟ್ಟಿಸುವ ಕ್ರೌರ್ಯ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_148.txt b/Kannada Sahitya/article_148.txt new file mode 100644 index 0000000000000000000000000000000000000000..1e46b5cceac608c8e30d23f6ff1f25d62ec28188 --- /dev/null +++ b/Kannada Sahitya/article_148.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕೇದಾರಗೌಳ +ತಾಳ — ಅಟ್ಟ +ತನು ನಿನ್ನದು ಜೀವನ ನಿನ್ನದು ರಂಗ | +ಅನುದಿನದಲಿ ಬಾಹ ಸುಖ – ದುಃಖ ನಿನ್ನದಯ್ಯಾ ||ಪ|| +ಸವಿನುಡಿ ವೇದ – ಪುರಾಣ ಶಾಸ್ತ್ರಂಗಳ | +ಕಿವಿಯಿಂದ ಕೇಳುವ ಕಥೆ ನಿನ್ನದು || +ನವಮೋಹನಾಂಗಿಯರ ರೂಪವ ಕಣ್ಣಿಂದ | +ಎವೆಯಿಕ್ಕದಲೆ ನೋಡುವ ನೋಟ ನಿನ್ನದಯ್ಯ ||೧|| +ಒಡಗೂಡು ಗಂಧ – ಕಸ್ತೂರಿ ಪರಿಮಳಗಳ | +ಬಿಡದೆ ಲೇಪಿಸಿಕೊಂಬುದು ನಿನ್ನದು || +ಪಡುರಸದನ್ನಕೆ ನಲಿದಾಡುವ ಜಿಹ್ವೆ | +ಕುಡುರುಚುಗೊಂಡರಾರುಚಿ ನಿನ್ನದಯ್ಯ ||೨|| +ಮಾಯಾಪಾಶದ ಬಲೆಯೊಳಗೆ ಸಿಲ್ಕಿರುವಂಥ | +ಕಾಯಪಂಚೇಂದ್ರಿಯಗಳು ನಿನ್ನವು || +ನ್ಯಾಯದಿ ಕನಕನೊಡೆಯ ಆದಿಕೇಶವ – | +ರಾಯ ನೀನಲ್ಲದೆ ನರರು ಸ್ವತಂತ್ರರೆ ||೩|| +***** +ರಾಗ — ಶಂಕರಾ‌ಅಭರಣ ತಾಳ — ಏಕ ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| ಹುತ್ತದೊಳಾಡುವ ಸರ್ಪ ಮತ್ತ […] +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ರಾಗ — ನೀಲಾಂಬರಿ ತಾಳ — ಅಟ್ಟ ಇಷ್ಟು ದಿನ ಈ ವೈಕುಂಠ | ಎಷ್ಟು ದೂರವೊ ಎನ್ನುತಲಿದ್ದೆ || ದೃಷ್ಟಿಯಿಂದಲಿ ನಾನು ಕಂಡೆ | ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| ಎಂಟು – ಏಳನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_149.txt b/Kannada Sahitya/article_149.txt new file mode 100644 index 0000000000000000000000000000000000000000..62da855341b9993aa50ac1b69d6d8837a7ac8b16 --- /dev/null +++ b/Kannada Sahitya/article_149.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […] +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_15.txt b/Kannada Sahitya/article_15.txt new file mode 100644 index 0000000000000000000000000000000000000000..48d25267281018f5bd65efe27797c8c107bd8226 --- /dev/null +++ b/Kannada Sahitya/article_15.txt @@ -0,0 +1,80 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ ರೀತಿಯೇ ಅಂಥದ್ದು. ಆದುದರಿಂದ ಹೀಗೆ ಇಂಥದ್ದೇ ಹೇಳುತ್ತೇನೆ ಎಂಬ ಯಾವ ಹಠವೂ ಇಲ್ಲದೆ ಈಗ ಏನೇನು ಮನಸ್ಸಿಗೆ ಬರುತ್ತದೋ ಅದನ್ನೆಲ್ಲ ಆದಷ್ಟೂ ಸಣ್ಣದಾಗಿ ಹೇಳಿ ವಿರಮಿಸುತ್ತೇನೆ. +ಅವತ್ತು ವಾರೆ ಬೈತಲೆ ತೆಗೆದು ಎರಡು ಜಡೆ ಕಟ್ಟಿಕೊಂಡು ಹೊರಟಿದ್ದಳಲ್ಲ ಅಮ್ಮಚ್ಚಿ. ಅಲ್ಲೇ ಆಚೆಗೆ, ಶಂಭಟ್ಟರ ಮೆನೆಯ ಸತ್ಯನಾರಾಯಣ ಪೂಜೆಗೆ. ಅವಳು ಉತ್ಸಾಹದಿಂದ ಹೋಗುತ್ತಿದ್ದುದು ಹಾಗೆ ನೋಡಿದರೆ ಶಂಭಟ್ಟರೆ ಮನೆಗೇ ಎಂದು ಗೋಚರವಾಗಬೇಕಾದರೆ ನನಗೆ ಇಷ್ಟು ವರ್ಷವಾಗಬೇಕಾಯಿತು. ಅದಿರಲಿ. ಅಲ್ಲಿಗೆ ಹೋಗಿಯಾದರು ಅವಳು ಮಾಡುತ್ತಿದ್ದುದು ಏನಪ್ಪಾ ಅಂತ ನೆನೆಸಿಕೊಂಡರೆ ಏನೂ ಇಲ್ಲ. ತದೇಕವಾಗಿ ಎಲ್ಲವನ್ನೂ ಎಲ್ಲರನ್ನೂ ನೋಡುವುದು ನೋಡುವುದು. ಇಂದು ಸತ್ಯನಾರಾಯಣ ಪೂಜೆಗೂ ನಡೆಯುವ ವೈಭವವನ್ನು ನೋಡುತ್ತ ನೋಡುತ್ತ ಮರಗಟ್ಟಿದಂತೆ ಕಾಣಿಸುವುದು. ಮರಗಟ್ಟಿದಂತೆ ಕಾಣಿಸುವುದು ಮಾತ್ರ. ನಿಜವಾದ ಅಮ್ಮಚ್ಚಿಯೋ ಯಾರನ್ನಾದರೂ ಮರಗಟ್ಟಿಸಿಯಾಳು, ಕೈಯಲ್ಲಿ ಮೂರು ಕಾಸು ಇಲ್ಲದೆಯೂ. ಅಮ್ಮಚ್ಚಿಗೂ ನನಗೂ ಏನು ಸಂಬಂಧ, ಹೇಗೆ ಗೆಳೆತನ ಎಂಬುದು ಕೂಡ ಅನವಶ್ಯವಲ್ಲವೆ? ಅಮ್ಮಚ್ಚಿ ಮಾತಾಡುವ ಫೋರ್ಸಿಗೆ ಬಹುಶಃ ನಾನು ಮರುಳಾಗಿಬಿಟ್ಟಿರಬೇಕು. ಅವಳ ಬೀಸುಮಾತಿಗೆ ಎಲ್ಲರೂ ಹೆದರುವವರೇ. ಅವಳ ಓರಗೆಯವರಂತೂ ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ಸುಳಿದರೂ ಅವರವರ ಮನೆಯವರು ಬೈದು ಜಬ್ಬುಜರಿಸಿಕೊಡುತ್ತಿದ್ದರು. ಅದೃಷ್ಟಕ್ಕೆ, ಅವಳ ಜೊತೆಗೆ ನಾನಿದ್ದರೆ ನನ್ನನ್ನು ಮನೆಯಲ್ಲಿ ಯಾರೂ ಗದರಿಸಲಿಲ್ಲವಾದ್ದರಿಂದ ಬೇಸರವಾದಾಗಲೆಲ್ಲ ನನ್ನ ದೊಡ್ಡ ಗೆಳತಿಯೆಂದರೆ ಅಮ್ಮಚ್ಚಿ. ಅವಳ ಹಿಂದೆ ನಾನು ಅಥವ ಮುಂದೆ ನಾನು. ಅಥವಾ ಕೈಹಿಡಿದು ಅವಳ ಹೆಜ್ಜೆಯ ವೇಗಕ್ಕೆ ಸರಿದೂಗಿಸಲು ನಾಲ್ಕು ಹೆಜ್ಜೆ ಕುಣಿಯುತ್ತ ನಾಲ್ಕು ಹೆಜ್ಜೆ ನಡೆಯುತ್ತ ನಾನು, ಅವಳು ಏನು ಹೇಳುವವಳೋ ಅದು ಅರ್ಥವಾಗಬೇಕಂತಲೂ ಇಲ್ಲದೆ ಹೂಂಗುಡುವುದು ನಗುವುದು ‘ಹೋಗಲಿ ಬಿಡು’ ಎನ್ನುವುದು……. +ಹಾಂ. ಹಾಗೆ ಹೊರಟಳಲ್ಲ ಎರಡು ಜಡೆ ಬಿಟ್ಟುಕೊಂಡು ಅಮ್ಮಚ್ಚಿ, ಸತ್ಯನಾರಾಯಣ ಪೂಜೆಗೆ, ವೆಂಕಪ್ಪಯ್ಯ ದಾರಿಯಲ್ಲೇ ಸಿಕ್ಕಿದ. “ಏನಿಯ? ಇದೇನಿಯ ಯೇಸ. ಬೊಂಬಾಯಿ ಲೇಡಿಯ ಹಂಗೆ, ವಾರೆ ಬಕ್ತಲೆ! ಶಿ……ಶಿ……ನಡೆ ಮನೆಗೆ. ಸರಿಯಾಯಿ ಬಾಚಿಂಡು ಹೋವು” ಎಂದ. ಅದಕ್ಕೆ ಅಮ್ಮಚ್ಚಿ “ಹೋವುಯ, ನೀ ಮನೆಗೆ ಹೋವು. ಹೋಯಿದ್ದ್ ಗಡದ್ದು ಒಂದು ಲೋಟೆ ಚಾಯ ಕುಡಿ. ಅಮ್ಮನ ಹಕ್ಕೆ ಹೇಳ್, ಹಂಗೂ ಮಾಡಿ ಕೊಡ್‌ತ್ಲ್…. ನನ್ನ ಸುದ್ದಿಗೆ ಮಿನಿ ಬರಳೆ. ಬೋಳುಮಂಡೆ ಕಾಕ. ನಿಂಗೆ ವಾರೆ ಬಿಡು, ಯಾವ ಬಕ್ತಲೆಯೂ ತೆಗೆಯಗಾಗದ ಸಂಕಟಕ್ಕೆ ನಂಗೆ ಯಾಕೆ ಹೇಳ್ತೆ?” ಎಂದವಳು ನನ್ನ ಕೈ ಹಿಡಿದು “ಬಾಯಿ ಬೀಸ ನೀನು. ಮೆಲ್ಲ ನಡೆದ್ರೆ ಹಿಂಗೇ. ನಾಯಿ ಸಂತಾನಗಳೆಲ್ಲ ಎದುರಾತೋ.” ಎಂದು ಎಳೆದುಕೊಂಡು ಮುಂದೆ ನಡೆದೇಬಿಟ್ಟಳು! “ಸುಟ್ಟದ್ ಎಲ್ಲಿ ತಯಾರಾಯ್ತೋ ನಮ್ಮ ಮನೆಗೇ….” ಅಂತೆಲ್ಲ ಗೊಣಗುತ್ತ. +ಕಾನೂನಿನವಳೆಂದೇ ಎಲ್ಲ ಹೇಳುವ ಅಮ್ಮಚ್ಚಿಯ ಕಾನೂನು ಎಂದರೆ ಹೀಗೆಂದೇ – ವೆಂಕಪ್ಪಯ್ಯನಿಗೆ ಖಿಶಿಯಿಲ್ಲವೆಂದು ತಾನು ಯಾಕೆ ವಾರೆಬೈತಲೆ ತೆಗೆಯಬಾರದು? ಎಂಬಂಥದೇ. ದಾತಾರರೆಂಬುವರು ಇಲ್ಲದ ಸೀತತ್ತೆಯ ಒಬ್ಬಳೇ ಮಗಳು ಅಮ್ಮಚ್ಚಿ. ಮನೆಯಲ್ಲಿ ಬೇರೆ ‘ಗಂಡು ಬಲ’ ಎಂಬುದು ಇಲ್ಲ. ಸೀತತ್ತೆಯ ‘ಸ್ಥಿತಿ ಲಾಗಾಯ್ತಿನಿಂದ’ ವೆಂಕಪ್ಪಯ್ಯನೇ ಎಲ್ಲದಕ್ಕೂ ಓಡಾಡಿದ ಹುಡುಗನಂತೆ. ತಂದೆ ಸಾಯುವಾಗ ಅಮ್ಮಚ್ಚಿಗೆ ಇನ್ನೂ ಆರು ತಿಂಗಳಷ್ಟೇ ಅಂತೆ. ಹನ್ನೆರಡು ವರ್ಷದ ವೆಂಕಪ್ಪನನ್ನು ಸೀತತ್ತೆ ಅಲ್ಲಿ ಇಲ್ಲಿ ಓಡಲು, ಅದು ತರಲು ಇದು ತರಲು ಹೇಳುತ್ತಿದ್ದರು. ಯಾರಿಲ್ಲದವ ಮನೆಯೆಂಬಂತೆಯೆ ಇದ್ದುಬಿಟ್ಟ. ಹೀಗೆ ಒಳಬಂದ ವೆಂಕಪ್ಪ ಬೆಳೆಯುತ್ತ ಬೆಳೆಯುತ್ತ ವೆಂಕಪ್ಪಯ್ಯನಾದ. ಅಮ್ಮಚ್ಚಿಯ ಹಕ್ಕುದಾರನೂ ತಾನೇ ಎಂಬಂತಾದ. “ಅವಳನ್ನು ಮದುವೆಯಾಪುಗೆ ಇನ್ನು ಯಾವ ಪುಣ್ಯಾತ್ಮ ಬಪ್ಪ? ಮಗಳ ಚಿಂತೆ ನೀವು ಮಾಡಳೆ. ನಾನಿದ್ದೆ.” ಎಂದು ಸೀತತ್ತೆಯ ಹತ್ತಿರವೂ ಹೇಳುತ್ತ ಊರ ತುಂಬವೂ ಅದನ್ನೇ ತುಂಬಿಸುತ್ತ ಅಮ್ಮಚ್ಚಿಯ ಕಣ್ಣಲ್ಲಿ ದಿನದಿನವೂ ಅಸಹ್ಯವಾಗುತ್ತ ಇದ್ದ. “ಗದ್ದೆ ಉಳುಪ ಕೋಣವಾದರೂ ಇವನಿಗಿಂತ ಊಂಚು…ಒಡ್ಡ ಎಲ್ಲಿದೋ. ಕಾಣ್, ಅವ ನನ್ನ ಕಂಡರೆ ನಿನ್ನ ಕಂಡಂಗೆ ಆತ್.” ಎಂದು ಕುಟು ಕುಟು ನಗುತ್ತಿದ್ದಳು ಅಮ್ಮಚ್ಚಿ. ನೋಡಿದರೇ ವೆಂಕಪ್ಪಯ್ಯನೇನೂ ಒಡ್ಡನಲ್ಲ! ಏನೋ ಅಮ್ಮಚ್ಚಿಯ ಮಾತೇ ಅರ್ಥವಾಗದೆಯೂ ನಾನು ನಗುತ್ತಿದ್ದೆ. “ಓಯ್, ಸಾಣೆಮಂಡೆ ಯಂಕಪ್ಪಯ್ಯ, ನಿಮ್ಮ ಚೀಟಿ ಜಪಾನಿಗೆ ಹೋತುದ್ ಯಾವಾಗ?” ಎಂದು ಅವ ಆಚೀಚೆ ಹೋಗುವಾಗ ಅವನಿಗೆ ಕೇಳದಂತೆ ನನಗೆ ಮಾತ್ರ ಕೇಳುವಂತೆ ಅವಳು ಹೇಳಿದರೆ, ಇದಾದರೆ ಸೈ ಅರ್ಥವಾಗುವುದೆ. ಪಾಪ, ಘಳಘಳ ಹೊಳೆಯುವ ಅವನ ಬೋಳುಮಂಡೆ ಇದ್ಯಾವ ಗೋಚರವೂ ಇಲ್ಲದೆ ಅತ್ತ ಸಾಗಿದಾಗ ನಗದೇ ಇರುವುದಾದರೂ ಹೇಗೆ? ಮಾತಿಗೊಂದು ನಗೆಯ ಗ್ಯಾರೆಂಟಿ ಸಿಕ್ಕಿದರೆ ಮಾತಾಡುವವರಿಗೂ ಹುರುಪು ಬರುತ್ತದಷ್ಟೆ. ಅಮ್ಮಚ್ಚಿ ಮತ್ತು ನನ್ನ ಜೊತೆ ಹಾಗಿತ್ತು. +ಅವತ್ತೊಂದು ದಿನ – +“ಪೇಟೆಗೆ ಹೋಪಯ!” ಎಂದಳು ಅಮ್ಮಚ್ಚಿ. +“ಹೋ.” +“ಅಲ್ಲಿಂದ ದೇವಸ್ಥಾನಕ್ಕೆ ಹೋಪ.” +“ಹೋ.” +“ಅಲ್ಲಿಂದ….. – ಅಮ್ಮ, ಮನೆಗೆ ಏನಾರು ಸಾಮಾನು ಗೀಮಾನು ಬೇಕ?” +“ಬೇಕಾರೆ ನೀ ಯಂತಕ್ಕೆ ಕೊಂಡರ್ತದ್ ಈಗ? ಅದೇ ನೆಪಲೆ ಪೇಟೆ ಮೆರವಣಿಗೆ ಮಾಡುಗ? ಯಂಕಪ್ಪಯ್ಯ ತರ್ತ?” +“ಯಾಕೆ? ಯಾಕೆ ಅವಂಗೆ ಹೇಳ್ತ್‌ದ್? ಒಂದು ಕಾಲಲೆ ಅವ ಬೇಕಾಯ್ತ್, ಹೇಳಿಯಾಯ್ತ್, ತ್ರಿಸಿಂಡಾಯ್ತ್. ಇನ್ನೂ ಇನ್ನೂ ಯಾಕೆ ಅವ ನಮಗೆ? ನಾನಿಲ್ಲಯ? ನಂಗೆ ತೆಳಿತಿಲ್ಲಯ? ನಂಗೆ ಹೇಳಗಾಗದ?” +“ಹಂಗಂದ್ರೆ ಸೈ ಮಾರಾಯ್ತಿ, ಹೋವು ನೀನೇ” – ಅಂತ ಬೇಕಾದ ಸಾಮಾನುಗಳನ್ನು ಹೇಳಿದರು, ದುಡ್ಡು ಕೊಟ್ಟರು ಸೀತತ್ತೆ. ಏನು ಪುಣ್ಯವೋ ಅಷ್ಟು ಬೇಗ ಒಪ್ಪಿದ್ದು. ಅಮ್ಮಚ್ಚಿಯ ಮುಖ ಆಗಿದ್ದೆಂದರೆ! “ಬಾ ಬಾ ಬಾ ಹೊರಡುವ. ಎನ್ನು ಆ ಸನ್ನಿಮೀರಿದವ ಬಂದರೆ ಜಂಬರ ಎಲ್ಲ ಆಡಿಮೇಲು” – ಎಂದು ಅವಸರದಿಂದ ಒಳಗೆ ಓಡಿದಳು. ಜಡೆ ಬಿಚ್ಚಿ ತಲೆ ಬಾಚಿಕೊಂಡು, ಹೆಣೆಯದೆ ಹಾಗೆಯೇ ಕಟ್ಟಿಕೊಂಡಳು. ಅದು ರುಮು ರುಮು ಹಾರುವಾಗ “ ಹೆಂಗೆ ಕಾಣ್ತಿಯ? ನಂಗೆ ಒಂಬುತ?” ಎಂದು ಉತ್ಸಾಹ ತಾಳಿದಳು. ಖಾಲಿಯಾತುತ್ತ ಬಂದಿದ್ದ ಹಿಮಾಲಯನ್ ಬುಕೆಯ ಉದ್ದ ಕರಡಿಗೆ ಬುಡವನ್ನು ಬಡಿದು ಬಡಿದು ತನ್ನ ಪುಟ್ಟ ಡಬ್ಬಿಗೆ ಪೌಡರು ಉದುರಿಸಿಕೊಂಡಳು. ಒಂದು ಡಬ್ಬಿ ತೆಗೆದುಕೊಂಡರೆ ವರ್ಷವಿಡೀ ಸಾಕಂತೆ ಅವಳಿಗೆ. “ಅಮ್ಮ ಹೆಂಗೂ ಪೌಡರುಗಿವ್ಡರು ಹಚ್ಚಿಂತಿಲ್ಲೆ. ಅವಳು ಹಚ್ಚಿಂಡ್ರೆ ಆತೆಂತದೂ ಇಲ್ಲೆ. ಜಾಸ್ತಿಯೆಂದರೆ ಆಚೀಚೆ ಹೋಪ್ತಿಗೆ ಉಂಚ ಪರಿಮಳ ಬಕ್ಕು. ಅವಳಿಗೆ ಬೆಡ ಉಂಬ್ರು. ಯಾರಾರು ಏನಾರೂ ಹೇಳ್ತ್ ಅಂದ್ ಅಂಜಿಕೆ. ಆ ಹೇಳ್ತವ್ರು ಉಂಟಲ್ಲ, ಮೂರಿ ಬಂದರಾರೂ ಸೈಸಿಂತೊ. ಪರಿಮಳನ್ನ ಸೈಸಿಂತಿಲ್ಲೆ.” ಎನ್ನುತ್ತ ಮುಖಕ್ಕೆ ಬಡಬಡ ಪೌಡರು ಹೊಡೆದುಕೊಂಡು ತಿಕ್ಕಿ ಒರೆಸಿಕೊಂಡಳು. ನನ್ನ ಮುಖಕ್ಕೂ ಪೌಡರು ಹೊಡೆದು ಲಾಲಗಂಧ ಇಟ್ಟಳು. ಅಮ್ಮಚ್ಚಿ ಹೊರಡುವಾಗ ಹೀಗೆ, ಸಂಭ್ರಮವೇ ಹೊರಡುತ್ತದೆ! ಆದರೆ ಆಗಲೇ ಹೇಳಿದಂತೆ, ಹೊರಡುವುದಾದರೂ ಎಲ್ಲಿಗೆ ಅಂತ ಬೇಕಲ್ಲ? “ಅಪ್ಪ ಸತ್ತ ಮೇಲೆ ನಮ್ಮನ್ನು ಮೂಸಿದವರುಂಟ? ಆಚೆ ಅಪ್ಪನ ಕಡೆಂದಲೂ ಇಲ್ಲೆ. ಈಚೆ ಅಮ್ಮನ ಕಡೆಂದಲೂ ಇಲ್ಲೆ…… ಹೋತ್‌ದ್ ಬಪ್ಪನಾಡು ಜಾತ್ರೆಗೆ. ಆದೂ ಇಲ್ಲದ್ರೆ ಏನು ಮಾಡಗಿತ್ತು!” ಎಂದು ನಕ್ಕಳು. “ಯಾರು ಇಲ್ಲದ್ದಕ್ಕೆ ಈ ಯಂಕಪ್ಪಯ್ಯ ಸವಾರಿ ಮಾಡ್ತ. ಅವಂಗೆ ಸಾವೂ ಬರ್ತಿಲ್ಲೆ ಅಲ್ದ?” ಎನ್ನುತ್ತಾ ಸೀರೆ ಉಟ್ಟಳು. ಸೆರಗು ಪಟ್ಟಿ ಮಾಡಿಕೊಂಡಳು. ಎರಡೂ ಅಂಚುಗಳು ಸರಿಯಾಗಿ ಕಾಣುವ ಹಾಗೆ ಮೂರು ಪಟ್ಟಿ ಮಾಡಿಕೊಂಡಳು. “ನಿಂಗೆ ಪಿನ್ನು ಕುತ್ತ್‌ಗೆ ತೆಳಿತ? ಅದು ಒಂಚೂರು ಹಿಂದೆ ಕುತ್ತಗು. ಕಾಂಬ, ಕುತ್ತು.” – ನಾನು ಅವಳು ಹೇಳಿದಲ್ಲಿಗೆ ಪಟ್ಟಿಸೆರಗಿಗೂ ರವಕಿಗೂ ಹೊಂದಿಸಿ ಪಿನ್ನು ಕುತ್ತಿದೆ. “ಹ್ಞಂ! ಹಿಂಗೆ! ನೀನೊಬ್ಬಳು ನಂಗೆ ಸಾರಥಿ. ನೀನೂ ಇಲ್ಲದ್ರೆ ಏನ್ ಮಾಡಗಿತ್ತು ನಾನು?” ಎಂದಳು. ಇದ್ದದ್ದನ್ನು ಹೇಳುತ್ತ ‘ಇಲ್ಲದಿದ್ದರೆ’ ಎಂದು ಚಿಂತಿಸುವ ಅಮ್ಮಚ್ಚಿ! ನಕ್ಕರೆ ಅವಳ ಗೆರಸಿ ಮುಖ ‘ಅರಳಿದ ಕಮಲದ ಹಾಗೆ’ ಎನ್ನುತ್ತಾರಲ್ಲ ಅದೇ. ಗೆಲು ನಮಗೂ ಹರಡಿಕೊಳ್ಳುತ್ತದೆ. ಅವಳು ಒಂದು ನಕ್ಕರೆ ಎದುರಿಗಿರುವವರು ನಾಲ್ಕು ನಗಬೇಕು….. ಹಿತವಿದ್ದರೆ. +ಅಮ್ಮಚ್ಚಿ ಅಮ್ಮಚ್ಚಿ….. +ಸಣ್ಣ ಉರುಟು ಕನ್ನಡಿಯಲ್ಲಿ ಆಚೆ ಬಗ್ಗಿ ಈಚೆ ಬಗ್ಗಿ ಹಿಂದೆ ಹೋಗಿ ಚೂರು ಚೂರೇ ನೋಡಿಕೊಳ್ಳುತ್ತ “ಅಲ್ಲ, ಶಂಭಟ್ಟರ ಮನೆಲೆ ಗೊತ್ತುಂಟ? ಎಷ್ಟುದ್ದ ಕನ್ನಡಿ! ಮೇಲಿಂದ ಹಿಡಿದು ಕೆಳಗಿನವರೆಗೆ ಕಾಣ್‌ತ್!! ಇದಯ, ಎಲ್ಲಂತೆ? ಮಾಯಿಯ ಕೋಣೆಲೇ!! ಮಾಯಿಗೆ ಎಂಥಾ ಗಮ್ಮತ್ತು ಕಾಣ್!…. +“ಎಂತ ಗಮ್ಮತ್ತು?” +“ಥೂ ನಿಂಗೆ ಗೊತ್ತಾತಿಲ್ಲೆ. ಉಂಚ ದೊಡ್ಡವಳಾಗ್ಗು…. ಅಲ್ಲ, ಅಷ್ಟು ದೊಡ್ಡ ಕನ್ನಡಿ ಮಾಯಿಗೆ ಬೇಕ? ಮೇಲಿಂದ ಕೆಳಗಿನವರೆಗೆ ಕಂಡಿಂತ್ರ ಹಂಗರೆ! ಕಂಡಿಂಬುಗೆ ಅವರಿಗೆ ಯಂತ ಉಳಿದಿಂತ್ ಅಂತ ಬೇಡ್ದ! ಆ ಕನ್ನಡಿ ನಂಗಾರೂ ಇದ್ದಿವ್ರೆ!” ಎಂದಳು. +ಹಾಂ ಅಂತೂ ಶೋಕು ಮುಗಿಯಿತು, ಇನ್ನೇನು ಹೊರಡಬೇಕು – ಬಂದೇಬಿಟ್ಟ ವೆಂಕಪ್ಪಯ್ಯ. +“ಬಂತಲ್ಲ ಯಂಕಪ್ಪಯ್ಯನ ಕೋಲ” +ಅಮ್ಮಚ್ಚಿಯ ಮುಖ ಕಂದಿದಂತೆ ಕಾಣಿಸಿ ನಾನೆಂದೆ, “ಯಂಕಪ್ಪಯ್ಯ ಅಲ್ಲ ಅವ – ಕುಂಕಪ್ಪಯ್ಯ” – ಸೈ, ಅಮ್ಮಚ್ಚಿ ಒಂದು ನಕ್ಕಿದ್ದೆಂದರೆ! ಬಿದ್ದು ಬಿದ್ದು ನಕ್ಕಳು, “ನೀನೊಬ್ಬಳೇ ಈ ಪ್ರಪಂಚಲೆ ಸಮ. ಮತ್ತೆ ಯಾರೂ ಸಮ ಇಲ್ಲೆ. ಕಾಣು, ಒಬ್ಬರಿಗಾದರೂ ಅವ ಕುಂಕಪ್ಪಯ್ಯನ ಹಂಗೆ ಕಾಣ್ತನ?….. ಎನ್ನುತ್ತ. +ಹಾಂಗಾದರೆ ಅಂದು ನಾನು ಒಟ್ಟಾರೆ ಹೇಳಿದ ‘ಕುಂಕಪ್ಪಯ್ಯ’ ಎಂಬುದಕ್ಕೆ ಏನೋ ವಿಶೇಷ ಅರ್ಥ ಇರಬೇಕಂತ ನಾನು ಎಷ್ಟು ದಿನ ಗಟ್ಟಿನಿಂಬಿಕೊಂಡಿದ್ದೆ. +ಹೂಂ…. ವೆಂಕಪ್ಪಯ್ಯ ಬಂದ “ಏನು ಏನು ಏನು! ಕೋಲ ಕಟ್ಟಿಂಡ್ ಹೊರಟ್‌ದ್ ಎಲ್ಲಿಗೆ ಮೆರವಣಿಗೆ?” +“ಟೋಕರ ಗುಡ್ಡೆಗೆ.” +“ಯಂತದಕ್ಕೆ ಹೊರಗೆ ಹೋತ್‌ದೀಗ?…..” +“ಸಂಕಪಾಸಣ ತಗಂಬುಗೆ. ದಾರಿ ಬಿಡಿಯ ನೀನು.” +ಆತ ದಾರಿ ಬಿಡದೆ “ಏನು ಯೇಸ ತಕಂಡು ಹೋತ ಪೇಟೆಯವ್ವ ಹಂಗೆ! ಶ್ಯೆಕ್ಕ್… ಎದೆ ಎರಡೂ ಕಾಣ್ತ ಹಂಗೆ ಪಟ್ಟಿ ಸೆರಗು ಹಾಸಿಂಡ್ ಹೊರಟೆಯಲ್ಲ! ಯಾರ ಮರ್ಯಾದೆ ತೆಗೆಗೆ?” ಎಂದ. ಅವ ಅಮ್ಮಚ್ಚಿಗೆ ಬೈದರೂ ಜೊತೆಗಿದ್ದ ನನಗೂ ಆ ಬೈಗುಳದ ಬಿಸಿಯನ್ನು ಹೇಗೆ ತಾಕಿಸುತ್ತಿದ್ದ! ಅಮ್ಮಚ್ಚಿ ದುರುಗುಟ್ಟಿ ಅವನನ್ನೇ ನೋಡುತ್ತ “ನೀ ಹೋವುಯಾ ಕೋಮಣ ಬಿಟ್ಟಿಂಡ್ ಎಲ್ಲಿಗೆ ಬೇಕಾರೂ. ನಾ ಕೇಣ್‌ತ್ನ? ನಾ ನಂಗೆ ಬೇಕಾದ ಹಂಗೆ ಹೊರಟರೆ ನಿಂಗೆ ಯಾಕೆ ಕಿಚ್ಚು?” +“ನಡೆ ಒಳಗೆ ಅಂದೆ.” +“ನೀ ಯಾರು ನಂಗೆ ಹೇಳುಗೆ ಅಂದೆ” +“ಕಾಲು ಮುರಿತೆ” +“ನಾನೇನು ಬಾಯಿಗೆ ಕಡ್ಲೆ ಕಾಳು ಬೀಸಿಂತ ಕುಳ್ಕಂತ್ನ?” +ವೆಂಕಪ್ಪಯ್ಯ ಸೀತತ್ತೆಯನ್ನು ಕರೆದ! “ಹಿಂಗೆಲ್ಲ ಮಾಡಿಂಡ್ ಇವಳು ಪೇಟೆಗೆ ಹೊರಡ್ತ್‌ದ್, ಬಾಸಾಯಿ ತಿಂತದ್, ಯಾಕೆ ಬೇಕಾಯಿ ಈಗ! ಪೇಟೆ ಸಾಮಾನು ಬೇಕಾರೆ ನಾನು ಕೊಣಂದ್ ಕೊಡ್ತಿಲ್ಲಯ?” ಮುಂತಾಗಿ ಹೇಳುತ್ತ ಹೇಳುತ್ತ ಕಡೆಯ ಬಾಣವಾಗಿ “ನಿಮಗೆ ಗೊತ್ತಿಲ್ಲೆ, ಇವಳು ಪೇಟೆ ಪೇಟೆ ಅಂದ್ ಹೋತ್‌ದ್ ಆ ಶಂಭಟ್ಟರಮನೆಗಲ್ದ? ಅವರ ಮನೆ ಜಗಲಿ ಕಾಸ್‌ತದ್, ಬಾಯಿ ಕಳ್ದ್ ನಗಾಡ್‌ತ್‌ದ್. ಅವು ಇವಳ ಹಲ್ಲೆಲ್ಲ ಲೆಕ್ಕ ಮಾಡಿಂತೋ.” ಸುಳ್ಳು. ಸುಳ್ಳು ಸೀತತ್ತೆ ಎಂದು ನಾನು ಕಷ್ಟಪಟ್ಟು ಕೂಗಿದ್ದು ಸೀತತ್ತೆಗೆ ಕೇಳಿಸುವುದೇ ಇಲ್ಲ. ಸುರುಮಾಡಿಯಾಯಿತು ಅವರು, “ಹೌದ್ದ ಹೆಣ್ಣೆ, ಹಿಂಗಾ ಇಚಾರ?….” ಅಂತೆಲ್ಲ ಇರುತ್ತಲ್ಲ? +“ಅವರ ಮನೆಗೆ ಹೋತಾರೆ ನಿಂಗೆ ಹೇಳಿಯೇ ಹೋಪೆ. ಸುಳ್ಳು ಹೇಳ್ತ ಗರ್ಜು ಇವತ್ತಿಗೆ ನಗಿಲ್ಲೆ. ಈ ಬಿರ್ಕನಕಟ್ಟೆ ದೈವದ ಮಾನು ಕೇಂಡ್‌ದ್ ನಂಗೆ ಯಾಕೆ ಬೈತೆ ನೀನು?” +ಸೀತತ್ತೆ ಸ್ಫೋಟವಾದರು. “ಅಯ್ಯೋ…. ಹೆಚ್ಚು ವಾದ ಮಾಡಳೆ ಮಾರಾಯ್ತೇ, ಇನ್ನು ಹೆಚ್ಚು ವಾದ ಮಾಡಳೆ. ಯೆಂಕಪ್ಪಯಾನು‌ಊ ಇಲ್ಲದೆ ಹೋದ್ರೆ ಆಗ ಗೊತ್ತಾಕ್ ನಿಂಗೆ ನಮ್ಮ ಅವಸ್ಥೆ ಏನ್ ಅಂದ್….” ಅಂತೆಲ್ಲ ಅವನ ಎದುರಿಗೆ ಕಿರುಚುತ್ತ, ಹೊರಟುನಿಂತ ಅಮ್ಮಚ್ಚಿಯನ್ನು ಅಕ್ಷರಶಃ ಒಳಗೆ ನೂಕಿದರು. ವೆಂಕಪ್ಪಯ್ಯ ನನ್ನನ್ನೂ ನುಂಗುವಂತೆ ನೋಡಿದ್ದೇ ನಾನು ಓಡಿಹೋಗಿ ಅಮ್ಮಚ್ಚಿಯನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡೆ. ಕೈ ಬಿಡಿಸಿಕೊಂಡು ತಲೆ ನೇವರಿಸಿದಳು ಅಮ್ಮಚ್ಚಿ. “ಹೆದರಳೆ. ಅದು ಪೋಂಕು. ಪೋಂಕುಗಳಿಗೆಲ್ಲ ಹೆದರಗೇ ಆಗ. ಬಾ. ನಾವು ಮಡಲು ಹೆಣೆವ.” ಅವಳ ಸ್ವರ ಕಂಪಿಸುತ್ತಿತ್ತು. ಕಣ್ಣಲ್ಲಿ ಮಾತ್ರ ಒಂದು ಹನಿ ನೀರು ಕೂಡ ಇರಲಿಲ್ಲ. ಮಡಲು ನೆನೆಸಿದ ಕಟ್ಟೆಗೆ ನಡೆದಳು ಅಮ್ಮಚ್ಚಿ ತಣ್ಣಗೆ ಮಂಜುಗಡ್ಡೆಯಂತೆ. ನೆನೆದ ಒಂದು ದೊಡ್ಡ ಮಡಲನ್ನು ಎತ್ತಿ ಅಂಗಳಕ್ಕೆ ಹಾಸಿಕೊಂಡಳು. ನನಗೂ ಒಂದು ಚಿಕ್ಕ ಮಡಲು ಕೊಟ್ಟಳು. “ನಿಂಗೆ ಹೇಳಿ ಕೊಡ್ತೆ. ಕಲಿ. ಎಲ್ಲ ಇದ್ಯೆ ಬರಗು. ಯಾವ್ದೂ ಬರ್ತಿಲ್ಲೆ ಅಂತೆಳಿ ಇಪ್ಪುಗಾಗ.” ಒತ್ತಿಟ್ಟ ಹಾಗಿದ್ದ ಸ್ವರವನ್ನು ಸಹಜ ಮಾಡಿಕೊಂಡು ಸೋಲದಂತೆ ತನ್ನ ಸಧ್ಯವನ್ನು ನಿಭಾಯಿಸಲು ಹೊರಟಂತೆ ಮಾತು ಮುಂದುವರಿಸಿದಳು ಅಮ್ಮಚ್ಚಿ. +“ಇದ, ಈ ಗರಿ ಹಿಂಗೆ ಮುರಿ. ಹಿಂಗೆ ಹಿಮ್ಮಡ್ಚು. ಒಂದು ಬಿಟ್ಟು ಒಂದರ ಹಿಂದೆ ಒಂದು ಬಿಟ್ಟು ಒಂದರ ಹಿಂದೆ ಸೇರಿಸ್ತ ಬಾ. ಉಂಚ ಬಿಗೀ ಎಳಕೊ. ಇಲ್ಲದ್ರೆ ಚಡಿ ಬಿಡ್‌ತ್. ಚಾಪೆ ನೇಯ್ತ ಕ್ರಮವೂ ಹಿಂಗೇ. ನಂಗೆ ಮಡಲು ನೇಯ್ತ ಅಂದ್ರೆ ಸೈ” ಎಂದಳು. ಹಂಗೇ….. ಹಿಂಗೇ….. ಎಂದು ನಾನು ಹೆಣೆಯುತ್ತ ಬಂದ ಹಾಗೂ ರಾಗವೆಳೆದಳು. “ಸಾಬಾಸ್. ಇನ್ನು ಮೇಲೆ ದಿನಾ ಮೂರು ನಾಲ್ಕು ಮಡಲು ಹೆಣೆವೆನೆ? ಪಂಥ ಕಟ್ಟುವ. ಯಾರು ಹೆಚ್ಚ್ ಹೆಣೆತ್ರ್ ಅಂದ್. ಹೊತ್ತ್ ಹೋದ್ದೇ ತೆಳಿತಿಲ್ಲೆ…. ಮುಗಿತಾ? ಹಾಂ. ಬದಿಯ ಗರಿಯನ್ನೆಲ್ಲ ಒಟ್ಟು ಸೆರಿಸಿ ಅಂಚು ತಿಪ್ಪ್‌ತಾ ಬಾ. ಗಂಟೊ ಹಾಕು. ಹಣಣಣಗೆ…… ಅವಂಗೆ ಮಾಡ್‌ಸ್ತೆ ಬಗೆ. ನಾನು ಬಾಳ್ಪುತೆ ಅಂದ್ ಮಾಡಿದ. ಬಾಳ್ಪಿಯೇ ಬಿಟ್ಟೆನಾ ನಾನು? ಅವನ ಕಣ್ಣೆಲೆ ನೀರು ಬರಿಸ್ದೇ ಇದ್ರೆ ನಾನು ನನ್ನ ಹೆಸರಲ್ಲ….. ಯಾವುದಕ್ಕೂ ನಂಗೊಬ್ಬ ಗಂಡ ಬರಡು. ಮತ್ತೆ ಉಂಟು ಇವಂಗೆ ಕಂಬಳ….” ಅಮ್ಮಚ್ಚಿ ಅವಡುಗಟ್ಟಿ ಮಡಿಲಿನಂಚನ್ನು ತಿಪ್ಪುತ್ತಿದ್ದಳು. “ಹಿಂಗೇ ದಿವಸಾ ನೇಯ್ದರೆ ನಮ್ಮ ಮದುವೆಗೂ ನಾವು ಹೆಣೆದ ಮಡಲನ್ನೇ ಹಾಕಳಕ್ಕು. ಕಾಣೀಲ್ಲಿ ಎಷ್ಟಗಲ! ಅಂಕಣ ಚಾಪೆಗಿಂತ ಅಗಲ” ಎಂದು ನಕ್ಕಳು. ಕಣ್ಣಂಚು ಹೊಳೆಯುತ್ತಿತ್ತು. ನಗೆಗೂ ಅಳುವಿಗೂ ಸಿಟ್ಟಿಗೂ ಹೊಳೆದುಕೊಂಡೇ ಇರುವ ಕಣ್ಣಂಚಿನ ಅಮ್ಮಚ್ಚಿ.”ಅಮ್ಮ ನಾವು ದೇವಸ್ಥಾನಕ್ಕೆ ಹೋಯಿದ್ದ್ ಬರ್ತೊ.” ಎಂದು ನನ್ನನ್ನೂ ಕರೆದುಕೊಂಡು ಅಮ್ಮಚ್ಚಿ ಹೋದದ್ದು ಎಲ್ಲಿಗೆ ಎಂದರೆ ರಮಾ ಟೀಚರ್ ಮನೆಗೆ. “ಮತ್ತೆ? ಸೀದ ಹೇಳ್ತವರಿಗೆ ಕಾಲ ಅಲ್ಲಯ ಇದು. ಸತ್ಯ ಹೇಳಿದ್ರೆ ಬಿಡದ್ರ ಮೇಲೆ ಸುಳ್ಳು ಹೇಳಗೇ ಆಯ್ತ?” ಎಂದು ನನ್ನ ಆಶ್ಚರ್ಯ ತಿಳಿಯಿತೆಂಬಂತೆ ತಾನಾಗೇ ಹೇಳಿದಳು. ರಮಾ ಟೀಚರ್ ಹೊಲಿಗೆಯವರು. ಅಮ್ಮಚ್ಚಿಗೆ ಹಿಂದುಗುಬ್ಬಿಯ ರವಕೆ ಬೇಕಂತ ಉಂಟು.. ಶಂಭಟ್ಟರ ಮನೆಗೆ ಬರುವ ಹುಡುಗಿಯರು ಕೆಲವರು ಹಿಂದುಗುಬ್ಬಿಯ ತೊಟ್ಟದ್ದು ಕಂಡಿದ್ದಳಂತೆ. +“ನೀನು ಕಂಡಿದ್ದೆಯ?” +“ಇಲ್ಲಪ್ಪ” +“ಅದೆಲ್ಲ ನಿಂಗೆ ಕಾಣ್ತಿಲ್ಲೆ…. ಹಿಂದುಗಿಬ್ಬಿ ರವಕೆನ್ನ ರಮಾಟೀಚರ್ ಚಂದ ಹೊಲೀತ್‌ರಂಬ್ರು. ಅಲ್ಲಯ, ನಾನು ಹೊಲಿಸಿಂಡ್ರೆ ಹಿಂದಿನಿಂದ ನೀನು ಗುಬ್ಬಿ ಹಾಕ್ತೆಯಲ್ಲ….. ನಾನು ಅಭ್ಯಾಸ ಮಾಡಿಂತವರೆಗೆ?” +“ಒಹೊ. ನಾನೇ ಹಾಕ್ತೆ.” +“ನೀನು ಹಾಕ್ತ್‌ದ್ ಅಂದ್ ಮತ್ತೆ ಯಾರ ಹಾಕ್ಯೈಯೂ ಹೇಳಗಾಗ?” +“ಹೇಳ್‌ತಿಲ್ಲಪ್ಪ.” +ಹೊಲಿಗೆ ಮಿಶನ್ನಿನ ಮೇಲೆ ಕೆಲಸದಲ್ಲಿದ್ದ ರಮಾಟೀಚರ್ ಮಿಶನು ನಿಲ್ಲಿಸಿ ನಮ್ಮತ್ತ ನೋಡಿದರು. ಏನು ಬಂದಿರಿ ಎಂಬಂತೆ ಅರ್ಧ ಹೊಲೆಯುತ್ತಿರುವ ಬಟ್ಟೆಯನ್ನೂ ಅರ್ಧ ನಮ್ಮನ್ನೂ ನೋಡುತ್ತ ಹುಬ್ಬೇರಿಸಿ ಇಳಿಸಿದರು. ರವಕೆ ಬಟ್ಟೆಯನ್ನು ರಮಾಟೀಚರ್‌ಗೆ ಕೊಟ್ಟಳು ಅಮ್ಮಚ್ಚಿ. “ಹಿಂದುಗುಬ್ಬಿ ಇಡಿ ಟೀಚರ್. ಅಮ್ಮನಿಗೆ ಹೇಳುವುದು ಬೇಡ. ಅದರ ವಿಚಾರ ನಾನು ನೋಡಿಕೊಳ್ಳುತ್ತೇನೆ.” ಎಂದಳು. ಮನೆಯಿಂದ ಹೊರಗೆ ಬಂದಳೆಂದರೆ ಅಮ್ಮಚ್ಚಿ ಮಾತಾಡುವುದು ‘ಕರ್ನಾಟಕ’! ಕೊಂಕಣಿ ಜಾತಿಯ ರಮಾಟೀಚರೂ ಹೊರಗಿನವರೊಡನೆ ಮಾತಾಡುವುದು ‘ಕರ್ನಾಟಕ’ವೇ. ರಮಾಟೀಚರ್ ಟೇಪು ಬಿಚ್ಚಿ ಅಳತೆ ತೆಗೆದುಕೊಳ್ಳುತ್ತಿದ್ದರೆ ಅದರ ಜೊತೆಜೊತೆಗೇ ಒಳಗೇ ನಗುತ್ತಿದ್ದಾರೆ ಅಂತಲೂ ಕಂಡಿತು. ಅಮ್ಮಚ್ಚಿ ಹಿಂದುಗುಬ್ಬಿಯ ರವಕೆ ಆಸೆಪಟ್ಟರೆ ಏನೋ ತಮಾಷೆ ಕೇಳಿದ ಹಾಗೆ ರಮಾಟೀಚರ್ ಯಾಕೆ ನಗಬೇಕು? +ಎಲ್ಲ ಮುಗಿದ ಮೇಲೆ “ಅಲ್ಲವನ ಅಮ್ಮಚ್ಚಿ, ಬ್ಯಾಕ್ ಬಟನ್ ಬ್ಲೌಸ್ ಹೊಲಿಯಬಹುದು. ಕಷ್ಟವಲ್ಲ. ಆದರೆ ವೆಂಕಪ್ಪಯ್ಯ ಕೊನೆಗೆ ನನಗೆ ಬಂದು ಗಲಾಟೆ ಮಾಡಿದರೆ? ಅವನಿಗೆ ಇದೆಲ್ಲ ಖುಶಿ ಇದ್ದ ಹಾಗೆ ಕಾಣುವುದಿಲ್ಲ….” ಎಂದರು! +ಹಳಬೆ ರಮಾಟೀಚರ್‌ಗೆ ಊರಿನ ಎಲ್ಲರೂ ಗೊತ್ತು. ಎಲ್ಲರ ಮನೆ ವಿಚಾರವೂ ಗೊತ್ತು. ಎಲ್ಲರಿಗೂ ರಮಾಟೀಚರ್ ಗೊತ್ತು. ಆದರೆ ಅಮ್ಮಚ್ಚಿ ಅಷ್ಟಕ್ಕೆ ಹೆದರುವವಳೇ? +“ಹ್ಞಾಂ! ಏನಂದಿರಿ ಟೀಚರ್? ಅವ ಯಾವ ದೊಡ್ಡ ಗುರಿಕಾರ ನಿಮಗೆ ಗಲಾಟೆ ಮಾಡಲಿಕ್ಕೆ! ಇದು ನನ್ನ ರವಕೆ. ನನಗೆ ಬೇಕಾದ ಹಾಗೆ ಹೊಲೆಯಿರಿ.” ಅವಳ ಆಜ್ಞೆಯ ದನಿ ಕೇಳಿ ರಮಾಟೀಚರ್‌ಗೆ ಮತ್ತಷ್ಟು ಮುಸಿ ನಗೆ! ಅಮ್ಮಚ್ಚಿ ಹೇಳುವಷ್ಟು ಹೇಳಿ ಒಂದು ನಿಟ್ಟುಸಿರು ಬಿಟ್ಟು ಅಲ್ಲಿಂದ ಎದ್ದಳು. ದಾರಿಯಲ್ಲಿ ಮೌನವಾಗಿಯೇ ಸಾಗುತ್ತ ಸುಮಾರು ಹೊತ್ತಿನ ಮೇಲೆ “ಏನು ಹಾಂಕಾರಿ! ನಾನು ಹೇಳ್ತ್‌ದ್ ಬೇಡ ಆ ಟೀಚರ್ತಿಗೆ ಯಂಕಪ್ಪಯ್ಯ ಉಂಬ್ರು…. (ಚಾಳಿಸಿ) ಯಂ….ಕಪ್ಪಯ್ಯ. ಅಂವ ಯಾರು ಹೇಳುಗೆ?” – ಅವಳ ಏನಂತಿ ಏನಂತಿ? ಎಂಬುದಕ್ಕೆ ಹೂಂಗುಡಲು ನಾನಿದ್ದೆ. +ಶಂಭಟ್ಟರ ಮನೆ ದೂರದಿಂದ ಕಾಣಿಸಿತು. “ಹೋಗಳಾಯಿಪ್ಪು ಅಲ್ಲಿಗೆ. ಕಸ್ತಲಾಪುಗೆ ಇನ್ನೂ ಸುಮಾರು ಹೊತ್ತು ಉಂಟು…. ಬೇಡ. ಈಗ ಬೇಡ…. ಎಲ್ಲಾದರೂ ಆ ಕುದ್ರಾಳು ಹಾವು ಕಾಂಬು…. ಶಂಭಟ್ಟರ ಮಗ ಬರ್ತ ಅಂಬ್ರಲ್ದ? ಗೊತ್ತುಂಟು ನಿಂಗೆ? ಅವ ಇದ್ಯೆ ಕಲಿತು ಮುಗಿತುಂಬ್ರು. ಇನ್ಮೇಲೆ ತೋಟ ಕಂಡಿಂತ ಉಂಬ್ರು…… ಅವಂಗೆ ಹಳ್ಳಿ ಹುಡುಗಿನ ಮದುವೆ ಮಾಡಿದ್ದು ಮನೆಲೇ ಕೂಡಿಸ್ತ ಅಂದಾಜುಂಬ್ರಲ್ಲ? ಅದೇ ಒಳ್ಳೇದು ಅಲ್ಲಯ?… ಆದರೆ ಅವನ ಅಬ್ಬೆ ಉಂಟಲ್ಲ ದೊಡಾ….. ಗಜಾಲಿ. ಗಂಡಂಗೆ ಬೇಕಾರೆ ನಾಕು ಹಾಕುಗೂ ರೆಡಿಯಂಬ್ರು! ಕೇಣಿಯ! ಹ್ಹ! …. ಕಂಡಿದ್ದೆಯಾ ಅವನ್ನ? ಶಂಭಟ್ಟರ ಮಗನ್ನ? ಅವ ಬಂದ ಮೇಲೆ ಒಮ್ಮೆ ಹೋಪ. ಏನಾರು ನೆಪ ಮಾಡಿಂದ್. ನಿಂಗೆ ತೋರಿಸ್ತೆ. ಅವ ಮಾತಾಡ್ತ ಅಪ್ಪ, ಎಷ್ಟು ಬೇಕಾರೂ ಮಾತಾಡ್ತ. ಹಮ್ಮುಗಿಮ್ಮು ಒಂಚೂರೂ ಇಲ್ಲೆ…..” +ಹೀಗೇ ಮನೆ ಮುಟ್ಟಿದೆವು.ರಮಾಟೀಚರು ಈ ಸಲ ರವಕೆಯನ್ನು ವೆಂಕಪ್ಪಯ್ಯನ ಹತ್ತಿರ ಮೆನೆಗೇ ಕಳಿಸಿಕೊಟ್ಟರು! ಅಮ್ಮಚ್ಚಿ ಪೆಕೇಟು ತೆಗೆದುಕೊಂಡು ಹೇಗಾಗುತ್ತದೆ ಎಂದು ನೋಡುವ ಅಂತ ಒಳಗೆ ಹೋಗುವ ನೀರಿನಲ್ಲಿ ನೆನೆನ್ಸಿದ ಒಣ ಬಾಳೆಸಿಪ್ಪೆಯಿಂದ ಹಗ್ಗ ಸಿಗಿಯುತ್ತ ಪಿಂಡೆ ಕಟ್ಟುತ್ತ ಇದ್ದ ಸೀತ್ತತ್ತೆಯನ್ನು ನೋಡಿ ವೆಂಕಪ್ಪಯ್ಯ ಮೆಲು ನಕ್ಕ. ಅವ ನಕ್ಕದ್ದು ನನ್ನ ಕಣ್ಣಿಗೆ ಬಿತ್ತೆಂದು ನನ್ನನ್ನೊಮ್ಮೆ ಅಪರಾಧಿಯಂತೆ ನೋಡುವಂತೆ ನೋಡಿ “ಮಾಲಶ್ಮಿ ಮಾಯಿಗೆ ಹೇಳಗು. ಅಮ್ಮಚ್ಚಿಯ ಸಂಗಡ ನಿಮ್ಮ ಮಗಳನ್ನು ಹೆಚ್ಚು ಬಿಡಳೆ. ಅವಳೂ ಹಾಳಾತ್ಲ್ ಅಂದ್.” ಎಂದು ನನಗೆ ಕೇಳುವಂತೆ ನುಡಿದು ಸೀತ್ತತ್ತೆಗೆ ಕಾಣದಂತೆ ಕಣ್ಣಲ್ಲೆ ಹೆದರಿಸಿದ. ನಾನು ಅಲ್ಲಿಂದ ಮೆಲ್ಲ ಎದ್ದು ಅಮ್ಮಚ್ಚಿ ಇದ್ದಲ್ಲಿಗೆ ಹೋಗುವ ತವಕದ ಹೆಜ್ಜೆ ಇಟ್ಟಿದ್ದೇನಷ್ಟೆ – +ಚೀತ್ಕರಿಸಿದಳು ಅಮ್ಮಚ್ಚಿ ಒಳಕೋಣೆಯಿಂದ. ದಂಗಾಗಿ ನೋಡಿದರೆ ಸೀತತ್ತೆ ಮತ್ತು ವೆಂಕಪ್ಪಯ್ಯ ಸದ್ದಿಲ್ಲದೆ ನಗುತ್ತಿದ್ದರು. ಅಮ್ಮಚ್ಚೀ…. +ಅಮ್ಮಚ್ಚಿ ಕೋಣೆಯಿಂದ ಹೊರಬಂದಳು. ಏನೂ ನಡೆದೇ ಇಲ್ಲವೆಂಬಂತೆ “ಯಂತಯ? ಯಾಕೆ ಕರೆದೆ?” ಎನ್ನುತ್ತ ವೆಂಕಪ್ಪಯ್ಯ ಮತ್ತು ಸೀತತ್ತೆ ಕೂತಲ್ಲಿಗೇ ಬಂದು ಹಗ್ಗ ಸೀಳುತ್ತ ತಾನೂ ಪಿಂಡೆ ಸುತ್ತ ತೊಡಗಿದಳು. ಸೀತತ್ತೆ ನಗೆ ಕಳಕಿದ ದನಿಯಲ್ಲಿ “ಏನಿಯ! ಹೆಂಗಾತ್ ರವಕೆ?” ಎಂದರೆ “ಫಸ್ಟ್‌ಕ್ಲಾಸ್! ಆಗದೆ? ಇದು ಹೊಲ್‌ದ್‌ದ್ ಯಾರು? ರಮಾಟೀಚರ್ ಅಲ್ದ?” ಎಂದಳು ಅಮ್ಮಚ್ಚಿ ವೆಂಕಪ್ಪಯ್ಯನಿಗೆ ಈ ಉತ್ತರ ಎಂಬಂತೆ. ಅವನತ್ತ ತಿರುಗಿ ಹಗ್ಗವನ್ನು ಬಾಯಿಂದ ಕಚ್ಚಿ ತುಂಡು ಮಾಡಿ, ಬಾಯಿಗೆ ಏನೋ ಸಣ್ಣ ಕಸ ಸಿಕ್ಕಿದರೆ ತ್ಸು ಎಂದು ಉಗಿದಂತೆ ಅವನೆದುರಿಗೇ ತ್ಸು ಎಂದು ಉಗಿಯುತ್ತ……ಎಂಟು ದಿನ ವೆಂಕಪ್ಪಯ್ಯ ಇರಲಿಲ್ಲ. ತಿರುಪತಿಗೆ ಹೋದದ್ದಂತೆ. ವರ್ಷಂಪ್ರತಿ ತಿರುಪತಿಗೆ ಹೋಗುವವ. ಇಂಥವರನ್ನೆಲ್ಲ ನೋಡಬೇಕಲ್ಲ. ಆ ತಿರುಪತಿ ದೇವರು! ಅವಂಗೆ ಕಷ್ಟ. ನಮಗೆಲ್ಲ ಎನ್ನುವಳು ಅಮ್ಮಚ್ಚಿ. “ಈ ಒಡ್ಡನಿಗೆ ಅವ ಶಾಪ ಕೊಡಗು. ಊರಿಗೆ ಹೋದದ್ದೇ ಸುಟ್ಟು ಬೂದಿಯಾಗು ಅಥವಾ ಆ ಪರಶುರಾಮ ಕ್ಷೇತ್ರದಲ್ಲಿ ಎಂಜಲು ಹೆಕ್ಕುವ ಹಾಗೆ ಆಗು ಅಂದ್. ಅಷ್ಟು ಮಾಡಿರೆ ನಾನೂ ವರ್ಷಂಪ್ರತಿ ತಿರುಪತಿಗೆ ಹೋಪೆ – ಆದರೆ ದೇವರಿಗೆ ಬುದ್ಧಿ ಇರಗಲ್ಲ! ಇಂಥವರಿಗೂ ವರ ಕೊಡ್ಡ. ಯಾರಿಗೆ ನಾಮ ಹಾಕಿರೂ ಪಾಪ ಬರದ ಹಂಗೆ…..” ಎನ್ನುವಳು. “ಅವ ಹೆಂಗೂ ಇಲ್ಲೆ. ಬಾ. ಆ ಕುದ್ರಾಳಿನ ಕೋಣೆಗೆ ಹೋಪ. ಏನೆಲ್ಲ ಬೇತಿದ ಕಾಂಬ……” ಎಂದು ಪಿಸುವಾಗಿ ಕರೆದು ನನ್ನನ್ನು ಅವನ ಕೋಣೆಗೆ ಹೋದಳು ಅಮ್ಮಚ್ಚಿ. ಅಲ್ಲಿ ಏನು ಇತ್ತು, ಏನು ಇಲ್ಲ ಕಂಡವರು ಯಾರು? ಕಣ್ಣಿಗೆ ಮೊದಲು ಬಿದ್ದದ್ದೆ ಅವನ ಶರ್ಟು. ಗೂಟದ ಮೇಲೆ ನೇತಾಡುತ್ತಿತ್ತು. “ಹೋ. ಯಂಕಪ್ಪಯ್ಯ ಎರಡೂ ಕೈ ಅಲ್ಲಾಡಿಸಿಂಡ್ ಗೂಟಲೆ ನೇತಾಡ್ತ್‌ದ್ ಕಾಣಿಯ” ಎಂದು ನಕ್ಕಳು. ಶರ್ಟನ್ನು ಮುಟ್ಟಲೇ ಅಸಹ್ಯವೆಂಬಂತೆ ದೂರದಿಂದ ಕೈನೀಡಿ ಅಲ್ಲಿಂದ ತೆಗೆದಳು. “ಓಡು. ಅಮ್ಮಂಗೆ ಕಾಣದ ಹಂಗೆ ಕತ್ತರಿ, ಸೂಜಿ, ನೂಲು ತಾ” ಎಂದಳು. ಮಧ್ಯಾಹ್ನ ಮೂರು ಗಂಟೆ. ಸೀತತ್ತೆ ಮಲಗಿದ್ದರು. ನಾನು ಗಾಳಿ ಹೊಕ್ಕಿದಂತೆ ಹಾರಿ ಹೋಗಿ ಎಲ್ಲ ತಂದು ಕೊಟ್ಟೆ. ಅಮ್ಮಚ್ಚಿ ಕರಕ್ಕನೆ ಶರ್ಟಿನ ಹಿಂಭಾಗ ಕೊಯ್ದಳು. ಮುಂಭಾಗ ಹೊಲಿದಳು. ಮುಂಭಾಗದ ಗುಂಡಿಗಳನ್ನು ಹಿಂಭಾಗಕ್ಕೆ ಹೇಗೆ ಹೇಗೋ ಇಟ್ಟಳು. “ಇದ! ರೆಡಿ! ಕೋಡಂಗಿ ಶರ್ಟು. ತಿರುಪತಿಯಿಂದ ವಾಪಸು ಬಂದವಂಗೆ ಪೆಶಲ್…..!” ಎಂದು ಪುನಹಃ ಗೂಟಕ್ಕೆ ಹೇಗಿತ್ತೋ ಹಾಗೆ ತೂಗು ಹಾಕಿದಳು. “ನನ್ನ ರವಕೆಗೆ ರಮಾಟೀಚರ್ ಹತ್ರ ಹೋಗಿ ಮಸಲತ್ತು ಮಾಡ್ತ್‌ದ್ ಅಂದ್ರೆ ಅಷ್ಟು ಸುಲಭ ಅಂದ್ ಮಾಡಿಯ ಯಂಕಪ್ಪಯ್ಯ ನೀನು?” ಎಂದು ಹಲ್ಲು ಕಡಿದು ನನ್ನತ್ತ ತಿರುಗಿ “ಅಮ್ಮಂಗೆ ಹೇಳಡ. ಹೇಲಿರೆ ಕಾಣ್. ತನ್ನಂತೆ ಗೊತ್ತಾರೆ ಆಗಡ್. ನಾ ಹೆದರ್ತಿಲ್ಲೆ.” ನಾನು ಹೇಲುವುದಿಲ್ಲ ಎಂದು ತಿಳಿದೂ ಅವಳದೇ ಸ್ವಂತ ಧೈರ್ಯಕ್ಕೆ. ನಾನು ಹೇಳುವುದಿಲ್ಲ ಎಂದು ಆಣೆ ಹಾಕಿದೆ.ತಿರುಪತಿಯಿಂದ ಬಂದ ವೆಂಕಪ್ಪಯ್ಯ. ಹಾ ಹೂ ಹೊ ಎನ್ನುತ್ತ ಮೆಟ್ಟಿಲು ಹತ್ತಿದ. ಅಲ್ಲಿನ ವಡೆ, ಲಾಡು, ಮೊಸರನ್ನ ವರ್ಣನೆ ಮಾಡಿದ. “ಮಂಡೆ ಬೋಳ್ಸಿಂಬ ಕೆಲ್ಸವೇ ಇಲ್ಲೆ ಇವಂಗೆ” ಎಂದು ಅಮ್ಮಚ್ಚಿ ತನ್ನ ತೃಪ್ತಿಗೆ ತನ್ನೊಳಗೇ ಛೇಡಿಸಿ ಹಿಲಾಲು ಹಿಡಿಯುವುದರ ಗೋಚರವೇ ಆಗದೆ, ಆವೇಶದಿಂದ ಅಲ್ಲಿಯೇ ಹತ್ತಿರ ತಾನೊಂದು ಹೊಟೇಲು ಇಡುವ ಸುದ್ದಿಯನ್ನೂ ತಿಳಿಸಿದ. “ಅಯ್ಯ ದೇವರೆ ಅಷ್ಟಪ್ಪ ದೂರ!” ಎಂದು ಸೀತತ್ತೆ ಉದ್ಗರಿಸಿದರೆ “ಹೂಂ. ಇಟ್ಟರೆ ದೂರ ಇಡಗು. ದುಡ್ಡು ಮಾಡಿದ ಮೇಲೆಯೇ ಊರಿಗೆ ಬರಗು” ಅಂತೆಲ್ಲ ತಿಳುವಳಿಕೆ ಹೇಳುವ ಧಾಟಿಯಲ್ಲಿ ತನ್ನ ‘ಭಯಂಕರ’ ಪ್ಲಾನು ವಿವರಿಸಿದ. “ಅಬ್ಬ! ಅಂತೂ ಭಂಡಾರ ಹೋತು ಅಂತಾಯಿತು” ಎಂದಳು ಅಮ್ಮಚ್ಚಿ. ಪ್ರಸಾದದ ಗಂಟು ಬಿಚ್ಚಿ ಸೀತತ್ತೆಯ ಕೈಗೆ ಕೊಟ್ಟು “ಎಲ್ಲ ತಕಣಿ. ಉಂಚ ಬುದ್ಧಿ ಸಮಾ ಆತ ಕಾಂಬ” ಎಂದು ಅಮ್ಮಚ್ಚಿಯನ್ನು ನೋಡಿ ಹೇಳಿ ಸ್ನಾನಕ್ಕೆ ಹೊರಟುಹೋದ. ಸ್ನಾನ ಮುಗಿಸಿ ಬಂದು “ಇನ್ನು ಊಟ ಊಟ ಊಟ. ಯಂಥಾ ಹಸಿತ್ ಅಂದ್ರೆ! ಈಗ ಬಂದೆ ಶಟರು ಹಾಕಿಂಡ್….” ಎನ್ನುತ್ತ ಕೋಣೆಗೆ ಹೋದ. +ಹೊರಗೆ ಬಂದದ್ದು – ರಾವಣಾಸುರ! +“ಎಲ್ಲಿ ಆ ಸೂಟೆ. ಆ ಮಾರಿ…. ಹಾಂಕಾರಿ…. ಅವಳ ಸತ್ಯನಾಶ ಮಾಡಿಬಿಡ್ತೆ…..” +ಕೂಗಿಗೆ ಹೆದರಿ ಉಪ್ಪರಿಗೆ ಮೆಟ್ಟಿಲಿನ ಮೂಲೆಗೆ ಓಡಿ ಕುಳಿತುಕೊಂಡ ನನ್ನನ್ನು ಅನಾಮತ್ತು ಎತ್ತಿ “ಎಲ್ಲಿ……ಹೇಳು. ಹೇಳ್‌ತಿಯಾ ಇಲ್ಲ ಎರಡು ಬಾರ್ಸಗ?” ಸೀತತ್ತೆ ಗಾಬರಿಯಿಂದ “ಏನು? ಏನಾಯ್ತಿಯ? ಏನಾಯ್ತೀಗ…. ಬರ್ತಲೊಳಗೆ. ರಂಡೆ ಏನ್ ಮಾಡ್ತ್?” ಎಂದರೆ ಅದಕ್ಕುತ್ತರಿಸದೆ ಹಿಡಿತ ಇನ್ನಷ್ಟು ಬಿಗಿ ಮಾಡಿ “ಹೇಳ್, ಎಲ್ಲಿ ಅದ್…..” ಎಂದು ಮತ್ತೆ ಕೂಗಿದ. +“ಅಮ್ಮಚ್ಚೀ…..” +ಅಮ್ಮಚ್ಚಿ ಬಂದು ತಳಿಕಂಡಿಗೊರಗಿ ಕಿಲಿಕಿಲಿ ನಗುತ್ತ ನಿಂತದ್ದು ಕಾಣಿಸಿತು. “ಏನು, ತಿರುಪತಿಗೆ ಹೋದ್ದೇ ಕಣ್ಣು ಮೇಲಾಯ್ತ? ನಾನು ಇಲ್ಲೇ ಇದ್ದೆ. ಕಾಣ್ತಿಲ್ಲಯ? ಆ ಮಗುನ್ನ ಯಾಕೆ ಹಿಂಸೆ ಮಾಡ್ತೆ?” ಆಗ ವೆಂಕಪ್ಪಯ್ಯ ನನ್ನನ್ನು ಅಲ್ಲಿಯೇ ಧಡಕ್ಕ ಹೊತ್ತು ಹಾಕಿ “ಏನಂದೆ ಏನಂದೆ” ಎನ್ನುತ್ತ ಅವಳತ್ತ ನುಗ್ಗಿ, ಅವಳ ಜಡೆ ಬುಡಕ್ಕೆ ಕೈ ಹಾಕಿ ದರದರನೆ ಎಳೆಯುತ್ತ ಸೀದ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. “ಅಯ್ಯೋ ಅಯ್ಯೋ! ಏನಪ್ಪಾ ಇದೆಲ್ಲ….. ನಂಗೆ ಕಾಂಬ್‌ಗೇ ಆತಿಲ್ಲೆ. ಯೇ ಯಂಕಪ್ಪಯ್ಯ ಯಂಕಪ್ಪಯ್ಯ ಬಾಗಿಲು ತೆರೆ….. ಯಂಕಪ್ಪಯ್ಯ ಅಯ್ಯೋ ಮಾರಿ ಹೆಣ್ಣೇ…..” ಎಂದು ಎದೆ ಹೊಡೆದಂತೆ ಕೂಗಿಕೊಂಡರು ಸೀತತ್ತೆ. +ಕ್ಷ್ಣದಲ್ಲಿ ಕೋಣೆಯ ಬಾಗಿಲು ತೆರೆಯಿತು. ಅಮ್ಮಚ್ಚಿ ಹೊರಗೆ ಬಂದಳು. ಮುಖ ಧಗಧಗಿಸುತ್ತಿತ್ತು. ತುಟಿ ಒಡೆದು ರಕ್ತ ವಸರುತ್ತಿತ್ತು. +“ಅಮ್ಮಚ್ಚೀ…. ರಕ್ತ!” ಹೆದರಿ ಹೆಪ್ಪಾದ ದನಿಯಲ್ಲಿ ಕೂಗಿಕೊಂಡರೆ ಅದು ಕೇಳೇ ಇಲ್ಲವೆಂಬಂತೆ ನಿಧಾನವಾಗಿ ಒಳಕೋಣೆಯತ್ತ ನಡೆಯುತ್ತಿದ್ದ ಅಮ್ಮಚ್ಚಿ ಸೀತತ್ತೆಯ ಕಡೆಗೆ ತಿರುಗಿ “ನೀ ಸಾಯಿ. ನೀ ಯಾಕೆ ಇರ್ತ್‌ದ್? ನನ್ನ ಕೊಲ್ಲ್‌ಗಾ? ಎನ್ನುತ್ತಾ ಬಾಗಿಲು ಹಾಕಿಕೊಂಡಳು. +ವೆಂಕಪ್ಪಯ್ಯ ಕೋಣೆಯೊಳಗೇ ಗುಮ್ಮ ಕುಳಿತ. ಸತ್ತೇಹೋದವರಂತೆ ಕಂಬಕ್ಕೊರಗಿದ್ದ ಸೀತತ್ತೆಯನ್ನು ಕಂಡು ಇನ್ನಷ್ಟು ಭಯವಾಯಿತು. +“ಸೀತತ್ತೇ.” +ನಾನು ಅಂತೆಯೇ ಎಣಿಸಿಕೊಂಡಿದ್ದೆ.ಶಾಲೆ – ಮನೆಯ ನಡುವೆ ದಿನ ಹೋದದ್ದೇ ತಿಳಿಯುವುದಿಲ್ಲ. ಒಂದು ದಿನ ನೋಡುತ್ತೇನೆ, ಅಮ್ಮಚ್ಚಿ ಬರುತ್ತಿದ್ದಾಳೆ! ಅಮ್ಮಚ್ಚಿ ಅಮ್ಮಚ್ಚಿ! ಕಿಟಕಿ ದಂಡೆಯಿಂದ ಒಮ್ಮೆಲೇ ಹಾರಿ ಹೊರಗೋಡಿ ಅವಳ ಬೆನ್ನುಹಿಡಿದೆ ನಾನು. ಕೈ ಚೀಲ ತೆಗೆದುಕೊಂಡೆ. ಅವಳೂ ಟ್ರಂಕು ಹಿಡಿದು ಮುಂಚಿನಂತೆಯೇ ಏನೂ ಆಗದ ಹಾಗೆ ರೈಲು ಬಸ್ಸು ತಿರುಪತಿ, ತಿರುಪತಿ ದೇವರ ಕೈ, ನಾಮ, ತಮ್ಮ ಹೊಟೆಲ್ಲು, ದೋಸೆ, ಪೂರಿ, ಇಡ್ಲಿ, ಒಡೆ ಇತ್ಯಾದಿ ಮಾತಾಡುತ್ತ ಮುಂದೆ ನಡೆದಳು. ಅವಳಿಗೆ ಹೇಳಲು ನನ್ನ ಬಳಿ ಒಂದು ಸುದ್ದು ಇತ್ತು. ಹುರುಪಿನಿಂದ ನುಡಿದೆ. “ಅಮ್ಮಚ್ಚಿ, ಶಂಭಟ್ಟರ ಮಗ ಸೇಸ ಬಂದಿದ್ದ. ನಾಲ್ಕು ದಿನ ಆಯ್ತು. ಇನ್ನು ಅವ ಇಲ್ಲೇ ಇರ್ತ ಉಂಬ್ರು. ಮಾಯಿ ಹೇಳಿರ್.” ನಡೆಯುತ್ತಿದ್ದ ಅಮ್ಮಚ್ಚಿ ನಿಂತಳು. ಹಿಂದಿರುಗಿ ನನ್ನನ್ನು ನೋಡಿದಳು – ಏನು ಹೇಳಿದಳೆಂದು ಪುನಃ ಮರುಕಳಿಸಿಕೊಳ್ಳುವಂತೆ. ನನ್ನನ್ನೇ ನೋಡುತ್ತ “ಸಾಯಡ್. ಎಲ್ಲ ಸಾಯಡ್. ಸತ್ತ್ ಮಣ್ಣ್ ತಿನ್ನಡ್” ಎಂದಳು. ಅರ್ಥವಾಗದೆ ಪಿಳಿಪಿಳಿ ನೋಡಿದ ನನ್ನನ್ನು ತಬ್ಬಿಕೊಂಡು “ಎಲ್ಲರೂ ಸಾಯಡಿಯ. ನಾವಿಬ್ಬರೇ ಇಪ್ಪ. ನಾ ಮಾತಾಡುಗೆ. ನೀ ನೆಗಾಡುಗೆ.” ಶಿಲೆಕಲ್ಲಿನಂತೆ ಕಂಡಳು ಅಮ್ಮಚ್ಚಿ. ನಗುವುದಿರಲಿ, ನಗೆಯೆಂಬುದು ಮೂಲದಲ್ಲಿಯೇ ಸುರುಟಿ ಹೋಗಬೇಕು – ಹಾಗೆ. +ಅಂತೂ ಮನೆ ಬಂತು. ಸೀತತ್ತೆ ಓ ಅಷ್ಟು ದೂರದಿಂದಲೇ ಅವಳನ್ನು ಕಂಡವರೇ ಬೆನ್ನಿಗೆ ಕೈಕೊಟ್ಟು ಹಿಮ್ಮುಖ ಬಾಗಿ ಬಾಯಿ ಕಳೆದು ನಿಂತೇಬಿಟ್ಟರು. ಹತ್ತಿರ ಬರುತ್ತಲೇ “ಏನು ರಂಡೆ ಒಬ್ಬಳೇ! ಯಂತ ಕತೆ ಮಾಡಿಂಡೆ?” – ಎಂದರು ಗುಮಾನಿ ಬಂದಂತೆ. “ಒಬ್ಬಳೇ ಬರದೆ ಮತ್ತೆಂತ ಮಾಡ್ತ್‌ದ್ ಅಲ್ಲಿದ್ದ್? ನಿನ್ನ ಯಂಕಪ್ಪಯ್ಯ ನೇಣು ಹಾಕಿಂಡ” – ಎಂದಳು ಅಮ್ಮಚ್ಚಿ. ಸೀದ ಕಲ್ಲುಮರಿಗೆ ಇದ್ದಲ್ಲಿಗೆ ಹೋಗಿ ನೀರನ್ನು ಮುಖಕ್ಕೆ ಬೀಸಿ ಬಡಿದುಕೊಳ್ಳುತ್ತ ತಿರುಗಿ ತಾಯಿಯನ್ನು ನೋಡಿದಳು. ಸೆರಗಿಂದ ಮುಖವರೆಸಿಕೊಳ್ಳೂತ್ತ ಎಡೆಯಲ್ಲಿ ನನ್ನನ್ನು ನೋಡಿ ನಕ್ಕಳು! +ಯಾಕೋ ತಟಕ್ಕನೆ ನಾನು ವಾಚಾಮಗೋಚರಚಾಗಿ ಬೈಗುಳ ಸುರುಮಾಡಿದ್ದ ಸೀತತ್ತೆಯ ಮುಖ ನೋಡಿದೆ. ಅವರ ಕಣ್ಣುಗಳಲ್ಲಿ ಆ ಬೈಗುಳದ ಗಾವು ಇರಲೇ ಇಲ್ಲ. ಅರೆ ಚೋದ್ಯವೆ! ಈಗಲೂ ನೆನೆಸಿಕೊಳ್ಳುತ್ತೇನೆ ಆ ಕಣ್ಣುಗಳನ್ನು….. ಮತ್ತೇನಾದರೂ ಕಾಣುತ್ತದೆಯೇ? ಇಲ್ಲ, ಇಲ್ಲ….. ಈಗ ನಾನು ಏನು ಕಂಡರೂ ಅದು ಇವತ್ತಿನ ನನ್ನ ಹಂಬಲಕ್ಕೆ ಅನುಸಾರವಾಗಿಯೇ ಇರುವುದರಿಂದ ಹಾಗೆ ಇಣುಕುವುದನ್ನು ನಿಲ್ಲಿಸುತ್ತೇನೆ. ಸೆರಗಿನಿಂದ ಮುಖ ಒರೆಸಿಕೊಳ್ಳುತ್ತ ಎಡೆಯಲ್ಲಿ ಮಿಣಕ್ಕನೆ ಮುಚ್ಚಿತೆರೆದು ನಕ್ಕ ಅಮ್ಮಚ್ಚಿಯ ಕಣ್ಣುಗಳನ್ನೇ ನೆನೆಯುತ್ತೇನೆ. +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […] +“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_150.txt b/Kannada Sahitya/article_150.txt new file mode 100644 index 0000000000000000000000000000000000000000..56cfbfa75e2aabf95be559edacc538780e248624 --- /dev/null +++ b/Kannada Sahitya/article_150.txt @@ -0,0 +1,107 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು. ಸಾಹಸಿಸಿದರೆ ಎಡವುವುದು ಸಹಜ. ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ ] ನಡುವೆ ಸಂವಹನ ಕುಸಿದು ಬೀಳುತ್ತದೆ. ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ – ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ. ಶಂಕೆಯಂತೂ ಇದ್ದೇ ಇದೆ. ನಾನು ಹೇಳಿದ ರೀತಿಯಲ್ಲೆ ಆಗಿರಬಹುದು. ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ. +ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ- +“ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ. ಸಿಂಗಲ್ ಹ್ಯಾಂಡ್. ಬೇರೆ ಯಾರ ಕೈಗೂ ಕೊಡೋಲ್ಲ.” +ನನ್ನ ಬಳಿಯೂ ಒಂದು ಮೊಪೆಡ್ ಇದೆ. ೧೯೮೫ರ ಮಾಡೆಲ್‌ನದು. ಎಲ್ಲರೂ ಉಪಯೋಗಿಸುತ್ತಾರೆ! +ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ. ಈಗೀಗ ಬಹಳ ಜನ ಹೇಳುತ್ತಾರೆ- “ಗುಜರಿಗಾಕೋ“. ” ಬೀಗ ಬೇರೆ ಯಾಕಾಕ್ತೀಯ? ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ“- +” ಸ್ಕ್ರಾಪ್ ಇಟ್ , ಸೆಂಡ್ ಇಟ್ ಟು ಸಾಲ್ವೇಜ್”-ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ. ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ. ಅವಮಾನವೂ ಇಲ್ಲ. ನಕ್ಕುಬಿಡುತ್ತೇನೆ. ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ,” ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ. . .” ಇವಳಿಗೂ ಅರ್ಥವಾಗುವುದಿಲ್ಲ. ಕ್ಷಮೆ ಇರಲಿ! +ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ. ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ. ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ. ಖಾತ್ರಿಯೂ ಇಲ್ಲ. ಷುಡ್ ಐ ಕೇರ್? ಉದ್ಧಟತನಕ್ಕೆ ಕ್ಷಮೆ ಇರಲಿ. +ಒಂದ್ಸಾರಿ ಏನಾಯ್ತೂಂದರೆ: +ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು. ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು. – ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು. ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ; +”ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ.” +ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ. ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ. ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ. ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್. ಸುಮಾರು ೧೩೦ ಕಿ. ಮೀ ಇಬ್ಬರನ್ನು ಹೊತ್ತು ತಂದಿತ್ತು! +ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು. ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು. ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು. ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ. ಒಳ್ಳೆಯ ಹಿಡಿತವೂ ಇತ್ತು. ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ ’ ಗೆ ಹುಡುಕಿದೆ. ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ. ಸುಬ್ಬ ಸ್ವಲ್ಪ ದೂರ ಈಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. +ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ. ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು. +ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ. ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ. ಇಳುಕಲಿನ ತಿರುವು ಹಾದಿ. ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ. ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು. ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ. ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦. ಕಿ. ಮೀ. ವೇಗ. ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು. ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ! +ಮತ್ತೆ ಇಳುಕಲಿನಲ್ಲಿ ಹೊರಟೆವು. ವೇಗವೋ ವೇಗ. ಬ್ರೇಕ್ ಹಾಕಿದೆ. ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು. ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್ ’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು. ಬಲಗಡೆಗೆ ಆಳವಾದ ಕಮರಿ. ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ-” ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು.”- ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು. ಕೂತೆ ಇದ್ದ. ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ. ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ. ಮೀ ವೇಗದಲ್ಲಿ ೧೭೦ ಕೆ. ಜಿ ತೂಕದ ನಾವುಗಳು ಬಿದ್ದೆವು. ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ. ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ. ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು. ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. +ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ – ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು“ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ“ಬೇಡಿದ. ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ. ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು. ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು. ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. +ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ. ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು. ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ. ಅರ್ಥವಾಗುತ್ತಾ, ನಿಮಗೆ? +ಭಾಗ-೨ +ಶಿವಾ. . . . . +ನೀವು ಅವನನ್ನು ನೋಡಬೇಕು. ಕಪ್ಪು ಬಣ್ಣದ ತಮಿಳಿನವ. ಕಪ್ಪಾದ ಮೈಗೆಲ್ಲಾ ಗ್ರೀಸು. ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ. ೧೮-೨೦ ವರ್ಷದವ. ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ. ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು. ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು. ಸ್ಪಾನರ್, ಸ್ಕ್ರೂ ಡ್ರೈವರ್,ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು. ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು. . ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ!“ಏನಯ್ಯ?“ಎಂದರೆ” ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ.” ಎಂದು ಹಲ್ಕಿರಿದಿದ್ದ. ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ. ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ. ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ. ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್ ’ ಎಂಬಂತೆ ಗಾಯ ಮಾಗಿಹೋಗಿತ್ತು! +ಕೆಲಸದಲ್ಲಿ ಅವನಿಗೆ ಎಂತದೋ ಖುಶಿ. ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ. ಬೇರೇನೋ ತೆರೆನಾದ ಖುಷಿ. ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ. ಅದರಲ್ಲೇ ಮಗ್ನಗೊಂಡ ಖುಷಿ. ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ. ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು. ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ. ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ. ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. +ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. +ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. +ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು. ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ. ಗಾಡಿ – ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ” ತನ್ರಿ ಹಾಕ್ಕೊಡ್ತೀನಿ“. ಶಿವ ಎಂದೂ ಹಾಗೆ ಇರುತ್ತಿರಲಿಲ್ಲ. ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ. ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ. ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. +ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ. ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ. ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ , ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು. ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ. ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ. ಖಿನ್ನನಾಗಿರುತ್ತಿದ್ದ ಆಷ್ಟೆ. ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ. ಒಳಗೆ ಎಂಥದೋ ಖುಷಿಯಾಗುತ್ತಿತ್ತು. ಆದರೆ ಆವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ. . . . +* +* +* +ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು. ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ. ನಿತ್ರಾಣವಾಗಿಹೋಗಿತ್ತು. ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ. ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. +ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ. ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. +ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲಿ ತೀರ್ಮಾನಿಸಿದ್ದೆ. ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ! +ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು. ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. +ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು. ಹೊರಟೆ. +* +* +* +ಮುರುಕಲು ಕುರ್ಚೆ ಮೇಲೆ ಕೂತಿದ್ದ. ಸಪ್ಪಗಿದ್ದ. ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. +“ಏನಣ್ಣಾ. .” – ಅದೇ ವಿನಯ. +“ಗಾಡಿ ಪಿಕಪ್ ಇಲ್ಲ. ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು. ಡೀಕಾರ್ಬನ್ ಮಾಡಿಸಿಯಾಯ್ತು. ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ. . .” +“ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ. . +“ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ.” ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ. . . .” +ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ. ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು. ಆದರೂ ಶಿವಾನ ಮೇಲೆ ನಂಬಿಕೆಯಿತ್ತು. +ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ. ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು! +“ಏನೋ ಅದು?“ +“ಕಲ್ಲೇಟು ಬಿತ್ತು ಸಾರ್. ಜೊತೆಗೆ ಕೀವು ರಕ್ತ. +“ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ. ನಾನು ಬಹಳ ಹೊತ್ತು ಜೊತೆಗಿದ್ದೆ. ಏನೋ ಖುಷಿ ಖುಷಿ. ಅವನಿಗೂ ಹಾಗೆಯೇ ಇರಬೇಕು. +“ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?“ +– ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. +“ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ. .“ +ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು. ನನ್ನ ಕಣ್ಣುಗಳು ಸಹ ಅರಳಿದ್ದವು. +* +* +* +ಮಾರನೆ ದಿನ ಗಾಡಿ ತಯಾರಾಗಿತ್ತು. ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ +“ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ”- ಎಂದ. +ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು. ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. +“ಪ್ಯಾಂಟು ಮೇಲೆತ್ತು.” ಎಂದೆ. ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ. ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು. ಕೊಳಕೊಳ ಬಿಗಿದುಕೊಂಡಂತೆ. ಶವದ ಕಾಲಿನಂತೆ. ನೋಡಿ ದಂಗಾದೆ. +“ವಿಪರೀತ ನೋಯುತ್ತೆ , ಸಾರ್.” +“ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ. . .” +ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ. ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು. ನನಗೋ ಖುಷಿಯಾಯಾಯಿತು. ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ. ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ. ಏನನ್ನೋ ಸಾಧಿಸಿದ ತೃಪ್ತಿ ಇತ್ತು. +ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. +ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. +* +* +* +ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು , ಸುಖದಲ್ಲಿದ್ದೆ. ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. +ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು. ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ. ಸಂದರ್ಭವೂ ದೊರೆಯಲಿಲ್ಲ. +ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ. ನಿರಿಕ್ಷಿಸಿಯೇ ಇರಲಿಲ್ಲ. ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ. ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ. ಆದರೂ ಕೇಳಿದಾಗ: +“ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ. ಅಡ್ಮಿಟ್ ಮಾಡ್ಕೊಂಡ್ರು. ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು. ಇವತ್ತೇನೆ ಬಂದಿದ್ದು. ಬಂದೋನು ಇಲ್ಲಿಗೆ ಬಂದ್ಬಿಟ್ಟೆ. ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ. ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ. . .” +– ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ. ನೀರಿರಲಿಲ್ಲ. ಬದಲಿಗೆ ಮಿನುಗುತ್ತಿದ್ದವು. +* +* +* +ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು. ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ- +“ಏನ್ಸಾರ್, ನಡ್ಕೊಂಡು ಬರ್ತಿದೀರ. . ?” +“ಗಾಡಿ ಮಾರ್ಬಿಟ್ಟೆ ಕಣೋ. . . .” ಅವನಿಗೆ ಅರ್ಥವಾಗಿತ್ತು. ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ. +“ಎಷ್ಟಕ್ಕೆ ಮಾರಿದ್ರಿ ಸಾರ್?” +“ಒಂದೂ ಕಾಲು ಸಾವಿರಕ್ಕೆ. .” +“ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್. . . ” +“ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು. ” +“ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್“- ನನಗೂ ಅರ್ಥವಾಯಿತು! +ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. +ಬಸ್ಸು ಬಂತು. ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವಾನನ್ನು ನೋಡಿ ಕೂಗೊಕೊಂಡೆ- +“ಬರ್ತೀನೊ ಶಿವಾ, ಸಿಕ್ತೀನಿ. . .” +ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ! +***** +ಸುದ್ಧಿಸಂಗಾತಿ ವಾರಪತ್ರಿಕೆಯಲ್ಲಿ ಪ್ರಕಟ- ಡಿಸೆಂಬರ್ ೧೯೯೧. +ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […] +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […] +೧ ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_151.txt b/Kannada Sahitya/article_151.txt new file mode 100644 index 0000000000000000000000000000000000000000..4157a02809c55bc334a4c5caa6550a006a59dd8f --- /dev/null +++ b/Kannada Sahitya/article_151.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” +ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. ಓದುವ ನಟನೆ ಮಾಡುತ್ತಿದ್ದ ಅವಳ ಕಣ್ಣುಗಳು ಕಿಡಕಿಯ ಹೊರಗಿನ ಕತ್ತಲೆಯೆಡೆಗೆ ಹೊರಳಿದವು. ಹಣೆ ಗಂಟಿಕ್ಕಿಕೊಂಡಿತು. ಹೊರಗಿನ ಗುಡುಗಿನ ಸಪ್ಪಳದೊಡನೆ ಥಟ್ಟನೆ ಅವಳಿಂದ ದನಿ ಹೊರಟಿತು. +“ಇನ್ನೂ ನಿದ್ದೆ ಬಂದಿಲ್ಲ ನನಗೆ. ನೀವು ಸುಮ್ಮನೆ ಮಲಕೊಳ್ಳಿರಿ ನೋಡೋಣ. ನನಗೆ ನಿದ್ದೆ ಬಂದಾಗ ನಾನು ಮಲಕೊಳ್ಳತೀನಿ. ನನ್ನ ಕಾಳಜಿ ಬೇಡ ನಿಮಗ.” +ಒಂದು ಬಗೆಯ ಕಾಠಿಣ್ಯ ಆ ಧ್ವನಿಯಲ್ಲಿ ಹೆಣಕಿ ಹಾಕುತ್ತಿತ್ತು. ಶ್ಯಾಮನಿಗೆ ಅದರ ಅರಿವಾಯಿತೋ ಇಲ್ಲವೋ, ಆತ ಅವಳೆಡೆಗೆ ಒಂದು ತೀಕ್ಷ್ಣವಾದ ನೋಟ ಬೀರಿ, ಮುಖ ಕಿವುಚಿ, ಮಗ್ಗಲು ಹೊರಳಿಸಿ ಮಲಗಿದ. ಮಗ್ಗಲು ಹೊರಳಿಸಿವಾಗ ಆದ ಸಣ್ಣ ಸದ್ದನ್ನು ಕೇಳಿ ಸುಶೀಲೆ ಅತ್ತ ದೃಷ್ಟಿ ಹೊರಳಿಸಿದಳು. ಅವಳ ದೃಷ್ಟಿಯಲ್ಲಿ ತಿರಸ್ಕಾರದ ಕಹಿ ಬೆರೆತಿತ್ತು. ಒಮ್ಮೆಲೆ ಅವಳ ತಲೆಯ ಮೂಲೆಯೊಂದರಲ್ಲಿ ಒಂದು ವಿಚಾರ ಮಿಂಚಾಡಿತು. +‘ಈಗಲೇ ಹೋಗಿ ಇವನ ಬೆನ್ನಲ್ಲಿ ಚಾಕುವಿನಿಂದ ಇರಿದರೆ ಹೇಗೆ?’ +ಬೆಚ್ಚಿ ಬಿದ್ದಳು ಸುಶೀಲೆ, ಅವಳ ವಿಚಾರದ ಮೊನೆ ಅವಳಿಗೇ ತಿವಿದಂತೆ! ‘ಅಯ್ಯೋ, ನನ್ನ ತಲೆಯಲ್ಲಿ ಇಂಥ ಕೆಟ್ಟ ಕೆಟ್ಟ ವಿಚಾರಗಳೇಕೆ ಬರುತ್ತಿವೆ ಇಂದು!’ ಮರಳಿ ಕಿಡಕಿಯ ಹೊರಗೆ ದೃಷ್ಟಿ ನೆಲೆಸಿದಳು. ಹೊರಗೆ ಸಣ್ಣಾಗಿ ಮಳೆ ಬೀಳುತ್ತಲೇ ಇತ್ತು. ಆದಿನ ಮುಂಜಾನೆ ಪ್ರಾರಂಭವಾದ ಮಳೆ ರಾತ್ರೆಯಾದರೂ ನಿಂತಿರಲಿಲ್ಲ. ಆಗಾಗ್ಗೆ ಝಗ್ಗೆನ್ನುವ ಮಿಂಚಿನಾಟ ರುದ್ರರಮ್ಯವಾಗಿ ತೋರಿತು ಸುಶೀಲೆಗೆ. ‘ಇಲ್ಲ, ನಾನೇ ಓಡಿಹೋಗಬೇಕು-ಈ ಮನೆಯಿಂದ ದೂರ, ಹೊರಗೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲಲ್ಲಿ, ಅಲ್ಲಿ ಸಿಡಿಲಿನ ಹೊಡೆತಕ್ಕೆ ಸಿಕ್ಕು ಸಾಯಬೇಕು, ಎಂಥ ಹುಚ್ಚು ವಿಚಾರಗಳು. ಅಯ್ಯೋ, ಈ ಮಿದುಳುಯಂತ್ರ ಹೇಗೆ ನಿಲ್ಲಿಸಲಿ?’-ಕೂಡಲೇ ಟೇಬಲ್ ಮೇಲಿನ ಮಾಸಿಕವನ್ನೆತ್ತಿಕೊಂಡು ಅದರ ಹಾಳಿಗಳನ್ನು ಭರಭರನೆ ತಿರುವತೊಡಗಿದಳು. ದೃಢನಿಶ್ಚಯದಿಂದ ಒಂದು ಕತೆ ಓದಲು ಪ್ರಾರಂಭಿಸಿದಳು. ಅದರ ತಲೆ ಬರಹ ಅವಳಿಗೆ ಸೇರಲಿಲ್ಲ. ‘ಪ್ರೇಮದಾಹ’… ‘ಸುಟ್ಟು ಬರಲಿ ಈ ಪ್ರೇಮಕ್ಕೆ!’ ಆದರೂ ಬೆರಳು ಮುಂದಿನ ಹಾಳಿಗಳನ್ನು ಅರ್ಧ ಎತ್ತಿದ್ದರೂ ಕಣ್ಣು ಆ ಕತೆಯನ್ನು ಓದಲು ತೊಡಗಿದ್ದವು. ಅದರ ಪ್ರಾರಂಭ ಓದಿ ಅವಳಿಗೆ ಸಿಟ್ಟು ಬಂದಿತು. ಅದರಲ್ಲಿ ಒಂದು ಸಂಜೆಯ ವರ್ಣನೆ ಇತ್ತು, ತೀರ ಕಾವ್ಯಮಯವಾದದ್ದು. ಆ ದಿವ್ಯ ಸಂಜೆಯ ಭವ್ಯ ವಾತಾವರಣದಲ್ಲಿ ಒಂದು ಪ್ರೇಮಿಯುಗಲ, ಪ್ರೇಮ, ಸರ್ಯ, ಜೀವನ, ಅನಂತತೆ ಎಂದೇನೋ ಕಾವ್ಯ ಮಯವಾಗಿ ಮಾತನಾಡುತ್ತಿತ್ತು. ಅದರ ರಸಭರಿತ ವರ್ಣನೆ ಸುಶೀಲೆಗೆ ಕೃತಕವೆನಿಸಿತು. ‘ಇಂಥ ಅಸಹ್ಯ ವರ್ಣನೆಯಿಲ್ಲದೆ ಇವರಿಗೆ ಕತೆ ಬರೆಯಲು ಬರುವುದಿಲ್ಲವೇನೋ?’ ಎಂಬ ಯೋಚನೆಯ ಜೊತೆಗೆ ಅವಳ ಬೆರಳುಗಳು ಆ ಪುಟವನ್ನು ತಿರುಗಿಸಿದವು. ಓದುವುದೇ ಬೇಡವೆನಿಸಿತು. ಮತ್ತೆ ಕಿಡಕಿಯ ಹೊರಗೆ ದೃಷ್ಟಿಹೋಯಿತು. ಕತ್ತಲೆಯಲ್ಲಿಯ ಮಳೆ ಅವಳಿಗೆ ತನ್ನ ಮನಸ್ಸಿನ ಪ್ರತಿಬಿಂಬದಂತೆ ತೋರಿರಬೇಕು! ಅಷ್ಟರಲ್ಲಿ ಒಂದು ಮಿಂಚು ಬೆಳಕು ಬೀರಿ ಸರ್ರನೆ ಮಾಯವಾಯಿತು. +‘ಅವನೆಲ್ಲಿರಬಹುದು? ಪುಣೆಯಲ್ಲಿಯ ಯಾವುದೋ ಕಾಲೇಜಿನಲ್ಲಿ ಪ್ರಾಧ್ಯಾಪಕನತೆ.’ ಅವಳ ಕಣ್ಣೆದುರಿಗೆ ತಾನು ಹಿಂದೆ ಮನಸ್ಸಿನಲ್ಲಿ ಆಗಾಗ್ಗೆ ಕಟ್ಟಿದ ಒಂದು ಕನಸು-ಚಿತ್ರ ಬಂದು ನಿಂತಿತು. +ಶ್ರೀಧರ ಟೇಬಲ್ ಹತ್ತಿರ ನಿಂತು ಎಫ್.ವಾಯ್.ಕ್ಲಾಸಿಗೆ ಇಂಗ್ಲೀಷು ಕಲಿಸುತ್ತಿದ್ದಾನೆ. ಯಾವುದೋ ಒಂದು ಕವಿತೆಯನ್ನು ಓದಿ ಅದರ ಅರ್ಥವನ್ನು ರಸಭರಿತವಾಗಿ ಹೇಳುತ್ತಿದ್ದಾನೆ. ತಾನು ಸುಶೀಲೆ ಕೌತುಕದಿಂದ ಆತನೆಡೆಗೆ ನಿಟ್ಟಿಸುತ್ತಿದ್ದಾಳೆ. ಶ್ರೀಧರನ ದೃಷ್ಟಿ ಮೇಲಿಂದ ಮೇಲೆ ಅವಳೆಡೆಗೆ ಹೊರಳುತ್ತದೆ. ಅ ದೃಷ್ಟಿಗೆ ಉತ್ತರವೆಂದು ಅವಳು ಮಂದಸ್ಮಿತ ಬೀರುತ್ತಾಳೆ. +ಆ ಚಿತ್ರದ ಬೆಂಬತ್ತಿ ಇನ್ನೂ ಎಷ್ಟೋ ತುಣುಕು ಕನಸುಗಳು ಮಸುಮಸುಕಾಗಿ ಜಾರಿ ಹೋದವು. ಅಷ್ಟರಲ್ಲಿ ಶ್ಯಾಮನ ಗೊರಕೆ ಕೇಳಿಬಂತು. ಸುಶೀಲೆಯ ಕಣ್ಣುಗಳಲ್ಲಿ ನೀರಿನ ಪರದೆಯೊಂದು ತೂರಿ ಬಂತು. +ಇನ್ನೇಕ ಆ ಕನಸುಗಳು? ತನ್ನ ಬಾಳು ಇಲ್ಲಿ ಹುದುಗಿದಾಗ, ಇಲ್ಲಿಂದ ಬಿಡುಗಡೆಯ ದಾರಿಯೇ ಇಲ್ಲದಾಗ ಇನ್ನೇಕೆ ಆ ಕನಸುಗಳು? +ಮರಳಿ ಕೈಯಲ್ಲಿಯ ಮಾಸಿಕ ಪುಟಗಳನ್ನು ತಿರುವಹತ್ತಿದಳು. ಒಂದು ವ್ಯಂಗ್ಯಚಿತ್ರ ಕಣ್ಣಿಗೆ ಬಿತ್ತು. ಒಂದು ಗಾರ್ಡನ್ ಬೆಂಚಿನಮೇಲೆ ಒಂದು ತುದಿಗೆ ಒಂದು ಹೆಣ್ಣು, ಮತ್ತೊಂದು ತುದಿಗೆ ಒಂದು ಗಂಡು, ಆ ಹೆಣ್ಣು ಒಂದು ನಾಯಿಯ ಕುನ್ನಿಗೆ ಮುದ್ದು ಕೊಡುತ್ತಿರುವುದನ್ನು ಆ ಗಂಡು ಆಯೆಂದು ಬಾಯಿ ಬಿಟ್ಟು ತುದಿಗಣ್ಣಿನಿಂದ ನೋಡುತ್ತಿದ್ದಾನೆ. +ಸುಶೀಲೆಯ ಮೊಗದ ಮೇಲೆ ಹುಚ್ಚು ನಗೆ ಮೂಡಿಬಂತು. ಮಲಗಿದ ಗಂಡನ ಕಡೆಗೊಮ್ಮೆ ನೋಡಿದಳು. ಅವಳ ನೋಟದಲ್ಲಿ ತಿರಸ್ಕಾರದ ಅಲಗು ಮಿಂಚುತ್ತಿತ್ತು. ‘ಈತನಿಗೆ ಅಂದು ನಾನು ಮುದ್ದು ಕೊಟ್ಟೆ. ಮುದ್ದು ಕೊಟ್ಟು ದಾಸಿಯಾದೆ. ನನ್ನ ಹೃದಯವನ್ನು ಸುಟ್ಟು ಬೂದಿ ಮಾಡಿದೆ. ಅಯ್ಯೋ, ನನ್ನ ಹಾಳು ದೈವ! ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು! ನನ್ನನ್ನು ನಾನೇ ಕೊಂದೆ!’ +ಅವಳ ಕಣ್ಣೆದುರಿಗೆ, ಹಿಂದೆ ಯಾವುದೋ ಚಿತ್ರಪಟದಲ್ಲಿ, ತನ್ನ ಎದೆಯಲ್ಲಿ ತಾನೇ ಚೂರಿ ಚುಚ್ಚುಕೊಂಡು, ರಕ್ತದ ಮಡುವಿನಲ್ಲಿ ಬಿದ್ದ ನರ್ಗೀಸಳ ಚಿತ್ರ ಹಾಯ್ದುಹೋಯಿತು. ಅದರಿಂದ ಒಂದು ಬಗೆಯ ವಿಲಕ್ಷಣ ಭಾವನೆಯಿಂದ ಅವಳ ಮೈ ಜುಮ್ಮೆಂದಿತು. ಹಿಂದೊಂದು ಸಲ ಶ್ರೀಧರನು, ‘ಇಂದೇ ಇದೇ ಗಳಿಗೆಗೆ, ಇದೇ ನಿಮಿಷಕ್ಕೆ ನನ್ನ ಪ್ರಾಣ ಹಾರಿ ಹೋದರೆ ಎಷ್ಟು ಚನ್ನು!’ ಎಂದು ಹೇಳಿ ಅವಳ ತುಟಿಗೆ ತುಟಿಯೊತ್ತಿದ ರಸನಿಮಿಷದ ನೆನಪಾಯಿತು….. +ಆ ನೆನಪಿನ ಅನುಭವದೊಂದಿಗೆ ಇನ್ನೊಂದು ಭಾವನೆ ಮನದೆದುರು ಬಂದಿತು-‘ಶ್ರೀಧರನು ನಿಜವಾಗಿ ನನ್ನನ್ನು ಪ್ರೀತಿಸುತ್ತಿದ್ದಿಲ್ಲ…ಇಲ್ಲಿ ಸೂಟಿಗೆ ಬಂದಾಗ ವೇಳೆ ಕಳಿಯಲು ನನ್ನೊಡನೆ ಚಲ್ಲಾಟವಾಡುತ್ತಿದ್ದ… ಅವನು ಎಂದೂ ಅಷ್ಟೊಂದು ಆಸ್ಥೆಯಿಂದ ಮನಬಿಚ್ಚಿ ಮಾತನಾಡದೆ ಬರಿಯ ಒಣ ನಗೆನಾಚಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದ…ಆತನ ಮುಖದಲ್ಲಿ ಎಂಥ ಮೋಹಕತೆ ಇತ್ತು!… ನನ್ನನ್ನೆಂದಿಗೂ ಮೋಸ ಮಾಡಲಾರ ಎಂದು ಬಗೆದಿದ್ದೆ. ಆದರೆ ಅವನದೇನು ತಪ್ಪು? ನಾನಾಗಿಯೇ ಅವನನ್ನು ಬಲೆಯಲ್ಲಿ ಹಾಕಲು ಯತ್ನಿಸಿದೆ. ಎಲ್ಲ ನನ್ನದೇ ತಪ್ಪು! ಅಯ್ಯೋ ಅವಲ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೆ. ಅವನೊಡನೆ ಎಲ್ಲಿ ಬೇಕಲ್ಲಿ ಹೋಗಲು ಸಿದ್ಧಳಿದ್ದೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲ್ಲಲ್ಲಿ.’ +ಮಳೆಯ ಜೋರು ಕೊಂಚ ಹೆಚ್ಚಾಗಿತ್ತು. ಗಾಳಿಯೂ ಭರ್ರನೆ ಬೀಸುತ್ತಿತ್ತು. ಕಿಡಕಿಯ ಬಾಗಿಲು ಧಡ್ಡನೆ ಮುಚ್ಚಿ ತೆರೆಯಿತು. ಎದ್ದು ಹೋಗಿ ಅದನ್ನು ಮುಚ್ಚಿ ಬಂದಳು. ಬರುವಾಗ ಕಪಾಟಿನಲ್ಲಿಟ್ಟ ಶ್ರೀಧರನ ಅಂದೇ ಬಂದ ಪತ್ರವನ್ನು ಮತ್ತೊಮ್ಮೆ ಓದಬೇಕೆನಿಸಿತು. ‘ಶ್ರೀಧರನಿಗೆ ದುಂಬಾಲು ಬಿದ್ದು ಬೇಡಿಕೊಂಡಿದ್ದರೆ, ಅಥವಾ ಹಾಂ, ಬೆದರಿಕೆ ಹಾಕಿದ್ದರೆ, ಅವನು ಒಪ್ಪಬಹುದಾಗಿತ್ತೇನೋ… ಆದರೆ ನನ್ನ ಸ್ವಾಭಿಮಾನ… ನನ್ನನ್ನು ಮೋಸಗಾರ್ತಿ ಎಂದು ಆತ ನನ್ನ ಜೀವವಿರುವತನಕ ದೂಷಿಸದೆ ಬಿಡುತ್ತಿದ್ದಿಲ್ಲ… ಆದದ್ದು ಒಳ್ಳೆಯದಕ್ಕೆ ಆಗಿದೆಯೇನೋ!’ ಕಪಾಟಿನ ಮೂಲೆಯಲ್ಲಿಯ ಹರಕು ಪುಸ್ತಕವೊಂದರಲ್ಲಿ ತುರುಕಿದ ಆ ಪತ್ರವನ್ನು ತರಲು ಮೆಲ್ಲನೆ ಎದ್ದಳು. ಶ್ಯಾಮ ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದ. ಅವನ ಮೇಲಿನ ಚಾದರ ಅಸ್ತವ್ಯಸ್ತವಾಗಿ ಅವನ ಕಾಲ್ಕೆಳಗೆ ಹೋಗಿ ಬಿದ್ದಿದ್ದಿತು. +‘ಇಂದು ಅಲ್ಲಿ ಶ್ರೀಧರನಿದ್ದಿದ್ದರೆ ಆ ಚಾದರವನ್ನು ನಯವಾಗಿ ಪ್ರೀತಿಯಿಂದ ಅವನ ಮೈಮೇಲೆ ಹೊದ್ದಿಸುತ್ತಿದ್ದೆನಲ್ಲವೇ? ಹೊದ್ದಿಸುವಾಗ ಆತ ಒಮ್ಮೆಲೆ ಎಚ್ಚರಾಗಿ ನನ್ನನ್ನು ನೋಡಿ, ಸರ್ರನೆ ಜಗ್ಗಿ, ನನ್ನನ್ನು….ಮತ್ತೆ ಹಾಳು ಕನಸು!’ +ಕಪಾಟಿನ ಬಾಗಿಲು ತೆರೆಯುವಾಗ ಸಪ್ಪಳಕ್ಕೆ ಗೊರಕೆ ಒಮ್ಮೆಲೆ ನಿಂತಿತು. ಸುಶೀಲೆ ಹಿಂದಿರುಗಿ ನೋಡಿ ಶ್ಯಾಮ ಎಚ್ಚೆತ್ತಿದ್ದ. +“ಏನೇ, ಎಷ್ಟು ಹೊತ್ತದು? ದೀಪಿದ್ದರ ನನಗ ನಿದ್ದೀನ ಛಲೋ ಹತ್ತೋದಿಲ್ಲ. ಮಲಕೊಳ್ಳಬಾರದ?… ಅಯ್ಯೊ, ಇನ್ನೂ ಕಪಾಟಿನಲ್ಲಿಯ ಪುಸ್ತಕ ಬ್ಯಾರೆ ಓದಬೇಕ?” ಎಂದು ಗೊಣಗುಟ್ಟಿದ ಸುಶೀಲೆ ತುಡುಗಿಯಂತೆ ಅಲ್ಲಿಯೇ ಸ್ತಂಭಿತಳಾಗಿ ನಿಂತಳು. ಅಷ್ಟರಲ್ಲಿ ಶ್ಯಾಮ ಸಂಪೂರ್ಣ ಎಚ್ಚೆತ್ತಿದ್ದ. ಎದ್ದು ಕುಳಿತ. +“ಕಾಲೇಜಿಗೆ ಹೋದರ ಎಷ್ಟು ಓದುತ್ತಿದ್ದಿಯೋ ಏನೋ? ಛಲೋ ಸ್ಕಾಲರಳಾಗಿ ಬಿಡತ್ತಿದ್ದಿಯಂತ ಕಣಿಸ್ತದ… ಹುಂ, ಸಾಕು ನಿನ್ನ ಓದು. ಬಂದಬೀಳಬಾರದ! ಓದಿಯಂತ-ನಾಳೆ!”… ಸಿಟ್ಟಿನ ಮೊನೆ ಆ ಮಾತಿನಲ್ಲಿ ಸ್ಪಷ್ಟವಾಗಿ ಕಾಣುತಿತ್ತು. +ಸುಶೀಲಳಿಗೂ ಮನೆ ಬಿಟ್ಟು ಓಡಿ ಹೋಗುವಷ್ಟು ಸಿಟ್ಟು ಬಂತು. ಕಪಾಟಿನ ಬಾಗಿಲನ್ನು ಧಡಕ್ಕನೆ ಮುಚ್ಚಿ ಜೋರಿನಿಂದ ಒದರಿದಳು: +“ಹೌದು, ನಾನೇನು ಕಾಲೇಜಿಗೆ ಹೋಗದೆ ಬಿಡತಿದ್ನೇನು? ನಿಮ್ಮನ್ನ ಕಟ್ಟಿಕೊಂಡು ಈ ಮೂಲೆಯಲ್ಲಿ ಕೊಳೀಬೇಕಾಗೇದ. ಈಗ ಅದೆಲ್ಲ ಬೇಡ. ಸುಮ್ನ ಮಲಕೊಳ್ಳಿರಿ ನೋಡೋಣೀಗ.” +“ಆಹ! ಹಾಂಗಾರ ನನ್ಯಾಕ ಲಗ್ನವಾದಿ?” ಕೆಣಕುವ ಧ್ವನಿಯಲ್ಲಿ ಶಾಮ ಕೇಳಿದ. +“ನಾಚಿಕೆ ಬರೋದಿಲ್ಲ ಕೇಳಾಕ? ಮಾಡೋದೆಲ್ಲ ಮಾಡಿ ಹ್ಯಾಂಗ ಕೇಳತಾರ ನೋಡ ಮತ್ತ?” +“ನಾಚಿಕ್ಯಾತರದು? ನಾ ಬೆನ್ನಹತ್ತಿದರೇನಾತು? ನೀನ ನನ್ನ ಕರೆಗೆ ಹುಂ ಅನ್ನಲಿಲ್ಲೇನು? ನಾನೇನು ಮೋಸಗೊಳಿಸಿದೆನೇನು? ಮಾಡಿದ ತಪ್ಪಿಗೆ ಲಗ್ನ ಆಗಾಕ ನಾನೇನು ಹಿಂಜರಿದ್ನೇನು? ನೀನ ಹೇಳು.” +ಸುಶೀಲೆಗೆ ಸಿಟ್ಟು ಉಕ್ಕೇರಿ ಬಂತು. ಎಷ್ಟೋ ದಿನಗಳಿಂದ ಹತ್ತಿಕ್ಕಿ ಇಟ್ಟ ಅವಳ ಕುದಿ ಹೊರಬಂತು. +“ನಾನಾಗಿಯೇ ಓ ಗೊಟ್ಟೆನೇ? ಅಯ್ಯೊ ಯಾವ ಬಾಯಿಂದ ಮಾತಾಡ್ತೀರಿ…ನನ್ನ ಅಜ್ಞಾನದ, ನನ್ನ ಕುತೂಹಲದ, ನನ್ನ ಮನಸ್ಸು ದುರ್ಬಲವಾದ ಕ್ಷಣದ ಲಾಭ ನೀವು ತೆಗೆದುಕೊಂಡು, ನನ್ನನ್ನು ಮೋಸ… ಅಲ್ಲ, ನನ್ನನ್ನು ಕೊಂದಿರಿ; ನನ್ನ ಹೃದಯಕ್ಕೇ ಬೆಂಕಿ ಹಚ್ಚಿದಿರಿ.” +ಶ್ಯಾಮನಿಗೆ ಸುಶೀಲಳ ಮಾತು ಹುಚ್ಚತನವೆಂದು ತೋರಿತು. ಒಮ್ಮೆಲೆ ಫಕ್ಕನೆ ನಕ್ಕುಬಿಟ್ಟ. ಸುಶೀಲೆಗೆ ಅವನ ಮುಖದ ಮೇಲೆ ಉಗಳಬೇಕೆನ್ನುವಷ್ಟು ತಿರಸ್ಕಾರವುಂಟಾಯಿತು. ಅವಳು ತುಟಿಕಚ್ಚಿ ಸುಮ್ಮನೆ ಸಿಂತುದನ್ನು ನೋಡಿ, ಕನಿಕರದಿಂದ ಅವಳನ್ನು ಸಂತೈಸುವವನಂತೆ ಶ್ಯಾಮ ಮಾತನಾಡತೊಡಗಿದ. +“ಆದದ್ದಾಯಿತು. ಇನ್ನೇನು ಮಾಡಲಿಕ್ಕಾಗುತ್ತದೆ? ನಿನ್ನನ್ನು ನಾನು ಪ್ರೀತಿಸೋದಿಲ್ಲಂತ ಎಲಿ ಹೇಳೀನಿ…?… ಬಾ.” +ಸುಶೀಲೆ ಸಿಡಿದು ಬಿದ್ದಳು. “ನಿಮ್ಮ ಪ್ರೀತಿಗೆ ಬೆಂಕಿ ಹತ್ತಿತು. ನಿಮ್ಮ ಸುಟ್ಟ ಪ್ರೀತಿ ಯಾರಿಗೆ ಬೇಕಾಗಿತ್ತು?” +“ಹಾಗಾದರೆ ಏನು ಬೇಕಾಗಿತ್ತು ನನ್ನಿಂದ?…ಹೇಳಲ್ಲ ಏನು ಬೇಕಾಗಿತ್ತು?” ಕೆಣಕುವ ತುಂಟ ಧ್ವನಿಯಲ್ಲಿ ಕೇಳಿದ. +“ಅಯ್ಯೋ, ನನ್ನ ಪೂರಾ ಕೊಂದೇಕೆ ಬಿಡುವದಿಲ್ಲ ನೀವು? ಹೌದು. ನಂದ ತಪ್ಪು, ನಾನೇ ಹಾಳು, ನಾನೇ ಕೆಟ್ಟವಳು, ನಾನಾಗೇ ನಿಮ್ಮ ಹತ್ತಿರ ಓಡಿ ಬಂದೆ, ಬೆನ್ನುಹತ್ತಿ ಬಂದೆ, ಆಯಿತಿಲ್ಲೋ?” +ಸುಶೀಲೆಗೆ ದುಃಖ ಏರಿಬಂತು. ಓಡಿಹೋಗಿ ಕುರ್ಚಿಯ ಮೇಲೆ ಕುಸಿದು ಬಿದ್ದು, ಟೇಬಲ್ ಮೇಲೆ ಮುಖ ಒರಗಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಶ್ಯಾಮನು ಅವಳೆಡೆಗೆ ಮುಖ ಕಿವುಚಿ ನೋಡಿ ಹೇಳಿದ: +“ಅಳು, ಬೇಕಾದಷ್ಟು ಅಳು. ನನಗೇನು?” +ಕೊಂಚ ಹೊತ್ತು ನಿಃಶಬ್ದ. ಹೊರಗಿನ ಮಳೆಯ ಸಪ್ಪಳದಲ್ಲಿ ಅವಳ ಅಳುವ ಸಣ್ಣದನಿ ಮುಳುಗಿಹೋಯಿತು. ಶ್ಯಾಮನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಎದ್ದು ಹೋಗಿ ಅವಳ ಬೆನ್ನಮೇಲೆ ಕೈಯಾಡಿಸತೊಡಗಿದ. ಸುಶೀಲೆಯು ತಿವಿಯಲ್ಪಟ್ಟ ಹಾವಿನಂತೆ ಹಾರಿಬಿದ್ದು, ಅವನನ್ನು ತನ್ನಿಂದ ದೂರ ನೂಕಿದಳು. ಶ್ಯಾಮನು ತನ್ನ ಸಿಟ್ಟನ್ನು ಬಿಗಿಹಿಡಿದು: +“ನಿನ್ನ ಸಿಟ್ಟು ಇಳಿದ ಮೇಲೆ ನೀನೇ ಹಾದಿಗೆ ಬರ್‍ತೀ” ಎಂದು ವೇದವಾಕ್ಯ ನುಡಿದು, ಮರಳಿ ಹೋಗಿ ಗೊಡೆಯ ಕಡೆಗೆ ಮುಖ ತಿರುಗಿಸಿ ಮಲಗಿದ…. +ದೂರ ಗುಡುಗಿನ ಸದ್ದು ಸಿಡಿಲು ಬಿದ್ದಂತೆ ಭಾಸವಾಯಿತು ಸುಶೀಲಳಿಗೆ. ಅಳುವುದನ್ನು ನಿಲ್ಲಿಸಿ, ಸರ್ರನೆ ಒಂದು ಹಾಳಿಯನ್ನು ತೆಗೆದುಕೊಂಡು ಏನೇನೋ ಗೀಚತೊಡಗಿದಳು. ಅದು ಶ್ರೀಧರನಿಗೆ ಬರೆದ ಪತ್ರವಾಗಿತ್ತು. +“…ಶ್ರೀಧರ, +ನಾನು ನಿಮಗೆ ‘ಪ್ರಿಯ’ನೆಂದು ಸಂಬೋಧಿಸುವ ಹಕ್ಕನ್ನು ಕಳೆದುಕೊಂಡಿರುವೆ…ನಿಮ್ಮ ಅಭಿನಂದನೆ, ನಮ್ಮೀರ್ವರ ಜೀವನ ಸುಖಮಯವಾಗಲಿ ಎಂಬ ನಿಮ್ಮ ಹರಕೆ, ನನ್ನ ಹೃದಯದಲ್ಲಿ ಅವ್ಯಕ್ತ ವೇದನೆಯನ್ನುಂಟು ಮಾಡಿದವು. ನೀವೇಕೆ ಹಾಗೆ ಅಣಕಿನ ಮಾತು ಹೇಳಿ ನನ್ನನ್ನು ದುಃಖಿಯನ್ನಾಗಿ ಮಾಡುತ್ತಿದ್ದೀರೋ ನಾ ಕಾಣೆ. ಶ್ಯಾಮನ ಮೇಲೆ ನನ್ನ ಪ್ರೀತಿ ಎಳ್ಳಷ್ಟೂ ಇಲ್ಲ. ಇದು ನಿಮಗೆ ಗೊತ್ತಿದ್ದರೂ ನೀವು ಅಭಿನಂದನೆಗಳನ್ನು ಕಳಿಸಿರುವಿರಿ…ಪ್ರೀತಿ ಇಲ್ಲದಿದ್ದರೆ ಆತನನ್ನೇಕೆ ಲಗ್ನವಾದೆ ಎಂದು ಕೇಳಬಹುದು. ಅದರ ಉತ್ತರ ನಿಮಗಲ್ಲದೆ ಮತ್ತಾರಿಗೆ ಹೇಳಲಿ? +ನೀವು ಹೋದ ಮೇ ತಿಂಗಳ ಸೂಟಿಯಲ್ಲಿ ಬಂದಾಗ ನಾನು ನಿಮಗೆ ಪ್ರಶ್ನಿಸಿದುದು ನೆನಪಿದೆಯೇ? +‘ಇಷ್ಟೆಲ್ಲ ನನ್ನೊಡನೆ ರೋಮಾನ್ಸ ಮಾಡಿದಿರಿ, ಕೊನೆಗೆ ನನ್ನನ್ನು ಲಗ್ನವಾಗುವದು ನಿಜ ತಾನೇ?’ +ಅದಕ್ಕೆ ನೀವು ನನ್ನನ್ನು ಬಿಗಿದಪ್ಪಿ, ‘ಆ ವಿಷಯ ಈಗಲೇ ಹೇಳುವದು ಹೇಗೆ? ನೀನಿನ್ನೂ ದೊಡ್ಡವಳಾಗಬೇಕು, ಕಾಲೇಜಿಗೆ ಹೋಗಿ ಕಲಿಯಬೇಕು. ಇಷ್ಟು ಬೇಗನೆ ವಿಚಾರ ಮಾಡುವ ವಿಷಯವಲ್ಲದು.’ ಎಂದು ಹೇಳಿದಿರಿ; ಹಾಗೂ ನಾನು ಮ್ಯಾಟ್ರಿಕ್ ಆದ ನಂತರ ಪುಣೆಯಲ್ಲಿಯ ನನ್ನ ಅತ್ತೆಯ ಮನೆಯಲ್ಲಿದ್ದು ನೀವಿದ್ದ ಕಾಲೇಜಿಗೆ ಬರಲು ನೀವೇ ಸೂಚಿಸಿದಿರಿ. +ಆದರೆ ನೀವು ಹೋದಮೇಲೆ ನಿಮ್ಮ ಪತ್ರದ ಹಾದಿಯನ್ನು ಕಾಯ್ದು ಬೇಸತ್ತೆ. ಆಗ ತಲೆಯಲ್ಲಿ ನೂರೆಂಟು ವಿಚಾರಗಳು. ನೀವು ನನ್ನ ಕೈಬಿಟ್ಟಿರುವಿರಿ ಎಂಬ ಭೀತಿ! ಅವೆಲ್ಲ ವಿಚಾರಗಳನ್ನು ಈಗ ಹೇಗೆ ಬರೆಯಲಿ? ಜೂನ ತಿಂಗಳಲ್ಲಿ ರಿಜಲ್ಟು ಆದಾಗ ನಾನು ನಾಪಾಸಾಗಿದ್ದೆ. ಅದಲ್ಲದೆ ಮುಟ್ಟಿ ನಿಂತಿತ್ತು…. ಮುಂದೆ ನಾನು ಬರೆದ ಎರಡು ಪತ್ರಗಳಿಗೆ ನೀವು ಯಾವ ಕಾರಣದಿಂದಲೇ ಉತ್ತರ ಬರೆಯಲಿಲ್ಲ. ನನ್ನ ಮನಸ್ಥಿತಿಯೇ ವಿಚಿತ್ರವಾಯಿತು. ಇದ್ದ ಸಂಗತಿಯನ್ನು ನಿಮಗೆ ತಿಳಿಸಿದ್ದರೆ ನಿಮ್ಮ ಕಣ್ಣು ತೆರೆಯುತ್ತಿದ್ದವೇನೋ…! ಮುಂದೆ ನನ್ನ ಕನಸುಗಳ ಮಂದಿರವೇ ಕುಸಿದು ಬಿದ್ದಂತಾಯಿತು ಆಗ ಹುಚ್ಚುಯಂತಿದ್ದೆ. ಆಗ…ಒಂದು ಉಪಾಯ ಹೊಳೆಯಿತು… ಮೊದಲಿನಿಂದಲೂ ನನ್ನ ಬೆನ್ನು ಹತ್ತಿದ್ದ ಶ್ಯಾಮ…ಅವನ ಜೊತೆಯಲ್ಲಿ… ನನ್ನ ದುರ್ದೈವ! ನನ್ನ ಕೊರಳಿಗೆ ನಾನೇ ನೇಣು ಹಾಕಿಕೊಂಡೆ… ನಿಮ್ಮ ವಿಚಾರವನ್ನೇ ಬಿಟ್ಟೆ. ಸ್ವಾಭಿಮಾನ ಬೇರೆ! ಶ್ಯಾಮ ಲಗ್ನವಾಗಲು ಸಿದ್ಧನೇ ಇದ್ದ….ನಮ್ಮ ಮನೆಯವರಿಗೂ ಶ್ಯಾಮ ಬೇಕಾದವ…ಆದರೆ ಈಗ ಎಲ್ಲವೂ ಶೂನ್ಯವಾಗಿದೆ. ಈ ಜೀವನವೇ ಬೇಡವಾಗಿದೆ. ನೀವಿಲ್ಲದೆ ನನ್ನ ಬಾಳು ಶೂನ್ಯ ಶೂನ್ಯ. ಮೇಲಾಗಿ ಇದು ಮೋಸದ ಬಾಳು…ನಿನ್ನ ಕೂಸು…” +ಮುಂದೆ ಬರೆಯುವದಾಗಲಿಲ್ಲ ಸುಶೀಲಳಿಗೆ…ದುಃಖ ಎದೆಯೊಳಗಿಂದ ಉಕ್ಕಿ ಬಂತು. ತನ್ನ ಎರಡೂ ಕೈಗಳಿಂದ ಮುಖಮುಚ್ಚಿಕೊಂಡು ಟೇಬಲ್ ಮೇಲೆ ಒರಗಿದಳು. ಮೊದಲೇ ಹನಿಗೂಡಿ ನಿಂತ ಕಣ್ಣುಗಳಿಂದ ನೀರು ಧಾರಾಳವಾಗಿ ಸುರಿಯತೊಡಗಿತು. +ಹೊರಗೆ ಮಳೆ ಬೀಳುತ್ತಲೇ ಇತ್ತು! +ಇತ್ತ ಶಾಮನ ಗೊರಕೆ ಸುರುವಾಗಿತ್ತು. +***** +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_152.txt b/Kannada Sahitya/article_152.txt new file mode 100644 index 0000000000000000000000000000000000000000..f4e9ef5260ca1acdde0f8d7de8fcb0818c9ad215 --- /dev/null +++ b/Kannada Sahitya/article_152.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪಾಳು ಗುಮ್ಮಟದ ಮೈಗೆ +ಪಾರಿವಾಳದ ತೇಪೆ +ಹಸಿರು ಚಾದರದಂಚಿಗೆ +ಹೊಳೆವ ಜರದೋಜ್ಹಿ ಕೈ ಕೆಲಸ +ಮಂಡಿಯೂರಿ, ಬೆನ್ನಬಗ್ಗಿಸಿ +‘ಅಲ್ಲಾ….. ಹೂ…..!’ +ಮುಂಜಾನೆ ಹೊನ್ನ ಬೆಳಕು +ಶಹರಿನ ತುಂಬ ತಣ್ಣನೆ ಗಾಳಿ +ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ +ಸಹಸ್ರ ಲಿಂಗದ ಹಾಗೆ; +ಈ ಊರ ಮೈ ತುಂಬ ಬಂಡೆಗಳು +ಇದ್ದಕ್ಕಿದ್ದಂತೆ ಎದ್ದು ನಿಲ್ಲುವ +ಬಿಡಿ ಬಿಡಿ ಬೆಟ್ಟಗಳು +ಅದರ ತುದಿಗೊಂದೊಂದು ಕಥೇ. +*ಹುಸೇನ್ ಸಾಗರದಲ್ಲಿ ವರ್ಷಕ್ಕೊಮ್ಮೆ +ಕೈಲಾಸಕ್ಕೊಂದು ಕಳ್ಳದಾರಿ. +* ಗಣೇಶ ಚತುರ್ಥಿಯ ಸಮಯದಲ್ಲಿ ಹೈದರಾಬಾದಿನ ಗಣಪತಿ ವಿಗ್ರಹಗಳನ್ನು ಸಾಮಾನ್ಯವಾಗಿ ‘ಹುಸೇನ್ ಸಾಗರ’ದಲ್ಲೇ ವಿಸರ್ಜನೆ ಮಾಡುವುದು. +***** +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_153.txt b/Kannada Sahitya/article_153.txt new file mode 100644 index 0000000000000000000000000000000000000000..1e5db6a8b7fcf34799f7365d5baad23c298e6f25 --- /dev/null +++ b/Kannada Sahitya/article_153.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಂಕರಾಭರಣ ಆದಿ +ಯಾರೆ ರಂಗನ ಯಾರೆ ಕೃಷ್ಣನ +ಯಾರೆ ರಂಗನ ಕರೆಯ ಬಂದವರು ಪ +ಗೋಪಾಲಕೃಷ್ಣನ ಪಾಪವಿನಾಶನ +ಈ ಪರಿಯಿಂದಲಿ ಕರೆಯಬಂದವರು ೧ +ವೇಣುವಿನೊದನ ಪ್ರಾಣ ಪ್ರಿಯನ +ಜಾಣೆಯರರಸನ ಕರೆಯ ಬಂದವರು ೨ +ಕರಿರಾಜವರದನ ಪರಮಪುರುಷನ +ಪುರಂದರವಿಠಲನ ಕರೆಯಬಂದವರು ೩ +***** +ರಾಗ — ಆನಂದಭೈರವಿ ತಾಳ — ಅಟ್ಟ ಮುಟ್ಟದಿರೋ ಎನ್ನನು – ರಂಗಯ್ಯ | ಮುಟ್ಟದಿರೋ ಎನ್ನನು ||ಪ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| […] +ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […] +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_154.txt b/Kannada Sahitya/article_154.txt new file mode 100644 index 0000000000000000000000000000000000000000..9d5ed1b61522643344f479cdc73943ddbe7f6a2d --- /dev/null +++ b/Kannada Sahitya/article_154.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” +ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. +ಓದುತೋದುತಲಿರಲು ಕಣ್ಣು ಹನಿಗೂಡಿತ್ತು; +ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; +ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ +ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. +ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು +ಕೃತಕತೆಯ ಕಟ್ಟಳೆಯ ಮೀರಿ ಮಮತೆಯ ತೋರಿ +ಎನ್ನದೆಯನಾವರಿಸಿ ಕರುಣೆ ಹೂ ತಳೆದಿತ್ತು; +ತಿಳಿಯೊಲವು ನರುಗಂಪ ಸೂಸಿತ್ತು; ಪೂಸಿತ್ತು. +ಬಾಳಕೊಳಗುಳದಲ್ಲಿ ನೋವಿನೆಳೆದಾಟದಲಿ +ಆಶೆಯಾಕಾಂಕ್ಷೆಗಳು ಹುಡಿಗೂಡುವನಿತರಲಿ +ಗಾಸಿಗೊಂಡಿಳೆಗೊರಗಿ ಕಣ್ಣಿವೆಯು ಜಡಮಾಗಿ +ಬದುಕಿರುವ ಜೀವಿಗಿಹುದದುವೆ ತಣ್ಣೆಳಲಾಗಿ. +***** +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_155.txt b/Kannada Sahitya/article_155.txt new file mode 100644 index 0000000000000000000000000000000000000000..acabd668881855590d2221bebcc8d29ea2312ad3 --- /dev/null +++ b/Kannada Sahitya/article_155.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ನಾಡಿನ +ತ್ರಿಶೂಲ +ಪ್ರಾಯ +ಸಮಸ್ಯೆಯೆಂದರೆ: +ನುಡಿ +ಗಡಿ +ಗುಡಿ. +***** +ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ ***** +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_156.txt b/Kannada Sahitya/article_156.txt new file mode 100644 index 0000000000000000000000000000000000000000..c271c321b3778809592470793d7ae0fe1e1e4a47 --- /dev/null +++ b/Kannada Sahitya/article_156.txt @@ -0,0 +1,65 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇವ ಹುಟ್ಟು ಹಾರಾಟಗಾರ; +ಇವನಮ್ಮ, ಇವನಜ್ಜಿ +ಅಕ್ಕ-ತಂಗಿಯರ, ಅತ್ತೆಯಂದಿರ +ಮುದ್ದು ಹನುಮ. +ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; +ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, +ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ +ಒಂದೇ ಏಟಿಗೆ +ಧಡಂ ಎಂದು ಹಾರುತ್ತಾ ಕಾಲ ಹಾಕುತ್ತಿರುತ್ತಾನೆ. +ಎರಡು ಹೆಜ್ಜೆಗೊಂದು ಹಾರು; +ಬೀಳುತ್ತಲೇ ಮೇಲೇಳುತ್ತಿರುತ್ತಾನೆ. +ಬಿದ್ದೆದ್ದು ಮಣ್ಣಾದ ಮೀಸೆಯ ಸವರಿ +ತನ್ನ ಗರಿ, ರೆಕ್ಕೆ, ಪುಕ್ಕಗಳ ನೇವರಿಸಿ +ಭೋಪರಾಕಿಗೆಂಬಂತೆ +ದಾರಿ ಬಿಡಿ, ದಾರಿ ಬಿಡಿ, ಅಡ್ಡಬಾರದಿರಿ +ಎನ್ನುತ್ತ ಹಾರುತ್ತಲೇ ಬರುತ್ತಾನೆ. +* +* +* +ಕಾಣಬಹುದು ನೀವೀತನನು +ಸತ್ತ ಮೀನಿನ +ಚೆಲುವ ಮೀನ ಕಣ್ಗಳ +ಮೀನಿನ ಮಾರ್ಕೆಟ್ಟಿನ ತಿರುವು ರಸ್ತೆಯ +ಮುರುವಿನಲ್ಲಿ; +ಬೇಕಿದ್ದರೆ ಗುರುತು – +ಜಗಿಯುತ್ತ ಇರುತ್ತಾನೆ +ತನ್ನ ಹುಲ್ಗಾವಲಿನ ಹಸಿ ಹಸಿ ಗರಿಕೆಗಳನ್ನು: +ಗುಟುರು ಹಾಕಲಿಕ್ಕೆ ಬೇಡವೇ ತ್ರಾಣ? +ಇವನಿಗೆ +ಹಸಿವಾದೊಡೆ ಭಕ್ಷ್ಯಾನ್ನಗಳುಂಟು +(ಅನ್ನ ಸಾಂಬಾರು, +ತಲೆ ಮಾಂಸ: ಅವರಿವರದು) +ತೃಷೆಯಾದೊಡೆ ಕೆರೆ ಬಾವಿಗಳುಂಟು +ದಾರಿಬದಿ ಹಾದುಹೋಗುವ ಕನಕಾಂಗಿಯರ +ಥೂ ಹಲ್ಕ ನೋಟ. +ಹಾರುತ್ತ ಹಾರುತ್ತಲೇ ಇರುತ್ತಾನೆ ಇವನು +ಮೋಸ ಹೋಗದಿರಿ. +ಇಂದಿಲ್ಲಿ, ಇವನ ಹಾರಿಗೆ ಸೆಳೆದು ಹೋದ ಗಾಳಿಗಳು +ನಾಳೆ ನಿಮಗೇ ಸಿಗಬಹುದು, +ಅಲ್ಲಿ: +ಅರೆ ಇದೆಲ್ಲಿ ಬಂತಪ್ಪ ಗ್ರಹಚಾರ, +ಹುಳಿಗಾಳಿ, ಕೆಸರ ಪಿಚಿಪಿಚಿ +ಎಂದು ಮೂಗು ಮುರಿಯುವರಾದರೆ – +ನೋಡಿ.. ನಿಮಗೆ ನಾನು ಮೊದಲೇ ಹೇಳಿಬಿಟ್ಟಿದ್ದೇನೆ. +***** +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಓ ತಂದೆ! ನಿನಗಿದೋ ಈ ನೆಲದ ಕಣಕಣವು ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ; ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ. ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು, ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ […] +– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_157.txt b/Kannada Sahitya/article_157.txt new file mode 100644 index 0000000000000000000000000000000000000000..d8110b9e8126055d57d5c1ca946abd8c91f9b9e3 --- /dev/null +++ b/Kannada Sahitya/article_157.txt @@ -0,0 +1,237 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +||ಶ್ರೀ|| +ಭಾಗ ಒಂದು : ಪುರುಕುತ್ಸ +-೧- +ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ ಅಧಿಪತಿಯಾಗಿ ರಜ್ಯಭಾರ ಮಾಡುತ್ತಿದ್ದ ಶ್ರೀಪುರುಕುತ್ಸ ಮಹಾರಜನ ರಾಜಧಾನಿಯಗಿತ್ತು.ಪುರುಕುತ್ಸನು ಸುಖ ಲೋಲುಪನು. ಇವನ ರಾಣಿ ನರ್ಮದಾ ಪುರುಕುತ್ಸಾನಿ. ಆದರೆ ಹೆಂಡತಿ ಜೊತೆಗೆ ಅವನಿಗೆ ಎನೂ ಸಂಬಂಧವಿರಲಿಲ್ಲ. ಏಕೆಂದರೆ ಪುರುಕುತ್ಸಾನಿ ಪುರುಕುತ್ಸ ಮಹಾರಾಜನ ತಂಗಿಯೂ ಹೌದು.ಸೂರ್ಯವಂಶದ ಪದ್ಧತಿಯಂತೆ ಚಿಕ್ಕಂದಿನಲ್ಲೇ ಅವರ ವಿವಾಹವು ಜರುಗಿಹೋಗಿತ್ತು.ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಮಾಡುವ ವ್ಯವಸ್ತೆ ಇದು.ಇಜಿಪ್ಶಿಯನ್ ರಾಜಮನೆತನಗಳಲ್ಲಿ ನಡೆದುಬಂದ ರೀತಿ ಇದು.ಪುರುಕುತ್ಸ ಮಹಾರಾಜನು ಪುರುಕುತ್ಸಾನಿ ತನ್ನ ತಂಗಿಯೆಂಬುವುದನ್ನು ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮಕ್ಕಳೂ ಆಗಲಿಲ್ಲ.ರಾಜಮನೆತನದ ಸಮಾನ ಅಧಿಕಾರಿಣಿಯಾಗಿದ್ದ ಪುರುಕುತ್ಸಾನಿ ತನ್ನ ವರ್ಚಸ್ಸಿನಿಂದ ಅಣ್ಣ-ಗಂಡನ ರಾಜ್ಯ ಸೂತ್ರಗಳನ್ನು ಭದ್ರವಾಗಿ ಕೈಯಲ್ಲಿ ಇರಿಸಿಕೊಂಡು ನಿಜವಾದ ರಾಜ್ನಿಯಂತೆ ಆಳುತ್ತಿದ್ದಳು.ಆದರೆ ಸಂಸಾರಸುಖವೊಂದು ಅವಳಿಗೆ ನಿಲುಕದ ವಿಷಯವಾಗಿತ್ತು.ರಾಜಮನೆತನದ ಈ ವಿಶಿಷ್ಟವಿವಾಹ ಪದ್ದತಿ ಹೇಗೆ ಮಾಯವಾಯಿತೆಂಬುದೇ ನಮ್ಮ ಕಾದಂಬರಿಯ ವಿಷಯ. +-೨- +“ಕಾಲಿಯಾ!” ಪುರುಕುತ್ಸ ಮಹಾರಾಜನು ಕೂಗಿದನು. +“ಮಹಾರಾಜ!” ಕಾಲಿಯ ಓಡಿಬಂದು ಮುಜುರೆ ಮಾಡಿ ನಿಂತನು. +“ತಾರ್ಕ್ಷ ಬಂದನೇ ?” ಪುರುಕುತ್ಸ ಮತ್ತೊಂದು ಗುಟುಕು ಮಧುಪಾನ ಮಾಡುತ್ತ ಕೇಳಿದನು, ಉತ್ಕಟೆಯಿಂದ. +“ಇನ್ನೂ ಬರಲಿಲ್ಲ ಸ್ವಾಮಿ !” ಎಂದ ಕಾಲಿಯಾ. +“ಬಂದಕೂಡಲೆ ಒಳಗೆ ಬರಹೇಳು!” ಎಂದನು ಮಹಾರಾಜ. +ಮಹಾರಾಜ ಅಂದು ಕೇಳಿದ್ದು ನಾಲ್ಕನೇ ಬಾರಿ. +ಕಾಲಿಯಾ ಹೇಳಿದ್ದೂ ನಾಲ್ಕನೇ ಬಾರಿ. +“ಆಗಲಿ ಮಹಾಪ್ರಭು!” +ಎರಡು ವರ್ಷ ಈ ಮಾತು ಕಾಲಿಯಾ ಕೇಳಿದ್ದ. ಅನೇಕಬಾರಿ ಇದೇ ಉತ್ತರ ಕೊಟ್ಟಿದ್ದ.ಅವರ ಸಂಭಾಷಣೆ ಇಲ್ಲಿಗೇ ಮುಕ್ತಾಯ. +ಹದಿನೇಳು ವರ್ಷದ ಕಾಲಿಯಾಗೆ ಇದೇ ಮಾತು ಕೇಳಿಕೇಳಿ ಬೇಸರವಾಗುತ್ತಿತ್ತು. +ಆಂರವನದಲ್ಲಿ ಒಂದು ಭವ್ಯ ಗುಡಿಸಲು. ಸುತ್ತಲೂ ಬೇಲಿ. ಬೇಲಿಯಹೊರಗೆ ಆತು ಪಹರೆಯವರು. ಒಳಗೇ ಓಮ್ತೀ ಮಹಾರಾಜ, ಅವನ ಆಪ್ತ ಆಳುಮಗ ಕಾಲಿಯಾ. ಹದಿನೈದು ವರ್ಷಕ್ಕೆ ಕೆಲಸಕ್ಕೆ ಸೇರಿಕೊಂಡ ಕಾಲಿಯಾನಿಗೆ ಪುರುಕುತ್ಸ ರಾಜನ ಸಿಬ್ಬಂದಿಯಲ್ಲಿ ವಿಶೇಷ ಸ್ಥಾನವಿತ್ತು. ಅವನು ಹೊಸಬ. ಯಾರದೂ ಪರಿಚಯವಿಲ್ಲ,ಮಾತುಕಮ್ಮಿ,ಆಸ್ಥಾನದ ಸುಶಿಕ್ಷಿತ ಭಾಷೆಯ ಪರಿಚಯ ಅವನಿಗಿರಲಿಲ್ಲ. ನಾಗಜಾತಿಯ ಹುಡುಗನಾಗಿದ್ದ ಅವನು, ಆಡುವ ಭಾಶೆಯ ಉಚ್ಚಾರವೂ ಕೇಳುವವರಿಗೆ ತಿಳಿಯಲು ಕಷ್ಟವಾಗುತ್ತಿತ್ತು. ಅಲ್ಲದೇ ಸುರಧ್ರೂಪಿ. ಏನೂ ಅರಿಯದವನು. ಈಗೀಗ ರಾಜನ ನಿತ್ಯಕರ್ಮದ ಪರಿಚಯ ತುಸು ಆಗಿತ್ತು. ತಾರ್ಕ್ಷ ಕುದುರೆಯಮೇಲೋ ರಥದಲ್ಲೋ ಕರೆದು ಕೊಂಡುಬಂದ ಗಣಿಕೆಯರು, ವಾರಾಂಗನೆಯರು, ರಾಜನ ಸಹವಾಸವಾದ ಮೇಲೆ ತಾವೂ ಕುಡಿದು ಮಲಗುತ್ತಿದ್ದರು. ಅವರನ್ನು ಎತ್ತಿಹೊರಗೆ ತಂದು ಹಾಕಿ, ಬೇಗ ಎಬ್ಬಿಸಿ,ಹೊರಗೆ ಅಟ್ಟುವುದು, ಪಹರೆಯವರಿಗೆ ಒಪ್ಪಿಸುವುದು- ಇದಷ್ಟು ಅವನು ಮಾಡುವ ನಿತ್ಯಕರ್ಮ. ಎಲ್ಲಿಂದ ಬಂದರೋ ಅವನಿಗೆ ತಿಳಿಯದು. ಅವರ ಮಾತು ಇವನಿಗೆ ಅರ್ಥವಾಗದು, ಇವನ ಮಾತು ಅವರಿಗೆ ಅರ್ಥವಾಗದು. ಮಹಾರಾಜರಿಗಷ್ಟೇ ಇವನ ಮಾತು ಅರ್ಥವಾಗುವುದು. ಏಕೆಂದರೆ ಅವರು ಈ ಭಾಷೆಯನ್ನು ಬಲ್ಲವರು . ಚಿಕ್ಕಂದಿನಿಂದಲೇ ಕಲಿತವರು. ತಾಯಿಯಿಂದಲೇ ಕಲಿತವರು. ತಾಯಿ ಬಿಂದುಮತಿದೇವಿ ನಾಗಕ್ಷತ್ರೀಯ ವಂಶದವಳು. ಆಕೆಯಕಾಲದಲ್ಲೇ ಆಕೆಯ ನಾಗಪೋಜೆಗಾಗಿ ಹಲವಾರು ನಾಗಬ್ರಾಹ್ಮಣರು ಅಯೋಧ್ಯೆಗೆ ವಲಸೆ ಬಂದು ನೆಲೆಸಿದ್ದರು. ಹಲವಾರು ನಾಗಸೇವಕರೂ ರಾಜನ ಸಿಬ್ಬಂದಿಯಲ್ಲಿ ಸೇರಿಕೊಂಡು ತುಸು ಸುಭದ್ರವಾಗಿ ಮೇಲ್ಪಂಕ್ತಿಗೆ ಏರಿದ್ದರು. ಪುರುಕುತ್ಸಾನಿ ಮಹಾರಾಣಿಯು ಕಾಲಿಯಾನನ್ನು ನೇಮಿಸಿಕೊಂಡು ಅರಸನ ಆಪ್ತಸೇವಕನನ್ನಾಗಿ ಮಾಡಿದುದೂ ಇದೇ ಕಾರಣದಿಂದ. ನಾಗಭಾಷೆಯೂ ಆರ್ಯಭಾಷೆಯೂ ತೀರ ಭಿನ್ನವೇನಲ್ಲ. ಆದರೆ ಉಚ್ಚಾರಣೆಯಲ್ಲಿ ತುಸು ಬೇರೆ. ಅಕಾರವು ಒಕಾರವಾಗುತ್ತಿತ್ತು. ಪ್ರತಿಮಾತಿಗೂ ಒಂದುಸಿರು ಮುಗಿದು ಮತ್ತೊಂದು ಉಸಿರು ಶುರುವಾಗಬೇಕಾದರೆ, ’ಆ’ ಎಂಬ ನಿದರ್ಶಕ ಲಘುಸ್ವರ ಬಂದು, ಕೇಳುವರಿಗೆ ಅರ್ಥವಾಗುವುದು ಕಠಿಣವಾಗುತ್ತಿತ್ತು. +ಐಗುಪ್ತದೇಶದ ಫೆರೋ ದೊರೆಗಳ ದೂರದ ಸಂಬಂಧಿಕನಾದ ಮಾಂಧಾತ ಮಹಾರಾಜನು ಅವರಿಗೆ ಪತ್ರ ಬರೆದು ಪುರುಕುತ್ಸ ಯುವರಾಜನ ಲಗ್ನದ ವಿಷಯಕ್ಕೆ ಸಲಹೆ ಕೇಳಿದ್ದನು. ಎರಡು ತಿಂಗಳಲ್ಲಿ ಅವರಿಂದ ಉತ್ತರ ಬಂದಿತ್ತು.–’ತಮ್ಮ ಪದ್ಧತಿಯಂತೆ ರಾಜವಂಶದ ರಕ್ತ ಶುದ್ಧ ಉಳಿಯಬೇಕು, ತೀರ ಸಮೀಪದ ಸಂಬಂಧಿಯನ್ನೇ ಮದುವೆ ಮಾಡಿಕೊಳ್ಳಬೇಕು. ವಂಶೋದ್ಧಾರವಾಗುತ್ತದೆ’ ಎಂದು. ಇಜಿಪ್ತ ರಕ್ತದವರಾರೂ ಇಲ್ಲ. ತಂಗಿ ಪುರುಕುತ್ಸಾನಿಯೊಬ್ಬಳೇ. ಅಯೋಧ್ಯೆಯ ವಶಿಷ್ಟಗೋತ್ರದ ಬ್ರಾಹ್ಮಣರು ಜನನರಹಸ್ಯದ ತತ್ವದ ಅನುಸಾರವಾಗಿ ಇದು ಬೇಡವೆಂದರು. ನಾಗಬ್ರಾಹ್ಮಣರು ತಮ್ಮ ಪದ್ದತಿಯಂತೆ ಇದು ಅಸಂಗತವೆಂದರು. ಬಿಂದುಮತೀದೇವಿಗೂ ಇದು ಧರ್ಮವಿರುದ್ಧವೆಂದು ತೋರಿತು. ಆದರೆ ರಾಜವಂಶದ ರಕ್ತಶುದ್ಧಿಯ ವಿಚಾರವನ್ನು ಒಪ್ಪಿದ ಕ್ಷತ್ರಿಯರು ಇದಕ್ಕೆ ಬೆಂಬಲ ಕೊಟ್ಟರು. ಹನ್ನೆರಡು ವರ್ಷದ ಪುರುಕುತ್ಸನಿಗೂ ಎಂಟು ವರ್ಷದ ನರ್ಮದಾ ಪುರುಕುತ್ಸಾನಿಗೂ ವಿವಾಹಮಂಗಲವಾಗಿಹೋಯಿತು. +ಪುರುಕುತ್ಸ ಹದಿನಾಲ್ಕು ವರ್ಷದವನಿದ್ದಾಗ ತಾಯಿ ಬಿಂದುಮತೀದೇವಿ ಕೊರಗಿ ನಿಧನ ಹೊಂದಿದಳು. ಅವನು ಹದಿನಾರು ವರ್ಷದವನಿದ್ದಾಗ ಮಾಂಧಾತ ಮಹಾರಾಜನು ರಾಜಯಕ್ಷ್ಮದಿಂದ ನಿಧನ ಹೊಂದಿದನು. ಮನೆಯವರೆಲ್ಲ ಕೂಡಿ ನಾಗಬ್ರಾಹ್ಮಣರ ಸಹಾಯದಿಂದ ಪುರುಕುತ್ಸನನ್ನು ಸಿಂಹಾಸನಕ್ಕೆ ಏರಿಸಿದರು. ಪುರುಕುತ್ಸನಿಗೆ ಆಗಿನ್ನೂ ಹನ್ನೆರಡು ವರ್ಷ. +ರಾಜಪುತ್ರಿಯರಂತೆ ಪುರುಕುತ್ಸಾನಿ ತುಸು ಗಂಡುಬೀರಿ. ಗಂಡನಜೊತೆಗೆ ಸಖಾಭಾವದಿಂದ ಆಟವಾಡುತ್ತಿದ್ದಳು. ಕುದುರೆ ಏರುತ್ತಿದ್ದಳು. ಮರ ಹತ್ತುತ್ತಿದ್ದಳು. ವ್ರಕ್ಷವಾನರ(ಮರಕೋತಿ) ಆಟದಲ್ಲಿ ಅವನನ್ನು ಸೋಲಿಸಿ ಅಳುವಂತೆ ಮಾಡುತ್ತಿದ್ದಳು. ಕುಸ್ತಿ ಆಟದಲ್ಲಿ ಅವನನ್ನು ಕೆಳಕ್ಕೆ ಹಾಕಿ ಎದೆಯಮೇಲೆ ಕೂಡುತ್ತಿದ್ದಳು. ಬೆತ್ತದಾಟದಲ್ಲಿ ಅವನ ಡುಬ್ಬಕ್ಕೆ ನಾಲ್ಕು ಸೆಳೆದು ಕಣ್ಣೀರು ಕಪಾಳಕ್ಕೆ ಬರುವಂತೆ ಮಾಡುತ್ತಿದ್ದಳು. ಮಗಳ ಭವಿಷ್ಯಕ್ಕೆ ಚಿಂತಿತಳಾದ ಬಿಂದುಮತೀದೇವಿ ಮಗಳಿಗೇ ಎರಡು ಪೆಟ್ಟು ಕೊಟ್ಟು ಆಟ ಸಮನಾಗುವಂತೆ ಮಾಡುತ್ತಿದ್ದಳು. ಪುರುಕುತ್ಸಾನಿ ಅಳುತ್ತಹೋಗಿ ತಂದೆ ಮಾಂಧಾತನ ಎದುರು ದೂರು ಕೊಡುತ್ತಿದ್ದಳು. ಮಾಂಧಾತ ಬಿಂದುಮತೀಯ ಮೇಲೆ ಸಿಟ್ಟು ಮಾಡುತ್ತಿದ್ದನು. ಒಂದೆರಡು ಬಾರಿ ಹೀಗೆ ಸಿಟ್ಟು ಮಾಡಿದ್ದಕ್ಕಾಗಿ ಬಿಂದುಮತೀದೇವಿ ಮಗಳ ಅಸಮ್ಮತ ಲಗ್ನದ ಮಾತೆತ್ತಿ ಅವನು ಮೌನಿಯಾಗುವಂತೆ ಮಾಡಿದ್ದಳು. ಅನಂತರ ಪುರುಕುತ್ಸಾನಿಗೇ ಸಮಾಧಾನ ಹೇಳಿ, ರಾಜ ಬಿಂದುಮತೀದೇವಿಯನ್ನು ಎದುರಿಸುವುದನ್ನು ಬಿಟ್ಟೂಕೊಟ್ಟನು. ಒಮ್ಮೆ ಜಗಳ ತೀರ ವಿಕೋಪಕ್ಕೆ ಹೋಗಿ ರಾಜ ದೇವಿಗೆ ’ಗಾದ್ಧಾವಿ’(’ಗಾರ್ಧಭಿ’) ಎಂದು ಅವಧೀ ಗ್ರಾಂಯಭಾಷೆಯಲ್ಲಿ ಕರೆದನು. “ಹೌದು ನಿಮ್ಮ ಮನೆತನವೇ ’ಗದ್ಧಾವಿ’ ಮನೆತನ” ಎಂದು ರಾಣಿ ಉತ್ತರ ಕೊಟ್ಟಳು. ಅಂದಿನಿಂದ ಸೊರಗುತ್ತ ಸೊರಗುತ್ತ ಆರು ತಿಂಗಳಲ್ಲಿ ಪ್ರಾಣ ಬಿಟ್ಟಳು. +ಪುರುಕುತ್ಸ ತನ್ನ ತಂಗಿಯೇ ತಾಯಿಯ ಮರಣಕ್ಕೆ ಕಾರಣವೆಂದು ನಂಬಿಬಿಟ್ಟ. ಸಾಮಾನ್ಯವಾಗಿ ಎಲ್ಲ ರಾಜಕುವರಿಯರಂತೆ ಪುರುಕುತ್ಸಾನಿಯು ತಡವಾಗಿ ಯೌವನವನ್ನು ತಲುಪಿದಳು. ಹದಿನಾಲ್ಕನೆಯ ವಯಸ್ಸಿನಲ್ಲಿ ಆಕೆ ಪ್ರಾಪ್ತವಯಸ್ಕಳಾದಳು-ತಾಯಿಯ ಮರಣದ ಎರಡು ತಿಂಗಳ ಮೇಲೆ. ಮೈಲಿಗೆಯ ದಿವಸಗಳಾದ್ದರಿಂದ ನಿಷೇಕಪ್ರಸ್ತವನ್ನು ಒಂದು ವರ್ಷ ಮುಂದೂಡಲಾಯಿತು. +ಆ ವರ್ಷ ತಿಂಗಳಲ್ಲಿ ಮೂರು ದಿನ ಬಿಟ್ಟು ಉಳಿದೆಲ್ಲ ದಿನಗಳಲ್ಲಿ ಹೆಂಡತಿ ಗಂಡನ ಜೊತೆಗೆ ಆಟವಾಡುವದನ್ನು ಬಿಡಲಿಲ್ಲ. ಎಲ್ಲ ಆಟಗಳಲ್ಲೂ ಆಕೆಯದೇ ಮೇಲುಗೈ. ಹುಡುಗ ಪುರುಕುತ್ಸನಿಗೆ ಆಟಕ್ಕೆ ಬೇರೆ ಯಾರನ್ನೂ ತರುವುದು ರಜಾಜ್ಞೆಯಂತೆ ನಿಷಿದ್ಧವಾಗಿತ್ತು. +ಮಾಂಧಾತ ಮಹಾರಾಜನ ರಾಜಯಕ್ಷ್ಮ ಉಲ್ಬಣಿಸಿದಂತೆ, ಮಗನ ನಿಷೇಕ ಪ್ರಸ್ತಕ್ಕೆ ಅವನು ಉತ್ಸುಕನಾದನು. ಸೂತಕದ ಒಂದು ವರ್ಷ ಕಳೆದಾದಮೇಲೆ ಶುಭದಿನ ನೋಡಿ ನಿಷೇಕಪ್ರಸ್ತವನ್ನು ಗೊತ್ತುಮಾಡಲಾಯಿತು. ವಿಧಿವಿಧಾನಗಳಿಂದ ಆರತಿ ಮಾಡಿ, ಹಸೆಗೆ ಕರೆದ ಹಾಡುಗಳನ್ನು ಹಾಡಿ, ಇಬ್ಬರನ್ನೂ ಒಂದು ಕೊಣೆಯಲ್ಲಿ ದೂಡಲಾಯಿತು. ತಾಯಿಯ ಗುಪ್ತ ಸಲಹೆಯಿಲ್ಲದೆ, ಮತ್ತಾರೂ ಗುಪ್ತವಿಷಯಗಳನ್ನು ಹೇಳಲಿಕ್ಕೆ ಧೈರ್ಯವಾಗದೆ, ಪುರುಕುತ್ಸಾನಿ ತನ್ನ ಆಟವನ್ನೇ ಒಳಗೆ ಮುಂದುವರೆಸಿದ್ದಳು. ಪುರುಕುತ್ಸ ಒಂದು ಮೂಲೆಯಲ್ಲಿದ್ದನು. ಅವನ ಬೆನ್ನ ಮೇಲಿನ ಬಾಸುಂಡೆ, ಕೈಯ ಮೇಲೆ ಮೂಡಿದ್ದ ಪುರುಕುತ್ಸಾನಿಯ ದಂತ ಪಂಕ್ತಿ, ತಂದೆಗೆ ತೋರಿಸಿದನು. ತಂದೆ ನಕ್ಕುಬಿಟ್ಟರು,’ಇನ್ನೂ ಎಳೆಯ ವಯಸ್ಸು! ಕಾಲವೇ ಸಂದರ್ಭವನ್ನು ಅರಿಕೆ ಮಾಡುತ್ತದೆ !’ ಎಂದು ಮನಸ್ಸಿನಲ್ಲೇ ಗುಣಿತಹಾಕಿ, +ಆದರೆ ಕಾಲ ಏನನ್ನೂ ಬದಲಾಯಿಸಲಿಲ್ಲ. +ಮಾಂಧಾತ ಮಹಾರಾಜನು ಇನ್ನೊಂದು ವರ್ಷಕ್ಕೆ ಮರಣ ಹೊಂದಿದನು. +ರಾಜನಾದ ಮರುದಿನವೇ ಪುರುಕುತ್ಸನು ಪುರುಕುತ್ಸಾನಿಯ ಜೊತೆಗೆ ಒಡನಾಟವನ್ನು ಬಿಟ್ಟುಕೊಟ್ಟನು. ಬೇರೆಕೋಣೆಯಲ್ಲಿ ಮಲಗತೊಡಗಿದನು. ಅವನ ಸುತ್ತಲೂ ಕೆಲವು ಆರ್ಯಕ್ಷತ್ರಿಯರೂ ಕೆಲವು ನಾಗಕ್ಷತ್ರಿಯರೂ ಕೆಲವು ವಣಿಕ ಪುತ್ರರೂ ಸೇರಿಕೊಂಡರು. ಮೊದಮೊದಲು ತಿನಿಸಿನ ಆಸೆಮೂಡಿಬಂದು ಜಿವ್ಹಲೌಲ್ಯಕ್ಕಾಗಿ ಹಲವಾರು ಜನರನ್ನು ಸಾಕಿದನು. ಮನೆಯವರು ಅವನಿಗೆ ಸ್ತ್ರೀಸೌಖ್ಯವನ್ನು ಕಲ್ಪಿಸಿದರು, ಗಣಿಕೆಯರು, ವಾರವನಿತೆಯರು ಅವನ ಸುಖಕ್ಕಾಗಿ ಬರತೊಡಗಿದರು. ಪುರುಕುತ್ಸನೇ ರಾಜನಾದದ್ದರಿಂದ ಜೊತೆಗಾರರ ನಿರ್ಬಂಧನೆ ಹೊರಟುಹೋಯಿತು. +ಆಟಕ್ಕೇ ಎಂದು ಭಾವಿಸಿದ ಪುರುಕುತ್ಸಾನಿ ಜೊತೆಗಾರ ಕೈಬಿಟ್ಟುದಕ್ಕಾಗಿ ತುಸುಮಿಡುಕಿದರೂ ತನ್ನ ಆಟಕ್ಕಾಗಿ ಸುಂದರಿ ಎಂಬ ಸರದಾರನ ಮಗಳನ್ನೂ, ವಜ್ರನೆಂಬ ಅವನ ಹನ್ನೆರಡು ವರ್ಷದ ತಮ್ಮನನ್ನೂ ಜೊತೆಗಾರರನ್ನಾಗಿ ಮಾಡಿಕೊಂಡಳು. ಸುಂದರಿಗೆ ಆಗ ಹದಿನಾರು ವಯಸ್ಸು. ಅವರ ಸ್ನೇಹ ಅನ್ಯೂನ್ಯವಾಗಿತ್ತು. ದುರ್ದೈವದಿಂದ ಆರು ತಿಂಗಳಲ್ಲಿಯೇ ಸುಂದರಿಯ ಲಗ್ನ ಗೊತ್ತಾಯಿತು. ಅದೇನಗರದ ಇನ್ನೊಬ್ಬ ಸರದಾರನ ಮಗನ ಜೊತೆಗೆ. ವತ್ಸರಾಜನೆಂದು ಅವನ ಹೆಸರು. ಇಪ್ಪತ್ತೆರಡು ವರ್ಷದ ಸುರಧ್ರೂಪಿ ಅನುಭವಿ ಯುವಕನು. ಚಿಕ್ಕವಳಾದ ಸುಂದರಿಗೆ ಯೋಗ್ಯ ಉಪಚಾರ ಮಾಡಿ ಸುಖಭೋಗಕ್ಕೆ ಓಲೈಸಿದ್ದನು. +ಲಗ್ನವಾದ ಎರಡು ಮೂರುವಾರಗಳಲ್ಲಿ ಸುಂದರಿ ತನ್ನ ಗೆಳತಿಯನ್ನು ಭೇಟಿಮಾಡಲು ಬಂದಳು. +ಮೊದಲಿನಂತೆ ಪುರುಕುತ್ಸಾನಿ ತನ್ನ ಗುದುಮುರುಗೆಗೆ ಮೊದಲು ಮಾಡಿದಳು. ಆದರೆ ಸುಂದರಿ ಅದಕ್ಕೆ ಒಪ್ಪಲಿಲ್ಲ. ’ನಾನೀಗ ಮದುವೆಯಗಿದ್ದೇನೆ. ಹಾಗೆಲ್ಲ ಹುಡುಗಾಟ ಸಲ್ಲ!’ ಎಂದು ಹೇಳಿಬಿಟ್ಟಳು. +’ನನ್ನದೂ ಮದುವೆಯಾಗಿದೆ!’ ಎಂದಳು ಪುರುಕುತ್ಸಾನಿ. ಸುಂದರಿಯ ಮದುವೆಯ ವಿವರಗಳನ್ನೆಲ್ಲ ವಿಚಾರಿಸಿದಳು. ಸ್ನೇಹದ ಗೆಳತಿ ಯಾದ್ದರಿಂದ ಸುಂದರಿ ಮುಚ್ಚುಮರೆಯಿಲ್ಲದೆ ಎಲ್ಲ ಹೇಳಿಬಿಟ್ಟಳು. +ಪುರುಕುತ್ಸಾನಿ ತನ್ನ ತೊಡೆಗಳನ್ನು ಮುಟ್ಟಿ ನೋಡಿಕೊಂಡಳು. ತನ್ನ ಕೌಮಾಯಣ ಇನ್ನೂಹಾಗೆ ಇದೆ ಎಂದು ಅರಿತಳು. +ಸುಂದರಿ ಹೇಳಿದ್ದ , “ಒಂದೆರಡು ದಿನ ಕುಂಟುತ್ತ ಅಡ್ಡಾಡಬೇಕಾಯಿತು. ಈಗ ಮನಸ್ಸು ಅದನ್ನೇ ಬಯಸುತ್ತದೆ” ಎಂಬ ಆ ಮಾತು ಪುರುಕುತ್ಸಾನಿಯ ಮನಸ್ಸಿನ ಮೇಲೆ ಅಚ್ಚೊತ್ತಿದಂತಾಯಿತು. +ಈಗ ಅವಳಲ್ಲಿ ಕಾಮೋದಯವಾಯಿತು.! +ಜೊತೆಗೆ ಸುಂದರಿ ಹೇಳಿದ ಇನ್ನೊಂದು ಮಾತು -“ನನಗೆ ಹಗಲಿರುಳು ಗಂಡನದೇ ಚಿಂತೆ ಎನ್ನ್ಯವುದರಲ್ಲೂ ಸೊಗಸಿಲ್ಲ. ಮೊದಲಿನಂತೆ ಆಟಪಾಟದಲ್ಲಿ ಮನಸ್ಸು ಹೋಗದು. ಅವರೇ ನನ್ನ ಯಜಮಾನರು.” +ಮುಂದೆ ಮೂರು ನಾಲ್ಕು ತಿಂಗಳಲ್ಲೇ ಸುಂದರಿ ಗರ್ಭಿಣಿಯಾದಳು. +ತನಗೆ ಎಂದು ಗರ್ಭ ನಿಲ್ಲುವುದು?- ಪುರುಕುತ್ಸಾನಿಯ ತವಕ. +ತನ್ನ ಇಬ್ಬರು ಚೇಟಿಯರನ್ನು ಗಂಡ ಪುರುಕುತ್ಸನ ಮೇಲೇ ಪಾಳತಿ ಇಡಲು ಕಳಿಸಿಕೊಟ್ಟಳು. ಅವರಿಗೆ ಅರಿಯದ ವಿಷಯವಿಲ್ಲ. ಒಡತಿಯ ಆಣತಿಯ ಮೇರೆಗೆ ರಾಜನಮೇಲೆ ಕಣ್ಣು ಇಟ್ಟರು. +ರಾಜನ ಕೋಣೆಗೆಬರುವ ವಾರಾಂಗನೆಯರೆಲ್ಲವತ್ಸರಾಜ ಸುಂದರಿಯರ ಅನುಭವ ಪಡೆದು ಕಾಣಿಕೆ ಪಡೆದು ಮರಳುತ್ತಿರುವ ವಿಷಯ ಗೊತ್ತಾಗಿ ಪುರುಕುತ್ಸಾನಿ ಇನ್ನಷ್ಟು ಸಂಕಟಕ್ಕೆ ಒಳಗಾದಳು. +ಚೇಟಿಯನ್ನು ಕರೆದು ಸಲಹೆ ಕೇಳಿದಳು. +ಅವರೆಲ್ಲ ಒಮ್ಮತದಿಂದ ಹೇಳಿದರು:”ನೀನು ಮಹಾರಾಜ್ನಿ,ವಾರಾಂಗನೆಯರು ರಾಜಮಂದಿರಕ್ಕೆ ಬರುವುದು ನಿನ್ನ ಘನತೆಗೆ ಕುಂದು. ಅದಕ್ಕೆ ಪ್ರತಿಬಂಧ ಮಾಡಬೇಕು. ಅರಸರಿಗೆ ಹೆಂಗೆಳೆಯರನ್ನು ತಂದು ಒಪ್ಪಿಸುವ ಸರದಾರರನ್ನು ಕರೆದು ಅವರಿಗೆ ನಿರ್ಭಂದ ಹಾಕಬೇಕು. ಅವರು ನಿನ್ನ ಮಾತುಕೇಳುವಂತೆ ಮಾಡಬೇಕು!” +ಒಬ್ಬ ಸಣ್ಣಾಕೆ ಚೇಟಿ “ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ!” ಎಂದು ಗುಟ್ಟಾಗಿ ತಿಳಿಸಿದಳು. +ಸಂಜೆ ತಾನೇ ಬಂದು ಪುರುಕುತ್ಸಾನಿಯ ಗಂಡುಬೀರಿ ಮುಖಕ್ಕೆ ಕಮಲದ ಹುಡಿಯನ್ನು ಸಿಂಪಡಿಸಿ, ಒಳ್ಳೆಯ ದುಕೂಲ ಉಡಿಸಿ, ಕೇಶಾಲಂಕಾರಗೈದು ,ಎದುರಿಗೆ ಕನ್ನಡಿ ಹಿಡಿದಳು. ತನ್ನ ರೂಪಲಾವಣ್ಯಗಳು ಇಮ್ಮಡಿಗೊಂಡುದನ್ನು ರಾಣಿ ಕಣ್ತುಂಬ ನೋಡಿದಳು. ಚೇಟಿ ಹೇಳಿದ ಇನ್ನೊಂದು ಮಾತು ಅವಳ ಹೃ‌ಅದಯಕ್ಕೆ ನಾಟಿತು. “ಅರಸನ ಹಾಸಿಗೆಯ ಮೇಲೆ ನಿನ್ನದು ಮೊದಲ ಅಧಿಕಾರ. ಅದನ್ನು ಸ್ಥಾಪಿಸುವುದು ನಿನ್ನನ್ನೇ ಕೂಡಿದೆ. ಹೊತ್ತು ಮೂಡಿದ ಮೇಲೆ ನೀನು ರಾಜರನ್ನು ಶಯನಾಗಾರದಲ್ಲಿ ಸಂಧಿಸಬೇಕು. ಓಲೈಸಬೇಕು, ಮನಸ್ಸು ಒಲಿಸಬೇಕು. ನಿನ್ನ ರೂಪ ಲಾವಣ್ಯಗಳನ್ನು ನೋಡಿ ಅರಸು ಕುಣಿಯುತ್ತ ನಿನ್ನ ಅಪ್ಪಿಕೊಳ್ಳುತ್ತಾನೆ” ಎಂದು ಉತ್ತೇಜನವಿತ್ತು ಕಳಿಸಿಕೊಟ್ಟಳು. +ಪಾಟಲೀ ಪುತ್ರದಿಂದ ತಾರ್ಕ್ಷ್ಯನು ಕರೆದುಕೊಂಡು ಬಂದಿದ್ದ ಪಕ್ಷ್ಮಾ ಎಂಬ ನ್ರತ್ಯವಿಶಾರದೆಯು ನ್ರತ್ಯಕ್ಕೆ ತಕ್ಕ ಉಡುಪುತೊಟ್ಟು ಅರಸನ ಶಯ್ಯಾಗ್ರಹದ ಹೊರಗಿನ ಕೋಣೆಯಲ್ಲಿ ದಾರಿ ಕಾಯುತ್ತ ಕುಳಿತಿದ್ದಳು. ಅಂದು ಅರಸನಿಗೆ ನಿಕಟವರ್ತಿಗಳಾದ ಕೆಲವು ಮನ್ನೆ ಮಾನ್ನ್ಯರು, ಶ್ರೇಷ್ತಿಗಳು ಎರ್ಪಡಿಸಿದ್ದ ಚಿಕ್ಕಸಭೆಯೆದುರು ಪಕ್ಷ್ಮಾ ರಾಣಿಯ ನ್ರ್ತ್ಯಪದರ್ಶನ ಆಗಬೇಕಿತ್ತು. ಎಲ್ಲರೂ ಸಮೀಪವರ್ತಿಗಳು. ಯಾರಿಗೋ ನ್ರತ್ಯದಲ್ಲಿ ಆಸಕ್ತಿಯಿಲ್ಲ. ಅರಸನಿಗಂತೂ ಮೊದಲೇ ಇಲ್ಲ. ಇಂಥ ಸಂದರ್ಭಗಳಿಗೆ ಅರಸನ ಇಛ್ಛಾನುಸಾರ ಆಯಾ ನ್ರ್ತ್ಯಗಾತಿಯನ್ನು ಸೀದಾ ಅರಸನ ಶಯ್ಯಾಗ್ರಹಕ್ಕೆ ಕರೆದೊಯ್ದು, ’ಇಂದಿನ ಕರ್ಯಕ್ರಮ ನಾಳೆಗೆ ಮೊಂದೂಡಲಾಗಿದೆ!’ ಎಂದು ಸಾರಿ ಹೇಳಿ, ಬಂದವರನ್ನು ಮನೆಗೆ ಅಟ್ಟುವ ಕೆಲಸವೂ ತಾರ್ಕ್ಷನಿಗೇ ಕೂಡಿದ್ದು. ಏಗಾಗಲೆ ನಾಲ್ಕಾರು ಅತಿಥಿಗಳುಸಭಾಂಗಣಕ್ಕೆ ಬಂದು ಆಸೀನರಾಗಿದ್ದರು, ಅರಸನ ಭೋಜನ ಸಾಗಿತ್ತು ಶಯ್ಯಗ್ರಹದಲ್ಲಿ. ಇಂದೇನು ಆಗುವುದೋ ಎಂಬ ಉತ್ಕಠೆಯಿಂದ ತಾರ್‍ಕ್ಷ ಪಕ್ಷ್ಮಾ ರಾಣಿಯ ಜೊತೆಗೆ ಕುಳಿತಿದ್ದ .ಪಕ್ಷ್ಮಾ ರಾಣಿಯ ಕೀರ್ತಿಯನ್ನು ಕೇಳಿದವರು ಅವಳ ನ್ರತ್ಯವನ್ನು ನೋಡುವ ಆಸೆಯಿಂದ ಬೇಗ ಬಂದು ಕುಳಿತಿದ್ದರು. +ಇದೇ ವೇಳೆ ಪುರುಕುತ್ಸಾನಿ ಬಿರಬಿರನೆ ನಡೆಯುತ್ತ ಅರಸನ ಶಯ್ಯಾಗ್ರಹದತ್ತ ನಡೆದಳು. +ಪಕ್ಷ್ಮಾರಾಣಿಯ ವೇಷಭೂಷಣಗಳನ್ನು ಕಂಡೊಡನೆ ಅರಸನ ಕೋಣೆಯನ್ನು ಬಿಟ್ಟು ಹೊರಗಿನ ಕೋಣೆಯನ್ನು ಪ್ರವೇಶಿಸಿದಳು. +“ಯಾರು ನೀನು ?” ಎಂದು ಬಿರುಸಾಗಿ ಕೇಳಿದಳು. +ಅವಳನ್ನು ಕಾಣುತ್ತಲೇ ತಾರ್ಕ್ಷ್ಯ ಬಾಗಿಲ ಹೊರಗೆ ನುಸುಳಿಕೊಂಡನು. ಅವನತ್ತ ಪುರುಕುತ್ಸಾನಿ ನೋಡಲಿಲ್ಲ. +ಬಾಗಿಲ ಹೊರಗಿನಿಂದ ತಾರ್ಕ್ಷ್ಯ ’ಬೇಗ ಹೊರಗೆ ಬಾ’ ಎಂದು ಸನ್ನೆ ಮಾಡಿದನು. ಈ ಅನುಭವ ಅವನಿಗೆ ಹೊಸತು. ಏನು ಮಾಡಬೇಕೆಂದು ಅವನು ವಿಚಾರ ಮಾಡಿರಲಿಲ್ಲ. +ಪಕ್ಷ್ಮಾ ಏಳಲು ನೋಡಿದಳು. ಪುರುಕುತ್ಸಾನಿ ಬಲವಾಗಿ ಅವಳ ಹೆಡಕು ಹಿಡಿದು ಕೂರಿಸಿದಳು. +“ನಾನು ಪಕ್ಷ್ಮಾ. ಸಭೆಯಲ್ಲಿ ನ್ರತ್ಯ ಮಾಡುವುದಕ್ಕೆಬಂದಿದ್ದೇನೆ, ಪಾಟಲೀಪುತ್ರದಿಂದ.” +“ಯಾರು ನಿನ್ನನ್ನು ಕರೆತಂದರು?” +“ನಿಮ್ಮ ಸೇವಕರು” +“ಯಾರು ಅದು?” +ಅನುಮಾನಿಸುತ್ತ ಪಕ್ಷ್ಮಾ ಹೇಳಿದಳು: “ತಾರ್ಕ್ಷ್ಯ!” +ತಾರ್ಕ್ಷ್ಯ ಪುರುಕುತ್ಸಾನಿಗೆ ಅಪರಿಚಿತರಲ್ಲೆ ಒಂದು ರೀತಿ ಅವಳ ಕಡೆಯವನು. ನಾಗಕ್ಷತ್ರಿಯ. ತಾಯಿ ಬಿಂದುಮತೀದೇವಿಯ ಊಳಿಗದವನು. +“ನಾನು ಅವನಿಗೆ ಹೇಳುತ್ತೇನೆ. ನೀನು ಇಲ್ಲಿಂದ ಹೊರಟುಹೋಗು.” +ಪಕ್ಷ್ಮಾ ಅವಮಾನಿಸಿದಳು. ನ್ರತ್ಯ? — ಆದರೆ ಪುರುಕುತ್ಸಾನಿಯ ಬಲವಾದ ಮುಷ್ಟಿ ಇನ್ನೂ ಅವಳ ಹೆಗಲಮೇಲೆ ಚುರುಗುಟ್ಟುತ್ತಿತ್ತು.ಎದುರು ಮಾತಾಡದೇ ನೇರವಾಗಿ ಹೊರಗೆ ನಡೆದಳು. ಸಭಾಂಗಣಕ್ಕೆ ಹೋಗದೆ, ಸುತ್ತುವರಿದು ಹೊರಬಾಗಿಲನ್ನು ಕಂಡಳು. +ಇತ್ತ ಪುರುಕುತ್ಸಾನಿ ಹಲವು ಕ್ಷಣಗಳವರೆಗೆ ನಿಂತಲ್ಲೇ ನಿಂತು ತನ್ನ ಕೋಪವನ್ನು ಸಾವರಿಸಿಕೊಂಡಳು. ಕನ್ನಡಿಯಲ್ಲಿ ಮುಖ ನೋಡಿಕೊಂಡು, ಮುಂಗುರುಳು ತೀಡಿಕೊಂಡಳು. ಕ್ರತಕ ಮುಗುಳ್ನಗೆಯನ್ನು ಮುಖಕ್ಕೆ ತಂದು ಕೊಂಡಳು. +ಒಮ್ಮೆಲೆ ಶಯ್ಯಗ್ರಹವನ್ನು ಪ್ರವೇಶ ಮಾಡಿದಳು. +ಹಾಸಿಗೆಯಲ್ಲೇ ಅರಸನು ಓಟ ಮಾಡುತ್ತಿದ್ದನು. ಉಂಡು ಚೌರಂಗಿಯ ಮೇಲೆ ತಾಟು ಬಡಿಸಲಾಗಿತ್ತು. ಒಬ್ಬ ಚೇಟಿ ಬಡಿಸಲಿಕ್ಕೆ ಸಾಮಗ್ರಿಯೊಂದಿಗೆ ನಿಂತಿದ್ದಳು. +ದುರದುರನೆ ಹೋಗಿ ಚೇಟಿಯ ಕೈಯಲ್ಲಿನ ಸವಟು, ಪಾತ್ರೆಗಳನ್ನು ಕಸಿದು ಹೊರಗೆಹೋಗಲಿಕ್ಕೆ ಮಹಾರಾಣಿ ಹೇಳಿದಳು. +ಅರಸನು ಅಪ್ರತಿಭನಾಗಿ ನೋಡತೊಡಗಿದನು. +“ನಿಮಗೆ ಬಡಿಸುವುದು ನಮ್ಮ ಕೆಲಸ, ಊಟ ಮಾಡಿ, ಹೊಟ್ಟೆತುಂಬ, ಇನ್ನಷ್ಟು ತೊವ್ವೆ ಬೇಕೆ? ಅಥವಾ ಶ್ರೀಖಂಡ?” ಎಂದು ದುಮದುಮನೆ ಊಟ ಸಾಮಗ್ರಿಗಳನ್ನು ಪೀಠದಮೇಲೆ ಇಟ್ಟು, ಸವುಟಿನೊಂದಿಗೆ ಅವನ ಹಾಸಿಗೆಯ ಮೇಲೆಯೇ ಸಮೀಪ ಕುಳಿತು, ಬಡಿಸಲು ಅಣಿಯಾದಳು. +“ಇಂದು ನೆನಪಾಯಿತೇ?”- ಅರಸ ವ್ಯಂಗವಾಗಿ ನುಡಿದ. +“ನಿಮಗೆ ಬಡಿಸಲು ಪಾಟಲೀಪುತ್ರದ ನ್ರತ್ಯಂಗನೆಯರೇ ಬೇಕೆ?” ನಾನು ಬಡಿಸಿದರೆ ಸವಿಯಾಗದೆ?” +“ಆಕೆ ಬಂದುದು ನ್ರತ್ಯಕ್ಕಾಗಿ, ಊಟ ಬಡಿಸುವದಕ್ಕಾಗಿ ಅಲ್ಲ.” +“ಆಕೆ ಬಂದು ನನ್ನ ಸ್ಥಾನ ಆಕ್ರಮಿಸಿಕೊಳ್ಳೂತ್ತಾಳೆ, ನಿಮ್ಮ ಹಾಸಿಗೆಯ ಮೇಲೆ” +“ನಿನಗಾಗದ ಕೆಲಸ ಆಕೆ ಮಾಡಿದರೆ ನಿನಗೆ ಸಂತೋಷವಿಲ್ಲವೆ?” +“ಇಲ್ಲ ಇನ್ನು ಮೇಲೆ ನನ್ನ ಹೊರತು ಈ ಹಾಸಿಗೆಯನ್ನು ಯಾರೂ ಆಕ್ರಮಿಸುವಂತಿಲ್ಲ.” +ಮುಂದೆ ಏನಾಯಿತೆಂಬುದರ ಬಗ್ಗೆ ವಿವರಗಳು ಬೇಡ. ಒಂದೇ ಮಾತು ಸಾಕು. +ಅವನು ಅರ್ಧಕ್ಕೇ ಊಟ ನಿಲ್ಲಿಸಿ, ತಾಟು ಬದಿಗೆ ಸರಿಸಿ, ಹೊದ್ದುಕೊಂಡು ನಿದ್ದೆಹೋದ. +ಪುರುಕುತ್ಸಾನಿ ಅವನ ಬದಿಗೇ ಪವಡಿಸಿದಳು. ಅಷ್ಟೇ. +ಆದರೂ ಘಟನೆ ಊರ ತುಂಬ ಗಾಳಿಸುದ್ದಿಯಾಗಿ ಹರಡಿತು. +“ಇಂದು ನ್ರತ್ಯವಿಲ್ಲ. ಕ್ಷಮಿಸಿ” ಎಂದು ತಾರ್ಕ್ಷ್ಯ ಸಭಿಕರಿಗೆ ಹೇಳಿದ್ದೇನೋ ನಿಜ. ನ್ರತ್ಯರಸಿಕರಷ್ಟೇ ನಿರಾಶಗೊಂಡರು. ಇಲ್ಲಿಗೇ ಮಾತು ನಿಲ್ಲುವುದೆಂದು ತಿಳಿದಿದ್ದ ತಾರ್ಕ್ಷ್ಯನಿಗೆ ನಿರಾಸೆಯಾಯಿತು. ಹೀಗೆ ಸಭೆಯ ಕಾರ್ಯಕ್ರಮ ನಿಂತದ್ದು ಮೊದಲನೇ ಸಲವಲ್ಲ. ಆದರೆ- +ಬಾಗಿಲ ಬಳಿ ಕಾವಲುಗಾರರ ಮಧ್ಯ ಕುಳಿತ ನ್ರತ್ಯಾಂಗನೆ ಪಕ್ಷ್ಮಾದೇವಿಯನ್ನು ಹಲವರು ರಸಿಕರು ನೋಡಿದರು. ಆಕೆ ಅರಸನ ಶಯ್ಯಾಗಾರವನ್ನು ಪ್ರವೇಶಿಸಿದುದಕ್ಕಾಗಿ ನ್ರತ್ಯಕಾರ್ಯಕ್ರಮ ರದ್ದಾಯಿತೆಂದು ಅಪೇಕ್ಷಿಸಿದವರೂ ನ್ರತ್ಯ ರಸಿಕರೂ ಸೋಜಿಗಪಟ್ಟು ಅವಳನ್ನು ಸುತ್ತುವರೆದರಿದು ನಿಂತರು. ಆಕೆಗೆ ಪ್ರಶ್ನೆ ಕೇಳ ತೊಡಗಿದರು. ಪುರುಕುತ್ಸಾನಿ ತನ್ನನ್ನು ನಿಷೇಧಿಸಿದ ವಿಷಯವನ್ನು ಆಕೆ ವಿಸ್ತಾರವಾಗಿ ಹೇಳಿಬಿಟ್ಟಳು. +ಅಷ್ಟೊತ್ತಿಗೆ ತಾರ್ಕ್ಷ್ಯ ಅವಳನ್ನು ಹುಡುಕುತ್ತ ಅಲ್ಲಿಗೆ ಬಂದನು. ಆಕೆ ಮೌನವಿರುವಂತೆ ಬಾಯಮೇಲೆ ಬೆರಳಿಟ್ಟು ಸೋಚಿಸಿದನು, ಆಕೆ ಅರ್ಧಕ್ಕೆ ನಿಲ್ಲಿಸಿದಳಾದರೂ ಪುರುಕುತ್ಸಾನಿ ಆಕೆಯನ್ನೂ ತಾರ್ಕ್ಷ್ಯನನ್ನೂ ಓಡಿಸಿದ ವಿಷಯ ಎಲ್ಲ ಮನ್ನೆಯರಿಗೋ ಶ್ರೇಷ್ಟಿಗಳಿಗೂ ತಿಳಿದೇಹೋಗಿತ್ತು. ಅವರಲ್ಲಿ ರಸಿಕರಾದವರು ಇನ್ನೊಂದು ಕಡೆಗೆ ನ್ರತ್ಯವನ್ನು ಎರ್ಪಡಿಸಲು ಯತ್ನಿಸಿದರು.’ ಬೇಡ’ವೆಂದು ತಾರ್ಕ್ಷ್ಯನ ಮನಸ್ಸು, ಆದರೆ ಈ ಘಟನೆಯಮೂಲಕ ಮುಖಭಂಗವಾದ ಅವನಿಗೆ ಬೇಡವೆನ್ನಲಿಕ್ಕೆ ಆಗಲಿಲ್ಲ. ಆದರೂ ಪಕ್ಷ್ಮಾರಾಣಿಗೆ ಬೇರೆ ಒಯ್ದು “ಏನೂ ಹೇಳಬಾರದೆಂದು” ಗುಟ್ಟಾಗಿ ಹೇಳಿದ. ತಾನು ಮನೆಗೆ ಹೊರಟು ಹೋದ. ಅಂದಿನ ನ್ರತ್ಯಕ್ಕೆ ಮನ್ನೆಯರು, ಶ್ರೇಷ್ಟಿಯವರು ಕೋಡಿಸಿದ ೩೦ ವರಹಗಳಿಂದಷ್ಟೇ ನ್ರತ್ಯಾಂಗನೆ ಸಂತುಷ್ಟವಾಗಬೇಕಾಯಿತು. ಕರಾರು ನೂರುವರಹದ್ದು. +ಮರುದಿನ ಮಹಾರಾಜರು ಕೊಡಮಾಡಿದ್ದ ಒದು ನೂರು ವರಹದ ಬಹುಮಾನಕ್ಕಾಗಿ ತಾರ್ಕ್ಷ್ಯನಿಗೆ ಎನೂ ಕೊಡಬಾರದೆಂದು ಮಹಾರಾಣಿ ಹೇಳಿಕಳಿಸಿದ್ದಾರೆಂದು ಉತ್ತರ ಬಂದಿತು. +ಪಕ್ಷ್ಮಾರಾಣಿಯನ್ನು ಇಳಿಸಿದ ತಾಣಕ್ಕೆಬಂದ ತಾರ್ಕ್ಷ್ಯ, “ಎನೂ ಚಿಂತೆ ಇಲ್ಲೆ,ಇಲ್ಲಿಯೇ ನಾಲ್ಕೈದು ದಿನ ಇರು. ರಾಜರಿಂದ ಕರೆ ಬರುತ್ತದೆ” ಎಂದು ಭರವಸೆ ನೀಡಿ ಮನೆಗೆ ಹೋದ. +ಭಂಡಾರಿಗೆ ಹಾಗೆ ಹೇಳಿಕಳಿಸಿದುದರ ತಂತ್ರ ನಂತರ ತಾರ್ಕ್ಷ್ಯನಿಗೆ ಗೊತ್ತಾಯಿತು. ತಾಯಿಯ ಕಾಲದಿಂದ ನಾಗಪಕ್ಷದ ಅಭಿಮಾನಿಯಾದ ತಾರ್ಕ್ಷ್ಯನನ್ನು ತನ್ನೆಡೆ ಬರುವಂತೆ ಮಾಡಿ ತನ್ನ ಪಕ್ಷಕ್ಕೆ ಒಲಿಸಿಕೊಳ್ಳುವುದೇ ಪುರುಕುತ್ಸಾನಿಯ ಉದ್ದೇಶ, ನೂರು ವರಹ ಕೊಡಿಸುವ ಹವ್ಯಾಸದಲ್ಲಿಬೇರೆ ಉಪಾಯ ಕಾಣದೆ ತಾರ್ಕ್ಷ್ಯ ಪುರುಕುತ್ಸಾನಿಯನ್ನು ಕಂಡ. +ಪುರುಕುತ್ಸಾನಿ ನೂರುವರಹಕ್ಕೆ ಸರ್ವಥಾ ಒಪ್ಪಲಿಲ್ಲ. ಒಂದು ವರಹ ಕೊಡಬೇಕೆಂದು ಭಂಡಾರಿಗೆ ಅವನೆದುರೇ ಹೇಳಿ ಚೀಟಿಯನ್ನಿ ಕಳಿಸಿದಳು. +ಊರಿಗೇ ಊರೇ ಸುದ್ದಿ ತಿಳಿದುಕೊಂಡು ಪುರುಕುತ್ಸಾನಿಯ ಕೆಲಸಕ್ಕೆ ’ಸೈ’ಅಂದಿತು. +ಮಹಾರಾಜನ ಸಡಿಲು ನಡತೆಯಿಂದ ಭಂಡಾರ ಬರಿದಾಗುತ್ತಿದ್ದುದನ್ನು ನೋಡಿ ಬೇಸತ್ತ ಭಂಡಾರಿಯೂ ’ಸೈ’ ಎಂದನು. +ಅಯೋಧ್ಯೆ ಬಡ ದೇಶವಲ್ಲ. ಆದರೂ ಅರಸನ ಅಸಡ್ಡಾಳ ನಡತೆಯನ್ನು ನೋಡುತ್ತ ಉಪಾಯವಿಲ್ಲದೇ ಕೈ ಚೆಲ್ಲಿ ಕೂತಿದ್ದ ಪುರಜನಪ್ರಮುಖರು ’ವಾಹವ್ಹಾ!’ ಹಾಕಿ, ಸಣ್ಣ ಸಮಿತಿಯೊಂದಿಗೆ ಮಹಾರಾಣಿಯನ್ನು ಕಂಡು,’ಬಿಗಿ ಧೋರಣೆಗೆ ತಮ್ಮ ಸಮ್ಮತಿ ಹೇಳಿ,ಹೊಗಳಿ,ಹಾಡಿ ಹಿಂತಿರುಗಿದರು. +ನಾಲ್ಕು ದಿನಗಳವರೆಗೆ ನಿಂತ ಪಕ್ಷ್ಮಾರಾಣಿಗೆ ತನ್ನ ನೂರುವರಹ ದೊರಕಲಿಲ್ಲ. ಇನ್ನೆರಡು ಖಾಸಗೀ ಕಾರ್ಯಕ್ರಮ ಮಾಡಿ ಇನ್ನು ಮೂವತ್ತು ವರಹಗಳನ್ನು ಗಳಿಸಿದಳು. ಆಕೆಯ ಸೊಬಗಿಗೆ ಮನಸೋತ ನಡುವಯಸ್ಸಿನ ವತ್ಸರಾಜನ ತಂದೆ ವಿಧುರ ದೇವರಾಜ ಆಕೆಯ ಜೊತೆಗೆ ಎರಡು ರಾತ್ರಿ ಕಳೆದು, ಹತ್ತುವರಹ ದಾನಮಾಡಿ, ಸಂತುಷ್ಟನಾಗಿ ಮರಳಿದನು. ತಾರ್ಕ್ಷ್ಯನು ಮೋರೆ ತಪ್ಪಿಸತೊಡಗಿದನು. ಜೊತೆಗೆ… +ಪುರುಕುತ್ಸಾನಿಯ ಪ್ರೇರಣೆಯೋ.. +ತಾರ್ಕ್ಷ್ಯನ ಮೇಲಿನ ದ್ವೇಷವೋ… +ಪೌರರ ತಿರಸ್ಕಾರವೋ… +ಮೂವತ್ತು-ನಾಲ್ವತ್ತು ಪೋಕರಿಗಳು ಕೋಡಿಕೊಂಡು, ಕತ್ತಲಲ್ಲಿ ಪಕ್ಷ್ಮಾರಾಣಿ ವಾಸಿಸುತ್ತಿದ್ದ ಮನೆಯ ಮುಂದೆ ನಿಂತಿದ್ದ ದೇವರಾಜನ (ವತ್ಸರಾಜನ ತಂದೆ) ರಥದ ಕುದುರೆಯನ್ನು ಬಿಚ್ಚಿ ಮೇವು ತೋರಿಸಿ, ಆಸೆಗಾಗಿ ಅದನ್ನು‌ಊರ ಇನ್ನೊಂದು ಮೂಲೆಗೆ ಕರೆದೊಯ್ದು, ಮರಕ್ಕೆ ಕಟ್ಟಿದರು .ಗುಪ್ತ ಬೇಟಿಯಾದ್ದರಿಂದ ದೇವರಾಜ ತನ್ನ ಜೊತೆಗೆ ಸಾರಥಿಯನ್ನು ಒಯ್ದಿರಲಿಲ್ಲ. ಮರುದಿನ ಚುಮುಚುಮು ನಸುಕಿನಲ್ಲಿ ದೇವರಾಜ ಹೊರಗೆಬಂದು ನೋಡುತ್ತಾನೆ,ಕುದುರೆ ಮಂಗಮಾಯ! ರಥದ ಸಮೀಪ ಹೋಗಿ ನೋಡಿದರೆ, ಅಚ್ಚಿನ ಕೀಲಗಳೇ ಕಣ್ಮರೆಯಾಗಿವೆ. +’ರಥವನ್ನು ಕದ್ದು ಕುದುರೆಯನ್ನು ಇಲ್ಲೇ ಬಿಟ್ಟಿದ್ದರೆ..ಹತ್ತಿ ಮನೆ ಸೇರುತ್ತಿದ್ದೆನಲ್ಲ..’ಎಂದು ವಿಚಾರ ಮಾಡುತ್ತ ನಿಂತ ದೇವರಾಜನಿಗೆ ಗೋಡೆಯ ಮರೆಯಿಂದ ’ಖಿಕ್’ ಎಂದು ನಕ್ಕ ಶಬ್ದ ಕೇಳಿಸಿತು.ಸಂಶಯದಿಂದ ಅತ್ತಿತ್ತ ನೋಡುವಾಗ ಪಕ್ಷ್ಮಾ ರಾಣಿಯ ಮನೆಯ ಮೇಲೆಯೇ ಏನೋ ಬರೆದದ್ದು ಕಾಣಿಸಿತು.”ವ್ರದ್ಧ ದೇವರಾಜ-ಪಕ್ಷ್ಮಾರಾಣಿ ಕಲ್ಯಾಣಮಂಟಪ” ಎಂದು ಬರಹ. ಬರೆದದ್ದು ಕೇಲಗಳಿಂದಲೇ;ಅರಿಶಿನ-ಕುಂಕುಮವದ್ದಿದ ಕೇಲ ಎಣ್ಣೆಯಿಂದ. ಕೇಲದೆಣ್ಣೆಯ ಭಾಂಡವೂ, ಕೀಲಗಳೂ ಅಲ್ಲೇ ಬಿದ್ದಿದ್ದವು. ಮುದುಕ ತನ್ನ ಅಂಗವಸ್ತ್ರದಿಂದ ಬರೆದದ್ದನ್ನು ಒರೆಸತೊಡಗಿದ. ಗೋಡೆಯ ಮರೆಯಿಂದ ಯಾರೋ ಅದೇ ಒಕ್ಕಣಿಕೆಯನ್ನು ಕೂಗಿ ಹೇಳಿ ಓಡಿದರು, ಅವರ ಹಿಂದೆಯೇ “ಯಲಾಣಮಂಟಪ” ಎಂದು ಹತ್ತಾರು ಪೋಕರಿಗಳ ಧ್ವನಿ, ಓಡಿಹೋದ ಸದ್ದು. +ದೇವರಾಜ ಒರೆಸುವ ಕಾರ್ಯವನ್ನು ಪೂರ್ತಿಗೊಳಿಸಿದ. ಅಷ್ಟರಲ್ಲಿ ಕುದುರೆಯ ಖರಪುಟ ಧ್ವನಿ . ತನ್ನದೇ ಕುದುರೆಯಿರಬಹುದೆಂಬ ಆಸೆಯಿಂದ ಬೀದಿಯ ಮಧದಲ್ಲೇ ನಿಂತ. ಬಂದವನು ಪಹರೆಯ ರಾವುತ , ವೇರಸೇನ. ತನ್ನ ಸೆಲ್ಲೆಯನ್ನು ಧ್ವಜದ ಹಾಗೆ ಬೀಸಿ, ರಾವಿತನನ್ನು ನಿಲ್ಲಿಸಿ, ಹತ್ತು ವರಹ ಅವನಿಗೆ ಸಲ್ಲಿಸಿ, “ರಥದೊಡನೆಮನೆಗೆ ಬಂದು ಕುದುರೆ ಒಯ್ಯಿ! ಇನ್ನು ಹತ್ತು ವರಹ ಕೊಡುತ್ತೇನೆ” ಎಂದು ಅವನನ್ನು ಒಪ್ಪಿಸಿ, ಕುದುರೆಯನ್ನು ಕೈಗಡ ಪಡೆದು, ಮುದುಕ ಅಲ್ಲಿಂದ ನುಸುಳಿದ. ಎಲ್ಲವನ್ನೂ ತರ್ಕಿಸಿದ ರಾವುತ ಬೆಳಗು ಮುಂಜಾನೆ ಪ್ರಾಪ್ತಿಯ ಮುಹೂರ್ತವಾಯಿತು”, ಎಂಬ ಹಿಗ್ಗಿನಿಂದ ಕೀಲಗಳನ್ನು ಕೂಡಿಸಿ ರಥವನ್ನು ಎಳೆದುಕೊಂಡು ಹೋದ, “ಕುದುರೆ ಹುಡುಕಿಕೊಂಡು ಬಾ, ಅದು ಪಹರೆಯವರ ಕರ್ತವ್ಯ. ಆಮೇಲೆ ಹತ್ತು ವರಹ ಕೊಡುತ್ತೇನೆ” ಎಂಬ ಸರದಾರೀ ಧಾಟಿಯ ಗತ್ತು ದೇವರಾಜ ಸಾಧಿಸಿದ .ಪಹರೆಯವನಿಗೆ ತನ್ನ ಕುದುರೆ ಮರಳಿ ಸಿಕ್ಕರೆ ಸಾಕಾಗಿತ್ತು. “ನನ್ನ ಕುದುರೆ ಕೊಡಿರಿ ಓಡಾಡಿ ನೋಡುತ್ತೇನೆ, ಸ್ವಾಮಿ” ಎಂದು ಪಹರೆಯವ ಹೇಳಿದ. ಕುದುರೆ ಮರಳಿ ಕೊಟ್ಟರೆ ಅವ ಆಚು ಕಡಿಮೆಯಾಗುತ್ತದೆ ಎಂದು ದೇವರಾಜನ ಚಿಂತೆ.”ಮೊದಲು ನನ್ನ ಕುದುರೆ ತಂದು ಕೊಡು..” ಎಂದು ದೇವರಾಜ ಹೇಳುತ್ತಿರುವಾಗ, ಅಟ್ಟ ಇಳಿದು ವತ್ಸರಾಜ ಬರುತ್ತಿರುವುದು ಕಾಣಿಸಿತು. ಈ ಸುದ್ದಿ ಮಗವರೆಗೆ ಮುಟ್ಟಬಾರದೆಂಬ ಚಿಂತೆಯಲ್ಲಿ ಲಗುಬಗೆಯಿಂದ, “ಲಾಯದಲ್ಲಿ ಕುದುರೆ ಕಟ್ಟಿದೆ. ಒಯ್ಯಿ. ಸಂಜೆಯವರೆಗೆ ಕುದುರೆ ಬಾರದಿದ್ದರೆ ನಿನ್ನ ಕೆಲಸಕ್ಕೆ ಅಪಾಯ!” ಎಂದು ಅವನನ್ನು ಅಲ್ಲಿಂದ ಅಟ್ಟಿದ. +ಕುದುರೆಯೇನೋ ಸಿಕ್ಕಿತು.ಅಪಪ್ರಚಾರ ನಿಲ್ಲಲಿಲ್ಲ.ಸಂಜೆ ಇನ್ನಷ್ಟು ಪೋಕರಿಗಳು ಪಕ್ಷ್ಮಾದೇವಿಯ ಮನೆಯೆದುರು ವ್ರದ್ಧಪ್ರೇಮಿಯ ಹೆಸರಿನಿಂದ ಬೊಬ್ಬೆ ಹಾಕಿದರು. ಇನ್ನು ನಾಲ್ಕು ದಿವಸ ನಿಂತು ಹೋಗಬೇಕೆನ್ನುವ ಪಕ್ಷ್ಮಾದೇವಿಯ ಆಸೆ ನೆರವೇರಲಿಲ್ಲ. ಅಪಪ್ರಚಾರದಿಂದ ಇತರ ಸರದಾರರು,ಮನ್ನೆಯರು , ಪ್ರತಿಷ್ಟಿತರು, ಶ್ರೇಷ್ಟಿಗಳು ಬರುವುದು ನಿಂತು ಹೋಯಿತು. ತಾರ್ಕ್ಷ್ಯನ ಸುದ್ದಿಯೇ ಇಲ್ಲ. +ಇತ್ತ, ಊರ ಆಗುಹೋಗುಗಳನ್ನು ತಾರ್ಕ್ಷ್ಯನಿಂದಲೇ ಅರಿತುಕೊಂಡು ಪುರುಕುತ್ಸಾನಿ ತನ್ನ ವೈಭವದ ರಥವೇರಿ, ಎರಡು ಚೀಟಿಗಳೊಂದಿಗೆ ಪಕ್ಷ್ಮಾರಾಣಿಯು ಇಳಿದುಕೊಂಡ ಮನೆಗೆ ಬಂದಳು. ಚೀಟಿಯಜೊತೆಗೆ ಹೇಳಿಕಳುಹಿಸಿದಳು: “ನೀನು ಈ ರಾಜ್ಯದಲ್ಲಿ ಎಪ್ಪತ್ತು ವರಹ ಗಳಿಸಿರುವಿ. ಇನ್ನು ಮೂವತ್ತು ವರಹ ಮಹಾರಾಣಿ ಕೊಡುತ್ತಾರೆ. ನಿನ್ನನ್ನು ರಾಜ್ಯದ ಗಡಿಯವರೆಗೆ ಒಯ್ಯಲು ರಥವನ್ನು ಕೊಡುತ್ತಾರೆ. ಮತ್ತೆ ಈ ರಾಜ್ಯದಲ್ಲಿ ಕಾಲು ಇರಿಸಕೂಡದು. ಬಂದದ್ದು ಗೊತ್ತಾದರೆ ನಿನ್ನನ್ನು ಶೂಲಕ್ಕೆ ಏರಿಸಲಾಗುವುದು. ಈಗಲೇ ನೀನು ಹೊರಡಬೇಕು.” +ಪಕ್ಷ್ಮಾದೇವಿ ಕಣ್ಣುಕಣ್ಣು ಪಿಳುಕಿಸಿ, ಹಿಗ್ಗಿ ಹಾಗಲಕಾಯಾಗಿ ಮಹಾರಾಣಿಯವರಿಗೆ ನಮಿಸಲು ಬಂದಳು. “ನಿಮ್ಮ ಮನಸ್ಸಿಗೆ ನೋವು ಮಾಡಿದೆ;ಕ್ಷಮಾಭಿಕ್ಷೆ ಬೇಡುತ್ತೇನೆ’ ಎಂದು ಕಾಲು ಬಿದ್ದಳು .ಏನೂ ಮಾತಾಡದೆ,ತನ್ನ ಹಮ್ಮಿಣಿಯಿಂದ ೩೦ ವರಹಗಳನ್ನು ಅವಳ ಮುಂದೆ ಎಣಿಸಿ, ಹಿಂದೆ ನಿಂತಿದ್ದ ಒಂದು ಕ್ಷುದ್ರ ರಥದತ್ತ ಬೆರಳು ತೋರಿಸಿ, ಅಲ್ಲಿಂದ ಹೊರಟು ಹೋದಳು. +ಇದೆಲ್ಲವನ್ನೂ ಹಾಡುಹಗಲೇ ನೋಡುತ್ತ ನಿಂತ ಜನಜಂಗುಳಿ ’ಉಘೇ!’ ಎಂದು ಮಹಾರಾಣಿಯ ಔದಾರ್ಯವನ್ನು ಹಾಡಿ ಹರಸಿದರು. +ರಾಜನಾಗಿಯೂ ಇದ್ದು ಇರದಂತಿದ್ದ ಪುರುಕುತ್ಸ ಮಹಾರಾಜನಿಗಿಂತ ಮಹಾರಾಣಿ ಪುರುಕುತ್ಸಾನಿಯ ಹೆಸರು ಮೂರೇದಿನಗಳಲ್ಲಿ‌ಎಲ್ಲೆಡೆ ಹರಡಿತು. ಎಲ್ಲ ಅಧಿಕಾರಿಗಳು,ಮನ್ನೆಯರು,ಶ್ರೇಷ್ಟಿಗಳು ಕೊಂಡಾಡತೊಡಗಿದರು. ರಾಜ್ಯ ಸೋತ್ರಗಳೆಲ್ಲ ಪುರುಕುತ್ಸಾನಿಯ ವಶಕ್ಕೆ ಬಂದವು. ತಾರ್ಕ್ಷ್ಯನೂ ತೋರಿಕೆಗೆ ರಾಜನ ಆಪ್ತಸೇವಕನೇ ಹೊರತು, ಅಲ್ಲಿನ ಯಚ್ಚಯಾವತ್ ಘಟನೆಗಳನ್ನು ಕಳ್ಳ ರೀತಿಯಿಂದ ಮಹಾರಾಣಿಗೆ ತಿಳಿಸತೊಡಗಿದನು. +ಎಲ್ಲ ರೀತಿಯಿಂದ ಗೆದ್ದ ಪುರುಕುತ್ಸಾನಿ ಒಂದು ವಿಷಯದಲ್ಲಿ ಮಾತ್ರ ನಿರಾಶಳಾದಳು. ಎರಡು ವಾರ ಸತತಯತ್ನ ಮಾಡಿದರೂ ಅವಳ ಕೌಮಾರ್ಯ ಅಳಿಯಲಿಲ್ಲ. +ಇನ್ನೊಬ್ಬ ಹೆಣ್ಣಿಗೆ ಅರಸನ ಶಯ್ಯಾಗ್ರಹಕ್ಕೆ ಪ್ರವೇಶಕೊಡಲಿಲ್ಲ‌ಎಂಬುದೇ ಆಕೆಯ ಯಶಸ್ಸು. ಅರಸನಿಗೆ ಹದಿನೈದು ದಿನ ಉಣಬಡಿಸಿದ್ದೊಂದೇ ಆಕೆಗೆ ಹೆಗ್ಗಳೀಕೆ. +ಒಮ್ಮೆಯಂತೂ ಪುರುಕುತ್ಸ ಸ್ಪಷ್ಟ ಹೇಳಿಬಿಟ್ಟ: +“ಒಮ್ಮೆ ನಿನಗೆ ಲಭ್ಯವಾಗುವ ಸಂಧಿ ಇತ್ತು. ಅಂದು ನೀನೆ ನನ್ನನ್ನು ಹೊಡೆದು ಬಡೆದು ಮೂಲೆಯಲ್ಲಿ ಮಲಗಹಚ್ಚಿದೆ. ಈಗ ಅನುಭವಿಸು. ನನ್ನಿಂದ ಇದು ಆಗದ ಕೆಲಸ!” +ಇಷ್ಟು ಸ್ಪಷ್ಟ ಮಾತಾದ ಮೇಲೆ ಹತಾಶಳಾದ ಪುರುಕುತ್ಸಾನಿ ಅತ್ತ ಇನ್ನೊಂದು ವಿಚಾರ ಮಾಡಲಿಲ್ಲ. ರಾಜನನ್ನು ತಾರ್ಕ್ಷ್ಯನಿಗೆ ಒಪ್ಪಿಸಿಬಿಟ್ಟಳು. ನಾಗಬಾಲಕ ಕಾಲಿಯನನ್ನು ಅವನ ಸೇವೆಗೆ ಇಟ್ಟಳು. ತಾರ್ಕ್ಷ್ಯನು ಎರಡು ದಿನಕ್ಕೊಮ್ಮೆ ರಹಸ್ಯವರದಿ ಒಪ್ಪಿಸುತ್ತಿದ್ದ. ಅರಸನ ಶಯ್ಯಾಗ್ರಹಕ್ಕೆ‌ಇನ್ನೊಮ್ಮೆ ಪುರುಕುತ್ಸಾನಿ ಕಾಲು ಹಾಕಲಿಲ್ಲ. +ಪೌರಜನರು ತಾರ್ಕ್ಷ್ಯನ ಬಗ್ಗೆ ತಕರಾರು ತೆಗೆದುಕೊಂಡು ಬಂದರು,ಊರ ಗಣಿಕೆಯರನ್ನೆಲ್ಲ ರಾಜಗ್ರಹಕ್ಕೆಕರೆದೊಯ್ಯುತ್ತಾನೆಂದು. ತಾರ್ಕ್ಷ್ಯನ ಎರಡೂ ಮುಖಗಳನ್ನು ಅರಿತ ಪುರುಕುತ್ಸಾನಿ ಏನೂ ಹೇಳಲಿಲ್ಲ. ಪೌರರನ್ನೇ ಸಲಹೆ ಕೇಳಿದಳು. +“ಲೀಲಾವಿಲಾಸಕ್ಕಾಗಿಯೇ ಅಯೋಧ್ಯೆಯ ಹಿಂದಿನ ಮಹಾರಾಜರೆಲ್ಲರೂ ಆಮರವನದಲ್ಲಿಯ ಕುಟೀರದಲ್ಲಿ ಇರುತ್ತಿದ್ದರು. ಅವರ ವಿಲಾಸಗಳು ಪೌರರಿಂದ ಮರೆಯಾಗುತ್ತಿದ್ದವು. ರಾಜಗ್ರಹದಲ್ಲೇ ಇಂತ ಕ್ಷುದ್ರ ವಿಲಾಸಗಳು ನಡೆಯುವದು ಲೋಕನಿಂದೆಗೆ ಕಾರಣವಾಗುತ್ತದೆ. ಗಣಿಕೆಯರು ರಾಜಗ್ರಹ ಸೇರುವುದು ಎಲ್ಲರಿಗೂ ಅಪಮಾನಾಸ್ಪದ. ಇದರಮೇಲೆ ಮಹಾರಾಣಿಯವರ ಚಿತ್ತ!” +ಪರಿಸ್ತಿಥಿ ಕೈ ಮೀರಿದೆಯೆಂದು ಮಹಾರಾಣಿಗೆ ಮನದಟ್ಟಾಯಿತು. ತಮ್ಮ ಖಾಸಗೀ ಪತಿ-ಪತ್ನಿ ಸಂಬಧದ ವೈಫ಼ಲ್ಯವು ಎಲ್ಲ ಪ್ರಜಾಜನರಿಗೆ ಗೊತ್ತಾಗಿದೆಯೆಂಬುದು ಅಂಗೈ ಮೇಲಿನ ನೆಲ್ಲಿಕಾಯಿಯಷ್ಟು ಸ್ಪಷ್ಟ. ಮಹಾರಾಣಿಗೆ ಸಿಟ್ಟೂ ಬರಲಿಲ್ಲ. ಮನಸ್ಸುತೀರ ಕಹಿಗೊಂಡಿತು. ತಾಯಿ ಬಿಂದುಮತೀದೇವಿ ಈ ವಿವಾಹವನ್ನು ವಿರೋಧಿಸಿದ್ದಳೆಂದು ಅವಳಿಗೆ ತಿಳಿದಿತ್ತು. ಆದರೇನು ಮಾಡುವುದು? ಈಗ ಹಿಂಜರಿದರೆ ಸಲ್ಲದು. ತಾನೂ ಒಂದು ಹೆಜ್ಜೆ ಮುನ್ದೆಯೇಹಾಕಬೇಕು… +ಮಹಾರಾಜರು ಆಂರವನದಲ್ಲಿ‌ಇರತೊಡಗಿದರೆ, ಪ್ರಜೆಗಳನ್ನು ಸಂರಕ್ಷಿಸುವವರು ಯಾರು?” +ಒಬ್ಬಮಧ್ಯವಯಸ್ಕ ತೆಲೆತಿರುಕನು ಹೇಳಿಯೇಬಿಟ್ಟನು :”ಮಹಾರಾಣಿಯವರು ಸಮಾನ ಅಧಿಕಾರಿಗಳು,ಸಮರ್ಥರು,ವರ್ಚಸ್ವಿಗಳು…” +– ಹೀಗೆ ಸ್ಪಷ್ಟ ಮಾತು ಮಹಾರಾಣಿಗೆ ಬೇಕಿರಲಿಲ್ಲ. ಮನಸಾ ಒಪ್ಪಿಗೆಯಾಗುವ ಮಾತೇ ಸರಿ! ಆದರೆ ಈ ವಾಚ್ಚಾರ್ಥಕ್ಕೆ ಮಾತು ಇಳಿಯಬಾರದು. ರಾಣಿ ತೆಲೆ ಅಲ್ಲಾಡಿಸಿದಳು. ಅವಳ ಮನೋಧರ್ಮದ ಸೂಕ್ಷ್ಮವನ್ನು ಅರಿತ ಒಬ್ಬ ಅನುಭವಿ ಶ್ರೇಷ್ಟಿಯು ಈ ಮಾತಿನ ಮೊನಚನ್ನು ಮೊಂಡಗೊಳಿಸಲಿಕ್ಕೆಂದೇ ಹೇಳಿದ: +“ಸಾಮ್ರಾಜ್ಞಿ,ನಮ್ಮಲ್ಲಿ ಕೆಲವು ಧ್ರಷ್ಟರ ಮಾತನ್ನು ಕ್ಷಮಿಸಬೇಕು. ಮಹಾರಾಜ ಮಹಾರಾಜ್ಞಿಯವರನ್ನು ಅಗಲಿಸುವ ಉದ್ದೇಶ ನಮ್ಮದಲ್ಲ. ಆಯೋಧ್ಯೆಯ ಅನೇಕ ಪ್ರಭುಗಳು ವಿಲಾಸಿಗಳು. ಅದು ರಾಜಧರ್ಮದ ಒಂದು ಅಂಶ. ಗಣಿಕೆಯರಿಗೆ ರಾಜ್ಯಮಾನ್ಯತೆ ಸಿಕ್ಕುವ ಬಹಿರಂಗ ಪ್ರಘಾತದಿಂದಷ್ಟೇ ನಮಗೆ ಚಿಂತೆಯಾಗಿದೆ. ಮಹಾರಾಜ್ಞಿಯವರು ಏನಾದರೂ ಉಪಾಯ ಮಾಡಬೇಕು. ಗಣಿಕೆಯರು ರಾಜರಿಂದ ಮನ್ನಣೆ ಪಡೆದು ರಾಜರ ಸ್ಥಾನವನ್ನೇ ಆಕ್ರಮಿಸಿದ ಕೆಲವು ಉದಾಹಾರಣೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆ ದೌರ್ಭಾಗ್ಯ ಅಯೋಧ್ಯೆಗೆ ಒದಗದಿರಲಿ, ಇಷ್ಟೇ ನಮ್ಮ ಆಶಯ. ಪ್ರಸಂಗಕ್ಕೆ ತಕ್ಕಂತೆ, ಮಹಾರಾಜರು ಒಂದು ಪಕ್ಷ ಒಂದು ಮಾಸ,ಇಚ್ಚಾನುಸಾರವಾಗಿ ಆಮ್ರವನಕ್ಕೆ ಹೋಗಿ ವಿಶ್ರಾಂತಿ ಪಡೆಯಬೇಕು. ಬೇಕಾದ ಗಣಿಕೆಯರನ್ನು ಅಲ್ಲಿಯೇ ಕರೆಸಿಕೊಳ್ಳಬಹುದು. ಮರಳಿ ಪ್ರಜಾಪಾಲನಕ್ಕಾಗಿ ಅರಮನೆಗೆ ಬರಬೇಕು. ಆಂರವನವೇನೂ ಅಯೊಧ್ಯೆಗೆ ದೂರವಲ್ಲ. ಒಂದೂವರೆ ಗಾವುದ ಅಷ್ಟೆ. ಅಂಥ ಅಗಥ್ಯ ಸಂದರ್ಭಗಳಲ್ಲಿ ಒಂದು ಎರಡು ಪ್ರಹರಗಳಲ್ಲಿ ಇಲ್ಲಿಬಂದು ನಿಲ್ಲಬಹುದು. ಆವರೆಗೆ ಮಹಾರಾಣಿಯವರ ನೇತ್ರತ್ವದಲ್ಲಿ ನಾವು ಹೋರಾಡುವ ಕಾಪಿನವರಾಗಿ ರಾಜ್ಯವನ್ನು ರಕ್ಶಿಸುತ್ತೇವೆ!” +ಈ ಶಬ್ಧರೂಪದಲ್ಲಿ ಮಹಾರಾಣಿ ಗೋಣುಹಾಕುವಂತಾಯಿತು. +ಆದರೂ ಯಾವ ನಿರ್ಣಯಕ್ಕೂ ಬರದೆ,”ನಾನು ವಿಚಾರ ಮಾಡಬೇಕು. ಅವಕಾಶ ಕೊಡಿರಿ!” ಇಷ್ಟೇ ಹೇಳಿ ಅವರನ್ನು ಕಳಿಸಿಕೊಟ್ಟಳು. ಅಪಕ್ವ ಜನರಿಗೆ ತಮ್ಮ ಸಂಧಾನ ವ್ಯರ್ಥವಾಯಿತೆಂದು ಅನಿಸಿತು. ಅನುಭವಿ ನಾಮಶ್ರೇಷ್ಟಿಯೂ, ಕೂದಲೆಳೆಯ ಅಗಲದಿಂದ ಮರ್ಯಾದೆ ಉಳಿಸಿಕೊಂಡ ಅನುಭವಿ ಲೋಲುಪ ದೇವರಾಜನಿಗೂ, ರಾಣಿಯ ಮೌನ ಗೋಣಲ್ಲಾಟವೇ ಸಾಕಾಯಿತು. ತಮ್ಮ ಸಂಧಾನ ಯಶಸ್ವಿಯಾಯಿತೆಂದೇ ಅವರು ನಿಶ್ಚಯಿಸಿದರು. ರಾಣಿ ಎಷ್ಟು ನಿಷ್ಟುರ ಕರ್ತವ್ಯಶಾಲಿಯೆಂಬುದನ್ನು ಹದಿನೈದೇ ದಿವಸಗಳಲ್ಲಿ ಅವರು ಅರಿತಿದ್ದರು. +ಮಹಾರಾಣಿ ತಕ್ಷಣ ಕರೆಸಿದ್ದು ತಾರ್ಕ್ಷ್ಯನನ್ನೇ. ತನ್ನಬಗ್ಗೆ ದೂರು ಕೊಡಲಿಕ್ಕೆಂದು ಪೌರರ ಸಮಿತಿಯೊಂದು ಮಹಾರಾಣಿಯವರ ಬಳಿಗೆ ಬಂದದ್ದನ್ನ್ನು ತಿಳಿಯುತ್ತಲೇ ಗರ್ಭಗಲಿತನಾದ ತಾರ್ಕ್ಷ್ಯನು ಗಡಗಡ ನಡುಗುತ್ತಲೇ ಮಹಾರಾಣಿಯ ಬಳಿಗೆ ಬಂದು, “ನನ್ನನ್ನು ರಕ್ಷಿಸಿರಿ” ಎಂದು ಸಾಷ್ಟಾಂಗ ಬಿದ್ದನು. +“ಹುಚ್ಚಾ ಏಳು ನಿನಗೆ ಸಂತೈಸಲು ನನಗೆ ಸಮಯವಿಲ್ಲ. ನಿನ್ನಿಂದ ಎರಡು ಕೆಲಸಗಳಾಗಬೇಕಿವೆ-ಒಂದು ,ನೀನು ಮಹಾರಾಜರ ಬಳಿ ಹೋಗಿ ಪಕ್ಷ್ಮಾದೇವಿಯ ಗುಣಗಾನ ಮಾಡು .ಶಯನದಲ್ಲಿ ಅವಳು ಬಹಳ ಸುಖವೆಂದು ಬಣ್ಣಿಸು. ನಿನಗೆ ಹೇಗೆ ಗೊತ್ತು, ಎಂದು ಮಹಾರಾಜರು ಕೇಳಬಹುದು. ಅಂಥ ಪ್ರಸಂಗ ಬಂದರೆ,ದೇವರಾಜ ಮನ್ನೆಯವರು ಹೇಳಿದರೆಂದು ಹೇಳು. ರಾಜರಿಗೆ ಆಗಣಿಕೆಯ ಲಾಲಸೆ ಇನ್ನೂ ಅಳಿದಿಲ್ಲ. ತಮಗೆಸಲ್ಲಬೇಕಾದುದು ದಕ್ಕಲಿಲ್ಲವೆಂಬ ಬಗ್ಗೆ ಅವರು ಖಿನ್ನರಾಗಿದ್ದಾರೆ. ನನ್ನ ಮೇಲೆ ಹರಿಹಾಯುತ್ತಾರೆ. ಎರಡನೇ ಕೆಲಸ,ನೀನು ಅವರ ಹಾಸಿಗೆಗೆ ಬೇಗನೇ ಪಕ್ಷ್ಮಾದೇವಿಯನ್ನು ಕರೆತರಬೇಕು!” +ತಾರ್ಕ್ಷ್ಯ ಬಾಯಿಬಿಟ್ಟು ನೋಡುತ್ತಲೇ ನಿಂತನು, ಚಕಿತನಾಗಿ. ಇದೇನು ಮಹಾರಾಣಿ ಆಟ ಆಡಿಸುತ್ತಿದ್ದಾರೆ. ಅವರ ಗುರಿ ಏನಿರಬಹುದು? +“ಮಹಾರಾಜ್ಞಿಯವರು ಪಕ್ಷ್ಮಾ ತಿರುಗಿ ಅಯೋಧ್ಯೆಗೆ ಬಂದರೆ ಶೂಲಕ್ಕೇರಿಸುವುದಾಗಿ ಅಪ್ಪಣೆ ಕೊಡಿಸಿರುವಿರಿ. ಆಕೆ ಬರಲು ಭಯಪಟ್ಟರೆ..” +“ಅಯೋಧ್ಯೆಗೆ ಕರೆತರಲು ಯಾರು ಹೇಳಿದರು?- ಆಮ್ರವನಕ್ಕೆ ಕರೆತರಬೇಕು. ಒಂದು ಗುಡಿಸಲಿನಲ್ಲಿ ಕೂಡಿಸಿ ಮಹಾರಜರನ್ನು ಕರೆದೊಯ್ಯಬೇಕು. ತೃಪ್ತಿಪಡಿಸಿ ಕರಕೊಂಡು ಬರಬೇಕು…” +“ಮಹಾರಾಣಿಯ ಕಣ್ಣಲ್ಲಿ ನೀರು ಊರಿತು,ತನ್ನ ಗಂಡನ ಸೂಳೆಗಾಗಿ ತಾನೇ ಕೊಂಟಲಗಿತ್ತಿಯಾಗಬೇಕಾಯಿತಲ್ಲಾ- ಎಂಬ ಕಲ್ಪನೆಯಿಂದ. +ತಾರ್ಕ್ಷ್ಯ ನೆಲ ನೋಡತೊಡಗಿದ. ಅವನಿಗೆ ಕಸಿವಿಸಿಯಾಯಿತು. ಎಷ್ಟಾದರೂ ಅವನು ರಾಣಿಯ ಗೋತ್ರದವನೇ. +“ಮಹಾರಾಜರು ಬರಲೊಪ್ಪದಿದ್ದರೆ…?” +ರಾಣಿಯಕೋಪ ಉದ್ರೇಕಿಸಿತು. “ನಿನಗೆ ಈ ಕೆಲಸ ಒಪ್ಪಿಸಿದೆ .ಅದನ್ನುಹೇಗೆ ಪೂರೈಸುವುದು ಅದು ನಿನ್ನ ಚಿಂತೆ. ಇಲ್ಲಿಂದ ಹೊರಡು. ನಿನಗೆ ಎಂಟು ದಿನ ಅವಧಿ ಕೊಟ್ಟಿದೆ. ” ರಾಣಿ ಬಿರಬಿರನೆ ಅಲ್ಲಿಂದ ಒಳಗೆ ನಡೆದಳು. ಬೆರಳು ತನ್ನ ಮುದ್ರಿಕೆಯ ಉಂಗುರವನ್ನುಕೊಡಲು ಮರೆಯಲಿಲ್ಲ. ಪಕ್ಷ್ಮಾಳಿಗೆ ಸಲ್ಲಬೇಕಾದ ನೂರುವರಹಗಳಿದ್ದ ಹಮ್ಮಿಣಿಯನ್ನು ಕೊಡಲು ಮರೆಯಲಿಲ್ಲ. ತಾರ್ಕ್ಷ್ಯ ನಿಟ್ಟುಸಿರುಬಿಟ್ಟು ಅಲ್ಲಿಯೇ ತುಸು ಸಮಯ ಕಂಭಕ್ಕೆ ಒರಗಿಕೊಂಡ. +ಪಕ್ಷ್ಮಾಳನ್ನು ನಂದಿಗ್ರಾಮದವರೆಗೆ ರಥ ಒಯ್ದಿತ್ತು. ಅಲ್ಲಿಂದ ಎರಡು ಸೀಳು ದಾರಿಗಳು. ಒಂದು ದಂಡಕಾರಣ್ಯಕ್ಕೆ. ಅತ್ತ ನಗರೋಪಜೀವಿ ಪಕ್ಷ್ಮಾ ಹೋಗಿರಲು ಸಾಧ್ಯವಿಲ್ಲ. ಇನ್ನೊಂದು ದಾರಿ ಹಿಡಿದು ಒಂದೆರಡು ಹಳ್ಳಿ ದಾಟಿ ಶ್ರಾವಸ್ತಿ ಸೇರಿರಬಹುದು. ಅದು ತಕ್ಕಮಟ್ಟಿಗೆ ದೊಡ್ಡ ಊರು. ಬಾಡಿಗೆಯ ರಥ ಮಾಡಿಕೊಂಡು ಮುಂದೆ ಕಾಶಿಗಾಗಲಿ ಪಾಟಲೀಪುತ್ರಕ್ಕಾಗಲಿ ಹೋಗಬಹುದು. ಕರೆತರುವಾಗ ಶ್ರಾವಸ್ತಿಯಲ್ಲಿ ಒಂದುದಿನ ಒಬ್ಬ ಅಡಗೂಲಜ್ಜಿಯ ಮನೆಯಲ್ಲಿ ಇಳಿದಿದ್ದರು. ಮೊದಲು ಆಕೆಯನ್ನುಸಂಧಿಸಿದರೆ ಸುದ್ದಿ ತಿಳಿಯಬಹುದು. ಬೇಗನೇ ಹೋಗಬೇಕು. ಆದರೆ ಕರೆತರುವಾಗ ಮಾತ್ರ ಸಂಶಯಬರದಂತೆ ರಥದ ಮೇಲೆ ಯವನಿಗೆ ಹಾಕಿ ತರಬೇಕು. ಪಹರೆಯವರಿಗೆ “ಮಹಾರಾಣಿಯಸ್ನೇಹಿತೆ” ಎಂದು ಹೇಳಿ ಉಂಗುರ ತೋರಿಸಬೇಕು. +ಹೊರಡುವ ಮೊದಲು ಮಹಾರಾಜನ್ನು ಕಂಡು ನ್ರತ್ಯಾಂಗನೆ ಪಕ್ಷ್ಮಾಳನ್ನು ಆಂರವನಕ್ಕೆ ತಂದರೆ ಹೇಗೆ? ಎಂದು ಕೇಳಬೇಕು. +ಎರಡನೆಯ ಕೆಲಸ ಸುಲಭವಾಗಿ ಕೈಗೂಡಿತು. +ತಾರ್ಕ್ಷ್ಯ ಮಹಾರಾಜರ ಶಯನಗ್ರಹದೆದುರು ತನ್ನ ಕುದುರೆಯನ್ನು ನಿಲ್ಲಿಸುತ್ತಲೆ ಕಾಲಿಯ ಓಡುತ್ತ ಬಂದು, “ಬೆಳಗಿನಿಂದ ಮಹಾರಾಜರು ನಿನ್ನನ್ನು ನೆನಸುತ್ತಿದ್ದಾರೆ. ಎಲ್ಲಿ ಹೋಗಿದ್ದಿ?” ಎಂದುಕೇಳಿ, ಕೈಹಿಡಿದು ಒಳಗೆ ಕರೆದುಕೊಂಡುಹೋದನು. +ಮಹರಾಣಿ ಕೋಣೆಗೆ ಬರುವುದನ್ನು ನಿಲ್ಲಿಸಿ ಐದೇ ದಿನವಾದರೂ, ಸ್ತ್ರೀ ಸಂಗವಿಲ್ಲದೇ ಮಹಾರಾಜರು ಇಪ್ಪತ್ತು ದಿನ ಕಳೆದಿದ್ದರು. ಪೌರಜನರ ಮನವಿಯ ಸುದ್ದಿ ತಿಳಿದ ಧೂರ್ತ ತಾರ್ಕ್ಷ್ಯನು ಗೆಳೆಯನಮನೆಸೇರಿ ಕಣ್ಮರೆಯಾಗಿದ್ದನು. ಅವನು ಅಲ್ಲಿ ಅಡಗಿ ಕುಳಿತದ್ದು ಮಹಾರಾಣಿಯವರಿಗಷ್ಟೇ ಗೊತ್ತು. ತಾರ್ಕ್ಷ್ಯ ಒಳಗೆ ಹೋಗುತ್ತಲೇ, ಮಹಾರಜರು ಸಿಡಿಮಿಡಿಮಾಡುತ್ತ “ಕತ್ತೇ, ಎಲ್ಲಿ ತೊಲಗಿದ್ದೆ?” ಎಂದು ಗರ್ಜಿಸಿದರು. +“ಪ್ರಭೂ, ಸೇವಕನನ್ನು ರಕ್ಷಿಸಬೇಕು” ಎಂದು ತಾರ್ಕ್ಷ್ಯ ಅವರ ಕಾಲಿಗೆ ಅಡ್ಡಬಿದ್ದು ಪ್ರಭುಗಳ ಕಾಲನ್ನು ಬಲವಾಗಿಹಿಡಿದುಕೊಂಡನು. +“ಏನಾಯಿತು?” +“ಮಹಾಪೌರರು ನನ್ನನ್ನು ಬಲವಂತವಾಗಿ ಹಿಡಿದು ಮಹಾರಾಣಿಯವರ ಎದುರು ನಿಲ್ಲಿಸುವ ಸಂಚು ಹೂಡಿದರು ಮರೆಯಾಗಿ ಅಡಗಿ ಕುಳಿತಿದ್ದೆ. ನಾನು ಕಲಾವಂತೆಯರನ್ನು ರಾಜಗ್ರಹಕ್ಕೇ ಕರೆದುಕೊಂಡು ಬರುವುದು ಪೌರರಿಗೆ ಅಪಮನವಂತೆ!” +“ಯಾರು ಹಾಗೆ ಹೇಳಿದವರು?” -ಆಗಲೇ ಅರಸನಿಗೆ ಅರ್ಧ ಮನವರಿಕೆಯಾದಂತೆ ಅವನ ಧ್ವನಿ ತತ್ತರಿಸಿತ್ತು. ಅವನ ಧ್ವನಿಯಲ್ಲಿ ಅರ್ಧ ಉಗ್ರತೆ ಇತ್ತಾದರೂ ಅನಿರ್ಧಾರವೂ ಇತ್ತು. +ತಾರ್ಕ್ಷ್ಯಾ ಚತುರ. ಈ ಪ್ರಶ್ನೆಗೆ ಉತ್ತರ ಕೊಡಲು ಹೋಗಲಿಲ್ಲ. ಬದಲಾಗಿ ತನ್ನ ಪೂರ್ವಯೋಜನೆಯನ್ನೇ ಮುಂದಿಟ್ಟ; +“ಪ್ರಭೂ, ತಮ್ಮ ಮೂರು ತೆಲೆಮಾರಿನ ಹಿರಿಯರು ವಿಲಾಸಕ್ಕಾಗಿಯೇ ಆಮ್ರವನದಲ್ಲಿ ಒಂದುಭೋಗಮಂದಿರ ಕಟ್ಟಿಸಿದ್ದಾರೆ. ಅಲ್ಲಿ ಬರುವ ಗಣಿಕೆಯರೂ ಬಾಯಿಹರಕರು. ಮಹಾರಾಜರ ಬೇಟಿಯನ್ನು ಬಣ್ಣಿಸಿ ಹೇಳಿ ತಮ್ಮ ತೆರವನ್ನು ಹೆಚ್ಚುಗೊಳಿಸುತ್ತಾರೆ. ಈಗ ಮ್ರಗನಯನೆಯ ತೆರ ಇಪ್ಪತ್ತು ವರಹಕ್ಕೆ ಏರಿದೆ. ಹೊಟ್ಟೆ ತುಂಬಿಸಿಕೊಳ್ಳಲ್ಲಿ. ಆದರೆ ಮಹಾರಾಜರಬಗ್ಗೆ ಲಘುಮಾತುಗಳು ನಡೆಯುವುದು ನನಗೆ ಬೇಸರವಾಗುತ್ತದೆ.” +ಅಷ್ಟರಲ್ಲಿಯೇ ತಾರ್ಕ್ಷ್ಯ ತನ್ನ ದ್ವೇಷ ಸಾಧಿಸಿಕೊಂಡಿದ್ದ. ಮ್ರಗನಯನೆ ಅವನಿಗೆ ಸಲ್ಲಬೇಕಾದಲಂಚವನ್ನುಕೊಟ್ಟಿರಲಿಲ್ಲ. +’ನೀನೂ ಆಪೌರರ ಹಾಗೇ ಮಾತಾಡುತ್ತಿದ್ದೀಯಲ್ಲ!” +“ಇಲ್ಲ ಮಹಾಪ್ರಭು! ದೂರದಿಂದಕರೆದುಕೊಂಡು ಬಂದ ಪಕ್ಷ್ಮಾರಾಣಿಯ ಬೇಟಿ ಮೊಟಕಾದದ್ದಕ್ಕೆ ನಾನಿನ್ನೂ ಮಿಡುಕುತ್ತಿದ್ದೇನೆ. ಮಹಾರಾಜರು ಆಮ್ರವನದಲ್ಲಿ ಆಕೆಯನ್ನು ಬಯಸಿದರೆ, ಮತ್ತೆ ಕರೆತರಲು ಯತ್ನಿಸುತ್ತೇನೆ.” +“ಆಕೆಯನ್ನು ಮಹಾರಾಣಿ ಊರು ಬಿಡಿಸಿದಳೆಂದು ನೀನೇ ಹೇಳಿದೆಯಲ್ಲ.” +“ಹೌದು, ಆದರೆ ದೂರ ಹೋಗಿರಲಾರಳು. ಅವಳನ್ನು ಕರೆತರುತ್ತೇನೆ, ಮಹಾರಾಣಿಯವರಿಗೂ ತಿಳಿಯದಷ್ಟು ಗುಪ್ತವಾಗಿ.” +“ಹಾಗಾದರೆ ಇಂದೇ ಆಮ್ರವನಕ್ಕೆ ಹೋಗುತ್ತೇನೆ” +“ಇಂದೇ ಬೇಡ ಪ್ರಭೂ. ನಾನು ಶೋಧಿಸಿ ತರುತ್ತೇನೆ.” +ರಾಜರೇ ಆಮ್ರವನಕ್ಕೆ ತೆರಳಲು ಉತ್ಸುಕರಾಗಿದ್ದು ಸುಸ್ಪಷ್ಟವಾಯಿತು. ಪಕ್ಷ್ಮಾಳನ್ನು ಹುಡುಕಲುಕನಿಷ್ಟ ೩-೪ದಿನಗಳು ಬೇಕು. ಆವರೆಗೆ ಅವರ ನಿಲಾಸಕ್ಕೆ ಬೇರೆ ಏನು ವ್ಯವಸ್ಥೆ ಮಾಡಬೇಕೆಂಬ ಚಿಂತೆಯನ್ನು ತಾರ್ಕ್ಷ್ಯ ಹೇಳಿದ್ದಕ್ಕೆ ಮಹಾರಾಜರು ಹೇಳಿದರು: +“ಇಲ್ಲ ಇಂದೇ ಆಮ್ರವನಕ್ಕೆಹೋಗುತ್ತೇನೆ. ನನ್ನ ಉಪ್ಪುಂಡು ದ್ರೋಹ ಮಾಡಿದ ಮ್ರಗನಯನೆಯಸುದ್ದಿ ಬೇಡ. ಶಶಾಂಕಿಯನ್ನು ಕಳಿಸಿಕೊಡು. ನೀನು ಬಹಳ ದಿನ ಮಾಯವಾಗಬೇಡ . ತಿಳಿಯಿತೇ?” +ತನ್ನ ಎರಡೂ ಕೆಲಸ ಸಲೀಸಾಗಿ ನೆರವೇರಿದ್ದನ್ನು ಕಂಡು ತಾರ್ಕ್ಷ್ಯ ಹಿಗ್ಗಿದ. +ಹಿಗ್ಗುತ್ತ-ಹಿಗ್ಗುತ್ತ ಮಹಾರಾಣಿಯವರಿಗೆ ವರದಿ ಒಪ್ಪಿಸಿ, ಶಶಾಂಕಿಯನ್ನು ಕಂಡು, ಅವಳನ್ನು ಕರೆದೊಯ್ಯಲಿಕ್ಕೆ ರಾವುತನನ್ನು ನೇಮಿಸಿ ಅಂದೇ ರಾತ್ರಿ ಕುದುರೆ ಹತ್ತಿ ಪಕ್ಷ್ಮಾಳ ಶೋಧನೆಗಾಗಿ ಮಧುವನಗ್ರಾಮಕ್ಕೆ ತೆರಳಿದ. +ತಾರ್ಕ್ಷ್ಯನ ತರ್ಕದಂತೆ ಪಕ್ಷ್ಮಾ ಶ್ರಾವಸ್ತಿ ರಾಜ್ಯದ ಗಡಿಯಮೇಲೆ ಮಧುವನ ಗ್ರಾಮದಲ್ಲಿ ಮನೆಹೋಡಿದ್ದಳು. ಅಡಗೂಲಜ್ಜಿಯೇ ಅಡುಗೆ ಮಾಡಿ ಎರಡೂ ಹೊತ್ತು ಬಡಿಸುತ್ತಿದ್ದಳು. ಮಾದ್ರಕನೆಂಬ ದೊಡ್ಡ ಸುಸಂಸ್ಕ್ರತ ಕೃಷಿವಲನೊಬ್ಬ ಅವಳ ಯಜಮಾನನಾಗಿದ್ದ. ಮನೆಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಧನಧಾನ್ಯಗಳನ್ನು ಒದಗಿಸಿದ್ದ. ಒಂದುತಿಂಗಳಿನ ಕರಾರಿನ ಮೇಲೆ ಅವನ ಓಣಿಯಲ್ಲೇ ಬಸ್ತಾನ ಹೂಡಿದ್ದಳು. +ತಾರ್ಕ್ಷ್ಯ ನೇರವಾಗಿ ಆಕೆಯ ಮನೆಗೆ ಹೋಗಲಿಲ್ಲ. ಅಡಗೂಲಜ್ಜಿಯ ಮನಸ್ತೃಪ್ತಿಯಾಗುವಂತೆ ಐದು ವರಹ ನೀಡಿ, ಗಿರಾಕಿ ಬಂದಿದೆಯೆಂದು ಪಕ್ಷ್ಮಾಳನ್ನು ಕರೆತರಲು ಕಳುಹಿಸಿಕೊಟ್ಟ. +ಪಕ್ಷ್ಮಾ ಬಂದಳು, ತಾರ್ಕ್ಷ್ಯನನ್ನು ಕಂಡು ತತ್ತರಿಸಿ ಓಡಿಹೋಗಲು ಯತ್ನಿಸಿದಳು. ಅಡಗೂಲಜ್ಜಿ ಹೊರಗಿನ ಬಾಗಿಲನ್ನು ಹಾಕಿಕೊಂಡಳು. +ತಾರ್ಕ್ಷ್ಯನ ಮಾತನ್ನು ಆಕೆ ಕೇಳಲೇ ಬೇಕಾಯಿತು. +ತಾರ್ಕ್ಷ್ಯ ಎಷ್ಟು ಹೇಳಬೇಕೋ ಅಷ್ಟನ್ನೇ ಆಯ್ಕೆ ಮಾಡಿ ಹೇಳಿದ. ಪಕ್ಷ್ಮಾಳನ್ನು ಅವಗುಂಠನ ಸಹಿತವಾದ ರಥದಲ್ಲಿ ಕರೆದುಕೊಂಡೊಯ್ಯುವೆನೆಂದೂ, ಇದಕ್ಕೆ ರಾಣಿಯೇ ಸಮ್ಮತಿಸಿರುವಳೆಂದೂ, ಆಮ್ರವನ ಅಯೋಧ್ಯೆಯಲ್ಲವೆಂದೂ, ಅವಳ ಶರೀರಕ್ಕೆ ಯಾವ ಹಿಂಸೆಯೂ ಆಗಲಾರದೆಂದೂ, ಪುರುಕುತ್ಸ ಮಹಾರಾಜ ಆಕೆಯನ್ನು ಕಾಣಲು ಲವಲವಿಸುತ್ತಿರುವರೆಂದೂ ವಿವರಿಸಿ ಹೇಳಿದ. +“ಈಗ ನಾನು ಮದ್ರಕನ ದಾಸಿ. ಒಂದು ತಿಂಗಳು ಇಲ್ಲಿಂದ ಕದಲ ಲಾರೆ” ಎಂದಳು ಪಕ್ಷ್ಮಾ. +“ಮಹಾರಾಜರು ನಿನ್ನ ತೆರವನ್ನು ಕಳಿಸಿದ್ದಾರೆ” ಎಂದು ನೂರುವರಹಗಳ ಹಮ್ಮಿಣಿಯನ್ನೂ, ಕಾಯಿ ವೇಳ್ಯದೆಲೆ-ಅಡಿಕೆಗಳನ್ನೂ ಒಂದು ಬೆಳ್ಳಿಯ ಹರಿವಾಣದಲ್ಲಿ ಇರಿಸಿ, ಆಕೆಯ ಪದತಲದಲ್ಲಿ ಅರ್ಪಿಸಿದ. ” ನಾನು ಸುಳ್ಳುಗಾರನಲ್ಲವೆಂದು ಕಾಮದೇವನೇ ಸಾಕ್ಷಿಹೇಳಲಿ” ಹಮ್ಮಿಣಿಗೆ ನಮಸ್ಕಾರ ಮಾಡಿದ. +“ಅದೆಲ್ಲ ನಂತರ, ಮೊದಲುಮಾದ್ರಕನು ಒಪ್ಪಬೇಕು. ನಾನು ಪಾಟಲೀ ಪುತ್ರದ ಕೆಳ ಓಣಿಯ ಚಿಲ್ಲರೆ ವೇಶ್ಯೆಯಲ್ಲ. ನಾನು ಕಲಾವಂತಿ . ನಮಗೂ ನಮ್ಮ ಧರ್ಮವಿದೆ” ಎಂದು ಕೂಗಾಡಿದಳು ಪಾಕ್ಷ್ಮೆ. +“ಪಕ್ಷ್ಮಾ, ನಾನು ರಾಜದೂತ. ಅರಸರ ಕಾಮನೆಯನ್ನು ನಿನ್ನ ಮುಂದೆ ಇಟ್ಟಿದ್ದೇನೆ. ಆಗಿಹೋದದ್ದನ್ನು ಮರೆತುಬಿಡು, ಕರಾರುವಕ್ಕಿನಂತೆ ಹಣ ತಂದು ಒಪ್ಪಿಸಿದ್ದೇನೆ. ಬೇಕಾದರೆ ಮಾದ್ರಕನನ್ನು ಬೇಟಿಮಾಡುತ್ತೇನೆ. ಆದರೆ ಮಹಾರಾಜರ ಸೇವಕನಾಗಿ ಬಂದ ನಾನು ಮಹಾರಾಜರಿಗೆ ಅವಮಾನವಾಗುವಂಥ ಮಾತು ಆಡಲಾರೆ. ವಾತ್ಸ್ಯಾಯನ ಮುನಿಗಳು ಕಾಮಶಾಸ್ತ್ರದಲ್ಲಿ ಹೇಳಿದ್ದಾರೆ: ಕಾಮ ಸಾಧನೆಗಾಗಿ ಸುಳ್ಳನ್ನು ಹೇಳಬೇಕು. ಮಾದ್ರಕನಂಥ ಗ್ರಾಮಸ್ಥನ ಎದುರು ಅಯೋಧ್ಯೆಯ ಮಹಾರಾಜರ ಮಾತು ಎತ್ತುವುದು ಸಭ್ಯವೇ? ನೀನೇ ಹೇಳು.” +ತಾನು ಆಗಲೇ ಕಟ್ಟಿದ ಸುಳ್ಳು ನಾಟಕವನ್ನು ಪಕ್ಷ್ಮಾಳಿಗೆ ಹೇಳಿ, ಅದಕ್ಕೆ ಅವಳ ಅನುಮೋದನೆ ಪಡೆದ. ಆಕೆಗೆ ಹಮ್ಮಿಣಿ ಒಪ್ಪಿಸಿ ಕಳುಹಿಸಿಕೊಟ್ಟ. +ಪಕ್ಷ್ಮಾದೇವಿ ಸತ್ಯಧರ್ಮಪರಾಯಣೆ ಹೌದೋ ಅಲ್ಲವೋ, ಎರಡು ಮೂರು ದಿನಗಳ ಮಾದ್ರಕನ ಸಹವಾಸದಲ್ಲಿ ಆಕೆಗೆ ಹೊಸದೊಂದು ಚಿಂತೆ ಹುಟ್ಟಿಕೊಂಡಿತ್ತು. ಮಾದ್ರಕನಿಗೆ ಆಗ ಅರವತ್ತು ವಯಸ್ಸು. ಕಟ್ಟುಮಸ್ತು ಆಳು. ಅವನ ಎಳೆದಾಟಕ್ಕೆ ತನ್ನ ನ್ರತ್ಯಕಲೆಗೆ ಬೇಕಾಗುವ ಅಂಗಸೌಷ್ಟವ ಕೆಟ್ಟುಹೋಗುವ ಸಂಭವ ಹೆಚ್ಚು. ಮಾದ್ರಕನಿಗೆ ನ್ರತ್ಯದ ಗಂಧ ಕೂಡ ಇಲ್ಲ. ಅವನ ಹರೆಯದ ಮಕ್ಕಳು ಮ್ರದಂಗ, ವೀಣೆಗಳಲ್ಲಿನಿಷ್ಣಾತರಾಗಿದ್ದರು. ಒಮ್ಮೆಯೇ ಆದ ನೃತ್ಯದಲ್ಲಿ ಇಬ್ಬರೂ ಪ್ರಾವೀಣ್ಯದಿಂದ ಆಕೆಗೆ ಸಂಗತಿ ನೀಡಿದ್ದರು. ಆ ಕ್ರತಜ್ಞತೆ-ಆಕರ್ಷಣೆಗಾಗಿ, ತನಗಿ ಒದಗಿದ ದುರ್ದಶೆಯ ಪರಿಸ್ತಿತಿಯಲ್ಲಿ ಬೇರೆ ಉಪಾಯವಿಲ್ಲದೇ, ಮಾದ್ರಕನಿಗೆ ವಶವಾಗಿದ್ದಳು, ಸಂತೋಷದಿಂದ ಅಲ್ಲ. ಕೃಷಿವಲನ ಸಂಗಕ್ಕಿಂತ ಅರಸನ ಸಂಗ ಎಷ್ಟೋವಾಸಿ ಎಂದು ಅವಳ ಭಾವನೆ. ಅರಸರು ಹೀಗೆ ಹುಂಬ ಎಳೆದಾಟಕ್ಕೆ ಬೀಳರು, ಎಂದು ಅವಳ ನಂಬಿಕೆ. ಇಲ್ಲಿಯವರೆಗಿನ ಅನುಭವಗಳಲ್ಲಿ ಯಾವ ರಾಜನೂ ಮಾದ್ರಕನ ಹಾಗೆ ಆಕೆಯ ದೇಹಕ್ಕೆ ಮುಗಿಬಿದ್ದಿದ್ದಿಲ್ಲ. +ಸಂಜೆ ಮಾದ್ರಕ ಬರುವಮೊದಲೇ ತಾರ್ಕ್ಷ್ಯ ಪಕ್ಷ್ಮಾಳ ಮನೆಗೆ ಹೋಗಿ ಹೊರ ಅಂಗಳದಲ್ಲಿ ಕುಳಿತ. ಮೊದಲೇ ಗೊತ್ತಾಗದಂತೆ ಪಕ್ಷ್ಮಾ ಬಾಗಿಲಹಾಕಿ ಒಳ ಚಿಲಕ ಭದ್ರಪಡಿಸಿಕೊಂಡಿದ್ದಳು, ತನ್ನವ್ರತಭಂಗವಾಗಿಲ್ಲದ್ದಕ್ಕೆ ಸಾಕ್ಷಿಯಂತೆ. +ಮಾದ್ರಕಬಂದೊಡನೆ, ತಾರ್ಷ್ಯ ಗಂಭೀರವಾಗಿ ಎದ್ದು ನಿಂತು “ತ್ರಾಹಿ, ತ್ರಾಹಿ ” ಎಂದು ಕೈ ಮುಗಿದ. +“ಏನಪ್ಪ ನಿನ್ನ ಮೇಲೆ ಬಂದ ಸಂಕಟ ?” ಎಂದು ಮಾದ್ರಕ ಕೇಳಿದ. +“ಒಂದು ತಿಂಗಳು ಮಾದ್ರಕನ ಜೊತೆಗೆ ಇರಬೇಕೆಂದು ವಾಗ್ದಾನ ಕೊಟ್ಟಿದ್ದೇನೆ ” ಎಂದು ಪಕ್ಷ್ಮಾದೇವಿ ಹೇಳುತ್ತಿದ್ದಾಳೆ. ನನ್ನಧನಿ ದೇವರಾಜ ಭದ್ರಮುಖರು ’ನನಗೆ ಕೊಟ್ಟವಾಗ್ದಾನವೇನಾಯಿತು ?’ ಎಂದು ಕೇಳುತ್ತಿದ್ದಾರೆ. +ಅಯೋಧ್ಯೆಯಿಂದ ನನ್ನನ್ನು ಕಳಿಸಿದ್ದಾರೆ. ಏನು ಮಾಡಬೇಕೋ ತಿಳಿಯದಾಗಿದೆ. ನಾನುಬರಿಗೈಯಿಂದ ಹೋದರೆ ನನ್ನ ರುಂಡ ಹಾರುತ್ತದೆ. ನಿನ್ನಲ್ಲಿ ಜೀವಭಿಕ್ಷೆ ಬೇಡುವದಕ್ಕಾಗಿ ಬಂದಿದ್ದೇನೆ. ಕುಡುಗೋಲು ಕೊಂಬಳಕಾಯಿ! ಏನು ಬೇಕಾದರೂ ಮಾಡು!” +“ಯಾರು ದೇವರಾಜರೆಂದರೆ? ಧರ್ಮರಾಜರ ಹಿರಿಯಪುತ್ರರೆ ?” +“ಹೌದು, ಮಾದ್ರಕಾ!ನಿನಗೆ ಈ ಭೂಮಿಯನ್ನು ಉಳುವುದಕ್ಕಾಗಿ ಗೆದ್ದು ಕೊಟ್ಟ ಧರ್ಮರಾಜ ಭದ್ರಮುಖರ ಹಿರಿಯ ಚಿರಂಜೀವಿ ದೇವರಾಜರು! ರಾಜ್ಯಗಳು ಉರುಳುತ್ತವೆ, ಕೈ ಬಿಡುತ್ತವೆ. ಆದರೆ ಕೃಷಿ ಧರ್ಮ ಮಾತ್ರ ಉಳಿಯುತ್ತದೆ. ಏನಂತೀ ನೀನು ?” +“ನಾನು ಹದಿನೈದು ವರ್ಷದವನಿದ್ದಾಗ ದೇವರಾಜನಿಗೆ ಹದಿಮೂರು ವರ್ಷ ಮಾತ್ರ. ಗಂಗಾತಟಾಕದಲ್ಲಿ ಗುಬ್ಬಿಮನೆ ಕಟ್ಟಿ ಆಡುತ್ತಿದ್ದೆವು.” +“ಅದನ್ನು ದೇವರಾಜ ಇನ್ನೂ ನೆನೆಸುತ್ತಾರೆ.” +“ವಾಗ್ದಾನದ ಕತೆ ಏನು?” +“ಅಯೋಧ್ಯೆಯ ರಸಿಕರ ಹ್ರದಯಗಳನ್ನು ಸೂರೆಗೈದಳು ಪಕ್ಷ್ಮಾದೇವಿ. ಆಕೆಯ ರೂಪಲಾವಣ್ಯಕ್ಕೆ ಮನಸೋತು ಹದಿನೈದು ದಿವಸಗಳ ವಾಗ್ದಾನ ಪಡೆದು ತಮ್ಮ ಅರಮನೆಯ ವಿಶಾಲವಾದ ರಂಗಸಜ್ಜಿಕೆಯಲ್ಲಿ ತಂದಿಟ್ಟುಕೊಂಡರು. ಈಕೆ ಬಂದ ಎರಡು ದಿನಗಳಲ್ಲೇ ದೂರ್ವಾಸ ಮುನಿಗಳಾ ಮರಿಮಗ ಕವಾಸ ಮುನಿಗಳು ಶಿಷ್ಯ ಸಹವರ್ತಮಾನ ದೇವರಾಜ ಭದ್ರಮುಖರ ಮನೆಗೆ ಬಂದು ಮೂರುದಿನಗಳ ಮಟ್ಟಿಗೆ ಉಳಿದುಕೊಂಡರು. ಮುತ್ತಜ್ಜನ ತಪಸ್ಸು ಅಲ್ಲದಿದ್ದರೂ, ಅವನ ಕ್ರೋಧ ಕವಾಸರಲ್ಲಿ ಪೂರ್ಣವಾಗಿ ಇಳಿದಿದೆ. ಅನಪೇಕ್ಷಿತ ಆಗಮನದಿಂದ ಭಯಭೀತರಾದ ದೇವರಾಜರು ’ಮೂರುದಿನಗಳಮಟ್ಟಿಗೆ ನೀನು ಇಲ್ಲಿ ಬರಬೇಡ!’ ಎಂದು ಹೇಳಿದ್ದೇ ತಡ, ಸೆಡವಿನಿಂದ ಪಕ್ಷ್ಮಾರಾಣಿ ಅಯೋಧ್ಯೆಯನ್ನೇ ತೊರೆದು ಶ್ರಾವಸ್ತಿ ರಾಜ್ಯಕ್ಕೆ ಬಂದಿದ್ದಾಳೆ. ಕವಾಸ ಮುನಿಗಳು ಇಂದ್ರಿಯನಿಗ್ರಹಕ್ಕಾಗಿ ಅಷ್ಟುಪ್ರಸಿದ್ಧರಲ್ಲ. ಅವರು ಪಕ್ಷ್ಮಾಳನ್ನು ನೋಡಿ ಮನಸ್ಸುಚಂಚಲವಾದರೆ ಏನು ಗತಿ? –ಆಗದಿದ್ದರೂ ದುರ್ಗತಿ. ತಮ್ಮಗೋತ್ರದವನಾದ ಒಬ್ಬ ಸ್ತ್ರೀಯ ಲೋಲುಪನೆಂದು ಅವರು ಕ್ಷುದ್ಧರಾದರೆ ದೇವರೇ ಗತಿ!– ಉಭಯ ಸಂಕಟದಲ್ಲಿ…” +ಒಳಗೆ ಈ ಮಾತುಗಳನ್ನು ಕೇಳುತ್ತ ನಿಂತಿದ್ದ ಪಕ್ಷ್ಮಾರಾಣಿ ಈ ಮಾತಿಗೆ ಸರಿಯಾಗಿ ಧಡಾರನೆ ಬಾಗಿಲ ತೆರೆದು, “ಇದು ನ್ಯಾಯವೇ ? ಇದು ಧರ್ಮ ಸಮ್ಮತವೇ ?” ಎಂದು ಕೂಗುತ್ತ ಹೊರಗೆ ಬಂದಳು. +“ಶ್…ಶ್.. ಸದ್ದು ಬೇಡ” ಎಂದು ಮಾದ್ರಕನೇ ಬಾಯಿ ಮೇಲೆ ಬೆರಳಿಟ್ಟ. +ಮಾದ್ರಕನಿಗೆ ಬೇರೊಂದು ತನ್ನದೇ ಚಿಂತೆ ಕಾಡುತ್ತಿತ್ತು. ಶ್ರಾವಸ್ತಿಯ ಯಾವನೊಬ್ಬ ರಾಜಭಟನಿಗೂ ಪಾಟಲೀಪುತ್ರದ ಪ್ರಸಿದ್ಧ ನ್ರತ್ಯಾಂಗನೆ ಮಾದ್ರಕನ ಆಸರೆಗೆಬಂದು ನಿಂತಿದ್ದಾಳೆಂದು ಗೊತ್ತಾದರೆ, ರಾಜನವರೆಗೆ ಈ ವಾರ್ತೆ ಮುಟ್ಟಿ, ಒಂದಿಲ್ಲೊಂದು ನೆಪದಿಂದ ತನಗೆ ದಂಡನೆಯಾಗಿ, ಪಕ್ಷ್ಮಾದೇವಿ ರಾಜನ ಊಳಿಗ ಸೇರುವದರಲ್ಲಿ ಸಂದೇಹವೇ ಇರಲಿಲ್ಲ. ತನ್ನ ಬಣಿವೆಗೆ ಮರೆಯಾಗಿದ್ದ ಈ ಮನೆಯಲಿ ಅದಕ್ಕೆಂದೇ ಪಕ್ಷ್ಮಾಲನ್ನು ತಂದು ಇರಿಸಿದ್ದು. ಇಂದಲ್ಲ ನಾಳೆ ಸುದ್ದಿ ಬಯಲಾಗಿ, ರಾಜಭಟರು ತನ್ನಮನೆ ಮುತ್ತಿದರೆ, ತಾನೇ ಪಕ್ಷ್ಮಾಳನ್ನು ಕರೆದೊಯ್ದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದ. ’ನನಗೇಕೆ ಈ ನರ್ತಕಿಯರ ಹವ್ಯಾಸ? ನನಗೆ ಹೊಲದಲ್ಲಿ ನೆಲ್ಲು ಕೀಳುವ ಆಳುಮಕ್ಕಳೇ ಸಾಕು!’ ಎಂದು ಮೊದಲಿನಿಂದ ನಂಬಿದ್ದ ಮಾದ್ರಕನಿಗೆ, ಪಕ್ಷ್ಮಳ ಏರು ಜವ್ವನದ ಸೊಗಸು ಎಲ್ಲಿಯವರೆಗೆ ದಕ್ಕುತ್ತದೋ ಅಲ್ಲಿಯವರೆಗೆ ಹೀರಿಬಿಡಬೇಕೆಂಬ ಆಸೆ. +ಅವನ ಸೂಚನೆಯಂತೆ ಮೂವರೂ ಮನೆಯ ಒಳಗೆ ಹೋದರು. ಅಲ್ಲಿಮಾದ್ರಕನೇ ಮುಂದಾಗಿ, “ಹುಡುಗೀ, ಕವಾಸ ಮಹಾಮುನಿಯ ಯೋಗ್ಯತೆ ನಿನಗೆ ಗೊತ್ತಿದೆಯೆ? ಸಿಟ್ಟಿಗೆದ್ದರೆಯೋಜನದುದ್ದ ಗೋದಿ ಬೆಳೆಯನ್ನುದ್ರಷ್ಟಿ ಮಾತ್ರದಿಂದ ದಗ್ದ ಮಾಡುತ್ತಾರೆ. ದೇವರಾಜರ ಹಿರಿಯರೇ ನನಗೆ ಭೂಮಿದಾನ ಮಾಡಿದವರು. ಅವರ ಉಪಕಾರವನ್ನು ನಾನು ಮರೆಯಲಾರೆ. ನಿನ್ನನ್ನು ತಂದು ಇಟ್ಟುಕೊಳ್ಳುವ ಸಾಮರ್ಥ್ಯ ಅವರಿಂದಲೇ ನನಗೆ ಬಂದದ್ದು ” ಎಂದು ಹೇಳತೊಡಗಿದನು. +“ನನ್ನ ಬಗ್ಗೆ ನಿಮಗೆ ವಿಚಾರವೇ ಇಲ್ಲ! ನನ್ನಂಥ ಪುಣ್ಯಜೀವಿಗಳು ಮೂರುದಿನ ಅಯೋಧ್ಯೆಯಂಥ ಪಟ್ಟಣದಲ್ಲಿ ಎಲ್ಲಿ ಕಳೆಯುವದು? ವಿಚಾರ ಮಾಡಿದಿರಾ? ವಗ್ದಾನ ಮಾಡಿಬಿಟ್ಟಿದ್ದೆ. ಬೇರೆಕಡೆ ಹೋಗುವುದು ನಮ್ಮಧರ್ಮದ ವಿರುದ್ಧ, ಬೇರೆ ಉಪಾಯ ಕಾಣದೆ, ಅಯೋಧ್ಯೆಯನ್ನೇ ತೊರೆದೆ! ಅಯೋಧ್ಯೆಯಭಾಗ್ಯ ನನ್ನ ಪಾಲಿಗಿಲ್ಲವೆಂದು ಅನಿಸಿತು !” +“ಈಗ ಅಯೋಧ್ಯೆಯ ಭಾಗ್ಯ ನಿನ್ನ ಪಾದತಲದಲ್ಲಿ ಇದೆಯಲ್ಲ!” ಎಂದನು ತಾರ್ಕ್ಷ್ಯ. +ಅಂತೂ ಪಕ್ಷ್ಮಾದೇವಿ ಒಂದು ಕರಾರಿನ ಮೇಲೆ ಅಯೊಧ್ಯೆಗೆ ಬರಲು ಒಪ್ಪಿದಳು : “ಮಾದ್ರಕ ಕೊಟ್ಟ ತಿಂಗಳ ಆಹಾರ ಸಾಮಗ್ರಿ ಇದೇ ಮನೆಯಲ್ಲಿ ಇರತಕ್ಕದ್ದು. ಇನ್ನಾವ ಹೆಣ್ಣೂ ಈ ಮನೆಯಲ್ಲಿ ತಿಂಗಳವರೆಗೆ ಬರಕೂಡದು. ಅಯೋಧ್ಯೆಯಲ್ಲಿ ಇನ್ನು ಹದಿಮೂರು ದಿನ ಇದ್ದು ತಾನು ಮರಳಿ ಇದೇ ಮನೆಗೆ ಬರುತ್ತೇನೆ!” +ಆಗ ಮಾದ್ರಕನಿಗೆ ತುಸು ಸಂಶಯ ಬಂದಿತು. ತನ್ನ ನೆರೆಗೂದಲನ್ನು ತೀಡುತ್ತ, “ನಿನ್ನಂಥವಳು ನನ್ನಂಥವನ ಬಳಿಗೆ ಬರುವ ಕಾರಣವೇನು ?” ಎಂದ. ಅದಕ್ಕೆ ತಾರ್ಕ್ಷ್ಯ ಸಮಾಧಾನ ಹೇಳಿದ: +“ಪಕ್ಷ್ಮಾದೇವಿ ಒಂದೇ ಮಾತಿನವಳು. ವಾಗ್ದಾನವಿತ್ತ ಮೇಲೆ ಅದರಂತೆ ನಡೆಯುವದು ಗಣಿಕಾ ಧರ್ಮ!” +ಆಗ ತನ್ನ ಮನಸ್ಸಿನ ಒಳ ಅಳುಕನ್ನು ಮಾದ್ರಕನು ತೋಡಿಕೊಂಡ. ರಾಜ ಭಟರಿಗೆ ಪಕ್ಷ್ಮಾ ಇಲ್ಲಿರುವ ಸುದ್ದಿ ತಿಳಿದರೆ, ಅನಿವಾರ್ಯವಾಗಿ ತಾನು ರಾಜನಿಗೆ ಪಕ್ಷ್ಮಳನ್ನು ಒಪ್ಪಿಸಬೇಕಾಗುತ್ತದೆ-ಎಂದು. +ಆಗ ಪಕ್ಷ್ಮಾ ಇನ್ನಷ್ಟು ಉತ್ಸಾಹಿತಳಾದಳು. ಬಚ್ಚಿಟ್ಟುಕೊಂಡು ಹೇಳಿದಳು :”ಈಗ ನೀವು ನನ್ನನ್ನು ದೇವರಾಜ ಭದ್ರಮುಖರಿಗೆ ಒಪ್ಪಿಸುತ್ತಿದ್ದೀರಿ. ಅನಂತರ ನೀವೇ ನನ್ನನ್ನು ಶ್ರಾವಸ್ತಿಯ ಮಹಾಪ್ರಭುಗಳಿಗೆ ಒಪ್ಪಿಸಬಹುದು. ಆದರೆ ವಾಗ್ದಾನದಂತೆ ಒಂದು ತಿಂಗಳು ನಾನು ವಶವರ್ತಿ. ಆಜ್ಞಾಧಾರಕಿ .ಅದು ನನ್ನ ಧರ್ಮ. ನನ್ನ ಧರ್ಮಪರಿಪಾಲನೆಯಿಂದಲೇ ನನಗೆ ಮೋಕ್ಷ. ನನ್ನ ತಾಯಿ ಹಾಕಿಕೊಟ್ಟ ಧರ್ಮದಂತೆ ನಾನು ನಡೆಯುತ್ತೇನೆ. ಧರ್ಮ ಕಾವಲಿದ್ದಾಗ ಕವಾಸ ಮಹಾಮುನಿಗಳು ನನಗೆ ಏನೂ ಮಾಡಲಾರರು!” ಎಂದಳು. +ಮುದುಕನಿಗೆ ಈ ಧರ್ಮಬುದ್ಧಿಯನ್ನು ನೋಡಿ ಅನುರಾಗ ಉಕ್ಕೇರಿತು. ತಾರ್ಕ್ಶ್ಯನ ಕಣ್ಣಮುಂದೆಯೇ ಪಕ್ಷ್ಮಾ ಹಿಂಡಿ ಹಿಪ್ಪೆಯಾಗುವಂತೆ ಅಪ್ಪಿಕೊಂಡ. ಪಕ್ಷ್ಮಾ ಅವನತೋಳಸೆರೆಯಿಂದ ಬಲುಕಷ್ಟದಿಂದ ಬಿಡಿಸಿಕೊಳ್ಳುತ್ತ, ಹೇಳಿದಳು: +“ಈರಾತ್ರಿಯೊಂದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ!” +ಮಾದ್ರಕನಿಗೆ ಕೂಡಲೇ ತನ್ನ ಅವಿವೇಕದ ಅರಿವಾಯಿತು. ಒಮ್ಮೆಲೇದೂರಸರಿದು, “ನನ್ನ ಅನ್ನದಾತನ ಪತ್ನಿಯಾದ ನೀನು ನನಗೆ ತಾಯಿಯ ಸಮಾನ! ಮಗಳೇ, ನಿನಗಾಗಿ ದೇವರಾಜರು ಕಾಯುತ್ತಿದ್ದಾರೆ. ನಾನು ಕಾಯಿಸುವದು ಅಧರ್ಮ, ಈಗಲೇ ನಿನ್ನ ಬಟ್ಟೆಬರೆ ಕಟ್ಟಿಕೊಂಡು ಹೊರಟುಬಿಡು. ಇಲ್ಲಿಂದ ಸರಯೂತೀರದ ನಂದಿಗ್ರಾಮಕ್ಕೆ ಹೋಗಲು ಒಳದಾರಿ ಇದೆ, ಒಂದು ಹಂತದವರೆಗೆ ನಾನೇ ಕಳಿಸಲುಬರುತ್ತೇನೆ. ಶ್ರಾವಸ್ತಿಯ ಗಡಿ ದಾಟಿದಮೇಲೆ ನನ್ನ ಹೊಣೆ ಮುಗಿಯುತ್ತದೆ. ನಡೆ, ಸಿಧ್ಧತೆ ಮಾಡು!” ಎಂದು ಹೇಳಿ, ತಾರ್ಕ್ಷ್ಯನನ್ನು ಕರೆದುಕೊಂಡು ಮಾದ್ರಕ ಹೊರಗೆ ನಡೆದ. +ಎರಡೂ ಸಂಭ್ಯಾವತೆಗಳನ್ನು ಅನುಲಕ್ಷಿಸಿ ಪಕ್ಷ್ಮಾದೇವಿ ತನ್ನ ಅತ್ಯಗತ್ಯವಸ್ತುಗಳನ್ನು ಒಂದು ಗಂಟಿನಲ್ಲಿ ಈಗಾಗಲೇ ಕಟ್ಟಿಟ್ಟಿದ್ದಳು. ಉಳಿದ ದಿನಬಳಕೆಯ ಬಟ್ಟೆಬರೆಗಳನ್ನು ಇನ್ನೊಂದು ಗಂಟಿನಲ್ಲಿ ಕಟ್ಟಿದಳು. ಅನುಭವಿ ಪ್ರವಾಸಿಯಾದ ಅವಳು ಎರಡೂ ಗಂಟುಗಳನ್ನು ಕುದುರೆಯ ಮೇಲೆ ಹಾಕಿದರೆ ಸಮತೋಲನವಾಗುವಂತೆಯೇ ಹಸಿಬೆಯ ಡರ್ತಿಯಲ್ಲಿ ಕಟ್ಟಿದಳು. +ಹೊರಗೆ ತಾರ್ಕ್ಷ್ಯ ಶ್ರಾವಸ್ತಿಯ ಅರಸನ ನೀತಿನಿಯಮಗಳನ್ನೂ ಅಜ್ಞಾತ ಒಳಹಾದಿಯ ಮುಖ್ಯತಿರುವುಗಳನ್ನೂ ಚರ್ಚಿಸಿದ. ಅಷ್ಟು ಹೊತ್ತಿಗೆ ಅಡಗೂಲಜ್ಜಿ ರಾತ್ರಿಯ ಊಟವನ್ನು ಚಟಿಗೆಗಳಲ್ಲಿ ಗಂಟುಕಟ್ಟಿಕೊಂಡು ಬಂದಳು. ಪಕ್ಷ್ಮಾ ಆಕೆಗೆ ಒಂದು ವರಹ ಕೊಡಲಿಕ್ಕೆ ಹೋದಾಗ, ತಾರ್ಕ್ಷ್ಯ ಚಟ್ಟನೆದ್ದು, ಹತ್ತು ವರಹಗಳನ್ನು ಆಕೆಗೆ ಎಣಿಸಿ, “ಇದು ನಮ್ಮ ರಾಜರ ಕಾಣಿಕೆ..” ಎಂದ. +“ಯಾವ ರಾಜರು?” ಎಂದು ಸಾಶಂಕವಾಗಿ ಮಾದ್ರಕ ಕೇಳಿದ. +“ದೇವರಾಜರು… ಇನ್ನ್ಯಾರು?”ಎಂದು ಫಡಪೋಶಿತನದಿಂದ ಪಕ್ಶ್ಮಳ ಕೈಯಲ್ಲಿನ ಎರಡು ಗಂಟುಗಳನ್ನು ತನ್ನ ಕುದುರೆಯ ತಡಿಗೆ ಗಂಟುಹಾಕಿ ಎರಡೂಕಡೆಗೆ ಇಳಿಬಿಟ್ಟ. ಪಕ್ಷ್ಮಾ ಊಟದ ಗಂಟಿನೊಂದಿಗೆ ಕುದುರೆ ಏರಿದಳು. +“ಅಲ್ಲಪ್ಪಾ ಮರಿ, ನಿನಗೆ ಈ ಮನೆ ಸಿಕ್ಕಿದ್ದು ಹೇಗೆ?” ಎಂದು ಕೇಳಿದ ಮಾದ್ರಕ. +ತಾರ್ಕ್ಷ್ಯ ಆ ಅಡಗೂಲಜ್ಜಿಯ ಕಡೆಗೆ ಬೆಟ್ಟುಮಾಡಿ, “ಆಕೆ ಹೇಳುತ್ತಾಳೆ” ಎಂದು ಹೇಳಿದ. +“ನಾನು ದಾರಿ ತೋರಿಸಲಿಕ್ಕೆ ಕುದುರೆ ತೆಗೆದುಕೊಂಡುಬರುತ್ತೇನೆ, ನಿಲ್ಲು” ಎಂದು ಮಾದ್ರಕ ಮನೆಯವರೆಗೂ ಓಡಿದ. +ಅವನು ಓಡಿದ್ದನ್ನು ಕಂಡ ತಾರ್ಕ್ಷ್ಯಮೆಲ್ಲನೆ ಕುದುರೆ ಏರಿ, ಅದರ ಹೊಟ್ಟೆಗೆ ತನ್ನ ಮೆಟ್ಟಿನಿಂದ ಬಲವಾಗಿ ಒತ್ತಿದ. +ಕುದುರೆ ನಾಗಾಲೋಟದಿಂದ ಹೊಲದ ಪೈರಿನ ನಡುವೆ ನುಗ್ಗಿತು. +“ಮುದುಕ ಬರುವವರೆಗೂ ನಿಲ್ಲಬೇಕಾಗಿತ್ತು !” ಎಂದಳು ಪಕ್ಷ್ಮಾ. +“ಕಾಮದಲ್ಲಿ ಸುಳ್ಳೂ ಒಂದು ಧರ್ಮ!” ಎಂದ ತಾರ್ಕ್ಷ್ಯ. +ದಾರಿಯಲ್ಲಿ ಕುದುರೆಯ ಖುರಪುಟಕ್ಕೆ ಉದ್ರಿಕ್ತಳಾದ ಪಕ್ಷ್ಮಾರಾಣಿ ನಿಟ್ಟುಸಿರುಬಿಡುತ್ತ ತಾರ್ಕ್ಷ್ಯನ ಕೊರಳಲ್ಲಿ ಕೈ ಹಾಕಿ ಮುದ್ದಿಡಲು ಯತ್ನಿಸಿದಳು. +“ಪಕ್ಷ್ಮಾ ನಾನು ಕಾಮಶಾಸ್ತ್ರಿ, ಲೋಲುಪನಲ್ಲ. ಸ್ತ್ರೀ ಲೋಲುಪರು ಮೂರ್ಖರು. ನಿನ್ನ ಲೀಲೆಗಳೆಲ್ಲ ಮುಗಿದ ಮೇಲೆ ಒಮ್ಮೆ ಸ್ವತಂತ್ರರಾಗಿ ಕೂಡೋಣ. ಆಗ ನಿನಗೆ ಕಾಮದ ನಿಜವಾದ ಅನುಭವವಾಗುವುದು. ಈಗ ನೀನು ಮಹಾರಾಜರ ಸೊತ್ತು. ಅಕ್ರಮವಾಗಿ ನಾನು ನಿನ್ನಲ್ಲಿ ನಿರತನಾಗಲಾರೆ” ಎಂದು ಹೇಳಿದ. +ಅದು ನಿಜವಾದರೂ ಒಂದು ರೀತಿಯಲ್ಲಿ ಸುಳ್ಳು. ಪಕ್ಷ್ಮಳನ್ನು ಮಹಾರಾಣಿಯವರ ಅಪ್ಪಣೆಯಮೇರೆಗೆ ಕರೆದೊಯ್ಯುತ್ತಿದ್ದನೇ ಹೊರತು ಇದರಲ್ಲಿ ಮಹಾರಾಜರ ಕಾಮ ಅಪ್ರಸ್ತುತ. +ಇದರಲ್ಲಿ ರಾಣಿಯ ಉದ್ದೇಶವೇನು-ಎಂಬುದು ಇನ್ನೂ ಬಗೆಹರಿಯದ ಸಮಸ್ಯೆಯಾಗಿತ್ತು, ತಾರ್ಕ್ಷ್ಯನಿಗೆ. +೩ +ನಂದಿಗ್ರಾಮದಲ್ಲಿ ಕೊತವಾಲನಿಗೆ ರಾಣಿಯ ಮುದ್ರಿಕೆ ತೋರಿಸಿ, ಯವನಿಕೆಯಿಂದ ಮುಚ್ಚಿದ ಒಂದು ರಥದಲ್ಲಿ ಪಕ್ಷ್ಮಾರಾಣಿಯನ್ನು ಕೂರಿಸಿದ ತಾರ್ಕ್ಷ್ಯ ಜೊತೆಗೆ ಒಬ್ಬ ರಾವುತನನ್ನೂ ಕರೆದೊಯ್ದನು. ರಥವು ಸೀದಾ ಆಮ್ರವನದವರೆಗೂ ಹೋಯಿತು. ಎರಡೇ ದಿನಗಳು ಸಂದಿದ್ದವು. ಆದರೂ ಪಕ್ಷ್ಮಾಳನ್ನು ಒಂದು ಗುಡಿಸಲಿನಲ್ಲಿ ಹಾಕಿ ಇಡಲಾಯಿತು. ಮಹಾರಾಜರು ಅದೇ ಶಶಾಂಕಿಗೆ ವಿದಾಯ ಹೇಳಿದರು. ಹತ್ತು ದಿನಗಳ ವರೆಗೆ ಪಕ್ಷ್ಮಾದೇವಿ-ಪುರುಕುತ್ಸ ಮಹಾರಾಜರ ವಿಹಾರ ಅವ್ಯಾಹತವಾಗಿ ಸಾಗಿತು. +ಪಕ್ಷ್ಮಾಳನ್ನು ರಾಜರ ವಶಕ್ಕೆ ಒಪ್ಪಿಸಿದವನೇ ತಾರ್ಕ್ಷ್ಯ ವಿಶ್ರಾಂತಿಗಾಗಿ ಅಯೊಧ್ಯೆಗೆ ಮರಳಿದನು. ಮಹಾರಾಣಿಯವರಿಗೆ ಸಾದ್ಯಂತ ವರದಿ ಒಪ್ಪಿಸಿದನು. +ಮಹಾರಾಜರು ಸ್ವೇಚ್ಛೆಯಿಂದಲೇ ಆಮ್ರವನಕ್ಕೆ ತೆರಳಿದವರು. ಆದರೆ ಪೌರಜನರಲ್ಲಿ ಮಹಾರಾಣಿ ಪುರುಕುತ್ಸಾನಿ ರಾಜರಿಗೆ ಸಿಟ್ಟು ಮಾಡಿ ಆಮ್ರವನಕ್ಕೆ ಅಟ್ಟಿದ್ದಾಳೆಂಬ ವದಂತಿ ದಟ್ಟವಾಗಿ ಹಬ್ಬಿತು. ಈಗಾಗಲೇ ವಾಸ್ತವವಾಗಿ ಎಲ್ಲ ರಾಜ್ಯಸೂತ್ರವನ್ನೂ ತನ್ನ ಕೈಯಲ್ಲಿಯೇ ಇಟ್ಟೂಕೊಂಡ ಮಹಾರಾಣಿ, ಈಗಂತೂ ಪ್ರಜಾವತ್ಸಲೆಯೆಂದು ಕೀರ್ತಿ ಪಡೆದು ಅಧಿಕಾರದ ನ್ಯಾಯಿಕ ಸ್ಥಾನಮಾನವನ್ನೂ ಪಡೆದಳು. ಅವಳೇ ಸಾಮ್ರಾಜ್ಞಿಯಾದಂತೆ. +ಆದರೆ ಹೆಣ್ಣು ಹೃದಯದ ಅವಳನ್ನು ಪೂರ್ತಿ ಅರಿತವರಾರು? +ಬರೀ ಆಡಳಿತದ ಅಧಿಕಾರಿಗಳು ತನ್ನ ಆಜ್ಞೆಯಂತೆ ನಡೆಯುವಷ್ಟೇ ತನ್ನ ಮುಂದಾಳು ತನವಾಯಿತೇ? ರಾಜ್ಯದ ಪ್ರತಿಷ್ಟರ ಮೇಲೆ ತನ್ನ ಸತ್ತೆ ಸಾಧಿಸಿದಂತಾಯಿತೆ? +ಮಹಾರಾಜ-ಪಕ್ಷ್ಮಾರಾಣಿಯರ ವಿಲಾಸವು ಆಗಲೇ ಒಂದು ವಾರ ಹಳತಾಗಿತ್ತು. ನಿಪುಣೆಯಾದ ಪಕ್ಷ್ಮಾ ಮಹಾರಾಜನ ಅಂಗಾಂಗಗಳಿಗೂ ಸುಖ ಕೊಡುತ್ತಿರುವ ವರದಿ ಚೇಟಿಯರ ಮೂಖಾಂತರ ತಿಳಿಯಿತು. ತರುಣಿ ರಾಣಿಯಲ್ಲಿ ಅಸೂಯೆ ಭುಗಿಲನ್ನೇ ಎಬ್ಬಿಸಿದಳು. ಆದರೆ ರಾಣಿ ಹೊರಗೆ ಏನೂ ತೋರಗೊಡಲಿಲ್ಲ. ತನ್ನ ತೊಡೆಯನ್ನು ಮುಟ್ಟಿಕೊಂಡು ಕೌಮಾರ್ಯ ಹಾಗೇ ಉಳಿದುದನ್ನು ನೆನೆಸಿಕೊಂಡಳು, ಅಷ್ಟೇ. +ಚೇಟಿಯರ ಮುಖಾಂತರ ಪುರುಕುತ್ಸಾನಿ ದೇವರಾಜ ಭದ್ರಮುಖರನ್ನು ಮುಖಭಂಗದಿಂದ ಪಾರುಮಾಡಿದ ರಾಹುತ ವೀರಸೇನನಿಗೆ ಕರೆಕಳಿಸಿದಳು. +ಅವನು ಬಂದು ಮುಜುರೆ ಸಲ್ಲಿಸಿ ನಿಂತನು. +“ಅಂದು ನೀನು ಭದ್ರಮುಖ ದೇವರಾಜರನ್ನು ಅವಮಾನದಿಂದ ಉಳಿಸಿದೆ ಅದಕ್ಕಾಗಿ ನಿನಗೆ ಅವರು ಏನು ಬಹುಮಾನ ಸಲ್ಲಿಸಿದರು?” +ಪಹರೆಯ ಕುದುರೆಯನ್ನು ಅವರಿಗೆ ಕೊಟ್ಟಿದ್ದು ಆಡಳಿತದ ನಿಯಮದ ವಿರುದ್ಧ. ಅದನ್ನು ಬಚ್ಚಿಟ್ಟುಕೊಂಡೂ ರಾಹುತವೀರಸೇನ ಹೇಳಿದ :”ಹತ್ತು ವರಹ, ಒಡತಿ!” +“ಹತ್ತೇ ವರಹಗಳೇ ?” ತೀಕ್ಷ್ಣವಾಗಿ ಕೇಳೀದಳು ರಾಣಿ ನರ್ಮದೆ. +“ಕುದುರೆ ಬೇಡಿದರು ಕೊಟ್ಟೆ. ಹತ್ತು ವರಹ ಬಹುಮಾನ ಕೊಟ್ಟರು.” +“ಒಟ್ಟು ಇಪ್ಪತ್ತು ವರಹ ಅಲ್ಲವೇ ?” +ವೀರಸೇನ ತಬ್ಬಿಬ್ಬಾದ. ಇಷ್ಟೆಲ್ಲ ವಿವರ ಮಹಾರಾಣಿಯ ಕಿವಿಯವರೆಗೆ ಹೋದದ್ದು ಹೇಗೆ ?- “ಅವರು ಕುದುರೆ ಬೇಡಿದರು ಕೊಟ್ಟೆ. ತಪ್ಪಾಯಿತು, ಮಹಾರಾಜ್ನಿ.” +“ಒಬ್ಬ ರಾಜಪುರುಷನ ಮರ್ಯಾದೆ ಕಾಯುವುದಕ್ಕಾಗಿ ಎರಡು ಗಂಟೆ ಪಹರೆಯ ಕುದುರೆ ಕೊಡಮಾಡಿದ್ದೇನು ತಪ್ಪಲ್ಲ. ಇನ್ನೆಷ್ಟು ಬೇಕಾಗಿತ್ತು ?” +ನಾನು ಕುದುರೆ ಬೇಡಲಿಕ್ಕೆ ಹೋದೆ. ’ನನ್ನ ಕುದುರೆ ಶೋಧಿಸಿ ತಾ. ಆಮೇಲೆ ಹತ್ತು ವರಹ’ ಎಂದು ಹೇಳುವುದು ರಾಜಪುರುಷರ ಧರ್ಮವೇ, ಮಹಾರಾಣಿ ?” +“ಹಾಗನ್ನುವುದು ನಿನಗೆ ಅನ್ಯಾಯ. ಅಲ್ಲದೇ, ನಿನಗೆ ಇಪ್ಪತ್ತೇ ವರಹ ಕೊಟ್ಟಿದ್ದು ನನ್ನ ಮನಸ್ಸಿಗೆ ಬಾರದು. ಇನ್ನಷ್ಟು ಗಳಿಸುವದು ನಿನ್ನ ಮನಸ್ಸಿನಲ್ಲಿ ಇದೆಯೇ? +ಇಪ್ಪತ್ತು ವರಹ ಅನ್ಯಾಯವೆಂದು ಹೇಳಿದ್ದು ಏಕೆ, ಒಮ್ಮೆಲೇ ವೀರಸೇನನಿಗೆ ಹೊಳೆಯಲಿಲ್ಲ. ಏನು ಹೇಳಬೇಕೆಂದು ತಿಳಿಯದೆ “ದೇವರು ಕೊಟ್ಟಷ್ಟು ಬೇಕು ಮಹಾರಾಣಿ !” ಎಂದ ವೀರಸೇನ. +“ನೀನು ಈಗ ಗೈದದ್ದು ಅಪದ್ಧರ್ಮ ಮಾತ್ರ. ಒಂದು ರೀತಿಯಿಂದ ನಿನ್ನ ಕರ್ತವ್ಯವೂ ಹೌದು. ಆದರೆ ದೇವರಾಜ ಭದ್ರಮುಖರಿಗೆ ನಿನ್ನಿಂದ ಒಂದು ಸುಖದ ದೇಣಿಗೆಯಾಗಬೇಕು. ಆವಾಗ ಏನು ಕೊಡುತ್ತಾರೆ, ಅದನ್ನು ಬಂದು ನನಗೆ ತಿಳಿಸು.” +“ಭದ್ರಮುಖರು ಅಪೇಕ್ಷಿಸುವ ಯಾವ ಸುಖವನ್ನು ನಾನು ಮಾಡಬಲ್ಲೆ ?” +“ನೋಡು, ಎರಡೇ ದಿನ ಅವರು ಪಕ್ಶ್ಮಾದೇವಿಯ ಸಂಗವನ್ನು ಅನುಭವಿಸಿದರು. ಈಗ ಪಕ್ಶ್ಮಾರಾಣಿ ಇಲ್ಲಿಯೇ ಸಮೀಪದಲ್ಲಿ ಇದ್ದಾಳೆಂದು ವರದಿ ಬಂದಿದೆ . ದೇವರಾಜರು ವಿಧುರರು. ಈ ವಾರ್ತೆ ತಿಳಿದರೆ ಅವರು ಕುಣಿದಾಡುತ್ತಾರೆ. ತಿಳಿಸುವುದು ನಿನ್ನನ್ನು ಕೂಡಿದೆ..”ಎಂದು ಹೇಳಿ ವಿವರಗಳನ್ನು ಮಹಾರಾಣಿ ತಿಳಿಸಿದಳು. ಅದನ್ನು ಹೇಗೆ ಹೇಳುವುದೆಂದೂ ಸೂಚನೆ ನೀಡೀದಳು. ಪಕ್ಶ್ಮಾರಾಣಿ ಮಹಾರಾಜರ ಸಂಗದಲ್ಲಿ‌ಇದ್ದುದನ್ನು ಮಾತ್ರ ಬಚ್ಚಿಟ್ಟಳು. +ಹತ್ತಿಪ್ಪತ್ತು ವರಹ ಕೊಡಲು ಬಂದರೆ ಸ್ವೀಕರಿಸಬೇಡ. ಎಷ್ಟು ಕೊಡಮಾಡಿದರೆಂಬುದನ್ನು ನನಗೆ ಬಂದು ಗುಟ್ಟಾಗಿ ಹೇಳು. ನಿನಗೆ ಸಲ್ಲಬೇಕಾದ ಹಣ ನಾನು ಕೋಡುತ್ತೇನೆ. ರಾಜಪುರುಷರ ಔದಾರ್ಯದ ಪರೀಕ್ಷೆ ಆಗಲಿ !” ಎಂದಳು. +ದೇವರಾಜರ ನಡತೆಯನ್ನು ನೋಡಿ ಬೇಸರಗೊಂಡ ವೀರಸೇನ ಈ ಸುಸಂಧಿಯನ್ನು ಚೆನ್ನಾಗಿಯೇ ಬಳಸಿಕೊಂಡನು. ದೇವರಾಜರ ಮನೆಗೆ ಹೋಗಿ, “ಒಂದು ಗುಟ್ಟು ಹೇಳುವುದಿದೆ. ನಿಮಗೆ ಸಂತೋಷವಾದರೆ ತಕ್ಕ ಬಹುಮಾನ ಕೊಡುವ ನಿಮ್ಮ ಔದಾರ್ಯದ ಬಗ್ಗೆ ನನಗೆ ಭರವಸೆ ಇದೆ” ಎಂದು ಭದ್ರಮುಖರಿಗೆ ಹೇಳಿದನು. +ಅವನ ಕೈಸನ್ನೆ-ಬಾಯಿಸನ್ನೆಗಳನ್ನು, ಕಣ್ಣುಮಿಟಿಕೆಗಳನ್ನು ನೋಡಿ ದೇವರಾಜ ಅವನನ್ನು ಗುಪ್ತಕೊಠಡಿಯಲ್ಲಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬಾರದೆಂದು ಪಹರೆಯವರಿಗೆ ಹೇಳಿದನು, +ಆಂರವನದಬಳಿಯ ಗುಡಿಸಿಲಿನಲ್ಲಿ ಪಕ್ಷ್ಮಾದೇವಿ ಹೂ ಕುಯ್ಯುತ್ತ ನಿಂತಿರುವುದನ್ನು ತಾನು ಪ್ರತ್ಯಕ್ಷ ನೋಡಿರುವುದಾಗಿಯೂ, ತನ್ನನ್ನು ಕಾಣುತ್ತಲೇ ಭಯಭೀತಳಾಗಿ ಒಳಗೆ ಓಡಿದುದಾಗಿಯೂ ವೀರಸೇನ ವಾರ್ತೆ ಹೇಳಿದನು. +ಭದ್ರಮುಖರು ಮೊದಲು ನಂಬಲಿಲ್ಲ. ಮಹಾರಾಣಿಯವರಿಂದ ನಿಷೇಧಕ್ಕೊಳಗಾದ ತಿರುಗಿ ರಾಜ್ಯದಲ್ಲಿ ಕಾಲಿಡುವ ಧೈರ್ಯ ಹೇಗೆ ಮಾಡಿದಳು ? ಮಹಾರಾಜರು ಆಮ್ರವನದಲ್ಲಿ ಇದ್ದುದು ದೇವರಾಜರಿಗೆ ಗೊತ್ತು. ಅವರೇ ತಮ್ಮ ಆಜ್ನೆ ಚಲಾಯಿಸಿ ಪಕ್ಷ್ಮೆಯನ್ನು ಕರೆತಂದಿರಬಹುದೆ?-ಹಾಗಾದರೆ ಮಹಾರಾಜರ ವರ್ಚಸ್ಸು ಮಹಾರಾಣಿಯವರಿಗಿಂತ ಮೇಲಾಗಿರಬಹುದೆ?- ಅಥವಾ ಇದೆಲ್ಲ ತಾರ್ಕ್ಷ್ಯನ ಕೈಚಳಕವಿರಬಹುದೇ? ಈ ವಾರ್ತೆಯ ಸಹಾಯದಿಂದ ತಾರ್ಕ್ಷ್ಯನನ್ನು ಮಹಾರಾಣಿಯವರ ಅವಕೃಪೆಯ ಜಾಲದಲ್ಲಿ ತೊಡಗಿಸಿತಾವು ಮಹಾರಾಣಿಯವರ ಕೃಪೆಯನ್ನು ಗಳಿಸಬಹುದೆ ? ಇಂಥ ವಿಚಾರಗಳ ತೊಳಲಾಟದಲ್ಲಿ ಸಿಲುಕಿಕೊಂಡು ಭದ್ರಮುಖರು ಮೌನದಿಂದ ಇದ್ದರು. +ಅವರ ಮುಖವನ್ನೇ ಮಿಕಿಮಿಕಿ ನೋಡುತ್ತ, “ಪ್ರಭು, ತಮಗೆ ಸಂತೋಷವಾಗಲಿಲ್ಲವೇ ?” ಎಂದು ಕೇಳಿದನು ವೀರಸೇನ. +ಆಯಿತು, ನೋಡೋಣ. ನಾಳೆ ನೀನು ಬಾ. ವಿಚಾರ ಮಾಡುತ್ತೇನೆ. ನೀನು ಹೋಗಬಹುದು” ಎಂದರು. +ವೀರಸೇನ ಕಾಲು ಕೀಳಲಿಲ್ಲ. ಭದ್ರಮುಖರು ತುಸು ಅಸಮಾಧಾನದಿಂದಲೇ ಅವನಿಗೆ ಒಂದು ವರಹ ಬಹುಮಾನವಿತ್ತು ಅಲ್ಲಿಂದ ಕಳಿಸಿಕೊಟ್ಟರು. +ಐದು ವರ್ಷದಿಂದ ವಿದುರರಾದ ದೇವರಾಜರಿಗೆ ಸಂಸಾರದಲ್ಲಿ ಸುಖವಿರಲಿಲ್ಲ. ವಿದುರರಾದ ಹೊಸತರಲ್ಲಿ ವೈರಾಗ್ಯಭವತಾಳಿ, ಕವಾಸಮುನಿಗಳ ಶಿಷ್ಯತ್ವವನ್ನು ಸ್ವೀಕಾರಮಾಡಿದ್ದರು. ಆದರೆ ಇತ್ತೀಚೆಗೆ ಇನ್ನೊಂದು ಮದುವೆಯಾಗುವ ವಿಚಾರದಲ್ಲಿ ತೊಡಗಿದ್ದರು. ಮಗ ವತ್ಸರಾಜನ ಹೆಂಡತಿ ಸುಂದರಿ ತುಂಬುಬಸಿರಿ. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಶ್ರೀಶ ಕಾರಾಂತ್ +ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. “ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” “ನಿಮ್ಮನ್ನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_158.txt b/Kannada Sahitya/article_158.txt new file mode 100644 index 0000000000000000000000000000000000000000..985769a7554a445a34e2692d2f62ab8f49d6db5c --- /dev/null +++ b/Kannada Sahitya/article_158.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ ದಾರಿಮಾಡಿ ಹಲವು ಕಿರುಕಥೆಗಳನ್ನೂ ತೇಲಿಬಿಟ್ಟರು. +ಅವೆಲ್ಲದರ ಸೆಂಟ್ರಲ್ ‘ಥೀಂ’ ಅವಾರ್ಡ್ +ಓದಿ-ನಕ್ಕು-ಮರೆತುಬಿಡಿ… ನೆನಪಿದ್ದರೆ ನಿಮ್ಮ ಗೆಳೆಯರಿಗೆ ಹೇಳಿ +ಇದ್ದರಿಬ್ಬರು ಗೆಳೆಯರು +ಈ ಇಬ್ಬರು ಚಿತ್ರರಂಗ ಪ್ರವೇಶಿಸಿದರು ಒಟ್ಟಿಗೆ. +ಒಂದು ಚಿತ್ರದಲ್ಲಿ ಹೀರೋ ಆದ ‘ಎ’. ನಂತರ ಮೋಬೈಲ್ ಬಂತು. ಕಾರ್‍ ಬಂತು. ಸ್ಟೈಲ್ ಬದಲಾಯಿತು. ದಿನಕ್ಕೊಂದು ಡ್ರೆಸ್. ಆನಂತರ ‘ಬಿ’ ಸಹಾ ಚಿತ್ರರಂಗದಲ್ಲಿ ಹೆಸರಾದ. ತಾನೂ ‘ಎ’ ತರಹವೇ ಆಗಬೇಕೆಂದು ಮೊಬೈಲ್ ಕೊಂಡ-ಅದೇ ಬಣ್ಣದ ಕಾರೂ ಕೊಂಡ. ಸ್ಟೈಲಿಷ್ ಕಿಂಗ ಎನ್ನವಂತೆ ತಾನೂ ಡ್ರೆಸ್ ಮಾಡಿದ. ಎ ದಿನಕ್ಕೊಂದು ಡ್ರೆಸ್ ಹಾಕಿದರೆ ಬಿ ಘಂಟೆಗೊಂದು ಡ್ರೆಸ್ ಹಾಕಿದ. +“ಎಲಾ ಇವ್ನ” ಎಂದಿದ್ದೇ ಎ ಒಂದು ಭರ್ಜರಿ ಬಂಗಲೆ ಕಟ್ಟಿಸಿದ. +ಬಿ ನಾನೇನು ಕಮ್ಮಿ ಎಂದು ಅದಕ್ಕಿಂತ ಭರ್ಜರಿ ಬಂಗಲೆ ಕಟ್ಟಿಸಿ ಮೀಸೆ ತಿರುವಿದ. +ಬಿ ಗೆ ಪಾಠಕಲಿಸಬೇಕೆಂದು ‘ಎ’ ದೊಡ್ಡ ಪ್ರಮಾಣದಲ್ಲಿ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ. +“ನಾನು ನಿನಗೇನು ಕಡಮೆ ಇಲ್ಲ’ ಎಂದು ‘ಬಿ’ ಅದೇ ಪ್ರಮಾಣದಲ್ಲಿ ತಾನೂ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ. +ಮುಂದಿನ ವರ್ಷ ಎ ಗೆ ಅಭಿನಯಿಸಿದ ಚಿತ್ರಕ್ಕೆ ಸೆಂಟ್ರಲ್ ಅವಾರ್ಡ್ ಬಂತು. +ಈಗ ಏನಂತೀರಿ ಮಿಸ್ಟರ್‍ ‘ಬಿ’ ಎಂದು ಗಹಗಹಿಸಿ ನಕ್ಕಾಗ ‘ಬಿ’ ಸೋತು-ಸಪ್ಪಗಾಗಿ “ಇಲ್ಲಪ್ಪ-ನಾನು ಅಷ್ಟು ಶ್ರೀಮಂತನಾಗಿಲ್ಲ ಇನ್ನೂ” ಎಂದು ಕೈ ಮುಗಿದನಂತೆ. +ಮಿತ್ರರ ಫೋನ್ +ಅವಾರ್ಡುಗಳ ಅನೌನ್ಸ್ ಆದಾಗ ‘ಕಂಗ್ರಾಜುಲೇಷನ್ಸ್’ ಹೇಳುವಂಥ ಕರೆಗಳು ಫ್ಯಾನ್ಸ್‌ಗಳಿಂದ ಬೇಕಾದಷ್ಟು ಬರುತ್ತೆ. ಅಂಥ ಫೋನ್‌ಗಳು ಮನಸ್ಸಿಗೆ ಮುದ ನೀಡುತ್ತೆ. ಅವಾರ್ಡ್ ಬರಕ್ಕೆ ಮುಂಚೆ ಕೆಲವು ಫೋನ್ ಬಂದಾಗ ಮನಸ್ಸಿಗೆ ಕಿರಿಕಿರಿಯಾಗುತ್ತೆ. “ವಿಷ್ಣುಸಾರ್‍ – ಈ ಸಾರಿ ನಿಮಗೇ ಅವಾರ್ಡ್ ಬಂದಿರೋದು. ನಿಮ್ಮ ಹೆಸರು ರೆಕಮೆಂಡ ಮಾಡಿದೋನು ನಾನೇ, ಅಂತ ಆ ಸ್ಟೇಟ್‌ಮೆಂಟ್‌ಗೊಂದು ಒಗ್ಗರಣೆ ಬೇರೆ ಹಾಕ್ತಾರೆ. ಕ್ಲಿಷ್ಟವಾದ ಪಾತ್ರ ಕಷ್ಟಪಟ್ಟು ಅಭಿನಯಿಸಿರೋನು ನಾನು. ವರ ರೆಕಮಂಡೇಷನ್‌ನಿಂದ ನಂಗೆ ಅವಾರ್ಡ್ ಬರೋದಾದ್ರೆ ಆ ಅವಾರ್ಡ್‌ಗೇನು ಬೆಲೆ ಇರುತ್ತೆ? +ಮಿಸ್ಟರ್‍ ಪಾರ್ಥೇನಿಯಂ +ಇನ್ನೊಬ್ಬ ವ್ಯಕ್ತಿ ಇದ್ದಾನೆ. ಆತ ಒಬ್ಬ ಕ್ರಿಮಿ. ಹೆಸರು ಹೇಳಬಹುದು. ಬೇಡ ಈಗ. ಒಂದೇ ಮಾತಲ್ಲಿ ಹೇಳಬೇಕಾದ್ರೆ ಆತ ಪಾರ್ಥೇನಿಯಂ. ಅವನೊಂದು ಸರ್ತಿ ಫೋನ್ ಮಾಡಿ “ಸಾರ್‍ ಈ ಸಾರಿ ನಿಮಕುದಾ ಅವಾರ್ಡ್ ವಂದಿರಕು ಅಂತ ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ‘ನಾಳೆ ಇಂಥವರು ಫ್ಯಾಮಿಲಿ ಸಮೇತ ಬರ್‍ತಾರೆ. ಪಾಷ್ ಹೋಟೆಲ್‌ನಲ್ಲಿ ಅವರನ್ನ ಚೆನ್ನಾಗಿ ಟ್ರೀಟ್ ಪಣ್ಣಂಗೊ’ ಅಂದ. ಸುಮ್ನೆ ಫೋನ್ ಕುಕ್ಕಿದೆ. ಫ್ರೆಂಡ್ಸ್ ಯಾರೋ ಊರಿಂದ ಬಂದರೆ ಅವರಿಗೆ ಅತಿಥಿ ಸತ್ಕಾರ ಚೆನ್ನಾಗಿ ಮಾಡೋದು ನಮ್ಮ ಸಂಸ್ಕೃತಿ. ಓ ಕೆ…. ಆದರೆ ಅವರು ಅವಾರ್ಡ್ ಕೊಡೋರು. ಅವರನ್ನ ಆ ಕಾರಣಕ್ಕೆ ಚೆನ್ನಾಗಿ ಟ್ರೀಟ್ ಮಾಡಿ ಅಂದ್ರೆ ಕೋಪ ಬರುತ್ತೋ ಇಲ್ಲವೋ? ಇಂಥ ಚಮಚಾಗಿರಿ ಮಾಡಿ ಅವಾರ್ಡ್ ತಗೊಂಡ್ರೆ ಮನಸ್ಸಿಗೆ ತೃಪ್ತಿ ಇರುತ್ತಾ ನಾನ್‌ಸೆನ್ಸ್”. +ಒಂದೊಂದು ಅವಾರ್ಡ್‌ದು ಒಂದೊಂದು ಕಥೆ +ಫಿಲಂ ಫೇರ್‍ ಅವಾರ್ಡು, ಆ ಅವಾರ್ಡು ಈ ಅವಾರ್ಡು ಅಂತ ಈಗ ಅವರ್ಡುಗಳಲ್ಲೂ ಥರಾ ಥರಾ. +ಇನ್ನು ಸೆಂಟ್ರಲ್ ಅವಾರ್ಡು ಕಥೆ ಈಗ ಹಾದಿರಂಪ-ಬೀದಿರಂಪ. +‘ವೀರಪ್ಪನಾಯ್ಕ’ ಸಹ ಹಿಂದೆ ಸೆಂಟ್ರಲ್ ಅವಾರ್ಡ್‌ಗೆ ಹೋಗಿತ್ತು. ನೋಡಿದರೆ ತಾನೆ ಚೆನ್ನ-ಚಾರು ಹೇಳೋದು ಸಾಧ್ಯ. ವೀರಪ್ಪನಾಯಕ ಡಬ್ಬ ತೆಪ್ಪಗೆ ಬಿದ್ದಿತ್ತಂತೆ. ಆ ಡಬ್ಬ ತೆಗೆದು ನೋಡೋ ಮನಸೂ ಬರಲಿಲ್ಲ ಅವರಿಗೆ. ಹೀಗಾದರೆ ಯಾರಿಗೆ ಆದ್ರೂ ನ್ಯಾಯ ಸಿಕ್ಕೀತು ಹೇಗೆ?” +ಪುಟ್ಟಣ್ಣಾಜಿ ಮತ್ತು ನಾಗರಹಾವು +“ಕುಮಾರ್‍ ಅಂತ ಇದ್ದ ಹೆಸರನ್ನ ವಿಷ್ಣುವರ್ಧನ್ ಅಂತ ಹೆಸರು ಬದಲಿಸಿದ್ದೇ ನನ್ನ ಗುರುಗಳಾದ ಕಣಗಾಲ್ ಪುಟ್ಟಣ್ಣಾಜಿ. ಅವರು ‘ನಾಗರಹಾವು’ ಚಿತ್ರದ ಮೂಲಕ ನನ್ನಂಥ ಕಗ್ಗಲ್ಲನ್ನ ಸುಂದರ ಶಿಲ್ಪವಾಗಿ ಕೆತ್ತಿ ಆಶೀರ್ವದಿಸಿದರು. ಚಿತ್ರದುರ್ಗದ ಮಂದಿ ಮಾತ್ರ ಅಲ್ಲ ಇಡೀ ಕನ್ನಡ ಕುಲಕೋಟಿ ಅವತ್ತಿಂದ ಇವತ್ತಿನವರೆಗೂ ತಮ್ಮ ಪ್ರೀತಿ ಧಾರಾಳವಾಗಿ ಧಾರೆ ಎರೆದಿದ್ದಾರೆ. ಬೇಕಾದಷ್ಟು ಸನ್ಮಾನ ಮಾಡಿದ್ದಾರೆ. ಅವಾರ್ಡ್‌ಗಳು ಕೊಟ್ಟಿದ್ದಾರೆ. ‘ನಾಗರಹಾವು’ ಆಗ ಬೇಕಾದಷ್ಟು ಅವಾರ್ಡ್‌ಗಳು ಪಡೀತು. ಅಂಥ ಜನರ ಪ್ರೀತಿಯ ಸವಿ ಉಂಡವನು ನಾನು. ಇವತ್ತು “ಎಲ್ಲಿ ಹೋದವು ಆ ದಿನ” ಅಂತ ಪ್ಯಾಥೋಸ್ ಟ್ಯೂನ್‌ನಲ್ಲಿ ಹಾಡಬೇಕಾದ ದಿನ ಬಂದಿದೆ.” +ಒನ್ ಬೈಟು ಅವಾರ್ಡ್‌ಗಳು +“ಯಾವುದೇ ಒಂದು ಅವಾರ್ಡು ಹಿರಿಯರಿಗೆ-ಕಿರಿಯರಿಗೆ ಬಂದರೆ ಖುಷಿಯಾಗಿ ಸಂತೋಷ ಹಂಚಿಕೊಳ್ಳೋನು ನಾನು. ಆದರೆ ಅವಾರ್ಡನ್ನು ಒನ್‌ಬೈಟು ಮಾಡೋದು ಸರಿಯಲ್ಲ ಅಂತ ಮುಂಚಿನಿಂದ ಹೇಳ್ಕೊಂಡು ಬಂದಿದೀನಿ. ಅಂಥಾದ್ರಲ್ಲಿ ರಾಜ್ಯ ಪ್ರಶಸ್ತಿ ನಂಗೆ, ರಮೇಶ್‌ಗೆ ಒಟ್ಟಿಗೆ ಕೊಟ್ರು. ಮುಂದಾದರೂ ಹೀಗೆ ಮಾಡದೆ ಇರಲಿ ಅಂತ ಪಬ್ಲಿಕ್ ಆಗಿ ಅದನ್ನು ಡೈರೆಕ್ಟರ್‌ಗೆ ಕೊಡಿ ಅಂತ ಪ್ರಶಸ್ತಿ ಸಮಾರಂಭದಲ್ಲೇ ವಾಪಾಸ್ಸು ಮಾಡಿದೆ.” +ನಿಜವಾಗಿ ಅವಾರ್ಡ್‌‌ಗಳು ಬಂದಾಗ ತುಂಬ ಖುಷಿ ಆಗುತ್ತೆ ಅನ್ನೋದು ನಿಜ. ಆದರೆ ಬಗೆ ಬಗೆ ಲಾಬಿಯಿಂದ ಅವಾರ್ಡ್ ಬಂದರೆ ಏನು ಪ್ರಯೋಜನ? ಈಗಂತೂ ಸರಕಾರಿ ಅವಾರ್ಡ್ ರಿಜೆಕ್ಟ್ ಮಾಡಿದರೆ-ಅದಕ್ಕೂ ಒಂದು ಅವಾರ್ಡ್ ಕೊಡೋ ಸಂಪ್ರದಾಯ ಹೊಸದಾಗಿ ಈಗ ತಲೆ ಎತ್ತಿದೆ. ಇಂಥ ಅಂಶಗಳೂ ಚಿತ್ರರಸಿಕರಿಗೆ ತಿಳಿದಿರಲೆಂದೇ ವಿಷ್ಣು ಪುರಾಣದ ಅವಾರ್ಡ್ ಕಥೆಗಳನ್ನು ಹೇಳಿದ್ದು. +***** +(೪-೫-೨೦೦೧) +ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ. ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ. ಜನತುಂಬಿ ತುಳುಕಿದ್ದರು. ಆನಂತರದ ಸಂತೋಷಕೂಟದಲ್ಲಿ […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_159.txt b/Kannada Sahitya/article_159.txt new file mode 100644 index 0000000000000000000000000000000000000000..9bf9ea9f9630e94022bac0a3ccb4bcf5412995dc --- /dev/null +++ b/Kannada Sahitya/article_159.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಮುದ್ರ ಸೀಳಿ ಲಾಗ ಹೊಡೆಯುವ +ತಿಮಿಂಗಲ +ಆಕಾಶವನ್ನೇ ಹರಿದು ಸುರಿಯುವ +ಮಳೆ +ಚಂದ್ರ ತಾರೆಗಳನ್ನೆ ನುಂಗಿಬಿಡುವ +ಮೋಡ +ಭೂಮಿಯೊಳಗಿಂದ ಹಟಾತ್ತನೆ ಸಿಡಿದು +ನಡುಗಿಸುವ ಕಂಪನ; +ನುಡಿಸಿದರೆ ರಾಗ, +ಹೀಗಿರಬೇಕು! +ರೋಮ ರೋಮಕ್ಕೂ ಲಗ್ಗೆ ಇಟ್ಟು +ಕೊಲ್ಲುವ ಹಾಗೆ! +ಕೀಲಿಕರಣ: ಕಿಶೋರ್‍ ಚಂದ್ರ +ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […] +ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […] +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_16.txt b/Kannada Sahitya/article_16.txt new file mode 100644 index 0000000000000000000000000000000000000000..e945c66d8dc257a519112c60c8608359d9fad0c8 --- /dev/null +++ b/Kannada Sahitya/article_16.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; ಮುಂದೆ ಎಕ್ಸಿಟ್ ಇಂಥ ಊರಿಗೆ, ಇಂತಿಷ್ಟು ನಿಮಿಷಗಳಿಗೆ, ಈ ನಂಬರ್ ದಾರಿಗೆ ಬಲಕ್ಕೆ ತಿರುಗಿ, ಇಲ್ಲಿ ಎಡಕ್ಕೆ ತಿರುಗಬೇಡಿ, ನೇರವಾಗಿ ಹೋಗಿ – ದಾರಿಯುದ್ದಕ್ಕೂ ಹೊಳೆಯುವ ಸೂಚಿಗಳು. ಇದನ್ನು ತಿನ್ನಿ, ಇದನ್ನು ಕುಡಿಯಿರಿ – ಕಣ್ಣು ಕಿವಿಗಳ ಮೇಲೆ ಸತತವಾದ ಧಾಳಿ. ನನ್ನ ಮರೆವು ಎಷ್ಟೆಂದರೆ ಒಂದೇ ಒಂದು ಜಾಹಿರಾತು ನನಗೆ ನೆನಪಿರುವುದಿಲ್ಲ. ಬಸ್ಸು ಕೆಲವೆಡೆ ನಿಲ್ಲುತ್ತದೆ. ಮೆಶಿನ್‌ನಿಂದ ಬಿಸಿಯಾದ ಕಾಫಿ, ತಣ್ಣಗಿನ ಸೆವೆನ್ ಆಪ್, ಕೋಕೋಕೋಲ, ಬಿಸಿಬಿಸಿ ಸೂಪು, ಸಿಗರೇಟು ಪಡೆದು ಪ್ರಯಾಣಿಕರು ಬಸ್ಸಿಗೆ ಹಿಂದಿರುಗುತ್ತಾರೆ. ಆರಡಿಗೂ ಹೆಚ್ಚು ಎತ್ತರದ, ನೀಳವಾದ ಶರೀರದ ಕಪ್ಪು ಮನುಷ್ಯ ನಮ್ಮ ಚಾಲಕ. ನಾವು ಎಲ್ಲಿದ್ದೇವೆ, ಎಷ್ಟು ಹೊತ್ತಿಗೆ ಚಿಕಾಗೋ ಸೇರುತ್ತೇವೆ – ಮೈಕಿನಲ್ಲಿ ಹೇಳುತ್ತಾನೆ, “ಎದುರುಗಡೆ ಸೀಟುಗಳಲ್ಲಿ ಸಿಗರೇಟು ಸೇದುವುದು ಕಾನೂನುಬಾಹಿರ, ಹಿಂದಿನ ಸೀಟಿನಲ್ಲಿ ಮಾತ್ರ ಸೇದಬಹುದು” ಎಂದು ಅವನು ಹೇಳಿದ್ದನ್ನು ಕೇಳಿ ನಾನು ಸಿಗರೇಟಿನ ಸಹಿತ ಹಿಂದಿನ ಸೀಟಿಗೆ ಹೋಗಿ ಕೂರುತ್ತೇನೆ. ಸೀಟನ್ನು ಹಿಂದಕ್ಕೆ ತಳ್ಳಿ ಸಿಗರೇಟು ಹಚ್ಚಿ ವಿಶ್ರಮಿಸುತ್ತೇನೆ. ಬಸ್ಸು ಕಾನೂನಿನ ಪ್ರಕಾರ ಐವತ್ತೈದು ಮೈಲುಗಳ ವೇಗದಲ್ಲಿ ಓಡುತ್ತದೆ. ಕಿಟಕಿಯಿಂದ ಸಾಲುಸಾಲಾಗಿ ಇರುವೆಯಂತೆ ಇನ್ನೊಂದು ದಿಕ್ಕಿನಲಿ ಓಡುವ ಕಾರುಗಳು ಕಾಣುತ್ತವೆ. ತನ್ನ ತನ್ನ ಪರಿಧಿಯಲ್ಲಿ ಎಲ್ಲವೂ ನಿಯಂತ್ರಿತವಾಗಿ ನಡೆಯುತ್ತದೆ. ಎಲ್ಲ ಹಿಡಿತದಲ್ಲಿದೆ, ಕ್ಷೇಮವಾಗಿದೆ ಎನ್ನಿಸಿದರೂ ರೇಡಿಯೋ ಹಾಕಿದಾಗ್ಗೆಲ್ಲ ಕೇಳುವುದು ಅಪಘಾತ. +ಇಲ್ಲ ಇಂಥ ಹೈವೇಗಳನ್ನು ನಮ್ಮ ದೇಶ ನಿರ್ಮಿಸುವುದು ಸಾಧ್ಯವಿಲ್ಲ. ಎಷ್ಟೋ ಹಳ್ಳಿಗಳನ್ನು ನಿರ್ನಾಮಮಾಡಬೇಕಾದೀತು. ಅಲ್ಲದೆ ನಮಗೆ ಇಷ್ಟೊಂದು ಕಾರುಗಳೂ ಬೇಡ, ಪಾರ್ಕ್ ಮಾಡುವ ಪರದಾಟವೂ ಬೇಡ. ಇಷ್ಟೊಂದು ಜನ ಎಲ್ಲಿಗೆ ಯಾಕೆ ಬರಿದೇ ತಿರುಗಾಡುತ್ತಾರೆ? ತೇಪೆ ಹಾಕಿದ ಬ್ಲೂ ಜೀನ್ಸ್ ತೊಟ್ಟು, ಉದ್ದಕೂದಲು ಗಡ್ಡಗಳನ್ನು ಬಿಟ್ಟ ನನ್ನ ವಿದ್ಯಾರ್ಥಿಗಳನ್ನು ಕೆಲವರು ಹೇಳುತ್ತಾರೆ : “ಈ ಕಾರುಗಳನ್ನು ನಾವು ದ್ವೇಷಿಸುತ್ತೇವೆ; ಈ ಟಿನ್ ಆಹಾರವನ್ನು ನಾವು ದ್ವೇಷಿಸುತ್ತೇವೆ. ಈ ಪದಾರ್ಥ ವ್ಯಾಮೋಹ, ಈ ಪ್ರಾಪಂಚಿಕತೆ ನಾವು ದ್ವೇಷಿಸುತ್ತೇವೆ; ನಮ್ಮ ವಾತಾವರಣ ಮಲಿನವಾಗುತ್ತಿದೆ. ನಮಗೆ ನ್ಯಾಚುರಲ್ ಫುಡ್ ಬೇಕು.” ನನ್ನ ಜೊತೆ ಕೆಲಸ ಮಾಡುವ ಇಬ್ಬರು ರಿಸರ್ಚ್ ಅಸಿಸ್ಟೆಂಟ್ ಹುಡುಗಿಯರು ತಿನ್ನುವುದು ಬರೀ ಮೊಸರು, ತರಕಾರಿ. +ಆದರೆ ನ್ಯೂಯಾರ್ಕ್ನಲ್ಲೊಂದು ಅಂಗಡಿಯಿದೆ. ಶ್ರೀನಿವಾಸರಾವ್ ನನಗಿದನ್ನು ಹೇಳಿದ್ದು. ಯೆಹೂದ್ಯನೊಬ್ಬ ಅಂಗಡಿಯ ಮಾಲೀಕ. ಭಾರತೀಯರಿಗೆ ಸ್ವಾಗತವೆಂದು ಹಿಂದಿಯಲ್ಲಿ ಬೋರ್ಡ್‌ಹಾಕಿಃದಾನಂತೆ. ೨೨೦ ವೋಲ್ಟ್‌ಗಳಲ್ಲಿ ನಡೆಯುವ ವಿದ್ಯುತ್ ಸರಕುಗಳನ್ನು ಅವನು ಮಾರುತ್ತಾನೆ. ಅಲ್ಲಿ ನಮ್ಮ ಭಾರತೀಯರು ಕಿಕ್ಕಿರಿದಿರುತ್ತಾರೆ. ಅದನ್ನು ಕೊಡು, ಇದನ್ನು ಕೊಡು ಎಂದು ಎತ್ತಿದ ಎರಡು ಕೈಗಳಿಂದಲೂ ಸರಕುಗಳನ್ನು ತೋರಿಸುತ್ತ ನಮ್ಮವರು ಹಾತೊರೆಯುವ ದೃಶ್ಯವನ್ನು ಶ್ರೀನಿವಾಸರಾವ್ ನನ್ನ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ನನಗೂ ಒಂದು ಕ್ಯಾಮರ, ಒಂದು ಕ್ಯಾಸೆಟ್ ಟೇಪ್ ರಿಕಾರ್ಡರ್, ಒಂದು ಒಳ್ಳೆಯ ಸ್ಟೀರಿಯೋ ರಿಕಾರ್ಡ್‌ಪ್ಲೇಯರ್ ಕೊಳ್ಳುವ ಆಸೆ. ಆದರೆ ನಾಚಿಕೆ. +ಪಕ್ಕದಲ್ಲಿ ಕೂತವ ’ಹಾಯ್’ ಎಂದ. ಗಟ್ಟುಮುಟ್ಟಾದ ಆಳು. ಗುಂಡು ಮುಖ. ಚಿಕಾಗೋ ಸೇರಲು ಇನ್ನೆಷ್ಟು ಸಮಯ ಬೇಕು ಎಂದೆ. “ಒಂದೂವರೆ ಗಂಟೆ. ನಿನ್ನದು ಯಾವ ದೇಶ?” +ಪರಸ್ಪರ ಪರಿಚಯವಾಯಿತು. ಅವನ ಪೂರ್ವಿಕರು ವೆಲ್ಶ್‌ಜನ. ಅವನದು ಊರಿಂದ ಊರಿಗೆ ಪ್ರಯಾಣ. ಕೆಲಸ ಸಿಕ್ಕಲ್ಲಿ ದುಡಿಮೆ. ಅವನ ಕನಸು : ಪರ್ವತ ಪ್ರದೇಶದಲ್ಲಿ ಗುಡಿಸಲು ಕಟ್ಟಬೇಕು. ರೈತನಾಗಿ ಬದುಕಬೇಕು ಈಜಬೇಕು, ಬೆಟ್ಟಗಳನ್ನು ಹತ್ತಬೇಕು, ಕೈಯಲ್ಲಿ ಬೆಳೆದದ್ದನ್ನು ತಿನ್ನಬೇಕು. ಟಿನ್ ಆಹಾರ, ಟೆಲಿವಿಶನ್, ಕಾರುಗಳು – ಎಲ್ಲದರಿಂದ ದೂರವಾಗಬೇಕು. +“ಹಾಗಾದರೆ ನೀನು ಅಮೆರಿಕಾನ್ನ ದ್ವೇಷಿಸುತ್ತಿ?” +“ಇಲ್ಲ. ಪ್ರಪಂಚದಲ್ಲಿ ಸದ್ಯಕ್ಕೆ ಇದೇ ಒಳ್ಳೆ ದೇಶ. ಇಲ್ಲಿ ಸ್ವಾತಂತ್ರ್ಯವಿದೆ. ಇಲ್ಲಿ ಯಾರೂ ದೊಡ್ಡವನಲ್ಲ, ಯಾರೂ ಚಿಕ್ಕವನಲ್ಲ, ನಾವು ನಿಕ್ಸನ್‌ಗೆ ಏನು ಮಾಡಿದೆವು ನಿನಗೆ ಗೊತ್ತಿರಬಹುದಲ್ಲ?” +“ಸರಿ, ಆದರೆ ನಿಮ್ಮ ಸ್ವಾತಂತ್ರ್ಯದ ಹಿಂದೆ ಸಮೃದ್ಧಿಯಿದೆ, ನಿಮ್ಮ ಸಮೃದ್ಧಿ ಸಾಧ್ಯವಾದ್ದು ನಮ್ಮ ದೇಶಗಳ ಬಡತನದಿಂದಾಗಿ, ನೋಡು – ನಿಮಗೆ ಪೆಟ್ರೊಲ್ ಚೀಪಾಗಿ ಸಿಗುತ್ತದೆ. ಆದರೆ ನಾವು ಕೊಳ್ಳುವ ನಿಮ್ಮ ಮೇಶಿನು ತುಂಬ ದುಬಾರಿ. ಈಗ ಪೆಟ್ರೊಲಿನ ಬೆಲೆ ಏರುತ್ತಿರುವುದರಿಂದ ಜನರಲ್ ಮೋಟಾರ್ಸ್‌ನಲ್ಲಿ ಕೆಲಸ ಮಾಡುವ ಎಷ್ಟೋಜನ ನಿರುದ್ಯೋಗಿಗಳಾಗಿದ್ದಾರೆ. ನಿಮ್ಮ ಸ್ಥಿತಿ ಹೀಗೆ ಮುಂದುವರಿಯುತ್ತದೆಂಬ ಭ್ರಮೆ ಇಟ್ಟುಕೊಳ್ಳುವುದು ತಪ್ಪು”. +“ನೀನು ಹೋಳೋದು ಸರಿಯಿರಬಹುದು. ರಾಜಕೀಯವೆಂದರೆ ನನಗೆ ಬೋರು, ಗ್ರಾಸ್‌ಸೇದುತ್ತೀಯೇನು?” +ಬ್ಯಾಗಿನಿಂದ ಅವ ಒಂದು ಚಿಕ್ಕ ಲೋಹದ ಪೈಪನ್ನು ತೆಗೆದ. ಇನ್ನೊಂದು ಪುಟ್ಟ ಚೀಲದಿಂದ ಮರಿವಾನಾವನ್ನು ತೆಗೆದು ತುಂಬಿದ. +“ನೋಡು – ಇದನ್ನು ಸೇದೋದು ಕಾನೂನು ಬಾಹಿರ. ನಮ್ಮನ್ನು ಪೋಲೀಸರು ಈಗ ಬಂಧಿಸಬಹುದು. ಆದರೆ ನನಗೆ ಅದರ ಎಗ್ಗಿಲ್ಲ. ಸಿಗರೇಟ್‌ಗಿಂತ ಇದು ಹೆಚ್ಚು ಕೆಟ್ಟದಲ್ಲ. ನಿಮ್ಮ ದೇಶದ್ದು : ರುಚಿನೋಡು. ಗ್ರಾಸ್ ಅಷ್ಟು ಚೆನ್ನಾಗಿಲ್ಲ. ಹೂ ತಗೋ”. +ದಾಕ್ಷಿಣ್ಯಕ್ಕಾಗಿ ಸೇದಿದೆ. ನಮ್ಮ ಸೇಟಿನ ಪಕ್ಕದಲ್ಲಿ ಇಬ್ಬರು ತೆಳುವಾದ ಮುಖಗಳ ಹುಡುಗಿಯರಿದ್ದರು. ನಾನು ಎರಡು ದಂ ಎಳೆದು ಕೊಟ್ಟ ಪೈಪನ್ನು ಅವನು ಅವರಿಗೆ ಕೊಟ್ಟ. ಅವರೂ ಅವನಿಗೆ ಅಪರಿಚಿತರು. ಪೈಪ್ ನಮ್ಮ ನಡುವೆ ಸುತ್ತಾಡಿತು. ಮುಂದೆ ಕೂತವರು ತಮಗಿದು ತಿಳಿಯದೆಂಬಂತೆ ನಟಿಸುತ್ತ ಸೆಟೆದುಕೂತಿದ್ದರು. ನನಗೆ ಗ್ರಾಸ್ ಸ್ವಲ್ಪವೂ ಸೇರಲಿಲ್ಲ. ಯಾವ ಪರಿಣಾಮವನ್ನೂ ಮಾಡಲಿಲ್ಲ. ಆದರೆ ಸ್ನೇಹಕ್ಕೆ ಬೇಡವೆನ್ನಲಾರದೆ ಸೇದಿದೆ. ನನ್ನ ಪಾಲಿಗೆ ಪೈಪ್ ಬಂದಾಗ ಒಂದು ದಂ ಎಳೆದು ಅವನಿಗೆ ಹಿಂದಕ್ಕೆ ಕೊಡುತ್ತಿದ್ದೆ. ನನ್ನ ದಾಕ್ಷಿಣ್ಯ ಅವನಿಗೆ ಅರ್ಥವಾಗಲಿಲ್ಲ. ಅವನು ತನ್ನ ವೆಲ್ಶ್ ಪೂರ್ವಿಕರ ಬಗ್ಗೆ, ತನ್ನ ಮೀನು ಹಿಡಿಯುವ ಸಾಹಸಗಳ ಬಗ್ಗೆ, ತಾನು ಇನ್ನೂ ಓದಲು ಇಚ್ಛಿಸುವ ಮಕ್ಕಳ ಅದ್ಭುತಕತೆಗಳ ಬಗ್ಗೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ತನಗೂ ಇನ್ನೊಂದು ಪ್ರಪಂಚ ಎನ್ನಿಸುವ ನ್ಯೂಯಾರ್ಕಿನ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದ. ಹಿಂದಿನ ಸೀಟಿನಲ್ಲಿ ಸುತ್ತಾಡುವ ಪೈಪ್ ಒಂದು ಸಣ್ಣ ಕುಟುಂಬವನ್ನು ರಚಿಸಿತ್ತು. +“ಇದೇ ಚಿಕಾಗೋನ ಎತ್ತರದ ಬಿಲ್ಡಿಂಗ್ – ಜಾನ್‌ಹ್ಯಾಂಕಾಕ್. ಸಿಯರ್ಸ್ ಇದಕ್ಕೂ ಹೆಚ್ಚು ಎತ್ತರವೆನ್ನುತ್ತಾರೆ. ಪ್ಮೇಬಾಯ್ ಪ್ರಕಟವಾಗುವುದು ನಿಮ್ಮ ಬಲಕ್ಕೆ ಕಾಣುವ ಆ ಎತ್ತರವಾದ ಕಟ್ಟದಲ್ಲಿ”. ನಮ್ಮ ಚಾಲಕ ಮೈಕ್‌ನಲ್ಲಿ ನಮ್ಮ ಪುರ ಪ್ರವೇಶವನ್ನು ಸಾರಿದ. +“ಚಿಕಾಗೋದಲ್ಲಿ ಏನು ಮಾಡುತ್ತಿ?” +“ಕ್ಯಾಲಿಫೋರ್ನಿಯಾ ಬೋರಾಯಿತು. ಈಗ ಚಿಕಾಗೋದಲ್ಲಿ ಕೆಲಸ ಹುಡುಕುತ್ತೇನೆ. ಯಾವುದೋ ಒಂದು ದಿನ ಬೆಟ್ಟದ ಮೇಲೊಂದು ಮನೆ ಕಟ್ಟುತ್ತೇನೆ. ಅಡಿಗೆ ಮಾಡುವುದರಲ್ಲಿ ಖುಷಿಯಿರುವ ಹುಡುಗಿಯನ್ನು ಮದುವೆಯಾಗುತ್ತೇನೆ. ಅಮೇರಿಕಾದ ಹುಡುಗಿಯರು ಗಂಡಸರಂತೆ ಆಗುತ್ತಿದ್ದಾರೆ. ನನ್ನ ಎದುರು ಕೂತ ಈ ಹುಡುಗಿಯನ್ನು ನೋಡು. ಅವಳ ಜೊತೆ ಸಂಭೋಗ ಮಾಡಬೇಕೆಂದು ನಿನಗನ್ನಿಸುತ್ತದೆಯೆ?” +ನನ್ನ ಮುಖದಲ್ಲಿ ಮೂಡಿದ ಮುಜುಗರ ಕತ್ತಲಿನಲ್ಲಿ ಅವನಿಗೆ ಅರ್ಥವಾಗಲಿಲ್ಲ. ಬಸ್ಸು ನಿಂತಾಗ ಅವನು ಎದ್ದುನಿಂತ. ಎತ್ತರವಾದ ಮೈಕಟ್ಟಿನ ಯುವಕ. ಅಮೆರಿಕಾದ ಸಮೃದ್ಧಿಯ ಶಿಶು. ಭಾರತದ ಗ್ರಾಸ್ ಎಂದು ಅವನು ಸೇದಿದ್ದು ನಿಜವಾಗಿಯೂ ಹುಲ್ಲೇ ಇರಬಹುದು. ಸ್ನೇಹಿತರೊಬ್ಬರು ಹೇಳಿದ್ದರು: ಬಾಳೆ ಹಣ್ಣಿನ ಒಣಗಿದ ಸಿಪ್ಪೆಯನ್ನು ಸೇದುವುದು ಮಾದಕವೆಂದು ಯುವಕರು ನಂಬಿ ಸೇದಲು ಪ್ರಾರಂಭಿಸಿದರಂತೆ. ಹಲವರಿಗೆ ಅದು ಮಾದಕವಾಗಿಯೂ ಕಂಡಿತಂತೆ. ಈ ಯುವಕರು ಏನನ್ನಾದರೂ ನಂಬಲು ಹಾತೊರೆದಿದ್ದಾರೆ…..ಅಥವಾ ನಾನು ಸೇದಿದ್ದು ನಿಜವಾಗಿಯೂ ಮಾರಿವಾನವೆ? ಬಸ್ಸನ್ನು ತಡವರಿಸದೇ ಇಳಿದಿದ್ದೆ. ಚಿಕಾಗೋನ ಅತ್ಯಂತ ಎತ್ತರದ ಜಾನ್ ಹ್ಯಾಂಕಾಕ್ ಆಗಲೀ, ಸಿಯರ್ಸ್ ಆಗಲೀ ನನ್ನ ಕಣ್ಣಲ್ಲಿ ತೇಲಿರಲಿಲ್ಲ; ಅದ್ಭುತವಾಗಿ ಖಂಡಿತ ಕಂಡಿರಲಿಲ್ಲ. +* +* +* +ಡಾ.ಕೃಷ್ಣರಾಜು ನನಗಾಗಿ ಕಾದಿದ್ದರು. +“ನೀ ಮೆಟ್ಟುವ ನೆಲ ಅದೆ ಕರ್ನಾಟಕ” +ಅಮೇರಿಕಾದ ಮಿಡ್‌ವೆಸ್ಟ್ ವಿದ್ಯಾರಣ್ಯವಾಗಿದೆ, ಮಿಚಿಗನ್ ನೃಪತುಂಗವಾಗಿದೆ. ನ್ಯೂಯಾರ್ಕ್ ಕಾವೇರಿಯಾಗಿದೆ, ಕ್ಯಾಲಿಪೋರ್ನಿಯಾ ಕರ್ನಾಟಕವಾಗಿದೆ. ಕನ್ನಡನಾಡಿನಲ್ಲಿ ಓದಿ ಅಮೇರಿಕಾದಲ್ಲಿ ಕೆಲಸ ಮಾಡುವ ನಮ್ಮ ಕನ್ನಡಿಗ ಡಾಕ್ಟರರು, ಎಂಜಿನಿಯರ್‌ಗಳು ತಾವು ಮೆಟ್ಟುವ ನೆಲವನ್ನು ಕರ್ನಾಟಕ ಮಾಡಿದ್ದಾರೆ; ಹೆಸರು ಕೊಟ್ಟು ಹಿಗ್ಗಿದ್ದಾರೆ. ಕೊರೆಯುವ ಚಳಿ, ಪ್ರಖರವಾದ ಬೆಳಕಿನ ಬಿಸಿಲಿನಲ್ಲಿ ಕ್ರೈಸ್ತ ಧರ್ಮದ ಕಾಲೇಜೊಂದರಲ್ಲಿ ಮಧ್ಯಾಹ್ನ ನಾಡಹಬ್ಬಕ್ಕೆಂದು ಸೇರುತ್ತಿದ್ದ ಕನ್ನಡಿಗರನ್ನು ನೋಡುತ್ತ ಅಡ್ಡಾಡಿದೆ. ಅಷ್ಟೇನೂ ಕನ್ನಡ ಕಿವಿಯ ಮೇಲೆ ಬೇಳಲಿಲ್ಲ. ಆದರೆ ಈ ಜರಿ ಅಂಚು ಸೆರಗುಗಳ ರೇಷ್ಮೆ ಸೀರೆಯನ್ನುಟ್ಟು ಸಡಗರದಲ್ಲಿ ಓಡಾಡುವ ಹೆಂಗಸರು ಕನ್ನಡಿಗರೇ – ಖಂಡಿತ. ಯಾರು ಕಮ್ಮೆ, ಯಾರು ಕರ್ನಾಟಕ, ಯಾರು ಮಾಧ್ವ, ಯಾರು ಶ್ರೀ ವೈಷ್ನವ ಎಂದು ಕೂಡ ಊಹಿಸಬಹುದು: ಅವರು ಮನೆಯಿಂದ ಮಾಡಿ ತಂದ ಓಗರಗಳ ವೈವಿಧ್ಯದಲ್ಲಿ. ಅದನ್ನು ಅವರು ಟೇಬಲ್ಲಿನ ಮೇಲೆ ಇಡುತ್ತಿದ್ದ ಸಂಭ್ರಮದಲ್ಲಿ, ಏಕಾಗ್ರತೆಯಲ್ಲಿ. ನಾಲ್ಕೈದು ರೀತಿಯ ಬಿಸಿಬೇಳೆ ಹುಳಿಯನ್ನ, ಮೊಸರನ್ನ, ಪುಳಿಯೋಗರೆ, ಜಾಮೂನು, ಇತ್ಯಾದಿ ಪ್ರತ್ಯಕ್ಷವಾದವು. ಮಕ್ಕಳು ತಾಯಂದಿರಿಗೆ ಅಂಟಿಕೊಂಡು ಅತ್ತವು. ಗೊಂದಲ. ಯಾರು ಏನು ಹಾಡಬೇಕು? ಯಾವುದರ ನಂತರ ಯಾವುದು? ಭಾರತದಲ್ಲಿ ಕ್ಷಾಮವೆ? ನಿಜವೆ? ಅಥವಾ ಅಮೆರಿಕಾದ ಪ್ರಚಾರವೆ? ಐದಾರು ವರ್ಷಗಳಿಂದ ದೇಶಕ್ಕೆ ಹಿಂದಿರಿಗದಿದ್ದವರು ನನ್ನ ಕೇಳಿದರು. ಒಬ್ಬ ಕನ್ನಡಗಿತ್ತಿ ಗೊಣಗಿದಳು: ಇವರೇ ನೋಡಿ ನೀವು ಏನೇ ಹೇಳಿ, ನಮ್ಮನ್ನು ಕಂಡರೆ ಈ ಜನಕ್ಕೆ ಆಗಲ್ಲ. ಅದರಲ್ಲೂ ಇಲ್ಲಿನ ಕರಿಯರಂತೂ…… +ಸೀರೆ ಮತ್ತು ಅಡಿಗೆ – ಈ ಎರಡು ಅಂಶಗಳಲ್ಲಿ ಭಾರತೀಯತೆ ನಾಶವಾಗದೇ ಉಳಿಯುತ್ತದೆ. ಜೊತೆಗೇ ಅಪಾರ್ಟ್‌ಮೆಂಟ್‌ಗಳ ಕಿಷ್ಕಿಂಧದಲ್ಲೂ ಕೆಲವು ಇಂಚುಗಳನ್ನು ಆಕ್ರಮಿಸುವ ದೇವರ ಚಿತ್ರಗಳಲ್ಲಿ. ಬೆಳ್ಳಿಯ ತಿಮ್ಮಪ್ಪನ ಪಟ, ಬೆಳ್ಳಿಯ ಕೃಷ್ಣ, ಕುಂಕುಮ, ಅರಿಶಿನ, ಮೈಸೂರಿನ ಊದುಬತ್ತಿ, ಲಕ್ಷ್ಮೀಪಟ. ದೇವರ ಮುಖ ಚೆಂದಾಗಿರಬೇಕೆಂದಿಲ್ಲ, ಆಶ್ಚರ್ಯವೆಂದರೆ ಅಮೇರಿಕಾದ ಕೃಷ್ಣಪಂಥದವರು ಪ್ರಕಟಿಸುವ ಪುಸ್ತಕಗಳಲ್ಲಿರುವ ನಮ್ಮ ದೇವರುಗಳ ವರ್ಣರಂಜಿತ ಚಿತ್ರಗಳೂ ಹೀಗೇ ಇರುತ್ತವೆ. +ನಾನು ಚಿಕಾಗೋದಲ್ಲಿ ಒಂದು ವಿಷಯ ಅರಿತೆ. ನಮ್ಮ ಹೆಂಗಸರಿಗೆ ಸ್ವಲ್ಪವಾದರು ನಮ್ಮ ಸಂಸ್ಕೃತಿಯ ಪರಿಚಯವಿರುತ್ತದೆ. ಕೊನೆಗೆ ಒಂದು ಹಾಡಾದರೂ. ಒಬ್ಬಾಕೆ ಅದ್ಭುತವಾಗಿ ಪುರಂದರದಾಸರ ಹಾಡುಗಳನ್ನು ಹೇಳಿದರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಈ ಹಾಡನ್ನು ಚಿಕಾಗೋದಲ್ಲಿ ಕೇಳುವುದು ಒಂದು ಅಸಂಗತ ಅನುಭವ. +ಡಾಕ್ಟರರ ಹೆಂಡರು ಸಹ ಡಾಕ್ಟರರು. ಇಲ್ಲಿಂದ ಕರ್ನಾಟಕಕ್ಕೆ ಹೋಗಿ ವಿಧಿಪೂರ್ವಕ ಮದುವೆಯಾಗಿ ಗ್ಯಾಡ್ಜೆಟ್‌ಗಳ ಸ್ವರ್ಗದಲ್ಲಿ ಸಂಸಾರ ಹೂಡಿದ ದಂಪತಿಗಳು; ಜಾತಕ, ಜಾತಿ, ಕಸುಬು ಎಲ್ಲ ಕೂಡಿ ಬಂದಿರುವ ಅದೃಷ್ಟಶಾಲಿಗಳು. ಅವರ ಪ್ರಕಾರ: ಭಾರತವನ್ನು ಅವರು ಪ್ರೀತಿಸುತ್ತಾರೆ, ಪಾಶ್ಚಿಮಾತ್ಯರ ಸಂಸ್ಕೃತಿಹೀನತೆಯನ್ನು ದ್ವೇಷಿಸುತ್ತಾರೆ, ಆದರೆ ಅವರ ಯೋಗ್ಯತೆಗೆ ಸರಿಯಾದ ಕೆಲಸ ಭಾರತದಲ್ಲಿ ಅವರಿಗೆ ಸಿಗದಿದ್ದರಿಂದ…… ಇತ್ಯಾದಿ. ಈ ವಾದದ ವಿರುದ್ಧ ಎಲ್ಲ ವಾದವೂ ವ್ಯರ್ಥವೆಂದು ನನಗೆ ಗೊತ್ತು. ಒಂದು ಡಾಲರಿಗೆ ಎಂಟುರೂಪಾಯಿ – ಅದು ನಿಜ. ಒಬ್ಬ ಹುಡುಗಿ ಮಾತ್ರ ನಿಜವಾದ ಮಾತು ಹೇಳಿದಳು. ಸುಧಾಳ ಪ್ರಕಾರ ಒಂದು ಡಾಲರು ಒಂದು ರೂಪಾಯಿಗೆ ಸಮವಾಗಿದ್ದರೆ ಈ ಚಳಿದೇಶಕ್ಕೆ ನಾವೆಲ್ಲ ಯಾಕೆ ಬರಬೇಕಿತ್ತು? ಸುಂದರವಾದ ಥಿಯೇಟರ್, ಮಕ್ಕಳು, ದೊಡ್ಡ ಕುಂಕುಮದ ಮುದುಕಿಯರು, ಈಚೆಗೆ ಭಾರತದಿಂದ ಬಂದಿರುವರೆಂಬುದಕ್ಕೆ ದ್ಯೋತಕವಾಗಿ ಟೈಟ್ ಪ್ಯಾಂಟ್‌ಗಳನ್ನು ಧರಿಸಿದ ಯುವಕ ಡಾಕ್ಟರರು, ಎಂಜಿನಿಯರು, ಕರ್ನಾಟಕದ ನಾಡಹಬ್ಬದಂತೆಯೇ ಈ ನಾಡಹಬ್ಬವೂ ನಡೆಯಿತು. ರತ್ನನ ಪದಗಳು; ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳು; ರಂಗದಿಂದ ಪಿಸುಮಾತೂ ಕೇಳಿಸಬಲ್ಲಂಥ ಥಿಯೇಟರಿನಲ್ಲಿ ಮೈಕು; ಅದು ಅನಾಮತ್ತಾಗಿ ಹಾಡಿನ ಮಧ್ಯೆ ಕಿರುಚುವುದು; ಮೈಕಿನ ವೈರನ್ನು ರಂಗನಿರ್ಗಮನದ ಅವಸರದಲ್ಲಿ ಎಡವೋದು; ತಾಯಿ ಹಾಡುತ್ತಿರುವಾಗ ಮಗು ಮೆಲ್ಲಮೆಲ್ಲನೆ ರಂಗ ಪ್ರವೇಶ ಮಾಡಿ ಎಲೆಕ್ಟ್ರಿಕ್ ವೈರಿನ ಮೂಲವನ್ನು ಎಳೆಯುವುದು; ಅದರಿಂದ ನಾವು ಗಾಬರಿಯಾಗುವುದು – ಅಮೇರಿಕನ್ನರ ಇಜಿಜಿiಛಿieಟಿಛಿಥಿ ಮಾನವೀಯವಲ್ಲವೆಂದು ವಾದಿಸುತ್ತ ಪರಕೀಯರ ನಡುವಿನ ನನ್ನ ದಿಗ್ಭ್ರಮೆ ಮುಚ್ಚಿಕೊಳ್ಳುವ ನನಗೆ, ಈ ವಾತಾವರಣ ನಿಜವಾಗಿಯೂ ಹಿತವೆನ್ನಿಸಿತು. +ನಾವು ತಿಂದ ಬಿಸಿ ಬೇಳೆ ಅನ್ನ ಕರಗುವಷ್ಟು ಕಾಲ ಶಾಸ್ತೀಯ ಸಂಗೀತ, ಭರತನಾಟ್ಯ, ಹಳ್ಳಿಮಾತಿನ ಅಣಕ, ಸಿನಿಮಾ ಹಾಡಿಗಳ ಕನ್ನಡ ಸಂಸ್ಕೃತಿಯ ಚೌಚೌ ನಡೆಯಿತು. +ಮುಖ್ಯ ಅತಿಥಿಯ ಭಾಷಣದಲ್ಲಿ ನಾನು ಹೇಳಿದೆ: ನಮ್ಮ ದೇಶ ಇನ್ನೂ ಎರಡು ಮೂರು ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಒಂದು ದಿನದ ಪ್ರಯಾಣದಲ್ಲಿ ಪಡೆದವರು ನೀವು. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ – ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು; ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ನೀವು ಚಕ್ರಕ್ಕೆ ಕೈ ಹಚ್ಚಿದವರಲ್ಲ. +ಮೇಲಿನ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ – ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ. ಭಾರತದಲ್ಲಿದ್ದೂ ಜನಸಮುದಾಯದ ಸುಖದುಃಖಗಳಲ್ಲಿ ಭಾಗಿಯಾಗುವವರು ಎಷ್ಟು ಜನ? ಇವರು ನನ್ನವರು, ನನ್ನಂಥವರು. ನಾವು ಅರಿಯಬೇಕಾದ್ದು; ಚರಿತ್ರೆ ಚಕ್ರ ಇಂಡಿಯಾದಲ್ಲಿ ತಿರುಗಲು ಶುರುವಾದಾಗ ನಮ್ಮ ಅಭಿಪ್ರಾಯಗಳು, ನಮ್ಮ ಸಣ್ಣ ಸಂಕಟಗಳು, ಕಷ್ಟಗಳು, ಒಳ ಜಗಳಗಳು – ಎಲ್ಲ ಎಷ್ಟು ಅಸಂಬದ್ಧ ಎಂಬುದನ್ನು. ಆದರೆ ಇವರು ಕೂಡ ನಿಜವಾಗಿ ಗುಂಪನ್ನು ಪ್ರೀತಿಸುವ ಜನ. ದೋಸೆ, ಇಡ್ಲಿ, ನಮ್ಮ ಮಂತ್ರಿಗಳ ಲಂಚಕೋರತನ, ಯಾರು ಈಗ ಯಾವ ಹುದ್ದೆಯಲ್ಲಿ – ಇತ್ಯಾದಿಗಳಲ್ಲಿದ್ದೇ ನಾನು ಕ್ಷಣ ಮೈಮರೆತು ನನ್ನ ಭಾಷೆಯನ್ನು ಮಾತಾಡುವ ಜನರ ಜೊತೆ ಒಂದಾಗಿ ಹೋದೆ. +ಈಚೆಗೆ ನಾನು ಗಾಢವಾಗಿ ಅನುಭವಿಸಬಲ್ಲ ಭಾವನೆಯೆಂದರೆ ಸಿಟ್ಟಲ್ಲ – ವಿಷಾದ. +ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_160.txt b/Kannada Sahitya/article_160.txt new file mode 100644 index 0000000000000000000000000000000000000000..c7b8f18404b6b44b84dd7193ab244f37c08ca3d6 --- /dev/null +++ b/Kannada Sahitya/article_160.txt @@ -0,0 +1,98 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ತುಂಬಾ ದೊಡ್ಡ ಪ್ರಮಾದವಾಗಿಬಿಟ್ಟಿದೆ…! “ತಮ್ಮಲ್ಲೇ ಹಳಿದುಕೊಂಡರು ಪ್ರೊ.ಸ್ಟ್ಯಾನ್ಲಿ. ಆಗಿನಿಂದ ಅವರು ಅದನ್ನೇ ಮೂರು ಬಾರಿ ನುಡಿದಿದ್ದರು. ಎದುರಿಗೆ ಕುಳಿತಿದ್ದ ಅವರ ಸಹಾಯಕರಾದ ಡಾ. ನೇಹಾ ಮತ್ತು ಸೈಂಟಿಸ್ಟ್ ದೇವ್ ಇಬ್ಬರಿಗೂ ಈ ವಿಜ್ಞಾನಿ ಏನೋ ಎಡವಟ್ಟು ಮಾಡಿಕೊಂಡಿರುವುದು ಗೊತ್ತಾಗಿತ್ತು. ಅದರೆ ಚಿತ್ರ ಸಂಪೂರ್ಣವಾಗಿ ಎದುರಿಗೆ ಬಾರದೆ ಪರಿಸ್ಥಿತಿ ಎನೆಂದು ಅರಿವಾಗುತ್ತಿಲ್ಲ. +“ಪ್ರೊಫೆಸರ್. ನೀವು ಪೂರ್ತಿ ವಿಷಯ ಹೇಳಿದರೆ ನಾವು ಏನಾದರೂ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಯ ಸರಿದು ಹೋದಷ್ಟು ಕೇಸು ಜಟಿಲಗೊಳ್ಳಬಹುದು…! “ದೇವ್ ನುಡಿಯುತ್ತಿದ್ದರೆ, +“ಐ ನೊ ದ್ಯಾಟ್ ಯು ಕ್ಯಾನ್ ಹೆಲ್ಪ್ ಬಟ್… ಅದು ಅಷ್ಟು ಸುಲಭದಲ್ಲಿ ಸಾಧ್ಯ ಇಲ್ಲ. ಮಿ.ದೇವ್. ಯಾಕೆಂದರೆ ಅವನು ತಪ್ಪಿಸಿಕೊಂಡು ಬಿಟ್ಟಿದಾನೆ. ಯಾವಾಗ ಏನು ಅನಾಹುತ ಮಾಡುತ್ತಾನೋ ಗೊತ್ತಾಗ್ತಾ ಇಲ್ಲ….” +“ಮೈ ಗಾಡ್… ಯಾರು… ಮಿಲ್ಟನ್ ಕಾಣೆಯಾಗಿದ್ದಾನಾ..? “ಅಂದಾಜಿಸುತ್ತಾ ಬಗ್ಗಿದ ದೇವ್. +“ಹೌದು ದೇವ್. ಅವನು ತಪ್ಪಿಸಿಕೊಂಡಿದ್ದಾನೆ. ಜೊತೆಗೆ ನನ್ನ ಫಾರ್ಮುಲಾ ಕೂಡಾ ಯಶಸ್ವಿಯಾಗಿ ಕೊಂಡೊಯ್ದುಬಿಟ್ಟಿದಾನೆ…” +“ಯಾವುದು…?” +“ಆಪರೇಶನ್ ಥರ್ಡ್ ಐ…” +“ರಿಯಲ್ಲಿ…? ಸರ್ ಇಸ್ ಇಟ್ ಪಾಸಿಬಲ್..? “ನಂಬಿಕೆಯಾಗದೆ ಪ್ರಶ್ನಿಸಿದಳು ನೇಹಾ. +“ಹೌದು. ನೇಹಾ. ಮಿಲ್ಟನ್ ಯಾವತ್ತೋ ಒಂದಿನ ಕೈ ಕೊಡ್ತಾನೆ ಅಂತಾ ದೇವ್ ಹೇಳಿದಾಗ ನಾನು ನಂಬಿರಲಿಲ್ಲ. ಅಷ್ಟು ಮಾತ್ರ ಮೊದ್ದನ೦ತಿರುವವ ಅದ್ಹೇಗೆ ತಾನೆ ನಮ್ಮ ಪ್ರಯೋಗವನ್ನ ಕದಿಯುತ್ತಾನೆ ಎಂದುಕೊ೦ಡಿದ್ದೆ. ಆದರೆ ದೇವ್ ಹೇಳಿದ ಹಾಗೆ ಆಗಿದೆ. ಅವನು ಕೇವಲ ನನ್ನ ಫಾರ್ಮುಲಾ ಮಾತ್ರ ಕದ್ದಿಲ್ಲ. ಅದರ ವ್ಯವಸ್ಥಿತವಾಗಿ ಇಂಪ್ಲಾಂಟ್ ಕೂಡಾ ಮಾಡಿಸಿಕೊಂಡಿದ್ದಾನೆ … ನೋಡಿ…”ಎನ್ನುತ್ತಾ ಏಳೆಂಟು ದಿನಪತ್ರಿಕೆಗಳನ್ನು ಎದುರಿಗೆ ಹರಡಿದರು. +ಅವೆಲ್ಲವನ್ನು ಅವರು ನೋಡಿಲ್ಲವೆಂದಲ್ಲ. ಆದರೆ ಅದಕ್ಕೆಲ್ಲಾ ಕಾರಣ ಮಿಲ್ಟನ್ ಎಂದು ಮಾತ್ರ ಅಂದಾಜಿರಲಿಲ್ಲ. ಯಾರು ಯಾರನ್ನೋ ಲೇಸರ್ ಗನ್ನಿನಿಂದ ಶೂಟ್ ಮಾಡಿದ ಸುದ್ಡಿಗಳು… ಕರೆಂಟ್ ಶಾಕ್‌ನಿಂದ ಆದ ಸಾವೇ ಎಂದು ಇನ್ವೆಸ್ಟಿಗೇಶನ್ ನಡೆಯುತ್ತಿರುವ ನ್ಯೂಸ್‌ಗಳು ಅಲ್ಲಿದ್ದವು. ಅದಕ್ಕಿಂತಲೂ ದಾರುಣವಾದುದೆಂದರೆ ಮೊನ್ನೆಯಷ್ಟೆ ನಡೆದ ಹನ್ನೆರಡು ವರ್ಷದ ಬಾಲಕಿಯೊಬ್ಬಳನ್ನು ಇದೇ ತಂತ್ರಜ್ಞಾನ ಉಪಯೋಗಿಸಿ ಮಿಲ್ಟನ್ ಕಣ್ಣು ಕಾಣದಂತೆ ಮಾಡಿಬಿಟ್ಟಿದ್ದಾನೆ. ಸಾಯಿಸುವುದು ಬೇರೆ. ಆದರೆ ಈ ರೀತಿ ಪ್ರಮುಖ ಅಂಗಗಳನ್ನು ದೇಹದಿಂದಲೇ ಒರೆಸಿ ಹಾಕಿಬಿಡುವುದು ಬೇರೆ. ಅದಕ್ಕಾಗೇ ಪ್ರೊ.ಸ್ಟ್ಯಾನ್ಲಿ ಅಷ್ಟೊಂದು ತಳಮಳಿಸುತ್ತಿದ್ದರು. +“ಹೀಗೆ ನಿಮ್ಮ ಫಾರ್ಮುಲಾವನ್ನು ಉಪಯೋಗಿಸುದರ ಜೊತೆಗೆ, ಬೇಕಿದ್ದಾಗ ಅದನ್ನು ನಿಲ್ಲಿಸಿಬಿಡುವಂತೆ ಮಾಡಲು ಯಾವುದಾದರೊ ಕೌಂಟರ್ ರೂಲ್ ಅದಕ್ಕಿರಬೇಕಲ್ಲವಾ…? ” +“ಎಲ್ಲದಕ್ಕೂ ಒಂದು ಕೌಂಟರ್ ರೂಲ್ ಇದ್ದೇ ಇರುತ್ತದೆ ದೇವ್. ಆದರೆ ಯಾವುದೊಂದು ಪ್ರಯೋಗ ಪೂರ್ತಿಯಾಗೋ ಮುಂಚೆನೆ ಅದರ ಉಪಯೋಗಕ್ಕಿಳಿದರೆ ಕೌಂಟರ್‌ರೂಲಿನ ಮನೆ ಹಾಳಾಗಲಿ ಅಟ್ಲೀಸ್ಟ್ ಅದನ್ನು ತಡೆಯೋದಾದರೂ ಹೇಗೆ ಸಾಧ್ಯ…? ” +“ಶಿಟ್… ಅಷ್ಟಕ್ಕೂ ಮಿಲ್ಟನ್ ಅದನ್ನು ನಿರಂತರವಾಗಿ ಉಪಯೋಗಿಸಕ್ಕೆ ಆಗುತ್ತೆ ಅಂತೀರಾ…? ” +“ಎಸ್. ಅದನ್ನು ನಿರಂತರವಾಗಿ ಉಪಯೋಗಿಸಲು ಮಿಲ್ಟನ್‌ನಿಂದ ಸಾಧ್ಯವಿದೆ. ಬೇರಾರೋ ಆಗಿದ್ದರೆ ಸಾಧ್ಯವಿರಲಿಲ್ಲವೇನೋ. ಆದರೆ ಅವನು ನನ್ನೊಂದಿಗೆ ಈ ಪ್ರಯೋಗಾಲಯದಲ್ಲಿ ಪಳಗಿದೋನು. ಹೋಗುವಾಗ ಸಾಕಷ್ಟು ಪರಿಕರಗಳನ್ನು ಇಲ್ಲಿಂದ ಎತ್ತಿಕೊಂಡೇ ಹೋಗಿದಾನೆ. ಪ್ರಮುಖವಾಗಿ ನಾನು ತುಂಬಾ ಜತನದಿಂದ ಕಾಯ್ದಿರಿಸಿದ್ದ ಆ ಮಣಿಗಳನ್ನು ಕೂಡಾ ಒಂದಷ್ಟು ತೆಗೆದುಕೊಂಡು ಹೋಗಿದ್ದಾನೆ. ಮುಖ್ಯವಾಗಿ ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳಿರುವ ಫೈಲ್‌ನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದಾನೆ. ಅಲ್ಲದೇ ಈಗಾಗಲೇ ನಡೆಯುತ್ತಿರುವ ಅನಾಹುತವನ್ನು ನೋಡಿದರೆ ಖಂಡಿತವಾಗಲೂ ಆತ ಅದನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದ್ದಾನಲ್ಲದೇ ಇನ್ನು ಮೇಲೆ ಕೂಡಾ ಅದನ್ನು ಉಪಯೋಗಿಸಬಲ್ಲ ಎಂದೆನ್ನಿಸುತ್ತಿದೆ.” +“ಪ್ರೊಫೆಸರ್ ಖಂಡಿತವಾಗಿಯೂ ಮಿಲ್ಟನ್ ಅಂತಹದ್ಡೊಂದು ದೊಡ್ಡ ದುರಾಕ್ರಮಣವನ್ನು ಎಸಗುವ ಮುಂಚೆ ಅವನನ್ನು ಹಿಡಿಯಬೇಕು. ಬೈ ದಿ ಬೈ… ಅವನನ್ನು ಹಿಡಿದರೆ ವಾಪಸ್ಸು ಅವನಿಂದ ಆ ಶಕ್ತಿಯನ್ನು ಕಿತ್ತುಕೊಳ್ಳಲು ಸಾಧ್ಯವಾ…? ” +“ಅದನ್ನ ಹೇಗೋ ಮಾಡಬಹುದು. ಒತ್ತಾಯದಿಂದ ಇಲ್ಲ ಬಲಾತ್ಕಾರದಿಂದಲಾರೂ ಮಾಡಬಹುದು… ಒಮ್ಮೆ ಮಣಿಯನ್ನು ಕಿತ್ತರೇ ಮುಗಿಯಿತಲ್ಲ. ನಂತರ ಎಲ್ಲಾ ಸರಿಯಾಗೇ ನಡೆಯುತ್ತೇ…” +“ದೆನ್ ಡೋಂಟ್ ವರಿ ಪ್ರೊಫೆಸರ್. ಆದರೆ ಅವನ ಕೈಗೆ ನೀವು ಮಾತ್ರ ಕನಿಷ್ಠ ಹದಿನೈದು ದಿನವಾದರೂ ಸಿಗದಂತಿದ್ದರೆ ಅವನನ್ನು ಯಶಸ್ವಿಯಾಗಿ ಹಿಡಿಯಬಹುದೆಂದುಕೊಳ್ಳುತ್ತೇನೆ…” +“ಓಕೆ… ನಾನು ಲ್ಯಾಬ್ ಬಿಟ್ಟು ಎಲ್ಲೂ ಹೋಗುವುದೇ ಇಲ್ಲ ” +“ನೋ.. ನೀವು ಲ್ಯಾಬ್ ಬಿಟ್ಟು ಬೇರೆಲ್ಲೂ ಇರಲಾರಿರಿ ಎಂದು ಮಿಲ್ಟನ್‌ಗೆ ಕೂಡಾ ಚೆನ್ನಾಗೇ ಗೊತ್ತಿದೆ. ಸೋ. ಆದಷ್ಟು ನಿಮ್ಮನ್ನು ಇಲ್ಲಿಯೇ ಹಿಡಿಯಲು ಅವನು ಯತ್ನಿಸುತ್ತಾನೆ. ಅದಕ್ಕಾಗಿ ಸಧ್ಯ ನಿಮ್ಮ ಸ್ಥಾವರವನ್ನು ಇಲ್ಲಿಂದ ಬದಲಾಯಿಸೋಣ. ಅದಕ್ಕೂ ಮೊದಲು ಮಾಡಬೇಕಾದ ಕೆಲಸಗಳಿವೆ. ನಾನು ಮತ್ತೇ ನಿಮ್ಮನ್ನು ನೋಡುತ್ತೇನೆ…”ಎದ್ದು ನಿಂತ ದೇವ್. ಅವನನ್ನೇ ಹಿಂಬಾಲಿಸಿದಳು ನೇಹಾ. ತಲೆಗೆ ಕೈ ಹೂಡಿ ಕುಳಿತುಕೊಂಡರು ಪ್ರೊಫೆಸರ್. +* +* +* +ಸೌರ ಶಕ್ತಿಯನ್ನು ವಿಶೇಷವಾಗಿ ಅಭ್ಯಸಿಸುತ್ತಿದ್ದ ವಿಜ್ಞಾನಿ ಪ್ರೊ.ಸ್ಟ್ಯಾನ್ಲಿಗೆ ಇದ್ದಕ್ಕಿದ್ದಂತೆ ಒಮ್ಮೆ ಈ ಶಕ್ತಿಯನ್ನು ಜೈವಿಕವಾಗಿ ನಮಗೆ ಬೇಕೆಂದಾಗ ಬೇಕಾದಂತೆ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಮೂಡಿಬಂತು. ಸೋ. ಕೂಡಲೇ ಆ ದಿಕ್ಕಿನಲ್ಲಿ ಯೋಚನೆಗಳನ್ನು ಹರಿಬಿಟ್ಟಾಗ ತಲುಪಿದ ಹಂತವೇ… ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಅದನ್ನು ಬೇಕೆಂದಾಗ ಸುಡುವ ಕಿರಣವಾಗಿ ಬದಲಾಯಿಸುವ ಯೋಜನೆ. ಅಸಲಿಗೆ ಅದು ಅವರ ಕನಸಿನ ಯೋಜನೆ. ಅದಕ್ಕೆ ಪೂರಕವಾಗಿ ದಕ್ಷಿಣ ಅಫ್ರಿಕಾದ “ಕೌಮಾರೋ “ಪ್ರಾಂತ್ಯದಲ್ಲಿ ಸಿಗುವ ಮಣಿಗಳು (ಕ್ವಾರ್ಟ್ಸ್ ) ಒಂದು ವಿಷೇಶ ಶಕ್ತಿಯನ್ನು ಹೊಂದಿದ್ದು ಹಗಲಿನಲ್ಲಿ ಸೂರ್ಯನ ಶಕ್ತಿಯನ್ನು ಹೀರಿಕೊಂಡು ರಾತ್ರಿಯಲ್ಲಿ ಮರುತ್ಪತ್ತಿಗೊಳಿಸುತ್ತವೆ ಎಂಬುದು. +ಈ ಸುದ್ಡಿಯ ಹಿನ್ನೆಲೆಯಲ್ಲಿ ಅದರ ಬೆನ್ನು ಬಿದ್ದ ವಿಜ್ಞಾನಿಯ ತಲೆಯಲ್ಲಿ ಅದ್ಭುತ ಯೋಜನೆಯೊಂದು ರೂಪಗೊಂಡಿತು. ಆ ಅಂಗವಾಗಿ ಅವರು ಮೊದಲು ತಮ್ಮ ಜ್ಯೂನಿಯರ್ ಆಗಿದ್ದ ದೇವ್ ಮತ್ತು ಮಿಲ್ಟನ್‌ರನ್ನು ಸಂಪರ್ಕಿಸಿ ತಮ್ಮ ಯೋಜನೆಯ ಶ್ರೇಯಸ್ಸಿಗೆ ಬೆಂಬಲವನ್ನು ಕೋರಿದರು. ಅದರಂತೆ ಅವರ ಮುಂದೆ ವಾದ ಮ೦ಡಿಸಿದಾಗ ಮೊದಲ ಆಕ್ಷೇಪವನ್ನು ಎತ್ತಿದವನೇ ಸೈಂಟಿಸ್ಟ್ ದೇವ್. +“ಬೇಡ ಪ್ರೋಫೆಸರ್. ಅಕಸ್ಮಾತಾಗಿ ನೀವು ಈ ರೀತಿಯಲ್ಲಿ ಕಥೆ ಹೇಳಿದಂತೆ ಹೇಳುತ್ತಿರುವ ವಿಷಯ ನಿಜವಾಗಿ, ನಿಮ್ಮ ಯೋಜನೆ ಯಶಸ್ವಿಯಾಗಿ ಆ ಶಕ್ತಿ ಕೈಗೂಡಿಬಿಟ್ಟರೆ ಅದರಿಂದ ಇನ್ನಿಲ್ಲದ ಅದ್ಭುತವೇನೋ ಘಟಿಸಬಹುದು ಆದರೆ ಅಕಸ್ಮಾತ ಅದೇನಾದರು ದುರುಳರ ಕೈಗೆ ಸಿಕ್ಕಿದರೆ ಇನ್ನಿಲ್ಲದ ಅಪಾಯವಾಗುತ್ತದೆ…” +“ಛೇ… ಹಾಗೆಲ್ಲ ಇಲ್ಲ ದೇವ್. ಇಲ್ಲಿ ನೋಡು. ಅಕಸ್ಮಾತ ನಾವು ಹಾಗೆ ಶಕ್ತಿಯನ್ನು ಹಿಡಿದುಕೊಳ್ಳಲು ಸಾಧ್ಯವಾಗೋದೇ ಆದರೆ ಅದಕ್ಕಿಂತ ಹೆಮ್ಮೆ ಇನ್ನೇನಿದೆ. ಏನು ಬೇಕಾದರೂ ಮಾಡಬಹುದು..” +“ಅಸಲಿಗೆ ಇದು ಸಾಧ್ಯ ಅಂತೀರಾ…ಪ್ರೊಫೆಸರ್…? “ಅಲ್ಲಿಯವರೆಗೂ ಸುಮ್ಮನಿದ್ದ ಮಿಲ್ಟನ್ ಹುಬ್ಬೇರಿಸಿದ. +’ ಖಂಡಿತಕ್ಕೂ ಸಾಧ್ಯವಿದೆ ಮಿಲ್ಟನ್…” +“ಆದರೆ ಒಂದು ವೇಳೆ ಹಾಗೆ ಹಿಡಿದಿಡುವ ಶಕ್ತಿ ಕರೆಕ್ಟಾಗಿ ಬಿಡುಗಡೆಯಾಗದಿದ್ದರೆ…? ” +“ಎಸ್… ನನಗೂ ಅಂಥಹದ್ದೊಂದು ಸಂಶಯ ಇದ್ದೇ ಇತ್ತು. ಅಸಲಿಗೆ ಅದನ್ನು ಈ ರೀತಿಯಲ್ಲಿ ಹೇಳಬಹುದು. ನೋಡು ಸೂರ್ಯನಿಂದ ಬೀರಲ್ಪಡುವ ಬೆಳಕು ಎಲ್ಲೆಂದರಲ್ಲಿ ಚದುರುವಾಗ ಬೀರುವ ಕಿರಣಗಳನ್ನು ಗ್ರಹಿಸುವ ಕ್ರಿಯೆ ಮೂಲಕ ಈ ಮಣಿಗಳು ತಮ್ಮ ಬೆಳಕಿನ ಅರ್ಥಾತ್ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ… ಹೌದೇ…? ” +“ಹೌದು. ಇದರಲ್ಲೇನು ವಿಶೇಷ ಪೊಫೆಸರ್. ಯಾಕೆಂದರೆ ಈಗಾಗಲೇ ಈ ಕ್ವಾರ್ಟ್ಸ್‌ಗಳನ್ನು ಕೆಲವು ವಿದುನ್ಮಾನ ಯಂತ್ರಗಳಲ್ಲಿ, ಟೈಮರ್ ಸೆಟ್ಟಿಂಗ್ ಇತ್ಯಾದಿ ಕೆಲಸದಲ್ಲಿ ಉಪಯೋಗಿಸುತ್ತಲೇ ಇದ್ದಾರಲ್ಲ. …” +“ಎಸ್. ನನಗೂ ಅದೇ ಬೇಕಾಗಿರುವುದು. ಅಂದರೆ ಅವರೆಲ್ಲಾ ಈ ಮಣಿಯಿಂದ ಶಕ್ತಿಯನ್ನು ಹೀರಿಸಿ ನಂತರ ತಮಗೆ ಬೇಕಾದ ಹೊತ್ತಿನಲ್ಲಿ ಬೇಕಾದ ಹಾಗೆ ಅದರಿಂದ ರಿಲೀಸ್ ಮಾಡುತ್ತಿದ್ದಾರೆ…. ಹೌದೇ …? ” +“ಹೌದು …” +“ಅದೇ ರೀತಿಯಲ್ಲಿ ನಾನು ಕೂಡಾ ಈ ಮಣಿಯನ್ನು ಮಾನವ ಸಂಪರ್ಕಕ್ಕೇ ತರುವುದರ ಮೂಲಕ ಅವರುಗಳೆಲ್ಲಾ ಅದನ್ನು ನಿಯಂತ್ರಣಕ್ಕೆಂದು ಹೇಗೆ ಮೆಶಿನ್‌ಗಳನ್ನು ಅವಲಂಬಿಸಿದ್ದಾರೋ ಹಾಗೆ ನಾನು ಮಾನವನನ್ನೇ ಈ ಕ್ವಾರ್ಟ್ಸ್‌ಗೆ ಅಳವಡಿಸುತ್ತೇನೆ. ಸೂರ್ಯನ ಬೆಳಕನ್ನು ಸಂಸ್ಕರಿಸಿ ಬಿಡುವ ಮೂಲಕ ಭೂತಗನ್ನಡಿಯ ರೇಸು ಕಾಗದವನ್ನು ಕ್ಷಣಾರ್ಧದದಲ್ಲಿ ಸುಟ್ಟು ಹಾಕುತ್ತದೆ ಹೌದೇ…? ” +“ಹೌದು. ಅದರಲ್ಲಿ ಸಾಂದ್ರೀಕೃತಗೊಳ್ಳುವ ಆ ಬೆಳಕಿನ ಕಿರಣಗಳು ವಕ್ರೀಭವನದ ಪರಿಣಾಮಕ್ಕೊಳಪಡುತ್ತಲೇ ಕನ್ನಡಿಯ ಪ್ಯಾರಾಬೋಲಿಕ್ ಇಫ್ಹೇಕ್ಟಿಗೆ ಒಳಪಡುವುದರಿಂದಾಗಿ ಸಂಪೂಣ೯ ಬೆಳಕಿನ ಶಕ್ತಿ ಒಂದು ಕಿರಣವಾಗಿ ಹೊರಬರುತ್ತದೆ. ಅದಕ್ಕೆ ಕಾರಣ ಮನುಶ್ಯ ನಿರ್ಮಿತ ಪುಟ್ಟ ಕನ್ನಡಿ. ನಾನು ಅದಕ್ಕಿಂತಲೂ ಪವರ್‌ಫುಲ್ ಆದ ಕನ್ನಡಿ ಮತ್ತು ಅದಕ್ಕೂ ಹೆಚ್ಚಿನ ರೇಡಿಯಸ್ ಇಫೇಕ್ಟ್ ಇರುವ ಮಸೂರ ಬಳಸುತ್ತೇನೆ…” +“ಅದಾವುದು ಅಂತಹ ಮಸೂರ …? ” +“ಯೋಚಿಸು… ಅದಕ್ಕೂ ಮೊದಲು ನನ್ನ ಸೂತ್ರ ಹೇಗೆ ಕೆಲಸ ಮಾಡುತ್ತದೆ ಗೊತ್ತೆ..? ಭೂತ ಕನ್ನಡಿಯನ್ನು ನೇರವಾಗಿ ಬಿಸಿಲಿಗೆ ಹಿಡಿಯುವುದರ ಮೂಲಕ ಕೆಲವು ಕ್ಷಣಗಳಲ್ಲಿ ಕಾಗದದ ಚೂರು ಬೆಂಕಿಗಾಹುತಿಯಾಗುವುದನ್ನು ಗಮನಿಸಿರಬಹುದು. ಅಲ್ಲಿ ನಡೆಯುತ್ತಿದ್ದ ತಂತ್ರಜ್ಞಾನವೆಂದರೆ ಇಷ್ಟೆನೆ. ಸೂರ್ಯನ ಕಿರಣವನ್ನು ಲೆನ್ಸ್ ಮುಖಾಂತರ ಕೇಂದ್ರೀಕರಿಸುವುದರಿಂದ ಆ ಲೆನ್ಸ್‌ನ ವ್ಯಾಪ್ತಿಯೊಳಗೆ ಬರುವ ಎಲ್ಲ ಶಾಖವೂ ಕೇಂದ್ರೀಕರಣಗೊಂಡು ಕಿರಣದ ರೂಪದಲ್ಲಿ ಹೊರಹೊಮ್ಮುವಾಗ ಪ್ರಖರವಾಗಿ ಬರುತ್ತದೆ ಮತ್ತು ಒ೦ದೆಡೆಗೆ ಕೇಂದ್ರೀಕೃತಗೊಳ್ಳುವುದರಿಂದ ಕೆಲವೇ ಸೆಕೆಂಡುಗಳಲ್ಲಿ ಕಾಗದವನ್ನು ಸುಟ್ಟುಬಿಡುತ್ತದೆ. ಅದನ್ನೇ ಆಧಾರವಾಗಿಸಿಕೊಳ್ಳೋದಾದರೆ ಸೂರ್ಯನ ಕಿರಣಗಳಿಂದಲೇ ಅಂತಹ ಶಕ್ತಿಯುತ ಕಿರಣವನ್ನು ಪಡೆಯಬಾರದೇಕೆ…? ಹಾಗೆ ಪಡೆಯಬಹುದಾದಲ್ಲಿ ಮತ್ತು ಅಂತಹ ಏನನ್ನೂ ಸುಟ್ಟು ಬಿಡುವ ತಾಕತ್ತಿನ ಕಿರಣವನ್ನು ನಾವು ಕೈಗೆಟುಕಿಸಿಕೊಳ್ಳುತ್ತೇವೆ ಎಂದಾದಲ್ಲಿ ಅದರ ಹೆಸರನ್ನು ಹೀಗೆ ಕರೆಯಬಹುದು. ಅದೆಂದರೆ… +… ಇನ್ಫ್ರಾರೆಡ್ ಲೇಸರ್ ಬೀಂ… ! +ಹೀಗೆ ಸೂರ್ಯನಿಂದ ಇನ್ಫ್ರಾರೆಡ್ ಲೇಸರ್ ಬೀಂ ಪಡೆಯಬಹುದೆ…? ಸಾಧ್ಯವಿದೆ ಎನ್ನುತ್ತದೆ ವಿಜ್ಞಾನ. ಕಾರಣ ಈಗಾಗಲೇ ಸಾಬೀತಾಗಿರುವಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ…. ಇದನ್ನೆ ಕೊಂಚ ಬಯಾಲಜಿ ಮತ್ತು ಜಿಯಾಲಜಿಯನ್ನು ಬೆರೆಸಿ ಉಪಯೋಗಿಸುವುದರ ಮುಖಾಂತರ ಕಣ್ಣಿನಿಂದಲೂ ಬೀಂಗಳನ್ನು ಹೊರಡಿಸಬಹುದೆನ್ನುತ್ತೇನೆ ನಾನು. +ಕಾರಣ ಲೇಸರ್ ಬೀ೦ನ್ನು ಉಪಯೋಗಿಸುವುದರ ಮುಖಾಂತರ ಎಷ್ಟೇ ದೂರದ ಗುರಿಯನ್ನು ಹತ್ತಿರವಾಗಿಸಿಕೊಳ್ಳುವುದು ಸಾಧ್ಯವಿದೆ ಎ೦ದಾಗ ಮತ್ತು ಲೇಸರ್ ಬೀಂ ಉಪಯೋಗಿಸಿ ಖಂಡಾಂತರ ಕ್ಷಿಪಣಿಗಳಂತಹ ಯುದ್ಧಾಸ್ತ್ರಗಳನ್ನೇ ನಾಶಪಡಿಸಬಹುದೆನ್ನುವ ಸತ್ಯ ನಮ್ಮೆದುರಿಗಿರುವಾಗ ಅದನ್ನು ಪಳಗಿಸಿ ಜೈವಿಕವಾಗಿ ಹೊರಹೊಮ್ಮಿಸುವುದು ಕಷ್ಟವೇನಲ್ಲ. ಅಸಲಿಗೆ ಸೂರ್ಯ ಕೂಡಾ ಒ೦ದು ಜೈವಿಕ ಶಕ್ತಿಯ ಆಗರವೇ ತಾನೆ. +ಯಾಕೆಂದರೆ ಜಿಯಾಲಜಿಯಲ್ಲಿ ಪಾಂಡಿತ್ಯವಿದ್ದವರಿಗೆ ಈ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಕ್ವಾರ್ಟ್ಸ್‌ಗಳ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾದ “ಕೌಮಾರೋ “ಗಣಿಗಳಲ್ಲಿ ಲಭ್ಯವಿರುವ ಅತ್ಯುನ್ನತ ಮಟ್ಟದ ಕ್ವಾರ್ಟ್ಸ್ ಇವತ್ತಿಗೂ ಜಗತ್ತಿನಲ್ಲಿ ಹೆಸರುವಾಸಿ. ಅವು ಹೇಗೆ ತಮ್ಮಲ್ಲಿ ಶಕ್ತಿಯನ್ನು ಶೇಖರಿಸಿ ಮರುತ್ಪತ್ತಿ ಮಾಡಬಲ್ಲವೋ ಹಾಗೇ ನಾನು ಬೇಕೆಂದಾಗ ಅವು ತೀಕ್ಷ್ಣತಮಗೊಳ್ಳಬೇಕು ಮತ್ತು ಅವು ನಮ್ಮದೇಹದಲ್ಲಿ ಅಡಗಿಸಬೇಕು…” +“ಅಂದರೆ ಕ್ವಾರ್ಟ್ಸ್ ಗಳನ್ನು ಮಾನವ ದೇಹದೊಂದಿಗೆ ಸಮ್ಮಿಳನಗೊಳಿಸುವುದೇ … ? ” +“ಹೌದು ಹೀಗೆ ಮಾಡುವುದರ ಮುಖಾಂತರ ಅದರ ಉಪಯೋಗವನ್ನು ನಾನು ಮನಸ್ಸಿನ ನಿಯಂತ್ರಣಕ್ಕೆ ಬಿಡಬಹುದೆಂದುಕೊಂಡಿದ್ದೇನೆ… ” +“ಆದರೆ ಆ ಕ್ವಾರ್ಟ್ಸ್ ದೇಹದ ಮೇಲೆ ಯಾವುದಾದರೂ ಪರಿಣಾಮ ಬೀರಿದರೆ…? ಅಷ್ಟಕ್ಕೂ ಅದನ್ನು ದೇಹದ ಯಾವ ಭಾಗದಲ್ಲಿ ಇಂಪ್ಲಾಂಟ್ ಮಾಡಲಿದ್ದೀರಿ …? ” +“ನೋಡುತ್ತಿರು. ಅದಕ್ಕೂ ಮೊದಲು ನಿನ್ನ ಎರಡನೆಯ ಸಂದೇಹ… ಕ್ವಾರ್ಟ್ಸ್ ದೇಹದ ಮೇಲೆ ಯಾವುದೇ ಪರಿಣಾಮ ಬೀರಲಾರವು. ಯಾಕೆಂದರೆ ಈ ಕ್ವಾರ್ಟ್ಸ್ ಕಲ್ಲುಗಳಿಗೆ ಶೇಕಡಾ ನೂರರಷ್ಟು ಸೂರ್ಯನ ಬೆಳಕಿನ ಶಾಖ ಮತ್ತು ಉಷ್ಣತೆಯನ್ನು ಹಿಡಿದುಕೊಳ್ಳುವ ತಾಕತ್ತಿದೆ. ಆದರೆ ಅಷ್ಟೊಂದು ಪ್ರಮಾಣದ ಭಾರಿ ಹೀರುವಿಕೆಯನ್ನು ಅರಗಿಸಿಕೊಂಡೂ ಕೂಡಾ ಈ ಕಲ್ಲುಗಳು ಯಾವುದೇ ರಾಸಾಯನಿಕ ಅಥವಾ ಭೌತಿಕ ( ಕೆಮಿಕಲ್ ಪ್ರಾಪರ್ಟೀಸ್) ಬದಲಾವಣೆಗಳನ್ನು ತೋರದೆ ಸುಮ್ಮನಿರುತ್ತವೆ. ಈ ಒಂದು ಗುಣವನ್ನೇ ಬಳಸಿಕೊಳ್ಳಲು ಹೊರಟಿರುವ ನಾನು ಅದರಿಂದ ಪ್ರಖರ ಉಷ್ಣವನ್ನು ಪ್ರತಿಫಲಿಸುತ್ತೇನೆ. ಜೊತೆಗೆ ಈ ಪ್ರಯೋಗ ಯಶಸ್ಸಾದರೆ ಪರಶಿವನಿಗಿದ್ದ ಮೂರನೆಯ ಕಣ್ಣು ಸುಳ್ಳೆಂದು ಸಾಬೀತು ಮಾಡುತ್ತೇನೆ. ನನ್ನ ಪ್ರಯೋಗದ ಮನುಶ್ಯನೂ ಕೂಡಾ ಶಿವನಂತೆ ಈಗಿರುವ ಕಣ್ಣನ್ನೇ ಬಳಸಿಕೊಂಡು … ಇನ್ಫ್ರಾರೆಡ್ ಲೇಸರ್ ಬೀಂ ನ್ನು ಬಿಡುಗಡೆಗೊಳಿಸಬಲ್ಲ. ಆಗ ಮೂರನೆಯ ಕಣ್ಣೆ ಬೇಕಿಲ್ಲ. ಮಾಮೂಲಿನ ಕಣ್ಣು ಕೂಡಾ ಆ ಕೆಲಸವನ್ನು ಮಾಡುತ್ತದೆ. ” +“ಮೈ ಗಾಡ್ ಕಣ್ಣಿನಲ್ಲಿ ಕ್ವಾರ್ಟ್ಸ್ ಹೂಡಿ ಅದರಿಂದ ಪ್ರತಿಫಲನವನ್ನು ಬೀಂ ಆಗಿ ಪಡೆಯುವುದೇ… ? ” +“ಹೌದು. ಹೇಗೆಂದರೆ ಒಮ್ಮೆ ಸಾಕಷ್ಟು ನಡು ಹಗಲಿನ ಪ್ರಖರ ಸೂರ್ಯನ ಬೆಳಕು ಕಣ್ಣನ್ನು ಪ್ರವೇಶಿಸುತ್ತಿದ್ದಂತೆ ಮಾಮೂಲಿನ ಕಣ್ಣಿನಲ್ಲಿ ನಡೆಯುವ ಆಕ್ಟಿವಿಟೀಸ್‌ಗಳ ಜೊತೆಯಲ್ಲಿ ಕೇವಲ ಬಿಂಬ ಸಂವಹನದ ಹೊರತಾಗಿ ಉಳಿದೆಲ್ಲ ಬೆಳಕು ಈ ಕ್ವಾರ್ಟ್ಸ್‌ನ ಮೇಲೆ ಬೀಳುವುದರೊಂದಿಗೆ ಅಲ್ಲಿ ಸಾಕಷ್ಟು ಶಕ್ತಿಯ ಸಂಗ್ರಹಣ ಆಗೇ ಆಗುತ್ತದೆ. ಇಲ್ಲಿ ನೈಸರ್ಗಿಕವಾಗಿ ದೊರೆಯುವ ಹರ್ಬಲ್ ಶೈಲಿಯ ಕ್ವಾರ್ಟ್ಸನ್ನು ನಾವು ಕಣ್ಣಿನ ಮಾಮೂಲಿನ ವ್ಯವಸ್ಥೆಗೆ ತೊಂದರೆಯಾಗದಂತೆ ಇಂಪ್ಲಾಂಟ್ ಮಾಡಲು ಸಾಧ್ಯವಾದಲ್ಲಿ ಈ ವಾದಕ್ಕೆ ಹೆಚ್ಚಿನ ಬೆಂಬಲ ಸಿಗುವುದರಲ್ಲಿ ಆಶ್ಚರ್ಯವೇನಿಲ್ಲ ಮತ್ತದು ಸಾಧ್ಯವಿದೆ ಕೂಡಾ. +ಯಾಕೆಂದರೆ ಮಿಂಚು ಹುಳುಗಳಾಗಲಿ… ರಾತ್ರಿ ಬೆಳಕು ಸೂಸುವ ಇತರೆ ಕೀಟಗಳಾಗಲಿ, ಕೆಲವೊಂದು ರಾತ್ರಿ ಬೆಳಕು ಬೀರುವ ಜೈವಿಕ ಸಸ್ಯಗಳಾಗಲಿ ನಮ್ಮ ಮುಂದಿರುವ ಸಣ್ಣ ಉದಾಹರಣೆಗಳೆ… ಒಮ್ಮೆ ಹೀಗೆ ಕಣ್ಣಿನಲ್ಲಿ ಹಗಲೆಲ್ಲಾ ಸೂರ್ಯನ ಶಕ್ತಿಯನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ನಾವು ಹರ್ಬಲ್ ಕ್ವಾರ್ಟ್ಸ್‌ನ ಮೂಲಕ ಸಾಧಿಸಿದರೆ ಅಷ್ಟೆ, ಅದರಿಂದ ಹೊರಹೊಮ್ಮುವ ಬೆಳಕು ನೇರವಾಗಿ ಹೊರಕ್ಕೆ ಬಾರದೆ ಮೊದಲು ಕಣ್ಣಿನ ಒಳ ಆವರಣವಾದ ರೆಟಿನಾದ ವಕ್ರ ಮೇಲ್ಮೈ ಮೇಲೆ ಬೀಳುತ್ತದೆ. ಒಮ್ಮೆ ಅಲ್ಲಿಂದ ಹೊರಕ್ಕೆ ಚಿಮ್ಮಿಸಬೇಕೆಂದರೆ ಸಹಜವಾಗೇ ಭೂತಗನ್ನಡಿಯ ಥಿಯರಿಯಂತೆ ಅದು ಸಾಂದ್ರೀಕೃತಗೊಂಡು ದೃಷ್ಠಿಯ ಪಾಯಿಂಟಿನ ಕಡೆಗೆ ನುಗ್ಗುತ್ತದೆ. +ಅಸಲಿಗೆ ಈ ಮೊದಲೇ ಹೇಳಿದಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ ಮತ್ತು ಆ ಕೆಲಸವನ್ನು ಈಗಾಗಲೇ ಕಣ್ಣಿನಲ್ಲಿ ದೃಷ್ಟಿ ಸಂಬಂಧಿ ಕ್ರಿಯೆಯಲ್ಲಿ ನಡೆಯುತ್ತಲೇ ಇದೆ. ಆದ್ರೆ ಇಲ್ಲಿಯವರೆಗೂ ಕಣ್ಣಿನಿಂದ ಕೇವಲ ವಸ್ತುವಿನ ಪ್ರತಿಫಲನವನ್ನು ಸ್ವೀಕರಿಸಿ ಪ್ರತಿಬಿಂಬವನ್ನು ಮೂಡಿಸುವ ಕೆಲಸವಾಗುತ್ತಿಡ್ದುದರಿಂದ ನಮಗೆ ಕಣ್ಣನ್ನು ಹೀಗೂ ಉಪಯೋಗಿಸಬಹುದು ಎನ್ನುವ ಅರಿವಿರಲಿಲ್ಲ. ಅಸಲಿಗೆ ಸಾಧನೆಯ ಮೂಲಕ ಕಣ್ಣನ್ನು ಎಷ್ಟೊಂದು ಪವರ್ ಫುಲ್ ಆಗಿ ಬಳಸುತ್ತಾರೆನ್ನುವುದು ಗೊತ್ತೇ ಇದೆ. ಅವರೆಲ್ಲಾ ಕಣ್ಣಿನಿಂದ ಕಿರಣಗಳನ್ನು ಯಾವ ರೀತಿಯಲ್ಲಿ ಸಂಕುಚಿಸಿ ದೃಷ್ಠಿಯನ್ನು ಹೊರಹಾಕುತ್ತಾರೋ ಅದೇ ಕ್ರಿಯೆಯನ್ನು ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ. +ಹಾಗೆ ಒಮ್ಮೆ ವಕ್ರ ಮೇಲ್ಮೈ ಮೇಲೆ ಬೀಳುವ ಬೆಳಕು ಸಹಜವಾಗೇ ಲೇಸರ್ ಆಗಿ ಬದಲಾಗುತ್ತಾ, ಅದೂ ಸಾಂದ್ರೀಕೃತಗೊಂಡು ಹೊಮ್ಮುವ ಬೆಳಕಿನ ಕಿರಣವಾಗಿದ್ದರಿಂದ ಸಾಕಷ್ಟು ಪವರ್ ಫುಲ್ ಆಗಿ ನುಗ್ಗಿ ಬರುತ್ತದೆ. ಜೊತೆಗೆ ಭೂತಗನ್ನಡಿಗೆ ಹೋಲಿಸಿದರೆ ರೆಟಿನಾದ ಒಳಮೈ ರೇಡಿಯಸ್ ತುಂಬಾ ಹೆಚ್ಚು. ಹಾಗಾಗಿ ಪ್ರತಿಫಲಿಸುವ ಕಿರಣಗಳ ಮಟ್ಟ ಕೂಡಾ ತುಂಬಾ ಹೆಚ್ಚು. ಅದನ್ನು ಸರಿಯಾಗಿ ದೃಷ್ಟಿಯನ್ನು ಕುಗ್ಗಿ ಪ್ರಯೋಗಿಸುವುದರ ಮೂಲಕ ಉಪಯೋಗಿಸಿದರೆ ಅದು ಬರಿ ಸುಡುವುದೇನು… ನೇರವಾಗಿ ಸೀಳಿ ಬಿಡಬಲ್ಲಷ್ಟು ಪ್ರಖರವಾಗಿ ಕಿರಣದ ರೂಪದಲ್ಲಿ ಬರುತ್ತದೆನ್ನುವುದರಲ್ಲಿ ಸಂಶಯವೇ ಇಲ್ಲ. +ಇನ್ನು ಕಣ್ಣನ್ನು ಕುಗ್ಗಿಸಿ ಪ್ರಯೋಗಿಸುವುದೆಂದರೇನು… ? ಅಸಲಿಗೆ ನಾವು ಯಾವುದೇ ದೂರದ ಅಥವಾ ತುಂಬಾ ಹತ್ತಿರದ ವಸ್ತು ಅಥವಾ ದೃಶ್ಯಗಳನ್ನು ನೋಡುವಾಗ ಮಾಡುವ ಕಣ್ಣಿನ ವ್ಯತ್ಯಾಸಾತ್ಮಕ ಪರಿಧಿಯಿಂದ ಹೊರಬೀಳುವ ಮತ್ತು ಒಳ ಬರುವ ಬೆಳಕಿನ ಕಿರಣದಿಂದಾಗಿ ಸ್ಪಷ್ಟತೆ ಹೆಚ್ಚಾಗುತ್ತದೆ. ಕೆಲವೊಮ್ಮೆ ನೇರವಾಗಿ ಕಾಣದ ಚಿತ್ರಗಳು ಕಣ್ಣಿನ ಕುಗ್ಗಿಸಿ ನೋಡುವ ದೃಷ್ಟಿಗೆ ಸ್ಪಷ್ಟವಾಗೇ ಗೋಚರಿಸುತ್ತವೆ. ( ಟಿ.ವಿ.ಯಲ್ಲಿ ಕೆಲವು ಚಿತ್ರಗಳನ್ನು ಬೇಕೆಂದೆ ಮಸುಕಾಗಿಸಿದ್ದನ್ನು ಈ ವಿಧಾನದ ಮೂಲಕ ಸ್ಪಷ್ಟವಾಗೇ ನೋಡಬಹುದು. ಆದರೆ ಇದನ್ನು ಸಾಧಿಸಲು ಕೊಂಚ ಪ್ರಯತ್ನಿಸಬೇಕಾಗುತ್ತದೆ ) ಆಗ ಕಣ್ಣಿನ ರೆಟಿನಾಗೆ ಪೂರೈಸುವ ಬೆಳಕಿನ ಕಿರಣಗಳ ಸಾ೦ದ್ರತೆ ಮಾಮೂಲಿನದಕ್ಕಿಂತ ಶೇ. ಐವತ್ತಕ್ಕೂ ಹೆಚ್ಚು. ಇದನ್ನೇ ರಿವರ್ಸಾಗಿ ಉಪಯೋಗಿಸಿದಾಗ ಅಗತ್ಯದಷ್ಟು ಬೆಳಕು ತೂರಿ ಹೋಗುತ್ತದೆ. ಹೀಗೆ ತೂರಿ ಹೋಗುವ ದೃಷ್ಟಿಯ ಕಿರಣಗಳ ಜೊತೆಯಲ್ಲಿ ಕಣ್ಣಿನ ಒಳಾವರಣದಲ್ಲಿ ಸ್ಥಾಪಿತಗೊಳ್ಳುವ ಕ್ವಾರ್ಟ್ಸ್ ಮಣಿಗಳು ಬೆಳಕನ್ನು ಸಂಕುಚಿಸಿ ಹೊರಬಿಟ್ಟರೆ ಎದುರಿಗಿರುವ ಯಾವುದೇ ಪದಾರ್ಥ ಮಟಾಶ್… “ದೊಡ್ಡದಾಗಿ ಕೈಯೆತ್ತಿ ಘೋಷಿಸಿದರು ಪ್ರೊಫೆಸರ್ ಸ್ಟ್ಯಾನ್ಲಿ. +ಅವರೆಷ್ಟು ಉತ್ಸುಕರಾಗಿದ್ದರೆಂದರೆ ಇನ್ನು ಕೆಲವೇ ದಿನದಲ್ಲಿ ಅವರು ಮಾನವನ ಮಾಮೂಲಿನ ಕಣ್ಣಿಗೆ ಪರಶಿವನ ಶಕ್ತಿಯನ್ನು ತುಂಬುವುದು ಖಚಿತವಾಗಿತ್ತು. ಆದರೆ ಇದನ್ನು ದೇವ್ ವಿರೋಧಿಸಿದ್ದ. ಇದರಿಂದ ಯಾವುದೇ ಉಪಯೋಗ ಇದೆ ಎನ್ನುವುದಕ್ಕಿಂತಲೂ ಏನಾದರೂ ಅವಘಡ ನಡೆಯುವ ಸಂದರ್ಭವೇ ಜಾಸ್ತಿ ಎಂದರೂ ವೃದ್ಧ ವಿಜ್ಞಾನಿ ಕಿವಿಗೊಡಲಿಲ್ಲ. ಕೇವಲ ಆರು ತಿಂಗಳ ಅವಧಿಯಲ್ಲಿ ಅದನ್ನು ಕೈವಶ ಮಾಡಿಕೊಂಡರು. ಪ್ರಾಯೋಗಿಕ ಪರೀಕ್ಷೆಗಳು ನಡೆದವು. ಫಲಿತಾಂಶ ಅದ್ಭುತವಾಗಿತ್ತು. ಅದಾದ ಕೆಲವೇ ದಿನದಲ್ಲಿ ಮಿಲ್ಟನ್ ಅದನ್ನು ಅಪಹರಿಸಿ ತನ್ನೊಂದಿಗೆ ಒಯ್ದು ಬಿಟ್ಟಿದ್ದ. ಅಕ್ಷರಶ: ಅದನ್ನು ತನ್ನ ಮೇಲೆ ಪ್ರಯೋಗಿಸಿಕೊಂಡಿದ್ದನಲ್ಲದೇ ತನಗೆ ಬೇಕಾದಂತೆ ಅದನ್ನು ಉಪಯೋಗಿಸಲು ಆರಂಭಿಸಿದ್ದ. +ಅವನನ್ನು ತಡೆಯುವ ಮುಂಚೆ ಒಮ್ಮೆ ಆ ಕಣ್ಣನ್ನು ತೆರೆದು ಕಿರಿದುಗೊಳಿಸಿ ಪ್ರಯೋಗಿಸಿದರೆ ಸಾಕಿತ್ತು. ಸುಮಾರು ಐವತ್ತು ಅರವತ್ತು ಮೀಟರ್ ದೂರದವರೆಗಿನ ವ್ಯಕ್ತಿ ವಸ್ತುಗಳೆಲ್ಲಾ ಪ್ರೊಫೆಸರ್ ಹೇಳಿದಂತೆ ಮಟಾಶ್. ಆದರೆ ಅದರ ದುರುಪಯೋಗ ವ್ಯವಸ್ಥಿತವಾಗಿ ಮಿಲ್ಟನ್ ಆರಂಭಿಸಿದ್ದ. ಜೊತೆಗೆ ಅದರ ಮುಂದಿನ ಗುರಿ ಪ್ರೊಫೆಸರ್ ಎನ್ನುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಕಾರಣ ಆ ಪ್ರಯೋಗಕ್ಕೆ ಸಂಬಂಧಿಸಿದ ಇಬ್ಬರನ್ನು ಅವನು ಆಗಲೇ ಬಲಿತೆಗೆದುಕೊಂಡಾಗಿತ್ತು. ಅದರ ಜೊತೆಗೆ ತನ್ನ ಚಟಕ್ಕೆ ಒಬ್ಬನನ್ನು ಕೊಂದಿದ್ದ. ಇನ್ನೋರ್ವಳನ್ನು ತೀಟೆಗೆ ಬಳಸಿಕೊಂಡು ಅರ್ಧ ಸುಟ್ಟಿದ್ದ. ಸಹಜವಾಗೇ ಪ್ರೊಫೆಸರ್ ಸಾವಿನ ಬಾಗಿಲಿಗೆ ಬಂದು ನಿಂತಿದ್ದರು. +* +* +* +ಮಿಲ್ಟನ್‌ನನ್ನು ತಲುಪಬೇಕಾದ ಒಂದೇ ಒಂದು ದಾರಿಯೆಂದರೆ ಅವನಿಗೆ ಈಗ ಪ್ರೊಫೆಸರ್ ಇಲ್ಲಿದ್ದಾರೆಂದು ತಿಳಿಯ ಪಡಿಸುವುದು. ಇಲ್ಲವಾದರೆ ಅವನು ಇಷ್ಟೊತ್ತಿಗೆ ಇಲ್ಲಿಗೆ ಬರುತ್ತಾನೆಂದು ತಿಳಿದುಕೊಂಡು ಹೊ೦ಚು ಹಾಕಿ ಹಿಡಿಯಬೇಕು. ಒಮ್ಮೆ ಅವನು ಕಣ್ಬಿಟ್ಟು ಬೆಂಕಿಯುಗುಳುವ ಮುಂಚೆ ಹಿಡಿದು ನಿಲ್ಲಿಸಿದರೆ ನಂತರ ಅವನನ್ನು ಆಪರೇಶನ್ ಟೇಬಲ್‌ಗೆ ಹೊತ್ತೊಯ್ಯುವುದು ಕಷ್ಟವೇನಲ್ಲ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಅವನಿಗೂ ಗೊತ್ತು ಒಮ್ಮೆ ತಾನು ಅದನ್ನು ಅಪಹರಿಸಿದ ನಂತರ ಪ್ರೊಫೆಸರ್ ತನ್ನ ಹಿಂದೆ ಬಿದ್ದಿರುತ್ತಾನೆಂದು ಅಥವಾ ಪೋಲಿಸ್… ಆದರೆ ಅವನು ದೇವ್ ದೇವ್ ಕೂಡಾ ಹೀಗೆ ಹಿಂಬಾಲಿಸಬಹುದೆಂದು ಅಂದಾಜಿಸಲಿಲ್ಲ. +ಕೂಡಲೇ ದೇವ್ ಮತ್ತು ನೇಹಾ ಇಬ್ಬರೂ ಮಿಲ್ಟನ್‌ನ ಮೊಬೈಲ್ ನಂಬರನ್ನು ತೆಗೆದುಕೊಂಡು ಅದರ ಆಧಾರದ ಮೇಲೆ ಅವನನ್ನು ಟ್ರೇಸ್ ಮಾಡಲು ಯತ್ನಿಸಿದರು. ಅದೂ ಆಗಲಿಲ್ಲ. ಮಿಲ್ಟನ್ ತುಂಬಾ ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸಲಾರಂಭಿಸಿದ್ದ. ಅಲ್ಲದೆ ಈ ಮೊದಲೇ ಎಸಗಿದ ಅಪರಾಧಗಳನ್ನು ಗಮನಿಸಿದರೆ ಅವನು ಅದಕ್ಕಾಗಿ ಕೈಗೊಂಡಿರಬಹುದಾದ ತಯಾರಿಯೂ ಕೂಡಾ ಅದ್ಭುತವಾಗಿದ್ದು ಕಂಡು ಬಂತು. ಕೂಡಲೇ ಅವನು ಮೇಯಿಲ್ ಡೌನ್ ಮಾಡುತ್ತಿದ್ದಾನೋ ಇಲ್ಲವೋ ಎನ್ನುವುದನ್ನು ಹ್ಯಾಕಿಂಗ್ ಮಾಡುವುದರ ಮೂಲಕ ಪತ್ತೆ ಹಚ್ಚಿದ ನೇಹಾ ಅವನನ್ನು ಬಲೆಗೆ ಹಾಕಲು ಒಂದು ಉಪಾಯ ಸೂಚಿಸಿದಳು. ಅದರಂತೆ ಒಮ್ಮೆ ಮಿಲ್ಟನ್ ಮೊಬೈಲಿನಲ್ಲಿ ದೇವ್‌ನಿಗೆ ಭೇಟಿಯಾದ. +“ಮಿಲ್ಟನ್ ದಯವಿಟ್ಟು ಇಲ್ಲಿವರೆಗೆ ಆಗಿದ್ದನ್ನು ನಾವು ಯಾರಿಗೂ ತಿಳಿಸುವುದಿಲ್ಲ. ಆದ್ದರಿಂದ ನೀನು ಆ ಆಪರೇಶನ್‌ನಿಂದ ಹೊರಕ್ಕೆ ಬಂದು ಬಿಡು. ..” +“ಹ್ಹ… ಹ್ಹ… ಹ್ಹಾ… ನೋಡು ದೇವ್ ಮೊದಲಿನಿಂದಲೂ ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಆದರೆ ಈ ಬಾರಿ ಮೋಸ ಹೋಗಲಿಲ್ಲ. ಅಷ್ಟಕ್ಕೂ ನನಗೆ ಬೇಕಾದ್ದನ್ನೆಲ್ಲಾ ಪಡೆಯುತ್ತಿದ್ದೇನೆ. ನಿಮ್ಮ ಕೈಗೆ ಸಿಕ್ಕರೆ ಅಷ್ಟೆ. ನನ್ನನ್ನು ನನ್ನ ಈ ಪವರ್ ಫುಲ್ ಕಣ್ಣನ್ನು ಇನ್ನಿಲ್ಲದಂತೆ ತೆಗೆದು ಬಿಸಾಡುತ್ತೀರ. ಮಿ.ದೇವ್ ಅದೆಲ್ಲಾ ಆಗೋಲ್ಲ. ಸಧ್ಯ ನಿನ್ನ ಮೇಲೆ ನನ್ನ ಕಣ್ಣು ಬಿದ್ದಿಲ್ಲ ಅದಕ್ಕೆ ಖುಷಿಪಡು..”ಎಂದ. +“ನೋ.. ಮಿಲ್ಟನ್ ನೋಡು… “ಇನ್ನೇನೊ ಹೇಳಲಿದ್ದಳು ನೇಹಾ. ಅಷ್ಟರಲ್ಲಿ ಆ ಕಡೆಯಿಂದ ಕರ್ಕಶವಾಗಿ ನುಡಿದ ಮಿಲ್ಟನ್. +“ಏಯ್ ಹುಡುಗಿ ನೀನು ತುಂಬ ಬುದ್ಧಿವಂತೆ ಅಂದ್ಕೋಬೇಡ. ಏನಾದರೂ ಮಾಡಿ ನನ್ನನ್ನು ಹಿಡಿಯಲು ಬೀಸುತ್ತಿರುವ ಉಪಾಯವಿದು. ನೆನಪಿಟ್ಟುಕೋ. ನನಗೆ ಬೇಕಾದ ಹೆಣ್ಣನ್ನು … ವಸ್ತುವನ್ನು ನಾನು ಬೇಕಾದ ರೀತಿಯಲ್ಲಿ ಪಡೆಯಬಲ್ಲೆ. ನೀನು ಅದಕ್ಕೆ ಬಲಿಯಾಗಬಾರದೆಂದಿದ್ದರೆ ಆ ಮುದುಕನ್ನ ಅವನ ಪಾಡಿಗೆ ಬಿಟ್ಟು ನನಗೆ ಬಲಿ ಕೊಟ್ಟು ಬಿಡು. ಇಲ್ಲದಿದ್ದರೆ ಅವನಿಗಿಂತಲೂ ಮೊದಲು ನೀವು ಬಲಿಯಾಗುತ್ತೀರ.. ಹುಶಾರ್..”ಎಂದವನೇ ಸಂಪರ್ಕ ಕತ್ತರಿಸಿದ. +ಇನ್ನು ಅವನೊಡನೆ ಮಾತಾಡಿ ಉಪಯೋಗ ಇಲ್ಲ ಎನ್ನಿಸಿತು. ಆದರೆ ಯಾವುದೇ ಕಾರಣಕ್ಕೂ ಪ್ರೊಫೆಸರ್ ಅವನ ಕಣ್ಣಿಗೆ ಬೀಳದಂತೆ ರಕ್ಷಿಸಿಕೊಳ್ಳಬೇಕು. ಅದು ಮುಖ್ಯ. ಆದರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಕಾರಣ ತುಂಬ ಹತ್ತಿರದಲ್ಲೇ ಪ್ರೊಫೆಸರ್ ತುಂಬಿದ ಸಭೆಯನ್ನು ಉದ್ದೇಶಿಸಿ ಮಾತಾಡಬೇಕಿತ್ತು. ಮತ್ತದಾಗಲೇ ಜಗಜ್ಜಾಹೀರಾದ ವಿಷಯವಾಗಿತ್ತು. ಅಲ್ಲಿ ಪ್ರೊಫೆಸರ್‌ನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಬಹುಶ ಪೊಫೆಸರ್ ತಮ್ಮ ಪ್ರಯೋಗಕ್ಕೇ ಬಲಿಯಾಗುತ್ತಾರಾ…? ಗೊತ್ತಿಲ್ಲ… ತಲೆ ಕೆದರಿಕೊಳ್ಳುತ್ತಾ ಲ್ಯಾಬ್ ನತ್ತ ಸರಿದು ಹೋದರು ಇಬ್ಬರು. +* +* +* +ಆ ಸಭಾ ಭವನ ಇನ್ನಿಲ್ಲದಂತೆ ತುಂಬಿದೆ. ಪ್ರೊಫೆಸರ್ ಯಾವ ಮಾರ್ಗವಾಗಿ ಬರುವುದೋ ಅದನ್ನು ಮೊದಲೇ ನಿರ್ಧರಿಸಿ ತಕ್ಕ ಬಂದೋಬಸ್ತು ಮಾಡಲಾಗಿತ್ತು. ಆದರೆ ಈ ಎಲ್ಲ ಗಡಿಬಿಡಿಯ ಮಧ್ಯೆ ಎಲ್ಲೊ ಒಂದು ಕಡೆಯಿಂದ ಮಿಲ್ಟನ್‌ನ ದೃಷ್ಠಿಗೆ ನಿಲುಕಿದರೂ ಸಾಕಲ್ಲ. ಪ್ರೊಫೆಸರ್ ಕಥೆ ಮುಗಿದಂತೆನೆ. ಅದಕ್ಕಾಗಿಯೇ ಪ್ರೊಫೆಸರಿಗೆ ಒಳಗಿನ ಕೋಣೆಯಿಂದಲೇ ಭಾಷಣ ಮಾಡುವಂತೆಯೂ ಅದನ್ನು ಕ್ಯಾಮೆರಾಗಳ ಮೂಲಕ ಎಲ್ಲರೆದುರಿಗೆ ಸ್ಕ್ರೀನ್ ಮೇಲೆ ಪ್ರಸಾರ ಮಾಡುವುದೆಂದು ಯೋಜಿಸಲಾಯಿತು. ಅದೇ ರೀತಿಯಲ್ಲಿ ಎಲ್ಲ ಸಿದ್ಧತೆಗಳು ಜರುಗಿದವು. ಪ್ರೊಫೆಸರ್ ಗುಪ್ತವಾಗಿ ಬಂದು ಆ ಕೋಣೆಯನ್ನು ಸೇರಿಕೊಂಡರು. ಕೆಲವೇ ಕ್ಷಣದಲ್ಲಿ ಅವರ ಭಾಷಣ ಆರಂಭವಾಗಲಿತ್ತು. ಆದರೆ ಈ ಮೊದಲೇ ಅಲ್ಲಿಗೆ ಬಂದು ಸೇರಿದ್ದ ಮಿಲ್ಟನ್ ನಿಧಾನಕ್ಕೆ ಪ್ರೊಫೆಸರ್ ಕೋಣೆಯಲ್ಲಿ ಕಾಲಿಟ್ಟ. +“ನೋ.. ಮಿಲ್ಟನ್ ಏನೂ ಮಾಡ್ಬೇಡ..”ಕೂಗಿದರು ಪ್ರೊಫೆಸರ್. +“ಪ್ರೊಫೆಸರ್ ಸ್ಟ್ಯಾನ್ಲಿ. ತುಂಬಾ ಉಪಕಾರ ಮಾಡಿದ್ದೀಯ ಈ ಪ್ರಯೋಗ ಕಂಡು ಹಿಡಿದು. ಅದಕ್ಕಾಗಿ ನಿನಗೆ ಯಾವುದೇ ಚಿತ್ರ ಹಿಂಸೆಯಾಗದಂತೆ ಕೊಂದು ಬಿಡುತ್ತೇನೆ. ನೇರವಾಗಿ ಎದೆಗೆ ಹಾಯಿಸಲಾ ಲೇಸರ್ ಬೀಂ ನ್ನು. “ವಿಕಟವಾಗಿ ನಕ್ಕ ಮಿಲ್ಟನ್. ಆಗ ಎದ್ದು ನಿಂತರು ಪ್ರೊಫೆಸರ್ ಅವನೆದುರಿಗೆ, +“ಮೂರ್ಖಾ ನಿನ್ನಂತವರು ಇದ್ದೇ ಇರುತ್ತಾರೆ ಎಂದು ನಾನದಕ್ಕೆ ಪರ್ಯಾಯವನ್ನು ಕಂಡುಕೊಂಡಿದ್ದೆ. ಅದನ್ನು ಪ್ರಯೋಗಾತ್ಮಕವಾಗಿ ಪ್ರಯೋಗಿಸಿರಲಿಲ್ಲ ಅಷ್ಟೆ. ಅದೇನು ಮಾಡುತ್ತೀಯೊ ಮಾಡಿಕೊ. ನಿನ್ನಿಂದ ಹೇಗೆ ಬದುಕಿಕೋ ಬೇಕು ನನಗೆ ಗೊತ್ತು…”ಎನ್ನುತ್ತಾ ಆಚೆ ತಿರುಗಿದರು. +“ಪ್ರೊಫೆಸರ್ … “ಎನ್ನುತ್ತಾ ಮಿಲ್ಟನ್ ಒಮ್ಮೆ ಜೋರಾಗಿ ಕಿರುಚಿ ಅವರೆದುರಿಗೆ ಕಣ್ಣನ್ನು ಉಜ್ಜುತ್ತಾ ಕಿರಿದುಗೊಳಿಸಿ ತೀಕ್ಷ್ಣವಾಗಿ ದಿಟ್ಟಿಸಿ ಬೀಂನ್ನು ಹರಿಸಲು ಯತ್ನಿಸಿದ. ಅಷ್ಟೊತ್ತಿಗೆ ಅಲ್ಲೆಲ್ಲಾ ಕರೆಂಟು ಹೊರಟು ಹೋಗಿ ಕತ್ತಲು ಕೋರೈಸಿತು. +“ಎಯ್..”ಎಂದು ಕಿರುಚಿದ ಮಿಲ್ಟನ್. ಮುಂದಿನ ಎರಡು ಸೆಕೆಂಡುಗಳಲ್ಲಿ ಬೆಳಕು ಮರಳಿತು. ಅಷ್ಟು ದೂರದಲ್ಲಿದ್ದಾರೆ ಪ್ರೊಫೆಸರ್. ಮಿಲ್ಟನ್ ಬೀಂ ನ್ನು ತೂರಿ ಅವರ ಮೇಲೆ ಬಿಟ್ಟ. ಆಗ ನಡೆಯಿತಾ ಘಟನೆ…. ಸರಕ್ಕನೆ ಪ್ರೊಫೆಸರ್ ತಿರುಗಿದಂತೆ ಆಯಿತು. ಮರುಕ್ಷಣದಲ್ಲಿ ನೂರಾರು ಕಿರಣಗಳು ಅವನ ಸುತ್ತಲೂ ತೂರಿ ಬಂದವು. ಮುಖ್ಯವಾಗಿ ಅವನ ಕಣ್ಣಿಗೆ ಇನ್ನಿಲ್ಲದ ಘಾಸಿಯಾಗುವಂತೆ ಚಿಮ್ಮಿಬಂದ ಕಿರಣಗಳು ಅವನನ್ನು ಘಾಸಿಗೊಳಿಸಿ ಕೆಡವಿದವು. ನೆಲಕ್ಕೆ ಬಿದ್ದ ಮಿಲ್ಟನ್ ಒದ್ದಾಡ ತೊಡಗಿದ. ಕಣ್ಣುಗಳಲ್ಲಿ ಬೆಂಕಿ ಇಟ್ಟ ಅನುಭವ. ಎದ್ಡು ನಿಲ್ಲಲಾಗುತ್ತಿಲ್ಲ. ಆ ಪಕ್ಕದಿಂದ ಆ ಸದ್ಡು ಕೇಳಿಸಿತು. +“ಮಿಲ್ಟನ್. ನಿನಗೆ ಈ ಮೊದಲೇ ಎಚ್ಚರಿಸಿದ್ದೆ. ಆದರೆ ನೀನು ಕೇಳಲಿಲ್ಲ. ಈಗ ಅನುಭವಿಸು. ನೀನು ಎಲ್ಲಿಂದಾದರೂ ಪ್ರೊಫೆಸರ್ ಮೇಲೆ ಗುರಿಯಿರಿಸಿಕೊಂಡು ಬಂದೆ ಬರುತ್ತಿ ಎಂದು ನನಗೆ ಗೊತ್ತಿತ್ತು. ಅದಕ್ಕೆ ಈ ರೂಮನ್ನು ವಿಶೇಷವಾಗಿ ವ್ಯವಸ್ಥೆಗೊಳಿಸಲಾಗಿತ್ತು. ರೂಲಿಂಗ್ ಮೀರರ್‌ಗಳ ಮೇಲೆ ಬೀಳುವ ಬೆಳಕು ಎಲ್ಲವೂ ಒಂದೇ ಕೋನದಲ್ಲಿ ಪ್ರತಿಫಲಿಸುವಂತೆ ಲೆಕ್ಕಾಚಾರ ಮಾಡಿ ಯಾವ ಕೋನಗಳಿಗೂ ತಿರುಗುವಂತೆ ಹೊಂದಿಸಲಾಗಿತ್ತು. +ನಿನಗೆ ಬರಬೇಕಾದ ದಾರಿ ಒಂದೇ ಒಂದು. ಅಲ್ಲಿಂದ ಹೇಗೆ ನೋಡಿದರೂ ಇಂಥಲ್ಲೇ ನಿನ್ನ ದೃಷ್ಠಿ ಬೀಳುತ್ತೆ ಎಂದು ಅಂದಾಜಿಸಿದ ನನ್ನ ಊಹೆ ತಪ್ಪಾಗಲಿಲ್ಲ. ಅದಕ್ಕೆ ರೂಲಿಂಗ್ ಮೀರರ್‌ಗಳನ್ನು ಹೊಂದಿಸಿಟ್ಟು ಅಕಸ್ಮಾತ ಮೊದಲ ಬಾರಿಗೆ ನಿನಗೆ ಘಾಸಿಯಾಗದಿದ್ದರೆ ನಂತರದಲ್ಲಾದರೂ ನಿನ್ನ ನೇರಕ್ಕೆ ಹೊಂದಿಕೆಯಾಗುವಂತೆ ಚಲಿಸುವ ಕನ್ನಡಿಗಳ ಬ್ರಹತ್ ವ್ಯವಸ್ಥೆ ಮಾಡಿಸಿದ್ದೆ. ಅದಕ್ಕೆ ತಕ್ಕಂತೆ ಕರೆಂಟು ಹೋದಾಕ್ಷಣ ಕಕ್ಕಾಬಿಕ್ಕಿಯಾದ ನೀನು ಬೆಳಕು ಬಂದ ತಕ್ಷಣ ಮಾನವನ ಸಹಜ ಸ್ವಭಾವದಂತೆ ಬೆಳಕಿನ ಮೂಲದತ್ತ ದೃಷ್ಠಿ ಹರಿಸಿದೆ. +ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿನಗೆ ಕಂಡಿದ್ಡು ಪ್ರೊಫೆಸರ್ ಬಿಂಬ ಮಾತ್ರ. ಕೂಡಲೇ ಪ್ರತಿಕ್ರಿಯಿಸಿದ್ದಿ. ನಿನ್ನ ಕಣ್ಣಿನಿಂದ ಹೊರಟ ಬೀಂಗಳು ತಮ್ಮ ಕೆಲಸ ಪೂರೈಸಿದ್ದವು. ನೀನು ಉರಿಸಿದ ಬೆಂಕಿಯ ಕಿರಣ ನಿನಗೇ ಹಿಂದಿರುಗಲು ನಾನು ಮಾಡಿದ ವ್ಯವಸ್ಥೆ ತುಂಬಾ ಸರಿಯಾಗಿ ಕಾರ್ಯ ನಿರ್ವಹಿಸಿದವು. ಎಷ್ಟೆಂದರೂ ಅದು ಗಾಜು. ಬಿದ್ದ ಬೆಳಕಿನ ಕಿರಣಗಳನ್ನು ಅದೇ ವೇಗ ಮತ್ತು ಕೋನದಲ್ಲಿ ಹಿಂದಿರುಗಿಸುತ್ತೆ. ನೀನು ಕಣ್ಣನ್ನು ತೆರೆಯುತ್ತಿದ್ದಂತೆ ಎಲ್ಲೆಡೆಯಿಂದ ಕೇಂದ್ರೀಕೃತವಾಗಿ ಹೊರಟ ಕಿರಣಗಳು ಪ್ರತಿಫಲಿಸಿ, ನಿನ್ನ ಮೇಲೆ ಮುಖ್ಯ ನಿನ್ನ ಕಣ್ಣಿಗೇ ದಾಳಿ ಮಾಡಿದವು. ಅದರ ಮೇಲೆ ಅದೇ ಮೀರರ್‌ಗಳ ಪ್ಯಾರಾಬೊಲಿಕ್ ಏಫ್ಹೆಕ್ಟ್ ಕೂಡಾ ಅದರೊಂದಿಗೆ ಇದ್ದುದರಿಂದ ನೀನೀಗ ಸಂಪೂರ್ಣ ದೃಷ್ಠಿಯನ್ನು ಕಳೆದುಕೊಂಡಿದ್ದರೂ ಹೆಚ್ಚೇನಲ್ಲ. ಪ್ರೊಫೆಸರಿಂದ ಪಡೆದಿದ್ದ ಮೂರನೆಯ ಕಣ್ಣಿನ ಬದಲಾಗಿ ನಿನ್ನ ಎರಡೂ ಕಣ್ಣು ಹೋದರೂ ಆಶ್ಚರ್ಯವೇನಿಲ್ಲ.”ಸ್ಪಷ್ಟವಾಗಿ ನುಡಿದ ದೇವ್. +“ಪ್ರೊಫೆಸರ್ ಬನ್ನಿ “ಎನ್ನುತ್ತ ಹೊರಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ಎದ್ಡು ನಿಂತ ಮಿಲ್ಟನ್‌ಗೆ ಸುತ್ತಲೂ ಗಾಡಾಂದಾಕಾರದ ವಿನಹ ಇನ್ನೇನು ಕಾಣಲಿಲ್ಲ. ಎರಡು ನಿಮಿಷ ಹಾಗೆ ಕಳೆದ. ಅಷ್ಟರಲ್ಲಿ ಹೊರಗಿನಿಂದ ಪ್ರೊಫೆಸರ್ ಭಾಷಣ ಕೇಳಿ ಬರಲಾರಂಭಿಸಿತು. +“ಎಸ್. ಯಾವುದೇ ಕಾರಣದಿಂದಲೂ ವಿಜ್ಞಾನ ಮಾನವನ ಕೈಯ್ಯಲ್ಲಿ ಆಟಿಕೆಯಂತಾಗಬಾರದು…”ಇತ್ಯಾದಿ. … ಇತ್ಯಾದಿ… ಜೋರಾಗಿ ಕಿರುಚಬೇಕೆಂದವನು ಸುಮ್ಮನಾಗಿ ಬಿಟ್ಟ ಮಿಲ್ಟನ್ ಹೊರಗಡೆ ಹೋಗಬೇಕೆಂದು ಕೊಂಡು ಅತ್ತ ಹೆಜ್ಜೆ ಸರಿಸಿದ. ಎದುರಿಗೆ ಕತ್ತಲೆಯ ಪರದೆ ಎದ್ದು ನಿಂತಿತ್ತು. ಸುತ್ತಲೂ ಬರಿ ಕತ್ತಲು… ಕತ್ತಲು… ಅಸ್ಪಷ್ಟ ಬೆಳಕು… ದೃಷ್ಠಿ ಸಹಕರಿಸಲಿಲ್ಲ. +***** +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […] +ದಿನಾಂಕ ೧, ಜೂನ್ ೧೯೮೯ ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ […] +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_161.txt b/Kannada Sahitya/article_161.txt new file mode 100644 index 0000000000000000000000000000000000000000..19550b4d47db9d5132acc7f278d4f33b62de0cf5 --- /dev/null +++ b/Kannada Sahitya/article_161.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ ತೋರುವ ಸೆಕ್ಸೀ ಥೇಟರುಗಳು, ಚಿತ್ರ ಗಬ್ಬಾಗಿದ್ದರೂ ಡೋಟ್‌ವರಿ, ನಾನಿದ್ದೇನೆ ನಿಮಗೆ ‘ಮಜಾ ಕೊಡಲು’ ಎಂದು ಪರದೆ ಮೇಲಿನ ಚಿತ್ರ ಮರೆಸಲು ಕಾಮ ಕೇಳಿಯ ‘ಲೈವ್ ಷೋ’ಗೆ ಅಣಿಯಾಗಿ ಬರುವ ಕಾಲ್‌ಗರ್ಲ್‌ಗಳ ಹಾವಳಿ ಇರುವಂಥ ಚಿತ್ರಮಂದಿರಗಳೂ ಕೆಂಪೇಗೌಡ ರೋಡಿನಲ್ಲಿವೆ. +ಕೋಟಿ ಕೋಟಿ ಹಣವನ್ನು ‘ಧಾಂ-ಧೂಂ’ ಎಂದು ವೆಚ್ಚಿಸಲು ಅಣಿಯಾಗಿರುವ ಚಿತ್ರ ನಿರ್ಮಾಪಕ-ನಿರ್ದೇಶಕರು ಒನ್ ಸೈಡ್ ಆದರೆ, ಇನ್ನೊಂದು ಸೈಡಿನಲ್ಲಿ ರೋಡ್‌ಸೈಡಿನ ತಿಂಡಿ ಕಾಫಿಗಳಲ್ಲೇ ತೃಪ್ತರಾಗಿ ಏನಾದರೂ ಹೊಸದನ್ನು ಮಾಡಿ ತೋರುವ ಲೋ ಬಜೆಟ್ ಚಿತ್ರ ನಿರ್ಮಾಪಕ-ನಿರ್ದೇಶಕರೂ ಇನ್ನೊಂದೆಡೆ ಇದ್ದಾರೆ. +ಒಬ್ಬೊಬ್ಬರಿಗೆ ಒಂದೊಂದು ಹುಚ್ಚು, ಕೆಲವರಿಗೆ ಹಣ ಮಾಡುವುದೇ ಜೀವನದ ಮುಖ್ಯ ಗುರಿ. ಇನ್ನು ಕೆಲವರಿಗೆ ಸದಭಿರುಚಿ ಚಿತ್ರ ಮಾಡುವುದು ಅವರ ಕಿರೀಟಕ್ಕೊಂದು ಗರಿ. ಇನ್ನೂ ಹಲವರು “ಏನು ಕೊಟ್ಟರೂ ನೋಡುತ್ತಾರೆ. ನಮ್ಮ ವೀರ ಕನ್ನಡಿಗರು. ಅವರು ನಿಜವಾದ “ಕುರಿ” ಅಂತ್ಲೂ ಅಂತಿರ್‍ತಾರೆ. +ಯಾರು ಏನೇ ಅನ್ನಲಿ-ಎಲ್ಲರಿಗೂ ಒಳ್ಳೆ ಚಿತ್ರಮಂದಿರಗಳು ಬೇಕು. ಈಗ ಒಳ್ಳೇ ಥಿಯೇಟರ್‌ಗಳ ಬಾಡಿಗೆ ಕೇಳಿದರೆ ‘ಹಾರ್‍ಟ್ ಫೈಲ್ಯೂರ್‍’ ಆಗುವಂಥ ದಿನ ಬಂದು ಹೋಗಿದೆ. ಎಷ್ಟೋ ನಿರ್ಮಾಪಕರು ಬಾಡಿಗೆ ಕಟ್ಟಲಾಗದೆ ಚಿತ್ರದ ಡಬ್ಬಗಳನ್ನು ಚಿತ್ರಮಂದಿರಗಳಲ್ಲೇ ತಿಂಗಳಾನುಗಟ್ಟಲೆ ಬಿಟ್ಟು ಬಂದಿರುವುದೂ ಉಂಟು. +ಹೊಟ್ಟೆ-ಬಟ್ಟೆ ಕಟ್ಟಿ ಲೋಬಜೆಟ್ ಚಿತ್ರ ತೆಗೆದವ – ಅಬ್ಬಬ್ಬ ಅಂದರೆ ಒಂದೋ-ಎರಡೋ ಪ್ರಿಂಟ್ ಹಾಕಿಸಬಲ್ಲ. ಭಾರಿಸ್ಟಾರ್‍ಸ್ ಇಲ್ಲ ಎಂದಾಗ ಗಾಂಧೀನಗರ ಅಂತ ನಿರ್ಮಾಪಕರಿಗೆ ಕಾಫಿಯೂ ಕೊಡಿಸುವುದಿಲ್ಲ-ಕ್ಯಾರೆ ಎಂದೂ ಅನ್ನುವುದಿಲ್ಲ. +ಹಾಗೆ ನೋಡಿದರೆ ಇಂಥ ಮಂದಿ ಮಾತ್ರ ಏನಾದರೂ ಕ್ರಿಯೇಟೀವ್ ಆಗಿ ಥಿಂಕ್ ಮಾಡಬಲ್ಲರು-ಸೃಜನಶೀಲವಾದುದನ್ನು ಏನಾದರೂ ಹೇಳಬಲ್ಲರು-ಸ್ಟಾರ್‍ಸ್ ಅಲ್ಲದವರನ್ನೂ ಮಿರುಮಿರುಗುವ ನಕ್ಷತ್ರವಾಗಿ ಮಿಂಚಿಸಬಲ್ಲರು. +ಸಬ್ಸಿಡಿಗಳು-ಪ್ರಶಸ್ತಿಗಳು ಇಂಥ ಮಂದಿಗೆ ನಿಜವಾದ ಆಶಾಕಿರಣಗಳು. +ಕೋಟಿ ಕೋಟಿ ಖರ್ಚು ಮಾಡಬಲ್ಲವರಿಗೆ ಈ ಹಣ ಮಹಾಜುಜಬಿ. ಒಂದು ದಿನದ ಕಾಕ್‌ಟೇಲ್ ಪಾರ್ಟಿ ಖರ್ಚು. +ಕನ್ನಡದ ಜನಪ್ರಿಯ ಹೀರೋ ಹೀರೋಯಿನ್‌ಗೆ ಕೊಡುವ ಸಂಭಾವನೆಯಲ್ಲಿ ಒಂದು ಲೋಬಜೆಟ್ ಚಿತ್ರ ತೆಗೆಯಬಲ್ಲ ಉತ್ಸಾಹೀ ಯುವ ನಿರ್ದೇಶಕರೂ ಇಂದು ಬಂದಿದ್ದಾರೆ. ಇಂಥ ಪ್ರಯತ್ನಗಳು ಹೆಚ್ಚಿದಾಗ ಮಾತ್ರ ಹೊಸ ಹೊಸ ಮುಖಗಳು ಚಿತ್ರರಂಗಕ್ಕೆ ಬರುವುದು ಸಾಧ್ಯ. +ಸರ್ಕಾರದ ಸದಾಶಯಗಳು ಕಾರ್ಯರೂಪಕ್ಕೆ ಬರಲೇಬೇಕೆಂದರೆ ಇಂಥ ಚಿತ್ರಗಳಿಗೇ ಮೀಸಲಾದ ಸುಸಜ್ಜಿತ ಮಿನಿ ಚಿತ್ರಮಂದಿರಗಳು ಬೇಕು. ಅವಿಲ್ಲದಿರುವುದರಿಂದಾಗಿಯೇ ಲೋಬಜೆಟ್ ಚಿತ್ರಗಳು-ವ್ಯಾಪಾರಿ ಚಿತ್ರಗಳ ಅಬ್ಬರದ ಅಲೆಯ ಮಾರುತಕ್ಕೆ ಸಿಲುಕಿ ಚಿಂದಿ ಎದ್ದು ಹೋಗಿದೆ. ಅರಮನೆ ಪಕ್ಕದಲ್ಲಿರುವ ಗುಡಿಸಲುಗಳು ಭೀಕರ ಬಿರುಗಾಳಿಗೆ ತತ್ತರಿಸಿ ಅಡ್ರೆಸ್ಸಿಗಿಲ್ಲದಂತಾಗುತ್ತದೆ. +ಕಣಗಾಲ್ ಪುಟ್ಟಣ್ಣ ಚಿತ್ರಮಂದಿರವಾದರೂ ಇಂಥ ಲೋಬಜೆಟ್ ಚಿತ್ರದವರಿಗೆ ಪರ್ಸಂಟೇಜ್ ಮೇಲೆ ಸಿಕ್ಕಲ್ಲಿ-ಅದೊಂದು ‘ಆಕ್ಸಿಜನ್ ಸಿಲಿಂಡರ್‍’ ಎನಿಸೀತು. +ಕಣಗಾಲರು ಚಿತ್ರರಂಗಕ್ಕೆ ಕೊಡುಗೆಯಾಗಿತ್ತ ಅಂಬರೀಷ್ ಹಾಗೂ ವಿಷ್ಣು-ತಮ್ಮ ಗುರುಗಳ ಹೆಸರಿನ ಚಿತ್ರಮಂದಿರಕ್ಕೆ ಹೊಸತನದ ಮೆರುಗು ನೀಡುವೆವು ಎಂದರು. +ಅದು ಈವರೆಗೆ ಮಂತ್ರಿಗಳ ಆಶ್ವಾಸನೆಯಂತೆ ಆಗಿದೆ. ಹೀಗಾಗಿ ಹೊಸ ಹೊಸ ಚಿಂತನೆಗಳು ಚಿತ್ರರಂಗದಲ್ಲಿ ಅರಳುವುದಾದರೂ ಎಂತು? ಸದಭಿರುಚಿ, ಸೂಕ್ಷ್ಮಭಾವನೆಗಳು, ಅರ್ಥಪೂರ್ಣ ಅನಿಸಿಕೆಗಳು, ಹೊಸ ಹೊಸ ಪ್ರಯೋಗಗಳು ಚಲನಚಿತ್ರರಂಗದಿಂದ ಗಾವುದ ದೂರವೇ ಇರಬೇಕೆ? +ಮಿನಿ ಚಿತ್ರಮಂದಿರಗಳಿಲ್ಲದಿರುವುದರಿಂದಾಗಿ ಲೋಬಜೆಟ್ ನಿರ್ಮಾಪಕ-ನಿರ್ದೇಶಕರು ಗಾಂಧೀನಗರದಿಂದ ‘ಔಟ್ ಆಫ್ ಬೌಂಡ್ಸ್’ ಎನ್ನುವಂತಾಗಿದೆ. +ಸದಭಿರುಚಿ ಚಿತ್ರಗಳ ಬಗ್ಗೆ ತುಂಬ ಒಲವು ತೋರುವ ವಾರ್ತಾ ಸಚಿವ ಪ್ರೊ. ಬಿ.ಕೆ.ಸಿ. ಇಂಥ ಕಡೆ ಮುಖ್ಯಮಂತ್ರಿಗಳ ಗಮನವನ್ನು ಎಳೆವಂತಾದರೆ ಚೆನ್ನ. +ಇಲ್ಲವಾದಲ್ಲಿ ಜನಪ್ರಿಯ ನಟ-ನಟಿಯರೂ ಕ್ರೌಡ್ ಪುಲ್ಲಿಂಗ್‌ಗೆ ಬೇಕಾದವರು ಎಂಬ ಹಿಂದೆ ಕಾರಣಕ್ಕೆ ನೋಡಿದ ಅದೇ ನಾಲ್ಕಾರು ಮುಖಗಳನ್ನು ಅವರಿಗೆ ಎಷ್ಟೇ ವಯಸ್ಸಾಗಲಿ ಕಾಲೇಜು ಹುಡುಗರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. +ಚಿತ್ರದ ನಿಜವಾದ ಹೀರೋ ಕಥೆ ಎಂದು ಜನ ಒಪ್ಪಿದ ಮರುಘಳಿಗೆ ಹೊಸ ಮುಖಕ್ಕೂ ಆರತಿ ಎತ್ತತೊಡಗುತ್ತಾರೆ. ಇಲ್ಲವಾದಲ್ಲಿ ಜನ ಕೇಳಿದ್ದನ್ನು ಕೊಡುತ್ತಿದ್ದೇವೆ ಎಂಬ ಕಾರಣಮಾಡಿ ಡಬ್ಬಲ್ ಮೀನಿಂಗ್, ಟ್ರಿಬ್ಬಲ್ ಮೀನಿಂಗ್ ಡೈಲಾಗ್‌ಗಳನ್ನು ತುರುಕಿ, ಸೆಕ್ಸೀ ದೃಶ್ಯಗಳ ಸರಮಾಲೆ ಪೋಣಿಸಿ ನಾನಾ ಷೇಪಿನವರನ್ನು ಕರೆತಂದು ಬೆತ್ತಲಾಗಿಸಿ ‘ರೇಪ್’ ಮಾಡಿಸಿ, ಆಕ್ಷನ್ ಫಿಲಂಗಳ ಹೆಸರಿನಲ್ಲಿ ಎಲ್ಲ ಚಿತ್ರಮಂದಿರಗಳನ್ನೂ ಕಾಮಪ್ರಚೋದನಾ ಕೇಂದ್ರಗಳಾಗಿ ಮಾಡಬಲ್ಲ ಮಹಾ ಚಾಣಾಕ್ಷರೂ ಗಾಂಧೀನಗರದಲ್ಲಿದ್ದಾರೆ. +ಇದಕ್ಕೆ ಪರ್‍ಯಾಯ ತಂತ್ರವೆಂದರೆ ನಾಲ್ಕಾರು ಮಿನಿಚಿತ್ರಮಂದಿರಗಳನ್ನು ಆರಂಭಿಸುವುದು ತುಂಬ ಮುಖ್ಯ. ಇಲ್ಲವಾದಲ್ಲಿ ನಾಳೆ ಆಹ್ವಾನ ಪತ್ರಿಕೆಗಳು ಹೀಗೆ ಬಂದೀತು. +ಆತ್ಮೀಯ ಪತ್ರಕರ್ತರೆ, +“ಈಗ ತುಂಬ ಕಡಿಮೆ ವೆಚ್ಚದಲ್ಲಿ ಒಂದು ಚಿತ್ರ ಅಣಿ ಮಾಡಿರುವೆ. ಗಾಂಧೀನಗರದ ವಿತರಕರು ನಮ್ಮನ್ನು ಕ್ಯಾರೇ ಎನ್ನುತ್ತಿಲ್ಲ. ಚಿತ್ರ ಮಾಡಿದ ಮೇಲೆ ಅದು ಡಬ್ಬದಲ್ಲೇ ಕೊಳೆಯುವುದು ನಮಗಿಷ್ಟವಿಲ್ಲ. ಕನಿಷ್ಠ ನೀವಾದರೂ ಬಂದು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದಲ್ಲಿ ಉಪಕಾರ. ಇದೆ ಚಿತ್ರ ೪ ದಿನ ಕಾರ್ಪೊರೇಷನ್ ಎದುರಿಗಿರುವ ಬಾದಾಮಿ ಹೌಸ್‌ನಲ್ಲಿ ಏರ್ಪಡಿಸಿದ್ದೇವೆ. +-ಮಲ-ಮೂತ್ರಗಳನ್ನು ದಯಮಾಡಿ ಮನೆಯಲ್ಲೇ ಮುಗಿಸಿಕೊಂಡು ಬನ್ನಿ. ಏಕೆಂದರೆ ಅಲ್ಲಿರುವುದು ಒಂದೆ ಟಾಯ್ಲೆಟ್. +ಇಂಟ್ರವೆಲ್‌ನಲ್ಲಿ ನೀವು ‘ಕ್ಯೂ’ನಲ್ಲಿ ನಿಂತು ವಾಪಸ್ಸು ಬರುವ ಹೊತ್ತಿಗೆ ಒಂದು ರೀಲ್ ಮುಗಿದು ಕಥೆಯೇ ಅರ್ಥವಾಗದೆ ಹೋದೀತು. ಹಾಗಾದಲ್ಲಿ ನಮ್ಮ ಪ್ರಯತ್ನ ವ್ಯರ್ಥ ಎಂಬ ಕಾರಣಕ್ಕೆ ಈ ವಿವರಣೆ ನೀಡಿದ್ದೇವೆ. ಖಂಡಿತಾ ಬನ್ನಿ- +-ನಿರ್ಮಾಪಕರು” +– ಇಂಥ ಪರಿಸ್ಥಿತಿ +ಬರದಿರಬೇಕಾದರೆ ಮಿನಿಚಿತ್ರಮಂದಿರಗಳು ಅಗತ್ಯ ಬೇಕಲ್ಲವೆ? +***** +(೨೦-೧೦-೨೦೦೦) +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_162.txt b/Kannada Sahitya/article_162.txt new file mode 100644 index 0000000000000000000000000000000000000000..958a465da5853f30aa8026c564f2d72376c04877 --- /dev/null +++ b/Kannada Sahitya/article_162.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು ಎಲ್ಲ. +“ಇನ್ನು ಬಿಡು, ಎಂಕ, ಸುಪ್ರಭಾತ-ಕಾವೇರಿ-ಜ್ಹೀಟೀವಿಯವರು-ಈ ಟೀವೀಯವರು ಭರ್‍ರನೆ ಬರುವ ಸಿದ್ಧತೆ ನಡೆಸಿದ್ದಾರೆ. ಉದಯವಾಣಿಯ ‘ಪೈ’ ಅವರು, ವಿಜಯ ಕರ್ನಾಟಕದ ವಿಜಯ ಸಂಕೇಶ್ವರ ಅವರೂ ಒಂದೊಂದು ಹೊಸ ಛಾನೆಲ್ ಆರಂಭಿಸುವರೆಂಬ ಮಾತಿದೆ. ಅವೆಲ್ಲ ಆದರೆ ಸಿನಿಮಾ ಕಡೆ ತಿರುಗಿ ನೋಡೋರು ಇರಲ್ಲ.” +“ಹಾಗೆ ಹೇಳಬೇಡ ಗೆಳೆಯ, ಟೀವೀಲಿ ಟೈಟಾನಿಕ್ ನೋಡೋಕೂ- ದೊಡ್ಡ ತೆರೇಲಿ ಟೈಟಾನಿಕ್ ನೋಡೋಕೂ ವ್ಯತ್ಯಾಸ ಇಲ್ಲವೆ? ಆ ಸಿನಿಮಾ ಅದ್ಭುತ ಅನಿಸಿಬೇಕಾದ್ರೆ ಬಿಗ್‌ಸ್ಕ್ರೀನ್‌ನಲ್ಲೇ ನೋಡಬೇಕು” ಎಂದು ಎಂಕ ಆಶಾವಾದಿಯಂತೆ ನುಡಿದ. +“ಅಂತ ಅಪರೂಪದ ಚಿತ್ರಗಳು ಸಾವಿರಕ್ಕೆ ಒಂದಿರಬಹುದಷ್ಟೆ” +“ಹಾಗೆ ಯಾಕೆ ಅಂತೀ, ಕನ್ನಡಕ್ಕೆ ಹೆಸರು ತರಬಲ್ಲ ಕೆಲವಾದರೂ ಒಳ್ಳೆ ಚಿತ್ರಗಳು ಬಂದಿವೆ” +“ಕೆಲವಾದರೂ ಅಂದೆಯಲ್ಲ ಎಂಕ. ಈ ಮಾತು ಒಪ್ಪಬಹುದು. ಆದರೆ ಬರಬಾರದಂಥ ಕನ್ನಡ ಚಿತ್ರಗಳದೇ ಮೆಜಾರಿಟಿ ಇದೆಯಲ್ಲ ಅದಕ್ಕೆ ಏನು ಹೇಳ್ತೀ?” +“ಮಾಡಿದ್ದುಣ್ಣೋ ಮಾಹರಾಯ ಅನ್ನಬೇಕಷ್ಟೆ. ಅದಕ್ಕೆ ಏನು ಮಾಡಕ್ಕೆ ಆಗಲ್ಲ” +“ಈಗಂತೂ ಸಿನಿಮಾದವರೆಲ್ಲ ಟೀವೀಲಿ ಮಾಡ್ತಿದಾರೆ. ಟೀವಿ ಒಂದು ಥರಾ ‘ವಿಸ್ಕಿ’ ಇದ್ದ ಹಾಗೆ. ಹಣವೂ ಬರುತ್ತೆ-ಹೆಸರೂ ಬರುತ್ತೆ-ಜನಪ್ರಿಯತೆಯ ಅಮಲೂ ಸಿಗತ್ತೆ. +‘ಸಿನಿಮಾ’ನ ‘ವಿಸ್ಕಿ’ ಅಂತ ಹೇಳಕ್ಕೆ ಆಗಲ್ಲ. ಅದು ತುಂಬಾ ರಿಸ್ಕಿ. ರೇಸ್ ಕುದುರೆ ಮೇಲೆ ಹಣ ಕಟ್ಟಿದ ಹಾಗೆ. ಗೆದ್ದರೆ ಜಾಕ್‌ಪಾಟ್. ಸೋತರೆ ಕೇರಾಫ್ ಫುಟ್ಪಾತ್. ಅಂದರೆ ಲಕ್ಷಾಧೀಶ ಇಲ್ಲವೇ ಭಿಕ್ಷಾಧೀಶ’ +ಹೀಗೆ ಮೇನ್ ರೋಡ್‌ನಲ್ಲಿ ಆರಂಭವಾದ ಮಾತು ಸಂದು-ಗೊಂದುಗಳಲ್ಲೂ ನುಗ್ಗಿ ಕೆಲವೊಮ್ಮೆ ಹೆಲಿಕಾಪ್ಟರ್‌ನಲ್ಲಿ ಹಿಮಾಲಯದೆತ್ತರಕ್ಕೆ ಹಾರಿದರೂ ವಾಸ್ತವಕ್ಕೆ ಮರಳಿದಾಗ ಎಲ್ಲ ಖಿನ್ನರಾಗೇ ಕುಳಿತಿದ್ದರು. +“ಹೆಚ್ಚು ಚಾನೆಲ್‌ಗಳು ಬಂದದ್ದರಿಂದ ಕನ್ನಡ ಕಲೆ, ಸಂಸ್ಕೃತಿ ಉದ್ಧಾರವಾದೀತಲ್ಲವೆ ಎಂಕ” +“ಹಾಗೆ ಹೇಳಕ್ಕೆ ಆಗಲ್ಲ. ಕನ್ನಡ ನೆಟ್ಟಗೆ ಮಾತಾಡೋರು ಎಷ್ಟು ಜನ ಇದ್ದಾರೆ. ದೂರದರ್ಶನ ನೋಡು. ಉದಯ ಟೀವಿ ನೋಡು ಎಂಗೆ-ಪಂಗೆ ಅಂತ ಮಾತಾಡೋರೇ ಜಾಸ್ತಿ. ಡಾ. ರಾಜ್ ಥರಾ ಸ್ಪಷ್ಟವಾಗಿ ಕನ್ನಡ ಉಚ್ಛಾರ ಮಾಡೋರು ಎಷ್ಟು ಜನ ಇದ್ದಾರೆ.” +“ಆ ಮಾತು ಒಪ್ಕೊಳ್ಳೋಣ. ಆದ್ರೆ ಹೊಸ ಮುಖಗಳು ಬರಲಿಕ್ಕೆ ಟಿ.ವಿ.ಚಾನೆಲ್‌ಗಳು ಹೆಚ್ಚು ಅವಕಾಶ ಮಾಡತ್ತಲ್ವ” +“ಇಲ್ಲ ಅಂತ ಹೇಳಕ್ಕೆ ಆಗಲ್ಲ, ಆದರೆ ಜಾಹಿರಾತು ಹಿಡ್ಕೊಂಡು ಬರಬಲ್ಲ ಯಾರು ಬೇಕಾದ್ರೂ ನಟ-ನಟಿಯರಾಗಬಲ್ಲ ಒಂದು ಅಪಾಯವೂ ಇದೆ ಟ.ವಿ.ಗಳಿಂದ” +“ಅಲ್ಲ ಎಂಕ, ಹತ್ತಾರು ಚಾನೆಲ್‌ಗಳಾದಾಗಲೇ ಅಲ್ಲವಾ ಹೊಸ ಹೊಸ ನಟ-ನಟಿಯರು ಬರೋದು” +“ನಿಜ, ಈಗ ರಂಗಭೂಮಿಲಿ ಇರೋರೆಲ್ಲ ಹೋಲ್‌ಸೇಲ್ ಆಗಿ ಟಿ.ವಿ.ಗೆ ಬಂದಿದ್ದಾರೆ. ಆದರಿಂದಲೇ ನಾಟಕದ ಮೇಜರ್‍ ಪ್ರೊಡಕ್ಷನ್ಸ್ ಆಗ್ತಾನೆ ಇಲ್ಲ. ಕಂಪನಿ ರಂಗಭೂಮೀಲಿ ನಟ-ನಟಿಯರನ್ನು ಹಾರಿಸ್ಕೊಂಡು ಹೋಗೋರು. ಈಗ ಅದೇ ಕೆಲಸ ಮೆಗಾ ಧಾರಾವಾಹಿ ಹೆಸರು ಹೇಳಿ ಟೀವಿಯವರು ಮಾಡ್ತಿದಾರೆ ಅಲ್ವ?” +“ಅದರಿಂದಲೇ ಬಹಳ ಕನ್ನಡ ಸಿನಿಮಾಗಳು ನೋಡಿದಾಗ ಒಂದು ನಾಟಕ ನೋಡಿದ ಹಾಗೆ ಆಗುತ್ತೆ, ಇಲ್ಲವೇ ಒಂದು ಟ.ವಿ.ಸೀರಿಯಲ್ ನೋಡಿದ ಹಾಗೆ ಆಗುತ್ತೆ” +“ಇನ್ನೊಂದು ಐದು ವರ್ಷ ಕಾದು ನೋಡು. ಕನ್ನಡ ಎಕ್ಕುಟ್ಟಿ ಹೋಗಿರತ್ತೆ. ಹೈಸ್ಕೂಲು-ಕಾಲೇಜುಗಳಲ್ಲಿ ಚಿಕ್ಕಪುಟ್ಟ ಪಾರ್ಟ್ ಮಾಡತಿದ್ದವರೆಲ್ಲ ನಟ-ನಟಿಯರಾಗ್ ಬಿಡ್ತಾರೆ” +“ಹಾಗಾರೆ ಹೊಸ ಮುಖಗಳು ಬರೋದು ತಪ್ಪಾ? ಎಷ್ಟೇ ವಯಸ್ಸು ಆದರೂ ಮತ್ತೆ ಅದೇ ಅದೇ ಮುಖಗಳನ್ನು ನೋಡ್ತಿರಬೇಕಾ, ನಾಲ್ಕು ಮಕ್ಕಳ ತಂದೆ-ತಾಯಿ ಆದವರು ಹೀರೋ-ಹೀರೋಯಿನ್ ಅಂತ ಎಷ್ಟು ದಿನ ಒಪ್ಪಿಕೊಳ್ಳೋದು”. +“ಈಗ ಕನ್ನಡದ ಹಿರಿಯ ನಟ-ನಟಿಯರು ವಯೋಮಾನಕ್ಕೆ ತಕ್ಕ ಪಾತ್ರ ಮಾಡೋ ಮನಸ್ಸು ಮಾಡ್ತಿದಾರೆ ಅಂತ ಈಚೆಗೆ ಬರ್‍ತಿರೋ ಚಿತ್ರಗಳು ನೋಡಿದರೆ ಸ್ಪಷ್ಟವಾಗುತ್ತೆ. ಆದರೆ ಅವರಿಗಿದ್ದ ಡೆಡಿಕೇಷನ್ ಈಗಿನ ಎಂಗರ್‍ ಜನರೇಷನ್‌ಗೆ ಇದೆ ಅಂತ ಹೇಳಲಾರೆ” +“ಹಾಗಾಗಕ್ಕೆ ಕಾರಣ?” +“ಹಣ, ದಿಢೀರ್‍ ಜನಪ್ರಿಯತೆ-ಧಾರಾಳವಾದ ಹಣದ ಹೊಳೆ. ಮುಂಚೆ ಯೂನಿಟ್‌ಗಳಲ್ಲಿ ಇದ್ದ ಪ್ರೀತಿ-ಸೌಹಾರ್ದ ಈಗ ಎಲ್ಲಿದೆ. ಈ ಮಾತನ್ನು ನಾಗರಹೊಳೆ ರೀ ರಿಲೀಸ್ ಟೈಂನಲ್ಲಿ ರಾಜೇಂದ್ರಸಿಂಗ್‌ಬಾಬು ತುಂಬಾ ಚೆನ್ನಾಗಿ ಹೇಳಿದರು” +“ಹಾಗಾರೀಗ ಏನಾಗಬೇಕೂಂತ ಎಂಕ?” +ಮೊನ್ನೆ ಕನ್ನಡದ ಖ್ಯಾತ ವಿಮರ್ಶಕ ಲೇಖಕ ಕಿ.ರಂ. ನಾಗರಾಜ್ ಹೇಳತಿದ್ರು “ಮೊದಲು ಎಲ್ರಿಗೂ ಕನ್ನಡ ಮಾತಾಡೋದು. ಬರಿಯೋದು ಕಲಿಸಬೇಕು. ಕನ್ನಡದ ಸಾಹಿತ್ಯದಲ್ಲಿರೋ ಲಾಲಿತ್ಯದ ಸೊಗಸನ್ನು, ಅಂತ್ಯ ಪ್ರಾಸಗಳ ಅಂದವನ್ನು, ಧ್ವನಿಯ ಏರಿಳಿತದಿಂದ ಉಂಟಾಗುವ ಪ್ರಭಾವವನ್ನು ಈಗಿಂದ ಮಕ್ಕಳಿಗೂ ಕಲಿಸಬೇಕು. ಅವರೇ ನಾಳಿನ ಲೇಖಕರು, ನಟರು, ಮೇಷ್ಟ್ರುಗಳು, ಕಾಯಕವೇ ಕೈಲಾಸ. ಪ್ರಯತ್ನಪಟ್ಟರೆ ಯಾರು ಏನುಬೇಕಾದ್ರೂ ಆಗಬಹುದು. ಆದರೆ ಒಳ್ಳೆ ಕನ್ನಡ ಬರೆಯೋದು. ಮಾತಾಡೋದು ಸತ್ವಪೂರ್ಣ ಸಾಹಿತ್ಯ ರಚಿಸೋದು ಸಾಧ್ಯವಾಬೇಕೂಂದ್ರೆ ಕಲಿಕೆಯಲ್ಲಿ ಪ್ರೀತಿ ಇರಬೇಕು. ಗ್ರಹಿಕೆಯಲ್ಲಿ ಒಲವಿರಬೇಕು. ಅದಕ್ಕೆ ಲೇಖಕರಾಗುವ ಮುನ್ನ, ನಟರಾಗುವ ಮುನ್ನ, ಸಂಗೀತ ನಿರ್ದೇಶಕರಾಗುವ ಮುನ್ನ, ಎಲ್ಲಕ್ಕೂ ತರಬೇತಿ ಶಿಬಿರಗಳು ಅಗತ್ಯ” ಎಂದರು. +“ಈ ಮಾತು ಖಂಡಿತಾ ನಿಜವೆನ್ನಿಸುತ್ತೆ” ಎಂದಾಗ ಚರ್ಚೆಗೆ ಮೌನದ ಮುದ್ರೆ ಬಿತ್ತು. +***** +(೧೪-೪-೨೦೦೦) +ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_163.txt b/Kannada Sahitya/article_163.txt new file mode 100644 index 0000000000000000000000000000000000000000..f3f8d5f6c39a2e25f2367006d3158840371bd317 --- /dev/null +++ b/Kannada Sahitya/article_163.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಮನೆ ಎದುರಿನ ಮರ +ಶಿಶಿರದಲ್ಲಿ ಉದುರಿ +ನಾಚಿಕೆಯೇ ಇಲ್ಲದೆ +ಬೆತ್ತಲೆ ನಿಂತು +ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ +ಬೆಳಗಿನ ಚುಮು ಚುಮು ಚಳಿಗೆ +ಮೈಯೊಡ್ಡಿ ನಿಂತು +ಹದಗೊಳ್ಳುತ್ತದೆ. +ಮತ್ತೆ ವಸಂತದಲ್ಲಿ +ನವವಧುವಿನಂತೆ +ಮತ್ತೆ ಹಸೆಮಣೆ ಏರಿ +ಮತ್ತೆ ಪ್ರಸ್ತದ ಕೋಣೆ ಸೇರಿ +ನೀರು ಬೆಳಕು ಗಂದಗಳ +ಸಾವಿರಕ್ಕೆ ಮತ್ತೆ ತಾಯಾಗಿ +ಮತ್ತೆ ತನ್ನವರನ್ನೆಲ್ಲಾ ತಬ್ಬಿ ನಿಲ್ಲುತ್ತದೆ. +ನಾವು, +ಕತ್ತಲೆಯು ಕರಗುವುದರೊಳಗೆ +ಉದುರಿ ಬೆತ್ತಲಾಗಿ, +ಬೆತ್ತಲಾದದ್ದಕ್ಕೆ ನಾಚಿ +ಹೆದರಿ +ಹೆದರಿದ್ದಕ್ಕೆ ಹೆರಲು ಹೊರಟಾಗ +ತೆರೆದು ಕೊಂಡದ್ದು ಮಾತ್ರಾ +ಬೆತ್ತಲಾಳದಿಂದ ಕತ್ತಲಿಗೆ ಕರಗುವ +ಮುನ್ನ ಉಳಿದ +ಕಾಮಕೇಳಿಗೆ. +***** +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […] +ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_164.txt b/Kannada Sahitya/article_164.txt new file mode 100644 index 0000000000000000000000000000000000000000..0e3372b4576e867d0985abffe2260d33748ec006 --- /dev/null +++ b/Kannada Sahitya/article_164.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? +ಮರಗಳು, ಗಿಡಗಳು, ಆಕಾಶ, ನಕ್ಷತ್ರ ಎಲ್ಲವೂ…ಸತ್ಯದ ಆಚೆ ಇನ್ನೆಲ್ಲೋ ಇದ್ದಂತೆ, ಎಲ್ಲವೂ ಹಿಂದೆ ಹಿಂದೆ ಹೋಗುತ್ತಿದ್ದಂತೆ. +ಆಗಷ್ಟೆ ಆಗಿದ್ದ ಅನುಭವದಿಂದ ಹೀಗನ್ನಿಸುತ್ತಿತ್ತೋ ಏನೋ, ಗೊತ್ತಿಲ್ಲ. ಮಧ್ಯಾಹ್ನದ ಬಿಸಿಲೇನು ರಣ ಬಿಸಿಲಾಗಿರಲಿಲ್ಲ. ಅದೇ ಹೇಳಿದೆನಲ್ಲ, ಸತ್ಯ ತನ್ನನ್ನು ತಾನೇ ಮೀರಿ ಒಂದು “ಪರ್‌ಫ಼ಾರ್‌ಮೆನ್ಸ್” ನಂತೆ ಇತ್ತು. ಅದರ ಹಿಂದೆ ಇದ್ದುದು ರಾಗ್ ಮಾರ್ವ, ಮಲ್ಲಿಕಾರ್ಜುನ್ ಮನ್ಸೂರ್ ಅವರದ್ದು. ಆ ಸಂಜೆ ಬೆಳಕು, ತೆಳುವಾಗಿ ಕತ್ತಲಾಗೋದು, ಆಗುತ್ತಾ ಆಗುತ್ತಾ ಒಪ್ಪಿಕೊಳ್ಳಲೇಬೇಕು ಅನ್ನುವ ಅದರ ಹಟವನ್ನು ಸಂಜೆ ಇಳಿಯುತ್ತಾ ತಿಳಿಸುತ್ತಿತ್ತು. “ಲಚ್ಛಾ ಸಾಕ್”ನಲ್ಲಿ ರಾಜಶೇಖರ್ ಅವರೂ ಅಷ್ಟೆ. +ಯಾರು ಹೇಳಿದ್ದು ಸಂಗೀತ ಅಮೂರ್ತ, ಅದು ಸ್ಪರ್ಶಕ್ಕೆ ಸಿಗುವುದಿಲ್ಲ ಎಂದು? ಮಲ್ಲಿಕಾರ್ಜುನರ ಆ ಮಾರ್ವದ “ರಿ” ಅಂದು ನನಗೆ ಮಾಡಿದ್ದಾದರೂ ಏನು? ನಿಂತ ನೀರನ್ನು ಕಲಕಿ ಉಂಗುರ ಏಳಿಸಿದ ಹಾಗೆ ಕಲಕಲ ಮಾಡಿ, ಮೇಲೆ ಅದರ ವಿಜೃಂಭಣೆ. +ಒಂದು ರೀತಿಯ ದಿಗ್ಭ್ರಾಂತಿಗೆ ಒಳಗಾದವಳಂತೆ ನಾನು. ಮುಂಬೈ ತಲುಪುತ್ತಾ, ತಲುಪುತ್ತಾ, ಈ ಎಲ್ಲ ಸತ್ಯಗಳೂ ಮತ್ತಷ್ಟು ವಿಸ್ತರಿಸುತ್ತಿರುವಂತೆ…ಗೊಂದಲ, ಕಸಿವಿಸಿ… +ಹಾಡುತ್ತಿದ್ದವರು ಮಲ್ಲಿಕಾರ್ಜುನ ಮನ್ಸೂರ ಮತ್ತು ಅವರ ಮಗ ರಾಜಶೇಖರರು. ನನ್ನ ಸತ್ಯಗಳಿಗೇನಾಗುತ್ತಿದೆ ಅದರಿಂದ? ನನ್ನ ಮೇಷ್ಟ್ರು ಕಲಿಸಿಕೊಡುವಾಗ ಹೇಳಿದ್ದು ತಟ್ಟನೆ ನೆನಪಾಯಿತು. ಸಂಗೀತ ಯಾವಾಗ ಏನು ರೂಪ ತಾಳುತ್ತದೋ ಗೊತ್ತಿಲ್ಲ ಎಂದು. +ಹೌದು, ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತು. ಹಾ! ಹತ್ತು ವರ್ಷಗಳ ಹಿಂದೆ ಹೀಗೆ ಸಂಗೀತದಿಂದ ಸತ್ಯವನ್ನು ಮೀರಿದ ಅನುಭವ ಆಗಲು ಸಾಧ್ಯವೇ ಇರಲಿಲ್ಲ. ಯಾಕೆ ಅಂತೀರ? ಸಂಗೀತ ಕೇಳೋದು ಬಿಟ್ಟು ಅದರ “ವ್ಯಾಕರಣ” ಎಂಬ ಗೋಣೀಚೀಲದಲ್ಲಿ ಹುದುಗಿ ನನ್ನನ್ನು ನಾನೇ ಹೊಲಿದುಕೊಂಡುಬಿಡುತ್ತಿದ್ದೆ. +ಟ್ರೈನ್ ಹೋಗುವ ಸದ್ದು. ಮನುಷ್ಯರು ಮಾತಾಡುವ ಸದ್ದು, ಆದೂ ಇದೂ ಮಾರಿಕೊಂಡು ಬರುವವರ ಸದ್ದು ಬಿಟ್ಟರೆ, ಬರೇ ಮೌನ. ಆ ಸದ್ದುಗಳು ತಾವಾಗಿಯೇ ಮುಳುಗಿ ಹೋದವು ಅನಿಸಿತು. ಮನ್ಸೂರರು ಮಾರ್ವದಲ್ಲಿ ತಾರಸ್ಥಾಯಿಗೆ ಹೋಗಿ “ರಿ” ಹಿಡಿದದ್ದು ಮೌನಕ್ಕೆ ಒಂದು ವಿಚಿತ್ರ ಅಭಿವ್ಯಕ್ತಿ ಕೊಟ್ಟಂತೆ ಇತ್ತು. ಆ ಮೌನ ಬಿರುಗಾಳಿ, ಭೂಕಂಪದ ಮುಂಚಿನ ತಣ್ಣನೆಯ ತಲ್ಲಣದಂತೆ. +ಮತ್ತೆ ಮೇಲೆ ರಣ ಬಿಸಿಲಲ್ಲ. ಸೂರ್ಯ ಯಾಕೋ ಎಲ್ಲ ಕಳೆದುಕೊಂಡು ನಿರಾಸೆಯ ಸೊಂಪಿನಲ್ಲಿ ಹಾಗೆ ತೂಗಾಡುತ್ತಾ ಇದ್ದಾನೆ ಎನ್ನಿಸಿತು. ನನಗೋ ಗೊತ್ತುಗುರಿ ಇಲ್ಲದ ಹುಡುಕಾಟ. ಇದರ ಮಧ್ಯೆ ಈ ಮನುಷ್ಯ ತನ್ನ ಲೋಕವನ್ನು ಭಸ್ಮ ಮಾಡಿ, ಮೈಗೆ ಬಳಿದುಕೊಂಡು “ನಾ ಜಾನೊ ಕಬ ಘರ ಆಯೆ…” ಅಂತ ಹಾಡಿದಾಗ ಈ ಮೂರು ಸತ್ಯಗಳ ಅರಿವಾದಂತೆ ಅನಿಸಿತು. +ಒಂದಡೆ ಸೂರ್ಯ, ಮತ್ತೊಂದಡೆ ಮನ್ಸೂರರ ಮಾರ್ವ, ಮತ್ತು ನಾನು. ಜನ್ಮಜನ್ಮಕ್ಕೂ ನನ್ನ ಮೇಷ್ಟ್ರ ಋಣವನ್ನು ತೀರಿಸುವುದು ಸಾಧ್ಯವೇ ಇಲ್ಲ. ಅವರು ನನ್ನನ್ನು ಬೆಳೆಸಿದ ರೀತಿ, ಇಂದು ನಾನು ಈ ಸತ್ಯಗಳನ್ನು ಒರೆಗೆ ಹಚ್ಚಿ ನೋಡುವಂತೆ ಮಾಡಿದೆ. ಮೊದಲು ನನ್ನ ಬಾಯಲ್ಲಿ ಬರುತ್ತಿದ್ದ ಮಾತೆಂದರೆ “ಅವರು ಚೆನ್ನಾಗಿ ಹಾಡ್ತಾರೆ…ಇವರಿಗೆ ಹಾಡಲಿಕ್ಕೆ ಬರಲ್ಲ…ಅವರ ಕಾನ್ ಸ್ವಲ್ಪ ವೀಕ್ ಆಗಿದೆ, ಅವರ ಸುರ್ ಅಷ್ಟೇನೂ ಸುರೇಲ್ ಆಗಿಲ್ಲ…” ಕಲಿಯುತ್ತಾ, ಕಲಿಯುತ್ತಾ, ಏಟು ತಿನ್ನುತ್ತಾ, ಪ್ರೀತಿಸುತ್ತಾ, ಅನುಭವಿಸುತ್ತಾ ಬಂದ ನನಗೆ ಇಂದು ಅರ್ಥವಾಗೋದು ಇಷ್ಟೆ. ಅದು ಒಂದು “ಘಳಿಗೆ” (ಮೊಮೆಂಟ್) ಆ ಘಳಿಗೆಯಲ್ಲಿ ಏನು “ಝಗ್” ಎಂದು ತೂರಿಕೊಂಡು ಬರುತ್ತದೋ ಎಂಬುದು ಹಾಡುವವರಿಗೆ ಮಾತ್ರ ಗೊತ್ತಿದ್ದಿರಬಹುದು. ಅದು ಒಂದು ಅನುಭವ, ಆ ಘಳಿಗೆಗೆ ತಕ್ಕ ಹಾಗೆ ನಾವು ತಿರುಗಬೇಕು, “ವೈಬ್ರೇಟ್” ಆದರೆ ಸರಿ, ಇಲ್ಲದಿದ್ದರೆ ಬಿಟ್ಟು ಬಿಡಬೇಕು. +ಅರೇ! ನಾನು ಕೇಳ್ತಿರೋದು ವಾಕ್‌ಮ್ಯಾನ್‌ನಲ್ಲಿ. ಅವರು ಉಸಿರುಕಟ್ಟಿ ಜಡಿದ “ತಾನು” ಬಂದು ಕಿಟಕಿಯಂದಾಚೆ ಇರುವ ಆ ಎಲೆಗಳನ್ನು ಗಾಬರಿ ಪಡಿಸಿದರೇ? ಸೂರ್ಯನೂ ಕೂಡ ಏನೋ ನೋಡುತ್ತಾ ನೋಡುತ್ತಾ ಈ “ತಾನ್” ಗೆ ನಿಟ್ಟುಸಿರು ಬಿಟ್ಟ ಎನ್ನಿಸಿತು. ನನ್ನ, ಸೂರ್ಯನ ಮತ್ತು ಮನ್ಸೂರರ ಅಕ್ಕಪಕ್ಕ ಜಗತ್ತು ತನ್ನದೇ ಆದ ಲಯದಲ್ಲಿ ನಡೀತಾನೇ ಇದೆ. ಇದ್ದಕ್ಕಿದ್ದಂತೆ ತನ್ನನ್ನು ತಾನು ಭಸ್ಮ ಮಾಡಿಕೊಂಡರೂ ಪ್ರತ್ಯಕ್ಷವಾಗದ ಶಿವನ ಮೇಲೆ ಸಿಟ್ಟು, ನಿರಾಸೆಯಾದಂತೆ ಮನ್ಸೂರರು ಆ ತಾನ್‌ಗಳ ಉಸಿರಾಟವನ್ನು ನಿಲ್ಲಿಸಿ ಆ ಶಡ್ಜ ಹಿಡಿದದ್ದು ಶಿವನನ್ನು ದುರುಗುಟ್ಟಿ ನೋಡಿದಂತೆ ಅನ್ನಿಸಿತು. ನನ್ನ ಕಲ್ಪನೆಗೆ ನಗು ಬಂತು. ಹೌದಲ್ಲ! ಅದು ಸತ್ಯ, ಕಲ್ಪನೆ ಅಲ್ಲ. +ನನ್ನ ಶಿವ, ನನ್ನ ಖುಸ್ರೋ, ನನ್ನ ಪ್ರೀತಿ…ಇಷ್ಟಾದರೂ ಇವರನ್ನೇ ನಾನು ಅರಸುತ್ತಿರುವುದು…ಶಿವನೂ ಇಲ್ಲ, ಹುಚ್ಚುತನ ಬರಲು ಒಳಗೆ ಸರಕೀ ಇಲ್ಲ…ಹ! ಇನ್ನು ಪ್ರೀತಿ ಎಲ್ಲಿ? ಈಗ ನನಗೆ ನಿಟ್ಟುಸಿರು. ಆ ಸೂರ್ಯನಿಗಾದರೂ ಎಂತಹ ಕಸಿವಿಸಿ? “ಈ ಮನ್ಸೂರ ಏನು? ನನ್ನ ಕೆಲಸ ಮಾಡುತ್ತಿರುವಂತೆ ಇದೆ!” ಎಂದುಕೊಂಡಾನೇನೋ. +ಯಾರು ಹೇಳಿದ್ದು ಸಂಗೀತ ಬರೀ ಕಿವಿಗೆ ಕೇಳಿಸೋದು ಅಂತ? ಸ್ಪರ್ಶಕ್ಕೆ ಸಿಗುತ್ತದೆ…ಕಣ್ಣಿಗೆ ಕಾಣುತ್ತದೆ…ವಿಚಿತ್ರವಾದ ಪರಿಮಳವನ್ನು ಹೊಂದಿಸುತ್ತಾ ಹೋಗುತ್ತದೆ. +ನಿಜ ಹೇಳಲಾ? ನಿಮಗೆ ಹುಚ್ಚು ಎನಿಸಬಹುದು. ವಿಲಾಯತ್ ಹುಸೇನ್ ಖಾನ್ ಸಾಹೇಬರ ಟೇಪ್ ಕೊಂಡಾಗ ಮೊದಲು “ಬಾಗೇಶ್ರೀ ಬಹಾರ್” ಎಂದು ಬರೆದಲ್ಲಿ ಮೂಸಿನೋಡಿದೆ. ಅದನ್ನು ಕೇಳುತ್ತಿದ್ದಾಗ ಒಳ್ಳೆ ಅಡಿಗೆಯ ಘಮವನ್ನು ಮೂಗಿಗೆ ತುಂಬಿಕೊಂಡಂತೆ ಬಾರಿ ಬಾರಿಗೂ ಉಸಿರೆಳೆದುಕೊಳ್ಳುತ್ತಿದ್ದೆ. ಬಾಯಿಗೆ ಸಿಕ್ಕ ರುಚಿಯಷ್ಟೇ ರುಚಿಯಲ್ಲ. ಹಾಡಿನ, ಸಂಗೀತದ ರುಚಿ ಕೂಡ ಹತ್ತುತ್ತದೆ… “ಟೇಸ್ಟ್ ಆಫ಼್ ಸಿಂಗಿಂಗ್” ಯಾರಾದರೂ ಹಾಡಬಹುದು…ಮತ್ತೆ ಈ “ಸೆರಿನಿಟಿ” ರಾಜಶೇಖರ್ ಅವರ “ಲಚ್ಛಾ ಸಾಕ್”…ಈಗಂತೂ ಬಣ್ಣಗಳೂ ತಮ್ಮ ಪಾತ್ರವಹಿಸಲು ಶುರು ಮಾಡಿದ್ದವು. ಕತ್ತಲು ಆಗುತ್ತಾ, ಆಗುತ್ತಾ ಹಸಿರೆಲೆಗಳ ಹಸಿರು ಕತ್ತಲ ಬಣ್ಣದಲ್ಲಿ ಸೇರಿಕೊಂಡು…ಮೋಡಗಳು ಲಚ್ಛಾ ಸಾಕ್‌ನ ಕೋಮಲ್ ನಿಷಾದ್‌ನ ಬಣ್ಣ ತಳೆದಂತೆ ಇತ್ತು. ಎಲ್ಲಿಯೋ ಸರಿದು ಹೋದಂತ ಒಂದು ಬೆಳಕಿನ ತುಂಡು ಆ ಅಂತರದಲ್ಲಿ ಬರುವ ಶುದ್ಧ ನಿಷಾದದಂತೆ…ಬೆಚ್ಚಿ ಬಿದ್ದು ಎದ್ದೆ. ನಿದ್ದೆಯಲ್ಲ ಅದು. ಹುಚ್ಚು. ಹೆದರಿಕೆ. ಗೊಂದಲ. ಅನಾಥಪ್ರಜ್ಝ್ನೆ ಬೆಳೆಯುತ್ತಾ ಇದೆ. ಪ್ರತಿಯೊಬ್ಬರ ಸಂಗೀತ ಕೇಳಿ, ಅರ್ಥವಾಗದ, ಅರ್ಥವಾಗುವ ಸತ್ಯಗಳನ್ನು ಅರಗಿಸಿಕೊಂಡಾಗಲೆಲ್ಲ, ನನ್ನ ಮೇಷ್ಟ್ರು ಇಲ್ಲದೆ ನನಗೆ ಜಗತ್ತೇ ಇಲ್ಲ ಎನಿಸಿ…ಮತ್ತೆ ರಾಜಶೇಖರರು ಆ ಶುದ್ಧ ನಿಷಾದ ಹಚ್ಚಿದರು..ಅಯ್ಯೋ ಹಳದಿ ಬಣ್ಣ…ಆ ಹಳದಿಯಲ್ಲಿ ಕೆಂಪೂ ಇದೆ ಸ್ವಲ್ಪ, ಸ್ವಲ್ಪ ನೇರಳೆ, ಸ್ವಲ್ಪ ಎಳೆ ನೇರಳೆ, ಆ ಹಳದಿ…ರಾಜಶೇಖರ ಅವರ ಆವಾಜು ಎರಡನ್ನೂ ಕಲಸಿ ಮೈಗೆಲ್ಲ ಹಚ್ಚುತ್ತಾ ಹಚ್ಚುತ್ತಾ, ಮತ್ತೆ ಎಚ್ಚರ… ಕನಸಲ್ಲ..ಸತ್ಯಗಳು, ತಮ್ಮನ್ನ ತಾವೇ ಮೀರಿ ನಿಂತಂತ ಸತ್ಯಗಳು. +ಇಡೀ ಜೈಪುರ ಘರಾಣಾದವರು…ಒಬ್ಬರಿಗಿಂತ ಒಬ್ಬರು…ಒಂದೇ “ಸ್ಕೂಲ್ ಆಫ಼್ ಥಾಟ್”…ಘರಾಣಾದ ಎಲ್ಲಾ ಅಂಶಗಳನ್ನು ಒಬ್ಬೊಬ್ಬರೂ ಬಳಸುವ ಅವರ ಪೂಜೆ…ಒಬ್ಬರು ಆಕಾಶದಂತೆ ಕಂಡರೆ ಇನ್ನೊಬ್ಬರು ತಮ್ಮನ್ನು ತಾವೇ ಸುಟ್ಟುಕೊಂಡು ಜಗತ್ತೇ ಇಲ್ಲ, ಇರುವುದು ಶಿವನೊಬ್ಬನೇ ಎಂಬಂತೆ, ಇನ್ನೊಬ್ಬರು ರಾಣಿಯಂತೆ, ಮತ್ತೊಬ್ಬರು ಗಾಂಭೀರ್ಯದಲ್ಲೆ ತಮ್ಮನ್ನು ತಾವು ಕಂಡುಕೊಳ್ಳುವಂತೆ… +ಹೌದು, ನನ್ನ ಈ ಜಗತ್ತಿನಲ್ಲಿ ಇವರ ಸಂಗೀತ ಯಾರ್‍ಯಾರನ್ನೆಲ್ಲ ಬದುಕಿಸಿಬಿಟ್ಟಿದೆ ಅಲ್ಲ? ನನಗೆ ಆ ಜೀವಗಳ ಬಗೆಗಿಗ ಸತ್ಯವನ್ನು ಪರಿಚಯಿಸಿದೆ..ಮತ್ತೆ ಟ್ರೈನ್ ನಲ್ಲಿ ಜಾತ್ರೆ ಸಾಗುತ್ತಲೇ ಇದೆ…ಯಾವುದೋ ಎರಡು ದೊಡ್ಡ ಕೈಗಳು ಚಾಚಿ ಕರೆದಂತಾಯಿತು. ಕೇಳುತ್ತಾ, ಕೇಳುತ್ತಾ ಕಣ್ಣಲ್ಲೆಲ್ಲಾ ನೀರು…ನನಗಿಂತಹ ಗುರುಗಳು ಸಿಗದೇ ಇದ್ದರೆ ಈ ಹುಚ್ಚೇ ಹಿಡಿಯುತ್ತಿರಲಿಲ್ಲ…ಇಲ್ಲ, ಈ ಹುಚ್ಚು ಬೇಕು…ಇದರಲ್ಲಿ ಮಿಂದು ಬೆಳಗಬೇಕು…ಭಸ್ಮವಾಗಿಬಿಡಬೇಕು… +ಮತ್ತೆ ರಾಜಶೇಖರರ ಗೋಧನ್ ಗೌರಿ…ಯಾವುದಕ್ಕೋ ಸಜ್ಜಾದಂತೆ… +ಒಂದು ನಗೆ ಬಂತು… +“ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ +ಕೇಳುತ್ತಾ ಕೇಳುತ್ತಾ ಜಗವೇ ತೆರೆದುಕೊಂಡಿದೆ ನೋಡು…” +***** +ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […] +ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […] +ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_165.txt b/Kannada Sahitya/article_165.txt new file mode 100644 index 0000000000000000000000000000000000000000..e155fb756cf935346f0d3c4325dbe13b6da46ec6 --- /dev/null +++ b/Kannada Sahitya/article_165.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ. +ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ ದೇಶದಕಡೆಗೆ ಹೋಗುವ ಕೊನೆಯ ಬಸ್ಸಿಗಾಗಿ ಕಾದು ನಿಂತಿರುವ ಕ್ರೈಸ್ತಕನ್ಯಾಸ್ತ್ರೀಯರು, ಬೆಳ್ಳನೆಯ ಮುಂಡಾಸು ಸುತ್ತಿಕೊಂಡ ಮುಸ್ಲಿಂ ಮತಪಂಡಿತ ಮಕ್ಕಳು. ವಾಂತಿ ಮಾಡಿಕೊಂಡು ಸುಸ್ತಾಗಿ ಬಸ್ಸೊಳಗೆ ತಮ್ಮತಮ್ಮ ಗಂಡಂದಿರ ಎದೆಗೆ ಒರಗಿ ನಿದ್ರಿಸುತ್ತಿರುವ ಎಳೆಯ ಪತ್ನಿಯರು….ಕುಡಿದು ಹೆಗಲಿಗೆ ಹೆಗಲು ಕೋಸಿಕೊಂಡು ಮಳೆಯಲ್ಲಿ ಸಿಳ್ಳೆ ಹೊಡೆದು ಕೊಂಡು ನಡೆದು ಹೋಗುತ್ತಿರುವ ಗೆಣೆಕಾರರು… +ಆ ದಿನ ಸಂಜೆ ವೀರಾಜಪೇಟೆಯಲ್ಲಿ ,ಆ ಕೆಸರು ಮಳೆ ಮನುಷ್ಯವಾಸನೆಗಳ ನಡುವೆ ಕೊಡೆ ಹಿಡಿದು ಕೊಂಡಿದ್ದ ನನಗೆ ಯಾಕೋ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ.ಅದು ಡಿಸೆಂಬರ್ ತಿಂಗಳ ಕೊನೆಯ ವಾರ.ಆದರೂ ಚಿರಿಚಿರಿ ಮಳೆ. ಅದು ರಂಜಾನ್ ತಿಂಗಳ ಕೊನೆಯ ದಿನಗಳು.ದಿನವಿಡೀ ಉಪವಾಸ ಹಿಡಿದ ಮುಸಲ್ಮಾನ ಭಾಂದವರು ಸಂಜೆ ಇನ್ನೇನು ಉಪವಾಸ ಮುಗಿಸಲು ಕಾಯುತ್ತಿದ್ದರು. ಹಾಗಾಗಿ ಒಂದು ತರಹದ ಧಾರ್ಮಿಕ ಹಸಿವೋ ಹಠ ವೋ ಅವರ ಮುಖದಲ್ಲಿತ್ತು. ಕ್ರಿಸ್ಮಸ್ ಗೆ ಇನ್ನು ಎರಡೇ ದಿನಗಳಿತ್ತು. ಕನ್ಯಾಶ್ರಮಗಳಿಂದ ಅನುಮತಿ ಪಡೆದು ತಮ್ಮ ಕುಟುಂಬ ವನ್ನು ಕಾಣಲು ಹೊರಟ ಕನ್ಯಾಸ್ತ್ರೀಯರ ಮುಖಗಳಲ್ಲಿ ಅಷ್ಟೇನೂ ಉಲ್ಲಾಸ ಕಾಣಿಸುತ್ತಿರಲಿಲ್ಲ.ಕಾಫಿಗೆ ಬೆಲೆಯಿಲ್ಲದೆ ಶುಂಠಿಗೆ ಬೆಲೆಯಿಲ್ಲದೆ ಅವೆರಡಕ್ಕೆ ಬೆಲೆಯಿಲ್ಲದಿದ್ದರೆ ಬೇರೆ ಏತಕ್ಕೂ ಬೆಲೆಕೊಡದ ಕೊಡಗಿನ ಬೆಳೆಗಾರರ ಮುಖಗಳೂ ಆಸಕ್ತಿ ಹುಟ್ಟಿಸುವಂತಿರಲಿಲ್ಲ. +ಸುಮ್ಮನೆ ಹತ್ತಬೇಕಿದ್ದ ಬಸ್ಸುಗಳನ್ನೆಲ್ಲ ತಪ್ಪಿಸಿಕೊಳ್ಳುತ್ತ ಎಲ್ಲಿಗಾದರೂ ಯಾಕಾದರೂ ಹೋಗಬೇಕು ಎಂದುಕೊಳ್ಳುತ್ತ ನಿಂತಿದ್ದವನ ಮುಂದೆ ಅವರಿಬ್ಬರು ಗಾಳಿಗೆ ಸಿಕ್ಕಿದ ಒಣ ಎಲೆಗಳಂತೆ ನಡೆದು ಬರುತ್ತಿದ್ದರು.ಮುಂದೆ ಮೌಲಾನ್ ಕುಟ್ಟಿ ಕಾಕಾ ಎಂಬ ಮುದುಕ ಮತ್ತು ಅವರ ಹಿಂದೆ ಪಾತುಂಞಿ ಎಂಬ ಸುಂದರಿ ಮುದುಕಿ… ಎಷ್ಟೋಕಾಲದ ನಂತರ ಇಬ್ಬರು ಮರಣದ ನಂತರವೇ ಒಂದಾಗಿರುವರೋ ಎಂಬಂತೆ ಆ ಮಂಜು ಮಳೆ ಗಾಳಿಯ ನಡುವೆ ನಡೆದು ಬರುತ್ತಿದ್ದರು. ಪಾತುಂಞಿ ತಾತಾಳ ಇತಿಹಾಸ ಪ್ರಸಿದ್ಧ ಬೆಳ್ಳಗಿನ ಬಣ್ಣ ಮತ್ತು ಅವಳ ತುಟಿಯಮೇಲಿದ್ದ ಕಪ್ಪಗಿನ ಕೆಡು ಮತ್ತು ಅದರ ಮೇಲೆ ಬೆಳೆದಿದ್ದ ಕಪ್ಪಗಿನ ಕೂದಲು ಈಗ ವಯಸ್ಸಾಗಿದ್ದರಿಂದ ಮಾತ್ರ ಬೆಳ್ಳಗಾಗಿ ಬಿಟ್ಟಿತ್ತು.ಇಲ್ಲದಿದ್ದರೆ ಮುದುಕಿ ಇನ್ನೂ ಸುಂದರಿಯಾಗಿಯೇ ಉಳಿದಿದ್ದಳು. +ಮೌಲಾನ್ ಕುಟ್ಟಿ ಕಾಕಾ ಮಾತ್ರ ಕೊಂಚ ತಲೆ ಕೆಟ್ಟವರಂತೆ ಕಾಣಿಸುತ್ತಿದ್ದರು. ಕಾಲಲ್ಲಿರಬೇಕಾದ ರಬ್ಬರಿನ ಚಪ್ಪಲಿಗಳನ್ನು ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಕೊಂಡು ಓಲಾಡಿಕೊಂಡು ನಡೆಯುತ್ತಿದರ್ದು.ಅವರ ಬಿಳಿ ಪಂಚೆ ಗಾಳಿ ಮಳೆ ಕೆಸರುಮಣ್ಣಿಗೆ ಸಿಲುಕಿ ಯಾವುದೋ ಬಣ್ಣ ಪಡೆದಿತ್ತು. ಎಲೆ ಅಡಿಕೆಯ ಜೊಲ್ಲು ಬಾಯಿಂದ ಇಳಿದು ಗಡ್ಡಕ್ಕೆ ಸೇರುತ್ತಿತ್ತು..ಬಾಯಲ್ಲಿ ಯಾವಾಗಲೋ ಆರಿಹೋಗಿದ್ದ ಮೋಟು ಬೀಡಿ.ಮುದುಕ ಗಾಳಿಗೆ ಸಿಕ್ಕಿ ಆರಲು ಹೊರಟ ಮೋಂಬತ್ತಿಯಂತೆ ನಡೆದಾಡುತ್ತಿದ್ದ. ಅವರ ಹಿಂದೆ ಕೊಂಚ ಸ್ತಿರವಾಗಿ ಪಾತುಂಞಿ ತಾತಾ ನಡೆದು ಬರುತ್ತಿದ್ದಳು .ಮುದುಕಿಯ ಮುಖದಲ್ಲಿ ಎಂತಹದೋ ಉಲ್ಲಾಸ ಕಂಡು ಬರುತ್ತಿತ್ತು. ಯಾಕೋ ಇಬ್ಬರಿಗೂ ತಲೆ ಕೆಟ್ಟು ಹೋಗಿ ಬಿಟ್ಟಿದೆ ಅನಿಸಿತು. +ಯಾಕೋ ಸಂಕಟ ನುಗ್ಗಿ ಬಂತು.ಸುಮಾರು ಇಪ್ಪತ್ತೈದು ವರ್ಷಗಳ ನಂತರ ನಾನು ಮತ್ತೆ ಈ ಇಬ್ಬರ ಮುಖವನ್ನು ಕಾಣುತ್ತಿರುವುದು.ಈ ದಿನ ನೋಡಿರದಿದ್ದರೆ ಇತರ ನೂರಾರು ಸಾವಿರಾರು ವಯಸ್ಸಾದವರ ಹಾಗೆ ಈ ಇಬ್ಬರು ಅಮರ ಪ್ರೇಮಿಗಳೂತೀರಿಕೊಂಡು ಹೋಗಿರುವರು ಅಂತಲೇ ತಿಳಿದು ಕೊಂಡಿರುತ್ತಿದ್ದೆ. ಮೂರು ವರ್ಷಗಳ ಹಿಂದೆ ನನ್ನ ಬಾಪಾ ತೀರಿಹೋಗಿದ್ದರು.ಈ ಇಬ್ಬರು ಅವರಿಗಿಂತ ಎಷ್ಟೋ ದೊಡ್ಡವರು.ನಾವು ಸಣ್ಣದಿರುವಾಗ ನದಿಬದಿಯಲ್ಲಿ ಕತ್ತಲಲ್ಲಿ ಕೂತುಗೊಂಡು ವಯಸ್ಸ್ಸಾದವರಲ್ಲಿ ಯಾರು ಮೊದಲು ತೀರಿಹೋಗಬಹುದು ಯಾರು ನಂತರ ಎಂದು ಲೆಕ್ಕ ಹಾಕುತ್ತಿದ್ದೆವು.ಆಗ ಮೊದಲು ಮೊದಲಿಗೇ ಬರುತ್ತಿದ್ದುದು ಈ ಮೌಲಾನ್ ಕುಟ್ಟಿಯವರ ಹೆಸರು. ನಂತರ ನದಿಯಲ್ಲಿ ಕತ್ತಲಲ್ಲಿ ಬತ್ತಲೆ ಸ್ನಾನ ಮಾಡುತ್ತಿದ್ದ ಪಾತುಂಞ್ ಎಂಬ ಅವರ ಸುಂದರಿ ಪ್ರೇಯಸಿಯ ಹೆಸರು.ಅಪ್ಪಿತಪ್ಪಿಯೂ ಕೂಡಾ ನಾವು ಹುಡುಗರು ತೀರಿ ಹೋಗಲಿರುವವರ ಯಾದಿಯಲ್ಲಿ ನಮ್ಮ ತಂದೆ ತಾಯಿಯರ ಹೆಸರು ಹೇಳುತ್ತಿರಲಿಲ್ಲ. ಈಗ ನೋಡಿದರೆ ನಾವು ಹೆಸರು ಹೇಳದವರೆಲ್ಲ ತೀರಿಹೋಗಿದ್ದರೂ ಈ ಇಬ್ಬರು ಎಂದೂ ಒಂದಾಗಿರದಿದ್ದ ಅಮರ ಪ್ರೇಮಿಗಳು ನನ್ನೆದುರೇ ಜೀವಂತ ದೇವತೆಯರಂತೆ ನಡೆದು ಬರುತ್ತಿದ್ದರು ಯಾಕೋ ಇವರಿಬ್ಬರನ್ನು ಇಪ್ಪತ್ತೈದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಆ ರೂಪದಲ್ಲಿ ಕಂಡೊಡನೆ ನನಗೆ ಕಣ್ಣು ತುಂಬಿ ಬಂತು. ವೀರಾಜಪೇಟೆಯ ಆ ಸಾಧಾರಣ ಬಸ್ಸು ನಿಲ್ದಾಣ ಜನನ-ಮರಣಗಳ ಪಾಪ-ಪುಣ್ಯಗಳ ರಂಗತಾಣವಾಗಿ ಕಂಡು ಸಣ್ಣಗೆ ನಡುಗಿದೆ. +ಮೌಲಾನ್‌ಕುಟ್ಟಿಯವರು ವಶೀಕರಣಕ್ಕೊಳಪಟ್ಟ ಮಂತ್ರವಾದಿಯಂತೆ ನಲುಗಿಹೋಗಿದ್ದರು.ಅವರ ತಲೆ ಬೋಳಾಗಿ,ಗಡ್ಡ ಮೀಸೆ ಕಣ್ಣಹುಬ್ಬು ಎಲ್ಲ ಬೆಳ್ಳಗಾಗಿಹೋಗಿತ್ತು.ಅವರು ತೊದಲುತ್ತಿದ್ದರು.ಕಂಡಕಂಡವರಿಗೆ ಅಸಹಜವಾಗಿ ಕೈ ಮುಗಿದು ನಗುತ್ತಿದ್ದರು. ನೋಡಿದವರಿಗೆ ಅದು ಅಳುವಂತೆ ತೋರುತ್ತಿತ್ತು. ಅವರ ಹಿಂದೆ ಬರುತ್ತಿದ್ದ ಪಾತುಂಞಿ ತಾತಾ ಒಂದು ಚೂರೂ ಮಾಸದ ಬೆಳ್ಳನೆ ಯ ಕುಪ್ಪಾಯ ಹಸಿರು ಅರೆ ಸೀರೆ ಸೊಂಟಕ್ಕೆ ಬೆಳ್ಳಿಯ ಉಡಿಪಟ್ಟಿ ಮತ್ತು ತಲೆಗೊಂದು ಬೆಳ್ಳನೆಯ ಬಟ್ಟೆಯನ್ನು ಕಟ್ಟಿಕೊಂಡು ಅಭೂತಪೂರ್ವ ಸುಂದರಿಯಂತೆ ನಡೆಯುತ್ತಿದ್ದರು.ಆ ಮುದುಕಿಯ ಮುಖದಲ್ಲಿ ಹೇಳಲಿಕ್ಕಾಗದ ಒಂದು ಮಂದಹಾಸವಿತ್ತು. ನಾನು ದೀನನಾಗಿ ಏನೂ ಮಾಡಲಾಗದವನಂತೆ ಆ ಜನ ಜಂಗುಳಿಯಲ್ಲಿ ಅವರನ್ನು ನೋಡುತ್ತಾ ನಿಂತಿದ್ದವನು ಹತ್ತಿರಕ್ಕೆ ಹೋಗಿ ಅವರಿಬ್ಬರ ಮುಂದೆ ನಿಂತೆ. +ನನ್ನ ಗುರುತಾಯಿತಾ..ಎಂದು ಮಲಯಾಳದಲ್ಲಿ ಕೇಳಿದೆ. +ಪಾತುಂಞಿ ತಾತಾ ಎಲ್ಲರ ಮುಖ ನೋಡುವಂತೆಯೇ ನನ್ನ ಮುಖವನ್ನೂ ನೋಡಿ ಮಂದಹಾಸ ಸೂಸಿತು +ಮುದುಕ ಕಿವಿಯನ್ನು ಮುಂದೆ ಮಾಡಿಕೊಂಡು ಹತ್ತಿರಕ್ಕೆ ಬಂದು ಸುಮ್ಮನೆ ನಕ್ಕಿತು. +ಅಲ್ಲಿಗೆ ನನಗೆ ಗೊತ್ತಾಗಿ ಹೋಯಿತು. ಈ ಇಬ್ಬರು ಪುರಾತನ ಪ್ರೇಮಿಗಳು ತಿರುಗಿ ಬರಲಾಗದ ಲೋಕವೊಂದಕ್ಕೆ ಬದುಕಿರುವಾಗಲೇ ಹೋಗಿಬಿಟ್ಟಿದ್ದಾರೆ. ಇನ್ನು ಇವರ ಜೊತೆ ಮಾತನಾಡಿ ಸುಖ ದುಃಖ ವಿಚಾರಿಸಿ ಏನೂ ಸುಖವಿಲ್ಲವೆಂದು ಗೊತ್ತಾಗಿ ಪೆಚ್ಚಾಗಿ ಹೋದೆ. +* +* +* +ಇಂದಿರಮ್ಮ ಎಂಬ ಒಂದು ಆಕಳನ್ನು ನೆನೆಯದೆ ಮತ್ತು ಈ ಆಕಳಿಗೆ ಇಂದಿರಮ್ಮ ಎಂಬ ಹೆಸರಿಟ್ಟ ನನ್ನ ಬಾಪಾನನ್ನು ನೆನೆಸಿಕೊಳ್ಳದೆ ನಾನು ಈ ಇಬ್ಬರು ಪ್ರೇಮಿಗಳ ಕತೆಯನ್ನು ಮುಂದುವರಿಸುವ ಹಾಗೆಯೇ ಇಲ್ಲ. ಹಾಗೆ ನೋಡಿದರೆ ವೀರಾಜಪೇಟೆ ಬಸ್ಸು ನಿಲ್ದಾಣದಲ್ಲಿ ತರಗೆಲೆಯಂತೆ ತೂರಿಕೊಂಡು ನಡೆದು ಬರುತ್ತಿದ್ದ ಇವರಿಬ್ಬರು ಕಣ್ಣಿಗೆ ಬಿದ್ದ ಕೂಡಲೇ ನನ್ನ ಮನಸ್ಸು ತುಂಬಿಕೊಂಡದ್ದು ತೀರಿಹೋದ ನನ್ನ ಬಾಪಾನ ನೆನಪು ಮತ್ತು ಅವರು ಹೆಸರಿಟ್ಟು ಸಾಕಿದ್ದ ಇಂದಿರಮ್ಮ ಎಂಬ ಪಾಪದ ಕಂದು ಆಕಳಿನ ರೂಪು. +ನಮ್ಮಲ್ಲಿ ಇಂದಿರಮ್ಮ ಎಂಬ ಆಕಳು ಇದ್ದದ್ದು ನಿಜ.ಇದಕ್ಕೂ ಮೊದಲು ಇಂದಿರಮ್ಮ ಎಂಬ ಇನ್ನೊಂದು ಹಳೆಯ ಆಕಳಿತ್ತು.ಇಂದಿರಾ ಗಾಂಧಿಯವರ ಪರಮ ಅಭಿಮಾನಿಂಗಿದ್ದ ನನ್ನ ಬಾಪಾ ಅದಕ್ಕೆ ಕರುವಾಗಿರುವಾಗಲೇ ಇಂದಿರಮ್ಮ ಎಂಬ ಹೆಸರಿಟ್ಟಿದ್ದರು.ಆ ಹಸು ತುಂಬಾ ಒಳ್ಳೆ ಸ್ವಭಾವದ ಹಸುವಾಗಿತ್ತಂತೆ.ಅಷ್ಟೊಂದು ಹಾಲು ಕೊಡುತ್ತಿತ್ತಂತೆ.ಆದರೆ ನನಗೆ ನೆನಪಿರುವಾಗಲೇ ಅದಕ್ಕೆ ತುಂಬಾ ವಯಸ್ಸಾಗಿ ತೀರಿಹೋಗಿತ್ತು.ಅದರ ನೆನಪಿಗೆ ಅಂತ ಇನ್ನೊಂದು ಕರುವಿಗೆ ಇಂದಿರಮ್ಮ ಎಂದು ಇನ್ನೊಮ್ಮೆ ಹೆಸರಿಟ್ಟಿದ್ದರು.ಈ ಇಂದಿರಮ್ಮನೂ ತುಂಬ ಒಳ್ಳೆಯ ಹಸು.ಆದರೆ ತುಂಬ ದಡ್ಡ ಹಸು.ಅದಕ್ಕೆ ತಾನು ಹಸುವೆಂಬುದೇ ತಿಳಿದಿರಲಿಲ್ಲ.ಹಾಗಾಗಿ ಕರುಹಾಕದೆ,ಹಾಲು ಕೊಡದೆ ಎಲ್ಲರಿಂದಲು ಬಯ್ಯಿಸಿಕೊಳ್ಳುತ್ತಿತ್ತು. ಕೋಳಿಗಳ ಜೊತೆ ಕೋಳಿಯಂತೆ ವರ್ತಿಸುವುದು, ನಾಯಿಗಳೊಂದಿಗೆ ಆಟವಾಡಲು ಹೋಗಿ ಕಚ್ಚಿಸಿಕೊಳ್ಳುವುದು,ನಾವು ಮಕ್ಕಳು ಎರಡು ಕಾಲಲ್ಲಿ ಓಡಿನಡೆದಾಡುವ ಕಡೆಯಲ್ಲೆಲ್ಲಾ ತಾನೂ ನಡೆಯಲು ಹೋಗಿ ಸಿಕ್ಕಿಹಾಕಿ ಕೊಳ್ಳುವುದು ಹೀಗೆಲ್ಲಾ ಮಾಡಿ ದೊಡ್ಡವರಿಂದ ಸಕತ್ತಾಗಿ ಏಟು ತಿನ್ನುತ್ತಿತ್ತು. +ಆ ಸಣ್ಣ ವಯಸ್ಸಿನಲ್ಲೇ ಪೋಲಿ ಬಿದ್ದು ಹೋಗಿದ್ದ ನನ್ನನ್ನು ಸರಿದಾರಿಗೆ ತರಲು ನನ್ನ ಬಾಪಾ ಇಂದಿರಮ್ಮ ಎಂಬ ಈ ಆಕಳನ್ನು ನನ್ನ ಸುಪರ್ದಿಗೆ ಬಿಟ್ಟಿದ್ದರು.ಅಂದರೆ ಅದನ್ನು ನೋಡಿಕೊಳ್ಳುವುದು,ಮೇಯಿಸಲು ಒಯ್ಯುವುದು,ತೊಳೆಯಲು ನದಿಗೆ ಕೊಂಡುಹೋಗುವುದು ಇದನ್ನೆಲ್ಲ ನಾನು ಮಾಡಬೇಕೆಂದು ಕನಸು ಕಂಡಿದ್ದರು.ಒಂದು ವೇಳೆ ಈ ಇಂದಿರಮ್ಮ ಕರು ಹಾಕಿದ್ದೇ ಆದರೆ ಹಾಲು ಕರೆಯುವುದು,ಅಳೆಯುವುದು,ಮಾರುವುದು,ಲೆಕ್ಕ ಇಟ್ಟುಕೊಳ್ಳುವುದು,ದುಡ್ಡು ವಸೂಲು ಮಾಡುವುದು ಇದನ್ನೆಲ್ಲಾ ನಾನೇ ಮಾಡಬೇಕೆಂದೂ ಇದರಿಂದ ನನ್ನ ಪೋಲಿ ತಿರುಗುವ ಚಟ ಅಳಿದು,ಜವಾಬ್ಧಾರಿಬುದ್ಧಿ ಬರುವುದೆಂದೂ ಇದರಿಂದ ತುಂಬ ಕಷ್ಟದಲ್ಲಿ ಬದುಕುತ್ತಿರುವ ನಮ್ಮ ಕುಟುಂಬವೇ ಉದ್ಧಾರವಾಗುವುದೆಂದೂ ಅವರು ಕನಸು ಕಂಡಿದ್ದರು. +ನನ್ನ ಬಾಪಾನ ಆತ್ಮಕ್ಕೆ ಶಾಂತಿಯಿರಲಿ. +ಅವರು ಅಂದು ಕೊಂಡಂತೆ ನಾನು ನಡೆದುಕೊಳ್ಳಲೇ ಇಲ್ಲ.ಇಂದಿರಮ್ಮ ಎಂಬ ಆ ಆಕಳನ್ನು ಕರೆದುಕೊಂಡು ಹೊರಟೆನೆಂದರೆ ನನಗೆ ಬೇರೆಯೇ ಯೋಚನೆಗಳು ಹೊಳೆಯುತ್ತಿದ್ದವು.ನದಿಯಲ್ಲಿ ಮೀಯಿಸಲು ಹೊರಟರೆ ಬೇರೆಯೇ ತರಹದ ಜನರು ಭೇಟಿಯಾಗುತ್ತಿದ್ದರು.ಅದು ಬೇರೆಯೇ ಒಂದು ಲೋಕ! +ಅಲ್ಲಿ ನದಿಯ ಬದಿಯಲ್ಲಿ ಇಂದಿರಮ್ಮನನ್ನು ಮೇಯಲು ಬಿಟ್ಟು ನಾನು ಬೇರೆ ಕೆಲಸಗಳಲ್ಲಿ ತೊಡಗುತ್ತಿದ್ದೆ.ಅದರಲ್ಲಿ ಪ್ರಮಖವಾದುದು ನದಿಯಲ್ಲಿ ಮೀಯಲು ಬರುವ ಹೆಣ್ಣು ಮಕ್ಕಳನ್ನು ಕಡೆಗಣ್ಣಿನಿಂದ ವೀಕ್ಷಿಸುವುದು. +ಹಾಗೆ ವೀಕ್ಷಿಸುತ್ತಿದ್ದಾಗಲೇ ಒಮ್ಮೆ ಈ ಮೌಲಾನ್ ಕುಟ್ಟಿ ಕಾಕಾ ನನ್ನ ಕಡೆಗಣ್ಣಿಗೆ ಸಿಕ್ಕಿಹಾಕಿಕೊಂಡದ್ದು. +ಅವರೂ ನನ್ನ ಹಾಗೆಯೇ ವೀಕ್ಷಣೆ ನಡೆಸಿದ್ದರು. +ಅವರು ಕದ್ದು ನೋಡುತ್ತಿದ್ದುದು ನದಿಯಲ್ಲಿ ಅರೆ ಬತ್ತಲೆಯಾಗಿ ಮೀಯುತ್ತಿದ್ದ ಪಾತುಂಞಿ ಎಂಬ ಸುಂದರಿ ಮುದುಕಿಯನ್ನು . ನದಿಯಲ್ಲಿ ಮೀಯುತ್ತಿದ್ದರೆ ಈ ಪಾತುಂಞಿ ಮುದುಕಿ ಅಂತ ಯಾರೂ ಹೇಳುವ ಹಾಗಿರಲಿಲ್ಲ.ನಾನೇ ಎಷ್ಟೋ ಸಲ ಬೆನ್ನು ತೋರಿಸಿಕೊಂಡು ಸ್ನಾನ ಮಾಡುತ್ತಿದ್ದ ಈ ಅಜ್ಜಿಯನ್ನು ಯಾರೋ ಸುಂದರಿಯುವತಿ ಎಂದು ಕದ್ದು ನೋಡುತ್ತಾ ನಂತರ ಗೊತ್ತಾಗಿ ಓಡಿ ಹೋಗಿದ್ದುಂಟು. +ಹಾಗಾಗಿ ಮುದುಕರಾದ ಮೌಲಾನ್ ಕುಟ್ಟಿಯವರು ಮುದುಕಿಯಾದ ಪಾತುಂಞಿಯನ್ನು ಕದ್ದು ನೋಡುವುದರಲ್ಲಿ ಅಂತಹ ತಪ್ಪೇನೂ ನನಗೆ ಈಗ ಕಾಣಿಸುವುದಿಲ್ಲ. ಆದರೆ ಆಗ ಚಿಕ್ಕವನಾಗಿರುವಾಗ ನನಗೆ ಅಸೂಯೆಯಾಗುತ್ತಿತ್ತು. +ಹಾಗಾಗಿ ವಿಚಿತ್ರವಾಗಿ ಕೂಗಿಕೊಳ್ಳುತ್ತಿದ್ದೆ. +ಈಗ ಎಲ್ಲ ವಿಚಿತ್ರವಾಗಿ ಕಾಣಿಸುತ್ತಿದೆ. +ಪಾತುಂಞಿ ವಿಚಿತ್ರ ಮುದುಕಿ.ಆಕೆ ತನ್ನನ್ನು ಬೆಳ್ಳೆಕ್ಕಾರನ ಅಂದರೆ ಬ್ರಿಟಿಷ್ ದೊರೆಯೊಬ್ಬನ ಮೊಮ್ಮಗಳು ಅಂತ ತಿಳಿದಿದ್ದಳು.ಕಾಡು ಕಡಿದು ಕಾಫಿತೋಟ ಮಾಡಲು ಬಂದ ಬೆಳ್ಳೆಕ್ಕಾರ ಈ ಪಾತುಂಞಿಯ ಅಜ್ಜಿಯನ್ನು ಮೋಹಿಸಿದ್ದನಂತೆ. ಹಾಗಾಗಿ ಪಾತುಂಞಿ ಅಷ್ಟು ಬೆಳ್ಳಗೆಯಂತೆ.ಪಾತುಂಞಿ ಆ ವಯಸ್ಸು ಕಾಲದಲ್ಲೂ ಅದನ್ನು ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿತ್ತು.ಅದನ್ನು ಎಲ್ಲರಿಗೆ ತೋರಿಸಲು ನದಿಯಲ್ಲಿ ಅರೆ ಬತ್ತಲಾಗಿ ಮೀಯುತ್ತಿತ್ತು. +ಎರಡೋ ಮೂರೋ ಮದುವೆಯಾಗಿ ಅದರಲ್ಲಿ ಅಸಂಖ್ಯಾತ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದಿದ್ದ ಮೌಲಾನ್ ಕುಟ್ಟಿ ಪಾತುಂಞಿ ಎಂಬ ಸುಂದರಿ ಮೀಯುವುದನ್ನು ನೋಡುತ್ತಿತ್ತು. +ತನ್ನ ಮಕ್ಕಳು ಮೊಮ್ಮಕಳ ಎದುರಲ್ಲೂ ನಾಚುಕೆಯಿಲ್ಲದೆ ನೋಡುತ್ತಾ ನಿಲ್ಲುತ್ತಿತ್ತು +‘ನನಗೆ ನಾಚುಕೆ ಏಕೆ? ಅವಳು ನನಗೆ ಮೀಸಲಾಗಿದ್ದವಳು..ಒಂದಲ್ಲ ಒಂದು ದಿನ ಅವಳ ಕುರುಡು ಗಂಡನ ಕೈ ಬಿಡಿಸಿಕೊಂಡು ನನ್ನ ಕೈ ಹಿಡಿದು ಬರಬೇಕಾದವಳು.. +ಆ ವಯಸ್ಸುಕಾಲದಲ್ಲೂ ಮೌಲಾನ್ ಕುಟ್ಟಿ ಪಾತುಂಞಿಯ ಮೇಲಿನ ತಮ್ಮ ನೂರಾರು ವರ್ಷಗಳ ಪ್ರೇಮದ ಕತೆಯನ್ನು ಎಲ್ಲರೆದುರು ಹೇಳಿಕೊಳ್ಳುತ್ತಿದ್ದರು. +ಪಾತುಂಞಿ ‘ಆ ಮುದುಕನಿಗೆ ಮರಳು… ಅವನು ನೂರು ವರ್ಷಗಳಿಂದ ಕಾಯುತ್ತಿದ್ದರೆ ಇನ್ನೂ ನೂರು ವರ್ಷ ಕಾಯಲಿ , ನಾನು ನನ್ನ ಕುರುಡು ಗಂಡನ ಬಿಟ್ಟು ಅವನ ಮಂಚಕ್ಕೆ ಹೋಗುವುದಿಲ್ಲ ಎಂದು ನಟಿಕೆ ಮುರಿಯುತ್ತಿದ್ದಳು. +ನಾನು ಇಂದಿರಮ್ಮ ಎಂಬ ಆಕಳನ್ನು ನದಿಯ ಬದಿಯಲ್ಲಿ ಮೇಯಲು ಬಿಟ್ಟು ಇವರಿಬ್ಬರ ನೂರಾರು ವರ್ಷಗಳ ಪ್ರೇಮ ಸಮರವನ್ನು ಕದ್ದು ಅನುಭವಿಸುತ್ತಿದ್ದೆ. +ಅದು ಅವರಿಬ್ಬರಿಗೂ ಗೊತ್ತಿತ್ತು. ಹಾಗಾಗಿ ಅವರಿಬ್ಬರೂ ಹುಡುಗನಾಗಿದ್ದರೂ ನನಗೆ ಮರ್ಯಾದೆ ತೋರಿಸುತ್ತಿದ್ದರು ಹಾಗೂ ಅವರಿಬ್ಬರು ಒಬ್ಬರನ್ನೊಬ್ಬರು ಹೇಗೆ ಮೋಹಿಸುತ್ತಿದ್ದರೆಂದೂ ಹೇಗೆ ಅವರಿಗೆ ಇನ್ನೊಬ್ಬರಿಂದ ಮೋಸವಾಯಿತೆಂದೂ ವಿವರಿಸುತ್ತಿದ್ದರು. +ನಾನು ಅವರಿಬ್ಬರ ಪ್ರೇಮವಾಗ್ವಾದಗಳಿಂದ ತಪ್ಪಿಸಿ ಕೊಂಡು ನದಿಯ ಬದಿಯಲ್ಲಿ ಕಳೆದು ಹೋದ ಇಂದಿರಮ್ಮ ಎಂಬ ಆಕಳನ್ನು ಹುಡುಕುವವನಂತೆ ಓಡಿಬಿಡುತ್ತಿದ್ದೆ. +* +* +* +ಆ ಹೊಟೇಲಿನ ನೂರಾರು ಕತ್ತಲ ಕೋಣೆಗಳೊಳಗಿನಿಂದ ಏಕಕಾಲದಲ್ಲಿ ನೂರಾರುಗಾಜಿನ ಬಳೆಗಳ ಕಲರವ,ಬೆಳ್ಳಿಕಾಲುಗೆಜ್ಜೆಗಳ ಗಿಜಿಗಿಜಿ, ನಗುವ, ನಿಟ್ಟುಸಿರುಬಿಡುವ, ಮೂಗೆಳೆಯುವ, ಅರೆಯುವ, ತೊಳೆಯುವ, ಗೇರುವ, ಕುಟ್ಟುವ ಸಡಗರ ಬೇಸರದ ಸದ್ದು ಕೇಳಿಬರುತ್ತಿತ್ತೆಂದರೆ, ಭೂಮಿ ಆಕಾಶಗಳನ್ನು ಒಂದು ಮಾಡುವಂತೆ ಎಲ್ಲಕಡೆ ಒಲೆಯಹೊಗೆ ತುಂಬಿಕೊಂಡು ಆ ಹೊಗೆಯ ನಡುವೆ ಒಂದಿಷ್ಟು ಜಾಗ ಮಾಡಿಕೊಂಡು ಒಂದು ಕರಿಹಿಡಿದ ಟೇಬಲಿನ ಮುಂದೆ ಹೊಗೆಗೋ ಅಥವಾ ಯಾತಕ್ಕೋ ಗೊತ್ತಾಗದೆ ಕಣ್ಣಲ್ಲಿ ನೀರು ಸುರಿಸಿಕೊಂಡು ಮೌಲಾನ್ ಕುಟ್ಟಿಯವರು ದಿನದ ಹಣ ಎಣಿಸುತ್ತಾ ಕೂತಿದ್ದಾರೆಂದರೆ ಮೈನಾಡಿನಲ್ಲಿ ಸಂಜೆಯಾಯಿತು ಎಂದು ಅರ್ಥ.ಅಷ್ಟು ಹೊತ್ತಿಗೆ ಮೌಲಾನ್ ಜ್ಯೇಷ್ಟ ಮಗಳಾದ ಸುಹುರಾ ಎಂಬ ನಡುವಯಸ್ಸಿನ ಸುಂದರಿ ಹುಡುಗಿ ಗ್ಯಾಸ್ ಲೈಟಿಗೆ ಗಾಳಿ ಹೊಡೆದು ಕಡ್ಡಿಗೀರಿ ಬೆಳಕು ಎಲ್ಲಕಡೆ ಬುಸ್ಸೆಂದು ಹೊತ್ತಿಕೊಂಡಿತೆಂದರೆ ಇನ್ನು ಸ್ಥಳೀಯ ಗಂಡಸರಿಗೆ ಅಲ್ಲಿ ಕೆಲಸವಿಲ್ಲವೆಂದು ಅರ್ಥ. +ಇನ್ನು ಅಲ್ಲಿ ನಮ್ಮಂತ ಹುಡುಗರಿಗೂ ಕೂರಲು ಅನುಮತಿಯಿಲ್ಲ. ಇನ್ನು ಅಲ್ಲಿ ನಡೆಯುವುದು ಮೌಲಾನ್ ಕುಟ್ಟಿಯವರ ಸ್ತ್ರೀಸಂಸಾರದ ರಾತ್ರಿ ಊಟದ ಹೋಟೆಲು. ಹಗಲೆಲ್ಲ ಮಲಗಿರುವ ಮುದುಕನಂತೆ ಗೊರಗುಟ್ಟಿಕೊಂಡಿರುವ ಅ ಹೋಟೆಲ್ಲು ಇರುಳು ಕವಿಯುತ್ತಿದ್ದಂತೆಯೇ ಜಗಜಗಿಸಲು ತೊಡಗುತ್ತದೆ. +‘ ಇನ್ನು ಹುಡುಗರು ಜಾಗ ಖಾಲಿ ಮಾಡಬಹುದು.. ಎಂದು +ಮೌಲಾನ್ ಕುಟ್ಟಿಯವರ ಮೊದಲನೆಯ ಹೆಂಡತಿ ಖತೀಜುಮ್ಮ ಎಲೆಯಡಿಕೆ ಜಗಿದ ರಸವನ್ನು ಹಿತ್ತಾಳೆಯ ಪೀಕುದಾನಿಗೆ ತುಪ್ಪಿ ಗಹಗಹಿಸಿ ನಕ್ಕರೆಂದರೆ ಇನ್ನು ಮೌಲಾನ್ ಕುಟ್ಟಿಯವರನ್ನೂ ಸೇರಿಸಿದಂತೆ ಸ್ಥಳೀಯ ಗಂಡಸರಿಗಾಗಲೀ ಹುಡುಗರಿಗಾಗಲೀ ಅಲ್ಲಿ ಜಾಗವಿಲ್ಲವೆಂದು ಅರ್ಥ. ನಾವು ಹುಡುಗರು ಉದಾಸೀನರಾಗಿ ಅಷ್ಟುಹೊತ್ತು ಬಿಸಿಮಾಡಿಟ್ಟುಕೊಂಡಿದ್ದ ಬೆಂಚುಗಳನ್ನು ಬಿಟ್ಟು ಏಳಲು ಪಾಡುಪಡುತ್ತಿದ್ದಂತೆ ಮೌಲಾನ್ ಕುಟ್ಟಿಯವರ ಎರಡನೆಯ ಹೆಂಡತಿ ಪಾತುಮ್ಮ ಹಭೆ ಏಳುವ ಬೇಯಿಸಿದ ಮರಗೆಣಸು ತುಂಬಿದ ಬಾಂಡಲಿಯನ್ನು ಎತ್ತಿಕೊಂಡು ಬಂದು ಕಪಾಟಿನೊಳಗಡೆ ಕುಕ್ಕುತ್ತಾರೆ. +ಆ ಇರುಳುಕತ್ತಲಿನಲ್ಲಿ ಹೊರಗೆ ಮಂಜುಕವಿದು ಒಳಗಡೆ ಬೇಯಿಸಿದ ಮರಗೆಣಸಿನ ಹಭೆಕವಿದು ನಂತರ ಮೌಲಾನ್ ಕುಟ್ಟಿಯವರ ಸುಂದರಿಯರಾದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ ಕಾಯಿಸಿದ ಮೀನು,ಒಣಗಿಸಿ ಹುರಿದ ಮಾಂಸ. +ಕಾಡು ಮೊಲದ ಮಾಂಸ ಹಭೆಯಲ್ಲಿ ಬೇಯಿಸಿದ ನೂಲು ಹಿಟ್ಟು, ಕರಿದ ನೇಂದ್ರ, ಹುರಿದ ನೇಂದ್ರ, ಬೇಯಿಸಿದ ನೇಂದ್ರ.. .. ಹೀಗೆ ಒಂದೊಂದೇ ಖಾಧ್ಯಗಳ ಬಾಂಡಲಿಗಳನ್ನು ಹಿಡಿದು ಹೊರಬಂದು ಅಡ್ಡಾಡತೊಡಗಿದರೆಂದರೆ ಅಲ್ಲೊಂದು ಯಕ್ಷಿಗಳ ಲೋಕವೇ ಸೃಷ್ಟಿಯಾಗಿಬಿಡುತ್ತಿತ್ತು. +ಮೌಲಾನ್ ಕುಟ್ಟಿಯವರ ಜೊತೆಗೆ ನಾವು ಹುಡುಗರೂ ಆ ಹೋಟೆಲ್ಲಿನಿಂದ ಜಾಗ ಖಾಲಿಮಾಡುತ್ತಿದ್ದೆವು.ಗಂಡಸರಾದ ನಮ್ಮ ಸದ್ದು ಅಲ್ಲಿಂದ ಅಡಗುತ್ತಿದ್ದಂತೆಯೇ ಅಲ್ಲಿ ಹೆಂಗಸರ ಹೇಳಲಾಗದಂತಹ ಸದ್ದಿನ ಸಂತೆಯೊಂದು ಶುರುವಾಗುತ್ತಿತ್ತು. ಮತ್ತು ಮಲೆಯಮೇಲಿನ ತೇಗದ ಕೂಪಿನಿಂದ ಇಳಿದುಬರುವ ಲಾರಿಗಳು ಒಂದೊದಾಗಿ ಸದ್ದು ಮಾಡುತ್ತಾ ಆ ಹೋಟೆಲಿನ ಮುಂದೆ ನಿಲ್ಲಲು ತೊಡಗಿ ಆ ಲಾರಿಗಳ ಡ್ರೈವರುಗಳೂ ಲೋಡರುಗಳೂ ಕ್ಲೀನರುಗಳಾದ ಹುಡುಗರುಗಳೂ ತಮತಮಗೆ ತಕ್ಕುದಾದ ಗಂಡಸುತನವನ್ನು ತಮ್ಮತಮ್ಮ ಮುಖಗಳಲ್ಲೂ ಮೈಯ್ಯ ಮಾಂಸಖಂಡಗಳಲ್ಲೂ ತೋರಿಸಿಕೊಳ್ಳುತ್ತ ಹೋಟೆಲಿನ ಒಳಗಡೆಹೊಕ್ಕುಬಿಡುತ್ತಿದ್ದರು. +ಮೌಲಾನ್ ಕುಟ್ಟಿಯವರ ಹೋಟೆಲ್ಲಿನಿಂದ ದೂಡಿಸಿಕೊಂಡ ನಾವು ಹುಡುಗರು ಅನಾಥರಂತೆ ನದಿಯಬದಿಯಲ್ಲಿ ಕುಳಿತುಕೊಂಡು ಸಂಜೆಕತ್ತಲಿನಲ್ಲಿ ನದಿಯಿಂದ +ಏಳುವ ಕಾವಳದಲ್ಲಿ ಜಿಗಿಯುವ ಉಸಿರುಬಿಡುವ ನಾನಾತರಹದ ಜಲಜಂತುಗಳನ್ನು ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದೆವು. +ಮೌಲಾನ್ ಕುಟ್ಟಿಯವರು ದಿಕ್ಕುತಪ್ಪಿದವರಂತೆ ಕತ್ತಲಿನಲ್ಲಿ ಎಡವಿಕೊಂಡು ಸೇತುವ ದಾಟಿ ಮಸೀದಿಯ ಅಂಗಳ ಸೇರಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಲು ತೊಡಗುತ್ತಿದ್ದರು +‘ಓ ಅಲ್ಲಾಹುವೇ ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ +‘ಓ ಪ್ರಭುವೇ ನೀನು ನನ್ನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು.. .. +* +* +* +ಪಾತುಂಞಿತಾತಾಳ ಕುರುಡ ಗಂಡನ ಹೆಸರು ಅಲವಿ ಕೋಯಾ ಅಂತ. .ಅವರನ್ನು ಹಲವರು ಕುರುಡು ಕೋಯಾ ಎಂತಲೂ ಇನ್ನು ಕೆಲವರು ಮಾಯದ ಕೋಯಾ ಎಂತಲೂಕರೆಯುತ್ತಿದ್ದರು ಕೋಯಾ ತನ್ನ ಬಿದಿರಿನ ಬಿಡಾರವನ್ನೆಲ್ಲ ಕತ್ತಲು ಮಾಡಿಕೊಂಡು ಎಲ್ಲೋ ಒಂದು ಮೂಲೆಯಲ್ಲಿ ಕಣ್ಣುಬಿಚ್ಚಿಕೊಂಡು ಕುಳಿತುಕೊಂಡುಬಿಟ್ಟರೆ ಮನೆಯೊಳಗೆ ಗಾಳಿ ಅಲ್ಲಾಡುವುದೂ ಆತನಿಗೆ ಕಾಣಿಸುತ್ತಿತ್ತು.ಪಾತುಂಞಿ ಸುಮ್ಮನೆ ಶೆಖೆಗೆ ಅಂತ ಕುಪ್ಪಾಯದ ಒಂದು ಗುಂಡಿ ಸರಿಸಿದರೂ ಆತ ಹೂಂಕರಿಸಿಬಿಡುತ್ತಿದ್ದ.ಆಕೆಯ ಕಾಲ ಸಪ್ಪಳದಿಂದಲೇ ಆಕೆ ಹೋಗುವುದು ನದಿಗೋ ನೀರಿಗೋ ತಂಡಾಸಿಗೋ ಎಂದು ಗೊತ್ತು ಹಿಡಿಯುತ್ತಿದ್ದ.ಅದಕ್ಕೇ ಪಾತುಂಞಿ ಕುರುಡು ಗಂಡ ಕೋಲು ಊರಿಕೊಂಡು ನದಿಯ ಆಚೆ ಕರೆಯ ಮಸೀದಿಗೆ ನಡೆಯುತ್ತಿದ್ದಂತೆ ಕದ್ದು ನದಿಗಿಳಿಯುತ್ತಿದ್ದಳು.ನಮಾಝ್ ಮುಗಿಸಿ ಬಂದ ಕೋಯಾನಿಗೆ ಹೆಂಡತಿ ನದಿಯಲ್ಲಿ ಮೀದು ಬಂದದ್ದು ವಾಸನೆ ಯಿಂದಲೇ ಗೊತ್ತಾಗಿ ಹೋಗುತ್ತಿತ್ತು +ಬೆಕ್ಕಿಗೆ ಕಣ್ಣಿಲ್ಲಾ ಎಂದು ಕಟ್ಟಿಕೊಂಡರೆ ಅದಕ್ಕೆ ಕುಂಡೆಯಲ್ಲೂ ಕಣ್ಣು..ಪಾತುಂಞಿ ಜೋರಾಗಿಯೇ ಗೊಣಗುತ್ತಿದ್ದಳು. ಕುರುಡ ಕೋಯಾ ಹೆಂಡತಿಯನ್ನು ಮನೆಯೆಲ್ಲಾ ಅಟ್ಟಾಡಿಸಿಕೊಂಡು ಹೊಡೆಯಲು ಹೋಗಿ ಗೋಡೆಗೆ ಡಿಕ್ಕಿ ಹೊಡೆಯುತ್ತಿದ್ದ ಈ ಬೆಳ್ಳಗಿನ ಹೆಣ್ಣಿನ ಮೈ ಕಾಣುವವರು ಯಾರೂ ಮುಟ್ಟಬಾರದು ಅಂತ ಕುರುಡನನ್ನು ಕಟ್ಟಿಕೊಂಡರೆ ಇವನು ಮೂರುಕಣ್ಣಿನವನಾದನಲ್ಲ ಪಡೆದವನೇ ಎಂದು ಪಾತುಂಞಿ ಅವನಿಂದ ತಪ್ಪಿಸಿಕೊಳ್ಳುತ್ತಾ ಬೊಬ್ಬೆ ಹೊಡೆಯುತ್ತಿದ್ದಳು +ಹಾಗಾಗಿ ಅಲವಿಕೋಯಾ ಆದಷ್ಟು ಮನೆಯಮುಂದಿನ ಮಣ್ಣಿನ ಹಾಸಿನಲ್ಲೇ ಆದಷ್ಟು ನಮಾಝು ಮಾಡಿಮುಗಿಸುತ್ತಿದ್ದರು ಮತ್ತು ಶುಕ್ರವಾರದಂದು ಮಾತ್ರ ಮಸೀದಿಗೆ ಹೋಗಿಬರುತ್ತಿದ್ದರು.ಅಥವಾ ಪಾತುಂಞಿಯ ಜೊತೆ ತಾನೂ ತಡಕುತ್ತಾ ನದಿಗೆ ನಡೆದು ದಡದಲ್ಲಿ ಕೂತುಬಿಡುತ್ತಿದ್ದರು.ಆಗ ಮಾತ್ರ ಪಾತುಂಞಿ ಬೆತ್ತಲಾಗುತ್ತಿರಲಿಲ್ಲ…ಮತ್ತು ಮೌಲಾನ್ ಕುಟ್ಟಿಯವರು ನದಿಯ ಬದಿಗೆ ಸುಳಿಯುತ್ತಿರಲಿಲ್ಲ. ಮತ್ತು ನಾನು ಇಂದಿರಮ್ಮ ಎಂಬ ಆಕಳನ್ನು ಕುರುಡ ಕೋಯನಿಗೆ ಸದ್ದು ಕೇಳಿಸದ ಹಾಗೆ ನದಿ ದಾಟಿಸಿ ಕರೆದೊಯ್ದು ಬಿಡುತ್ತಿದ್ದೆ +* +* +* +ಅದೆಲ್ಲಿಂದಲೋ ಮಸೀದಿಯಿಂದ ಸಂಜೆಯ ಉಪವಾಸ ಮುಗಿಸುವ ಬಾಂಗಿನ ಕೂಗು ಕ್ಷೀಣವಾಗಿ ಹಸಿದ ಹೊಟ್ಟೆಯೊಳಗಿಂದ ಕೇಳಿಬರುವ ದೀನಕೂಗಿನಂತೆ ಕೇಳಿಬರುತ್ತಿದ್ದಂತೆ ಮಲಗಿಕೊಂಡಂತಿದ್ದ ಆ ನಗರ ಸೆಟೆದುಕೊಂಡು ಅಲ್ಲಾಡಲು ತೊಡಗಿತು.ಅದೆಲ್ಲೋತೆರೆದುಕೊಳ್ಳಲು ತೊಡಗಿದಹೋಟೆಲ್ಲುಗಳು, ಗ್ಲಾಸಿನಸದ್ದು, ತಿನ್ನುವಸದ್ದು, ಖರ್ಜೂರ,ಗಸಗಸೆ,ಹುರಿದಮೊಟ್ಟೆ,ಮೆಂತೆಯಪಾಯಸ, ಸುಲಿದ ಕಿತ್ತಳೆಯಪರಿಮಳ.. +ಮಳೆ ನಿಂತು ಆಕಾಶ ಒಂದುತರಹದ ಹಳದಿಯಿಂದ ತುಂಬಿಕೊಂಡು ಕುಡಿದವರು ಕುಡಿಯದವರು ಉಪವಾಸವಿದ್ದವರು ಇರದಿದ್ದವರು ಎಲ್ಲರೂ ಆ ಹಳದಿ ಬೆಳಕಿನಲ್ಲಿ ವಿಚಲಿತರಾಗಿ ನಡೆಯುತ್ತಿರುವವರಂತೆ ತೋರುತ್ತಿದ್ದರು ಮೌಲಾನ್ ಕುಟ್ಟಿ ಮತ್ತು ಪಾತುಂಞಿ ಎಂಬ ಅಮರ ಪ್ರೇಮಿಗಳು ಅದಾಗ ತಾನೇ ತೆರೆದುಕೊಂಡ ಹೋಟೆಲ್ಲೊಂದರ ಮುಂದೆ ದೀನರಾಗಿ ನಿಂತು ಕೊಂಡು ಉಪವಾಸ ಮುರಿಯಲು ಏನನ್ನಾದರೂ ತಿನ್ನಲು ಕೊಡಲು ಕೈಯೆತ್ತಿ ಬೇಡಿಕೊಳ್ಳುತ್ತಿದ್ದರು +‘ಇಹ ಲೋಕದಲ್ಲಿ ಕೈಯೆತ್ತಿ ಕೊಟ್ಟರೆ ಪರಲೋಕದಲ್ಲಿ ಆ ಪಡೆದವನು ನಿಮಗೆ ಕೈಯೆತ್ತಿ ನೀಡುತ್ತಾನೆ ಮಕ್ಕಳೇ’ ಮೌಲಾನ್ ಕುಟ್ಟಿಯವರು ಎರಡೂ ಕೈಗಳನ್ನೆತ್ತಿ ಒಮ್ಮೆ ಆಕಾಶನೋಡುತ್ತಾ ಇನ್ನೊಮ್ಮೆ ಹೋಟೆಲ್ಲಿನಿಂದ ಹೊರಬರುವ ತಿಂದುಂಡ ಬಾಯಿಗಳನ್ನು ಆಸೆಯಿಂದ ನಿರುಕಿಸುತ್ತಾ ನಾಲಿಗೆ ತೀಡಿಕೊಳ್ಳುತ್ತಾ ಕೇಳಿಕೊಳ್ಳುತ್ತಿದ್ದರು ‘ಈ ವಯಸ್ಸಾದ ಯತೀಂ ಮುದುಕರ ಉಪವಾಸ ಬಿಡಿಸಿದರೆ ಮೂವತ್ತೂ ಉಪವಾಸ ಮಾಡಿದ ಕೂಲಿ ಪರಲೋಕದಲ್ಲಿ ಸಿಗುತ್ತದೆ ನನ್ನ ಮುದ್ದು ಮಕ್ಕಳೇ ಪಾತುಂಞಿ ತಾತಾ ಮೋಹಕವಾಗಿ ಕೂಗಿಕೊಳ್ಳುತ್ತಿದ್ದಳು. +ಮುದುಕಿಯಾದರೂ ಇನ್ನೂ ಹಾಗೇ ಇರುವ ಆಕೆಯ ಬೆಳದಿಂಗಳಂತಹ ಮೈ.. ಆಕೆಯ ತುಟಿಯ ಮೇಲಿನ ಕಪ್ಪಗಿನ ಕೆಡು.. ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವೀರಾಜಪೇಟೆಯ ಆ ಸಂಜೆ.. ಉಪವಾಸ ಮುರಿದು ತಲೆಗೆ ಬೆಳ್ಳಗಿನ ಬಟ್ಟೆ ಕಟ್ಟಿಕೊಂಡು ಪ್ರಾರ್ಥಿಸಲು ಮಸೀದಿಗೆ ದಾವಿಸುತ್ತಿರುವ ಮಂದಿ.. +ಯಾಕೋ ಕಣ್ಣು ತುಂಬಿಕೊಳ್ಳತೊಡಗಿ ನಗು ಬಂತು. +ಬಂದ ಬಸ್ಸುಗಳನ್ನೆಲ್ಲ ತಪ್ಪಿಸಿ ಕೊಂಡು ಎಲ್ಲಿಗೆ ಯಾಕಾದರೂ ಹೋಗಬೇಕೆಂದು ನನ್ನ ಬಾಲ್ಯ ಕಾಲದ ಈ ಪುರಾತನ ಪ್ರೇಮಿಗಳನ್ನು ಕಣ್ಣೆವೆ ಬಿಡಿಸದೆ ಸುಮ್ಮನೆ ನೋಡುತ್ತಿರುವ ನಾನು.. ಉಪವಾಸವೂ ಇರದೆ ಪಡೆದವನನ್ನೂ ಕಾಣದೆ ನಾನಾ ಖಯಾಲಿಗಳಲ್ಲಿ ಮುಳುಗಿರುವ ನಾನು.. +ಅವರಿಬ್ಬರನ್ನು ಕರೆದು ಹೋಟೆಲ್ಲಿನೊಳಗೆ ಕೂರಿಸಿ ಅಪರಿಚಿತನಂತೆ ನಟಿಸುತ್ತಾ ಅವರ ಉಪವಾಸ ಬಿಡಿಸಿದೆ. ಅವರು ನೂರಾರು ದಿನಗಳಿಂದ ಉಪವಾಸ ಇದ್ದವರಂತೆ ತಿನ್ನುತ್ತಿದ್ದರು. +ತಿಂದು ಮುಗಿಸಿದ ಮೌಲಾನ್ ಕುಟ್ಟಿಯವರು ಸುಮ್ಮನೇ ತೇಗುತ್ತಿದ್ದರು.ತಿಂದು ಮುಗಿದಮೇಲೆ ಪಾತುಂಞಿ ತಾತಾ‘ನಿನ್ನ ಪಡೆದವನು ರಹಮತ್ತಿನಲ್ಲಿ ಇಡಲಿ ಮಗನೇ..ಎಂದರು +ಆಮೇಲೆ ಕೊಂಚ ತಡೆದು‘ ನಿನ್ನದು ಎಲ್ಲಿಯಾಯಿತು ಮಗನೇ ಎಂದು ಕೇಳಿದಳು ಯಾಕೋ ಸುಳ್ಳು ಹೇಳಬೇಕೆನಿಸಿತು ಇಲ್ಲೇ ಕೇರಳದಲ್ಲಿ..ಇರಿಟ್ಟಿಯ ಹತ್ತಿರ.. ಇಲ್ಲಿ ಶುಂಠಿ ವ್ಯಾಪಾರಕ್ಕೆ ಬಂದಿರುವೆ..ಎಂದು ಹೇಳಿಬಿಟ್ಟೆ. ಮೌಲಾನ್ ಕುಟ್ಟಿಯವರು ತೇಗುವುದು ಮುಗಿದು ಅಲ್ಲೇ ಹೋಟೆಲಿನೊಳಗೇ ಪ್ರಾರ್ಥಿಸಲು ಶುರುಮಾಡಿದರು ‘ಪಡೆದವನೇ..ಎಲ್ಲಿಂದಲೋ ಬಂದು ನಮಗೆ ಈ ದಿನದ ಉಪವಾಸ ಮುರಿಸಿದ ಈ ಮಗುವಿಗೆ ಇಹದಲ್ಲೂ ಪರದಲ್ಲೂ ಬರಕತ್ತನ್ನೂ ರಹಮತ್ತನ್ನೂ ಕರುಣಿಸು ಪಡೆದವನೇ ಅಂತಿಮ ದಿನದಂದು ಇವನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು ಕರುಣಾಮಯನಾದ ಅಲ್ಲಾಹುವೇ.. +ನಮ್ಮ ಇಂದಿರಮ್ಮ ಎಂಬ ಆಕಳುಸತ್ತುಹೋಗಿದ್ದು ಮತ್ತು ಪಾತುಂಞಿ ತಾತಾಳ ಗಂಡ ಕುರುಡ ಕೋಯಾ ತೀರಿಹೋಗಿದ್ದು ಒಂದೇದಿನದಲ್ಲಿ ಮತ್ತು ಒಂದೇ ನದಿಯಲ್ಲಿ.. ಸುಮಾರು ಕಾಲು ಶತಮಾನದ ಹಿಂದೆ ಇಂತಹದೇ ಒಂದು ಸಂಜೆ ಮೈನಾಡಿನ ನದಿಯಲ್ಲಿ ಪಾತುಂಞಿ ನದಿಯ ನೀರಲ್ಲಿ ಮುಳುಗು ಹಾಕುತ್ತಿರುವಾಗ ಪಾಪದ ಆಕಳು ನಾನಿಲ್ಲದೆ ನದಿ ದಾಟಲು ಹೋಗಿ ನೀರಲ್ಲಿ ಸಿಲುಕಿ ಪಾತುಂಞಿ ಬೊಬ್ಬೆ ಹಾಕಿದಳಂತೆ.ಕುರುಡು ಕೋಯ ನದಿಗೆ ಹಾರಿದನಂತೆ.ನಾವು ಶಾಲೆ ಬಿಟ್ಟು ಬಂದಾಗ ಆಕಳ ದೇಹ ಮತ್ತು ಕುರುಡು ಕೋಯನ ಶರೀರ ಎರಡನ್ನೂ ದಡದಲ್ಲಿ ಮಲಗಿಸಿ ಪಾತುಂಞಿ ಪಡೆದವನಿಗೆ ಶಾಪ ಹಾಕುತ್ತಿದ್ದಳು.ಮೌಲಾನ್ ಕುಟ್ಟಿಯವರು ನೋಡುತ್ತಿದ್ದರು.. +ನಾವು ಮಕ್ಕಳು ಅಳುತ್ತಿದ್ದೆವು.. +ಪ್ರಿಯ ಓದುಗರೇ, +ಈ ಕತೆ ಹೇಗೆ ಮುಗಿಸುವುದು ಎಂದು ಕುಳಿತಿರುವಾಗಲೇ ಮೌಲಾನ್ ಕುಟ್ಟಿಯವರು ತೀರಿ ಹೋದ ಸುದ್ದಿ ಬಂದಿದೆ +ಪಾತುಂಞಿ ತೀರಿಹೋದ ಅವರ ದೇಹದ ಬಳಿ ಇದ್ದಳಂತೆ ಮತ್ತು ಮೌಲಾನ್ ಕುಟ್ಟಿಯವರ ದೇಹವನ್ನು ದಫನಕ್ಕೆ ಮೈನಾಡಿನ ಖಬರ ಸ್ಥಾನಕ್ಕೆ ಕೊಂಡು ಹೋಗುವಾಗ ಪಡೆದವನಿಗೆ ಶಾಪ ಹಾಕುತ್ತಿದ್ದಳಂತೆ.ಮತ್ತು ಈಗಲೂ ಅವಳ ಬಿದಿರಿನ ಬಿಡಾರವನ್ನು ಕತ್ತಲೆ ಮಾಡಿಕೊಂಡು ಕೂತಿರುತ್ತಾಳಂತೆ. +ಎಲ್ಲರ ಆತ್ಮಕ್ಕೂ ಶಾಂತಿಯಿರಲಿ +***** +ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು […] +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_166.txt b/Kannada Sahitya/article_166.txt new file mode 100644 index 0000000000000000000000000000000000000000..eb8acc87715ab526ee5c3b4266e33308ad7c84f8 --- /dev/null +++ b/Kannada Sahitya/article_166.txt @@ -0,0 +1,81 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ ಕುಳಿತಾಗ ಮೊದಲೆಲ್ಲ ತಂದದ್ದನ್ನು ಹಂಚಿಕೊಳ್ಳುವಷ್ಟು ಪ್ರೇಮವಿತ್ತು ಅವರಲ್ಲಿ. ಅವಳು ಬಂದಮೇಲೆ ಎಲ್ಲಿ ತನ್ನ ಊಟದಲ್ಲಿಯೂ ಪಾಲು ಕೊಡುತ್ತಾಳೋ ಎನ್ನುವ ಭಯದಿಂದ ಆ ಪ್ರೀತಿ ತನ್ನಷ್ಟಕ್ಕೆ ತಾನೇ ಮಾಯವಾಗಿತ್ತು. ಒಂದಿಷ್ಟೂ ಸುಳಿವು ಕೊಡದೆ. ಇದು ದೇವಕಿಗೇನೋ ದುಃಖದ ಸಂಗತಿ. ಆದರೆ ಅವಳಾದರೂ ತಾನೆ ಏನು ಮಾಡಬಲ್ಲಳು? ಆ ಜಾತಿಯಲ್ಲಿ ಹುಟ್ಟಿದ್ದು ತನ್ನ ತಪ್ಪೇನಲ್ಲ, ಆ ಜಾತಿಯನ್ನು ಹುಟ್ಟಿಸಿದವರದ್ದೇ ತಪ್ಪು ಎನ್ನುವ ವಾದ ಅವಳದು. ಹಾಗೆಂದು ವಾದ ಬೆಳೆಸುವವಳೂ ಅವಳಲ್ಲ. ಅಷ್ಟೇ ಅಲ್ಲ, ಕೀಳರಿಮೆಯಿಂದ ಅವರ ಮುಂದೆ ಕುಗ್ಗಿ ನಡೆಯುವದು ದೌರ್ಬಲ್ಯವೆಂದುಕೊಂಡಿದ್ದಳು. ಅವರಾದರೂ ಊಟ ಅಡುಗೆಯ ವಿಷಯದಲ್ಲಿ ಅಷ್ಟು ಕಟ್ಟುನಿಟ್ಟಾದರೂ ಉಳಿದುದರಲ್ಲಿ ಸ್ನೇಹಿತರೇ. +“ದೇವಕೀ, ನಿಮ್ಮ ಸೀರಿ ಎಷ್ಟ ಛಂದ ಅದ, ಎಲ್ಲಿ ಕೊಂಡಿರಿ?” ಎಂದು ಶ್ಯಾಮಲಾ ಕೇಳಿದರೆ- +“ದೇವಕೀ. ನಿಮಗ ಕರ್ರಗ ಮೊಣಕಾಲತನಾ ಉದ್ದ ಕೂದಲು ಅದಾವ, ಯಾವ ಎಣ್ಣೀ ಹಚ್ತೀರಿ?” ಮಂದಾಕಿನಿ ವಿಚಾರಿಸುವಳು. +“ಶುದ್ಧ ನಾರಿಯಲ್ ತೇಲ್” ಎಂದು ಟಿ.ವಿ. ಜಾಹಿರಾತಿನಂತೆ ಕಣ್ಣು ತಿರುಗಿಸುತ್ತ ದೇವಕಿ ಹೇಳುವಾಗ ಎಲ್ಲರೂ ನಕ್ಕುಬಿಡುವರು. +“ನಿಮ್ಮ ದನಿ ಕೋಗಿಲೆ ಹಾಂಗ ಎಷ್ಟ ಮಧುರ ಅದ ದೇವಕಿ, ಈ ಸಾರೆ ವಾರ್ಷಿಕೋತ್ಸವಕ ಮಕ್ಕಳಿಗೆ ಗ್ರುಪ್‌ಸಾಂಗ್ ನೀವ ಕಲಸರಿ” ಎಂದು ಸರಿತಾ ಉಪಾಯವಾಗಿ ಹೊಣೆ ಹೊರಿಸುವಳು. +“ನಮ್ಮ ಶಾಲೆಯ ಲತಾ ಮಂಗೇಶಕರ ನಾನೇ” ಎಂದು ಅವರ ಪ್ರಶಂಸೆಯನ್ನು ನಗೆಯಲ್ಲಿ ತೇಲಿಸಿಬಿಡುವಳು ದೇವಕಿ- +ಆ ದಿನ ಶ್ಯಾಮಲಾಳ ಮುಖ ಬಾಡಿತ್ತು, ಕಣ್ಣು ಕೆಂಪಾಗಿತ್ತು. “ಯಾಕ್ರೀ ಶ್ಯಾಮಲಾ, ಏನಾಗೆದ? ಆರಾಮ ಅದೀರಿಲ್ಲೊ?” ದೇವಕಿಯ ಮೆತ್ತಗಿನ ದನಿಯಲ್ಲಿಯ ಪ್ರೀತಿ ಶ್ಯಾಮಲಾಳ ದುಃಖಕ್ಕೆ ಚಾಲನೆ ಕೊಟ್ಟಿತು. +ಏನೂ ಇಲ್ಲ ಎನ್ನುತ್ತಲೇ ಅಳುತ್ತ ಎಲ್ಲ ಹೇಳಿದಳು ಶ್ಯಾಮಲಾ. ಅವಳ ತಾಯಿಗೆ ಜಡ್ಡಾಗಿದೆ. ತಮ್ಮ, ಹಣಕ್ಕಾಗಿ ಪತ್ರ ಬರೆದಿದ್ದಾನೆ. ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸುವ ಗಂಡ ಹಣ ಕೊಡಲು ತಯಾರಿಲ್ಲ. ತವರಿನವರ ಕಷ್ಟಕ್ಕೆ ಸಹಾಯ ಮಾಡಬೇಕೆಂಬ ಮನಸ್ಸಿಗೆ ನೋವಾಗುತ್ತಿದೆ. ಗಂಡ ಇವಳ ಪೂರ್ತಿ ಸಂಬಳ ಬ್ಯಾಂಕಿಗೆ ಹಾಕುತ್ತಾನೆ. ತನ್ನ ಖರ್ಚಿಗೆ ಬೇಕಾದರೂ ಜಗಳ ಮಾಡಿ ಪಡೆಯಬೇಕು. ದೇವಕಿಗೆ ಆಶ್ಚರ್ಯ, ಸಿಟ್ಟು. ಅವಳು ದುಡಿದ ಹಣದ ಮೇಲೆ ಅವಳಿಗೆ ಹಕ್ಕಿಲ್ಲವೇ? ಶ್ಯಾಮಲಾಳ ಗಂಡ ಜಿಪುಣ, ಮಂದಾಕಿನಿ ಗಂಡ ತವರುಮನೆಯಿಂದ ತಾ ಎಂದು ಬರೆ ಹಾಕ್ತಾನೆ. ಸರಿತಾನ ಅತ್ತೆ ಅವಳು ಬಂಜೆ ಎಂದು ಎಲ್ಲರೆದುರು ಹೀಯಾಳಿಸಿ, ಹಿಂಸೆ ಮಾಡ್ತಾಳೆ. ಎಂಥ ಹೆಂಗಸರಿವರು, ಎಷ್ಟೊಂದು ನೋವು ನುಂಗ್ತಾರೆ, ಮತ್ತೆ ತಮ್ಮ ಸಮಾನರು ಯಾರಿಲ್ಲ ಅಂತ ಸೊಕ್ಕು ಮಾಡ್ತಾರೆ. ಕಣ್ಣೀರಿನಲ್ಲಿ ಕೈ ತೊಳೀತಾರೆ. ಸಹಿಸಲಿಕ್ಕೆ ಆಗದಿದ್ದಾಗ ಜೀವಾ ಕೊಡ್ತಾರೆ. ಎದುರಿಸಿ ನಿಲ್ಲೋ ಅಷ್ಟು ಛಾತೀನೇ ಇಲ್ಲ ಇವರಲ್ಲಿ. ಕಲಿತವರೂ ಅಷ್ಟೇ, ಮೇಲ್ಜಾತಿಯವರಾದರೇನು, ನಮ್ಮವರಾದರೇನು ಒಬ್ಬೊಬ್ಬರದು ಒಂದೊಂದು ತರದ ದೌರ್ಬಲ್ಯ, ಮೂರ್ಖತನ, ಹೇಡಿಗಳು-ದೇವಕಿ ವಿಚಾರ ಮಾಡುತ್ತ ಕೈ ತೊಳೆಯಲು ಎದ್ದಾಗ ಕೋಣೆ ಖಾಲಿಯಾಗಿತ್ತು. ಮರುದಿನ ದೇವಕಿ ಶ್ಯಾಮಲಾಳಿಗೆ ನೂರು ರೂಪಾಯಿ ಕೊಟ್ಟಿದ್ದಳು. ಅವಳು ತಿರುಗಿ ಕೊಡ್ತಾಳೆ ಎನ್ನುವ ಭರವಸೆಯೂ ಇಲ್ಲದೆ. +ತನ್ನ ಹಿಂದೆ ತನ್ನ ಬಗ್ಗೆ ಏನು ಮಾತಾಡ್ಕೊಳ್ತಾರೆ ಎನ್ನುವ ಬಗ್ಗೆ ದೇವಕಿ ಎಂದೂತಲೆ ಕೆಡಿಸಿಕೊಂಡವಳಲ್ಲ. ಕ್ಲಾಸು ಮುಗಿಸಿ ಡಬ್ಬಿ ಹಿಡಿದು ಬರುವುದು ಒಂದು ದಿನ ತಡವಾದಾಗ ಶ್ಯಾಮಲಾ ಮಂದಾಕಿನಿಗೆ ಹೇಳುತ್ತಿದ್ದ ಮಾತು ಕಿವಿಗೆ ಬಿತ್ತು. +“ಗಂಡನ್ನ ಬಿಟ್ಟು ಬಂದು ಆರಾಮ ಚೈನೀ ಅದಾಳ ತಾನೊಬ್ಬಳ, ಇಂಥವರಿಗೆಲ್ಲಾ ಏನ ನೀತಿ-ನಡಾವಳಿ ಇರ್ತದ, ಮನಸ್ಸಿಗಿ ಬಂದದ್ದ ಮಾಡತಾರ.” +ಅವರ ಮಾತು ಕಿವಿಗೆ ಬಿದ್ದೇ ಇಲ್ಲವೆನ್ನುವಂತೆ ಒಳಗೆ ಬಂದು ಎಲ್ಲರನ್ನೂ ನೋಡಿ ನಗು ತೂರಿ ಡಬ್ಬಿ ಬಿಚ್ಚಿದಳು. ಶ್ಯಾಮಲಾ ಮಾತ್ರ ತಗ್ಗಿಸಿದ ತಲೆ ಎತ್ತಿರಲಿಲ್ಲ. +ತನ್ನ ಬಗ್ಗೆ, ತನ್ನ ಹಿಂದಿನ ಜೀವನದ ಬಗ್ಗೆ ಇವರಿಗೆಲ್ಲ ಏನು ಗೊತ್ತಿದೆ? ತನ್ನ ಮನೆ ಎಲ್ಲಿದೆ. ಮನೆಯಲ್ಲಿ ಯಾರಾರಿದ್ದಾರೆ ಎನ್ನೋದು ಗೊತ್ತಿಲ್ಲ. ತನ್ನ ಗಂಡ ಯಾರು ಅನ್ನೋದು ಇವರಿಗೆ ಗೊತ್ತಿಲ್ಲ. ಈ ದಿನ ತನ್ನ ಮನೆಯಲ್ಲಿ ಏನಾಗಿದೆ? ತನಗೆ ಏನು ಕಷ್ಟ ಇದೆ, ಹ್ಯಾಗೆ ಜೀವನ ಮಾಡ್ತೀನಿ-ಉಹು ತಿಳಕೊಳ್ಳೋದರಲ್ಲಿ ಯಾರಿಗೂ ಆಸಕ್ತಿ ಇಲ್ಲ. ಇಂಥವರ ಮುಂದೆ ನಾನು ನನ್ನ ಸುಖ-ದುಃಖ ತೋಡಿಕೊಳ್ಳಲೇ? ಉಹುಂ, ನನ್ನ ಅಭಿಮಾನ ಒಪ್ಪೋದಿಲ್ಲ-ಢಣ್‌ಢಣ್ ಶಾಲೆಯ ಗಂಟೆ ದೇವಕಿಯನ್ನು ಎಚ್ಚರಿಸಿ ಮನೆಗೆ ಓಡುವಂತೆ ಮಾಡಿತು. +ದೇವಕಿಯ ಕೈ ಮಗಳನ್ನು ತಟ್ಟುತ್ತಿದ್ದರೂ ಬಾಗಮ್ಮನ ಮುಖವೇ ಕಣ್ಣಮುಂದೆ ಕಟ್ಟಿತ್ತು. ಜ್ವರ ಬಂದ ಕಿರಣಳನ್ನು ಸಂಜೆಯವರೆಗೆ ನೋಡಿಕೊಂಡಿದ್ದಳು. ಆದರೆ ಇವತ್ತು ಅವಳಿಗೆ ಅವಸರದಲ್ಲಿ ಏನೂ ತಂದಿರಲಿಲ್ಲ. ಎಲೆ ಅಡಿಕೆ, ನಾಶೀಪುಡಿ ಏನಾದರೂ ತರಬೇಕಿತ್ತು. ತನ್ನ ಖಾಲಿ ಕೈ ನೋಡಿ ಬಾಗಮ್ಮನವರ ಮುಖ ಗಂಟಾಗಿತ್ತು. ನಿರಾಶೆಯಿಂದ ಮುಖ ತಿರುವಿದ್ದಳು. ಆದರೆ ಹೀಗೆ ತಂದುಕೊಡುವ ಆಸೆಯನ್ನು ಹಚ್ಚಿದವಳು ತಾನೆ. ಮೊದಮೊದಲು ಮುದುಕಿ ಏನೂ ಬೇಡ ಬೇಡ ಎನ್ನುತ್ತಿದ್ದಳು. ಈಗೀಗ ಏನಾದರೂ ತರದಿದ್ದರೆ ಸಿಟ್ಟು ಬರುತ್ತದೆ ಬಾಗಮ್ಮನಿಗೆ… +ಗೌತಮ ಬುದ್ಧ ಹೇಳಿದ್ದು ಸತ್ಯ. ‘ಅಸೆಯೇ ದುಃಖಕ್ಕೆ ಮೂಲ’ ಎಂದು ಹೇಳಿದ ಬುದ್ದ ಆಸೆಯನ್ನು ಗೆದ್ದು ಮಹಾಪುರುಷನಾದ. ಆದರೆ ತನ್ನ ಗುರು, ಮಾರ್ಗದರ್ಶಿ, ಕೇರಿಯ ಯುವಕರ ನಾಯಕ ತನ್ನ ಶ್ರೀಧರಣ್ಣ ಏನಾದ? ಬುದ್ಧನ ತತ್ತ್ವಗಳಿಗೆ ಮರುಳಾಗಿ ಬೌದ್ದನಾಗಿ ನಮ್ಮ ಕೇರಿಯನ್ನು ಬಿಟ್ಟು ಒಳ್ಳೆಯ ಬೀದಿಗೆ, ಅಂತಸ್ತಿಗೆ, ಮಹಡಿ ಮನೆಗೆ, ಬದಲಾಗುತ್ತ ಹೋದ ಶ್ರೀಧರಣ್ಣ ಎತ್ತರಕ್ಕೆ ಏರಲು ಹೋಗಿ ಕೆಳಗೆ ಬಿದ್ದುಬಿಟ್ಟಿದ್ದ. ನಾವಿದ್ದ ಜಾಗದಿಂದಲೇ ಮೇಲೆ ಹೋಗೋದಕ್ಕೆ ಸಾಧ್ಯವಿಲ್ಲವೇ? ಯಾಕಿಲ್ಲ? ಮನುಷ್ಯ ಬದಲಾಗಬೇಕೆ ಹೊರತು ಒಂದಂಗಿ ಬಿಟ್ಟು ಇನ್ನೊಂದನ್ನು ತೊಡುವ ಹಾಗೆ ಆಗಬಾರದು. ಧರ್ಮ ಬದಲಾದರೆ ಒಳಗಿನ ಆಸೆ, ರೋಷ, ದುಷ್ಟತನ ಎಲ್ಲ ಹೋಗಿಬಿಡುತ್ತವೆಯೆ ಎಂದು ಅವನೊಡನೆ ತುಂಬಾ ಜಗಳಾಡಿದೆ. ‘ನೀನೂ ಸದಾಶಿವನ ಹಾಂಗ ಮಾತಾಡಬ್ಯಾಡಾ’ ಅಂದ. ‘ಯಾರು ಸದಾಶಿವ’ ಅಂದೆ, ತನ್ನ ಗೆಳೆಯನ ಪರಿಚಯ ಮಾಡಿ ಕೊಟ್ಟ…. +‘ನಿನ್ನ ಸೀದ್ರಣ್ಣ ಬೌದ್ಧ ಆಗಿ ಆನಂದ ಆಗಲಿಕ್ಕೆ ಹೊಂಟಾನ, ನೀ ಏನ ಆಗ್ತೀ” ಸದಾಶಿವ ಮೊದಲನೇ ಪ್ರಶ್ನೆ ಎಸೆದಿದ್ದ. +“ಈ ಮಾತಿನಿಂದ ಅಣ್ಣನ ಕೂಡ ಮನ್ಯಾಗ ದಿನಾ ಜಗಳಾಡತೀನಿ. ಅಂವಾ ಕೇಳವೊಲ್ಲ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ”. +“ಹೌದು, ನೀ ಅನ್ನೋದು ಖರೆ ಐತಿ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ. ನಾನು, ಸಂಘದ ಗೆಳೆಯರು ಎಲ್ಲಾರೂ ಕೂಡಿ ಭಾಳ ಪ್ರಯತ್ನ ಮಾಡಿದಿವಿ. ಏನೂ ಉಪಯೋಗ ಆಗಲಿಲ್ಲ. ಅಂವಾ ಅಂತೂ ನಮ್ಮ ಕೈ ಬಿಟ್ಟ ಹೊಂಟಾನ, ನೀ ಏನ ಮಾಡೂವಾಕಿ ಹೇಳ. ಇಲ್ಲೇ ಅಪ್ಪ-ಅವ್ವನ ಕೂಡ ಇರ್ತೀಯೋ, ನೀನೂ ಹೋಗ್ತಿಯೊ?” +“ನಮ್ಮಪ್ಪ-ಅವ್ವ, ತಮ್ಮಂದಿರು ಎಲ್ಲಾರೂ ಅಣ್ಣನ ಕೂಡ ಹೋಗಲಿಕ್ಕೆ ಒಂಟಿಗಾಲ ಮ್ಯಾಲ ನಿಂತಾರ. ನಾ ಮಾತ್ರ ಗಟ್ಟಿ ಮನಸ ಮಾಡೇನಿ. ನಾ ಒಬ್ಬಾಕಿ ಆದರೂ ಅಡ್ಡಿಯಿಲ್ಲಾ, ಇಲ್ಲೇ ಕೇರಿಯೊಳಗ ಇದ ಗುಡಿಸಲದಾಗ ನಾ ಇರಾಕಿ.” +“ಹೊಟ್ಟಿಗೆ ಏನ್ಮಾಡ್ತಿ?” +“ಪಿ.ಯು.ಸಿ. ಪಾಸಾಗೇನಿ.ಎಲ್ಲೆರ ಕೆಲಸಾ ಹುಡಕತೇನಿ, ಯೋಗೀಶ ಪ್ರಿಂಟಿಂಗ ಪ್ರೆಸ್ಸಿನ್ಯಾಗ ಕೆಲಸಾ ಕೊಡಸ್ತೀನಿ ಅಂದಾನ ನಮ್ಮ ಸಂಘದ ಕೆಲಸಾ ಮಾಡತೇನಿ. ನಮ್ಮ ಜನರಿಗೆ ತಿಳವಳಿಕಿ ಹೇಳ್ತೀನಿ. ಅವರಿಗೆ ಆಗೂ ಅನ್ಯಾಯ, ಅತ್ಯಾಚಾರಾ ಎದುರಿಸತೀನಿ” ಆವೇಶದಿಂದ ಹೇಳಿದೆ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಮೂಡಿತ್ತು. +“ವಾಹ್‌ರೇ ಹುಡುಗೀ. ಇನ್ನೂತನಾ ನಿನ್ನಂಥಾ ಹುಡೂಗೀನ ನನಗ ಸಿಕ್ಕಿದ್ದಿಲ್ಲಾ.” ಅವನ ಹೊಗಳಿಕೆ ತನ್ನ ಕಪ್ಪು ಕೆನ್ನೆಗಳನ್ನು ಕೆಂಪಾಗಿಸಿದ್ದು ಅವನಿಗೆ ಕಾಣುವುದು ಹೇಗೆ ಸಾಧ್ಯ? ಹಾಗೇ ಮಾತು ಮುಂದುವರಿಸಿದ್ದ. “ನಿನ್ನ ಛಲ, ದಿಟ್ಟಿತನದ ಮಾತು, ಗಟ್ಟಿ ಮನಸ್ಸು ನೋಡಿದರ ನಮ್ಮ ಅವ್ವನ ನೆನಪ ಆಗತೈತಿ.” ಸದಾಶಿವನ ಅವ್ವನನ್ನು ಎಂದಾದರೂ ನೋಡಬೇಕೆಂದು ತನಗೆ ಆಗಲೇ ಅನ್ನಿಸಿತ್ತು. +ಸಂಘ, ಸಮ್ಮೇಳನ, ಹೋರಾಟ, ಮೆರವಣಿಗೆಯ ಕೆಲಸಗಳಲ್ಲಿ ನನ್ನ, ಸದಾಶಿವನ ಓಡಾಟ, ಒಡನಾಟ ಹೆಚ್ಚಾಗತೊಡಗಿತು. ಕೇರಿಯ ಜನರ ಬಾಯಿ ಸುಮ್ಮನಿದ್ದೀತೆ? ನನ್ನ ಬಳಿ ಅರಿವೆ ಮಾತು, ಓದು, ಬುದ್ಧಿ ಅವರಿಂದ ನನ್ನನ್ನು ದೂರ ಒಯ್ದಿರಬೇಕು. ನನಗೆ ತಂಗಿಯೇ ಇಲ್ಲ, ಸತ್ತು ಹೋಗಿದ್ದಾಳೆಂದು ಒದರಿ ಜಗಳಾಡಿ ಹೋಗಿದ್ದ ಸೀದ್ರಣ್ಣನ ಮನೆಯ ಹೊಸಲು ನಾನು ಮತ್ತೆ ಮೆಟ್ಟಿರಲಿಲ್ಲ. ತನ್ನ ಸುತ್ತಮುತ್ತೆಲ್ಲ ಹುಡುಗರೇ ಇದ್ದರೂ ತನಗೆ ಸರಿಯಾಗುವಂಥ ಒಬ್ಬ ಯುವಕನೂ ಕಣ್ಣಿಗೆ ಬಿದ್ದಿರಲಿಲ್ಲ. ಅಣ್ಣನ ವೈರಿಗಳು, ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುವವರೂ ಅಲ್ಲಿದ್ದರು. ಅಂಥವರ ಮಾತುಗಳಿಂದ ತಳಮಳಗೊಳ್ಳುತ್ತಿದ್ದೆ. ಅಂಥ ದಿನಗಳಲ್ಲೇ- +“ದೇವಕೀ, ನೀ ನನ್ನ ಮದುವೀ ಆಗ್ತೀಯಾ” ಸದಾಶಿವನ ಮಾತಿಗೆ ಬೆಚ್ಚಿಬಿದ್ದಿದ್ದೆ. ನನ್ನ ಮನಸ್ಸಿನ ಮಾತುಗಳನ್ನೇ ಕಿವಿ ಕೇಳುತ್ತಿರುವ ಭ್ರಮೆ ಎಂದುಕೊಂಡೆ. +“ದೇವೂ ನನಗೆ ನಿನ್ನ ಸ್ವಭಾವ, ಗುಣಾ ಭಾಳ ಸೇರ್ತದ. ನಾವಿಬ್ಬರೂ ಮದುವೀ ಮಾಡಿಕೊಂಡರ ಸುಖದಿಂದ ಇರ್ತೀವಿ ಅನಸ್ತದ.” +“ನನ್ನ ರೂಪ, ಬಣ್ಣಾ…?” +“ಅಮಾವಾಸ್ಯಿ ದಿನ ನಕ್ಷತ್ರ ಹೊಳದಾಂಗ ಥಳಾಥಳಾ ಹೊಳೀತಾವಲ್ಲ ಈ ಜೋಡಿ ಕಣ್ಣು. ಇದರ ಮುಂದ ನಾ ಜಗತ್ತ ಮರೀತೇನಿ. ಈ ನಿನ್ನ ಉದ್ದನ್ನ ಕೂದಲ ನನಗೆ ಎಷ್ಟ ಹುಚ್ಚ ಹಿಡಿಸೈತಿ ಅಂದರ ಸಾಯೂವಾಗ ಈ ನಿನ್ನ ಜಡೀಲೆ ಉರ್ಲ ಹಾಕ್ಯೋಬೇಕು ಅನಸತೈತಿ.” ತಳಮಳ, ಉದ್ವೇಗ ಎಲ್ಲ ಶಾಂತವಾಗಿ ಶುದ್ಧ ಪ್ರೇಮ ಒಂದೇ ಉಳಿದಿತ್ತು ನನ್ನ ಮನಸ್ಸಿನಲ್ಲಿ. +ಮಾನವ ಕುಲವೇ ನಮ್ಮ ಕುಟುಂಬ ಎಂದುಕೊಂಡ. ನಾವಿಬ್ಬರೂ ಒಂದು ಸಭೆಯಲ್ಲಿ ನೂರಾರು ಜನರ ಎದುರು ಹಾರ ಬದಲಾಯಿಸಿ ಸತಿ-ಪತಿಗಳಾದೆವು. ನನಗೆ ಅಷ್ಟೇ ಸಾಕಿತ್ತು. ಸದಾಶಿವ ಸುಮ್ಮನಿರದೆ ರಜಿಸ್ಟ್ರಾರ ಕಛೇರಿಯಲ್ಲಿಯೂ ಮದುವೆ ನೊಂದಾಯಿಸಿದ. ಮನುಷ್ಯನಿಗೆ ಕಾಣುವಂಥ ಮುಖವೊಂದೇ ಅಲ್ಲದೆ ಇನ್ನೂ ಬೇರೆ ಬೇರೆ ಮುಖಗಳಿರುತ್ತವೆಂದು ತಿಳಿಯದಷ್ಟು ನಾನು ಮುಗ್ಧಳಾಗಿದ್ದೆ. ಅಲ್ಲದೇ ನನಗೆ ಇದ್ದಿದ್ದೊಂದೇ ಮುಖ. ಅಲ್ಲದೆ ನನ್ನ ಬದುಕಿನ ಹೀರೋ ನಾಲ್ಕಾರು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದ್ದ. ಮನಸ್ಸಿನ ಆಸೆಗೆ ಮಿತಿಯಿಲ್ಲ ಎನ್ನುವ ಮಾತಿಗೆ ಸದಾಶಿವನೂ ಹೊರತಾಗಿರಲಿಲ್ಲ. ಆದರ್ಶ ಪ್ರೇಮವನ್ನು ಎಲ್ಲೋ ಒಗೆದುಬಿಟ್ಟು ಅಂತರ್ಜಾತಿ ವಿವಾಹಕ್ಕೆ ಸರಕಾರ ಕೊಡುವ ಎಲ್ಲ ಸವಲತ್ತುಗಳನ್ನೂ ಪಡೆದ. ಹಣ, ನೌಕರಿ, ಸೈಟು ಎಲ್ಲ ಬಾಚಿಕೊಂಡ. ಮದುವೆಯಾದೊಡನೆ ನಾನು ಕೇರಿಯ ಗುಡಿಸಲನ್ನು ಬಿಡಬೇಕಾಗಿತ್ತು. ಅದೇ ನನ್ನ ತಪ್ಪು. ಸದಾಶಿವ ನನ್ನ ಜೊತೆಗೆ ನನ್ನ ಗುಡಿಸಲಲ್ಲಿ ಇರಲು ಸಾಧ್ಯವೇಕಿಲ್ಲ ಎನ್ನುವ ಪ್ರಶ್ನೆ ನನ್ನ ಮನದಲ್ಲಿ ಹುಟ್ಟದಷ್ಟು ಅವನ ಪ್ರೇಮನಾಟಕದ ನಾಯಕಿಯ ಪಾತ್ರದಲ್ಲಿ ಕಳೆದುಹೋಗಿದ್ದೆ. ಸರಕಾರೀ ಕಾಲೇಜಿನ ರೀಡರು, ಒಳ್ಳೇ ಮನೆ, ಸೀರೆಗಳು, ಪಾತ್ರೆ-ಸಾಮಾನು, ಓಡಾಡಲು ಸ್ಕೂಟರು, ಕಂಕುಳಲ್ಲೊಂದು ಮಗು, ಕೆಲಸ ಬಿಟ್ಟು ಹಾಯಾಗಿದ್ದೆ, ಎಲ್ಲ ಇತ್ತು, ಇನ್ನೇನು ಬೇಕಿತ್ತು ನನಗೆ. ಇಷ್ಟೆ ಸಾಕೆ? ಸಾಕಾಗಿಲ್ಲ ಇನ್ನೂ ಏನೋ ಬೇಕು ಎನ್ನುವ ಅತೃಪ್ತಿ ಒಳಗೇ ಹೊಗೆಯಾಡುತ್ತಿತ್ತು. ಸದಾಶಿವ ಕ್ಲಾಸು, ಪರೀಕ್ಷೆ ಕಾಲೇಜು ಎಂದು ಸಂಘದ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ವಿಷಯ ನನ್ನ ಗಮನಕ್ಕೆ ಬರುತ್ತಿತ್ತು. ಬರಬರುತ್ತ ನಾನು ಹೋದರೂ ಗೊಣಗುತ್ತಿದ್ದ. ಕೊನೆಗೆ ನಿರ್ಬಂಧ ಹಾಕಿದ. ಅದೇ ಅಸಮಧಾನ ಬೆಳೆದು ತನ್ನಲ್ಲಿ ಬಿಸಿಯಾಗಿ ಜಗಳಗಳಾಗುತ್ತಿದ್ದವು. ಪ್ರೇಮದ ಕಾವು ಇಳಿಯುತ್ತ ಹೋದಂತೆ ಈ ಎಲ್ಲ ಕೊರತೆಗಳು ಸ್ಪಷ್ಟವಾಗಿ ಇಬ್ಬರ ನಡುವಿನ ಬಿರುಕು ಹೆಚ್ಚುತ್ತಾ ಹೋಯಿತು. ಅಂದು ತಾನು ಹಟ ತೊಟ್ಟು. ಕಿರಣಗಳನ್ನು ಎತ್ತಿಕೊಂಡೇ ಮೆರವಣಿಗೆಯಲ್ಲಿ ಹೋದೆ. ಸದಾಶಿವ ಸಿಟ್ಟಾಗಿ ತನ್ನನ್ನು ಹೊಡೆದು ಮರ್ಯಾದೆ ಹಾಳಾಗುತ್ತಿದೆಯೆಂದು ಕೂಗಾಡಿದ. ಇತ್ತಿತ್ತಲಾಗಿ ಅವನು ತನ್ನನ್ನು ತೀವ್ರವಾಗಿ ಪ್ರೇಮಿಸಲೂ ಹಿಂಜರಿಯುತ್ತಿದ್ದ. ನಮ್ಮ ದಾರಿ ಕವಲೊಡೆದಿದ್ದುವು. ಈ ಬದಲಾವಣೆ ಹೇಗೆ ಕೊನೆಗೊಳ್ಳುತ್ತದೆ ಎಂದು ತಾನು ಭಯಪಡುತ್ತಿದ್ದ ದಿನಗಳಲ್ಲೇ – +“ದೇವಕಿ, ನಾ ಹಳ್ಳೀಗೆ ಹೋಗಿ ಬರತೀನಿ. ಕೆಲಸ ಅದ. ತಿರುಗಿ ಬರೂದು ತಡಾ ಆಗ್ತದ, ನನ್ನ ದಾರೀ ನೋಡಬ್ಯಾಡಾ.” +“ನಿಮ್ಮ ಅವ್ವನ್ನ, ಹಳ್ಳೀನ ನಾನೂ ನೋಡಬೇಕು. ಈ ಸಲಾ ಆದ್ರೂ ನನ್ನೂ ಕರಕೊಂಡು ಹೋಗ್ರಿ.” +“ಇಲ್ಲಾ ನನ್ನ ಮದುವೀ ಅಗೇದ. ಅದೂ ಹರಿಜನ ಹುಡುಗೀ ಮಾಡಿಕೊಂಡೀನಿ ಅಂತ ನಾ ಯಾರಿಗೂ ಹೇಳಿಲ್ಲ. ಗೊತ್ತಾದರ ಅವ್ವ ಎದಿ ಒಡಕೊಂಡ ಸಾಯ್ತಾಳ. ನೀ ಬರೂದು ಬ್ಯಾಡಾ.” +ಸದಾಶಿವ ಹೊರಟುಹೋಗಿದ್ದ. ನಮ್ಮ ಮದುವೆಯಾಗಿ ಮೂರು ವರ್ಷ ಕಳೆದಿದ್ದರೂ ಈ ಸುದ್ದಿ ಮನೆಯಲ್ಲಿ ಹೇಳಿಲ್ಲ ಎಂದಿದ್ದ ಸದಾಶಿವನ ಇನ್ನೊಂದು ಮುಖದ ಪರಿಚಯ ಆದಾಗ ನಾನು ಕುಸಿದುಬಿದ್ದೆ. ಅದೇ ಕೊನೆಯ ಭೆಟ್ಟಿ. ತಿಂಗಳೂ ಕಳೆದರೂ ಸದಾಶಿವ ಬರಲಿಲ್ಲ. ಮನೆಯ ದಿನಸಿ ತೀರಿದಾಗ ಒಂದೆರಡು ಪಾತ್ರೆ ಮಾರಿದೆ. ಸದಾಶಿವನೇ ಬಿಟ್ಟು ಹೋದಮೇಲೆ ಆ ಮನೆಯಲ್ಲಿ ಇರುವ ಅಧಿಕಾರ ತನಗಿಲ್ಲ ಎನ್ನಿಸಿದಾಗ ಎರಡು ದಿನ ಉಪವಾಸವಿದ್ದೆ. ಪೈಸೆ ಖರ್ಚಿಲ್ಲದೆ ಮಗಳ ಜೊತೆ ಕೆರೆಗೆ ಬಿದ್ದು ಸಾಯಬೇಕೆನ್ನುವ ಯೋಚನೆಯೂ ಬಂದಿತ್ತು ಮನೆಯವರು, ಕೇರಿಯವರು, ಸಮಾಜ, ವ್ಯವಸ್ಥೆ ಎಲ್ಲದರ ವಿರುದ್ಧ ಹೋರಾಡುವ ದಿಟ್ಟೆಯಾಗಿದ್ದ ನಾನು ಈ ಭಂಡ ಗಂಡನ ಜೊತೆಗಿದ್ದು ಹೇಡಿಯಾಗಿಬಿಟ್ಟೆನೇ? ಉಹುಂ-ಸೋತು ಸಾಯಬಾರದು. ಕಷ್ಟ ನನಗೇನೂ ಹೊಸದಲ್ಲ. ಮಗಳೊದನೆ ಸ್ವತಂತ್ರವಾಗಿ ಬದುಕಬೇಕು. ಆದರೆ ಅದಕ್ಕೂ ಮೊದಲು ಸದಾಶಿವನ ಬಣ್ಣ ಬಯಲು ಮಾಡಬೇಕು. ಅವನ ಅವ್ವನಿಗೆ ತಾನ್ಯಾರೆಂದು ತಿಳಿಯಬೇಕು. +ವಿಚಾರ ಮಾಡುತ್ತ ಮಲಗಿದ ದೇವಕಿಗೆ ಒಮ್ಮೆಲೆ ಎಚ್ಚರಾಯಿತು. ಕಿರಣಳ ಜ್ವರ ಇಳಿದು ಬೆವರು ಸುರಿದಿತ್ತು. ಕಿಡಿಕಿಯ ಕೆಳಗೆ ಪತ್ರವೊಂದು ಬಿದ್ದಿತ್ತು-ತನಗೆ ಬರೆಯುವವರಾದರೂ ಯಾರು-ಅಪರಿಚಿತ ಕೈಬರಹ. ಕುತೂಹಲದಿಂದ ಓದಿದಳು. +ಪ್ರೀತಿಯ ದೇವೂ, +ನಾನು ನಿನಗೆ ಬರೆಯುತ್ತಿರುವುದು ಇದೇ ಮೊದಲು. ಕೊನೆಯದೂ ಇದೇ ಪತ್ರ. ಕೆಲವು ತಿಂಗಳುಗಳಿಂದ ನನ್ನ ಅರೋಗ್ಯ ಸರಿ ಇರಲಿಲ್ಲ. ಡಾಕ್ಟರರಿಗೆ ತೋರಿಸಲು ಹೋದೆ. ನಾನಾ ತರದ ಪರೀಕ್ಷೆಗಳಾದ ಮೇಲೆ ಡಾಕ್ಟರ ಕ್ಯಾನ್ಸರ ಆಗಿದೆ, ಬೇಗ ಆಪರೇಷನ್ ಮಾಡಬೇಕೆಂದರು. ಈ ರೋಗದ ಬಗ್ಗೆ ನಾನೂ ಅಷ್ಟಿಷ್ಟು ಓದಿಕೊಂಡಿದ್ದೇನೆ. ಇದು ಸಾವನ್ನು ಮುಂದೆ ಹಾಕುವ ರೋಗವೇ ಹೊರತು ಗುಣವಾಗುವದಲ್ಲ. ಮಕ್ಕಳಿಬ್ಬರ ಬೇಜವಾಬ್ದಾರಿಯಿಂದ ಆಸ್ತಿ ಹಾಳಾಗುತ್ತಿದೆ. ಅಂಥವರ ಮೇಲೆ ನನ್ನ ಆಪರೇಷನ್ ಖರ್ಚೂ ಹಾಕಲು ಮನಸ್ಸು ಒಪ್ಪುವುದಿಲ್ಲ. ನನ್ನ ಕೆಲಸ ಮುಗಿದಿದೆ. ಇನ್ನೂ ಬದುಕಬೇಕೆನ್ನುವ ಆಸೆಯೂ ನನಗಿಲ್ಲ. ನಿನಗೆ, ಕಿರಣಳಿಗೆ ಆಶೀರ್ವಾದಗಳು. ನನ್ನ ಬದುಕನ್ನು ಮುಗಿಸುವ ನಿರ್ಧಾರ ಕೈಗೊಂಡಿದ್ದೇನೆ. ಬದುಕೇ ಒಂದು ಹೋರಾಟ, ನಿನ್ನ ಹೋರಾಟದಲ್ಲಿ ಯಶಸ್ಸು ಸಿಗಲಿ. +ನಿನ್ನ +ಗೌರತ್ತೆ +ಮನೆಯ ಛಾವಣಿಯೇ ತನ್ನ ಮೇಮೆ ಕಡಿದುಕೊಂಡು ಬೀಳುತ್ತಿದೆಯೆ. ತಲೆ ಗಟ್ಟಿಯಾಗಿ ಹಿಡಿದುಕೊಂಡು ದೇವಕಿ ಚೀರಿದಳು. ಅತ್ತು ದುಃಖ ಹಗುರ ಮಾಡಿಕೊಳ್ಳಲು ತನಗೆ ಅತ್ತೆಯ ತೊಡೆಯೊಂದು ಇತ್ತು. ಈಗ…ಈಗ ತಾನು ನಿಜವಾಗಿಯೂ ಅನಾಥೆ, ಸಂಜೆಯ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಅಳುವು ನಿಂತು ಮನಸ್ಸಿನಲ್ಲಿ ಶೂನ್ಯ ತುಂಬಿಕೊಳ್ಳತೊಡಗಿತ್ತು. ಕಿರಣ ‘ಅವ್ವಾಹಸಿವಿ’ ಎಂದಾಗ ಎಚ್ಚೆತ್ತು ಅವಳಿಗೆ ಹಾಲು ಕುಡಿಸಿ ಬಗಲಲ್ಲಿಟ್ಟುಕೊಂಡು ಬಸ್‌ಸ್ಟ್ಯಾಂಡ್ ದಾರೀ ಹಿಡಿದಳು. ಏನಾದರಾಗಲಿ-ಅತ್ತೆಯನ್ನೊಮ್ಮೆ ನೋಡಲೇಬೇಕು-ಅವಳನ್ನು ಮೊದಲು ನೋಡಿದ ದಿನ- +“ನೀನು ದೇವಕಿ ಏನು? ನಾನು ಸದಾಶಿವನ ಅವ್ವ ಗೌರವ್ವ. ಸರವೂರಿಂದ ಬಂದೀನಿ. ಇಂವಾ ನಮ್ಮ ಆಳುಮಗಾ ಫಕೀರ, ಪಕೀರಾ ನೀ ಹೊರಗ ಕಟ್ಟೀಮ್ಯಾಲೆ ಕೂಡ್ರು.” +ಎತ್ತರವಾದ, ಕೆಂಪುಬಣ್ಣದ ಬೆಳ್ಳಿಗೂದಲಿನ ಹೆಂಗಸೊಬ್ಬಳು ಹೊಸ್ತಿಲ ದಾಟಿ ಒಳಬರುತ್ತ ಹೇಳಿದಾಗ ದೇವಕಿಯ ಎದೆ ಡವಡವ ಎಂದಿತ್ತು. ಯಾವ ಉಪಚಾರಕ್ಕೂ ಕಾಯದೆ ಒಳಗೆ ಬಂದು ಕುಳಿತ ಅತ್ತೆಯನ್ನು ನೋಡಿ ಸಿಟ್ಟಿನ ಮಾತುಗಳಲ್ಲ ಒಳಗೇ ಇಂಗಿ ಹೋಗಿದ್ದವು. ನಿಧಾನವಾಗಿ ಮಾತನಾಡಿದ್ದಳು ಗೌರತ್ತೆ. +“ನಿನ್ನ ಪತ್ರಾ ಮುಟ್ಟಿತು ದೇವೂ, ಆದರ ಭಾಳ ತಡಾ ಆತು. ನಿನ್ನ ಮದುವೀ ಆಗೀನಿ ಅಂತ ಸದಾಶಿವ ನಮಗ ತಿಳಿಸೇ ಇಲ್ಲ- ಅವಂಗ ನನ ಮಗಾ ಅನಲಿಕ್ಕೂ ನಾಚಿಕೆ ಬರ್ತದ- ಈಗ ಹದಿನೈದು ದಿನಾ ಆತು ನಮ್ಮ ಜಾತೀದ ಇನ್ನೊಂದ ಹುಡುಗಿ ಮದುವೀ ಮಾಡಿಕೊಂಡು ಹನಿಮೂನ ಹೋಗ್ಯಾನ. ಈ ಸುದ್ದಿ ಕೇಳಿದರ ನಿನಗ ಕೆಟ್ಟ ಅನಸ್ತದ ಅನ್ನೋದು ಗೊತ್ತಾಗೇ ನಾನ ಬಂದೆ. ನಿನ್ನ ನೋಡಿ ಮಾತಾಡಬೇಕು ಅನ್ನಿಸ್ತು ಬಂದೆ.” ಅವಳ ದನಿಯಲ್ಲಿಯ ನಿಷ್ಕಪಟತೆ ನನ್ನ ಮನಸ್ಸನ್ನು ಮುಟ್ಟಿ ನಂಬುವಂತೆ ಮಾಡಿತು. ತಾನು ಮೋಸಕ್ಕೆ ಬಲಿಯಾದೆ ಅನ್ನೋದು ನೆನಪಾಗಿ ದುಃಖ ಉಕ್ಕಿ ಬಂತು. ಅದನ್ನು ತಿಳಿದವಳಂತೆ ಗೌರತ್ತೆ ತನ್ನನ್ನು ಹತ್ತಿರ ಎಳೆದುಕೊಂಡಳು. ಆಕೀ ಉಡಿಯೊಳಗ ನಾ ಮನಸಾ ಅತ್ತುಬಿಟ್ಟೆ. +“ನನ್ನ ಮಗಾ ಒಂದ ಹೆಣ್ಣಿನ ಕುತಿಗೀ ಕೊಯ್ದಾ ಅಂದರ ಆಂವಾ ನನ್ನ ಪಾಲಿಗೆ ಸತ್ತಾಂಗ. ಆದರ ನಾ ಈಗ ಏನ ಮಾಡಿದರೂ, ಏನ ಆಡಿದರೂ ಆಗಿಹೋದ ತಪ್ಪು ತಿದ್ದಾಕ ಆಗೂದಿಲ್ಲ. ನಿನಗ ಏನ ಸಹಾಯ ಬೇಕಾದರೂ ಕೇಳು, ಮಾಡ್ತೀನಿ.” ಮಗಳ್ನ ಕರಕೊಂಡು ಒಬ್ಬರ ಮನೀ ಬಾಗಿಲಿಗೆ ಹೋಗಬಾರದು. ಯಾರಿಗೂ ಭಾರ ಆಗಬಾರದು. ನನ್ನ ಕಾಲ ಮ್ಯಾಲ ನಾ ನಿಂತು ಜೀವನಾ ಮಾಡಬೇಕಂತೀನಿ.” ಅನ್ನೂ ನನ್ನ ಮಾತು ಕೇಳಿ ಮತ್ತೊಮ್ಮೆ ಅಪ್ಪಿಕೊಂಡಳು. +“ಮಗಳ ನಿನ ಬಣ್ಣ ಕಪ್ಪ ಅದರೂ ಮನಸ್ಸು ಬೆಳ್ಳಗೈತಿ. ನಿನ್ನಂತಾ ಹೆಣ್ತಿ ಕೂಡ ಬಾಳೇ ಮಾಡೂ ದೈವ ಆ ಎಡವಟ್ಟಗಿಲ್ಲ ಮತ್ತೇನ ಬೇಕಾದರೂ ಕೇಳು. ನಿನಗ ಅಧಿಕಾರ ಐತಿ. ಬರಬೇಕು ಅನ್ನಿಸಿದಾಗ ಹಳ್ಳೀ ಮನೀಗಿ ಬಾ. ನನಗೂ ಹೆಣ್ಣುಮಕ್ಕಳಿಲ್ಲ. ಎರಡೂ ಗಂಡು. ಸಾಲೀ ಕಲಿತು ಶಾಣ್ಯಾ ಆಗಿ ನಾಕ ಮಂದಿಗೆ ಉಪಕಾರ ಮಾಡಲಿ ಅಂತ ಕಲಿಸಿದರ ಇಂವಾ ಹಿಂಗ ಮಾಡಿದಾ. ಇವನ ತಮ್ಮ ಮಲ್ಲೇಶಿ ವಿದ್ಯಾ ತಲೀಗೆ ಹತ್ತಲಾರದ ಹೊಲಾ ಮಾಡ್ತೀನಿ ಅಂತ ಊರಾಗ ಬಿಳೇ ಅರಿವಿ ಹಾಕ್ಕೊಂಡ ತಿರಗತಾನ. ಮನ್ಯಾಗ ಹೆಣ್ತೀ ಮಕ್ಕಳು ಇದ್ರೂ ರಾತ್ರಿ ಯಾವಾಕಿನ್ನರೆ ಹುಡುಕ್ಕೊಂಡು ಹೊಲಗೇರಿಗೆ ಹೋಕ್ಕಾನ. ಹಿಂತಾ ಮಕ್ಕಳು ಹುಟ್ಟದಿದ್ದರ ಛೊಲೋ ಇತ್ತು. ಮುಪ್ಪಿನ ಕಾಲಕ್ಕ ಮನಸೀಗಿ ಶಾಂತಿ ಇರಬೇಕು. ಇದನೆಲ್ಲಾ ನೋಡಿದರ ಲಗೂನ ಕಣ್ಣು ಮುಚ್ಚಲಿ ಅಂತೀನಿ.” ರಾತ್ರಿ ಪಕ್ಕದಲ್ಲಿ ಮಲಗಿದ ಗೌರತ್ತೆ ಕಣ್ಣಿರು ತಂದು ಹೇಳಿದ್ದಳು. +“ಯವ್ವಾ ನೀನ ನನ್ನವ್ವ. ಹಂಗ ಸಾಯೂ ಮಾತ ಆಡಬ್ಯಾಡ” ಅಂದಿದ್ದೆ. ಎಂದೂ ಕಾಣದ ಆ ಹೆಂಗಸಿನೊಡನೆ ತನ್ನ ಸಂಬಂಧ ಏನಿತ್ತು? ಅವಳು ತನ್ನನ್ನು ಬಿಟ್ಟು ಹೋದ ಗಂಡನ ಅವ್ವ. ಆದರೆ ಬದುಕಿನಲ್ಲಿ ಸುಖಕ್ಕಿಂತ ಕಷ್ಟವನ್ನೇ ಹೆಚ್ಚು ಉಂಡ ಹೆಣ್ಣು ಎಂದು ಕೇಳಿದ್ದೆ. ಬಹುಶಃ ಅದೇ ತಮ್ಮಿಬ್ಬರನ್ನು ತಳಕು ಹಾಕಿರಬೇಕು. +“ಯವ್ವ, ನೀ ಎಲ್ಲಾರ ಹಾಂಗ ಅಲ್ಲ. ಜಗತ್ತಿನ್ಯಾಗಿನ ಎಲ್ಲಾ ಹೆಂಗಸರೂ ಒಂದ ಅಂದರ, ನೀ ಒಬ್ಬಾಕೀನೇ ಒಂದು ಅನಿಸೇದ ನನಗ.” +“ಹುಚ್ಚವ್ವ, ನಾ ಏನ ಹೆಚ್ಚಿನಾಕಿ ಕಂಡೆ ನಿನಗ.” +“ನಿನ್ನ ಕುಲಾ ಹೆಂತಾದ್ದು ಏನ ಕತಿ. ಆದರೂ ನೀ ನನ್ನ ಒಪ್ಪಿಕೊಂಡು ಅಪ್ಪಿಕೊಂಡಿ, ಇದು ಭಾಳ ದೊಡ್ಡ ಮಾತು, ಸಭಾದಾಗ ದೊಡ್ಡ ಮನುಷ್ಯರು ದೊಡ್ಡ ದೊಡ್ಡ ಮಾತ ಹೇಳತಾರ. ಆದರ ಮನೀ ಬಾಗಿಲಿಗಿ ಹೋದರ ಒಳಗ ಬಾ ಅನ್ನಾಂಗಿಲ್ಲ, ನೀ ಒಬ್ಬಾಕಿ ಅಪವಾದ ಅದೀ.” +“ಅದಕ್ಕ ಬ್ಯಾರೇನೇ ಕಾರಣ ಐತಿ ದೇವೂ. ಹುಟ್ಟಿದ ಮನ್ಯಾಗ ನಾ ಬೆಳದದ್ದ ಹಾಂಗ. ನಮ್ಮಪ್ಪ ವೀರಪ್ಪ ದೇಶಕ್ಕ ಸ್ವತಂತ್ರ ತರಾಕ ಹೋರಾಡಿ ಪೋಲೀಸರ ಹೊಡೆತಾ ತಿಂದು ಜೇಲಿಗೆ ಹೋಗಿದ್ದ. ಗಾಂಧೀ ಅಜ್ಜನ ಕಟ್ಟಾ ಭಕ್ತಾ ಅಂವಾ. ಮಕ್ಕಳಿಗೆಲ್ಲಾ ಓದು-ಬರಹ ಕಲಿಸಿದಾ, ಖಾದಿ ತೊಡಾಕ ಹಚ್ಚಿದ್ದಾ, ನೂಲಾಕ ರಾಟೀ ತಂದುಕೊಟ್ಟಿದ್ದಾ, ರಟ್ಟೀ ಮುರುದು ದುಡದ ತಿನ್ರಿ ಅಂತಿದ್ದಾ. ಈ ಜಾತಿ ಪಾತಿ ಎಲ್ಲಾ ಮನಿಶೇರ ಮಾಡಿ ಕೊಂಡಿದ್ದೋ ಮಕ್ಕಳ್ರಾ, ಎಲ್ಲಾರ ಮೈಯಾನ ರಕ್ತ ಕೆಂಪ ಐತಿ, ಹುಟ್ಟಿಸಿದ ದೇವರು ಒಬ್ಬನ ಅದಾನ ತಿಳಕೊಳ್ರಿ ಅಂತ ಬುದ್ಧಿ ಹೇಳತಿದ್ದಾ.” +“ಹಂತಾ ದೊಡ್ಡ ಮನಶ್ಯಾನ ಮಗಳಾಗಿ ನೀ ಹಿಂತಾಕಿ ಆಗೀ ಯವ್ವಾ. ಮತ್ತ ನಿನ್ನ ಮಗ್ಗ ಅಟ ಹಿಂತಾ ಬುದ್ಧಿ ಯಾಕ ಬರಲಿಲ್ಲಾ, ನಿನ ಟಂಕ ಸಾಲ್ಯಾಗ ಖೊಟ್ಟಿ ರೂಪಾಯಿ ಅದ ಅಲ್ಲ ಅಂವಾ?” +ಗೌರತ್ತೆ ಉಸಿರು ಬಿಟ್ಟು ಎಷ್ಟೋ ಹೊತ್ತು ಸುಮ್ಮನಿದ್ದು ಹೇಳಿದ್ದಳು “ಸದಾಶಿವ ತಮ್ಮ ಅಪ್ಪನ್ನ ಹೋತಾನ ದೇವೂ” ಎಂದು, ಕುತೂಹಲ ತಡೆಯದೆ ಮತ್ತಷ್ಟು ಕೆದಕಿದ್ದಳು. +“ಹದಿನಾರು ವರ್ಷಕ್ಕ ಸರವೂರ ಸಾವಕಾರನ ಎರಡನೇ ಹೇಣ್ತಿ ಆಗಿ ಬಂದೆ ದೇವೂ. ಆಗಿಂದ ನಾ ಬರೇ ಕಷ್ಟಾನ ಸೋಸೀನಿ. ಬೇಕಾದಷ್ಟ ಶ್ರೀಮಂತಿಕಿ ಇದ್ರೂ ಗೌಡಗ ಗುಣ ಇದ್ದಿದ್ದಿಲ್ಲ. ಲಂಗು ಲಗಾಮು ಇಲ್ಲದ ಗೂಳಿ ಹಾಂಗ ಮೆರದಾ. ಮೊದಲನೆಯಾಕಿ ಇವನ ಹೊಡತಕ್ಕ ಸತ್ತಿದ್ದಳಂತ. ಪೊಲೀಸರ ಬಾಯಿಗೆ ರೊಕ್ಕಾ ತುಂಬಿ ಉಳಕೊಂಡಿದ್ದಾ. ಹೇಣ್ತಿ ಅಂದರ ಕಾಲಾನ ಚಪ್ಪಲಿ ಆಗಿತ್ತು ಅವಂಗ. ಹಾಂಗ ಗುದ್ದಾಡಿಕೊಂತ ಸದಾಶಿವ, ಮಲ್ಲೇಶಿ ಹುಟ್ಟಿದ್ದರು. ಗೌಡ ಊರಾಗ ರಂಡೀ ಇಟ್ಟಿದ್ದು ಗೊತ್ತಾತು. ನನ್ನ ರಕ್ತಾ ಕುದೀತು. ಇಂವನ ಕೂಡ ಬಾಳೇ ಸಾಕಾಗಿ ಹೋಗಿತ್ತು. ತಿರಿಗಿ ಬಿದ್ದೆ ನೋಡು, ನನ್ನ ಸನೇಕ ಬರಗೊಡಲಿಲ್ಲಾ. ನೀ ನನ್ನ ಮುಟ್ಟಿದೀ ಅಂದರ ನೋಡು ಅಂತ ಕುಡಗೋಲು ತೋರಿಸಿದ್ನಿ. ಖೋಲಿ ಬಾಗಲಾ ಹಾಕ್ಕೊಂಡು ಮಕ್ಕಳ್ನ ಕರಕೊಂಡು ಕುಡಗೋಲ ತಲೆದಿಂಬಿಗೆ ಇಟಕೊಂಡ ಮಲಗತಿದ್ದೆ. ಸಾಯೂತನಾ ಹಿಂಗ ಇದ್ದಿವಿ. ಸೆರೆ, ಕೆಟ್ಟ ಚಾಳಿ ಎಲ್ಲಾ ಕೂಡಿ ಅವನ್ನಾ ಜೀವಾ ತೊಗೊಂಡ್ವು. ಮನೀ ಭಾರಾ ಎಲ್ಲಾ ನಾ ಹೊತ್ಕೊಂಡೆ. +“ಸತ್ಯಕ್ಕ ನ್ಯಾಯಕ್ಕ ಹೊಡದಾಡೂವಾಕಿಯವ್ವಾ ನೀನು. ಅದಕ ನಿನ ಮಾರೀ ಮ್ಯಾಲೆ ಕಳೇ ಹ್ಯಾಂಗ ಐತಿ ನೋಡು.” +“ಸುಮ್ಮನ ಹೊಗಳಬ್ಯಾಡ ಹುಡುಗೀ ನೀನು. ಈ ಹೊಡೆದಾಟದಾಗ ನಮ ಜೀವ ಸಣ್ಣಾಗತೈತಿ ಅನ್ನೂದ ಮರೀಬ್ಯಾಡಾ, ಸರ್ಪದ ಜೋಡಿ ಸರಸಾ ಆಡಿದಾಂಗ ಆಕ್ಕೈತಿ ನಮ ಬಾಳೆ. ನೀ ಮನಸಿಗೆ, ದೇಹಕ್ಕೆ ಮುಗುದಾಣಾ ಹಾಕಿ ಕೈಯಾಗ ಇಟಕೊಂಡು ತಪ್ಪ ಹೆಜ್ಜಿ ಇಡದಂಗ ನಡದೀ ಅಂದರ ಈ ಮಂದಿ ಡೊಗ್ಗಿ ಸಲಾಮು ಹಾಕತಾರ. ನೀ ಹಾದೀ ಬಿಟ್ಟೀ ಅಂದರ ಅದ ಮಂದಿ ಆಳಿಗೊಂದು ಕಲ್ಲು ಹೊಡೆದು ಸಾಯಿಸ್ತಾರ. ನಾಕ ಮಂದಿ ಬೆರಳ ಎತ್ತೂಹಾಂಗ ನಾ ಬಾಳೇ ಮಾಡಲಿಲ್ಲ. ನನಗ ಅದ ಬಲಾ. ನಿನಗೂ ಒಂದ ಮಾತ ಹೇಳ್ತೇನಿ. ನೆಪ್ಪ ಇಟಕೊ. ನಿನ್ನ ಕಾಲಮ್ಯಾಲ ನಿಂತು ಅನ್ನಾ ಸಂಪಾದಿಸಿಕೋ. ಆದರೂ ನೀ ಇನ್ನೂ ಸಣ್ಣಾಕಿ. ಜೋಡಿ ಬೇಕು ಅನಿಸಿದರ ಸದಾನ ಕಡೆ ಸೋಡಚೀಟಿ ತೊಗೊಂಡು ಬ್ಯಾರೆ ಮದುವೀ ಮಾಡಿಕೋ. ಅಂವನ ಕಿವಿ ಹಿಡಿದು ತಂದು ನಿಮ್ಮನ್ನ ಕೂಡಸಾಕ ನನಗ ಬರತೈತಿ. ಆದರ ಒಮ್ಮೆ ಮನಸ ಮುರದ ಮ್ಯಾಲೆ ಬಾಳೆ ಮಾಡಿದರ ಏನ ಸಂವಿ ಇರತೈತಿ. ಆ ಹುಡುಗೀಗೂ ಮೋಸ ಆಗೇದ. ಸಾಯೂತನಕ ಈ ಚಿಂತಿ ನನ್ನ ಕಾಡತೈತಿ.” ಆ ರಾತ್ರಿ ಅತ್ತೆ-ಸೊಸೆ ಕಣ್ಣು ಮುಚ್ಚಿರಲಿಲ್ಲ- +‘ಸರವೂರು ಬಂತು, ಯಾರು ಇಳೀರಿ’ ಕಂಡಕ್ಟರ ಕೂಗುತ್ತಿದ್ದ. ದಿಗ್ಗನೆ ಎದ್ದಳು ದೇವಕಿ. ಒಂದು ಕಾಲದ ಗಂಡನ ಮನೆ ಹುಡುಕಿಕೊಂಡು ಬಾಗಿಲಿಗೆ ಬಂದ ದೇವಕಿಯ ಕಾಲಿನ ಶಕ್ತಿ ಸೋರಿಹೋಯಿತು. ರಣಹಲಗೆ ಆಳು…. ಜನರ ನೂಕು ನುಗ್ಗಲು ದಾಟಿದಳು- +“ನನ್ನವ್ವ ಏನು ಛಂದ ಕಾಣತಾಳ ನೋಡ್ರೇ ಕರೀ ಸೀರಿ ಉಟಗೊಂಡು, ಈಬೂತಿ ಪಟ್ಟಾ ಬಡಕೊಂಡು, ರುದ್ರಾಕ್ಷಿ ಸರಾ ಹಾಕ್ಕೊಂಡು ಶಿವಪೂಜೆ ಮಾಡಾಕ ಹ್ವಾದಳೇನ್ರೇ ನನ್ನವ್ವ” – ಕೂಡಿದ ಹೆಂಗಸರೆಲ್ಲ ಹಾಡಿ ಹಾಡಿಕೊಂಡು ಅಳುತ್ತಿದ್ದಾಗ- +“ಸರ್ರಿ ಸರ್ರಿ ಸ್ವಾಮೇರ ಬಂದ್ರು ಜಾಗಾ ಬಿಡ್ರಿ. ಪಾದಪೂಜೆ ಮಾಡಸರಿ, ಕಾಯಿ ಒಡೀರಿ, ಕಪ್ಪಾರ ಹಚ್ಚರಿ, ಪತ್ರೀ ಹಂಚಿರಿ, ಬಾರೋ ಮಲ್ಲೇಶ, ಸದಾಶಿವ ನೀ ಇತ್ಲಾಗ ನಿಲ್ಲು. ಶೇಕವ್ವ, ವಿಜಯವ್ವ ಮುಂದಕ ಬರ್ರಿ. ಕಡೀ ಪೂಜಾ ಇದು, ಎತ್ತಬೇಕಿನ್ನ, ಮನೀ ಮಂದಿ ಎಲ್ಲಾರೂ ಬರ್ರಿ”- ಆ ಜನ ಜಾತ್ರೆಯಲ್ಲಿ ದೇವಕಿ ಯಾರೆಂದು ಯಾರೂ ಕೇಳಿರಲಿಲ್ಲ. ಸದಾಶಿವ ಮಾತ್ರ ಕೆಕ್ಕರಿಸಿ ನೋಡಿದ್ದ. ಅವನತ್ತ ಕಣ್ಣೆತ್ತಿಯೂ ನೋಡದೆ ಕಿರಣಳನ್ನೆತ್ತಿಕೊಂಡು ಗೋಡೆಗೆ ಒರಗಿ ನಿಂತಿದ್ದಳು ದೇವಕಿ. +ಗೌರತ್ತೆಯ ಮುಖ ಮಣ್ಣಿನಲ್ಲಿ ಮರೆಯಾದಂತೆ ದೇವಕಿಯೂ ಅಲ್ಲಿಂದ ಮರೆಯಾಗುತ್ತಿದ್ದಳು. ಸದಾಶಿವ ಸುಮ್ಮನಿರಲಿಲ್ಲ. ಶತಮೂರ್ಖ! ದೇವಕಿಯ ರಟ್ಟೆ ಹಿಡಿದೆಳೆದು ಹೊರಗಿನ ಕಟ್ಟೆಗೆ ಎಳೆದೊಯ್ದು, “ನೀ ಯಾಕ ಬಂದಿ ಇಲ್ಲೆ? ಏನ ಸಂಬಂಧ? ಯಾರ ಹೇಳಿ ಕಳಿಸಿದ್ರು ನಿನಗ?” ಪೌರುಷ ತೋರಿಸಲು ದಬಾಯಿಸಿದ. +ಅಲ್ಲಿಯವರೆಗೆ ಅವಳ ಕಡೆಗೆ ಲಕ್ಷ್ಯ ಕೊಡದ ಮನೆಯ ಜನರೆಲ್ಲ ತಮಾಷೆ ನೋಡುವವರಂತೆ ಬಂದು ಗುಂಪಾದರು. ದೇವಕಿಯ ರಕ್ತ ಕುದಿಯಿತು. ಕಣ್ಣು ಕೆಂಪೇರಿದವು. ಹೊಟ್ಟೆಯ ಸಂಕಟ, ದುಃಖವೆಲ್ಲ ನುಗ್ಗಿ ಬಾಯಿಗೆ ಬಲ ಕೊಟ್ಟಿತು. +“ಏನೋ ಭಾಡ್ಯಾ. ನೀ ಯಾರು ಅಂತೀಯಲ್ಲ. ನಿನ್ನ ಹೇಣ್ತಿ ದೇವಕಿ ನಾನು. ಈ ಹುಡುಗಿ ನಿನ್ನ ಮಗಳು. ಈ ಮನೀ ಸೊಸಿ ನಾನು. ನಮ್ಮತ್ತೀ ಮಣ್ಣಿಗೆ ಬಂದೇನಿ. ಯಾರ ಯಾಕ ಕರಸಬೇಕೋ ನನ್ನ?” +ಸದಾಶಿವನ ಸಿಟ್ಟು ಏರುತ್ತಿದ್ದರೂ ಕಾಲಿನ ಬಲ ಸೋರಿಹೋಗಿ ಥರಥರ ನಡುಗತೊಡಗಿದ. ಆಧಾರಕ್ಕೆ ಹೆಬ್ಬಾಗಿಲ ಚೌಕಟ್ಟಿಗೆ ಆನಿಸಿ ನಿಂತು ಚೀರಿದ. “ಹೆಣ್ತೀ ಇದ್ದಿ. ಆದರ ಈಗಲ್ಲ. ಮಾನಾ ಮರ್ಯಾದಿ ಇದ್ದವರು ಮನ್ಯಾಗ ಇರತಾರ. ಕಂಡ ಕಂಡ ಗಂಡಸರ ಹಿಂದ ಬೀದಿ ಬೀದಿ ಅಡ್ಡ್ಯಾಡಾಕ ಓಡಿಹೋಗೂದಿಲ್ಲ.” +“ಓಡಿ ಹೋದಾಕೀ ನಾ ಅಲ್ಲೋ ನೀನು. ಹೇಳದ ಕೇಳದ ಹೋಗಿ ಈ ಗೊಂಬೀನ್ನ ಲಗ್ನಾ ಮಾಡಿಕೊಂಡ ಬಂದೀ, ಪ್ರೇಮ, ಪ್ರೀತಿ ಅಂತ ನನ್ನ ಹೊಂದ ಓಡ್ಯಾಡಿ ಲಗ್ನಾ ಮಾಡಿಕೊಂಡದ್ದಕ್ಕ ರಜಿಸ್ಟ್ರಾರ ಕಚೇರ್ಯಾಗ ದಾಖಲೆ ಐತಿ. ನಾ ಮನಸ ಮಾಡಿದ್ದರ ನಿನ್ನ ಜೇಲಿಗೆ ಕಳಸತಿದ್ದೆ. ಪುಣ್ಯವಂತಿ, ನಮ್ಮ ಗೌರತ್ತಿ ಮಾರೀ ನೋಡಿ ಸುಮ್ಮನಾಗೀನಿ. ಯಾಕ ಬಂದೀ ಅಂದೆಲ್ಲಾ. ಒಂಬತ್ತ ತಿಂಗಳ ಹೊತ್ತ ಹಡದ ತಾಯೀನ ಬಾವಿಪಾಲು ಮಾಡಿದವರು ನೀವು. ಗಂಡಸರ? ನನಗ ಗೊತ್ತಾಗಿದ್ದರ ನಾ ಜ್ವಾಪಾನ ಮಾಡುತ್ತಿದ್ದೆ ಅತ್ತೀನ. ಇಕಾ ನೋಡಿಲ್ಲೆ, ಅತೀ ಪತ್ರಾ” ಎಂದು ಗೌರವ್ವನ ಪತ್ರವನ್ನು ಅವನತ್ತ ಬೀಸಿ ಒಗೆದವಳೇ ಮಗಳನ್ನು ಎತ್ತಿಕೊಂಡು ಭರಭರ ನಡೆದುಬಿಟ್ಟಳು. ಕೂಡಿದ ಮಂದಿ ಉಸಿರಾಡುವದನ್ನೂ ಮರೆತು ಕಲ್ಲಿನಂತೆ ನಿಂತಿದ್ದರು. ಆ ನಿಶ್ಯಬ್ದವನ್ನು ತೂರಿಕೊಂಡು ಒಂದು ಹೆಣ್ಣಿನ ಬಿಕ್ಕಳಿಕೆ ಮಾತ್ರ ದೇವಕಿಯ ಬೆನ್ನು ಹತ್ತಿತ್ತು. +***** +“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […] +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […] +(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_167.txt b/Kannada Sahitya/article_167.txt new file mode 100644 index 0000000000000000000000000000000000000000..a994d68b075145efabf7c687e08add55a024409e --- /dev/null +++ b/Kannada Sahitya/article_167.txt @@ -0,0 +1,99 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು +ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! +ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು +ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! +ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ +ತುಡಿವ ಬೆಳ್ಳಕ್ಕಿಗಳ ಬಯಕೆ-ಸಾಲು ; +ದೂರ ಬೆಟ್ಟವನಿಳಿದು ಮೆಲುಕಾಡಿಸುತ ಬರುವ ಕೊರಳ ಗಂಟೆಯು ಮಿಡಿವ ನಾದ ಹೊಳಲು. +ಗಿರಿಯ ಮುಡಿಗಿರುವ ಗುಡಿಯಲ್ಲಿ ನಂದಾದೀಪ +ಬಾನಿಗೇರಿದೆ ಹೊಗರು ಅಗರುಧೂಪ- +ಶೂನ್ಯದೊಡನನ್ಯೋನ್ಯವಾಗಿ ಬೆರೆದಿದೆ ವಿಶ್ವಚೈತನ್ಯ ವಿವಿಧರೂಪ. +ಮುಳ್ಳು ಜಾಲಿಯ ಹೂವ ಸೌಗಂಧದಲಿ ತೇಲೆ ದುಂಬಿಗನಸು +ಜೋಂಪಿಸುತ್ತಿದೆ ಮಗುವಿನೆಳೆಯ ಮನಸು. +‘ಕಂದ ಜೋ ಜೋ … ಬೆಳಕಿನಂದ ಜೋ ಜೋ’ +ಹೊಂಗೆ ಹುಣಿಸೆಯು ಬೊಗಸೆ ಬೊಗಸೆ ಸುರಿದಿವೆ ಹೂವು +ಹಣ್ಣು ತೂಗಿದೆ ಕೊಂಬೆ ಕೊಂಬೆಯಲಿ ಮಾವು ; +ಧೂಳಿ ನುಣ್ಣಗೆ ನೆಲಕೆ ಜಾರುತಿದೆ ಗಾಳಿಯಲಿ ಆರುತಿಹುದದರ ಕಾವು +ಮನೆಯ ಜಗುಲಿಯನೇರಿ ಬೆಳಕು ತೂಗಾಡುತಿದೆ +ಒಳದನಿಯು ಹಾಡುತಿಹುದು : +‘ಕಂದ ಜೋ ಜೋ ಪೂರ್ಣಚಂದ್ರ ಜೋ ಜೋ’ +ನೀಲಪರದೆಯ ನಡುವಿನೆಳೆಯ ಜಗ್ಗಲು ಝಗ್ಗನೆದ್ದು ಕುಣಿದಿವೆ ತಾರೆ +ನೆಲದೆದೆಯ ಮೊಗ್ಗರಳಿ ಪರಿಮಳದ ಸೂರೆ ! +ಮುಗಿಲ ಮಂಚವನೇರಿ ಅಂಚೆದುಪ್ಪಳ ಹೊದೆದು +ಚಿಕ್ಕೆಗಂಗಳ ಮುಚ್ಚಿ ತೆರೆವ ನೀರೆ! +ಆಡಿ ದಣಿದಿದೆ ಮಗುವು +(ಅದಕೆ ದಣಿವೇ ಇಲ್ಲ !) +ಎಳೆಯ ಕಂಗಳ ಎವೆಗೆ ತಂಗಾಳಿಯಾಗಿ ಸುಳಿ, ಜೇನಾಗಿ ಇಳಿದು ಬಾರೆ ! +* * * * +೨ +ಹಗಲು ಕೋಳಿಯ ನಿದ್ದೆ- +ಬಯಲಾಟದಲಿ ಸೋಗು ಕುಣಿದದ್ದೂ ಕುಣಿದದ್ದೆ +ತಕ್ಕ ಥೈ ತಕ್ಕ ಥೈ +ಕಾಳಿಂಗನ ಹೆಡೆಯ ಹತ್ತಿ ಹತ್ತಿ ತುಳಿದ ಬಾಲಕೃಷ್ಣ +ಧಿತ್ಥೈ ಥೈ ! +ಆಚೆ ಬೀದಿಗು ಗಸ್ತಿ ಹೊಡೆದು ಬರುವದು ಕೇಕೆ +ಕೊಟ್ಟು ಎಚ್ಚರಿಕೆ ! +ಬಿಳಿ ಜೋಳ ಹೊಲದಲ್ಲಿ ಕವಡೆಗಲ್ಲನು ಬೀರಿ ಹಕ್ಕಿ ಹಾರಿಸುತಿಹನು +ಅತ್ತಿತ್ತ ಸುಳಿದೀರಿ ಮತ್ತೆ, ಜೋಕೆ ! +ತಾಸಿಗಿಪ್ಪತ್ತು ಮೈಲಿನ ವೇಗ ಮೀರುವುದು +ಮನೆತುಂಬ ಓಡುವುದು ಅಂಬೆಗಾಲಿನ ಕಾರು ! +ನೋಡ ನೋಡುತ ಧುಮುಕಿ ಹೊಡೆದು ಮೇಲೇಳುವದು +ಬ್ರೇಕು ಹಾಕಲು ವೇಗ ಮತ್ತಿಷ್ಟು ಜೋರು ! +ಏನಿಲ್ಲವೆಂದರೂ ದಿನಕೆಂಟು ಅಪಘಾತ +ಇನ್ನೆಂಟು ಆದರೂ ಈತ ನಿರ್ಭೀತ, +ಎಂಥ ಅದ್ಭುತವಡಗಿ ಕುಳಿತು ಆಡಿಸುತಿಹುದೊ +ಎಂಟು ತಿಂಗಳ ಪುಟ್ಟ ಜೀವಯಂತ್ರ ! +೩ +ಮೈಮರೆತು ಕುಳಿತ ಕಡೆಗಿವನ ಮಿಂಚಿನದಾಳಿ +ಹೊಂಚುಗಾರ ! +ಎಲ್ಲಿಂದಲೊ ಸರ್ರನೆರಗಿ ಬಡಿಯುವ ಗಿಡುಗ +ಆಕ್ರಮಣಶೀಲ ! +ರಾಶಿಯೊಕ್ಕುವ ಸಮಯಕೆದ್ದ ಸುಂಟರಗಾಳಿ- +ಕೋಲಾಹಲ! +ಏಳು ಮೆಟ್ಟಿನ ಹುಲಿಯ ಹಿಡಿದು ಪಳಗಿಸಬಲ್ಲ +ಚಂಡ ಪ್ರಚಂಡ ! +ಕಣ್ಗೆ ಬಿದ್ದು ದನೆಲ್ಲ ಕಸಿದು ಕೈವಶಗೊಂಬ +ಪುಂಡ ಮಾರ್ತಾಂಡ ! +ನಜರು ಕಾಣಿಕೆ ಕೊಟ್ಟು ಮುಜುರೆ ಹೊಡೆದರು ಕೂಡ +ಸಂಧಾನ ವಿಫಲ ವಿಫಲ ! +ತುಂಟನಗೆ ಸಮ್ಮೋಹನಾಸ್ತ್ರ ಬೀರುವ ಬಂಟ +ನಿತ್ಯ ಜಯಶೀಲ ! +* * * * +೪ +ಎರೆದು ಧೂಪವ ಹಾಕಿ ಹೊಚ್ಚಿ ಬೆಚ್ಚಗೆ ತುಂಬುದೊಟ್ಟಿಲನು ತೂಗಿ +ಮೆಲ್ಲನುಲಿಯಲಿ ಇವಳು ಜೋಗುಳವ ಹಾಡುತಿರೆ +ಹೊಮ್ಮಿ ಬರುವುದು ಇವಗು ಕಾವ್ಯ ಸ್ಫೂರ್ತಿ ! +ಯಾವ ದೈವಿಕ ಭಾಷೆ ಯಾವುದೋ ಧಾಟಿ- +ಹಾಡಿಯೇ ಹಾಡುವನು ಕಂಠಪೂರ್ತಿ- +ತೂಗಿದವರಿಗೆ ಬಂತು ತೂಕಡಿಕೆ ಎಂದಾಗ +ಹಾಡು ಮುಗಿವುದು ಕನಸಿನಲ್ಲಿ ಕರಗಿ. +ಏರಿ ಗಗನಕೆ ಹಾರಿ ತೂರಿ ಬಿನ್ನಾಣದಲಿ +ಬಗೆ ಬಗೆಯ ಲಾಗ ಹಾಕಿ +ಗೂಡಿಗಿಳಿವುದು ಪಾರಿವಾಳ ನೆಟ್ಟಗೆ ಬಂದು +ಬಾನಿನಲಿ ಸಂಜೆಯಾಗಿ. +ದಡಸೂಸಿ ಹರಿವ ನದಿ ಮಡುವಾಗಿ ನಿಂತಂತೆ +ಇರುಳಿನಲಿ ಇವನ ನಿದ್ದೆ- +(ನಿದ್ದೆಯಲ್ಲೂ ಮುಖವು ಮುದ್ದು ಮುದ್ದೇ) +ನಡುವೆ ಏನೋ ಕನಸು, ತುಟಿಯಂಚಿನಲಿ ಮಿಂಚು- +ಮೂಡಿಮರೆಯಾಗುವದು ದಿವದ ಬೆಳಕು ; +ಕೊಳದ ತಳದಿಂದ ಮೇಲೆದ್ದು ಮುಳುಗಲು ಮೀನು +ಥಳಥಳಿಸಿ ಹೊಳೆಯುವೊಲು ನೀರಿನಂಚು ! +ಎಲ್ಲೊ ಒಲವಿನ ಸೂತ್ರ ಹಿಡಿದು ಆಡಿಸುತಿರಲು +ಆನಂದದುಯ್ಯಾಲೆ ಒಳಗು ಹೊರಗು ; +ಸೂರ್ಯಚಂದ್ರರು ದಿನವು ಮೂಡಿ ಬೆಳಕಾಡಿದರು +ಇವನಿಂದಲೇ ನಮಗೆ ಬೈಗು-ಬೆಳಗು. +***** +ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […] +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […] +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_168.txt b/Kannada Sahitya/article_168.txt new file mode 100644 index 0000000000000000000000000000000000000000..46d1bc8128c3e85abd23694d658c7b267b529ab0 --- /dev/null +++ b/Kannada Sahitya/article_168.txt @@ -0,0 +1,77 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” +ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ ಜೊತೆಯೂ ಮಲಗಿಲ್ಲವ?” +ನಿಶ್ಚಲತೆಯಿಂದ ಉತ್ತರಿಸಿದಳು ಅವಳು. “ಇಲ್ಲ”. +“ಬೇರೆ ಯಾರನ್ನೂ ಪ್ರೀತಿಸಿಲ್ಲವ?” +“ಇಲ್ಲ”. +ಒಂದು ಸಣ್ಣ ಉಸಿರು ಆತನ ಮುಖದಿಂದ ತಿಳಿಯುವಂತೆಯೇ ಹೊರಬಿತ್ತು. “ಇರಲಿ ಹೊತ್ತಾಯಿತು. ನಾನು ಹೊರಟೆ.” – ಎಂದ. +“ಹೂಂ…. ಹೋಗು. ಅಲ್ಲಿಗೇ…” +ಆತನಿಗೆ ಸಿಟ್ಟು ಬರುವುದಿಲ್ಲ. ಸುಮ್ಮನೆ ನಗುವ. ಮಗುವಿನಂತೆ ನಿಲ್ಲುವ. “ನೀನೊಬ್ಬಳೇ ನನಗೆ ಏಳೇಳು ಜನ್ಮಕ್ಕೂ ಅಂತೆಲ್ಲ ನಾಟಕದ ಮಾತು ಹೇಳಬೇಕೆ? ಬೇಕೆಂದರೆ ಹೇಳುವೆ.” +“……….” +ಕೇಳಿದ “ನಾನಿನ್ನು ಹೊರಡಲೆ?” +“ಬೇಡ. ಹನ್ನೆರಡೂವರೆಗೆ ಒಂದು ನಿಮಿಷವಿದೆ. ಅಷ್ಟು ಕಳೆಯಲಿ.” +ಎದ್ದು ನಿಂತ ಅವನನ್ನು ಒತ್ತಿ ಕುಳ್ಳರಿಸಿದಳು ಅವಳು. ಒಂದೇ ನಿಮಿಷ…. +ಹನ್ನೆರಡೂವರೆಯಾಯಿತು. ಆತ ಹೊರಟು ಹೋದ. +ಆತ ತನ್ನ ಮಟ್ಟಿಗೆ ಪ್ರಪಂಚವೇ ಆಗಿರುವನಲ್ಲವೆ! ಬಾಗಿಲು ಹಾಕಿದಳು ಆಕೆ. ಫ್ಯಾನಿನಡಿ ಕೈಕಾಲುಗಳನ್ನು ಸಡಿಲಾಗಿ ಚೆಲ್ಲಿ ಕಣ್ಣು ಮುಚ್ಚಿ ಮಲಗಿದಳು. ….ನಿಧಾನವಾಗಿ ಉಸಿರಾಡು. ಇನ್ನೂ ನಿಧಾನ. ತಲೆಯಲ್ಲಿ ಬೇರೆ ಯಾವ ವಿಚಾರ ಬೇಡ. ಆಳವಾಗಿ ಒಂದು ನಿದ್ದೆ ಬರಲಿ. ನಿದ್ದೆ ಬರಲಿ. ನಿದ್ದೆ ಬರಲಿ…. ತನ್ನೊಳಗೇ ಹೇಳಿಕೊಂಡಳು. +ಆದರೂ ಆತ ಆ ಪ್ರಶ್ನೆ ಕೇಳಿದನಲ್ಲ! ಎಲವೋ, ಗಂಡಸರು ಮಲಗುವಷ್ಟು ಸುಲಭವಾಗಿ ಹೆಂಗಸರು ಮಲಗುವುದಿಲ್ಲ ತಿಳಕೊ. ಅವರ ಆಯ್ಕೆ ಬಹಳ ಸೂಕ್ಷ್ಮದ್ದು. ಜಾಗರೂಕತೆಯದು. ಎಷ್ಟೆಂದರೆ ಆಯ್ಕೆ ಮುಗಿಯುವಾಗ ಅವರ ಆಯುಷ್ಯವೇ ಅರ್ಧ ಮುಗಿಯುತ್ತದೆ. ಅದಕ್ಕೇ ಬಹುಶಃ ಅವರಿಗೆ ಆಯ್ಕೆಯ ಅವಕಾಶವನ್ನೇ ಕತ್ತರಿಸಿ ಹಾಕಿರುವುದು. +ಉಸಿರಾಟ ಆಳವಾದಂತೆ ಧ್ಯಾನವೂ ಆಳ ಆಳಕ್ಕೆ ಇಳಿಯುತ್ತಿತ್ತು. ಎಲ್ಲೋ ಆಳತಳಕ್ಕೆ ಹೋಗಿ ಸ್ಮೃತಿ ಕಚ್ಚಿ ಎತ್ತಿ ಮೇಲ್ತಂದಂತೆ, ಹಿಡಿತ ತಪ್ಪಿ ಮತ್ತದು ಕೆಳಗೆ ಬಿದ್ದಂತೆ. ಮತ್ತೆ ಮತ್ತೆ ಹೆಕ್ಕಿಕೊಂಡಂತೆ. ಏನದು? ಯಾರ ನೆನಪು? +ಪಕ್ಕದಲ್ಲಿ ಕುಳಿತಿದ್ದ ಅರುಂಧತಿ “ಈ ಮಾಸ್ಟರು ಚಂದ ಇದ್ದಾರೆ ಅಲ್ಲನ?” ಎಂದು ಕಿವಿಯಲ್ಲಿ ಪಿಸುಗುಟ್ಟಿದಾಗ “ಥೂ ಹಾಗೆಲ್ಲ ಹೇಳಬಾರದು. ಅಸಹ್ಯ.” – ಎಂದಿದ್ದೆ ತಾನು. ಮನೆಗೆ ಹೋದ ಮೇಲೆ ಅರುಂಧತಿ ಹೀಗೆ ಹೇಳಿದಳು ಎಂದು, ತಾನಾದರೆ ದೊಡ್ಡ ಸುಭಗಿತ್ತಿ ಹಾಗೆಲ್ಲ ಹೇಳುವವಳಲ್ಲ ಎಂಬಂತೆ ಅಮ್ಮನೊಡನೆ ಹೇಳುತ್ತ ಆ ಮಾಸ್ಟರ ವಿಷಯವನ್ನು ಮತ್ತೆ ಎತ್ತಿದರೆ. +“ಕಲಿಯುವ ಮಕ್ಕಳಿಗೆ ಏನದು ಅಧಿಕ? ಮಾಸ್ಟರು ಹೇಗಿದ್ದರೇನು?” – ಅಮ್ಮ ತಾನು ಹೇಳುವುದನ್ನು ಪೂರ್ತಿ ಯಾಕೆ ಕೇಳಬಾರದು? ತಾನು ಅಂಥವಳಲ್ಲ ಅಂತ ಅಮ್ಮನಿಗೇಕೆ ತಿಳಿಯುವುದಿಲ್ಲ? +ಆದರೂ….. ಬೆನ್ನ ಹಿಂದೆ ಕೈಕಟ್ಟಿಕೊಂಡು ಪಾಠ ಹೇಳುತ್ತ ತಿರುಗುತ್ತಿದ್ದ ಅವರು ಒಮ್ಮೆ ತನ್ನ ಸಮೀಪಕ್ಕೆ ಬಂದಾಗ ಅವರ ಶರ್ಟಿನ ತುದಿಯನ್ನು ತಾನು ಮುಟ್ಟಿದ್ದು ಅಮ್ಮನಿಗೆ ಹೇಳಲೇ ಇಲ್ಲ ತಾನು. +ಅದು ಅಷ್ಟೇ. ಅಲ್ಲಿಗೆ ಮುಗಿಯಿತು. +ಅವರಿಗೂ ಲೆಕ್ಕದ ಟೀಚರಿಗೂ ದೋಸ್ತಿ ಬಿದ್ದಿದೆ ಎಂದಳು ಗಿರಿಜ ಎಂಬವಳು. ಹೇಗೆ ಗೊತ್ತಾಯಿತು ನಿನಗೆ ಎಂದರೆ ಗೊತ್ತಾಯಿತು ಹೇಗೋ ಎಂದಳು. ಕಣ್ಣಲ್ಲಿ ಕಂಡಂತೆ ಏನೇನೋ ವಿವರಿಸಿದಳು. “ಟೀಚರು ಮಾತಾಡುವಾಗ ಮಾಸ್ಟರು ಅವರನ್ನೇ ನೋಡುತ್ತಿರುತ್ತಾರೆ. ಇನ್ನೊಮ್ಮೆ ಸರೀ ನೋಡು” ಎಂದಳು. ಅಷ್ಟರವರೆಗೆ ಮಾಸ್ಟರು ಕೊಟ್ಟ ಹೋಮ್ವರ್ಕನ್ನು ಜತನದಿಂದ ಮಾಡುತ್ತಿದ್ದ ತಾನು ಆಮೇಲಿಂದ ಒಟ್ಟಾರೆಯಾಗಿ ಮಾಡಿದೆನಲ್ಲವೆ? ಅರುಂಧತಿ ಮತ್ತು ಗಿರಿಜ ಕೂಡ ಬಹುಶಃ. +ಒಂದು ರಾತ್ರಿ ಊಟದ ಸಮಯ. “ಅಮ್ಮ, ಆ ಶಾಂತಪ್ಪ ಮಾಸ್ಟರು ಲೆಕ್ಕದ ಟೀಚರೊಡನೆ….” ಎಂದು ಹೇಳಲು ಹೊರಟದ್ದೇ “ಮಾಸ್ಟರುಗಳಿಗೆ ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು ಯಾಕೆ ಇಂಥದ್ದೆಲ್ಲ, ಬೇಕಾಗಿದೆಯ?” ಎಂದೆಲ್ಲ ಹೇಳುತ್ತ ಮುಂದೆ ತಾನು ಉದ್ದ ಎಳೆಯಬೇಕೆಂದಿದ್ದ ಮಾತುಗಳನ್ನೆಲ್ಲ ಗುಡಿಸಿಹಾಕಿಬಿಟ್ಟಳು. ತನಗೆ ಊಟ ಸೇರಲಿಲ್ಲ. “ಉಣ್ಣು. ರಾತ್ರಿ ಅಡಿಕೆಯಷ್ಟು ಉಂಡರೂ ಆನೆಯಷ್ಟು ಬಲ” – ಕಣ್ಣು ಕೆಂಚರಿಸಿದಳು ಅಮ್ಮ. +ಎಲ್ಲಿಯ ಶಾಂತಪ್ಪ ಮಾಸ್ಟರೋ ಯಾವ ಲೆಕ್ಕದ ಟೀಚರೋ. ಈಗ ಆ ಮಾಸ್ಟರು ಎಲ್ಲಿದ್ದಾರೆ? ಆ ಟೀಚರಂತೂ ಮದುವೆಯಾಗಲೇ ಇಲ್ಲವಂತೆ. ಟೀಚರ್‍, ದೊಡ್ಡ ತಪ್ಪು ಮಾಡಿದಿರಿ. ಆತ ಯೌವನವನ್ನು ಪ್ರೀತಿ ಮಾಡುವವ. ಜೀವವನ್ನಲ್ಲ. ನೀವು ಬಿಳಿಗೂದಲಿನವರಾದರೆ ಅವನಿಗೆ ಬೇಡ. ಇದೆಲ್ಲ ನಿಮಗೆ ಯಾಕೆ ತಿಳಿಯದೇ ಹೋಯಿತು ಟೀಚರ್‍? +ಸ್ವತಃ ಟೀಚರೇ ಎದುರು ನಿಂತು ನಗುತ್ತಿದ್ದರು. ಪ್ರಶ್ನೆಯನ್ನು ಅವಳಿಗೇ ತಿರುಗಿ ಸಿಟ್ಟಂತೆ. ಎಲ್ಲ ಪುರುಷರೂ ಹಾಗೇ ಎಂಬಂತೆ. +ಕಿರುಚಿದಳು ಆಕೆ. “ಟೀಚರ್‍, ಆತನೇನು ಶಾಂತಪ್ಪ ಮಾಸ್ಟರ ಹಾಗಲ್ಲ ತಿಳೀತಾ?” ನಸುನಗುತ್ತ ಟೀಚರು ಮರೆಯಾದರು. ಆಕೆ ಮೆಲುವಾಗಿ ಉಸಿರಾಡಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕೆಂದಷ್ಟೂ ಅದು ವೇಗದಿಂದ ಏರಿಳಿಯ ತೊಡಗಿತು. ಶಾಂತಪ್ಪ ಮಾಸ್ಟರ ಕಣ್ಣುಗಳನ್ನು ನೆನಪಿಸಿಕೊಳ್ಳ ಹೋದಳು. ಅವು ಟೊಳ್ಳು ಬಿದ್ದಿದ್ದವು! +….ಕಣ್ಣೆದುರು ಆತ ನಿಂತಿದ್ದ. ಅದೇ ಸಂಯಮದ ನಗೆ. +ನಂಬುತ್ತೀಯ ಇದನ್ನ? ಇನ್ನೂ ಏಳೆಂಟು ವರ್ಷದ ಹುಡುಗಿಯ ಪ್ರೀತಿ ಕಥೆಯನ್ನ? ಆತ ಎಲ್ಲ ಬಲ್ಲಂತೆ ದೊಡ್ಡದಾಗಿ ನಕ್ಕ. ಅಕೆ ಆ ನಗೆಯನ್ನೇ ದಿಟ್ಟಿಸಿದಳು. ಆತನ ನಗೆಯ ಗೆರೆ ಶಾಂತಪ್ಪ ಮಾಸ್ಟರ ನಗೆಯ ಗೆರೆಯನ್ನೇ ಹೋಲುತ್ತಿದೆಯೇ….! ಮೆಲ್ಲ ಅ ಗೆರೆಯ ಮೇಲೆ ಕೈಯಾಡಿಸಿದಳು. ಬಾಲ್ಯದ ಮೃದು ಭಾವನೆಯನ್ನು ಪ್ರೀತಿಯಿಂದ ಸವರಿದಂತೆ. +ಆತ ಮಾಯವಾದ. +ನಾಟಕದ ಹಾಡುಗಳಿಗೆ ಹಾರ್‍ಮೋನಿಯಂ ನುಡಿಸಲು ಬರುತ್ತಿದ್ದ ರಘುಪತಿ! ನೀನು ಇನ್ನೂ ಇಲ್ಲಿದ್ದೀಯ? ಇಲ್ಲವೇ ಇಲ್ಲ ಎಂದು ತಿಳಿದಿದ್ದೆ. ಹಾರ್‍ಮೋನಿಯಂ ನುಡಿಸುವ ಆ ದೃಢವಾದ ಬೆರಳುಗಳನ್ನೇ ನಾವು ನೋಡುತ್ತಾ ಇರುತ್ತಿದ್ದೆವಲ್ಲ! ಕೆಂಪು ಗುಲಾಬಿ ಮಿಶ್ರ ಉಗುರುಗಳು. ಬೆರಳುಗಂಟಿನ ಮೇಲೆಯೂ ರೋಮ. ಅವು ಹಾರ್‍ಮೋನಿಯಂನ ಮೆನಯ ಮೇಲೆ ಕುಣಿಯುತ್ತ ಅತ್ತ ಇತ್ತ ಸಾಗುವಾಗ ಸಮ್ಮೋಹಗೊಂಡವರಂತೆ ನೋಡುತ್ತಿದ್ದೆವಲ್ಲ ಎಲ್ಲ ಹುಡುಗಿಯರೂ. ಮನೆ ಪಕ್ಕದ ಕಸ್ತೂರಿಯೂ. ಇಲ್ಲವಾದರೆ ಅವನ ಕುರಿತು ಮಾತಾಡುವಾಗೆಲ್ಲ ಕಸ್ತೂರಿಯ ಮುಖ ಯಾಕೆ ಹೊಳೆಯುತ್ತಿತ್ತು? ಆತ ಕಾಟುಜಾತಿಯವ ಎಂದು ತಿಳಿದ ದಿನ ಅವಳ ದನಿಯೇಕೆ ಬೇಸರ ಕಾಸಿದಂತಿತ್ತು? +“ನಿಂಗೇನು ಅವರು ಯಾವ ಜಾತಿಯಾದರೆ?” – ಸುಭಗಿತ್ತಿ ತಾನು ಕೇಳಿದ್ದೆ. ಕಸ್ತೂರಿ ಮಾತಾಡಲಿಲ್ಲ. ಬಹಳ ಹೊತ್ತಿನವರೆಗೂ ಯೋಚನೆಯಲ್ಲಿದ್ದಂತೆ ಕಂಡಳು. ಅವಳ ದುಃಖ ಕಂಡು ತನಗೆ ಖುಶಿಯಾಗಿತ್ತು. ಜೊತೆಗೇ ಅವ ಕಾಟುಜಾತಿಯಂತ ಒಳಗೊಳಗೇ ಖುಶಿ ನಂದಿಹೋಗುತ್ತಿತ್ತು ಕೂಡ. ಆದರೂ ಬಾಯಿಪಾಠ ಹೇಳುವಂತೆ ಹೇಳಿದ್ದೆ. “ಜಾತಿಗೀತಿ ಎಂಥದನಾ? ಅದೆಲ್ಲ ಸುಮ್ಮನೆ” – ಎಂದು. +ಮನ ಮುಟ್ಟುವುದರೊಳಗೆ ಅವಳೊಡನೆ ಬೇಕೆಂದೇ ಜಗಳಾಡಿದ್ದೆ. ಸಣ್ಣ ವಿಷಯಕ್ಕೆ. ಆತ ಚಾಕ್ಪೀಸ್ ಹಿಡಿಯುವುದು ಸಿಗರೇಟು ಹಿಡಿದ ಹಾಗೇ ಎಂದು ಆಕೆ ಹೇಳಿದ್ದಕ್ಕೆ. ಸ್ವಲ್ಪ ಸಮಯದ ನಂತರ ಮತ್ತೊಂದು ಸುದ್ದಿ ತಂದವಳೂ ಅವಳೇ. “ಏಯ್ ರಘುಪತಿಗೆ ಮದುವೆಯಂತೆ. ಸಾವಿರಗಟ್ಟಲೆ ವರದಕ್ಷಿಣೆಯಂತೆ.” ಆಕೆ ಹೇಳಿದ್ದು ‘ನಿನಗೆ ಹಾಗೇ ಆಗಬೇಕು’ ಎಂಬ ಧಾಟಿಯಲ್ಲಿ! ಯಾವುದೂ ಸ್ವಷ್ಟವಿಲ್ಲದ ಸ್ಪಷ್ಟ ನುಡಿಯದ ಸ್ವಷ್ಟಗೊಳ್ಳಲು ಹೆದರುವ ದಿನಗಳವು. ಎಲ್ಲ ಮುಸುಕಿನೊಳಗಿನ ಗುಮಾನಿ. +ತಾನು ಮುಟ್ಟಿನವಳು ಬೇರೆ. ಕೆಳಹೊಟ್ಟೆ ಅಸಾಧ್ಯ ನೋಯುತ್ತಿತ್ತು. ಕಾಲು ಜಗಿಯುತ್ತಿತ್ತು. ಮನೆ ಮುಟ್ಟಿದವಳೇ ವಾಂತಿ ಮಾಡಿದೆ. ತಿಂಡಿ ಬೇಡ ಕಾಫಿ ಬೇಡ ಎಂದು ಮುಟ್ಟಿನ ಮೂಲೆಯಲ್ಲಿ ಕವುಚಿ ಮಲಗಿಬಿಟ್ಟೆ. ಒಳಗಿನಿಂದ ಕೇಳಿಸುತ್ತಿತ್ತು. “ಎಸ್ಸೆಸ್ಸೆಲ್ಸಿ ಆಗಿಬಿಟ್ಟರೆ ಸಾಕು. ಮುಂದೆ ಕಳಿಸುವುದು ಬೇಡ. ಮುಟ್ಟಿನ ಹೊತ್ತಿನಲ್ಲೆಲ್ಲಾ ಶಾಲೆಗೆ ಹೋಗುವುದು, ಉಳಿದವರನ್ನು ಮುಟ್ಟುವುದು, ಹಾರುವುದು ಕುಣಿಯುವುದು, ಯಾಕಾಗುತ್ತದೆ? ಮುಂದೆ ಹೆತ್ತು ಹಿಡಿಯ ಬೇಕಾದವರು.” +“ಅಷ್ಟೇ ಸೈಯಾ? ಯಾರನ್ನಾದರೂ ಕಟ್ಟಿಕೊಂಡು ಹಾರಿದರೆ!…. ಜಾತಿಗೀತಿ ನೋಡಿಕೊಂಡು ಹಾರಿದರಾದರೂ ಅದೊಂದು ಲೆಕ್ಕ” – ದೊಡ್ಡ ನಗೆಯಲ್ಲಿ ಮಾತು ಉರುಳಿಸಿಬಿಡುವ ಗುಂಡಕ್ಕ. ಅವರಿಗೆ ಇದೆಲ್ಲ ಹೇಗೆ ತಿಳಿಯುತ್ತದೆ? +ತಾನು ಬಿಕ್ಕುತ್ತಿದ್ದೆ. ಗುಂಡಕ್ಕನಿಗೆ ಕಾಣಿಸುತ್ತಿರಲಿಲ್ಲ. +ಮರೆಯಾಗಿದ್ದ ರಘುಪತಿ ಯಕಿಲ್ಲಿ ಮತ್ತೆ ಪ್ರತ್ಯಕ್ಷನಾದ? ನನಗಂತೂ ಬೇಡ. +…..ಮುಂದೆ? ಕೇಳಿದನಾತ ಬಾನ್ಸುರಿಯಂತೆ. ಅರೆ, ರಘುಪತಿಯ ನಗೆಯ ಬಿಳಲು ಇಲ್ಲಿ, ನಿನ್ನ ಕಣ್ಣಲ್ಲಿ! ಹೋಗು ಹೋಗು, ನಾ ಮುಂದೆ ಹೇಳುವುದಿಲ್ಲ. ಅದೂ ನಿನ್ನ ಹತ್ತಿರ. +ಹೊರಳಿದಳಾಕೆ. ಏನು ಮಾಡಿದರೂ ನಿದ್ದೆ ಬರಲೊಲ್ಲದು. ಸುತ್ತ ನಿಶ್ಶಬ್ದ. ನಿಶ್ಶಬ್ದತೆ ಸೀಳಿಕೊಂಡು ನಂಬರು ಕರೆದಂತೆ. +ಹಂಡ್ರೆಡ್ ಅಂಡ್ ಏಯ್ಟ್? +ಎಸ್ ಸರ್‍. +ಈ ಸರ್‍ಗೆ ಎಷ್ಟು ಬೇಗ ‘ನೋ’ ಅನ್ನಬೇಕಾಯ್ತು. ಅತನ ನಿಲುವು ನಡಿಗೆಯನ್ನು ತಾನು ಕಣ್ಣಿಂದ ಹಿಂಬಾಲಿಸುತ್ತಿರುವಾಗಲೇ ಫಕ್ಕನೆ ಆತ ತೀರ ಕೊಳಕಾಗಿ ಕಂಡಿದ್ದ. ಸಧ್ಯ ತಾನು ಬಯಿಬಿಡದ್ದು ಎಷ್ಟು ಒಳ್ಳೆಯದಾಯಿತು! ಮತ್ತೆ, ಪ್ರೀತಿಸುತ್ತೇನೆಂದು ಜಗವೆಲ್ಲ ಹೇಳಿಕೊಂಡು ಬಂದ ಮತ್ತೊಬ್ಬ ಸರ್‍. ಬಲು ತಮಾಷೆಯಾಗಿದ್ದ. ಆಚೀಚೆ ಹೋಗುವಾಗ ಸಣ್ಣಗೆ ಸಿಳ್ಳಿನಲ್ಲಿ ಹಾಡು ನುಡಿಸುತ್ತಿದ್ದ. ಪ್ರೀತಿಯ ವಿಷಯ ಮಾತಾಡುವಾಗೆಲ್ಲ ಎದೆಯ ಮೇಲೆ ಕೈಯಿರಿಸಿಕೊಳ್ಳುತ್ತಿದ್ದ. ತನಗೆ ತಡೆಯಲಾರದ ನಗು ಬರುತ್ತಿತ್ತು. ಮತ್ತು ತಾನು ಅವನಿಗೂ ‘ನೋ’ ವಾಗಬೇಕಾಯಿತು. ಅವರ ಮುಖಗಳನ್ನೆಲ್ಲ ಈಗ ಎಣಿಸಹೋದರೆ ಒಂದೂ ಮೂಡುತ್ತಿಲ್ಲ! +ಕೇಳಿಲ್ಲಿ, ಎಲ್ಲಿಯೂ ಬೀಳದೆ ಜೋತಾಡದೆ ಸೋಲದೆ ತೆರೆದುಕೊಳ್ಳುತ್ತ ಮುಚ್ಚಿಕೊಳ್ಳುತ್ತ ಮತ್ತೆ ತೆರೆದುಕೊಳ್ಳುತ್ತ ಬದುಕಿಗೆ ಮಿಡಿಯುತ್ತಲೇ ಇದ್ದೆ. ಇನ್ನೂ ಹೇಳಬೇಕೇನು ನಿನಗೆ? ಕೇಳುವಂಥವನಾಗಿ ಧೀರ. +* * * * +ಅಂದೊಮ್ಮೆ ನೈಟ್ ಬಸ್ಸಿನಲ್ಲಿ ಕುಳಿತಿದ್ದೆ. ತನ್ನ ಬಳಿಯೇ ಓರ್ವ ಬಂದು ಕುಳಿತ. ಎಲ್ಲಿಯವನೋ ಯಾರೋ. ಬಸ್ಸು ವಾಲುವಾಗ ತೋಳಿಗೆ ತೋಳು ತಾಕುತಿತ್ತು. ಮೊದಮೊದಲು ಮುದುರುತ್ತಿದ್ದ ಆತ ಆ ಮೇಲೆ ಮಾತಿಗೆ ತೊಡಗಿದ. ಸ್ವರದಲ್ಲಿ ಹೊಳಪಿತ್ತು. ಏನು ಮಾತಾಡಿದ ಅಂದರೆ ತನ್ನ ಕೆಲಸ ಹೆಸರು ಊರು… ಹೀಗೇ. ಯಾಕೆ ಹೇಳಿದನೋ. ಮನುಷ್ಯ ತನ್ನನ್ನು ತಾನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಇರಬಹುದು. ಕಣ್ಣು ಕೂರುತ್ತಿತ್ತು. ಒಮ್ಮೊಮ್ಮೆ ಅವನ ತಲೆ ನನ್ನ ಹೆಗಲಿಗೆ ಬಂದು ತೂಗುತ್ತಿತ್ತು. (ಉದ್ದ ಪಯಣ. ನಾನೂ ಏನೂ ಮಾಡುವಂತಿರಲಿಲ್ಲ ಅಂತೆಲ್ಲ ಹೇಳಬೇಕೇ?) ಕತ್ತಲಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಆದರೆ ಲೈಟು ಹತ್ತಿದಾಗಲೂ ನಾನು ಕಿಟಕಿಯ ಹೊರಗೆ ನೋಡುತ್ತಿದ್ದೆ! ನನಗವನನ್ನು ನೋಡಬೇಕೆಂದು ಅನಿಸಲೇ ಇಲ್ಲ. ಬೆಳಕಲ್ಲಿ ಅವನ ಮಾತು ಕೇಳಬೇಕೆಂತಲೂ ಅನಿಸುತ್ತಿರಲಿಲ್ಲ. ಮಬ್ಬುಗತ್ತಲೆಯಲ್ಲಿ, ಬೆಕ್ಕಿನನಿದ್ದೆಯಂತಹ ಸಣ್ಣ ಸಣ್ಣ ನಿದ್ದೆಗಳೆಡೆಯಲ್ಲಿ ಆತ ಮಾತಾಡುತ್ತಲೇ ಇದ್ದ. ಏನಂತ? ನೆನಪಿಲ್ಲ. ನಾನೇನೂ ನಿದ್ದೆ ಹೋಗಿರಲಿಲ್ಲ. ಆದರೆ ಅವನ ಮಾತಿನ ಸಾರ ನನಗೆ ಬೇಕಂತಲೂ ಇರಲಿಲ್ಲ. ಮರೆತುಹೋಗದಿರುವುದು ಬಸ್ಸಿನ ಕುಲುಕಟ ಮಾತ್ರ. +ಬೆಳಗಿನ ನಸುಕು. ಅವನ ಊರು ಬಂತು ಬಂತೆನುವಾಗ ತನ್ನ ಸೂಟ್ಕೇಸ್ ಇತ್ಯಾದಿ ಜೋಡಿಸಿಕೊಳ್ಳತೊಡಗಿದ. ಅಷ್ಟು ಹೊತ್ತೂ ಜೊತೆಗೇ ಕುಳಿತು ಚಂದ ದನಿಯಲ್ಲಿ ಮಾತಾಡುತ್ತಲೇ ಬಂದ ಆತ ಊರು ಬರುತ್ತಲೂ ಅಪರಿಚಿತರಂತೆ ತಟಪಟ ಇಳಿದು ಹೋಗಿ ಬಿಟ್ಟ. ಎಲ್ಲಿಗೋ ಏನೋ? ಮನುಷ್ಯ ಮನುಷ್ಯನಾಗಿ ಇರುವುದು ಇಂತಹ ಕೆಲ ಕ್ಷಣಗಳಲ್ಲಿ ಮಾತ್ರವಿರಬಹುದೆ? ಸಭ್ಯತೆಯ ಎಲ್ಲೆ ಮೀರದೆಯೂ ನೆನಪು ಉಳಿಸಿ ಹೋದ. ಹೋಗುವಾಗ ನನಗೂ ದುಃಖವಾಗಲಿಲ್ಲ. …ಇನ್ನೂ ಇದ್ದಾನೆ ಒಳಗೆ ಅಂದರೆ! ಕೇವಲ ಧ್ವನಿಯಾಗಿ. +ಹೇಳು. ಇದಕ್ಕೆಲ್ಲ ಪ್ರೀತಿಯ ಹೆಸರು ಕೊಡುತ್ತೀಯ? ಮಲಗುವುದೆಂದರೆ ಇದೇ ಮತ್ತೆ ಎನ್ನುತ್ತೀಯ? ಆದರೆ ನಾನು ಹಾಗೆಣಿಸುವುದಿಲ್ಲ. ಬಹುಶಃ ಪ್ರೀತಿಸುವ ಗುಣದ ಮನ ಆ ಸ್ವಭಾವ ಒಣಗಿ ಹೋಗದಂತೆ ಮೃದುತ್ವದ ಸಿಂಚನ ಮಾಡುತ್ತ ತನ್ನನ್ನು ತಾನೇ ಕಾಪಾಡಿಕೊಂಡು ಬರುವ ಬಗೆಯಾಗಿರಬಹುದು ಅದು. ಇದೆಲ್ಲ ನಡೆದದ್ದು ಮುಂದೊಂದು ದಿನದ ಒಂದು ಘನಕ್ಕಾಗಿ. ಒಂದು ನಿಜಕ್ಕಾಗಿ. ಒಂದು ನಿಜವಾದ ಮಲಗುವಿಕೆಗಾಗಿ. ಅರ್ಥವಾಗುತ್ತಿದೆಯೆ ನಿನಗೆ? ಅರ್ಥ ಮಾಡಿಸಬೇಕಿಲ್ಲ. ಅದೂ ನಿನಗೆ! +ಇಷ್ಟಕ್ಕೂ ಅರ್ಥ ಮಾಡಿಸುವ ಕೆಲಸ ಬಲುಕಷ್ಟದ್ದು. ಉದಾಹರಣೆಗೆ ಆ ಶತದಡ್ಡ ಹುಡುಗ, ಅಡ್ಡಡ್ಡ ಬೆಳೆಕುಕೊಂಡವ, ಬಂದ ಎಂದರೆ ಎಲ್ಲಿಲ್ಲದ ಗಲುವು ಯಾಕೆ ತುಂಬುತ್ತಿತ್ತೆಂದು ಹೇಳಲು ಹೇಗೆ ಸಾಧ್ಯ? ಅವನಿರುವಷ್ಟು ಹೊತ್ತು ಮಾತಿಗೆ ಮುಂಚೆ ನಗೆ. ನಗೆಗಾಗಿಯೇ ಅರಳುವಂತಹ ನಗೆ. ಈಗಲೂ ಅವನನ್ನು ನೆನೆಸಿಕೊಮಡರೆ ಒಮದು ಹಾಸು ನಗೆ ಬರುತ್ತದೆ ತನಗೆ. +ಈ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಕೇವಲ ಆಶ್ಚರ್ಯವೇ? ಚೇಷ್ಟೆಯ ನಗು. ತೆಳು ಅಲೆಯ ಮೃದು ವೇದನೆ. ಎಲ್ಲೋ ಸಂಧಿಸಿದ ಕಣ್ಣುಗಳು ಯಾವ ಸೇತುಬಂಧವಿಲ್ಲದೆಯೂ ಹರಿದುಬರುವ ಮಂದಸ್ಮಿತಗಳು ಶಬ್ದವಿಲ್ಲದ ಮತುಗಳು ಕೇಳದ ರಾಗಗಳು….. +* * * * +“ಹೂಂ. ಹಾಗೆ ಬಾ ಮತ್ತೆ.” +“ಅರೇ, ನೀನಿನ್ನೂ ಹೋಗಿಲ್ಲವೆ? ಹನ್ನೆರಡೂವರೆಯಾದೊಡನೆ ಹೋಗುವೆನೆಂದು ಹೊರಟವನು? ಹೋಗು ಹೋಗು. ನನ್ನ ಬಳಿ ಮಾತಿಲ್ಲದೆ ಕುಳಿತುಕೊಳ್ಳುವವನು ಅದು ಹೇಗೆ ಇನ್ನೊಬ್ಬಳು ಎದುರು ಬಂದರೆ ವಾಚಾಳಿಯಾಗುತ್ತಿ? ನೀನೆಂದರೆ ಅಸಹ್ಯವಾಗುವಂತೆ ವರ್ತಿಸುತ್ತಿ? ನೀನೇ ಅಲ್ಲ ಅಂತನಿಸುವಷ್ಟು ಕೆಟ್ಟದಾಗಿ ನಗುತ್ತೀ ಚಲಿಸುತ್ತೀ…..” +ಆಕೆ ಅವನನ್ನೇ ದಿಟ್ಟಿಸಿದಳು. +ಆ ಮುಖದಲ್ಲಿ ಗೆರೆಯಿತ್ತು. ತುಟಿಯಲ್ಲಿ ಸಿಳ್ಳಿತ್ತು. ಬೆರಳ ತುದಿಯಲ್ಲಿ ಗುಲಾಬಿ ಗೆಂಪಿತ್ತು. ಕಣ್ಣಲ್ಲಿ ನಗೆಯಿತ್ತು. +ಸೊಂಟಕ್ಕೆ ಕೈಕೊಟ್ಟು ನಗುತ್ತ ನಿಂತಿದ್ದನಾತ. +ಬಾ. ದೇವರಗೂಡಲ್ಲಿ ಕೈಗೆ ಕಡಗೋಲು ಕೊಟ್ಟು ಕೂರಿಸುತ್ತೇನೆ….. +* * * * +ಆಕೆ ತಲೆಯನ್ನೊಮ್ಮೆ ಜೋರಾಗಿ ಅಲುಗಿಸಿ ಮಲಗಿದಳು. ಈಗ ಶವಾಸನ. ಕಾಲನ್ನು ಅಗಲಿಸಿ ಎದೆಯ ಮೇಲೆ ಬಲಗೈಯಿಟ್ಟು ಎಡಗೈಯನ್ನು ನಾಭಿಯ ಮೇಲಿಟ್ಟು ಉಸಿರಿನ ಏರಿಳಿತವನ್ನೇ ಗಮನಿಸು – ಎಂದು ತನಗೇ ಹೇಳಿಕೊಳ್ಳುತ್ತ. ನಿಧಾನವಾಗಿ ಆಳವಾಗಿ ಉಸಿರಾಡುತ್ತ. +ಫ್ಯಾನು ತಿರುಗುತ್ತಲೇ ಇತ್ತು. ತನ್ನ ಸುತ್ತ ತಾನೇ. ಸ್ವಂತ ಗತಿಯ ಮೇಲೆ ತನಗೇ ನಿಯಂತ್ರಣವಿಲ್ಲದ ವಸ್ತು. +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […] +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_169.txt b/Kannada Sahitya/article_169.txt new file mode 100644 index 0000000000000000000000000000000000000000..c24c0704b938508a23fd9903190267ed1e97f7e2 --- /dev/null +++ b/Kannada Sahitya/article_169.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಳೆ ಅಂಗಡಿಯ ಮುಂದೆ ನಿಂತವಳು +ಒಳ ಹೋಗಲಾರಳು.. ಮನಸ್ಸು +ಕಿಣಿಕಿಣಿಸುತ್ತ ಹೊರಬರಲೊಲ್ಲದು; +ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ +ಕಲಾವಿದನ ಚಿತ್ರದಂತೆ +ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ +ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು +ಕಾಡಿಗೆ ಕಣ್ಣ ಹೊಳಪನ್ನು ನೋಡುತ್ತ, +ಸಂಜೆ ಸಿಂಗಾರವಾಗಿ +ಗೇಟಿಗಾತು ನಿಂತ ಹೆಂಗಸರ ಹಗುರ ಪರಿಮಳವ, +ಕೋಲಾಟದ ಹುಡುಗಿಯರ ಗೆಜ್ಜೆ ಹೆಜ್ಜೆಗಳ, +ತುಂಬಿದ ಬಸುರಿಯೊಳಗಿನ ಮಿಸುಗಾಟವ +ಗಮನಿಸುತ್ತ.. ಫಕ್ಕನೆ ನಿಂತು ಬಿಡುತ್ತಾಳೆ; +ಇದೆಂಥ ಎದೆ ಭಾರ +ಯಾವ ಕ್ಷಣದೊಳು ಮನ ಒಳ ಸರಿದು +ಯಾರದು ಬಾಗಿಲು ಮುಚ್ಚಿ ಬೀಗ ಜಡಿದಿದ್ದು? +ಯಾರು ಯಾರದು ಕೀ ಕಳೆದಿದ್ದು? +ಅಥವ ಕೀ ಇಲ್ಲದ ಬೀಗವೆ? +ಒಳಗಿನ ಮೌನ +ಹೊರಗಿನ ಮೌನಕೆ ಕೇಳುತಿದೆ +ಬೀಗ ಮುರಿಯಲಾರೆಯಾ? +***** +ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; […] +ಬೆಟ್ಟದ ಮೇಲೆ ಹಿಂದೆ ತಲೆಯೆತ್ತಿ ಮೆರೆದು, ಇಂದು ಹಾಳು ಬಿದಿರಿವಂಥ ಕೋಟೆ. ಅಲ್ಲಿದ್ದನೊಬ್ಬ ಮುದುಕ, ಅವಗೊಬ್ಬನೇ ಮಗ ಹೇಗೊ ಸಾಗಿಸುತ್ತಿದ್ದ ಬದುಕ. ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾಯಿತು ಅವನ ಕುದುರೆ, ಅವನಿಗಿದ್ದಾಸರೆ. ಬೆಟ್ಟದ ಕೆಳಗೆ […] +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_17.txt b/Kannada Sahitya/article_17.txt new file mode 100644 index 0000000000000000000000000000000000000000..6236c6f4314aaadb4b62806876278bf585f1c5a8 --- /dev/null +++ b/Kannada Sahitya/article_17.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು ತಿಳಿಯಲಿಲ್ಲ. ಮೈಯೆಲ್ಲ ಬಿಗಿದು ಕತ್ಟಿದ ಹಾಗೆ, ಅಲುಗಾಡಿಸಲೂ ಆಗುತ್ತಿರಲಿಲ್ಲ. ಅಗಳಿ ಹಾಕಿಲ್ಲ. ಹಾಗೇ ಕದ ದೂಡಿ ಬಾ ಎನ್ನೋಣವೆಂದರೆ ನಾಲಗೆ ಏಳದಾಯಿತು. ವಾಸು ತಾನೇ ಕದ ದೂಡಿ ಒಳಗೆ ಬಂದವನು ಇವನನ್ನು ನೋಡಿ ಥಕ್ಕಾಗಿ ನಿಂತುಬಿಟ್ಟ. “ಇದೆ! ರಾತ್ರಿಯೆಲ್ಲ ಕುರ್ಚಿಯಲ್ಲೇ ನಿದ್ದೆ ಮಾಡಿದಿರೋ ನೋಡುತ್ತೇನೆ” ಎಂದಾಗ, ಮೆಲ್ಲಗೆ ದೃಷ್ಟಿಗೆ ಬಿದ್ದಿದ್ದುವು: ರಾತ್ರಿಯಿಡೀ ಉರಿದ ದೀಪದ ಬೆಳಕಿನಲ್ಲಿ ಬೆಳಗಿನಿಂತ ಮಲಗುವ ಕೋಣೆ ; ನಿರಿ ಮುರಿಯದೇ ಇದ್ದ ಹಾಸಿಗೆ ; ಪ್ರಿಯವಾದ ಪುಸ್ತಕಗಳ ಕಪಾಟು. ವಿರಾಮ ಕುರ್ಚಿಯಲ್ಲಿ ಕುಳಿತು ಕಾಲುಗಳ ಮೇಲಿರಿಸಿ ಬರೆದ ವಹಿ ಅವನಿಂದ ದೂರ ಸಿಡಿದು ನೆಲದ ಮೇಲೆ ಬಿದ್ದಿತ್ತು. ಅವನನ್ನೇ ಮಿಕಿಮಿಕಿ ನೋಡುತ್ತಿದ್ದ ವಾಸು ಚಕಿತನಾಗಿ, “ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತೇನೆ. ಅದು ಯಾಕೆ ಹಾಗೆ ರಾಯರ ಬನೀನು ಮಸಿಯಲ್ಲಿ ಅದ್ದುಬಿಟ್ಟಿದೆ?” ಎಂದಾಗ ನೋಡಿಕೊಂಡ : ಹೌದು. ತೆರೆದೇ ಇದ್ದ ಪೆನ್ನಿನ ನಿಬ್ಬು ಬನಿಯನ್ನಿನ ಎದೆಯ ಭಾಗದಲ್ಲಿ ಊರಿಕೊಂಡಲ್ಲೇ ಇಷ್ಟು ದೊಡ್ಡ ಚಕ್ರಾಕಾರದ ಮಸಿಯ ಕಲೆಯನ್ನು ಮೂಡಿಸಿತ್ತು : ವಾಸೂನ ವಿನೋದ ಬುದ್ಧಿಗೆ ನಗು ಬಂತು. ಕುರ್ಚಿಯಿಂದ ಏಳುವ ಪ್ರಯತ್ನ ಮಾಡದೇ ಕುಳಿತಲ್ಲಿಂದ ಪೆನ್ನಿಗಾಗಿ ತಡಕಾಡಿದ. ವಹಿ ಬಿದ್ದ ಜಾಗದ ಸಮೀಪವೇ ಬಿದ್ದಿತ್ತು. ವಾಸೂನೇ ವಹಿ ಮತ್ತು ಪೆನ್ನುಗಳೆರಡನ್ನೂ ಎತ್ತಿ ಹತ್ತಿರದ ತೇಬಲ್ಲಿನ ಮೇಲಿಟ್ಟು ಚಹದ ಕಪ್ಪನ್ನು ಕೈಗೆ ಕೊಟ್ಟು ಎಂದಿನ ಹಾಗೆ ರೂಮಿನಿಂದ ಹೊರಟುಹೋಗದೇ ಗೋಡೆಗೆ ಒರಗಿ ಕೈಕಟ್ಟಿ ಕುಕ್ಕರುಗಾಲಲ್ಲಿ ಕುಳಿತುಕೊಂಡ. ತನ್ನ ರಾಯರಲ್ಲಿ ಕಂಡ ಎಂತಹುದೋ ವಿಶೇಷ ಬದಲು ಹಿಂದೆಂದೂ ತೋರದೇ ಇದ್ದ ಸಲುಗೆಗೆ ಎಡೆಮಾಡಿಕೊಟ್ಟಂತಿತ್ತು. ಓದುವ ಕೋಣೆ, ಮಲಗುವ ಕೋಣೆ ಎರಡೂ ಒಂದೇ ಆಗಿದ್ದ ಆ ದೊಡ್ಡ ಕೋಣೆಯನ್ನು ಮೊದಲ ಬಾರಿಯೇ ನೋಡುತ್ತಿದ್ದೇನೆ ಎನ್ನುವವನ ಹಾಗೆ ಬೆರಗುಗಣ್ಣುಗಳಿಂದ ನೋಡುತ್ತ, “ರಾಯರೇ”, ಎಂದ. “ನೀವು ಇಷ್ಟೆಲ್ಲ ಪುಸ್ತಕಗಳನ್ನು ಓದಿದ್ದೀರಾ?” ಎಂದು ಕೇಳಿದ. “ಇಲ್ಲ ವಾಸೂ, ಎಲ್ಲ ಪುಸ್ತಕಗಳನ್ನೂ ಪೂರ ಓದಿಲ್ಲ. ಓದುವುದು ಇನ್ನೂ ಬಹಳ ಇದೆ,” ಎಂದು ರಾಮಚಂದ್ರ ಹೇಳಿದಾಗ, ವಾಸು ಪುಸ್ತಕಗಳನ್ನು ನೋಡುತ್ತ ಕುಳಿತುಬಿಟ್ಟ. +ವಾಸು ಈ ಮನೆಗೆ ಹೊಸಬ. ಬಂದು ಒಂದು ತಿಂಗಳಷ್ಟೇ ಆಗಿರಬೇಕು. ರಾಮಚಂದ್ರನ ಊರಿನ ಕಡೆಯವನೇ. ಮುಂಬಯಿಯ ಉಡುಪಿ ಹಾಟೆಲ್ ಒಂದರಲ್ಲಿ ಮಾಣಿಯ ಕೆಲಸ ಮಾಡುತ್ತಿದ್ದವನನ್ನು ಈ ಮೊದಲಿನ ಅಡಿಗೆಯವನೇ ತಾನು ರಜೆಯ ಮೇಲೆ ಹೋಗುವಾಗ ತಂದುಕೊಟ್ಟಿದ್ದ. ವಾಸು ಈ ವರೆಗೂ ತನ್ನ ಹತ್ತಿರ ಹೀಗೆ ಮಾತನಾಡಿದ್ದು ರಾಮಚಂದ್ರನಿಗೆ ನೆನಪಿಲ್ಲ. ತನ್ನ ಮೋರೆಯ ಅದೆಂತಹ ಬದಲು ಕಂಡು ಈ ಬಗೆಯ ಸಲುಗೆಗೆ ಧೈರ್ಯ ಮಾಡಿದನೋ ಎಂದು ಕುತೂಹಲವೆನಿಸಿತು. ನಾಲ್ಕು ಮಲಗುವ ಕೋಣೆಗಳು ; ಹಿರಿದಾದ ದಿವಾಣಖಾನೆ ; ಮೂರು ಬಾಲ್ಕನಿಗಳು, ನಾಲ್ಕು ಬಚ್ಚಲುಮನೆಗಳು. ಇಷ್ಟು ದೊಡ್ಡ ಮನೆಯಲ್ಲಿ ಇರುತ್ತಿದ್ದವರು ತಾವಿಬ್ಬರೇ. ತಾನು ಪ್ರಿಂಟಿಂಗ್ ಪ್ರೆಸ್ಸಿಗೆ ಹೊರಟುಹೋದಮೇಲಂತೂ ‘ಚೀಂ’ ಎನ್ನುತ್ತಿದ್ದ ಮನೆಯಲ್ಲಿ ವಾಸು ಒಬ್ಬಂಟಿ. ಪಾಪ! ಬೇಸರ ಬರಲಾರದೇ? ಮೇಲಾಗಿ, ಕಳೆದ ಕೆಲವು ದಿನಗಳಿಂದ ಪ್ರೆಸ್ಸಿಗೆ ಮೊದಲಿನ ಹಾಗೆ ದಿನವೂ ತಪ್ಪದೇ ಹೋಗದೇ ಆಗೊಮ್ಮೆ ಈಗೊಮ್ಮೆ ಗರಜು ಬಿದ್ದಾಗಷ್ಟೇ ಹೋಗುತ್ತಿದ್ದರೂ ಮನೆಯಲ್ಲಿರುತ್ತಿದ್ದುದು ಕಡಿಮೆಯೇ. ಈ ಎರಡು ದಿನ ಮಾತ್ರ ಮನೆಯಲ್ಲೇ ಇದ್ದೆ. ಆದರೆ ಇಡೀ ದಿನವೆಂಬಂತೆ ಪುಸ್ತಕಗಳಲ್ಲಿ ತಲೆ ಮರೆಸಿ ಕೂತವನು ಇದೀಗ ಮಾತನಾಡಲು ಸಿಕ್ಕನೆಂದನ್ನಿಸಿರಬೇಕು : ರಾಮಚಂದ್ರ ತಾನೂ ವಾಸುವಿನೊಂದಿಗೆ ಹರಟೆ ಹೊಡೆಯಲು ಸಿದ್ಧನಾದ : +“ನಿನ್ನೆ ರಾತ್ರಿ ಏನೋ ಬರೆಯುತ್ತೇನೆ ಎಂದು ಕೂತಿರಲ್ಲ. ಏನು ಬರೆದಿರಿ?” +“ಒಂದು ಕತೆ ಬರೆದೆ ವಾಸೂ.” +“ಯಾರ ಬಗ್ಗೆ? ಆ ಕತೆಯಲ್ಲಿ ನಾನೂ ಬಂದಿದ್ದೇನೋ ಏನೋ….” +“ಕೆಲವು ದಿನಗಳ ಹಿಂದೆ ಇಲ್ಲೊಬ್ಬ ಹೆಂಗಸು ಬಂದಿದ್ದಳಲ್ಲ. ಅವಳ ಬಗ್ಗೆ.” +“ಓ ! ಕಾಶಿಗೆ ಹೋದ ಮುದುಕಮ್ಮನಾ? ಅವಳ ಬಗ್ಗೆ ಏನಪ್ಪ ಬರೆಯೋ ಹಾಗೆ ಇದೆ? ಅವಳು ಸತ್ತಾಗ ಯಾಕೆ ಅಷ್ಟೊಂದು ಅತ್ತಿರಿ? ಮೊನ್ನೆ ಬಂದಿದ್ದರಲ್ಲ ಅವರು?” +“ಯಾರು ಬಂದಿದ್ದರೋ ವಾಸು?” +“ಅವರೇ ಬೆಳ್ಳಗೆ ಚೆಂದವಾಗಿದ್ದಾರಲ್ಲ…?” ವಾಸೂನ ಮೋರೆ ಕೆಂಪಾಯಿತು. ವಾಸೂ ಹೇಳುತ್ತಿದ್ದುದು ಗೆಣೆಗಾತಿ ವೀಣಾಳ ಬಗ್ಗೆ ಇರಬೇಕು ಎಂಬುದು ಗೊತ್ತಾಗಿ, +“ಅವರೇ? ಏನೆಂದರು?” ಎಂದು ಕೇಳಿದ ರಾಮಚಂದ್ರ, ಮೋರೆಯ ಮೇಲೆ ತಾವ ಭಾವನೆಯನ್ನೂ ವ್ಯಕ್ತಪಡಿಸದೇ. +“ಅವರೂ ಹೇಳುತ್ತಿದ್ದರು : ಆಮುದುಕಿ ಸತ್ತದ್ದನ್ನು ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿರೋ ಎಂದು. ಅವರು ಹೇಳಿದ್ದೂ ಸುಳ್ಳಲ್ಲ. ಆ ಮುದುಕಮ್ಮ ಸತ್ತಾಗಲಾಯ್ತು ನೀವು ಒಂದು ನಮೂನೆ ಆಗಿಬಿಟ್ಟಿದ್ದೀರಿ…” ಎಂದ. ರಾಮಚಂದ್ರ ಕೂಡಲೇ ಏನೂ ಮಾತನಾಡಲಿಲ್ಲ. ತುಸು ಹೊತ್ತಿನ ಮೇಲೆ, ಕತೆಯಲ್ಲಿ ತನ್ನ ಬಗ್ಗೆ ಏನು ಬಂದಿದೆ ಎಂದು ವಾಸು ಕೇಳಿದ ಪ್ರಶ್ನೆ ಈಗ ಲಕ್ಷ್ಯಕ್ಕೆ ಬಂದವನ ಹಾಗೆ, +“ನೋಡು, ವಾಸೂ ನೀನೂ ನನ್ನ ಕತೆಯಲ್ಲಿ ಬಂದಿದ್ದೀ. ಆ ಮುದುಕಮ್ಮನ ತಂಗಿಯ ಮಗ ನಾಗಪ್ಪನೋ ಇನ್ನಾರೋ ಆಗಿರಬೇಕು-ಸರಿಯಾಗಿ ನೆನಪಿಲ್ಲ,” ಎಂದ, ಮುಗುಳುನಗುತ್ತ. ಈ ಪರಕಾಯಪ್ರವೇಶ ವಿದ್ಯೆಯ ತುದಿ ಬುಡ ಗೊತ್ತಾಗದೇ ಆಶ್ಚರ್ಯಚಕಿತನಾಗಿ ಬಾಯಿ ತೆರೆದು ಕುಳಿತುಬಿಟ್ಟ ವಾಸು. ಆಮೇಲೆ ಕ್ರಮೇಣ ಅವನ ಪ್ರಶ್ನೆಗಳು ವೀಣಾಳ ಕಡೆಗೆ, ಅವಳ ತಾಯಿ ಕಡೆಗೆ ತಿರುಗಿದ್ದರಿಂದ ಸಲುಗೆಯನ್ನು ಅತಿಗೆ ಹೋಗಕೊಡಲು ಮನಸ್ಸಿಲ್ಲದವನ ಹಾಗೆ, “ವಾಸೂ ಆಮೇಲೆ ನಿನಗೆ ಕತೆಯನ್ನು ಓದಿ ತೋರಿಸುತ್ತೇನೆ. ಆಗದೇ? ಬ್ರೇಕ್‌ಫಾಸ್ಟಿಗೆ ಏನಾದರೂ ಸ್ಪೆಶಲ್ ಮಾಡು ನೋಡೋಣ,” ಎಂದ, ಅವನನ್ನು ಅಲ್ಲಿಂದ ಓಡಿಸಲೆಂದೇ. ಹಾಗೆ ಹೇಳಿದ್ದೇ, ತನಗೆ ಬಹಳ ಹಸಿವೆಯಾಗಿದೆ ಎಂದೂ ಅನ್ನಿಸಿತು. ವಾಸೂಗೆ ಏಳುವ ಮನಸ್ಸಾದಂತೆ ತೋರಲಿಲ್ಲ. ಆದರೂ ಕತೆ ಓದಿ ತೋರಿಸುತ್ತೇನೆ ಎಂದುದಕ್ಕೇ ಜೋತುಬಿದ್ದು, ಖಾಲಿಯಾದ ಕಪ್ಪು ಬಸಿಗಳನ್ನೆತ್ತಿಕೊಂಡು ಅಡುಗೆಯ ಮನೆಗೆ ನಡೆದ. +ಪ್ರಾತರ್ವಿಧಿಗಳನ್ನು ಮುಗಿಸಲು ಹೊರಡೋಣವೆಂದು ವಿರಾಮ ಕುರ್ಚಿಯಿಂದ ಏಳುವಾಗ ತಿರುಗಿ ಬನಿಯನ್ನಿನ ಮೇಲಿನ ನಾಲ್ಕು ಇಂಚು ವ್ಯಾಸದಷ್ಟು ದೊಡ್ಡದಾದ ಕಲೆಯನ್ನು ನೋಡಿ ‘ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತ್ತೇನೆ,’ ಎಂದು ಆಗ ವಾಸು ಹೇಳಿದ್ದು ನೆನಪಾಗಿ, ರಾಮಚಂದ್ರ ತನ್ನಷ್ತಕ್ಕೇ ನಕ್ಕ. ವಹಿ ತೆರೆದು ನೋಡುವ ಕುತೂಹಲವಾಗಿ ಅದನ್ನು ಕೈಗೆತಿಕೊಳ್ಳೋಣವೆಂದರೆ ಹತ್ತಿರ ಹೋಗುವಷ್ಟರಲ್ಲಿ-ಈಗ ಬೇಡ ಬ್ರೇಕ್‌ಫಾಸ್ಟ್ ಮುಗಿಸಿದ ಮೇಲೇ-ಎಂದುಕೊಂಡು, ಬರೆದದ್ದನ್ನು ಓದಿ ನೋಡುವ ತವಕವನ್ನು ಹತ್ತಿಕ್ಕಿಯೇ ಬಚ್ಚಲು ಮನೆಗೆ ಹೋದ….ಎಂದಿನ ಹಾಗೆ, ಒಂದು ಇನ್ನೊಂದಕ್ಕೆ, ಇನ್ನೊಂದು ಮತ್ತೊಂದಕ್ಕೆ, ಮತ್ತೊಂದು ಮಗದೊಂದಕ್ಕೆ ಪ್ರತೀಕವಾಗುತ್ತ ಒಗಟು ಒಗಟಾದ ಹಳವಂಡದ ಹಾಗೆ, ಕನಸಿನ ಹಾಗೆ ಆಗದೇ ಈ ಸಾರೆ ಎಲ್ಲವನ್ನೂ ಸ್ಪಸ್ಟವಾಗಿ ಮುಚ್ಚುಮರೆಯಿಲ್ಲದೇನೇ ಹೇಳಿಕೊಂಡಿದ್ದೇನೆ ಎನ್ನುವ ಹರವಾದ ಭಾವನೆಯಿಂದ ಮನಸ್ಸು ತುಂಬ ಹಗುರವಾಗಿ, ಒಂದು ತರದ ಹುಡುಗುತನದಿಂದ ಗೆಲುವಾಗಿತ್ತು. +ವೀಣಾಳನ್ನು ಕಾಣದೇ ಎಷ್ಟು ದಿನಗಳಾದವು, ಅನ್ನಿಸಿತು. ತುಂಬ ಮನಸ್ಸಿಗೆ ಹಚ್ಚಿಕೊಂಡಿರಬೇಕು ಹುಡುಗಿ. ಅವಳ ತಾಯಿ ಕೂಡ. ನಾಳೆ ಹೋದರಾಯಿತು ಎಂದುಕೊಂಡ. ಏಕೋ ಈಗ ಮೊದಲಿನ ಜೋಮೂ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ವೀಣಾ ತನ್ನನ್ನು ಹಚ್ಚಿಕೊಂಡ ರೀತಿಗೆ ಒಂದು ಬಗೆಯ ಹೆದರಿಕೆಯಾಗುತ್ತದೆ. ಯಾವ ಬಂಧನವೂ ಬೇಡ ಎಂದುಕೊಂಡವನ ಕಾಲಿಗೆ ಇವಳ ಪ್ರೀತಿಯ ಕರುಳುಬಲ್ಳಿ ತೊಡಕಾಗದಿರಲಿ ದೇವರೇ! ತನ್ನ ಮನೆ, ಭರಭರಾಟೆಯಿಂದ ನಡೆದ ಪ್ರೆಸ್ಸು, ಬ್ಯಾಂಕಿನಲ್ಲಿದ್ದ ಹಣದ ಮೋಹಕ್ಕಾಗಿ ತನ್ನನ್ನು ಪ್ರೀತಿಸಿದ್ದಾಳೆಂದು ಬಗೆದು ತಳೆದ ಧೈರ್ಯ ಇತ್ತಿತ್ತ ಕುಗ್ಗುತ್ತಿದೆ. ವೀಣಾಳಿಗಿಂತ ಮೊದಲಿನ ಹುಡುಗಿಯರನ್ನು ಮನೆಗೆಂದೂ ಕರೆಸಿದವನಲ್ಲ. ಬೇಕೆನ್ನಿಸಿದಾಗ ತಾನೇ ಅವರಲ್ಲಿ ಹೋಗುತ್ತಿದ್ದ. ಆದರೆ ವೀಣಾ ಮಾತ್ರ ಗೆಳೆತನವಾದ ಐದಾರು ವರುಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದಿದ್ದಾಳೆ. ಅದೂ ಹಗಲು ಹೊತ್ತಿಗೆ ಮಾತ್ರ. ರಾತ್ರಿಯಲ್ಲಿ ಎಂದೂ ಇಲ್ಲಿ ಕಳೆದವಳಲ್ಲ. ಆದರೆ ಸಾತಕ್ಕ ಸತ್ತಾಗ ಇಡೀ ಮನೆಯೇ ತಿನ್ನಲು ಎದ್ದು ಬಂದ ರೀತಿ ಬಿಕೋ ಎನ್ನಿಸಿದಾಗ ನಾಲ್ಕು ದಿನ ಇಲ್ಲೇ ಇದ್ದಳು. ಒಂದೇ ಹಾಸಿಗೆಯಲ್ಲಿ ಮಲಗಿಯೂ ಅವಳನ್ನು ಮುಟ್ಟಿರಲಿಲ್ಲ. ಕಾರಣ ಗೊತ್ತಿದ್ದೂ ರಾತ್ರಿಯಿಡೀ ಅತ್ತವಳಂತೆ ಕಣ್ಣುಗಳನ್ನು ಕೆಂಪಗೆ ಊದಿಸಿಕೊಂಡೇ ಏಳುತ್ತಿದ್ದಳು. ಅವಳನ್ನು ಮೈದಡವಿ ಸಂತೈಯಿಸುವ ಹಾಗೆ ಏನಾದರೂ ಮಾತನಾಡಬೇಕೆನ್ನಿಸಿದರೂ ಏನೊಂದೂ ಸೂಚಿಸದೇ ಮನಸ್ಸು ಸುನ್ನವಾಗುತ್ತಿತ್ತು. ಸಾತಕ್ಕ ಆಸ್ಪತ್ರೆಯಲ್ಲಿದ್ದಾಗ ಕೂಡ ತನ್ನೊಡನೆ ಓಡಾಡುತ್ತಿದ್ದಾಗ ಹೆಚ್ಚಾಗಿ ಮಾತನಾಡಿಸಿದ್ದು ನೆನಪಿಲ್ಲ. ಒಂದು ದಿನವಂತೂ “ಅವಳು ಕುರೂಪಿಯಾದ ಮುದುಕಿಯಾಗಿರದಿದ್ದರೆ ಅವಳು ನಿಮ್ಮ ಚಿಕ್ಕಂದಿನ ಪ್ರೇಯಸಿಯೆಂದು ಸಂಶಯಪಡುತ್ತಿದ್ದೆ,” ಎಂದು ಸಿಟ್ಟು ವ್ಯಕ್ತಪಡಿಸಿದಳು….ಸಾತಕ್ಕನ ಬಗ್ಗೆ ವೀಣಾಗೆ ಅನ್ನಿಸಿದ ಅಸೂಯೆಯ ನೆನಪಾದಾಗ ರಾಮಚಂದ್ರನಿಗೆ ನಗು ಬಂತು. ಬಚ್ಚಲುಮನೆಯಿಂದ ಹೊರಗೆ ಬರುವಾಗ ಫಕ್ಕನೆ ಎಂಬಂತೆ ಹೊಳೆದುಬಿಟ್ಟಿತು : ವಾಸು ತನ್ನೊಡನೆ ವರ್ತಿಸುವಾಗ ಪ್ರಕಟಿಸುತ್ತಿದ್ದ ಸಲಿಗೆಯ ಕಾರಣ ಬಹುಶಃ ತನಗೂ ವೀಣಾಗೂ ಇದ್ದ ಸಂಬಂಧ ಗೊತ್ತಾದದ್ದು ಎಂದು. ಸೂಳೇಮಗನೇ ಎಂದುಕೊಂಡ. +ಉಪಾಹಾರಕ್ಕೆ ಕೂತಾಗ ವಾಸೂನೊಡನೆ ಸಲುಗೆಯಿಂದಲೇ ಮಾತನಾದಬೇಕೆಂದು ಬಯಸಿದರೆ ವಾಸು ಒಮ್ಮಿಂದೊಮ್ಮೆಲೇ ತನ್ನ ಮೊದಲಿನ ನಡವಳಿಕೆಯ ರೀತಿ ಹಿಂತಿರುಗಿದಂತಿತ್ತು. ಇವನಿಗೇನಾಯಿತಪ್ಪ ಎಂದುಕೊಂಡ. ವೀಣಾಳ ಬಗ್ಗೆ ಮಾತು ತೆಗೆದಾಗ ಅರ್ಧಕ್ಕೇ ತಡೆದದ್ದಕ್ಕೆ ಕೆಡುಕೆನಿಸಿರಬೇಕು. ಇಲ್ಲ, ತನ್ನ ನಡತೆಯ ಬಗ್ಗೆ ತನಗೇ ಹೆದರಿಕೆಯಾಗಿರಬೇಕು….ರಾಮಚಂದ್ರ ಕೂಡಲೇ ಮಾತನಾಡಿಸುವ ಗೋಜಿಗೆ ಹೋಗದೇ ನಾಸ್ತಾ ಮುಗಿಸಿ ಓದುವ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿ ವಾಸು ಬಾಗಿಲಲ್ಲಿ ಪ್ರಕಟವಾಗಿ, “ರಾಯರೇ,” ಎಂದ, ದುಗುಡ ತುಂಬಿದ ದನಿಯಲ್ಲಿ. “ನಿಮ್ಮ ಊರಿನ ಆ ನಾಗಪ್ಪ ಎಂತಹ ಹುಡುಗ?” ಯಾವ ನಾಗಪ್ಪ ಎಂದು ಗೊತ್ತಾಗದೇ ರಾಮಚಂದ್ರ ತಬ್ಬಿಬ್ಬಾದದ್ದನ್ನು ನೋಡಿ ತಾನು ಕೇಳಿದ ಪ್ರಶ್ನೆಯನ್ನು ಸ್ಪಷ್ಟಪಡಿಸುತ್ತ, “ಈಗ ನಿಮ್ಮ ಕತೆಯಲ್ಲಿ ನನ್ನನ್ನು ನಾಗಪ್ಪನನ್ನಾಗಿ ಮಾಡಿದ್ದೆನೆ ಎಂದಿದ್ದಿರಲ್ಲ-ಆ ನಾಗಪ್ಪ. ನಿಮಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ ರಾಯರೇ,” ಎಂದು ತಡೆದ. ಕೆಲ ಹೊತ್ತಿನ ಮೇಲೆ ಅದೇ ಗಾಂಭೀರ್ಯದಿಂದ “ನನ್ನ ಅಕ್ಕ ತುಂಬ ಒಳ್ಳೆಯವಳು. ಅವಳೊಬ್ಬಳೇ ನನ್ನನ್ನು ಅಕ್ಕರೆ ಮಾಡುತ್ತಿದ್ದುದು ನಮ್ಮ ಮನೆಯಲ್ಲಿ. ಅವಳ ಬಗ್ಗೆ…ಇಲ್ಲಿ ಬಂದಿದ್ದರಲ್ಲ ಅವರಿಗೆಲ್ಲ ಹೇಳಿದ್ದೇನೆ ಆ ಹೊತ್ತು. ಅಕ್ಕನನ್ನೇ ನಿಮ್ಮ ಕತೆಯಲ್ಲಿ ಹಾಕಿ” ಎಂದ. ಚೋಟುದ್ದದ ಈ ವಾಸುವಿನಲ್ಲೂ ಮಾತಿನಲ್ಲಿ ಪ್ರಕಟವಾಗಲು ಹಾತೊರೆಯುವ ವಿಶ್ವವೊಂದು ಅಡಗಿದ್ದು ಲಕ್ಷ್ಯಕ್ಕೆ ಬಂದು ಅಪ್ರತಿಭನಾದ. ಹಾಗೂ “ಆಗಲಪ್ಪಾ, ಒಂದು ದಿನ ನೀನೇ ಎಲ್ಲ ಹೇಳು : ಬರೆಯುತ್ತೇನೆ ಆಗದೇ?” ಎಂದು ಭರವಸೆಯಿತ್ತ. ವಾಸು ಖುಷಿಯಿಂದ ಹಲ್ಲು ತೋರಿಸಿ ನಕ್ಕ. +ಹೆಬ್ಬಾಗಿಲ ಮೇಲೆ ಯಾರೋ ಬಡಿದ ಸದ್ದು ಕೇಳಿಸಿ, ಬಾಗಿಲ ಗಂಟೆಯಿದ್ದಾಗಲೂ ಹೀಗೆ ಕದ ಬಡಿಯುವವ ಮಗ್ಗಲು ಮನೆಯ ಪಾರಸಿ ಗೃಹಸ್ಥ ನೊಶೀರ್ ಖಂಬಾಟಾ ಅಲ್ಲದೇ ಬೇರೆ ಯಾರೂ ಅಲ್ಲ ಎಂಬ ಭರವಸೆಯಿಂದ ಲಗುಬಗೆಯಿಂದ ಕದ ತೆರೆದು. “ಬಾ ಬಾ ನೊಶೀರ್-ಬಾ” ಎಂದು ತನಗೇ ಅರ್ಥವಾಗಿರದ ಖುಷಿಯಿಂದ ನೋಶೀರನನ್ನು ಬರಮಾಡಿಕೊಂಡು ಡ್ರಾಯಿಂಗ್ ರೂಮಿಗೆ ಕರೆದೊಯ್ಯುತ್ತ ವಾಸೂವಿಗೆ ಇನ್ನೆರಡು ಕಪ್ಪು ಚಹ ತರಲಿಕ್ಕೆ ಹೇಳಿದ. “ಇಲ್ಲೇ ಬಾಲ್ಕನಿಯಲ್ಲಿ ಕೂಡ್ರೋಣ. ಇವತ್ತು ಸಮುದ್ರದ ನೀರು ಎಳೆಬಿಸಿಲಲ್ಲಿ ಎಷ್ಟೊಂದು ಭವ್ಯವಾಗಿದೆ ನೋಡು,” ಎನ್ನುತ್ತ ನೋಶೀರನಿಗೆ ಒಂದು ಡೆಕ್‌ಚೇರ್ ಕೊಡುತ್ತ ತಾನೂ ಒಂದರಲ್ಲಿ ಕುಳಿತುಕೊಂಡ. ರಾಮಚಂದ್ರನ ಈ ಉತ್ಸಾಹ, ಗೆಲುವು ನೋಶೀರನನ್ನು ಬಲವಾಗಿ ತಟ್ಟಿದುವು : “ನಿನ್ನೆ ಇಡೀ ರಾತ್ರಿ ನಿನ್ನೆ ಕೋಣೆಯಲ್ಲಿ ದೀಪ ಉರಿದಂತಿತ್ತು. ನಾನು ರಾತ್ರಿ ಎಚ್ಚರವಾಗಿ ಬಾತ್‌ರೂಮಿಗೆ ಹೋದ ಎರಡು ಸಲವೂ ಕಂಡೆ. ಅಂತೂ ಬಹಳ ದಿನಗಳ ನಂತರ ದೊಡ್ಡ ಕೃತಿಯೊಂದು ಹುಟ್ಟಿರಬೇಕು,” ಎಂದ ನೋಶೋರ್ ಸಂತೋಷ ವ್ಯಕ್ತಪಡಿಸಿದ. +“ನನ್ನ ಮಸ್ತೆರ್ಪಿ‌ಎಚೆ ನೋಶೀರ್, ನನ್ನ ಮಸ್ತೆರ್ಪಿ‌ಎಚೆ ! ನಿನಗೆ ಕನ್ನಡ ಅರ್ಥವಾಗುತ್ತಿದ್ದರೆ ಇಡೀ ಕಥೆಯನ್ನು ಓದಿ ತೋರಿಸುತ್ತಿದ್ದೆ. ರಾತ್ರಿಯ ಊಟ ಮುಗಿಸಿದ್ದೇ ಬರೆಯಲು ಕೂತವನು ಬೆಳಿಗ್ಗೆ ಎಷ್ಟು ಗಂಟೆಗೆ ಮಲಗಿದೆನೋ ನೆನಪಿಲ್ಲ ನೋಡು. ಹಿಂದೆಂದೂ ಇಡೀ ಕತೆಯನ್ನು ಹೀಗೆ ಒಂದೇ ಪಟ್ಟಿಗೆ ಕೂತು ಬರೆದು ಮುಗಿಸಿರಲಿಲ್ಲ. ಇದೊಂದು ತೀರ ಹೊಸ ಅನುಭವ. ನಿನ್ನೆ ಸಂಜೆ ಹೀಗೆ ಈ ಸಮುದ್ರವನ್ನು ನೋಡುತ್ತ ಕೂತಿದ್ದೆ. ನೀನಿದನ್ನು ನಂಬಬೇಕು ನೋಶೀರ್. ನೋಡುತ್ತ ಕೂತಿರುವಾಗ ತೆರೆಗಳು ಎದ್ದೆದ್ದು ಬೀಳುತ್ತಿದ್ದ ರೀತಿಗೆ ಮನಸ್ಸಿಗೆ ಒಂದು ಬಗೆಯ ಗುಂಗು ಹಿಡಿದ ಹಾಗೆ : ನಾನೇ ಸಮುದ್ರ ಆದ ಹಾಗೆ. ಆಳದಲ್ಲಿದ್ದದ್ದು ತಾನೇ ಎದ್ದು ಬಂದ ಹಾಗೆ…” +ವಾಸು ಚಹದ ಕಪ್ಪುಗಲನ್ನು ಕೈಗಿತ್ತಾಗ ರಾಮಚಂದ್ರನ ಮನಸ್ಸು ವಾಸ್ತವಕ್ಕೆ ಇಳಿದಿತ್ತು. ಇವನು ಎಂದಿನ ರಾಮಚಂದ್ರನಲ್ಲ ಎಂದನ್ನಿಸಿತು ನೋಶೀರನಿಗೆ, ಕೌತುಕ, ಕುತೂಹಲ ತುಂಬಿದ ದೃಷ್ಟಿಯಿಂದ ಅವನನ್ನು ನೋಡುತ್ತ, “ಕತೆ ಯಾತರ ಬಗ್ಗೆ ಇದೆ?” ಎಂದು ಕೇಳಿದ. +ಬಿಸಿಬಿಸಿ ಚಹದ ಗುಟುಕೊಂದನ್ನು ಸೀಪುತ್ತ, “ಉತ್ತರ ಕೊಡುವುದು ಕಷ್ಟ…ಮೊನ್ನೆ ನಮ್ಮ ಮನೆಗೆ ಬಂದ ಒಬ್ಬ ಮುದುಕಿ ಸತ್ತಳಲ್ಲ…ಅವಳ ಸಾವು, ಈ ಸಮುದ್ರ ಕೂಡಿ ಏನೋ ವಿಚಿತ್ರ ಪರಿಣಾಮ ಮಾಡಿರಬೇಕು ಕತೆ ಅವಳ ಬಗ್ಗೆಯೇ ಇದೆ. ಈ ಸಮುದ್ರದ ಬಗ್ಗೆಯೂ ಇದೆ. ಹಾಗೆ ನೋಡಿದರೆ ಅದು ನಾನು ಬರೆದದ್ದೇ ಅಲ್ಲವೆನಿಸುತ್ತದೆ….ವಿಚಿತ್ರ ನೋಡು : ನೀನು ಇಲ್ಲಿ ಬಂದಾಗ ಇಡೀ ಕತೆ ನಿಚ್ಚಳವಾಗಿ ನೆನಪಿದ್ದ ಭಾವನೆ. ನಿನಗದನ್ನು ಹೇಳಬೇಕೆಂದು ಆತುರನಾಗಿದ್ದೆ ಕೂಡ. ಆದರೆ ಈಗ ಅದೆಲ್ಲ ಮರೆತೇಹೋದಂತಿದೆ. ಆಶ್ಚರ್ಯ. ಈಗ ನೆನಪಿನಲ್ಲಿದ್ದುವು-ಎರಡೇ: ತೀರ ಸದ್ಯದ ಸಾತಕ್ಕನ ಸಾವು ಹಾಗೂ ಅನಾದಿಯಾದ ಈ ಸಮುದ್ರದ ನೀರು…” +ನೋಶೀರನಿಗೆ ಇದಾವುದೂ ಅರ್ಥವಾಗಲಿಲ್ಲ. ಎಲ್ಲ ಲೇಖಕರೇ ಹೀಗಿರಬೇಕೆಂದುಕೊಂಡು ಚಹ ಕುಡಿಯುತ್ತ ಮುಗುಳುನಕ್ಕ. ರಾಮಚಂದ್ರ ಅರಿವಿಲ್ಲದೇನೇ ತಾನೂ ಮುಗುಳುನಕ್ಕ. ಬಾಗಿಲ ಗಂಟೆ ಬಾರಿಸಿದ್ದು ಕೇಳಿ ವಾಸು ಹೋಗಿ ಕದ ತೆರೆದ. ನೋಶೀರನ ಮಗಳು ಟೆಲಿಫೋನ್ ಕರೆ ಬಂದಿದೆಯೆಂದು ತಿಳಿಸಲು ಬಂದಿದ್ದಳು. ನೋಶೀರ್ ಈ ಕರೆಯ ಹಾದಿಯನ್ನೇ ಕಾಯುತ್ತಿದ್ದವನ ಹಾಗೆ, “ಆಮೇಲೆ ಮತ್ತೆ ಬರುತ್ತೇನೆ. ಬರೆದದ್ದನ್ನು ಇನ್ನೊಮ್ಮೆ ಓದಿ ನೋಡು. ಎಂದಿನ ಹಾಗೇ ನಿನ್ನ ಕತೆಯನ್ನು ಕೇಳಲು ಉತ್ಸುಕನಾಗಿದ್ದೇನೆ” ಎಂದು ಅವನಿಂದ ಬೀಳ್ಕೊಂಡು ಮನೆಗೆ ನಡೆದ. +ನೋಶೀರ್ ಹೊರಟುಹೋದಮೇಲೆ ಕುರ್ಚಿಯಲ್ಲಿ ಕುಳಿತಲ್ಲೇ ಇದೀಗ, ಒಂದು ಕ್ಷಣದ ಮೊದಲಷ್ಟೇ ಅನ್ನಿಸುತ್ತಿದ್ದ ಗೆಲುವು ಮಾಯವಾಗಹತ್ತಿ ಅದರ ಜಾಗದಲ್ಲಿ ಅರ್ಥವಾಗದ, ನಿರಾಕಾರವಾದ ಕಾತರ ನೆಲೆಸಹತ್ತಿದೆ ಎಂಬಂತಹ ಭಾವನೆಯಿಂದ ಎದೆಯ ಗುಂಡಿಯಲ್ಲಿ ಒದ್ದೆತನ ಅನುಭವವಾಗಿ ಅಸ್ವಸ್ಥಗೊಂಡ, ನಿನ್ನೆ ರಾತ್ರಿ ಬರೆದದ್ದನ್ನು ಓದಿ ನೋಡಬೇಕೆಂದು ಕೋಣೆಗೆ ಹೋಗಿ ವಹಿಯನ್ನು ತೆರೆಯಲು ಹೋದರೆ ತನಗನ್ನಿಸುತ್ತಿದ್ದ ಭಯದ ಮೂಲಸ್ಥಾನವೇ ಅಲ್ಲಿತ್ತೆಂಬಂತೆ ವಹಿಗೆ ಕೈಹಚ್ಚುವ ಧೈರ್ಯವಾಗಲೇ ಇಲ್ಲ. ಕುರ್ಚಿಯಿಂದ ಎದ್ದು ಹೋಗಿ ಅಡ್ಡ ಮಾಡಿದ ಕದ ತೆರೆದು ‘ವಾಸೂ ಬಾ ಕತೆ ಓದಿ ತೋರಿಸುತ್ತೇನೆಂ’ದು, ಅವನನ್ನು ಕರೆದು ಮುಂದೆ ಕೂಡ್ರಿಸಿ ವಹಿಯನ್ನು ತೆರೆದ. ತೆರೆದರೆ ತನ್ನ ಕಣ್ಣುಗಳನ್ನು ತಾನೇ ನಂಬದಾದ : ನೂರಕ್ಕೂ ಮಿಕ್ಕಿದ ಪುಟಗಳಲ್ಲಿ ತೋಡಿಕೊಂಡದ್ದೆಲ್ಲ ಬರಿಯ ಗೀಚು ಗೀಚಾಗಿತ್ತೇ ಹೊರತು ಓದಲು ಶಕ್ಯವಾದ ಅಕ್ಷರಗಳಾಗಿ ಮೂಡಿರಲೇ ಇಲ್ಲ! ಆದ ಆಘಾತದಿಂದ ತತ್ತರಿಸಿ ಬೆವರಹತ್ತಿದ. ಮೊದಮೊದಲು ಉತ್ಸುಕತೆಯಿಂದ, ಆಮೇಲೆ ಒಂದು ಬಗೆಯ ಅಸಹನೆಯಿಂದ ಕೊನೆಗೆ ಇವೆಲ್ಲವುಗಳನ್ನೂ ಮೀರಿ ನಿಂತ ಕಾತರತೆಯಿಂದ ಅವಲೋಕಿಸುತ್ತಿದ್ದ ವಾಸು ಇವನಲ್ಲಿ ಆಗ ನಡೆಯುತ್ತಿದ್ದ ಅತಿಮಾನುಷ ಎಂಬಂತಹ ಪ್ರಕ್ರಿಯೆಗೆ ಸಂಪೂರ್ಣವಾಗಿ ಪ್ರತಿಸ್ಪಂದಿಯಾಗಿದ್ದವನ ಹಾಗೆ ಹೆದರಿ ಭಡಕ್ಕನೆ ಎದ್ದವನೇ ಚಕಾರ ಶಬ್ದವನ್ನೂ ಕೂಡ ಆಡದೇನೇ ಹೊರಗೆ ನಡದೇ ಬಿಟ್ಟ. ಆದ ಆಘಾತದಿಂದ ಚೇತರಿಸಿಕೊಳ್ಳಲು ರಾಮಚಂದ್ರನಿಗೆ ತುಂಬ ಸಮಯ ಹಿಡಿಯಿತು. ಆಮೇಲೆ ಒಂದೊಂದೇ ಪುಟವನ್ನು ತಿರುವು ಹಾಕುತ್ತ ಹೋದ ಹಾಗೆ ಯಾವುದೋ ಶಿಲಾಯುಗದ, ನಮಗೆ ಅರ್ಥವಾಗದ್ಗುಪ್ತಲಿಪಿಯಲ್ಲಿ ಬರೆದಂತಿದ್ದ ಗೀಚುಗೀಚಾದ ಬರೆವಣಿಗೆಯಲ್ಲಿ ಕೂಡ ಅಲ್ಲಿ ಇಲ್ಲಿ ಓದಲು ಸಾಧ್ಯವಾಗುವಂತಹ ಅರ್ಥವಾಗಬಲ್ಲಂತಹ ಕೆಲವು ಅಕ್ಷರಗಳಿದ್ದದ್ದು ಲಕ್ಷ್ಯಕ್ಕೆ ಬಂದು, ಗಾಬರಿ ತುಂಬಿದ ಆತುರದಲ್ಲಿ ಓದಿಕೊಂಡಾಗ ಪ್ರಜ್ಞೆಗೆ ದಕ್ಕಿದಿಷ್ಟು : +ಪುಟ ೧ : +“…ಇಂದು ನನ್ನ ಪಾರ್ವತಿಯ ‘ಶ್ರಾದ್ಧ’ ದಿನ, ಅವಳು ಸತ್ತು ಇಂದಿಗೆ ಇಪ್ಪತ್ತೈದು ವರ್ಷಗಳು…ನಂಬುವುದು ಕಷ್ಟ…” +ಪುಟ ೩ : +“…ಪಾರ್ವತಿಗೆ ಮೆಚ್ಚಿಗೆಯಾದೀತೆಂದು ಬಗೆದು ಮುಂಬಾದೇವಿಗೆ ಹೋಗಿ ಅವಳ ಹೆಸರಿನಲ್ಲಿ ಒಂದು ಪೂಜೆ ಸಲ್ಲಿಸಿ ಬಂದೆ…” +ಪುಟ ೧೦ : +“…ಮರೆಯಲಾಗದ ಈ ದುರಂತದಲ್ಲಿ ಆರು ಪಾತ್ರಗಳಿವೆ : ಅಪ್ಪ, ಅಮ್ಮ, ಪಾರ್ವತಿ, ನಾನು ಮತ್ತು ಒಂದು ಬಾವಿ ಹಾಗೂ ನಾನು ಕೊನೆಗೂ ಬರೆಯದೆ ಉಳಿದ ಒಂದು ಪತ್ರ…” +ಪುಟ ೩೦ : +“…ಒಂದು ತಿಂಗಳ ಹಿಂದೆ ಊರಿನಿಂದ ಕಾಶಿಯಾತ್ರೆಗೆ ಹೊರಟು ಸಾತಕ್ಕ ನಮ್ಮಲ್ಲಿಗೆ ಬಂದಿದ್ದಳು… ಇಂತಹ ಮುದಿ ವಯಸ್ಸಿನಲ್ಲೂ ಅವಳನ್ನು ಇಂತಹ ದೂರದ ಪ್ರವಾಸಕ್ಕೆ ಕಳುಹಿಸುವ ಧೈರ್ಯವನ್ನು ಹೇಗೆ ಮಾಡಿದರೋ…ಕಾಶಿಯಿಂದ ಹಿಂತಿರುಗಿ ಬರುವಾಗ ದಾರಿಯಲ್ಲಿ ನ್ಯೂಮೋನಿಯ ಆಗಿ ಕೊನೆಗೆ ಇಲ್ಲಿಯದೇ ಆಸ್ಪತ್ರೆಯೊಂದರಲ್ಲಿ ಸತ್ತಳು… ಧಗಧಗ ಉರಿಯುವ ಅವಳ ಚಿತೆಯನ್ನು ನೋಡುತ್ತಿದ್ದಾಗ… ಏಕೋ ನನ್ನನ್ನು ಗಾಢವಾಗಿ ತಟ್ಟುತ್ತಿದ್ದ ಪ್ರತಿಯೊಂದು ಸಾವಿಗೆ ನಾನೇ ಕಾರಣವೇನೋ ಎನ್ನುವಂತಹ ಭ್ರಮೆಯಾಗುತ್ತದೆ ಇತ್ತಿತ್ತ…” +ಪುಟ ೩೫ : +“…ಸತ್ತವಳು ಸಾತಕ್ಕನಲ್ಲವೆ? ಪಾರ್ನತಕ್ಕನೆಂದೇಕೆ ಹೇಳುತ್ತೀರಿ ಎಂದು ವೀಣಾ ಕೇಳಿದಾಗ ಎದೆ ಧಸ್ ಎಂದಿತು…” +ಪುಟ ೬೬ : +“…ನನ್ನ ಪ್ರೀತಿಯ ಪಾರ್ವತೀ… ನಿನ್ನನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟ ಈ ಎಂಟೆದೆಯ ಬಂಟ ನಿನಗೆ ದಿನ ಹೋಗಿವೆ ಎಂದು ತಿಳಿದ ಕ್ಷಣವೇ…ಹೆದರಬೇಡ. ಹೆದರಬೇಡ… ಊರಿಗೆ ಹೋದದ್ದೇ ಅಪ್ಪ-ಅಮ್ಮಂದಿರನ್ನು ಒಪ್ಪಿಸಿ ನಿನಗೆ ಪತ್ರ ಬರೆಯುತ್ತೇನೆ ಇಲ್ಲ ಖುದ್ದು ನಾನೇ ಬಂದು ಕಾಣುತ್ತೇನೆ… ಕೈಮೇಲೆ ಕೈಯಿಟ್ಟು ಭಾಷೆ ಕೊಟ್ಟು ಊರಿಗೆ ಬಂದವನು…ಎಂಟೆಂಟು ದಿನಕ್ಕೆ ಒಂದಿಲ್ಲ ಒಂದು ನೆಪ ಮಾಡಿ ನಿನ್ನ ಊರಿಗೆ ಬರುತ್ತಿದ್ದವನು ಒಮ್ಮೊಂದೊಮ್ಮೆಲೇ ತನ್ನ ಪ್ರೇಮಸಂಚಾರವನ್ನು ನಿಲ್ಲಿಸಿ ಆಯತ ವೇಳೆಗೆ ಪುಸ್ತಕ ಓದುವ ಹುಚ್ಚು ಹಿಡಿಸಿಕೊಂಡು ಮೂಲೆಗುಂಪಾದೆನಲ್ಲವೇ…” +ಪುಟ ೮೦ : +“…ಮುದುಕನಾಗುತ್ತಿದ್ದೇನೆ ಪಾರ್ವತೀ…ತಲೆಯ ಕೂದಲು, ಉದ್ದವಾಗಿ ಬಿಟ್ಟ ಗಡ್ಡ ಮೀಸೆ ಎಲ್ಲ ಬೆಳ್ಳಗಾಗಹತ್ತಿವೆ…” +ಪುಟ ೮೨ : +“ಹಳ್ಳಿಯಲ್ಲೀಗ ಯಾರೂ ಇಲ್ಲ. ಅಪ್ಪ-ಅಮ್ಮ ಎಂದೋ ಸತ್ತಿದ್ದಾರೆ…ಹೊಲ ಮನೆ ಎಲ್ಲ ಮಾರಿ ಮುಂಬಯಿಯಲ್ಲಿಯ ಪ್ರಿಂಟಿಂಗ್ ಪ್ರೆಸ್ ಹಾಕಿದ್ದೇನೆ…ಹಣ ದಿನದಿನಕ್ಕೆ ಮರಿಹಾಕುತ್ತ ಬ್ಯಾಂಕಿನಲ್ಲಿ ಬೆಳೆಯಹತ್ತಿದೆ. ಹಣ ಹೇಗೆ ಖರ್ಚು ಮಾಡಬೇಕೆಂದು ಗೊತ್ತಾಗದೇ ಬಂಗಲೆಯಂತಹ ದೊಡ್ಡ ಮನೆ ಕಟ್ಟಿಸಿದ್ದೇನೆ…ಜಿಲ್ಲೆಯ ಕಾಲೇಜಿನಲ್ಲಿ ಪಾರ್ವತಿಯ ಹೆಸರಿನ ಹಾಲ್ ಕಟ್ಟಿಸಿದ್ದೇನೆ. ಇಲ್ಲಿಯ ಹಲವು ಮಹಿಳಾ ಸಂಸ್ಥೆಗಳಿಗೆ ಎಷ್ಟೆಲ್ಲ ಹಣ ದೇಣಿಗೆ ಕೊಟ್ಟಿದ್ದೇನೆ! ಪಾರ್ವತಿ ಯಾರೆಂಬುದು ಮಾತ್ರ ಯಾರಿಗೂ ಗೊತ್ತಿಲ್ಲ….” +ಪುಟ ೮೭ : +“…ಕತೆ ಬರೆಯುವುದನ್ನು ಎಂದೋ ನಿಲ್ಲಿಸಿದ್ದೇನೆ….ಬರೆದರೂ ಪ್ರಕಟಿಸುವುದನ್ನು….ಬರೆಯಲು ಕೂತರೆ ನನಗರಿವು ಇಲ್ಲದೇನೆ ಪಾರ್ವತಿಯ ಸಾವಿನ ನೆರಳೇ ಎದ್ದು ಬರುತ್ತದೆ…” +ಪುಟ ೮೯ : +“…ಬದುಕಿನ ಅರ್ಥ ಹುಡುಕುವುದೇ ತಪ್ಪೇನೋ, ಇದ್ದರೆ ತಾನೇ ಹುಡುಕುವುದು?….ಅದು ನಾವು ಕೊಟ್ಟದ್ದು ಹುಟ್ಟಿಸಿದ್ದು…ನೀನು ಬಂದದ್ದೇ ನನ್ನ ಬದುಕಿಗೆ ಅರ್ಥ ಬಂದಿತ್ತು…ನಿನ್ನೊಡನೆಯೇ ಹೋಗಿಬಿಟ್ಟಿದೆ…..ನಿನಗೆ ನನ್ನಿಂದಾದ ಘೋರ ಅನ್ಯಾಯವನ್ನು ಧೈರ್ಯದಿಂದ ಒಪ್ಪಿಕೊಳ್ಳುವ ಬದಲು ನ್ಯಾಯ-ಅನ್ಯಾಯ: ಒಳಿತು-ಕೆಡಕು: ಪಾಪ-ಪುಣ್ಯ ಇಂಥ ಬೇಧಗಳಿಗೆ ಅರ್ಥವೇ ಇಲ್ಲ ಎನ್ನುವಂತಿದೆ… ಅಂಥ ತಾರತಮ್ಯಗಳನ್ನು ನಿರಾಕರಿಸುವಂತಿದೆ ನಾನು ಇಂದು ಬದುಕುವ ರೀತಿ….ಇದೆಲ್ಲ ಅಪ್ಪ-ಅಮ್ಮರ ಗೊಡ್ಡು ಬ್ರಾಹ್ಮಣ ಮಡಿವಂತಿಕೆಯ ವಿರುದ್ಧ ನಾನೆಬ್ಬಿಸಿದ ಬಂಡಾಯವಾಗಿರಬಹುದೇ? ನನ್ನ ಸ್ವಭಾವಕ್ಕೆ ಮನೋಧರ್ಮಕ್ಕೆ ಒಗ್ಗುವಂತಹುದಲ್ಲವೆಂದು ಗೊತ್ತಿದ್ದೂ ಕ್ರಾಂತಿಕಾರಿ ರಾಜಕೀಯ ಪಕ್ಷವೊಂದನ್ನು ಸೇರಬೇಕೆಂದಿದ್ದೇನೆ…” +ಪುಟ ೯೫ : +“ಸ್ವತಃ ಕಾಮುಕನೂ ದುಷ್ಟನೂ ಆಗಿದ್ದ ಅಪ್ಪ ನನ್ನ-ನಿನ್ನ ಸಂಬಂಧದ ಸುಳಿವು ಹತ್ತಿದ್ದೇ ನಿನ್ ನಿನ್ ನಿನ್… ಸಿಗಿದು ತೋರಣ ಕಟ್ಟುತ್ತೇನೆಂದು ಜಮದಗ್ನಿಯ ಅವತಾರನಾಗಿದ್ದನಲ್ಲ…ನಾನು ಹುಟ್ಟಿದ್ದೆ ಅಪ್ಪನಿಗೆ ವಿರಕ್ತಿ ಬಂದು ತೀರ್ಥಯಾತ್ರೆಗೆ ಹೋರಟುಹೋಗಿದ್ದರೆ ಅಥವಾ ಶೂದ್ರಳಾದ ನಿನ್ನೊಡನೆ ಮದುವೆಯಾದರೆ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಳ್ಳುತ್ತೇನೆಂದು ಚಂಡಿಯ ಅವತಾರವಾದ ಅಮ್ಮ ನಾನು ಹುಟ್ಟುವಾಗಲೇ ಸತ್ತುಹೋಗಿದ್ದರೆ…ಅಥವಾ ಜಾನಪದ ಕತೆಗಳಲ್ಲಿ ಕುದುರೆ ಸವಾರನಾಗಿ ಬರುವ ಪೊತ್ತೆ ಮೀಸೆಯ ಸರದಾರನ ಹಾಗೆ ನಾನೇ ಎದೆ ಗಟ್ಟಿಮಾಡಿ ನಿನಗೆ ಇಂತಿಂಥಲ್ಲಿ ಬಂದು ನಿಲ್ಲು ಎಂದು ಗುಪ್ತ ಸಂದೇಶ ಕಳಿಸಿ… ನಿನ್ನೊಡನೆ ಓಡಿಹೋಗಿದ್ದರೆ…. ಅಥವಾ…ನಿನ್ನ ಬಸಿರಿಗೆ ಕಾರಣನಾದ ನಾನೇ ಷಂಡನಾಗಿದ್ದರೆ… ದೇವರೇ… ನನ್ನ ಪಾಪದ ಪಿಂಡವನ್ನು ಗರ್ಭದಲ್ಲೇ ಹೊತ್ತು ಬಾವಿಯಲ್ಲಿ ಹಾರಿ ಪಾರ್ವತಿ ಜೀವ ತೆಗೆದುಕೊಂಡ ಕರಾಳ ಸತ್ಯಕ್ಕೆ ಕಣ್ಣು ಮುಚ್ಚಲು ಎಷ್ಟೊಂದು ಒಳದಾರಿಗಳು…” +ಪುಟ ೯೬ : +“… ನನ್ನ ಕೈಯಿಂದ ನಡೆದ ಈ ಶೂದ್ರಹತ್ಯೆಗೆ ಈಗ ಎಷ್ಟು ಕಾಲವಾಯಿತು? ಸಾವಿರ ವರ್ಷಗಳೇ? ಇಲ್ಲ, ಸಾವಿರ ನಿಮಿಷಗಳೇ?….ಕಾಲಪ್ರಜ್ಞೆಯೇ ಮಸುಕಾಗುತ್ತಿದೆ…” +ಪುಟ: … +ಮುಂದಿನ ಹತ್ತು ಹದಿನೈದು ಪುಟಗಳ ಮೇಲೂ ಓದಲು ಶಕ್ಯವಾಗುವಂತಹ ಕೆಲವು ಅಕ್ಷರಗಳಿದ್ದವು. ಆದರೆ ರಾಮಚಂದ್ರನಿಗೆ ಅವುಗಳನ್ನು ಓದುವುದಾಗಲಿಲ್ಲ : ಕಣ್ಣುಗಳು ಆಗಲೇ ಹನಿಗೂಡಹತ್ತಿ ದೃಷ್ಟಿ ಮಂಜಾಗಿತ್ತು. ವಹಿಯನ್ನು ಮುಚ್ಚಿಟ್ಟು ಅತ್ತುಬಿಡಬೇಕು ಎನ್ನುವ ಬಲವಾದ ಬಯಕೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಕೈಗಳೆರಡನ್ನೂ ಗಟ್ಟಿಯಾಗಿ ಎದೆಗವಚಿ ಕುಳಿತುಬಿಟ್ಟ : ಇಲ್ಲ ಇಲ್ಲ ಇಲ್ಲ ಪಾರ್ವತೀ, ನನ್ನ-ನಿನ್ನ ನಿಜವಾದ ಸಂಬಂಧವನ್ನು, ನನ್ನ ಕೈಯಿಂದಾದ ಕ್ರೂರ ಅಪರಾಧವನ್ನು ನೇರವಾದ, ಸ್ಪಷ್ಟವಾದ ಮಾತುಗಳಲ್ಲಿ ಎಲ್ಲರಿಗೂ ಜಾಹೀರುಪಡಿಸುವ ಎದೆಗಾರಿಕೆ ಇನ್ನೂ ಹುಟ್ಟಿಲ್ಲ ಈ ಹೇಡಿಗೆ…ಅಂತಹ ಎದೆಗಾರಿಕೆ ಹುಟ್ಟುವವರೆಗೂ ಇಂತಹ ಹೊಸ ಹೊಸ ಆಟಗಳನ್ನು ಹೂಡುತ್ತೇನೆ. ಆಟ ಆಡುವವರೆಗೂ ಇದು ಆಟ ಎನ್ನುವುದು ನನಗೇ ಗೊತ್ತಾಗದ ಹಾಗೆ, ನನ್ನನ್ನು ನಾನೇ ವಂಚಿಸುವ ಹಾಗೆ ಹೊಸ ಹೊಸ ಉಪಾಯಗಳನ್ನು ಹುಡುಕುತ್ತೇನೆ. ಕಾಲಕಾಲಕ್ಕೆ ನಿನ್ನ ಸಾವಿನ ದುಃಖವನ್ನು ಮೊತ್ತಮೊದಲು ಅನುಭವಿಸಿದಾಗಿನ ಉತ್ಕಟತೆಯಿಂದಲೇ ತಿರುತಿರುಗಿ ಅನುಭವಿಸುವ ಹಾಗೆ ಇಂತಹ ಹೊಸ ಹೊಸ ತಂತ್ರಗಳನ್ನು ಯೋಜಿಸುತ್ತೇನೆ. ಬೆನ್ನ ಹುರಿಯಲ್ಲೆ ಬೇರು ಬಿಟ್ಟ ಈ ಪಾಪಪ್ರಜ್ಞೆಯಿಂದ ನವೆಯುತ್ತ-ಕೆಂಪು ಜ್ವಾಲೆಯ ನಾಲಗೆಗಳಿಂದ ಕಾಲ ದಿಕ್ಕುಗಳನ್ನು ನೆಕ್ಕುತ್ತ ಉರಿದ ನಿನ್ನ ಚಿತೆಯಿಂದಲೇ ಎತ್ತಿಕೊಂಡಂತಿದ್ದ ಈ ಸುಡುವ ಕೆಂಡಗಳನ್ನು ತಲೆಯಲ್ಲಿ ಹೊತ್ತು ಮೂಲೆಮೂಲೆಗಳಲ್ಲಿ ತಂಪನ್ನರಸುತ್ತ ಅಲೆಯುತ್ತಿರುತ್ತೇನೆ… +ಸಾವಿರ ವರ್ಷಗಳ ಬಿಗುಮಾನವನ್ನು ಅರೆನಿಮಿಷದಲ್ಲಿ ಕಳಕೊಂಡವನ ಹಾಗೆ ರಾಮಚಂದ್ರ, ಹೊರಗಿನಿಂದ ವಾಸು ಕೇಳಬಹುದೆಂಬುದರ ಪರಿವೆ ಕೂಡ ಮಾಡದೇನೇ ಅಳಹತ್ತಿದ. ಕಿವಿಗಳನ್ನು ಇತ್ತಲೇ ನೆಟ್ಟು ಅಡುಗೆ ಮನೆಯಲ್ಲಿ ಕೂತ ವಾಸು ತನ್ನ ರಾಯರ ಅಳಲು ಎಂದಾದರೂ ಮುಗಿದೀತೆ ಎಂಬ ಆತಂಕದಿಂದ ಕಂಗಾಲಾದ. +***** +೧೯೭೭ +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_170.txt b/Kannada Sahitya/article_170.txt new file mode 100644 index 0000000000000000000000000000000000000000..a685b65b8ee21a6f8a550fa8067f6792a92407b8 --- /dev/null +++ b/Kannada Sahitya/article_170.txt @@ -0,0 +1,234 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಪ್ಪು ಮೋಡ, ಬೆಳ್ಳಿ ಅಂಚು +ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- +‘ಈಗ ಹೇಗಿದೆ?’ +ಪ್ರಯಾಸಪಟ್ಟು ಸಣ್ಣ ನಗೆ ಎಳೆದು- +‘ಓ.ಕೆ. ಹುಷಾರಾಗಿದ್ದೀನಿ, ನೀ ಇನ್ನು ಹೋಗು. ನಿಮ್ಮನೆಯೊರು ಕಾಯ್ತಾ ಇರ್‍ತಾರೆ. ಪುಟ್ಟ ಬೇರೆ ನಿಮ್ಮನೇಲಿ….’ +‘ಹೆಚ್ಚು ಮಾತಾಡ್‌ಬೇಡ. ನಾನಿವತ್ತು ಇಲ್ಲೇ ಮಲಗ್ತೀನಿ. ಅವರು ಮಕ್ಕಳನ್ನ ನೋಡಿಕೊಳ್ತಾರೆ.’ +‘ಬೇಡ ಶೀಲಾ ಪರವಾಗಿಲ್ಲ…. ನಾ ಈಗ ಸರಿಯಾಗಿದ್ದೀನಿ….’ ನನ್ನ ಬಾಯ ಮೇಲೆ ಬೆರಳಿಟ್ಟು ‘ಹುಷ್’ ಎಂದು ಗದರಿದಳು. ನಾ ಮೆಲ್ಲನೆ ಹೇಳಿದೆ- +‘ಹೆದರಬೇಡ, ನಾ ಮತ್ತೆ ನಿದ್ದೆ ಗುಳಿಗೆ ತೆಗೆದುಕೊಳ್ಳೋಲ್ಲ….’ +ಮೋಸಂಬಿ ರಸ ಹಿಂಡುತ್ತಿದ್ದ ಶೀಲಾ ತಟ್ಟನೆ ತಲೆ ಎತ್ತಿದಳು. +‘ನೀ ಮತ್ತೆ ತೆಗೆದುಕೊಳ್ಳಬೇಕೆಂದಿದ್ರೆ ಧಾರಾಳವಾಗಿ ತಗೋ. ಈ ಬಾರಿ ಉಳಿಸೋಕೆ ನಾ ಬರೋಲ್ಲ ಅಷ್ಟೆ….’ +ತಮಾಷೆಗೇನೋ ಎಂದು ನೋಡಿದೆ. ಅವಳ ಮುಖಭಾವ ಕಟುವಾಗಿತ್ತು. ಮರುಕ್ಷಣ ತಿಳಿಯಾದಳು. +‘ಬದುಕಿನ ಎಲ್ಲಾ ಸಮಸ್ಯೆಗೂ ಸಾವೇ ಉತ್ತರ ಅನ್ನೋ ಹಾಗಿದ್ರೆ ಈ ಜಗತ್ತಿನಲ್ಲಿ ಒಂದು ನರಪಿಳ್ಳೆಯೂ ಉಳೀತಿರಲಿಲ್ಲ ಕಣೇ….’ +ನಾನು ಮೆಲ್ಲನೆ ನಕ್ಕೆ +‘ಅರೆ ಹುಡುಗಿ, ನಾನು ಎಲ್ಲಿ ಸಾಯಲು ಹೋಗಿದ್ದೆ. ನನ್ನ ಸಾವಿನ ಯತ್ನ ಕೂಡ, ಬದುಕೋ ಹತಾಶ ಪ್ರಯತ್ನ ಆಗಿತ್ತು. ರವೀನ ಹೇಗಾದರೂ ಸರಿ ಉಳಿಸಿಕೊಳ್ಳೋ ಕಟ್ಟಕಡೆಯ ವಿಪರೀತ ಪ್ರಯಾಸವಾಗಿತ್ತು.’ +‘ಅವನ ಉಳಿವು ಅಳಿವಿಗೂ, ನಿನ್ನ ಉಳಿವು ಅಳಿವಿಗೂ ಯಾಕೆ ಕೊಂಡಿ ಹಾಕ್ತೀಯಾ….’ ಲೋಟ ನನ್ನ ಕೈಗಿಡುತ್ತಾ ಒರಟಾಗಿ ಹೇಳಿದಳು. ‘ಅವನಿಲ್ಲದೆ ಬದುಕಿಲ್ಲ ಅಂತಲೆ…? ಅದಕ್ಕೇನಂತಾರೆ, ಅಮೋಘ ಪ್ರೇಮ….’ ಮತ್ತೆ ಕುಟಕಿದಳು. ‘ಓಹ್ ಕಮಾನ್ ಮಧು. ಜೀವನದ ಸರ್ವೇಸಾಮಾನ್ಯ ಸಂಬಂಧಗಳಿಗೆಲ್ಲ ಬಹು ದೊಡ್ಡ ಅರ್ಥ ಕಲ್ಪಿಸಬೇಡ. ಮೂಲಭೂತ ಅವಲಂಬನೆಗೆ, ಮೇಲೆ ನೀನು ಎಷ್ಟೇ ಕೋಟ್ ಪ್ರೀತಿ ಪ್ರೇಮದ ಡಿಸ್‌ಟೆಂಪರ್ ಹೊಡೆದರೂ….’ ಜೋರಾಗಿ ನಗತೊಡಗಿದಳು. +ನಾನು ಗಂಭೀರವಾಗಿ ಹೇಳಲು ಹೊರಟೆ- +‘ರವಿ ಇಲ್ಲದೆ ನಾನು ಯಾಕೆ ಬದುಕಬೇಕು ಅನ್ನಿಸುತ್ತೆ….’ +ಶೀಲಾ ಕುರ್ಚಿ ಎಳಕೊಂಡು, ನನ್ನೆದುರು ಬಲು ಹತ್ತಿರದಲ್ಲಿ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು-‘ಯಾಕೆ ರವಿ ಇಲ್ಲದೆ ಬದುಕುವುದು ಪ್ರಯಾಸ ಅಂತಲೆ? ಬದುಕುವುದನ್ನು ಎಂದಾದರೂ ನೀನು ಕಲಿಯಲೇಬೇಕು ಮರಿ, ಈಗ ಮಲಗು….’ ಬಾಗಿಲು ಮುಂದೆ ಮಾಡಿ ಹೊರಗೆ ಹೊರಟು ಹೋದಳು. +ಬಹಳ ಹೊತ್ತು ನಿದ್ದೆ ಬರಲಿಲ್ಲ. ನೋವು, ಆಯಾಸ ಸ್ವಲ್ಪ ತಗ್ಗಿತ್ತು. ವಾರದ ಹಿಂದೆ ತಟ್ಟನೆ ಪ್ರಾರಂಭವಾದ ಈ ಹಾಳು ಜ್ವರ ಈಗಷ್ಟೇ ಬಿಟ್ಟಿತ್ತು. +ಬದುಕು ಅನಿರೀಕ್ಷಿತಗಳನ್ನೇ ಹೊತ್ತು ತರುತ್ತದೆ, ಅದೂ ತಯಾರಿಲ್ಲದವರ ಹೆಗಲಿಗೆ? ಹತ್ತು ವರ್ಷಗಳ ವೈವಾಹಿಕ ಬದುಕಿನ ಒಂದು ಸಂಜೆ- +ನನ್ನವನಾದ ರವಿ ನನ್ನೆದುರು ಚಡಪಡಿಸುತ್ತಾ ಕುಳಿತಿದ್ದ. ಅವ ಸುಮಾರು ಎರಡು ಗಂಟೆ ಕೊರೆದ ಸುದೀರ್ಘ ಕತೆಯ ಒಟ್ಟು ಸಾರಾಂಶ ಇದು- +‘ನಮ್ಮ ನಡುವೆ ಏನೂ ಉಳಿದಿಲ್ಲ. ನಿಧಾನವಾಗಿ ನಿರ್ಣಯಕ್ಕೆ ಬಾ. ಆದರೆ ಈ ವಿಚ್ಛೇದನ ಅನಿವಾರ್ಯ. ನನ್ನ ಮನಸ್ಸು ಬೇರೆಲ್ಲಿಗೋ ಹಾರಿದೆ. ನಾನು ಸ್ವತಂತ್ರವಾಗ ಬಯಸುತ್ತೇನೆ.’ +ಎಷ್ಟು ಸಲೀಸಾಗಿ ಒಪ್ಪಿಸಿದ್ದ. ನಾ ಬೆಕ್ಕಸಬೆರಗಾಗಿ ಕೇಳಿದೆಲ್ಲವನ್ನೂ ನಂಬಲಾರದೆ ಕಣ್ಣರಳಿಸಿ ಕುಳಿತುಬಿಟ್ಟಿದ್ದೆ. ನಮ್ಮ ಅತ್ಯಂತ ಆಪ್ತರಲ್ಲೂ, ಆತ್ಮೀಯರಲ್ಲೂ…. ನಮ್ಮ ಗಂಡಂದಿರಲ್ಲೂ ನಾವು ಕಾಣದ ಎಷ್ಟೊಂದು ಮುಖಗಳಿವೆ? +‘ನಿನ್ನ-ಪುಟ್ಟಿಯ ಖರ್ಚು ವೆಚ್ಚ ಆಮೇಲೂ ನಾ ವಹಿಸ್ತೀನಿ. ನೀ ಅದರ ಚಿಂತೆ ಮಾಡಬೇಡ’ ಈ ಕ್ಷಣದ ಅವನ ಆಶ್ವಾಸನೆಗಳಿಗೆ ನನ್ನ ಭವಿಷ್ಯವನ್ನೆಲ್ಲ ತೂಗು ಹಾಕಲು ಕರೆಕೊಟ್ಟ. ಅವನ ಸ್ವಾತಂತ್ರ್ಯಕ್ಕೆ ಅವ ತಿಂಗಳಿಗೆ ಸಾವಿರದೈನೂರು ದಂಡ ತೆರಲು ನಿದ್ಧನಿದ್ದ! +ನಾನು ಅತ್ತೆ, ಕೂಗಾಡಿದೆ. ಯಾವುದಕ್ಕೂ ಅವ ಪ್ರತಿಕ್ರಿಯಿಸದೆ ತನ್ನ ನಿರ್ಧಾರವನ್ನೇ ಮುಂದಿಟ್ಟು ಕಲ್ಲು ದೇವರಾದ. ಒಂದು ಕ್ಷಣ… ‘ನನ್ನ ಮನೆ, ನನ್ನ ಗಂಡ, ನನ್ನ ಮಗು, ನಾಲ್ಕಂಕಿಯ ಸಂಬಳ….’ ಎಂಬ ಅತ್ಯಂತ ಸುಭದ್ರ ಸಂಬಂಧದಲ್ಲಿ ಕಾಲುಚಾಚಿ ಆರಾಮ ಕುಳಿತ ನನ್ನನ್ನು, ಕೂತ ಜಮಖಾನದಿಂದಲೇ ತೆಗೆದೊಗೆದಂತಾಗಿತ್ತು. +ತಟ್ಟನೆ ಆಗ ತೋರಿದ್ದು ಒಂದೇ ದಾರಿ, ನಿದ್ದೆ ಗುಳಿಗೆ ನುಂಗಿದೆ. ಎದ್ದಾಗ ಆಸ್ಪತ್ರೆಯಲ್ಲಿದ್ದೆ. ರವಿ ತಲೆ ಕೆಳಗೆ ಹಾಕಿ ಚಿಂತಾಕ್ರಾಂತನಾಗಿ ಕುಳಿತಿದ್ದ. ನನಗೆ ಗೊತ್ತಿತ್ತು ನಾನು ಸಾಯುವುದಿಲ್ಲ ಎಂದು. ಹೆಚ್ಚು ಗುಳಿಗೆ ತೆಗೆದುಕೊಂಡಿರಲಿಲ್ಲ. ಬದುಕಿನ ಸೆರಗನ್ನು ಭದ್ರ ಹಿಡಿದುಕೊಂಡೇ ಸಾವಿನ ಪ್ರಪಾತಕ್ಕೆ ಧುಮುಕಿದ್ದೆ. +ರವಿ ಉಳಿದ-ಮನೆಯಲ್ಲಿ. ಮತ್ತೆ ವಿಚ್ಛೇದನದ ಮಾತು ಎತ್ತಲಿಲ್ಲ. ಬೆಳಿಗ್ಗೆ ಎಂಟಕ್ಕೆ ಮನೆ ಬಿಡುವ, ರಾತ್ರಿ ಹತ್ತಕ್ಕೆ ಬರುವ ‘ಊಟ’ ಎಂದರೆ ‘ನನ್ನದಾಗಿದೆ-’ ಎಂಬ ಮೊಟಕು ಉತ್ತರ. ಒಂದೇ ಮನೆಯಲ್ಲಿ ಒಂದೇ ಹಾಸಿಗೆಯಲ್ಲಿ ಶುದ್ಧ ಅಪರಿಚಿತರು. +ಎಲ್ಲಾ ಬದಲಾಗಿತ್ತು. +ಮಾತು ಮಾತಿಗೆ ಸಿಡುಕುವುದು, ರೇಗುವುದು ನಿಂತಿತ್ತು. ನನ್ನೆಲ್ಲ ಅಳು-ಕೂಗಾಟಕ್ಕೆ ಅವನ ಮೌನ ನಿರ್ಲಕ್ಷ್ಯವಷ್ಟೇ ಉತ್ತರವಾಗಿತ್ತು. ನನ್ನ ಅಸ್ತಿತ್ವವೇ ಇಲ್ಲವೆಂಬಂತೆ ವರ್ತಿಸುವ ಅವನಿಗೆ ನನ್ನ ಅವಶ್ಯಕತೆಯೇ ಇಲ್ಲದೆ, ನಾನು ಮಾತ್ರ ಅವನನ್ನು ಬಿಡದೆ ತಬ್ಬಿ ಹಿಡಿದ ಸತ್ಯ ಹೊಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. +ಒಂದು ಮುಂಜಾನೆ ತನ್ನ ಬಟ್ಟೆಗಳನ್ನು ಸೂಟ್‌ಕೇಸಿಗೆ ತುರುಕಿ ನಡೆದವ ಮತ್ತೆ ಬರಲಿಲ್ಲ. ಕಾನೂನಿಗಲ್ಲದಿದ್ದರೂ, ಸಮಾಜದ ಕಣ್ಣಿಗೆ ಒಂದು ವಿವಾಹವಾಗಿದ್ದ. ಅವಳು ಎರಡೆಳೆ ಕರಿಮಣಿ ಸರದ ದಪ್ಪ ತಾಳಿಯನ್ನು ಎದೆಯ ಮೇಲೆ ಹೆಮ್ಮೆಯಿಂದ ಹಾಕಿಕೊಂಡು ಜಾಹಿರಾತು ಮಾಡಿದಳು. ತನ್ನ ಹೆಸರಿನ ಮುಂದಕ್ಕೆ ‘ರವಿ ಹುಲಸೂರ್’ ಎಂದು ಇವನ ಹೆಸರು, ಊರುಗಳನ್ನು ಅಂಟಿಸಿಕೊಂಡಳು. ನನಗಿಂತ ಹೆಚ್ಚು ಅಭದ್ರತೆಗಳು ಅವಳನ್ನು ಕಾಡಿದಂತಿತ್ತು! +ನಕ್ಕು ನಗಿಸಿದ ಇನಿಯ, ಇರಿದು ಕರಗದೆ ನಡೆದಿದ್ದ. +ವರ್ಷಗಳು ನೀರೆರೆದು, ಕ್ಷಣದಲ್ಲಿ ಬುಡ ಕಡಿದಿದ್ದ. +ಹೆಚ್ಚು ಕಾಲ ಬೇಕಾಗಿರಲಿಲ್ಲ. ಈ ವ್ಯರ್ಥ ಸಂಬಂಧ ಜಗ್ಗಿ ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಅಂದು ಸಂಜೆ ಸಹಿ ಹಾಕಿದೆ. ಅವನ ಹಿಡಿದೆಳೆದ ಸೂತ್ರ ಕತ್ತರಿಸಿ, ಹಾರಲು ಬಿಟ್ಟೆ. ಹೋಗಲಿ, ಅವನ ಮನ ಬಂದತ್ತ. +‘ಏನು ಮಾಡ್ತೀಯ ಮಧು, ಯೋಚಿಸಿದ್ಯಾ ಏನಾದ್ರೂ….?’ ಶೀಲಾಳ ಪ್ರಶ್ನೆಗೆ ಕೇಳಿಸದವಳಂತೆ ಕಿಟಕಿ ಆಚೆ ನೋಡುತ್ತಾ ನಿಂತೇ ಇದ್ದೆ. +‘ಮಧೂ….’ ಗಟ್ಟಿಯಾಗಿ ಕೂಗಿದಳು. ‘ಅವರಿವರ ಅನುಕಂಪದ ಚಟ್ಟ ಏರಬೇಡ. ಆ ಅನುಕಂಪ ನಿನ್ನ ಒಂದು ಹೊತ್ತಿನ ಊಟಕ್ಕೂ ಒದಗದು….’ ಗದರಿಸುವಂತೆ ಹೇಳಿದಳು. +“ಈ ಶೋಕ ಎಷ್ಟು ದಿನ? ಸತ್ತವರಿಗೂ ಹದಿಮೂರನೇ ದಿನಕ್ಕೆ ತಿಥಿ ಮಾಡಿ ಮುಗಿಸ್ತಾರೆ’- ಕಟುವಾಗಿತ್ತು ಅವಳ ವಾಕ್ಯ. +‘ಮತ್ತೆ ಆತ್ಮಹತ್ಯೆ….? ಕೆಣಕಿ ಪ್ರಶ್ನಿಸಿದಳು. +‘ಇಲ್ಲಾ ನಾ ಖಂಡಿತಾ ಸಾಯೋಲ್ಲ….’ ದೃಢವಾಗಿ ಹೇಳಿದೆ. ‘ಪುಟ್ಟಿಗಾಗಿ ನಾನು ಬದುಕಬೇಕೆನಿಸಿದೆ…’ ಬದುಕಲು ನಾ ಕೆದಕಿದ ಹೊಸ ಹೊಸ ಕಾರಣಗಳಿಂದ ಶೀಲಾ ಸ್ವಲ್ಪವೂ ಕದಲಲಿಲ್ಲ. ಜೋರಾಗಿ ನಕ್ಕಳು. +‘ಬದುಕಲು ನೆನಪುಗಳನ್ನು ಹುಡುಕಬೇಡವೇ ಮಧು, ನಿನಗಾಗಿ, ನಿನ್ನ ಬದುಕಿಗಾಗಿ, ಈ ಜೀವನದ ಸೋಲುಗಳನ್ನೆಲ್ಲ ಸವಾಲುಗಳನ್ನಾಗಿ ಉತ್ತರಿಸುವ ಛಲಕ್ಕಾಗಿ ಪಂಥಾಹ್ವಾನಕ್ಕಾಗಿ ಬದುಕು. ನಾಳೆ ಪುಟ್ಟಿ ಬೆಳೆದು ದೂರಾಗಬಹುದು. ಋಣಭಾರವನ್ನು ಅವಳ ಹೆಗಲಿಗೆ ಹೇರಿ ಹಿಡಿದಿಡಬೇಡ. ಹಾರಲು ಬಿಡು ಹಕ್ಕಿಯಂತೆ. ಮತ್ತೆ ಗಾಳಿಪಟದಂತೆ ಜಗ್ಗಿ ಸೂತ್ರ ಎಳೆಯಬೇಡ. ನೀ ನಿಲ್ಲಬಲ್ಲೆ ನಿನ್ನದೇ ಪಾದಗಳ ಬಲದ ಮೇಲೆ…’ +ಅವಳು ಹೇಳಿದಷ್ಟು ಸುಲಭವಿರಲಿಲ್ಲ ಬದುಕುವುದು, ಮತ್ತೆ ಪ್ರಾರಂಭಿಸುವುದು. ಮನಸ್ಸಿಗೆ ಶಾಂತಿ ಇರಲಿಲ್ಲ. ಕುದಿವ ಆಕ್ರೋಶ, ಅವನತ್ತ ವಿಪರೀತ ನಿಷ್ಠೆಯಿಂದ ಬಾಳಿದ ಬದುಕು, ನಿಷ್ಠೆಯನ್ನು ಹಕ್ಕಿನಂತೆ ನಿರೀಕ್ಷಿಸಿತ್ತು. ನಾನೆಂದೂ ಮೈಯಿರಲಿ, ಮನಸ್ಸಿನಲ್ಲೂ ‘ಜಾರಿರಲಿಲ್ಲ’ ಅದು ನನ್ನ ದೌರ್ಬಲ್ಯವೋ, ಹೆಚ್ಚಳಿಕೆಯೋ, ಗೊತ್ತಿರಲಿಲ್ಲ. ಅದು ನನ್ನ ಸೋಲೆನ್ನಬೇಕೆ, ಶ್ರೇಷ್ಠತೆ ಎನ್ನಲೇ ತಿಳಿದಿರಲಿಲ್ಲ. ನನ್ನ ಮನೆ, ಮನೆಯಂಗಳದಾಚೆ ನಾ ಕಂಡ ಬದುಕೆಷ್ಟಿತ್ತು? ಒಮ್ಮೆ, ಒಮ್ಮೆ ಮಾತ್ರ ರವಿಯ ಸ್ನೇಹಿತನೊಬ್ಬ ಬಂದು ಉಳಿದ ನಾಲ್ಕು ದಿನ-ಬೆಳಿಗ್ಗೆ ಎದ್ದೊಡನೆ ನೈಟಿ ತೆಗೆದು, ಜಡೆ ಹೆಣೆದು, ನಾಲ್ಕು ಮಾತು ಹೆಚ್ಚೇ ಆಡಿದ್ದೆ-ರವಿಯ ಕಣ್ಣು ಕೆಂಪಾಗಿತ್ತು. ಒಂದಿಷ್ಟು ಹಗರಣವೇ ಆದ ನೆನಪಿದೆ. ನಾ ಮತ್ತೆ ಅಡಿಗೆ ಮನೆ ಸೇರಿದೆ. ‘ಗಂಡನ ಇಚ್ಛೆಯನರಿವ ಸತಿ’ಯಾದೆ. ಗಂಡನ ಅಭಿಪ್ರಾಯಕ್ಕೆ ಪೂರಕವಾಗಿ ನನ್ನ ನಡವಳಿಕೆಯ ತಿದ್ದಿಕೊಂಡೆ. ನಿಜ, ಇದನ್ನು ಪೂರಾ ಅವ ಹೇರಿದ್ದಲ್ಲ. ನಾ ಸ್ಥಾಪಿಸಿದೆ ಬಿಟ್ಟಿದ್ದೆ ನನ್ನ ವ್ಯಕ್ತಿತ್ವವನ್ನು. ವಾದಿಸುವ, ಹೋರಾಡುವ ಆ ಶ್ರಮವೇಕೆ ಎಂಬ ಆಲಸ್ಯದಲ್ಲಿ. ಆದರೂ ಅನಿಸಿದ್ದೇನೊ ನಿಜ- +ನಾವು ರೇಣುಕೆಯರು +ನಿಂತ ನೀರಲ್ಲಿ +ಪುರುಷನ ನೆರಳು ಕಂಡೇ +ಅಪವಿತ್ರರಾದವರು +ಪರಶುರಾಮನ ಕೊಡಲಿ ಏಟಿಗೆ +ಸತ್ತವರು, ಮತ್ತೆ ಹುಟ್ಟಿದವರು. +ಯುಗಗಳ ನಂತರವೂ +ಕಾದಿದೆ ಕೊರಳ ಮೇಲೆ +ಪುರುಷ-ರಾಮರ ಕೊಡಲಿಗಳು +ಅವನಿಗೆಲ್ಲಿತ್ತು ಆ ಮಿತಿ, ಆ ಸೀಮೆ-ಸರಹದ್ದು. ಸೀತೆಯ ಪಾದಕ್ಕೇ ನಿಂತಿತ್ತಲ್ಲ ಲಕ್ಷ್ಮಣ ರೇಖೆ. ತ್ರೇತಾಯುಗದ ರಾವಣರಿರಲಿಲ್ಲ. ಆದರೂ ಹಾಕಿದ ಗೆರೆಯ ದಾಟಲು ಎಂಥಾ ಅಳುಕು. ಅವ ಲಗ್ಗೆ ಇಟ್ಟಿದ್ದ. ವಯಸ್ಸು ಮರೆತು ಹೊಸ ಪ್ರೀತಿ-ಸಾಹಸಕ್ಕೆ, ಮತ್ತೆ ಪ್ರೀತಿಸುವ ಹಕ್ಕನ್ನು ಕಾನೂನು ಕೂಡಾ ಕಿತ್ತುಕೊಳ್ಳಲಾರದುನನ್ನ ವಯಸ್ಸು ಮಾತ್ರ ಹಣೆಯಲ್ಲಿ ನವಿರಾದ ಗೆರೆಗಳಾಗಿತ್ತು. ನನ್ನ ವಯಸ್ಸು ಹಿಡಿ ಮಾತ್ರ ಉಳಿದ ಕರುಳ ಗುಚ್ಛವಾಗಿತ್ತು. ನನ್ನ ವಯಸ್ಸು ದಶಕಗಳ ಕುಪ್ಪಳಿಸಿ ಖಾಲಿಯಾಗಿತ್ತು. ಅದರಾಚೆ ಏನೂ ಆಗಲಿಲ್ಲ. ಬದುಕು ಮಾತ್ರ ಉಳಿದುಬಿಟ್ಟಿತ್ತು. ಸೀಮಾರೇಖೆಯ ಹೊರ ಸುಳಿಯದೆಯೆ. ನಾನೇ ಒಡ್ಡಿಕೊಂಡ ಅವಲಂಬನೆಯ ಮಯಣದರಮನೆ ಕರಗುತ್ತಿತ್ತು. +ಕಿಡಿಗೇಡಿ ಪ್ರಶ್ನೆಯೊಂದು ಕಣ್ಣು ಮಿಟುಕಿಸಿತು. +ಶೋಷಿತರು ಯಾರು? ನಾನೇ, ಅವಳೇ? +ಯೌವನವನ್ನೆಲ್ಲ ಅವನಿಗೆ ಅರ್ಪಿಸಿ ಖಾಲಿಯಾದ ನಾನೇ? ಇಲ್ಲ ಇಪ್ಪತ್ತರ ಕುಡಿ ಯೌವನವನ್ನು ಅವನಿಗೆ ಅರ್ಪಿಸ ಹೊರಟ ಅವಳೆ? +ಎಂಥಾ ಹುಚ್ಚಿಯರು! ಅರೆ-ಗಂಡನಿಗೂ ಪೂರ್ಣ ‘ಸತಿ’ಯಾದವರು! +ರವಿಯ ಬಗ್ಗೆ ಚಿಂತಿಸಿದಷ್ಟೂ ನನ್ನ ಸಿಟ್ಟು ಆಕ್ರೋಶ, ಮಿತಿಮೀರುತ್ತಿತ್ತು. ಒಮ್ಮೆ ಪ್ರಜ್ಞೆ ತಪ್ಪಿ ಬಿದ್ದಾಗ, ಶೀಲಾ ಗಟ್ಟಿಯಾಗಿ ರೇಗಿದಳು- +‘ನಿನ್ನ ಬಿ.ಪಿ. ಏರ್‍ತಾ ಇದೆ…. ಗಂಡನ ಜೊತೆ ಆರೋಗ್ಯಾನೂ ಕಳಕೊಳ್ಳೋ ಪಣ ತೊಟ್ಟಿದ್ದೀಯಾ?’ ಮತ್ತೆ ಮೆತ್ತಗಾದರೂ, ಅಷ್ಟೇ ದೃಢಸ್ವರದಲ್ಲಿ- +‘ನೋಡು, ರವಿ ಬಗ್ಗೆ ನೀನು ಎಷ್ಟೇ ಯೋಚಿಸಿದರೂ, ಕೋಪಗೊಂಡರೂ ಅವನಿಗದು ಯಾವ ರೀತಿಯಲ್ಲೂ ತಟ್ಟದು. ನೀನು ಪ್ರಯತ್ನಪೂರ್ವಕವಾಗಿ ಅವನತ್ತ ಚಿಂತಿಸೋದ ನಿಲ್ಲಿಸಬೇಕು’ ವ್ಯೆದ್ಯಳ ಗತ್ತಿನಲ್ಲಿ ಆಜ್ಞಾಪಿಸಿದಳು. +“ವಿವಾಹದ ಪವಿತ್ರ ಬಂಧನಾನ….’ ನಾನು ಇನ್ನೂ ರಗಳೆ ಪ್ರಾರಂಭಿಸುವ ಮೊದಲೇ ಕತ್ತರಿಸಿ- +‘ಅವನನ್ನು ಬಿಡು, ಅವನ ಬದುಕಿನ, ಅವನ ಗತಿಗೆ, ಇದು ಯಾವ ಕಾಲ ವಿವಾಹ-ದ್ರೋಹ ಎಂದೆಲ್ಲ ನಡೆಯದ ನಾಣ್ಯಗಳನ್ನು ಹಿಡಿದು ತಿರುಗಾಡಲು. ಒಂದು ತಾಳಿಯಿಂದ, ಒಂದು ಕಾನೂನಿನಿಂದ ಮನುಷ್ಯ ಸಂಬಂಧಗಳನ್ನು ಕಟ್ಟಿಡಲು ಸಾಧ್ಯವೇ? ಅವನಿಗೆ ನೀನು ಬೇಕಿಲ್ಲದ ಮೇಲೆ, ನಿನಗೇಕೆ ಅವನು ಅಷ್ಟು ಬೇಕು?’ +ಏಕೆ ಬೇಕು….? ಎದೆಗೆ ಗುದ್ದಿದ ಪ್ರಶ್ನೆ. +‘ಅವನನ್ನು ಮರೆಯೋದು, ಅವನಷ್ಟು ಸುಲಭವಾಗಿ ಪ್ರೀತಿಯನ್ನು ಮರೆಯೋದು….’ ಮತ್ತೆ ಕತ್ತರಿ ಬಿತ್ತು ನನ್ನ ಪ್ರಲಾಪಕ್ಕೆ. +ಇದನ್ನು ಪ್ರೀತಿ ಎಂದು ಅರ್ಥೈಸಬೇಡ ಅಂತ ನಾನು ಹೇಳಿದ್ದೆ. ಅವಲಂಬನೆಯ ಮೂಲಭೂತ ಬೇಡಿಕೆಗೆ ಪ್ರೀತಿ-ಪ್ರೇಮದ ಎಷ್ಟೊಂದು ರಂಗಿನ ಪದಗಳನ್ನು ಹೊದಿಸದರೂ, ಅದರ ಹರಕು ಕಣ್ಣಿಗೆ ರಾಚುತ್ತೆ. ರವಿ ಒಂದು ಪಕ್ಷ ಹಣ ಕಳುಹಿಸದಿದ್ದರೆ ನಿನ್ನ ಮುಂದಿನ ತಿಂಗಳ ದಿನಸಿ ಎಲ್ಲಿಂದ ಬರುತ್ತೆ. ಮನೆ ಬಾಡಿಗೆ, ಹಾಲಿಗೆ ಹಣ, ಪುಟ್ಟಿ ಫೀಸ್…. ಮೊದಲು ಇದಕ್ಕೆ ಉತ್ತರ ಹುಡುಕು, ಪ್ರೀತಿ-ಪೇಮದ ಬಗ್ಗೆ ನಂತರ ಚಿಂತಿಸಿದರಾಯ್ತು, ಪುರುಸೊತ್ತಾಗಿ,’ +ಬಿ. ಪಿ. ಸಲಕರಣೆ ಚೀಲಕ್ಕೆ ತುರುಕಿ ನಡೆದೇ‌ಇಟ್ಟಳು ಶೀಲಾ. +ಶೀಲಾ ಮುಲಾಜಿಲ್ಲದ ಹೆಂಗಸು. ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ ಮೂರ್ನಾಲ್ಕು ಹೆರಿಗೆ, ಶಸ್ತ್ರಕ್ರಿಯೆ ಮಾಡುವ, ನೂರೆಂಟು ಕಾರಣಗಳಿಗೆ ಬಸಿರಿಳಿಸುವ-ಸ್ತ್ರೀತಜ್ಞೆ. ವೃತ್ತಿ ಸಹಜವೇನೋ ಎಂಬಂತೆ ಶೀಲಾಳಿಗೆ ನಯನಾಜೂಕಿನ ಮಾತುಗಳನ್ನು ಪೋಣಿಸುವ ಸಹನೆ ಇರಲಿಲ್ಲ. ಇದ್ದದ್ದನ್ನು ಮುಖಕ್ಕೆ ಎತ್ತೆ ಒಗೆವಂತೆ ಹೇಳುವಳು. +‘ಬದುಕುವುದು ಅಂತಲೇ ನಿರ್ಧರಿಸಿದ ಮೇಲೆ ಹೇಗಾದರೂ ಬದುಕೋದು ಅಂದರೇನು? ಬದುಕೋದಾದರೆ ಗರ್ವದಿಂದ ಬದುಕು’ ಎನ್ನುವಳು. +‘ಅವರಿವರ ಸಹಾನುಭೂತಿಯ ಗುಡ್ಡೆ ಹಾಕಿಕೊಂಡು ನೀ ಗದ್ದುಗೆ ಏರೋಕಾಗಲ್ಲ’ ಎಚ್ಚರಿಸುವಳು. +‘ಸಾಕು ಹೊರಗೆ ಬಾ ಈ ದುರಂತ ನಾಯಕಿಯ ಪಾತ್ರದಿಂದ. ನಿನಗೆ ಈ ನೋವು ಒಂದು ರೀತಿ ಮಜ ಕೊಡ್ತಾ ಇದೆ ಅಲ್ಲ’ ಕೆಣಕುವಳು. +ನಾ ಬೆಚ್ಚುತ್ತಿದ್ದೆ. ನನ್ನ ಮುಖವಾಡಗಳನ್ನೆಲ್ಲ ಕಿತ್ತೆಸೆಯುವ ಅವಳ ಪರಿಗೆ, ಪೂರ್ಣ ಬೆತ್ತಲಾಗುವ ಭಯಕ್ಕೆ. ಅವಳ ಒಂದೊಂದು ಮಾತು, ನನ್ನ ಒಳಗೊಳಗೇ ಮುಟ್ಟಿ-ತಟ್ಟಿ ಪ್ರಶ್ನಿಸುವುವು. ನನ್ನ-ಅವನ ಸಂಬಂಧ ಹುಸಿ-ದಿಟವ ಬೇರ್ಪಡಿಸಲು ಪ್ರೇರೇಪಿಸುತ್ತಿದ್ದವು. +ಈಗ ಕುಳಿತು ಯೋಚಿಸಿದರೆ, ನಮ್ಮ ಸಾಂಗತ್ಯ ವಿಚಿತ್ರವಿತ್ತು ಅನಿಸುತ್ತದೆ. ವಾರಗಕ್ಕಲೆ ರವಿ ಪ್ರವಾಸಕ್ಕೆ ಹೋದಾಗ ನಾನು ಚಡಪಡಿಸುತ್ತಿದ್ದೆ. ಹಾಲಿನವನ ಲೆಕ್ಕ ದಿನಸಿಯವನ ಲೆಕ್ಕ ಎಲ್ಲವನ್ನೂ ಎಡತಾಡಲು. ಎಲೆಕ್ಟ್ರಿಸಿಟಿ ಬಿಲ್‌ಗೆ ಪಕ್ಕದ ಮನೆ ಶಶಿಯನ್ನು ಕೇಳಬೇಕಿತ್ತು. ಶೀಲಾ ಕೈಲಿ ಇವರು ಕೊಟ್ಟ ಬೇರರ್ ಚೆಕ್ ಕಳುಹಿಸುತ್ತಿದ್ದೆ. +ರವಿ ಕೂಡಾ ನನ್ನ ‘ಮಿಸ್’ ಮಾಡುತ್ತಿದ್ದ. ನಾನು ಅನಿವಾರ್ಯವಾಗಿ ತೌರಿಗೆ ಹೋದ ಒಂದೆರಡು ಸನ್ನಿವೇಶದಲ್ಲಿ, ಬೆಳಿಗ್ಗೆ ಬಿಸಿ ಬಿಸಿ ಕಾಫಿ ಇಲ್ಲದೆ, ಘಮ ಘಮ ಉಪ್ಪಿಟ್ಟಿಲ್ಲದೆ, ಮಧ್ಯಾಹ್ನಕ್ಕೆ ಹಾಜರಾಗುವ ಮೂರು ಡಬ್ಬದ ಕ್ಯಾರಿಯರ್ ಇಲ್ಲದೆ, ಸಂಜೆ ತೆರೆದ ಬಾಗಿಲಿನ ನಗುವ ಪತ್ನಿಯ ಸ್ವಾಗತಿವಿಲ್ಲದೆ. +ಅವಲಂಬಿತರು…. ಪರಮ ಅವಲಂಬಿತರು. ಅವನ ಅವಲಂಬನೆಗಳಿಗೆ ಬಹಳ ಸುಲಭವಾಗಿ ಬದಲು ಸಿಕ್ಕಾಗಿದೆ. ನನ್ನ ಅವಲಂಬನೆಯೇ ಅಧಿಕವಿತ್ತು. ಆರ್ಥಿಕ ಅವಲಂಬನೆ. ಮಾನಸಿಕ ಅವಲಂಬನೆ, ಹೊರಗಿನೆಲ್ಲ ಪ್ರಪಂಚಕ್ಕೆ ಕದವಿಕ್ಕಿ ಕುಳಿತ ಏಕಾಂಗಿಯ ಸಾಂಗತ್ಯದ ಅವಲಂಬನೆ. +ಈ ಮನೆಯ ಮುಖಂಡತ್ವವನ್ನು ನಾನೇ ಬಿಟ್ಟುಕೊಟ್ಟಿದ್ದೆ, ಯಾರದೋ ನೆರಳಲ್ಲಿ ಯಾರದೋ ಹೆಗಲಿಗೆ ಜವಾಬ್ದಾರಿ ಹೇರಿ, ಯಾರದೋ ಆಸರೆಯಲ್ಲಿ ಉಳಿಯುವುದರಲ್ಲಿ ಒಂದು ಬಗೆಯ ಆರಾಮವಿತ್ತು. ಬ್ಯಾಂಕಿನಿಂದ ಹಣ ಬೇಕು, ರವಿ ತರುತ್ತಿದ್ದ. ಪೋಸ್ಟ್ ಆಫೀಸ್ ಉಳಿತಾಯ, ರವಿ ಕಟ್ಟಿ ಬರುತ್ತಿದ್ದ. ದೀಪ ಕೆಟ್ಟು ಹೋಯ್ತು, ರವಿ ಬದಲಿಸುತ್ತಿದ್ದ. ಪುಟ್ಟಿಯ ಹೆಚ್ಚಿನ ಪ್ರಶ್ನೆಗಳಿಗೆಲ್ಲ ‘ಅಪ್ಪ ಬರಲಿ, ಅಪ್ಪನ ಕೇಳು, ಅಪ್ಪಂಗೆ ಹೇಳ್ತೀನಿ ತಾಳು….’ ಉತ್ತರವಾಗಿತ್ತು. ರವಿ ಕಿತ್ತುಕೊಳ್ಳದಿದ್ದರೂ ಅವನ ಶಿರಕ್ಕೆ ಕಿರೀಟ ಇಟ್ಟು, ನಾ ಪದತಳದಲ್ಲಿ ಕುಳಿತಿದ್ದೆ. +ಎಷ್ಟು ಸಣ್ಣ ಘಟನೆಗಳು…. +‘ಅಮ್ಮ ಇರಾಕ್ ಯಾವ ಖಂಡದಲ್ಲಿದೆ?’ +‘ಅಪ್ಪನ ಕೇಳೋಗಮ್ಮ….’ +‘ಅಮ್ಮ ರಿಪೋರ್ಟ್ ಕಾರ್ಡ್‌ಗೆ ಸಹಿ ಹಾಕು….’ +‘ಅಪ್ಪನ ಹತ್ರ ಹಾಕಿಸ್ಕೋ….’ +‘ಇವತ್ತು ಪೇರೆಂಟ್ಸ್ ಡೇ….’ +‘ರವಿ, ನೀನು ಹೋಗಿ ಬರ್ತೀಯಾ, ಮರೀಬೇಡ….’ +ಸಣ್ಣ ಸಣ್ಣ ಕೆಲಸಗಳು. ನನ್ನ ಶಕ್ತಿ ಮೀರಿದ ಹಿಮಾಲಯವನ್ನು ಎತ್ತಿಡಬೇಕಾದ ಘನ ಕಾರ್ಯಗಳಲ್ಲ. ಪುಟ್ಟ ಪುಟ್ಟ ಕೆಲಸಗಳು…. ನಾನು ಹೊರಲಾರದ್ದಲ್ಲ. ನಾನು ಹಂಚಿಕೊಳ್ಳದೆ ಉಳಿದದ್ದು…. ನಾನು ಕಲಿಯದ್ದು! +ಶೀಲಾ ಹೇಳುತ್ತಾಳೆ ಒರಟಾಗಿ- +‘ಬದುಕಿಗೆ ತಯಾರಾಗುವ ಯೋಚನೆಯೇ ನಿನಗೆ ಬಂದಿರಲಿಲ್ಲವಾ ಮಧು? ಆಪತ್ಕಾಲಕ್ಕಷ್ಟೇ ನಾವು ಕಲಿತ ವಿದ್ಯೆ, ಪ್ರತಿಭೆ, ಚಟುವಟಿಕೆ ನೆನಪಾಗುತ್ತದೆ. ಇಲ್ಲಾ ಹೀಗೇ ತಗ್ಗಿಗೆ ಹರಿಯೋ ನೀರಿನಂತೆ ಹೋದತ್ತಲೇ ಹಾದಿಯೆಂದು ಕೈ ಕಟ್ಟಿ ಕೂರುತ್ತೇವೆ.’ +ಬದುಕಿಗೆ ತಯಾರಾಗುವ ಪ್ರಮೇಯವೇ ಬಂದಿರಲಿಲ್ಲ. ಶೇಕಡ ತೊಂಬತ್ತೊಂಬತ್ತು ಸಂಸಾರಗಳು, ಏನೇ ತೊಂದರೆ ಬಂದರೂ, ಹೇಗೋ ಕೊನೆಯವರೆಗೂ ನಿಭಾಯಿಸುತ್ತವೆ. ಉಳಿದ ಆ ಶೇಕಡ ಒಂದರ ಸಾಧ್ಯತೆ…. ಅತಿ ಕಡಿಮೆ. ಬದುಕು ನನ್ನ ಗಣಿತ, ಹುಣಾಕಾರದ ಎಗ್ಗಿಲ್ಲದೆ ನಕ್ಕಿತ್ತು! +ಹೊಸ ಬದುಕಿಗೆ ಒಂದೊಂದೇ ಹೆಜ್ಜೆಗಳು, ಪ್ಲಾಸ್ಟರ್‍ನಲ್ಲಿದ್ದ ಕಾಲನ್ನು ಉಪಯೋಗಿಸದೆ ಬಿಟ್ಟು ನಡೆಯಲು ತಡವರಿಸುವ ಪರಿ ನನ್ನದಾಗಿತ್ತು. ಶೀಲಾ ಎರಡು ದಿನ ರಜೆ ಹಾಕಿ ನನ್ನೊಂದನೆ ಬಂದಳು. ಬ್ಯಾಂಕಿನಲ್ಲೊಂದು ಅಕೌಂಟ್ ತೆಗೆಸಿದಳು. ವಿದ್ಯಾವಂತೆ ನಾನು. ಒಂದು ಚೆಕ್ ಬರೆಯುವುದು ಕಲಿತದ್ದು…. ಮುವ್ವತೈದಕ್ಕೆ! ಅಂಚೆ ಕವರಿನ ಬೆಲೆ ಒಂದು ರೂ. ಎಂದು ತಿಳಿದದ್ದು…. ಮುವ್ವತೈದಕ್ಕೆ! ಪುಟ್ಟಿಯ ಅಂಕ ಗಣಿತಕ್ಕೆ ಉತ್ತರ ಹುಡುಕಿದ್ದು ಮುವ್ವತೈದಕ್ಕೆ! +‘ಮದು, ಏನು ಮಾಡಬೇಕು ಅಂತ ಯೋಚಿಸಿದ್ದೀಯಾ?’ ಮತ್ತೆ ಒತ್ತಿ ಕೇಳಿದ ಶೀಲಾಗೆ ಅರೆಮನಸ್ಸಿನಿಂದ ಹೇಳಿದೆ- +‘ಬಿ. ಎ. ಕಟ್ತೀನಿ….’ +‘ಬಿ. ಎ. ಮಾಡಿ ಏನು ಮಾಡ್ತೀಯಾ?’ ನೇರವಿತ್ತು ಅವಳ ಪ್ರಶ್ನೆ. +‘ಗೊತ್ತಿಲ್ಲ, ನನ್ನ ಉದಾಸೀನದ ಉತ್ತರ. +‘ಮಧು, ನಿನಗೆ ಮತ್ತೆ ಈ ಸಾವಿರದೈನೂರ ಜೀವನಾಂಶದಲ್ಲಿ ಬದುಕು ಒಗ್ಗಿ ಹೋಗುತ್ತೆ…. ಏನಾದರೂ ಮಾಡಬೇಕು ಅನ್ನೋ ಉತ್ಸಾಹ, ಛಲ, ಒಂದಿಷ್ಟೂ ಬೇಡವೇ?’ ಅಸಮಾಧಾನದಿಂದ ರೇಗಿದಳು. +‘ಶೀಲಾ ಪ್ಲೀಸ್…. ನನ್ನನ್ನು ಏನು ಮಾಡು ಅಂತೀಯಾ? ಡಿಗ್ರಿ ಇಲ್ಲ. ಮತ್ತೆ ಹಿಂದಿರುಗಿದರೆ ಸ್ವಾಗತಿಸೋಕೆ ತೌರಿನ ಸಂಪತ್ತಿಲ್ಲ. ನನ್ನ ಕಸ ಗುಡಿಸು, ಮುಸುರೆ ತಿಕ್ಕು ಅಂತೀಯಾ….’ +ಶೀಲಾ ಬಹಳ ಹೊತ್ತು ಉತ್ತರಿಸಲಿಲ್ಲ. +‘ಮಧು… ನೀನು ತಗ್ಗಿನ ಹಾದಿಯನ್ನೆ ಹಿಡಿಯುತ್ತಿ. ವಿದ್ಯುತ್ತು ಅತಿ ಕಡಿಮೆ ನಿರೋಧಕ ದಾರಿಯನ್ನು ತುಳಿಯುತ್ತೆ. ಮನುಷ್ಯ ಕೂಡ ಅತಿ ಕಡಿಮೆ ಪರಿಶ್ರಮದ ಮಾರ್ಗ ಹುಡುಕ್ತಾ ಇರ್‍ತಾನೆ. ನೀ ಏನು ಆಗಬೇಕು ಅಂತ ನಿಶ್ಚಯಿಸಬೇಕಾದವಳು ನೀನು. ನಿನ್ನಿಂದ ಏನು ಸಾಧ್ಯ ಅಂತ ತಲೆ ಕೆಡಿಸಿಕೊಳ್ಳಬೇಕಾದವಳೂ ನೀನೇ….’ +ನಾ ಏನೂ ಹೇಳದೇ ಸುಮ್ಮನೆ ಕುಳಿತೆ. +ಯುದ್ಧದಲ್ಲಿ ಶಸ್ತ್ರಾಭ್ಯಾಸ ಮಾಡಲು ಹೊರಟಿದ್ದೆ. ಈ ಜೀವನ ಸಮರಕ್ಕೆ ನಾನು ಸಿದ್ಧವಿರಬೇಕಿತ್ತು. ಎಷ್ಟು ಮಧಾಹ್ನಗಳು ಎಷ್ಟು ಸಂಜೆಗಳು ವ್ಯರ್ಥವಾಗಿ ಕಳೆದದ್ದು. ಮನೆಗೆ ಮಿಕ್ಸಿ ಬಂತು. ಫ್ರಿಜ್ ಬಂತು. ವಾಷಿಂಗ್ ಮಷಿನ್ ಬಂತು…. ನನ್ನ ಕೆಲಸವಿಷ್ಟು ಹಗುರವಾಗಿತ್ತು. ಸಮಯವಿಷ್ಟು ಮಿಕ್ಕಿ ಉಳಿದಿತ್ತು. +ನಾವು ಜಡತ್ವವನ್ನು ಅವಳಿಯಾಗಿ ಪಡೆದು ಬಂದವರು. ಅವಶ್ಯಕತೆ ಇಲ್ಲದೆ ಏನನ್ನೂ ಕಲಿಯಲು, ಒಂದಿಂಚೂ ಬೆಳೆಯಲು ಸಿದ್ಧರಿಲ್ಲದವರು. ನಿಜ, ನಾ ಹೋರಾಡಬೇಕಿರಲಿಲ್ಲ. ಒಂಬತ್ತರಿಂದ ಐದರ ಕೆಲಸ ಹಿಡಿದು. ಆದರೆ ನನ್ನ ಬೆರಳ ತುದಿಯ ಪ್ರತಿಭೆಯನ್ನು ಉಳಿಸಿಕೊಳ್ಳಬಹುದಿತ್ತು. ಕಲಿತ ವಿದ್ಯೆಯನ್ನು ಬಳಸಿಕೊಳ್ಳಬಹುದಿತ್ತು. ಸ್ವತಃದುಡಿಮೆಯ ಸವಿರುಚಿಯ ಒಂದಿಷ್ಟು ಸವಿಯಬಹುದಿತ್ತು. ಅಂಥಾ ಯಾವ ಯತ್ನವನ್ನೂ ಮಾಡಲಿಲ್ಲ. ಈ ಒಂದು ದಶಕದಲ್ಲಿ. ಎಂಥಾ ಹುಚ್ಚು ಜನ ನಾವು, ಬದುಕು ಅಂಚಿಗೆ ನೂಕುವವರೆಗೂ ನಿಂತಿರುತ್ತೇವೆ. ಕೊನೆಗೆ ಆ ತುದಿಯ ಹಿಡಿದು ಜೋತಾಡುತ್ತೇವೆ. ಬೀಳಬಹುದಾದ ಪ್ರಪಾತಕ್ಕೆ ಹೆದರಿ ತಲ್ಲಣಿಸಿ. +ಒಂದು ದಶಕ ಹೇಗೆ ಕಳೆದಿತ್ತು? +ಪುಟ್ಟಿ-ಹುಟ್ಟಿದಳು, ಹೊಟ್ಟೆ ಕೆಳಗಾದಳು, ಅಂಬೆಗಾಲಿಟ್ಟಳು. ಹೆಜ್ಜೆ ಇಟ್ಟು ನಡೆದೇಬಿಟ್ಟಳು…. ಎಷ್ಟೊಂದು ಬೆಳವಣಿಗೆ! +ರವಿ…. ಎಂ. ಬಿ. ಎ. ಮುಗಿಸಿದ. ಕಂಪ್ಯೂಟರ್…. ಮಾರ್ಕೆಟಿಂ ಅಂತ ಡಿಗ್ರಿ…. ಡಿಪ್ಲಮೋಗಳ ಪೋಣಿಸಿಕೊಂಡ. ಸಾವಿರದಿನ್ನೂರರ ಸಂಬಳಕ್ಕೆ ಸೇರಿದಾತ, ಆರು ಸಾವಿರದ ಅಂಚಿಗೆ ಬಂದ! +ನಾನು…. ತಾಯಾದೆ, ಒಂದಿಷ್ಟು ದಪ್ಪವಾದೆ. ಮನೆಗೆಲಸ, ವಿಡಿಯೋ, ಮತ್ತೆ ಜೋಡಿಸಿ ಹೋದ ಕೇಬಲ್ ಟಿ. ವಿ. ಗೆ ಜೋತುಬಿಟ್ಟೆ ದಶಕವನ್ನು. ಮೂಲೆಮನೆಯ ಸೀತಾ ಹುಬ್ಬು ಕಿತ್ತು ಹಣಗಳಿಸುವುದನ್ನು, ಪಕ್ಕದ ಮನೆ ಶಶಿ, ಅರಚಿಕೊಳ್ಳೊ ಮಕ್ಕಳನ್ನು ಸಂಭಾಳಿಸುತ್ತಾ ಬೇಬಿ ನರ್‍ಸರಿ ತೆರೆದದ್ದನ್ನು ಮೋಜಿನಿಂದ ಕಂಡೆ, ಆಡಿಕೊಂಡೆ. ‘ಇವರಿಗೆ ಇಷ್ಟವಾಗೋಲ್ಲ’ ಎಂಬ ಸಬೂಬನ್ನು ಹೊಂದಿಸಿಕೊಂಡೆ. ಹಾಗೆ ನೋಡಿದರೆ ರವಿ, ನನ್ನ ಕೆಲಸ, ಹವ್ಯಾಸಗಳಿಗೆ ಯಾವತ್ತೂ ಆಕ್ಷೇಪ ಎತ್ತಿರಲಿಲ್ಲ. ಇಬ್ಬರೇ ಇದ್ದ ಮನೆಯಲ್ಲಿ ಹಿರಿಯರ ಅಂಕೆ ಅಡ್ಡಿಯೂ ಇರಲಿಲ್ಲ. ಏಕೋ ಏನೋ ಮಾಡಬೇಕಿನಿಸಲಿಲ್ಲ. ಬಾಲ್ಯ್ದ ವೇಗ, ಆವೇಗ, ಸ್ಪರ್ಧೆ ಯಾವುದೂ ಇಲ್ಲದ ಈ ವಿವಾಹಿತ ಬದುಕು, ಸಮತಟ್ಟು ತಲುಪಿತ್ತು. ಎಲ್ಲಾ ಹುಡುಗಿಯರಂತೆ ನಾನೂ ಶಾಲೆಯಲ್ಲಿ ಚಿತ್ರ ಬಿಡಿಸಿದ್ದೆ. ಪ್ರಬಂಧ ಬರೆದಿದ್ದೆ. ಕದ್ದು ಮುಚ್ಚಿ ಕವನಗಳನ್ನೂ ಬರೆಯುತ್ತಿದ್ದೆ. ಅಲಂಕಾರದ ಬಟ್ಟೆಗಳನ್ನೂ ಹೊಲೆದುಕೊಳ್ಳುತ್ತಿದ್ದೆ. ಅವಕ್ಕೆಲ್ಲ ಇದ್ದ ಕಾರಣಗಳು ಈಗ ಇರಲಿಲ್ಲ. ಕಾರಣಗಳಿಲ್ಲದೆಯೂ ಸಾಧಿಸುವ ಛಲಕ್ಕೆ ಬೇಕಾದ ಪರಿಶ್ರಮದ ಅಗತ್ಯ ಕಾಣಲಿಲ್ಲ. ‘ಏನೂ ಮಾಡ್ತಾ ಇಲ್ವಾ ಮಧು….. ಪೇಂಟಿಂಗ್, ಹೊಲಿಗೆ….’ ಅಂದಾಗೆಲ್ಲ ‘ಪುಟ್ಟ ಮಗು ಇದೆ ಸಮಯವೆಲ್ಲಿ….’ ಅನ್ನುತ್ತಿದ್ದೆ. ಕಾರಣಗಳಿತ್ತು. ನೂರು ಕಾರಣಗಳು…. ಪುಟ್ಟಿ ಬೆಳೆದಂತೆ ಕಾರಣಗಳೆಲ್ಲ ನೆಪಗಳಾದವು. ‘ಮಗು ಬಂದಾಗ ಮನೆಯಲ್ಲಿರಬೇಕು’ ಇವರು ಬಂದ ತಕ್ಷಣ ಕಾಫಿ ಆಗಬೇಕು….’ ಕಾರಣಗಳ ಕೊಟ್ಟುಕೊಂಡೆ. ಗೃಹಿಣಿಯ ಮಾದರಿಯಾಗುವ ಆಸೆಯಿಂದಲ್ಲ. ಮತ್ತೇನೂ ಆಗಲಾರದ ಆಲಸ್ಯದಿಂದ. +ಅಂದು, ಅವನ ಮೊದಲ ಚೆಕ್ ಬಂದಿತ್ತು. +ಈಗ ನನ್ನ…. ಅವನ ನಡುವೆ ಉಳಿದ ಸಂಬಂಧ ಈ ಹಣವೊಂದೇ. +ಇಷ್ಟೇ ಇತ್ತೇ ನಮ್ಮ ಸಂಬಂಧ…. ಇಷ್ಟೇ? ‘ಇರಲಿಕ್ಕಿಲ್ಲ ರವಿ…. ಒಂದಿಷ್ಟು ಮತ್ತೇನೋ ಇತ್ತು. ಇಲ್ಲದಿದ್ದರೆ ಸಮಯ ಹೀಗೇಗೆ ನಿಂತುಬಿಟ್ಟಿದೆ, ನೀ-ನಿಲ್ಲದ ಈ ಹೊತ್ತಿನಲ್ಲಿ. ಅವಳು ಕಣ್ಣೊತ್ತುವುದೇಕೆ, ಸಂಜೆ ಕೆಂಪಿನ ಕತ್ತಲಲ್ಲೆ. ಶೀಲಾ ಏನೇ ಹೇಳಿದರೂ ನನ್ನ-ಅವನ ನಡುವೆ ಅವಲಂಬನೆಯ ಹೊರತಾಗಿಯೂ ಒಂದು ಸಂಬಂಧವಿತ್ತು. ಪ್ರೀತಿಯೋ-ಪ್ರೇಮವೋ ಯಾವುದೋ ಒಂದು. ನನ್ನನ್ನು ಈ ವೈವಾಹಿಕ ನಿಶ್ಚಿಂತೆಯಲ್ಲಿ, ಸುಷುಪ್ತಿಯಲ್ಲಿ ಮಲಗಿಸಿದ ಒಂದಿಷ್ಟು ಸಿಹಿವರ್ಷಗಳು. +ಸತ್ಯ ಇಷ್ಟೆ, ಪ್ರೇಮ-ಕಾಮ, ವಾತ್ಸಲ್ಯ, ಭರವಸೆ, ನಿಷ್ಠೆ ಎಲ್ಲಾ ಬಂಧನಗಳೂ ಕಿತ್ತುಕೊಂಡ ಮೇಲೂ ಜಗ್ಗಾಡಿ ಉಳಿದುಕೊಂಡ ಕೊಂಡಿ…. ಈ ಹಣದ್ದು! +‘ಬೇಡ, ನಾ ಹಸಕ್ಕೊಂಡಾದ್ರೂ ಸಾಯ್ತೀನಿ. ಭಿಕ್ಷೇನಾದ್ರೂ ಬೇಡ್ತೀನಿ. ಅವನ ಹಣ ಬೇಕಿಲ್ಲ. ನನಗೂ ಆತ್ಮಗೌರವ ಇದೆ’ ಬುಸುಗುಟ್ಟುತ್ತ ಚೆಕ್ ಅತ್ತ ಬಿಸುಟೆ. ಅದು ಬರೀ ಬಾಯಿ ಮಾತಿನ ಚೀರಾಟ ಎಂದು ನನಗೂ ಗೊತ್ತಿತ್ತು. ಈ ಸಾವಿರದೈನೂರರ ಮೇಲೆ ನನ್ನ ತಿಂಗಳು ಪೂರಾ ಒಂಟಿಗಾಲಲ್ಲಿ ನಿಂತಿತ್ತು. +ಶೀಲಾ ನಾ ಬಿಸುಟ ಚೆಕ್ಕನ್ನು ನಿಧಾನವಾಗಿ ಎತ್ತಿ ಮೇಜಿನ ಮೇಲಿಟ್ಟು, ನನ್ನ ಬಳಿ ಬಂದು, ಭುಜ ತತ್ಟುತ್ತಾ ನನ್ನ ಹೈ-ಡ್ರಾಮಾದಿಂದ ಕೊಂಚವೂ ವಿಚಲಿತವಾಗದೆ ಹೇಳಿದಳು- +“ಙou ಛಿಚಿಟಿ’ಣ ಚಿಜಿಜಿoಡಿಜ seಟಜಿ ಡಿesಠಿeಛಿಣ mಥಿ ಜeಚಿಡಿ, ಆತ್ಮಗೌರವ ಬಹಳ ದುಬಾರಿಯಾದುದು. ಸದ್ಯಕ್ಕೆ ನಾಳೆ ಹೋಗಿ ಇದನ್ನು ಜಮಾ ಮಾಡು. ಅವನ ಈ ಚೆಕ್ಕನ್ನು ಬಿಸುಡಬಲ್ಲ ತಾಕತ್ತು ನಿನಗೆ ಬಂದಾಗ ಹೇಳುವಿಯಂತೆ….’ +ಶೀಲಾಳದು ಕಡ್ಡಿ ಮುರಿದಂಥಾ ಮಾತು. ವೈದ್ಯಳು ಸಕ್ಕರೆ ಬೆರೆಸದೆಯೇ ಕಹಿ ಔಷಧಿಯ ಗಂಟಲಲ್ಲಿ ನುಗ್ಗಿಸಬಲ್ಲವಳು. ಶಸ್ತ್ರಕ್ರಿಯೆಯಂತೆ ಸುಳ್ಳು, ಪೊಳ್ಳುಗಳಲ್ಲಿ ಸಿಲುಕಿದ ಸತ್ಯವನ್ನು ಕತ್ತರಿಸಿ ಬೇರ್ಪಡಿಸಿ ಕಣ್ಣೆದುರು ತೂಗುಹಾಕಬಲ್ಲವಳು. ನನ್ನ ಬಗ್ಗೆ ಒಂದಿಷ್ಟು ಸಿಟ್ಟೂ ಇದ್ದವಳು. ಬಹುಶಃ ಬದುಕನ್ನು ವ್ಯವಸ್ಥಿತವಾಗಿ ಬದುಕಿದವರಿಗೆ, ಬದುಕಿನೆಲ್ಲ ಸಾಧ್ಯತೆಗಳನ್ನು ಊಹಿಸಿ ತಯಾರಾದ ಜಾಣರಿಗೆ ನನ್ನಂಥಾ ಗಬ್ಬೆಬ್ಬಿಸಿಕೊಂಡ ಬದುಕು ರೇಗಿಸಬಹುದು. ಹೇಸಿಗೆ ಎನಿಸಬಹುದು. ಒಮ್ಮೆ ಮೆತ್ತಗಾದ ಕ್ಷಣದಲ್ಲಿ ಶೀಲಾ ಹೇಳಿದ್ದಳು- +‘ನಾ ಅನುಕಂಪ ಸುರಿಸಬಹುದು, ನಿನ್ನ ಪರ ವಹಿಸಿ ಅವನಿಗಿಷ್ಟು ಹಿಡಿಶಾಪ ಹಾಕಬಹುದು. ಹೇಳು ಅದರಿಂದೇನು ಪ್ರಯೋಜನ? ಭೂತ ಎಷ್ಟೇ ಸುಂದರವಿದ್ದರೂ ಬರೀ ಇತಿಹಾಸವಾಗುತ್ತೆ. ಅವಶೇಷಗಳಷ್ಟೇ ಉಳಿಯುತ್ತೆ. ಈ ಅನುತಾಪ, ಅನುಕಂಪವನ್ನೆಲ್ಲ ಚಾಚಿ ಹರಡಿ ಹೊದ್ದು ಮಲಗಿಬಿಡುತ್ತೀ. ನಿನಗೀಗ ಬೇಕಿರೋದು ಎದ್ದು ಕುಳಿತುಕೊಳ್ಳುವ ಕ್ರಿಯೆ. ನೀನು ಎಂದೂ ನಿನ್ನ ಭವಿಷ್ಯದ ಬಗ್ಗೆ ಚಿಂತಿಸಲಿಕ್ಕಿಲ್ಲ ಅಲ್ಲ…. ಅದನ್ನೂ ರವಿಗೇ ಬಿಟ್ಟಿದ್ದೆ. ಅಥವಾ ಈಗಲೂ ಬಿಟ್ಟಿರುವೆ.’ +ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೆ. ಬೆಳಗಾಗೆದ್ದರೆ ಪತ್ರಿಕೆಯಲ್ಲಿ ಅಪಘಾತಗಳ ಸುದ್ದಿ ಓದಿಯೇ ನಡುಗುತ್ತಿದ್ದೆ. ರವಿ ಬರುವುದು ಕೊಂಚ ತಡವಾದರೂ ತಳಮಳಿಸುತ್ತಿದ್ದೆ. ಮೆಜೆಸ್ಟಿಕ್ ಸರ್ಕಲ್ ಹತ್ತಿರ ಯಾವನೋ ಕೆಂಪು ದೀಪ ನೋಡಿಯೂ ನುಗ್ಗಿಸಿ, ರವಿ ಬ್ರೇಕ್ ಒತ್ತಿ ಮುಗ್ಗರಿಸಿದ ಪ್ರಕರಣ…. ಮೊಣಕೈ ತರಚಿದ್ದಕ್ಕೆ ಆತಂಕಪಟ್ಟಿದ್ದೆ. ನನ್ನ ಮನಸ್ಸಿಗೆ ಹೊಳೆದಿದ್ದ, ನಾ ಊಹಿಸಿದ್ದ, ಚಿಂತಿಸಿದ್ದ, ಅತಿ ದೊಡ್ಡ ದುರಂತ ರವಿಯ ಸಾವು! +ಅಂತಹ ಸಮಯಕ್ಕೂ ಒಂದು ಬಗೆಯ ನೆರವಿತ್ತು, ನೆರಳಿತ್ತು. ರವಿ ಜೀವ ವಿಮೆ ಮಾಡಿಸಿದ್ದ. ಇಪ್ಪತ್ತು ಪರ್‍ಸೆಂಟ್ ಪಿ. ಎಫ಼್. ಕಟ್ಟುತ್ತಿದ್ದ. ನಲವತ್ತರ ವಯಸ್ಸಿಗೇ ಪ್ಲಾಟ್ ಬುಕ್ ಮಾಡಿದ್ದ. ಆರ್ಥಿಕ ಸ್ಥಿತಿಯ ಬಗ್ಗೆ ನಾ ಯೋಚಿಸಬೇಕಿರಲಿಲ್ಲ. +ಇಂದು ರವಿಯ ಸಾವಿಗಿಂತ ದೊಡ್ಡ ದುರಂತ ನನ್ನ ಕಣ್ಣ ಮುಂದೆ ನಿಂತಿದೆ. ಬಾಡಿಗೆ ಮನೆಯಲ್ಲಿ ಬಿಡಿಗಾಸಿಲ್ಲದೆ, ರವಿಯ ಆಶ್ವಾಸನೆಯ ಮೇಲೆ ನಿಂತಿದ್ದೆ, ಅವನ ತಿಂಗಳ ಹಣದ ನಿರೀಕ್ಷೆಯಲ್ಲಿ, ಒಂದು ಪಕ್ಷ ಬಾರದಿದ್ದರೆ ಎಂಬ ಆತಂಕದಲ್ಲಿ, ಜೀವನಾಂಶಕ್ಕೆ ಹೋರಾಡಬೇಕಿತ್ತೆ ಎಂಬ ಡೈಲಮಾದಲ್ಲಿ! +ಛೀ, ನಾನು ರವಿಯ ಸಾವನ್ನು ಬಯಸುತ್ತಿರುವೆನೆ? ದೇವರೆ, ಸಂಬಂಧಗಳು ಕೂಡ ಕಟ್ಟಕಡೆಗೆ ತಮ್ಮ ಸ್ವಾರ್ಥವನ್ನಷ್ಟೇ ಹುಡುಕಿ ನಿಲ್ಲುತ್ತವಲ್ಲ. ಏನೆಲ್ಲ ಇನ್‌ಷೂರ್ ಮಾಡಿದ್ದೆವು. ಈ ವಿವಾಹ, ಈ ಸಂಬಂಧ, ಈ ಪ್ರೀತಿ ಇನ್‌ಷೂರ್ ಆಗುವಂತಿದ್ದರೆ! +ರವಿ ನನ್ನ ಬದುಕನ್ನು ಈ ಮಟ್ಟಿಗೆ ನಿಯಂತ್ರಿಸಲು ಬಿಡಬಾರದು. ರವಿಯ ಹಣದ ಮೇಲೆ ನನ್ನ ಹಕ್ಕಿರಬಹುದು….. ಅವ ಹೊರಗೆ ದುಡಿದಂತೆಯೇ, ನಾ ಒಳಗೆ ದುಡಿದಿದ್ದೆ. ನನ್ನ ಪತಿಯ ಸ್ಥಾನದಿಂದ ನಿವೃತ್ತನಾದರೂ, ಪುಟ್ಟಿಯ ಅಪ್ಪನಾಗಿ, ಅವನ ಕರ್ತವ್ಯಗಳಿವೆ. ಆದರೂ ಈ ಹಣ ನನ್ನ ಕುಟುಕುತ್ತದೆ, ಕಟ್ಟಿಕೊಂಡ ತಪ್ಪಿಗಾಗಿ, ಬಿಟ್ಟು ಹೋದ ಗಂಡ ‘ಕಪ್ಪ’ ತೆರುತ್ತಿರುವ ಹಣ! +ನನ್ನ ಸ್ವಾವಲಂಬನೆಗೆ ಶೀಲಾ ನೂರು ಹಾದಿಗಳನ್ನು ತಡಕಾಡಿದಳು. ಟೈಪಿಂಗ್, ಬೇಬಿ ಸಿಟ್ಟಿಂಗ್, ಪ್ಲಾಂಟ್ ನರ್ಸರಿ…. ನಾ ಎಲ್ಲಕ್ಕೂ, ನಕಾರ ಹೇಳುತ್ತಾ ಬಂದೆ. ತಟ್ಟನೆ ಏನೋ ಹೊಳೆದಂತೆ- +‘ಮಧು, ನಿನ್ನ ಬೆಡ್‌ರೂಂನಲ್ಲಿ ಹೊಲಿಗೆ ಮೆಷೀನ್ ನೋಡಿದ್ದೆ. ನೀ ಅಮ್ಮನ ಮನೆಯಿಂದ ತಂದಿದ್ದಲ್ಲಾ? ಆಗೇನೇನೋ ಹೊಲಕೊಳ್ತಾ ಇದ್ದೆ. ಇದಕ್ಕೆ ಫ್ರಿಲ್, ಅದಕ್ಕೆ ಪಫ್ ಅಂತ ಏನೇನೋ ಹೊಲಕೊಂಡು ಮೆರಿತಾ ಇದ್ದದ್ದು ನೆನಪಿದೆ. ನಿನ್ನ ಭವಿಷ್ಯಕ್ಕೆ ಈಗ ಹೊಲಿಗೆ ಸಾಕು.’ +‘ಏನು ರವಿಕೆ ಹೊಲಕೊಂಡು ಹೊಟ್ಟೆ ಹೊರೆಯೋಗಾಗುತ್ತಾ? +‘ಥೂ ನಿನ್ನ, ಹೊಲೆಯೋದು ಅಂದರೆ ಈ ನಮ್ಮ ಹಿಂದೀ ಚಿತ್ರಗಳಲ್ಲಿ ತೋರಿಸ್ತಾರಲ್ಲ, ಹಗಲೂ ರಾತ್ರಿ ಕೆಮ್ಮಿಕೊಂಡು ನಾಲ್ಕು ಕಾಸು ಸಂಪಾದಿಸೋ ವಿಧವೆ ತಾಯಂದಿರ ಚಿತ್ರ, ಹಾಗೆ ಅಂದುಕೊಂಡೆಯಾ? ನೀ ದರ್ಜಿ ಅಲ್ಲ. ಡ್ರೆಸ್ ಡಿಸೈನರ್ ಆಗ್ತೀಯಾ…. ನೋಡು ಹೇಗೂ ಮುಂದಿನ ಕೋಣೆ, ವರಾಂಡಕ್ಕೆ ತೆರೆದಿದೆ. ದೊಡ್ಡದಾಗೂ ಇದೆ. ಇವತ್ತೇ ಹೋಲ್ ಸೇಲಿನಲ್ಲಿ ಒಂದಿಷ್ಟು ಬಟ್ಟೆ, ಲೇಸು, ಬಟನ್ ಎಲ್ಲಾ ತರೋಣ. ನೀ ಬೊಟೀಕ್ ಪ್ರಾರಂಭಿಸು.’ +ಶೀಲಾಳ ಒಂದು ಪುಟ್ಟ ಸಲಹೆ. ನನ್ನ ಭವಿಷ್ಯಕ್ಕೆ ಕಿರು ಬಾಗಿಲು ತೆರೆದಿತ್ತು. ಶೀಲಾಳ ಬಾಲವಿಡಿದು ಒಂದಿಷ್ಟು ಸುತ್ತಿದೆ. ಬಣ್ಣ ಬಣ್ಣದ ಹೊಸ ವಿನ್ಯಾಸಗಳ ಶೋ ರೂಂಗಳನ್ನು ನೋಡಿಯೇ ನನಗಷ್ಟು ಐಡಿಯಾ ಬರುತ್ತಿತ್ತು. ಶೀಲಾ ಐದಾರು ಉಡುಪು ವಿನ್ಯಾಸದ ಪುಸ್ತಕಗಳನ್ನು ತಂದುಕೊಟ್ಟಳು. ಒಂದಿಷ್ಟು ಉತ್ಸಾಹದಿಂದಲೇ ಆರಂಭವಾಯಿತು. ನನ್ನ ಬೆರಳ ತುದಿಯ ಪ್ರತಿಭೆಯ ಉದ್ಯಮವಾಗಿಸುವ ಬೃಹತ್‌ಕಾರ್ಯ. +ಏಕೋ, ಸಮಯ ಸರಿದಂತೆ ಮನಸ್ಸು ಮತ್ತೆ ನಿಧಾನವಾಗಿ ಹಳೆಯ ಬದುಕಿಗೆ ಬಂದು ನಿಂತಿತು. ಆರು ತಿಂಗಳು ಕಳೆದಿತ್ತು. ಅವನ ಚೆಕ್ ತಿಂಗಳು ತಿಂಗಳು ತಪ್ಪದೆ ತಲುಪುತ್ತಿತ್ತು. ಪುಟ್ಟಿಯ ಬಗ್ಗೆ ಆಗಾಗ್ಗೆ ಬಂದು ವಿಚಾರಿಸಿಕೊಳ್ಳುವ. ಅವ ಬಿಟ್ಟು ಹೋದ ಹೊಸತರಲ್ಲಿ ಧೂಳೆದ್ದ ಛಲ ಮತ್ತೆ ಸೋಲತೊಡಗಿತ್ತು. ಒಂದಿಷ್ಟು ಅಕ್ಕಪಕ್ಕದವರ ರವಿಕೆ-ಫ್ರಾಕ್ಸ್ ಹೊಲೆದುಕೊಟ್ಟಿದ್ದೆ ಅಷ್ಟೆ. ಅದರಾಚೆ ಹೊಲಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆರಂಭದ ಆ ಉತ್ಸಾಹ ಹೆಚ್ಚು ದಿನ ಉಳಿಯಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆಯಲ್ಲೇ ಇದ್ದವಳಿಗೆ ಈ ಓಡಾಟ-ಹೋರಾಟ ಅತಿ ಪ್ರಾಯಾಸದ್ದೆನಿಸಿತ್ತು. +ಶೀಲಾ ತಿವಿದು ಕೇಳಿದಾಗೆಲ್ಲ-‘ಯಾರೇ ನನ್ಹತ್ರ ಬರ್ತಾರೆ. ಬಂದ್ರೂ ಇವತ್ತು ಕೊಟ್ಟು ನಾಳೇನೇ ಕೊಡಿ ಅಂತಾರೆ. ಇಡೀ ರಾತ್ರಿ ಕುಳಿತು ಹೊಲೆಯಬೇಕು. ಮತ್ತೆ ಇಲ್ಲಿ ಸಡಿಲ, ಅಲ್ಲಿ ಬಿಗಿ ಅನ್ನೋ ದೂರುಗಳನ್ನು ಕೇಳಬೇಕು’ ಎಂದಿದ್ದೆ. +“ಮಧು ಸೆಲ್ಫ್‌ಡ್ರೈವ್ ಇಲ್ಲದ ಜನಕ್ಕೆ ಹೊರಗಿಂದ ಎಷ್ಟೇ ಪಂಪ್ ಹೊಡೆದರೂ ತುಸುಕ್ ಅಂತ ಕೂರುತ್ತಾರೆ. ನೀನು ಆ ಗುಂಪಿನೋಳು. ನಿನ್ನ ಸ್ವಾವಲಂಬನೆ ಒಂದು ದಿನದಲ್ಲಿ ಒಂದು ರವಿಕೆ ಹೊಲೆದೊಡನೆ ಧಾವಿಸಿ ಬರುತ್ತೆ ಅಂದುಕೊಂಡೆಯಾ?’ ಶೀಲಾ ಗುಡುಗಿ ಕೇಳಿದಳು. +ಏಕೋ ನನ್ನಲ್ಲಿ ಉತ್ಸಾಹವೇ ಮೂಡಲಿಲ್ಲ. ಒಂದು ಜೀವನಕ್ರಮಕ್ಕೆ ಒಗ್ಗಿದ ದೇಹ-ಮನಸ್ಸು ಬದಲಾವಣೆಗೆ ಎಷ್ಟೊಂದು ಪ್ರತಿಭಟಿಸುತ್ತದೆ! ಇದು ಒಂಬತ್ತರಿಂದ ಐದರ ಕೆಲಸವಾಗಿರಲಿಲ್ಲ. ಅತ್ತ ಮಾಡಿ ಬಿಸುಟು ಪ್ರತಿ ತಿಂಗಳ ನಿಗದಿತ ಸಂಬಳವನ್ನು ನಿಶ್ಚಿಂತೆಯಿಂದ ನಿರೀಕ್ಷಿಸಲು. ನಾನೊಂದು ಉದ್ಯಮವಾಗಬೇಕಿತ್ತು. ಏಕ ವ್ಯಕ್ತಿಯ ಉದ್ಯಮ. ವಿನ್ಯಾಸ ಹುಡುಕುವುದು, ಉಡುಪುಗಳಿಗೆ ಅಳವಡಿಸಿ ತಯಾರಿಸುವುದು, ಮತ್ತೆ ಕೊಳ್ಳುವ ಗಿರಾಕಿಗಳ ಹುಡುಕುವುದು. ನನ್ನ ಗತಿ ಬಲು ನಿಧಾನವಾಗಿತ್ತು. ಒಂದೆರಡು ಹೊಲೆದು ಸುತ್ತಮುತ್ತ ಒಂದಿಬ್ಬರಿಗೆ ತೋರಿಸುವುದು. ಮತ್ತೆ ಖರ್ಚಾಗದಿದ್ದರೆ ‘ಇದೆಲ್ಲಾ ನನ್ನಿಂದಾಗೋಲ್ಲ ಬಿಡು’ ಎಂದು ಖಿನ್ನಳಾಗುವುದು. ಇದರ ಲೈನಿಂಗ್ ಬಟ್ಟೆ ಇಲ್ಲ. ಇದರ ಶೋ-ಬಟನ್ ಸಿಕ್ಕಿಲ್ಲ. ನಾಳೆ ತಂದರಾಯಿತು. ನಾಡಿದ್ದು…. ಹೀಗೇ ಮುಂದೂಡುವ ನನ್ನ ಸೋಮಾರಿತನದಲ್ಲಿ ಒಂದು ಸಣ್ಣ ಆಸೆಯೂ ಇತ್ತು…. ರವಿ ಮತ್ತೆ ಬರಬಹುದೆಂದು….. ನನ್ನ ನಿಷ್ಕ್ರಿಯತೆ ಕಂಡುಕೊಂಡ ಆಶಾವಾದ ಅದು. +ಅಪ್ಪಟ ಅವಶ್ಯಕತೆ ಇದ್ದರೂ ಬದುಕದ ನಮ್ಮಂಥವರಿಗೆ ಕೆಲವೊಮ್ಮೆ ಶಾಕ್-ಟ್ರೀಟ್‌ಮೆಂಟ್ ಒಂದೇ ಉತ್ತರವಿರಬೇಕು. ಬದುಕು ಬದಲಾಯಿತು. ಆ ಒಂದು ಘಯ್ಟನೆಯಲ್ಲಿ! +ಪುಟ್ಟಿಯ ಹುಟ್ಟು ಹಬ್ಬ-ನೆನಪಿರಬಹುದೆ ರವಿಗೆ? ರವಿ ಈ ವಿಷಯಗಳಲ್ಲಿ ಬಹಳ ಮರೆವಿನವ. ಹುಟ್ಟು ಹಬ್ಬ, ನಮ್ಮ ಮದುವೆಯಾದ ದಿನ ಎಲ್ಲವನ್ನೂ ವಾರಗಟ್ಟಲೆ ಮೊದಲೇ ಕೊರೆದು ನೆನಪಿಸಿ ಅಂದು ಸಂಜೆ ನುಗ್ಗುತ್ತಿದ್ದೆವು, ಎಂ. ಜಿ. ರಸ್ತೆ-ಡಿನ್ನರ್-ಐಸ್‌ಕ್ರೀಮ್ ಅಂತ. ಇಲ್ಲ ಅಂದರೆ ಅದೇ ಸಂಜೆ ಆಫೀಸಿನಲ್ಲೇನೋ ಕೆಲಸ ಬಿತ್ತು ಎಂದು ಎಂಟರವರೆಗೂ ಆರಾಮವಾಗಿ ಮರೆತು ಕೂರುವ ಆಸಾಮಿ. ಅದ್ಯಾಕೋ ರವಿಗೆ ಈ ಸಣ್ಣ ಸಣ್ಣ ವಿಷಯಗಳು ಸಣ್ಣ ಸಣ್ಣ ಸುಖಗಳು ಕಣ್ಣಿಗೆ ಕಾಣುತ್ತಲೇ ಇರಲಿಲ್ಲವೇನೋ. ಯಾವುದೋ ಭಯಂಕರ ಸುಖದ ಬೇಟೆಯಲ್ಲಿದ್ದ….! +ನಾಳೆ ರವಿ ಬರಲಿ ಬಿಡಲಿ, ಹುಟ್ಟುಹಬ್ಬ ಆಚರಿಸಬೇಕು. ತಿಂಗಳ ಕೊನೆಯಲ್ಲಿ ಉಳಿದ ಹಣ ಲೆಕ್ಕ ಹಾಕಿ, ಕೂಡಿಸಿ, ಗುಣಿಸಿ, ನೋಡಿದೆ. ಒಟ್ಟು ನೂರು ರೂಪಾಯಿಗಳಷ್ಟು ತೆಗೆದಿಡಬಹುದು. ಪುಟ್ಟಿಗೊಂದು ಹೊಸ ಫ್ರಾಕ್ ತರಬೇಕು. ಪುಟ್ಟಿಯ ಕೈ ಹಿಡಿದು ‘ಕಮರ್ಷಿಯಲ್ ರಸ್ತೆ’ ತುಳಿದೆ. ಒಂದೊಂದೇ ಅಂಗಡಿಗಳು-ಝಗಮಗಿಸುವ ಬೆಳಕು. +‘ಬನ್ನಿ ಮೇಡಂ, ಏನು ಬೇಕು?’ ಮುಗುಳ್ನಗೆಯ ಸ್ವಾಗತದ ಸೇಲ್ಸ್‌ಗರ್ಲ್. +“ಒಂದು ಫ್ರಾಕ್ ಬೇಕು….’ ಒಂದೇನು ರಾಶಿ ರಾಶಿ ಮೊಗೆದು ಬಿತ್ತು. ಒಂದೊಂದೇ ಬೆಲೆಯ ಚೀಟಿಯ ಎತ್ತಿ ನೋಡಿದೆ. ಎದೆ ಧಸಕ್ ಎಂದಿತು. ಈ ಒಂದು ವರ್ಷದಲ್ಲಿ ಏನೆಲ್ಲಾ ಬದಲಾಯಿತೋ ಗೊತ್ತಿಲ್ಲ. ರವಿಯ ಸಂಬಳದಲ್ಲೂ ಇಷ್ಟು ಬಡ್ತಿ ಆಗಿರಲಿಕ್ಕಿಲ್ಲ. ಫ್ರಾಕ್‌ಗಳೆಲ್ಲದರ ಬೆಲೆ ೩೦೦-೩೫೦ರ ಫಲಕ ಹೊತ್ತು ಕುಳಿತಿದ್ದವು ಮೆಲ್ಲನೆ ನಡುಗಿದೆ. +‘ಇದು ಬೇಡ, ತುಂಬಾ ಗ್ರಾಂಡ್ ಆಯ್ತು. ಇದರ ಬಣ್ಣ ಗಾಡಿ….’ ನನ್ನ ಸಬೂಬುಗಳನ್ನು ಇರಿದು ನೋಡುವಂತೆ- +‘ಯಾವ ಬಣ್ಣ ಬೇಕು ಹೇಳಿ ತೋರಿಸ್ತೀವಿ. ಇನ್ನೂ ಕಡಿಮೆ ಬೆಲೆಯದಾದರೆ ಅವೂ ಇವೆ….’ +‘ಹಾಗಲ್ಲ….’ ನಾ ತಡವರಿಸುತ್ತಿದ್ದಂತೆಯೇ ಮತ್ತೊಂದು ರಾಶಿ ಕಡಿಮೆ ಬೆಲೆಯ ೨೦೦-೨೫೦ರ ಫ್ರಾಕ್‌ಗಳು! ಮುಜುಗರಗೊಂಡೆ. ಬಲೆಯಲ್ಲಿ ಸಿಕ್ಕಿಕೊಂಡ ಮೃಗದಂತೆ ಚಡಪಡಿಸಿದೆ. +‘ಇಲ್ಲ ಇದು ಬೇಡ…. ನೋಡಿ ಬರ್ತೀನಿ….’ ನಾ ತಟ್ಟನೆ ತಿರುಗಿ ಪುಟ್ಟಿಯ ಕೈ ಹಿಡಿದು ಹೊರಟಂತೆ, ಎತ್ತಿ ಹಾಕಿದ ರಾಶಿಯ ಹ್ಯಾಂಗರ್‍ಗೆ ಸೇರಿಸುತ್ತಿದ್ದ ಆ ಸೇಲ್ಸ್‌ಗರ್ಲ್ ವ್ಯಂಗ್ಯವಾಗಿ ಬದಿಯವಳಿಗೆ- +‘ನೋಡಿ ಬರ್ತಾರಂತೆ….’ ಎಂದು ಮೆಲ್ಲನೆ ಹೇಳಿ ಕಿಸಕ್ಕನೆ ನಕ್ಕದ್ದು, ಎದೆ ಇರಿಯಿತು. ಈ ಅಂಗಡಿಯವರು, ಗಿರಾಕಿಗಳ ಆರ್ಥಿಕ ಸ್ಥಿತಿಯನ್ನು ಮನದಲ್ಲೇ ಓದಿ ಬಿಡುವಷ್ಟು ನಿಪುಣರು. ಓರ್ವ ಸೇಲ್ಸ್‌ಗರ್ಲ್-ಓರ್ವ ಯಕಶ್ಚಿತ್ ಸೇಲ್ಸ್‌ಗರ್ಲ್‌ಳ ಅಪಹಾಸ್ಯಕ್ಕೆ ಗುರಿಯಾಗಿದ್ದೆ. ಇಂದು ಹೆಚ್ಚೆಂದರೆ ಅವಳ ಸಂಬಳ ಎಷ್ಟಿರಬಹುದು…. ಐನೂರು.. ಇಲ್ಲ.. ಸಾವಿರ… ಅಷ್ಟಕ್ಕೇ ಇಷ್ಟು ಗರ್ವವೇ? ಕುದಿದ ಕೋಪದ ಮನಕ್ಕೆ ಎಲ್ಲಿಯದೋ ಉತ್ತರ- +‘ಇರಬಹುದು…. ಆದರೆ ಅದು ಅವಳು ದುಡಿದ ಹಣ… ತಿಂಗಳೂ ತಿಂಗಳೂ ಬಿಟ್ಟು ಹೋದ ಗಂಡ ಒಲ್ಲದ ಮನಸ್ಸಿನಿಂದ ಬಿಸುಡುವ ಹಣವಲ್ಲ…. ತಿಂಗಳು ತಿಂಗಳೂ ಅನಿಶ್ಚಯದ ಕಾಯುವಿಕೆ ಅವಳಿಗಿಲ್ಲ.’ +ತಟ್ಟನೆ ಸುಧಾರಿಸಿಕೊಂಡೆ. ಕೋಪ-ಅಸಹಾಯಕತೆಗೆ ಇದು ಕಾಲವಲ್ಲ. ಮಲ್ಲೇಶ್ವರಂನಲ್ಲಿಳಿದು, ಗಾರ್ಡನ್ ಬಟ್ಟೆ ಎರಡೂವರೆ ಮೀಟರ್ ಹರಿಸಿಕೊಂಡೆ. ಒಂದಿಷ್ಟು ಸ್ಯಾಟಿನ್ ರಿಬ್ಬನ್, ಜರಿ, ಲೇಸು, ಅಲಂಕಾರದ ಗುಂಡಿಗಳನ್ನು ಕೊಂಡೆ. +‘ಏನು ಮಾಡ್ತಾ ಇದ್ದೀಯಾ ಅಮ್ಮಾ….’ ಎಂದಪುಟ್ಟಿಗೆ- +“ಆ ಫ್ರಾಕ್ ಯಾವುದೂ ಚೆನ್ನಾಗೇ ಇರಲಿಲ್ಲ ಪುಟ್ಟಿ. ನೋಡ್ತಾ ಇರು ಎಂಥಾ ಸಿಂಡ್ರೆಲ್ಲಾ ಡ್ರೆಸ್ ಹೊಲೀತೀನಿ….’ +ಅಪಮಾನಕ್ಕಿಂತ ದೊಡ್ಡ ಚಾಲಕಶಕ್ತಿ ಮತ್ತೊಂದಿರಲಾರದು. ಶೀಲಾ ಕೂಡಾ ತುಂಬಲು ಯತ್ನಿಸಿ ವಿಫಲಳಾದ ಆ ಸಾಹಸ ಪ್ರವೃತ್ತಿ ಮೈಮೇಲೆ ಆವರಿಸಿತ್ತು. ಹೊಲಿಗೆ ಯಂತ್ರದ ಮೇಲೆ ಕುಳಿತ ನನ್ನ ಕಣ್ಣ ಮುಂದೆ ಅಂಗಡಿಯ ಶೋ-ಕೇಸಿನಲ್ಲಿ ತೂಗಾಡಿದ ಆ ೩೦೦ ರೂ. ಗಳ ಫ್ರಾಕ್ ! ಕಡೆಗೂ ಹೊಲಿದು ಮುಗಿಸಿದ್ದೆ. ರಾತ್ರಿಯ ಆಳದಲ್ಲೇ ಲೇಸ್ ಜೋಡಿಸಿ, ಗುಂಡಿ ಅಲಂಕರಿಸಿ ಸಿದ್ಧವಾದಾಗ ನನ್ನ ಛಲವೇ ಗೆದ್ದಿತ್ತು…. ಸಿಂಡ್ರೆಲ್ಲಾ ಫ್ರಾಕ್! ಲೆಕ್ಕಹಾಕಿದೆ. ನೂರಾ ಐದು ರೂಪಾಯಿ ವೆಚ್ಚ ತಗುಲಿತ್ತು. ಒಂದು ನೂರು ರೂಗಳ ಉಡುಪಿಗೆ ಮುನ್ನೂರರ ಬೆಲೆಯೆ? ನನ್ನ ಬೆರಳ ತುದಿಯಲ್ಲಿ ಎಂಥ ಪ್ರತಿಭೆ ಇದೆ. ಅದನ್ನೇಕೆ ಕಟ್ಟಿ ಕೂಡಿ ಹಾಕಿರುವೆ? ನಾ ಬರೀ ಸೀರೆ ಅಂಚು, ಫಾಲ್ಸ್ ಹೊಲಿಯೋ ಹೆಂಗಸಲ್ಲ. ನಾ ಡಿಸೈನ್ ಮಾಡಬಲ್ಲೆ-ಅವರಿವರ ಬಟ್ಟೆ ಬರೆಗಳ, ತೋಳು ರವಿಕೆಗಳ, ಸಲವಾರ್-ಕಮೀಜುಗಳ, ಸಿಂಗರಿಸಬಲ್ಲೆ. ಲವಲವಿಕೆಯ ಲೇಸುಗಳಿಂದ ರಂಗೇರಿಸಬಲ್ಲೆ, ಬಣ್ಣ ಬಣ್ಣದ ಹೊಳಪು ಚಮಕಿಗಳಿಂದ… ನನ್ನ ಬದುಕನ್ನೂ, +ಈ ಒಂದು ಘಟನೆಯಲ್ಲ…. +ಮತ್ತೆ ಮತ್ತೆ ಎದುರಾದವು ನನಗೆ ಸವಾಲಾದ ಸಮಸ್ಯೆಗಳು, ಘಟನೆಗಳು. +ಅಂದು ಪುಟ್ಟಿಯನ್ನು ಎಳೆದುಕೊಂಡು ಎಂ. ಜಿ. ರಸ್ತೆಗೆ ಹೋಗಿದ್ದ ಪ್ರಸಂಗ, ‘ಲೇಕ್ ವ್ಯೂ’ ಬಳಿ ಬರುತ್ತಿದ್ದಂತೆ ಪುಟ್ಟಿ ಕುಣಿದಳು- +‘ಅಮ್ಮಾ ಐಸ್‌ಕ್ರೀಂ, ದೊಡ್ಡದು…. ಬ್ಲಾಕ್ ಫಾರೆಸ್ಟ್ ಐಸ್‌ಕ್ರೀಮ್….’ +ಅದೆಷ್ಟು ಬಾರಿ ಬಂದಿದ್ದೆ ಇಲ್ಲಿಗೆ…. ರವಿಯೊಡನೆ. ಬ್ಲಾಕ್ ಫಾರೆಸ್ಟ್…. ಹದಿನೆಂಟು ರೂಪಾಯಿ ಬೆಲೆಯದು…. ಮೆಲ್ಲನೆ ಪರ್ಸ್ ತೆರೆದೆ. ಹತ್ತು ರೂಪಾಯಿಯ ಒಂದು ನೋಟು, ಒಂದೂವರೆ ರೂಗಳ ಚಿಲ್ಲರೆ ವಿಷಾದದಿಂದ ನಕ್ಕಿತು. +‘ಈಗ ಬೇಡ ಪುಟ್ಟಿ, ಮತ್ತೆ ಬರೋಣ….’ +‘ಉಹುಂ ಈಗಲೇ ಬೇಕು….’ ಕಾಲನ್ನು ನೆಲಕ್ಕೆ ಅಪ್ಪಳಿಸಿ ಹಟದಿಂದ ಹೇಳಿದಳು. +‘ನೆಗಡಿಯಾಗುತ್ತೆ, ಕೆಮ್ಮು ಬರುತ್ತೆ ನೋಡು….’ ನನ್ನ ಒಣ ಗದರಿಕೆಯೆಂದೂ ಅವಳ ತಟ್ಟಲಿಲ್ಲ. +‘ಏನೂ ಬರೋಲ್ಲ, ಈಗಲೇ ಬೇಕು….’ ಆಗಲೇ ತಾರಕ ಸ್ವರ ಹೊರ ಬರುವ ಎಲ್ಲಾ ಸೂಚನೆಗಳೂ ಕಂಡವು. +ಸೋತೆ…. ಪೂರ್ಣ ಸೋತೆ. +‘ಪುಟ್ಟಿ…’ ಅವಳ ಕೆನ್ನೆ ಹಿಡಿದು ಅತ್ಯಂತ ದೀನಳಾಗಿ ಹೇಳಿದೆ- +‘ಪುಟ್ಟಿ, ನನ್ನತ್ರ ಹಣ ಇಲ್ಲ ಕಣೆ, ನೋಡು….’ ಖಾಲಿಯಾಗಿ ಸೊರಗಿ ಬಾಯಿಬಿಟ್ಟ ಪರ್ಸ್ ಹಿಡಿದೆ. ಪುಟ್ಟಿ ತಟ್ಟನೆ ಮೌನವಾದಳು. ಪರ್ಸ್‌ನೆಲ್ಲ ಒಮ್ಮೆ ತಡಕಾಡಿದಳು. ನನ್ನ ನೂರು ಸುಳ್ಳುಗಳಿಗಿಲ್ಲದ ತಾಕತ್ತು ಆ ಒಂದು ಸತ್ಯಕ್ಕಿತ್ತು. +‘ಯಾಕೆ ದುಡ್ಡಿಲ್ಲ….? ಮತ್ತೆ ಅಪ್ಪ ಯಾವಾಗ್ಲೂ ಕೊಡಿಸ್ತಿದ್ರು….’ +‘ಅಪ್ಪ ಹತ್ತಿರ ದುಡ್ಡಿದೆ ಪುಟ್ಟಿ…. ಅಪ್ಪ ಕೆಲಸ ಮಾಡ್ತಾರೆ….’ +ಅವಳಿಗೆ ಕೊಟ್ಟ ಉತ್ತರ ನನಗೇ ಹೇಳಿಕೊಂಡಂತಿತ್ತು. ಹಾಗಾದರೆ ನಾನೀವರೆಗೆ ಮಾಡಿದ್ದಾವುದೂ ಕೆಲಸವಲ್ಲವೆ? +ಮಾತಿಲ್ಲದೆ ಕಾಲೆಳೆಯುತ್ತಾ ನನ್ನ ಕೈ ಹಿಡಿದು ನಡೆದ ಸಪ್ಪೆ ಮುಖವನ್ನೇ ನೋಡಿದೆ. +‘ಸಾಫ್ಟೀ ಕೊಡಿಸಲಾ?’ ಪಕ್ಕದ ರಸ್ತೆ ಬದಿಯ ಎರಡು ರೂಪಾಯಿಯ ಕೋನ್ ತೆಗೆದುಕೊಟ್ಟೆ. ಸುಮ್ಮನೆ ಎತ್ತಿಕೊಂಡು ತಿನ್ನುತ್ತಾ ಬಂದಳು. +ಹೆಚ್ಚು ಮಾತಿಲ್ಲದೆ ಊಟ ಮುಗಿಯಿತು. ಹಾಸಿಗೆ ಸರಿಪಡಿಸಿ, ಕತ್ತಿನವರೆಗೂ ಬೆಚ್ಚಗೆ ಹೊದ್ದಿಸಿ ಮಲಗಿಸಿದೆ. ತಟ್ಟನೆ ಪುಟ್ಟಿ ಹಾಸಿಗೆಯಿಂದ ಪುಟಿದೆದ್ದು ಕುಳಿತಳು. +‘ಅಮ್ಮ ನನ್ನ ಫೀಸ್‌ಗೆ ಮತ್ತೆ ದುಡ್ಡು?’ ಅವಳ ಎಳೆಯ ಮುಖದಲ್ಲಿ ಗಾಢವಾದ ಆಕಂಕ ಅಭದ್ರತೆ, ಎದೆಯ ತಟ್ಟಿತು. ಮುಖ ಗೆಲುವಾಗಿಸಿ ಪ್ರಯತ್ನಪಟ್ಟು ಹೇಳಿದೆ- +‘ಅಪ್ಪ ದುಡ್ಡು ಕಳಿಸ್ತಾರೆ ಪುಟ್ಟಿ….’ +ತಿಂಗಳಿಗೊಮ್ಮೆ ಕಾಣುವ ಅಪ್ಪನ ಯಾವುದೋ ಭರವಸೆಯಲ್ಲಿ ಮತ್ತೆ ಹೊದ್ದು ಮಲಗಿದಳು. ಮಲಗಿದ ಅವಳ ಮುಖವನ್ನೇ ತುಂಬಿದಗಣ್ಣುಗಳಿಂದ ನೋಡಿದೆ. ಉಬ್ಬಿದ ಹಾಲುಗೆನ್ನೆಗಳ ನಡುವೆ ಸಣ್ಣ ಬಾಯಿ ನೋವಿನಿಂದ ನಸು ಬಾಗಿತ್ತು. ನಿದ್ದೆಯಲ್ಲೂ ಅತೃಪ್ತಿ-ಆತಂಕದ ಚಿನ್ಹೆ. ಮುಖದಲ್ಲಿ ದುಗುಡ ತುಂಬಿತ್ತು. +ದೇವರೆ, ನೊಂದವರ ಮೇಲೆ ನೋವುಗಳ ಹೇರಿ, ಬೆಂದವರ ಮೇಲೆ ಬೆಂಕಿಯ ಚೆಲ್ಲುವ ನಿನ್ನ ಈ ಪರಿ ಎಂಥದ್ದು? ನೋವು ನಲಿವುಗಳು ತಕ್ಕಡಿಯಲ್ಲಿ ತೂಗಿ ಸಮನಾಗಿ ಹಂಚಬೇಕಿತ್ತು ನೀನು. +ಒಳಗೆಲ್ಲ ಸಂಕಟ. ನನ್ನ ಮಗಳಿಗೆ, ವೈಭವದ ಐಶ್ವರ್ಯದ ಬದುಕು ಬೇಡ- ಅವಳಿಗೆ ಒಗ್ಗಿದ ಮಧ್ಯಮವರ್ಗದ ಬದುಕನ್ನೂ ನೀಡಲಾರದಾಗಿದ್ದೆ. ಪುಟ್ಟಿ ಕೇಳಿದ ಐಸ್‌ಕ್ರೀಂ ಕೊಡಿಸದ ಸಂಕಟ ಕಾಡಿತ್ತು. ಎಷ್ಟೋ ಬಾರಿ ನೆಗಡಿ, ಕೆಮ್ಮು ಇದ್ದಾಗ ಕೊಡಿಸದೆ ಗದರಿಸಿ ಕರೆತಂದದ್ದುಂಟು. ಆದರೆ ಎಂದೂ ಇಷ್ಟು ಸಂಕಟವಾಗಿರಲಿಲ್ಲ. ಪರ್ಸ್‌ನಲ್ಲಿ ಕೇವಲ ಹತ್ತು ರೂಪಾಯಿಗಳನ್ನು ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರುಗೊಳ್ಳುವ ಕಲ್ಪನೆಯೇ ಎದೆಯಲ್ಲಿ ತಮಟೆ ಬಾರಿಸಿತ್ತು. +ತಟ್ಟನೆ ಎದ್ದೆ. ಪುಟ್ಟಿಗೆ ಹೊದಿಕೆ ಹೊದ್ದಿಸಿ, ದೀಪ ಆರಿಸಿ ಹಾಲಿಗೆ ಬಂದೆ. ಶೀಲಾ ತಂದಿಟ್ಟ ಫ್ಯಾಷನ್ ಪತ್ರಿಕೆಗಳನ್ನು ಹೊರಗೆಳೆದೆ. ಒಂದೊಂದು ಉಡುಪಿನ ವಿನ್ಯಾಸವನ್ನು ಅಧ್ಯಯಿಸುತ್ತಾ ಬೇಕಾಗುವ ಸಾಮುಗ್ರಿ-ಬಟ್ಟೆಯ ಅಳತೆ ಅಂದಾಜು ಮಾಡಿ ಪಟ್ಟಿ ಮಾಡತೊಡಗಿದೆ. ನಾ ಡಿಸೈನರ್ ಆಗಲೇಬೇಕು…. ಈ ಹರಕು ವರ್ತಮಾನಕ್ಕೆ ತೇಪೆ ಹಚ್ಚುವ ಕೆಲಸ ಬೇಡ. ನಾಳಿನ ಚಿಂತೆ ಇಲ್ಲದಷ್ಟು ಹಣ ಸಂಪಾದಿಸುವ ಉದ್ಯಮಿಯಾಗಬೇಕು. ಪುಟ್ಟಿಗೆ ಅವಳಿಗೊಗ್ಗಿದ ಬದುಕನ್ನು ನೀಡುವಷ್ಟು. +ನನಗೆ ಅಷ್ಟೈಶ್ವರ್ಯಗಳೂ ಬೇಕು. ಕಮರ್ಷಿಯಲ್ ರಸ್ತೆಯಲ್ಲಿ ಮುನ್ನೂರರ ಆ ಫ್ರಾಕು ಕೊಳ್ಳುವೆನೋ ಇಲ್ಲವೋ, ಆ ಕೊಳ್ಳಬಲ್ಲ ಶಕ್ತಿ ನಾನು ಗಳಿಸಬೇಕು. ಹದಿನೆಂಟು ರೂಪಾಯಿಗಳ ಐಸ್‌ಕ್ರೀಂಗೆ ಸುರಿಯುವುದು ಎಷ್ಟು ಸಾಧುವೋ ಚಿಂತೆ ಇಲ್ಲ. ಅದು ಬೇಡ ಎಂದು ನಿರ್ಣಯಿಸಬಲ್ಲ ಆಯ್ಕೆ ನನಗೆ ಬೇಕು. +ಈ ಹಣದಿಂದ ಎಲ್ಲವನ್ನೂ ಕೊಳ್ಳಲಾರೆ ನಿಜ. ಆದರೆ ಹಣದಿಂದ ನಾನು ಬಹಳಷ್ಟು ಕೊಳ್ಳಬಲ್ಲೆ. ಹಣವನ್ನು ಬೇಡವೆನ್ನುವ ಆಯ್ಕೆ ನನಗಿರಲಿ. ಇಲ್ಲದ್ದನ್ನು ಒಲ್ಲೆನೆನ್ನುವ ಹುಸಿ ವೈರಾಗ್ಯ ಬೇಡ. ಮತ್ತೆ ಮುಷ್ಟಿಯಲ್ಲಿ ಮುದುಡಿದ ಹತ್ತು ರೂ. ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರು ನೋಡುವ ಭಯಂಕರ ನಿರೀಕ್ಷೆ ಬೇಡ. +ನನ್ನ ಹಣ ನನಗೆ ಬಹಳಷ್ಟನ್ನು ಕೊಡಬಲ್ಲದು. +-ಪುಟ್ಟಿಯ ಭವಿಷ್ಯವನ್ನು ಕೊಡಬಲ್ಲದು. +-ನನ್ನ ನಾಳೆಗಳನ್ನು ಕೊಡಬಲ್ಲದು. +-ನನ್ನ ಕಳಕೊಂಡ ಆತ್ಮವಿಶ್ವಾಸವನ್ನು ಕೊಡಬಲ್ಲದು. +ಇದಾವುದನ್ನೂ ರವಿಯ ಹಣ ನನಗೆ ಒದಗಿಸಲಾರದು. ಬಲಾತ್ಕಾರದ ಕರ್ತವ್ಯ ನಿರ್ವಹಣೆಯ ಆ ಹಣ ತಿಂಗಳಿಗೆ ಸಾವಿರವಲ್ಲ, ಹತ್ತು ಸಾವಿರವಾದರೂ ನನ್ನ ಬದುಕಿಗೆ ಮತ್ತೆ ಭದ್ರತೆಯನ್ನು ನೀಡಲಾರದು. +ಮನಸ್ಸಿನ ಮೂಲೆಯಲ್ಲಿದ್ದ ಕಹಿಯನ್ನೆಲ್ಲ ಗುಡಿಸಿ ಹಾಕಿದೆ. +ಪರೀಕ್ಷೆಗಿಡದ ಪ್ರೀತಿಗಳಿಗಿಂತ ಈ ಸೋತ ಸಂಬಂಧಗಳೇ ಮೇಲೇನೋ. +ಏಕಾಯಿತು ಹೀಗೆ? ಏಕೆ? ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿಕೊಳ್ಳುವುದೇಕೆ? ಉಪಯೋಗವಿಲ್ಲದ ಉತ್ತರಗಳ ತಲಾಷೆಯಾದರೂ ಏಕೆ? ಈ ಉತ್ತರಗಳೊಂದೂ ಅವನನ್ನು ನನ್ನಲ್ಲಿಗೆ ಮತ್ತೆ ತರಲಾರವು. +ಅವನನ್ನೇ ಕೇಳಿದರೆ ಕಾರಣಗಳನ್ನು ಪೋಣಿಸಬಲ್ಲ…. ಹತ್ತಲ್ಲ… ನೂರು. ಅದೆಲ್ಲ ಮತ್ತೆ ಯೋಚಿಸಿದ ನಂತರ ಹುಟ್ಟಿದ ಕಾರಣಗಳು…. ನೆಪಗಳು ಬರೀ ನೆಪಗಳು. ಶೀಲಾ ಹೇಳಿದ್ದು ನಿಜವಿರಬಹುದು- ‘ಇದ್ದದ್ದೆಲ್ಲ ಹಳತಾಗುತ್ತದೆ. ಹೆಂಡತಿಯೂ ಸೇರಿದಂತೆ….’ ಎಂದು ನಕ್ಕಿದ್ದಳು. ನಾನೂ ತೆಪ್ಪಗೆ ನಕ್ಕೆ, ಗೆಲುವಾದೆ, ಅವನ ದೌರ್ಬಲ್ಯಕ್ಕೆ ನನ್ನಲ್ಲೇಕೆ ತಪ್ಪುಗಳ ಹುಡುಕಿಕೊಳ್ಳಲಿ! ‘ಹೌದು ಶೀಲಾ, ಹಲತಾದದ್ದೆಲ್ಲ ಆಕರ್ಷಣೆ ಕಳಕೊಳ್ಳುತ್ತದೆ, ಗಂಡನೂ ಸೇರಿದಂತೆ….’ ಎಂದೆ. ‘ಹೌದಾ….?’ ಹುಬ್ಬೇರಿಸಿ ನಕ್ಕಳು. ‘ಹೂಂ, ಹೀಗಿದ್ದೂ, ಮೆಟ್ಟ ಚಪ್ಪಲಿಯಂತೆ, ಹೊದ್ದ ಛಾದರದಂತೆ, ತೊಟ್ಟ ಬಳೆಯಂತೆ, ಬಳಸಿದ್ದೆಲ್ಲ ಹಿತವಾಗಿರುತ್ತದೆ…. ಹಳತಾದಂತೆ. ಬದುಕನ್ನು ಈ ತಿರುವಿನಲ್ಲಿ ತಟ್ಟನೆ ಹೊಸತಾಗಿ ಪ್ರಾರಂಭಿಸೋದು ಎಷ್ಟು ಕಷ್ಟ….’ +‘ಇದು ಕಥೆಯಲ್ಲ, ಸಿನೆಮಾ ಅಲ್ಲ. ಮೂರನೆಯ ಹೆಣ್ಣು ಖಳನಾಯಕಿಯಾಗಬೇಕಿಲ್ಲ. ಪತ್ನಿಯ ಪಾತಿವ್ರತ್ಯದ ಅಖಂಡ ಜಯವಾಗಬೇಕಿಲ್ಲ…’ ಶೀಲಾ ಮತ್ತೆ ವಾಸ್ತವಕ್ಕೆ ಎಳೆದಳು. +ನಾ ಮತ್ತೆ ಮತ್ತೆ ಹೇಳಿಕೊಂಡೆ. ಚಡಪಡಿಸಿದ ಮನಸ್ಸಿನ ತಲೆಯ ಮೇಲೆ ಮೊಟ್ಟಿ ಮೊಟ್ಟಿ ಹೇಳಿಕೊಂಡ ಮಾತು…. ಬಿಡು ಅವನನ್ನು, ಅವನ ಬದುಕಿಗೆ. +ನಿನ್ನ ನೀತಿ-ಪ್ರೀತಿ ತಕ್ಕಡಿಯಲ್ಲಿ ತೂಗಿ ಸೋಲುವುದೇಕೆ, ಅದರ ಫಲಿತಾಂಶಗಳೆಂದೂ ಅವನ ತಟ್ಟದ ಮೇಲೆ. ಅವನಿಗೆ ಶಿಕ್ಷೆ ನೀಡುವ ಹಕ್ಕು, ಅಧಿಕಾರವಿಲ್ಲದಾಗ ಅವನ ತಪ್ಪು-ಒಪ್ಪುಗಳನ್ನು, ಪಾಪ-ಪುಣ್ಯಗಳನ್ನು, ನ್ಯಾಯ-ಅನ್ಯಾಯಗಳನ್ನು ತೂಗಿ ತೂಗಿ ತೃಪ್ತಿ ಪಡುವುದೇಕೆ? ಬಿಡು ಅವನನ್ನು ಅವನ ಬದುಕಿಗೆ, ಅದರೊಡನೆಯ ಪಾಪ-ಪುಣ್ಯಗಳ ತಕ್ಕಡಿಗೆ, ಒಪ್ಪು-ತಪ್ಪುಗಳ ಇತ್ಯರ್ಥಕ್ಕೆ, ಪ್ರೀತಿ-ಪ್ರೇಮಗಳ ಹೆಣಗಾಟಕ್ಕೆ. ಮತ್ತೆ ಮತ್ತೆ ಮಂತ್ರದಂತೆ ಹೇಳಿಕೊಂಡೆ. ಅವನತ್ತ ವ್ಯರ್ಥ ಚಿಂತಿಸಿ ಪೋಲಾಗುತ್ತಿದ್ದ ತನ್ನ ಮನಸ್ಸನ್ನು ಎಳೆದೆಳೆದು ಗೂಟಕ್ಕೆ ಕಟ್ಟಿದೆ-ವರ್ತಮಾನದ ಗೂಟಕ್ಕೆ ನನ್ನ ಶಕ್ತಿ ಚಿಂತನಾ ಸಾಮರ್ಥ್ಯವನ್ನೆಲ್ಲ ಆಕ್ರೋಶದ ಕಡಾಯಿಯಲ್ಲಿ ಹಾಕಿ ಕುದಿಸಿ ಕುದಿಸಿ ಕರಕಲಾಗಿಸುವುದರಲ್ಲೇನು ಲಾಭ? +ಕ್ಲೀಷೆಯಾಗುವಷ್ಟು ಬಾರಿ ಶೀಲಾ ಹೇಳಿ ಹೋದಳು- +‘ಬದುಕು ಎಲ್ಲವನ್ನೂ ಕಲಿಸುತ್ತದೆ, ಬದುಕುವುದನ್ನೂ….’ +ಕಲಿಕೆ ಕಷ್ಟವಿರಲಿಲ್ಲ, ನಾನಂದುಕೊಂಡಷ್ಟು. ಮೊದಲ ಹೆಜ್ಜೆಯಷ್ಟೇ ಭಾರವಿತ್ತು. ಎತ್ತಿ ಇಟ್ಟೊಡನೆ ನಡಿಗೆ ಸುಲಭವಾಯ್ತು. ಆರಂಭವಷ್ಟೇ ಪ್ರಾಯಾಸದ್ದು, ಹಾದಿ ಹಗುರವಿತ್ತು. ಹೊರಗಿನ ಪ್ರಪಂಚ ನಾನು ಕಲ್ಪಿಸಿದಷ್ಟು ಭಯಂಕರವಿರಲಿಲ್ಲ. ನನ್ನ ನೋಡಿ ನಕ್ಕು ಮುಕ್ಕಳಿಸಲು ಜನಕ್ಕೆ ಸಮಯವೆಲ್ಲಿ? ತಮ್ಮ ಬದುಕಿನ ಓಟದಲ್ಲಿ ಓಡುತ್ತಿರುವ ಜನ…. ಪುರುಸೊತ್ತಿಲ್ಲದ ಜನ. +ಮುಗುಳ್ನಗೆ, ಮೊದಲ ಬಾರಿಗೆ ಸ್ವಾತಂತ್ರ್ಯದ ಅನುಭವವಾಯಿತು. ಏಕಾಂತ ನಾನು ಕಲ್ಪಿಸಿದಷ್ಟು ಅಸಹನೀಯವಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಸಹ್ಯವಾಗುತ್ತಾ ಆಪ್ತವಾಗತೊಡಗಿತು. ‘ನನಗೆ ಸ್ವತಂತ್ರ ಕೊಡು’ ಅಂದಿದ್ದ ಅವ, ಅವನ ನೆನಪು-ಅಪರಾಧಿ ಪ್ರಜ್ಞೆಯಿಂದ ಸ್ವತಂತ್ರನಾದನೋ ಇಲ್ಲವೋ ಗೊತ್ತಿಲ್ಲ. ಅವನಿಗೆ ಸ್ವಾತಂತ್ರ್ಯ ನೀಡುತ್ತಲೇ ನಾನು ಸ್ವತಂತ್ರಳಾದೆ. ನನ್ನೊಳಗಿನ-ನಾನೇ ಗುರುತಿಸಿರದ ವ್ಯಕ್ತಿಯೊಂದು ನುಸುಳಿ ಹೊರಬಂದಿತ್ತು. +ನನ್ನ ಬದುಕಿನಲ್ಲಿ ಮತ್ತೆ ಸ್ನೇಹ-ಸಂಬಂಧಗಳು ಬರಬಹುದು, ಆದರೆ ಅವಲಂಬನೆಗಳಲ್ಲ. +ನನ್ನ ಬದುಕಿನಲ್ಲಿ ಮತ್ತೆ ಪುರುಷರು ಹಾಯಬಹುದು, ಆದರೆ ಯಜಮಾನರಲ್ಲ. +ನಾನಿಂದು ಯಾರಿಗೂ ಉತ್ತರಿಸಬೇಕಿಲ್ಲ. ಎಲ್ಲಿ ಹೋದೆ, ಯಾವಾಗ ಬಂದೆ. ಏನು ಮಾಡಿದೆ, ಅಡಿಗೆ ಏಕಾಗಿಲ್ಲ, ಕಾಫಿ ಬಿಸಿ ಇಲ್ಲ-ಯಾವುದಕ್ಕೂ ಉತ್ತರಿಸಬೇಕಿಲ್ಲ. ಬದುಕು ಒಂಟಿತನವನ್ನೇ ನನ್ನ ಜೋಳಿಗೆಗೆ ಹಾಕಿದ್ದರೆ, ಈ ಏಕಾಂತದಲ್ಲೇ ಅಡಗಿರುವ ಲಾಭವನ್ನು ಅಗೆಯ ಹೋದೆ, ನಿಜವಾದ ಉದ್ಯಮಿಯಂತೆ! ಸುಳ್ಳು ಏಕೆ…. ನಿಜ, ರಾತ್ರಿಗಳು ತಟ್ಟನೆ ತಣ್ಣಗಾಗುತ್ತವೆ…. ಗ್ರೀಷ್ಮದ ರಾತ್ರಿಗಳೂ ಕೂಡಾ. ನಮ್ಮದೊಂದು ಅದ್ಭುತ ಲೈಂಗಿಕ ಬದುಕಿತ್ತು ಎಂದಲ್ಲ. ಹೀಗಿದ್ದೂ ರವಿ ಹುದುಗಿಕೊಂಡಿರುವ ಎದೆಯಲ್ಲಿ ಮುಳ್ಳಿನ ಹಾಗೆ, ನೆನಪಾದಾಗಲೆಲ್ಲ ಅಲುಗಿ ನೋಯುವ ಹಾಗೆ, ಇವನ ನೆನಪು, ಅದುಮಿ ಇಟ್ಟಷ್ಟೂ ಪುಟಿವ ಚಂಡು. ನನ್ನ ಜಾಗೃತ ಅವಸ್ಥೆಗೆ ಮರೆಯಾಗಿ, ಇಲ್ಲ ಮರೆತಂತೆ ನಟಿಸುವಾಗಲೇ ರಾತ್ರಿ ಕನಸಿನಲ್ಲಿ ತಟ್ಟನೆ ಮೈ-ಮನಗಳನ್ನು ಮುಟ್ಟಿ ಬೆಚ್ಚಿಸುವುದುಂಟು. ನನ್ನ ಚಿಂತನೆಯ ಎಷ್ಟು ಭಾಗವನ್ನು ಕೆಲವು ಕಾಲದ ಮಟ್ಟಿಗಾದರೂ ಅವ ಆವರಿಸಿದ್ದು ತಿಳಿದರೆ, ಅವನಿಗಿರಲಿ ನನಗೇ ಅಚ್ಚರಿಯಾಗುತ್ತದೆ. +ಈಗ ನಾ ಹೋರಾಡುವುದನ್ನು ಬಿಟ್ಟೆ, ನೆನಪುಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದನ್ನು ಬಿಟ್ಟೆ. ಬನ್ನಿ ನೆನಪುಗಳೇ ಅದೇನು ಮಾಡುತ್ತೀರೋ ಎಂದು ಎದೆ ಕೊಟ್ಟು ನಿಂತೆ. ಭೂತವನ್ನು ಅಳಿಸುವ ಶ್ರಮವೇಕೆ? ಭೂತವನ್ನು ಭೂತವಾಗಿ ಸ್ವೀಕರಿಸಿಬಿಟ್ಟರಾಯಿತು, ಭವಿಷ್ಯವಾಗಲು ಬಿಡದೆ. +ಮತ್ತೆ ಪ್ರಾರಂಭಿಸಿದೆ, ಅರೆಮನಸ್ಸಿನ ಯತ್ನವಲ್ಲ, ಪೂರ್ಣಪ್ರಮಾಣದ ಪ್ರಯತ್ನ. +ಶೀಲಾ ನಾಲ್ಕು ಜನ ಪರಿಚಯ ಇದ್ದವಳು, ಹೊರಗೆ ತಿರುಗಾಡುವವಳು. ನಾನು ರಾತ್ರಿಯೆಲ್ಲ ಕುಳಿತು ಡಿಸೈನ್ ಮಾಡಿದ ಸಲವಾರ್-ಕಮೀಜಗಳನ್ನು ತಾನೇ ಹಾಕಿಕೊಂಡು ಜಾಹೀರಾತು ಮಾಡಿದಳು. ಬಹಳ ಪರಿಶ್ರಮದಿಂದ ಐದಾರು ಸೆಟ್ ತಯಾರಿಸಿದ್ದೆ. ಭಾರವಾದ ತಾಳಿ ಸರ ಮಾರಿ ಬಂದ ಹಣದಲ್ಲಿ ಬಹಳಷ್ಟನ್ನು ನನ್ನ ಗಾರ್ಮೆಂಟ್ ಉದ್ಯಮಕ್ಕೆ ತೊಡಗಿಸಿದೆ. ಶೀಲಾ ನನ್ನ ಹೊಸ ಉತ್ಸಾಹ ಕಂಡಳು. ನಾಲ್ಕೇ ವಾರದಲ್ಲಿ ಒಂದಷ್ಟು ಆರ್ಡರ್‍ಸ್ ತಂದಳು. ಮನೆಯಲ್ಲೇ ಸಿದ್ಧ ಉಡುಪುಗಳನ್ನು ತೂಗುಹಾಕಲು ಸಮಯ ಹಿಡಿಯಲಿಲ್ಲ. ಹತ್ತು-ಹದಿನೈದು ಉಡುಪುಗಳು ಸದಾ ಸಿದ್ಧವಿದ್ದವು. ಮೆಲ್ಲಮೆಲ್ಲನೆ ನನ್ನ ಮುದುಡಿದ ನೈಟಿಯ ಕವಚದಿಂದ ಪೂರ್ಣ ಪ್ರಮಾಣದ ಮಹಿಳಾ ಉದ್ಯಮಿ ಹೊರಬಂದಳು-ಸುತ್ತಮುತ್ತಲ ಕಾಲೇಜು ಹುಡುಗಿಯರು, ಅವರ ಸ್ನೇಹಿತರು…. ಆರು ತಿಂಗಳು, ಕೇವಲ ಆರು ತಿಂಗಳು…. ನನ್ನ ಆದಾಯ ಎರಡು ಸಾವಿರ ಮುಟ್ಟಿತ್ತು! +ನನ್ನ ನೋಡುತ್ತಿದ್ದ ಪುಟ್ಟಿಯ ಕಣ್ಣುಗಳಲ್ಲಿ ಹೊಳಪು-ಹೆಮ್ಮೆ ಕಂಡೆ. ಮೆಲ್ಲಮೆಲ್ಲನೆ ಹಣವಿಲ್ಲದ ಆತಂಕ ತಗ್ಗಿತು. ಅವಳ ಊಟ-ತಿಂಡಿ-ಉಡುಪುಗಳಲ್ಲಿ ಕಡಿತವಿರಲಿಲ್ಲ. ಈ ಮಧ್ಯೆ ಶೀಲಾ ತನ್ನ ಬಳಿಗೆ ಯಾವುದೋ ದೂರದರ್ಶನದ ಸ್ಕ್ರಿಪ್ಟ್‌ಗೆಂದು ವೈಧ್ಯಕೀಯ ಮಾಹಿತಿ ಹುಡುಕಿ ಬಂದ ನಿರ್ದೇಶಕನಿಗೆ ನನ್ನ ಹೆಸರು ಸೂಚಿಸಿದ್ದಳು. ‘ವಸ್ತ್ರ ವಿನ್ಯಾಸ’- ನನ್ನ ಸಾಧಾರಣ ಹೊಲಿಗೆಗೆ ಹೊಸ ಹೊಸ ಹೆಸರುಗಳು, ಮಾಧ್ಯಮಗಳು, ಆಯಾಮಗಳು, ‘ಕ್ರೆಡಿಟ್ ಲೈನ್’ ಇರಬೇಕೆಂಬ ಒಪ್ಪಂದದ ಮೇಲೆ ಒಪ್ಪಿದೆ. ಮೊದಲ ಪ್ರಯತ್ನ. ಹಗಲಿರುಳ ನಿದ್ದೆ ತೊರೆದು ಹೊಚ್ಚ ಹೊಸ ವಿನ್ಯಾಸಗಳನ್ನು ಹುಡುಕಿದೆ. ದೇಶೀ, ವಿದೇಶೀ, ಪತ್ರಿಕೆಗಳನ್ನೆಲ್ಲಾ ತಡಕಾಡಿ ಹೊಂದಿಸಿದೆ. ಬದುಕು ಬದಲಾಯಿತು, ಪುಟ್ಟ ತೆರೆಯ ಮೇಲೆ ಪ್ರಸಾರವಾದ ಆ ಒಂದು ಸಾಲಿನಿಂದ, ವಸ್ತ್ರ ವಿನ್ಯಾಸ- ‘ಮಧು ಬುಟೀಕ್, ಮಲ್ಲೇಶ್ವರಂ.’ +ಮತ್ತೆಂದೂ ಹಿಂದೆ ನೋಡುವ, ನಾ ಹೊರಟ ಹಾದಿಯಲ್ಲಿ ತಡವರಿಸುವ ಅಪಾಯವಿಲ್ಲದೆ ನಡೆದೆ. ಭವಿಷ್ಯದ ಗಾಬರಿ ಮರೆಯಾಯಿತು. ಬ್ಯಾಂಕ್‌ನಲ್ಲಿ ಸ್ವಲ್ಪ ಸ್ವಲ್ಪವಾಗಿ ಕೂಡಿದ ಹಣ ಎದೆಯ ಆತಂಕ ಸಂಪೂರ್ಣ ತಗ್ಗಿಸಿತು. ಒಂದು ದೊಡ್ಡ ಪ್ರಶ್ನೆಯಾಗಿದ್ದ ‘ನಾಳೆ’ ನೂರು ಅರ್ಥಗಳೊಡನೆ, ನೂರು ಸಾಧ್ಯತೆಗಳೊಡನೆ ಕೈ ನೀಡಿತು. +‘ಅಮ್ಮ ನಾ ಫಸ್ಟ್ ಬಂದಿದ್ದೀನಿ….’ ರಿಪೋರ್ಟ್ ಕಾರ್ಡ್ ಹಿಡಿದು ಕುಣಿಯುತ್ತಾ ಬಂದ ಪುಟ್ಟಿಯ ಎತ್ತಿ ಮುತ್ತಿಟ್ಟೆ. +‘ಅಮ್ಮ ನಂಗೇನ್ ಕೊಡಿಸ್ತೀಯಾ?’ ಪುಟ್ಟಿ ಕೇಳಿದಳು. +‘ನಡಿ ಸೆಲಿಬ್ರೇಟ್ ಮಾಡೋಣ….’ ಬಟ್ಟೆ ಬದಲಿಸುತ್ತಾ ಹೇಳಿದೆ. +‘ನಾವಿಬ್ರೆ?’ +‘ನಾವಿಬ್ರೂ….’ ಒತ್ತಿ ಹೇಳಿದೆ. +ಅದೇ ‘ಲೇಕ್ ವ್ಯೂ.’ ಏನೂ ಬದಲಾಗಿರಲಿಲ್ಲ. ಐಸ್‌ಕ್ರೀಂ ಬೆಲೆಯ ಹೊರತು. +‘ಅಮ್ಮ ಐಸ್‌ಕ್ರೀಂ…. ದೊಡ್ಡದು….’ ಕುರ್ಚಿಯಿಂದ ಕಾಲು ಕೆಳಗೆ ಇಳಿಬಿಟ್ಟು, ಜೋಡಿ ಜುಟ್ಟುಗಳನ್ನು ಕುಣಿಸುತ್ತಾ ಹೇಳಿದಳು. ಗಲ್ಲಕ್ಕೆ ಕೈಯೂರಿ ಖುಷಿಯಿಂದ ಮೇಜಿನ ಮೇಲೆ ತಾಳ ಕುಟ್ಟುತ್ತಾ ಕೂತೆ. ಬೇರರ್ ಬಂದ, ಮೆನು ಕಾರ್ಡ್ ಕೈಗಿಟ್ಟ. +‘ಐಸ್‌ಕ್ರೀಂ-ಮೆರ್ರಿ ವಿಡೋ ಸ್ಪೆಷಲ್…. ಎರಡು’ +‘ದೊಡ್ಡದು….’ ಪುಟ್ಟಿ ಅವಳ ಪರಿಯಲ್ಲಿ ಹೇಳಿದಳು. +ಅಗಲ ಪಿಂಗಾಣಿ ತಟ್ಟೆಯಲ್ಲಿ ಹರಡಿಕೊಂಡ ಮೂರು-ನಾಲ್ಕು ಸವಿಯ ಐಸ್‌ಕ್ರೀಂ ಮೇಲೆ ಕಂದುಬಣ್ಣದ ಕೇಕಿನ ನಾಲ್ಕು ತುಂಡುಗಳ ಅಲಂಕೃತ ಮುಕುಟ. ಯಾರು ಇದಕ್ಕೆ ಈ ಹೆಸರಿಟ್ಟವರು…. ‘ಮೆರ್ರಿ ವಿಡೋ ಸ್ಪೆಷಲ್’…. ಮೆರ್ರಿ….! ಜೋರಾಗಿ ನಗತೊಡಗಿದೆ. +‘ತುಂಬಾ ಚೆನ್ನಾಗಿ ಇದೆ ಅಲ್ಲ ಅಮ್ಮಾ ?’ ಪುಟ್ಟಿ ಸವಿ ಸವಿದು ತಿಂದಳು. +‘ಹೂಂ….’ ಎಂದೆ. ಸಂತೃಪ್ತಿಯ ಅವಳ ಮುಖವನ್ನೇ ನೋಡುತ್ತ . +ಶೀಲಾ ಯಾವಾಗಲೂ ಗುಣಿಗುಣಿಸುತ್ತಿದ್ದ ‘ಸಮತಾ’ದ ಹಾಡು ಕಿವಿಯಲ್ಲಿ ಮೊರೆ ಇಟ್ಟಿತು – +‘ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವಾ…. ಬೆಳಕಿಗಿಂದು ಹೊರಗೆ ಬಾ ಕಂಡೀತು ಜೀವನ….’ +ಬಿಲ್ ಕೊಟ್ಟು ಹೊರಗೆ ಬಂದೆ. ಆಕಾಶದಲ್ಲಿ ಅಲ್ಲಿಷ್ಟು ಕಪ್ಪು ಮೋಡ ಆವರಿಸಿತ್ತು. +‘ಮಳೆ ಬರುತ್ತೆ ಬೇಗ ಹೋಗೋಣ ಬಾ ಪುಟ್ಟಿ….’ ಕೈ ಹಿಡಿದು ಹೊರಟೆ, ತಟ್ಟನೆ ಎದುರಿಗೆ ರವಿ ನಿಂತಿದ್ದ! +‘ಅಪ್ಪಾ….’ ಜೋರಾಗಿ ಓಡಿ ಪುಟ್ಟಿ ಅಪ್ಪಿದಳು. ರವಿ ಎರಡೂ ಕೆನ್ನೆಗೆ ಮುತ್ತಿಟ್ಟ, +‘ಪುಟ್ಟಿ ಐಸ್‌ಕ್ರೀಂ ತಿಂತಿಯಾ ?’ ಮುದ್ದಿನಿಂದ ಕೇಳಿದ. +‘ನಾವಾಗ್ಲೇ ತಿಂದ್ವಿ….’ +ಪುಟ್ಟಿಯನ್ನು ಮೆಲ್ಲನೆ ಕೆಳಗಿಳಿಸಿ, ರವಿ ನನ್ನನ್ನೇ ನೋಡಿದ. ಮೂರು ಹೊತ್ತು ನೈಟಿಯಲ್ಲಿ ಕಂಡಿದ್ದ ಪತ್ನಿಯ ಗುರುತು ಸಿಕ್ಕಲಿಲ್ಲವೇನೋ, ರವಿ ಬಿಟ್ಟುಹೋದ ಹೆಣ್ಣು ಅಲ್ಲಿರಲಿಲ್ಲ. ಅವನಲ್ಲಿ ಒಂದಿಷ್ಟು ಅಳುಕಿತ್ತು, ಅಪರಾಧೀ ಪ್ರಜ್ಞೆ ತುಡಿದಿರಬೇಕು. +‘ಮಧೂ ಹಣದ ತೊಂದರೆ ಏನಾದ್ರೂ ಇದೆಯಾ? ಸಾವಿರದೈನೂರರಲ್ಲಿ ಸಂಭಾಳಿಸೋದು ಕಷ್ಟ ಗೊತ್ತು. ಆದರೆ ನನ್ನೊಬ್ಬನ ಸಂಬಳದಲ್ಲಿ ಎರಡು ಸಂಸಾರ ನಡೀಬೇಕು. ನನಗೀಬಾರಿ ಪೇ-ರಿವೈಸ್ ಆದ್ರೆ ಸ್ವಲ್ಪ ಹೆಚ್ಚು ಕೊಡಬಲ್ಲೆ….’ ತಡವರಿಸಿದ. ನಾ ಮೆಲ್ಲನೆ ನಕ್ಕೆ. +‘ಡೋಂಟ್ ವರಿ ರವಿ. ನೀ ನನಗಾಗಿ ಕಳಿಸೋ ಅವಶ್ಯಕತೆ ಇಲ್ಲ. ಆದರೆ ಹಾಂ…. ಈ ಪುಟ್ಟಿ ನನ್ನ ಮಗಳಂತೆ ನಿನ್ನ ಮಗಳೂ ಹೌದು. ಅವಳಿಗೆ ಅಪ್ಪನ ಹಕ್ಕು ಖಂಡಿತಾ ಇದೆ. ನನಗೆ ಕಳಿಸ್ತಾ ಇದ್ದ ಹಣಾನ ಬೇಕಾದ್ರೆ ಅವಳ ಹೆಸರಲ್ಲಿ ಬ್ಯಾಂಕಿಗೆ ಹಾಕು….’ +‘ಆದ್ರೆ ನೀ ಹೇಗೆ….’ ಅವನ ಮಾತನ್ನು ಮಧ್ಯೆ ತುಂಡರಿಸಿ ಹೇಳಿದೆ- +‘ರವಿ ಅವಲಂಬಿತರು ಎಂದಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲಲೇಬೇಕು…. ಪುಟ್ಟಿ ಹೊರಡೋಣ, ಅಪ್ಪಂಗೆ ಟಾಟಾ ಮಾಡು….’ +ಆಟೋದಲ್ಲಿ ಕುಳಿತು, ಕಲ್ಲಿನಂತೆ ನಿಂತೇ ಇದ್ದ ರವಿಗೆ ಕೈ ಬೀಸಿದೆ. ತಲೆ ಹೊರಹಾಕಿ ನೋಡಿದೆ- +ಆಗಸದಲ್ಲಿ ಮೂಡಿದ್ದ ಕಪ್ಪು ಮೋಡಕ್ಕೊಂದು ಬೆಳ್ಳಿ ಅಂಚಿತ್ತು. +***** +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_171.txt b/Kannada Sahitya/article_171.txt new file mode 100644 index 0000000000000000000000000000000000000000..9c755b7aaa171aeab91908a765c6366924c506b9 --- /dev/null +++ b/Kannada Sahitya/article_171.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_172.txt b/Kannada Sahitya/article_172.txt new file mode 100644 index 0000000000000000000000000000000000000000..b097320bec8f6083366de46f8a77ca79f92c8d28 --- /dev/null +++ b/Kannada Sahitya/article_172.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಲೆಸನ್ -೧ +ಪಾರ್ಟ್ಸ್ ಆಫ್ ದ ಬಾಡಿ +ಒಮ್ಮೊಮ್ಮೆ +ಎಲ್ಲರೂ ಒಂದೇ ರೀತಿ ಕಾಣುತ್ತಾರೆ, +ಕಣ್ಣು, ಮೂಗು, ಮುಖ, ಕೈ, ಕಾಲು….. +ಲಯಬದ್ಧವಾಗಿ ಮಿಡಿಯುವ ಹೃದಯ +ಅದರಲ್ಲೊಂದಷ್ಟು ಪ್ರೀತಿ. +***** +ಸಿನೀ ಮೋಹ ವಿಲಾ ಮೋಹ ದಷ್ಟೆ ದಿಗ್ಗೇಡಿ. ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_173.txt b/Kannada Sahitya/article_173.txt new file mode 100644 index 0000000000000000000000000000000000000000..5ab56ed491e4615efb9e41dd1bfd89eef4d57828 --- /dev/null +++ b/Kannada Sahitya/article_173.txt @@ -0,0 +1,76 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. +ಅವರ ಕುರಿತು ನಂಬಬೇಕೋ ಬಿಡಬೇಕೋ, ನಂಬದಿದ್ದರೂ ಸರಿಯೇ ಎಂಬಂತಹ ಉದಾಸೀನದ, ವಿನೋದದ, ಖೇದದ ಹಲವು ಕತೆಗಳಿವೆ. ಒಂದು ಉದಾಹರಣೆಗೆ – ಆತ ಹುಟ್ಟುವಾಗ ತಲೆಗಿಂತ ಮೊದಲು ಮೂಗು ಬಂತಂತೆ. ಮಿಡ್ಬಾಯಿ ಮೂಗನ್ನೇ ಒತ್ತಿ ಹಿಡಿದು ಎಳೆದಳಂತೆ. ಹಾಗಾಗಿ ಅದು ನಡುಮಧ್ಯೆ ಡೊಂಕಾಗಿ ತುದಿಬಾಗಿ ಗರುಡ ಮೂಗಿನಂತೆಯೇ ಆಯಿತಂತೆ. ಅಲ್ಲಲ್ಲ. ಅದು ಹುಟ್ಟಾ ಗರುಡಮೂಗು ಎನ್ನುವವರೂ ಇದ್ದಾರೆ. ಇನ್ನೂ ಒಂದು ಕತೆ – ದೇವತ್ತೆ ಅವರೊಟ್ಟಿಗೆ ಬದುಕಲಾರೆ ಎನ್ನುತ್ತಾ ಮೊದಲ ರಾತ್ರಿಯೇ ಕೋಣೆ ಬಾಗಿಲು ಪಟಾರೆಂತ ತೆಗೆದು ಹೊರಗೋಡಿ ಬಂದದ್ದು. “ನೋಡುವುದಕ್ಕೆ ಮಾತ್ರ ಮನುಷ್ಯ. ಸತ್ಯಕ್ಕೂ ಅದು ಗರುಡಪಕ್ಷಿ.” – ಅಂತ ಹೇಳಿ ಹೇಳಿ ಅತ್ತದ್ದು. ಏನೇನು ಮಾಡಿದರೂ ಗಂಡನ ಮನೆಗೆ ಹೋಗದೆ ಕುಳಿತದ್ದು. +ಮರುಮದುವೆ ಮಾಡಲಿಕ್ಕೆ ಹೊರಟರೂ ಅತ್ತೆ ಒಪ್ಪಲೇ ಇಲ್ಲವಂತೆ. ಬದಲು ಜವಳಿ ವ್ಯಾಪಾರಕ್ಕೆಂದು ಮಂಗಳೂರಿಗೆ ಬಂದಿದ್ದ ಚೆಟ್ಟಿಯಾರ್ ಕುಟುಂಬವೊಂದು, ಮನೆಯ ಸಮೀಪದಲ್ಲಿಯೇ ವಾಸವಾಗಿದ್ದದ್ದು, ವ್ಯಾಪಾರವನ್ನು ಮಕ್ಕಳಿಗೆ ಒಪ್ಪಿಸಿ ಮದ್ರಾಸಿಗೆ ಮರಳುವಾಗ ಜೊತೆಯಲ್ಲಿ ಅಡುಗೆಯವಳಾಗಿ ಮದ್ರಾಸಿಗೆ ಹೋಗಿಬಿಟ್ಟಳಂತೆ. ಯಾರ್‍ಯಾರು ಎಷ್ಟೆಷ್ಟು ಪರಿಯಲ್ಲಿ ಹೇಳಿದರೂ ಕೇಳದೆ. ಆಮೇಲೆ ಒಬ್ಬರೂ ಅವಳನ್ನು ಕಂಡದ್ದಿಲ್ಲ. ಅದೂ ಕೂಡ ಸಾಧ್ಯವಿಲ್ಲದೆ ಏನಲ್ಲ; ಇರಲಿ. +ದೇವತ್ತೆ ನಾರಾಯಣರಾಯರಿಗೆ ಗರುಡಪಕ್ಷಿ ಎಂದದ್ದು ದಾಟುತ್ತಾ ದಾಟುತ್ತಾ ಕೊನೆಗೆ ಅವರಿಗೆ “ಗರುಡಪಕ್ಷಿ ನಾರಾಯಣರಾರು” – ಎಂದೇ ಅಡ್ಡಹೆಸರು ಬಂದುಬಿಟ್ಟಿತು. ಇದೆಲ್ಲ ತಡೆಯಲಾರದೆ ನಾರಾಯಣರಾಯರು ಊರು ಬಿಟ್ಟು ಸೀದಾ ಕಾಶಿಗೆ ಹೋದರು. ಅಲ್ಲಿ ದಿನಾ ಬೆಳಿಗ್ಗೆ ಸಂಜೆಯೆನ್ನದೆ ಗಂಗಾನದಿಯಲ್ಲಿ ಮುಳುಗು ಹಾಕಿ ಹಾಕಿ ಎದ್ದರು. ಅವಮಾನದ ಕಲೆ ಅಳಿಸಿಹೋಗದೆ ಅಲ್ಲಿಂದಲೂ ಹೊರಟು ಉತ್ತರ ದೇಶವನೆಲ್ಲ ತಿರುಗಿ ತಿರುಗಿ ಸನ್ಯಾಸಿಯಾಗಿಬಿಡುವ ನಿರ್ಧಾರಕ್ಕೆ ತಲುಪಿದರು. +ದೀಕ್ಷೆಗಾಗಿ ಹಿಮಾಲಯದಲ್ಲಿ ಒಬ್ಬ ದೊಡ್ಡ ಗುರುವಿನ ಬಳಿಗೆ ಹೋಗಿ ನಿಂತಾಗ ಗಂಗೆಯಲ್ಲಿ ಮಿಂದೂ ತಣಿಯದ ಅವಮಾನದ ಬೇಗೆ ಸನ್ಯಾಸಿಯಾದರೂ ತಣಿಯದು ಎಂದ ಆ ಗುರು “ಸನ್ಯಾಸ ಖಂಡಿತಾ ಬೇಡ. ಹೋಗು. ಕಂಡದ್ದು ಮಾಡು. ಅದರಲ್ಲೇ ನಿನಗೆ ಸಿದ್ದಿ. ನಿನಗೆ ನಾರಾಯಣ ದೇವರ ಅನುಗ್ರಹವಿದೆ. ನಿನ್ನ ಗರಡಮೂಗೇ ಅದನ್ನು ಹೇಳುತ್ತದೆ.” – ಎಂದರಂತೆ. (ಗರುಡ ಮೂಗೇ ಹಾಗೆ. ಬಹಳ ಲಕ್ಷಣದ್ದು-ಶಾಂತಕ್ಕ) +ಮೂರು ನಾಲ್ಕು ಜನ ಸಾಧು ಸಂತ ಸಾಧಕ ತಾಂತ್ರಿಕರೂ ಇದೇ ಮಾತು ಹೇಳಿದಾಗ ನಾರಾಯಣರಾಯರು ಮನಸ್ಸು ಬದಲಾಯಿಸಿ ಹಿಮಾಲಯ ಇಳಿಯತೊಡಗಿದರು. ಚಿಂತಿಸುತ್ತಾ ಇಳಿಯುತ್ತಾ ಇನ್ನೇನು ಬುಡ ತಲುಪಬೇಕು; ಥಟ್ಟೆಂತ ಅವರ ಮನಸ್ಸಿಗೆ ಗೋಚರಿಸಿದ್ದು – ಇಲ್ಲೊಂದು ಉಡುಪಿ ಹೋಟೆಲು ಇಲ್ಲವಲ್ಲ – ಅಂತ. ಆ ಕ್ಷಣದಲ್ಲೇ ಸನ್ಯಾಸದ ಕನವರಿಕೆ ಕಂತುತ್ತ ಹೋಟೆಲಿನ ಜಾನ ಹೆಚ್ಚುತ್ತ ಹೋಗಿ ಹೋಟೆಲ್ ಸುರುಮಾಡಿಯೂಬಿಟ್ಟರು. ಗೊತ್ತಲ್ಲ, ಒಬ್ಬ ಋಷಿ ಒಂದು ಇಲಿ ಮರಿಯನ್ನು ಹುಡುಗಿಯನ್ನಾಗಿ ಮಾಡಿ ಸಾಕಿ ಸಲಹಿ ಪ್ರಾಪ್ತ ವಯಸ್ಸಿನಲ್ಲಿ ಅವಳಿಗೆ ವರ ಹುಡುಕಲು ಹೊರಟಾಗ ಯಾವ ಯಾವ ವರವನ್ನೂ ಒಲ್ಲೆಂದ ಹುಡುಗಿ ಕೊನೆಗೆ ಒಂದು ಇಲಿಯನ್ನು ಕಂಡೊಡನೆ ವರಿಸಲೊಪ್ಪಿದ್ದು? ಅಂತೆಯೇ ಹಿಮಾಲಯದ ಬುಡದಲ್ಲಿಯೂ ನಾರಾಯಣರಾಯರಿಗೆ ತೋಚಿದ್ದು ತನ್ನೂರಿನ ಕಾಫಿ ಕ್ಲಬ್ಬೇ – ಅಂತ ವಿನೋದಪ್ರಿಯರು ಹೇಳದೆ ಬಿಡರು. +ಊರಲ್ಲಿ ಯಾರಿಗೂ ಚಕಾರ ವರ್ತಮಾನ ಕೊಡದೆ ಹೆಸರು ಸಹ ಇಡದೆ ಕಾಫಿ, ಇಡ್ಲಿ, ದೋಸೆ, ಹುಳಿಯವಲಕ್ಕಿ ಅಂತ ಸಣ್ಣದಾಗಿ ಪ್ರಾರಂಭವಾದ ಒಬ್ಬರೇ ನಡೆಸುತ್ತಿದ್ದ ಹೋಟೆಲು ಕ್ರಮೇಣ ಸಣ್ಣದೊಂದು ಬೋರ್ಡು ಧರಿಸಿತು. ತನಗೆ ಅವಮಾನ ತಂದ ಹೆಸರನ್ನೇ ಮುಂದಿಟ್ಟುಕೊಂಡರು ನಾರಾಯಣರಾಯರು. ‘ಹೋಟೆಲು ಗರುಡ ಕಾಫಿ ಕ್ಲಬ್’ – ಆರಂಭದಿಂದಲೂ ಕ್ಷಣದಿಂದ ಊರ್ಧ್ವಮುಖಿಯೇ. ಒಬ್ಬನೇ ನೋಡಿಕೊಳ್ಳುವುದು ಸಾಧ್ಯವೇ ಆಗದಂತಾಗಿ – ತಾನು ಇಂಥಲ್ಲಿದ್ದೇನೆ, ಹೀಗೆ ಹೀಗೆ ವಿಚಾರ ಅಂತೆಲ್ಲ ಬರೆದು ಊರಿನಿಂದ ಮಾಣಿಗಳನ್ನು ಭಟ್ಟರನ್ನು ಕರೆಸಿಕೊಂಡರು. ಹೋಟೆಲು ಇನ್ನಷ್ಟು ದೊಡ್ಡದಾಗುತ್ತ ಒಂದಿದ್ದದ್ದು ಎರಡಾಗಿ ನಾಲ್ಕಾಗಿ ಆರಾಗಿ ಕೊನೆಗೆ ‘ಗರುಡ ಗ್ರೂಪ್ ಆಫ್ ಹೋಟೆಲ್ಸ್’ ಅಂತಾಗಿ ಉತ್ತರ ದೇಶದ ಯಾತ್ರಾಸ್ಥಳಗಳಲ್ಲೆಲ್ಲ ಹರಡಿಕೊಂಡು ಹೆಸರು ಮಾಡಿತು. ಎಲ್ಲ ಗರುಡಮೂಗಿನ ಲಕ್ಷಣದಿಂದಾಗಿಯೇ – ಎಂದು ಹತ್ತು ಸಮಸ್ತರಿಗೂ ನಂಬಿಕೆ ಬರುವಂತೆ. ಇಷ್ಟೆಲ್ಲ ಆಗಿ ಗಟ್ಟಿ ನಿಂತ ಕಾಲಾಂತರದ ಮೇಲೆಯೇ ನಾರಾಯಣರಾಯರು ಊರಿನ ಕಡೆ ಬರತೊಡಗಿದ್ದು. ನಾರಾಯಣರಾಯರು ಬಂದರೆಂದರೆ ಈಗ ಕಷ್ಟಸುಖ ಕೇಳುವ ಜೀವವೊಂದು ಬಂದ ಹಾಗೆ. ಮದುವೆ ಮುಂಜಿ ಕಾಯಿಲೆ ಕಸಾಲೆ ಸಂಕಷ್ಟಗಳ ಏನೇ ಖರ್ಚಿರಲಿ ನಾರಾಯಣ ರಾಯರು ಅಂತಃಕರಣ ಮಿಡಿದು ಯಾವ ಅಹಂಕಾರವನ್ನೂ ತೋರದೆ ಸಹಾಯ ಮಾಡುವರು. “ಇದನ್ನು ಸಹಾಯ ಎನ್ನಬೇಡಿ. ನಾನು ದುಡಿದ ಕೂಡಲೇ ಅದು ನನ್ನದೇ ದುಡ್ಡು ಅಂತೇನೂ ಅಲ್ಲ. ಸಮಸ್ತರಿಗೆ ಸೇರಿದ್ದು” ಎಂಬ ಮಾತಿನ ತಂಪೆರೆಯುವರು. ಈ ಕಿಸೆಯಿಂದ ಆ ಕಿಸೆಯಿಂದ ಒಳಕಿಸೆಯಿಂದ ತೆಗೆದಷ್ಟೂ ದುಡ್ಡು. ಚೆಕ್ಕು ಡಿಡಿ ಯಾವುದಕ್ಕೂ ಲೆಕ್ಕಪತ್ರ ಇಲ್ಲ. ಎಲ್ಲಾದರೂ ಹೊಟ್ಟೆಕಿಚ್ಚು ಕಂಡಿತೇ ಮೊದಲು ಅದನ್ನು ನಂದಿಸಿ ಪ್ರಸನ್ನತೆ ಸ್ಥಾಪಿಸುವರು. +“ಆದರೂ…. ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು” – ಎಂದಳು ಶಾಂತಕ್ಕ. ಯಾವ ಶಾಂತಕ್ಕ ಎಂದರೆ ಅದೇ, ಇದುವರೆಗೆ ನಾರಾಯಣರಾಯರ ಕುರಿತು ಹೇಳಿದೆನಲ್ಲ ಅದನ್ನೆಲ್ಲ ಆಗಾಗ ಅಷ್ಟಷ್ಟೇ ನನಗೆ ಹೇಳುತ್ತ ಮುಂದುವರಿಸಿಕೊಂಡು ಬರುವ ಶಾಂತಕ್ಕ. ಅವರ ದೊಡ್ಡ ಅಭಿಮಾನಿ. ಸಂಪಾದಿಸಿದರೆ ಅವರ ಹಾಗೆ. ಖರ್ಚು ಮಾಡಿದರೆ ಅವರ ಹಾಗೆ. ವೈರಾಗ್ಯ ಬಂದರೆ ಅವರ ಹಾಗೆ ಇರಬೇಕು ಎಂಬವಳು. ಅವಳೊಡನೆ ಯಾವ ಮಾತಿಗೆ ಇಳಿದರೂ ಸುತ್ತಿ ಬಳಸಿ ಆಕೆ ಮುಟ್ಟಿಕೊಳ್ಳುವುದು ನಾರಾಯಣರಾಯರ ವಿಚಾರಕ್ಕೇ. ಮೊದಮೊದಲು ನನಗೂ ಹೊಳೆಯಲಿಲ್ಲ. ಆಮೇಲಾಮೇಲೆ ಗುರುತು ಹತ್ತಿದಂತೆ ಮೆಲ್ಲ ಛೇಡಿಸುತ್ತಿದ್ದೆ. ಛೇಡಿಸಿದರೆ ಏನೂ ಬೇಸರವಿಲ್ಲದೆ ಸುಖವಾಗಿ ನಗುತ್ತ ನಿಲ್ಲುವಳು. +“ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು, ಸಹಾಯ ಮಾಡುತ್ತಾನೆ ಮರುಗುತ್ತಾನೆ ಮಾತಾಡುತ್ತಾನೆ ಎಲ್ಲ ಸಮ. ಹೆಣ್ಣುಮಕ್ಕಳ ಮುಖ ಮಾತ್ರ ಸುತರಾಂ ನೋಡುವುದಿಲ್ಲ! ಹೆಂಗಸರು ಮಾತಾಡಿಸಿದರೆ, ಅವರು ಹಳಬರೇ ಇರಲಿ ಬೇಕಾದರೆ, ಗೋಡೆ ನೋಡುತ್ತ ಒಂದು ಮಾತಿಗೆ ಒಂದೇ ಉತ್ತರ. ಕೊಟ್ಟರೆ ಕೊಟ್ಟ ಇಲ್ಲದಿದ್ದರೆ ಅದೂ ಇಲ್ಲ.” +“ನಿನ್ನ ಹತ್ತಿರವೂ?” +“ಹೌದಪ್ಪ, ನನ್ನ ಹತ್ತಿರವೂ. ನಾನು ಯಾವದೊಡ್ಡ ಸ್ಪೆಶಲ್? ನಮ್ಮ ಪುಟ್ಟನ ಉಪನಯನಕ್ಕೆ ಬಂದಿದ್ದರಲ್ಲ. ಇವರಿಗೇನೋ, ತನ್ನದಾಗಿ ಇರಲಿ ಸ್ವಲ್ಪ ಅಂತ ಮರೆಯಲ್ಲಿ ಕರೆದು ದುಡ್ಡು ಕೊಟ್ಟರಂತೆ. ಆದರೆ, ನನ್ನ ಹತ್ತಿರ ಸ್ಯಾಂಪಲ್ಲಿಗೆ ಒಂದು ಮಾತು? ಒಂದು ನಗೆ? ಕಡೆಗೆ ಕಣ್ಣೆತ್ತಿ ನೋಡಿದರೆ ಹೇಳು….! ಅದಕ್ಕೇ….” +“ಏನು ಅದಕ್ಕೆ? ನಾನಾಗಿದ್ದರೆ ಆ ದುಡ್ಡು ವಾಪಾಸು ಕೊಡಿ ಅವರಿಗೆ ಎನ್ನುತ್ತಿದ್ದೆ.” +“ಯಾಕೆ? ಆತ ದ್ವೇಷದಿಂದ ಮಾತಾಡದೆ ಹೋದರೆ ಸರಿ. ಆದರೆ ಇದು ಹಾಗಲ್ಲವಲ್ಲ. ಹೆಂಗಸರ ಮುಖ ನೋಡುವ ಅಭ್ಯಾಸವೇ ಇಲ್ಲದವರು? ಈ ವ್ಯತ್ಯಾಸ ತಿಳಕೊ. ಅದಕ್ಕೇ….” +“ಏನು ‘ಅದಕ್ಕೆ’? ಹೇಳಿಬಿಡು.” +“ಅದಕ್ಕೇ ನನಗೊಂದು ಹಟ” – ನಕ್ಕಳು ಶಾಂತಕ್ಕ. “ಏನಂತ ಹೇಗೆ ಬೇಕಾದರೂ ಊಹಿಸಿಕೊ.” +“ಹೇಗೆ ಬೇಕಾದರೂ ಯಾಕೆ ಊಹಿಸಿಕೊಳ್ಳುತ್ತೇನೆ ನಾನು? ಹೆಚ್ಚಂದರೆ ಅಂತಹ ಗೋಡೆ ನೋಡುವ ಗಂಡಸನ್ನು ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸಲೇಬೇಕೆಂಬ ಹಟ ಅಂತ ಊಹಿಸುವೆ.” +“ಆದರೆ ಅದು ಸಾಧ್ಯವಿಲ್ಲವೇ. ಸೊಲ್ಲು ಎತ್ತುವುದರೊಳಗೆ ಆತ ಅಲ್ಲಿಂದ ಕಣ್ಮಾಯಕ.” +* +* +* +ಕಡೆಗೇನಾಯಿತು ಎಂದರೆ ನಾರಾಯಣರಾಯರಿಗೆ ಹೋಟೆಲು ಮಾಡಿ ಮಾಡಿ ಸಾಕಾಯಿತು. ವೈರಾಗ್ಯವೂ ಹೆಚ್ಚೆಚ್ಚು ಕವಿಯಿತು. ಹೋಟೆಲುಗಳನ್ನು ಅಲ್ಲಲ್ಲಿನ ಕೆಲಸದವರಿಗೇ ವಹಿಸಿಕೊಟ್ಟು, ಒಂದು ಮಸಾಲೆ ವ್ಯಾಪಾರ ತೆರೆದರು. ಅಲ್ಲಿಯೂ ದುಡ್ಡು. ಅಡಿಕೆಪುಡಿ ಅಂಗಡಿ ತೆರೆದರು. ಅಲ್ಲಿಯೂ ವ್ಯಾಪಾರ. ಕಡೆಗೆ ಅದೂ ಬೇಡ ಅಂತ ಅದನ್ನೂ ಯಾರಿಗೋ ವಹಿಸಿಕೊಟ್ಟು ನಸ್ಯದ ಅಂಗಡಿ ತೆರೆದರೆ ಅಲ್ಲಿಯೂ ದುಡ್ಡಿನ ಬುದುಬುದು ಅವತಾರವೇ! ಊರುಕಡೆಯ ಗಂಡುಮಕ್ಕಳನ್ನು ಕರೆಕರೆದು ವ್ಯಾಪಾರದಲ್ಲಿ ಭದ್ರ ಕೂಡಿಸಿದರು. ಈ ದುಡ್ಡು ಎಂಬುದುಂಟಲ್ಲ, ಯಾವಾಗ ಒಲಿಯುತ್ತದೆ, ಯಾಕೆ ಒಲಿಯುತ್ತದೆ, ಯಾವಾಗ ಮುನಿಯುತ್ತದೆ, ಯಾಕೆ ಮುನಿಯುತ್ತದೆ ಅಂತ ಹೇಳಲಿಕ್ಕೇ ಸಾಧ್ಯವಿಲ್ಲ ನೋಡು. ದುಡ್ಡು ಒಲಿಯಿತೆಂದರೆ ಆತ ಬುದ್ಧಿವಂತ ಎನ್ನುತ್ತಾರೆ. ನಷ್ಟವಾದರೆ ದಡ್ಡ ಎನ್ನುತ್ತಾರೆ ಸಲೀಸಾಗಿ. ಅದೆಲ್ಲ ಬಹುಶಃ ಹಾಗಲ್ಲ. ಅಂತಹ ಶ್ರಮವಂತನೂ ಅಲ್ಲದ ನಡುನಡುವೆ ವೈರಾಗ್ಯದಿಂದ ಎತ್ತಲೋ ಹೇಳದೆ ಕೇಳದೆ ಹೊರಟೂಬಿಡುವ ನಾರಾಯಣರಾಯರಿಗೆ ಏನು ಮಾಡಿದರೂ ಝಣಝಣ ಹಣವೆಂದರೆ! ದಿನವಿಡೀ ಗಲ್ಲಾಪೆಟ್ಟಿಗೆಯ ಮೇಲೆಯೇ ಪ್ರತಿಷ್ಠಾಪನೆ ಆಗಿರುವವರಿಗಿಂತ ಸಾವಿರ ಪಾಲು ಸಂಪಾದಿಸಿ ಅನಾಯಾಸವಾಗಿ ಹೀಗೆ ದುಡ್ಡು ತನಗೆ ಒಲಿದು ಬಂದು ಬೀಳುವುದು ಕಂಡೇ ದಿಗಿಲಾಯಿತೊ ಎಂತದೊ. ಸಾಯಲಿ ಈ ವ್ಯವಹಾರ ಅಂತ ಎಲ್ಲವನ್ನೂ ತ್ಯಜಿಸಿ ಕಡೆಗೆ ಸನ್ಯಾಸಿಯಾಗಿಬಿಟ್ಟರು. +ಸನ್ಯಾಸಿಯಾದರೂ ಹೆಣ್ಣುಮಕ್ಕಳನ್ನು ಮಾತ್ರ ನೋಡರು. ಅಪ್ಪಿತಪ್ಪಿ ಮಾತಾಡಲೇ ಬೇಕಾಗಿ ಬಂದರೆ ಆಕಾಶ ನೆಲ ಗೋಡೆ ಮಾಡು ನೋಡುತ್ತ ಕಷ್ಟದಲ್ಲಿ ಎರಡು ಮಾತು ಒಗೆದು ಮುಗಿಸುವ ವಿಚಿತ್ರ ಸನ್ಯಾಸಿ. ಹಾಗಾದರೆ ಆ ಸನ್ಯಾಸತ್ವ ಎಂತಹದು? – ಪ್ರತೀಸಲ ನಾರಾಯಣರಾಯರ ಕುರಿತು ಮಾತು ಮುಗಿಸುವಾಗಲೂ ಶಾಂತಕ್ಕನ ಪ್ರಶ್ನೆ ಇದು. +ಸನ್ಯಾಸಿಯಾದ ಮೇಲೆಯೂ ವರ್ಷಕ್ಕೊಮ್ಮೆ ತಪ್ಪದೆ ಊರಿಗೆ ಬರುತ್ತಿದ್ದರು ನಾರಾಯಣರಾಯರು. ದೇವಸ್ಥಾನದಲ್ಲಿ ಪ್ರವಚನವಿರುತ್ತಿತ್ತು. ಶಾಂತಕ್ಕ ತಪ್ಪದೇ ಹೋಗುತ್ತಿದ್ದಳು. “ಬಾ ಎಂದರೆ ಬರುವಿದಿಲ್ಲ ನೀನು. ಬಂದರೆ ಏನು ನಷ್ಟ? ಪ್ರವಚನ ಮಾಡುವಾಗ ಅವರ ಕಣ್ಣು ನೋವಿನ ಪಸೆಯಿಂದ ಮಿನಿಗುವುದನ್ನು ನೋಡಬೇಕು. ಆ ಕಣ್ಣಿಗೂ ಆ ನೋವಿಗೂ ಏನು ಲಗತ್ತು ಅಂತಿ! ನೋಡುತ್ತಿದ್ದರೆ ನೋಡುತ್ತಾ ಕುಳಿತುಕೊಳ್ಳಬೇಕು – ಹಾಗೆ. ನಾನಂತೂ ಒಂದೇ ಒಂದು ಪ್ರವಚನ ತಪ್ಪಿಸುವುದಿಲ್ಲ. ‘ಇವರು’ ಎಷ್ಟೇ ತಮಾಷೆ ಮಾಡಿದರೂ. ಅಲ್ಲ… ಒಮ್ಮೆ ಬಾ. ನಾ ಹೇಳುವುದು ನಿನಗೇ ತಿಳಿಯುತ್ತದೆ.” +ಪ್ರವಚನ ಕೇಳಲು ಹೋಗಿ ಕಣ್ಣು ನೋಡುತ್ತ ಕುಳಿತುಕೊಳ್ಳುವುದನ್ನ ಯಾವ ಮರೆಯಿಲ್ಲದೆ ಹೇಳುವ ಪ್ರೀತಿಯ ಶಾಂತಕ್ಕ. ಸನ್ಯಾಸಿ ಗಡ್ಡದ ರೋಮ ರೋಮದಲ್ಲಿಯೂ ಅಪಾರ ವೇದನೆಯನ್ನು ಊಹಿಸುವವಳು. “ಸುಲಭವಾಗಿ ಬ್ರಹ್ಮಚರ್ಯೆ ಸಾಧನೆಯಾದವರಲ್ಲಿ ಈ ಪರಿಯ ನೋವು ಇರುವುದಿಲ್ಲ. ರಾಮಕೃಷ್ಣ ಪರಮಹಂಸರ ಕಣ್ಣು ನೋಡು. ವಿವೇಕಾನಂದರ ಕಣ್ಣು ನೋಡು. ಶುಭ್ರ ಕೊಳ. ಅದೇ ನಾರಾಯಣರಾಯರ ಕಣ್ಣು ನೋಡು….” +“ಕಣ್ಣು ನೋಡದೆ ಮೂಗು ನೋಡಿದರೆ ಸೈಯಪ್ಪ.” +“ಹಾಂ. ಮೂಗನ್ನಾದರೂ ನೋಡಲ್ಲ. ಅದು ಗರುಡ ಮೂಗು. ಯಾರಿಗೆ ಗೊತ್ತು, ಯಾವ ಶಾಪಕ್ಕಾಗಿ ಈ ಭೂಮಿಯ ಮೇಲೆ ಜನಿಸಿದ ವಿರಹಿ ಗರುಡಪಕ್ಷಿಯೊ!” +“ಓಹೋಹೋ. ನಿನ್ನ ತಲೆಯೆಂದರೆ ತಲೆ! ಇಷ್ಟಕ್ಕೂ ಅವರು ಬ್ರಹ್ಮಚಾರಿಯಾಗಿಯೇ ಇದ್ದರೆಂದು ಹೇಗೆ ಹೇಳುತ್ತಿ ನೀನು?” +“ಹ! ಪ್ರಶ್ನೆಯೇ ಇದು?” +” ಆ ನೋವು ಅದೇ ಅಂತಾದರೂ ಹೇಗೆ ಗೊತ್ತು ನಿನಗೆ? ತಿರುಗಮುರುಗವೂ ಇರಬಹುದಲ್ಲ. ಎಲ್ಲ ಅನುಭವಿಸಿಯೂ…. ಇದೆಲ್ಲ ಇಷ್ಟೆಯೇ? ಯಾರ ಮಾತೂ ಕೇಳದೆ ಮೊದಲೇ ಸನ್ಯಾಸ ಸ್ವೀಕರಿಸಬಹುದಿತ್ತಲ್ಲಪ್ಪ, ಅಂತಲೂ?” +“ಅಯ್ಯೊ, ‘ಎಲ್ಲ’ ಅನುಭವಿಸುವುದೆ? ಅವರೆ? ಅದು ಅಂತಹ ಅಸಾಮಿಯೇ ಅಲ್ಲವೇ. ಒಮ್ಮೆ ಬಾ. ನೋಡು. ಕಡೆಗೆ ಮಾತಾಡು.” ಕಳವಳಿಸಿದಳು ಶಾಂತಕ್ಕ. +ಹಾಗೆ ನೋಡಿದರೆ ಎಷ್ಟೊತ್ತಿಗೂ ಗಳಿಸುತ್ತಲೇ ಹೋದ, ವಿನಿಯೋಗಿಸುತ್ತಲೇ ಹೋದ, ಕೈಹಾಕಿದಲ್ಲೆಲ್ಲ ಯಶಸ್ವಿಯಾದ ಆದರೂ ಅವ್ಯಕ್ತ ನೋವಲ್ಲಿ ಅದ್ದಿಕೊಂಡಂತೆ ಕಾಣುವ ಎಲ್ಲಿಯೂ ಯಾರಲ್ಲಿಯೂ ತನ್ನ ವೈಯಕ್ತಿಕ ಬದುಕಿನ ಯಾವ ವಿವರವನ್ನೂ ಬಿಟ್ಟುಕೊಡದೆ ಇಹಪರಗಳ ಕುರಿತು ಪ್ರವಚನ ಮಾಡುವ ನಾರಾಯಣರಾಯರ ಕುರಿತು ನನಗೂ ನನ್ನದೇ ಆದ ಕುತೂಹಲವಿತ್ತು. ಅವರು ಗೋಡೆಯ ಮೇಲಿಂದ ಕಣ್ಣು ಕಿತ್ತು ಧೈರ್ಯದಿಂದ ನೇರ ನೋಡುತ್ತ ಮಾತಾಡಲು ಪ್ರೇರಿಸ ಬಯಸುವ ಪ್ರಶ್ನೆಗಳೂ. ಆದರೆ ಅದೇ, ಹೇಳಿದೆನಲ್ಲ; ಗೋಡೆ ನೋಡಿ ಮಾತಾಡುವವರ ಭೇಟಿಗೆ ಮನಸ್ಸು ಬೇಕೆಂದರೂ ಉಮೇದು ತಾಳುವುದಿಲ್ಲ. +* +* +* +“ಇವರು ಹೇಳಿದರು-ನಾರಾಯಣರಾಯರು (ಆತನಿಗೆ ಏನೋ ಒಂದು ‘ಆನಂದ’ ಸ್ವಾಮಿ ಅಂತ ಹೆಸರಿದ್ದರೂ ಶಾಂತಕ್ಕನಿಗೆ ಆ ಹೆಸರು ಯಾವತ್ತೂ ಬಾಯಲ್ಲಿ ಬಂದದ್ದೇ ಇಲ್ಲ.) ಊರಿಗೆ ಬಂದಿದ್ದಾರಂತೆ. ‘ನಿನ್ನ ಪ್ರೇಮಿ ಬಂದಿದ್ದಾನೆ’ ಅಂತ ಎಷ್ಟು ಸರಾಗವಾಗಿ ಹೇಳಿ ನಕ್ಕರು ಗೊತ್ತೆ? ಗಂಡಸರಿಗೂ ಸೂಕ್ಷ್ಮವಿರುತ್ತದೆ ನೋಡು.” – ನಕ್ಕಳು ಶಾಂತಕ್ಕ. “ಈ ಸಲ ಖಂಡಿತಾ ನಾನವರನ್ನು ಮಾತಾಡಿಸಲೇಬೇಕು. ನೀನು ಜೊತೆಯಲ್ಲಿದ್ದರೆ ಸಾಕು. ಧೈರ್ಯಕ್ಕೆ. ನಾಳೆ ಪ್ರವಚನಕ್ಕೆ ಹೋಗೋಣ.” +“………” +“ಸಂಜೆ ಆರಕ್ಕೆ ಪ್ರವಚನ. ಒಂದು ಗಂಟೆ ಮೊದಲೇ ಹೋದರೆ ಮಾತಿಗೆ ಸಿಕ್ಕಿಯಾರು. ಬರುತ್ತೀಯಲ್ಲ?” +“ನೋಡುವ…..” +“ಏನು, ನೋಡುವ ಗೀಡುವ ಮಾತೇ ಇಲ್ಲ. ರೆಡಿಯಾಗಿರು ಎಂದರೆ ರೆಡಿಯಾಗಿರಬೇಕು. ಕಡೇಕ್ಷಣದಲ್ಲಿ ಮನಸ್ಸು ಬದಲಾಯಿಸಬೇಡ ಮತ್ತೆ. ಈ ಸಲ ಒಮ್ಮೆ ನೋಡಿಬಿಡು. ಆಮೇಲೆ ಪ್ರತೀಸಲ ಹೋಗುತ್ತೀ ನಾನು ಹೇಳದೇನೇ.” ನಗೆ. +ನಾಳೆಯಾಗಿ ಸಂಜೆ ನಾಲ್ಕಕ್ಕೆ ಹತ್ತಿರವಾಗಿರಬೇಕು. ಮತ್ತೆ ಶಾಂತಕ್ಕನ ಪೋನು. “ಹೇ, ದೇವತ್ತೆ ಬಂದಿದ್ದಾಳಂತೆ!” +“ಆಂ!….ಯಾರು…. ನಿನ್ನ ಗರುಡಪಕ್ಷಿ…..” +“ನಾರಾಯಣರಾಯರ ಹೆಂಡತಿ. ಬಂದಿದ್ದಾಳಂತೆ. ಫ್ಲೈಟಿನಲ್ಲಿ! ಇದ್ದಕ್ಕಿದ್ದಂತೆ. ಏ… ಗೊತ್ತುಂಟ? ಅವರು ಮದ್ರಾಸಿನಲ್ಲಿ ಪ್ರವಚನ ಮಾಡುವಾಗ ದೇವತ್ತೆ ನಿತ್ಯವೂ ಹೋಗುತ್ತಿದ್ದರಂತೆ…” +“!! ಇದೆಲ್ಲ ನಿನಗೆ ಗೊತ್ತಾಯಿತಾದರೂ ಹೇಗೆ?” +“ಇನ್ನೂ ಏನೆಲ್ಲ ಗೊತ್ತಾಗಿದೆ. ಎಲ್ಲ ಆಮೇಲೆ ಹೇಳುತ್ತೇನೆ….” ಶಾಂತಕ್ಕನ ಸ್ವರ ಹುರುಪೆಲ್ಲ ಕಳೆದು ಬಾವಿಯಿಂದ ಬಂದ ಹಾಗೆ ಕೇಳಿಸುತ್ತಿತ್ತು. ಫೋನು ಧಡಕ್ಕನೆ ಇಟ್ಟಳು. ಅಷ್ಟು ಬೇಗ ಮಾತಾಡಿ ಎಂದೂ ಮುಗಿಸದವಳು. +ಅದುವರೆಗೆ ಹೋಗಲೋ ಬೇಡವೋ ಅಂತ ಉದಾಸೀನದಿಂದ ಇದ್ದವಳನ್ನು ಹೊಡೆದೆಬ್ಬಿಸಿದಂತಾಗಿ ನಾನು ಲಗುಬಗನೆ ಹೊರಡತೊಡಗಿದೆ. ಕಣ್ಣಮುಂದೆ ಗರುಡಮೂಗೊಂದು ಚಿತ್ರ ಕಟ್ಟುತ್ತಿತ್ತು. ಕೇಳುತ್ತ ಕೇಳುತ್ತ ತನ್ನಷ್ಟಕ್ಕೆ ರೂಪ ಆಕಾರ ತಾಳಿಕೊಂಡಿದ್ದ ದೇವತ್ತೆ ಆಕಾಶ ಮಾರ್ಗದಿಂದ ಕೆಳಗಿಳಿಯುತ್ತಿದ್ದಳು. ಒಳಗೆ ನಗೆಯೊಂದು ಮೆಲ್ಲಗೆ ಮೃದುವಾಗಿ ನಿರಾಮಯ ಹರಡಿಕೊಂಡಿತು. +ಎಷ್ಟು ಹೊತ್ತು ಈ ಶಾಂತಕ್ಕನಿಗೆ ಬರಲು? ಎಂದುಕೊಳ್ಳುತ್ತಿರುವಾಗಲೇ ಅವಳದೇ ಪೋನು. “ಏನು? ಹೊರಟಿದ್ದೀಯ? ಇಲ್ಲ, ನನಗೆ ಗೊತ್ತು. ನಾನೂ ಹೋಗುವುದಿಲ್ಲ ಬಿಡು.” +“ಅರೆ! ಕಡೇಕ್ಷಣದಲ್ಲಿ….?” +“ಸಾರಿ. ಯಾಕೋ ಹೊರಡಬೇಕೆಂತಲೇ ಕಾಣುತ್ತಿಲ್ಲ. ಉಮೇದೇ ಇಲ್ಲಪ್ಪ.” +“ಆದರೆ ಶಾಂತಕ್ಕ ನಾನು ಹೊರಟಿದ್ದೇನೆ. ಬಾರೇ.” +“ನೀನ! ಹೊರಟಿದ್ದೀಯ!” +“ಹೌದು. ಬಾ ಬೇಗ. ಹೋಗುವ.” +“ಇಲ್ಲ ನಾ ಬರುವುದಿಲ್ಲ…. ನೀನಾದರೂ ಯಾಕೆ ಎಲ್ಲ ಬಿಟ್ಟು ಈಗ ಹೋಗಬೇಕು?” +“………..” +ಫೋನಿಟ್ಟು, ನಾನು ಹೊರಬಂದೆ. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […] +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […] +ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_174.txt b/Kannada Sahitya/article_174.txt new file mode 100644 index 0000000000000000000000000000000000000000..dfb6476ec06eebfc52c46603fe5445af77533765 --- /dev/null +++ b/Kannada Sahitya/article_174.txt @@ -0,0 +1,84 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ +ಚಾಣದಲಿ ಹೊಡೆದಂತೆ ಹತ್ತು ಗಂಟೆ +ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು +ಇರಲಿ ಬಿಡು, ನಮಗೇತಕದರ ತಂಟೆ ? +ಮಂದ ಬೆಳಕ ತಂದ್ರಿಯಲ್ಲಿ +ಇಂದ್ರಚಾಪದಂತೆ ಬಾಗಿ +ಒಲವು ಸವಿಯ ನೀಡಿತು; +ಹಿಗ್ಗು ಪಡೆದ ಪ್ರಣಯಪಕ್ಷಿ +ನೀಲದಾಳದಲ್ಲಿ ಸುಳಿದು +ನಿರಾಯಾಸವಾಗಿ ಇಳಿದು +ಎದೆಯಗೂಡ ಸೇರಿತು. +ದೀಪವಿಳಿದು ಆರಿತು +ಕತ್ತಲೆ ಮೈ ಚಾಚಿತು +ನಿದ್ದೆಲೋಹಚುಂಬಕದೊಲು +ಎಳೆವ ಸೆಳೆವ ಹೊತ್ತಿನಲ್ಲೆ +ತಂಬೂರಿಯ ನಾದದಂತೆ +ನಾರದರವತರಿಸಿದಂತೆ +ಝೇಂಕರಿಸಿತು +ಮೂಲೆಯಲ್ಲಿ ಕಾದು ಕುಳಿತ ಸೊಳ್ಳೆ +ತನ್ನ ಗತ್ತಿನಲ್ಲೆ! +೨ +ಕೊಳ್ಳೆ ಹೊಡೆಯಲು ಬರುವ ಮೆತ್ತಗಿನ ಕಳ್ಳನೊಲು +ಸುಳ್ಳು ಸುಳ್ಳೇ ಹಾಡಿ ಹರಸುತಿತ್ತು; +ಬಾಂಬನಸೆಯುವ ಮೊದಲು ಅತ್ತಿತ್ತ ಹಾರಾಡಿ +ಸುತ್ತುವ ವಿಮಾನದೊಲು ಮರಸುತಿತ್ತು. +ಬಂತು ಅಗೊ! +ಬಂದೇಬಿಟ್ಟಿತು +ಮಹಾಸೈನ್ಯವನು ಹಿಂದಿರಿಸಿ ಮೊರೆದು ‘ಸ್ವಾಹಾ’ +“ನೀನಾರಿಗಾದೆಯೋ ಎಲೆ ಮಾನವಾ” +ಪರಿಚಿತರು ಸಲಿಗೆಯಲಿ ಮಾತನಾಡುತ್ತ ಬಂದು +ಹೆಗಲಮೇಲೆಯೆ ಕೈಯನಿರಿಸುವಂತೆ +ಬಂದು ಕುಳಿತಿದೆ ಮುಖದಮೇಲೆ ಅಂತೆ ; +ಕೈ ಮುಟ್ಟಿ ಮೈ ಮುಟ್ಟಿ ಬಂದು +ಗುಂಯ್‌ ಗುಟ್ಟುತಿದೆ +ಕಿವಿಯಲ್ಲಿ ಸ್ಕ್ರೂ ಇಟ್ಟು ತಿರುವಿದಂತೆ +ರೋಮರೋಮಕೆ ಸೂಜಿ ಮದ್ದಿನಂತೆ! +ಇಂಥ ಧೈರ್ಯವದೆಂತು ಬಂತೋ ಕಾಣೆ. +ಕೋಣೆಯಾಚೆಗೆ ಇದನು +ಹೊಡೆದೋಡಿಸದೆ ಮಾಣೆ! +೩ +ಅದು ಮುಂದು ಮುಂದೆ +ನಾನು ಸೂತ್ರದಗೊಂಬೆ +ಅಂತೆ ಆಡಿಸಿತೆನ್ನ ಹಿಂದುಮುಂದೆ. +ಗುಂಗಾಡಗುಂಗು ಮೈದುಂಬಿ ಹಂಗಿಸುತಿತ್ತು +ಆದರೂ ಆಗಲೆಂದೆ; +ಮನಕೆ ಮಾಯಾಮೃಗದ ನೆನಪು ತಂದು +ಪುಂಗಿಯೂದಿತು ಕಿವಿಯ ಬಳಿಗೆ ಬಂದು; +ಚಪ್ಪಾಳೆಗೂ ಸೊಪ್ಪು ಹಾಕದೆಯೆ ಕೈ ತಪ್ಪಿ +ಮೂಲೆಯ ಕಪಾಟಿನಲ್ಲಿ ಲೀನವಾಯ್ತು. +ಶಿಸ್ತಿನಿಂದ ಹಿಂದೆ ಸರಿದ +ಸೈನಿಕನೊಲು ಮರಳಿದೆ, +ಹಾಸಿಗೆಯಲ್ಲಿ ಹೊರಳಿದೆ +………….. +ಕನಸಿನಲ್ಲಿ ಗೊರವ ಬಂದು +ಜಾಗಟೆಯನು ಬಡಿದನು: +‘ಏಳ್ಕೋಟಿಗೇಳ್ಳೋಟಿಗೇಳ್ಕೊಟಿಗೋ’ +ಕಣ್ಣೆರೆದೆನು +? ? ? +ಕಿವಿ ನಿಮಿರಿತು +! ! ! +ಗಡಿಯಾರ ಬಾರಿಸಿತು +ಏಳುಗಂಟೆ. +***** +ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_175.txt b/Kannada Sahitya/article_175.txt new file mode 100644 index 0000000000000000000000000000000000000000..ffec39424797dc005c4d3a2d97a838aecd3a5c05 --- /dev/null +++ b/Kannada Sahitya/article_175.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ ತನ್ನ ಐವತ್ತು ವರ್ಷ ಆಚರಿಸಿಕೊಂಡಿದ್ದರು. ಬ್ರಹ್ಮಚಾರಿಯ ಜೀವನದಲ್ಲಿ ಹುಟ್ಟುಹಬ್ಬಕ್ಕೆ ವಿಶೇಷ ಅರ್ಥ ತಲ್ಲಣ ಎರಡು ಇರುತ್ತದೆ ಎಂದು ಮೂರ್ತಿ ಆ ಸಂಜೆ ಗುಂಡಿನ ಗುಂಗಿನಲ್ಲಿ ದೊಡ್ಡದಾಗಿ ಮಾತನಾಡುತ್ತಿದ್ದರು. ಅವರು ಬಿಟ್ಟರೆ ಅಲ್ಲಿದ್ದವರೆಲ್ಲರೂ ವಿವಾಹಿತ ಗಂಡಸರೇ. ಮೂರ್ತಿಯವರ ಚಿಂತನೆಯ ಬರವಣಿಗೆಯ ಅಭಿಮಾನಿಗಳು. +’ವಿವಾಹಿತರಿಗಿಲ್ಲದ ವಿಶೇಷ ಏನದು ನಿಮಗೆ, ಮೂರ್ತಿ?’ – ಪ್ರಶ್ನೆ ಕೇಳಿದವರು ಗಣಪತಿ. ಕಟ್ಟಾ ಮಾರ್ಕ್ಸ್‌ವಾದಿ ಸರ್ಕಾರಿ ಅಧಿಕಾರಿ. ಮಾತಿನಲ್ಲಿ ಅಣಕವಿತ್ತು. ಆದರೆ, ಮೂರ್ತಿ ತುಂಬ ಆಳವಾದ ಪದರಗಳುಳ್ಳ ಮನುಷ್ಯನಾದ್ದರಿಂದ ಏನೊ ಆಳವಾದ ಹೊಳೆಯೇ ಈ ಹೇಳಿಕೆಯಲ್ಲಿರಬಹುದೆಂಬ ಅನುಮಾನವೂ ಇತ್ತು ಆ ಮಾತಿನಲ್ಲಿ. +ವಿಶೇಷವೇ? ಮಕ್ಕಳನ್ನು ಪಡೆದಾತ ತಾನು ಮಕಳಲ್ಲಿ ಮುಂದೆಯೇ ಬಾಳುತ್ತೇನೆ ಎಂದು ನಂಬುತ್ತಾನೆ. ಆದರೆ ಬ್ರಹ್ಮಚಾರಿಗೆ ಪ್ರತಿ ವರ್ಷದ ಹುಟ್ಟು ಹಬ್ಬವೂ ತಾನು ನಾಶವಾಗುವುದರ, ನಿರ್ನಾಮವಾಗುವುದರ ಸೂಚನೆ. ಮೂರ್ತಿ ನಿಧಾನಕ್ಕೆ ವಿಸ್ಕಿ ಗುಟುಕರಿಸುತ್ತಾ ಹೇಳಿದರು. ಕಣ್ಣಾಲಿಗಳಲ್ಲಿ ಅರ್ಧ ನೀರಿತ್ತು. ವಿವರಿಸಲಾಗದ ಭಯವಿತ್ತು. ಅಕ್ಕಕ್ಕೆ, ಪಕ್ಕಕ್ಕೆ, ಎದುರಿಗೆ ಎಲ್ಲವೂ ಬಹು ಅಂತಸ್ತಿನ ಕಟ್ಟಡಗಳೇ. ಮೂರ್ತಿಯದೊಂದು ಮಾತ್ರ ಹಳೆಯ ಕಾಲದ ಸಣ್ಣ ಮನೆ. ಹಠದಿಂದ ಮೂರ್ತಿ ಅದನ್ನು ಉಳಿಸಿಕೊಂಡಿದ್ದರು. ವೈಶಾಖ ಪೂರ್ಣಿಮೆಯ ದಿನ ಮೂರ್ತಿ ಹುಟ್ಟಿದ್ದರಿಂದ ಅಂದೇ ಅದನ್ನು ಮೂರ್ತಿ ಸಂಭ್ರಮದಿಂದ ಆಚರಿಸುತ್ತಿದ್ದರು. ರಾತ್ರೆ ಹನ್ನೊಂದುವರೆಯಾಗಿತ್ತು. ಬೀದಿಗಳಲ್ಲಿ ಬಿಕೋ ಎನ್ನುವ ಮೌನ. ಸೆಖೆ. ಸೇರಿದ್ದವರು ಹತ್ತು, ಹನ್ನೆರಡು ಜನ. ವಿಸ್ಕಿ ಧಾರಳವಾಗಿ ಹರಿಯ ತೊಡಗಿತ್ತು. ಮೂರ್ತಿ ಎಂದಿಗಿಂತ ಹೆಚ್ಚಾಗಿ ಕುಡಿದಂತಿತ್ತು. ನಿರರ್ಗಳ, ಸ್ಪಷ್ಟ ಮಾತಿಗೆ ಹೆಸರಾಗಿದ್ದ ಮೂರ್ತಿಯ ಮಾತುಗಳು ಈ ದಿನ ವಾಕ್ಯದ ಅರ್ಧಕ್ಕೇ ನಿಂತು ಬಿಡುತ್ತಿತ್ತು. ಒಗಟಿನ ಥರ, ರೂಪಕದ ಥರ ವಾಕ್ಯಗಳು ಕೇಳಿಸುತ್ತಿದ್ದವು. +’ಮೂರ್ತಿ, ನಿನಗೆ ಯಾಕೆ ಈ ಥರದ ಯೋಚನೆ? ನಿನ್ನ ಮಕ್ಕಳು ಕೂಡಾ ಎಲ್ಲೊ ಯಾವುದೋ ಬಸ್ ಸ್ಟಾಂಡ್‌ನಲ್ಲಿ ಕುಯ್ಯೊ ಮರ್ರೊ ಎಂದು ಅಳುತ್ತಿರಬೇಕು’ ಎಂದು ಮೂರ್ತಿಯ ಹಳೆಯ ಗೆಳೆಯ ಪೀಟರ್ ಹೇಳಿದಾಗ, ಒಮ್ಮೆಗೆಯೇ ಮೂರ್ತಿ ವ್ಯಗ್ರರಾಗಿಬಿಟ್ಟರು. ’ರ್‍ಯಾಸ್ಕಲ್, ಹಾಗೆ ಮಾತನಾಡಬೇಡ ನನ್ನ ಬಗ್ಗೆ ಎಂದು ಎಷ್ಟು ಸಲ ಹೇಳಿಲ್ಲ ನಿನಗೆ?’ ಎಂದು ಹೊಡೆಯುವವರಂತೆ ಅವನ ಕಡೆಗೆ ನುಗ್ಗಿದರು. ಅವನು ತೂರಾಡುತ್ತಾ ಒಳಗೆ ಇನ್ನೊಂದು ರೂಮಿಗೆ ಓಡಿಹೋದ. ಉಳಿದವರು ಚಪ್ಪಾಳೆ ಹೊಡೆದು ನಕ್ಕರು. ಮೂರ್ತಿ ಮಾತ್ರ ಗಂಭೀರವಾಗಿಬಿಟ್ಟರು. ಅವರೊಳಗೆ ಯಾವುದೋ ಅತಿ ಸೂಕ್ಷ್ಮವಾದದ್ದನ್ನುಪೀಟರ್ ಮುಟ್ಟಿ ಚುಟುಕು ಮುಳ್ಳಾಡಿಸಿದಂತೆ ಅತ್ತಿತ್ತ ಹೊರಳಿದರು. ಕೂತಿದ್ದ ಲಾನ್‌ನ ಹಸಿರು ಹುಲ್ಲು, ಗಿಡ, ಮರ, ಆಕಾಶ ಎಲ್ಲವೂ ಅವರನ್ನು ಅಣಕಿಸಿದಂತೆ ತೋರುತ್ತಿತ್ತು. ಹಾಗೇ ಕಣ್ಣು ಮುಚ್ಚಿ ಕೂತರು. ಎಷ್ಟೋ ಯುಗಗಳಾದಂತೆ, ದೀರ್ಘ ನಿದ್ರೆಯಲ್ಲಿ ಮುಳುಗಿ ಬಿಟ್ಟಂತೆ ಅನ್ನಿಸಿತು. ಉಳಿದವರು ಎದ್ದು ಒಳಗೆ ನಡೆದರು. ಯಾರ ನಡಿಗೆಯಲ್ಲೂ ಸ್ತಿಮಿತವಿರಲಿಲ್ಲ. ಮೂರ್ತಿ ಒಮ್ಮೆಗೇ ಎಚ್ಚೆತ್ತು ನೋಡಿದರು. ಸುತ್ತ ಯಾರೂ ಇಲ್ಲ. ಎದುರು ಮನೆಯಲ್ಲಿ ಎರಡನೆಯ ಮಹಡಿಯ ಇಂಜಿನಿಯರ್ ಜೋಶಿ ಬಾಲ್ಕನಿಯಿಂದ ಇವರ ಕಡೆಗೆ ಕೈ ಬೀಸಿದ. ಆತ ಇವರನ್ನೇ ಕುತೂಹಲದಿಂದ ದಿಟ್ಟಿಸುತ್ತಿದ್ದಂತೆ, ಅಭ್ಯಾಸ ಮಾಡುತ್ತಿದ್ದಂತೆ ಇತ್ತು. ಗಂಟೆ ಎಷ್ಟೆಂದು ತಿಳಿಯಲೂ ಹೆದರಿಕೆಯಾಗಿ ಎಷ್ಟೋ ದಶಕಗಳ ಹಿಂದೆಯೇ ಕೈಗಡಿಯಾರ ಕಟ್ಟುವುದನ್ನೇ ಮೂರ್ತಿ ಬಿಟ್ಟಿದ್ದರು. ಹನ್ನೆರಡೋ, ಹನ್ನೆರಡೂವರೆಯೋ ಆಗಿರಬೇಕು. ಎಲ್ಲರನ್ನೂ ಊಟಕ್ಕಾದರೂ ಎಬ್ಬಿಸೋಣ ಎಂದು ಎದ್ದು ಮುಂಚೆ ಬಾತ್ ರೂಮಿಗೆ ಹೋಗಲು ಹಿಂಭಾಗದ ಬಾತ್ ರೂಮಿಗೆ ಹೋಗುವಾಗ ಹಾಲಿನಿಂದ ಮಾತುಕತೆ ಕಿವಿಗೆ ಬಿತ್ತು. ಕದ್ದು ಕೇಳಲೆಂದು ನಿಂತರು. +ಪೀಟರ್ ಗಂಭೀರವಾಗಿ ಹೇಳುತ್ತಿದ್ದ – ಮೂರ್ತಿಗೆ ಏನಾಗಿದೆ ಅಂತ ಗೊತ್ತಿಲ್ಲ. ಕಚಡಾ ಹೆಂಗಸರನ್ನೆಲ್ಲಾ ತಂದು ಮನೇಲಿ ತಿಂಗಳು, ಎರಡು ತಿಂಗಳು ಇಟ್ಟುಕೋತಾನೆ. ಅವರ್‍ಯಾರು ರೂಮು ಬಿಟ್ಟು ಹೊರಗೆ ಕೂಡಾ ಬರೋದಿಲ್ಲ. ಆಮೇಲೆ ಅವರು ಎಲ್ಲಿ ಹೋಗ್ತಾರೋ? ಏನೋ? ಆಮೇಲೆ ಇನ್ಯಾರೋ ಬಂದಿರ್‍ತಾರೆ. ಇವನಿಗೆ ಅಂಥೋರನ್ನ ಯಾರು ಸಪ್ಲೈ ಮಾಡ್ತಾರೋ ಏನೋ ಗೊತ್ತಾಗೋದೇ ಇಲ್ಲ. ಯಾವ ಜಾತಿ, ಕುಲ, ಭಾಷೆ ಅಂತ ತಿಳಿಯೋದು ಕಷ್ಟವೇ. ಧಂಡಿ ಸೂಳೆಗಾರಿಕೆ ಮಾಡ್ತಾನೆ. ಸಂತಾನ ಮುಂದುವರೆಸೋರಿಗೆ ಮಾತ್ರ ದೇವರು ಬೇಕು ಅಂತ ಅದನ್ನು ದೊಡ್ಡಾದಾಗಿ ತತ್ವ ಕೊಡ್ತಾನೆ. ಉಳಿದವರು ಏಕೋ ಚಪ್ಪಾಳೆ ಹೊಡೆದು ನಕ್ಕರು. ತುಂಟ ಗಣಪತಿ ಏನೋ ವ್ಯಗ್ರವಾದ ಪೋಲಿ ಜೋಕು ಹೊಡೆದಿರಬೇಕು. ತನಗೆ ಅದು ಕೇಳಿಸದೇ ಹೋಯಿತಲ್ಲ ಎಂದು ಮು‌ಊರ್ತಿ ತಮ್ಮ ಮೇಲೆಯೇ ಕೃದ್ಧರಾದರು. ಶ್ ಎಂದು ಸುಮ್ಮನಿರಿಸಿ ಪೀಟರ್ ಮುಂದುವರೆಸಿದ. +’ನಿಮಗೆ ಗೊತ್ತಿರೋ ಹಾಗೆ ನಾನೇ ಮೂರ್ತಿಗೆ ಆಪ್ತ ಸ್ನೇಹಿತ. ನನ್ನ ಹತ್ತಿರ ಕೂಡಾ ಆತ ತನ್ನ ಲೈಂಗಿಕ ಜೀವನದ ವಿವರಗಳನ್ನು, ಗುಟ್ಟುಗಳನ್ನು ಹೇಳಲ್ಲ. ನಾನು ಮೊದಲಿಗೆ ಕೆದಕ್ತಾ ಇದ್ದೆ. ಈಗ ಅದನ್ನೂ ಬಿಟ್ಟು ಬಿಟ್ಟಿದೀನಿ. ಹೆಂಗಸರನ್ನು ಹೇಗೆ ಬೆನ್ನು ಹತ್ತಿದರೆ ಹೇಗೆ ಅಂತ ಮೊನ್ನೆ ಕೇಳಿದೆ. ’ನನ್ನ ನೈತಿಕತೆ ನಿನಗೆ ಗೊತ್ತಾಗಲ್ಲ ಪೀಟರ್’ ಅಂತ ಬೈದು ಕೂರಿಸಿಬಿಟ್ಟ ಅಯೋಗ್ಯ’ – ಈ ವಾಕ್ಯ ಮುಗಿಯುವ ಹೊತ್ತಿಗೆ ಮೂರ್ತಿ ಒಳಗೆ ಬಗ್ಗಿ ನೋಡಿದರೆ, ಕಿಟಕಿ ಸಂದಿಯಿಂದ ಪೀಟರ್ ಬೆತ್ತದ ಕುರ್ಚಿಯ ಮೇಲೆ ಕೂತು ಗಂಭೀರವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಿದ್ದ. ಉಳಿದವರೆಲ್ಲ ನೆಲದ ಮೇಲೆ ದಿವಾನ್‌ಗಳ ಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದರು. ಹೊಗೆ ರೂಮಿನಲ್ಲಿ ತುಂಬಿ ಹೋಗಿತ್ತು. ಮಂಜಿನ ಮಧ್ಯೆ ಅವರು ಅಸ್ಪಷ್ಟವಾಗಿ, ಕದಡಿ ಹೋಗಿದ್ದ ಆಕೃತಿಗಳಂತೆ ಮಾತ್ರ ಕಾಣುತ್ತಿದ್ದರು. ಅವರೆಲ್ಲ ತನ್ನ ಅಭಿಮಾನಿಗಳೇ ತಾನೆ? ಮೂರ್ತಿ ನಕ್ಕರು. +ಗಣಪತಿ ಎದ್ದುನಿಂತು ನಾಟಕೀಯವಾಗಿ ಹೇಳಿದ – ’ಬಿಡ್ರಮ್ಮ, ವಿಷಯ ಇದು ನಮ್ಮ ಗುರು ವಿಷಯ ಶಾನೆ ಸೀರಿಯಸ್. ಅವನ ಬೆಡ್ ರೂಮ್ ವಿಚಾರ ನಮಗ್ಯಾಕೆ? ನಮಗೆ ಅವನ ಲೈಬ್ರರಿ ವಿಚಾರ, ಈ ಗುಂಡು ಹಾಕೋ ಜಾಗ ಲಾನ್ ವಿಚಾರ ಸಾಕು’ ಎಂದ. +ಮೂಲೆಯಲ್ಲಿ ಕುಳಿತು ಕೋಳಿಯಂತೆ ಜ್ಯೂಕರಿಸುತ್ತಾ ಕೂತಿದ್ದ ಶ್ರೀಧರ ಚಪ್ಪಾಳೆ ಹೊಡೆದು ಎದ್ದು ನಿಂತ. ಅವನು ಕುಡಿದಾಗ ಹುಚ್ಚುಚ್ಚಾಗಿ ಆಡುವುದು ಪ್ರಸಿದ್ಧವಾದ್ದರಿಂದ ಇಡೀ ಗುಂಪು ಬೆಚ್ಚಿದಂತೆ ಕಂಡಿತು. ಅವನನ್ನು ನಿಯಂತ್ರಣ ಮಾಡಿದರೆ ಮತ್ತಷ್ಟು ಗಲಾಟೆ ಮಾಡುತ್ತಾನೆ ಎಂದು ಗೊತ್ತಿದ್ದರಿಂದ ಸುಮ್ಮನೆ ಕೂತರು. ಯ್ಯಕ್ ಯ್ಯಕ್ ಎಂದು ಎರಡು ಸಾರಿ ಬಿಕ್ಕಳಿಸಿದ. ಮೂರ್ತಿಗೂ ಒಳಗೆ ಹೋಗಿ ಕೂರಬೇಕೆನ್ನಿಸಿತು. ತನ್ನ ಬಗ್ಗೆ ಚರ್ಚೆ ಆಗುತ್ತಿರುವಾಗ ತಾನೂ ಅಲ್ಲಿದ್ದರೆ ಒಳ್ಳೆಯದು ಎನ್ನಿಸಿತು. ತಾನು ಇರುವಾಗ ಅವರು ಮುಕ್ತವಾಗಿ ಚರ್ಚಿಸುವುದಿಲ್ಲ ಎಂದು ಹೊಳೆದು ಅಲ್ಲೇ ಗೋಡೆಗೆ ಒರಗಿ ನಿಂತರು. ಮಾತನ್ನು ಮನಸ್ಸಿನ ಒಂದು, ಸಣ್ಣ ಭಾಗ ಮಾತ್ರ ಕೇಳುತ್ತಿತ್ತು. ಉಳಿದದ್ದು ಎಲ್ಲೋ ಅಶಾಂತವಾಗಿ ಅಲೆದಾಡುತ್ತಿತ್ತು. ಕೇಳಿಸಿಕೊಂಡ ಮಾತುಗಳೇ ಅಲೆದಾಡುತ್ತಿದ್ದ ಮನಸ್ಸನ್ನು ಮತ್ತಷ್ಟು ದೂರ ತಳ್ಳಿಬಿಟ್ಟಿತು. ಯ್ಯಾಕ್, ಯ್ಯಾಕ್ ಎಂದು ನಿಲ್ಲದ ಬಿಕ್ಕಳಿಕೆಯ ಮಧ್ಯದಲ್ಲೇ ಏನೋ ಹೇಳಲು ಪ್ರಯತ್ನಿಸಿ ವಿಫಲನಾಗಿ ಮತ್ತೆ ಎರಡು ನಿಮಿಷ ನೀರು ಕುಡಿದು ಸುಧಾರಿಸಿಕೊಂಡು ಶ್ರೀಧರ ಮಾತನಾಡತೊಡಗಿದ. ಒಮ್ಮೆಗೇ ಸುತ್ತಲಿನ ಎಲ್ಲ ನಾಯಿಗಳೂ ಬೊಗಳಲು ಶುರು ಮಾಡಲು ಮೂರ್ತಿ ಬೀದಿ ಕಡೆ ನೋಡಿದರು. ಯಾವುದೋ ಒಂದು ಗೂಳಿ ತಪ್ಪಿಸಿಕೊಂಡು ಬಂದು ಬಿಟ್ಟಿತ್ತು. ನಾಯಿಗಳು ಅದನ್ನು ಇಟ್ಟಾಡಿಸುತ್ತಿದ್ದವು. ಗೂಳಿ ಬೆದರಿ ಅತ್ತ ಇತ್ತ ಓಡಿ ಆಗಾಗ ತೀರಾ ಮೇಲೇರಿ ಬಂದ ನಾಯಿಗೆ ಹಾಯಲು ಯತ್ನಿಸಿ ಅಡ್ಡಾದಿಡ್ಡಿಯಾಗಿ ಹಾಯುತ್ತಿತ್ತು. ಗಂಟೆ ಗಣಗಣ ಎಂದು ಶಬ್ಚ ಮಾಡುತ್ತಿತ್ತು. ಟಕ್ ಟಕ್ ಎಂದು ಎದುರಿಗಿನ ಕಟ್ಟಡದ ದೀಪಗಳು ಬಂದು. ಒಂದೆರಡು ಮುಖಗಳು ಕಂಡವು ಕಿಟಕಿಗಳಲ್ಲಿ. ಒಂದು, ನಿಸ್ಸಂದೇಹವಾಗಿ ಜೋಶಿಯದೇ ಎಂದುಕೊಂಡರು ಮೂರ್ತಿ. ’ನಿಮ್ಮ ನಂದಿಗೆ, ಶಿವನ ವಾಹನಕ್ಕೆ ನಾಯಿಗಳು ಕೂಡ ಕಚ್ತಾ ಇವೆ ಜೋಶಿ’ ಎಂದು ಕೂಗಿ ಹೇಳಬೇಕೆನ್ನಿಸಿತು. ತೀರಾ ಒರಟಾಗಿ ಬಿಡುತ್ತದೆಂದು ಭಯವಾಗಿ ಎಲ್ಲೇ ಮತ್ತಷ್ಟು ಮರೆಗೆ, ಸಂಪಿಗೆ ಮರದ ಮರೆಗೆ ಸರಿದರು. ಈ ನಾಯಿಗಳ ಬೊಗಳುವಿಕೆ, ಗಲಾಟೆ ಕೂಡಾ ಈ ಮೂರ್ತಿಗೆ, ಮನೆಗೆ ಸಂಬಂಧಿಸಿದ್ದೇ ಇರಬೇಕೆಂದು ಹೊರಗೆ ತಲೆಹಾಕಿದ ಜೋಶಿಗೆ ನಿರಾಶೆಯಾಗಿ ಟಕ್ ಎಂದು ದೀಪ ಆರಿಸಿದರು. ಬೆದರಿದಂತೆ ಗೂಳಿ ಧಡಧಡನೆ ಇನ್ನೊಂದು ರಸ್ತೆಗೆ ಓಡಿ ಹೋಯಿತು. ನಾಯಿಗಳ ಹಿಂಡು ಹಿಂಬಾಲಿಸಿತು. ಮೂರ್ತಿಯವರ ಕರುಳು ಚುರುಕ್ಕೆಂದಿತು. ಎಷ್ಟು ಹೊತ್ತಾಯಿತು ತಾನು ಕಡೆಯ ವಾಕ್ಯ ಕೇಳಿ ತಿಳಿಯಲಿಲ್ಲ. ಮತ್ತೆ ಎಚ್ಚರದಿಂದ ಕಿವಿಗೊಟ್ಟು ಕೇಳಿದರು. ಹಾಗೇ ಕಿಟಕಿ ಸಂದಿನಿಂದ ಬಗ್ಗಿಯೂ ನೋಡಿದರು. ಅವರು ಮುಂಚೆ ನೋಡಿದ ಭಂಗಿಗಳಿಗಿಂತ ಎಲ್ಲರೂ ಬೇರೆ ರೀತಿಯಲ್ಲಿದ್ದಂತೆ ಕಂಡಿತು. ಶ್ರೀಧರ ದಿವಾನ್ ಅಂಚಿಗೆ ಪದ್ಮಾಸನ ಹಾಕಿ ಕೂತು ಮಾತನಾಡುತ್ತಿದ್ದ. +ಅದೆಲ್ಲಾ ಬಿಡಿ, ನಾನು ಹೇಳೋ ಮುಖ್ಯ ವಿಚಾರ ಅಂದ್ರೆ.. ಯ್ಯಕ್, ನಾನು ನಾಸ್ತಿಕ ಆದದ್ದೇ ಮೂರ್ತಿ ಪುಸ್ತಕ ಓದಿ. ಮಹಾ ಟ್ರೆಡೀಷನಲ್ ಫ್ಯಾಮಿಲೀಯಿಂದ ಬಂದೋನು ನಾನು. ಮೂರ್ತಿ ಪುಸ್ತಕ ಓದಿ ಅದರಲ್ಲೂ ಅವರ ಪುಸ್ತಕ ’ದೇವರನ್ನು ಧೂಸ ಮಾಡಿ’ ಓದಿ ದೇವರ ಮನೇಲಿ ಉಚ್ಚೆ ಹೊಯ್ದೊನು ನಾನು. ಯಾರೂ ಇಲ್ಲದಾಗ ಅಂತ ಇಟ್ಟುಕೋಳಿ, ಅಫ್‌ಕೋರ್ಸ್ ಎಲ್ಲಿದೆ ಆತ್ಮ? ಪುಸ್ತಕ ಓದಿ ಪೂರ್ಣವಾಗಿ ನಾಸ್ತಿಕ ಆದೆ ಕಣ್ರೋ. ಆದರೆ, ಈಚೆಗೆ ಯಾಕೋ ಮೂರ್ತಿ ಬಗ್ಗೆ ಅನುಮಾನ ಬರ್ತಿದೆ ಕಣ್ರೋ. ’ಆ ಸೂಳೇಮಗ ದೇವರಿಗೆ ಹೇಳಿದೆ, ಯಾಕೆ ಜನರನ್ನು ಈ ರೀತಿ ಕಾಡ್ತೀಯ’ ಅಂತ ಹೇಳಿದೆ ದೇವರಿಗೆ ಅಂತ ಮೊನ್ನೆ ಮೂರ್ತಿ ಹೇಳಿದ್ರು ಯ್ಯಕ್. ಎರಡು ಸಾರಿ ಆ ಡೈಲಾಗ್ ರಿಪೀಟ್ ಮಾಡಿದ್ರು. ದೇವರು ಇದಾನೆ ಅಂತ, ತಾನು ಆತನ ವಿರೋಧಿ ಅಂತ ಮೂರ್ತಿ ನಂಬೋ ಹಾಗೆ ಕಾಣ್ತಾನೆ. ಅಯ್ಯೋ ಯ್ಯಕ್, ಏನ್ರೋ ಗತಿ ಅಗ ನಮ್ಮಂಥೋರದು? ಅಯ್ಯೋ ಯ್ಯಕ್..’ ಎಂದು ಗೋಳಾಡಲಾರಂಭಿಸಿದ. ಅದು ಗಂಭೀರವೋ, ತಮಾಷೆಯೋ ಯಾರಿಗೂ ಹೊಳೆಯಲಿಲ್ಲ. +ಮೂರ್ತಿಯವರಿಗೆ ಮಾತ್ರ ಶಾಕ್ ಹೊಡೆದಂತಾಯಿತು. ದಿಕ್ಕು ತಪ್ಪಿ ಅಲೆದಾಡುತ್ತಿದ್ದ ಎರಡು ವೈರುಗಳು ಥಟಕ್ಕನೆ ಕಚ್ಚಿಕೊಂಡಂತೆ. ತಲೆ ಗಿರ್ರೆಂದಿತು. ಎಂಥಾ ಮಾತು ಶ್ರೀಧರನದು? ಎಂಥಾ ಮರ್ಮಘಾತಕ ಹೇಳಿಕೆ ಇದು? +ಮೂರ್ತಿ ತೂರಾಡುತ್ತಾ ಒಳಗೆ ಬಂದರು. ಎಲ್ಲರೂ ಮೌನವಾಗಿ ಅವರ ಕಡೆಗೇ ನೋಡಿದರು. ಅಚಿಥಾ ಮತ್ತಿನಲ್ಲೂ ತನ್ನ ಮಾತು ಅವರಿಗೆ ಕೇಳಿಸಿರಬಹುದೇ ಎಂದು ಗಾಬರಿಯಾಗಿ, ಕುಡಿದು ಪೂರಾ ಚಿತ್ತಾಗಿರುವವನಂತೆ ಶ್ರೀಧರ ಕುತ್ತಿಗೆಯನ್ನು ಎಡಕ್ಕೆ ವಾಲಿಸಿದ. ಮೂರ್ತಿ ಮೌನವಾಗಿ ಅವನನ್ನು ಎಬ್ಬಿಸಿದರು. ಹತ್ತು ನಿಮಿಷದಲ್ಲೆ ಊಟ ಮುಗಿದೇ ಹೋಯಿತು. ಮಧ್ಯೆ ಒಂದು ಮಾತೂ ಇಲ್ಲ. ಮೂರ್ತಿಯವರ ಮನಸ್ಸು ಮಾತ್ರ ಎಲ್ಲಿಯೋ ಇತ್ತು. +ಎಲ್ಲರೂ ಚಕಚಕನೆ ತಮ್ಮ ಸ್ಕೂಟರ್, ಲೂನಾ ಹತ್ತಿ ಹೊರಟರು. ಒಮ್ಮೆಗೇ ಏಳೆಂಟು ಗಾಡಿಗಳು ಶುರುವಾದಾಗ ಇಡೀ ಬೀದಿ ಮತ್ತೆ ಒದ್ದಾಡಿದಂತೆ ಕಂಡಿತು. ಮತ್ತೆ ಗೂಳಿ ಚಕ್ಕನೆ ಓಡಿ ಬಂದಿತು. ನಾಯಿಗಳ ಹಿಂಡು ಹಿಂದೆ. ಈ ಗಾಡಿಗಳ ಮಧ್ಯೆ ಅದು ನುಗ್ಗಿತು. ಒಂದಿಬ್ಬರು ’ಅರರೇ’ ಎಂದು ಬೆದರಿ ಲೂನಾಗಳನ್ನು ದಬ್ಬಿ ಹಾಕಿಕೊಂಡು ಕೆಳಕ್ಕೆ ಬಿದ್ದು ಬಿಟ್ಟರು. ನಾಯಿಗಳು ಹಿಂಬಾಲಿಸಿದವು. ಗದ್ದಲಕ್ಕೆ ಮತ್ತೆ ಎದುರಿನ ಕಟ್ಟಡದಲ್ಲಿ ’ಟಕ್’ ’ಟಕ್’ ಎಂದು ದೀಪ ಹತ್ತಿದವು. ಗಾಡಿಗಳು ಹೊರಟವು. +ಮೂರ್ತಿಯವರಿಗೆ ಎಚ್ಚರವಾಯಿತು. ಕತ್ತಲ ಅಧೋಲೋಕದಲ್ಲಿ ವಿಚಿತ್ರ ಸ್ವಪ್ನಗಳಲ್ಲಿ ಮುಳುಗಿ ಹೋಗಿದ್ದವರಿಗೆ ಇದ್ದಕ್ಕಿದ್ದಂತೆ ಎಲ್ಲಿಗೊ ರೋಯ್ಯನೆ ಎಸೆದು ಬಿಟ್ಟಂತೆ ಎಚ್ಚರವಾಯಿತು. ಅಯ್ಯೋ, ದೀಪವೇಕೆ ಬಂತು? ಯಾರಲ್ಲಿ? ಯಾರು ಆ ಕತ್ತಲ ಮೂಲೆಯಲ್ಲಿ ಬೆಂಕಿಯ ಮರದಂತೆ ನಿಂತವರು? ಅಯ್ಯೋ? ಯಾರು ನೀನು? ಕುತ್ತಿಗೆಯನ್ನು ಉಸಿರುಕಟ್ಟಿಸುವಂತೆ ಹಿಸುಕುತ್ತಿದ್ದ, ಇದ್ದಕ್ಕಿದ್ದಂತೆ ಗಾಳಿಗಿಂತ ಹಗುರವಾಗಿ ದೀಪವಾಗಿ ಬಿಟ್ಟಿದ್ದವರು ಯಾರು? ಮೂರ್ತಿ ಝಗ್ಗನೆದ್ದು ಕೂತರು. ತಮ್ಮ ಮಂಚವೇ ಸಾವಿರ ಸೂರ್ಯನಂತೆ ಹೊಳೆಯುತ್ತಿದ್ದಂತೆ ದೀಪವಾರಿಸದೆ ತಾನೇಕೆ ಮಲಗಿದೆ? ಎನ್ನಿಸಿ ಮಂಚದ ಹತ್ತಿರವೇ ಇದ್ದ ಸ್ವಿಚ್ ಆರಿಸಿದರು. ಮೂಲೆಯಲ್ಲಿ ಯಾರೋ ಕೂತಂತೆ, ಚಿಕ್ಕ ಮಕ್ಕಳ ಹಾಗೆ ಭೀತಿಯಿಂದ ಅತ್ತಕಡೆಗೆ ನೋಡದೆಯೇ ಮೈಚಾಚಿದರು. +ಕನಸಲ್ಲೋ ಭ್ರಮೆಯಲ್ಲೋ ಅಥವಾ ವೈಚಾರಿಕ ಸಂಕಲ್ಪದಲ್ಲೋ ಮೂರ್ತಿ ಮತ್ತೆ ತೇಲತೊಡಗಿದರು. ಶ್ರೀಧರ ಅವರ ಮರ್ಮವೊಂದನ್ನೆ ಮೀಟಿ ಬಿಟ್ಟಿದ್ದ. ತನಗೆ ದೇವರ ಬಗ್ಗೆ ಅಷ್ಟೇಕೆ ಹುಚ್ಚು? ಅವನು ಇಲ್ಲವೆಂದು ಹೇಳುವ ಮತ್ತೆ ಮತ್ತೆ ಅದನ್ನು ಪ್ರತಿಪಾದಿಸುವ ಹುಚ್ಚು? ಕಣ್ಣು ಬಿಟ್ಟರು. ಸದ್ಯ, ದೊಡ್ದ ಕತ್ತಲೆಯ ಖಾಂಡಲಿ ಮುಳುಗಿಬಿದ್ದಂತೆ, ಅದರಲ್ಲೂ ತಾವು ಕೆಳಗೆ ಸಿಕ್ಕಿದಂತೆ. +ಈಚೀಚೆಗೆ ದೇವರು ಅವರಿಗೆ ನಿಜವಾಗ ತೊಡಗಿದ್ದ. ಆದರೆ, ಅವರು ಅವನನ್ನು ತಮ್ಮ ಶತ್ರು ಎಂದು ಭಾವಿಸತೊಡಗಿದ್ದರು. ಅಷ್ಟೆ ಬರೇ ನಾಸ್ತಿಕ ಸಾಹಿತ್ಯ ಓದಿ ಅದನ್ನೇ ಮತ್ತೆ ಭಾಷೆಯಲ್ಲಿ ಇಳಿಸುವ ತನಕ ಅವರಿಗೆ ಯಾವ ಸಮಸ್ಯೆಯೂ ಕಂಡಿರಲಿಲ್ಲ. ಆದರೆ, ಈಚೆಗೆ ತೀರಾ ಸ್ವಂತದ್ದೆ ಏನಾದರೂ ಹೇಳಬೇಕು ಎನ್ನಿಸಿ ಧಾರ್ಮಿಕ ಸಾಹಿತ್ಯವನ್ನು, ಅನುಭಾವಿ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡ ಹತ್ತಿದರು. ಅದರಿಂದ ಆದ ಪರಿಣಾಮ ಮಾತ್ರ ಬೇರೆಯೇ ಆದ ರೀತಿಯದಾಗಿತ್ತು. ಹೊರಗೆ ಹೇಳುತ್ತಿದ್ದ ವಾಕ್ಯಗಳು ಹಳೆಯವೇ ಆಗಿದ್ದರೂ, ಅದಕ್ಕೆ ಹೊಸ ರೀತಿ ತೀವ್ರತೆ, ಅರ್ಥ ಬಂದು ಬಿಟ್ಟಿತು. ಇದನ್ನು ಕೇಳುತ್ತಿದ್ದ ಅವರ ಅಭಿಮಾನಿಗಳಿಗೆ ರೋಮಾಂಚನವಾಗುತ್ತಿತ್ತು. ಆದರೆ, ಅವರು ಅದನ್ನು ಗ್ರಹಿಸುತ್ತಿದ್ದ ರೀತಿಗೂ, ತಮಗೂ ಒಂದು ಸೂಕ್ಷ್ಮವಾದ ವ್ಯತ್ಯಾಸವೇನೋ ಬಂದು ಬಿಟ್ಟಿದೆ ಎಂದು ಮಾತ್ರ ಅವರಿಗೆ ಗೊತ್ತಾಗಿತ್ತು. ಅದೇನು, ಅದರ ಸ್ವರೂಪದ ಸೂಕ್ಷ್ಮತೆಗಳ ಬಗೆಗೆ ಮಾತ್ರ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಅದರ ಬಗ್ಗೆ ಯೋಚಿಸಲು, ತರ್ಕೀಕರಿಸಲು ಕೂಡಾ ಹೆದರುತ್ತಿದ್ದರು. ಭಾವನಾ ಜಗತ್ತಿನ ಸೂಕ್ಷ್ಮ ವ್ಯತ್ಯಾಸವಾಗಿ ಪ್ರಾರಂಭವಾದದ್ದು, ಅದು ಅಂತಿಮವಾಗಿ ಬೌದ್ಧಿಕ ಜಗತ್ತಿಗೂ ಇಳಿಯುತ್ತಿದ್ದುದು ಅವರಿಗೂ ಅನುಭವಕ್ಕೆ ಬಂದಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ಮಾತ್ರ ಸಿದ್ಧರಾಗಿರಲಿಲ್ಲ. ನಿದ್ರೆ ಏಕೋ ಭೀಕರವಾಗತೊಡಗಿತು. +ಕಣ್ಣು ಬಿಟ್ಟು ನೋಡಲು ಪ್ರಯತ್ನಿಸಿದರು. ಮೂಲೆಯಲ್ಲಿನ ಕುರ್ಚಿಯಲ್ಲಿ ಯಾರೋ ಕೂತಹಾಗಿತ್ತು. ಅಸ್ಪಷ್ಟ ಆಕಾರ, ಬೆಚ್ಚಿ ಅವರು ಯಾರು, ಯಾರದು ಎಂದರು. ಟಕ್, ಬೆಳಕು ಬಂತು. ಕೂತಿದ್ದವಳು ಕಲಾ. +’ನೀನು ಯಾಕೆ ಬಂದೆ, ಯಾವಾಗ ಬಂದೆ, ಹೇಗೆ….’ ಮಾತು ಒಂದೇ ಸಮವಾಗಿ ಹೊರಡುತ್ತಿತ್ತು. ಹೊರಡದೆ ಒದ್ದಾಡುತ್ತಿತ್ತು. +’ಸುಮ್ಮನೆ ಬಿದ್ಕೊಳಿ, ಸುಸ್ತು ಮಾಡಿಕೋ ಬೇಡಿ, ಪ್ರಶ್ನೆ ಕೇಳಿ. ಯಾಕೆ ಬಂದೆ ಅಚಿದ್ರೆ…. ಇಷ್ಟು ದಿನ ಜತೇಲಿ ಮಲಗಿಸಿಕೊಂಡು ಈಗ ಬೇಡ ಅಂದ್ರೆ ಹೋಗಿ ಬಿಡ್ತೀನಾ’. ಧ್ವನಿಯಲ್ಲಿ ಕಾಠಿಣ್ಯವಿತ್ತು. ನಿರ್ಧಾರವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಏನೋ ಒಂದು ಬಗೆಯ ಒಳಸಂಚಿದ್ದಹಾಗಿತ್ತು. +’ಏನೇ ಹಾಗಂದ್ರೆ, ಬಿಟ್ಟಿ ಮಲಗಿದಿಯೇನು ನೀನು, ಇಲ್ವಲ್ಲಾ. ದುಡ್ದು ತಗೊಂಡಿಲ್ವಾ’ ಮೆತ್ತಗೆ ಈ ಮಾತು. ಗಟ್ಟಿಯಾಗಿ ಹೇಳಲು ಸಾಧ್ಯವಾಗಲಿಲ್ಲ. ತಾನು ಎಷ್ಟೇ ಚೀರಿ ಹೇಳಿದರೂ ಕಲಾಳ ಗಂಟಲು ಅದನ್ನು ಮೀರುತ್ತದೆಂದು ಮೂರ್ತಿಗೆ ಚೆನ್ನಾಗಿ ಗೊತ್ತು. ಕಲಾ ಧಡಕ್ಕನೆ ಎದ್ದಳು. ಎದ್ದು ಧಡಧಡನೆ ಹೆಜ್ಜೆ ಹಾಕಿ ಬಂದು ಜುಟ್ಟು ಹಿಡಿದಳು. +’ಈವತ್ತು ತಾನೇ ಅಬಾರ್ಷನ್ ಮಾಡಿಸಿಕೊಂಡು ಬಂದಿದೀನಿ. ಸೀದಾ ಆಸ್ಪತ್ರೆಯಿಂದ್ಲೇ ಬರ್ತಿದೀನಿ ತಿಳ್ಕೊ’ – ಮೂಸುವಂತೆ ಮೈಯನ್ನು ಇನ್ನಷ್ಟು ಹತ್ತಿರ ಒಡ್ಡಿದಳು. ಆಸ್ಪತ್ರೆಗೆ ಮಾತ್ರ ವಿಶಿಷ್ಟವಾದ ಅನೇಕ ವಾಸನೆಗಳು ಬಂದು ಆವರಿಸಿಬಿಟ್ಟವು. ಅದು ನಿಜವಾಗಿ ಆಸ್ಪತ್ರೆಯ ವಾಸನೆಗಳೇ, ಅಥವಾ ತಮ್ಮ ಭ್ರಮೆಯೇ ಎನ್ನುವುದನ್ನು ತಿಳಿಯುವ ಶಕ್ತಿ ಮೂರ್ತಿಗೆ ಹೊರಟು ಹೋಗಿತ್ತು. +***** +ಕೀಲಿಕರಣ: ಎಂ ಆರ್ ರಕ್ಷಿತ್ +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […] +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_176.txt b/Kannada Sahitya/article_176.txt new file mode 100644 index 0000000000000000000000000000000000000000..e632430acd47b6204e8f0858c8bf112649687b90 --- /dev/null +++ b/Kannada Sahitya/article_176.txt @@ -0,0 +1,186 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಧನ್ಯತೆಯ ಧ್ಯಾಸ +ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ ಈ ಮಣೆ ಹತ್ತಿ ಪ್ಲಾವಿತಳಾಗಿ, ತುಸು ಭಾವುಕಳೂ ಆಗಿ ನಿಂತಿದ್ದೇನೆ. ಮೂಡಬಿದಿರೆಯ ಈ ಮಂಜುಳ ಹರ್ಷಾಭಿಷೇಕದ ಮಂಗಳಮಯ ಸಮ್ಮೇಳನ ನನಗೆ ಪುರಾಣಗಳು ಹೇಳುವ ದೇವಪುಷ್ಪ ವೃಷ್ಟಿಯ ಪುಳಕಾನುಭವವೂ ಆಗುತ್ತಿದೆಯೆಂದು ಪ್ರಾಂಜಲವಾಗಿ ನಿವೇದಿಸುತ್ತೇನೆ. +ನನ್ನ ನಿಡುಬಾಳಿನಲ್ಲಿ ಕಂಡುಂಡ ಋತಸತ್ಯಗಳನ್ನು, ನಂಬಿ ನಡೆದ ಸಿದ್ಧಾಂತಗಳನ್ನು, ಯೋಗ್ಯ ಹಾಗೂ ಮೌಲಿಕವೆಂದು ಹೊಳೆದ ಚಿಂತನೆಗಳನ್ನು ಮನಬಿಚ್ಚಿ ನುಡಿಯಲು ನೀವೆಲ್ಲ ಸ್ಫೂರ್ತಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ಎಲ್ಲ ವಿಷಯಗಳನ್ನು ಕುರಿತು ಹೇಳುವ ಪ್ರಜ್ಞಾಪ್ರಭುತ್ವವಾಗಲಿ ಸರ್ವಜ್ಞತ್ವವಾಗಲಿ ನನಗೆ ಇಲ್ಲ. ನಾನು ಬಲ್ಲ ಹಾಗೂ ಗ್ರಹಿಸಿದ ವಿಚಾರಗಳನ್ನು ನಿರೂಪಿಸುವಾಗ ಕೂಡ ಸರ್ವಜ್ಞತ್ವವನ್ನು ಆರೋಪಿಸಿಕೊಂಡು ಹೂಂಕರಿಸುವ ಅಹಂಕಾರ ನನ್ನನ್ನು ಆಕ್ರಮಿಸದಿರಲಿ. +ಅಧ್ಯಕ್ಷಭಾಷಣದ ಆರಂಭದಲ್ಲಿಯೇ ಹೇಳಬೇಕಾದ ಕೆಲವು ಸಂಗತಿಗಳನ್ನು ಮೊದಲು ಪ್ರಸ್ತಾಪಿಸುತ್ತೇನೆ. ನಾನು ನಿಂತಿರುವ ವೇದಿಕೆಗೆ ಹೆಸರಿಟ್ಟಿರುವ ಮಹಾಕವಿ ರತ್ನಾಕರವರ್ಣಿಗೂ ನನ್ನ ಅಧ್ಯಯನ-ಅಧ್ಯಾಪನ ಶಿಸ್ತಿಗೂ ಅರ್ಧಶತಮಾನದ ಬೆಸುಗೆಯಿದೆ. ಪ್ರೌಢಶಾಲೆಯಲ್ಲಿ ಭರತೇಶ ವೈಭವದ ಸಾಂಗತ್ಯ ಪದ್ಯಗಳ ವಾಚನ ಪರಿಚಯವಾಗಿ, ಕಾಲೇಜು ತರಗತಿಯಲ್ಲಿ ಶತಕಗಳ ಹಾಗೂ ಸಮಗ್ರ ಭರತೇಶ ವೈಭವದ ಅನುಸಂಧಾನವಾಯಿತು. ಆ ಮಹಾಕಾವ್ಯವನ್ನು ೧೯೬೭ರಲ್ಲಿ ಪ್ರೊ.ಜಿ. ಬ್ರಹ್ಮಪ್ಪ, ಪ್ರೊ. ಹಂಪನಾ ಮತ್ತು ನಾನು, ಹೊಸ ಓಲೆಗರಿಗಳ ನೆರವಿನಿಂದ ಸಂಪಾದಿಸಿದ್ದೆವು. ಇದೀಗ ಅದರ ಮರುಮುದ್ರಣ ಮಾಡಿ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಈ ಸಮ್ಮೇಳನದಲ್ಲಿ ಬಿಡುಗಡೆ ಆಗುತ್ತಿದೆ. ೧೯೭೯ರಲ್ಲಿ ಡಾ. ಹಂಪನಾ ೨೩೮ ರತ್ನಾಕರನ ಹಾಡುಗಳನ್ನು ಏಕೈಕ ಹಸ್ತ ಪ್ರತಿಯ ಸಹಾಯದಿಂದ ಸಂಪಾದಿಸಿದಾಗಲೂ ನಾನು ಸಹಕರಿಸಿದ್ದೆ. ರತ್ನಾಕರನ ಕಾವ್ಯಗಳನ್ನು ಕುರಿತು ಇದೇ ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ನಡೆಸಿದಾಗಲೂ ನಾನು ಭಾಗವಹಿಸಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಏರ್ಪಾಡಾಗುತ್ತಿದ್ದ ಉಪನ್ಯಾಸಗಳಿಗೆ ಇಲ್ಲಿಗೆ ನಾನು ಆಗಮಿಸಿದ ನೆನಪು ಹಸಿರಾಗಿದೆ. ಈ ೭೧ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪೋಷಕರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಪಟ್ಟಾಭಿಷಕ್ತರಾದ ಶುಭ ದಿವಸ ಕೂಡ, ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನನ್ನನ್ನೂ ಬರಮಾಡಿಕೊಂಡಿದ್ದರು. +ಸಾವಿರ ಕಂಬದ ಬಸದಿ ಹೆಸರಿನ ಇಲ್ಲಿಯ ಉತ್ಕ ಷ್ಟ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ಮತ್ತು ಇತರ ಬಸದಿಗಳ ವಾಸ್ತುಶಿಲ್ಪದ ದರ್ಶನದಿಂದ ರೋಮಾಂಚಗೊಂಡಿದ್ದೇನೆ. ಆಳುಪರು, ಚೌಟರು, ಅಜಿಲರು ಮತ್ತು ಬಂಗರು ಹೊಂದಿದ್ದ ಧಾರ್ಮಿಕ ಶ್ರದ್ಧೆ, ಕಲಾಪ್ರೇಮವನ್ನು ಇಲ್ಲಿಯ ೧೮ ಜಿನಾಲಯಗಳಲ್ಲದೆ ಇನ್ನಿತರ ೧೮ ದೇವಾಲಯಗಳೂ ಕೆರೆಗಳೂ ಶಾಸನಗಳೂ ಸಾರುತ್ತಿವೆ. ಸಮಸ್ತ ಆಗಮ ಪರಂಪರೆಯ ಸಾರ ಸಮಸ್ತವನ್ನು ಗರ್ಭೀಕರಿಸಿದ ಧವಲ, ಜಯಧವಲ, ಮಹಾಧವಲದ ಏಕೈಕ ಸಂರಕ್ಷಿತ ಹಸ್ತಪ್ರತಿ ಇಲ್ಲಿನ ಶ್ರುತಭಂಡಾರದ ತವನಿಧಿಯಾಗಿ ಬೆಳಗಿದ್ದನ್ನೂ ಹಾಗೂ ವಿದ್ವನ್ಮಣಿಗಳಾದ ಶಾಸ್ತ್ರಿಗಳ ಪರಂಪರೆಯಿಂದ ಸುಶೋಭಿತವಾದುದನ್ನೂ, ಇನ್ನು ಎಂದೆಂದಿಗೂ ಸಿಗಲಾರದೆಂದು ತಿಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಇಲ್ಲಿನ ಶ್ರುತ ಭಂಡಾರದಿಂದ ಬೆಳಕು ಕಂಡಿತೆಂಬುದನ್ನೂ, ಕನ್ನಡ ಸಾಹಿತ್ಯ ಪರಂಪರೆಯ ಉಜ್ವಲ ದೀಪಸ್ತಂಭವಾದ ವಡ್ಡಾರಾಧನೆಯ ಪರಿಷ್ಕಾರಕ್ಕೆ ಇಲ್ಲಿನ ತಾಳೆಗರಿ ಗ್ರಂಥಗಳು ಮುಖ್ಯ ಆಕರವೆಂಬುದನ್ನೂ ಕನ್ನಡ ವಿದ್ವತ್ತು ಬಲ್ಲುದು. ಕನ್ನಡ ಸಾಹಿತ್ಯ, ಸಂಸ್ಕ ತಿ, ವಾಸ್ತು, ಶಿಲ್ಪ ಮತ್ತು ಕಲೆಗಳಿಗೆ ತನ್ನ ವಿಶಿಷ್ಟ ಕೊಡುಗೆ ನೀಡಿ ಅಕ್ಷಯ ಭಂಡಾರವೆನಿಸಿದ ಮೂಡಬಿದರೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಸರ್ವಾನುಮತದಿಂದ ಆರಿಸಿದ್ದರ ಹಿಂದೆ ಅತೀತ ಶಕ್ತಿಯೊಂದು ಪ್ರವರ್ತನಶೀಲವಾಗಿರಬೇಕೆಂದು ಊಹಿಸುತ್ತೇನೆ. ರತ್ನಾಕರವರ್ಣಿಯ ಹೆಸರಿನ ವೇದಿಕೆ ಹತ್ತಿಸಿ, ಮಹಾಕವಿಯ ಹೆಗಲಮೇಲೆ ಕೂಡಿಸಿ, ಸಾಹಿತ್ಯ ಜಗತ್ತಿಗೆ ನಾನು ಕಾಣುವಂತೆ ಅಕ್ಕರೆ ತೋರಿದವರಿಗೆಲ್ಲ ಸಾರ್ದ್ರ ಹೃದಯಳಾಗಿ ನಮಸ್ಕರಿಸುತ್ತೇನೆ. +ದಕ್ಷಿಣ ಕನ್ನಡ ಜಿಲ್ಲೆಯಂತೂ ಕರ್ನಾಟಕಕ್ಕೇ ಅಲ್ಲದೆ ಭಾರತಕ್ಕೂ ಜಗತ್ತಿಗೂ ಹಲವು ವಿಷಯಗಳಲ್ಲಿ ಮಾದರಿ. ಬಹು ಭಾಷೆಗಳವರು ಒಟ್ಟೊಟ್ಟಿಗೆ ನಗುನಗುತ್ತ ಸಾಮರಸ್ಯದಿಂದ ಬಾಳುವುದು ಸಾಧ್ಯವಿದೆ ಎಂಬ ಲಕ್ಷಣಕ್ಕೆ ಈ ಜಿಲ್ಲೆ ಲಕ್ಷ ವಾಗಿದೆ. ಅನನ್ಯ ಯಕ್ಷಗಾನ ಕಲೆಯ ತಾಯಿನೆಲ ಆಗಿರುವುದಲ್ಲದೆ ಬ್ಯಾಂಕಿಂಗ್ ಮತ್ತು ಹೋಟೆಲ್ ಉದ್ಯಮಗಳಿಗೆ ಮೇಲ್ಪಂಕ್ತಿಯಾಗಿದೆ. ಇಲ್ಲಿನ ಧರ್ಮ ಸಮನ್ವಯ, ಹೊಸದರತ್ತ ತುಡಿಯುವಿಕೆ, ಸಾಹಸಕ್ಕಾಗಿ ದೂರ ದೂರದ ಊರು-ನಾಡುಗಳಿಗೆ ದಾಂಗುಡಿಯಿಡುವ ವಿಜಗೀಷು ಪ್ರವೃತ್ತಿ ಅನುಕರಣಯೋಗ್ಯವಾದುದು. ಮುಂಬಯಿಯಲ್ಲಿರುವ ಲಕ್ಷಾಂತರ ಕನ್ನಡಿಗರಲ್ಲಿ ಬಹುಪಾಲಿನವರು ತುಳುನಾಡಿನವರು. ಪರಮದೇವಕವಿಯ ತುರಂಗಭಾರತ ಮೊದಲು ಬೆಳಕು ಕಂಡಿದ್ದು ಅಲ್ಲಿ, ತೌಳವರ ನೆರವಿನಿಂದ. ಮುಂಬಯಿ ನಗರಸಭೆ ಬ್ರಿಟಿಷರಿಗೆ ಒಪ್ಪಿಸಿದ ಮಾನಪತ್ರ ಕನ್ನಡದಲ್ಲಿದ್ದುದಕ್ಕೆ ಕಾರಣ ಇಲ್ಲಿಂದ ಅಲ್ಲಿಗೆ ಹೋಗಿ ಹೆಸರು ಮಾಡಿದ ವೀರಾಭಿಮಾನಿ ತೌಳವರು. +ಬಹುಭಾಷೆಯ ಈ ನೆಲದಲ್ಲಿ ತುಳು ಹೆಚ್ಚು ಜನರ ತಾಯಿನುಡಿ. ಕೊಂಕಣಿ ಮಾತೃಭಾಷೆಯಾಗಿರುವ ಸಹಸ್ರಾರು ಜನರಿದ್ದಾರೆ. ಬ್ಯಾರಿಗಳಿದ್ದಾರೆ. ಮೋಯ ಮಾತಾಡುವವರಿದ್ದಾರೆ. ಹೀಗೆ ಮನೆಯ ಮಾತು ತುಳುವೊ ಕೊಂಕಣಿಯೊ ಮತ್ತೊಂದೊ ಇದ್ದರೂ ಈ ಜಿಲ್ಲೆಯ ಜನರು ಶಾಲೆಯಲ್ಲಿ ಓದುವುದು ಕಲಿಯುವುದು ಬರೆಯುವುದು ಕನ್ನಡ ಭಾಷೆ. ಇವರೆಲ್ಲ ತಮ್ಮ ತುಳು ಅಥವಾ ಕೊಂಕಣಿಯಲ್ಲಿ ಪತ್ರ ಬರೆಯುವಾಗ ಬಳಸುವುದು ಕನ್ನಡ ಲಿಪಿಯನ್ನು. ಹೀಗೆ ಇಲ್ಲಿನ ಜನಪದರು ಭಾವಿಸುವುದು, ಬಾಳಿಸುವುದು ಕನ್ನಡವನ್ನು. ಮಾತೃಭಾಷೆಯಾದ ತುಳು, ಕೊಂಕಣಿಯನ್ನು ಉಳಿಸಿಕೊಂಡು ಕನ್ನಡದ ಮೇಲಾಳಿಕೆಯನ್ನು ಮಾನ್ಯಮಾಡಿದ ಇಂಥ ಹೃದಯ ಸಂಪನ್ನರ ಸಿರಿಗಂಧದ ನೆಲದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅದರ ಕೇಂದ್ರದಲ್ಲಿ ನಿಲ್ಲುವ ಗೌರವ ಪ್ರಾಪ್ತಿಗಾಗಿ ಹರ್ಷಪುಳಕಿತಳಾಗಿದ್ದೇನೆ. +ಕನ್ನಡ – ಕರ್ನಾಟಕ : ಒಳನಾಡು +ಕನ್ನಡ ನಿನ್ನೆ ಮೊನ್ನೆ ಹುಟ್ಟಿದ ಕೂಸುಕಂದಯ್ಯನಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಸಾತತ್ಯ, ಸತ್ವ ಮತ್ತು ಸತ್ಯ. ಅದರ ಬೆಳಕಿನಲ್ಲಿ ಕೋಟಿಕೋಟಿ ಕನ್ನಡಿಗರು ಬಾಳಿದ್ದಾರೆ. ಶತಮಾನಗಳ ಹಾಸಿನಲ್ಲಿ ರಾಜರು ಆಳಿದರು, ಸಾಹಿತ್ಯ ಕೃತಿಗಳು ಬೆಳಗಿದುವು. ಸಂಸ್ಕ ತ, ಪ್ರಾಕೃತಗಳ ಶ್ರೇಷ್ಠ ಕಾವ್ಯಗಳ ಸಾರಸಮಸ್ತವನ್ನೂ ಹೀರಿ ಸೂರೆ ಮಾಡಿ ಅದನ್ನು ಕನ್ನಡದ ಕಾಲುವೆಯಲ್ಲಿ ಹರಿಸಿದರು. (ಇದೇ ತತ್ವ ಇಂಗ್ಲಿಷ್ ಹಾಗೂ ಇತರ ವಿದೇಶೀಯ ಭಾಷೆಗಳಿಗೂ, ತಮಿಳು ತೆಲುಗು ಬಂಗಾಳಿ ಮರಾಠಿ ಹಿಂದಿ ಮೊದಲಾದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕು). ಸಂಸ್ಕ ತ ಪ್ರಾಕೃತಗಳಿಗೆ ಕನ್ನಡ ಎಲ್ಲ ರೀತಿಯಲ್ಲೂ ಸರಿಸಮವೆಂದು ತೋರಿಸಿದ ಆದ್ಯರು ಶ್ರಮಣರು, ಶರಣರು, ದಾಸರು. ಅವರೆಲ್ಲ ಕನ್ನಡದಲ್ಲಿ ಭಾವಿಸಿ ಅನುಭವಿಸಿದರಲ್ಲದೆ ಕನ್ನಡಕ್ಕಿರುವ ಅಗಾಧ ಹಸಿವು, ಜೀರ್ಣಶಕ್ತಿ ಮತ್ತು ಅಸ್ಮಿತೆಯನ್ನು ತೋರಿಸಿದರು. ಕನ್ನಡದ ಮೂಲಕ ದುಃಖ ದುಮ್ಮಾನ ತೋಡಿಕೊಂಡರು, ಸುಖ ಸುಮ್ಮಾನ ಪಡೆದರು. ಮಾತೃ ಭಾಷೆಯನ್ನು ಸಂಪನ್ನಗೊಳಿಸಿದರು. ಕುತ್ತಿಗೆಯವರೆಗೆ ಬಂದ ಕುತ್ತಗಳಿಂದ ಕನ್ನಡವನ್ನು ಬದುಕಿಸಿದ ಮೃತ್ಯುಂಜಯರವರು. ಚಿರಂಜೀವ ಕೃತಿಗಳ ಅಮೃತ ಕಲಶ ತಂದ ವೈನತೇಯರವರು. +ಭಾಷೆಯ ಸಂರಚನೆಯಲ್ಲಿ ತರಬಹುದಾದ ಸುಧಾರಣೆಯ ದಿಕ್ಕಿನತ್ತ ಹೊರಟವರು ಸಹಜ ಪ್ರಕ್ರಿಯೆಯಿಂದ ಕೂಡಿದ ವ್ಯತ್ಯಾಸಗಳನ್ನು ಚಿಂತಿಸುವಾಗ ಮೂಲ ಬೇರು, ಬುಡ ಒಣಗದಂತೆ, ಅದರ ಪಸಿಮೆ ಇರುವಂತೆ ನೋಡಿಕೊಳ್ಳುವುದೂ ಮುಖ್ಯವೆ. ಕನ್ನಡ ಭಾಷೆ ಯಾವತ್ತೂ ನಿಂತ ನೀರಾಗದೆ ಹರಿಯುವ ತೀರ್ಥವಾಗಿದೆ. ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಇಂಗ್ಲಿಷ್ ಶಬ್ದಗಳು ವಿಲೀನಗೊಳ್ಳುವ ಪ್ರಕ್ರಿಯೆ ದಟ್ಟವಾಗುತ್ತದೆ. ಕನ್ನಡದ ಕುಂದಣದಲ್ಲಿ ಅನೇಕ ಇಂಗ್ಲಿಷ್ ಹರಳುಗಳನ್ನು ಈಗಾಗಲೆ ಕೂಡಿಸಲಾಗಿದೆ. ಕನ್ನಡ ನಿಘಂಟಿನಲ್ಲಿ ಸಾವಿರಾರು ಇಂಗ್ಲಿಷ್ ಮಾತುಗಳು ಕೋದುಕೊಂಡಿವೆ. ಪ್ರಾಕೃತ ಮತ್ತು ಸಂಸ್ಕ ತ ಶಬ್ದಗಳು ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆಯುವ ಕಾರ್ಯ ಹತ್ತನೆಯ ಶತಮಾನದ ವೇಳೆಗೆ ಪೂರೈಸಿತ್ತು. ನಡುಗನ್ನಡದ ಕಾಲಘಟ್ಟದಲ್ಲಿ ಅರಬ್ಬಿ ಮತ್ತು ಪಾರಸಿ ಭಾಷೆಗಳ ಪ್ರಭಾವವನ್ನು ಕನ್ನಡ ಅರಗಿಸಿಕೊಂಡಿತು. ಕನ್ನಡ-ಇಂಗ್ಲಿಷ್ ಭಾಷಾಸಂಕರ ಇನ್ನೂರು ವರ್ಷಗಳಿಂದ ಆಮೆವೇಗದಿಂದ ಆರಂಭವಾಗಿ ಇದೀಗ ಮೊಲದ ವೇಗ ಪಡೆಯುತ್ತಿದೆ. ಈ ಕನ್ನಡ ಇಂಗ್ಲಿಷ್ ಬೆರಸಿದ ‘ಕಂಗ್ಲಿಷ್’ ಬಳಕೆ ಹಳ್ಳಿಗಳವರೆಗೆ ದಾಂಗುಡಿಯಿಟ್ಟಿದೆ. ಅರಬ್ಬಿ, ಪಾರಸಿ, ಇಂಗ್ಲಿಷ್, ಹಿಂದಿ ಬೆರಸಿದ ‘ಹಿಂಗ್ಲಿಷ್’ಬೇರೆ ಚಾಲ್ತಿಯಲ್ಲಿದೆ. ಇವೇನೂ ಗಾಬರಿಯ ವಿಷಯಗಳಲ್ಲ. ಭಾಷೆಯಲ್ಲಿ ಮಡಿವಂತಿಕೆಗೆ ಜಾಗವಿಲ್ಲ ಎಂಬುದು. ನಿತ್ಯದ ವ್ಯವಹಾರಕ್ಕೆ ಅನಿವಾರ್‍ಯವಾದ ಹೊಸ ಶಬ್ದಗಳು ಬರಲಿ. ಆದರೆ ಅನಗತ್ಯವಾಗಿ ಇದನ್ನು ಉತ್ತೇಜಿಸಬಾರದು, ನಮ್ಮಲ್ಲಿರುವ ಮಾತುಗಳನ್ನು ಮೂಲೆಗೊತ್ತಿ ಅನಗತ್ಯವಾಗಿ ಅನ್ಯಭಾಷೆಯ ಶಬ್ದಗಳನ್ನು ಬಳಸುವುದನ್ನು ಖಂಡಿಸಬೇಕು. +ಸಾಹಿತಿಗಳಲ್ಲದೆ ವಿಶೇಷವಾಗಿ ಜನಸಾಮಾನ್ಯರು ಕನ್ನಡವನ್ನು ಸಾವಿರಾರು ವರ್ಷಗಳಿಂದ ಸಲಹಿದ್ದಾರೆ. ಅವರ ಅಸೀಮ ಅಕ್ಕರೆಯಿಂದಾಗಿ ಇಂದಿಗೂ ಕನ್ನಡ ಕೋಟಿಕೋಟಿ ಜನರ ತಾಯ್ನುಡಿಯಾಗಿದೆ. ಜನಮನ ತನ್ನ ನಾಡು ನುಡಿ ಪ್ರೇಮವನ್ನೂ ನುಡಿಜಾಣರಿಗೆ ಹೆಚ್ಚಿನ ಮನ್ನಣೆಯನ್ನೂ ಬಗೆ ಬಗೆಯಲ್ಲಿ ಪ್ರಕಟಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ವಿಸೀ ಮೊದಲಾದವರ ಹೆಸರುಗಳನ್ನು ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಿದ್ದಾರೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಕನ್ನಡಿಗರ ಈ ಉತ್ಕಟ ನಾಡುನುಡಿ ಅಭಿಮಾನ, ನುಡಿಜಾಣರಿಗೆ ನಮನ ಅನನ್ಯವೆನಿಸುವಷ್ಟಿದೆ. ಕುರಿತೋದದ ಜನರೂ ಪರಂಪರೆಗೆ ಪ್ರಾಂಜಲವಾಗಿ, ಒಮ್ಮೊಮ್ಮೆ ಅತಿಭಾವುಕವೆನಿಸುವಷ್ಟು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ. +ಕನ್ನಡಕ್ಕೆ ಸಾರ್ವಭೌಮಸ್ಥಾನ ಇರಬೇಕೆಂಬುದಕ್ಕೆ ಯಾವ ರಾಜಕೀಯ ಪಕ್ಷವೂ ವಿರೋಧವಾಗಿಲ್ಲ. ಕನ್ನಡವನ್ನು ಬಾಲವಾಡಿ ಮತ್ತು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕೆಂಬುದನ್ನು ಉತ್ರೆ ಕ್ಷಿಸಬೇಕಾಗಿಲ್ಲ. ಕನ್ನಡದ ಕಾಳುಗಳನ್ನು ಮಕ್ಕಳ ಮನಸ್ಸಿನ ಹೊಲದಲ್ಲಿ ಬಿತ್ತಬೇಕು. ಚಿಕ್ಕವರಿಗೆ ಪ್ರಾಮುಖ್ಯ ಕೊಡುವುದನ್ನು ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ. ಅಬ್ದುಲ್ ಕಲಾಮರಿಂದ ಕಲಿಯಬೇಕು. ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡದಿಂದ ಕಿತ್ತು ಬೇರೆ ಕಡೆ ನಾಟಿ ಮಾಡಲಾಗುತ್ತಿದೆ. ಕಿರಿಯ ಪ್ರಾಥಮಿಕ ತರಗತಿಯಿಂದ ಕನ್ನಡ ಪಠ್ಯ ಕಡ್ಡಾಯವಾಗುವುದು ಸಮಂಜಸವಾದ ನಿರ್ಧಾರ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಂತೂ ಇದು ಅತ್ಯಗತ್ಯ. ಕನ್ನಡ ಕಲಿಕೆ ಕಡ್ಡಾಯವಾಗುವುದರೊಂದಿಗೆ ಅದನ್ನು ಕಾಟಾಚಾರವಾಗಿ ಕಲಿಸಿದಂತೆ ಕಣ್ಣೊರಸುವುದಾಗಬಾರದು. +ಕನ್ನಡ ಕಲಿಸದಿದ್ದರೆ ಎಲ್ಲ ಕಾನ್ವೆಂಟುಗಳನ್ನೂ ಇಂಗ್ಲಿಷ್ ಮಾಧ್ಯಮಶಾಲೆಗಳನ್ನೂ ಸರ್ಕಾರ ತಕ್ಷಣ ರಾಷ್ಟ್ರೀಕರಣಗೊಳಿಸಿ ತನ್ನ ಆಡಳಿತ ಕಕ್ಷೆಗೆ ತೆಗೆದುಕೊಳ್ಳುವುದು ಸೂಕ್ತ. ಕನ್ನಡ ಶಾಲೆಗಳ ಸ್ಥಿತಿಗತಿ ಆಮೂಲಾಗ್ರವಾಗಿ ಸುಧಾರಣೆಯಾಗುವ ಜರೂರಿದೆ. ವಿದ್ಯೆ ಇಂದು ವಾಣಿಜ್ಯವಾಗಿದೆ. ಸಂಪಾದನೆಗೆಂದು ಹೋಟೆಲೊ ಅಂಗಡಿಯೊ ಕಲ್ಯಾಣಮಂಟಪವೊ ಪ್ರಾರಂಭ ಮಾಡುವುದಕ್ಕಿಂತ ಇಂಗ್ಲಿಷ್ ಮಾಧ್ಯಮಶಾಲೆ ತೆರೆಯುವುದು ಧಿಡೀರ್ ಧನಾಢ್ಯತೆಗೆ ರಾಜಮಾರ್ಗ. ಅದರಿಂದ ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗೆ ಸುಲಭವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕನ್ನಡಶಾಲೆಗಳ ದುಸ್ಥಿತಿ ಕಣ್ಣಿಗೆ ಬಡಿಯುತ್ತದೆ. ಈ ದುರವಸ್ಥೆಯನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ. ಇಂಗ್ಲಿಷ್ ಶಾಲೆಗಳಿಗಿಂತ ಕನ್ನಡಶಾಲೆಗಳು ಶುಭ್ರವಾಗಿದ್ದು ಸಮವಸ್ತ್ರವೂ ಜಾರಿಗೆ ಬರಲಿ ಎಂಬುದು ಕನ್ನಡಪರ ಚಿಂತಕರ ಅಪೇಕ್ಷೆ. +ಬಾಲವಾಡಿಯಿಂದ ಸ್ನಾತಕೋತ್ತರದವರೆಗೆ, ಅಡಿಯಿಂದ ಹಿಡಿದು ಮುಡಿಯತನಕ ಇಂಗ್ಲಿಷ್ ಮಾಧ್ಯಮದ್ದೇ ದರಬಾರು. ‘ತುರ್ತುನಿಗಾ ಕೊಡಬೇಕಾದ ಆಲಯ’ದೊಳಗೆ ದೂಡಿರುವ ಕನ್ನಡ ಮಾಧ್ಯಮಕ್ಕೆ ಆಮ್ಲಜನಕವಿತ್ತು ಉಳಿಸಬೇಕಾಗಿ ಬಂದಿದೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಆಳುತ್ತಿದ್ದಾಗ ಕನ್ನಡಕ್ಕೆ ಇದ್ದ ಶೈಕ್ಷಣಿಕ ಸ್ಥಾನ ಮನ್ನಣೆ, ನಮ್ಮವರೇ ಆಳುವ ಸಂದರ್ಭದಲ್ಲಿ ತಪ್ಪಿಹೋಗಿರುವುದು ವಿಪರ್ಯಾಸ. +ಇಂಗ್ಲಿಷ್ ಎಂಬುದು ಅಧಿಕಾರ, ಘನತೆ, ಗೌರವ, ಮನ್ನಣೆ, ಪ್ರತಿಷ್ಠೆ ಹಾಗೂ ಪ್ರಚಾರ ಇರುವ ಹಾಗೂ ಹೆರುವ ಭಾಷೆಯೆಂಬ ಪ್ರತೀತಿ ಪ್ರಬಲವಾಗಿ ಹಬ್ಬಿದೆ. ಕನ್ನಡಕ್ಕೆ ಕೀಳರಿಮೆ ಅಂಟಿಕೊಂಡಿದೆ. ಇದು ಸರಿದೂಗಬೇಕಾದರೆ ಇರುವ ದಾರಿ ಒಂದೇ, ಇಂಗ್ಲಿಷಿನ ಸ್ಥಾನಮಾನವನ್ನು ಕನ್ನಡವೂ ಕರ್ನಾಟಕದಲ್ಲಿ ಪಡೆಯಬೇಕು. ಕನ್ನಡವನ್ನು ಪುಷ್ಟವಾಗಿಸುವ ಸಬಲೀಕರಣದ ಕೆಲಸ ನಮ್ಮಿಂದಲೇ ಆಗಬೇಕು. ಮಕ್ಕಳಿಗಿಂತ ಹೆಚ್ಚಾಗಿ ತಾಯಿತಂದೆ ನೆಂಟರು ಇಂಗ್ಲಿಷನ್ನು ಧ್ಯಾನಿಸುತ್ತಾರೆ. ಇಂಗ್ಲಿಷಿಗೆ ಅಧಿಕಾರಾರೂಢರ ಕುಮ್ಮಕ್ಕಿನೊಂದಿಗೆ ಬಂಡವಾಳಶಾಹಿಗಳ ಬೆಂಬಲವಿದೆ. ದೇಸೀಯ ಸಂಸ್ಕ ತಿಯ ಬುಡಕ್ಕೆ ಸಿಡಿಲು ಬಡಿಯಲು ಬಿಡಬಾರದು. ಇಂಗ್ಲಿಷು ವಸಾಹತುಶಾಹಿಯ ಪರಿಣಾಮವಾಗಿ ತಲೆಯೆತ್ತಿತ್ತು. ಇಂಗ್ಲಿಷನ್ನು ನಿರಾಕರಿಸುವುದು ಸಾಧುವಲ್ಲ, ಸಾಧ್ಯವಿಲ್ಲ. ಜ್ಞಾನದ ಆ ಕಿಟಕಿಯನ್ನು ಮುಚ್ಚಬೇಕಾಗಿಲ್ಲ. ಸಾಹಿತ್ಯ ಎಲ್ಲರಿಗೂ ಅಲ್ಲ ಎಂದು ಸರ್ವಜ್ಞ ಹೇಳಿದ ಹಾಗೆ, ಇಂಗ್ಲಿಷು ಎಲ್ಲರಿಗೂ ಅಲ್ಲ. ಅದು ಕೆಲವರಿಗಷ್ಟೇ ಬೇಕು. ಆ ಕೆಲವರಿಗಾಗಿ ಕೋಟ್ಯಂತರರು ಗೊಬ್ಬರವಾಗಬೇಕಾಗಿಲ್ಲ. ಕನ್ನಡವನ್ನು ಬಿಡದೆ ಇಂಗ್ಲಿಷ್ ಶಿಕ್ಷಣ ಬಯಸುವವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲ ಪರ್‍ಯಾಯ ಅನುಕೂಲಗಳಿರಲಿ. +ಬಹು ಭಾಷೆಗಳ ಭಾರತದಲ್ಲಿ ಶಿಷ್ಟ, ಪ್ರತಿಷ್ಠಿತ ಎಂದು ಮಾನ್ಯತೆ ಪಡೆದ ಸಾಹಿತ್ಯಕ ಭಾಷೆಗಳು ಸಾಕಷ್ಟಿವೆ. ಕೇಂದ್ರ ಸಾಹಿತ್ಯ ಅಕಾದೆಮಿ ಡೋಗ್ರಿ, ಮೈಥಿಲೀ, ರಾಜಸ್ತಾನಿ ಮತ್ತು ಸಿಂಧಿ ಭಾಷೆಗಳೂ ಸೇರಿ ೨೨ ಭಾಷೆಗಳಿಗೆ ಮಣೆಹಾಸಿದೆ. ಭಾರತದ ಯಾವೊಂದು ಅಧಿಕೃತ ಮನ್ನಣೆ ಪಡೆದ ಭಾಷೆಯಲ್ಲಿ ಬರೆದರೂ ಲೇಖಕರು ಪ್ರಾದೇಶಿಕರಾಗಿ ಪರಿಣಿತರಾಗುತ್ತಾರೆ. ಪ್ರಾದೇಶಿಕ ಪ್ರಗತಿಗೆ ಕೊಡುವ ಆದ್ಯತೆ ಅರಾಷ್ಟ್ರೀಯವಲ್ಲ. ವಿಚಿತ್ರವೆಂದರೆ ಯೂರೋಪು ರಾಷ್ಟ್ರಗಳಲ್ಲಿ ವ್ಯವಹಾರದಲ್ಲಿರುವ, ನಮಗಿಂತ ಬಹಳ ಕಡಿಮೆ ಸಂಖ್ಯೆಯ ಜನರಾಡುವ ಭಾಷೆಯಲ್ಲಿ ಬರೆದರೂ “ರಾಷ್ಟ್ರೀಯ ಲೇಖಕ”ರೆಂಬ ಮಾನ್ಯತೆಗಳಿಸುತ್ತಾರೆ. ಹಿಂದಿಯಲ್ಲಿ ಬರೆದವರಿಗೆ ಸಿಗುವ ಪ್ರಸಾರ-ಪ್ರಚಾರ ಹಿಂದಿಯೇತರ ಭಾರತೀಯ ಭಾಷೆಗಳವರಿಗೂ ಸಿಗಬೇಕು. ಇನ್ನೂ ವಿರೋಧಾಭಾಸವೆಂದರೆ, ಭಾರತದಲ್ಲಿಯು, ಕೇವಲ ಶೇಕಡಾ ಇಬ್ಬರು ಮಾತಾಡುವ ಇಂಗ್ಲಿಷ್ ಭಾಷೆಯಲ್ಲಿ ಬರೆದವರಿಗೆ ಬಹುದೂರದವರೆಗೆ, ಭಾರತವೇ ಅಲ್ಲದೆ ಅದರ ಆಚೆಗೂ ಚಾಚಿಕೊಳ್ಳುವ ಅವಕಾಶವಿದೆ. ಇದು ಇಂದು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಬರೆಹಗಾರರಿಗೆ ಇರುವ ವ್ಯಾಪ್ತಿಯ ಮಿತಿ ಮತ್ತು ಸವಾಲು. ಲೇಖಕರು, ಅದರಲ್ಲಿಯೂ ಲೇಖಕಿಯರು, ಈ ಪ್ರಸಾ(ಚಾ)ರ ಪ್ರವಾಹದ ಎದುರು ಈಜಿ, ದಾಟಿ “ರಾಷ್ಟ್ರೀಯ ಭಾಷೆ”, “ರಾಷ್ಟ್ರೀಯ ಸಾಹಿತಿ” ಎಂಬ ಎರಡು ಮಿಥ್‌ಗಳನ್ನು ಮೀರಬೇಕಾದ ದೊಡ್ಡ ಸವಾಲಿದೆ. +ಕನ್ನಡ : ಗಡಿನಾಡು, ಹೊರನಾಡು +ಕನ್ನಡನಾಡು ಎಂದು ಹೇಳಿದಾಗ ಅದು ಬರಿಯ ಭೌತಿಕ ಜಗತ್ತಲ್ಲ. ಕನ್ನಡ ಎನ್ನುವುದು ಐದುಕೋಟಿ ಕನ್ನಡಿಗರ ಭಾವಪ್ರಪಂಚ. ಭಾವಜಗತ್ತಿನ ಮುಂದೆ ಮೂರುಲೋಕ ಕೂಡ ಹುಲ್ಲು ಕಡ್ಡಿ. ಹೊರನಾಡ ಕನ್ನಡಿಗರ ಕಡೆ ನಿಗಾ ಇರುವುದು ಅವಶ್ಯಕ. ಮಹಾರಾಷ್ಟ್ರದಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ದೆಹಲಿಯಲ್ಲಿ ಇರುವಂತೆ ಮುಂಬಯಿಯಲ್ಲಿಯೂ ಕರ್ನಾಟಕ ಸರಕಾರದ ಒಡೆತನವಿರುವ ಒಂದು ಕನ್ನಡ ಭವನ ಅವಶ್ಯವಿದೆ. ಒಳನಾಡಿನ ಚಟುವಟಿಕೆಯೊಂದಿಗೆ ಸಾಂಸ್ಕ ತಿಕ ಸಂಪರ್ಕ ಸದಾ ಜೀವಂತವಾಗಿದ್ದರೆ ಅಲ್ಲಿ ಕನ್ನಡ ಬಳಗ ಬಾಡುವುದಿಲ್ಲ. ಒಂದು ಕಾಲಕ್ಕೆ ಕನ್ನಡ ಶಾಲೆಗಳು ಮುಂಬಯಿಯಲ್ಲಿ ನೂರಾರಿದ್ದುವು. ಈಗಲೂ ಮುಂಬಯಿಯ ನಗರಪಾಲಿಕೆ ನೆರವಿನಿಂದ ೬೩ ಕನ್ನಡ ಶಾಲೆಗಳು ನಡೆಯುತ್ತಿವೆ. ಆದರೆ ಭಾರತದ ಎಲ್ಲ ಪ್ರಾಂತಗಳಂತೆ ಇಲ್ಲಿಯೂ ಇಂಗ್ಲಿಷ್ ಶಾಲೆಗಳು ಹಬ್ಬುತ್ತ ಕನ್ನಡಶಾಲೆಗಳನ್ನು ಕಬಳಿಸುತ್ತಿವೆ. ಗೋವಾದಲ್ಲಿ ಇಂದಿಗೂ ಕನ್ನಡ ಶಾಲೆಗಳಿವೆಯಾದರೂ ಅವರಿಗೆ ಬೇಕಾದ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಕನ್ನಡ ಪಠ್ಯಗಳನ್ನು ಉಚಿತವಾಗಿ ಪೂರೈಸುವ ಮೂಲಕ ಅಲ್ಲಿ ಕನ್ನಡದ ಕಲಿಕೆ ಬತ್ತದಂತೆ ನಿಲ್ಲಿಸಬಹುದು. ಮುಂಬಯಿ, ಕಾಸರಗೋಡು ಕನ್ನಡಿಗರ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನಲ್ಲಿದ್ದಾರೆ. ಇದರಂತೆ ಎಲ್ಲ ಅಕಾಡೆಮಿಗಳಲ್ಲಿಯೂ ಒಬ್ಬೊಬ್ಬರು ಸದಸ್ಯರು ಇರುವುದು ಸೂಕ್ತ. ಗೋವಾಕ್ಕೂ ಒಂದು ಪ್ರಾತಿನಿಧ್ಯವಿರಲಿ. ಸಾಂಸ್ಕ ತಿಕ ಪರಂಪರೆಯ ಬೇರುಗಳ ಪಸಿಮೆ ಒಣಗದೆ ಇರಬೇಕಾದರೆ ಇಲ್ಲಿಂದ ಗೊಬ್ಬರ ನೀರು ಸರಬರಾಜು ನಿಲ್ಲಬಾರದು. ತೇವ ಇದ್ದರೆ ಜೀವ ಉಸಿರಾಡುತ್ತಿರುತ್ತದೆ. +ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕೆ ಆದ್ಯತೆ ಕೊಡುವ ನೆಲೆಯಲ್ಲೇ ಹೊರನಾಡ ಕನ್ನಡಿಗರಿಗೂ ಸೂಕ್ತ ಪ್ರಾತಿನಿಧ್ಯ ಇರಬೇಕೆಂಬುದನ್ನು ಮರೆಯುವಂತಿಲ್ಲ. ಮುಂಬಯಿ, ಮದರಾಸು, ಕಾಸರಗೋಡು, ಮದುರೈ, ಹೈದರಾಬಾದು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎಂ, ಎಂ.ಫಿಲ್, ಪಿ‌ಎಚ್.ಡಿ ಓದುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ಹತ್ತು ಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿವೇತನ ಕೊಟ್ಟು ಅಲ್ಲಿ ಕನ್ನಡ ಕಲಿಯಲೂ ಕಲಿಸಲೂ ಕಾಲೂರಿ ನಿಲ್ಲಲೂ ಅನುವು ಮಾಡುವುದು ಒಳ್ಳೆಯದು. ಗಡಿಯ ಎಡೆಗಳಲ್ಲೂ ಈ ಹೊರನಾಡುಗಳಲ್ಲೂ ಕನ್ನಡದ ಸೊಲ್ಲೂ ಸೊಗಡೂ ಸೂಸುವ ಹಾಗೆ ತಿಂಗಳಿಗೊಂದು ಸಾಂಸ್ಕ ತಿಕ ಕಾರ್ಯಕ್ರಮವನ್ನು ಅಕಾಡೆಮಿಗಳ ಮೂಲಕ ಏರ್ಪಡಿಸುವುದು ಸೂಕ್ತ. +ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಹಳ್ಳಿಯಲ್ಲಿ ವರ್ಷದುದ್ದಕ್ಕೂ ಮಿಡಿಯುವ ಕನ್ನಡ ನಾಡಿಯ ಸ್ಪಂದನ ಅನುಕರಣೀಯ ಯೋಗ್ಯವಾಗಿದೆ. ವಾಸ್ತವವಾಗಿ ಭಾಷೆಯ ಪ್ರೇಮ ಇನ್ನೂ ಬಲವಾಗಿ ಉಳಿದಿರುವುದು ಹಳ್ಳಿಗಳಲ್ಲೇ. ಅದರಿಂದ ಹೊಸ ಉಪಕ್ರಮಗಳು ಹಳ್ಳಿಯಿಂದಲೇ ಆರಂಭವಾಗಬೇಕು, ಪಟ್ಟಣಗಳು ಅದಕ್ಕೆ ಸ್ಪಂದಿಸಿ ಅನುರಣಿಸಲಿ. ಸಿಗರೇಟು ಪ್ಯಾಕುಗಳ ಮೇಲೆ ಸಣ್ಣಕ್ಷರಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಮುದ್ರಿಸಿದಂತಾಗಬಾರದು ‘ಕನ್ನಡ ಉಳಿಸಿ, ಕನ್ನಡ ಬಳಸಿ’ ಎಂಬ ಗೋಡೆ ಬರೆಹ. ಕನ್ನಡ ರಾಜ್ಯೋತ್ಸವ ನವೆಂಬರೋತ್ಸವ ಮಾತ್ರ ಆಗದೆ ವರ್ಷವಿಡೀ ಆಚರಣೆಯಲ್ಲಿರುವ ನಿತ್ಯೋತ್ಸವವೆನಿಸುವತ್ತ ಅಣಿಯಾಗಲಿ, ಸಮಗ್ರ ಕರ್ನಾಟಕವೇ ಕನ್ನಡಿಗರ ಆಶೋತ್ತರಗಳ ವೇದಿಕೆಯಾಗಲಿ, ಕನ್ನಡಿಗರು ಅಭಿಮಾನಶೂನ್ಯರಾಗದಿರಲಿ ಎಂಬುದು ಅಂತರಂಗದ ಮಾತಾದರೆ ಅದಕ್ಕೆ ಪುಷ್ಟಿ ಬರುತ್ತದೆ. +ಭಾಷಾವಾರು ಪ್ರಾಂತ್ಯ ರಚನೆಯಿಂದ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಕರ್ನಾಟಕದ ಏಕೀಕರಣವಾಗಿ ನಮಗೆ ಬರಬೇಕಾದ ನೆಲವೆಲ್ಲ ಒಂದು ಆಡಳಿತದ ಕೆಳಗೆ ಬಂದಿದೆ ಎಂದಲ್ಲ. ನಮಗೆ ಸೇರಬೇಕಾದ ಎಷ್ಟೋ ಭೂಮಿ, ಊರು ಕೇರಿ ಇನ್ನೂ ನೆರೆರಾಜ್ಯಗಳಲ್ಲಿ ಉಳಿದಿದೆ. ಏಕೀಕರಣಾನಂತರದ ಕರ್ನಾಟಕದಲ್ಲಿ ಅನ್ಯಭಾಷೆಗಳ ಪ್ರಾಬಲ್ಯ, ಪ್ರತಿಷ್ಠೆ, ಸವಲತ್ತು, ಶಿಕ್ಷಣಾನುಕೂಲ ತಗ್ಗಿಲ್ಲ. ಆದರೆ ಕರ್ನಾಟಕದ ಪಕ್ಕದ ಪ್ರಾಂತ್ಯಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ದಯನೀಯವಾಗಿದೆ, ಹಿಂದೆ ಇದ್ದುದಕ್ಕಿಂತ ಶೇಕಡಾ ಎಪ್ಪತ್ತೈದರಷ್ಟು ಕಡಿಮೆಯಾಗಿದೆ. ಕನ್ನಡ ಶಾಲಾ ಕಾಲೇಜುಗಳೂ, ಕನ್ನಡ ಶಿಕ್ಷಕರೂ ತಮಿಳುನಾಡು, ಆಂಧ್ರ ಮತ್ತು ಕೇರಳದಲ್ಲಿ ನಾಲ್ಕನೆಯ ಒಂದು ಭಾಗಕ್ಕೆ ಕುಗ್ಗಿದೆ. ಇಷ್ಟೆಲ್ಲ ಹೊಡೆತ ತಿಂದರೂ ಕನ್ನಡ ಮಾತ್ರ ತುಟಿಪಿಟಕ್ ಎನ್ನದೆ ತೆಪ್ಪಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರ್ನಾಟಕದಲ್ಲಿ ಅನುಕೂಲಗಳು ಅಧಿಕವಿದ್ದೂ ಹೊರಭಾಷೆಗಳವರು ಆಗಾಗ ಅನ್ಯಾಯವಾಗಿದೆಯೆಂದು ಬೊಬ್ಬೆ ಹಾಕುತ್ತಿದ್ದಾರೆ. ಬಾಯಿದ್ದವರು ಬರಗಾಲದಲ್ಲಿಯೂ ಬದುಕುತ್ತಾರೆ, ಸುಭಿಕ್ಷದಲ್ಲೂ ವಿಜೃಂಭಿಸುತ್ತಾರೆ. ಇಂದು ನಮ್ಮ ಯಾವ ಜಿಲ್ಲೆಯೂ ಶುದ್ಧ ಕನ್ನಡ ಜಿಲ್ಲೆಯಾಗಿ ಉಳಿದಿಲ್ಲ. ಈ ಉದಾಸೀನ ಪ್ರವೃತ್ತಿ ಹೀಗೆಯೇ ಮುಂದುವರಿದರೆ ನಮ್ಮ ಜೀವಿತ ಕಾಲದಲ್ಲಿಯೇ ಕನ್ನಡ ಕಣ್ಮರೆಯಾಗಬಹುದೆಂಬ ಭೀತಿ ಬಂದಿದೆ. ಗಡಿಗಳೆಡೆಯಲ್ಲಿ ಕಟ್ಟೆಚ್ಚರ ಸಡಿಲವಾಗಿದೆ. ಕೊಳ್ಳೆಗಾಲ ತಾಲೂಕಿಗೆ ಸೇರಿದ ೧೮೦೦ ಎಕರೆ ಭೂಮಿಯನ್ನು ತಮಿಳುನಾಡು ಒತ್ತರಿಸಿದೆಯೆಂದು ಗುಂಡ್ಲುಪೇಟೆ ಶಾಸಕರು ಶಾಸನಸಭೆಯಲ್ಲಿ ಪ್ರಸ್ತಾಪಿಸಿದ ವರದಿ ಗಾಬರಿ ತರುತ್ತದೆ. ಈ ವಿಚಾರದಲ್ಲಿ ನಿಜಾಂಶ ಏನು, ಕರ್ನಾಟಕ ಸರ್ಕಾರ ಕೈಗೊಂಡ ಕ್ರಮವೇನು ತಿಳಿಯದು. ಇಂತಹುದು ಆಗಬಾರದು ಮತ್ತು ಇದು ಮರುಕಳಿಸಬಾರದು. +ಕೇರಳ ಸರಕಾರ ಯಾವುದೇ ರೀತಿಯಲ್ಲಿ ಕಾಸರಗೋಡಿನ ಕನ್ನಡತನವನ್ನು ನಿರ್ವೀರ್ಯಗೊಳಿಸುತ್ತ ಕ್ರಮೇಣ ಕೊಲ್ಲದಂತೆ ನಿಗಾವಹಿಸಬೇಕಾದ ಅನಿವಾರ್‍ಯ ಬಂದಿದೆ. ಅಲ್ಲಿನ ಕನ್ನಡವೆಂದಾಗ ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ. ಅದರೊಂದಿಗೆ ಅವಿಭಾಜ್ಯವಾಗಿ ಬೆಸೆದ ಇತಿಹಾಸ, ಕೋಟೆಕೊತ್ತಲ, ಯಕ್ಷಗಾನ, ಜಾನಪದ, ಪರಂಪರೆ, ಸಾಹಿತ್ಯ ಸಂಸ್ಕ ತಿಯೂ ಸಂರಕ್ಷಿಸಲ್ಪಡಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಕಲ್ಪಿತವಾದ ಸವಲತ್ತುಗಳೂ ಕಾಸರಗೋಡು ಜಿಲ್ಲಾದ್ಯಂತ ಹಾಗೂ ಕೇರಳದ ಎಲ್ಲ ಕನ್ನಡಿಗರಿಗೂ ಸಿಗಬೇಕು. ಕಾಸರಗೋಡು ಜಿಲ್ಲೆ ಇಡಿಯಾಗಿ ಕನ್ನಡ ನಾಡಿನೊಂದಿಗೆ ಕೂಡಲಸಂಗಮವಾಗುವವರಿಗೆ ಈ ಎಲ್ಲ ಹಕ್ಕೊತ್ತಾಯ ಜೀವಂತವಾಗಿ ಜಾರಿಯಲ್ಲಿರಬೇಕು. ಜೊತೆಗೆ ಉಭಯ ಸರಕಾರಗಳು ಶಾಶ್ವತ ಅನುದಾನವನ್ನು ಮಂಜೂರು ಮಾಡಲು ನಾನು ಆಗ್ರಹಪಡಿಸುತ್ತೇನೆ. ಅಲ್ಲಿನ ಕನ್ನಡ ಶಾಲೆಗಳು ಒಣಗದಂತೆ, ದುರ್ಬಲಗೊಳ್ಳದೆ ಚೈತನ್ಯದಿಂದ ಇರುವಂತೆ ಮಾಡುವ ಜವಾಬ್ದಾರಿ ಎರಡೂ ಸರಕಾರಗಳ ಮೇಲಿದೆ. ಕೇರಳದ ಮಲೆಯಾಳ ಮಾತಾಡುವ ಲಕ್ಷಾಂತರ ಪ್ರಜೆಗಳು ಕರ್ನಾಟಕದ ದೊಡ್ಡ ಕೊಡೆಯ ಅಡಿಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆಂಬ ಸಂಗತಿಯನ್ನು ಕೇರಳ ಸರ್ಕಾರ ಮರೆಯಬಾರದೆಂಬುದನ್ನು ರಾಜಕೀಯ ಭಾಷೆಯ ನೆಲೆಯಲ್ಲಿ ಜ್ಞಾಪಿಸಬಯಸುತ್ತೇನೆ. +ಇದೇ ನೆಲೆಯ ಮಾತು ಮಹಾರಾಷ್ಟ್ರ ಸರಕಾರಕ್ಕೂ ಅನ್ವಯಿಸುತ್ತದೆ. ಮುಂಬಯಿಯಲ್ಲಿ ಹಾಗೂ ಇಡೀ ಮಹಾರಾಷ್ಟ್ರದಲ್ಲಿ ಕನ್ನಡಿಗರು ಎಂದೂ ಒಂದು ಭಾಷಾದ್ವೀಪವಾಗಿ ಪ್ರತ್ಯೇಕ ಹಕ್ಕೊತ್ತಾಯಗಳನ್ನು ಮುಂದಿಟ್ಟಿಲ್ಲ. ಅದರ ಬದಲು ಕನ್ನಡಿಗರು ಆ ರಾಜ್ಯದ ಮುಖ್ಯವಾಹಿನಿಯಲ್ಲಿ ವಿಲೀನವಾಗಿದ್ದಾರೆ. ಹೀಗಿದ್ದೂ ಅವರ ಮೇಲೆ ಆಗಾಗ ವಿನಾಕಾರಣ ಕಾಲುಕೆರೆದು ಹಲ್ಲೆ ಮಾಡುವುದು ನಿಲ್ಲಬೇಕು. ಬೆಳಗಾವಿ ಮಹಾನಗರದಲ್ಲೂ ಅದರ ಗಡಿಗಳಲ್ಲೂ ತಂಟೆ ತಕರಾರು ತೆಗೆದು ಗಲಾಟೆ ಮಾಡುವುದು ನಿಂತಿಲ್ಲ. ಇದು ಅವರ ತಪ್ಪೋ ಅಥವಾ ಅವರು ನಿಂತ ನೆಲದ ತಪ್ಪೊ ಎಂದು ಯೋಚಿಸುವಂತಿದೆ. ಇದಕ್ಕೆ ಇರುವ ಪರಿಹಾರದ ಮಹಾಮಾರ್ಗವೆಂದರೆ ಮಹಾಜನ ವರದಿಯೇ ಐತೀರ್ಪೆಂದು ತಲೆಬಾಗುವುದು. ಅದು ಜಾರಿಗೆ ಬರುವವರೆಗೆ ಈಗ ಇರುವ ವ್ಯವಸ್ಥೆಯಲ್ಲಿ ಸೌಹಾರ್ದವನ್ನು ಕಲಕಿ ರಾಡಿಗೊಳಿಸದೆ ಒಟ್ಟಿಗೆ ಬಾಳುವುದು ಮುಖ್ಯ. ಮಹಾಜನ ವರದಿಯನ್ನು ಮತ್ತೆ ತಿರುಚುವ, ತೆರೆಯುವ ಪ್ರಶ್ನೆಯೇ ಇಲ್ಲ. ಒಂದು ರೂಪಕದ ಮೂಲಕ ಇದರ ಸೂಕ್ಷ ವನ್ನು ಅನಾವರಣಗೊಳಿಸುತ್ತೇನೆ. ಒಬ್ಬ ಶಾಲಾ ಅಧ್ಯಾಪಕರಿಗೆ ಇಬ್ಬರು ಮಕ್ಕಳಿದ್ದರು. ಆ ಅಧ್ಯಾಪಕರು ಕರ್ನಾಟಕದಲ್ಲಿದ್ದಾಗ ಒಬ್ಬ ಮಗ ಹುಟ್ಟಿದ, ಮಹಾರಾಷ್ಟ್ರದಲ್ಲಿ ಇದ್ದಾಗ ಇನ್ನೊಬ್ಬ ಮಗ ಹುಟ್ಟಿದ. ಕರ್ನಾಟಕದಲ್ಲಿ ಹುಟ್ಟಿದ ಮಗನಿಗೆ ಎಷ್ಟು ಕೊಟ್ಟರೆ ಅಷ್ಟಕ್ಕೇ ತೃಪ್ತನಾಗುತ್ತಿದ್ದ. ಆದರೆ ಮಹಾರಾಷ್ಟ್ರದಲ್ಲಿದ್ದಾಗ ಹುಟ್ಟಿದವನಿಗೆ ಎಷ್ಟು ಕೊಟ್ಟರೂ ತೃಪ್ತನಾಗದೆ ಅದು ಬೇಕು, ಇದು ಬೇಕು, ಇನ್ನೂ ಬೇಕು ಎಂದು ರಂಪ ಮಾಡುತ್ತಿದ್ದ. ಮಹಾಜನ ವರದಿಯ ಸಂಬಂಧದಲ್ಲಿಯೂ ಇದೇ ಬಗೆಯ ಗದ್ದಲ ಮಾಡುತ್ತಿರುವವರು ಯಾರು ಮತ್ತು ಯಾಕೆ ಎಂದು ನಾನು ವಿಸ್ತರಿಸುವುದು ಅನಗತ್ಯ. ಇಷ್ಟು ಮಾತ್ರ ನಿಜ. ಭಗವಂತ ಬಂದರೂ ಬೆಳಗಾವಿಯನ್ನು ಕನ್ನಡಿಗರಿಗೆ ಒಪ್ಪಿಸುತ್ತಾನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದು ಸತ್ಯಸ್ಯ ಸತ್ಯ. +ಕರ್ನಾಟಕದ ಏಕೀಕರಣವನ್ನು ೧.೧೧.೧೯೫೯ರಂದು ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದರು ಅಧಿಕೃತವಾಗಿ ಉದ್ಘಾಟಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ. ಜಯಚಾಮರಾಜ ಒಡೆಯರ್, ಎಸ್. ನಿಜಲಿಂಗಪ್ಪ ಮೊದಲಾದ ನಾಡಿನ ಗಣ್ಯರು ಮತ್ತು ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿದ ಮರೆಯಲಾಗದ ಮಹತ್ವದ ಸಮಾರಂಭದ ಅದು ಆ ಐತಿಹಾಸಿಕ ಘಟನೆಯ ನೆನಪಿಗಾಗಿ ಇದುವರೆಗೆ ಏನೊಂದೂ ಸ್ಮಾರಕ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದ ಬಳಿ ನಿರ್ಮಾಣವಾಗಿಲ್ಲ. ಕನ್ನಡ ನಾಡಿನ ಇತಿಹಾಸದಲ್ಲಿ ಅಪೂರ್ವ ಕ್ಷಣವನ್ನು ಕಂಡ ಜಾಗದಲ್ಲಿ ಸೂಕ್ತ ಸ್ಮಾರಕ ಇರಬೇಕಾದ ಅಗತ್ಯ ಮತ್ತು ಮಹತ್ವವನ್ನು ಹೆಚ್ಚು ವಿಸ್ತರಿಸಿ, ಉತ್ಪ್ರೇಕ್ಷಿಸಿ ಹೇಳುವ ಅಗತ್ಯವಿಲ್ಲ. ಈ ಕೆಲಸಕ್ಕೆ ಸರ್ಕಾರ ಕೂಡಲೆ ಗಮನ ಕೊಡಬೇಕೆಂದು ಒತ್ತಾಯಿಸುತ್ತೇನೆ. +ಒಟ್ಟು ಕನ್ನಡಿಗರಲ್ಲಿ ದೇಸೀ ಕನ್ನಡಿಗರು ವಿದೇಶೀ ಕನ್ನಡಿಗರಿಗೆ ಬೆಂಬಲಿಗರೆಂಬುದಕ್ಕೆ ಅರೆಕೊರೆ ಇರಬಾರದು. ಒಳನಾಡು ಕನ್ನಡಿಗರಿಗೆ ಇರುವ ಪ್ರಮಾಣದಲ್ಲಿ ಹೊರನಾಡು ಕನ್ನಡಿಗರಿಗೆ ಸವಲತ್ತುಗಳನ್ನು ವಿಸ್ತರಿಸುವುದಕ್ಕೆ ಮಿತಿಗಳುಂಟು, ದಿಟವೆ. ಹಾಗೆಂದು ಹೊರನಾಡು ಮತ್ತು ಹೊರದೇಶಗಳ ಕನ್ನಡಿಗರತ್ತ ನಮ್ಮ ಲಕ್ಷ ನಿಲ್ಲಬಾರದು. ಅಲ್ಲೆಲ್ಲ ಕನ್ನಡವನ್ನು ಜೀವಂತವಾಗಿ ರಿಸಲು ಸುಸಂಬದ್ಧ, ಪರಿಣಾಮಕಾರಿ ‘ಪ್ಯಾಕೇಜ್’ ಸಿದ್ಧಪಡಿಸುವುದು ಸೂಕ್ತ. ದೃಶ್ಯ-ಶ್ರವ್ಯ ಮಾಧ್ಯಮಗಳ ಪ್ರಭಾವಿಶಕ್ತಿಯನ್ನು ದುಡಿಸಿಕೊಳ್ಳುವುದರೊಂದಿಗೆ ಕಲಾವಿದರ ಪ್ರತಿಭೆಯನ್ನೂ ಬಳಸಬಹುದು. ಎಲ್ಲ ಅಕಾಡೆಮಿಗಳ ಒಟ್ಟು ಕಾರ್ಯಕ್ರಮಗಳಲ್ಲಿ ಮೂರನೆಯ ಒಂದು ಭಾಗ ಕಡ್ಡಾಯವಾಗಿ ಹೊರನಾಡು ಕನ್ನಡಿಗರ ನೆರವಿಗಿರಲಿ. +ಉದ್ಯೋಗಗಳಿಗೆ ನೇಮಕಾತಿಯ ನಿಯಮಗಳು ಕನ್ನಡಪರವಾಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ನ್ಯಾಯ ಯಾವಾಗಲೂ ಲಭಿಸಿಲ್ಲ. ಸಿಬ್ಬಂದಿಯ ನೇಮಕದಲ್ಲಿ ಕರ್ನಾಟಕಕ್ಕೆ ‘ಶೂನ್ಯ ಸಂಪಾದನೆಯೊಂದೇ ಗ್ಯಾರಂಟಿ’ ಎನ್ನುವಂತಾಗಿದೆ. ಮೊದಲೇ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರುವಾಗ ಯುವ ಕನ್ನಡ ಚೇತನಗಳಿಗೆ ಉದ್ಯೋಗಾವಕಾಶದ ಬಾಗಿಲುಗಳು ಹೀಗೆ ಮುಚ್ಚಿದ್ದರೆ ನಾಡಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ. ಕೇಂದ್ರ ಸರಕಾರ ನಡೆಸುವ ಪ್ರತಿಯೊಂದು ಪರೀಕ್ಷೆಯೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವುದು ಅನಿವಾರ್‍ಯ. ಕೇಂದ್ರದ ನೇಮಕಾತಿಗಳಲ್ಲಿ ಪ್ರತಿರಾಜ್ಯದವರಿಗೂ ಇಂತಿಷ್ಟು ನೌಕರಿಯೆಂದು ಶೇಕಡಾವಾರು ಪ್ರಮಾಣವನ್ನು ಗೊತ್ತುಪಡಿಸಿ ಸಮರ್ಪಕ ಪಾಲು ಕರ್ನಾಟಕಕ್ಕೆ ಸಿಗುವುದು ಅತ್ಯವಶ್ಯ. ಈ ದಿಶೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಶಾಸಕರು ತಮ್ಮ ಹಕ್ಕೊತ್ತಾಯಗಳನ್ನು ಅಂಕಿ ಅಂಶಗಳೊಂದಿಗೆ ಬಲಿಷ್ಠವಾಗಿ ಪ್ರತಿಪಾದಿಸುವುದು ಅತ್ಯಗತ್ಯ. ನೈ‌ಋತ್ಯ ರೈಲ್ವೆ ಕಾರ್ಯಾಲಯ ಹೆಸರಿಗೆ ಹುಬ್ಬಳ್ಳಿಯಲ್ಲಿದ್ದರೂ ಅಲ್ಲಿಯ ಸಿಬ್ಬಂದಿಯವರು ಅನ್ಯಭಾಷಿಕರು, ಹೊರಗಿನವರು. +ಕರ್ನಾಟಕ ಏಕೀಕರಣ ಶ್ರಮ-ಪ್ರೇಮ ಮಿಶ್ರಿತ ಸಾಧನೆಯಿಂದ ಸಂಭವಿಸಿದೆ. ಬೇರೆ ಬೇರೆಯಾಗಿ ಹಂಚಿಹೋಗಿದ್ದ ನಾಡಿನ ಭಾಗಗಳು ಸೇರಿ ಒಂದಾಗಿರುವ ಕರ್ನಾಟಕವನ್ನು ಮತ್ತೆ ಸೀಳಿ ಹೋಳುಗಳಾಗಲು ಬಿಡಬಾರದು. ಪ್ರತ್ಯೇಕತೆಯ ಕೂಗು ಆರೋಗ್ಯಕರವಲ್ಲ. +ಪ್ರಾದೇಶಿಕ ಅಸಮಾನತೆ ಇದೆಯೆಂಬ ಭಾವನೆಯನ್ನು ಬೇರುಸಹಿತ ಮೊದಲು ಕಿತ್ತುಹಾಕುವುದಕ್ಕೆ ಆದ್ಯತೆಯಿರಲಿ. ನಮ್ಮನ್ನು ಅಲಕ್ಷ್ಯ ಮಾಡುತ್ತಿದ್ದಾರೆಂಬ ಅಪಸ್ವರ ಬಲಿತು ದೊಡ್ಡದಾಗಲು ಬಿಡಬಾರದು. ಇಷ್ಟು ವರ್ಷ ಒಟ್ಟಿಗೆ ಇದ್ದರೂ ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ, ಕಾಳಜಿ ತೋರಿಸುತ್ತಿಲ್ಲ, ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದಾರೆ – ಎಂಬಿತ್ಯಾದಿ ಸಂಶಯದ ಕಾಳುಗಳು ಅಖಂಡ ಕರ್ನಾಟಕದ ಯಾವ ಭಾಗದಲ್ಲೂ ಮೊಳಕೆಯೊಡೆಯಲು ಬಿಡಬಾರದು. ಕೊರತೆಯ, ಕೊರಗಿನ ಮುಲುಕು ಮೂಡದಂತೆ ಅಕ್ಕರೆಯ ತೆಕ್ಕೆಯ ಮುತುವರ್ಜಿ ನೇವರಿಸುತ್ತಿರಲಿ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸುವಂತಾಗಬಾರದು. +ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ನ್ಯಾಯಪೀಠ ಬೇಗ ಆಗಲಿ. ಮೀನ ಮೇಷ ಎಣಿಸಿ ಗುಣಿಸಿ ನ್ಯಾಯಯುತ ಬೇಡಿಕೆಯನ್ನು ಮುಂದೂಡುವುದು ಬೇಡ. ಜೊತೆಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಕಚೇರಿಯೊಂದು ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ತೆರೆದು ತಿಂಗಳಲ್ಲಿ ಒಂದು ದಿನ ಉತ್ತರ ಕರ್ನಾಟಕದ ಆ ಕಚೇರಿಯಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರುವುದು ತುಂಬ ಒಳ್ಳೆಯ ಮಾರ್ಗ. ಏಕೆಂದರೆ ವಿಶ್ವಾಸವಿದೆ ಎಂದು ಮಾತಿನಲ್ಲಿ ಹೇಳಿದರೆ ಸಾಲದು, ಜನಕ್ಕೆ ಅಂಥ ನಂಬಿಕೆ ಬರುವುದು ಬಹಳ ಮುಖ್ಯ. ಸರಕಾರದ ಇಚ್ಛಾಶಕ್ತಿ ಕನ್ನಡಪರವಾಗಿದೆ ಎಂಬುದು ಜನಮನಕ್ಕೆ ನಾಟಬೇಕು. +ನೆಲ, ಜಲ, ರೈತ : ಸಮಸ್ಯೆಯ ಚಕ್ರತೀರ್ಥ +ನೆಲ, ಜಲ, ಮತ್ತು ವಿದ್ಯುತ್ತು ಇದ್ದರೆ ರೈತರು ಬಂಗಾರ ಬೆಳೆದಾರು. ಆದರೆ ಭೂಮಿಯಿದ್ದೂ ರೈತರು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಕ್ಷಾಮಡಾಮರಗಳಿಗೆ ನಾಂದಿ ಜಲಕ್ಷಾಮ. ಅಂತರ್ಜಲದ ಸೆಲೆಗಳು ಬತ್ತುತ್ತಾ ಪೂರಾ ನೀರು ಇಂಗಿಹೋಗುತ್ತಿದೆ. ಕೆರೆಗಳ ಹೂಳು ತೆಗೆಯುವ ಹಳೆಯ ರೂಢಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕನ್ನಡ ನಾಡು ಕೆರೆಗಳ ಬೀಡು. ಕೆರೆಗಳಲ್ಲಿ ಊಳು ತೆಗೆಸುವುದು ಅಪರೂಪವಾಗುತ್ತಿದೆ. ಜಲಾಶಯಗಳಲ್ಲಿ ತುಂಬಿದ ಊಳು ತೆಗೆಸುವುದು ಕಷ್ಟ. ಊಳು ತುಂಬಿದ ಕಾರಣ ಶೇಕಡಾ ೨೫ರಷ್ಟು ನೀರಿನ ಸಂಗ್ರಹ ಪ್ರಮಾಣ ಕಡಮೆಯಾಗಿದೆಯೆನ್ನಲಾಗಿದೆ. ಅದರಿಂದ ಈ ನಷ್ಟದ ಪ್ರಮಾಣಕ್ಕೆ ಅನುಗುಣವಾದ ಪರಿಹಾರಕ್ಕೆ, ಅಂದರೆ ಈಗ ಕರ್ನಾಟಕಕ್ಕೆ ಗೊತ್ತು ಮಾಡಿರುವ ಪ್ರಮಾಣಕ್ಕೆ, ಈ ಊಳು ತುಂಬಿದ ಕಾರಣ ಕಡಮೆ ಆಗಿರುವ ಹೊರಹರಿವಿನ ಶೇಕಡಾ ಪ್ರಮಾಣದಷ್ಟು ನೀರಿಗೆ ಹಕ್ಕೊತ್ತಾಯ ನಿಲ್ಲಿಸಬಾರದು. ಜೊತೆಗೆ ಅನುತ್ಪಾದಕ ಹಾಗೂ ನಷ್ಟದ ಬಿಳಿ ಆನೆ ಸಾಕೊ ರೀತಿಯ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ತಪ್ಪಿಸೋಣ ಮತ್ತು ಅಂತರ್ಜಲ ಪುನರುತ್ಪಾದಕವಾಗಿಸುವ ಜಲಯೋಜನೆಗಳಿಗೆ ಚೈತನ್ಯ ತುಂಬೋಣ. +ಹೀಗೆ ಹೇಳುವಾಗ ನಾನು ಹೆಚ್ಚು ಒತ್ತು ಕೊಡುತ್ತಿರುವುದು ಹಮ್ಮಿಕೊಂಡಿರುವ ಯೋಜನೆಗಳನ್ನು ಬೇಗ ಬೇಗ ಪೂರೈಸುವುದಕ್ಕೆ. ಚಿತ್ರಾವತಿ ತೊರೆಗೆ ಪರಗೋಡು ಅಡ್ಡಕಟ್ಟೆ ಕಟ್ಟುವುದನ್ನು ಏನೇ ಆದರೂ ನಿಲ್ಲಿಸದೆ ಪೂರೈಸಲಾಗುವುದೆಂಬ ಕೆಚ್ಚು ತೋರಿದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರನ್ನು ಅಭಿನಂದಿಸುತ್ತೇನೆ. ಇದೇ ದಿಟ್ಟ ನಿಲುವನ್ನು ಇತರ ನೀರಾವರಿ ಯೋಜನೆಗಳಿಗೂ ತೋರಿಸಿದರೆ “ಅಭಿನವ ಭಗೀರಥ” ರೆಂಬ ಕೀರ್ತಿಗೆ ಪಾತ್ರರಾಗಬಹುದು. ಬಚಾವತ್ ನ್ಯಾಯಾಧಿಕರಣದ ‘ಎ ಸ್ಕೀಂ’ ಶಿಫಾರಸಿನಂತೆ ಕೃಷ್ಣಾನದಿ ಕೊಳ್ಳದ ಹಳ್ಳಗಳಿಂದ ಸಿಗುವ ನೀರಿನ ಪಾಲನ್ನು ಬಳಸಿದಂತೆ ‘ಬಿ ಸ್ಕೀಂ’ ನ ಹೆಚ್ಚುವರಿ ನೀರನ್ನೂ ಕರ್ನಾಟಕ ಧಾರಾಳವಾಗಿ ಬಳಸುವ ಧೈರ್ಯ ಮತ್ತು ವಿವೇಕ ತೋರಬೇಕು. ಆಂಧ್ರ ಸರಕಾರ ಈ ಕೆಲಸ ಮಾಡಿದೆ. ಸಿಂಗಟಾಲೂರು ನೀರಾವರಿ ಯೋಜನೆಯ ಗಾತ್ರವನ್ನು ಹಿಗ್ಗಿಸಿದ್ದು ‘ಬಿ ಸ್ಕೀಂ’ಗೆ ಅನುಗುಣ ವಾಗಿರುವುದರಿಂದ ನಮ್ಮ ಆ ಯೋಜನೆ ಬೇಗ ಪೂರ್ಣಗೊಳ್ಳಬೇಕು. +ನಗರವಾಸಿಗಳೂ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ. ದಿನನಿತ್ಯ ಬಕೆಟ್ಟುಗಟ್ಟಲೆ ನೀರು ಸುರಿದು ಮೀಯುವವರೊಂದು ಕಡೆ, ಮೂರು ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡಲು ನೀರಿಗೆ ಬರ ಇರುವವರು ಇನ್ನೊಂದು ಕಡೆ. ಈ ಎರಡು ತುದಿಗಳ ಸಮನ್ವಯವೆಂದರೆ ಕೇವಲ ಸ್ನಾನಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ನೀರಿನ ಸದ್ವಿನಿಯೋಗ ಹೇಗೆಂಬ ಗಂಭೀರ ಪರಾಮರ್ಶೆಯ ಜರೂರು ಒದಗಿದೆಯೆಂಬತ್ತ ಗಮನ ಕೇಂದ್ರೀಕರಿಸುವುದು; ಹನಿಹನಿ ಕೂಡಿದರೆ ಹಳ್ಳ ಎಂಬ ಜಾಣ್ಣುಡಿಯು ವಾಸ್ತವವಾಗಲೆಂಬ ಗ್ರಹಿಕೆ. +ವ್ಯವಸಾಯ, ಜಗತ್ತಿನ ಹಳೆಯ ವೃತ್ತಿ. ನಮ್ಮ ಸಂಸ್ಕ ತಿ ಐದುಸಾವಿರ ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಭಾಷಣ ಮಾಡುತ್ತೇವೆ. ಕೃಷಿ ಹನ್ನೆರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಈ ಉದ್ದ ನಡಿಗೆಯಲ್ಲಿ ರೈತರು ಬೇಸಾಯ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ಅಳವಡಿಸುತ್ತ ಬಂದಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ವೃತ್ತಿಗೆ ವಿದಾಯ ಹೇಳದೆ, ನಂಬಿದ ನೆಲವನ್ನು ಕೈಬಿಡದೆ ಬಾಳಿದ್ದಾರೆ. ನೀರಿನ ಆಸರೆ ಹುಡುಕುತ್ತ ಆಗಾಗ ವಲಸೆ ಹೋಗಿರಬಹುದು. ಹೀಗಿದ್ದೂ ರೈತರು ಕಂಗಾಲಾಗಿ ಸರಣಿ ಆತ್ಮಹತ್ಯೆಗೆ ಹೊರಟಿದ್ದು ಇತ್ತೀಚಿನ ವರ್ಷಗಳಲ್ಲಿ. ಅದು ತನ್ನ ಪರಾಕಾಷ್ಠೆ ಮುಟ್ಟಿದ್ದು ಈ ವರ್ಷ. ಪರ್ಯಾಯ ಕುಸುಬುಗಳನ್ನು ಕಲಿತಿಲ್ಲದ ರೈತರು ಗುಳೆ ಹೊರಟಿದ್ದಾರೆ. ಒಂದು ಅಂದಾಜಿನಂತೆ ಸುಮಾರು ಅಯ್ವತ್ತು ಸಾವಿರ ರೈತರು ಕರ್ನಾಟಕ ಬಿಟ್ಟು ವಲಸೆ ಹೋಗಿದ್ದಾರೆ. ಪ್ರಪಂಚಕ್ಕೂ ಭಾರತಕ್ಕೂ ಬರಗಾಲ ಹೊಸದಲ್ಲ. ಹಾಗೆ ನೋಡುವುದಾದರೆ ಕರ್ನಾಟಕದ ಅಧಿಕೃತ ಇತಿಹಾಸ ಅನಾವರಣಗೊಳ್ಳುವುದೇ ಬರಗಾಲದ ಹಿನ್ನೆಲೆಯಲ್ಲಿ. ಉತ್ತರ ಭಾರತದಲ್ಲಿ ೧೨ ವರ್ಷಗಳ ಭೀಕರ ಬರಬಂದಾಗ ಮೌರ್ಯ ಸಾಮ್ರಾಟ ಚಂದ್ರಗುಪ್ತನು ಶ್ರುತಕೇವಲಿ ಭದ್ರಬಾಹು ಮತ್ತು ಸಾವಿರಾರು ಮುನಿಗಳೊಂದಿಗೆ ಸುಭಿಕ್ಷ ಕನ್ನಡ ನಾಡಿಗೆ ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಆಗಮಿಸಿ ಶ್ರವಣಬೆಳಗೊಳದಲ್ಲಿ ನೆಲಸಿದನು. ಇಂತಹ ಸಮೃದ್ಧ ಕರ್ನಾಟಕ ಕಳೆದ ೨೦ ವರ್ಷಗಳಿಂದ ಸರಿಯಾದ, ಹದವಾದ ಮಳೆಗಾಲವನ್ನು ಕಾಣಲಿಲ್ಲ. ಹಿಂದೆಲ್ಲ ರಾಜಮಹಾರಾಜರು ಉಗ್ರಾಣಗಳ ದವಸಧಾನ್ಯವನ್ನು ಜನರಿಗೆ ಹಂಚಿದರು. ಮಠಮಾನ್ಯಗಳು ಜನತೆಗೆ ಗಂಜಿ ಊಟಕ್ಕೆ ನೆರವಾದರು. ಈಗ ಸರ್ಕಾರ ತನ್ನ ಕೈಲಾದುದನ್ನು ಮಾಡುತ್ತ ಬಂದಿದೆ, ಸಹಾಯ ಹಸ್ತ ಚಾಚಲು ಹಿಂದೆ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಮಕ್ಕಳಾದ ಗ್ರಾಮೀಣ ಕನ್ನಡಿಗ ಯುವಕರಿಗೆ ಕೃಪಾಂಕವಿತ್ತು ನೇಮಕ ಮಾಡಿದ್ದು ಒಳ್ಳೆಯ ಉಪಕ್ರಮ. ಈ ನೆಲದ ಮಕ್ಕಳಿಗೆ ಉದ್ಯೋಗದಲ್ಲಿ ಯಾವಾಗಲೂ ಆದ್ಯತೆಯಿರಲಿ. +ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಬೆಳೆ ಸರಿಯಾಗಿಲ್ಲ. ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಸಾಲಸೋಲ ಅಧಿಕವಾಗಿದ್ದುದು ಕ್ರಮೇಣ ಅಧಿಕತರವಾಗಿ, ಕಡೆಗೆ ಅಧಿಕತಮವಾಯಿತು. ಒಂದು ವರ್ಷ ಸುಧಾರಿಸಿದರು, ಎರಡನೆಯ ವರ್ಷ ಕೂಡಿಟ್ಟ ಆಪದ್ಧನ ಮುಗಿಯಿತು, ಮೂರನೆಯ ವರ್ಷ ದನಕರು ಮಾರಿದರು. ನಾಲ್ಕನೆಯ ವರ್ಷ ಪಾತ್ರೆ ಪಡಗ ಆಸ್ತಿ ಮಾರಿದರು. ಈಗ ಇನ್ನೇನೂ ಉಳಿಯದೆ ತ್ರಾಣ ಇರುವ ಕೆಲವರು ಗುಳೆ ಹೋದರು. ಅನೇಕರು ಪ್ರಾಣ ತೆತ್ತರು. ಮಳೆಯಾಗಿ ಬೆಳೆ ಬರುತ್ತದೆ, ಮಾಡಿದ ಸಾಲ ತೀರಿಸೋಣ ಎಂಬ ಕನಸುಗಳೊಂದಿಗೆ ಇಟ್ಟ ಬೆಳೆಯೂ ಒಟ್ಟೊಟ್ಟಿಗೆ ಒಣಗಿದುವು. ಕಡು ಬಡತನದ ಸಿಡಿಲ ಹೊಡೆತ ತಾಳಲಾರದೆ ಪ್ರಾಣತೆತ್ತ ರೈತರ ಸರಣಿ ಆತ್ಮಹತ್ಯೆ ನೆನೆದಾಗ ನನಗೆ ಜನಪದ ಗೀತೆಯೊಂದು ನೆನಪಾಗುತ್ತದೆ: +ಬಡವರು ಸತ್ತರೆ ಸುಡಲಿಕೆ ಸೌದಿಲ್ಲೊ +ಒಡಲ ಬೆಂಕೀಲಿ ಹೆಣ ಬೆಂದೊ +ದೇವರೆ ಬಡವರಿಗೆ ಸಾವ ಕೊಡಬೇಡೊ|| +ಇಂಥ ರೈತರು ಬೆಳೆದು, ಕೊಟ್ಟ ಅನ್ನ ತಿಂದು ಬೆಳೆದ ನಾನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವನ್ನು ಕೃತಜ್ಞತೆಯಿಂದ ರೈತರ ಚಿರಸ್ಮರಣೆಗೆ ಸಮರ್ಪಿಸುತ್ತೇನೆ. ಆದರೆ ಅದೇ ಉಸಿರಿನಲ್ಲಿ ನಮ್ಮ ರೈತರು ಬದುಕಿನ ಸವಾಲನ್ನು ಎದುರಿಸುತ್ತ ಬಂದ ಎದೆಗಾರಿಕೆಯನ್ನು ಕಳೆದುಕೊಳ್ಳಬಾರದೆಂದೂ ಕೋರುತ್ತೇನೆ. ತಮ್ಮನ್ನು ಕಾಪಾಡುವವರೂ ಕೇಳುವವರೂ ಯಾರೂ ಇಲ್ಲವೆಂಬ ಹತಾಶೆಕಾಡಿ, ‘ಭೂಮಿ ನಂಬಿ ನಾವು ಕೆಟ್ಟೆವು. ಈ ನೆಲ ಉಳೋದು ಬಿಟ್ಟು ನೌಕರಿ ಚಾಕರಿ ಮಾಡಲು ಹೋಗಿದ್ದರೆ ಬದುಕುತ್ತಿದ್ದೆವು’ ಎಂಬ ಭಾವನೆ ಬಲವಾಗುತ್ತಿದೆ. ಹೆಂಗಸರು ‘ಇನ್ನು ಅಡುಗೆ ಮನೆ ಬೇಡ’ ಎಂದೂ, ರೈತರು ‘ಇನ್ನು ಭೂಮಿ ಬೇಡ, ಹೊಲಕ್ಕೆ ಹೋಗುವುದಿಲ್ಲ’ ಎಂದೂ ವಿದಾಯ ಹೇಳಿದರೆ ಮನೆಗೂ ನೆಲಕ್ಕೂ ಬೆಂಕಿ ಬಿದ್ದ ಹಾಗೆ. ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ ಎಂದು ನಾಡು ಚಿಂತಿಸಬೇಕು. ಕರುಣೆ, ಅನುಕಂಪ, ಸಹಾನುಭೂತಿಗಳು ಸಾಲುವುದಿಲ್ಲ. ಆತನ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಹಾಗೆ ಶಾಶ್ವತ ಪರಿಹಾರದ ದಾರಿಗಳನ್ನು ಹುಡುಕಬೇಕು. +೨೫-೩೦ ಎಕರೆಗಿಂತ ಕಡಿಮೆ ಭೂಮಿಯ ಸಣ್ಣ ರೈತರಿಗೆ ಸಾಲವನ್ನು ಮನ್ನಾಮಾಡಿ ಉತ್ತೇಜಿಸಬೇಕು. ಹಸಿರು ಕ್ರಾಂತಿ ಎಂಬುದು ಹೆಸರಿಗಷ್ಟೆ. ಹಳ್ಳಿಗಳ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ಕೃಷಿವಲಯಕ್ಕೆ ಹೊಸ ಚೈತನ್ಯ ತುಂಬಬೇಕಾಗಿದೆ. ರೈತರಿಗೆ ಕೃಷಿ ಆಧಾರಿತ ಉದ್ಯೋಗಗಳು ಗ್ರಾಮಪರಿಸರದಲ್ಲಿಯೇ ಕಲ್ಪಿತವಾದರೆ ಗುಳೆ ಹೋಗುವುದು ತಪ್ಪಿ ಸ್ವಾವಲಂಬಿತ ಬದುಕಿಗೆ ದಾರಿಯಾಗುತ್ತದೆ. ಸರ್ಕಾರದೊಂದಿಗೆ ಸಾಹಿತಿಗಳೂ ರೈತರ ಸಮಸ್ಯೆಗೆ ಮುಖಾಮುಖಿಯಾಗಿ ನಿಂತು ಸಾಂತ್ವನ ಹೇಳಬೇಕು. ಸಾಹಿತಿಗಳಾದ ನಾವೆಲ್ಲ ನಿಮ್ಮ ಜೊತೆಗೆ ಇದ್ದೀವಿ ಎಂದು ಧೈರ್‍ಯ ಹೇಳಬೇಕು. +ಮುನ್ನೂರು ವರ್ಷ ಆಳಿದ ಪರಕೀಯರ ಗುರುತು ಗಾಯಗಳು ಪೂರಾ ಅಳಿಸುವ ಮೊದಲೆ ಮತ್ತೆ ಹೊರಗಿನವರ ಪ್ರವೇಶದ ಹಿಂದೆ ಪ್ರವರ್ತಿಸುವ ಮೂಲ ಆಶಯಗಳನ್ನು ಗುಮಾನಿಯಿಂದ ಹೆಕ್ಕಬೇಕಾಗಿದೆ. ಏಕೆಂದರೆ ಹಾಲಿ ಎದುರಿಸುತ್ತಿರುವ ಇಕ್ಕಟ್ಟಿನ ನಡುವೆ ‘ಗ್ಯಾಟ್’ ಒಪ್ಪಂದದಿಂದ ದೂರಗಾಮಿ ದುಷ್ಪರಿಣಾಮಗಳಿಗೆ ಒಳಗಾಗುವ ಅಪಾಯವೂ ಎದುರಾಗಿದೆ. ಈಸ್ಟ್ ಇಂಡಿಯಾ ಕಂಪನಿ ಮಾರು ವೇಷಗಳಲ್ಲಿ ಮರುಕಳಿಸಿ ಭಾರತವನ್ನು ನುಂಗಿ, ಆಪೋಷನಕ್ಕೆ ಕಾಯುತ್ತಿವೆ. ಗ್ಯಾಟ್ ಎಂಬುದು ಅದರ ಒಂದು ಸುಧಾರಿತ ಆವೃತ್ತಿ, ಮೆಟ್ರೊ ಎಂಬುದು ಅದರದೇ ಇನ್ನೊಂದು ರೂಪ. ಬಹುರಾಷ್ಟ್ರೀಯ ಕಂಪನಿಗಳ ಈ ವಿವಿಧೋದ್ದೇಶಗಳಿಗೆ ವಿವಿಧ ದೇಶಗಳನ್ನು ಕಬಳಿಸಿ ನುಂಗಿ ನೀರು ಕುಡಿಯುವ ಆಶಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಭಾಷೆಗಳ ಬಗ್ಗೆ ಅಸಡ್ಡೆ. ಸ್ಥಳೀಯ ವಿಚಾರದಲ್ಲಿ ನಿರ್ದಯಿಗಳು. ಇಲ್ಲಿನ ಸಂಪತ್ತು ಮಾತ್ರ ಬೇಕೆಂಬುದು ಹಗಲು ದರೋಡೆಯಲ್ಲದೆ ಮತ್ತೇನು? ಕರ್ನಾಟಕವನ್ನು ಕಡೆಗಣಿಸಿ ವಿಜೃಂಭಿಸಬಯಸುವ ಪ್ರವೃತ್ತಿಗಳನ್ನು ಹತ್ತಿಕ್ಕಿದರೆ ತಪ್ಪಲ್ಲ. ಕೃಷಿಯೇ ಭಾರತದ ಶಕ್ತಿ ಎಂಬುದನ್ನು ವಿದೇಶಿ ಜಾಣರು ಚೆನ್ನಾಗಿ ಬಲ್ಲರು. ಕಡಿಮೆ ದರದಲ್ಲಿ ವಿದೇಶಿ ಸರಕುಗಳನ್ನು ಆರಂಭದ ವರ್ಷ ಒದಗಿಸುತ್ತ ಕ್ರಮೇಣ ಇಲ್ಲಿನ ವ್ಯವಸಾಯ ಮತ್ತು ಮಾರುಕಟ್ಟೆಯನ್ನು ದಾಸ್ಯಕ್ಕೆ ತಳ್ಳುವ ಷಡ್ಯಂತ್ರಜಾಲ ಸಿದ್ಧವಾಗುತ್ತಿದೆ. ಹತ್ತು ದಿನ ಇಟ್ಟರೂ ಕೆಡದಂಥ ಹಾಲನ್ನು ಡೆನ್ಮಾರ್ಕಿನವರು ಇಲ್ಲಿಯೂ ಹಂಚಿದರೆ ಇಲ್ಲಿನ ಎಮ್ಮೆ ಹಸುಗಳನ್ನೂ ಹಾಲನ್ನೂ ಕೇಳುವವರು ಯಾರು? ಇಳುವರಿ ಹೆಚ್ಚಲೆಂಬ ಕಾರಣಕ್ಕೆ ವಿದೇಶಿ ಮಿಶ್ರತಳಿ ಕಾಳು ಬಳಸುತ್ತಾರೆ. ಆದರೆ ಮುಂದಿನ ಬೆಳೆಗೆ ಅವು ನಿರುಪಯೋಗಿ, ಮರು ಉತ್ಪಾದಕವಲ್ಲ. ಅದರಿಂದ ಮತ್ತೆ ವಿದೇಶಿ ಮಾಲಕರ ಬಳಿ ಬಿತ್ತನೆ ಕಾಳಿಗೆ ಕೈಯೊಡ್ಡಿ ಪಾಳಿ ನಿಲ್ಲುವುದು ತಪ್ಪುವುದಿಲ್ಲ. ಈ ದಿಕ್ಕಿನ ಲೆಕ್ಕಾಚಾರವನ್ನು ನಮ್ಮ ರೈತ ಸಂಘಗಳು ಪರಿಭಾವಿಸಬೇಕಾದ ಸಂಕ್ರಮಣಾವಸ್ಥೆ ಬಂದಿದೆ. ಹೀಗೆ ಹೇಳುವಾಗ ಮತ್ತೆ ಹಳೆಯ ಪದ್ಧತಿಗಳಿಗೇ ಗಂಟು ಬೀಳಬೇಕೆಂದು ನಾನು ಸೂಚಿಸುತ್ತಿಲ್ಲ. ಕಾಲಕಾಲಕ್ಕೆ ತಕ್ಕ ಬದಲಾವಣೆ ಆಗುವಾಗಲೂ ನಾಳೆಗಳ ಮುನ್ನೋಟವೂ ನೆನಪಿರಲೆಂಬ ಗ್ರಹಿಕೆಯಿಂದ ಈ ನಾಲ್ಕು ಮಾತು ಆಡಿದ್ದೇನೆ. +ಶತಮಾನಗಳಿಂದ ಸ್ವಾಭಿಮಾನಿಗಳಾಗಿ ಬಾಳುತ್ತ ಬಂದಿರುವ ನೇಗಿಲಯೋಗಿಗಳು ಮರ್ಯಾದಾ ಪುರುಷೋತ್ತಮರು. ಈ ನಮ್ಮ ಅನ್ನದಾತರು ಇಂದು ಸರಣಿ ಆತ್ಮಹತ್ಯೆಯತ್ತ ಅಭಿಮುಖರಾಗಿರುವುದು ಕಳವಳಕಾರಿಯಾದ ಬೆಳವಣಿಗೆ. ಅಲ್ಲೊಬ್ಬ ಇಲ್ಲೊಬ್ಬರೆಂದು ಆರಂಭವಾಗಿ ಒಟ್ಟೊಟ್ಟಿಗೆ ಕುಟುಂಬಗಳೇ ಉರುಳಿಗೆ ಕೊರಳೊಡ್ಡಿದ ವರದಿಗಳು ತಲ್ಲಣಗೊಳಿಸುತ್ತಿವೆ. ಈ ದಾರುಣ ಘಟನೆಗಳಿಗೆ ವಿಷಣ್ಣರಾಗಿ ಮೊಸಳೆ ಕಣ್ಣೀರು ಸುರಿಸಿ ವಿರಮಿಸದೆ ನಾವೀಗ ಈ ಇಡೀ ಪ್ರಸಂಗಗಳ ಹಿಂದಿರುವ ವಾಸ್ತವವನ್ನು ಸರಿಯಾಗಿ ಅರಿತು ಪರಿಹಾರದ ದಾರಿಗಳನ್ನು ಹುಡುಕುವ ವಿವೇಕ ತೋರಬೇಕೆನಿಸಿದೆ. ರೈತರೇ ಅಲ್ಲದೆ ಇದೇ ಬಗೆಯ ಬವಣೆ ಬೇಗುದಿಯಲ್ಲಿ ಬೇಯುತ್ತಿರುವ, ಕೈಮಗ್ಗಗಳನ್ನು ನಂಬಿದ ನೇಕಾರರನ್ನೂ ಗಿರಣಿಗಳನ್ನು ಅವಲಂಬಿಸಿದ ಕಾರ್ಮಿಕರನ್ನೂ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುವವರನ್ನೂ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಾಗಿದೆ. ಬೇಕಾಬಿಟ್ಟಿ ಬಂದ್‌ಗೆ ಕರೆಕೊಡುವುದರಿಂದ ಇವರೆಲ್ಲರಿಗೂ ಆಗುವ ಬೃಹತ್ ಪ್ರಮಾಣದ ನಷ್ಟವನ್ನೂ ಗಮನಿಸಬೇಕು. +ಪುರುಷ ಪ್ರಧಾನವಾದ ಕುಟುಂಬಗಳಲ್ಲಿ ಆರ್ಥಿಕ ವಹಿವಾಟು ಬಹುವಾಗಿ ಯಜಮಾನ ಗಂಡಸಿನ ಕಾರ್ಯಭಾರವಾಗಿರುವುದರಿಂದ ಈಗಿನ ಆತ್ಮಹತ್ಯೆಯು ಅದಕ್ಕೆ ಆತ ತೆತ್ತಬೆಲೆಯೆ – ಎಂಬುದನ್ನೂ ಪರಾಮರ್ಶಿಸಬೇಕು. ಹಾಲಿ ಇರುವ ಸಾಂಸಾರಿಕ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಟು ತಂದುಕೊಂಡು ಹೆಂಗಸರಿಗೂ ಮನೆಯ ಆರ್ಥಿಕ ವಹಿವಾಟನ್ನು ವಹಿಸಿದ ಪಕ್ಷದಲ್ಲಿ ಈ ದುರಂತ ನಿವಾರಣೆಯಾದೀತೆ ಎಂದೂ ಪರಿಶೀಲಿಸಬೇಕು. ಇತ್ತೀಚೆಗೆ ಪ್ರಬಲ ಚಳವಳಿಯಾಗಿ ಹಳ್ಳಿಗಳವರೆಗೂ ಹಬ್ಬುತ್ತಿರುವ ಸ್ತ್ರೀಶಕ್ತಿ ಸಂಘಟನೆಯ ಸಬಲೀಕರಣ ಪ್ರಗತಿಯನ್ನು ಗಮನಿಸಿದಾಗ ಹೆಣ್ಣಿಗೆ ಆರ್ಥಿಕ ಸಬಲತೆ ತರುವ ನಿಟ್ಟಿನಲ್ಲಿಯೂ ಕಾರ್ಯತತ್ಪರರಾಗಬಹುದು. ರೈತರಿಗೂ ಕೂಲಿನಾಲಿಗಳಿಗೂ ಕಾರ್ಮಿಕರಿಗೂ ನೀಡುವ ಸಾಲಗಳಿಗೆ ಬಡ್ಡಿದರ ಬಹಳ ಕಡಿಮೆ ಇರಬೇಕು. ಚಕ್ರಬಡ್ಡಿ ಹಾಕಬಾರದು. ಮತ್ತು ದೀರ್ಘಾವಧಿ ಸಾಲ ಸುಲಭವಾಗಿ ಶೀಘ್ರವಾಗಿ ಸಿಗುವಂತಾಗಬೇಕು ಮಧ್ಯವರ್ತಿಗಳ ಬೋನುಗಳಿಂದ ಬಿಡಿಸಿ ಕೃಷಿ ಮಾರುಕಟ್ಟೆ ಸಂಘಗಳ ಮೂಲಕ ರೈತನ ಬೆಳೆಗೆ ನ್ಯಾಯಬೆಲೆ ಸಿಗುವಂತೆ ಕೊಳ್ಳಬೇಕು. ಆತ ಇಡೀ ವರ್ಷ ಬಂಡವಾಳ ಹೂಡಿ ಸರಿಯಾದ ಬೆಲೆ ಸಿಗಲಿಲ್ಲವೆಂದು ಹತಾಶನಾಗಿ ಹೊಲದಲ್ಲೂ ರಸ್ತೆ ಬದಿಯಲ್ಲೂ ತನ್ನ ಬೇಗೆಯನ್ನು ಬಿಸಾಕಿ ಕೈಚೆಲ್ಲುತ್ತಿದ್ದಾನೆ. ದಲ್ಲಾಳಿಗಳೊಂದಿಗೆ ಪೈಪೋಟಿಯಿಂದ ಸ್ಪರ್ಧಿಸಲಾಗದೆ ಮುಗ್ಗರಿಸುತ್ತಿದ್ದಾನೆ. +ರೈತರು ಬರ್ಬರತೆಗೆ ಒಲಿದವರಲ್ಲವಾದರೂ ಸಿಟ್ಟಿಗೇಳುವ ರಟ್ಟೆ ಬಲ ಇಲ್ಲವೆಂದಲ್ಲ. ಆದರೆ ಭೂಮಿಯನ್ನು ನಂಬಿದ ಅವರಿಗೆ ಭೂಮಿತೂಕದ ತಾಳ್ಮೆಯೂ ಸಹಜವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರ ಸಂಘಟನೆಯನ್ನು ಪುರಸ್ಕರಿಸಬೇಕು. ತಾನು ಬೆಳೆದದ್ದಕ್ಕೆ ಸರಿಯಾದ ಬೆಲೆ, ಪ್ರತಿಫಲ ಸಿಗಬೇಕೆಂಬುದು ನ್ಯಾಯ. ಕಾಯಕ ಜೀವಿಗಳ ಹೊಟ್ಟೆಯ ಮೇಲೆ ಬರೆ ಹಾಕಬಾರದು. ದಳ್ಳಾಳಿಗಳ ಬೋನಿಗೆ ಬೀಳದಂತೆ ರಕ್ಷಿಸುತ್ತ ಕಡಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಸಿಗುವಂತಾಗಬೇಕು. +ಮಹಿಳೆ : ಲೇಖಕಿಯ ಸುತ್ತಮುತ್ತ +ನಾನು ಮೊದಲಿಂದ ಸ್ತ್ರೀವಾದಿಯೆಂಬ ಠಸ್ಸೆ ಒತ್ತಿದ್ದಾರೆ. ಇದನ್ನು ಬೇಷರತ್ತಾಗಿ ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಮಹಿಳೆಯರ ಪರವಾಗಿ ಮುಂದೆ ನಿಂತು ಮಾತಾಡುವುದು ನನಗೆ ದಣಿವರಿಯದ ಪ್ರಿಯವಾದ ಕಾಯಕ. ಮಹಿಳೆಯನ್ನು ಎಲ್ಲೆಡೆ ಎರಡನೆಯ ದರ್ಜೆಯವಳೆಂದು ತಿಳಿಯುವ ಪರಿಪಾಟಿ ಈಗಲೂ ನಿಂತಿಲ್ಲ. ಹೆಣ್ಣು ಭ್ರೂಣಹತ್ಯೆ ವ್ಯವಸ್ಥಿತವಾಗಿ ಮುಂದುವರಿದಿದೆ. ಹೆಂಗಸರೇ ಹೆಂಗಸರಿಗೆ ಹಗೆಗಳಾಗದೆ, ತಮ್ಮನ್ನು ಕೀಳಾಗಿ ಕಾಣುವ ಕೀಳರಿಮೆಯಿಂದ ನರಳದೆ ಸಂಘಟಿತರಾಗಿ ಆತ್ಮಸ್ಥೈರ್ಯ ತಾಳಬೇಕು. ಹೆಣ್ಣು, ಲೋಕ ಹೇಳುವಷ್ಟು ದುರ್ಬಲಳೇನಲ್ಲ. ಕಳೆದ ಮೂರು ದಶಕಗಳಿಂದ ಈಚೆಗೆ ಸ್ತ್ರೀಪರವಾದ ಹೋರಾಟ ಹುರಿಗೊಳ್ಳುತ್ತಿದೆ. ವಿದೇಶಗಳಲ್ಲಿಯೂ ಸ್ತ್ರೀಯ ಶೋಷಣೆ ಅವ್ಯಾಹತವಾಗಿ ನಡೆದಿದೆ. ಆದರೆ ಹೆಣ್ಣಿಗೆ ಸರಿಸಮಾನ ಸ್ಥಾನಮಾನ ಸಿಗಬೇಕೆಂಬ ಹೋರಾಟ ಅಲ್ಲಿ ದಟ್ಟವಾಗಿದೆ. ಇಲ್ಲಿಗಿಂತ ಅಲ್ಲಿ ಸ್ತ್ರೀ ಆರ್ಥಿಕವಾಗಿ ಸಬಲೆ. +ಇಪ್ಪತ್ತು ಮೂವತ್ತು ವರ್ಷಗಳ ಹಿಂದಣ ಮಹಿಳಾ ಸಾಹಿತ್ಯದೊಂದಿಗೆ ಇಂದಿನ ಲೇಖಕಿಯರ, ಕೃತಿಗಳನ್ನು ಹೋಲಿಸಿದರೆ ಸ್ತ್ರೀಯರ ಬರೆಹ ನಿಚ್ಚಳವಾಗಿ ಗುಣಾತ್ಮಕವಾಗಿ ಮೌಲಿಕವಾಗುತ್ತಿರುವುದು ಕಾಣುತ್ತದೆ. ಅದರಲ್ಲಿಯೂ ೧೯೮೫-೯೦ ರಿಂದ ಈಚೆಗಿನ ಲೇಖಕಿಯರ ಬರವಣಿಗೆ ಮಹತ್ತರವಾದ ಬೆಳವಣಿಗೆಯನ್ನು ಬಿಂಬಿಸಿದೆ. ಹೀಗಿದ್ದೂ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ, ಪುರಸ್ಕಾರ ಸಿಕ್ಕಿಲ್ಲ. +ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ಪಕ್ಕಕ್ಕೆ ಸರಿಸುವ ರೂಢಿ ಈಗಲೂ ಇದೆ. ಆದರೆ ಸ್ತ್ರೀಯ ಸ್ವಾಭಿಮಾನ ಜಾಗೃತವಾಗಿದೆ. ಆಕೆ ಮಹಿಳೆಯೆಂಬ ರಿಯಾಯಿತಿ ಅಥವಾ ಸಹಾನುಭೂತಿ ಬೇಡವೆಂದು ಹೇಳುವ ಸ್ಥಿತಿಯಲ್ಲಿದ್ದಾಳೆ. ಸಾಹಿತ್ಯದಲ್ಲಿ ಲಿಂಗಭೇದ ಆಧಾರಿತ ತಾರತಮ್ಯವನ್ನೂ ವಿರೋಧಿಸಬೇಕು. ಆತ್ಯಂತಿಕವಾಗಿ ನಿಲ್ಲುವುದು ಮಾಡಿದ ದೊಡ್ಡ ಸಾಧನೆಗಳ ಗುಣಮಟ್ಟ. ತನ್ನ ಅರ್ಹತೆಯಿಂದಲೇ ಸೋಪಾನಗಳನ್ನೇರಿ ಎತ್ತರಗಳನ್ನು ಎಟುಕಿಸುವ ಈ ಆರೋಗ್ಯಕರ ಧೋರಣೆ ಶ್ಲಾಘ್ಯವಾದುದು. ಅಮೂರ್ತ ಸಿದ್ಧಾಂತಗಳಲ್ಲಿ ಸಾಹಿತ್ಯ ಅರಳುವುದಿಲ್ಲ. ಅದಕ್ಕೆ ಈ ನೆಲದ ಬದುಕಿನ ಬದ್ಧತೆ ಇರುತ್ತದೆ. ಶ್ರೇಷ್ಠ ಸಾಹಿತ್ಯ ಪ್ರಾದೇಶಿಕ ಹಾಗೂ ರಾಷ್ಟ್ರೀಯ ತುರ್ತುಗಳಿಗೆ ಸ್ಪಂದಿಸುತ್ತ ಕಡೆಗೆ ಎಲ್ಲ ಪರಿಮಿತ ಒತ್ತಡಗಳನ್ನು ಮೀರಿ ಜಾಗತಿಕ ಎತ್ತರಗಳಿಗೆ ಎಟುಕಬೇಕು. ಅಂದರೆ ಸಮಸ್ತ ಮನುಷ್ಯರ ಪರವಾಗಿ ನಿಂತು ಎಲ್ಲ ರೀತಿಯಿಂದ ಶೋಷಣೆಯನ್ನೂ ಸರ್ವಾಧಿಕಾರವನ್ನೂ ತುಳಿತವನ್ನೂ ಧಿಕ್ಕರಿಸಬೇಕೆಂಬ ಅರಿವು ಲೇಖಕಿಯರಿಗಿದೆ. +ದೇಶದ ಮುಖ್ಯವಾಹಿನಿಯೆಂದರೆ ಅದು ಪುರುಷ ವಾಹಿನಿಯೆಂಬ ಗ್ರಹಿಕೆಯಲ್ಲಿ ತಿದ್ದುಪಡಿ ಬರಲಿ. IZಜ್ಞಿ oಠ್ಟಿಛಿZಞ ಎಂದರೆ IZಛಿ oಠ್ಟಿಛಿZಞ ಮಾತ್ರ ಎಂಬ ಹೇಳಿಕೆಗೆ ಸಾಹಿತ್ಯವೂ ಹೊರತಲ್ಲ. ‘ಸಾಹಿತ್ಯ ಪುರುಷ ಪ್ರಧಾನ ಹಾಗೂ ಪುರುಷ ಕೇಂದ್ರಿತವಾಗಿದ್ದು ಸ್ತ್ರೀ ಅದರ ಅಂಚಿನಲ್ಲಷ್ಟೇ ಸಂಚರಿಸಬಹುದು, ಬಟ್ಟೆಯ ತುದಿಗಳಲ್ಲಿ ಅಲಂಕಾರಕ್ಕೆ ಇಳಿಯಬಿಟ್ಟ ಬಣ್ಣದ ಎಳೆಗಳಂತೆ. ಕಳೆದ ಎರಡು ದಶಕಗಳಿಂದ ಹಲವಾರು ಮಹಿಳೆಯರು ಲೇಖಣಿ ಹಿಡಿದಿದ್ದಾರೆ -ಎಂದಾಕ್ಷಣ ಪೊರಕೆ, ಲಟ್ಟಣಿಗೆ, ಸೌಟು ಕೆಳಗಿಟ್ಟಿದ್ದಾಳೆ ಎಂದು ಅರ್ಥವಲ್ಲ, ಈ ಶತಮಾನದಲ್ಲಿ ಬರೆಹಗಾರ್ತಿಯರ ಬಳಗ ದಟ್ಟವಾಗಿದ್ದು ಅವರ ಬರೆಹವೂ ಮಹತ್ವದಾಗುತ್ತಿದೆ. ಕಳೆದ ಶತಮಾನ ಮಹಿಳೆಯರು ಸಹಸ್ರಮಾನಗಳ ಮೌನ ಮುರಿದು ಮಾತಾಡಿದ ಹಾಗೂ ಬರೆಯತೊಡಗಿದ ಕಾಲಮಾನವಾದರೆ, ಈ ಶತಮಾನ ಆ ಬರೆಹ ಮತ್ತು ಮಾತನ್ನು ಶ್ರೇಷ್ಠ ಕಲಾಕೃತಿಯಾಗಿಸುವ ಹಂತ. ಸಾಮಾಜಿಕ, ಸಾಂಸ್ಕ ತಿಕ, ಆರ್ಥಿಕ, ರಾಜಕೀಯ ಪ್ರಗತಿಗೆ ಪಾಲುದಾರಳೆಂಬ ಗ್ರಹಿಕೆ ಸ್ಥಾಪಿತವಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಅಸ್ಪಶ್ಯರೆಂದೊ ಶೂದ್ರರೆಂದೊ ಕೆಲವರನ್ನು ಕೀಳಾಗಿ ಕಂಡಂತೆ ಲೇಖಕಿಯರನ್ನು ಕಡೆಗಣಿಸುವುದು ಅಸಾಧ್ಯವೆಂಬ ವಾಸ್ತವತೆ ಮನವರಿಕೆ ಆಗುತ್ತಿದೆ. ಮಾನದಂಡದ ಈ ಪಲ್ಲಟದಿಂದಾಗಿ, ಸಮಗ್ರ ಭಾರತೀಯ ಚರಿತ್ರೆಯನ್ನು, ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯ ಚರಿತ್ರೆಯನ್ನು ಮತ್ತೆ ಬರೆದು ಲೇಖಕಿಯರಿಗೆ ತೋರಿರುವ ಅನಾದರವನ್ನು ಸರಿಪಡಿಸಬೇಕಾಗಿದೆ. ನ್ಯಾಯವಾಗಿ, ಅರ್ಹತೆಯಿಂದ ಸಲ್ಲಬೇಕಾದ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಲೇಖಕಿಯರು ಆಗ್ರಹಿಸುವ ತನಕ ಕಾಯಬೇಕಾಗಿಲ್ಲ. +ಮಹಿಳೆಯರನ್ನು ಮಾರಾಟದ ಸರಕು ಎಂಬಂತೆ ಬಿಂಬಿಸುತ್ತ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಜಾಹಿರಾತು ಲೋಕದ ಪಾಪದ ಮುಖವನ್ನು ಕುರಿತು ನಾನು ಹೇಳಲೇಬೇಕಾದ ಪ್ರತಿಕ್ರಿಯೆ ಇದೆ. ಪ್ರತಿದಿವಸ ಮಾಧ್ಯಮಗಳಲ್ಲಿ ಮುದ್ರಣವಾಗುವ, ದೂರದರ್ಶನದಲ್ಲಿ ಪ್ರಸಾರವಾಗುವ ಅರ್ಥಹೀನ ಜಾಹಿರಾತುಗಳು ವಾಕರಿಕೆ ತರುತ್ತವೆ. ಗಂಡಸರು ಮುಖಕ್ಷೌರ ಮಾಡಿಕೊಳ್ಳುವ ರೇಜರ್ ಮತ್ತು ಬ್ಲೇಡುಗಳ, ಧರಿಸುವ ಒಳ ಚಡ್ಡಿಯ ಜಾಹಿರಾತಿಗೆ ಮಹಿಳೆಯನ್ನು ಬಳಸಿಕೊಳ್ಳುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಸುವಾಸನೆಯ ದ್ರವ್ಯಗಳನ್ನು ಪುರುಷ ಮೈಗೆ ಸಿಂಡಪಿಸಿಕೊಂಡ ಕೂಡಲೆ ಹೆಂಗಸರು ಮೈಮರೆತು ಓಡೋಡಿ ಬರುತ್ತಾರೆಂದೂ, ತಂಪುಪಾನೀಯ ಶೀರ್ಷೆಯನ್ನು ಗಂಡಸರ ಕೈಯಲ್ಲಿ ನೋಡುವುದೆ ತಡ ಸ್ತ್ರೀಯರು ದಡದಡಿಸಿ ಬಂದು ಮುತ್ತಿಕೊಳ್ಳುತ್ತಾರೆಂದೂ ತುಚ್ಛವಾಗಿ ತೋರಿಸಲಾಗುತ್ತಿದೆ. ಇಂಥ ಜಾಹಿರಾತುಗಳು ಆರೋಗ್ಯಕರ ಸಮಾಜಕ್ಕೆ ಶತ್ರುಗಳು. ಮಹಿಳೆಯರಿಗೇ ಅಲ್ಲದೆ ಪುರುಷರಿಗೂ ಅಪಮಾನಕರವಾದ ಈ ಬಗೆಯ ಜಾಹಿರಾತುಗಳನ್ನು ಖಂಡಿಸಬೇಕು. ಮಹಿಳೆಯರನ್ನು ಕೀಳಾಗಿ ಕಾಣಿಸುವ ಈ ದುರ್ಬಳಕೆಯನ್ನು ನಿಯಂತ್ರಿಸುವಂತೆ, ಪ್ರಪಂಚದಾದ್ಯಂತ ಅನ್ವಯಿಸುವಂತೆ ಜಾಹಿರಾತು ನೀತಿಸಂಹಿತೆಯನ್ನು ಜಾರಿಗೆ ತರಬೇಕೆಂದು ಈ ವೇದಿಕೆಯಿಂದ ಆಗ್ರಹಪಡಿಸುತ್ತೇನೆ. ಕೆಲವು ಮಾನವೀಯ ಘನತೆಯನ್ನು ಮಾನ್ಯಮಾಡಿ ಸ್ತ್ರೀಪುರುಷರೆಂಬ ತಾರತಮ್ಯಗಳಿಲ್ಲದೆ ಮಾನವತೆಯ ಮಣೆಯ ಮೇಲೆ ನಿಲ್ಲಿಸುವ ವಿವೇಕ ಆಳಬೇಕು. +ಮಹಿಳೆ ಹಿಂದುಳಿದವರಲ್ಲಿ ಬಹು ಹಿಂದುಳಿದವಳು, ಶೋಷಿತರಲ್ಲಿ ಬಹು ಶೋಷಿತಳು. ಸಾಮಾಜಿಕವಾಗಿ ಮಂದುವರಿದ ಸಮಾಜವಿರಲಿ, ಧಾರ್ಮಿಕವಾಗಿ ಮೇಲು ಜಾತಿಯ ಸಂಸಾರಗಳಾಗಲಿ, ಆರ್ಥಿಕವಾಗಿ ಸದೃಢವಾದ ಕುಟುಂಬಗಳಿರಲಿ – ಎಲ್ಲೆಲ್ಲೂ ಮಹಿಳೆಗೆ ಎರಡನೆಯ ಸಾಲು. ಸುಲಿಗೆಯ ರೂಪ ಸ್ವರೂಪ ವ್ಯತ್ಯಾಸಗೊಳ್ಳಬಹುದೇ ಹೊರತು ಶೋಷಣೆ ನಿಂತಿಲ್ಲ. ಕೊಳಚೆ ಪ್ರದೇಶಗಳ ಹೆಂಗಸರು, ಮಕ್ಕಳು ಶಿಕ್ಷಣ ಸೌಲಭ್ಯದಿಂದ ದೂರ ಇದ್ದಾರೆ. ಲೈಂಗಿಕ ಕಿರುಕುಳ ಹಾಗೂ ಕೌಟಿಂಬಿಕ ಕಲಹಗಳಿಗೆ ಮೀಸಲಾದ ಕಾನೂನನ್ನು ಸಾಮಾಜಿಕ, ಮಾನಸಿಕ ದೃಷ್ಟಿಯಿಂದ ವಿಶ್ಲೇಷಿಸುವತ್ತ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಮಹಿಳಾ ಆಯೋಗ ಇನ್ನೂ ಸಶಕ್ತವಾಗಬೇಕು. ಇಂದು ಹೆಣ್ಣಿಗೆ ಸ್ವಾಭಿಮಾನದ ಹಸಿವು ಮುಖ್ಯವೆನಿಸಿದೆಯೆಂಬ ಅರಿವು ಪುರುಷರಲ್ಲೂ ಉಂಟಾಗಿ ಸಹಕರಿಸುತ್ತಿರುವುದು ಸ್ವಾಗತಾರ್ಹ. ಇಷ್ಟಿದ್ದೂ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಲೋಕಸಭಾ ಸದಸ್ಯರು, ಒಂದಿಲ್ಲೊಂದು ಕಾರಣಗಳನ್ನು ಮುಂದಿಟ್ಟು, ಮುಂದೂಡುತ್ತಿರುವುದು ದುರಂತ. ರಾಜಕೀಯ ಇಚ್ಛಾಶಕ್ತಿ ಮಹಿಳಾಪರ ಧೋರಣೆಗೆ ಓಗೊಟ್ಟು ಬೇಗ ಸ್ಪಂದಿಸಿದರೆ ಸ್ತ್ರೀಶಕ್ತಿಯ ಸಂಘಟನೆಗೆ ಸಿಂಹಬಲ ಬರುತ್ತದೆ. +ಭಾರತದಲ್ಲಿ ಅಕ್ಷರಸ್ಥ ಸ್ತ್ರೀಯರ ಸಂಖ್ಯೆ ಕಡಿಮೆ. ಲೇಖಕಿಯರು ಮತ್ತೂ ಕಡಿಮೆ. ಸ್ತ್ರೀಯರ ಲೇಖನಕ್ಷೇತ್ರದ ಹಸಿರು ಕ್ರಾಂತಿಗೆ ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರೇರಣೆಯಾದದ್ದು ನಿಜ. ಮಹಿಳಾ ಸಾಹಿತ್ಯದ ನೆಲೆಬೆಲೆಯ ಪರಾಮರ್ಶೆಗೂ ಆತ್ಮಾವಲೋಕನಕ್ಕೂ ಭೂಮಿಕೆ ಸೃಷ್ಟಿಯಾದದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ೧೯೭೫ರಲ್ಲಿ ನಡೆಸಿದ ಲೇಖಕಿಯರ ಸಮ್ಮೇಳನದಲ್ಲಿ. ಅದು ಮೊತ್ತಮೊದಲ ಐತಿಹಾಸಿಕ ಹೆಜ್ಜೆ. ಅಲ್ಲಿಂದ ವೈಚಾರಿಕ, ವೈಜ್ಞಾನಿಕ ಬುದ್ಧಿ ಭಾವಗಳ ಸಿದ್ಧತೆಯ ಮಶಾಲು ಹಿಡಿದು ಹೊರಟ ಲೇಖಕಿಯರ ಗಂಭೀರ, ಸೃಜನಶೀಲ ಕೃತಿಗಳು ಹೊರಬರಲು ಸಾಧ್ಯವಾಯಿತು. ಸಾಹಿತ್ಯದಲ್ಲಿ ಲಿಂಗಭೇದ ಆಧರಿಸಿದ ತಾರತಮ್ಯ ಇಲ್ಲವೆಂಬ ಅರಿವಿನಿಂದ ಸತ್ವಶಾಲಿ ಬರವಣಿಗೆಯೇ ಮೌಲಿಕವೆಂಬ ಗ್ರಹಿಕೆ ಗಟ್ಟಿಯಾಯಿತು. ಸಾಹಿತ್ಯದ ಪಲ್ಲಟಗಳ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಅರಿವಿನ ಸ್ಪೋಟದಿಂದ ಲೇಖಕಿಯರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕ್ರಿಯಾಶೀಲರಾಗಿದ್ದಾರೆ. +ನಾನು ಅದೃಷ್ಟಶಾಲಿ. ನನ್ನ ಕೆಲವು ಕನಸುಗಳು ನನಸಾದುವು, ಪ್ರಯತ್ನಗಳು ಫಲಿಸಿದುವು. ಕರ್ನಾಟಕ ಸರ್ಕಾರ ಪ್ರತಿವರ್ಷ ಅತ್ತಿಮಬ್ಬೆಯ ಹೆಸರಿನಲ್ಲಿ ಸಾಹಿತ್ಯಕವಾಗಿ ದೀರ್ಘಕಾಲಿಕ ಮಹತ್ಸಾಧನೆ ಮಾಡಿದ ಮಹತ್ವದ ಲೇಖಕಿಗೆ ಒಂದು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಪ್ರಶಸ್ತಿಯಿಂದ ಪುರಸ್ಕರಿಸಬೇಕೆಂದು ಎಡೆಬಿಡದೆ ಸರಕಾರವನ್ನು ಕಾಡಿದೆ. ನನ್ನ ಹೋರಾಟದ ಸಾಂಸ್ಕ ತಿಕ ಆಯಾಮವನ್ನು ಮನಗಂಡು ಘನ ಕರ್ನಾಟಕ ಸರ್ಕಾರ ನಾನಿತ್ತ ಸೂಚನೆಯನ್ನು ಪೂರ್ತಿಯಾಗಿ ಮಾನ್ಯಮಾಡಿತು. ನನ್ನ ಮನವಿಗೆ ಸಂಪೂರ್ಣ ಸ್ಪಂದಿಸಿದ, ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರನ್ನೂ ಸಂಸ್ಕ ತಿ ಸಚಿವೆಯಾಗಿದ್ದ ಬಿ.ಟಿ. ಲಲಿತಾನಾಯಕ ಅವರನ್ನೂ ಇಂದೂ ಸಹ ಕೃತಜ್ಞತೆಯಿಂದ ನೆನೆಯುತ್ತೇನೆ. +ಅಬ್ಬಕ್ಕರಾಣಿಯ ಸಾಹಸ ಆಕೆಯ ಜೀವಿತ ಕಾಲದಲ್ಲಿ ಜಾಗತಿಕ ವೇದಿಕೆಗೆ ಸಂದಿತ್ತು. ಆ ತಾಯಿ ಮಗಳು ಧೈರ್ಯ ಸಾಹಸ ತೋರಿರದಿದ್ದರೆ ದೇಶದ ಇತಿಹಾಸ ಪಲ್ಲಟಗೊಂಡು ಇಂದು ಭಾರತವನ್ನು ಬ್ರಿಟಿಷರ ಬದಲು ಪೋರ್ಚುಗೀಸರು ಆಳುತ್ತಿದ್ದರು. ಅಂಥ ಸ್ವಾಭಿಮಾನಿ ರಾಣಿಯ ನೆನಪನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಸಲ ಸೂಚಿಸಿದ್ದೇನೆ. ಮಂಗಳೂರು ಬಂದರಿಗೂ, ಮಂಗಳೂರಿಂದ ಹೊರಡುವ ಅಥವಾ ಬರುವ ರೈಲು ಒಂದಕ್ಕೆ ಅಬ್ಬಕ್ಕರಾಣಿಯ ಹೆಸರಿಡುವುದರಲ್ಲಿ ಔಚಿತ್ಯವಿದೆ. +ದೀರ್ಘಕಾಲ ಆಳಿದ ಏಕಮೇವಾದ್ವಿತೀಯ ಮಹಾಮಂಡಲೇಶ್ವರಿ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ನೆನಪನ್ನು ಚಿರಸ್ಥಾಯಿಗೊಳಿಸುವ ದಿಕ್ಕಿನಲ್ಲಿ ಈ ನಾಡು ಮಾಡಬೇಕಾದ ಕೆಲಸಗಳನ್ನು ಸರಕಾರದ ಹಾಗೂ ಜನತೆಯ ಗಮನಕ್ಕೆ ತಂದಿದ್ದು ಇನ್ನೂ ನೆನೆಗುದಿಗೆ ಬಿದ್ದಿವೆ. ಹೊನ್ನಾವರ, ಹಾಡುವಳ್ಳಿ, ಬಾರಕೂರು, ಭಟ್ಕಳ, ನಗಿರೆ ರಾಜ್ಯಗಳನ್ನು ಒಳಗೊಂಡ ವ್ಯಾಪಕ ಪ್ರದೇಶವನ್ನು ಗೆರಸೊಪ್ಪೆ ರಾಜಧಾನಿಯಿಂದ ಆಳಿದ ಈ ಮಹಾರಾಣಿ ಕರ್ನಾಟಕದ ಸಾಹಿತ್ಯ, ಶಿಲ್ಪ, ಕಲೆ, ವಾಣಿಜ್ಯ ವ್ಯವಹಾರ, ಸಂಸ್ಕ ತಿ ಪುರೋಭಿವೃದ್ಧಿಗೆ ನೀಡಿದ ಕೊಡುಗೆ ದೊಡ್ಡದು. +ಮಹಿಳಾ ವಿಶ್ವವಿದ್ಯಾಲಯ ಆಗಬೇಕೆಂದು ನಿರಂತರವಾಗಿ ೧೯೯೩ರಿಂದ ಒಕ್ಕೊರಲಿಂದ ಸಾರುತ್ತ ಬಂದಿದ್ದೆ. ನೂರಾರು ವೇದಿಕೆಗಳಿಂದ ಹಕ್ಕೊತ್ತಾಯ ಮಾಡುತ್ತ ಸರಕಾರದ ಮೇಲೆ ಒತ್ತಡ ಏರಿದ್ದಲ್ಲದೆ ಸಾರ್ವಜನಿಕ ಅಭಿಪ್ರಾಯವನ್ನೂ ರೂಪಿಸಿದೆ. ನಮ್ಮ ಘನ ಸರಕಾರ ಈ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸಲು ಹರ್ಷಿಸುತ್ತೇನೆ. +ಜನಭಾಷೆಯಾದ ಕನ್ನಡವನ್ನು ಮಹಾಕಾವ್ಯದ ಭಾಷೆಯನ್ನಾಗಿಸಿದ ಆದಿಕವಿ ಪಂಪನ ೧೧೦೦ನೆಯ ಹುಟ್ಟುಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ಜನತೆಗೂ ಸರಕಾರಕ್ಕೂ ಕರೆ ಕೊಟ್ಟಿದ್ದು ಬಹುವಾಗಿ ಈಡೇರಿದೆ. ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮ ಗಳಾದುವು. ಸಾರ್ವಜನಿಕ ಸಂಘ ಸಂಸ್ಥೆಗಳೂ ಶಾಲಾ ಕಾಲೇಜುಗಳೂ ವಿಶ್ವವಿದ್ಯಾನಿಲಯಗಳೂ ಪಂಪನ ಕಾವ್ಯಗಳ ಚಿಂತನ ಮಂಥನ ನಡೆಸಿವೆ. ನನಗೆ ತಿಳಿದಂತೆ ೯೦ ಕಾರ್ಯಕ್ರಮಗಳಾಗಿವೆ. ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಸಹ ಸರಕಾರ ನೀಡುತ್ತ ಬಂದಿದೆ. +ಕನ್ನಡ ಸಂಸ್ಕ ತಿ ಇಲಾಖೆ ಈ ವಿಚಾರದಲ್ಲಿ ಆದ್ಯತೆ ಮೇರೆಗೆ ಕಾರ್‍ಯಪ್ರವೃತ್ತವಾಗಲು ತಕ್ಷಣ ನಾನುಕೊಟ್ಟ ಮನವಿ ಪತ್ರದ ಮೇಲೇ ಸೂಚನೆಯಿತ್ತು ಚಾಲನೆ ನೀಡಿದ ಮುಖ್ಯಮಂತ್ರಿ ಯವರಿಗೆ ಈ ವೇದಿಕೆಯಿಂದ ವಂದನೆ ಹೇಳುತ್ತೇನೆ. ಅಲ್ಲದೆ ಅವರು ಈ ಸಂಬಂಧವಾಗಿ ತುರ್ತಾಗಿ ಮಾಡಲೇಬೇಕಾದ ಇನ್ನೊಂದು ಕಾರ್ಯಕ್ರಮಕ್ಕೂ ಮುಂದಾಗಬೇಕೆಂದು ಪ್ರಾರ್ಥಿಸುತ್ತೇನೆ. ನಾನು ಮಾಡಿದ ಮನವಿ ಹಾಗೂ ಮಂಡಿಸಿದ ಸೂಚನೆಗಳಲ್ಲಿ ಶಿಖರ ಪ್ರಾಯವಾದುವು ಎರಡು: +ಕರ್ನಾಟಕಾಂಧ್ರ ಸರಕಾರಗಳು ಸಂಯುಕ್ತವಾಗಿ ಸಹಯೋಗದಿಂದ ಆಂಧ್ರದ ಕರೀಂನಗರ ಜಿಲ್ಲೆಯ ಗಂಗಾಧರಂ ತಾಲೂಕಿನ ಕುರ್ಕ್ಯಾಲ ಗ್ರಾಮದ ಹತ್ತಿರವಿರುವ ಜಿನವಲ್ಲಭನ ಶಾಸನ ಇರುವ ಮಹತ್ವದ ಗುಡ್ಡವನ್ನು ರಾಷ್ಟ್ರೀಯ ಸ್ಮಾರಕವಾಗಿ ಕಾಪಾಡುವುದು ಜರೂರು ಆಗಬೇಕು. ಅದನ್ನು ಸಾಹಿತ್ಯ, ಸಂಸ್ಕ ತಿ ಮಹತ್ವದ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು. ಮೂಲನಿಧಿಯಾದ ಶಿಲ್ಪ ಹಾಗೂ ಶಾಸನಕ್ಕೆ ಧಕ್ಕೆ ಆಗದಂತೆ ಆ ಬೆಟ್ಟವನ್ನು ಹತ್ತಲೂ ಇಳಿಯಲೂ ಮೆಟ್ಟಿಲನ್ನು ಮಾಡಿಸಬೇಕು, ಎರಡೂ ರಾಜ್ಯದ ಮುಖ್ಯಮಂತ್ರಿಗಳೊಮ್ಮೆ ಅಲ್ಲಿಗೆ ಸಂಸ್ಕ ತಿ ಸೌಹಾರ್ದವರ್ಧನ ಯಾತ್ರೆ ಮಾಡುವುದು ಅಗತ್ಯ. ತೆಲುಗು ಭಾಷೆಯ ಪ್ರಥಮ ಹಾಗೂ ಪ್ರಾಚೀನ ಪದ್ಯಗಳನ್ನು ಅಲ್ಲಿ ಪಂಪನ ತಮ್ಮ ಜಿನವಲ್ಲಭ ಕ್ರಿ.ಶ. ೯೫೦ರಲ್ಲಿ ಬರೆದಿದ್ದಾನೆ. ಸಂಸ್ಕ ತ – ತೆಲುಗು- ಕನ್ನಡ ಮೂರು ಭಾಷೆಗಳಲ್ಲಿ ಆ ಶಾಸನವಿದೆ. ತೆಲುಗು ಭಾಷೆಯ ಆದಿಕವಿ ಜಿನವಲ್ಲಭನ ಹಾಗೂ ಕನ್ನಡದ ಆದಿಕವಿ ಪಂಪನ ನೆನಪನ್ನು ಹೊತ್ತು ಎತ್ತರದಲ್ಲಿ ನಿಂತಿರುವ ಈ ಭವ್ಯ ಸ್ಮಾರಕದ ಮಹತ್ವವನ್ನು ನಾನಿಲ್ಲಿ ಮತ್ತೆ ಉತ್ಪ್ರೇಕ್ಷಿಸಬೇಕಾದ ಅಗತ್ಯವಿಲ್ಲ. ಉಭಯ ಸರಕಾರಗಳಿಗೆ ಕೀರ್ತಿ ತರುವ ಈ ಕೆಲಸವನ್ನು ಅವಶ್ಯ ಮಾಡಬೇಕಾದ ಕರ್ತವ್ಯವೆಂದು ಪರಿಗಣಿಸಬೇಕು. +ಪಂಪ ಕರ್ನಾಟಕಾಂಧ್ರವಲ್ಲದೆ ಇಡೀ ಭಾರತದ ರಾಷ್ಟ್ರಕವಿ. ಆತನ ಕಾವ್ಯಗಳ ಸಾಹಿತ್ಯಕ ಹಾಗೂ ಸಾಂಸ್ಕ ತಿಕ ಅಭಿವ್ಯಾಪಕ ಆಯಾಮವನ್ನು ಭಾರತಕ್ಕೆ ಬಿತ್ತರಿಸುವ ರೀತಿಯಲ್ಲಿ ದೆಹಲಿಯಲ್ಲಿ ಇಂಗ್ಲಿಷಿನಲ್ಲಿ ಮೂರು ದಿವಸಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಬೇಕೆಂದು ಸರಕಾರಕ್ಕೆ ಒಪ್ಪಿಸಿದ್ದ ಹಾಗೂ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರ ಸಹಿಯೊಂದಿಗೆ ಸಂಸ್ಕ ತಿ ಇಲಾಖೆಗೆ ರವಾನೆಯಾದ ಪತ್ರದಲ್ಲಿ ನಮೂದಿಸಿದ್ದೆ. ಅದು ಇನ್ನೂ ಕಾರ್ಯಗತ ಆಗಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೃಪೆಯಿಟ್ಟು ಈ ವಿಚಾರದಲ್ಲಿ ಸೂಕ್ತ ಆದೇಶವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಕನ್ನಡವನ್ನೂ ಕರ್ನಾಟಕವನ್ನೂ ತನ್ನೆಲ್ಲ ರಾಜಕೀಯ ವೈಭವದೊಂದಿಗೆ ಪ್ರತಿಷ್ಠಾಪಿಸಿದ ಪಂಪನ ಪ್ರಯತ್ನ ಅನನ್ಯವಾದದ್ದು. ಪಂಪನ ಹೆಸರು ಹೇಳಿದರೆ, ಅವನ ಕಾವ್ಯ ಓದಿದರೆ ಮಿಂಚಿನ ಸಂಚಾರವಾಗುತ್ತದೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ ಚಿಮ್ಮುತ್ತದೆ. ಭಾರತೀಯ ಭಾಷೆಗಳಲ್ಲಿಯೇ ವ್ಯಾಸಭಾರತವನ್ನು ಸಂಸ್ಕ ತದಿಂದ ಜನಭಾಷೆಗೆ ಜಗ್ಗಿ ಇಳಿಸಿದವನು ಕನ್ನಡದ ಪಂಪನೇ ಮೊತ್ತಮೊದಲಿಗನೆಂಬುದನ್ನು ನೆನೆದಾಗ ಈಗಲೂ ಮೈ ನವಿರೇಳುತ್ತದೆ. ಅದರಿಂದ ಕನ್ನಡದ ಏಳಿಗೆಗೆ, ಕನ್ನಡದ ಮಹತ್ವವನ್ನು ಅನ್ಯಭಾಷಾ ಸಾಹಿತ್ಯ ವಲಯದಲ್ಲಿ ನಿಲ್ಲಿಸುವುದಕ್ಕೆ ಈ ರಾಷ್ಟ್ರೀಯ ವಿಚಾರ ಸಂಕಿರಣ ಅಧಿಷ್ಠಾನವಾಗುತ್ತದೆ. +ತಂತ್ರಜ್ಞಾನ : ಸವಾಲು, ಜವಾಬು +ನಮ್ಮ ಕಾಲದ ಸಾಧನೆಗಳ ಬೃಹತ್ತು ಮಹತ್ತು ಅಸೀಮವಾದುದು ದೀರ್ಘಕಾಲ ದೊಡ್ಡಬಾಳು ಬದುಕಿದ ಬಹುದೊಡ್ಡ ಲೇಖಕರು ಆಗಿಹೋದ ಶತಮಾನ. ಸಂಪರ್ಕ ಸುಲಭವಾಗಿದೆ, ಸಂವಹನ ಸೌಕರ್ಯ ಹೆಚ್ಚಿದೆ. ಇಂದು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಮನುಷ್ಯ ಲೋಕವನ್ನು ತಬ್ಬಿದೆ. ಈ ವಿದ್ಯುನ್ಮಾನ – ಟೆಕ್ನಾಲಜಿಯೆಂಬ ಬಾಹುಬಂಧನ ಧೃತರಾಷ್ಟ್ರ ಆಲಿಂಗನ ಆಗದಂತೆ ಎಚ್ಚರ ಇರಬೇಕು. ಹೈಟೆಕ್ ನಮಗೆ ಶಾಪವಾಗದೆ ವರವಾಗಿ ಬರಬೇಕು. ಯಾವುದೇ ಆವಿಷ್ಕಾರ ಮನುಷ್ಯ ಸಂಬಂಧವನ್ನು ಹಾಗೂ ಪುಸ್ತಕ ಸಂಸ್ಕ ತಿಯನ್ನು ಅಳಿಸಿ ಹಾಕಲು ಬಿಡಬಾರದು. ಕನ್ನಡ ಭಾಷೆ ಹಾಗೂ ಲಿಪಿಯ ನಾಶ ಆಗಬಾರದು. ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಮೆಲ್ಲಗೆ ನುಸುಳುತ್ತಿವೆ. ಇದು ಬಿಡಾರದೊಳಗೆ ಒಂಟೆ ತಲೆಹಾಕಿದಂತೆ ಆಗಬಾರದು. ಮೆಟ್ರೊ ಬೃಹತ್ ಮಳಿಗೆ ಬೆಂಗಳೂರಲ್ಲಿ ಕಾಲೂರಿದೆ. ಇದು ಕೊಳ್ಳುಬಾಕತನದ ಚಟ ಹುಟ್ಟಿಸಿ ಆಮೇಲೆ ನಮ್ಮನ್ನು ಗುಲಾಮರನ್ನಾಗಿಸುವ ವಿದೇಶಿ ಹುನ್ನಾರ. ಪರ್‍ಯಾಯವಾಗಿ ಕನ್ನಡ ಸಂಸ್ಕ ತಿಯ ಮೇಲೆ ನಡೆಯುವ ಹಲ್ಲೆ. +ಆಧುನೀಕರಣ, ಜಾಗತೀಕರಣ ಎಂಬುವು ಕನ್ನಡದ ಕುತ್ತಿಗೆ ಅದುಮಿ ಉಸಿರಾಟವನ್ನು ನಿಲ್ಲಿಸುವ ದಿಕ್ಕಿನಲ್ಲಿ ಹಬ್ಬಲು ಬಿಡಬಾರದು. ಕನ್ನಡ ರಾಷ್ಟ್ರೀಯತೆಯ ಗಟ್ಟಿ ಬುಡ ಬೇರುಗಳನ್ನು ಸಡಿಲಿಸಲು ತೊಡಗಿದರೆ ಒಡನೆಯೇ ಸಾಹಿತಿಗಳೂ ಕಲಾವಿದರೂ ತಮ್ಮ ಲೇಖನಿ ಕುಂಚಗಳನ್ನು ಖಡ್ಗವಾಗಿಸಿ ಝಳಪಿಸಲು ಸಿದ್ಧವಾಗಿರಬೇಕು. ಪ್ರಸ್ತುತಕ್ಕೆ ಬೇಕಾದ ಪ್ರಖರ ಸಾಹಿತ್ಯ ಪಥ ನಿರ್ಮಾಣವಾಗಿ ಹೊಸಪಂಥ ಹುಟ್ಟಿ ಸಮಾಜಮುಖಿ ನೆಲೆಗಳತ್ತ ಹುರಿಗೊಳ್ಳಲಿ. ತುಂಬ ಉಮೇದಿನಿಂದ ಭೋರ್ಗರೆದು ವೇಗವಾಗಿ ಹೊರಟಿರುವ ಮಾಹಿತಿ ತಂತ್ರಜ್ಞಾನದ ಓಘದಲ್ಲಿ ಕನ್ನಡದ ತಂತ್ರಾಂಶ ಸೊರಗದಂತೆ ವರ್ತಿಸೋಣ. ಕಂಪ್ಯೂಟರ್ ವಿದ್ಯುನ್ಮಾನದತ್ತವಾದ ಈ ಟಿ.ವಿ., ವಿಡಿಯೊ ಆಟಗಳು ಕನ್ನಡ ಭಾಷೆಗೆ ಮಾರಕವೊ ಪೂರಕವೊ ಎಂಬ ವಾಗ್ವಾದ ನಡೆದಿದೆ. ದೂರದರ್ಶನದ ಮುಂದೆ ಮುಂಜಾವಿನಿಂದ ಸಂಜೆಯತನಕ ಅಂಟಿಕೊಂಡ ಕಣ್ಣನ್ನು ಬೇರೆ ಕಡೆ ಹೊರಳಿಸದ ಆಬಾಲವೃದ್ದರು ಕೋಟಿಗಟ್ಟಲೆ ಇದ್ದಾರೆಂದು ಸಮೀಕ್ಷೆಗಳು ವರದಿಮಾಡಿವೆ. ಧಾರಾವಾಹಿಗಳಿಗೆ ತನ್ನನ್ನು ತೆತ್ತುಕೊಂಡ ಬುದ್ಧಿ ಭಾವಗಳಿಗೆ ಅವುಗಳ ಪ್ರಸಾರ ವೇಳೆಯಲ್ಲಿ ಎಂಥ ಹತ್ತಿರದ, ಆಪ್ತ ನೆಂಟರಿಷ್ಟರು ಬಂದರೂ ‘ಈ ಶನಿಗಳು ಯಾಕೆ ವಕ್ರಿಸಿದರೊ’ ಎಂದು ಗೊಣಗುವರು ಇದ್ದಾರೆ. ಕ್ಯಾಸೆಟ್ಟುಗಳೂ ಸಿಡಿಗಳೂ ಸುಲಭವಾಗಿ ಸಿಗುತ್ತವೆ. ಇವುಗಳೊಂದಿಗೆ ಟಿವಿ ಮುಂದೆ ಕುಳಿತರೆ ಅದೇ ಜಗತ್ತು. ಹೊರಗೆ ಬಾಂಬು ಹಾಕಿದರೂ ಅಲ್ಲಾಡರು. +ಹಳೆಯದೆಲ್ಲ ಹೊನ್ನಲ್ಲ ಎಂದು ಅಲ್ಲಗಳೆಯುವ, ಹಳತೆಲ್ಲ ಹಳಸಲಲ್ಲ ಎಂದು ಮೆಚ್ಚುವ ಎರಡು ತುದಿಗಳಿರುತ್ತವೆ. ಈ ತುದಿಗಳ ಸಮನ್ವಯದೊಂದಿಗೆ ವೈಚಾರಿಕ, ವೈಜ್ಞಾನಿಕ ಚಿಂತನ ಮಂಥನ ಜಗತ್ತಿನಲ್ಲಿ ವಿಪುಲವಾಗಿ ನಡೆದಿವೆ. ಪರಿಣಾಮವಾಗಿ ನಾನಾ ಜ್ಞಾನ ಕ್ಷೇತ್ರಗಳಲ್ಲಿ ವಿನೂತನ ಜಾಗತಿಕ ಪರಿಕಲ್ಪನೆಗಳು ಚಿಗುರಿವೆ. ಜಾಗತಿಕ ಚಿಂತನೆಗಳು ದೇಶೀಯ ಹಾಗೂ ಸ್ಥಳೀಯ ಕ್ರಿಯೆಗಳ ಹಾಸಿನಲ್ಲಿ ಹೆಣೆದುಕೊಳ್ಳಬೇಕು. +ತಂತ್ರಜ್ಞಾನದ ಅನನ್ಯ ಚೈತನ್ಯವನ್ನು ಅಲಕ್ಷಿಸುವಂತಿಲ್ಲ. ತಂತ್ರಜ್ಞಾನ ಹೊಸಕಾಲದ ಅನಿವಾರ್ಯತೆ. ಹೊಸಕಾಲವನ್ನು ಹೊಸ ತಂತ್ರಜ್ಞಾನದ ಮೂಲಕವೇ ಪಳಗಿಸಿ, ದುಡಿಸಿ ನಾಡು ಅಭಿವೃದ್ಧಿ ಹೊಂದಬೇಕು. ನಾವು ವಿiನುಗಳಂತೆ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವುದು ಸಾಧ್ಯವಿಲ್ಲ. +ವಿಜ್ಞಾನವೇ ಸರ್ವಜ್ಞ ಅಥವಾ ಸರ್ವಸ್ವ ಅಲ್ಲ. ಅದರ ಗ್ರಹಿಕೆಗೂ ಮೀರಿದ ಸಂಗತಿಗಳು, ಸಂಬಂಧಗಳು ಸೃಷ್ಟಿಯಲ್ಲಿವೆ. ಅಕ್ಷರ ಜ್ಞಾನದ ಆಚೆಗೂ ಚಾಚಿರುವ ಅದ್ಭುತಗಳಿವೆ. ವಿದ್ಯಾವಂತರೆಲ್ಲ ವಿಚಾರವಂತರಲ್ಲ. ಅವಿದ್ಯಾವಂತರೆಲ್ಲ ಅಜ್ಞಾನಿಗಳಲ್ಲ. ಅವಿದ್ಯಾವಂತ ಜ್ಞಾನಿಗಳೂ ಅಶಿಕ್ಷಿತರ ಸಂಸ್ಕ ತಿಯೂ ಉಪಾದೇಯವೇ. +ಆಧುನೀಕರಣ ಎಂದೂ ಉದಾರೀಕರಣ, ಕೈಗಾರಿಕೀಕರಣ, ಜಾಗತೀಕರಣ, ಖಾಸಗೀಕರಣ, ನಗರೀಕರಣ ಎಂದೂ ಹೊಸ ಪಂಚಕರಣಗಳು ಮೊಳಗುತ್ತಿವೆ. ಇವುಗಳಿಗೆ ನಾವು ಸ್ಪಂದಿಸದಿರುವುದು ಸಾಧ್ಯವಿಲ್ಲ. ಹೊಸದನ್ನು ಬರಮಾಡಿಕೊಳ್ಳಲು ಅನುಮಾನಗಳೂ ಆತಂಕಗಳೂ ಇರುವುದು ಸಹಜ. ಒಂದು ವ್ಯವಸ್ಥೆಗೆ, ಜೀವನ ಶೈಲಿಗೆ, ಚಿಂತನಾಕ್ರಮಕ್ಕೆ ಒಗ್ಗಿದ ನಮ್ಮ ಬುದ್ಧಿ ಭಾವಗಳು ಬದಲಾವಣೆಗೆ ತಯಾರಾಗದೆ ತಕರಾರು ಮಾಡುತ್ತವೆ. +ಜಾಗತೀಕರಣ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳೂ ಕರಗಿ ಹೋಗಿ ಬಾಳು ಒಮ್ಮೆಲೇ ಸುಗಮಗೊಳ್ಳತ್ತದೆಂಬುದು ಭ್ರಮೆಯೆನಿಸಿದರೂ ಅದು ಬೊಗಳೆಯಲ್ಲ. ಜಾಗತೀಕರಣದ ದೂರಗಾಮಿ ಪರಿಣಾಮಗಳ ವಿಚಾರದಲ್ಲಿ ಗುಮಾನಿಗಳಿವೆ, ನಿಜ. ಹಾಗೆಂದು ಅದರ ಸಾಧಕ ಬಾಧಕಗಳನ್ನು ಈಗಲೇ ದಿಢೀರನೆ ತೀರ್ಪು ಕೊಡುವುದು ಬೇಡ. ಜ್ಞಾನಪಥ ಚಲನಶೀಲವಾಗಿರುತ್ತದೆ. ಹೊಸ ವಿಚಾರಗಳ ಬೀಜ ಚೆಲ್ಲುತ್ತ ಶಿಲಾಯುಗದಿಂದ ಮನುಷ್ಯ ಬಹಳ ದೂರ ಬಂದಿದ್ದಾನೆ. ತನ್ನ ಅರಿವನ್ನು ಸಮಾಜದ ಮೇಲ್ಮೆಗೆ ಬಳಸಿದಾಗ ಮೇಲೇರಿದ್ದಾನೆ, ಅಪಮಾರ್ಗದ ವಿನಾಶಕ್ಕೆ ಉಪಯೋಗಿಸಿದಾಗ ನೆಲಕಚ್ಚಿದ್ದಾನೆ. ಶ್ರೇಷ್ಠ ಮೌಲ್ಯಗಳ ಸದಭಿರುಚಿಯನ್ನು ಉಳಿಸುತ್ತ, ಸುಸಂಸ್ಕ ತ ಸಮಾಜದ ಹೃದಯದ ಬಡಿತ ನಿಲ್ಲದಂತೆ ಉಸಿರಾಡಿಸುವ ಚಿಂತಕರು ಎಲ್ಲ ದೇಶಗಳಲ್ಲೂ ಇದ್ದಾರೆ. ಕನ್ನಡ ಸಾಹಿತ್ಯದ ಸಂದರ್ಭದಲ್ಲೂ ಈ ಪರಂಪರೆಯಿದೆ. ಲೇಖಕರಿಗೆ ಬೇಕಾಗಿರುವುದು ಗನ್ ಅಲ್ಲ, ತ್ರಿಶೂಲ ಅಲ್ಲ, ಆಮಿಷಗಳಿಗೆ ಬಾಗದ ಪೆನ್ನು. ನಿಜದನಿಯ ಲೇಖನದ ಮೊನಚಿಗೆ ಹರಿಹರರೂ ಅಂಜುವರು. ನಮ್ಮ ಲೇಖಣಿಯ ಹರಿತವನ್ನು ಹೈಟೆಕ್ ವಿದ್ಯುನ್ಮಾನ ಮೊಂಡು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂತಿಮವಾಗಿ ಲೇಖಕರದು. +ಜಾಗತಿಕ ಪ್ರeಗೆ ಸಮಾನಾಂತರವಾಗಿ ಕನ್ನಡ ತನ್ನ ಧಾರಣಶಕ್ತಿಗೆ ಸಜ್ಜಾಗದೆ ಗತ್ಯಂತರವಿಲ್ಲ. “ಇದು ವೈಜ್ಞಾನಿಕ ಯುಗ, ಹೈಟೆಕ್ ಕಾಲ. ಕೈಗಾರಿಕಾದಿ ಉದ್ಯಮಗಳಿಗೆ, ಗಣಕಯಂತ್ರಗಳಿಗೆ, ತಂತ್ರಾಂಶಗಳಿಗೆ, ಕಂಪ್ಯೂಟರಿಗೆ ಆದ್ಯತೆ. ಅದರಿಂದ ಸಾಹಿತ್ಯದ ಅಗತ್ಯ ಇದೆಯೆ” – ಎಂಬ ಪ್ರಶ್ನೆ ಎದ್ದಿದೆ. ಯಾವ ಯುಗದಲ್ಲೂ ಸಾಹಿತ್ಯವನ್ನು ಗೌಣವೆಂದು ಗುಡಿಸಿ ಹಾಕುವಂತಿಲ್ಲ. ಸಾಹಿತ್ಯ ಶಾಸ್ತ್ರವೂ ಹೌದು, ವಿಜ್ಞಾನವೂ ಹೌದು, ಮನೋವಿಜ್ಞಾನವೂ ಹೌದು. ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಸ್ತ ಜ್ಞಾನಗಳ ಕಲಿಕೆಗೆ ಕನ್ನಡ ಸಶಕ್ತವಾಗಿದೆಯೆಂದು ಜಗತ್ತಿಗೆ ತೋರಿಸಲು ವಿಜ್ಞಾನಿಗಳು ಕನ್ನಡವನ್ನು ಬಳಸಬೇಕು. +ಇಂಥ ಆತ್ಮಪ್ರತ್ಯಯ ಮೂಡಲು ಕನ್ನಡ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕು. ಇಡೀ ದಕ್ಷಿಣ ಏಷಿಯಾರಾಷ್ಟ್ರಗಳ ಪ್ರಭುತ್ವದ ಭಾಷೆಯಾಗಿ ರಾಜರ ಒಡ್ಡೋಲಗಗಳಲ್ಲಿ ಸಂಸ್ಕ ತ ಪ್ರತಿಷ್ಠಿತವಾಗಿದ್ದ ಕಾಲಘಟ್ಟದಲ್ಲಿ ಶ್ರೀ ವಿಜಯ (೮೫೦), ಆದಿ ಗುಣವರ್ಮ (೯೦೦), ಪಂಪ (೯೪೧) ಪೊನ್ನ (೯೯೫), ರನ್ನ (೯೯೩) ಮೊದಲಾದವರು ಪುಟ್ಟ ಪ್ರದೇಶದ ಜನಭಾಷೆಯಾದ ಕನ್ನಡವನ್ನು ರಾಜಮನ್ನಣೆಯ ಆಸ್ಥಾನ ಭಾಷೆಯಾಗಿಸಿ, ಮಹಾಕಾವ್ಯಗಳ ಭಾಷೆಯಾಗಿಸಿ ಕೀಳರಿಮೆಯ ಬೇರುಗಳನ್ನು ಕತ್ತರಿಸಿದರು, ಕನ್ನಡದ ಸೃಷ್ಟಿ ಶಕ್ತಿಯನ್ನು ಎತ್ತರಿಸಿದರು. ಅದೇ ರೀತಿ ಇಂದು ಶ್ರೇಷ್ಠ ವಿಜ್ಞಾನಿಗಳು ಕನ್ನಡದಲ್ಲಿ ಸ್ವತಂತ್ರ, ಸ್ವೋಪಜ್ಞ, ಅನ್ಯಾವಲಂಬಿಯಲ್ಲದ, ಅನುಕರಣವಲ್ಲದ ಅಸಲು ಕೃತಿಗಳಿಗೆ ಜನ್ಮದಾತರಾಗಬೇಕು. ವಿನೂತನ ವೈಜ್ಞಾನಿಕ ಆವಿಷ್ಕಾರಗಳು ಹೀಗೆ ಕನ್ನಡದಲ್ಲಿಯೇ ಉದ್ಭವಿಸಿದರೆ ಆಗ ಕನ್ನಡ ಮಾತೃಕೆಯಾಗುತ್ತದೆ. ಜೊತೆಗೆ ವಿಜ್ಞಾನವನ್ನು ಕನ್ನಡದಲ್ಲಿ ಮನಮುಟ್ಟುವಂತೆ ಹೇಳಲು ಸಾಧ್ಯವಾದಾಗ ಸಹಜವಾಗಿ ಕನ್ನಡ ಮಾಧ್ಯಮಕ್ಕೆ ಶಕ್ತಿ ಬರುತ್ತದೆಯಲ್ಲದೆ ಕನ್ನಡ ಕಲಿಯುವರಿಗೂ ಕಲಿಸುವವರಿಗೂ ವಿಶ್ವಾಸದೊಂದಿಗೆ ಉತ್ಸಾಹ ಗರಿಗೆದರುತ್ತದೆ. +ತಂತ್ರಜ್ಞಾನದ ನಿರಾಕರಣೆ ಸಲ್ಲದು. ಕನ್ನಡ ಜಗತ್ತಿಗೆ ತಂತ್ರಜ್ಞಾನದ ಪ್ರವೇಶ ಸ್ವಾಗತಾರ್ಹ. ಎರಡು ದಶಕಗಳಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಸಂತಸದಾಯಕ ಸಂಗತಿ. ತಂತ್ರಜ್ಞಾನವನ್ನು ಒಂದು ಭಾಷೆಗೆ ತರುವಾಗ ತಂತ್ರಜ್ಞಾನದ ಸಲಕರಣೆಗಳ (ಟೆಕ್ನಾಲಜಿ ಟೂಲ್ಸ್) ನಿರ್ಮಾಣ ಆಯಾ ಭಾಷೆಯ ಜಾಯಮಾನ ಮತ್ತು ಸಾಂಸ್ಕ ತಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನಿರ್ಮಿಸಬೇಕು. ಜೊತೆಗೆ ತಂತ್ರಜ್ಞಾನವೆಂದಾಕ್ಷಣ ಕನ್ನಡತನವನ್ನು ಕ್ಲಿಷ್ಟಗೊಳಿಸಲಾಗಲಿ ನಷ್ಟಗೊಳಿಸಲಾಗಲಿ ಸಂಯೋಜಿಸಲಾಗುತ್ತಿಲ್ಲ ಎಂಬ ಅಂಶ ಆದರ್ಶವಾಗಿರಬೇಕು. ಕನ್ನಡಕ್ಕೆ ಮಾರಕವಾಗದೆ ಪೂರಕವಾಗಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುವಾಗ ಗಮನಿಸಬಹುದಾದ ಕೆಲವು ಸಂಕೀರ್ಣ ಸಂಗತಿಗಳನ್ನು ಸಂಗ್ರಹವಾಗಿ ಪ್ರಸ್ತಾಪಿಸುತ್ತೇನೆ. +೧. ಒಸಿ‌ಆರ್ (uಇ = umಠಿಜ್ಚಿZ eZZಠಿಛ್ಟಿ ಛ್ಚಿಟಜ್ಞಜಿಠಿಜಿಟ್ಞ), ಅಂದರೆ ‘ಚಾಕ್ಷುಷ ಅಕ್ಷರ ಗುರುತಿಸುವಿಕೆ’ ಎಂಬ ತಂತ್ರಾಂಶದ ನಿರ್ಮಾಣ ಕನ್ನಡಕ್ಕೆ ಅತ್ಯವಶ್ಯಕವಾದದ್ದು. ಈ ತಂತ್ರಾಂಶದಿಂದ ನೂರಾರು ವರ್ಷಗಳ ಹಳೆಯ ಪ್ರತಿಯ ಮರು ಮುದ್ರಣ ಸುಲಭ ಸಾಧ್ಯವಾಗುತ್ತದೆ. ಆದರೆ ಹಳೆಯ ಓಲೆಗರಿ ಪ್ರತಿಗಳನ್ನು ‘ಸ್ಕಾ ನ್’ ಮಾಡಿ ಯಥಾವತ್ತಾಗಿ ಅದನ್ನು ಕಂಪ್ಯೂಟರ್ ಮುಖಾಂತರ ಸಂರಕ್ಷಿಸಬೇಕೇ ಹೊರತು ಮೂಲಪ್ರತಿಯನ್ನೇ ತಿದ್ದುವ ಪರಿಪಾಠವನ್ನು ಪ್ರಾರಂಭಿಸಬಾರದು. ಅಂದರೆ ಒಸಿ‌ಆರ್ (uಇ) ಅನ್ನು ಸಾಧಕವನ್ನಾಗಿ ಉಪಯೋಗಿಸಿಕೊಳ್ಳಬೇಕೇ ವಿನಾ ಬಾಧಕವಾಗಿ ಅಲ್ಲ. +೨. ಪಠ್ಯದಿಂದ ವಾಕ್ (ಠಿಛ್ಡಿಠಿ ಠಿಟ omಛಿಛ್ಚಿe=SSಖ) ಮತ್ತು ವಾಕ್‌ನಿಂದ ಪಠ್ಯ (omಛಿಛ್ಚಿe ಠಿಟ ಠಿಛ್ಡಿಠಿ = ಖSS) ಎಂಬ ತಂತ್ರಾಂಶ ನಿರ್ಮಾಣದಲ್ಲಿ ಕನ್ನಡ ಭಾಷೆಯ ವಾಕ್ಯ ವಿಜ್ಞಾನ (ಖqsಠಿZ) ಮತ್ತು ಶಬ್ದಾರ್ಥ ವಿಜ್ಞಾನಕ್ಕೆ (ಖಛಿಞZಠಿಜ್ಚಿo) ಲೋಪ ಬರದಂತೆ ಕಾರ್ಯನಿರ್ಮಾಣ ಸಮರ್ಪಕ ರೀತಿಯಲ್ಲಿ ಸಂಯೋಜಿತವಾಗಬೇಕು. +೩. ಸ್ವಯಂ ವಾಕ್ ಜ್ಞಾನ (ZಠಿಟಞZಠಿಜ್ಚಿ omಛಿಛ್ಚಿe ಛ್ಚಿಟಜ್ಞಜಿಠಿಜಿಟ್ಞ = ಅಖ್ಟ) ತಂತ್ರಾಂಶ ನಿರ್ಮಾಣದಲ್ಲಿಯೂ ಕನ್ನಡ ಭಾಷಾ ಪ್ರಯೋಗದೊಂದಿಗೆ ಕನ್ನಡ ಉಪಭಾಷೆಗಳ ಪ್ರಯೋಗವನ್ನೂ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕಾದ ಜವಾಬ್ದಾರಿಯೂ ಇದೆ. +೪. ಯಂತ್ರ ಭಾಷಾಂತರವೂ ಸ್ವಾಗತಾರ್ಹವೇ ಆದರೂ ಇದು ‘ವಾಕ್’ನಿಂದ ‘ವಾಕ್’ಗೆ (omಛಿಛ್ಚಿe ಠಿಟ omಛಿಛ್ಚಿe) ರೂಪದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಂತ್ರಮುಖೇನ ಪ್ರವಹಣಗೊಳ್ಳುವುದರಿಂದ ಭಾಷೆಯ ಕಣ ಕಣವನ್ನೂ ಪರಿಗಣಿಸಿ ಭಾಷೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. +೫. ಕನ್ನಡ ಭಾಷೆಗೊಂದು ಪ್ರತ್ಯೇಕ ವಿದ್ಯುನ್ಮಾನ ಅಂಚೆಯ (ಜ್ಚಿಟbಛಿ) ಉಪಯೋಗ ಲಭ್ಯವಾಗಬೇಕು. ಇದಕ್ಕಾಗಿ ವಿದ್ಯುನ್ಮಾನ ನಿಘಂಟುಗಳು ನಿರ್ಮಾಣವಾಗಬೇಕಲ್ಲದೆ ವಿದ್ಯುನ್ಮಾನ ಕೃತಿಗಳ ಅವತರಣಿಕೆಯೂ ಆಗಬೇಕು. ವಿದ್ಯುನ್ಮಾನ ನಿಘಂಟುಗಳ ಉಪಯುಕ್ತತೆ ವ್ಯಾಪಕವಾಗಿರಲು ಅವು ಏಕಭಾಷಾ ಆಗಿರದೆ ದ್ವಿಭಾಷಾ ತ್ರಿಭಾಷಾ ಬಹುಭಾಷಾ ನಿಘಂಟುಗಳಾಗಿರಬೇಕು. ಇಂಥ ವಿದ್ಯುನ್ಮಾನ ನಿಘಂಟುಗಳಂದ ಕನ್ನಡ ಭಾಷಾ ಸಾಹಿತ್ಯ ಕರ್ನಾಟಕ ದಾಟಿ ಹೊರನಾಡುಗಳಲ್ಲಿಯೂ ದಾಂಗುಡಿಯಿಡುತ್ತದೆ. ಇನ್ನು ಮುಂದೆ ಕರ್ನಾಟಕ ಪಸರಿಸುವ ಪರಿ ಇದಾದೀತು. +೬. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಕನ್ನಡ ವರ್ಣಮಾಲೆ ಕಳೆದುಹೋಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಕನ್ನಡ ಅಕ್ಷರಗಳಿಗೆ ಧಕ್ಕೆ ಆಗದೆ ಯಥಾವತ್ತಾಗಿ ಉಳಿಯಬೇಕೆಂದು ಹೇಳುವಾಗ ಕೆಲವು ದ್ವಂದ್ವಗಳೂ ಎದುರಾಗಬಹುದು. ಉದಾಹರಣೆಗೆ ವಿi-ಮೀ, ಪು-ಪು, ಪೂ-ಪೂ, ಪೊ-ಪೊ ಎಂಬ ಎರಡೆರಡು ಸಮಾನ ರೂಪಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳುವುದರಿಂದ ಸುಭಗತೆ, ಸರಳತೆ ಬರುತ್ತದೆ. ಹೊಸದಾಗಿ ಕಲಿಯುವವರಿಗೆ ಗೊಂದಲಗಳಿರುವುದಿಲ್ಲ. +ಇಂದು ಅನೇಕ ಜಾಲತಾಣಗಳು ಲಭ್ಯವಿವೆ. ಕಾಲದ, ಸ್ಥಳದ, ಪರಿಸರದ ನಿರ್ಬಂಧಗಳನ್ನು ಸೀಮೋಲ್ಲಂಘನ ಮಾಡಿ ಮಾಹಿತಿಯು ವಿಶ್ವಾದ್ಯಂತ ಲಭ್ಯವಾಗುತ್ತಿದೆ. ಇದು ಅಯಾಚಿತವಾಗಿ ಅವಲೀಲೆಯಿಂದ ದಕ್ಕುತ್ತಿರುವ ಕಾರಣಕ್ಕಾಗಿಯೂ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು (ಜ್ಞ್ಛಿಟ್ಟಞZಠಿಜಿಟ್ಞ ಠಿಛ್ಚಿeಟ್ಝಟಜqs ಠಿಟಟ್ಝo) ಅಳವಡಿಕೆಯಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಗುರುತರವಾದ ಹೊಣೆಯಿದೆ. +ಮುಖ್ಯವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಂಥ ತಜ್ಞರು ಕನ್ನಡ ಭಾಷೆಗೆ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಮಾಹಿತಿ ತಂತ್ರಜ್ಞಾನದ ಉಪಯೋಗ ಎಷ್ಟೆಂಬುದನ್ನು ಬಲ್ಲವರೆಲ್ಲ ಸ್ವಾಗತಿಸುತ್ತಾರೆ. ಒಂದೇ ಒಂದು ಅಯಸ್ಕಾಂತ ತಟ್ಟೆ (‘ಸಿಡಿ’)ಯಲ್ಲಿ ಸುಮಾರು ಐನೂರು ಪುಸ್ತಕಗಳನ್ನು ಅಳವಡಿಸಬಲ್ಲ ಸೌಕರ್ಯವಿದೆಯೆಂದ ಮೇಲೆ ಅದರ ಅನುಕೂಲ, ಮಿತವ್ಯಯಾಸಕ್ತಿ ದೊಡ್ಡ ಆಕರ್ಷಣೆಯಾಗಿದೆ. ಈ ಅನುಕೂಲ ನಾಳೆ ನಮ್ಮ ಮುದ್ರಣ ಕ್ಷೇತ್ರಕ್ಕೆ ಸವಾಲಾಗಿ ನಿಲ್ಲಲೂಬಹುದು. ಒಂದೊಂದು ಅಯಸ್ಕಾಂತ ತಟ್ಟೆ (‘ಸಿಡಿ’) ನೂರಾರು ಗ್ರಂಥಗೆಳನ್ನು ಹಿಡಿದುಕೊಡುವಾಗ ಇನ್ನು ಮುಂದೆ ಮುದ್ರಕರು, ಪ್ರಕಾಶಕರು, ವಿತರಕರು, ಲೇಖಕರು ಕಷ್ಟಗಳಿಗೆ ಸಿಕ್ಕಿ ಬೀಳಬಹುದಲ್ಲವೆ? – ಈ ನಿಟ್ಟಿನಲ್ಲಿಯೂ ನಾವು ಇಂದೇ ಮುನ್ನೆಚ್ಚರಿಕೆ ವಹಿಸಬೇಕಾದ ಜರೂರು ಬಂದಿದೆ. ಒಂದರಿಂದ ೨೫ರ ವರೆಗೆ ಮಗ್ಗಿ ಹೇಳುತ್ತ ಮಕ್ಕಳ ಜ್ಞಾಪಕ ಶಕ್ತಿಯನ್ನು ಹರಿತವಾಗಿಡಲು ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದರು. ಕ್ಯಾಲಿಕ್ಯುಲೇಟರ್‌ನ ಬಹುಬಳಕೆಯಿಂದ ಆ ಪದ್ಧತಿಯಲ್ಲಿ ಆಸಕ್ತಿ ಬತ್ತಿ ಹೋಗಿದೆ. ಎರಡು ಎರಡು ಸೇರಿದರೆ ಎಷ್ಟು ಎಂಬುದಕ್ಕೂ ಕ್ಯಾಲಿಕ್ಯುಲೇಟರನ್ನು ಆಶ್ರಯಿಸುವಂತಾದರೆ ಬುದ್ಧಿಗೆ ತುಕ್ಕು ಹಿಡಿಯುತ್ತದೆ. ಈಗ ಕಂಪ್ಯೂಟರಿನ ಮೂಲಕ ಓದು, ಬರೆಹ, ಪತ್ರವ್ಯವಹಾರ ಜನಪ್ರಿಯವಾಗುತ್ತಿದೆ. ಇದರಿಂದ ಮುಂದೆ ಕೈಯಿಂದ ಅಕ್ಷರಗಳನ್ನು ಬರೆಯುವ ಪರಿಪಾಟಿಯೂ ತಪ್ಪಬಹುದು. ಇಂದು ಇರುವ ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂಬೆರಡು ವರ್ಗಗಳಿಗೆ ಸಮಾನಾಂತರವಾಗಿ ಕಂಪ್ಯೂಟರ್ ಇರುವವರು ಮತ್ತು ಇಲ್ಲದವರ ನಡುವೆ ಬಿರುಕು ಮೂಡಿ ಎರಡು ವರ್ಗಗಳು ಏರ್ಪಡಬಹುದು. ಆದ್ದರಿಂದ ತಂತ್ರಜ್ಞಾನವೆಂಬುದು ಕೇವಲ ಮಾಹಿತಿಯನ್ನು ‘ಕೊಳ್ಳೋದು-ಮಾರೋದು’ ಎಂಬ ಯಾಂತ್ರಿಕ ವ್ಯವಹಾರ ಆಗದೆ ವಿದ್ಯೆಯನ್ನು ಸೃಷ್ಟಿಸುತ್ತ ಕನ್ನಡವನ್ನು ಹದಗೊಳಿಸುವ ಕಾರ್ಯಗತಿಯಾಗಲಿ. ದೇಶೀಯ ಭಾಷೆಗಳನ್ನು ಒತ್ತರಿಸುತ್ತ ಇಂಗ್ಲಿಷಿನಂಥ ಪ್ರಪಂಚದ ಬಲಿಷ್ಠ ಭಾಷೆಯ ಮುನ್ನುಗ್ಗುವಿಕೆಯನ್ನು ಎದುರಿಸಿ ನಿಲ್ಲುವ ತಾಕತ್ತನ್ನು ಕನ್ನಡಕ್ಕೆ ಈ ವಿದ್ಯುನ್ಮಾನ ತಾಂತ್ರಿಕ ಸಲಕರಣೆ ತುಂಬಬೇಕಾಗಿದೆ. ಫ್ರೆಂಚ್, ಜರ್ಮನ್, ಹಂಗೇರಿಯನ್ ಮೊದಲಾದ ಯೂರೋಪಿಯನ್ ಭಾಷೆಗಳು ಇಂಥ ಸಾಮರ್ಥ್ಯದಿಂದ ಇಂಗ್ಲಿಷಿನ ದಾಳಿಯನ್ನು ಹಿಮ್ಮೆಟ್ಟಿಸಿ ನಿಂತಿರುವ ದೃಷ್ಟಾಂತಗಳಿಂದ ಸ್ಫೂರ್ತಿಗೊಳ್ಳೋಣ. ಸಹಸ್ರಮಾನಗಳ ಹಿಂದೆ ಶ್ರಮಣ ಪರಂಪರೆ ಜನಭಾಷೆಗೆ ನಾಲಗೆಯಾದದ್ದು ಇಂಥ ಜನಮುಖಿ ತುಡಿತಗಳಿಂದ. ಶತಮಾನಗಳ ಹಿಂದೆ ಸಂಸ್ಕ ತದ ಯಜಮಾನ್ಯವನ್ನು ದೂರವಿಟ್ಟು ‘ಅನ್ಯರ ಮನೆಯ ಬಾವಿಯ ಸಿಹಿನೀರಿಗಿಂತ ನಮ್ಮ ಮನೆಯ ಉಪ್ಪುನೀರೇ ಲೇಸೆಂದು’ ಕನ್ನಡವನ್ನು ಪೊರೆದ ಶರಣರ, ದಾಸರ ಮಾದರಿ ನಮಗೆ ದಾರಿದೀಪವಾಗಬೇಕು. ವಿದ್ಯುನ್ಮಾನ ಸಾಧನೆಗಳು ಕನ್ನಡಕ್ಕೆ ದಕ್ಕುವ ದಿಕ್ಕಿನಲ್ಲಿ ಏನೇನು ಮಾಡಬೇಕೆಂಬುದನ್ನು ಸೂಚಿಸುವಂಥ ಪರಿಣತಿ ಗಳಿಕೆಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಸಮಯ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕು. +ಬಹುತಾಂತ್ರಿಕ ಆಧುನೀಕರಣ ಮತ್ತು ಜಾಗತೀಕರಣದ ತುಡಿತದಿಂದಾಗಿ ಪ್ರಾದೇಶಿಕ ಭಾಷೆಯ ಯುವ ಪ್ರತಿಭೆಗಳು ಮಾತೃಭಾಷೆಯನ್ನು ತೊರೆದು ಇ-ಶಿಕ್ಷಣಕೆ ಪಲಾಯನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೊದಲೇ ಪರಿಮಿತವಾಗಿದ್ದ ಪ್ರಾದೇಶಿಕ ಭಾಷೆಗಳ ಓದುಗರ ಪ್ರಮಾಣ ಈಗ ಮತ್ತಷ್ಟು ಇಳಿಮುಖಗೊಂಡಿದೆ. ಇಂಥ ಇಳಿಗಾಲದಲ್ಲಿ ಕನ್ನಡಕ್ಕೆ ಉಳಿಗಾಲ ಎಲ್ಲಿ, ಹೇಗೆ ಎಂಬುದು ಗಂಭೀರ ಪರಿಭಾವನೆಯ ಸಮಸ್ಯೆ. ಇದನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಹೊಸ ಪೀಳಿಗೆ ತಾಯಿಭಾಷೆಯ ಹೊಕ್ಕಳ ಬಳ್ಳಿಯಿಂದ ಕಳಚಿಕೊಳ್ಳುತ್ತಿರುವುದಲ್ಲದೆ ತಾಯಿಭಾಷೆಯ ಸಾಹಿತ್ಯದಿಂದಲೂ ದೂರ ಸರಿಯುತ್ತಿರುವುದು. ಸವಾಲುಗಳು ಹೀಗೆ ಸಂಕೀರ್ಣತರಗೊಳ್ಳುತ್ತ ಸಾಗುತ್ತಿರುವಾಗ ಅದಕ್ಕೆ ಸಡ್ಡು ಹೊಡೆದು ಸಜ್ಜಾಗಿ ನಿಲ್ಲುವ ಕಸುವು ಇದೆಯೆ ಎಂಬ ಶೋಧನೆಯ ತುರ್ತು ಒದಗಿದೆ. ಮಾತೃಭಾಷೆ ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡವನ್ನು ಒಪ್ಪಿಕೊಳ್ಳಬೇಕು. ಕನ್ನಡವನ್ನು ಒಪ್ಪಿಕೊಳ್ಳದವರಿಗೆ ಇಲ್ಲಿ ಜಾಗ ಸಿಗುವುದಿಲ್ಲವೆಂಬ ಒತ್ತಡ ತರುವುದಲ್ಲದೆ ರಾಜಧಾನಿಯಾದ ಬೆಂಗಳೂರು ಮೊದಲು ಕನ್ನಡಮಯವಾಗಬೇಕು. ಈ ಸಿಲಿಕಾನ್ ನಗರ ಕನ್ನಡವಾದರೆ ಇಡೀ ಕರ್ನಾಟಕ ಕನ್ನಡವಾಗುತ್ತದೆ. ಆಡಳಿತ ಗಂಗೋತ್ರಿಯಾದ ವಿಧಾನಸೌಧ ಕನ್ನಡವಾದರೆ ಬೆಂಗಳೂರು ತನಗೆ ತಾನು ಕನ್ನಡವಾಗುತ್ತದೆ. ರಾಜಧಾನಿಯಲ್ಲಿ ಕನ್ನಡವನ್ನು ಜೀವಂತವಾಗಿಡಲು ಹಾಗೂ ಕನ್ನಡದ ಬೇರುಗಳು ಒಣಗದಂತೆ ಸತತವಾಗಿ ಎಚ್ಚರಿಸುತ್ತಿರುವ ಕನ್ನಡ ಚಳವಳಿಗಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. +ಪುಸ್ತಕ ಸಂಸ್ಕ ತಿ +ಮನುಷ್ಯರನ್ನು ಹತ್ತಿರವಾಗಿಸುವ ಹಾಗೂ ಮನಸ್ಸುಗಳನ್ನು ಕೂಡಿಸುವ ಸಾಹಿತ್ಯ ನಿರ್ಮಿತಿ ಅಚ್ಯುತವಾಗಿ ನಡೆಯಬೇಕು. ಉದಾರೀಕರಣ ಹಾಗೂ ಜಾಗತೀಕರಣದ ಪರಿಣಾಮ ಪುಸ್ತಕ ಸಂಸ್ಕ ತಿಯ ಸಂದರ್ಭದಲ್ಲಿ ಯಾವ ಸ್ವರೂಪದ್ದಾಗಿ ಪರಿಣಮಿಸೀತೆಂಬ ಸಮೀಕ್ಷೆ ನಡೆಯಲಿ. ಪುಸ್ತಕ ಸಂಸ್ಕ ತಿ ಅವಿನಾಶಿಯೆಂದು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಪುಸ್ತಕಗಳ ಸ್ವರೂಪ, ಬಳಸುವ ಸಾಮಗ್ರಿ ಬದಲಾಗುತ್ತ ಬಂದಿದೆ. ಓಲೆಗರಿಯಿಂದ ಕಾಗದಕ್ಕೆ ಮುದ್ರಣ ಕಲೆ ನಾಗಲೋಟದಿಂದ ಬೆಳೆಯುತ್ತ ಬದಲಾಗುತ್ತ ಚಲನಶೀಲವಾಗಿದೆ. ಇಂದು ಅಚ್ಚಾಗಿ ಹೊರಬರುತ್ತಿರುವ ಪುಸ್ತಕಗಳ ಚೆಲುವಿಗೆ ಮಾರುಹೋಗುತ್ತೇವೆ. ಹಿಂದೆಂದೂ ಕಾಣದಂಥ ಅಂದ ಚೆಂದದ ಬೊಂಬೆಗಳಂತೆ ಮನಮೋಹಕ ಹೊರಪುಟ ಹೊದಿಕೆಯೊಂದಿಗೆ ಕನ್ನಡ ಪುಸ್ತಕಗಳು ಹೊರಬರುತ್ತಿವೆ. ಸತ್ವಶಾಲಿ ಒಳಹೂರಣವೂ ಉಂಟು. ಓಲೆಗರಿ, ಕಾಗದಗಳ ಯುಗ ಮುಗಿದು ಕ್ಯಾಸೆಟ್ಟು, ಫ್ಲಾಪಿ, ಸಿಡಿರಾಂಗಳ ಕಾಲದಲ್ಲಿದ್ದೇವೆ. ಸಾಹಿತಿಗಳು ಅಕ್ಷರ ಸಂಸ್ಕ ತಿಯ ವಕ್ತಾರರು ಹಾಗೂ ಪುಸ್ತಕ ಸಂಸ್ಕ ತಿಯ ವಾರಸುದಾರರು. +ಹೈಟೆಕ್ ಮತ್ತು ಮಾಹಿತಿ ತಂತ್ರಜ್ಞಾನದ ನೆರಳು ಎಲ್ಲ ಕ್ಷೇತ್ರಗಳ ಮೇಲೆ ಬೀಳುತ್ತಿರುವಾಗ ಸಾಹಿತಿಗಳೂ ಕಲಾವಿದರೂ ಚಲನಚಿತ್ರ ನಿರ್ಮಾಪಕರೂ ಪುಸ್ತಕ ಪ್ರಕಾಶಕರೂ ತಟಸ್ಥರಾಗುವುದು ಅಸಾಧ್ಯ. ಪುಸ್ತಕ ಸಂಸ್ಕ ತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕ ತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶ ಪ್ರೇರಿತರಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ-ಸಂಸ್ಕ ತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟುಕುವಂತೆ ಮಾಡಿದರು. ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕ ತಿ ಇಲಾಖೆ, ಪುಸ್ತಕ ಪ್ರಾಧಿಕಾರ – ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ. +ಲೇಖಕ, ಪ್ರಕಾಶಕ, ಮುದ್ರಕ, ವಿತರಕ, ವಾಚಕ – ಇವು ಅಯ್ದು ಪುಸ್ತಕ ಸಂಸ್ಕ ತಿಯ ಪಂಚಾಂಗ. ಲೇಖಕ – ಪ್ರಕಾಶಕರಿಗೆ ಪ್ರಶಸ್ತಿಗಳಿರುವಂತೆ ಮುದ್ರಕರಿಗೂ ವಿತರಕರಿಗೂ, ಅದರಲ್ಲಿಯೂ ಏಕವ್ಯಕ್ತಿ ವಿತರಕರಿಗೂ, ಪ್ರಶಸ್ತಿಯ ಪ್ರೋತ್ಸಾಹವಿರಲಿ. +ಪುಸ್ತಕ ಸಂಸ್ಕ ತಿ ಸಂವರ್ಧನೆಗೆ ಸಾಹಿತ್ಯ ಸಮ್ಮೇಳನ ಗಟ್ಟಿ ಅಡಿಪಾಯವಾಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿಲ್ಲ ಮತ್ತು ವಾಚನಾಭಿರುಚಿ ಒಣಗಿಲ್ಲ ಎಂಬುದಕ್ಕೆ ಪುಸ್ತಕ ಮಳಿಗೆಗಳು ಕನ್ನಡಿ ಹಿಡಿದಿವೆ. ಆದರೆ ಪೋಷಕರೂ ಅಧ್ಯಾಪಕರೂ ಶಾಲಾ ಮಕ್ಕಳಿಗೆ ರಜೆ ಬಂದರೆ ಪ್ರವಾಸ, ಪಿಕ್‌ನಿಕ್, ಚಲನಚಿತ್ರ, ಮನರಂಜನೆಗೆ ಕರೆದುಕೊಂಡು ಹೋಗುತ್ತಾರೆ. ಗ್ರಂಥಾಲಯಗಳಿಗಂತೂ ಹೋಗುವುದಿಲ್ಲ. ಹೀಗಿರುವಾಗ ಪುಸ್ತಕ ಪ್ರೀತಿ ಬತ್ತದೆ ಹಸಿರಾಗುವುದು ಹೇಗೆ. ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಗೆ, ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ ಪಕ್ವತೆಗೆ ಓದು ಸಹಕಾರಿ. ಯಂತ್ರಮಾನವನಾಗದೆ ಹೃದಯ ಸಿರಿಯ ನಾಗರಿಕರಾಗಲು ಪುಸ್ತಕ ಪ್ರೀತಿ ಸಹಾಯವಾಗುತ್ತದೆ. +ಕರ್ನಾಟಕದಲ್ಲಿ ಚಲನಚಿತ್ರೋದ್ಯಮ ಪ್ರತಿಭಾ ಸಂಪನ್ನರ ಕ್ಷೇತ್ರವಾಗಿ ವರ್ಧಿಸುತ್ತಿದೆ. ನಟನಟಿಯರೂ ನಿರ್ದೇಶಕ ನಿರ್ಮಾಪಕರೂ ಕರ್ನಾಟಕದ ಸಾಂಸ್ಕ ತಿಕ ಪರಂಪರೆಯನ್ನು ಜನತೆಗೆ ಪ್ರಭಾವಶಾಲಿಯಾಗಿ ತಲಪಿಸುವ ದಿಕ್ಕಿನಲ್ಲಿ ಪ್ರಶಂಸಾರ್ಹ ರೀತಿಯಲ್ಲಿ ಶ್ರಮಿಸುತ್ತಿರುವ ಈ ಇಡೀ ಸಮುದಾಯವನ್ನು ಅಭಿನಂದಿಸುತ್ತೇನೆ. ಕಿರುತೆರೆಯ ಕ್ಷೇತ್ರದವರೂ ಹಿರಿತೆರೆಯವರಿಗಿಂತ ಕಡಿಮೆಯಿಲ್ಲದಂತೆ ಉತ್ತಮ ಧಾರಾವಾಹಿಗಳಿಂದ ಮನುಷ್ಯ ಸಮಾಜದ ಕತ್ತಲೆ ಬೆಳಕನ್ನು ಬಿಂಬಿಸುತ್ತಿದ್ದಾರೆ. ಅತ್ಯಾಚಾರ, ಕಳ್ಳತನ, ಕ್ರೌರ್‍ಯ, ದರೋಡೆ, ವಂಚನೆ, ಹಿಂಸೆಗಳಿಂದ ಸಮಾಜದ ನೆಮ್ಮದಿಯನ್ನು ಕೊಲ್ಲುವ ವ್ಯಕ್ತಿ, ಶಕ್ತಿ, ಪ್ರವೃತ್ತಿಗಳನ್ನು ಈ ಮಾಧ್ಯಮಗಳು ಬಯಲಿಗೆಳೆಯುತ್ತಿವೆ. ಆದರೆ ಇವನ್ನು ಅತಿಯಾಗಿ ಉತ್ಪ್ರೇಕ್ಷಿಸಿ ವೈಭವೀಕರಿಸುವುದಕ್ಕೆ ನಿಯಂತ್ರಣವಿರಬೇಕು. +ಸಾಹಿತ್ಯದಂತೆ ಮಾಧ್ಯಮಗಳೂ ಮನೆ ಮನಸ್ಸುಗಳನ್ನು ಮುರಿಯುವ ಹಾಗೂ ಹುರಿದುಮುಕ್ಕುವ ದಿಕ್ಕಿಗೆ ಹೆಜ್ಜೆ ಹಾಕುವುದಕ್ಕೆ ಪ್ರಚೋದನೆಯಾಗಬಾರದು. ಜನಮುಖಿ ಹಾಗೂ ಜೀವಪರ ತುಡಿತದ ತರಂಗಗಳಿಗೆ ಅಂತರಂಗ ಪುಟಿಯುವಂಥ ಪ್ರೇರಣೆ ಬರಲಿ. ಹೊಸಪೀಳಿಗೆಯ ಅರಳುವ ಪ್ರತಿಭೆಗಳಿಗೆ, ಸೃಜನಶೀಲ ಕರ್ಷಣಕ್ಕೆ ಎಂಥ ಪ್ರತಿಕೂಲ ಆತಂಕಗಳಿವೆ ಎಂಬುದನ್ನು ಬಲ್ಲೆ. ಇಡೀ ಭಾರತೀಯ ಪ್ರಜ್ಞಾವಲಯದಲ್ಲಿ ತುಂಬಿ ತುಳುಕುತ್ತ ಒಳಗೊಳಗೇ ಹಬ್ಬುತ್ತಿರುವ ಮಾಫಿಯ ಷಡ್ಯಂತ್ರ ಜಾಲ ಈ ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಆವರಿಸಿರುವುದು ಗೊತ್ತಿದೆ. ಆದರೆ ಇಂಥ ಇಕ್ಕಟ್ಟುಗಳ ಅಡಕತ್ತರಿಗೆ ಸಿಲುಕದೆ, ಪೂರ್ವಗ್ರಹದ ವಿಮರ್ಶೆಗಳ ಬುತ್ತಿಯನ್ನು ಬೆನ್ನಲ್ಲಿ ಕಟ್ಟಿಕೊಳ್ಳದೆ ಆರೋಗ್ಯಕರ ಸಮಾಜಕ್ಕೆ ಆಮ್ಲಜನಕ ತುಂಬುವ ಒತ್ತಾಸೆಯೇ ಮುಖ್ಯ ಪ್ರೇರಣೆಯಾಗಿರಲಿ. ಯಾವುದೇ ವೃತ್ತಿಯ ಪಾವಿತ್ರ್ಯ, ಘನತೆ ಮತ್ತು ಕ್ರಮವನ್ನು ಅಬದ್ಧವಾಗಿ ಯದ್ವಾತದ್ವಾ ತೋರಿಸುವುದು ಅರ್ಥಹೀನವಾಗುತ್ತದೆ. ಪೊಲೀಸರನ್ನು ನಿಷ್ಪ್ರಯೋಜಕರು, ದಡ್ಡರು ಎಂಬಿತ್ಯಾದಿಯಾಗಿ ಅಪಹಾಸ್ಯ ಹಾಗೂ ಗೇಲಿ ಮಾಡಿ ತೋರಿಸುವ ಪ್ರವೃತ್ತಿ ವಾಡಿಕೆಯಲ್ಲಿದೆ. ನ್ಯಾಯಾಲಯದ ನಡವಳಿಕೆಯಲ್ಲಿ ವಕೀಲರು ಮೇಜು ಮುರಿಯುವ ಹಾಗೆ ಗುದ್ದಿ ಕಟ್ಟಡ ಬಿರಿಯಂತೆ ಕೂಗಾಡುವುದು ಅವಾಸ್ತವ ಚಿತ್ರಣ. ಆಸ್ಪತ್ರೆ ಮತ್ತು ವೈದ್ಯ ವೃತ್ತಿಯನ್ನು ಪ್ರತಿನಿಧಿಸುವ ರೀತಿಯೂ ಅಷ್ಟೆ. ರೋಗಿಗೆ ನೇರವಾಗಿ ಒಬ್ಬನಿಂದ ಇನ್ನೊಬ್ಬನಿಗೆ ರಕ್ತ ಕೊಡುವಂತೆ ತೋರಿಸುವುದು ಅಪಹಾಸ್ಯವಾಗುತ್ತದೆ. +ಕನ್ನಡ ಅಧ್ಯಾಪಕರನ್ನು ಗೇಲಿ ಮಾಡುವುದು, ಶಾಲಾ ಕಾಲೇಜುಗಳನ್ನೂ ಚುಡಾಯಿಸಿ ಅಸಭ್ಯವಾಗಿ ರೌಡಿಗಳಂತೆ ವರ್ತಿಸುವುದೊಂದೇ ಇಂದಿನ ಹುಡುಗರು ನಡೆದುಕೊಳ್ಳುವ ಸಹಜ ನಡೆವಳಿಕೆ – ಎಂಬಂತೆ ಬಿಂಬಿಸುವುದು ಸರಿಯಲ್ಲ. ಇವೆಲ್ಲವೂ ಪ್ರೇಕ್ಷಕರ ಗುಣಮಟ್ಟವನ್ನು ಕೀಳಾಗಿ ತಿಳಿದು ಚಿತ್ರಿಸುವ ವಿಧಾನ. ವಾಸ್ತವತೆಯನ್ನು ಕೊಲ್ಲದೆ ಕತೆಯ ಹಂದರವನ್ನು ಪ್ರಭಾವಶಾಲಿಯಾಗಿ ಮಾಡುವ ಸಾಮರ್ಥ್ಯ ಬಳಕೆಯಾಗಲಿ ಎಂದು ಹೇಳುವಾಗ ಚಿತ್ರಣ ಆದರ್ಶಗಳ ಮುದ್ದೆಯಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಯಾವುದೇ ವೃತ್ತಿಗಳಲ್ಲಿ ತಾಂಡವವಾಡುವ ಕೊರಮರನ್ನು ಬಯಲಿಗೆಳೆಯುವಾಗ ವಸ್ತುಸ್ಥಿತಿಯ ತಪ್ಪು ಚಿತ್ರಣ, ದೋಷಗಳು ನುಸುಳಬಾರದೆಂಬ ಪ್ರೇಕ್ಷಕರ ಪರವಾದ ಸೂಚನೆಯಿದೆ. ಕನ್ನಡದ ಮಾತುಗಳನ್ನು ಮುಳುಗಿಸಿ ಅದರ ಮೇಲೆ ಅತಿಯಾಗಿ ಅನಗತ್ಯವಾಗಿ ಇಂಗ್ಲಿಷ್ ಸವಾರಿ ಮಾಡಿಸುವುದನ್ನು ದೃಶ್ಯ ಮಾಧ್ಯಮಗಳು ನಿಯಂತ್ರಿಸಬೇಕು. +ಕನ್ನಡ ಸಾಹಿತ್ಯ ಪರಿಷತ್ತು +ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಸಾಹಿತ್ಯ, ಸಂಸ್ಕ ತಿ ಕ್ಷೇತ್ರಗಳ ಅನಭಿಷಿಕ್ತ ಸೌರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕ ತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ. ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ, ಸಾಂಸ್ಕ ತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೇ ವೇದಿಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು. +ಕನ್ನಡ ಚೈತನ್ಯಕ್ಕೆ ಎಲ್ಲವನ್ನೂ ತಾಳಬಲ್ಲ ಕಸುವು ಇದೆ. ಎಂಥದೇ ಕಠಿಣಗಳನ್ನು ಜೀರ್ಣಿಸಿಕೊಂಡು ಪುಷ್ಟವಾಗುವ ವಿಶೇಷ ಮಹಿಮೆಯಿದೆ. ಪರ ಭಾಷೆಗಳನ್ನು, ಪರ ಸಂಸ್ಕ ತಿ ಮತ್ತು ವಿಚಾರಗಳನ್ನೂ ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುತ್ತ ಕನ್ನಡ ಬೆಳೆದುಬಂದಿದೆ. ಕನ್ನಡದ ಸಾಂಸ್ಕ ತಿಕ ಪರಂಪರೆಯ ನಿಜದನಿಯನ್ನು ಮೊದಲು ದಾಖಲಿಸಿದ ಕವಿ ಶ್ರೀವಿಜಯ. ಕವಿರಾಜಮಾರ್ಗದಲ್ಲಿ ಆತ ಈ ಸಂಗತಿಯನ್ನು ಹಿಡಿದಿಟ್ಟ ಪದ್ಯ ಹೀಗಿದೆ: +ಕಸವರಮೆಂಬುದು ನೆರೆ ಸೈ +ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮ್ಮಮುಮಂ +ಕಸವೇಂ ಕಸವರಮೇನು +ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ|| +ನಮಗೆ ಬೇಕಾದದ್ದು ಎಲ್ಲ ಭಾಷೆಯವರೂ ಎಲ್ಲ ಧರ್ಮದವರೂ ಎಲ್ಲ ವಯಸ್ಸಿನವರೂ ಒಟ್ಟಿಗೆ ಸೌಹಾರ್ದದಿಂದ ಬಾಳಬಹುದಾದ ಸಂತೋಷ. ಅಂತರಂಗದಲ್ಲಿ ಪ್ರೀತಿಯ ಅಂತರ್ಜಲ ಪಾತಾಳಕ್ಕಿಳಿದಿದೆ, ರಿಗ್ ಹಾಕಿ ನೂರಾರು ಅಡಿ ಆಳಕ್ಕಳಿದರೂ ಇದು ಚಿಮ್ಮುವುದು ಕಷ್ಟವಾಗಿದೆ. ಶಬ್ದಗಳ ಅಳವಡಿಕೆಯಲ್ಲಿ ತೀರ ಮಡಿವಂತಿಕೆ ಬೇಡ. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಹೊಸ ನುಡಿಗಳು ಸೇರ್ಪಡೆ ಆದರೆ ತಪ್ಪಿಲ್ಲ. ಆಯ್ದ ಅನ್ಯಭಾಷೆಯ ಮಾತುಗಳು ಕನ್ನಡ ನೇಯಿಗೆಯಲ್ಲಿ ಧಾರಾಳವಾಗಿ ಹೆಣೆದುಕೊಳ್ಳಲಿ. ಸಾವಿರಾರು ವರ್ಷಗಳಿಂದ ಕನ್ನಡ ಬಾಳಿದ್ದು ಹೀಗೆ, ಬೆಳೆದದ್ದು ಹಾಗೆ. ಜನಪ್ರಿಯ ನಿಘಂಟಿನ ಆವೃತ್ತಿಗಳು ಹೊಸ ಶಬ್ದಗಳ ಸೇರ್ಪಡೆಯಿಂದ ಪರಿಷ್ಕ ತಗೊಂಡು ಸಾಹಿತ್ಯ ಪರಿಷತ್ತಿನ ಪ್ರಕಟನೆಯಾಗಿ ಪ್ರತಿವರ್ಷ ಹೊರಬರುತ್ತಿರಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಸುಲಭ ಬೆಲೆಯಲ್ಲಿ ಸಿಗಲಿ. ಜನಕ್ಕೆ ಕನ್ನಡದಲ್ಲಿ ಅಕ್ಕರೆಯಿದೆ ಎಂಬುದಕ್ಕೆ ಇಂಥ ಸಾಹಿತ್ಯ ಸಮ್ಮೇಳನಗಳು ಜ್ವಲಂತ ಸಾಕ್ಷಿ. ಹಾಸನದ ಸಮ್ಮೇಳನದಂತೆ ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನಗಳ ನೇರ ಪ್ರಸಾರವಾಗಬೇಕು. ಕೋಟ್ಯಂತರ ಜನ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಸಾಹಿತ್ಯ ಸಮ್ಮೇಳನವನ್ನು ನೋಡಿ ಸವಿಯುವಂತಾಗಲಿ. +ಪ್ರಾದೇಶಿಕ ಭಾಷೆಗೆ ಸಂಸ್ಕ ತಿಗೆ ತನ್ನದೇ ಆದೊಂದು ಸೊಗಡು, ಮೊಹರು, ಘಾಟು ಇರುತ್ತದೆ. ಭಾಷಾ ಏಕರೂಪತೆಗೆ ಗದ್ದುಗೆ ಹತ್ತಿಸುವುದಕ್ಕಿಂತ ಸ್ಥಳೀಯ ವೈವಿಧ್ಯಗಳನ್ನು ಉಳಿಸಿ ಬಾಳಿಸುವುದು ಒಳ್ಳೆಯದು. ಇದನ್ನು ಪತ್ರಿಕೆಗಳೂ ಬಳಸಿ ಪ್ರೋತ್ಸಾಹಿಸಬೇಕು. ಪತ್ರಿಕೆಗಳಿಂದಾಗಿ ಕನ್ನಡ ಭಾಷೆ, ಒಂದು ಶಿಷ್ಟರೂಪಕ್ಕೆ ಹೆಜ್ಜೆ ಹಾಕುತ್ತಲಿದೆ. ಆದರೆ ಉತ್ತರ ಕರ್ನಾಟಕದ ಪತ್ರಿಕೆಗಳು ಅಲ್ಲಿಯ ಜನಭಾಷೆಯ ವಿಶಿಷ್ಟತೆಯನ್ನು ಬಿಂಬಿಸುವುದು ಚೆನ್ನು. ಹೀಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳು ಅಲ್ಲಿಯ ಪ್ರಾದೇಶಿಕ ಭಾಷೆಯ ಸ್ವರೂಪವನ್ನು ಬಿಡಬಾರದು. ಜನಭಾಷೆಯ ಸೊಗಸು ಇರುವುದೇ ಅದರ ಸೊಗಡಿನಲ್ಲಿ. ತನ್ನ ಸ್ವಂತಿಕೆಯ ಸ್ವರೂಪವನ್ನು ಬಳಸಲು ಯಾವ ಕೀಳರಿಮೆಯೂ ಕಾಡಬಾರದು. +ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣವಾಗಿಸಬಹುದು ನಾಲ್ಕೆ ದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ಧತೆಗೆ ಹೆಚ್ಚು ಸಮಯಾವಕಾಶವಿರುತ್ತದೆ. +ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ. ಬಹೂಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷದಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೆ ದು ಜಿಲ್ಲಾ ಕನ್ನಡ ಭವನಗಳು ರೂಪಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ – ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕ ತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು. +ಕನ್ನಡ ಸಾಹಿತ್ಯ ಮೊದಲು ಧರ್ಮಕೇಂದ್ರಿತವಾಗಿತ್ತು, ಸಂಸ್ಕ ತ ಪ್ರಾಕೃತ ಪ್ರೇರಿತವಾಗಿತ್ತು. ಅನಂತರ ಅದರ ಪ್ರೇರಣೆ ಪರಿಕಲ್ಪನೆ ಇಂಗ್ಲಿಷ್ ಸಾಹಿತ್ಯದಿಂದ ಮೂಡಿ ಕನ್ನಡವೂ ಇಂಗ್ಲಿಷ್ ಕೇಂದ್ರಿತವಾಯಿತು. ಈಗೀಗ ಅದು ಹೈಟೆಕ್ ಕೇಂದ್ರಿತವಾಗುತ್ತಿದೆ. ಅನಿವಾರ್‍ಯವಾಗಿ ಆಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಬರಮಾಡಿಕೊಳ್ಳೋಣ. ಸುಗಮ ಜೀವನ ಮುಕ್ತದ್ವಾರವಾಗಿರಲಿ. ಆದರೆ ಇವೆಲ್ಲವೂ ಮಾನವ ಹಾಗೂ ಕನ್ನಡ ಕೇಂದ್ರಿತವಾಗಿಯೇ ಕ್ರಿಯಾಶೀಲವಾಗಿರುವಂತೆ ನಿರ್ವಹಿಸುವ ಹೊಣೆ ಜ್ಞಾನಿಗಳನ್ನು ಅವಲಂಬಿಸಿದೆ. +ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮನ್ವಂತರದ ಮತ್ತೊಂದು ವೈಶಿಷ್ಟ್ಯವೂ ಪರಿಭಾವನ ಯೋಗ್ಯವಾಗಿದೆ. ಹತ್ತನೆಯ ಶತಮಾನದಲ್ಲಿದ್ದ ಪಂಪನ ೧೧೦೦ನೆಯ ಜನ್ಮೋತ್ಸವ ಮುಗಿದು ಇಪ್ಪತ್ತನೆಯ ಶತಮಾನದ ಕುವೆಂಪು ಅವರ ಶತಮಾನೋತ್ಸವ ಪ್ರಾರಂಭವಾದದ್ದು ಆಕಸ್ಮಿಕವಿರಲಾರದು. ಹೊಸಗನ್ನಡಕ್ಕೆ ಹೊಸದಿಕ್ಕು, ದನಿ, ಬಿಗಿಬನಿ ನೀಡಿದ ಕುವೆಂಪುರವರು ಆದಿಕವಿ ಪಂಪನ ಮಹಾನ್ ಪರಂಪರೆ ವಿಚ್ಛಿನ್ನವಾಗದಂತೆ ಮುಂದುವರಿಸಿದವರು. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಭಾವಗೀತೆ ಕರ್ನಾಟಕದ ನಾಡಗೀತೆಯಾಗಿರುವುದು ಔಚಿತ್ಯಪೂರ್ಣವಾಗಿದೆ. ಭಾರತ ಅಸ್ತಿತ್ವದಲ್ಲಿ ಇದ್ದರೆ ಆಗ ಕರ್ನಾಟಕವೂ ಅಸ್ತಿತ್ವದಲ್ಲಿ ಇರುತ್ತದೆ. ಹಾಗೆಂದು ಪ್ರಾದೇಶಿಕ ಸ್ವಂತಿಕೆಯನ್ನು, ವ್ಯಕ್ತಿತ್ವವನ್ನು ಮಾರಿಕೊಳ್ಳುವುದು ಅಂತ ಅರ್ಥವಲ್ಲ. ಕುವೆಂಪು ಪ್ರತಿಷ್ಠಾನ ನೊಂದಾವಣೆ ಆದದ್ದು ಮತ್ತು ಪ್ರತಿಷ್ಠಾನದ ವಿಳಾಸ ನಮ್ಮ ಮನೆಯದೇ ಆಗಿದ್ದುದು ಮರೆಯಲಾಗದ ನೆನಪು. ಕುವೆಂಪು ಶತಮಾನೋತ್ಸವ ಆರಂಭವಾಗುತ್ತಿರುವ ಡಿಸೆಂಬರ್ ತಿಂಗಳಲ್ಲಿ ಮತ್ತು ಆ ಮಹಾಕವಿಯ ಕವಿತೆ ಜಯಭಾರತ ಜನನಿಯ ತನುಜಾತೆ ಕನ್ನಡ ನಾಡಗೀತೆ ಆದ ಸುಸಂದರ್ಭದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೂ, ಇದರ ಅಧ್ಯಕ್ಷತೆಯ ಗೌರವ ನನಗೆ ಪ್ರಾಪ್ತವಾಗಿರುವುದೂ ನನಗೆ ದಕ್ಕಿದ ಸಿರಿಸಂಪದ. +ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳನ್ನು ಸಂಸ್ಕ ತಮಯವಾಗಿಸುವುದು ತರವಲ್ಲ. ಸಾಂಸ್ಕ ತಿಕ ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್‌ಸಿಂಗ್‌ನಗರ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕುಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು. +ಸಂಕೀರ್ಣ ಚಿಂತನೆಗಳು +ರಾಜಕಾರಣದ ಸ್ವರೂಪ ಇಂದು ಹಿಂದೆ ಇದ್ದಂತಿಲ್ಲ. ಏಕಪಕ್ಷದ ಬದಲು ಬಹುಪಕ್ಷಗಳು ಸಖ್ಯದಿಂದ ಆಡಳಿತ ನಡೆಸುವುದು ಶಕ್ಯವಾಗಿದೆ. ಒಂದು ದೇಶದ ಭಯೋತ್ಪಾದಕತೆಯನ್ನು ಇನ್ನೊಂದು ದೇಶ ತಟಸ್ಥ ಪ್ರೇಕ್ಷಕನಾಗಿ ನೋಡುವುದು ತಪ್ಪೆಂಬ, ಕಷ್ಟ ಸುಖಗಳಲ್ಲಿ ಪರಸ್ಪರರು ನೆರವಿಗೆ ಒದೆಗಲ್ಲಾಗಿ ನಿಲ್ಲಬೇಕೆಂಬ ತವಕ ಬಂದಿದೆ. ಅಸ್ತ್ರಶಸ್ತ್ರಗಳ ಬಲ, ಸೈನ್ಯ ಬಲ, ಆರ್ಥಿಕ ಬಲಗಳ ಪ್ರಮತ್ತತೆಗೆ ಧಕ್ಕೆಯಾಗಿದೆ. ಒಟ್ಟಾರೆ ಪಶ್ಚಿಮದ ಸಾಂಸ್ಕ ತಿಕ ಯಾಜಮಾನ್ಯ ನೆಲಕಚ್ಚುತ್ತಿದೆ. ಸಾಮ್ರಾಜ್ಯಶಾಹಿಗಳ ಠೇಂಕಾರ ಮುಗಿಯಿತು. ತಾನೇ ಲೋಕನಾಯಕನೆಂಬ ಅಮಲಿನಿಂದ ಸೊಕ್ಕಿದವರು ಬಾಗಿ ನಡೆಯುವುದರ ವಿವೇಕಕ್ಕೆ ಸ್ಪಂದಿಸಿದ್ದಾರೆ. ತನ್ನ ಬೆಂಕಿಯಿಂದಲೇ ಬೆಳಕು, ತನ್ನ ಕೋಳಿಯಿಂದಲೇ ಬೆಳಗು-ಎಂಬ ಭ್ರಾಂತಿಯಲ್ಲಿ ಮೆರೆಯುವುದು ಇನ್ನು ಸಾಧ್ಯವಾಗದೆಂಬ ತಿಳಿವಳಿಕೆಯ ತರಂಗಗಳು ಅನುರಣಿಸುತ್ತ ಗೋಳವನ್ನು ಆವರ್ತಿಸಿವೆ. +ಲೋಕಸಭೆಯ ಮಧ್ಯಂತರ ಚುನಾವಣೆಯದಿನಾಂಕವನ್ನು ಗೊತ್ತುಪಡಿಸುವ ಮೊದಲೆ ಪ್ರಚಾರ ಪ್ರಾರಂಭವಾಗಿದೆ. ತಪ್ಪೇನಲ್ಲ. ಆದರೆ ಆಡಳಿತಾರೂಢರೂ ಇತರರೂ ಮಾಡುತ್ತಿರುವ ಆರೋಪ ಪ್ರತ್ಯಾರೋಪಗಳು ಘನತೆ ತರುವಂತಹುದಲ್ಲ. ಈ ಬಗೆಯ ಚುನಾವಣೆಯ ಪ್ರಚಾರ ವೈಖರಿ ಅಸಹ್ಯ ಹುಟ್ಟಿಸುತ್ತಿದೆ. ಪರಸ್ಪರ ಕಚ್ಚಾಡುತ್ತ ಮಣ್ಣೆರೆಚುವ ಈ ಜನಕ್ಕೆ ಮತಕೊಡಬೇಕೆ ಎಂದು ಚಿಂತಿಸುವಂತಾಗಿದೆ. ತಮ್ಮ ಪಕ್ಷದ ಸಿದ್ಧಿ ಸಾಧನೆಗಳನ್ನು ವೈಭವೀಕರಿಸಿ ಹೇಳಿದರೂ ಸಹಿಸಬಹುದು. ಆದರೆ ಎದುರು ಪಕ್ಷಗಳನ್ನು ಹಳಿಯುವುದು ಸರಿಯಲ್ಲ. ಅದರಲ್ಲಿಯೂ ವ್ಯಕ್ತಿನಿಂದನೆ ಕೆಳಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೂ ಒಂದು ಏಕರೂಪದ ಪ್ರಚಾರ ಸಂಹಿತೆಯನ್ನು ಅನುಶಾಸನವಾಗಿಸಬೇಕು. ಚುನಾವಣಾ ಸಂಹಿತೆಯಲ್ಲಿ +ಯಾರೂ ಯಾವ ಪಕ್ಷವನ್ನೂ ಖಂಡಿಸಕೂಡದು +ಯಾರೂ ಯಾವ ವ್ಯಕ್ತಿಯನ್ನೂ ನಿಂದಿಸಕೂಡದು +ಎಂಬ ಎರಡು ಅಂಶಗಳಿಗೆ ಒತ್ತುಕೊಡಬೇಕು. ಈ ಲಕ್ಷಣರೇಖೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಚುನಾವಣಾ ಅಭ್ಯರ್ಥಿತನಕ್ಕೆ ಅನರ್ಹಗೊಳಿಸಬೇಕು. ವಿಧಾನಸಬೆಗಾಗಲಿ, ಲೋಕ ಸಭೆಗಾಗಲಿ ಎಲ್ಲ ಚುನಾವಣೆಯೂ ಆರೋಗ್ಯಕರ ನೆಲೆಯಲ್ಲಿ ಗಂಭೀರವಾಗಿ ನಡಯಬೇಕೆಂದು ಮತದಾರರು ಬಯಸುತ್ತಾರೆ. ಎಲ್ಲ ಪಕ್ಷಗಳೂ ಜನಸೇವೆಗೆಂದು ಹುಟ್ಟಿದ ಶ್ರೇಷ್ಠ ಪಕ್ಷಗಳು. ನಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಎನ್ನುವುದಕ್ಕಿಂತಾ ಎಲ್ಲ ಪಕ್ಷಗಳಿಗೂ ಸೇರಿದವಳು ಎಂದು ಹೇಳುವುದರಲ್ಲಿ ಅರ್ಥವಿದೆ. ಜನಪರ ಜೀವಪರ ತುಡಿತದ, ಮಾನವೀಯ ಕಾಳಜಿಯ ಪಕ್ಷಗಳಿಗೆ ನನ್ನ ಸಹಮತ ಉಂಟು. +ದೀನದಲಿತರ ದುಃಖದುಮ್ಮಾನಗಳನ್ನು ಹೋಗಲಾಡಿಸಿ ಕಣ್ಣೀರನ್ನು ಒರೆಸುವುದಕ್ಕೆ ನಾಡು ಮುಂದಾಗಬೇಕೆಂದು ನೂರು ವರ್ಷಗಳ ಹಿಂದೆ ಸಿಂಹವಾಣಿ ಮೊಳಗಿಸಿದ್ದು ಸ್ವಾಮಿ ವಿವೇಕಾನಂದರು. ಅವರು ‘ದರಿದ್ರ ದೇವೋ ಭವ’ ಎಂಬ ವಾಕ್ಯ ಹೇಳಿದರು. ನಾವು ಅದರೊಂದಿಗೆ ಕೃಷಿಕ ದೇವೋಭವ, ಕಾರ್ಮಿಕ ದೇವೋಭವ, ಎಂದೂ ಸೇರಿಸಬಹುದು. ನಿಜ, ದುಡಿಯುವವರೇ ದೇವರು. ಶ್ರಮವೇ ದೇವರು. ಮೈಗಳ್ಳರು ಪ್ರೇತಗಳು. ದಶಾವತಾರಗಳಿಂದ ರಾಮನಾಗಿ ಕೃಷ್ಣನಾಗಿ, ಬುದ್ಧನಾಗಿ, ಯಾವುದಾದರೂ ಒಂದು ರೂಪದಲ್ಲಿ ದೇವರು ಬರುತ್ತಾನೆಂಬ ನಂಬಿಕೆಗೆ ಇಂಬುಕೊಟ್ಟು ಹೇಳುವುದಾದರೆ, ಇಂದು ದೇವರು ನಾಡಿಗಾಗಿ, ಜನರಿಗಾಗಿ ದುಡಿಯುವವರ ರೂಪದಲ್ಲಿ ಬಂದಿದ್ದಾನೆಂದು ತಿಳಿಯಬಹುದು. +ಜಾತಿಮತ ಮಠ ಮಂದಿರ ಮಸೀದಿ ಚರ್ಚು ಗುಡಿ ಗೋಪುರಗಳು ಅವುಗಳ ಪಾಡಿಗೆ ಅವು ಇರಲಿ. ಧರ್ಮಗಳೂ ಧರ್ಮಗುರುಗಳೂ ಮಠಾಧೀಶರೂ ಸಮಾಜದ ಹಿತಚಿಂತಕರು. ಧರ್ಮದಿಂದ ಧರ್ಮಸಂಸ್ಥೆಗಳಿಂದ ಅಶಾಂತಿ ಇಲ್ಲ. ಆದರೆ ಧರ್ಮಾಂಧರಾದ ಮೂಲಭೂತವಾದಿ ರಕ್ಕಸರಿಂದ ರಕ್ತಪಾತಗಳಾಗುತ್ತಿವೆ. ಮತಗಳಿಂದ ಅಪಾಯವಾಗಲಿಲ್ಲ. ಮತಾಂಧರಿಂದ ಗಂಡಾಂತರ ಬಂದಿದೆ. ಮತ ಧರ್ಮಗಳಲ್ಲಿ ಗುರುಪೀಠಗಳಲ್ಲಿ ಜನಮುಖಿ ಹಾಗೂ ಸಹಿಷ್ಣುತೆ – ಸಹಕಾರ – ಸಮನ್ವಯಗಳ ಧೋರಣೆ ಕಾಣಿಸದಿದ್ದಾಗ ಮುಖ ಮೋರೆ ನೋಡದೆ ಸಮಾಜ ಮತ್ತು ಸರಕಾರ ತನ್ನ ಗದಾಪ್ರಹಾರ ಮಾಡುವುದು ತಪ್ಪಲ್ಲ. ಪೂಜಾ ಸ್ಥಳಗಳೂ ಪ್ರಾರ್ಥನಾ ಮಂದಿರಗಳೂ ಸಿಡಿಮದ್ದು, ಬಂದೂಕು ತುಂಬಿದ ಆಯುಧಾಗಾರ ಆಗಬಾರದು. ಹೋಳಿ ಹಬ್ಬದ ದಿವಸ, ಮೊಹರಮ್ಮಿನ ಹಬ್ಬದಲ್ಲಿ, ಜಾತ್ರೆತೇರು ಹರಿಯುವಾಗ, ಉರುಸು ಸಾಗುವಾಗ ಅಣ್ಣತಮ್ಮಂದಿರೆಂದು ಅಪ್ಪಿ ಆಲಂಗಿಸುವುದು ಅದೊಂದು ಗಳಿಗೆಯ ತೋರಿಕೆಯ ನಾಟಕಾಭಿನಯ ಆಗಬಾರದು. ಬದುಕಿನುದ್ದಕ್ಕೂ ನಿತ್ಯ ನಡೆವಳಿಕೆಯಲ್ಲಿ ಭ್ರಾತೃತ್ವ, ಸೌಹಾರ್ದ ಬೇರು ಬಿಟ್ಟು ಜೀವಂತವಾಗಬೇಕು. ನನ್ನದೊಂದು ಕವಿತೆ ನೆನಪಾಗುತ್ತಿದೆ. +ನಾ ಬರೆದೆ ನಿಮಗಾಗಿ +ನಾ ಬರೆದೆ ನನಗಾಗಿ +ನಾ ಬರೆದೆ ಜನಕಾಗಿ +ನಾ ಬರೆದೆ ಜಗಕಾಗಿ +ಎಲ್ಲರಿಗು ತಲಪಲಿ ನನ್ನ ಈ ಕವನ +ಎಲ್ಲರಿಗು ಸೇರಲಿ ನನ್ನ ಈ ಕವನ +ಎಲ್ಲರಿಗೂ ದೊರಕಲಿ ನನ್ನ ಈ ಕವನ +ಶತ್ರುತ್ವ ತೊಲಗಲಿ +ಮಿತ್ರತ್ವ ಉಳಿಯಲಿ +ಭ್ರಾತೃತ್ವ ಬೆಳೆಯಲಿ +ಎಲ್ಲರಿಗು ಸೇರಲಿ ನನ್ನ ಈ ಕವನ +ಸಹನೆಯ ಬಿತ್ತೋಣ +ಶಾಂತಿಯ ಬೆಳೆಯೋಣ +ಮಾನವತೆ ಉಳಿಸೋಣ +ಎಲ್ಲರಿಗು ದೊರಕಲಿ ನನ್ನ ಈ ಕವನ +ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಯಾವತ್ತೂ ಚ್ಯುತಿ ಬರಬಾರದು. ತಮಗೆ ಇಷ್ಟ ಬಂದ ದೈವವನ್ನು ಮನಬಂದಂತೆ ಪೂಜಿಸುವ ಸ್ವಾತಂತ್ರ ಕ್ಕೆ ಧಕ್ಕೆಯಾಗದಿರಲಿ. ಆದರೆ ಧ್ವನಿವರ್ಧಕ ಬಳಸಿ ಇಡೀ ಪರಿಸರದ ಪ್ರಶಾಂತತೆಯನ್ನು ಕಲಕುವುದು, ಬಲವಂತ ಮಾಘಸ್ನಾನ ಮಾಡುವುದು ಬೇಡ. ಅವರವರ ಮನೆಯಲ್ಲಿ, ಮಂದಿರದಲ್ಲಿ ಮಾಡುವ ಮಂತ್ರ ಪಠನ, ಪೂಜೆ ಅವರವರಿಗಷ್ಟೇ ಸೀಮಿತವಾಗಿದ್ದು ಉಳಿದವರ ಮೇಲೆ ಹೇರುವ ದಬ್ಬಾಳಿಕೆ ಸರಿಯಲ್ಲ. ಪೂಜಾ ಮಂದಿರ ಹಾಗೂ ಪ್ರಾರ್ಥನಾ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಶಬ್ದ ಮಾಲಿನ್ಯಗೊಳಿಸುವುದು ತಕ್ಷಣ ನಿಲ್ಲಿಸುವುದು ಲೇಸು. ಯಾವುದೇ ಒಂದು ಧರ್ಮವನ್ನು ಕುರಿತು ನಾನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೂ ಪ್ರಾರ್ಥನಾ ಮಂದಿರಗಳಿಗೂ ಅನ್ವಯಿಸುವ ಏಕರೂಪದ ಶಾಸನ ತಂದು ಧ್ವನಿವರ್ಧಕಗಳನ್ನು ಅಳವಡಿಸುವಂತೆ ನಿಯಂತ್ರಿಸಿದರೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಶಾಂತಿಪ್ರಿಯರಿಗೆ, ಕಾರ್ಯಮಗ್ನರ ನೆಮ್ಮದಿಗೆ ಪೂಜಾಸ್ಥಳಗಳು ಉಪಕಾರ ಮಾಡಿದಂತೆ ಆದೀತು. +ಇರಲಿರಲಿ ಅವರವರ ಧರ್ಮಗುಡಿಗಳು +ಅಂತರ್ಮುಖಿಯಾಗಿರಲಿ ಆರಾಧಿಸುವ ಹಕ್ಕುಗಳು +ತಂತಮ್ಮ ಮಂತ್ರ ಪಠಣ ಪೂಜಾ ಘೋಷಗಳು +ನಿರಂತರ ನಡೆಯುತಿರಲಿ ನಿಲ್ಲದೆಯೆ ಹಗಲಿರಳು +ಗುಡಿಗೋಪುರ ಚರ್ಚುಗಳಲಿ ಮಸೀದಿಗಳಲಿ +ಪರಮ ಪವಿತ್ರ ಪೂಜಾ ಮಂದಿರಗಳಲಿ +ಹೊಮ್ಮಲಿ ಧೂಪಧೂಮ ಅಗರು ಕರ್ಪೂರ +ಆರತಿ ಬೆಳಗಲಿ ಗಂಟೆಜಾಗಟೆಯು ಮೊಳಗಲಿ +ಮುಗಿದು ಮಣಿಯುವ ಮನಸು ಕನಸುಗಳಿಗೆ +ಉಣಿಸಲಿ ಗ್ರಹಿಸಲಿ ದೈವ ಅನುಗ್ರಹಿಸಲಿ +ಬಾಳು ನೆಮ್ಮದಿಗೆ ಪ್ರಾರ್ಥನೆಗಳು ಘಟಿಸಲಿ +ಯಾರ ತಕರಾರು ಅಡ್ಡಿ ಹಂಗು ಹಸಾದ +ಜನರ ಮೌನ ಪ್ರಾರ್ಥನೆಗೆ ಅಡ್ಡ ಬರದಿರಲಿ +ನಿಶ್ಯಬ್ದ ಪರಮ ಪ್ರಾರ್ಥನೆಯ ಕದಡುವೀ +ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರಲಿ +ಕನ್ನಡ ಸಾಹಿತ್ಯದ ಉದ್ದಕ್ಕೂ ಭಿನ್ನಪಾತಳಿಗಳಲ್ಲಿ ಎದ್ದುಕಾಣುವ ಬಂಡಾಯ ಸಹ ಸಾಂಸ್ಕ ತಿಕ ಸರ್ವಾಧಿಕಾರ ಧೋರಣೆಯ ವಿರುದ್ಧವಾಗಿತ್ತು. ಭಾಷೆಯ ದಬ್ಬಾಳಿಕೆಯನ್ನು ಧಿಕ್ಕರಿಸಿದ್ದು, ಮಾರ್ಗ-ದೇಸಿ ಹಾಗೂ ವಸ್ತುಕ-ವರ್ಣಕ ಪಲ್ಲಟ, ಛಂದಸ್ಸಿನಲ್ಲಾದ ಮಾರ್ಪಾಟು, ಜನಭಾಷೆಯನ್ನು ಮಹಾಕಾವ್ಯ ಮತ್ತು ಆಸ್ಥಾನದ ಭಾಷೆಯಾಗಿಸಿದಂತೆ ಮತ್ತೆ ಅದನ್ನು ಜನಭಾಷೆಗೇ ಜಗ್ಗಿದ್ದು-ಇವೆಲ್ಲ ಕನ್ನಡ ಸಾಹಿತ್ಯ ಕಂಡ ಸ್ಥಿತ್ಯಂತರಗಳು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಕನ್ನಡ ನಡೆದುಬಂದ ದಾರಿಯ ಈ ವೈವಿಧ್ಯಗಳ ದಿವ್ಯ ತಿರುವು ನಮ್ಮ ಸಾಹಿತ್ಯದ ಶಕ್ತಿ. ರತ್ನಾಕರವರ್ಣಿಯ ಸಂದೇಶ ಸಾರ್ವಕಾಲಿಕ ವಾಸ್ತವಕ್ಕೆ ಕೆತ್ತಿದೆ ಪ್ರತಿಮೆ, ಎತ್ತಿದ ಸೊಲ್ಲು : +ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು +ರಯ್ಯ ಮಂಚಿದಿಯೆನೆ ತೆಲುಗರು +ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು +ಮೆಯ್ಯುಬ್ಬಿ ಕೇಳಬೇಕಣ್ಣ || +ಇಡೀ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಹೀಗೆ ತನ್ನ ಭಾಷೆಯೊಂದಿಗೆ ನೆರೆಹೊರೆಯ ಜನರ ತಾಯಿಭಾಷೆಯನ್ನೂ ಪರಿಭಾವಿಸಿ ಅಕ್ಕರೆಯುಕ್ಕಿ ಹೀಗೆ ಚಿಂತಿಸಿದ ಹೃದಯಸಿರಿ ಅಪರೂಪ. ಸಾಹಿತಿಗಳಿಗೂ ಇದು ದಿಕ್ಸೂಚಿಯಾಗಿರುವ ಮಾತು. ದೂರದ ಇಂಗ್ಲಿಷ್ ಭಾಷೆಯಲ್ಲಿ ಏನಾಗುತ್ತಿದೆ ಎಂದು ವಾಗ್ವಾದ ನಡೆಸುತ್ತೇವೆ, ಅದು ತಪ್ಪಲ್ಲ ಎಂಬುದೂ ದಿಟವೆ. ಆದರೆ ನಮ್ಮ ಅಕ್ಕಪಕ್ಕದ ಭಾಷೆಗಳಲ್ಲಾಗುತ್ತಿರುವ ಪ್ರಗತಿ ಪಲ್ಲಟಗಳ ಪರಿಚಯವೇ ಇರುವುದಿಲ್ಲವೆಂಬುದು ವಿಷಾದನೀಯ. ನಮ್ಮ ಬದುಕಿನ ಸಾಂಸ್ಕ ತಿಕ ಬೇರುಗಳಿಗೆ ತಾಕಿದ, ಉಸಿರಿಗೆ ಹತ್ತಿರದ ಭಾಷಾಸಾಹಿತ್ಯದ ಪರಿಚಯ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ‘ಕೊಡು-ಪಡೆ’ಗಳಿಗೆ ಇದು ದಾರಿ ತೆರೆಯುತ್ತದೆ. ರತ್ನಾಕರವರ್ಣಿಯ ಈ ತಿಳಿವಳಿಕೆಯ ಬೆಳಕು ಇಂದಿನ ಯುಗಕ್ಕೆ ತೀರ ಅವಶ್ಯ. ರತ್ನಾಕರವರ್ಣಿಯ ಹಾಡುಗಳು ಮೈಲಿಗೆಯಲ್ಲ. ನಮ್ಮ ಸಂಗೀತಗಾರರು ಸಂಗೀತ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಜೇನು ಸವರಿದ ಸುಮಧುರ ಕಂಠಸಿರಿಯಿಂದ ಕನ್ನಡ ಕವಿತೆಗಳನ್ನು ಹಾಡಿ ಮನೆ ಮನಗಳನ್ನು ತಣಿಸಿ ಕುಣಿಸುತ್ತಿರುವ ಸುಗಮ ಸಂಗೀತಗಾರರನ್ನು ಅಭಿನಂದಿಸುತ್ತೇನೆ. ಈ ಕಲಾವಿದರು ಆಧುನಿಕ ಕವಿತೆಗಳ ಜೊತೆಗೆ ಪ್ರಾಚೀನ ಕಾವ್ಯಗಳಿಂದಲೂ ಆರಿಸಿದ ಅರ್ಥಪೂರ್ಣ ಪದ್ಯಗಳನ್ನು ಹಾಡುವುದು ಅಗತ್ಯ. ಆ ಮೂಲಕ ಪರಂಪರೆಯ ಸುವರ್ಣ ಕೊಂಡಿ ಕಳಚಿ ಹೋಗದ ಹಾಗೆ ಪುನರುಜ್ಜೀವಿಸಬೇಕು. ಕನ್ನಡ ಕಾವ್ಯಪರಂಪರೆಯ ಸಾತತ್ಯವನ್ನು ಪುನರುತ್ಥಾನಿಸುವುದಕ್ಕೆ ಗಮಕಿಗಳೂ ಪ್ರಯತ್ನಶೀಲರಾಗಿರುವುದು ಶ್ಲಾಘನೀಯ. ಗಮಕಿಗಳು ಚಂಪೂಕಾವ್ಯಗಳನ್ನೂ ರಗಳೆ ವಚನಗಳನ್ನೂ ಬೇರೆಬೇರೆ ಷಟ್ಪದಿ ಕಾವ್ಯಗಳನ್ನೂ ಹಾಡಿ ಗಮಕಕ್ಕೆ ವಿಸ್ತಾರ ಮತ್ತು ವೈವಿಧ್ಯ ತರಬೇಕು. +ಜೀವಸಂಕುಲವನ್ನು ಕಾಪಾಡಿದ, ಈಗಲೂ ರಕ್ಷಿಸುತ್ತಿರುವ ಅಮೃತ ಚೈತನ್ಯದ ಆಮ್ಲಜನಕಕ್ಕೆ ಚ್ಯುತಿ ಬಾರದಂತೆ ಉಳಿಸುವ ನೈತಿಕ ಹೊಣೆ ಹೊತ್ತು, ಪರಿಸರಮಾಲಿನ್ಯಕ್ಕೆ ಎಡೆಕೊಡುವುದಿಲ್ಲವೆಂಬ ದೃಢ ಪ್ರತಿe ನಮ್ಮದಾಗಲಿ. ಗಿಡಮರಗಳ ಮಹತ್ವವನ್ನು ಮನಗಾಣಿಸುವ ಪಾಠಗಳು ಪಠ್ಯಗಳಲ್ಲಿ ಹೆಚ್ಚು ಸೇರಲಿ. +ಕಾಶ್ಮೀರದಲ್ಲಿ ದಿನನಿತ್ಯ ನಿರಂತರವಾಗಿ ನಡೆಯುತ್ತಿರುವ ಬರ್ಬರ ಹತ್ಯಾಕಾಂಡ ಕಲ್ಲೆದೆಗಳನ್ನೂ ತಲ್ಲಣಗೊಳಿಸುವಂಥದು. ಉಗ್ರಗಾಮಿ ಭಯೋತ್ಪಾದಕರು ಹಿಂಸಾಕಾಂಡದಲ್ಲಿ ವಿಜೃಂಭಿಸುತ್ತ ಅಮಾಯಕ ನಾಗರಿಕರನ್ನು, ಕಾಶ್ಮೀರಿ ಪಂಡಿತರನ್ನು, ಹತ್ಯೆ ಮಾಡುತ್ತಿದ್ದಾರೆ. ಹಿಂಸೆಗೆ ಪ್ರತಿಹಿಂಸೆ ಪರಿಹಾರವಲ್ಲವೆಂಬ ದಿಟದ ಮನವರಿಕೆಯಾದರೂ ಜೀವಹಾನಿಗೆ ವಿರಾಮ ಸಾಧ್ಯವಾಗಿಲ್ಲ. ಒಮ್ಮೆ ಭಾರತದ ತೊಟ್ಟಿಲು ತೂಗುತ್ತ ಇನ್ನೊಮ್ಮೆ ಪಾಕಿಸ್ತಾನವನ್ನು ಚಿವುಟುತ್ತ, ಮದ್ದು ಗುಂಡು ಯುದ್ಧವಿಮಾನ ಸರಬರಾಜು ಮಾಡುತ್ತ, ಹಲವು ರಾಷ್ಟ್ರಗಳನ್ನು ಅಲ್ಲೋಲ ಕಲ್ಲೋಲಗೊಳಿಸುವ ಬಲಿಷ್ಠ ಗೋಮುಖ ವ್ಯಾಘ್ರಗಳನ್ನು ಸಂಪೂರ್ಣ ನಂಬಬಾರದು. ಭಾರತ, ಚೈನಾ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರು ಮುಂತಾದ ರಾಷ್ಟ್ರಗಳೆಲ್ಲ ಒಗ್ಗೂಡಿದರೆ ಅಮೆರಿಕವನ್ನು ಮೂಸುವವರು ಯಾರು? ಈ ಕಾರಣಕ್ಕಾಗಿಯೇ ಅಭಿವೃದ್ಧಿ ಪಥದಲ್ಲಿರುವ ನಮ್ಮಂಥ ದೇಶಗಳ ನಡುವೆ ಹೊಂದಾಣಿಕೆ ಸಾಧ್ಯವಾಗದಂತೆ ಒಡಕುಮೂಡಿಸಲು ಬಲಿಷ್ಠ ರಾಷ್ಟ್ರದ ಹುನ್ನಾರ. ಅಮೆರಿಕದ ಸೊಕ್ಕು ಮಣ್ಣುಮುಕ್ಕುವ ದಿನಗಳು ಹತ್ತಿರ ಬಂದಿವೆ. ಭಯೋತ್ಪಾದಕತೆಯನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಮುಂದುವರಿದ ರಾಷ್ಟ್ರಗಳು ಪರಾವಲಂಬಿ ಗಳಾಗಿದ್ದಾರೆ. ಸಾಮೂಹಿಕ ಸಂಘಟನೆಯಿಂದಲೇ ಸಮೂಹ ಸನ್ನಿಯನ್ನು ಬಗ್ಗುಬಡಿಯಲು ಸಾಧ್ಯವೆಂಬ ವಾಸ್ತವ ಪ್ರe ಎಚ್ಚೆತ್ತಿದೆ. +ರಾಷ್ಟ್ರೀಯ ಪಕ್ಷಗಳ ಅಟ್ಟಹಾಸದಲ್ಲಿ ಪ್ರಾಂತೀಯ ಪಕ್ಷಗಳು ಕುಸಿಯಬಾರದು. ಪ್ರಾಂತೀಯ ಪಕ್ಷಗಳ ಕುತ್ತಿಗೆ ಹಿಚುಕುವ ಹುನ್ನಾರಗಳಿಗೆ ಬಲಿಯಾಗಬಾರದು. ರಾಷ್ಟ್ರೀಯ ಭಾಷೆಗಳ ಮೆರವಣಿಗೆಯಲ್ಲಿ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಧರ್ಮದ ಸೋಗಿನಲ್ಲಿ ದೇಸೀಯ ಜನಪದರ ಧರ್ಮಗಳೂ ಕಳೆದುಹೋಗಬಾರದು. ರಾಷ್ಟ್ರೀಯ ಪ್ರಧಾನ ಸಂಸ್ಕ ತಿಯ ಹಮ್ಮು ಬಿಮ್ಮುಗಳಲ್ಲಿ ಪ್ರಾದೇಶಿಕ ಸಮಸಂಸ್ಕ ತಿಗಳ ಉಸಿರು ಕಟ್ಟಬಾರದು. ದೇಸೀಯ ಹಾಗೂ ಸ್ಥಳೀಯ ತತ್ವಗಳಿಗೆ ಸಲ್ಲಬೇಕಾದ ಮಹತ್ವ, ಮನ್ನಣೆ ಇತ್ತು ಉಳಿಸಿಕೊಳ್ಳುವುದು ಒಳ್ಳೆಯದು. ಪ್ರಾದೇಶಿಕ ವೈವಿಧ್ಯ ಅಪಾಯಕಾರಿಯಲ್ಲ. +ಭಾರತ ರಜಗಳ ಮಹಾರಾಜ. ಪ್ರಗತಿ ಬಯಸುವ ಯಾವ ರಾಷ್ಟ್ರದಲ್ಲಿಯೂ ಇಲ್ಲಿರುವಷ್ಟು ರಜಗಳಿಲ್ಲ. ಹೊಸವರ್ಷದ ಪಂಚಾಂಗ ಹಿಡಿದರೆ ಮೊದಲು ನೋಡುವುದು ಆ ವರ್ಷದಲ್ಲಿ ಎಷ್ಟು ರಜಗಳಿವೆ, ರಜದ ಹಬ್ಬಗಳು ಭಾನುವಾರ ಬಂದು ಎಷ್ಟು ರಜ ತಪ್ಪಿತು – ಎಂದು! ಹಾಲಿ ಇರುವ ರಜಗಳ ಏರ್ಪಾಟನ್ನು ಮುರಿದು ಮರುಸಂಯೋಜನೆ ಮಾಡುವುದರತ್ತ ಪರಿಭಾವಿಸುವ ಹಂತ ಮುಟ್ಟಿದ್ದೇವೆ. ಇಡೀ ದೇಶಕ್ಕೆ ಅನ್ವಯಿಸುವಂತೆ ವರ್ಷಕ್ಕೆ ಇಷ್ಟು ಎಂದು ರಜಗಳ ಸಂಹಿತೆ ಜಾರಿಗೊಳ್ಳುವುದು ಲೇಸು. ಸಾರ್ವತ್ರಿಕ ರಜಗಳು ರಾಷ್ಟ್ರೀಯ ಮಹತ್ವದ್ದಾಗುವುದು ಸೂಕ್ತ : ಆಗಸ್ಟ್ ೧೫, ಅಕ್ಟೋಬರ್ ೨, ಜನವರಿ ೨೬ – ಈ ಮೂರು ದಿನಗಳಷ್ಟೆ ಇಡೀ ಭಾರತಕ್ಕೆ ಅನ್ವಯಿಸುವ ರಜೆಯ ದಿನಗಳಾಗುವುದು ಸಮಂಜಸ. ಆಯಾ ಪ್ರಾಂತ್ಯದ ಸಾಂಸ್ಕ ತಿಕ ಮಹತ್ವದ ಹಾಗೂ ಜಾತಿಮತಧರ್ಮದ ಸೋಂಕು ಇರದ ಒಂದು ದಿನ ವರ್ಷದ ರಜಕ್ಕೆ ಅರ್ಹವಾಗಬಹುದು. ಕರ್ನಾಟಕದಲ್ಲಿ ನವೆಂಬರ್ ೧ ರಾಜ್ಯೋತ್ಸವ ಮಹತ್ವದ ರಜದ ದಿವಸವಾಗುವುದು ಸರಿ. ಉಳಿದಂತೆ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ವರ್ಷದಲ್ಲಿ, ಅವರ ಗಳಿಕೆಯ ರಜವಲ್ಲದೆ, ಒಟ್ಟು ಇಪ್ಪತ್ತು ದಿನಗಳ ಸಾಂದರ್ಭಿಕ ರಜ ಪಡೆಯಲು ಅವಕಾಶವಿದ್ದರೆ ಸಾಕು. ಒಟ್ಟಾರೆ, ಎಲ್ಲ ಮತಧರ್ಮಗಳೂ ಶ್ರೇಷ್ಠವೆ ಆಗಿರುವುದರಿಂದ ಯಾವೊಂದನ್ನೂ ನಿಯಮ ಮುರಿದು ಓಲೈಸಬೇಕಾಗಿಲ್ಲ. ಆತ್ಯಂತಿಕವಾಗಿ ರಾಷ್ಟ್ರಧರ್ಮಕ್ಕೆ ಮನ್ನಣೆ ಸಲ್ಲಲಿ. +ಸಮೂಹ ಸನ್ನಿಯಿಂದ ಸಾಂಸ್ಕ ತಿಕ ಚಳವಳಿಗಳು ಹದ್ದು ಮೀರಿ, ದಾರಿತಪ್ಪಿದ್ದುಂಟು. ಅತಿಭಾವುಕತೆಯ ಅಪಸ್ಮಾರದಿಂದ ಪಥಭ್ರಷ್ಟರಾಗುವ ಅಪಾಯ ತಪ್ಪಿದ್ದಲ್ಲ. ಮುಷ್ಕರ, ಧರಣಿ, ಪ್ರತಿಭಟನೆ, ಬಂದ್ ಮೊದಲಾದುವು ಇಂದು ಮೂಲಾರ್ಥದಿಂದ ಬಹುದೂರ ಬಂದು, ತಮ್ಮ ಶಕ್ತಿಯ ಪಾವಿತ್ರ ವನ್ನು ಕೆಡಿಸಿ ದುರುಪಯೋಗ ಮಾಡುತ್ತಿವೆ. ನಮ್ಮ ಯಾವುದೇ ವಿರೋಧಾಭಿವ್ಯಕ್ತಿಯ ವಿಧಾನ ಪ್ರಗತಿಚಕ್ರದ ಚಾಲನೆಯನ್ನು ನಿಲ್ಲಿಸಬಾರದು. ಮಾತತ್ತಿದರೆ ಬಂದ್‌ಗೆ ಕರೆ ಕೊಡುವುದು ವಿಪರ್ಯಾಸ. ಸಮಾಜದ ಸೌಷ್ಠವ ಚಲನೆಯನ್ನೇ ಅಸ್ತವ್ಯಸ್ತಗೊಳಿಸುವ ‘ಬಂದ್’, ಜೀವವಿರೋಧಿಯಾದ ಉಪಕ್ರಮ. ಅದರಿಂದ ಆಗುವ ಅನಾಹುತ, ನಷ್ಟ, ನೋವು ಊಹಾತೀತ. ಮುನ್ನಡೆಯನ್ನು ಬಯಸುವ ರಾಷ್ಟ್ರಗಳ, ಶತ್ರುಗಳು ಬಂದ್ ಮತ್ತು ಮುಷ್ಕರ. ಹೀಗೆ ಹೇಳುವಾಗ ಧರಣಿ, ಮುಷ್ಕರ, ಪ್ರತಿಭಟನೆ ತೋರದೆ ಎಲ್ಲ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿಕೊಳ್ಳಬೇಕೆಂದು ಅರ್ಥವಲ್ಲ. ಮಾನವ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳನ್ನು ಸುಲಿಗೆ ಮಾಡುವ, ದಮನಗೊಳಿಸುವ ಎಲ್ಲ ಹುನ್ನಾರಗಳನ್ನು ಬಯಲಿಗೆ ಎಳೆದು ಖಂಡಿಸಬಾರದೆಂದಲ್ಲ. ಸಾಮ್ರಾಜ್ಯಷಾಹಿ ಪ್ರಮತ್ತತೆಯನ್ನು ಬಗ್ಗುಬಡಿಯುವುದು ಅನಿವಾರ್‍ಯ. ಆದರೆ ವಿರೋಧವನ್ನು ದಾಖಲಿಸುವ ವಿಧಾನದ ಸ್ವರೂಪ ಉತ್ಪಾದಕವಾಗಿರಬೇಕು. ಪ್ರತಿಭಟನೆಯ ಪ್ರತೀಕವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಕೆಲಸಕ್ಕೆ ಹಾಜರಾಗಬಹುದು, ಕೆಲಸದ ಅವಧಿ ಮುಗಿಸಿ ಅನಂತರ ಜನತಾಂತ್ರಿಕವಾದ ಸಂಧಾನದ ಮಾರ್ಗಗಳಿಂದ ಪ್ರತಿಭಟನೆ ಸಂಬಂಧದ ಸಭೆ ನಡೆಸಬಹುದು. +ಹೀಗೆಯೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನಾತ್ಮಕವಾಗಿ ಅಳವಡಿಸಬೇಕಾದ ಇನ್ನೊಂದು ಜರೂರು ಜನಸಂಖ್ಯಾಸ್ಫೋಟ ನಿಯಂತ್ರಣ. ಜಾತಿಮತ ಧರ್ಮ ಪಕ್ಷ ಪ್ರದೇಶಗಳ ತಾರತಮ್ಯ ತೋರದೆ, ಒಬ್ಬರು ಅಥವಾ ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ಅವಕಾಶ ಕೊಡದಂತೆ ಜನಸಂಖ್ಯೆಯನ್ನು ನಿಯಂತ್ರಿಸುವ ಕಾಯಿದೆ ೨೦೦೫ ರಿಂದ ಜಾರಿಗೆ ಬರಬೇಕು. +ಉಲ್ಬಣಿಸುತ್ತಿರುವ ಪ್ರಜಾಸಂಖ್ಯೆಯ ನಿಯಂತ್ರಣ ಗೋಳದ ಅಗತ್ಯಗಳಲ್ಲೊಂದು. ಭಾರತದ ಹಲವು ಸಮಸ್ಯೆಗಳಿಗೆ ಜನಸಂಖ್ಯಾಸ್ಫೋಟ ಕಾರಣ. ಜನರಿಗೆ ಇದರ ಅರಿವನ್ನು ಮೂಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ, ಜನರೂ ಇದರಲ್ಲಿ ಕೈಜೋಡಿಸಿ ಸಹಕರಿಸಬೇಕು. ಜನಸಂಖ್ಯೆಯನ್ನು ಹತೋಟಿ ಮೀರದಂತೆ ಹಿಡಿತಕ್ಕೆ ತರಬೇಕಾದರೆ ಕಠಿಣ ಕ್ರಮಕ್ಕೂ ಮುಂದಾಗಬೇಕು. ಯಾವ ಧರ್ಮವೂ ಪ್ರಜೆಯೂ ದೇಶಕ್ಕಿಂತ ದೊಡ್ಡದಾಗಬಾರದು. ಮುಂದಿನ ವರ್ಷದಿಂದಲೇ ಸುಗ್ರೀವಾಜ್ಞೆ ಹೊರಡಿಸಿ ವಿಧಿಸಬೇಕಾದ ಷರತ್ತು: +೧. ಯಾವ ಪಕ್ಷವೇ ಆಗಲಿ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಬೇಕಾದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರಕೂಡದು. ಚುನಾವಣೆ ಸಮೀಪಿಸುತ್ತಿದೆ, ಚುನಾವಣೆಗೆ ನಿಲ್ಲುವವರು ಕನ್ನಡ ಬಲ್ಲವರಾಗಿರಬೇಕು ಕನ್ನಡ ಬಲ್ಲವರಿಗೆ ಸೀಟು ಕನ್ನಡ ತಿಳಿದವರಿಗೆ ಓಟು ಎನ್ನುವುದು ಚುನಾವಣೆಯ ಒಂದು ತಾರಕ ಮಂತ್ರವಾಗಬೇಕು. ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗೆ ಕೂಡ ಇದೇ ನಿಯಮ. +೨. ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ದರೆ ಅಂಥ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿವೇತನ ಕೊಡಬಾರದು. +೩. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರ ಸಾಲ ಕೊಡಬಾರದು. ಕೆಲಸಕ್ಕೆ ಸೇರುವಾಗ ಎರಡು ಮಕ್ಕಳಿದ್ದು ಆಮೇಲೆ ಹೆಚ್ಚು ಮಕ್ಕಳಾದರೆ ಯಾವುದೇ ಮುಂಬಡ್ತಿಗಳು ಸಿಗುವುದಿಲ್ಲವೆಂಬಂತಾಗಬೇಕು. +೪. ಅಲ್ಪಸಂಖ್ಯಾತ ಅಥವಾ ಧಾರ್ಮಿಕ ಕಾರಣಗಳ ರಿಯಾಯಿತಿ ಖಂಡಿತ ಇರಬಾರದು. +೫. ಕಾರ್ಮಿಕರೂ ರೈತರೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಈ ನಿಯಮವಿರಬೇಕು. +೬. ಈ ನಿಯಮ ಪಾಲನೆಯಿಂದ ರೈತ ಕುಟುಂಬಗಳಿಗೆ ಹೆಚ್ಚು ಸುಖಪ್ರಾಪ್ತಿಯಿದೆ. ಆಸ್ತಿಯ ಹಂಚಿಕೆಯೂ ದೊಡ್ಡ ಕುಟುಂಬ ನಿರ್ವಹಣೆಯ ಹೊಣೆಯೂ ನಿವಾರಣೆ ಆಗುತ್ತದೆ. ಸಾಲಗಾರರಾಗುವುದು ತಪ್ಪುತ್ತದೆ. +* +* +* +ಅನೇಕಾನೇಕ ಪ್ರಶ್ನೆಗಳ ಸರಮಾಲೆ ಹಿಡಿದು ಅಧ್ಯಕ್ಷಭಾಷಣವನ್ನು ಲಂಬಿಸುವ ಅಪೇಕ್ಷೆ ಇಲ್ಲ. ನನಗೆ ನನ್ನ ಮಿತಿಯ ಅರಿವು ಇದೆ. ಕೆಲವೇ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಗ್ರಹಿಕೆಗಳ ನಿರ್ವಚನಕ್ಕೆ ಸೀಮಿತಗೊಳಿಸಿದ್ದೇನೆ. ಸಮಾಜ, ಸಾಹಿತ್ಯ, ಸಂಸ್ಕ ತಿ, ಭಾಷೆ ಕುರಿತು ನನ್ನೊಳಗೆ ಮಿಡುಕುತ್ತ ಚಿಮುಗುಡುವ ಭಾವನೆಗಳನ್ನು ನಿಮ್ಮ ಮಡಿಲಿಗಿಟ್ಟಿದ್ದೇನೆ. ನಾನು ಹುಟ್ಟಿದಂದಿನಿಂದ ಕನ್ನಡದ ಶಿಷ್ಯೆ. ಸಮಗ್ರ ಕನ್ನಡ ಪರಂಪರೆಯೇ ನನ್ನ ಪಠ್ಯ, ಕರ್ನಾಟಕವೇ ನನ್ನ ಪಾಠಶಾಲೆ. ಈ ಕನ್ನಡ ಶಾಲೆಯಲ್ಲಿ ನಾನು ಜೀವನ ಪಾಠಗಳನ್ನು ಕಲಿತು ಬೆಳೆದ ವಿದ್ಯಾರ್ಥಿನಿ. ಹತ್ತಾರು ಸಂಗತಿಗಳಿಗೆ ಮುಖಾಮುಖಿಯಾಗುತ್ತ ಮಾತಾಡಿದ್ದೀನೆ. ಇದು ನನಗೆ ನಾನು ಗಟ್ಟಿಯಾಗಿ ಹೇಳಿಕೊಂಡ ಉಪನ್ಯಾಸವೂ ಹೌದು. ಆಶಾವಾದಿಯಾದ ನನ್ನ ಕಳಕಳಿಯನ್ನು ಪ್ರಾಮಾಣಿಕ ಪರಿಭಾವನೆಯನ್ನು ಆಲಿಸುವ ಔದಾರ್ಯ ತೋರಿದ ತಮ್ಮ ಹೃದಯಸಿರಿಗೆ, ಸುಹೃದ್ ಗಣಾವೃತ ಕನ್ನಡ ಜನ ಸಂಸದಾಂತರ್ಗತ ನಿರ್ಮಲ ಜ್ಯೋತಿಗೆ ನಮಸ್ಕರಿಸುತ್ತೇನೆ. +ದಿನಾಂಕ: ೧೮ ಡಿಸೆಂಬರ್, ೨೦೦೩, ಸ್ಥಳ: ಮೂಡುಬಿದಿರೆ (ಕವಿ ಮುದ್ದಣ್ಣ ನಗರ) +***** +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ […] +ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_177.txt b/Kannada Sahitya/article_177.txt new file mode 100644 index 0000000000000000000000000000000000000000..ea14e61705a48f112b2a467dcf4f70aaf62d31a4 --- /dev/null +++ b/Kannada Sahitya/article_177.txt @@ -0,0 +1,78 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂದರ್ಶಕಿ : ಪ್ರೀತಿ ನಾಗರಾಜ್ +ಸಮಯ: ಮಧ್ಯಾಹ್ನ ೨:೩೦ ಘಂಟೆ +ಸ್ಥಳ: ಜಯನಗರ +ಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ +ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” ಅಂದಿದ್ದರು ಗಿರೀಶ್. ಬೆಂಗಳೂರನ್ನು ಬಲ್ಲದವರಿಗೆ ಜಯನಗರದಲ್ಲಿ ವಿಳಾಸ ಹುಡುಕುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಬಹುಶಃ ಅನುಭವಿಸಿದವರಿಗೇ ಗೊತ್ತು. ಎರಡು ಬಾರಿ ರಸ್ತೆ ತಪ್ಪಿ ಹೋಗಿ, ಅಲ್ಲಲ್ಲೇ ಸುತ್ತು ಹೊಡೆಯುತ್ತಾ ಫೋನ್ ಮಾಡಿ ಮತ್ತೆ ಖಾತ್ರಿ ಮಾಡಿಕೊಂಡು ಕಾರುಗಳು ಸಾಲುಗಟ್ಟಿದ್ದ ಮನೆ-ಕಂ-ಸ್ಟುಡಿಯೋ ಸೇರಿದಾಗ ಒಂದು ಹಂತದ ಸಂದರ್ಶನ ಮುಗಿದಷ್ಟೇ ನಿರಾಳ. +ರಿಸೆಪ್ಶನ್ನಿನಲ್ಲಿ ಕೂತ ಕನ್ನಡಕಧಾರಿ “ಗಿರೀಶ್ ಅವರನ್ನ ನೋಡಲಿಕ್ಕೆ ಬಂದಿದ್ದೀರ? ಅಲ್ಲಿ ಕೂತುಕೊಳ್ಳಿ, ಬರ್ತಾರೆ,” ಅಂತ ಹೇಳಿದರು. “ಹೋಗೋ, ಅವರನ್ನ ಹಿಂದೆ ಕೂರಿಸಿ, ಗಿರೀಶ್ ಸಾಹೇಬ್ರಿಗೆ ಯಾರೋ ಲೇಡೀಸ್ ಬಂದಿದ್ದಾರೆ ಅಂತ ಹೇಳು.” +ಮೂಕಪ್ರಾಣಿಯಂತೆ ನನ್ನ ಮುಂದೆ ಹೊರಟ ಕಪ್ಪು-ಬಿಳಿ ಚೌಕಳಿ ಅಂಗಿಯವನನ್ನು ಹಿಂಬಾಲಿಸಿದೆ. ಒಳಗೆ ಮಾತುಗಳ ರೆಕಾರ್ಡಿಂಗ್..”ಅಯ್ಯೋ ಹಾಗಲ್ಲರೀ, ಇನ್ನೊಮ್ಮೆ ಹೇಳಿ” “ಹೂಂ, ಹೂಂ, ಮತ್ತೊಮ್ಮೆ” ಅಂತೆಲ್ಲ ಮಾತುಗಳು ತೆರೆದ ಕಿಟಕಿಯಿಂದ ಕೇಳಿ ಬರುತ್ತಿದ್ದವು. +ಮಧ್ಯೆ, ಮಧ್ಯೆ ರೇಡಿಯೊ ಅಲೆ. ಅದರ ಸದ್ದನ್ನು ಮುಚ್ಚಿ ಹಾಕುವ ಪ್ರಯತ್ನವೆಂಬಂತೆ “ಮ್ಯೂಸಿಕ್ ಪ್ಲೀಸ್..” ಅನ್ನುವ ಧ್ವನಿ. ಅದು ಮುಳುಗುವ ಮೊದಲೇ ಶುರುವಾಗುವ ಸಂಗೀತ…”ರಂಗಣ್ಣಾ, ಪುಟ್ಟಪ್ಪಾ ನನ್ನ ಮೇಲೆ ಹಾಕಿದ ಕೇಸ್ ಸೋತುಬಿಟ್ರು…” ಪದೇ ಪದೇ ಅದೇ ಮಾತು…”ಗೃಹಭಂಗ”ದ ಸಾಲುಗಳ ಹಿನ್ನೆಲೆ…ಇದಕ್ಕೆಲ್ಲ ಸಾಕ್ಷಿಯೆನ್ನುವಂತೆ ನಾನು, ಪ್ರವೀಣ್ ಸ್ಟುಡಿಯೋದ ಹಿತ್ತಲಿನಲ್ಲಿ. +ಅಲ್ಲೊಂದು ತೆಂಗಿನ ಮರ. ಕೂತವರಿಗೆ ಕಾಣುವುದು ಬರೀ ಬಡ್ಡೆ. ಕತ್ತು ನೋಯುವಷ್ಟು ಮೇಲೆ ತಲೆ ಎತ್ತಿ ನೋಡಿದರೆ, ಹಿತ್ತಲಿಗೆ ಛಾವಣಿಯಾಗಿದ್ದ ಹಸಿರು-ನೀಲಿ ಪ್ಲಾಸ್ಟಿಕ್ ಶೀಟನ್ನೂ ಮೀರಿ ಬೆಳೆದಿದ್ದ ಮರದಿಂದ ಜೋತು ಬಿದ್ದಿರುವ ದುಡ್ಡಿನ ಗಿಡ – ಅಲಿಯಾಸ್ – ಮನಿ ಪ್ಲಾಂಟುಗಳು. ಅವೆಲ್ಲ ದುಡ್ಡು ಬಿಡಬಹುದು ಅನ್ನುವಂಥಾ ಆಶಾವಾದಿ ಇಲ್ಲಿದ್ದನೇನೋ ಎಂಬಂತೆ ಪಾಚಿಗಟ್ಟಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು, ಅದರಲ್ಲಿ ಮತ್ತಷ್ಟು ಪ್ಲಾಂಟುಗಳು. +ತೆಂಗಿನ ಗಿಡವನ್ನು ಭದ್ರವಾಗಿ ಹಿಡಿದಿದೆಯೆನೋ ಅನ್ನುವ ಭ್ರಮೆ ತರಿಸುತ್ತಿದ್ದ ಕಟ್ಟೆಯ ಮೇಲೆ ಅರಿಶಿಣ-ಕುಂಕುಮಗಳಿಂದ ಅಲಂಕೃತವಾಗಿದ್ದ ತುಳಸಿ ಗಿಡ. ಮನಿ ಪ್ಲಾಂಟುಗಳ ಪಾಪವನ್ನು ತುಳಸಿ ಗಿಡ ಟಿuಟಟiಜಿಥಿ ಮಾಡುತ್ತಿತ್ತೇನೋ ಎಂಬಂತೆ. +ಅವುಗಳಿಂದ ಉದುರಿದ ಎಲೆ ಕಸವಾಗಿ ಮಾರ್ಪಾಡಾಗಿತ್ತು. ಯಾರೂ ಸ್ವಚ್ಛಗೊಳಿಸುವ ಕಾಯಕಕ್ಕೆ ಕೈ ಹಾಕಿದಂತಿರಲಿಲ್ಲ. ಮಣ್ಣು ಎಲೆಗಳ ಮಿಶ್ರಣವನ್ನು ಯಾರೂ ಮನೆಯ ಒಳಗೆ ಮೆಟ್ಟಿ ಹೋಗದಂತೆ ಹಿಂಬಾಗಿಲಿನ ಮುಂದೆ ಹಳೆಯ ಫುಟ್ ರಗ್. ಅದರ ಪಕ್ಕದಲ್ಲಿ ಹವಾಯಿ ಚಪ್ಪಲಿಗಳು. ಮೂಲೆಯಲ್ಲಿ ಸಿಂಕು… ಸ್ವಲ್ಪ ಮೇಲೆ ಸಣ್ಣ ಕನ್ನಡಿ..ಅದರ ಮೇಲೆಲ್ಲ ಕಡು ಕೆಂಪು ಸ್ಟಿಕ್ಕರುಗಳು. ಬಾಜುವಿನಲ್ಲಿ ಆಗಲೋ ಈಗಲೋ ಕೈಗೆ ಬರುವ ಸ್ಥಿತಿಯಲ್ಲಿದ್ದ ಬಾಗಿಲಿಗೆ “ಖಿoiಟeಣ” ಅನ್ನುವ ಫಲಕ. ಆಗಾಗ ಧಡ್-ಧಡ್ ಅಂತಾ ಬಂದು, ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತ ಹೆಂಗಸನ್ನು ಕಂಡ ತಕ್ಷಣ ಮೆಲ್ಲಗೆ ಟಾಯ್ಲೆಟ್ಟಿನೊಳಗೆ ಜಾರುವ ಗಂಡಸರು. +ಅದರ ಅಟ್ಟ ಯಾವ್ಯಾವುದೋ ವಸ್ತುಗಳ ಮನೆಯಾಗಿ ಮಾರ್ಪಾಡಾಗಿತ್ತು. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣಗಳ ಚಿತ್ರವಿದ್ದ ರಟ್ಟಿನ ಡಬ್ಬಗಳು ಯರ್ರಾಬಿರ್ರಿಯಾಗಿ ಬಿದ್ದಿದ್ದವು. ಅವುಗಳ ಧೂಳಿನ ನಾತ ಅಲ್ಲೆಲ್ಲಾ ಹರಡಿತ್ತು. ನಾನು ಕೂತ ಕುರ್ಚಿಯನ್ನೂ ಸೇರಿಸಿ ಇದ್ದ ನಾಲ್ಕು ಪ್ಲಾಸ್ಟಿಕ್ ಕುರ್ಚಿ, ಒಂದು ಮ್ಯಾಚಿಂಗ್ ಟೇಬಲ್ಲಿನ ಮೇಲೆ ಧಾರಾಳವಾಗಿ ಹರಡಿದ್ದ ಧೂಳು. +ಒಮ್ಮೊಮ್ಮೆ ಶಬ್ದದ ಗತಿಯನ್ನು ಮುರಿಯುವ ಪ್ರಯತ್ನವೆಂಬಂತೆ ತೇಲುವ ಮೌನ. ಅದಕ್ಕೆ ಪೈಪೋಟಿಯಾಗಿ ಮೊಬೈಲ್ ಫೋನುಗಳ ಚಿತ್ರ-ವಿಚಿತ್ರ ರಿಂಗಣ. “ಆಫ್ ಮಾಡ್ರೀ ಅವನ್ನ..” ಅಂತ ಯಾರದೋ ಅಸಮಾಧಾನದ ಧ್ವನಿ. ಮತ್ತೆ “ರಂಗಣ್ಣಾ, ಪುಟ್ಟಣ್ಣಾ…” ಕನವರಿಕೆ. +* +* +* +ಬಾದಾಮಿ ಬಣ್ಣದ ಜುಬ್ಬಾಧಾರಿಯಾಗಿ ಗಿರೀಶ್ ಆಗಮನ. “ಹಲೊ”ಗಳ ವಿನಿಮಯ ಮುಗಿದ ಮೇಲೆ ಸಂದರ್ಶನಕ್ಕೆ ಕೂತರು. ಮೊದಮೊದಲು ಸ್ವಲ್ಪ ಬಿಗಿಯಾಗೇ ಕೂತ ಗಿರೀಶರನ್ನು ರಿಲ್ಯಾಕ್ಸ್ ಆಗುವಂತೆ ಮಾಡಿದ್ದು ನನ್ನ ಮೊದಲ ತಪ್ಪು ಪ್ರಶ್ನೆ. “ನಿಮಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಇದು ಏಳನೇ ಬಾರಿ ಅಲ್ಲವೇ?” +ಹೌದೋ ಅಲ್ಲವೋ ಅನ್ನುವಂತೆ ನಕ್ಕ ಗಿರೀಶರು “ಇಲ್ಲ, ಇದು ಎಂಟನೇ ಬಾರಿ” ಎಂದು ತಿದ್ದಿದರು. +(ನಾಲ್ಕು ಸ್ವರ್ಣ, ನಾಲ್ಕು ರಜತ ಕಮಲ) +ಮುಂದೆ ನಡೆದದ್ದಿಷ್ಟು: +ಪ್ರ: ಗಿರೀಶರಿಗೆ ಸಿನಿಮಾ ಎಷ್ಟು ಅನಿವಾರ್ಯ ಮತ್ತು ಸಿನಿಮಾಕ್ಕೆ ಗಿರೀಶರು ಎಷ್ಟು ಅನಿವಾರ್ಯ? +ಉ: ಗಿರೀಶ್‌ಗೆ ಸಿನಿಮಾ ಜಾಸ್ತಿ ಅನಿವಾರ್ಯ. ಯಾಕೆ ಅಂದರೆ, ನನಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ಆದರೆ, ಸಿನಿಮಾಕ್ಕೆ ಬೇಕಾದಷ್ಟು ವ್ಯಕ್ತಿಗಳ “ಚಾಯ್ಸ್” ಇದೆ. ಗಿರೀಶ್ ಅದರಲ್ಲೊಬ್ಬ ಮಾತ್ರ. ಆದರೆ ಗಿರೀಶ್‌ಗೆ ಸಿನಿಮಾ ಬಿಟ್ಟರೆ ಬೇರೆ ದಿಕ್ಕು ಇಲ್ಲ. +ಪ್ರ: ಕನ್ನಡಕ್ಕೆ ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿ ಕೊಟ್ಟಿದ್ದೀರ ಅನ್ನುವುದನ್ನು ಗಮನದಲ್ಲಿಟ್ಟು ಯೋಚಿಸಿದರೆ? +ಉ: ಹಾಗೆ ನೋಡಿದರೆ, ಪ್ರಾಯಶ:, ಕನ್ನಡ ಸಿನಿಮಾಕ್ಕೆ ಗಿರೀಶ್ ಬೇಕು ಅನ್ನಬಹುದು. ಅನಿವಾರ್ಯ ಅಂತ ಹೇಳಲಿಕ್ಕೆ ಆಗುವುದಿಲ್ಲ. ಒಬ್ಬ ಗಿರೀಶ್ ಇಲ್ಲದಿದ್ದರೆ ಅಂಥಾ ನಷ್ಟವೇನೂ ಆಗಲಾರದು. ಇನ್ಯಾರೋ ಹುಟ್ಟಿಕೊಳ್ಳುತ್ತಾರೆ. ಕಲೆಗೆ ಕಲಾವಿದರು “ಮಿತಿ” ಆಗಲಾರರು. ಇದು ಎಲ್ಲಾ ಕಲೆಗೂ ಅನ್ವಯಿಸುವಂಥಾ ಮಾತು. +ಪ್ರ: ಸಿನಿಮಾ ಒಂದು ಮಾಧ್ಯಮವಾಗಿ ಬೆಳೆದ ಹಾಗೆ ಅದರ “ವಿಮರ್ಶೆ” ಬೆಳೆಯಲಿಲ್ಲ ಅನ್ನುವ ಒಂದು ಅಭಿಪ್ರಾಯವಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ? +ಉ: ಹೌದು. ಸಿನಿಮಾ ಒಂದು ಕಲೆಯಾಗಿ ಬೆಳೆದಂತೆ, ಅದರ ವಿಮರ್ಶೆ ಒಂದು ಕಲೆಯಾಗಿ ಬೆಳೆಯಲಿಲ್ಲ. ಒಂದು “ಛಿiಟಿemಚಿಣiಛಿ ಟiಟಿgo” ವಿಕಸನಗೊಳ್ಳಲಿಲ್ಲ. ಹಲವಾರು ವರ್ಷಗಳಲ್ಲಿ, ವಿಮರ್ಶೆಯ ಪ್ರಪಂಚದಲ್ಲಿ ಅಂಥಾ ಬದಲಾವಣೆಯೇನೂ ಕಂಡಿಲ್ಲ. ಸಿನಿಮಾ ಗುಣಗ್ರಹಣ ಕ್ರಮ ಇದೆಯಲ್ಲ, ಅದನ್ನು ಬರಹದಲ್ಲಿ ಸಿದ್ಧಿಸಿಕೊಂಡವರು ತುಂಬಾ ಕಮ್ಮಿ. ಇಲ್ಲಿಯವರೆಗೂ ಸಿನಿಮಾ, ವಿಮರ್ಶಕರ ದೃಷ್ಟಿಯಲ್ಲಿ ಕಥೆಯ ವಿಸ್ತರಣೆಯಾಗಿ ಬೆಳೆದಿದೆ. ಒಂದು ಸಿನಿಮಾದ ಮೂಲ ಕಥೆಯನ್ನ “sಣಚಿಟಿಜಚಿಡಿಜ” ಆಗಿ ಇಟ್ಟುಕೊಂಡು ಬರೆದಿರುವಂಥ ವಿಮರ್ಶೆಯನ್ನೇ ಜಾಸ್ತಿ ಕಾಣಬಹುದು. ಇದು ತಪ್ಪು ಅನ್ನುವ ಅಭಿಪ್ರಾಯವಿದೆ. ಯಾಕೆಂದರೆ, ಸಿನಿಮಾ ಚಿತ್ರಗಳ ಅಥವ imಚಿges ಮೇಲೆ ನಿರ್ಮಾಣವಾಗಿ ಅವುಗಳ ಮೇಲೇ ನಿಲ್ಲುವ ಒಂದು ಕಲೆ ಅಥವ ಮಾಧ್ಯಮ. +ಸಿನಿಮಾದಲ್ಲಿ ಕಾಣುವ “ಠಿoಟiಣiಛಿs oಜಿ imಚಿges” ಬಗ್ಗೆ ಆಳವಾಗಿ ಆಲೋಚಿಸತೊಡಗಿದರೆ ಆ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಅದನ್ನು ಬಿಟ್ಟು ಅದರ ಕಥೆ ಅಥವ “ಫ್ರೇಂ” ಗಳನ್ನು ಮಾತ್ರ ನೋಡಿ ಬರೆದದ್ದು ವಿಮರ್ಶೆ ಆಗುವುದಿಲ್ಲ. ಅದು ಆ ಸಿನಿಮಾದ ವಿಮರ್ಶೆಯೂ ಆಗಿರಬಹುದು ಮತ್ತು ಮೂಲ ಕಥೆಯ ವಿಮರ್ಶೆಯೂ ಆಗಿರಬಹುದು. +ಇದು ಬರೀ ಕನ್ನಡ ಸಿನಿಮಾಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಹಿಂದಿ ಸಿನಿಮಾಕ್ಕೂ ಅಷ್ಟೆ, ಒಟ್ಟಾರೆ ಸಿನಿಮಾ ಮಾಧ್ಯಮಕ್ಕೇ ಅನ್ವಯಿಸುವಂಥಾ ಮಾತು. +ಹಿಂದಿ ಅಥವಾ ರಾಷ್ಟ್ರೀಯ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಓದಿದರೆ ಸ್ವಲ್ಪ ವ್ಯತ್ಯಾಸ ಕಾಣಬಹುದು. ಅಲ್ಲಿನ ವಿಮರ್ಶಕರು ಬೇರೆ ದೇಶಗಳ ಸಿನಿಮಾಕ್ಕೆ ನಮ್ಮವರಿಗಿಂತ ಹೆಚ್ಚು ಹತ್ತಿರವಾದವರು. ದೆಹಲಿಯಲ್ಲಿ ಇರುವ ವಿಮರ್ಶಕರು ಅಂತರ ರಾಷ್ಟ್ರೀಯ ಸಿನಿಮಾಕ್ಕೆ ನಮ್ಮವರಿಗಿಂತ ಹತ್ತಿರವಾದವರು. ಆ ಕಾರಣದಿಂದ ಅವರ ವಿಮರ್ಶೆಯಲ್ಲಿ ಕೊಂಚ ವ್ಯತ್ಯಾಸ ಕಾಣಬಹುದೇನೋ…ಆದರೆ, ಅದರ ಒಟ್ಟು ಪರಿಣಾಮ “ವಿಮರ್ಶಾ ಪ್ರಪಂಚ” ದ ಮೇಲೆ ಕಮ್ಮಿ. +ಅದಕ್ಕೆ ಹಲವಾರು ಕಾರಣಗಳು ಇರಬಹುದು. ನಮ್ಮ ವಿಮರ್ಶಕರಿಗೆ ಬೆಂಗಾಲಿ, ಚೈನೀಸ್, ಜರ್ಮನ್, ಇಟಾಲಿಯನ್, ಫ್ರೆಂಚ್, ಮರಾಠಿ ಇತ್ಯಾದಿ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸುವ ಅವಕಾಶಗಳು ಕಮ್ಮಿ. ಮತ್ತೆ, ಅದರ ಬಗ್ಗೆ ಏನಾದರೂ ಮಾಡಬೇಕು, ಹೇಗಾದರೂ ಮಾಡಿ ಈ ಸಿನಿಮಾಗಳನ್ನ ವೀಕ್ಷಿಸಬೇಕು ಅನ್ನುವ ತುಡಿತವೂ ಇದ್ದಂತಿಲ್ಲ. ಹಾಗಾಗಿ, ನಮ್ಮಲ್ಲಿ ವಿಮರ್ಶೆ ನಿಂತ ನೀರಾಗಿ ಬಿಟ್ಟಿದೆ. +[“Poಟiಣiಛಿs oಜಿ imಚಿges” ಅನ್ನು ಸ್ವಲ್ಪ ವಿವರಿಸಿದ ಗಿರೀಶರು ಹೇಳುವಂತೆ ನಾವು ತೆರೆಯ ಮೇಲೆ ನೋಡುವ ಯಾವ ಇಮೇಜೂ “ನ್ಯೂಟ್ರಲ್” ಅಲ್ಲ. “ಉದಾರಹಣೆಗೆ ಓರ್ವ houseತಿiಜಿe ಅನ್ನು ಕಲ್ಪಿಸಿಕೊಳ್ಳಿ ಎಂದು ಒಬ್ಬ ಸಾಮಾನ್ಯ ಮನುಷ್ಯನಿಗೆ ಹೇಳಿದರೆ, ಅವನ ಮನಸ್ಸಿನಲ್ಲಿ ಯಾವುದೋ ಜಾಹೀರಾತು ಇಲ್ಲಾ ಧಾರಾವಾಹಿಯಲ್ಲಿ ನೋಡಿದ ಗರಿ-ಗರಿಯಾದ ಸೀರೆಯುಟ್ಟ, ನೀಟಾಗಿ ತಲೆ ಬಾಚಿಕೊಂಡು, ಕುಂಕುಮ ಇಟ್ಟುಕೊಂಡು ನಗುನಗುತ್ತಾ ಇರುವ ಹೆಂಗಸು ನೆನಪಿಗೆ ಬರುತ್ತಾಳೆ. ಅಸ್ತವ್ಯಸ್ತವಾದ ಸೀರೆ, ಕೂದಲಿಗೆ ಎಣ್ಣೆ ಹಚ್ಚಿಕೊಂಡವಳಲ್ಲ. ಯಾಕೆಂದರೆ, ದಶಕಗಳ ಕಾಲ, ಅಂಥಾ ಒಂದು ಇಮೇಜನ್ನು ಟೀವಿ ಮತ್ತು ಸಿನಿಮಾ ಸೃಷ್ಟಿ ಮಾಡಿವೆ.] +ಪ್ರ: ಸಾಹಿತಿಗಳು ಇದನ್ನು ಬದಲಾಯಿಸಲಿಕ್ಕೆ ಸಾಧ್ಯ ಇತ್ತೇ? ಕಲಾತ್ಮಕ ಸಿನೆಮಾಕ್ಕೆ ಮೂಲ ವಸ್ತುವನ್ನು ಕೊಟ್ಟವರು ಅದರ ವಿಮರ್ಶೆಯ ಬೆಳವಣಿಗೆಗೂ ಸಹಾಯಕರಾಗಬಹುದಿತ್ತಲ್ಲವೇ? +ಉ: ಇಲ್ಲ. ಇದು ಸಾಹಿತಿಗಳ ಕೆಲಸ ಖಂಡಿತಾ ಅಲ್ಲ. ಇದು ಸಂಪೂರ್ಣವಾಗಿ ವಿಮರ್ಶಕರ ಕೆಲಸ. ಸಾಹಿತಿಗಳು ನಮ್ಮ ಸಿನಿಮಾಕ್ಕೆ ಮೂಲ ವಸ್ತುವನ್ನು ಒದಗಿಸಿ ಕೊಟ್ಟ ಮೇಲೆ ಅದು ತೆರೆಯ ಮೇಲೆ ಹೇಗೆ ಮೂಡಿ ಬಂದಿದೆ ಅನ್ನುವುದನ್ನು ನೋಡಿ ಸಂತೃಪ್ತಿ ಅಥವಾ ಅಸಂತೃಪ್ತಿಯನ್ನು ವ್ಯಕ್ತ ಪಡಿಸುವುದರ ಮೂಲಕ ತಮ್ಮ ಜವಾಬ್ದಾರಿ ಮುಗಿಸುತ್ತಾರೆ. ಅಲ್ಲಿಂದ ಮುಂದಿನದು ವಿಮರ್ಶಕರ ಕೆಲಸ. ಸಿನಿಮಾವನ್ನು ಒಂದು ಭಾಷೆಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಸಾಹಿತಿಗಳಿಗಿಂತ ವಿಮರ್ಶಕರಿಗೆ ಜಾಸ್ತಿ ಇದೆ. ಗಮನಿಸಿ ನೋದಿ, ಇಂದಿಗೂ ಒಂದು ಸಿನಿಮಾದ ವಿಮರ್ಶೆ ವಿಮರ್ಶಕನ “ಣಚಿsಣe” ಮೇಲೆ ಬಹುಮಟ್ಟಿಗೆ ನಿಂತಿದೆಯೇ ಹೊರತು ಅವರ “exಠಿosuಡಿe ಣo ಣhe ಚಿಡಿಣ” ಮೇಲೆ ನಿಲ್ಲುವಿದು ಬಹಳ ಅಪರೂಪ. ಇಲ್ಲವೇ ಇಲ್ಲ ಅಂತ ಹೇಳಿದರೆ ತಪ್ಪೇನಿಲ್ಲ. +ಪ್ರ: ಈಗ ಇರುವ ವಿಮರ್ಶಕರಲ್ಲಿ ಯಾರ ಕೃತಿಯನ್ನು ನೀವು ಓದುತ್ತೀರಿ? +ಉ: ಇದು ಸ್ವಲ್ಪ ಸೂಕ್ಷ್ಮವಾದ ಪ್ರಶ್ನೆ. ನಾನು ಇದಕ್ಕೆ ಉತ್ತರಿಸಲಾರೆ. ಆದರೆ, ನಾನು ವಿಮರ್ಶೆಯನ್ನು ಓದುವ ರೀತಿಯ ಬಗ್ಗೆ ಸ್ವಲ್ಪ ಹೇಳಬಲ್ಲೆ. ಒಬ್ಬ ವಿಮರ್ಶಕನ ಕೃತಿಯನ್ನು ಓದುವಾಗ ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಖಂಡಿತ ಮಾಡಿರುತ್ತೇನೆ. ಅವರು ಮೆಚ್ಚಿದ ಸಿನಿಮಾ ಯಾವುದು, ಯಾಕೆ, ಅದರ ಬಗ್ಗೆ ಏನು ಮತ್ತು ಹೇಗೆ ಬರೆದಿದ್ದರು, ಬೇರೆ ಸಿನಿಮಾದ (ಅದು ನನ್ನ ಸಿನಿಮಾನೇ ಆಗಿರಬೇಕು ಅಂತೇನಿಲ್ಲ) ಬಗ್ಗೆ ಏನು ಬರೆದಿದ್ದರು, ಇತ್ಯಾದಿ. ಇಷ್ಟು ತಿಳಿದ ಮೇಲೆ ಅವರ ವಿಮರ್ಶೆಯಲ್ಲಿ ಪದಗಳ ಬಳಕೆ ಹೇಗೆ, ಒಂದು ಪದ ಪ್ರಯೋಗ ಮಾಡುವುದರ ಮೂಲಕ ಏನನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನುವ ತೀರ್ಮಾನಕ್ಕೆ ಬರ್ತೀನಿ. ಒಂದು ವಿಮರ್ಶೆಯಲ್ಲಿ “ಸಿನಿಮಾದ ಸಂಕಲನ ಬಹಳ ಬಿಗಿಯಾಗಿತ್ತು” ಎಂದು ಹೇಳಿದರೆ, ಸಂಕಲನಕಾರ ತಕ್ಷಣ ಹೆಮ್ಮೆ ಪಡುವ ಮುನ್ನ ಆಲೋಚಿಸಬೇಕಾಗುತ್ತದೆ. ಬಿಗಿ ಸಂಕಲನ ಆ ಸಿನಿಮಾಕ್ಕೆ ಅವಶ್ಯಕವಾಗಿಲ್ಲದಿದ್ದರೆ, ಆ ಒಂದು ವಾಕ್ಯ “ಟಿegಚಿಣive ಆಗ ಬಹುದು. ಇನ್ನೊಂದು ಕಡೆ “ಒಳಾಂಗಣ” ಅಥವ “ಹೊರಾಂಗಣ” ಅತೀ ಸುಂದರವಾಗಿತ್ತು ಎಂದಾಗ ಅದರ uಟಿಜeಡಿಟಥಿiಟಿg ಣoಟಿe ಬೇರೆಯೇ ಆಗಿರಬಹುದು. ಯಾಕೆಂದರೆ, ಒಳಾಂಗಣ ಅಥವ ಹೊರಾಂಗಣ ಆ ಒಂದು ಸಿನಿಮಾಕ್ಕೆ ಅರ್ಥ ಬರುವಂಥ ರೀತಿಯಲ್ಲಿ ಬಳಕೆಯಾಗದಿದ್ದಲ್ಲಿ, ವಿಮರ್ಶಕ “ಅವುಗಳನ್ನು ಬಿಟ್ಟರೆ ಆ ಸಿನಿಮಾದಲ್ಲಿ ಇನ್ನೇನೂ ಇರಲಿಲ್ಲ” ಅನ್ನುವ ಅರ್ಥದಲ್ಲಿ ಹೇಳಿರಬಹುದು! ಅಥವಾ ವಿಮರ್ಶಕನ ಗಮನ ಸೆಳೆದ ಆ ಅಂಶಗಳಷ್ಟೇ (ಹೊರಾಂಗಣ ಅಥವಾ ಒಳಾಂಗಣ) ಒಂದು ಉತ್ತಮ ಸಿನಿಮಾ ಆಗಬಲ್ಲವು ಅನ್ನುವ ನಿರ್ಣಯಕ್ಕೆ ಓದುಗ ಬಂದುಬಿಡಬಾರದು. ನಿರ್ದೇಶನದಿಂದ ಹಿಡಿದು, ಮುಂದೆ ಬರುವ ಎಲ್ಲ “ಛಿomಠಿoಟಿeಟಿಣs” ಆ ಸಿನಿಮಾಕ್ಕೆ ನೆಲೆ ಕಟ್ಟಿಕೊಡಬೇಕು…ಅಲ್ಲಿಂದ ಮುಂದಕ್ಕೂ ಸಿನಿಮಾ ಬೆಳೆಯಬೇಕು. ಅವ್ಯಾವೂ “ಜಿuಟಟ sಣoಠಿ” ಆಗಬಾರದು! +ಪ್ರ: ನಿಮ್ಮ ಸಿನಿಮಾಗಳಲ್ಲಿ ಅತಿ sombಡಿe ಬಣ್ಣಗಳನ್ನು ಉಪಯೋಗಿಸುತ್ತೀರ, ಮತ್ತು ಠಿಡಿimಚಿಡಿಥಿ ಬಣ್ಣಗಳ ಬಳಕೆ ತುಂಬಾ ವಿರಳ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. +ಉ: ಇಲ್ಲ. ನನ್ನ ಸಿನಿಮಾದಲ್ಲಿ ಬಣ್ಣಗಳ ಬಳಕೆಯ ಮೇಲೆ ಯಾವ ನಿರ್ಬಂಧವೂ ಇಲ್ಲ. ಯಾವ ಬಣ್ಣವೇ ಆಗಲಿ, ಅದು ನನ್ನ ಕಥೆ, ಪಾತ್ರ ಮತ್ತು ಸಂದರ್ಭಕ್ಕೆ ಹೊಂದಿಕೊಳ್ಳುವಂತಿದ್ದರೆ ಅದರ ಬಳಕೆಯನ್ನು ಖಂಡಿತವಾಗಿ ಮಾಡಿದ್ದೇನೆ. ಈಗ “ದ್ವೀಪ”ದ ಉದಾಹರಣೆ ತೆಗೆದುಕೊಂಡರೆ, ಅದು ಮಲೆನಾಡಿನ ಒಂದು ಹಳ್ಳಿಯಲ್ಲಿ ಮೂಡಿರುವ ಕಥೆ. ಆ ಹಳ್ಳಿಯಲ್ಲಿ ನನ್ನ ಪಾತ್ರಗಳಿಗೆ ಹತ್ತಿರವಾಗಿರುವಂಥ ವ್ಯಕ್ತಿಗಳು ಏನೇನನ್ನು ತೊಡಬಹುದು ಅನ್ನುವ ಅಂಶವನ್ನು ಗಮನಿಸಿ ನನ್ನ ಪಾತ್ರಗಳ ವಸ್ತ್ರಗಳನ್ನು ನಿರ್ಧರಿಸಲಾಗಿದೆ. ಆ ಪಾತ್ರಗಳು ತಿಳಿ ಅಥವ ಗಾಢ ಬಣ್ಣಗಳನ್ನು ಧರಿಸಿದ್ದರೆ, ಅವುಗಳ ಬಳಕೆ ಆ ಪರಿಸರದಲ್ಲಿ ಆಗಿದ್ದರೆ, ನನ್ನ ಸಿನಿಮಾ ಕೂಡ ಅದನ್ನೇ ಪ್ರತಿಬಿಂಬಿಸಿರುತ್ತದೇ ಹೊರತು, ಅದರಲ್ಲಿ ನಾನು ಛಿoಟಿಣಡಿoಟ ಮಾಡುವಂಥ ಸಾಧ್ಯತೆ ಕಮ್ಮಿ. +ಇನ್ನೊಂದು ಸಂದರ್ಭದಲ್ಲಿ ನೋಡಿದರೆ, ನನ್ನ ಸಿನಿಮಾದಲ್ಲಿನ “ಎ” ಮತ್ತು “ಬಿ” ವ್ಯಕ್ತಿಗಳು ಏನು ಹಾಕಿಕೊಳ್ಳಬೇಕು ಅನ್ನುವುದನ್ನು ನಿರ್ಧರಿಸುವವ ನಾನು, ಅಂದರೆ ನಿರ್ದೇಶಕ. ಸಿನಿಮಾಕ್ಕೆ ಹೊರತಾಗಿ ಅವರಿಬ್ಬರೂ ಬೇರೆ ಉಡುಗೆಗಳನ್ನೇ ತೊಡಬಹುದು…ಅಂದರೆ, ನಿಜ ಜೀವನದಲ್ಲಿ, ಅಂಥ ಇಬ್ಬರು ವ್ಯಕ್ತಿಗಳು ತಾವೇನನ್ನ ತೊಡಬೇಕು ಅನ್ನುವುದನ್ನು ತಾವೇ ನಿರ್ಧರಿಸುತ್ತಾರೆ…ಆದರೆ, ಸಿನಿಮಾದಲ್ಲಿ ಹಾಗಲ್ಲ, ಅವರಿಬ್ಬರ ಉಡುಗೆಗಳನ್ನು ಇನ್ನೊಬ್ಬ ನಿರ್ಧರಿಸುತ್ತಾನೆ, ಸಂದರ್ಭಕ್ಕೆ ತಕ್ಕಂತೆ. +ಪ್ರ: ಎರಡು-ಮೂರು ದಶಕಗಳ ಮುನ್ನ, ಕನ್ನಡ ಸಿನಿಮಾದಲ್ಲಿ ಕಲಾತ್ಮಕ ಚಿತ್ರಗಳ ಒಂದು movemeಟಿಣ ( ಆಂದೋಲನ) ಶುರುವಾಯಿತು. ಆದರೆ, ಅದು ಒಂದು ದಿಕ್ಕನ್ನು ಹಿಡಿಯಲಿಲ್ಲ. ಯಾಕೆ? +ಉ: ಜಗತ್ತಿನ ಹಾಗೂ ಸಿನಿಮಾ ಪ್ರಪಂಚದ ಯಾವುದೇ “movemeಟಿಣ” ಅನ್ನು ನೋಡಿದಾಗ, ಒಂದು ಅಂಶವನ್ನು ಗಮನಿಸಬಹುದು. ಬಹಳಷ್ಟು ಚಳುವಳಿ ಅಥವ ಆಂದೋಲನಗಳಿಗೆ ಒಂದು ನಿರ್ದಿಷ್ಟ “ಆದಿ” ಇರುತ್ತದೆ. +ಯೂರೋಪಿನಲ್ಲಿ ಜರ್ಮನ್ ಚಿನೆಮ, ಇಟಾಲಿಯನ್ ಸಿನಿಮಾ ಅಥವ “ಫ್ರೆಂಚ್ ನ್ಯೂ ವೇವ್”, ಇವೆಲ್ಲಕ್ಕೂ ಒಂದು “ಪ್ರಾರಂಭ” ಇತ್ತು…ಒಂದು “ಛಿommoಟಿ mಚಿಟಿiಜಿesಣo” ಇತ್ತು. ಇಲ್ಲಿ ಅಂಥಾದ್ದೇನೂ ಆಗಿರಲಿಲ್ಲ. ಆದ್ದರಿಂದ ಒಂದು ಆಂದೋಲನ ಶುರುವಾಗಿತ್ತು ಅನ್ನುವುದೇ “ತಪ್ಪು” ಕಲ್ಪನೆ ಆನುವುದು ನನ್ನ ಅಭಿಪ್ರಾಯ. +ನಮ್ಮಲ್ಲಿ ಏನಾಯಿತು ಅಂದರೆ, ಯಾರೋ ಒಬ್ಬರು ಸಿನಿಮಾ ಮಾಡಲಿಕ್ಕೆ ಶುರು ಮಾಡಿದರು, ಉಳಿದವರು ಅದರಿಂದ ಸ್ಫೂರ್ತಿ ಪಡೆದು ಅನುಸರಿಸಿ, ಅನುಕರಿಸಿದರು. ಇಲ್ಲಿ, “ಛಿommoಟಿ mಚಿಟಿiಜಿesಣo” ಇರಲಿಲ್ಲ. ಸಿನಿಮಾ ಯಾಕೆ, ಎಲ್ಲಿ, ಏನನ್ನ ಸಾಧಿಸಲಿಕ್ಕೆ? ಅನ್ನುವ ಪ್ರಶ್ನೆಗಳು ಉದ್ಭವಿಸಿ ಕಾಡಲಿಲ್ಲ. ಅವರೆಲ್ಲ, ತಮ್ಮ-ತಮ್ಮ ಮನಸ್ಸಿಗೆ ಸರಿ ಅನ್ನಿಸಿದ್ದನ್ನ ಮಾಡಿ, ಬೇರೆ-ಬೇರೆ ದಾರಿ ಹಿಡಿದರು. +ಹಾಗೆ ಆದಾಗ, ನಾನಾ ಥರದ ಸಿನಿಮಾಗಳು “ಕಲಾತ್ಮಕ” ಅನ್ನಿಸಿಕೊಂಡವು. ಯಾವುದು ಚಿಟಿ ಣಡಿಚಿ ಸಿನಿಮಾ ಆಗಿರಲಿಲ್ಲವೋ, ಅದು ಕಲಾತ್ಮಕ ಅನ್ನಿಸಿಕೊಂಡಿತೇ ಹೊರತು, ಅದು “ಕಲಾತ್ಮಕ” ಸಿನಿಮಾ ದ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡಿತ್ತು ಅಂತ ಅಲ್ಲ! +ಆ ರೀತಿ ಹರಡಿಕೊಂಡ ಒಂದು ಚಳುವಳಿಗೆ ಆಯಸ್ಸು ಕಮ್ಮಿ ಆದ್ದದ್ದು ಸಹಜವೇ. ಇಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲ ಒಳ್ಳೆ ಅವಕಾಶಗಳು ಸಿಕ್ಕ ತಕ್ಷಣ ಅವರು ಹೊರಟು ಹೋದರು. ಇನ್ನು ಕೆಲವರು, ಬಿ ವಿ ಕಾರಂತರಂಥವರು, ಇಲ್ಲಿ ಸ್ವಲ್ಪ ಡಿesisಣಚಿಟಿಛಿe ಕಂಡ ಕೂಡಲೆ, ನಾಟಕದ ಕಡೆ ವಾಪಾಸು ಹೊರಳಿದರು. ಅವರಿಗೆ ನಾಟಕವೇ ತಮ್ಮ ಮನೆ ಆನಿಸಿತೇ ಹೊರತು, ಸಿನಿಮಾದ ಬಗ್ಗೆ ಅಷ್ಟು ವ್ಯಾಮೋಹ ಬೆಳೆ ಯಲಿಲ್ಲ…೧೯೭೫ರಲ್ಲಿ “ಚೋಮನ ದುಡಿ” ಮಾಡಿದರು…ಆಗೊಮ್ಮೆ, ಈಗೊಮ್ಮೆ ಅದ್ಭುತವಾದ ಸಂಗೀತದ ಕೊಡಲು ಬಂದು ಹೋದರು..ಆದರೆ, ಇಲ್ಲಿ ನೆಲೆ ನಿಲ್ಲಲಿಲ್ಲ. +ನನಗೆ, ಇದೇ ಮನೆ. ನಾನು ಸಿನಿಮಾಕ್ಕೇ ಸೇರಿದವ. ಈ ಮಾಧ್ಯಮದ ಭಾಷೆ ನನಗೆ ಇಷ್ಟ…ಕಾರಂತರಂಥವರಿಗೆ ಹಾಗಲ್ಲ. ನಾಟಕವೇ ಅವರ ಮನೆ. +ಪ್ರ: ನಿಮ್ಮ ಸಿನಿಮಾದ ಮೂಲಕ ಛಿommuಟಿiಛಿಚಿಣioಟಿ ಸಾಧ್ಯವಾಗಿದೆಯೆ? ಏನನ್ನ ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದಿರೋ ಅದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೀರಾ? +ಉ: ಬಹು ಮಟ್ಟಿಗೆ ಹೌದು. ಛಿommuಟಿiಛಿಚಿಣioಟಿ ವಿಷಯದಲ್ಲಿ ನಾನು ಸುಮಾರು ಯಶಸ್ವಿಯಾಗಿದ್ದೇನೆ, ನನಗನ್ನಿಸಿದ್ದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇನೆ ಅನ್ನಿಸಿದೆ. ಆದರೆ, ಒಬ್ಬ ಕಲೆಗಾರನಿಗೆ ತನ್ನ ಸೃಷ್ಟಿಯ ಬಗೆಗೆ ಎಂದೂ ಪೂರ್ತಿಯಾಗಿ ಖುಶಿ ಇರುವುದಿಲ್ಲ. ಒಂದರಿಂದ ಇನ್ನೊಂದು ಸೃಷ್ಟಿಗೆ ಅದನ್ನು ಉತ್ತಮ ಪಡಿಸುವ, ಹಾರುವ ಆತುರ ಒಬ್ಬ ಕಲೆಗಾರನಿಗೆ ಇದ್ದೇ ಇರುತ್ತದೆ. +ಪ್ರ: ಯಾವಾಗಲಾದರೂ ನಿಮ್ಮ ಸಿನಿಮಾದ “ಪ್ರೇಕ್ಷಕ”ನೊಡನೆ ಮಾತಾಡಿದ್ದೀರ? ಅಂದರೆ, ನಿಮ್ಮ ಸಿನಿಮಾ ಎಷ್ಟರ ಮಟ್ಟಿಗೆ ನಿಮ್ಮ ಭಾವನೆ, ಅನಿಸಿಕೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಿದೆ ಅನ್ನುವುದನ್ನು ತಿಳಿಯುವ ಮಾನದಂಡವೇನಾದರೂ ಇದೆಯೆ? +ಉ: ಮಾನದಂಡ ಪ್ರೇಕ್ಷಕನ ಹೊರತು ಇನ್ನೇನೂ ಇಲ್ಲ. ಪ್ರೇಕ್ಷಕರು ಬಂದು ಹೇಳದ ಹೊರತು ನಮಗೆ ಹೇಗೆ ತಿಳಿಯಬೇಕು? ನೀವು ಸಿನಿಮಾ ನೋಡಿ ಬಂದು ಹೇಳಿದರೆ ಮಾತ್ರ ನಮಗೆ ಅರಿವಾಗುವುದು. +ಕೆಲವೊಮ್ಮೆ ಇದರಲ್ಲೂ ಎಡವಿ ಬೀಳುವ ಸಾಧ್ಯತೆ ಇದೆ. ಕೆಲವರು ಸುಮ್ಮನೆ ಯಾವುದೋ ಸಿನಿಮಾವನ್ನು ನನ್ನದು ಎಂದು ಭಾವಿಸಿ ಹೊಗಳುತ್ತಾರೆ. “ನಿಮಗೆಲ್ಲೋ ಕನ್‌ಫ್ಯೂಶನ್ ಆಗಿರಬೇಕು” ಅನ್ನುತ್ತೇನೆ. ಆಗಲೂ ನಿಲ್ಲಿಸದಿದ್ದರೆ, ಅವರು ಹೇಳುತ್ತಿರುವುದು ಸುಳ್ಳು ಎಂದು ನನಗೆ ಖಾತ್ರಿ! +ಆದರೆ, ಕೆಲವು ಪ್ರೇಕ್ಷಕರು ಸಿನಿಮಾದ ಬಗ್ಗೆ ನಿಜವಾದ ಕಳಕಳಿಯಿಂದ ಮಾತಾಡುತ್ತಾರೆ. ಅಂತಹವರು ಸುಮ್ಮನಿದ್ದು ಬಿಡುತ್ತಾರೆ, ಇಲ್ಲಾಂದರೆ ಕೆಲವು ಶಬ್ದಗಳಲ್ಲಿ ತಮಗನ್ನಿಸಿದ್ದನ್ನ ಹೇಳಿಬಿಡುತ್ತಾರೆ. +ಆದರೆ, ಎರಡನೇ ಗುಂಪಿಗೆ ಸೇರುವ ಜನರ ಸಂಖ್ಯೆ ಕಮ್ಮಿ!! +ಈ ಸಂದರ್ಶನ ಬರೆದು ಮುಗಿಸುವ ಹೊತ್ತಿಗೆ “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಸಂದಿದೆ. ಎಲ್ಲಾ ಪ್ರಶಸ್ತಿಗಳು ತರುವ ಸಂಭ್ರಮವನ್ನು ಈ ಪ್ರಶಸ್ತಿ ತಂದಿಲ್ಲವಂತೆ. ಫೋನ್ ಮಾಡಿದರೆ, “ಡಿಪ್ಲೊಮ್ಯಾಟಿಕ್” ಆಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದ ಗಿರೀಶರು, ಸ್ವಲ್ಪ ಖಾರವಾಗಿಯೇ ಮಾತು ಮುಗಿಸಿದರು. +“ಒಬ್ಬ ಕಲಾವಿದನಿಗೆ ಯಾವ ಪ್ರಶಸ್ತಿಯೇ ಆಗಲಿ ಖುಶಿ ತರುತ್ತದೆ…ತರಲೇಬೇಕು. ಆದರೆ, “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಬಂದಿರುವ ಬಗ್ಗೆ ನನಗೆ ಸಂತೋಶಕ್ಕಿಂತಾ ನೋವು ಜಾಸ್ತಿ ಆಗಿದೆ, ನಮ್ಮ “ರಿಡಿಥಿ” ಆಡಿರುವ ಮಾತಿನಿಂದ. ಅವರ ಪ್ರಕಾರ, ರಾಷ್ಟ್ರ ಪ್ರಶಸ್ತಿ ಬಂದಿರುವ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಕೊಡಲೇಬೇಕಾದಂಥ ಅನಿವಾರ್ಯತೆ ಇತ್ತಂತೆ. ಏನಿದರ ಅರ್ಥ? ನಮ್ಮ ಜ್ಯೂರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು, ಧೈರ್ಯ ಇಲ್ಲವೆಂತಲೇ? ಏನಿವರು ಹೇಳುವ “ಅನಿವಾರ್ಯತೆ” ಎಂಬುದರ ಅರ್ಥ? ಸಿನಿಮಾಕ್ಕೆ ಯೋಗ್ಯತೆ ಇಲ್ಲದಿದ್ದರೂ ಕೊಟ್ಟೆವು ಎಂದೋ?” +“ಇದು ಬರೀ “ದ್ವೀಪ”ದ ವಿಷಯವಲ್ಲ. ಒಟ್ಟಿನಲ್ಲಿ ಇಂಥಾ ಧೋರಣೆ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಹಂಬಲ ಇರುವ ಯಾರಿಗೂ ಪ್ರೋತ್ಸಾಹ ನೀಡುವಂಥದ್ದಲ್ಲ. ಮತ್ತು, ನಮ್ಮ ಜ್ಯೂರಿಯ ಸ್ಥಾನಕ್ಕೆ ಶೋಭೆ ತರುವಂಥದ್ದಂತೂ ಖಂಡಿತಾ ಅಲ್ಲ…” +ಅರೆ! “ಡಿಪ್ಲೋಮ್ಯಾಟಿಕ್” ಆಗಿರುವ ಗಿರೀಶರು ಹೀಗೆಲ್ಲಾ ಹೇಳಬಲ್ಲರೇ ಎಂದು ಯೋಚಿಸುತ್ತಾ, ಸರಸರನೆ ಇದನ್ನೆಲ್ಲ ಬರೆದುಕೊಳ್ಳುತ್ತಿದ್ದವಳಿಗೆ ಕೊನೆಗೂ ಉತ್ತರ ಸಿಕ್ಕಿತು. +“ನಮ್ಮಲ್ಲಿ, “ದ್ವೀಪ” ಸಿನಿಮಾಕ್ಕೂ, ಅದರ ಛಾಯಾಗ್ರಾಹಕ ರಾಮಚಂದ್ರನಿಗೂ ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಎರಡೂ ಬಂದಿದೆ. ನಮ್ಮ ಜ್ಯೂರಿ ಯಾರ ಬಗ್ಗೆ ಹೇಳಿದರು (ಸಿನಿಮಾದ ಬಗ್ಗೆಯೋ ಇಲ್ಲಾ ಛಾಯಗ್ರಾಹಕರ ಬಗ್ಗೆಯೋ) ಎಂಬುದು ಸ್ಪಷ್ಟವಾಗಿಲ್ಲ…” +***** +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […] +ಪಾತ್ರಧಾರಿಗಳು: ಕೊರ್ಮ (ನಿರ್ದೇಶಕ), ಶೀಲಾ (ಚಿತ್ರ ನಟಿಯಾಗುವ ಕನಸು ಹೊತ್ತ ಲಲನೆ), ಕುಂಭಕೋಣಂ (ಚಿತ್ರ ನಿರ್ಮಾಪಕ), ಪೋಸ್ಟ್‌ಮ್ಯಾನ್. (ರಂಗ ಮಧ್ಯದಲ್ಲೊಂದು ದೊಡ್ಡ ಕೆಂಪು ಡಬ್ಬವಿದೆ. ಬಲಭಾಗದಲ್ಲಿ ಶೀಲಾ ಇದ್ದಾಳೆ. ಎಡಭಾಗದಲ್ಲಿ ಕೊರ್ಮ ಇರುವ) ಕೊರ್ಮ: […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_178.txt b/Kannada Sahitya/article_178.txt new file mode 100644 index 0000000000000000000000000000000000000000..0d5e8e7988ab266a90ec57c1eb9c9a7670bfad81 --- /dev/null +++ b/Kannada Sahitya/article_178.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ ಹಾಗೂ ಭವಿಷ್ಯದ ಬಗ್ಗೆ ಚರ್ಚಿಸಲು ಮೀಸಲಾಗಿದ್ದುದು ಒಂದು ವಿಶೇಷ. ಅದಕ್ಕೆ ಪೂರಕವಾಗಿ ಬೆಂಗಳೂರಿನಿಂದ ದೂರವಾಗಿ, ಚೇತೋಹಾರಿಯಾದ ಪ್ರಕೃತಿಯ ಮಡಿಲಲ್ಲಿ ಸೇರಿದ್ದು ಮತ್ತೊಂದು ವಿಶೇಷ. ಈ ವಿಶೇಷಗಳ ಫಲಶ್ರುತಿ ಈ ಸುಧೀರ್ಘ ವರದಿಯ ರೂಪದಲ್ಲಿ ನಿಮ್ಮ ಮುಂದಿದೆ. +ಬೆಂಗಳೂರಿನ ಗೌಜು ಗದ್ದಲದಲ್ಲಿ, ಸದಾ ಕೆಲಸದ ಒತ್ತಡದಲ್ಲಿ ಮುಳುಗಿರುವ ಎಲ್ಲರಿಗೂ ಓದೇಕಾರ್ ಫಾರಂ ಮುದ ನೀಡಿತು ಎಂದರೆ ಸುಳ್ಳಾಗುವುದಿಲ್ಲ. ಶ್ರೀ ಮೂರ್ತಿ ದಂಪತಿಗಳ ಉಪಚಾರದೊಂದಿಗೆ ಪುಷ್ಕಳ ಭೋಜನದ ನಂತರ ಪೂರ್ವನಿರ್ಧಾರಿತವಾದಂತೆ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು. ಮೊದಲಿಗೆ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಅಂಗವಾಗಿ ಸಂವಾದ.ಕಾಂನ ಪ್ರಾರಂಭದ ಬಗ್ಗೆ ಮಾತನಾಡಿದರು. ದೃಶ್ಯ ಮಾಧ್ಯಮದ ಬಗ್ಗೆ ಎಲ್ಲೂ ಮೌಲ್ಯಯುತವಾದ ಚರ್ಚೆ ನಡೆಯದಿರುವ ಬಗ್ಗೆ ಪ್ರಸ್ತಾಪಿಸುತ್ತಾ ಸಂವಾದ.ಕಾಂ ಈ ಕೊರತೆಯನ್ನು ನೀಗಿಸುವ ವೇದಿಕೆಯಾಗಲಿದೆ ಎಂದು ಹೇಳಿದರು. ನಾಟಕ, ಸಿನಿಮಾ ಅಥವಾ ಚಿತ್ರಕಲೆಯನ್ನು ನೋಡುವುದಷ್ಟೇ ಅಲ್ಲದೆ, ಅರ್ಥೈಸಿಕೊಳ್ಳುವ, ಆಸ್ವಾದಿಸುವ ಕಲೆಯನ್ನು, ಆಸಕ್ತಿಯನ್ನು ಹುಟ್ಟುಹಾಕಲು ಸಂವಾದ.ಕಾಂ ರೂವಾರಿಯಾಗಬೇಕು, ಮಾರ್ಗದರ್ಶಿಯಾಗಬೇಕು ಎಂಬ ತಮ್ಮ ಆಶಯವನ್ನೂ, ಅಂತಹ ಒಂದು ಕೆಲಸದ ಪ್ರಸ್ತುತತೆ, ಅಗತ್ಯತೆಯನ್ನೂ ವಿವರಿಸಿದರು. ಇತ್ತೀಚಿಗೆ ನಡೆದ ಮಠ ಚಿತ್ರದ ಸಂವಾದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರಸ್ತಾಪಿಸುತ್ತ ಈಗಾಗಲೇ ಕೆಲವು ನಿರ್ಮಾಪಕರು, ನಿರ್ದೇಶಕರು ಇಂತಹ ಕಾರ್ಯಕ್ರಮದ ಬಗ್ಗೆ ಉತ್ಸಾಹಿತರಾಗಿದ್ದಾರೆಂದು ಸೂಚಿಸಿದರು. +ಕೆ‌ಏಸ್‌ಸಿ ಸಾಲದೆ? ಸಂವಾದ.ಕಾಂ ಬೇಕೆ? ಬೇಕಿದ್ದರೆ ಅದು ಬೇರೆಯಾಗಿರಬೇಕೆ? ಇದರಿಂದ ಕೆ‌ಏಸ್‌ಸಿಯ ಬಗ್ಗೆ ಆಸಕ್ತಿ ಕಡಿಮೆಯಾಗುವುದಿಲ್ಲವೇ? ನಮ್ಮ ಮೂಲ ಆಶಯದಿಂದ ದೂರ ಹೋಗುತ್ತಿದ್ದೇವೆಯೇ? ಕೆ‌ಏಸ್‌ಸಿಯ ಕೆಲಸಗಳೇ ಇನ್ನೂ ಉಳಿದಿರುವಾಗ, ಇನ್ನೊಂದನ್ನು ಹುಟ್ಟುಹಾಕಿ ನಿರ್ವಹಿಸುವುದು ಕಷ್ಟವಾಗುವುದಿಲ್ಲವೆ? ಎಂಬ ಅನೇಕ ಪ್ರಶ್ನೆಗಳು ಸಭೆಯಲ್ಲಿ ಭಾಗವಿಹಿಸಿದ್ದವರಿಂದ ವ್ಯಕ್ತವಾದವು. ಇದಕ್ಕೆ ಉತ್ತರಿಸಿದ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಪ್ರಧಾನ ಆಶಯ ಜನಸಾಮಾನ್ಯರಿಗೆ ಬೇಕಾದ ದೇಸಿ ಸಂಸ್ಕೃತಿಗೆ ಒಗ್ಗುವಂತೆ ತಾಂತ್ರಿಕತೆಯನ್ನು ರೂಪಿಸುವುದೇ ಆಗಿದೆ. ಪ್ರಧಾನ ಸಂಸ್ಕೃತಿ ಮುಖ್ಯವಾಗಿ ಬಿಂಬಿತವಾಗುವುದು ಪಠ್ಯ ಹಾಗೂ ದೃಶ್ಯ ಮಾಧ್ಯಮಗಳಲ್ಲಿ, ಪಠ್ಯಕ್ಕೆ ಕನ್ನಡಸಾಹಿತ್ಯ.ಕಾಂ ಇರುವಂತೆ ದೃಶ್ಯಕ್ಕೆ ಸಂವಾದ.ಕಾಂ ಇರುತ್ತದೆ ಎಂದು ತಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟಪಡಿಸಿದರು. +ನಂತರ ಸಂವಾದ.ಕಾಂಗೆ ತನ್ನದೇ ಆದ ಟ್ರಸ್ಟ್ ಇರುವ ಅಗತ್ಯತೆಯನ್ನು ಸೂಚಿಸಿ, ಸಭೆಯಲ್ಲಿ ನೆರೆದಿದ್ದವರನ್ನು ಸ್ವಪ್ರೇರಣೆಯಿಂದ ಸದಸ್ಯರಾಗಲು ಆಹ್ವಾನಿಸಿದರು. ಅಜಿತ್ ಮುಂದೆ ಬಂದವರಲ್ಲಿ ಮೊದಲಿಗರಾದರು. ನಂತರ ಕಿರಣ್, ಶೇಖರ್, ರವಿ ಅರೇಹಳ್ಳಿ, ರುದ್ರಮೂರ್ತಿ, ರಾಘವ ಕೋಟೆಕರ್, ಲಾವಣ್ಯ, ಸೌಮ್ಯ, ಕಿಶೋರ್, ಶೇಖರ್‌ಪೂರ್ಣ, ರಮೇಶ್ ಜೊತೆಗೂಡಿದರು. ಅಜೀವ ಸದಸ್ಯರಾಗಲು ಅಜಿತ್ ಒಪ್ಪಿಕೊಂಡರು. ಟ್ರಸ್ಟ್‌ನ ಸದಸ್ಯರೆಲ್ಲರೂ ಕನಿಷ್ಠ ರೂ.೧೦೦೧/- ನ್ನು ದೇಣಿಗೆಯಾಗಿ ನೀಡಬೇಕೆಂದು ತೀರ್ಮಾನಿಸಲಾಯಿತು. +ಟ್ರಸ್ಟನ ವಿವಿಧ ಹುದ್ದೆಗಳಿಗೆ ಸದಸ್ಯರ ಹೆಸರುಗಳನ್ನು ಸೂಚಿಸಲು ಆಹ್ವಾನಿಸಲಾಯಿತು. +೧) ಅಧ್ಯಕ್ಷರ ಸ್ಥಾನಕ್ಕೆ ಶೇಖರ್‌ಪೂರ್ಣರವರು ಶ್ರೀ ಶೇಖರ್ ಅವರನ್ನು ಸೂಚಿಸಿದರು, ಕಿಶೋರ್ ಚಂದ್ರ ಅನುಮೋದಿಸಿದರು. +೨) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೂತನ ಅಧ್ಯಕ್ಷರಾದ ಶೇಖರ್ ರವರು ಶ್ರೀ ರವಿ ಅರೇಹಳ್ಳಿಯವರನ್ನು ಸೂಚಿಸಿದರು, ಲಾವಣ್ಯ ಅನುಮೋದಿಸಿದರು. +೩) ಖಚಾಂಚಿ ಸ್ಥಾನಕ್ಕೆ ಅಜಿತ್ ರವರು ಶ್ರೀ ಕಿರಣ್‌ರವರನ್ನು ಸೂಚಿಸಿದರು, ರಾಘವ ಕೋಟೆಕರ್ ರವರು ಅನುಮೋದಿಸಿದರು. +೪) ಕಾರ್ಯದರ್ಶಿ ಸ್ಥಾನಕ್ಕೆ ರುದ್ರಮೂರ್ತಿಯವರು ಶ್ರೀಮತಿ ಲಾವಣ್ಯರವರನ್ನು ಸೂಚಿಸಿದರು, ಸೌಮ್ಯ ಅನುಮೋದಿಸಿದರು. +ಈ ಎಲ್ಲ ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಭೆ ಒಮ್ಮತದಿಂದ ಅಂಗೀಕರಿಸಿತು. +ಸಭೆಯಲ್ಲಿ ತೆಗೆದುಕೊಂಡ ಕೆಲವು ಪ್ರಮುಖ ನಿರ್ಣಯಗಳು: +೧) ಟ್ರಸ್ಟ್ ರಿಜಿಸ್ಟರ್ ಮಾಡಲು ಬೇಕಾದ ಎಲ್ಲ ಕಾಗದ ಪತ್ರಗಳನ್ನು ಶೇಖರ್‌ಪೂರ್ಣರವರು ತಯಾರು ಮಾಡತಕ್ಕದ್ದು. ರಿಜಿಸ್ಟರ್ ಮಾಡುವ ದಿನದಂದು ಎಲ್ಲರೂ ಹಾಜರಿರಬೇಕಾದ ಕಾರಣ ಆ ದಿನಾಂಕವನ್ನು ಒಂದು ವಾರ ಮುಂಚೆ ಎಲ್ಲರಿಗೂ ತಿಳಿಸುವುದು. +೨) ಇನ್ನು ಮುಂದೆ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಬಳಸುವ ಬ್ಯಾನರ್‌ಗಳು ಹಾಗೂ ಲೆಟರ್ ಹೆಡ್‌ಗಳಲ್ಲಿ “ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ಬಳಗ” ಹಾಗೂ “ಸಂವಾದ.ಕಾಂ” ಎರಡೂ ಹೆಸರುಗಳು ಇರಬೇಕು. +೩) ಕೆ‌ಏಸ್‌ಸಿ ಹಾಗೂ ಸಂವಾದ.ಕಾಂನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಲು ಕೆಲವು ಸಮಿತಿಗಳನ್ನು ರಚಿಸಲಾಯಿತು ಹಾಗೂ ಅದಕ್ಕೆ ಕೆಲವು ಸದಸ್ಯರನ್ನು ನಿಯೋಜಿಸಲಾಯಿತು. ಅವು ಹೀಗಿವೆ: +ಅ) ಸಂಪಾದಕ ಸಮಿತಿ +ಸಂಪಾದಕರು – ಶ್ರೀ ಶೇಖರ್‌ಪೂರ್ಣ +ಉಪ ಸಂಪಾದಕರು – ಶ್ರೀ ವಿಕ್ರಮ್ ಹತ್ವಾರ್ +ಶ್ರೀ ಕಿರಣ್ ಎಂ +ಶ್ರೀ ಜಯಕುಮಾರ್ +ಕಲಾ ನಿರ್ದೇಶಕರು – ಶ್ರೀ ಪಿ.ಟಿ.ಪ್ರಮೋದ್ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಸಂಗ್ರಹದಲ್ಲಿರುವ ಎಲ್ಲ ಪಠ್ಯವನ್ನು ಮುಖ್ಯ ತಾಣಕ್ಕೆ ವರ್ಗಾಯಿಸುವುದು. +ತಾಣವನ್ನು ವಿಶಿಷ್ಟವಾಗಿರುವಂತೆ ನೋಡಿಕೊಳ್ಳುವುದು (ಈoಛಿus oಟಿ Pಡಿeseಟಿಣಚಿಣioಟಿ ಣo ಞeeಠಿ ಣhe siಣe uಟಿique) +ಬ) ಕಾರ್ಯ ನಿರ್ವಾಹಕ ಸಮಿತಿ +ಃಡಿಚಿಟಿಜ Pಡಿomoಣioಟಿ ಚಿಟಿಜ Pಖ ಔಠಿeಡಿಚಿಣioಟಿs – ಶ್ರೀ ಕಿಶೋರ್ ಚಂದ್ರ +ಶ್ರೀ ರವಿ ಅರೇಹಳ್ಳಿ +ಶ್ರೀ ರಾಜ್‌ಕುಮಾರ್ +ಈuಟಿಜ ಡಿಚಿisiಟಿg +ಶ್ರೀ ಅಜಿತ್ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಕೆ‌ಏಸ್‌ಸಿಯ ಬಗ್ಗೆ ಒಂದು ಮಾಹಿತಿ ಕೈಪಿಡಿ(ಃಡಿoಛಿhuಡಿe) +ಎಲ್ಲ ಸಕ್ರಿಯ ಸದಸ್ಯರಿಗೆ ಕೆ‌ಏಸ್‌ಸಿ mಚಿiಟ iಜ +ಎಲ್ಲ ಸದಸ್ಯರ ಮೈಲುಗಳಲ್ಲಿ ಸಹಿ ಇರುವ ಕಡೆ ಕೆ‌ಏಸ್‌ಸಿಯನ್ನು ಪ್ರತಿನಿಧಿಸುವ ಒಕ್ಕಣೆ +ಪ್ರತಿ ತಿಂಗಳು ಒಂದು ಚಟುವಟಿಕೆ +ಪ್ರಚಾರಕ್ಕಾಗಿ ಬಳಸುವ ಎಲ್ಲ ಸಾಮಗ್ರಿಗಳು ಕೆ‌ಏಸ್‌ಸಿ ಹೆಸರಿನಲ್ಲಿರಬೇಕು +ಸಕ್ರಿಯ ಸದಸ್ಯರಿಗೆ ಗುರುತಿನ ಚೀಟಿ +ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಚಾಂಚಿಗೆ ಪ್ರತ್ಯೇಕ ವಿಸಿಟಿಂಗ್ ಕಾರ್ಡ್ ಹಾಗೂ ಇತರರಿಗೆ ಕೆ‌ಏಸ್‌ಸಿ ಗುರುತಿನ ಚೀಟಿ +ಸದಸ್ಯರಿಗೆ ಕೆ‌ಏಸ್‌ಸಿಯ ಲೋಗೋ ಇರುವ ಟೀ-ಶರ್ಟ್ +ಕ) ತಾಂತ್ರಿಕ ಸಮಿತಿ +ಶ್ರೀ ರುದ್ರಮೂರ್ತಿ +ಶ್ರೀ ರಾಘವ ಕೋಟೆಕರ್ +ಶ್ರೀ ವಿವೇಕ್ +ಶ್ರೀಮತಿ ಲಾವಣ್ಯ +ಕುಮಾರಿ ಸೌಮ್ಯ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಪ್ರತಿ ತಿಂಗಳೂ ಪ್ರಕಟವಾಗುವ ಪಠ್ಯವನ್ನು ಬ್ಯಾಕಪ್ ಮಾಡುವುದು.(ವಿವೇಕ್ ಈ ಹೊಣೆಯನ್ನು ಹೊತ್ತಿದ್ದಾರೆ) +“ಸಂಪೂರ್ಣ” ಅ‌ಒS ಅನ್ನು ಸಂಪೂರ್ಣಗೊಳಿಸುವುದು +೪) ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದಲ್ಲಿ ಸಂವಾದ.ಕಾಂಗೆ ಮಾತ್ರ ಲಿಂಕ್ ಇರಬೇಕು. ಬೇರೆ ಯಾವುದೇ ತಾಣದ ಲಿಂಕ್ ಸಂವಾದ.ಕಾಂ ತಾಣದಲ್ಲಿ ಕೊಡಬಹುದು. +೫) ಯಾವುದೇ ಚಟುವಟಿಕೆಯ ಪ್ರಕಟಣೆಯನ್ನು ಸಂಪಾದಕ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ(ರವಿ ಅರೇಹಳ್ಳಿ)ಯ ಮುಖಾಂತರ ಕೊಡತಕ್ಕದ್ದು. +೬) ಕೆ‌ಏಸ್‌ಸಿಯ ಜಿಲ್ಲಾವಾರು ಬೆಂಬಲಿಗರ ಬಳಗಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆಗಳು ಹಾಗೂ ಸಹಾಚಿi ಮೂಲ ಗುಂಪಿನಿಂದ ಸಿಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಹಣ ಸಂಗ್ರಹಣೆ ಆಯಾ ಜಿಲ್ಲೆಗಳ ಸಂಚಾಲಕ ಹಾಗೂ ಸದಸ್ಯರಿಗೆ ಬಿಟ್ಟಿದ್ದು. ಕಾರ್ಯಕ್ರಮದ ನಂತರ ಖರ್ಚು ವೆಚ್ಚದ ವರದಿಯನ್ನು ಮೂಲ ಗುಂಪು ಹಾಗೂ ಟ್ರಸ್ಟ್‌ಗಳಿಗೆ ಸಲ್ಲಿಸತಕ್ಕದ್ದು. +ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಸಬೇಕೆಂದು ಯೋಚಿಸಿರುವ “ಪರ್ಯಾಯ ಸಿನಿಮಾ ನನ್ನ ದೃಷ್ಟಿಯಲ್ಲಿ?” ಎರಡು ದಿನಗಳ ಕಾರ್ಯಶಿಬಿರದ ಬಗ್ಗೆ ಶೇಖರ್‌ಪೂರ್ಣರವರು ಪ್ರಸ್ತಾಪಿಸಲು, ಎರಡು ದಿನವಿರಬೇಕೆ? ಒಂದು ದಿನ ಸಾಲದೆ ಎಂಬ ಸ್ವರಗಳು ಜೋರಾಗಿಯೇ ಎದ್ದರೂ ಕೊನೆಗೆ ಅಡಗಬೇಕಾಯಿತು. ಶಿಬಿರ ಎರಡು ದಿನಗಳು ನಡೆಯುವುದೆಂದು ತೀರ್ಮಾನಿಸಲಾಯಿತು. ಸಂಭವನೀಯ ಕಾರ್ಯಕ್ರಮದ ಪಟ್ಟಿ ಹೀಗಿದೆ: +ಮೊದಲ ದಿನ – ಉದ್ಘಾಟನೆ +“ಘಟಶ್ರಾದ್ಧ” ಸಿನಿಮಾ ಪ್ರದರ್ಶನ +ಚಲನಚಿತ್ರದ ಬಗ್ಗೆ ತಜ್ಞರಿಂದ ಮೂರು ಉಪನ್ಯಾಸಗಳು +ಏರಡನೆಯ ದಿನ – ಶ್ರೀ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಸಿನಿಮಾ ಪ್ರದರ್ಶನ +ಪರ್ಯಾಯ ಚಲನಚಿತ್ರಗಳ ಬಗ್ಗೆ ಎರಡು ಉಪನ್ಯಾಸ +ಶ್ರೀ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ +ಈ ನಿಟ್ಟಿನಲ್ಲಿ ಸದಸ್ಯರ ಜವಾಬ್ದಾರಿಗಳು +ಸತತ ಎರಡು ತಿಂಗಳ ಆನ್‌ಲೈನ್ ಪ್ರಚಾರ – ರಾಘವ ಕೋಟೇಕರ್, ಲಾವಣ್ಯ +ಅತಿಥಿಗಳ ಜವಾಬ್ದಾರಿ – ಶ್ರೀ ಶೇಖರ್‌ಪೂರ್ಣ +ಸಾರ್ವಜನಿಕ ಸಂಪರ್ಕ – ರವಿ ಅರೇಹಳ್ಳಿ +ಊಟೋಪಚಾರ – ಶ್ರೀ ಶೇಖರ್, ರಮೇಶ್ +ನೆನಪಿನ ಕಾಣಿಕೆ – ರಮೇಶ್, ಸೌಮ್ಯ +ನೆನಪಿನ ಕಾಣಿಕೆಯ ರೂಪುರೇಷೆ – ಕಿಶೋರ್ ಚಂದ್ರ +ಶಿಬಿರಾರ್ಥಿಗಳಿಗೆ ಕೊಡುವ ಪೇಪರ್ ಚೀಲ ಇತ್ಯಾದಿ – ರಮೇಶ್ +ಇಷ್ಟಾದ ನಂತರ, ಸಮಯ ರಾತ್ರಿ ೨.೩೦ ಆದ್ದರಿಂದ ಬಲವಂತವಾಗಿ ಚರ್ಚೆಯನ್ನು ನಿಲ್ಲಿಸಿ ಸಭೆಯನ್ನು ಮುಗಿಸಲಾಯಿತು. ಮರುದಿನ ತಿಂಡಿ ತಿಂದು, ಮತ್ತೊಂದು ಸುತ್ತು ತೋಟ ನೋಡಿ, ವರ್ಷಕ್ಕೊಮ್ಮೆಯಾದರೂ ಇಂತಹ ಶಿಬಿರ ಇರಬೇಕು ಎಂದುಕೊಳ್ಳುತ್ತ, ನಮ್ಮ ನಮ್ಮ ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲರೂ ಹೊರಟಿದ್ದಾಯಿತು. +***** +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […] +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_179.txt b/Kannada Sahitya/article_179.txt new file mode 100644 index 0000000000000000000000000000000000000000..46f4a37e8a01d3c6a6e80ebd6de736920d7074c0 --- /dev/null +++ b/Kannada Sahitya/article_179.txt @@ -0,0 +1,74 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸವತಿ ಮಕ್ಕಳ ಹಾಗೆ ಕಾಣಬೇಡವ್ವ +ಸವತಿ ಮಕ್ಕಳ ಹಾಗೆ ಕಾಣಬೇಡ. +– ೧ – +ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ +ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ +ಮರುಧರೆಯ ಮರುಳರ ಕಡು ನೆಂಟರೆಂಬೆ +ಪಕ್ಕದ ಖೂಳನ ಏಜೆಂಟರೆಂಬೆ, +ಹಳೆ ಹೇಳಿಗೆಯ ನಂಜೆದೆಯ ತಳಿಗಳ ಜೊತೆಯಲ್ಲೆ, +ಹೊಸ ಪೀಳಿಗೆಯ ನಿರಪಾಯ ಏಳಿಗೆಯ ಸುಳಿಗಳನು +ದೂಡುವೆ ಸಂಶಯದ ಖೆಡ್ಡಕ್ಕೆ ತಾಯಿ +ಲೇಬಲ್ಲನಂಟಿಸುವೆ ಗಡ್ಡಕ್ಕೆ ತಾಯಿ, +ಸವತಿ ಮಕ್ಕಳ ಹಾಗೆ….. +– ೨ – +ಧರ್ಮಾಂಧ ಧೂರ್ತರ ಎಡಗೈಯ ತುತ್ತಿಗೆ +ಕೊಬ್ಬಿರುವ ಮನೆಮುರುಕ ಮಂದಿಯ ಕತ್ತಿಗೆ +ಒರೆಯಾಗಿ ಇಹರಿವರು ಒಳಗೊಳಗೆ ಮೆತ್ತಗೆ, +ಕೊಯ್ಯಲು ಕುತ್ತಿಗೆ ಸರಿಯಾದ ಹೊತ್ತಿಗೆ +ಹೊಂಚಿಹರು ಎಂಬಂತೆ, ತಲೆ ಹೊಯ್ದು ಇಟರೂ +ಸೋರೆ ಬುರುಡೆಯ ಎಂದು ಶಂಕಿಸುವೆ ನಮ್ಮವ್ವ- +ಚಲ್ಲಣರ ಎದೆಯಲ್ಲು ತಲ್ಲಣದ ದೆವ್ವ +ಕುಣಿಸುತ್ತ, ತಿರುಚುವೆ ಹೊಂಗನಸ ಹುವ್ವ, +ಸವತಿ ಮಕ್ಕಳ ಹಾಗೆ….. +– ೩ – +ಹೆಚ್ಚು ಕಡಿಮೆಗಳಿಲ್ಲ ಇಂಡಿಯನ್ನರು ಒಂದೆ +ಹಲವು ಬಣ್ಣದ ಕುರಿಗಳಿಂದಾದ ಮಂದೆ +ಎಂದು ಲೋಕಕೆ ಸಾರಿ, ಪಶ್ಚಿಮರ ಮುಂದೆ +ಮೆರೆಸುವೆ ರಾಷ್ಟ್ರಪತಿ ದಾಡಿಗನ ಮಂಡೆ. +ಬಾಡಿಗೆಯ ಮನೆಗಿಲ್ಲಿ ಅಲೆದಿರಲು, ಮನೆಯೊಡೆಯ +ಹೆಸರಿಂದ ಕುಲವರಿತು, ಅಟ್ಟಲು ಕಾರಣ- +ಮುದಿ ತಾಯ ಮಡಿತನವನೊಡ್ಡುವೆ ಅಮ್ಮ, +ಬೇವರ್ಸಿಗಳ ಹಾಗೆ ಅಲೆಸುವೆ ಅಮ್ಮ, +ಸವತಿ ಮಕ್ಕಳ ಹಾಗೆ….. +– ೪ – +ನಾವೂನು ಭಾರತಿಯ ಬಸಿರವರೆ ಎನ್ನುತ್ತ +ತಾಯೆಂಬ ಬಾಯಲ್ಲೆ ನಾಯುಣಿಸು ತಿನ್ನುತ್ತ +ಮೀರ್ ಸಾದಖರು ಮತ್ತೆ ನಮ್ಮಕ್ ಹರಾಮರು +ಮೊಘಲಾಯಿ ದೌಲತ್ತು ಮೆರೆವ ಅನಾಮರು- +ಇದ್ದಾರು ಕೋಮಿನ ಕಂತ್ರಾಟುದಾರರು +ಮಾಸೂಮು ಮಂದಿಯ ನೆಮ್ಮದಿ ಚೋರರು; +ಮಾಡವ್ವ ಅಂಥವರ ಸುಳಿಯ ಸಘಾಯಿ; +ನಿಷ್ಪಾಪಿಗಳಿಗಾಗು ನಿರ್ಭಯದಾಯಿ, +ಸವತಿ ಮಕ್ಕಳ ಹಾಗೆ….. +– ೫ – +ಬೆಳಕ ಕಂಡೆವು ಇಲ್ಲೆ, ಬಾಡಿ ಬೀಳುವೆವಿಲ್ಲೆ, +ಏನಾಟ ನಡೆದರೂ ನಿನ್ನಡಿಯ ಗಡಿಯಲ್ಲೆ. +ಮರಳಂತೆ ಸಣ್ಣಾಗಿ ಬಾಳ್ದೊರೆಯ ತಡಿಯಲ್ಲೆ +ಸುಡು ಬಿಸಿಲನುಂಡರೂ, ಕೈನೀಡಿನೆಡೆಯಲ್ಲೆ +ಹರಿವ ನೀರನು ಕಂಡು, ನೀರಡಿಕೆ ಉಲ್ಬಣಿಸಿ, +ನಿನ್ನ ಹಳಿಯುವ ಖೋಡಿ ತಿಳಿಗೇಡಿಗಳ ಹರಸಿ- +ತೆಗೆದುಕೊ ಇವರನ್ನೂ ಲೆಕ್ಕಕ್ಕೆ ತಾಯೆ +ಪರದೆಯೆಳಿ ಇವರೆದೆಯ ದುಃಖಕ್ಕೆ ತಾಯೆ +ಸವತಿ ಮಕ್ಕಳ ಹಾಗೆ….. +***** +ಕೀಲಿಕರಣ: ಶ್ರೀನಿವಾಸ +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_18.txt b/Kannada Sahitya/article_18.txt new file mode 100644 index 0000000000000000000000000000000000000000..03cbdc8544c7d6f884fde906011bfb4037ba2774 --- /dev/null +++ b/Kannada Sahitya/article_18.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, +ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. +ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ +ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. +ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – +ಕೊಂಬೆಗಳೆಲ್ಲ ಸಂಜೆ ಬಾನಿನ ನಿರಾಳ ಮನದೊಳಚ್ಚೊತ್ತಿ +ಚಿತ್ತಾರವಾಗಿ ಕಪ್ಪು ಮುಸುಕಿನ ಒಳಗೆ ಹುದುಗುವವು +ಇದ್ದು ಇಲ್ಲದ ಹಾಗೆ. ಇರುಳಿನಲಿ ಒಮ್ಮೆಲೇ ಚಿಗುರೊಡೆದು +ಅಂತರಂಗವ ಬಿಚ್ಚಿ ಬಯಲಿಗಿಡುವದು ಬಾನು: +ಎಚ್ಚರಾಗದ ಹಾಗೆ ನೆಲದ ಮೈದಡವಿ ಮುದ್ದಿಸುವದು. +ಆಗ ಎಲ್ಲರಿಗು ನಿದ್ದೆ. ಬೆಳಗಿನ ಜಾವ ಯಾವುದೊ +ಕನಸು: ಬೆಳಗಾದ ಮೇಲೆ ಮರೆತು ನೆನೆಸುವದು – +ತಿರುಗಾಡಿ ಬರುವಾಗ ಗೆಳೆಯರಿಗು ಹೇಳಿ ನಕ್ಕು +ನಗಿಸುವದು; ಹೂ ಗಿಡಕೆ ನೀರು ಹಣೆಸುವದು. +* * * * +ಚಳಿಗಾಲದಲ್ಲಿ ಒಂದೊಂದೆ ಎಲೆಯುದುರಿ ನೆನಪು ಕಳಚು +ತ್ತಿರುವಾಗ ಯಾರಿಗೂ ಕಾಣದ ಹಾಗೆ ಬೇರಿಂದ ರಸ ಹೀರಿ +ಚಿಗುರಿ ನಿಂತವರಾರು? ಬಿರುಗಾಳಿ ಬೀಸಿ ಆಕಾಶದುದ್ದ +ಧೂಳಡರಿ ದಿಕ್ಕು ತಪ್ಪಿಸಿ, ಮನೆಮನೆಯ ಕಿಡಕಿ ಬಾಗಿಲು +ಬಡಿದು ಪಟಪಟ ಹನಿಯುದುರಿದಾಗ ಯಾರು ನೆಲಕಿಳಿದು +ಬಂದವರು? ಮರುದಿನ ಬೇಲಿಗುಂಟ ಹೂವರಳಿದಾಗ ಯಾರು +ಕಿಲಕಿಲ ನಕ್ಕು ಹೋದವರು? ನಿರ್ಮಲವಾಗಿ ನಿಂತ ಮೋಡ +ಹೊಯ್ದಾಡಿ ಎಲ್ಲೊ ಇಳಿಯುವುದು-ಭೂಮಿ ಗುಟುಕರಿಸುವದು. +ಆಗೀಗ ಮಿಂಚಿ ಅಂತರಿಕ್ಷದಲೇನೊ ಹೊಳೆಯುವದು. +* * * * +ಯಾವುದೋ ಗಳಿಗೆಯಲಿ ಹಟಾತ್ತನೆ ಒಳಗೆ ಅನಿಸುವ- +ದೊಂದು ; ಬೆಟ್ಟದ ಮುಡಿಯ ಕಲ್ಲು ಬಂಡೆಯಲಿ ಚೆಲ್ಲನೆ ಬುಗ್ಗೆ +ಚಿಮ್ಮಿ ಮುಂದೆ ಹರಿದದ್ದೆಲ್ಲೊ. ಹಗಲಿರುಳು ಜಾರುವವು +ದಿನದಿನವು ನನ್ನೊಳಗಿಂದ ಏನೊ ಹೀರುವವು ; ಮತ್ತೆಲ್ಲೊ +ತಿರುಗಿ, ಪತ್ತೆಯಿಲ್ಲದ ಹಾಗೆ ಜೇನಿಟ್ಟು ‘ಬಿಡಿಸಿಕೊ’ ಎಂದು +ದುಡಿಸುವವು. ಜೋಂಗೊಡುವ ಕಂಡು ಅಚ್ಚರಿಗೊಂಡರೂ +ಅವಸರ ಪಡುವ ಹಾಗಿಲ್ಲ ; ದಾಹ ತೀರಿಸಲು ನೀರಿಲ್ಲ. +ಮತ್ತು ಬರಿಸುವ ಮದ್ಯವಲ್ಲ. ಅಂಗೈಯಲ್ಲಿ ಹನಿಹನಿ +ಹಾಕಿ, ನೆಕ್ಕಿ ನಾಲಗೆ ತುಂಬ ಸವಿದು, ಕಣ್ಮುಚ್ಚಿ +ತೆರೆಯಬೇಕು. +* * * * +ನನ್ನ ನಂಬಿಕೆಯೊಂದು ಆಕಾಶ: +ನಿಜ, ಅದಕೆ ತಲೆಬುಡವಿಲ್ಲ, ನಾನೆಷ್ಟು ಬೆಳೆದರೂ +ನನಗೆ ನಿಲುಕುವುದಿಲ್ಲ, ದೂರದಿಂದಲ್ಲದೆ ನಾನದನು +ಮುಟ್ಟಿ ಅನುಭವಿಸಿಲ್ಲ. ಮೇಲೆ ನೋಡದೆ ಸೆಟೆದುಕೊಂಡೇ +ನಡೆದರೂ ಅದು ಸದಾ ನನ್ನ ತಲೆಯ ಮೇಲೆ. +ಹಗಲು ಹೊತ್ತಿನಲಿ ಅದರೆಡೆಗೆ ಲಕ್ಷ್ಯವಿಲ್ಲ. ನಮ್ಮ ಬದುಕಿನಲಿ +ನಾವು ಮಗ್ನರಾದರೆ ಸಾಕು, ಅದಕೆ ಚಿಂತೆಯಿಲ್ಲ. +ರಾತ್ರಿ ವಿದ್ಯುದ್ದೀಪ ಕೈಕೊಟ್ಟು, ಮಿಣಿ ಮಿಣಿ ಮೇಣ- +ಬತ್ತಿಯ ಹಚ್ಚಿ, ಅಂಜಿ ಆಕಳಿಸುತ್ತ ಕುಳಿತಾಗಲೂ +ಆಕಾಶದಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ. +***** +೧೯೬೯ +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_180.txt b/Kannada Sahitya/article_180.txt new file mode 100644 index 0000000000000000000000000000000000000000..51a83ff22d1624c9bd9a7a81c8d165ae0980d0a4 --- /dev/null +++ b/Kannada Sahitya/article_180.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ ಆಗುತ್ತಿರುವ ಪಲ್ಲಟವನ್ನು ಈ ಟಿಪ್ಪಣಿಗಳು ಗುರುತಿಸುತ್ತವೆ) +ಭಾನುವಾರ ಫೆಬ್ರವರಿ ೧೯, ೧೯೭೮, ಖಿuಜಿಣs, ಒeಜಜಿoಡಿಜ +ಹಗುರಾಗಿ ಕುಣಿಯುವ ಪಾದಗಳ, ಚಿರತೆಯಂತೆ ಬಳಕುವ ಮೈಕಟ್ಟಿನ ಮಹಮ್ಮದಾಲಿ ಸೋತ. ಇನ್ನು ಮುಂದೆ ಇವ ಜಗತ್ತಿನ ಬಾಕ್ಸಿಂಗ್ ಚಾಂಪಿಯನ್ ಅಲ್ಲ. ಎದುರಾಳಿಯ ಹೊಡೆತಗಳನ್ನು ಪುಷ್ಪಾರ್ಚನೆಯೆಂಬಂತೆ ಸ್ವೀಕರಿಸುತ್ತ, ನಗುತ್ತ, ಹೀಯಾಳಿಸುತ್ತ ಅವು ಅತಿಯಾದಾಗ ಗರ್ಜಿಸುತ್ತ, ಛಂಗನೆ ನೆಗೆಯುತ್ತ, ನಾವು ನೋಡುತ್ತಿರುವುದು ಅವನ ಮುಷ್ಟಿಯನ್ನೋ ನಗುವ ಕಣ್ಣುಗಳನ್ನೋ ಜಿಗಿದಾಡುವ ಕಾಲುಗಳನ್ನೋ ಎಂಬುದೇ ತಿಳಿಯದ ಹಾಗೆ ಪ್ರೇಕ್ಷಕರನ್ನು ರಮಿಸುತ್ತ, ರಕ್ತದಾಹದ ಭೀಕರ ಮುಷ್ಟಿಯುದ್ದವನ್ನೇ ಮೋಹಕ ಕಲೆಯಾಗಿ ಇವನು ಮಾಡಿದ್ದ. ಈ ಕಪ್ಪು ಯುವಕ ತನ್ನ ಹೆಸರನ್ನೂ ಹೆಂಡತಿಯನ್ನೂ ಬದಲಾಯಿಸಿಕೊಂಡು ಮುಸ್ಲಿಂ ಆದವನು. ಕ್ಯಾಸಿಯಸ್ ಕ್ಮೇ ಎಂಬ ಹೆಸರಲ್ಲಿ ಹುಟ್ಟಿ ಬೆಳೆದು ನಂತರ ಮಹಮದಾಲಿಯಾಗಿ ತನ್ನ ನಾಡಿನ ಬಿಳಿ ಜನರ ಧರ್ಮದ ಹಂಗನ್ನು ತೊರೆದವನು; ಕ್ರೌರ್ಯವೂ ಮೋಹಕವಾದ ಆಟವಾಗಬಹುದೆಂಬುದನ್ನು ತನ್ನ ದೇಹವನ್ನೇ ಒಡ್ಡಿಕೊಂಡು ಈತ ಸಾಧಿಸಿದ್ದು ಕಪ್ಪು ಜನಾಂಗದ ಅವಮಾನ, ಒಳಗುದಿಗಳನ್ನು ಮೀರಲಿಕ್ಕೋಸ್ಕರ; ಅಥವಾ ಹಾಗೆನ್ನಿಸುವಂತೆ ಮೀಡಿಯಾ ಬಳಸಿಕೊಂಡಿತು. +ಹೀಗೆ ಸ್ಲಮ್‌ಗಳಲ್ಲಿ ಹಠಾತ್ತನೆ ಸಿಡಿದೇಳುತ್ತಿದ್ದ ದ್ವೇಷವೇ ರಂಗಭೂಮಿಯ ಪ್ರೇಕ್ಷಣೀಯ ನಾಟಕವಾಗಿ ಬಿಡುತ್ತಿತ್ತು. ಬಾಕ್ಸಿಂಗ್ ಅಂಕಣದ ಸ್ಪಾಟ್ ಲೈಟಿನ ವಿಧಿನಿಯಮಗಳ ಚೌಕಟ್ಟಿನಲ್ಲಿ ಕಪ್ಪು ರೋಷದ ತಮವನ್ನು ರಜೋಗುಣ ಮಾಡಿ, ಈ ರಜೋಗುಣವನ್ನು ತನ್ನ ವಿಶ್ರಾಂತಿ ಕಾಲದಲ್ಲಿ ಧಾರ್ಮಿಕವಾದ ಸತ್ವಗುಣವಾಗಿ ಮಾಡಲು ತನ್ನ ಮೋಹಕ ಮಾತುಗಾರಿಕೆಯಲ್ಲಿ, ಮುಗ್ಧ ನಗುವಿನಲ್ಲಿ, ಅಮಾಯಕವಾದ ಜಂಬಗಾರಿಕೆಯಲ್ಲಿ ಮಹಮದಾಲಿ ಶ್ರಮಿಸಿದವನು. ಇನ್ನು ಯಾವ ರಂಗದಲ್ಲೂ ಹೀಗೆ ಒಬ್ಬಮಾತ್ರ ಎಂಬಂತೆ ಇರುವ ಏಕಮೇವಾದ್ವಿತೀಯ – ನಿಜವಾಗಿ – ಇವನೇ. ಕರ್ಮದಲ್ಲಿ ಕೌಶಲವೇ ಯೋಗವೆನ್ನುವುದಾದರೆ ಇವನೂ ಒಬ್ಬ ಯೋಗಿಯೇ. ಕೋಪತಾಪದ್ವೇಷಗಳು ಅಭಿನಯಕ್ಕಾಗಿ ಈತನಿಗೆ ಒದಗುತ್ತಿದ್ದ ಸರಕುಗಳು-ಅಷ್ಟೇ. ಹಾಗೆನ್ನಿಸುವಷ್ಟು ರಾಗದ್ವೇಷಗಳನ್ನು ಹಾಸ್ಯಾಸ್ಪದವಾಗುವಷ್ಟು ಅವುಗಳ ಅತಿಗೆ ಮಾತಿನಲ್ಲಿ ಉಬ್ಬಿಸಿ ಚೀರುತ್ತಿದ್ದವನು ಇವನು. ಹೀಗೆ ಮಹಮದಾಲಿಯಲ್ಲಿ ಎಲ್ಲವೂ ಉತ್ಪ್ರೇಕ್ಷೆಯ ಹುಂಬಲೀಲೆ; ಅತ್ಯಂತ ಜಂಬದ ಮಾತುಗಳೆಲ್ಲವೂ ವಾಸ್ತವಸತ್ಯ. ಅವನು ಕೊಚ್ಚಿಕೊಳ್ಳುತ್ತಿದ್ದಂತೆ ನಿಜಕ್ಕೂ ಅವನು ’ಗ್ರೇಟೆಸ್ಟ್’. ವಿಪರ್ಯಾಸವೆಂದರೆ ಹಲವು ಬಾರಿ ಈ ಕಪ್ಪು ಶಕ್ತಿ ವ್ಯಕ್ತವಾದ್ದು ಕಪ್ಪು ಬಾಕ್ಸರ್‌ಗಳನ್ನು ಕೆಡವಿಯೇ. +ಅರವತ್ತರ ದಶಕದಲ್ಲಿ ಈ ಜಂಬದ ಹುಂಜ ಕವಿಯಾಗಿ, ಸುಂದರ ಪುರುಷನಾಗಿ, ಮನೋಹರ ಕಲೆಗಾರನಾಗಿ ಮೆರೆದ. ಕಪ್ಪು ಜನರ ಸ್ವಾಭಿಮಾನವನ್ನು ಬ್ರಿಟಿಷ್ ರಾಣಿಯ ಜೊತೆ ನರ್ತಿಸಿ ಘಾನಾದ ಅಧ್ಯಕ್ಷ ನುಕ್ರುಮಾ ಸ್ಥಾಪಿಸಿದಂತೆ. ಮಹಮದಾಲಿ ಬಾಕ್ಸಿಂಗ್‌ರಿಂಗ್‌ನಲ್ಲಿ ಚೀರಿ ಕುಣಿದು ಕಪ್ಪು ಹೊಳೆಯುವಂತೆ ಮಾಡಿದ. ಬುದ್ಧಿಶಕ್ತಿಯ ಪಟುತ್ವವಿಲ್ಲದಿದ್ದಲ್ಲಿ ಅವನ ಕೈಕಾಲುಗಳ ಚಳಕ ಮಿಂಚುವ ಕಲೆಗಾರಿಕೆಯಾಗುತ್ತಿರಲಿಲ್ಲ. ಬುದ್ಧಿಶಕ್ತಿಯಿಂದಾಗಿಯೇ ಈ ಕಲೆಗಾರಿಕೆ ಬಂಡಾಯವಾಗುವುದೂ ರಾಜಕೀಯವಾಗುವುದೂ ಅನಿವಾರ್ಯವಾಯಿತು; ಅವನ ಕಲೆಯನ್ನು ಗುತ್ತಿಗೆ ಹಿಡಿಯುತ್ತಿದ್ದವರಿಗೆ ಸಮಸ್ಯೆಯೂ ಆಯಿತು. ವಿಯಟ್ನಾಂ ಯುದ್ಧಕ್ಕೆ ವಿರೋಧಿಯಾದ ಮಹಮ್ಮದಾಲಿ ಡ್ರಾಪ್ಟ್ ಕಾರ್ಡನ್ನು ಹರಿದುಹಾಕಿ, ಕಾನೂನು ಭಂಗ ಮಾಡಿ, ಬಾಕ್ಸಿಂಗ್ ಕಣಕ್ಕೆ ಮರಳುವ ಅವಕಾಶವನ್ನು ಕಳೆದುಕೊಂಡ. ಅಮೆರಿಕನ್ ಯುವಜನರ ಸಿಟ್ಟಿಗೆ ಸಂಕೇತವಾದ. ಅಂತೆಯೇ ಬೆವರುವ ಅವಕಾಶವಿಲ್ಲದೆ ಬಳಲಿದ, ತುಸುತೋರವಾದ. ತನ್ನನ್ನು ಬೆಳೆಸಿದ ಮೀಡಿಯಾವನ್ನೂ ಮೀರಿದ. +ಇವತ್ತು ಮಹಮ್ಮದಾಲಿ ಸೋತಿದ್ದಾದರೂ ಯಾರಿಗೆ? ಸಾಮಾನ್ಯ ಕಸುವಿನ ಇನ್ನೊಬ್ಬ ಕಪ್ಪು ಯುವಕನಿಗೆ. ಈ ಯುವಕ ವಿಯಟ್ನಾಂ ಯುದ್ಧದ ಮಾಜಿಯೋಧ ಬೇರೆ! ಮಹಮದಾಲಿಯ ಕಾಲಕ್ಕೆ ತದ್ವಿರುದ್ಧವಾದ ಎಪ್ಪತ್ತರ ದಶಕದ ಮುಖಹೀನ ಹೊಂದಾಣಿಕೆಗೆ ಈತನ ಯಶಸ್ಸು ಒಂದು ಉತ್ತಮ ಸಂಕೇತ. +ನನಗೆ ಆಶ್ಚರ್ಯವೆಂದರೆ ಹಳಬರನ್ನು ಬಿಟ್ಟರೆ ಇನ್ನು ಯಾರೂ ಮಹಮದಾಲಿಯ ಈ ಸೋಲಿನಿಂದ ದುಃಖಿತರಾಗಿಲ್ಲ. ನನ್ನ ಗೆಳೆಯ ಜಾನ್ ಪೆರೆ – ಅರವತ್ತರ ದಶಕದ ಕ್ರಾಂತಿಕಾರಿ ಸಮಾಜವಾದಿ ಮಾತ್ರ ನಿರ್ವಿಣ್ಣವಾಗಿ ಈ ಬಗ್ಗೆ ಮಾತಾಡುತ್ತಾನೆ, ಬಿಟ್ಟರೆ ಸುದ್ದಿಗಾಗಿ ಹಾತೊರೆಯುವ ಅಮೆರಿಕಾದಲ್ಲಿ ಇದೊಂದು ದೊಡ್ಡ ಸುದ್ದಿಯೇ ಅಲ್ಲ. ನಿತ್ಯದ ಆರಾಧಕರಿಗೆ ಶಾಶ್ವತವಾದ ಸ್ಮೃತಿಯೇ ಇಲ್ಲವೇನೋ. ಮಹಮದಾಲಿಯ ಕಲೆಗಾರಿಕೆ ಕೂಡ ಈ ಬಗೆಯ ಸಂಸ್ಕೃತಿಯಿಂದಲೇ ಹುಟ್ಟಿದ್ದಲ್ಲವೆ? ಸಂಚಾರಿಯೇ ಇಲ್ಲಿ ಸ್ಥಾಯಿ….ಬೇಂದ್ರೆ ಅನ್ನುವಂತೆ ’ನಿನ್ನ ತಾಯಿಯೇ ವ್ಯಭಿಚಾರಿ’. ಯಾವ ಮೀಡಿಯಾದ ಭೂತಕನ್ನಡಿ ಮಹಮದಾಲಿಯನ್ನು ದೊಡ್ಡದು ಮಾಡಿತೋ, ಅದೇ ಅವನನ್ನು ಹಿಂಡಿ ಹೀರಿ ಬಿಸಾಡಿತು. +ಮಹಮದಾಲಿ ಕಪ್ಪುಜನದ ದ್ವೇಷ ರೋಷಗಳನ್ನು ಮುಷ್ಟಿಯುದ್ಧದ ಕಲೆಯನ್ನಾಗಿ ಮಾಡಿದ ಪ್ರತಿಭಾಶಾಲಿಯಾದರೆ ಇದಕ್ಕಿಂತ ಅನ್ಯವಾದ ನೈತಿಕವಾದ ಪ್ರತಿಭೆ, ಅಹಿಂಸಾವಾದಿ ಮಾರ್ಟಿನ್ ಲ್ಯೂಥರ್ ಕಿಂಗ್‌ನದು. ಜೆಫರ್‌ಸನ್, ಲಿಂಕನ್‌ರ ನಂತರ ಅಮೆರಿಕಾ ಒಂದು ರಾಷ್ಟ್ರವಾಗಿ ಪಡೆದ ಮಹಾನುಭಾವನೆಂದರೆ ಮಾರ್ಟಿನ್ ಲೂಥರ್‌ಕಿಂಗ್. ಹೋದವಾರ ಅವನ ಬಗ್ಗೆ ತುಂಬ ಧೈರ್ಯದಿಂದ ತಯಾರಿಸಿದ ಚಿತ್ರವೊಂದನ್ನು ಟೆಲಿವಿಷನ್‌ನಲ್ಲಿ ತೋರಿಸಿದರು. ಅಮೆರಿಕಾದ ಗಾಂಧಿಯಾದ ಕಿಂಗ್ ತನ್ನ ನಡುಪ್ರಾಯದಲ್ಲೇ ಕೊಲೆಗೆ ಈಡಾದ. ಇಡೀ ಅಮೆರಿಕಾದ ಅಂತಃಸಾಕ್ಷಿಯೆಂಬಂತೆ ಹೋರಾಡಿ ಸತ್ತ ಇವನ ಬಗೆಗಿನ ಚಿತ್ರವನ್ನು ಎಲ್ಲ ಹೃದಯಗಳನ್ನೂ ಕಲಕೀತೆಂಬ ನಿರೀಕ್ಷೆಯಲ್ಲಿ ತಯಾರಿಸಲಾಗಿತ್ತು. ಅರವತ್ತರ ದಶಕದ ಅತ್ಯಂತ ಉಜ್ವಲವಾದ ವ್ಯಕ್ತಿ ಈತ – ಹಲವು ಬಿಳಿಯರು ದ್ವೇಷಿಸಿದ, ಕೆಲವು ಬಿಳಿಯರು ತುಂಬ ಪ್ರೀತಿಸಿದ, ತನ್ನ ಮಾತಿನಿಂದ ಲಕ್ಷಾಂತರ ಜನರ ಮಂಪರು ಹರಿದಿದ್ದ ಅಪ್ಪಟ ಅಹಿಂಸಾತ್ಮಕ ಹೋರಾಟಗಾರನಾದ ಈ ಕಪ್ಪು ಮನುಷ್ಯ ಒಬ್ಬ ಧೀರ ಗಾಂಧಿವಾದಿ. ಗಾಂಧೀಜಿಯ ನಂತರ ನಾವು ಕಾಣುವ ದೊಡ್ಡ ಅಹಿಂಸಾವಾದಿ ಜನನಾಯಕ. ಅಮೆರಿಕಾ ಮತ್ತೆ ಮರ್ಯಾದೆಯಿಂದ ತಲೆಯೆತ್ತುವಂತೆ ಮಾಡಿದವನು ಇವನೊಬ್ಬನೇ. +ಇವನು ತನ್ನ ನಾಡಿನ ಸಂಸ್ಕೃತಿಗೆ ಒಳಗಿನವನಾದ ಕ್ರಿಶ್ಚಿಯನ್; ಜೊತೆಗೇ ತನ್ನ ನಾಡಿ ಸಂಸ್ಕೃತಿಯನ್ನು ನಿಷ್ಠುರವಾಗಿ ಛೇಡಿಸುತ್ತಿದ್ದ ಬಂಡಾಯಗಾರ. ಹೀಗೆ ಏಕಕಾಲದಲ್ಲಿ ಒಳಗಿನವನೂ ಬಂಡಾಯಗಾರನೂ ಆದ ಮಾರ್ಟಿನ್ ಲ್ಯೂಥರ್ ಕಿಂಗ್ ಕರಿಯರಿಗೆ ಆತ್ಮ ಗೌರವವನ್ನು ತಂದುಕೊಟ್ಟ. ಸಮಾನತೆಯ ಹೋರಾಟದಲ್ಲಿ ಪೂರ್ಣವಲ್ಲದಿದ್ದರೂ ಬಹುಪಾಲು ಯಶಸ್ವಿಯಾದ. ಇವನ ಯಶಸ್ಸು ಹಿಂಸಾತ್ಮಕ ಬಂಡಾಯಕ್ಕೂ ತಯಾರಾಗಿದ್ದ, ಅಮೆರಿಕನ್ ಸಂಸ್ಕೃತಿಯನ್ನೇ ಧಿಕ್ಕರಿಸಿ ನಿಂತಿದ್ದ ಬ್ಲಾಕ್ ಪ್ಯಾಂಥರ್ಸ್ ಸಾಧಿಸಿದ್ದಕ್ಕಿಂತ ವ್ಯಾಪಕತೆಯಲ್ಲಿ ಹೆಚ್ಚಿನದೆಂದೇ ಹೇಳಬಹುದು. ಈತ ಬಿಳಿಯರ ದ್ವೇಷಕ್ಕೆ ಒಳಗಾದ, ಜೊತೆಗೇ ಬಂಡಾಯಗಾರ ಕರಿಯರ ಅನುಮಾನಕ್ಕೂ ತುತ್ತಾದ. ಕಿಂನಂಥ ನಾಯಕರು ಯಾವ ಸಂಸ್ಕೃತಿಯಲ್ಲೇ ಆಗಲಿ ಹೆಚ್ಚು ಆತಂಕದಲ್ಲಿ, ಹೆಚ್ಚು ಮನಃಪೂರ್ವಕ ಶ್ರದ್ಧೆಯಲ್ಲಿ, ಹೆಚ್ಚು ಜವಾಬ್ದಾರಿಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಅಂಥವರು ಇಡುವ ಪ್ರತಿ ಹೆಜ್ಜೆಯೂ ನೈಜವಾಗಿರುತ್ತದೆ. ಕ್ರಾಂತಿ ಇವರಿಗೆ ಎಂದೂ ತೀಟೆಯಲ್ಲ, ಉಮ್ಮಳದ ಚಪಲವಲ್ಲ, ಶೌರ್ಯದ ಪ್ರದರ್ಶನವಲ್ಲ. ಗಂಧದಂತೆ ನಿತ್ಯ ತನ್ನನ್ನು ತೇದುಕೊಳ್ಳುವ ಸಂಸಾರಿಯ ಹಾಗೆ ಪಾಲನೆಗಾಗಿ ಕ್ರಿಯಾಶೀಲರಾಗುವ ಮಾರ್ಟಿನ್ ಲ್ಯೂಥರ್ ಕಿಂಗ್ ಮತ್ತು ಗಾಂಧೀಜಿಯಂಥವರು ಮಾನವನ ದೈನಿಕದ ಉಪದ್ವ್ಯಾಪಗಳಲ್ಲೇ ದೈವಿಕವಾದ್ದನ್ನೂ ಹುಡುಕುವವರು, ಪಡೆಯುವವರು. ಸಂಸಾರದ ಗೂಡು ಕಟ್ಟಲೆಂದೇ ಸಮಾಜ ಪರಿವರ್ತನೆಯ ಬಿರುಗಾಳಿಗೂ ಸಿದ್ದರಾದಾಗ ಇಂಥವರಲ್ಲಿ ಹುಟ್ಟುವ ನಿಶ್ಚಯದ ಚೆಲುವು ಕೆಲವು ಕ್ಷಣಗಳಲ್ಲಿ ಮಾತ್ರ ಮೆರೆಯಬಲ್ಲ, ಮೆರುಗಬಲ್ಲ ರಮ್ಯವಲ್ಲ. +ಬ್ಲಾಕ್ ಪ್ಯಾಂಥರ್ಸ್‌ನ ನಾಯಕನಾಗಿದ್ದ ಮಾಲ್ಕಮ್ ಎಕ್ಸ್ ಕರಿಯರಲ್ಲಿ ಅರಿವಿನ ಸ್ಫೋಟ ಉಂಟುಮಾಡಿದ – ನಿಜ. ಪೂರ್ಣ ಧಿಕ್ಕಾರದಿಂದ ಹುಟ್ಟುವ ಮಿಂಚಿನ ಶಕ್ತಿ ಅವನದು. ಅದು ನಿತ್ಯದ ಬಳಕೆಯ ಭಾವನೆಯಾಗದು. ಮಾರ್ಟಿನ್ ಲ್ಯೂಥರ್ ಕಿಂಗ್‌ರಂಥವರ ಕ್ರಿಯೆಯಲ್ಲಿ ಕಂಕುಳಲ್ಲಿ ಕೂಸುಹೊತ್ತ ತಾಯಂದಿರು, ಬ್ರೆಡ್ಡು ಬೆಣ್ಣೆಗಳು ತುಟ್ಟಿಯಾಯಿತೆಂದು ಪರದಾಡುವ ಗಂಡಂದಿರು, ಸಂಸಾರ ಹೂಡುವ ಕನಸಿನ ಗೆಳೆಯ ಗೆಳತಿಯರು ಭಾಗಿಯಾಗಬಲ್ಲರು. ಮಾಲ್ಕಮ್ ಎಕ್ಸ್, ಮಹಮದಾಲಿಯವರದು ಯೌವನಕ್ಕೆ ಸಹಜವಾದ ಆಕರ್ಷಕವಾದ ಆತ್ಮಪ್ರದರ್ಶನದ ಮಾರ್ಗ; ಕಿಂಗ್‌ನದು ಎದುರಾಳಿಯ ಹೃದಯಗೆಲ್ಲುವ (ಹೊಂದಾಣಿಗಳಲ್ಲೂ ಗೆಲ್ಲುವ) ಹಠದ ಮಾರ್ಗ. ಕಿಂಗ್‌ನ ಅನುಯಾಯಿಯಾದ ಕರಿಯ ತನ್ನ ವಿರೋಧಿ ಬಿಳಿಯನಿಗಿಂತಲೂ ಹೆಚ್ಚು ಒಳ್ಳೆಯವನಾಗಲು ಶ್ರಮಿಸಬೇಕಾಗುತ್ತದೆ. ಮಾಲ್ಕಮ್ ಎಕ್ಸ್‌ನ ಅನುಯಾಯಿ ಬಿಳಿಯನನ್ನು ತರಸ್ಕರಿಸಿ ತನ್ನ ಉಮೇದಿನಲ್ಲಿ, ಹಿಗ್ಗಿನಲ್ಲಿ ತತ್ಕ್ಷಣದ ಸ್ವಂತಿಕೆ ಗಳಿಸುತ್ತಾನೆ. ಮಹಮದಾಲಿ ತನ್ನ ವಿಶಿಷ್ಟತೆಯಲ್ಲೇ ಅದರ ಪ್ರದರ್ಶನದಲ್ಲೇ ಖುಷಿಪಡುತ್ತ ಖುಷಿ ಕೊಡುತ್ತಾನೆ. ನಾವು ಅವನಿಂದ ಪಡೆಯುವ ಖುಷಿ ’ಮೂಲಕ ಮಹಾಶಯ’ರಾಗಿ; ನಾವು ಮಾಡಲಾರದ್ದನ್ನು ಅವನು ಮಾಡುತ್ತಿದ್ದಾನೆಂದು. ಅವನ ಮೂಲಕ ಬದುಕುವ ಈ ನಮ್ಮ ಖುಷಿ ಸತ್ಯವೂ ಅಲ್ಲ, ನಿತ್ಯವೂ ಅಲ್ಲ – ಮೇಲಾಗಿ ಅನಧಿಕೃತ. +* +* +* +ಕಿಂಗ್ ಕುರಿತ ಚಿತ್ರವನ್ನು ಟೆಲಿವಿಷನ್‌ನಲ್ಲಿ ನೋಡುತ್ತಿರುವುದೇ ಒಂದು ವಿಚಿತ್ರ ಹಿಂಸೆಯ ಭಾವನೆಯಾಯಿತು. ಈ ಚಿತ್ರ ನಿರ್ಮಾಪಕರು ತುಂಬ ಹಣ ಖರ್ಚು ಮಾಡಿದ್ದರು; ಅಧಿಕಸಂಖ್ಯೆಯ ಪ್ರೇಕ್ಷಕರನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಎಲ್ಲ ಪತ್ರಿಕೆಗಳೂ ಈ ಚಿತ್ರವನ್ನು ಸೋಲೆಂದು ಕರೆದುವು. ಚಿತ್ರ ಚೆನ್ನಾಗಿರಲಿಲ್ಲ ಎಂದಲ್ಲ. ನೋಡಬೇಕಾದಷ್ಟು ಜನ ನೋಡಲಿಲ್ಲ ಎಂದು. ಕರಿಯರೂ ನಿರಾಸಕ್ತರಾಗಿದ್ದರು ಎಂದು. +ಅರವತ್ತರ ದಶಕದ ಭರವಸೆ, ಕನಸುಗಳು ಅಮೆರಿಕಾದಲ್ಲಿ ಉಳಿದಿಲ್ಲ ಎಂದಾಯಿತು. +ಟೆಲಿವಿಷನ್‌ನಲ್ಲಿ ಚಿತ್ರ ನೋಡುವುದೇ ಒಂದು ಹಿಂಸೆ ಎಂದೆ. ನಡುನಡುವೆ ಕಮರ್ಷಿಯಲ್ ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಟೆಲಿವಿಷನ್ ಸಂಸ್ಥೆ ಸಂಪಾದಿಸುವುದೇ ಈ ಮಾರ್ಗದಿಂದ. ತಮಾಷೆಯೆಂದರೆ ನಮ್ಮ ಮನಸ್ಸನ್ನು ಕಲಕುವ ಮಾರ್ಟಿನ್ ಲ್ಯೂಥರ್ ಕಿಂಗ್‌ನ ಉಜ್ವಲ ಭಾಷಣದ ನಡುವೆ ಅದನ್ನು ಅಣಕಿಸುವಂಥ ಉಜ್ವಲ ಗದ್ಗದ ಕಂಠದಲ್ಲಿ ಬೆಕ್ಕಿಗೆ ರುಚಿಯಾದ ಮಾಂಸದ ಪೊಟ್ಟಣ ಒಂದರ ಜಾಹೀರಾತು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಒಂದು ಉತ್ಕೃಷ್ಟ ಭವನೆಯನ್ನು ಅತ್ಯಂತ ಆಯಸ್ಥಳಗಳಲ್ಲಿ ಮುರಿಯುವ ಈ ಜಾಹೀರಾತುಗಳು ಅಸಂಬದ್ಧವೆನ್ನಿಸುತ್ತವೆ. ಜೊತೆಗೇ ಕಿಂಗ್‌ನ ಪಾದ್ರೀ ಭಾಷಣ ವಾಗ್ವೈಖರಿಯ ಹಿಂದಿರುವ ಆರ್ತತೆ ಮರೆಯಾಗಿ ವೈಖರಿಯೇ ಮುಂದಾದಂತೆ ತೋರುತ್ತದೆ. +ಆದರೆ ಟೆಲಿವಿಷನ್ ಸಂಸ್ಥೆಗೆ ಅಮೆರಿಕಾದ ಸರ್ವಶಕ್ತ, ಕಿಂಗ್ ವಿರೋಧಿ ಪೋಲೀಸ್ ಎಫ್‌ಬಿ‌ಐಯನ್ನು ವಿರೋಧಿಸಿ ಹೀಗೊಂದು ಚಿತ್ರ ತಯಾರಿಸಲು ಸಾಧ್ಯವಾದ್ದು ಕೂಡ, ಈ ಜಾಹೀರಾತುಗಳಿಂದ ಬೆಳೆಯುವ ಅಮೆರಿಕಾದ ಬಂಡವಾಳಶಾಹಿ ಸಂಸ್ಥೆಯಿಂದಾಗಿ ಎಂದು ನನ್ನ ಗೆಳೆಯ ಜಾನ್‌ಪೆರಿ ವ್ಯಂಗ್ಯವಾಗಿ ಹೇಳುತ್ತಾನೆ. ಮುಖ್ಯವಾದ್ದು ಮಾರಾಟ; ಇಸ್ರೇಲಿಗೂ ಯುದ್ಧಕ್ಕೆ ಬೇಕಾದ ವಿಮಾನ ಕೊಡುತ್ತೇವೆ, ಈಜಿಪ್ಟಿಗೂ ಕೊಡುತ್ತೇವೆ; ಎಫ್‌ಬಿ‌ಐಪೊಲೀಸರ ಮುಖೇನ ವ್ಯವಸ್ಥೆ ರಕ್ಷಿಸುತ್ತೇವೆ; ಕಿಂಗ್ ಚಿತ್ರದ ಮುಖಾಂತರ ಮಾಲು ಮಾರಿ ವ್ಯವಸ್ಥೆ ಪೋಷಿಸುತ್ತೇವೆ; ಹೀಗೆ ಮಾಡುವಾಗ ನಿಮ್ಮ ಅಂತಃಸಾಕ್ಷಿ ತಣಿಯುವಂತೆ ಕಿಂಗ್‌ಗೆ ಇಡೀ ವ್ಯವಸ್ಥೆ ಎಷ್ಟು ಅನ್ಯಾಯ ಮಾಡಿತು ಎಂಬ ನಿರುಪದ್ರವಿಯಾದ ವ್ಯಾಕುಲದ ಭಾವನೆಯನ್ನೂ ಹುಟ್ಟಿಸುತ್ತೇವೆ. ಮಹಮದಾಲಿಗೆ ರೋಷ ಉಕ್ಕುವಂತೆ ಮಾಡಿ, ಈ ರೋಷವನ್ನು ಮೀಡಿಯಾಗಳಲ್ಲಿ ರಂಜಕಕಲೆಯಾಗುವಂತೆ ಮಾಡಿ, ವಾಸ್ತವಕ್ಕೂ ನಟನೆಗೂ ನಡುವಿನ ಭೇದವೇ ಸುಳ್ಳೆನ್ನುವಂತೆ ಮಾಡುತ್ತೇವೆ. +ಅಯೋವಾ ಸಿಟಿ, ಅಕ್ಟೋಬರ್-ನವೆಂಬರ್ ೧೯೮೫ +೧೯೭೮ರಲ್ಲಿ ನಾನು ಅಮೆರಿಕಾದ ಯುವಜನರಲ್ಲಾಗುತ್ತಿದ್ದ ಕೆಲವು ಬದಲಾವಣೆಗಳನ್ನು ಗುರುತಿಸಿದ್ದೆ. ಏಳುವರ್ಷಗಳ ನಂತರ ಮತ್ತೆ ನೋಡಿದಾಗ ಈ ಬದಲಾವಣೆ ಪೂರ್ಣವಾಗಿತ್ತು. ಈ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಾಗಿ ಯುವಶಕ್ತಿ ಹಂಬಲಿಸುತ್ತಿಲ್ಲ. ಆಗ ಹಿಂದಿರುಗಿದ ಹಿಪ್ಪೀಗಳು ಎಲೆಕ್ಟ್ರಿಕ್ ಬಾಚಣಿಗೆಗಳಲ್ಲಿ ಓರಣಗೊಳಿಸಿಕೊಳ್ಳುತ್ತಿದ್ದ ಉದ್ದ ಕೂದಲು ಕೂಡ ವಿಶ್ವವಿದ್ಯಾನಿಲಯಗಳಲ್ಲಿ ಈಗ ಕಾಣಿಸುವುದಿಲ್ಲ. ನೀಟಾಗಿ ಕಾಣುವ ಯುವಕ ಯುವತಿಯರು ಒಳ್ಳೆಯ ಉದ್ಯೋಗಗಳಿಗಾಗಿ ಹಂಬಲಿಸುವ ಕ್ಯರಿಯರಿಸ್ಟರಾಗಿದ್ದಾರೆ. ಅರವತ್ತರ ದಶಕದಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಕ್ರಾಂತಿಕಾರಕ ಮಾರ್ಕ್ಸ್‌ವಾದಿಯಾಗಿದ್ದ ಗೆಳೆಯ ಶೆಲ್ಡನ್ ಈಗ ದೊಡ್ಡ ಸಂಸ್ಕೃತ ಪ್ರಾಧ್ಯಾಪಕರು; ರಾಮಾಯಣವನ್ನು ಇಂಗ್ಲಿಷಿಗೆ ಭಾಷಾಂತರಿಸುತ್ತಿರುವ ಹಾರ್ವಾರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದವರು. ಇವರು ಗುಪ್ತಚಾರ ಸಿ.ಐ.ಎ. ವಿರುದ್ಧ ಯುವಕರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಸಿ.ಐ.ಎ ಯಾವ ನಾಚಿಕೆಯಾಗಲೀ ಆತಂಕವಾಗಲೀ ಇಲ್ಲದೆ ಯೂನಿವರ್ಸಿಟಿಯ ಕ್ಯಾಂಪಸ್ಸಿನೊಳಗೇ ಬಿಡಾರಮಾಡಿ ವಿದ್ಯಾರ್ಥಿಗಳನ್ನು ಕೆಲಸಗಳಿಗಾಗಿ ಸಂದರ್ಶಿಸುತ್ತಿದೆ. ಇದರಿಂದ ವಿಶ್ವವಿದ್ಯಾನಿಲಯಗಳ ವಸ್ತುನಿಷ್ಠತೆಯ ಆದರ್ಶಕ್ಕೆ ಭಂಗವಾಗುತ್ತದೆಂದು ನನ್ನ ಈ ಗೆಳೆಯನ ವಾದ. ಸಿ.ಐ.ಎ ಜೊತೆ ಸಂಬಂಧವಿರಬಹುದೆಂಬ ಅನುಮಾನದಿಂದಾಗಿ ಈಗಾಗಲೇ ಅಮೆರಿಕನ್ ವಿದ್ವಾಂಸರಿಗೆ ಭರತಕ್ಕೆ ಅಧ್ಯಯನಕ್ಕೆಂದು ಬರಲು ಸಿಗುತ್ತಿದ್ದ ವೀಸಾ ಕಠಿಣವಾಗಿದೆ. ವಿಶ್ವವಿದ್ಯಾನಿಲಯದ ಒಳಗೇ ಈ ಭೀಕರ ಗುಪ್ತಚಾರ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಲ್ಲಿ ಶಕ್ತಿರಾಜಕಾರಣದಲ್ಲಿ ಅನಾಸಕ್ತವಾದ ಧೋರಣೆಯಿಂದ ಮಾತ್ರ ಬೆಳೆಯಬಲ್ಲ ಜ್ಞಾನದ ಶಿಸ್ತುಗಳಿಗೆ ಇರುವ ಸರ್ವಮಾನ್ಯತೆ ಅನುಮಾನಾಸ್ಪದವಾಗುತ್ತದೆಂದು ಈ ಗೆಳೆಯ ಸಂಕಟ ಪಡುತ್ತಾನೆ. +ಆದರೆ ನನಗಾದ ಆಶ್ಚರ್ಯವೆಂದರೆ ನಡುವಯಸ್ಸಿನ ಈ ನನ್ನ ಗೆಳೆಯನಲ್ಲಿ ಕಂಡುಬಂದ ಆದರ್ಶ ಕಿರಿಯರಲ್ಲಿ ಇರಲಿಲ್ಲ. ವಿಯಟ್ನಾಂ ಯುದ್ಧದ ಸಮಯದಲ್ಲಿ, ಕರಿಜನರ ಹಕ್ಕುಗಳಿಗಾಗಿ ಸಿವಿಲ್‌ರೈಟ್ಸ್ ಚಳವಳಿಯಲ್ಲಿ ಮಾರ್ಟಿನ್ ಲ್ಯೂಥರ್ ಕಿಂಗ್‌ರ ನೇತೃತ್ವದಲ್ಲಿ ಕೆಲಸ ಮಾಡಿದವರಲ್ಲಿ ಕಾಣುವ ಸಮುದಾಯಚಿಂತನೆ ಈಗ ಎಳೆಯರಲ್ಲಿ ಇಲ್ಲವಾಗಿದೆ. ವಯಸ್ಸಾದವರಲ್ಲಿ ಇನ್ನೂ ಉಳಿದಿರುವ ಕ್ಯಾಂತಿಕಾರಕತೆ ಎಳೆಯರಲ್ಲಿ ಇಲ್ಲದಿರುವ ವಿಪರ್ಯಾಸ ಅಮೆರಿಕಾದಂತಹ ಬಲಿಷ್ಠ ದೇಶದಲ್ಲಿ ಆತಂಕಕಾರಿಯಾದದ್ದು. ಬಂಡವಾಳಶಾಹೀ ಪದ್ಧತಿಯ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಈ ಬಗೆಯ ಸ್ವಾರ್ಥಪರವಾದ ವ್ಯಕ್ತಿವಾದದ ಬೆಲವಣಿಗೆ ಎನ್ನಬಹುದು. +ಮಾನವನ ನೈತಿಕವಾದ ವಿಚಾರಗಳೆಲ್ಲ ಹುಟ್ಟುವುದು ವ್ಯಕ್ತಿಗೂ ಸಮುದಾಯಕ್ಕೂ ಇರುವ ನಂಟಿನ ಬಗ್ಗೆ ನಮಗೆ ಇರುವ ಆಸಕ್ತಿಯಿಂದಾಗಿ. ಈ ಸಂಬಂಧ ವ್ಯಕ್ತಿಯನ್ನು ಅರಳಿಸಲೂ ಬಹುದು, ಬಾಡಿಸಲೂ ಬಹುದು ಎಂಬ ಆತಂಕವನ್ನು ಪಡುವವರೆಲ್ಲರೂ ರಾಜಕೀಯ ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತರಾಗುತ್ತಾರೆ. ಸಮುದಾಯವೆಂದರೆ ಬಿಡಿಬಿಡಿಯಾದ ವ್ಯಕ್ತಿಗಳು ಕ್ಷಣಿಕ ಪ್ರಯೋಜನಗಳಿಗಾಗಿ ಮಾಡಿಕೊಂಡ ಸಂಬಂಧವಲ್ಲ; ವ್ಯಕ್ತಿಯ ಸೃಷ್ಟಿಶೀಲತೆ ಪರಿಪೂರ್ಣವೆನ್ನುವಂತೆ ಅರಳಲು ಆರೋಗ್ಯಕರವಾದ ಸಮುದಾಯದ ಸದಸ್ಯ ಅವನಾಗಿರಬೇಕು; ಅಂತೆಯೇ ಈ ಸೃಷ್ಟಿಶೀಲತೆಯ ಪ್ರಯೋಜನಕ್ಕಾಗಿ, ಬಳಕೆಗಾಗಿ ಕುಟುಂಬ ಸದೃಶವಾದ ಸಮುದಾಯ ಬೇಕು. ಪ್ರಾಯಶಃ ಈ ಆದರ್ಶ ತನ್ನಿಂದ ತಾನಾಗಿಯೇ ಕೈಗೂಡುವಂಥದ್ದು ಅಲ್ಲ. ಯಾವತ್ತೂ ಆದರ್ಶ ಸ್ಥಿತಿಯಲ್ಲಿ ಇದ್ದುದೂ ಅಲ್ಲ. ನಾವು ಕಟ್ಟಿಕೊಳ್ಳುವ ಅರ್ಥವ್ಯವಸ್ಥೆಯೇ ಅತ್ಯಂತ ಜಟಿಲವಾಗಿ ಇಡೀ ಸಮುದಾಯ ಕೇವಲ ಗ್ರಾಹಕರಾಗಿ ಬಿಡುವ ಅಪಾಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ದುಡ್ಡೇ ದೊಡ್ಡಪ್ಪನಾಗಿ ಬಿಡುವುದು ಬಂಡವಾಳಶಾಹೀ ವ್ಯವಸ್ಥೆಯಲ್ಲಿ; ಫ್ಯೂಡಲ್ ವ್ಯವಸ್ಥೆಯಲ್ಲಲ್ಲ…… ಆದ್ದರಿಂದಲೇ ಏನೋ ಸಮುದಾಯ ಮುಖ್ಯವಾಗುವ ಸಮಾಜವಾದೀ ವ್ಯವಸ್ಥೆಗೆ ಫ್ಯೂಡಲ್ ದೇಶಗಳು ಮಾನಸಿಕವಾಗಿ ತಯಾರಾಗಿರುವಂತೆ ಸಿರಿವಂತ ದೇಶಗಳು ಸನ್ನದ್ಧವಾಗಿಲ್ಲ. ವಿಯೆಟ್ನಾಂ, ಕ್ಯೂಬಾ, ಚೈನಾ – ಈ ದೇಶದ ಜನರಿಗೆ ಸಾಧ್ಯವಾದದ್ದು ಪ್ರತಿಯೊಬ್ಬನೂ ತನಗೇ ಒಂದು ಕಾರು ಬೇಕೆಂದು ಬಯಸುವ ಮುಂದುವರಿದ ದೇಶಗಳ ಪ್ರಜೆಗಳಿಗೆ ಸಾಧ್ಯವಾಗಿಲ್ಲ. ಪೂರ್ವಯೂರೋಪಿನ ಕಮ್ಯುನಿಸ್ಟ್ ದೇಶಗಳ ಜನರೂ ಈ ಬಗೆಯ ವ್ಯಕ್ತಿವಾದದಿಂದ ಪ್ರಭಾವಿತರಾಗುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. +ಯಾಕೆ, ಈಗ ಮಹಮದಾಲಿಯೂ ವಿ.ಐ.ಪಿ; ಹೊರ ಜಗತ್ತಿಗೆ ಅಮೆರಿಕನ್ ರಾಯಭಾರಿ. ತಾನು ಅಮೆರಿಕಾದ ಜೀವನಕ್ರಮವನ್ನು ಎಷ್ಟು ಪ್ರೀತಿಸುತ್ತಿರುವೆನೆಂದು ಅವನಿಗೆ ತಿಳಿದದ್ದು ಕೂಡ ಅವನು ಹೊರಗೆ ಹೋದಾಗ, ಕಮ್ಯುನಿಸ್ಟ್ ದೇಶಗಳಲ್ಲಿ ಅಲೆದಾಡಿದಾಗ. ನನ್ನ ಗೆಳೆಯ ಶೆಲ್ಡನ್ ಮಾತ್ರ ತನ್ನ ಚೀಲದಲ್ಲಿ ಕರಪತ್ರಗಳನ್ನು ತುಂಬಿಕೊಂಡು ಕ್ಯಾಂಪಸ್ಸಿಡೀ ಕನಸುಗಾರ ಯುವಕರಿಗಾಗಿ ಅಲೆದಾಡುತ್ತಾನೆ. ’ಸಿ.ಐ.ಎ.ಯನ್ನು ಇಲ್ಲಿಬರಲು ಬಿಡಬೇಡಿ’ ’ನಿಕರಾಗುವಾದ ಸರ್ಕಾರ ಬೆಂಬಲಿಸಿ’ ’ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿಸಿ’ ’ತಾರಾಯುದ್ಧ ಅರ್ಥಹೀನವಾದ್ದು’ ’ನಗುವ ರೀಗನ್ ರಕ್ತ ಪಿಪಾಸು’. +ರಷ್ಯಾದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ಜರೆಯುವುದು ಇವನಿಗೆ ಅಪ್ರಸ್ತುತ. ತನ್ನ ದೇಶದ ವ್ಯವಸ್ಥೆಯ ಅಸಹನೆ, ಹಸ್ತಕ್ಷೇಪದ ದುಷ್ಟರಾಜಕೀಯ ಇವನನ್ನು ಸದಾ ಬಾಧಿಸುತ್ತದೆ. ಉಳಿದ ಸಮಯದಲ್ಲಿ ನನ್ನ ಗೆಳೆಯ ರಾಮಾಯಣ ಭಾಷಾಂತರಿಸುತ್ತಾನೆ. ಸಂಸ್ಕೃತ ಹೇಳಿಕೊಡುತ್ತಾನೆ. ಜೆಫರಸನ್, ಲಿಂಕನ್, ಮಾರ್ಟಿನ್ ಲ್ಯೂಥರ್ ಕಿಂಗ್ – ಹೀಗೆ ಅವನಲ್ಲಿ ಸಣ್ಣದಾಗಿಯಾದರೂ ಉರಿಯುತ್ತಾರೆ; ನನಗಷ್ಟೇ ಸಮಾಧಾನ. +ಈ ನನ್ನ ಗೆಳೆಯ ಈಗ ತನ್ನೆರಡು ಮಕ್ಕಳ ಜೊತೆ ಬದುಕುತ್ತಿದ್ದಾನೆ. ನಾಲ್ಕೈದು ವರ್ಷಗಳ ಹೊಯ್ದಾಟದ ಅನಂತರ ಹೆಂಡತಿಯಿಂದ ಬೇರಾಗಿದ್ದಾನೆ. ಅರವತ್ತರ ದಶಕದ ಹೋರಾಟಗಳಲ್ಲಿ ಸಂಗಾತಿಯಾಗಿದ್ದ ಅವಳು ಕ್ರಮೇಣ ಅವನಿಂದ ದೂರವಾಗಿಬಿಟ್ಟದ್ದೂ ಮಾನಸಿಕ ದೈಹಿಕ ಕಾರಣಗಳಿಗಾಗಿ ಮಾತ್ರವಲ್ಲ; ಯಾವುದು ಅವರಿಬ್ಬರನ್ನು ಬೆಸೆದಿತ್ತೋ ಈಗ ಅದು ಅವರು ಉಸಿರಾಡುವ ಗಾಳಿಯಲ್ಲಿಲ್ಲ. ಹಾಗೆಂದೇ ನನ್ನ ಗೆಳೆಯ ತನ್ನ ಖಾಸಗಿ ಜೀವನದ ಕಷ್ಟಗಳನ್ನು ವ್ಯಾಖ್ಯಾನಿಸುತ್ತಾನೆಂಬುದು ಗಮನಿಸಬೇಕಾದ ಸಂಗತಿ. ಚಿತ್ರಕಾರಳಾದ ಹೆಂಡತಿ ವಸ್ತುವಿಗಿಂತ ಹೆಚ್ಚಾಗಿ ರೂಪದಲ್ಲಿ ಮಗ್ನಳಾದಳು; ರೂಪಮಗ್ನತೆ ಕ್ರಮೇಣ ಅಮೂರ್ತ ವಿಚಾರಗಳ ಸ್ವಪ್ರತಿಷ್ಠೆಯಾಯಿತು. ತನ್ನ ಹೆಂಡತಿ ಹೆಚ್ಚು ಹೆಚ್ಚಾಗಿ ಹೀಗೆ ಸ್ವಮಗ್ನಳಾಗುತ್ತ ಹೋದಂತೆ ತಾನೂ ಅವಳಿಂದ ದೂರವಾದೆ ಎಂದು ತಮ್ಮ ದಾಂಪತ್ಯವನ್ನೂ ರಾಜಕೀಯ ಚಿಂತನೆಯ ಒಂದಂಶವಾಗಿ ಕಾಣುವ ನನ್ನ ಗೆಳೆಯ ತನ್ನ ಬಗ್ಗೆಯೂ ವ್ಯಥೆಯಿಂದ ಹೇಳಿಕೊಳ್ಳುತ್ತಾನೆ. “ನಾನೂ ಈಚೆಗೆ ಬರಿದಾಗಿಬಿಟ್ಟಿದ್ದೇನೆ. ಏನೋ ಹಳೆಯ ಕಾಲದ ಹಳಹಳಕೆಯಿಂದಾಗಿ ಈ ಕರಪತ್ರಗಳನ್ನು ಅಚ್ಚುಮಾಡಿಸಿ ಹಂಚುತ್ತೇನೆ – ಅಷ್ಟೆ. ಆದರೆ ನನ್ನ ಹೃದಯವಿರುವುದು ಈಗ ಇಲ್ಲಿ ಯಾರಿಗೂ ಬೇಡದ ಪಾಂಡಿತ್ಯದ ಪ್ರಶ್ನೆಗಳಲ್ಲಿ. ಆದರೆ ನಾನು ಕೆಲಸ ಮಾಡುತ್ತಿರುವ ಸರಕು ನಿನ್ನ ದೇಶದಲ್ಲಿ ಇನ್ನೂ ಎಷ್ಟು ನೈಜ – ಅದೇ ನನ್ನ ಸಮಾಧಾನ. ಸಂಸ್ಕೃತಿಯ ದೃಷ್ಟಿಯಿಂದ ಶೇಕ್ಸ್‌ಪಿಯರ್‌ಗಿಂತ ವಾಲ್ಮೀಕಿಯೇ ಹೆಚ್ಚು ಜೀವಂತ ಅಲ್ಲವೇ ಹೇಳು”. +ಅರವತ್ತರ ದಶಕದ ಆದರ್ಶಗಳನ್ನು ಇನ್ನೂ ಉಳಿಸಿಕೊಂಡ ಈ ಗೆಳೆಯನಂಥವರ ಸ್ವಂತ ಜೀವನದ ಅನಿವಾರ್ಯ ಕಷ್ಟಗಳು, ಭಾರತದಲ್ಲಿ ಅಂಥವರ ಆಸಕ್ತಿ _ ಈ ಎರಡೂ ನನಗೆ ಅರ್ಥಪೂರ್ಣವೆನ್ನಿಸಿದುವು. ಎಲ್ಲೇ ಆಗಲಿ, ಯಾವತ್ತೇ ಆಗಲಿ ನಾವು ಬದುಕುವ ಜೀವನ ನಮ್ಮದು ಮಾತ್ರವಲ್ಲ, ಸುಲಭವೂ ಅಲ್ಲ. ಮಕ್ಕಳು ಸ್ಕೂಲಿನಿಂದ ಬರುವ ಮುಂಚೆ ಅವಸರವಾಗಿ ಮನೆಗೆ ಹೋಗಿ ಊಟಕ್ಕೆ ಸಿದ್ಧಮಾಡುವ ಈ ನನ್ನ ಗೆಳೆಯ ಪಾಲನೆಯ ಕಟ್ಟುಪಾಡುಗಳಿಗೆ ಬದ್ಧನಾಗಿದ್ದು, ಈ ಪಾಲನೆಯ ಅವಿಭಾಜ್ಯ ಅಂಶವಾಗಿಯೇ ರಾಜಕೀಯವನ್ನೂ ಕಾಣುತ್ತಾನಲ್ಲ – ಅದೇ ನನಗೆ ಅಮೆರಿಕಾದ ಅರವತ್ತರ ದಶಕದ ಹೆಚ್ಚುಗಾರಿಕೆಯೆನ್ನಿಸಿತು. +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […] +‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_181.txt b/Kannada Sahitya/article_181.txt new file mode 100644 index 0000000000000000000000000000000000000000..855ba527d4933ff15a22bf170a7b1895b36a8d7f --- /dev/null +++ b/Kannada Sahitya/article_181.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: +ಬೆಟ್ಟ ಮಾಡಿ ರವೆಯಷ್ಟನ್ನು +ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. +ಅವುಗಳಿಗೆ ಅತಿ ಮುಖ್ಯ +ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. +ಶಾಶ್ವತದ ಹೂರಣಕ್ಕೆ ಮಾಡಿ ದಖಲ್ ಪಟ್ಟಿ +ಮುಜುರೆ ಸಲ್ಲಿಸುತ್ತವೆ +ಸಾಮಯಿಕ ಕಣಕಕ್ಕೆ ಪಟ್ಟಿ ಕಟ್ಟಿ. +ತಾರಾಮೌಲ್ಯವಿರದ ಭೂಪ +ಅವುಗಳ ಪಾಲಿಗೆ ಮರೆವಿನ ಕೂಪ; +ಚಾಲ್ತಿಯಿಲ್ಲದ ಭೂಗತ ಸ್ತೂಪ. +ಎಂದೇ, ಆ ಮಾಧ್ಯಮಗಳ ಉದ್ದಗಲ +ಲೌಕಿಕ ಸಾಧಾರಣರದೇ ನಿತ್ಯ ಗದ್ದಲ: +ರಾಜಕಾರಣಿ ಶಕುನಿ, ಸಿನಿಮಾ ಮೊದ್ದು ಕಣ್ಮಣಿ, +ಕ್ರಿಕೆಟ್ ಶಿಖಾಮಣಿಗಳದೇ ಕೈಫಿಯತ್ತು; +ಅವರದೇ ದೇಖಾವೆಯ ದೊಂಬರಾಟದ ಗರ್ದಿ ಗಮ್ಮತ್ತು. +– ೨ – +ಸಾಧನಾಸಮರ್ಪಿತ ಅಂತರ್ಮುಖಿಗಳಾಗಿ +ಲೋಕ ಕಲ್ಯಾಣಾರ್ಥ ಜೀವವನೆ ಚಂದನಗಳಾಗಿ ನೀಗಿ +ದೂರದೇಕಾಂತದಜ್ಞಾತ ಎಡೆಗಳಲ್ಲಿ +ಪರಿಪಕ್ವವಾಗುತ್ತ ಆಧ್ಯಾತ್ಮ ಅನುಭಾವದಡೆಗಳಲ್ಲಿ, +ಕಂಗಾಲರನವರತ ಕೈಂಕರ್ಯದಾರೈಕೆಯಲ್ಲಿ, +ಸಚರಾಚರದ ಶ್ರೇಯಸಿನ ಹಾರ್ದ ಹಾರೈಕೆಯಲ್ಲಿ +ಬದುಕ ಕೃತಕೃತ್ಯತೆಗೆ ಹಾಯಿಸಿದ +ಯೋಗಿ ಸಂತ ದಾರ್ಶನಿಕ ಮಹಾಕವಿ ಸತ್ವಗಳ +ತೇಜೋಜ್ವಲ ಚಿರ ಚೇತನ ಮಹತ್ವಗಳ +ಅರಿವು ಬಾರದು ಸಮೂಹ ಮಾಧ್ಯಮಗಳಿಗೆ +ದಿನನಿತ್ಯದಾಗುಹೋಗುಗಲ ಬಾಲವನು +ನೇರ್ಪಡಿಸುವುದರಲ್ಲಿ ನಿಮಗ್ನವಾದ ನಫೆಯ ನಳಿಗೆಗಳಿಗೆ. +– ೩ – +ಲೋಕದ ಜಾಯಮಾನವೇ ಹೀಗೆ +ಸುಪ್ರಶಸ್ತ ಅದಕ್ಕೆ ಕಾಗೆ, ಡೇಗೆ; +ನೆನಪಾಗುವುದು ಅಪರೂಪ ಸೋಗೆ. +ಅದರ ಸ್ಥೂಲ ದೃಷ್ಟಿಗೆ ಬಿದ್ದು +ಕಾಣಿಸುವುದು ತತ್‌ಕ್ಷಣಕ್ಕೆದ್ದು +ಮೇಲುಗಡೆ ರಾರಾಜಿಸುವ ಹರಳಿನುಂಗುರದ +ನಾಲ್ಕು ಬೆರಳು ಮಾತ್ರ; +ತಗ್ಗಿನ ಹೆಬ್ಬೆಟ್ಟು ಅದರ ಕೃಪಾವಲೋಕನಕ್ಕೆ ಚಿರ ಅಪಾತ್ರ. +ಅದರದು ಕೆಳಗಿರುತ್ತಲೇ, +ಸ್ವಂತ ಮೇಲ್ಮನೆಯನು ಮರೆಸುತ್ತಲೇ +ಸಲ್ಲಿಸುತ್ತದೆ ಸತ್ಕಾಯಕವ, ನಿರಾಭರಣ. +ಎಂದೇ, ಎಲ್ಲ ಬೆರಳುಗಳಿಗಿಂತ ಅದು ಗಣ್ಯ, ಅಸಾಧಾರಣ. +ಅದರ ನೆರವಿರದೆ ಯಾವುದನು ತಾನೆ +ಹಿಡಿಯಲಾದೀತು ಗಟ್ಟಿ? +ಕಾರ್ಯ ನೆರವೇರಿಸಲಾದೀತು ಬೆರಳುಗಳು ಮುಟ್ಟಿ? +ಅದನುಳಿದು ಮುಚ್ಚಿದರೆ +ಅಪೂರ್ಣ, ಅಸಾರ್ಥಕ ಭದ್ರ ಮುಷ್ಟಿ. +***** +ಕೀಲಿಕರಣ: ಶ್ರೀನಿವಾಸ +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_182.txt b/Kannada Sahitya/article_182.txt new file mode 100644 index 0000000000000000000000000000000000000000..3a40360f2aae22f98c26d9a623fe6a9a02eb1f68 --- /dev/null +++ b/Kannada Sahitya/article_182.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಚೆಪ್ಪೆ +ನೆಲದಾಳದಿಂದ +ಬಳಕ್ಕನೆ ಪುಟಿದ +ದಳ ದಳ ಬಣ್ಣ +ಹೊರತಾಗದ +ಸುಖದಚ್ಚರಿ +***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಸ್‌ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. ***** +ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_183.txt b/Kannada Sahitya/article_183.txt new file mode 100644 index 0000000000000000000000000000000000000000..f152ff094d5540d907585e169e62849c9c55e4c1 --- /dev/null +++ b/Kannada Sahitya/article_183.txt @@ -0,0 +1,130 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. +ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು ಅವಸರದಿಂದ ಎಬ್ಬಿಸಿದ ತಾಕೆಂದು ಅಮಲಿನಲ್ಲಿದ್ದ ಅವರೂ ಕೇಳಲಿಲ್ಲ. ಗುಡಸೀಕರನೂ ಎದ್ದ “ಒಳಗ ಹಣಕಿ ಹಾಕೋ ರಾಜಾ, ನಿನಗಾಗಿ ಏನ ತಂದೆನ್ನೋಡು ಎಂದು ಹೇಳಿ ಗುಡಸೀಕರನನ್ನು ಅಲ್ಲೇ ಬಿಟ್ಟು ಮಿಕ್ಕವರೊಂದಿಗೆ ಹೊರಬಂದು ಬಾಗಿಲಿಕ್ಕಿಕೊಂಡ. ಒಳಗೆ ಚಿಮಣಾ ಇದ್ದಳು. +ಊರು ವಿ-ವಿಚಿತ್ರವಾಯಿತು +ಚುನಾವಣೆ ಆ ಸಣ್ಣ ಹಳ್ಳಿಗೆ ವಿಚಿತ್ರವಾಗಿ ಕಂಡಿತು. ಚತುಷ್ಟಯರ ಹಿರಿಯರು ಗೌಡರ ವಿರುದ್ಧ ನಿಂತುದಕ್ಕೆ ಬೈದು ಬುದ್ಧಿ ಹೇಳಿದರು. ಅದೇನು ಭಂಡತನವೋ, ಒಳಕ್ಕಿಳಿವ ಹೆಂಡವೋ ನಿಂತರೆ ತಪ್ಪೇನೆಂದು ಸಾಧಿಸಿದರು. ಹ್ಯಾಗೂ ಸೋಲುತ್ತವೆ, ನಿಂತರೆ ನಿಂತುಕೊಳ್ಳಲೆಂದು ಅವರೂ ಸುಮ್ಮನಾದರು. ಇಷ್ಟಾಗಿಯೂ ಊರ ಜೀವನ ನೆಮ್ಮದಿಯಾಗೇ ಇತ್ತು. ಚುನಾವಣೆಯ ಹುಳ ಕೊರೆಯುತ್ತಿದ್ದುದು ಇವರ ತಲೆಯಲ್ಲಿ ಮಾತ್ರ. +ಸರಕಾರೀ ಕಚೇರಿಯಿಂದ ಹುರಿಯಾಳುಗಳ ಹೆಸರು ಸ್ಥಿರಪಟ್ಟಿ ಬಗ್ಗೆ ಪತ್ರ ಬಂತು. ಶ್ರೀ ಪರಗೌಡಾ ಶಿವಗೌಡಾ ನಾಯಕ, ಶ್ರೀ ದತ್ತೋಬಾ ದೋಂಡೋಬಾ ಕುಲಕರ್ಣಿ, ಶ್ರೀ ಬಾಳಪ್ಪ ಬಸವಂತಪ್ಪ ಮುಗಳಿ, ಶ್ರೀ ಬಸೆಟ್ಟಿ ಪರಮಸೆಟ್ಟಿ ಪುಗಸೆಟ್ಟಿ, ಶ್ರೀ ನಿಂಗಪ್ಪ ಗೊಲೇರ, ದೇವರೇಸಿ ಇವರು ಐದು ಜನ ಒಂದು ಪಕ್ಷವಾದರೆ ಶ್ರೀ ಜಿ. ಎಂ. ಗುಡಸೀಕರ ಬಿ. ಎ. ಎಲ್. ಎಲ್.ಬಿ, ಶ್ರೀ ಸಿ. ಬಿ. ರಮೇಸ್, ಶ್ರೀ ಎಂ.ವಾಯ್ ಮೆರಮಿಂಡ, ಶ್ರೀ ಡಿ. ಬಿ. ಸಾತೀರ, ಶ್ರೀ ಎಸ್. ಎಸ್. ಕಡ್ಲಿ( ಅಂದರೆ ಕಳ್ಳ ಸಿದರಾಮ) ಇವರು ಇನ್ನೊಂದು ಪಕ್ಷವಾದರು ಜನ ಚುನಾವಣೆ ಅರಿಯದವರಲ್ಲ. ಈ ಹಿಂದೊಮ್ಮೆ ಒಂದು ನಡೆದಿತ್ತು. ಹೂಡಿದ ಎತ್ತು, ಗುಡಿಸಲ ಚಿತ್ರಗಳ ಮಧ್ಯೆ. ಹೂಡಿದ ಎತ್ತು ನಮ್ಮ ತಂದೆ ಇದ್ದ ಹಾಗೆ. ಅದಕ್ಕೇ ಹೋಟು ಬರೆಯೋಣ ಎಂದು ಗೌಡ ಹೇಳಿದ್ದರಿಂದ ಹೋಗಿ ಹೋಟು ಬರೆದು ಬಂದಿದ್ದರು. ಈ ಸಲ ಗುಡಸೀಕರನ ಗುಂಪಿಗೆ ತಕ್ಕಡಿಯ ಗುರುತನ್ನು ಕೊಡಲಾಗಿತ್ತು. +ಚತುಷ್ಟಯರು ಕೈಯಿಂದ ಹಣ ಖರ್ಚು ಮಾಡುವಂಥದೇನೂ ಇರಲಿಲ್ಲ, ಗುಡಸೀಕರನ ದಯದಿಂದ. ಆದ್ದರಿಂದ ನಾಲ್ವರೂ ಧಾರಾಳಿಗಳಾದರು. ಮಾತಾಡಿಸಿದವರಿಗೆಲ್ಲ ಬೀಡಿ ಕೊಡುತ್ತ ತಮಗೇ ಹೋಟು ಹಾಕಬೇಕೆಂದರು. ಬಸವರಾಜು ಬೆಳಗಾವಿಯಿಂದ ಒಬ್ಬ ಪೇಂಟರನ್ನು ಗೊತ್ತು ಮಾಡಿ ತಂದ. ಬಂದವನು ಗುಡಸೀಕರನ ಮನೆಯ ಸುಣ್ಣದ ಗೋಡೆಯ ಮೇಲೆ ದೊಡ್ಡ ತಕ್ಕಡಿಯ ಚಿತ್ರ ಬರೆದು “ನಿಮ್ಮ ಹೋಟು ತಕ್ಕಡಿಗೆ” ಎಂದು ಬರೆದಿದ್ದ. +ಬಣ್ಣದಿಂದ ಬರೆದ ಆ ಚಿತ್ರ ಎಷ್ಟು ದೂರದಿಂದ ನೋಡಿದರೂ ಒಡೆದು ಕಾಣುತ್ತಿತ್ತು. ಜನ ಗುಡಸೀಕರನ ಮನೇ ಮುಂದೆ ನಿಂತು, ನಡೆದಾಡಿ ನೋಡಿ ನೋಡಿ ಬಂದರು. ಚಿತ್ರಗಾರ ಪುಕ್ಕಟ್ಟಿ ಬರೆಯುವುದು ಗೊತ್ತಾದೊಡನೆ ಬಸವರಾಜನಿಗೆ ವಿನಂತಿಸಿಕೊಂಡು ಜನ ತಂತಮ್ಮ ಮನೆ ಗೋಡೆಗಳ ಮೇಲೆ ಅಂಥವೇ ಚಿತ್ರ ಬರೆಸಿದರು. ಹೀಗಾಗಿ ಪ್ರತಿ ಮನೆಯ ಗೋಡೆಯ ಮೇಲೆ ಚಿತ್ರದ ತಕ್ಕಡಿ ತೂಗ ತೊಡಗಿತು. ಮಕ್ಕಳು “ನಮ್ಮ ಮನೆಯ ತಕ್ಕಡಿ ದೊಡ್ದದು, ನಿಮ್ಮದು ಸಣ್ಣದೆಂದು ತಂತಮ್ಮಲ್ಲಿ ಜಗಳವಾಡತೊಡಗಿದರು. ಕೆಲವು ಸ್ಥಳಿಕ ಕಲಾವಿದರು ಬರೀ ತಕ್ಕಡಿಯಲ್ಲಿ ಹಣ್ಣು, ತೆಂಗಿನಕಾಯಿ, ವೀಳ್ಯೆದೆಲೆ ಬರೆದರು. ಇನ್ನೊಬ್ಬ ಕಲಾವಿದ ಒಂದು ಪರಡಿಗೆಯಲ್ಲಿ ಹಕ್ಕಿಯನ್ನೂ ಇನ್ನೊಂದರಲ್ಲಿ ರೂಪಾಯಿಗಳನ್ನೂ ಬರೆದ. ಗೌಡನಪಕ್ಷದವರು ಬರೆಸಲಿಲ್ಲವಾದ್ದರಿಂದ ಮರದ ಚಿತ್ರ ಮೂಡಲೇ ಇಲ್ಲ. ಆದರೆ ಗೌಡನ ಪಕ್ಷದ ಸಂಕೇತ ಮರವೆಂದು ಗುರುತಾದೊಡನೆ ತಂತಮ್ಮ ಮನೆಗಳ ತಕ್ಕಡಿಯಲ್ಲಿ ಮರ ಕೂರಿಸಿದಂತೆ, ಅದರ ಮೇಲೆ ಹಕ್ಕಿ ಕೂತ ಹಾಗೆ, ಅದರ ನೆರಳಿನಲ್ಲಿ ದನ ನಿಂತಂತೆ, ಕೆರೆಯಲ್ಲಿ ಕರಿಮಾಯಿ ಕಮಲದ ಹೂ ಹಿಡಿದಿದ್ದಂತೆ ಚಿತ್ರ ಬರೆದರು. ಹೀಗಾಗಿ ಇಡೀ ಊರು ತಕ್ಕಡಿ ಮರಗಳ ವಿಚಿತ್ರ ಪ್ರದರ್ಶನದಂತೆ ಕಾಣುತ್ತಿತ್ತು. +ಊರು ರಂಗು ರಂಗಾಗಿ ಕಂಡಿತಲ್ಲ, ಹಳೆಯ ಮಂದಿ ಅವರೂ ಸೋಜಿಗಪಟ್ಟರೇ, ಆನಂದಪಟ್ಟರೇ, ನೆವದಲ್ಲಿ ನೆವ ಊರಾದರೂ ಚೆಂದಾಯಿತಲ್ಲ ಎಂದರು. ಆದರೆ ಅವರಿಗೆಂದೂ ತಮ್ಮ ಯಶಸ್ಸಿನ ಬಗ್ಗೆ ಸಂದೇಹ ಬರಲಿಲ್ಲ, ಜನಕ್ಕೂ. +ಇತ್ತ ಚತುಷ್ಟಯರು ಅಂದಂದಿನ ಪರಿಣಾಮಗಳನ್ನು ಚರ್ಚಿಸಲು ಪ್ರತಿದಿನ ಗುಡಿಸಲಿನಲ್ಲಿ ಸೇರುತ್ತಿದ್ದರು. ನಾಳೆ ಮಾಡಬೇಕಾದ ಕೆಲಸಗಳನ್ನು ಬಸವರಾಜು ವಿವರಿಸುತ್ತಿದ್ದ. ಅವನ ತಂತ್ರಗಳ ಬಗ್ಗೆ ಈಗ ಗುಡಸೀಕರನಲ್ಲೂ ನಂಬಿಕೆ ಮೂಡಿತ್ತು. ಯಾಕೆಂದರೆ ತಕ್ಕಡಿಯ ಚಿತ್ರ ಬರೆಸುವ ಮೂಲ ವಿಚಾರ ಆತನದೆ. ಈಗಂತೂ ಅವನ ಮಾತೇ ಮಾತು. ಪ್ರಚಾರ ಮಾತ್ರ ಏಕಪಕ್ಷೀಯವಾಗಿತ್ತು. ಈ ತನಕ ಮಂದಿಗೆ ಬೀಡಿಕೊಟ್ಟು, “ನಮಗ ಹೋಟು ಹಾಕ್ರಿ” ಎಂದು ಹೇಳುತ್ತಿದ್ದವರು. ಈಗ ಸಿಗರೇಟು ಹಂಚತೊಡಗಿದರು. ಒಂದು ದಿನ ಬಸವರಾಜು ಇದ್ದಕ್ಕಿದ್ದಂತೆ ಬೆಳಗಾವಿಗೆ ಹೋಗಿ ಇನ್ನೂರು, ಮುನ್ನೂರು ಬಾಡಿತಂದು, ಗಿರಿಜಾ ಮೂಲಕ ಹೆಂಗಸರಿಗೆ ಗೋಪ್ಯವಾಗಿ ಹಂಚಿ, ಆ ಎಲ್ಲರಿಂದಲೂ ಗುಡಸೀಕರ ಪಾರ್ಟಿಗೇ ಹೋಟು ಹಾಕುವಂತೆ ಕರಿಮಾಯಿಯ ಆಣೆ ಮಾಡಿಸಿದ್ದ. +ಇತ್ತ ಚತುಷ್ಟಯರು ಸುಮ್ಮನೆ ಕೂತಿರಲಿಲ್ಲ. ಸಾಲೆ ಮಕ್ಕಳ ಮೆರವಣಿಗೆಯಲ್ಲಿ ದಿನಾ ಮಾಲೆ ಹಾಕಿಕೊಂಡಿ ಕಂಡ ಕಂಡವರಿಗೆ ಬೀಡಿ ಸಿಗರೇಟು ಕೊಡುತ್ತ ಪ್ರಚಾರ ಮಾಡತೊಡಗಿದರು. ಎಲ್ಲಕ್ಕಿಂತ ಹೆಚ್ಚಾಗಿ ನಾಲ್ವರಿಗೂ ಪುಷ್ಕಳ ಸಿಕ್ಕುತ್ತಿದ್ದ ಭಾಷಣದ ಅವಕಾಶಗಳನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇವರ ಭಾಷಣ ಕೇಳಲಿಕ್ಕೆ ಜನ ಬರಲಿ, ಬಿಡಲಿ, ಒಬ್ಬರಿರಲಿ, ಇಬ್ಬರಿರಲಿ, ಬಸವರಾಜು ಕಲಿಸಿದ ಸ್ಟೈಲಿನಲ್ಲಿ ನಿಂತುಕೊಂಡು ಭಾಷಣ ಮಾಡುತ್ತಿದ್ದರು. ಬರೀ ಒಬ್ಬಿಬ್ಬರು ಗಂಡಸರಿದ್ದ ಸಭೆಯಲ್ಲಿ ಚತುಷ್ಟಯರು “ನನ್ನ ನೆಚ್ಚಿನ ಬಂಧು ಭಗಿನಿಯರೇ” ಎಂದೇ ಸುರುಮಾಡಿ ಜೈಹಿಂದಿನಲ್ಲೇ ಮುಗಿಸುತ್ತಿದ್ದರು. ಮಕ್ಕಳು ಮೆರವಣಿಗೆ ಹೊರಟಾಗ “ಮುದಿಯರ ಕಾಲ ಮುಗೀತು, ತರುಣರ ಕಾಲ ಸುರುವಾತು, ಹಳಬರ ಗೊಡ್ಡು ನೀತಿಗೆ ದಿಃಕ್ಕಾರ! ಹೊಸ ರೀತಿಗೆ ಜಯಕಾರ! ಏನೇ ಬರಲಿ, ಒಗ್ಗಟ್ಟಿರಲಿ”, ಇತ್ಯಾದಿ ಕಿರುಚುತ್ತಿದ್ದವು. ಚತುಷ್ಟಯರ ಪೈಕಿ ಇದ್ದುದರಲ್ಲೇ ಸ್ವಲ್ಪ ಸ್ವಂತಿಕೆಯಿದ್ದವರೆಂದರೆ ಕಳ್ಳ ಹಾಗೂ ರಮೇಸ. ಕಳ್ಳ ಉಳಿದವರಂತೆ ಭಾಷಣ ಸುರುಮಾಡಿ ಮುಗಿಸುತ್ತಿದ್ದರೂ ಮಧ್ಯದಲ್ಲಿ ದೃಷ್ಟಾಂತಗಳನ್ನು ಸೇರಿಸುತ್ತಿದ್ದ. ಅವನ ಭಾಷಣದ ಸಾಧ್ಯವಾದಷ್ಟು ಅಶ್ಲೀಲವಲ್ಲದ ಭಾಗವನ್ನು ಕೆಳಗೆ ಉದಾಹರಿಸಿದ್ದೇನೆ. +“ಒಬ್ಬಾಕಿ, ಒಳೇ ಚಂದ, ನವ ತರುಣಿ ಇದ್ದಳಂತ. ಮದಿವ್ಯಾಗೋ ವಯಸ್ಸು ಬಂತು. ಯಾರನ್ನ ಮದಿವ್ಯಾಗಬೇಕು? ವಾರಿಗಿ ಹುಡುಗನ್ನ ಮದಿವ್ಯಾದರ ಅವಂಗ ರಾತ್ರಿ ಬರೋಬರಿ ಕೆಲಸಾ ಮಾಡಾಕ ಬರತೈತೋ ಇಲ್ಲೋ! ಅದಕ್ಕೆ ಒಬ್ಬಾಂವ ವಯಸ್ಸಾದ ಮುದುಕನ್ನ ಮದಿವ್ಯಾದರ, ಹೆಂಗೂ ಅನುಭವ ಇರತೈತಿ, ಕೆಲಸಾ ಬರೋಬರಿ ಮಾಡತಾನು! +ನನ್ನ ನೆಚ್ಚಿನ, ಅಚ್ಚುಮೆಚ್ಚಿನ ಶಿವಾಪುರದ ಬಾಂಧವರೇ, ಹಾಂಗ ತಿಳಕೊಂಡ ಆಕಿ ಮುದುಕನ್ನ ಮದಿವ್ಯಾದಳಂತ! ರಾತ್ರಿ ಸಡಗರ ಮಾಡಿಕೋತ ಹ್ವಾದರ ಅಲ್ಲೇನೈತಿ? ಅನುಭವ ಇತ್ತ ಖರೆ! ಗೂಟ? ಆದ್ದರಿಂದ ನನ್ನ ಬಂಧು ಭಗಿನಿಯರೇ, ಆ ನವ ತರುಣಿ ಹಾಂಗ ಹಳೇ ಬುಡ್ಡಾಗೋಳಿಗಿ ಹೋಟ ಹಾಕಿ ಗೂಟ ಇಲ್ಲಬೇ ಅಂತ ಅಳಬ್ಯಾಡರಿ. ಜೈಹಿಂದ್.” +ಇದಕ್ಕೆ ರಮೇಸನ ವಿವರಣೆ ಹೀಗಿರುತ್ತಿತ್ತು: +“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಶಿವಾಪುರದ ಬಂಧು ಭಗಿನಿಯರೇ, ನಮ್ಮ ಕಳ್ಳರವರು ಹೇಳಿದ ಮಾತನ್ನು ಬರೋಬರಿ ತಿಳಕೊಳ್ಳಿರಿ. ಅವರು ಹೇಳಿದ ಕತೆ ಸುಳ್ಳಲ್ಲ. ಅದರೊಳಗ ನವತರುಣಿ ಅಂದರ ಹೋಟು ಹಾಕುವಂತಾ ನೀವು. ಬುಡ್ಡಾ ಅಂದರ ಗೌಡರ ಪಾರ್ಟಿ, ಮುದಿವ್ಯಾಗೋದಂದರ ಹೋಟ ಹಾಕೋದು; ರಾತ್ರಿ ಅಂದರ ಎಲೆಕ್ಷನ್ ಆದಮೇಲೆ ಅಂತ ಅರ್ತ. ಆ ನವ ತರುಣಿಯು ಯಾವ ರೀತಿ ಬುಡ್ಡಾನನ್ನು ಮದಿವ್ಯಾಗಿ ರಾತ್ರಿ ಗೂಟವಿಲ್ಲೆಂದು ಅತ್ತಳೋ, ಅದೇ ರೀತಿ ನೀವು ಗೌಡರ ಪಾರ್ಟಿಗೆ ಹೋಟು ಹಾಕಿ, ಬಂಧು ಭಗಿನಿಯರೇ, ಗೋಳಾಡಬ್ಯಾಡಿರಿ. ಮದುವೆ ಜೀವನದಾಗ ಮ್ಯಾಲಿಂದ ಮ್ಯಾಲ ಆಗೋದಿಲ್ಲ. ಈಗ ಆ ನವ ತರುಣಿ ಏನು ಮಾಡಬೇಕು? ಗೂಟಿಲ್ಲದ ಬುಡ್ಡಾ ಒಂದು ಕಡೆ, ನವ ಪ್ರಾಯ ತುಂಬಿ ತುಳುಕುವ ನವ ತರುಣ ಇನ್ನೊಂದು ಕಡೆ. ವಿಚಾರ ಮಾಡಿರಿ, ಏನು ಮಾಡಬೇಕು?” +ಅಷ್ಟರಲ್ಲಿ ಸಭಿಕರಲ್ಲಿ ಒಬ್ಬ “ಹಾದರ ಮಾದಬೇಕಪಾ” ಅಂದ. ರಮೇಸ ಅದನ್ನೇ ಮುಂದುವರೆಸಿದ. +“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಬಂಧು ಭಗಿನಿಯರೇ, ಮೊದಲೇ ನವ ತರುಣನಾದ ಹುಡುಗನ್ನ ಮದಿವ್ಯಾಗಿದ್ದರೆ ಹಾದರ ಯಾಕೆ ಮಾಡಬೇಕಾಗಿತ್ತು? ಅದಕ್ಕೆ ನಮಗೇ ಹೋಟು ಹಾಕಿರಿ. ಜೈಹಿಂದ್!” +ಇವರು ಇಷ್ಟೆಲ್ಲ ಪ್ರಚಾರ ಮಾಡಿದ ಮೇಲೆ ಯಾವನಾದರೊಬ್ಬ “ಛೇ ಛೇ ನೀವೆಲ್ಲಾ ಗೌಡರ ಮುಂದಿನ ಕರುಗಳು. ಇನ್ನ ತಲೀ ಮ್ಯಾಲಿನ ಮಾಂಸ ಆರಿಲ್ಲ, ಚುನಾವಣೆ ಗೆಲ್ಲತಾರಂತ” ಹೀಗಂದರ ಸಾಕು ಪ್ರಚಾರ ಇನ್ನೂ ತೀವ್ರವಾಗುತ್ತಿತ್ತು. +ಬಹಳ ದಿನಗಳಿಂದ ಮನರಂಜನೆ ಕಾಣದಿದ್ದ ಊರಿಗೆ ಇದೆಲ್ಲ ಸೊಗಸಾಗೇ ಕಂಡಿತು. ಸೋಲು ಗೆಲುವುಗಳ ಬಗ್ಗೆ ಗುಡಸೀಕರ ಮತ್ತು ಪಾರ್ಟಿಯವರು ಮನಸ್ಸಿಗೆ ಹಚ್ಚಿಕೊಂಡಂತೆ ಉಳಿದವರ್‍ಯಾರೂ ಹಚ್ಚಿಕೊಳ್ಳಲೂ ಇಲ್ಲ. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿದ್ದ ಗೌಡನಿಗಾಗಲಿ, ಆ ಬಗ್ಗೆ ಸಹಾನುಭೂತಿಯಲ್ಲಿದ್ದ ಹಿರಿಯರಿಗಾಗಲಿ ಪ್ರಚಾರ ಮಾಡುವ ಬುದ್ಧಿ ಬರಲೇ ಇಲ್ಲ. ಅವರಿಗೂ ಪ್ರಚಾರದ ಈ ಹುಡುಗಾಟ ಮೋಜೆನಿಸಿತು. ಚುನಾವಣೆಯ ದಿನ ಸಮೀಪಿಸಿದಂತೆ ಗುಡಸೀಕರನ ಪಾರ್ಟಿಯವರ ಚಡಪಡಿಕೆ ಜಾಸ್ತಿಯಾಗುತ್ತಿತ್ತು.ಚಡಪಡಿಕೆಯಲ್ಲಿ ಒಮ್ಮೊಮ್ಮೆ ಅಲ್ಲದ್ದನ್ನೂ ಆಡುತ್ತಿದ್ದರು. “ಚಿಮಣಾನ ಬಸರ ಮಾಡಿದ ಗೌಡನಿಗೆ ಧಿಕ್ಕಾರ” ಎಂದು ಮಕ್ಕಳಿಂದ ಒದರಿಸಿದರು. ಆದರೆ ಜನ ಛೀ, ಥೂ ಉಗುಳಿ ಹುಡುಗರನ್ನು ಹೊಡೆದದ್ದರಿಂದ ಅಷ್ಟಕ್ಕೇ ನಿಲ್ಲಿಸಿದರು. +ನೆತ್ತಿಯ ಸೀಳಿದಂತೆ +ಹಗಲು ಹೊತ್ತಿನಲ್ಲಿ ಚತುಷ್ಟಯರ ಪ್ರಚಾರ ಕಾರ್ಯ ನಡೆದರೆ, ರಾತ್ರಿ ಹೊತ್ತು ಬಸವರಾಜೂನ ಸಂಚುಗಳು ನಡೆಯುತ್ತಿದ್ದವು. ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಅವು ಜನಗಳ ಕಣ್ಣಿಗೆ ಬೀಳುತ್ತಿರಲಿಲ್ಲ. +ಮುಂಗಾರಿ ಬೆಳೆ ಬಂದಾಗಿತ್ತು. ಹಿಂಗಾರಿಯಿನ್ನೂ ಹೊಲಗಳಲ್ಲಿತ್ತು. ಈಗ ದೇವರೇಸಿಗೆ ಮೈತುಂಬ ಕೆಲಸ. ಓಡಾಡಿ ಆಯ ತರಬೇಕಿತ್ತು. ಸಂಜೆಯ ತನಕ ಕಣದಿಂದ ಕಣಕ್ಕೆ ಅಲೆದಾಡಿ ಗುಡಿಸಲಿಗೆ ಬಂದರೆ, ಕಂಬಳಿ ಚೆಲ್ಲಿಕೊಂಡು ಬಿದ್ದರೆ ಸಾಕಾಗಿತ್ತು. ಆದರೆ ಎಷ್ಟಂದರೂ ಚಪಲದ ಬಾಯಿ, ಕಂಠಮಟ ಕುಡಿಯಬೇಕೆನಿಸಿ ಒಣಗುತ್ತಿತ್ತು. ಇತ್ತ ಲಗಮವ್ವನಿಗೂ ಆಯ ಸಂಗ್ರಹಿಸುವ ಕೆಲಸ. ಭಟ್ಟಿಯಿಳಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳು ಅಡಿಗೆ ಮಾಡಿಕೊಳ್ಳುವುದೇ ಅಪರೂಪವಾಗಿತ್ತು. ಹೊಲಗಳಲ್ಲಿ ರೈತರು ಕೊಡುವ ರೊಟ್ಟಿಯಿಂದಲೇ ತೃಪ್ತಳಾಗುತ್ತಿದ್ದಳು. ಇಷ್ಟು ದಿನ ಗುಡಿಸಲಲ್ಲಿ ದುರ್ಗಿಯಿರುತ್ತಿದ್ದಳು. ಲಗಮವ್ವ ಬೇಕೆನಿಸಿದರೆ ಒಂದು ರೊಟ್ಟಿ ಸುಡಿಸಿಕೊಳ್ಳುತ್ತಿದ್ದಳು. ಈಗ ದುರ್ಗಿಯ ಬಳಕೆ ಕಮ್ಮಿಯಾಗಿತ್ತು. +ಇತ್ತ ದಿನ ಅಲ್ಲ, ಕಾಲವಲ್ಲ, ಧೀನ್ ಅಂದ ಹಾಗೆ ಸುಂದರಿಯ ಸಡಗರ ಕಟ್ಟುಮೀರಿತ್ತು. ಗುಡಸೀಕರ ಮತ್ತೆ ಸಿಕ್ಕ ಸಂಭ್ರಮದಲ್ಲಿ ಮೈಮರೆತು ಖಬರಗೇಡಿಯಾಗಿದ್ದಳು. ಅವಳನ್ನು ಹಿಡಿಯುವುದೇ ಕಷ್ಟವಾಗಿ ಕಣ್ಣಿ ಬಿಚ್ಚಿದ ಉಡಾಳ ದನದಂತೆ ಮೈ ಉಮೇದಿಯನ್ನು ಕೇರಿಯ ತುಂಬ ತುಳುಕಿದಳು. ನೆಲ ಗುಡಿಸುವ ಹಾಗೆ ನೆರಿಗೆ ಹೊಡೆದು ಇಪ್ಪತ್ತು ರೂಪಾಯಿಯ ಶಾಪೂರಿ ಸೀರೆ ಉಟ್ಟು ಮೆರೆದಳು. ಬಾಡಿಯ ಎದೆಯಲ್ಲೆರಡು ಚೂಪಾದ ಚೂರಿ ಇಟ್ಟುಕೊಂಡು ಗುಡಸೀಕರನ ಕಣ್ಣಿರಿದಳು. ಸೊಂಟಕ್ಕೆ ಬೆಂಕಿ ಹಚ್ಚಿದಳು. ಮೂಗಿನ ದಿಗರಿನಲ್ಲಿ ಕೆಳಗಿನ ನೆಲ ಮರೆತಳು. ಜನ ಕೆಲಸಗಳಲ್ಲಿ ಬಹಿಷ್ಕಾರ ಮರೆತರು. ಇವಳ ಉಡಿಗೆ ತೊಡಿಗೆ ನಡಿಗೆಯ ವಿಲಾಸ ಊರವರ ಕಣ್ಣು ಕುಕ್ಕದಿರಲಿಲ್ಲ. ಆದರೆ ಹೇಳಿ ಕೇಳಿ ಸೂಳೆಯಾದ್ದರಿಂದ, ಅದೂ ಪರವೂರವಳಾದ್ದರಿಂದ ಅನ್ನುವಷ್ಟು ಅಂದು ಸುಮ್ಮನಾದರು. ಆದರೆ ಮೂಗಿನ ಮೂಗುತಿಯಲ್ಲೇ ನದರ ನೆಟ್ಟ ಸುಂದರಿಗೆ ಈ ಮಾತು ಕೇಳಿಸಲಿಲ್ಲ. ಚೈನಿಯ, ಪ್ರೇಮದ, ಕಾಮದ, ಸುಖದ ಉನ್ಮಾದದಲ್ಲಿ ಹುಚ್ಚು ಕುದುರೆಯಾಗಿದ್ದಳು. ಏರಿದವನ ಖರೆ, ಖೊಟ್ಟಿ, ತಿಳಿಯದೆ, ಗೊತ್ತುಗುರಿ ಗೊತ್ತಿಲ್ಲದೆ ಮೂಗಿನ ಮುಂದಿನ ದಿಕ್ಕಿಗೆ, ಎದುರು ತಗ್ಗಿರಲಿ, ದಿನ್ನೆಯಿರಲಿ, ಏಳಲಿ, ಬೀಳಲಿ, ಓಟಕ್ಕೆ ಸಿದ್ಧವಾಗುತ್ತಿದ್ದಳು. ಆದರೆ ಅವಳಿಗೂ ತಿಳಿದಿರಲಿಲ್ಲ. ತನ್ನ ನಿಜವಾದ ಸವಾರ ಯಾರೆಂದು. +ಇತ್ತ ಬಸವರಾಜು ಜಾತ್ಯಾ ಕಮ್ಮಾರನಂತೆ ಕುಲುಮೆಯಲ್ಲಿ ಅನೇಕ ಕಬ್ಬಿಣ ಹಾಕಿ ಕಾಸುತ್ತಿದ್ದ. ಚತುಷ್ಟಯರಿಂದ ತಿದಿ ಊದಿಸುತ್ತಿದ್ದ. ಇದ್ದಿಲು ಹಾಕುತ್ತಿದ್ದ. ಕಬ್ಬಿಣ ಕಾದೊಡನೆ ಗುಡಸೀಕರನಿಂದ ಹೊಡೆಸಿ ಏನೋ ಸಾಮಾನು ಮಾಡುತ್ತಿದ್ದ. ಆದರೆ ಮಾಡಿದ ಸಾಮಾನು ಯಾರಿಗೆ ಯಾವ ಕೆಲಸಕ್ಕೆ ಉಪಯೋಗ ಬೀಳುತ್ತದೆಂಬುದು ಮಾತ್ರ ಬೇರೆಯವರಿಗೆ ತಿಳಿಯುತ್ತಲೇ ಇರಲಿಲ್ಲ. ಅವನ ಕುಲುಮೆಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಸಲಾಕೆಯೊಂದಿತ್ತು. ಹೊಸ ಮಿದು ಕಬ್ಬಿಣವೊಂದು ಬಂದು ಸೇರಿತ್ತು. ಅದೇನು ಸಾಮಾನು ಮಾಡುತ್ತಾನೋ ನೋಡೋಣ. +ಒಂದು ದಿನ ದೇವರೇಸಿ ಹೊಲದಿಂದ ಮೂರು ಸಂಜೆಗೇ ಬಂದ. ಬಸವರಾಜು ಮೆತ್ತಗೆ ದೇವರೇಸಿಯ ಗುಡಿಸಲಲ್ಲಿ ಕಾಲಿಟ್ತ. ನೋಡನೋಡುತ್ತಿದ್ದಂತೇ “ತಾಯೀ” ಎಂದು ಬಂದವನೇ ಕಾಲು ಹಿಡಿದ. ಅವನ ಬಗ್ಗೆ ದೇವರೇಸಿಗೇನೂ ಸಿಟ್ಟಿರಲಿಲ್ಲ. ಅಸಮಧಾನವೂ ಇರಲಿಲ್ಲ. ಆದರೆ ಆತ ತನ್ನ ಗುಡಿಸಲಿಗೆ ಬಂದಾನೆಂದು ಕನಸು ಮನಸಿನಲ್ಲೂ ಧೇನಿಸಿದವನಲ್ಲ. ತಾನಾಗಿ ಗುಡಿಸಲಿಗೆ ಬಂದನಲ್ಲ, ದೇವರೇಸಿಗೆ ಸಂತೋಷವೇ ಆಯ್ತು. ಇಂಗರೇಜಿ ಕಲಿತವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಾರೆಂದು ಮನಸಿನಲ್ಲಿ ಸ್ವಲ್ಪ ಅಸಮಧಾನ ಕೂಡ ಇತ್ತು. ಗುದಸೀಕರ ಒಮ್ಮೆಯೂ ಇವನ ಕಾಲು ಮುಟ್ಟಿರಲಿಲ್ಲ. ತಾಯೀ ಅಂದಿರಲಿಲ್ಲ. ಈತನಾದರೆ ಗುಡಸೀಕರನಿಗಿಂತ ಸ್ವಲ್ಪ ಹೆಚ್ಚು ಕಲಿತಿರಬೇಕೆಂದೇ ಅನೇಕರು ಮಾತಾಡಿಕೊಂಡಿದ್ದರು. ಈಗ ಇವನೇ ಬಂದು ಕಾಲು ಹಿಡಿದು, ಕೊಡಬೇಕಾದ ಗೌರವ ಕೊಟ್ಟಿದ್ದನಲ್ಲ, ಆ ಮಾತು ನಿಜವೆನ್ನಿಸಿತು. ಆದರೆ ಕೂಡಲೇ ಏನು ಮಾಡಬೇಕು? ಏನು ಮಾತಾಡಬೇಕೆಂದು ತೋಚಲಿಲ್ಲ. ಎದ್ದು ಹೋಗಿ ಮೂಲೆ ನೆಲುವಿಗಿದ್ದ ಬಂಡಾರ ಚೀಲತಂದು ಅವನ ಹಣೆಗಂಟಿಸಿ ಕೂತ. ಬಸವರಾಜು ಕೈಮುಗಿದೇ ಕೂತ. “ತಾಯೀ ನಮ್ಮ ಗುಡಿಸಲ ತನಕ ಪಾದಾ ಬೆಳೆಸಿ, ನಮ್ಮ ಸೇವಾ ಒಪ್ಪಿಸಿಕೋಬೇಕು” ಅಂದ. ದೇವರೇಸಿಗೆ ಇನ್ನೂ ದಿಗಿಲು. ಅವನ ಬರುವಿನ ಹಾಗೆ ಅವನ ಈ ಮಾತನ್ನೂ ಆತ ನಿರೀಕ್ಷಿಸಿರಲಿಲ್ಲ. ಹೂಂ ಎನ್ನಬೇಕೆ?ಈ ಅಡ್ಡದಿನ ಅಡ್ಡವೇಳೆಯಲ್ಲಿ ಸೇವೆ ಒಪ್ಪಿಸಿಕೊಳ್ಳೋದೆಂದರೇನು? ಗುಡಿಸಲ ತನಕ ಬರಬೇಕಂತ ಅಲ್ಲವೆ ಹೇಳಿದ್ದು? ಹೋಗಿ ಅದೇನು ಸೇವೆಯೋ ನೋಡೋಣವೆಂದುಕೊಂಡು ” ಆಗಲಿ” ಅಂದ. ಬಸವರಾಜು ಎದ್ದುನಿಂತ ಕೈ ಮುಗಿದುಕೊಂಡೇ, ಅವನ ಹೋಗದೆ ಅಲ್ಲೇ ನಿಂತದ್ದನ್ನು ನೋಡಿ ಬಹುಶಃ ಈಗಲೇ ಬಾ ಅಂತಿದ್ದಾನೆಂದು ದೇವರೇಸಿಯು ಎದ್ದ. ಬಸವರಾಜು ಮುಂದೆ ಹೊರಟ. ದೇವರೇಸಿ ಬೆನ್ನು ಹತ್ತಿದ. +ಕಂಬಳಿ ಹಾಸಿತ್ತು. ತಾಯಿ ಗದ್ದಿಗೆಗೊಂಡಳು. ಬಸವರಾಜು ಒಳಹೊರಗೆ ಓಡಾಡುತ್ತ, ಸಂಭ್ರಮ ಮಾಡುತ್ತ ಒಂದು ಹರಿವಾಣ ತುಂಬ ವಿಸ್ಕಿ ಸುರಿದು ತಾಯಿಗಿತ್ತ. ತಾಯಿಗೆ ಹಿಗ್ಗೋ ಹಿಗ್ಗು. ಈಗ ಹದಿನೈದು ದಿನಗಳಿಂದ ಮುಟ್ಟಿರಲಿಲ್ಲವಲ್ಲ, ಕುಡಿಯೋದನ್ನ ಬಿಟ್ಟು ವರ್ಷವಾದಂತಾಗಿತ್ತು. ಅಲ್ಲದೆ ಈ ತನಕ ಕುಡಿದದ್ದು ಕಂಟ್ರಿ ಸೆರೆ; ಅದೂ ಲಗಮವ್ವ ಮಾಡಿದ್ದು. ಇದಾದರೆ ಥಳಥಳ ಹೊಳೆಯುವ ಬಣ್ಣದ ಬಾಟ್ಲಿಯಲ್ಲಿಟ್ಟಿದ್ದು, ತನ್ನೆದುರಿಗೇ ಅದನ್ನು ಒಡೆದದ್ದು. ಮುಂದಿಡುವುದೇ ತಡ ತಾಯಿ ಒಂದೇ ಗುಟುಕಿಗೆ ತಳಕ್ಕೊಂದು ಹನಿ ಕೂಡ ಬಿಡದೆ ಮುಗಿಸಿದಳು. ಕರುಳಿನಲ್ಲಿ ಭಗ್ಗನೆ ಹೊತ್ತಿದಂತಾಗಿ ಕಿವಿ, ಮೂಗು, ಬಾಯಿಗಳಲ್ಲಿ ಬಿಸಿ ಗಾಳಿ ಸೂಸಿತು. ಆಮೇಲೆ ಒಳಗೆ ಹೋಗಿ ಹರಿವಾಣದ ತುಂಬ ಖಂಡದ ಪಲ್ಯ, ಏಳೆಂಟು ರೊಟ್ಟಿ ತಂದು ಮುಂದಿಟ್ಟ. ತಾಯಿಯ ಕಣ್ಣರಳಿ, ಮೂಗರಳಿ, ಆ ಈ ಕಡೆ ನೋಡದೆ ಪಚಪಚ ತಿನ್ನತೊಡಗಿದಳು. +ನೀರು ಕೂಡ ಬೆರೆಸದೆ ಇಡೀ ಬಾಟ್ಲಿ ವಿಸ್ಕಿಯನ್ನು ಒಂದೇ ಗುಟುಕಿಗೆ ಸೇವಿಸಿದಾಗ ಬಸವರಾಜು ಕಣ್ಣಗಲಿಸಿ ಆಶ್ಚರ್ಯ ಸೂಚಿಸಿದ್ದರೆ ಚಿಮಣಾ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡು ಹೊಯ್ಮಾಲಿ ಹೊಯ್ಕಗೊಂಡಳು. ಈಗ ದೇವರೇಸಿ ಪ್ರಾಣಿಗಳ ಹಾಗೆ ಸಪ್ಪಳ ಮಾಡುತ್ತ ಖಂಡ ತಿನ್ನುವುದನ್ನು ನೋಡಿ ಬಸವರಾಜು ಮುಗುಳುನಕ್ಕ. ಒಳಗಿದ್ದ ಸುಂದರಿ ಇಶ್ಯೀ ಎಂದು ಕಿಸಕ್ಕನೆ ನಕ್ಕಳು. ದೇವರೇಸಿ ಮಾತ್ರ ಇದಾವುದರ ಪರಿವೆಯಿಲ್ಲದೆ ತಿನ್ನುತ್ತಿದ್ದ. +ಮೈಯಲ್ಲಿ ಸೊಂಟದ ಧೋತ್ರ ಬಿಟ್ಟರೆ ಒಂದು ಚೂರು ಬಟ್ಟೆಯಿರಲಿಲ್ಲ. ಖಂಡ ಹೆಂಡ ಎರಡೂ ಸೇರಿ ಮೈಮೇಲೆ ಧಾರಾಕಾರ ಬೆವರು ಸುರಿಯುತ್ತಿತ್ತು. ಮೊದಲೇ ಕರ್ರಗೆ ಕಬ್ಬಿಣದಂತಿದ್ದ ಮೈ, ಬೆವರಿನಿಂದ ಇನ್ನಷ್ಟು ಹೊಳೆಯತೊಡಗಿತ್ತು. ಆ ಮೈಕಟ್ಟಿಗೆ ಅರವತ್ತು ವರ್ಷ ಬಹಳವಾಯ್ತು. ಎದೆ, ರಟ್ಟೆಯ ಮಾಂಸಖಂಡ ಗಟ್ಟಿಗೊಂಡು ಹುರಿಯಾಗಿದ್ದವು. ಹಿಂದೆ ಮಾರುದ್ದ ಜಡೆ, ಮುಂದೆ ಗಡ್ಡ, ಹೆಂಗಸಲ್ಲದ ಗಂಡಸಲ್ಲದ ಆ ಆಕೃತಿ ವಿಶೇಷ ನೋಡಿ ಬಸವರಾಜನಿಗೆ ಮೋಜೆನಿಸಿತು. ಸುಂದರಿಗೂ ಮುಂದೆ ಬಂದು ದೇವರೇಸಿಯಿಂದ ನೋಡಿಸಿಕೊಳ್ಳಬೇಕೆಂದಳು. ತಾನು ಹೇಳದ ಹೊರತು ಹೊರಗೆ ಬರಕೂಡದೆಂದು ಬಸವರಾಜು ಹೇಳಿದ್ದ, ಸುಮ್ಮನಿದ್ದಳು. ಬಹುಶಃ ಖಾರ ಜಾಸ್ತಿಯಾಗಿರಬೇಕು ಪಲ್ಯಕ್ಕೆ. ದೇವರೇಸಿಯ ಮೂಗು ಸೋರಿ ಕಣ್ಣೀರೂ ಅದರೊಂದಿಗೆ ಬೆರೆತು, ಬೆವರುಗೈಯಿಂದಲೇ ಅದನ್ನೆಲ್ಲ ಒರೆಸಿಕೊಳ್ಳುತ್ತ ಉಂಡ. ಉಂಡಮೇಲೆ ಗುಡಿಸಲು ನಡುಗಿ, ಪಕ್ಕದ ಗುಡಿಸಲು ಮಕ್ಕಳು ಹೆದರಿ ಚೀರುವ ಹಾಗೆ ಡರ್ರ್ರ್ ಎಂದು ಢರಿಕೆ ತೇಗಿದ, ಸುಂದರಿಗೆ ಅಸಹ್ಯವಾಯ್ತು. +ಊಟವಾದ ಮೇಲೆ ಬಸವರಾಜು ಮತ್ತು ಸುಂದರಿ ಇಬ್ಬರೂ ಒಳಗೊಳಗೇ ನಗುತ್ತ ತಾಯಿಗೆ ಅಡ್ಡಬಿದ್ದರು. ತಾಯಿ ಅವರ ಹಣೆಗೆ ಬಂಡಾರ ಹಚ್ಚಲಿಲ್ಲ. ಹರಕೆ ನುಡಿಯಲಿಲ್ಲ. ತೇಲುಗಣ್ಣು ಮಾಡಿಕೊಂಡು ‘ತಾಯಿ’ ಎನ್ನುತ್ತ ಎದ್ದಳು. ತೂಕ ತಪ್ಪಿತು. ಬಸವರಾಜು ಹೋಗಿ ಹಿಡಿದುಕೊಂಡು ಅವಳ ಗುಡಿಸಲು ತನಕ ಹೋಗಿ ಬಿಟ್ಟುಬಂದ. +ಆ ದಿನ ರಾತ್ರಿ ದೇವರೇಸಿಗೆ ಯಾರೋ ನೆತ್ತಿಯ ಮೇಲೆ ಕೊಡ್ಲಿಯಿಂದ ಏಟು ಹಾಕಿದಂತೆ ಕನಸಾಯಿತು. ಗಡಬಡಿಸಿ ಎದ್ದುಕೂತ. ಬಿಕ್ಕಲಾಗಲಿಲ್ಲ. ಕನಸಿನ ಅರ್ಥವೂ ತಿಳಿಯಲಿಲ್ಲ. ಆದರೆ ಮಾರನೇ ದಿನದಿಂದ ತಾಯಿಯ ಕೃಪಾದೃಷ್ಟಿ ಬಸವರಾಜೂನ ಗುಡಿಸಲ ಕಡೆಗೆ ಬೀಳತೊಡಗಿತು. ಬಸವರಾಜು ನಿರಸೆಗೊಳಿಸಲಿಲ್ಲ. +ಊರು ಬೀದಿಗಿಳಿಯಿತು +‘ರಂಡಿ ಹುಣ್ಣಿವೆ’ಯಿನ್ನೂ ನಾಕು ದಿನ ಇತ್ತು. ಅಂದು ಮಧ್ಯಾಹ್ನ ಬೇಸಿಗೆಯಂಥ ಬಿಸಿಲು ಬಿದ್ದು ದನಕರು ಕೆರೆಯಲ್ಲಿ ಬಿದ್ದು ತಂಪಿನ ಅಮಲಿನಲ್ಲಿದ್ದವು. ಹೊಲಗಳಲ್ಲಿದ್ದವರು ಒಣ ಕನಿಕೆಯ ಗೂಡು, ಮರ, ಮರೆಯ ನೆರಳುಗಳಲ್ಲಿ ಆಶ್ರಯ ಪಡೆದಿದ್ದರು. ಭೂಮಿ ಸೀಮೆಯ ಸುತ್ತಮುತ್ತ ಎತ್ತ ನೋಡಿದರೂ ಬಿಸಿಲುಗುದುರೆಗಳ ಓಟ ಕಾಣಿಸುತ್ತಿತ್ತು. ಊರಿನಲ್ಲಿ ಜನ ಕಟ್ಟೆಗಳ ಮೇಲೆ, ಪಡಸಾಲೆಯಲ್ಲಿ ತಂಪಾಗಿ ಕೂತಿದ್ದರು. ಉರಿ ಬಿಸಿಲಿನ ಪ್ರತಾಪ ಎಷ್ಟು ತೀವ್ರವಾಗಿತ್ತೆಂದರೆ ಮಾತಾಡುವುದಕ್ಕೆ ಕೂಡ ಮನಸ್ಸಾಗುತ್ತಿರಲಿಲ್ಲ. ಹೀಗಾಗಿ ಹಗಲಾದರೂ ರಾತ್ರಿಯಷ್ಟೇ ಊರು ನಿಶ್ಯಬ್ದವಾಗಿತ್ತು. +ಅಷ್ಟರಲ್ಲಿ ಊರವರು ಹಿಂದೆಂದೂ ಕೇಳರಿಯದ, ಊಹಿಸಬರದ, ಕಲ್ಪಿಸಬರದ ವಿಕಾರ ಸ್ವರ ಕಿವಿಯಲ್ಲಿ ಗೂಟ ಜಡಿದಂತೆ, ಇಡೀ ಊರು ಸಿಡಿದು ಸ್ಪೋಟಗೊಂಡಂತೆ, ಗುಡ್ಡ ಉರುಳಿ ಮೈ ಮೇಲೆ ಬಿದ್ದಂತೆ ಕೇಳಿಸಿ ಊರಿಗೂರೇ ಕೆಲವು ಕ್ಷಣ ದಿಗ್ಭ್ರಮೆಗೊಂಡಿತು. ಮಲಗಿದ್ದವರು ದುಃಸ್ವಪ್ನ ಕಂಡಂತೆ ಚಕ್ಕನೆ ಎದ್ದು ಕೂತರು. ಕೆರೆಯಲ್ಲಿದ್ದ ದನಗಳು ಬೆದರಿ, ಹೊರಗೋಡಿದವು. ಅನೇಕರ ಸೀರೆ ಧೋತ್ರಗಳು ಒದ್ದೆಯಾದವು. ಮಕ್ಕಳು ಕಿಟಾರನೆ ಕಿರುಚಿದವು. ಲಗಮವ್ವ ಹೇಳಿದ್ದು ನಿಜವೇ ಎನ್ನುವುದಾದರೆ, ಕರಿಮಾಯಿಯ ಮೂರ್ತಿ ಈ ದನಿ ಕೇಳಿ ಗಕ್ಕನೆ ಹಾರಿ, ಕುಪ್ಪಳಿಸಿ, ಮುರಿದ ಕೈ ಜಾರಿ ಕೆಳಗೆ ಬಿತ್ತಂತೆ! ಲಗಮವ್ವ ಅದನ್ನು ಮತ್ತೆ ಅವಳ ಕೈಯಲ್ಲಿಟ್ಟು ನೋಡಿದಾಗ ಮೂರ್ತಿ ಸಣ್ಣದಾಗಿ ಬೆವರಿತ್ತಂತೆ! ಕೆರೆಯ ಸುತ್ತಲಿನ ಗಿಡಮರಗಳಲ್ಲಿ ಕೂತ ಹಕ್ಕಿ ಪಕ್ಕಿಗಳು ಏನೋ ಆಘಾತವಾದಂತೆ ಕಿರ್ರ್ ಎಂದು ಕಿರುಚು‌ಉ‌ಅ ಹಾರಾಡತೊಡಗಿದವು! ಏನೇನೂ ಅತಿಶಯೋಕ್ತಿಯಿಲ್ಲದೆ ವರ್ಣಿಸಬೇಕೆಂದರೆ ಮನೆಗಳಲ್ಲಿ ಒಬ್ಬರೂ ಉಳಿಯದೆ ಊರಿಗೆ ಊರೇ ಹೊಟ್ಟೆ ತೊಳಸಿ ವಾಂತಿ ಮಾಡಿಕೊಂಡಂತೆ ಎಲ್ಲ ಜನ ಹಿರಿಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ಬೀದಿಗೆ ಬಂದರು! ಮೊದಮೊದಲು ಅದರ ದನಿ ಮಾತ್ರ ಕೇಳಿಸಿ, ಅನಂತರ “ನಿಮ್ಮ ಹೋಟು ಯಾರಿಗೆ? ಗುಡಸೀಕರ ಸಾಹೇಬರಿಗೆ” ಎಂಬ ಶಬ್ದಗಳು ಕೇಳಿದ್ದರಿಂದ ಸ್ವಲ್ಪ ನೆಮ್ಮದಿಗೊಂಡು ದನಿಬಂದ ಕಡೆಗೆ ಕೂತ ನಿಂತವರೆಲ್ಲ ನುಗ್ಗಿದರು. ಗುಡಸೀಕರ ಮೈಕ್ ತರಿಸಿ ಮಟ ಮಟಾ ಮಧ್ಯಾಹ್ನದ ಹೊತ್ತಿನಲ್ಲಿ ಮಾರಾಯ, ಕರಿಮಾಯಿ ಅವನ ಹೊಟ್ಟಿ ತಣ್ಣಗಿಡಲಿ, ಚುನಾವಣೆಯ ಪ್ರಚಾರ ಒದರಿಸುತ್ತಿದ್ದ. +ಆ ದಿನ ಯಾರ ಬಾಯೊಳಗೆಲ್ಲ ಅದೇ ಮಾತು. ಉದ್ರೇಕಕರ ಕತೆಗಳಿಂದ, ಸುದ್ದಿಗಳಿಂದ, ಸಪ್ಪಳದಿಂದ, ಉರಿ ಬಿಸಿಲಿನಿಂದ ಊರು ದುಮುಗುಟ್ಟಿತು. ದುರ್ದೈವವೆಂದರೆ ಒಬ್ಬರ ಮಾತು ಒಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಿರಿಚಿ, ಅಭಿನಯಿಸಿ, ಗಂಡಸರು ಗುಂಪುಗೂಡಿ, ಹೆಂಗಸರು ಹೊರಗಡೆ ಹೋದಲ್ಲಿ ಮಾತಾಡಿಕೊಂಡರು. ಹಿರಿಯರು ಕೂಡ ಹೆಂಗಸರಂತೆ ಆಡಿಕೊಂಡರು. ಮೈಕ್ ಶಬ್ಧವನ್ನು ಒಂಯ್ಕ್ ಒಂಯ್ಕ್ ಎಂದು ಅಣಕಿಸಿದರು. ಇದಕ್ಕೆಲ್ಲ ಎಷ್ಟು ಖರ್ಚು ಬಂದಿರಬಹುದೆಂದು ಅಂದಾಜು ಹಾಕಿದರು. ಅವರಪ್ಪ ಮಂದಿಯ ಗೋಣು ಮುರಿದು ಕೂಡಿಸಿದ್ದನ್ನೆಲ್ಲ ಮಗ ಕಕ್ಕಲೆಂದರು. ಎಲ್ಲರೂ ಆ ದಿನ ತಡವಾಗಿ ಮಲಗಿದರು. +ಹಳೆಯ ಪಂಚರೀಗ ಚಿಂತೆ ಮಾಡಲೇಬೇಕಾಯಿತು. ಈ ತನಕ ಅವರಿಗೆ ತಮ್ಮ ಗೆಲುವಿನಲ್ಲಿ ಭರವಸೆಯೇನೋ ಇತ್ತು. ಆದರೆ ಎದುರಿನವರ ಪ್ರಚಾರ ತಂತ್ರಕ್ಕೆ ತಲೆಬಾಗದೆ ವಿಧಿಯಿರಲಿಲ್ಲ. ಹೆಂಗಸರಲ್ಲಿ ಬಾಡಿ ಹಂಚಿ ಆಣೆ ಮಾಡಿಸಿದ ಸುದ್ದಿ ಕಿವಿಗೆ ತಲುಪಿತ್ತು. ಹುಣ್ಣಿಮೆಯ ಮಾರನೇ ದಿನ ಚುನಾವಣೆಯಿದ್ದುದೊಂದೇ ಅವರಿಗಿದ್ದ ಧೈರ್ಯ. ಆ ದಿನ ಹೆಂಗೂ ಬಂಗಾರದ ಮೂರ್ತಿ ಏಳುತ್ತದೆ. ದೇವರ ಕಾರಣಿಕವಾಗುತ್ತದೆ. ಕರಿಮಾಯಿ ಊರಿಗೊಂದು ಆಜ್ಞೆ ಕೊಟ್ಟೇ ಕೊಡುತ್ತಾಳೆ. ಅಂದರೆ ಅದು ತಮ್ಮ ಪರವಾಗೇ ಇರುತ್ತದೆಂದು ಇವರ ನಂಬಿಕೆ. ಹಾಗೆಂದು ಸುಮ್ಮನೆ ಕೂರುವುದ್ಯಾಕೆಂದು ಭೇಟಿಯಾದವರಿಗೆ ತಮ್ಮ ‘ಮರದ ಗುರುತಿಗೆ ಹೋಟ ಹಾಕ್ರೆಪಾ’ ಎಂದು ಅವರೂ ಹೇಳತೊಡಗಿದರು. +ಇತ್ತ ಗುಡಸೀಕರನಿಗೆ ಹುಣ್ಣಿಮೆಯ ಭಯ ಇರಲಿಲ್ಲವೆಂದಲ್ಲ. ಯಾಕೆಂದರೆ ನಿಂತ ಐವರಲ್ಲಿ ದೇವರೇಸಿಯೂ ಒಬ್ಬ. ಆದರೆ ಆ ಕಾಳಜಿ ನಿಮ್ಮದಲ್ಲ, ನನ್ನದೆಂದು ಬಸವರಾಜು ಹೇಳಿದ್ದರಿಂದ ಹ್ಯಾಗೋ ಸಮಾಧಾನ ಮಾಡಿಕೊಂಡಿದ್ದ. ಅದೇನೆಂದು ಬಸವರಾಜು ಹೇಳಿರಲಿಲ್ಲ. +ದೀಪವಾರಿತು +ಮಾರನೇ ದಿನ ಮಂಗಳವಾರ ಮುಂಜಾನೆ ದೇವರೇಸಿ ಗುಡಿಗೆ ಹೋಗಿ ಪೂಜೆ ಮಾಡುತ್ತಿದ್ದ. ದೇವಿಯ ಮೈಮೇಲಿನ ಆಭರಣ ಕಳಚಿ ಮಜ್ಜನ ಮಾಡಿಸಿದ, ಮಡಿಯುಡಿಸಿದ, ಮತ್ತೆ ತೊಡಿಸಬೇಕೆಂದು ನೋಡಿದರೆ ಆಭರಣಗಳೇ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ. ಮೊದಲು ಇದ್ದುವೆ? ಇಲ್ಲವೆ? ಎಂದು ನೆನಪು ಮಾಡಿಕೊಂಡ. ಇದ್ದವು ಮಾತ್ರವಲ್ಲ, ಅವನ್ನು ಕಳಚಿಟ್ಟ ಸ್ಥಳವೂ ನೆನಪಿತ್ತು. ಆದರೆ ಆ ಸ್ಥಳದಲ್ಲಿ ಅವಿರಲಿಲ್ಲ. ಗುಡಿಯಲ್ಲಿ ತನ್ನ ಬಿಟ್ಟು ಯಾರೂ ಇರಲಿಲ್ಲ. ದೇವಿಯ ಮಾಯೆಯೇ? ಎಂದೊಂದು ಕ್ಷಣ ಅಧೀರನಾದ. ಇರಲಾರದೆಂದು ಉಡಿಸಿದ ಸೀರೆಬಿಚ್ಚಿ ಜಾಡಿಸಿ ಹುಡುಕಿದ. ಸಿಕ್ಕಲಿಲ್ಲ. ಮತ್ತೆ ಉಡಿಸಿ ಮೂರ್ತಿಯ ಹಿಂದೆ ಮುಂದೆ ಹುಡುಕಿದ. ಧೋತ್ರದಲ್ಲಿರಬಹುದೇ ಎಂದು ಜಾಡಿಸಿಕೊಂಡ. ಯಾಕೆಂದರೆ ದೇವಿಯ ಸುತ್ತ ಕೆಲವು ಕಿಲಾಡಿ ಭೂತಗಳಿರುತ್ತವಲ್ಲ, ಅವು ಒಮ್ಮೊಮ್ಮೆ ಏನೇನೋ ಮಾಡಬಹುದು. ತನ್ನ ಧೋತರ ಕಚ್ಚೆ ಬಿಚ್ಚಿ ಹುಡುಕುತ್ತಿರುವಾಗ ಯಾರೋ ಕುಲುಕುಲು ನಕ್ಕಂತಾಯಿತು. ತಿರುಗಿ ನೋಡಿದರೆ ಸುಂದರಿ! ಭೂತವೇ ಇವಳ ರೂಪದಲ್ಲಿ ಬಂದಿದೆಯೋ ಎಂದುಕೊಂಡು ಕೂಡಲೇ ತಾಯಿಯ ಚೌರಿ ಹಿಡಿದ. ಈ ಭೂತ ಮಾಯವಾಗಲಿಲ್ಲ. ಇನ್ನೂ ನಗುತ್ತಿದ್ದಳು. ಸದ್ಯ ಅವಳೇ ಬಾಯಿ ಬಿಟ್ಟು ಮಾತಾಡಿದಳು. “ನನಗ ಈ ಸರ ಹೆಂಗ ಕಾಣತೈತಿ?” ನೋಡಿದರೆ ದೇವಿಯ ಕತ್ತಿನಲ್ಲಿದ್ದ ದಪ್ಪ ಕವಡೆಯ ಸರ ಚಿಮಣಾಳ ಕತ್ತಿನಲ್ಲಿತ್ತು! ಆ ಸರದಲ್ಲಿ ಎಣಿಸಿದರೆ ಹೆಬ್ಬೆರಳು ಗಾತ್ರದ ಇಪ್ಪತ್ತೊಂದು ಕವಡೆಗಳಿದ್ದವು. ಅದು ಅಲಂಕಾರಕ್ಕಾಗಿ ಹಾಕಿದ ಸರವಲ್ಲ. ದೇವಿ ಇಷ್ಟಪಟ್ಟಿದ್ದರೆ ಅಂಥ ಬಂಗಾರದ ಸರವನ್ನೇ ಊರಿನ ಜನ ಹಾಕಬಹುದಿತ್ತು. ಅವಳ ತೂಕದ ಬಂಗಾರದ ಮುಖ ಮಾಡಿಸಿಕೊಟ್ಟವರಿಗೆ ಒಂದು ಸರ ಮಾಡಿಸುವುದೇನು ದೊಡ್ಡದಲ್ಲ. ತಾಯಿ ದೇವತೆಗಳಿಗೆ ಹೆದರಿ ತನ್ನ ಇಪ್ಪತ್ತೊಂದು ಮಕ್ಕಳನ್ನು ಸಂಜೆಯವರೆಗೆ ಆಡಬಿಟ್ಟು ಸೂರ್ಯಾಸ್ತಮವಾದೊಡನೆ ಅವರನ್ನು ಕವಡೆಗಳಾಗಿ ಮಾರ್ಪಡಿಸಿ ಸರ ಮಾಡಿ ಕೊರಳಲ್ಲಿ ಧರಿಸುತ್ತಿದ್ದಳು! ಆ ಕವಡೆಗಳ ಸರವಿದು! ಪೂಜೆ ಮಾಡುವಾಗ ತಾಯಿಗೆ ಮಜ್ಜನ ಮಾಡಿಸಿದಂತೆ ಈ ಕವಡೆ ಸರವನ್ನೂ ಒಂದು ಸಲ ನೀರಿನಲ್ಲದ್ದಿ ಮತ್ತೆ ತೊಡಿಸುವ ಕ್ರಮವಿದೆ. +ಸುಂದರಿಗೆ ಇದೆಲ್ಲ ಯಾವ ಲೆಕ್ಕ? ದೇವರೇಸಿ ಗಡಬಡಿಸಿ ದೇವಿಯ ಹಿಂದೋಡಿ ಒದ್ದೆ ಧೋತ್ರ ಸುತ್ತಿಕೊಳ್ಳುತ್ತಿದ್ದ. ಅಷ್ಟರಲ್ಲಿ ದೂರದಿಂದ ದತ್ತಪ್ಪ ಬರುತ್ತಿರುವುದು ಕಾಣಿಸಿತು. ದೇವರೇಸಿಗೆ ಏನು ಮಾಡಬೇಕೆಂದು ತೋಚದಾಯಿತು. ದತ್ತಪ್ಪನದು ಮೊದಲೇ ತೀಕ್ಷ್ಣಬುದ್ಧಿ. ದೇವಿಗೆ ನಮಸ್ಕರಿಸುವಾಗ ಕತ್ತಿನಲ್ಲಿ ಸರ ಇಲ್ಲದ್ದು ಕಂಡರೆ, ಕಂಡು ಸರ ಎಲ್ಲಿ ಎಂದು ಕೇಳಿದರೆ, ಏನು ಹೇಳುವುದು? ಹೊರಗೆ ಗುಡಿಯನ್ನು ಬಲಗೊಳ್ಳುತಿದ್ದ ದತ್ತಪ್ಪನಿಗೆ ಕಾಣದಂತೆ ಅವಳ ಹತ್ತಿರ ಹೋಗಿ ಸರ ಕೊಡುವಂತೆ ಕೈಸನ್ನೆಯಿಂದಲೇ ಕೇಳಿದ. ಇವಳೂ ಕೈಸನ್ನೆಯಿಂದಲೇ ಕೊಡುವುದಿಲ್ಲವೆಂದು ಹೇಳುವಷ್ಟರಲ್ಲಿ ದತ್ತಪ್ಪ ಒಳ ಬಂದ. ದೇವರೇಸಿ ಹಾಗೇ ಅವಳ ಬಾಯಿಮುಚ್ಚಿ ಕುರಿಮರಿಯಂತೆ ಅವಳನ್ನು ಹಿಡಿದುಕೊಂಡು, ದೇವಿಯ ಮರದ ಮೂರ್ತಿಯ ಕೆಳಗಡೆ ಡೊಗ್ಗಿ ಅಡಗಿದ. ದತ್ತಪ್ಪನಿಗೆ ಇದ್ಯಾವುದೂ ತಿಳಿಯಲಿಲ್ಲ. ತಾನು ತಂದ ಹೂಗಳನ್ನು ದೇವಿಯ ಮೇಲೆ ಚೆಲ್ಲಿ ಅಡ್ಡಬಿದ್ದು ಹೊರಟುಹೋದ. +ಅವ ದೂರ ಹೋದ ಎಂದು ಖಾತ್ರಿಯಾದ ಮೇಲೆ ದೇವರೇಸಿ ಎದ್ದು “ಛೇ, ಎಷ್ಟ ಹೆದರ್‍ಸಿದಿ. ಕೊಡ ಕೊಡ ಸರ ಕೊಡು” ಅಂದ. ಇಂಥ ಚೇಷ್ಟೆಯನ್ನು ದೇವರೇಸಿಯೇನು, ಆ ಊರಿನ ಯಾರೂ ಸಹಿಸುವುದು ಸಾಧ್ಯವಿಲ್ಲ. ದೇವರೇಸಿಗೆ ಸಿಟ್ಟು ಬಂತು. “ಕೊಡ್ತೀಯೋ,…..” ಎಂದು ಅನ್ನುವಷ್ಟರಲ್ಲಿ ಯಾವುದೋ ಮಾಯೆಯಿಂದ ಬಸವರಾಜು ಹಾಜರಾದ. ಸುಂದರಿ ಮುಸಿ ಮುಸಿ ನಗುತ್ತ “ಕೊಡೋದಿಲ್ಲ” ಎಂದು ಹೇಳಿ ಇವನ ಹಿಂದಿನ ಜಡೆ ಎತ್ತಿ ಬೆನ್ನಿಗೆ ಅಪ್ಪಳಿಸಿ ಓಡಿ ಹೋದಳು. ಬಸವರಾಜು ಬಂದ ಹಾಗೇ ಮಾಯವಾದ. +ದೇವರೇಸಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಹಾಗಾಯಿತು. ಇದೇನಿದು? ಬೆಂಕಿ ಕೆಂಡದಂಥ ದೇವಿಯ ಜೊತೆಗೆ ಚೇಷ್ಟೆಯೆ? ಓಡಿ ಬೆನ್ನು ಹತ್ತಿ ಹೋಗಿ ಸರ ಕಸಿದು ತರುವುದು ತರವಲ್ಲ ಎಂದುಕೊಂಡ. ಗಡಿಬಿಡಿಯಿಂದ ಪೂಜೆ ಮಾಡಿದ. ಕತ್ತು ಕಾಣದ ಹಾಗೆ ತಾಯಿಗೆ ಸೀರೆ ಸುತ್ತಿದ. ಎವ್ವಾ ಎಂದು ಅಡ್ದಬಿದ್ದ. ಕಣ್ಣಲ್ಲಿ ದಳ ದಳ ಕಣ್ಣೀರು ಹರಿಯಿತು. ತಪ್ಪಾಯಿತೆಂದು ಗಲ್ಲ ಬಡಿದುಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಸರ ಸಿಕ್ಕ ಮೇಲೆ ಇವರ ಮುಖ ನೋಡುವುದಿಲ್ಲವೆಂದು ಆಣೆ ಪ್ರಮಾಣ ಮಾಡಿಕೊಂಡ. ಮತ್ತೆ ಮತ್ತೆ ಅಡ್ಡಬಿದ್ದ. ಅವನ ಉಸಿರಿಗೋ, ಗಾಳಿಗೋ ಹಚ್ಚಿಟ್ಟ ದೀಪ ಆರಿತು. ಜೀವ ಗಕ್ಕನೆ ಬಂದು ಗಂಟಲಿಗೆ ಹಾದಂತಾಗಿ “ಅಯ್ಯೋ, ಎವ್ವಾ” ಎಂದು ಕುಕ್ಕರಿಸಿದ. ಬಾಯಿ ಒಣಗಿತು. ಕೈಕಾಲಲ್ಲಿಯ ಶಕ್ತಿ ಉಡುಗಿ ಹೋಯ್ತು. ತಡವರಿಸಿಕೊಂಡು ಎದ್ದು ಮತ್ತೆ ದೀಪಹಚ್ಚಿ ತನ್ನ ಗುಡಿಸಲಿಗೆ ನಡೆದ. +ಕಂಬಳಿ ಹಾಸಿದವನೇ ದೊಪ್ಪನೇ ಬಿದ್ದ. ಎವ್ವಾ ಎನ್ನುತ್ತಾ ಹೊರಳಾಡಿ ಮುಳುಮುಳು ಅತ್ತ. ನಾಕು ತಾಸು ಹೊತ್ತೇರಿ ಜ್ವರ ಬಂದು, ಕರಿಮೈ ಕಾದ ಹಂಚಿನಂತೆ ಸುಡುತ್ತಿತ್ತು. ಅತ್ತು ಅತ್ತು ಕಣ್ಣು ಕೆಂಪಗೆ ಕಾದಿದ್ದವು. ಅಂಥ ಜ್ವರದಲ್ಲಿ ಎದ್ದು ಬಸವರಾಜೂನ ಗುಡಿಸಲಿಗೆ ಹೋಗಿ ಬಂದ. ಬಸವರಾಜೂ ಇದ್ದ. ಸುಂದರಿ ಇಲ್ಲವೆಂದು ಗುಡಸೀಕರನ ಹೊಲಕ್ಕೆ ಹೋಗಿರುವಳೆಂದೂ, ರಾತ್ರಿ ಬರುವಳೆಂದೂ, ಹೇಳಿದ. ಹೊಲಕ್ಕೆ ಹೋಗಿ ಕೇಳುವಂತಿರಲಿಲ್ಲ. ಜನಕ್ಕೆ ಗೊತ್ತಾದರೆ ಕಷ್ಟ. ಈ ಮಧ್ಯೆ ಯಾರು ಯಾವಾಗ ಗುಡಿಯ ಕಡೆ ಹೋಗಿ ತಾಯಿಯ ಕತ್ತಿನಲ್ಲಿ ಸರ ಇಲ್ಲದ್ದನ್ನು ಪತ್ತೆ ಹಚ್ಚುತ್ತಾರೋ ಎಂಬ ಭಯ. ಜ್ವರದಿಂದ ತಲೆ ಸಿಡಿಯತೊಡಗಿತ್ತು. ದೇವಿಯ ಮುಂದೆ ದೀಪವಾರಿತ್ತು. ತಾನಿಂದು ಸಾಯುವುದೇ ಖಾತ್ರಿ ಎಂದುಕೊಂಡ. ಒಳ್ಳೆಯದೇ, ಹಾಗಾದರೆ ತನ್ನ ಮೇಲೆ ಹರಲಿ ಬರುವುದಿಲ್ಲ. ಅನ್ಯಾಯವಾಯಿತೇನೋ. ಹಿಡಿದು ಸುಂದರಿಯ ಕೆನ್ನೆಗೆರಡು ಬಿಟ್ಟು ಸರ ಕಸಿಯಬೇಕಾಗಿತ್ತು. ಅವರಲ್ಲಿ ಹೆಂಡ ಖಂಡ ತಿಂದದ್ದು ಹೇಲುಹುಚ್ಚೆ ತಿಂದಂತಾಯಿತೆಂದು ಪಶ್ಚಾತ್ತಾಪಪಟ್ಟ. ಈಗ ಬಂದಿದ್ದಾಳೆಂದು ಮಧ್ಯಾಹ್ನ ಇನ್ನೊಮ್ಮೆ ಅವರ ಗುಡಿಸಲಿಗೆ ಹೋದ. ಈಗಲೂ ಬಸವರಾಜ ಇಲ್ಲವೆಂದ. ದೇವರೇಸಿ ಹಾಹೂ ಎನ್ನದೆ ತಿರುಗಿದ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ತಲೆ ತಿರುಗಿದಂತಾಯಿತು. ಊಟವಿಲ್ಲ, ಬಿಸಿಲು, ಮಾನಸಿಕ ಯಾತನೆ ಬೇರೆ, ಬಂದವನೇ ತನ್ನ ಗುಡಿಸಲ ಮುಂದೆ ಕೂತುಕೊಂಡು ವಾಂತಿ ಮಾಡಿಕೊಂಡ. ಕೊನೆಯಲ್ಲಿ ಒಂದಿಷ್ಟು ರಕ್ತ ಬಿತ್ತು. ತಾಯಿ ರಕ್ತ ಕಾರಿಸುತ್ತಿದ್ದಾಳೆ ಎಂದುಕೊಂಡ. ಒಳಗೆ ಹೋಗಿ ತಾಯಿಗೆ ನಮಸ್ಕರಿಸುವಂತೆ ಬೆನ್ನು ಮೇಲಾಗಿ ಹಾಗೇ ಬಿದ್ದುಕೊಂಡ. +ರಂಡಿ ಹುಣ್ಣಿವೆ +ಆ ದಿನ ರಾತ್ರಿ ದೇವರೇಸಿ ಬಯಸಿದ ಸರವೇನೋ ಸಿಕ್ಕಿತು. ಆದರೆ ತಾಯಿಯಿಂದ ಭಿನ್ನನಾದ. +ದೇವರೇಸಿ ಬಂದು ಹೋದಾಗ ಸುಂದರಿ ಒಳಗಿದ್ದರೂ ಬಸವರಾಜು ಇಲ್ಲವೆಂದು ಹೇಳಿದ್ದ. ದೇವರೇಸಿಯ ಮುಖಚರ್‍ಯೆ ನೋಡಿ ತೊಡೆತಟ್ಟಿ ನಕ್ಕ. ರಾತ್ರಿ ಮಂದಿ ಉಂಡು ಮಲಗೋ ಹೊತ್ತು. ಬಸವರಾಜು ಮತ್ತು ಸುಂದರಿ ರೇಡಿಯೋ ಕೇಳುತ್ತ ಕಾಲಮೇಲೆ ಕಾಲ ಹಾಕಿಕೊಂಡು ಕೂತಿದ್ದರು. ನಿರೀಕ್ಷಿಸಿದಂತೆ ದೇವರೇಸಿ ಬಂದ. ಮುಖ ಹೀರಿ ಒಗೆದ ಸೊಟ್ಟಿಯಾಗಿತ್ತು. ಕಣ್ಣು ಕೆಂಪಗಾಗಿ ಹರಳಾಗಿದ್ದವು. ಅವ ಬಂದಾಗ ಇಬ್ಬರೂ ಏಳಲಿಲ್ಲ. ಕೂತುಕೊಂಡೇ ಬಸವರಾಜು ‘ಬಾರವಾ ತಾಯಿ’ ಅಂದ. ಸುಂದರಿ ಇವನ ಮಾತಿನ ಧಾಟಿಗೆ ಮಾತಿಗೊಮ್ಮೆಬದಲಾಗುವ ಕೈಮುದ್ರೆಗೆ ಮೋಜುಗೊಂಡಳು. ಏನೂ ಮಾತಾಡದೆ ಒಳಕ್ಕೆ ಹೋದಳು. ಬಸವರಾಜು ಕಾಲು ಬದಲಿಸಿ ‘ಅದೇನ ದೊಡ್ಡ ಕಿಮ್ಮತ್ತಿನ ಸರಾ? ಅದ್ಯಾಕಿಷ್ಟ ಕಳವಳಪಡ್ತಿ?’ ಎಂದ. ದೇವರೇಸಿಗೆ ಅಸಮಧಾನವಾಯ್ತು. +“ಏನಂಬೋ ಮಾತೋ ಹುಡುಗಾ? ಬೆಂಕಿ ಕೆಂಡದಂಥಾ ದೇವೀ ಜೋಡಿ ನಗಾಡತಾರೇನೊ ಹುಚ್ಚಾ?” +ಈ ತನಕ ಬಾತಿಗೆಬಾರದ ಸರವಾಗಿದ್ದ ಅದರ ಬೆಲೆ, ದೇವರೇಸಿಯ ದೈನಾಸ ನೋಡಿದ ಮೇಲೆ, ಬಸವರಾಜನಿಗೆ ತಿಳಿದುಬಿಟ್ಟಿತು. ‘ಕೊಡೋಣಂತ, ನಾವೆಲ್ಲಿ ಓಡಿಹೋಗ್ತೇವೇನು? ಏನೋ ಹುಡುಗಾಟದ ಹುಡುಗಿ, ತಂದಾಳ, ಕೊಡಸ್ತೀನಿ. ಕೂತುಕೊ ಬಾ’ ಎಂದ. ಅಷ್ಟರಲ್ಲಿ ಸುಂದರಿ ಹರಿವಾಣದ ತುಂಬ ಭಟ್ಟೀ ಸೆರೆತಂದು ಮುಂದಿಟ್ಟಳು. ಈಗ ಸರ ತಿರುಗಿ ಕೊಡಿಸುತ್ತಾನೆಂದು ಖಾತ್ರಿಯಾಗಿತ್ತು. ಕೂತ. ಬೆಳಗಿನಿಂದ ತುತ್ತು ಕೂಳಿಲ್ಲ, ಹನಿ ನೀರು ಮುಟ್ಟಿರಲಿಲ್ಲ. ಒಮ್ಮೆಲೆ ಹಸಿದ ಅರಿವಾಯ್ತು. ಕುಡಿದ. “ಇನ್ನ ಸರ ಕೊಡವಾ” ಅಂದ. ಇನ್ನೊಮ್ಮೆ ಹರಿವಾಣ ತುಂಬಿದಳು. ಅದನ್ನೂ ಕುಡಿದ. ಖಂಡಬಂತು, ತಿಂದ. ಸುಮ್ಮನೇ ಕೂತ. ಬಸವರಾಜು ಹೇಳಿದ-“ಬೆಂಕೀಕೆಂಡದಂಥಾ ದೇವೀ ಅಂತೀ; ಆ ಸರ ಇದ್ದಲ್ಲಿಂದ ಇಲ್ಲಿ ಬಂದ ಬೀಳೋ ಹಾಂಗ ಮಾಡು” ಅಂದ. ದೇವರೇಸಿ ಸುಮ್ಮನಾದ. “ತಾಯೀ ಸತ್ಯ ಅಷ್ಟಿದ್ದರ ನಾ ರಕ್ತ ಕಾರಿ ಸಾಯೋ ಹಂಗ ಮಾಡಲಿ” ಎಂದು ಸುಂದರಿಯೂ ಮಾತು ಸೇರಿಸಿದಳು, ಬಸವರಾಜನ ಮುಗುಳು ನಗೆಗೆ ತನ್ನ ಹೀಹೀ ನಗೆ ಸೇರಿಸುತ್ತ. ದೇವರೇಸಿ ಒಂದು ಸಲ ಢರ್ರನೆ ತೇಗಿ ಬಿಕ್ಕತೊಡಗಿದ. ಕೂಡಲೇ ಬಸವರಾಜು “ತಾಯಿ ಬಂದಾಳ ಪಾದಾ ಹಿಡಕೊ” ಎಂದು ಸುಂದರಿಗೆ ಹೇಳಿದ. ಸುಂದರಿ ಓಡಿಹೋಗಿ ಕಾಲು ಹಿಡಿದಳು. +ಪಾದಾ ಹಿಡಕೊಂಡವಳು ಹಾಗೇ ಕಾಲು ತಿಕ್ಕತೊಡಗಿದಳು. ದೇವರೇಸಿ ತೇಲು ಗಣ್ಣಾಗಿ ಹಾಗೇ ಹಿಂದೆ ಮುಂದೆ ತೂಗುತ್ತ, ಬಿಕ್ಕುತ್ತ ಕೂತ. ಇದು ದೇವೀ ಮೈಮೇಲೆ ಬಂದ ಗುರುತು. ಬಸವರಾಜು ಒಳಗೊಳಗೇ ನಗುತ್ತಿದ್ದವನು ಸುಂದರಿಗೆ ಕಣ್ಣು ಹೊಡೆದ. ಅವಳು ಕಾಲು ತಿಕ್ಕುತ್ತ, ತಿಕ್ಕುತ್ತ ಮೊಳಕಾಲು ದಾಟಿ ತೊಡೆ ತಿಕ್ಕತೊಡಗಿದಳು. ತಾಯಿಯ ಬಿಕ್ಕು ಗಕ್ಕನೆ ನಿಂತು, ಗಡಬಡಿಸಿ ತೊಡೆಯ ಮೇಲಿನ ಕೈ ನಿವಾರಿಸಿದ. ಸುಂದರಿ ಹೋ ಎಂದು ನಕ್ಕಳು. ಬಸವರಾಜು ಹುಸಿ ಸಿಟ್ಟಿನಿಂದ ‘ತಾಯೀ ತೊಡೆಯಲ್ಲಿ ಬೆಂಕಿಯಿದೆ. ಹಾಗೆಲ್ಲ ಆಟ ಆಡಬ್ಯಾಡ’ ಎಂದ. ಸುಂದರಿ ಇನ್ನೂ ನಕ್ಕಳು. ನಗು ತಡೆಯದೆ ಒಳಗೆ ಹೋದಳು. ಮತ್ತೆ ಹರಿವಾನ ತುಂಬಿದಳು. ದೇವರೇಸಿ ಕುಡಿಯದೆ “ತಾಯೀ ನನ್ನ ಕೊಂದ ಹಾಕತಾಳ ಸರಾ ಕೊಡ ಎವ್ವಾ” ಎಂದು ದೊಡ್ಡ ದನಿ ತೆಗೆದು ಅಳುತ್ತಾ ಸುಂದರಿಗೆ ಕೈ ಮುಗಿದ. ಬಸವರಾಜು ಗಾಬರಿಯಾಗಿ ತಕ್ಷಣ ಸರ ಕೊಡುವಂತೆ ಹೇಳಿ ಹೊರಗೆ ಬಂದ, ಯಾರಾದರೂ ಇಲ್ಲಿ ನಡೆಯುವುದನ್ನ ಗಮನಿಸುತ್ತಿದ್ದಾರೆಯೋ ಎಂದು ನೋಡುವುದಕ್ಕೆ. ಸಧ್ಯ ಯಾರಿರಲಿಲ್ಲ, ಅಲ್ಲೇ ನಿಂತ. +ಸುಂದರಿ ಸರ ತಂದು, ‘ತಗೋ’ ಎಂದಳು. ದೇವರೇಸಿ ಅಡರಾಸಿ ಅದಕ್ಕೆ ಕೈಹಾಕ ಹೋದಾಗ ನಗುತ್ತ ಹಿಂದೆ ಸರಿದಳು. ಬುಡಕಡಿದ ದೊಡ್ಡ ಮರ ಬಿದ್ದ ಹಾಗೆ ದೇವರೇಸಿ ಸಮತೋಲ ತಪ್ಪಿಬಿದ್ದ. ಮತ್ತೆ ತೋರಿಸಿದಳು. ಮತ್ತೆ ಎದ್ದು ಅಲ್ಲೀತನಕ ತೂರಾಡುತ್ತ ಹೋಗಿ ಕೈಹಾಕಿದ. ಮತ್ತೆಯೂ ಹಿಂದೆ ಸರಿದಳು. ಹೀಗೆ ನಾಲ್ಕೈದು ಸಲ ಮಾಡಿದಾಗ ಕೊನೆಗೆ ಅವಳನ್ನೇ ಗಟ್ಟಿಯಾಗಿ ಹಿಡಿದು ಕಸಿಯುತ್ತಿದ್ದ. ಬೆಳಗಿನಿಂದ ಹಸಿದು ನಿಶ್ಯಕ್ತಗೊಂಡಿದ್ದ. ರಕ್ತ ಕಾರಿಕೊಂಡಿದ್ದ. ಮೈಮೇಲೆ ಅಡರಿದ್ದ ಅವನನ್ನು ಜೋರಿನಿಂದ ಚಿಮಣಾ ದೂಕಿದಳು. ಅಲ್ಲೇ ಜೋಲಿ ತಪ್ಪಿ ಕುಸಿದ. ಕೈಕಾಲೂರಿ ಏಳಬೇಕೆಂದಾಗ ಚಿಮಣಾ ಓಡಿಹೋಗಿ ಅವನ ಡುಬ್ಬ ಹತ್ತಿ ಕುಕ್ಕರಿಸಿದಳು. ಏಳಲಾರದೆ ಬೀಳಲಾರದೆ ನೊಂದ ಪ್ರಾಣಿಯ ಹಾಗೆ ದೇವರೇಸಿ ಹೋರಾಡುತ್ತಿದ್ದ. ಹೇಳಿ ಕಳಿಸಿದ ಹಾಗೆ ಬಸವರಾಜು ಒಳಗೆ ಬಂದ. ಅದೇನು ಉಮೇದಿ ಉಕ್ಕಿತ್ತೋ ಸುಂದರಿ ಹೋ ಎಂದು ನಗುತ್ತ ಹುಲಿಯೇರಿದ ಕರಿಮಾಯಿಯ ಭಂಗಿಯಲ್ಲಿ ಕೂತು ಆಶೀರ್ವದಿಸಿದಳು. ಬಸವರಾಜನಿಗೆ ದಿಗಿಲಾಯಿತೇನೋ, ಗಂಭೀರವಾಗಿ ಕೈಮುಗಿದ! +ಅಂತೂ ಹುಣ್ಣೀಮೆಯೇನೋ ಬಂತು. ತಾಯಿ ರಂಡಿಯೂ ಆದಳು. +ತಾಯಿ ರಂಡಿ ಆದುದಕ್ಕೆ ಏನೋ ಚಂದ್ರ ಕ್ಷಯರೋಗಿಯಂತೆ ಬಿಳಿಚಿದ. +ಆ ದಿನ ಬೆಳಗಿನ ಬೆಳ್ಳಿಮೂಡುವ ಸಮಯದಲ್ಲಿ ಗೌಡನಿಗೆ, ಕರಿಮಾಯಿಯ ಗುಡಿಯ ನಡುಗಂಬ ನಡುಗಿ ಇಡೀ ಗುಡೀ ಕುಸಿದಂತೆ ಕನಸಾಯಿತು. ಫಕ್ಕನೆ ಎದ್ದು ಕೂತ. ಎದೆ ನಡುಗಿತು. ಕೂತು ಚಿಂತಿಸಲಾಗಲಿಲ್ಲ. ಅನಾಹುತ ತಪ್ಪಿಸುವುದು ಸಾಧ್ಯವೇ ಎಂದು ನೋಡಿದ. ಹಾದಿ ಕಾಣಲಿಲ್ಲ. ಕನಸನ್ನು ದತ್ತಪ್ಪನಿಗೆ ತಿಳಿಸಬೇಕೆಂದು ಆಗಲೇ ಜಳಕಕ್ಕೆ ಕೆರೆಯ ಕಡೆ ನಡೆದ. +ಊರಿಗಿನ್ನೂ ಬೆಳಗಾಗಿರಲಿಲ್ಲ. ಗುಡಿಗೆ ಹೋದ. ಒಳಗೆ ಕತ್ತಲೆಯಿತ್ತು. ತಾಯಿಯ ಮೂರ್ತಿ ಕಾಣಿಸುತ್ತಿರಲಿಲ್ಲ. ಹಾಗೇ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಬಂದು ಹೊರಗೆ ಪೌಳಿಯ ದೀಪಗಂಬದ ಕಟ್ಟೆಯ ಮೇಲೆ ಕೂತ. ಶೀಗೆ ಹುಣ್ಣಿಮೆಯಲ್ಲಿ ತಾಯಿಯ ಕೈ ಮುರಿದವರ ಪತ್ತೆಯಾಗಿರಲಿಲ್ಲ. ಗುಡಿಕಟ್ಟಿಸಿದ ತನ್ನ ಹಿರಿಯರ ನೆನಪಾಯಿತು. ತಾಯಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆನ್ನಿಸಿ ಭಯವಾಯ್ತು. ಮತ್ತೆ ಮಗನ ನೆನಪಾಗಿ ಕಂಠ ತುಬಿ ಬಂತು. ಎಷ್ಟು ಹೊತ್ತು ಕೂತಿದ್ದನೋ, ಮೈಯೆಚ್ಚರ ಬಂದಾಗ ಬೆಳ್ಳಂಬೆಳಕಾಗಿತ್ತು. ಮತ್ತೊಮ್ಮೆ ಪ್ರದಕ್ಷಿಣೆ ಹಾಕಿದ. ಕಣ್ಣುತುಂಬ ತಾಯಿಯ ಮೂರ್‍ತಿ ನೋಡಿದ. ‘ಹಡದವ್ವಾ ನನ್ನ ಮನೀ ದೀಪಾ ಉಳಸು’ ಎಂದು ಅಡ್ಡಬಿದ್ದ. ಶೀಗೇ ಹುಣ್ಣಿಮೆಯಲ್ಲಿ ಮುರಿದ ಕೈಯನ್ನು ಹಾಗೇ ಕಟ್ಟಿದ್ದರಲ್ಲ, ಅದು ಕೆಳಗೆ ಬಿದ್ದಿತ್ತು. “ಕತ್ತಿ ಚೆಲ್ಲೋದ ನಿನ್ನ ಪದವಿ ಅಲ್ಲ ತಾಯಿ, ಮತ್ತ ಹಿಡಿದ ಊರ ಜೀಂವಾ ಕಾಯಿ” ಎಂದು ಮತ್ತೆ ಮೊದಲಿನಂತೆ ಕಟ್ಟಿದ. ಆ ಕನಸು. ಈ ಅಪಶಕುನ ಒಟ್ಟಾರೆ ಅಮಂಗಳವೆನ್ನಿಸಿ ದತ್ತೂನ ಮನೆ ಕಡೆ ಹೆಜ್ಜೆ ಹಾಕಿದ. +ಅಲ್ಲಿ ದತ್ತಪ್ಪ ಸ್ನಾನ ಕೂಡ ಮಾದದೆ ತಲೆಮೇಲೆ ಕೈಹೊತ್ತು ಚಿಂತಾಮಣಿ ನೋಡುತ್ತ ಕೂತಿದ್ದ. ಇವ ತನ್ನ ಕನಸು ಹೇಳಬೇಕೆಂದು ಬಾಯಿ ತೆರೆಯುವುದರೊಳಗೆ ದತ್ತಪ್ಪ +“ಗೌಡಾ, ರಾತ್ರಿ ಕನಸಿನಾಗ ನನ್ನ ಚಿಂತಾಮಣಿ ಕಳಧಾಂಗಿತ್ತೊ!’ ಅಂದ. ಗೌಡ ಮಾತಾಡಲೇ ಇಲ್ಲ. +ಬಹುಶಃ ಇವರಿಬ್ಬರ ಕನಸು ಕೇಳಿದಮೇಲೆ ಹೇಳಿದಳೋ, ಅಥವಾ ನೆನೆಸಿಕೊಂಡಳೋ ಯಾಕೆಂದರೆ ಲಗಮವ್ವ ಕವಿಯತ್ರಿಯಾದ್ದರಿಂದ ಬೇಕುಬೇಕಾದ ಸಮಾಂತರ ಸಂಗತಿಗಳನ್ನು ನಿಂತಕಾಲ ಮೇಲೇ ಹೊಸೆಯಬಲ್ಲವಳಾದ್ದರಿಂದ ಹೀಗೆ ಹೇಳಬೇಕಾಯಿತು. ಅವಳ ನಾಲಗೆ ಕಳಚಿ ಬಿದ್ದಂತೆ ಕನಸಾಗಿತ್ತು. +ಊರಿಗೆಲ್ಲ ಆದಂತೆ ದೇವರೇಸಿಯ ಗುಡಿಸಲಿಗೂ ಬೆಳಗಾಯಿತು. ಬೆಳತನಕ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲವಾದ್ದರಿಂದ ಕಣ್ಣು ಕೆಂಪಗೆ ಕರಿಮಾಯಿಯ ಕಣ್ಣಂತೆ ಕಾಣುತ್ತಿದ್ದವು. ಜ್ವರದಿಂದ ಮೈ ಸಿಡಿಯುತ್ತಿತ್ತು. ತಾನಿಂದು ಬದುಕುವುದಿಲ್ಲವೆಂದು ಖಚಿತವಾಗಿತ್ತು. ಏನಿದ್ದದ್ದು ಏನಾಗಿ ಹೋಗಿತ್ತು! ಊರವರ ಮುಖ ನೋಡುವುದಿರಲಿ, ತಾಯಿಯ ಮುಖ ಕಣ್ಣಾರೆ ನೋಡುವುದು ಹ್ಯಾಗೆ, ಕೈಯ್ಯಾರೆ ಮುಟ್ಟಿ ಪೂಜೆ ಮಾಡೋದು ಹ್ಯಾಗೆ? ಓಡಿಹೋಗಿ ಒಂದು ಸಲ ನಿನ್ನೆ ನಡೆದಿದ್ದನ್ನೆಲ್ಲ ಗೌಡನ ಮುಂದೆ ಒದರಿ ಬಿಡಲೆ ಎನ್ನಿಸಿತು. ಯಾಕೆ, ತಾಯಿಯ ಮುಂದೇ ಒದರೋಣ. ಆದರೆ ಕಣ್ಣುತಪ್ಪಿ ನಡೆಯೋದೇನಿದೆ? ಊರು ಮುಚ್ಚಿರಬಹುದು, ತಾಯಿ ಕಣ್ಣು ಮುಚ್ಚುವುದು ಸಾಧ್ಯವೆ? ಹಾಗಂತ ಈ ದಿನ ಹಿಂದೆ ಸರಿಯುವುದೂ ಸಾಧ್ಯವಿಲ್ಲ. ತಾಯಿಯ ಮಹತ್ವದ ಹುಣಿಮೆ ಇದು; ತಾಯಿ ರಂಡಿಯಾಗುವ ಹುಣ್ಣಿಮೆ. ಆದದ್ದಾಗಲಿ ತಾಯಿ ಬೇಕಾದರೆ ನನ್ನನ್ನು ರಕ್ತಕಾರಿಸಿ ಕೊಂದು ಇನ್ನೊಬ್ಬರನ್ನಾಯ್ದುಕೊಳ್ಳಲಿ ಎಂದುಕೊಂಡ. ಇಷ್ಟು ವರ್ಷ ದೇವರೇಸಿಯಾಗಿದ್ದವನಿಗೆ ಅದೇ ಮಾನದ ಸಾವು. ಅಥವಾ ತಾಯಿ, ಎಷ್ಟಂದರೂ ಹಡದ ಕರುಳು. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಬಾರದೇಕೆ? ‘ನಾವೋ ಉಪ್ಪು ಹುಳಿ ಖಾರ ತಿಂಬವರು, ತಪ್ಪು ಮಾಡುವವರು, ತಾಯಿಯಲ್ಲದೆ ಇನ್ಯಾರು ಕಾಪಾಡಬೇಕು? ಮಗು ಹೇಸಿಗೆ ಮಾಡಿಕೊಳ್ಳುತ್ತದೆ. ತಾಯಿ ತೊಳೆದು ಹತ್ತಿರ ಕರೆದುಕೊಳ್ಳುವುದಿಲ್ಲವೆ? ಏನು ಮಾಡುತ್ತಿದ್ದೇನಂತ ಅರಿವಿಲ್ಲದೆ ಮಗು ತಾಯಿಗೆ ಹೊಡೆಯುತ್ತದೆ. ಹಸಿದಾಗ ಮತ್ತೆ ಅವ್ವಾ ಎನ್ನುತ್ತದೆ. ಹೊಡೆದಾಗ ಹೊಡಿಸಿಕೊಂಬುವಳೂ ಅವಳೇ. ಹಸಿದಾಗ ಮೊಲೆಯೂಡುವವಳೂ ಅವಳೇ ಅಥವಾ, +ಉಗುಳಿದಳು ಅನ್ನೋಣ, ಅವಳೇನು ಹೊರಗಿನವಳೆ? ತಾಯಿಯಲ್ಲವೆ? ಅವಳಿಗೆ ಉಗುಳುವ ಹಕ್ಕಿದೆ. ಆಕೆ ನನ್ನನ್ನು ಗಡಿಯಾಚೆ ಉಗುಳಿದರೂ ಅದು ಮಾನವೆ. ಅವಳೇ ಹುಟ್ಟಿಸಿದಳು. ಅವಳೇ ಕೊಲ್ಲಲಿ, ಎಂದುಕೊಂಡು ಧೋತರ ತಗೊಂಡೆದ್ದ. ಮೈಯಲ್ಲಿ ದಿನದ ಕಸುವಿರಲಿಲ್ಲ. ಉತ್ಸಾಹವಿರಲಿಲ್ಲ. ಮಂದಿಯ ಮುಖ ನೋಡುವ ಧೈರ್ಯವಿರಲಿಲ್ಲ. ಸುಡುಸುಡುವ ಜ್ವರ ಬೇರೆ. ಮೆಲ್ಲಗೆ ಸಾಧ್ಯವಿದ್ದಷ್ಟು ಜನಗಳನ್ನು ನಿವಾರಿಸಿ ಕೆರೆಗೆ ಹೋಗಿ ಮಿಂದ. ಒದ್ದೆಯುಟ್ಟು ಗುಡಿಗೆ ಬಂದ. ಕಣ್ಣಿಗೆ ಕತ್ತಲು ಬಂದು ಗುಡಿಯ ಹೊಸ್ತಿಲ ಮೇಲೆ ಬಿದ್ದ. ಮತ್ತೆ ತಾನೇ ಎದ್ದು ಒಳಗೆ ಹೋದ. +ದೀಪ ಹಚ್ಚಿದ. ತಾಯಿಯ ಸೀರೆ ಕಳಚಿ ಮೈಗೆ ಮಜ್ಜನ ಮಾಡಿಸುವಾಗ ಮೈ ಝುಂ ಎಂದು ಚಳಿ ಬಂದು ನಡುಗಿದ. ನಡುಗುವ ಕೈಗಳಿಂದಲೇ ಮಡಿ ಉಡಿಸಿದ. ತಾನು ತಂದಿದ್ದ ಕವಡೆಯ ಸರ ಹಾಕಿದ. ಹೂವೇರಿಸಿದ. ಗಂಟೆ ಬಾರಿಸಿದ.ಕೊನೆಗೆ ಪ್ರದಕ್ಷಿಣೆ ಹಾಕಿ ಅಡ್ಡಬಿದ್ದ. ಏಳುವ ಮನಸ್ಸಾಗಲೊಲ್ಲದು. ಚಳಿಜ್ವರ ನೆತ್ತಿಗೇರತೊಡಗಿತು. +ತಡವರಿಸಿಕೊಂಡು ಮೇಲೆದ್ದು ತಾಯಿಯ ಮುಖದ ಕಡೆ ನೋಡಿದ. ಒತ್ತರಿಸಿ ದುಃಖ ತಡೆಯಲಾಗದೆ ‘ಎವ್ವಾ’ ಎಂದು ಅಳತೊಡಗಿದ. “ಎದಿ ಕಲ್ಲ ಮಾಡಿಕೊ ಬ್ಯಾಡ ತಾಯೀ”, ಎಂದು ಎದೆ ಎದೆ ಬಡಿದುಕೊಂಡ. “ನಾ ನಿನ್ನ ಮಗಾನ ಹಡದವ್ವಾ” ಎನ್ನುತ್ತ ಹಣೆಯನ್ನು ಕಲ್ಲಿಗೆ, ಗದ್ದಿಗೆಗೆ ಬಾರಿಸಿದ. ಅದೇನು ಕರಿಮಾಯಿಯ ಮಾಯೆಯೋ, ಮೂರ್‍ತಿಯ ಬಲಭುಜದ ಹೂವು ಕೆಳಗೆ ಬಿತ್ತು. ದೇವರೇಸಿಗೆ ಹೋದ ಜೀವ ತಿರುಗಿ ಬಂದಷ್ಟು ಸಂತೋಷವಾಯ್ತು. ಸ್ವಥಾ ತಾಯಿ ಅವನನ್ನು ತಬ್ಬಿಕೊಂಡು, ಮೈದಡವಿ ‘ಮಗನ ಚಿಂತೀ ಮಾಡಬ್ಯಾಡ. ನಾ ಇದ್ದೀನಿ’ ಅಂದಷ್ಟು ನೆಮ್ಮದಿಯಾಯ್ತು. ಮೈ ಹುಷಾರಾಗಿ ಚಳಿ ಜ್ವರ ಬಿಟ್ಟೋಡಿ ಮೈ ಬೆವರಿದ. ತಾಯಿಗೆ ಅತ್ಯಂತ ವಿನೀತನಾದ….ಕೃತಜ್ಞತೆಯಿಂದ ತುಂಬಿ ತುಂಬಿ ಕಣ್ಣೀರು ತುಳುಕಿದ. “ತಾಯಿ ನನ್ನ ತಪ್ಪ ಹೊಟ್ಯಾಗ ಹಾಕ್ಕೊಂಡ್ಳು; ತಾಯೀ ಆಶೀರ್ವಾದ ಆತು” ಎಂದು ತನಗೆ ತಾನೇ ಗಟ್ಟಿಯಾಗಿ ಹೇಳಿಕೊಳ್ಳುತ್ತ ಗುಡಿಸಲ ಕಡೆ ನಡೆದ. +ಇಡೀ ದಿನ ಗುಡಸೀಕರನ ಪಾರ್ಟಿಯ ಪ್ರಚಾರವೋ ಪ್ರಚಾರ. ಬೆಳಗಾವಿಯಿಂದ ಬ್ಯಾಂಡ್‌ಸೆಟ್‌ನವರನ್ನು, ಅವರ ಹಿಂದೆ ಕುಣಿಯುವ ಪಾತ್ರದ ಸೂಳೆಯರನ್ನು ಕರೆತಂದು ಊರ ತುಂಬ ಕುಣಿಸಿದರು. ಸ್ವಯಂ ಗುಡಸೀಕರ ಚತುಷ್ಟಯರೊಂದಿಗೆ ಮನೆ ಮನೆಗೆ ಹೋಗಿ ತಮಗೇ ಹೋಟು ಹಾಕಬೇಕೆಂದು ಆಬಾಲವೃದ್ಧರಿಗೆ ವಿನಂತಿಸಿಕೊಂಡು ಬಂದ. ಗೌಡ ದತ್ತಪ್ಪ ಹೋಗಲಿಲ್ಲ. ಕನಸುಗಳಿಂದ ಅವರ ಮನಸ್ಸು ಮೊದಲೇ ಜರ್ಜರಿತವಾಗಿತ್ತು. ನಿಂಗೂ ಮಾತ್ರ ಕುಸ್ತಿ ಹುಡುಗರನ್ನು ಕರೆದುಕೊಂಡು ಗೌಡರಿಗೇ ಹೋಟು ಹಾಕಬೇಕೆಂದು, ಗಂಡಸರು, ಹೆಂಗಸರೆನ್ನದೆ ಎಲ್ಲರಿಗೂ ಹೇಳಿಬಂದ. ಲಗಮವ್ವ ಹೆಂಗಸು ರೀತಿಯಲ್ಲಿ ಹೇಳಿಬಂದಳು. ಬಾಳೂ ಬಸೆಟ್ಟಿ ಅವರೂ ಅಲೆದಾಡಿ ಬಂದರು. ಕಂಡಕಂಡವರಿಗೆಲ್ಲ ದೇವಿಯ ಬಂಡಾರ ಹಚ್ಚಿಬಂದರು. ಈ ಗಡಿಬಿಡಿಯಲ್ಲಿ ಸಂಜೆಯಾದದ್ದೇ ಯಾರಿಗೂ ತಿಳಿಯಲಿಲ್ಲ. +ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದ. ದನಕರು ಮನೆಗೆ ಧಾವಿಸುವ ಅವಸರದಲ್ಲಿ ಎದ್ದ ಧೂಳು, ಪ್ರಚಾರಕ್ಕಾಗಿ ಜನ ಓಡಾಡಿ ಎದ್ದ ಧೂಳು, ಪಾತ್ರದವರು ಕುಣಿದಾಡಿ ಅವರ ಸುತ್ತ ಗುಂಪುಗೂಡಿ ತುಳಿದಾಡಿ ಎದ್ದ ಧೂಳು, ಕಾರಖಾನೆಯ ಹೊಗೆಯಂತೆ ಅಡರಿದ್ದ ಕಲಬೆರಕೆಯ ವಿಚಿತ್ರ ಧೂಳಿನಲ್ಲಿ ಊರಿನ ವಿವರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಇದರ ಜೊತೆಗೆ ಮೈಕಿನ, ಬ್ಯಾಂಡ್‌ಸೆಟ್ಟಿನ, ಮನುಷ್ಯರ ವಿಕಾರ ದನಿಗಳು ಬೆರೆತು ಊರಿಗೂರೇ ಕಿಟಾರನೆ ಕಿರುಚುತ್ತಿದ್ದಂತೆ ಕೇಳಿಸುತ್ತಿತ್ತು. ಮಕ್ಕಳು ಹೆದರಿ ಮೊಲೆ ಮರೆತು ಚೀರಿದರೂ ಯಾರಿಗೂ ಕೇಳಿಸದಂತಾಗಿತ್ತು. ಪಶ್ಚಿಮದ ಆಗಸ ಕರಿಮಾಯಿಯ ಕೆಂಗಣ್ಣಿನಂತೆ ಕೆಂಪಾಗಿತ್ತು. ಮೂಡಣದಲ್ಲಿ ಹುಣ್ಣಿಮೆ ಚಂದ್ರನ ಆಕೃತಿ ಮೂಡಿತು. +ಇಂದು ಉಳಿದೆಲ್ಲ ಹುಣ್ಣಿಮೆಯಂತಿರಲಿಲ್ಲ. ಎದ್ದ ಧೂಳು ನೆಲಕ್ಕಂಟಿರಲಿಲ್ಲ. ಸಪ್ಪಳ ನಿಂತಿರಲಿಲ್ಲ.ಬೆಳದಿಂಗಳು ಹುಚ್ಚೆಚ್ಚು ಕೆರಳಿದಂತೆ ಆಕಾರಗೊಂಡುದಕ್ಕೆಲ್ಲ ನೆರಳು ಬಂತು. ನೆರಳು ಕ್ಷಣೇ ಕ್ಷಣೇ ದಟ್ಟವಾಗಿ ಕತ್ತಲೆಯ ಮರಿಯಂತಾಯಿತು. +ನಾನಾ ನಮೂನೆಯಲ್ಲಿ ದನಿಗಳಲ್ಲಿ ಗೌಡನ ಮನೆಯಿಂದ ಹೊರಟ ಹಲಗೆ, ಡೊಳ್ಳಿನ ದನಿಯೂ ಒಂದಷ್ಟೆ. ಕೆಲವರ ಊಟವಾಗಿತ್ತು; ಕೆಲವರದಿಲ್ಲ. ಆಗಲೇ ಪಂಚರು, ಹಿರಿಯರು, ಆಳು ಮಕ್ಕಳು, ಗರತಿಯರು ಗೌಡನ ಮನೆಮುಂದೆ ಸೇರಿದ್ದರು. ಪಲ್ಲಕ್ಕಿಯಲ್ಲಾಗಲೇ ದೇವಿಯ ಬಂಗಾರದ ಮುಖವನ್ನಿಟ್ಟಿದ್ದರು. ಒಂದು ಕಡೆಯಿಂದ ದತ್ತಪ್ಪ, ಇನ್ನೊಂದು ಕಡೆಯಿಂದ ಗೌಡ ತಾಯಿಗೆ ಚೌರಿ ಬೀಸುತ್ತಿದ್ದರು. ಡೊಳ್ಳಿನ ಅಬ್ಬರದಲ್ಲಿ ಅವರ ಹಾಡು ಕೇಳಿಸುತ್ತಿರಲಿಲ್ಲ. ಬರುವವರೆಲ್ಲ ಬಂದುದು ಖಚಿತವಾದೊಡನೆ ಗೌಡ ಮೆರವಣಿಗೆಹೊರಡಲೆಂದ. ‘ಚಾಂಗು ಭಲೇ’ ಎಂದು ಮೆರವಣಿಗೆ ಹೊರಟಿತು. +ಮೆರವಣಿಗೆ ಊರಿನ ಮುಖ್ಯ ರಸ್ತೆಗಳಲ್ಲಿ ಹಾದು ದೇವರೇಸಿಯ ಗುಡಿಸಿಲಿಗೆ ಬಂತು. ದೇವರೇಸಿಯಾಗಲೇ ಹಸಿರು ಸೀರೆ ಉಟ್ಟು ಸಿದ್ಧನಾಗಿದ್ದ. ದೇವರೇಸಿಯ ಮೈ ಸುಡುತ್ತಿದ್ದುದನ್ನು ಗಮನಿಸಿ ಲಗಮವ್ವ “ಯಾಕೋ ಅವ್ವನ ಮೈ ಕಾದ ತಗಡಾಗೇತಿ” ಎಂದಳು. ಉಳಿದ ಗರತಿಯರೂ ಗಮನಿಸಿದರು. ದೇವರೇಸಿ ಉತ್ತರ ಕೊಡಲಿಲ್ಲ. ಮುತ್ತೈದೆಯರು ಹಾಡುತ್ತ ಅವನ ಎರಡೂ ಕೈಗೆ ಐದು ವರ್ಣಗಳ ಬಳೆ ಮೊಳಕೈತನಕ ತೊಡಿಸಿದರು. ಹಣೆತುಂಬ ಕುಂಕುಮ, ಬಂಡಾರ ಹಚ್ಚಿದರು. ಜಡೆಗೆ ಹೂ ಮುಡಿಸಿ ಬಂಡಾರ ಸಿಡಿಸಿದರು. ಕಾಲಿಗೆ ತೋಡೆ ತೊಡಿಸಿದರು. ಕೈಯಲ್ಲಿ ನವಿಲು ಗರಿಯ ಚೌರಿ ಹಿಡಿದುಕೊಂಡಾದ ಮೇಲೆ ‘ಚಾಂಗು ಭಲೇ’ ಎಂದು ಮೆರವಣಿಗೆ ಗುಡಿಯ ಕಡೆ ನಡೆಯಿತು…. +ಪೌಳಿಗೆ ಬಂದು ವಾಲಗ ಸುರುವಾಯಿತು. ಗೌಡ ತಾಯಿಯ ಬಂಗಾರದ ಮುಖವನ್ನೂ ಮಡಿಲಲ್ಲಿ ಬಚ್ಚಿಟ್ಟು ಕೂಸಿನಂತೆ ಎದೆಗವಚಿಕೊಂಡ. ದತ್ತಪ್ಪ ಚೌರಿ ಬೀಸುತ್ತ ದಾರಿ ತೋರಿಸಿದ. ತಾಯಿಯ ಬಂಗಾರದ ಮುಖವನ್ನು ಗರ್ಭಗುಡಿಗೆ ಒಯ್ದರು. ನಿಶ್ಯಕ್ತಿಯಿಂದ ದೇವರೇಸಿ ನಡೆಯಲಾರದಾಗಿದ್ದ. ಲಗಮವ್ವ ರಟ್ಟೆಯಲ್ಲಿ ಕೈಹಾಕಿ ಒಳಗೊಯ್ದಳು. ಅವರಷ್ಟೆ ಒಳಗೆ ಹೋದೊಡನೆ ಬಾಗಿಲಿಕ್ಕಿತು. +ತಾಯಿಯ ಬಂಗಾರದ ಮುಖವನ್ನು ಮೂಲ ವಿಗ್ರಹಕ್ಕೆ ಜೋಡಿಸಿದರು. ಕೆಂಪಗೆ ಥಳ ಥಳ ಹೊಳೆಯುವ ಕಣ್ಣುಪಟ್ಟಿಗಳನ್ನು ಹೊಂದಿಸಿದರು. ಕವಡೆಯ ಸರ ತೆಗೆದು ತಾಯಿಯ ಎದುರಿಗಿಟ್ಟರು. ಗರಿಗರಿ ನೆರಿಗೆ ಹೊಯ್ದು ಹಸಿರು ಸೀರೆ ಉಡಿಸಿದರು. ಬಂಗಾರದ ಥರಾವರಿ ಆಭರಣ ತೊಡಿಸಿದರು. ವಿಗ್ರಹದ ಕೈಗೂ ಐದು ವರ್ಣದ ಬಳೆ ತೊಡಿಸಿದರು ತಾಯಿಯ ಈ ಬಗೆಯ ಶೃಂಗಾರ ಇನ್ನು ಒಂದು ತಿಂಗಳ ತನಕ ನೋಡದೊರೆಯಿವುದಿಲ್ಲ. ಆದ್ದರಿಂದ ಗೌಡ, ಲಗಮವ್ವ, ದತ್ತಪ್ಪ ಬಿದ್ದ ಕನಸುಗಳಿಗೆ ಹೆದರಿದ್ದರಿಂದ ಇದ್ದೀತು, ತುಂಬ ಭಾವುಕರಾಗಿ ಕಣ್ಣುತುಂಬ ನೋಡಿದರು. ಹಿಂದೆ ತಾಯಿಯ ಕೈ ಸಿಡಿಯುವಂತೆ ಮಾಡಿದ ಪಾಪಿಯ ಪತ್ತೆಯಾಗಿರಲಿಲ್ಲ. ತಾಯಿಯ ಮಾತೇ ಹೀಗೆ. ಎಲ್ಲಾ ತಮ್ಮ ಪರಿಣಾಮಗಳಿಂ,ದಲೇ ತಿಳಿಯುತ್ತವೆ. ಮೊದಲೇ ಗೊತ್ತಾದರೆ ಆಗುವ ಅನಾಹುತವನ್ನಾದರೂ ತಪ್ಪಿಸಬಹುದು. ಆದರೆ ತಿಳಿಯುವಂತೆ ಮಾತಾಡಲು ತಾಯಿ ತಮ್ಮಂತೆ ಮನುಷ್ಯಳೆ? ಆಕೆಯ ವ್ಯವಹಾರದಲ್ಲಿ ಕೈಹಾಕುವುದು ತಮ್ಮಿಂದೇನಾದೀತು? ಇದನ್ನೆಲ್ಲ ನೆನೆದಾಗ ತಾವೆಂಥ ದುರ್ಬಲರೆಂದು ಅನಿಸುತ್ತದೆ. ಆಗೋದನ್ನ ಕೈಕಟ್ಟಿಕೊಂಡು ಸಾಕ್ಷಿಯಾಗಿ ನೋಡುವುದೆಷ್ಟೇ ಅಷ್ಟೆ. +ದೇವರೇಸಿಯನ್ನು ಎಬ್ಬಿಸಬೇಕಾಯ್ತು. ಎಬ್ಬಿಸುವಾಗ ಮೈ ಸುಡುತ್ತಿದ್ದುದು ಗೌಡನಿಗೂ ತಿಳಿದು ಹಳಹಳಿಸಿದ. ದೇವರೇಸಿ ಎದ್ದು ದೂಪಾರತಿಯನ್ನು ಕೈಗೆತ್ತಿಕೊಂಡೊಡನೆ ಗರ್ಭಗುಡಿಯ ಬಾಗಿಲು ತೆರೆದರು. ಹೊರಗೆ ನೆರೆದಿದ್ದ ಭಕ್ತರೆಲ್ಲ ಬಾಗಿಲಿಗೆ ಮುಕುರಿ ತಾಯಿಯ ಬಂಗಾರದ ಶೃಂಗಾರ ಮೂರ್ತಿಯನ್ನು ಕಣ್ಣತುಂಬ ನೋಡಿದರು. ದೇವರೇಸಿ ದೂಪಾರತಿ ತಗೊಂಡು ಹೊರಬಂದು ಗುಡಿ ಪ್ರದಕ್ಷಿಣೆ ಹಾಕಿದ. ದೀಪಕಂಬದ ಹತ್ತಿರ ಹೋಗಿ ಅಲ್ಲಿದ್ದ ಗಣಗಳಿಗೆ ದೂಪಾರತಿಯ ಕೈ ಮೇಲೆತ್ತಿ ‘ಚಾಂಗುಭಲೇ’ ಎಂದು ಕಿರಿಚಿ ನೆಲಕ್ಕೆ ಕುಕ್ಕಿದ ಕೂಡಲೇ ನೆರೆದ ಭಕ್ತರೆಲ್ಲ ಗುಡಿಯಲ್ಲಿದ್ದ ಎಲ್ಲ ಗಂಟಿ, ಜಾಗಟಿ, ತಾಳ, ಡೊಳ್ಳುಗಳನ್ನು ಚಾಂಗು ಭಲೇ ಎಂದು ಕಿರುಚುತ್ತ ಕಿವಿಗಡಚಿಕ್ಕುವಂತೆ ಬಾರಿಸತೊಡಗಿದರು. +ದೇವರೇಸಿ ಓಡೋಡುತ್ತ ಬಂದು ಗರ್ಭಗುಡಿ ಹೊಕ್ಕ. ಈಗ ತಪಸ್ಸಿಗಾಗಿ ಅಡವಿಯಲ್ಲಿದ್ದ ಜಡೆಮುನಿಯ ಸಂಹಾರವಾಯಿತೆಂದೂ ಆ ಸುದ್ದಿಯನ್ನು ದೇವರೇಸಿ ಓಡೋಡುತ್ತ ಬಂದು ತಾಯಿಗೆ ಅರಿಕೆಮಾಡಿದನೆಂದೂ ಇದರರ್ಥ. ತಾಯಿಯೀಗ ರಂಡೆ (ವಿಧವೆ)ಯಾದ್ದರಿಂದ ಆಕೆಯ ಕೈಬಳೆ ಒಡೆಯುತ್ತಾರೆ. ಗೌಡ ಆವೇಶದಲ್ಲಿದ್ದ ದೇವರೇಸಿಯನ್ನು ತೆಕ್ಕೆಹಾಯ್ದು ಹಿಡಿದುಕೊಂಡಿದ್ದ. ಲಗಮವ್ವ ಅವಸರದಲ್ಲಿ ದೇವರೇಸಿಯ ಕೈಬಳೆ ಒಡೆದಳು. ಕುಂಕುಮ ಅಳಿಸಿದಳು. ದತ್ತಪ್ಪ ಮೂರ್ತಿಯ ಕೈಬಳೆ ಒಡೆದು ಕುಂಕುಮ ಅಳಿಸಿದ. ಕೂಡಲೇ ಕೂಡಿದ ಭಕ್ತರು ಬಿಲ್ಲುಬಾಣೆಸೆದಂತೆ ಮೂರ್ತಿಯ ಕಡೆಗೆ ಅಡಿಕೆಗಳನ್ನು ಎಸೆದರು. ದೇವದಾನವರು ತಾಯಿಯ ಗರ್ಭಕ್ಕೆ ಆಯುಧಗಳನ್ನೆಸೆದರೆಂದು ಇದರರ್ಥ. ಗರ್ಭ ಕಳಚಿದೊಡನೆ ದೇವರೇಸಿ ವಿಕಾರವಾಗಿ ಕಿರಿಚಿದ. ಗೌಡ, ದತ್ತಪ್ಪ ಲಗುಬಗೆಯಿಂದ ನಾನಾ ಬಗೆಯ ಇಪ್ಪತ್ತೊಂದು ಹಣ್ಣುಗಳನ್ನು ತಾಯಿಯ ಉಡಿಯಲ್ಲಿ ಕಟ್ಟಿದರು. +ತಾಯಿ ಕೂಡಲೇ ಕೋಪಗೊಂಡಳು. ಮೈತುಂಬಿ ಮುಳ್ಳಾವಿಗೆ ಹತ್ತಿದಳು. ಕೈಯಲ್ಲಿ ಖಡ್ಗ ಕೊಟ್ಟರು. ಎಡಗೈಯಲ್ಲಿ ಪಂಜು ಕೊಟ್ಟರು. ರಭಸದಿಂದ ಗುಡಿಬಿಟ್ಟುಹೊರಗೆ ಪೌಳಿಗೋಡಿದಳು. ಪೌಳಿಯ ತು,ಬ ಗಂಡಸರು ಕಿಕ್ಕಿರಿದು ನೆರೆದಿದ್ದರು. ಈಗ ತಾಯಿ ದೇವದಾನವರ ಸಂಹಾರಕ್ಕೆ ಹೊರಡುವ ಸಮಯ. ಆ ಅವಸರದಲ್ಲಿಯೇ ಹಕ್ಕಿನ ಹಿರಿಯರನ್ನು ಕರೆದು ಊರ ಯೋಗಕ್ಷೇಮದ ಬಗ್ಗೆ ಮೂರು ವಿಶೇಷ ಕಾರಣಿಕ ಹೇಳಿ ಊರ ಸೀಮೆ ದಾಟುತ್ತಾಳೆ. ಪಲ್ಲಕ್ಕಿಯ ಹತ್ತಿರ ನಿಂತೊಡನೆ ತಾಯಿ ಪಂಜಿನ ಕೈ ಎತ್ತಿ ‘ಏಽಽಽಽ’ ಎಂದು ಕಿರಿಚಿದಳು. ಕೇಳುವುದಕ್ಕೆ ಎಲ್ಲರೂ ಸ್ತಬ್ಧರಾದರು. ಗೌಡ ಗಪ್ಪಬೆ ಬಗ್ಗಿ ತಾಯಿಯ ಮುಳ್ಳಾವಿಗೆಯ ಮೇಲೆ ನಿಂತ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ. ಗುಡಿಯ ಒಳಗಡೆ ಹೆಂಗಸರು ಇನ್ನೂ ಗದ್ದಲ ಮಾಡುತ್ತಿದ್ದರು. ದತ್ತಪ್ಪ ಗದರಿಸಿದ, ಸುಮ್ಮನಾದರು. ಆದರೆ ಏನೋ ಗುಸುಗುಸು ನಡೆಯುತ್ತಿತ್ತು. ತಾಯಿ ಬೇಗನೆ ಬಾಯಿ ಬಿಡಲಿಲ್ಲ; ಬರೀ ಬಿಕ್ಕತೊಡಗಿದಳು. +ಜನ ಮೈಯೆಲ್ಲ ಕಿವಿಯಾದರು. ಆಶ್ಚರ್ಯವೆಂದರೆ ಗುಡಸೀಕರ ಕೂಡ ಬಸವರಾಜನೊಂದಿಗೆ ಕಾರಣಿಕ ಕೇಳಲು ಬಂದಿದ್ದ. ಒಳಗೊಳಗೇ ದೇವಿ ತನ್ನ ಎಲೆಕ್ಷನ್ ಪರವಾಗಿಯೇ ಕಾರಣಿಕ ಹೇಳಿಯಾಳೆಂಬ ನಂಬಿಕೆಯಿತ್ತು. ಬಸವರಾಜು ಅವನ ಪಕ್ಕದಲ್ಲೇ ನಿಂತು ಹೆಂಗಸರ ಕಡೆ ಕುಡಿನೋಟ ಬೀರುತ್ತ ನಿಂತಿದ್ದ. ಗುಡಸೀಕರನ ಕಿವಿಯಲ್ಲಿ ಏನೋ ಹೇಳುತ್ತಿದ್ದಂತೆ ಬಾಯಿ ಮುಚ್ಚಲಿಕ್ಕೆ ಸನ್ನೆ ಮಾಡಿ ಕಾರಣಿಕಕ್ಕೆ ಕಿವಿಕೊಟ್ಟ. ಹೆಂಗಸರಲ್ಲಿದ್ದ ಗಿರಿಜಳಿಗೆ ಕಾರಣಿಕದ ಬಗ್ಗೆ ಕಾಳಜಿಯಿದ್ದಂತಿರಲಿಲ್ಲ. ಬಸವರಾಜೂನನ್ನು ಕಣ್ಣಿನಿಂದಿರಿಯುತ್ತ, ಹಲ್ಲು ಕಿಸಿಯುತ್ತ ನಿಂತಿದ್ದಳು. ಈಗಲೂ ತಾಯಿಗೆ ಬಾಯಿ ಬಂದಿರಲಿಲ್ಲ. ಬರೀ ಬಿಕ್ಕುತ್ತಿದ್ದಳು. +ಗೌಡನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ತಾಯಿಯ ವಾಣಿ ಏನಾಗುತ್ತದೋ, ಬಾಯಿ ಕೂಡ ಬರದಾಗಿತ್ತು. ನಿಂಗೂ ಹೆಂಗಸರಲ್ಲೇ ನಿಂತಿದ್ದವನು ಬಸವರಾಜುವಿನ ಕಣ್ಣ ಬೇಟಿ ಗಮನಿಸಿದ್ದ. ನೋಡಿ ಅಸೂಯೆಪಟ್ಟಿದ್ದ. ಹಿಂದೆ ನಿಂತಿದ್ದ ಸುಂದರಿ ನಿಧಾನವಾಗಿ ಬಿಕ್ಕತೊಡಗಿದಳು. ಕೂಡಲೇ ಹೆಂಗಸರು ಅವಳನ್ನು ಗದರಿಕೊಂಡು. ಒಂದು ಸಲ ಸುಮ್ಮನಾಗಿ ಮತ್ತೆ ಬಿಕ್ಕತೊಡಗಿದಳು. “ಈ ರಂಡಿಗೇನಾಗೈತ್ಯೊ ಬ್ಯಾನಿ” ಎಂದು ಹೆಂಗಸರಿಗೆ ಕೇಳಿಸುವಂತೇ ಲಗಮವ್ವ ಬೈದು ಮತ್ತೆ ಕಾರಣಿಕಕ್ಕೆ ಕಿವಿಯೊಡ್ಡಿದಳು. ನಿಂಗೂ ತಿರುಗಿ ನೋಡಿದಾಗ ಸುಂದರಿ ನಿಂತಲ್ಲೇ ಬಿಕ್ಕುತ್ತ ಕುಸಿದಿದ್ದಳು. ಬಿಕ್ಕುವಾಗ ಎದ್ದೆದ್ದು ಬೀಳುತ್ತಿದ್ದಳು. ಅಷ್ಟರಲ್ಲಿ ತಾಯಿ ಇನ್ನೊಮ್ಮೆ, +“ಏಽಽಽ” +ಎಂದು ಕಿರಿಚಿದಳು, ಜನ ಸ್ತಬ್ಧರಾದರು. ಗೌಡ ತಾಯಿಯ ಕಾಲನ್ನು ಇನ್ನೂ ಬಿಗಿಯಾಗಿ ಹಿಡಿದ. ಕಿವಿಯ ಮೇಲೆ ತಾಯಿಯ ಬೆಚ್ಚಗಿನ ಕಣ್ಣೀರ ಹನಿ ಬಿದ್ದಾಗ ಕಳವಳವಾಯ್ತು. ತಾಯಿಗೆ ಬಾಯಿ ಬಂತು; +ಆಸರದ ಆಲದ ಮರದ ಬೇರ +ನೀರಿಲ್ಲದ ಒಣಗ್ಯಾವು +ನೀರ ಹಾಕೋದ ಮರೀಬ್ಯಾಡ್ರಲೇ…. +ಕಾರಣಿಕ ಸ್ಪಷ್ಟವಾಗಿ ಚುನಾವಣೆಯ ಬಗ್ಗೆ ಇತ್ತೆಂಬ ಬಗ್ಗೆ ಯಾರಿಗೂ ಅನುಮಾನವಾಗಲಿಲ್ಲ. ಆಸರದ ಆಲದ ಮರದ ಬೇರಿಗೆ ನೀರು ಹಾಕುವುದೆಂದರೆ ಗೌಡನ ಪಾರ್ಟಿಗೆ ‘ಹೋಟು’ ಹಾಕಬೇಕೆಂಬುದಾಗಿ ಎಲ್ಲರೂ ಅರ್ಥೈಸಿಕೊಂಡರು. ಗಟ್ಟಿಮುಟ್ಟಾದ ನುಡಿಯೆಂದು ಜನ ಆಡಿಕೊಂಡರು ಕೂಡ, “ನಡೀಪಾ ಗುಡಸೀಕರಾ ಇನ್ನ” ಎಂದೊಬ್ಬ ಕುಸ್ತೀ ಹುಡುಗ ಕುಹಕವಾಡಿದ. ಗುಡಸೀಕರನಿಗೆ ನಿರಾಶೆಯಾಯ್ತು. ಬಸವರಾಜೂನ ಕಡೆ ನೋಡಿದ. ಅವನಿರಲಿಲ್ಲ. +ರಂಡಿ ಹುಣ್ಣಿವೆ ದಿನ ಆಗೋದು ಒಟ್ಟು ಮೂರು ನುಡಿಗಳು. ಊರುಗಾರಿಕೆಯ ಮೊದಲನೆಯ ನುಡಿಯಾದ ಮೇಲೆ ಎರಡನೆಯ ನುಡಿ ಗೌಡನ ಮನೆತನಕ್ಕೆ ನೇರವಾಗಿ ಸಂಬಂಧಪಡುವುದರಿಂದ ತನ್ನ ಕಳೆದ ಮಗನ ಬಗ್ಗೆ ತಾಯಿ ಏನು ಹೇಳುವಳೋ ಎಂದು ಗೌಡ ತವಕಗೊಂಡ. ಗಂಟಲಲ್ಲಿದ್ದ ಎರಡನೆಯ ನುಡಿ ಇನ್ನೇನು ದನಿಗೊಂಡು ಹೊರಬರಬೇಕು, ಅಷ್ಟರಲ್ಲಿ ಗುಡಿಯೊಳಗಿದ್ದ ಸುಂದರಿ ವೀರಾವೇಶದಿಂದ “ಏ” ಎಂದು ಥೇಟ್ ದೇವರೇಸಿಯಂತೆಯೇ ಕಿರಿಚಿದಳು. ಜನ ದಂಗಾದರು. +ಏನು, ಎತ್ತ, ಯಾಕೆ-ತಿಳಿಯುವ ಮುನ್ನವೇ, ಜನ ಹಿಂದಿರುಗಿ ಹೆಂಗಸರತ್ತ ನೋಡನೋಡುವುದರೊಳಗೆ ಸುಂದರಿ ಹೆಂಗಸರ ಮಧ್ಯದಿಂದ ನೆಗೆದು ಬಂದು ಗಂಡಸರ ಗುಂಪಿನಲ್ಲಿ ಹೊಕ್ಕು ಎರಡೂ ಕೈಯಲ್ಲಿದ್ದ ಬಂಡಾರವನ್ನು ರಭಸದಿಂದ ಮೇಲಕ್ಕೆರೆಚಿದಳು. ದೇವರೇಸಿ ಅವಾಕ್ಕಾಗಿ ನಡುಗಿದ. ಅವಳು ಒಲೆದಾಡುವ ಪರಿ ನೋಡಿ ದೇವೀ, ತನ್ನ ಬಿಟ್ಟು ಇವಳ ಮೈತುಂಬಿದಳೆಂಬ ದುಃಖ ಒಂದೆಡೆಗಾದರೆ ಎಲ್ಲಿ ತನ್ನ ಗುಟ್ಟು ರಟ್ಟುಮಾಡುವಳೋ ಎಂಬ ಭಯ ಇನ್ನೊಂದೆಡೆ, ಸುಂದರಿ ಓಡಿ ಬಂದು ದೇವರೇಸಿಯ ಹತ್ತಿರವೇ ನಿಂತು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಇನ್ನೊಮ್ಮೆ ಕಿರಿಚಿದಳು. ಜನರ ಮನಸ್ಸು ಚೆಲ್ಲಾಪಿಲ್ಲಿಯಾಯಿತು. ಅವಳು ಒಲೆದಾಡುವ ಪರಿಯೋ ಥೇಟ್ ದೇವರೇಸಿಯಂತೆಯೇ ಇದ್ದುದರಿಂದ ಇವಳಿಗೂ ತಾಯಿ ಮೈತುಂಬಿರಬೇಕೆಂದು ಕೆಲವರಂದುಕೊಂಡರು. ಈ ಹುಚ್ಚರಂಡೆ ಹಗರಣಾ ಮಾಡುತ್ತಿದ್ದಾಳೆಂದು ಕೆಲವರಂದರು. ಮೈತುಂಬದಿದ್ದರೆ ಕೂಡಿದ ಭಕ್ತರಲ್ಲಿ ಹೀಗೆ ಒದರುವ ಧೈರ್ಯ ಬರುತ್ತಿತ್ತೇ? ಪಲ್ಲಕ್ಕಿಯ ಹತ್ತಿರ ನಿಲ್ಲುವ ಧೈರ್ಯವಾಗುತ್ತಿತ್ತೇ? ಹಗರಣಾ ಮಾಡಿದ್ದರೆ ನಾವ್ಯಾಕೆ, ದೇವಿ ಸುಮ್ಮನಿರುತ್ತಿದ್ದಳೆ? ನಿಂತಲ್ಲೇ ರಕ್ತ ಕಾರಿಬಿಡುತ್ತಿದ್ದಳು. ಅದೂ ಹೋಗಲಿ, ಅವಳ ದನಿಯಲ್ಲೇ ಏನೋ ಒಂದು ವಿಶೇಷವಿದೆ. ಹಲ್ಕಟ ಹೆಂಗಸೇನೋ ಹೌದು. ಆದರೆ ತಾಯಿಯ ಮನಸ್ಸಿಗೆ ಬಂದರೆ ಏನು ಮಾಡಲಾಗುತ್ತದೆ? ದೇವರೇಸಿ ಏನೋ ಮೈಲಿಗೆ ಮಾಡಿರಬೇಕು. ಇಲ್ಲದಿದ್ದರೆ ಅವನನ್ನು ಬಿಟ್ಟು ದೇವೀ ಇನ್ನೊಬ್ಬರನ್ನು ಯಾಕೆ ಆರಿಸಿಕೊಳ್ಳುತ್ತಿದ್ದಳು? ಗೌಡ ಅಪ್ರತಿಭನಾದ. ದತ್ತಪ್ಪನ ಚಿಂತಾಮಣಿಯ ಬುದ್ಧಿ ಮಸಳಿಸಿತು. ಏನು ಮಾಡಬೇಕೆಂದು ಯಾರಿಗೂ ತೋಚಲೊಲ್ಲದು. ಸುಂದರಿ ಕಿರಿಚಿ ಮತ್ತೆ ಬಿಕ್ಕತೊಡಗಿದಳು. ಇದು ದೇವರೇಸಿಯ ಬಿಕ್ಕಿನಂತೇ ಇತ್ತು. ನಂಬಲು ಸಿದ್ಧರಾದ ಕೆಲವು ಭಾವುಕರಿಗೆ ಸಂಶಯವೇ ಉಳಿಯಲಿಲ್ಲ. ಚರ್ಚಿಸುವ ಸಮಯವೂ ಅದಲ್ಲ. +ಎಲ್ಲೀ ಹೋದಳೆನ್ನಬೇಡಿರೇ +ಸುಂದರಿ ಕೈ ಎತ್ತಿ “ಚಿಗಿರಿಗೆ ನೀರ ಹಾಕ್ರಲೇ” ಎಂದು ಕಿರಿಚಿದಳು. ದೇವರೇಸಿಯ ಕೈಯ ಪಂಜು ಕಳಚಿ ಹಾಗೇ ಕೆಳಕ್ಕೆ ಬಿತ್ತು. ಹತ್ತಿರಿದ್ದವರಿಗೆ ಅವಳ ಮಾತು ಕೇಳಿಸಿತು. ದೂರಿದ್ದವರಿಗೆ ಕೇಳಿಸಲಿಲ್ಲ. ಏನು, ಏನೆಂದು ಅವರಿವರಿಂದ ತಿಳಿದುಕೊಂಡರು. ಕೂಡಲೇ ದತ್ತಪ್ಪ ಕೈ ಮೇಲೆತ್ತಿ “ಇದು ಗುಡಿಸ್ಯಾನ ದೇವರಪೋ” ಎಂದು ಕೂಗಿದ. ಜನ ದೇವಿಯೆಂದರು. ಹೊಯ್ಮಾಲಿಯೆಂದರು. ಹಾ ಎಂದರು, ಹೋ ಎಂದರು. ದೇವರೇಸಿ +“ದೇವೀ ನನ್ನ ಕೈಬಿಟ್ಟಳ್ರೋಽಽಽ” +-ಎಂದು ಕಿರಿಚುತ್ತ ಭೂತ ಕಂಡ ಮಗುವಿನಂತೆ ರಭಸದಿಂದ ಜನಗಳನ್ನು ಆ ಕಡೆ ಈ ಕಡೆ ತಳ್ಳಿ ಹೊರಗೋಡಿಬಿಟ್ಟ. ಜನ ಹೋ ಎಂದು ಗಾಬರಿಯಲ್ಲಿ ಕಿರಿಚುತ್ತಿದ್ದಂತೆ ಗೌಡ “ಸತ್ತಗಿತ್ತಾನ ಬಾರೋ ದತ್ತೂ” ಎಂದು ಕಿರಿಚಿ ದೇವರೇಸಿಯ ಬೆನ್ನು ಹತ್ತಿದ. ದತ್ತಪ್ಪನೂ ಓಡಿದ. ಅವರ ಹಿಂದಿನಿಂದ ಕೆಲವು ಕುಸ್ತೀ ಹುಡುಗರೂ, ಇನ್ನೂ ಕೆಲವರು ಓಡಿದರು. ಬಸವರಾಜು ಯಾವುದೋ ಪರಿಯಿಂದ ಗರ್ಭಗುಡಿ ಸೇರಿದವನು ಯಾರಿಗೂ ಗೊತ್ತಾಗದಂತೆ ಹೆಜ್ಜೇನಿನ ಮೂರು ಹುಟ್ಟುಗಳಿಗೆ ಉದ್ದ ಕೋಲಿನಿಂದ ಬೀಸಿ ಹೊಡೆದ. ಒಂದೊಂದೇ ಏಟಿಗೆ ಮೂರು ಹುಟ್ಟುಗಳು ಕತ್ತರಿಸಿ ನೆಲಕ್ಕೆ ರೊಪ್ಪೆಂದು ಬಿದ್ದವು. ಬಿದ್ದ ಹುಟ್ಟುಗಳ ಸುತ್ತ ಹಸಿನೆತ್ತರಿನಂತೆ- ಜೇನುತುಪ್ಪ ಹುಳು ಸಮೇತ ಚಿಲ್ಲೆಂದು ಸಿಡಿಯಿತು. ಆಘಾತದಿಂದ ತತ್ತರಿಸಿದ ಹುಳುಗಳು ಗೊಯೆಂದು ಭಗ್ಗನೆ ಹೊಗೆಯೆದ್ದಂತೆ-ಹೊರಬಿದ್ದು ಸಿಕ್ಕಸಿಕ್ಕವರನ್ನು ಸಿಕ್ಕಸಿಕ್ಕಲ್ಲಿ ಕಚ್ಚತೊಡಗಿದವು. +ಕಿರಿಚಾಟ, ಕೂಗಾಟ, ಒದರಾಟ, ಅಯ್ಯೋ, ಅಪ್ಪಾ, ಅವ್ವಾ, ತಾಯೀ, ಕರಿಮಾಯೀ ಎಂದು ಜನ ಮರೆ ಎಲ್ಲಿದ್ದರಲ್ಲಿಗೆ ಹೋ ಎಂದು ಓಡತೊಡಗಿದರು. ಬಿದ್ದರೋ, ಎದ್ದರೋ, ತುಳಿದರೋ, ತುಳಿಸಿಕೊಂಡರೋ- ಬಟ್ಟೆ ಕಿತ್ತೆಸೆದರು, ಸೀರೆ ಬಿಚ್ಚಿ ಎಸೆದರು, ಹೊಯ್ಕೊಂಡರೂ, ಹೊಡಕೊಂಡರೂ ಹುಳು ಬಿಡದೆ ಅಟ್ಟಿಸಿಕೊಂಡು ಹೋಗಿ ಎಲ್ಲೆಂದರಲ್ಲಿ, ಒಬ್ಬೊಬರಿಗೆ ಸಾವಿರ ಸಾವಿರ ಮುತ್ತಿ, ಒಂದನ್ನು ಒರೆದರೆ ಅದರ ನೆತ್ತರಿನಿಂದ ಸಾವಿರ ಹುಟ್ಟಿ, ಜೀವದ ಪರಿವೆಯಿಲ್ಲದೆ ಹೆಂಗಸರು ಮಕ್ಕಳೆನ್ನದೆ, ಬಿದ್ದವರೆದ್ದವರೆನ್ನದೆ, ಹೊಕ್ಕಲ್ಲಿ ಬಿಡದೆ, ಬಿದ್ದಲ್ಲಿ ಸೋಲದೆ ಗೊಯೆಂದು, ಹುಯ್ಯೆಂದು ಕಚ್ಚಿದವು. +ಒಂದೆರಡು ಗಳಿಗೆಯಲ್ಲಿ ಗುಡಿ ಇದ್ದಕ್ಕಿದ್ದಂತೆ ಖಾಲಿಯಾಗಿ ದೂರದಲ್ಲಿ ಮಕ್ಕಳ ಅಳುವಿನ ದನಿ, ಊರನಾಯಿಗಳ ವಿಕಾರವಾಗಿ ಊಳಿಡುವ ದನಿ ಮಾತ್ರ ಕೇಳಿಸುತ್ತಿತ್ತು. +ಶಿಶು ಮಕ್ಕಳು ಕಡಿದಷ್ಟು ಕಡಿಯಲೆಂದು ಅಲ್ಲೇ ಕಂಬಳಿಗಳಲ್ಲಿ ಮುದ್ದೆಯಾಗಿ ಬಿದ್ದಿದ್ದರು. ಗುಡಸೀಕರನೂ ಒಬ್ಬನ ಕಂಬಳಿಯಲ್ಲಿ ಹಾಗೇ ಅವಿತಿದ್ದವನು ದೈವವಶಾತ್ ಎಂಬಂತೆ ದೇವಿಯ ಬಂಗಾರದ ಮುಖದ ನೆನಪಾಯಿತು. ಹುಳು ಇನ್ನೂ ಕಡಿಮೆಯಾಗಿರಲಿಲ್ಲ. ಕಡಿಮೆಯಾಗುವ ಲಕ್ಷಣಗಳೂ ಕಾಣಲಿಲ್ಲ. ಗೌಡ, ದತ್ತಪ್ಪ ಇವರೂ ಯಾರಿರಲಿಲ್ಲ. ಬಿದ್ದುಕೊಂಡೇ ಶಿಶುಮಕ್ಕಳನ್ನು ಉದ್ದೇಶಿಸಿ ದೇವಿಯ ಬಂಗಾರದ ಮುಖದ ಬಗ್ಗೆ ಹೇಳಿದ. ಆಗ ಅವರಿಗೂ ನೆನಪಾಯಿತು. ಏಳಿರೆಂದು ಒಂದಿಬ್ಬರನ್ನು ಎಬ್ಬಿಸಿ ಕಚ್ಚುತ್ತಿದ್ದ ಹುಳ ಗಮನಿಸದೆ ಗರ್ಭಗುಡಿಯೊಳಗೆ ಓಡಿಹೋಗಿ ತಾಯಿಯ ಬಂಗಾರದ ಮುಖವನ್ನು ಜೋರಿನಿಂದ ಕಿತ್ತುಕೊಂಡ. ಕಿತ್ತ ರಭಸಕ್ಕೆ, ತಾಯಿಯ ಇಡೀ ಮೂರ್ತಿ ರುಂಡವಿಲ್ಲದೆ ಬರೀ ಮುಂಡ ಮಾತ್ರ ಧೊಪ್ಪನೆ ನೆಲಕ್ಕೆ, ಬೆನ್ನು ಮೇಲಾಗಿ ಕೈಕಾಲೂರಿ ಬಿದ್ದುಬಿಟ್ಟಿತು. ಗುಡಿಯಲ್ಲಿದ್ದ ಫಲ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಲ್ಲಿದ್ದವರ ಜೀವ ಹಾರಿಹೋದಂತಾಯ್ತು. ನಾಳೆ ಸರಿಪಡಿಸಿದರಾಯ್ತೆಂದು ಉಟ್ಟ ಧೋತ್ರದಲ್ಲಿ ತಾಯಿಯ ಮೂರ್ತಿ ಬಚ್ಚಿಟ್ಟುಕೊಂಡು ಆಭರಣಗಳನ್ನಾಯ್ದುಕೊಂಡು ಶಿಶು ಮಕ್ಕಳೊಂದಿಗೆ ಮನೆಗೆ ಓಡಿದ. ಓಡಿ ಬಂದವರಲ್ಲಿ ಬಸವರಾಜೂ ಕೂಡ ಒಬ್ಬನಾದದ್ದು ಮನೆಗೆ ಬಂದ ಮೇಲೆ ತಿಳಿಯಿತು. +ಎಲ್ಲರ ಮುಖ ಬಾತುಹೋಗಿ ಗುರುತು ಸಿಗದಾಗಿತ್ತು. ಬಸವರಾಜೂನ ಕಣ್ಣು, ಸೊಂಡಿ, ಕಿವಿ, ಎಲ್ಲಾ ಉಬ್ಬಿ ಬಾಯಿ ತೆರೆದಾಗ ಲಗಮವ್ವನ ಹಾಡಿನ ದೈತ್ಯನಂತೆ ಕಾಣುತ್ತಿದ್ದ. ಈಗ ಮಾತಾಡಿ ಪ್ರಯೋಜನವಿರಲಿಲ್ಲ. ಒಬ್ಬೊಬ್ಬರೂ ಮೈ ಪರಚಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು. ಒಳಗೆ ಗಿರಿಜಾ ಸಣ್ಣಗೆ ಅಳುತ್ತಿದ್ದಳು. ದೂರದಲ್ಲಿನ್ನೂ ಜನರ ನರಳಾಟ ಕೇಳಿಸುತ್ತಿತ್ತು. ನಾಯಿಗಳು ಊಳಿಡುತ್ತಿದ್ದವು. ಗೌಡ, ದತ್ತಪ್ಪ ಈಗ ಬಂದಾರು ಆಗ ಬಂದಾರೆಂದು ಬಂದೊಡನೆ ಈ ಮುಖ, ಆಭರಣಗಳನ್ನು ಅವರಿಗೊಪ್ಪಿಸಿ ಜವಾಬ್ದಾರಿ ತೀರಿಸಿಕೊಳ್ಳಬೇಕೆಂದು ದಾರಿನೋಡುತ್ತ, ಮೈಪರಚಿಕೊಳ್ಳುತ್ತ ಗುಡಸೀಕರ ಕೂತ. ಬಹಳ ಹೊತ್ತಾದರೂ ಯಾರೂ ಬರುವ ಸುಳಿವು ಕಾಣಲಿಲ್ಲ. ತಾವೆಲ್ಲಾ ಇಲ್ಲಿದ್ದರೆ ಅವರಿಗೆ ದೇವಿಯ ಮುಖ ಇಲ್ಲಿದ್ದುದು ತಿಳಿಯುವುದಾದರೂ ಹ್ಯಾಗೆ? ಬಂದಿದ್ದ ಶಿಶು ಮಕ್ಕಳನ್ನು ಗೌಡ, ದತ್ತಪ್ಪರ ಮನೆಗೆ ಕಳುಹಿಸಿದ. ಅವರ ಅಳುಮುಖ ನೋಡಿ ಗುಡಸೀಕರನ ಕರುಳು ಕಿತ್ತು ಬಾಯಿಗೆ ಬಂದಂತೆ ಗಂಟಲು ತುಂಬಿ ಬಂತು. ಬಸವರಾಜ ಇಲ್ಲದಿದ್ದರೆ ಅತ್ತುಬಿಡುತ್ತಿದ್ದನೋ ಏನೋ! ಅವ ಮಿಕಿಮಿಕಿ ಇವನನ್ನೇ ನೋಡುತ್ತಿದ್ದ. ಅವನಿಗೂ ಅನಿರೀಕ್ಷಿತ ಆಘಾತವಾದಂತಿತ್ತು. +ಒಂದು ತಾಸು ಹಾದಿ ನೋಡಿದ. ಯಾರೂ ತನ್ನ ಮನೆ ಕಡೆ ಬರುವ ಲಕ್ಷಣ ಕಾಣಿಸಲಿಲ್ಲ. ಗಡಿಯಾರ ನೋಡಿಕೊಂಡ. ಆಗಲೇ ಮೂರು ಗಂಟೆಯಾಗಿತ್ತು. ಬಸವರಾಜು ಕೂತಲ್ಲೇ ಮಲಗಿ ಗೊರಕೆಹೊಡೆಯುತ್ತಿದ್ದ. ದೇವಿಯ ಮುಖ ಕಣ್ಣು ತೆರೆದುಕೊಂಡು ಪಲ್ಲಂಗದ ಮೇಲೆ ಹಾಗೇ ಕೂತಿತ್ತು. ತಗೊಂಡು ಹೋಗಿ ತನ್ನ ದೇವರ ಮನೆಯ ತಿಜೋರಿಯಲ್ಲಿಟ್ಟು ಬೀಗ ಹಾಕಿಬಂದ. ಇನ್ನೂ ಯಾರೂ ಬರಲಿಲ್ಲ. +ಒತ್ತೊತ್ತಿ ಉಕ್ಕಿಬರುವ ಆಲೋಚನೆಗಳಿಂದ, ಚಿಂತೆಗಳಿಂದ ಅಳು ಬಂತು. ಗಳಗಳ ಕಣ್ಣೀರು ಸುರಿಸಿದ. ಸುಂದರಿ ಮಾಡಿದ್ದು ಬಸವರಾಜೂನ ಕುತಂತ್ರದಿಂದಲೇ ಎಂದು ಖಾತ್ರಿಯಾಗಿತ್ತು. ಅದೆಲ್ಲ ತನಗಾಗಿ ಇದ್ದೀತು. ಆದರೆ ಹಾಗೆ ಮಾಡಿದ್ದು ಸರಿಯಲ್ಲವೆಂದು ಅವನ ಅಭಿಪ್ರಾಯವಾಗಿತ್ತು. ತನ್ನೊಬ್ಬನ ಅಧಿಕಾರ ದಾಹಕ್ಕಾಗಿ ಇಡೀ ಹಳ್ಳಿಯ ಪುರಾಣವನ್ನು ಬಲಿಕೊಡುವುದೂ ಅವನಿಗೆ ಬೇಕಿರಲಿಲ್ಲ. ಆದರೆ ಎಲ್ಲ ಅನಿರೀಕ್ಷಿತವಾಗಿ ಘಟಿಸಿಬಿಟ್ಟಿತ್ತು. ಗೌಡ ತನಗಿಂತ ಬಹಳ ದೊಡ್ಡವನೆನ್ನಿಸಿತು. ಬೆಳಿಗ್ಗೆ ದೇವಿಯ ಮುಖ ಒಪ್ಪಿಸಿ ಕ್ಷಮಾಪಣೆ ಕೇಳಬೇಕೆಂದುಕೊಂಡ. ತಾನು ಎಲ್ ಎಲ್. ಬಿ. ಪಾಸಾದಾಗ ಅವ ಸಕ್ಕರೆ ಹಂಚಿದ್ದನ್ನು, ಎಲೆಕ್ಷನ್ ಇಲ್ಲದೆ ಪಂಚಾಯ್ತಿ ತನ್ನ ಕೈಗಿತ್ತದ್ದನ್ನು, ಇತ್ತೀಚೆಗೆ ತೋಟದಲ್ಲಿ ತನ್ನನ್ನು ಕಂಡು ಅಂಗಲಾಚಿದ್ದನ್ನು ನೆನೆದುಕೊಂಡ. ಗುಡಿಯಲ್ಲಿ ನಡೆದ ಇಂದಿನ ಗೊಂದಲ ನೆನಪಿಸಿಕೊಂಡ. ದೇವಿಯ ಆಳು ಮಕ್ಕಳ ಅಳುಮುಖ ನೆನಪಿಸಿಕೊಂಡ. ಜನ ತನ್ನನ್ನು ಕ್ಷಮಿಸಲಾರರೆನ್ನಿಸಿತು. ಪಶ್ಚತ್ತಾಪದಿಂದ ಸುಟ್ಟು ಸುಣ್ಣವಾದ. ಬಹುಶಃ ಪಶ್ಚತ್ತಾಪಂದಿಂದಲೋ ಏನೋ ಎದೆ ಸ್ವಲ್ಪ ಹಗುರವಾಯ್ತು. ಅವನಿಗೇ ಗೊತ್ತಿಲ್ಲದಂತೆ ಕಣ್ಣುಮುಚ್ಚಿ ನಿದ್ರೆಹೋದ. +ಬೆಳಿಗ್ಗೆ ಯಾರೋ ಚಿಟ್ಟನೆ ಚೀರಿದ್ದು ಕೇಳಿಸಿತು. ಎಚ್ಚರವಾಗಿ ಕಣ್ಣು ತೆರೆದ. ಕೆಳಗೆ ತನ್ನ ತಾಯಿ ಕಿರಿಚುತ್ತಿದ್ದಳು. ತಬ್ಬಿಬ್ಬಾಗಿ ಕೆಳಗಿಳಿದುಹೋದ. ಮುದುಕಿ ದೇವರ ಮನೆಕಡೆ ಕೈ ತೋರಿಸುತ್ತ ಎದೆ ಎದೆ ಬಡಿದುಕೊಂಡು ಅಳುತ್ತಿತ್ತು. ನೋಡಿದರೆ ತಿಜೋರಿಯ ಬಾಗಿಲು ತೆರೆದಿತ್ತು. ಒಳಗೆಲ್ಲ ಖಾಲಿ. +ಬಸವರಾಜು ಕರಿಮಾಯಿಯ ಬಂಗಾರದ ಮುಖದೊಂದಿಗೆ ಆಭರಣ, ಹಣ ತಗೊಂಡು ಗಿರಿಜೆಯನ್ನು ಓಡಿಸಿಕೊಂಡು ಪರಾರಿಯಾಗಿದ್ದ. +*** +ಅದಾಗಿ ಸರಿಯಾಗಿ ಒಂದು ತಿಂಗಳಾಯಿತು. ಇಂದು ಮುತ್ತೈದೆ ಹುಣ್ಣಿವೆ. ರಂಡಿ ಹುಣ್ಣಿವೆಯಂದು ವಿಧವೆಯಾದ ತಾಯಿ ಕರಿಮಾಯಿ ಒಂದು ತಿಂಗಳ ಅವಧಿಯಲ್ಲಿ ಏಳೇಳು ಶಿರದ ಈರೇಳು ಭುಜಗಳ ದೈತ್ಯರನ್ನೂ, ದೇವತೆಗಳನ್ನೂ ಸಂಹರಿಸಿ ಮಕ್ಕಳ ಹಾಗೂ ಗಂಡನ ಜೀವ ಮರಳಿ ಪಡೆದುಕೊಂಡು ಹಿಂದಿರುಗಿ ಬರುವ ದಿನ ಇಂದು. ತಾಯಿ ಬರಲೇ ಇಲ್ಲ. +ಧರಣಿಗೆ ದೊಡ್ಡವಳಾದ ಕರಿಮಾಯಿ ಆಡುವ ಮಕ್ಕಳಿಗೆ ತೂಗು ತೊಟ್ಟಿಲವಾದಳು. ಮುತ್ತೈದೆಯರಿಗೆ ಬಾಗಿನದ ಮರವಾದಳು. ಹಣ್ಣು ಮುದುಕರಿಗೆ ಊರುವ ಕೋಲಾದಳು. ಅನಾಥರಿಗೆ ಆಧಾರವಾದಳು. ಅವಳನ್ನು ನೆನೆದು ಕೈಲಿ ಹಿಡಿದ ಕೆಂಡ ಕೆಂದಾವರೆಯಾಯ್ತು. ಮಣ್ಣು ಚಿನ್ನವಾಯಿತು. ಹಿಟ್ಟು ಬೆಲ್ಲವಾಯಿತು. ಅಂಬಲಿ ಪಾಯಸವಾಯಿತು. ಜೋಪಡಿ ಅರಮನೆಯಾಯಿತು. ಇಂಥ ಮೂರು ಲೋಕಕ್ಕೆ ಅಧಿಕವಾದ ತಾಯಿ ಬರಲೇ ಇಲ್ಲ. +ಆಕಾಶ ಪಾತಾಳ ಒಂದು ಮಾಡಿ ಹುಡುಕಿಸಿದರೂ ಬಸವರಾಜು ಸಿಕ್ಕಲಿಲ್ಲ. ಪೋಲೀಸರಿಗೆ ಹೇಳಿ ಬಂದಿದ್ದರು. ಅವರಿಂದ ಈ ತನಕ ಯಾವ ಬಾತಮಿಯೂ ಬಂದಿರಲಿಲ್ಲ. ಆ ದಿನ ಗುಡಸೀಕರ ಬಂಗಾರದ ಮುಖ ತೆಗೆದಾಗ ರುಂಡವಿಲ್ಲದ ತಾಯಿಯ ಮೂರ್ತಿ ಬಕ್ಕ ಬರಲು ಕೈಕಾಲೂರಿ ಬಿದ್ದಿತ್ತು. ಅದನ್ನೆತ್ತಿ ಮುಂಡಕ್ಕೆ ಕಟ್ಟಿಗೆಯ ಮುಖವನ್ನಾದರೂ ಜೋಡಿಸಬೇಕಿತ್ತು. ಶುದ್ಧ ಮಾಡಿಲ್ಲದೆ ಅದಾಗದು. ತಾಯಿಯೇ ಬರದಿದ್ದರೆ ಶುದ್ಧ ಮಾಡಿಯಾದರೂ ಏನು ಪ್ರಯೋಜನ? ಹೆದರಿಕೆಯಲ್ಲಿ ಲಗಮವ್ವನೂ ಗುಡಿಯ ಕಡೆ ಸುಳಿದಿರಲಿಲ್ಲ. ಅವಳೇನಾದರೂ ಈ ಪರಿಯಲ್ಲಿರುವ ತಾಯಿಯನ್ನು ಕಂಡಿದ್ದರೆ, ದೈತ್ಯರು ತಾಯಿಯ ರುಂಡ ಚೆಂಡಾಡಿದರೆಂದು ಅತ್ತುಕೊಂಡು ಹಾಡುತ್ತಿದ್ದಳೋ ಏನೋ! ರಾತ್ರಿಯಾದೊಡನೆ ಒಬ್ಬಳೇ ಗುಡಿಸಲಲ್ಲಿ ಕೂತುಕೊಂಡು +ಎಲ್ಲೀ ಹೋದಳೆನ್ನಬ್ಯಾಡಿರೇ +ಕರಿಮಾಯಿ ನಿಮ್ಮ ಮನಸೀನಾಗ ಐದಾಳೆನ್ನಿರೇ! +ಎತ್ತ ಹೋದಳೆನ್ನಬ್ಯಾಡಿರೇ +ಕರಿಮಾಯಿ ನಿಮ್ಮ|ಚಿತ್ತದೊಳಗೈದಾಳೆನ್ನಿರೇ || +ಎಂದೇನೋ ಹಾಡುತ್ತಿದ್ದಳು, ಬಹುಶಃ ತನ್ನ ಸಮಾಧಾನಕ್ಕಾಗಿ. ಆದರೆ ಅವಳ ದನಿ ವಿಕಾರವಾಗಿ ದೂರದಲ್ಲಿದ್ದವರಿಗೆ ಅದೊಂದು ನೊಂದ ಪ್ರಾಣಿಯ ಆಳಾಪದಂತೆ ಕೇಳಿಸುತ್ತಿತ್ತು. +ದೇವರೇಸಿ ಆ ದಿನ ಎಲ್ಲರನ್ನೂ ತಪ್ಪಿಸಿ ಕಾಡಿನಲ್ಲಿ ಮಾಯವಾದ. ಮೂರು ದಿನಗಳ ತರುವಾಯ ನೇಣು ಹಾಕಿಕೊಂಡ ಅವನ ಹೆಣ ಸಿಕ್ಕಿತ್ತಷ್ಟೆ. ತಾಯಿ ಇನ್ನೊಬ್ಬ ದೇವರೇಸಿಯನ್ನಾರಿಸಿಕೊಂಡು ಅವನ ಮುಖಾಂತರ ಬಂಗಾರದ ಮುಖದ ಸುಳಿವು ಕೊಟ್ಟಾಳು. ಇಲ್ಲವೆ ಬಸವರಾಜನಿಗೆ ನೆತ್ತರು ಕಕ್ಕಿಸಿ ಅವ ಓಡಿಬಂದು ವಾಪಸ್ಸು ಕೊಡುವಂತೆ ಮಾಡ್ಯಾಳೆಂದು ಎಲ್ಲರ ನಂಬಿಕೆಯಾಗಿತ್ತು. ಅಂಥ ಸುದ್ದಿ ಈಗ ಬಂದೀತು, ಆಗ ಬಂದೀತು, ನಾಳೆ ಬಂದೀತೆಂದು ಕಾದರು. ಬೆಳಗಾವಿಯ ಪತ್ರಿಕೆಗಳಲ್ಲಿ “ಶಿವಾಪುರದಲ್ಲಿ ಭಾರೀ ದರೋಡೆ, ಚಿನ್ನದ ಮೂರ್ತಿಯ ನಾಪತ್ತೆ” ಎಂಬ ತಲೆಬರಹದಡಿಯಲ್ಲಿ ಸುದ್ದಿ ಪ್ರಕಟವಾಗಿತ್ತಷ್ಟೆ. ಇದನ್ನು ನೋಡಿ ಜನ ತಮ್ಮ ಆಪ್ತರು ಸತ್ತ ಸುದ್ದಿ ಕೇಳಿದಂತೆ ಹೋ ಎಂದು ಅತ್ತರು. ಊರಿಗೆ ಊರೇ ಸತ್ತವರ ಮನೆಯಂತೆ ಬಿಕೋ ಎನ್ನುತ್ತಿತ್ತು. +ಈಗ ಕರಿಮಾಯಿಯ ಹೆಸರು ಹೇಳುವುದಕ್ಕೇ ಹೆದರುತ್ತಿದ್ದರು. ಯಾರೊಬ್ಬರೂ ದನಿ ಎತ್ತರಿಸಿ ಮಾತಾಡುತ್ತಿರಲಿಲ್ಲ. ಊರ ಹೊರಗಿನಿಂದ ಯಾರು ಬಂದರೂ ಅವರನ್ನು ಮುತ್ತಿ ಸುದ್ದಿಯೇನೆಂದು ಕೇಳುತ್ತಿದ್ದರು. ಒಬ್ಬರ ಮುಖದಲ್ಲೂ ಕಳೆಯಿರಲಿಲ್ಲ. ಪ್ರತಿಯೊಬ್ಬರ ಹೊಕ್ಕಳ ಬಳಿ ದೊಡ್ಡ ಗಾಯವಾಗಿ ಅದರ ವೇದನೆಯಿಂದ ಅತ್ತು ಅತ್ತು ಈಗಷ್ಟೇ ಸುಮ್ಮನಾಗಿದ್ದವರಂತೆ ಅಥವಾ ಉಕ್ಕುವ ದುಃಖವನ್ನು ತುಟಿಕಚ್ಚಿ ತಡೆದಂತೆ ಕಾಣಿಸುತ್ತಿದ್ದರು. ಕಣ್ಣಂಚಿನಲ್ಲಿ ತಾಯಿ ಸಿಕ್ಕಳೆಂಬ ಆಸೆ ಮಾತ್ರ ಹೊಳೆಯುತ್ತಿತ್ತು. ದಿನೇ ದಿನೇ ಅದೂ ಬಾಡತೊಡಗಿತ್ತು. +ಗೌಡ ಈ ಒಂದು ತಿಂಗಳ ಅವಧಿಯಲ್ಲಿ ತೊಗಲು ಜೋತು ಹೆಗಲು ಬಿದ್ದ ಮೈ ಮೇಲಿನ ನೊಣಕ್ಕೂ ಬಾಲ ಎತ್ತಲಾಗದ ಮುದಿ ಎತ್ತಿನಂತಾಗಿದ್ದ. ಕೂತರೆ ಕೂತ, ನಿಂತರೆ ನಿಂತ, ದಾಡಿ ಮಾಡಿಸಿಕೊಂಡರೆ ಮಾಡಿಸಿಕೊಂಡ, ಇಲ್ಲದಿದ್ದರಿಲ್ಲ, ಮಾತುಕೊಟ್ಟ ಹೋದ ತಾಯಿ ಬಂದಿರಲಿಲ್ಲ. ಮಗ ಶಿವನಿಂಗ ಬಂದಿರಲಿಲ್ಲ. ಶಿವನಿಂಗನ ಸುದ್ದಿ ಬಂದಿರಲಿಲ್ಲ. ‘ಕರಿಮಾಯಿಗೆ ಬೇಡ, ಸಾವಿಗಾದರೂ ನನ್ನ ಮೇಲೆ ಕರುಣೆ ಬರಬಾರದೇ?’ ಎಂದುಕೊಂಡು ಕಾಲ ನೂಕುತ್ತಿದ್ದ. ಆದರೆ ಸಾವಿಗೆಲ್ಲಿಯ ಕರುಳು? ಇದ್ದೊಂದು ಜೊತೆ ಶಿವಸಾನಿಯೂ “ಶಿವನಿಂಗಾ” ಎಂದು ಕಣ್ಣುಮುಚ್ಚಿದಳು. ಇನ್ನು ತನ್ನ ಸರದಿ. ಈಗಲೋ ಆಗಲೋ “ತಾಯೀ” ಎನ್ನುವುದಕ್ಕೆ ಸಿದ್ಧನಾಗಿ ಕೂತ, ಮಗನ ತೋರುವ ತಾಯಿ ಕರಿಮಾಯಿ ಮುತ್ತೈದೆ ಹುಣ್ಣಿವೆಯಂದು ಉದ್ಭವಿಸುವಳೆಂಬ ನಂಬಿಕೆ ಮಾತ್ರ ಕಣ್ಣಲ್ಲಿತ್ತು. ಜೀವ ಕಣ್ಣಲ್ಲೇ ಇತ್ತು. ಸದಾ ಮೊಳಕಾಲಿಗೆ ಕೈಕಟ್ಟಿ ಗುಡಿಯ ದೀಪದ ಕಂಬದ ಕಟ್ಟೆಯ ಮೇಲೆ ಎದುರನ್ನೇ ನೋಡುತ್ತ ಕೂತಿರುತ್ತಿದ್ದ. ಅಗತ್ಯವಿದ್ದಾಗ ಮಾತ್ರ ಆಗೀಗ ಒಂದೆರಡು ಮಾತಾಡುತ್ತಿದ್ದ. ಮಾತಾಡಿದಾಗೊಮ್ಮೆ ಕಣ್ಣಿರು ಸುರಿಸುತ್ತಿದ್ದ. ಅವನನ್ನು ನೋಡಿದೊಡನೆ ಜನಕ್ಕೆ ಕಳೆದ ತಾಯಿಯ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಅವನ ಗಂಟಲಲ್ಲಿ ಅನ್ನ ಇಳಿಸುವುದೇ ದತ್ತಪ್ಪನ ಸಮಸ್ಯೆಯಾಗಿತ್ತು. +ಈ ಒಂದು ತಿಂಗಳಲ್ಲಿ ಇನ್ನೂ ಏನೆಲ್ಲಾ ಆಯ್ತು ಊರಿನಲ್ಲಿ. ಈ ಮಧ್ಯೆ ಚಿಮಣಾ ತುಂಬು ಗರ್ಭಿಣಿಯಾಗಿ ಇದೇ ಊರಿಗೆ ಬಂದಿದ್ದಳು. ತಲೆ ಕೆದರಿ, ಮೈ ಸೊರಗಿ ಕಡ್ಡಿಯಾಗಿ ಬರೀ ಚಿಂದಿ ಬಟ್ಟೆಯ ಉಬ್ಬಿದ ಬಸುರು ಮಾತ್ರ ಮುಂಚಾಚಿ ತೋರುತ್ತಿದ್ದ ಅವಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಗುರುತು ಸಿಕ್ಕೊಡನೆ ಊರವರೆಲ್ಲ ಅವಳ ಸುತ್ತು ಮುತ್ತಿದರು. ಅವಳಿಂದ ಪ್ರಯೋಜನವಾಗುವಂತಿರಲಿಲ್ಲ. ಬಾಯಿ ಹೋಗಿತ್ತು. ಸಾಲದ್ದಕ್ಕೆ ಹುಚ್ಚು ಬೇರೆ. ಬಸವರಾಜು ಅವಳಿಗೂ ಮೋಸ ಮಾಡಿದ್ದ. ಅವಳ ಮೇಲೆ ಸಿಡಿದೆದ್ದರೆ ಏನಾದೀತು? ತಾಯಿಯೇ ಅವಳಿಗೆ ಸರಿಯಾದ ಶಿಕ್ಷೆ ಕೊಟ್ಟಳೆಂದು ಸುಮ್ಮನಾದರು. ತನ್ನ ಗುಡಿಸಲ ಮುಂದೆ ಸುಮ್ಮನೆ ನಾಯಿಯಂತೆ ಊಳಿಡುತ್ತ ಕೂರುತ್ತಿದ್ದಳು. ಯಾರಾದರೂ ಧರ್ಮಾತ್ಮರು ತುತ್ತು ಕೊಟ್ಟರೆ ತಿನ್ನುತ್ತಿದ್ದಳು. ಇಲ್ಲದಿದ್ದರೆ ಅಲ್ಲೇ ಬಿದ್ದಿರುತ್ತಿದ್ದಳು. ಅವಳಿಗೆ ಕರುಣೆ ತೋರಿಸುವಷ್ಟು ನೆಮ್ಮದಿ ಜನಕ್ಕಿರಲಿಲ್ಲ. ಅವರಿಗ್ಯಾರು ಕರುಣೆ ತೋರಿಸುತ್ತಿದ್ದರು? +ಇದ್ದುದರಲ್ಲಿ ಈ ದಿನವೇ ಗೌಡ ಸ್ವಲ್ಪ ಲವಲವಿಕೆಯಿಂದಿದ್ದ. ಇಂದು ಮುತ್ತೈದೆ ಹುಣ್ಣಿವೆಯಾದ್ದರಿಂದ ತಾಯಿ ತಿರುಗಿ ಬಂದು ಗದ್ದಿದೆಗೊಳ್ಳುವ ದಿನ. ತಾಯಿ ಖಂಡಿತ ಈ ದಿನ ಬರುತ್ತಾಳೆ. ಇಲ್ಲವೆ ಯಾರದಾದರೂ ಮೈ ತುಂಬಿ ತಾನಿರುವ ಠಿಕಾಣವನ್ನಾದರೂ ತಿಳಿಸುತ್ತಾಳೆ. ಶಿವನಿಂಗನನ್ನೂ ಕರೆ ತರುತ್ತಾಳೆಂದು ಬಲವಂತವಾಗಿ ನಂಬಿದ್ದ. ಮುಂಜಾನೆಯಿಂದಲೇ ಗುಡಿಯ ದೀಪ ಕಂಬದ ಮೇಲೆ ಕೂತಿದ್ದ. ಅವನೊಟ್ಟಿಗೆ ದತ್ತಪ್ಪನೂ ಕೂತಿದ್ದ. +ಗುಡಿಯ ಕಡೆ ಯಾರು ಸುಳಿದರೂ ಇಲ್ಲ ಮೈ ತುಂಬಿ ಬರುತಾರೆ, ಇಲ್ಲ, ಮೈ ತುಂಬಿದ ಸುದ್ದಿಯನ್ನಾದರೂ ತರುತ್ತಾರೆಂದು ನೋಡುತ್ತಿದ್ದರು. ಕೂಳು, ನೀರು ಮರೆತು, ದಿಕ್ಕುದಿಕ್ಕುಗಳನ್ನು ಹಡ್ಡಿ ಹಡ್ಡಿ ನೋಡಿದರು. ಕಣ್ಣುಗಳಲ್ಲಿ ಆಸೆ ಹೊತ್ತಿಸಿಕೊಂಡು ಹುಡುಕಿದರು. ಸಂಜೆಯಾಗಿ ದನಕರು ಮನೆಗೆ ಬಂದವು. ಮುಳುಗುವ ಸೂರ್ಯನೊಂದಿಗೆ ಇವರ ಕಣ್ಣೊಳಗಿನ ಬಳಕೂ ನಂದಿ ಕಮ್ಮಿಯಾಯಿತು. ಮೂಡಣದಲ್ಲಿ ಚಂದ್ರ ಮೂಡಿದ. ತಾಯಿ ಬರುವ ಸಮಯ ಮೀರಿತು. ಬೆಳದಿಂಗಳು ಹೆಚ್ಚಾದಂತೆ ಬೂದಿ ಬಣ್ಣಕ್ಕೆ ತಿರುಗಿದ ಊರು ಬಿಳಚಿಕೊಂಡು ಕ್ಷಯರೋಗಿಯಂತೆ ಕಾಣುತ್ತಿತ್ತು. ದತ್ತಪ್ಪ ದೊಡ್ಡದಾಗಿ ನಿಟ್ಟುಸಿರು ಬಿಟ್ಟು +“ಏಳ ಗೌಡಾ” +ಎನ್ನುತ್ತ ಗೌಡನ ಭುಜದ ಮೇಲೆ ಕೈಯಿಟ್ಟ. ಗೌಡ ಸುಮ್ಮನೆ ಎದ್ದ. ಎಲ್ಲಿದ್ದರೂ ಯಾವುದೋ ಮಾಯೆಯಿಂದ ಮುತ್ತೈದೆ ಹುಣ್ಣಿವೆ ದಿನ ಅವತರಿಸಿ ಬರುತ್ತೇನೆಂದ ತಾಯಿ ಮಾತಿಗೆ ತಪ್ಪಿದಳು! +ಬರುತ್ತಿರುವಾಗ ದಾರಿಯಲ್ಲಿ ದತ್ತಪ್ಪ ಒಮ್ಮೆಲೆ ಸ್ಪೂರ್ತಿಗೊಂಡಂತೆ “ಅಂದ್ಹಾಂಗ ಗೌಡಾ, ಲಗಮಿ ಯಕೋ ಬರಲಿಲ್ಲಲ್ಲ” ಎಂದ. ತಕ್ಷಣ ಗೌಡನ ಕಣ್ಣುಗಳು ಹೊಳೆದವು. ಹೌಂದಲ್ಲ ಎನಿಸಿತು. ಯಾರಿಗೆ ಗೊತ್ತು, ಅವಳ ಕೇರಿಯಲ್ಲಿ ತಾಯಿ ಅವತರಿಸಿರಬಹುದು. “ಬಾ ನೋಡೋಣ”ವೆಂದು ಹೊಲಗೇರಿಯ ಕಡೆ ಧಾವಿಸಿದರು. +ಚಿಮಣಾಳ ಗುಡಿಸಲಲ್ಲಿ ಹೆಂಗಸರು ಕಿಕ್ಕಿರಿದು ನೆರೆದಿದ್ದರು. ತಡೆಯಲಾರದೆ ಇಬ್ಬರೂ ಓಡಿದರು. ಒಳಗೆ ಹೆಂಗಸರು ಸಡಗರ ಮಾಡುತ್ತಿದ್ದರು. ಲಗಮವ್ವನ ದನಿ ಕೇಳಿಸುತ್ತಿತ್ತು. ಹೆಂಗಸರು ಕಲಕಲ ಮಾತಾಡಿಕೊಳ್ಳುತ್ತಿದ್ದರು. ಏನೆಂದು ಕೇಳಿದರೆ ಒಬ್ಬಳಿಂದ ಚಿಮಣಾ ಹೆಣ್ಣು ಹಡೆದಿರುವಳೆಂದು ತಿಳಿಯಿತು. ಸಂಭ್ರಮದಲ್ಲಿದ್ದ ಒಳಗಿನವರಿಗೆ ಹೊರಗೆ ಗೌಡ, ದತ್ತಪ್ಪ ಬಂದದ್ದು ಗೊತ್ತಾಗಲೇ ಇಲ್ಲ. ಒಬ್ಬಳು “ಏ ಏ, ಇದರ ಮೂಗ ಥೇಟ್ ಗುಡಿಸ್ಯಾನ್ಹಾಂಗ ಐತಿ ನೋಡ” ಎಂದಳು. ಲಗಮವ್ವ “ಅಲ್ಲ ತಗಿ, ಇದರ ಮೂಗ, ಬಾಯಿ, ಚೇರಾಪಟ್ಟಿ ಎಲ್ಲಾ ಥೇಟ್ ಗೌಡನ್ಹಾಂಗ! ಗೌಡನ ರೂಪದಾಗ ಎದ್ದಿ ತೆಗಧಾಂಗೇತಿ” ಎಂದಳು. ಗೌಡ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ. ಆ ನಿರಾಸೆಯಲ್ಲೂ ದತ್ತಪ್ಪನ ತುಟಿಯಲ್ಲಿ ಮಂದಹಾಸ ಸುಳಿದಾಡಿತು. +ಇಲ್ಲೀಗಿ ಹರ ಹರ +ಇಲ್ಲೀಗಿ ಶಿವ ಶಿವ +ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು || +ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ +ಇಲ್ಲೀಗಿ ನಮ ಕತಿ ಸಂಪೂರ್ಣವಯ್ಯಾ || +***** +ಮುಗಿಯಿತು +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […] +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_184.txt b/Kannada Sahitya/article_184.txt new file mode 100644 index 0000000000000000000000000000000000000000..34d5648da38ad2bbe0cd9ee2d72f5345a82ab837 --- /dev/null +++ b/Kannada Sahitya/article_184.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ +ನೈರಾಶ್ಯದಭ್ರಂಗಳು; +ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ +ಬೆಳಕೆಲ್ಲಿ? ಬರಿಯ ಇರುಳು! +ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ +ಕಾಳುಗೆಟ್ಟೋಡಿಸುವವು; +ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು +ದಂಡೆಗಪ್ಪಳಿಸುತಿಹವು. +ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು +ತಾಂಡವಂಗೈಯುತಿಹವು, +ಎದೆಯಟ್ಟ ನಿರಿನಿಟಿಲು, ಹೂಗಿಡಕೆ ಬರಸಿಡಿಲು +ಬಡಿಯುತಿರೆ ಬಾಳ್ವುದೆಂತು? +೨ +ಸಂಜೆಯಾಗಸದಲ್ಲಿ ಹೊಂಬೆಳಕು ಚಿಮುಕಿರಲು +ಕಾರ್ಮೋಡ ಹೂವಾಗದೆ? +ಜೀವನದ ಕಣದಲ್ಲಿ ಆ ಬೆಳಕು ಮೂಡಿಬರೆ +ಹೆದ್ದಾರಿ ತೋರಬಹುದೆ? +ಉತ್ತಿಬಿತ್ತಿದ ಬೀಜ ಮೊಳಕೆಯಲಿ ಹೊರಬಂದು +ಚಿಗುರಾಗಿ ಚಲ್ವರಿದಿರೆ, +ಹೂವಾಗಿ ಮಿಡಿಯಾಗಿ ಪಾಡಾಗಿ ಹಣ್ಣಾಗೆ +ಕಷ್ಟವೆನಿತನುಭವಿಸಿರೆ! +೩ +ವಿಧಿಮಾಟದೇರಾಟ ಹೋರಾಟಗಳಿಗೆಲ್ಲ +ಎದೆಗೊಟ್ಟು ನಿಲ್ಲು ಜೀವ; +ಕಲ್ಲು ಕಲ್ಲಾಗಲೆದೆ ಸಂಕಷ್ಟ ಸಂತತಿಗೆ +ಅಣಿಗೊಂಡ ವಜ್ರಾಯುಧ. +ಕುದಿಕುದಿದು ಬೆಂದು ಬೇಗುದಿಗೊಂಡ ನಿನ್ನಾಸೆ +ಹೊರಚೆಲ್ಲಿ ಹರಿಯದಿರಲಿ; +ಬಂದಡರಿದೆಡರು ತೊಡರುಗಳೆಲ್ಲ ಹೊಸಹೊಸದು +ಬತ್ತಿಗೈ ಸೊಡರಾಗಲಿ. +ನಿನ್ನೊಡಲ ಕಡಲ ಕಡೆ, ಬರುವಮೃತ ವಿಷಗಳನು +ಜೊತೆಯಾಗಿ ಕುಡಿಯುತ್ತಿರಲು, +ಬರಿಯ ವಿಷ ಕಾರದಿರು, ಲೋಕ ತಲ್ಲಣಿಸೀತು- +ನಂಜುಂಡನಾಗಿ ಬಾಳು. +***** +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_185.txt b/Kannada Sahitya/article_185.txt new file mode 100644 index 0000000000000000000000000000000000000000..f61adab7c7520728628a6318b6f0cde2a82e22e5 --- /dev/null +++ b/Kannada Sahitya/article_185.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. +ಕದಡಿದ ನೀರು, ನಾನೇ ಬಿಜ್ಜಳ, ಸತ್ತವರ ನೆರಳು, ಪರಿವಾರದವರು, ಆ ಊರು ಈ ಊರು, ಮೂಕಬಲಿ ನಾಟಕಗಳ ಮುಖಾಂತರ ಕನ್ನಡ ನಾಟಕ ಲೋಕ ಶ್ರೀಮಂತ ಗೊಳಿಸಿದವರು ಜಿ.ಬಿ. +ಮನೋಹರ ಗ್ರಂಥಮಾಲೆಯ ರೂವಾರಿಗಳಾದ ಜಿಬಿ ನಮ್ಮನ್ನಗಲಿ ಡಿಸೆಂಬರ್‍ ತಿಂಗಳಿಗೆ ಎಂಟುವರ್ಷ ಸಲ್ಲುತ್ತದೆ. ಈ ಸಂದರ್ಭದಲ್ಲಿ (ಈ ಹಿರಿಯ ಲೇಖಕರಿಗೆ ತಮ್ಮ ನಮನ ಸೂಚಿಸಲು ಅಭಿನಯತರಂಗ ೨೦೦೨-೦೩ನೇ ಸಾಲಿನ ವಿದ್ಯಾರ್ಥಿಗಳ ಮೇಜರ್‍ ಪ್ರೊಡಕ್ಷನ್ ಆಗಿ ಮೂಕಬಲಿ ಆ.೨೨-೨೫ ರಂದು ಕಲಾಕ್ಷೇತ್ರದಲ್ಲಿ ಪ್ರಮೋದ ಶಿಗ್ಗಾಂವ್ ನಿರ್ದೇಶನದಲ್ಲಿ ರಂಗಕ್ಕೆ ಬರುತ್ತಿದೆ. ರಂಗಾಯಣದ ‘ಟಿಪ್ಪುವಿನ ಕನಸು’ಗಳಿಗೆ ಕಲಾತ್ಮಕ ಕುಸುರು ಮಿಂಚುವಂತೆ ಮಾಡಿ, ನಾಗಾಭರಣರ ‘ನೀಲ’ ಚಿತ್ರಕ್ಕೆ ಸೊಗಸಾದ ವಸ್ತ್ರವಿನ್ಯಾಸದಿಂದ ಹೆಸರಾದ ಪ್ರಮೋದ್ “ಸೆಜ್ಜುವಾನ್ ನಗರದ ಸಾಧ್ವಿ” ನಿರ್ದೇಶಿಸಿಯೂ ಹೆಸರಾದವರು. ಈಗ ಜಿ.ಬಿ. ಜೋಶಿಯವರ ಮೂಕಬಲಿ ವಿನ್ಯಾಸದ ಹಾಗೂ ನಿರ್ದೇಶನದ ಹೊಣೆ ಹೊತ್ತು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸ ಹೊರಟಿದ್ದಾರೆ. ಇದು ನಾಟಕದ ಸೀನ್… +ಈಗ ಸಿನಿಮಾ ಸೀನಿಗೆ ಬರೋಣ… ಈವರೆಗೆ ರೀಮೇಕ್ ಚಿತ್ರಗಳಿಂದಲೇ ತಮಗೆ ಮೋಕ್ಷ, ಅದೊಂದೇ ತಮ್ಮ ಅದೃಷ್ಟದ ಬಾಗಿಲು ತೆರೆಯುವ ಮಹಾದ್ವಾರ ಎಂದುಕೊಂಡಿದ್ದವರು ಈಗ ಕನ್ನಡ ಕತೆ, ಕಾದಂಬರಿ, ನಾಟಕಗಳತ್ತ ತಮ್ಮ ದೃಷ್ಟಿ ಹರಿಸುತ್ತಿದ್ದಾರೆ ಚಿತ್ರ ನಿರ್ಮಾಪಕ ನಿರ್ದೇಶಕರು ಎಂಬುದು ಶುಭ ಸೂಚನೆ. +ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕುಂ. ವೀರಭದ್ರಪ್ಪನವರ ‘ಬೇಲಿ ಮತ್ತು ಹೊಲ’ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’, ಶಿವರಾಮ ಕಾರಂತರ ಕಾದಂಬರಿಗಳು ಚಿತ್ರವಾಗಲಿದೆ ಎಂಬ ಸುದ್ದಿ ಅಲೆಅಲೆಯಾಗಿ ತೇಲಿಬರುತ್ತಿದೆ. +ಗಿರೀಶ್ ಕಾಸರವಳ್ಳಿ, ನಾ. ಡಿಸೋಜರವರ ‘ದ್ವೀಪ’ ಚಿತ್ರೀಕರಣ ನಡೆಸಿದ್ದಾರೆ. ಜನಪ್ರಿಯ ನಟೀಮಣಿ ಸೌಂದರ್ಯ ಅದರ ನಿಮಾಪಕಿಯಾಗಿದ್ದಾರೆ. +ಕೆ.ಸಿ.ಎನ್. ಚಂದ್ರು ಅವರಿಗೆ ಬಹುದಿನದಿಂದ ‘ಕಿಂಗ್ ಲಿಯರ್‍’ ಸಿನಿಮಾ ಮಾಡುವ ಕನಸಿತ್ತು. ಆದರೆ, ಸಿನಿರಂಗದ ಏಳುಬೀಳುಗಳನ್ನು, ಬಂದ ಬಹಳಷ್ಟು ನಿರೀಕ್ಷಿತ ಚಿತ್ರಗಳು ಅಡ್ರೆಸ್ಸಿಗಿಲ್ಲದೆ ಹೋದುದನ್ನು ಕಂಡದ್ದರಿಂದಲೋ ಏನೋ ಈ ವ್ಯವಹಾರ ಚತುರ ಅದನ್ನು ಟೀವಿ ಮೆಗಾ ಧಾರಾವಾಹಿ ಮಾಡುವ ಸಿದ್ಧತೆ ನಡೆಸಿದ್ದಾರೆ. +ಇವೆಲ್ಲ ಸದಭಿರುಚಿಗೆ ಕನ್ನಡಿ ಹಿಡಿವ ಪ್ರಯತ್ನಗಳು ಎಂಬ ಕಾರಣಕ್ಕೆ ಸಂತಸವೆ. ಆದರೆ, ದುಃಖವಾಗುವುದು ಎಲ್ಲಿ ಎಂದರೆ ಕತೆ, ಕಾದಂಬರಿ, ನಾಟಕಗಳನ್ನು ಚಿತ್ರ ಮಾಡುವಾಗ ಹಲವು ನಿರ್ಮಾಪಕ-ನಿರ್ದೇಶಕರು ನಾನಾ ಮಸಾಲೆಗಳನ್ನು ಸೇರಿಸಿ ಒಂದು ಡಬ್ಬಾ ಫಿಲಂ ತೆರೆಗರ್ಪಿಸಿ ಬಿಡುತ್ತಾರೆ. +ಅದಕ್ಕೊಂದು ಉದಾಹರಣೆ ಎಂದರೆ ‘ಅಮ್ಮ ರಿಟೈರಾಗ್ತಾಳೆ ನಾಟಕ’ ನೂರಾರು ಬಾರಿ ಬೇರೆ ಬೇರೆ ಭಾಷೆಗಳಲ್ಲಿ ಮಾತ್ರವಲ್ಲ ಕನ್ನಡ ರಂಗಭೂಮಿಯಲ್ಲೂ ಹೆಸರಾದ ನಾಟಕ ‘ಅಮ್ಮ’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತದೆ ಎಂದಾಗ ಹಿರಿಹಿರಿ ಹಿಗ್ಗಿದವರು ಬಹುಮಂದಿ. ಲಕ್ಷ್ಮಿ ಮತ್ತು ಅನಂತನಾಗ್ ಮತ್ತೆ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಅಭಿನಯಿಸುತ್ತಿರುವರೆಂಬ ಅಂಶ ಭಾರೀ ಸುದ್ದಿಯಾಗದಾಗ ನಿರ್ದೇಶಕ ಡಿ.ರಾಜೇಂದ್ರಬಾಬು ಇದರಿಂದ ಮತ್ತಷ್ಟು ಹೆಸರಾದಾರೆಂದು ಆಶಿಸಿದರು ಚಿತ್ರರಸಿಕರು ಹಾಗೂ ರಂಗಾಭಿಮಾನಿಗಳು. ಆದರೆ, ಡಿ. ರಾಜೇಂದ್ರಬಾಬು ಆ ನಾಟಕದ ಹೊಳಹೂ ಸಿಗದಂತೆ ಮಾಡಿ, ಹಾಸ್ಯಕ್ಕೆ ತಿಲಾಂಜಲಿಯಿತ್ತು ನಾಟಕದಲ್ಲಿ ಇಲ್ಲದ ‘ಕಿಡ್ನಿ ದಾನ’ ದಿಂದ ಸೆಂಟಿಮೆಂಟನ್ನು ಪ್ಲೇಮಾಡಲು ಹೋಗಿ ಮುಗ್ಗರಿಸಿದರು. +ಈ ಮಾತನ್ನು ಮತ್ತೆ ಇಲ್ಲಿ ಹೇಳಲು ಕಾರಣವೂ ಉಂಟು. ಕಳೆದ ವಾರ ಬಾಬುಗೆ ಫೋನ್ ಮಾಡಿ ಈ ಬಾರಿ ಪ್ರಮೋದ್ ಶಿಗ್ಗಾಂವ್ ಜಿ.ಬಿ. ಜೋಶಿವರ ಆ ಊರು ಈ ಊರು ಅರ್ಥಾತ್ ಮೂಕಬಲಿ ನಿರ್ದೇಶನ ಮಾಡುತ್ತಿದ್ದಾರೆ ಎಂದ ಕೂಡಲೇ “ಅರೆರೇ ಅದನ್ನು ನಾನು ಫಿಲಂ ಮಾಡಬೇಕು ಅಂತ ಬಹಳ ಹಿಂದೆಯೇ ರೈಟ್ಸ್ ತೆಗೆದುಕೊಂಡಿರುವೆ. ಚಿತ್ರ ಮಾಡೇ ಮಾಡ್ತೀನಿ-ಖಂಡಿತಾ ನಾಟಕಕ್ಕೆ ಬರ್ತೇನೆ” ಎಂದರು. +ಆ ಕ್ಷಣಕ್ಕೆ ನನಗೂ ಸಂತೋಷವಾಯಿತು. ಆದರೆ, ನಾನಾಗ ಅಮ್ಮ ನೋಡಿರಲಿಲ್ಲ ‘ಅಮ್ಮ’ ನೋಡಿದ ನಂತರ ಮೂಕಬಲಿಯೂ ಹಾಗೆಲ್ಲಾದೀತೋ ಎಂದು ಗಾಬರಿಯಾಯಿತು. +ಇಂಥ ಕೃತಿ ಚಿತ್ರಮಾಡುವಾಗ ತುಂಬ ಎಚ್ಚರವಹಿಸಿ ಎಂಬ ಮಾತು ಹೇಳುತ್ತಾ, ಲೇಖಕ-ವಿಮರ್ಶಕ, ಪ್ರೊಫೆಸರ್‍ ಕಿ.ರಂ.ನಾಗರಾಜ್ ಆ ಊರು-ಈ ಊರು ಯಾವ್ಯಾವ ರೀತಿ ವ್ಯಾಖ್ಯಾನಿಸಬಹುದು ಎಂದು ಹೇಳಿದ ಅಂಶ ಟಿಪ್ಪಣಿಸುತ್ತಿರುವೆ. +ಒಳ್ಳೆಯವರು ಕೆಟ್ಟವರ ನಡುವಿನ ಆದಾನ-ಪ್ರದಾನ ಆ ಊರು-ಈ ಊರು ಒಂದು ಗ್ರಾಮದ ಕತೆಯೂ ಹೌದು. ಸಾಂಪ್ರದಾಯಿಕ ಕಥಾನಕವಾದರೂ ಹೇಳಿರುವ ಕ್ರಮದಿಂದ ನಾಟಕಕ್ಕೆ ಮಹತ್ವ ಬಂದಿದೆ. ನಾಟಕದಲ್ಲಿ ಗಾಂಭೀರ್ಯ ಮಾತ್ರವಲ್ಲ ಟ್ರಾಜಿಕ್ ಟೋನ್ ಸಹಾ ಇದೆ ಎಂಬುದು ಬಹು ಮುಖ್ಯ. +ಮಾನವೀಯತೆ ನಾಡವಾಗಿದೆ ಎಂಬುದನ್ನು ಕತೆ ಹೇಳುತ್ತದೆ. ಇಲ್ಲಿ ಸ್ತ್ರೀಪಾತ್ರಗಳ ಬಲಿ ಮೌನವಾಗಿ ನಡೆಯುತ್ತದೆ. ಇಲ್ಲಿರುವುದು ಒಂದು ಮುಗ್ದ ಜಗತ್ತು ಇನ್ನೊಂದು ಕಿಲಾಡಿ ಜಗತ್ತು. ದರ್ಪ ತೋರಲು ಮುಗ್ದ ಜನರ ಮೇಲೆ ಆಕ್ರಮಣ. ಹಾಗೆ ನೋಡಿದರೆ ಇದೊಂದು ರೀತಿ ಗಾಂಧಿಯನ್ ಪ್ಲೇ. ಪವರ್‍ ಪಾಲಿಟಿಕ್ಸ್‌ನಿಂದ ಏನೇನು ಅನಾಹುತವಾಗಬಹುದು ಎಂಬುದನ್ನು ನಾವಿಂದು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಒಂದೇ ದಿನದ ಒಂದು ರಾತ್ರಿಯ ಕಥೆಯಲ್ಲಿ ಸಮುದಾಯದ ಬದುಕಿನ ಚಿತ್ರವಣವಿದೆ. ಈ ನಾಟಕದಲ್ಲಿ ‘ಆ ಊರು-ಈ ಊರು’ಗೆ ಕೊಂಡಿಯಾಗಿರುವುದು ನದಿ. ಒಂದೆಡೆ ಹಾಲು-ಇನ್ನೊಂದೆಡೆ ವಿಷ. ಮಾತನಾಡದಿರುವ ಹೆಣ್ಣು ಇದರಲ್ಲಿ ಮೂಕಬಲಿಯಾಗುತ್ತಾಳೆ. ಪೀಳಿಗೆ ಕಮರಿ ಹೋಗುವುದನ್ನು ನಾಟಕ ಹೇಳುತ್ತೆ ಆದರಿಂದ ಇಂಥ ಕೃತಿಯನ್ನು ರಂಗಕ್ಕೆ ತರುವಾಗ ತುಂಬ ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತೆ. ನಿರ್ದೇಶಕ ನಾಟಕದ ಸಾಲುಗಳಲ್ಲಿ ಅಂತರ್ಗತವಾಗಿ ಹುದುಗಿರುವ ಅಂಶಗಳನ್ನು ಪ್ರಖರವಾಗಿ ತೋರುವುದಕ್ಕೆ ಚಿಂತನೆ ಮಾಡಬೇಕು. ಸಾಹಿತ್ಯದ ಸಾಲುಗಳಲ್ಲಿ ಗ್ರಾಮೀಣ ಸೊಗಡು ಇರುವಂತೆ ನೋಡಿಕೊಂಡು ತುಂಬ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಕೃತಿಗೆ ನ್ಯಾಯ ಸಂದೀತು ಎಂದರು. +ಈ ಎಲ್ಲ ಅಂಶ ಗಮನದಲ್ಲಿಟ್ಟೇ ಪ್ರಮೋದ್ ಶಿಗ್ಗಾಂವ್ ರಂಗ ವ್ಯಾಖ್ಯಾನಕ್ಕೆ ಅಣಿಯಾಗುತ್ತಿದ್ದಾರೆ. ಇದನ್ನೊಂದು ಚಿತ್ರ ಮಾಡುವ ಕನಸು ಹೊತ್ತಿರುವ ಡಿ.ರಾಜೇಂದ್ರ ಬಾಬು ನಾಟಕ ಬಂದು ನೋಡುವುದು ಮಾತ್ರವಲ್ಲ ತೆರೆಗೆ ಅಳವಡಿಸುವಾಗ ಸೂಕ್ಷ್ಮತೆಗಳನ್ನು ಗಮನಿಸದಿದ್ದಲ್ಲಿ ಇದು ಇನ್ನೊಂದು ‘ಅಮ್ಮ’ ಆದೀತು. +ಡಿ. ರಾಜೇಂದ್ರಬಾಬು ಈ ಬಾರಿ ಹೆಚ್ಚು ಆಸ್ಥೆ ವಹಿಸುತ್ತಾರೆ ಎಂದು ಆಶಿಸೋಣ. +***** +(೧೨-೧೦-೨೦೦೧) +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_186.txt b/Kannada Sahitya/article_186.txt new file mode 100644 index 0000000000000000000000000000000000000000..3d8273d6d36364c82ec23ea2b5cbf79188c3923c --- /dev/null +++ b/Kannada Sahitya/article_186.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಾಗೆ ಪ್ರೀತಿಯ ಹುಡುಗ, +ಏನೇನೋ ಮಾತುಗಳು – ಬೇಕಾಬಿಟ್ಟಿ. +ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ +ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ +ಅವನು ಹಾಗೇ! +ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ +ಏನೂ ಆಗದಹಾಗೆ ಮತ್ತೂ ಹತ್ತಿರ ಸರಿದು +ಏನೂ ತಿಳಿಯದಹಾಗೆ ಗುಂಪಲ್ಲಿ ಮುತ್ತಿಟ್ಟು, +ಸಹಜ ಎನ್ನುವ ಹಾಗೆ ಕಿವಿಯೊಳಗೆ ಹೇಳಿದ್ದೇನೋ….. +(ಅದು ಅಲ್ಲೇ ಮರೆತಿತ್ತು) +ಕೆನ್ನೆಯಂಚಿನ ಮೇಲೆ +ಸುಳಿದ ಬೆಚ್ಚನೆ ಉಸಿರು +ಅಲ್ಲೇ ಹಾಗೇ ಜೀಕು ಹಾಕುತ್ತಾ +ರೋಮ ರೋಮದಲ್ಲೂ ಸುಯ್‌ಗುಡುತ್ತಾ….. +ಅದೊಂದು ಮಧುರ ನೆನಪು. +ಆಮೇಲೆ; +ಅವನು ಅಲ್ಲಿ ಹಾಗೇ ತಣ್ಣಗೆ. +ಮತ್ತೆ ಅರಳಿಸಲಾರ +ಮತ್ತೆ ಹೊರಳಿಸಲಾರ +ಅವನು ಹಾಗೇ! +‘ಪ್ರೀತಿಯ ಹುಡುಗ’ ಹಾಗೇ +ಮತ್ತೊಬ್ಬನೂ ಅವನ ಹಾಗೆ +‘ಪ್ರೀತಿಯ ಹುಡುಗ’. +ಅವನೂ ಹಾಗೇ! +ಪ್ರೀತಿಯ ಹುಡುಗನ ಹಾಗೆ. +***** +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […] +ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_187.txt b/Kannada Sahitya/article_187.txt new file mode 100644 index 0000000000000000000000000000000000000000..d7fb4e97c050b1ca19c9d1f58879c1f645a32f87 --- /dev/null +++ b/Kannada Sahitya/article_187.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ – ಹೊಸ ಮದುಮಗಳ ನಾಚಿಕೆಯಬಡಾವಣೆಗಳಲ್ಲಿಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿಪಳಗಿರುವ ಮೊಹಲ್ಲಗಳಲ್ಲಿಮಾಟಾದ ಸೌಧಗಳನೋಟದಾಮೋದಗಳನೀಟು ದಂತಾವಳಿಯ ನಡುವೆಕಣ್ಣನಿರಿಯುತ್ತವೆ ಧುತ್ತೆಂದು-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;ಪಾರ್ಥೇನಿಯಮ್ಮಿನ ದಟ್ಟ ತೋಟಗಳುಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳುಸೆಟ್ಟರ, ಸೇಟುಗಳ,ನರಾಕೃತಿವೆತ್ತ ನೋಟುಗಳ,ಸುಲಭ ಕಮಾಯಿಯ ಬತ್ತದೂಟೆಗಳು;ದಿನೇ ದಿನೇ […] +೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_188.txt b/Kannada Sahitya/article_188.txt new file mode 100644 index 0000000000000000000000000000000000000000..f420a5783e69f2386efa9415bd82692c30c90f52 --- /dev/null +++ b/Kannada Sahitya/article_188.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಾಕ್ ಹೋಗಿ +ಬದುಕು ಕಲೆಯಂತೆ ಸಮಾನಾಂತರ ಸಾಗಿದ +ದೀಪದ ತಂತಿಗಳಲ್ಲೊಂದರಿಂದ +ಯಾವುದೋ ಅಪ್ರಖ್ಯಾತ ಪಕ್ಷಿಯ +ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು +ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ +ಬರೀ ಅನಾಥ ಸಂಜೆ. +***** +ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […] +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_189.txt b/Kannada Sahitya/article_189.txt new file mode 100644 index 0000000000000000000000000000000000000000..c1dd6f88c7e0e2b74f6cd790ce5ca6ca399745ad --- /dev/null +++ b/Kannada Sahitya/article_189.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ +ಹಗುರು ಕಣ್ಣುಗಳಿಂದ +ತಟತಟ +ಉದುರುವ ಕಂಬನಿಯೇ +ಮಂಡಿ ತರಚಿದಾಗೆಲ್ಲ ಬ್ಲೇಡು +ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ +ಕಡುರಕ್ತವೇ +ತೆಪ್ಪಗೆ ಜಿನುಗುವ ಬೆವರೇ +ಹೇಳಿ, +ನಿಮ್ಮ ನಡುವೆಯೂ +ಎಲ್ಲಿಗೆಲ್ಲಿಯ ಸಂಬಂಧ +ನಿಮ್ಮ ಮೇಲಿಲ್ಲವೆ +ನನಗೂ +ಒಂದಿಷ್ಟು ಅಧಿಕಾರ? +***** +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_19.txt b/Kannada Sahitya/article_19.txt new file mode 100644 index 0000000000000000000000000000000000000000..a3042f4281fae6911dcebba964258c567614255a --- /dev/null +++ b/Kannada Sahitya/article_19.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉರಿದುರಿದು ಹಗಲು +ಆರಿ ಹೋಗಿಹ ಕೆಂಡವಾಯ್ತು ಮುಗಿಲು! +ನೇಸರನಿಗೂ ಬೇಸರಾಗುವದು ಸಹಜ +ನಿಜ- , +ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ? +ಅಂತೆಯೇ +ಅವನೆಂದಿನಂತೆಯೇ +ಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದು +ಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! +ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆ +ಮಳೆಯು ಜಿಟಿ ಜಿಟಿ ಹತ್ತಿ ತೊಟ್ಟಿಕ್ಕಿದೆ; +ಮರದ ಎಲೆಗಳ ಸಂದಿಯಲ್ಲಿ ಮಾಸಿದ ಕಿರಣ +ಹರಿದು ಬರುತಿದೆ ಪಿಸಿಯ ನೂಲಿನಂತೆ. +ಆಗ ಕಣ್ಣಿಗೆ ಸ್ವಲ್ಪ ಬಣ್ಣವಾಗೆ +ಅಳುವ ಮಕ್ಕಳು ನಸುವೆ ನಕ್ಕಹಾಗೆ +ಬಳಿಯ ಹೊಂಡದ ದುಂಡುಮೇಜು ಪರಿಷತ್ತಿನಲಿ +ಕಪ್ಪೆಗಳು ಚಪ್ಪಾಳೆ ತಟ್ಟಿ ಜಿಗಿದಾಡುತಿವೆ +ತಮ್ಮ ಪಕ್ಷವೆ ಕೊನೆಗೆ ಗೆದ್ದ ಹಾಗೆ ! +ಜ್ವರವಿಳಿದು ಮೈ ಬೆವರು ಬಿಟ್ಟ ರೋಗಿಯತೆರದಿ +ಕಾದ ತಿರೆ ತೊಯ್ದಿಹುದು ಮೇಲೆ ಕೆಳಗೆ- +ಇಂಥ ಇಳಿಹೊತ್ತಿನೊಳಗೆ! +ಕಣ್ಣು ತಪ್ಪಿಸಿ ಬರುವ ಕಳ್ಳ ಬೆಕ್ಕಿನ ತೆರದಿ +ಮಬ್ಬುಗತ್ತಲೆ ಇಳೆಯ ಮೂಸುತಿಹುದು; +ಗಾಳಿ ಮೈಸೋಕಿಸದೆ ಮಡಿಯ ಮಾಡುವರಂತೆ +ದೂರ ದೂರವೆ ಹಾರಿ ಬೀಸುತಿಹುದು. +ಮಂಜು ಹಬ್ಬಿತು +ಪೃಥ್ವಿಗೇ ನಂಜೇರಿದಂತೆ! +ಸೇದಿ ಬೀಸಾಡಿರುವ ಸಿಗರೇಟು ತುಂಡಿನೋಲು +ದೂರದಲಿ ಕಾಣಿಸಿತು ಮಂಕು ಚಿಕ್ಕೆ! +ವಿರಹಿಗಾಯಿತು ಸಂಜೆ +ಸೊರಗಿ ಹೋದಂತೆಯೆ ಬಾನಬಂಜೆ- +ರಾಗ ವಿರಹಿತವಾಯ್ತು ಅವಳ ಕೆನ್ನೆ +ನಿಶೆಯು ಬರೆಯಿತು ದೊಡ್ಡದೊಂದು ಸೊನ್ನೆ! +***** +ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […] +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_190.txt b/Kannada Sahitya/article_190.txt new file mode 100644 index 0000000000000000000000000000000000000000..507c377ccb955524991d87925684a659959df619 --- /dev/null +++ b/Kannada Sahitya/article_190.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಜೈ ಯಮುನಾಮಯ್ಯಾ… ಜೈ ಗಂಗಾಮಯ್ಯಾ… ಜೈ ಕೇದಾರೇಶ್ವರ…. ಜೈ ಬದರೀ ವಿಶಾಲ…’ ಕಳೆದ ಏಳೆಂಟು ದಿನಗಳಿಂದ ಈ ಚಾರಧಾಮ ಯಾತ್ರೆಯಲ್ಲಿ ಗುರಣ್ಣ ಈ ಜೈಜೈಕಾರಗಳಲ್ಲಿ ಮುಳುಗೇಳುತ್ತಿದ್ದಾನೆ. ಯಾತ್ರೆಯ ಸುರುವಾತಿಗೆ ಗುರಣ್ಣಗ ಈ ಜೈಕಾರಗಳು ಮಜಾ ಅನಸತಿದ್ದವು. ತನ್ನಂತಹ ಸುಶಿಕ್ಷಿತ ಮನಿಶಾ ಹುಚ್ಚು ಹುಚ್ಚರ ಹಂಗ ಏನು ‘ಜೈ’ ಎನ್ನುವದು ಎನ್ನುತ್ತ ಮೊದಮೊದಲಿಗೆ ತಮಾಷೆಗೆಂದು, ಮುಜುಗರಪಡುತ್ತ, ಮುಗುಳು ನಗುತ್ತ ಈ ‘ಜೈ ಗಂಗಾ…… ಜೈ ಕೇದಾರ’ಗಳಿಗೆ ದನಿಗೂಡಿಸುತ್ತಿದ್ದವನು, ಈಗೀಗ ಯಾತ್ರೆ ಕೊನೆಯ ಘಟ್ಟವನ್ನು ತಲುಪುತ್ತಿದ್ದಂತೆ, ಯಾತ್ರೆಯ ಅಮಲು ಅವನನ್ನು ತೀವ್ರವಾಗಿ ಆವರಿಸತೊಡಗಿದಂತೆ ತಾನೂ ಆಸ್ಥೆಯಿಂದ ಹುರುಪಿನಿಂದ ಏನನ್ನೋ ಸಾಧಿಸಿದ, ಸಾಧಿಸುತ್ತಿರುವ ಹೆಮ್ಮೆಯಿಂದ ‘ಜೈ ಬದರೀನಾಥ’ ಎಂದು ಮುಕ್ತ ಕಂಠದಿಂದ ಸಹಯಾತ್ರಿಕರೊಡನೆ ಉದ್ಘೋಷಿಸುತ್ತಾನೆ. +ಲಕ್ಷಾಂತರ ಜನ ಗಂಡಸರು ಮುದುಕರು ತದಕರು ಕೂಸು ಕುನ್ನಿ, ದೇಶದ ಅಷ್ಟಪೈಲು ಮೂಲೆಗಳಿಂದ ಬಂದ ಬಣ್ಣಬಣ್ಣದ ವೇಷದ, ಚಿತ್ರವಿಚಿತ್ರ ಭಾಷೆಯ ಬಹುರಂಗೀ ಜನಸಮುದಾಯ, ಸಾಲದ್ದಕ್ಕೆ ನಾಲ್ಕಾರು ಜನ ಬಿಳೀ ಚರ್ಮದ ವಿದೇಶೀಯರು, ಒಬ್ಬೊಬ್ಬರು ಎದುರಾದಾಗ, ಗುಂಪುಗುಂಪಿಗೆ ದಾರಿಬಿಡುವಾಗ ಈ ಜಯಘೋಷಗಳಿಂದ ಎದುರುಗೊಳ್ಳುತ್ತಿದ್ದರು ಬೀಳ್ಕೊಡುತ್ತಿದ್ದರು. ನಾವೂ ನಿಮ್ಮವರೇ ಎಂದು ಭರವಸೆ ಹುಟ್ಟಿಸುತ್ತಿದ್ದರು. ಈ ನಾವೂ ನಿಮ್ಮವರೇ ಎಂದು ಭರವಸೆ ಹುಟ್ಟಿಸುತ್ತಿದ್ದ ಸಹಯಾತ್ರಿಗಳ ನಡುವೆ ‘ಇದೂ ನಮ್ಮದು, ಏನು ಮಾಡುವದು ನಮ್ಮ ನಮ್ಮ ಕರ್ಮ’ ಎಂಬಂತೆ ಆ ಹಂಡಬಂಡ ಹುಡುಗಿ, ಗುರಣ್ಣನ ಮೊಮ್ಮಗಳು ಸೂಸಿ ಉರ್ಫ ಸುಸಾನಳೂ ಇದ್ದಳು. ಹದಿನೈದು ಹದಿನಾರು ವರುಷದ ಬಿಳೇ ಹುಡುಗಿ, ಪ್ಯಾಂಟು ಶರಟು ಹಾಕ್ಕೊಂಡು ಚಿಣಿಗಿ ಹಾವಿನ್ಹಾಂಗ ಎಲ್ಲೆಂದರಲ್ಲಿ ಜಿಗಿಯುತ್ತ ಕುಣಿಯುತ್ತ, ಮಾತು ಮಾತಿಗೆ ‘ಓಕೆ… ಓಕೆ… ರಾಯಿಟ್… ರಾಯಿಟ್’ ಎನ್ನುತ್ತ ಪುಟಿ ಚಂಡಿನಂತೆ ಪುಟಿಯುವ ಹುಡುಗಿ, ತಾನೂ ಎಲ್ಲರಂತೆ ‘ಘಾಂಘಾಮಾಯಾಕೀ ಛೈ……. ಖೇದಾರೇಷ್ವರ್ ಕಿ ಛೈ’ ಎನ್ನುತ್ತ ಕುಪ್ಪಳಿಸುತ್ತಿದ್ದುದನ್ನು ನೋಡಿ ಗುರಣ್ಣಗ ನಗು ಬರುತ್ತಿತ್ತು. ಮರುಕ್ಷಣ ಇದು ತನ್ನ ಬದುಕಿನ ವೈಫಲ್ಯದ ದ್ಯೋತಕ ಎಂದು ನೆನೆದು ಮನಸ್ಸಿಗೆ ಪಿಚ್ಚೆನಿಸುತ್ತಿತ್ತು. +ಆದರ ಗುರಣ್ಣನ ತಾಯಿ ಕೃಷ್ಟಕ್ಕಗ ಮಾತ್ರ, ಯಾತ್ರೆಗೆ ಹೊರಡಲು ನಾಲ್ಕು ದಿನ ಇರುವಾಗ ಅಮೆರಿಕಾದಿಂದ ಸುಸಾನ ಬಂದು ವಕ್ಕರಿಸಿದ್ದು, ವಕ್ಕರಿಸಿ ತಾನೂ ಬದರೀ ಯಾತ್ರೆಗೆ ಬರುತ್ತೇನೆಂದು ಹಟ ಹಿಡಿದು ಬಂದದ್ದು, ಯಾವದೂ ಮನಸ್ಸಿಗೆ ಬಂದಿರಲಿಲ್ಲ. ಆಕೆಗೆ ಈ ಬಿಳೇ ಹುಡುಗಿ ಬಂದದ್ದೇ ಒಂದು ತರಹ ವಾಗತ್ಯ ಅನಿಸಲಿಕ್ಕೆ ಹತ್ತಿತ್ತು. ಆಕೆರs ಏನು ಮಾಡ್ಯಾಳು ಪಾಪ! ಹತ್ತು ವರುಷದಿಂದ ತನ್ನ ದತ್ತಕ ಮಗ ಗುರಣ್ಣಗ ದುಂಬಾಲು ಬಿದ್ದು, ಹಟ ಹಿಡದು, ಬೈದು, ಅಂದು ಕೆಟ್ಟ ಕೆಟ್ಟ ಮಾತಾಡಿ ಈ ವರುಷ ಕಡಿಕೂ ಅವನ ಮನ ಒಲಿಸಿ ಬದರೀ ಯಾತ್ರೆಗೆ ಹೊರಡಿಸಿದರ, ಆಯತಾ ವ್ಯಾಳ್ಯಾಕ್ಕ ಈ ಚಣ್ಣ ಹಾಕ್ಕೊಂಬೋ ಬಿಳೇ ಹಲ್ಲಿಯಂತಹ ಹುಡುಗಿ ವಕ್ಕರಿಸಬೇಕ? ‘ಒಂದು ಮಡೀನss ಮೈಲಿಗೇss ದೊಡ್ಡದಾಗೇದಂತ, ಮೂರು ಮೂರು ದಿವ್ಸ ಕೂಡೂದುಲ್ಲ ಸಹಿತ ಸುಡ್ಲಿ……. ಒಳಗs ಹೊರಗs ಏಕರಾಸ ಮಾಡಿ ಬಿಡತsದ… ಇದರ ಸಂಗತೀ ಯಾತ್ರಿ ಪುಣ್ಯಾ ಪಡಕೋ ಬೇಕು’ ಎನ್ನುತ್ತ ನಿರಂತರ ಗೊಣಗುತ್ತ ಗುರಣ್ಣನ್ನ ತಿವೀತಿದ್ದಳು. +ಏನs ಆಗಲಿ ಯಾತ್ರೆ ಮುಗಿ ಮುಗೀತಾ ಬಂದ ಬಂಧಗ ಗುರಣ್ಣನ ಮನಸ್ಸು ನಿರುಂಬಳ ಆಗಲಿಕ್ಕೆ ಹತ್ತೇದ. ‘ಹ್ಯಾಂಗೂ ಇನ್ನೊಂದೆರಡು ದಿನಕ್ಕೆ ಮುಗೀತದಲ್ಲ’ ಎನ್ನುತ್ತ ಒಳಗಿಂದೊಳಗs ಸ್ವಲ್ಪ ಉಲ್ಲಸಿತನಾಗಲಿಕ್ಕೆ ಹತ್ಯಾನ. ಮೊದಮೊದಲಿಗೆ ಯಾವ ಯಾವ ಅನಿಶ್ಚಿತಗಳಿಗೆ ಅತೀವ ಹೆದರಿಕೊಂಡಿದ್ದನೋ, ಅವನ್ನೆಲ್ಲ ದಾಟಿ ಬಂದ ಮ್ಯಾಲ, ಈಗ ಅವೆಲ್ಲ ತಾನು ಸಾಧಿಸಿದ ಸಾಹಸೀ ದಿಗ್ವಿಜಯಗಳೇನೋ ಎನ್ನುತ್ತ ಮತ್ತೆ ಮತ್ತೆ ಅವನ್ನೇ ಮೆಲಕುಹಾಕುತ್ತಿರುತ್ತಾನೆ, ಹೆಮ್ಮೆ ಪಟ್ಟುಕೊಳ್ಳುತ್ತಿರುತ್ತಾನೆ. +ಹೃಷಿಕೇಶದ ಉರಿಬಿಸಿಲಿನ್ಯಾಗ, ಸ್ವರ್ಗಾಶ್ರಮ…. ಶಿವಾನಂದಾಶ್ರಮ…. ಲಕ್ಷ್ಮಣ ಝೂಲಾ…. ರಾಮ ಝೂಲಾ…. ಅನಕೋತ ಬೆವರಿಳಿಸುತ್ತ ಒದ್ದ್ಯಾಡತಿರಬೇಕಾದರ, ಪ್ರತೀ ಸರೇ ಯಾವದಾದರೂ ನದಿ ಬರೂತಲೇ, ಕೃಷ್ಟಕ್ಕ ತಾನು ಉಟ್ಟ ಕೆಂಪು ಮಡಿಸೀರಿ ಸಡಿಲಿಸಿ ಸೊಂಟದಿಂದ ಎಂಟಾಣೆ ತೆಗೆದು ಹರಿವ ನದಿಗೆ ಎಸೆಯುತ್ತಿದ್ದದನ್ನ ನೋಡಿ ಹುಡುಗಿ ಸುಸಾನ, ‘ಗ್ರ್ಯಾಂಪಾ…… ವ್ಹಾಯ್ ಧಿಸ್ ಓಲ್ಡೀ ಇಸ್ ವೇಸ್ಟಿಂಗ ಮನೀ?’ ಎಂದದ್ದು ನೆನಪು ಮಾಡಿಕೊಂಡು ಮುಗುಳು ನಗತಾನ. ಆದರ ಅದೇ ಬಿಳೇ ಹುಡುಗಿ ಸುಸಾನ ಹೃಷಿಕೇಶ ಬಿಡುವ ಮುಂದ, ಓಡೋಡಿ ಬಂದು ಬಸ್ಸಿನಲ್ಲಿ ತನ್ನ ಪಕ್ಕದ ಸೀಟಿನಲ್ಲಿ ಕುಕ್ಕರಿಸಿದಾಗ ಭಗ್ಗಂತ ಉಗ್ಗಿದ ಸಿಗರೇಟಿನ ವಾಸನಿಗೆ ಗುರಣ್ಣ ಕುಗ್ಗಿ ಬಿಟ್ಟಿದ್ದ. ಹಿಂದಿನ ಸಾಲಿನಿಂದ ಕೃಷ್ಟಕ್ಕ ‘ಎಲ್ಲಿ ಹೋಗಿತ್ತಂತಪಾ ನಿನ್ನ ವಂಶದ ಕುಡಿ…… ಊಟದ ವ್ಯಾಳ್ಯಾಕ್ಕೂ ಇದ್ದಿದ್ದಿಲ್ಲ……… ಊಟಾ ಉಡಿಗಿ ಏನೂ ಬ್ಯಾಡಂತೇನು?’ ಎಂದು ಫೂತ್ಕರಿಸಿದಾಗ, ಗುರಣ್ಣ ಸುಸಾನಳನ್ನ ಕೇಳಿ ‘ಆಕಿ ಏನೋ ತಿಂದು ಬಂದಾಳಂತ’. ಎಂದದ್ದಕ್ಕ ಕೃಷ್ಟಕ್ಕ ‘ಏನು ಶಗಣೀ ತಿಂದ ಬಂದsದ ಕೇಳು… ಯಾತ್ರಿ ಮುಗಿಯೋ ತನಕ ಒಂದ್ನಾಕು ದಿವಸ ನಮ್ಮ ಸಂಗತೀsನ ಇರಲಿಕ್ಕೆ ಹೇಳು’ ಎಂದು ಚುಚ್ಚಿದ್ದಳು. +ಮುಂದ ಈ ಉತ್ತರ ಧ್ರುವ ದಕ್ಷಿಣ ಧ್ರುವಗಳನ್ನ ಎಡಕs ಬಲಕs ಇಟಗೊಂಡs ಯಾತ್ರೆಯ ಉದ್ದಕ್ಕೂ ಗುರಣ್ಣಗ ಒದ್ದಾಡಬೇಕಾಯಿತು. ಖರೆ ಅಂದರ ಗುರಣ್ಣಗ ಈ ಹುಡುಗಿ ಸುಸಾನ ಬಂದಾಗನs ಅಷ್ಟಿಷ್ಟು ಧೈರ್ಯ ಬಂಧಂಗ ಅನಸತsದ. ದಶಕಗಳಿಂದ ಕೃಷ್ಟಕ್ಕನ ಕೈಯಾಗ, ‘ಅಪಹಾತ… ಅಳಬುರಕ…. ಅವ್ವಾಳಿ…’ ಅಂತ ಬೈಸಿಗೊಂಡು ಬೈಸಿಗೊಂಡು ಕ್ಷತವಿಕ್ಷತಗೊಂಡ ಅವನ ವ್ಯಕ್ತಿತ್ವಕ್ಕ ಈ ಹುಡುಗಿಯ ಸ್ವಚ್ಛಂದ ಸ್ವಲ್ಪ ಸ್ಥೈರ್ಯ ತುಂಬಿದ ಹಂಗ ಅನಸತsದ. ಇಲ್ಲದಿದ್ದರ ಧಾರವಾಡದಾಗ ಇದ್ದಾಗ ಒಂದು ಹತ್ತು ಫೂಟು ಎತ್ತರದ ಮೈಲಾರಲಿಂಗನ ಗುಡ್ಡ ಹತ್ತಲಿಕ್ಕೆ ಹೆದರಾವ, ಮಾಳಮಡ್ಡಿಯೊಳಗಿನ ತಮ್ಮ ಮನೀ ಹಿತ್ತಿಲ ಭಾವಿಯೊಳಗ ಹಣಿಕಿ ಹಾಕಿದರ ತಲಿ ತಿರಗತsದ ಅಂತಿದ್ದಾಂವ, ಈಗ ಈ ನಾಲ್ಕs ದಿವಸಕ್ಕs ತಾನೇನು ಈ ಹಿಮಾಲಯದ ಮಡಿಲಲ್ಲೇ ಹುಟ್ಟಿ ಬೆಳೆದ ಪಹಾಡಿಯೇ ಏನೋ ಅನ್ನವರಹಂಗ, ಈ ಪರ್ವತಗಳ ಸಖ್ಯದಲ್ಲಿ ರಮಿಸಲಿಕ್ಕೆ ಹತ್ಯಾನ. ಈ ಬೃಹದಾಕಾರದ ಪರ್ವತಗಳು, ಈ ತಳವೇ ಇಲ್ಲದ ಕೊಳ್ಳಗಳು ಇವೆಲ್ಲ ತನ್ನ ಬಾಲ್ಯ ಸ್ನೇಹಿತರೇನೋ ಅನ್ನುವಷ್ಟು ಸಲಿಗೆಯಿಂದ, ಸಲೀಸಾಗಿ ಈ ಹಿಮಾಲಯದ ಒಡನಾಟದಾಗ ಅಡ್ಡಾಡತಿರತಾನ. +ಯಮುನೋತ್ರಿಗೆ ಹೊರಟಾಗ ಹನುಮಾನ ಚಟ್ಟಿಯಿಂದ ಜಾನಕೀ ಚಟ್ಟೀತನಕ ಕುರೀ ತುಂಬಿದಂತಹ ಒಂದು ಜೀಪಿನ್ಯಾಗ ಕೃಷ್ಟಕ್ಕನ್ನ ಮುಂದಿನ ಸೀಟಿನ್ಯಾಗ ಎತ್ತಿ ಕೂಡಿಸಬೇಕಾರ ಅದೊಂದು ಹರಸಾಹಸವೇ ಆತು. ಆದರೆ ಸುಸಾನ ಮಾತ್ರ ಗುರಣ್ಣನ ಸಂಗತೀನs ಜೀಪಿನ ಹಿಂದಿನ ದೊಡ್ಡಿಯೊಳಗ ಟಣ್ಣಂತ ಜಿಗಿದು, ಮುವತ್ತು ಮಂದೀ ನಡುವ ನುಗ್ಗು ನುಗ್ಗಾಗುತ್ತ, ಮ್ಯಾಲಿನ ಪಟ್ಟೀ ಹಿಡಿದು ತೂಗಾಡುತ್ತ, ‘ಓ ಇಟ್ಸ್ ಗ್ರೇಟ್ ಫನ್…… ಗ್ರೇಟ್ ಥ್ರಿಲ್’ ಅಂತ ಚೀರಾಡತೊಡಗಿದ್ದಳು. ಮುಂದ ಗುರಣ್ಣ ಮತ್ತು ಕೃಷ್ಟಕ್ಕ ಒಂದೊಂದು ಪಾಲಕಿಯೊಳಗೆ ಕೂತು ಯಮನೋತ್ರಿ ಏರತೊಡಗಿದರ, ಸುಸಾನ ಮಾತ್ರ ಒಂದು ಕುದುರೀ ಮ್ಯಾಲ ಜಿಗಿದು ಕೂತು ಟುಣು ಟುಣು ಅನಕೋತ ಮುಂದ ಮುಂದ ಹೊರಟುಬಿಟ್ಟಳು. +ಪರ್ವತದ ಗುಂಟ ಸಾಗಿದ ಇಕ್ಕಟ್ಟಾದ ಕಚ್ಚಾ ಏರುದಾರಿ, ಅಲ್ಲಲ್ಲಿ ಅಲ್ಲಲ್ಲಿ ಸೈಜುಗಲ್ಲಿನ, ಹೆಜ್ಜೆ ಇಟ್ಟರೆ ಅಲ್ಲಾಡುವ ಮೆಟ್ಟಿಲುಗಳು; ಒಂದು ಕಡೆ ಮುಗಿಲು ಹರಿದು ಆಚೆಗೆ ಚಾಚಿರುವ ಪರ್ವತ, ಕೆಳಗೆ ‘ಆ’ ಎಂದು ಬಾಯ್ದೆರೆದು ಆತ್ಮಹತ್ಯೆಗೆ ಪ್ರಚೋದಿಸುವ ಪ್ರಪಾತ, ರಮಣೀಯತೆಗೆ ರೌದ್ರ ಬೆರೆತಿದೆಯೋ, ಇದಕ್ಕೆ ಅದೋ ತಿಳಿಯದಂತಹ ಭಯಾವಹ ದೃಶ್ಯ. ಒಂದಿಷ್ಟು ಅಗಲ ರಸ್ತೆಯಲ್ಲಿ ಪಾಲಕಿಯವರು, ಕಾಲುನಡಿಗೆಯವರು, ಕುದುರೆ ಸವಾರರು…. ಕೂಲಿಗಳ ಬಾಗಿದ ಬೆನ್ನಿಗೆ ಬಿಗಿದ ಬುಟ್ಟಿಯಲ್ಲಿ ಬಿದ್ದುಕೊಂಡವರು… ಏರು ಏರು ಏರು… ಪಾಲಕಿ ಹೊತ್ತವರ ಕೆಮ್ಮು… ಕಾಲು ನಡಿಗೆಯವರ ದಮ್ಮು… ಪೋನಿಗಳ ಹೇಷಾರವ… ‘ಜೈ ಯಮುನಾ ಮಯ್ಯಾ..’ ‘ಅರೇ ಬಾಜೂ… ಸಾಡ… ಸಾಡ… ದೇ ಮಾಯೀ…. ಬಾಜೂ ಅರೇ ಹಾಟ್…’ ಎನ್ನುತ್ತ ಒಬ್ಬರನ್ನೊಬ್ಬರು ಛೇಡಿಸುತ್ತ ಕೆಣಕುತ್ತ ಎದುರು ಬದುರಾಗಿ ಏರುತ್ತಿದ್ದ ಇಳಿಯುತ್ತಿದ್ದ ಪಾಲಕೀ ಹೊತ್ತ ಹುಡುಗರು… ಗದ್ದಲ… ನೂಕು ನುಗ್ಗಲು… ಎಲ್ಲ ಯದೀ ಘಟ್ಟಿದ್ದವರ ಕೆಲಸ. ತಮ್ಮನ್ನು ಹೊತ್ತ ಪಾಲಕಿಗಳು ಒಂದಿಷ್ಟು ಹಿಂದು ಮುಂದಾದರೆ ಹೆದರಿ ಕಕ್ಕಾವಿಕ್ಕಿಯಾಗುವ, ‘ಒಂದs ಒಂದು ಹೆಜ್ಜಿ ಅತ್ತಲಾಗ ಇತ್ತಲಾಗ ಆದರ ಎಲಬು ಸಹಿತ ಸಿಗಲಿಕ್ಕಿಲ್ಲಾ ಅಂದೆ’ ಎನ್ನುವ ಕೃಷ್ಟಕ್ಕನ ಹೌಹಾರಿಕೆಗಳು… ದಾರಿಯ ಎರಡೂ ಕಡೆ ನಿರಂತರವಾಗಿ ಫುಟ್‌ಬಾಲ್‌ಗಳಂತೆ ಉಬ್ಬಿ ಉಬ್ಬಿ ಬಿರಿಯುತ್ತಿರುವ ಬಿಳಿಯ ರೊಟ್ಟಿಗಳನ್ನು ಸುಡುತ್ತಿರುವ ಧಾಬಾಗಳು… ಎಣ್ಣೆಮಯ ಸಬ್ಜಿಗಳು… ನೊಣ ಮುಕುರಿದ ಚಾಯ್‌ಗಳು… ಅಲ್ಲಲ್ಲಿ ಅಲ್ಲಲ್ಲಿ ಕುದುರೆಗಳ ಬಾಥರೂಮುಗಳು… ನಡುನಡುವೆ ಮಳೆ… ಎಲುಬು ಕಂಪಿಸುವ ಹಿಮದ ತುಣುಕುಗಳು… ಹತ್ತು ಹತ್ತು ರೂಪಾಯಿಗಳಿಗೆ ಕೊಂಡು ಈಗ ಗಾಳಿಗೆ ಹರಿದು ಹೋಗಿರುವ ಟೆಂಪರರೀ ಪ್ಲಾಸ್ಟಿಕ್ ರೇನುಕೋಟುಗಳು… ಆಗೊಮ್ಮೆ ಈಗೊಮ್ಮೆ ಮೋಡ ಸರಿದಾಗ ಝಗ್ಗೆಂದು ಮಿಂಚುವ ಹಿಮಾಚ್ಛಾದಿತ ಶಿಖರಗಳು… ಎಳೆ ಬಿಸಿಲಿನಲ್ಲಿ ಥಳಥಳಿಸುವ ಆ ಬೆಳ್ಳಿಬೆಡಗುಗಳು ಇ॒ದ್ದಕಿದ್ದಂತೆ ಮಂಜು ಅ॒ಲ್ಲೊಬ್ಬರು ಬಿದ್ದರು ಇ॒ಲ್ಲೊಬ್ಬರು ಎದ್ದರು… ನಡುನಡುವೆ… ‘ಆ ಕುದರೀ ಮ್ಯಾಲ ಕೂತದ್ದು ಬಿಳೇ ಹಲ್ಲಿ ಎಲ್ಲಿ ಹೋತು ಸುಡ್ಲಿ ನೋಡೋ ಗುರು‘ಗಳು… ಹತ್ತು ಹತ್ತು ಹತ್ತು… ಇಳೀ ಇಳೀ ಇಳೀ…. ಇದೊಂದು ಹತ್ತುವ ಇಳಿಯುವ ಮೆರಿಗೋ ರೌಂಡದ ಬ್ಯಾರೇ ಪ್ರಪಂಚನs ಸೈ… ಇಲ್ಲಿ ಯಾರಿಗೆ ಯಾರೋ?…. ಬಹುಶಃ ಪ್ರೇತಗಳ ಜತೆಗಿನ ಆ ಕೊನೆಯ ಏಕಾಕೀ ಯಾತ್ರೆಯೂ ಹೀಗೇನೇ ಏನೋ…. +ಯಮುನೋತ್ರಿಯೊಳಗ ಸುಸಾನ ಎಲ್ಲೋ ತಪ್ಪಿಸಿಕೊಂಡುಬಿಟ್ಟಿದ್ದಳು. ಗುರಣ್ಣ ಮತ್ತು ಕೃಷ್ಣಕ್ಕ ತಿರುಗಿ ಹನುಮಾನ ಚಟ್ಟಿಗೆ ಮರಳಿ ಬಂದಾಗ ಅಲ್ಲೆ ಭೆಟ್ಟಿಯಾದಳು. ಅವತ್ತ ಕೃಷ್ಟಕ್ಕ ಒಂದು ತಾಸು ಗೊಣಗಿದ್ದಳು. ‘ಇದರ ಸುಡ್ಲಿ…. ಇದು ಮನೀ ಹೆಣ್ಣು ಮಗಳಾಗಿ ಛಂದಾಗಿ ಒಂದು ಸೀರಿ ಉಟಗೊಂಡು ಬಂದಿದ್ದರs ಅಲ್ಲೇ ಯಮುನಾದೇವಿ ಗುಡಿಯೊಳಗ ಪೂಜಿ ಮಾಡಿ, ಉಡೀ ತುಂಬಿ ಬಾಗಣಾ ಕೊಟ್ಟು ಬರಬಹುದಿತ್ತು…. ಇದನ್ನೆಲ್ಲ ತಲೀ ಬೋಳಿಸಿಕೊಂಡ ಮಡೀ ಹೆಂಗಸಾಗಿ ನಾ ಮಾಡಬೇಕss?…. ಬಂದಿದ್ದೇನs ಇಲ್ಲ ಅಂದ್ರ ಆ ಮಾತು ಬ್ಯಾರೇ…. ಇಲ್ಲೀ ತನಕಾ ಬಂದು ಚಣ್ಣಾ ಹಾಕ್ಕೊಂಡsದ ಸುಡ್ಲಿ… ಹಣೀ ಮ್ಯಾಲ ಒಂದು ಕುಂಕುಮ ಇಲ್ಲ…. ಕೈಯಾಗ ಬಳೀ ಇಲ್ಲ…. ಯಲ್ಲಾ ಆ ಮುಳಗುಂದದ ಸಕೇಶಿ ಶಾಪ… ಶಾಪ…’ ಎನ್ನುತ್ತ ನಾಲ್ಕು ದಿನ ಮರವೆಯಾಗಿದ್ದ ಆ ಮುಳಗುಂದದ ಸಕೇಶಿಯನ್ನು ಮತ್ತೆ ಎಳೆತಂದು ಶಾಪ ಹಾಕತೊಡಗಿದಳು. +ಮರುದಿವಸ ಗಂಗೋತ್ರಿಗೆ ಹೊರಟಾಗ ಮಾತ್ರ ಧಾರವಾಡದಿಂದ ಬಂದ ಸಹಯಾತ್ರಿ ಸುಬ್ಬಕ್ಕನ್ನ ಹಿಡಿದು ಆಕೀ ಕಡಿಂದ ಸುಸಾನಗ ’ಒಂದು ಛಂದನ್ನ ಕೇಸರೀ ಬಣ್ಣದ ಪತ್ತಲಾ ಉಡಿಸಿಗೊಂಡು ಬಂದು, ಗಂಗಾದೇವಿ ಗುಡಿಯೊಳಗ ಪೂಜಿ ಮಾಡಿಸಿ, ಉಡೀ ತುಂಬಿಸಿದಳು. ಆ ಮ್ಯಾಲ ಎಷ್ಟೋ ಹೊತ್ತು ಸುಸಾನ, ಪರ್ವತ ತುದಿಯ ಗಂಗಾ ತಟದ ವಿಶಾಲ ಘಾಟಿನ ಮ್ಯಾಲ ಎಳೆ ಬಿಸಿಲಿನ್ಯಾಗ, ಮಾರಿಗೆಲ್ಲ ಅರಿಷಿಣ ಕುಂಕುಮ ಮೆತ್ತಿಕೊಂಡು, ಉಟ್ಟಿ ಸೀರಿ ಮೊಣಕಾಲ ತನಕ ಎತ್ತಿ ಹಿಡದು ಉದ್ದುದ್ದ ಕಾಲು ಹಾಕುತ್ತ ಗಂಗೆಯ ನೀರನ್ನು ಎಲ್ಲರ ಮೇಲೆ ಚಿಮುಕಿಸುತ್ತ, ಮಂಗ್ಯಾನ್ಹಂಗ ಕುಣಿದಾಡಿದ್ದನ್ನು ನೋಡಿ, ಗುರಣ್ಣನ ಕಣ್ಣಾಗ ನೀರು ಬಂದವು. ಕೃಷ್ಟಕ್ಕ ಹಣೀಹಣೀ ಬಡಕೊಂಡಳು. ಮುಂದ ಕೃಷ್ಟಕ್ಕ ಮತ್ತು ಗುರಣ್ಣ ಹೆದರಿಕೋತ, ಹೆದರಿಕೋತ, ಒಬ್ಬರ ಕೈ ಒಬ್ಬರು ಹಿಡಕೊಂಡು, ಹೌರಗs ಬಗ್ಗಿ ಬಗ್ಗಿ ತಾವು ತಂದ ಪ್ಲಾಸ್ಟಿಕ್‌ದ ಕ್ಯಾನಿನೊಳಗ, ಪವಿತ್ರ ಗಂಗಾಜಲ ತುಂಬಿಕೋತಿದ್ದಾಗ, ಸುಸಾನ ಯಥಾಪ್ರಕಾರ ಗಾಯಬ್ ಆದಳು. ನಾಲ್ಕು ಹೆಜ್ಜೆದಾಟಿ ಮರಳಿ ತಮ್ಮ ಬಸ್ಸಿಗೆ ಹೊರಟಾಗ, ಯಾರೋ ಬಂದಿಬ್ಬರು ಅಪರಿಚಿತ ಪಾಲಕೀ ಹೊರುವ ಹುಡುಗರ ಜತೆಗೆ ಎದೆಯ ಮೇಲಿನ ಸೆರಗನ್ನು ಸೊಂಟಕ್ಕೆ ಬಿಗಿದು, ಕಾಲು ಮೇಲೆ ಕಾಲು ಹಾಕಿ, ಬಲಗೈಯಾಗ ಚಹಾದ ಗ್ಲಾಸ್ ಹಿಡಿದುಕೊಂಡು, ಎಡಗೈಲೇ ಬೀಡೀ ಸೇದಿಕೋತ ಕೂತ ತನ್ನ ಮೊಮ್ಮಗಳು ಸುಸಾನಳನ್ನ ನೋಡಿಯೂ ನೋಡದವರ ಹಾಂಗ, ಗುರಣ್ಣ ಖಿನ್ನನಾಗಿ ಇತ್ತಲಾಗ ಮಾರೀ ಮಾಡಿಕೊಂಡು ಬಂದುಬಿಟ್ಟ. ಪುಣ್ಯಾಕ್ಕ ಕೃಷ್ಟಕ್ಕ ಅತ್ತಲಾಗಿನ ಅಂಗಡಿಯೊಳಗ ಸುಬ್ಬಕ್ಕನ ಸಹಾಯದಿಂದ ಸುಸಾನಗ ಬಳೀ ಖರೀದಿಸಲಿಕ್ಕೆ ಹತ್ತಿದ್ದಳು! +ಮುಂದ ಬಸ್ಸಿನ್ಯಾಗ ಕೂತು ಮರಳಿ ಹೊರಟಾಗ ಯಾವದೋ ಮಾಯದಿಂದ ಸುಸಾನ ಎಲ್ಲರಕ್ಕಿಂತ ಮೊದಲs ಬಂದು ಕೂತಿದ್ದಳು. +ಆಮ್ಯಾಲಿನ ಕೇದಾರ ಯಾತ್ರಾದ್ದೊಂದು ಕಥೀನ. ಕೇದಾರ ಮುಗಿಸಿಕೊಂಡು ಬರೋ ತನಕ ಕೃಷ್ಟಕ್ಕ ಘಾಬರ್‍ಯಾಗಿ ಸುಂದ ಬಡದವರಹಂಗ ಕೂತುಬಿಟ್ಟಿದ್ದಳು. ಒಂದಿಷ್ಟು ಅಗಲ ಹಾದಿಯೊಳಗ, ಹತ್ತವರೂ, ಇಳಿಯವರೂ… ಇಳಿಯವರೂ ಹತ್ತವರೂ… ಈ ಏರುವ ಇಳಿಯುವ ಕಾರವಾನ್‌ಗಳ ನಡುವ ಉಂಟಾಗುವ ಟ್ರಾಫಿಕ್ ಜಾಮುಗಳು… ಇದ್ದಕ್ಕಿದ್ದ ಹಾಗೆ ಗುಡುಗಿ ಬಂದು ಎದೆ ನಡುಗಿಸುವ ಭೂಕುಸಿತಗಳು… ಘಡಘಡಘಡ ಸಪ್ಪಳ ಮಾಡುತ್ತ ಎಲ್ಲೋ ಕನಸಿನ ಆಳದಲ್ಲಿ ಜುಳುಜುಳು ಹರಿಯುತ್ತಿರುವ ಯಾವದೋ ನದಿಯ ಒಡಲಿಗೆ ಬೀಳುತ್ತಿದ್ದ ಬಂಡೆಗಳು… ಗುಡುಗು… ಮಳೆ. ಇದನ್ನೆಲ್ಲ ನೋಡಿ ಅಮೆರಿಕದ ಆ ಬಿಳೇ ಹುಡುಗಿ ಸುಸಾನ ‘ಗ್ರೇಟ… ರಿಯಲಿ ಗ್ರೇಟ… ಹೌ ಎಕ್ಸೈಟಿಂಗ್’ ಎಂದು ಕೈತಟ್ಟಿ ಕುಣೀತಿರಬೇಕಾರ, ಇತ್ತಲಾಗ ಕೃಷ್ಟಕ್ಕ ಘಾಬರ್‍ಯಾಗಿ ‘ನಾವು ಮಾಧ್ವರು ಕೇದಾರಕ್ಕ ಬರಬಾರದೂ ಅಂತಾರss… ಬಂದೇವೀ… ಅದಕ್ಕs ಹಿಂಗೆಲ್ಲ ಆಗಲಿಕ್ಕೆ ಹತ್ತೇದೋ ಏನೋ…’ ಎಂದುಕೊಂಡು ಮರುಕ್ಷಣ ಒಮ್ಮೆಲ್ಲೇ ಬೆಚ್ಚಿ ಬಿದ್ದು. ‘ಛೇ… ಛೇ… ರುದ್ರದೇವರು ಏನು ಅಂದುಕೊಂಡಾರು?’ ಎಂದು ಭಯಭೀತಳಾಗಿ ಗಲ್ಲಗಲ್ಲ ಬಡಕೊಂಡಳು. ಆಮ್ಯಾಲ ಸ್ವಲ್ಪ ಹೊತ್ತು ಬಿಟ್ಟು ಯಲ್ಲಾ ಶಾಂತ ಆಗಿ, ಇನ್ನೊಮ್ಮೆ ಛಂದನ್ನ ಬೆಳ್ಳೀ ಬಿಸಿಲು ಬಿದ್ದಾಗ, ಮತ್ತೆ ತನ್ನ ಬದುಕಿನ ಪಲ್ಲವಿ…‘ಥೀಮ ಸಾಂಗ‘… ‘ಮುಳಗುಂದ ಸಕೇಶಿ ಶಾಪ’ಕ್ಕೆ ಮರಳಿ ‘ಆದರೂ ದೇವರು ಧೊಡ್ಡಾಂವಾ’ ಎಂದು ನಿಟ್ಟುಸಿರುಬಿಡುವಳು. ಸುತ್ತಲಿನ ‘ಜೈ ಕೇದಾರನಾಥ‘ಗಳಿಗೆ ದನಿಗೊಡುವಳು. +ಅಂತೂ ಕೇದಾರದ ಆ ಭಯಾನಕತೆಯನ್ನು ದಾಟಿ ಯಾತ್ರೆಯ ಕೊನೆಯ ಘಟ್ಟ ಬದರಿಗೆ ಹೊರಟರು. ದೀರ್ಘ ಬಸ್ಸಿನ ಪ್ರಯಾಣ. ಶತಶತಮಾನಗಳಿಂದ ಅಸಂಖ್ಯ ಶ್ರದ್ಧಾಳುಗಳು ಯಾವದಕ್ಕೆ ಹಪಹಪಿಸುತ್ತಿರುತ್ತಾರೋ, ಆ ಬದರೀ ಯಾತ್ರೆಗೆ ಗುರಣ್ಣ ಇತ್ತಲಾಗ ಮಡೀ ಹೆಂಗಸು ಕೃಷ್ಟಕ್ಕನ್ನs ಅತ್ತಲಾಗ ತನ್ನ ಮೊಮ್ಮಗಳು ಬಿಳೀ ಹುಡುಗಿ ಸುಸಾನಳನ್ನ ಕರಕೊಂಡು, ಪಾವನಗಂಗೆಯಿಂದ ಇನ್ನಷ್ಟು ಪುನೀತವಾದ ಆ ದೇವ ಭೂಮಿಯಲ್ಲಿ, ನಾಲ್ಕಾರು ಬಿಸಲೇರಿ ನೀರಿನ ಬಾಟಲ್ಲುಗಳನ್ನು ಕೊಂಡು ಬಸ್ಸು ಏರಿದ. ಯಥಾಪ್ರಕಾರ ಸುಸಾನ ಅವನ ಬಾಜೂಕ ಕೂತಳು. ಹಿಂದಿನ ಸಾಲಿನ್ಯಾಗ ಕೃಷ್ಟಕ್ಕ, ಸುಬ್ಬಕ್ಕ ಮತ್ತು ಧಾರವಾಡ ಕಡಿಂದ ಬಂದ ಇನ್ನೂ ಕೆಲವು ಯಾತ್ರಿಗಳು ತೂಕಡಿಸಲಿಕ್ಕೆ ಹತ್ತಿದರು. ಪರ್ವತ ಪ್ರದೇಶದ ಎಳೆ ಬಿಸಿಲಿನ್ಯಾಗ ಬಸ್ಸು ಮ್ಯಾಲ ಮ್ಯಾಲ ಏರಲಿಕ್ಕೆ ಹತ್ತಿತು. ನಾಲ್ಕಾರು ದಿವಸ ಗಂಗೋತ್ರಿ ಯಮನೋತ್ರಿ, ಕೇದಾರ ಅನಕೋತ ಹತ್ತೀ ಇಳದೂ ಮಾಡಿದ ಶ್ರಮಕ್ಕೋ ಏನೋ ಇಡೀ ಬಸ್ಸಿಗೆ ಬಸ್ಸೇ ತೂಕಡಿಸಲಿಕ್ಕೇ ಹತ್ತಿತು. ನಾಭಿಯಿಂದ ಧ್ವನಿ ಹೊರಡಿಸುತ್ತ ಅತ್ಯಂತ ಕರ್ಕಶ ದನಿಯಲ್ಲಿ ಮಾತಾಡುತ್ತಿದ್ದ ಆ ಮುಂದಿನ ಸಾಲಿನ ಖಲ್ವಟ ಯಾತ್ರಿ ಗೊರಕೆ ಹೊಡೀಲಿಕ್ಕೆ ಹತ್ತಿದ್ದ. ಮುಂದ ಯಾವಾಗೋ ಎಚ್ಚರ ಆದಾಗ ಹಿಂದಿನ ಸಾಲಿನ ಸುಬ್ಬಕ್ಕ ಮಂದ್ರಗೊಗ್ಗರ ದನಿಯಲ್ಲಿ ‘ಅಂಟಿನ ಉಂಡಿಗೆ ಒಣಖೊಬ್ಬರಿ ಯಾವಾಗ ಹಾಕಬೇಕು… ಉತ್ತತ್ತಿ ಎಷ್ಟು ಸಣ್ಣಗ ಕತ್ತರಿಸಬೇಕು…. ಥಾಲೀ ಪೆಟ್ಟು ಹೊತ್ತಬಾರದಂದರ ಗ್ಯಾಸು ಎಷ್ಟು ಸಿಮ್‌ಕ್ಕ ಇಟ್ಟಿರಬೇಕು…’ ಇತ್ಯಾದಿ ಮಹತ್ವಪೂರ್ಣ ವಿಷಯಗಳ ಬಗ್ಗೆ, ವಿದ್ವತ್‌ಪೂರ್ಣವಾಗಿ ಪಕ್ಕದಲ್ಲಿದ್ದವಳಿಗೆ ವ್ಯಾಖ್ಯಾನ ಕೊಡಲಿಕ್ಕೆ ಹತ್ತಿದ್ದಳು. ಆ ಪಕ್ಕದವಳಿಗೆ ನಿದ್ದಿ ಹತ್ತಿತ್ತು! ಗುರಣ್ಣನೂ ನಿದ್ದೆಯ ಆಳಕ್ಕ ಇಳಿದ. ಮುಂದ ಯಾವದೋ ತಿರುವಿಗೆ ಟ್ರ್ಯಾಫಿಕ್ ಜಾಮು ಆದಾಗ ಅರ್ಧಂಬರ್ಧ ಎಚ್ಚರದಲ್ಲಿ ನೋಡಿದರ ಸುಸಾನ ಅವನ ಹೆಗಲ ಮೇಲೆ ತಲೆ ಇಟ್ಟು ಮಲಗಿತ್ತು. ಗುರಣ್ಣ ಮಗ್ಗಲು ಬದಲಿಸಿ ಮತ್ತೆ ಮೊಮ್ಮಗಳ ತಲೆಯನ್ನು ತನ್ನ ಹೆಗಲಲಿಗೆ ಇಟ್ಟು ಕೊಂಡೇ ನಿದ್ದೆಗಿಳಿದ. ಟ್ರಾಫಿಕ್ ಜಾಮಿನಿಂದ ದಾಟಿ ಬಂದ ಬಸ್ಸು ಮತ್ತೆ ಹಿಮಾಲಯ ಏರತೊಡಗಿತ್ತು. ಇನ್ನೆಷ್ಟೋ ಹೊತ್ತು ಕಳೆದು ಬಸ್ಸು ಯಾವಾಗಲೋ ಬಂದು ನದಿಯ ಮೇಲಿನ ಕಬ್ಬಿಣದ ಸೇತುವೆಯನ್ನು ಧಡಧಢ ಎಂದು ದಾಟುತ್ತಿದ್ದಾಗ ಗುರಣ್ಣಗ ಮತ್ತೆ ಎಚ್ಚರಾತು. +ಹಿಂದಿನ ಸಾಲಿನಲ್ಲಿ ಕೃಷ್ಟಕ್ಕ ತನ್ನ ಪಕ್ಕದವಳಿಗೆ, ‘ಇಷ್ಟೆಲ್ಲಾ ಆ ಸಕೇಶಿಯಿಂದ ಆತು ನೋಡರೆವಾ… ನಾ ಬಡಕೊಂಡೆ…’ ಎನ್ನುತ್ತ ನಲವತ್ತು ವರುಷಗಳ ಹಿಂದಿನ ಇತಿಹಾಸವನ್ನು ಪುನಃ ಪಠಿಸತೊಡಗಿದ್ದಳು. ಗುರಣ್ಣಗ ಈಗ ನಿದ್ದಿ ಪೂರಾ ಹಾರಿ ಹೋತು. ಕೃಷ್ಟಕ್ಕನ ರೆಕಾರ್ಡು ತಿರುಗತೊಡಗಿತ್ತು. ‘ನನಗ ಮಕ್ಕಳು ಆಗಲಿಲ್ಲರೆವಾ… ಪಾಪಿ ನಾನು… ಖರೇ ಅದs… ಆದರs ಆವಾಗಿನ ಕಾಲದ ಲೋಕಾರೂಢಿ ಪ್ರಕಾರ ಇನ್ನೊಂದು ಲಗ್ನ ಮಾಡಿಕೋಬೇಕಾಗಿತ್ತು… ಯಾರು ಬ್ಯಾಡಾ ಅಂತಿದ್ದರು… ಅದೆಲ್ಲ ಬಿಟ್ಟು ಅಡಿಗಿ ಮಾಡಿ ಹಾಕಲಿಕ್ಕೇ ಅಂತ ಬಂದ ಆ ಮುಳಗುಂದದ ಸಕೇಶಿ… ಆಕೀ ಸಂಗತೀನss… ಛೀ…‘ +ಕೃಷ್ಟಕ್ಕ ‘ಛೀ’ ಎನ್ನುವದಕ್ಕೂ ಬಸ್ಸು ‘ಠಸ್ಸ್’ ಎಂದು ಪಂಕ್ಚರ್ ಆಗುವದಕ್ಕೂ ಸರಿಹೋತು. ಡ್ರೈವರೂ ಕ್ಲೀನರೂ ಕೈಯಾಗ ಜಾಕು ಪಾನಾ ಇನ್ನೇನೇನೋ ಆಯುಧಗಳನ್ನು ಹಿಡಕೊಂಡು ಬಸ್ಸಿನಿಂದ ಕೆಳಗೆ ಜಿಗಿದರು. ಅಷ್ಟೊತ್ತಿಗೆ ಇಡೀ ಬಸ್ಸಿಗೇ ಪೂರ್ತಿ ಎಚ್ಚರಾತು. ಯಾತ್ರಿಗಳು ಇಳೀಲಿಕ್ಕೆ ಹತ್ತಿದರು. ಗುರಣ್ಣನೂ ಬ್ಯಾಸರದಿಂದ ಆಕಳಿಸುತ್ತ ಇಳಿದು, ತುಸು ದೂರ ಇಕ್ಕಟ್ಟಾದ ದಾರಿಯಲ್ಲಿ ಸಾಗಿ, ಎಡಗಡೆಗೆ ತಲೆ ಎತ್ತಿ ಪರ್ವತದ ತುದಿಯನ್ನೂ ಬಲಗಡೆ ದೂರ ದೂರ ಪಾತಾಳದ ಕೊರಕಲಿನಲ್ಲಿ ಸದ್ದಿಲ್ಲದೇ ಅಂಕು ಡೊಂಕಾಗಿ ಹರಿಯುವ ಯಾವದೋ ನೀಲೀ ನದಿಯನ್ನೂ ನೋಡುತ್ತ ಕ್ಷಣ ಹೊತ್ತು ನಿಂತ. ಆ ಮೇಲೆ ದಾರಿಯ ಪಕ್ಕದ ಒಂದು ಕಲ್ಲನ್ನು ಹೆಕ್ಕಿ ‘ಭರ್ರ್’ ಅಂತ ಬೀಸಿ ಕೊರಕಲ್ಲಿನಲ್ಲಿ ಬಗೆದ. ಅದು ಎರಡೇ ಹೆಜ್ಜೆ ಸಾಗಿ ಒಂದು ಕಂಟಿಗೆ ಸಿಕ್ಕಿಕೊಂಡಿದ್ದನ್ನು ನೋಡಿ ನಕ್ಕು ಬಸ್ಸು ಏರಿದ. ಬಸ್ಸಿನಲ್ಲಿ ನಾಭಿಕಂಠೀ ಖಲ್ವಟ, ಕರ್ಕಶದನಿಯಲ್ಲಿ ಪಕ್ಕದವನಿಗೆ ‘ಕಂಟ್ರಿ ವಿಲ್ ಗೋ ಟು ಡಾಗ್ಸ್’ ಎಂದು ಭವಿಷ್ಯ ಹೇಳುತ್ತಿದ್ದ. ಹಿಂದಿನ ಸಾಲಿನಲ್ಲಿ ಕೃಷ್ಟಕ್ಕನ ರೆಕಾರ್ಡು ಸುತ್ತುತ್ತಿತ್ತು. ‘ಮಂದಿಗೇನರೀ…. ನಾಲ್ಕು ದಿವಸ ಮಾತಾಡಿಕೊಂಡು ಸುಮ್ಮನಾದರು… ಆದರs ಇವರು ಆ ಸಕೇಶಿನ್ನss ಆಕಿಗೆ ಹುಟ್ಟಿದ ಆ ಮಗನ್ನ ತಂದು ಮನ್ಯಾಗ ಇಟಗೊಂಬೋದೇನು… ಅದಕ್ಕ ಅಚ್ಛಾ ಏನು…. ಅದನ್ನ ಬೆಳಸೋದೇನೂ……. ತಿರುಪತಿಗೆ ಹೋಗಿ ಅದರ ಮುಂಜಿವಿ ಮಾಡಿಕೊಂಡು ಬರೋದೇನೂ… ಅತೀ ನಡದು ಬಿಟ್ಟಿತ್ತು. ಕಡೀಕ ಆ ಹುಡುಗ ಬಿಂದ್ಯಾನ್ನs ಅಂದರ ಆ ಮುಳಗುಂದದ ಸಕೇಶಿಗೆ ಹುಟ್ಟಿದವನ್ನss ದತ್ತಕ ತೊಗೋತೇನೀ ಅಂದಾಗ ಮಾತ್ರ ನಾ ಅಗದೀ ತಲೀ ತಕ್ಕೊಂಡು ನಿಂತು… ‘ಸಾಧ್ಯssನs ಇಲ್ಲ… ಭಾಳಾದರs ಶಗಣೀ ತಿಂದ ತಪ್ಪಿಗೆ ಒಂದು ನಾಕೆಂಟಾಣೆ ಕೊಟ್ಟು ಹೊರಗ ಹಾಕಿ ಕೈ ತೊಳಕೋಳ್ರೀ… ಇಷ್ಟು ಆಸ್ತಿ ಪಾಸ್ತಿ ಅದs, ದತ್ತಕ ತೊಗೊಳ್ಳೋದs ಇದ್ದರ ನನ್ನ ತಂಗೀ ಮಗ ಗುರ್‍ಯಾನ್ನss… ಅಂದರ ಆ ಮುಂದಿನ ಸಾಲಿನ್ಯಾಗ ಆ ಬಿಳೇ ಹಲ್ಲೀ ಬಾಜೂಕ ಕೂತಾನಲ್ಲs……. ಅವನ್ನsss ತೊಗೊಳ್ಳಲಿಕ್ಕೆಬೇಕು ಅಂತ ಹಟ ಹಿಡಿದೆ…‘ +ಅಷ್ಟೊತ್ತಿಗೆ ಬಸ್ಸಿನ ಪಂಕ್ಚರು ರಿಪೇರಿ ಆಗಿತ್ತು. ಕ್ಲೀನರ ಬಸ್ಸಿನೊಳಗ ಬಂದು ‘ಚಲೋ… ಚಲೋ… ಜಲದೀ ಚಲೋ…’ ಎನ್ನುತ್ತ ಯಾತ್ರಿಕರನ್ನ ಎಣಿಸತೊಡಗಿದ. ಬಸ್ಸು ಮತ್ತೆ ಹೊರಟಿತು. ಮತ್ತೆ ಶಕೆ, ಧೂಳು, ನಿದ್ದೆ, ಬಿಸಲೇರಿ ಬಾಟಲ ನೀರು ಅನಕೋತ ಯಲ್ಲಾ ಸುಸೂತ್ರ ಸಾಗಿತ್ತು. ಮುಂದ ರುದ್ರಪ್ರಯಾಗದಾಗ ಮಾತ್ರ ಕೃಷ್ಟಕ್ಕ ಬಸ್ಸಿನ ಡ್ರೈವರನ ಸಂಗತೀ ಝಗಳಾನs ತಗದಳು. +ಒಂದು ಕಡೆಯಿಂದ ರಭಸದಿಂದ ಮುನ್ನುಗ್ಗಿ ಹರಿದು ಬಂದ ತಿಳಿನೀಲಿ ಅಲಕನಂದೆಯನ್ನು ‘ನಿಲ್ಲು ನಾನೂ ಬರುತ್ತೇನೆ’ ಎಂದು ಅಷ್ಟೇ ರಭಸದಿಂದ ಕೂಡಿಕೊಂಡ ಕಂದು ಬಣ್ಣದ ಮಂದಾಕಿನಿ… ಎರಡು ನದಿಗಳ ಪವಿತ್ರ ಸಂಗಮದ ಅದ್ಭುತರಮ್ಯ ರುದ್ರಪ್ರಯಾಗ. ಪ್ರಯಾಗವೇ ವಿಸ್ಮಯ; ಮುಂದಿನ ಪ್ರವಾಹ ಹೇಗೋ ಏನೋ? ನಾಲ್ಕಾರು ಜನ ಅಲ್ಲಲ್ಲಿ ನಿಂತು ಫೋಟೋ ತೆಗೆಯುತ್ತಿದ್ದರು. ವಿಪರೀತ ಗಾಳಿ, ಹನಿ ಹನಿ ಮಳೆ ಬಿಸಿಲು, ಪ್ರಕೃತಿಯ ಸ್ವಚ್ಛಂದವೇನೋ ಸರಿಯೇ; ಆದರ ಪಾಪ ಕೃಷ್ಟಕ್ಕ ಎಷ್ಟೇ ಒದ್ದಾಡಿದರೂ, ಯಾವ ಯಾವ ಮೂಲೆಯ ಯಾವ ಯಾವ ಕೋನದಿಂದ ಒಗೆದರೂ, ಅವಳು ನೀರಿಗೆ ಎಸೆದ ಎಂಟಾಣಿ ಪ್ರಯಾಗದ ಪವಿತ್ರ ನೀರಿನಲ್ಲಿ ಬೀಳದೇ, ಗಾಳಿಗೆ ಹಾರಿ ಯಾವದೋ ಕಲ್ಲಿಗೋ ಕಂಟಿಗೋ ತಾಗಿ ಎಲ್ಲೆಲ್ಲೋ ಬಿದ್ದುಬಿಡುತ್ತಿತ್ತು. ಅವಳ ನಾಲ್ಕಾರು ಎಂಟಾಣಿಗಳು ಈ ರೀತಿ ವ್ಯರ್ಥವಾಗಿ, ಅವಳ ಪುಣ್ಯ ಸಂಚಯಕ್ಕೆ ಚ್ಯುತಿ ಬಂದು, ಸಿಟ್ಟಿಗೆದ್ದ ಕೃಷ್ಟಕ್ಕ ಡ್ರಾಯಿವರಗ ‘ಯಾಕೋ ರಂಡೇಗಂಡ… ಬಸ್ಸು ಇಷ್ಟು ದೂರ ನಿಂದರಿಸಿದರ ಹ್ಯಾಂಗ? ಅಲ್ಲೇ ಸಮೀಪದಾಗ ನಿಂದರಿಸಿದ್ದರ ನಿನಗೇನು ಧಾಡಿ ಆಗತ್ತಿತ್ತು…. ಇಲ್ಲಿಂದ ನಾವು ನದೀ ಪೂಜಿ ಮಾಡೋದು ಹ್ಯಾಂಗ?’ ಎಂದು ಝಾಡಸಲಿಕ್ಕೆ ಹತ್ತಿದಳು. ಡ್ರಾಯಿವರ ಮಾರೀ ತಿರುವದs ಚುಟ್ಟಾ ಸೇದಿಕೋತ ಕೂತುಬಿಟ್ಟ, ಅವಗ ಕನ್ನಡ ಬರತಿದ್ದಿಲ್ಲ! ಮುಂದ ಜೋಶೀ ಮಠದಾಗ ಎಲ್ಲರೂ ಊಟಾ ಮಾಡೋ ಮುಂದ ರುದ್ರ ಪ್ರಯಾಗದ ಸಿಟ್ಟಿನಿಂದ ಇನ್ನೂ ದುಮು ದುಮು ಉರಿಯುತ್ತಿದ್ದ ಕೃಷ್ಟಕ್ಕ, ದೂರ ಒಂದು ಗಿಡದ ಬುಡಕ ಕೂತು ತನ್ನ ಗಂಟು ಬಿಚ್ಚಿ ಅವಲಕ್ಕಿ ಮುಕ್ಕಿ ನೀರು ಕುಡಿದಳು! +ಬಸ್ಸು ಜೋಶಿಮಠ ಬಿಟ್ಟು ಮತ್ತೆ ಗೋವಿಂದ ಘಾಟ, ಪಾಂಡುಕೇಶ್ವರ ಅನಕೋತ ಬಿಸಿಲಿಗೆ ತೇಕಲಿಕ್ಕೆ ಹತ್ತಿತು. ಬಸ್ಸಿನೊಳಗೆ ಮತ್ತೆ ಶಕೆ, ಧೂಳು, ಕೃಷ್ಟಕ್ಕನ ರೆಕಾರ್ಡು ‘ಆ ಮುಳಗುಂದದ ಸಕೇಶಿಗೆ ಮತ್ತ ಆಕಿ ಮಗ ಬಿಂದ್ಯಾಗ, ಯಾವಾಗ ಇನ್ನ ತಮ್ಮ ಬ್ಯಾಳಿ ಬೇಯೂದಿಲ್ಲ ಅಂತ ಗೊತ್ತಾತೋ ಆವಾಗ ಸುರೂ ಮಾಡಿದರು ನೋಡವಾ… ತುಡುಗೂ… ಕಳವೂ… ಸಾಮಾನು ಮುಚ್ಚಿಟ್ಟುಕೊಳ್ಳುವದೂ… ಇವತ್ತ ಬಂಗಾರದ ಬೋರಮಾಳಾ ಹೋತೂ… ನಾಳೆ ಬಚ್ಚಲದಾಗ ತಗದಿಟ್ಟದ್ದು ಉಂಗುರ ಕಳೀತು…… ಇನ್ನೊಮ್ಮೆ ನಲವತ್ತು ತೊಲೀದು ದೊಡ್ಡ ಬೆಳ್ಳೀ ತಾಟು ಮಾಯ ಆತು… ಅನಕೋತ ಸಣ್ಣಾಗಿ ತಾಯಿ ಮಗ ಕೂಡಿ ಮನೀ ತೊಳೀಲಿಕ್ಕೆ ಹತ್ತಿದರು. ಒಂದು ದಿವ್ಸ ಆ ಸಕೇಶಿ ಮಗಾ ಬಿಂದ್ಯಾ ಇವರ ಪಾಕೀಟಿನ್ಯಾಗ ಕೈ ಹಾಕಿ ರೊಕ್ಕ ಕದಿಯೋ ಮುಂದ ಸಿಕ್ಕ ಬಿತ್ತು… ಇವರೂ ಸಿಟ್ಟಿಗೆದ್ದು ಎರಡು ತಪರಾಕಿ ಕೊಟ್ಟರ ಅದು ಚಾಕೂನs ತಗೀತರೆವ್ವ… ಹದಿನಾರು ವರುಷದ ದಾಂಡಿಗ್ಯಾ ಹುಡುಗ… ಅದರ ಇದರಿಗೆ ಇವರೆಲ್ಲಿ ಹತ್ತಬೇಕು… ಮುಂದ ಎಂಟು ದಿವ್ಸ ಆಸ್ಪತ್ರಿಯೊಳಗ ನೆಳ್ಳಿ ನೆಳ್ಳಿ ಹೋದರವಾ….’ ಎನ್ನುತ್ತ ಕಣ್ಣೊರೆಸಿಕೊಂಡಳು ಕೃಷ್ಟಕ್ಕ. +ಗುರಣ್ಣಗ ಅದs ಅದs ಹಳೇ ರೆಕಾರ್ಡು ಕೇಳಿ ಕೇಳಿ ಮನಸ್ಸು ರೋಸಿ ಹೋಗಿತ್ತು. ಒಮ್ಮೊಮ್ಮೆ ‘ತಾ ಯಾಕ ಈ ರಾಡಿಯೊಳಗ ಬಿದ್ದು ಒದ್ದಾಡಬೇಕಾಗಿತ್ತು…. ಹತ್ತು ವರುಷದಾವಿದ್ದಾಗ ದತ್ತಕ ಆತು… ಆವಾಗ ತಾ ಸಣ್ಣಾವಿದ್ದೆ…. ತಿಳೀತಿದ್ದಿಲ್ಲಾ… ಯಲ್ಲಾ ಖರೇ ಅದ… ಆದರ ಧೊಡ್ಡಾಂವಾದಿಂದರs ಝಾಡಿಸಿಕೊಂಡು ಇತ್ತಲಾಗ ಬರಲಿಕ್ಕೆ ಏನಾಗಿತ್ತು?’ ಎಂಬ ಕೀಳರಿಮೆ ಗುರಣ್ಣನ್ನ ಕಾಡತೊಡಗುತ್ತದೆ. ಈಗೀಗ ಈ ಹಳೇ ರೆಕಾರ್ಡು, ಈ ಕೀಳರಿಮೆಯ ಕಾಟ ಯಲ್ಲಾ ರೂಢಾ ಆಗಿ ಅವಗ ದಡ್ಡ ಬಿದ್ಧಂಗ ಆಗೇದ. +ಬದರಿಯೊಳಗ ಹೊಗೆ ಬಡಿದು ಕಪ್ಪಾದ ವಿಶಾಲ ಪೌಳಿಯ ತಮ್ಮವರ ಮಠ ಹುಡುಕಿಕೊಂಡು, ‘ನಾಳೆ ಪಿಂಡ ಪ್ರದಾನದ ವ್ಯವಸ್ಥಾ ಆದೀತೇನು?’ ಅಂದರ ಮಠದವರು ‘ನೀವು ಯಾರು?… ಎಲ್ಲಿಯವರು?… ಯಾವ ಮಠದವರು?… ಗುರುತಿನ ಚೀಟಿ ಏನಾದರೂ ಅದsನೋ ಹೆಂಗ?’ ಎಂದೆಲ್ಲ ಕೇಳಿ ಐನೂರು ರೂಪಾಯಿ ಇಸಕೊಂಡು, ‘ನಾಳೆ ಬೆಳಿಗ್ಗೆ ಬ್ರಹ್ಮಕಪಾಲದ ಹತ್ತರ ವಾದಿರಾಜಾಚಾರ್ ಅಂತ ಇರತಾರ, ಅವರನ್ನ ಭೆಟ್ಟಿಯಾಗರೀ ಅಂದರ ಯಲ್ಲಾ ವ್ಯವಸ್ಥಾ ಆಗತsದ’ ಅಂದರು. ಗುರಣ್ಣಗ ನಗೆ ಬಂತು. ಐನೂರು ರೂಪಾಯಿ ಕೊಟ್ಟರ ಯಲ್ಲಿ ಬೇಕಲ್ಲಿ ಯಾರು ಬೇಕು ಅವರ ಶ್ರಾದ್ಧ ಮಾಡಬಹುದು ಅಂತಹದು ಅದಕ್ಕೂ ಇಷ್ಟು ಖಾನೇಸುಮಾರೀ ಮಾಡತಾರಲ್ಲ ಎಂದು ವಿಸ್ಮಿತನಾಗುತ್ತ ಈಚೆಗೆ ಬಂದ. +ತಾವು ಇಳಕೊಂಡ ಖೋಲಿಗೆ ಬಂದರ ಯಥಾಪ್ರಕಾರ ಮೊಮ್ಮಗಳು ಸುಸಾನ ಎಲ್ಲೋ ಹೋಗಿದ್ದಳು. ಸರಿ ಕೃಷ್ಟಕ್ಕನ್ನ ಕರಕೊಂಡು ಸಂಜೆಯ ಆರತಿಗೆ ಬದರಿ ನಾರಾಯಣನ ದರ್ಶನಕ್ಕೆ ಹೊರಟರ ಅದೊಂದು ಕಥೀನs. ದಾರಿಯನ್ನು ಏರಿ ಇಳಿದು ಎರಡೂ ಬದಿಗಳಲ್ಲಿ ನೂರಾರು ಝಗಮಗಿಸುವ ಅಂಗಡಿಗಳ ಮಧ್ಯದ ಜನಸಾಗರವನ್ನು ಅಕ್ಷರಶಃ ಈಜಿಕೊಂಡು ಈಚೆಗೆ ಬರಬೇಕು. ಸ್ಫಟಿಕದ, ಹವಳದ, ಗೋಮೇಧಕಗಳ, ರುದ್ರಾಕ್ಷಿಯ ಮಾಲೆಯ ಅಂಗಡಿಗಳು… ಬದರೀ, ಕೇದಾರ, ಗಂಗೋತ್ರಿ, ಹರಿದ್ವಾರ ಇತ್ಯಾದಿ ಪುಣ್ಯ ಕ್ಷೇತ್ರಗಳ ಗಾಜು ಕೂಡಿಸಿದ, ಲ್ಯಾಮಿನೇಟ ಮಾಡಿಸಿದ, ವಿವಿಧ ಆಕಾರದ ಫೋಟೋಗಳು… ಸೀಲು ಮಾಡಿ ತುಂಬಿಸಿ ಇಟ್ಟ ಸಣ್ಣ ದೊಡ್ಡ ಗಂಗೋದಕದ ಬಿಂದಿಗೆಗಳು… ಕೆಂಪು ಹಸಿರಿನ ಉಣ್ಣೆಯ ತಲೆಟೋಪಿ ಶಾಲು ಸ್ವೆಟರುಗಳು… ಕುದಿಕುದಿದು ಉಕ್ಕುತ್ತಿರುವ ದೊಡ್ಡ ದೊಡ್ಡ ಮಲಾಯಿ ಹಾಲಿನ ಕಡಾಯಿಗಳು… ರೊಟ್ಟಿ ಸುಡುತ್ತಿರುವ ಧಾಬಾಗಳು, ಇವನ್ನೆಲ್ಲ ದಾಟಿ, ಆಚೆಯಿಂದ ನುಗ್ಗಿ ಬರುತ್ತಿರುವ ಹಿಂಡು ಹಿಂಡು ಜನರನ್ನು ತಳ್ಳಿಕೊಂಡು, ದುಗಿಸಿ, ಸರಿಸಿ, ನುಗ್ಗಿ, ನೂಕಿ, ಮಧ್ಯದ ಅಲಕನಂದಾ ನದಿಯ ಸೇತುವೆಯ ಮೇಲೆ ಕೃಷ್ಟಕ್ಕನ ಕೈ ಹಿಡಿದು ಅಕ್ಷರಶಃ ದರದರ ಎಳಕೊಂಡು, ಕಣ್ಣು ಕೋರೈಸುತ್ತ ಝಗ್ಗೆಂದು ಬೆಳಗುತ್ತಿರುವ ಬದರೀ ನಾರಾಯಣನ ಮಂದಿರದ ಮೆಟ್ಟಿಲಿಗೆ ಬಂದ. +ಕೃಷ್ಟಕ್ಕ ಒಮ್ಮೆಲೇ ಗುರಣ್ಣನ ಕೈ ಬಿಡಿಸಿಕೊಂಡು ತನ್ನ ಎರಡೂ ಕೈ ಮೇಲೆತ್ತಿ ತಲೆಯ ಮೇಲೆ ಜೋಡಿಸಿ ಹಿಡಿದು ಭಾವ ವಿವಶಳಾಗಿ ‘ನಾರಾಯಣಾ… ನಾರಾಯಣಾ… ಬದರೀನಾರಾಯಣಾ… ಅಂತೂ ಕರೆಸಿಕೊಂಡೆಪ್ಪss… ಸಾಯೋದರಾಗ ಒಮ್ಮೆ ಕರೆಸಿಕೊಂಡೆಪ್ಪ… ನಾರಾಯಣಾ… ಬದರೀನಾಥಾ ನನ್ನ ಖೋಡಿ ಜನ್ಮ ಸಾರ್ಥಕ ಆತಪ್ಪಾ…’ ಎನ್ನುತ್ತ ಪಾವಟಣಿಗೆಗಳ ಮ್ಯಾಲ ಬಿದ್ದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಗುರಣ್ಣನೂ ಸಾಕಷ್ಟು ಭಾವೋದ್ವಿಗ್ನನಾಗಿದ್ದ. ಆ ಮೇಲೆ ಕೃಷ್ಟಕ್ಕ ಗುರಣ್ಣನ ಬೆನ್ನ ಮ್ಯಾಲ ಕೈ ಹಾಕಿ ‘ಅಂತೂ ಇಷ್ಟು ಮಾಡಿಸಿದೆಪ್ಪ… ದತ್ತಕ ತೊಗೊಂಡದ್ದು ಸಾರ್ಥಕ ಆತಪಾ… ನಾಳೆ ಅವರದಷ್ಟು ಶ್ರಾದ್ಧ ಮಾಡಿ ಬಿಡಪ್ಪ…’ ಎನ್ನುತ್ತ ಎಷ್ಟೋ ಹೊತ್ತು ಮೆಟ್ಟಿಲಿಗೆ ತಲೆ ಇಟ್ಟು, ಬದರೀ ನಾರಾಯಣನ ಜತೆ ಏನೇನೋ ಮೂಕ ಸಂಭಾಷಣೆ ನಡೆಸಿದಳು. ಆ ಮ್ಯಾಲೆ ಇಬ್ಬರೂ ಮೆಟ್ಟಲೇರಿ ಎಡಕ್ಕೆ ಹೊಳ್ಳಿ, ಬಲಕ್ಕೆ ತಿರುಗಿ ಪೂರ್ವಕ್ಕೂ ಪಶ್ಚಿಮಕ್ಕೂ ತಿರುಗುತ್ತ, ದರ್ಶನಕ್ಕಾಗಿ ಮೈಲುಗಟ್ಟಲೆ ನಿಂತ ‘ಕ್ಯೂ’ದ ಬಾಲ ಸೇರಿ, ಇಂಚಿಂಚು ಮುಂದೆ ಮುಂದೆ ಸರಿಯುತ್ತ ಬದರೀ ವಿಶಾಲನ ದರ್ಶನ ತಕ್ಕೊಂಡು ಈಚೆಗೆ ಬರಲಿಕ್ಕೆ ಎರಡು ಗಂಟೆಯೇ ಹಿಡಿಯಿತು. ಗರ್ಭಗುಡಿಯ ಮುಂದೆ ಕೈ ಮುಗಿದು ಕಣ್ಣು ಮುಚ್ಚಿ ಜಪ್ಪೆಂದರೂ ಈಚೆಗೆ ಬಾರದೇ ಇದ್ದ ಕೃಷ್ಟಕ್ಕನ್ನ, ಕಡೀಕ ಅಲ್ಲಿಯ ಸ್ವಯಂಸೇವಕರು, ರಟ್ಟೆ ಹಿಡಿದು ಎಳೆದು ಈಚೆಗೆ ಕಳಿಸಬೇಕಾಯಿತು. +ತಿರುಗಿ ಬರಬೇಕಾದರ ಕೃಷ್ಟಕ್ಕ, ‘ಸುಡಲಿ, ಈ ನಿನ್ನ ಅಮೆರಿಕಾದ ಬಿಳೇ ಹಲ್ಲಿ, ಏನು ಕರ್ಮನೋ ಏನೋ ನಮ್ಮ ವಂಶದಾಗ ಹುಟ್ಟೇದ… ಒಂದಿಷ್ಟು ಕೈ ಕಾಲು ತೊಳಕೊಂಡು ಬಂದು ದರ್ಶನಾ ತೊಗೊಬಾರದಿತ್ತss ಅರಿಷ್ಟ ಖೋಡಿ’ ಅಂತ ಒಟ ಒಟ ಒಟ ಅನಕೋತ ಬರತಿರಬೇಕಾದರ, ದಾರಿಯೊಳಗ ಯಾವದೋ ಬಂದು ಧಾಬಾದ ಹತ್ತಿರ ಸುಸಾನ ಕೆಂಪದೊಂದು ಅರ್ಧಚಣ್ಣ ಹಾಕ್ಕೊಂಡು, ನಾಲ್ಕಾರು ಪಂಡಾಗಳು, ಒಂದಿಬ್ಬರು ತಲೆ ಬೋಳಿಸಿಕೊಂಡ ಅಮೆರಿಕನ್ ಇಸ್ಕಾನ್‌ದವರ ಜತೆ, ‘ಜೈ ಜಗದೀಶ ಹರೇ… ಸ್ವಾಮಿ ಜೈ ಜಗದೀಶ ಹರೇ’ ಎಂದು ಉನ್ಮತ್ತಳಾಗಿ ಕುಣೀಲಿಕ್ಕೆ ಹತ್ತಿದ್ದಳು. ಈ ಕುಣಿಯುವವರ ಸುತ್ತ ಒಂದು ಸಣ್ಣ ಗುಂಪು ಸೇರಿ ಈ ಬಿಳೇ ಹುಡುಗಿಯ ಕುಣಿತ ಮಣಿತಗಳನ್ನು ಆಸ್ವಾದಿಸಲಿಕ್ಕೆ ಹತ್ತಿತ್ತು. ಗುರಣ್ಣ ಹೇಸಿ ಈಚೆಗೆ ಬಂದ. ಪುಣ್ಯಕ್ಕ ಕೃಷ್ಟಕ್ಕಗ ಇದ್ಯಾವದೂ ಕಂಡಿರಲಿಲ್ಲ. +ಅವತ್ತ ರಾತ್ರಿ ಸುಸಾನ ಕುಣದು ಕುಣದು ಕಾಲು ಉಳುಕಿಸಿಕೊಂಡು, ಸಾಕಷ್ಟು ತಡವಾಗಿ ಬಂದು ನರಳುತ್ತ ಹಾಸಿಗೆಯಲ್ಲಿ ಬಿದ್ದುಕೊಂಡಳು. ನಿದ್ದೆ ಕೆಟ್ಟ ಕೃಷ್ಟಕ್ಕ ಗುರಣ್ಣಗ ‘ಏನಾಗೇದಂತ ಕೇಳೋ’ ಅಂದಳು. ಗುರಣ್ಣ ಕವಕ್ಕನs ‘ಹಾಳಾಗಿ ಹೋಗು ಅನ್ನು ಅದಕ್ಕ’ ಎಂದು ಸಿಟ್ಟಿನಿಂದ ಅರಚಿ ಮುಸುಕೆಳೆದು ಮಲಗಿಬಿಟ್ಟ. ಆದರೆ ಅವ ಎಳೆದ ಮುಸುಕು, ಅವನ ಅಂತರಂಗದ ತುಮುಲವನ್ನು ಮುಚ್ಚಿಹಾಕಲಿಕ್ಕೆ ಅಸಮರ್ಥವಾಗಿತ್ತು. +ಹತ್ತು ವರುಷದಷ್ಟೊತ್ತಿಗೇ ಅನಾಥನಾದ ತನ್ನ ದತ್ತಕ… ತನ್ನ ಮ್ಯಾಲಿನ, ತನ್ನ ಇಡೀ ವ್ಯಕ್ತಿತ್ವದ ಮ್ಯಾಲಿನ ಕೃಷ್ಟಕ್ಕನ ಉಡದ ಹಿಡಿತ… ತನ್ನ ಒಬ್ಬನೇ ಮಗ ಪ್ರತಿಭಾವಂತ… ಅಮೆರಿಕೆಯಲ್ಲಿ ಒಬ್ಬ ಬಿಳಿಯಳನ್ನು ಮದುವೆಯಾಗಿ ಮನೆಯಿಂದ ದೂರವಾದದ್ದು… ಪ್ರತಿ ವರುಷಕ್ಕೆಂಬಂತೆ ತಮ್ಮೊಡನೆ ಕೆಲದಿನ ಕಳೆಯಲು ಭಾರತಕ್ಕೆ ಬರುತ್ತಿದ್ದ ಮಗನ ಒಬ್ಬಳೇ ಮಗಳು ಸುಸಾನ… ಎರಡು ವರುಷದ ಹಿಂದೆ ಮಗನ ಚಿಂತೆಯಲ್ಲಿ ಕೊರಗಿ ಕೊರಗಿ ತೀರಿ ಹೋದ ತನ್ನ ಹೆಂಡತಿ… ಅವಳ ಕರ್ಮಗಳಿಗೂ ಬಾರದ ಮಗ… ಈ ಗಂಟುಗಂಟಾದ ವಂಶಾವಳಿಯ ಯೋಚನೆಯೇ ಗುರಣ್ಣನನ್ನು ಸಾಕಷ್ಟು ಗಾಸಿಗೊಳಿಸುತ್ತದೆ… ಅದರ ಮ್ಯಾಲ ಇವತ್ತಿನ ಈ ಸುಸಾನ… ಯಲ್ಲಾರೂ ಬಿಟ್ಟರೂ ಇದೊಂದು ಯಾಕ ಇಷ್ಟೊಂದು ಹಚ್ಚಿಕೊಂಡು ಬರತsದೋ ಮುಂಡೇದ್ದು… ಎನ್ನುತ್ತ ಗುರಣ್ಣ ಮಗ್ಗಲು ಬದಲಿಸಿದ. +ಸ್ವಲ್ಪ ಹೊತ್ತು ಸುಸಾನಳ ನರಳುವಿಕೆಯನ್ನು ಕೇಳಿ ಕೃಷ್ಟಕ್ಕ ಹಾಸಿಗೆ ಬಿಟ್ಟು ಮೇಲೆದ್ದು ದೀಪ ಹಾಕಿ, ‘ಏನು ಮಾಡಿಕೊಂಡು ಬಂದೀಯ ನಿನ್ನ ಸುಡ್ಲೀ…’ ಎನ್ನುತ್ತ ಅವಳ ಉಳುಕಿದ ಕಾಲನ್ನು ನೋಡಿ, ತನ್ನ ಚೀಲದಿಂದ ಯಾತ್ರೆಯ ಎಮರ್ಜೆನ್ಸಿಗೆಂದು ತಂದ ಗಂಟಿನಿಂದ ಒಂದಿಷ್ಟು ಅಂಬೀ ಹಳದೀ ರಕ್ತಬಾಳದ ಬೇರು ತೆಗೆದು ಬಚ್ಚಲದಾಗ ಅದನ್ನು ತೇಯ್ದು, ಆ ಮಿಶ್ರಣವನ್ನು ಸುಸಾನಳ ಉಳುಕಿದ ಕಾಲಿಗೆ ಮೆಲ್ಲನೇ ನೀವುತ್ತ ‘ನಿನಗ ಯಾರೂ ಹೇಳವರ ಕೇಳವರು ಇಲ್ಲಂತ ತಿಳದೀ ಏನು?… ಗಂಡ ರಾಮೀ ಹಾಂಗ ಏನು ಕುಣೀತೀದೀ… ಜಿಗೀತೀದಿ… ನೀ ಒಂದು ಹೆಣ್ಣು ಅಂಬೋದರs ನಿನಗ ಗೊತ್ತ ಅದ ಏನು?… ಪುಣ್ಯಾತ್ಮಗಿತ್ತಿ ನಿನ್ನ ಅಜ್ಜಿ, ಗುರಣ್ಣನ ಹೆಂಡತಿ ಮೊದಲs ಸತ್ತು ಪುಣ್ಯಾಕಟ್ಟಿಕೊಂಡಳು, ಇದನ್ನೆಲ್ಲ ನೋಡಲಿಲ್ಲ… ಗಂಡಸರ ಹಂಗ ಅದೇನು ಚಣ್ಣ ಹಾಕ್ಕೊಂಡು ಕುಂಡೀ ಬಿಟಗೊಂಡು ಚುಟ್ಟಾ ಸೇದಿಕೋತ ಅಡ್ಡ್ಯಾಡತೀದೀ… ಎಲ್ಲೆ ಉಣತೀ… ಎಲ್ಲೆ ತಿನ್ನತೀ… ನಿನ್ನ ಸುಡ್ಲಿ ನಿನಗೆ ನಾಚಿಗೆ ಮರ್ಯಾದಿ ಅಂಬೋದು ಏನೂ ಇಲ್ಲೇನು?’ ಎಂದು ಸ್ವಲ್ಪ ಹೊತ್ತು ಬಿಟ್ಟು, ‘ಈಗ ಸ್ವಲ್ಪ ಆರಾಮ ಅನಸತದೋ ಇಲ್ಲೋ?… ಏನಾರs ಚೂರು ತಿಂದು ಮಲಕೋ’ ಎಂದು ತನ್ನ ಗಂಟಿನಿಂದ ಒಂದು ಹಿತ್ತಾಳೀ ಡಬ್ಬೀ ತಗದು ಎರಡು ಅಂಟಿನ ಉಂಡಿ ಕೊಟ್ಟು, ಸುಸಾನ ಅವನ್ನ ತಿಂದ ಮೇಲೆ, ‘ಹಂ… ಇನ್ನ ನಿನ್ನ ಆ ಸುಡಗಾಡ ಬಾಟ್ಲೀ ನೀರು ಕುಡದು ಬೀಳು’ ಎನ್ನುತ್ತ ತನ್ನ ಹಾಸಿಗೆಗೆ ಬಂದಳು. +ಮರುದಿವಸ ಮುಂಜಾನೆ ಗುರಣ್ಣ ಗಿಜಿಗುಟ್ಟುವ ಬ್ರಹ್ಮಕುಂಡದಾಗ ನೂರಾರು ಶ್ರದ್ಧಾಳುಗಳ ಜತೆಗೆ ತಾನೂ ಸ್ನಾನಕ್ಕೆ ಇಳಿದ. ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವ ಅಲಕನಂದಾ ನದಿಯ ವಿಶಾಲ ಮೆಟ್ಟಲುಗಳ ಮೇಲೆ ಪಂಡಾಗಳು ಆಗಳೇ ಮಂತ್ರೋಚ್ಚಾರಣೆಗೆ ತೊಡಗಿದ್ದರು. ಗುರಣ್ಣ ಮಠದ ವಾದಿರಾಜಾಚಾರ್‍ಯರನ್ನು ಹುಡುಕಿ ತೆಗೆದು, ಅವರ ನಿರ್ದೇಶನದಲ್ಲಿ ಇನ್ನೂ ನಾಲ್ಕಾರು ಜನರ ಜತೆಗೆ ಪಿಂಡ ಪ್ರದಾನಕ್ಕೆ ಕುಳಿತ. ಹಿಂದೆ ತುಸು ದೂರದಲ್ಲಿ ಕೃಷ್ಟಕ್ಕ ಗುರಣ್ಣನ ಪ್ಯಾಂಟು ಶರಟು ಸ್ವೆಟರು ಚೀಲ ಹಿಡಕೊಂಡು ಚಪ್ಪಲೀ ಕಾಯುತ್ತ ಕುಳಿತಿದ್ದಳು. ಅವತ್ತ ಕೃಷ್ಟಕ್ಕಗ ತೃಪ್ತಿ ಆಗಿತ್ತು. ಮನಸ್ಸು ತುಂಬಿ ಬಂದಿತ್ತು. ಬದರೀ ಪುಣ್ಯಕ್ಷೇತ್ರದಲ್ಲಿ ತನ್ನ ಗಂಡನ ಶ್ರಾದ್ಧ ಕರ್ಮಾದಿಗಳು ನಡೆದದ್ದನ್ನ ನೋಡತಾ ನೋಡತಾ ಒಂದು ಧನ್ಯತಾ ಭಾವವನ್ನು ಅನುಭವಿಸತೊಡಗಿದ್ದಳು. ಇತ್ತ ಎಷ್ಟು ಬ್ಯಾಡಂದರೂ ಕೇಳದs ಸುಸಾನ ಅಂಬೀ ಹಳದೀ ರಕ್ತಬಾಳದ ಕೆಂಪು ಹಳದೀ ಪಟ್ಟೀ ಕಾಲಿಗೆ ಕಟ್ಟಿಗೊಂಡು ಕುಂಟುತ್ತ ಕುಂಟುತ್ತ ಬಂದು ‘ಗ್ರ್ಯಾಂಪಾ ವಾಟ ಇಸ್ ಧಿಸ್…. ವಾಟ ಇಸ್ ದ್ಯಾಟ….’ ಅಂತ ಕೇಳಿಕೋತ ‘ಛಕಾ ಛಕ್’ ಅಂತ ಕೆಮರಾದಿಂದ ಫೋಟೋ ತೆಗೀಲಿಕ್ಕೆ ಹತ್ತಿದ್ದಳು. +ಗುರಣ್ಣ ಗಳಿಗೆಗೊಮ್ಮೆ ಗಾಳಿಗೆ ಹಾರುತ್ತಿದ್ದ ಮೈ ಮೇಲಿನ ಶಲ್ಲೆ ಸರಿಪಡಿಸಿಕೊಳ್ಳುತ್ತ, ತೀರಿ ಹೋದ ತನ್ನ ಮನೆಯ ಹಾಗೂ ದತ್ತಕ ಮನೆಯ ವಂಶಸ್ಥರಿಗೆಲ್ಲ ತರ್ಪಣ ಕೊಡಲಿಕ್ಕೆ ಹತ್ತಿದ್ದ. ಎರಡು ವರುಷದ ಹಿಂದೆ ತನ್ನನ್ನು ಬಿಟ್ಟು ಹೋದ ಹೆಂಡತಿಯ ಹೆಸರು ಹೇಳಿ ತರ್ಪಣ ಕೊಡುವಾಗ ಕೊರಳು ಬಿಗಿದು ಬಂದಂತಾಗಿ ಗುರಣ್ಣ ಬಿಕ್ಕಿದ. ಎದುರಿಗೆ ಸಾಲೀ ಹುಡುಗರಿಗೆ ಡ್ರಿಲ್ ಮಾಡಿಸುವವರಂತೆ ವಾದಿರಾಜಾಚಾರು ಹಿಂದೆ ಕೈ ಕಟ್ಟಿಕೊಂಡು ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡುತ್ತ, ‘ತಂದೀ……. ತಂದೀ ತಂದೀ ಅವರ ತಂದಿ…… ತಾಯೀ…… ಅಜ್ಜೀ…… ಮುತ್ತಜ್ಜೀ…… ಅತ್ತೀ…… ಮಾವ…… ಚಿಕ್ಕಪ್ಪ…… ದೊಡ್ಡಪ್ಪ…… ಚಿಕ್ಕವ್ವ…… ದೊಡ್ಡವ್ವ’ ಎನ್ನುತ್ತ ತೀರಿಹೋದವರ ಒಂದೊಂದು ಪಿಂಡಕ್ಕೂ ಎಳ್ಳುನೀರು ಬಿಡಲಿಕ್ಕೆ ಹೇಳಲಿಕ್ಕೆ ಹತ್ತಿದ್ದರು. ಆವಾಗ ಏನನ್ನೋ ನೆನೆಸಿಕೊಂಡ ಕೃಷ್ಟಕ್ಕ ಗುರಣ್ಣನಿಗೆ ಏನೋ ಹೇಳಲೆಂದು ಮುಂದೆ ಬಂದಳು. ಬಂದವಳು ವಾದಿರಾಜಾಚಾರ ಮುಖನೋಡಿ ‘ಗಕ್ಕ’ಂತ ನಿಂತು ಬಿಟ್ಟಳು! ಆ ಮೇಲೆ ಸಾವರಿಸಿಕೊಂಡು ಹಿಂದೆ ನಡೆದಳು. ಮತ್ತೆ ಕ್ಷಣ ಬಿಟ್ಟು ಏನೇನೋ ಯೋಚಿಸುತ್ತ, ಅನುಮಾನಿಸುತ್ತ ಮತ್ತೆ ಮುಂದೆ ಬಂದು ವಾದಿರಾಜಾಚಾರ ಮುಖವನ್ನು ಹುಳು ಹುಳು ನೋಡತೊಡಗಿದಳು. ತರ್ಪಣ ವಿಧಿಗಳೆಲ್ಲ ಮುಗಿದಿದ್ದವು. ಎಲ್ಲರೂ ಪಿಂಡಗಳನ್ನು ಹರಿವ ನೀರಿನಲ್ಲಿ ಬಿಟ್ಟು ವಾದಿರಾಜಾಚಾರ್‍ಯರಿಗೆ ದಕ್ಷಿಣೆ ಕೊಟ್ಟು ನಡೆದರು. ಯಾಕೋ ಕಡೀಕ ಉಳಿದ ಗುರಣ್ಣ ತಾನೂ ದಕ್ಷಿಣೆ ಕೊಟ್ಟು ಬಗ್ಗಿ ನಮಸ್ಕರಿಸಿ ಮೇಲೆ ಎದ್ದ. ಇಷ್ಟೂ ಹೊತ್ತೂ ವಾದಿರಾಜಾಚಾರ್‍ಯರನ್ನು ಮಿಕಿ ಮಿಕಿ ನೋಡುತ್ತ ನಿಂತಿದ್ದ ಕೃಷ್ಟಕ್ಕ ‘ನಾನೂ ನಮಸ್ಕಾರ ಮಾಡತೇನಿ’ ಎನ್ನುತ್ತ ತಾನೂ ಹತ್ತಿರ ಹೋಗಿ ಬಗ್ಗಿ ನಮಸ್ಕಾರ ಮಾಡಿ ಎದ್ದು ಅವರನ್ನು ಕ್ಷಣಕಾಲ ನಿಟ್ಟಿಸಿ ನೋಡಿ ಒಮ್ಮೆಲೇ ಕಠೋರಳಾಗಿ ‘ಏ ನೀನು ಮುಳಗುಂದ ಬಿಂದ್ಯಾ ಅಲ್ಲೇನೋ?’ ಎಂದು ಗಟ್ಟಿಯಾಗಿ ಚೀರಿ ಬಿಟ್ಟಳು. ವಾದಿರಾಜಾಚಾರು ತಬ್ಬಿಬ್ಬಾಗಿ ‘ಏನು ತಾಯಿ… ಏನಂದರೀ… ನಾವು ಉಡುಪಿಯವರು… ವಾದಿರಾಜಾ ಅಂತ ನನ್ನ ಹೆಸರು… ಮಠಕ್ಕ ಸೇರೇನಿ…. ಮಠದ ಡ್ಯೂಟಿ…… ಎಲ್ಲಿ ಕಳಿಸತಾರೋ ಅಲ್ಲಿ ಹೋಗಬೇಕಾಗತsದ’ ಎನ್ನುತ್ತ ಮುಗುಳು ನಕ್ಕರು. +ಕೃಷ್ಟಕ್ಕ ವಾದಿರಾಜಾಚಾರ್‍ಯರಿಗೆ ‘ನೀ ಮುಳಗುಂದ ಬಿಂದ್ಯಾ ಅಲ್ಲೇನೋ?’ ಎಂದು ಒದರಿದ್ದು ಕೇಳಿ ಗುರಣ್ಣಗ ಬಹಳ ಸಂಕೋಚ ಆತು. ಅವ ‘ಅವ್ವಾ ನೀ ಯಾರ್‍ಯಾರಿಗೋ ಏನೇನೋ ಅಂತೀದಿ’ ಎನ್ನುತ್ತ, ಆಚಾರ ಕಡೆ ತಿರುಗಿ ‘ಕ್ಷಮಿಸಬೇಕು ಆಚಾರಸ್ವಾಮಿ’ ಎಂದು ಒಂದು ಕ್ಷೀಣ ನಗು ನಕ್ಕು, ಕೃಷ್ಟಕ್ಕನ ಮ್ಯಾಲ ಸಿಟ್ಟು ಸಿಟ್ಟು ಹಾಯುತ್ತ ಅವಳನ್ನು ಕರಕೊಂಡು ಮರಳಿ ನಡೆದ. ಆಗ ಕೃಷ್ಟಕ್ಕ ಕೊಸರಿಕೊಂಡು ಹೊಳ್ಳಿ ನಿಂತು ‘ಹಂಗಾರ ನಿಮ್ಮ ಎಡಗೈಗೆ ಏನಾಗೇದ? ಅದು ಯಾತರ ಕಲೆ?’ ಎಂದು ಕೇಳಿದಳು ಪಟ್ಟು ಬಿಡದವಳಂತೆ. +ವಾದಿರಾಜಾಚಾರು ತಮ್ಮ ಎಡಗೈ ಮುಂದೆ ಚಾಚಿ, ‘ಇದೇ? ನಮ್ಮದೇನು ತಾಯೀ… ಬ್ರಾಹ್ಮಣಾರ್ಥದ ಬದುಕು… ಅಗ್ನಿ ಹೋತ್ರ… ನೈವೇದ್ಯ… ದೀಪ… ಧೂಪ ಎನ್ನುತ್ತ ಯಾವಾಗಲೂ ಅಗ್ನಿಯ ಸಹವಾಸ…’ ಎಂದು ಮುಗುಳು ನಕ್ಕರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ರಪ ರಪ ರಪ ಮಳೆ ಹೊಡೆಯಲಿಕ್ಕೆ ಹತ್ತಿತು. ವಾದಿರಾಜಾಚಾರ ಮತ್ತೆ ಅದೇ ಮುಗುಳು ನಗು ನಗುತ್ತ, ‘ಬರಲೇ?’ ಎನ್ನುತ್ತ ಮಳೆಯಿಂದ ರಕ್ಷಿಸಿಕೊಳ್ಳಲು ತಲೆಯ ಮೇಲೊಂದು ಟವಲು ಹಾಕಿಕೊಂಡು, ಯಾತ್ರಿಕರ ಒಂದು ಗುಂಪಿನ ಮಧ್ಯೆ ಹೊಕ್ಕು ಓಡತೊಡಗಿದರು. ಗುರಣ್ಣ ಚೀಲ ಬಗಲಿಗೇರಿಸಿಕೊಂಡು, ಒಂದು ಕೈಯಿಂದ ಕುಂಟುತ್ತಿರುವ ಸುಸಾನಳನ್ನು ಎಳೆಯುತ್ತ, ಕೃಷ್ಟಕ್ಕನ ಕಡೆ ಒಂದು ಅಸಹ್ಯ ಕ್ರುದ್ಧ ನೋಟ ಹರಿಸಿ ತಾನೂ ಓಡತೊಡಗಿದ. ಕೃಷ್ಟಕ್ಕ ಇನ್ನೂ ಅನುಮಾನಿಸುತ್ತ ತಾನೂ ಹೆಜ್ಜೆ ಕಿತ್ತಿದಳು. +ಎಷ್ಟು ಹೇಳಿದರೂ ಕೃಷ್ಟಕ್ಕನ ಅನುಮಾನ ಸಂಶಯ ಹೋಗೋ ಲಕ್ಷಣ ಕಾಣಿಸಲಿಲ್ಲ. ಗುರಣ್ಣ ಹೇಳಿ ಹೇಳಿ ಬ್ಯಾಸತ್ತ. ‘ನಲವತ್ತು ವರುಷದ ಹಿಂದಿನ ಕಥಿ… ಆ ಮುಳಗುಂದದ ಬಿಂದ್ಯಾ ಬದುಕೆರ ಬದುಕ್ಯಾನೋ ಇಲ್ಲೋ… ಒಂದು ವ್ಯಾಳ್ಯಾ ಬದುಕಿದ್ದರೂ ಯಲ್ಲಾ ಬಿಟ್ಟು ಇಲ್ಲೆ ಬದರಿಗೆ ಯಾಕ ಸಾಯಲಿಕ್ಕೆ ಬರತಾನ… ಬಂದಿದ್ದರ ಸಹಿತ ಎಷ್ಟು ಮುದುಕ ಆಗಿರತಾನೋ ಏನೋ… ಅಂಥವನ್ನ ನಲವತ್ತು ವರುಷದ ಮ್ಯಾಲ ನೀ ಗುರುತು ಹಿಡೀತೀಯಾ… ಹುಚ್ಚು… ನಿನಗ ಹಳವಂಡ…‘ +ಕೃಷ್ಟಕ್ಕನ ಸಹಯಾತ್ರಿಗಳಾದ ಸುಬ್ಬಕ್ಕ ಮತ್ತು ಉಳಿದವರೂ ಸಾಕಷ್ಟು ಹೇಳಿದರು. ಏನಾದರೂ ಕೃಷ್ಟಕ್ಕನ ಅನುಮಾನ. ಸಂಶಯ ಬಗೆಹರೀಲಿಲ್ಲ. ಆಕೀದು ಒಂದs ಹಟ, ‘ಅವನ ಎಡಗೈಗೆ ಆದದ್ದು ಸುಟ್ಟಗಾಯ ಅಲ್ಲ…… ಅವತ್ತ ಪಾಕೇಟಿನ್ಯಾಗಿನ ರೊಕ್ಕಾ ಕಳವು ಮಾಡೋ ದಿವಸ ಇವರ ಸಂಗತೀ ಹಾತಾಪಾಯೀ ಆತಲ್ಲs…… ಆವಾಗ ಚೂರಿ ತರದು ಆದದ್ದು ಗಾಯ ಅದು… ಪೋಲಿಸರು ಲಾಕಪ್ಪಿನ್ಯಾಗ ನನ್ನ ಕರದು ಅವನ ಕೈ ತೋರಿಸಿದ್ದರು…. ತಿಂಗಳಾನುಗಟ್ಟಲೇ ಲಾಕಪ್ಪಿನ್ಯಾಗs ಇದ್ದ… ಆ ಮ್ಯಾಲ ತಪ್ಪಿಸಿಕೊಂಡು ಓಡಿ ಹೋತಂತ ಖೋಡಿ… ಬರೇ ಅಷ್ಟs ಅಲ್ಲ ಆ ಮಾರಿ, ಥೇಟ ಮುಳಗುಂದ ಸಕೇಶಿ ಮಾರಿ…. ನನ್ನ ಗಂಡನ್ನ ಕೊಂದ ಮಾರೀ ಯಂದಾದರೂ ಮರೀತೀನೇನು ನಾನು?’ ಎನ್ನುತ್ತ ಅದೇ ಮಾತು ಅದೇ ಹಟ. +ಯಾತ್ರೆ ಮುಗಿದಿತ್ತು. ಯಾತ್ರಿಕರು ಮರಳಿ ಹೊರಟಿದ್ದರು ಬಸ್ಸಿನವರು ಗಡಿಬಿಡಿ ಮಾಡಲಿಕ್ಕೆ ಹತ್ತಿದ್ದರು. ‘ಈಗ ಬಿಟ್ಟರ ಸಂಜಿಗೆ ಪೀಪಲಕೋಟ ಮುಟ್ಟತೇವಿ… ಮಳೀ ಬರಬಹುದು… ಜಲ್ದೀ ಜಲ್ದೀ ನಡೀರೀ…’ ಅಂತ ಅವಸರಿಸಲಿಕ್ಕೆ ಹತ್ತಿದ್ದರು. ಸಾಮಾನು ಸರಂಜಾಮು ಎಲ್ಲಾ ಬಸ್ಸಿನ ಮ್ಯಾಲ ಹಾಕಿದ್ದಾಗಿತ್ತು. ಉಳಿದ ಯಾತ್ರಿಕರೆಲ್ಲ ತಮ್ಮ ತಮ್ಮ ಸೀಟಿನ ಮ್ಯಾಲ ಕೂತಿದ್ದರು. ಮುಖ ಗಂಟಿಕ್ಕಿ ಖಿಡಕೀ ಹೊರಗ ಮಾರೀ ಇಟಗೊಂಡು ಕೃಷ್ಟಕ್ಕನೂ ಕೂತಿದ್ದಳು. ಇನ್ನೂ ಕುಂಟುತ್ತಿದ್ದ ಸುಸಾನಳಿಗೆ ಬಸ್ಸ ಏರಲಿಕ್ಕೆ ಗುರಣ್ಣ ಸಹಾಯ ಮಾಡಲಿಕ್ಕೆ ಹತ್ತಿದ್ದ. ಯಾರೋ ಗಟ್ಟಿಯಾಗಿ ‘ಬದರೀ ವಿಶಾಲಕೀ…’ ಎಂದು ಕರೆಕೊಟ್ಟರು ಉಳಿದವರೆಲ್ಲರೂ ‘ಜೈ’ ಎಂದು ಜಯಘೋಷ ಮಾಡಿದರು. +ಅಷ್ಟರಾಗ ಏನಾತೋ ಏನೋ ಇದ್ದಕ್ಕಿದ್ಧಂಗ ಕೃಷ್ಟಕ್ಕ ಛಂಗನೇ ತನ್ನ ಸೀಟು ಬಿಟ್ಟೆದ್ದು, ‘ಅಕಾ… ಅಲ್ಲಿ ಹೊಂಟಾನ ನೋಡ್ರಿ ಅವನs ಅವನs ಮುಳಗುಂದ ಬಿಂದ್ಯಾ’ ಎಂದು ಚೀರುತ್ತ, ಎಲ್ಲರನ್ನೂ ಸರಿಸಿ ಬಸ್ಸಿನ ಒಳಬಾಗಿಲಿನ ಬಳಿ ಬರುತ್ತಿದ್ದ ಗುರಣ್ಣ ಸುಸಾನರನ್ನು ರಭಸದಿಂದ ನೂಕಿ, ‘ನನ್ನ ಗಂಡನ್ನ ಕೊಂದವನ್ನ ಏನಾದರೂ ಬಿಡೂದುಲ್ಲ’ ಎಂದು ಗಟ್ಟಿದನಿಯಲ್ಲಿ ಒದರ್‍ಯಾಡುತ್ತ, ತುಸು ದೂರ ಇವರಿಗೆ ಬೆನ್ನು ಮಾಡಿ ನಡೆದಿದ್ದ, ವಾದಿರಾಜಾಚಾರರಂತೆ ಕಾಣುತ್ತಿದ್ದ ಆ ಮನುಷ್ಯನ ಬೆನ್ನತ್ತಿ, ಬಲಗೈಯಿಂದ ಹಿಂದಿನ ಕಚ್ಚೆಯನ್ನು ಒಳಸರಿಸುತ್ತ, ಎಡಗೈಯಿಂದ ಬಲಗಾಲಿನ ಸೀರೆಯನ್ನು ಎತ್ತಿ ಹಿಡಿದು ‘ಏ ಬಿಂದ್ಯಾ ನಿಂದರೋ…’ ಎನ್ನುತ್ತ ಉನ್ಮತ್ತಳಂತೆ ಓಡತೊಡಗಿದಳು. ಕಕ್ಕಾಬಿಕ್ಕಿಯಾದ ಗುರಣ್ಣ ಏನು ಮಾಡಲೂ ತೋಚದೇ ಕಂಗೆಟ್ಟು ‘ಅವ್ವಾ…….. ಅವ್ವಾ’ ಎನ್ನುತ್ತ ತಾನೂ ಅವಳ ಹಿಂದಿನಿಂದ ಓಡತೊಡಗಿದ. ನಾಲ್ಕು ಹೆಜ್ಜೆ ಹಿಂದಿನಿಂದ ಬಿಳೇ ಹುಡುಗಿ ಸುಸಾನ ತಾನೂ ಆರ್ತಳಾಗಿ ‘ಆವಾ……. ಕಮ್‌ಬ್ಯಾಕ್…….ಆವಾ’ ಎನ್ನುತ್ತ ಅಳುತ್ತಳುತ್ತ ರಭಸದಿಂದ ಕುಂಟುತ್ತ ಅವರಿಬ್ಬರ ಹಿಂದೆ ನಡೆದಳು. +ಬಸ್ಸಿನಲ್ಲಿದ್ದವರೆಲ್ಲ ‘ಅರೇ ಕ್ಯಾ ಹೋಗಯಾ… ಏನಾತು… ವಾಟ ಹ್ಯಾಪಂಡ’ ಎಂದು ನಾನಾ ತರದ ಉದ್ಗಾರ ತಗೀಲಿಕ್ಕೆ ಹತ್ತಿದರು. ಬಸ್ಸು ಹೊರಡಲು ತಡಾ ಆಗತsದ ಅಂತ ಉಗ್ರ ಕೋಪದಲ್ಲಿ ಬಸ್ಸಿನ ಡ್ರಾಯಿವರ ‘ಡ್ರಾಂವ್…….. ಡ್ರಾಂವ್…….. ಡ್ರಾಂವ್’ ಅಂತ ಕ್ರೂರವಾಗಿ ಹಾರ್ನ್ ಬಾರಿಸತೊಡಗಿದ. +***** +ಕೃಪೆ: ದೇಶಕಾಲ (ಸಂಚಿಕೆ: ಜನವರಿ-ಮಾರ್ಚ್: ೨೦೦೬) +ಅನುಮತಿ ನೀಡಿದ ಶ್ರೀನಿವಾಸ ವೈದ್ಯರಿಗೆ ಧನ್ಯವಾದಗಳು. +ಕನ್ನಡಸಾಹಿತ್ಯ.ಕಾಂನಲ್ಲಿ ಪ್ರಕಟೀಸಲು ಅನುಮತಿ ನೀಡಿ ಜೊತೆಗೆ ಶ್ರೀನಿವಾಸ ವೈದ್ಯರಿಂದ ಅನುಮತಿ ಪಡೆದುಕೊಟ್ಟ ವಿವೇಕ ಶಾನಭಾಗರಿಗೆ ಧನ್ಯವಾದಗಳು. +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_191.txt b/Kannada Sahitya/article_191.txt new file mode 100644 index 0000000000000000000000000000000000000000..aa9ef72625f03b04ab3faf59e079017f2559b55a --- /dev/null +++ b/Kannada Sahitya/article_191.txt @@ -0,0 +1,106 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ +ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ +ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ +ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ +ದುಃಖವಾಯಿತು. ಮೈಲಿಗೆ +ಪರಿಚಿತ ಸಿಕ್ಕಿದ್ದು ನವುಲೆ ಗ್ರಾಮದ ಹನುಮ: +ಯಾರದೋ ಗದ್ದೆಯಲ್ಲಿ ಗೇಯುವ, ಮೋಟು ಬೀಡಿಯ +ಕಿವಿಗೆ ಸಿಕ್ಕಿಸಿಕೊಳ್ಳುವ, ತೊಡೆಯ ಪರಪರ ಕೆರೆದುಕೊಳ್ಳುವ, +ಹಳ್ಳಿಯೇ ಹನುಮಿಸಿದಂತೆ ನನಗೆ ಭಾಸವಾಗುವ ವಿಚಿತ್ರ- +ಅಭ್ಯಾಸರೂಪಿತ ನಿರ್ದಿಷ್ಟ ಅಳತೆಯ ನಿರ್ವಿವಿಧ ಕೂಗಿಂದ +ಹಕ್ಕಿಗಳ ಅಟ್ಟುತಿದ್ದ; ಪಾತಿ ಸರಿಗೊಳಿಸುತ್ತಿದ್ದ; ಅಪ್ರಚಲಿತ +ಹಳ್ಳಿ ಪದದ ಅಶಾಸ್ತ್ರೀಯ ಮಟ್ಟನ್ನು ಕುರುಕುತ್ತಿದ್ದ. +ಕಂಡೊಡನೆ, ‘ಹ್ಯಾಂಗಿದೀರಿ’ ಅಂದ; +ಈಚೀಚೆಗೆ ಅಪರೂಪವಲ್ಲ ಅಂದ, ಯಾಕೋ ಬಡವಾಗಿದ್ದೀರಿ +ಅಂದ, ಮಳೆ ಬೇಕಾಗಿಲ್ಲ ಅಂದ, ಫಸಲನ್ನು ಅಂದಾಜಿಸಿದ; +‘ನೆರೆಯವನೊಡನೆ ದಿನವಹಿ ಕಾದಾಟ ಸಾಕಾಗಿದೆ ಮಾರಾಯರೇ’ +ಅಂದ – ಕೊರೆಯುತ್ತಲೇ ಇದ್ದ – ಹೂಂಗುಟ್ಟಿದೆ – +ಅವನ ಮಾತಿಗೆ ಮಂಜಿನೊಳಗಿನ ಸೂರ್ಯ, ನನ್ನ ಪ್ರಜ್ಞೆ, +‘ರಾಮನ್ ಸತ್ತರೋ ಹನುಮ’ ಅನ್ನಬೇಕು, ಆಗ ತಡೆದು +ಸುಮ್ಮನಾದೆ. ರಾಮನ್ ಅರ್ಥೈಸಿಕೊಳ್ಳಬಹುದೆ ಇವನ +ಅಶಿಕ್ಷಿತ ಅರಿವಿಗೆ? +– ೨ – +ಆ ಕಡೆ ರಾಮನ್, ಈ ಕಡೆ ಹನುಮ; +ದಿನವಿಡಿ ಮೈ ಕೆಸರಿಸಿಕೊಂಡು, ನನ್ನಂಥವ ನೆನೆಯಲೂ +ನಿರಾಕರಿಸುವ ತಂಗಳುಂಡು, ರಾತ್ರಿ ಕಳ್ಳಭಟ್ಟಿಯ ಹೊಡೆದು- +ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನೆನ್ನೆಯ +ಪುನರಾವರ್ತನೆಯ ಏಕತಾನತೆಯಲ್ಲಿ – ಲೋಕ ಮರೆಯುವ +ಹನುಮನಿಗೆ ರಾಮನ್ ಹೋದರೆಷ್ಟೊ, ರಸೆಲ್ ಹೋದರೂ ಅಷ್ಟೆ. +ಪತ್ರಿಕೆಯೋದುವುದಿಲ್ಲ; ನಾನು ಕವಿಯೆಂಬುದು ಗೊತ್ತಿಲ್ಲ; +ಹೊಟ್ಟೆಬಟ್ಟೆಯ ಅಗತ್ಯ ಮೀರಿದ ನನ್ನ ಹಸಿವು, ಅಸ್ವಸ್ಥತೆ +ಅರಿತಿಲ್ಲ; ಲೋಕದ ಪ್ರತಿನಿತ್ಯದ ಆಗು – ಹೋಗುಗಳಿಗೆ ಪ್ರತಿಕ್ರಿಯಿಸುವ +ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ +ಉದ್ಭವಿಸಿಲ್ಲ – ಆದರೂ ತೃಪ್ತ….. +ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು, +ದೇವರ ಗ್ರಾಮ್ಯಕಲ್ಪನೆ, ಊರಿನ ಪುಢಾರಿ – ಇಷ್ಟೇ ಜಗತ್ತು – +ಆದರೂ ತೃಪ್ತ….. +ನನ್ನಂತೆ ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಕಾಡುವುದಿಲ್ಲ- +ಹೆಂಡತಿಗೆ ಚೋಲಿ, ಹಿರಿ ಮಗನ ಶಾಲೆ +ಬೆಲ್ಲದ ಕಾಫಿಯ ಹಾಲೇಶಿಯ ಸಾಲ +ಹೊತ್ತು ಹೊತ್ತಿಗೆ ರುಚಿಗೌಣ ಅರಸಿಕ ಕೂಳು – ಚಿಂತೆಯಿಲ್ಲ +ವೆಂದಲ್ಲ- +ಆದರೂ ತೃಪ್ತ….. +– ೩ – +ಇದ ಮೆಚ್ಚಿ, ಕರುಬಿ, ಪೇಚಾಡಿ ನಡೆದಾಗ +ದೂರದಿಂದ, ಪ್ರಕೃತಿಯ ಆಗಾಧದಲ್ಲಿ ಹಿಮಾಚ್ಛಾದಿತ ಹನುಮ, +ಅವನ ಕೂದಲೆಳೆಯ ಕೂಗು- +ಅರ್ಥ ತೋರದ ಚುಕ್ಕೆ. +ಇಲ್ಲಿಂದ ನನಗೆ ವರ್ಗವಾಗುತ್ತೆ, ಒಂದು ದಿನ +ಹನುಮ ಸಾಯುತ್ತಾನೆ – ತಿಳಿಯುವುದಿಲ್ಲ. +ಇಲ್ಲಿನ ಹಳಬ ಅಲ್ಲಿ ಹೊಸಬನಾಗುತ್ತೇನೆ, +ಎಲ್ಲೋ ಹೇಗೋ ಸಾಯುತ್ತೇನೆ – ತಿಳಿಯುವುದಿಲ್ಲ. +ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು – ತಿಳಿಯುವುದಿಲ್ಲ. +ಈ ಪರಿಚಿತ ಆಕಾಶ, ತೆಂಗಿನ ಮರ, ಕಾಲುವೆ, ಗುಡ್ಡ, ಗುಡಿಸಲು- +ಇವು ಕೊಟ್ಟ ಧಾರಾಳ, ಅರ್ಥವಂತಿಕೆ. ಭಾವ ಸಂಚಾರ- +ತಿಳಿಯುವುದಿಲ್ಲ. +ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ +ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು….. +ಹಕ್ಕು +ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು +ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ +ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ +ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು +ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. +ಅರೆ, ಎಂದು ಒಂದು ಕ್ಷಣ ಆಶ್ಚರ್ಯಪಟ್ಟೆ, +ಆಲೋಚಿಸಿದೆ; +ನೆರಳು ನನ್ನ ಮರದ್ದು, ನಿಲ್ಲಿಸಬೇಡಯ್ಯ ಕಾರು +ಅಂದರೆ ತಪ್ಪೆ? +ಅದರ ನೆರಳಲ್ಲಿ ನಿಂತಿದ್ದರಿಂದ ಆ ಕಾರು +ನನ್ನದೆಂದರೆ ತಪ್ಪೆ? +ದಬಾಯಿಸಿದರೆ ಅವ ಹೀಗೆ: ಬೆಪ್ಪೆ, +ತೆಂಗು ನಿನ್ನದಿರಬಹುದು, ಅದರ ನೆರಳು ನಿನ್ನದ? +ದಿನ ಬೆಳಗಾದರೆ ಗರಿಗಳಲ್ಲಿ ಅರಳುವ ಹಕ್ಕಿ ನಿನ್ನದ? +ಅದರ ಕಿಚಪಿಚ, ಅಲೆಯುವ ಹವೆ, ಹೊಳೆಯುವ ಕಿರಣ, +ತೂಗುವ ಚಂದ್ರ – ನಿನ್ನದ? +ಇದು ಸಾರ್ವಜನಿಕ ರಸ್ತೆ – ನಿಲ್ಲಿಸಲು, +ಅಲ್ಲಿ ಚೆಲ್ಲಿದ ನೆರಳೂ ನನ್ನದೆನ್ನಲು ಹಕ್ಕುಂಟು. +ಆಲದೆ, ನೆರಳ ನೆಪದಿಂದ ವಾಹನ ನಿಲ್ಲುತ್ತೆ, +ಹಾಗಾಗಿ ಸಂಚಾರಕ್ಕೆ ಅಡಚಣೆ, ಕತ್ತರಿಸು +ಮರವನೆಂದರೆ ಎಲ್ಲಿದೆ ನನ್ನಲಿ ಜವಾಬು? +ಕ್ಷಣ, ದಿಗಿಲಾಗಿ +ಕಾರಲ್ಲಿ ಯಾರೂ ಇಲ್ಲದ್ದು ಖುಷಿಯಾಗಿ +ನೆರಳ ನೋಡದೆ +ಬರೀ ಕಾರಿನಂದವ ಮೆಚ್ಚುತ್ತ ಸರಸರ ಒಳಗೆ ನಡೆದೆ. +***** +ಕೀಲಿಕರಣ: ಶ್ರೀನಿವಾಸ +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ ಹರಿವರಿದು ಬರುವ ಗಂಧೋದಕದಿ ಮಿಂದ ತಂ- ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! ದಿವ್ಯಾನುಭೂತಿಯಲಿ ರಸದ […] +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_192.txt b/Kannada Sahitya/article_192.txt new file mode 100644 index 0000000000000000000000000000000000000000..3c0b2593c4d7ec64f08078180ea00d8b4cb35bdb --- /dev/null +++ b/Kannada Sahitya/article_192.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ +ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ +ಯಾರೋ ಕರೆದಂತೆ +ಪಾಠದ ಮಧ್ಯಕ್ಕೇ +ಸಟ್ಟನೆ ಎದ್ದು ಹೊರಗೆ +ನಡೆದುಬಿಡುತ್ತಾರೆ +***** +‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. ***** +ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. ***** +ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_193.txt b/Kannada Sahitya/article_193.txt new file mode 100644 index 0000000000000000000000000000000000000000..e3f52ed33b57b709339361f4192f0fa213521e05 --- /dev/null +++ b/Kannada Sahitya/article_193.txt @@ -0,0 +1,589 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪತ್ತೇದಾರೀ ಕಿರುಕಾದಂಬರಿ +-ಒಂದು- +ನಿನ್ನೆ ಸಂಜೆ ತಮಿಳುನಾಡಿನ ಉತ್ತರ ತೀರಕ್ಕೆ ಅಪ್ಪಳಿಸಿದ ಭೀಷಣ ಚಂಡಮಾರುತ ಪಶ್ಚಿಮದಲ್ಲಿ ಒಳನಾಡಿನತ್ತ ಸಾಗಿದಂತೆ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತ್ತು. ಅದರ ಪ್ರಭಾವದಿಂದಾಗಿ ಕಪ್ಪು ಮೋಡಗಳು ಇಡೀ ಮೈಸೂರು ನಗರವನ್ನು ಬೆಳಗಿನಿಂದಲೂ ಸೂತಕದಂತೆ ಮುಸುಕಿಕೊಂಡಿದ್ದವು. ಮಧ್ಯಾಹ್ನ ಆರಂಭವಾದ ಮಳೆ ಒಂದು ಒಂದೂವರೆ ಗಂಟೆಯವರೆಗೆ “ಧೋ” ಎಂದು ಸುರಿದು ನಂತರ ಕ್ಷೀಣಗೊಂಡು ಸಣ್ಣಗೆ ರಾಗ ಎಳೆಯತೊಡಗಿ ಮುಂದಿನ ಅರ್ಧ ಗಂಟೆಯಲ್ಲಿ ಅದೂ ನಿಂತುಹೋಗಿತ್ತು. ಇನ್ನು ಮಳೆ ಬರುವುದಿಲ್ಲ ಅಂದುಕೊಳ್ಳುತ್ತಿದ್ದಂತೇ ರಾತ್ರಿಯ ಊಟದ ಹೊತ್ತಿಗೆ ಸಣ್ಣಗೆ ಆರಂಭವಾದ ಅದು ಸಮಯ ರಾತ್ರಿ ಹನ್ನೊಂದಾದರೂ ನಿಂತಿರಲಿಲ್ಲ. ಮಳೆಯ ಜತೆ ಕೊರೆವ ಚಳಿ. ಅಲ್ಲದೇ ಮಳೆ ಆರಂಭವಾದ ಎರಡು ನಿಮಿಷಗಳಲ್ಲಿ ಮಾಯವಾದ ಕರೆಂಟ್ ಇಡೀ ನಗರವನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು. +ಪುಸ್ತಕದಿಂದ ತಲೆಯೆತ್ತಿ ಒಮ್ಮೆ ಧೀರ್ಘವಾಗಿ ಆಕಳಿಸಿ ಕಣ್ಣು ಮುಚ್ಚಿದಳು ಮಾನ್ಸಿ. ಬೆಳಗಿನಿಂದ ಸತತವಾಗಿ ಓದಿದ್ದಲ್ಲದೇ ರಾತ್ರಿ ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ಮೂರು ಗಂಟೆಗಳಷ್ಟು ಕಾಲ ಓದಿದ್ದಳು. ನಾಳಿನ ಪರೀಕ್ಷೆಗೆ ಅಂತಹ ಓದಿನ ಅಗತ್ಯವಿತ್ತು. ಸೈಕಾಲಜಿಯ ಮೂರನೆಯ ಪೇಪರ್ ಅದು. ಅದು ಮುಗಿದರೆ ಬಿ ಎ ಮುಗಿದಂತೆ. +ಕಣ್ಣು ತೆರೆದು ಪುಸ್ತಕದ ತೆರೆದ ಪುಟದತ್ತ ನೋಟ ಹರಿಸಿದಳು. ಬೆರಳುಗಳು ನಿಧಾನವಾಗಿ ಆಡಿ ಇನ್ನೂ ಓದಲು ಉಳಿದಿದ್ದ ಪುಟಗಳ ಎಣಿಕೆ ನಡೆಸಿದವು. ತುಟಿಗಳು ಬಿಗಿದುಕೊಂಡವು. +ಇನ್ನೂ ಧೀರ್ಘವಾಗಿ ಉಳಿದ ಮೂವತ್ತು ಪುಟಗಳು… +ಕಣ್ಣುರೆಪ್ಪೆಗಳನ್ನು ಬಲವಂತದಿಂದ ತೆರೆದು ಅಕ್ಷರಗಳ ಮೇಲೆ ಕೀಲಿಸಿದಳು. ಎರಡು ಸಾಲು ಓದುವಷ್ಟರಲ್ಲಿ ರೆಪ್ಪೆಗಳು ತಾವಾಗಿಯೇ ಮುಚ್ಚಿಕೊಂಡವು. ತೆರೆದ ಪುಸ್ತಕದ ಮೇಲೇ ತಲೆಯಿಟ್ಟಳು… +ಇನ್ನು ಓದು ಸಾಕು. ಬೆಳಿಗ್ಗೆ ಬೇಗನೆ ಎದ್ದು ಉಳಿದ ಪುಟಗಳತ್ತ ಒಮ್ಮೆ ಕಣ್ಣಾಡಿಸಿದರಾಯಿತು. +ಮೇಜಿನ ಮೂಲೆಯಲ್ಲಿದ್ದ ಪುಟ್ಟ ಗಡಿಯಾರದತ್ತ ನೋಟ ಹಾಯಿಸಿದಳು. ಸಮಯ ಹನ್ನೊಂದೂಮುಕ್ಕಾಲಾಗಿತ್ತು. ಪುಸ್ತಕವನ್ನು ತೆರೆದಂತೆಯ ಇಟ್ಟು ಮೇಲೆದ್ದಳು. +ಎಡಗೈಯನ್ನು ಮೇಜಿನ ಅಂಚಿಗೆ ಬಿಗಿಯಾಗಿ ಊರಿ ಶರೀರವನ್ನು ಬಲಕ್ಕೆ ತುಸುವೇ ಬಾಗಿಸಿ ಬಲಗೈಯನ್ನು ಪಕ್ಕಕ್ಕೆ ಚಾಚಿ ಗೋಡೆಗೆ ಆತು ನಿಂತಿದ್ದ ಊರುಗೋಲನ್ನು ಹತ್ತಿರಕ್ಕೆ ಎಳೆದುಕೊಂಡು ಬಲ ಕಂಕುಳಿಗೆ ಸೇರಿಸಿದಳು. ಎಡ ತೊಡೆಯಿಂದ ಕುರ್ಚಿಯನ್ನು ಹಿಂದೆ ನೂಕಿ ನಿಧಾನವಾಗಿ ಹೆಜ್ಜೆ ಮುಂದಿಟ್ಟಳು. ಪೋಲಿಯೋ ಮಾರಿಗೆ ತುತ್ತಾಗಿ ಶಕ್ತಿಹೀನವಾಗಿದ್ದ ಬಲಗಾಲನ್ನು ಮೆಲ್ಲಗೆ ಎಳೆದು ಹಾಕುತ್ತಾ ಊರುಗೋಲಿನ ಆಸರೆಯಲ್ಲಿ ಬಾತ್‌ರೂಮಿನತ್ತ ಸಾಗಿದಳು… +ಗೋಡೆಗೆ ಒರಗಿನಿಂತು ತುಂಡು ಟವಲ್‌ನಿಂದ ಮುಖ ಒರೆಸಿ ಒಂದು ಲೋಟ ಬೆಚ್ಚನೆಯ ನೀರನ್ನು ಗಂಟಳಿಗಿಳಿಸಿದಳು. ಹಾಸಿಗೆಯತ್ತ ಸಾಗಿದವಳಿಗೆ ಏಕಾ‌ಏಕಿ ನೆನಪಿಗೆ ಬಂತು. +’ಸಂಜೆಯ ವೇಳೆಗೆ ಮೈಸೂರಿಗೆ ಹಿಂತಿರುಗುವುದಾಗಿ ಗೋಕುಲ್ ಬೆಳಿಗ್ಗೆಯಷ್ಟೇ ಫೋನ್‌ನಲ್ಲಿ ಹೇಳಿದ್ದ.’ +ಹೊರಗೆಲ್ಲಾದರೂ ಹೋಗಿ ಹಿಂತಿರುಗಿದ ಅರ್ಧಗಂಟೆಯೊಳಗೆ ನನ್ನನ್ನು ನೋಡಲು ಬರುವುದು ಅವನ ಅಭ್ಯಾಸ. ನನ್ನನ್ನು ಬಿಟ್ಟಿರುವುದು ಅವನಿಗೆ ಅಸಾಧ್ಯ. ಹತ್ತಾರು ಬಾರಿ ಅವನೇ ಹೇಳಿದ್ದ ಮಾತು ಅದು. +ಇಂದು ಅವನ ಸುಳಿವಿಲ್ಲ! +ಮಧ್ಯರಾತ್ರಿಯಾದರೂ ಅವನಿಂದ ಒಂದು ಫೋನ್ ಕರೆ ಸಹ ಇಲ್ಲ! ಇಂದು ಇಡೀ ದಿನ ನಾನು ಮನೆಯಲ್ಲಿ ಒಂಟಿ ಎಂದು ಅವನಿಗೆ ಚೆನ್ನಾಗಿ ಗೊತ್ತು. ಯಾವುದೇ ಕಾರಣದಿಂದ ನನ್ನ ಬಳಿಗೆ ಬರಲಾಗದಿದ್ದರೆ ಕೊನೇಪಕ್ಷ ಫೋನ್ ಮಾಡಬಹುದಾಗಿತ್ತಲ್ಲ? +ಅವನನ್ನು ಸಂಪರ್ಕಿಸಲು ಅವಳು ನಡೆಸಿದ ಪ್ರಯತ್ನ ವಿಫಲವಾಗಿತ್ತು. ನಾಲ್ಕೈದು ಸಲ ಪ್ರಯತ್ನಿಸಿದರೂ ಆ ಕಡೆಯಿಂದ ಕೇಳಿಬಂದದ್ದು “ದ ನಂಬರ್ ಯು ಆರ್ ಡಯಲಿಂಗ್ ಈಸ್ ಕರೆಂಟ್ಲೀ ಸ್ವಿಚ್ಡ್ ಆಫ್. ಪ್ಲೀಸ್ ಟ್ರೈ ಲೇಟರ್” ಎಂಬ ಕಿರಿಕಿರಿ ಏಕತಾನ. ಮನಸ್ಸಿಗೆ ಬೇಸರವಾದರೂ ಅದರ ಬಗ್ಗೇ ಯೋಚಿಸುತ್ತಾ ಕುಳಿತುಕೊಳ್ಳಲು ನಾಳಿನ ಪರೀಕ್ಷೆ ಅವಕಾಶ ಕೊಟ್ಟಿರಲಿಲ್ಲ. ಓದಿನತ್ತ ಗಮನ ಹರಿಸಿದ್ದಳು. +ಎಮರ್ಜೆನ್ಸಿ ಲ್ಯಾಂಪ್ ಆರಿಸಿ ಹಾಸಿಗೆಯಲ್ಲುರುಳಿದಳು. ಅವಳು ಯಾರಿಗೂ ಕಾಯಬೇಕಾದ ಅಗತ್ಯವಿರಲಿಲ್ಲ. ಅತ್ತಿಗೆ ರಜನಿಯ ತಂಗಿಯ ಮದುವೆಗೆಂದು ಅಂದು ಬೆಳಿಗ್ಗೆ ಬೆಳಗಾವಿಗೆ ಹೋದ ಅಣ್ಣ ಮತ್ತು ಅತ್ತಿಗೆ ಹಿಂತಿರುಗುವುದು ಇನ್ನು ನಾಲ್ಕು ದಿನಗಳಿಗೆ. ಅಲ್ಲಿಯವರೆಗೆ ಅವಳು ಮನೆಯಲ್ಲಿ ಏಕಾಂಗಿ. ಆ ದೊಡ್ಡ ಮನೆಯಲ್ಲಿ ಕೆಲದಿನಗಳು ಒಂಟಿಯಾಗಿ ಕಳೆಯುವುದು ಅವಳಿಗೆ ಹೊಸದೇನಲ್ಲ. ವ್ಯವಹಾರನಿರತ ಅಣ್ಣ, ಕಾಲಿಗೆ ಚಕ್ರ ಕಟ್ಟಿಕೊಂಡ ಸಂಚಾರಪ್ರಿಯೆ ಅತ್ತಿಗೆಯಿಂದಾಗಿ ತಿಂಗಳಿಗೆ ಒಂದೆರಡು ಸಲ ಒಂಟಿಯಾಗಿ ದಿನಗಳೆಯುವುದು ಇತ್ತೀಚೆಗೆ ಅವಳಿಗೆ ಸಾಮಾನ್ಯವಾಗಿಬಿಟ್ಟಿದೆ. +ಹೊರಗೆ ಮಳೆಯ ಏಕತಾನ ನಿರಂತರವಾಗಿ ಸಾಗಿತ್ತು. ಅವಳ ಮನದಲ್ಲಿ ಮತ್ತೆ ಗೋಕುಲ್‌ನ ನೆನಪಿನ ಪ್ರವಾಹ… +ಮೂರನೆಯ ವಯಸ್ಸಿನಲ್ಲಿ ಫೋಲಿಯೋದಿಂದಾಗಿ ಬಲಗಾಲು ಕಳೆದುಕೊಂಡು ಹೆಳವಿಯಾದ ನನ್ನ ಬಗ್ಗೆ ಎಲ್ಲರ ಅಭಿಪ್ರಾಯ…? +ಪರಾವಲಂಬಿ! +ಹೌದು. ನೆಟ್ಟಗೆ ನಡೆಯಲೂ ಆಗದ ನಾನೊಬ್ಬಳು ಪರಾವಲಂಬಿ. +ಊನಗೊಂಡ ಕಾಲಿನ ಜತೆಗೆ ಹುಸಿ ಪರಿತಾಪದ ನುಡಿಗಳಿಂದಾಗಿ ಘಾಸಿಗೊಂಡ ಮನಸ್ಸು, ಕಮರಿದ ಜೀವನೋತ್ಸಾಹ… +…ಇಪ್ಪತ್ತು ವರ್ಷಗಳು ಕಳೆದುಹೋಗಿದ್ದವು. +ಆರು ತಿಂಗಳ ಹಿಂದೆ ತಂದೆ ತಾಯಿಯರಿಬ್ಬರೂ ಅಫಘಾತದಲ್ಲಿ ದುರಂತಮರಣವನ್ನಪ್ಪಿದ್ದು ನನ್ನ ಅದೃಷ್ಠದ ಮೇಲೆ ವಿಧಿ ಎಳೆದ ಮತ್ತೊಂದು ಬರೆ… ಅಣ್ಣ ಅತ್ತಿಗೆಯ ಆಶ್ರಯ ಎಲ್ಲಿಯವರೆಗೆ? +ನಾನು ಜೀವನಪರ್ಯಂತ ಪರಾವಲಂಬಿಯಾಗಿಯೇ ಉಳಿಯಬೇಕೆ? ಅದು ನನ್ನ ಹಣೆಬರಹವೇ? +ಪ್ರಶ್ನೆ ಏಕಾ‌ಏಕಿ ಬಗೆಹರಿದಿತ್ತು. +ನಾಲ್ಕು ತಿಂಗಳ ಹಿಂದೆ ಎಲ್ಲಿಂದಲೋ ಅವತರಿಸಿ ಬಂದ ಚಿಗುರು ಮೀಸೆಯ, ಚಂದದ ನಗುವಿನ ಗೋಕುಲ್. +“ಇವನು ನನ್ನ ತಮ್ಮ. ಓದೋದಕ್ಕೆ ಅಂತ ದೆಹಲಿ ಅಹಮದಾಬಾದ್‌ಗಳಲ್ಲಿದ್ದ. ಓದು ಮುಗಿಸಿ ಈಗ ಮೈಸೂರಿಗೆ ಬಂದಿದ್ದಾನೆ. ಇಲ್ಲೇ ಇರೋ ಇಚ್ಚೆ ಅವನಿಗೆ.” +ಹಾಗೆಂದು ಪಕ್ಕದ ಮನೆಯ ದೇವಕಿ, ಅವಳ ಪ್ರೀತಿಯ ದೇವಕಿ ಆಂಟಿ, ಪರಿಚಯಿಸಿದಾಗಿನಿಂದ ಮಾನ್ಸಿ ವಶೀಕರಣಕ್ಕೊಳಗಾದವಳಂತಾಗಿಬಿಟ್ಟಿದ್ದಳು. ದಿನವೂ ಎದುರಿಗೆ ಬಂದು ಅವಳೊಡನೆ ನಗುತ್ತಾ ಹರಟಿ, ಜೋಕು ಹೇಳಿ ನಗಿಸಿದ ಅವನು ಒಂದು ವಾರದಲ್ಲಿ ಅವಳ ಹೃದಯದ ಆಳಕ್ಕಿಳಿದುಬಿಟ್ಟಿದ್ದ. +ಅಂದು… +ತನ್ನ ಮನೆಯಲ್ಲಿ ಅಣ್ಣ ಅತ್ತಿಗೆ, ಪಕ್ಕದ ಮನೆಯಲ್ಲಿ ದೇವಕಿ ಆಂಟಿ ಯಾರೂ ಇಲ್ಲದೇ ಅವಳು ಒಂಟಿಯಾಗಿದ್ದಾಗ… +ಮೆಟ್ಟಲ ಅಂಚಿಗೆ ಊರುಗೋಲು ತಾಗಿ ಆಯತಪ್ಪಿ ಅವಳು ಕೆಳಗೆ ಉರುಳಲಿದ್ದಾಗ ಅವನು ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಅವತರಿಸಿಬಂದಿದ್ದ. ಅವಳನ್ನು ತಬ್ಬಿ ಹಿಡಿದು ಆಸರೆ ನೀಡಿದ್ದ… ಅವಳ ಕಣ್ಣುಗಳಲ್ಲಿ ಉಕ್ಕಿದ ಕಣ್ಣೀರನ್ನು ಮೃದುವಾಗಿ ಒರೆಸಿದ್ದ… ಅವಳ ಕಿವಿಯಲ್ಲಿ ತುಟಿಯಿಟ್ಟು ಪಿಸುಗುಟ್ಟಿದ್ದ: “ನಾನು ನಿನಗೆ ಹೀಗೇ ಬದುಕುಪೂರ್ತಿ ಆಸರೆಯಾಗಿರ್ತೀನಿ ಮಾನ್ಸಿ.” +‘ನನಗೂ ಒಬ್ಬ ಪ್ರೇಮಿ!’ +ಅಂತಹ ಕನಸನ್ನು ಅವಳೂ ಕಂಡಿದ್ದಳು. ಅದೆಂದೂ ನಿಜವಾಗಲಾರದೆಂದು ಕೊರಗಿದ್ದಳು. +ಅಂಗವಿಕಲಳಾದ ತನಗೊಬ್ಬ ಪ್ರೇಮಿ! ಪರಾವಲಂಬಿಯಾದ ತನಗೊಬ್ಬ ಪತಿ! +ಅವಳ ಕನಸು ನನಸಾಗತೊಡಗಿತ್ತು. ಅವಳೆದೆಯಲ್ಲಿ ಜೀವನೋತ್ಸಾಹ ಚಿಮ್ಮಿತ್ತು. +ಕಳೆದ ಮೂರು ತಿಂಗಳಲ್ಲಿ ತನ್ನ ನೂರು ಕನಸುಗಳನ್ನು ಅವನೊಡನೆ ಹಂಚಿಕೊಂಡಿದ್ದಳು ಮಾನ್ಸಿ. +“ಪರಾವಲಂಬಿಯ ಬದುಕು ನನಗೆ ಸಾಕಾಗಿಹೋಗಿದೆ.” ಅವನೆದೆಯಲ್ಲಿ ಮುಖ ಹುದುಗಿಸಿ ಬಿಕ್ಕಿದ್ದಳು. +ಅದಕ್ಕೆ ಅವನ ಪ್ರತಿಕ್ರಿಯೆ…? +ಅವಳನ್ನು ತನ್ನೆದೆಗೆ ಗಾಢವಾಗಿ ಒತ್ತಿಕೊಂಡು ಕಿವಿಯಲ್ಲಿ ಉಸುರಿದ್ದ: “ನೀನು ಪರಾವಲಂಬಿ ಅಲ್ಲ. ಬದಲಾಗಿ ನೂರು ಜನ ನಿನ್ನನ್ನ ಅವಲಂಬಿಸಿರ್ತಾರೆ. ನಾನು ಇನ್ನಾರು ತಿಂಗಳಲ್ಲಿ ಪ್ರಾರಂಭಿಸೋ ಬಿಸಿನೆಸ್ ಕನ್ಸಲ್ಟೆನ್ಸಿ ಮತ್ತು ಔಟ್‌ಸೋರ್ಸಿಂಗ್ ಸೆಂಟರ್‌ನ ಛೀಫ್ ಮ್ಯಾನೇಜಿಂಗ್ ಡೈರೆಕ್ಟರ್ ನೀನು.” +ಮಾನ್ಸಿ ಅಗಾಧ ಹರ್ಷದಿಂದ ಕಣ್ಣರಳಿಸಿದ್ದಳು. ಸ್ವರ್ಗದ ಕೀಲಿಕೈ ಅವಳ ಅಂಗೈ ಮೇಲಿತ್ತು… +ನರಹರಿ! +ಮಾನ್ಸಿಯ ಬದುಕಿನಲ್ಲಿ ಎರಡು ವಾರಗಳ ಹಿಂದೆ ಏಕಾ‌ಏಕಿ ಕಾಣಿಸಿಕೊಂಡ ಧೂಮಕೇತು! +ಅವಳ ಯೋಚನಾ ಚಕ್ರ ಫಕ್ಕನೆ ತುಂಡಾಯಿತು. +ಮಳೆಯ ರವವನ್ನು ಮೀರಿ ಕೇಳಿಬಂದ ಏರುದನಿಯ ಮಾತುಗಳು! +ಒಮ್ಮೆಲೆ ಹೆಚ್ಚಿದ ಮಳೆಯ ಆರ್ಭಟ. ದನಿಗಳು ಕರಗಿಹೋದವು. +ಎರಡು ಕ್ಷಣಗಳಲ್ಲಿ ಹತ್ತಿರದಲ್ಲೇ ಎಲ್ಲೋ ಒಂದು ಕಡೆ ಏನೋ ಭಾರವಾಗಿ ಉರುಳಿದ ಸದ್ದು! ಮಳೆಯ ಆರ್ಭಟವನ್ನು ಮೀರಿ ಕೇಳಿಬಂದ ಹೂಂಕಾರ! +ಥಟ್ಟನೆ ಎದ್ದು ಕುಳಿತಳು ಮಾನ್ಸಿ. ಕಿವಿ ನಿಮಿರಿಸಿ ಶಬ್ಧಗಳಿಗಾಗಿ ಕಾದಳು… +ಮಳೆಯ ಏಕತಾನದ ಹೊರತಾಗಿ ಬೇರಾವ ಸದ್ದೂ ಅವಳ ಕಿವಿಗೆ ಬೀಳಲಿಲ್ಲ. +ಶಬ್ಧಗಳು ಕೇಳಿಬಂದದ್ದು ಎಲ್ಲಿಂದ? ಹೂಂಕಾರ ಯಾರದು? +ಅವಳು ಸೋಜಿಗಗೊಂಡಳು. +ಮುಂದಿನ ಐದು ನಿಮಿಷಗಳಲ್ಲಿ ಮಳೆಯ ಹುಯ್ಲಿನ ಹೊರತಾಗಿ ಬೇರಾವ ಶಬ್ಧವೂ ಅವಳ ಕಿವಿಗಳಿಗೆ ಬೀಳಲಿಲ್ಲ. +ಶಬ್ಧ ಕೇಳಿದ್ದು ತನ್ನ ಭ್ರಮೆಯಿರಬೇಕು. +ಹಾಸಿಗೆಯಲ್ಲುರುಳಿ ಕಣ್ಣು ಮುಚ್ಚಿದಳು. ಬೆಳಿಗ್ಗೆ ಬೇಗನೆ ಏಳಬೇಕು. ಓದಲು ಇನ್ನೂ ಮೂವತ್ತು ಪುಟಗಳು ಬಾಕಿ ಉಳಿದಿವೆ… ನಿಧಾನವಾಗಿ ನಿದ್ರೆಯ ಮಡಿಲಿಗೆ ಜಾರಿದಳು… +ಅವಳಿಗೆ ಫಕ್ಕನೆ ಎಚ್ಚರವಾಯಿತು. ಕಣ್ಣು ತೆರೆದಳು. +ಕೋಣೆಯಲ್ಲಿ ಎಕಾ‌ಏಕಿ ಹೆಚ್ಚಿದ ಬೆಳಕು! ಕಿಟಕಿಯಾಚೆ ಕತ್ತಲೆ ಬೆಳಕಿನ ನರ್ತನ! +ಅವಳಿಗೆ ಏನೊಂದೂ ಅರ್ಥವಾಗಲಿಲ್ಲ. +ನಿಧಾನವಾಗಿ ಮೇಲೆದ್ದಳು. ಕೈಯಾಡಿಸಿ ಊರುಗೋಲನ್ನು ಹತ್ತಿರಕ್ಕೆಳೆದುಕೊಂಡಳು. +ಕಿಟಕಿ ಸಮೀಪಿಸಿದ ಮಾನ್ಸಿ ಕಂಡ ದೃಶ್ಯದಿಂದ ಬೆಚ್ಚಿದಳು. ಅವಳ ನಿದ್ದೆ ಹಾರಿಹೋಯಿತು. +ಅವಳ ಕಿಟಕಿಗೆ ನೇರವಾಗಿ ಹತ್ತು ಅಡಿಗಳ ದೂರದಲ್ಲಿದ್ದ ದೇವಕಿಯ ಮನೆಯ ಕಿಟಕಿಯಲ್ಲಿ ಬೆಂಕಿಯ ಜ್ವಾಲೆ! +ಅವಳು ಗಾಬರಿಗೊಂಡಳು. ಬಲಗೈನಿಂದ ಊರುಗೋಲನ್ನು ಆತುರಾತುರವಾಗಿ ಎತ್ತಿಹಾಕುತ್ತಾ ಹಿಂಬಾಗಿಲಿನತ್ತ ಸಾಗಿ ಬೋಲ್ಟ್ ಸರಿಸಿದಳು. ತುಂತುರಾಗಿ ಹನಿಯುತ್ತಿದ್ದ ಮಳೆಯ ತಣ್ಣನೆಯ ಸೂಜಿಯ ಇರಿತಗಳನ್ನು ಲೆಕ್ಕಿಸದೇ ಅರ್ಧ ನಿಮಿಷದಲ್ಲಿ ಅವಳು ದೇವಕಿಯ ಮನೆಯ ಕಿಟಕಿಯ ಬಳಿಯಿದ್ದಳು. +ಏದುಸಿರು ಹಾಕುತ್ತಾ ಕಿಟಕಿಗೆ ಮುಖವೊಡ್ಡಿದಳು. +ಕಿಟಕಿಗೆ ಹತ್ತಿರದ ಮಂಚದ ಮೇಲಿನ ಹಾಸಿಗೆಗೆ ಬೆಂಕಿ ಹತ್ತಿತ್ತು. ಹಾಸಿಗೆಯ ಮಧ್ಯದಲ್ಲಿ ಗುಪ್ಪೆಯಾಗಿ ಮುದುರಿಬಿದ್ದಿದ್ದ ವಸ್ತು! ಬೆಂಕಿ ಅದರ ಅಂಚನ್ನು ನುಂಗತೊಡಗಿತ್ತು. +ಮನೆಯಲ್ಲಿ ಯಾರೂ ಇಲ್ಲವೇ? +ನನಗೆ ತಿಳಿದಂತೆ ದೇವಕಿ ಆಂಟಿ ಬೆಳಿಗ್ಗೆ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲಿದ್ದ ತಾಯಿಯ ಮನೆಗೆ ಹೋಗಿದ್ದಳು. ಅವಳು ಇಂದು ಹಿಂತಿರುಗುವ ಸಾಧ್ಯತೆ ಇಲ್ಲ. ಬದುಕಿನ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ರೋಗಿ ತಂದೆಯ ಆರೈಕೆಗೆ ಅವಳ ಅಗತ್ಯವಿದೆ. ಅವಳ ಗಂಡ ದಯಾನಂದ ಮನೆಗೆ ಹಿಂತಿರುಗುವುದು ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರವೇ. ಮನೆಯಲ್ಲಿರಬಹುದಾದ ಒಂದೇ‌ಒಂದು ವ್ಯಕ್ತಿ…? ಆ ಧೂಮಕೇತು…. +ಮಾನ್ಸಿ ಚೀರಿದಳು. +ಬೆಂಕಿ ನುಂಗತೊಡಗಿದ್ದ ಮಂದದ ರಗ್‌ನ ಅಡಿಯಲ್ಲಿ ಕಂಡ ಎರಡು ಕಾಲುಗಳು! ಬೆಂಕಿಗೆ ಆಹುತಿಯಾಗುತ್ತಿರುವುದು ಮನುಷ್ಯದೇಹ! +ಅದು ನರಹರಿಯೇ? ಅವನಿಗೇನಾಗಿದೆ? +ಕಿಟಕಿಯ ಗಾಜಿಗೆ ಬಲವಾಗಿ ಮುಖವೊತ್ತಿದಳು. ಕಣ್ಣುಗಳು ಕಿರಿದುಗೊಂಡವು. +ಬೆಂಕಿಯಲ್ಲಿ ಬೇಯುತ್ತಿದ್ದ ಕಾಲೊಂದರಲ್ಲಿ ಕಂಡ ಹೊಳೆಯುವ ವಸ್ತು! +ಅವಳ ಚುರುಕು ಕಣ್ಣುಗಳು ಆ ಹೊಳಪಿನ ವಸ್ತುವನ್ನು ಫಕ್ಕನೆ ಗುರುತಿಸಿದವು. +ಗೆಜ್ಜೆಗಳಿಂದ ಕೂಡಿದ ಕಾಲಂದಿಗೆ! +ಅದು… ಅದು… ದೇವಕಿ ಆಂಟಿಯ ಕಾಲಂದಿಗೆ! +ಮೈಗಾಡ್! ಇದೇನಾಗುತ್ತಿದೆ? +ಮಾನ್ಸಿ ಬೆವತುಹೋದಳು. +ನಾನೀಗ ಯಾರನ್ನಾದರೂ ಕರೆಯಬೇಕು. ನಾಲಿಗೆಗೆ ಬಂದದ್ದು ದಯಾನಂದನ ಹೆಸರೇ. +“ದಯಾ ಅಂಕಲ್.” ಕೂಗಿದಳು. +ಪ್ರತಿಕ್ರಿಯಿಸಿದ್ದು ಒಮ್ಮೆಲೆ ಉದ್ರೇಕಗೊಂಡ ಮಳೆ. +ದಯಾನಂದ ಮನೆಯಲ್ಲಿರುವ ಸಾಧ್ಯತೆ ಇಲ್ಲ. ಬಹುಷಃ ಮನೆಯಲ್ಲಿ ಯಾರೂ ಇಲ್ಲ. +ಎಡಬಲ ತಿರುಗಿದಳು. ರಸ್ತೆಯಾಚೆಗಿನ ಮನೆಯ ಮಹಡಿಯ ಕಿಟಕಿಯಲ್ಲಿ ಮೇಣದಬತ್ತಿಯ ಮಾಸಲು ಬೆಳಕು ದೃಷ್ಟಿಗೆ ನಿಲುಕಿತು. +“ಮಾಧವ್ ಅಂಕಲ್.” ಆ ದಿಕ್ಕಿಗೆ ಮೊಗವೊಡ್ಡಿ ಕೂಗು ಹಾಕಿದಳು. +ಮಾಧವ ರಾವ್‌ನ ಪ್ರತ್ಯುತ್ತರ ಕೇಳಿಬರಲಿಲ್ಲ. +“ಮೀನಾಕ್ಷಿ ಆಂಟೀ.” ಶರೀರದ ಶಕ್ತಿಯನ್ನೆಲ್ಲಾ ಗಂಟಲಿಗೆ ಹೂಡಿ ಕೂಗಿದಳು. +ಅರವತ್ತು ಅಡಿಗಳ ಆಚೆ ಎತ್ತರದಲ್ಲಿದ್ದ ಆ ಮನೆಗೆ ಮಳೆಯ ಆರ್ಭಟವನ್ನು ಮೀರಿ ಅವಳ ಕೂಗು ತಲುಪುವ ಸಾಧ್ಯತೆ ಇರಲಿಲ್ಲ. +ಕಿಟಕಿಯತ್ತ ತಿರುಗಿದಳು. +ನಗ್ನ ಕಾಲುಗಳು ಬೆಂಕಿಯ ಜ್ವಾಲೆಯಲ್ಲಿ ಬೇಯುತ್ತಿದ್ದವು. +‘ನಾನೀಗ ಏನಾದರೂ ಮಾಡಬೇಕು.’ +ಪರಾವಲಂಬಿಯ ಎದೆಯಲ್ಲಿ ಪರೋಪಕಾರದ ಸೆಲೆ. +ಹತಾಷೆಯಿಂದ ಎಡಬಲ ಕಣ್ಣಾಡಿಸಿದಳು ಮಾನ್ಸಿ. ಹುಚ್ಚುಹಿಡಿದಂತೆ ಅತ್ತಿತ್ತ ಹರಿದಾಡಿದ ಕಣ್ಣುಗಳು ಒಂದು ಕಡೆ ಸ್ಥಿರಗೊಂಡವು. +ಕೈತೋಟಕ್ಕೆ ನೀರು ಹಾಯಿಸಲೆಂದು ನಲ್ಲಿಗೆ ಜೋಡಿಸಿದ್ದ ನೀಳವಾದ ಪ್ಲಾಸ್ಟಿಕ್ ಪೈಪ್! +ಅವಳ ತಲೆಯಲ್ಲಿ ಮಿಂಚು ಹೊಳೆಯಿತು. +ಗೋಡೆಯ ಆಸರೆಯಲ್ಲಿ ನಿಂತು ಊರುಗೋಲನ್ನು ಎರಡೂ ಕೈಗಳಲ್ಲಿ ಎತ್ತಿ ಹಿಡಿದಳು. ಮರುಕ್ಷಣ ಊರುಗೋಲಿನ ಮೇಲುಭಾಗದ ದಿಂಡು ಕಿಟಕಿಯ ಗಾಜಿಗೆ ಅಪ್ಪಳಿಸಿತು. ಹೊಡೆತದ ರಭಸಕ್ಕೆ ಗಾಜು ಠಳ್ಳನೆ ಸೀಳಿತು. ಉಸಿರೆಳೆದುಕೊಂಡು ಮತ್ತೆರಡು ಏಟು ಹಾಕಿದಳು. ಗಾಜು ಶತಚೂರುಗಳಾಗಿ ಸಿಡಿದುಬಿತ್ತು. ಹಿಂದೆಯೇ ಬಿಸಿಗಾಳಿ ಅವಳ ಮುಖಕ್ಕೆ ಗಪ್ಪನೆ ರಾಚಿತು. ಜತೆಗೇ ಸುಟ್ಟ ಬಟ್ಟೆ ಹಾಗೂ ಮಾಂಸದ ಕಟು ವಾಸನೆ. +ಊರುಗೋಲನ್ನು ಕಂಕುಳಿಗೆ ಸೇರಿಸಿ ಮುಂದೆ ಹೆಜ್ಜೆಯಿಟ್ಟಳು. ನಲ್ಲಿಯನ್ನು ಪೂರ್ಣಮಟ್ಟಕ್ಕೆ ತಿರುಗಿಸಿ ಪೈಪಿನ ಮತ್ತೊಂದು ತುದಿಯನ್ನು ಎತ್ತಿ ಕೈಯಲ್ಲಿ ಹಿಡಿದು ಕಿಟಕಿಯತ್ತ ತಿರುಗಿದಳು. +ಪೈಪ್ ಹಿಡಿದಿದ್ದ ಬೆರಳುಗಳಿಗೆ ತಣ್ಣನೆಯ ನೀರಿನ ಅನುಭವವಾಗುತ್ತಿದ್ದಂತೇ ಅದನ್ನು ಮೇಲೆತ್ತಿ ಹಿಡಿದಳು. ಪೈಪಿನ ತುದಿಯನ್ನು ಎರಡು ಬೆರಳುಗಳಿಂದ ಚಪ್ಪಟೆಯಾಗಿ ಒತ್ತಿದಳು. ನೀರು ಒಮ್ಮೆಲೆ ಛಿಲ್ಲನೆ ಹತ್ತು ಅಡಿಗಳ ದೂರಕ್ಕೆ ಹಾರಿತು. +ಪೈಪನ್ನು ಕ್ಷಣಕ್ಶಣಕ್ಕೂ ಅತ್ತಿತ್ತ ತಿರುಗಿಸುತ್ತಾ ಮಂಚದ ಉದ್ದಗಲಕ್ಕೂ ನೀರು ಚಿಮ್ಮಿಸಿದಳು… +* * * +-ಎರಡು- +ಎಮರ್ಜೆನ್ಸಿ ಲ್ಯಾಂಪ್ ಹಿಡಿದು ನಿಧಾನವಾಗಿ ಕೋಣೆಯೊಳಗೆ ಹೆಜ್ಜೆಯಿಟ್ಟ ಸಬ್‌ಇನ್ಸ್‌ಪೆಕ್ಟರ್ ಟೈಟಸ್. ಕೋಣೆ ಬೆಚ್ಚಗಿತ್ತು. +ವಿಶಾಲ ಕೋಣೆಯ ಒಂದು ಪಕ್ಕ ಕಿಟಕಿಗೆ ಹೊಂದಿಕೊಂಡಂತಿತ್ತು ಮಂಚ. ಮಂಚದ ತಲೆಭಾಗದ ಬಳಿ ಒಂದು ಬೆತ್ತದ ಕುರ್ಚಿ, ಗೋಡೆಯ ಪಕ್ಕ ಅಂತದೇ ಮತ್ತೊಂದು ಕುರ್ಚಿ, ಮೇಲೆ ಗಾಜಿನ ಹಲಗೆ ಹೊಂದಿಸಿದ್ದ ಬೆತ್ತದ್ದೇ ವೃತ್ತಾಕಾರದ ಟೀಪಾಯ್, ಮುಚ್ಚಿದ ಕಬೋರ್ಡ್, ವಾರ್ಡ್‌ರೋಬ್, ಡ್ರೆಸ್ಸಿಂಗ್ ಟೇಬಲ್, ಪುಸ್ತಕಗಳಿಂದ ತುಂಬಿದ್ದ ಗಾಜಿನ ಬಾಗಿಲಿನ ಕಪಾಟು, ಪುಟ್ಟ ಟೇಬಲ್ ಮೇಲೆ ಒಂದೆರಡು ಪುಸ್ತಕಗಳು, ಒಂದು ಪೆನ್ನು… ಆಕರ್ಷಕ ವಿನ್ಯಾಸದ ಟೈಮ್ ಪೀಸ್… ಮೂಲೆಯಲ್ಲಿ ಎತ್ತರದ ಕಬ್ಬಿಣದ ಟೇಬಲ್ ಮೇಲಿದ್ದ ಪುಟ್ಟ ಅಕ್ವೇರಿಯಂ, ನಿಧಾನವಾಗಿ ಮೈಹೊರಳಿಸುತ್ತಾ ಈಜುತ್ತಿದ್ದ ಎರಡು ಗೋಲ್ಡ್ ಫಿಶ್‌ಗಳು… ಎಲ್ಲವೂ ಸಹಜವಾಗಿತ್ತು. ಯಾವ ವಸ್ತುವಿಗೂ ಯಾವ ಹಾನಿಯೂ ತಟ್ಟಿರಲಿಲ್ಲ. ಯಾವುದೇ ಘರ್ಷಣೆ ನಡೆದ ಕುರುಹೂ ಅಲ್ಲಿರಲಿಲ್ಲ. +ನಿಧಾನವಾಗಿ ಹಾಸಿಗೆಯತ್ತ ನಡೆದ. ಎರಡು ಅಡಿಗಳ ದೂರದಲ್ಲಿ ನಿಂತು ಅರೆಸುಟ್ಟ ಹಾಸಿಗೆಯನ್ನೂ, ಶವವನ್ನೂ ನೋಡಿದ. +ಆರಾಮವಾಗಿ ಮಲಗಿದ ಭಂಗಿಯಲ್ಲಿತ್ತು ದೇವಕಿಯ ಶವ. ಎರಡೂ ಕೈಗಳು ಹೊಟ್ಟೆಯ ಮೇಲೆ ಒರಗಿದ್ದವು. ನಡುವಿನಿಂದ ಕಾಲಿನವರೆಗೆ ಹೊದೆಸಿದ್ದ ರಗ್ ಮುಕ್ಕಾಲು ಪಾಲು ಸುಟ್ಟುಹೋಗಿತ್ತು. ಮಂಡಿಯವರೆಗೆ ಕಾಲುಗಳೂ ಬೆಂದುಹೋಗಿದ್ದವು. ಶವದ ಮೈ ಮೇಲಿದ್ದದ್ದು ಮೆರೂನ್ ರಂಗಿನ ಸೀರೆ, ಬಿಳುಪು ರವಿಕೆ. ಕೊರಳು, ಕಿವಿ, ಮೂಗುಗಳಲ್ಲಿದ್ದ ಆಭರಣಗಳು ಹಾಗೇ ಇದ್ದವು. +ಹತ್ತಿರ ಸರಿದು ದೀಪವನ್ನು ಮುಖದತ್ತ ತಿರುಗಿಸಿದ. ಸುಂದರ ಮುಖದಲ್ಲಿ ಅಗಾಧ ನೋವಿನ ಛಾಯೆ… +ಏನೋ ಕಂಡಂತಾಗಿ ಸೆರಗನ್ನು ತುಸುವೇ ಸರಿಸಿ ಕೊರಳ ಮೇಲೆ ಸೂಕ್ಷ್ಮ ನೋಟ ಹೂಡಿದ. ಕಣ್ಣುಗಳು ನಿಮಿಷದವರೆಗೆ ಅಲ್ಲೇ ಕೀಲಿಸಿದವು. +ಕೊರಳ ಸುತ್ತಲೂ ಗಾಢ ಕೆಂಪಿನ ಗೆರೆ! ಒಂದೆರಡು ಕಡೆ ರಕ್ತ ಜಿನುಗಿ ಹೆಪ್ಪುಗಟ್ಟಿತ್ತು. +ಏಕಾ‌ಏಕಿ ಮೂಗು ಅರಳಿಸಿದ. ಏನೋ ಪರಿಚಿತ ವಾಸನೆ! +ಮುಖದತ್ತ ಮತ್ತೂ ಬಾಗಿದ. ಹೊಳೆಯುತ್ತಿದ್ದ ಹಣೆಯತ್ತ ಮೂಗು ಸರಿಸಿದ. ವಾಸನೆ ಗುರುತಿಗೆ ಹತ್ತಿತು. +ಅಮೃತಾಂಜನ್! +ಹಾಗೆಯೇ ಬಾಗಿದಂತೇ ಮೂಗನ್ನು ಮುಖದ ಬೇರೆಬೇರೆ ಭಾಗಗಳತ್ತ ಸರಿಸಿದ. ಕೊರಳ ಬಳಿ ಬಂದಾಗ ಕ್ಷಣಗಳ ಕಾಲ ಹಾಗೆಯೇ ನಿಂತ. ಅಲ್ಲಿಯೂ ಅಮೃತಾಂಜನ್‌ನ ದಟ್ಟ ಪರಿಮಳ! +ನೆಟ್ಟಗೆ ನಿಂತು ಛಾವಣಿಗೆ ಮೊಗವೆತ್ತಿ ಕಣ್ಣು ಮುಚ್ಚಿದ… +* * * +ಹಣೆಗೆ ಕೈ ಒತ್ತಿ ಬಿಕ್ಕಿದಳು ಮಾನ್ಸಿ. ಸಬ್ ಇನ್ಸ್‌ಪೆಕ್ಟರ್ ಟೈಟಸ್ ನೋಟುಬುಕ್ಕಿನಿಂದ ತಲೆಯೆತ್ತಿದ. +“ದೇವಕಿ ಆಂಟಿ ಮನೇಗೆ ಯಾವಾಗ ಬಂದ್ರು ಅಂತಾನೇ ನಂಗೆ ಗೊತ್ತಾಗ್ಲಿಲ್ಲ. ನಂಗೆ ನೆನಪಿರೋ ಹಾಗೆ ಒಂಬತ್ತು ಗಂಟೆಗೆ ದಯಾ ಅಂಕಲ್ ಮಾಮೂಲಿನಂತೆ ಮನೆಗೆ ಬಂದು ಊಟ ಮಾಡಿ ಹೋದರು. ಆಗ ಆಂಟಿ ಮನೇಲಿರ್ಲಿಲ್ಲ. ‘ಅವಳು ಈ ರಾತ್ರಿ ಮನೆಗೆ ಬರೋದಿಲ್ಲ, ಇನ್ನೂ ಎರಡು ಮೂರು ದಿನ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲೇ ಉಳೀತಾಳೆ’ ಅಂತ ಅಂಕಲ್ ಹೇಳಿದ್ರು. ಹಾಗಿರೋವಾಗ ಆಂಟಿ ಯಾವಾಗ ಬಂದ್ರೋ ಗೊತ್ತಾಗ್ಲಿಲ್ಲ…” ಕಳೆದ ಇಪ್ಪತ್ತು ನಿಮಿಷಗಳಲ್ಲಿ ಅವಳು ಆ ಮಾತುಗಳನ್ನು ಹೇಳಿದ್ದು ಇದು ನಾಲ್ಕನೆಯ ಬಾರಿ. +“ನಿಮಗಾಗಿರೋ ಆಘಾತ ನಂಗರ್ಥ ಆಗತ್ತೆ.” ಕ್ಷಣ ತಡೆದು ಮುಂದುವರೆಸಿದ ಟೈಟಸ್. “ಈಗ ನಿಮಗೆ ವಿಶ್ರಾಂತಿಯ ಅಗತ್ಯ ಇದೆ ಅಂತ ತಿಳೀತೀನಿ. ನಿಮ್ಮ ಮನೇಗೆ ಹೋಗಿ ರೆಸ್ಟ್ ತಗೋಳ್ಳಿ. ನಾಳೆ ನಿಮ್ಮನ್ನ ಮತ್ತೆ ಕಾಣ್ತೀನಿ.” +ಮಾನ್ಸಿಯ ಬಿಕ್ಕುವಿಕೆ ನಿಲ್ಲಲಿಲ್ಲ. ಮಾತುಗಳು ತಡೆತಡೆದು ಬಂದವು. +“ಆಂಟೀನ್ನ ಹೀಗೆ ಮಾ… ಮಾಡಿದೋರು… ಅವ್ರು… ಅವ್ರು… ಯಾರೇ ಆಗಿರ್ಲಿ ಇನ್ಸ್‌ಪೆಕ್ಟರ್, ನೀವು… ನೀವು ಅರೆಸ್ಟ್ ಮಾಡ್ಬೇಕು… ಮಾ…ಡ್ಲೇ…ಬೇಕೂ.” +“ಹೌದಮ್ಮ ಹಾಗೇ ಮಾಡ್ತೀನಿ. ನನ್ನ ಕರ್ತವ್ಯ ಅದು. ಇನ್ನು ನೀವು ಮನೆಗೆ ಹೊರಡಿ. ಈ ದುರಂತಾನ ಮರೆತು ನೆಮ್ಮದಿಯಾಗಿ ನಿದ್ದೆ ಮಾಡಿ. ನಾಳೆ ಪರೀಕ್ಷೇನ ಚೆನ್ನಾಗಿ ಮಾಡ್ಬೇಕು ನೀವು.’ ಅಧಿಕಾರಿಯ ದನಿಯಲ್ಲಿ ಉತ್ತೇಜನವಿತ್ತು. +ಮಾನ್ಸಿ ಮೌನವಾಗಿ ಮೇಲೆದ್ದಳು. +ಕೋಲಿನ ಆಸರೆಯಲ್ಲಿ ನಿಧಾನವಾಗಿ ಕಾಲೆಳೆಯುತ್ತಾ ಬಾಗಿಲು ದಾಟಿದ ಯುವತಿಯತ್ತ ಮರುಕದ ನೋಟ ಬೀರಿದ ಎಸ್ ಐ ಟೈಟಸ್. ಒಮ್ಮೆ ಲೊಚಗುಟ್ಟಿ ಎದುರಿಗೆ ನಿಂತಿದ್ದ ಮಧ್ಯವಯಸ್ಸಿನ ಗಂಡಸಿನತ್ತ ತಿರುಗಿದ. +“ನಿಮ್ಮ ಹೆಸರು ಶಿವಶಂಕರಪ್ಪ ಅಂತ ಹೇಳಿದ್ರಿ.” +ಪಂಚೆ ಬನಿಯನ್‌ನಲ್ಲಿದ್ದ ಶಿವಶಂಕರಪ್ಪ ಎರಡು ಹೆಜ್ಜೆ ಮುಂದೆ ಬಂದು ಹಲ್ಲು ಕಿರಿದ. +“ಹೌದು ಸಾರ್. ನಿಮಗೆ ಫೋನ್ ಮಾಡಿದ್ದು ನಾನೇ.” +“ಸರಿ, ನಿಮ್ಜೊತೆ ಎರಡು ಮಾತಾಡಬೇಕು ನಾನು. ನೀವು ಕಂಡದ್ದು ಏನು ಅಂತ ನಂಗೆ ವಿವರವಾಗಿ ಹೇಳಿಕೆ ಕೊಡಿ.” +ಅದಕ್ಕೇ ಕಾದಿದ್ದವನಂತೆ ಶಿವಶಂಕರಪ್ಪ ಬಾಯಿ ತೆರೆದ. +“ನಂಗಿನ್ನೂ ನಿದ್ದೆ ಬಂದಿರ್ಲಿಲ್ಲ. ಹಾಳು ಸೊಳ್ಳೆ ಕಾಟ ನೋಡಿ. ಈ ಹುಡ್ಗಿ ಕೂಗಿದ್ದು, ಗಾಜು ಒಡೆದ ಸದ್ದು ಕೇಳಿ ಎದ್ದು ಕಿಟಕೀಲಿ ನೋಡ್ದೆ. ಕತ್ಲಲ್ಲಿ ಏನೂ ಕಾಣ್ಲಿಲ್ಲ. ಸಪೋಟಮರ ಬೇರೆ ಅಡ್ಡ ಇತ್ತಲ್ಲ? ಬಾಗಿಲು ತೆರೆದು ಹೊರಗೆ ಬಂದೆ. ಈ ಹುಡ್ಗಿ ನೀರಿನ ಪೈಪ್ ಹಿಡ್ಕೊಂಡು ಕಿಟಕೀ ಹತ್ರ ನಿಂತಿರೋದನ್ನ ನೋಡಿ ಆಶ್ಚರ್ಯ ಆಯ್ತು. ಅವಳ ಹಿಂದೆ ಮತ್ತೊಬ್ಬ ವ್ಯಕ್ತಿ ನಿಂತಿತ್ತು. ಅದು ಗಂಡ್ಸು ಅಂತನ್ಸುತ್ತೆ…” +ಅಧಿಕಾರಿಯ ಹುಬ್ಬುಗಳು ಚಕ್ಕನೆ ಮೇಲೇರಿ ಇಳಿದವು. ಅವನು ಅಚ್ಚರಿಗೊಂಡದ್ದು ಸ್ಪಷ್ಟವಾಗಿತ್ತು. +“ಅಂ! ಏನಂದ್ರಿ? ಆ ಹುಡ್ಗಿ ಹಿಂದೆ ಒಬ್ಬ ಗಂಡಸು ನಿಂತಿದ್ನಾ?” +“ಹೌದು ಸಾರ್. ನಾನು ಚೆನ್ನಾಗೇ ನೋಡ್ದೆ. ಇವಳ ಬೆನ್ನ ಹಿಂದೇನೇ ಅವ್ನು ನಿಂತಿದ್ದದ್ದು.” +“ಅದು ಯಾರು? ಅವನ ಬಗ್ಗೆ ಮಾನ್ಸಿ ಏನೂ ಹೇಳ್ಲೇ ಇಲ್ವಲ್ಲ? ಎಲ್ಲಾನೂ ತಾನೇ ಮಾಡಿದ್ದು, ಕಿಟಕಿ ಗಾಜು ಒಡೆದು ಒಳಕ್ಕೆ ನೀರು ಹಾಯಿಸಿದ್ದು ಎಲ್ಲಾನೂ ತಾನೊಬ್ಳೇ ಮಾಡಿದ್ದು, ಸಹಾಯಕ್ಕೆ ಯಾರೂ ಇರ್‍ಲಿಲ್ಲ ಅಂದಳಲ್ಲ ಅವಳು?” +“ಅವ್ಳು ಹಾಗಂದದ್ದನ್ನ ನಾನೂ ಕೇಳಿಸ್ಕೊಂಡೆ. ನಂಗೆ ಈಗ ಅನ್ಸುತ್ತೆ ಆ ಮನುಷ್ಯ ಹಿಂದೆ ನಿಂತಿದ್ದದ್ದು ಆ ಹುಡ್ಗೀಗೆ ಗೊತ್ತೇ ಇರ್‍ಲಿಲ್ಲ ಅಂತ.” +“ಅವನ ಬಗ್ಗೆ ಆ ಹುಡುಗಿ ಇಲ್ಲಿದ್ದಾಗಲೇ ಯಾಕೆ ಹೇಳ್ಲಿಲ್ಲ ನೀವು? ಅವಳನ್ನ ವಿಚಾರಿಸಬೋದಾಗಿತ್ತು. ಭಾಳಾ ಇಂಪಾರ್ಟೆಂಟ್ ಇದು.” +ಶಿವಶಂಕರಪ್ಪ ಕೈ ಹೊಸಕಿದ. +“ನಾನದನ್ನ ನಿಮ್ಗೆ ಹೇಳೋದಿಕ್ಕೆ ಎರಡ್ಸಲ ಪ್ರಯತ್ನ ಪಟ್ಟೆ. ನೀವು ಕೈ ಅಡ್ಡ ಮಾಡಿ ತಡೆದುಬಿಟ್ರಿ.” +ಅಧಿಕಾರಿಯ ಮುಖ ಇಳಿಯಿತು. +“ಇರ್‍ಲಿ, ಅವಳನ್ನ ಆಮೇಲೆ ವಿಚಾರಿಸ್ಕೋತೀನಿ. ನೀವು ಹೇಳಿ?” +“ಅದೇ… ಇಬ್ರನ್ನೂ ನೋಡಿದ ನಾನು ಇಲ್ಲೇನೋ ನಡೀತಾ ಇದೆ ಅಂತ ಕಾಂಪೌಂಡ್ ಹತ್ರ ಬಂದು ‘ಮಾನ್ಸೀ ಏನಮ್ಮ ಅದೂ’ ಅಂತ ಕೇಳ್ದೆ. ಅದು ಅವಳಿಗೆ ಕೇಳೀಸ್ಲಿಲ್ಲ. ಆದ್ರೆ ಅವಳ ಹಿಂದಿದ್ದ ಆ ಮನುಷ್ಯ ನನ್ನ ಕಡೆ ತಿರುಗಿದ. ನನ್ನನ್ನ ನೋಡಿದೋನೇ ಹಿಂಭಾಗದ ಕಾಂಪೌಂಡ್ ಕಡೆ ಓಡಿದ.” +“ಆಮೇಲೆ?” ಅಧಿಕಾರಿಯ ಹೆಚ್ಚುಕಡಿಮೆ ಚೀರಿದ. +“ನಾನು ಮತ್ತೆ ಮಾನ್ಸೀನ ಕರೆದೆ. ಅದು ಅವಳಿಗೆ ಕೇಳಿಸ್ತು. ‘ಅಂಕಲ್ ಬೇಗ ಇಲ್ಬನ್ನೀ’ ಅಂತ ಕೂಗಿದ್ಲು. ಏನೋ ಅನಾಹುತ ನಡೀತೀದೆ ಅಂತ ನಂಗೆ ಅರ್ಥ ಆಯ್ತು. ಕಾಂಪೌಂಡ್ ಹತ್ತಿ ಒಳಗೆ ಹೋದೆ. ದಯಾನಂದರ ಮನೆ ಒಳಗೆ ಬೆಂಕಿ ಹತ್ಕೊಂಡಿದೆ ಅಂತ ಮಾನ್ಸಿ ಹೇಳಿದ್ಮೇಲೆ ಗೊತ್ತಾಯ್ತು. ಕಿಟಕೀಲಿ ನೋಡ್ದೆ. ಬೆಂಕಿ ಏನೂ ಕಾಣ್ಲಿಲ್ಲ. ಸುಟ್ಟ ವಾಸ್ನೆ ಮಾತ್ರ ಇತ್ತು. ಅಂದ್ರೆ ನಾನು ಅಲ್ಲಿಗೆ ತಲುಪೋದಕ್ಕೆ ಮುಂಚೇನೇ ಮಾನ್ಸಿ ಬೆಂಕೀನ ಆರಿಸ್ಬಿಟ್ಟಿದ್ಲು.” +“ನೀವು ಆಮೇಲೇನ್ಮಾಡಿದ್ರಿ?” +ಮನೇಗೆ ಬಂದು ನಿಮ್ಗೆ ಫೋನ್ ಮಾಡ್ದೆ. ಸೀಟಿ ಬಾರಿಸ್ಕೊಂಡು ಬರ್ತಾ ಇದ್ದ ಘೂರ್ಖಾ ಗುಲಾಬ್ ಸಿಂಗ್‌ಗೆ ವಿಷಯ ತಿಳಿಸ್ದೆ.” +“ಜತೆಗೆ ಅಕ್ಕಪಕ್ಕದ ಜನಾನ್ನೆಲ್ಲಾ ಎಬ್ಬಿಸಿ ಅವರೆಲ್ಲ ಇಲ್ಲಿ ಸೇರೋ ಹಾಗೆ ಮಾಡಿದ್ರಿ.” +ಶಿವಶಂಕರಪ್ಪ ತಲೆ ತಗ್ಗಿಸಿದ. ತಲೆಯೆತ್ತದೇ ಮೆಲ್ಲಗೆ ದನಿ ಹೊರಡಿಸಿದ. +“ನಾಕು ಜನ ಹತ್ರ ಇದ್ರೆ ಮಾನ್ಸಿಗೆ ಒಳ್ಳೇದು ಅಂತ ತಿಳಿದೆ.” +ನೋಟುಬುಕ್ಕಿನ ಮೇಲೆ ಕೈಹೂಡಿದ ಟೈಟಸ್ ಎರಡು ನಿಮಿಷಗಳಲ್ಲಿ ತಲೆಯೆತ್ತಿ ಪ್ರಶ್ನಿಸಿದ. +“ಮಾನ್ಸಿ ಹೇಳಿದ ಪ್ರಕಾರ ದೇವಕಿ ಈ ರಾತ್ರಿ ಮನೆಗೆ ಹಿಂತಿರುಗೋ ಸಾಧ್ಯತೆ ಇರಲಿಲ್ಲವಂತೆ. ಅವರು ಬಂದದ್ದು ಯಾವಾಗ ಅಂತ ನಿಮಗೇನಾದ್ರೂ ಗೊತ್ತೇ?” +ಶಿವಶಂಕರಪ್ಪ ತಲೆ ತುರಿಸಿಕೊಂಡ. +“ರಾತ್ರಿ ಒಂದು ಸಲ ಯಾವುದೋ ವೆಹಿಕಲ್ ಬಂದ ಶಬ್ಧ ಕೇಳಿದ ಹಾಗೆ ನೆನಪು… ಅದು ಸ್ಕೂಟರ್ರೋ, ಇಲ್ಲಾ ಆಟೋನೋ ಗೊತ್ತಾಗ್ಲಿಲ್ಲ.” +“ಆಗ ಎಷ್ಟೊತ್ತಾಗಿತ್ತು?” +ಅವನು ಮತ್ತೆ ತಲೆ ಕೆರೆದ. +“ಇಲ್ಲ ನಂಗೊತ್ತಿಲ್ಲ.” ಕ್ಷಣ ತಡೆದು ಸೇರಿಸಿದ. “ಹತ್ತೂವರೆ ಹತ್ತೂಮುಕ್ಕಾಲರ ಸುಮಾರಿಗೆ ಅಂತ ಕಾಣುತ್ತೆ.” +* * * +ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ಆದಷ್ಟು ಪರಿಶೋಧನೆ ನಡೆಸಿ; ಅಗತ್ಯವಿರುವ ಫೋಟೋಗಳನ್ನು ತೆಗೆಸಿ; ಶವವನ್ನು ಪೋಸ್ಟ್‌ಮಾರ್ಟಂಗೆ ಕಳಿಸಿ; ಅರೆಸುಟ್ಟ ವಸ್ತುಗಳು, ಮಂಚದ ಕೆಳಗೆ ಸಿಕ್ಕಿದ ಮೀಟರ್ ಉದ್ದದ ಕೆಂಪು ನೈಲಾನ್ ದಾರ, ಅಮೃತಾಂಜನ್‌ನ ಪುಟ್ಟ ಬಾಟಲಿ, ಶವದ ತಲೆಯ ಪಕ್ಕ ಸಿಕ್ಕಿದ ಒದ್ದೆಯಾಗಿದ್ದ ಬಿಳುಪು ಕರವಸ್ತ್ರ- ಇಷ್ಟನ್ನೂ ಫೊರೆನ್ಸಿಕ್ ಟೆಸ್ಟ್‌ಗೆ ಕಳಿಸಿ ಸಬ್ ಇನ್ಸ್‌ಪೆಕ್ಟರ್ ಟೈಟಸ್ ಬೆಳಗಿನ ನಾಲ್ಕು ಗಂಟೆಗೆ ಸ್ಟೇಷನ್‌ಗೆ ಹೊರಟ. ಸೀಲ್ ಮಾಡಿದ ಕೋಣೆಯನ್ನು ಕಾಯುವ ಜವಾಬ್ದಾರಿ ಪಿ ಸಿ ಮಾಲಿಂಗನ ತಲೆಯ ಮೇಲೆ ಬಿದ್ದಿತ್ತು. +ಜೀಪ್ ಏರಿದ ಟೈಟಸ್‌ನ ತಲೆಯಲ್ಲಿ ಚಕ್ರ ಸುತ್ತಿತು. +ಕೊಲೆ ಹೇಗೆ ನಡೆದಿರಬಹುದು ಎನ್ನುವ ಬಗ್ಗೆ ನಾನು ಈಗಾಗಲೇ ಒಂದು ತೀರ್ಮಾನಕ್ಕೆ ಬಂದಾಗಿದೆ. ಕೊಲೆಗಾರ ದೇವಕಿಗೆ ತೀರಾ ಹತ್ತಿರದವನೇ ಆಗಿರಬೇಕು. ಎಷ್ಟು ಹತ್ತಿರದವನು ಅಂದರೆ ಹಾಸಿಗೆಯ ಮೇಲೆ ಮಲಗಿದ ಅವಳ ತಲೆಯ ಕಡೆ ಕುರ್ಚಿಯಲ್ಲಿ ಕೂತು ಶೀತದಿಂದ ನರಳುತ್ತಿರಬಹುದಾದ ಅವಳ ಹಣೆ ಮತ್ತು ಕುತ್ತಿಗೆಗೆ ಅಮೃತಾಂಜನ್ ಹಚ್ಚುವಷ್ಟು! ಹಾಗೇ ಹಚ್ಚುತ್ತಾ ಅವಳ ಕಣ್ಣು ತಪ್ಪಿಸಿ ಕೆಂಪು ನೈಲಾನ್ ದಾರವನ್ನು ಏಕಾ‌ಏಕಿ ಅವಳ ಕುತ್ತಿಗೆಗೆ ಸುತ್ತಿ ಬಲವಾಗಿ ಎಳೆದಿದ್ದಾನೆ. ದೇವಕಿಗೆ ಅದು ತೀರಾ ಅನಿರೀಕ್ಷಿತವಾಗಿರಬೇಕು. ಬಹುಷಃ ಹೋರಾಟ ನಡೆಸಲು ಅವಳಿಗೆ ಅವಕಾಶವೇ ಸಿಕ್ಕಿರಲಾರದು… +ಕೊಲೆ ಮಾಡಿದ ನಂತರ ದೇವಕಿಯ ಶವವನ್ನು ಸರಿಯಾಗಿ ಮಲಗಿಸಿ, ಸೊಂಟದವರೆಗೆ ರಗ್ ಹೊದಿಸಿ ಬೆಂಕಿ ಹಚ್ಚಿದ್ದಾನೆ. +ಆತ ಯಾರಿರಬಹುದು? +ಶಿವಶಂಕರಪ್ಪ ಕಂಡ ವ್ಯಕ್ತಿ, ಮಾನ್ಸಿಯ ಹಿಂದೆ ನಿಂತಿದ್ದವನು ಅವನೇ ಇರಬೇಕು. ಮಾನ್ಸಿ ನೀರು ಹಾಯಿಸಿ ಬೆಂಕಿ ಆರಿಸಿದ್ದು ತನ್ನ ಕೆಲಸಕ್ಕೆ ಅವಳು ಮಾಡುತ್ತಿರುವ ಅಡ್ಡಿ ಎಂದವನು ತಿಳಿದನೇ? ಅವಳಿಗರಿವಿಲ್ಲದಂತೇ ಹಿಂದಿನಿಂದ ಅವಳ ಮೇಲೆ ಆಕ್ರಮಣವೆಸಗಿ ಅವಳನ್ನೂ ಕೊಲ್ಲುವ ಉದ್ದೇಶ ಅವನಿಗಿತ್ತೇ? ಶಿವಶಂಕರಪ್ಪನ ಆಗಮನದಿಂದಾಗಿ ಮಾನ್ಸಿಯ ಪ್ರಾಣ ಉಳಿಯಿತೇ? +ಅಂದಹಾಗೆ ದೇವಕಿಯ ಗಂಡ ದಯಾನಂದ ಎಲ್ಲಿ ಹೋದ? ಅವನ ಟೆಕ್ಸ್‌ಟೈಲ್ಸ್ ಫ್ಯಾಕ್ಟರಿಯ ಮ್ಯಾನೇಜರ್ ಹೇಳುವ ಪ್ರಕಾರ ಅವನು ಹತ್ತೂಮುಕ್ಕಾಲಿಗೇ ಫ್ಯಾಕ್ಟರಿಯಿಂದ ಹೊರಟನಂತೆ. ಮನೆಗೆ ಬರದೇ ಎಲ್ಲಿ ಹೋದ? ಮಾನ್ಸಿಯ ಹೇಳಿಕೆಯ ಪ್ರಕಾರ ದೇವಕಿಯ ಮನೆಯಲ್ಲಿ ಅವಳು ಅಸಹಜ ಶಬ್ಧಗಳನ್ನು ಕೇಳಿದ್ದು ಹನ್ನೆರಡು ಗಂಟೆಯ ಸುಮಾರಿಗೆ. ದೇವಕಿಯ ಕೊಲೆಗಾರ ಅವಳ ಗಂಡನೇ ಇರಬಹುದೇ? ಫ್ಯಾಕ್ಟರಿಯಿಂದ ಮನೆಗೆ ಬಂದು ಹೆಂಡತಿಯನ್ನು ಕೊಲೆ ಮಾಡಿ, ನಂತರ ಮಾನ್ಸಿಯನ್ನು ಕೊಲ್ಲಲು ಯತ್ನಿಸಿ ಸೋತು ಓಡಿಹೋಗಿರಬಹುದೇ?… +ಅವನ ಸೆಲ್ ಫೋನ್ ನಂಬರನ್ನು ಮಾನ್ಸಿಯಿಂದ ಪಡೆದು ಹತ್ತು ಹನ್ನೆರಡು ಸಲ ಪ್ರಯತ್ನಿಸಿದರೂ ಪ್ರಯೋಜವಾಗಿರಲಿಲ್ಲ. ರಿಂಗ್ ಹೋಗುತ್ತದೆ. ಆದರೆ ಅವನು ಉತ್ತರಿಸುತ್ತಿಲ್ಲ! ಇದರರ್ಥ ಏನು?” +ಕಣ್ಣ ಮುಂದೆ ತೇಲಿತು ಆಕರ್ಷಕ ಯುವಕನ ಮುಖ. +ಗೋಕುಲ್! +ಚಂದದ ಹೆಸರಿನ ಆಕರ್ಷಕ ತರುಣ. ಕೊಲೆಯಾದ ದೇವಕಿಯ ತಮ್ಮ. ಮಾನ್ಸಿ ಫೋನ್‌ನಲ್ಲಿ ವಿಷಯ ತಿಳಿಸಿದೊಡನೇ ಓಡೋಡಿ ಬಂದಿದ್ದ. ಅಕ್ಕನ ದುರಂತ ಮರಣ ಕಂಡು ಅವನ ದುಃಖದ ಕಟ್ಟೆಯೊಡೆದಿತ್ತು. ಅವನನ್ನು ಸಮಾಧಾನಿಸಲು ನನ್ನಿಂದಲೂ ಸಾಧ್ಯವಾಗಿರಲಿಲ್ಲ… +ಸ್ಟೇಷನ್ ಸೇರಿ ಟಾಯ್ಲೆಟ್‌ಗೆ ಹೋಗಿಬಂದು ಮುಖಕ್ಕೆ ನೀರು ಚಿಮುಕಿಸಿ ಪೇದೆಯೊಬ್ಬ ತಂದಿಟ್ಟ ಹೊಗೆಯಾಡುತ್ತಿದ್ದ ಕಾಫಿಯ ಲೋಟಕ್ಕೆ ಕೈ ಹಾಕುವಷ್ಟರಲ್ಲಿ ಫೋನ್ ರಿಂಗಾಯಿತು. ರಿಸೀವರ್ ಎತ್ತಿ “ಹಲೋ” ಎಂದ. ಅತ್ತಲಿಂದ ಕೇಳಿಬಂದದ್ದು ದೇವಕಿಯ ಮನೆಯಲ್ಲಿ ಕಾವಲಿರಿಸಿದ್ದ ಪೇದೆ ಮಾಲಿಂಗನ ದನಿ. +“ಸರ್, ಒಂದು ವಿಷ್ಯ.” +“ಏನಯ್ಯ ಅದೂ?” +“ಪಕ್ಕದ ಔಟ್ ಹೌಸ್‌ನಲ್ಲಿ ಒಬ್ಬ ಮನುಷ್ಯ ಮಲಗಿದ್ದಾನೆ. ಅವನು ದಯಾನಂದ ಅವರ ತಮ್ಮ ಅಂತ ಈ ಹುಡ್ಗಿ ಮಾನ್ಸಿ ಹೇಳ್ತಿದಾಳೆ.” +ಅಧಿಕಾರಿಯ ಕಣ್ಣುಗಳು ಕಿರಿದುಗೊಂಡವು. ಅವನು ಅಚ್ಚರಿಗೆ ಸಿಕ್ಕಿದ್ದ. +ದಯಾನಂದನ ತಮ್ಮ! +ಇದ್ದಕ್ಕಿದ್ದಂತೆ ಎಲ್ಲಿಂದ ಅವತರಿಸಿಬಂದ ಅವನು? +“ಮಾನ್ಸಿಗೆ ಫೋನ್ ಕೊಡು.” ಪೇದೆಗೆ ಸೂಚಿಸಿ ರಿಸೀವರನ್ನು ಕಿವಿಗೆ ಮತ್ತಷ್ಟು ಬಲವಾಗಿ ಒತ್ತಿದ. +ರಿಸೀವರ್ ಕೈ ಬದಲಾಯಿಸಿದ ಸದ್ದು. ಹಿಂದೆಯೇ ಮಾನ್ಸಿಯ ಆತುರದ ಮಾತುಗಳು. +“ಸರ್, ದಯಾ ಅಂಕಲ್‌ದು ತಮ್ಮನ್ನ ಪ್ರಶ್ನೆ ಮಾಡ್ಲಿಲ್ಲ ನೀವು.” +“ದಯಾನಂದ ಅವರ ತಮ್ಮ! ಅವರಿಗೊಬ್ಬ ತಮ್ಮ ಇದಾರೆ ಅಂತಾನೇ ನೀವು ಹೇಳಲೇ ಇಲ್ಲವಲ್ಲ?” ತನಗಾಗಿದ್ದ ಅಚ್ಚರಿಯನ್ನು ಹೊರಹಾಕಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. +“ಶಾಕ್‌ನಲ್ಲಿ ನಾನು ಆಗ ಹೇಳೋದನ್ನ ಮರೆತೆ. ದಯಾ ಅಂಕಲ್‌ದು ತಮ್ಮ ನರಹರಿ. ಗೋಕುಲ್ ಅವನ ಬಗ್ಗೆ ನಿಮ್ಗೆ ಹೇಳ್ತಾರೆ.” ರಿಸೀವರ್ ಮತ್ತೆ ಕೈ ಬದಲಾಯಿಸಿದ ಶಬ್ಧ. +ಎರಡು ಕ್ಷಣಗಳಲ್ಲಿ ಗೋಕುಲ್‌ನ ದನಿ ಕೇಳಿಬಂತು. +“ನಮ್ಮಕ್ಕನ ಮೈದುನ ನರಹರಿ. ಇಲ್ಲಿ ಅವನನ್ನ ನೋಡಿದೋರು ಬಹಳ ಕಡಿಮೆ.” ಸ್ವಲ್ಪ ತಡೆದು ಮುಂದುವರೆಸಿದ. “ಸಿನಿಮಾ ಗೀಳು ಹತ್ತಿಸಿಕೊಂಡು ಮದ್ರಾಸ್ ಬಾಂಬೆ ಅಂತ ಹತ್ತು ವರ್ಷಗಳಿಂದ ಅಲೀತಿದ್ದ. ಈಗ ಬುದ್ಧಿ ಬಂದು ಹದಿನೈದು ದಿನಗಳ ಹಿಂದೆ ವಾಪಸ್ ಬಂದಿದ್ದಾನೆ.” +“ಐ ಸೀ! ಈಗೆಲ್ಲಿದ್ದಾರೆ ಆತ?” +“ಇಲ್ಲೇ ಈ ಮನೇಲೇ. ರಾತ್ರಿಯೆಲ್ಲಾ ಅವನು ಇಲ್ಲೇ ಔಟ್ ಹೌಸ್‌ನಲ್ಲೇ ಇದ್ದ.” +ರಾತ್ರಿಯೆಲ್ಲಾ ಮನೆಯಲ್ಲೇ ಇದ್ದ ವ್ಯಕ್ತಿ! ನನಗೆ ಅವನ ಸುಳಿವೇ ಸಿಗಲಿಲ್ಲ! ಅಧಿಕಾರಿ ಮತ್ತೊಮ್ಮೆ ಅಚ್ಚರಿಗೆ ಸಿಕ್ಕಿದ್ದ. +“ರಾತ್ರಿಯೆಲ್ಲಾ ಅಲ್ಲೇ ಇದ್ದರೇ? ನೀವು ನನಗೆ ಹೇಳಲೇ ಇಲ್ಲ.” +ಎರಡು ಕ್ಷಣಗಳ ಮೌನದ ನಂತರ ಅತ್ತಲಿಂದ ಮಾತು ಬಂತು. +“ಗಾಬರಿಯಲ್ಲಿ ಹೇಳೋದು ಮರೆತೆ.” ದನಿ ಕುಗ್ಗಿತ್ತು. +“ಅವರೇ ನನ್ನ ಮುಂದೆ ಬರಬೋದಾಗಿತ್ತಲ್ಲ? ನನ್ನ ಕಣ್ಣಿಂದ ಯಾಕೆ ಮರೆಯಾಗಿದ್ರು ಅವರು?” ಅಧಿಕಾರಿಯ ದನಿಯಲ್ಲಿ ನಸು ಗಡಸುತನ ಇಣುಕಿತ್ತು. +“ಅವನು ಕೋಣೆಯ ಬಾಗಿಲು ಮುಚ್ಚಿ ಮಲಗಿಬಿಟ್ಟಿದ್ದ. ರಾತ್ರಿ ನಡೆದ ಯಾವ ಘಟನೆಯೂ ಅವನ ಅರಿವಿಗೆ ಬಂದಿಲ್ಲ.” +ಅಧಿಕಾರಿಯ ಹಣೆಯಲ್ಲಿ ಸುಕ್ಕುಗಳು ಮೂಡಿದವು. +ಮನೆಯಲ್ಲಿ ಅಷ್ಟೋಂದು ಅವಾಂತರಗಳು ನಡೆಯುತ್ತಿದ್ದರೂ ಎಚ್ಚರವಿಲ್ಲದಷ್ಟು ನಿದ್ದೆ ಆ ವ್ಯಕ್ತಿಗೆ! +ಏನೋ ಪ್ರಶ್ನಿಸಲು ಹೊರಟವನು ಕೊನೇ ಗಳಿಗೆಯಲ್ಲಿ ತಡೆದು ಕ್ಷಣ ಮೌನ ಧರಿಸಿದ. “ಅಲ್ಲೇ ಇರೋದಿಕ್ಕೆ ಹೇಳಿ ಅವರಿಗೆ. ನಾನೀಗಲೇ ಬರ್ತೀದೀನಿ.” ಹೇಳಿ ರಿಸೀವರ್ ಕೆಳಗಿಟ್ಟ. +ಮಾಸಲು ನೀಲಿ ರಂಗಿನ ದೊಗಳೆ ಜೀನ್ಸ್ ಪ್ಯಾಂಟ್, ದುಂಡನೆಯ ಕುತ್ತಿಗೆಯ ಬಿಳುಪು ಟೀ ಶರ್ಟ್ ತೊಟ್ಟು ಎದುರಿಗೆ ಕುಳಿತ ಸುಮಾರು ಇಪ್ಪತ್ತೇಳು ಇಪ್ಪತ್ತೆಂಟರ ತರುಣನನ್ನು ಆಸಕ್ತಿಯಿಂದ ನಿರುಕಿಸಿದ ಎಸ್ ಐ ಟೈಟಸ್. ಅಷ್ಟೇನೂ ಪುಷ್ಟವಲ್ಲದ ನೀಳಕಾಯದ ಆಕರ್ಷಕ ತರುಣ ನರಹರಿ. ಗುಂಗುರು ಕೂದಲು, ದಟ್ಟ ಹುಬ್ಬು, ಮುಖದಲ್ಲಿ ಮೂರುನಾಲ್ಕು ದಿನಗಳ ಹುಲುಸು ಬೆಳೆ, ಕಣ್ಣುಗಳಲ್ಲಿ ನಿದ್ದೆ… +“ರಾತ್ರಿ ಇಲ್ಲಿ ಅಷ್ಟೆಲ್ಲಾ ಅವಾಂತರ ನಡೀತಾ ಇದ್ರೂ ನೀವು ನಿದ್ದೆ ಮಾಡೋದಿಕ್ಕೆ ಹ್ಯಾಗೆ ಸಾಧ್ಯ ಆಯ್ತು?” ಟೈಟಸ್ ಅಸಹನೆಯಿಂದ ಪ್ರಶ್ನಿಸಿದ. +“ಇಲ್ಲಿಗೆ ಬಂದಾಗಿನಿಂದ್ಲೂ ನಂಗೆ ಸೊಗಸಾದ ನಿದ್ದೆ ಬರತ್ತೆ. ರಾತ್ರಿ ಹತ್ತು ಗಂಟೆಗೆ ಮಲಗಿದ್ರೆ ಬೆಳಗಿನವರೆಗೆ ಭೂಕಂಪ ಆದ್ರೂ ಎಚ್ಚರ ಆಗಲ್ಲ ನಂಗೆ.” ನಿಧಾನವಾಗಿ ಮಾತು ಹರಿಸಿದ ನರಹರಿ. ಚಂದದ ಮುಖದಷ್ಟೇ ಆಕರ್ಷಕ ಅವನ ದನಿ. +“ಇಲ್ಲಿಗೆ ಬಂದಾಗಿನಿಂದ ಅಂದ್ರೆ! ಅದಕ್ಕೆ ಮೊದ್ಲು ನಿದ್ದೆ ಸರಿಯಾಗಿ ಬರ್ತಾ ಇರಲಿಲ್ಲ ಅಂತ ಅರ್ಥವೇ?” +“ಒಂದು ವಿಧದಲ್ಲಿ ಹಾಗೇನೇ. ನಾನು ನೆಮ್ಮದಿಯಾಗಿ ನಿದ್ರಿಸಿ ವರ್ಷಗಳೇ ಕಳೆದುಹೋಗಿದ್ವು. ಇಲ್ಲಿಗೆ ಬಂದ ಒಂದೆರಡು ದಿನ ಅದೇ ತಾಪತ್ರಯ ಇತ್ತು. ಆಮೇಲೆ ಏನು ಮಾಯೆಯೋ ಗೊತ್ತಿಲ್ಲ, ಹತ್ತು ಗಂಟೆಗೆ ಮಲಗಿದ ತಕ್ಶಣ ಸೊಗಸಾದ ನಿದ್ದೆ ಹತ್ತಿಬಿಡತ್ತೆ. ಬೆಳಗಿನವರೆಗೆ ಕೊರಡಿನ ಹಾಗೆ ಬಿದ್ದುಹೋಗಿರ್ತೀನಿ.” +“ಐ ಸೀ!” ಅಧಿಕಾರಿ ಗಲ್ಲ ತುರಿಸಿಕೊಂಡ. +“ನಿನ್ನೆ ರಾತ್ರಿ ನೀವು ಮಲಗಿದ್ದು ಯಾವಾಗ?” +“ಒಂಬತ್ತೂವರೆಗೆ ಊಟ ಮುಗಿಸ್ದೆ. ಹತ್ತು ಗಂಟೆಗೆ ಹಾಸಿಗೆ ಸೇರಿದ ನೆನಪು.” +“ಮನೇಲಿ ನಿಮ್ಮತ್ತಿಗೆ ಇರ್‍ಲಿಲ್ಲ. ರಾತ್ರಿ ಊಟ ಯಾರು ಬಡಿಸಿದ್ರು?” +ನರಹರಿ ತಲೆಯೆತ್ತಿ ಸೂರು ನೋಡಿದ. ತನಗಷ್ಟಕ್ಕೇ ಎಂಬಂತೆ ಗೊಣಗಿಕೊಂಡ. +“ಅವಳು ಇದ್ದಿದ್ರೂ ಅವಳ ಕೈನ ಊಟ ಮಾಡ್ತಾ ಇರ್‍ಲಿಲ್ಲ ನಾನು.” +“ಏನಂದ್ರಿ?” ಅಧಿಕಾರಿ ಬೆರಗಿಗೆ ಸಿಕ್ಕಿದ್ದ. ನರಹರಿಗೆ ತನ್ನ ಅತ್ತಿಗೆಯ ಮೇಲೆ ಅಸಹನೆ! +“ನಿಮ್ಮ ಮಾತಿನ ಅರ್ಥ?” ಟೈಟಸ್ ಮುಖ ಮುಂದೆ ತಂದ. +ನರಹರಿ ತಲೆ ತಗ್ಗಿಸಿದ. ಗೋಕುಲ್ ಅವನ ನೆರವಿಗೆ ಬಂದ. +“ನರಹರಿಗೂ ಅಕ್ಕನಿಗೂ ಸ್ವಲ್ಪ ಇರುಸುಮುರುಸು. ಇವನಿಲ್ಲಿಗೆ ಬಂದ ಎರಡನೇ ದಿನವೇ ಇಬ್ಬರಿಗೂ ಸ್ವಲ್ಪ ಮಾತು ನಡೀತು.” +“ಅಂದರೆ ನರಹರಿ ಹಿಂತಿರುಗಿದ್ದು ನಿಮ್ಮಕ್ಕನಿಗೆ ಇಷ್ಟ ಆಗಿಲ್ಲ ಅಂತ ಅರ್ಥವೇ?” ನೇರವಾಗಿ ನೋಡುತ್ತಾ ಪ್ರಶ್ನಿಸಿದ ಅಧಿಕಾರಿ. +“ಒಂದು ರೀತೀಲಿ… ಅದು ಹಾಗೇನೇ.” ಗೋಕುಲ್‌ನ ದನಿ ಕುಗ್ಗಿತ್ತು. +“ಅದು ಯಾಕೆ ಅಂತ ಹೇಳ್ತೀರಾ?” ಟೈಟಸ್ ಮುಖ ಮುಂದೆ ತಂದ. +ಗೋಕುಲ್‌ನ ಉತ್ತರ ತಡೆದು ಬಂತು. +“ಇಲ್ಲ ನಂಗೊತ್ತಿಲ್ಲ. ಅವಳು ನಂಗೆ ಏನೂ ಹೇಳ್ಲಿಲ್ಲ.” +“ನೀವು ಕೇಳಬೇಕಾಗಿತ್ತು.” ಅಧಿಕಾರಿ ಪಟ್ಟು ಬಿಡಲಿಲ್ಲ. +“ಇವನು ಅಕ್ಕನ ಮದುವೆಗೂ ಬಂದಿರ್ಲಿಲ್ಲ. ಹೀಗಾಗಿ ಇವನೂ, ಅಕ್ಕನೂ ಸಂಪೂರ್ಣ ಅಪರಿಚಿತರು. ಸ್ವಲ್ಪ ದಿನಗಳ ನಂತರ ಎಲ್ಲವೂ ಸರಿಹೋಗುತ್ತೆ ಅಂತ ತಿಳಿದು ನಾನು ಸುಮ್ಮನಾಗಿಬಿಟ್ಟೆ. ಭಾವ ಸಹಾ ಹಾಗೇ ಅಂದುಕೊಂಡ್ರು” ಗೋಕುಲ್‌ನ ದನಿಯಲ್ಲಿ ಏಕಾ‌ಏಕಿ ಧೃಢತೆ ಕಂಡಿತ್ತು. +ನೋಟುಬುಕ್ಕಿನ ಮೇಲೆ ನಿಮಿಷಗಳ ಕಾಲ ಪೆನ್ನು ಓಡಿಸಿದ ಟೈಟಸ್ ತಲೆಯೆತ್ತಿ ನರಹರಿಯತ್ತ ತಿರುಗಿದ. +“ಮಿ. ನರಹರಿ, ನಿಮಗೂ ನಿಮ್ಮ ಅತ್ತಿಗೆಗೂ ಆಗಾಗ ಘರ್ಷಣೆ ನಡೀತಾ ಇತ್ತು. ನಿಮ್ಮ ಬರವನ್ನ ಆಕೆ ಇಷ್ಟ ಪಡ್ಲಿಲ್ಲ. ಅವರ ಕೈನ ಊಟ ಮಾಡೋದಕ್ಕೂ ಆಗದಷ್ಟು ಕೋಪ ನಿಮಗೆ ಅವರ ಮೇಲೆ.” ನರಹರಿಯ ಮುಖದಲ್ಲಿ ಬದಲಾಗುತ್ತಿದ್ದ ಬಣ್ಣಗಳನ್ನು ಗಮನಿಸುತ್ತಾ ಮುಂದುವರೆಸಿದ. “ನಿನ್ನೆ ರಾತ್ರಿ ನೀವು ಇದೇ ಮನೇಲಿ ಮಲಗಿದ್ರಿ. ಆ ಸಮಯದಲ್ಲಿ ಅವರ ಕೊಲೆ ಆಗಿದೆ. ನಿಮಗೆ ಅದ್ಯಾವುದೂ ಗೊತ್ತಿಲ್ಲ! ನಿಮ್ಮ ಹೇಳಿಕೆಯನ್ನ ನಾನು ನಂಬೋದಿಲ್ಲ.” ಕೊನೆಯ ವಾಕ್ಯ ಇರಿಯುವಂತಿತ್ತು. +ನರಹರಿ ಸರಕ್ಕನೆ ತಲೆಯೆತ್ತಿದ. +“ನಂಬೋದು ಬಿಡೋದು ನಿಮಗೆ ಸೇರಿದ್ದು. ನಾನು ನಿದ್ದೆ ಮಾಡಿದ್ದಂತೂ ನಿಜ.” ಅವನ ದನಿಯಲ್ಲಿ ಏಕಾ‌ಏಕಿ ಒರಟುತನ ಕಂಡಿತ್ತು. ಕೈ ಝಾಡಿಸಿ ಮೇಲೆದ್ದು ನಿಂತ. +ಟೈಟಸ್‌ಗೆ ಇದು ಅನಿರೀಕ್ಷಿತ. ಥಟ್ಟನೆ ಮೇಲೆದ್ದು ಒಂದು ಹೆಜ್ಜೆ ಮುಂದಿಟ್ಟು ಗಡಸು ದನಿಯಲ್ಲಿ ಹೇಳಿದ. +“ಮಿ. ನರಹರಿ! ಯಾರ ಜತೆ ಮಾತಾಡ್ತಾ ಇದೀರಿ ಅನ್ನೋ ಅರಿವಿದೆಯೇ ನಿಮಗೆ?” +ನರಹರಿಯ ಉತ್ತರ ಬಾಣದಂತೆ ಬಂತು. +“ನಿಮ್ಮಿಂದ ಸೌಜನ್ಯ ಕಲೀಬೇಕಾಗಿಲ್ಲ ನಾನು. ನಾನು ಸಂಯಮದಿಂದ ಎರಡು ಸಲ ಹೇಳಿದ ಮಾತನ್ನ ನೀವು ನಂಬದೇಹೋದಾಗ ದನಿ ಎತ್ತರಿಸಿ ಮಾತಾಡೋ ಅಗತ್ಯ ನನಗಿತ್ತು. ಆಯಮ್ಮ ತನ್ನ ಕರ್ಮಕ್ಕೆ ತಾನು ಕೊಲೆಯಾಗಿಹೋದ್ಲು. ಅದಕ್ಕೂ ನಂಗೂ ಯಾವ ಸಂಬಂಧವೂ ಇಲ್ಲ. ನೀವು ನೂರು ಸಲ ಪ್ರಶ್ನೆ ಮಾಡಿದ್ರೂ ನಾನು ಹೇಳೋದು ಇದನ್ನೇ.” +ಅಧಿಕಾರಿ ಮತ್ತೊಮ್ಮೆ ಸೋಜಿಗಕ್ಕೊಳಗಾದ. ನರಹರಿಗೆ ಏನೋ ಹೇಳಹೊರಟ ಗೋಕುಲ್‌ನನ್ನು ಕೈ ಅಡ್ಡತಂದು ತಡೆದ. ನರಹರಿಯ ಕಣ್ಣುಗಳ ಮೇಲೆ ನೋಟ ನೆಟ್ಟು ಗಂಭೀರ ದನಿಯಲ್ಲಿ ಹೇಳಿದ. +“ಈ ಕೊಲೆಗೂ ನಿಮಗೂ ಸಂಬಂಧ ಇದೆ ಅನ್ನೋ ಮಾತನ್ನ ನಾನು ಇದುವರೆಗೆ ಎತ್ತಿಲ್ಲ.” +“ನೇರವಾಗಿ ಹೇಳಿಲ್ಲ. ಆದ್ರೆ ನಿಮ್ಮ ಮಾತಿನ ಅರ್ಥ ಅದೇ ತಾನೇ? ಬೆಳಿಗ್ಗೆ ಬೆಳಿಗ್ಗೆನೇ ಎದ್ದು ನಿಮ್ಮ ಜತೆ ವಾದ ಮಾಡೋಕೆ ತಯಾರಿಲ್ಲ ನಾನು.” ಪಕ್ಕಕ್ಕೆ ತಿರುಗಿ ಎರಡು ಹೆಜ್ಜೆ ಮುಂದಿಟ್ಟ. ಅವನತ್ತ ಸರ್ರನೆ ನುಗ್ಗಿದ ಅಧಿಕಾರಿಯನ್ನು ಗೋಕುಲ್ ತಡೆದ. +“ಮಿ. ಟೈಟಸ್, ಸಮಾಧಾನ ತಂದ್ಕೊಳ್ಳಿ. ಅವನೀಗ ಉದ್ರೇಕದಲ್ಲಿದ್ದಾನೆ. ಇನ್ನೂ ಒಂದೆರದು ಗಂಟೆ ನಿದ್ದೆ ಮಾಡ್ಲಿ. ಆ ನಂತರ ಸ್ನಾನ ಮಾಡ್ಸಿ ನಾನೇ ಸ್ತೇಷನ್‌ಗೆ ಕರಕೊಂಡು ಬರ್ತೀನಿ. ಈಗ ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ ಪ್ಲೀಸ್.” +* * * +-ಮೂರು- +ಸರ್ಕಲ್ ಇನ್ಸ್‌ಪೆಕ್ಟರ್‌ರ ಬೈಗಳು, ನಿನ್ನೆ ರಾತ್ರಿಯ ಪ್ರಕರಣದ ತಲೆ ತಿರುಗಿಸುವ ಗೊಂದಲ- ಎರಡೂ ಒಟ್ಟಿಗೆ ಸೇರಿ ಸಬ್ ಇನ್ಸ್‌ಪೆಕ್ಟರ್ ಟೈಟಸ್‌ನ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳು ಮಾಡಿಬಿಟ್ಟಿದ್ದವು. ರಾತ್ರಿ ಬೇರೆ ನಿದ್ದೆ ಇಲ್ಲ. +ಬೆಳಿಗಿನ ಹೊತ್ತಿಗೆ ತಲೆ “ಧಿಂ” ಎನ್ನುತ್ತಿತ್ತು. ಆತುರಾತುರವಾಗಿ ಮೈಮೇಲೆ ನೀರು ಸುರಿದುಕೊಂಡು ಯೂನಿಫಾರ್ಮ್ ಧರಿಸಿದ. ಡೈನಿಂಗ್ ಟೇಬಲ್‌ಗೆ ಬಂದು ಹೆಂಡತಿ ಇಟ್ಟಿದ್ದ ದೋಸೆಗೆ ಕೈಹಾಕಿದ. ಮನದ ತುಂಬಾ ನಿಲ್ಲದ ಗೊಂದಲಗಳ ಸಂತೆ. ಆತುರದಲ್ಲಿ ಚಟ್ನಿಯಲ್ಲಿ ಹಾಗೆಯೇ ಉಳಿದಿದ್ದ ಮೆಣಸಿನಕಾಯಿಯನ್ನು ಕಚಕ್ಕನೆ ಅಗಿದ. ನಾಲಿಗೆಯಲ್ಲಿ ಭಯಂಕರ ಖಾರ ಜ್ವಾಲೆಯಂತೆ ಭುಗಿಲೆದ್ದಿತು. ಕೆಮ್ಮು ಒತ್ತರಿಸಿಕೊಂಡು ಬಂತು. ಕಣ್ಣುಗಳಲ್ಲಿ ಚಿಮ್ಮಿದ ನೀರು. ನೀರಿನ ಲೋಟಕ್ಕಾಗಿ ಅತ್ತಿತ್ತ ಕಣ್ಣಾಡಿಸಿದ. ಅದು ಕಾಣಲಿಲ್ಲ. +“ನೀರೂ.” ಕೂಗಿದ. +ದೋಸೆ ಹುಯ್ಯುತ್ತಿದ್ದ ರೋಸಮ್ಮನಿಗೆ ಗಂಡನ ಅರ್ತನಾದ ಸರಿಯಾಗಿ ಕೇಳಿಸಲಿಲ್ಲ. +“ಕರೆದ್ರಾ?” ಅಡಿಗೆಮನೆಯಿಂದಲೇ ಕೂಗಿದಳು. +ಎರಡು ಸಲ ಕೆಮ್ಮಿದ ಟೈಟಸ್. “ಹ್ಞೂಂ. ನೀರ್ ತಗೋಂಡ್ ಬಾ.” ದನಿ ಎತ್ತರಿಸಿದ. +“ನೀರಾ?” ಹೆಂಡತಿಯಿಂದ ನೀರಿನ ಬದಲು ಮತ್ತೆ ಪ್ರಶ್ನೆ ಬಂತು. ರೋಸಮ್ಮನ ತಲೆಯಲ್ಲಿದ್ದುದು ಮಧ್ಯಾಹ್ನ ಚಂದ್ರಿಕಾಳ ಮನೆಯಲ್ಲಿನ ಕಿಟಿ ಪಾರ್ಟಿಗೆ ಯಾವ ಸೀರೆ ಉಟ್ಟರೆ ಚಂದ ಎಂಬ ಮಹತ್ತರ ಪ್ರಶ್ನೆ. +“ಹ್ಞೂಂ ಅದೇ. ಬೇಗ ತಗೋಂಡ್ ಬಾ” ಮತ್ತೆರಡು ಸಲ ಕೆಮ್ಮಿದ. +“ಕುಡಿಯೋದಕ್ಕಾ?” ರೋಸಮ್ಮನಿಂದ ಮತ್ತೊಂದು ಪ್ರಶ್ನೆ. +ಅಲ್ಲಿಗೆ ಟೈಟಸ್‌ನ ಸಹನೆಯ ಕಟ್ಟೆಯೊಡೆಯಿತು. +“ಮತ್ತೇನು ತಿಕ ತೊಳೆಯೋದಕ್ಕೆ ಅಂದ್ಕೊಂಡ್ಯಾ?” ಅರಚಿದ. +ರೋಸಮ್ಮನಿಗೆ ಇದು ಸರಿಯಾಗಿ ಕೇಳಿಸಿತು. +“ತಗೋಳ್ರಿ, ಅದನ್ನೇ ತೊಳಕೊಳ್ರೀ.” ಹೇಳುತ್ತಾ ನೀರಿನ ಚೊಂಬನ್ನು ತಂದು ಟೇಬಲ್ ಮೇಲೆ ಕುಕ್ಕಿ ಅಡಿಗೆಮನೆಯೊಳಗೆ ಹೋಗಿಬಿಟ್ಟಳು. +ಟೈಟಸ್‌ನ ಮೈಯೆಲ್ಲಾ ಉರಿದುಹೋಯಿತು. “ಎಲಾ ನಿನ್ನ” ಎಂದು ಅಬ್ಬರಿಸಿ ಧಡಕ್ಕನೆ ಮೇಲೆದ್ದವನು ತಲೆಯ ಮೇಲೇ ಮೊಳಗಿದ ಕರೆಗಂಟೆಯ ಸದ್ದಿಗೆ ಬೆಚ್ಚಿ ನಿಂತಿದ್ದಂತೇ ಮತ್ತೆರಡು ಸಲ ಭಯಂಕರವಾಗಿ ಕೆಮ್ಮಿದ. +ರೋಸಮ್ಮ ಬಾಗಿಲತ್ತ ನಡೆದಳು. +“ಕೆಮ್ತಾ ಇರೋರು ಸಾಹೇಬ್ರೋ ಅಥವಾ ಮನೇನೇ ಕೆಮ್ಕೋತಾ ಇದೆಯೋ? ಈಪಾಟೀ ಸದ್ದು!” ಕೇಳುತ್ತಾ ಒಳಬಂದ ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ. +ಮಾತುಮಾತಿಗೂ “ಈಪಾಟೀ…” ಎಂದು ಸೇರಿಸುತ್ತಿದ್ದ ಅವನನ್ನು ಸ್ಟೇಷನ್‌ನಲ್ಲಿ ಎಲ್ಲರೂ “ಈಪಾಟೀ ಕೋದಂಡಯ್ಯ” ಅಂತಲೇ ಕರೆಯುತ್ತಿದ್ದರು. +ಈಪಾಟೀ ಕೋದಂಡಯ್ಯ ಒಳಬಂದವನೇ ಟೈಟಸ್‌ನತ್ತ ಒಮ್ಮೆ ನೋಡಿ ಮುಖದ ತುಂಬಾ ಕಿರುನಗೆ ತಂದುಕೊಂಡ. +“ಇದೇನ್ ದೇವ್ರೂ ಇದೂ? ಕಣ್ನಲ್ಲಿ ಈಪಾಟೀ ನೀರು!” ಅಂದವನೇ ಗೋಡೆಯ ಮೇಲಿದ್ದ ಕ್ರಿಸ್ತನ ಫೋಟೋದತ್ತ ತಿರುಗಿ ಹೇಳಿದ. “ಅಪ್ಪಾ ಯೇಸುಸ್ವಾಮಿ, ಈವತ್ತು ನನ್ನ ಕಣ್ಣಿಗೆ ಏನೇನು ಬೀಳೋ ಹಾಗೆ ಮಾಡ್ತಾ ಇದೀಯಪ್ಪಾ! ಅಲ್ಲಿ ನೋಡಿದ್ರೆ ದೊಡ್ಡ ಸಾಹೇಬರ ಮೇಲೆ ಅಮ್ಮಾವ್ರ ಸವಾರಿ. ಇಲ್ಲಿ ನೋಡಿದ್ರೆ ಚಿಕ್ಕ ಸಾಹೇಬ್ರ ಕಣ್ನಲ್ಲಿ ತಲಕಾವೇರಿ.” ರೋಸಮ್ಮನತ್ತ ತಿರುಗಿ ನಕ್ಕ. +ಚೊಂಬಿನಲ್ಲಿದ್ದ ನೀರನ್ನೆಲ್ಲಾ ಗಂಟಲಿಗೆ ಸುರಿದುಕೊಂಡ ಟೈಟಸ್ ನ್ಯಾಪ್‌ಕಿನ್‌ನಿಂದ ಕಣ್ಣು ಮೂಗು ಒರೆಸುತ್ತಾ ಪ್ರಶ್ನೆ ಹಾಕಿದ. +“ಸಾಹೇಬರ ಮನೇಗೆ ಹೋಗಿದ್ದೆಯೇನು?” +“ಹ್ಞೂಂ ಅಲ್ಲಿಂದಾನೇ ಬರ್ತಾ ಇದೀನಿ.” ಕುರ್ಚಿ ಎಳೆದು ಕೂತ ಕೋದಂಡಯ್ಯ. +“ಬೆಳಿಗ್ಗೆಬೆಳಿಗ್ಗೇನೇ ಅಲ್ಲಿಗೆ ಪಾದ ಬೆಳೆಸಿದ್ದೀಯ! ಏನು ವಿಷ್ಯ?” ಮುಖ ಮುಂದೆ ತಂದ ಟೈಟಸ್. ಅವನ ತಲೆಗೆ ಮತ್ತೊಂದು ಜೇನುಹುಳು ನುಗ್ಗಿತ್ತು. +“ವಿಷಯ ಭಾರೀದೇ. ಅದನ್ನ ಹೇಳೋದಕ್ಕೆ ಮೊದ್ಲು ನಂಗೆ ಒಂದು ಕಪ್ಪು ಮಸಾಲೆ ಟೀ ಬೇಕು. ಅಮ್ಮಾವ್ರ ಕೈನ ಮಸಾಲೆ ಟೀ ನಾಲಿಗೆಗೆ ಬಿದ್ರೇನೇ ಹೇಳಬೇಕಾದ್ದನ್ನ ಹೇಳಬೇಕಾದ ರೀತೀಲಿ ಹೇಳೋದಿಕ್ಕೆ ನನ್ ತಲೇಗೆ ಹೊಳೆಯೋದು.” +ಅವನನ್ನೊಮ್ಮೆ ಗಂಡನನ್ನೊಮ್ಮೆ ನೋಡುತ್ತಾ ಅಲ್ಲೇ ನಿಂತಿದ್ದ ರೋಸಮ್ಮ ನಗುತ್ತಾ ಅಡಿಗೆಮನೆಯತ್ತ ನಡೆದಳು. +‘ಇನ್ನು ಇವನು ಬಾಯಿ ಬಿಡುವುದು ಟೀ ಗಂಟಲಿಗೆ ಇಳಿದ ಮೇಲೇ.’ ಮನಸ್ಸಿನಲ್ಲೇ ಗೊಣಗಿಕೊಂಡ ಟೈಟಸ್. ತಲೆಯಲ್ಲಿ ಜೇನುಹುಳು ಗುಂಯ್‌ಗುಟ್ಟಿತು. +‘ಇಷ್ಟು ಬೆಳಿಗ್ಗೆಯೇ ಇವನು ಸಾಹೇಬರ ಮನೆಗೆ ಯಾಕೆ ಹೋಗಿದ್ದ? ವಿಷಯ ಭಾರಿಯದೇ ಅನ್ನುತ್ತಿದ್ದಾನೆ! ಅವರು ಇವನಿಗೆ ಏನೂ ಹೇಳಿರಬಹುದು? ನಿನ್ನೆ ಬೇರೆ ನನ್ನ ಮೇಲೆ ಹುಚ್ಚುನಾಯಿಯ ಹಾಗೆ ಎಗರಾಡಿದ್ದರು.’ +ಅವರ ಬೈಗಳುಗಳು ನೆನಪಿಗೆ ಬಂದವು. ಒಮ್ಮೆ ಲೊಚಗುಟ್ಟಿ ಬಾಯಿ ತೆರೆದ. +“ಅಲ್ಲಾ ಕೋದಂಡಯ್ಯ. ನಾನು ಏನೂ ಮಾಡಿಯೇ ಇಲ್ಲ ಅನ್ನೋ ಹಾಗೆ ಮಾತಾಡಿಬಿಟ್ರಲ್ಲ ಅವರು! ನಂಗಂತೂ ಈ ಚಾಕರಿಯೇ ಬೇಜಾರು ಹುಟ್ಟಿಸಿಬಿಟ್ಟಿದೆ. ಯಾವನಿಗೆ ಬೇಕು ಇದು? ರಾಜೀನಾಮೆ ಬರೆದು ಎಸೆದುಬಿಡ್ತೀನಿ. ಮರ್ಯಾದೆಯಾಗಿ ಬದುಕೋದಿಕ್ಕೆ ನೂರು ದಾರಿ ಇವೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ವಾ?” ಬೇಸರ ತೋಡಿಕೊಂಡ. ತಲೆ ಭಾರವಾಗಿ ಕೆಳಗೆ ಬಾಗಿತು. +ಕೋದಂಡಯ್ಯನ ಮುಖದಲ್ಲಿ ಕಿರುನಗೆ ಕಾಣಿಸಿಕೊಂಡಿತು. +“ಹುಲ್ಲು ಮಾತ್ರ ಯಾಕೆ? ದೋಸೆ ಚಟ್ನೀನೂ ಮೇಯೀಸ್ತಾನೆ.” ನಗುತ್ತಾ ಟೈಟಸ್ ತಿನ್ನದೇ ಬಿಟ್ಟಿದ್ದ ತಿಂಡಿಯ ತಟ್ಟೆಯತ್ತ ಕೈಮಾಡಿದ ಕೋದಂಡಯ್ಯ. +ಅಧಿಕಾರಿ ಸರಕ್ಕನೆ ತಲೆಯೆತ್ತಿದ. +“ನಿಂಗೆ ಇದೂ ತಮಾಷೆ. ಸೀರಿಯಸ್‌ನೆಸ್ಸೇ ಇಲ್ಲ.” ಸಿಡುಕಿದ. +ಕೋದಂಡಯ್ಯನ ನಗೆ ದೊಡ್ಡದಾಯಿತು. +“ನಾನು ಭಾಳಾ ಸೀರಿಯಸ್ಸಾಗೇ ಹೇಳ್ತಾ ಇದೀನಿ ಗುರುವೇ. ಈಗ ಈ ದೋಸೆ ಚಟ್ನಿ ತಿನ್ನಿ. ಅದೇ ದೇವರು ಮಧ್ಯಾಹ್ನ ಬಿರಿಯಾನಿ ಮೇಯಿಸ್ತಾನೆ.” +‘ಇವನದು ಯಾವಾಗಲೂ ಇದೇ. ಬರೀ ತರಲೆ ಮಾತು.’ ಮನದಲ್ಲೇ ಗೊಣಗಿಕೊಂಡ ಟೈಟಸ್. ‘ಆದರೂ ಇವನ ಮೇಲೆ ರೇಗಲಾಗದು. ಇವನ ಸಹಕಾರವಿಲ್ಲದೇ ಯಾವ ಕೇಸನ್ನಾದರೂ ಮುಕ್ತಾಯಗೊಳಿಸಲು ನನಗೆ ಇದುವರೆಗೆ ಸಾಧ್ಯವಾಗಿಲ್ಲ. ಮಾತಿನ ಮೋಡಿ ಹಾಕುತ್ತಾ ಎಲ್ಲ ಕಡೆಗೂ ನುಗ್ಗಿ ವಿಷಯ ಹೊರತೆಗೆಯಬಲ್ಲ ಚಾಣಾಕ್ಷ ಇವನು. ಇವನನ್ನು ದೂರ ಮಾಡಿಕೊಳ್ಳಲಾಗದು.’ +“ರಾತ್ರಿ ವಿವೇಕಾನಂದ ನಗರದ ಮನೇಲಿ ಏನೋ ನಡೀತಂತೆ. ತಾವು ಅರ್ಧರಾತ್ರಿಯಿಂದ ಬೆಳಿಗ್ಗೆ ಕೋಳಿ ಕೂಗೂವರ್‍ಗೂ ಅಲ್ಲಿ ಠಿಕಾಣಿ ಹೂಡಿದ್ರಂತೆ?” ಕೋದಂಡಯ್ಯ ಮಾತು ತೆಗೆದ. +“ಹ್ಞೂಂ ಕೋದಂಡಯ್ಯ. ಅದೊಂದು ತಲೆ ತಿರುಗಿಸೋ ಪ್ರಕರಣ. ನಂಗಂತೂ ತಲೆ ಕೆಟ್ಟು ಗೊಬ್ರ ಆಗ್ಬಿಟ್ಟಿದೆ ಕಣಯ್ಯಾ.” ಹಣೆಗೆ ಕೈ ಒತ್ತಿದ ಟೈಟಸ್. +“ಅದು ಯಾವಾಗ್ಲೂ ಗೊಬ್ಬರವೇ ತಾನೆ…” ಚಹದ ಕಪ್ಪನ್ನು ಹಿಡಿದು ಬಂದ ರೋಸಮ್ಮನನ್ನು ಕಂಡು ಕೋದಂಡಯ್ಯನ ಮಾತು ಅಷ್ಟಕ್ಕೇ ನಿಂತಿತು. ಅಷ್ಟರಲ್ಲಾಗಲೇ ಅವನ ಮಾತನ್ನು ಕೇಳಿಸಿಕೊಂಡಿದ್ದ ರೋಸಮ್ಮನ ಮುಖದಲ್ಲಿ ಕಿರುನಗೆ ಮಿಂಚಿತು. ಟೈಟಸ್ ಅವಡುಗಚ್ಚಿದ. +ಅವನತ್ತ ಯಾವ ಗಮನವನ್ನೂ ಕೊಡದೇ ಕೋದಂಡಯ್ಯ ರೋಸಮ್ಮನ ಕೈನಿಂದ ಚಹದ ಕಪ್ಪನ್ನು ಕೈಗೆ ತೆಗೆದುಕೊಂಡ. ಕಪ್ಪಿಗೆ ತುಟಿಯೊತ್ತಿದವನು ಸರಕ್ಕನೆ ತುಟಿ ಹಿಂದೆ ತೆಗೆದ. +“ಏನ್ ತಾಯೀ, ನೀವು ರೋಸಮ್ಮನೋ ಇಲ್ಲಾ ಮೋಸಮ್ಮನೋ? ಟೀ ಈಪಾಟೀ ಒಗರು. ಸಕ್ರೇನೇ ಹಾಕಿಲ್ವಲ್ಲ ನೀವು?” ಮುಖ ಕಿವಿಚಿದ. +“ಅಯ್ಯಯ್ಯೋ ಸಾರೀ ಕೋದಂಡಯ್ಯ. ನಾನು ಗಮನಿಸ್ಲೇ ಇಲ್ಲ. ನನ್ ತಲೆನೂ ಗೊಬ್ರ ಆಗ್ಬಿಟ್ಟಿದೆ ನೋಡು.” ರೋಸಮ್ಮ ಸಕ್ಕರೆಯ ಕುಪ್ಪಿಯನ್ನು ಅವನ ಮುಂದೆ ಸರಿಸಿದಳು. ಗಂಡನತ್ತ ತಿರುಗಿ ಮುಸುಮುಸು ನಗೆ ಹರಿಸಿದಳು. +ಟೈಟಸ್ ಉರಿದುಹೋದ. ‘ಇಬ್ಬರೂ ಸೇರಿ ನನ್ನನ್ನು ತಮಾಷೆ ಮಾಡುತ್ತಿದ್ದಾರಲ್ಲ.’ ಹಲ್ಲು ಕಡಿದ. ಹೆಂಡತಿಯತ್ತ ಉರಿನೋಟ ಬೀರಿದ. ಅವಳ ನಗೆ ದೊಡ್ಡದಾಯಿತು. ಬಾಯಿಗೆ ಸೆರಗು ಒತ್ತಿ ಅಡಿಗೆಮನೆಯತ್ತ ಓಡಿದಳು. +ಟೀಯನ್ನು ಸೊರಸೊರ ಹೀರಿದ ಕೋದಂಡಯ್ಯ ಟೈಟಸ್‌ನ ಗಮನ ಸೆಳೆದ. +“ರಾತ್ರಿ ಏನು ನಡೀತು ಸ್ವಲ್ಪ ಹೇಳ್ತೀರಾ ಸ್ವಾಮೀ?” +ಟೈಟಸ್‌ನ ಮುಖ ಅವನತ್ತ ತಿರುಗಿತು. +“ಅದೊಂದು ರಗಳೆ ಕಣಯ್ಯ. ಮಧ್ಯರಾತ್ರಿ ಹೊತ್ನಲ್ಲಿ ವಿವೇಕಾನಂದ ನಗರದ ಆ ಮನೇಲಿ ಬೆಂಕಿ ಬಿದ್ದಿದೆ, ಬೆಂಕೀನಲ್ಲಿ ಯಾವುದೋ ಮನುಷ್ಯ ದೇಹ ಉರಿದುಹೋಗಿದೆ ಅಂತ ಸ್ಟೇಷನ್‌ಗೆ ಫೋನ್ ಬಂತಂತೆ. ಫಕ್ರುದ್ದೀನ್ ಅದನ್ನ ಮನೇಲಿದ್ದ ನನಗೆ ತಲುಪಿಸ್ದ. ತಕ್ಷಣ ಅಲ್ಲಿಗೆ ಓಡ್ದೆ. ಮನೇ ಬಾಗಿಲು ಲಾಕ್ ಆಗಿತ್ತು. ಬೆಡ್‌ರೂಂನ ಹಾಸಿಗೆ ಬೆಂಕೀಲಿ ಅರ್ಧಕ್ಕರ್ಧ ಸುಟ್ಟುಹೋಗಿತ್ತು. ಹಾಸಿಗೆ ಮೇಲೆ ಒಂದು ಹೆಂಗಸಿನ ಶವ. ಅದೂ ಸಾಕಷ್ಟು ಸುಟ್ಟು ಹೋಗಿತ್ತು ಕಣಯ್ಯ. ಯಾರೋ ಆಯಮ್ಮನ್ನ ಕೊಲೇ ಮಾಡೀ ಹಾಸಿಗೆ ಮೇಲೆ ಮಲಗ್ಸಿ ಬೆಂಕಿ ಹಾಕಿ ಓಡ್ಹೋಗಿದ್ದಾರೆ ಅಂತ ನೋಡಿದ ಕೂಡ್ಲೇ ತಿಳಿದುಹೋಯ್ತು.” +“ಸತ್ತ ಮೇಲೆ ಬೆಂಕಿ ಹಾಕ್ಬೇಕು ತಾನೆ? ಕೊಲೆಗಾರ ಮಾಡಬೇಕಾದದ್ದನ್ನೇ ಮಾಡಿದ್ದಾನಲ್ಲ?” ಚಹದ ಕಪ್ಪನ್ನು ಮೇಜಿನ ಮೇಲಿಡುತ್ತಾ ಹೇಳಿದ ಕೋದಂಡಯ್ಯ. ಮುಖದ ತುಂಬ ತುಂಟನಗೆ. +“ಅದೇನು ಅವನ ಪರ ಮಾತಾಡ್ತಿದೀಯಲ್ಲ? ಅವನೇನು ನಿನ್ನ ಚಿಕ್ಕಪ್ಪನ ಮಗನೋ ಹೇಗೆ?” ಟೈಟಸ್ ಕೆಣಕಿದ. +ಕೋದಂಡಯ್ಯ ಹಣೆ ಬಡಿದುಕೊಂಡ. +“ಬಿಡ್ತು ಅನ್ನಿ. ಕೊಲೆಗಾರ ನನ್ನ ಚಿಕ್ಕಪ್ಪನ ಮಗ! ಶಿವಶಿವಾ. ನಂಗೆ ಚಿಕ್ಕಪ್ಪನೇ ಇಲ್ಲ. ಇರೋರೆಲ್ಲ ದೊಡ್ಡಪ್ಪಂದೀರು ಮಾತ್ರ.” +“ಮತ್ತೆ…! ಹೇಳೋದನ್ನ ತೆಪ್ಪಗೆ ಕೇಳು ಮೊದ್ಲು. ನಿನ್ನ ಹರಕುಬಾಯನ್ನ ಆಮೇಲೆ ತೆಗೆಯೋವಂತೆ.” +ಕೋದಂಡಯ್ಯ ನಾಟಕೀಯವಾಗಿ ಬಾಯಿಯ ಮೇಲೆ ಬೆರಳಿಟ್ಟುಕೊಂಡ. +“ನೋಡು ಕೋದಂಡಯ್ಯ, ಕೊಲೆಗಾರನ ಸುಳಿವು ಒಂಚೂರೂ ಇಲ್ಲ. ಅವನು ಭಾಳಾ ಚಾಲಾಕಿ ಅಂತ ಕಾಣುತ್ತೆ.” +“ಕೊಲೆ ನಡೆದ ಮೊದಲ ದಿನ ಎಲ್ಲ ಕೊಲೆಗಾರ್ರೂ ಭಾಳಾ ಚಾಲಾಕಿಯಾಗೇ ಕಾಣ್ತಾರೆ. ನಾಕು ದಿನದಲ್ಲಿ ಅವರ ಬಂಡವಾಳ ಬಯಲಾಗಿಬಿಡುತ್ತೆ. ಹ್ಞೂಂ ಮುಂದೆ ಹೇಳಿ.” +“ಮುಂದೆ ಏನ್ ಹೇಳ್ಲಿ? ಪೋಸ್ಟ್‌ಮಾರ್ಟಂ ರಿಪೋರ್ಟ್ ಬಂದ ಮೇಲೆ ಕೇಳು. ಆಗ ಹೇಳೋದಕ್ಕೆ ಏನಾದ್ರೂ ಇರತ್ತೆ.” +“ಪೋಸ್ಟ್‌ಮಾರ್ಟಂ ರಿಪೋರ್ಟ್ ಈವತ್ತು ಬರಲ್ಲ. ಸರ್ಕಾರೀ ಆಸ್ಪತ್ರೆ ಡಾಕ್ಟಟ್‌ಗಳು ಈವತ್ತು ಸ್ಟ್ರೈಕ್ ಮಾಡ್ತಾ ಇದಾರೆ ಅನ್ನೋದನ್ನ ನೀವು ಮರೆತ ಹಾಗಿದೆ. ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳೋದು ಬೇಡ. ರಾತ್ರಿ ನೀವು ಮಾಡಿದ ಸಾಧನೆ ಬಗ್ಗೆ ಒಂದು ನಾಲ್ಕು ಮಾತು ಹೇಳಿ. ಹೋದೋರು ಬರೀ ಸುಟ್ಟಮೂತಿಯ ಹೆಣಾ ನೋಡ್ಕೊಂಡು ಹಿಂದಕ್ಕೆ ಬಂದ್ಬಿಟ್ರಾ? ಬದುಕಿರೋರ್‍ಯಾರೂ ಸಿಕ್ಕಿ ಏನೂ ಹೇಳ್ಲಿಲ್ವಾ? ಅಥವಾ ನೀವೇ ಕೇಳ್ಲಿಲ್ವಾ?” ನಕ್ಕ ಕೋದಂಡಯ್ಯ. +“ಸಿಕ್ಕಿದ್ರು ಕಣಯ್ಯ. ಪಕ್ಕದ ಮನೇ ಹುಡ್ಗಿ, ಪಾಪ ಒಂದು ಕಾಲು ಕುಂಟು. ಪಕ್ಕದ ಮನೆಗೆ ಬೆಂಕಿ ಬಿದ್ದಿರೋದನ್ನ ನೋಡಿ ಕೋಲೂರಿಕೊಂಡು ಓಡಿಹೋಗಿ ಕಿಟಕಿ ಗಾಜು ಒಡೆದುಹಾಕಿ ಒಳಕ್ಕೆ ಪೈಪ್‌ನಿಂದ ನೀರು ಹಾಯ್ಸಿ ಬೆಂಕಿ ಆರ್‍ಸಿದಾಳೆ ಕಣಯ್ಯ. ಒಂದ್ಸಲ ಶಾಭಾಸ್ ಅನ್ನಬೇಕು ಅವಳ ಸಾಹಸಕ್ಕೆ.” +“ಅನ್ನೋಣ ಬಿಡಿ, ಅದಕ್ಕೇನಂತೆ? ಒಂದಲ್ಲದಿದ್ರೆ ಎರಡ್ಸಲ ಅನ್ನೋಣ. ಮುಂದೆ ಹೇಳಿ. ಸತ್ತವಳು ಯಾರಂತೆ?” +“ಅದೇ ಮನೆ ಹೆಂಗ್ಸು ಕಣಯ್ಯ. ದೇವಕಿ ಅಂತ ಹೆಸ್ರು.” +“ಐ ಸೀ. ಮನೇಲಿ ಬೇರೆ ಯಾರೂ ಇರ್ಲಿಲ್ವಾ? ಅವಳಿಗೆ ಗಂಡ ಗಿಂಡ ಅಂತ ಯಾರೂ ಇಲ್ವಾ?’ +“ಇದ್ದಾನಂತೆ ಕಣಯ್ಯ. ಆದ್ರೆ ಆ ಮನುಷ್ಯ ಎಲ್ಲೋ ಕಾಣ್ತಾ ಇಲ್ಲ.” +“ಅದೆಲ್ಲಿ ಹಾಳಾಗಿಹೋಗಿದ್ದಾನಂತೆ?” +“ಭಾರೀ ಬಿಸಿನೆಸ್‌ಮ್ಯಾನ್ ಕಣಯ್ಯ ಅವ್ನು. ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಟೆಕ್ಸ್‌ಟೈಲ್ ಫ್ಯಾಕ್ಟರಿ ಇದೆ ಅವಂಗೆ. ದಿನಪೂರ್ತಿ ಅಲ್ಲೆ ಬಿದ್ದಿರ್ತಾನೆ. ರಾತ್ರಿ ಮನೇಗೆ ಬರೋದು ಹನ್ನೊಂದು, ಹನ್ನೆರಡಾದ ಮೇಲೇ ಅಂತೆ. ನಿನ್ನೆ ರಾತ್ರಿ ಮಾತ್ರ ಅವ್ನು ಮನೆಗೆ ಬರ್‍ಲೇ ಇಲ್ಲ. ಬೆಳಗಿನ ಜಾವದವರೆಗೂ ಅವನ ಸುಳಿವೇ ಇಲ್ಲ.” +“ಬರ್‍ಲೇ ಇಲ್ಲ ಅಂದ್ರೆ! ಅದೆಲ್ಲಿ ನೆಗೆದುಬಿದ್ದಿದ್ದಾನೆ ಅವ್ನು?” +“ಅದು ನಂಗೊತ್ತಿಲ್ಲ ಕಣಯ್ಯ. ಬೆಳಿಗ್ಗೆಬೆಳಿಗ್ಗೇನೇ ನೀನು ಬೇರೆ ವಕ್ಕರಿಸಿ ನನ್ನ ತಲೆ ತಿನ್ಬೇಡ.” +“ಹ್ಞೂ ಸರಿ. ಉದ್ದಾರವಾಯ್ತು.” ಕೋದಂಡಯ್ಯ ಲೊಚಗುಟ್ಟಿದ. +“ಯಾಕಯ್ಯ ಹಲ್ಲೀ ಹಂಗೆ ಲೊಚಗುಟ್ತೀಯ? ಶಕುನ ಗಿಕುನ ಹೇಳ್ತಿದೀಯೋ ಹ್ಯಾಗೆ?” +“ಶಕುನ! ಇನ್ನು ಅದು ಬೇರೆ ಕೇಡು. ಹೆಂಡ್ತಿ ಕೊಲೆ ಆದ್ರೆ ಮೊದ್ಲು ಹಿಡೀಬೇಕಾದದ್ದು ಗಂಡನ್ನ ಅನ್ನೋ ಮೂಲಮಂತ್ರಾನ್ನೇ ಮರೆತು ಅವನೆಲ್ಲಿದ್ದಾನೋ ಗೊತ್ತೇ ಇಲ್ಲ ಅಂತ ಕೈ‌ಆಡಿಸಿಬಿಡ್ತಾ ಇದೀರಲ್ಲ? ಏನ್ ಹೇಳ್ಲಿ ನಿಮ್ಮ ಬುದ್ದಿವಂತಿಕೆಗೆ?” +ಟೈಟಸ್ ಅವನನ್ನೇ ದುರುಗುಟ್ಟಿಕೊಂಡು ನೋಡಿದ. +“ನಾನೇನು ಸುಮ್ನೆ ಕೂತಿದ್ದೀನಿ ಅಂದ್ಕೊಂಡ್ಯಾ? ಅವನ ಫ್ಯಾಕ್ಟರಿ, ಅವನಿರಬೋದಾದ ಕಡೆಗೆಲ್ಲಾ ಫೋನ್ ಮಾಡ್ದೆ. ಅವನ ಸುಳಿವು ಸಿಕ್ತಾ ಇಲ್ಲ. ಫಾಕ್ಟರಿ ಮ್ಯಾನೇಜರ್ ಹೇಳೋ ಪ್ರಕಾರ ಆತ ರಾತ್ರಿ ಹತ್ತೂವರೆಗೇ ಮನೆಗೆ ಹೊರಟ್ನಂತೆ. ಮನೆಗಂತೂ ತಲುಪಿಲ್ಲ. ಎಲ್ಲಿ ಹಾಳಾದನೋ ಗೊತ್ತಿಲ್ಲ.” +“ಅಲ್ಲಾ ಗುರೂ, ಭಾರೀ ಬಿಸಿನೆಸ್‌ಮ್ಯಾನ್ ಅಂತೀರಿ. ಅವನತ್ರ ಸೆಲ್‌ಫೋನ್ ಇದ್ದೇ ಇರುತ್ತೆ. ಅದರ ನಂಬರ್‌ಗೆ ಫೋನ್ ಮಾಡಬಾರ್‍ದಾ? ಅದನ್ನೂ ನಾನೇ ಹೇಳಿಕೊಡಬೇಕಾ?” ಕೋದಂಡಯ್ಯ ನಕ್ಕ. +“ನೀ ಬಂದು ಹೇಳೋ ತನಕ ಕಾಯ್ಕೊಂಡು ಕೂತಿದ್ದೀನಿ ಅಂದ್ಕೊಂಡ್ಯಾ? ಆ ನಂಬರ್‌ಗೆ ರಾತ್ರಿ ಒಂದು ಹತ್ತು ಸಲ ಡಯಲ್ ಮಾಡ್ದೆ. ಅದು ರಿಂಗ್ ಆಗುತ್ತೆ. ಆದ್ರೆ ಆ ಮನುಷ್ಯ ಮಾತಾಡ್ತಾ ಇಲ್ಲ.” +“ನಿದ್ದೆ ಗಿದ್ದೆ ಮಾಡಿಬಿಟ್ಟಿದ್ದಾನೋ ಏನೋ.” ಕೋದಂಡಯ್ಯ ಮೆಲ್ಲಗೆ ದನಿ ಎಳೆದ. +ಟೈಟಸ್ ಕೈ ಆಡಿಸಿಬಿಟ್ಟ. +“ನಿಂಗೆಲ್ಲೋ ತಲೆಕೆಟ್ಟಿದೆ. ಮನೆಗೇ ಬರದೇ ಹೋದೋನು ಅದೆಲ್ಲಯ್ಯ ನಿದ್ದೆ ಮಾಡ್ತಾನೆ?” +“ಹ್ಞುಂ! ನೀವಿನ್ನೂ ಎಳಸು ಅನ್ನೋದನ್ನ ಮರೆತುಬಿಟ್ಟಿದ್ದೆ. ಈ ಮನೆಗೆ ಬರದೇಹೋದ್ರೆ ಅವ್ನು ಇನ್ನೊಂದು ಮನೇಗೆ ಹೋಗಿರ್ತಾನೆ. ಈ ಬಿಸಿನೆಸ್‌ಮ್ಯಾನ್‌ಗಳಿಗೆ ಒಂದಕ್ಕಿಂತಾ ಹೆಚ್ಚು ಮನೆಗಳಿರ್‍ತವೆ. ಅಲ್ಲದೇ…” ನಿಲ್ಲಿಸಿದ. +“ಏನು, ಅಲ್ಲದೇ?” ಟೈಟಸ್ ಹುಬ್ಬೇರಿಸಿದ. +“ಒಂದೊಂದು ಮನೇಲೂ ಒಬ್ಬೊಬ್ಬಳು ಮನೆಯಾಕೆ ಇರ್‍ತಾಳೆ.” ಸಣ್ಣಗೆ ನಕ್ಕ ಕೋದಂಡಯ್ಯ. +“ನೀನು ಹೇಳೋದೂ ಸರಿ ಅನ್ನು.” ಟೈಟಸ್‌ನ ಮುಖದಲ್ಲೂ ನಗೆ ಮಿನುಗಿತು. “ಸರಿ, ಈಗೇನು ಮಾಡು ಅಂತೀಯ ನನ್ನನ್ನ?” ವಿಧೇಯ ವಿದ್ಯಾರ್ಥಿಯಂತೆ ಪ್ರಶ್ನಿಸಿದ. +“ಈಗ ಮತ್ತೊಂದ್ಸಲ ಟ್ರೈ ಮಾಡಿ. ಅವನೇನಾದ್ರೂ ಈಗ ಎದ್ದಿರಬೋದೇನೋ.” ಹೇಳುತ್ತಾ ಟೇಬಲ್‌ನ ಮೂಲೆಯಲ್ಲಿದ್ದ ಫೋನನ್ನು ಟೈಟಸ್‌ನತ್ತ ಸರಿಸಿದ ಕೋದಂಡಯ್ಯ. +ರಿಸೀವರ್‌ಗೆ ಕೈ ಹಚ್ಚಿದ ಟೈಟಸ್ ಛಕ್ಕನೆ ತಲೆಯೆತ್ತಿದ. +“ಅಷ್ಟೊತ್ನಿಂದ ಬರೀ ನನ್ನಿಂದ್ಲೇ ಮಾತು ಹೊರಡಿಸ್ತಾ ಇದೀಯಲ್ಲ, ನೀನು ಬೆಳಿಗ್ಗೆ ಬೆಳಿಗ್ಗೇನೇ ಸಾಹೇಬರ ಮನೆಗೆ ಯಾಕೆ ಹೋದದ್ದು ಅನ್ನೋದನ್ನ ಬಾಯಿ ಬಿಡ್ತಾನೇ ಇಲ್ಲ? ಸ್ವಲ್ಪ ಅದು ಹೇಳು ಮೊದ್ಲು. ಫೋನು ಗೀನು ಆಮೇಲೆ ಮಾಡೋಣವಂತೆ.” ಕೋದಂಡಯ್ಯ ಬೆಳಿಗ್ಗೆ ಬೆಳಿಗ್ಗೆಯೇ ಸರ್ಕಲ್ ಇನ್ಸ್‌ಪೆಕ್ಟರ ಮನೆಗೆ ಹೋಗಿದ್ದದ್ದು ಯಾಕೆ ಎಂಬ ಮಹತ್ತರ ಪ್ರಶ್ನೆ ಅವನ ಮನಸ್ಸಿನಲ್ಲಿ ಧುತ್ತನೆ ಎದ್ದು ನಿಂತಿತ್ತು. +ಕೋದಂಡಯ್ಯ ಪಕಪಕನೆ ನಕ್ಕುಬಿಟ್ಟ. +“ಅಯ್ ಬಿಡಿ ದೇವ್ರೂ, ಅದೊಂದ್ ಕತೆ.” +“ಅದೇನದು ಹೇಳಬಾರದಾ?” ಟೈಟಸ್ ಸಿಡಿಮಿಡಿಗುಟ್ಟಿದ. +ಕೋದಂಡಯ್ಯನ ನಗೆ ದೊಡ್ಡದಾಯಿತು. +“ಅವರ ಶ್ರೀಮತಿಯೋರು ಬುಲಾವ್ ಕಳಿಸಿದ್ರು.” +“ಯಾತಕ್ಕೆ?” ಟೈಟಸ್‌ನ ಹುಬ್ಬುಗಳು ಮೇಲೇರಿದವು. +“ಅಂಥಾ ಘನಂದಾರಿ ಕೆಲ್ಸ ಏನೂ ಅಲ್ಲ ಅದು. ಬೋಟಿ ಬಜಾರ್‌ಗೆ ಹೋಗಿ ಮಟನ್ ತರಬೇಕಾಗಿತ್ತಂತೆ.” +“ಅಷ್ಟೇನಾ?” ಟೈಟಸ್‌ನ ಹುಬ್ಬುಗಳು ಛಕ್ಕನೆ ಕೆಳಗಿಳಿದವು. ಕಣ್ಣುಗಳಲ್ಲಿ ಹೊಳಪು. ‘ಸಧ್ಯ, ಸಾಹೇಬರು ಇವನನ್ನು ಕರೆಸಿದ್ದು ನನ್ನ ವಿಷಯದಲ್ಲಲ್ಲ.’ ಸಮಾಧಾನಗೊಂಡ. +“ಹ್ಞೂಂ ಅಷ್ಟೇನೇ. ತರಿಸೋದು ಕಾಲು ಕೇಜಿ ಮಾಂಸ. ಅದಕ್ಕೆ ಎಷ್ಟು ಧಿಮಾಕು ಅಂತೀನಿ ಆಯಮ್ಮಂಗೆ. ಇನ್ನೂರೈವತ್ತು ಗ್ರಾಂ ಮಾಂಸ ತರೋದಿಕ್ಕೆ ಸ್ಟೇಷನ್‌ನಿಂದ ಹೆಡ್ ಕಾನ್ಸ್‌ಟೇಬಲ್ ಹೋಗಬೇಕಾಯ್ತು. ಇನ್ನು ಕೇಜಿಗಟ್ಟಲೆ ತರಬೇಕಾಗಿದ್ದಿದ್ರೆ ಬೆಂಗ್ಳೂರ್‍ನಿಂದ ಐ ಜಿ ಪಿ ಸಾಹೇಬ್ರನ್ನೇ ಕರೆಸ್ತಿದ್ರೋ ಏನೋ.” ಹೇಳುತ್ತಾ ಟೆಲೆಫೋನ್ ಮೇಲೆ ಬೆರಳಿನಿಂದ ಬಡಿದ. “ಅದು ಬಿಡಿ, ಮಾಡಬೇಕಾಗಿರೋ ಕೆಲಸದ ಕಡೆ ಗಮನ ಕೊಡಿ. ಹೊಡೀರಿ ಒಂದು ಫೋನು ಆವಯ್ಯಂಗೆ.” +ಟೈಟಸ್ ಮಾತಿಲ್ಲದೇ ರಿಸೀವರ್ ಕೈಗೆತ್ತಿಕೊಂಡ. ಬಾಯಿಪಾಠವಾಗಿದ್ದ ದಯಾನಂದನ ನಂಬರಿನ ಅಂಕೆಗಳನ್ನು ನಿಧಾನವಾಗಿ ಒಂದೊಂದಾಗಿ ಒತ್ತಿದ. +ಕೊನೇ ಅಂಕೆಯ ಗುಂಡಿಯಿಂದ ಬೆರಳು ತೆಗೆದನೋ ಇಲ್ಲವೋ ಹತ್ತಿರದಲ್ಲೇ ಮೊಳಗಿತು ಮೊಬೈಲ್ ಫೋನ್‌ನ ಇಂಪು ಸಂಗೀತ: “ಸಾರೆ ಜಹಾಂಸೆ ಅಚ್ಛಾ…” +ಬೆಚ್ಚಿ ತಲೆಯೆತ್ತಿದ ಟೈಟಸ್. +ಸಂಗೀತ ಹೊರಡುತ್ತಿರುವುದು ಕೋದಂಡಯ್ಯನ ಶರಟಿನ ಜೇಬಿನಿಂದ! +ಕೋದಂಡಯ್ಯನ ಮುಖದಲ್ಲಿ ಕುಹಕ ನಗೆ. +ಅಧಿಕಾರಿಯ ಗೊಂದಲಗ್ರಸ್ತ ಮುಖದತ್ತ ನೋಡುತ್ತಲೇ ನಿಧಾನವಾಗಿ ಜೇಬಿನಿಂದ ಸೆಲ್‌ಫೋನನ್ನು ಹೊರತೆಗೆದು ಟೇಬಲ್ ಮೇಲಿಟ್ಟ. ಮುಖದಲ್ಲಿ ಅದೇ ಕುಹಕ ನಗೆ. +ಮುಂದಿದ್ದ ಸೆಲ್‌ಫೋನಿನತ್ತ ಅಪನಂಬಿಕೆಯ ನೋಟ ಹೂಡಿದ ಟೈಟಸ್. +ತಿಳಿನೀಲೀ ಬೆಳಕಿನ ಹಿನ್ನೆಲೆಯಲ್ಲಿ ಕಂಡ ಕಪ್ಪು ಅಂಕೆಗಳು. ಅವು ಈಗ ತನ್ನ ಕೈಯಲ್ಲಿರುವ ತನ್ನದೇ ಫೋನ್‌ನ ನಂಬರ್! +ಮುಖದ ಗೊಂದಲ ಮತ್ತೂ ಅಧಿಕವಾಯಿತು. +ಕೋದಂಡಯ್ಯನ ಮುಖದ ನಗೆ ದೊಡ್ಡದಾಯಿತು. +“ಇದೇ ಗುರೂ ಆವಯ್ಯ ದಯಾನಂದನ ಸೆಲ್ ಫೋನು.” +“ಇ… ಇದೆಲ್ಲಿ ಸಿಕ್ತು ಕೋದಂಡಯ್ಯ ನಿಂಗೆ?” +“ಕುವೆಂಪುನಗರ ಬಸ್ ಡಿಪೋದ ಪಕ್ಕದ ಪೊದೆಯಲ್ಲಿ. ಸಿಕ್ಕಿದ್ದು ನಂಗಲ್ಲ. ಮೈತೂಕ ಇಳಿಸೋದಿಕ್ಕೆ ಅಂತ ಬೆಳಗಿನ ವಾಕಿಂಗ್ ಹೊರಟಿದ್ದ ಒಬ್ಬಳು ಗುಂಡಮ್ಮನಿಗೆ. ನಡೀತಾ ಇದ್ದೋಳಿಗೆ ಪೊದೆ ಒಳಗೆ ಇದ್ದಕ್ಕಿದ್ದಂತೆ ಸೆಲ್‌ಫೋನ್ ಸಂಗೀತ ಕೇಳಿಬಂತಂತೆ. ಒಂದು ಗಳಿಗೆ ಗಾಬರಿಯಾಗೋದ್ಲಂತೆ. ಧೈರ್ಯ ತಂದ್ಕೊಂಡು ಬಗ್ಗಿ ನೋಡ್ದಾಗ ಇದು ಕಾಣಿಸ್ತಂತೆ. ಎತ್ಕೊಂಡು ಬಂದು ಅಲ್ಲೇ ಬೂತ್‌ನಲ್ಲಿದ್ದ ನಮ್ಮ ಸಣ್ಣಯ್ಯನ ಕೈಗೆ ಹಾಕಿ ಹೋದ್ಲು. ಅವ್ನು ಅದನ್ನ ನಿಮಗೆ ಕೊಡೋದಕ್ಕೆ ಅಂತ ಬಂದ. ನೀವಿರ್‍ಲಿಲ್ಲ. ನಾ ತಗೋಂಡೆ. ನಿಮ್ಮ ಶ್ರಮಾನ ಸ್ವಲ್ಪ ಕಡಿಮೆ ಮಾಡೋಣ ಅಂತ ಒಂಚೂರು ಪತ್ತೇದಾರಿ ನಡೆಸ್ದೆ.” ಕಣ್ಣು ಮಿಟುಕಿಸಿದ. +“ಏನು ಪತ್ತೇದಾರೀ ನಡೆಸ್ದೆ?” +“ಆ ಮೊಬೈಲ್ ಫೋನ್ ಕಂಪನೀನ ಸಂಪರ್ಕಿಸ್ದೆ. ಆಗ ಅದು ದಯಾನಂದನ ಫೋನ್ ಅಂತ ತಿಳೀತು. ಫೋನ್ ಸಿಕ್ಕಿದ ಜಾಗಕ್ಕೆ ಹೋಗಿ ಕಾಲಾಡಿಸ್ದೆ. ಅಲ್ಲಿ ದ್ವಿಚಕ್ರ ವಾಹನವೊಂದು ಒದ್ದೇ ರಸ್ತೇನಲ್ಲಿ ಸ್ಕಿಡ್ ಆಗಿ ಉರುಳಿದ್ದರ ಗುರುತುಗಳು ಕಂಡುಬಂದ್ವು. ಅಂದ್ರೆ ಈ ದಯಾನಂದ ಅನ್ನೋ ವ್ಯಕ್ತಿಗೆ ಅಕ್ಸಿಡೆಂಟ್ ಆಗಿದೆ, ಆ ಸಮಯದಲ್ಲಿ ಅವನ ಜೇಬಿನಲ್ಲಿದ್ದಿರಬಹುದಾದ ಸೆಲ್‌ಫೋನ್ ಎಗರಿ ರಸ್ತೆಪಕ್ಕದ ಪೊದೆಗೆ ಬಿದ್ದಿದೆ ಅಂತ ಊಹಿಸ್ದೆ. ಅವನಿಗೆ ಗಾಯ ಗೀಯ ಆಗಿ ಆಸ್ಪತ್ರೆನಲ್ಲಿರಬೋದೇನೋ ಅನ್ನಿಸ್ತು. ಪಕ್ಕದಲ್ಲೇ ಇದ್ದ ಒಂದೆರಡು ಆಸ್ಪತ್ರೆಗಳಿಗೆ ಭೇಟಿಕೊಟ್ಟೆ. ಮೂರನೆಯ ಪ್ರಯತ್ನ ಯಶಸ್ವಿ ಆಯ್ತು. ಆ ಮನುಷ್ಯ ಕಾವೇರಿ ನರ್ಸಿಂಗ್ ಹೋಂನಲ್ಲಿ ಪತ್ತೆಯಾಗಿಹೋದ. ರಸ್ತೆ ಪಕ್ಕದಲ್ಲಿ ನರಳ್ತಾ ಬಿದ್ದಿದ್ದ ಅವನನ್ನ ಯಾರೋ ನಿಮ್ಮಂಥಾ ಪುಣ್ಯಾತ್ಮರು ನರ್ಸಿಂಗ್ ಹೋಂಗೆ ಸೇರ್‍ಸಿ ಹೋಗಿದ್ದರಂತೆ.” ವಿವರಣೆ ಮುಗಿಸಿ ತುಟಿಯರಳಿಸಿದ. +ಬಿಟ್ಟಕಣ್ಣು ಬಿಟ್ಟಂತೇ ಕೇಳುತ್ತಿದ್ದ ಟೈಟಸ್ ಬಾಯಿ ತೆರೆದ. +“ಆ ಮನುಷ್ಯನೇ ಈ ದೇವಕಿ ಅನ್ನೋಳ ಗಂಡ ಅಂತ ನಿಂಗೆ ಗೊತ್ತಿತ್ತಾ?” +“ಯಾವಾಗ್ಲೋ ಗೊತ್ತಾಯ್ತು. ಕೃಷ್ಣಮೂರ್ತಿ ಎಲ್ಲಾನೂ ಹೇಳ್ದ. ಅದು ತಿಳಿದ ಮೇಲೇ ಅವನನ್ನ ಹುಡುಕೋದಕ್ಕೆ ನಾನು ಅಷ್ಟು ಮುತುವರ್ಜಿ ವಹಿಸಿದ್ದು.” +“ಅವನ ಜತೆ ಮಾತಾಡಿದ್ಯಾ?” +“ಇಲ್ಲ. ನಾನು ಹೋದಾಗ ಅವ್ನು ನಿದ್ದೆ ಮಾಡ್ತಿದ್ದ. ಅವನನ್ನ ಡಿಸ್ಟರ್ಬ್ ಮಾಡೋದು ಬೇಡ ಅಂತ ನರ್ಸಮ್ಮ ಖಡಾಖಂಡಿತವಾಗಿ ಹೇಳಿಬಿಟ್ಲು. ಆವಯ್ಯಂಗೆ ಮೊಣಕಾಲು ಮುರಿದಿದೆಯಂತೆ. ಈ ಸಮಯದಲ್ಲಿ ಅವನಿಗೆ ಹೆಂಡತಿಯ ಕೊಲೆ ವಿಷಯ ಹೇಳೋದು ಸರಿ ಅಲ್ಲ ಅನ್ನಿಸ್ತು. ಹಿಂದಕ್ಕೆ ಬಂದ್ಬಿಟ್ಟೆ. ಆವಯ್ಯ ಕೊನೇಪಕ್ಷ ಎರಡು ವಾರಗಳವರೆಗೆ ಅಲ್ಲಿಂದ ಅಲುಗಾಡೋ ಹಾಗಿಲ್ಲ. ಅವನ ಜತೆ ಆರಾಮವಾಗಿ ಮಾತಾಡೋದಿಕ್ಕೆ ಬೇಕಾದಷ್ಟು ಸಮಯ ಇದೆ.” +“ಇದನ್ನೆಲ್ಲಾ ನೀನು ನಂಗ್ಯಾಕೆ ತಿಳಿಸ್ಲಿಲ್ಲ?” +“ಮನ್ನಿಸಬೇಕೂ. ಇದರಲ್ಲಿ ಯಾವ ಸಂಚೂ ಇಲ್ಲಾ. ನೀವು ರಾತ್ರಿಯಿಡೀ ಸಖತ್ ಬಿಜ಼ಿಯಾಗಿದ್ರಿ. ಬೆಳಿಗ್ಗೆ ಸ್ಟೇಷನ್‌ಗೆ ಬಂದ ಎರಡು ಕ್ಷಣದಲ್ಲಿ ಮತ್ತೆ ವಿವೇಕಾನಂದನಗರಕ್ಕೆ ಓಡಿದ್ರಿ ಅಂತ ತಿಳೀತು. ಅಲ್ಲಿಂದ ನೇರವಾಗಿ ಮನೇಗೆ ಹೋದ್ರಿ ಅಂತಾನೂ ಗೊತ್ತಾಯ್ತು. ಆರಾಮವಾಗಿ ಮನೇಗೇ ಬಂದು ಅಮ್ಮಾವ್ರ ಕೈನ ಮಸಾಲೆ ಟೀ ಕುಡೀತಾ ವಿಷಯ ಹೇಳೋಣ ಅಂತ ಮಾಡ್ದೆ. ಅಪರಾಧ ಆಗಿದ್ರೆ ಕ್ಷಮಿಸಬೇಕೂ. ಬಡವ ನಾನು, ಮಕ್ಕಳೊಂದಿಗ.” ನಾಟಕೀಯವಾಗಿ ಕೈ ಜೋಡಿಸಿದ. ತಲೆಯೂ ಬಾಗಿತು. +ಟೈಟಸ್ ದಂಗಾಗಿ ಹೋಗಿದ್ದ. +‘ಈ ಕೋದಂಡಯ್ಯ ಎಷ್ಟೊಂದು ಕೆಲಸ ಮಾಡಿದ್ದಾನೆ!’ +“ಇಲ್ಲಿಗೆ ಬಂದ ಕೂಡ್ಲೇ ಇದನ್ನೆಲ್ಲಾ ಯಾಕೆ ಹೇಳ್ಲಿಲ್ಲ ನೀನು? ವಿಷಯ ಗೊತ್ತೇ ಇಲ್ಲ ಅನ್ನೋವ್ನ ಹಾಗೆ ನಾಟಕ ಆಡ್ದೆ? ಏನೂ ಅರೀದ ಮಳ್ಳನ ಹಾಗೆ ನನ್ ಕೈಲಿ ಫೋನ್ ಮಾಡ್ಸಿ ತಮಾಷೆ ನೋಡ್ದೆ.” ಆಕ್ಷೇಪಿಸಿದ. +ಕೋದಂಡಯ್ಯನ ಮುಖದಲ್ಲಿ ಮತ್ತೆ ನಗೆ ಮಿಂಚಿತು. +“ನಾನು ಎಲ್ಲಾನೂ ಹೇಳಬೇಕು ಅಂತಾನೆ ಇಲ್ಲಿಗೆ ಬಂದೆ ದೇವ್ರೂ. ಆದ್ರೆ…” ನಿಲ್ಲಿಸಿದ. +ಟೈಟಸ್‌ನ ಹುಬ್ಬುಗಳು ಮೇಲೇರಿದವು. +“ಏನು ಆದ್ರೆ…?” +ಕೋದಂಡಯ್ಯ ಅಧಿಕಾರಿಯ ಮುಖವನ್ನೇ ನೇರವಾಗಿ ನೋಡುತ್ತಾ ದನಿ ತಗ್ಗಿಸಿ ತಣ್ಣಗೆ ಹೇಳಿದ. +“ನಾನು ಬಂದ ಗಳಿಗೇಲಿ ನೀವು ಆದೇನನ್ನೋ ತೊಳಕೋಬೇಕು ಅಂತ ಅಮ್ಮಾವ್ರನ್ನ ನೀರು ಕೇಳ್ತಾ ಇದ್ರಿ. ಎಲ್ಲಾನೂ ತೊಳಕೊಂಡು ಆರಾಮವಾಗಿ ಕೂತುಕೊಳ್ಲಿ. ಆಮೇಲೆ ಮಾತಾಡೋಣ ಅಂತ ಸುಮ್ನಾದೆ.” ಅವನ ನಗೆ ದೊಡ್ಡದಾಯಿತು. ಟೈಟಸ್ ಅವಡುಗಚ್ಚಿದ. +“ನಿನ್ನ… ನಿನ್ನಾ…” ಅವನ ಮುಂದಿನ ಮಾತುಗಳು ಅಡಿಗೆಮನೆಯಲ್ಲಿ ಎದ್ದ ಕುಲುಕುಲು ನಗೆಯಲ್ಲಿ ಕರಗಿಹೋದವು. +* * * +-ನಾಲ್ಕು- +“ಸಮಾಧಾನ ತಂದ್ಕೊಳ್ಳೀ ಗೋಕುಲ್.” ಪ್ರಿಯಕರನ ಭುಜ ಸವರಿದಳು ಮಾನ್ಸಿ. +ಅಕ್ಕನ ದುರಂತ ಮರಣದಿಂದಾಗಿ ಅವನ ಹೃದಯಕ್ಕೆ ತಟ್ಟಿರಬಹುದಾದ ಆಘಾತದ ಆಳವನ್ನು ಅವಳು ಊಹಿಸಬಲ್ಲಳು. ಅವನಿಗದು ದೊಡ್ಡ ದುರಂತ. ಆ ಗಾಯ ಎಂದೂ ಮಾಯಲಾರದು. ಅವನ ದುಃಖದಲ್ಲಿ ಅವಳು ಸಹಭಾಗಿ. ಅವಳ ಪ್ರೀತಿಯ ದೇವಕಿ ಆಂಟಿ ಇಲ್ಲವಾಗಿದ್ದಳು. +ಗೋಕುಲ್ ಮತ್ತೆ ಬಿಕ್ಕಿದ. +“ಯಾರು ಮಾಡಿರಬೋದು ಇದನ್ನ? ಅವಳು ಯಾರಿಗೂ ಅನ್ಯಾಯ ಮಾಡಿದೋಳಲ್ಲ. ಅವಳು ದೇವತೆಯಂಥೋಳು. ಅವಳಿಗೆ ಹೀಗಾಯ್ತಲ್ಲ. ಆ ದೇವರು ಎಷ್ಟು ಕಟುಕ.” ಮತ್ತೊಮ್ಮೆ ಬಿಕ್ಕಿದ. ಕೆನ್ನೆಗಳ ಮೇಲೆ ಕಣ್ಣೀರು ಇಳಿಯಿತು. +ಅದು ಮಾನ್ಸಿಗೆ ಹೃದಯ ಹಿಂಡುವಂತಹ ನೋಟ. ಅವಳ ಕಣ್ಣುಗಳಲ್ಲೂ ನೀರು ಜಿನುಗಿತು. +ನಿಮಿಷಗಳ ನಂತರ ತಲೆಯೆತ್ತಿ ಹೇಳಿದ ಗೋಕುಲ್. +“ಮಾನ್ಸಿ, ಈ ದುರಂತ ನಿನ್ನ ಓದಿಗೆ ಅಡ್ಡಿ ಆಗಬಾರ್ದು. ಈಗ ನೀನು ತಯಾರಾಗು ಹೋಗು. ನಿನ್ನ ಎಕ್ಸಾಂನ ಕೊನೆ ಪೇಪರ್ ಇಂದು. ಹೋಗಿ ಅದನ್ನ ಬರೆದು ಬಂದುಬಿಡು.” ಅವಳ ಕೈ ಹಿಡಿದ. ತನ್ನ ಬದುಕಿನಲ್ಲಾದ ದುರಂತ ಪ್ರೇಯಸಿಯ ಪ್ರಗತಿಗೆ ಅಡ್ಡಿಯಾಗಬಾರದೆಂಬ ಸಹಜ ಕಾಳಜಿ ಅವನಿಗೆ. +ಮಾನ್ಸಿಯ ಹೃದಯ ತುಂಬಿಬಂತು. +ಆದರೆ ಪರೀಕ್ಷೆ ಬರೆಯುವ ಮಾನಸಿಕ ಚೈತನ್ಯ ಅವಳಲ್ಲಿರಲಿಲ್ಲ. ಅವಳು ದೈಹಿಕವಾಗಿ ಸೋತುಹೋಗಿದ್ದಳು. ಅವಳ ಮನಸ್ಸು ಜರ್ಝರಿತವಾಗಿಹೋಗಿತ್ತು. ಪ್ರತಿಕ್ರಿಯಿಸದೇ ಅವನ ಮುಖವನ್ನೇ ದಿಟ್ಟಿಸಿದಳು. +ಹೊರಗೆ ಜೀಪ್ ನಿಂತ ಸದ್ದಾಯಿತು. ಗೋಕುಲ್ ಛಕ್ಕನೆ ಮೇಲೆದ್ದ. ಮಾನ್ಸಿ ಬದಿಯಲ್ಲಿದ್ದ ಊರುಗೋಲನ್ನು ಕೈಗೆತ್ತಿಕೊಂಡಳು. +ರಾತ್ರಿ ಕಂಡ ಸಬ್ ಇನ್ಸ್‌ಪೆಕ್ಟರ್ ಒಳಬಂದ. ಹಿಂದೆ ಮತ್ತೊಂದು ಅಪರಿಚಿತ ಪೋಲೀಸ್ ಮುಖ. +ಗೋಕುಲ್‌ನತ್ತ ನಗೆಬೀರಿ ಮಾನ್ಸಿಯತ್ತ ತಿರುಗಿದ ಟೈಟಸ್. +“ರಾತ್ರಿ ನೀವು ಕೋಣೆಯೊಳಕ್ಕೆ ನೀರು ಹಾಯಿಸ್ತಾ ಇದ್ದಾಗ ನಿಮ್ಮ ಹಿಂದೆ ಒಬ್ಬ ಗಂಡಸು ನಿಂತಿದ್ದ ಅಂತ ಶಿವಶಂಕರಪ್ಪ ಹೇಳ್ತಾರೆ.” +ಮಾನ್ಸಿಯ ಕಣ್ಣುಗಳು ಸಂಕುಚಿತಗೊಂಡವು. “ಇಲ್ಲ ನನಗದು ಗೊತ್ತಿರಲಿಲ್ಲ.” ಗಾಬರಿಯ ದನಿ ಹೊರಡಿಸಿದಳು. “ನೀವು ಹೋದ ಮೇಲೆ ಶಿವ ಅಂಕಲ್ ಅದನ್ನ ಹೇಳಿದ್ರು.” ಮೆಲ್ಲಗೆ ಸೇರಿಸಿದಳು. +“ಆ ವ್ಯಕ್ತೀನೇ ದೇವಕಿಯವರ ಕೊಲೆಗಾರ ಅಂತ ಊಹೆ ಮಾಡಬೋದು. ಬಹುಷಃ ನಿಮ್ಮ ಮೇಲೆ ಧಾಳಿ ಮಾಡೋ ಉದ್ದೇಶವೂ ಅವನಿಗಿದ್ದಿರಬಹುದು ಅಂತ ನಂಗನ್ಸುತ್ತೆ.” ಮಾತು ಮುಗಿಸಿ ಬೆದರಿದ ಹೆಣ್ಣಿನ ಮುಖದಲ್ಲಿ ಬದಲಾಗುತ್ತಿದ್ದ ಬಣ್ಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ. +ಮಾನ್ಸಿ ಪ್ರತಿಕ್ರಿಯಿಸಲಿಲ್ಲ. ಅಧಿಕಾರಿಯ ಮುಖವನ್ನೇ ದಿಟ್ಟಿಸಿದಳು. +ಒಮ್ಮೆ ಗೋಕುಲ್‌ನತ್ತ ನೋಟ ಹೊರಳಿಸಿ ಮತ್ತೆ ಮಾನ್ಸಿಯತ್ತ ತಿರುಗಿದ ಟೈಟಸ್. +“ಆ ವ್ಯಕ್ತಿ ಯಾರಿರಬಹುದು?” +ಮಾನ್ಸಿಯ ಮುಖದಲ್ಲಿ ಗೊಂದಲ. ಗೋಕುಲ್‌ನತ್ತ ತಿರುಗಿದಳು. ಗೋಕುಲ್ ಅವಳ ನೆರವಿಗೆ ಬಂದ. +“ಅದರ ಬಗ್ಗೆ ನಾವಿಬ್ರೂ ಮಾತಾಡಿದ್ದೀವಿ ಇನ್ಸ್‌ಪೆಕ್ಟರ್. ತನ್ನ ಹಿಂದೆ ಆತ ನಿಂತಿದ್ದದರ ಅರಿವೇ ಅವಳಿಗಿಲ್ಲ. ಅದು ಯಾರಿರಬಹುದು ಅಂತ ಊಹೆ ಮಾಡೋದಿಕ್ಕೆ ನಾವು ಪ್ರಯತ್ನಪಟ್ಟು ಸೋತಿದ್ದೀವಿ. ಅಕ್ಕನಿಗೆ ಇದ್ದ ವೈರಿ ಯಾರು ಅಂತ ನಮಗೆ ತಿಳೀತಾ ಇಲ್ಲ. ನಮ್ಮ ಭಾವನಿಗೆ ಗೊತ್ತಿರಬಹುದೇನೋ. ಆದ್ರೆ ನಿನ್ನೆ ರಾತ್ರಿಯಿಂದ ಅವರ ಪತ್ತೆ ಇಲ್ಲ.” +ಅಧಿಕಾರಿ ಏಕಾ‌ಏಕಿ ವಿಷಯಾಂತರಿಸಿದ. +“ಎಲ್ಲಿ ಆ ಕುಂಭಕರ್ಣ? ಇನ್ನೂ ಎದ್ದಿಲ್ಲವೇ?” +ಮಾನ್ಸಿಯ ಮುಖದಲ್ಲಿ ಮತ್ತೆ ಗೊಂದಲ. ಗೋಕುಲ್ ಅವಳ ಕೈ ತಟ್ಟಿದ. +“ಇನ್ಸ್‌ಪೆಕ್ಟರ್ ಕೇಳ್ತಾ ಇರೋದು ನರಹರಿ ಬಗ್ಗೆ.” +ಅವಳ ಮುಖದಲ್ಲಿ ಏಕಾ‌ಏಕಿ ಮೂಡಿ ಮರೆಯಾದ ಭಯದ ಎಳೆಯನ್ನು ಟೈಟಸ್‌ನ ಸೂಕ್ಷ್ಮ ಕಣ್ಣುಗಳು ಗಮನಿದವು. +“ಹತ್ತು ನಿಮಿಷದ ಹಿಂದೆ ಎದ್ದ. ಈಗ ಸ್ನಾನ ಮಾಡ್ತಾ ಇರಬೋದು. ಇನ್ನರ್ಧ ಗಂಟೇನಲ್ಲಿ ಅವನನ್ನೇ ಸ್ಟೇಷನ್‌ಗೆ ಕರಕೊಂಡು ಬರೋಣ ಅಂತಿದ್ದೆ.” ಗೋಕುಲ್ ಆತುರಾತುರವಾಗಿ ಹೇಳಿದ. +“ಸ್ಟೇಷನ್‌ಗೆ ಕರಕೊಂಡು ಬರೋ ಅಗತ್ಯ ಇಲ್ಲ. ನಾವು ಅವರ ಜತೆ ಇಲ್ಲೇ ಮಾತಾಡ್ತೀವಿ. ಅವರ ಸ್ನಾನ ಮುಗಿಯೋವರೆಗೆ ಕಾಯ್ತೀವಿ.” ಗೋಕುಲ್‌ಗೆ ಹೇಳಿ ಮಾನ್ಸಿಯತ್ತ ತಿರುಗಿದ ಟೈಟಸ್. “ಎರಡು ನಿಮಿಷ ಹೊರಗೆ ಬನ್ನಿ ಮ್ಯಾಡಂ. ನಿಮ್ಮ ಜತೆ ಸ್ವಲ್ಪ ಮಾತಾಡೋದಿದೆ.” ಬಾಗಿಲತ್ತ ಹೆಜ್ಜೆ ಹಾಕಿದ. ಗೋಕುಲ್‌ನತ್ತ ಒಮ್ಮೆ ಆತಂಕದ ನೋಟ ಬೀರಿ ಮಾನ್ಸಿ ನಿಧಾನವಾಗಿ ಹೆಜ್ಜೆ ಸರಿಸಿದಳು. ಅವಳನ್ನು ಹಿಂಬಾಲಿಸಿದ ಗೋಕುಲ್‌ನ ಭುಜ ತಟ್ಟಿದ ಟೈಟಸ್‌ನ ಜತೆ ಬಂದಿದ್ದ ಖಾಕಿಧಾರಿ. +“ಅಲ್ಲಿ ನಿಮ್ಮ ಅಗತ್ಯ ಇಲ್ಲ. ಅವರ ವ್ಯವಹಾರ ಮುಗಿಯೋವರೆಗೆ ನಾವಿಬ್ರೂ ಮಾತಾಡಬೋದಲ್ಲ?” ನಗೆ ಬೀರಿದ. +ಗೋಕುಲ್ ತಟ್ಟನೆ ನಿಂತ. ಕಣ್ಣುಗಳಲ್ಲಿ ಗಲಿಬಿಲಿ. +ಖಾಕಿಧಾರಿ ಅವನ ಕೈ ಒತ್ತಿದ. +“ನಾನು ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ. ದೇವಕಿಯವರ ಕೊಲೆ ತನಿಖೆಯಲ್ಲಿ ಎಸ್ ಐ ಟೈಟಸ್‌ರ ಬಲಗೈ ಬಂಟ.” +“ಕೊಲೆಯಾದ ದೇವಕಿ ನಮ್ಮಕ್ಕ.” ಗೋಕುಲ್ ಮೆಲ್ಲಗೆ ದನಿ ಹೊರಡಿಸಿದ. +“ಅದು ನಂಗೆ ಗೊತ್ತು. ಆಗಿರೋ ದುರಂತಕ್ಕೆ ನಾನು ವಿಷಾದ ಪಡ್ತೀನಿ.” ಗೋಕುಲ್‌ನ ತೋಳನ್ನು ಮೆಲ್ಲಗೆ ಒತ್ತಿದ ಕೋದಂಡಯ್ಯ. ಗೋಕುಲ್ ತಲೆ ತಗ್ಗಿಸಿದ. +“ಈ ದುರಂತದ ಬಗ್ಗೆ ನಿಮಗೆ ತಿಳಿದದ್ದು ಯಾವಾಗ?” ದನಿ ತಗ್ಗಿಸಿ ಪ್ರಶ್ನಿಸಿದ ಕೋದಂಡಯ್ಯ. +“ರಾತ್ರಿ ಮೂರುಗಂಟೆಯ ಹೊತ್ನಲ್ಲಿ. ಮಾನ್ಸಿ ಫೋನ್ ಮಾಡಿ ತಿಳಿಸಿದ್ಲು.” +“ಆಗ ನೀವೆಲ್ಲಿದ್ರಿ?” +“ಬಸ್ ಸ್ಟ್ಯಾಂಡ್‌ನಲ್ಲಿ. ಆಗಷ್ಟೇ ಹೈದ್ರಾಬಾದ್‌ನ ಬಸ್‌ನಿಂದ ಇಳಿದು ಮೊಬೈಲ್ ಆನ್ ಮಾಡಿದ ಅರ್ಧ ನಿಮಿಷದಲ್ಲಿ ಅವಳ ಕಾಲ್ ಬಂತು. ರಾತ್ರಿ ಹನ್ನೆರಡು ಗಂಟೆಯಿಂದ್ಲೂ ಅವಳು ನನಗೆ ಫೋನ್ ಮಾಡೋದಿಕ್ಕೆ ಟ್ರೈ ಮಾಡ್ಥಾನೇ ಇದ್ಲಂತೆ. ಜರ್ನೀನಲ್ಲಿ ನಾನು ಮೊಬೈಲ್‌ನ ಸ್ವಿಚ್ ಆಫ್ ಮಾಡಿ ನಿದ್ದೆ ಮಾಡಿಬಿಟ್ಟಿದ್ದೆ. ಅವಳಿಂದ ವಿಷಯ ತಿಳಿದದ್ದೇ ಇಲ್ಲಿಗೆ ಓಡಿಬಂದೆ.” +“ನೀವು ಏನು ಉದ್ಯೋಗ ಮಾಡ್ತಿದೀರಿ ಗೋಕುಲ್?” +ಏಕಾ‌ಏಕಿ ಬದಲಾದ ಮಾತಿಗೆ ಗೋಕುಲ್ ಅಚ್ಚರಿಗೊಂಡ. ಕ್ಷಣದಲ್ಲಿ ಸುಧಾರಿಸಿಕೊಂಡ. +“ಈಗಷ್ಟೇ ಸ್ಟಡೀಸ್ ಮುಗಿಸಿದ್ದೀನಿ. ಸ್ವಂತದ್ದೇನಾದ್ರೂ ಮಾಡೋ ಯೋಚ್ನೆ ಇದೆ.” +“ಹೌದೇ? ಏನು ಓದಿದ್ದೀರಿ?” +“ಎಂ ಬಿ ಏ… ರ್‍ಯಾಂಕ್ ಹೋಲ್ಡರ್.” ದನಿಯಲ್ಲಿ ಹೆಮ್ಮೆಯಿತ್ತು. +ಕೋದಂಡಯ್ಯನ ಕಣ್ಣುಗಳು ಮಿನುಗಿದವು. +“ವೆರಿ ಗುಡ್. ಎಲ್ಲಿ ಮಾಡಿದ್ದು ಎಂ ಬಿ ಏನ?” +“ಐ ಐ ಎಂ, ಅಹ್ಮದಾಬಾದ್‌ನಲ್ಲಿ.” +“ಐ ಐ ಎಂ, ಅಹ್ಮದಾಬಾದ್! ಜತೆಗೆ ರ್‍ಯಾಂಕ್ ಹೋಲ್ಡರ್! ಅಂದ ಮೇಲೆ ಯಾವ್ದಾದ್ರೂ ಮಲ್ಟಿನ್ಯಾಷನಲ್ ಕಂಪನೀಲಿ ಕರೆದು ಕೆಲ್ಸ ಕೊಡ್ತಾರೆ. ಅರವತ್ತು ಎಪ್ಪತ್ತು ಸಾವಿರ ಸಂಬಳಕ್ಕೆ ಮೋಸ ಇಲ್ಲ.” ಕೋದಂಡಯ್ಯನ ಮಾತಿನಲ್ಲಿ ಮೆಚ್ಚುಗೆ ಇತ್ತು. +ಗೋಕುಲ್ ನಕಾರದಲ್ಲಿ ತಲೆ ಅಲುಗಿಸಿದ. +“ಎರಡು ಮೂರು ಅಫರ್ ಬಂದಿವೆ. ಆದ್ರೆ ನಂಗೆ ಆಸಕ್ತಿಯಿಲ್ಲ.” +“ಯಾಕೆ?” ಕೋದಂಡಯ್ಯನ ದನಿಯಲ್ಲಿ ಅಚ್ಚರಿ ಇತ್ತು. +ತೆರದ ಬಾಗಿಲತ್ತ ಒಮ್ಮೆ ನೋಡಿ ಹೇಳಿದ ಗೋಕುಲ್. +“ಸ್ವಂತವಾಗಿ ಏನಾದ್ರೂ ಮಾಡೋ ಆಸೆ ನಂಗೆ. ಇಲ್ಲೇ ಮೈಸೂರ್‍ನಲ್ಲಿ ಬಿಸಿನೆಸ್ ಕನ್ಸಲ್ಟೆನ್ಸಿ ಶುರು ಮಾಡೋಣ ಅಂತ. ಅದಕ್ಕಾಗಿ ತಯಾರಿ ನಡೆಸ್ತಾ ಇದೀನಿ…” ಕ್ಷಣ ತಡೆದು ಸೇರಿಸಿದ. “ಅದರಲ್ಲಿ ಯಶಸ್ವಿ ಆಗ್ತೀನಿ ಅನ್ನೋ ನಂಬಿಕೆ ಇದೆ ನಂಗೆ.” +“ಭೇಷ್! ನಿಮ್ಮ ಐಡಿಯಾನ ನಾನು ಮೆಚ್ತೀನಿ. ದೈರ್ಯವಾಗಿ ಮುನ್ನುಗ್ಗಿ. ದೇವರು ನಿಮ್ಮ ಜತೆ ಇರ್ತಾನೆ.” ಕೋದಂಡಯ್ಯ ಹಾರ್ದಿಕವಾಗಿ ಗೋಕುಲ್‌ನ ಬೆನ್ನು ತಟ್ಟಿದ. ಗೋಕುಲ್‌ನ ನೋಟವನ್ನನುಸರಿಸಿ ಬಾಗಿಲತ್ತ ನೋಡುತ್ತಾ ಪ್ರಶ್ನೆ ಹಾಕಿದ. +“ಈ ಹುಡುಗಿ ಮಾನ್ಸಿ ಎಷ್ಟು ದಿನದಿಂದ ಪರಿಚಯ ನಿಮಗೆ?” +“ನಾಲ್ಕೈದು ತಿಂಗಳಿರಬೋದು.” ಗೋಕುಲ್‌ನ ಚುಟುಕು ಉತ್ತರ. +“ಇದು ಅವಳ ಅಣ್ಣನ ಮನೆ ಅಂತ ಕೇಳ್ದೆ.” +“ಹೌದು. ಅವರಣ್ಣ ವಸಂತರಾವ್ ದೇಶಪಾಂಡೆಯವರ ಮನೆ. ಈ ಮನೇಲಿ ಮಾನ್ಸಿಗೆ ಸಮಪಾಲಿದೆ.” ಮಾತು ಮುಗಿಸಿ ತುಟಿ ಕಚ್ಚಿಕೊಂಡ ಗೋಕುಲ್. ಹೇಳಬಾರದ್ದನ್ನು ಹೇಳಿಬಿಟ್ಟಂತಹ ಹುಳಿಭಾವನೆ ಮುಖದಲ್ಲಿ. +“ಹ್ಯಾಗೆ?” ಕೋದಂಡಯ್ಯನ ಕಣ್ಣುಗಳಲ್ಲಿ ಅಚ್ಚರಿ ಕುಣಿಯಿತು. ಒಂದು ಹೆಜ್ಜೆ ಮುಂದೆ ಬಂದ. +ಗೋಕುಲ್ ಉತ್ತರಿಸಲು ನಿಧಾನಿಸಿದ. “ಈಗ ಅದೆಲ್ಲ ಯಾಕೆ ಬಿಡಿ.” ತಲೆ ತಗ್ಗಿಸಿದ. +ಕೋದಂಡಯ್ಯ ಬಿಡಲಿಲ್ಲ. +“ಇರಲಿ ಹೇಳಿ. ಆ ಹುಡ್ಗಿ ಎಸ್ ಐ ಜತೆ ಮಾತಾಡಿ ಬರೋವರೆಗೆ ನಾವು ಟೈಂ ಪಾಸ್ ಮಾಡಬೇಕಲ್ಲ? ಸಮಯಾನ ಕೊಲ್ಲೋದಿಕ್ಕೆ ಇನ್ನೊಬ್ಬರ ಬಗ್ಗೆ ಅದರಲ್ಲೂ ಅವರ ಆಸ್ತಿಪಾಸ್ತಿಯ ಬಗ್ಗೆ ಮಾತಾಡೋದಕ್ಕಿಂಥ ಒಳ್ಳೇ ವಿಧಾನ ಯಾವುದಿದೆ.” ಪುಸಲಾಯಿಸಿದ. +ಗೋಕುಲ್ ಬಾಯಿ ತೆರೆದ. +“ಮಾನ್ಸಿಯ ತಂದೆ ತಾಯಿ ಕಳೆದ ವರ್ಷ ಅಕ್ಸಿಡೆಂಟ್‌ನಲ್ಲಿ ತೀರಿಕೊಂಡ್ರು. ಅವರು ಬಿಟ್ಟುಹೋಗಿರೋ ಆಸ್ತಿಯ ಒಟ್ಟುಮೊತ್ತ ಎರಡೂವರೆ ಕೋಟಿಗೂ ಹತ್ತಿರ…” +ಅವನ ಮುಂದಿನ ಮಾತುಗಳನ್ನು ಅಷ್ಟಕ್ಕೇ ತಡೆದ ಕೋದಂಡಯ್ಯ. +“ಅರ್ಥವಾಯ್ತು ಬಿಡಿ. ಹುಡುಗಿ ಕುಂಟಿ ಆದ್ರೇನಂತೆ? ಇವಳನ್ನ ಮದುವೆಯಾಗೋನು ಕೋಟ್ಯಾಧೀಶ ಆಗ್ತಾನೆ! ಗೋಕುಲ್ ಛಕ್ಕನೆ ತಲೆ ಎತ್ತಿದ. +ಕೋದಂಡಯ್ಯ ಸರ್ರನೆ ಅವನ ಪಕ್ಕ ಸರಿದು ಅವನ ಕೈ ಹಿಡಿದ. +“ತಪ್ಪಾಯ್ತು ತಪ್ಪಾಯ್ತು. ಈ ಫೋಲೀಸ್ ಇಲಾಖೆ ಸೇರಿದ್ಮೇಲೆ ಇಂಥಾ ಮಾತು, ಇಂಥಾ ಭಾಷೆ ಅಭ್ಯಾಸ ಆಗೋಯ್ತು. ಇನ್ನೊಂದ್ಸಲ ಹಂಗನ್ನಲ್ಲ. ಅವರಿವರ ಸುದ್ದಿ ನಂಗ್ಯಾಕೆ ಅಂತ ತೆಪ್ಪಗಿದ್ದುಬಿಡ್ತೀನಿ.” ಕೆನ್ನೆ ಬಡಿದುಕೊಂಡ. +ಗೋಕುಲ್ ಪ್ರತಿಕ್ರಿಯಿಸುವ ಮೊದಲೇ ಬಾಗಿಲಲ್ಲಿ “ಟಕ್ ಟಕ್” ಶಬ್ಧ ಕೇಳಿಸಿತು. ಇಬ್ಬರೂ ಒಟ್ಟಿಗೆ ಅತ್ತ ತಿರುಗಿದರು. ಊರುಗೋಲಿನ ಆಸರೆಯಲ್ಲಿ ನಿಧಾನವಾಗಿ ನಡೆದುಬರುತ್ತಿದ್ದ ಮಾನ್ಸಿ ಕಾಣಿಸಿದಳು. +ಮಾನ್ಸಿ ಗೋಕುಲ್‌ನತ್ತ ನೋಡಿ ಏರು ಕಂಠದಲ್ಲಿ ಹೇಳಿದಳು. +“ಗೋಕುಲ್ ಗೊತ್ತಾಯ್ತೇನು ವಿಷಯ? ದಯಾ ಅಂಕಲ್‌ಗೆ ಅಕ್ಸಿಡೆಂಟ್ ಆಗಿದೆಯಂತೆ. ಹಾಗಂತ ಇನ್ಸ್‌ಪೆಕ್ಟರ್ ಹೇಳ್ತಾರೆ.” +“ಹ್ಞಾ! ಹೌದಾ? ಎಲ್ಲಿ?” ಗೋಕುಲ್ ಚೀರಿದ. ಅವನು ಆಘಾತಕ್ಕೊಳಗಾಗಿದ್ದುದು ಸ್ಪಷ್ಟವಾಗಿತ್ತು. +“ರಾತ್ರಿ ಫ್ಯಾಕ್ಟರಿಯಿಂದ ಮನೇಗೆ ಬರೋವಾಗ ಕುವೆಂಪು ನಗರದ ಬಸ್ ಡಿಪೋದ ಬಳಿ ಬೈಕ್‌ನಿಂದ ಕೆಳಗೆ ಉರುಳಿದ್ರಂತೆ. ನೋಡಿದ ಯಾರೋ ಅವರನ್ನ ಕರಕೊಂದು ಹೋಗಿ ಕಾವೇರಿ ನರ್ಸಿಂಗ್ ಹೋಂಗೆ ಸೇರ್‍ಸಿದಾರಂತೆ.” +ಎರಡುಕ್ಷಣ ಅಚಲನಾಗಿ ನಿಂತ ಗೋಕುಲ್. “ನಮಗ್ಯಾರಿಗೂ ಗೊತ್ತೇ ಆಗ್ಲಿಲ್ವಲ್ಲ!” ತನ್ನಷ್ಟಕ್ಕೇ ಹೇಳಿಕೊಂಡ. ಮರುಕ್ಷಣ ದನಿ ಎತ್ತರಿಸಿ ಹೇಳಿದ. “ಇರು ನಾನು ಎಸ್ ಐ ಜತೆ ಮಾತಾಡಿ ಡೀಟೈಲ್ಸ್ ತಗೋತೀನಿ.” ಹೆಜ್ಜೆ ಮುಂದಿಟ್ಟ. +ಕೋದಂಡಯ್ಯ ಅವನ ಕೈ ಹಿಡಿದ. +“ಡೀಟೇಲ್ಸ್ ನಾನು ಕೊಡ್ತೀನಿ.” ಗಕ್ಕನೆ ನಿಂತವನ ಭುಜ ತಟ್ಟುತ್ತಾ ನಿಧಾನವಾಗಿ ಹೇಳಿದ. “ನಾನೂ ಎಸ್ ಐ ಸಾಹೇಬರೂ ಈಗ ನರ್ಸಿಂಗ್ ಹೋಂನಿಂದ್ಲೇ ಬರ್ತಾ ಇದೀವಿ. ದಯಾನಂದ ಅವರ ಜತೆ ವಿವರವಾಗಿ ಮಾತಾಡಿದ್ದೀವಿ. ಅಕ್ಸಿಡೆಂಟ್ ಆದದ್ದು ರಾತ್ರಿ ಹನ್ನೊಂದು ಗಂಟೇನಲ್ಲಿ ಅಂತ ದಯಾನಂದ ಹೇಳ್ತಾರೆ. ಮಳೆ ನೀರಿನಿಂದಾಗಿ ಬೈಕ್ ಸ್ಕಿಡ್ ಆಯ್ತು ಅಂತಾರೆ.” +“ಹೆಚ್ಚು ಗಾಯ ಗೀಯ ಆಗಿಲ್ಲ ತಾನೆ?” ಗೋಕುಲ್‌ನ ದನಿಯಲ್ಲಿ ಆತಂಕವಿತ್ತು. +ಕೋದಂಡಯ್ಯ ಅವನ ಕೈ ಒತ್ತಿದ. +“ಸ್ವಲ್ಪ ಗಾಯ ಆಗಿದೆ.” ತುಸು ನಿಧಾನಿಸಿ ಮೆಲ್ಲಗೆ ಸೇರಿಸಿದ. “ಎಡ ಮೊಣಕಾಲಿನಲ್ಲಿ ಫ್ರಾಕ್ಚರ್ ಆಗಿದೆ ಅಂತ ಡಾಕ್ಟರ್ ಹೇಳ್ತಾರೆ.” +“ಮೈಗಾಡ್!” ಗೋಕುಲ್ ಹಣೆಗೆ ಕೈ‌ಒತ್ತಿದ. “ನಾನೀಗ್ಲೇ ನೋಡ್ಬೇಕು ಅವರನ್ನ.” ಒಂದು ಹೆಜ್ಜೆ ಮುಂದಿಟ್ಟವನನ್ನು ಕೋದಂಡಯ್ಯ ಮತ್ತೆ ತಡೆದ. +“ನೀವು ಅವರನ್ನ ನೋಡೋ ಅಗತ್ಯ ಖಂಡಿತಾ ಇದೆ. ಅಲ್ಲಿಗೆ ಹೊರಡೋದಿಕ್ಕೆ ಮೊದ್ಲು ನನಗೊಂದು ಸಣ್ಣ ವಿವರ ಕೊಡಿ.” +ಅವನನ್ನೇ ವಿಚಿತ್ರವಾಗಿ ನೋಡಿದ ಗೋಕುಲ್. ಪ್ರತೀಸಲ ಹೊರಟಾಗಲೂ ತಡೆ ಒಡ್ಡುತ್ತಿದ್ದ ಕೋದಂಡಯ್ಯ ಅಧಿಕಪ್ರಸಂಗಿಯಂತೆ ಕಂಡಿರಬೇಕು ಅವನಿಗೆ. +“ನಿಮ್ಮಕ್ಕ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲಿರೋ ನಿಮ್ಮ ತಂದೇ ಮನೇಗೆ ಹೋಗಿದ್ರು. ನಿನ್ನೆ ರಾತ್ರಿ ಇಲ್ಲಿಗೆ ಹಿಂತಿರುಗೋ ಉದ್ದೇಶ ಅವರಿಗೆ ಇರ್‍ಲಿಲ್ಲ ಅಂತ ದಯಾನಂದ ಹೇಳ್ತಾರೆ. ರಾತ್ರಿ ಹತ್ತೂವರೆಯ ನಂತರ ಆಕೆ ಇಲ್ಲಿಗೆ ಬಂದದ್ದು ಯಾಕೆ ಅಂತ ನಂಗರ್ಥ ಆಗ್ತಾ ಇಲ್ಲ ಅಂತಾರೆ ಅವರು. ಇದರ ಬಗ್ಗೆ ನಿಮಗೇನಾದ್ರೂ ಗೊತ್ತೇ?” +“ಇಲ್ಲ ನಂಗೊತ್ತಿಲ್ಲ. ನಾನು ಹೈದ್ರಾಬಾದಿಗೆ ಹೋಗಿದ್ದೆ. ಅಕ್ಕ ಬೃಂದಾವನ್ ಎಕ್ಸ್‌ಟೆನ್ಷನ್‌ಗೆ ಹೋಗಿದ್ದು, ಇಲ್ಲಿಗೆ ಹಿಂತಿರುಗಿದ್ದು ಯಾವುದೂ ನಂಗೆ ಗೊತ್ತಿಲ್ಲ.” ಗೋಕುಲ್ ಸ್ಪಷ್ಟವಾಗಿ ಹೇಳಿದ. ಮಾತು ಮುಗಿಸಿ ಕೋದಂಡಯ್ಯನ ಕಡೆ ತಿರುಗಿಯೂ ನೋಡದೇ ಗೇಟ್‌ನತ್ತ ವೇಗವಾಗಿ ನಡೆದವನು ಯಾರದೋ ಕರೆ ಕೇಳಿ ಗಕ್ಕನೆ ನಿಂತ. +ಅವನ ನೋಟವನ್ನನುಸರಿಸಿ ಕಣ್ಣು ಹೊರಳಿಸಿದ ಕೋದಂಡಯ್ಯನಿಗೆ ಕಂಡದ್ದು ಕಂದು ಜೀನ್ಸ್, ಬಿಳೀ ಟೀಶರ್ಟ್ ತೊಟ್ಟ ಎತ್ತರದ ವ್ಯಕ್ತಿ. ಕೆದರಿದ ತಲೆಗೂದಲು, ಚೆಲುವು ಮುಖದಲ್ಲಿ ನಿದ್ದೆಯ ದಟ್ಟಛಾಯೆ. +ಕೋದಂಡಯ್ಯ ಮಾನ್ಸಿಯತ್ತ ಪ್ರಶ್ನಾರ್ಥಕವಾಗಿ ನೋಡಿದ. ಅವಳ ಮುಖದಲ್ಲಿ ಏಕಾ‌ಏಕಿ ಮೂಡಿದ ಆತಂಕವನ್ನು ಕಂಡು ಸೋಜಿಗಗೊಂಡ. +“ಯಾರಮ್ಮ ಅದೂ?” ಹತ್ತಿರ ಸರಿದು ಮೃದುವಾಗಿ ಪ್ರಶ್ನಿಸಿದ. +“ಅವ್ನು… ಅವ್ನು ನರಹರಿ… ದಯಾ ಅಂಕಲ್‌ದು ತಮ್ಮ.” ದನಿಯಲ್ಲಿ ನಸುಕಂಪನ! +ಕೋದಂಡಯ್ಯ ನೋಡುತ್ತಿದ್ದಂತೇ ನರಹರಿ ವೇಗವಾಗಿ ಹೆಜ್ಜೆ ಹಾಕಿ ಗೋಕುಲ್‌ನನ್ನು ಕೂಡಿಕೊಂಡ. +“ಗೇಟ್ ಮುಂದಿನ ಮಣ್ಣುನೆಲದ ಮೇಲೆ ಕಾಲಿಡಬೇಡಿ.” ಕೋದಂಡಯ್ಯ ಅವರತ್ತಲೇ ನೋಟ ನೆಟ್ಟು ಕೂಗಿ ಹೇಳಿದ. +ಗೋಕುಲ್‌ನ ಬೈಕ್ ಶಬ್ಧ ಕ್ಷೀಣವಾದ ನಂತರ ಮಾನ್ಸಿಯತ್ತ ತಿರುಗಿದ ಕೋದಂಡಯ್ಯ. ಅವನೇನೋ ಕೇಳಲು ಬಾಯಿ ತೆರೆಯುವ ಮೊದಲೇ ಅವಳಿಂದ ಮಾತು ಬಂತು. +“ದೇವಕಿ ಆಂಟಿ ರಾತ್ರಿ ಇಲ್ಲಿಗೆ ಬಂದದ್ದರ ಬಗ್ಗೆ ಅವರ ಅಪ್ಪ ಅಮ್ಮಂಗೆ ಗೊತ್ತಿರಬೋದು. ಅವರನ್ನ ಒಮ್ಮೆ ವಿಚಾರಿಸಬೇಕು ನೀವು.” ಅವಳ ದನಿಯ ಕಂಪನ ಮಾಯವಾಗಿತ್ತು. ಮತ್ತೆ ಸೌಮ್ಯಗೊಂಡ ಮುಖಭಾವ. +ಕೋದಂಡಯ್ಯ ಅವಳತ್ತ ಎರಡು ಕ್ಷಣ ಮೌನವಾಗಿ ನೋಡಿದ. ಅವಳೇನೋ ಹೇಳಲು ಮತ್ತೆ ಬಾಯಿ ತೆರೆಯುವ ಮೊದಲೇ ಹೇಳಿದ. +“ನಾವೀಗ ಅಲ್ಲಿಂದಾನೇ ಬರ್ತಾ ಇದೀವಿ ಕಣಮ್ಮ. ಅವರಿಗೂ ಏನೂ ಗೊತ್ತಿಲ್ಲ.” ಕ್ಷಣ ತಡೆದು ನಿಧಾನವಾಗಿ ಮುಂದುವರೆಸಿದ. “ಆದ್ರೆ ಅವರಿಂದ ಒಂದು ವಿಷಯ ತಿಳೀತು. ತನ್ನ ಇ ಮೇಲ್ ಚೆಕ್ ಮಾಡ್ಬೇಕು ಅಂತ ಹೇಳಿ ದೇವಕಿ ಏಳೂವರೆಯ ಹೊತ್ತಿಗೆ ಮನೆಗೆ ಸ್ವಲ್ಪ ದೂರದಲ್ಲಿರೋ ಕಂಪ್ಯೂಟರ್ ಸೆಂಟರಿಗೆ ಹೋದ್ರಂತೆ. ಅವ್ರು ಮನೇಗೆ ಹಿಂತಿರುಗಿದಾಗ ಸಮಯ ಒಂಬತ್ತು ಗಂಟೆ ಸಮೀಪಿಸ್ತಾ ಇತ್ತಂತೆ. ಬಂದೋರು ಯಾರ ಜತೇನೂ ಮಾತಾಡ್ದೇ ಕೂತುಬಿಟ್ರಂತೆ. ‘ಏನು ವಿಷಯ?’ ಅಂತ ಕೇಳ್ದಾಗ ‘ಸ್ವಲ್ಪ ತಲೇ ನೋಯ್ತಾ ಇದೆ’ ಅಂದ್ರಂತೆ. ಒಂದು ಹತ್ತು ನಿಮಿಷದ ನಂತರ ಎಲ್ಲರ ಜತೆ ಚೆನ್ನಾಗೇ ಮಾತಾಡಿದ್ರಂತೆ. ನಗ್ತಾ ನಗ್ತಾ ಊಟಾನೂ ಮಾಡಿದ್ರಂತೆ. ಹತ್ತು ಗಂಟೆ ಹೊತ್ತಿಗೆ ‘ನಂಗೆ ಮನೇಲಿ ಸ್ವಲ್ಪ ಕೆಲ್ಸ ಇದೆ, ನಾಳೆ ಬೆಳಿಗ್ಗೆ ಬಂದ್ಬಿಡ್ತೀನಿ’ ಅಂದ್ರಂತೆ. ‘ಈ ಮಳೇ ರಾತ್ರೀಲಿ ಅದೆಂಥಾ ಅರ್ಜೆಂಟ್ ಕೆಲ್ಸ? ನಾಳೆ ಬೆಳಿಗ್ಗೆ ಹೋದರಾಗದೇ?’ ಅಂತ ಅವರಮ್ಮ ಕೇಳ್ದಾಗ ‘ಇಲ್ಲ ನಾನೀಗ್ಲೇ ಹೋಗ್ಬೇಕು. ಬೆಳಿಗ್ಗೆ ಬಂದ್ಬಿಡ್ತೀನಿ ಅಂದೆನಲ್ಲ’ ಅಂತ ಹೇಳಿ ಕಾರ್ ತಗೋಂಡು ಹೊರಟುಬಿಟ್ರಂತೆ.” +ಮಾನ್ಸಿಯ ಮುಖದಲ್ಲಿ ಸುಕ್ಕುಗಳು ಮೂಡಿದವು. +‘ಅಷ್ಟು ಅವಸರವಸರವಾಗಿ ದೇವಕಿ ಆಂಟಿ ಇಲ್ಲಿಗೆ ಬಂದದ್ದರ ಕಾರಣ ಏನು? ಇಲ್ಲಿಗೆ ಬರುವಂತೆ ಕೊಲೆಗಾರನಿಂದ ಅವಳಿಗೆ ಕರೆ ಬಂದಿತ್ತೇ? ಆ ಕರೆ ಬಂದದ್ದು ಇ ಮೇಲ್ ಮೂಲಕವೇ? ಆ ಕರೆಯನ್ನು ನಿರಾಕರಿಸಲಾಗದಷ್ಟು ಅಸಹಾಯಕಳಾಗಿದ್ದಳೇ ದೇವಕಿ ಆಂಟಿ? ಕರೆ ನೀಡಿದ್ದು ಯಾರಿರಬಹುದು?’ ಅವಳೆದೆಯಲ್ಲಿ ಪ್ರಶ್ನೆಗಳ ನರ್ತನ. +ಕೋದಂಡಯ್ಯ ಮೆಲ್ಲಗೆ ಅವಳ ಭುಜ ತಟ್ಟಿದ. +“ದೇವಕಿಯಮ್ಮನ ಇ ಮೇಲ್ ಚೆಕ್ ಮಾಡಿದ್ರೆ ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಬೋದು.” +ಮಾನ್ಸಿಯ ಕಣ್ಣುಗಳು ವಿಶಾಲಗೊಂಡವು. +‘ಅಧಿಕಾರಿಯ ಆಲೋಚನೆಯ ಗತಿ ನನ್ನದರಂತೇ ಇದೆ!’ +“ಹೌದು ಸರ್. ನೀವು ಹೇಳೋದು ಸರಿ” ಸಕಾರದಲ್ಲಿ ತಲೆ ಅಲುಗಿಸಿದಳು. +ಅವಳ ಭುಜದ ಮೇಲಿದ್ದ ಕೋದಂಡಯ್ಯನ ಬೆರಳುಗಳ ಒತ್ತಡ ಅಧಿಕವಾಯಿತು. +“ಆಯಮ್ಮನ ಪಾಸ್‌ವರ್ಡ್ ನಿನಗೆ ಗೊತ್ತೇ ಹುಡುಗೀ?” +ಮಾನ್ಸಿಯ ಹುಬ್ಬುಗಳು ಚಕ್ಕನೆ ಕೆಳಗಿಳಿದವು. ತಲೆ ಬಾಗಿತು. ನಿರಾಶೆಯ ಪಿಸುಗು ಉದ್ಗಾರ ಹೊರಬಂತು. +“ಅಯ್ ಆಮ್ ಸಾರೀ. ನಂಗೆ ಗೊತ್ತಿಲ್ಲ.” +* * * +-ಐದು- +ಕೊಲೆ ನಡೆದ ಕೋಣೆಯ ನಡುವೆ ನಿಂತ ಟೈಟಸ್. ಒಮ್ಮೆ ಕಣ್ಣು ಮುಚ್ಚಿದ. ಚಿತ್ರಗಳು ತೇಲಿದವು. ಮನೆಯೊಡತಿ ಕೊಲೆಯಾಗಿದ್ದಾಳೆ. ಮನೆಯ ಯಜಮಾನ ಅಫಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ… +ಅವರಿಬ್ಬರ ಹೊರತಾಗಿ ಮನೆಯಲ್ಲಿ ಬೇರಾರೂ ಇಲ್ಲ. +ಕೋಣೆಯಲ್ಲಿ ಮತ್ತೊಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿದ ಟೈಟಸ್. ರಾತ್ರಿ ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ನಡೆಸಿದ್ದ ಶೋಧನೆ ಅವನಿಗೆ ತೃಪ್ತಿ ನೀಡಿರಲಿಲ್ಲ. +ಅರ್ಧ ಸುಟ್ಟಿದ್ದ ಹಾಸಿಗೆಯ ಮೇಲೆ ಒಂದೆರಡು ಕ್ಷಣ ಕಣ್ಣಾಡಿಸಿದ. ರಾತ್ರಿ ನೋಡಿದ್ದಕ್ಕಿಂತ ಹೆಚ್ಚಿನದೇನೂ ಅಲ್ಲಿ ಕಂಡುಬರಲಿಲ್ಲ. +ಕಬೋರ್ಡ್ ತೆರೆದ. ಮೇಲುಭಾಗದಲ್ಲಿ ನೀಟಾಗಿ ಜೋಡಿಸಿದ್ದ ಹಲವಾರು ಪ್ಲಾಸ್ಟಿಕ್ ಡಬ್ಬಗಳು, ಉಳಿದೆಡೆ ರಾಶಿರಾಶಿಯಾಗಿ ತುಂಬಿದ್ದ ಪುಸ್ತಕಗಳು. ಕೊಲೆಯಾದವಳು ಪುಸ್ತಕಪ್ರಿಯೆ! +ಅರ್ಧಗಂಟೆ ಅಲ್ಲಿ ಕಳೆದು ಹೊರಬಂದ. +ದಯಾನಂದನ ಕೋಣೆಯಲ್ಲಿ ಹತ್ತು ನಿಮಿ‌ಇಷ ಕಾಲಾಡಿಸಿದ. ಹೊರಬಂದಾಗ ಕೋದಂಡಯ್ಯ ಕಾಣಿಸಿಕೊಂಡ. +“ಏನಾದ್ರೂ ಸಿಕ್ತಾ ಗುರೂ?” ನಗೆ ಸೂಸಿ ಪ್ರಶ್ನೆ ಹಾಕಿದ ಈಪಾಟೀ ಕೋದಂಡಯ್ಯ. +“ಎಂಥದೂ ಇಲ್ಲ ಕಣಯ್ಯ.” ನಿರಾಶೆಯ ದನಿ ಎಳೆದ ಟೈಟಸ್. “ನೀನೇನಾದ್ರೂ ಪತ್ತೇದಾರೀ ನಡೆಸಿದೆಯಾ?” ಪ್ರಶ್ನಿಸಿದ. +“ನಾನಾ! ನಾನೆಂಥ ಪತ್ತೇದಾರೀ ನಡೆಸ್ಲೀ ಗುರೂ? ನಾನೊಬ್ಬ ಹಳ್ಳೀಮುಕ್ಕ. ನಂಗ್ಯಾವ ಪತ್ತೇದಾರಿ ಬರುತ್ತೆ? ಅದಕ್ಕೆಲ್ಲಾ ನೀವೇ ಸರಿ.” ಕೋದಂಡಯ್ಯ ಹಲ್ಲು ಕಿರಿದ. +“ಹಂಗಾದ್ರೆ ಅಷ್ಟೊತ್ನಿಂದ ಇಲ್ಲೇನು ಮಾಡ್ತಾ ಇದ್ದೆ? ಮೊಟ್ಟೆ ಇಡ್ತಾ ಇದ್ಯಾ?” ಛೇಡಿಸಿದ ಟೈಟಸ್. +“ಮೊಟ್ಟೆ ಇಡೋದಾ? ಅದು ನನ್ನ ಕೆಲಸ ಅಲ್ಲ ದೇವ್ರೂ. ನಾನು ಹುಂಜ.” ಮೀಸೆ ಮೇಲೆ ಕೈಯಾಡಿಸಿಕೊಂಡ ಕೋದಂಡಯ್ಯ. +“ಘನಂದಾರೀ ಹುಂಜ! ಇಲ್ಲೇನು ಹೇಂಟೆ ಬೇಟೆ ನಡೆಸಿದ್ದೀಯೇನು?” ಟೈಟಸ್ ಕಣ್ಣು ಮಿಟುಕಿಸಿದ. +ಕೋದಂಡಯ್ಯ ಗಲ್ಲ ಬಡಿದುಕೊಂಡ. +“ಅಯ್ ಬಿಡಿ ದೇವ್ರೂ. ಇಲ್ಲಿ ಕಣ್ಣಿಗೆ ಬೀಳ್ತಾ ಇರೋವೆಲ್ಲಾ ಬರೀ ಬಾತುಕೋಳಿ, ಮಾಂಗೋಳಿಗಳೇ. ನಂಗೆ ಲಗತ್ತಲ್ಲ ಬಿಡಿ.” ನಗೆ ಸೂಸಿ ಮಾತು ಹರಿಸಿದವನು ಅಧಿಕಾರಿಗೆ ಮತ್ತೊಂದು ಕೀಟಲೆಯ ಮಾತಿಗೆ ಅವಕಾಶವಿಲ್ಲದಂತೆ ಕರ್ತವ್ಯದ ಪ್ರಸ್ತಾಪವೆತ್ತಿದ. +“ಕೋಳಿ ಕುರಿ ವಿಷಯ ಆಮೇಲೆ ನೋಡ್ಕೊಳ್ಳೋಣ ದೇವ್ರೂ, ಈಗ ಸ್ವಲ್ಪ ನನ್ನ ಜತೆ ಬನ್ನಿ. ಈಪಾಟೀ ಕೆಲ್ಸ ಬಿದ್ದಿದೆ. ಅದರ ಕಡೆ ಮೊದ್ಲು ಗಮನ ಹರಿಸ್ಬೇಕು ಸಾಹೇಬರು.” ಒಂದು ಪಕ್ಕ ಹೆಜ್ಜೆ ಹಾಕಿದ. +‘ಇವನಿಗೇನೋ ಕಂಡಿದೆ!’ ಮನದಲ್ಲಿ ಮೂಡಿದ ಕುತೂಹಲವನ್ನು ಅದುಮಿಕೊಂಡು ಮೌನವಾಗಿ ಕೋದಂಡಯ್ಯನ ಹಿಂದೆ ಹೆಜ್ಜೆ ಸರಿಸಿದ ಟೈಟಸ್. +ಗೇಟ್ ತೆರೆದು ಹೊರಗೆ ರಸ್ತೆಯಲ್ಲಿ ನಿಂತ ಕೋದಂಡಯ್ಯ. ಸುತ್ತಲೂ ಒಮ್ಮೆ ಕೊರಳು ಹೊರಳಿಸಿ ನಂತರ ನೆಲದತ್ತ ಬೆರಳು ಮಾಡಿದ. +“ಇಲ್ಲಿ ನೋಡಿ ದೇವ್ರೂ” ಅಧಿಕಾರಿಯ ಗಮನ ಸೆಳೆದ. ಟೈಟಸ್ ವಿಧೇಯ ವಿದ್ಯಾರ್ಥಿಯಂತೆ ನೆಲದತ್ತ ಕಣ್ಣು ಹೊರಳಿಸಿದ. +ಟಾರ್ ರಸ್ತೆ ಮತ್ತು ಗೇಟ್‌ನ ನಡುವೆ ಮೂರು ಅಡಿಗಳ ಮಣ್ಣು ನೆಲ. ನಿನ್ನೆಯಡೀ ಸುರಿದ ಮಳೆಯಲ್ಲಿ ಕೊಚ್ಚೆಯಾಗಿಹೋಗಿದ್ದ ಮರಳುಮಿಶ್ರಿತ ಕೆಂಪುಮಣ್ಣು. ಅರ್ಧ ವೃತ್ತಾಕಾರದಲ್ಲಿ ಮೂಡಿದ್ದ ಯಾವುದೋ ವಾಹನದ ಚಕ್ರದ ಆಳವಾದ ಗುರುತು. ಅದರ ತಳದಲ್ಲಿ ನಿಂತ ಮಳೆನೀರು. +ಟೈಟಸ್ ತಲೆಯೆತ್ತಿ ಪ್ರಶ್ನಾರ್ಥಕವಾಗಿ ನೋಡಿದ. ಕೋದಂಡಯ್ಯ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ. ಬಲಗೈನ ತೋರುಬೆರಳನ್ನು ಚಕ್ರದ ಗುರುತಿನತ್ತ ತಿರುಗಿಸಿದ. ತಲೆಯೆತ್ತದೇ ಹೇಳತೊಡಗಿದ. +“ಇದು ಆಟೋರಿಕ್ಷಾದ ಚಕ್ರದ ಗುರುತು ಗುರೂ. ಹಿಂಭಾಗದ ಚಕ್ರ ಅಂತ ಊಹೆ ಮಾಡಬೋದು. ಮೆಯಿನ್ ರೋಡ್‌ನಿಂದ ಬಂದ ಆಟೋ ಮನೆ ಮುಂದೆ ನಿಂತಿದೆ. ಅದರಲ್ಲಿದ್ದವರು ಇಳಿದ ನಂತರ ಅದು ಎಡಕ್ಕೆ ತಿರುಗಿ ಮತ್ತೆ ಮೆಯಿನ್ ರೋಡ್ ಕಡೆ ಹೊರಟುಹೋಗಿದೆ. ಅದು ಹಾಗೆ ತಿರುಗೋವಾಗ ಹಿಂಭಾಗದ ಬಲಗಡೆಯ ಚಕ್ರ ಟಾರ್ ರಸ್ತೆ ಬಿಟ್ಟು ಮಣ್ಣು ನೆಲಕ್ಕೆ ಇಳಿದಿದೆ. ಚಕ್ರದ ಗುರುತು ಸ್ಪಷ್ಟವಾಗಿ ಮೂಡಿದೆ. ಈ ಮನೆಯಲ್ಲಿ ಕೊಲೆ ನಡೆದಿದೆ ಅಂತ ತಿಳಿದ ತಕ್ಷಣ ಘೂರ್ಖಾ ಗುಲಾಬ್ ಸಿಂಗ್ ಇಲ್ಲಿ ಮಣ್ಣಿನ ಮೇಲೆ ಯಾರ ಹೆಜ್ಜೆಯ ಗುರುತೂ ಬೀಳದ ಹಾಗೆ ನೋಡ್ಕೊಂಡಿದ್ದಾನೆ. ಅವನಿಗೆ ನೂರು ಥ್ಯಾಂಕ್ಸ್ ಹೇಳ್ಬೇಕು ನಮ್ಮ ಇಲಾಖೆ. ಅವನ ಸಮಯಸ್ಪೂರ್ತಿಯ ಕೃತ್ಯದಿಂದಾಗಿ ಇಲ್ಲಿ ಆಟೋ ಚಕ್ರದ ಗುರುತು ಮಾತ್ರ ಉಳಿದುಹೋಯ್ತು…” ಹೇಳುತ್ತಾ ಎದ್ದು ನಿಂತ. ಚಕ್ರದ ಗುರುತಿನತ್ತಲೇ ನೋಟ ಹೂಡಿದ್ದ ಅಧಿಕಾರಿಯ ಪಕ್ಕ ಸರಿದು ಗಂಭೀರ ದನಿಯಲ್ಲಿ ಪ್ರಶ್ನೆ ಹಾಕಿದ. +“ಇದನ್ನ ನೋಡಿದ್ರೆ ನಿಮಗೇನನ್ಸುತ್ತೆ?” +ನೆಲದಿಂದ ನೋಟ ಕೀಳದೇ ಸಣ್ಣಗೆ ದನಿ ಹೊರಡಿಸಿದ ಟೈಟಸ್. +“ಈ ಆಟೋರಿಕ್ಷಾದ ಚಕ್ರದ ಹೊರತಾಗಿ ಇಲ್ಲಿ ಬೇರೆ ಯಾವ ಗುರುತೂ ಇಲ್ಲ. ಮನುಷ್ಯರ ಹೆಜ್ಜೆಗಳ ಗುರುತೂ ಇಲ್ಲ. ಅಂದರೆ ಆಟೋದಿಂದ ಇಳಿದವರು ಮನೆಯೊಳಗೆ ಹೋದದ್ದು ಹೇಗೆ ಅನ್ನೋದು ಪ್ರಶ್ನೆ ಅಲ್ಲವಾ ಕೋದಂಡಯ್ಯ?” +ಒಮ್ಮೆ ನಿಟ್ಟುಸಿರಿಟ್ಟ ಕೋದಂಡಯ್ಯ. +“ಮೊದ್ಲು ಕಾಫಿ ಕುಡಿದು ನಂತರ ಉಪ್ಪಿಟ್ಟಿಗೆ ಕೈಹಾಕೋ ಜಾಯಮಾನದೋರು ನೀವು ಅನ್ನೋದನ್ನ ನಾನು ಮರೆತಿದ್ದೆ.” +ಟೈಟಸ್ ಸರ್ರನೆ ತಲೆಯೆತ್ತಿದ. ಕಣ್ಣುಗಳು ಕೆಂಡ ಕಾರಿದವು. +ಕೋದಂಡಯ್ಯ ಅವನ ಹತ್ತಿರ ಸರಿದ. +“ನೀವು ಕೇಳೋದು ಭಾಳಾ ಮುಖ್ಯವಾದ ಪ್ರಶ್ನೆ ಗುರೂ. ಆದ್ರೆ ಅದು ಎರಡನೇ ಪ್ರಶ್ನೆ. ಮೊದಲ್ನೇ ಪ್ರಶ್ನೆ ಕಡೆ ಮೊದ್ಲು ಗಮನ ಕೊಡೋಣ.” +“ಏನದು ನಿನ್ನ ಮೊದಲ್ನೇ ಪ್ರಶ್ನೆ? ನಿನ್ನಜ್ಜಿ ಪಿಂಡ!” +ಅವನ ಕೋಪದ ಕಡೆ ಯಾವ ಗಮನವನ್ನೂ ಕೊಡದೇ ಕೋದಂಡಯ್ಯ ಮಾತು ತೆಗೆದ. +“ಆಟೋದಲ್ಲಿ ಬಂದೋರು ದೇವಕಿನೇ ಅಂತ ಊಹೆ ಮಾಡಬೋದು. ಪ್ರಶ್ನೆ ಏನೂ ಅಂದ್ರೆ ಬೃಂದಾವನ್ ಎಕ್ಸ್‌ಟೆನ್ಷನ್‌ನಿಂದ ತನ್ನ ಕಾರಿನಲ್ಲಿ ಹೊರಟ ಆಯಮ್ಮ ಇಲ್ಲಿಗೆ ಆಟೋದಲ್ಲಿ ಹೇಗೆ ಬಂದ್ರು ಅನ್ನೋದು.” +“ಆಯಮ್ಮ ಆಟೋದಲ್ಲಿ ಬಂದ್ರು ಅಂತ ಹ್ಯಾಗಯ್ಯ ಹೇಳ್ತೀಯ?” ಟೈಟಸ್‌ನ ಕೋಪ ಇನ್ನೂ ಶಮನವಾಗಿರಲಿಲ್ಲ. +ಕೋದಂಡಯ್ಯನ ಮುಖದಲ್ಲಿ ಸಣ್ಣಗೆ ನಗೆ ಮಿನುಗಿತು. +“ಆಕೆ ಕಾರ್‌ನಲ್ಲೇ ಇಲ್ಲಿಗೆ ಬಂದಿದ್ರೆ ಇಲ್ಲಿ ಅದರ ಚಕ್ರದ ಗುರುತು ಇರಬೇಕಾಗಿತ್ತು. ಆದ್ರೆ ಅದು ಇಲ್ಲ. ಒಂದುವೇಳೆ ಆಯಮ್ಮ ಸರ್ಕಸ್‌ನಲ್ಲಿ ಮಾಡೋ ಹಂಗೆ ಕಾರನ್ನ ಕಾಂಪೌಂಡ್ ಮೇಲೆ ಹಾರಿಸಿಕೊಂಡು ಒಳಕ್ಕೆ ತಗೋಂಡು ಹೋಗಿದ್ದಾರೆ ಅನ್ನೋದಾದ್ರೆ ಕಾರು ಒಳಗೆ ಇರಬೇಕಾಗಿತ್ತು. ಆದ್ರೆ ಅದು ಎಲ್ಲೂ ಇಲ್ಲ. ನನ್ನ ಮಾತ್ನಲ್ಲಿ ನಂಬಿಕೆ ಇಲ್ಲ ಅಂದ್ರೆ ನೀವೇ ಒಂದ್ಸಲ ಹುಡುಕಿನೋಡಿ, ಗ್ಯಾರೇಜಿನಲ್ಲಾಗಲೀ, ಅಡಿಗೆಮನೆಯಲ್ಲಾಗಲೀ, ಬಾತ್‌ರೂಮಿನಲ್ಲಾಗಲೀ ಅಥವಾ ಬೆಡ್‌ರೂಂನ ಮಂಚದ ಕೆಳಗಾಗಲೀ ಎಲ್ಲಾದರೂ ಹುಡುಕಿ. ಆ ಕಾರ್ ನಿಮಗೆ ಸಿಗೋದಿಲ್ಲ.” ಅವನ ನಗೆ ದೊಡ್ಡದಾಯಿತು. +ಟೈಟಸ್ ಎರಡು ಕ್ಷಣ ಮಾತು ಹೊರಡದೇ ನಿಂತ. ಒಮ್ಮೆ ಆಕಾಶದತ್ತ ಮೊಗವೆತ್ತಿ ಇಳಿಸಿದ. ಸಣ್ಣಗೆ ದನಿ ತೆಗೆದ. +“ಹೌದು ಕೋದಂಡಯ್ಯ! ನೀನ್ಹೇಳೋದು ಸರಿ.” ಅಗಲವಾಗಿ ಬಾಯಿ ತೆರೆದ. “ಆ ಕಾರ್ ಎಲ್ಲಿದೆ ಅಂತ ಪತ್ತೆ ಮಾಡ್ಬೇಕು ಕಣಯ್ಯ.” ದನಿಯೆತ್ತರಿಸಿದ. +“ಅಗತ್ಯವಾಗಿ ಮಾಡಬೇಕಾದ ಕೆಲಸ ಅದು. ಅದಕ್ಕೆ ಮೊದ್ಲು ನೀವು ಎತ್ತಿದ ಪ್ರಶ್ನೆ- ಆಟೋದಲ್ಲಿ ಬಂದೋರು ಮನೆಯೊಳಗೆ ಹೋದದ್ದು ಯಾವ ದಾರೀಲಿ ಅನ್ನೋದನ್ನ ಪತ್ತೆ ಮಾಡ್ಬೇಕು. ಬನ್ನಿ ಆ ಕೆಲ್ಸಾನ್ನ ಈಗ ಮಾಡಿಬಿಡೋಣ.” ಹೇಳುತ್ತಾ ಕಾಂಪೌಂಡ್ ಪಕ್ಕದ ಹಸಿರು ಹುಲ್ಲುಹಾಸಿನ ಮೇಲೆ ಹೆಜ್ಜೆ ಸರಿಸಿದ. ಬಲಕ್ಕೆ ತಿರುಗಿ ನಾಲ್ಕು ಹೆಜ್ಜೆ ನಡೆದು ಪುಟ್ಟ ಕಬ್ಬಿಣದ ಗೇಟ್ ಮುಂದೆ ನಿಂತ. +ಮನೆಯ ಬಲಬದಿ ಅದು. ಹತ್ತಡಿ ಅಗಲದ ಅಡ್ಡರಸ್ತೆ. ಟಾರ್ ಕಾಣದ, ಬರೀ ಜಲ್ಲಿ ಕಲ್ಲುಗಳು ಹಾಗೂ ಮಣ್ಣು ತುಂಬಿದ ಮೈ. ಅದರಾಚೆ ಹಸಿರು ರಂಗು ಬಳಿದ ಕಬ್ಬಿಣದ ತೆಳು ಕಂಬಗಳ ಸಾಲಿನಿಂದ ಆವೃತವಾಗಿದ್ದ ವಿಶಾಲವಾದ ಮಕ್ಕಳ ಆಟದ ಬಯಲು. ಪ್ರಪಂಚದ ಗೋಜು ಮರೆತು ಕ್ರಿಕೆಟ್ ಆಟದಲ್ಲಿ ಮುಳುಗಿಹೋಗಿದ್ದ ಪಡ್ಡೆಹುಡುಗರ ಗುಂಪು. +ಗೇಟ್‌ನ ಕೆಳಗಿನ ಸಿಮೆಂಟ್ ನೆಲಕ್ಕೂ ಕಲ್ಲುಮಣ್ಣಿನ ರಸ್ತೆಗೂ ನಡುವಿನ ಎರಡಡಿ ನೆಲ ಅರ್ಧ ಅಡಿಗೂ ಎತ್ತರದ ಹಚ್ಚಹಸಿರು ಹುಲ್ಲಿನಿಂದ ಮುಚ್ಚಿಹೋಗಿತ್ತು. ಹೆಚ್ಚು ಉಪಯೋಗಿಸದ ಗೇಟ್ ಇರಬೇಕು ಅದು. ಹುಲ್ಲನ್ನು ತೆಗೆಸುವ ಅಗತ್ಯ ದೇವಕಿಗಾಗಲೀ, ದಯಾನಂದನಿಗಾಗಲೀ ಕಂಡಂತಿರಲಿಲ್ಲ. +ಅದರತ್ತ ಕೈ ಮಾಡಿದ ಕೋದಂಡಯ್ಯ. +“ಆಟೋದಲ್ಲಿ ಬಂದ ದೇವಕಿ ಮನೆಯ ಮೆಯಿನ್ ಗೇಟ್ ಬಳಿ ಇಳಿದು ಟಾರ್ ರಸ್ತೆ ಮೇಲೆ ನಡೆದು ಈ ಅಡ್ಡರಸ್ತೆಗೆ ಬಂದಿದ್ದಾರೆ. ಈ ಹುಲ್ಲನ್ನ ದಾಟಿ ಗೇಟ್ ತೆರೆದು ಒಳಗೆ ಹೋಗಿದ್ದಾರೆ. ಅಡ್ಡರಸ್ತೆಯ ಜಲ್ಲಿಕಲ್ಲುಗಳ ಮೇಲೆ ಅವರ ಹೆಜ್ಜೆ ಗುರುತು ಬಿದ್ದಿಲ್ಲ. ಹುಲ್ಲಿನ ಮೇಲೂ ಅದು ಮೂಡೋದಿಲ್ಲ ಅನ್ನೋದನ್ನ ನಾನು ನಿಮಗೆ ಪ್ರತ್ಯೇಕವಾಗಿ ಹೇಳೋ ಅಗತ್ಯ ಇಲ್ಲ. ಗೇಟ್ ಕೆಳಗಿನ ಸಿಮೆಂಟ್ ನೆಲದ ಮೇಲೆ ಬಿದ್ದ ಹೆಜ್ಜೆ ಗುರುತುಗಳು ಮಳೆಯ ನೀರಿನಲ್ಲಿ ತೊಳೆದುಹೋಗಿವೆ. ಆದರೆ ಆಯಮ್ಮ ಇಲ್ಲೇ ನಡೆದು ಹೋಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇದೆ.” +ಟೈಟಸ್‌ನ ಹುಬ್ಬುಗಳು ಮೇಲೇರಿದವು. +“ಬನ್ನಿ ತೋರಿಸ್ತೀನಿ.” ಹೇಳುತ್ತಾ ಕೋದಂಡಯ್ಯ ಬಂದ ದಾರಿಯಲ್ಲೇ ಹಿಂದೆ ನಡೆದ. ಆಟೋ ಚಕ್ರದ ಗುರುತು ಹೊತ್ತಿದ್ದ ಮಣ್ಣುನೆಲವನ್ನು ತಪ್ಪಿಸಿ ಹುಲ್ಲಿನ ಮೇಲೆ ನಡೆದು ಮೆಯಿನ್ ಗೇಟ್ ದಾಟಿದ. ಬಾಗಿಲು ಸಮೀಪಿಸಿ ಕೆಳಗೆ ಬಾಗಿದ. ಗೋಡೆಯ ಪಕ್ಕ ನೀಟಾಗಿ ಇರಿಸಿದ್ದ ಎತ್ತರದ ಹಿಮ್ಮಡಿಯ ಪಾದರಕ್ಷೆಗಳಲ್ಲಿ ಒಂದನ್ನು ಎತ್ತಿ ತಿರುಗಿಸಿದ. +ಟೈಟಸ್‌ನ ಕಣ್ಣುಗಳು ಮೊನಚಾದವು. +ಪಾದರಕ್ಷೆಯ ತಳದಲ್ಲಿ ಅಂಟಿದ್ದ ಎರಡು ಹುಲ್ಲಿನ ಎಸಳುಗಳು! +“ಇದು ದೇವಕಿಯಮ್ಮನ ಬಲಗಾಲಿನ ಚಪ್ಪಲಿ. ಇಲ್ಲಿ ಅಂಟಿರೋ ಹುಲ್ಲು ಆ ಗೇಟ್ ಆಚೆ ಇರೋ ಹುಲ್ಲುಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತೆ.” +ಹೆಡ್ ಕಾನ್ಸ್‌ಟೇಬಲ್‌ನ ಮಾತನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಇರಲಿಲ್ಲ. +“ಮೆಯಿನ್ ಗೇಟ್ ಮುಂದೆ ಆಟೋದಿಂದ ಇಳಿದೋರು ಇಲ್ಲೀವರೆಗೆ ನಡೆದುಬಂದು ಉಪಯೋಗಿಸದೇ ಇದ್ದ ಈ ಗೇಟ್ ಮೂಲಕ ಒಳಗೆ ಬರೋ ಅಗತ್ಯ ಏನಿತ್ತು?” ಮೆಲ್ಲಗೆ ಗೊಣಗಿದ ಟೈಟಸ್. +“ಆಯಮ್ಮ ತಾನಾಗಿ ಈ ದಾರಿ ಹಿಡಿದಿಲ್ಲ ಗುರೂ. ಅವಳನ್ನ ಕರೆತಂದ ಕೊಲೆಗಾರ ಈ ದಾರೀಲಿ ನಡೆಸಿದ್ದಾನೆ.” +“ಕೊಲೆಗಾರ ಆಯಮ್ಮನ ಜತೇನೇ ಬಂದ ಅಂತ ನೀನು ಹೇಳ್ತೀಯೇನು?” +“ಘಂಟೆ ಹೊಡೆದ ಹಾಗೆ ಹೇಳ್ತೀನಿ. ಆಯಮ್ಮ ಒಬ್ಳೇ ಬಂದಿದ್ರೆ ಇಲ್ಲಿಗೆ ನೇರವಾಗಿ ತನ್ನ ಕಾರ್‌ನಲ್ಲಿ ಬರ್ತಾ ಇದ್ಲು. ಬಂದೋಳು ರಾಜಾರೋಷವಾಗಿ ಮೆಯಿನ್ ಗೇಟ್ ಮೂಲಕ ಕಾರನ್ನ ಒಳಗೆ ತಗೋಂಡು ಹೋಗ್ತಾ ಇದ್ಲು. ನಡೆದಿರೋದು ಏನಪ್ಪಾ ಅಂದ್ರೆ ಕೊಲೆಗಾರ ಇ ಮೇಲ್ ಮೂಲಕ ಮೆಸೇಜ್ ಕೊಟ್ಟು ದೇವಕಿಯಮ್ಮ ಮಳೇರಾತ್ರೀಲಿ ಮನೆಯಿಂದ ಹೊರಡೋ ಹಾಗೆ ಮಾಡಿದ್ದಾನೆ. ತನ್ನನ್ನ ಸಂಧಿಸೋದಿಕ್ಕೆ ಯಾವುದೋ ಸ್ಥಳಾನ್ನ ಸೂಚಿಸಿದ್ದಾನೆ. ಈಯಮ್ಮ ಅಲ್ಲಿಗೆ ತಲುಪಿದಾಗ ಯಾವುದೋ ನೆಪ ಹೇಳಿ ಕಾರನ್ನ ಬಿಟ್ಟು ಆಟೋದಲ್ಲಿ ಇಲ್ಲಿಗೆ ಬರೋ ಹಾಗೆ ಮಾಡಿದ್ದಾನೆ. ಇಲ್ಲಿಗೆ ತಲುಪಿದ ಮೇಲೆ ಮೆಯಿನ್ ಗೇಟನ್ನ ಬಿಟ್ಟು ಸಣ್ಣ ಗೇಟ್ ಮೂಲಕ ಒಳಕ್ಕೆ ನಡೆಸಿದ್ದಾನೆ. ಇದನ್ನೆಲ್ಲಾ ಅವನು ಉದ್ದೇಶಪೂರ್ವಕವಾಗೇ ಮಾಡಿದ್ದಾನೆ. ಕೊಬ್ಬಿದ ಕುರಿಯನ್ನ ಕಟುಕ ಕಸಾಯಿಖಾನೆಗೆ ಕರೆದೊಯ್ಯುವಷ್ಟೇ ಜೋಪಾನವಾಗಿ ಕೊಲೆಗಾರ ದೇವಕಿಯಮ್ಮನ್ನ ಇಲ್ಲಿಗೆ ಕರೆತಂದಿದ್ದಾನೆ.” +ಟೈಟಸ್ ಮೌನವಾದ. ಕ್ಷಣ ತಡೆದು ದನಿಯೆತ್ತರಿಸಿದ. “ಆಯಮ್ಮ ಕೊಲೆಗಾರನ ಜತೆ ಆಟೋದಲ್ಲಿ ಬಂದದ್ದನ್ನ, ಇಲ್ಲಿ ಇಳಿದದ್ದನ್ನ, ಆ ಗೇಟ್ ಮೂಲಕ ಒಳಗೆ ಹೋದದ್ದನ್ನ ಯಾರಾದ್ರೂ ನೋಡಿರಲೇಬೇಕು ಕೋದಂಡಯ್ಯ. ಅಕ್ಕಪಕ್ಕದಲ್ಲಿ ಸ್ವಲ್ಪ ವಿಚಾರಿಸಬೇಕು.” +ಕೋದಂಡಯ್ಯ ಲೊಚಗುಟ್ಟಿದ. +“ಆ ಕೆಲಸ ಮಾಡಿಯಾಯ್ತು. ಏನೂ ಪ್ರಯೋಜನ ಇಲ್ಲ.” +“ಹಂಗಂದ್ರೆ?” +“ಹಂಗಂದ್ರೆ ಹೀಂಗೆ ಗುರೂ. ಕಟುಕನ ಜತೆ ಕುರಿ ಇಲ್ಲಿಗೆ ಬಂದದ್ದನ್ನ ಯಾರೂ ಗಮನಿಸಿಲ್ಲ. ಜನಾನೇ ಹೀಗೆ. ಏನೂ ಇಲ್ಲದಿದ್ದಾಗ ಎಲ್ಲರೂ ಅತ್ತಲೇ ನೋಡ್ತಾ ಇರ್ತಾರೆ. ನಡೀಬಾರದ್ದು ನಡೀತಾ ಇರೋವಾಗ ಆ ಕಡೆ ತಿರುಗಿಯೂ ನೋಡೋದಿಲ್ಲ…” ಮತ್ತೊಮ್ಮೆ ಲೊಚಗುಟ್ಟಿ ಮುಂದುವರೆಸಿದ. “ಸುತ್ತುಮುತ್ತಲಿನ ಜನ ನೋಡಿ ನಮಗೆ ಸುದ್ದಿ ಕೊಡೋದಾಗಿದ್ರೆ ನಾವು ಕಷ್ಟಪಡೋ ಅಗತ್ಯವಾದ್ರೂ ಎಲ್ಲಿರ್‍ತಿತ್ತು? ಆ ಪುಣ್ಯ ನಮಗೆಲ್ಲಿ ಬಂತು? ಆ ಮಾತು ಬಿಡಿ. ನಮ್ಮ ಕೆಲಸ ನಾವೇ ಮಾಡ್ಬೇಕು. ಸಧ್ಯಕ್ಕೆ ಇಲ್ಲಿ ಇಷ್ಟು ಮಾಡಿದ್ದು ಸಾಕು. ಬೃಂದಾವನ್ ಎಕ್ಸ್‌ಟೆನ್ಷನ್‌ಗೆ, ಕಾವೇರಿ ನರ್ಸಿಂಗ್ ಹೋಂಗೆ ಒಂದೊಂದ್ಸಲ ಭೇಟಿ ಕೊಟ್ಟುಬಿಡೋಣ. ಉಳಿದ ಕೆಲಸ ಏನಿದ್ರೂ ಪೋಸ್ಟ್‌ಮಾರ್ಟಂ ಮತ್ತು ಫೊರೆನ್ಸಿಕ್ ರಿಪೋರ್ಟ್ ಬಂದಮೇಲೆ.” +ಜೀಪ್ ಹೊರಡುತ್ತಿದ್ದಂತೇ ಟೈಟಸ್ ಗಾಬರಿಯ ದನಿ ತೆಗೆದ. +“ಅಯ್ಯಯ್ಯೋ! ಒಂದ್ ಕೆಲ್ಸಾ ಮರೆತು ಹೋಯ್ತಲ್ಲಾ ಕೋದಂಡಯ್ಯ!” +ಕೋದಂಡಯ್ಯ ಕಣ್ಣರಳಿಸಿದ. +“ಆ ನರಹರಿಯನ್ನ, ಅಂದ್ರೆ ದೇವಕಿಯಮ್ಮನ ಮೈದುನನ ಜತೆ ಮಾತಾಡಬೇಕಾಗಿತ್ತು ಕಣಯ್ಯ.” +ಕೋದಂಡಯ್ಯ ಮತ್ತೊಮ್ಮೆ ಲೊಚಗುಟ್ಟಿದ. +“ಆವಯ್ಯ ಹೊರಕ್ಕೆ ಹೋಗಿ ಯಾವ್ದೋ ಕಾಲ ಆಯ್ತು. ಅವನನ್ನ ಆಮೇಲೆ ನಿಧಾನವಾಗಿ ನೋಡಬೋದು. ಈಗ ಅದಕ್ಕಿಂತ್ಲೂ ಮುಖ್ಯವಾದ ಕೆಲಸ ಇದೆ.” +“ಏನದು?” +ಅವನ ಕಡೆ ತಿರುಗದೇ ಡ್ರೈವರ್‌ಗೆ ಆದೇಶಿಸಿದ ಕೋದಂಡಯ್ಯ. +“ಸ್ವಲ್ಪ ಆ ಎದುರಿಗೆ ಕಾಣ್ತಾ ಇರೋ ಮಿಲ್ಟ್ರಿ ಹೋಟೆಲ್ ಮುಂದೆ ಗಾಡಿ ನಿಲ್ಸಪ್ಪ.” +ಅಧಿಕಾರಿಯ ಗೊಂದಲಗ್ರಸ್ತ ಮುಖದತ್ತ ನೋಡಿ ಕಿರುನಗೆ ನಕ್ಕ. +“ತಮಗೆ ಬೆಳಿಗ್ಗೆ ದೋಸೆ ಚಟ್ನಿ ಮೇಯಿಸಿದ ದೇವರು ಮಧ್ಯಾಹ್ನ ಬಿರಿಯಾನಿ ಮೇಯಿಸ್ತಾನೆ ಅಂತ ನಾನು ಹೇಳಿದ್ದನ್ನ ಮರೆತುಬಿಟ್ರಾ? ಈಗ ಬಿಸಿಬಿಸಿ ಬಿರಿಯಾನಿ ತಯಾರಾಗಿರತ್ತೆ. ನಿಮಗೆ ಬಡಿಸೋದಿಕ್ಕೆ ದೇವರು ಕಾದು ನಿಂತಿದ್ದಾನೆ ಅಲ್ಲಿ. ನಡೀರೀ, ಹೋಗಿ ಹೊಡೆದುಬಿಡೋಣ.” +* * * +-ಆರು- +ಹಣೆಗೆ ಕೈ ಒತ್ತಿದಳು ಮಾನ್ಸಿ. ತಲೆಯಲ್ಲಿ ಗೊಂದಲಗಳ ಮೆರವಣಿಗೆ ಸಾಗಿತ್ತು. +ಬಿ ಎ ಪೂರ್ಣವಾಗಲಿಲ್ಲ! +ಕೊನೆಯ ಪರೀಕ್ಷೆಯ ಸಮಯ ಸರಿದುಹೋಗಿತ್ತು. +ಪರೀಕ್ಷೆ ಬರೆಯಲು ಹೋಗಲಾಗಲಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಇನ್ನಾರು ತಿಂಗಳು ಕಾಯಬೇಕು. +ನೆರೆಯಲ್ಲಿ ನಡೆದಿರುವ ದುರಂತ ಕಣ್ಣುಗಳಿಗೆ ಕತ್ತಲೆ ಕವಿಸಿದೆ. ಮನಸ್ಸಿನ ತುಂಬಾ ಸೂತಕದಂಥ ಮುಸುಕು. +ಬಿ ಎ ಮುಗಿಯದೇ ಗೋಕುಲ್‌ನೊಡನೆ ಮದುವೆಗೆ ಮನಸ್ಸು ಒಪ್ಪುತ್ತಿಲ್ಲ. ಅದರರ್ಥ ನಾನು ಇನ್ನೂ ಕೆಲವು ತಿಂಗಳುಗಳು ಅಣ್ಣ ಅತ್ತಿಗೆಯ ನೆರಳಿನಲ್ಲೇ ಬದುಕಬೇಕು. ಪರಾವಲಂಬಿಯ ಬದುಕು ಇನ್ನೂ ಮುಂದುವರೆಯುತ್ತದೆ! +ಇರಲಿ, ಈಗ ಅದು ಮುಖ್ಯ ಅಲ್ಲ. ನನಗಾದರೆ ಪರೀಕ್ಷೆ ಬರೆಯುವ ಅವಕಾಶ ಇನ್ನಾರು ತಿಂಗಳಲ್ಲಿ ಮತ್ತೊಮ್ಮೆ ಬರುತ್ತದೆ. ಆದರೆ ಗೋಕುಲ್‌ಗೆ…? +ಅವನ ಏಕೈಕ ಅಕ್ಕ ಇನ್ನೆಂದೂ ಹಿಂತಿರುಗುವುದಿಲ್ಲ. +‘ಪ್ರಿಯಕರನ ಬಾಳಿನಲ್ಲಿ ನಡೆದ ದುರಂತ ನನ್ನ ಬದುಕಿನ ದುರಂತವೂ ಹೌದು.’ +ಇದು ಹೇಗಾಯಿತು? +ಸಿಡಿದುಹೋಗುತ್ತಿದ್ದಂತಹ ತಲೆಯನ್ನು ಅಂಗೈಗಳಿಂದ ಒತ್ತಿ ಹಿಡಿದಳು. +ದೇವಕಿ ಆಂಟಿಗಿದ್ದ ವೈರಿ ಯಾರು? ಅವಳನ್ನು ಕೊಂದು ಬೆಂಕಿಯಲ್ಲಿ ಸುಡುವಷ್ಟು ದ್ವೇಷ ಅವನಿಗೆ! +ಅವನು ನನ್ನ ಹಿಂದೆಯೂ ನಿಂತಿದ್ದ ಎಂದು ಶಿವ ಅಂಕಲ್ ಹೇಳುತ್ತಾರೆ. +ಅಂದರೆ ಬೆಂಕಿ ಆರಿಸುವ ನನ್ನ ಪ್ರಯತ್ನ ಅವನ ಯೋಜನೆಗೆ ಒಡ್ಡಿದ ತಡೆಯೇ? ಅದಕ್ಕಾಗಿ ನನ್ನನ್ನೂ ಕೊಲ್ಲಲು ಅವನು ಬಯಸಿದ್ದನೇ? ಶಿವ ಅಂಕಲ್ ಸಮಯಕ್ಕೆ ಸರಿಯಾಗಿ ಬಾರದಿದ್ದರೆ ನಾನೂ ದೇವಕಿ ಆಂಟಿಯ ದಾರಿ ಹಿಡಿಯುತ್ತಿದ್ದೆನೇ? +ಅವಳೆದೆಯಲ್ಲಿ ಭಯ ಝಿಲ್ಲನೆ ಪುಟಿಯಿತು. +ಅವನು ಯಾರು? +ದೇವಕಿ ಆಂಟಿಗೆ ಇ ಮೇಲ್ ಮೂಲಕ ಸೂಚನೆ ಕೊಟ್ಟ ಅವನು ಆಕೆ ಜಿನುಗುಮಳೆಯಲ್ಲಿ ಮನೆಯಿಂದ ಹೊರಡುವಂತೆ ಮಾಡಿದ್ದಾನೆ. ಬೃಂದಾವನ್ ಎಕ್ಸ್‌ಟೆನ್ಷನ್‌ನ ಮನೆಯಿಂದ ತನ್ನ ಕಾರಿನಲ್ಲಿ ಹೊರಟ ಅವಳು ಇಲ್ಲಿಗೆ ತಲುಪಿದ್ದು ಆಟೋರಿಕ್ಷಾದಲ್ಲಿ! ಅವಳ ಕಾರು ಕುವೆಂಪು ನಗರ ಮಾರ್ಕೆಟ್‌ನ ಹತ್ತಿರ ರಸ್ತೆಬದಿಯಲ್ಲಿ ನಿಂತಿದ್ದುದು ಈ ಮಧ್ಯಾಹ್ನ ಪೋಲೀಸರ ಗಮನಕ್ಕೆ ಬಂದಿದೆ. ಅವರು ಮೊದಲು ಸಂದೇಹಿಸಿದಂತೆ ಆಂಟಿಯ ಕಾರಿಗೆ ಯಾವ ತೊಂದರೆಯೂ ಆಗಿಲ್ಲ. ಎಂಜಿನ್ ಸರಿಯಾಗಿದೆ ಹಾಗೂ ಪೆಟ್ರೋಲ್ ಟ್ಯಾಂಕ್ ಭರ್ತಿಯಾಗಿದೆ. +ಆಂಟಿ ಅಲ್ಲೇಕೆ ತನ್ನ ಕಾರ್ ನಿಲ್ಲಿಸಿದಳು? ಕೊಲೆಗಾರ ಅವಳಿಗಾಗಿ ಅಲ್ಲಿ ಕಾದುನಿಂತಿದ್ದನೇ? ಅವಳನ್ನು ಕಾರಿನಿಂದಿಳಿಸಿ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಇಲ್ಲಿಗೆ ಕರೆತಂದನೇ? ಅವನು ಆಂಟಿಯ ಜತೆ ಇಲ್ಲಿಗೆ ಬಂದದ್ದನ್ನು ಯಾರೂ ನೋಡಿಲ್ಲ… +ಮನೆಯ ಯಾವ ಭಾಗದಲ್ಲೂ ಕೊಲೆಗಾರನ ಬೆರಳ ಗುರುತುಗಳಾಗಲೀ, ಅವನ ಬಗ್ಗೆ ಯಾವುದೇ ಸುಳಿವಾಗಲೀ ಪೋಲೀಸರಿಗೆ ಸಿಕ್ಕಿಲ್ಲ! ಅವರಿಗೆ ಧಾರಾಳವಾಗಿ ಸಿಕ್ಕಿರುವುದು ದೇವಕಿ ಆಂಟಿಯ, ದಯಾ ಅಂಕಲ್‌ರ, ಅಡಿಗೆ ಹೆಂಗಸು ಅಂಬುಜಮ್ಮನ ಹಾಗೂ ಕೆಲಸದಾಕೆ ಸಾಕಮ್ಮನ ಬೆರಳ ಗುರುತುಗಳು ಮಾತ್ರ. ಅಲ್ಲಲ್ಲಿ ಮಸುಕಾಗಿ ಗೋಕುಲ್‌ನ ಬೆರಳ ಗುರುತುಗಳೂ ಸಿಕ್ಕಿವೆಯಂತೆ. +ದೇವಕಿ ಆಂಟಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ದಯಾ ಅಂಕಲ್ ಅವಳ ಕೊಲೆಗೆ ಕಾರಣ ಅಲ್ಲ. ಆಂಟಿ ಇಲ್ಲಿ ಕೊಲೆಯಾದಾಗ ಪಾಪ ದಯಾ ಅಂಕಲ್ ಅಕ್ಸಿಡೆಂಟ್‌ನಲ್ಲಿ ಕಾಲು ಮುರಿದುಕೊಂಡು ರಸ್ತೆಯಲ್ಲಿ ಬಿದ್ದಿದ್ದರು. ಗೋಕುಲ್ ಎರಡು ದಿನಗಳ ಹಿಂದೆ ಹೈದರಾಬಾದಿಗೆ ಹೋದವನು ಹಿಂತಿರುಗಿದ್ದು ಆಂಟಿಯ ಕೊಲೆಯಾದ ಅದೆಷ್ಟೋ ಗಂಟೆಗಳಾದ ಮೇಲೆ. ಮನೆಯಲ್ಲಿ ಸಿಕ್ಕಿರುವ ಅವನ ಬೆರಳ ಗುರುತುಗಳು ಎರಡು ದಿನಗಳಷ್ಟು ಹಳೆಯವು. ಅವನನ್ನು ಸಂದೇಹಿಸಲು ಪೋಲೀಸರಿಗೆ ಯಾವ ಕಾರಣವೂ ಇಲ್ಲ. ಅವರೇನಾದರೂ ಅವನನ್ನು ಸಂಶಯಿಸಿದರೆ ಅವರಿಗೆ ತಲೆ ಕೆಟ್ಟಿದೆ ಎಂದೇ ಅರ್ಥ. ಪಾಪದ ಹೆಂಗಸರಾದ ಅಂಬುಜಮ್ಮ ಮತ್ತು ಸಾಕಮ್ಮ ಆಂಟಿಯ ಕೊಲೆ ಮಾಡಲು ಸಾಧ್ಯವೇ ಇಲ್ಲ. +ತನ್ನ ಬೆರಳ ಗುರುತನ್ನು ಬಿಡದಷ್ಟು ಜಾಗರೂಕತೆ ಕೊಲೆಗಾರನಿಗೆ… +ಅವಳ ತಲೆಯಲ್ಲಿ ಮಿಂಚು ಹೊಳೆಯಿತು. +ನರಹರಿ! +ಅವನಿರುವುದು ಈ ಮನೆಯಲ್ಲೇ. +ಅವನ ಬೆರಳ ಗುರುತು ಮನೆಯ ಯಾವ ಭಾಗದಲ್ಲೂ ಸಿಕ್ಕಿಲ್ಲ! +ಇದು ಹೇಗೆ ಸಾಧ್ಯ? +ಆಂಟಿಗೆ ಅಪಾಯ ಇದ್ದುದಾದರೆ ಅದು ಅವನೊಬ್ಬನಿಂದ ಮಾತ್ರ. +ಎರಡು ವಾರಗಳ ಹಿಂದೆ ಅವನಿಲ್ಲಿಗೆ ಬಂದಾಗ ಆಂಟಿಯ ಬಗ್ಗೆ ಅವನ ವರ್ತನೆ…! ಅಂದು ಸಂಜೆ ದಯಾ ಅಂಕಲ್ ಮನೆಯಲ್ಲಿಲ್ಲದಾಗ ನಡೆದ ಆ ಘಟನೆ…! +ಓಹ್! ದೇವಕಿ ಆಂಟಿ ಅದೆಷ್ಟು ಹೆದರಿದ್ದಳು? +ಈ ನರಹರಿಯೇ ಕೊಲೆಗಾರ! ನನ್ನ ಪ್ರೀತಿಯ ದೇವಕಿ ಆಂಟಿಯನ್ನು ಅಮಾನುಷವಾಗಿ ಕೊಂದವನು ಅವನೇ? +ನಾನಿದನ್ನು ಈಗಲೇ ಪೋಲೀಸರಿಗೆ ತಿಳಿಸಬೇಕು. +ಏರಿದ ಉತ್ಸಾಹಕ್ಕೆ ವಿವೇಕದ ಕಡಿವಾಣ ಬಿತ್ತು. +ನರಹರಿಯ ಮೇಲೆ ಆಪಾದನೆ ಹೊರಿಸಲು ನನ್ನಲ್ಲಿ ಆಧಾರಗಳೇನಿವೆ? ಆಧಾರಗಳಿಲ್ಲದಿದ್ದರೆ ಪೋಲೀಸರ ಮುಂದೆ ನನ್ನ ಮಾತು ನಡೆಯುವುದಿಲ್ಲ. +ನಾನೀಗ ಅಗತ್ಯವಾಗಿ ಮಾಡಬೇಕಾದ ಕೆಲಸ ನನ್ನ ಸಂದೇಹಕ್ಕೆ ಆಧಾರಗಳನ್ನು ಸಂಗ್ರಹಿಸುವುದು. +ಆದರೆ ಹೇಗೆ? +ಮೆದುಳಿನಲ್ಲಿ ಛಳಕು ಹತ್ತಿತು. +ಆಂಟಿಗೆ ಬಂದಿರಬಹುದಾದ ಇ ಮೇಲ್! +ಅವರ ಮೇಲ್ ಬಾಕ್ಸನ್ನು ತೆರೆಯುವುದು ನನಗೆ ಸಾಧ್ಯವಾದರೆ…! +ಆಂಟಿಯ ಪಾಸ್‌ವರ್ಡ್ ನನ್ನಲ್ಲಿಲ್ಲ ನಿಜ. +ಅದನ್ನು ಕಂಡುಹಿಡಿಯುವ ಪ್ರಯತ್ನ ಮಾಡಬೇಕು. +ಸಾಧ್ಯವೇ? +ಯಾಕಿಲ್ಲ? ಎಂಥೆಂಥಾ ಭಾರಿಭಾರೀ ವೆಬ್‌ಸೈಟ್‌ಗಳನ್ನೇ ಒಡೆದು ಒಳನುಗ್ಗುವ ಹ್ಯಾಕರ್‌ಗಳಿರುವಾಗ ಸರಳ ಸ್ವಭಾವದ ಆಮಾಯಕ ದೇವಕಿ ಆಂಟಿ ಸೃಷ್ಟಿಸಿಕೊಂಡಿರಬಹುದಾದ ಒಂದು ಸರಳ ಪಾಸ್‌ವರ್ಡನ್ನು ಕಂಡುಹಿಡಿಯುವುದು ಕಷ್ಟವಾಗಲಾರದು… +ಊರುಗೋಲಿನ ಆಸರೆಯಲ್ಲಿ ತನ್ನ ಕಂಪ್ಯೂಟರಿನತ್ತ ವೇಗವಾಗಿ ನಡೆದಳು. ಹದಿನೈದಡಿ ದೂರ ಯಾಕೋ ಬಹಳವೆನಿಸಿತು… +***** +ಮುಂದುವರೆಯುವುದು +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +||ಶ್ರೀ|| ಭಾಗ ಒಂದು : ಪುರುಕುತ್ಸ -೧- ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ […] +ಅಧ್ಯಾಯ ಮೂರು ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_194.txt b/Kannada Sahitya/article_194.txt new file mode 100644 index 0000000000000000000000000000000000000000..7bc0da6c29b3e91c28cb6b53a259a8e272181fb1 --- /dev/null +++ b/Kannada Sahitya/article_194.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. +ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ ಚಿತ್ರಗಳು ಬಿಸಿಬಿಸಿ ಒಗ್ಗರಣೆಯೊಡನೆ ಜೆರಾಕ್ಸ್ ಕಾಪಿಯಾಗಿ ರಾರಾಜಿಸಿದುವು. +ಆ ಭಾಷೆಯ ಸಂಸ್ಕೃತಿ, ಆಚಾರ, ವಿಚಾರ, ಹಾಸ್ಯ ಅಪಹಾಸ್ಯ ಇಲ್ಲಿಯ ನೆಲಕ್ಕೆ ಒಗ್ಗುತ್ತದೆಯೋ, ಇಲ್ಲವೋ ಎಂಬುದನ್ನೂ ತರ್ಕಿಸದೆ ಮಕ್ಕಿಕಾಮಕ್ಕಿ ಭಟ್ಟಿ ಇಳಿಸಹೊರಟರು. +ಹೀಗೆ ಕನ್ನಡೀಕರಿಸುವ ಸಂದರ್ಭದಲ್ಲಿ ಹಲವು ಒಳ್ಳೆ ಪ್ರಯತ್ನಗಳೂ ನಡದಿವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಹೆಚ್ಚುಪಾಲು ಗಾಂಧೀನಗರಿಗರು ಕೈ ಎತ್ತಿದ್ದು ರೀಮೇಕಿಗೆ. +ಆದರೆ ಇತ್ತೀಚೆಗೆ ಎಲ್ಲರ ಗಮನ ಕನ್ನಡ ಕೃತಿಗಳತ್ತ ಹೊರಳುವ ಸೂಚನೆಗಳು ಕಂಡಿವೆ ಎಂಬುದು ಸಂತಸದ ಅಂಶ. +ಕವಿತಾ ಲಂಕೇಶ್ ‘ದೇವೀರಿ’ ತೆಗೆದು ಗೆದ್ದರು. ಎಸ್.ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಟಿ.ಎನ್. ಸೀತಾರಂ ಅವರಿಂದ ತೆರೆಗೆ ಬಂತು. ಬೋಳುವಾರು ಅವರ ‘ಮತ್ತಚ್ಚೇರಾ’ ಕಥೆ ಶೇಷಾದ್ರಿ ನಿರ್ದೇಶನದಲ್ಲಿ ‘ಮುನ್ನುಡಿ’ ಚಲನಚಿತ್ರವಾಯಿತು. +ವ್ಯಾಪಾರೀ ಚಿತ್ರ ತಯಾರಿಕೆಯಲ್ಲೇ ಖುಶಿ ಕಂಡುಕೊಂಡಿದ್ದ ಯೋಗೀಶ್ವರ್‍ ‘ದ್ಯಾವನೂರ’ರ ಕಥೆ – ಆಧಾರದಿಂದ ‘ದ್ಯಾವನೂರ’ ಆರಂಭಿಸಲು ಶಿವರುದ್ರಯ್ಯನವರನ್ನು ನಿರ್ದೇಶನಕ್ಕೆ ಕರೆತಂದರು. ಇದೀಗ ಟಿ.ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ತಯಾರಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. +ಈ ಸುದ್ದಿ ಹೊರಗೆಡಹುವ ಮೊದಲ ಪ್ರಸ್‌ಮೀಟ್ನಲ್ಲಿ ನಿರ್ಮಾಪಕ ಕುಮಾರಸ್ವಾಮಿ ೪೮೮ ಪುಟದ ೧೪೦ ರೂ. ಬೆಲೆಬಳುವ ಕೃತಿಯನ್ನು ಎಲ್ಲ ಪತ್ರಕರ್ತರಿಗೂ ನೀಡಿ ‘ಚಿತ್ರ ಆರಂಭಿಸುವ ಮುನ್ನ ನಿಮ್ಮ ಸಲಹೆ ಸೂಚನೆಗಳೂ ಬರಲಿ’ ಎಂಬ ಮಾತು ಕೇಳಿ ಇತರೆ ನಿರ್ಮಾಪಕ, ನಿರ್ದೇಶಕರಿಗೂ ಮಾದರಿ ಆದರು. ಕನ್ನಡ ಚಿತ್ರರಂಗದಲ್ಲಿ ಪುಸ್ತಕ ಸಂಸ್ಕೃತಿ ಮತ್ತೆ ತಲೆ ಎತ್ತುವುದು ಈ ಮೂಲಕ ಸಾಧ್ಯವಾದಲ್ಲಿ ಅದೊಂದು ದೊಡ್ಡ ಸಾಧನೆಯೇ. +ಆಗ ನನಗನ್ನಿಸಿತು – ಕತೆ, ಕಾದಂಬರಿ ಆಧಾರಿತ ಚಿತ್ರ ಮಾಡುವವರು ಪುಸ್ತಕ ನೀಡುವಂತೆ ‘ರಿಮೇಕ್’ ಚಿತ್ರ ಮಾಡುವವರು ಮುಹೂರ್ತದಂದು – ಏನೂ ಕಥೇ ಹೇಳದೆ ಮೂಲ ಚಿತ್ರದ ಒಂದೊಂದು ಕ್ಯಾಸೆಟ್ ನಿಡಿದಲ್ಲಿ ಅದು ಇನ್ನೊಂದು ರೀತಿ ಬೆಳವಣಿಗೆಯಾದೀತು. ಹಾಗೆಂದುಕೊಂಡಾಗ ಪ್ರಶ್ನೋತ್ತರದ ಬಾಲ ಹೀಗೆ ಬೆಳೆಯಿತು. +‘ಸರಿ, ತೆಲುಗು-ತಮಿಳು ಮಲೆಯಾಳಂ ಭಾಷೆಯ ರೀಮೇಕ್ ಆದರೆ ಕ್ಯಾಸೆಟ್ ಕೊಡಬಹುದು. ಆದರೆ ಎರಡು-ಮೂರು ಚಿತ್ರಗಳ ಹಲವಾರು ದೃಶ್ಯಗಳ ಜೋಡಣೆಯ ರೀಮೇಕ್ ಚಿತ್ರವಾದರೆ?” +‘ಆಗ ಎರಡು ಮೂರು ಚಿತ್ರಗಳ ಕ್ಯಾಸೆಟ್ ಕೊಡಬೇಕಾಗುತ್ತದಲ್ಲ. ಅದು ತಾಪತ್ರಯ’. +‘ಒರಿಜಿನಲ್ ಕಥೆ ಎಂದು ತುತ್ತೂರಿ ಊದಿ ರಿಮೇಕ್ ಮಾಡುವವರಾದರೆ’ +‘ಅದಕ್ಕೆ ಕಥೆ ಹೇಳಿದರೆ ಸುಳುವು ಹಿಡಿದಾರೆಂದೇ ಅನೇಕರ ಕಥೆಯನ್ನು ‘ಸಸ್ಪೆನ್ಸ್’ ಎಂದು ತೇಲಿಸಿ ಬಿಡುತ್ತಾರೆ’ +‘ಇದು ಇಂಥವರ ಕಾದಂಬರಿ ಆಧಾರಿತ ಕೃತಿ ಎಂದು ಚಿತ್ರ ತೆಗೆಯಲಿಲ್ಲವೆ ಹಿಂದೆ. ಅದಕ್ಕೇನನ್ನೋಣ’ +‘ಅದು ಇನ್ನೊಂದು ರೀತಿ ಜಾಣತನ. ಇಂಗ್ಲೀಷ್ ಚಿತ್ರದ ಕಥೆ ಲೇಖಕಿಗೆ ಹೇಳಿ ಬರೆಸಿ ಅಚ್ಚುಹಾಕಿಸಿದ ನಂತರ ಅನೌನ್ಸ್ ಮಾಡುವವರಿಗೇನು ಮಾಡುವುದು’ +‘ವಾಕಿಂಗ್ ಇನ್ನ್ ದಿ ಕ್ಲೌಡ್ಸ್ ಮುಂಗಾರಿನ ಮಿಂಚು ಕುರಿತು ಹೇಳುತ್ತಿದ್ದೀರಾ?’ +‘ಹಾಗೂ ಎಷ್ಟೋ ಆಗಿದೆ. ಹಿಂದೆ ಕಾನಕಾನಹಳ್ಳಿ ಗೋಪಿ ಕಥೆಯೊಂದನ್ನು ಹೇಳಿ ಲೇಖಕಿ ಎಂ.ಕೆ.ಇಂದಿರಾ ಕೈಲಿ ಬರೆಸಲಿಲ್ಲವೆ?’ +‘ಅಷ್ಟು ದೂರ ಏಕೆ ಹೋಗುತ್ತೀರಿ’. +‘ನಮ್ಮ ಕಣ್ಣೆದುರಿಗೇ ‘ಹಾಲು-ಸಕ್ಕರೆ’ ಒರಿಜಿನಲ್ ಕಥೆ ಎಂದು ಹೇಳಿರುವ ಉದಾಹರಣೆ ಇಲ್ಲವೆ’ +‘ಹೌದ್ಹೌದು… ಧನರಾಜ್ ‘ಕಾದಲಕ್ಕು ಮರ್‍ಯಾದೆ’ ತಮಿಳು ಚಿತ್ರದ ರೈಟ್ಸ್ ಕೊಂಡಿಟ್ಟಿದ್ದರು. ಆ ಹಕ್ಕು ಬಿಟ್ಟಿಕೊಡುವಂತೆ ಯೋಗೀಶ್ ಹುಣಸೂರು ಕೇಳಿದಂತೆ. ಧನರಾಜ್ ಒಪ್ಪಲಿಲ್ಲ. ಫಾಜಿಲ್ ಮೊರೆ ಹೊಕ್ಕರಂತೆ. ಅವರೂ ತಾರಮ್ಮಯ್ಯ ಎಂದುಬಿಟ್ಟರಂತೆ. ಆಗ ಧಿಡೀರ್‍ ಜಾಗೃತಗೊಂಡ ಮನಸ್ಸು ಅದೇ ಕಥೆಯ ಎಳೆಯ ಮೇಲೆ ಹೊಸ ಕತೆ ನೇಯ್ದು ಕ್ಲೈಮಾಕ್ಸ್‌ಗೆ ಮತ್ತೊಂದು ಚಿತ್ರದ ದೃಶ್ಯ ಕೂಡಿಸಿ ತೆರೆಗೆ ಬಿಟ್ಟಾಗ ವಾದ, ವಿವಾದ, ಕೋರ್ಟು ಕೇಸು ಹೀಗೆ ಗಲಿಬಿಲಿಗಳು ಗಾಂಧೀನಗರದಲ್ಲಿ ಆರಂಭವಾಯಿತು. +ಚರ್ಚೆ, ರಾಜಿ ಕಾರ್ಯಕ್ರಮ, ಪಂಚಾಯಿತಿ ಕಟ್ಟೆಯ ದೃಶ್ಯಗಳು ಮರುಕಳಿಸಿದುವು. ಈಗ ಯಾರ್‍ಯಾರು ಯಾವ ಯಾವ ಭಾಷೆಯ ಚಿತ್ರಗಳನ್ನು ರೀಮೇಕಿಗೆ ಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರಿಗೆಲ್ಲ ಈಗ ‘ಗಾಬರಿ’ ಆರಂಭವಾಗಿದೆ. ಎಲ್ಲ ಆ ಕಥೆಯ ಎಳೆ ಹಿಡಿದು ಸರಸರ ಸುತ್ತವವರು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೋ ಎಂದು. ಅದರಿಂದಾಗಿಯೆ ಹಲವರು ಈಗಾಗಲೇ ತಾವು ರಿಮೆಕಿಗಾಗಿ ಕೊಂಡ ಚಿತ್ರಗಳ ರೈಟ್ಸನ್ನು ಮಾರುತ್ತಿದ್ದಾರೆ ಎಂಬ ಬಿಸಿಬಿಸಿ ಸುದ್ದಿಯೂ ಬಂದಿದೆ. +ರೀಮೇಕ್ ಚಿತ್ರಗಳಿಗೆ ಈಗ ‘ಟ್ಯಾಕ್ಸ್’ ವಸೂಲು ಮಾಡಬೇಕೆಂಬ ಹೊಸ ತಕರಾರೊಂದು ಆರಂಭವಾಗಿ ಎಡವಟ್ಟಾಗಿ ಕುಳಿತಿದೆ ‘ಯಜಮಾನ’ ಚಿತ್ರದ ಯಶಸ್ಸಿನಿಂದ ಕಣ್ಣು ಕೆಂಪಾದವರ ಹುನ್ನಾರವಿದು ಎಂಬುದು ಹಲವರ ಅಂಬೋಣ. +ಅದರಿಂದಲೇ ಈಗ ಬಹುಮಂದಿ ಕತೆ, ಕಾದಂಬರಿಗಳತ್ತ ವಾಲುತ್ತಿದ್ದಾರೆ ಎಂಬ ಮಾತಿದೆ. ಶಿವರಾಮ ಕಾರಂತರ, ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಚಿತ್ರವಾಗುವ ಮಾತು ಜೋರಿದೆ. ತೇಜಸ್ವಿಯವರ ಜುಗಾರಿ ಕ್ರಾಸ್ ಚಿತ್ರವಾಗಲಿದೆ. ಇಂಥವೆಲ್ಲ ಆದಾಗ ಅವರಿಗೆ ಪ್ರಶಸ್ತಿಯತ್ತ ಕಣ್ಣಿರುವುದೂ ಸಹಜ. +ಕ್ಯಾಸೆಟ್ ಸಂಸ್ಕೃತಿಯ ಮೇಲೆ ಪುಸ್ತಕ ಸಂಸ್ಕೃತಿ ಸವಾರಿ ಮಾಡುವ ದಿನ ಬಂದರೆ ಸಂತೋಷವೇ? +ಬಂದೀತೆ ಅಂಥ ದಿನ. +***** +(೨೭-೦೪-೨೦೦೧) +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […] +ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_195.txt b/Kannada Sahitya/article_195.txt new file mode 100644 index 0000000000000000000000000000000000000000..50590fdc80437c07d7d94835d9abf8aa0daf7b24 --- /dev/null +++ b/Kannada Sahitya/article_195.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ನೂರು ಹೃದಯ ಮೇರು ಭಾವಗಳ +ನೂರಾರು ಸಾಲುದೀಪ +ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- +ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: +ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು +ಕೊಳ್ಳೆ ಹೊಡೆಯಲು ಕೇಳಿಬರುವದೊಂದೇ ಸೊಲ್ಲು +ಅಣಕಣದ ವಿಪ್ರಲಾಪ! +ಸುತ್ತು ಕಂದಕ ತೋಡಿ ಮುಳ್ಳು ತಂತಿಯ ಬಿಗಿದು +ಭದ್ರವಾಗಿಯೆ ಕಾವಲಿಟ್ಟರೂ ಬಿಟ್ಟರೂ +ನುಗ್ಗಿ ಬಂದೇ ಬಿಡುವನಲ್ಲ ಈ ಭೂಪ! +ಬಿಳಿಯ ಗೋಡೆಯ ಮೇಲೆ ನೆರಳುಬಂದಾಡುವವು +ಕುಣಿಸುವನು ಕಿಳ್ಳಿಕೇತ; +ನೆತ್ತಿಯಲಿ ಸುರುಳಿ ಸುತ್ತಿ ಮಲಗಿದ ಮೆದುಳು….ಬಡಪಾಯಿ +ಚಿತ್ತವೆತ್ತೋ …. ಆದರ ಧ್ಯಾನವೆತ್ತೋ …. ! +ಕೆಸರು ಮೆತ್ತಿದ ಕಾಲನೆತ್ತೆತ್ತಿ ಇಡುತಿಹುದು ಗಾಣದೆತ್ತು +ಹಾಳುಗೋಡೆಯ ಬದಿಗೆ ಕಾಲು ಜೋಡಿಸಿ ನಿಂತು +ಇಹಪರದ ದೀರ್ಘ ಆಲೋಚನೆಗೆ ತೊಡಗಿಹುದು +ಯುಗಯುಗದ ದೈನ್ಯವಾಣಿ- +ಕಟ್ಟಿ ಕಾಲನು ಮೇಯಬಿಟ್ಟ ಪ್ರಾಣಿ. +ಕೆದರಿ ತಿಪ್ಪೆಯ ಕೋಳಿ ಹೆಕ್ಕುತಿಹುದೇನನೊ +ಬೆನ್ನ ಹಿಂದೆಯೆ ಕಟ್ಟಿಕೊಂಡು ತಿರುಗಿದೆ ತನ್ನ ಸರ್ವ ಬಳಗ ! +ಬೆಳಗಾಗೊ ಮುನ್ನವೇ ಕೂಗುವದೆ-ಅದರಮನೆ ಹಾಳಾಗ ಇಷ್ಟು ಬೇಗ? +ಹಿಡಿದು ಒಂದೇ ಉಸಿರು ಒದರುತಿದೆ ಊರೆಲ್ಲ ಗಿರಣಿ ಭೋಂಗಾ. +ದಿನದ ಬೀಸುವಕಲ್ಲು ಗರಗರೆಂದಾಡಿಹುದು +ಬಳೆಯ ಮಂಜುಳರವದ ನಾದ ಹಿಡಿದು ; +ಇರುಳೆಲ್ಲ ಉರಿದುರಿದು ಸಣ್ಣದಾಗಿದೆ ಪಣತಿ +ಗುಡಿಸಲದ ಗೂಡಿನಲಿ ಜೀವ ಹಿಡಿದು ! +೨ +ಅವತಾರಗಳ ಮೇಲೆ ಅವತಾರಗಳು ಬಂದು +ಮಂಡಿಸಿದ ಭಾವಚಿತ್ರ ! +ಕಟ್ಟುಹಾಕಿಸಿ ಗೋಡೆಗಿಡಿದು ಮೊಳೆಯನು ಜಡಿದು +ತೂಗಬಿಟ್ಟ ಹರಾರೊ ಬಲು ವಿಚಿತ್ರ ! +ಸುತ್ತು ಮುತ್ತಲು ಪೌಳಿ ನಡುವೆ ಗೋಪುರವೇರಿ +ಮೂಡಿತ್ತು ಮುದ್ದು ಕಳಸ ; +ಹರಗಿ ಹಸನಾದ ಹೊಲದಲ್ಲಿ ಬೆಳೆಯಿತು ರಾಶಿಧಾನ್ಯದವಸ, +ಪೂಜೆ ಸಂದಿತು ಮುಗ್ಧ ನೈವೇದ್ಯ ಸಂತೃಪ್ತಿ- +ಹಬ್ಬ ಹುಣ್ಣಿವೆಗೊಮ್ಮೆ ಹೊಮ್ಮಿದುತ್ಸಾಹದಲಿ +ಮೊಳಗಿದವು ಜೋಡು ಕಹಳೆ ! +ಗಂಟೆ ಗಣಗಣನಾದ ರಿಂಗಣದಿ ನರನರವು ವಿದ್ಯುತ್ ರಂಗಮಾಲೆ ! +ಬಯಕೆ ಊದಿನಕಡ್ಡಿ ಬರೆದುಹಾಕಿತು ದಿನವು ಬಿನ್ನಹದ ಓಲೆ +ಮುಟ್ಟಿತಿಲ್ಲವೊ, ಇನ್ನೂ ಉತ್ತರವೆ ಬರಲಿಲ್ಲ +ಏನೊ ವರ್ಗಾವರ್ಗಿ ಅಲ್ಲಿ ಮೇಲೆ ! +ನುಡಿಯಲೊಲ್ಲದು ದೇಹ ದೇಗುಲದ ಗಂಟೆಯುಲಿ +ಮಿಡಿಯಲೊಲ್ಲದು ಮುಖ್ಯ ಜೀವನಾಡಿ, +ಹಿಡಿದು ಸಿಕ್ಕಾಬಟ್ಟೆ ಜಗ್ಗುತಿವೆ ನೂರಾರು ಬೇಟೆನಾಯಿ ! +ಮಡಿಯುಟ್ಟ ಪೂಜಾರಿ (ನೋಡಿರವನವತಾರ !) +ಕಾಣಿಕೆಯ ಕೊಂಡ ತತ್ ಕ್ಷಣವೇ ಕೃತಾರ್ಥ. +ಆಮೇಲೆ ಧರ್ಮಾರ್ಥ ಹಣಿಸುವನು ಒಂದೊಂದೆ ಸೌಟು ತೀರ್ಥ +(ಗಂಗೆ ತುಂಗೆಯು ಬ್ರಹ್ಮಪುತ್ರೆ ಕಾವೇರಿಯರು ನೆರೆ ಬಂದು ಹೊರಚೆಲ್ಲುತಿಹರು ವ್ಯರ್ಥ) +ಬಣ್ಣ ಬಣ್ಣದ ಬಲ್ಬು ಕಾಜಿನ ಗುಳಾಪುಗಳು ಕಾರ್ತಿಕವ ಹಚ್ಚಿದಿರುಳು +ಥಳಥಳಿಸುವೆರಡು ಬಂಗಾರ ಪಾದುಕೆಮೇಲೆ +ಆಡುತಿವೆ ಪೂಜಾರಿ ಕೈಯ ಬೆರಳು ! +ಗರ್ಭಗುಡಿಯಲಿ ಪಣತಿ ಉರಿದಿವೆ ನಿರಾತಂಕ +ಬಂದು ಬಡಿದರು ನೂರು ದೀಪದಹುಳು ! +(೩) +ಚೆಂಡು ಹೂ ತುಂಬೆ ಹೂ ಹೊನ್ನವರೆ ಹುಚ್ಚೆಳ್ಳು- +ಸಜ್ಜೆ ಜೋಳದ ತೆನೆಗೆ ಸುಂಕವಾಡಿ +ಮಣ್ಣ ಕುಡಿಕೆಯನೊಡೆದು ಪುಟಿಯುತಿದೆ ಕಾರಂಜಿ +ಬಣ್ಣ ಬಣ್ಣದ ಬದುಕನೆಲ್ಲ ತೂರಿ! +ಗುದ್ದುತಿದೆ ಗಾಳಿಯನ್ನು ಸುಮ್ಮಸುಮ್ಮನೆ ಮದ್ದು +ಒದ್ದಾಡುತಿವೆ ಒಳಗೆ ಚಟಪಟಾಕಿ ; +ಹೊತ್ತಿ ಸುರುಸುರುಬತ್ತಿ ನಕ್ಷತ್ರ ಸೂಸುತಿವೆ +ಗೊತ್ತಿಲ್ಲವೇ, ಇಂದು ದೀಪಾವಳಿ ! +ಗುರಿಯಿರದ ಸುರುಬಾಣ ಹಾರಿದ ಧಡಲ್ ಬಾಜಿ +ಆಟದಾಟಂ ಬಾಂಬಿನಾಸ್ಫೋಟಿನ! +ಒಂದೊಂದಕೂ ಸ್ಪರ್ಧೆ ‘ನಾ ಮುಂದೆ ನೀ ಮುಂದೆ’ +ಸಾಲಬಹುದೇ ಒಂದು ಜೀವಮಾನ? +ಮುಗಿಲು ಝಗಝಗ ಮಿಂಚಿ ಹೊಡೆದುಕೊಂಡಿತು ಸ್ನ್ಯಾಪು +(ಸಿಗಲಾರದಿನ್ನಿಂಥ ಜಗದ ಭಂಗಿ!) +ಬಿರುಗಾಳಿ ಬೀಸಿ ಮಳೆ ಹೊಯ್ದು ಗುಡುಗುಡಿಸಿತ್ತು +ಸಿಕ್ಕ ಬೇಟೆಯ ಸಿಡಿಲು ತಿಂದು ತೇಗಿ ! +ಮರ ಮುರಿದು ಬಿದ್ದು ಕಬ್ಬಿಣಕಂಬ ನೆಲಕೊರಗಿ +ಹರಿದು ವಿದ್ಯುತಂತಿ ದೀಪವಾರಿ +ಕತ್ತಲೆಯೆ ತುಂಬಿ ಹೊರಚೆಲ್ಲುವ ಗಟಾರದಲಿ +ಕೊಚ್ಚಿ ಹೋಯಿತು ಪಾಪ, ಮುದ್ದು ಕುನ್ನಿ ! +* * * * +ತಲೆತಲಾಂತರದಿಂದ ತೈಲವೆರೆಯುತ ಬಂದು +ಸೊಡರು ಕುಡಿಯಾಡಿಸಿದೆ ಮಣ್ಣ ಪಣತಿ ;- +ನೆಲಬಾನಿಗೊಂದೆ ದೀಪಾವಳಿಯ ಸೇತುವೆಯ +ನಿಲಿಸಿ ಉದ್ಘಾಟಿಸಲಿ ‘ಜ್ಯೋತಿಷಾಂ ಜ್ಯೋತಿಃ!’ +***** +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […] +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_196.txt b/Kannada Sahitya/article_196.txt new file mode 100644 index 0000000000000000000000000000000000000000..5516144d359f472683e56a6e972fe44e2fd9886b --- /dev/null +++ b/Kannada Sahitya/article_196.txt @@ -0,0 +1,25 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪಡೆದು ಕೆಟ್ಟಾರು ಕಮ್ಯುನಿಸ್ಟರು +ಕೆಟ್ಟು ಪಡೆದರು ಕಾಂಗಿ ಕಾಂಗರು +ಕೇಡದೆ ಉಳಿದವರಾರು ಎಂದರೆ +ಬಿಸಿಲು ಕಾಯುವ ಬೆಪ್ಪರು. +೨೬-೧೨-೯೧ +ಬರಬಾರದು ಹೀಗೆ ನೀವು ನಮ್ಮೊಳಗೆ, ನವಿಲ ಗರಿಯೊಳಗೆ ಬಂದ ನೀಲಿ ಕಣ್ಣಂತೆ. ಮಾತನಾಡಲಿಲ್ಲ ನಾವು ಎಂದೂ ಹತ್ತಿರ ಕೂತು ಹೊತ್ತು ಕಳೆದಿಲ್ಲ ಆದರೂ ಕೇಳುತ್ತದೆ ಎದೆಬಡಿತ ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. ಮೋಹಕ್ಕೆ ಸಾವಿರ […] +೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […] +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_197.txt b/Kannada Sahitya/article_197.txt new file mode 100644 index 0000000000000000000000000000000000000000..6d13bbbd26ec5c70c3adbea2e1fae41274f11576 --- /dev/null +++ b/Kannada Sahitya/article_197.txt @@ -0,0 +1,129 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು. +ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ ಕಾಲಿನ ಉಗುರುಗಳನ್ನು ಕೀಳುತ್ತಾ ನೆಲಕ್ಕೆ ಉಗಿಯುತ್ತಾ ಕುಳಿತಿದ್ದ. ಸಿಕ್ಕಿದಕ್ಕೆಲ್ಲ ಸುಮ್ಮನೆ ‘ಮಣ್ಣಾಂಗಟ್ಟಿ ಎಂದು ಬೈದು ನೆಲಕ್ಕೆ ಕ್ಯಾಕರಿಸಿ‌ಉಗಿಯುವ ಇಸುಬುವಿನ ಹೋಟೆಲ್ಲು ಮೈಯೆಲ್ಲ ಸುಟ್ಟುಕೊಂಡು ಸರ್ವನಾಶವಾಗಿ ಹೋಗಿ ನೋಡುವವರಿಗೆ ತಮಾಶೆಯಾಗಿ ಕಾಣಿಸುತ್ತಿತ್ತು. +ಅತ್ತಕಡೆ ಕೂಜಿಮಲೆ, ಇತ್ತಕಡೆ ಏಲಕ್ಕಿಮಲೆ,ಮುಂದುಗಡೆ ಎತ್ತರಕ್ಕೆ ಈರುಳ್ಳಿಮಲೆ, ಎಡಕ್ಕೆ ರಸ್ತೆಯನ್ನೇ ಸವರಿಕೊಂಡು ಸದಾಕಾಲವೂ ಮೈಕುಲುಕಿಕೊಂಡು ಹರಿಯುವ ಬೆಣ್ಣೆ ಹಳ್ಳದ ನೀರು…. ಈ ಎಲ್ಲ ದೈವಲೀಲೆಯ ನಡುವೆ ಕಪ್ಪು ಕುರುವಿನಂತೆ ಕರಕಲಾಗಿ ಎದ್ದು ನಿಂತಿರುವ ಇಸುಬುವಿನ ತಟ್ಟಿಹೋಟೆಲ್ಲು….. ವಿಕಾರವೂ, ಅನಗತ್ಯ ತಮಾಶೆಯೂ, ಕೊಂಚ ಹೆಚ್ಚೇ ಸೌಂಧರ್ಯವೂ ತುಂಬಿಕೊಂಡಿರುವ ಈ ಜಗತ್ತು….. +ದೇವರ ಕೊಲ್ಲಿ ಎಂಬ ಈ ಸುಂದರವೂ ನಿಗೂಢವೂ ನಿತ್ಯ ದುಃಖ್ಖಿಸುತ್ತಿರುವ ಸುಂದರಿಯಂತೆಯೂ ಇರುವ ತಿರುವಿನಲ್ಲಿ ಬೈಕು ನಿಲ್ಲಿಸಿಕೊಂಡು ಈ ಇಸುಬುವಿಗೆ ಇಂತಹ ಆಪತ್ತಿನ ಕಾಲದಲ್ಲಿ ಏನು ದೈರ್ಯ ತುಂಬುವುದು ಹೇಗೆ ದೈರ್ಯ ತುಂಬುವುದು ಎಂದು ಎಂದಿನಂತೆ ಹಣೆ ನಿರಿಗೆ ಮಾಡಿಕೊಂಡು ಯೋಚಿಸುತ್ತಿದ್ದೆ. +ಹಾಗೆ ನೋಡಿದರೆ ಈ ಇಸುಬು ಇಲ್ಲದ ವೇಳೆಯಲ್ಲಿ ಶುಕ್ರವಾರದ ನಡು ಮದ್ಯಾಹ್ನ ದ ಹೊತ್ತಿನಲ್ಲಿ ಅಂದರೆ ಇಸುಬು ಮಡಿಕೇರಿ ಯ ಸಂತೆಯನ್ನೂ ವಾರದ ಜುಮ್ಮಾ ನಮಾಝನ್ನೂ ಮುಗಿಸಿ ಬರುವುದರೊಳಗೆ ತಮ್ಮನ್ನು ಬಂದು ನೋಡಬೇಕೆಂದೂ ತಾವು ಏನಾದರೊಂದು ಯೋಚಿಸಿ ಇಟ್ಟಿರುವುದಾಗಿಯೂ ಇಸುಬು ಇರುವ ವೇಳೆಯಲ್ಲಿ ಏನೂ ಹೇಳಲಾಗುವುದಿಲ್ಲ ವೆಂದೂ ಅವನೇನಾದರೂ ಇದ್ದಲ್ಲಿ ಎಲ್ಲಾ ಹಾಳಾಗಿ ಹೋಗುವುದೆಂದೂ ಇಸುಬುವಿನ ತಂಗಿ ನೆಬೀಸಾ ತನ್ನ ಮಗಳಾದ ಕೈರುವಿನ ಕೈಯಲ್ಲಿನನಗೆ ಕಾಗದ ಬರೆದು ತಿಳಿಸಿದ್ದಳು . +ನಾನೂ ನೆಬೀಸಾಳ ಕಾಗದದ ಆದೇಶವನ್ನೂ ಅರ್ಥವನ್ನೂ ಮನಗಂಡು ಶುಕ್ರವಾರವೇ ಹೊರಟವನು ದಾರಿಯಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಸಿಲುಕಿಕೊಂಡು ಅದು ಹೇಗೋ ಏನೂ ಆಗದೆ ಶನಿವಾರದ ನಡು ಮದ್ಯಾಹ್ನದ ಹೊತ್ತು ಇಸುಬುವಿನ ಸುಟ್ಟ ಹೋಟೆಲ್ಲಿನ ಮುಂದೆ ಬಂದು ನಿಂತು ನಿಂತಿದ್ದೆ . ಯಾಕೋ ಎಂದೂ ಬಾರದ ವೈರಾಗ್ಯವೊಂದು ನನ್ನನ್ನು ಆ ಹಸಿರು ಸಾಲಿನ ನಡುವೆ ಸುತ್ತಿಕೊಂಡು ಏನೂ ಬೇಡವೆನಿಸುತ್ತಿತ್ತು . ಸಂಬಂಧಗಳನ್ನು ಜೋಡಿಸುವುದು, ಕಾಣೆಯಾದವರನ್ನು ಹುಡುಕಿಕೊಡುವುದು, ಮರೆತುಹೋದವರನ್ನು ಮತ್ತೆ ನೋಡುವುದು ನನ್ನ ಈ ಎಲ್ಲ ಹುಚ್ಚಾಟಗಳೂ ಈ ಸುಟ್ಟುಹೋದ ಹೋಟೆಲ್ಲಿನ ಮುಂದೆ ಎಷ್ಟು ನಗೆಪಾಟಲಿನ ವಿಷಯ ಅನಿಸುತ್ತಿತ್ತು. ಹಾಗೇ ಸುಮ್ಮನೆ ಆವಿಯ ಹಾಗೆ ಈ ಬೆಟ್ಟಸಾಲಿನ ನಡುವಿಂದ ಯಾವುದಾದರು ಮಂತ್ರ ಬಲದಿಂದ ಮಾಯವಾಗುವುದು ಸಾಧ್ಯವಿದ್ದರೆ ಎಂದು ಯೋಚಿಸಿಬಿಟ್ಟೆ. +ಸಣ್ಣದಿರುವಾಗ ನಾನೂ ಈ ಇಸುಬುವೂ ನದಿಯ ನೀರಿನಲ್ಲಿ ಒಂದು ಕಾಲಿನಲ್ಲಿ ಗಂಟೆಗಟ್ಟಳೆ ಕಂಠಮಟ್ಟ ನಿಂತುಕೊಂಡು ಕುಟ್ಟಿಚಾತ ಎಂಬ ದೈವವನ್ನು ಆವಾಹಿಸುತ್ತಿದ್ದೆವು. ಬೇಕೆಂದಾಗ ಬೇಕೆಂಬ ಪ್ರಾಣಿಯ ರೂಪವನ್ನು ತಾಳಿಕೊಂಡು ನಮಗೆ ಬೇಕೆಂದದ್ದನ್ನು ತಂದು ಕೊಡಬಲ್ಲ ಕುಟ್ಟಿಚಾತದ ಆವಾಹನೆಯಾಗಬೇಕಾದರೆ ಬೆಳಗೆ ಬರಿಹೊಟ್ಟೆಗೇ ಒಂದು ಬೆಂಕಿತುದಿಯಷ್ಟು ಗಾತ್ರದ ಮಲವನ್ನು ಸೇವಿಸಬೇಕೆಂದೂ ಆಮೇಲೆ ಕಂಠಮಟ್ಟ ಒಂಟಿಕಾಲಲ್ಲಿ ನದಿಯಲ್ಲಿ ನಿಲ್ಲಬೇಕೆಂದೂ ಇಸುಬು ಯಾರಿಂದಲೋ ಕೇಳಿಕೊಂಡು ಬಂದಿದ್ದ .ನಾವಿಬ್ಬರೂ ಬೆಳಗೆ ಹಾಗೇ ಮಾಡಿಕೊಂಡು ನದಿಯನೀರಲ್ಲಿ ಸೂರ್ಯ ಮೂಡುವವರೆಗೆ ನಿಂತುಕೊಳ್ಳುತ್ತಿದ್ದೆವು +ಕುಟ್ಟಿಚಾತ ಒಂದು ಕಾಡುಬೆಕ್ಕಿನ ರೂಪವನ್ನು ಆವಾಹಿಸಿಕೊಂಡು ನಡುರಾತ್ರಿಯಲ್ಲಿ ಅರಸನೊಬ್ಬನ ಮನೆಗೆ ನುಗ್ಗಿ ಆಹಾರವನ್ನೂ ವಸ್ತ್ರ ಒಡವೆಗಳನ್ನೂ ತಂದು ಒಪ್ಪಿಸುವನೆಂದೂ ನಾವು ಅವುಗಳನ್ನು ಆನಂದಿಸಿ ಬೆಳಗಾಗುವುದರೊಳಗೆ ತಿರುಗಿಸಿ ಕುಟ್ಟಿಚಾತನಿಗೇ ಒಪ್ಪಿಸಬೇಕೆಂದು ಕುಟ್ಟಿಚಾತ ಅವುಗಳನ್ನು ತಿರುಗಿಸಿ ಅರಸನ ಮನೆಯಲ್ಲೇ ಮರಳಿ ಇಡುವನೆಂದೂ ಒಂದುವೇಳೆ ನಾವು ಹಿಂತಿರುಗಿಸದಿದ್ಡರೆ ನಮ್ಮನ್ನು ಜೀವನ ಪೂರ್ತಿ ನಾಯಿಗಳನ್ನಾಗಿ ಮಾಡಿಬಿಡುವನೆಂದೂ ಹಿಂತಿರುಗಿಸಿದರೆ ನಮಗೆ ಆಶೆಯಾಗುವುದನ್ನೆಲ್ಲಾ ಹೀಗೇ ನಡುರಾತ್ರಿಯ ಹೊತ್ತು ತಂದುಕೊಡುತ್ತಿರುತ್ತಾನೆಂದು ಇಸುಬು ನನ್ನಲ್ಲಿ ಆಶೆ ಹುಟ್ಟಿಸಿ ಹಲವು ದಿನಗಳಷ್ಟು ಕಾಲ ನನ್ನನ್ನು ಮಲತಿನ್ನುವಂತೆ ಮಾಡಿಬಿಟ್ಟಿದ್ದ. ಮತ್ತು ನೀರಲ್ಲಿ ನಿಲ್ಲಿಸಿದ್ದ. +ಈಗ ನೋಡಿದರೆ ಇಸುಬು ಯಾವ ಕುಟ್ಟಿಚಾತನ ಬಲವೂ ಇಲ್ಲದೆ ಆದರೂ ಏನೂ ಆಗದವನಂತೆ ಧಿಕ್ಕಾರದ ಮುಖ ಮಾಡಿಕೊಂಡು ಕುಳಿತಿದ್ದ. ಅವನ ಯಾವತ್ತಿನ ಧಿಕ್ಕಾರದ ಮುಖ. ಪರಮ ಪಾಷಾಂಡಿಯೂ ಹಠಮಾರಿಯೂ ಆದ ತನ್ನ ಅಣ್ಣ ಇಸುಬುವಿನಿಂದ ತನ್ನ ಬಾಳೆಲ್ಲವೂ ಹಾಳಾಯಿತೆಂದೂ ತನ್ನ ಮಗಳು ಕೈರು ಅಪ್ಪನ ಮುಖವನ್ನೇ ನೋಡದೆ ಈ ಹದಿನಾರು ವರ್ಷಗಳನ್ನು ಅನಾಥೆಯಂತೆ ಕಳೆಯಬೇಕಾಯಿತೆಂದೂ ಇಸುಬುವಿನ ತಟ್ಟಿ ಹೋಟೆಲ್ಲಿನ ಅಲುಮಿನಿಯಂ ಪಾತ್ರೆಗಳನ್ನು ನದಿಯಲ್ಲಿ ತೊಳೆದು ತೊಳೆದು ತನ್ನ ಆಯುಷ್ಯವೆಲ್ಲವೂ ಮೂರಾಬಟ್ಟೆಯಾಯಿತೆಂದೂ ಹೇಗಾದರೂ ತನ್ನನ್ನೂ ತನ್ನ ಮಗಳನ್ನೂ ಈ ನರಕದಿಂದ ಬಿಡಿಸಬೇಕೆಂದೂ ತನ್ನ ಗಂಡ ಅಬ್ಬಾಸ್ ಬ್ಯಾರಿಯ ಎರಡನೆಯ ಹೆಂಡತಿಯ ಎಂಜಲು ತಿಂದಾದರೂ ಬದುಕುವೆನೆಂದೂ ನೆಬೀಸಾ ತನ್ನ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಳು .ಅವಳಿಗೆ ನಾನು ಮಂಜೇಶ್ವರದ ಬಳಿಯಲ್ಲಿ ಅವಳ ಗಂಡ ಅಬ್ಬಾಸ್ ಮುಕ್ರಿಯವರನ್ನು ಸಂಸಾರ ಸಮೇತ ಕಂಡು ಹುಡುಕಿದ್ದು ವಿಪರೀತ ಖುಷಿಯನ್ನು ಉಂಟುಮಾಡಿತ್ತು. +ಹದಿನಾರು ವರ್ಷಗಳ ಹಿಂದೆ ಓಡಿಹೋದ ಆಕೆಯ ಗಂಡ ಅಬ್ಬಾಸ್ ಮುಕ್ರಿ ಇನ್ನೊಂದು ಸಂಸಾರ ಮಾಡಿಕೊಂಡಿದ್ದರೂ ಸುಖವಾಗಿರುವುದೂ ಆ ಸಂಸಾರ ಸುಖದೊಳಗೂ ಆತ ತನ್ನನ್ನೂ ಮಗಳು ಕೈರುವನ್ನೂ ನೆನೆದು ಅತ್ತಿದ್ದೂ ಹೇಗದರೂ ಮಾಡಿ ತನ್ನನ್ನೂ ಮತ್ತು ತನ್ನ ಮೊದಲನೆಯ ಸಂಸಾರವನ್ನೂ ಒಂದುಗೂಡಿಸಬೇಕೆಂದು ನನ್ನ ಕೈ ಹಿಡಿದು ಬೇಡಿಕೊಂಡದ್ದು ಎಲ್ಲವನ್ನೂ ಹದಿನೈದು ದಿನಗಳ ಹಿಂದೆ ಒಂದು ಶುಕ್ರವಾರ ಬಂದಿದ್ದಾಗ ನಾನು ಅವರಿಬ್ಬರಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೆ. ಅದು ಹೇಗೆ ಅಬ್ಬಾಸ್ ಮುಕ್ರಿಯವರ ಎರಡನೆಯ ಹೆಂಡತಿ ತನ್ನ ಏಳೆಂಟು ಮಕ್ಕಳನ್ನು ಸುತ್ತ ನಿಲ್ಲಿಸಿಕೊಂಡು ಅವರೆಲ್ಲರ ತಲೆಯ ಮೇಲೆ ಆಣೆಯಿಟ್ಟು ತನಗೂ ತನ್ನ ಪತಿಯ ಮೊದಲನೆಯ ಸಂಸಾರವನ್ನು ನೋಡಲು ಅಮಿತವಾದ ಆಶೆಯಾಗುತ್ತಿರುವುದಾಗಿಯೂ ಹೇಗಾದರೂ ಮಾಡಿ ಎರಡೂ ಸಂಸಾರಗಳನ್ನೂ ಒಂದು ಮಾಡಿ ಅಲ್ಲಾಹುವಿನ ಕಡೆಯಿಂದ ಪುಣ್ಯ ಕಟ್ಟಿಕೊಳ್ಳಬೇಕೆಂದೂ ತನ್ನದೇ ಗಂಡನ ರಕ್ತ ಮಾಂಸಗಳನ್ನು ಪಡೆದು ಹುಟ್ಟಿದ ಕೈರು ಎಂಬ ಹುಡುಗಿ ಹೀಗೆ ಅನಾಥಳಂತೆ ಕಂಡವರು ಹೋಟಲಲ್ಲಿ ಉಂಡ ಎಂಜಲು ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಕೇಳಿ ಸಹಿಸಲಾಗುತ್ತಿಲ್ಲವೆಂದೂ ನನ್ನಗೆ ಬಾರಿ ಬಾರಿ ಸತ್ಯ ಮಾಡಿಹೇಳಿದ್ದನ್ನು ನಾನು ಅವರ ತಟ್ಟಿ ಹೋಟಲ್ಲಿನೊಳಗೆ ಇಸುಬು ಇಲ್ಲದಿರುವಾಗ ಹೇಳಿ ತಾಯಿಮಗಳಿಬ್ಬರೂ ಕಣ್ಣೀರು ಹರಿಸುವಂತೆ ಮಾಡಿದ್ದೆ. ಅಮೇಲೆ ನನಗೇ ನಾನು ಹೇಳಿದ್ದು ಅತಿಯಾಯಿತೆಂದು ಅನಿಸಿ ಹಳಹಳಿಕೆ ಶುರುವಾಗಿತ್ತು. +ಯಾಕೆಂದರೆ ನಾನು ಹೇಳಿ ಮುಗಿಸಿ ಕೊಂಚ ಹೊತ್ತಲ್ಲೇ ನೆಬೀಸ ನನ್ನ ಮುಂದಿಂದಲೇ ಕರುಳು ಕಿವಿಚುವಂತೆ ಮಗಳ ಕೈಯಲ್ಲಿ ಗಂಡನಿಗೆ ಕನ್ನಡದಲ್ಲಿ ಒಂದು ಪತ್ರವೊದನ್ನು ಹೇಳಿಬರೆಯಿಸಿ ನನ್ನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಳು. +ಗಂಡನಿಲ್ಲದ ತನ್ನ ಹದಿನಾರು ವರ್ಷಗಳು ಅದು ಹೇಗೆ ನರಕದಂತೆ ಕಳೆಯಿತೆಂದೂ, ತನ್ನ ಮಗಳು ಕೈರುನ್ನೀಸಾ ಅದು ಹೇಗೆ ಒಂದುವರ್ಷವಾಗುವ ಮೊದಲೇ ಬಾಪಾ ಬಾಪಾ ಎಂದು ಕಾಣೆಯಾದ ಅಪ್ಪನನ್ನು ಹುಡುಕುತ್ತಾ ನೆಲದಲ್ಲೆಲ್ಲಾ ತೆವಳುತ್ತಿದ್ದಳೆಂದೂ ಅದು ಹೇಗೆ ಇಸುಬು ಎಂಬ ತನ್ನ ಅಣ್ಣ ಆ ಮಾತು ಬಾರದ ಮಗುವನ್ನು ಅದರ ಈ ಆರ್ತನಾದಕ್ಕಾಗಿ ಶಿಕ್ಷಿಸುತ್ತಿದ್ದನೆಂದೂ +ಕುರಾನಿನ ಪ್ರಕಾರವಾಗಿಯೇ ಮದುವೆಯಾಗಿ ಅದರಿಂದ ಮಗುವನ್ನೂ ಪಡೆದ ತಾವಿಬ್ಬರೂ ಬೇರೆಬೇರೆಯಾಗಲು ದುಷ್ಟನಾದ ತನ್ನ ಅಣ್ಣನೇ ಕಾರಣವೆಂದೂ ಎಲ್ಲವನ್ನೂ ಕಾಣುವವನೂ ಅರಿತವನೂ ಆದ ಆ ಪಡೆದವನು ಇದೊಂದು ಅನ್ಯಾಯವನ್ನು ಅದು ಹೇಗೆ ಕಾಣದೆ ಇರುವನೆಂದೂ +ಇದುವರೆಗೆ ತಾನು ಮತ್ತು ತನ್ನ ಮಗಳು ಕೈರು ಈ ಇಹಲೋಕದಲ್ಲಿ ಅಲ್ಲದಿದ್ದರೆ ಆ ಮುಹ್‌ಶರಾ ಎಂಬ ಪರ ಲೋಕದಲ್ಲಾದರೂ ನಿಮ್ಮನ್ನು ಕಾಣುವೆನೆಂದು ತಿಳಿದಿದ್ದವೆಂದೂ ಆದರೆ ಈಗ ತಾವು ಮಂಜೇಶ್ವರದಲ್ಲಿ ಇರುವುದು ತಿಳಿದಿರುವುದರಿಂದ ಅಲ್ಲೇ ಬಂದು ಬದುಕುವುದಾಗಿಯೂ ಮಗಳಿಂದ ಬರೆಸಿದ್ದಳು. +ಮಗಳು ಕೈರುವೂ ಕಾಗದದಕೊನೆಯಲ್ಲಿ ತನ್ನದೂ ಕೆಲವು ಸಾಲುಗಳನ್ನು ಸೇರಿಸಿ ತಾವರೆಗೆ ಹೇಗೆ ಚಂದ್ರನನ್ನು ಕಾಣಲು ಆಶೆಯಾಗುವುದೋ ಹಾಗೆ ತನಗೆ ಇದುವರೆಗೆ ಕಂಡೇ ಇರದ ತನ್ನ ಬಾಪಾನೆ ಮುದ್ದುಮುಖವನ್ನು ನೋಡುನ ಆಶೆಯಾಗುತ್ತಿರುವುದಾಗಿಯೂ ಆದಷ್ಠು ಬೇಗ ತಮ್ಮಿಬ್ಬರನ್ನು ಈ ನರಕದ ಬೆಂಕಿಯಿಂದ ರಕ್ಷಿಸಬೇಕೆಂದೂ ಬೇಡಿಕೊಂಡಿದ್ದಳು. +ನೆಬೀಸಾ ಈ ಕಾಗದ ಕೊಂಚ ಅತಿಯಾಯಿತಲ್ಲವಾ ಎಂದು ನಾನು ಅವಳನ್ನು ಸಹಜವಾಗಿಯೇ ಕೇಳಿದ್ದೆ. +ನೀನು ಸುಮ್ಮನೆ ಇರು ಇವನೇ ನಾನು ನನ್ನ ಮಗಳು ಈ ಬಂಡಗೆಟ್ಟವನ ಆಡಳಿತದಲ್ಲಿ ಪಟ್ಟಿರುವ ಬಂಗ ಆ ಪಡೆದವನಿಗೇ ಗೊತ್ತು. ನಿನಗೆ ಪೇಟೆಯಲ್ಲಿ ಆರಾಮವಾಗಿ ಕಾಲಮೇಲೆ ಕಾಲು ಹಾಕಿ ಸಂಬಳದ ನೋಟು ಎಣಿಸುವವನಿಗೆ ನಮ್ಮ ಬೆನೆ ಏನು ಗೊತ್ತು +ಅವಳು ನನಗೇ ರೋಪು ಹಾಕಿದ್ದಳು . +ನಾನು ಅವರ ಕಾಗದವನ್ನು ಸುಮ್ಮನೆ ಮಡಚಿ ಜೇಬಿಗೆ ಹಾಕಿ ಮಂಗಳೂರಿನ ಕಡೆಗೆ ಬೈಕು ಹತ್ತಿದ್ದೆ.ದಾರಿಯುದ್ದಕ್ಕೂ ನನಗೆ ಕೆಡುಕೆನಿಸುತ್ತಿತ್ತು . ನನ್ನ ವೃಥಾ ಎಲ್ಲದರಲ್ಲೂ ತಲೆ ಹಾಕುವ ಗುಣದಿಂದಾಗಿ ಬಾಲ್ಯದ ಗೆಳೆಯ ಇಸುಬುವನ್ನೂ ಅವನ ಕರುಳಿನ ಬಳ್ಳಿಯಂತಹ ತಂಗಿ ನೆಬೀಸಾಳನ್ನು ದೂರಮಾಡುತ್ತಿರುವುದೂ , ನೆಬೀಸಾಳ ಈ ಪ್ರೀತಿ ತುಂಬಿದ ಪತ್ರವನ್ನು ಕೊಟ್ಟು ಅಬ್ಬಾಸ್ ಮುಕ್ರಿಯ ಎರಡನೆ ಹೆಂಡತಿಯ ಮನಸಿನೊಳಗೆ ಅಲ್ಲೋಲಕಲ್ಲೋಲ ಉಂಟುಮಾಡುವುದು ಇದೆಲ್ಲಾ ಬೇಡವಾಗಿದ್ದ ಕೆಲಸ ಅಂತಲೂ ಅನಿಸುತ್ತಿತ್ತು. ಎರಡು ಮೂರುದಿನ ಆ ಪತ್ರವನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. +ನಾಲ್ಕನೆಯ ದಿನ ಅಬ್ಬಾಸ್ ಮುಕ್ರಿಯವರು ಮಂಜೇಶ್ವರದಿಂದ ರೈಲು ಹತ್ತಿ ನನ್ನನ್ನು ಹುಡುಕಿಕೊಂಡು ಆಫೀಸಿಗೇ ಬಂದು ಬಿಟ್ಟಿದ್ದರು . ನನ್ನ ಮುಂದೆ ಆಶೆಯಿಂದ ಕುಳಿತಿದ್ದ ಅವರ ವಿರಹವೋ ಕಳವಳವೋ ಗೊತ್ತಾಗದ ಮುಖನೋಡಿ ತಡೆಯಲಾರದೆ ಆ ಪತ್ರವನ್ನು ಅವರ ಕೈಗೆ ಕೊಟ್ಟುಬಿಟ್ಟಿದ್ದೆ. +ನನ್ನ ಕಣ್ಣ ಮುಂದೆಯೇ ಅವರು ಆ ಪತ್ರವನ್ನು ಕಣ್ಣಿಗೆ ಕಣ್ಣಡಕ ಏರಿಸಿಕೊಂಡು ಓದಿ ಗಳಗಳ ಅಳಲು ಶುರು ಮಾಡಿದ್ದರು. +ಸುಮಾರು ನಲವತ್ತು ನಲವತ್ತೈದರ ಪ್ರಾಯದ ಅಬ್ಬಾಸ್ ಮುಕ್ರಿಯವರ ಅಳುವ ಮುಖ ಅರವತ್ತರ ಮುದುಕನಂತೆ ಕಾಣಿಸುತ್ತಿತ್ತು . ಅವರ ದಪ್ಪ ಕನ್ನಡಕ , ಅವರ ಬೆಳ್ಳಗಾಗಿದ್ದ ಕುರುಚಲು ಗಡ್ಡ, ಅವರ ಮಾಸಿ ಹೋಗಿದ್ದ ಬಿಳಿಯ ಮುಂಡಾಸು, ಅವರ ಸುಕ್ಕುಗಟ್ಟಲು ತೊಡಗಿದ್ದ ಮುಖ, ಅವರ ಸಣ್ಣಗೆ ನಡುಗುತ್ತಿದ್ದ ದೇಹ, ಈ ಎಲ್ಲ ಪ್ರಾಯ ದೋಷಗಳನ್ನು ಮರೆಸುವಂತೆ ಅವರು ಆ ಪ್ರೇಮದ ಪತ್ರವನ್ನು ಓದುತ್ತಿದ್ದಂತೆ ಹೊಳೆಯ ತೊಡಗಿದ್ದ ಅವರ ಕಣ್ಣುಗಳು.ಅಬ್ಬಾಸ್ ಮುಕ್ರಿಯವರು ಕಾಲದ ಸುಕ್ಕುಗಳನ್ನು ಮೀರಿ ಹದಿನಾರು ವರ್ಷಗಳಷ್ಟು ಹಿಂದಕ್ಕೆ ಹೋಗಿ ಮದು ಮಗನಂತೆ ಕಂಪಿಸುತ್ತಿದ್ದರು. ಏಕಕಾಲದಲ್ಲಿ ಅವರ ಅಳುವಿನಲ್ಲಿ ಧ್ವನಿಯ ಏರಿಳಿತಗಳಲ್ಲಿ ಪ್ರೇಮಿಯೂ ಮದು ಮಗನೂ ವಿರಹಿಯೂ ಅಪ್ಪನೂ ಏಕಕಾಲದಲ್ಲಿ ನುಗ್ಗಿಬರಲು ನೋಡುತ್ತಿದ್ದವು .ಅಬ್ಬಾಸ್ ಮುಕ್ರಿಯವರು ತಮ್ಮ ಕೈಯಲ್ಲಿನ ತಾಯಿ ಮಗಳ ಪತ್ರವನ್ನು ಕಣ್ಣಿಗೊತ್ತಿಕೊಂಡು ಚುಂಬಿಸಿ ಮಡಚಿ ಜೇಬಿಗಿಟ್ಟು ಕೊಂಡಿದ್ದರು. +ನಾನು ಒಂದು ಮಾತು ಹೇಳಲು ಅನುಮತಿಸುತ್ತೀರಾ ಎಂದು ನನ್ನ ಅನುಮತಿಗಾಗಿ ಬೇಡಿದರು. +ನಾನು ಮಾತಾಡದೇ ಅವರನ್ನು ನೋಡಿದೆ. +ನಾನು ಪಡೆದ ಅಲ್ಲಾಹುವಿನ ಪರಮವಿಶ್ವಾಸಿ . ಯಾರಿಗೂ ಯಾವ ತರಹದಲ್ಲೂ ಕನಸಿನಲ್ಲೂ ಕೇಡು ಬಗೆದವನಲ್ಲ .ಆದರೆ.. ಎಂದು ನಿಲ್ಲಿಸಿದರು. +ಆದರೆ ನಿಮಗೆ ಗೊತ್ತಾ. ಕಳೆದ ಹದಿನಾರು ವರ್ಷಗಳಿಂದ ಒಂದು ರಾತ್ರಿಯೂ ಬಿಡದೆ ಅಲ್ಲಾಹುವಿನಲ್ಲಿ ಒಂದು ವಿಷಯವನ್ನು ಮಾತ್ರ ಬೇಡುತ್ತಿದ್ದೇನೆ ಎಂದು ನನ್ನನ್ನು ನೋಡಿದರು. +‘ಕಳೆದ ಹದಿನಾರು ವರ್ಷಗಳಿಂದ ನನ್ನನ್ನೂ ನನ್ನ ಹೆಂಡತಿ ನೆಬೀಸಾಳಾನ್ನೂ ನನ್ನ ಮಗಳನ್ನೂ ಬೇರೆಯಾಗುವಂತೆ ಮಾಡಿದ ಆ ಮಣ್ಣಾಂಗಟ್ಟಿ ಇಸುಬುವಿನ ಸರ್ವನಾಶವಾಗಿ ಹೋಗಿ ಅವನು ಮಡಿಕೇರಿಯ ಸಂತೆಯಲ್ಲಿ ಕುಷ್ಟರೋಗಹಿಡಿದು ಹುಣ್ಣಾಗಿ ಬಿಕ್ಷೆ ಬೇಡುವುದನ್ನು ನನ್ನ ಕಣ್ಣಿಂದ ನೋಡುವಂತೆ ಅನುವು ಮಾಡಿಕೊಡು ಪಡೆದವನೇ, ಆ ನಂತರ ನನ್ನ ರೂಹು ಹೋದರೂ ಪರವಾಗಿಲ್ಲ ತಂಬುರಾನೇ ಎಂದು ನಾನು ಬೇಡಿಕೊಳ್ಳುತ್ತಿರುವೆ ಗೊತ್ತಾ ಎಂದು ಕನ್ನಡಕ ತೆಗೆದು ಕಣ್ಣು ಒರೆಸಿಕೊಂಡು ಎದ್ದಿದ್ದರು. +* +* +* +ಈಗ ನೋಡಿದರೆ ಕುಷ್ಟಹಿಡಿದು ಹುಣ್ಣಾಗಿರದಿದ್ದರೂ ಹಿಂಧೂ ಮುಸ್ಲಿಂ ಗಲಾಟೆಗೆ ಸಿಲುಕಿ ಇಸುಬುವಿನ ತಟ್ಟಿಹೋಟೆಲ್ಲು ಸರ್ವನಾಶವಾಗಿ ಹೋಗಿ ಇಸುಬು ಕಾಲಬೆರಳಿನ ಉಗುರು ಕೀಳುತ್ತಾ ತನ್ನ ಎಂದಿನ ವರಸೆಯಲ್ಲಿ ಮನಸ್ಸಿನಲ್ಲಿಯೇ ಬೈಯುತ್ತಾ ನೆಲಕ್ಕೆ ಸಣ್ಣಗೆ ಉಗಿಯುತ್ತಾ ಕುಳಿತಿದ್ದ. ಆತ ಶಾಫ ಹಾಕುತ್ತಿರುವುದು ಹೋಟೆಲ್ಲಿಗೆ ಬೆಂಕಿ ಹಾಕಿದವರಿಗೋ ಹೊಳೆಯಲ್ಲಿ ಕಾಲಾಡಿಸುತ್ತಿರುವ ತಂಗಿ ಮತ್ತು ಅವಳ ಮಗಳಿಗೋ ಅಥವಾ ನನಗೋ ಅಥವಾ ಇದನ್ನೆಲ್ಲ ಸುಮ್ಮನೆ ನೋಡುತ್ತಿರುವ ಭಗವಂತನಿಗೋ ಗೊತ್ತಾಗದಂತೆ ದೇವರಕೊಲ್ಲಿಯ ತಿರುವಿನ ಆ ಸ್ವರ್ಗಸದೃಶ ಪರಿಸರದಲ್ಲಿ ಮಂಜು ಮುಸುಕಿಕೊಳ್ಳಲು ತೊಡಗಿತ್ತು. ಕಾಡೂ ನದಿಯೂ ರಸ್ತೆಯೂ ಹೋಟೆಲ್ಲೂ ಮಲೆಗಳೂ ಮನುಷ್ಯರೂ ಎಲ್ಲವೂ ಮಂಜಿನೊಳಗೆ ಸಿಲುಕಿಕೊಂಡು ಇಲ್ಲಿ ಸಾವಿರಾರು ವರ್ಷಗಳಿಂದ ಒಂದು ಹುಲ್ಲು ಕಡ್ಡಿಯೂ ಬದಲಾಗಿಲ್ಲ ಎನ್ನುವ ಸುಳ್ಳು ನಂಬಿಕೆ ಹುಟ್ಟಿಸುತ್ತಿತ್ತು. +‘ ಆ ಮಂಜಿನಲ್ಲಿ ಏನು ಮಣ್ಣಾಂಗಟ್ಟಿ ಅಂತ ನಿಂತಿದ್ದೀಯಾ ಒಳಕ್ಕೆ ಬಾ +ಇಸುಬು ಎಂದಿನ ಸಲುಗೆಯಲ್ಲಿ ನನ್ನನ್ನು ಕರೆಯುತ್ತಿದ್ದ. +ನನಗೆ ನಗುಬಂತು +ಒಳಗೆ ಹೋಗಲು ಅವನ ಹೋಟೆಲ್ಲೇ ಇರಲಿಲ್ಲ . ಸುಟ್ಟು ಕರಕಲಾಗಿದ್ದ ಮರದ ತುಂಡುಗಳ ನಡುವೆ ಉಳಿದಿದ್ದ ಒಂದು ಹಳೆಯ ಸೀರೆಯನ್ನು ಕಟ್ಟಿ ಅವನು ಅದರೊಳಕ್ಕೆ ನನ್ನನ್ನು ಕರೆಯುತ್ತಿದ್ದ. +ಅಷ್ಟರೊಳಗೆ ನದಿಯಿಂದ ಮಂಜಿನೊಳಗಿಂದ ನಡೆದು ಬಂದ ನೆಬೀಸಾ ಮತ್ತು ಕೈರು ಸಹ ಒಳಗೆ ಕರೆಯಲು ಶುರು ಮಾಡಿದ್ದರು. +‘ಒಳಗೆ ಬಾ ಹಾಲಿನ ಚಾ ಮಾಡಲಾ ಕಪ್ಪು ಚಾ ಕುಡಿಯುತ್ತೀಯಾ? ಏನು ತಿನ್ನುತ್ತೀಯಾ? +ಅವರು ಮೂವರು ಎಂದಿನಂತೆ ಲಗುಬಗೆಯಿಂದ ನನ್ನನ್ನು ಸತ್ಕರಿಸಲು ನೋಡುತ್ತಿದ್ದರು +ಯಾಕೋ ಸಂಕಟವಾಗಲು ತೊಡಗಿತ್ತು .ಇಂತಹ ಹೊತ್ತಲ್ಲಿ ಈ ಇಸುಬುವನ್ನೂ ಮತ್ತು ನೆಬೀಸಾ ಮತ್ತು ಅವಳ ಮಗಳನ್ನೂ ಹೇಗೆ ಬೇರೆ ಬೇರೆ ಮಾಡುವುದು? ಇಲ್ಲದೇ ಹೋದರೆ ಅಬ್ಬಾಸ್ ಬ್ಯಾರಿಗಳಿಗೆ ಏನು ಹೇಳುವುದು? ಏನೂ ಗೊತ್ತಾಗದೆ ಮಂಜು ನಮ್ಮನ್ನೆಲ್ಲ ಮುತ್ತಿಕೊಂಡು ಚಳಿಯಲ್ಲಿ ನಡುಗುತ್ತಿದ್ದೆ. +* +* +* +ಹಾಗೆ ನೋಡಿದರೆ ಈ ಇಸುಬುವೂ ನಾನೂ ನೆಬೀಸಾಳೂ ಒಂದು ಕಾಲದಲ್ಲಿ ಒಂದೇ ಮದರಸದಲ್ಲಿ ಒಟ್ಟಿಗೇ ಅರಬಿ ಕಲಿಯುವ ಮಕ್ಕಳಾಗಿದ್ದೆವು. ಇಸುಬುವೂ ನಾನೂ ಕುರಾನಿನ ಹತ್ತನೇ ಅದ್ಯಾಯದಲ್ಲಿದ್ದರೆ ನೆಬೀಸಾಳು ಅದಾಗತಾನೇ ಅಲೀಫ್ ಬಾ ಎಂದು ಅರಬಿಯ ಮೊದಲ ಅಕ್ಷರಗಳನ್ನು ಕಲಿಯುವ ಸಣ್ಣ ಹುಡುಗಿಯಾಗಿದ್ದಳು. ನಾನೂ ಇಸುಬುವೂ ಅರಬಿ ಮದರಸವನ್ನು ತಪ್ಪಿಸಿಕೊಂಡು ಬೆಳಗೆಯೇ ಬೆಂಕಿ ಕಡ್ಡಿಯ ತುದಿಯಷ್ಟು ಮಲವನ್ನು ಸೇವಿಸಿ ಕುಟ್ಟಿಚಾತನನ್ನು ಆವಾಹಿಸಿಕೊಂಡು ಒಂಟಿಗಾಲಲ್ಲಿ ನದಿಯಲ್ಲಿ ಕಂಠಮಟ್ಟ ನಿಂತುಕೊಂಡು ಕಾಲಕಳೆಯುತ್ತಿದ್ದರೆ ಜಾಣಳಾದ ನೆಬೀಸಾ ಅರಬಿ ಅಕ್ಷರಗಳನ್ನು ಕಲಿತು ಕುರಾನನ್ನು ಕಂಠಪಾಠ ಮಾಡಿಕೊಂಡು ಅಮಲಿಯಾತ್ ದೀನಿಯಾತ್ ಎಂಬ ಪುಸ್ತಕಗಳನ್ನೂ ಓದಿ ಮುಗಿಸಿ ಆಗಲೇ ದೊಡ್ಡ ಮತ ಪಂಡಿತಳಂತೆ ಅರಬಿ ಕಲಿಸುವ ಮೊಲ್ಲಾಕನಿಗೆ ಚಾಡಿ ಹೇಳಿ ನಮಗೆ ನಾಗರಬೆತ್ತದಲ್ಲಿ ಏಟು ಕೊಡಿಸುವಷ್ಟು ಬೆಳೆದು ದಾರಿಯಲ್ಲಿ ನಮ್ಮಿಂದ ಸರಿಯಾಗಿ ಒದೆ ತಿನ್ನುತ್ತಿದ್ದಳು . ನಾನು ಅವಳ ತಲೆಯನ್ನು ನೆಲಕ್ಕೆ ಬಗ್ಗಿಸಿ ಹಿಡಿದರೆ ಇಸುಬು ಮೊಣಕಾಲಿನಿಂದ ಅವಳ ಕುಂಡೆಗೆ ಒದೆಯುತ್ತಿದ್ದನು +ಕುಟ್ಟಿಚಾತನಿಗೆ ಹೇಳಿ ನಿನ್ನ ಇಲ್ಲದಂತೆ ಮಾಯಮಾಡಿಸುತ್ತೇನೆ ಇಬಿಲೀಸೇ +ಎಂದು ಅವಳನ್ನು ಇನ್ನಿಲ್ಲದಂತೆ ಹೆದರಿಸುತ್ತಿದ್ದೆವು. ಅವಳನ್ನು ಮಟಮಟ ಬಿಸಿಲಲ್ಲಿ ನಿಲ್ಲಿಸಿ ನೆಲದಲ್ಲಿ ಬಿದ್ದಿರುವ ಅವಳ ನೆರಳನ್ನೇ ದಿಟ್ಟಿಸಿ ನೋಡಲು ಹೇಳಿ ಆಮೇಲೆ ಹಾಗೆಯೇ ತಲೆಯೆತ್ತಿ‌ಆಕಾಶವನ್ನು ನೋಡಲು ಹೇಳೀ ಅವಳು ಆಕಾಶವನ್ನು ನೋಡಿದರೆ ಆಕಾಶದಲ್ಲಿ ಅವಳ ನೆರಳು ಬಲೆಬಲೆಯಾಗಿ ಮೂಡಿ ನಾವು ಅವಳಿಗೆ ಅದೇ ಕುಟ್ಟಿಚಾತನೆಂದು ಹೇಳಿಕೊಟ್ಟು ಅವಳು +ಚಾಡಿ ಹೇಳುವುದನ್ನು ನಿಲ್ಲಿಸಿಯೇ ಬಿಟ್ಟಿದ್ದಳು. +ಒಂದು ದಿನ ಬೆಳಗೆ ನಾವು ಮನಸ್ಸಿಲ್ಲದ ಮನಸ್ಸಿನಿಂದ ಅರಬಿ ಕಲಿಯುತ್ತಿರುವಾಗ ಮದರಸದಲ್ಲೇ ನೆಬೀಸಾ ದೊಡ್ಡವಳಾಗಿ ಬಿಟ್ಟಿದ್ದಳು . ಅಂದು ಮದರಸದ ನೆಲದಲ್ಲಿ ಹರಿದ ತೊಟ್ಟು ತೊಟ್ಟು ನೆತ್ತರು ಕಂಡು ನಮಗೆಲ್ಲ ಹೆದರಿಕೆಯಾಗಿ ಬಿಟ್ಟಿತ್ತು. +ಅಬ್ಬಾಸ್ ಮುಕ್ಕ್ರಿ ಮಾತ್ರ ಅರ್ಥಗರ್ಬಿತವಾಗಿ ನಕ್ಕಿದ್ದರು . +ಅಬ್ಬಾಸ್ ಮುಕ್ರಿ ಆ ಅರಬಿ ಮದರಸದಲ್ಲಿ ಓದು ಕಲಿಸುವ ದೊಡ್ಡ ಮುಸಿಲಿಯಾರರ ಸಹಾಯಕ ಮುಕ್ರಿಯಾಗಿದ್ದರು.ದೊಡ್ಡ ಮುಸಲಿಯಾರರು ಚಾ ಕುಡಿಯಲು ಹೊರಗೆ ಹೋದಾಗ ಬೆತ್ತ ಹಿಡಿದು ಕೊಂಡು ಮಕ್ಕಳನ್ನು ಸುಮ್ಮನೆ ಕೂರಿಸುವುದು, ವಾರಕ್ಕೊಮ್ಮೆ ಮಸೀದಿಯ ಸಿಮೆಂಟು ಕೊಳದ ನೀರನ್ನು ಶುದ್ಧಿ ಮಾಡುವುದು, ಮುಸಲಿಯಾರರು ಇಲ್ಲದಾಗ ಪ್ರಾರ್ಥನೆಯ ಬಾಂಗ್ ಕೂಗುವುದು, ಅದೆಲ್ಲಕ್ಕಿಂತ ಮುಖ್ಯವಾಗಿ ಯಾರಾದರೂ ಸಾರುಮಾಡಲು ಕೋಳಿ ಹಿಡಿದುಕೊಂಡು ಬಂದರೆ ಪಡೆದವನ ಹೆಸರನ್ನು ಸ್ಮರಿಸಿ ಅದರ ಕೊರಳನ್ನು ಚಾಕುವಿನಿಂದ ಕೊಯಿದು ಕೊಡುವುದು ಅಬ್ಬಾಸ್ ಮುಕ್ರಿಯವರ ಮುಖ್ಯ ಕರ್ತವ್ಯವಾಗಿತ್ತು . ಮುಕ್ರಿಯವರು ಕೋಳಿಯ ಕೊರಳನ್ನು ಕೊಯ್ಯುವಾಗ ನಾವು ಯಾರಾದರೂ ಹುಡುಗರು ಅದರ ಎರಡೂಕಾಲುಗಳನ್ನು ರೆಕ್ಕೆಯೊಂದಿಗೆ ಜೋಡಿಸಿ ಪವಿತ್ರ ಕಹಬಾದ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕಿತ್ತು. ನಾವು ಯಾರಾದರೂ ನಿಲ್ಲುತ್ತಿದ್ದೆವು. +* +* +* +ನೆಬೀಸಾ ಅರ್ದ ಸುಟ್ಟು ಕರಕಲಾದ ಚಾದ ಪಾತ್ರವನ್ನು ಅದೆಲ್ಲಿಂದಲೋ ಎತ್ತಿ ತಂದು ಕಡ್ಡಿಪುರಲೆಗಳಿಂದ ಒಲೆ ಹತ್ತಿಸಿ ಇಟ್ಟು ಚಾ ಪುಡಿಗಾಗಿ ಹುಡುಕಾಟ ನಡೆಸಿದ್ದಳು. +ಅದೇನು ಹುಡುಕುತ್ತೀಯಾ ಮಣ್ಣಾಂಗಟ್ಟಿ .. ಎಲ್ಲ ಸುಟ್ಟುಹಾಕಿದ್ದಾರಲ್ಲ.. +ಇಸುಬು ನೆಲಕ್ಕೆ ಉಗಿದು ಗೊಣಗಿದ . +ಕೈರು ಕಿಸಕ್ಕನೆ ನಕ್ಕಳು. +ನನಗೂ ಆ ವಿಷಾದದಲ್ಲೂ ನಗು ಬಂತು. +ಮದುವೆಯಾಗುವಾಗ ನೆಬೀಸಾ ಕೈರು ಈಗ ಇರುವ ಹಾಗೆಯೇ ಇದ್ದಳು. ಆದರೆ ಇನ್ನೂ ಗುಂಡಗೆ ಇದ್ದಳು.ಅದೇ ಚೂಪು ಮೂಗು. ಅದೇ ಉರುಟು ಮುಖ.ಅದೇ ಉರಿಯುತ್ತಿರುವಂತಹ ಹಣೆ. +ಕೈರು ಎಲ್ಲದರಲ್ಲೂ ತಾಯಿಯಹಾಗೇ ಇದ್ದಳು. ಒಂದು ಕಿವಿಯನ್ನು ಮಾತ್ರ ಹೊರತು ಪಡಿಸಿ. ಅವಳ ಒಂದು ಕಿವಿಮಾತ್ರ ತುಂಬಾ ಅಸಹಜ ಅನ್ನುವಷ್ಟರ ಮಟ್ಟಿಗೆ ದೊಡ್ಡದಿತ್ತು. ತಂದೆ ಅಬ್ಬಾಸ್ ಮುಕ್ರಿಯ ಹಾಗೇ. +‘ ಮಣ್ಣಾಂಗಟ್ಟಿ, ಹೆಂಡತಿಯನ್ನು ಬಿಟ್ಟು ಓಡಿ ಹೋಗುವಾಗ ಮುಕ್ರಿ ತನ್ನ ನೆನಪಿಗಾಗಿ ತನ್ನ ಆನೆ ಕಿವಿಯೊಂದನ್ನು ಮಾತ್ರ ಗರ್ಭದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಕೈರು ಹುಟ್ಟಿದಾಗ ಇಸುಬು ಕ್ಯಾಕರಿಸಿ ನೆಲಕ್ಕೆ ಉಗಿದಿದ್ದ. +‘ನಾನು ಬಿಟ್ಟು ಓಡಿದ್ದಲ್ಲ ಪಡೆದವನೇ . ನನ್ನನ್ನು ಕೊಡಗು ಬಿಟ್ಟು ಓಡಿಸಿದ್ದು ಆ ಪರಮದುಷ್ಟನಾದ +ಇಸುಬು ಎಂಬ ಇಬಿಲೀಸು ಎಂದು ಅಬ್ಬಾಸ್ ಮುಕ್ರಿ ಅಲ್ಲಾಹುವಿನೆದುರು ಆಣೆ ಮಾಡಿ ನನ್ನನ್ನು ನಂಬಿಸಿದ್ದರು. +‘ನೀನು ನಂಬುವುದಾದರೆ ನಂಬು. ಆದರೆ ಆ ಎಲ್ಲವನ್ನೂ ಅರಿತವನಾದ ಅಲ್ಲಾಹುವಿಗೆ ಎಲ್ಲವೂ ಗೊತ್ತು.ಅವನ ಅಂತಿಮ ದಿನದ ಆಣೆ ಮಾಡಿ ಹೇಳುತ್ತೇನೆ. ತಾವರೆ ಹೂವಿನಂತಹ ನೆಬೀಸಾಳನ್ನು ಬಿಟ್ಟು ಓಡಲು ನನಗೇನು ಹುಚ್ಚಾ? ನನ್ನನ್ನು ಅವಳಿಂದ ಅಗಲಿಸಿ ಓಡಿಸಿಬಿಟ್ಟದ್ದು ಅವನಲ್ಲದೇ +ಬೇರೆ ಯಾರೂ ಅಲ್ಲ ಎಂದು ತಮ್ಮ ಎರಡನೆಯ ಹೆಂಡತಿ ಮಕ್ಕಳ ಎದುರೇ ಗಳಗಳ ಅತ್ತಿದ್ದರು +ಅವರು ಅಳುವುದನ್ನು ಕಂಡು ಅವರ ಎರಡನೆಯ ಹೆಂಡತಿಗೂ ಅಳು ಬಂದು ಅವರ ಪುಡಿಪುಡಿ ಮಕ್ಕಳೂ ಅಳಲು ತೊಡಗಿ ಮಂಜೇಶ್ವರದ ದರ್ಗಾದ ಬಳಿಯಿರುವ ಅವರ ಮನೆ ಅಳುವಿನ ಕಡಲೇ ಆಗಿ ಬಿಟ್ಟಿತ್ತು. +ಅಳುವುದನ್ನು ನಿಲ್ಲಿಸಿ ಅಬ್ಬಾಸ್ ಮುಕ್ರಿಯವರ ಎರಡನೆಯ ಹೆಂಡತಿ ಮೂಗು ಒರೆಸಿಕೊಂಡು . ‘ಹೋಗಲಿ ಬಿಡಿ ಆಗಿದ್ದೆಲ್ಲಾ ಒಳ್ಳೆಯದಕ್ಕೇ . ಈಗ ಹೇಳಿ . ನನ್ನ ಗಂಡನ ಮೊದಲನೆಯ ಹೆಂಡತಿಯೂ ಅವರಿಗುಂಟಾದ ಮಗಳೂ ನೋಡಲು ಹೇಗಿದ್ದಾರೆ ಬೆಳ್ಳಗಿದ್ದಾರಾ ಕಪ್ಪಗಿದ್ದಾರಾ +ಮಗಳಿಗೆ ಮದುವೆಯ ಪ್ರಾಯವಾಯಿತಲ್ಲವಾ. ಮದುವೆ ಮಾಡಿಸಬೇಕಲ್ಲವಾ ಎಂದೆಲ್ಲ ಸಂಭ್ರಮ ಕುತೂಹಲಗಳೊಂದಿಗೆ ಕೇಳಲು ತೊಡಗಿದ್ದರು. +ನಾನು ನನ್ನಿಂದಾದಷ್ಟು ಅವರಿಬ್ಬರನ್ನು ವರ್ಣಿಸಿದ್ದೆ. ಎಲ್ಲವನ್ನು ವರ್ಣಿಸಿ ಕೊನೆಗೆ ಕೈರುವಿನ ಒಂದು ಕಿವಿ ಅಬ್ಬಾಸ್ ಮುಕ್ರಿಯವರ ಹಾಗೆಯೇ ಇರುವುದನ್ನು ಒತ್ತಿ ಹೇಳಿದ್ದೆ +ಅದು ಕೇಳಿ ಅಬ್ಬಾಸ್ ಮುಕ್ರಿಯವರ ಧ್ವನಿ ಇನ್ನಷ್ಟು ಗದ್ಗದವಾಗಿತ್ತು. ಒಂದು ನಿಮಿಷ ಅವರ ಉಸಿರು ನಿಂತು ಹೋದಂತಾಗಿತ್ತು.ಅವರು ಎರಡನೆಯ ಹೆಂಡತಿಯ ಮುಖವನ್ನೊಮ್ಮೆ ದೀನವಾಗಿ ನೋಡಿ ಸಾಲು ಸಾಲಾಗಿ ನಿಂತು ಕೊಂಡಿದ್ದ ಮಕ್ಕಳನ್ನೊಮ್ಮೆ ನೋಡಿ ಬುಳಕ್ಕನೆ ಅಳಲು ನೋಡುತ್ತಾ ಹಲ್ಲು ಕಡಿದುಕೊಂಡಿದ್ದರು. +* +* +* +ಹಾಗೆ ನೋಡಿದರೆ ಮಸೀದಿಯ ಮುಕ್ರಿಯ ಕೆಲಸ ಅಬ್ಬಾಸ್ ಬ್ಯಾರಿಯವರಿಗೆ ವಂಶ ಪಾರಂಪರ್ಯವಾಗಿ ಬಂದದ್ದೇನಲ್ಲ. ಅವರದ್ದು ವಂಶ ಪಾರಂಪರ್ಯವಾಗಿ ಗುಡ್ಡಕ್ಕೆ ಸುರಂಗ ತೋಡುವ ಕೆಲಸ. ಇದೂ ಎಷ್ಟು ತಲೆಮಾರುಗಳಿಂದ ತಮ್ಮ ಕುಟುಂಬಕ್ಕೆ ಅಂಟಿಕೊಂಡದ್ದು ಅಂತಲೂ ಅವರಿಗೆ ಗೊತ್ತಿಲ್ಲ. ಅಬ್ಬಾಸ್ ಬ್ಯಾರಿಯವರಿಗೆ ನೆನಪಿರುವಂತೆ ಅವರು ಹುಟ್ಟಿದ್ದೂ ತಾಯಿಯ ಮೊಲೆಹಾಲು ಕುಡಿದದ್ದೂ ಬೆಳೆದದ್ದೂ ಎಲ್ಲವೂ ಯಾವುದೋ ಒಂದು ಗುಡ್ಡದ ಅಡಿಯಲ್ಲಿರುವ ಸುರಂಗದ ಕೆಳಗೇ. ಪೇಶ್ವೆಗಳ ಕಾಲದಲ್ಲಿ ಮುಸಲ್ಮಾನ ಅರಸರ ಅಬ್ಬರಕ್ಕೆ ಹೆದರಿ +ತಮ್ಮ ಇಷ್ಟದೇವರುಗಳನ್ನು ಎತ್ತಿಕೊಂಡು ಪಶ್ಚಿಮಘಟ್ಟದ ಸೆರಗುಹಿಡಿದು ಬಂದ ಮರಾಠಾ ಬ್ರಾಹ್ಮಣರು ಕರಾವಳಿಯ ಗುಡ್ಡದ ತಪ್ಪಲುಗಳಲ್ಲಿ ತೋಟಗಳನ್ನು ಮಾಡಿಕೊಂಡು ನೀರಿಗಾಗಿ ಆ ಗುಡ್ಡಕ್ಕೇ ಅಡ್ಡಸುರಂಗಗಳನ್ನು ತೋಡಿಸಿ ತೋಟಕ್ಕೆ ಸದಾ ನೀರು ಹರಿದು ಬರುವಂತೆ ಮಾಡುವ +ವಿದ್ಯೆಯನ್ನು ಅದೆಲ್ಲಿಂದಲೋ ಕಲಿತುಕೊಂಡಿದ್ದರು. ಎತ್ತರಕ್ಕೆ ನಿಂತ ಗುಡ್ಡವೊಂದಕ್ಕೆ ಉದ್ದಕ್ಕೆ ಕನ್ನ ಕೊರೆಯುವುದು ನೀರಿನ ಸೆಲೆ ಕಂಡೊಡನೆ ನಿಲ್ಲಿಸುವುದು ಮತ್ತು ಆ ನೀರನ್ನು ತೋಟಕ್ಕೆಲ್ಲ ಹರಿಯಬಿಡುವುದು. ಅಬ್ಬಾಸ್ ಬ್ಯಾರಿಗಳಿಗೆ ತಮ್ಮ ಅಜ್ಜ ಅಜ್ಜಿ ತಂದೆ ತಾಯಿ ಅಕ್ಕ ತಮ್ಮ ಎಲ್ಲರ ನೆನಪು ಶುರುವಾಗುವುದೂ ಕೊನೆಗೊಳ್ಳುವುದೂ ಇಂತಹ ಸುರಂಗದ ಒಳಗೆಯೇ . ಗಂಡಸರು ಗುದ್ದಲಿ ಪಿಕ್ಕಾಸು ಹಿಡಕೊಂಡು ಬೆಟ್ಟಕ್ಕೆ ಆಳೆತ್ತರದ ಬಿಲವನ್ನು ಕೊರೆಯುತ್ತಾ ಹೋಗುವುದು, ಹೆಂಗಸರು ಮಕ್ಕಳು ಅವರ ಕಾಲಡಿಯಿಂದಲೇ ಅವರು ಅಗೆದ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಸಿ ಹೊರಗೆ ತಂದು ಸುರಿಯುವುದು. ನೀರು ಕಂಡಾಗ ನಿಲ್ಲುವುದು. ಅವರೆಲ್ಲ ಉಣ್ಣುವುದು ಮಲಗುವುದು ಕನಸು ಕಾಣುವುದು ಎಲ್ಲವೂ ಇಂತಹ ಯಾವುದಾದರೂ ಬಿಲದ ಬಳಿಯಲ್ಲಿಯೇ. +ಅಬ್ಬಾಸ್ ಬ್ಯಾರಿಗಳಿಗೆ ಸಣ್ಣದಿರುವಾಗಲೇ ಜನನವೂ ಮರಣವೂ ಇಹವೂ ಪರವೂ ಸ್ವರ್ಗವೂ ನರಕವೂ ಎಲ್ಲವೂ ಈ ಮಣ್ಣು ಅಗೆಯುವುದರಿದ ತೊಡಗಿ ಈ ಮಣ್ಣು ಸುರಿಯುವುದರಿಂದ ಕೊನೆಗೊಳ್ಳುತ್ತದೆ ಅನ್ನಿಸುತ್ತಿತ್ತು. ಬಾಪಾ ಎಂಬ ಆಸರೆ ಉಮ್ಮಾ ಎಂಬ ಮಮತೆ ಎಲ್ಲವೂ ಈ ಮಣ್ಣಿನ ಕೆಲಸದಲ್ಲಿ ಕಲಸಿಹೋಗಿ ಅವರು ಗೊತ್ತಿಲ್ಲದಂತೆ ಸಣ್ಣದಿರುವಾಗಲೇ ಪಡೆದವನನ್ನು +ಈ ಮಣ್ಣಿನ ಕೆಲಸದಿಂದ ಬಿಡುಗಡೆ ಮಾಡುವಂತೆ ಬೇಡಿಕೊಂಡಿದ್ದರು. +ರಣ್ ಸಣ್ಣ ಹುಡುಗನಿರುವಾಗಲೇ ಎಲ್ಲರನ್ನು ಬಿಟ್ಟು ಉಳ್ಳಾಲದ ಅರಬಿ ಕಲಿಯುವ ಶಾಲೆಗೆ ಸೇರಿಕೊಂಡು ಮಣ್ಣಿನ ಕೆಲಸದಿಂದ ಬಚಾವಾಗಿಬಿಟ್ಟೆ ಅಂದು ಕೊಂಡಿದ್ದರು . ಅಷ್ಟಿಷ್ಟು ಅರಬಿ ಕಲಿತು ಮಂಗಳೂರಿಂದ ಸಿ ಪಿ ಸಿ ಬಸ್ಸು ಹತ್ತಿ ಘಟ್ಟ ಹತ್ತಿ ಮಡಿಕೇರಿಯ ಹತ್ತಿರದ ಮದರಸವೊಂದರಲ್ಲಿ ಮುಕ್ರಿಯಾಗಿ ಸೇರಿಕೊಂಡಿದ್ದರು. ನೋಡಿದವರಿಗೆ ಸಣ್ಣವನಾಗಿ ಕಾಣಿಸಿಕೊಳ್ಳುವೆನು ಎಂದು ಹೆದರಿ ಬಿಳಿಯ ಮುಂಡಾಸನ್ನು ಎರಡು ಸುತ್ತು ಜಾಸ್ತಿಯೇ ಸುತ್ತಿ ಮೀಸೆ ಬರುವಲ್ಲಿ ಕೊಂಚ ಸುರುಮ ಬಳಿದು ಕೊಂಡು ದೊಡ್ಡವನಂತೆ ತೋರಿಸಿಕೊಳ್ಳುತ್ತಿದ್ದರು .ಮಕ್ಕಳು ಹೆದರಲಿ ಎಂದು ಕೈಯಲ್ಲಿನ ಕೋಲನ್ನು ಸುಮ್ಮನೆ ನೆಲಕ್ಕೆ ಒಮ್ಮೊಮ್ಮೆ ಜೋರಾಗಿಯೇ ಬಡಿಯುತ್ತಿದ್ದರು. +ಆದರೆ ಅರಬಿ ಕಲಿಯಲು ತಲೆಗೆ ಬಿಳಿಯ ತಟ್ಟವನ್ನು ಸುತ್ತಿಕೊಂಡು ಬರುತ್ತಿದ್ದ ನೆಬೀಸಾಳನ್ನು ಕಂಡೊಡನೆ ಅವರ ಹೃದಯ ಅಲ್ಲಾಡಲು ತೊಡಗುತ್ತಿತ್ತು. ಅವಳ ಕಾಲ ಸಪ್ಪಳವಾಗುತ್ತಿದ್ದಂತೆ +ಇದೆಂತಹ ಸೌಂದರ್ಯ ಪಡೆದವನೇ ಎಂದು ಅವರ ಹೃದಯ ಅಳಲು ತೊಡಗುತ್ತಿತ್ತು. ಮನುಷ್ಯ ಸೃಷ್ಟಿಯನ್ನು ಕೇವಲ ಮಣ್ಣಿನಬಣ್ಣದಲ್ಲಿ ಕಂಡಿದ್ದ ಅವರಿಗೆ ನೆಬೀಸಾಳನ್ನು ಮನುಷ್ಯ ಸೃಷ್ಟಿ ಎಂದು ನೋಡಲು ತಡೆಯುಂಟಾಗುತ್ತಿತ್ತು. ಕೇವಲ ಹದಿಮೂರು ವರ್ಷಗಳ ನೆಬೀಸಾ ಎಂಬ ಹುಡುಗಿ ಅವರಿಗೆ ಪಡೆದವನ ಇನ್ನೊಂದು ಸೃಷ್ಟಿಯಾದ ಜಿನ್ನಿನಂತೆ ಕಾಣಿಸುತ್ತಿತ್ತು. +ಒಬ್ಬಳು ತರುಣಿಯನ್ನು ಸಲ್ಲದ ದೃಷ್ಟಿಯಲ್ಲಿ ನೋಡುವುದು ಅಲ್ಲಾಹುವಿನ ಆಜ್ಞೆಗೆ ಅತೀತವೆಂದು ಗೊತ್ತಿದ್ದ ಅವರು ಜಮಾತಿನ ಅನುಮತಿಪಡೆದು ನೆಬೀಸಾಳನ್ನು ನಿಖಾಹ್ ಮಾಡಿಕೊಂಡಿದ್ದರು. +* +* +* +ತಾವರೆಯ ಹೂವಂತಹ ತಮ್ಮ ಎಳೆಯ ಪತ್ನಿ ನೆಬೀಸಾ ಳನ್ನು ಅಬ್ಬಾಸ್ ಮುಕ್ರಿಯವರು ನಿಖಾ ಮಾಡಿಕೊಂಡ ಒಂದು ದಿನದಲ್ಲೇ ಯಾಕೆ ತ್ಯಜಿಸಿ ಓಡಿ ಹೋದರೆಂಬುದು ನಮಗೆಲ್ಲ ಬಹು ಕಾಲದವವರೆಗೆ ಒಂದು ಚೋದ್ಯವಾಗಿಯೇ ಉಳಿದಿತ್ತು.ಒಬ್ಬೊಬ್ಬರು ಒಂದೊಂದು ಕತೆ ಹೇಳಿ ನಮಗೆ ಹುಡುಗರಿಗೆ ಎಲ್ಲವೂ ಒಂದುದೊಡ್ಡ ಒಗಟಿನಂತೆ ಆಗಿ ಬಿಟ್ಟಿತ್ತು. +ಇನ್ನೂ ಸಣ್ಣ ಹುಡುಗಿಯಾಗಿದ್ದ ನೆಬೀಸಾಳಿಗೆ ಸೀರೆ ಲಂಗ ಉಡಿಸಿ ದೊಡ್ಡವಳಾಗಿ ಕಾಣುವಂತೆ ಮಾಡಿ ಅವಳ ಕೈಗಳಿಗೆ ಮದರಂಗಿ ಹಚ್ಚಿ ಮುಡಿಗೆ ಮಲ್ಲಿಗೆ ಮುಡಿಸಿ ಹೆಂಗಸರೂ ಗಂಡಸರೂ ಕೈ ಚಪ್ಪಾಳೆ ತಟ್ಟಿ ಹಾಡು ಹೇಳಿ ಅಬ್ಬಾಸ್ ಮುಕ್ರಿಯವರ ಕೋಣೆಗೆ ಕಳುಹಿಸಿದಮೇಲೆ ಏನು ನಡೆಯಿತೆಂಬುದರ ಬಗ್ಗೆ ಬಹಳಷ್ಟು ಕತೆಗಳಿದ್ದವು. ನೆಬೀಸಾಳ ಮೈಯಲ್ಲಿ ಅಡಗಿದ್ದ ಜಿನ್ ಒಂದು ಅಬ್ಬಾಸ್ ಮುಕ್ರಿಯವರು ಅವಳ ಮೈಯನ್ನೇರುತ್ತಿದ್ದಾಗ ಖಡ್ಗದಿಂದ ಘಾಸಿಗೊಳಿಸಿತೆಂದು ಒಂದು ಕತೆ ಹೇಳಿದರೆ ಅಬ್ಬಾಸ್ ಮುಕ್ರಿಯವರ ಮೈವಾಸನೆ ಸಹಿಸಲಾಗದೆ ನೆಬೀಸಾಳೇ ಅವರನ್ನು ಕಚ್ಚಿ ಗಾಯಗೊಳಿಸಿದಳೆಂದು ಇನ್ನೊದು ಕತೆಯಿತ್ತು. ಇಸುಬುವನ್ನು ಕೇಳಿದರೆ ತಾನು ಆವಾಹಿಸಿದ ಕುಟ್ಟಿಚಾತ ದೈವವು ಬೆಕ್ಕಿನ ರೂಪದಲ್ಲಿ ಅವರ ಮೊದಲ ರಾತ್ರಿಯ ಮಂಚವನ್ನೇರಿ ತನ್ನ ಖಡ್ಗದಂತಹ ಬಾಲವನ್ನು ಬೀಸಿ ಮುಕ್ರಿಯವರನ್ನು ಕೊಂದೇಬಿಡಲು ಹೋಯಿತೆಂದು ಅವನು ಕತೆ ಕಟ್ಟಿ ಹೇಳುತ್ತಿದ್ದ. +‘ ಜಿನ್ನೂ ಅಲ್ಲ, ಕುಟ್ಟಿಚಾತನೂ ಅಲ್ಲ. ಆವತ್ತು ನಮ್ಮ ಮೊದಲರಾತ್ರಿಯ ಕೋಣೆಯಲ್ಲಿ ಏನಾಯಿತು ಗೊತ್ತಾ +ಅಬ್ಬಾಸ್ ಮುಕ್ರಿಯವರು ಮಂಜೇಶ್ವರದಿಂದ ಮಂಗಳೂರಿಗೆ ಹೋಗುವ ರೈಲು ಹತ್ತಿಸಲು ಬಂದಾಗ ಕತ್ತಲ ರಾತ್ರಿಯಲ್ಲಿ ಟಾರ್ಚು ಬಿಡುತ್ತಾ ಬಹಳ ದೊಡ್ಡ ಗುಟ್ಟೊಂದನ್ನು ನನಗೆ ಹೇಳಿಬಿಟ್ಟಿದ್ದರು. +ಅದನ್ನು ಕೇಳಿ ನನಗೆ ನಗಬೇಕೋ ಅಚ್ಚರಿ ಪಡಬೇಕೋ ಅಥವಾ ಇಸುಬು ಎಂಬ ಮಹಾಮಂಡನಾದ ಮುಷಂಡಿಯ ತಲೆ ಕತ್ತರಿಸಬೇಕೋ ಅಥವಾ ಅಬ್ಬಾಸ್ ಮುಕ್ರಿಯವರ ಹಾಸ್ಯಾಸ್ಪದವಾದ ಅಸಹಾಯಕತೆಗೆ ಕಣ್ಣೀರುಗರೆಯಬೇಕೋ ಗೊತ್ತಾಗದೆ ಆ ಕತ್ತಲೆಯ ದಾರಿಯಲ್ಲಿ ನೀಳವಾದ ನಿಟ್ಟುಸಿರೊಂದನ್ನು ಬಿಟ್ಟಿದ್ದೆ. +ಅಬ್ಬಾಸ್ ಬ್ಯಾರಿಗಳು ನನಗೆ ಆವತ್ತು ರಾತ್ರಿ ಹೇಳಿದ್ದು ಇಷ್ಟೆ- ತಮ್ಮ ಮದುವೆಯ ಮೊದಲ ರಾತ್ರಿಯಲ್ಲಿ ಮಂಚವನ್ನೇರಿ ಅವರು ತಮ್ಮ ಮದುಮಗಳು ನೆಬೀಸಾಳನ್ನು ಹತ್ತಿರದಿಂದ ನೋಡುತ್ತಾ ಲಲ್ಲೆಮಾತುಗಳನ್ನು ಆಡುತ್ತಾ ಅವಳ ಕೆನ್ನೆಯನ್ನು ಸವರುತ್ತಾ ಮೆಲ್ಲಗೆ ಅವಳ ಉಡುಪನ್ನು ಸರಿಸಿ ಮೇಲೆರಗಲು ಹೋದಾಗ ಇದ್ದಕ್ಕಿದ್ದಂತೆ ಈ ಆಕ್ರಮಣ ಯಾಕೆ ಎಂದು ಗೊತ್ತಾಗದ ಸಣ್ಣಹುಡುಗಿ +ನೆಬೀಸಾ ಮಾಡುಹಾರಿಹೋಗುವಂತೆ ಕಿರುಚಲು ತೊಡಗಿದಳಂತೆ. ಅವಳ ಕಿರುಚಾಟಕ್ಕೆ ಹೆದರಿದರೂ ಇದು ಆಗಲೇ ಬೇಕಾದ ಕ್ರಿಯೆ ಎಂದು ತೀರ್ಮಾನಿಸಿದ್ದ ಮುಕ್ರಿಗಳು ಅದು ಹೇಗೋ ಅವಳ ತೆರೆದ ಬಾಯಿಯನ್ನು ಅಮುಕಿ ಹಿಡಿದು ತಮ್ಮ ಕೆಲಸವನ್ನು ಮುಗಿಸುತ್ತಿದ್ದಂತೆ ನೋವು ತಡೆಯಲಾಗದೆ ನೆಬೀಸಾ ಅವರ ಮೊಣಗಂಟನ್ನು ಕಚ್ಚಿ ಕೂಗಾಡತೊಡಗಿದಳಂತೆ. +ಈ ಕೂಗಾಟವನ್ನು ಕೇಳುತ್ತಿದ್ದ ನಮ್ಮ ಮಣ್ಣಾಂಗಟ್ಟಿ ಇಸುಬು ಅದೆಲ್ಲಿಂದಲೋ ಮೀನು ಇರಿಯುವ ಕಠಾರಿಯೊಂದಿಗೆ ಕೋಣೆಯೊಳಕ್ಕೆ ದಾವಿಸಿಬಂದು ಮುಕ್ರಿಯವರ ಮೈಯನ್ನು ಎಲ್ಲ ಕಡೆ ಇರಿದು ಬಿಟ್ಟನಂತೆ. +ಇದು ಮುಕ್ರಿಯವರು ಹೇಳಿಬಿಟ್ಟ ನಿಜದ ಕತೆ. ಇದನ್ನು ಹೇಳಿ ಮುಗಿಸಿದ ಅವರು‘ ಪಡೆದವನೇ ನಿನ್ನ ಸೃಷ್ಟಿ ನಿಜವಾಗಿದ್ದರೆ, ನಿನ್ನ ಸ್ವರ್ಗನರಕಗಳು ನಿಜವಾಗಿದ್ದರೆ, ನಿನ್ನ ಅಂತಿಮದಿನ ನಿಜವಾಗಿದ್ದರೆ +ನನ್ನ ಮದುವೆಯ ಮೊದಲ ರಾತ್ರಿಯನ್ನು ನೆತ್ತರಿನ ಹೊಳೆಯಲ್ಲಿ ಮುಳುಗಿಸಿದ ಆ ಮಣ್ಣಾಂಗಟ್ಟಿ +ಇಸುಬುವನ್ನು ಅಂತಿಮದಿನದ ನ್ಯಾಯ ತೀರ್ಮಾನಕ್ಕಾಗಿ ಕಾಯದೆ ಅವನು ಬದುಕಿರುವಾಗಲೇ ಹುಣ್ಣು ಹಿಡಿದು ಸಾಯುವಂತೆ ಮಾಡು ಪಡೆದವನೇ ಎಂದು ನನ್ನ ಕಣ್ಣ ಮುಂದೆಯೇ ಇನ್ನೊಮ್ಮೆ ಬೇಡಿಕೊಂಡಿದ್ದರು. +* +* +* +ದೇವರ ಕೊಲ್ಲಿಯ ಆ ತಿರುವಿನಲ್ಲಿ ಸುಟ್ಟುಹೋದ ಇಸುಬುವಿನ ತಟ್ಟಿಹೋಟಲ್ಲಿನಿಂದ ಮತ್ತೆ ಹೊಗೆ ಏಳುತ್ತಿತ್ತು. +ನೆಬೀಸಾಳೂ ಕೈರುವೂ ಅದೆಲ್ಲಿಂದಲೋ ಸುಟ್ಟುಹೋದ ಡಬ್ಬಿಯೊಳಗಿಂದ ಚಾ ಪುಡಿಯನ್ನೂ ಸಕ್ಕರೆಯನ್ನೂ ಹುಡುಕಿ ಚಾ ಕಾಸುತ್ತಿದ್ದರು. ಹೋಟೆಲ್ಲಿನೊಳಗಿಂದ ಹೊಗೆ ಏಳುತ್ತಿರುವುದನ್ನು ಕಂಡು ರಸ್ತೆಯಲ್ಲಿ ಕೆಳಮುಖವಾಗಿ ಚಲಿಸುತ್ತಿದ್ದ ಲಾರಿಯೊಂದು ಕಿರ್ರನೆ ಬ್ರೇಕು ಹಾಕಿ ಹೋಟೆಲ್ಲಿನ ಮುಂದೆ ನಿಂತುಕೊಂಡಿತು. ಅದರ ಡ್ರೈವರ್ ಆ ಕತ್ತಲಲ್ಲೇ ಸುಟ್ಟುಹೋದ ಹೋಟೆಲ್ಲಿನ ಹೊಸ್ತಿಲನ್ನು ತಡವರಿಸುತ್ತಾ ಏರಿಬಂದು ಇದೆಲ್ಲಾ ಏನಾಯಿತೆಂದು ತಮಿಳಿನಲ್ಲಿ ವಿಚಾರಿಸತೊಡಗಿದ. ಅವನಿಗೆ ಇಸುಬುವಿನಜೊತೆ ಬಹಳ ಕಾಲದ ಗೆಳೆತನವಿದ್ದಂತೆ ತೋರುತ್ತಿತ್ತು. +ಅವನೂ ಇಸುಬುವನ್ನು ಮಣ್ಣಾಂಗಟ್ಟಿ ಅಂತಲೇ ಸಂಬೋದಿಸುತ್ತಿದ್ದ. +ಅಷ್ಟರಲ್ಲಿ ಅತ್ತ ಕಡೆಯಿಂದ ಕೂಜಿಮಲೆಯನ್ನು ಇಳಿದು ಬಂದ ಕೂಲಿಯಾಳುಗಳಂತೆ ಕಾಣಿಸುತ್ತಿದ್ದವರು ಸಣ್ಣ ಚೀಲವನ್ನು ಅತ್ಯಂತ ಬಾರದ ವಸ್ತುವನ್ನು ಇಳಿಸುವಂತೆ ಹೆಗಲಿಂದ ಇಳಿಸಿ +ಹೋಟೆಲ್ಲಿನೊಳಕ್ಕೆ ಎಳೆದು ತಂದು ಇರಿಸಿ ಇಸುಬುವಿನ ಜೊತೆ ಹರಟಲು ತೊಡಗಿದರು. +ಅವರು ಕೂಜಿಮಲೆಯಲ್ಲಿ ಅಮಿತವಾಗಿ ದೊರಕುತ್ತಿರುವ ಕಲ್ಲೋ ರತ್ನವೋ ಏನೋ ಅಮೂಲ್ಯವಾದದನ್ನು ಕದ್ದುಸಾಗಿಸುವವರು ಅಂತ ಗೊತ್ತಾಗುತ್ತಿತ್ತು. +‘ ಯಾರು ಏನು ಮಾಡಿದರೂ ಏನಾಗುತ್ತದೆ ಮಣ್ಣಾಂಗಟ್ಟಿ. ನಿಮ್ಮ ಗ್ರಾಚಾರ ಸರಿಯಾಗಿದ್ದರೆ ಈ ಕಲ್ಲಿನಿಂದ ನಿಮಗೆ ಒಂದು ಐವತ್ತು ಸಾವಿರವಾದರೂ ಗೀಟಲಿಕ್ಕಿಲ್ಲವಾ +ಇಸುಬು ತನ್ನ ಗ್ರಾಚಾರವನ್ನು ಮರೆತು ನನ್ನನ್ನೂ ನಿರ್ಲಕ್ಷಿಸುತ್ತಿರುವವನಂತೆ ಆಡುತ್ತಾ ಅವರ ಹೆಗಲಲ್ಲಿ ಕೈಯಿಟ್ಟು ಸರಸವಾಡುತ್ತಿದ್ದ. +ನಾನು ಹೊಗೆಯೋ ಮಂಜೋ ಗೊತ್ತಾಗದ ಹೋಟೆಲ್ಲಿನೊಳಗಿನ ಬೆಳ್ಳನೆಯ ತೆರೆ ಯೊಳಗೆ ಚಾ ಕಾಸಲು ಪರದಾಡುತ್ತಿರುವ ನೆಬೀಸಾಳನ್ನೂ ಅವಳ ಮಗಳು ಕೈರುವನ್ನೂ ಗಮನಿಸುತ್ತಿದ್ದೆ. +ಅವರು ನಾನು ಅಬ್ಬಾಸ್ ಮುಕ್ರಿಯವರಿಂದ ಏನು ಸಂದೇಶ ತಂದಿರುವೆನೆಂಬ ಕುತೂಹಲದಲ್ಲಿ ನಡುನಡುವೆ ನನ್ನ ಕಡೆ ಕಳ್ಳ ನೋಟ ಬೀರುತ್ತಿದ್ದರು. +***** +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +….ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_198.txt b/Kannada Sahitya/article_198.txt new file mode 100644 index 0000000000000000000000000000000000000000..7dfe009cf2925277561e7625f88c807f54c761fa --- /dev/null +++ b/Kannada Sahitya/article_198.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬುದ್ಧನಿಗು +ಪೆದ್ದನಿಗು +ವ್ಯತ್ಯಾಸ +ಕೊಂಬು +ಮಾತ್ರ +***** +ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಫುಟ್‌ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_199.txt b/Kannada Sahitya/article_199.txt new file mode 100644 index 0000000000000000000000000000000000000000..1548d8d7aeb8130777aae9f94c44ff0359137d7b --- /dev/null +++ b/Kannada Sahitya/article_199.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೧ +ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ ಸುಖಾಸನದಲ್ಲಿ ಕೂತಿದ್ದ. ಸ್ಟೀಲಿನ ಬಟ್ಟಲಿನಿಂದ ಮೊಳಕೆಯೊಡೆದ ಹೆಸರು ಕಾಳನ್ನು ತನ್ನ ಬೆರಳುಗಳಿಂದ ಆರಿಸಿ, ತುಸುವೇ ತೆರೆದ ತುಟಿಗಳಲ್ಲಿಟ್ಟು, ಸೂಕ್ಷ್ಮವಾಗಿ ಗದ್ದವನ್ನಾಡಿಸುತ್ತ ಅದು ಪರಮಾನ್ನವೆಂಬಂತೆ ಸುಖದಲ್ಲಿ ತಿನ್ನುತ್ತಿದ್ದ. ಫಸ್ಟ್‌ಕ್ಲಾಸ್ ರೈಲಿನ ಹರಿದ ಕುಶನ್ನುಗಳ ಡಬ್ಬಿಯಲ್ಲಿ ತಾವಲ್ಲದೆ ಇನ್ನೂ ಇಬ್ಬರು ಇದ್ದರು. ಆದರೆ ಓಡುವ ರೈಲಿನ ಕಿಟಕಿಯಾಚೆ ಸತತವಾಗಿ ಕಣ್ಣುಗಳಿಗೆ ಏಳುತ್ತ ಒದಗುವ ಬಳ್ಳಾರಿ ಜಾಲಿಯ ಮೊಟ್ಟುಗಳನ್ನೂ, ಬಾಯಾರಿ ಕೂಗುವ ಕಾಗೆಗಳನ್ನೂ, ತಮ್ಮ ಮೈಗಳಿಗಷ್ಟೇ ಚಾಚುವ ನೆರಳುಗಳಲ್ಲಿ ಮಲಗಿರುವ ಎಮ್ಮೆಗಳನ್ನೂ ಯಾರ ಪರಿವೆಯೂ ಇಲ್ಲವೆಂಬಂತೆ ನೋಡುತ್ತ ಕೂತಿದ್ದ. ಅಯ್ಯಪ್ಪ ವ್ರತಧಾರಿಯಾದ ಅವನು ಕಪ್ಪುಜುಬ್ಬವನ್ನೂ ಕಪ್ಪು ಮುಂಡನ್ನೂ ತೊಟ್ಟು ಹೆಗಲಿನ ಮೇಲೊಂದು ಕಪ್ಪುವಸ್ತ ಚೆಲ್ಲಿದ್ದ. ಈ ಕಪ್ಪು ವಸ್ತದ ಮೇಲೆ ಅವನು ತೊಟ್ಟ ತಾಯಿತ ಬಂಗಾರದ ಚೈನಿನಲ್ಲಿ ತೋರುವಂತೆ ನೇತು ಬಿದ್ದಿತ್ತು. ಸೀಟಿನ ಮೇಲೆ ಕಿಟಕಿಗೆ ಎದುರಾಗಿ ಅವನು ಕೂತಿದ್ದರೆ ಕಿಟಕಿಯ ಪಕ್ಕ ವಿಶ್ವನಾಥಶಾಸ್ತಿ ಕೂತಿದ್ದರು. ತಿಂಗಳಿಗೊಮ್ಮೆ ಕ್ಷೌರ ಮಾಡಿಸಿಕೊಳ್ಳುವ ಅವರ ಮುಖದ ಮೇಲೆ ಬಿಳಿ ಕುರುಚಲು ಗಡ್ಡ ಬೆಳೆದಿತ್ತು. ಮೈಮೇಲೆ ಹಸಿರು ಅಂಚಿನ ಬಿಳಿಧೋತ್ರ ಹೊದ್ದಿದ್ದರು. ಅದೇ ಅಂಚಿನ ಪಂಚೆಯುಟ್ಟಿದ್ದರು. ಅವರ ವಯಸ್ಸು ಸುಮಾರು ಎಪ್ಪತ್ತರ ಒಳಗೆ ಎನ್ನಿಸುವಂತಿತ್ತು. ಪ್ಯಾಂಟು ಶರಟು ಧರಿಸಿದ ಉಳಿದ ಇಬ್ಬರಂತಲ್ಲದೆ, ಶಾಸ್ತಿಗಳು ಮತ್ತು ಅಯ್ಯಪ್ಪ ವ್ರತಧಾರಿಯಾದ ಅವನು ಫಸ್ಟ್‌ಕ್ಲಾಸ್ ಡಬ್ಬಿಯಲ್ಲಿ ವಿಶೇಷ ಗಮನ ಸೆಳೆಯುವಂತೆ ಇದ್ದರು. ಸಮಯ ಮಧ್ಯಾಹ್ನವಾಗಿತ್ತು. ಇನ್ನಿಬ್ಬರು ಹಿಂದಿನ ಸ್ಟೇಶನ್ನಿನಿಂದ ಊಟ ಪಡೆದಿದ್ದರು. ಅವರಲ್ಲಿ ಜೀನ್ಸ್ ತೊಟ್ಟವನೊಬ್ಬ ಮಾಂಸಾಹಾರಿಯಾದ್ದರಿಂದ ಜುಟ್ಟಿನಲ್ಲಿ ಬಾಡಿದ ತುಳಸಿಯನ್ನು ಮುಡಿದಿದ್ದ ಶಾಸ್ತಿಗಳಿಗೂ, ಕಪ್ಪು ವಸ್ತದ ಅಯ್ಯಪ್ಪ ಭಕ್ತನಿಗೂ ಮುಜುಗರವಾಗಬಾರದೆಂದು ಅಪ್ಪರ್ ಬರ್ತ್ ಹತ್ತಿ ನೆಟ್ಟಕೂರಲಾರದೆ ಬಾಗಿ ಕೂತು, ಕದ್ದು, ಮುಚ್ಚಿ , ಮೂಳೆ ಚೀಪುತ್ತಿದ್ದ. ಇನ್ನೊಬ್ಬ ಪ್ಯಾಂಟ್ ಧರಿಸಿ ಹಣೆಗೆ ಕುಂಕುಮ ಇಟ್ಟುಕೊಂಡವನು ಮದ್ರಾಸಿನ ಸಾಂಬಾರು ರಸ ಪಲ್ಯಗಳನ್ನೆಲ್ಲ ಒಟ್ಟುಮಾಡಿ ಕಿವುಚುತ್ತ ಉಂಡೆಕಟ್ಟಿ ಬಾಯಿಗೆಸೆದು ಸಶಬ್ದವಾಗಿ ತಿನ್ನುತ್ತಿದ್ದ. ಶಾಸ್ತಿಗಳು ತಮ್ಮ ಮಡಿಗಂಟಿನಿಂದ ಸ್ಟೀಲಿನ ಡಬ್ಬಿಯನ್ನು ಎತ್ತಿಕೊಂಡರು. ಆದರೆ ಅದರ ಮುಚ್ಚಳ ತೆರೆದು ತಿನ್ನಲಾರದಷ್ಟು ಅವರು ಬೆವರುತ್ತ ನಡುಗುತ್ತಿದ್ದರು. ಮತ್ತೆ ಮತ್ತೆ ಅವರ ಕಣ್ಣು ದುರೂಹ್ಯವಾದ ಸಂಜ್ಞೆಯನ್ನು ಬಿಡಿಸಿಕೊಳ್ಳಲು ಹೆಣಗುತ್ತ ತಾಯತವನ್ನು ದಿಟ್ಟಿಸುತ್ತಿತ್ತು. ಅವನು ಮಧ್ಯ ವಯಸ್ಕನೆ? ಅಥವಾ ಅದಕ್ಕಿಂತ ಕೊಂಚ ಇನ್ನೂ ಚಿಕ್ಕವನೆ? ಮುಖದಲ್ಲಿ ಬೆಳೆಯುತ್ತಿದ್ದ ಗಡ್ಡದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲಿದೆ – ಅಷ್ಟೆ. ನಾಟಕದಲ್ಲಿ ರಾಮನ ಪಾತ್ರಕ್ಕೆ, ಕೃಷ್ಣನ ಪಾತ್ರಕ್ಕೆ ಅರ್ಹವೆನ್ನಿಸುವಂತಹ ಗುಣಾತಿಶಯಗಳನ್ನು ತೋರುವ ಮುಖ. ಬಾಡಿದ ಮುಖ; ಆದರೆ ತೇಜಸ್ಸಿನ ಮುಖ. ಅವನ ನೀಳವಾದ ಮೂಗು, ಅವನ ಅಗಲವಾದ ಕಣ್ಣುಗಳ ಬಣ್ಣ, ಆ ನಿರ್ಲಕ್ಷ್ಯದ ಕಣ್ಣುಗಳ ಮೋಹಕತೆ ಥೇಟು ಸರೋಜಳದೇ ಎನ್ನಿಸಿ ಶಾಸ್ತಿಗಳು ಆವೇಗದಿಂದ ಉಸಿರಾಡತೊಡಗಿದರು. ಈಗ ತನ್ನ ಭಾವನೆಗಳಿಗೆ ಮಾತು ಕೊಡಲಾರದೆ ಅವಾಕ್ಕಾಗಿ ಬಿಟ್ಟಿದ್ದರು. ತದನಂತರದ ದಿನಗಳಲ್ಲಿ ಶಾಸ್ತಿಗಳು ತನ್ನಲ್ಲೊಂದು ಅಕ್ಕರೆಯ ಭಾವನೆ ಯಾವ ಹೊತ್ತಲ್ಲಿ ಹೀಗೆ ಉಮ್ಮಳಿಸಿ ಹುಟ್ಟಿಬಿಟ್ಟ ಪರಿಯನ್ನು ಅನಿಷ್ಟ ನಿವಾರಣೆಗಾಗಿ ನೆನೆಯುವರು. ಮೊಳಕೆಯೊಡೆದ ಹೆಸರುಕಾಳನ್ನು ಬಾಯಲ್ಲಿ ಆಡಿಸುತ್ತ ಕೂತಿದ್ದ ಅವನು ಮೈಮೇಲೆ ಬಿದ್ದ ಬಿಸಿಲನ್ನೂ ಮಳೆಯನ್ನೂ ಸ್ವೀಕರಿಸುತ್ತ ತಟಸ್ಥವಾಗಿ ಮೆಲುಕು ಹಾಕುವ ಹಸುಗರುವಿನಂತೆ ಕಂಡಿದ್ದ. ಅವನ ಬಟ್ಟಲು ಬರಿದಾಗಿದ್ದಿರಬೇಕು; ಅವನ ಕಣ್ಣು ನಿರೀಕ್ಷೆಯಲ್ಲಿ ಬಟ್ಟಲ ಕಡೆ ನೋಡಿದ್ದೇ ಶಾಸ್ತಿಗಳಿಗೆ ತಡೆದುಕೊಳ್ಳಲು ಆಗಿರಲಿಲ್ಲ. ತನ್ನಲ್ಲಿ ಕರುಣೆ ಉಕ್ಕಿ ಚಕಿತರಾಗಿದ್ದರು. ತನ್ನ ಬಟ್ಟಲಿನ ಮುಚ್ಚಳವನ್ನು ತೆರೆದು ಎಡಗೈಯೂರಿ ಸೀಟಿಂದ ಜರಿಯುತ್ತ, ಅವನಿಗೆ ಹತ್ತಿರವಾಗಿ ಅದನ್ನು ಒಡ್ಡಿದ್ದರು. ‘ಇಕೊ’ ಎನ್ನಬೇಕೆಂದರೂ ಅನ್ನಲಾರದೆ ‘ಇಕೊಳ್ಳಿ’ ಎಂದಿದ್ದರು. ಅವನಿಗೆ ಕನ್ನಡ ತಿಳಿಯದೆಂಬುದು ಅವನು ಪ್ರಶ್ನಾರ್ಥಕವಾಗಿ ತನ್ನ ಕಡೆ ನೋಡಿದ ಕ್ರಮದಿಂದ ಶಾಸ್ತಿಗಳಿಗೆ ಮನದಟ್ಟಾಗಿತ್ತು. ಹಾಗಾದರೆ ಇವನು ಯಾರೋ ಬೇರೆಯವನು ಎಂದು ಸಮಾಧಾನವಾಗಿತ್ತು. ಬೊಂಬಾಯಿಯಲ್ಲಿ ಸುಮಾರು ನಲವತ್ತೋ, ನಲವತ್ತೈದೋ ವರ್ಷಗಳ ಕೆಳಗೆ ಅಲೆದಾಡುತ್ತಿದ್ದಾಗ ತನ್ನ ಲಂಪಟತನದಿಂದಾಗಿ ಕಲಿತ ಒರಟಾದ ಹಿಂದೂಸ್ತಾನಿ ನೆನಪಾಗಿತ್ತು. ಅಯ್ಯಪ್ಪ ಭಕ್ತನಂತೆ ಕಂಡವನ ಜೊತೆ ಆ ಭಾಷೆಯಲ್ಲಿ ಮಾತಾಡಲು ಹಿಂಜರಿದಿದ್ದರು. ಅವರಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಒಡ್ಡಿದ ಬಟ್ಟಲಲ್ಲಿರುವುದನ್ನು ನೋಡಿ ಅವನು ತನ್ನ ಗಡ್ಡದಲ್ಲಿ ಬೆರಳಾಡಿಸುತ್ತ ಅಸ್ವಸ್ಥನಾಗಿಬಿಟ್ಟಂತೆ ಕಂಡಿದ್ದ. ಶಾಸ್ತಿಗಳು ಒಡ್ಡಿದ್ದು ಅವನಿಗೆ ನಿಧಾನವಾಗಿ ಗುರುತು ಹತ್ತಿರಬೇಕು. ‘ಕು…ಟ್ಟ…ವ…ಲ…ಕ್ಕಿ’ ಎಂದಿದ್ದ ಕೊಂಚ ನಡುಗುವ ಸ್ವರದಲ್ಲಿ.ಗುಹೆಯಿಂದ ಬಂದಂತಿದ್ದ ಶಬ್ದದಿಂದ ಶಾಸ್ತಿಗಳು ರೋಮಾಂಚಿತರಾಗಿದ್ದರು. ಆದರೆ ಮಾತು ಶುರು ಮಾಡುವವರ ಕೃತಕ ಸಲಿಗೆಯಿಂದ ಹೇಳಿದ್ದರು. “ ಹಾಗಾದರೆ ಇದು ಏನು ಗೊತ್ತು ನಿಮಗೆ. ಕುಟ್ಟವಲಕ್ಕಿ ಗೊತ್ತೆಂದರೆ ಒಂದೋ ನೀವು ಕನ್ನಡಾ ಜಿಲ್ಲೆಯವರು, ಅಥವಾ ನನ್ನಂತೆ ಯಾರೋ ಕನ್ನಡಾ ಜಿಲ್ಲೆಯವರು ನಿಮಗೆ ಹಿಂದೆಂದಾದರೂ ಗಂಟು ಬಿದ್ದಿರಬೇಕು. ನಾನು ಹರಿಕಥೆ ಮಾಡುತ್ತಾ ಹೇಳೋದಿದೆ: ಕುಚೇಲ ಕನ್ನಡ ಜಿಲ್ಲೆಯವನು. ಅವನು ತನ್ನ ಬಾಲ್ಯದ ಸ್ನೇಹಿತನಿಗೆ ಒಯ್ದದ್ದು ಕೇವಲ ಅವಲಕ್ಕಿಯಲ್ಲ-ಕುಟ್ಟವಲಕ್ಕಿ ಅಂತ.” ಶಾಸ್ತಿಗಳಿಗೆ ಗತ್ತಿನ ತನ್ನ ಪರಿಚಿತ ಭಾಷೆಗೆ ಹಿಂದಿರುಗಿ ಸ್ವಸ್ಥರಂತೆ ಕಾಣುವುದು ಸಾಧ್ಯವಾದರೂ ತನ್ನ ಒಳಗಿನ ತಳಮಳಕ್ಕೆ ತಕ್ಕ ಮಾತಲ್ಲವೆಂದು ಮುಜುಗರವಾಗಿತ್ತು. ಅವನು ಏನೂ ಅರ್ಥವಾಗದವನಂತೆ ವಿನಯದಲ್ಲಿ ಕೈಮುಗಿದು ತನ್ನ ಪಾಡಿಗೆ ತನ್ನನ್ನು ಬಿಡಿ ಎಂಬಂತೆ ಶಾಸ್ತಿಗಳಿಗೆ ತನ್ನ ಸ್ವಮನಸ್ಕನಾದ ಕಣ್ಣುಗಳಿಂದ ಸೂಚಿಸಿದ್ದ. ಆ ಕಣ್ಣುಗಳು ಮತ್ತೆ ಗೂಢವಾಗಿ ಶಾಸ್ತಿಗಳನ್ನು ಬಾಧಿಸುತ್ತಿದ್ದಂತೆ ಅವನು ‘ಅಚ್ಛಾ’ ಎಂದು ಕುಟ್ಟವಲಕ್ಕಿಗೆ ಕೈಯೊಡ್ಡಿದ್ದ. ಶಾಸ್ತಿಗಳು ಅಕ್ಕರೆಯಲ್ಲಿ ಅವನ ಕೈಮೇಲೆ ಸುರಿದದ್ದನ್ನು ಬಾಯಿಗೆ ಹಾಕಿಕೊಂಡಿದ್ದ. ಅದರ ರುಚಿ ಅವನ ಕಣ್ಣುಗಳನ್ನು ಏನೋ ಹುಡುಕುವಂತೆ ಮುಚ್ಚಿಸಿದ್ದನ್ನು ಕಂಡು ಶಾಸ್ತಿಗಳಿಗೆ ಭಯವನ್ನೂ ಭರವಸೆಯನ್ನೂ ಕುದುರಿಸಿತ್ತು.ಇಷ್ಟರಲ್ಲಿ ತನ್ನ ಮಾಂಸದ ಊಟ ಮುಗಿಸಿ ಕೆಳಗಿಳಿದವನು ಇಂಗ್ಲಿಷಿನಲ್ಲಿ , ‘ನಿಮ್ಮ ಹೆಸರು ಕೇಳಬಹುದೆ?’ ಎಂದ, ಕುಟ್ಟವಲಕ್ಕಿಯನ್ನು ನಿಧಾನವಾಗಿ ಮೆಲ್ಲುತ್ತಲೇ ಇದ್ದ ಅಯ್ಯಪ್ಪ ವ್ರತದವನಿಗೆ. ವ್ರತದವನು ಕುಶಲದ ಪ್ರಶ್ನೆಯನ್ನು ಗಮನಿಸಲಿಲ್ಲ. ಆದರೆ ನಿಧಾನವಾಗಿ ತನಗಾಗಿ ಮಾತ್ರ ತೆರೆದ ಅವನ ಕಣ್ಣುಗಳಲ್ಲಿ ನೀರನ್ನು ಕಂಡು ಶಾಸ್ತಿಗಳು ಗಾಬರಿಯಾಗಿ ‘ಖಾರವ?’ ಎಂದರು. ಹಿಂದುಸ್ತಾನಿಯಲ್ಲಿ ಅದೇ ಪ್ರಶ್ನೆ ಕೇಳಿದರು. ಅವನು ಮೊದಲ ಸಾರಿಗೆ ಮುಗುಳ್ನಕ್ಕು ಹಿಂದಿನಂತೆಯೇ ತಲೆಯಾಡಿಸಿದ. ಡಬ್ಬಿಯಿಂದ ಹೊರ ಹೋಗಿ ಕೈತೊಳೆದು ಬಂದವನು ತನ್ನ ಜೀನ್ಸ್‌ನ ಜೋಬಿನಿಂದ ಕರ್ಚೀಫನ್ನು ತೆರೆದು ಕೈಯೊರೆಸಿಕೊಳ್ಳುತ್ತ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಇನ್ನಷ್ಟು ಪೊಲೈಟಾಗಿ ಕೇಳಿದ : “ನಿಮ್ಮ ಹೆಸರು ಕೇಳಬಹುದೆ?“ +ಅವನು ಕಣ್ಣೊರೆಸಿಕೊಂಡು ತನ್ನ ವಸ್ತದ ಕಡೆ ಬೆರಳು ಮಾಡಿ ‘ಸ್ವಾಮಿ’ ಎಂದ. ‘ನನ್ನ ಹೆಸರನ್ನು ಕಳೆದುಕೊಂಡಿದ್ದೇನೆ’ ಎಂದ ನಿರ್ಭಾವದಲ್ಲಿ. ಆದರೆ ಜೀನ್ಸ್‌ಧಾರಿ ತನ್ನ ಉತ್ಸಾಹ ಕಳೆದುಕೊಳ್ಳಲಿಲ್ಲ. +“ಈ ನಿಮ್ಮ ಉಡುಪಿನಲ್ಲೂ ನನಗೆ ಗೊತ್ತಾಗಲಿಲ್ಲವೆಂದುಕೊಂಡಿರ? ನೀವು ದಿನಕರ್. ಟೀವಿಯಿಂದಾಗಿ ನೀವು ದೇಶದಲೆಲ್ಲ ಪ್ರಸಿದ್ಧರು. ನನ್ನ ತಮ್ಮನಿಗೆ ನೀವು ದೊಡ್ಡ ಹೀರೋ. ಏಷ್ಯಾ ಖಂಡದ ಎಲ್ಲ ನಾಯಕರನ್ನು ನೀವು ಮಾಡಿರುವ ಇಂಟರ್‍ವ್ಯೂ ನೋಡದವರು ಇಲ್ಲ. ನೀವು ದೆವರು ಗೀವರುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರಲ್ಲ ಎಂದುಕೊಂಡು ಇಷ್ಟುಹೊತ್ತೂ ಅನುಮಾನದಲ್ಲೇ ನಿಮ್ಮನ್ನು ನೋಡುತಿದ್ದೆ. ಅಮಿತಾಬ್ ಬಚನ್ ಕೂಡ ಅಯ್ಯಪ್ಪ ದರ್ಶನ ಮಾಡಿದನೆಂದು ಕೇಳಿದ್ದೇನೆ. ಇಂಟರಸ್ಟಿಂಗ್. ಮದ್ರಾಸಿನಲ್ಲಿ ನೀವು ರೈಲು ಹತ್ತಿದ್ದೇ ಯಾರೋ ಪರಿಚಯದವರಂತೆ ಕಾಣುತ್ತಾರಲ್ಲ ಎಂದು ಚಿಂತಿಸುತ್ತಲೇ ಇದ್ದೆ. ಮದ್ರಾಸಿನ ಸುತ್ತಮುತ್ತಲ ದೇವಸ್ಥಾನಗಳನ್ನು ನೀವು ನೋಡಿ ಬಂದಿರಬೇಕು. ದೆಹಲಿಯಿಂದ ಪ್ರಯಾಣ ಮಾಡುತ್ತಿರಬೇಕು. ಟೀವಿಯಲ್ಲೂ ನಿಮ್ಮನ್ನು ನೋಡದೆ ತಿಂಗಳ ಮೇಲಾಯಿತು. ನಿಮ್ಮನ್ನು ದುರುಗುಟ್ಟಿ ನೋಡುವುದು ಇಂಪೊಲೈಟ್ ಎಂದು ಇಷ್ಟು ಹೊತ್ತೂ ಸುಮ್ಮನಿದ್ದೆ. ಕ್ಷಮಿಸಿ. ನಾನು ಡಿಸೈನರ್ ಬಟ್ಟೆಯ ಎಕ್ಸ್‌ಪೋರ್‍ಟರ್ – ಬೊಂಬಾಯಿಯವನು. ಮದ್ರಾಸಿಗೆ ಬಟ್ಟೆ ಖರೀದಿಸಲು ಬಂದಿದೆ“ ಎಂದು ಕೈಯೊಡ್ದಿದ. ತನ್ನ ಪತ್ತೆಯ ಖುಷಿಯಲ್ಲಿದ್ದ ಜೀನ್ಸ್ ಧಾರಿ ಅಯ್ಯಪ್ಪ ವ್ರತದವನು ಕೈಯೊಡ್ದಲಿಲ್ಲವೆಂದು ಹುರುಪು ಕಳೆದುಕೊಳ್ಳಲಿಲ್ಲ. ಸೊಗಸಾದ ಶರ್ಟ್‌ಗಳನ್ನು ಧರಸಿ ನುಣ್ಣಗೆ ಕ್ಷೌರ ಮಾಡಿಕೊಂಡ ನಗುಮುಖದ ತನ್ನ ಟೀವಿ ಹೀರೋ ಜೊತೆಯೇ ಅವನು ಮಾತು ಮುಂದುವರಿಸಿದ್ದ : “ನನ್ನ ಮಗಳು ಎಂಬಿಬಿ‌ಎಸ್ ಒದುತ್ತಿದ್ದಾಳೆ. ಅವಳಿಗಾಗಿ ನಿಮ್ಮ ಆಟೋಗ್ರಾಫ್ ಬೇಕು. ಬೆಂಗಳೂರಿನಲ್ಲಿ ಇಳಿಯುವುದಲ್ಲವೇ? ನಿಮ್ಮ ಆಟೋಗ್ರಾಫ್ ಆಮೇಲೆ ತೆಗೆದುಕೊಳ್ಳುವೆ“ ಆಟೋಗ್ರಾಫ್ ಸಿಗುವುದು ಖಚಿತವೆಂಬಂತೆ ಮಾತಾಡಿ ಎದುರಿನ ಸೀಟಿನಲ್ಲಿ ಕೂತು ಇಂಗ್ಲಿಷ್ ಮ್ಯಾಗಸೀನ್ ಒಂದನ್ನು ತೆರೆದು ಓದತೊಡಗಿದ. +ಶಾಸ್ತಿಗಳು ಬಟ್ಟಲನ್ನು ಎದುರು ಹಿಡಿದು ಇನ್ನಷ್ಟು ಸಂಜ್ಙೆಗೆ ಕಾದವರಂತೆ ಎವೆಯಿಕ್ಕದೆ ಅವನ ಕಡೆ ನೋಡುತ್ತಲೇ ಇದ್ದರು. ಅವನು ಅಯ್ಯಪ್ಪ ವ್ರತ ಹಿಡಿದಿದ್ದರಿಂದ ಕೇವಲ ’ಸ್ವಾಮಿ’ ಎಂಬ ಹೆಸರಿನವನೆಂದೂ, ಟೀವಿಯಲ್ಲಿ ಅವನು ಖ್ಯಾತನೆಂದೂ ಅವರು ಅರ್ಧಂಬರ್ಧ ಅರ್ಥ ಮಾಡಿಕೊಂಡಿದ್ದರು. ಅವನು ಕುಟ್ಟವಲಕ್ಕಿಯನ್ನು ಆಸಕ್ತಿಯಿಂದ ನೋಡುತ್ತಿದ್ದಾನೆಂದು ಅವರಿಗೆ ಹಿತವಾಯಿತು. ಇನ್ನೊಂದು ಬಟ್ಟಲಿನಿಂದ ಮೊಸರು ತೆಗೆದು, +‘ಕೈಕಾಲು ತೊಳೆದು ಬಂದು ಇದನ್ನು ತಿನ್ನಿ’ ಎಂದರು. ಸ್ವಾಮಿಗೆ ಶಾಸ್ತಿಗಳ ಮಾತು ಅರ್ಥವಾಗದಿದ್ದರೂ ಆಗ್ರಹ ತಿಳಿದಂತೆ ಕಂಡಿತು. ಎದ್ದು ಡಬ್ಬಿಯ ಬಾಗಿಲು ತೆರೆದು ಹೋದನು. ತನ್ನೊಳಗೆ ಆವೆಶವಾದ್ದು ಅಪದೇವತೆಯಲ್ಲವೆಂದು ಸಮಾಧಾನಪಡುತ್ತ ಕೊರಳಿನಿಂದ ರುದ್ರಾಕ್ಷಿ ತೆಗೆದು ಆಗ ತಾನು ಜಪಕ್ಕೆ ತೊಡಗಿದ್ದೆ ಎಂದು ಶಾಸ್ತಿಗಳು ನೆನೆಯುವರು. +ಡಬ್ಬಿಯಲ್ಲಿ ಕೂತಿದ್ದ ಇನ್ನೊಬ್ಬ ಊಟ ಮುಗಿಸಿ ಎಲೆಗೆ ಸುಣ್ಣ ಹಚ್ಚುತ್ತ ಶಾಸ್ತಿಗಳ ಜೊತೆ ಮಾತಿಗೆ ತವಕಿಸಿದ. “ತಾವು ಪ್ರಸಿದ್ಧ ಕೀರ್ತನಕಾರ ವಿಶ್ವನಾಥ ಶಾಸ್ತಿಗಳೆಂದು ನನಗೆ ಗೊತ್ತಿದೆ. ನಾನೂ ನಿಮ್ಮಕಡೆಯವನೇ, ನಮ್ಮ ಅಜ್ಜನ ಕಾಲದಲ್ಲಿ ಅಡಿಕೆ ತೋಟ ಕಳೆದುಕೊಂಡು ಊರು ಬಿಟ್ಟಿದ್ದು, +ಎಮ್‌ಡನ್ ಹಡಗಿನ ಕಥೆ ತಾವು ಕೇಳಿರಬಹುದು. ಹಾಗಾಗಿ ನಾವು ನಿರ್ವಾಹವಿಲ್ಲದೆ ವ್ಯಾಪಾರಕ್ಕೆ ಇಳಿದ್ದದು. ನನ್ನ ಉದ್ಯೋಗ ಮಲೆನಾಡಿನಲ್ಲಿ ಅಡಿಕೆ ಕೊಂಡು ಮಾರುವುದು. ನೀವು ಶಿವಳ್ಳಿ ಸ್ಮಾರ್ತರಾದರೆ ನಾನು ಮಾಧ್ವರವನು. ನಿಮ್ಮ ಹರಿಕಥೆ ಕೇಳಿಸಿಕೊಂಡಿದ್ದೇನೆ. ಶ್ರೀಕೃಷ್ಣ ಪರಮಾತ್ಮನನ್ನು ಕಣ್ಣಿಗೆ ಕಟ್ಟುವಂತೆ ಹಾಡುತ್ತ ನೀವು ವರ್ಣಿಸುತ್ತೀರಿ. ನಿಮ್ಮ ಭೇಟಿಯಾದ್ದು ನನ್ನ ಪುಣ್ಯ“ ಎಂದು ತನ್ನ ಎಲೆಯಡಿಕೆ ಕೈಚೀಲವನ್ನು ಶಾಸ್ತಿಗಳಿಗೆ ಒಡ್ಡಿದನು. +ಜಪದ ಮಣಿಯನ್ನು ಹಿಡಿದುಕೊಂಡೇ ಕಣ್ಣು ಬಿಟ್ಟು ಶಾಸ್ತಿಗಳು, +‘ನನ್ನದಿನ್ನೂ ಫಲಾಹಾರವಾಗಿಲ್ಲ’ ವೆಂದರು. “ಅವರಿಗೆ ನಿಮ್ಮ ಫಲಾಹಾರ ಕೊಟ್ಟು ಬಿಡುತ್ತಿದ್ದೀರಲ್ಲ. ನಿಮಗೇನು ಉಳಿಯುತ್ತದೆ, ಮುಂದಿನ ಸ್ಟೇಶನ್ನಿನ್ನಲ್ಲಿ ಇಡ್ಲಿ ಸಿಗುತ್ತದೆ. ತಂದುಕೊಡಲೆ?” ಎಂದ. “ನಾನು ಹೊಟೆಲಲ್ಲಿ ತಿನ್ನುವುದಿಲ್ಲ. ಪ್ರಯಾಣ ಮಾಡುವಾಗ ಸ್ವಲ್ಪ ಅವಲಕ್ಕಿ ಮೊಸರು ತೆಗೆದುಕೊಳ್ಳುತ್ತೇನೆ ಅಷ್ಟೆ. ಅವರಿಗೆ ಕೊಟ್ಟೂ ನನಗೆ ಮಿಕ್ಕಿರುತ್ತದೆ. ನಿಮ್ಮ ಉಪಕಾರಕ್ಕೆ ಕೃತಜ್ಙ. ತಮ್ಮ ನಾಮಧೇಯ ತಿಳಿಯಬಹುದೋ?” ಎಂದರು. ಶಾಸ್ತಿಗಳಿಗೆ ತನ್ನ ಭಾಷೆಗೆ ಮರುಕಳಿಸುವುದು ಸಾಧ್ಯವಾಗಿ ಸಂತೋಷವಾದಂತೆ ಇತ್ತು. +ಅಧ್ಯಾಯ-೨ +ತಟ್ಟೆಯಲ್ಲಿ ಹಾಕಿಕೊಟ್ಟ ಕುಟ್ಟವಲಕಿಯನ್ನೂ ಮೊಸರನ್ನೂ ಸ್ವಾಮಿಯ ರೂಪದಲ್ಲಿದ್ದವ ಬಹಳ ದಿನ ಹಸಿದಿದ್ದವನಂತೆ ತಿನ್ನುವುದನ್ನು ತನಗೆ ಅರ್ಥವಾಗದ ವೇದನೆಯಿಂದ ನೋಡುತ್ತ ಕೂತಿದ್ದೆ ಎಂಬುದು ಶಾಸ್ತಿಗಳಿಗೆ ತನ್ನ ದೌರ್ಬಲ್ಯದಲ್ಲಿ ಆಧಾರವಾಗುವ ನೆನಪು. ಮುಚ್ಚಿದ ಯಾವುದೋ ಬಾಗಿಲು ತೆರೆದಿತ್ತು. ದಿಗಿಲಾಗಲು ತೊಡಗಿತ್ತು. ಮಡಿಗಂಟಿನಿಂದ ಬಾಳೆಹಣ್ಣಿಗಾಗಿ ತಾನು ಹುಡುಕುತ್ತಿದ್ದಾಗ ಸ್ವಾಮಿ ಸದೃಶನಂತೆ ಕಾಣುತ್ತ ಹೋದ ಅವನು ತನ್ನ ಚೀಲದಿಂದ ಸೇಬನ್ನೂ ಬಾಳೆಹಣ್ನನ್ನೂ ಸಿಹಿ ದ್ರಾಕ್ಷಿಯನ್ನೂ ಎಡಗೈಯಲ್ಲಿ ತೆಗೆದು ಸೀಟಿನ ಮೇಲಿಟ್ಟು, ತನ್ನ ಬಲಗೈಯಿಂದ ಕೊಳ್ಳಿರೆಂದು ಹಣ್ಣನ್ನು ತೋರಿಸಿದ್ದ. ಒಳ್ಳೆಯ ಮಡಿವಂತ ಕುಟುಂಬದವನಿರಲೇ ಬೇಕು. ಹಿಂದಿಯಲ್ಲಿ ಅವನು ಆಡಿದ ಮಾತಿಗೆ ಅದೇ ಭಾವದಲ್ಲಿ ತಾನು ಉತ್ತರಿಸುತ್ತಿದ್ದೇನೋ ತಿಳಿಯದೆ ತಮ್ಮ ಪೂರ್ವಜನ್ಮದ ಬೊಂಬಾಯಿ ಹಿಂದಿಯಲ್ಲಿ ಶಾಸ್ತಿಗಳು ಕೇಳಿದ್ದರು:“ ಹೊಟ್ಟೆ ತುಂಬಿತೆ ಸ್ವಾಮಿ?” +“ ನನ್ನನ್ನು ಹಿರಿಯರಾದ ತಾವು ದಿನಕರ ಎಂದು ಕರೆಯಬಹುದು”. +ಸ್ವಲ್ಪ ತಡೆದು, ಅದೆಷ್ಟು ಮೃದುವಾಗಿ, ತನಗೆ ತನ್ನ ಪೂರ್ವಜನ್ಮದ ಸುಕೃತ ಎಂಬಂತೆ, ನರಕದ ತನ್ನ ಆತಂಕ ಕಳೆಯುವಂತೆ ಹೇಳಿದ್ದ: +“ ಬೇಡ, ಬೇಡ ನಿಮ್ಮ ಕುಟ್ಟವಲಕ್ಕಿಯಿಂದ ನನ್ನ ತಾಯಿ ಕರೆಯುತ್ತಿದ್ದ ಹೆಸರು ನೆನಪಾಯಿತು. ಪುಟಾಣಿ, ಪುಟಾಣಿ ಎಂದರೆ ಏನು? ಆ ಹೆಸರಿಗೆ ನಾನು ಯೋಗ್ಯ ಎನ್ನಿಸಿದರೆ ಹಾಗೇ ಕರೆಯಿರಿ.” +ಫ್ಯಾಷನಬಲ್ ಆದ ಜೀನ್ಸ್ ಧರಿಸಿದವನು, ಇದನ್ನು ಕೇಳಿಸಿಕೊಳ್ಳುತ್ತಾ ತಾನು ಓದುತ್ತಿದ್ದ ಇಂಡಿಯಾ ಟುಡೆ ಮುಚ್ಚಿ ನಕ್ಕ. +“ ಅಚ್ಛಾ ನನ್ನ ಊಹೆ ಹಾಗಾದರೆ ನಿಜವಾಯಿತು” ಎಂದು ತನ್ನ ಮ್ಯಾಗಜೀನ್‌ಗೆ ಹಿಂದಿರಿಗಿದ್ದ- ಈ ಬಾರಿ ಹಿಂದಿಯಲ್ಲಿ ಮಾತಾಡಿ. +ದಿನಕರ ನಿಧಾನವಾಗಿ ಶಾಸ್ತಿಗಳಿಗೆ ಅರ್ಥವಾಗುವಂತೆ ಸರಳವಾದ ಹಿಂದಿಯಲ್ಲಿ ಹೇಳತೊಡಗಿದ: +“ ನನ್ನ ತಾಯಿ ಕನ್ನಡದವರು ಇರಬಹುದೆಂದು ಕೇಳಿದ್ದೇನೆ. ನನಗೆ ಐದು ವರ್ಷವಿದ್ದಾಗ ಅವರು ಗಂಗಾನದಿಯ ಪಾಲಾಗಿ ಹರಿದ್ವಾರದಲ್ಲಿ ಸತ್ತರು. ಅವರು ಕುಟ್ಟವಲಕ್ಕಿಯನ್ನು ನನಗೆ ಪ್ರಿಯವೆಂದು ತಿನ್ನಿಸುತ್ತಿದ್ದರೆಂದು ಬಹಳ ವರ್ಷಗಳ ನಂತರ ಇನ್ನೊಬ್ಬ ತಾಯಿ ನೆನಪು ಮಾಡಿಕೊಟ್ಟದ್ದನ್ನು ಈಗ ನಿಮ್ಮ ವಿಶ್ವಾಸದಿಂದಾಗಿ ಥಟ್ಟನೆ ನೆನಪಾಯಿತು. ನನ್ನ ತಂದೆ ಯಾರೋ ನನಗೆ ಗೊತ್ತಿಲ್ಲ. ಮೊದಲೇ ಅವರನ್ನು ಕಳಕೊಂಡಿರಬಹುದು. ಆಮೇಲೆ ತಾಯಿಯನ್ನು ಕಳೆದುಕೊಂಡೆ. ಒಂದೆರಡು ತಿಂಗಳುಗಳ ಹಿಂದಿನಿಂದ ನನ್ನ ಹೆಸರನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.” +‘ಅಚ್ಛಾ’ ಎಂದು ಕುಶಲವಾಗಿ ನಕ್ಕ. ಅದೆಷ್ಟು ನಿರಾಯಾಸವಾದ ಸಲಿಗೆಯಲ್ಲಿ ಮಾತಾಡಲು ಅವನು ತೊಡಗಿದ್ದ! ಥಟ್ಟನೆ ಒದಗಿಬಿಟ್ಟ ಕೃಪೆಯಂತೆ ಅವನ ಮಾತು ಕಂಡಿತ್ತು. ‘ನಿಮ್ಮ ವಿಶ್ವಾಸಕ್ಕಾಗಿ ಮತ್ತೆ ನನ್ನ ಹೆಸರಿಗೆ ಹಿಂದಿರುಗುತ್ತೀನಿ. ನಿಮಗಿಷ್ಟವಾದರೆ ನನ್ನ ತಾಯಿ ಕರೀತಿದ್ದ ಹೆಸರಿಗೂ.” ಈ ಬಾರಿ ತನ್ನನ್ನೇ ಹಾಸ್ಯ ಮಾಡಿಕೊಳ್ಳುವವನಂತೆ ತನ್ನ ಟೀವಿ ವ್ಯಕ್ತಿತ್ವದ ಮೋಹಕವಾದ ಧಾಟಿಯಲ್ಲಿ ಹೇಳಿ ಗಂಭೀರವಾಗಿ ಮುಂದುವರಿದ: +“ ಅಚ್ಛಾ, ನಿಮ್ಮಿಂದ ಒಂದು ಸಹಾಯವಾಗಬೇಕು ನನಗೆ. ಇಪ್ಪತ್ತೈದು ವರ್ಷಗಳ ಕೆಳಗೆ ನನಗೊಬ್ಬರು ಮಂಗಳೂರಿನವರು ಹರಿದ್ವಾರದಲ್ಲಿ ಗುರುತಾಗಿದ್ದರು. ಈಗ ಅವರು ಪ್ರಸಿದ್ಧರಾದ ಅಡ್ವೊಕೇಟರಾಗಿದ್ದರೆಂದು ಕೇಳಿದ್ದೇನೆ. ಅವರು ಒಂದು ತಿಂಗಳ ಕಾಲ ನನ್ನ ಅತ್ಯಂತ ಆತ್ಮೀಯರಾದರು. ಅದಕ್ಕೆ ಕಾರಣ ಅವರ ತಾಯಿ, ಸೀತಮ್ಮ ಅಂತ. ನನಗೆ ತಾಯಿ ಅನ್ನಿಸಿದ್ದು ಅವರೊಬ್ಬರೇ. ಅವರು ಬದುಕಿದ್ದರೆ ಅವರನ್ನು ನೋಡಬೇಕು” +ಎಂದು ದಿನಕರ ತನ್ನ ಚೀಲದಿಂದ ಒಂದು ಹಳೆಯ ಅಡ್ರೆಸ್ ಪುಸ್ತಕ ತೆಗೆದು ‘ನಾರಾಯಣ ತಂತ್ರಿ’ ಎಂಬುವರ ವಿಳಾಸ ತೋರಿಸಿದ. ಶಾಸ್ತಿಗಳಿಗೆ ತನ್ನ ಬದುಕು ಬದಲಾಗುವ ಸಂಜ್ಞೆ ಗಟ್ಟಿಯಾದಂತಾಗಿ, ವೇದನೆಯಾಗಿ, ಆದರೆ ಅವನಂತೆಯೇ ತನ್ನ ದೈನಿಕ ವ್ಯಕ್ತಿತ್ವಕ್ಕೆ ಹೊರಳಿ ಕೇಳಿದರು: +“ ಅಯ್ಯೋ ಇವರು ನನಗೆ ಬೇಕಾದವರು. ಅವರ ಮನೆಯಲ್ಲಿ ಒಂದು ದಿನವಿದ್ದೇ ನಾನು ನನ್ನ ಊರಿಗೆ ಹೋಗುವುದು. ಅವರ ತಾಯಿ ಇನ್ನೂ ಇದ್ದಾರೆ. ಅವರ ಮನೆಗೆ ಹೋದಾಗಲೆಲ್ಲ ನಾನು ಅವರಿಗೆ ಪುರಾಣ ಓದಿ ಹೇಳಬೇಕು. ಅದೇ ಪುರಾಣವನ್ನು ಅದೆಷ್ಟೋ ಸಲ ಈ ಹತ್ತು ಹದಿನೈದು ವರ್ಷಗಳಿಂದ ಅವರಿಗೆ ಪಠಿಸಿದ್ದೇನೆ. ನಿಮ್ಮನ್ನು ನಾನೇ ಖುದ್ದು ಕರೆದುಕೊಂಡು ಹೋಗುತ್ತೇನೆ. ಬೆಂಗಳೂರಿಗೆ ಈ ರೈಲು ಸಂಜೆ ತಲುಪುತ್ತದೆ. ರಾತ್ರೆ ಲಕ್ಸುರಿ ಬಸ್ಸಿದೆ ಮಂಗಳೂರಿಗೆ” ಎಂದು ಆಡಬಾರದಷ್ಟು ಮಾತನ್ನು ಆಡಿಬಿಟ್ಟರು. +ಇಂಥ ಪರಿಶುದ್ಧವಾದ ಮಾತುಗಳನ್ನಾಡಲು ಅವರು ಈ ಭಾಷೆಯನ್ನು ಬಳಸಿದ್ದೇ ನೆನಪಾಗಿತ್ತು; ತಾನು ಶರ್ಟು ಪೈಜಾಮಗಳನ್ನು ಹಾಕಿಕೊಂಡು, ಜುಟ್ಟು ಮುಚ್ಚಲೆಂದು ತಲೆಯ ಮೇಲೊಂದು ಕಪ್ಪು ಟೊಪ್ಪಿಯನ್ನೂ ಧರಿಸಿ, ಹಣೆಯ ಮೇಲೆ ಅಕ್ಷತೆಯಿಲ್ಲದೆ, ಬೊಂಬಾಯಿ ಬೀದಿಗಳಲ್ಲಿ ಸುಮಾರು ಅರ್ಧ ಶತಮಾನಗಳ ಹಿಂದೆ ಅಂತರ ಪಿಶಾಚಿಯಾಗಿ ಅಲೆದಾಡುತ್ತ ರೂಢಿಮಾಡಿಕೊಂಡಿದ್ದ ಭಾಷೆ ಅದು. ಆದ್ದರಿಂದ ಹೀಗೆ ಮಾತಾಡುತ್ತಿರುವುದು ತಾನಲ್ಲ, ತನ್ನನ್ನು ಹೊಕ್ಕ ಅಪದೇವತೆ ಎನ್ನಿಸಿತ್ತು. ಆದರೆ ಅವರ ಮುಖ ಆರ್ತವಾದ ನಿರೀಕ್ಷೆಯಲ್ಲಿ ಅವನನ್ನು ನೋಡುತ್ತಿತ್ತು. ಬಾಯಿಗೆ ಬಂದದ್ದನ್ನು ಹೇಳಿಬಿಟ್ಟಿದ್ದರು: “ಪುಟಾಣಿ ಎಂದರೆ ಮುದ್ದಿನ ಮಗ ಅಂತ . ನನಗೆ ಈಗ ಮಕ್ಕಳಿಲ್ಲ. ಇದ್ದ ಒಬ್ಬಮಗಳು ಎರಡು ವರ್ಷಗಳ ಕೆಳಗೆ ಮನೆಬಿಟ್ಟು ನಡೆದುಬಿಟ್ಟಳು. ಒಟ್ಟು ನನ್ನ ಗ್ರಹಚಾರ ಎನ್ನದೇ ವಿಧಿಯಿಲ್ಲ. ನನಗೆ ನೀವು ಮಗನಾಗಬಹುದಿತ್ತು.” ಹೀಗೆ ತಾನು ಎಸೆದುಬಿಟ್ಟ ಮಾತಿಗೆ ದಿನಕರ ಸುಲಭವಾದ ಸೌಜನ್ಯದಿಂದ ಉತ್ತರಿಸಿದ್ದ. “ದಾಡಿ ಬಿಟ್ಟ ನನ್ನಂಥ ದಾಂಢಿಗನನ್ನು ಹಾಗೆ ಕರೆಯೋದು ಸರಿ ಅನ್ನಿಸಿದರೆ ನಿಮ್ಮನ್ನ ಎನೂಂತ ಕರೀಲಿ? ಚಿಕ್ಕಪ್ಪನೋ ದೊಡ್ಡಪ್ಪನೋ ಮಾವನೋ?” ಈ ಮಾತು ಕೇಳಿ ತಾನು ಪ್ರೇತ ಸಮಾನವಾಗಿ ಬಿಟ್ಟೆ ಎಂದು ವೃದ್ಧನಾದ ತನಗೆ ಅನ್ನಿಸಿತ್ತು. ಆದರೆ ಅವನು ಎಷ್ಟು ಗೆಲುವಾಗಿ ಬಿಟ್ಟಿದ್ದನೆಂದರೆ, ಆಟೋಗ್ರಾಫ್ ಪುಸ್ತಕವನ್ನು ತನ್ನ ಲೆದರ್ ಬ್ರೀಫ್‌ಕೇಸಿನಿಂದ ತೆಗೆದು ಒಡ್ಡಿದ ಜೀನ್ಸ್‌ದ್ಧಾರಿಗೂ ಖುಷಿಯ ಹಾಸ್ಯದಲ್ಲಿ ಹೀಗೆ ಹಿಂದಿಯಲ್ಲಿ ಬರೆದಿದ್ದ : “ಟೀವಿಯ ದಿನಕರನಲ್ಲ. ಅವನಿಂದ ಕಳಚಿಕೊಂಡು ಬೆಂಗಳೂರು ತಲುಪುತ್ತಿರುವ ಅರಿಯದ ಒಬ್ಬ ಪುಟಾಣಿ” ಮತ್ತೆ ಬಿಳಿಚಿಕೊಂಡಿದ್ದ ತನ್ನ ಕಡೆ ನೋಡಿ, ಪುಟಾಣಿಯಂತೆಯೇ ಮುದ್ದಾಗಿ ಅಂದಿದ್ದ: “ಚಿಕ್ಕಪ್ಪ, ನಿಮ್ಮ ಕಚ್ಚಾ ಹಿಂದಿ ಚೆನ್ನಗಿಯೇ ಇದೆ. ಆದರೆ ನನಗೆ ಬಹುವಚನ ಉಪಗೋಗಿಸಬೇಡಿ.” ದಿನಕರನ ಕೊರಳಿನ ತಾಯಿತವನ್ನು ತಾನು ನೋಡುತ್ತಿರುವುದನ್ನು ಗಮನಿಸಿ ಅಪರಿಚತನಾದ ತನಗೆ ಅವನು ಹೇಳಿಬಿಟ್ಟ ಮುಂದಿನ ಮಾತು ಶಾಸ್ತಿಗಳನ್ನು ಇನ್ನಷ್ಟು ಅಧೀರಗೊಳಿಸಿತ್ತು. “ಚಿಕ್ಕಪ್ಪ ನೋಡಿ, ಈ ತಾಯಿತವನ್ನು ನನ್ನ ತಾಯಿ ಗಂಗೆಯಲ್ಲಿ ಇಳಿಯುವುದಕ್ಕೆ ಮುಂಚೆ ನನ್ನ ಕೊರಳಲ್ಲಿ ಹಾಕಿದ್ದು. ನೀರಿಗಿಳಿದವರು ಮತ್ತೆ ಬರಲಿಲ್ಲ. ನೀವು ಕೊಟ್ಟ ತಿಂಡಿಯ ಫಲವಾಗಿ ಈಗ ಮತ್ತೆಲ್ಲ ನೆನೆಪು. ಈ ನಲವತ್ತು ವರ್ಷಗಳಿಂದ ಈ ತಾಯಿತ ನನ್ನ ಕೊರಳಲ್ಲೇ ಮಾತೃರಕ್ಷೆಯಾಗಿ ಇದೆ” ಎಂದಿದ್ದ. ಈ ಮಾತು ಕೇಳಿ ಶಾಸ್ತಿಗಳು ‘ಶಿವ ಶಿವಾ ನನ್ನನ್ನು ಕಾಪಾಡು’ ಎಂದು ಜಪಮಣಿ ಹಿಡಿದು ಕಣ್ಣುಮುಚ್ಚಿ ಫ್ರಾರ್ಥಿಸಿದ್ದರು. +ಅಧ್ಯಾಯ ೩ +ಶಾಸ್ತಿಗಳು ಗರ ಬಡಿದವರಂತೆ ಮಂಕಾಗಿ ಬಿಟ್ಟಿದ್ದರು. ಪುರಾಣ ಪ್ರವಚನದಿಂದ ತನಗೆ ಅಭ್ಯಾಸವಾದ ಅನ್ಯಶ್ರವಣಕ್ಕಾಗಿ ಸೊಗಸುಗೊಂಡ ಭಾಷೆಯೂ, ಪೂರ್ವಜನ್ಮದಂತೆ ನೆನಪಾಗುವ ತನ್ನ ಬೊಂಬಾಯಿ ವ್ಯಸನದ ಭಂಡು ಭಾಷೆಯೂ ತನಗೇ ಅವರು ಭಯಪಡುತ್ತ ಅಂದುಕೊಳ್ಳುತ್ತಿದ್ದುದನ್ನು ಹೆಳಲಾರದಾಗಿ ಬಿಟ್ಟಿತ್ತು. ದಿನಕರ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗೋಣವೆಂದು ಒತ್ತಾಯ ಮಾಡಿದ : “ಅಯ್ಯಪ್ಪ ವ್ರತ ಹಿಡಿದಿದ್ದರೂ ನನ್ನ ಹತ್ತಿರ ಕ್ರೆಡಿಟ್ ಕಾರ್ಡಿದೆ. ಇದೋ ನೋಡೆ ಚಿಕ್ಕಪ್ಪ”. “ಅಯ್ಯೋ ಅದು ಖರ್ಚಿನ ಪ್ರಶ್ನೆಯಲ್ಲ. ರಾತ್ರೆ ಘಾಟಿನಲ್ಲಿ ಪ್ರಯಾಣ ಕ್ಷೇಮವಲ್ಲ. ನನ್ನ ಹತ್ತಿರವು ಮಸ್ತು ದುಡ್ಡಿದೆ. ಅಡಿಕೆಯಲ್ಲಿ ಪ್ರತಿವರ್ಷ ಐದುಲಕ್ಷಕ್ಕೂ ಕಮ್ಮಿಯಿಲ್ಲದಂತೆ ಮಿಕ್ಕುತ್ತದೆ. ನನಗೇನು ಮಕ್ಕಳೊ, ಮರಿಯೋ-ಯಾವುದರ ಖರ್ಚು? ಕರ್ಮ ಸವೆಸಲೆಂದು ಹಚ್ಚಿಕೊಂಡವ್ಯಸನ ಇದು-ಪುರಾಣ ಪ್ರವಚನ ಅಂತ ಅಲೆದಾಡೋದು”. ಇಷ್ಟು ಮಾತನ್ನು ಕಷ್ಟಪಟ್ಟು ಹೊರಗೆ ಹಾಕುವಾಗ ಅವನನ್ನು ‘ಪುಟಾಣಿ’ಯೆಂದು ಸಂಬೋಧಿಸಬೇಕೆಂದರೂ ಗಂಟಲು ಕಟ್ಟಿತ್ತು. ಅವನು ಆ ಸೂಳೆಮಗ ಪಂಡಿತನ ಮಗನಾಗಿದ್ದರೆ? ಸ್ಟೇಶನ್ನಿನಿಂದ ಟ್ಯಾಕ್ಸಿ ಮಾಡಿಕೊಂಡಿ ಕಿರಿದಾದ ಬೀದಿಗಳಲ್ಲಿ ಸುತ್ತಿ ಬಳಸಿ ಹತ್ತಿ ಇಳಿದು ಅಡ್ವೊಕೇಟ್ ನಾರಾಯಣ ತಂತ್ರಿಗಳ ಬಂಗಲೆಯ ಎದುರು ಇಳಿದರು. ಮನೆಗಳಿಗೆ ಹೊದಿಸಿದ ಹೆಂಚುಗಳ ಅದೇ ಬಣ್ಣದ ಹಲವು ಶೇಡುಗಳು, ಹಳೆಯ ಕಾಲದ ಮನೆಗಳ ಮುಖಮಂಟಪಗಳು, ಬಳಸುತ್ತ ಸಾಗುವ ಬೀದಿಗಳು-ಇವು ದೆಹಲಿಯಲ್ಲಿ ಕಣ್ಣು ಕಿವಿಗಳನ್ನು ಕೆಡಿಸಿಕೊಂಡ ದಿನಕರನಿಗೆ ಖುಷಿಕೊಟ್ಟಿದ್ದವು. “ನಾನು ಯಾರೆಂದು ಹೇಳಬೇಡಿ ಚಿಕ್ಕಪ್ಪ. ಅಮ್ಮನಿಗೆ ಈ ಇಪ್ಪತೈದು ವರ್ಷಗಳ ನಂತರ ಗುರ್ತು ಹತ್ತತೋ ನೋಡುವ, ಅದೂ ಈ ನನ್ನ ವೇಷದಲ್ಲಿ, ಹತ್ತಿದರೆ ಇನ್ನೂ ದಿನಕರ ನಿರ್ನಾಮವಾಗಿಲ್ಲ ಅಂತ.” ದಿನಕರ ಹಗುರಾಗಿ ಬಿಟ್ಟಿದ್ದ. ಲಗುವಗೆಯಿಂದ ತನ್ನ ಕೈಚೀಲವನ್ನು ಹೆಗಲಿಗೆ ನೇತುಹಾಕಿ ಗೇಟನ್ನು ತೆಗೆದು ನೋಡಿದ. ಹಸಿರಾದ ಸಾಲು ಮರಗಳನ್ನೂ, ಮಾವಿನ ಮರಗಳನ್ನೂ, ತೆಂಗಿನ ಮರಗಳನ್ನೂ ಸಮೃದ್ಧವಾಗಿ ಪಡೆದು, ಕಂಡೂ ಕಾಣದ ಹಾಗೆ, ಕಣ್ಣು ಮುಚ್ಚಾಲೆಯಾಡುವ ಹಳೆಯ ಕಾಲದ ಬಂಗಲೆಯನ್ನು ಸುಮಾರು ಎರಡು ಎಕರೆ ತೋಟದ ಡ್ರೈವ್‌ವೇನಲ್ಲಿ ಸುತ್ತಿ ಬಳಸಿ ನಡೆದು ಮುಟ್ಟಬೇಕು. ಜಪದ ಮಣಿ ಎಣಿಸುತ್ತ ಶಾಸ್ತಿಗಳು ಹಿಂಬಾಲಿಸಿದ್ದರು. ಮನೆಯ ಎದುರಿನ ಅಂಗಳದಲ್ಲಿ ಬಿಳಿಕೂದಲನ್ನು ನೀಟಾಗಿ ಬಾಚಿಕೊಂಡ ಮುದುಕಿಯೊಬ್ಬಳು ನಿಂತಿದ್ದಳು. ಬರುತ್ತಿರುವವರನ್ನು ಕಾಣಲೆಂದು ನಿರೀಕ್ಷೆಯಲ್ಲಿ ಎತ್ತಿದ ಸುಕ್ಕುಗಟ್ಟಿದ ಮುಖದ ಮೇಲೆ ಮನೆಯೆದುರು ನೆಟ್ಟ ಕಂದೀಲಿನ ಬೆಳಕು ತುಸುಬಿದ್ದು ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಸಪುರವಾದ ಮೈಕಟ್ಟಿನವರಿಗೆ ವಯಸ್ಸಾದ್ದು ಗೊತ್ತಾಗುವುದಿಲ್ಲವೆನ್ನುತ್ತಾರೆ. ಹರಿದ್ವಾರದಲ್ಲಿ ಕಂಡಂತೆಯೇ ಸೀತಮ್ಮ ಲಕ್ಷಣವಂತೆಯಾಗಿ ಕಂಡಿದ್ದರು. ಇನ್ನಷ್ಟು ಸುಕ್ಕು,ಇನ್ನಷ್ಟು ಬಿಳಿಕೂದಲು ಬಿಟ್ಟರೆ ಬದಲಾವಣೆಯಿಲ್ಲ. ಅವರು ತೊಟ್ಟ ಶುಭ್ರವಾದ ಬಿಳಿಸೀರೆ, ಒಣಗಲೆಂದು ತುದಿಯಲ್ಲಿ ಗಂಟು ಹಾಕಿದ ಕೂದಲು ನೋಡಿದರೆ, ಸ್ನಾನ ಮಾಡಿದಂತೆ ಕಾಣುತ್ತಿತ್ತು. ಅಂಗಳದಲ್ಲಿ ಯಾಕೆ ನಿಂತಿದ್ದಾರೆಂಬುದು ಅವರು ಕೈಯಲ್ಲಿ ಹಿಡಿದ ರಂಗೋಲೆ ಬಟ್ಟಲಿನಿಂದ ಖಚಿತವಾಗಿತ್ತು. ಕಪ್ಪುಕಲ್ಲಿನ ಆ ಬಟ್ಟಲೂ ಹರಿದ್ವಾರದಲ್ಲಿ ಖರೀದಿಸಿದ್ದಿರಬೇಕು. ಹರಿದ್ವಾರದಲ್ಲಿ ತನ್ನ ಸಾಕುತಂದೆ ಕಟ್ಟಿಸಿದ ಛತ್ರದಲ್ಲಿ ನಿಲ್ಲಲೆಂದು ಎಲ್ಲ ಯಾತ್ರಿಕರಂತೆ ಯಾರೋ ಅಪರಿಚಿತರಾಗಿ ಬಂದವರು, ತಮ್ಮ ದಿವ್ಯವಾದ ಮುಖಲಕ್ಷಣದ ತೇಜಸ್ಸಿನಿಂದ ಒಂದೆರಡು ದಿನಗಳಲ್ಲೇ ತನ್ನ ಸಕುತಂದೆಗೆ ಬೇಕಾದವರಾಗಿ ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು. ನಸುಕಿನಲ್ಲೆದ್ದು ಮನೆಯ ಅಂಗಳ ಗುಡಿಸಿ, ಸಾರಿಸಿ, ಗಂಗಾಸ್ನಾನ ಮಾಡಿಕೊಂಡು ಒದ್ದೆಗೂದಲನ್ನು ಬೆನ್ನಿನ ಬೇಲೆ ಹರಡಿಕೊಂಡು ಎಷ್ಟು ಏಕಾಗ್ರವಾಗಿ, ಸುಂದರವಾಗಿ, ದಿನಕ್ಕೊಂದು ಬಗೆಯ ರಂಗೋಲಿಯನ್ನು ಅಂಗಳದಲ್ಲಿ ಬಿಡಿಸುತ್ತಿದ್ದರೆಂದರೆ ತ್ರಿಪಾಠಿಗಳ ಪುರಾತನ ಮನೆಗೆ ಸೌಭಾಗ್ಯದ ಕಳೆ ಬಂದಿತ್ತು. ರಂಗೋಲೆ ಮುಗಿದದ್ದೇ ಸೀತಮ್ಮ ಸ್ವಯಂಪಾಕದ ವ್ರತ ಹಿಡಿದವರಾದ್ದರಿಂದ ತಾವೇ ಸ್ವತ: ಅಡಿಗೆ ಮನೆಗೆ ಒತ್ತಾಯದಿಂದ ನುಗ್ಗಿ, ಅವಲಕ್ಕಿಯ ಉಪ್ಪಿಟ್ಟನ್ನೋ, ಕೇಸರಿಬಾತನ್ನೋ, ಇಡ್ಲಿಯನ್ನೋ ಮಾಡಿ ಮನೆ ಮಂದಿಗೆಲ್ಲಾ ಹೊಸರುಚಿಯ ತಿಂಡಿಗಳನ್ನು ಬಡಿಸಿ, ಎಲ್ಲರಿಗೂ ಪ್ರೀತಿಯ ಅಮ್ಮನಾಗಿಬಿಟ್ಟಿದ್ದರು. ಅವರಿಗೆ ಆಗ ನಡುಪ್ರಾಯ. ನಲವತೈದು ವರ್ಷದ ವಿಧವೆ. ತ್ರಿಪಾಠಿಗಳಿಗೆ ಆಗಲೇ ಎಪ್ಪತೈದು ವರ್ಷ. ಕುಲೀನ ಶ್ರೀಮಂತರು. ಮಹಾಧರ್ಮಿಷ್ಠರು. ಸೀತಮ್ಮನನ್ನು ಅವರು ಅಕ್ಕರೆಯಿಂದ ‘ತಂಗಿ’ ಎಂದು ಕರೆಯುವುದು : “ತಂಗಿ ನಾವು ಕೂಡ ಬ್ರಾ ಹ್ಮಣರೇ. ಈರುಳ್ಳಿಯನ್ನು ಕೂಡ ತಿನ್ನುವವರಲ್ಲ. ನಮ್ಮ ಅಡಿಗೆ ನೀವು ಊಟ ಮಾಡಬಹುದು.” ಅವರು ಹಿಂದಿಯಲ್ಲಿ ಮಾತಾಡಿದ್ದು ಸೀತಮ್ಮನಿಗೆ ಅರ್ಥವಾಗುತ್ತಿರಲಿಲ್ಲ. ಅವರ ಮಗ ನಾರಾಯಣ ತಂತ್ರಿಗೆ ಸ್ಕೂಲಿನಲ್ಲಿ ಹಿಂದಿ ಪ್ರಚಾರ ಸಭಾದ ಉತ್ಸಾಹ ಫಲವಾಗಿಯಲ್ಲದೆ, ಅವನ ಚಿಕ್ಕವಯಸ್ಸಿನ ಡಿಬೇಟಿನ ಮೋಜಿನಿಂದಾಗಿ ಅಷ್ಟಿಷ್ಟು ಹಿಂದಿ ಬರುತ್ತಿತ್ತು. ಅವನಿಗೆ ಸತತವಾಗಿ ದುಭಾಷಿಯ ಕೆಲಸ. +ಸೀತಮ್ಮನ ಎದುರು ಹೋಗಿ ದಿನಕರ ನಿಂತ. ‘ಅಮ್ಮ’ ಎಂದ. ಸೀತಮ್ಮ ದಿನಕರನ ಕೊರಳಿನ ತಾಯಿತವನ್ನು ಕಣ್ಣು ಕಿರಿದು ಮಾಡಿ ಶಾಸ್ತಿಗಳಂತೆಯೇ ದಿಟ್ಟಿಸಿದ್ದರು. ಮತ್ತೆ ಅವನನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದ್ದರು. ಅವರ ಕಣ್ಣುಗಳು ಕ್ರಮೇಣ ಮಾತೃವಾತ್ಸಲ್ಯದಲ್ಲಿ ಬೆಳಗುತ್ತ, ಕಾಲದಲ್ಲಿ ಹಿಂದಾಗುತ್ತ, ತನ್ನನ್ನು ಪುನ: ಸೃಷ್ಟಿಸಿಕೊಳ್ಳುವುದನ್ನು ಆತಂಕದಲ್ಲೂ ಏರಿ ಇಳಿಯುವ ಸುಖಕರವಾದ ವೇದನೆಯಲ್ಲೂ ನಿರೀಕ್ಷಿಸುತ್ತ ದಿನಕರ ನಿಂತಿದ್ದ. “ಅಯ್ಯೋ ದಿನಕರನಲ್ಲವ” ಎಂದ್ದಿದ್ದರು. ಅವನನ್ನು ಮಡಿಯಲ್ಲಿದ್ದುದರಿಂದ ಆ ಕ್ಷಣವೇ ತಬ್ಬಿಕೊಳ್ಳಲಿಲ್ಲ, ಅಷ್ಟೆ. ಆದರೆ ಅವರ ಕಣ್ಣುಗಳು ಮಾತೃಸ್ಪರ್ಶದ ಸುಖವನ್ನೆಲ್ಲ ಅವನಿಗೆ ಕೊಟ್ಟಿತ್ತು. ಹೀಗೆ ಒಂದು ಕ್ಷಣ ಕಳೆಯಿತು ಅಷ್ಟೆ. ಸೀತಮ್ಮ ಶಾಸ್ತಿಗಳ ಕಡೆ ತಿರುಗಿ, ‘ಏನು ಶಾಸ್ತಿಗಳೆ, ಮತ್ತೆ ಸ್ನಾನ ಮಾಡಿ ನಿಮಗೆ ಫಲಾಹಾರ ಮಾಡಿದರಾಯಿತು, ಅಲ್ಲವ?’ ಎಂದು ಹತ್ತಿರ ಬಂದು ಅವನ ಕೈಹಿಡಿದುಕೊಂಡರು. ಇಷ್ಟು ವರ್ಷ ಯಾಕೆ ತನ್ನನ್ನು ಬಂದು ನೋಡಲಿಲ್ಲೆಂದು ಕೇಳಿರಲಲ್ಲ. “ನಾಗವೇಣಿ ಕಾಫಿ ತಗೊಂಡು ಬಾ” ಎಂದು ಕೂಗಿದ್ದರು. ತಾವೇ ಒಳಗಿನಿಂದ ಬೆತ್ತದ ಕುರ್ಚಿಗಳನ್ನು ಅಂಗಳಕ್ಕ ತರಲು ಸೀತಮ್ಮ ಹೋಗುವುದನ್ನು ಕಂಡು ದಿನಕರ ಲಗುಬಗೆಯಿಂದ ಹೇಳಿದ್ದ. ‘ಅಮ್ಮ ರಂಗೋಲೆಯಿಕ್ಕಿ, ನೋಡಬೇಕು’. ಸೀತಮ್ಮನಿಗೆ ಅರ್ಥವಾಗದಿದ್ದರೂ ಗೊತ್ತಾದಂತೆ ಇತ್ತು. ‘ನಿನಿಗೆ ಇಷ್ಟವಲ್ಲವ? ಕೂತುಕೋ. ನಿನಿಗೆ ಹರಿದ್ವಾರದಲ್ಲಿ ಇಷ್ಟವಾದ್ದನ್ನೇ ಬಿಡಿಸುತ್ತೇನೆ. ಕಾಫಿ ಕುಡುಯುತ್ತಾ ನೋಡುವಿಯಂತೆ. ಶಾಸ್ತಿಗಳೇ ನೀವು ಒಳಗೆ ಹೋಗಿ ಸ್ನಾನ ಮಾಡಿ. ಬೇಕಾದರೆ ಬಿಸಿ ನೀರು ಕಾಯಿಸಿದ್ದಿದೆ’ ಎಂದು ತನ್ನಷ್ಟಕ್ಕೆ ನಗುತ್ತ ರಂಗೋಲೆಯಿಕ್ಕಲು ಕೂತರು ಸೀತಮ್ಮ. ಶಾಸ್ತಿಗಳು ತಮ್ಮ ಹಿಂದುಸ್ತಾನಿಯಲ್ಲಿ ಭಾಷಾಂತರಿಸಿ ಸ್ನಾನದ ಮನೆಗೆ ಹೋಗಿದ್ದರು. ಹೆಬ್ಬೆರೆಳಿಂದಲೂ ತೋರು ಬೆರೆಳಿಂದಲೂ ರಂಗೊಲೆ ಪುಡಿಯನ್ನು ಹಿಡುದು, ಅದನ್ನು ಬೆರೆಳಿನಲ್ಲಿ ತಿಕ್ಕುತ್ತ ಬಿಗಿಮಾಡಿ, ರೇಖೇಗೆ ಅಗತ್ಯವಾದಷ್ಟು ಅದನ್ನು ಸರಿಸುತ್ತ, ಕ್ಷಣಾರ್ಧದಲ್ಲಿ ಸಾರಿಸಿದ ಅಂಗಳದ ನಡುವಿನಲ್ಲೆಂದರೆ ನಡುವಿನಲ್ಲಿ, ಎರಡು ತ್ರಿಕೋಣಗಳನ್ನು ಒಂದರೊಳಗೊಂದು ಮೂಡಿಸಿದ್ದರು. ಒಂದರಲ್ಲಿ ದೇವರ ಕೃಪೆ ಮೇಲಿನಿಂದ ಭೂಮಿಗಿಳಿದರೆ, ಇನ್ನೊಂದರಲ್ಲಿ ಜೀವಾತ್ಮನ ಆಕಾಂಕ್ಷೆ ಕೆಳಗಿನಿಂದ ಮೇಲೇರುತ್ತಿತ್ತು. ಎರಡೂ ಸೀತಮ್ಮನ ನಿರ್ದೋಷದ ನೋಟದಿಂದಾಗಿ ಒಂದಕ್ಕೊಂದು ಸಮನಾಗಿ ಸಂಧಿಸಿತ್ತು. ತಾನು ರುಚಿಕರವಾದ ಬಿಸಿಯಾದ ಕಾಫಿಯನ್ನು ಬೆಳ್ಳಿಯ ಬಟ್ಟಲಿನಲ್ಲಿ ಇಪ್ಪತೈದು ವರ್ಷಗಳ ಹಿಂದಿನಂತೆಯೇ ಚೂರು ಚೂರೇ ಕುಡಿಯುತ್ತ ಸೀತಮ್ಮನ ಸೃಷ್ಟಿಯಲ್ಲಿ ಏಕಾಗ್ರನಾಗಿ ಬಿಟ್ಟಿದ್ದೆ. ಸಾವಿರಾರು ವರ್ಷಗಳಿಂದ ಸತತವಾಗಿ ದೇವಾಲಯಗಳ ಗೋಡೆಗಳ ಮೇಲೂ ಬಡವರ ಗುಡಿಸಲುಗಳ ಅಂಗಳದಲ್ಲೂ ಮೂಡುತ್ತಲೇ ಇದ್ದುದ್ದು ಈ ಪ್ರಾತಃಕಾಲವೂ ಸಗಣಿ ಹಾಕಿ ಸಾರಿಸಿದ ಅಂಗಳದಲ್ಲಿ ಮೂಡತೊಡಗಿತ್ತು. ಎಲ್ಲಿ ಬೇಕೋ ಅಲ್ಲಿ ಬಳ್ಳಿ, ಬಳ್ಳಿಗೆ ಎಲೆ, ಎಲೆ ಎಲೆಗೂ ಹೂವು, ರಕ್ಷೆಗೆಂದು ಅಲ್ಲಿ ಇಲ್ಲಿ ಮೂಲೆಯಲ್ಲಿ ಸ್ವಸ್ತಿಕ, ಮತ್ತೆ ನವಿಲುಗಳು-ಮತ್ತೆ ಅದೋ ಗಣೇಶ. ಅವನಿಗೋಂದು ಮೂಷಿಕ ಕೂಡ. ಇಲಿಯನ್ನು ಬಿಡಿಸುತ್ತ ಸೀತಮ್ಮ ಮುಗುಳ್ನಕ್ಕು ಹೇಳಿದ್ದರು: ‘ಸ್ವಲ್ಪ ಅಡ್ಡಂಬಡ್ಡವಾಗಿ ಬಿಟ್ಟಿತು. ಈಗ ನನ್ನ ಬೆರಳಿಗೆ ಶಕ್ತಿ ಸಾಲದು. ಕೈ ನಡುಗುತ್ತೆ. ನಾಳೆ ಇನ್ನೂ ಚೆನ್ನಾಗಿ ಬಿಡಿಸುವೆ, ಆಯಿತಾ ದಿನಕರ? ನಾಳೆ ಗಣೇಶ ನಡುವೆ ಬರುತ್ತಾನೆ. ಕೂತಿರುವುದಿಲ್ಲ ಕುಣಿಯುತ್ತಾನೆ’ ಎಂದು ತನ್ನಷ್ಟಕ್ಕ ಅಂದುಕೊಂಡರು. ದಿನಕರನಿಗೆ ಕನ್ನಡ ಅರಿಯದೆಂದು ಅವರಿಗೆ ಎಗ್ಗಿಲ್ಲ. +ಅಧ್ಯಾಯ ೪ +“ನಾಣಿ ಯಾವಾಗಲೂ ಏಳುವುದು ತಡ. ಅವನ ಮಗ ಗೋಪಲ ಮಾತ್ರ ಬೇಗ ಎದ್ದು ಬಿಡುತ್ತಾನೆ. ನಾವು ಹರಿದ್ವಾರಕ್ಕೆ ಬಂದಾಗ ಅವನು ಕೂಸು. ತಾಯಿಯನ್ನು ಕಳೆದುಕೊಂಡ ಕೂಸು. ಕೂಸನ್ನು ನೋಡಿಕೊಳ್ಳಲೆಂದು ಗಂಗೂಬಾಯಿ ಎಂಬ ಹುಡುಗಿ ನಮ್ಮ ಜೊತೆಗಿದ್ದಳು. ನಿನಗವಳು ನೆನಪಿರಬೇಕು. ಬಳೆ ತೊಡಿಸಿಕೊಳ್ಳೋದೂಂದರೆ ಅವಳಿಗೆ ಹುಚ್ಚು. ಕಂಡಲ್ಲಿ ಬಳೆ ತೊಡಿಸಿಕೊಳ್ಳಬೇಕು ಅವಳಿಗೆ. ನಿನಗೆ ನೆನಪಿರಲಿಕ್ಕ ಸಾಕು. ಅವಳಿಗೂ ಈಗ ಒಬ್ಬ ಮಗ ಇದ್ದಾನೆ. ಗೋಪಾಲನಿಗಿಂತ ಒಂದು ವರ್ಷ ಚಿಕ್ಕವನು. ಅವಳು ಶಾಲೆಗೆ ಹೋಗಿ ಕಲಿತು ಈಗ ಹೈಸ್ಕೂಲಿನಲ್ಲಿ ಮೇಡಂ. ಅವಳ ಮಗನ ಹೆಸರು ಪ್ರಸಾದ. ನಾಣಿಯೇ ಅವರಿನೋಂದು ಮನೆ ಕಟ್ಟಿಸಿಕೊಟ್ಟ. ಗಂಗೂಬಾಯಿಗೆ ಸೋದರಿಕ ಸಂಬಂಧ. ಅವಳ ಗಂಡನಿಗೆ ಏನೂ ತಿಳಿಯದು. ಹಸುವಿನಂಥ ಸಾಧುಪ್ರಾಣಿ. ಮನೇಲಿ ದನ ಸಾಕಿಕೊಂಡು ಹಾಲು ಕರೀತಾನೆ. ತಮಗಷ್ಟು ಇಷ್ಟುಕೊಂಡು ನಮಗಷ್ಟು ಕೊಟ್ಟು ಉಳಿದಿದ್ದನ್ನು ಮಾರತಾನೆ. ಆಯಿತ? ನನ್ನ ಮೊಮ್ಮಗನೋ ಈಚೆಗೆ ಬಹಳ ಹಾರಾಡಕ್ಕೆ ಶುರು ಮಾಡಿದಾನೆ. ನನ್ನ ಮಗ ಇಲ್ಲಿಯ ಮುನಿಸಿಪಾಲಿಟಿಯ ಫ್ರೆಸಿಡೆಂಟಾಗೆ ಭಾರೀ ಕಡಿದದ್ದು ಆಯಿತು. ಈಗ ಮೊಮ್ಮಗ ದೇಶೋದ್ದಾರದ ಕೆಲಸಕ್ಕೆ ಶುರು ಮಾಡಿದಾನೆ. ಅಪ್ಪನ ಜೊತೆ ಲಾಯರು ಅಂತ ನೆವಕ್ಕೆ ಬೋರ್ಡ್ ಹಾಕ್ಕೊಂಡಿದಾನೆ. ಆದರೆ ಅಪ್ಪನ ಮಾತು ಕೇಳ್ತಾನೋ? ಇವತ್ತು ಈ ಪಾರ್ಟಿಯಾದರೆ, ನಾಳೆ ಇನ್ನೊಂದು ಪಾರ್ಟಿ. ಬೆಳ್ಳಿಗ್ಗೆ ಎದ್ದು ಫೋನ್ ಮಾಡಕ್ಕೆ ಶುರು ಮಾಡ್ತಾನೆ-ಸುಬ್ಬಲಕ್ಷ್ಮಿ ಸ್ತೋತ್ರಾನ್ನ ಕೇಳಿಸಿಕೊಳ್ತಾ. ನೋಡ್ತಾ ಇರು: ನಿನ್ನ ಕಂಡದ್ದೇ ಹೇಗೆ ಹಾರಾಡ್ತಾನೆ ಅಂತ. ನಿನ್ನನ್ನ ಟೀವಿಯಲ್ಲಿ ನೋಡಿದಾಗಲೆಲ್ಲ ನಾವು ಮಾತಾಡಿಕೋತೀವೆ. ನಮ್ಮನ್ನು ಮರೆತುಬಿಟ್ಟಿರಬೇಕು ಅಂತ ನಾಣಿ ಹೇಳ್ತಾನೆ. ಆದರೆ ನಾನು ಹೇಳ್ತೀನೆ: ಅವನನ್ನು ಮತ್ತೆ ನೋಡದೆ ನಾನು ಸಾಯಲ್ಲ ಅಂತ. ‘ನೀನೇ ಬರೆಯೋ’ ಎಂದರೆ ನಾಣಿಗೆ ಸೋಮಾರಿತನ. ಎಷ್ಟು ವರ್ಷ ಬಿಟ್ಟಿತು, ಮರೆತಿರಬಹುದು. ಬಹಳ ದೊಡ್ಡ ಮನುಷ್ಯ ಆಗಿಬಿಟ್ಟಿದ್ದಾನೆ ಅಂತ ಮುಜುಗರ. ಆದೇನು ದೊಡ್ಡ ಮನುಷ್ಯನೋ ನೀನು?” ಎಂದು ಅಡಿಗೆ ಮನೆಯಲ್ಲಿ ಸ್ಟೂಲಿನ ಮೇಲೆ ಕೂತು ತನಗೆ ಏನೇನೂ ಅರ್ಥವಾಗದ ಸೀತಮ್ಮನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದಿನಕರನ ಕೆನ್ನೆ ಚಿವುಟಲು ಬಂದು ಸೀತಮ್ಮ, ತಾನು ಮಡಿಯಲ್ಲಿದ್ದೇನೆಂದು ನೆನಪಾಗಿ, ನಗುತ್ತಾ ಹಿಂದಕ್ಕೆ ಸರಿದು ಮತ್ತೆ ಒಲೆಯೆದುರು ಕೂತರು. ದಿನಕರನಿಗೆ ಕನ್ನಡ ಬರದೆಂಬುದನ್ನು ಸಂಪೂರ್ಣ ಮರೆತಂತೆ ಅವನ ಮೇಲೆ ಪ್ರೀತಿ ಸುರಿಯುವ ನೆಪದಲ್ಲಿ ಸೀತಮ್ಮ ಮಾತಾಡುತ್ತಲೇ ಹೋದರು, ಕಡುಬು ಬೇಯುವುದನ್ನು ಕಾಯುತ್ತ. ಸೀತಮ್ಮ ಕೂತೇ ಅಡಿಗೆ ಮಡುವುದು. ಅದೂ ಸೌದೆ ಉರಿಯ ಮೇಲೆ, ಅವರೇ ಮಣ್ಣು ಕಲೆಸಿಕಟ್ಟಿದ ಕೂಡಲೊಲೆಯ ಮೇಲೆ. ನಿತ್ಯ ಬೆಳ್ಳಿಗ್ಗೆ ಈ ಒಲೆಯನ್ನು ಶುಭ್ರಮಾಡಿ, ಕರಿ ಬೆರೆಸಿದ ಸಗಣಿಯಲ್ಲಿ ಸಾರಿಸಿ, ಅದರ ಮೇಲೂ ರಂಗೋಲೆ ಬಿಟ್ಟಿರಬೇಕು. ಅವರು ಕಟ್ಟಿಗೆ ಜೋಡಿಸಿದರೆ ಉರಿ ಹತ್ತಿಕೊಳ್ಳುವ ಹಾಗೆ ಬೇರೆಯವರು ಜೋಡಿಸಲಾರರು. ಉರಿ ಒಲೆಯಲ್ಲಿ ಹೆಚ್ಚಾಗಿ, ಇನ್ನೆರಡು ತೂತುಗಳಲ್ಲಿ ಸ್ವಲ್ಪ ಸ್ವಲ್ಪ ಕಡಿಮೆಯಾಗಿ, ಉರಿಯ ಪ್ರಮಾಣಕ್ಕೆ ಉಚಿತವಾದ ಮೇಲೋಗರಗಳನ್ನು ಬೇಯಿಸುತ್ತದೆ. ಸೀತಮ್ಮ ಒಲೆಯಲ್ಲಿ ಜೋಡಿಸಿದ ಕಟ್ಟಿಗೆಯನ್ನು ಅಲ್ಲಿ ಇಲ್ಲಿ ಚೂರು ಚೂರೇ ಒಳದಬ್ಬುತ್ತ, ಹೊರಗೆಳೆಯುತ್ತ, ಒಂದರ ಮೇಲೋಂದು ಒಡ್ಡಿಕೋಂಡು ಉರಿಯಲು ಸಹಕರಿಸುವಂತೆ ತುಸುವೇ ಹಂದಿಸುತ್ತ, ರಂಗೋಲೆಯಿಕ್ಕುವಾಗಿನಂತೆಯೇ ಏಕಾಗ್ರರಾಗುತ್ತರೆ. ದಿನಕರನಿಗೆ ಹರಿದ್ವಾರದಲ್ಲಿ ಅವರೊಡನೆ ಕಳೆದ ದಿನಗಳು ಅವರು ಒಲೆ ಉರಿಸುವ ಕೌಶಲ್ಯ ಕಂಡು ನೆನಪಾಗಿತ್ತು.ತ್ರಿಪಾಠಿಗಳ ಮನೆಯಲ್ಲೂ ಅವರು ತಕ್ಕುದಾದ ಮಣ್ಣು ತರಿಸಿಕೊಂಡು ಒಲೆಯನ್ನು ನಿರ್ಮಿಸಿ ಅಡಿಗೆ ಮಾಡುತ್ತಿದ್ದದ್ದು. ಹತ್ತು ದಿನಕ್ಕೆಂದು ಬಂದವರು ಒಂದು ತಿಂಗಳು ಇದ್ದರು. +‘ಏನೋ ಹೇಳ್ತ ಇದ್ದೆ’ ಎಂದು ಸೀತಮ್ಮ ಮತ್ತೆ ದಿನಕರನ ಜೊತೆ ಮಾತಿಗೆ ಪ್ರಾರಂಭಿಸಿದ್ದರು. “ನಿನ್ನ ಕತ್ತಿನ ತಾಯಿತ ನೋಡಿದ್ದೆ ನೀನು ಯಾರೆಂದು ಗೊತ್ತಾಗಿ ಬಿಟ್ಟಿತು. ನಾಣಿಗೂ ನಿನ್ನ ಈ ವೇಷದಲ್ಲಿ ಗೊತ್ತಾಗತ್ತ ನೋಡಬೇಕು. ಗಂಗೂಗು ಗೋತ್ತಾಗತ್ತಾ ನೋಡಬೇಕು. ಟೀವಿಯಲ್ಲಿ ನಿನ್ನ ನೋಡಿದವರು ಯಾಕೆ ಮರೀತಾರೆ? ನಿನ್ನ ಕಣ್ಣನ್ನ ಯಾಕೆ ಮರೀತಾರೆ? ನೀನು ಹೀಗೆ ವ್ರತ ಹಿಡೀದೇ ಇದ್ದಿದ್ದರೆ ನಿನಗೆ ದೃಷ್ಟಿ ಸುಳಿದು ಹಾಕ್ತಾ ಇದ್ದೆ.” ಸೀತಮ್ಮ ಅಡಿಗೆ ಮನೆ ಬಾಗಿಲಲ್ಲಿ ಶಾಸ್ತಿಗಳು ತನ್ನ ಮಾತು ಕೇಳಿಸಿಕೊಳ್ಳುತ್ತ ನಿಂತುದನ್ನು ನೋಡಿದರು: “ನನ್ನ ಹುಚ್ಚು ಕಂಡುಬಿಟ್ಟಿರಾ ಶಾಸ್ತಿಗಳೆ. ಈ ಮಾಣಿಗೆ ಕನ್ನಡ ಬರಲ್ಲಾ ಅನ್ನೋದನ್ನ ಮರತೇಬಿಟ್ಟು ಹೇಗೆ ಬಡಬಡಿಸ್ತ ಇದೀನಿ ನೋಡಿ. ಇದು ಪರದೇಶಿ ಮಾಣಿ ಅಂತ ನನ್ನ ಕರಳು ಚುಂಯ್ ಎಂದು ಬಿಟ್ಟಿತು ನೋಡಿ: ತ್ರಿಪಾಠಿಗಳ ಮನೇಲಿ ಬೇಳಿತಿದ್ದ ಇದನ್ನು ಕಂಡು. ಅವರು ಪಾಪ ದೊಡ್ಡವರು – ಇವನನ್ನು ಬಿಟ್ಟು ಹಾಕಲಿಲ್ಲ. ಕೂಸಿಗೆ ಐದು ವರ್ಷ : ಅದರ ತಾಯಿ ಅವರ ಮನೇಲಿ ಪರದೇಶಿ ಹಾಗೆ ಬಂದಿಳಿದಗ. ಒಂದು ಟ್ರಂಕು, ಕೈಚೀಲದಲ್ಲಿ ಒಂದಷ್ಟು ಬಟ್ಟೆ ಇಟ್ಟುಕೊಂಡು ಸೀದಾ ಇದರ ಅಮ್ಮ ತ್ರಿಪಾಠಿಗಳ ಮನೆಗೆ ಬಂದದ್ದಂತೆ. ಅವರಿಗೆ ಇವನ ತಾಯಿ ದಕ್ಷಿಣ ದೇಶದವಳು ಅಂತ ಮಾತ್ರ ಗೊತ್ತು. ತ್ರಿಪಾಠಿಗಳು ದೊಡ್ಡ ಮನಸ್ಸಿನವರು. ಅವಳಿದ್ದ ಪಾಡು ನೋಡಿ ಯಾರು ನೀನು? ಏನು? ಎತ್ತ? ಯಾವುದೂ ಕೇಳಲಿಲ್ಲ. ಅಡಿಗೆ ಮಾಡಿಕೊಂಡು ಇರೋದಿಕ್ಕೆ ಜಾಗ ಕೊಟ್ಟರು. ಬೇಕಾದ ಸಾಮಾನು ಸರಂಜಾಮು ಒದಗಿಸಿದರು. ಹಣೆಯಲ್ಲಿ ಕುಂಕುಮವಿದ್ದದ್ದು ಕಂಡು ‘ನಿನ್ನ ಗಂಡನ್ನ ಹುಡುಕಿಕೊಂಡು ಬರಲ?’ ಅಂತ ಒಂದು ಸಾರಿ ಮಾತ್ರ ಕೇಳಿದ್ದರಂತೆ. ಅವಳಿಗೆ ಅಷ್ಟಿಷ್ಟು ಹರಕು ಮುರಕು ಹಿಂದಿ ಗೊತ್ತಿತ್ತಂತೆ. ಅವಳು ಏನೂ ಉತ್ತರ ಕೊಡದೆ ಕಣ್ಣು ತುಂಬ ನೀರು ತುಂಬಿಕೊಂಡು ನಿಂತದ್ದು ಕಂಡು ಮತ್ತೆ ತ್ರಿಪಾಠಿಗಳು ಆ ಪ್ರಶ್ನೆ ಕೇಳಲೇ ಇಲ್ಲವಂತೆ. ಏನೂ ಕೇಳಕೂಡದು ಅಂತ ಮನೆ ಹೆಂಗಸರನ್ನು ಗದರಿಸಿ ಇಟ್ಟಿದ್ದರಂತೆ. ಒಂದು ಹೆಂಗಸಿಗೆ ಇನ್ನೊಂದು ಹೆಂಗಸೂಂದರೆ ಕುತೂಹಲ ಅಲ್ಲವ?” ಶಾಸ್ತಿಗಳು ಬಿಳುಚಿಕೊಂಡದ್ದು ನೋಡಿದ ಸೀತಮ್ಮ, ‘ಯಾಕೆ ಹುಷಾರಿಲ್ವ? ರಾತ್ರೆ ನಿದ್ದೆ ಬರಲಿಲ್ಲವ?’ ಎಂದು ಅಡಿಗೆ ಮನೆಯಲ್ಲಿ ಒಂದು ಮಣೆ ಹಾಕಿ ಕೂರಿಸಿದರು. “ಸುಮಾರು ಹೀಗೆ ಐದಾರು ತಿಂಗಳು ಕಳಿತಂತೆ. ಒಂದು ದಿನ ಬೆಳಗಿನ ಜಾವ ಇವನ ತಾಯಿ ಎದ್ದವಳು ಸೀದ ತ್ರಿಪಾಠಿಗಳಿದ್ದಲ್ಲಿಗೆ ಹೋದಳಂತೆ. ಅವರು ಆಗ ತಮ್ಮ ಪೂಜೆಯ ಮನೆಯಲ್ಲಿ ಕೂತು ಧ್ಯಾನ ಮಾಡ್ತ ಇದ್ದರು. ಇವರ ಅಮ್ಮ ನೋಡೋಕೆ ತುಂಬ ಲಕ್ಷಣವಂತೆ. ಇವನದೇ ಕಣ್ಣಂತೆ. ಈ ತಾಯಿತದ ಜೊತೆ ಮಂಗಳಸೂತ್ರ ಅವಳ ಕೊರಳಲ್ಲಿ ಇತ್ತಂತೆ. ಇದನ್ನೆಲ್ಲ ತ್ರಿಪಾಠಿಗಳೇ ನನಗೆ ಹೇಳಿದ್ದು. ಆಯಿತ? ಏನೋ ಹೇಳಲಿಕ್ಕೆ ಹೋಗಿ ಇನ್ನೇನೋ ಹೇಳ್ತಾ ಇದೀನಿ. ತ್ರಿಪಾಠಿಗಳಿಗೆ ಇವನ ತಾಯಿ ನಮಸ್ಕಾರ ಮಾಡಿ, ಅವರ ಎದರು ತನ್ನ ಟ್ರಂಕನ್ನು ಇಟ್ಟು, ಅದರ ಮುಚ್ಚಳ ತೆಗೆದಳಂತೆ. ತ್ರಿಪಾಠಿಗಳಿಗೆ ತಮ್ಮ ಕಣ್ಣನ್ನು ನಂಬಲಿಕ್ಕೆ ಆಗಲಿಲ್ಲ. ಅದರಲ್ಲಿ ಎರಡು, ಮೂರು ಮಣದಷ್ಟಾದರೂ ಬಂಗಾರ. ಕತ್ತಿನ ಸರ, ಬುಗುಡಿ, ಬೆಂಡೋಲೆ, ಬಳೆ, ಬಂಗಾರದ ಪಟ್ಟಿ ಮಾತ್ರವಲ್ಲ, ಮುರಸದ ಬಂಗಾರದ ಗಟ್ಟಿಗಳು – – ನನಗೂ ಈ ಟ್ರಂಕನ್ನು ಬಿಚ್ಚಿ ತ್ರಿಪಾಠಿಗಳೇ ತೋರಿಸಿದ್ದು. ಈ ಟ್ರಂಕಿನ ಮೇಲೆ ಸರ್ಪಗಾವಲು ತ್ರಿಪಾಠಿಗಳದ್ದು. “ನನ್ನ ಮಗನನ್ನು ನಿಮ್ಮ ಮೊಮ್ಮಗ ಅಂತ ತಿಳಕೊಳ್ಳಿ. ನನ್ನನ್ನು ನಿಮ್ಮ ಮಗಳು ಅಂತ ತಿಳಕೊಳ್ಳಿ” ಎಂದು ಇವನ ತಾಯಿ ದೇವರಿಗೂ, ತ್ರಿಪಾಠಿಗಳಿಗೂ ನಮಸ್ಕಾರ ಮಾಡಿದಳಂತೆ. ತ್ರಿಪಾಠಿಗಳು ಅವಳ ತಲೆ ಮುಟ್ಟಿ ಆಶೀರ್ವದಿಸಿ, ಪೆಟ್ಟಿಗೆಯನ್ನು ತಮ್ಮ ತಿಜೋರಿಯಲ್ಲಿಟ್ಟು ಬಂದರಂತೆ. ಆ ಬಂಗಾರವನ್ನು ನೋಡಲಿಕ್ಕೆ ಎರಡು ಕಣ್ಣು ಸಾಲದ್ಶ್ಠು. ವಿಜಯನಗರದ ಕಾಲದ ಆಭರಣಗಳು ಮೇಲೆ, ಕೆಳಗೆ ಬಂಗಾರದ ಇಡಿ ಇಡೀ ಗಟ್ಟಿಗಳು. ಇದಾದ ಮೇಲೆ ಒಂದು ತಿಂಗಳು ಎಲ್ಲ ಸುಸೂತ್ರವಾಗಿ ಕಳೀತು. ತ್ರಿಪಾಠಿಗಳು ದಿನಕರನನ್ನು ಮನೇ ಮಗು ಅಂತಲೇ ಹಚ್ಚಿ ಕೊಂಡರು. ತಮ್ಮ ಮನೇಲೇ ಇಟ್ಟುಕೊಂಡರು. ತನ್ನ ಖರ್ಚಿನಲ್ಲೇ ಓದಿಸಿದರು. ಆ ಬಂಗಾರವನ್ನು ಮುಟ್ಟಲಿಲ್ಲ. ಅದೊಂದು ದೊಡ್ಡ ಕಥೆ ಎನ್ನಿ. ಒಂದು ದಿನ ಬೆಳಿಗ್ಗೆ ಗಂಗಾಸ್ನಾನಕ್ಕೆ ಅಂತ ಹೋದ ಇವನ ತಾಯಿ ಹಿಂದಕ್ಕೆ ಬರಲಿಲ್ಲ. ಎಲ್ಲೋ ದೂರದಲ್ಲಿ ಅವಳ ಹೆಣ ಸಿಕ್ಕಿತು. ಕಾಲು ಜಾರಿ ತೇಲಿ ಹೋಗಿರಬಹುದು ಅಂತಲೂ ಅಂತಾರೆ. ಆದರೆ ತ್ರಿಪಾಠಿಗಳ ಮನೆ ಮಂದಿಗೆಲ್ಲ ಆಶ್ಚರ್ಯ ಎಂದರೆ ಅವಳು ಗಂಗಾಸ್ನಾನಕ್ಕೆ ಹೋಗೋಕೆ ಮುಂಚೆ ತನ್ನ ಕತ್ತಿನಲ್ಲಿದ್ದ ತಾಯಿತವನ್ನು ಮಗನ ಕೊರಳಿಗೆ ಯಾಕೆ ಹಾಕಿದಳು? ಯಾಕೆ ಮಗನ್ನ ಅಷ್ಟು ಬೇಗ ಎಬ್ಬಿಸಿ ಹಾಲನ್ನು ಕಾಯಿಸಿ ಕುಡಿಸಿದಳು?” ಸೀತಮ್ಮ ಅಳಲು ಪ್ರಾರಂಭಿಸಿದ್ದರು. ದಿನಕರ ಮಾತಾಡದೆ ಕೇಳಿಸಿಕೊಳ್ಳುತ್ತ ಅವರು ಏನು ಹೇಳುತ್ತಿದ್ದಾರೆಂದು ಊಹಿಸಿದ್ದ. ಶಾಸ್ತಿಗಳು ಕಣ್ಣುಮುಚ್ಚಿ ಕೂತು ಜಪದ ಸರ ಎಣಿಸುತ್ತಿದ್ದರು. “ನಾನು ತಾಯಿತ ನೋಡಿದ್ದೇ ಇದರೊಳಗೆ ಶ್ರೀಚಕ್ರ ಇದೆ. ಇದು ನಮ್ಮ ಕಡೇದು ಎಂದುಬಿಟ್ಟೆ. ಯಾರ ಮನೆಯ ಮಾಣಿಯೋ? ಇದರ ಅಪ್ಪ ಯಾರೊ? ಯಾಕೆ ಇವನ ತಾಯಿ ಹಸುಗೂಸು ಕಟ್ಟಿಕೊಂಡು ಮನೆ ಬಿಡಬೇಕಾಯಿತೋ? ಪುರಾಣ ಹೇಳ್ತೀರಲ್ಲ ಶಾಸ್ತಿಗಳೇ, ವೇದವ್ಯಾಸರು ಮಾತ್ರ ಇವನ ಕಥೆ ಬರೆದಾರು. ಇಡೀ ದೇಶವೆಲ್ಲಾ ಈ ಮಾಣಿಯನ್ನು ಭಾರಿ ತಿಳುವಳಿಕಸ್ತ ಅಂತ ಗೌರವಿಸುತ್ತದೆ. ಆದರೆ ಈ ಮಾಣಿಗೆ ತನ್ನ ತಾಯಿ ಯಾರು ತಿಳಿಯಡು. ತಂದೆ ಯಾರು ತಿಳಿಯದು. ತನ್ನ ಊರು ಯಾವುದು ತಿಳಿಯದು. ಅದಕ್ಕೇ ದೇವರನ್ನೆ ತಾಯಿ, ತಂದೆ ಅಂತ ತಿಳೀಲಿಕ್ಕೆ ಏನೋ ಈ ವೇಷದಲ್ಲಿ ಅಲೀತಿದೆ.” ಶಾಸ್ತಿಗಳನ್ನು ನೋಡಿ ಸೀತಮ್ಮ ಗಾಬರಿಯಾಗಿ, “ಯಾಕೆ?” ಎಂದು ಅವರಿಗೆ ಕುಡಿಯಲು ನೀರು ಕೊಟ್ಟರು. +ಅಧ್ಯಾಯ ೫ +ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ತನ್ನ ತಲೆಯಲ್ಲಿ ಎರಡು ಜೊತೆ ಕೆಂಗಣ್ಣುಗಳು ಕೆಕ್ಕರಿಸುತ್ತ ಒಂದನ್ನೊಂದು ದಿಟ್ಟಿಸುತ್ತಿದ್ದಾವೆ ಎಂದು ಶಾಸ್ತಿಗಳಿಗೆ ಎನ್ನಿಸಿತ್ತು. ತನ್ನ ಎರಡನೇ ಹೆಂಡತಿ ಮಹಾದೇವಿ ಮೌನವಾಗಿ ಹೀಗೆ ತನ್ನನ್ನು ದ್ವೇಷದಲ್ಲಿ ನೋಡುವುದಿದೆ. ತಾನೂ ಹಾಗೆ ಅವಳನ್ನು ನೋಡುವುದಿದೆ. +ಮುಂದುವರೆಯುವುದು +“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್ +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_2.txt b/Kannada Sahitya/article_2.txt new file mode 100644 index 0000000000000000000000000000000000000000..4cd8fcef8e743fc868689024343e7c5e729bacf2 --- /dev/null +++ b/Kannada Sahitya/article_2.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ ದಿನಗಳಿಂದ ಹಂಬಲಿಸಿದ್ದೆ. ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಲು ಸಮಯ ಒದಗಿಬಂದಿರಲಿಲ್ಲ. ಅಪರೂಪಕ್ಕೊಮ್ಮೆ ಒಳ್ಳೆಯ ಚಿತ್ರಗಳನ್ನು ಪ್ರಸಾರ ಮಾಡುವ ಜನಪ್ರಿಯ ವಾಹಿನಿಯೊಂದರಲ್ಲಿ ಈ ಚಿತ್ರದ ಪ್ರಿಮಿಯರ್ ಇದೆಯೆಂದು ತಿಳಿದಾಗ, ನಾನದನ್ನು ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. +ಚಿತ್ರದ ಮೊದಲ ದೃಶ್ಯದಲ್ಲಿ ನಾವು ಕಾಣುವುದು ಜಲರಾಶಿಯನ್ನು. ಇದರ ನಡುವೆ ಹುಟ್ಟುಹಾಕುತ್ತ, ನಾಯಕಿ ದೋಣಿಯಲ್ಲಿ ಸಾಗಿಬರುವುದು ಮುಂದಿನ ದೃಶ್ಯ. ಚಿತ್ರದ ಒಟ್ಟೂ ಆಶಯಕ್ಕೆ ಈ ದೃಶ್ಯ ಮೆಟಾಫರ್ನಂತಿದೆ. ಸ್ತ್ರೀವಾದಿ ನಿಲುವನ್ನು ಮುಂದು ಮಾಡುವುದನ್ನು ನಿರ್‍ದೇಶಕರು ಇಲ್ಲಿಂದಲೇ ಪ್ರಾರಂಭಿಸುತ್ತಾರೆ. ಮುಂದೆ ಚಿತ್ರದಲ್ಲಿ ಬರುವ ಕೆಲವು ಘಟನಾವಳಿಗಳು ಈ ಮೂಲ ಆಶಯದಿಂದ ಹಿಂದೆ ಸರಿದಿರುವಂತೆ ಕಂಡು ಬಂದರೂ ಚಿತ್ರದಲ್ಲಿ ಸ್ತ್ರೀವಾದಿ ನಿಲುವೇ ಅಂತಿಮ. +“ದ್ವೀಪ”ದ ಕಥೆ ಮುಖ್ಯವಾಗಿ, ಒಂದು ಗ್ರಾಮೀಣ ಸಮುದಾಯದ ಮೇಲೆ ಆಧುನಿಕತೆಯ ಬಳುವಳಿಯಾಗಿ ಬಂದ ಯೋಜನೆಯೊಂದು ನೀಡುವ ಹೊಡೆತದ ಬಗ್ಗೆಯೇ ಆಗಿದ್ದರೂ ಸಹ, ನಿರ್‍ದೇಶಕರು, ಕಥೆಯಲ್ಲಿ ಬರುವ ಪ್ರತಿಭಟನೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನಿರೂಪಿಸಿದ್ದಾರೆ. ಇದಕ್ಕೆ ಕಾರಣ ನಿಚ್ಚಳ. “ಕಾನೂರು ಹೆಗ್ಗಡಿತಿ”ಯಲ್ಲಿ ನಿರ್‍ದೇಶಕ ಗಿರೀಶ್ ಕಾರ್‍ನಾಡರೇ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರಿಂದ, ಆ ಚಿತ್ರದ ಮೇಲಾದ ಪರಿಣಾಮವೇ “ದ್ವೀಪ”ದಲ್ಲಿ ಪುನರಾವರ್‍ತನೆಗೊಂಡಿದೆ. “ದ್ವೀಪ” ಚಿತ್ರದ ನಿರ್‍ಮಾಪಕಿ ಚಿತ್ರದ ನಾಯಕಿಯೂ ಹೌದು. ಇದರಿಂದಾಗಿ ಕಾಸರವಳ್ಳಿಯವರಿಗೆ “ದ್ವೀಪ”ವನ್ನು ಸ್ತ್ರೀವಾದಿ ನೆಲೆಯಲ್ಲಿ ನಿರೂಪಿಸುವುದು ಅನಿವಾರ್‍ಯವಾಗಿದ್ದಿರಬಹುದು. +ನಾನು ಈ ಮೊದಲು ಹೇಳಿ ದಂತೆ, ಚಿತ್ರದ ನಡುವೆ ಕೆಲವೆಡೆ ಈ ಮೂಲ ಆಶಯದಿಂದ ಸ್ವಲ್ಪ ಹಿಂದೆ ಸರಿದಂತೆ ಕೆಲವು ಘಟನಾವಳಿಗಳಿವೆ. ದುಗ್ಗಜ್ಜನ ಪಾತ್ರ ಇದರಲ್ಲಿ ಮುಖ್ಯವಾದದ್ದು. ಮತ್ತೊಂದು ಸ್ವತಂತ್ರ ಚಿತ್ರವೇ ಆಗಬಲ್ಲ ಸಾಮರ್‍ಥ್ಯ ಈ ಪಾತ್ರದ ಕಥೆಯಲ್ಲಿದೆ. ಆದರೆ ದುಗ್ಗಜ್ಜನ ಸಾವಿನೊಂದಿಗೆ ಈ (ಸಬ್)ಕಥೆಯನ್ನು ಅನ್‌ಸೆರೆಮೋನಿಯಸ್ಸಾಗಿ ಎಂಡ್ ಮಾಡಲಾಗಿದೆ. +ಇನ್ನು ಗಣಪನ ಪಾತ್ರವನ್ನು ಗಮನಿಸಿದಾಗ, ಸ್ತ್ರೀವಾದಿ ನಿಲುವಿಗೆ ಪೂರಕವಾಗಿ ನಿರೂಪಿಸಲ್ಪಟ್ಟಿರುವುದು ಕಂಡು ಬರುತ್ತದೆ. ಚಿತ್ರಕ್ಕೆ ಬೇರೊಂದು ಆಯಾಮವನ್ನೇ ಈ ಪಾತ್ರ ನೀಡುತ್ತದೆ. “ಅಪ್ಪ ಹಾಕಿದ ಅಲದ ಮರಕ್ಕೆ ನೇಣು ಹಾಕಿಕೊಳ್ಳಬಯಸುವ ಸಮಾಜದ ಒಂದು ವರ್‍ಗವನ್ನು ಈ ಪಾತ್ರ ಪ್ರತಿನಿಧಿಸುತ್ತದೆ. ಹೀಗಿದ್ದಾಗ್ಯೂ ಚಿತ್ರದಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಕೆಲಸವೇನು ಇಲ್ಲ. +ಮತ್ತೊಂದು ಪಾತ್ರ ಕೃಷ್ಣನದ್ದು. ನಾಗಿಗೆ ಹೊರ ಜಗತ್ತಿನೊಂದಿಗೆ ಸಂಪರ್‍ಕ ಕೊಂಡಿ ಈತ. ನಾಗಿ ಪಟ್ಟಣದಲ್ಲಿ ಬೆಳೆದ ಹೆಣ್ಣು ಮಗಳು. ಸಹಜವಾಗಿಯೇ ಆಕೆಯ ಆಸೆಗಳು ಅಲ್ಲಿನ ಪರಿಸರದಿಂದ ಪ್ರೇರಿತವಾದುವು. ಇಲ್ಲಿ ಪಟ್ಟಣ ಆಧುನಿಕತೆಯ ಪ್ರತೀಕ. ನಾಗಿಯ ಛಲ, ಹಿಡಿದದ್ದನ್ನು ಸಾಧಿಸಬೇಕೆಂಬ ಗುಣಗಳು, ಪಟ್ಟಣದ ಪರಿಸರದಿಂದ ಬಂದವುಗಳು. ತನ್ಮೂಲಕ ಈ ಗುಣಗಳು ಆಧುನಿಕತೆಯ ಪ್ರತೀಕವೇ ಆಗಿವೆ. ನಾಗಿಯ ಟ್ರಯಂಫ್ನಿಂದಾಗಿ, ಆಧುನಿಕ ಜಗತ್ತು ಹುಟ್ಟಿಹಾಕುವ ಸಮಸ್ಯೆಗಳಿಗೆ, ಪರಂಪರೆಯಲ್ಲಲ್ಲ, ಆಧುನಿಕತೆಯಲ್ಲೇ ಉತ್ತರವಿದೆ, ಎಂಬುದೂ ಧ್ವನಿತವಾದಂತೆ ತೋರುತ್ತದೆ. ಕೃಷ್ಣನೊಟ್ಟಿಗಿನ ಆಕೆಯ ವರ್‍ತನೆಯೂ ಆಧುನಿಕತೆಯ ಪಡಿ ಅಚ್ಚಿನಂತೆ. ಅದಕ್ಕೆ ಗಣಪನು ತೋರುವ ಪ್ರತಿಕ್ರಿಯೆ, ಪರಂಪರೆಗೆ ಅನುಗುಣವಾದದ್ದು. ಈ ರೀತಿಯ ಪ್ರತಿಕ್ರಿಯೆಯಿಂದ ಗಣಪ ಪರಂಪರೆಗೆ ನಿಷ್ಟವಾಗಿರುವ ತನ್ನ ಗುಣವನ್ನು ನಿರೂಪಿಸುತ್ತಾನೆ. ಹೀಗಾಗಿ ನನ್ನ ಅಭಿಪ್ರಾಯದಲ್ಲಿ, ಚಿತ್ರದಲ್ಲಿನ ನಾಗಿಯ ಗೆಲುವಿನಲ್ಲಿ ಆಧುನಿಕತೆಯ ಗೆಲುವಿದೆ. +ಚಿತ್ರದಲ್ಲಿನ ಮತ್ತೊಂದು ಆಭಾಸವೆಂದು ನನಗೆ ತೋರಿದ್ದು, ಸಮುದಾಯದ ಹೋರಾಟವನ್ನು ವ್ಯಕ್ತಿ ನಿರ್‍ದಿಷ್ಟ ಹೋರಾಟವನ್ನಾಗಿಸಿ, ನಾಯಕಿಯ ಪಾತ್ರದ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಹೊರೆ ಹೇರಿರುವುದು. ಇದೇ ನೆಲೆಯಲ್ಲಿ “ವಾನಪ್ರಸ್ಥಂ” ಚಿತ್ರದಲ್ಲಿನ ನಾಯಕನ ಪಾತ್ರವನ್ನು ಗಮನಿಸಿದಾಗ, ಮೇಲೆ ಹೇಳಿದಂಥಹ ಯಾವುದೇ ಹೊರೆಯಿಲ್ಲದ ಪಾತ್ರ ಹೇಗೆ ಚಿತ್ರವನ್ನು ಎತ್ತಿಹಿಡಿಯಬಲ್ಲುದು ಎಂಬುದನ್ನು ನೋಡಬಹುದು. ಅಲ್ಲಿ ಚಿತ್ರವೆಲ್ಲ ನಾಯಕ ಕೇಂದ್ರಿತ. ನಾಯಕನಲ್ಲದೆ ಬೇರ್ಯಾವ ವಿಚಾರವು ಅಲ್ಲಿ ಫೋಕಸ್‌ನ ವಿಷಯವಲ್ಲ. +ಚಿತ್ರದಲ್ಲಿ ಇಬ್ಬರು ಪಾತ್ರಧಾರಿಗಳು “ಔಟ್ ಆಫ್ ಪ್ಲೇಸ್” ಎನಿಸಿದರು. ನಾಗಿಯ ತಂದೆ, ತಾಯಿ ಮಲೆನಾಡಿಗರಂತೆ ಕಾಣುವುದೇ ಇಲ್ಲ. +ಮತ್ತೆ ಚಿತ್ರದಲ್ಲಿನ ಭಾಷೆ, ಸಂಗೀತದಂತೆ ಮುದನೀಡುತ್ತದೆ. ಕನ್ನಡ ಭಾಷೆಯ ಸೌಂದರ್‍ಯ ಇಲ್ಲಿ ಸಾಕಾರಗೊಂಡಿದೆ. “ಕಾನೂರು ಹೆಗ್ಗಡಿತಿ” ಅಪ್ಪಟ ಮಲೆನಾಡಿನ ಕಥೆಯಾದರೂ, ಅದರಲ್ಲಿ ಭಾಷಾಪ್ರಯೋಗದ ವಿಶಿಷ್ಟತೆಗೆ ಒತ್ತು ನೀಡಲಾಗಿರಲಿಲ್ಲ. +ಒಟ್ಟಿನಲ್ಲಿ “ದೀಪ” ಸ್ತ್ರೀವಾದಿ ಚಿತ್ರವೆನಿಸಿ, ದೃಶ್ಯಕಾವ್ಯವಾಗುವಲ್ಲಿ ಎಡವಿದ್ದರೂ ಸಹ ವಿಚಾರವಂತಿಕೆಗೆ ಸಾಕಷ್ಟು ಇಂಬುಕೊಡುತ್ತದೆ. +***** +’ದ್ವೀಪದ ಬಗೆಗೆ ಇತರ ಲೇಖನಗಳು/ವಿಮರ್ಶೆ +‘ದ್ವೀಪ’ ಸಿನಿಮಾ – ಒಂದು ಟಿಪ್ಪಣಿ – ಜಿ ವಿ ಶಿವಕುಮಾರ್ +“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” : ಬೇಂದ್ರೆ – ಯಶಸ್ವಿನಿ ಹೆಗಡೆ +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […] +ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ […] +ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_20.txt b/Kannada Sahitya/article_20.txt new file mode 100644 index 0000000000000000000000000000000000000000..cd788b45ab943d3b457636149e2a3da57257ac94 --- /dev/null +++ b/Kannada Sahitya/article_20.txt @@ -0,0 +1,156 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ ತೋರಿಸುವುದು ಹ್ಯಾಗೆ? ಮಿದುವಾದ ಉಪಾಯಗಳಿಂದ ಪ್ರಯೋಜನವಿಲ್ಲ ಅನ್ನಿಸಿತು. ಇಷ್ಟಕ್ಕೂ ಕಾರಣ ಈ ರಂಡೆ. ಇವಳನ್ನು ಗುಡಿಸಲಲ್ಲಿ ಚಚ್ಚಿಹಾಕಿ ಬೆಂಕಿ ಹಚ್ಚಬೇಕೆಂದುಕೊಂಡ. ನರಿಬುದ್ಧಿಯಲ್ಲಿ ಗೌಡನನ್ನು ಮೀರಿಸುವುದು, ಎದುರಿಸುವುದೂ ಸಾಧ್ಯವಿಲ್ಲ. ಈಗುಳಿದದ್ದು ಒಂದೇ ಉಪಾಯವೆಂದುಕೊಂಡ; ಎಕ್ ಮಾರ್ ದೋ ತುಕಡಾ! +ಕಬ್ಬಿಣ ಸರಿಯಾಗಿ ಕಾಯಲೆಂದು ಕಾಯುವ ಕಮ್ಮಾರನಂತೆ ಈ ತನಕ ಸುಮ್ಮನಿದ್ದ ಬಸವರಾಜು ಈಗ ಏಟು ಹಾಕಿದ. ಅವನ ಮಾತೇ ಮಾತು. ‘ಹ್ಯಾಂಗ್ರೀ’ ಅಂದ. ‘ಹೀಂಗ್ರೀ’ ಅಂದ. ಸುಂದರಿ ಕಟ್ಟಿಕೊಂಡ ಹೆಂಡತಿಯಲ್ಲ! ಅಂದ. ‘ಸೂಳೆ’ ಅಂದ. ಸೂಳೆಗೆಲ್ಲಿಯ ನಿಷ್ಠೆ? ಅದು ದೊಡ್ಡದಲ್ಲ; ಗೌಡ ನಿಮ್ಮ ಸೂಳೆಗೆ ಕೈಹಾಕಿದರೆ ನೀವು ಅವನ ಸೂಳೆ ದುರ್ಗಿಗೆ ಕೈಹಾಕಿದರಾಯ್ತು. ಲೆಕ್ಕ ಬಡ್ಡಿಗೆ ಬಡ್ಡಿ ಚುಕ್ತಾ ಆದಂತೇ. ಆದರೆ ಇಂದಿನಂಥಾ ಲಾಭ ನಿಮಗೆ ಹಿಂದೆ ಆಗಿಲ್ಲ; ಮುಂದೆ ಆಗೋದು ಸಾಧ್ಯವಿಲ್ಲ. ಗೌಡ ಸುಂದರಿಗೆ ಕೈಹಾಕಿದ್ದು, ನಿಮ್ಮ ಮೇಲಿನ ಸೇಡಿನಿಂದ. ಈಗವಳು ಬಸರಾಗಿದ್ದಾಳೆ. +ಗುಡಸೀಕರನಿಗೆ ಇನ್ನೊಂದು ಆಘಾತವಾಯ್ತು. “ಬಸರಾಗ್ಯಾಳ?” ಎಂದು ಉದ್ಗಾರದಿಂದ ಪ್ರಶ್ನಿಸಿದ. ಬಸವರಾಜ ಮತ್ತೆ ತಣ್ಣಗೆ ನುಣ್ಣಗೆ ಮಾತಿನ ಬಲೆ ಹೆಣೆಯತೊಡಗಿದ! ಗೌಡ ಬಲೆಗೆ ಬಿದ್ದಂತಾಯ್ತು. ಇದು ಅವನ ಸೇಡಿನಳತೆಗೆ ಮೀರಿ ಆದದ್ದು. ಅದಕ್ಕೇ ಹೆದರಿ ಅವ ಹೊಟ್ಟೆಯಿಳಿಸುವ ಮದ್ದು ಕೊಟ್ಟದ್ದು! +“ಮದ್ದು ಕೊಟ್ಟ!” +“ಈಗ ಸುಂದರಿಯನ್ನು ಬಿಟ್ಟರೆ ಹ್ಯಾಗೋ ಮಾಡಿ ಗೌಡ ಅವಳ ಹೊಟ್ಟೆಯಿಳಿಸೋದು ಖಂಡಿತ. ನಾವು ಅವಳನ್ನು ನಮ್ಮ ಕೈಯಲ್ಲೇ ಇಟ್ಟುಕೊಂಡಿರಬೇಕು. ಆ ಕಡೆ ಎಲೆಕ್ಷನ್ ಭರಾಟೆ, ಈ ಕಡೆ ಒಂದು ಮೂಕರ್ಜಿ, ಗೌಡ ತನಗರಿವಿಲ್ಲದಂತೆ ಗೋರಿ ತೋಡಿಕೊಂಡಿದ್ದಾನೆ. ಜನ ಹುಚ್ಚರಲ್ಲ. ಅಥವಾ ಯಾವಾಗಲೂ ಹುಚ್ಚರಾಗಿರುವುದಿಲ್ಲ. ಸುಂದರಿ ಯಾರಿಗೇ ಬಸಿರಾಗಿರಬಹುದು. ಹೆಸರಂತೂ ಗೌಡನದೇ. ಇದು ಜನಕ್ಕೆ ಅರ್ಥವಾಗುವುದಿಲ್ಲ ಎನ್ನಬೇಡಿರಿ, ಅದೂ ಬೇಡ, ಗೌಡನ್ನ ಜೇಲಿಗೆ ಈಗಿಂದೀಗ ಕಳುಹಿಸುವುರೇನು?” +“ಜೇಲಿಗೆ?” +ಬಸವರಾಜು ಎದ್ದವನೇ ಒಳಗೆ ಹೋಗಿ ಸುಂದರಿ ಕೊಟ್ಟ ದಿನಪತ್ರಿಕೆ ತಂದು ಗುಡಸೀಕರನ ಮುಂದೆ ಹಿಡಿದ. ಅದರಲ್ಲಿಯ ಮುದುಕನೊಬ್ಬನ ಫೋಟೋ ತೋರಿಸಿ‌ಅರ್ಥಪೂರ್ಣವಾಗಿ ನಕ್ಕ. ಕೊಳವೀ ಮುದುಕಪ್ಪ ಗೌಡಪ್ಪನನ್ನು ಜೀವಂತವಾಗಲಿ, ಇಲ್ಲವೆ ಕೊಂದಾಗಲಿ ತಂದುಕೊಟ್ಟವರಿಗೆ ೫೦೦೦ ರೂ. ಬಹುಮಾನವೆಂದು ಸರ್ಕಾರೀ ಪ್ರಕಟಣೆಯಿತ್ತು. ಆಗಲೂ ಗುಡಸೀಕರನಿಗೆ ಅರ್ಥವಾಗಲಿಲ್ಲ. ‘ಹಹ್ಹಾಹ್ಹ! ಓಲ್ಡ್‌ಬಾಯ್ ಕೊಳವಿ ಮುದುಕಪ್ಪ ಸ್ವಾತಂತ್ರ್ಯ ಚಳುವಳಿಯಲ್ಲಿದ್ದಾನೆ! ಗೌಡ ತನ್ನ ಮನೆಯಲ್ಲಿ ಇವನನ್ನು ಅಡಗಿಸಿಟ್ಟಿದ್ದಾನೆ.” +ಆಡಿಕೊಂಡರು, ಹಾಡಿಕೊಂಡರು +ಸುಂದರಿಯನ್ನು ಕಳಿಸಿದೊಡನೆ ದತ್ತಪ್ಪ ಗೌಡನೊಂದಿಗೆ ಅವನ ಮನೆಗೆ ಹೋದ. ವಿಷಯ ಇಬ್ಬರಿಗೂ ಗೊತ್ತಾಗಿತ್ತು; ಆ ಹುಡುಗ ತನ್ನ ಮನೆಗೆ ಬೇಲಿ ಹಚ್ಚಿ ಹೆಂಟಾ ಬಡಿಯುತ್ತಾನೆಂದು ಮಾತಾಡಿಕೊಂಡರು. ಅವನಿಗೆ ತಿಳಿವಳಿಕೆ ಹೇಳಲು ಸಾಧ್ಯವಾಗದ್ದಕ್ಕೆ ಗೌಡ ಮರುಗಿದ. ಆ ಮುದುಕಿಗಾದರೂ ಬುದ್ಧಿ ಇರಬಾರದೆ? ಮಗ ಹೇಳಿದ ಹಾಗೆ ಕುಣಿಯೋದಕ್ಕೆ ಇದು ವಯಸ್ಸೆ? ಎಂದ. ಯಾರಿಗೂ ಬುದ್ಧಿ ಕಲಿಸುವ ದಾರಿ ಚಿಂತಾಮಣಿಯ ದತ್ತಪ್ಪನಿಗೆ ಅರಿದಿಲ್ಲ. +ನೋಡೂ, ಅವಗ ಬುದ್ಧಿ ಕಲಸಾಕ ಒಂದ ಹಾದಿ ಅದ. ನಿನ್ನ ಕಬೂಲಿದ್ದರ….” “ಅದೇನಪಾ?” +“ಸುಂದರೀನ ಬಸರ ಮಾಡ್ಯಾನಂತ ಒಂದ ಮೂಕರ್ಜಿ ಹೆಟ್ಟಿದರ ನೋಡಪಾ, ಹುಡುಗ ನಾವ ಹೇಳಿಧಾಂಗ ಕೇಳಿಕೂತ ಬಿದ್ದಿರತಾನ” +ಉಪಾಯವೇನೋ ಬರೋಬರಿ. ಆದರೆ ರಾಡಿ ಸೋಸಬೇಕಲ್ಲ? ಪೋಲೀಸರು ಬರೋದು, ಗುಡಸೀಕರನನ್ನ ಹೊಡಿಯೋದು, ನ್ಯಾಯ ಮಾಡೋದು, ಪಂಚಾತಿ ಅನ್ನೋದು ಸಾಕ್ಷಿ ನೀ ಹೇಳು, ನಾ ಹೇಳು- ಈ ಗದ್ದಲ ಸೋಸುವುದಿರಲಿ ಮುದುಕಪ್ಪ ಗೌಡ ಸರ್ಕಾರದ ಕಣ್ಣುತಪ್ಪಿಸಿ ತನ್ನ ಮನೆಯಲ್ಲಿದ್ದಾಗ ಪೋಲೀಸರು ಬರೋದು ತಮ್ಮ ಹಿತದೃಷ್ಟಿಯಿಂದ ಕೂಡ ಒಳ್ಳೆಯದಲ್ಲ. ಏನೋ ಮಾಡಹೋಗಿ ಏನೇನೋ ಆಗುವ ಬಾಬತ್ತಿವೆಲ್ಲ. “ಬ್ಯಾಡ ತೆಗಿ” ಅಂದ. ದತ್ತಪ್ಪನಿಗೆ ಕೂಡಲೇ ಖಾತ್ರಿಯಾಯ್ತು. ಮುದುಕಮ್ಮನಿಗೆ ಬುದ್ಧಿ ಹೇಳಿದರೋ? ಮುದುಕಿ ಮಾತು ಕೇಳ್ಯಾಳು, ಹುಡುಗ ಕೇಳಬೇಕಲ್ಲ? ಅವರವರ ಕರ್ಮ ಎಂದು ಇಬ್ಬರೂ ಸುಮ್ಮನಾದರು. ಅಲ್ಲಿಗದು ಮುಗಿಯಿತೊ? +ಜನರ ಬಾಯಲ್ಲಿ ಚಿಗಿಯಿತು. ದಿನಕ್ಕೊಂದು ಚಂದಾಗಿ ಗುಸುಗುಸು ಸುರುವಾಯಿತು. ಮುಂಗಾರಿ ಬೆಳೆ ಬಂದು ಒಂದು ನಿಲುಗಡೆಗೆ ಬಂದುದರಿಂದ ಚಾಡಿ ಹೇಳುವುದಕ್ಕೆ ಅವರಿಗೆ ಸಮಯವೂ ಇತ್ತು. ಆಡಿಕೊಂಡು ನಗಾಡಿದರು, ಚತುಷ್ಟಯರನ್ನು ಕೀಟಲೆ ಮಾಡಿದರು. ವ್ಯಂಗ್ಯದ ಪದ ಕಟ್ಟಿ ಹಾಡಿದರು. ಆದರೆ ಆ ಪದಗಳು ಗುಡಸೀಕರನಿಗಾಗಲಿ, ಬಸವರಾಜನಿಗಾಗಲಿ ತಿಳಿಯಲೇ ಇಲ್ಲ. ಚತುಷ್ಟಯರಿಗೆ ತಿಳಿಯುತ್ತಿತ್ತು. ಅವರು ಹೇಳಲಿಲ್ಲ. ಹೀಗಾಗಿ ಹಾಡಿನ ಚಮತ್ಕಾರಕ್ಕೆ ಇವರು ನಕ್ಕರು. ತಿಳಿಯದ ಇವರ ದಡ್ಡತನಕ್ಕೆ ಹುಡುಗರು ನಕ್ಕರು. +ಸುಂದರಿ ಕರ್ಮವೆಂದು ಬಸಿರನ್ನೊಪ್ಪಿಕೊಂಡಳು. ಮದ್ದಿನಿಂದ ಮೈ ನಿಶ್ಯಕ್ತಿಯಾಯಿತು. ಗುಡಿಸಲಿನಲ್ಲಿದ್ದುಕೊಂಡೇ ಇವರ ಮಾತು ಕೇಳುತ್ತಿದ್ದಳು. ಆ ಘಟನೆ ನಡೆದಾಗಿನಿಂದ ಗುಡಸೀಕರನ ಚೇರಾಪಟ್ಟಿಯಲ್ಲಿ ಬದಲಾಗಿತ್ತು. ಬರುತ್ತಿರಲಿಲ್ಲ. ಬಂದರೂ ತಪ್ಪಿಕೂಡಾ ತನ್ನ ಕಡೆ ನೋಡುತ್ತಿರಲಿಲ್ಲ. ನೋಡಿದರೂ ಅವನ ಕಣ್ಣಲ್ಲಿ ಕೋಪವಿರುತ್ತಿತ್ತು. ಬಸವರಾಜು ಮೊದಲಿನಂತೆಯೇ ಮಾತಾಡುತ್ತಿದ್ದ. ಒಂದೆರಡು ಕೊಡ ನೀರು ತರುತ್ತಿದ್ದ. ಅನ್ನ ಬೇಯಿಸುತ್ತಿದ್ದ. ತಾನೂ ತಿಂದು ಇವಳಿಗೂ ಹಾಕುತ್ತಿದ್ದ. +ಗುಡಸೀಕರನ ತಾಯಿಗೆ ಮಾತ್ರ ಮನೆಯ ನಡುಗಂಬ ತನ್ನ ನೆತ್ತಿಯ ಮೇಲೆ ಕಡಕೊಂಡು ಬಿದ್ದಷ್ಟು ಸಂಕಟವಾಯ್ತು. ಸುದ್ದಿಗಳೋ ದಿನಕ್ಕೊಂದು ಪರಿ ಬರುತ್ತಿದ್ದವು. ಮಗ ಕದ್ದು ಮದುವೆಯಾಗಿದ್ದಾನಂತೆ. “ಹೌಂದೇನಾ ಎವ್ವಾ?” ಎಂದೊಬ್ಬ ಮಗಳು ಕೇಳಿದರೆ, ಮೊಮ್ಮಗನ ಹೆಸರಲೆ ಆಸ್ತಿ ಮಾಡ್ಯಾನಂತ “ಹೌಂದೇನಾ ಎಕ್ಕಾ?” ಎಂದೊಬ್ಬ ತಂಗಿ ಕೇಳುತ್ತಿದ್ದಳು. ಸಕಾಲಕ್ಕೆ ಮದುವೆ ಮಾಡಿದ್ದರೆ ಇದೆಲ್ಲ ಯಾಕಿರುತ್ತಿತ್ತೆಂದು ಮುದುಕಿಯೊಬ್ಬಾಕೆ ಹೇಳದೆ ಬಿಡಲಿಲ್ಲ. ಮಗನೊಂದಿಗೆ ಇದನ್ನೆಲ್ಲ ಬಾಕಿ ಉಳಿಸದಂತೆ ಮಾತಾಡಬೇಕೆಂದರೆ ಅವನು ಸದಾ ಹುಬ್ಬುಗಂಟು ಹಾಕಿಕೊಂಡೇ ಇರುತ್ತಿದ್ದ. ಮುದುಕಿ ಬಾಯಿ ಬಿಟ್ಟರೆ ಗದರುತ್ತಿದ್ದ. ಗೌಡ, ದತ್ತಪ್ಪ ಯಾಕೊಮ್ಮೆ ಬುದ್ಧಿ ಹೇಳಬಾರದೆಂದಳು-ಅವರ ಮಾತು ಮಗ ಕೇಳುವುದಿಲ್ಲವೆಂದು ಗೊತ್ತಿದ್ದೂ, ಸತ್ತ ಗಂಡನ ನೆನೆದು ಅತ್ತಳು. ಓಣಿಯ ಅವ್ವಕ್ಕಗಳ ಮುಖ ಎದುರಿಸಲಾರದೇ ಮುದುಕಿ ಅಡಿಗೆ ಮನೆಯಲ್ಲಿ ‘ಕರಿಮಾಯೀ’ ಎಂದು ಕೈಹೊತ್ತು ಕೂತಳು. +ಅಣ್ಣ ಊಟಕ್ಕೆ ಮಾತ್ರ ಮನೆಗೆ ಬರುತ್ತಿದ್ದು ಉಳಿದೆಲ್ಲ ಸಮಯ ತೋಟದಲ್ಲೇ ಕಳೆಯುತ್ತಿದ್ದುದರಿಂದ ಮೊದಮೊದಲು ಆಗೀಗ ಬರುತ್ತಿದ್ದ ಬಸವರಾಜ ಸಮಯ ಸಾಧಿಸಿ ಹೆಚ್ಚೆಚ್ಚು ಸಲ ಹೆಚ್ಚೆಚ್ಚು ಹೊತ್ತು ಬರಲಾರಂಭಿಸಿದ್ದರಿಂದ ಗಿರಿಜಾ ಸನ್ನಿವೇಶದ ಅಸಲು ಪ್ರಯೋಜನವನ್ನು ಬಡ್ಡಿಸಮೇತ ಪಡೆದಳು. +ಕುದುರೆಯ ಕೆಣಕಿದರು. +ಚುನಾವಣೆ ಅನಿವಾರ್ಯವಾಗಿತ್ತು. ಗುಡಸೀಕರನಿಗಂತೂ ಊರೊಳಗಿನ ತನ್ನ ಸ್ಥಾನಮಾನ ಮಂದಿಗಿಲ್ಲ, ತನಗೇ ಖಾತ್ರಿಯಾಗಬೇಕಿತ್ತು. ಹಿರಿಯರ ಔದಾರ್ಯದಿಂದ ದೊರೆತ ಸರಪಂಚಗಿರಿಯ ಸುಖ ಕಂಡುಂಡದ್ದಾಗಿತ್ತು. ಇವು ಪೂರಕ ವಿಚಾರಗಳು; ಅಥವಾ ಹೊತ್ತಿದ ಬೆಂಕಿಯಲ್ಲಿ ಆಗಾಗ ಬೀಳುತ್ತಿದ್ದ ಹುಲ್ಲಿನ ಗರಿಗಳು. ಮುಖ್ಯವಾಗಿ ಸುಂದರಿಯನ್ನು ಗೌಡ ಕೂಡಿದ್ದು ಹುಡುಗನ ಆಳದಲ್ಲಿ ಹುಣ್ಣು ಮಾಡಿತ್ತು. ಚಡಪಡಿಸಿದ, ಒದ್ದಾಡಿದ, ದಿನಕ್ಕಿಂತ ಹೆಚ್ಚು ಕುಡಿದ, ಹೆಚ್ಚು ಸೇದಿದ, ವೀರಾವೇಶದಿಂದ ಹೊಗೆಬಿಟ್ಟ, ಚತುಷ್ಟಯರನ್ನು ಕರೆದು ‘ಗಂಡಿಗ್ಯಾಗೋಳ್ರಾ’ ಎಂದು ಬೈದ. ಚತುಷ್ಟಯರಿಗೇನೋ ಸುದ್ದಿ ಗೊತ್ತಾಯ್ತು. ಆದರೆ ಅವರು ನಂಬಲಿಲ್ಲ. ಹಾಗಂತ ಆಡಿಕೊಳ್ಳಲಿಲ್ಲ. ಅವನ ಕಾಟ ತಡೆಯಲಾರದೆ ಗುಡಸೀಕರನೊಂದಿಗೆ ಅಷ್ಟು ಜನ ಒಮ್ಮೆ ಸೇರಿ ಒಮ್ಮೆ ಗೌಡನ ಮುದಿ ಕುದುರೆ ಗುಡಸೀಕರನ ತೋಟ ಹೊಕ್ಕು ಮೇಯುತ್ತಿದ್ದಾಗ ಅಟ್ಟಿಸಿಕೊಂಡು ಹೋಗಿ ಹೊಡೆದರು, ಕಡಿದರು, ಕಲ್ಲು ಹೇರಿದರು. ಕೊನೆಗೆ ಕೆರೆಯ ಕೆಸರಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರು. ಸಾಲದೆಂದು ನಿಸ್ಸಹಾಯಕವಾಗಿ ಒದ್ದಾಡುತ್ತಿದ್ದ ಆ ಪ್ರಾಣಿಯ ಪೃಷ್ಟದಲ್ಲಿ ಉದ್ದನೆಯ ಗೂಟ ಜಡಿದ ಗುಡಸೀಕರ. +ಸಂಜೆಯೇ ಗೌಡನಿಗೆ ಸುದ್ದಿ ತಿಳಿಯಿತು. ಅಭಿಮಾನ ಕೆರಳಿತು. ಬಾಯಿಯಿಲ್ಲದ ಪ್ರಾಣಿಗೆ ಈ ರೀತಿ ಚಿತ್ರಹಿಂಸೆ ಮಾಡುವುದೆಂದರೇನು? ಸುತ್ತ ಹದಿನಾಲ್ಕು ಹಳ್ಳಿಯಲ್ಲಿ ಈ ತನಕ ಯಾವನೂ ಗೌಡನ ಎದುರಿಗೆ ನಿಲ್ಲುವ ಧೈರ್ಯ ಮಾಡಿರಲಿಲ್ಲ. ಹಾದಿ ಬೀದಿಯ ಹುಡುಗರು ಹೀಗೆ ಮಾಡುವಂತಾಯಿತಲ್ಲ, ದಿನೇ ದಿನೇ ಇವನ ಉರವಣಿಗೆ ಜಾಸ್ತಿಯಾಯಿತೇ ವಿನಾ ತಿಳುವಳಿಕೆ ಮೂಡಲಿಲ್ಲ. ತನ್ನ ಸಹನೆಯಿಂದ ಬುದ್ಧಿ ಕಲಿಯಲಿಲ್ಲವಲ್ಲ. ಕೂಡಲೇ ದತ್ತಪ್ಪನಿಗೆ ಕರೆ ಹೋಯ್ತು. +ಕುದುರೆಯನ್ನು ಕೆಸರಲ್ಲಿ ಸಿಕ್ಕಿಸಿದ ಸುದ್ದಿ ಆಗಲೇ ಕುಸ್ತಿ ಹುಡುಗರಿಗೆ ತಿಳಿದು ಓಡಿದ್ದರು. ಕೆಲವರು ಅದನ್ನು ಗಳ ಹಾಕಿ ಎತ್ತುವ ಪ್ರಯತ್ನದಲ್ಲಿದ್ದರೆ, ಇನ್ನೂ ಕೆಲವರು ಗುಡಸೀಕರನನ್ನೂ, ಚತುಷ್ಟಯರನ್ನೂ ಹುಡುಕುತ್ತಿದ್ದರು. +ಹೊತ್ತು ಮುಳುಗಿ ಆಗಷ್ಟೆ ಕತ್ತಲಾಗಿತ್ತು. ಗೌಡ, ದತ್ತಪ್ಪ ಆ ವಿಷಯವಾಗೇ ಮಾತಾಡುತ್ತ ಕುಳಿತಿದ್ದರು. ಅಷ್ಟರಲ್ಲಿ ಹುಡುಗರು ಕುದುರೆಯನ್ನು ನಿಧಾನವಾಗಿ ನಡಸಿಕೊಂಡುಬಂದರು. ಅದರ ತೊಡೆ ಗಡಗಡ ನಡುಗುತ್ತಿದ್ದವು. ಮೈತುಂಬ ಬಾಸಳೆದ್ದು, ಕುಂಡಿ ನೆತ್ತರಾಡಿತ್ತು. ಕುದುರೆ ನಿಲ್ಲಲಾರದೆ ಮುಂಗಾಲೂರಿ ಕುಸಿದು ಬಿದ್ದುಬಿಟ್ಟಿತು. ಗೌಡ ಕೋಪದಿಂದ ನಡುಗಿದ. ದತ್ತಪ್ಪನ ಕಣ್ಣಲ್ಲಿ ನೀರಾಡಿ ಚಟ್ಟನೇ ಎದ್ದು “ಎಲ್ಲಿದ್ದಾರ ಆ ಹೊಲ್ಯಾರು?” ಅಂದ. ಗೌಡ ತಕ್ಷಣ ಎದ್ದ. +ಗುಡಸೀಕರನ ತಾಯಿ ಆಗಷ್ಟೆ ಲಾಟೀನಿನ ಗ್ಲಾಸು ಒರೆಸಿ ದೀಪ ಹಚ್ಚಿ ತೂಗು ಹಾಕುತ್ತಿದ್ದಳು. ಕಿವಿಯ ಮೇಲೆ ಸಿಡಿಲಪ್ಪಳಿಸಿದಂತೆ “ಎಲ್ಲಿದ್ದೀಯಲೇ ಗುಡಿಸ್ಯಾ?” ಎಂದು ಕೇಳಿಸಿತು. ನೋಡಿದರೆ ಇಡೀ ಬಾಗಿಲು ತುಂಬಿಕೊಂಡು ಗೌಡ ನಿಂತಿದ್ದ. ಮುದುಕಿಗೆ ತುದಿಬುಡ ಒಂದೂ ತಿಳಿಯದೆ ಏನೂ ಮಾತಾಡಬೇಕೆಂಬುದೂ ತೋಚದೇ “ಬರ್ರೀ ಎಪ್ಪಾ” ಎನ್ನುತ್ತಾ ಉತ್ತರಕ್ಕೂ ಕಾಯದೆ “ಏ, ಗಿರ್‍ಜಾ” ಎಂದು ಕೀರಲಿ, ಕುಸಿಯುತ್ತಿದ್ದ ತೊಡೆ ಸಾವರಿಸಿಕೊಂಡು ಒಳಸರಿದು ಬಾಗಿಲಿಗೆ ಒರಗುವಷ್ಟರಲ್ಲಿ ಗೌಡ: “ನಿನ್ನ ಮಗಾ ಎಲ್ಲಿದ್ದಾನಬೇ?” ಎಂದ. ಗೌಡನ ಕೋಪವನ್ನು ಹಿಂದೆಂದೂ ಕಂಡರಿಯದ ಮುದುಕಿಗೆ ಏನಾಯಿತೆಂದು ತಿಳಿಯುವ ಮೊದಲೇ ಗೌಡ ಮುದುಕಿಗೆ ಸಮೀಪ ಬಂದಿದ್ದ. ಹಿಂದೆ ದತ್ತಪ್ಪ ನಿಂತಿದ್ದ. ತನ್ನ ಮಗ ಏನೋ ಅನಾಹುತ ಮಾಡಿದ್ದಾನೆಂದೂ, ಈಗ ಸಿಕ್ಕರೆ ಅವನನ್ನು ಮುರಿಯುವರೆಂದೂ ಭಯವಾಗಿ ತಕ್ಷಣ ತಲೆಮೇಲಿನ ಸೆರಗನ್ನು ನೆಲಕ್ಕೆ ಒಡ್ಡಿ, “ಏಪ್ಪಾ, ಅವ ನನ್ನ ಮಗ ಅಲ್ಲ; ನಿನ್ನ ಮಗ ಅಂತ ತಿಳಿ” ಎಂದು ತಲೆ ಬಾಗಿದಳು. ಗೌಡ ಮನುಷ್ಯರೊಳಗೆ ಬಂದ. ಅಲ್ಲೇ ಮೇವಿನ ಪೆಂಟೆಯ ಮೇಲೆ ಕುಸಿದ. ದತ್ತಪ್ಪ ನಡೆದುದನ್ನೆಲ್ಲ ಹೇಳಿದ ಮುದುಕಿಯೂ ಬೈದಳು. ನೀವೇ ಬುದ್ದಿ ಹೇಳಬೇಕೆಂದು ಅಂಗಲಾಚಿದಳು. +ಆಡುವ ಮಾತಿನ್ನೂ ಬಾಯಲ್ಲೇ ಇದೆ; ಹಾಸಿದ ಸೆರಗು ಹಾಗೇ ಇದೆ. ಗುಡಸೀಕರ ಧಡಪಡಿಸಿ ಅಟ್ಟಿಸಿಕೊಂಡು ಬಂದ ಬೇಟೆಯ ಹಾಗೆ ಬಂದು ಅಡಿಗೆ ಮನೆಗೆ ದೌಡಾಯಿಸಿದ. ಗುರಿಯಿಟ್ಟ ಬಾಣದ ಹಾಗೆ ಶಿವಲಿಂಗ ಬೆನ್ನುಹತ್ತಿದ. ಏನು ಎತ್ತ ತಿಳಿಯದೆಲೇ, ಕೂತವರು ಮೇಲೇಳುವ ಮೊದಲೇ ಗುಡಸೀಕರ ಅಡಿಗೆ ಮನೆಯಲ್ಲಿ ಕಿಟಾರನೆ ಕಿರಿಚಿದ. ಗಿರಿಜಾ, ಮುದುಕಿ ಏನಾಯಿತೆಂದು ತಿಳಿಯದೆಲೆ ಲಬೊಲಬೊ ಹೊಯ್ಕೊಳ್ಳುತ್ತ ಒಳನುಗ್ಗುವ ಮೊದಲೇ ಗೌಡ ಧಾವಿಸಿದ್ದ. ಗುಡಸೀಕರ ಒದರುತ್ತ ಹೊರಗೆ ಬಂದ. ಹಿಡಿದ ಗೌಡನನ್ನು ಶಿವನಿಂಗ ತಳ್ಳಿ ಹಾ ಎನ್ನುವುದರಲ್ಲಿ ಹಾರಿಬಂದು ಓಡುತ್ತಿದ್ದ ಗುಡಸೀಕರನನ್ನು ತೆಕ್ಕೆ ಹಾದು ಹಿಡಿದುಕೊಂಡು ಅಮಾತ ಎತ್ತಿ ನೆಲಕ್ಕೆ ರಪ್ಪನೆ ಅಪ್ಪಳಿಸಿದ. ಪಕ್ಕದ ಗೋಡೆಯ ಗೂಟ ಲಟಕ್ಕನೆ ಮುರಿದು ವಿಲಿವಿಲಿ ಒದ್ದಾಡುತ್ತಿದ್ದ ಗುಡಸೀಕರನನ್ನು ಒದ್ದು ಬೆನ್ನು ಮೇಲಾಗಿ ಚೆಲ್ಲಿ ಪ್ಯಾಂಟಿಗೆ ಕೈಹಾಕಿದ. ಇಷ್ಟೆಲ್ಲ ರೆಪ್ಪೆ ತೆಗೆದಿಕ್ಕಿವುದರೊಳಗೆ ಆಗಿಬಿಟ್ಟಿತ್ತು.ಮುದುಕಿ “ಎಪ್ಪಾ” ಎಂದು ಒದರುತ್ತ ಓಡಿಬಂದು ಮಗನ ಮೇಲೆ ಸಾಗರ ಬಿತ್ತು. ಒಳಗಿನಿಂದ ಗೌಡ “ಏ ಶಿವನಿಂಗಾ” ಎಂದು ಕಿರುಚಿದ. ದತ್ತಪ್ಪ ಓಡಿಹೋಗಿ ತೆಕ್ಕೆ ಹಾದ. ಅವನೊಂದಿಗೆ ಇನ್ನಷ್ಟು ಜನ ಬಂದು ಶಿವನಿಂಗನನ್ನು ಹಿಡಿದರು. ಊರಿಗೂರೇ ಅಲ್ಲಿ ಸೇರಿತ್ತು. +ತಗಲಿಕೊಂಡರು +ಇದರ ಪರಿಣಾಮವಾಗಿ ಹಿಂಡು ಹಿಂಡು ಪೋಲೀಸರು ಊರು ಹೊಕ್ಕರು. ಯಾವುದಕ್ಕೋ ಬಂದವರು ಇನ್ಯಾವುದಕ್ಕೋ ತಗಲಿಕೊಂಡರು. +ಮಾರನೇ ದಿನವೇ ಗುಡಸೀಕರ ಸರಿಕರೊಂದಿಗೆ ಬೆಳಗಾವಿಗೆ ಹೋದ. ಮುಂದೆ ಎರಡು ಮೂರು ದಿನ ಬರಲೇ ಇಲ್ಲ. ಇಲ್ಲೀತನಕ ಹಿರಿಯರು ಚತುಷ್ಟಯರನ್ನು ಲೆಕ್ಕಕ್ಕೇ ಹಿಡಿದಿರಲಿಲ್ಲ. ಬಂದೊಡನೆ ಗುಡಸೀಕರನಿಂದ ಬೇರೆ ಇರೋದಕ್ಕೆ ತಾಕೀತು ಮಾಡಬೇಕೆಂದುಕೊಂಡರು. ಶಿವನಿಂಗನಿಗೆ ಹೆದರಿ ಊರು ಬಿಟ್ಟಿದ್ದಾರೆಂದೇ ಜನ ಆಡಿಕೊಂಡರು. +ಗುಡಸೀಕರ ಚತುಷ್ಟಯರ ಸಮೇತ ಬಂದಿಳಿದ. ಆಶ್ಚರ್ಯವೆಂದರೆ ಒಬ್ಬರ ಕಣ್ಣ ಬಳಿಯೂ ಚಿಂತೆಯ ಗೆರೆಯಿರಲಿಲ್ಲ. ಸಾಲದ್ದಕ್ಕೆ ಗೆದ್ದವರಂತೆ ಹುಮ್ಮಸ್ಸಿನಿಂದಿದ್ದರು. ಕುದುರೆಗೆ ಹಿಂಸೆ ಮಾಡಿದ್ದು ಅವರಿಗೆ ಸಾಮಾನ್ಯ ವಿಷಯವಾಗಿತ್ತು. ನಿಂಗೂ ತಡೆಯದೆ ಕಳ್ಳನ ಬಳಿಹೋಗಿ ” ಮೂಕ ಪ್ರಾಣೀನ್ನ ಹಾಂಗ ಬಡ್ಯಾಕೆ ತಿಳಿಲಿಲ್ಲೇನೋ? ತಡಿ, ನಿಮಗ ಗೌಡ್ರ ಬುದ್ಧಿ ಕಲಸ್ತಾರ” ಎಂದು ಹೇಳಿದಾಗ ಕಳ್ಳ “ಯಾರು ಯಾರಿಗೆ ಬುದ್ಧಿ ಕಲಸ್ತಾರ ನೋಡೀಯಂತ ತಡಿ” ಅಂದಿದ್ದ. +ಮಾರನೇ ದಿನ ಕೋಳಿ ಕೂಗಿ ಬೆಳಗಾಯಿತು. ಝಮುಝಮು ಥಡಿಯ ದಿನಗಳಾದ್ದರಿಂದ ಜನ ಏಳುವುದು ತಡವೇ. ‘ಕರಿಮಾಯೀ’ ಎಂದು ಮೈಮುರಿದು ಕಣ್ಣು ತಿಕ್ಕುತ್ತ ಹೊರಗೆ ಬಂದರೆ-ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ, ಬಂದೂಕು ಹಿಡಿದ ಹಿಂಡು ಹಿಂಡು ಪೋಲೀಸರಿದ್ದರು!’ ಧಸ್ ಎಂದು ಎದೆ ಹಿಡಿದುಕೊಂಡು ‘ಕರಿಮಾಯೀ’ ಎಂದವರೇ ಒಳಗೋಡಿ ಬಾಗಿಲಿಕ್ಕಿಕೊಂಡರು. ಇಷ್ಟೊತ್ತಿನಲ್ಲಿ ಊರಲ್ಲಿ ಉರಿಹಚ್ಚಿ ಕಾಸಿಕೊಳ್ಳುವ ಮಕ್ಕಳ ಗಲಾಟೆಯೇನು? ಕೋಳಿಗಳ ಕೂಗಾಟವೇನು, ಹುಡುಗಿಯರು ನೀರು ತರುವ ಸಡಗರವೇನು, ನೋಡುವ ಹುಡುಗರ ಚಡಪಡಿಕೆಯೇನು, ದೀಡೀ ಮಾತೇನು, ಧಿಮಾಕಿನ ಉತ್ತರಗಳೇನು, ಎಲ್ಲ ಸ್ತಬ್ಧವಾಗಿ ಒಳಗೊಳಗೇ ಪಿಸುಗುಟ್ಟಿ ನಿಟ್ಟುಸಿರಿನಲ್ಲಿ ಮಾತಾಡಿಕೊಂಡರು. ಯಾಕೆಂದು ಯಾರಿಗೂ ತಿಳಿಯದು. ಗೌಡನನ್ನೂ, ಶಿವನಿಂಗನನ್ನೂ ಹಿಡಿಸುವ ಸಲುವಾಗಿ ಗುಡಸೀಕರ ಪೋಲೀಸ್ ಪಾರ್ಟಿ ತಂದಾನೆಂದು ಊಹಿಸಿದರು. +ಇತ್ತ ಗೌಡನ ಮನೆಯನ್ನೂ, ತೋಟವನ್ನೂ, ಪೋಲೀಸರು ಸುತ್ತುವರೆದಿದ್ದರು. ಬಾಗಿಲು ತೆಗೆದೊಡನೆ ಮನೆ ತಲಾಶ್ ಮಾಡಿದರು. ಅಡಕಲ ಗಡಿಗೆ ಚೆಲ್ಲಿದರು. ಪೇರಿಸಿಟ್ಟ ಧಾನ್ಯದ ಚೀಲ ಚೆಲ್ಲಿದರು. ಅಡ್ಡಬಂದ ಶಿವನಿಂಗನನ್ನು ದೂಕಿ, ಅಟ್ಟದ ಮೇಲಿನ ಹೊಟ್ಟು ಕೆದರಿದರು. ಸುದೈವಕ್ಕೆ ಅಲ್ಲೇ ಇದ್ದ ಪೆಟ್ಟಿಗೆ ತೆರೆಯಲಿಲ್ಲ. ಅದರಲ್ಲಿ ಕರಿಮಾಯಿಯ ಬಂಗಾರದ ಮೂರ್ತಿಯಿತ್ತು. ಮೂಲೆ ಮೂಲೆಯ ಸಾಮಾನು ಚೆಲ್ಲಿ ಚೆಲ್ಲಾಪಿಲ್ಲಿ ದರೋಡೆಯಾದ ಮನೆಮಾಡಿ ಹೊರಗೆ ಹೋಗಿ ಮತ್ತೆ ಕಾವಲು ನಿಂತರು. +ಶಿವನಿಂಗ ತಂದೆಗೆ ಹೇಳಬೇಕೆಂದು ತೋಟಕ್ಕೋಡಿದರೆ ಅಲ್ಲೂ ಅದೇ ಹಾಡು, ಗುಡಿಸಲ ಹೊರಗಿನ ಹೊರಸಿನ ಮೇಲೆ ಪೋಜುದಾರ ಕೂತಿದ್ದ. ಕಬ್ಬಿನ ಬೆಳೆ ಹೊಕ್ಕು, ಪೋಲೀಸರು ಹುಡುಕುತ್ತಿದ್ದರು. ಕೈ ಕೈ ಹೊಸೆಯುತ್ತ ಗೌಡ ನಿಂತಿದ್ದ. “ರೂಪಾಯಿ ಪಾಂಚ್ ಹಜಾರ್ ಬಹುಮಾನ ಕೊಡಸ್ತೇನ ಹೇಳ ಗೌದಾ, ಕೊಳವಿ ಮುದುಕಪ್ಪನ್ನ ಎಲ್ಲಿಟ್ಟಿದಿ?” ಎಂದು ಪೋಜುದಾರ ಗದರಿಸುತ್ತಿದ್ದ. “ನಂಗೊತ್ತಿಲ್ಲರೀ” ಎಂದು ಗೌಡ ಹೇಳುತ್ತಿದ್ದ. +ಕಟ್ಟಿ ಪೋಜುದಾರನೆಂದರೆ ಆ ಭಾಗದಲ್ಲಿ ಭಾರೀ ಹೆದರಿಕೆಯ ಹೆಸರು. ಆ ಹುದ್ದೆ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಾರಾಯ, ಭಯಂಕರ ಹೆಸರು ಮಾಡಿಕೊಂಡಿದ್ದ. ಚಳುವಳಿಯ ಹದಿನೆಂಟು ಹುಡುಗರ ಕಣ್ಣುಕಿತ್ತು ಮೂವತ್ತಾರು ಗುಡ್ಡೆಗಳನ್ನು ಗೋಲಿಮಾಡಿ ಇಂಗರೇಜಿಯವರೊಂದಿಗೆ ಆಡಿದ್ದನಂತೆ. ಅವನ ರೂಪ ಇಂಥ ಕತೆಗಳನ್ನು ಸಮರ್ಥಿಸುವಂತಿತ್ತು. ಕರೀ ಮೈ, ದಟ್ಟಮೀಸೆ, ನೆಣಕೊಬ್ಬಿನ ಪೊಗರು, ತನಗೆ ಎಲ್ಲರೂ ಅಂಜಬೇಕೆಂಬ ಛಲ, ಮೂಗು ದಪ್ಪ; ಮುಖದಲ್ಲಿ ಕರು ಮಲಗಿದಂತೆ. ಆದ್ದರಿಂದ ಆ ಮೂಗಿನ ತುದಿಯಿಂದ ನೋಡಿದರೆ ಉಳಿದವರು ಅಲ್ಪರಾಗಿ ಇಲ್ಲವೇ ಅಸ್ಪಷ್ಟವಾಗಿ ಕಾಣಿಸುವುದು ಸ್ವಾಭಾವಿಕ. ಇವ ಕಾಲಿಟ್ಟ ಊರುಗಳಲ್ಲಿ ಇವನ ಖ್ಯಾತಿ ಹ್ಯಾಗೆ ಹಬ್ಬಿತ್ತೆಂದರೆ ಅಳುವ ಮಕ್ಕಳಿಗೆ ತಾಯಂದಿರು “ಕಟ್ಟಿ ಪೋಜುದಾರನ ಕೈಯಾಗ ಕೊಡ್ತಿನ್ನೋಡ” ಎಂದು ಹೆದರಿಸುತ್ತಿದ್ದರಂತೆ! ಅದು ನಿಜವಿದ್ದೀತು; ಯಾಕೆಂದರೆ ಆ ಕರೀಮುಖದಲ್ಲಿ ಅವನ ಬಾಯಿ, ಕಣ್ಣು ಮಾತ್ರ ರಂಗು ಹೊಡೆದಂತೆ ಅಚ್ಚಕೆಂಪಗಿದ್ದವು. ಹೊಸದಾಗಿ ಪೋಜುದಾರನಾಗಿದ್ದನಲ್ಲ, ತನ್ನ ಟೊಪ್ಪಿಗೆಯ ಧೂಳನ್ನು ಮೇಲಿನಿಂದ ಮೇಲೆ ಕೊಡಹುತ್ತಿದ್ದ. ಅಷ್ಟೇ ಅಲ್ಲ-ಕಾಲ್ನಡಿಗೆ, ಹೊರಕಡೆಗೆ ಹೊರಟಾಗೆಲ್ಲ ಆ ಟೊಪ್ಪಿಗೆ ತೆಗೆದು ಒಬ್ಬ ಪೋಲೀಸನ ಕೈಗಿತ್ತು ಬಕ್ಕತಲೆಯಲ್ಲೇ ಹೋಗುತ್ತಿದ್ದ. +ಗುಡಸೀಕರ ಹಿಂದುಮುಂದಿನ ಖಬರಿಲ್ಲದೆ ಮುದುಕಪ್ಪ ಗೌಡನನ್ನು ಹಿಡಿದುಕೊಡುವ ಸೂಚನೆ ಕೊಟ್ಟೊಡನೆ ಅಕಾ ನನ್ನ ಪ್ರಿಯ ಟೊಪ್ಪಿಗೆಗೆ ಒಂದು ತುರಾಯಿಬಂತೆಂದು ಬಂದ. ಇಡೀ ದಿನ ಎಲ್ಲಿಯೂ ಮುದುಕಪ್ಪನ ಪತ್ತೆಯಾಗಲಿಲ್ಲ. ಅವನ ಫೊಟೋ ತೋರಿಸಿ ಇವನನ್ನು ಕಂಡೀರೇನೆಂದು ಅನೇಕರನ್ನು ಕೇಳಲಾಯಿತು. ಬೆದರಿಕೆ ಹಾಕಿ ನೋಡಿದರು. ಬಹುಮಾನದ ಆಸೆ ಹಚ್ಚಿ ನೋಡಿದರು. ಎಲ್ಲರೂ ನಾ ಕಂಡಿಲ್ಲ. ನೀ ಕಂಡಿಲ್ಲ. ಕಂಡವರ ಕಣ್ಣು ಕಳೆಯಲೆಂದು ಕರಿಮಾಯಿಯ ಹೆಸರುಗೊಂಡರು ಕೆಲವರು. +ತನಗೂ, ಪೋಜುದಾರನ ಈ ಧಾಳಿಗೂ ಸಂಬಂಧವಿಲ್ಲವೆಂಬಂತೆ ಗುಡಸೀಕರ ನಟಿಸಿದ. ಆದರೆ ಮುಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಮಧ್ಯಾಹ್ನ ಪೋಲೀಸರಿಗೆ ಗೌದನ ಮನೆಯಲ್ಲಿ ಊಟವಾದರೆ ಪೋಜುದಾರನಿಗೆ ಗುಡಸೀಕರನ ಮನೆಯಲ್ಲಿ ವ್ಯವಸ್ಥೆಯಾಯಿತು. ಜನ ಮನಸ್ಸಿನಲ್ಲೇ ಅವನನ್ನು ಶಪಿಸಿದರು. ಕರಿಮಾಯಿಯ ಮೊರೆಹೊಕ್ಕರು. +ಬೆಕ್ಕಿನ ಬೆದೆ +ನಿಜ ಹೇಳಬೇಕೆಂದರೆ ಕೊಳವಿಯ ಮುದುಕಪ್ಪ ಗೌಡನನ್ನು ಇತ್ತೀಚೆಗೆ ಯಾರೂ ನೋಡಿರಲಿಲ್ಲ. ಗೌಡನೊಂದಿಗೆ ಅವನ ನಂಟುತನವಿದ್ದಿದೇನೋ ಜನರಿಗೆ ಗೊತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮುದುಕಪ್ಪ ಗೌಡ ಒಮ್ಮೆ ಕೂಡ ಶಿವಾಪುರದ ಕಡೆ ಸುಳಿದಿರಲಿಲ್ಲ. ಆತ ಬಂದು ಗೌಪ್ಯವಾಗಿಯೇ ಗೌಡನ ಮನೆಯಲ್ಲಿದ್ದುದು ಗೌಡ, ದತ್ತಪ್ಪ, ಶಿವಸಾನಿ, ಲಗಮವ್ವ ಈ ನಾಲ್ವರಿಗಲ್ಲದೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಂದರಿ ಪತ್ತೆ ಹಚ್ಚುದ್ದು ಇವರಿಗೆ ಗೊತ್ತಿರಲಿಲ್ಲ. ಇದು ಗುಡಸೀಕರನ ಸಂಚೆಂದು ತಿಳಿದಾಗಂತೂ ಗೌಡ, ದತ್ತಪ್ಪ ಹೊತ್ತಿಕೊಂಡುರಿದರು. ಶಿವನಿಂಗನನ್ನು ತಡೆಹಿಡಿದದ್ದು ತಪ್ಪಾಯಿತೆಂದರು. ಇದೊಂದು ಸಲ ಪಾರಾದರೆ ನೆನಪಿಟ್ಟುಕೊಳ್ಳುವ ಹಾಗೆ ಬುದ್ಧಿ ಕಲಿಸಬೇಕೆಂದರು. ಆ ದಿನ ತಾಯಿ ದೇವರೇಸಿಯ ಮೈತುಂಬಿ ಬಿಕ್ಕಳಿಸಿದಳಂತೆ. ಹೋಗಿ ಕಾಲು ಹಿಡಿಯಲಿಕ್ಕೂ ಸಾಧ್ಯವಾಗದೇ ಹೋಯ್ತು. ಪೋಲೀಸರು ಗೌಡ, ದತ್ತಪ್ಪ ಇಬ್ಬರ ಮೇಲೂ ಕಾವಲಿದ್ದರು. ತಾಯಿ ಏನು ಹೇಳಲಿದ್ದಳೋ ಅವಳ ವಾಕ್ಯಕ್ಕೂ ಎರವಾದರು. +ಇತ್ತಲಾಗಿ ಗುಡಸೀಕರನ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ. ಸೇಡಿನ ಉದ್ರೇಕದಲ್ಲಿ ಬಸವರಾಜನಿಗೆ ಹಗ್ಗಾ ಕೊಟ್ಟು ಕೈಕಟ್ಟಿಸಿಕೊಂಡಂತಾಗಿತ್ತು. ಇಲ್ಲದಿದ್ದರೆ ಗಾಂಧೀಜಿಯ ಪರಮ ಭಕ್ತನಾಗಿ, ಸ್ವಾತಂತ್ರ್ಯ ಹೋರಾಟಗಾರರನ್ನೇ ಕೈಯಾರೆ ಕೊಡಲೊಪ್ಪಿ ದೇಶದ್ರೋಹ ಮಾಡುವುದೆಂದರೇನು? ಬೆಳಗಾವಿಯಲ್ಲಿದ್ದಾಗ ಚಳುವಳಿ ಸೇರಬೇಕಂದದ್ದು ಸುಳ್ಳೆ? ಗಾಂಧೀಜಿಯ ಸಲಹೆಯಂತೆ ಹಳ್ಳಿಗೆ ಬಂದದ್ದು ಸುಳ್ಳೆ? ಸುಳ್ಳೇನು? ಶಿವಾಪುರದಲ್ಲಿ ಚಳುವಳಿಯ ಹುಡುಗರಿದ್ದಿದ್ದರೆ ಇವನೇ ಮುಂದಾಳಾಗುತ್ತಿದ್ದ. ತಾನು ಹಲ್ಕಟ್ ದಂಧೆ ಮಾಡಿದೆನೆಂದು ತಿಳಿದದ್ದು ಪೋಜುದಾರ ಊಟಕ್ಕೆ ಬಂದಾಗ. +ಊಟಕ್ಕೆ ಕೂತಿದ್ದರಲ್ಲ, ಓಡಾಡಿ ನೀಡುತ್ತಿದ್ದ ಗಿರಿಜಾಳನ್ನು ತೋರಿಸಿ ಪೋಜುದಾರ ಇವನ ಕಂಕುಳಕ್ಕೆ ಕೈಹಾಕಿ ಕಣ್ಣು ಮಿಟುಕಿಸಿ “ಗೊಂಬ್ಯಾಗ್ಯಾಳಲ್ಲಾ!” ಎಂದ. ಇವನ ಪಿತ್ಥ ನೆತ್ತಿಗೇರಿತು. ತಡಕೊಂಡು “ಆಕಿ ನನ್ನ ತಂಗಿ” ಎಂದ. ಪೋಜುದಾರ ನಂಬಲಿಲ್ಲ. ಗುಡಸೀಕರ ತನ್ನ ತಂಗಿಯನ್ನು ಸರಿಯಾಗಿ ಗಮನಿಸಿದ್ದು ಈಗಲೇ ಎಂದು ತೋರುತ್ತದೆ. ಎದೆ ಮೀರಿ ಬೆಳೆದಿದ್ದಳು. ಕುಬಸ ತೊಟ್ಟು ಒಳಗೆ ಬಾಡಿ ಹಾಕಿದ್ದಳು. ಜೋಡು ಹೆಳಲು ಹಾಕಿ ಟೇಪು ಕಟ್ಟಿದ್ದಳು. ನೋಡಿದವರು ಇವಳು ಹಳ್ಳಿಯವಳೆಂದು ಹೇಳುವುದು ಸಾಧ್ಯವೇ ಇರಲಿಲ್ಲ. ಅವಳ ಮೇಲೂ ಸಿಟ್ಟು ಬಂತು. ಪೋಜುದಾರ ಕೆಂಪು ಕಣ್ಣರಳಿಸಿ ಬೆವರು ಸುರಿಸುವ ಕರೀ ಕೆನ್ನೆಗಳನ್ನು ಕುಣಿಸುತ್ತ ಅನ್ನದ ಅಗಳಗಂಟಿದ ಬಿಳೀ ಹಲ್ಲುಗಳಲ್ಲಿ ನಗುತ್ತ “ಸುಳ್ಳ ಯಾಕ ಹೇಳ್ತೀಯೋ? ಇಂಥಾ ಕೆಲಸದಾಗ ನಾ ಮುಳುಗಿ ಮುಳುಗಿ ಎದ್ದಾಂವ” ಅಂದ. ಈಗ ಗುಡಸೀಕರನ ಮುಖ ನೋಡಬೇಕಿತ್ತು. ಸಿಟ್ಟು ತಹಬಂದಿಗೆ ತರಲಾರದೆ ತಾಮ್ರದ ತಪ್ಪಲೆಯಂತೆ ಮುಖಮಾಡಿ “ಸಾಹೇಬರ ಒಬ್ಬರ ಮನೀಗಿ ಬಂದಾಗ ಇಂಥಾ ನಡತಿ ಚೆಲೋ ಅಲ್ಲರಿ” ಅಂದ. +ಪೋಜುದಾರನಿಗೂ ಸಿಟ್ಟುಬಂತು. “ನನಗ ನಡತಿ ಕಲಸ್ತೀಯೇನೋ? ಬೆಳಗಾವಿ ಚಿಮಣಾನ ನೀ ತಂದಿಟ್ಟುಕೊಂಡದ್ದ ನಂಗೊತ್ತಿಲ್ಲಂದಿ?” +ಊಟವಾದ ಮೇಲೆ ಮನಸ್ಸಿಲ್ಲದಿದ್ದರೂ ಪೋಜುದಾರನ ಮಲಗುವ ವ್ಯವಸ್ಥೆಯನ್ನು ಮಹಡಿಯ ಮೇಲೆ ಮಾಡಬೇಕಾಯಿತು. ಗುಡಸೀಕರನ ತಡೆದಿಟ್ಟ ಸಿಟ್ಟು ಬಸವರಾಜನ ಮೇಲೆ ಹರಿಹಾಯಿತು. ನಿನ್ನ ಮಾತು ಕೇಳಿ ಇಡೀ ಊರಿಗೆ ನಿವಾಳಿಸುವ ಪ್ರಸಂಗ ಬಂತು. ಹೆರವರ್‍ಯಾರೋ, ತನ್ನವರ್‍ಯಾರೋ ಹೋ ಎಂದು ಹಾರಾಡಿದ. ಮಾತಿಗೆ ಅವಕಾಶ ಕೊಟ್ಟು ಆಮೇಲೆ ಬಸವರಾಜು, ತನ್ನ ಸಹಜ ಬುದ್ಧಿವಂತಿಕೆ ಬಿಚ್ಚಿದ. ಪೋಜುದಾರ ನೀಚನೇ, ಇನ್ನೇನು ಸಜ್ಜನನಾಗಿರಬೇಕೆ? ನಮ್ಮ ಕೆಲಸ ಮುಖ್ಯ. ಮುದುಕಪ್ಪನ ಜವಾಬ್ದಾರಿ ನನಗಿರಲಿ. ಈಗ ಇದನ್ನೋದು ತಿಳಿಯುತ್ತದೆ; ನಾ ಯಾರೆಂದು ಎನ್ನುತ್ತ ಕಿಸೆಯಲ್ಲಿಯ ಒಂದು ಕಾಗದ ತೆಗೆದ. +ಅದು ಮೆಹರ್ಬಾನ ಪೋಜುದಾರ ಸಾಹೇಬರ ಪಾದಾರವಿಂದಕ್ಕೆ ಚಿಮಣಾ ಸುಂದರಬಾಯಿ ಬರೆದ ವಿನಂತಿಯ ಅರ್ಜಿಯಾಗಿತ್ತು. ಗೌಡ, ಗೌಡನ ಮಗ, ಶಿವನಿಂಗ, ಇಬ್ಬರೂ ಸೇರಿ ತನ್ನನ್ನು ಬಲಾತ್ಕರಿಸಿ ಬಸಿರು ಮಾಡಿದ್ದಾರೆಂದೂ, ತನ್ನ ಹಾಗೂ ಗರ್ಭದ ಕೂಸಿನ ಜೀವನೋಪಾಯಕ್ಕೆ ಆಧಾರ ಮಾಡಬೇಕೆಂದೂ ಚಿಮಣಾ ಕೈಮುಗಿದು ಕೋರಿದ್ದಳು. ಕೆಳಗೆ ಸದರಿ ಅರ್ಜಿದಾರಳ ಸಹಿ ಇತ್ತು. ಶಿವನಿಂಗನ ಹೆಸರು ಸೇರಿದ್ದಕ್ಕೆ ಗುಡಸೀಕರನ ಸೇಡಿನ ಹೆಡೆಯಾಡಿ ಸೈಯೆನಿಸಿತು. ಬಾಕಿ ತಾನು ನೋಡಿಕೊಳ್ಳುವುದಾಗಿ ಬಸವರಾಜು ಬಲಗೈ ಭಾಷೆಕೊಟ್ಟ. +ಪೋಜುದಾರ ಏಳುವ ಸಮಯಕ್ಕೆ ಸರಿಯಾಗಿ ಬಸವರಾಜು ಹೋದ ಹತ್ತುಸಲ ಹಲ್ಲು ಗಿಂಜಿ ಅರ್ಜಿಕೊಟ್ಟ. ಮುದುಕಪ್ಪ ಗೌಡ ಸಿಕ್ಕದಿದ್ದ ನಿರಾಸೆಯಲ್ಲಿದ್ದ ಕಟ್ಟಿ ಸಾಹೇಬರ ಕಣ್ಣು ಪಳ ಪಳ ಹೊಳೆದವು. ಹೆಣ್ಣಿನ ಕೇಸುಗಳೆಂದರೆ ಅವನಿಗೆ ಪಂಚಪ್ರಾಣ. ಊಟಕ್ಕೆ ಕೂತಿದ್ದಾಗ ಚಿಮಣಾಳಂಥವಳನ್ನು ನೋಡಿದ್ದ ಬೇರೆ. ಅರ್ಜಿಯನ್ನು ಕೆಳಗಿನ ಚಿಮಣಾಳಿಗೆ ಕೇಳಲೆಂಬಂತೆ ಜೋರಿನಿಂದ ಓದಿದ. ಕೆಳಗಡೆ ಕಟ್ಟೆಯ ಮೇಲೆ ನಿಂಗೂ ಕೂತಿದ್ದವನು ಕೇಳಿ ಗೌಡನ ಮನೆಯ ಕಡೆಗೋಡಿದ. +ರಾತ್ರಿ ಖಾವಂದ ಕಟ್ತಿ ಪೋಜುದಾರ ಸಾಹೇಬ ದರ್ಬಾರು ಕರೆದ.ಹಿರುಯರು ಬಂದರು. ಕೈಯಲ್ಲಿಯ ಕೋಲನ್ನು ಅತ್ತಿತ್ತ ಆಡಿಸುತ್ತ ಪೋಜುದಾರ “ಸುಂದರಾ ಬಾಯೀನ ಕರಸು” ಎಂದ. ಗೌಡನಿಗೆ ಸುಂದರಾಬಾಯಿ ಯಾರೆಂದು ತಿಳಿಯಲಿಲ್ಲ. ಊರಿನಲ್ಲಿ ಆ ಹೆಸರಿನವರು ಯಾರೂ ಇದ್ದಂತಿರಲಿಲ್ಲ. ಅನುಮಾನಿಸುತ್ತ “ಯಾವ ಸುಂದರಾಬಾಯಿ?” ಎಂದು ಹೇಳುತ್ತಿರುವಂತೆಯೇ ದತ್ತಪ್ಪ “ಅದ, ಗುಡಿಸ್ಯಾ ತಂದಿಟ್ಟುಕೊಂಡಾನಲ್ಲ. ಚಿಮಣಾ” ಎಂದ. ಅವಳನ್ನು ಕರೆತರಲು ಹಳಬ ಓಡಿದ, ವಿಷಯವೇನೆಂದು ಗೌಡ, ದತ್ತಪ್ಪ ಇಬ್ಬರಿಗೂ ಹೊಳೆಯಿತು. ಸುಂದರಿ ಬಸಿರಾದ್ದನ್ನು ಯಾರೋ ಮೂಕರ್ಜಿ ಮಾಡಿ ತಿಳಿಸಿದ್ದು ಖಾತ್ರಿಯಾಯ್ತು. ಗೌಡನಿಗೆ ಇದ್ದದ್ದೂ ದಿಗಿಲು. ಹಾಗೇನಾದರೂ ಬಂದಿದ್ದರೆ ನಮ್ಮ ನಾವೇ ತೀರಿಸಿಕೊಳ್ಳಬಹುದಾಗಿತ್ತು. ಯಾವ ಚಂಡಾಲರು ಮೂಕರ್ಜಿ ಕೊಟ್ಟಿದ್ದಾರೋ ಎಂದು ಗೌಡ ಚಿಂತಿಸಿದರೆ ದತ್ತಪ್ಪನಿಗೆ ಒಳಗೊಳಗೇ ಖುಷಿಯಾಗಿತ್ತು. ಗುಡಿಸ್ಯಾ ಇದರಿಂದಾದರೂ ಹಣ್ಣಾಗುತ್ತಾನಲ್ಲಾ ಎಂದು. ಅಷ್ಟರಲ್ಲಿ ಗುಡಸೀಕರ ಚತುಷ್ಟಯರೊಂದಿಗೆ ಬಂದ. ಅವನ ನಿರ್ಮಲ ಮುಖನೋಡಿ ದತ್ತಪ್ಪನಿಗಿನ್ನೂ ನಗೆ ಬಂತು. ದೂರದಲ್ಲಿ ಜನ ಗುಂಪಾಗಿ ನಿಂತಿದ್ದರು. “ಸುಂದರಾಬಾಯಿ ಬರಲಿಲ್ಲೇನು?” ಎಂದು ಪೋಜುದಾರ ಗುಡುಗಿದ. ಸುಂದರಿ ಆಗಲೇ ಬಂದಿದ್ದಳು. ಆದರೆ ಯಾರೂ ಗಮನಿಸಿರಲಿಲ್ಲ. ಜನಗಳಲ್ಲಿ ನಿಂತಿದ್ದ ಬಸವರಾಜೂನನ್ನು ಗುಡಸೀಕರ ಕರೆದು ಚಾವಡಿಯಲ್ಲಿ ಅವನಿಗಿಷ್ಟು ಕೂರಲು ಸ್ಥಳ ಕೊಟ್ಟ. ಸುಂದರಿ ಬಂದುದನ್ನು ತಿಳಿಸಿದವನೂ ಗುಡಸೀಕರನೇ, “ಶಿವನಿಂಗ ಅಂಬಾಂವೆಲ್ಲಿ?” ಎಂದು ಪೋಜುದಾರ ಗುಡುಗಿದ. ಹಳಬ ಮತ್ತೆ ಓಡಿದ. ಶಿವನಿಂಗನಿಗಾಗಿ ಕಾಯದೆ ವಿಚಾರಣೆ ಸುರುವಾಯ್ತು. ಪೋಜುದಾರನ ಮೊದಲನೇ ನುಡಿಗೇ ಎಲ್ಲರಿಗೂ ಆಘಾತವಾಯ್ತು. +“ಏನೋ ಗೌಡಾ, ಊರಿಗಿ ಹಿರ್‍ಯಾ ಆಗಿ ನೀನಽ ಇಂತಾ ಹಲಕಟ್ ದಂಧಾ ಮಾಡೋದಾ?” +“ಯಾಕ ಏನಾತ್ರಿ?” +“ಅರೇದವನ್ಹಾಂಗ ಆಡಬ್ಯಾಡ. ಚಿಮಣಾ ಬಾಯೀನ ನೀನೂ, ನಿನ್ನ ಮಗ ಕೂಡಿ ಬಸರ ಮಾಡಿದ್ದ ಎಷ್ಟು ದಿನ ಮುಚ್ಚಿಟ್ಟುಕೋಬೇಕಂತಿದ್ದಿ?” +ಈ ಮಾತು ಕೇಳಿ ಎಲ್ಲರಿಗೂ ಅಸಮಧಾನವಾಯ್ತು. ಕುಸ್ತಿ ಹುಡುಗರಾಗಲೇ ಕುದಿಯತೊಡಗಿದ್ದರು. ಗೌಡ ಬಾಯಿ ತೆಗೆಯುವುದರೊಳಗೆ ದತ್ತಪ್ಪನೇ ಮಾತಾಡತೊಡಗಿದ. +“ಏನಂಬೋ ಮಾತರಿ ಇದು? ಕರಕೊಂಬಂದಾವ ಗುಡಿಸ್ಯಾ. ಗೌಡರಿಗಿ ಆಕೀ ಹೆಸರ ಸೈತ ಗೊತ್ತಿಲ್ಲ. ಬಸರ ಮಾಡೋದಂದರೇನ್ರಿ?” +“ನಡುವ ಬಾಯಿ ಹಾಕಾಕ ನೀ ಯಾರಲೆ?” +ಸಿಟ್ಟು ಎಲ್ಲರ ನೆತ್ತಿಗೇರಿತು. ಪೋಜುದಾರನಿಗೆ ಇನ್ನೂ ಹೆಚ್ಚು. ತನ್ನ ಗಂಡಸು ದನಿಗೆ ಅಧಿಕಾರದ ಮದ ಬೆರೆಸಿ, ಮಾತಿಗೊಮ್ಮೆ ಲೇ ಎನ್ನುತ್ತ ಒದರಾಡತೊಡಗಿದ. “ಗೌಡ ಮಾಡಿಲ್ಲದೇ ಹೋದಲ್ಲಿ ಸ್ವಥಾ ಅರ್ಜಿ ಯಾಕ ಹಾಕಲಿಲ್ಲ?” ಅಂದ. “ಪರವೀರವಳ ಬಗ್ಗೆ ತಾ ಯಾಕೆ ಅರ್ಜಿ ಹಾಕಬೇಕೆಂದು” ಗೌಡ ಕೇಳಿದ. “ಪರವೂರವಳಾದ ಮಾತ್ರಕ್ಕೆ ಅನ್ಯಾಯ ಆಗಬಹುದೋ?” ಎಂದು ಪೋಜುದಾರ ಕೇಳಿದ. “ಅದು ಕರೆತಂದವರ ಜವಾಬ್ದಾರಿ” ಎಂದು ಗೌಡ ಹೇಳಿದ. “ಅವಳನ್ನು ಕರೆತಂದವರ್‍ಯಾರು, ಆಕೆ ಜೊತೆ ವ್ಯವಹಾರ ಇದ್ದವರ್‍ಯಾರು ಅಂತ ಊರಂತೂರು ಗೊತ್ತಿದ್ದ ವಿಚಾರ. ವಿಚಾರಿಸಬಹುದಲ್ಲ” ಎಂದು ದತ್ತಪ್ಪ ಹೇಳಿದ. ಇಷ್ಟೆಲ್ಲ ಮಾತು ಚಕಮಕಿಯ ಕಿಡಿಯಂತೆ ಹಾರಿ ಹೋಗುತ್ತಿದ್ದವು. ತನ್ನ ಕೈಕೆಳಗಿನ ಗೌಡ ಕುಲಕರ್ಣಿಗಳಿಂದ ಈ ರೀತಿಯ ಅವಿಧೇಯತೆಯನ್ನು ಪೋಜುದಾರ ನಿರೀಕ್ಷಿಸಿರಲಿಲ್ಲ. ಮುಖದ ಮೇಲೇ ಸ್ಪಷ್ಟವಾಗಿ ಮಾತಾಡತೊಡಗಿದ್ದರು. ಪೋಜುದಾರನಿಗೆ ತನ್ನ ಮೀಸೆ ಬೋಳಿಸಿ ಕೈಗಿಟ್ಟಷ್ಟು ಅವಮಾನವಾದಂತಾಗಿತ್ತು. ಬುಸುಗುಡಲಾರಂಭಿಸಿದ. “ನೀನೇನಂತಿ?” ಎಂದು ಗುಡಸೀಕರನತ್ತ ತಿರುಗಿದ. ಗುಡಸೀಕರ ಎದ್ದು ಚಾವಡಿಯ ಮಧ್ಯೆ ಬಂದು, +“ಮೆಹರ್ಬಾನ್ ಪೋಜುದಾರ ಸಾಹೇಬರೇ, ಊರ ಹಿರುಯರೆ, ಅಣ್ಣತಮ್ಮಂದಿರೆ, ಅಕ್ಕ ತಂಗಿಯರೆ….” +ಎಂದು ಭಾಷಣ ಸುರುಮಾಡಿದ. ಪೋಜುದಾರನಿಗೆ ವಿಶ್ರಾಂತಿ ಬೇಕಿತ್ತೆಂದು ತೋರುತ್ತದೆ. ಅವನನ್ನು ತಡೆಯಲಿಲ್ಲ. ಇನ್ನು ಗುಡಸೀಕರನನ್ನು ತಡೆಯುವವರ್‍ಯಾರು? ಅದೇ ಗೊತ್ತಲ್ಲ. “ಇಂಡಿಯಾ ದೇಶ, ಹಳ್ಳಿಗಳ ದೇಶದಿಂದ ಸುರುವಾಗಿ ಪಂಚಾಯ್ತಿಯವರೆಗೆ ಬಂದು, ತಾನು ಊರ ಮುಂದೆ ತರೋದಕ್ಕೆ ಪ್ರಯತ್ನಿಸಿದ್ದು, ಹಿರಿಯರು ಅವನ ಕಾಲುಹಿಡಿದು ಹಿಂದೆಳೆದದ್ದು, ಪಂಚಾಯ್ತಿ ಹಿಂದಿರುಗಿಸಲೆಂದು ಕೇಳಿದ್ದು, ಎಲೆಕ್ಷನ್ ಆಗಲೆಂದು ತಾ ಹೇಳಿದ್ದು…. ಇತ್ಯಾದಿ ಇತ್ಯಾದಿ. ಪೋಜುದಾರನ ತಾಳ್ಮೆ ತಪ್ಪಿ “ಲಗು ಮುಗಸಪಾ” ಎಂಬ ಸೂಚನೆ ಬಂತು. “ತನ್ನನ್ನು ಎಲೆಕ್ಷನ್ನಿನಲ್ಲಿ ಸೋಲಿಸೋದಕ್ಕೆ ಗೌಡ ಇಂಥ ಅಪವಾದ ತನ್ನ ಮೇಲೆ ಹೊರಿಸುತ್ತಿದ್ದಾನೆ ಎಂದು ಹೇಳಿದ. ಕೂಡಿದವರು ತಂತಮ್ಮಲ್ಲಿ ತಲೆಗೊಂದು ಮಾತಾಡಿಕೊಂಡರು. ಬೇಕಾದರೆ ಪೋಜುದಾರನೇ ಇವರನ್ನು ನಿಯಂತ್ರಿಸಲೆಂದು ಗೌಡ ಸುಮ್ಮನಾದ. ದತ್ತಪ್ಪನೂ ಅಷ್ಟರಲ್ಲಿ ಕೂಡಿದ ಮಂದಿಯೊಳಗಿಂದ ನಿಂಗೂ ಜಿಗಿದು ಬಂದು ಪೋಜುದಾರನ ಎದುರು ನಿಂತ. ಒರಟು ದನಿಯ ಹೆಣ್ಣು ವೇಷದ ಇವನನ್ನು ನೋಡಿ ಆ ಬಿಗಿ ವಾತಾವರಣದಲ್ಲೂ ಪೋಜುದಾರನಿಗೆ ಮೋಜೆನಿಸಿತು. ಆವೇಶ ಬಂದವನಂತೆ ಎತ್ತರದ ದನಿಯಲ್ಲಿ” ಅಲ್ಲಪಾ ಸರಪಂಚಾ, ನೀನಽ ಆಕೀನ್ನ ತಂದ ಇಟ್ಟಕೊಂಡಿದೀ. ದಿನಾ ಆಕೀ ಸೀರೀ ಸೆರಗಿನ್ಯಾಗ ಉಳ್ಳಾಡತಿ, ಗೌಡ್ರ ಬಸರ ಮಾಡ್ಯಾರಂತ, ಹೇಳಾಕ ಬಂದಿ. ಮ್ಯಾಲ ಶಿವನಿಂಗನ ಹೆಸರೂ ಸೇರಿಸಿದಿ. ತಿಳೀಬಾರದ? ಯಾರಾದರೂ ನಂಬೂ ಮಾತಽ ಇದು? ನೋಡೋಣು, ಈ ಮಂದ್ಯಾಗ ಒಬ್ಬರ ಬಾಯಾಗಾದರೂ ಈ ಮಾತ ಹೊಂಡಸು, ಗಂಡಸಂತೀನಿ.” +ಅಂದ. ಇಂಥ ಮಾತನ್ನು ಗುಡಸೀಕರ ಮೊದಲೇ ನಿರೀಕ್ಷಿಸಿದ್ದನೆಂದು ತೋರುತ್ತದೆ. “ಯಾರ ಬಾಯಾಗ ಯಾಕ ಹೊಂಡಸಬೇಕೂ? ಆಕೀ ಗೌಡನ ತೊಡೀಮ್ಯಾಲ ತಲೀ ಇಟ್ಟಾ ಮಲಗಿದ್ದ ಖುದ್ದ ನಾನಽ ನೋಡೀನಿ. ಬೇಕಂದರ ಬಸವರಾಜೂನ.” +ಓತಿಕ್ಯಾತಿಗೊಂದು ಬೇಲಿ ಸಾಕ್ಷಿ. ಈಗ ಗೌಡ ಬಾಯಿ ಬಿಡಲೇ ಬೇಕಾಯಿತು. ಎದ್ದುನಿಂತು ಪೋಜುದಾರನ ಕಡೆಗೊಮ್ಮೆ. ಜನರ ಕಡೆಗೊಮ್ಮೆ ಮುಖಮಾಡಿ, ಆಗಾಗ ಎರಡೂ ಕೈ ಜೋಡಿಸುತ್ತ, ಅಂದಿನ ಘಟನೆಯನ್ನು ವಿವರಿಸತೊಡಗಿದ. ಗೌಡನಿಗೆ ಈ ರೀತಿ ಮಾತಾಡುವ ಅವಕಾಶ ಕೊಡುವುದು ಗುಡಸೀಕರನಿಗೆ ಬೇಕಿರಲಿಲ್ಲ. ಪೋಜುದಾರ ಗೌಡನನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಗೌಡನ ಪ್ರತಿ ಮಾತಿಗೂ ಸತ್ಯದ ಹೊಳಪಿತ್ತು, ಹರಿತವಿತ್ತು. ಸತ್ಯವೇ ಹಾಗೆ. ಜನರ ಕಣ್ಣಲ್ಲಂತೂ ಗುಡಸೀಕರ ಪುಡಿ ಪುಡಿಯಾಗಿಬಿಟ್ಟ. ಆಗಾಗ ತಡೆಯುವುದಕ್ಕೆ ಯತ್ನಿಸಿ ಸೋತ. ಗೌಡ ಕೊನೆಗೆ- +ನೋಡ್ರಿ ಸಾಹೇಬರ ಆದದ್ದ ಹಿಂಗ. ಈ ಮಾತಿಗೆ ಎರಡಿದ್ದರ ಕರಿಮಾಯಿ ನನ್ನ ನಾಲಿಗಿ ಸೀಳಲಿ. ಬೇಕಾದರ ದತ್ತೂನ ಕೇಳ್ರಿ. ಲಗಮವ್ವನ ಕೇಳ್ರಿ. ಗುಡಿಸ್ಯಾನ ಮ್ಯಾಲ ನಮಗ್ಯಾಕ್ರಿ ಸಿಟ್ಟು ಬರಬೇಕು? ಸಿಟ್ಟಿದ್ದಿದ್ದರ ನಾವಽ ಕರದ ಪಂಚಾಯ್ತಿ ಅವನ ಕೈಯಾಗಿಡತಿದ್ದಿವ?” +ಎಂದ. ಇದನ್ನು ಕೇಳಿ ಮಂದಿಯ ಅಂಚಿಗಿದ್ದ ಲಗಮವ್ವನೇನು ಅನೇಕರು ಕರಗಿ ಕಣ್ಣಿರು ತಂದರು. +ಹಿಂದಿನ ಎಲ್ಲ ಕೇಸುಗಳಲ್ಲಿಯಂತೆ ಇಲ್ಲಿಯೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗನ್ನಿಸಿತು. ಸ್ವಥಾ ಪೋಜುದಾರನೂ ಆರ್ದ್ರನಾಗಿದ್ದಂತೆ ತೋರಿತು. ಕೂಡಲೇ ಆವೇಶ ತಾಳಿ ಹೆದರಿದವರು ಕಿರಿಚಿ ಮಾತಾಡುವಂತೆ ಒದರಿದ: +“ಇಂಥಾ ಬಣ್ಣದ ಮಾತು ಮೆಹರ್ಬಾನ ಸಾಹೇಬರ ಮುಂದ ಆಡ್ತೀಯೇನೋ ಗೌಡಾ? ಅವರಿಗೆಲ್ಲಾ ತಿಳಿತೈತಿ. ಸಾಹೇಬರಽ ಬೇಕಾದ್ರ ಸುಂದರೀಬಾಯಿ ಇಲ್ಲೇ ಇದ್ದಾಳ ಆಕೀನ್ನಽ ಕೇಳ್ರಿ. ಹೇಳತಾಳ ಇವನ ಅವತಾರ.” +ಕೆಲದಿನಗಳ ಹಿಂದೆ ಬಸವರಾಜು ತನ್ನಿಂದ ಬಸಿರಿಳಿಯುವ ಮದ್ದು ಒಯ್ದ ಕಾರಣ ಸ್ಪಷ್ಟವಾಯ್ತು ನಿಂಗೂನಿಗೆ. ಆ ಉದ್ರೇಕದಲ್ಲಿ ಗಪ್ಪನೆ ಪೋಜುದಾರನ ಮುಂದೆ ಕೂತು ನೆಲ ಬಾರಿಸುತ್ತ, +“ಸಾಹೇಬರ ಇದರ ಹಕೀಕತೆಲ್ಲ ನನಗ ತಿಳೀತ್ರಿ”ಅಂದ. ಇವನ ಮಾತು ಕೇಳುವ ತಾಳ್ಮೆ ಪೋಜುದಾರನಿಗಿರಲಿಲ್ಲ. +“ಬಾಯ್ಮುಚ್ಚತೀಯೋ? ಇಲ್ಲಾ ಲಗಾಸಂತಿಯೋ?” +“ಕೇಳಿದಮ್ಯಾಲ ಬೇಕಾದರ ಲಗಾಸರಿ. ಹಲಿವುಳಿಯೋಮದ್ದ ಬಸವರಾಜೂಗ ಸ್ವಥಾ ನಾನ ಕೊಟ್ಟಿದ್ನಿ. ಅಂದಽ ಚಿಮಣಾಗ ಕೊಟ್ಟಿದ್ದ. ಗೌಡರ ಹೇಳಿದ್ದೆಲ್ಲಾ ಅಂದಽ ನಡದೈತ್ರಿ.” +ಕೂಡಿದ ಮಂದಿಗೆಲ್ಲ ಖಾತ್ರಿಯಾಗಿಬಿಟ್ಟಿತ್ತು. ಗುಡಸೀಕರನ ಪಿತ್ಥ ನೆತ್ತಿಗೇರಿತು. “ಸ್ವಥಾ ಬಸರದಾಕೀನ ಬಿಟ್ಟ ಇದೆಲ್ಲಿ ಸಾಕ್ಷಿ ಕೇಳಾಕ ಹತ್ತಿದಿರಿ?” ಎಂದು ಪೋಜುದಾರನಿಗೆ ಸಿಟ್ಟು ಮಾಡಿದ. ಪೋಜುದಾರನಿಗೂ ತನ್ನ ಅಧಿಕಾರದ ನೆನಪಾಯಿತು. +“ಯಾಕಲೇ ಹಲಿವುಳಿಯೋ ಮದ್ದ ಕೊಡೋದು ಬೇಕಾಯ್ದೀಶೀರುನ್ನೋದ ಗೊತ್ತಿಲ್ಲ? ಮೊದಲ ನಿನ್ನಽ ಜೇಲಿಗೆ ಹಾಕತೀನಿ ತಡಿ: ಆ ಮ್ಯಾಲ ಅವರನ್ನ ನೋಡಿಕೊಳ್ತೀನಿ? ಎಲ್ಲಿ ಆ ಹೆಂಗಸು?” +ಎಂದು ಸುಂದರಿಯನ್ನು ಮುಂದೆ ಕರೆತರುವಂತೆ ಸನ್ನೆ ಮಾಡಿದ. ಈತನಕ ಮೂಲೆಯಲ್ಲಿ ಹುದುಗಿದ ಸುಂದರಿ ಮುಂದೆ ಬಂದಳು. ಪೋಜುದಾರನ ಕೌತುಕವೆಲ್ಲ ಸೋರಿಹೋಯಿತು. ಇವಳು ಇಂದು ಮಧ್ಯಾಹ್ನ ಊಟ ನೀಡಿದವಳಾಗಿರಲಿಲ್ಲ. ಉಳಿದವರೆಲ್ಲ ಉಸಿರು ಬಿಗಿಹಿಡಿದು ಅವಳನ್ನೇ ನೋಡುತ್ತಿದ್ದರು. ಆಕೆ ಗುಡಸೀಕರನಂತೆ ಹೇಳುವುದರಲ್ಲಿ ಸಂಶಯವಿರಲಿಲ್ಲ. ದಿನಾ ಅವನ ಅನ್ನ ಉಂಡವಳು, ಮೈಯುಂಡವಳು ಇನ್ನು ಹ್ಯಾಗೆ ಹೇಳ್ಯಾಳು? ಕೆಲವರಾಗಲೇ ಗೊಣಗಿದರು ಕೂಡ. ಅದು ಪೋಜುದಾರನಿಗೆ ನಿಲುಕಲೇ ಇಲ್ಲ. ಈ ಮಧ್ಯೆ ನಿಂಗೂ ಯಾವಗಲೋ ಮಾಯವಾಗಿದ್ದ. ಸುಂದರಿ ಮುಂದೆ ಬಂದು ತಲೆಬಾಗಿ ನಿಂತಳು. +“ಏನಽ ಬರೋಬರಿ ಹೇಳ, ನೀ ಬಸರಾದ್ದದ್ದ ಯಾರಿಗೆ?” ಏನು ಹೇಳುತ್ತಾಳೆಂದು ಎಲ್ಲರೂ ತುಟಿ ಬಿಗಿಹಿಡಿದು ನಿಂತರು. ಸುಂದರಿ ಮೆಲ್ಲಗೆ “ಗೌಡಗ” ಎಂದು ಹೇಳಿ ಗೌಡನ ಕಡೆ ಬೆರಳುಮಾಡಿ ತೋರಿಸಿ ಮತ್ತೆ ತಲೆ ಕೆಳಗೆ ಹಾಕಿದಳು. ಇದು ಸಮೀಪದವರಿಗೆ ಕೇಳಿಸಿತು, ದೂರಿದ್ದವರಿಗೆ ಕೇಳಿಸಲಿಲ್ಲ. ತಂತಮ್ಮಲ್ಲೇ ಏನಂದ್ಲು ಏಮಂದ್ಲೆಂದು ಗೊಂದಲ ಹಾಕುತ್ತಿರುವಾಗ ಲಗಮವ್ವ “ಥೂ ಬೆಕ್ಕಿಗೆ ಬೆದಿ ಕಲಿಸೋ ರಂಡೆ” ಎಂದು ಕರ್‍ಕರ್‍ಕ್ಕೆಂದು ಲಟಿಕೆ ಮುರಿದಳು. ಎಲ್ಲರ ಅಸಮಧಾನಕ್ಕೆ ಕೊಳ್ಳಿಯಿಟ್ಟಂತಾಗಿ “ಛೇ ಛೇ ಹಾಹೋ” ಸುರುವಾಯಿತು. ಪೋಜುದಾರ ಬಾಯಿ ಹಾಕಲಿಲ್ಲ. ಇದ್ದುದರಲ್ಲಿ ಗುಡಸೀಕರ ಹುರುಪಾದ. ಚತುಷ್ಟಯರು ಕೈ ಕಟ್ಟಿಕೊಂಡು, ತುಟಿ ಹೊಲಿದುಕೊಂಡು, ಸಾಲೆ ಮಕ್ಕಳಂತೆ ಕುಳಿತಿದ್ದರು. ಅವರ ಪೈಕಿ ಸ್ವಲ್ಪ ಲವಲವಿಕೆಯಿದ್ದವನು ಕಳ್ಳ. ಅದಕ್ಕೆ ಕಾರಣವಿತ್ತು. ಈಗಷ್ಟೇ ನಿಂಗೂ ಧೈರ್ಯದ ಮಾತಾಡಿ ಹೋಗಿದ್ದನಲ್ಲ. ಅಷ್ಟೂ ಜನರಿಗಿಲ್ಲದ ಅವನ ಧೈರ್ಯ, ಪೇಟೆ ಸೂಳೆಯರಂಥ ಅವನ ಹಾವಭಾವ, ನೋಡಿ ಕಳ್ಳ ಭಲೆ ಭಲೆ ಎಂದು ಜಿಲ್ಲು ಸುರಿಸಿದ. ಎದೆಗಾರಿಕೆಯ ಸಪಾಟಾದ ಅವನೆದೆಗೆ ಉಬ್ಬು ಮೂಡಿಸುವ ವ್ಯವಸ್ಥೆ ಮಾಡಿದರೆ ಅವಳ ರೂಪ ಹೆಂಗಾಗುವುದೆಂದು ಧ್ಯಾನಿಸುತ್ತಿದ್ದ. ಈಗ ಅವನ ಹ,ಬಲದ ಸುದ್ದಿ ಯಾಕೆ? +ಜನ ಬೇಕಾಬಿಟ್ಟಿ ಮಾತಾಡಿಕೊಂಡರು. ಪೋಜುದಾರ ಜನರನ್ನು ಸುಮ್ಮನಾಗಿಸುವ ಗೋಜಿಗೆ ಹೋಗಲೇ ಇಲ್ಲ. ಹಾಹೋ ಗದ್ದಲದಲ್ಲಿಯೇ ಯಾರಿಗೆ ಕೇಳಿಸ್ತೋ, ಯಾರಿಗಿಲ್ಲವೋ ತನ್ನ ತೀರ್ಮಾನ ಒದರಿಬಿಟ್ಟ. ಗೌಡ ಸುಂದರಿಗೂ, ಅವಳ ಕೂಸಿಗೂ ಎರಡೆಕರೆ ಜಮೀನು ಬರೆದು ಕೊಡತಕ್ಕದ್ದು. ಇಷ್ಟು ಹೇಳಿ ಥಟ್ಟನೆ ಎದ್ದುಹೋದ. +ಮಾಯವಾದ +ಚಾವಡಿಯಲ್ಲಿ ಹೀಗಾಗುತ್ತಿರಬೇಕಾದರೆ ಇತ್ತ ಚಿನ್ನದ ಕೂಸು ಕಣ್ಮರೆಯಾಯಿತು. +ಸಾಯಂಕಾಲ ನಿಂಗೂನಿಂದ ಸುದ್ದಿ ತಿಳಿದ ಶಿವನಿಂಗ ಹತಾಶನಾಗಿ ಕೈಕಾಲು ಕಳೆದುಕೊಂಡು ಬಿಟ್ಟ. ಆ ರಂಡೆ ವಿಶ್ವಾಸಘಾತ ಮಾಡಿದಳು, ಅಂದುಕೊಂಡ. ಈ ಪೋಜುದಾರ ಹೋಗಲಿ, ಅವಳನ್ನು ಸಿಗಿದು ಚರ್ಮ ಸುಲಿಸುತ್ತೇನೆ; ಅದಾಗಿ ಈಗ ಊರಿಗೆ ಮುಖ ತೋರಿಸೋದು ಹ್ಯಾಗೆ? ಅಪ್ಪನೆದುರು ಮುಖ ಕೊಟ್ಟು ಮಾತಾಡೋದು ಹ್ಯಾಗೆ? ಗುಡಿಸ್ಯಾ ಒಬ್ಬ ಗಂಡಿಗ್ಯಾ ಅಂದ. ಅವನ ಕಾಲು ಮುರಿದು ಕೈಗೆ ಕೊಡಬೇಕಂದ. ಗುಡಿಸ್ಯಾನನ್ನು ಇಷ್ಟು ಬೆಳೆಯಗೊಟ್ಟ ಅಪ್ಪನಿಗೆ ಆಡಿದ, ಬುದ್ಧಿ ಹೇಳದ ದತ್ತಪ್ಪನಿಗೆ ಅಂದ. ಮುದಿಗೊಡ್ಡುಗಳೆಂದು ಬೈದ. ತನ್ನಿಂದಾಗಿ ಗೌಡ ಮನೆತನ ತೋರುಬೆರಳಿಗೆ ಗುರಿಯಾಗುವಂತಾಯಿತಲ್ಲಾ ಎಂದು ಹಣೆ ಹಣೆ ಹೊಡೆದುಕೊಂಡ. ಮನೆಯತ್ತ ಪೋಲೀಸರು, ತೋಟದಲ್ಲಿ ಪೋಲೀಸರು ಎಲ್ಲಿ ಅಡಗಲಿ, ಎಲ್ಲಿ ಈ ಹಾಳು ಮುಖ ಮುಚ್ಚಿಕೊಳ್ಳಲೆಂದು ಬೋನಿಗೆ ಸಿಕ್ಕ ಹುಲಿಯ ಹಾಗೆ ಹಾಯ್ ಹಾಯ್ ಮಾಡುತ್ತ ಹರಿದಾಡಿದ. ಪೋಜುದಾರನ ಮುಂದೆ ನಡೆಯುವ ಪಂಚಾಯ್ತಿ: ಊರವರೆದುರು ನಿಲ್ಲುವಂಥ ತನ್ನನ್ನ ನೆನೆಸಿಕೊಂಡು ಚಡಪಡಿಸಿದ. ಸ್ವಲ್ಪ ಕತ್ತಲಾದೊಡನೆ ತೋಟದ ಕಡೆ ಹೋದವನು ಹ್ಯಾಗೋ ಪೋಲೀಸರ ಕಣ್ಣುತಪ್ಪಿಸಿ, ಯಾವುದೋ ಮಾಯೆಯಿಂದ ಮಾಯವಾದ. +ರಾತ್ರಿ ಎಷ್ಟಾಗಿತ್ತೋ, ಪೌಳಿಯ ಹಿಂಬದಿಯ ಗೋಡೆ ಹಾರಿ ಕರಿಮಾಯಿ ಗುಡಿಹೊಕ್ಕ. ಬಗ್ಗಿಕೊಂಡೇ ಒಳಗೆ ಸರಿದ. ಒಳಗೆ ಕತ್ತಲಿತ್ತು. ಕರಿಮಾಯಿ ಮೂರ್ತಿಯ ಹಿಂದೆ ಕೂರೋಣವೆಂದು ಸರಿಯುತ್ತಿರುವಾಗ “ಯಾರವರಾ” ಎಂದು ಕೇಳಿಸಿತು. ಹುಡುಗ ಬೆಚ್ಚಿದ. ಮತ್ತೆ ಯಾರಪ್ಪಾ ನೀನು? ಎಂದದ್ದು ಕೇಳಿಸಿತು. ದನಿ ಗುರುತು ಹತ್ತಿ ಕೊಳವಿಯ ಮುದುಕಪ್ಪ ಗೌಡನೆಂದು ಗೊತ್ತಾಯಿತು. “ನಾ-ಎಜ್ಜಾ ಶಿವನಿಂಗ” ಎಂದು ಹತ್ತಿರ ಸರಿದ. +“ಯಾಕೋ ತಮ್ಮಾ, ನಿಮ್ಮಪ್ಪ ಏನಾರ ಹೇಳಿಕಳಿಸ್ಯಾನೇನು?” +“ಏನಿಲ್ಲೆಜ್ಜಾ” +“ಮತ್ತ ನೀ ಯಾಕ ಹಿಂಗ ಕಳ್ಳರ್‍ಹಾಂಗ ಬಂದ್ಯೋ ಹುಡುಗಾ?” ಶಿವನಿಂಗ ಸುಮ್ಮನಾದ. ಮುದುಕಪ್ಪನೂ ಮಾತು ಬೆಳೆಸಲಿಲ್ಲ. ಚಿಮಣೀ ಮಾಡದ ಕಾಡಿಗೆ ಕಡಕೊಂಡು ಬಿದ್ದಹಾಗೆ ಕತ್ತಲಿತ್ತು. ಊರುಬಿಟ್ಟು ಗುಡಿ ದೂರ ಇದ್ದುದರಿಂದ ಇದ್ದದ್ದೂ ಸಪ್ಪಳ ಕಮ್ಮಿ. ಜೀರುಂಡೆ ಹುಳು ಮಾತ್ರ ಒಂದೇ ಸಮ ಮರ ಕೊರೆದಂತೆ ಜಿರ್ರ್ ಎಂದು ಒದರುತ್ತಿತ್ತು. ಜಾಗಾ ಸುರಕ್ಷಿತವೆಂದಾದ ಮೇಲೆ ಎದೆಬಡಿತ ತುಸು ಕಮ್ಮಿಯಾಯಿತು. ಬಹುಶಃ ಪೋಲೀಸರೀಗ ತನ್ನನ್ನು ಹುಡುಕುತ್ತಿರಬಹುದು. ನಾಳೆ ಬೆಳಿಗ್ಗೆ ಅಪ್ಪ ಚರ್ಮ ಸುಲಿಯುವುದು ಖಚಿತ. ಊರುಬಿಟ್ಟು ದೂರ ಹೋಗುವುದೇ ಚಲೋ. ಹೋಗೋ ಮುನ್ನ ಗುಡಿಸ್ಯಾ ಚಿಮಣಾ ಇಬ್ಬರನ್ನೂ ಮುಗಿಸಿ ಹೋಗಿದ್ದರೆ ಬರೋಬರಿ ಆಗುತ್ತಿತ್ತೆಂದು ಯೋಚಿಸಿದ. ಅಷ್ಟರಲ್ಲಿ ಮುದುಕನ ಕೈ ತಾಗಿತು. “ತಮ್ಮಾ” ಎನ್ನುತ್ತ ಮುದುಕ ಶಿವನಿಂಗನಿಗೆ ಇನ್ನಷ್ಟು ಸಮೀಪ ಸರಿದು ಪಿಸುಗುಟ್ಟಿದ. +“ತಮ್ಮಾ ಕುಂದರಗಿ ಮಠ ನೋಡಿದಿಯೇನ?” +“ಹೂಂ” +“ಎಷ್ಟಾಕ್ಕತಿ ಇಲ್ಲಿಂದ?” +“ಯಾಡ ಮೂರ ಹರಿದಾರಿ ಆದೀತು” +“ಏನ ಮಾಡ್ಲೊ ಹುಡುಗಾ, ನಾಳಿ ನಾ ಹೋಗದಿದ್ದರ ಕೆಲಸ ಕೆಡತೈತಿ. ನನ್ನ ಹಾದಿ ನೋಡಿಕೋತ ಹತ್ತುಮಂದಿ ಕೂತಿರತಾರ. ನಿಮ್ಮಪ್ಪ ಯಾರ್‍ನೊ ಕಳಿಸ್ತೇನಂದಿದ್ದ, ಹೋಗಿ ನಿಮ್ಮಪ್ಪಗಾಟ ನೆನಪು ಮಾಡಿ ಮರ್‍ತೀಯೇನ?” +“ನಮ್ಮಪ್ಪನಽ ನನ್ನ ಕಳಿಸ್ಯಾನಜ್ಜಾ” +ಎಂದೊಂದು ಸುಳ್ಳುಬಿಟ್ಟ. ಅಲ್ಲದೆ ಆ ಕೆಲಸ ತಾನೇ ಮಾಡಬಹುದಲ್ಲಾ, ಊರು ಬಿಡಲಿಕ್ಕೆ ಇದೊಳ್ಳೆ ನೆವ ಸಿಕ್ಕಿತೆಂದುಕೊಂಡ. +“ಎಲೀ ಇವನ, ಮತ್ತ ಕೇಳಿದರ ಹೇಳಲಿಲ್ಲಲ್ಲೋ? ಚೆಲೋ ಆತ ಬಾ. ದೇಶಕ್ಕ ನಿಂದೂ ಅಽಟ ಸೇವಾ ಸಲ್ಲಲಿ. ಕುಂದರಗಿ ಮಠಕ್ಕ ಹೋಗಿ ಬರ್‍ತೀಯೇನ?” +“ಅಲ್ಲಿ ಕುಂತವರ್‍ಯಾರು ನೇರೂ ಗಾಂಧೀಯೇನಜ್ಜಾ?” +“ಅವರ ಅಂತ ತಿಳಿ” +“ಹೋಗತೇನ ಏನ ಹೇಳೆಜ್ಜಾ” +ಮುದುಕ ಬಲುಭದ್ರವಾಗಿ ಬಚ್ಚಿಟ್ಟುಕೊಂಡಿದ್ದ ಒಂದು ಗಂಟು ಹೊರಗೆ ತೆಗೆದ. ಮೇಲೊಂದು ಚೀಟಿಕೊಟ್ಟು “ಮಠಕ್ಕೆ ಹೋಗು. ಅಲ್ಲಿ ಪೂಜಾರಿದ್ದಾನ್ನೋಡು, ಗಡ್ಡದಾಂವ, ಅವನ ಹಂತ್ಯಾಕ ಹೋಗಿ ಮುದುಕಪ್ಪ ಗೌಡ ಕಳಿಸ್ಯಾನಂತ ಹೇಳು. ನಿನ್ನ ಕರಕೊಂಡು ಹೋಗಿ ಅಣ್ಣೂ ಗುರೂಜಿಗೆ ಭೇಟಿ ಮಾಡಿಸ್ತಾನ, ಕೈಯಾಗ ಈ ಗಂಟಾ, ಚೀಟಿ ಕೊಡು, ನನ್ನ ಆಸೇ ಬಿಡಿರಿ, ಶಿವಾಪುರದ ಕಡೆ ಇನ್ನ ಎಂಟದಿನಾ ಬರಬ್ಯಾಡರಂತ ಹೇಳಿ ಬಾ ಹೋಗು” ಎಂದ. ಮುದುಕನ ದನು, ಕೊನೆಕೊನೆಗೆ ನಡುಗಿತು. ಭಾವುಕನಾಗಿ ಶಿವನಿಂಗನ ಕೈಹಿಡಿದು ಎದೆಗವಚಚಿಕೊಂಡು ಸ್ವಲ್ಪ ಹೊತ್ತು ಮಾತಿಲ್ಲದೆ ಕೂತ. ಅಳುತ್ತಿದ್ದ ಕೂಡ. ಶಿವನಿಂಗನ ಕೈಮೇಲೆ ಒಂದು ಹನಿ ಬಿಸಿ ಕಣ್ಣೀರು ಬಿತ್ತು. ಮುದುಕನ್ನ ಹ್ಯಾಗೆ ಸಮಾಧಾನ ಮಾಡಬೇಕೆಂದು ತಿಳಿಯದಾಯ್ತು. ತಾನು ಹೋಗುವುದಕ್ಕೆ ಅನುಮಾನ ಪಡುತ್ತಿದ್ದೇನೆಂದು ಅಂದುಕೊಂಡನೋ ಎಂದು “ಕಾಳಜಿ ಬಿಡೆಜ್ಜಾ ನಾ ಹೋಗತೀನಿ” ಅಂದ. ಮುದುಕ ಮಾತಾಡಲಿಲ್ಲ. ಶಿವನಿಂಗನನ್ನು ಹಾಗೆ ಬಾಚಿ ತಬ್ಬಿಕೊಂಡ. ಮುದಿಯೆತ್ತು ಕರುವುನ ಮೈ ನೆಕ್ಕುವ ಹಾಗೆ ಬೆನ್ನಿನ ಮೇಲೆ ಬಹಳ ಹೊತ್ತು ಕೈಯಾಡಿಸಿದ. ಮುದುಕನ ಚಡಪಡಿಕೆ ನೋಡಿ ಇದೇನೊ ಮಹತ್ವದ ಕೆಲಸವೇ ಇರಬೇಕೆಂದುಕೊಂಡ. ಚೆಲ್ಲಿಕೊಂಡು ಹಾಗೆ ಸುಮ್ಮನೇ ಬಿದ್ದುಕೊಂಡ, ಅವನಿಗೆ ಸಮಾಧಾನವಾಗುವ ತನಕ. +“ಅಂಧಾಂಗ ನೀ ಮೊದಲ ಯಾಕ ಹೇಳಲಿಲ್ಲಾ?” +ಶಿವನಿಂಗ ಈಗಲೂ ಸುಮ್ಮನಾದ. +“ನಾನಽ ಹೌಂದಲ್ಲೊ ಅಂತ ಸಂಶೆ ಬಂತೇನ?” +ಮುದುಕ ಇನ್ನೂ ಮಾತಾಡುತ್ತಲೇ ಇದ್ದ. ‘ನಾ ಹೋಗತೀನೆಜ್ಜಾ’ ಎಂದು ಶಿವನಿಂಗ ಅವಸರ ಮಾಡಿದ. “ಹೂಂ ಈಗ ಹ್ವಾದರಽ ಪಾಡ. ನಾನೂ ಬರತಿದ್ದೆ. ಈ ಕಣ್ಣೊಂದಪಾ” ಎನ್ನುತ್ತ ತನ್ನ ಅಸಹಾಯಕತೆಯ ಬಗ್ಗೆ ಪರಿತಪಿಸಿದ. ಶಿವನಿಂಗನಿಗೆ ಈಗ ನೆನಪಾಯಿತು. ಮುದುಕನಿಗೆ ಇರುಳುಗಣ್ಣೆಂದು. ಎದ್ದು “ನಾ ಹೋಗ್ತೀನೆಜ್ಜಾ” ಎಂದ. ಮುದುಕನಿಗೆ ಏನು ತಿಳಿಯಿತೋ ತಾನೂ ಎದ್ದು ಶಿವನಿಂಗನನ್ನು ಮತ್ತೆ ತಬ್ಬಿಕೊಂಡು “ಪೋಲೀಸರು ಗಿಲೀಸರು ಹುಶಾರಪಾ. ಕೊಟ್ಟವನಽ ಬಂದುಬಿಡು. ಕರಿಮಾಯಿ ಕಾಪಾಡತಾಳ ನೀ ಹೋಗಿ ಬಾ” ಎಂದ. ಶಿವನಿಂಗ ಸರ್ರನೇ ಮಾಯವಾದ. +ಕರಿಮಾಯಿಗೆ ಕಡೇ ಶರಣು +ಗೌಡ ಗುಡಸೀಕರನನ್ನು ನೋಡಿ ದೈನಾಸ ಪಡುತ್ತಿದ್ದರೆ ಅತ್ತ ಕೊಳವಿಯ ಮುದುಕಪ್ಪ ಗೌಡ ಕರಿಮಾಯಿಗೆ ಕಡೆ ಶರಣು ಮಾಡಿದ. +ಇದು ಗುಡಸೀಕರನ ಪ್ರಥಮ ಗೆಲುವಾಗಿತ್ತು. ಆ ದಿನ ಸುಂದರಿ ಪೋಜುದಾರನ ಸೇವೆಗೊದಗಿ ತಡಮಾಡಿ ಗುಡಿಸಲಿಗೆ ಬಂದಳು. ಆ ಏಳೂ ಜನ ತಮ್ಮ ಗೆಲುವನ್ನು ಭರ್ಜರಿಯಾಗಿ ಅದ್ದೂರಿಯಿಂದ ಒದ್ದೊದ್ದೆಯಾಗಿ ಆಚರಿಸಿದರು. ಆ ಗೆಲುವಿಗೆ ಕಾರಣಳಾದ ಸುಂದರಿಯನ್ನು ಬಸವರಾಜೂನನ್ನು ಗುಟುಕಿಗೊಮ್ಮೆ ಸ್ಮರಿಸಲಾಯಿತು. ಸುಂದರಿಗಂತೂ ನೆಲದ ಮೇಲೆ ಕಾಲೂರದಷ್ಟು ಹೌಶಿಯಾಗಿತ್ತು. ತನ್ನ ಸಂಚು ಫಲಿಸಿದ್ದಕ್ಕೆ ಗುಡಸೀಕರ ತನ್ನ ಗುಣಗಾನ ಮಾಡುತ್ತಿದ್ದದ್ದಕ್ಕೆ. ಮೈತುಂಬ ರೋಮಾಂಚನಗೊಂಡಳು. ಕುಡಿತದ ಅಮಲಿನಲ್ಲಿ ಆ ದಿನ ಗೌಡ ಹೇಳಿದ ಮಾತುಗಳನ್ನು ಪುನಃ ಅವನಂತೆಯೇ ಹೇಳಿ ಗುಡಸೀಕರನನ್ನು ನಗಿಸಿದಳು. +ಅದೇ ದಿನ ಊರ ಹಿರಿಯರ ಸಭೆ ದತ್ತಪ್ಪನ ನೇತೃತ್ವದಲ್ಲಿ ಸೇರಿತು. ಗೌಡ ಬಂದಿರಲಿಲ್ಲ. ಸುಂದರಿಗೆ ಬಹಿಷ್ಕಾರ ಹಾಕುವುದೆಂದು ತೀರ್ಮಾನಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅದೇನೋ ಎಲೆಕ್ಷನ್ ಅಂತಿದ್ದನಲ್ಲ ಅದಕ್ಕೆ ಈ ಸಲ ತಾವೂ ನಿಲ್ಲಬೇಕೆಂದು ಗೊತ್ತುಮಾಡಿಕೊಂಡರು. +ಮಾರನೇ ದಿನ ಮುಂಜಾನೆ ತಮ್ಮ ತೀರ್ಮಾನವನ್ನು ಗೌಡನಿಗೆ ತಿಳಿಸಿದರು. ಗೌಡ ಸುಮ್ಮನಾದ ಅವರು ಹೋದ ಮೇಲೆ ಗುಡಸೀಕರನನ್ನು ಕರೆತರಲಿಕ್ಕೆ ಹಳಬನನ್ನು ಓಡಿಸಿದ. +ಹಳಬ ಬಂದಾಗ ಗುಡಸೀಕರ ಸುಂದರಿಯ ಗುಡಿಸಲಲ್ಲಿದ್ದ. ಗೌಡರು ಕರೆಯುತ್ತಿದ್ದಾರೆಂದು ಹಳಬ ಹೇಳಿದ್ದೇ ತಡ, ಹುಡುಗ ಹುರುಪಾದ. ಬಸವರಾಜೂನ ಭುಜ ಎರಡೆರಡು ಬಾರಿಬಾರಿಸಿ “ನೋಡಿದಿ? ಹೆಂಗ ಹಾದಿಗಿ ಬಂದ!” ಎಂದುದು ಗಟ್ಟಿಯಾಗಿ ನಕ್ಕ. ಸುಂದರಿಗೆ ಕಣ್ಣು ಹಾರಿಸಿ ನಕ್ಕ. ಹಾಳಾದವರು ಆ ಚತುಷ್ಟಯರಿರಲಿಲ್ಲ. ಸಾಮೂಹಿಕವಾಗಿ ಚಪ್ಪಾಳೆ ತಟ್ಟಿ ನಗಬಹುದಿತ್ತು. ನಗುವ ಸಂಭ್ರಮದಲ್ಲಿ ಹಳಬ ಕಂಡಿರಲೇ ಇಲ್ಲ. ಕಂಡೊಡನೆ “ನನಗ ಸಡವಿಲ್ಲಾ ಬೇಕಾದರ ಅಂವಗಽ ಬಾ ಅಂತ ಹೇಳ” ಎಂದ. ಈ ಸೊಕ್ಕನ್ನು ಹಳಬ ನಿರೀಕ್ಷಿಸಿರಲಿಲ್ಲ. ಆಗಲೆಂದು ಹೋದ. ಗುಡಸೀಕರನ ಸೊಕ್ಕು ಕೆಳಕ್ಕಿಳಿಯದಾಯಿತು. ತಾನೆಂಥ ಮಹತ್ವದ ಯುದ್ಧ ಗೆದ್ದೆನಲ್ಲ ಎಂದುಕೊಂಡ. ಗೌಡನಲ್ಲಿಗೆ ಹೋಗಬಹುದಾಗಿತ್ತೇನೋ, ಹೋಗಿದ್ದರೆ ಗೌಡನ ಸೋಲನ್ನು ಕಣ್ಣಾರೆ ನೋಡಿ ಕಿವಿಯಾರೆ ಕೇಳಬಹುದಾಗಿತ್ತು. ಯಾಕೆ ಕರೆಸಿದ್ದಾನು? ಊರವರ ಮುಂದೆ ಮೀಸೆ ಮೊಂಡಾದದ್ದು ಒಂದು ಕಡೆ; ಎರಡೆಕರೆ ಜಮೀನು ಕಕ್ಕಬೇಕಾದ್ದು ಇನ್ನೊಂದುಕಡೆ. ಅಪಸಾತಿ ಮಾಡಿಕೊಳ್ಳೋಣ ಎಂದಿರಬೇಕು. ಮಗನಿಗೆ ಈಗಲಾದರೂ ತಿಳಿಯಿತಲ್ಲ, ತಾನು ಯಾರು ಅಂತ. ಇನ್ನು ಮೇಲಾದರೂ ಬಾಯಿ ಮುಚ್ಚಿಕೊಂಡು ಇದ್ದರೆ ಬರೋಬರಿ. ಇಲ್ಲದಿದ್ದರೆ ಮೂಗಿಗೆ ಮೂಗುದಾರ ಪೋಣಿಸದಿದ್ದರೆ ನನ್ನ ಹೆಸರು ಗುಡಸೀಕರನೆಂದು ಯಾಕಿರಬೇಕು? +ಹಿಂಗೆಂದು ಒಳಗೊಳಗೇ ಮಾತಾಡಿಕೊಳ್ಳುತ್ತ, ಹೊರಗೆ ನಗುತ್ತ ತೋಟದ ಕಡೆ ಕಾಲು ಹಾಕಿದ. ನಡೆದಾಡುವಾಗ ಕೂಡ ವಿಚಿತ್ರ ಹೌಸಿ ಅವನೊಳಗೆ ಹರಿದಾಡತೊಡಗಿತ್ತು. ರೆಕ್ಕೆ ಬೀಸಿ ಹಾರಿಹೋದಂತೆ ತೋಟಕ್ಕೆ ಹೋದ. ಕಬ್ಬಿನ ತೋಟದಲ್ಲಿ ನಾಲ್ಕೈದ ಮಂದಿ ಆಳುಗಳು ಮೇವು ಬಳಿಯುತ್ತಿದ್ದರೆ, ಸೀದಾ ಅಲ್ಲಿಗೇ ಹೋದ. +ಅವರ್‍ಯಾರೂ ಇವನ ಅಭಿಪ್ರಾಯ ಅನುಮೋದಿಸುವವರಾಗಿರಲಿಲ್ಲ. ಇವ ತನ್ನ ಕಾಳಿ ಊದ ತೊಡಗಿದ. ತನಗೆ ಪರಿಚಿತರೆಂದು ಅಧಿಕಾರಿಗಳ ಕುಲಗೋತ್ರ ಹೆಸರು ಹೇಳಿದ. ಅವರೊಂದಿಗೆ ತನ್ನ ಸಲಿಗೆಯ ಪ್ರಸಂಗಗಳನ್ನು ಕಥೆಮಾಡಿ ಹೇಳಿದ. ಗೌಡ ಅಪಸಾತಿ ಮಾಡಿಕೊಳ್ಳಲು ಓಡಾಡುತ್ತಿದ್ದುದನ್ನು ದನಿ ಎತ್ತರಿಸಿ ಸ್ವಲ್ಪ ಉದ್ರೇಕಿತನಾಗಿಯೇ ಹೇಳಿದ. ತನ್ನ ಹೇಳಿಕೆಯಲ್ಲಿ ಗೌಡನನ್ನು ಹುಳುಮಾಡಿ ತಾನೊಂದು ಆನೆಯಷ್ಟು ಎತ್ತರಕ್ಕೆ ಬೆಳೆದ. ಅಷ್ಟರಲ್ಲಿ ಗೌಡ ಅಲ್ಲಿಗೇ ಬಂದ. ಸರಪಂಚ ಮಾತಾಡಿಸಲಿಲ್ಲ. ತನಗೇನೂ ಆಗಿಲ್ಲವೆಂಬಂತೆ ಆಳುಗಳೊಂದಿಗೆ ಅದು ಇದು ಬಾತಿಗೆ ಬಾರದ್ದನ್ನಾಡುತ್ತ ನಿಂತ. ಆಳುಗಳಲ್ಲಿ ಒಂದಿಬ್ಬರು ಗೌಡನಿಗೆ ಶರಣು ಹೇಳಿದರು. ಗೌಡ ಬಂದವನು “ತಮ್ಮಾ, ನಿನ್ನ ಜೋಡೆ ಮಾತಾಡಬೇಕು ಗುಡಿಸಲ ಕಡೆ ಬರ್‍ತೀಯೇನು?” ಅಂದ. ಸರಪಂಚ ತಿರುಗಿ ಕೂಡ ನೋಡದೆ “ಅದೇನ ಮಾತ ಅದಾವ ಇಲ್ಲೇ ಹೇಳಬಹುದಲ್ಲಾ” ಅಂದ. ಗೌಡನ ಮನಸ್ಸು ಮುದುಡಿ ಆ ಮಾತಿನಷ್ಟೇ ಆಯ್ತು. ಆದರೆ ಗುಡಸೀಕರನ ಈ ನಡೆ ಅನಿರೀಕ್ಷಿತವಾಗಿರಲಿಲ್ಲ. ಅಭಿಮಾನವಿಲ್ಲವೆಂದಲ್ಲ. ವಿವೇಕ ಅದಕ್ಕಿಂತ ಹೆಚ್ಚಾಗಿತ್ತು. “ಆಗಲಿ, ಬಿಡಪಾ, ಇಲ್ಲೇ ಮಾತಾಡೋಣು” ಎಂದು ಅಲ್ಲೇ ಬದುವಿನ ಮೇಲೆ ಕುಳಿತ. ಆಳುಗಳು ಆ ಅಂಚಿಗೆ ಹೋಗುತ್ತೇವೆ ಎಂದು ಹೇಳಿಕೊಂಡು ಎದ್ದುಹೋದರು. +ಗೌಡ ಮಾತು ಶುರುಮಾಡಿದ. “ನೋಡ ತಮ್ಮ, ಕಾಲ ಮುಗೀತು. ಇಲ್ಲಿ ತಂಕಾ ಒಂದ ಹದ್ದಬಸ್ತಿನಾಗ ಊರ ತಂದ ನಿನ್ನ ಕೈಯಾಗಿಟ್ಟಿವಿ. ನೀ ಕಲಂತಾ. ಲೋಕಾ ತಿಳಿದಾಂವ….” ಹೇಳುತ್ತ ಗೌಡ ಸ್ವಲ್ಪ ಹೊತ್ತು ಸುಮ್ಮನಾದ. ಸರಪಂಚ ಆಗಲೇ ಅಳ್ಳಳ್ಳಕಾಗಿ ಗುಡಸೀಕರನಾಗುತ್ತಿದ್ದ. ಗೌಡ ಮತ್ತೆ ಮುಂದುವರಿದ. “ನೀ ಬ್ಯಾರೆ ಅಲ್ಲ, ನನ್ನ ಮಗಾ ಬ್ಯಾರೇ ಅಲ್ಲಪಾ. ನಿನಗ ಹಾಗ ತಿಳಿದ ಪಂಚಾಯ್ತಿ ಮಾಡಪಾ ಅಂತ ಊರ ನಿನ್ನ ಅಗೈಯಾಗಿಟ್ಟಿವಿ. ನಾ ನಿನಗ ಏನ ಕೆಟ್ಟ ಮಾಡೀನಿ ಹೇಳೋ ಎಪ್ಪಾ. ನನ್ನ ಕಂಡರ ವೈರೀನ ಕಂಡಾಗ ಮಾದತಿ. ಏನಾರ ತಪ್ಪ ಆಗಿದ್ದರ ಹೇಳು, ನಿನ್ನ ಕಾಲಿಗಿ ತಲೀ ಕಟೀತೀನಿ. ನಿನ್ನ ಜೋಡೀ ಜಗಳ ಮಾಡೋ ವಯಸ್ಸ ನಂದ? ಇಂದಿಲ್ಲಿ; ನಾಳೆ ಗೋರ್‍ಯಾಗ ಇರಾವರು. ನೀವಾದರ ಇದಽ ಇನ್ನೂ ಚಿಗರವರು. ಹೂ ಕಾಯಿ ಹಣ್ಣಾಗವರು. ಈ ಊರಿಗಿ ನಮ್ಮಂಥಾ ಮುದುಕರಲ್ಲಪಾ, ನೀ ಬೇಕು, ನಿನ್ನಂತವ ಬೇಕು. ಏನೊ ನಾಲಿಗಿ ತುಂಬ ಹಂಗ ಮಾಡ್ರೊ, ಹೀಂಗ ಮಾಡ್ರೊ ಅಂತ ಹೇಳತೀವು. ಕಣ್ಣಿಗಿ ದಿನಾ ಬೆಳಗಾದರ ಕಾಣತೈತಿ, ಅದರ ಅಂಜಿಕ್ಯಾಗ ಏನಾರ ಆಡತಿದ್ದೇನಪಾ, ಬ್ಯಾಡಂದರ ಅದನೂ ಬಿಡತೀವು. ಆದರ ನಮ್ಮ ಮ್ಯಾಲಿನ ಸಿಟ್ಟಲೆ ಊರ್‍ಯಾಕ ಹಾಳಾಗಬೇಕೋ ಎಣ್ಣಾ?” ಗುಡಸೀಕರ ಪೂರಾ ಕರಗಿಬಿಟ್ಟದ್ದ. ಪಾಪ, ಈ ಮುದುಕನ್ನ ತಾನು ಅಪಾರ್ಥ ಮಾಡಿಕೊಂಡಿದ್ದೇನೆನಿಸಿತು. ಸ್ವಲ್ಪ ಅಂತಃಕರಣ ಬಿಚ್ಚಿ “ಇದನ್ನ ಹೆಂಗ ಮಾಡೋಣು” ಅಂತ ಕೇಳಿದರೆ ಸಾಕು. ಮುದುಕ ಉಬ್ಬುವವ. ಹೆಚ್ಚೇನು ಹಿರಿಯರಿಗೆ ಬೇಕಾದ್ದೂ ಅಷ್ಟೇ. ಹೇಳಿ ಕೇಳಿ ಹೆಗಲು ಬಿದ್ದವರು. ಇನ್ನೆಷ್ಟು ದಿನ ಇದ್ದಾರು? ಇರೋ ತನಕ ಸ್ವಲ್ಪ ಮರ್ಯಾದೆ ಕೊಟ್ಟರೆ ತನಗೇನು ಕೊರತೆ ಬಿದ್ದೀತು? ಅದೊಂದು ಗ್ರಾಮ ಪಂಚಾಯ್ತಿ. ಹೋಗಿ ಕೇಳಿದರೆ ಈಗಲೂ ಎಲೆಕ್ಷನ್ನಿಲ್ಲದೆ ಹಾಗೇ ಕೊಡುವುದು ದೂರದ ಮಾತಲ್ಲ. ಗೌಡ ಮುಂದುವರೆಸಿದ: +“ಖರೆ ಹೇಳೋ ತಮ್ಮಾ, ನಾ ಆ ಚಿಮಣಾನ ಬಸರು ಮಾಡಿದ್ದ ಖರೆ ಮಾತ? ನೀ ನಿಮ್ಮಪ್ಪನ ಹೆಸರ ತಗೊಂಡ ಹೌಂದನ್ನು. ನಾ ಇಕ್ಕಽ ಈಗ ಎರಡೆಕರೆ ಜಮೀನೂ ಕೊಟ್ಟು ಬಿಡತೇನು: ಅಪ್ಪಾ ಸಾಯೋ ಕಾಲದಾಗ ನನ್ನ ಮ್ಯಾಲ ಹಿಂತಾದೊಂದ ಹರಲಿ ಹೊರಸ ಬ್ಯಾಡ” +ಎನ್ನುತ್ತ ಕೂಡಲೇ ಗೌಡ ಕೈಮುಗಿದ. ಇಬ್ಬರ ಬಾಯಿ ಕಟ್ಟಿತು. ಹಮ್ಮು ಕರಗಿ ನೀರಾಗಿ ಹರಿದಂತೆ ಗುಡಸೀಕರ ಕಣ್ಣೊಳಗಿಂದ ಎರಡು ಹನಿ ಉದುರಿದವು. ತಾನು ಇಲ್ಲವೆ ಬಸವರಾಜು ಇಬ್ಬರಲ್ಲಿ ಒಬ್ಬರ ಕಾರಭಾರಿಗೆ ಸುಂದರಿ ಬಸರಿಯಾದದ್ದು ಖಾತ್ರಿಯಾಗಿತ್ತು. ನಿಂಗೂ ನಿನ್ನೆ ಬಸವರಾಜೂನ ಭಾನಗಡಿ ಹೇಳಿದ್ದ. ಇದರಲ್ಲಿ ಬಸವರಾಜೂನ ಭಾಗವೇ ಹೆಚ್ಚಾದಂತಿತ್ತು. ಇಲ್ಲದಿದ್ದರೆ ಬಸರಿನ ಸುದ್ದಿ ಮೊದಲು ತನಗಾದರೂ ಹೇಳಬಹುದಿತ್ತೊ? ಗರ್ಭಪಾತದ ಸಂಗತಿಯನ್ನಾದರೂ ತಿಳಿಸಬಹುದಿತ್ತೊ? +ಬಹಳ ಹೊತ್ತಿನ ತನಕ ಇಬ್ಬರೂ ಮಾತಾಡಲಿಲ್ಲ. ಗುಡಸೀಕರ ಇಲ್ಲೀತನಕ ಒಂದು ಮಾತೂ ಆಡಿರಲಿಲ್ಲ. ಏನಾಡಬೇಕೆಂದು ಹೊಳೆಯಲೂ ಇಲ್ಲ. ಈಗಲೂ ಗೌದನೇ ಹೇಳಿದ. “ನೋಡು ತಮ್ಮಾ, ದಿನ ಬೆಳಗಾದರ ಒಬ್ಬರ ಮಾರಿ ಒಬ್ಬರ ನೋಡಾವರು ನಾವು. ನಿನ್ನ ನಿಟ್ಟುಸಿರಿಗೆ ನಾನಽ ಕರಗಬೇಕು. ನಂದಕ ನೀ ಕರಗಬೇಕು. ಬೆಳಗಾಂವಿ ಮನಿಶ್ಯಾ ಇಂದಿದ್ದ ನಾಳಿ ಹೋಗಾಂವಪಾ. ಅವರಿಬ್ಬರನ್ನು ಈಗಿಂದೀಗ ಹೊರಗ್ಹಾಕು. ನಿನಗ್ಹೆಂಗ ಬೇಕ ಹಾಂಗ ಊರ ಆಳಿಕೊ. ಖರೆ ಹೇಳ್ತೀನೋ ಎಪ್ಪಾ. ಸಡ್ಲ ಬಿಟ್ಟರೆ ಆಕೆ ಈ ಊರ ಆಳವೆತ್ತತಾಳ” ಅಂದು ಸುಮ್ಮನಾದ. ಮಾತುಕತೆಗೊಂದು ಮುಕ್ತಾಯವನ್ನಾದರೂ ಕೊಡಬೇಕಲ್ಲ. +“ಆಗಲಿ, ನೀವೇನ ಕಾಳಜಿ ಮಾಡಬ್ಯಾಡರಿ, ನಡೀರಿ ಹೋಗೋಣು” ಅಂದ. ಮಾತಿನ್ನೂ ಬಾಯಲ್ಲಿಯೇ ಇತ್ತು. ಢಂ ಢಂ ಎಂದು ಗುಂಡು ಹಾರಿದ್ದು ಕೇಳಿಸಿತು. ಇಬ್ಬರೂ ತಬ್ಬಿಬ್ಬಾದರು. ಮುಖಾಮುಖಿ ನೋಡಿಕೊಂಡರು. ಗುಡಸೀಕರ ಸದ್ದು ಬಂದ ಕಡೆ ಓಡಿದ. ಗೌಡನ ಕೈಕಾಲೇ ಹೋದವು. ಅಲ್ಲೇ ಕುಸಿದ. ಗುಡಸೀಕರ ಓಡಿ ಬಂದಾಗ ಕರಿಮಾಯಿಯ ಗುಡಿಯಲ್ಲಿ ಪೋಲೀಸರು ಓಡಾಡುತ್ತಿದ್ದರು. ಗುಂಡಿನ ಸಪ್ಪಳಕ್ಕೆ ತತ್ತರಿಸಿ ಜೇನು ಹುಟ್ಟೊಂದರ ಕಾಲುಭಾಗ ಕಳಚಿಬಿದ್ದಿತ್ತು. ಜೇನು ಚಿಲ್ಲನೆ ಸುತ್ತ ಸಿಡಿದಿತ್ತು. ಜೇನ್ನೊಣಗಳು ಎದ್ದು ಗುಂಯೆಂದು ಹುಯಿಲೆಬ್ಬಿಸಿ ಪೋಲೀಸರನ್ನು ಅಟ್ಟಿಸಿಕೊಂಡೋಡಿ ಕಚ್ಚುತ್ತಿದ್ದವು. ಪೋಜುದಾರ ಗುಡಸೀಕರನನ್ನೂ ಗಮನಿಸದೆ, ಹುಳುಗಳ ಕಾಟ ಲೆಕ್ಕಿಸದೇ ವಿಜಯೋನ್ಮಾದದಿಂದ ಕಿರಿಚಿ ಆಜ್ಞೆ ಮಾಡುತ್ತಿದ್ದ. ಜನ ಒಬ್ಬೊಬ್ಬರೇ ಓಡಿಬಂದು ದೂರದಲ್ಲೇ ನಿಂತುಕೊಂಡು ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದರು. ಕೊಳವಿಯ ಶ್ರೀ ಮುದುಕಪ್ಪ ಗೌಡನ ಹೆಣ ಬೊಕ್ಕ ಬೋರಲಾಗಿ ಬೆನ್ನು ಮೇಲಾಗಿ ಕರಿಮಾಯಿಯ ಕಡೆ ಮುಖಮಾಡಿ ತಾಯಿಗೆ ಕೊನೆಯ ಶರಣು ಹೇಳುವಂತೆ ಬಿದ್ದಿತ್ತು. ಹೊಟ್ಟೆಯ ಕೆಳಗೆ ನೆತ್ತರ ಮಡು ನಿಂತಿತ್ತು. +ಸಾಲದ್ದಕ್ಕೆ ಇದೇ ಸಂದರ್ಭವೆಂದು ಎರಡೆಕರೆ ಹೊಲಾ ಕೇಳಲಿಕ್ಕೆ ಚಿಮಣಾ ಗೌಡನ ಮನೆಗೆ ಹೋದಳು. ದತ್ತಪ್ಪ ಬಹಿಷ್ಕಾರ ಹಾಕಿಬಿಟ್ಟ. +ಮುದುಕಪ್ಪ ಗೌಡನ ಸಾವಿಗೆ ಜನ ಮರುಗಿದರು. ಕಳ್ಳನಲ್ಲ, ಸುಳ್ಳನಲ್ಲ. ಅದೇನೋ ದೇಶಸೇವೆ ಅಂದ, ಚಳುವಳಿ ಅಂದ. ಗಾಂಧಿ ನೇರೂ ಅಂದ. ಅಂದ ಮಾತ್ರಕ್ಕೆ ಹೀಗೆ ಕೊಂದು ಹಾಕುವುದೇ? ಗುಡಸೀಕರ ಬಹುಮಾನದ ಆಸೆಯಿಂದ ಹೀಗೆ ಮಾಡಿದನೆಂದು, ಪೋಜುದಾರ ಇವನಿಗೆ ಪೋಜುದಾರ ೫೦೦೦ ರೂ. ಕೊಟ್ಟುದನ್ನು ಕಣ್ಣಾರೆ ಕಂಡೆವೆಂದು ಕೆಲವರೆಂದರು. ಜನ ಗುಡಸೀಕರನಿಗೆ ಹೆದರಿದರು. ಹೆಸರು ಹೇಳಿದರೆ ಸಾಕು ಪೋಲೀಸ್ ಪೋಜುದಾರ ಅನ್ನುವ ಸೈತಾನನವ. ಅವನನ್ನು ತಡವೋದೂ ಪೋಜುದಾರನಿಗೆ “ಲೇ ಮಗನ” ಎಂದು ಬೈಯುವುದೂ ಸಮ ಎಂದರು. +ಚತುಷ್ಟಯರು ಇದ್ದದ್ದೂ ಆಮೋದಗೊಂಡರು. ಕೊಳವಿ ಮುದುಕಪ್ಪನ ಹೆಣ ಒಯ್ದ ಮಾರನೇ ದಿನ ಸುಪ್ರಭಾತದಲ್ಲಿ ಎದ್ದು ನೋಡುತ್ತಾರೆ. ಊರಿಗೂರೆ ಅವರಿಗೆ ಹೆದರುತ್ತಿದೆ. ಕರೆದು ಕರೆದು ಶರಣು ಹೇಳುತ್ತಿದೆ. ಈ ಹದಕ್ಕಾದ ಹೆದರಿಕೆ ಹಾಗೇ ಕ್ಷಣಭಂಗುರವಾಗಬಾರದೆಂದು ಹಂಚಿಕೆ ಹಾಕಿದರು. ಗುಡಸೀಕರನ ಬಗ್ಗೆ ಭಯಂಕರ ಕಥೆ ಕಟ್ಟಿದರು. ಪೋಲೀಸ್ ಪೋಜುದಾರ, ಕಲೆಕ್ಟರ, ಮಾಮಾಲೇದಾರ, ಬೆಳಗಾವಿಯ ಈ ಅಧಿಕಾರಿಗಳೆಲ್ಲ ಗುಡಸೀಕರನಿಗೆ ಪರಿಚಿತರೆಂದೂ, ಇವರು ಚೀಟಿ ಕಳಿಸಿದರೆ ಸಾಕು, ಸರಕಾರ ತುದಿಗಾಲಲ್ಲೇ ಮಿಲ್ಟ್ರಿ ಕಳಿಸುತ್ತಾರೆಂದೂ, ಮುದುಕಪ್ಪನಿಗೆ ಆಶ್ರಯ ಕೊಟ್ಟದ್ದಕ್ಕೆ ಸರಕಾರ ಇದೇ ಊರು ಸುಟ್ಟುಬರಲು ಪೋಲೀಸ್ ಪಾರ್ಟಿ ಕಳಿಸಿತ್ತೆಂದೂ ಆದರೆ ನಮ್ಮ ಸರಪಂಚದಿಂದಾಗಿ ಮುದುಕಪ್ಪ ಹೋಗಿ ಊರು ಉಳಿಯಿತೆಂದೂ ಹೀಗೆ ಯದ್ವಾ ತದ್ವಾ ಊಹೆಗಳಿಗೆ ಕೈಕಾಲು ಮೂಡಿಸಿ ಕಥೆಮಾಡಿ, ಕಥೆಗೆ ಜೀವ ತುಂಬಿ ಊರ ಕಿವಿಗಳಲ್ಲೇ ಊದಿಬಿಟ್ಟರು. +ಗೌಡ ಮಾತ್ರ ಆಳಾಗಲೇ ಇಲ್ಲ. ಬೆನ್ನಿಗೆ ಬಿದ್ದವನ ಕಾಪಾಡಲಾಗದ ದುಃಖ ಒಂದು ಕಡೆ. ಇದಕ್ಕೆಲ್ಲ ಗುಡಸೀಕರ ಕಾರಣನೆಂಬ ಸಿಟ್ಟು ಇನ್ನೊಂದು ಕಡೆ. ಹೀಗೆ ಇಬ್ಬಂದಿಯಾಗಿ ಕಿಚ್ಚಿನೊಳಗೆ ಕೀಡೆಯಂತೆ ಚಡಪಡಿಸಿದ. ದೋತರ ಸೆರಗಿನಲ್ಲಿ ಮುಖ ಹುದುಗಿಸಿ ಮಂದಿ ಹೆಂಗಸಿನ ಹಾಗೆ ಅತ್ತ. ಬರಬರುತ್ತ ಮುದುಕಪ್ಪ ಸತ್ತದ್ದು ಹಿಂದಾಗಿ, ಶಿವನಿಂಗ ಕಳೆದುಹೋದ ದುಃಖ ಮುಂದಾಯಿತು. ಕುಂದರಗಿ ಮಠಕ್ಕೆ ಹೋದ ಆಳು ಅಲ್ಲಿದ್ದ ಮಂದಿಯೆಲ್ಲ ಮಾಯವಾದ ಸುದ್ದಿ ತಂದಿದ್ದ. ಊರೂರಿಗೆ ಬೀಗರಿಗೆ ಹೇಳಿ ಕಳಿಸಿದ. ಶಿವನಿಂಗ ಬರಲಿಲ್ಲ. ಶಿವನಿಂಗನ ಸುದ್ದಿ ಬರಲಿಲ್ಲ. ಮೂಕರ್ಜಿಯಲ್ಲಿ ತನ್ನ ಹೆಸರು ಇದ್ದುದಕ್ಕೆ ಹೆದರಿ ಹುಡುಗ ಏನಾದರೂ ಓಡಿದನೋ ನೇಣು ಹಾಕಿಕೊಂಡನೋ ಎಂದೂ ಊಹಿಸಿದ. ಕರಿಮಾಯಿಗೆ ಮೊರೆಹೊಕ್ಕ. ತಾಯಿಯೇನೋ ತಿರುಗಿ ಬಂದೇ ಬರ್‍ತಾನೆಂದು ಹೇಳಿದಳು. ಮಗನನ್ನು ಕಣ್ಣಾರೆ ಕಾಣುವ ತನಕ ನಂಬದಾದ. ಶಿವಸಾನಿ ಮಗನ ಹೆಸರಿ ಜಪಿಸುತ್ತ ಕೂಳು, ನೀರುಬಿಟ್ಟು ಬರೀ “ಶಿವನಿಂಗಾ” ಎಂದು ಹಲುಬುತ್ತ ಮೂಲೆ ಹಿಡಿದಳು. ಹ್ಯಾಗಿದ್ದವಳು ಒಂದೇ ವಾರದಲ್ಲಿ ಸೊರಗಿ ಸೊರಗಿ ಸಣ್ಣಾದಳು. ಮೂಲೆಯ ಕೋಲಾದಳು. ಕಡ್ಡಿಯಾದಳು. ಸಾಲದ್ದಕ್ಕೆ ಚಿಮಣ ಬಂದು ಮನೇ ಮುಂದೆ ದುಂಬಡಿ ಹಾಕಿದಳು. ಅದು ಹೀಗೆ: +ಒಂದು ದಿನ ಗೌಡ ಬೆಳಿಗ್ಗೆದ್ದು ಕೆರೆಯಲ್ಲಿ ಮಿಂದು ಕರಿಮಾಯಿಗೆ ಅಡ್ಡಬಿದ್ದು ಮನೆಕಡೆ ಬಂದ. ಆಗಷ್ಟೇ ಬೆಳಕಾಗುತ್ತಿತ್ತು. ಅಲ್ಲಲ್ಲಿ ಜನ ಅಂಗಳ ಗುಡಿಸುತ್ತಿದ್ದರು. ಕೋಳಿ ಬಿಡುತ್ತಿದ್ದರು. ದನ ನೀರಿಗೆ ಬಿಡುತ್ತಿದ್ದರು.ಎದ್ದವರು ಗೌಡನಿಗೆ ಶರಣು ಹೇಳುತ್ತಿದ್ದರು. ಆ ರಸ್ತೆ ದಾಟಿ ತನ್ನ ಮನೆಕಡೆ ತಿರುಗಿದ. +ಆ ರಸ್ತೆಯಲ್ಲಿ ಅಷ್ಟು ಚಟುವಟಿಕೆ ಇರಲಿಲ್ಲ. ತನ್ನ ಮನೇ ಮುಂದೆ ನಾಕೈದು ಜನ ಹೆಂಗಸರಿದ್ದರು. ಧಾಪುಗಾಲು ಹಾಕಿದ. ಗೌಡ ಬಂದುದನ್ನು ನೋಡಿ ಹೆಗಸರು ಬದಿಗಾದರು. ನೋಡಿದರೆ ಸುಂದರಿ ತೊಲೆಬಾಗಿಲು ಹೊಸ್ತಿಲಕ್ಕೆ ಎಡತೊಡೆ ಆನಿಸಿ, ಅದರಗುಂಟ ಎಡಗೈ ಹಬ್ಬಿಸಿ, ಅದಕ್ಕೆ ಬಲಗೈ ಕಟ್ಟಿಕೊಂಡು ಕೂತಿದ್ದಳು. ಗೌಡನಿಗೆ ತಕ್ಷಣ ಏನು, ಎತ್ತ ಗೊತ್ತಾಗಲಿಲ್ಲ. ಒಳಗೆ ತನ್ನ ಹಿರಿಯ ಹೆಂಡತಿ, ನಿಜಗುಣೆವ್ವನ ತಾಯಿ ನಿಂತಿತ್ತು. ಎಲ್ಲರನ್ನೂ ಕುರಿತಂತೆ “ಏನು?” ಅಂದ. ಒಬ್ಬ ಅವ್ವಕ್ಕ “ಯಾಡ್ಯೆಕೆರೆ ಹೊಲಾ ಕೇಳಾಕ ಬಂದಾಳ್ರಿ” ಎಂದಳು. ಗೌಡ ಒಳಕ್ಕೆ ಹೆಜ್ಜೆ ಹಾಕಿದ. +ಗೌಡ ನ್ಯಾರೆ ಮಾಡಿ ಹೊರಕ್ಕೆ ಬಂದಾಗ ಪಡಸಾಲೆಯಲ್ಲಾಗಲೇ ದತ್ತಪ್ಪ ಹಾಜರಾಗಿದ್ದ. ಬಾಳಪ್ಪ ಆಗಷ್ಟೇ ಬಂದ. ಮನೆಯ ಮುಂದೆ ಜನ ಸೇರಿದ್ದರು. ಎಲ್ಲರ ದೃಷ್ಟಿಗಳನ್ನು ನಿವಾರಿಸುತ್ತ ಚಿಮಣಾ ಕೂತಿದ್ದಳು. ಎಸಳು ಮುಖದ ಹುಚ್ಚು ಹುಡುಗಿ. ಕುಣಿಸಿದರೆ ಕುಣಿಯುತ್ತಾಳೆ. ಕುಣಿಯೋದರ ಬೆಲೆ ಏನೆಂದರಿಯದೆ ಅವಳು ಕೂತ ಭಂಗಿ, ಧೈರ್ಯ ಮೊಂಡುತನಗಳೆಲ್ಲ ಅವಳ ಆಕೃತಿಗೆ ಭಾರವಾಗಿ, ಅಸಹಜವಾಗಿ, ಕಂಡವು. ಇವಳ ಮೇಲೆ ಸಿಟ್ಟಿಗೇಳುವುದೂ ಕಷ್ಟವೆ; ಎಳೇ ಕೂಸು ಬಲಿತವರ ಅಭಿನಯ ಮಾಡಿದಂತಿತ್ತು. ಇಂಥ ಸಂದರ್ಭಗಳಲ್ಲಿ ಯಥಾ ಪ್ರಕಾರ ಬಾಯಿ ಹಾಕುವವನು ದತ್ತಪ್ಪನೇ. +“ಏನವಾ? ಯಾಕ ಬಂದಿ? ಜಗಳಾ ಮಾಡಾಕ?” ಎಂದು ದತ್ತಪ್ಪ ಕೇಳಿದರೆ ಆ ಹೊಯ್ಮಾಲಿ ಹೇಳುತ್ತಾಳೆ,- +“ನಾ ಏನ ಜಗಳ ಮಾಡಾಕ ಬಂದಿಲ್ರಿ. ಗೌಡರು ಯಾಡ್ಡೆಕರೆ ಹೊಲ ಬರಕೊಡ್ಲಿ. ಥಣ್ಣಗ ನಾ ಹೋಗತೇನ.” +ದತ್ತಪ್ಪನಿಗೆ ಹೊಯ್ಕಾಯಿತು. ಅಡಡಡ ಎಂದು ಆಶ್ಚರ್ಯ ನಟಿಸುತ್ತಿದ್ದರೆ ಬಾಳಪ್ಪನಿಗೆ ತಡೆಯಲಾಗಲಿಲ್ಲ. +“ಅದೇನ ಅಡಡಡ ಅಂತೀಯೊ? ಈ ರಂಡೀ ಮೂಗ ಮಲಿ ಕೋದ ಅಡವಿಗಟ್ಟಿ ಬರೋಣ್ನಡಿ.” +ಸುಂದರಿಗೆ ತಡೆಯುವುದಾಗಲಿಲ್ಲ. +“ಯಾಕ? ಈ ಕಡೆ ಹಗುರ ಅಂತ ತಿಳಿದುಕೊಂಡಿರೇನ? ನಾನೂ ಹೋಗಿ ಪೋಜುದಾರನ್ನ ಕರಕೊಂಬರ್‍ತೇನ” +“ಪೋಜುದಾರಂದರ ಸರಕಾರಲ್ಲವಾ. ಕೋರ್ಟಿಗೆ ಹೋಗಿ ಅಲ್ಲಿಂದ ಬೇಕಾದರ ಜಜ್‌ಮೆಂಟಾಗಿ ಬಂದರ ಕೊಡಾಕ ಬಂದೀತ. ಪೋಲೀಸ್ ಪೋಜುದಾರರೆಲ್ಲಾ ಜಜ್‌ಮೆಂಟ ಕೊಡತಿದ್ದರ ಹೆಂಗ? ನೀ ಬೇಕಾದರ ಕೋರ್ಟಿಗೆ ಹೋಗು.” +ಎಂದ ದತ್ತಪ್ಪ, ಸುಂದರಿ ಬಿಡಲಿಲ್ಲ. +“ಹಿಂತಾ ಮಾತ ಪೋಜುದಾರನ ಮುಂದ ಯಾಕ ಬರಲಿಲ್ಲ? ಹೆಣ್ಣ ಬಾಲಿ ನನಗನ್ಯೆ‌ಏ ಮಾಡಿ ಬದಿಕೇನಂತೀರಿ?” +“ಹಂಗಾದರ ಹೋಗಿ ಅದ್ಯಾವ ಪೋಜುದಾರನ್ನ ಕರತರ್‍ತಿ ತಾ ಹೋಗ” +ಎಂದ ಇವನೂ ಅಷ್ಟೇ ಒರಟಾಗಿ. ಹೆಂಗಸರ ನಡುವಿದ್ದ ನಿಂಗೂನಿಗೆ ತಡೆಯಲಾಗಲಿಲ್ಲ. “ಹರೀವತ್ತೆದ್ದ ಇದೇನ ಹಚ್ಚೀಯೆ ನನ್ನ ಸವತಿ. ಬಂದ ಕಾಲಲೆ ಜಾಗಾ ಬಿಡತೀಯೊ? ತುರಬ ಹಿಡಿದ ಎಳದ ಒಗೀ ಅಂತೀಯೊ?” +“ಯಾಕಲಾ ಗಂಡುಗ್ಯಾ ಭಾಡ್ಯಾ ಬಾ ಗಂಡಸಿದ್ದರ” +ಎಂದು ಇವಳೂ ನಿಂತಳು. ಗೌಡನಿಗಿನ್ನೂ ಸಿಟ್ಟು ಬರಲೊಲ್ಲದು. ಗೌಡ ಹೂಂ ಅಂದಿದ್ದರ ಅವಳನ್ನು ಹಾಗೇ ಹರಿದು ಚಿಂದಿಮಾಡಲು ಹುಡುಗರು ಸಿದ್ಧರಾಗಿದ್ದರು. ಬೆಳಿಗ್ಗೆದ್ದೊಡನೆ ಈ ಪರಿಯ ಹಗರಣ ಆ ಊರಿಗೆ ಹೇಳಿ ಮಾಡಿಸಿದ್ದಲ್ಲ. ಅಷ್ಟರಲ್ಲಿ ಲಗಮವ್ವ ಬಂದಳು. ಬಸೆಟ್ಟಿ ಬಂದ. ದೇವರೇಸಿ ಬಂದ. ಇನ್ನೇನು ಬೇಕು? ಈಗಲೇ ಇವಳಿಗೆ ಊರಿಂದ ಬಹುಷ್ಕಾರ ಹಾಕಿಬಿಡೋಣವೆಂದು ಬಾಳು ಹೇಳಿದ. ಬಸೆಟ್ಟಿ ಹೌದೆಂದ. ಈ ತನಕ ಸುಂದರಿಗೆ ಧೈರ್ಯವಿತ್ತು. ಸರಪಂಚ ಇರೋ ತನಕ ತನಗೆ ಯಾರೇನು ಮಾಡಲಾದೀತೆಂಬ ಹಮ್ಮಿನಲ್ಲಿದ್ದಳು. ಆದರೆ ಈ ಬಹಿಷ್ಕಾರದ ಅಸ್ತ್ರ ಅವಳಿಗೆ ಹೊಸದು. ಹಾಗೆಂದರೇನೆಂದೂ ಅರಿಯಳು, ಏನೋ ಅಪಾಯ ಕಾದಿದೆಯೆಂದು ಹೆದರಿ ಎದ್ದುನಿಂತು, +“ನಾ ಹಡಬಿಟ್ಟಿ ಹೆಂಗಸಲ್ಲ. ಗೌಡನ….ಫಲ…” ಎಂದು ಹೇಳ ಹೇಳುತ್ತ ಕೂಡಿದ ಮಂದಿಯಲ್ಲಿ ಹೊಟ್ಟಿ ಮುಟ್ಟಿಕೊಂಡೊಡನೆ ಅವಳಿಗರಿವಾಗದಂತೆ ಕಣ್ಣೀರುಕ್ಕಿ ಗಂಟಲು ತುಂಬಿತು. ಬಿಕ್ಕಿ ಬಿಕ್ಕಿ ಕುಸಿದಳು. ಗೌಡನಿಗೆ ತಡೆಯಲಾಗಲಿಲ್ಲ. +“ಹೌಂದವಾ ನನಗಽ ಬಸಿರಾಗೀದಿ ಹೌಂದಲ್ಲೊ? ಹಾಂಗಿದ್ದರ ನಮ್ಮ ಮನ್ಯಾಗ ಇದ್ದುಬಿಡು. ನಿನಗ ಹೊಲಾ ಯಾಕ ಬೇಕು?” +ಈಗ ತಾನು ಕೆಸರಲ್ಲಿ ಸಿಗಬಿದ್ದುದು ಅವಳಿಗೂ ಅರಿವಾಯಿತು. ಇನ್ನು ತನಗಿಲ್ಲಿ ಉಳಿಗಾಲವಿಲ್ಲ. +“ನಾ ಯಾಕ ನಿನ್ನ ಮನ್ಯಾಗಿರ್‍ಲಿ? ಮನಸ್ಸಿಗೆ ಬಂದಲ್ಲಿರ್‍ತೇನ” +ಸುಂದರಿಗೆ ಸಹಾನುಭೂತಿ ತೋರಿಸುವವರು ಒಬ್ಬರೂ ಇರಲಿಲ್ಲ. ಇದೇ ಸಂಧರ್ಭವೆಂದು ಗೌಡನನ್ನು ಕೇಳದೆ, ಕೇಳಿದರೆ ಮತ್ತೆ ರಾಡಿಯಾಗುವುದೆಂದು ಬಗೆದು ಬಹಿಷ್ಕಾರ ಘೋಷಿಸಿಯೇ ಬಿಟ್ಟ ದತ್ತಪ್ಪ. ಅಲ್ಲೇ ಇದ್ದೊಂದು ಕುಂಬಳಕಾಯಿಯನ್ನು ಒಡೆದು ಲಗಮವ್ವನಿಂದ ನೀರು ಬಿಡಿಸಿದ. ಸುಂದರಿ ಅದಕ್ಕಾಗಿ ಏನೋ ಮಾಡಹೋಗಿ ಏನೋ ಆಗಿ ಏನುತ್ತರ ಕೊಡಲೂ ತೋಚದೆ ಗಳಗಳ ಅಳುತ್ತ ಸರಪಂಚಗ ಹೇಳ್ತೇನೆನ್ನುತ್ತ ಅಟ್ಟಿಸಿಕೊಂಡ ಪ್ರಾಣಿಯ ಹಾಗೆ ಓಡಿದಳು. ಜನ ಇವಳಿಗೆ ಇದೇ ತಕ್ಕ ಪ್ರಾಯಶ್ಚಿತ್ತ ಎಂದರು. ದತ್ತಪ್ಪನಿಗೆ ಹೌದ್ಹೌದೆಂದರು. ಇದೆಲ್ಲ ಹದಿನೈದಿಪ್ಪತ್ತು ಎಣಿಸುವುದರೊಳಗೆ ಮುಗಿದುಹೋಗಿತ್ತು. ಜನ ಚೆದುರಿದ ಮೇಲೆ ಗೌಡ “ಅಲ್ಲಪಾ ಪರವೂರವಳು ಆಕೀ ಮ್ಯಾಲ ಹೆಂಗ ಬಹಿಷ್ಕಾರ ಹಾಹಾಕ ಬರತೈತಿ?” ಅಂದ. +ದತ್ತಪ್ಪ ಸಿಡಿದು, +“ನನ್ನ ಚಿಂತಾಮಣಿ ಸುಳ್ಳ ಹೇಳತದೇನು? ತಗಿ, ತಗಿ, ನಾ ಇನ್ನೂ ಜಳಕ ಮಾಡಿಲ್ಲ?” +ಎನ್ನುತ್ತ ಮನೆಗೆ ಹೋದ. +ಕರಗಿದ +ಗುಡಸೀಕರ ಇತ್ತೀಚೆಗೆ ಕರಗಿದ್ದನ್ನು ಬಸವರಾಜು ಗಮನಿಸಿದ್ದ. ಇವನ ಗುಡಿಸಲ ಕಡೆ ಅವ ಬರಲೂ ಇಲ್ಲ. ದಾರಿ ನೋಡಿ ನೋಡಿ ಬಸವರಾಜೂ ತಾನೇ ತೋಟದ ಕಡೆ ಬಂದ. ಗುಡಸೀಕರ ಕೆಲಸ ಮಾಡಿಸುತ್ತಿದ್ದ. ಇಬ್ಬರೂ ಬಹಳ ಹೊತ್ತು ಮಾತಾಡಲಿಲ್ಲ. ಆಮೇಲೆ ಬಸವರಾಜೂ ತನ್ನ ಶಕ್ತಿಯುಕ್ತಿಗಳನ್ನೆಲ್ಲ ಉಪಯೋಗಿಸಿ ಗೌಡನೊಡನಾದ ಮಾತುಕತೆಗಳನ್ನೆಲ್ಲ ಹೊರಡಿಸಿದ. ಗೌಡನ ಪ್ರಭಾವದಿಂದ ಗುಡಸೀಕರನನ್ನು ಹೊರಕ್ಕೆಳೆಯುವುದು ಕಷ್ಟವೇ. ಅದಕ್ಕಾಗಿ ಭಾವುಕನಂತೆ ಅಭಿನಯಿಸಿ, ಎಲ್ಲೀ ಗೌಡ? ಎಲ್ಲೀ ಮುದುಕಪ್ಪ? ಯಾವುದಕ್ಕ ಯಾರ ಬಲಿ? ಎಂದು ಆಳಾಪ ಮಾಡಿದ. ಗೌಡನಿಗೆ ನಿನ್ನ ಬಗ್ಗೆ ಅಕ್ಕರತೆ ಇದ್ದದ್ದೇ ನಿಜವಾದರೆ ಈತನಕ ಯಾಕೆ ಸುಮ್ಮನಿದ್ದ? ಈಗ ಸಿಕ್ಕುಬಿದ್ದಿದ್ದಾನೆ. ಎರಡೆಕರೆ ಹೊಲ ಕಕ್ಕಬೇಕು. ಸಾಲದ್ದಕ್ಕೆ ಊರವರ ಮುಂದೆ ಅವಮಾನವಾಗಿದೆ. ಈಗ ಅವನಿಗಿರುವ ಉಪಾಯ ಒಂದೇ: ನಿನ್ನನ್ನು ಬುಟ್ಟಿಗೆ ಹಾಕಿಕೊಳ್ಳುವುದು. ನೀನೋ ಹಗುರ ಮನಸ್ಸಿನವನು….ಹೀಗೇ ಗಾಂಧಿ ಹಳ್ಳಿ ಜನನಾಯಕ ಏನೇನೋ ಅಂದ. ಏನಂದರೂ ಗುಡಸೀಕರನಲ್ಲಿ ಸರಪಂಚ ಮೂಡಲೇ ಇಲ್ಲ. +ಇತ್ತ ಬಹಿಷ್ಕಾರದಿಂದ ಯಾರೂ ವಿಚಲಿತರಾಗಲಿಲ್ಲ. ಸುಂದರಿಗೂ ಇದರಿಂದೇನಾಗಬೇಕಿದೆ? ಕುಲದವಳಲ್ಲ; ಹೆಣ್ಣು ಗಂಡು ಆಗಬೇಕಾದ್ದಿಲ್ಲ. ತಿರುಗಿ ಕೇಳಿದರೆ ಊರವಳಲ್ಲ. ಕೆಲಸಕ್ಕಂತೂ ಹೋಗಬೇಕಾದ್ದಿಲ್ಲ. ಆದರೆ ಬಹಿಷ್ಕಾರದ ಕಹಿ ಅನಿಭವ ಗುಡಸೀಕರನಿಗೆ ಆಮೇಲೆ ಆಗತೊಡಗಿತು. ಚತುಷ್ಟಯರು ಹೇಳಿ ಕಲಿಸಿದರೂ ಭೇಟಿಯಾಗದೆ ನೆಪಹೇಳಿ ತಲೆ ತಪ್ಪಿಸಿಕೊಳ್ಳತೊಡಗಿದರು. ತೋಟದ ಕೆಲಸಕ್ಕೆ ಆಳುಗಳು ಸಿಗದಾದರು. ಎದುರು ಬಂದರೂ ಜನ ಮಾತಾಡಿಸದಾದರು. ಗಂಡಸಾದ ಇವನಿಗೇ ಈ ರೀತಿ ಅನುಭವ ಬರಬೇಕಾದರೆ ಅವನ ತಾಯಿ-ತಂಗಿಯರ ಸ್ಥಿತಿ ಕೇಳುವುದೇ ಬೇಡ. ಇವನ ಮುಖ ನೋಡಿದೊಡನೆ ತಾಯಿ ಮುಖಕ್ಕೆ ಸೆರಗುಹಾಕಿ ಅಳುತ್ತಿದ್ದಳು. ಗುಡಸೀಕರ ಕೊನೆಗೆ ಬಸವರಾಜನೊಂದಿಗೆ ಆಪ್ತವಾಗಿ ಮಾತಾಡಿದ. ಸುಂದರಿಯನ್ನು ಕಳಿಸಿದ ಹೊರತು ಗತಿಯಿಲ್ಲವೆಂದ. +ಸುಂದರಿಯನ್ನು ಒಪ್ಪಿಸಬೇಕಾದರೆ ಕುರಿಕೋಣ ಬೀಳಬೇಕಾಯಿತು. ನಿಜ ಏನಿತ್ತೋ, ಹೊರಗೆ ಮಾತ್ರ ಬಸಿರಾದದ್ದು ಗುಡಸೀಕರನಿಗೇ ಎಂಬಂತಿದ್ದಳು. ಮದುವೆ ಹೆಂಡತಿಯಂತೆ ತನ್ನನ್ನು ನಡೆಸಿಕೊಳ್ಳಬೇಕಾದ್ದಿಲ್ಲ. ಅವ ಬೇಕಾದರೆ ಬೇರೆ ಮದುವೆಯಾಗಲಿ, ತನ್ನನ್ನು ಈಗಿದ್ದಂತೆ ಇಟ್ಟುಕೊಂಡರೆ ಸಾಕು, ಎಂದು ಒಂದೆರಡು ಬಾರಿ ಹೇಳಿದ್ದಳು. ಗುಡಸೀಕರ ಸ್ವಲ್ಪ ಹೃದಯ ತೆರೆದು ಮಾತಾಡಿದರೆ ತನ್ನನ್ನು ಧಾರೆಯೆರೆಯಲು ಸಿದ್ಧಳಾಗಿದ್ದಂತೆ ಅಭಿನಯಿಸಿದಳು. ಗೌಡನ ಬಾಗಿಲಲ್ಲಿ ಹೋಗಿ ಕೂರು ಎಂದು ಬಸವರಾಜು ಹೇಳಿದಾಗ ಅವಳೊಪ್ಪಿದ್ದೇ ಈ ಕಾರಣಕ್ಕೆ; ಈ ಮೂಲದಿಂದಾದರೂ ಅವನಿಗೆ ತನ್ನ ಪ್ರೀತಿ ಖಾತ್ರಿಯಾಗಲಿ ಎಂದು. +ಈಗ ಊರು ಬಿಡುವ ಯೋಜನೆ ಬಸವರಾಜು ಹೇಳಿದೊಡನೆ ಕಂಗಾಲಾದಂತೆ ಅಭಿನಯಿಸಿದಳು. ಗುಡಸೀಕರನ ಕಾಲು ಹಿಡಿದಳು. ನೀನೇ ಬಂದು ಗರ್ಭ ತೆಗೆಸು ಎಂದಳು. ನನಗೆ ನಿನ್ನ ಬಿಟ್ಟು ಯಾರೂ ದಿಕ್ಕಿಲ್ಲ. ಹಿಂದಿಲ್ಲ, ಮುಂದಿಲ್ಲ ಕಾಣಾ ಕಾಣಾ ನನ್ನನ್ಯಾಕೆ ಅಡವೀ ಹೆಣ ಮಾಡುತ್ತೀ ಎಂದಳು. ಒಂದೆರಡು ದಿನ ಬೆಳಗಾವಿಯಲ್ಲಿದ್ದು ಗರ್ಭ ತೆಗೆಸಿಕೊಂಡು ಬರುವುದೆಷ್ಟೊ ಅಷ್ಟೆ ಎಂದು ಸಮಾಧಾನ ಮಾಡಿದರು. ಹೋಗುವಾಗ ಮತ್ತೆ ಮತ್ತೆ ಗುಡಸೀಕರನ ಕಾಲು ಹಿಡಿದಳು. ಕಣ್ಣೀರಿನಿಂದ ಅವನ ಪಾದ ತೋಯ್ಸಿದಳು. ಕಾಲು ತಬ್ಬಿಕೊಂಡು ಅತ್ತಳು. ಕೊನೆಗೆ ಹೋಗಲೇಬೇಕಾಯಿತು; ಹೋದಳು. ಅವಳು ಹೋದದ್ದು ಗೊತ್ತಾಗಿ ಚತುಷ್ಟಯರು ಮೆಲ್ಲಗೆ ಅವನ ತೋಟದ ಕಡೆ ಸುಳಿದರು. ಜನ ಮಾತಾಡಿಸಿದರು. ಆಳು ಸಿಕ್ಕರು. ಜೀವನವೇನೋ ಯಥಾ ಸಾಂಗ ಸಾಗಿತ್ತು. ಆದರೆ ಹುಡುಗ ದಿನಕ್ಕಿಂತ ಹೆಚ್ಚು ಒಂಟಿಯಾದ. ಅದೇ ಮನೆ, ಅದೇ ತೋಟ, ಅದೇ ಜನ-ಥೂ ಎಂದು ಕುಡಿದ, ಸೇದಿದ, ಮಲಗಿದ, ಹೋದ, ಬಂದ. ಚತುಷ್ಟಯರೇನೋ ಆಗಾಗ ಬರುತ್ತಿದ್ದರು, ಅವರೊಂದಿಗೆ ಎದೆ ಬಿಚ್ಚಿ ಮಾತಾಡಲಾಗುತ್ತಿರಲಿಲ್ಲ, ನಿಂತು ನಿಂತು ಅವರೇ ಹೋಗುತ್ತಿದ್ದರು. ಈ ಮಧ್ಯೆ ಎಲೆಕ್ಷನ್ನಿಗೆ ನಿಲ್ಲುವವರು ತಮ್ಮ ಹೆಸರು ನಮೂದಿಸಬೇಕೆಂದು ಸರ್ಕಾರಿ ಕಾಗದ ಬಂತು. ಕಳ್ಳನ ಮೂಲಕ ಆ ಕಾಗದವನ್ನು ದತ್ತಪ್ಪನಿಗೆ ಕಳಿಸಿಕೊಟ್ಟು ಸುಮ್ಮನೆ ಕೂತ. ಒಂದೆರಡು ದಿನಗಳಲ್ಲಿ ಹಳೇ ಹಿರಿಯರೆಲ್ಲ ಗೌಡನ ನೇತೃತ್ವದಲ್ಲಿ ಚುನಾವಣೆಗೆ ಹುರಿಯಾಳುಗಳಾಗಿ ತಮ್ಮ ಹೆಸರು ಕೊಟ್ಟದ್ದು ತಿಳಿದುಬಂತು. ಆಗಲೂ ಕೆಡುಕೆನಿಸಲಿಲ್ಲ. ಸಿಟ್ಟೂ ಬರಲಿಲ್ಲ. ಬಹಳವಾದರೆ ಆದಿನ ಹೆಚ್ಚಾಗಿ ಕುಡಿದ. +ಹೆಸರು ಕೊಡಲಿಕ್ಕೆ ಇನ್ನೊಂದು ದಿನದ ಅವಧಿಯಿತ್ತು. ಆ ದಿನ ಇಳಿಹೊತ್ತಿನಲ್ಲಿ ನಾಟಕೀಯವಾದ ರೀತಿಯಲ್ಲಿ ಗುಡಸೀಕರನ ತೋಟದ ಗುಡಿಸಲಿಗೆ ಬೆಂಕಿ ಬಿತ್ತು. ಗುಡಸೀಕರ ಅಲ್ಲೇ ಮಲಗಿದ್ದವನು ಎದ್ದು ಪಾರಾದ. ಹಾನಿ ಹೆಚ್ಚಾಗಲಿಲ್ಲ. ಸುತ್ತಲಿನ ಜನ ಸೇರಿ ಆಗಿಂದಾಗ ನಂದಿಸಿದರು. ಆದರೆ ಗುಡಸೀಕರ ಗಾಬರಿಯಾದ. ಹಲ್ಲು ಮುರಿದ ಹಾವಿನಂತಾದ. ತನ್ನ ಸ್ಥಿತಿ ನೆನೆದು ಸಂತಾಪಗೊಂಡ. ಅದೇ ಸಮಯಕ್ಕೆ ಸರಿಯಾಗಿ ಬಸವರಾಜು ಬೆಳಗಾವಿಯಿಂದ ಬಂದಿಳಿದ. +ಬಂದವನು ರ್ರಾತ್ರಿ ತಾನೇ ಹೋಗಿ ಚತುಷ್ಟಯರನ್ನು ಗುಡಿಸಲಿಗೆ ಕರೆತಂದ. ಆಘಾತದಲ್ಲಿದ್ದ ಗುಡಸೀಕರನನ್ನು ಸಾಂತ್ವನಗೊಳಿಸಿ ಒತ್ತಾಯದಿಂದ ಕರೆದುತಂದ, ತಾನು ಈಗಷ್ಟೇ ಬೆಳಗಾವಿಯಿಂದ ತಂದ “ಫಾರಿನ್ ಭಿರಂಡಿ” ತೆರೆದ. ನಡೆದ ವಿದ್ಯಮಾನ ಅವನಿಗೆ ತಿಳಿಯದ್ದೇನಿದೆ? ಯಾಕೆಂದರೆ ಗುದಸೀಕರನ ಗುಡಿಸಲಿಗೆ ಬೆಂಕಿ ಹಚ್ಚಿದವನೇ ಅವನು. ಯಾರಿಗೂ ಗೊತ್ತಾಗದಂತೆ ಮಾಡಿದ್ದ, ಅಷ್ಟೇ. ಗೊತ್ತಾಗುವ ಹಾಗೆ ಬೆಂಕಿ ಹಚ್ಚುವುದಾದರೆ ಅದು ಬಸವರಾಜನಿಂದಲೇ ಯಾಕಾಗಬೇಕು? ಅದು ಇದು ಮಾತಾಡುತ್ತ ಯಥಾವತ್ ಮೀಟಿಂಗ್ ಸುರುಮಾಡಿದ. ಒತ್ತಾಯ ಮಾಡಿ ಗುಡಸೀಕರನಿಗೆ ಕೈಯಾರೆ ಬ್ರಾಂದಿ ಕುಡಿಸಿ ತಾನು ಎಂಜಲು ಹೀರಿದ. ಪರದೇಶೀ ದೇವರನ್ನು ಎಲ್ಲರಿಗೂ ಹಂಚಿದ. ತನ್ನದನ್ನು ಎತ್ತಿಕೊಂಡು, ಗುಡಸೀಕರ ಸಾಹೇಬರ್‍ನ ಈ ಗತಿಗೆ ತಂದಿರಲ್ಲ, ಆ ಸಂತೋಷಕ್ಕೆ ಕುಡಿಯಿರೆಂದು ತಾನೇ ಒಂದು ಗುಟುಕು ಹೀರು ಮುದಿ ಹೆಂಗಸಿನಂತೆ ಗಳಗಳ ಅಳತೊಡಗಿದ ಬಸವರಾಜು. ಚತುಷ್ಟಯರಿಗೆ ಕುಡಿಯಬೇಕೋ, ಬಿಡಬೇಕೋ ಒಂದೂ ಹೊಳೆಯಲೊಲ್ಲದು. ಮಿಕಿಮಿಕಿ ಮುಖ ನೋಡುತ್ತ ಕೂತರು. +“ಗೌಡ ಸುಂದರಿಗೆ ಬಹಿಷ್ಕಾರ ಹಾಕಿದಾಗ ಮಂದೀ ಜೊತೆ ನೀವೂ ಗುಡಿಸಲ ಕಡೆ ಸುಳಿಯಲಿಲ್ಲವೆಂದು ಚತುಷ್ಟಯರನ್ನು ಬೈದ. ನಾಲಾಯಖರೆಂದ. ತಾಯ್ಗಂಡರೆಂದ. ಒಂದು ಕಡೆ ಬ್ರಿಟಿಷರು. ಇನ್ನೊಂದು ಕಡೆ ಗಾಂಧೀಜಿ. ಗೌಡನ ಪಾರ್ಟಿ ಬ್ರಿಟಿಷರಿದ್ದಂತೆ. ಗುಡಸೀಕರ ಗಾಂಧೀಜಿಯಿದ್ದಂತೆ. ಬ್ರಿಟಿಷರನ್ನೋಡಿಸಿ ಹಳ್ಳಿಗೆ ಸ್ವಾತಂತ್ರ್ಯ ತಂದುಕೊಡುವ ಪವಿತ್ರಕಾರ್‍ಯ ಗುಡಸೀಕರ ಮಾಡಿದ್ದು. ಆದರೆ ಅವನ ನಾಯಕತ್ವದಲ್ಲಿ ದುಡಿಯುವ ಯೋಗ್ಯತೆ ನಿಮಗಿಲ್ಲ ನೀವೆಲ್ಲಾ ಗಂಡಿಗ್ಯಾಗೋಳ್ರೋ. ನೀವ ಗಂಡಸರಾಗಿದ್ದರ ಇಂದು ಗುಡಸೀಕರ ಸಾಹೇಬರ ಗುಡಿಸಲಕ್ಕ ಬೆಂಕೀ ಹಚ್ಚೋ ಧೈರ್‍ಯ ಯಾವಾನಾದರೂ ಮಾಡುತ್ತಿದ್ದನೇನ್ರೋ” ಎನ್ನುತ್ತ ಪಕ್ಕದ ರಮೇಸನನ್ನು ಕೂಸಿನಂತೆ ಅವುಚಿಕೊಂಡು ಇನ್ನಷ್ಟು ಅತ್ತ. ಅವನನ್ನು ನೋಡಿ ಗುಡಸೀಕರನ ಕಣ್ಣಾಲಿಯಲ್ಲೂ ನೀರಾಡಿತು. ಗುಡಸೀಕರನೊಳಗೆ ಆಗಲೇ ನಸೆ ಉಕ್ಕತೊಡಗಿತು. ಸುಂದರಿಯನ್ನು ಹಿಂದಿರುಗಿ ಕಳಿಸಿದ್ದು ನಮ್ಮ ಸೋಲನ್ನು ಒಪ್ಪಿಕೊಂಡಂತಾಯಿತೆಂದ. ಇಡೀ ಊರಿಗೆ ಗೊತ್ತಾಗುವಂತೆ ಸೊಲೊಪ್ಪಿದಮ್ಯಾಲೆ ಚುನಾವಣೆ ಯಾವ ಧಿಮಾಕಿಗೆ ಬೇಕು? “ಈಗ ಸುಂದರಿ ಇರಬೇಕಾಗಿತ್ತೋ ಬಸವರಾಜೂ” ಎಂದು ಅಳುದನಿಯಲ್ಲಿ ರಾಗ ತೆಗೆದ. ಚತುಷ್ಟಯರಿಗಾಗಲೇ ಪಶ್ಚಾತ್ತಾಪವಾಗಿತ್ತು. ಆದರೆ ಏನು ಹೇಳಬೇಕೆಂಬುದು ಹೊಳೆಯಲೊಲ್ಲದು. ಈಗ ಕಣ್ಣೀರು ಸುರಿಸುವುದೇ ಯೋಗ್ಯವೆಂದು ಕಳ್ಳನ ಕಳ್ಳಬುದ್ಧಿಗೆ ಹೇಗೆ ಹೊಳೆಯಿತೋ- ‘ಏನೇ ಬರಲಿ, ಒಗ್ಗಟ್ಟಿರಲಿ’ ಎಂದು ಹೇಳುತ್ತ ಅವನೂ ಅಳತೊಡಗಿದ. ಬಸವರಾಜು ಬಿಡಲಿಲ್ಲ. ಯಾಕೊ? ಒಗ್ಗಟ್ಟಿರಬೇಕು? ಎಲೆಕ್ಷನ್ನಿಗೆ ನಿಂತು ಒಗ್ಗಟ್ಟಾಗಿ ದುಡಿಯೋದಾದರೆ ಒಗ್ಗಟ್ಟು ಬೇಕು. ಇಲ್ಲದಿದ್ದರೆ ಅದೇನು ಪ್ರಯೋಜನ? ಈ ತನಕ ಸುಮ್ಮನೇ ಕೂತಿದ್ದ ಮೆರಮಿಂಡನಿಗೆ ಅದೇನು ಸ್ಪೂರ್ತಿ ಉಕ್ಕಿತೋ. ಎದ್ದವನೇ ಮಂಡೆಗಾಲೂರಿ “ಈಗೇನಾಗೇತಿ? ಹೆಸರು ಕೊಡಾಕ ಇನ್ನ ಒಂದಿನ ಐತಿ. ನಾಳಿ ಎಲ್ಲರೂ ಹೋಗಿ ಹೆಸರ ಕೊಟ್ಟ ಬರೋಣು” ಅಂದ. ‘ಥೂ’ ಎಂದು ಬಸವರಾಜು ವೀರಾವೇಶದಿಂದ ಉಗುಳಿದ. ‘ಏನಂತ ನಂಬಬೇಕ್ರೋ ನಿಮ್ಮನ್ನ? ಗಂಡಸರಂತೂ ಅಲ್ಲ, ನಿಂಗೂನ ಹಾಗೆಯೂ ಅಲ್ಲ, ಯಾಕೆಂದರಿ ರೋಬಾ ರೋಬ ಸೀರಿ ಉಟ್ಟ ಅಡ್ಡಾಡತಾನ. ನಿಮಗ ಆ ತಾಕ್ಕತ್ತ ಇಲ್ಲ!-ಹೀಗೆ ಮಾತಿನಲ್ಲಿ ಚತುಷ್ಟಯರನ್ನು ಒಂದೊಂದೇ ಹಂತ ಕೆಳಗಿಳಿಸುತ್ತ ಹುಳ ಮಾಡಿದ. ಕಾಲಕಸ ಮಾಡಿದ. ಕೊನೆಗೆ ಕಸಕ್ಕಿಂತ ಕಡೆ ಅಂದ. ಅವರೂ ಹಾಗೆ ಕೂತರು. +ಒಂದಷ್ಟು ಸಮಯ ಯಾರೂ ಮಾತಾಡಲಿಲ್ಲ. ತಿರುಗಾ ಮುರುಗಾ ಬಸವರಾಜು ಮತ್ತು ಗುಡಸೀಕರ ಇಬ್ಬರೇ ಕುಡಿಯುತ್ತಿದ್ದರು. ವಾತಾವರಣ ದರಿದ್ರವಾಗುತ್ತಿತ್ತು. ಬಸವರಾಜು ಇದನ್ನು ನಿರೀಕ್ಷಿಸಿರಲಿಲ್ಲ. ಕೂಡಲೇ ಪಕ್ಕದ ರಮೇಸನ ಬೆನ್ನಮೇಲೆ ಚಪ್ಪನೆ ಒಂದೇಟು ಹೊಡೆದು “ಏನಂತಿ?” ಅಂದ. ಅವನೇನೂ ಅನ್ನಲಿಲ್ಲ.ಮತ್ತೆ ತಾನೇ ಅನ್ನತೊಡಗಿದ. ಊರ ಮಂದೀನ್ನ ಎದುರು ಹಾಕಿಕೊಂಡು ಎಲೆಕ್ಷನ್ನಿಗೆ ನಿಲ್ಲತೀರೇನು? ಅಷ್ಟ ಗಂಡಸತನ ಇದ್ದರ ಕುಡೀರೆಂದು ಆಜ್ಞೆಮಾಡಿದ. ಆಸೆ ಹತ್ತಿಕ್ಕಿಕೊಂಡು ಉಳಿದವರು ಸುಮ್ಮನೇ ಕೂತರು. ಕೊನೆಗೂ ಕಳ್ಳ ನಿರ್ಧರಿಸಿಯೇ ಬಿಟ್ಟ. +“ತತಾ. ನಾ ಗಂಡಸಾಗತೇನ” +ಎಂದು ಬಟ್ಟಲಿಗೆ ಕೈ ಹಾಕಿದ. ಬಸವರಾಜು ಅವನ ಬಟ್ತಲ ಮೇಲೆ ಕೈ ಇಟ್ಟು “ಕರಿಮಾಯೀ ಆಣೀ ಮಾಡು” ಎಂದ, ಹುದಲಿನಲ್ಲಿ ಸಿಗಬೀಳುತ್ತಿದ್ದುದರ ಅರಿವಾಯಿತು ಕಳ್ಳನಿಗೆ. ಈ ತನಕ ಬರೀ ಅರಳಿಗಂಟಿನ ಮೇಲೆ ಲಾಗಾ ಹಾಕಿದವ. ಹಾಕಿದ ಲಾಗಗಳಿಗೆ ಹೆಸರಂಟಿಸಿಕೊಂಡವ. ಕರಿಮಾಯಿ ಆಣೀ ಹುಡುಗಾಟಿಕೆಯ ಮಾತಲ್ಲ. ಅವಳ ಆಣೆ ಮಾಡುವುದೂ ಪದರಿನಲ್ಲಿ ಬೆಂಕಿ ಕಟ್ಟಿಕೊಳ್ಳುವುದೂ ಒಂದೇ, ಬಸವರಾಜು ಹತ್ತು ಹೇಳಬಹುದು. ಗುದಸೀಕರ ಹತ್ತಕ್ಕೂ ಕತ್ತು ಹಾಕಬಹುದು. ಅವನಿಗೇನು, ಹಿಂದೆ ಹೇಳವರಿಲ್ಲ. ಮುಂದೆ ಕೇಳವರಿಲ್ಲ. ಮನೆಯ ಮುಂಬಾಗಿಲಿನಿಂದ ಹಿತ್ತಲ ಬಾಗಿಲ ತನಕ ಅವನದೇ ಕಾರುಭಾರ. ತನಗಾದರೆ ಹೇಳ ಕೇಳುವ ಹಿರಿಯರಿದ್ದರು. ಹಿಂದೆ ಕರಿಮಾಯಿಯ ಸುದ್ದಿ ಬಂದಾಗ ಬಸವರಾಜೂನ ಜೊತೆ ಇವನೂ ನಕ್ಕಿದ್ದನೇನೋ ಹೌದು, ಆದರೆ ಆಣೆ ಮಾಡುವುದು ಬಂದೊಡನೆ ಹೆದರಿದ. ಇವರ ಮೂಲ ಹಿಡಿದಷ್ಟು ಸಂತೋಷವಾಯ್ತು ಬಸವರಾಜನಿಗೆ. ಗುಡಸೀಕರನಿಗೆ ನಿರಾಸೆಯಾಯ್ತು. “ಇದೇನು ಆಗೋ ಮಾತಲ್ಲ, ಹೋಗೋ ಮಾತಲ್ಲ. ಬಿಡೋ ಬಸವರಾಜು” ಎಂದ. ಬಸವರಾಜು ಬಿಡಲಿಲ್ಲ. ಬಾಯಿ ಹಾಕಿದ. ಇನ್ನೊಂದು ಭಾಷಣ ಬಿಗಿದ. ದೇವತೆಗಳು ರಾಕ್ಷಸರ ಉದಾಹರಣೆ ಕೊಟ್ಟ. ಇದು ಕರಿಮಾಯಿಯ ಹೆಸರಿನಲ್ಲಿ ನಡೆಯುವ ಧರ್ಮಯುದ್ಧವೆಂದ. ಗೌಡ ದತ್ತಪ್ಪನಂಥ ದೈತ್ಯರು ಜನರನ್ನು ಹೇಗೆ ಮೋಸ ಮಾಡುತ್ತಿದ್ದಾರೆ, ಹೇಗೆ ಸುಲಿಯುತ್ತಿದ್ದಾರೆ. ಇಂಥವರನ್ನು ಓಡಿಸಲು ತಾಯಿ ಕರಿಮಾಯಿಯೇ ಗುಡಸೀಕರನನ್ನು ಕರೆಸಿಕೊಂಡಿದ್ದಾಗಿಯೂ ಹೇಳಿದ. ಕರಿಮಾಯಿಯ ಅವನ ವರ್ಣನೆ ಕೇಳಿ ಕಳ್ಳ ಕಣ್ಣೀರು ತಂದ. ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ ಕಣ್ಣಲ್ಲಿ ಬಸವರಾಜೂನನ್ನೇ ಇಂಗಿಸಿಕೊಳ್ಳುತ್ತ ಕೆಳಕ್ಕೆ ನೆಲ ಬಡಿಯುತ್ತ,”ಕರಿಮಾಯೀ ಆಣಿ, ಸರಪಂಚರ ಬೆನ್ನಿಗೆ ನಿಲ್ಲತೇನ ಕೊಡ” ಅಂದ. +***** +ಮುಂದುವರೆಯುವುದು +‘ಚುತುರ್ಥಾಶ್ವಾಸಂ’ ನಾನೂ ನನ್ನ ಹೆಂಡತಿ ಅನ್ನಪೂರ್ಣ ಸದರೀ ಗ್ರಾಮದಲ್ಲಿ ಗದಗಿನ ಪಂಚಾಕ್ಷರಿ ಕಂಪನಿಯವರು ಬೆಳ್ಳಂಬೆಳಗು ಆಡಿದ ಹೇಮರೆಡ್ಡಿ ಮಲ್ಲಮ್ಮ ನಾಟಕ ನೋಡಿ ಬಂದ ಮೇಲೇಯೇ ಶಾಮಣ್ಣನ ಕುರಿತ ಕಾದಂಬರಿಗೆ ಹೊಸ ಆಯಾಮ ದೊರಕಿದ್ದು ಅದನ್ನು […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_200.txt b/Kannada Sahitya/article_200.txt new file mode 100644 index 0000000000000000000000000000000000000000..4531e53c1583822b4d6d3bcf744a5d9bfcab3d21 --- /dev/null +++ b/Kannada Sahitya/article_200.txt @@ -0,0 +1,17 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-ಬರ್ಟೋಲ್ಟ್ ಬ್ರೆಕ್ಟ್ +ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು ಹೇಳುತ್ತೆ?’ ಚೂರೋ ಪಾರೊ ಇಂಗ್ಲಿಷ್ ಕಲಿತು ಬಂದಿದ್ದ ಇಟಾಲಿಯನ್ ಪಾಕಪ್ರವೀಣ ತಡವುತ್ತ ಉತ್ತರಕೊಟ್ಟ: `೧೪೯೨’. ಇಂಗ್ಲಿಷ್‌ ಭಾಷೆಯೇ ಅವನಿಗೆ ಗೊತ್ತಿಲ್ಲವೆಂದು ಅರ್ಜಿ ರದ್ದಾಯಿತು. ಅಮೆರಿಕಾಕ್ಕು ಹೊಸರುಚಿಯ ಇಟಾಲಿಯನ್ ಊಟ ಬೇಡವೆ? ಮೂರು ತಿಂಗಳು ಇಂಗ್ಲಿಷ್ ಕಲಿತು ನಮ್ಮ ಇಟಾಲಿಯನ್ ಅಡುಗೆಭಟ್ಟ ಜಡ್ಜಿನ ಎದುರು ಕೈಕಟ್ಟಿ ತಿರುಗಿ ಅದೇ ವಿನಯದಲ್ಲಿ ನಿಂತ. ಜಡ್ಜಿ ಪ್ರಶ್ನೆ ಬದಲಾಯಿಸಿದ: ‘ಸಿವಿಲ್ ವಾರ್‌ದಲ್ಲಿ ಗೆದ್ದ ಜನರಲ್ ಯಾರು?’ ದಿಟ್ಟದನಿಯಲ್ಲಿ ಇಟಾಲಿಯನ್ ಉತ್ತರಿಸಿದ: ‘೧೪೯೨’, ಮತ್ತೆ ಯಥಾಪ್ರಕಾರ ಅರ್ಜಿ ರದ್ದಾಯಿತು. ಮರಳಿಯತ್ನವ ಮಾಡು ಎಂಬುದರಲ್ಲಿ ನಂಬಿಕೆಯಿದ್ದ ಅಡುಗೆಯವನು ಮತ್ತೆ ಮೂರು ತಿಂಗಳನಂತರ ಬಂದ. ಜಡ್ಜಿ ಕೇಳಿದ: ‘ಎಷ್ಟು ವರ್ಷ ಅಮೆರಿಕಾದ ಚುನಾಯಿತ ಅಧ್ಯಕ್ಷನ ಅವಧಿ?’ ಅದೇ ಉತ್ತರ: ‘೧೪೯೨’, ಜಡ್ಜಿಗೆ ಅರ್ಥವಾಯಿತು. ಇವನು ಹೊಸ ಭಾಷೆ ಕಲಿಯಲಾರ. ‘ಹೇಗೆ ಬದುಕುತ್ತಿ?’ ಎಂದ. `ಕಷ್ಟಪಟ್ಟು ದುಡಿಮೆ ಮಾಡಿ’ ಮಾತಿಗೆ ತಡಕಾಡುತ್ತ ಈ ಪಾಕಪ್ರವೀಣ ಇಟಾಲಿಯನ್ ಹಾಗೂ ಹೀಗೂ ಹೇಗೋ ಅಂದ. ‘ಮೂರು ತಿಂಗಳು ಬಿಟ್ಟು ಮತ್ತೆ ಬಾ’ ಎಂದ ಜಡ್ಜಿ. ನಾಲ್ಕನೇ ಬಾರಿ ಬಂದವನನ್ನು ಜಡ್ಜಿ ಕೇಳಿದ: ‘ಅಮೆರಿಕಾ ದೇಶ ಡಿಸ್ಕವರ್ ಆದದ್ದು ಯಾವಾಗ?’ ನಮ್ಮ ಇಟಾಲಿಯನ್‌ನದು ಮತ್ತೆ ಅದೇ ಉತ್ತರ: `೧೯೪೨’. +ಸರಿಯಾದ ಉತ್ತರ ಕೊಟ್ಟನೆಂದು ಇಟಾಲಿಯನ್‌ಗೆ ಅಮೆರಿಕಾದ ಸಿಟಿಝನ್ ಶಿಪ್ಪು ಸಿಕ್ಕಿತು. +***** +‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ […] +“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. […] +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_201.txt b/Kannada Sahitya/article_201.txt new file mode 100644 index 0000000000000000000000000000000000000000..6f88a9f05c8632c26d3b657c15c767462d7b84c0 --- /dev/null +++ b/Kannada Sahitya/article_201.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹವಾ ನಿಯಂತ್ರಿತ ಷಹರೆಂದು +ಹೆಸರಾದ ಬೆಂಗಳೂರಿನಲ್ಲಿ ಸದ್ಯ +ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ +ಇರದೆ ಬದುಕುವುದು ದುಸ್ಸಾಧ್ಯ. +***** +ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. ***** +ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. ***** +ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_202.txt b/Kannada Sahitya/article_202.txt new file mode 100644 index 0000000000000000000000000000000000000000..17514e86853048079464343920b77a5bbb838de9 --- /dev/null +++ b/Kannada Sahitya/article_202.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಗಲೆಂದರೆ ಇವಳು ಕಾಣುವ ಕನಸು +ಹೊತ್ತು ತರಬೇಕು ಇವಳಿದ್ದಲ್ಲಿ, +ನಿದ್ದೆ-ಮಂಪರು-ಕನಸು-ಕಂಪನ; +ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ +ರಾತ್ರಿ ಚಾದರದಡಿಗೆ ದಂಡು ದಂಡು +ಮಂದಿ ಬಂದು ಬೀಳುತ್ತಾರೆ +ಉಂಡಷ್ಟೂ (ಸಹ) ಭೋಗ +ಕೊಂಡಷ್ಟೂ (ಸ)ರಾಗವೆಂದು. +ಸಾವಿರ ಗಂಡರಿಗೆ ಮೊಲೆಯುಣಿಸಿ +ಲಾಲಿ ಹಾಡುತ್ತಾಳೆ, +ಅವರು ಅಲ್ಲೇ…. ಹಾಗೇ…. +ತಣ್ಣಗೆ, ಅವಳ ಮಡಿಲಲ್ಲಿ +ಮಲಗುವ ಹಾಗೆ. +ಇವಳ ಕತ್ತಲ ಅಹಂಕಾರಕ್ಕೆ +ಸೊಕ್ಕಿ ಉಕ್ಕುತ್ತದೆ ಕಡಲು +ಹರಳ ಬಿರಿಬಿಟ್ಟರೆ ಅಲ್ಲಿ, +ಸಿಕ್ಕಲ್ಲಿ ಹೊಕ್ಕು ನಲುಗುವ +ಒಂಟಿ ಮಲ್ಲಿಗೆ ಹೂವು; +ಕೆಳಗೆ ಝುಳು ಝುಳು ಧಾರಾಕಾರ +ಹರಿವ ಹುಣ್ಣಿಮೆ ಬೆಳಕು +ಇವಳು ಕತ್ತಲ ಕನ್ಯೆ! +ಅಡಗಿದ್ದ ಸೂರ್ಯನ್ನ +ಆಕಾಶಕ್ಕೆ ಕೊಡವಿ, +ಮತ್ತೆ ಮುಡಿ ಕಟ್ಟುತ್ತಾಳೆ. +***** +ಕೀಲಿಕರಣ: ಕಿಶೋರ್‍ ಚಂದ್ರ +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_203.txt b/Kannada Sahitya/article_203.txt new file mode 100644 index 0000000000000000000000000000000000000000..9efd5c9b705f31b1eeee06d48acc2c24ee6b3097 --- /dev/null +++ b/Kannada Sahitya/article_203.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಜ್ಞಾನಪೀಠ ಪ್ರಶಸ್ತಿ ಭಾಷಣ) +ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು ದೋಣಿಯಿದ್ದಂತೆ. ತನ್ನನ್ನು ಮೇಲಕ್ಕೆ ಎತ್ತಿ ತೇಲಿಸುವ ನೀರಿನ ಆಳದ ಗುಣ ದೋಣಿಗೆ ಎಂದಾದರೂ ಗೊತ್ತಿರುತ್ತದೆಯೇ? ನಮ್ಮ ಆಳವಾದ ಅಭಿಮಾನದ ಮೇಲೆ ನೀನು ತೋರುವಂತೆ ತೇಲುತ್ತಿದ್ದೀಯ ಎನ್ನುವುದನ್ನು ಮರೆಯಬೇಡ….” +ಈ ಕಥೆಯನ್ನು ಹೇಳಿದವರು ಕನ್ನಡದ ಹಿರಿಯ ಕವಿಗಳಾದ ಶ್ರೀ ಪು.ತಿ.ನರಸಿಂಹ ಆಚಾರ್ಯರು. ಅವರಿಗೆ ೯೦ ವರ್ಷ ವಯಸ್ಸು. ಇಂತಹ ಕಥೆಗಳೆಲ್ಲವನ್ನೂ ನಾವು ನಮ್ಮ ಹಿರಿಯರಿಂದ ಕೇಳಿಸಿಕೊಂಡು ತಿಳಿಯುವುದೇ ಹೊರತಾಗಿ ಓದಿ ತಿಳಿಯುವುದಲ್ಲ. ಎ.ಕೆ.ರಾಮಾನುಜನ್ನರು ಒಮ್ಮೆ ಅಂದಿದ್ದರು: ನಾವು ಯಾರೂ ಪ್ರಥಮ ಬಾರಿಗೆ ಮಹಾಭಾರತವನ್ನಾಗಲಿ, ರಾಮಾಯಣವನ್ನಾಗಲಿ ಓದಿರುವುದಿಲ್ಲ. ಇಂಥ ಕಥೆಗಳನ್ನು ನಾವು ಕೇಳಿಸಿಕೊಳ್ಳುತ್ತಿರುವಾಗ ಅದಕ್ಕೆ ಒಂದು ಸಂದರ್ಭ ಇದ್ದೇ ಇರುತ್ತದೆ. ಪು.ತಿ.ನ.ರವರಿಗೂ ನನಗೂ ನಡುವೆ ಅಂತಹ ಒಂದು ಸಂದರ್ಭ ಇತ್ತು. ನನ್ನ ಈ ಹಿರಿಯರಿಗೆ ನಮ್ಮ ಜನಾಂಗದ ಒಬ್ಬ ಕವಿಯನ್ನು ಕುಶಾಲಿನಲ್ಲಿ ಗೇಲಿಮಾಡುವ ಅಗತ್ಯವಿತ್ತು. ಆ ಕವಿಯ ಮುಖೇನ ನನ್ನನ್ನು ಛೇಡಿಸುವ ಆಸೆಯೂ ಈ ಹಿರಿಯರಿಗೆ ಇದ್ದಿರಬಹುದು. ಯಾಕೆಂದರೆ ನನ್ನ ವಾರಿಗೆಯವರು ಈ ಹಿರಿಯರ ಕಾವ್ಯಮಾರ್ಗದಿಂದ ಹೊರಳಿಕೊಂಡು ಅವರನ್ನು ಟೀಕಿಸುತ್ತ ನಮ್ಮದೇ ಒಂದು ನವ್ಯ ಮಾರ್ಗವನ್ನು ಸ್ಥಾಪಿಸಿದ್ದೆವು. ಅಡಿಗರಿಂದ ಸ್ಫೂರ್ತಿಪಡೆದ ಈ ನವ್ಯ ಮಾರ್ಗ ಹಿರಿಯರ ದಾರಿಯಲ್ಲಿ ಕೊರತೆಯನ್ನು ಕಂಡು ಹೊಸದನ್ನು ಅನ್ವೇಷಿಸಿತ್ತು. ತನ್ನ ಕಾಲಕ್ಕೆ ನಿಜವಾಗಿ ಸ್ಪಂದಿಸುವಾಗ ಹೀಗೆ ಹಿಂದಿನವರಿಗಿಂತ ಬೇರೆಯಾಗುವ ಅಗತ್ಯವೂ ಆ ಕಾಲದಲ್ಲಿ ಇತ್ತು. ಆದರೆ ಆಗ ತೀರ ಹೊಸದು ಎಂದು ನಾವು ಭಾವಿಸಿದ್ದ ಸಾಹಿತ್ಯದ ಮಾರ್ಗವು ಈಗ, ಹಿನ್ನೋಟದಲ್ಲಿ ನಮ್ಮ ಹಿಂದಿನವರಿಂದ ಸೂಕ್ಷ್ಮವಾಗಿ ಕಲಿತದ್ದೆಂದೂ, ಪರಂಪರೆಯಿಂದ ಅಷ್ಟೇನೂ ಭಿನ್ನವಲ್ಲವೆಂದೂ ತೋರುತ್ತದೆ. +ಪು.ತಿ.ನ.ರವರು ಹೇಳಿದ ಈ ಕಥೆ ಪರಂಪರೆಗೂ ಆಧುನಿಕತೆಗೂ ಇರುವ ಸಂಬಂಧವನ್ನು ಕುರಿತಾದ ಬಹು ಸ್ವಾರಸ್ಯದ ರೂಪಕವೆಂದು ನಾನು ತಿಳಿಯುತ್ತೇನೆ. ಪೂರ್ವಸೂರಿಗಳು ನಮ್ಮನ್ನು ತೇಲುತ್ತಾ ತೋರುವಂತೆ ಎತ್ತಿಹಿಡಿದಿದ್ದಾರೆ. ಇದು ಅವರ ಕೃಪೆ. ಅವರ ಕೃಪೆಯಲ್ಲಿ ನಾವು ಅನ್ಯಮನಸ್ಕರಾಗಿ ನಮ್ಮನ್ನು ತೇಲುವಂತೆ ಎತ್ತಿಹಿಡಿದಿರುವ ಹಿರಿಯರ ಶಕ್ತಿಯನ್ನು ಮರೆಯಬಹುದು. ಹೀಗೆ ಮರೆಯದೆ ಸೃಜನಶೀಲತೆ ಕೂಡ ಇಲ್ಲ. ಈ ಕಥೆಯ ಸ್ವಾರಸ್ಯವೆಂದರೆ ನಮ್ಮ ಹಿಂದಿನವರನ್ನು ಛೇಡಿಸಲು ಕೂಡ ಈ ರೂಪಕವನ್ನು ಬಳಸಬಹುದು. ವ್ಯಾಸ, ವಾಲ್ಮೀಕಿಗಳು ಇಲ್ಲದೆ ಕಾಳಿದಾಸನೆಲ್ಲಿ? ಕಾಳಿದಾಸನಿಲ್ಲದೆ ಪಂಪನೆಲ್ಲಿ? ಪಂಪ, ಕುಮಾರವ್ಯಾಸರಿಲ್ಲದೆ ಕುವೆಂಪು, ಪು.ತಿ.ನ.ರವರೆಲ್ಲಿ? +ಆದರೆ ಇಷ್ಟು ನಿಜ: ಪರಂಪರೆಯ ಜೊತೆ ಜಗಳವಿಲ್ಲದೇ ಪ್ರಸ್ತುತದಲ್ಲಿ ಸೃಜನಶೀಲತೆ ಹುಟ್ಟಲಾರದು. ಮತ್ತು ಈ ಜಗಳ ನಮ್ಮ ಜೊತೆಗೂ ನಾವು ಆಡಿಕೊಳ್ಳುವ ಜಗಳ. ನಿಜವಾಗಿ ಹುಟ್ಟುವುದೆಲ್ಲ ಸತ್ತೇ ಹುಟ್ಟುವುದು. ನಾವು ನಮ್ಮ ಪೂರ್ವಸೂರಿಗಳಿಗೆ ಕೊಡುವ ಗೌರವವೆಂದರೆ ಹೀಗೆ ಸತ್ತು ಹುಟ್ಟಿ ನಾವು ಪಡೆದದ್ದನ್ನು ಪರಂಪರೆಗೆ ಹಿಂದಿರುಗಿಸುವುದು. ಈ ಸೃಜನಶೀಲತೆಯನ್ನು ಸಾಧ್ಯಮಾಡುವ ಭಾಷೆ ಲೇಖಕನ ಸ್ವಯಂಸೃಷ್ಟಿಯಲ್ಲ ಎನ್ನುವುದರಲ್ಲೇ ಸಾಹಿತ್ಯದ ವಿನಯ ಇರುವುದು. ಎಲ್ಲ ಭಾಷೆಯೂ ನಮ್ಮ ಹಿಂದಿನವರು ಬೆಳೆಸಿದ್ದು; ಮತ್ತು ನಮ್ಮ ಸಮಕಾಲೀನರು ಜೀವಂತವಾಗಿ ಉಳಿಸಿರುವುದು. ಹೀಗೆ ಭಾಷೆಯ ಮೂಲಕ ನೆನಪು ಸತತವಾಗಿ ಉಳಿಯುತ್ತದೆ. ನಮ್ಮ ಬೆಳವಣಿಗೆಯ ಕಷ್ಟಗಳು, ಜೀವನದ ಸಂದಿಗ್ಧಗಳು, ನಮ್ಮ ನಮ್ಮ ಸಾವನ್ನೂ ನಮಗೆ ಪ್ರಿಯರಾದವರ ಸಾವನ್ನೂ ಎದುರಿಸುವುದರಲ್ಲಿ ಇರುವ ದುಃಖ – ಇವೆಲ್ಲವೂ ಎಷ್ಟು ನಮಗೆ ಎದುರಾಗುವ ಸದ್ಯದ್ದೋ ಅಷ್ಟೇ ನಮ್ಮ ಭಾಷೆಗಳಲ್ಲಿ ನಮ್ಮ ಸದ್ಯಕ್ಕೆ ಒದಗಿಬರುವಂತೆ ದಾಖಲಾದದ್ದು. ನಮ್ಮ ಅತ್ಯಂತ ಏಕಾಕಿತನದ ಭಾವನೆಯ ಹೊತ್ತಿನಲ್ಲಿ ನಾವು ಸಮಷ್ಟಿಯ ಒಂದು ಅಂಗವೂ ಎನ್ನಿಸುವುದನ್ನು ಸಾಧ್ಯ ಮಾಡುವುದು ಒಂದು ಭಾಷೆಯ ಸಾಹಿತ್ಯದ ಪರಂಪರೆ. +ನನ್ನ ಪಾಲಿಗೆ ಇದು ಕನ್ನಡ. ಈ ಕನ್ನಡದಲ್ಲಿ ಜಾನಪದ ನೆನಪುಗಳು ಜೀವಂತವಾಗಿ ಉಳಿದಿವೆ. ಸಂಸ್ಕೃತ ಸಾಹಿತ್ಯದ ಆದರ್ಶಗಳು ಈ ಕನ್ನಡ ಭಾಷೆಯೊಳಗೆ ಈಗಲೂ ಚುರುಕಾಗಿ ಉಳಿದಿವೆ. ಹಾಗೆಯೇ ಈ ಭಾಷೆ ಯುರೋಪಿನ ಬಹು ಶಕ್ತಿಯುತವಾದ ಪ್ರಭಾವವನ್ನು ಅರಗಿಸಿಕೊಂಡು ಪಳಗಿಸಿಕೊಳ್ಳುವ ಉಪಾಯವನ್ನು ನಮಗೆ ಕೊಟ್ಟಿದೆ. ಆದ್ದರಿಂದ ಬ್ಲೇಕ್ ಅನ್ನುವಂತೆ ನಾನು ನನ್ನ ಪರಂಪರೆಗೆ ಸೇರಿಸಿರಬಹುದಾದ ಕಿಂಚಿತ್ತನ್ನು ’ಇದು ನನ್ನದು, ಆದರೆ ನನ್ನದು ಮಾತ್ರವಲ್ಲ’ ಎನ್ನುವುದು ಸಾಧ್ಯವಾಗಿದೆ. ನಾನು ಪ್ರಸ್ತುತದಲ್ಲಿ ತೇಲಿ, ಲೋಕಕ್ಕೆ ತೋರುವಂತೆ ಮಾಡಿರುವ ಶಕ್ತಿಯ ಹಿಂದೆ ಈ ಕಾಲದ ನನ್ನ ಸರೀಕರೂ ಪೂರ್ವಸೂರಿಗಳೂ ಇದ್ದಾರೆ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿ, ಜ್ಞಾನಪೀಠ ಪಡೆದ ಭಾರತದ ಮಹಾಶಯರ ನಡುವೆ ಒಬ್ಬನಾಗುವುದನ್ನು ಅತ್ಯಂತ ವಿನಯದಿಂದ ಒಪ್ಪಿಕೊಳ್ಳುತ್ತೇನೆ. +ಒಂದು ಸಾವಿರ ವರ್ಷದಷ್ಟಾದರೂ ಜೀವಂತ ಸಾಹಿತ್ಯಪರಂಪರೆಯಿರುವ ಕನ್ನಡದಲ್ಲಿ ನಾನು ಬರೆಯುವುದು. ಭಾರತೀಯ ಸಾಹಿತ್ಯದ ಮುಖ್ಯ ಪ್ರವಾಹದಲ್ಲಿ ತಾನು ಇದ್ದೇನೋ, ಇಲ್ಲವೋ ಎನ್ನುವ ಸಂಶಯ ಈ ಕಾಲದಲ್ಲಾಗಲಿ ಹಿಂದಿನ ಕಾಲದಲ್ಲಾಗಲಿ ನನ್ನ ಭಾಷೆಯಲ್ಲಿ ಯಾವ ಲೇಖಕನಿಗೂ ಬಂದದ್ದಿಲ್ಲ. ಮಗುವಾಗಿ ನಾನು ಓದಲು ಕಲಿಯುತ್ತಿದ್ದಾಗ ನನ್ನ ಕಣ್ಣಿನಲ್ಲಿ ನೀರನ್ನು ತಂದ ಒಂದು ಪದ್ಯ ಧರಣಿಮಂಡಲದ ಮಧ್ಯದೊಳಗೆ ಕರ್ನಾಟ ದೇಶ ಇದೆ ಎಂದು ಹೇಳುತ್ತದೆ. ಒಂದು ಹುಲಿಯ ಕ್ರೂರ ಹೃದಯವನ್ನು ತನ್ನ ಪ್ರಾಮಾಣಿಕತೆಯಿಂದ ಮತ್ತು ಸತ್ಯಸಂಧತೆಯಿಂದ ಗೆದ್ದ ಹಸುವಿನ ಕತೆ ಈ ಹಾಡು. ಹೃದಯ ಪರಿವರ್ತನೆಯ ಈ ಹಾಡು ನಿಜವಾಗಿಯೂ ಗಾಂಧಿ ತತ್ತ್ವವನ್ನು ಪ್ರತಿಪಾದಿಸುವಂತಿದೆ. ಈ ಅನಾಮಿಕ ಕವಿಗೆ ಪ್ರಪಂಚದ ಕೇಂದ್ರ ಕರ್ನಾಟಕ. ಅಂತಹ ಒಂದು ದೇಶದಲ್ಲಿ ಒಬ್ಬ ಗೊಲ್ಲನಿದ್ದಾನೆ. ಅವನ ಹೆಸರು ಕಾಳಿಂಗ. ಹೀಗೆ ಈ ಹಾಡು ಒಂದು ಲಾಂಗ್ ಶಾಟ್‌ನಿಂದ ಶುರುವಾಗಿ ಒಬ್ಬ ಗೊಲ್ಲನಲ್ಲಿ ನಮಗೆ ಕ್ಲೋಸಪ್ ಕೊಡುತ್ತದೆ. ಅವನು ಕರೆಯುವ ಹಸುಗಳಿಗೆ ಭಾರತದ ಮುಖ್ಯ ನದಿಗಳ ಹೆಸರಿವೆ. ಸಹ್ಯಾದ್ರಿ ಪರ್ವತ ಶ್ರೇಣಿಯ ನಿಬಿಡ ಅರಣ್ಯದ ಮಧ್ಯದ ಒಂದು ಮನೆಯಲ್ಲಿ ನಾನು ಈ ಪದ್ಯವನ್ನು ಕಲಿತದ್ದು. ನಮ್ಮ ರಾಷ್ಟ್ರದ ನದಿಗಳ ಹೆಸರುಗಳನ್ನು ನನಗೆ ತಿಳಿಸಲು ಪ್ರಾರಂಭಿಸಿದ್ದು ಈ ಪದ್ಯದ ಹಸುಗಳು. ಇಲ್ಲಿ ಪುಣ್ಯಕೋಟಿ ಎನ್ನುವ ಹಸು ತನ್ನ ಪ್ರೀತಿಯ ಕರುವನ್ನು ಬೀಳ್ಕೊಟ್ಟು ಹುಲಿಗೆ ತನ್ನ ಇಡೀ ದೇಹವನ್ನು ಅರ್ಪಿಸುವ ಸಂದರ್ಭ ಬಂದಾಗ ನನ್ನ ತಂದೆ ಅತ್ತಿದ್ದರು. ನನ್ನ ತಂದೆ ಹೀಗೆ ಅತ್ತಿದ್ದನ್ನು ನಾನು ಎಂದೂ ನೋಡಿದ್ದಿಲ್ಲ.ಇವು ನನ್ನ ತುಂಬ ಹಿಂದಿನ ನೆನಪುಗಳು. ಆದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಸಮಾಜದ ಕೆಲವು ಕ್ರೂರ ಸತ್ಯಗಳನ್ನು ಕಂಡು ನನ್ನ ಮುಗ್ಧತೆಯನ್ನು ಕಳೆದುಕೊಳ್ಳಲು ಇನ್ನಷ್ಟು ವರ್ಷಗಳು ಕಾಯಬೇಕಾಯಿತು. ಒಂದು ಸುಂದರವಾದ ಸಣ್ಣ ಪಟ್ಟಣದಲ್ಲಿ (ತೀರ್ಥಹಳ್ಳಿ) ನಾನು ಹೈಸ್ಕೂಲು ಕಲಿಯಲು ಅಗ್ರಹಾರದಿಂದ ನಡೆದು ಹೋಗುತ್ತಿದ್ದೆ. ಕಾಲೇಜಿನಲ್ಲಿ ಶಿಕ್ಷಣ ಪಡೆದ ನನ್ನ ಅಧ್ಯಾಪಕರೊಬ್ಬರು ಅಲ್ಲಿ ಭಗವದ್ಗೀತೆಯನ್ನು ಕುರಿತು, ಒಂದು ಯುದ್ಧದ ಸಂದರ್ಭದಲ್ಲಿ ಅಷ್ಟು ಗಂಟೆಗಳ ಕಾಲ ಬೋಧಿಸುವುದು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಎತ್ತಿದ್ದು ನೆನಪಿದೆ. ಮಡಿವಂತ ಕುಟುಂಬದಿಂದ ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ಈ ಪ್ರಶ್ನೆ ಎಷ್ಟು ಬಾಧಿಸಿರಬಹುದು ಊಹಿಸಿಕೊಳ್ಳಿ. ಅಗ್ರಹಾರಕ್ಕೆ ಹಿಂದಿರುಗುವಾಗ ದಾರಿಯಲ್ಲಿ ಡಾ|ಚಾರ್ಲ್ ಎಂಬ ಒಬ್ಬ ಡಾಕ್ಟರರ ಶಾಪಿಗೆ ಹೋಗಬೇಕಾಗಿ ಬರುತ್ತಿತ್ತು. ನನ್ನ ಸ್ಕೂಲು ಬ್ಯಾಗಿನಲ್ಲಿ ಬೇರೆ ಬೇರೆ ಬಣ್ಣಗಳ ಔಷಧಿ ಬಾಟಲಿಗಳನ್ನು ನನ್ನ ಅಕ್ಕಪಕ್ಕದವರಿಗಾಗಿ ನಾನು ಯಾವತ್ತೂ ಕೊಂಡೊಯ್ಯುತ್ತಿದ್ದೆ. ಈ ಶಾಪಿನಲ್ಲಿ ನನಗೆ ಅತ್ಯಂತ ಆಕರ್ಷಕರಾದ ಒಬ್ಬ ವ್ಯಕ್ತಿ – ಸಿನ್ಹಾ ಎಂದು ತನ್ನ ಹೆಸರನ್ನು ಆಧುನಿಕಗೊಳಿಸಿಕೊಂಡ ಶ್ರೀನಿವಾಸ ಜೋಯಿಸ್ ಎಂಬವರು – ಆರಾಮಾಗಿ ಕೂತಿರುತ್ತಿದ್ದರು. ವಿದ್ಯುತ್‌ಚ್ಛಕ್ತಿ ಇರದ ನಮ್ಮ ಊರಿನಲ್ಲಿ ಇವರು ಡೈನಮೋದಿಂದ ನಡೆಸುವ ಒಂದು ರೇಡಿಯೋದಿಂದ ಇಂಗ್ಲಿಷ್ ಭಾಷೆಯನ್ನು ಶುದ್ಧವಾಗಿ ಕಲಿತವರಾಗಿದ್ದರು. ಶಾಪಿನಲ್ಲಿ ಔಷಧಿಗಾಗಿ ಕಾಯುತ್ತಿದ್ದಾಗ ನನಗೆ ಜಾರ್ಜ್ ಬರ್ನಾಡ್ ಷಾ ಬಗ್ಗೆ ಮತ್ತು ಆ ಕಾಲದ ಪ್ರಸಿದ್ಧ ನಿರೀಶ್ವರವಾದಿ ಇಂಗರ್ ಸಾಲ್ ಬಗ್ಗೆ ಅವರು ಏನೇನೋ ಹೇಳಿ ವಿವರಿಸುತ್ತಿದ್ದರು. ಅಗ್ರಹಾರಕ್ಕೆ ಹಿಂದಿರುಗಿದವನು ಅಲ್ಲಿದ್ದ ಮಠಕ್ಕೆ ಹೋದರೆ, ಅಲ್ಲಿ ದ್ವೈತ ಮತ್ತು ಅದ್ವೈತದ ನಡುವಿನ ವಾದಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಈ ಭೂಮಿ ಗುಂಡಗಿದೆಯೇ ಅಥವಾ ಚಪ್ಪಟೆಯಾಗಿದೆಯೇ ಎನ್ನುವ ವಾಗ್ವಾದ ಅಲ್ಲಿಗೆ ಬರುತ್ತಿದ್ದ ಒಬ್ಬ ಆರ್ಯ ಸಮಾಜಿಗೂ ಮಡಿವಂತ ಪಂಡಿತರಿಗೂ ನಡುವೆ ನಡೆದದ್ದು ಕೇಳಿದ್ದೇನೆ. ನನ್ನ ಅಗ್ರಹಾರದಲ್ಲಿ ನಾನು ಗೆಲಿಲಿಯೋನ ಸಮಕಾಲೀನ ಆಗಿರಬಹುದಿತ್ತು. ನನ್ನ ತಂದೆಯ ತಲೆಯ ಮೇಲಿನ ಕೂದಲು ಕೆಲವೊಮ್ಮೆ ಮಡಿವಂತರದಂತೆಯೂ, ಕೆಲವೊಮ್ಮೆ ಆಧುನಿಕರದಂತೆಯೂ, ಶೈಲಿಯಲ್ಲಿ ಬದಲಾಗುತ್ತಿತ್ತು. ಅವರು ಮಹಾತ್ಮ ಗಾಂಧಿಯ ’ಹರಿಜನ’ವನ್ನು ಮನೆಗೆ ತರಿಸಿಕೊಂಡು ವಾರಿಗೆಯವರಿಗೆ ಓದಿ ಹೇಳುತ್ತಿದ್ದರು. +ಮಹಾತ್ಮ ಗಾಂಧಿ ಅಗ್ರಹಾರದ ನಮ್ಮನ್ನು ಗೊಂದಲಗೊಳಿಸಿದ್ದರು. ಕೆಲವರಿಗೆ ಅವರು ದೈವಿಕ ಸಂತರಂತೆ ಕಂಡರೆ, ಹರಿಜನರನ್ನು ದೇವಾಲಯದೊಳಗೆ ಪ್ರವೇಶಿಸುವಂತೆ ಮಾಡಿ ವರ್ಣಸಂಕರಕ್ಕೆ ಕಾರಣನಾದ ಕಾಪುರುಷನಂತೆಯೂ ಕಾಣುತ್ತಿದ್ದರು. ಒಮ್ಮೆ ಊರಿನಲ್ಲಿ ಪ್ಲೇಗ್ ಕಾಣಿಸಿಕೊಂಡಿತ್ತು. ಇನಾಕ್ಯುಲೇಟ್ ಮಾಡಲು ಬಂದ ಡಾಕ್ಟರು ಅಗ್ರಹಾರದ ಹೊರಗಿದ್ದ ಅಸ್ಪೃಶ್ಯರ ಕೇರಿಗೆ ಹೋಗಲಿಲ್ಲ. ಹರಿಜನರು ಪ್ಲೇಗಿನಿಂದ ಸಾಯಲು ಪ್ರಾರಂಭಿಸಿದಾಗ ನಮ್ಮಲ್ಲಿ ಕೆಲವು ಮೂಢರು, ಎಲ್ಲೋ ದೂರದ ಗಾಂಧಿಯ ಮಾತು ಕೇಳಿ ದೇವಾಲಯ ಪ್ರವೇಶಿಸಿದ್ದರಿಂದ ನಮ್ಮೂರಿನ ಹರಿಜನರು ಶಿಕ್ಷಿತರಾಗುತ್ತಿದ್ದಾರೆ ಎಂದು ವಾದಿಸುತ್ತಿದ್ದರು. ಆಗ ನಾನು ಅಗ್ರಹಾರದಲ್ಲಿ ಕೈಬರಹದ ಪತ್ರಿಕೆಯೊಂದನ್ನು ಗೆಳೆಯರೊಡನೆ ಕೂಡಿ ಹೊರತರಲು ಪ್ರಾರಂಭಿಸಿದ್ದೆ. ಸಂಸ್ಕೃತ ಇಂಗ್ಲಿಷ್ ಮತ್ತು ಕನ್ನಡ – ಮೂರೂ ಭಾಷೆಗಳಲ್ಲಿ ಅಗ್ರಹಾರದ ಹುಡುಗರ ಈ ಮಾಸಪತ್ರಿಕೆ ಹೊರಬರುತ್ತಿತ್ತು! ಅದರಲ್ಲಿ ನಾನೊಂದು ಕತೆ ಬರೆದಿದ್ದೆನೆಂದು ನೆನಪು. ಈ ಕಥೆ ಕ್ಲಿಷ್ಟ ರೂಪಕಗಳಲ್ಲಿ ಬರೆದುದಾಗಿತ್ತು. ಯಾಕೆಂದರೆ ನೇರವಾಗಿ ನನ್ನ ಮನಸ್ಸಿನಲ್ಲಿ ಇರುವುದನ್ನು ಬರೆದು ಹಿರಿಯರ ಕೋಪಕ್ಕೆ ತುತ್ತಾಗುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಕತೆಯ ಪ್ರೇರಣೆ ಇದಾಗಿತ್ತು: ಹರಿಜನರು ಸಾಯಲು ತೊಡಗಿದಾಗ ಸುಂದರಳಾದ ಒಬ್ಬಳು ’ಅಸ್ಪೃಶ್ಯ’ ಹುಡುಗಿ ಕೇರಿಯನ್ನು ತೊರೆದು ಓಡಿ ಹೋಗಿದ್ದಳು. ಯಾಕೆಂದು ಅದರ ರಹಸ್ಯ ನನಗೆ ಮಾತ್ರ ಗೊತ್ತಿತ್ತು. ಸೈನ್ಯದಲ್ಲಿ ಕೆಲಸಮಾಡಿದ್ದ ಅಗ್ರಹಾರದ ಯುವಕನೊಬ್ಬ ಊರಿಗೆ ಮರಳಿ ಬಂದವನು ಆಕೆಯ ಜೊತೆ ಗುಪ್ತ ಸಂಬಂಧವನ್ನು ಇಟ್ಟುಕೊಂಡಿದ್ದ. ಆದ್ದರಿಂದ ಮತ್ಸ್ಯಗಂಧಿಯಂತೆ ಕಾಣುತ್ತಿದ್ದ ಈ ಕಪ್ಪು ಸುಂದರಿ, ಎಲ್ಲರಂತೆ ತನ್ನ ಪಾಡೆಂದು ಸಾಯಲು ಒಲ್ಲದೆ ಓಡಿಹೋಗಿದ್ದಕ್ಕೆ ಕಾರಣ, ಅವಳು ಸ್ಪರ್ಶಿತಳಾದದ್ದು ಮತ್ತು ಇಂತಹ ಸ್ಪರ್ಶದಿಂದ ಅವಳು ಜಾಗೃತಗೊಂಡದ್ದು ಎಂದು ಭಾವಿಸಿ ಕತೆ ಹೆಣೆದಿದ್ದೆ. ನನಗೆ ಮೂವತ್ತು ವರ್ಷವಾಗಿದ್ದಾಗ ಇಂಗ್ಲೆಂಡಿನಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ನಾನು ನನ್ನ ಅಧ್ಯಾಪಕರ ಜೊತೆ ಬರ್ಗ್‌ಮನ್‌ನ ಒಂದು ಸಿನೆಮಾ ’ದಿಥಿಟ ಛಿ’ ನೋಡಲು ಹೋಗಿದ್ದೆ. ಈ ಚಿತ್ರದಲ್ಲಿ ಸಬ್‌ಟೈಟಲ್ ಇರಲಿಲ್ಲವಾದ್ದರಿಂದ ನಾನದನ್ನು ಮಸುಕು ಮಸುಕಾಗಿ ಅರ್ಥಮಾಡಿಕೊಂಡಿದ್ದೆ. ಕೆಲವೊಮ್ಮೆ ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು ಸೃಜನಶೀಲತೆಗೆ ಕಾರಣವಾಗಬಹುದು. ನನ್ನ ಅಧ್ಯಾಪಕರಿಗೆ ಸಿನೆಮಾ ನೋಡಿದ ಅನಂತರ ಹೀಗೆ ಹೇಳಿದೆ: “ಐರೋಪ್ಯನೊಬ್ಬ ತನ್ನ ಮಧ್ಯಯುಗವನ್ನು ಪುಸ್ತಕಗಳ ಮುಖೇನ ತಿಳಿದುಕೊಳ್ಳಬೇಕಾಗುತ್ತದೆ. ಐರೋಪ್ಯರ ಐತಿಹಾಸಿಕ ಕಾಲ ಸರಳರೇಖಾತ್ಮಕವಾಗಿ ಬೆಳೆದದ್ದು. ಆದರೆ ಭಾರತೀಯನಾದ ನನಗಾದರೋ ಎಲ್ಲ ಕಾಲವೂ ಒಂದೇ ಕಾಲದಲ್ಲಿ ಸಹಬಾಳ್ವೆ ಮಾಡುತ್ತವೆ”. ಹೀಗೆ ನನಗೆ ಹೊಳೆದದ್ದೇ, ಹೈಸ್ಕೂಲು ದಿನಗಳಲ್ಲಿ ನಾನು ಬರೆದ ಕತೆಯನ್ನು ಮತ್ತೊಮ್ಮೆ ಬರೆಯುವಂತೆ ಮಾಡಿತು. ಅದೇ, ನನ್ನ ’ಸಂಸ್ಕಾರ’ ಕಾದಂಬರಿ. ಹೀಗೆ ನಾನು ವಿವರಿಸಿ ಹೇಳಲು ಕಾರಣ ನನ್ನ ಪರಂಪರೆಯ ಜೊತೆಗೆ ನನಗಿರುವ ಜಗಳವನ್ನು ಸ್ಪಷ್ಟಪಡಿಸಲು. ನಾನು ಪರಂಪರೆಯ ಜೊತೆ ಜಗಳಮಾಡುವುದು ಹೊರಗಿನವನಾಗಿ ಅಲ್ಲ, ಒಳಗಿನವನಾಗಿ. ಹೀಗಾಗಿ ನನ್ನನ್ನು ನಾನು ಒಬ್ಬ ಒಳ ವಿಮರ್ಶಕನೆಂದು ತಿಳಿದುಕೊಂಡಿದ್ದೇನೆ. ಇದರಲ್ಲಿ ನಾನು ಮಾರ್ಗದರ್ಶನ ಪಡೆದದ್ದು ಕನ್ನಡ ಪರಂಪರೆಯಿಂದಲೇ. ನಮ್ಮ ಮೊದಲ ಕವಿ ಪಂಪ ಮತಪರಿವರ್ತನೆ ಹೊಂದಿದ ಜೈನವರನು. ಅವನ ದೊರೆ ಹಿಂದೂ ಮತ್ತು ಅವನು ಬರೆದದ್ದು ಮಹಾಭಾರತ. ಇಡೀ ಮನುಜಕುಲ ಒಂದು ಎಂದು ತಿಳಿದಿದ್ದ ಅವನ ನಿಜವಾದ ನಾಯಕ ಕರ್ಣ; ಜಾತಿ ವ್ಯವಸ್ಥೆಯಿಂದಾಗಿ ನೊಂದವನು. ಹನ್ನೆರಡನೆ ಶತಮಾನದ ವಚನಕಾರರಾದರೋ ಇಡೀ ವರ್ಣವ್ಯವಸ್ಥೆಯನ್ನು ಪ್ರಶ್ನಿಸಿ ಮನುಷ್ಯರೆಲ್ಲರೂ ಸಮಾನರೆಂದು ಶಿವನಿಗೆ ತಮ್ಮನ್ನು ಅರ್ಪಿಸಿಕೊಂಡವರು. ಆ ಕಾಲದ ಬಸವ ಒಬ್ಬ ಅಸ್ಪೃಶ್ಯನಿಗೆ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಲು ನೆರವಾದವನು.ಅಗ್ರಹಾರದಲ್ಲಿ ಬೆಳೆಯುತ್ತಿದ್ದಾಗ ನಾನು ನನ್ನ ಅಸ್ತಿತ್ವವನ್ನು ರೂಪಿಸುತ್ತಿದ್ದ ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗಳನ್ನು ಪ್ರಶ್ನಿಸುವಂತೆ ಎಚ್ಚರವಾದೆ ಎಂದು ಹೇಳಿದೆ; ಅದಕ್ಕೆ ಕಾರಣ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಮ್ಮೆಲ್ಲರ ಮೇಲೂ ಆದ ಮಹಾತ್ಮ ಗಾಂಧಿಯ ಪ್ರಭಾವ. ಅಲ್ಲದೆ ಆಗ ನಾನು ಕನ್ನಡದ ಹಿರಿಯ ಲೇಖಕರ ಕಾದಂಬರಿಗಳನ್ನೂ ಓದಿದ್ದೆ. ಕುವೆಂಪುರವರ ’ಕಾನೂರು ಹೆಗ್ಗಡತಿ’ ಮತ್ತು ಶಿವರಾಮ ಕಾರಂತರ ’ಚೋಮನ ದುಡಿ’ಯಿಂದ ನಾನು ಕಂಡದ್ದು ಎಲ್ಲ ಮನುಷ್ಯರಿಗೂ ಒಂದು ತೀವ್ರವಾದ ಒಳಬದುಕು ಇರುತ್ತದೆ ಎಂಬುದು. ಅಂದರೆ ನಾವು ನಿಕೃಷ್ಟರೆಂದು ಕಾಣುವ ಜನರಲ್ಲಿ ಹೊರಗೆ ಕಾಣದ ಈ ಒಳಬದುಕು ಇದೆ ಎನ್ನುವುದು ನನ್ನನ್ನು ದಂಗುಬಡಿಸಿತ್ತು. ಜೊತೆಗೆ ನಾನು ನಿತ್ಯ ಕಾಣುತ್ತಿದ್ದ ಸಾಮಾನ್ಯ ಪ್ರಪಂಚ ತೇಜೋಮಯವೆಂದು ನನಗೆ ಅನ್ನಿಸಿತ್ತು. ನಿನ್ನ ಸುತ್ತಲಿನ ಪರಿಸರವನ್ನು ನಿನ್ನ ಕಣ್ಣನ್ನು ಉಜ್ಜಿ ಮತ್ತೆ ನೋಡಬೇಕು ಅಷ್ಟೆ. ಪೌರಾಣಿಕ ಪ್ರಪಂಚ ಮತ್ತು ವಾಸ್ತವಿಕ ಪ್ರಪಂಚ ಹೀಗೆ ಅನ್ಯೋನ್ಯವಾಗಿ ಏಕಗೊಳ್ಳುತ್ತಿದ್ದಂತೆಯೇ, ಇನ್ನೂ ಅಪಕ್ವ ಕ್ರಾಂತಿಕಾರನಾದ ನಾನು, ಪುರಾಣ ಪ್ರಪಂಚದ ಶೋಭೆಯಲ್ಲಿ ಉಜ್ವಲವೆಂದುಕೊಂಡ ನನ್ನ ಸುತ್ತಮುತ್ತಲಿನ ಭೂತಗಳನ್ನು ಅಪವಿತ್ರಗೊಳಿಸಲು ಪ್ರಾರಂಭಿಸಿದ್ದೆ. ಇಂತಹ ಘಟನೆಗಳಿಂದಲೇ ನಾನು ನನ್ನ ಪರಿಸರದಿಂದ ಒಡೆದುಕೊಂಡು ಲೇಖಕನಾದೆ. ನಾನೊಬ್ಬ ಗಣಿತಶಾಸ್ತಜ್ಞನಾಗಿ ನೆಮ್ಮದಿಯ ಧ್ಯಾನಶೀಲತೆಯಲ್ಲಿ ಬದುಕಬೇಕೆನ್ನುವುದು ನನ್ನ ತಂದೆಯ ಇಚ್ಛೆಯಾಗಿತ್ತು. ಆದರೆ ಡಾಕ್ಟರ್ ರಾಮಮನೋಹರ ಲೋಹಿಯಾರ ಅನುಯಾಯಿಗಳ ಪ್ರಭಾವಕ್ಕೆ ಒಳಗಾಗಿ ನನ್ನ ಹಸಿ ತಾರುಣ್ಯದಲ್ಲಿ ಒಂದು ರೈತ ಸತ್ಯಾಗ್ರಹದಲ್ಲಿ ಭಾಗಿಯಾದದ್ದು (ಕಾಗೋಡು ರೈತ ಸತ್ಯಾಗ್ರಹ) ನನ್ನ ಜೀವನದ ದಿಕ್ಕನ್ನೆ ಬದಲಿಸಿಬಿಟ್ಟಿತು. ಹೀಗೆ ನಾನು ಬರಹಗಾರನಾದದ್ದು. ನಾನು ಪಾಶ್ಚಾತ್ಯ ವಿಚಾರಗಳ ಕುರುಡು ಅನುಯಾಯಿಯಾಗಿ ಹೋಗದಂತೆ ನನ್ನನ್ನು ಕಾಪಾಡಿದ ಡಾಕ್ಟರ್ ಲೋಹಿಯಾರ ಕ್ರಾಂತಿಕಾರಕ ವೈಚಾರಿಕತೆಗೆ ಈಗಲೂ ನಾನು ಋಣಿಯಾಗಿದ್ದೇನೆ. ನಮ್ಮ ಕಾಲದ ಅತ್ಯಂತ ಉಜ್ವಲ, ಧೀಮಂತ ದೃಷ್ಟಾರ ಗಾಂಧೀಜಿಯನ್ನು ನಾನು ಪಡೆದದ್ದು ಲೋಹಿಯಾ ಮುಖೇನ. ಆ ಕಾಲದ ನನ್ನ ಎಲ್ಲ ನೆನಪುಗಳನ್ನು ಒಂದು ರೂಪಕಗಳ ಉಗ್ರಾಣವಾಗಿ ಪಡೆದು ನಾನು ಈಗಲೂ ಬದುಕಿ ಬರೆಯುತ್ತೇನೆ. ಮಠದ ಪರಿಸರದಲ್ಲಿ ನಡೆಯುತ್ತಿದ್ದ ಸಂಜೆಯ ದೀರ್ಘವಾದ ಪೂಜಾವಿಧಿಗಳು, ಕಾರ್ತಿಕ ಮಾಸದ ಹಬ್ಬಗಳು, ಹರಿಕಥೆಗಳು, ಪಾಂಡಿತ್ಯಪೂರ್ಣ ಪಾರಮಾರ್ಥಿಕ ಚರ್ಚೆಗಳು, ನನ್ನ ಕೆಲವು ನೆರೆಹೊರೆಯವರ ಸರಳವಾದ ಧಾರ್ಮಿಕ ಜೀವನ, ಜೊತೆಯಲ್ಲೇ ಜಾತಿ ಹೆಮ್ಮೆಯ ಉಸಿರುಗಟ್ಟಿಸುವ ವಾತಾವರಣ, ನಮ್ಮವರಲ್ಲದವರ ಬಗ್ಗೆ ನಮಗಿದ್ದ ತಿರಸ್ಕಾರ ದೃಷ್ಟಿ, ಬಡ ಗೇಣಿದಾರರ ಜೊತೆ ಮಠದವರು ನಡೆಸುತ್ತಿದ್ದ ಕೊನೆ ಇಲ್ಲದ ಕೋರ್ಟು ವ್ಯಾಜ್ಯಗಳು – ಇವೆಲ್ಲವೂ ಒಟ್ಟಾಗಿ ನನ್ನ ಸ್ಮೃತಿಯ ಉಗ್ರಾಣದ ರೂಪಕಗಳಾಗಿವೆ.ನನ್ನ ಈ ಬಾಲ್ಯದ ನೆನಪುಗಳು ನನ್ನಲ್ಲಿ ದ್ವಂದ್ವ ಭಾವನೆಗಳನ್ನು ಯಾವತ್ತೂ ಉಂಟುಮಾಡುತ್ತವೆ. ಮಡಿವಂತ ವಾತಾವರಣದಲ್ಲಿ ಬದುಕುವುದು ಕೇವಲ ಉಸಿರುಗಟ್ಟಿಸುವ ಅನುಭವ ಮಾತ್ರ ಕೊಟ್ಟಿತೆಂದು ಹೇಳಿದರೆ ಅದು ಸುಳ್ಳಾಗುತ್ತದೆ. ಈ ಪುಟ್ಟ ಪ್ರಪಂಚದಲ್ಲಿ ನಾನು ಪಡೆದ ಕೆಲವು ಅನುಭವಗಳು ಇವತ್ತಿಗೂ ನನಗೆ ರಹಸ್ಯಾತ್ಮಕವೆಂದೂ, ಪಾರಮಾರ್ಥಿಕವೆಂದೂ ಅನ್ನಿಸುತ್ತವೆ. ಅಪರಿಗ್ರಹದ ನಿಷ್ಠ ಸಾಧಕರೊಬ್ಬರು ಮಠದಲ್ಲಿದ್ದರು. ಒಂದು ಬಟ್ಟಲಿನಲ್ಲಿ ತನ್ನ ಭಿಕ್ಷೆಯನ್ನು ಅವರು ದಿನದ ಒಂದೇ ಸಾರಿ ಪಡೆದು ಊಟಮಾಡಿ ಬದುಕುತ್ತಿದ್ದರು; ಇಡೀ ವರ್ಷಕ್ಕೆ ಒಂದು ಜೊತೆ ವಸ್ತವನ್ನು ಮಾತ್ರ ಬೇಡಿ ಪಡೆದು ಉಡುತ್ತಿದ್ದರು; ದೇವಾಲಯದ ಗೋಡೆಯ ಪುಟ್ಟ ಗೂಡಿನಲ್ಲಿ ಉರಿಯುತ್ತಿದ್ದ ಹಣತೆಯ ಬೆಳಕಿನಲ್ಲಿ ನಿಂತು ಇಡೀ ರಾತ್ರಿ ಓದುತ್ತಿದ್ದರು. ಹಣತೆ ತಾನಾಗಿ ಆರುವ ತನಕ ಓದುತ್ತಿದ್ದ ಅವರು ಹೆಚ್ಚು ಬೆಳಕಿಗಾಗಿ ಬತ್ತಿಯನ್ನು ಒಂದು ಚೂರಾದರೂ ಮುಂದಕ್ಕೆ ತಳ್ಳದವರು. ಅಂಥವರು ನನ್ನ ಸಂಸ್ಕೃತದ ಅಧ್ಯಾಪಕರು. ಇಷ್ಟೊಂದು ಕಠೋರ ನಿಷ್ಠೆಯ ಇಂತಹ ಬ್ರಹ್ಮಚಾರಿ ’ಶಾಕುಂತಳ’ದ ಶೃಂಗಾರಮಯವಾದ ಭಾಗಗಳನ್ನು ಪಾಠಮಾಡುವಾಗ ಅವರಿಗೇನು ಅನ್ನಿಸುತ್ತಿತ್ತು ಅನ್ನುವುದೇ ನನಗೆ ಸೋಜಿಗ. ಒಮ್ಮೆ ತಲೆಕೆಟ್ಟವನೊಬ್ಬ ಅವರ ಬಳಿ ಬಂದು, ಹೊದ್ದ ಅಂಗವಸ್ತವನ್ನು ಕೊಡು ಎಂದು ಕೇಳಿದ. ಕೇಳಿದವನಿಗೆ ಒಲ್ಲೆ ಎನ್ನಬಾರದು ಎನ್ನುವ ವ್ರತದ ಅವರು ಅಂಗವಸ್ತವನ್ನು ಅವನಿಗೆ ಕೊಟ್ಟುಬಿಟ್ಟು, ಇಡೀ ಚಳಿಗಾಲ ಬರಿಮೈಯಲ್ಲಿ ಕಳೆದರು. ಮುಂದಿನ ವರ್ಷ ಮಾತ್ರ ಅವರು ವಸ್ತವನ್ನು ಬೇಡಿ ಪಡೆಯಬಹುದಾಗಿತ್ತು. +ತನಗೆ ಕರೆ ಬಂದಿದೆ ಎಂದು ಒಮ್ಮೆ ಅವರಿಗೆ ಅನ್ನಿಸಿತು. ಅಶ್ವತ್ಥದ ಒಂದು ಎಲೆಯನ್ನು ಹಿಡಿದು ಕಣ್ಣು ಮುಚ್ಚಿ ಪ್ರಾರ್ಥಿಸಿ ಅದನ್ನು ಕೆಳಗೆ ಬೀಳಲು ಬಿಟ್ಟರು. ಅದು ಅಂಗಾತ್ತನೆ ಬಿದ್ದರೆ, ನೀನು ಎಲ್ಲವನ್ನೂ ತ್ಯಜಿಸಿ ಹೊರಟುಹೋಗು ಎಂದು ಅಪ್ಪಣೆಯಾದಂತೆ ಎಂದುಕೊಂಡು ಕಣ್ಣುಬಿಟ್ಟರು. ಅಶ್ವತ್ಥದ ಎಲೆ ಹೋಗೆಂದು ಅವರಿಗೆ ಅಪ್ಪಣೆ ಕೊಟ್ಟಿತು. ಅವರು ಹೊರಟುಹೋದರು. ನಾವು ಮತ್ತೆ ಅವರನ್ನು ನೋಡಲಿಲ್ಲ. ಇನ್ನೊಂದು ಸಂದರ್ಭದಲ್ಲಿ ನಾನು ಈಗಾಗಲೇ ಹೇಳಿದ್ದನ್ನು ಮತ್ತೆ ಹೇಳಲು ಬಯಸುತ್ತೇನೆ. ಕುರುಡು ಪಾಶ್ಚಾತ್ಯೀಕರಣ ಮತ್ತು ಅಂತರಾಷ್ಟ್ರೀಯತೆಯ ಈ ಕೆಟ್ಟ ದಿನಗಳಲ್ಲಿ, ಸಾರ್ವಜನಿಕ ಘಟನೆಗಳು ಮುಟ್ಟಲಾರದ ಒಂದು ಖಾಸಗಿ ಬದುಕಿದೆ ಎಂದು ತಿಳಿಯುವುದೇ ಸಾಧ್ಯವಿಲ್ಲವಾಗಿದೆ. ಆದ್ದರಿಂದ ನಾವು ಲೇಖಕರು ವಿಶೇಷವಾದ ವ್ಯಕ್ತಿಗಳೆಂದೂ, ನಮ್ಮ ಏಕಾಕಿತನದಲ್ಲಿ ನಮ್ಮ ಕಲೆಯನ್ನು ಉಜ್ವಲಗೊಳಿಸಿಕೊಳ್ಳಬಲ್ಲವರೆಂದೂ ನಾವು ನಂಬಿಕೊಂಡವರಾದರೆ ನಾವು ಜುಜುಬಿ ಕಲಾರಾಧಕರಾಗಿ ಕೊಳೆಯುವುದೇ ಸರಿ. ಬದುಕುವುದೆಂದರೆ ತೊಡಗಿಸಿಕೊಳ್ಳುವುದು. ನಮ್ಮ ಕೈಮೀರಿದ ಘಟನೆಗಳಿಗೂ ತುತ್ತಾಗುವುದು. ಆದರೆ ಬರೆಯುವ ಕ್ರಿಯೆಗೆ ದೂರನಿಂತು ನೋಡುವ ಅಗತ್ಯವಿದೆ. ಆದರೆ ಹೀಗೆ ದೂರದಿಂದಲೋ ಮೇಲಿನಿಂದಲೋ ನೋಡುವುದು ಕಷ್ಟಮಾತ್ರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಇಂಥ ದ್ವಂದ್ವಗಳಲ್ಲಿ ಗೂಢವಾಗುತ್ತ ಬೆಳೆದ ಯೇಟ್ಸ್ ಕವಿ ಐರ್‌ಲ್ಯಾಂಡಿನ ಉದ್ವೇಗಯುಕ್ತ ರಾಜಕಾರಣದಲ್ಲಿ ಮನಸ್ಸು ತಾಳದೆ ಒಳಗಾದವನಾಗಿ ಹೀಗೆ ಬರೆಯುತ್ತಾನೆ:”ಏನೇ ಆದರೂ ನಮ್ಮ ಆತ್ಮವನ್ನು ನಮ್ಮೊಡನೆ ನಾವು ಒಯ್ಯುವಂತೆ ನೋಡಿಕೊಳ್ಲಬೇಕು…. ನಮ್ಮ ಕಲ್ಪನೆಗೆ ಸಂತೆಯ ಬಂಡಿಯೇ ಸರಿ ಅನ್ನಿಸಿದರೆ ನಮ್ಮ ಶರೀರದೊಳಗೆ ನಮ್ಮ ಆತ್ಮವನ್ನು ಗಟ್ಟಿಯಾಗಿ ಹಿಡಿದಿಟ್ಟು ಕಾಯಬೇಕು. ಯಾಕೆಂದರೆ ಹಲವು ಸೂಕ್ಷ್ಮ ಜನಾಂಗಗಳ ದೀರ್ಘ ಇತಿಹಾಸದಲ್ಲಿ ನಾವು ಆತ್ಮನಿಷ್ಠ ಸೌಂದರ್ಯದ ರುಚಿಗೆ ಮನಸೋತವರಾಗಿಬಿಟ್ಟಿರುವುದರಿಂದ, ಕೇವಲ ಶಕ್ತಿಯ ಆರಾಧನೆಗೆ, ಕೇವಲ ವೈಯಕ್ತಿಕತೆಯ ವಿಜೃಭಣೆಗೆ, ಆವೇಶದ ರಕ್ತದ ತುಮುಲಕ್ಕೆ ಒಳಗಾಗುವುದನ್ನು ನಮ್ಮಲ್ಲಿ ಅಂತರ್ಗತವಾಗಿರುವ ಅಲೌಕಿಕದ ರುಚಿ ಅಸಹನೆಯಿಂದ ಕಾಣುತ್ತದೆ.” ಮೇಲೇರುವ ಪಕ್ಷಿಯ ಮಾರ್ಗ ಈ ಕಾಲಕ್ಕೆ ಸಲ್ಲದ್ದು ಎನ್ನಿಸಿ ಸಾರ್ವಜನಿಕ ಜಂಜಾಟಗಳ ಸಂತೆಯ ಬಂಡಿಯನ್ನು ನಾವು ಆಯ್ದವರಾದರೆ, ಇದನ್ನು ನೆನಪಿಡಬೇಕು: ಅರ್ಥಶಾಸ್ತಜ್ಞರಿಗೂ, ಸಮಾಜ ವಿಜ್ಞಾನಿಗಳಿಗೂ ಇರುವ ವಸ್ತುನಿಷ್ಠ ವಿಶ್ಲೇಷಣೆಯ ಸಾಮಗ್ರಿ ನಮ್ಮದಲ್ಲ. ಜೊತೆಗೆ ರಾಜಕೀಯದ ಉಪಾಯಗಾರರಿಗೆ ಗೊತ್ತಿರುವ, ತಮ್ಮ ಇಚ್ಛಾಶಕ್ತಿಗೆ ಬೇಕಾದಂತೆ ಜನರನ್ನು ಉಪಯೋಗಿಸುವ ಕಲೆ ನಮ್ಮದಲ್ಲ. ನಮ್ಮನ್ನು ಮೆಚ್ಚಿದವರು ಬಯಸುವ ಸಾರ್ವಜನಿಕ ವ್ಯಕ್ತಿಗಳಾಗಿ ನಾವು ಆಗಿಬಿಡಬಾರದು. ತನ್ನ ಪ್ರತಿಯೊಂದು ಹೊಸ ಕೃತಿಯಲ್ಲೂ ತನ್ನನ್ನು ಮೆಚ್ಚಿಕೊಂಡ ಮಂದಿಯಲ್ಲಿ ಕೆಲವರನ್ನಾದರೂ ಕಳೆದುಕೊಳ್ಳದ ಲೇಖಕ ಎಲ್ಲೋ ಸುಳ್ಳಾಗುತ್ತಿದ್ದಾನೆ ಎನ್ನುವ ಅನುಮಾನ ನಮಗಿರಬೇಕು. ಯಾಕೆಂದರೆ ನಾವು ನಮ್ಮನ್ನೇ ಅನುಕರಿಸಿಕೊಳ್ಳುತ್ತಿರಬಹುದು ಅಥವಾ ಸಾರ್ವಜನಿಕರ ಕಣ್ಣಿಗೆ ಇಷ್ಟವಾಗುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳುತ್ತಿರಬಹುದು. ವಾಗ್‌ವೈಭವ ಅಪಾಯಕಾರಿ. ಅದು ಸಮೂಹವನ್ನು ಉದ್ರೇಕಗೊಳಿಸುವುದಕ್ಕಾಗಿ ರೂಪಿತವಾದದ್ದು. ಸುಳ್ಳುಗಳನ್ನು ಕೇಳಿಸಿಕೊಳ್ಳುತ್ತ ಬದುಕುವುದು ಸಾಮಾನ್ಯವಾಗಿ ಎಲ್ಲರಿಗೂ ಕ್ಷೇಮವೆನ್ನಿಸುತ್ತದೆ, ಹಿತವೆನ್ನಿಸುತ್ತದೆ. ಆದರೂ ಜನರ ಆತ್ಮ ಸತ್ಯಕ್ಕಾಗಿ ಹಸಿದಿರುತ್ತವೆ. ಆದ್ದರಿಂದ ನಾವು ನಮ್ಮ ಅತ್ಯಂತ ಏಕಾಂಗಿತನದಲ್ಲಿ ನಾವೇ ನಂಬಿದ್ದನ್ನು ಹೇಳುವ ಧೈರ್ಯ ಮಾಡಬೇಕು. ನಮಗೇ ನಾವು ಸುಳ್ಳು ಹೇಳಿಕೊಂಡು ಬದುಕುವ ಯಾವುದಾದರೂ ಶೈಲಿಗೆ ಬದ್ಧರಾಗಿ ಬಿಟ್ಟರೆ ಯಾರೂ ನಮ್ಮನ್ನು ಪಾರುಮಾಡುವಂತಿಲ್ಲ. ಆಳುವ ವರ್ಗದ ರಾಷ್ಟ್ರಕವಿಯಾಗುವುದಾಗಲಿ, ರಾಜಕೀಯ ಪಕ್ಷಗಳ ವಕ್ತಾರರಾಗುವುದಾಗಲಿ ಈ ಕಾರಣದಿಂದ ಲೇಖಕನಿಗೆ ಅಪಾಯಕಾರಿಯಾದದ್ದು. ಇವತ್ತಿಗೂ ಕಲೆ ನಾವು ಅಡಗಿಕೊಳ್ಳಬಹುದಾದ ಜಾಗವಾಗಿಯೇ ಉಳಿದಿದೆ. ಸೋವಿಯತ್ ದೇಶದ ಸೆಕ್ಯುಲರ್ ಅಬ್ಬರದಲ್ಲಿ ಸೋಲ್ಝೆನಿಟ್ಸಿನ್‌ನಿಗೆ ಆಸ್ತಿಕನಾಗಿ ಉಳಿಯುವುದು ಹೀಗೆ ಸಾಧ್ಯವಾಯಿತು. ಅಂತೆಯೇ ತಾವು ದೇವರನ್ನು ನಂಬಿದವರೆಂದು ಬೀಗುವವರ ಮತೀಯ ಅಸಹನೆ ಮತ್ತು ಕ್ರೌರ್ಯದ ಜಗತ್ತಿನಲ್ಲಿ, ಅನುಮಾನಿಗಳಾಗಿ ಇರುವುದು ನಮ್ಮ ಕಾಲದ ಹಲವರಿಗೆ ಸಾಧ್ಯವಾಗಿದೆ. ಇಂತಹ ಸಾಂಸ್ಕೃತಿಕ ಬಿಕಟ್ಟುಗಳ ಕಾಲದಲ್ಲಿ ಕಲಾವಿದ ತನ್ನ ಶಕ್ತಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆನ್ನುವುದನ್ನು ಜಾಯ್ಸ್ ಹೇಳುತ್ತಾನೆ. ಕಲಾವಿದ ಇಂತಹ ಕಾಲದಲ್ಲಿ ಆಯಬೇಕಾದ್ದು, ಜಾಯ್ಸ್ ಪ್ರಕಾರ ಮೌನ, ಅಜ್ಞಾತವಾಸ ಮತ್ತು ಉಪಾಯ. ಆದರೆ ರಾಜಕೀಯವಾಗಿ ಆರೋಗ್ಯವೆನ್ನಿಸುವ ಕಾಲದಲ್ಲೂ ಲೇಖಕ ಬೇರೆ ರೀತಿಯ ಉಪಾಯಗಳನ್ನು ಆಶ್ರಯಿಸಬಹುದು. ಯಾಕೆಂದರೆ ತನ್ನ ಅಂತರಾತ್ಮದ ಕಿರುದನಿಗೆ ಓಗೊಟ್ಟು ಅವನು ಅಗತ್ಯಬಿದ್ದಲ್ಲಿ ಜನಾದರವನ್ನು ನಿರ್ಲಕ್ಷಿಸುವ ಅಪ್ರಿಯ ಲೇಖಕನೂ ಆಗಬೇಕಾಗಬಹುದು. ನಿಜವಾದ ಪ್ರಜಾತಾಂತ್ರಿಕ ಸಮಾಜದಲ್ಲಿ ಲೇಖಕನ ಪಾತ್ರ ಇಂತಹದ್ದಾಗಿರುತ್ತದೆ. ಇಂತಹ ಒಂದು ಶೀಲವಂತ ಸಮಾಜ, ಪರಂಪರೆಯ ಸ್ಮೃತಿ ಸಾತತ್ಯವನ್ನು ಪ್ರೀತಿಸುವುದರ ಜೊತೆಗೇ, ಜನರ ಭಾವುಕತೆಯನ್ನು ದೋಚುವ ಸಮೂಹಸನ್ನಿಯನ್ನು ಆದರಿಸುವುದಿಲ್ಲ ಎಂದು ನಾವು ಭರವಸೆ ಇಟ್ಟುಕೊಂಡಿರಬೇಕಾಗುತ್ತದೆ. ಈ ಬಗೆಯ ಅಪ್ಪಟ ಪ್ರಜಾತಾಂತ್ರಿಕ ಸಮಾಜದಲ್ಲಿ ಮಾತ್ರ ಲೇಖಕನಿಗೆ ತಾನು ಕೋಮಲವಾದ ಅಂತಃಕರಣದ, ಧ್ಯಾನಶೀಲನಾದ ಸಹನಾಗರಿಕನಾಗಿ ಬದುಕುತ್ತ, ತನ್ನ ಮಾತುಗಳಿಗೆ ಇತರರನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿದೆಯೆಂದು ತಿಳಿಯಲು ಸಾಧ್ಯವಾಗಿರುತ್ತದೆ. ಹೀಗೆ, ಒಂದು ಗತಿಶೀಲವಾದ ನಾಗರಿಕ ಸಮಾಜದ ಸೃಷ್ಟಿಗೆ ನಾವೆಲ್ಲರೂ ಬದ್ಧರಾಗಲು ಸಾಧ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ಒಂದು ಸಮಾಜದಲ್ಲಿ ಮಾತ್ರ ಸಂಸ್ಕೃತಿಗಳ ಬಹುತ್ವದಲ್ಲಿ ಸಂತೋಷವಿರುತ್ತದೆ. ನಮ್ಮದಲ್ಲದ ದನಿಗಳಿಗೆ ಕಿವಿಗೊಡಬೇಕೆಂಬ ಆಸೆಯಿರುತ್ತದೆ. ಇಂಥಲ್ಲಿ ಮಾತ್ರ ಸಾಹಿತ್ಯ ವರ್ಧಿಸುತ್ತದೆ. ಮಾತಿಗೆ ಒಲಿಸಿಕೊಳ್ಳುವ ಶಕ್ತಿಯಿದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುವುದು ಸಾಧ್ಯವಾದಾಗ ಮಾತ್ರ ಸಾಹಿತ್ಯಕ್ಕೆ ಶಕ್ತಿಯಿರುತ್ತದೆ. +***** +೨೫ ಮಾರ್ಚ್ ೧೯೯೫ +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […] +ಸುಳ್ಯದ ಸ್ವಂತಿಕಾ ಪ್ರಕಾಶನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರು ಸಂಯುಕ್ತವಾಗಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಮಾರೋಪ ಭಾಷಣದ ಮೂಲಕ ನನ್ನ ಕೆಲವು ಆಲೋಚನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು […] +ಧನ್ಯತೆಯ ಧ್ಯಾಸ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_204.txt b/Kannada Sahitya/article_204.txt new file mode 100644 index 0000000000000000000000000000000000000000..53fef6f7a56f28ff22f04f9f6052132e73a27f81 --- /dev/null +++ b/Kannada Sahitya/article_204.txt @@ -0,0 +1,102 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡಸಾಹಿತ್ಯ.ಕಾಂ ಪ್ರಕಟಣೆಯ ವಲಯದಲ್ಲಿ ಎಷ್ಟೋ ಸಾಹಿತಿಗಳು ಇಲ್ಲ. ಹಾಗೆಯೇ ಪುತಿನರ ಸಾಹಿತ್ಯವೂ ಇಲ್ಲಿಯವರೆಗೆ ನೆಟ್‌ನಲ್ಲಿ ಇರಲಿಲ್ಲ. “ಗೋಕುಲ ನಿರ್ಗಮನ” ವನ್ನು ಪ್ರಸಕ್ತಗೊಳಿಸುವ ಕೆ ವಿ ಸುಬ್ಬಣ್ಣನವರ ಲೇಖನವನ್ನು ಪ್ರಕಟಿಸಿದಾಗ “ಪುತಿನ”ರವರ ಮೂಲ ಕೃತಿಗಳು ಕನ್ನಡಸಾಹಿತ್ಯ.ಕಾಂ ನಲ್ಲಿಲ್ಲವಲ್ಲ ಎಂದೆನ್ನುವ ಕೊರತೆ ಇತ್ತು. ವಿಶ್ವನಾಥ್ ಹುಲಿಕಲ್‌ರವರ ನೆರವಿನಿಂದ ಯು ಎಸ್ ಎ ಯಲ್ಲಿರುವ ಶ್ರೀಮತಿ ಅಲಮೇಲು ಅಯ್ಯಾಂಗಾರ್‌ರ ಸಂಪರ್ಕ ದೊರೆತು ಅವರ ಮೂಲಕ ಐ ಐ ಎಂ ನಲ್ಲಿ ಪ್ರೊಫೆಸರ್ ಅಗಿರುವ ಶ್ರೀ ಪಿ ಎನ್ ತಿರುನಾರಾಯಣರವರ ಸಂಪರ್ಕ ದೊರೆತು ಒಮ್ಮೆ ಹೋಗಿ ಅವರನ್ನು ಭೇಟಿ ಮಾಡಿದೆ. ತಿರುನಾರಾಯಣರವರು ಪುತಿನರವರ ಸಾಹಿತ್ಯದ ೨-೩ ಲೇಖನಗಳನ್ನು, ೩-೪ ಕತೆಗಳನ್ನು ಹಾಗು ೧೦ ಕವನಗಳನ್ನು ಕನ್ನಡಸಾಹಿತ್ಯ.ಕಾಂ ನಲ್ಲಿ “ಎಕ್ಸ್‌ಕ್ಲೂಸಿವ್” ಆಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಈ ಸಂಖ್ಯೆಗೆ ಒಳಪಟ್ಟು ಕನ್ನಡಸಾಹಿತ್ಯ.ಕಾಂ ಪ್ರಕಟಿಸುವ ಪ್ರಕಟಣೆ ಕನ್ನಡಸಾಹಿತ್ಯ.ಕಾಂಗಿರುವ “ಎಕ್ಸ್‌ಕ್ಲೂಸಿವ್” ಆದ ಹಕ್ಕುಗಳು. ಬೇರೆ ಯಾರಾದರೂ, ಇಂಟರ್‌ನೆಟ್‌ನಲ್ಲಿ ಬಳಸಬೇಕಾದರೆ ಅವರು ಕನ್ನಡಸಾಹಿತ್ಯ.ಕಾಂ ಅನುಮತಿ ಪಡೆಯಬೇಕು. ಅದರಲ್ಲಿ “ವಾಣಿಜ್ಯೋದ್ದೇಶವಿದ್ದರೆ” ಅದರ ಸಂದರ್ಭಾನುಸಾರ, ಅಂತಹವರ ಬಳಿ “ಮಾತನಾಡುವ” ಹಕ್ಕನ್ನು ಕನ್ನಡಸಾಹಿತ್ಯ.ಕಾಂ ಪ್ರತಿನಿಧಿಸುವ ನಾನು ಹಾಗು ಮಿತ್ರ ಎಂ ಆರ್ ರಕ್ಷಿತ್ ಉಳಿಸಿಕೊಂಡಿದ್ದೇವೆ. ಕನ್ನಡದ ಸಾಹಿತ್ಯ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ಸಾಹಿತಿಗಳಿಗೆ ಅನ್ಯಾಯವಾಗಿದೆ. ಹಕ್ಕುಗಳನ್ನು ಕೆಲವರು “ಹಿಡಿದಿಟ್ಟುಕೊಂಡು” ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಡದ್ದರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ದ್ರೋಹವಾಗಿದೆ, ಅಪಾಯವಾಗಿದೆ ಎನ್ನುವ ಅನೇಕ ದೃಷ್ಟಾಂತಗಳ ಅರಿವಿದ್ದೂ ಇದನ್ನು “ಎಕ್ಸ್‌ಕ್ಲೂಸಿವ್” ಆದ ಹಕ್ಕುಗಳು ಎನ್ನುವುದನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇನೆ. ಸಾರ್ವಜನಿಕರ ಪಾಲು ಕನ್ನಡಸಾಹಿತ್ಯ.ಕಾಂ ನಲ್ಲಿರುವವರೆಗೆ ಇದರಿಂದ ನಾನು ಯಾವುದೇ ಲಾಭವನ್ನು ಬಯಸುವುದಿಲ್ಲ. ಜೊತೆಗೆ ಹೀಗೆ ಹಕ್ಕುಗಳನ್ನು ನೀಡಿರುವ “ಹಕ್ಕುದಾರರೂ” ಬಯಸುವುದಿಲ್ಲವೆನ್ನುವ ಭರವಸೆ ಇದೆ. ಇಂಟರ್‌ನೆಟ್ ಎಂದೊಡನೆ, ಸಾಹಿತ್ಯವೆಂದೊಡನೆ “ಎಲ್ಲರ” ಹಕ್ಕಾಗುವುದಿಲ್ಲ. ಹಕ್ಕು ಎಂದರೆ “ಉಚಿತ”ವೆಂದೂ ಅರ್ಥವಲ್ಲ. ನಾವು “ಈ ಲೇಖನಗಳಿಂದ “ಲಾಭ”ಗಳಿಸಿದರೆ ಅದರ ಅಂಶವನ್ನು ಪುತಿನ ಕೃತಿಗಳ ಹಕ್ಕುದಾರರಿಗೂ ನೀಡಬೇಕು ಎನ್ನುವ ನಿಯಮಕ್ಕೊಳಪಟ್ಟಿದ್ದೇವೆ. “ಅದಾಯದ ಹಂಚಿಕೆ” ಎನ್ನುವುದು ನಾವು ಬಳಸಿರುವ ಎಲ್ಲ ಸಾಹಿತ್ಯ ಕೃತಿಗಳಿಗೂ ಅನ್ವಯವಾಗುತ್ತದೆ. ಅಲ್ಲಿಯವರೆಗೆ, ಜೊತೆಗೆ ಈಗ ಇರುವ ಅನುಮತಿ ಹಾಗು ಹಕ್ಕುಗಳನ್ನು ಲೇಖಕರು ಪುನರ್‌ಪರಿಶೀಲಿಸುವವರೆಗೆ, ಕನ್ನಡಸಾಹಿತ್ಯ.ಕಾಂ ಈಗ ಇರುವ ರೀತಿಯಲ್ಲೇ ಮುಂದುವರೆಯುತ್ತದೆ. ಆರ್ಥಿಕವಾಗಿ ಲಾಭ ಮಾಡಬಹುದಾದಂತಹ ಸುಭಿಕ್ಷ ಕಾಲ “ಇಂಟರ್‌ನೆಟ್” ಮೂಲಕ ಬರುವಂತಾದರೆ, ಆ ಗಳಿಗೆ ನಿಜಕ್ಕೂ ಸಾರ್ಥಕ. ಇನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳಬೇಕಾದರೆ ಕನ್ನಡಸಾಹಿತ್ಯ.ಕಾಂ ಎನ್ನುವುದು “ಖಾಸಗಿಯಾದ ಆಸ್ತಿ”- ಇದನ್ನು ವಿರೋಧಿಸುವವರು ಪರ್ಯಾಯಗಳನ್ನು ರಚಿಸುವಲ್ಲಿ, ಹುಡುಕುವಲ್ಲಿ “ಹೊಣೆಗಾರಿಕೆ ಹೊರಬೇಕಾಗುತ್ತದೆ. ಈ ಹೊಣೆಗಾರಿಕೆಯಿಂದ ಕನ್ನಡಸಾಹಿತ್ಯ.ಕಾಂ ಹಿಂಜರಿದಿಲ್ಲ ಎನ್ನುವುದನ್ನು ಇಲ್ಲಿ ಯಾವುದೇ ಸಂಕೋಚವಿಲ್ಲದೆ ಹೇಳಬಲ್ಲೆ. +ಅನುಮತಿ ದೊರಕಿಸುವಲ್ಲಿ ಸಹಕರಿಸಿದ ಶ್ರೀ ವಿಶ್ವನಾಥ ಹುಲಿಕಲ್ ಹಾಗು ಶ್ರೀಮತಿ ಅಲುಮೇಲು ಅಯ್ಯಂಗಾರ್‌ರವರಿಗೆ ಮತ್ತು “ಎಕ್ಸ್‌ಕ್ಲೂಸಿವ್ ” ಆದ ಅನುಮತಿ ನೀಡಿದ ಶ್ರೀ ಪಿ ಎನ್ ತಿರುನಾರಾಯಣರಿಗೆ ಧನ್ಯವಾದಗಳು. ಈ ಬಾರಿ ಪುತಿನರವರ ಎರಡು ಲಲಿತ ಪ್ರಬಂಧಗಳನ್ನು ಪ್ರಕಟಿಸಲಾಗಿದೆ. +೮.೦೨-೨೦೦೬ ಸೇರಿಸಿದ್ದು: “ಖಾಸಗಿಯಾದ ಆಸ್ತಿ” ಎನ್ನುವ ಪದ ತಪ್ಪು ಅರ್ಥಗಳನ್ನು ಕಲ್ಪಿಸಿ ಬಿಡುತ್ತದೆ. ಒಂದು ರೀತಿಯಲ್ಲಿ “ನಿಷೇಧಿತ ಪ್ರದೇಶ” ಎಂದರೆ ಸರಿಯಾಗ ಬಹುದೆ? ಅಥವ “ವಿಶೇಷ ಪ್ರದೇಶ” ಎಂದರೆ ಸರಿಯಾಗ ಬಹುದೆ? +* +* +* +-ಮೇಲಿನ ಸಾಲುಗಳನ್ನು “ಇಂಟರ್‌ನೆಟ್”ನಲ್ಲಿ, ವೆಬ್‌ಟೆಕ್ನಾಲಜಿಯಲ್ಲಿ ಸುಮಾರು ಅನುಭವವಿರುವ ನಾನು ಪ್ರಜ್ಞಾಪೂರ್ವಕವಾಗಿ ಹೇಳಿದ್ದೇನೆ ಎನ್ನುವುದರಲ್ಲಿ ಸಂದಿಗ್ಧತೆಗೆ ಅವಕಾಶವೇ ಇಲ್ಲ. ಮತ್ತು ಇಲ್ಲಿ ಯಾವ ಉದ್ವಿಗ್ನತೆಯೂ ಇಲ್ಲ. ಕನ್ನಡಸಾಹಿತ್ಯ.ಕಾಂ ಆರಂಭವಾದಾಗ ಕನ್ನಡದ ಸಾಂಸ್ಕೃತಿಕ/ಸಾಹಿತ್ಯಿಕವಾದಂತಹ ಮತ್ತು “ಇನ್ನೂ ತೃತೀಯ ಜಗತ್ತಿನ ಗುಂಪಿನಲ್ಲೇ ಇರುವ (ಔಟ್ ಡೇಟಡ್ ಡೆಫಿನಿಶನ್?) ಭಾರತೀಯ ಸಂದರ್ಭಕ್ಕನುಸಾರವಾದ” ಪ್ರಾತಿನಿಧಿಕ ಶಕ್ತಿಯಾಗಿ ಪರಿಣಮಿಸಬಲ್ಲಂತಹ ಪ್ರಯತ್ನಗಳು ಇರಲೇ ಇಲ್ಲ. ಈಗ ತಾನೆ ಒಂದು ಚೂರು “ಬೀಜಾಂಕುರವಾಗಿದೆ”. ನಮ್ಮ ಅಸಾಹಾಯಕ ಸಂದರ್ಭಕ್ಕೆ ವಿರುಧ್ಧವಾಗಿರುವ, ಹಿತಾಸಕ್ತಿಗಳಿಗೆ ವಿರುಧ್ದವಾಗಿರುವ “ಗ್ಲೋಬಲೈಸೇಷನ್” (ಅಂದರೆ ಯಾವುದೇ ತಾರತಮ್ಯಗಳಿಲ್ಲದೆ “ಎಲ್ಲವನ್ನು ಒಂದೇ ಮಾಡಿಬಿಡುವ, ಬರಿಯ ಶ್ರೀಮಂತರ “ಹಕ್ಕುಗಳನ್ನು” ಮತ್ತಷ್ಟು ಹಿಗ್ಗಿಸಿಬಿಡುವ ಹುನ್ನಾರ) ನಾನಂತೂ ಸ್ಪಷ್ಟ ಮಾತುಗಳಲ್ಲಿ ವಿರೋಧಿಸುತ್ತೇನೆ. +ಈ ಮೇಲೆ ವಿವರಿಸಿರುವ ಅಂಶಗಳನ್ನು ಮತ್ತಷ್ಟು ವಿವರವಾದ ವಿಶ್ಲೇಷಣೆಯೊಂದಿಗೆ ಮುಂದಿನ ವಾರ ಇದೇ ಪುಟದಲ್ಲಿ ವಿಸ್ತರಿಸುತ್ತೇನೆ. ಆ ಮುಂಚೆ ಈ ಲೇಖನಕ್ಕೆ ಬರಬಹುದಾದ ಪ್ರತಿಕ್ರಿಯಗಳನ್ನು ಇದೇ ಪುಟದಲ್ಲಿ ಪ್ರಕಟಿಸಲಾಗುವುದು. ಆಸಕ್ತರಿಗೆ ಇದು ಮುಕ್ತವಾದ-ಉಚಿತ ಆಹ್ವಾನ. +* +* +* +ಇದು ಎಂದೋ ಆಗಲೇ ಬೇಕಾಗಿತ್ತು, ತಡವಾಗಿಯಾದರೂ ಆಗಿದೆ. ಕನ್ನಡಸಾಹಿತ್ಯ.ಕಾಂ ಆಯ-ವ್ಯಯವನ್ನು ಅಧಿಕೃತವಾಗಿ, ಕಾನೂನು ಪ್ರಕಾರ ಆಡಿಟ್ ಮಾಡಿಸಿದ “ಬ್ಯಾಲೆನ್ಸ್ ಶೀಟ”ನಲ್ಲಿ ಪ್ರಕಟಿಸಲಾಗಿದೆ. ಆಸಕ್ತರು ಇದನ್ನು ನೋಡಬಹುದಾಗಿದೆ. ಇದಕ್ಕೊಂದು ಸ್ವರೂಪ ಕೊಡುವಲ್ಲಿ ಸಹಕರಿಸಿದ ಎಂ ಕಿರಣ್ (ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕಿರುವ ಯಾಹೂ ತಂಡದದ ಸದಸ್ಯರು), ಆದರ್ಶ ಬಿ ಎಲ್ (ಕಿರಣ್‌ರವರ ಸ್ನೇಹಿತರು) ಹಾಗು ಸಿ ವೇಣು ವಿಘ್ನೇಶ್ ( ಶೆಣೈ, ಪ್ರಸನ್ನ ಅಂಡ್ ಅಕೌಂಟೆಂಟ್ಸ್‌ನ ಪಾಲುದಾರರು, ಮಲ್ಲೇಶ್ವರಂ)-ಇವರಿಗೆಲ್ಲ ಧನ್ಯವಾದಗಳು. ವಿಘ್ನೇಶ್‌ರವರು ಯಾವುದೇ ರಿತಿಯ ಶುಲ್ಕ ವಿಧಿಸಿಲ್ಲ. +* +* +* +ಮುಕ್ತವಾಗದ ಸೀತಾರಾಂ ಹಾಗು ನಾನು… +ಮುಕ್ತ ಧಾರಾವಾಹಿ ಪ್ರಧಾನ ನಿರ್ದೇಶಕರಾದ ಟಿ ಎನ್ ಸೀತಾರಾಂರವರ ಬಗೆಗೆ ಒಂದು ಕುತೂಹಲವಿತ್ತು. “ನಮ್ಮದೊಂದು ಕಾಲ” ಎನ್ನುವ ಧ್ವನಿಯಲ್ಲಿ ಹೊರಟಾಗ, ಸೀತಾರಾಂರವರನ್ನು ಲಂಕೇಶ್‌ರ ಅನುರೂಪ, ಕ್ರಾಂತಿ ಬಂತು ಕ್ರಾಂತಿ ಇತ್ಯಾದಿಗಳ ನಡುವೆ ನೋಡಿಕೊಂಡು ಬಂದದ್ದರಿಂದ-ಆಗಿನ ಸೀತಾರಾಂರವರಿಗೂ ಈಗಿನ ಸೀತಾರಾಂರವರಿಗೂ ಏನಾದರೂ ವ್ಯತ್ಯಾಸವಿದ್ದರೆ…ಗ್ರಹಿಸಬೇಕು ಎನ್ನುವ ಕುತೂಹಲ: ಬೇಕಾದರೆ ಕೆಟ್ಟದ್ದೆನ್ನಿ. +ಅವರಿಗೆ ಜನವರಿ ಹನ್ನೊಂದರಂದು ಫೋನ್ ಮಾಡಿದ್ದೆ. ಸಿಜಿಕೆಯವರ ನಿಧನದ ವಾರ್ತೆ ನನಗೆ ಅವರಿಂದಲೇ ತಿಳಿದದ್ದು. ಆಪ್ತಮಿತ್ರನ ಅಗಲಿಕೆಯ ಸೂತಕದಲ್ಲಿದ್ದ ಅವರನ್ನು ಮಾತನಾಡಿಸಲು ಸಂಕೋಚವಾಗಿ ಮತ್ತೆ ರಾತ್ರಿ ಫೋನ್ ಮಾಡಿ ಒಂದರ್ಧ ಗಂಟೆ ಮಾತನಾಡಿದೆ. “ಆಗ ನಮಗೆ ಇದ್ದ ಸಂಭ್ರಮ- ಈಗಿನದಕ್ಕಿಂತಲೂ ಬಹಳ ಹತ್ತಿರವಾದದ್ದು. ಈಗಿನದಕ್ಕಿಂತಲೂ ಅತ್ಯಂತ ಮೌಲಿಕವಾದದ್ದು..” ಎನ್ನುವುದು ನಮ್ಮ ಸಂಭಾಷಣೆಯನಡುವೆ ಹಾದು ಹೋದ ತುಣುಕು. “ಹಾಗಾದರೆ ನಿಮಗೆ ನೋವಿದೆಯ?” ಎಂದು ತಟಕ್ಕನೆ ಪ್ರಶ್ನಿಸಿದ್ದೆ. ತರ್ಕಕ್ಕೆ ಸಿಕ್ಕಿಸಿ ಮಾತಿಗೆಳೆಯುವ ಹುನ್ನಾರವಂತೂ ನನ್ನದಾಗಿರಲಿಲ್ಲ. ಆಗ ಸೀತಾರಾಂರವರಿಂದ ಬಂದ ಉತ್ತರ ದಂಗು ಬಡಿಸಿತು (ನಿಜಕ್ಕೂ ದಂಗಾಗಿದ್ದೆನೆ?) “ಈಗಿನ ಸಂಭ್ರಮವೇ ಬೇರೆ. ಹೆಚ್ಚು ಜನರನ್ನು ತಲುಪುತ್ತಿದ್ದೇನೆ…ನನ್ನ ವಿಚಾರಗಳನ್ನೇ ಅವರು ಬಯಸುವ ರೀತಿಯಲ್ಲಿ ಸಂಯೋಜಿಸಿದ್ದೇನೆ..ಆದರೂ ಹಳೆಯ ಸಂಭ್ರಮದಂತೆ ನನ್ನ ಆತ್ಮ ಬಯಸುವ ಸಂಭ್ರಮ ಇದಲ್ಲ ಎನ್ನುವ ಅರಿವೂ ಇದೆ..” ಮುಕ್ತ ನೋಡುವಾಗ ನನ್ನಂತವರಿಗೆ ರಾಚುವ ದೌರ್ಬಲ್ಯಗಳು, ಸೀತಾರಾಂರವರಿಂದ ಇದನ್ನು ಬಯಸಿರಲಿಲ್ಲ ಎಂದು ಮುಕ್ತ ನೋಡುವಾಗಲೆಲ್ಲ ಅಂದುಕೊಂಡಿದ್ದಿದೆ. ಇದನ್ನು ಸಾಧಿಸಿರದಿದ್ದರೂ ಪರವಾಗಿರಲಿಲ್ಲ. ಮಾತನ್ನು ಮುಗಿಸುವ ಮುನ್ನ “ಮುಕ್ತ ಬಹಳ ಚೆನ್ನಾಗಿ ಬರುತ್ತಿದೆ” ಎಂದು ಹೇಳಿ ಮುಗಿಸಿದಾಗ ನನ್ನ ಬಗೆಗೆ ನಾನೇ ದಂಗು ಬಡಿದಿದ್ದಂತೂ ನಿಜ. ಮಾತನಾಡುವಾಗ ಅರೆ ಸುಳ್ಳನ್ನು-ಅರೆ ನಿಜವನ್ನು ಎಷ್ಟು ಚೆನ್ನಾಗಿ ಬೆರೆಸುತ್ತೇವೆ !!! +“ಮುಕ್ತ ಧಾರಾವಾಹಿಯನ್ನು ಯಾವಾಗಲೋ ಮುಗಿಸಬೇಕಿತ್ತು ಸೀತಾರಾಂ..” ಎಂದು ಹೇಳಿದಾಗ, “ನಾನು ಒಂದು ವರ್ಷದಿಂದಲೂ ಇದನ್ನೇ ಹೇಳುತ್ತಿದ್ದೇನೆ. ಆದರೆ, ನನ್ನನ್ನು ನಂಬಿದ ೬೭ ಜನರಿದ್ದಾರೆ. ಧಾರಾವಾಹಿ ಮುಗಿದೊಡನೆ ಎಲ್ಲರ ಬದುಕೂ ಕಷ್ಟವಾಗಿ ಬಿಡುತ್ತದೆ. ಆದುದರಿಂದ ಪರ್ಯಾಯವೊಂದನ್ನು ಆಲೋಚಿಸಿಯೇ ಮುಗಿಸಬೇಕಾಗುತ್ತದೆ..” ಎನ್ನುವಾಗ ಸೀತಾರಾಂರವರ ಧನಿಯಲ್ಲಿ ಡಿಪ್ಲೊಮಸಿಗಿಂತಲೂ ಹೊಣೆಗಾರಿಕೆ ಇದ್ದದ್ದಂತು ನಿಜ. ಕನ್ನಡಸಾಹಿತ್ಯ.ಕಾಂ ನಂತಹ ಹೊಣೆ ಹಾಗು ಭಾರತೀಯ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಹೊಣೆ ಹೊತ್ತಿರುವ ನನಗೂ ಅವರ ಕಾಳಜಿ ಅರ್ಥವಾಗುತ್ತದೆ. ಇತರರ ಹೊಣೆ ಹೊತ್ತವರ ಬದುಕು ತೀರಾ ಸರಳವಾಗಿರಲು ಸಾಧ್ಯವೇ ಇಲ್ಲವೇನೋ..ಎಂತೆಂತಹ ರಾಜಿಗಳು. ಆದರೂ ಇದೆಲ್ಲ ಗೌರಯುತವಾದ ರಾಜಿಗಳು ಎಂದಷ್ಟೇ ಇಲ್ಲಿ ಹೇಳಬಲ್ಲೆ…ಕ್ಷುದ್ರವಾದ, ನೀಚವಾದ ರಾಜಿಗಳಲ್ಲ. ರಾಜಿಗಳಿಲ್ಲದೆ ಬದುಕು ಅಸಾಧ್ಯ ಎಂದಾದರೂ, ಎಂತಹ ರಾಜಿಗಳು ಎನ್ನುವ ವಿವೇಚನೆಯನ್ನು ಮರೆತಾಗಲೇ ಭಂಡತನ, ನೀಚತನ ಎರಡೂ ತಲೆದೋರುವುದು. +* +* +* +ಕೊಂಕಣಿಯಿಂದ.. +ಕಳೆದ ಬಾರಿಯ ಸಂಪಾದಕೀಯವನ್ನು ಓದಿ ಸಂಪರ್ಕಿಸಿದವರಲ್ಲಿ ಕುವೈತ್‌ನಲ್ಲಿರುವ ವಲ್ಲಿ ಕ್ವಾಡ್ರಸ್ ಕೂಡ ಒಬ್ಬರು. ಪರಿಚಯದ ನಡುವೆ ಅವರು ನಿರ್ವಹಿಸುತ್ತಿರುವ ಡಾಯ್ಜ್.ಕಾಂ ಕಡೆಗೆ ನನ್ನ ಗಮನ ಹೋಯಿತು. ಕೊಂಕಣಿ ಸಾಹಿತ್ಯದ ಬಗೆಗಾಗಲಿ, ಭಾಷೆಯ ಕುರಿತಾಗಲಿ ನಾನು ಮಾತನಾಡಲು ಸಾಧ್ಯವಿಲ. ಏಕೆಂದರೆ ಎರಡೂ ನನಗೆ ಗೊತ್ತಿಲ್ಲ. ಆದರೆ, ಕೊಂಕಣಿ ಸಮೂಹ ನಾನಾ ಲಿಪಿಗಳ ಮಧ್ಯೆ ಹರಿದು ಹಂಚಿ ಹೋಗಿದೆ. ಕನ್ನಡ-ಕನ್ನಡಿಗರಿಗಿಂತಲೂ, ಕೊಂಕಣಿಯಂತಹ ಒಂದು ಸಮೂಹಕ್ಕೆ ವೇದಿಕೆಯೊಂದನ್ನು ನಿರ್ಮಿಸುವುದು ಅತ್ಯಂತ ಕಠಿಣವಾದ ಹಾದಿ. ಅದರಲ್ಲಿ, ವಲ್ಲಿ ಕ್ವಾಡ್ರಸ್ ನಿರತರಾಗಿದ್ದಾರೆ. ಬರಿಯ ವೆಬ್‌ಸೈಟ್ ಮಾತ್ರವಲ್ಲ. ಕೊಂಕಣಿಯ ಸಾಹಿತ್ಯದ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ಹಲವು ಬಹುಮಾನಗಳು ಅವರದಾದರೂ, ಆ ಬಹುಮಾನಗಳು ಅವರು ಕೊಂಕಣಿಗಾಗಿ ಮಾಡುತ್ತಿರುವ ಸೇವೆಗೆ ಈ ಬಹುಮಾನಗಳೇ ಮಾನದಂಡಗಳಲ್ಲ. ಅವರ ಪ್ರಯತ್ನಗಳು ನಿಜಕ್ಕೂ ಇದಕ್ಕಿಂತಲೂ ಹೆಚ್ಚಿನ ಮಟ್ಟದ ಮನ್ನಣೆಗೆ ಅರ್ಹವಾದದ್ದು. +ಒಂದನ್ನಂತೂ ಇಲ್ಲಿ ಅವರಿಗೆ ಸಲಹೆ ನೀಡಬಹುದು: ಬಣ್ಣಗಳು ಕಣ್ಣಿಗೆ ರಾಚುತ್ತವೆ (ಈಗ ಇರುವುದು ಶಿವಕಾಶಿಯಲ್ಲಿ ಮುದ್ರಣವಾದ ಪ್ಯಾಂಪ್ಲೆಟ್‌ಗಳಂತೆ). ಹಿತವಾದ ಬಣ್ಣ ಹಾಗು ಪುಟಗಳ ವಿನ್ಯಾಸ ಬಳಸಿದರೆ ಡೈಜ್.ಕಾಂ ಹೆಚ್ಚು ಶೋಭಿಸಬಹುದು. ಇದು ಅವರಿಗೆ ನನ್ನ ಸಲಹೆ. +ಕೊಂಕಣಿ ಭಾಷೆಯ ಧ್ವನಿ ಒಂದು ರೀತಿಯಲ್ಲಿ ಖುಷಿ ಕೊಡುವಂತದ್ದು. ಅದರ ಸಾರ ನಮ್ಮ ಕೆ ಎಸ್ ಸಿ ಓದುಗರಿಗೂ ಸಿಗುವಂತಾಗಲಿ ಎಂದು ವಲ್ಲಿಯವರ ಪದ್ಯವನ್ನು ಮೂಲ ಹಾಗು ಅನುವಾದದೊಂದಿಗೆ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. +* +* +* +ಗಮನಿಸ ಬೇಕಾದ “ಬುಕ್ ಮಾರ್ಕ್‌ಗಳು” +ಖುಶಿಯಾಗುವ, ಕೊಂಚ ಮಟ್ಟಿಗಾದರೂ ಸಂಭ್ರಮಿಸುವ ಸಂಗತಿಯೆಂದರೆ, ಕನ್ನಡಕ್ಕೆ ನಿಜವಾಗಿಯೂ ಒಂದಿಷ್ಟಾದರೂ ಮಾನ ತರಬಹುದಾದಂತಹ ಪ್ರಯತ್ನಗಳು ನಡೆಯುತ್ತಿರುವುದು. ಉದಾಹರಣೆಗೆ: ಶ್ರೀರಾಮ್ ಹಾಗು ನಮ್ಮ ಸುದರ್ಶನ ಪಾಟೀಲ್ ಕುಲಕರ್ಣಿಯವರು ತಮ್ಮದೇ ಪುಟಗಳನ್ನು (ಬ್ಲಾಗ್) ತೆರೆದಿದ್ದಾರೆ. ಅಲ್ಲಿ, ಅವರುಗಳು ಆಗಾಗ್ಯೆ ಏನನ್ನಾದರೂ ಬರೆಯುತ್ತಿರುತ್ತಾರೆ. ಚಿಂತನೆಯೆ, ಅಭಿಪ್ರಾಯಗಳೇ, ಟಿಪ್ಪಣಿಗಳೇ ಅಥವ ಹರಟೆಯೆ (ಹರಟೆಗೆ ಸ್ಥಾನವಿರಬಾರದು ಎಂದೇನಲ್ಲ…ಮನೆಯ ಮುಂದಿನ ಜಗಲಿಯಲ್ಲಿ (ಆ ಜಗಲಿಗಳು ಎಲ್ಲಿಹೋದವು?)-ಹಿತ್ತಲಿನಲ್ಲಿ ದೈನಂದಿನ ಶ್ರಮದನಂತರ ನಡೆಯುವ ಅನೌಪಚಾರಿಕವಾದ ಸಂಭಾಷಣೆಯಲ್ಲೂ ಸತ್ವವಿರುತ್ತದೆ. ಸತ್ವವೇ ಇಲ್ಲದೆ ಕಾಡುಹರಟೆಯ ಮಟ್ಟದಲ್ಲೇ ಇದ್ದರೂ ಮನರಂಜನೆಯನ್ನಂತೂ ಕೊಡುತ್ತಾ ಉಲ್ಲಾಸವನ್ನು ಮೂಡಿಸುತ್ತಿರುತ್ತದೆ ಎನ್ನುವುದಂತೂ ಸುಳ್ಳಲ್ಲ. ಶ್ರೀ ರಾಮ್ ಹಾಗು ಸುದರ್ಶನ್ ರವರ ಬ್ಲಾಗ್‌ಗಳ ವರ್ಗಿಕರಣವನ್ನಾಗಲಿ, ಗುಣಮಟ್ಟದ ನಿರ್ಣಯವನ್ನಾಗಲೀ ಮಾಡುವುದು ಈ ಸಾಲುಗಳ ಉದ್ದೇಶವಲ್ಲ. ಅಂತಹ ನಿಯಮಬದ್ಧಾವಾದ “ಡೆಫಿನಿಶನ್”ಗಳೇ ಇಲ್ಲದಿರುವ ಈ ಸಂದರ್ಭದಲ್ಲಿ ಗಮನಿಸಬಹುದಾದ, ಸ್ವಾಗತಿಸಬಹುದಾದ “ಬ್ಲಾಗ್”ಗಳಿವು ಎಂದು ಸಂಕೋಚವಿಲ್ಲದೆ ಇಲ್ಲಿ ದಾಖಲಿಸಬಹುದು. ಬ್ಲಾಗ್‌ಗಳ ಸ್ವರೂಪದ ಬಗೆಗೆ ಅಲ್ಲಲ್ಲಿ ಆಗಾಗ್ಯೆ ಚರ್ಚೆಯಾಗುತ್ತಿರುತ್ತದೆ. ಆ ಅಲ್ಲಲ್ಲಿ (ಎಲ್ಲಿ ಎನ್ನುವ ನಿಖರತೆಯಿಲ್ಲದಿದ್ದರೂ) ಪ್ರಕಟಣೆಯ ಉದ್ಯಮದ ಬಗೆಗೆ ರೀ ಡೆಫಿನಿಶನ್ ಅನ್ನು ಅದು ಅನಿವಾರ್ಯಗೊಳಿಸುತ್ತದೆ. ಅಭಿಪ್ರಾಯಗಳ ಅಭಿವ್ಯಕ್ತಿಗಿದ್ದ ಅಲ್ಪ ಅವಕಾಶವನ್ನು ಹೆಚ್ಚು ಹಿಗ್ಗಲಿಸಿ, “ಇಂಟರ್‌ನೆಟ್” ಸವಲತ್ತುಗಳಿರುವವರ ನಡುವೆಯಂತೂ, ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವತ್ತ ಇದು ಬಿರುಸಿನಿಂದ ಸಾಗಿರುವುದಂತೂ ಗಮನಿಸಲೇ ಬೇಕಾದ ವಿಚಾರ. ದಿನಪತ್ರಿಕೆ, ನಿಯತಕಾಲಿಕೆಗಳು, ಟೆಲಿವಿಷನ್, ಸಿನಿಮಾ, ನಾಟಕ, ರೇಡಿಯೋ ಮುಂತಾದ ಮಾಧ್ಯಮಗಳಿಗಿಂತ ಇಂಟರ್‌ನೆಟ್ ಕಡಿಮೆ ವೆಚ್ಚದ ಹೆಚ್ಚು ಸಾಧ್ಯತೆಗಳುಳ್ಳ ಮಾಧ್ಯಮವಾಗುತ್ತದೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಈ ಸಾಧ್ಯತೆಗಳ/ಬಳಕೆಯ ಬಗೆಗೆ ಹೆಚ್ಚಿನ ಸ್ಪಷ್ಟತೆಗೆ ಯತ್ನಿಸುವುದು ಕಾಲ ಮಿಂಚುವ ಮುನ್ನವೆ ಚಿಂತಿಸುವುದು ಒಳ್ಳೆಯದು. ಇಲ್ಲದಿದ್ದರೆ, ಭಾರತದ ಯಾವುದೇ ನಗರದ ನಗರಸಭೆಗಳ “ಉದ್ಯಾನವನದಂತಾದೀತು” ಎನ್ನುವ ಭೀತಿಯೂ ಸಹ ಸಕಾರಾಣವಾದದ್ದೇ. ಉದ್ಯಾನವನದಲ್ಲಿ ಅತ್ಯುತ್ತಮ ಹಸಿರು ಸಂಪತ್ತು ಹಾಗು ಕಸ ಎರಡೂ ಒಂದೆಡೆಯೇ ಇರುತ್ತದೆಯಲ್ಲವೆ? ಈ ಭೀತಿಯ ನಡುವೆ, ಓ ಎಲ್ ನಾಗಭೂಷಣ ಸ್ವಾಮಿಯವರ, ಬೇಳೂರು ಸುದರ್ಶನ್‌ರವರ, ಶ್ರೀ ರಾಮ್ ಹಾಗು ಸುದರ್ಶನ್ ಪಾಟೀಲ್ ಕುಲಕರ್ಣಿವರಿಗೆ ಅಭಿನಂದನೆಗಳು. ‘ಬ್ಲಾಗ್’ ಗಳ ಬಗೆಗೆ, ಅವುಗಳ ಅಗತ್ಯ-ಬಳಕೆಯ ಬಗೆಗೆ ಗಂಭೀರವಾದ ಚರ್ಚೆಯಂತೂ ಅಗತ್ಯವೆಂದನ್ನಿಸುತ್ತದೆ. ‘ಇಂಟರ್ನೆಟ್ ಹಾಗು ಕನ್ನಡ’ದ ಸಂದರ್ಭದಲ್ಲಂತೂ ಶೂನ್ಯ ಪ್ರಯತ್ನಗಳ ಈ ಸಂದರ್ಭದಲ್ಲಿ, ಚರ್ಚೆ ಆಗಲೇ ಬೇಕಾದ್ದು. +ನಾಟಕರಂಗ ಕರ್ಮಿ ಸಿಜಿಕೆಯವರ ಬಗೆಗೆ ಶ್ರೀ ರಾಮ್ ಲೇಕನವೊಂದನ್ನು ಈ ಸಂಚಿಕೆಗೆ ವಿಶೇಷವಾಗಿ ಬರೆದಿದ್ದಾರೆ. +ಅಂದ ಹಾಗೆ ಲೇಖನದ ಜೊತೆಗೆ ಶ್ರೀರಾಮ್‌ರವರ ‘ಮಾಯಾ ದರ್ಪಣ’ ದಿಂದ ಕತೆಯೊಂದನ್ನು ಆಯ್ಕೆ ಮಾಡಿ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. +ಲೇಖನಗಳ ಸಾಲಿನಲ್ಲಿ : ನರೇಂದ್ರ ಪೈಯವರು ರಾಘವೇಂದ್ರ ಪಾಟಿಲರ ತೇರು ಕಾದಂಬರಿಯ ಬಗೆಗೆ ಬರೆದಿದ್ದಾರೆ. +* +* +* +ಇಂಟರ್‌ನೆಟ್, ಕನ್ನಡಸಾಹಿತ್ಯ.ಕಾಂ ಹಾಗೂ ಸಾಮೂಹಿಕ ಸ್ವರೂಪದ “ಹೆಜ್ಜೆಗಳು” +ಹೀಗೆ, ಇಂಟರ್ನೆಟ್ ಮತ್ತು ಕನ್ನಡದ ಸಂದರ್ಭದಲ್ಲಿನ ವೈಚಾರಿಕ ಲೇಖನವೊಂದರ ಬಗೆಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ಬಿಲ್‌ಗೇಟ್ಸ್ ಹಾಗು ವಿಕ್ರಮಾರ್ಜುನ ವಿಜಯ ಎನ್ನುವ ಶೀರ್ಷಿಕೆಯ ಲೇಖನ ಇಲ್ಲಿದೆ. ಏ ನಾರಾಯಣ್ ನನ್ನ ಸಹೊದ್ಯೋಗಿಯಾಗಿದ್ದವರು. ಈಗ ಲಂಡನ್‌ನಲ್ಲಿದ್ದಾರೆಂದು ಸುದ್ದಿ. ಬೆಂಗಳೂರಿನಲ್ಲಿ ಆಗಾಗ್ಯೆ ತೇಲುವ ಅವರೊಡನೆ ಮುಗುಳ್ನಕ್ಕು-ಕೈಕುಲುಕಿ ಅವರವರ ಹಾದಿಗಳಲ್ಲಿ ಅವರವರು ಸಾಗುವಷ್ಟು ಬಿರುಸಿನ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದೇವೆ. ಸಂಪದ.ನೆಟ್ ಹಾಗು ಕನ್ನಡಸಾಹಿತ್ಯ.ಕಾಂನ ಬಗೆಗೆ ನಾರಾಯಣ್ ಉದಯವಾಣಿಯ ‘ಅರ್ಥಾತ್’ ಅಂಕಣದಲ್ಲಿ ಮೆಚ್ಚುಗೆಯನ್ನು “ನಾಳೆ”ಗಳ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿವೆ ಎಂದು ಪ್ರಾಸಂಗಿಕವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಧನ್ಯವಾದಗಳು. ಉತ್ಸಾಹಿ ಯುವಕ ಎಚ್‌ಪಿ‌ಎನ್ ನಿರ್ವಹಿಸುತ್ತಿರುವ ಸಂಪದ.ನೆಟ್‌ನ ಬಗೆಗೆ ನಾನು ಈ ಪುಟಗಳಲ್ಲಿ, ಈ ಸಂದರ್ಭದಲ್ಲಿ ಮೆಚ್ಚುಗೆ ಹೊರತಾಗಿ ಬೇರೇನನ್ನಾದರೂ ಪ್ರಸ್ತಾಪಿಸುವುದು ಸಮಂಜಸವಾಗಲಾರದು, ಆದುದರಿಂದ, ಇಲ್ಲಿ ಕನ್ನಡಸಾಹಿತ್ಯ.ಕಾಂ ಬಗೆಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ. +ಕನ್ನಡಸಾಹಿತ್ಯ.ಕಾಂ ಆಶಯ ಬೆಳೆಯುತ್ತಾ ಹೋದಂತೆ ಸ್ವರೂಪ ಪಡೆದುಕೊಂಡದ್ದು. ಮೂಲಭೂತವಾದ ಆಶಯವಿದ್ದದ್ದು ತಾಂತ್ರಿಕಿಕತೆಯನ್ನು ಕನ್ನಡಕ್ಕೆ ಒಗ್ಗಿಸುವ ನಿಟ್ಟಿನಲ್ಲಿ, ಕನ್ನಡವನ್ನು ತಾಂತ್ರಿಕತೆಯ ಬಳಿಗೆ ತೆಗೆದುಕೊಂದು ಹೋಗುವುದರ ಪ್ರಯತ್ನದಲ್ಲಿ ಎಂದೂ ಹಿಂಜರಿಕೆ ಇರಕೂಡದು ಎನ್ನುವುದಂತೂ ಗಟ್ಟಿಯಾಗಿತ್ತು. ಜೊತೆಗೆ ಟೊಳ್ಳೂ ಟೊಳ್ಳಾಗಿ ಇರುವ ಅವಕಾಶವನ್ನು ಬಳಸಿಕೊಳ್ಳಬಾರದು ಎನ್ನುವ ದೃಢ ನಿಶ್ಚಯವೂ ಇತ್ತು. ಕನ್ನಡಸಾಹಿತ್ಯ.ಕಾಂ “ಸುಮ್ಮನೆ ಬ್ರೌಸರ್ ಮೇಲೆ ಕನ್ನಡ ಕಾಣಿಸಿಕೊಂಡರೆ” ಸಾಕು ಎನ್ನುವ ಮಟ್ಟದಲ್ಲಿ ರೂಪಿಸಿಲ್ಲ. ಇದರ ನಿರ್ವಹಣೆಯ ಹಿಂದೆ “ತಾಂತ್ರಿಕವಾಗಿ ಹೀಗೆ ಇರಬೇಕು” ಎನ್ನುವ ದೃಡ ನಿಶ್ಚಯವಂತೂ ಇದ್ದೇ ಇದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಶಿಫಾರಸಾಗುವ “ನಿಯಮಾವಳಿಗಳನ್ನು” (ಸ್ತಾಂಡರ್ಡೈಸೇಷನ್-ಸರಿಯಾದ ಪದ? ) ಚಾಚೂ ತಪ್ಪದಂತೆ ಪಾಲಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಪೇಕ್ಷೆಯನ್ನಂತೂ ತೋರಿಸಿಲ್ಲ. ಕಂಟೆಂಟ್ ಅತ್ಯುತ್ತಮವಾದದ್ದು-ಹಾಗೆಯೇ ತಾಂತ್ರಿಕತೆಯೂ ಅತ್ಯುತ್ತಮವಾಗಿಯೇ ಇರುವಂತೆ ನೋಡಿಕೊಳ್ಳಲಾಗಿದೆ. ತಾಂತ್ರಿಕತೆ ಅತ್ಯುತ್ತಮವಾಗಿರುವಂತೆ ಕಂಟೆಂಟ್ ಸಹ ಅತ್ಯುತ್ತಮವಾಗಿಯೇ-ಯಾವುದೇ ರಾಜಿಗಳಿಲ್ಲದಂತೆ ಕಾಯ್ದುಕೊಂಡು ಬರಲಾಗಿದೆ. ಇವೆರಡೂ ಪರಸ್ಪರ ಪೂರಕವಾಗಿರುವಂತೆ ನೋಡಿಕೊಳ್ಳಲಾಗಿದೆ ಎನ್ನುವುದನ್ನಂತೂ ಇಲ್ಲಿ ಒತ್ತು ಕೊಟ್ಟು ಹೇಳಬಲ್ಲೆ. ಅಲ್ಲಲ್ಲಿ, ಸಾಕಷ್ಟು “ಹ್ಯೂಮನ್ ಎರರ್ಸ್” ರಹಿತವಾಗಿ ಪುಟಗಳನ್ನು ನೋಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಮುಂದೆ ಅದೆಲ್ಲವನ್ನೂ ಸರಿಪಡಿಸುವ ಪ್ರಯತ್ನಗಳು ಸಾಗಿದೆ. ಅವುಗಳನ್ನು ಸರಿಪಡಿಸಿದರೆ “ತಲೆ ಎತ್ತಿಕೊಂಡು ನಡೆಯಬಹುದು”-ಅಲ್ಲಿಯವರೆಗೆ ತಾಳ್ಮೆಯನ್ನು ಕೋರಿ ತಲೆ ತಗ್ಗಿಸುವುದರ ಹೊರತಾಗಿ ಬೇರೇನು ಮಾಡಲು ಸಾಧ್ಯ… +ಇನ್ನು ನಮ್ಮ ನಾರಾಯಣರ ಆಶಾವಾದಕ್ಕೆ, ಕೆ ಎಸ್ ಸಿ ಗೆ ಅವರು ನೀಡಿರುವ ಸ್ಥಾನಕ್ಕೆ ಧನ್ಯವಾದಗಳು. ಆದರೆ, ಇದೇ ಆಶಾವಾದದ ವಿಸ್ತರಣೆಯಾಗಿ ನನಗೆ “ಕನ್ನಡ”ದಲ್ಲಿ ಹೆಚ್ಚೆಚ್ಚು ಪ್ರಯತ್ನಗಳು ಕಂಡು ಬರುತ್ತಿಲ್ಲ. ಮೇಲೆ ಪ್ರಸ್ತಾಪಿಸಿರುವ ಬ್ಲಾಗ್‌ಗಳಲ್ಲಿ ಒಂದಷ್ಟು “ಕನ್ನಡ”ವನ್ನು ಕಾಣಬಹುದಾದ್ದರಿಂದ ಒಂದಷ್ಟು ಸಮಾಧಾನ. ಆದರೆ, ಈಗ ಹೆಚ್ಚಿನ ಅಗತ್ಯವಿರುವುದು “ಒಂದು ಸಾಮೂಹಿಕವಾದ” ಪ್ರಯತ್ನಗಳು ಮತ್ತು ವೇದಿಕೆಗಳು (ಕೊಂಚ ಮಟ್ಟಿಗೆ ತನ್ನದೇ ಮಿತಿಯಲ್ಲಿ ಸಂಪದ.ನೆಟ್ ತನ್ನ ಪ್ರಯತ್ನವನ್ನು ಮಾಡುತ್ತಾ ಬಂದಿದೆ, ಇಂತಹ ಸಾಮೂಹಿಕ ಪ್ರಯತ್ನಗಳು ಇನ್ನೂ ಹೆಚ್ಚಾದರೆ ಮತ್ತಷ್ಟು ಸಂತೋಷ). ಕೆ ಎಸ್ ಸಿ ಯೂ ಸಹ “ಒಂದು ಸಾಮೂಹಿಕ ಪ್ರಯತ್ನವಾಗಲು ಎಲ್ಲ ಯತ್ನವನ್ನು ನಡೆಸುತ್ತದೆ.” ಎಂದಷ್ಟು ಹೇಳಬಹುದೇನೋ. “ಕೆ ಎಸ್ ಸಿ, ನಿಜವಾದ ಸಾಮೂಹಿಕ” ಯತ್ನವೆನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ, ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರಮಬದ್ಧಗೊಳ್ಳಬೇಕಿದೆ. ಅದರ ಕುರಿತ ಸಂವಾದವನ್ನು ಕಳೆದ ತಿಂಗಳು ಆರಂಭಿಸಲಾಗಿದೆ. +ಅದನ್ನು ಓದಿದನಂತರ, ಕೀ-ಇನ್ ಮಾಡಲು, ಪ್ರೂಫ್-ರೀಡಿಂಗ್ ಮಾಡಲು ಉತ್ಸಾಹಿತರು ಮುಂದೆ ಬಂದಿದ್ದಾರೆ. ಅದರ, ಫಲಿತಾಂಶವೆಂದರೆ: ಈ ತಿಂಗಳು ಪ್ರಕಟಿಸಲಾಗಿರುವ ನಾ.ಡಿಸೋಜರ ಕಾದಂಬರಿ. ಇಡೀ ಕಾದಂಬರಿಯನ್ನು ಬರಹಕ್ಕೆ ಕೀ ಇನ್ ಮಾಡಿರುವವರು ಉತ್ಸಾಹಿ ಯುವಕ: ಕಿರಣ್ ಎಂ. ಇವರು, ಕೀ ಇನ್ ಮಾಡಿದ್ದನ್ನು ಪ್ರೂಫ್ ರೀಡಿಂಗ್ ಮಾಡಿದವರು ಲಂಡನ್‌ನಲ್ಲಿರುವ ಮೀರಾ ಗಣಪತಿ. ನಿಜವಾದ, ಇಂಟರ್‌ಆಕ್ಷನ್ ಅಂದರೆ, ಇದೆ ಅಲ್ಲವೆ…ಇವರಿಬ್ಬರಿಗೂ ವಿಶೇಷವಾದ ಧನ್ಯವಾದಗಳು. ಇದು ಸಮೂಹವೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ರೀತಿ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು. ಈ ಸಾಮೂಹಿಕ, ಸಕ್ರಿಯಾತ್ಮಕ ಬೆಳವಣಿಗೆ ಇನ್ನಷ್ಟು ವ್ಯಾಪ್ತಿ ಬೆಳೆಸಿಕೊಂಡರೆ ಕೆ ಎಸ್ ಸಿಯ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆ. ಮತ್ತಷ್ಟು ಜನ ಸೇರಲಿ-ಇರುವ ಬೆಂಬಲವನ್ನು ಕ್ರಮಬಧ್ಧಗೊಳಿಸುವ ಬಗೆಗೆ ಎಲ್ಲರೂ ಆಲೋಚಿಸುವಂತಾದರೆ-ಯಾವುದೇ ಹಿನ್ನಡೆ ಇರದು. +ನಾ ಡಿಸೋಜಾರವರೊಂದಿಗೆ ಕಿರಣ್ ಎಂ ಹಾಗು ಅವರ ಮಿತ್ರ ಅವಿನಾಶ್ ಜಿ ಹೆಗ್ಗೋಡು ಸೇರಿ ಒಂದು ಸಂದರ್ಶನವನ್ನು ಮಾಡಿದ್ದರೆ. ಕಾದಂಬರಿ ಓದುವ ಮುನ್ನ ಸಂದರ್ಶನವನ್ನು ಒಮ್ಮೆ ಓದಿ. +* +* +* +೭೨ನೆ ಕನ್ನಡ ಸಾಹಿತ್ಯ ಸಮ್ಮೇಳನ-ಬೀದರ್ +ಶಾಂತರಸರು ಅಧ್ಯಕ್ಷ ಸ್ಥಾನದಿಂದ ಮಾಡಿದ ಭಾಷಣದ ಮೊದಲ ೩೧ ಪುಟಗಳ ಪಠ್ಯವನ್ನು ಪ್ರಕಟಿಸಲಾಗಿದೆ. ಈ ಪುಟಗಳನ್ನು ಕೀ-ಇನ್ ಮಾಡಿದ ರೋಹಿತ್ ರಾಮಚಂದ್ರರವರು ಸಣ್ಣದೊಂದು ವರದಿಯನ್ನು ಬರೆದಿದ್ದಾರೆ. ದಾಖಲೆಗಾಗಿ ಅದನ್ನೂ ಪ್ರಕಟಿಸಲಾಗಿದೆ. ಅವರಿಗೆ ಧನ್ಯವಾದಗಳು. ಮುಂದಿನ ಸಂಚಿಕೆಯಲ್ಲಿ ಉಳಿದ ಭಾಗವನ್ನು ಪ್ರಕಟಿಸಲಾಗುವುದು. ಜೊತೆಗೆ ಎಸ್ ಆರ್ ವಿಜಯಶಂಕರ್‌ರವರ ಕನ್ನಡ ಸಾಹಿತ್ಯ ಪರಿಷತ್: ಮರುಹುಟ್ಟು ಯಾಕೆ ಬೇಕು? ಎನ್ನುವ ಲೇಖನವನ್ನು ಅವರ ಜಾಗತೀಕರಣ ಎನ್ನುವ ಲೇಖನದೊಂದಿಗೆ ಪ್ರಕಟಿಸಲಾಗಿದೆ. +* +* +* +ಟೆಲಿವಿಷನ್, ಸಿನಿಮಾ, ನಟನೊಬ್ಬನ ಸೃಜನಶೀಲತೆ +-ಈ ಬಾರಿ ಮಾಧ್ಯಮದ ಬಗೆಗೆ ಹೆಚ್ಚು ಮಾತನಾಡುತ್ತಿರುವುದರಿಂದ, ಟೆಲಿವಿಷನ್ ಮಾಧ್ಯಮದ ಬಗೆಗೂ ನನಗನ್ನಿಸಿದ್ದನ್ನ ಇಲ್ಲಿ ದಾಖಲು ಮಾಡಿಬಿಡುವ ಆತುರ ತೋರಿದ್ದೇನೆ. ಸೃಜನಾತ್ಮಕ ಕ್ರಿಯೆ ಎಲ್ಲೇ ಮೂಡಿಬರಲಿ, ಅದಕ್ಕೆ ಪ್ರತಿಕ್ರಿಯಿಸುವುದೂ ಸಹ ಅಗತ್ಯವೆಂದೇ ಈ ಟಿಪ್ಪಣಿ: ಇರಲಿ. ಕನ್ನಡ ಸಿನಿಮಾಗಳ ಅಧೋಗತಿಯನ್ನು ನೋಡುತ್ತಾ ಹೋಗುತ್ತಿರುವಂತೆ, ಅದರ ಹೊಸ ಹೊಸ ಅವತಾರಗಳು, ಅವಸ್ಥೆಗಳನ್ನು ನೋಡುತ್ತಾ ಹೋದಂತೆ, ಕನ್ನಡ ಸಿನಿಮಾಗಳಿಂದ ದೂರ ಉಳಿಯುವಂತಾಗುತ್ತದೆ. ಬದಲಿಗೆ, ಹೆಚ್ಚು ಹೆಚ್ಚು ಟೆಲಿವಿಷನ್ ಕಡೆಗೆ ನೂಕುತ್ತದೆ. ಸಮಯ ಸಿಕ್ಕಾಗ (ಊಟ ಮಾಡುವ ಸಮಯವಂತೂ ಟೆಲಿವಿಷನ್ ವೀಕ್ಷಣೆಗೆ ಮೀಸಲಾಗಿರುತ್ತದೆ.), ಮನೆಯಲ್ಲೂ- ಕೆಲವು ಧಾರಾವಾಹಿಗಳನ್ನು ನೋಡುವ ಪರಿಪಾಠವಿಟ್ಟುಕೊಂಡಿರುವುದರಿಂದ ಈ ಧಾರಾವಾಹಿಗಳ ವೀಕ್ಷಣೆ ನನಗೂ ಲಭ್ಯ. ಒಮ್ಮೊಮ್ಮೆ ಉಪೇಕ್ಷೆಯಿಂದ, ಮತ್ತೊಮ್ಮೆ ಆಸಕ್ತಿಯಿಂದ ನೋಡುತ್ತಾ ಹೋಗುತ್ತೇನೆ. ಇದರಲ್ಲಿ, ವಿಶೇಷವಾಗಿ ಗಮನ ಸೆಳೆದವರು: ಸುಚೀಂದ್ರ ಪ್ರಸಾದ್. ಸಿನಿಮಾಗಳನ್ನು ಕಳೆದ ನಾಲ್ಕು ದಶಕಗಳಿಂದ ನೋಡಿಕೊಂಡು ಬಂದಿರುವ ನನಗೆ ತಟಕ್ಕನೆ ಸುಚೇಂದ್ರಪ್ರಸಾದ್ ಗಮನ ಸೆಳೆದದ್ದಕ್ಕೆ ಕಾರಣಗಳನ್ನು ಕುರಿತಂತೆ ಮನಸ್ಸನ್ನು ಕೇಂದ್ರಿಕರಿಸಿದಾಗ ಅಭಿನಯದ ಬಗೆಗಿನ ಅನೇಕ ಶೈಲಿಗಳು ಹೊಳೆಯುತ್ತಾ ಹೋಯಿತು. ಆ ಕ್ಷಣ ನಾನು ಅತ್ಯಂತವಾಗಿ ಮೆಚ್ಚಿ ಟೀಕಿಸುತ್ತಿದ್ದ ಕೆಟ್ಟ ಹಾಲಿವುಡ್ ನಟರಾದ ಬ್ರಾಂಡೋ, ಅಲ್ ಪಚೀನೊ, ಡಸ್ಟಿನ್ ಆಫ್ಮನ್ (ಆಕ್ಟರ್ಸ್ ಮೆಥಡಾಲಜಿಯಲ್ಲಿ ಪಳಗಿದವರು) ಇವರನ್ನೆಲ್ಲ ಒತ್ತಟ್ಟಿಗೆ ತಳ್ಳಿ ನೋಡಲಾರಂಭಿಸಿದೆ. ಸುಚೇಂದ್ರಪ್ರಸಾದ್ ಎದುರಿಸುವ ಪ್ರತಿಯೊಂದು ಫ್ರೇಮನ್ನು ಗಮನವಿಟ್ಟು ನೋಡತೊಡಗಿದೆ. ನಟನೊಬ್ಬ ತನ್ನ ನಟನ ಸಾಮರ್ಥ್ಯದಿಂದಲೇ ಅಪಾಯಕರಿಯಾಗಬಲ್ಲ ಎನ್ನುವ ಜಿಜ್ಞಾಸೆ ತೋರಿಕೊಳ್ಳಲಾರಂಭಿಸಿತು. ನಟನೆಯಲ್ಲಿ-ತೀರಾ ರಿಯಲಿಸ್ಟಿಕ್ ಆಗಿಬಿಡಬಾರದು-ಪಾತ್ರಕ್ಕೆ ಜೀವ ತುಂಬಿಬಿಡಬಾರದು. ಅದಾದೊಡನೆ ಅವನ ಪಾತ್ರದ ಗುಣಾವಗುಣಗಳೆಲ್ಲ ಒಂದು ರೋಲ್ ಮಾಡೆಲ್ ಆಗಿ “ಮನೆಯೊಳಗೆಲ್ಲಾ” ಓಡಾಡಲಾರಂಭಿಸಿಬಿಡುತ್ತದೆ ಎಂದೂ ಅನ್ನಿಸ ತೊಡಗಿತು. ನಾನು ಇಂದಿಗೂ ಖುಷಿಯಿಂದ ನೋಡುವ, ಮೆಚ್ಚುವ ಎಂ ಜಿ ರಾಮಚಂದ್ರನ್ (ತಮಿಳಿನ ‘ಅನ್ನಾತೆ’), ರಜನಿಕಾಂತ್ ಎಲ್ಲ ಏಕೆ ಅತ್ಯುತ್ತಮ ನಟರು ಎನುವುದಕ್ಕೆ (ಅಲ್ಲಲ್ಲಿ ಈ ನಟರ ವಾರಿಸುಗಳೆಂಬಂತೆ ಸಮಾಜದಲ್ಲಿ-ಫ್ಯಾಷನ್ ಪರೇಡ್ ನಡೆಸುವವರ ಬಗೆಗೆ ನಾನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ ಎನ್ನುವುದು ಪ್ರಜ್ಞಾವಂತರಿಗೆ ವಿವರಿಸಬೇಕಿಲ್ಲ.) ಒಂದು ಸಣ್ಣ ವಿವರಣೆ: ನಿಜ ಹೇಳಬೇಕೆಂದರೆ ಎಂ ಜಿ ರಾಮಚಂದ್ರನ್ ನಟಿಸುತ್ತಿರಲಿಲ್ಲ-ಸಂಭ್ರಮಿಸುತ್ತಿದ್ದರು. ಅವರ ನಟನೆಯಲ್ಲಿ ಕ್ಲೋಸಪ್‌ಗಳು ವಿರಳ. ತುಲನಾತ್ಮಕವಾಗಿ ನೋಡಿದಾಗ ಶಿವಾಜಿ ಗಣೇಶನ್ ಹೆಚ್ಚು ಕ್ಲೋಸಪ್‌ಗಳನ್ನು ಎದುರಿಸಿದ್ದಾರೆ. ಅಂದರೆ, ಕೆಮೆರಾದ ದೂರ ನಟನೊಬ್ಬನ ಶೈಲಿಯನ್ನು ತಿದ್ದುತ್ತಾ-ಕತೆ-ಚಿತ್ರಕತೆ-ಸಂಭಾಷಣೆ ಎಲ್ಲವನ್ನು ತಿದ್ದಿಬಿಡುತ್ತದೆ. ಅಥವಾ, ಕೆಮೆರಾವನ್ನು ಎದುರಿಸುವ ನಟನ ಸಾಮರ್ಥ್ಯವನ್ನು ಕೆಮೆರಾ ದುಡಿಸಿಕೊಳ್ಳುತ್ತದೆ. ಈ ಎರಡೂ ಶೈಲಿಗಳು ಒಟ್ಟೊಟ್ಟಿಗೆ ಬರುತ್ತದೆ. +ದೂರದರ್ಶನಕ್ಕೂ-ಸಿನಿಮಾಗೂ ಇರುವ ವ್ಯತ್ಯಾಸವೆಂದರೆ: ಪರದೆಯ ಅಳತೆಗಳು ಅಂದರೆ ಕ್ಯಾನವಾಸ್. ನಟನ ಪ್ಲೇಸ್‌ಮೆಂಟ್ ಸ್ವಲ್ಪ ಹೆಚ್ಚೂ ಕಡಿಮೆಯಾದರೂ (ಉದಾಹರಣೆಗೆ ಸಿನಿಮಾದಲ್ಲಿ ಲಾಂಗ್-ಷಾಟ್‌ಗಳನ್ನು ಅಳವಡಿಸಿಕೊಂಡು ಪ್ರೇಕ್ಷಕನಿಗೆ ಹೆಚ್ಚು ವಿವರಗಳನ್ನು ನೀಡಬಹುದು) ಆದರೆ ಇದು ಟೆಲಿವಿಷನ್‌ಗೆ ಸಾಧ್ಯವಿಲ್ಲ. ಟೆಲಿವಿಷನ್ ಪರದೆಯ ಮೇಲೆ ಲಾಂಗ್-ಷಾಟ್ ಅನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದುದರಿಂದ ಎಲ್ಲವೂ ಮಿಡ್ ಲಾಂಗ್ ಅಥವ ಕ್ಲೋಸಪ್‌ಗಳಲ್ಲೇ ನಿರ್ವಹಣೆಯಾಗಿಬಿಡುತ್ತದೆ. ಆದುದರಿಂದ ನಟನೊಬ್ಬ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸ್ವಲ್ಪ “ಗ್ರೇ” ಏರಿಯಾಗಳಿರುವ ಪಾತ್ರಗಳು ತೀರಾ ರಿಯಲಿಸ್ಟಿಕ್ ಮೌಲ್ಡ್‌ನಲ್ಲಿ ನಿರ್ವಹಿಸಿದರೆ ಕೇವಲ “ಐದರಿಂದ ಎಂಟು ಅಡಿ ದೂರವಿರುವ” ಪಾತ್ರಗಳು (ಮನುಷ್ಯರು) ಹೆಚ್ಚು “ನಿಜ”ವಾಗಿ ಬಿಡುತ್ತಾರೆ. ಅದರಲ್ಲೂ ಸ್ವಲ್ಪ “ಗಿಮಿಕ್ಸ್” ಬೆರೆತಿದ್ದರಂತೂ “ಮನೆ ಹಾಗು ಮನಸ್ಸಿನೊಳಗೆ” ಕುಳಿತೇ ಬಿಡುತ್ತಾರೆ. ಅವರು-ಪ್ರತಿಪಾದಿಸುವುದೆಲ್ಲ “ನಿಜ”ಗಳಾಗಿ ಬಿಡುತ್ತದೆ. +ಮೇಲೆ ವಿವರಿಸಿರುವ ಸಂದರ್ಭದಲ್ಲಿ ಸುಚೀಂದ್ರಪ್ರಸಾದ್‌ರವರನ್ನು ಭೇಟಿಯಾದಾಗ ಪ್ರಸ್ತಾಪಿಸಿದೆ. ನಿಜಕ್ಕೂ ಬಹಳ “ಸತ್ವಯುತವಾದ” ಕಲಾವಿದ. ಬೇರೆ ಕಲಾವಿದರೆಲ್ಲ ಒಮ್ಮೊಮ್ಮೆ ಸಪ್ಪೆ ಎಂದೆನ್ನಿಸಿಬಿಡಬಹುದಾದಷ್ಟು ಬಿಗಿ ನಿರ್ವಹಣೆ ಅವರಲ್ಲಿ ಕಾಣುತ್ತದೆ. ಜೊತೆಗೆ ತೀರಾ ಕ್ಯಾಷುವಲ್ ಆಗಿರಬಹುದಾದ ಕಲಾವಿದರ ಬಗೆಗೆ ಅವರ “ಜಿಗುಪ್ಸೆ”ಯೂ ಅವರ ಪಾತ್ರ ನಿರ್ವಹಣೆಯಲ್ಲಿಯೂ ತಳಕು ಹಾಕಿಕೊಂಡು ಬಿಡುತ್ತದೆ. ಅಷ್ಟರ ಮಟ್ಟಿಗಿನ “ಕೃತಕತೆ” ಅವರಲ್ಲಿ ಎದ್ದು ಕಂಡು ಬಿಡುತ್ತದೆ. ತನ್ನ “ಜಿಗುಪ್ಸೆಯನ್ನು” ಪಾತ್ರದೊಟ್ಟಿಗೆ ತಳಕು ಹಾಕದಿರುವಂತೆ ನೋಡಿಕೊಳ್ಳಬೇಕಾದ ಸವಾಲು ಸೂಕ್ಷ್ಮವಾಗಿರುವ ಎಲ್ಲರೂ ಎದುರಿಸಲೇ ಬೇಕಾದ್ದು ಎಂದನ್ನಿಸುತ್ತದೆ. ಸುಚೇಂದ್ರಪ್ರಸಾದ್‌ರವರ ಬಗೆಗೆ ಪ್ರಸ್ತಾಪಿಸುತ್ತ “ಸೃಜನಾತ್ಮಕತೆ” ಎದುರಿಸ ಬೇಕಾದ ಸವಾಲುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಸುಚೇಂದ್ರರವರಿಗೆ ಒಳ್ಳೆಯದಾಗಲಿ-ಇಂತಹ ಸೂಕ್ಷ್ಮಕ್ಕೆ ಸದಾ ಸಂವಾದಿಯಾಗಿರುವ ಅವರ ಗಟ್ಟಿತನ ಇನ್ನಷ್ಟು ದೃಢವಾಗಲಿ. ಅಂದ ಹಾಗೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಕೂಟದಲ್ಲಿ ಅವರೂ ಸದಸ್ಯರಾಗಿದ್ದಾರೆ. ಸ್ವಾಗತ. +* +* +* +ನಾಗರಾಜ್ ವಸ್ತಾರೆಯವರ “ಹೊಸತನ” +ಬಿಡುವಿಲ್ಲದ ಬಿಡುವಿನ ನಡುವೆ ಕಣ್ಣುಗಳನ್ನು ಅಗಲಗೊಳಿಸಿದಾಗ ಧುತ್ತನೆ ಎದುರಾದದ್ದು: ನಾಗರಾಜ ವಸ್ತಾರೆ ಎನ್ನುವ ಹೆಸರು. ಕೇಳಿರಲಿಲ್ಲ-ಓದಿರಲಿಲ್ಲ. ಕಳೆದೆರಡು ವಾರಗಳ ಹಿಂದೆ ಕನ್ನಡಪ್ರಭದಲ್ಲಿ ಬಂದ ಅವರ “ಬಹುಮಾನಿತ” ಸಣ್ಣಕತೆಯನ್ನು ಓದಿದಾಗ, ಸುದರ್ಶನ್ ಪಾಟೀಲ್ ಕುಲಕರ್ಣಿಯವರು “ಸುಲೇಕ.ಕಾಂ” ಪ್ರಕಟಿಸಿದ್ದ ಒಂದು ಸಣ್ಣಕತೆಯತ್ತ ನನ್ನ ಗಮನ ಸೆಳೆದಿದ್ದುದು ತಟಕ್ಕನೆ ನೆನಪಿಗೆ ಬಂದಿತು. ಆ ಕತೆಯ ಹೆಸರು: ದೇಸಿ ಬೊನ್ಸಾಯ್. ಲೇಖಕರು: ಎಜಿ (ಇಷ್ಟು ವಿವರಗಳ ಹೊರತಾಗಿ ಆ ಲೇಖಕರ ಬಗೆಗೆ ಹೆಚ್ಚು ತಿಳಿದಿಲ್ಲ.) +ದೇಸಿ ಬೊನ್ಸಾಯ್ ಓದಿದಾಗಿನಿಂದಲೂ ಕನ್ನಡ ಸಣ್ಣಕತೆಗಳ ವ್ಯಾಪ್ತಿಯಲ್ಲಿ ಇಂತಹವು ಬರಲಾರದೆ-ಬಂದಿದ್ದೆಲ್ಲ ಗಮನಕ್ಕೆ ಬರಲಾರದೆ ಎಂದು ಕೊರಗಿದ್ದೂ ಉಂಟು. ನಾಗಾರಾಜ್ ವಸ್ತಾರೆಯವರನ್ನು ಸಂಪರ್ಕಿಸಿ, ಚರ್ಚಿಸಿ, ಅನುಮತಿ ಪಡೆದುಕೊಂಡನಂತರ ಅವರೆಲ್ಲ ಸಣ್ಣಕತೆಗಳ “ಸಾಫ್ಟ್‌ಕಾಪಿ”” ಕಳುಹಿಸುವಂತೆ ಕೇಳಿಕೊಂಡೆ. ಕಳಿಸಿದ್ದಾರೆ. ಕೆಲವನ್ನು ಆಯ್ದು ಪ್ರಕಟಿಸಲಾಗಿದೆ. +ಆಧುನಿಕತೆ, ನಗರಗಳ ಸ್ವೈರ ಪ್ರವೃತ್ತಿ (ಹೀಗೆನ್ನಬಹುದೆ..ಸ್ವಲ್ಪ ಹಿಂಜರಿಕೆಯಿಂದಲೇ ಹೀಗಂದಿದ್ದೇನೆ), ಆಯ್ಕೆಗಳು ತೆಗೆದಿಟ್ಟುಬಿಡಬಹುದಾದ ಅರಾಜಕತೆ ಈ ಎಲ್ಲಾ ಮುಂಗಟ್ಟಿನ ಸಂಕಟಗಳನ್ನು ನಾಗರಾಜ್ ವಸ್ತಾರೆಯವರ ಕತೆಗಳು ಕಟ್ಟಿಕೊಡುತ್ತವೆ. ಅವರ ಭಾಷೆ, ವಿವರಗಳು ಆ ಸಂವೇದನೆಯನ್ನು ಕಟ್ಟಿಕೊಡುವುದರತ್ತ ದುಡಿಯುತ್ತವೆ-ಯಶಸ್ವಿಯೂ ಆಗುತ್ತವೆ. ಇದಕ್ಕಿಂತಲೂ ಹೆಚ್ಚಿಗೆ ಹೇಳದೆ, ಓದುಗರಿಗೆ ಅವುಗಳನ್ನು ಮುಕ್ತವಾಗಿ ತೆಗೆದಿಟ್ಟುಬಿಡುವುದೇ ಒಳ್ಳೆಯದು. ಅವರ ಕತೆಗಳನ್ನು ಓದುವಾಗ ನನಗೆ ಜೀರ್ಣಿಸಿಕೊಳ್ಳಲಾಗದ್ದೆಂದರೆ: ಸ್ವರತಿಯೇ ಎಂದನ್ನಿಸಿಬಿಡುವಂತಹ ಕ್ರಮ. ಇದನ್ನು ಇಲ್ಲಿ ಒಬ್ಬ ಜವಬ್ದಾರಿಯುತ ಓದುಗನೆನ್ನುವ ನಿಟ್ಟಿನಲ್ಲಿ ಹೇಳಿ, ಅವರ ಕತೆಗಳ ಬಗೆಗೆ ಹೆಚ್ಚಿನ ಚರ್ಚೆಗೆ/ಪ್ರತಿಕ್ರಿಯೆಗೆ ಆಹ್ವಾನ ನೀಡುತ್ತಿದ್ದೇನೆ. ಬರುವ ಪ್ರತಿಕ್ರಿಯೆಗಳು ಬಂದಲ್ಲಿ ಅವರ ಕತೆಗಳ ಕೆಳಗೆ ಅಥವಾ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು. +ಮೇಲಿನ ಅಂಶಗಳಿರುವ ಮತ್ತೊಂದು ಸಣ್ಣ ಕತೆ ಬೇಳೂರು ಸುದರ್ಶನ್‌ರವರ ಬೆಸಲ್ ಒಪ್ಪಂದ. ಅದನ್ನೂ ಪ್ರಕಟಿಸಲಾಗಿದೆ. +* +* +* +ದೇಶಕಾಲದ ನಾಲ್ಕನೆ ಸಂಚಿಕೆ +ದೇಶಕಾಲದ (ತ್ರೈ ಮಾಸಿಕ) ನಾಲ್ಕನೆ ಸಂಚಿಕೆ ಬಿಡುಗಡೆಯಾಗಿದೆ. ಬಹಳ ಇಷ್ಟವಾಯಿತು. ಅದರಲ್ಲೂ, ಶ್ರೀನಿವಾಸ ವೈದ್ಯರ ರುದ್ರಪ್ರಯಾಗ ಹಾಗು ಕೊಂಕಣಿ ಲೇಖಕಿ ಮೀನಾ ಕಾಕೋಡಕರ್‌ರವರ ‘ದೇವ ಸೌತೆ’ ಎನ್ನುವ ಕತೆಗಳಂತೂ ಬಹಳ ಚೆನ್ನಾಗಿದೆ. ಅನುವಾದಕರು: ಶಾ. ಮಂ. ಕೃಷ್ಣರಾಯ. ಈ ಸಂಚಿಕೆಯಲ್ಲಿ ಶ್ರೀನಿವಾಸ ವೈದ್ಯರ “ರುದ್ರ ಪ್ರಯಾಗ”ವನ್ನು ಪ್ರಕಟಿಸಲಾಗಿದೆ. ಕೆ ಎಸ್ ಸಿ ಯಲ್ಲಿ ಅದನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀನಿವಾಸ ವೈದ್ಯರಿಗೆ, ಅನುಮತಿ ಪಡೆಯಲು ನೆರವಾದ ವಿವೇಕ ಶಾನಭಾಗರಿಗೆ ಧನ್ಯವಾದಗಳು. +ದೇಶಕಾಲದ ಕುರಿತು ಹೇಳುವುದನ್ನು ಮರೆತಿದ್ದೆ: ಈ ಸಂಚಿಕೆಗೆ ಚಂದಾ ಮುಗಿಯುತ್ತದೆ. ನವೀಕರಿಸಲು ಯಾವುದೇ ಶ್ರಮವನ್ನು ಪಡದಿರಲೆಂದು ಸ್ತಾಂಪ್ ಅಂಟಿಸಿದ ಕವರನ್ನೂ ಸಹ ವಿವೇಕರು ಇಟ್ಟಿದ್ದಾರೆ. ನಾಚಿಕೆಯಾಗುತ್ತದೆ. ಅದನ್ನು ಕಳೆದು ಹಾಕಿಬಿಟ್ಟಿದ್ದೇನೆ. ಈಗತಾನೆ, ಚೆಕ್ ಬರೆದು ಇಟ್ಟಿದ್ದೇನೆ. ಅದನ್ನು ಇಂದೇ ಖಂಡಿತವಾಗಿ ಅಂಚೆಗೂ ಹಾಕುತ್ತೇನೆ. +ದೇಶಕಾಲದ ಓದುಗರು (ಕೆ ಎಸ್ ಸಿ ಬಳಗದಲ್ಲಿ) ಇದ್ದರೆ, ಅವರೆಲ್ಲರಿಗೂ ನವೀಕರಿಸುವಂತೆ ಮನವಿ. +* +* +* +ಸಂಕೋಚಗಳ ನಡುವೆಯೇ-ಸಾಹಿತ್ಯ ಪರಿಚಾರಿಕೆ +ಹೇಳಿದ್ದಂತೆ ವಸುದೇಂದ್ರ ಷ್ರಾಫ್‌ರವರು ಈ ಬಾರಿಯೂ ಮೂರು ಕೃತಿಗಳನ್ನು ತಮ್ಮ ಛಂದ ಪುಸ್ತಕದ ವತಿಯಿಂದ ಪ್ರಕಟಿಸಿದ್ದಾರೆ. ದಟ್ಸ್ ಕನ್ನಡ.ಕಾಂ ನಲ್ಲಿ‌ಅಂಕಣವಾಗಿ ಪ್ರಕಟಗೊಂಡ ದತ್ತಾತ್ರಿಯವರ ಸೀಮೋಲ್ಲಂಘನ, ರವಿ ಬೆಳಗೆರೆಯವರ “ಹಾಯ್ ಬೆಂಗಳೂರ್” ನಲ್ಲಿ ಪ್ರಕಟವಾಗುತ್ತಿರುವ “ಜಾನಕಿ” ಅಂಕಣದಿಂದ ಆಯ್ದ ಬರವಣಿಗೆ , ಅಲಕ ತೀರ್ಥಹಳ್ಳಿಯವರ ಆಯ್ದ ಕತೆಗಳನ್ನು ಪ್ರಕಟಿಸಿದ್ದಾರೆ. ಪ್ರಕಟಣೆಯಲ್ಲಿನ ಅಚ್ಚುಕಟ್ಟುತನದಲ್ಲಿ, ಬೆಲೆ ನಿಗದಿ ಪಡಿಸುವಲ್ಲಿ ವಸು ಬಹಳ ಎಚ್ಚರಿಕೆ ವಹಿಸಿದ್ದಾರೆ. ಬಿಡುಗಡೆ ಸಮಾರಂಭಕ್ಕೆ “ತಪ್ಪಿಸಿಕೊಳ್ಳಲಾಗಲಿಲ್ಲ”. ಸಮಾರಂಭಕ್ಕೆ ಹಾಜಾರಾತಿಯನ್ನು ಹಾಕುವ ಇರಾದೆಯೊಂದಿಗೆ ಸಾಕಷ್ಟು ಸ್ನೇಹಿತರೆಲ್ಲ ನೋಡಲು, ಮಾತನಾಡಲೂ ಸಹ ಸಿಗಬಹುದೆನ್ನುವ ಪ್ರಲೋಭನೆಯೂ ಇತ್ತು. +ಕೃತಿಗಳನ್ನು ಕುರಿತು ಮಾತನಾಡಿದವರು: ವಿಕ್ರಮ ವಿಸಾಚಿ, ಜಿ ಬಿ ಹರೀಶ ಹಾಗು ಅಶೋಕ ಹೆಗಡೆ. ಅವಸರದ ಮಾತುಗಳು, ಕೃತಿಗಳನ್ನು ಕುರಿತು “ಪರಿಚಯ” ಮಾಡಿಕೊಡುವಲ್ಲಿಗೆ ಮಾತುಗಳನ್ನು ಕೇವಲ ವ್ಯಯ ಮಾಡಿದರು. ಇಂತಹ ವೇದಿಕೆಯಲ್ಲಿ ಇನ್ನೂ ಹೆಚ್ಚಿನ ಹೊಣೆಗಾರಿಕೆಯನ್ನು ಇವರು ವಹಿಸಬೇಕಿತ್ತು ಎನ್ನುವ ಮಾತುಗಳು ಕೇಳಿಬಂದಾಗ ನಿಜ ಎಂದೂ ಅನ್ನಿಸಿತು. ಸಮಯದ ಅಭಾವ, ಅವಸರದ “ಆತುರಗಾರಿಕೆಯಿಂದ” ಹೀಗೆ ಆಗುವುದು ಸಹಜವೇ ಆದರೂ…ಜಯಂತ ಕಾಯ್ಕಿಣಿಯೂ ಇದಕ್ಕೆ ಹೊರತಾಗಲಿಲ್ಲ. +ಇದರ ನಡುವೆ, ಈ ವಸು ಮಾತ್ರ ಹೆಚ್ಚು ನಾಚಿಕೊಳ್ಳುತ್ತಿದ್ದರು. ಬಹುಶ ಇದೇ ಅವರ ಜೀವಾಳ. ಅದ್ಭುತವಾದದ್ದನ್ನು ಮಾಡುತ್ತಿದ್ದರು, ಅದರ ಅರಿವಿದ್ದರೂ ವೇದಿಕೆಯ ಮೇಲೆ ಇದ್ದ ಗಣ್ಯರಿಗೆ “ಮಿನರಲ್ ವಾಟರ್” ನೀಡಿ ಸತ್ಕರಿಸುತ್ತಾ ವಿನಯಶೀಲರಾಗಿ ನಿಂತದ್ದು ಇಲ್ಲಿ ಯಾವುದೇ ಕುಹಕವಿಲ್ಲದೆ ದಾಖಲಿಸುತ್ತಿದ್ದೇನೆ (ಇಂತಹ ಕೆವಿಯಟ್ ಅಗತ್ಯವಾಗಿರುವಂತಹ ವಾತಾವರಣ ಸೃಷ್ಟಿಯಾಗಿರುವುದು ದುರಂತವೇ ಸರಿ.) ವಸುರವರಿಗೆ ಶುಭವಾಗಲಿ. ಅವರು ಪ್ರಕಟಿಸಿರುವ ಕೃತಿಗಳಿಂದ, ಲೇಖಕರ ಅನುಮತಿಯೊಂದಿಗೆ ಒಂದೊಂದನ್ನು ಅಯ್ದು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. +ಕನ್ನ್‌ಡ ವಿಕಿಪೀಡಿಯ: +ದಿನಾಂಕ: ೧೪-೦೩-೨೦೦೬ ರಂದು ಸೇರಿಸಿದ್ದು: ಎಚ್ ಪಿ ನಾಡಿಗ್ ಕನ್ನಡ ವಿಕಿಪೀಡಿಯಾ ಬಗೆಗೆ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಕ. ಆಗಾಗ್ಯೆ ಆನ್‌ಲೈನ್‌ನಲ್ಲಿ ಒಂದಷ್ಟು ಚರ್ಚೆ/ಹರಟೆ ಈ ಹುಡುಗನ ಜೊತೆ ನಡೆಸಿದ್ದಿದೆ. ಈಗ ಅವರು ವಿಕಿಪೀಡೀಯದವರೊಡನೆ ಬೆಂಗಳೂರಿನಲ್ಲಿ ಸಮಾವೇಶವನ್ನು ಏರ್ಪಡಿಸಿದ್ದಾರೆ. ಇದರ ಬಗೆಗೆ ಕನ್ನಡಸಾಹಿತ್ಯ.ಕಾಂ ಓದುಗರಿಗೆ ತಿಳಿಸಿಕೊಡಬಲ್ಲಿರ ಎಂದು ಕೇಳಿದರು. ಬೆಂಗಳೂರಿನಲ್ಲಿರುವ ಆಸಕ್ತರು ಅವರ ಈ ಪುಟದಲಿ ನೊಂದಾಯಿಸಿಕೊಳ್ಳಬಹುದು. +ಶೇಖರ್‌ಪೂರ್ಣ +ಫೆಬ್ರವರಿ ೭, ೨೦೦೬ +***** +‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […] +ಕನ್ನಡಸಾಹಿತ್ಯ.ಕಾಂ ನ ಚಾರಣಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಾನು ಸಿಟ್ಟಿನ ಭರದಲ್ಲಿ ಒಮ್ಮೆ ಈ ತಾಣವನ್ನು ನನ್ನ ಪ್ರತಿಭಟನೆಯ ಸಂಕೇತವಾಗಿ ಸ್ಥಗಿತಗೊಳಿಸಿದಾಗ, ಕನ್ನಡದಲ್ಲಿ ಆಸಕ್ತಿ ಇರುವ ವಿಮರ್ಶೆ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಓ ಎಲ್ […] +ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_205.txt b/Kannada Sahitya/article_205.txt new file mode 100644 index 0000000000000000000000000000000000000000..b88e2d9b9ac6e130b96ce09932baa6bb11522b6d --- /dev/null +++ b/Kannada Sahitya/article_205.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! +ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ +ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- +ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. +ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- +ಧಾರಕರ, ಮಾರಕರ, ಜಾತಿಮತ ಲುಬ್ಬಕರ. +ನೀನೊಮ್ಮೆ ಸಿಡಿಲಾಗಿ ಗರ್ಜಿಸಲು ಅಂತಹರ +ಪಾಡೇನು? ನಿನ್ನ ಮೊಗ ಮಗುದೊಮ್ಮೆ ಸಂತೋಷ +ಲಹರಿಯಲಿ ತೇಲುವುದ ಕಾಂಬೆವೇ? ನವವೇಷ +ಧಾರಿಣಿಯೆ, ನುಡಿ ಶಿಲ್ಪ ಸಂಸ್ಕೃತಿಯ ರೂಪಿಣಿಯೆ +ಕವಿವರ್ಯ ಧರ್ಮಾತ್ಮ ಧೀರಗುವರರ ತಾಯೆ +ಉಕ್ಕುತಿಹುದಿಂದಿದೋ ಒಕ್ಕೊರಲಿನುದ್ಘೋಷ; +ಎಂದು ಸಿರಿಗನ್ನಡದ ನಾಡಿನೇಕೀಕರಣ- +ಅಂದು ನವಭಾರತದ ಬಾಗಿಲಿಗೆ ತೋರಣ. +***** +ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್‍ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […] +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_206.txt b/Kannada Sahitya/article_206.txt new file mode 100644 index 0000000000000000000000000000000000000000..3566728e04696337ca8c1b315f5a2b0ce7c13af2 --- /dev/null +++ b/Kannada Sahitya/article_206.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ ಅವರಿಗೆ ತಿಳಿಸುತ್ತೇನೆ. ಕಾಳಜಿ ಬೇಡ.” +“ಇಲ್ಲ, ಕಾಯುತ್ತೇನೆ.” +ಸುಮಾರು ಇಪ್ಪತ್ತಮೂರು ಇಪ್ಪತ್ತನಾಲ್ಕು ವಯಸ್ಸಿನ ಆ ತರುಣ ಶಿಕ್ಷಣ ಮಂತ್ರಿಗಳ ಕಾರ್ಯಾಲಯಕ್ಕೆ ಬಂದು ಕಳೆದ ಎರಡು ತಾಸುಗಳಿಂದಲೂ ಅವರ ಭೇಟಿಗಾಗಿ ಕಾಯುತ್ತಿದ್ದಾನೆ. ಅವನ ತಾಳ್ಮೆಯನ್ನು ನೋಡಿ ಮಂತ್ರಿಗಳ ಕಾರ್ಯದರ್ಶಿಗೇ ತಾಳ್ಮೆಗೆಡುವಂತಾಯಿತು. ‘ಇನ್ನೆಷ್ಟು ಹೊತ್ತು ಹಾದಿ ಕಾಯುತ್ತೀರಿ?’ ಎಂದು ಈ ಮೊದಲೂ ಎರಡು ಬಾರಿ ಕೇಳಿದ್ದ. ತರುಣನಿಂದ ಆಗಲೂ ಬಂದಿದ್ದ ಉತ್ತರವೊಂದೇ: ‘ಇಲ್ಲ ಕಾಯುತ್ತೇನೆ.’ ಬೇಸರದ ಲವಲೇಶವೂ ಇಲ್ಲದ ಅವನ ದೃಢ ನಿಶ್ಚಯ ನೋಡಿ ಕಾರ್ಯದರ್ಶಿಗೆ ಆಶ್ಚರ್ಯವಾಯಿತು. ಮಂತ್ರಿಗಳ ಕೋಣೆಯ ಹೊರಗೆ ಗರ್ದಿ ಮಾಡಿದ್ದ ಜನ ಅವರು ಇವತ್ತಿನ ಮಟ್ಟಿಗೆ ಕೋಣೆಗೆ ಹಿಂತಿರುಗಲಾರರು ಎಂದು ತಿಳಿದವರ ಹಾಗೆ ಒಬ್ಬೊಬ್ಬರೇ ಅಲ್ಲಿಂದ ಚೆದರಿದರು. ಆದರೆ ಒಳಗೆ ಕುಳಿತಿದ್ದ ತರುಣ ಕುಳಿತೇ ಉಳಿದ, ಕೂರಲು ಹೇಳಿದ ಜಾಗದಿಂದ ಹಂದಾಡಲಿಲ್ಲ. ಕಾರ್ಯದರ್ಶಿ ವೇದ-ಉಪನಿಷತ್ತುಗಳ ಪರಿಚಯ ಇದ್ದವನಾಗಿದ್ದರೆ ಅವನಿಗೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕೂಡ ತನ್ನ ಅತಿಥೇಯನ ಹಾದಿ ಕಾಯುತ್ತ ಕುಳಿತಿದ್ದ ತರುಣ ಅತಿಥಿಯೊಬ್ಬನ ಅಸೀಮ ಸಹನಶೀಲತೆ ನೆನಪಾಗಬಹುದಿತ್ತು. +ಮಂತ್ರಿಗಳನ್ನು ಕಾಣಲು ಬಂದಾಗಲೂ ಸಾದಾ ಶರ್ಟು ಪ್ಯಾಂಟು ತೊಟ್ಟ, ಕಾಲಲ್ಲಿ ಸವೆದ ಚಪ್ಪಲಿಗಳನ್ನು ಮೆಟ್ಟಿರುವ ಯುವಕನಲ್ಲಿಯ ಎಂತಹದೋ ವಿಶೇಷಕ್ಕೆ ಆಕರ್ಷಿತನಾಗಿದ್ದಂತಿದ್ದ ಮಂತ್ರಿಗಳ ಕಾರ್ಯದರ್ಶಿ ಈಗಾಗಲೇ ಅವನ ಮೇಲೆ ಹಲವು ಬಾರಿ ಆಪಾದಮಸ್ತಕ ಕಣ್ಣು ಹಾಯಿಸಿ ನಿರುಕಿಸಿದ್ದಾನೆ. ಇದೀಗ ಮತ್ತೆ ಹಾಗೆಯೇ ನಿರುಕಿಸುತ್ತ ಕೇಳಿದ: +“ಸಾಹೇಬರಿಗೆ ಸಂಬಂಧಿಗಳೇನೋ?” +“ಅಲ್ಲ.” +“ಜಾತಿಯವರೇನೋ?” +“ಅವರ ಮಗನ ಕ್ಲಾಸ್‌ಮೇಟು.” +“ಸಾಹೇಬರಾಗಿಯೇ ನಿಮ್ಮನ್ನು ಕರೆಸಿಕೊಂಡಿದ್ದು ನೋಡಿದರೆ ಕೆಲಸ ಅವರದೇ ಇರಬೇಕು?” +“ಗೊತ್ತಿಲ್ಲ.” +ತನ್ನ ಹತ್ತಿರ ಮಾತನಾಡುವ ಮನಸ್ಸೇ ಇಲ್ಲದವನ ಹಾಗೆ ತೀರಾ ಚುಟುಕಾಗಿ ಹಾರಿಕೆಯ ಉತ್ತರ ಕೊಟ್ಟಿದ್ದನ್ನು ನೋಡಿ ಕಾರ್ಯದರ್ಶಿಗೆ ಕಿರಿಕಿರಿಯಾಗುವಾಗಲೂ ಅವನ ಬಗ್ಗೆ ಎಲ್ಲಿಲ್ಲದ ಕುತೂಹಲವುಂಟಾಯಿತು. ಮಂತ್ರಿಗಳನ್ನು ಕಾಣಲು ಬಂದ ಯಾವನೂ ತನ್ನ ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರ ಕೊಟ್ಟಿದ್ದು ನೆನಪಾಗಲಿಲ್ಲ. ತಾನು ಸಂಬಂಧಿಗಳೋ ಎಂದು ಕೇಳಬೇಕಾದ್ದೇ ಇಲ್ಲ. ತಾವಾಗಿಯೇ ಸಂಬಂಧ ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುವವರೇ ಹೆಚ್ಚು. ಜಾತಿಪಾತಿಗಳಲ್ಲಿ ನಂಬಿಕೆಯಿಲ್ಲವೆಂದು ತೋರಿಸಿಕೊಳ್ಳುತ್ತಲೇ ಸಾಹೇಬರ ಜಾತಿಯವರೆಂದೋ ಅಲ್ಲವಾದರೆ ಅವರಿಗಿಂತ ಮೇಲ್ಜಾತಿಯವರೆಂದೋ ಸೂಚಿಸುವವರೇ ಹೆಚ್ಚು. ‘ಜಾತಿಯವರೇನೊ?’ ಎಂದು ಮುಖಕ್ಕೆ ಕೇಳಿದ ಪ್ರಶ್ನೆಗೆ ಕೊಟ್ಟ ಖುಬಿಯ ಉತ್ತರ ನೋಡಿ ಕಾರ್ಯದರ್ಶಿ ಕ್ಷಣ ಹೊತ್ತು ತಬ್ಬಿಬ್ಬಾದ. ಆ ಮೇಲೆ ತಲೆಯೊಳಗೆ ಟ್ಯೂಬ್‌ಲೈಟ್ ತಡ ಮಾಡಿ ಬೆಳಗಿಕೊಂಡಿತೆಂಬಂತೆ, +“ಯಾವ ಪರೀಕ್ಷೆಗೆ ಕುಳಿತಿದ್ದಿರೊ? ಯೂನಿವರ್ಸಿಟಿಗಳಲ್ಲಿ ಕೂಡ ಎಲ್ಲಾ ಅಫರಾತಫರಾ ಅಂತೆ” ಎಂದ. +“ಪ್ರಶ್ನೆಯ ಮೊದಲ ಭಾಗ ಅರ್ಥವಾದರೂ ಕೊನೆಯ ಉದ್ಗಾರದ ಸಂದರ್ಭ ತಿಳಿಯಲಿಲ್ಲ. +“ಎಂ.ಎಸ್‌ಸೀ. ಪರೀಕ್ಷೆಯಲ್ಲಿ ಮೊದಲನೇ ರ್‍ಯಾಂಕು. ಜೊತೆಗೆ ಸುವರ್ಣ ಪದಕ” ಎಂದ. ಮಾತಿನಲ್ಲಿ ತುಂಬಾ ಅಪ್ರಿಯವಾದದ್ದೇನೋ ಹೇಳುತ್ತಿದ್ದೇನೆ ಎನ್ನುವಂಥ ಧಾಟಿಯಿತ್ತು. +“ಮುಂದೆ ಕಲಿಯುವ ಮನಸ್ಸಿತ್ತೇನೊ?” +ಕಾರ್ಯದರ್ಶಿಯ ದನಿಯಲ್ಲಿ ಮೊದಲ ಬಾರಿಗೆ ತುಸು ವ್ಯಂಗ್ಯ ಸೇರಿಕೊಂಡತಿತ್ತು. ಯುವಕ ಅವನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಅವನ ಮೌನವೇ ತನ್ನ ಪ್ರಶ್ನೆ ಈ ಭೇಟಿಯ ಗುಟ್ಟಿಗೆ ತೀರ ಹತ್ತಿರವಾಗಿರುವ ಭರವಸೆ ಹುಟ್ಟಿಸಿತು. +“ಈಗ ಏನು ಕೆಲಸ ಮಾಡುತ್ತಿದ್ದೀರೋ?” +ಗುಟ್ಟು ಬಯಲುಗೊಳಿಸುವ ಸ್ಪಷ್ಟ ಉದ್ದೇಶದಿಂದಲೇ ಕೇಳಿದ ತನ್ನ ಪ್ರಶ್ನೆ ಉದ್ಧಟತನದ್ದಾಯಿತೆಂದು ಹೊಳೆದರೂ ಕಾರ್ಯದರ್ಶಿ ಹಿಂದೆಗೆಯಲಿಲ್ಲ. ಮಂತ್ರಿವರ್ಯರೊಬ್ಬರ ಆಪ್ತ ಕಾರ್ಯದರ್ಶಿ ತಾನು ಎನ್ನುವ ಧಿಮಾಕು ಅವನ ದನಿಯಲ್ಲೀಗ ಮೂಡಿತ್ತು. ಯುವಕನಿಗೂ ಇದು ಲಕ್ಷ್ಯಕ್ಕೆ ಬಂದಿರಬೇಕು. +“ನಾನೀಗ ಕೆಲಸ ಹುಡುಕಿಕೊಂಡು ಬಂದಿಲ್ಲ” ಎಂದ. +“ಗೊತ್ತು” ಕಾರ್ಯದರ್ಶಿಯ ದನಿಯಲ್ಲಿ ಅಸಾಧಾರಣ ಚಿತಾವಣಿಯಿತ್ತು. ಯುವಕ ಮೊದಲ ಬಾರಿಗೆ ಮುಗುಳ್ನಕ್ಕ. ಉತ್ತರ ಕೊಡಲಿಲ್ಲ. ಒಂದು ಬಗೆಯ ನಿರ್ಲಜ್ಜತನದಿಂದಲೇ ಕಾರ್ಯದರ್ಶಿ ಕೇಳಿದ: +“ಯಾರೂ ಮಾಡಬಾರದಂಥ ಕೆಲಸವೇನು ಇದ್ದಿರಲಾರದು?” +ಮಾತಿನ ಧಾಟಿಯಲ್ಲೀಗ ವ್ಯಂಗ್ಯದ ಜೊತೆಗೆ ಕ್ರೌರ್ಯದ ಎಳೆ ಸೇರಿಕೊಂಡದ್ದು ನೋಡಿ ಯುವಕನಿಗೆ ಕಾರ್ಯದರ್ಶಿಯ ಬಗೆಗೇ ಕೆಡುಕೆನ್ನಿಸಿತು. ತಾನು ಅವನಿಗೆ ತೃಪ್ತಿಯಾಗುವಂಥ ಉತ್ತರ ಕೊಡಲು ತುಸುವೇ ತಡ ಮಾಡಿದರೂ ತಮಗಿಬ್ಬರಿಗೂ ಅಪ್ರಿಯವಾದಂಥ ಸನ್ನಿವೇಶ ಹುಟ್ಟಿಕೊಳ್ಳುವ ಭಯವಾಯಿತು. ಮಂತ್ರಿವರ್ಯರು ತನ್ನನ್ನು ಕರೆಸಿಕೊಂಡುದರ ಉದ್ದೇಶ ಅವರ ಆಪ್ತ ಕಾರ್ಯದರ್ಶಿಗೂ ಗೊತ್ತಿಲ್ಲ ಎನ್ನುವ ಬಗ್ಗೆ ಖಾತರಿಯಾದಂತೆ ತನ್ನ ಹಾರಿಕೆಯ ಉತ್ತರಗಳಿಗೀಗ ವಿನಾಕಾರಣ ಜಾತೀಯತೆಯ ಅಪಾರ್ಥ ಹುಟ್ಟದಿರಲಿ ಎಂದು ಹಾರೈಸಿದವನ ಹಾಗೆ; +“ನನ್ನ ಮೇಲೆ ಹಾಗೆ ಸಿಟ್ಟಾಗಬೇಡಿ. ಇಲ್ಲಿ ಈ ಏರ್‌ಕಂಡೀಶಂಡ್ ಕೋಣೆಯಲ್ಲಿ ಕೂರಿಸಿಕೊಂಡಿರಿ. ಬೇಡ ಬೇಡವೆಂದರೂ ಚಹ, ಬಿಸ್ಕೀಟ್ ಕೊಡಿಸಿದಿರಿ. ನನ್ನ ಬೇಸರ ಕಳೆಯಲೆಂದೇ ಹತ್ತಿರ ಕೂತು ಮಾತನಾಡಿಸಿದಿರಿ. ಮಂತ್ರಿಗಳು ನನ್ನನ್ನು ಕರೆಸಿಕೊಂಡದ್ದೇಕೆ? ದೇವರಾಣೆಗೂ ನನಗೆ ಗೊತ್ತಿಲ್ಲ. ನಿಮ್ಮ ಪ್ರಶ್ನೆಗಳನ್ನು ನೋಡಿದರೆ ನಿಮಗೂ ಗೊತ್ತಿಲ್ಲ, ಅನ್ನಿಸುತ್ತದೆ. ಬಿಟ್ಟುಬಿಡಿ. ನೀವು ಮನೆಗೆ ಹೊರಡುವ ಸಮಯವಾಗಿದ್ದರೆ ನಾನು ಅಡ್ಡ ಬರಲಾರೆ. ಕಾರ್ರಿಡಾರಿನಲ್ಲಿ ಹಾಕಿದ ಬೆಂಚಿನ ಮೇಲೆ ಹೋಗಿ ಕೂರುತ್ತೇನೆ. ಈ ಕೋಣೆಯ ಕದ ಯಾರು ಮುಚ್ಚುತ್ತಾರೋ ಗೊತ್ತಿಲ್ಲ. ಅದನ್ನು ಮುಚ್ಚಿದ್ದೇ ಇಲ್ಲಿಂದ ಹೊರಟು ಹೋಗುತ್ತೇನೆ. ಇನ್ನೆಂದಿಗೂ ಇಲ್ಲಿ ಕಾಲಿರಿಸಲಾರೆ. ನೀವೇ ನಾಳೆ ನಿಮ್ಮ ಸಾಹೇಬರಿಗೆ ತಿಳಿಸಿರಿ” ಎಂದ. +ಆಗಿನಿಂದಲೂ ಎರಡೆರಡೇ ಶಬ್ದಗಳಲ್ಲಿ ಉತ್ತರ ಕೊಡುತ್ತಿದ್ದ ಯುವಕ ಈಗ ಒಮ್ಮೆಲೇ ಇಷ್ಟೊಂದು ಮಾತುಗಳನ್ನು ಆಡಿದ್ದು ನೋಡಿ ಕಾರ್ಯದರ್ಶಿಗೆ ಆಶ್ಚರ್ಯವಾಯಿತು. ಜೊತೆಗೆ ಕರಕರೆಯಾಯಿತು. ಹಣವಿದ್ದವನಂತೂ ಅಲ್ಲವೇ ಅಲ್ಲ. ರಾಜಕೀಯ ಬಲವಿದ್ದವನೂ ಇದ್ದಿರಲಾರ. ಮಂತ್ರಿಗಳಿಗೆ ಸುದ್ದಿ ಮುಟ್ಟಿಸುವ ಕೆಲಸವನ್ನು ತನಗೆ ವಹಿಸಿ ಕೊಟ್ಟಾಗಿನ ದರ್ಪ ನೋಡಿದರೆ ಹುಟ್ಟಿನ ಸೊಕ್ಕು ತಲೆಗೇರಿದವನಿರಬೇಕೆಂಬ ಗುಮಾನಿಯಿಂದಾಗಿ ಇಬ್ಬರ ನಡುವೆ ಆರಂಭದಲ್ಲಿದ್ದ ವಿಶ್ವಾಸ ಬಿರುಕು ಬಿಟ್ಟಿತು. ಕೆಲಸದ ಬಗ್ಗೆ ಕೇಳಿದ ಪ್ರಶ್ನೆಗೆ ಕೂಡ ಈಗಲೂ ಉತ್ತರ ಕೊಡದೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಬಿರುಕು ಇನ್ನಷ್ಟು ದೊಡ್ಡದಾಯಿತು. +“ನಾಳೆ ನೀವೇ ಸಾಹೇಬರಿಗೆ ಫೋನ್ ಮಾಡಿ ತಿಳಿಸಿರಿ. ನಾನು ಏನೂ ಹೇಳಲು ಹೋಗಲಾರೆ.” +“ನಿಮ್ಮ ಮರ್ಜಿ. ನನ್ನ ಮನೆಯಲ್ಲಂತೂ ಫೋನ್ ಇಲ್ಲ.” +“ನಮ್ಮ ಸಾಹೇಬರಿಗಿಂತ ತುಂಬಾ ಮೇಲ್ಜಾತಿಯವರಿರಬೇಕು.” +“ಯಾತರ ಮೇಲಿಂದ?” +“ಆಗ ರ್‍ಯಾಂಕು ಗೀಂಕು ಎಂದು ಜಂಭ ಕೊಚ್ಚಿಕೊಂಡ ರೀತಿ. ನಿಮ್ಮ ಈಗಿನ ಮಾತಿನ ವೈಖರಿ. ನಿಮ್ಮ ಮೂಗಿನ ಚೂಪಾದ ತುದಿ. ಮೋರೆಯ ಬಣ್ಣ.” +“ನಿಮ್ಮ ಸಾಹೇಬರ ಜಾತಿ ನನಗೆ ಗೊತ್ತಿಲ್ಲ. ನನಗಂತೂ ಜಾತಿ ಇಲ್ಲ.” +“ಜಾತ್ಯತೀತರೇನೋ?” +“ಒಂದರ್ಥದಲ್ಲಿ ಹಾಗೆಯೇ ಎನ್ನಬಹುದು” +“ನೀವು ಹೇಳಬೇಕು, ನಾನು ಕೇಳಬೇಕು! ಜಾತಿಯಲ್ಲಿ ನಂಬಿಕೆಯಿಲ್ಲವೆಂದು ಹೇಳಿಕೊಂಡ ಮಾತ್ರಕ್ಕೆ ನಿಮಗೆ ಜಾತಿಯೇ ಇಲ್ಲವೆಂದು ಹೇಗೆ ಹೇಳುತ್ತೀರಿ? ನಿಮ್ಮ ಜಾತಿಗಿಂದು ಆದ ದುರ್ಗತಿ ಯಾರಿಗೂ ಆಗಕೂಡದು, ಒಪ್ಪಿದೆ.” +ಕಾರ್ಯದರ್ಶಿ ಕಾಲು ಕೆದರಿ ನಿಂತ ರೀತಿ ನೋಡಿ ಯುವಕನಿಗೆ ಹೆದರಿಕೆಯಾಯಿತು. ಎಣಿಸಿಯೇ ಇರದ ಈ ಸನ್ನಿವೇಶಕ್ಕೆ ಯಾರು ಕಾರಣರೋ ತಿಳಿಯದಾದ. ಉತ್ತರ ಕೊಡದೇ ಉಳಿದನೋ ತುಂಬಾ ಒಳ್ಳೆಯ ಮನುಷ್ಯನಾಗಿ ತೋರುವ ಕಾರ್ಯದರ್ಶಿ ಅನಾವಶ್ಯಕ ಕ್ರೌರ್ಯಕ್ಕೆ ಅಧಿಕಾರಿಯಾಗಿ ಮುಜುಗರಕ್ಕೆ ಒಳಗಾಗುತ್ತಾನೆ. ಉತ್ತರ ಕೊಟ್ಟನೋ ಆಗಿನಿಂದಲೂ ತುಂಬಾ ಸೂಚ್ಯವಾಗಿ ಹೇಳಲು ಪ್ರಯತ್ನಿಸಿದ್ದನ್ನೇ ಸ್ಪಷ್ಟವಾಗಿ ಹೇಳುವ ಅಪ್ರಿಯ ಕೆಲಸದಿಂದ ತಾನೇ ನೋವನ್ನು ಅನುಭವಿಸಬೇಕು: +“ನೋಡಿ, ನೀವು ನನ್ನ ತಂದೆಯ ಸ್ಥಾನದಲ್ಲಿದ್ದೀರಿ. ಆಗಿನಿಂದಲೂ ಇಷ್ಟೊಂದು ಚೆಂದವಾಗಿ ನನ್ನನ್ನು ನೋಡಿಕೊಂಡವರು ಈಗ ಇದ್ದಕ್ಕಿದ್ದಂತೆ ನನ್ನ ಹುಟ್ಟಿಗೇಕೆ ಗಂಟುಬಿದ್ದಿರಿ? ನನ್ನ ಜಾತಿಯ ಬಗ್ಗೆ ಕೆಲಸದ ಬಗ್ಗೆ ಏನು ಕಲ್ಪಿಸಿಕೊಂಡರೆ ನಿಮ್ಮ ಮನಸ್ಸಿಗೆ ಸುಖವೆನ್ನಿಸುತ್ತದೆಯೋ ಅದನ್ನೇ ಕಲ್ಪಿಸಿಕೊಳ್ಳಿ. ಆದರೆ ನನ್ನ ಬಾಯಿಂದಲೇ ಕೇಳುವ ಹಠ ಬಿಟ್ಟುಕೊಡಿ. ಕೋಣೆಯೊಳಗೆ ನೆಲಸಹತ್ತಿದ ಮಬ್ಬುಗತ್ತಲೆ ನಿಮ್ಮ ಭಾವನೆಯೊಳಗಿನ ಬದಲಾವಣೆಗೆ ಕಾರಣವಾಗಿದ್ದರೆ ದೀಪ ಹಾಕಿ.” +ಪ್ರಾರ್ಥನೆ ತುಂಬಿದ ಶಾಂತ ದನಿಯೊಳಗಿನ ದೃಢ ನಿಶ್ಚಯವನ್ನು ನೊಡಿ ಕಾರ್ಯದರ್ಶಿಗೆ ಅದೇನಾಯಿತೋ: ಸಾವಿರಾರು ವರ್ಷಗಳಿಂದ ಆಡದೇ ಉಳಿದ ಎಲ್ಲ ಬೈಗಳೂ ಈಗ ಒಮ್ಮೆಲೇ ನಾಲಗೆಗೆ ನುಗ್ಗಿದುವೋ ಎನ್ನುವಂತೆ ತುಟಿಗಳು ಪಟಪಟ ಅದುರ ತೊಡಗಿದುವೇ ಹೊರತು ಶಬ್ದಗಳನ್ನು ಹೊರಗೆಡವದಾದವು. ತಾನೇ ಕೆಲ ಹೊತ್ತಿನ ಮೊದಲಷ್ಟೇ ತಂದೆಯ ಸ್ಥಾನದಲ್ಲಿದ್ದವನೆಂದು ಕರೆದ ವ್ಯಕ್ತಿಯ ಈಗಿನ ಸ್ಥಿತಿ ನೋಡಿ ತರುಣನಿಗೆ ಅವನ ಆರೋಗ್ಯದ ಬಗ್ಗೆ ಕಾಳಜಿಯಾಯಿತು. ಕೊನೆಗೂ ತಾನೇ ಸೋಲಬೇಕಾಗುತ್ತದೆಯೇನೋ ಎಂದುಕೊಳ್ಳುವಷ್ಟರಲ್ಲಿ ಕಾರ್ಯದರ್ಶಿಯ ಕ್ಯಾಬಿನ್‌ನಲ್ಲಿ ಟೆಲಿಫೋನ್ ಸದ್ದು ಮಾಡುತ್ತಿದ್ದದ್ದು ಕೇಳಿಸಿತು. ಕಾರ್ಯದರ್ಶಿ ಕೂಡಲೇ ಅತ್ತ ಧಾವಿಸಿದಾಗ ಇಲ್ಲಿಂದ ಕಾಲು ಕೀಳುವುದೇ ಒಳ್ಳೆಯದೆಂದು ತಿಳಿದವನ ಹಾಗೆ ತರುಣ ಅಲ್ಲಿಂದ ಹೊರಟು ಹೋದ. +ಇತ್ತ ತನ್ನ ಕ್ಯಾಬಿನ್‌ಗೆ ಹೋದ ಕಾರ್ಯದರ್ಶಿ ಫೋನ್ ಮೇಲೆ ಮಾತಾಡುತ್ತಿದ್ದಂತೆ ಕಾಲುಗಳಲ್ಲಿ ನಡುಕ ಸೇರಿಕೊಂಡಿತು. ಮೋರೆ ಬಣ್ಣ ಕಳೆದುಕೊಳ್ಳ ಹತ್ತಿತ್ತು. ಫೋನಿನ ಆ ತುದಿಯಲ್ಲಿಂದ ಸಚಿವಾಲಯದ ದೊಡ್ಡ ಟೆಲಿಫೋನ್ ಬೋರ್ಡಿನ ಆಪರೇಟರ್ ಹೇಳುತ್ತಿದ್ದ: +“ಎಂಥಾ ಪಿ‌ಏರೀ ನೀವು? ಸಾಹೇಬರ ಡೈರೆಕ್ಟ್ ಫೋನ್ ರಿಸೀವರ್ ಕೆಳಗಿರಿಸಿದೀರೋ? ಸಾಹೇಬರಿಗೆ ನಿಮ್ಮ ಜೊತೆ ಮಾತಾಡಬೇಕಂತೆ. ಕೂಡಲೇ ರಿಸೀವರ್ ಸರಿಯಾಗಿಡಿ” ಎಂದವನು ಮಾತು ನಿಲ್ಲಿಸಿ ಬಿಟ್ಟ. ರಿಸೀವರ್ ಮೇಲಿರಿಸಿದ ಅರ್ಧ ಸೆಕೆಂಡಿನಲ್ಲೇ ಫೋನ್ ಸದ್ದು ಮಾಡತೊಡಗಿತು. ಕಾರ್ಯದರ್ಶಿ ಹೆದರುತ್ತ ರಿಸೀವರ್ ಎತ್ತಿಕೊಂಡ. ಆ ಬದಿಯಿಂದ ಬಂದ ದನಿ ಮಂತ್ರಿಗಳದಾಗಿರಲಿಲ್ಲ. ಯಾರದೆಂದು ಪತ್ತೆಯಾಗಲಿಲ್ಲ. +“ಸಾಹೇಬರು ಇದೀಗ ಮುಖ್ಯಮಂತ್ರಿಗಳ ಬಂಗಲೆಯಿಂದ ಹೊರಟಿದ್ದಾರೆ. ಅವರನ್ನು ಕಾಣಲು ಬಂದವರನ್ನು ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಂತೆ. ಅರ್ಧ ಗಂಟೆಯಿಂದಲೂ ನಿಮ್ಮನ್ನು ಅವರ ಖಾಸಗಿ ಲೈನ್ ಮೇಲೆ ಸಂಪರ್ಕಿಸಲು ಪ್ರಯತ್ನಿಸಿ ಸಾಧ್ಯವಾಗದೇ ಇದೀಗ ತುಂಬಾ ಸಿಟ್ಟಿನಲ್ಲಿ ಹೊರಟಿದ್ದಾರೆ.” +ಕಾರ್ಯದರ್ಶಿಗೆ ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು. ಮಂತ್ರಿಗಳು ಸಚಿವಾಲಯದಲ್ಲಿ ಇಲ್ಲದ್ದು ಗೊತ್ತಿರಲೇ ಇಲ್ಲ. ಇಲ್ಲವಾದರೆ ಟೆಲಿಫೋನ್ ರಿಸೀವರ್ ಕೆಳಗಿಡುವ ದಡ್ಡತನವನ್ನು ಮಾಡುತ್ತಿರಲೇ ಇಲ್ಲ. ಹುಡುಗನ ಬಾಯಿ ಬಿಡಿಸುವ ಆವೇಶದ ಭರದಲ್ಲಿ ಏನೆಲ್ಲ ಮಾಡಿದೆ! ಹುಡುಗ ಸಾಹೇಬರಿಗೆ ಬೇಕಾದವನಿರಬೇಕು. ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಾದವನ ಎದುರು ಆಡಬಾರದ್ದನ್ನೆಲ್ಲ ಆಡಿದೆ. ಟೆಲಿಫೋನ್ ಕೆಳಗಿರಿಸಿ ಹೊರಗಿನ ಕೋಣೆಗೆ ಬರುವಷ್ಟರಲ್ಲಿ ಆಗಿನಿಂದಲೂ ಸಹನಶೀಲತೆಯ ಮೂರ್ತಿಯಾಗಿ ಕುಳಿತಿದ್ದ ಹುಡುಗ ಅದೃಶ್ಯನಾಗಿದ್ದ. ಕಾರ್ಯದರ್ಶಿಗೆ ತಾನು ತನ್ನ ತಲೆಯ ಮೇಲೆ ಗಂಡಾಂತರದ ಸ್ವಚ್ಛ ಅರಿವು ಮೂಡಿತು. ಕ್ಷಣಾರ್ಧದಲ್ಲಿ ಆತ್ಮಸಂರಕ್ಷಣೆಯ ಪ್ರಾಣಿ-ಬುದ್ಧಿ ಎಚ್ಚರಗೊಂಡು ಮೈಕೊಡವಿತು. ಆವೇಶ ಬಂದವನ ಹಾಗೆ ಕೋಣೆಯೊಳಗಿನ ದೀಪಗಳೆಲ್ಲವನ್ನೂ ಒಂದರ ನಂತರ ಒಂದಾಗಿ ಬೆಳಗಿಸಿದ. ಅವಸರ ಅವಸರವಾಗಿ ಕೋಣೆ ಹೊಕ್ಕ ಮಂತ್ರಿವರ್ಯರಿಗೆ ಅವರು ಪ್ರಶ್ನೆ ಕೇಳುವ ಮೊದಲೇ ಏಕತಾನದ ಧಾಟಿಯಲ್ಲಿ ವರದಿ ಒಪ್ಪಿಸಿದ: +“ಸರಿಯಾಗಿ ನೀವು ಹೇಳಿದ ಹೊತ್ತಿಗೇ ಬಂದಿದ್ದನು ಸರ್! ಅರ್ಧ ಗಂಟೆ ಕಾಯುವುದರಲ್ಲಿ ಬೇಸರಗೊಂಡು ಇನ್ನೊಮ್ಮೆ ಬರುತ್ತೇನೆಂದು ಹೇಳಿ ಹೊರಡಲನುವಾದವನನ್ನು ಪುಸಲಾಯಿಸಿ ನಿಲ್ಲಿಸಿಕೊಳ್ಳಬೇಕಾಯಿತು ಸರ್! ಚಹ, ಬಿಸ್ಕೀಟು ಕೊಡಿಸಿದೆ. ಇಲ್ಲಿ ಈ ಕೋಣೆಯಲ್ಲೇ ಸೋಫಾದ ಮೇಲೆ ಕೂರಿಸಿಕೊಂಡು ಮಾತನಾಡಿಸಿದೆ. ಗೆಳೆಯರು ಹಾದಿ ಕಾಯಬಹುದು ಎಂದ. ಫೋನ್ ಇದ್ದವರಾದರೆ ಇಲ್ಲಿಂದಲೇ ಫೋನ್ ಮಾಡಲು ಅಡ್ಡಿಯಿಲ್ಲ ಎಂದು ಹೇಳಿ ನಿಮ್ಮ ಡೈರೆಕ್ಟ್ ಲೈನ್ ಕೊಟ್ಟೆ. ಖುಷಿಯಿಂದ ಅರ್ಧ ಗಂಟೆಯವರೆಗೆ ಯಾರ ಯಾರದೇ ಜೊತೆಗೆ ಮಾತಾಡಿದ. ಎಷ್ಟೊಂದು ಸುತ್ತುಬಳಸಾಗಿ ಪ್ರಶ್ನೆ ಕೇಳಿದರೂ ತನ್ನ ಭೇಟಿಯ ಉದ್ದೇಶದ ಬಗ್ಗೆ ಚೂರೂ ಮಾಹಿತಿ ಕೊಡಲಿಲ್ಲ. ರ್‍ಯಾಂಕು ಗೀಂಕು, ಪದಕ ಗಿದಕಗಳ ಬಗ್ಗೆ ಜಂಭ ಕೊಚ್ಚಿಕೊಂಡಿದ್ದು ನೋಡಿದರೆ ಅಮೆರಿಕಾ ಗಿಮೆರಿಕಾಗಳಿಗೆ ಹೋಗುವ ಮನಸ್ಸಿತ್ತೋ, ಸ್ಕಾಲರ್‌ಶಿಪ್ ಗೀಲರ್‌ಶಿಪ್ ದೊರಕಿಸುವಲ್ಲಿ ಸಾಹೇಬರ ನೆರವು ಬೇಕಿತ್ತೊ ಒಂದೂ ಗೊತ್ತಾಗಲಿಲ್ಲ. ಹುಡುಗ ತುಂಬಾ ಒಳ್ಳೆಯವನು ಸರ್! ತರುಣ ಪ್ರಾಯ ನೋಡಿ. ಎರಡೆರಡು ಗಂಟೆ ಕಾಯುವುದೆಂದರೆ ಬೇಸರ ಬಂದಿತೋ ಏನೋ. ಫೋನ್ ಗಂಟೆ ಬಾರಿಸಿತೆಂದು ಒಳಗೆ ಹೋದವನು ಹೊರಗೆ ಬರುವಷ್ಟರಲ್ಲಿ ಹುಡುಗ ಹೊರಟು ಹೋಗಿದ್ದ. ಕರೆಸಿದರೆ ಇನ್ನೊಮ್ಮೆ ಬರದಿರಲಾರ.” +ಕಾರ್ಯದರ್ಶಿಯ ವರದಿಯಲ್ಲಿ ಅನಿರೀಕ್ಷಿತವಾದುದೇನನ್ನೂ ಕಂಡಿರದ ಮಂತ್ರಿಗಳು, “ಇಷ್ಟೆಲ್ಲ ದೀಪಗಳನ್ನೇಕೆ ಬೆಳಗಿಸಿದ್ದೀರಿ?” ಎಂದು ಗುಡುಗಿದರು. ಈಗಿನ ಸಂದರ್ಭದಲ್ಲಿ ಅದೊಂದೇ ಅನಿರೀಕ್ಷಿತವಾದ ಘಟನೆಯಾಗಿತ್ತೆನ್ನುವ ತರಹ. +ಹುಡುಗ ತಾನು ಬರುವ ಮೊದಲೇ ಹೊರಟು ಹೋದದ್ದರಿಂದ ಹತಾಶೆಗೊಂಡ ಮಂತ್ರಿಗಳಿಗೆ ತಮ್ಮ ಹತಾಶೆಯನ್ನು ತೋರಿಸಿಕೊಳ್ಳುವುದಿರಲಿಲ್ಲವೇನೋ! ಆದರೆ ಅದನ್ನು ಅಡಗಿಸುವುದರಲ್ಲಿ ಅವರು ಸಂಪೂರ್ಣ ಗೆಲ್ಲಲಿಲ್ಲ. ಮುಖ್ಯಮಂತ್ರಿಗಳು ತಮ್ಮ ಬಂಗಲೆಯಲ್ಲೇ ಏನೋ ಅರ್ಜೆಂಟು ಸಭೆ ಕರೆದಿರಬೇಕು. ಸಭೆ ಮುಗಿಯುತ್ತಲೇ ಅಲ್ಲಿಂದಲೇ ನೇರವಾಗಿ ಮನೆಗೆ ಹೋಗಬಹುದಾಗಿದ್ದವರು ಇಲ್ಲಿಗೆ ಬಂದದ್ದು ಹುಡುಗನನ್ನು ಭೇಟಿಯಾಗಲೆಂದೇ ಎನ್ನುವುದರ ಬಗ್ಗೆ ಖಾತರಿಯಾದಾಗ ಕಾರ್ಯದರ್ಶಿಗೆ ತನ್ನ ಅಧಿಕಪ್ರಸಂಗ ಅರಿವಾಯಿತು. ಮುಖ್ಯಮಂತ್ರಿಗಳು ಈ ತುರ್ತಿನ ಸಭೆ ಕರೆದಿರದಿದ್ದರೆ ಮಂತ್ರಿಗಳು ಈ ಹುಡುಗನನ್ನು ಅವನು ಬಂದ ಕೂಡಲೇ ಭೇಟಿಯಾಗುತ್ತಿದ್ದರು! ಭೇಟಿಯಾಗಿದ್ದರೆ ಇಷ್ಟೆಲ್ಲ ಘೋಟಾಳೆ ಆಗುತ್ತಿರಲಿಲ್ಲ! ಹಾಗೆ ನೋಡಿದರೆ ಹುಡುಗ ತನಗೆ ತುಂಬಾ ಮೆಚ್ಚುಗೆಯಾಗಿದ್ದ. ಯಾವ ಕೆಟ್ಟ ಗಳಿಗೆಯಲ್ಲಿ ಎಲ್ಲ ಬಿಟ್ಟು ಅವನು ತನ್ನ ಜಾತಿಯನ್ನು ಹಂಗಿಸುತ್ತಾನೆಂದು ತೋರಿತೋ! +ಮಂತ್ರಿಗಳು ಕ್ಷಣ ಹೊತ್ತು ಕುರ್ಚಿಯಲ್ಲಿ ಕುಳಿತರು. ಆಮೇಲೆ ತಮ್ಮ ದೊಡ್ಡ ಮೇಜಿನ ಖಣವನ್ನು ತಾವೇ ತೆರೆದು ಅದರೊಳಗಿಂದ ಕಂದೀ ಬಣ್ಣದ ಬಾಯಿ ಮುಚ್ಚಿದ ದಪ್ಪ ಲಿಫಾಪೆಯನ್ನು ತಮ್ಮ ಬ್ರೀಫ್‌ಕೇಸ್‌ಗೆ ಸೇರಿಸಿಕೊಂಡರು. ಕುತೂಹಲ ತುಂಬಿದ ಕಣ್ಣುಗಳಿಂದ ತಮ್ಮನ್ನು ನೋಡುತ್ತ ನಿಂತ ಕಾರ್ಯದರ್ಶಿಯಿಂದ ಬೀಳ್ಕೊಂಡು ಕಚೇರಿಯ ಹೊಸಲನ್ನು ದಾಟಿದರು. +ಜೋಲು ಬಿದ್ದ ಅವರ ಭುಜಗಳನ್ನು ಬೆನ್ನ ಹಿಂದಿನಿಂದ ನೋಡುತ್ತಿದ್ದಂತೆ ಅಂಥ ಯಾವ ಬಲವಾದ ಕಾರಣವಿಲ್ಲದೇನೇ ಮಂತ್ರಿಗಳು ಮಾಡ ಹೊರಟಿದ್ದು ಹುಡುಗನ ಮಟ್ಟಿಗೆ ಅಷ್ಟೊಂದು ಒಳ್ಳೆಯ ಕೆಲಸವಿದ್ದಿರಲಾರದು ಅನ್ನಿಸಿ ಹೋದಾಗ ಹುಡುಗನೊಡನೆ ತಾನು ನ್ಯಾಯವಾಗಿ ನಡೆದುಕೊಳ್ಳಲಿಲ್ಲವೆಂದು ತೋರಿ ಕಾರ್ಯದರ್ಶಿಗೆ ಕೆಡುಕೆನ್ನಿಸಿತು. +ಇದಾದ ಸುಮಾರು ಆರು ತಿಂಗಳ ನಂತರ ಒಂದು ದಿನ ಬೆಳಗಿನ ಪತ್ರಿಕೆಯಲ್ಲಿ “ಈ ಹೊಲಸು ಕೆಲಸದಲ್ಲಿ ಮಂತ್ರಿಗಳ ಕೈಯಿರಬಹುದೆ?” ಎಂದು ದೊಡ್ಡ ಪ್ರಶ್ನೆ ಚಿಹ್ನೆಯುಳ್ಳ ಶೀರ್ಷಿಕೆ ಹೊತ್ತ ಸುದ್ದಿ ಓದುತ್ತಿದ್ದಂತೆ ಕಾರ್ಯದರ್ಶಿಯ ತೆರೆದ ಬಾಯಿ ತೆರೆದೇ ಉಳಿಯಿತು. ಅರಳಿದ ಕಣ್ಣುಗಳು ಅರಳಿಯೇ ಉಳಿದವು. ಸುದ್ದಿಯಲ್ಲಿ ಉಲ್ಲೇಖಗೊಂಡ ಮಂತ್ರಿ ಬೇರೆ ಯಾರೂ ಅಲ್ಲದೇ ತನ್ನ ಸಾಹೇಬರೇ ಎಂದೂ ಅವರಿಂದ ಅನ್ಯಾಯಕ್ಕೆ ಒಳಗಾದ ಹುಡುಗ ಆ ದಿನ ತಾನು ಜಾತಿಯ ಮಾತೆತ್ತಿದಾಗ ಹೆದರಿ ಓಡಿ ಹೋದ ಹುಡುಗನೇ ಎಂದೂ ಸರಕ್ಕನೆ ಹೊಳೆದು ಹೋಯಿತು. ಅರರೇ! ಹುಡುಗನಿಗಾದ ಅನ್ಯಾಯದಲ್ಲಿ ತನ್ನ ಕೈಯೂ ಇದೆ ಹಾಗಾದರೆ, ಅನ್ನಿಸದೇ ಇರಲಿಲ್ಲ. +ಪೇಪರು ಓದಿ ಮುಗಿಸಿದ್ದೇ ಎಲ್ಲಿಲ್ಲದ ಅವಸರದಲ್ಲಿ ಆಫೀಸಿಗೆ ಹೊರಡುವ ಸಿದ್ಧತೆಗೆ ತೊಡಗಿದ್ದು ನೋಡಿ ಕಾರ್ಯದರ್ಶಿಯ ಮನೆಯವರಿಗೆ ಆಶ್ಚರ್ಯವಾಯಿತು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ವ್ಯವಧಾನವೂ ಅವನಿಗೆ ಉಳಿಯಲಿಲ್ಲ. ಅವನ ಮನಸ್ಸಿನಲ್ಲೀಗ ಒಂದೇ ವಿಚಾರ: ಮುಖ್ಯಮಂತ್ರಿಗಳ ವಾರದ ಸಭೆಗೆ ಹೊರಡುವ ಮೊದಲೇ ಅವರನ್ನು ಸಂಧಿಸುತ್ತೇನೆ. ಪತ್ರಿಕೆಯೊಳಗಿನ ಸುದ್ದಿಯನ್ನು ಅವರ ಮುಖಕ್ಕೆ ಹಿಡಿದು ಇದು ದೇವರು ಮೆಚ್ಚುವ ಕೆಲಸವೋ ಎಂದು ಕೇಳುತ್ತೇನೆ. ಏನೆಂದರೂ ನಾನು ಸರಕಾರಿ ನೌಕರ. ನನ್ನ ನೌಕರಿಗೇನು ಸಂಚಕಾರ ಬರಲಾರದು. ಮಂತ್ರಿಗಳ ಕೋಪಕ್ಕೆ ತುತ್ತಾಗಬಹುದು. ಆದರೆ ಈ ಅನ್ಯಾಯವನ್ನು ಪ್ರತಿಭಟಿಸದೇ ಇರಲಾರೆ. ಈ ಪೇಪರಿನವರೂ ಎಂಥ ಪುಕ್ಕರು! ಮಂತ್ರಿಗಳು ಎನ್ನುವಾಗ ರಾಜ್ಯದ ಹೆಸರಿಲ್ಲ. ಅನ್ಯಾಯಕ್ಕೆ ಗುರಿಯಾದ ಹುಡುಗನ ಹೆಸರಿಲ್ಲ. ಮಂತ್ರಿಗಳಿಗೆ ಶಾಮೀಲಾಗಿದ್ದಾರೆ ಎನ್ನಲಾದ ಪ್ರಾಧ್ಯಾಪಕರ ಹೆಸರಿಲ್ಲ. ತಾನೂ ಎಂಥ ದಡ್ಡ! ಹುಡುಗನ ಜಾತಿ ಕೇಳಿದೆ, ಹೆಸರು ಕೇಳಲಿಲ್ಲ, ಮಂತ್ರಿಯೂ ಎಂಥಾ ಪಕ್ಕಾ! ಭೇಟಿಯಾಗಲು ಬರಲಿದ್ದವನ ವಯಸ್ಸು ತಿಳಿಸಿದ, ಹೆಸರು ತಿಳಿಸಲಿಲ್ಲ. ಇದು ಲಕ್ಷ್ಯಕ್ಕೆ ಬರುತ್ತಲೇ ಕಾರ್ಯದರ್ಶಿ ಅಧೀರನಾದ: ಪತ್ರಿಕೆಯನ್ನು ಮಂತ್ರಿಗಳ ಮುಖಕ್ಕೆ ಹಿಡಿಯಬಹುದು. ಆದರೆ ಯಾವುದೇ ರೀತಿಯಿಂದ ಪೇಚಿಗೆ ಸಿಕ್ಕಿಸುವುದು ಶಕ್ಯವಿಲ್ಲ. ಶಕ್ಯವಿದ್ದಿದ್ದರೆ ಅವರು ಅದು ಹೇಗೆ ಮಂತ್ರಿಯಾಗುತ್ತಿದ್ದರು? +ಆದರೂ ಮಂತ್ರಿವರ್ಯರು ತಮ್ಮ ಕೋಣೆಗೆ ಬಂದು ತಮ್ಮ ಕುರ್ಚಿಯನ್ನು ಅಲಂಕರಿಸಿದ್ದೇ ಕಾರ್ಯದರ್ಶಿ ಅವರೆದುರು ಹಾಜರಾಗಲು ಹೆದರಲಿಲ್ಲ. ಕಾರ್ಯದರ್ಶಿಯ ಕೈಯಲ್ಲಿದ್ದ ಪತ್ರಿಕೆಯನ್ನೂ, ಡೋಲು ಬಾರಿಸುತ್ತ ಬಂದವನ ಹಾಗೆ ಬಂದು ಎದುರು ನಿಂತ ಠೀವಿಯನ್ನೂ ನೋಡಿ ಅವನ ಇರಾದೆಯನ್ನು ಸರಿಯಾಗಿ ಊಹಿಸಿಕೊಂಡವರ ಹಾಗೆ ಮಂತ್ರಿ ಮುಗುಳ್ನಕ್ಕರು: +“ನನಗೆ ಗೊತ್ತಿತ್ತು” +“ಏನು?” +“ಆ ಪತ್ರಿಕೆಯನ್ನು ನನ್ನೆದುರಿಗೆ ಹಿಡಿಯುತ್ತೀರೆಂದು. ಮುಖ್ಯಮಂತ್ರಿಗಳ ವಾರದ ಮೀಟಿಂಗ್ ಇವತ್ತು. ನಿಮಗೆ ಹೇಳಬೇಕಾದ್ದನ್ನು ಆದಷ್ಟು ಸಂಕ್ಷಿಪ್ತವಾಗಿ ಹೇಳಿ.” +“ವಿಸ್ತರಿಸಿ ಹೇಳುವಂಥದ್ದಾದರೂ ಏನಿದೆ ಅದರಲ್ಲಿ? ಮಗನ ಮೇಲಿನ ವ್ಯಾಮೋಹಕ್ಕೆ ಆ ಹುಡುಗನಿಗೆ ಇಷ್ಟೊಂದು ಘೋರ ಅನ್ಯಾಯವೆಸಗಬಹುದೆ?” +“ನಾನು ಅನ್ಯಾಯ ಮಾಡಿದ್ದು ಮಗನ ಮೇಲಿನ ವ್ಯಾಮೋಹಕ್ಕೆಂದು ನೀವೇ ಹೇಳಿದಿರಿ. ಆದರೆ ನೀವು ಅವನ ಹುಟ್ಟಿನ ಬಗ್ಗೆ ನಿಮಗೆ ಗೊತ್ತಿಲ್ಲದ್ದನ್ನು ಆಡಿ ಅವನು ಇಲ್ಲಿಂದ ಓಡಿ ಹೋಗುವಷ್ಟು ಮನಸ್ಸು ನೋಯಿಸಿದ್ದು ಯಾವ ಕಾರಣಕ್ಕೆಂದು ತಿಳಿಯಬಹುದೇ? ನನಗೆ ಯಾರು ಹೇಳಿದರು ಎಂದು ಆಶ್ಚರ್ಯವಾಗುತ್ತಿದೆಯಲ್ಲವೆ? ಯಾರೂ ಹೇಳಲಿಲ್ಲ. ನಾನೇ ಊಹಿಸಿದೆ. ನಿಮ್ಮಂತಹವರ ತಲೆ ನಾಲಗೆ ಹೇಗೆ ಕೆಲಸ ಮಾಡುತ್ತವೆಯೆಂದು ಚೆನ್ನಾಗಿ ಬಲ್ಲವನಾದ್ದರಿಂದ. ನೀವು ಸ್ವತಃ ನನಗಿಂತ ಮೇಲ್ಜಾತಿಯವರೆಂದು ಇಲ್ಲಿ ಬಂದವರೆದುರೂ ತೋರಿಸಿಕೊಳ್ಳಲು ಹೋಗುತ್ತೀರೆಂಬುದು ನನಗೆ ಗೊತ್ತಿಲ್ಲವೆಂದು ತಿಳಿಯಬೇಡಿ. ನೀವು ಯಾವುದನ್ನು ಘೋರ ಅನ್ಯಾಯವೆಂದು ಕರೆದಿರೋ ಆ ಕೆಲಸಕ್ಕೆ ಹುಡುಗನ ಪೂರ್ವ ಸಮ್ಮತಿಯನ್ನು ಪಡೆಯಲೆಂದೇ ಅವನನ್ನು ಇಲ್ಲಿಗೆ ಕರೆಸಿದ್ದೆ-ನಾನಾಗಿ! ಅವನಾಗಿ ಬಂದದ್ದಲ್ಲ. ಇಷ್ಟಕ್ಕೂ ಈಗ ಆದದ್ದಾದರೂ ಏನು? ನನ್ನ ಮಗ ಇವನಷ್ಟು ಬುದ್ಧಿವಂತನಲ್ಲ, ಒಪ್ಪಿದೆ. ಆದರೆ ದಡ್ಡನೂ ಅಲ್ಲ. ಇಲ್ಲವಾದರೆ ಪಿ‌ಎಚ್‌ಡಿಗಾಗಿ ಇಂಗ್ಲೆಂಡಿಗೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ. ಇವನಿಗೆ ಬೇಕಾದ ಪ್ರವೇಶ ಕಾಲೇಜಿನಲ್ಲಿ ಪ್ರವೇಶ ಸಿಗಲು ಇವನು ಪ್ರಕಟಿಸಿದ ರಿಸರ್ಚ್ ಪೇಪರುಗಳೇನಾದರೂ ಇದ್ದರೆ ಹೆಚ್ಚು ಅನುಕೂಲವಾದೀತೆಂದು ಅವನ ಇಲ್ಲಿಯ ಕಾಲೇಜಿನ ಪ್ರಾಧ್ಯಾಪಕರೇ ತಿಳಿಸಿದರಂತೆ; ಅವರೇ ಉಪಾಯ ಸೂಚಿಸಿದರಂತೆ: ಈ ಹುಡುಗ ಬರೆದ ಸುದೀರ್ಘ ಪ್ರಬಂಧವೊಂದು ಅದೇ ಆಗ ಪ್ರಕಟಣೆಗೆ ಹೋಗಲು ಸಿದ್ಧವಾಗಿತ್ತು. ಅವನ ಪ್ರಾಧ್ಯಾಪಕರೇ ಅದನ್ನು ಇಂಗ್ಲೆಂಡಿನ ಜರ್ನಲ್‌ಗೆ ಕಳಿಸುವವರಿದ್ದರು. ಆ ಪ್ರಬಂಧಕ್ಕೆ ಹುಡುಗನ ಹೆಸರಿನ ಜೊತೆಗೆ ನನ್ನ ಮಗನ ಹೆಸರನ್ನೂ ಜೋಡಿಸುವ ಯೋಚನೆ ಈ ಪ್ರಾಧ್ಯಾಪಕರದ್ದೇ ಆಗಿತ್ತು. ಆದರೆ ಅದಕ್ಕೆ ಹುಡುಗನ ಒಪ್ಪಿಗೆ ಪಡೆಯುವ ಕೆಲಸವನ್ನು ನನಗೆ ಬಿಟ್ಟುಕೊಟ್ಟರು. ನನಗೂ ಈ ಯೋಚನೆ ಅಷ್ಟೊಂದು ಕೆಟ್ಟದ್ದೆಂದು ತೋರಲಿಲ್ಲ. ಇಷ್ಟೇ, ಒಬ್ಬರ ಬದಲು ಇಬ್ಬರಿಗೆ ಆ ಪ್ರಬಂಧಕ್ಕಾಗಿ ಮಾನ ಸಿಗುತ್ತಿತ್ತು. ಆದರೆ ಅದೇ ಹೊತ್ತಿಗೆ ನನ್ನ ಮಗನಿಗೆ ಇಂಗ್ಲೆಂಡಿನಲ್ಲಿ ಪಿ‌ಎಚ್‌ಡಿಗೆ ಪ್ರವೇಶ ದೊರಕಿಸಲು ನೆರವಾಗುತ್ತಿತ್ತು. ಈಗ ಆದದ್ದೂ ಹಾಗೆಯೇ ಅಲ್ಲವೆ? ನನ್ನ ಮಗನಿಗೀಗ ಪ್ರವೇಶ ದೊರಕಿದೆ. ಮುಂದಿನ ತಿಂಗಳು ಅವನು ಇಂಗ್ಲೆಂಡಿಗೆ ಹೊರಟಿದ್ದಾನೆ. ನಮ್ಮ ಕೃತ್ಯಕ್ಕೆ ಬೇರೆ ಇರಾದೆ ಇರಲಿಲ್ಲ. ತಿಳಿ ಹೇಳಿದರೆ ಹುಡುಗನೂ ಬೇಡವೆನ್ನುತ್ತಿರಲಿಲ್ಲ. ಹೇಳುವುದು ಆ ದಿನ ಸಾಧ್ಯವಾಗಿದ್ದರೆ ಹುಡುಗನಿಗೂ ಸಮಾಧಾನವಾಗುತ್ತಿತ್ತು. ನೀವು ನನ್ನ ಮೇಲೆ ಆರೋಪ ಹೊರೆಸುವುದೂ ತಪ್ಪುತ್ತಿತ್ತು.” +“ಸುದ್ದಿ ಪತ್ರಿಕೆ ಹಾಗೆ ಹೇಳುವುದಿಲ್ಲವಲ್ಲ! ತುಂಬಾ ಉಚ್ಚಮಟ್ಟದ, oಡಿigiಟಿಚಿಟ ಆದ ವಿಚಾರಗಳಿದ್ದ ಪ್ರಬಂಧವಂತೆ ಅದು. ಪ್ರಕಟಗೊಂಡಿದ್ದು ಮಾತ್ರ ನಿಮ್ಮ ಮಗನ ಹೆಸರಿನಲ್ಲಿ!” ಕಾರ್ಯದರ್ಶಿಯ ಮಾತಿನಲ್ಲಿ ಅವುಡುಗಚ್ಚಿದ ವ್ಯಂಗ್ಯವಿತ್ತು. +“ಅದು ಹೇಗೆಂದು ನನಗೂ ಗೊತ್ತಾಗಲಿಲ್ಲ. ಪ್ರಕಟಿಸಿದ ಜರ್ನಲ್‌ನ ಆಫೀಸಿನಲ್ಲೇ ಏನೇ ಘೋಟಾಳೆಯಾಗಿರಬೇಕು Iಣ musಣ be ಚಿ boಟಿಚಿ ಜಿiಜe eಡಿಡಿoಡಿ. ಇಲ್ಲವಾದರೆ ಪ್ರಾಧ್ಯಾಪಕರೇ ಹುಡುಗನನ್ನು ಕಾಲೇಜಿಗೆ ಕರೆಸಿಕೊಂಡು, ಮುದ್ರಣಗೊಂಡ ಪ್ರಬಂಧದ ಪ್ರತಿಯೊಂದನ್ನು ಅವನ ಕೈಯಲ್ಲಿರಿಸಿ ಅವನಲ್ಲಿ ಮಾಫಿ ಕೇಳುತ್ತಿರಲಿಲ್ಲ. ಬೆಳಿಗ್ಗೆ ಪತ್ರಿಕೆ ಓದಿ ಕಳವಳ ಪಟ್ಟು ಪ್ರಾಧ್ಯಾಪಕರಿಗೆ ಫೋನ್ ಮಾಡಿದ ಮೇಲೇ ನಡೆದದ್ದು ಏನೆಂದು ನನಗೂ ಗೊತ್ತಾದದ್ದು. ಈಗ ಅನ್ನಿಸುತ್ತದೆ, ಅವರು ಹುಡುಗನಿಗೆ ಹೇಳದೇ ಉಳಿದಿದ್ದರೇ ಒಳಿತಿತ್ತೇನೋ. ಅದು ಪ್ರಕಟವಾಗುವುದರಲ್ಲಿ ಅವನಿಗೇ ಅಷ್ಟೊಂದು ಆಸ್ಥೆಯಿರಲಿಲ್ಲವಂತೆ.” +“ಮೇಲಾಗಿ ಪ್ರಾಧ್ಯಾಪಕರು ಹೇಳದೇ ಉಳಿದಿದ್ದರೆ ಪೇಪರಿನಲ್ಲಿ ಸುದ್ದಿಯಾಗುವುದೂ ತಪ್ಪುತ್ತಿತ್ತು!” +“ಸುದ್ದಿಯಾಗಲಿಲ್ಲ. ಬರೇ ಕಂತೆ ಪುರಾಣವಾಯಿತು. ಯಾಕೆ ಗೊತ್ತೆ? ಸ್ವತಃಕ್ಕೆ ತನ್ನನ್ನೊಬ್ಬ ಜಾತಿತಜ್ಞರೆಂದು ತಿಳಕೊಂಡ ನೀವು ಅವನ ರ್‍ಯಾಂಕಿನ ಧಿಮಾಕು, ಮಾತಿನ ವೈಖರಿ, ಮೂಗಿನ ತುದಿ-ಹೆದರಬೇಡಿ, ಇದೂ ಯಾರೂ ಹೇಳಿದ್ದಲ್ಲ, ನಾನೇ ಊಹಿಸಿದ್ದು-ಇವುಗಳ ಆಧಾರದ ಮೇಲೆ ಅವನು ಇಂತಿಂಥ ಕುಲದವನೆಂದು ತೀರ್ಮಾನಿಸಿ ಅವನನ್ನು ದ್ವೇಷಿಸಿದಿರಿ. ಆ ಪೇಪರಿನವರೂ ಎಂಥ ಶತಮೂರ್ಖರು ನೋಡಿ. ನೀವು ತಿಳಕೊಂಡದ್ದಕ್ಕೆ ಸರೀ ವ್ಯತಿರಿಕ್ತವಾದ ಜಾತಿಯವನೆಂದು ಗೊತ್ತಿದ್ದವರ ಹಾಗೆ ಅವನ ರ್‍ಯಾಂಕನ್ನು ನಂಬಲಿಲ್ಲ, ಅಂಥ ಆ ಪ್ರಬಂಧ ಬರೆದವನೆಂದೂ ನಂಬಲಿಲ್ಲ. ಆದರೂ ಣo be oಟಿ ಣhe sಚಿಜಿe siಜe ಎಂಬಂತೆ ಎಲ್ಲರ ಹೆಸರನ್ನೇ ಅಳಿಸಿಬಿಟ್ಟರು. ನಮ್ಮ ಪ್ರತ್ಯಕ್ಷ ಸಾಕ್ಷಿಯಲ್ಲಿ ಘಟಿಸಿದ್ದನ್ನು ಪ್ರಶ್ನಾರ್ಥಕ ಚಿಹ್ನೆ ಹೊತ್ತ ಊಹೆಯೆನ್ನುವಂತೆ ಪ್ರಕಟಿಸಿದರು. ಹೇಳಿ, ಈ ದುರಂತಕ್ಕೆ ಮೂಲ ಕಾರಣರು ಯಾರು? ಮುಖ್ಯಮಂತ್ರಿಗಳ ಸಭೆಗೆ ಹೋಗಿ ಬರುವುದರೊಳಗೆ ಉತ್ತರ ಹುಡುಕಿಡಿ,” ಎಂದು ಮನೆಯಿಂದ ಬರುವಾಗಲೇ ತಾಲೀಮು ಮಾಡಿಕೊಂಡೇ ಬಂದವರ ಹಾಗೆ ಮಾತನಾಡಿದವರು ದೊಡ್ಡ ಸುಕೃತ ಗೈದ ಡೌಲಿನಲ್ಲಿ ಸಭೆಯ ಸಲುವಾಗಿ ಬೇಕಾಗಿದ್ದ ಫೈಲೊಂದನ್ನು ಕಾರ್ಯದರ್ಶಿಯಿಂದಲೇ ಪಡೆದು ಕೋಣೆಯ ಹೊರಗೆ ನಡೆದರು. ಹೋಗು ಹೋಗುವಾಗ, “ಅಂದ ಹಾಗೆ ನನ್ನ ಡೈರೆಕ್ಟ್ ಫೋನ್ ರಿಸೀವರ್ ಸರಿಯಾದ ಜಾಗದಲ್ಲೇ ಇರಲಿ” ಎಂದರು. +ಕಾರ್ಯದರ್ಶಿ ವಿಚಾರ ಮಾಡುವ ಸ್ಥಿತಿಯಲ್ಲೇ ಉಳಿಯಲಿಲ್ಲ. ಮಂತ್ರಿಗಳು ತಾವು ಎಸಗಿದ ಅನ್ಯಾಯವನ್ನು ಸಮರ್ಥಿಸಿಕೊಂಡ ನಯನಾಜೂಕನ್ನು ನೆನೆದಷ್ಟು ಅವರನ್ನು ಪ್ರತಿಭಟಿಸಲು ಬೇಕಾದ ನೈತಿಕ ಬಲವೇ ತನ್ನಲ್ಲಿ ಇಲ್ಲದ್ದು ನೋಡಿ ಹತಾಶೆಗೊಂಡರು. ತನ್ನ ಕ್ಯಾಬಿನ್ನಿಗೆ ಮರಳಿ ಬಂದು ತಲೆಯ ಮೇಲೆ ಕೈಹೊತ್ತು ಕುಳಿತವರ ಹಾಗೆ ಕುಳಿತಿರುವಾಗ ಮಂತ್ರಿಗಳ ಡೈರೆಕ್ಟ್ ಟೆಲಿಫೋನ್ ಸದ್ದು ಮಾಡಿತು. ನಿಶ್ಚಿತವಾಗಿ ಹುಡುಗನದಿರಬೇಕು ಅನ್ನಿಸಿ ರಿಸೀವರ್ ಎತ್ತಿಕೊಂಡ. ಅವನೇ ಆಗಿದ್ದ ಪಕ್ಷದಲ್ಲಿ-ಬೇಕಾದ ಜಾತಿಯವನಿರಲೀ, ಕುಲದವನಿರಲೀ ಕ್ಷಮಿಸು ಎಂದು ಕೇಳುತ್ತೇನೆ ಎಂದುಕೊಂಡ. +“ಯಾರು? ಮಂತ್ರಿವರ್ಯರ ಆಪ್ತ ಕಾರ್ಯದರ್ಶಿಗಳಿರಬೇಕು. ನೀವು ಯಾರೆಂದು ತಿಳಿಸಬೇಕಾದ್ದಿಲ್ಲ. ಕಿವಿ ತೆರೆದು ಕೇಳಿಸಿಕೊಂಡರೆ ಸಾಕು. ನನ್ನ ಪ್ರಾಧ್ಯಾಪಕ ಮಹಾಶಯರು ನಿಮ್ಮ ಮಂತ್ರಿಗಳಿಗೆ ಶಾಮೀಲಾಗಿದ್ದಕ್ಕೆ ನನಗೆ ಕಾರಣ ತಿಳಿಸಿದರು. ಅವರ ಇರಾದೆ ಒಳ್ಳೆಯದೇ ಆಗಿತ್ತಂತೆ. ಮಂತ್ರಿಗಳ ಮಗ ಇಂಗ್ಲೆಂಡಿಗೆ ಹೋದರೆ ಖಾಲಿಯಾಗುವ ಜಾಗಕ್ಕೆ ನನ್ನನ್ನು ನೇಮಿಸುವ ಆಶ್ವಾಸನೆಯನ್ನು ನನ್ನ ವತಿಯಿಂದ ಪಡೆದುಕೊಂಡಿದ್ದರಂತೆ. ಆದರೆ ಐನು ಹೊತ್ತಿಗೆ ಇವರಾರೂ ಎಣಿಸಿಯೇ ಇರದ ಒಂದು ಪೇಚು ಇದಿರಾಗಿ ಆ ಜಾಗ ಬಹುಶಃ ಪ್ರಾಧ್ಯಾಪಕರ ಮಗನಿಗೆ ಸಿಗಬಹುದಂತೆ. ಯಾರ ಮಗನಿಗಾದರೇನಂತೆ, ಸಿಗುತ್ತದಲ್ಲ-ಅದು ಮುಖ್ಯ. ಅವರಿಗೆ ನನ್ನಿಂದಾಗಿ ಇದಿರಾದ ಪೇಚು ಏನೆಂದು ಗೊತ್ತೇ? ನನಗೆ ಜಾತಿಯಿಲ್ಲದ್ದು. ಅಂದರೆ ಇಂಥದ್ದೇ ಜಾತಿಯೆಂದು ನಿಶ್ಚಿತವಾಗಿ ಹೇಳಲು ಆಗದ್ದು. ಒಗಟು ಬಿತ್ತಲ್ಲವೆ? ನನಗೆ ನನ್ನ ಅಪ್ಪ ಯಾರೆಂದು ಗೊತ್ತಿಲ್ಲ. ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲವಂತೆ. ಅಂದ ಮೇಲೆ? ಈಗ ನೀವೇ ಹೇಳಿ. ಇನ್ನೊಮ್ಮೆ ಫೋನ್ ಮಾಡಿ ಕೇಳುವಷ್ಟರಲ್ಲಿ ಉತ್ತರ ಹುಡುಕಿಡಿ ನನ್ನ ಸಲುವಾಗಿ.” +ರಿಸೀವರ್ ತನ್ನಿಂದ ತಾನೇ ಎಂಬಂತೆ ಕೈಯಿಂದ ಜಾರುತ್ತಿದ್ದಾಗ ಕಾರ್ಯದರ್ಶಿಗೆ ತಲೆ ಸುತ್ತು ಬಂದಂತಾಯಿತು. ಅರರೇ! ಇವನು…..? ಇವನು…..? ಮೊದಲ ಬಾರಿಗೆ ಮನುಷ್ಯಯಾತನೆಯನ್ನು ಕುರಿತು ಮನುಷ್ಯನ ಹಾಗೆ ಯೋಚಿಸ ತೊಡಗಿದ್ದ ಕಾರ್ಯದರ್ಶಿಗೆ ಹುಡುಗ ಹಾಕಿದ ಒಗಟು ಬಿಡಿಸಲು ಸಮಯ ಬೇಕಿತ್ತೇನೋ-ಹಾಗೇ ಕುಳಿತಿದ್ದ. +***** +(೧೯೯೨) +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_207.txt b/Kannada Sahitya/article_207.txt new file mode 100644 index 0000000000000000000000000000000000000000..d580e3f75671070ad1b12201274a9eac0e2c95cb --- /dev/null +++ b/Kannada Sahitya/article_207.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಅಲ್ಲಿಯೇ ಕುಳಿತಿತ್ತು ಹಾವು! +ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು +ಕೈ ಮಾಡಿ ಕರೆವಂತೆ ಮೋಹಬಂಧ ! +ಜೋಡು ನಾಲಗೆ-ನಾ ಮುಂಚು ತಾ ಮುಂಚು +ಮುಗಿಲ ಮೋಹರದಲ್ಲಿ +ಸಳ ಸಳ ಮಿಂಚು ಹರಿದಾಡಿ, ನಡೆದಂತೆ +ಸಿಡಿಲಿನೊಳಸಂಚು ! +ನಾವು ನೀವೂ ಅಲ್ಲಿಯೇ +ಅಲೆದುದೆಷ್ಟೋ ಬಾರಿ, +ಒಮ್ಮೆಯಾದರೂ +ನಮ್ಮನದು ಕಂಡಿರಬೇಕು, ಖಂಡಿತ ; +ಮನದೊಳೇನೋ ಗುಣಾಕಾರ ಹಾಕಿರಬೇಕು +ಈಗಲಾದರೂ ಕಂಡಿರ, ಅದರದೆಂಧಾ ಚಮಕು ಚುರುಕು ? +೨ +ನೆರಳ ಜೊತೆ ನೆರಳಾಗಿ ಅರಿವಾಗಗೊಡದಂತೆ ಹುಟ್ಟಿನಿಂದಲೆ ಬಂತೊ ಬೆನ್ನ ಹಿಂದೆ ! +ಹೆಜ್ಜೆಯಲಿ ಹೆಜ್ಜೆಯನಿಟ್ಟು +ಕಾಯ್ದು ಕೊಂಡೇ ಇತ್ತು +ಎಂಥಾ ಒಜ್ಜೆ ಹೊತ್ತರೂ ನುಜ್ಜುಗುಜ್ಜಾಗದೊಲು ಮಾಂಸಮಜ್ಜೆ! +ಜಪ್ಪಿಸಿ ಕುಳಿತು ನೋಡುವದು-ತಪ್ಪಿತೋ +ಕುನುಸಿಟ್ಟು ಕೊನೆಗಾಣಿಸಿಯೆ ಬಿಡುವ ಹಿಡಿತ ಹೊಡೆತ ! +ಇದೆ ಈಗ ಸುರುಳಿಯ ಬಿಚ್ಚಿ ಮಿಂಚಿ ಮರೆಯಾಯ್ತು! +ನುಣ್ಣಗಿನ ಡೊಂಕುಗೆರೆ ಬದಿಗೆ ಹಕ್ಕಿಯ ಹೆಜ್ಜೆ +ನಕ್ಷತ್ರ ಮೂಡಿಸಿದೆ ! ಮುಂದೆ ಮಾತೇ ಇಲ್ಲ! ಅದರ ಗುರುತಿಲ್ಲ +ಯಾರು ಊದಿದರೇನು ಮನಸೆಳೆವ ಪುಂಗಿ +ಅದಕಿತ್ತು ಬೇರೊಂದು ಭಾವಭಂಗಿ ! +೩ +ಉಸುಕಿನಲಿ ನಡೆದಂತೆ ಸಾಗಿತ್ತು ನಾಡೀಪರೀಕ್ಷೆ +ಔಷಧಿಯ ಚಮಚ ಎಣಿ ಎಣಿಸಿತ್ತು ಒಂದೊಂದೆ ಕೊನೆಯಗಳಿಗೆ +ಭೂಲೋಕವನು ಮೂರು ಸುತ್ತು ಸುತ್ತಿದರು +ಸಪ್ತಸಾಗರ ತಳವ ಶೋಧಿಸಿದರು +ಇಲ್ಲ…….. ……. ಎಲ್ಲೂ …………… ಇಲ್ಲ +ಬರಿಯ ಪಂಜರ ಕೆಳಗೆ ಜೋತಾಡುತಿತ್ತು +“ಸಣ್ಣ ಗಿಣಿಯು ಕತ್ತಲಲ್ಲಿ ಎಲ್ಲಿ ಹಾರಿತು?” +ಆಕಾಶವಾಣಿಯು ನುಡಿದು ಗುಡುಗು ಮಿಂಚನು ತಳೆದು +ದೇವದೇವಿಯರೊಲಿದು ಬರುವ ಮೊದಲೇ +ಮಣ್ಣ ಲೋಕದ ಸಣ್ಣ ಬೊಂಬೆ ಕೇಳಿತು ಜಗವ +“ಹೊತ್ತಾಯ್ತು ನಾನಿನ್ನು ಹೋಗಿ ಬರಲೆ?” +***** +ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […] +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_208.txt b/Kannada Sahitya/article_208.txt new file mode 100644 index 0000000000000000000000000000000000000000..48682f30dca7c56636d25df8a337a04aec3a2e86 --- /dev/null +++ b/Kannada Sahitya/article_208.txt @@ -0,0 +1,168 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಲ್ಲವ್ವ ಮುಂಜಾಲೆದ್ದು ಮಕ ತೊಳಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು, ಒಲೆ ಸಾರಿಸಿ ಅದಕ್ಕೂ ವಿಭೂತಿ ಹಚ್ಚಿ, ಹತ್ತಿಕಟಿಗಿ ಪುಳ್ಳೀ ಒಲೆಯೊಳಗಿಟ್ಟು ಕಡ್ಡಿ ಗೀರಿ ಒಲಿಹಚ್ಚಿ ಆಲೀಮನಿ ಡಬರ್ಯಾಗ ಚಾ ಕಾಸಾಕ ಹತ್ತಿದಳು. ಬೆಲ್ಲ ಚಾಪುಡಿ ಹಾಕಿ ನೆಲುವಿನ ಮ್ಯಾಲಿಟ್ಟಿದ್ದ ಹಾಲು ತರಾಕ ಮೇಲೆದ್ದಳು. ಅಷ್ಟೊತ್ತಿಗೆ ಆಕೆಯ ಅತ್ತಿ ಬಸವ್ವ ಒಳಗೆ ಬಂದು +‘ಮಲ್ಲವ್ವಾ, ಬೆಲ್ಲಾನೂ ಹಾಲ್ನೂ ಬಾಳಟು ಹಾಕಿ ಚಾ ಕಾಸವಾ. ಕುಡಿಯಾದೊಂದು ಒಪ್ಪತ್ತು. ರುಚಿಯಾಗೇ ಕುಡಿಯಾನ’ ಅಂದಳು. +‘ಹ೦ಗ ಮಾಡ್ತನಿಬೇ ಯತ್ತಿ.’ +ಅಷ್ಟೊತ್ತಿಗೆ ಮಲ್ಲವ್ವನ ಮಕ್ಕಳೆರಡೂ ಗಂಗಾಳ ಹಿಡಿದುಕೊಂಡು ಅಡಿಗಿ ಮನೀಗೆ ಬಂದು ‘ಚಾ ನನಗ ಮದ್ಲು, ನನಗ ಮದ್ಲು’ ಅಂತ ಜಗಳಾಡಾಕ ಹತ್ತಿದವು. ಅದೇ ಹೊತ್ತಿಗೆ ಒಳಗೆ ಬಂದ ಮಲ್ಲವ್ವನ ಗಂಡ ಈಶಪ್ಪ +‘ಮುಂಜಾಲೆದ್ದ ಗಳಿಗ್ಗೆ ಏನ್ರಲೇ ಜಗಳ? ಸೊಳೇಮಕ್ಕಳಾ. ಹೊರಗ ಹೋಕ್ಕೀರೊ ಏನು ತೊಗೋಳ್ಯೋ ಬಾರಕೋಲಾ?’ ಅಂತ ಜಬರಿಸಿದ. ಮಕ್ಕಳೆರಡೂ ಹೆದರಿಕೊಂಡು, ಗಂಗಾಳ ಅಲ್ಲೇ ಒಕ್ಕೊಟ್ಟು, ಹೊರಗೆ ಓಡಿ ಹೋದವು. +‘ಸೊಳೇಮಕ್ಕಳಾ’ ಅಂತ ಬೈದದ್ದು ಕೇಳಿ ಬಸವ್ವನ ಎದ್ಯಾಗ ಬರ್ಚೀಲೆ ತಿವಿದಂಗಾತು. ಆದರೂ ಸಹಿಸಿಕೊ೦ಡು +‘ಅಯ್ಯ, ಬಿಡ ನಮ್ಮಪ್ಪ. ಅವರ್ನ್ಯಾಕ ಬೆಯ್ತೀದಿ? ಸಣ್ಣ ಮಕ್ಕಳು. ತೀಳೀದ ಜಗಳ ಮಾಡ್ಯಾವು. ಆಟಕ್ಕ ನೀ ಇಂತಾ ಕೆಟ್ಟ ಬೈಗಳಾ ಬೈಯೋದಾ?’ ಅನ್ನುತ್ತ ಬಸವ್ವ ಒಂದು ಚರಿಗ್ಯಾಗ ಚಾ ತೊಗೊಂಡು ಎರಡೂ ಗಂಗಾಳಾ ಹಿಡಕೊಂಡು ಹೊರಗ ಬಂದಳು. ಎರಡೂ ಮಕ್ಕಳು ಹೆದರಿಕೊಂಡು ಬೆದರಿ ಬಂದ ಚಿಗರೀ ಮರಿ ಹಾಂಗ ಕುಳಿತಿದ್ದವು. +ಬಸವ್ವ ಅವರಿಬ್ಬರಿಗೂ ಚಾ ಕುಡಿಸಿ, ತಾನೂ ಕುಡಿದು ‘ಇಲ್ಲೇ ಆಡಿಕೆಳ್ರಿ. ಇಲ್ಲಾ, ಪಾಟೀ ಪುಸ್ತಾಕ ತೊಗೊಂಡು ಓದಿಕೆಳ್ರಿ.’ ಅಂತ ಅಡಿಗಿ ಮನಿಗೆ ಬಂದ ಬಸವ್ವ ಏನೋ ನೋಡಿ ಥಟ್ಟನ ನಿಂತಳು. +‘ಅಯ್ಯ ನನ್ ಶಿವನ. ಇದರ ಸಲ್ವಾಗಿ ಮಕ್ಕಳ್ನ ಬೇದು ಹೊರಗ ಕಳಿಸಿದನ? ಹೇಣ್ತಿನ್ನ ಮುದ್ದಾಡೋದೂ ಒಲೀ ಮುಂದ ಆಗಬೇಕಾ? ರಾತ್ರಿ ಸಾಲದಾ?’ ಅಂತ ಸೆರಗಿನಿಂದ ಮುಖ ಮರೆ ಮಾಡಿಕೊಂಡು ಮೆಲ್ಲನೆ ‘ಮಲ್ಲವ್ವ’ ಅಂದಳು. +ಇಬ್ಬರೂ ದಡಬಡಿಸಿಕೊಂಡು ಎದ್ದರು. +‘ಯವ್ವಾ, ಮಲ್ಲಿ ಕಣ್ಣಾಗ ಏನೋ ಕಸ ಬಿದ್ದಿತ್ತಂತ. ನೋಡ್ತಿದ್ದೆ. ಅಟ.’ +‘ಮತ್ತ ನೀ ಹೊಲಕ್ಕ ಹೋಗೋ ಹೊತ್ತಿಗೆ ಅಡಿಗಿ ಆಗಬೇಕಲ್ಲಪ್ಪ. ಅದಕ್ಕ ಕರದೆ.’ +‘ಶೆಗಣಿ ಕಸ ಬಳದು ನಾಕು ಕೊಡ ನೀರು ಶೇದಿ ಹಾಕೋ ಹೊತ್ತಿಗೆ ಅಡಿಗಿ ಆಕ್ಕೈತಿ ಬಿಡಬೇ.’ ಎಂದು ಈಶಪ್ಪ ದಂದಕ್ಕಿ ಕಡೆಗೆ ಹೋದ. +‘ಮಲ್ಲವ್ವಾ, ನಾ ಮಜ್ಜಿಗೀ ಕಡದು ಬೆಣ್ಣಿ ತಗದು, ಆಕಳ ಹಿಂಡಿಕೊಂಡು ಬರ್ತೀನಿ. ನೀ ಆಟೊತ್ತಿಗೆ ರೊಟ್ಟಿಗೆ ಹಂಚು ಇಟ್ಟುಬಿಡು. ಈಶಪ್ಪಗ ಮುಂಜಾಲಿ ಹೊತ್ತಿನ್ಯಾಗ ಪಲ್ಯೇವು ಏನೂ ಬ್ಯಾಡ. ಕಡ್ಲೀ ಹಿಂಡಿ ಬೆಣ್ಣಿ ಹಾಕ್ಕೊಂಡು ರೊಟ್ಟೀ ತಿಂತಾನ. ಇಲ್ಲಾಂದ್ರ ಕರಿಹಿಂಡಿ ಮೊಸರು ತಿಂತಾನ. ಮದ್ಯಾನದ ಹೊತ್ತಿಗೆ ಬಿಸಿ ಅನ್ನ ಹುಳಪಲ್ಲೇವು ಮಾಡಿದರಾತು.’ ಅಂತ ಹೇಳಿ ಮೊಮ್ಮಕ್ಕಳನ್ನು ಹುಡುಕಿಕೊಂಡು ಹೊರಗೆ ಬಂದಳು. +ಏನೋ ಕೆಟ್ಟ ಕೆಲಸ ಮಾಡಿ ಅವು ಅವರಪ್ಪನ ಕೈಲೆ ಮತ್ತೆ ಬೈಸಿಕೊಳ್ಳುತ್ತಿದ್ದವು. +‘ಈ ಮಾರಾಯ ಮಕ್ಕಳ್ನ ಬೈಯೋದರಾಗ ಇರ್ತಾನ… ಈಶಪ್ಪ. ನೀ ಉಣ್ಹೋಗು. ನಾ ಅವರ್ನೆಲ್ಲ ನೋಡಿಕೆಂತೀನಿ. ಬರ್ರೆಪಾ’ ಅಂತ ಪಡಸಾಲೆಯ ಕಟ್ಟೆಯ ಮೇಲೆ ಬಸವ್ವ ಅವರಿಬ್ಬರನ್ನೂ ಕರೆದುಕೊಂಡು ಕುಳಿತಳು. +‘ಹಾ೦ಗೆಲ್ಲ ಕೆಟ್ಟ ಕೆಲಸಾ ಮಾಡಬಾರದು. ಬೆಳಿಗ್ಗೆದ್ದು ಓದಿಕೇಬೇಕು, ಇಲ್ಲ ಜಳಕಾ ಮಾಡಿ ದೇವರ ದ್ಯಾನ ಮಾಡಬೇಕು.’ +‘ಏನಂತ ದ್ಯಾನಾ ಮಾಡಬೇಕಬೇ ಯಮ್ಮ? ಅಪ್ಪ ಅಂತಾನಲ್ಲ ಹಾಂಗ ‘ಸೊಳೇಮಕ್ಕಳಾ, ಬೋಳೀಮಕ್ಕಳಾ’ ಅನಬೇಕನಬೇ?’ +ಮಮ್ಮಕ್ಕಳ ಮಾತು ಕೇಳಿ ಬಸವ್ವನ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾಯಿತು, ಕಣ್ಣಲ್ಲಿ ನೀರು ಬಂತು. +‘ಅಯ್ಯೋ ಶಿವನೇ. ಯಾ ಮಾತ್ನಿಂದಾ ನನ್ನ ಗಂಡನ್ನ ಕಳಕೊಂಡೆನೋ ಆ ಮಾತ್ನ ಇವತ್ತು ಮಗ ಮಮ್ಮಕ್ಕಳು ಎಲ್ಲಾರ ಬಾಯಾಗ ಕೇಳ೦ಗಾತಲ್ಲಾ!’ ಅಂತ ಕಣ್ಣೊರಸಿಕೊಂಡಳು. +‘ಯಾಕಬೇ ಯಮ್ಮ, ಅಳಾಕ ಹತ್ತೀಯೇನು?’ +‘ಇಲ್ಲಪ್ಪ. ಕಣ್ಣು ಯಾಕೋ ಒತ್ತಿತ್ತು.’ ಅಂತ ಮಾತು ಮರೆಸಿದಳು. +ಆದರೂ ಮಮ್ಮಕ್ಕಳಾಡಿದ ಮಾತು ಕೇಳಿ ಬಸವ್ವ ತಲಿ ತಲಿ ಜಜ್ಜಿಕೊಂಡು ‘ಹಾ೦ಗೆಲ್ಲ ಮಾತಾಡಬಾರದು.’ +‘ಮತ್ತ ಅಪ್ಪ ಯಾಕ ಮಾತಾಡತಾನ?’ +‘ಅಂವಗೂ ಹೇಳ್ತೀನಿ. ಇನ್ನ್ ಮ್ಯಾಲೆ ಯಾರೂ ಹಾ೦ಗ ಮಾತಾಡಬ್ಯಾಡ್ರಿ.’ +‘ಯಮ್ಮ, ಹೊಟ್ಟಿ ಹಶೀತೈತಿಬೇ’ +‘ತಡೀರೆಪ್ಪ. ನಿಮ್ಮಪ್ಪಂದು ಉಣ್ಣೋದು ಮುಗದು, ಆತ ಗಳೇವು ಅಟ್ಟಿಕೊಂಡು ಹೊಲಕ್ಕ ಹ್ವಾದ ಅಂದ್ರ ನಾವು ಉಣ್ಣಾಕ ಹೋಗೋಣ೦ತ.’ ಬಸವ್ವ ಮಮ್ಮಕ್ಕಳನ್ನು ರಮಿಸಿದಳು. +ಆಟೊತ್ತಿಗೆ ಈಶಪ್ಪ ಉಂಡು ಕುಡ, ಮಿಣಿ ಹೆಗಲ ಮೇಲೆ ಇಟ್ಟುಕೊಂಡು ಹೊರಗೆ ಬಂದ. ದಂದಕ್ಕಿಯೊಳಗಿನ ಎತ್ತು ಬಿಟ್ಟುಕೊಂಡು ಬಂದು, ನಗ ಹಾಕಿ, ಕಳೇಬಾರು ಕಟ್ಟಿ, ನಗದ ಮೇಲೆ ಕುಂಟಿ ಇಟ್ಟ. ಮಲ್ಲವ್ವ ತತ್ರಾಣಿಯೊಳಗೆ ನೀರು ತುಂಬಿಕೊಂಡು ಬಂದು ಗಂಡನಿಗೆ ಕೊಟ್ಟು, ಒಂದು ಸಣ್ಣ ನಗೆ ನಕ್ಕಳು. ಅದನ್ನು ನೋಡಿ ಈಶಪ್ಪ ತಾನೂ ನಕ್ಕು ಖುಶಿಯಿಂದ ಹೊಲಕ್ಕೆ ಹೊರಟ. +ಮಲ್ಲವ್ವ ಒಳಗೆ ಬಂದು ‘ಯತ್ತೀ, ಮಕ್ಕಳ್ನ ಕರಕೊಂಡು ಬಾರಬೇ. ಬಿಸೀ ರೊಟ್ಟೀ ಮಾಡೀನಿ. ಉಣ್ಣಬರ್ರಿ’ ಅಂದಳು. ಸೊಸೆಯ ಮಾತು ಕೇಳಿ ಬಸವ್ವ +‘ಬ೦ದೆನವ್ವ.’ ಅಂತ ಕೈಕಾಲು ಮಕ ತೊಳಕೊಂಡು ಒಳಗೆ ಬಂದಳು. +‘ಬಿಸೀ ರೊಟ್ಟೀ ಮಾಡಿಕೊಡೋ ಸೊಸೀ ಸಿಕ್ಕಳಲ್ಲ’ ಅಂತ ಸಂತೋಷಪಟ್ಟಳು. +ಹಾಗೆಯೇ ಆಕೆಯ ನೆನಪು ಹಿಂದಕ್ಕೆ ಹೋಯಿತು. +ಮದುವೆಯಾಗಿ ಹತ್ತು ವರ್ಷ ಆದರೂ ಬಸವ್ವನಿಗೆ ಮಕ್ಕಳಾಗಲಿಲ್ಲ. ಅತ್ತೆ ಗದಿಗೆವ್ವ ಮತ್ತು ಮಾವ ರುದ್ರಪ್ಪ ಅವರಿಗೆ ಚಿಂತೆ ಹತ್ತಿತು. +‘ಬಸವ್ವ, ಮನೆತನಕ್ಕ ಒಂದು ಕೂಸು ಬೇಕಲ್ಲ. ನಿನ್ ಗಂಡಗ ಇನ್ನೊ೦ದು ಮದಿವೀ ಮಾಡಾಣೇನು?’ ಎಂದ ಗದಿಗೆವ್ವನ ಮಾತು ಕೇಳಿ ಬಸವ್ವನಿಗೆ ಕೊರಗು ಶುರುವಾಯಿತು. +ಆದರೆ ಬಸವ್ವನ ಗ೦ಡ ಕಪ್ಪತ್ತಪ್ಪ ಅದರ ಬಗ್ಗೆ ಚಿಂತಿ ಮಾಡ್ತಿದ್ದಿಲ್ಲ. +‘ನಮಗ ಮಕ್ಕಳಾಗಲಿಲ್ಲ’ ಅಂತ ಬಸವ್ವ ಕೇಳಿದರ +‘ನನಗ ನೀನು, ನಿನಗ ನಾನು. ಮಕ್ಕಳ್ಯಾಕ ಬೇಕು.’ ಅಂತ ನಗಿಚ್ಯಾಟಿಗಿ ಮಾಡ್ತಿದ್ದ. +ಬಸವ್ವ ಮಾತ್ರ ಅಮಾವಾಸ್ಯೆಗೊಮ್ಮೆ ಕಪ್ಪತ್ತ ಗುಡ್ಡಕ್ಕೆ ಹೋಗಿ ಕಪ್ಪತ್ತ ಮಲ್ಲಣ್ಣಗ ಕೈ ಮುಗದು ‘ನನಗ ಒಂದಾರ ಮಗನ್ನ ಕೊಡು.’ ಅಂತ ಬೇಡಿಕೊಳ್ಳುತ್ತಿದ್ದಳು. ಜೋಳ ಬೀಸುವಾಗ ಕೂಡ ಮನೆ ದೇವರಾದ ಕಪ್ಪತ್ತ ಮಲ್ಲಣ್ಣನನ್ನು ನೆನೆಯುತ್ತಿದ್ದಳು. +ಕಪ್ಪತ್ತಕ್ಕ ಹೋಗವರ| ಮಕ್ಕಳ ಬೇಡುವರ| +ಕಪ್ಪತ್ತ ಮಲ್ಲಣ್ಣ| ಕಾರಿಯ ಸಿದ್ದಣ್ಣ | +ಇಪ್ಪತ್ತ ಮಕ್ಕಳ ಕರುಣೀಸ| ನಿನ್ನ ಹೆಸರ | +ಇಪ್ಪತ್ತ ಸಾರೀ | ನೆನದೇನ| +ಎಂದು ಹಾಡುತ್ತಿದ್ದಳು. +‘ನನ್ನ ಗಂಡ ಇನ್ನೊಂದು ಮದಿವಿ ಮಾಡಿಕೊಂಡ್ರ ಆಕಿ ನನ್ನ ಗಂಡನ ಹಂತ್ಯಾಕ ಹೋಗಾದಿರ್ಲಿ ಅವನ್ ಕೂಡ ಮಾತಾಡಾಕರ ಬಿಡತಾಳೋ ಇಲ್ಲೋ’ ಅಂತ ಚಿಂತೆ ಮಾಡುತ್ತಿದ್ದಳು. +ಕಪ್ಪತ್ತಪ್ಪ ಬಾರೀ ಚೆಲುವ. ಎತ್ತರನ್ನ ಆಳು; ನವಣೀ ಒಣಗಹಾಕಬಹುದು ಅಂತಾ ಬೆನ್ನು, ಕೂದಲು ತುಂಬಿದ ಹರವಾದ ಎದೀ, ದುಂಡನ್ನ ಮುಖದಾಗ ಕಲ್ಲಿಮೀಸೆ; ಸಾಲಾಗಿ ಹೊಂದಿಸಿದ ಹಲ್ಲು; ಬಾಯಿ ತುಂಬಾ ಕುಲುಕುಲು ನಗಿ. ತಲೀ ಮ್ಯಾಲೆ ಗತ್ತೀಲೆ ಸುತ್ತಿದ ದೊಡ್ಡ ರುಮಾಲು. ನೀಲೀ ಬಣ್ಣದ ತುಂಬು ತೋಳಿನ ಅಂಗಿ, ಅದಕ್ಕ ಕಳಾವಾರ, ಕುಂಬಳದ ಗುಂಡಿ. ಅದಕ್ಕೊಂದು ಬೆಳ್ಳೀ ಚೇನು. ಬಲಗೈ ಬೆರಳಿನಾಗ ಬಿಳೆ ಹರಳಿನ ಉಂಗುರ. ಬೆಳ್ಳನ್ನ ವಲ್ಲಿ ಉಟ್ಟುಕೊಂಡು ಅದರ ಚುಂಗು ಕೈಯಾಗ ಹಿಡಕೊಂಡು ಕಿನ್ನಾಳದ ಜೋಡು ಮೆಟ್ಟಿಕೊಂಡು ಒಳ್ಳೇ ಠೀವೀಲೆ ಕಪ್ಪತ್ತಪ್ಪ ಓಣ್ಯಾಗ ಹೊಂಟರ ಎಲ್ಲಾರೂ ಬಾಯಿ ತಕ್ಕೊಂಡು ನೋಡ್ತಿದ್ದರು. ಹೆಣ್ಣುಮಕ್ಕಳ ಮೈ ಬಿಸಿಯಾಗಿ ಬಿಗಿದಂಗ ಆಗೋದು. ಹಿಂತಾ ಚೆಲುವ ಚೆನ್ನಿಗರಾಯನ್ನ ಬ್ಯಾರೇದಕೀಗೆ ಬಿಟ್ಟುಕೊಡಾಕ ಬಸವ್ವನ ಮನಸ್ಸು ಹ್ಯಾಂಗ ಒಪ್ಪೀತು! +ಕಪ್ಪತ್ತಪ್ಪ ಕಷ್ಟ ಪಟ್ಟು ದುಡಿಯಾಂವ ಅಲ್ಲ. ತನ್ನ ಕುದರಿ ಹತ್ತಿಕೊಂಡು ಡಂಬಳದ ಸುತ್ತಲ ಊರಿಗೆ ಹೋಗಿ ಗಾ೦ವಠಿ ಔಷದ ಕೊಡ್ತಿದ್ದ. ಕಪ್ಪತ್ತ ಗುಡ್ಡದಾಗಿರೋ ಗಿಡಮೂಲಿಕೀ ಔಸದೀಯೆಲ್ಲ ತಿಳಕೊಂಡಿದ್ದ. ‘ಅವನ ಕೈಗುಣ ಒಳ್ಳೇದೈತಿ’ ಅಂತ ಎಲ್ಲಾರೂ ಅವನ್ನ ನಂಬತಿದ್ರು. ಮಾತು ಮಾತಿಗೆ ನಕ್ಕು ನಗಿಸಿ ಎಲ್ಲಾರ್ನೂ ಅರಾಂ ಮಾಡ್ತಿದ್ದ. +ಒಂದಿನ ವಡ್ಡಟ್ಟಿಗೆ ಹೋದಾಗ ಸಾವಂತ್ರೆವ್ವ ಬಂದು ‘ಯಣ್ಣ, ನನ್ ಗಂಡಗ ಇಲಿ ಕಡದೈತಿ. ಔಸದೀ ಕೊಡು’ ಅಂದಳು. +‘ಇಲಿ ಕಡದೈತೋ ಏನ್ ನೀನ ಕಡದೀಬೇ?’ ಅಂದದಕ ನಾಚಿಕೊಂತ +‘ಹೊಗ ಯಣ್ಣ, ನೀನೂ ಬಾರೀ ಆಡಿಸ್ಯಾಡಾಂವ. ಏನಾರ ಔಸದಿ ಕೊಡು ಅಂದ್ರ…’ ಅಂದಳು. +‘ಹಾ೦ಗಾರ ಈ ನಂಜಿನ್ ಬೇರು, ಇಸರೀ ಬೇರು ತೊಗೋ. ಎಲ್ಡನ್ನೂ ತೇದು ಹಚ್ಚು. ಹೊಟ್ಟ್ಯಾಗೂ ಕೊಡು. ಹಾಲು ಮಸರು ಕೊಡಬ್ಯಾಡ. ಗೋದೀರೊಟ್ಟೀ ಸುಟ್ಟುಕೊಡು.’ +ಆಮೇಲೆ ಸಂಕವ್ವನೂ ಬಂದು ‘ಯಣ್ಣ, ನನಗ ಮೂರು ದಿವ್ಸದಿಂದ ಜರ ಬರ್ತಾವು’ ಅಂದಳು. +‘ಹೌದಾ, ಎಲಬಸ೦ದಕದ ಬೇರ್ ಕೊಡ್ತೀನಿ. ತೇದು ಹೊಟ್ಟ್ಯಾಗ ತೊಗೋ. ಗೋಯಿನ್ ಸೊಪ್ನ ಬಿಸಿಮಾಡಿ ತೆಲೀಗೆ ಹಾಕಿ ಕಟ್ಟಿಕೋ. ಬೆವರ್ ಬ೦ದು ಜರಾ ಇಳೀತಾವು’ ಅಂದ. +ಹೀ೦ಗ ಎಲ್ಲಾರಿಗೂ ಕಪ್ಪತ್ತಪ್ಪ ಬೇಕಾದವನಾಗಿದ್ದ. +ಅವನ ಅಪ್ಪ ರುದ್ರಪ್ಪ ಮತ್ತು ಅವ್ವ ಗದಿಗೆವ್ವಗ ಕಪ್ಪತ್ತಪ್ಪನ ಮ್ಯಾಲೆ ಅದೆಷ್ಟು ಪ್ರೀತಿನೋ! ಅವ೦ಗ ಒಂದು ಕೆಲಸ ಹೇಳ್ತಿದ್ದಿಲ್ಲ. ‘ಯಪ್ಪ ಉಣ್‌ಬಾರೋ’ ಅಂತ ಪ್ರೀತೀಲೆ ಕರದು ಮಗನ ಕೂಡ ಉಣ್ಣುತ್ತಿದ್ದರು. +ಕಪ್ಪತ್ತಪ್ಪ ನಿರಾಳ ಸ್ವಬಾವದವ. ಮನೀ ಕಡೆ ಆಗಲಿ, ತನಗ ಮಕ್ಕಳಿಲ್ಲ ಅಂತ ಆಗಲಿ ಒಂದಿನ ಚಿಂತಿ ಮಾಡ್ತಿದ್ದಿಲ್ಲ. +‘ಮತ್ತ ನಮಗ ಮಕ್ಕಳಾಗಲಿಲ್ಲ ಅಂತ ಅತ್ತಿ ಮಾಂವ ನಿನಗ ಇನ್ನೊಂದು ಮದಿವೀ ಮಾಡಿ ನನಗ ಸವತೀ ತರತೀನಿ ಅಂತಾರ! ನೀಯೇನಂತೀದಿ’ ಅಂತ ಬಸವ್ವ ಕೇಳಿದ್ದಕ್ಕ +‘ಅಯ್ಯ, ಬಿಡ ನಿನ. ಅವರು ಹಾ೦ಗಂದ್ರ ನೀ ಪದ ಹೇಳಿಬಿಡು’ +‘ಏನಂತ ಪದ ಹೇಳಬೇಕು?’ +‘ನನ ಮ್ಯಾಲೆ ಸವತೀ ತರತೀನಂದ | ಮನ್ಯಾಗಿಡತೀನ೦ದ. +ತಂದಾರ ತರಲೆವ್ವ | ತಂಗ್ಯಾಗಿರಲೆವ್ವ| +ನಾ ಬಿಟ್ಟ ಸೀರಿ ಉಡಲೆವ್ವ | +ಮನ್ಯಾಗಿರಲೆವ್ವ | +ಅಂತ ಪದ ಹೇಳಿಬಿಡು’ ಅಂದ. +‘ನಿನಗ ಎಲ್ಲಾನೂ ಬರೇ ನಗಿಚಾಟಿಗೀನ. ನನಗ ಪ್ರಾಣ ಸಂಕಟ. ನಾಳೆ ಸವತೀ ತಂದರ, ನೀಯೇನು ಹೊಸ ಹೇಣ್ತೀ ಕೂಡ ಸುಕವಾಗೇ ಇರ್ತೀದಿ.’ ಅಂತ ಬಸವ್ವ ಅಂದದ್ದಕ್ಕ +‘ನಾಯೇನ್ ಮಾಡ್ಲಿ ಹೇಳು. ನನ್ ಕೈಯಾಗೇನೈತಿ? ಕಪ್ಪತ್ತ ಮಲ್ಲಣ್ಣ ಕಣ್ ಬಿಟ್ಟಾಗ ತಾನ ಆಕ್ಕಾವಳು. ನೀಯೇನ್ ಚಿಂತೀ ಮಾಡಬ್ಯಾಡ. ಮದಿವಿ ಆಗಾ೦ವ ನಾನು. ನನ್ ಕೇಳ್ದ ಬ್ಯಾರೆ ಮದಿವಿ ಮಾಡಾಂಗಿಲ್ಲ!’ ಅಂತ ಕಪ್ಪತ್ತಪ್ಪ ಬಸವ್ವನ್ನ ಸಮಾಧಾನ ಮಾಡಿದ. +ಒಂದು ದಿನ ಅಪ್ಪ ಅವ್ವ ಈ ಮಾತು ಕೇಳಿಯೇ ಬಿಟ್ಟರು. ಅದಕ್ಕ ಕಪ್ಪತ್ತಪ್ಪ +‘ನಮಗ ಮಕ್ಕಳಿಲ್ದಿದ್ರೂ ಆಟ ಹೋತು. ನನಗ ಇನ್ನೊಂದ್ ಮದಿವಿ ಬ್ಯಾಡ. ನಾವಿಬ್ರೂ ಸುಕವಾಗೇ ಅದೀವಿ’ ಅಂದ. +ಅವನು ಹಾಗಂದರೂ ರುದ್ರಪ್ಪ ಗದಿಗೆವ್ವರು ಮಾತ್ರ ದಿನಾ ಬಸವ್ವನ್ನ ಕೊರೆಯುತ್ತಿದ್ದರು. +ಈ ಮಾತು ಕೇಳಿ ಬ್ಯಾಸರಾದಾಗೆಲ್ಲ ಬಸವ್ವ ಗಂಡನ ಎದೀಮ್ಯಾಲೆ ತಲೆಯಿಟ್ಟು ಕೂದಲೊಳಗ ಕೈಯಾಡಿಸಿಕೊಂತ ತನ್ನೆಲ್ಲ ನೋವು ಕಷ್ಟ ಮರೆಯುತ್ತಿದ್ದಳು. ಇಂಥ ಸುಖವನ್ನು ಇನ್ನೊಬ್ಬಾಕಿಗೆ ಬಿಟ್ಟು ಕೊಡಲು ಆಕೆಗೆ ಮನಸ್ಸಿರಲಿಲ್ಲ. +ಕಪ್ಪತ್ತಪ್ಪ ಒಂದಿನ ಮಧ್ಯಾಹ್ನವೇ ಮನೆಗೆ ಬಂದ. ಅವನ ಅವ್ವ ಗದಿಗೆವ್ವ ಜೋಳ ಹಸಮಾಡಿಕೊಂತ ಕುಳಿತಿದ್ದಳು. ಬಸವ್ವ ನವಣಿ ಕುಟ್ಟುತ್ತಿದ್ದಳು. ಅಂವ ಬಂದದ್ದು ನೋಡಿ ಕೈಯಾಗಿನ ಕೆಲಸ ಅಲ್ಲೇ ಬಿಟ್ಟು ಅವ್ವ +‘ಯಾಕಪ್ಪ, ಈಟೊತ್ತಿಗೇ ಬಂದು ಬಿಟ್ಟೀ?’ ಅಂದಳು. ಹೆಂಡತಿ ಬಸವ್ವ ಅವನ ಬಾಡಿದ ಮುಖ ನೋಡಿ ನವಣಿ ಕುಟ್ಟೋದನ್ನ ಬಿಟ್ಟು +‘ದಿನಾ ಚಂಜೀಗಂಟಾ ಹೊರಗ ಇರಾಂವ. ಒಂದಿನಾ ಮಕ ಬಾಡ್ತಿದ್ದಿಲ್ಲ. ನಕ್ಕೊಂತ ಮನೀಗೆ ಬರಾ೦ವ! ಇವತ್ ಏನಾಗೇತಿ? ಸಪ್ಪಗ ಅದೀಯಲ್ಲ!’ ಅಂತ ಕೇಳಿದಳು. ಕಪ್ಪತ್ತಪ್ಪ +‘ಯಾಕೋ ತೆಲೀ ನೋಯಾಕ ಹತ್ತಿತ್ತು. ಮನೀಗ್ ಬಂದ್ ಬಿಟ್ಟೆ.’ ತನ್ನ ಮನಸ್ಸಿನಲ್ಲಿ ಎದ್ದ ಕೋಲಾಹಲವನ್ನು ಮುಚ್ಚಿಟ್ಟು ಹೇಳಿದ. +‘ತೆಲಿನೋವಂತೀದಿ. ಓಟು ಕಸಾಯಾನರ ಕಾಸಿ ಕೊಡ್ತೀನಿ’ ಅಂತ ಬಸವ್ವ ಸುಂಟಿ, ಬೆಲ್ಲ, ಹವೀಜ ಹಾಕಿ ಕಷಾಯ ಮಾಡಿ ಕೊಟ್ಟಳು. +ಕಪ್ಪತ್ತಪ್ಪಗ ಕುಂತರೂ ನಿಂತರೂ ಅದೇ ಚಿಂತಿ ಹತ್ತಿ ಮನಸ್ಸಿನ್ಯಾಗ ಸಮಾಧಾನ ಇಲ್ಲದ೦ಗ ಆಗಿತ್ತು. ‘ಎಂತಾ ಹ್ವಾರೇವು ಮಾಡಿಬಿಟ್ಟೆ ನಾನು! ಒಂದು ಕ್ಷಣ ಮೈಮರತದ್ದಕ್ಕ ಒಂದು ಹುಡಿಗೀ ಬಾಳೇವು ಹಾಳಾತಲ್ಲ!’ ಅಂತ ಹಳಹಳಿಸುತ್ತಿದ್ದ. +‘ಯಕಪ್ಪ, ಎಲ್ಡು ದಿನದಿಂದ ಹೊಟ್ಟಿತುಂಬ ಉಣವಲ್ಲಿ, ಹೊರಗೂ ಹೋಗವಲ್ಲಿ. ಎನಾರೆ ಆಗೇತಿ ಹೇಳು’ ಅಂತ ಪೀಡಿಸಿ ಗದಿಗೆವ್ವ ಕೇಳಿದಳು. +‘ಏನ್ ಹೇಳ್ಲಿ? ನಾ ಯಾವತ್ತೂ ತೆಲಿ ತಗ್ಗಸೋವಂತ ಹ್ವಾರೇವು ಮಾಡಿದಾಂವಲ್ಲ. ಈಗ ನನ್ ಕಡಿಂದ ಅಗಬಾರದ್ದೊಂದು ತೆಪ್ಪು ಆಗಿಹೋಗೇತಿ. ಅದನ್ನ ಕೇಳಿ ನೀವೇನಂತೀರೋ ಅಂತ ಹೆದರಿಕಿ ಆಕ್ಕೈತಿ.’ +‘ಹೀಗ ಮೋಗಂ ಮಾತಾಡಬ್ಯಾಡ. ಏನಾತಂತ ಬಿಡಿಸಿ ಹೇಳು.’ ಅಂತ ಅವ್ವ ಮತ್ತ ಪೀಡಿಸಿ ಕೇಳಿದಳು. ಕಪ್ಪತ್ತಪ್ಪ ನಡೆದದ್ದನ್ನೆಲ್ಲ ಹೇಳಲೇಬೇಕಾಯಿತು. +‘ಡೋಣ್ಯಾಗ ಪರಸಪ್ಪ ಅವನ್ ಮಗಳು ಪಾರಿ ಅದಾರ ಅಂತ ಹೇಳ್ತಿದ್ನೆಲ್ಲ. ಅವ೦ಗ ದಮ್ಮಿತ್ತು. ಔಸದಿ ಕೊಡ್ತಿದ್ದೆ. ಓಟು ಕಮ್ಮಿನೂ ಆಗಿತ್ತು. ಒಂದಿನ ಚಂಜೀ ಹೊತ್ತಿಗೆ ಹೆಚ್ಚಾಗಿ ಬಿಟ್ಟಿತು. ಕೆಮ್ಮಿದಾಗೆಲ್ಲ ರಕ್ತಾನ ಬೀಳ್ತಿತ್ತು. ಪಾರಿ ಬೋರಾಡಿ ಅಳಾಕ ಹತ್ತಿದ್ಲು. ಔಸದಿ ಕೊಡಾಕ೦ತ ನಾ ಅಲ್ಲೇ ಉಳಕೊಂಡೆ. ಏನ್ ಮಾಡೋದು ನಡರಾತ್ರೀ ಪರಸಪ್ಪ ಸತ್ತ ಹ್ವಾದ. ‘ನಾ ಪರದೇಶಿ ಆದೆ’ ಅಂತ ಗೋಳಾಡೋ ಪಾರಿನ್ನ ನೋಡಿ ನನ್ ಕಳ್ಳು ಕಿತ್ತುಬ೦ದಾಂಗಾತು. ಪಾಪ ಅನಿಸಿ ಸಮಾದಾನ ಮಾಡಾಕ ಮತ್ತ ಮತ್ತ ನಾ ಅಕೀ ಮನೀಗೆ ಹೋಕ್ಕಿದ್ದೆ. +‘ಒಮ್ಮೆ ಹೋದಾಗ ಮೂರೂಚಂಜಿ ಆಗಿತ್ತು. ಗುಡುಗು, ಸಿಡ್ಲು, ಕೋಲ್ಮಿಂಚು ಸುರುವಾಗಿ ಮಳೀನೂ ವಿಪರೀತ ಹೊಡಿಯಾಕ ಹತ್ತಿತ್ತು. ಏಟೊತ್ತಾದ್ರೂ ಮಳೀ ನಿಲ್ಲಿಲ್ಲ. ಹೊಲದಿಂದ ತೊಯ್ಸಿಕೊಂಡು ಬಂದ ಪಾರಿ ತಂಡಿ ಹತ್ತಿ ನಡಗತಿದ್ಲು. ನಾ ಔಸದಿಯೇನೋ ಕೊಟ್ಟೆ. ನಡಕ ನಿಲ್ಲಲಿಲ್ಲ. ಎಲ್ಡು ಗೊಂಗಡಿ ಹೊಚ್ಚಿ ಗಟ್ಟ್ಯಾಗಿ ಹಿಡಕೊಂಡು ಕುಂತೆ. ಹೀಗಾಗಿ ನಾ ಅಲ್ಲೇ ಉಳಕೊ೦ಡೆ. ಅವತ್ತ ನಡೀಬಾರದ್ದು ನಡದು ಹೋತು. ಈಗ ಪಾರಿಗೆ ಮೂರು ತಿಂಗಳಾಗೇತಿ.’ ಅಂತ ಕಪ್ಪತ್ತಪ್ಪ ಅಳುಕಿನಿಂದಲೇ ಹೇಳಿದ. +‘ನನಗಿನ್ನೂ ಮದಿವಿ ಆಗಿಲ್ಲ, ಈ ಗತಿ ಬಂತು. ಎಲ್ಲಾರೂ ನನಗ ಸೂಳಿ ಅ೦ದರ ಏನ್ ಮಾಡ್ಲಿ? ಅಂತಾ ಮಾತು ಕೇಳಾಕ ನಾ ಒಲ್ಲೆ. ಬಾವೀ ಬೀಳ್ತೀನಿ, ಜೀವ ಕಳಕೊಂತೀನಿ. ಇಲ್ಲಾಂದ್ರ ನನಗ ಕೆಟ್ಟ ಹೆಸರು ಬರದಾಂಗ ನೀವು ನೋಡಿಕೊಳ್ರಿ. ನನ್ನಿಂದಾಗಿ ನಿಮಗೂ ಕೆಟ್ಟ ಹೆಸರು ಬರಬಾರದು’ ಅಂತಾ ಗೋಳ್ಯಾಡಿ ಅಳತಾಳ. ಏನ್ ಮಾಡಬೇಕಂತ ತಿಳೀದಂಗ ಆಗೇತಿ. ಊರಾಗ ನಾಕ್ ಮ೦ದಿಗೆ ಗೊತ್ತಾದ್ರ ಮಕ ಎತ್ತಿಕೊಂಡ್ ಅಡ್ಡಾಡದಂಗ ಆಕ್ಕೈತಿ.’ ಅಂತ ಕಪ್ಪತ್ತಪ್ಪ ಗೋಳಾಡಿದ. +ಈ ಮಾತು ಕೇಳಿ ಮನ್ಯಾಗ ಎಲ್ಲರೂ ಚಿಂತಿ ಮಾಡಾಕ ಹತ್ತಿದರು. +‘ಅದಕ್ಕ್ಯಾಕೀಟು ಗೋಳ್ಯಾಡ್ತೀ? ನನ್ನ ಹ್ಯಾ೦ಗ ನೋಡಿಕೊಂತೀಯೋ ಹಾ೦ಗ ಆಕಿನ್ನೂ ನೊಡಿಕೋ. ಶಿವ ನನಗ ಮಕ್ಕಳ್ನ ಕೊಡ್ಲಿಲ್ಲ. ಆಕೀಗರ ಕೊಟ್ಟಾನಲ್ಲ. ಅದ ಸಂತೋಸ. ಆ ಕೂಸಿನ್ನ ತಂದು ನಾವ ಸಾಕಿಕೊಂಡರಾತು. ಆಕೀಗೆ ಜೀವಾ ಕಳಕೋಬ್ಯಾಡ ಅಂತ ಹೇಳು. ನೀನೂ ದೈರ್ಯವಾಗಿರು.’ ಅಂದ ಬಸವ್ವನ ಮಾತು ಕೇಳಿ ಕಪ್ಪತ್ತಪ್ಪಗ ಆಶ್ಚರ್ಯವಾಯಿತು. +‘ಅಲ್ಲಾ, ನನಗ ಇನ್ನೊಂದು ಮದಿವಿ ಮಾಡ್ತಾರ ಅಂದದಕ ಅತಗೊಂತ ಕುಂತಾಕಿ ನೀನು! ಈಗ ಹೀಂಗತೀಯಲ್ಲ!’ +‘ಮದಿವಿ ಮಾಡಿಕೊಂಡ್ರ ಸವತೀ ಮತ್ಸರ ಹುಟ್ಟತೈತಿ. ಈಗ ಒಂದ್ ಹೆಣ್ಣಿನ್ ಜೀವದ ಮಾತೈತಿ.’ ಅಂದ ಬಸವ್ವನ ಮಾತು ಕೇಳಿ ಗದಿಗೆವ್ವ +‘ಎಂತಾ ಹೆಣಮಗಳವಾ ನೀನು! ಏಟೊಂದು ದೊಡ್ ಮನಸು ನಿ೦ದು’ ಅಂದಳು. +‘ನಂದೇನು ದೊಡ್ ಮನಸ್ ಬಂತ್‌ಬೇ ಯತ್ತಿ. ಪಾರವ್ವ೦ದ ದೊಡ್ ಮನಸ್ಸು. ತನಗ ಹೀ೦ಗಾತು ಅಂತ ತಾಳೀ ಕಟ್ಟಿ ಮನೀಗೆ ಕರಕೊಂಡು ಹೋಗು ಅ೦ದಿಲ್ಲಲ್ಲ. ಕೆಟ್ಟ ಹೆಸರು ಬರದ್ಹಾಂಗ ನೋಡಿಕೊಳ್ರಿ ಅಂತ ಕೇಳಿಕೊಂಡಾಳ ಆಟ.’ ಅಂದ ಬಸವ್ವನ ಮಾತು ಕೇಳಿ ಕಪ್ಪತ್ತಪ್ಪನಿಗೆ ಧೈರ್ಯ ಬಂತು. +‘ಹಂಗಾರ ಪಾರಿನ್ನ ಮಾತಾಡಿಸಿ ಓಟು ದೈರ್ಯ ಹೇಳಿ ಬರ್ತೀನಿ’ ಅಂತ ಡೋಣಿಗೆ ಬಂದ. +ಬಂದು ನೋಡಿದರ ಪಾರವ್ವನ ಮನೀಗೆ ಕೀಲಿ ಹಾಕಿತ್ತು. ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದ. ಆಕೆ ಎಲ್ಲಿ ಹೋದಳೆಂದು ಯಾರಿಗೂ ಗೊತ್ತಿರಲಿಲ್ಲ. ಮುಂದೇನು ಮಾಡಬೇಕೆಂಬುದು ತಿಳಿಯದೇ ಕಪ್ಪತ್ತಪ್ಪ ಮನೆಗೆ ಬಂದು ‘ಪಾರಿ ಮನೀ ಕೀಲಿ ಹಾಕಿ ಹೇಳದ ಕೇಳದ ಊರು ಬಿಟ್ಟ ಹೋಗ್ಯಾಳಂತ’ ಹೇಳಿದ. +ಇದನ್ನು ಕೇಳಿ ಬಸವ್ವನಿಗೂ ಗದಿಗೆವ್ವನಿಗೂ ದುಃಖವಾಯಿತು. +‘ಅಯ್ಯೋ ಶಿವನೇ, ಪಾರವ್ವ ಜೀವಾನ ಕಳಕೊಂಡಾಳೋ? ಏನು ಸಮ್ಮ೦ದಿಕರ ಮನೀಗ್ ಹೋಗ್ಯಾಳೋ? ಎಲ್ಲಿ ಇದ್ದಿದ್ದಿದ್ದಾಳು’ ಅಂತ ಚಿಂತೆ ಮಾಡುತ್ತಿದ್ದರು. +ಕಪ್ಪತ್ತಪ್ಪ ತಾನು ಹೋಗುತ್ತಿದ್ದ ಊರಿನಲ್ಲೆಲ್ಲ ಹುಡುಕಿದ. ಪಾರವ್ವನ ಸುಳಿವು ಎಲ್ಲೂ ಸಿಗಲಿಲ್ಲ. +ಪಾರವ್ವ ಬೂದ್ಯಾಳದಾಗಿರೋ ತನ್ನ ಚಿಗವ್ವನ ಮನೆಗೆ ಹೋಗಿ ಆಕೆಯ ಮುಂದೆ ತನ್ನ ಕಷ್ಟಾನೆಲ್ಲ ಹೇಳಿಕೊಂಡಳು. +‘ನಮ್ಮಪ್ಪಗ ಔಸದಿ ಕೊಡಾಕಂತ ನಮ್ಮನೀಗ್ ಒಬ್ರು ಬರ್ತಿದ್ರು. ಅವರು ಬಾಳ ಒಳ್ಳೆಯವ್ರು. ಅಪ್ಪ ಸತ್ತ ಮ್ಯಾಕ ಒಂದಿನ ನನ್ ಮಾತಾಡಸಾಕಂತ ಬಂದ್ರು. ಹತ್ತಿದ ಮಳೀ ರಾತ್ರಿಯಾದರೂ ಬಿಡಲೇ ಇಲ್ಲ. ಅವತ್ತ ನಡೀಬಾರದ್ದು ನಡದು ಹೋತು. ನಾ ಅಲ್ಲೇ ಇದ್ದರ ನನ್ ಮಾನ ಹೋಕ್ಕೈತಿ ಅಲ್ದ ಅವರ್ ಮಾನಾನೂ ಹೋಕ್ಕೈತಿ ಅಂತ ನಾ ಇಲ್ಲಿಗೆ ಬಂದೆ. ಮುಂದೇನು ಮಾಡ್ಬೇಕಂತ ತಿಳೀದಂಗಾಗೇತಿ’ ಅಂತ ಗೋಳಾಡಿ ಅತ್ತಳು. ಅದನ್ನು ನೋಡಲಾರದೆ ಆಕೆಯ ಚಿಗವ್ವನ ಕಣ್ಣಲ್ಲೂ ನೀರು ಬಂತು. +‘ಆದದ್ದಾಗಿ ಹೋಗೇತಿ. ನೀ ಚಿಂತೀ ಮಾಡಬ್ಯಾಡ. ಇಲ್ಲಿಗಂತೂ ಬಂದ್ಯಲ್ಲ. ಶಿವ ಕೊಟ್ಟದ್ದನ್ನ ಹಡದು ಹೊರೀ ಇಳಿಸಿಕೋ. ನಾಯೆಲ್ಲ ನೋಡಿಕೊಂತೀನಿ. ನನಗರ ಯಾರದಾರ? ನೀನ ನನ್ ಮಗಳು ಅಂತ ತಿಳಕೊಂತೀನಿ. ನೀ ಅಳಬ್ಯಾಡ.’ ಅಂದ ಚಿಗವ್ವನ ಮಾತು ಕೇಳಿ ಪಾರವ್ವಗ ಸಮಾದಾನಾತು. +ಮುಂದೆ ಕೆಲವು ದಿನಗಳ ನಂತರ ಪಾರವ್ವಗ ಗಂಡು ಕೂಸು ಹುಟ್ಟಿತು. ಆದರೆ ಬಾಣಂತಿ ರೋಗ ಸೇರಿಕೊಂಡು ಮ್ಯಾಲೆ ಏಳರಾರದಷ್ಟು ನಿಶ್ಶಕ್ತಿ ಆಯಿತು. +‘ಚಿಗವ್ವ, ನಾಯೇನ್ ಬಾಳ ದಿನ ಬದಕಾಕಿಲ್ಲ ಅನಸ್ತೈತಿ. ಯಾರ್ನಾರ ಡಂಬಳಕ್ಕ ಕಳಿಸಿ ಅವರಿಗೆ ಸುದ್ದಿ ಕಳಿಸಿಬಿಡು’ ಅಂದಳು. +ಒಂದಿನ ಇದ್ದಕ್ಕಿದ್ದ೦ತೆ ಒಬ್ಬಾತ ಕಪ್ಪತ್ತಪ್ಪನ ಮನೀಗೆ ಬಂದ. +‘ಯಾರಪ್ಪ ನೀನು?’ ಎಂದು ಕೇಳಿದ್ದಕ್ಕೆ ಅವನು +‘ನಾ ಬೂದ್ಯಾಳದಿಂದ ಬಂದೀನಿ. ಪಾರವ್ವ ತನ್ ಚಿಗವ್ವನ ಮನ್ಯಾಗದಾಳ. ‘ಗಂಡು ಕೂಸು ಹುಟ್ಟೇತಿ. ಆದ್ರ ಜಡ್ಡು ಒಲವಾಗೇತಿ. ನೀವು ನೋಡಾಕ ಬರಬೇಕು ಅಂತ ಹೇಳಿ ಕಳಿಸ್ಯಾಳ’ ಅಂದ. +ಈ ಸುದ್ದಿ ಕೇಳಿ ಕಪ್ಪತ್ತಪ್ಪ ಮತ್ತು ಬಸವ್ವ ತರಾತುರಿಯಿಂದ ಬೂದ್ಯಾಳಕ್ಕೆ ಹೋದರು. ಅಲ್ಲಿ ಪಾರವ್ವನ ಸ್ಥಿತಿ ನೋಡಿ ಇಬ್ಬರ ಕಣ್ಣಾಗೂ ನೀರು ಬಂತು. +‘ನಿನ್ ನೋಡಬೇಕಂತ ಡೋಣಿಗೆ ಹೋಗಿದ್ದೆ. ನೀ ಹೇಳ್ದ ಕೇಳ್ದ ಊರು ಬಿಟ್ಟು ಹೋಗಿದ್ದಿ.’ ಅಂದ ಕಪ್ಪತ್ತಪ್ಪನ ಮಾತು ಕೇಳಿ ಪಾರವ್ವ +‘ನಾ ಅಲ್ಲೇ ಇದ್ದಿದ್ರ ನನ್ ಮಾನ ಹೋಕ್ಕಿತ್ತು. ನಿಮ್ಮ ಮಾನಾನೂ ಕಳದಾ೦ಗ ಆಕ್ಕಿತ್ತು ಅಂತ ಆ ಊರು ಬಿಟ್ಟೆ.’ +‘ಈಗ ನಿನ್ ನೋಡಾಕಂತ ನನ್ ಹೇಣ್ತೀನೂ ಬಂದಾಳ’ +ಪಾರವ್ವ ಬಸವ್ವನನ್ನು ನೋಡಿ ಆಕೆಯ ಕೈ ಹಿಡಕೊಂಡು ದೈನಾಸ ಪಟ್ಟು +‘ನಾಯೇನ್ ಇನ್ನ ಬದಕಾಂಗಿಲ್ಲ. ಈ ಕೂಸು ಇನ್‌ಮ್ಯಾಲೆ ನಿಂದ. ಇದನ್ನ ಜ್ವಾಕಿಲೆ ನೋಡಿಕೋ. ಅವರು ನನ್ ಪಾಲಿನ್ ದೇವರು. ನಾ ಸೂಳಿ ಅಲ್ಲ. ನನ್ ಮಗ ಸೂಳೀಮಗ ಅಲ್ಲ. ಹಂಗ್ಯಾರೂ ಅನದಂಗ ನೋಡಿಕೋ. ಇದೊಂದ್ ಮಾತ್ನ ನಡೆಸಿ ಕೊಡು’ ಅಂತ ಕೈಮುಗಿದು ಕೇಳಿಕೊಂಡು ಪಾರವ್ವ ಕೂಸನ್ನು ಬಸವ್ವನ ಉಡಿಯಾಗ ಹಾಕಿದಳು. +‘ನನಗ ಮಗನ್ನ ಕೊಟ್ಟು ಈ ಜನ್ಮದಾಗ ತೀರಸಾಕ ಆಗದಂತಾ ಉಪಕಾರಾ ಮಾಡೀದಿ. ಆಗಲೆವಾ, ನಿನ್ ಮಾತು ನಡಿಸಿ ಕೊಡ್ತೀನಿ’ ಅಂತ ಬಸವ್ವ ಮಾತು ಕೊಟ್ಟ ಕೂಡಲೇ ಪಾರವ್ವನ ಕಣ್ಣು ತೇಲಿ ಬಂದು ಕೊನೆಯುಸಿರೆಳೆದಳು. +ಬಸವ್ವ ಕೂಸನ್ನು ಕರಕೊಂಡು ಡಂಬಳಕ್ಕೆ ಬಂದಳು. ಅದಕ್ಕೆ ಹೊಯ್ ಹಾಲು ಹಾಕಿ ಜೋಪಾನ ಮಾಡಿದಳು. ಈಶಪ್ಪ ಅಂತ ಹೆಸರಿಟ್ಟು ಮುದ್ದಿನಿಂದ ಬೆಳೆಸಿದಳು. +ಮಗನ ನೆನಪಾದ ಕೂಡಲೇ ಕಪ್ಪತ್ತಪ್ಪ ಎಲ್ಲಿದ್ದರೂ ಓಡಿ ಬಂದುಬಿಡ್ತಿದ್ದ. ಅಜ್ಜ ಅಜ್ಜಿಯಂತೂ ಕೂಸಿನ್ನ ಕೆಳಗ ಬಿಡ್ತಿದ್ದಿಲ್ಲ. ಕೂಸು ಬಂದಾಗಿನಿಂದ ಮನ್ಯಾಗ ಸಂತೋಷ ತುಂಬಿ ತುಳುಕುತ್ತಿತ್ತು. +‘ಬಸವ್ವ ನೀನ ಹ್ವಾರೇವು ಎಲ್ಲ ನೋಡಿಕೋ. ನಾ ಮಮ್ಮಗನ್ನ ಎತ್ತಿಕೊಂಡು ಕುಂತುಬಿಡ್ತೀನಿ’ ಅಂತ ಅಜ್ಜಿ ಅನ್ನುತ್ತಿದ್ದಳು. +ಹೀಗೆ ಹಿಂದಿನ ಕಥೆಯನ್ನು ನೆನಪು ಮಾಡಿಕೊಳ್ಳುತ್ತ ಬಸವ್ವ ಅದೆಷ್ಟು ಹೊತ್ತು ಕುಳಿತಿದ್ದಳೋ? ಸೊಸೆ ಬಂದು ‘ಬಾರಬೇ ಯತ್ತಿ ಉಣ್ಣಾಕ’ ಎಂದು ಕರೆದಾಗಲೇ ಎಚ್ಚರ! +‘ಯಾಕಬೇ ಯತ್ತಿ ಕಣ್ಣಾಗ ನೀರು ಬಂದಾವು?’ +‘ಏನಿಲ್ಲವ್ವಾ ನಡಿ. ಹಿಂದಲದೆಲ್ಲ ನೆಪ್ಪಾಗಿತ್ತು……ಮದ್ಯಾನಕ್ಕ ಓಟು ಅನ್ನ ಬಸ್ತು ಹುಳಪಲ್ಯೇವು ಮಾಡು.’ +‘ಯತ್ತಿ, ಗಡಾನ ಹಳ್ಳಕ್ಕ ಹೋಗಿ ಎಳ್ಡು ಅರಿಬಿ ಸೆಳಕೊಂಡು ಬಂದು ಅಡಿಗೀ ಮಾಡ್ತೀನಿ.’ +‘ಹೂಂನವಾ’ ಅಂತ ಬಸವ್ವ ಮಮ್ಮಕ್ಕಳನ್ನು ಕರೆದುಕೊಂಡು ಅಂಗಳದಾಗ ಮೆಂತೆ ಪಲ್ಲೇವು ಬಿಡಿಸಿಕೊಂತ ಕು೦ತಳು. +ಆಟೊತ್ತಿಗೆ ಎದುರು ಮನೀ ಬರಮವ್ವ ಬ೦ದು ಅದು ಇದು ಮಾತಾಡ್ತಾ +‘ನೀನು ಪುಣ್ಯ ಮಾಡೀದಿ ಬಸಕ್ಕ. ಎಂಥಾ ಬಂಗಾರದಂಥಾ ಸೊಸಿ ಸಿಕ್ಕಾಳ! ನನ್ನ ಸೊಸೀನೂ ಅದಾಳ. ಒಂದಿನಾನರ ಕರದು ಉಣ್ಣಾಕ್ ನೀಡಿಲ್ಲ’ ಅಂದಳು. +‘ಹೌದವ್ವ. ದೇವರು ಅದೊಂದರಾಗರ ಆಸೇವು ಇಟ್ಟಾನ. ಇಲ್ಲಾ೦ದರ ಈಟೊತ್ತಿಗೆ ನಾನೂ ನನ್ನ ಗಂಡನ ಹಿಂದನ ಹೋಗಬೇಕಾಗಿತ್ತು.’ +‘ಇರಲಿ ಬಿಡವ್ವ. ನಮ್ ಕೈಯಾಗರ ಏನೈತಿ? ಶಿವ ಕೊಟ್ಟದ್ದನ್ನ ಬೋಗಸಾಕ ಬೇಕು.’ ಎಂದು ಬರಮವ್ವ ಮಾತಾಡುತ್ತ ಕುಳಿತಿದ್ದಾಗ ಮಲ್ಲವ್ವ ಹಳ್ಳದಿಂದ ಬಂದು ಅರಿಬೀನೆಲ್ಲ ಹಗ್ಗದ ಮ್ಯಾಲೆ ಹರವಿ +‘ಹೊತ್ತು ನೆತ್ತೀಮ್ಯಾಗ ಬಂತು. ಗಡಾನ ಅಡಿಗಿ ಮಾಡತೀನಿ.’ ಅಂತ ಒಳಗೆ ಹೋದಳು. +ಬರಮವ್ವ ಎದ್ದು ಮನೆಗೆ ಹೋದ ಮ್ಯಾಲೆ ಬಸವ್ವ ಒಳಗೆ ಬಂದು +‘ಮಲ್ಲವ್ವ, ಅಡಿಗಿ ಮಾಡೋದು ಮುಗದಿದ್ರ ಅನ್ನದ್ ತಪ್ಪಲಿಗೂ ಹುಳಪಲ್ಯದ ಗಡಿಗ್ಗೂ ಓಟು ವಿಬೂತಿ ಹಚ್ಚಿ ಶಿವನೇ ಅಂತ ಓಟು ಕುಂತಕೋ ಬಾ. ಮುಂಜೇಲಿಂದ ಒಂದಸವನ ಹ್ವಾರೇವು. ಪಾಪ. ಈಗ್ ಅಂವ ಹೊಲದಿಂದ ಬಂದ ಅಂದರ ಅಂವನ್ ಕಾಟ ಸುರುವ, ನಿನ್ ಸುತ್ತ.’ ಅಂದದ್ದಕ್ಕೆ ಮಲ್ಲವ್ವನ ಮುಖ ನಾಚಿಕೆಯಿಂದ ಕೆಂಪೇರಿತು. +‘ನಾಳೆ ಹ್ಯಾಗೂ ಸಣ್ಣ ಸ್ವಾಮಾರ. ಗಳೇವು ಹೂಡಾಂಗಿಲ್ಲ. ಓಟು ಹೊತ್ತಾಗಿ ಎದ್ದರೂ ನಡೀತೈತಿ. ಮುಂಜಾಲೆದ್ದು ರೊಟ್ಟೀ ಮಾಡೋದೂ ಇಲ್ಲ. ಮಂಡಾಳ ಒಗ್ಗಣಿ ಮಾಡಿ ಮದ್ಯಾನಕ ಗೋದೀಹುಗ್ಗೀ ಮಾಡಿದ್ರಾತು.’ ಅಂತ ಬಸವ್ವ ಮರುದಿನದ ಕೆಲಸವನ್ನೂ ಹೇಳಿದಳು. +ಈಶಪ್ಪ ಹೊಲದಿಂದ ಬಂದು ಜಳಕ ಮಾಡಿ ಅಡಿಗಿ ಮನೀಗೆ ಬಂದ. +ಮಲ್ಲವ್ವ ಮಣಿ ಹಾಕಿ ಅಡ್ಡಣಿಗಿ ಇಟ್ಟು, ಕಂಚಿನ ಗಂಗಾಳದಾಗ ಉಣ್ಣಾಕ ನೀಡಿದಳು. +ಉಂಡು ಪಡಸಾಲೀ ಕಟ್ಟೆಯ ಮೇಲೆ ಬಂದು ಕು೦ತು ಎರಡು ಹೋಳು ಅಡಕೀ ಬಾಯೊಳಗ ಒಕ್ಕೊಂಡು ಯಲೀ ತುಂಬು ತಗದು ಅದಕ ಸುಣ್ಣಾ ಸವರಿ ದವಡಿಯೊಳಗೆ ಇಡುತ್ತ ಈಶಪ್ಪ +‘ಯಾಕಬೇ ಯವ್ವ, ನಿನ್ನೀಯಿಂದ ಒಂತರಾ ಸುಂದ್ ಅದೀಯಲ್ಲ. ಮೈಯಾಗ ಅರಾಮೈತೋ ಇಲ್ಲೋ?’ ಅಂತ ಕೇಳಿದ. +‘ಏನ್ ಹೇಳ್ಲೆಪ್ಪ. ನೀ ಮಕ್ಕಳಿಗೆ ಬೈಯಾದ್ ಕೇಳಿ ನನಗ ತ್ರಾಸಾಗೇತಿ. ಅದೂ ಸೊಳೇಮಕ್ಕಳಾ ಅಂತ ಬೈಬ್ಯಾಡಪಾ. ಅದ ಮಾತಿಗೆ ಜಗಳ ಆಗಿ ನಿಮ್ಮಪ್ಪನ್ನ ಕಳಕೊಂಡೆ.’ +‘ಹೌದಾ, ಅದೇನ್ ಸುದ್ದಿ, ಹೇಳಬೇ.’ +‘ಏನ್ ಹೇಳ್ಲೆಪ್ಪ. ಈಟು ದಿವ್ಸ ಮನಸ್ಸಿನ್ಯಾಗಿದ್ದ ಮಾತ್ನ ಇವತ್ತು ಹೇಳಬೇಕಾಗೇತಿ. ನೀ ಏನೂ ಬ್ಯಾಸರಾ ಮಾಡಿಕೋಬಾರದು. ಮನಸ್ಸು ಬದಲಾಯಿಸಬಾರದು. ಮೊದಲಿನಂಗ ನಡಕೋಬೇಕು. ಅಂದ್ರ ಹೇಳ್ತಿನಿ.’ +‘ಇಲ್ಲವ್ವ, ಹೇಳು. ದೇವರಂತಾಕಿ ನಿನ್ ಮನಸ್ ನೋಯ್ಸಿ ನಾ ಯಾವ್ ನರಕಕ್ಕ ಹೋಗಲಿ? ಅಪ್ಪನ್ ನೆಪ್ಪು ಸೈತ ನನಗಿಲ್ಲ. ನೀನ ಎಲ್ಲಾ ಆಗಿ ನನ್ನ ಈಟು ದೊಡ್ಡಾ೦ವನ್ ಮಾಡೀದಿ. ಅಪ್ಪ ಹ್ಯಾ೦ಗಿದ್ನಬೇ?’ +‘ಏನ್ ಹೇಳ್ಲೆಪ್ಪ, ಅಂತಾತನ್ನ ಕಳಕೊಂಡು ನಾಯಿನ್ನೂ ಬದಕೀನಲ್ಲ ಅನಸ್ತೈತಿ. ಎಂದಾರ ಒಂದಿನ ಈ ಮಾತು ನಿನಗ ತಿಳಿಯಾಕ ಬೇಕು. ಇವತ್ತ ಹೇಳ್ತಿನಿ. ನನಗ ಮದಿವ್ಯಾಗಿ ಹತ್ತು ವರ್ಸಾದ್ರೂ ಮಕ್ಕಳಾಗಲಿಲ್ಲ. ನಿಮ್ಮ ಅಪ್ಪನಿಂದ ಪಾರವ್ವ ಅನ್ನಾಕೀ ಹೊಟ್ಟ್ಯಾಗ ನೀ ಹುಟ್ಟಿದಿ. ಹುಟ್ಟಿದ ಎಲ್ಡು ತಿಂಗ್ಳಿಗೇ ನನ್ ಉಡಿಯಾಗ ಹಾಕಿ ನಿಮ್ಮ ಅವ್ವ ಕಣ್ಣುಮುಚ್ಚಿದ್ಲು. ಅವತ್ನಿಂದ ನನ್ ಕಣ್ ರೆಪ್ಪೀಹಾಂಗ ನಿನ್ನ ಸಾಕಿದೆ. ಆಕೀ ಉಪಕಾರಾನ ಎ೦ದಿಗೂ ಮರಿಯಾಂಗಿಲ್ಲ.’ ಬಸವ್ವ ಹೇಳಿದಳು. +‘ಹಂಗಾರ ನಾ ನಿನ್ ಹೊಟ್ಟ್ಯಾಗ ಹುಟ್ಟಿಲ್ಲನ್ನು.’ +‘ಇಲ್ಲಪಾ. ನೀನು ನಾ ಹಡದ ಮಗ ಅಲ್ಲ, ಪಡದ ಮಗ.’ +‘ಹೊಟ್ಟ್ಯಾಗ ಹುಟ್ಟಿದ ಮಕ್ಕಳ್ನರ ಈಟೊಂದು ಪ್ರೀತೀಲೆ ನೋಡಿಕೆಂತಿದ್ದರೋ ಇಲ್ಲೋ. ನೀ ಹಂಗ ನೋಡಿಕೆಂಡೀದಿ. ಅದಕ ನನಗ ಅದರ ಅರುವ ಆಗಿಲ್ಲ, ನೋಡು.’ ಈಶಪ್ಪನಿಗೆ ಅವ್ವನ ಬಗ್ಗೆ ಪ್ರೀತಿ ಇನ್ನೂ ಹೆಚ್ಚಾಯಿತು. +‘ಹೂನಪ್ಪ, ಅದಕ್ಕ ನಾ ಹೇಳಾದು. ನೀ ಮಕ್ಕಳಿಗೆ ಬೈಬ್ಯಾಡ. ಇವತ್ ಮುಂಜಾಲೆ ಸೊಳೇಮಕ್ಕಳಾ ಅಂತ ನೀ ಬೈದದ್ದಕ್ಕ ನನ್ ಹೊಟ್ಟ್ಯಾಗ ಕಶಿವಿಶಿ ಆಗಿ ಹಿಂದಲದೆಲ್ಲ ನೆಪ್ಪಾತು. ಈ ಮಾತಿಗೇ ನಾ ಗಂಡನ್ನ ಕಳಕೊಂಡೆ. ಇವತ್ತಿಗೆ ಇಪ್ಪತ್ತೈದು ವರ್ಸದ ಹಿಂದಿನ ಮಾತು. +‘ನೀನು ಆಗ ಮೂರು ತಿಂಗಳ ಕೂಸು. ಮನೀ ದೇವರಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಬರಾಕ೦ತ ನಿನ್ ಕರಕೊಂಡು ಮನೀ ಮ೦ದೆಲ್ಲ ಕಪ್ಪತ್ತ ಗುಡ್ಡಕ್ಕ ಹೋಗಿ ಪೂಜೀ ಮಾಡಿಸಿಕೊಂಡ್ ಬಂದ್ವಿ. +‘ಬಂದ್ ಗಳಿಗ್ಗೆ ನಿನ್ ದೊಡ್ಡಪ್ಪ ವಿರುಪಾಕ್ಷಪ್ಪ ಮನೀಗೆ ಬಂದು ‘ನನಗ ಇಬ್ರು ಗಣಮಕ್ಕಳದಾರ. ಅದರಾಗ ಒಬ್ಬನ್ನ ದತ್ತಕ ಮಾಡಿಕೊಂಡಿದ್ರ ಅಗ್ತಿದ್ದಿಲ್ಲ? ಏನಪಾ ಯಪ್ಪ. ಈಟು ವಯಸ್ಸಾಗೇತಿ. ನಿನಗರ ತಿಳೀಬಾರದ? ನಮ್ ಆಸ್ತಿ ನಮ್ ಮಮ್ಮಕ್ಕಳಿಗೇ ಆಗಬೇಕು ಅಂತ. ಯಾವದೋ ಸೂಳೀಮಗನ್ನ ತಂದು ಆಸ್ತೀನ ಅಂವಗ ಮಾಡಕ ಹತ್ತೀರೇನು?’ ಅಂತ ಕೇಳಿದ. +ಅದಕ್ಕ ನಿಮ್ಮಜ್ಜ ‘ನೀ ಹೊಲಸು ಮಾತು ಆಡಬ್ಯಾಡ. ಕಪ್ಪತ್ತಪ್ಪ ಯಾರದರ ಮಗನ್ನ ತಂದಿಲ್ಲ. ತನಗ ಹುಟ್ಟಿದ ಮಗನ್ನ ತಂದು ಸಾಕ್ಯಾನ. ಅದನ್ನ ಕೇಳಾಕ ನೀ ಯಾರು? ನಿನ್ ಮಕ್ಕಳು ಬರೇ ಕುಡುಕರು. ಅವ್ರು ನಿನ್ ನೋಡಿಕೊಂಡರ ಸಾಕು. ಸೊಸಿ ಅಂತ ಬಂದಾಕಿ ಮೂರು ದಿನಾನರೆ ನಮ್ಮನ್ನ ಚೆಂದಾಗಿ ನೋಡಿಕೊಳ್ಳಲಿಲ್ಲ. ಈಗ ನಾವು ಇವನ ಹಂತ್ಯಾಕ ಸುಕವಾಗದೀವಿ. ಸುಮ್ಕ ಮನೀಗೆ ಹೋಗು. ಕಾಲ್ಕೆದರಿ ಜಗಳ ತಗೀಬ್ಯಾಡ. ಕಪ್ಪತ್ತಪ್ಪ ದೇವರಂತಾ ಮನಶ್ಯಾ.’ ಅಂತ ನಿಮ್ಮಜ್ಜ ಅಂದದಕ ನಿನ್ ದೊಡ್ಡಪ್ಪ +‘ಒಂದೂ ಮಾತಾಡದ ಹ್ಯಾಂಗ್ ಕುಂತಾನ್ ನೋಡು. ಹೆಣಗ ಸೊಳೇಮಗ. ಇಂವನ್ನ ನೋಡಿಕೊಂತೀನಿ ಒಂದು ಕೈನ.’ ಅಂದ. +‘ಅಲ್ಲೀ ಮಟಾ ಸುಮ್ಕ ಕುಂತಿದ್ದ ನಿಮ್ಮಪ್ಪ ಈ ಮಾತು ಕೇಳಿ ಅದೆಲ್ಲಿತ್ತೊ ರೋಸ, ಕೆರಳಿ ಕೆಂಡಾಗಿ ಈರಬದ್ರನ ಅವತಾರಾನ ತಾಳಿದ. ನಿಮ್ಮಪ್ಪನ ಸಿಟ್ನ ನಾ ಅವತ್ತ ನೋಡಿದೆ. ಎದ್ದು ಹೋದವನ +‘ಏನೋ, ಇದೊಂದು ಬೈಗಳಾನ ಯಾರರೇ ಬೈದರೂ ನಾ ತಡಕಳ್ಳಾಕಿಲ್ಲ. ಅಂತಾದ್ದು ನನಗ ಈ ಬೈಗಳಾ ಬೈತೀಯಲ್ಲ’ ಅಂತ ಅಣ್ಣನ ಕುತಿಗ್ಗೆ ಕೈಹಾಕಿ ನಾಕು ಏಟು ಕೊಟ್ಟ ಬಿಟ್ಟ. ಇಬ್ರೂ ಗುದ್ದ್ಯಾಡಾಕ ಹತ್ತಿದ್ರು. ಮ೦ದಿ ಬಂದು ಜಗಳ ಹರದ್ರು. ‘ಹ್ಯಾ೦ಗ್ ಬಾಳ್ತೀಯೋ ನಾನೂ ನೋಡ್ತೀನಿ.’ ಅಂತ ನಿಮ್ ದೊಡ್ಡಪ್ಪ ಬುಸಗುಟ್ತಾನ ಹ್ವಾದ. +‘ಎಲ್ಡು ವರ್ಸ ಕಳೀತು. ಇನ್ನೇನು ಮರತರು ಬಿಡು ಅಂತ ಸುಮ್ಕಾದ್ವಿ. +‘ನಿನಗ ಆಗ ಎರಡು ವರ್ಸ. ನಿಮ್ಮಪ್ಪ ಒಂದಿನ ಮೂರೂಚಂಜೀ ಹೊತ್ತಿನ್ಯಾಗ ಕುದರೀ ಮ್ಯಾಗ ಬರಾಕ ಹತ್ತಿದ್ದನಂತ. ನಿಮ್ಮ ದೊಡ್ಡಪ್ಪ ಮೂರು ನಾಕು ಮ೦ದಿನ್ನ ಕರಕೊಂಡು ಊರ ಹೊರಗ ಕೌನೆಳ್ಳಿನ್ಯಾಗ ಕಂಟೀ ಮರೀಗೆ ಕುಂತ್‌ಗೊಂಡಿದ್ದನಂತ. ನಿಮ್ಮಪ್ಪ ಅಲ್ಲಿಗೆ ಬಂದೇಟಿಗೇ ಅವನ್ನ ಅಡ್ಡ ಹಾಕಿ ಹೊಡದು ಕೊಂದ ಹಾಕಿ ಬಿಟ್ನಪ್ಪಾ. ಆಮ್ಯಾಕ ನಮಗ ಸುದ್ದಿ ತೀಳಿತು. ನಾವು ಅಲ್ಲಿಗೆ ಹೋಗೋ ಹೊತ್ತಿಗೆ ಎಲ್ಲಾ ಮುಗದ ಹೋಗಿತ್ತು. ನಿಮ್ಮಪ್ಪನ್ನ ಕೊಂದರೂ ಅವರಿಗೆ ಆಸ್ತಿಯೆನೂ ಸಿಗಲಿಲ್ಲ. ಬರೀ ಸೇಡು ತೀರಿಸಿಕೊಡ್ರು ಅಟ. +ನಿಮ್ಮಜ್ಜ ‘ನನ್ನ ಮಗ ಅಂತೂ ಸತ್ತು ಹ್ವಾದ. ನನ್ ಸೊಸೀಗೂ ಮಮ್ಮಗ್ಗೂ ಇವನ ಕಾಟ ತಪ್ಪಿದ್ದಲ್ಲ’ ಅಂತ ಆಸ್ತಿಯೆಲ್ಲ ನಿನ್ನ ಹೆಸರಿಗೆ ಬರದು ನಿನ್ನ ಇಪ್ಪತ್ತನೇ ವಯಸ್ಸಿಗೆ ಬರೋ ಹಾಂಗ ಮಾಡಿ ಇಟ್ಟ. ಮಗನ ಕೊರಗಿನ್ಯಾಗ ನಿಮ್ಮಜ್ಜ ಅಮ್ಮ ತೀರಿಕೊ೦ಡ್ರು. ನಾ ದೇವರ್ನ ಕಂಡಿಲ್ಲ. ಆದರ ಆ ಮೂರು ಮಂದ್ಯಾಗ ದೇವರ್ನ ಕಂಡೆ. ಅವರಂತವರು ಏಸು ಜನ್ಮಾ ಎತ್ತಿ ಬಂದರೂ ಸಿಗಾಣಿಲ್ಲ.’ ಎಂದು ಹೇಳುತ್ತಿರುವಾಗ ಬಸವ್ವನ ಕಣ್ಣೀರು ಕೋಡಿಯಾಗಿ ಹರಿಯಿತು. +‘ಹೋಗಲಿ ಬಿಡವ್ವ. ನೀ ಅಳಬ್ಯಾಡ. ಯಾರ್ಯಾರ ಹಣ್ಯಾಗ ಏಟೇಟು ಬರದಿರ್ತೈತೋ ಅಟ ಸಿಗತೈತಿ.’ ಅಂತ ಈಶಪ್ಪ ಸಮಾಧಾನ ಹೇಳಿದ. +‘ಅದಕಪಾ. ನಾ ಹೇಳೋದೀಟ. ಎಲ್ಲಾರಿಗೂ ಮಕ್ಕಳ ಬಾಗ್ಯೇವು ಸಿಗೋದು ಕಷ್ಟ. ದೇವರು ನಿನಗ ಬಂಗರದಂತಾ ಎಲ್ಡು ಗಣಮಕ್ಕಳ್ನ ಕೊಟ್ಟಾನ. ಆ ಬೈಗಳಾ ಮಾತ್ರ ಬೈಯದ ಚೆಂದಾಗಿ ನೋಡಿಕೋ. ನಿಮ್ಮಪ್ಪನ ಹಾಂಗ ಬಾಳಿ ನಾಕು ಮಂದೀ ಕೈಲೆ ಸೈ ಅನಿಸಿಕೋ. ಬರೋ ಸ್ವಾಮಾರ ಕಡೀ ಸ್ವಾಮಾರ. ಕಪ್ಪತ್ತ ಮಲ್ಲಣ್ಣಗ ಹಣ್ಣು ಕಾಯಿ ಮಾಡಿಸಿಕೊಂಡ್ ಬರೋಣ’ ಅಂದಳು. +***** +ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […] +ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […] +ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_209.txt b/Kannada Sahitya/article_209.txt new file mode 100644 index 0000000000000000000000000000000000000000..b23818bd6424b160f67c1c24b72b904947e4350d --- /dev/null +++ b/Kannada Sahitya/article_209.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ +ಆಮೇಲೆ ಬಂದ ಮಂದಿ +ಹೆದ್ದಾರಿ ಜೊತೆ ಹೋಲಿಸಿದಂತೆ +ಕಿಷ್ಕಂಧಿತ ಸಂದಿಗೊಂದಿ. +***** +ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. ***** +ರವಿ ಕೂತಿದ್ದಾನೆ ಪಡುವಣದ ಅಂಗಡಿಯಲ್ಲಿ ಸೀರೆಗಳ ಹ ರವಿ. ***** +ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_21.txt b/Kannada Sahitya/article_21.txt new file mode 100644 index 0000000000000000000000000000000000000000..161c6eaf8fc1b4575361d1ae60dd6ac0a14d4bd0 --- /dev/null +++ b/Kannada Sahitya/article_21.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ಎಡ್ವಿನ್ ಮುಯಿರ್ +ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ +ಏಳು ದಿನಗಳ ಯುದ್ಧ ಕೊನೆಯಾಗಿ +ಇನ್ನೇನು ಒಂದುವರ್ಷ ಕಳೆಯುವುದರ ಒಳಗೆ +ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ +ಹೊತ್ತಿನಲ್ಲಿ +ಬಂದೇಬಿಟ್ಟವು ಅವು +ಅಪರೂಪದ ಕುದುರೆಗಳು +ಅಷ್ಟರಲ್ಲಿ ನಾವು ಮೌನಕ್ಕೆ ಶರಣಾಗಿದ್ದೆವು +ಮೊದಲ ಕೆಲದಿನಗಳು ಎಷ್ಟು ಬಿಕೋ ಎನ್ನಿಸುತ್ತ ಇತ್ತೆಂದರೆ +ನಮ್ಮ ಉಸಿರಾಟವೇ ನಮಗೆ ಕೇಳಿಸಿದಂತಾಗಿ ದಿಗಿಲಾಗುತ್ತ ಇತ್ತು. +ಎರಡನೇ ದಿನ ರೇಡಿಯೋಗಳು ತೆಪ್ಪಗಾಗಿಬಿಟ್ಟವು +ಆನ್ ಮಾಡಲು ನೋಡಿದೆವು; ಸುದ್ದಿಯಿಲ್ಲ, ಸದ್ದೂ ಇಲ್ಲ. +ಮೂರನೇ ದಿನ ಯುದ್ಧನೌಕೆಯೊಂದು ನಮ್ಮೆದುರು ಉತ್ತರಕ್ಕೆ ಚಲಿಸಿತು +ಅದರ ಡೆಕ್ಕಿನ ಮೇಲೆ ಹೆಣಗಳ ರಾಶಿಯಿತ್ತು +ಆರನೇ ದಿನ ಒಂದು ವಿಮಾನ ತತ್ತರಿಸಿ ಸಮುದ್ರದೊಳಗೆ ಬಿದ್ದು ಕಣ್ಮರೆಯಾಯಿತು +ಆಮೇಲೆ ನೀರವ ಮೌನ. +ರೇಡಿಯೋಗಳು ತೆಪ್ಪಗೆ +ಕೂತಿವೆ ನಮ್ಮ ಅಡುಗೆ ಮನೆಗಳಲ್ಲಿ, ಅವು ಇರುವ ಜಾಗಗಳಲ್ಲಿ, ಎಂದಿನ ಹಾಗೆ +ಆನ್ ಆಗಿಯೇ, ಯಾವತ್ತಿನಂತೆ ಲಕ್ಷೋಪಲಕ್ಷ ಕೋಣೆಗಳಲ್ಲಿ +ಈ ಪೃಥಿವಿಯ ಮೇಲೆ ಎಲ್ಲೆಲ್ಲೂ ಈ ಬಡಾಯಿ ಡಬ್ಬಿಗಳು +ತಣ್ಣಗೆ ಕೂತಿವೆ. +ಈಗವು ಮಾತಾಡಬಲ್ಲವಾದರೆ, +ನಟ್ಟನಡು ಮಧ್ಯಾಹ್ನ ಥಟ್ಟನೇ ಏನಾದರೂ ಮಾತಾಡಿಬಿಟ್ಟರೆ +ಸಹಿಸಲಾರೆವು ನಾವು. +ಒಂದೇ ಒಂದು ಗುಟುಕಿಗೆ ಪ್ರಪಂಚದ ಮಕ್ಕಳನ್ನೆಲ್ಲ ಕಬಳಿಸಿಬಿಟ್ಟ ಹಿಂದಿನ ಆ ಲೋಕದ +ಸುದ್ದಿಯೇ ನಮಗೆ ಬೇಡ. +ಎಲ್ಲೆಲ್ಲೋ ಯಾವುಯಾವುದೋ ರಾಜ್ಯಗಳು ಮೊಣಕಾಲು ಮಡಚಿ ದಾರುಣವೇದನೆಯಲ್ಲಿ +ಮುದುರಿಕೊಂಡು ಮಲಗಿವೆ ಎಂದು ಅನ್ನಿಸುತ್ತೆ. +ಇಂಥ ವಿಲಕ್ಷಣವಿಚಾರ ಹೊಳೆಯಿತೆಂದೇ ಅಚ್ಚರಿಯಾಗುತ್ತೆ. +ಹೊಲಗಳ ಮೇಲೆ ಟ್ರಾಕ್ಟರುಗಳು ಇಳಿಸಂಜೆಯಲ್ಲಿ +ಅನಾಥ ಪಿಶಾಚಿಗಳಂತೆ ಮುಗುಂ ಅಗಿ ಮುಸುಕುಹಾಕಿ ಕಾದಿರುವಂತೆ +ಭಾಸವಾಗುತ್ತವೆ. +ಅವುಗಳ ಪಾಡಿಗೆ ಅವನ್ನು ಕ್ರಮೇಣ ತುಕ್ಕಾಗಿ, ಧೂಳಾಗಿ, ಮಣ್ಣಿಗುದುರಿ +ಕಸಕಡ್ಡಿ ಜೊತೆ ಗೊಬ್ಬರವಾಗಲು ಬಿಟ್ಟಿದ್ದೇವೆ. +ನಮ್ಮವೇ ಎತ್ತುಗಳನ್ನು ಮರೆತಿದ್ದ ಹಳೆಯ ನೇಗಿಲುಗಳಿಗೆ ಹೂಡಿ +ಉಳುತ್ತೇವೆ ಇನ್ನು. +ಪಿತೃಪಿತಾಮಹರು ಉತ್ತಿದ್ದ ಮಣ್ಣಿಗೆ ಮರಳಿದ್ದೇವೆ. +ಆಮೇಲೆ, ಬೇಸಿಗೆಯ ಒಂದು ಸಂಜೆ +ಬಂದೇಬಿಟ್ಟವು ಅವು +ಅಪರೂಪದ ಕುದುರೆಗಳು. +ಮೊದಲು ಎಲ್ಲೋ ದೂರದ ರಸ್ತೆಯಮೇಲೆ ಲಘುವಾಗಿ ತಟ್ಟಿದ ಸದ್ದು +ಆಮೇಲೆ ಮಂದ್ರವಾದ ತಮ್ಮಟೆ ಬಾರಿಸಿದ ಸದ್ದು +ಹಿಡಿದು, ಬಿಟ್ಟು, ಹಿಡಿದು, ಬಿಟ್ಟು ಕೇಳುವ ಈ ಸದ್ದೇ +ರಸ್ತೆಯ ತಿರುವಿನಲ್ಲಿ ಗಹಗಹದ ಗುಡುಗಿನ ಸದ್ದಾಗಿ ಕೇಳುತ್ತಿರುವಾಗ +ಒಮ್ಮೆಗೇ +ಪ್ರತ್ಯಕ್ಷವಾದವು ಅವುಗಳ ತಲೆಗಳು. +ಉನ್ಮತ್ತ ಅಲೆ ಎದ್ದು ಅಪ್ಪಳಿಸಿದಂತೆ +ಭೀತರಾದೆವು ನಾವು. +ನಮ್ಮ ತಂದೆಯರ ಕಾಲದಲ್ಲಿ ಹೊಸ ಟ್ರಾಕ್ಟರುಗಳನ್ನು ಕೊಳ್ಳಲೆಂದು ನಾವು +ಕುದುರೆಗಳನ್ನು ಮಾರಿಬಿಟ್ಟಿದ್ದೆವು. +ಈಗ ಕುದುರೆಗಳು ನಮಗೆ ವಿಲಕ್ಷಣ ಪ್ರಾಣಿಗಳು +ಪುರಾತನ ಗುರಾಣಿಗಳ ಅಂದ ಹೆಚ್ಚಿಸುವ ಕೆತ್ತನೆಗಳು +ಶೂರಾಧಿ ಶೂರರ ಕಥೆಗಳಲ್ಲಿ ಕಾಣುವ ಚಿತ್ರಗಳು. +ಅವುಗಳ ಹತ್ತಿರಹೋಗಿ ಥರಗುಡುವ ಅವುಗಳ ಶೋಭೆಯನ್ನು ಮುಟ್ಟಿ ಸವರಲಾಗದ +ಅಂಜಿಕೆ ನಮಗೆ ಈಗ. +ಆದರೂ ಅವು ಕಾದವು. ತಮ್ಮ ಪಟ್ಟುಬಿಡದ ಮೊಂಡಲ್ಲಿ, ಲಜ್ಜೆಯಲ್ಲಿ, ಸಂಕೋಚದಲ್ಲಿ ಪುರಾತನರ ಅಪ್ಪಣೆ ಪಾಲಿಸಲು ನಮ್ಮ ಸ್ಥಿತಿ ಗತಿ ಕುಶಲ ಕೇಳಿ +ಗತಿಸಿದ ಕಾಲದ ನಮ್ಮ ಪ್ರಾಂಕ್ತನ ನಂಟನ್ನು ಕುದುರಿಸಲು ಬಂದವರಂತೆ +ಅವು ಕಾದವು: ತಮ್ಮ ಮೊಂಡಲ್ಲಿ ಲಜ್ಜೆಯಲ್ಲಿ ಸಂಕೋಚದಲ್ಲಿ. +ಮೊದಮೊದಲು ನಮಗೆ ಹೊಳೆಯಲೇ ಇಲ್ಲ +ನಮ್ಮ ಒಡೆತನಕ್ಕೆ, ಉಪಯೋಗಕ್ಕೆ ಸಲ್ಲುವ ಪ್ರಾಣಿಗಳು ಅವು ಎಂದು +ಅವುಗಳ ನಡುವೆ ಹೇಗೋ ಸಾಯದೇ ಉಳಿದ ಐದಾರು ಗಂಡುಮರಿಗಳೂ +ಇದ್ದವು, ನಮ್ಮ ಭಗ್ನ ಲೋಕದವೇ, ಯಾವುದೋ ಕಾಡಿಂದ ಬಂದ ಅವು +ಈಡನ್ ಸ್ವರ್ಗದ ಮರಿಗಳಂತೆ ಇದ್ದವು. +ಕುದುರೆಗಳು ನಮ್ಮನ್ನು ಈಗ ಹೊತ್ತು ಸಾಗುತ್ತವೆ, ನಮ್ಮ ಹೊರೆಗಳನ್ನು ಹೊರುತ್ತವೆ ಗದ್ದೆಯನ್ನು ಉಳುತ್ತವೆ. +ಅವು ಮನಸಾರೆ ನಮಗೆ ಮಾಡುವ ಬಿಟ್ಟಿ ಚಾಕರಿ +ಹೃದಯವನ್ನು ತಿವಿಯುವಂಥದು +ನಮ್ಮ ಬಾಳು ಬದಲಾಗಿದೆ, +ಅವುಗಳ ಆಗಮನ +ನಮ್ಮ ಆರಂಭ +(೧೯೫೮ರಲ್ಲಿ ಎಡ್ವಿನ್ ಮುಯಿರ್ ಎಂಬ ಸ್ಕಾಟ್ ಲ್ಯಾಂಡಿನ ಕವಿ ಬರೆದ ಪದ್ಯ. ಎಲಿಯಟ್ ತನ್ನ ಗರಿಮೆಯಕಾಲದಲ್ಲಿ ತಾನು ನಿರ್ಲಕ್ಷಿಸಿದ ಮೇಜರ್ ಕವಿ ಇವನೆಂದೂ, ಈ ಪದ್ಯ terrifying ಎಂದೂ ಕರೆಯುತ್ತಾನೆ. ಎಲಿಯಟ್‌ನ ವೇಸ್ಟ್ ಲ್ಯಾಂಡ್ ಪದ್ಯದ ವಸ್ತುವೂ ಇದೇ. ಅಣುಬಾಂಬಿನ ಯುದ್ಧದ ಭೀಕರತೆಯನ್ನೂ, ಅರ್ಥಹೀನತೆಯನ್ನೂ ಆಧುನಿಕ ನಾಗರಿಕತೆಯ ಪೂರ್ವದಲ್ಲಿ ಆಗಲೂ ಸ್ವಾರ್ಥಿಯಾಗಿದ್ದ ಮಾನವನಿಗೂ ಮೃಗಲೋಕಕ್ಕೂ ಇದ್ದಸಂಬಂಧವನ್ನೂ, ತಮ್ಮ ಇಚ್ಛೆಯಿಂದಲೇ ಎನ್ನಿಸುವ ನಿಸ್ಪೃಹತೆಯಲ್ಲಿ ಅವು ಕೃತಘ್ನನಾದ ಮಾನವನಿಗೆ ಮಾಡಿದ ಸೇವೆಯನ್ನೂ ದಾರ್ಶನಿಕ ಎನ್ನಿಸುವ ಬೀಸಿನ ತೀವ್ರತೆಯಲ್ಲೂ ಈ ಕವನ ಸೃಷ್ಟಿಸುತ್ತದೆ, ಸ್ವತಹ ಕವಿಯೇ ಈ ಪದ್ಯದ ಕುದುರೆಗಳ ಬಗ್ಗೆ ಸ್ವಾರ್ಥಿಯಾದ ಮನುಷ್ಯಮರೆತರೂ, ಪುರಾತನ ನಂಟನ್ನು ಮರೆಯದ ಕುದುರೆಗಳ ಬಗ್ಗೆ ಹೇಳುವ ಮಾತುಗಳನ್ನು ಇಲ್ಲಿ ಉದ್ದರಿಸುತ್ತಿದ್ದೇನೆ. ಒಬ್ಬ ವಿದ್ಯಾರ್ಥಿಗೆ ಎಡ್ವಿನ್ ಮುಯಿರ್ ಬರೆದ ಮಾತುಗಳು ಇವು: “The horses are seeking the long lost archaic relationship, accepted by men in former times as an obvious right, so that it never occured to them that there was anything surprising in using and owning horses. It is the surprise of the return that makes them realize the beauty of that free servitude.’ +ಸ್ವ‌ಇಚ್ಛೆಯಿಂದಲೇ ಎಂಬಂತೆ, ಕೃಪೆ ಎನ್ನಿಸುವಂತೆ ಕೈಗೊಂಡ ಕುದುರೆಗಳ ಕೈಂಕರ್ಯದ ಘನತೆ ಮತ್ತು ವಿಸ್ಮಯ ಮಾನವನಿಗೆ ಅರ್ಥವಾಗುವುದು ಅವು ತಾವಾಗಿಯೇ ಮಾನವನನ್ನು ಹುಡುಕಿಕೊಂಡು ಮರಳಿದಾಗ. +ಬಹಳ ಕಾಲ ಎಡ್ವಿನ್ ಮುಯಿರ್ ಎಷ್ಟುದೊಡ್ಡ ಕವಿ ಎಂಬುದು ಆ ಕಾಲದ ಫ್ಯಾಷನ್ನಿನಲ್ಲಿ ಯಾವ ದೊಡ್ಡ ವಿಮರ್ಶಕನಿಗೂ ಹೊಳೆದಿರಲಿಲ್ಲ. ನಾನು ಎಂ.ಎ. ಓದುವಾಗ ಇವನನ್ನು ಓದಿರಲಿಲ್ಲ. ಈಚೆಗೆ ಎಡ್ವಿನ್ ಮುಯಿರ್ ತನ್ನ ಪಾಡಿಗೆ ತಾನು ಬರೆದುಕೊಂಡಿದ್ದ ಹಿರಿತನದ ಲೇಖಕನೆಂದೂ ಇಂಗ್ಲಿಷ್ ವಾಙ್ಮಯಕ್ಕೆ ಕಾಪ್ಕಾನನ್ನು ತನ್ನ ಹೆಂಡತಿಯ ಜೊತೆ ಅನುವಾದಿಸಿ ಕೊಟ್ಟವನೆಂದೂ ಪ್ರಸಿದ್ಧನಾಗಿದ್ದಾನೆ. ನಾನು ಈ ಪದ್ಯವನ್ನು ಅನುಸರಿಸುವವನಂತೆ ಅನುವಾದಿಸಿದ್ದೇನೆ. ಅಂದರೆ ಆಧಾರ ಮೂಲದ ಪದ್ಯಮಾತ್ರವಲ್ಲ; ಅದು ನನಗೆ ಕೊಟ್ಟ ಸಂತೋಷ). +***** +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +– ೧ – ಮೊದಮೊದಲು ಹೀಗಿರಲಿಲ್ಲ ಈ ಕರಿಹೈದ. ತುಂಬ ಸಂಕೋಚದವ. ನೋಡಿದರೆ ಬಾಡಿ ಮೂಲೆಯಲ್ಲಿ ಮುದುಡುತ್ತಿದ್ದ. ಮಾತಿಗೊಮ್ಮೆ ತಪ್ಪಿತಸ್ಥರ ಹಾಗೆ ಹಸ್ತ ಹೊಸೆಯುತ್ತಿದ್ದ. ಯಾರೋ ನೆಂಟರ ಪೈಕಿ; ಕೈತುಂಬ ಕೆಲಸದ, ತಲೆತುಂಬ ಯೋಚನೆಯ […] +ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_210.txt b/Kannada Sahitya/article_210.txt new file mode 100644 index 0000000000000000000000000000000000000000..d405fa976d6ddaf35317757c102fd7f92626e766 --- /dev/null +++ b/Kannada Sahitya/article_210.txt @@ -0,0 +1,105 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” +ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ ನಾಗಪ್ಪನಿಗೆ ಕೇಳಿಸುತ್ತಿತ್ತು. ಅವರ ಕರೆಗೆ ಒಪ್ಪಿ, “ಇದೀಗ ಬರುತ್ತೇನೆ, ನೀವು ಕೂತುಕೊಳ್ಳಿ.” ಎಂದು ಒಳಗೆ ಹೋಗಿ, ಪ್ಯಾಂಟು, ಅಂಗಿ ಕಳಚಿ ತನ್ನ ಪ್ರೀತಿಯ ಪೈಜಾಮಾ, ಕುರ್ತಾ ಧರಿಸಿ ಮಗ್ಗುಲುಮನೆಯವರಲ್ಲಿ ಊಟಕ್ಕೆ ಹೋದ. +ಊಟಕ್ಕೆ ಕೂತಾಗ, ಇವಳನ್ನು ಮೊದಲ ಬಾರಿಗೇ ನೋಡುವವನ ಹಾಗೆ ನೋಡುತ್ತಿದ್ದಾಗ ಒಂದೆರಡು ಬಾರಿ ತನ್ನ ಕಣ್ಣುಗಳನ್ನು ಸಂಧಿಸಿದ ಅವಳ ಕಣ್ಣುಗಳಲ್ಲಿಯ ಮಾದಕತೆಗೆ ಸಣ್ಣಗೆ ಕಂಪಿಸಿದ. ‘ನನಗೆ ಬೇಕಾದ ಔಷಧ ನಿನ್ನ ಹತ್ತಿರವಿಲ್ಲ’ ಎಂದ ತನ್ನ ಉದ್ಧಟತನ ನೆನಪಾಗಿ, ಇವಳು ಆ ಕಾರಣಕ್ಕಾಗಿಯೇ ಈಗ ತನ್ನನ್ನು ಕೆಣಕುತ್ತಿಲ್ಲ ತಾನೆ ? ಅಥವಾ….ಆ ದಿನ ಕೂಡ ತನ್ನನ್ನು ಮಾತನಾಡಿಸಿದ್ದರಲ್ಲಿ ತನ್ನ ಲಕ್ಷ್ಯ ಸೆಳೆಯುವ ಉದ್ದೇಶವೇ ಇರಲಿಲ್ಲ ತಾನೆ ?….ಅವಳ ಪ್ರತಿಯೊಂದು ಭಂಗಿಯಲ್ಲಿ ಕಾಮುಕತೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು : ಈ ದರ್ಜಿಯಿಂದ ತೃಪ್ತಳಾಗುವ ಹೆಣ್ಣಲ್ಲ ಇವಲು ಎಂಬ ಅನ್ನಿಸಿಕೆಯ ಹಿನ್ನೆಲೆಯಲ್ಲಿ ಅವಳು ಹಿಂದೆ ಕೇಳಿದ ಪ್ರಶ್ನೆಗೆ ಈಗ ಬೇರೆಯೇ ಅರ್ಥ ಹೊಳೆದು ತಾನು ಜಾಗರೂಕನಾಗಿರುವುದು ಒಳ್ಲೆಯದು ಎಂದುಕೊಂಡ. ಊಟ ಮುಗಿಯುತ್ತಲೇ ಅವಳ ಅಡಿಗೆಯನ್ನು ಬಾಯಿತುಂಬ ಹೊಗಳಿ, ಆ ಭಾರ ಮನ್ನಿಸಿ, ತನ್ನ ಕೋಣೆಗೆ ಹೊರಟಾಗ, “ಬನ್ನಿ ಇನ್ನೊಮ್ಮೆ, ಈವತ್ತಿನ ಊಟ ತೀರ ಸಾದಾ ಆಯಿತು. ನಿಮಾಗಾಗಿಯೇ ಏನೂ ವಿಶೇಷ ಮಾಡಿರಲಿಲ್ಲ.” ಎನ್ನುತ್ತ ಅವಳು ತನ್ನತ್ತ ನೋಡಿ ಕಣ್ಣು ಹೊಡೆದ ರೀತಿಗೆ ನಾಗಪ್ಪನಿಗೆ ಸಂಶಯ ಉಳಿಯಲಿಲ್ಲ. ಕಳೆದ ಆರೆಂಟು ತಿಂಗಳಿಂದ ಆಗೀಗ ದೃಷ್ಟಿಗೆ ಬೀಳುತ್ತಿದ್ದಳಾದರೂ ಈಗ ನೋಡಿದ ಹಾಗೆ ನೋಡಿಯೇ ಇರಲಿಲ್ಲ ಎಂಬುದೂ ಲಕ್ಷ್ಯಕ್ಕೆ ಬರದಿರಲಿಲ್ಲ : ಎಂದೆಂದಿಗೂ ಒಳಗೆ ಜಗ್ಗುವ ಹಾಳು ನೆನಪುಗಳಿಂದ ಸುತ್ತಲಿನದೆಲ್ಲ ನೋಡುವ ತನ್ನ ದೃಷ್ಟಿಯೇ ಬದಲಿಸಿಬಿಟ್ಟಿದೆಯೇ…. +uಟಿಜeಜಿiಟಿeಜ +ರೂಮಿಗೆ ಬಂದು ಹಾಸಿಗೆಯಲ್ಲಿ ಅಡ್ಡವಾದವನ ಮನಸ್ಸಿನ ಮೇಲೆ ಮಗ್ಗುಲುಮನೆಯ ಹೆಣ್ಣು ಇತ್ತ ಕಾಮಕೇಳಿಯ ಇಷಾರೆಗಿಂತ ಊಟಕ್ಕೆ ಹೋಗುವ ಮೊದಲಷ್ಟೆ ತನ್ನನ್ನು ಬಾಲ್ಯಾವಸ್ಥೆಗೆ ಎಳೆದುಬಿಟ್ಟ ಅಪ್ಪ_ಅಮ್ಮರ ಮೋರೆಗಳ ಮೇಲಿನ ನಿಗೂಢ ಯಾತನೆಯ ಹಿಡಿತವೇ ಪ್ರಭಲವಾಗಿತ್ತು ; ಹಿಂದೆ ಎಷ್ಟೊಂದು ಸಾರೆ ಬಾಲ್ಯದ ನೆನಪುಗಳು ಬೆನ್ನಟ್ಟಿ ಬಂದಿದ್ದರೂ ಹೀಗೆ, ಚಿಕ್ಕ ಮಗುವಿನಂತೆ ಅತ್ತುಬಿಡುವಷ್ಟರ ಮಟ್ಟಿಗೆ, ತನ್ನನ್ನು ಅಲ್ಲಾಡಿಸಿರಲಿಲ್ಲ. ಇದೆಲ್ಲ ಆ ಬಾರ್ಬಿಚ್ಯುರೇಟ್ ಗುಳಿಗೆಗಳ ಪ್ರತಾಪ_ಮನಸ್ಸಿನ ಪ್ರಭುದ್ಧತೆಯನ್ನೇ ನಾಶಮಾಡಿಬಿಡುತ್ತದೆ ಹಾಳಾದವುಗಳು. ಹಾಸಿಗೆಯಿಂದ ಎದ್ದವನೇ ಕಪಾಟಿನೊಳಗಿಂದ ಬಾಟಲಿಯನ್ನು ಹೊರತೆಗೆದು ಅದರ ಮುಚ್ಚಳವನ್ನು ತೆರೆದು ಇಡೀ ಬಾಟಲಿಗೆ ಬಾಟಲಿಯನ್ನೇ ರಸ್ತೆಯ ಮೇಲೆ ಖಾಲಿ ಮಾಡಿದ. ಗುಳಿಗೆಗಳೆಲ್ಲ ರಸ್ತೆಯಂಚಿನ ಕೆಸರಿನಲ್ಲಿ ಚಲ್ಲಾಪಿಲ್ಲಿಯಾಗಿ ಹರಡಿಹೋದವು. ಖಾಲಿಯಾದ ಸೀಸೆ ಕಚರಾಬುಟ್ಟಿಯನ್ನು ಸೇರಿತು. ಇನ್ನು ಮುಂದೆ ಇಂತಹ ಮರೆಯುವ ಯುಕ್ತಿಗಳಾವವೂ ಬೇಡ ಎಂದುಕೊಂಡ : ಬಂದ ನೆನಪುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಕಲಿಯಬೇಕು ಯಾತನೆಯನ್ನು ನೋವು ಕಳೆಯುವ ಅಮಲಿನಲ್ಲಿ ಮುಳುಗಿಸುವುದು ಬೇಡ. ಅನುಭವಿಸುವ ದೈರ್ಯವನ್ನು ತಂದುಕೊಳ್ಳಬೇಕು….ಹೌದು. ನನಗೆ ಸ್ಪಷ್ಟ ಅರಿವು ಇದೆ ; ಮೇರಿಗೆ ನನ್ನ ಬಗ್ಗೆ ಇದ್ದ ಭಾವನೆ ಕೂಡ ಸುಳ್ಳಾದದ್ದು. ಅವಳು ಹೋದದ್ದು ಫಿರೋಜನ ಪಾರ್ಟಿಗೇ ಇರಬೇಕು ಎಂಬ ಸಂಶಯದಿಂದಲೇ ಹುಟ್ಟಿದ ಅಸೂಯೆ ಎಷ್ಟೊಂದು ಪ್ರಭಲವಾಗಿತ್ತೆಂದರೆ ಅದರಿಂದಾಗಿ ಹುಟ್ಟಿದ ನೋವಿನಲ್ಲಿ ಇಂದು ನಡೆಯಲಿದ್ದ ತನಿಖೆಯನ್ನು ಕೂಡ, ಪೂರ್ತಿಯಾಗಿ ಮರೆತೇ ಕೂತಂತೆ ಕೂತುಬಿಟ್ಟಿದ್ದೇನೆ ! ಫಿರೋಜ್ ಇಲ್ಲಿ ಬಂದ ಎರಡೇ ದಿನಗಳಲ್ಲಿ ಅವಳನ್ನು ಪಾರ್ಟಿಗೆ ಕರೆಯುವಷ್ಟರ ಮಟ್ಟಿಗೆ ಸಲುಗೆ ಬೆಳೆಸಿರಬೇಕಾದರೆ…! ಬೋಳೀಮಗನಿಗೆ ಯಾರ ಮೇಲೂ ಭೇಟಿಯಾದ ಒಂದೇ ಗಳಿಗೆಯಲ್ಲಿ ಛಾಪು ಹಾಕುವ ಮಾತಿನ ಕಲೆಯಿದೆ. ಜೊತೆಗೆ, ಮಾತುಗಳು ಉಂಟುಮಾಡುವ ಪರಿಣಾಮವನ್ನು ಎತ್ತಿಹಿಡಿಯುವಂಥ_ಯಾರನ್ನೂ ಮರುಳುಗೊಳಿಸಿಬಿಡುವಂಥ_ಮೋರೆ, ಕಣ್ಣು, ಕೂದಲು, ಆರೋಗ್ಯ !…. +ಫಿರೋಜನ ಮೋರೆ ಹಿಂದೆಂದೂ ಕಂಡಿರದಷ್ಟು ಸ್ಫುಟವಾಗಿ ಕಣ್ಣ ಮುಂದೆ ನಿಂತಾಗ ಮೂಗಿನ ಹೊರಳೆಗಳು ಉಬ್ಬಿಕೊಂಡವು : ಕೊರಳಸೆರೆಗಳು ಬಿಗಿಯಾದವು. ಸ್ವಾಸೋಚ್ಛಾಸ ಕೂಡ ಕಷ್ಟಕರವಾಯಿತು ; ಸಮಾಜ ಕೂಡಲೇ ಮನ್ನಿಸುವದು ಇದನ್ನೇ_ಹೊರಗಿನಿಂದ ಕಾಣುವ ಮನುಷ್ಯನನ್ನೇ ! ಒಳಗೆ ಇದ್ದವನನ್ನಲ್ಲ. +ಒಳಗೆ ಇದ್ದವನ ವಿಚಾರ ಬಂದದ್ದೇ, ನಾಗಪ್ಪ ಮತ್ತೆ ವ್ಯಾಕುಲನಾದ. ಒಳಗಿನಿಂದ ಎದ್ದುಬರುವುದನ್ನು ಪ್ರತಿರೋಧಿಸುವದು ಅಸಾಧ್ಯವಾದಾಗ ಕುರ್ಚಿಯಿಂದ ಎದ್ದು ಕೋಣೆಯಲ್ಲಿ ರಭಸದಿಂದ ಶತಪಥ ಹಾಕಹತ್ತಿದ : ಒ‌ಆ ಯವರೋ ಇನ್ನಾರೋ ಹಿಂದೊಮ್ಮೆ ಆದಂತೆ ತನ್ನದು oಟಿe-ಣಡಿಚಿಛಿಞ miಟಿಜ ಎಂದುಕೊಂಡ : ಮೇರಿ, ಡಾಯನಾ, ಥ್ರೀಟೀ, ಇವರೆಲ್ಲ ಒಂದು ಅನನ್ಯ ಸನ್ನಿವೇಶದಲ್ಲಿ ತನ್ನಲ್ಲಿ ಹುಟ್ಟಿಸಿದ ಆತ್ಮವಿಶ್ವಾಸದ ಹಿಡಿತದಲ್ಲಿದ್ದಾಗ ನೌಕರಿಯನ್ನೇ ಬಿಟ್ಟುಕೊಡುವ ಧೈರ್ಯಮಾಡಿ ಖಂಬಾಟಾನೊಡನೆ ಖಂಡತುಂಡವಾಗಿ, ಒಂದು ಬಗೆಯ ಮೊಂಡುತನದಿಂದ, ಮಾತನಾಡಿದ ನಾನು ಈಗ_ಆ ಧೈರ್ಯಕ್ಕೆ ಮೂಲವಾದ ಒಂದು ಭಾವನೆಗೇ ಪೆಟ್ಟುಬಿದ್ದಾಗ_ಈವರೆಗೆ ಅನುಭವಕ್ಕೆ ಬಂದಿರದ ಒಂದು ವಿಶೇಷ ಜಾತಿಯ ಭಯ ತನ್ನನ್ನು ಆವರಿಸಹತ್ತಿದ ಅನ್ನಿಸಿಕೆಯಿಂದ ತತ್ತರಿಸಿದ್ದೇನೆ, ಎನ್ನಿಸಿತು : ಕೊನೆಗೂ, ತನಗೆ ಈ ನೌಕರಿಯ ಅವಶ್ಯಕತೆ ಇದೆಯೇನೋ ! ಬದುಕಿನಲ್ಲಿ, ಯಾವುದಾದರೂ ಒಂದು ನಿಶ್ಚಿತವಾದ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಾಗ ಮಾತ್ರ….ಕದದ ಮೇಲೆ ಯಾರೋ ಮೆಲ್ಲಗೆ ತಟ್ಟಿದ ಸದ್ದಲ್ಲವೇ ?….ತೆರೆದು ನೋಡಿದ : ಮಗ್ಗುಲು ಮನೆಯ ಹೆಂಗಸು ! ಚಹದ ಕಪ್ಪನ್ನು ಕೈಯಲ್ಲಿ ಹಿಡಿದು ನಿಂತವಳು, ಕಪ್ಪನ್ನು ಕೈಗೆ ಕೊಡುವಂತೆ ಮುಂದೆ ಚಾಚಿದಳು. ವಿಚಾರಮಾಡುವ ಮೊದಲೇ ಅವನು ಕಪ್ಪನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಪುಟಿದೆದ್ದು ಕಾಣುತ್ತಿದ್ದ ಬಲಬದಿಯ ಮೊಲೆಯಿಂದ ಜಾರಿದ ಸೆರಗನ್ನು ಸರಿಪಡಿಸಿಕೊಳ್ಳುವ ನೆಪದಲ್ಲಿ ಅದರತ್ತ ಲಕ್ಷ್ಯ ಸೆಳೆಯುತ್ತ, ಅರ್ಧ ಕ್ಷಣದ ಮಟ್ಟಿಗೆ ಇವನತ್ತ ನೋಡಿ ಕಣ್ಣುಗಳನ್ನು ಅರಳಿಸಿ ಅಲ್ಲಿಂದ ಮಾಯವಾದಳು. ಕುರ್ಚಿಯಲ್ಲಿ ಕೂತು ಚಹ ಕುಡಿಯುವಾಗ ಬಾರ್ಬಿಚ್ಯುರೇಟ್ ಗುಳಿಗೆಗಳ ಅಮಲು ಸಂಪೂರ್ಣವಾಗಿ ಕಳೆದಿತ್ತು. ದರ್ಜಿಯ ಹೆಂಡತಿಯ ಹುಚ್ಚುತನಕ್ಕೆ ಮಗುಳುನಕ್ಕ : ಯಾವುದೇ ಬಗೆಯ ಅಸಡ್ಡೆ ಭಾವನೆಗೆ ಎಡೆಕೊಡದೇ ಈ ಪ್ರಕರಣ ಮುಂದುವರಿಯದ ಹಾಗೆ ತಾನೇ ತುಸು ಕಾಳಜಿ ವಹಿಸಬೇಕು, ಅಷ್ಟೇ. ಹುಡುಗಿ ಇನ್ನೂ ಸಣ್ಣವಳು…. +ಕುರ್ಚಿಯಿಂದ ಎದ್ದು ಮಾಡಲು ಬಯಸಿದ ಮೊದಲನೇ ಕೆಲಸವೆಂದರೆ ಕ್ಷೌರ ಹಾಗೂ ಸ್ನಾನ. ಕ್ಷೌರ ಮುಗಿಸಿ ಸ್ನಾನಕ್ಕೆ ನಿಂತಾಗ ಅನ್ನಿಸಿತು : ಮೇರಿಯನ್ನು ಸಂಶಯ ದೃಷ್ಟಿಯಿಂದ ನೋಡುವುದಕ್ಕೆ ಕಾರಣ ಬಹುಶಃ ಫಿರೋಜನ ಬಗೆಗಿರುವ ಅಸೂಯೆಯೇ ಇರಬಹುದು. ಆದರೂ ಇದರ ಸೋಕ್ಷಮೋಕ್ಷವಾಗಲೇಬೇಕು : ಕಳೆದ ಎಂಟು ದಿನಗಳ ಅನುಭವದಿಂದ ತಾನು ಪಡೆದ ಪ್ರಬುದ್ಧತೆಯನ್ನು ಈಗ ಒಮ್ಮೆಲೇ ಬಿಟ್ಟುಕೊಡಬಾರದು. ಸಂಜೆ ಮೇರಿಗೆ ಫೋನ್ ಮಾಡಿ ಕೇಳಿದರಾಯಿತು. ಅವಳು ನಿನ್ನೆ ಹೋದದ್ದು ಫಿರೋಜನ ಪಾರ್ಟಿಗೇ ಎನ್ನುವದು ಹೌದಾದರೆ ಯಾವುದೇ ಬಗೆಯ ಭ್ರಮೆಯ ಮೋಹಕ್ಕೆ ಒಳಗಾಗದೇ ಈ ಸಂಬಂಧವನ್ನು ಕೂಡ ಕಡಿಯಬೇಕು….ತಲೆಯ ಮೇಲೆ ಸುರಿಯುತ್ತಿದ್ದ ನೀರಡಿಗೆ ಕಣ್ಣುಗಳು ತುಂಬಿಕೊಳ್ಳುತ್ತಿದ್ದವು : ಜನ್ಮಾಂತರದಲ್ಲಿ ಭರವಸೆಯನ್ನು ಹುಟ್ಟಿಸಿದ ಮೇರಿ, ಫಿರೋಜನೊಡನೆ ವ್ಯವಹರಿಸುವಾಗ ಹುಷಾರಾಗಿರುವಂತೆ ಹೇಳಿದ ಮೇರಿ_ಈಗ ಇದ್ದಕ್ಕಿದ್ದಂತೆ ಫಿರೋಜನ ಪಾರ್ಟಿಗೆ ಹೋಗುವಷ್ಟು ಬದಲಿಸಿಹೋದಳೆ ?… ಛಾತಿಯ ಮೇಲೆ ಸಾಬೂನು ತಿಕ್ಕಿಕೊಳ್ಳುವಾಗ ಮೇರಿಯ ಮಗ್ಗುಲಲ್ಲಿ, ಡಾಯನಾಳ ಮಗ್ಗುಲಲ್ಲಿ, ಮನುಷ್ಯ ಸಂಬಂಧಗಳ ಕ್ಷಣಭಂಗುರತೆಯ ಮೇಲೆ ಉಪನ್ಯಾಸ ಮಾಡಿದ ಗಂಭೀರ ಮುಖಮುದ್ರೆಯ ಥ್ರೀಟೀಯ ಮಗ್ಗುಲಲ್ಲಿ ಫಿರೋಜನನ್ನು ನಿಲ್ಲಿಸಿ ನೋಡುತ್ತ ತನ್ನ ಬಗ್ಗೆ ತಾನೇ ಜಿಗುಪ್ಸೆಪಟ್ಟು ಕುಗ್ಗಿದ. ಮೊನ್ನೆ ಹೈದರಾಬಾದ್ ಏರ್‍ಪೋರ್ಟಿನಲ್ಲಿ ರೆಡ್ಡಿಯೊಡನೆ ಮಾತನಾಡುವಾಗ ಕೂಡ ಇಂತಹದೇ ಒಂದು ಚಿತ್ರ ಕಣ್ಣಮುಂದೆ ನಿಂತಾಗ ತುಂಬ ತುಂಬ ಕುಗ್ಗಿದ್ದ : ತುಟಿ ಪಿಟ್ಟೆನ್ನದೇ ಕೂತಿರುವಾಗ ಬರಿಯ ತನ್ನ ಸಾನ್ನಿಧ್ಯದಿಂದಲೇ ಇದಿರಿನ ಹೆಣ್ಣಿನ ಮೈಯ ಕಣಕಣವನ್ನೂ ಅಲ್ಲಾಡಿಸಬಲ್ಲ ಮಾಟವುಳ್ಳ ವ್ಯಕ್ತಿತ್ವವಿದು : ಎದೆ ಸೆಟೆದು, ಭುಜ ಹರಹಿ ಮಾತನಾಡುವ ಮೋಡಿಯಂತೂ ಆಡಿದ ಪ್ರತಿ ಮಾತಿಗೆ, ಮಾತಿನ ಅರ್ಥವಾಗುವ ಮೊದಲೇ, ಸೈ ಎನ್ನಿಸುವಂಥದ್ದು. ವಿಮಾನದಿಂದ ಇಳಿಯುವ ಮೊದಲು ರೆಡ್ಡಿಯಿತ್ತ ಪತ್ರವನ್ನು ಓದುವ ಮೊದಲೇ ಹರಿದೊಗೆದದ್ದಕ್ಕೆ ಕಾರಣವಾದ ಪ್ರೇರಣೆಯಲ್ಲಿ ಈ ಅಸೂಯೆಯೂ ಸೇರಿಕೊಂಡಿತ್ತು ಎಂಬ ಅನುಮಾನ ಈಗ ಮತ್ತೆ ಬಂದಿತು : ಥ್ರೀಟಿಯ ಕೈಯನ್ನು ಬಿಡುವಾಗ_ಅದನ್ನು ಹಿಡಿದ ಕೈ ರೆಡ್ಡಿಯದಾಗಿದ್ದರೆ ಎಂಬ ವಿಚಾರದ ಹಿಂದೆಯೇ ಬಂದಿತ್ತು ರೆಡ್ಡಿಯ ಪತ್ರವನ್ನು ಹರಿದೊಗೆಯುವ ವಿಚಾರ ! ಪಾರ್ಟಿಯಲ್ಲಿ ಮೇರಿ, ಡಾಯನಾ ಫಿರೋಜನೊಡನೆ ನಡೆಸಿರಬಹುದಾದ ಚೆಲ್ಲಾಟವನ್ನು ಊಹಿಸಿಯೇ ಇನ್ನಷ್ಟು ಮುದುರಿದ : ಐವತ್ತು ದಾಟಿದರೂ ಹುಡುಗಿಯರನ್ನು ಲಲ್ಲೆಯಿಸುವ ಚಟ ಬಿಟ್ಟಿಲ್ಲ_ಭೆಂಛೋದ್ !…ಇದನ್ನು ನೆನೆಯುವಾಗ ತನಗೆ ಸಿಟ್ಟು ಬಂದದ್ದು ಅಪ್ಪನ ಮೇಲೇ. ಸ್ನಾನದ ನೀರನ್ನು ಟವೆಲ್ಲಿನಿಂದ ಒರೆಸಿಕೊಳ್ಳುವಾಗ ಹೊಟ್ಟೆ ಛಾತಿಗಳನ್ನು ನೋಡಿಕೊಳ್ಳುತ್ತ ಸಿಡಿಮಿಡಿಗೊಂಡ : ಅಪ್ಪನಿಂದಲೇ ಪಡೆದ ಬಳುವಳಿಯಿದು, ಜತೆಗೆ_‘ಸಾಯ್’ ಎಂಬ ಆಶೀರ್ವಾದ. ಸಿಟ್ಟಿನ ಹಿಂದೆಯೇ ಬಂದ ಹುಚ್ಚು-ವಿಚಾರಕ್ಕೆ ಕ್ಷಣಕಾಲ ಅಪ್ರತಿಭನಾದ : ಧೋಂಡೋಬಾ ಶಿಂಫಿಯ ಹೆಂಡತಿಗೊಮ್ಮೆ (ಇನ್ನೊಮ್ಮೆ ಸಿಕ್ಕಾಗ ಅವಳ ಹೆಸರನ್ನು ಕೇಳಬೇಕು) ಬನಿಯನ್, ಅಂಗಿ ತೊಟ್ಟಿರದ ಬರಿಮೈಯನ್ನು ತೋರಿಸಿ ನೋಡಬೇಕು_ಪರಿಣಾಮ ಏನಾಗುತ್ತದೆಯೋ ಎಂದು ! ಬಂದ ವಿಚಾರಕ್ಕೇ ನಕ್ಕುಬಿಡಬೇಕು ಎಂದೆನ್ನಿಸಿದರೂ ಬನಿಯನ್ ಅಂಗಿ ಕಳಚಿ ನಿಂತಾಗ ಇದಿರು ನಿಂತವಳು ಮೇರಿ ಇಲ್ಲವೆ ಡಾಯನಾ ಇಲ್ಲವೆ ಥ್ರೀಟೀ ಆಗಿದ್ದರೆ ಎಂಬ ವಿಚಾರ ಬಂದಾಗ ನಗುವದು ಸಾಧ್ಯವಾಗಲಿಲ್ಲ….ತಾನು ಇಷ್ಟು ದಿನ ಎಷ್ಟೊಂದು ಧೈರ್ಯದಿಂದ ಇದಿರಿಸಲು ಪ್ರಯತ್ನಿಸಿದ ತನ್ನ ಇತಿಹಾಸ ಕೂಡ ಇಂದು ಏಕಾ‌ಏಕೀ ತನ್ನನ್ನು ಶಿಕಾರಿಯಾಡುವ ಫಿರೋಜನ ತಂಡವನ್ನು ಸೇರಿಬಿಟ್ಟಿದೆ ಎಂಬಂತಹ ಅನ್ನಿಸಿಕೆಯಿಂದ ಮೈ ಬಿಸಿಯಾಗಿ ಇನ್ನೊಮ್ಮೆ ಸ್ನಾನ ಮಾಡುವ ಮನಸ್ಸಾಯಿತು. ಆದರೆ ಸ್ನಾನಕ್ಕೆಂದು ಶೇಖರಿಸಿಟ್ಟ ನೀರು ತೀರಿಹೋಗಿತ್ತು. ಮೇರಿಯೊಡನೆಯಾಗಲೀ, ಡಾಯನಾ ಥ್ರೀಟಿಯರೊಡನೆಯಾಗಲೀ, ದೀರ್ಘಕಾಲದ ಗೆಳೆತನ ಬೆಳೆಸುವ ಯೋಗ್ಯತೆ ತನಗಿಲ್ಲ. ಅನ್ನಿಸಿತು : ಹೀಗೇ_ಆಕಸ್ಮಿಕವಾಗಿ ವಿಮಾನದಲ್ಲಿ ಭೆಟ್ಟಿಯಾದಾಗ ಇಲ್ಲ, ಒ‌ಆ ಯವರ ಕೋಣೆಗೆ ಹೋಗುವಾಗ ಕಣ್ಣಿಗೆ ಬಿದ್ದಾಗ ಊeಟಟo ಎಂದು ತನ್ನ sತಿeeಣ sಚಿಜ ಜಿಚಿಛಿe ಬಗ್ಗೆ ಅನುಕಂಪ ತೋರಿಸಿ ಮುದ್ದಾಡುವ ಈ ಣಡಿಚಿಟಿsieಟಿಣ ಜಿಡಿieಟಿಜshiಠಿ ಅಷ್ಟೇ ತನ್ನ ಪಾಲಿನ ಭಾಗ್ಯ…. ರಾಣಿ ಒಬ್ಬಳು ಮಾತ್ರ ತನ್ನ ಇಡೀ ದೇಹವನ್ನು ನೋಡಿಯೂ ಒಮ್ಮೆಯೂ ಜಿಗುಪ್ಸೆಪಟ್ಟವಳಲ್ಲ. ಅವಳನ್ನು ನೋಡಬೇಕು ಎಂದು ಎಷ್ಟು ಸರತಿ ಅನ್ನಿಸಿದರೂ ಕೊನೆಯ ಗಳಿಗೆಯಲ್ಲಿ ತನಗೆ ಅರ್ಥವಾಗದ್ದೇನೋ ಅಡ್ಡ ಬರುತ್ತಿದೆ….ನಾಳೆ ಅವಳಿಗೆ ಇನ್ನೂರು ರೂಪಾಯಿ ಒ.ಔ. ದಿಂದ ಕಳಿಸಬೇಕು…. +ಹೀಗೇ ಚೌಪಾಟಿಯವರೆಗೆ ಹೋಗಿಬರಬೇಕು ಎಂದುಕೊಂಡು ಹೊರಗೆ ಹೋಗುವ ತಯಾರಿಗೆ ತೊಡಗಿದ. ನಾಳೆ ರಾಣಿಗೆ ಒ.ಔ. ಮಾಡಲು ಹೋದಾಗ ಬ್ಯಾಂಕಿಗೆ ಹೋಗಿ ತನ್ನ ಪಾಸ್‌ಬುಕ್ ಹೊಂದಿಸಿಕೊಂಡು ಬರಬೇಕು : ಖಾತೆಯಲ್ಲಿ ಎಷ್ಟು ಹಣವಿದೆಯೆನ್ನುವುದು ಗೊತ್ತಾದೀತು. ನಾಳೆ ಫೈನಾನ್ಸ್ ಡಿಪಾರ್ಟ್‌ಮೆಂಟಿಗೆ ಫೋನ್ ಮಾಡಿ ತನ್ನ ಖಾತೆಗೆ ಜಮಾ ಆದ ಪ್ರಾವಿಡೆಂಟ್ ಫಂಡಿನ ಅಂಕೆ ಎಷ್ಟೆಂಬುದು ಕೇಳಿ ತಿಳಿಯಬೇಕು. ಹದಿನೆಂಟು ವರ್ಷಗಳ ನೌಕರಿಯೆಂದಮೇಲೆ ಗ್ರೆಚ್ಯುಯಿಟಿ ಕೂಡ ಸಿಗಬೇಕು….ಮಧ್ಯದಲ್ಲೇ ತನ್ನ ವಿಚಾರಣೆಗೆ ಹರಿದ ದಿಕ್ಕಿನ ಅರಿವು ಬಂದದ್ದೇ ತನ್ನ ಬಗ್ಗೆ ತನಗೇ ಅನುಕಂಪ ಹುಟ್ಟಿ ತಡೆದ : ಖಂಬಾಟಾ ಕಾರು, ಪತ್ರ ಕಳಿಸದೇ ಇದ್ದುದರ ಅರ್ಥವೊಂದೇ : ಫಿರೋಜನ ಅಹಂಕಾರದ ನಿರ್ಣಯ : “೧೮ ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಅನನ್ಯವಾದ ನಿಷ್ಠೆಯಿಂದ, ಧೀಶಕ್ತಿಯಿಂದ ಕಾರಖಾನೆಯನ್ನು ಇಂದಿನ ಭರಭರಾಟೆಯ ಸ್ಥಿತಿಗೆ ತಂದ ಅಸಾಧಾರಣ ಸೃಷ್ಟಿಶೀಲ ಪ್ರತಿಭೆಯ ನಾಗಪ್ಪ ಅಲಿಯಾಸ್ ನಾಗನಾಥ ಸಾಂತಯ್ಯ ಮಾಸ್ಪೇಕರ್_ವಯಸ್ಸು ೩೯. ಕಂಪನಿ ಸೇರಿದ್ದು ೧೯೫೦ರಲ್ಲಿ. ಆಗಿನ ಡೆಸಿಗ್ನೇಷನ್ : ಖeseಚಿಡಿಛಿh ಅhemisಣ. ಇವನನ್ನು ಇಂದಿನಿಂದ ಕೆಲಸದ ಮೇಲಿಂದ ತೆಗೆದುಹಾಕಲಾಗಿದೆ. ಕಾರಣ. ತನ್ನ ಪ್ರತಿಭೆಯ ಲಾಭವನ್ನು ಪಡೆಯುವ_ಎಲ್ಲ ಪ್ರೊಫೆಶನಲ್‌ಗಳಲ್ಲಿ ಇರಲೇಬೇಕಾದ_ಚಾಲಾಕು ಇವನಲ್ಲಿ ಎಳ್ಳಷ್ಟೂ ಇಲ್ಲದ್ದು”_ಸಹಿ ಮಾಡಿದವರು : ಫಿರೋಜ್ ಸೋರಾಬ್ಜೀ ಬಂದೂಕವಾಲಾ, ಆಕ್ಟಿಂಗ್-ಮ್ಯಾನೇಜಿಂಗ್ ಡೈರೆಕ್ಟರ್_ತಾರೀಖು….” +ಒಂದು ವಿಚಿತ್ರ ಗಳಿಗೆಯಲ್ಲಿ ಹುಟ್ಟಿಬಂದ ಈ ನೋಟೀಸು ಹೊತ್ತು ಹೋದಹಾಗೆ ಎಷ್ಟೊಂದು ವಾಸ್ತವತೆಯ ಸತ್ವ ಪಡೆಯಿತೆಂದರೆ, ತಾನು ಕಳೆದ ಎಂಟು ದಿನಗಳಿಂದ ಆಫೀಸಿಗೆ ಹೋಗದೇ ಹೀಗೆ ಮನೆಯಲ್ಲಿ ಮೂಲೆಗುಂಪಾಗಿ ಕೂತದ್ದು ನೌಕರಿಯನ್ನು ಕಳೆದುಕೊಂಡದ್ದಕ್ಕಾಗಿಯೇ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕುವದು ಅಸಾಧ್ಯವಾಯಿತು. ನೌಕರಿ ಹೋಗಿ ಎಂಟು ದಿನಗಳಾದರೂ ತಾನಿನ್ನೂ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ವಿಚಾರವನ್ನೇ ಮಾಡಿಲ್ಲವಲ್ಲ ಎಂಬಂತಹ ಕಾತರದ ಭಾವನೆಯೊಂದು ಮನಸ್ಸಿನಲ್ಲಿ ನೆಲೆಸಹತ್ತಿತು : ಇನ್ನೊಂದು ಕಂಪನಿಯಲ್ಲಿ ನೌಕರಿಗಾಗಿ ಪ್ರಯತ್ನಿಸಲೇ ? ಕಷ್ಟವಾಗಲಿಕ್ಕಿಲ್ಲ. ಈಗಾಗಲೇ ತಾನು ಕಂಪನಿಯಲ್ಲಿ ಸಾಧಿಸಿದ್ದು ಕಂಪನಿಯ ಛಿomಠಿeಣiಣoಡಿs ಹಾಗೂ ಗ್ರಾಹಕರಿಗೆಲ್ಲ ಗೊತ್ತಾಗಿದೆ. ಅನೇಕ ಸೆಮಿನಾರುಗಳಲ್ಲಿ ತಾನು ಓದಿದ ಪೇಪರುಗಳ ಮೂಲಕ ಕೆಮಿಕಲ್ ಇಂಡಸ್ಟ್ರಿಯಲ್ಲಿ ತನ್ನ ಹೆಸರು ಪ್ರಸಿದ್ಧವಿದೆ, ಎನ್ನಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಅವನು ತುಂಬ ಸಮಾಧಾನ ಹಾಗೂ ಅಭಿಮಾನಪಟ್ಟ ಸಂಗತಿಯೆಂದರೆ ಅವನ ಹೆಸರಿನಲ್ಲಿ ದಾಖಲೆಯಾಗಿರುವ ಆರು ಪೇಟೆಂಟುಗಳು : ಅವನ ದೃಷ್ಟಿಯಲ್ಲಿ ಈ ಪೇಟೆಂಟುಗಳು ಸಾಮಾನ್ಯವಾದವುಗಳಾಗಿರಲಿಲ್ಲ. ಅವು ಒಳಗೊಂಡ ಶೋಧಗಳು ಉಚ್ಚದರ್ಜೆಯವಾಗಿದ್ದವು. ಒಂದು ಶೋಧವಂತೂ ‘ನ್ಯಾಶನಲ್ ಇನ್‌ವೆನ್ಯನ್ ಅವಾರ್ಡ್’ ಸಲುವಾಗಿ ಸ್ವತಃ ಒ‌ಆ ಅವರೇ ಸಹಿ ಮಾಡಿದ ಅರ್ಜಿಯ ಮುಖಾಂತರ ದಾಖಲೆಯಾಗಿತ್ತು. ಇನ್ನೊಂದು ಸಂತೋಷದ ಸಂಗತಿಯೆಂದರೆ _ಕಂಪನಿಯ ಜiveಡಿsiಜಿiಛಿಚಿಣioಟಿ ಕಾರ್ಯಕ್ರಮದಲ್ಲಿ ತಾನು ವಹಿಸಿದ್ದ ದೊಡ್ಡ ಪಾತ್ರ….ಆದರೆ ಇಷ್ಟು ಇದ್ದೂ ಎಲ್ಲ ಕಂಪನಿಗಳೂ ಒಂದೇ ! ಯಾಕೆಂದರೆ ಮನುಷ್ಯರೆಲ್ಲ ಒಂದೇ. ಇಲ್ಲ, ಕೆಲಸದ ದೃಷ್ಟಿಯಿಂದ ಈಗಿನ ಕಂಪನಿಗಿಂತ ಒಳ್ಳೆಯದಾದ ಕಂಪನಿಯಿರಲಾರದು. ಫಿರೋಜ್ ಯಾವ ಕಾರಣವೂ ಇಲ್ಲದೇನೇ ಹೀಗೆ ಹಗೆ ಕಾದದ್ದು ತನ್ನ ದುರದೃಷ್ಟ ! ಪುಸ್ತಕದ ಅಂಗಡಿ ? ಮೊದಲು ಸಿಗಬೇಕಲ್ಲ ! ಮುಂಬಯಿಯಂಥ ನಗರದಲ್ಲಿ ಪಾಗಡಿ ಕೊಟ್ಟಹೊರತು ಯಾವುದೂ ಸಾಧ್ಯವಿಲ್ಲ. ಸಾಹಿತ್ಯದ ಮೇಲೇ ಬದುಕಬಹುದೇ ? ಸ್ಟ್ರ್ಯಾಂಡ್ ಬುಕ್ ಸ್ಟಾಲಿನಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡಿ ಬಿಡುವಿನ ವೇಳೆಯನ್ನು ಯಾವುದಾದರೂ ರಾಜಕೀಯ ಪಕ್ಷದ ಇಲ್ಲವೇ ಸಾಮಾಜಿಕ ಸಂಸ್ಥೆ ಸಂಘಗಳ ಕಾರ್ಯದಲ್ಲಿ ಹಾಕಿದರೆ ಹೇಗೆ ?… ನಾಗಪ್ಪನ ಮೋರೆಯ ಮೇಲೆ ವಿಷಾದ ತುಂಬಿದ ನಗು ಮೂಡಿತು : ರಾಜಕಾರಣ ತನ್ನ ಮನೋಧರ್ಮಕ್ಕೆ ಒಗ್ಗಿದ್ದೇ ಅಲ್ಲ. ಗಿಲ್ಬರ್ಟ ಅಷ್ಟಾಗಿ ಹೇಳಿದ ಚೆಶಾಯರ್ ಹೋಮ್‌ಗೆ ಹೋಗಿ ಅಲ್ಲಿಯ ರೋಗಿಗಳ ಅಪಂಗತ್ವವನ್ನು ನೋಡುವ ಧೈರ್ಯ ಕೊನೆಗೂ ಆಗದೇ ಇದ್ದಾಗ ೫೦೦ ರೂಪಾಯಿ ವಂತಿಗೆಯ ಚೆಕ್ ಕಳಿಸಿದ್ದ. ಅಷ್ಟೇ ! ತನ್ನ ಚೈತನ್ಯದ ಬೀಸೇ ದೊಡ್ಡದಲ್ಲ. ತನ್ನ ಸೀಮಿತ ಪ್ರತಿಭೆಗೆ ಸಾಧ್ಯವಾದ, ಸೀಮಿತ ಚೈತನ್ಯಕ್ಕೆ ದಕ್ಕಿದ ಒಂದೇ ಒಂದು ಕೆಲಸವೆಂದರೆ ಲೆಬೋರೇಟರಿಯಲ್ಲಿ ರಾಸಾಯನಿಕ ಶೋಧ. ಬಿಟ್ಟರೆ ಆಗೀಗ ಸಾಹಿತ್ಯ…. +ಏನೋ ನೆನಪಾದವನ ಹಾಗೆ ತಲೆ ಕೊಡವಿ ಎದ್ದ : ಇಂತಹ ನೀರಿಲ್ಲದ ಹಳವಂಡಕ್ಕೆ ಎಡೆ ಕೊಡಬಾರದು. ನಾಳೆಯನ್ನು ಕುರಿತು ವಿಚಾರ ಮಾಡಲೇಕೂಡದು. ನಿನ್ನೆ ಖಂಬಾಟಾನ ಜೊತೆ ಮಾತನಾಡಿದ್ದು ಒಣ ಜಂಭವಾಗಲು ಬಿಡಬಾರದು. ಇಷ್ಟು ದೀರ್ಘಕಾಲ ಕೆಲಸಮಾಡಿದ ಒಬ್ಬ ನಿಷ್ಠಾವಂತ ಮ್ಯಾನೇಜರನನ್ನು ಕೆಲಸದಿಂದ ತೆಗೆದುಹಾಕುವದು ಸಣ್ಣ ಕೆಲಸವಲ್ಲ. ಅದರಲ್ಲೂ ಒ‌ಆ ಅವರು ತನ್ನ ಬೆನ್ನಿಗಿದ್ದಾಗ, ಈವತ್ತು ಖಂಬಾಟಾ ಬರದಿರಲಿಕ್ಕೆ ಬೇರೆಯೇ ಏನಾದರೂ ಕಾರಣವಿರಬಹುದು. ಅದರ ಬಗ್ಗೆ ಈಗ ವಿಚಾರಮಾಡುವದೇ ಬೇಡ, ಸದ್ಯ. ಎಲ್ಲಾದರೂ ಸುತ್ತಾಡಿಬರುವದು ಆರೋಗ್ಯಕರ. ಇಡೀ ದಿನ ನನ್ನ ಬಗೆಗೇ ವಿಚಾರಮಾಡಿ ತಲೆ ಸುನ್ನವಾಗಿದೆ. ಈಗ ಚೌಪಾಟಿಗೆ ಹೋಗಬೇಕು_ಕಾಲ್ನಡಿಗೆಯಲ್ಲೇ. ಎಂಟು ಗಂಟೆಗೆ ಸರಿಯಾಗಿ ಮೇರಿಗೆ ಫೋನ್ ಮಾಡುವದು. ಊಟಕ್ಕೆ ಚರ್ಚ್ ಗೇಟಿನ ‘ಗೇಲಾರ್ಡ್’ಗೇ ಹೋಗಬೇಕು. ಬಿಯರ್ ಕುಡಿಯಬೇಕು. +ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಮೋರಿಯ ದಡಿಯ ಮೇಲಿಟ್ಟ ಚಹದ ಕಪ್ಪು-ಬಶಿ ಕಣ್ಣಿಗೆ ಬಿದ್ದವು. ಅವು ಶಿಂಪಿಯವರವಾಗಿದ್ದವು. ಹೊರಗೆ ಹೋಗುವಾಗ ಹಿಂದಿರುಗಿಸಿದರಾಯಿತು ಎಂದುಕೊಂಡು ಮೈಮೇಲೆ ನೀರು ಸಿಡಿಯದಂತೆ ಕಾಳಜಿ ವಹಿಸಿ ನಲ್ಲಿಯ ನೀರಿನಿಂದ ತೊಳೆದ. ಕೊನೆಯ ಗಳಿಗೆಯಲ್ಲಿ, ಈಗ ಬೇಡ, ಅವಳ ಗಂಡ ಅಂಗಡಿಯಿಂದ ಬಂದ ಮೇಲೇ ಕೊಟ್ಟಾರಾಯಿತು ಎಂದುಕೊಂಡು ತಿರುಗಿ ದಡಿಯ ಮೇಲೆ ಇಡಲು ಹೋದಾಗ ಕಪ್ಪು-ಬಶಿ ಸದ್ದುಮಾಡಿದವು. ಕದ ತೆರೆದು ಹೊರಗೆ ಕಾಲಿಡುವಾಗ ಬದಿಯ ಹೆಂಗಸು, ಬಾಗಿಲಲ್ಲಿ, ಇವನು ಹೊರಗೆ ಬರುವುದರ ಹಾದಿ ಕಾಯುತ್ತ ನಿಂತವಳ ಹಾಗೆ, ನಿಂತವಳು_ಅತಿ ತಗ್ಗಿದ ದನಿಯಲ್ಲಿ_”ಕಪ್ಪು-ಬಶಿ,” ಎಂದಳು. “ಇದೀಗ ತಂದೆ,” ಎಂದವನೇ ಒಳಗೆ ಹೋದ. ಕಪ್ಪು-ಬಶಿ ಸದ್ದು ಮಾಡಿದ್ದು ಅವಳಿಗೇ ಕೇಳಿಸಿರಬೇಕು ಎಂದುಕೊಳ್ಳುತ್ತ ಅವನ್ನು ಹಿಂದಿರುಗಿಸುವಾಗ ಮೋರೆಯ ಮೇಲೆ ತೆಳುವಾದ ಮುಗುಳುನಗೆ ಮೂಡಿತ್ತು. ಕಪ್ಪು-ಬಶಿ ಕೈಗೆ ತೆಗೆದುಕೊಳ್ಳುವಾಗ ಅವಳ ಬೆರಳುಗಳು ತನ್ನ ಬೆರಳುಗಳಿಗೆ ತಾಕಿದ್ದು ಆಕಸ್ಮಿಕವಲ್ಲವೇನೋ ಎಂದು ಗೊಂದಲಿಸಿದ. ಕೋಣೆಯ ಕದಗಳನ್ನು ಇಕ್ಕುವಾಗ ಇನ್ನೂ, ಬಾಗಿಲಲ್ಲಿ_ತುಸು ಓರೆ ಮಾಡಿಕೊಂಡು ಕದದ ಮರೆಗೆ_ನಿಂತವಳು. ಇವನು ಬೀಗ ಹಾಕಿ ಕಾರಿಡಾರಿನಲ್ಲಿ ತಿರುಗಿದ್ದೇ, ಕಣ್ಣುಗಳನ್ನು ಇಷ್ಟಗಲ ಅರಳಿಸುತ್ತ “ತಿರುಗಾಡಲು ಹೊರಟಿರಾ ?” ಎಂದು ಕೇಳಿದಳು. ಕೇಳಿದ್ದು ತನಗೆ ತಾನೇ ಅನುಮಾನಿಸುತ್ತ, “ಹೌದು” ಎಂದ. ನಿರುಪಾಯನಾದವನಂತೆ ಕೆಲಹೊತ್ತು ನಿಂತ. ಚಾಳಿನ ಉಳಿದೆಲ್ಲ ಮನೆಗಳ ಈ ಬದಿಯ ಕದಗಳು ಮುಚ್ಚಿಕೊಂಡಿದ್ದವು. ಮನೆಯಲ್ಲಿ ಇನ್ನಾರೂ ಇಲ್ಲದ್ದಕ್ಕೆ ಬೇಸರ ಬಂದಿರಬೇಕು. ಊಟ, ಚಹ ಕೊಟ್ಟ ಹೆಣ್ಣನ್ನು ಮಾತನಾಡಿಸದೇ ಹೋಗುವದು ಸೌಜನ್ಯವಲ್ಲ : “ಒಬ್ಬರಿಗೇ ಬೇಸರವೇನೋ ಅಲ್ಲವೆ ?” ಎಂದು ಕೇಳಿದಾಗ, “ಇವರಿಗೆ ರಾತ್ರೆ ಬರಲು ಹತ್ತು ಗಂಟೆ. ಕುಲಾಬಾ ದಿಂದ ಬರಬೇಕಂತೆ.” ಎನ್ನುತ್ತ ಇನ್ನೊಮ್ಮೆ ಕಣ್ಣರಳಿಸಿದಳು. ಅವುಗಳಲ್ಲಿಯ ಬೆಳಕಿಗೆ ಮಂತ್ರಮುಗ್ಧನಾದವನ ಹಾಗೆ_”ನಿಮ್ಮ ಹೆಸರನ್ನು ತಿಳಿಯಬಹುದೆ ?” ಎಂದು ಕೇಳಿದ. ಅವನ ದನಿ ಗೊಗ್ಗರಿಸಿದ್ದನ್ನು ಗಮನಿಸುತ್ತ,”ಜಾನಕೀ” ಎಂದಳು. ಖುಕ್ ಎಂದು ತಮಾಶಾದ ಹೆಣ್ಣಿನ ಹಾಗೆ ನಕ್ಕು ಬೆರಳು ಕಚ್ಚಿಕೊಂಡಳು. ಅರ್ಜುನ್‌ರಾವರ ಮನೆಯ ಕದ ತೆರೆಯುತ್ತಿದ್ದ ಸದ್ದು ಕೇಳಿಸಿ, “ಹೀಗೇ ಹೊರಗೆ ಹೋಗಿ ಬರುತ್ತೇನೆ,” ಎಂದವನೇ ಅಲ್ಲಿಂದ ಹೊರಟ. ‘ಬೇಗ ಬನ್ನಿ’ ಎಂದಂತೆ ಕೇಳಿಸಿತೆ ? ಎಂದು ಅನುಮಾನಿಸುತ್ತ ನಿಚ್ಚಣಿಕೆಯ ದಿಸೆಯಲ್ಲಿ ಹೆಜ್ಜೆ ಹಾಕಹತ್ತಿದ. ಹೊಸತೇ ಒಂದು ಸಂಬಂಧ, ಅನಪೇಕ್ಷಿತ ಗಳಿಗೆಯಲ್ಲಿ, ಅನೂಹ್ಯ ರೀತಿಯಲ್ಲಿ ಅಂಕುರಿಸಹತ್ತಿತ್ತು. ಮಾಳಿಗೆಯ ಮೆಟ್ಟಿಲ ಮೇಲೆ ಹೆಜ್ಜೆ ಎಡವಿದಾಗ ಸಾವರಿಸಿಕೊಳ್ಳಲು ನಿಚ್ಚಣಿಕೆಯ ರೇಲಿಂಗಿಗೆ ಕೈಯೊಡ್ಡಿದ : ನೇರವಾಗಿ ಹತ್ತಿರ ಕರೆಯುವ ಸಂಬಂಧವಿದು_ಮಾತೇ ಇಲ್ಲದ್ದು, ಮೆದುಳೇ ಇಲ್ಲದ್ದು. uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತೇಳು – +ಚೌಪಾಟಿಯ ಸಮುದ್ರವನ್ನು ಕಂಡು ಎಷ್ಟು ವರ್ಷಗಳಾದವು ?_ನಾಗಪ್ಪನಿಗೆ ನೆನಪಿಲ್ಲ. ದಂಡೆಯ ಉಸುಕಿನಲ್ಲಿ ಕೂತು ಸಮುದ್ರದ ನೀರನ್ನೂ, ಸುತ್ತಲೂ ನೆರೆಯಹತ್ತಿದ ಜನಸಮುದಾಯವನ್ನೂ ನೋಡುವಾಗಲೂ ಎಂಟೂದಿನ ಸತತವಾಗಿ ಅಂತರ್ಮುಖವಾದ ಮನಸ್ಸು ಹೊರಗೆ ಬರಲಿಕ್ಕೇ ನಿರಾಕರಿಸುತ್ತಿತ್ತು : ಏಕೋ ಈ ಕೊನೆಯಿಲ್ಲದ ಪ್ರತೀಕ್ಷೆಯೇ ತನ್ನನ್ನು ಮಾನಸಿಕವಾಗಿ ಮುರಿಯುತ್ತಿದೆ ಎನ್ನಿಸಿತು. ಇದೆಲ್ಲ ಯಾಕೆ ? ಎಲ್ಲರನ್ನು ಬಿಟ್ಟು ನಿರುಪದ್ರವಿಯಾದ ತನಗೇ ಯಾಕೆ ? ಎಲ್ಲ ಬಿಟ್ಟು ಈಗ ಯಾಕೆ ? ಇದೆಲ್ಲದರ ಸೋಕ್ಷಮೋಕ್ಷ ಯಾವಾಗ ? ಈ ಎಂಟು ದಿನಗಳಲ್ಲಿ ಒಬ್ಬರೂ ತನ್ನನ್ನು ಭೆಟ್ಟಿಯಾಗಲು ಬಂದಿಲ್ಲ_ಒಂದೂಮಗ ಖಂಬಾಟಾನನ್ನು ಬಿಟ್ಟು, ಮೇರಿಯ ಕೂಡ ಮಾತನಾಡಿದ್ದೆ_ಬರೇ ಫೋನಿನ ಮೇಲೆ ಹೀಗೆ ಜನಸಂಪರ್ಕವನ್ನು ಕಳಕೊಂಡ ಮನಸ್ಸು ಒಂದೋ ನೋವು ತುಂಬಿದ ಭೂತಕಾಲಕ್ಕೆ ಇಲ್ಲ. ಹೆದರಿಸುವ ಭವಿಷ್ಯತ್ತಿಗೆ ಕೈಚಾಚಿ ದಣಿಯುತ್ತದೆ…. +ಧೋಂಡೋಬಾನ ಹೆಂಡತಿ ಜಾನಕಿ ನೆನಪಿಗೆ ಬರಹತ್ತಿದಳು. ಹಿಂದುಮುಂದಿನ ವಿಚಾರವಿಲ್ಲದೇ ಇದೀಗಿನ ಗರಜಿನಲ್ಲಷ್ಟೇ ಹುಟ್ಟುವ ಸಂಬಂಧವಿದು : ಅಳೆಯುವ ಮಾನದಂಡಗಳು ಎರಡೇ_ತೃಪ್ತಿ, ಅತೃಪ್ತಿ. ಇದಾಗಲೇ ಪಡೆದ ಕೀರ್ತಿಯ ಸುತ್ತ, sತಿeeಣ, sಚಿಜ, buಣ bಡಿiಟಟiಚಿಟಿಣ ಕಣ್ಣುಗಳ ಸುತ್ತ, ಮಾತನಾಡುವ ಕಲೆಯ ಸುತ್ತ ಹುಟ್ಟಿಕೊಳ್ಳುವ ಸುಳ್ಳಿನ ಕಂತೆಪುರಾಣಗಳು ಇಲ್ಲಿ ಹುಟ್ಟಲಾರವು. ಜೀವವಿಕಾಸದ ಆದಿಯಿಂದಲೇ ಹುಟ್ಟಿಕೊಂಡ ಈ ಎಳೆತದ ಪರಿಧಿಯಲ್ಲಿ “ಯಾಕೆ ?” ಎಂಬ ಪ್ರಶ್ನೆ ಕೂಡ ಏಳಲಾರದು : ಪ್ರಶ್ನಾತೀತವಾದದ್ದಿದು. ತನ್ನ ಸಮಸ್ಯಯೋ ಮೂಲಭೂತವಾದ ಪ್ರಶ್ನೆಯಲ್ಲೇ ಹುಟ್ಟಿದ್ದು : ಯಾಕೆ ಬದುಕಿರಬೇಕು ? ಯಾಕಾದರೂ ಬದುಕಿರಬೇಕು ? ಅಪ್ಪ ಹುಡುಕಿಕೊಂಡ ದಾರಿ ಯಾಕೆ ಕೆಟ್ಟದ್ದು ? ಎಂದು ಕೇಳುವ ವಿವೇಕ ಕೂಡ ಆ ಕೊನೆಯ ಗಳಿಗೆಯ ಈಚೆಯದು ; ಈಚೆ ನಿಂತವರು ತಮ್ಮ ಸ್ಥಾನಿಕ ಮಾನದಂಡಗಳಿಂದ ಅಳೆದದ್ದು. ಆಲ್ಬರ್ಟ ಕಮೂ ಹೇಳಿದಂತೆ ನಿಜವಾದ ತಾತ್ವಿಕ ಪ್ರಶ್ನೆಯೊಂದೇ : ಆತ್ಮಹತ್ಯೆ, ತನ್ನ ಮಟ್ಟಿಗಂತೂ ! ಸಾಯುವ ಆದೇಶವನ್ನು ಹೊತ್ತೇ ಬೆಳೆದ ಮಗು ತಾನು. ತಾನು ಮಾಡಲಿದ್ದುದರ ಪ್ರಸ್ತುತತೆ ಒಂದರಿಂದಲೇ ನಿಶ್ಚಿತವಾಗಬೇಕು_ತನ್ನ ವೈಯಕ್ತಿಕ ಇರವಿನ ಪ್ರಸ್ತುತತೆಯಿಂದ, ಇದಿರು ಕುಳಿತ ಈ ವಿಶಾಲ ನೀರಿನ ಹೊಟ್ಟೆಯನ್ನು ಸೇರಿ ಎಲ್ಲ ಯಾತನೆಯನ್ನೂ ಮುಗಿಸಿಬಿಡಬಹುದು. ಯಾರಿಗೂ ಯಾವ ಹಾನಿಯೂ ಆಗಲಾರದು. ಈ ವಿಚಾರ ಕೂಡ ಸಾವಿನ ಈಚೆಯ ಸರಹದ್ದಿನದು.ತನ್ನ ಯಾತನೆಯ ಮೂಲವೇ ಇಲ್ಲಿದೆ ಅನ್ನಿಸಿತು : ಮೂಲಭೂತವಾದ ಪ್ರಶ್ನೆಗಳನ್ನು ಕೇಳುವ ಈ ಪ್ರಜ್ಞೆಯಲ್ಲಿ ! ಜಾನಕಿಗೆ ಇಲ್ಲವೇ ಇಲ್ಲ ಈ ಪ್ರಶ್ನೆಗಳ ಜಂಜಾಟ, ಬದುಕಿನಿಂದ ಬೇಡುತ್ತಿದ್ದದ್ದು ಉತ್ತರಗಳನ್ನಷ್ಟೇ. ಖೇಮರಾಜಭವನದ ಆಯ ಆಕಾರಗಳಿಲ್ಲದ ಜನಜಂಗುಳಿಗೆ ದಾದುಮಾಡುವ ಹೆಣ್ಣೇ ಅಲ್ಲವಿದು : ತನಗೇ ಅರಿವಿಲ್ಲದೇ ಆತ್ಮಘಾತದ ವಿಚಾರದಲ್ಲಿ ತೊಡಗಿದ ನಾಗಪ್ಪನನ್ನು ಬದುಕಿನ ಸರಹದ್ದನ್ನು ದಾಟದಂತೆ ತಡೆಹಿಡಿಯುವ ಶಕ್ತಿಯ ಪ್ರತೀಕಗಳ ಹಾಗೆ_ಅಡ್ಡವಾದ ಕದದ ಮರೆಯಿಂದ ತನ್ನನ್ನೇ ನೋಡುತ್ತಿದ್ದ_ಜಾನಕಿಯ ಇಷ್ಟಗಲವಾದ ಕಣ್ಣುಗಳು ನಾಗಪ್ಪನ ಇದಿರು ನಿಂತವು. ಅವು ವ್ಯಕ್ತಪಡಿಸುತ್ತಿದ್ದುದನ್ನು ಹಿಡಿಯುವ ಶಬ್ದ ಮಾನವಭಾಷೆಯಲ್ಲಿ ಹುಟ್ಟಿಲ್ಲವೇನೋ ! ಶಬ್ದಗಳಲ್ಲಿ ಹಿಡಿಯಲು ಹೋಗಿ ಅದನ್ನು ಕೆಡಿಸಬಾರದು ಎಂದುಕೊಂಡು ಸುಮ್ಮನಾದ. ಇದಿರಿನ ಪುರಾತನ ನೀರಿನ ರಾಶಿಯನ್ನು ನೋಡುತ್ತ ಕುಳಿತ_ಯಾವ ಆಸೆ ಆಕಾಂಕ್ಷೆಗಳಿಲ್ಲದೇನೆ. ಈ ಸಮಾಧಿಯಿಂದ ಎಚ್ಚರವಾದದ್ದು ದೂರದ ಕ್ಲಾಕ್‌ಟವರಿನ ದೊಡ್ಡ ಗಡಿಯಾರ ಎಂಟು ಗಂಟೆಯ ದನಿ ಮೊಳಗಿಸಿದಾಗ. +ಕಡಲತೀರದ ಇಷ್ಟೆಲ್ಲ ಗೌಜು ಗುಲ್ಲಿನಲ್ಲಿ ಕೂಡ ಗಡಿಯಾರದ ಗಂಟೆಯೇ ಏಕೆ ಕೇಳಿಸಿತು ? ಎಂದು ಆಶ್ಚರ್ಯಪಡುತ್ತಿರುವಾಗಲೇ ಭಡಕ್ಕನೆ ಎದ್ದು ಇದಿರಿನ ಇರಾಣೀ ಅಂಗಡಿಯಲ್ಲಿ ಟೆಲಿಫೋನ್ ಇರಬಹುದಲ್ಲವೇ ಎಂದುಕೊಂಡು ಅತ್ತ ನಡೆಯಹತ್ತಿದ. ಎಂದಿನಂತೆ ಎದೆ ಡವಗುಟ್ಟಲಿಲ್ಲ. ಮೇರಿ ಏನು ಹೇಳಬಹುದು ? ತಾನು ಏನು ಕೇಳಬಹುದು ? ಮೇರಿ ಮನೆಯಲ್ಲಿರಬಹುದೇ ?_ಯಾವುದರ ಬಗೆಗೂ ಊಹಾಪೋಹ ನಡೆಯಲಿಲ್ಲ. ಇರಾಣೀ ಅಂಗಡಿಯಲ್ಲಿ ಟೆಲಿಫೋನ್ ಇತ್ತು. ಆದರೆ ತನಗಿಂತ ಮೊದಲೇ ಬಂದ ಮೂವರು ಕ್ಯೂದಲ್ಲಿ ನಿಂತಿದ್ದರು. ಎಲ್ಲರೂ ಕಾಲೇಜ್ ಹುಡುಗರಂತೆ ಕಂಡರು. ಗಲ್ಲೆಯಲ್ಲಿ ಕೂತ ಇರಾಣಿಯ ದೊಡ್ಡ ಮೂಗನ್ನು ನೋಡುತ್ತಿದ್ದಂತೆ ಫಿರೋಜನ ಮೂಗಿನ ರಮ್ಯ ಪ್ರವಾಸಕಥನದ ನೆನಪಾಗಿ ಮೋರೆಯ ಮೇಲೆ ನಗು ಮೂಡಿತು. ತನ್ನನ್ನು ಕಂಡು ನಕ್ಕ ಎಂದು ತಪ್ಪು ತಿಳಿದ ಇರಾಣಿ ತಾನೂ ನಕ್ಕ. ಅವನೊಡನೆ ಗೆಳೆತನ ಬೆಳೆಸುವ ಇರಾದೆಯಿಂದೆಂಬಂತೆ ಇಲ್ಲಿ ಟೆಲಿಫೋನ್ ಚಾರ್ಜು ಎಷ್ಟು ಎಂದು ಕೇಳಿದಾಗ_ಎಂಟಾಣೆ ಎಂದ. ಈ ಇರಾಣಿಗಳು ಎಲ್ಲ ಬಿಟ್ಟು ಈ ದೇಶದಲ್ಲಿ ಚಹದಂಗಡಿಗಳನ್ನು ಹೇಗೆ ತೆರೆದರೋ : ಮಾರ್ಬಲ್ಲಿನ ಗೋಲಾಕಾರದ ಟೇಬಲ್ ಟಾಪ್ಸ್. ಉರುಟುರುಟಾದ ಕೈಗಳುಳ್ಳ, ಕಪ್ಪುಬಣ್ಣದ ಕುರ್ಚಿಗಳು, ಆಳೆತ್ತರ ಕನ್ನಡಿಗಳನ್ನು ಹಚ್ಚಿದ ಕಂಬಗಳು, ಗೋಡೆಗಳಿಗೆ ಹಚ್ಚಿದ ಕಾಚಿನ ಕದಗಳುಳ್ಳ ಕಪಾಟುಗಳಲ್ಲಿ_ಇವು ಯಾವಾಗಲಾದರೂ ಮಾರಿಹೋದಾವೋ ಅನ್ನಿಸಹಚ್ಚುವ_ಬಿಸ್ಕೀಟು, ಟಾಫೀ, ಸಿಗರೇಟು-ಡಬ್ಬಿಗಳು : ಬ್ರಿಲ್‌ಕ್ರೀಮ್, ಹೆರಾಯ್ಲ್ ಬಾಟಲಿಗಳು, ರೆಸ್ಟೋರೆಂಟಿನಲ್ಲಿ ಬಹಳ ಜನರಿದ್ದಿರಲಿಲ್ಲ. ಕೂತವರಲ್ಲಿ ಹಲವರು ಬರೇ ಚಹಾ ಕುಡಿಯುತ್ತಿದ್ದರೆ ಕೆಲವರ ಮುಂದಿನ ಬಶಿಗಳಲ್ಲಿ ಖಾರೀಬಿಸ್ಕೀಟುಗಳಿದ್ದವು. ಪ್ರತಿಯೊಂದು ಟೇಬಲ್ ಮೇಲೆ ಕಾಚಿನ ಭರಣಿಗಳಲ್ಲಿ ಬಿಸ್ಕೀಟುಗಳನ್ನು ತುಂಬಿಟ್ಟಿದ್ದರು. ಗಿರಾಕಿ ಬೇಡಿದವುಗಳನ್ನು ಇದಿರಿನ ಭರಣಿಯಿಂದಲೇ ತೆಗೆದು ಗಿರಾಕಿಯ ಬಶಿಯಲ್ಲಿಡುತ್ತಿದ್ದ ವೇಟರ್ ! ಪಠಾಣೀ ಶೈಲಿಯ ಸುರುವಾಲ್, ಉದ್ದ ಬಿಳಿಯ ಅಂಗಿ, ದೊಡ್ಡ ಮೀಸೆ, ಇವುಗಳಿಂದ ಕಣ್ಣುತುಂಬುವ ಒಬ್ಬನೇ ಒಬ್ಬ ವೇಟರ್ ಎಲ್ಲ ಗಿರಾಕಿಗಳ ದೇಖರೇಖಿ ನೋಡುತ್ತಿದ್ದ. ಜರೂರಿ ಬಿದ್ದಾಗ ಗಲ್ಲೆಯಲ್ಲಿ ಕೂತ ಯಜಮಾನ ಇರಾಣಿ ತಾನೇ ಹೋಗಿ ವಿಚಾರಿಸುತ್ತಿದ್ದ. ಗಿರಾಕಿಗಳಲ್ಲಿ ಒಬ್ಬರೂ ತನ್ನ ಪರಿಚಯದವರಿರಲಿಲ್ಲ…. +ಟೆಲಿಫೋನ್ ಮಾಡುವ ಸರದಿ ಬಂದಾಗ ಗಲ್ಲೆಯಲ್ಲಿಯ ಇರಾಣಿ ಎಚ್ಚರಿಸಿದ. ಟೆಲಿಫೋನ್ ರಿಸೀವರನ್ನು ಕೈಗೆತ್ತಿಕೊಂಡಾಗ ತನ್ನ ಹಿಂದೆ ಕ್ಯೂ ಇಲ್ಲದ್ದನ್ನು ನೋಡಿ ಸಮಾಧಾನವೆನಿಸಿತು. ನಂಬರ್ ಡಾಯಲ್ ಮಾಡಿದಾಗ ಫೋನ್ ಮೇಲೆ ಬಂದವಳಿಗೆ_Is ಣhಚಿಣ Zಚಿಡಿiಟಿ ?” ಎಂದು ಕೇಳಿದ. “ಔh ! gooಜ eveಟಿiಟಿg, ಒಡಿ. ಓಚಿgಟಿಚಿಣh. ಠಿಟeಚಿse ತಿಚಿiಣ, I ತಿiಟಟ ಛಿಚಿಟಟ ಒಚಿಡಿಥಿ.” ಎಂದವಳೇ ಅವಳು ಮೇರಿಯ ಹೆಸರನ್ನು ಹಿಡಿದು ಕೂಗಿದ್ದು, ನಾಗನಾಥ್ ಫೋನ್ ಮೇಲೆ ಬಂದಿದ್ದಾರೆ ಎಂದು ಹೇಳಿದ್ದು ನಾಗಪ್ಪನಿಗೆ ಸ್ಪಷ್ಟವಾಗಿ ಕೇಳಿಸಿತು. ಮೇರಿ ಫೋನ್ ಮೇಲೆ ಬರುವುದರ ಹಾದಿ ಕಾಯುವಾಗ ತನ್ನ ಮನಸ್ಸಿನಲ್ಲಿ ಯಾವುದೇ ಬಗೆಯ ಕ್ಷೋಭೆ ಇಲ್ಲದ್ದಕ್ಕೆ ಆಶ್ಚರ್ಯವಾಗಲಿಲ್ಲ ; ಅವಳು ನಿನ್ನೆ ಹೋದದ್ದು ತನ್ನ ವೈರಿಯಾದ ಫಿರೋಜನ ಪಾರ್ಟಿಗೇ. ಈಗ ಫೋನ್ ಮಾಡುತ್ತಿದ್ದದ್ದು ಸಂಶಯನಿವಾರಣೆಗಾಗಿ_ಅಷ್ಟೇ. ಮೇರಿ ಫೋನ್ ಎತ್ತಿಕೊಂಡಳು : +“ಹಲೋ ನಾಗ್, ಹ್ಯಾಗೆ ಇದ್ದೀಯಾ ? ನಿನ್ನೆ ನೀನು ಫೋನ್ ಮಾಡಿದ್ದು ಝರೀನಳಿಂದ ತಿಳಿಯಿತು. ಈವತ್ತು ಆಫೀಸಿಗೆ ಹೋಗಲಿಲ್ಲ. ಒಂದು ದಿನದ ರಜೆ ಪಡೆದು ಮನೆಯಲ್ಲೇ ಇದ್ದೇನೆ. ಇಡೀ ದಿನ ನಿನ್ನ ಫೋನಿನ ಹಾದಿ ಕಾದೆ. ಝರೀನ್ ಹೇಳಿರಬೇಕು ನಾವು ಪಾರ್ಟಿಗೆ ಹೋದದ್ದು. ಆo ಥಿou ಞಟಿoತಿ ತಿhಚಿಣ ಣime ತಿe ಡಿeಣuಡಿಟಿeಜ ? ಒಚಿಞe ಚಿ guess_ ಬೆಳಗಿನ ಒಂದು ಗಂಟೆಗೆ ! ಫಿರೋಜ್ ತುಂಬ ತುಂಬ ಖುಶಿಯ ಮೂಡಿನಲ್ಲಿದ್ದ. ಸ್ವತಃ ತನ್ನ ಕಾರಿನಲ್ಲೇ ನಮ್ಮ ಜೊತೆಗೆ ಮನೆತನಕ ಬಂದು ಬಿಟ್ಟು ಹೋದ. ಊe ತಿಚಿs so sತಿeeಣ ಣo us giಡಿಟs ಣhಡಿoughouಣ ಣhe eveಟಿiಟಿg. ಪಾರ್ಟಿ ತಾಜಮಹಲಿನ ಕ್ರಿಸ್ಟಲ್‌ರೂಮಿನಲ್ಲಿತ್ತು. ನಾಲ್ವತ್ತಕ್ಕೂ ಮಿಕ್ಕಿ ಜನ ಇತ್ತು_ಗಂಡು ಹೆಣ್ಣುಗಳು ಕೂಡಿ.ಎಲ್ಲ ಫಿರೋಜನ ಗೆಳೆಯರೇ ಅಂತೆ. ಕೆಲವು ಕಸ್ಟಮರರೂ ಇದ್ದರು. ಒಂದಿಬ್ಬರು ನಿನ್ನ ಬಗ್ಗೆ ಕೇಳಿದರು. ಂಟಟ veಡಿಥಿ soಠಿhisಣiಛಿಚಿಣeಜ ಛಿಡಿoತಿಜ, ಥಿou see…. ಈ ಫಿರೋಜನಿಗೆ ಮುಂಬಯಿಯಲ್ಲಿ ಇಷ್ಟೊಂದು ಜನ ಗೆಳೆಯರಿದ್ದದ್ದು ಗೊತ್ತೇ ಇರಲಿಲ್ಲ ನೋಡು. ಂಟಿಜ ತಿhಚಿಣ ಛಿhಚಿಡಿmiಟಿg hosಣ ! ನಾನು ಸ್ವತಃ ಒ‌ಆ ಯವರ ಸೆಕ್ರೆಟರಿಯಾಗಿದ್ದರೂ ಇಂತಹ ಒಂದು ಪಾರ್ಟಿಗೂ ಕರೆದಿರಲಿಲ್ಲ. I ಜಿeಟಣ veಡಿಥಿ ಚಿಟಿgಡಿಥಿ ತಿiಣh him. ಆಫೀಸಿನಿಂದ_ಅಂದರೆ ಮುಂಬಯಿಯ ಆಫೀಸಿನಿಂದ ನಾನೊಬ್ಬಳೇ_ನಂಬುವೆಯಾ ? ಆoಟಿ’ಣ ಜಿeeಟ ರಿeಚಿಟous_I ಚಿಟmosಣ ಜಿeeಟ iಟಿ ಟove ತಿiಣh him ಜಿoಡಿ ಣhe mosಣ eಟಿಛಿhಚಿಟಿಣiಟಿg ತಿಚಿಥಿ iಟಿ ತಿhiಛಿh he iಟಿviಣeಜ me. ಹೇಳಲು ಮರೆತೆ : ನಾನೊಬ್ಬಳೇ ಅಂದರೆ ಜ್ಯೂನಿಯರ್ ಸ್ಟಾಫಿನಲ್ಲಿ ಮಾತ್ರ. ಯಾಕೆಂದರೆ ಖಂಬಾಟ ಹಾಗೂ ಅವನ ಹೆಂಡತಿ ಕೂಡ ಬಂದಿದ್ದರು. ಶಿರೀನ್ ಎಂದಿನಂತೆಯೇ ತಿಚಿs ಚಿ sತಿeeಣ souಟ…. She eಟಿquiಡಿeಜ ಚಿbouಣ ಥಿou bಥಿ ಣhe ತಿಚಿಥಿ…. ರಾಮಕೃಷ್ಣ_ಣhಚಿಣ ಜiಡಿಣಥಿ ಡಿogue ! ಅವನ ನಡತೆಯನ್ನು ಎಂದೂ ಕ್ಷಮಿಸಲಾರೆ. ಕುಡಿದಿರಬೇಕು….ಣhಚಿಣ ಟಿಚಿsಣಥಿ guಡಿಥಿ…. ಹೌದು, ಪಾರ್ಟಿಗೆ ಕೊಕ್‌ಟೇಲ್ಸ್ ಆಂಡ್ ಡಿನ್ನರ್. ನಮ್ಮ ಒ‌ಆ ಯವರ ಮಾತುಗಳನ್ನು ಕೇಳಿಯೇ ನಾನು ಫಿರೋಜನ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿದ್ದೆ. ಆದರೆ ನಿನ್ನೆಯ ಪಾರ್ಟಿ ಅವನ ಬಗೆಗಿನ ವಿಚಾರಗಳನ್ನು ಸಂಪೂರ್ಣವಾಗಿ ಬದಲಿಸಿಬಿಟ್ಟಿತು, ನೋಡು. I ಛಿಚಿಟಿ’ಣ beಟieve he is ಜಿiಜಿಣಥಿ ಥಿeಚಿಡಿs…. ನಿನ್ನೆ ಅವನು ತೊಟ್ಟ ಕ್ರೀಮ್-ಕಲರ್ ಟ್ರೌಜರ್ ಹಾಗೂ ಅಚ್ಚನೀಲೀ ಬಣ್ಣದ ಬುಶ್‌ಶರ್ಟಿನಲ್ಲಂತೂ ಎಷ್ಟೊಂದು ಆಕರ್ಷಕನಾಗಿ ಕಂಡನಂತೀ_ಡಾಯನಾ ಅಂತೂ ಅವನನ್ನು ಇಡೀ ದಿನ ಹೊಗಳಿದೇ ಹೊಗಳಿದ್ದು. She ಜಿeeಟ ಜಿoಡಿ him heಚಿಜ oveಡಿ heeಟs_ಥಿou see ತಿhಚಿಣ I meಚಿಟಿ ! ನಂಬುತ್ತೀಯಾ ? ನಾನು ಮತ್ತು ಡಾಯನಾ ಇದ್ದಲ್ಲಿ ಒಮ್ಮೆ ಬಂದು_Whಚಿಣ ಚಿಡಿe ಥಿou suಛಿh ಛಿhಚಿಡಿmiಟಿg giಡಿಟs ಜoiಟಿg heಡಿe ? ಠಿಟeಚಿse go ಚಿಟಿಜ meeಣ ಣhe oಣheಡಿs. ಖಿheಡಿe ಚಿಡಿe so mಚಿಟಿಥಿ ಥಿouಟಿg meಟಿ ಎನ್ನುತ್ತ ನನ್ನ ಎರಡು ಕೈಗಳನ್ನೂ ತನ್ನ ಕೈಗಳಲ್ಲಿ ತೆಗೆದುಕೊಳ್ಳುತ್ತ_ಚಿಟಿಜ he hಚಿs suಛಿh big hಚಿಟಿಜs ! ಊಚಿve ಥಿou mಚಿಡಿಞeಜ ?_‘ಅಚಿಚಿಟಟ me Phiಡಿoz, boಣh oಜಿ ಥಿou giಡಿಟs, ತಿiಟಟ ಥಿou ? ಮಿಸ್ಟರ್ ಬಂದೂಕವಾಲಾ ಎಂದು ಕರೆದರೆ ನನಗೆ ಅಪಮಾನ ಮಾಡಿದಂತೆ….’ ಎಂದ. ನಿನ್ನೆ ನೀನೂ ಇರಬೇಕಾಗಿತ್ತು. ನಿನ್ನೆಯ ಪಾರ್ಟಿಯಲ್ಲಿ ಕಂಡ ಫಿರೋಜನನ್ನು ನೋಡಿ ನೀನೂ ನನ್ನ ವಿಚಾರಗಳನ್ನು ಬದಲಿಸುತ್ತಿದ್ದೆ. ಔuಡಿ ಒ‌ಆ ಟಚಿಛಿಞs ಣhese ಠಿeಡಿsoಟಿಚಿಟ ಛಿhಚಿಡಿms…. ಇಂಥ ದೊಡ್ಡ ಹುದ್ದೆಗೆ ಇಂಥ ಗುಣಗಳೂ ಬೇಕು ಅನ್ನಿಸುವುದಿಲ್ಲವೇ ? ಬರೇ ಬುದ್ದಿಯಲ್ಲಿ….ಹೆಲ್ಲೋ ಹೆಲ್ಲೋ ನಾಗ್….ಂಡಿe ಥಿou ಟisಣeಟಿiಟಿg….” +ನಾಗಪ್ಪ ಕೇಳುವದನ್ನು ಎಂದೋ ನಿಲ್ಲಸಿದ್ದ. ಟೆಲಿಫೋನ್ ರಿಸೀವರ್ ಕೈಯಿಂದ ಜಾರಿ ಬಿತ್ತೋ ತಾನೇ ಇರಿಸಿದನೋ_ನೆನಪಿಲ್ಲ ! “ಸಾಹೇಬ್, ಯಾವುದಾದರೂ ಕೆಟ್ಟಸುದ್ದಿ ಕೇಳಿದರಾ ?” ಎಂದು ಇರಾಣೀ ಮಾಲೀಕ ಕೇಳಿದಾಗ ತನ್ನ ಕಣ್ಣುಗಳಲ್ಲಿ ನೀರು ತುಂಬಿದ್ದರ ಅರಿವು ಬಂದು ದಡಬಡಿಸಿ ಕಿಸೆಯಲ್ಲಿಯ ಕೈವಸ್ತ್ರಕ್ಕೆ ಕೈಹಾಕಿದ. ಟೆಲಿಫೋನ ಕ್ಯೂದಲ್ಲಿ ನಿಂತ ಇನ್ನಿಬ್ಬರ ಮೋರೆಯ ಮೇಲೂ ಸಹಾನುಭೂತಿ ಮೂಡಿ ನಿಂತಿತ್ತು. ಸುಮಾರು ಹತ್ತು ಮಿನಿಟುಗಳವರೆಗೆ, ಒಂದು ಚಕಾರ ಶಬ್ದವನ್ನೆತ್ತದೆ, ಅ ತುದಿಯಿಂದ ಬರುತ್ತಿದ್ದ ಮಾತುಗಳನ್ನು ಕೇಳುತ್ತಿದ್ದಾಗ ಅವನ ಮೋರೆಯ ಮೇಲೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಹೋದ ನೋವನ್ನು ಗಮನಿಸಿಯೇ ಹೊಟೆಲ್ ಮಾಲೀಕನಾಗಲೀ ಕ್ಯೂದಲ್ಲಿ ನಿಂತವರಾಗಲೀ ತಾಳ್ಮೆಗೆಡದೇ ಇದ್ದದ್ದು, ಕೌಂಟರಿನ ಮೇಲೆ ಒಂದು ರೂಪಾಯಿಯ ನೋಟು ಇಡುತ್ತ ಥ್ಯಾಂಕ್ಸ್ ಎನ್ನುವಾಗ ಕೊರಳು ಬಿಗಿದುಕೊಂಡಿತು. ಮೂಲೆಯಲ್ಲಿಯ ಟೇಬಲ್ಲಿಗೆ ನಡೆದು ಕುರ್ಚಿಯೊಂದರಲ್ಲಿ ಕುಕ್ಕರಿಸಿ ಯಾವುದೇ ಬಗೆಯ ಭಾವೋದ್ವೇಗದ ಪ್ರದರ್ಶನಕ್ಕೆ ಯೋಗ್ಯವಾದ ಜಾಗವಲ್ಲ ಇದು ಎಂಬುದನ್ನು ಅರಿವಿಗೆ ತಂದುಕೊಳ್ಳುತ್ತ ತನ್ನನ್ನು ಸಾವರಿಸಿಕೊಂಡ. ವೇಟರ್ ಬಂದಾಗ, ಕೆಳದನಿಯಲ್ಲಿ_ಇಲ್ಲಿ ಬಿಯರ್ ಸಿಗಬಹುದೇ ? ಎಂದು ಕೇಳಿದ. ವೇಟರ್ ಮಾಲೀಕನತ್ತ ನೋಡಿದಾಗ ಅವನೇ ಬಂದು ಇವನಿಗೆ ಕೊಡಬೇಕಾದ್ದೇನು ಎನ್ನುವುದನ್ನು ತಿಳಿದು_ನಮಗೆ ಪರ್ಮಿಟ್ ಇಲ್ಲ. ನೀವು ಈ ಪರದೆಯ ಆಚೆಯ ರೂಮಿಗೆ ಬನ್ನಿ ಎಂದು ಅವನನ್ನು ಆ ಕಡೆಗೆ ಕರೆದೊಯ್ದ. ಹಸಿರು ಬಣ್ಣದ ಪರದೆಯ ಆಚೆ ಕೋಣೆಯಿದೆ ಎಂಬ ಕಲ್ಪನೆಯೇ ನಾಗಪ್ಪನಿಗಿರಲಿಲ್ಲ. ಕೋಣೆಯಲ್ಲಿ ನಾಲ್ಕೈದು ಟೇಬಲ್ಲುಗಳಿದ್ದರೂ ಸದ್ಯ ಎಲ್ಲವೂ ಖಾಲಿಯಿದ್ದವು. ಬಿಯರ್ ಜೊತೆ ಒಮ್ಲೆಟ್ ಹಾಗೂ ಪಾಪು-ಬೆಣ್ಣೆ ತರಲು ಹೇಳಿದ. ಇಂದಿನ ಊಟ ಇಲ್ಲೇ ಮಾಡಿದರಾಯಿತು ಎಂದುಕೊಂಡು ಬಿಯರಿನ ಹಾದಿ ಕಾಯಹತ್ತಿದ. uಟಿಜeಜಿiಟಿeಜ +– ಅದ್ಯಾಯ ಇಪ್ಪತ್ತೆಂಟು – +ಮರಿದಿನ ಬೆಳಿಗ್ಗೆ, ನಸುಕಿನಲ್ಲೇ ಎದ್ದು ಬರೆಯಲು ಕೂತಿದ್ದ_ನಾಗಪ್ಪ. ನಿನ್ನೆ ಚೌಪಾಟಿಯ ಇರಾಣೀ ಅಂಗಡಿಯನ್ನು ಬಿಟ್ಟಾಗಿನಿಂದ ತನ್ನ ಕೋಣೆಯನ್ನು ಸೇರುವ ತನಕದ ಅನೇಕ ವಿದ್ಯಮಾನಗಳು ನೆನಪಿನಲ್ಲಿ ಇಣುಕುವ ಹವಣಿಕೆಯಲ್ಲಿದ್ದುದರ ಅಸ್ಪಷ್ಟ ಅರಿವು ಇದ್ದರೂ ಯಾವುದೇ ಬಗೆಯ ಭಾವುಕತೆಗೆ ಈಗ ಎಡೆಕೊಡಬಾರದೆಂದು ಧೃಡನಿಶ್ಚಯ ಮಾಡಿಯೇ ಕೂತಂತೆ ಕೂತಿದ್ದ : ಎಲ್ಲರನ್ನು ಬಿಟ್ಟು ಕೋಳೀಗಿರಿಯಣ್ಣನ ಬಗ್ಗೆ ಏಕೆ ಬರೆಯುತ್ತಿದ್ದೇನೆ ಎಂಬುದರ ಬಗ್ಗೆ ಕ್ಷಣಕಾಲ ಆಶ್ಚರ್ಯಪಟ್ಟರೂ ಮರುಕ್ಷಣ ಆ ವಿಚಾರವನ್ನು ಕೂಡ ತೊಡೆದುಹಾಕಿದ : ಯಾಕೆ ಬದುಕಿರಬೇಕು ಎಂಬ ಪ್ರಶ್ನೆಯ ಬಗೆಗೇ ನಿಶ್ಚಿತ ನಿಲುಗಡೆಗೆ ಬರಲು ಸಾಧ್ಯವಾಗದೇ ಇದ್ದಾಗ ಈ ಪ್ರಶ್ನೆಯೇನು ಮಹಾ ! ಕೋಳೀಗಿರಿಯಣ್ಣನ ಮನೆ ಅವರ ಮಗ್ಗುಲ_ಹಿತ್ತಲಲ್ಲೇ ಇತ್ತು. ಅದರಾಚೆಯ ಹಿತ್ತಲಲ್ಲಿ ಮಾಸ್ತೀ ಹೊನ್ನಪ್ಪನ ಮನೆ. ಹೊನ್ನಪ್ಪನ ಹೆಂಡತಿ ಪರಮೇಶ್ವರಿಗೂ ಗಿರಿಯಣ್ಣನ ಹೆಂಡತಿ ದೇವಿಗೂ ಆಗುತ್ತಿರಲಿಲ್ಲ. ಇಬ್ಬರೂ ನಾಡ್ಕರ್ಣಿ ಅಪ್ಪೂರಾಯರ ಒಕ್ಕಲು. ಪರಮೇಶ್ವರಿಯ ಮೂವರೂ ಹುಡುಗಿಯರು ಕಪ್ಪು ಬಣ್ಣದವು_ಹೊನ್ನಪ್ಪನ ಹಾಗೆ. ಗಿರಿಯಣ್ಣನಿಗೆ ಎರಡು ಮಕ್ಕಳು_ಒಂದು ಹೆಣ್ಣು. ಒಂದು ಗಂಡು. ಇಬ್ಬರೂ ಬೆಳ್ಳಗೆ. ದಿನವೂ ಸಂಜೆ, ಯಾವುದಾದರೂ ಸಣ್ಣಪುಟ್ಟ ಕಾರಣಗಳಿಗಾಗಿ ದೇವಿಗೂ ಪರಮೇಶ್ವರಿಗೂ ಝಟಾಪಟೀ : ಬೇಲಿಯ ಆಚೆ ಈಚೆ ನಿಂತು ಜಗಳಾಡುವ ಭರದಲ್ಲಿ ಒಮ್ಮೊಮ್ಮೆ ಮೈಮೇಲಿನ ಭಾನ ತಪ್ಪಿದವರ ಹಾಗೆ ಅತ್ಯಂತ ಅವಾಚ್ಯವಾದ ಬೈಗುಳಗಳ ಜೊತೆಗೆ ಬೀಭತ್ಸವಾದ ಹಾವಭಾವಗಳು. ಎಲ್ಲ ಬೈಗಳು. ಹಾವಭಾವಗಳು ತಮ್ಮ ಲೈಂಗಿಕ ಜೀವನಕ್ಕೆ ಸಂಬಂಧಪಟ್ಟವುಗಳು. ಒಮ್ಮೊಮ್ಮೆ ಪರಿಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗುತ್ತಿತ್ತೆಂದರೆ ಇಬ್ಬರೂ ತಮ್ಮ ಸೀರೆಗಳನ್ನು ಎತ್ತಿ ತೊಡೆ ತೋರಿಸುತ್ತ_ ರಂಡೇ ರಂಡೇ ರಂಡೇ ! ನಿನ್ನ ಗಂಡನ ತೀಟೆ ತೀರಿಸುವದು ನಿನ್ನ ಕೈಯಲ್ಲಿ ಸಾಧ್ಯವಿಲ್ಲದಿದ್ದರೆ ಕಳಿಸೇ ಅವನನ್ನು ನನ್ನ ಕಡೆ ಎನ್ನುವಂತಹ ಮಾತಿನತನಕ ಮುಟ್ಟುತ್ತಿತ್ತು ! ಇದೆಲ್ಲ ನಡೆಯುವಾಗ, ಇದನ್ನೆಲ್ಲ ಕೇಳಿಯೂ ಕೇಳದವನ ಹಾಗೆ ನಿರ್ಲಿಪ್ತನಾದ ಗಿರಿಯಣ್ಣ_ಕೆಂಪು ಮಣ್ಣಿನ ಗಾರೆ ಮೆತ್ತಿ, ನುಣುಪುನುಣುಪಾಗಿ ತಿಕ್ಕಿ ಹೊಳೆಯುವಂತೆ ಮಾಡಿದ ಜಗಲಿಯ ತಂಪು ನೆಲದ ಮೇಲೆ ಅಂಗತ್ತ ಮಲಗಿ. ಕಾಲುಗಳನ್ನೆತ್ತಿ, ಮೊಮ್ಮಗಳನ್ನು ಪಾದಗಳ ಮೇಲೆ ಕವುಚಿ ಮಲಗಿಸಿ_ “ಭೋರ್ ಭೋರ್ ಭಂಗೀ ಬಂಗಾರಕ್ಕನ ತಂಗೀ” ಎಂದು ಹಾಡುವುದರಲ್ಲಿ ಗರ್ಕನಾಗಿರುತ್ತಿದ್ದ. ಇವರ ಜಗಳದ ಗದ್ದಲ ಕೇಳುವುದು ತೀರ ಅಸಾಧ್ಯವಾದಾಗೊಮ್ಮೆ ಬಾಯಿಮಾಡುತ್ತಿದ್ದ _ “ಸಾಕುಮಾಡಿರೇ ನಿಮ್ಮ ಬಾಯಿಪರ್ತಾಪ…ಬರೇ ಬಾಯಿಮಾತಿನಿಂದಲೇ ತೆವಲು ತೆಗೆದುಕೊಳ್ಳುತ್ತೀರೇನರೇ….” +ನಾಗಪ್ಪನ ಮೋರೆಯ ಮೇಲೆ ನಗು ಮೂಡಿತು. ಮರುಗಳಿಗೆ ಬರೆಯುವ ಕೈ ತಂತಾನೇ ನಿಂತಿತು. ಇನ್ನೂ ಹೆಚ್ಚು ಕಾಲ ಗಿರಿಯಣ್ಣನ ಬಗ್ಗೆ ಬರೆಯುತ್ತ ಕೂತರೆ ಅಪ್ಪ-ಅಮ್ಮ, ಅಣ್ಣ-ತಂಗಿಯರೂ ಮೂಡಿಬಂದಾರು ಎಂದು ಭಯವಾಯಿತು. ಎಷ್ಟೊಂದು ಸರತಿ ಪ್ರಯತ್ನ ಮಾಡಿದರೂ ಅಂಗಿಗೆ ಬೆಂಕಿ ಹತ್ತಿದ ಸನ್ನಿವೇಶ ನೆನಪಾಗುವ ಭಯವಾದೊಡನೆ ಮನಸ್ಸು ಭೂತಕಾಲದಿಂದ ಪಲಾಯನ ಹೇಳುತ್ತಿತ್ತು. ಮೇಲಾಗಿ, ಬಾಲ್ಯದ ಅನೇಕ ಸಂಗತಿಗಳನ್ನು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟವಾಗಿ ನೆನೆಯಬಲ್ಲನಾದರೂ ತನ್ನ ಅನುಭವದಲ್ಲಿಯ ಒಂದು ವಿಶೇಷ ಜಾಗ ಮಾತ್ರ ಬೆಳಕಿಗೆ ಬರಲು ನಿರಾಕರಿಸುತ್ತ ಕತ್ತಲೆಯಲ್ಲೇ ಮುಳುಗಿದ್ದುದರ ಅರಿವು ನಾಗಪ್ಪನಿಗೆ ಇದೆ. ಬೆಂಕಿಯ ಪ್ರಕರಣದ ಬಗ್ಗೆ ಸ್ಪಷ್ಟವಾಗಿ ಬರೆಯುವ ಇಲ್ಲವೇ ಇನ್ನೊಬ್ಬರ ಮುಂದೆ ಹೇಳಿಕೊಳ್ಳುವ ಧೈರ್ಯ ತನಗೆ ಬಂದಿದ್ದರೆ….ಯಾರ ಮುಂದೆ ? ಜಾನಕಿಯ ಮುಂದೆ ? ಸರಕ್ಕನೆ ನೆನಪಾಯಿತು : ಜಾನಕಿಗೆ ಹೆದರಿಯೇ ತಾನು ನಿನ್ನೆ ರಾತ್ರಿ ಹತ್ತುಗಂಟೆಯ ನಂತರವೇ ಮನೆ ಸೇರಿದ್ದು. ಅಷ್ಟು ಹೊತ್ತಿಗೆ ಗಂಡ ಮನೆ ಸೇರಿರಬೇಕು_ಕದ ಮುಚ್ಚಿತ್ತು. +ಬರೆಯುವದು ಅಸಾಧ್ಯವೆನಿಸಿತು. ವಹಿಯನ್ನು ಮುಚ್ಚಿಟ್ಟು ಕಿಡಕಿಗೆ ಬಂದ. ನಸುಕಿನ ತಂಪುಗಾಳಿ ಮೋರೆಗೆ ಬಡಿದಾಗ ಸುಖವೆನಿಸಿತು. ಪ್ರೀತಿಯ ಅಶ್ವಥ್ಥ ಇನ್ನೂ ಕಣ್ಣುತೆರೆದಿರಲಿಲ್ಲ. ಮುಂದಿನ ಮನೆಯ ದತ್ತಭಕ್ತನಿಗೂ ಎಚ್ಚರವಾಗಿರಲಿಲ್ಲ. ದೇವರ ಮುಂದೆ ರಾತ್ರಿಯಿಂದಲೂ ಉರಿಯುತ್ತಿದ್ದ ನಂದಾದೀಪದ ಬೆಳಕು, ಮಬ್ಬುಗತ್ತಲೆ ತುಂಬಿದ ಪರಿಸರದಲ್ಲಿ, ತನ್ನ ಒಂಟಿತನದ ಅರಿವನ್ನು ಇನ್ನಷ್ಟು ತೀವ್ರಗೊಳಿಸಲು ಕಾರಣವಾಯಿತು. ಕೆಳಗೆ ನೋಡಿದ : ರಸ್ತೆಯಂಚಿನಲ್ಲಿ ಚಾರಪಾಯಿಗಳ ಮೇಲೆ ತಲೆಯವರೆಗೆ ಬಿಳಿಯ ಧೋತರದ ಮುಸುಕೆಳೆದು ಗಾಢನಿದ್ದೆ ಸೇರಿದ ಹಾಲಿನಂಗಡಿಯ ಭೈಯಾ: ಇದ್ದಲು ಅಂಗಡಿಯ ಕೋಳಶೆವಾಲಾ ; ಕಬ್ಬಿನ ಗಾಣದ ಮರಾಠಾ, ಚಾರಪಾಯಿಗಳಕೆಳಗಡೆ ಒಂದೆಡೆಯಲ್ಲಿ ನಾಯಿ_ಬಹುಶಃ ಭೈಯಾನದಿರಬೇಕು. ಅದೂ ಮೈಮುದುಡಿ ನಿದ್ದೆಹೋಗಿತ್ತು. ಆ ದೃಶ್ಯ ನೋಡಿ ನಾಗಪ್ಪನಿಗೆ ಅಸೂಯೆಯಾಯಿತು : ಹಾಗೆ ನಿದ್ದೆ ಮಾಡಲು ಬೇಕಾದ ಮನಸ್ಸು ತನಗೂ ಇದ್ದಿದ್ದರೆ ! ಸಾಲೆ ಕಾಲೇಜುಗಳಿಗೆ ಹೋಗಿರದೇ ಹನೇಹಳ್ಳಿಯಲ್ಲಿ ಗದ್ದೆ ಉಳುತ್ತ ಇದ್ದುಬಿಟ್ಟಿದ್ದರೆ…. ಗಿರಿಯಣ್ಣನ ಮಗಳಂತಹಳನ್ನು ಇಲ್ಲ. ಮೈಯಲ್ಲಿ ಸೊಕ್ಕೇರಿದಾಗ ಭಿಡೆ ಬಿಯ್ಟ್ಟು ಗಂಡುಮೈಯನ್ನು ನೇರವಾಗಿ ಹತ್ತಿರ ಕರೆಯುವ ಎದೆಗಾರಿಕೆಯ ಜಾನಕಿಯಂತಹಳನ್ನು ಮದುವೆಯಾಗಿ ಅಪ್ಪನ ಚಾಕೊಂಪೆಯನ್ನೇ ಮುಂದುವರಿಸಿಕೊಂಡು ಹೋಗಿದ್ದರೆ…. +ರುಷಕ್ಕೆರಡು ಸೀರೆಗಳನ್ನು ಕೊಳ್ಳುತ್ತಿದ್ದ ಅಮ್ಮ, ಗಿಡ್ಡಪಂಚೆಯೊಂದನ್ನು ಬಿಟ್ಟರೆ ಬರಿ ಮೈಯಲ್ಲೇ ಅಂಗಡಿಯಲ್ಲಿ ಕೂಡ್ರುತ್ತಿದ್ದ ಅಪ್ಪ, ‘ಇತ್ತು’ ಅನ್ನುವುದಕ್ಕೆ ಎದೆಯಲ್ಲಿ ದಪ್ಪ ಜನಿವಾರವಿತ್ತು. ಹೆಗಲ ಮೇಲೆ ಒಂದು ಪಂಚೆಯ ತುಂಡು. ತನಗೋ ಸಾಲೆಗೆ ಹೋಗುವಾಗಷ್ಟೇ ಗಿಡ್ಡ ಚೆಡ್ಡಿ, ಅಂಗಿ. ತಲೆಗೆ ಒಂದು ಬಿಳಿಯ ಟೋಪಿ. ಕಾಲಿಗೆ ಚಪ್ಪಲಿ ಬಂದದ್ದು ಹಾಯ್‌ಸ್ಕೂಲು ಬಿಟ್ಟ ನಂತರವೇ. ತನ್ನ ಕೇರಿಯ ಕ್ರಿಶ್ಚನ್ ಹಾಗೂ ಶೂದ್ರ ಮಕ್ಕಳೊಡನೆ ಆಡುವಾಗ ಅವರಂತೆಯೇ ತಾನು ಕಚ್ಚೆ ಉಟ್ಟು ಓಡಾಡುತ್ತಿದ್ದ : ಫಿರೋಜ್ ಅಪ್ಪನ ವೃತ್ತಿಯನ್ನು ಕುರಿತು ಕೇಳಿದ ಪ್ರಶ್ನೆಗೆ ಉತ್ತರ ಕೊಡಲು, ನಾನು ಹಿಂದೆ ಮುಂದೆ ನೋಡಿದ್ದು. ಉತ್ತರ ಕೊಟ್ಟ ಮೇಲೆ ಫಿರೋಜ್ ಓ ! ಎಂದು ತಾತ್ಸಾರ ತೋರಿಸಿದ್ದು ಮತ್ತೊಮ್ಮೆ ನೆನಪಿಗೆ ಬಂತು. ಅವನ ತಾತ್ಸಾರಕ್ಕೆ ಸವಾಲಾಗಿಯೇ ಎಂಬಂತೆ ಇನ್ನೊಮ್ಮೆ ಹನೇಹಳ್ಳಿಯಲ್ಲಿ ಬೇರುಬಿಟ್ಟ ತನ್ನ ವ್ಯಕ್ತಿತ್ವದ ರೂಪವನ್ನು ನಿರ್ಧರಿಸಿದ ಬಾಲ್ಯವನ್ನು ನೆನೆದುಕೊಂಡ : ಗಿರಿಯಣ್ಣ, ಹೊನ್ನಪ್ಪ, ಅಗೇರ ಎಂಕೂ, ಮಾರ್ಕುಂಡೀ ; ಮುಂದಿನ ಕೇರಿಯ ಕಲಾಯಿಕಾರ ಶೇಖ್ ಫರೀದ್ ; ಎಣ್ಣೆಯ ಗಾಣದ ಸಾವೇರ ; ಮಿಠಾಯಿ ಅಂಗಡಿಯ ಗಣಪಯ್ಯ ಶೆಟ್ಟಿ : ಚಮ್ಮಾರ ದೇವೂ ; ಮಡಿವಾಳ ಮಾದೇವ ; ಸೂಲಗಿತ್ತಿ ಸಂತಾನ ; ನಾಯಿಂದ ಈರ ; ಸೊನ್ನಾರ ರಾಯ್‌ಶೆಟ್ಟಿ ; ಸೂಳೆಯರಾದ ಉತ್ತಮಿ, ಬೀರಮ್ಮ, ನಾಗಮ್ಮ ; ಬೇಲಿಗಳು ; ಗದ್ದೆ, ಬೆಲ್ಲಗಡ್ಡೆ, ಕಲ್ಲಂಗಡಿಯ ಓಳುಗಳು : ಬೇಣ, ಕರಡುಹುಲ್ಲು, ಮೊಗೆಕಾಯಿ ಬಳ್ಳಿಗಳು ; ಗೇರುಹಕ್ಕಲುಗಳು ; ಗುಮ್ಟೆಪಾಂಗುಗಳು ; ಬಣ್ಣಬಣ್ಣದ ಪತಾಕೆಗಳಿಂದ ಲಕಲಕಿಸುವ ತೇರು ; ಬಂಡೀ ಹಬ್ಬಗಳು ; ಬದುಕಿಗೆ ತೀರ ಹತ್ತಿರ ತಂದು ಸುಖ ಕೊಟ್ಟ ಅಲ್ಲಿಯ ಓಣಿಗಳು; ಧೂಳಿ ತುಂಬಿದ ರಸ್ತೆಗಳು ; ನಡುವೆಯೇ ! ಈವರೆಗೂ ನೆನಪಿಗೆ ಬಂದಿರದ ಒಂದು ಚಿತ್ರ ; ಶ್ರಾವಣಮಾಸದಲ್ಲಿ ರವಿವಾರ ದಿನ ಅಮ್ಮ ಸೂರ್ಯನನ್ನು ಪೂಜಿಸುತ್ತಿದ್ದುದರ ನೆನಪು : ಪೂಜೆಗಾಗಿ ಅನೇಕ ತರದ ಹೂವು, ದೂರ್ವೆಯ ಗರಿಕೆ, ಇವುಗಳ ಜೊತೆ ಓಣಿಯ ಪಾಗಾರದ ಮೇಲೆ ಮಳೆಗಾಲದಲ್ಲಷ್ಟೇ ಬೆಳೆಯುವ ಹಲವು ಜಾತಿಯ ಗಿಡಗಳ ಎಲೆಗಳನ್ನು (ಅಕ್ಕಾರಕ್ಕೆ ತಕ್ಕಂತೆ ಹೆಸರುಗಳು : ಹುಲಿಯ ಪಂಜ ; ಆಕಳ ಕಿವಿ ; ಬೆಕ್ಕಿನ ತರಡು’ ಕುದುರಯ ಖುರ ಇತ್ಯಾದಿ) ಕಿತ್ತು ತರುವಾಗ ಕಚ್ಚೆ ಉಟ್ಟು ಮಳೆಯಲ್ಲಿ ನೆನೆಯುತ್ತ ಓಣಿಯಲ್ಲಿ ಮೊಣಕಾಲಿನವರೆಗೆ ತುಂಬಿದ ನೀರಿನಲ್ಲಿ ಆಡುತ್ತ ಕೇರಿಯ ಹುಡುಗ ಹುಡುಗಿಯರೊದಿಗೆ ಕೇಕೆ ಹಾಕಿದ ದಿನಗಳು : ಬಂದ ನೆನಪಿಗೆ ಸಿಟ್ಟುಬಂದು ಮೂಗಿನ ಹೊರಳೆಗಳು ಅರಳಿದವು. ಂಟಟ veಡಿಥಿ soಠಿhisಣiಛಿಚಿಣeಜ ಛಿಡಿoತಿಜ, ಥಿou see” _ಮೇರಿಯ ಮಾತುಗಳು ನೆನಪಿಗೆ ಬಂದವು. ಃuಟಟ-shiಣ….ಖಿo heಟಟ ತಿiಣh ಥಿou ಚಿಟಿಜ ಥಿouಡಿ soಠಿhisಣiಛಿಚಿಣioಟಿ, ಫಿರೋಜ್ ಹಾಗೂ ಮೇರೀ, ಹಾಗೂ ಡಾಯನಾ ಹಾಗೂ ಥ್ರೀಟೀ ಹಾಗೂ….ಈ ವ್ಯವಸಾಯದ ಜಗತ್ತೇ ತನ್ನ ಪ್ರೀತಿಯ ಹನೇಹಳ್ಳಿಯನ್ನು ಹೀಯಾಳಿಸಿ ನಗುತ್ತದೆ ಎಂಬ ಕಲ್ಪನೆಯಿಂದ ಕ್ಷೋಭೆಗೊಂಡು ಕಿಡಕಿಯನ್ನು ಬಿಟ್ಟು ನಿಂತ. ತನ್ನ ವ್ಯಕ್ತಿತ್ವಕ್ಕೆ ಒಗ್ಗಿದ ಜಗತ್ತೇ ಅಲ್ಲವಿದು. ಆದರೂ ತನಗೆ ಪ್ರಿಯವಾದ ಜಗತ್ತಿಗೆ ಹಿಂದಿರುಗುವದೂ ಅಸಾಧ್ಯವಾಗಿತ್ತು ; ಪಂಜರದಲ್ಲಿ ಸಿಕ್ಕಿಬಿದ್ದ ಇಲಿಯ ಹಾಗೇ ವಿಲಿವಿಲಿ ಒದ್ದಾಡುವ ಭಾವನೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಯಿತು. +ಪ್ರಾತರ್ವಿಧಿಗಳನ್ನು ಮುಗಿಸುತ್ತಲೇ ಎಲ್ಲಾದರೂ ದೂರ ತಿರುಗಾಡಿ ಬರೋಣ, ಅನ್ನಿಸಿತು : ಬರುವಾಗ ಉಪಾಹಾರಕ್ಕೆ ಯಾವುದಾದರೂ ಉಡುಪಿ ರೆಸ್ಟೋರೆಂಟಿಗೆ ಹೋದರಾಯಿತು. ಹಾಗೇ, ಪೋಸ್ಟಾಫೀಸಿಗೆ ಹೋಗಿ ರಾಣಿಗೆ ಮನಿ-ಆರ್ಡರ್ ಮಾಡಬೇಕು. ಮತ್ತು ಬ್ಯಾಂಕಿಗೆ ಹೋಗಿ ಖಾತೆ ಪುಸ್ತಕವನ್ನು ಹೊಂದಿಸಿಕೊಂಡು ಬರಬೇಕು. ಅಂದರೆ, ಕ್ಷೌರ, ಸ್ನಾನ ಮುಗಿಸಿಕೊಂಡೇ ಹೋದರೆ ಒಳ್ಳೆಯದು ಈವತ್ತು ಶುಕ್ರವಾರ. ಇಂದೂ ಖಂಬಾಟಾನಿಂದ ಚೀಟಿ ಬರದಿದ್ದರೆ ಮತ್ತೆ ಅವನಿಂದ ಕೇಳುವದು ಸೋಮವಾರವೇ. ಸಾಧ್ಯವಾದರೆ ಶನಿವಾರ. ಹಾಗೂ ರವಿವಾರ ತಾನಾಗಿಯೇ ತನ್ನ ಹಿಂದಿನ ಕೆಲವು ಗೆಳೆಯರನ್ನು ಕಂಡುಬರಬೇಕು : ಮುಖ್ಯವಾಗಿ ಸೀತಾರಾಮ ಹಾಗೂ ವೋಮೂ ಇವರನ್ನು, ಸೀತಾರಾಮನ ಜೊತೆಗೆ ಗಿಲ್ಬರ್ಟ ಅಷ್ಟಾಗಿ ಹೇಳಿದ ಚೆಶಾಯರ್ ಹೋಮಿಗೂ ಹೋಗಬೇಕು. ‘ಸ್ಟ್ರ್ಯಾಂಡ್-ಬುಕ್-ಸ್ಟಾಲಿ’ನ ಶಾನಭಾಗರನ್ನೂ ಕಂಡುಬರಬೇಕು. ಒಂದು ಐನೂರು ರೂಪಾಯಿಯ ಸೇಲ್ಸಮನ್ನನ ಕೆಲಸ ಕೊಡದೇ ಇರಲಿಕ್ಕಿಲ್ಲ. ೧೮ ವರ್ಷಗಳ ಹಿಂದೆ ನೌಕರಿ ಸಿಕ್ಕಾಗಿನ ಆರಂಭದ ಸಂಬಳವಿದು. ತನಗೀಗ ಅದರ ಐದು ಪಟ್ಟಿಗಿಂತ ಹೆಚ್ಚಿನ ಸಂಬಳ. ಆದರೂ ಬೇಡ_ಈ ಸ್ಪರ್ಧೆ ! ಈ ಹಗೆ ! ಸುಳ್ಳು-ಅಮಿಷಗಳ ಹಿಂದೆ ಓಡಿ ಸುಳ್ಳಾಗುವ ಈ ಜಂಜಾಟದ ಬದುಕು…. +ನಾಗಪ್ಪ ಬೆಳಿಗ್ಗೆ ನಿಶ್ಚಯಿಸಿಕೊಂಡ ಕಾರ್ಯಕ್ರಮವನ್ನು ಮುಗಿಸಿ ಮತ್ತೆ ಮನೆ ಸೇರುವ ಹೊತ್ತಿಗೆ ೧೦-೩೦. ಆಗಲೇ ಚಾಳಿನ ಗಂಡಸರೆಲ್ಲ ತಮ್ಮ ತಮ್ಮ ಆಫೀಸುಗಳಿಗೆ ಹೋಗಿಯಾಗಿತ್ತು. ಮಗ್ಗುಲಮನೆಯ ಕದಕ್ಕೆ ಬೀಗವಿತ್ತು. ಮನೆಯ ಕದ ತೆರೆಯುವಾಗ ಅನ್ನಿಸಿದ ಒಂದು ಬಗೆಯ ನಿರಂಬಳತೆಗೆ ನಾಗಪ್ಪನಿಗೆ ನಗು ಬಂತು : ಪಾಪ, ಜಾನಕಿಯ ಪ್ರಾಯ ತುಂಬಿ ತುಳುಕಾಡುವ ದೇಹ ಸೌಷ್ಠವಕ್ಕೆ ಹೆದರಿಕೊಂಡ ತಾನೇ ಅವಳ ಹಾವಭಾವಕ್ಕೆ ಇಲ್ಲದ ಅರ್ಥ ಹಚ್ಚುತ್ತಿರಬಹುದು…. +ಕದ ತೆರೆದರೆ ಎರಡು ಪತ್ರಗಳು : ಎರಡೂ ಯಾರೂ ಖುದ್ದು ಬಂದು ಕದದ ಕೆಳಗಿನ ಕಿಂಡಿಯೊಳಗಿಂದ ತೂರಿ ಹೋದವುಗಳು. ಒಂದು ಆಫೀಸಿನದು_ಬಹುಶಃ ಪ್ರಭಾಕರ ಬಂದಿರಬೇಕು. ಇಲ್ಲ, ಖಂಬಾಟಾನ ಡ್ರೈವರ್. ಇನ್ನೊಂದು ಯಾರದೆಂಬುದು ತಿಳಿಯಲಿಲ್ಲ. ಒಡೆದು ಅದನ್ನೇ ಮೊದಲು ಓದಿದ_ಶ್ರೀನಿವಾಸ ಅವನ ಪ್ರೆಸ್ಸಿನ ಆಳಿನೊಂದಿಗೆ ಕಳಿಸಿದ ಸಣ್ಣ ಚೀಟಿ : “ನಾಳೆ ಪ್ರೆಸ್ಸಿಗೆ ಸೂಟಿ, ಮನೆಯಲ್ಲೇ ಇರುತ್ತೇನೆ. ಮಧ್ಯಾಹ್ನದ ಊಟಕ್ಕೆ ನಮ್ಮಲ್ಲೇ ಬಾ. ಒಂದು ಮಹತ್ವದ ವಿಷಯ ನಿನ್ನ ಹತ್ತಿರ ಮಾತನಾಡುವದಿದೆ.” ತನ್ನ ಹತ್ತಿರ ಮಾತನಾಡುವ ವಿಷಯ ಯಾವುದಿರಬಹುದು ಎಂದು ಆಶ್ಚರ್ಯ ಪಡುತ್ತಿರುವಾಗಲೇ ‘ಸಂತೋಷಭವನ’ದ ನಾಯಕ ಹೇಳಿದ ಮಾತು ನೆನಪಾಯಿತು : ಅಂತೂ ಫಿರೋಜನ ತನಿಖೆಗೆ ಮೊದಲು ಈ ಒಂದೂ ಮಗನ ತನಿಖೆಗೆ ಆರಂಭವಾಗುತ್ತದೆಯೇನೋ, ಆಗಲಿ. ತನ್ನ ಪೂರ್ವಜರ ಮೂಲಕ್ಕೆ ಕೈಹಾಕುವ ಇವರ ನೀರನ್ನಾದರೂ ನೋಡೋಣ. ಎಂದುಕೊಂಡ. ಆದರೆ ನಾಗಪ್ಪನಿಗೆ ಅರ್ಥವಾಗದ ಸಂಗತಿಯೆಂದರೆ_ಇದೆಲ್ಲ ಹೀಗೇ ಒಂದೇ ಕಾಲಕ್ಕೆ ಕೂಡಿಬರುತ್ತಿದ್ದುದಾದರೂ ಹ್ಯಾಗೆ ಎನ್ನುವದು. ನಾಗಪ್ಪನಿಗೆ ಮೊದಲ ಬಾರಿ ಜನ್ಮಕುಂಡಲಿಯಲ್ಲಿ ವಿಶ್ವಾಸ ಮೂಡುತ್ತಿರುವುದು ಭಯವಾಯಿತು. ಇದೇ ವಿಷಯದ ಮೇಲೆ ಅರ್ಜುನ್‌ರಾವನೊಡನೆ ವಾದಿಸಿ ಜಗಳವಾಡಿದ್ದ….. +ತಾನು ಇನ್ನೊಂದು ಪತ್ರವನ್ನು ತೆರೆಯಲು ಹಿಂಜರಿಯುತ್ತಿದ್ದೇನೆಯೇ ? ಎಂದು ಅನುಮಾನಿಸುತ್ತ ಅದನ್ನು ತೆರೆದ : ಪತ್ರ ಖಂಬಾಟಾನದಾಗಿತ್ತು : “ತನಿಖೆ ಕಾರಣಾಂತರದಿಂದ ಸೋಮವಾರದ ತನಕ ಮುಂದೂಡಲಾಗಿದೆ. ನೀನು ಬಯಸಿದ ಹಾಗೆ ಆ ದಿನ ಬೆಳಿಗ್ಗೆ ಸರಿಯಾಗಿ ೯-೩೦ಕ್ಕೆ ಕಾರನ್ನು ಕಳಿಸುತ್ತೇನೆ. ಡ್ರೈವರ್ ಅಬ್ದುಲ್ ಬಂದು ನಿನ್ನನ್ನು ಕಾಣುತ್ತಾನೆ. ನೀನು ಅಷ್ಟು ಹೊತ್ತಿಗೆ ತಯಾರಾಗಬೇಕೆಂದು ಕೇಳಿಕೊಳ್ಳುತ್ತೇನೆ. ತನಿಖೆ ತಾಜಮಹಲ್ ಹೊಟೆಲ್ಲಿನಲ್ಲಿ ನಡೆಯುತ್ತದೆ. ರೂಮ್ ನಂಬರ್ ೭೧೭ ರಲ್ಲಿ. ಸರಿಯಾಗಿ ೧೦-೩೦ ಗಂಟೆಗೆ. ತನಿಖೆಯ ಆಯೋಗದಲ್ಲಿ ಆ‌ಒ‌ಆ ಯವರ ಹೊರತಾಗಿ ಇನ್ನಿಬ್ಬರು ಡೈರೆಕ್ಟರರು ಇರುತ್ತಾರೆ. ಅವರ ಹೆಸರುಗಳು ತನಿಖೆಯ ವೇಳೆಗೆ ಅವರಿಂದಲೇ ನಿನಗೆ ತಿಳಿಯುತ್ತದೆ. ನಿನಗೆ ನಿಷ್ಕಾರಣವಾಗಿ ಹಾನಿ ತಯ್ಟ್ಟಬಾರದು ಎಂಬ ಉದ್ದೇಶದಿಂದ ಶಕ್ಯವಿದ್ದ ಎಲ್ಲ ಜಾಗ್ರತೆ ತೆಗೆದುಕೊಳ್ಳಲಾಗಿದೆ : ತನಿಖೆಯ ಮುಖ್ಯ ಉದ್ದೇಶ ನಿನ್ನಿಂದ ಕೆಲ ಮಾಹಿತಿಯನ್ನು ದೊರಕಿಸುವದೇ ಆಗಿದೆಯೇ ಹೊರತು ಯಾವುದೇ ಬಗೆಯ ಮಾನಸಿಕ ಒತ್ತಡಕ್ಕೆ ನಿನ್ನನ್ನು ಗುರಿಪಡುಸುವುದಾಗಿಲ್ಲ ಎಂದು ನಿನಗೆ ತಿಳಿಸುವಂತೆ ಆ‌ಒ‌ಆ ಯವರು ಮುದ್ಧಾಮ್ ಕೇಳಿಕೊಂಡಿದ್ದಾರೆ….”ಪತ್ರದಲ್ಲಿ ಒಥಿ ಜeಚಿಡಿ ಓಚಿgಟಿಚಿಣh ಎಂಬ ಆರಂಭ ಹಾಗೂ ತಿiಣh ಞiಟಿಜesಣ ಡಿegಚಿಡಿಜs ಎಂಬ ಕೊನೆ ಹಾಗೂ ಖಂಬಾಟಾನ ಲಂಬಾಜೌಡಾ ಸಹಿ ಇವಷ್ಟೇ ಪೆನ್ನಿನಲ್ಲಿ ಬರೆದ ಅಕ್ಷರಗಳಾಗಿದ್ದವು. ಉಳಿದದ್ದೆಲ್ಲ ಟ್ಯಾಪ್ ಮಾಡಿದ್ದಾಗಿತ್ತು. ಪತ್ರದ ಒಟ್ಟೂ ಧಾಟಿ ನೋಡಿದರೆ, ತಾನು ಖಂಬಾಟಾಗೆ ಆಡಿದ ಕಟ್ಟುನಿಟ್ಟಿನ ಮಾತುಗಳು ವ್ಯರ್ಥ ಹೋಗಿಲ್ಲ ಎಂಬುದು ಸ್ಪಷ್ಟವಿತ್ತು. ಒ‌ಆ ಯವರ ಮನಸ್ಸಿನ ವಿರುದ್ಧ ಕೈಗೊಂಡ ತನಿಖೆ ತನ್ನ ವಿರುದ್ಧ ಹೋಗುವ ಭಯ ಫಿರೋಜನಿಗಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ ! ಪತ್ರದ ಪ್ರತಿಯೊಂದನ್ನು ಇಟ್ಟುಕೊಂಡಿರಬೇಕು. ಖಂಬಾಟಾ, ಇಟ್ಟುಕೊಳ್ಳಲಿ, ತನಿಖೆ ಮುಗಿದ ಮೇಲೆ ಬೇಕಾದರೆ ಜೇನುತುಪ್ಪ ಹಚ್ಚಿ ಚೆನ್ನಾಗಿ ನೆಕ್ಕಲಿ_ತನಗೇನಂತೆ ! ರೆಡ್ಡಿ ಕೊಟ್ಟ ಪತ್ರವನ್ನು ಓದುವ ಮೊದಲೇ ಹರಿದೊಗೆಯಬಾರದಿತ್ತು. ಅದರಲ್ಲಿ ಉಲ್ಲೇಖಿಸಿದ ಫಿರೋಜನ ಲಫಡಾಗಳಾದರೂ ಏನೇನು ಎನ್ನುವದು ಗೊತ್ತಾಗುತ್ತಿತ್ತು…. +ಆದರೂ ನಾಗಪ್ಪ ತನ್ನಷ್ಟಕ್ಕೇ ಖುಶಿಯಾಗಿದ್ದ. ಅಂತೂ ಇನ್ನೆರಡು ದಿನಗಳಲ್ಲೇ ಇದೆಲ್ಲದರ ಇತ್ಯರ್ಥವಾಗುತ್ತದೆಯಲ್ಲ_ಕೊನೆಗೊಮ್ಮೆ, ಎಂಬ ವಿಚಾರದಿಂದಲೋ, ತನಿಖೆಯ ಮುಖ್ಯ ಉದ್ದೇಶ ತನ್ನಿಂದ ಮಾಹಿತಿಯನ್ನು ದೊರಕಿಸಿಕೊಳ್ಳುವುದೇ ಆಗಿದೆ ಎಂದು ಆ‌ಒ‌ಆ ಯವರು ಕೊಟ್ಟ ಭರವಸೆಯಿಂದಲೋ_ಕಳಕೊಂಡ ಗೆಲುವನ್ನು ತಿರುಗಿ ಪಡೆದಿದ್ದ : ಮಧ್ಯಾಹ್ನದ ಊಟಕ್ಕೆ ‘ಶೇರ್-ಏ-ಪಂಜಾಬಿ’ಗೇ ಹೋಗಬೇಕು. ಚಿಕನ್ ಬಿರ್ಯಾಣಿಯ ಜೊತೆಗೆ ಬಿಯರ್ ಕುಡಿಯಬೇಕು. ತಿರುಗಿ ಬಂದ ಮೇಲೆ ಗಡದ್ದಾಗಿ ನಿದ್ದೆ ಮಾಡಬೇಕು. ಈವತ್ತೂ ಜಾನಕಿ ರಾತ್ರಿಯ ಊಟಕ್ಕೆ ತಮ್ಮಲ್ಲೇ ಬಾ ಎಂದರೆ ಹೋಗಬೇಕು….. uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತೊಂಬತ್ತು – +ಬಿಯರಿನ ಸುಖದಾಯಕ ಅಮಲಿನಲ್ಲಿ ಗಡದ್ಧಾಗಿ ನಿದ್ದೆ ಮಾಡಿ ಏಳುವ ಹೊತ್ತಿಗೆ ಮಧ್ಯಾಹ್ನದ ನಾಲ್ಕು ಗಂಟೆ. ತುಂಬ ಪ್ರಸನ್ನ ಮನಃಸ್ಥಿತಿಯಲ್ಲಿರುವಾಗಲೇ ಎಚ್ಚರಗೊಂಡು ಹಾಸಿಗೆಯಲ್ಲಿ ಕೂತವನು, ಚಾಳಿನ ತುಂಬ ಹರಡಿಕೊಂಡ ನಿಶ್ಯಬ್ದ ಕಿವಿಗೆ ಬಡಿದಂತಾಗಿ, ಅರೆ ! ಎಂದುಕೊಂಡ. ಗಂಡಸರೆಲ್ಲ ಕೆಲಸಕ್ಕೆ ಹೋಗಿದ್ದರಿಂದ ಚಾಳುಗಳಲ್ಲಿ ಹೆಂಗಸರಷ್ಟೇ. ಮಕ್ಕಳು ಕೂಡ ಸಾಲೆ ಕಾಲೇಜುಗಳಿಗೆ ಹೋಗಿರಬೇಕು. ತಾನೊಬ್ಬನು ಮಾತ್ರ ಕಾಯಿಲೆಯಾದವನ ಹಾಗೆ ಇಡೀ ದಿನ ಮನೆಯಲ್ಲಿರಬೇಕಾದ ಪರಿಸ್ಥಿತಿಯ ನೆನಪು ಮತ್ತೆಲ್ಲಿ ತನ್ನ ಇದೀಗಿನ ಖುಶಿಯ ಮೂಡನ್ನು ಕೆಡಿಸೀತೋ ಎನ್ನುವ ಭಯವಾಗಿ ಹಾಸಿಗೆ ಬಿಟ್ಟು ಎದ್ದವನೇ ಮೋರಿಗೆ ಹೋಗಿ ಐದು ಮಿನಿಟುಗಳವರೆಗೆ ನಲ್ಲಿಯ ನೀರನ್ನು ಒಂದೇ ಸಮನೆ ಮೋರಿಗೆ ತೋಕುತ್ತ ನಿಂತ. ಬಿಯರಿನ ಅಮಲು ಸಂಪೂರ್ಣವಾಗಿ ಇಳಿದು ಕಣ್ಣು ಮನಸ್ಸುಗಳೆರಡೂ ಈಗ ತಿಳಿಯಾಗಿವೆ ಎಂದೆನ್ನಿಸುವ ಹೊತ್ತಿಗೆ ಚಹ ಕುಡಿಯುವ ತಲಬು ಬಂದಿತು. ಅದರ ಜೊತೆಗೇ ಜಾನಕಿಯ ನೆನಪು. ಅಂದಹಾಗೆ ಜಾನಕಿ, ತನ್ನ ಮನಸ್ಸಿನ ಮೇಲೆ ತಾನು ತಿಳಿದದ್ದಕ್ಕಿಂತ ಹೆಚ್ಚು ಪ್ರಭಲವಾದ ಪ್ರಭಾವ ಬೀರಿರಬಹುದೇ ? ನಿನ್ನೆ ರಾತ್ರಿಯಿಂದಲೂ ಅವಳ ನೆನಪು ಆಗೀಗ ಕಾಡುತ್ತಲೇ ಇದೆ. ತುಂಬ ಕಾಮುಕಳಾದ ಹೆಣ್ಣು. ನಿನ್ನೆ ಸಂಜೆಯಿಂದ ತಿರುಗಿ ಕಣ್ಣಿಗೆ ಬೀಳಲೇ ಇಲ್ಲವಲ್ಲ. ಮನೆಯಲ್ಲೇ ಇದ್ದಂತಿಲ್ಲ. ಮಧ್ಯಾಹ್ನ ಊಟಮಾಡಿ ಬರುವಾಗಲೂ ಕದಕ್ಕೆ ಬೀಗವಿದ್ದಹಾಗಿತ್ತು. ಚಹಕ್ಕೆ ಕೆಳಗಿನ ರೆಸ್ಟೋರೆಂಟಿಗೇ ಹೋದರಾಯಿತು. ಸ್ಟೋವ್ ಹೊತ್ತಿಸುವುದೆಂದರೆ ಬೇಸರವೆನಿಸುತ್ತದೆ. ಆಫೀಸಿಗೆ ಹೋಗುವುದನ್ನು ನಿಲ್ಲಿಸಿದಂದಿನಿಂದ ತಾನು ಸೋಮಾರಿಯಾಗುತ್ತಿದ್ದೇನೆಯೇ ? ಮದುವೆಯಾದರೆ ಹೇಗೆ ? ಈಗಿನ ನೌಕರಿಯನ್ನು ಬಿಡಬೇಕಾಗಿ ಬಂದರೆ ಹಳ್ಳಿಯ ಹೆಣ್ಣನ್ನೇ ಮದುವೆಯಾಗುತ್ತೇನೆ_ಜಾನಕಿಯಂತವಳನ್ನು ! ರಾಣಿಯನ್ನೇ ಮದುವೆಯಾದರೆ ಹೇಗೆ ?…ತನ್ನಷ್ಟಕ್ಕೇ ಖುಶಿಯಿಂದ ನಕ್ಕ. ತಾನು ಪಡುತ್ತಿದ್ದ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಲಲು ಇಂತಹದನ್ನೆಲ್ಲ ಯೋಚಿಸುತ್ತಿದ್ದೇನೆ ಎಂಬ ಅರಿವು ಬಂದು_ಏ ಬೋಳೀಮಗನೇ ಎಂದು ಬಹಳ ಖುಶಿಯಿಂದ ತನ್ನನ್ನು ತಾನೇ ಬೈದುಕೊಂಡ. +ಈಗ ಕೆಳಗೆ ಹೋಗುತ್ತಿದ್ದದ್ದು ಬರಿಯೆ ಚಹ ಕುಡಿಯುವುದಕ್ಕಾದರೂ ಟ್ರಂಕಿನೊಳಗಿಂದ ತನ್ನ ಪ್ರೀತಿಯ ನೀಲೀಬಣ್ಣದ ಬುಶ್-ಶರ್ಟ್ ಹಾಗೂ ಕ್ರೀಮ್-ಕಲರ್ ಟೆರ್ರೀಕಾಟ್ ಪ್ಯಾಂಟ್ ತೆಗೆದ. ಅವನ್ನು ಹಾಕಿಕೊಳ್ಳುವಾಗ_‘ಇದು ನಿನ್ನೆ ಮೇರಿ ಫೋನ್ ಮೇಲೆ ಫಿರೋಜನ ಉಡುಪನ್ನು ಬಣ್ಣಿಸಿದ ರೀತಿಗೆ ಪ್ರತಿಕ್ರಿಯೆಯಲ್ಲವೇನೋ ?’ ಎಂದು ಒಳಗಿನಿಂದ ಎದ್ದ ಆಕ್ಷೇಪಣೆಯನ್ನು ಲಕ್ಷ್ಯಕ್ಕೆ ತಂದುಕೊಳ್ಳದೇ, ಯಾರಿಗೆ ಗೊತ್ತು_ಇದರಲ್ಲಿ ಜಾನಕಿಯ ಮೇಲೆ ಛಾಪು ಹಾಕುವ ಉದ್ದೇಶವಿದ್ದರೂ ಇದ್ದೀತು ಎಂದುಕೊಂಡ. ಕನ್ನಡಿಯ ಎದುರು ನಿಂತು ತನ್ನನ್ನು ತಾನೇ ಮೆಚ್ಚಿಕೊಳ್ಳುತ್ತಿರುವಾಗ ಹಿಂದೊಮ್ಮೆ ಮೇರಿ ಇದೇ ಡ್ರೆಸ್ಸನ್ನು ಮೆಚ್ಚುತ್ತ_Iಣ goes so ತಿeಟಟ oಟಿ ಥಿou ಎಂದದ್ದು ನೆನಪಾಗಿ ನಾಲಗೆಯ ತುದಿಯವರೆಗೆ ಬಂದ ಬಯ್ಗಳನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡ : ಮೇರಿ ತಾನು ತೊಟ್ಟ ಬುಶ್-ಶರ್ಟನ್ನು ಹೊಗಳುತ್ತ ಅಂದಿದ್ದಳು_‘ಬುಶ್-ಶರ್ಟನ್ನು ಹಾಕಿಕೊಂಡಾಗ ಎಲ್ಲಕ್ಕೂ ಮೇಲಿನ ಎರಡು ಗುಂಡಿಗಳನ್ನು ಹಾಕಬಾರದು. ಮೇಲಾಗಿ_‘ಙou hಚಿve suಛಿh ಚಿ bಡಿoಚಿಜ ಛಿhesಣ ಚಿಟಿಜ ಣhiಛಿಞ ಟಿeಛಿಞ…. ಆoಟಿ’ಣ ಥಿou ಞಟಿoತಿ giಡಿಟs ಟiಞe ಣhe hಚಿiಡಿಥಿ ಛಿhesಣ ಣhಚಿಣ ಠಿeeಠಿs ಣhಡಿough ಣhe oಠಿeಟಿ ಛಿಚಿಟಟಚಿಡಿ….?’ ಆಗ ಯಾವ ರೀತಿಯಿಂದ ಪ್ರತಿಕ್ರಿಯಿಸಿದ್ದೆನೋ ಎನ್ನುವುದು ಅವನಿಗೆ ನೆನಪಿಲ್ಲ. ಆದರೆ ಈಗ ಬಂದ ನೆನಪಿನಿಂದ ಮಾತ್ರ_ಬುಶ್-ಶರ್ಟಿನ ಎಲ್ಲ ಗುಂಡಿಗಳನ್ನೂ ಭದ್ರವಾಗಿ ಸಿಕ್ಕಿಸಿಕೊಳ್ಳುವಾಗ, ತುಸು ಮ್ಲಾನಗೊಂಡ : ಣhe hಚಿiಡಿಥಿ ಛಿhesಣ_mಥಿ ಜಿooಣ ಎಂದುಕೊಳ್ಳುತ್ತ ಕದದ ಸಮೀಪದ ಸ್ಟೂಲಿನ ಮೇಲೆ ಕೂತಾಗ ಬೂಟು ಹಾಕಿಕೊಳ್ಳುವ ಹುಕ್ಕಿ ಬಂದಿತು. ಬೂಟುಗಳನ್ನು ಅರಿವೆಯ ಚಿಂದಿಯಿಂದ ಚೆನ್ನಾಗಿ ಉಜ್ಜಿ ಲಕಲಕಿಸುವಂತೆ ಮಾಡಿ ಒಂದು ಕಾಲಿನ ಚೀಲ ಹಾಗೂ ಬೂಟು ಹಾಕಿಕೊಂಡು ಇನ್ನೊಂದು ಕಾಲಿನ ಚೀಲವನ್ನು ಹಾಕಿಕೊಳ್ಳಬೇಕು ಎಂದು ಕೈಗೆ ಎತ್ತಿಕೊಂಡಿದ್ದನಷ್ಟೇ_ನಡುವೆಯೇ ಬಂದ ಒಂದು ಹುಚ್ಚು_ವಿಕಾರಕ್ಕೆ ಸ್ಟೂಲಿನಿಂದ ಎದ್ದು ಕದ ತೆರೆದು ಮಗ್ಗುಲುಮನೆಯ ಕದಕ್ಕೆ ಇನ್ನೂ ಬೀಗವೆದೆಯೇ ಎಂದು ನೋಡುವುದಕ್ಕೂ ಅರ್ಜುನ್‌ರಾವರ ಮುದಿ ತಾಯಿ ಸಂಡಾಸಿಗೆ ಹೋಗಿ ಹಿಂತಿರುಗಿ ಬರುವುದಕ್ಕೂ ಸರಿಯಾಯಿತು : +‘ಯಾರು_ಜಾನಕಿ ಬೇಕಿತ್ತೇ ? ಅವರು ಯಾರೂ ಇಲ್ಲ. ಬೆಳಿಗ್ಗೇ ತವರು ಮನೆಗೆ ಹೋಗಿದ್ದಾಳೆ_ಕಲ್ಯಾಣಕ್ಕೆ. ಗಂಡನೇ ಕಳಿಸಿಕೊಟ್ಟ.’ ಎಂದ ಮುದುಕಿಯ ಮೋರೆಯ ಮೇಲೆ ವ್ಯಕ್ತವಾದ_ಜಿಗುಪ್ಸೆಗೆ ಹತ್ತಿರವಾದ_ಭಾವನೆಯ ಅರ್ಥ ಹೊಳೆಯದೇ ನಾಗಪ್ಪ ಗೊಂದಲಿಸಿದ. ತತತ ಪತತ ಮಾಡುತ್ತ ಹಲ್ಲು ಕಿಸಿದು ನಕ್ಕ, ಮುದುಕಿ ಇನ್ನೂ ಬಾಗಿಲಲ್ಲೇ ನಿಂತು : “ಎಲ್ಲಿ ಸಿನೇಮಾಕ್ಕೆ ಹೊರಟೆಯಾ ? ಇನ್ನೂ ಎಷ್ಟು ದಿನ ರಜೆ ನಿನ್ನದು ?” ಎಂದು ಕೇಳಿದ ಧಾಟಿ ಸೇರಲಿಲ್ಲ. ಬೇರೆ ಯಾವಾಗಲಾದರೆ ಈ ಇಲ್ಲದ ಉಪದ್ವ್ಯಾಪದ ಮುದುಕಿಗೆ ಸರಿಯಾಗಿ ಜವಾಬು ಕೊಡದೇ ಇರುತ್ತಿರಲಿಲ್ಲ. ಆದರೆ ಈಗ ಅವಳು ತನ್ನನ್ನು ತೀರ ತಪ್ಪು ಸನ್ನಿವೇಶದಲ್ಲಿ ಸಂಧಿಸಿದ್ದರಿಂದ ಹುಟ್ಟಿದ ಅಪರಾಧಭಾವನೆ ಬಾಯಿ ಬಿಗಿಹಿಡಿಯುವಂತೆ ಮಾಡಿತ್ತು. ಆದರೂ ತನ್ನ ತೋಲವನ್ನು ಕಾಯುತ್ತ_”ನಿನ್ನೆ ಮಧ್ಯಾಹ್ನ ಊಟ ಚಹ ಅವರಲ್ಲೇ ಆಗಿತ್ತು. ಬೆಳಗಿನಿಂದ ಕದಕ್ಕೆ ಬೀಗವಿದ್ದದ್ದು ನೋಡಿ ಕಾಳಜಿಯಾಯಿತು….ಮಂಗಳವಾರದಿಂದ ತಿರುಗಿ ಆಫೀಸಿಗೆ ಹೋಗಲು ಶುರುಮಾಡುತ್ತೇನೆ. ನನಗೂ ಬೇಸರ ಬಂದುಹೋಯಿತು…..ಕಾದಂಬರಿಯೂ ಮುಗಿಯುತ್ತ ಬಂದಿದೆ.” ಎಂದ. ಮುದುಕಿಗೆ ಸಮಾಧಾನವಾದಂತೆ ತೋರಲಿಲ್ಲ. ಸಮಾಧಾನ ಪಡುವ ಹೆಣ್ಣೇ ಅಲ್ಲ ಇವಳು. ತುಂಬ ಪಿರಿಪಿರಿಯ ಮುದುಕಿ : ಅವಳಿನ್ನೂ ಅಲ್ಲಿ ನಿಂತಿರುವಾಗಲೇ ಇನ್ನೊಂದು ಕಾಲಿಗೆ ಬೂಟು ಹಾಕಿಕೊಳ್ಳಹತ್ತಿದ. ಮುದುಕಿ ತನ್ನ ಎಂದಿನ ಅಧಿಕಪ್ರಸಂಗದ ಕುತೂಹಲದಿಂದ ಕೋಣೆಯ ಸುತ್ತ ಕಣ್ಣಾಡಿಸಿ ಮುಖ ಸಿಂಡರಿಸಿಕೊಂಡು ಹೊರಟುಹೋದಳು. ನಾಗಪ್ಪನ ಚಹ ಕುಡಿಯುವ ಉತ್ಸಾಹವೇ ಕುಗ್ಗಿಹೋಯಿತು. ತನ್ನ ಉಡುಪಿನ ಬಗೆಗಿನ ಉತ್ಸಾಹ ಕೂಡಾ. ಆದರೂ ಪ್ರತಿಸಲ ಪರಿಸರವನ್ನೇ ಮೇಲುಗೈಯಾಗಲು ಬಿಡಬಾರದು ಎಂದುಕೊಂಡ : ಹರೆಯದಲ್ಲೇ ಗಂಡ ಸತ್ತು ಬೋಳಿಯಾದ ಈ ಮುದುಕಿಗೆ ಪ್ರತಿಯೊಂದು ಗಂಡು-ಹೆಣ್ಣಿನ ಸಂಬಂಧದಲ್ಲಿ ದರಿದ್ರ ಕುತೂಹಲ. ಇಷ್ಟೇ : ತನ್ನಿಂದಾಗಿ ಪಾಪ, ಜಾನಕಿಗೆ ತೊಂದರೆ ಬರದಿದ್ದರೆ ಸಾಕು. ಅವಳು ತನ್ನ ಬಗ್ಗೆ ತೋರಿದ ಆಸಕ್ತಿಯ ಬಗ್ಗೆ ಗಂಡನಿಗೇನಾದರೂ ಗುಮಾನಿ ಬಂದಿರಬಹುದೇ ? ….ಹಾಗಾದರೆ ತಾನೇ ಜಾಗ್ರತೆ ವಹಿಸುವದೊಳ್ಳೆಯದು….. +ಮುದುಕಿಯ ಫಾಜೀಲ ಉಪದ್ವ್ಯಾಪದ ಪರಿಣಾಮವೆಂದರೆ ಕೆಳಗಿನ ‘ಕೃಷ್ಣವಿಲಾಸ’ಕ್ಕೆ ಹೋಗುವದನ್ನು ಬಿಟ್ಟು ನೇರವಾಗಿ_ ಇನ್ನೆಂದೂ ಇಲ್ಲಿ ಕಾಲಿಡಲಾರೆನೆಂದು ಆಣೆಮಾಡಿಕೊಂಡ_‘ಸಂತೋಷಭವನ’ಕ್ಕೇ ಬಂದದ್ದು. ಬೆನ್-ಹ್ಯಾಮ್-ಹಾಲ್-ಲೇನ್ ಒಳಗಿನಿಂದ ಹಾದುಹೋಗುವಾಗ ಬೇಕೆಂದೇ ಹೆಜ್ಜೆಗಳ ವೇಗವನ್ನು ತಗ್ಗಿಸಿದ : ತಾಜಾತನದಿಂದ ಲಕಲಕಿಸುವ ಕಾಯಿಪಲ್ಲೆ. ಹೂವು, ಹಣ್ಣುಹಂಪಲುಗಳಿಂದಾಗಿ ಪ್ರತಿಸಲದಂತೆ ಹನೇಹಳ್ಳಿ ಮನಸ್ಸನ್ನು ಮುತ್ತಿಕೊಂಡಿತು. ಜಾಜೀಹೂಗಳ ವಾಸನೆಯಂತೂ ತಮ್ಮ ಮನೆಯಕತ್ತಲೆ ತುಂಬಿದ ದೇವರ ಕೋಣೆಯ ನೆನಪು ಬಂದಿತು. ಜೊತೆಗೇ, ಭಾಷೆಯ ಮೇಲಿನ್ನೂ ಪ್ರಭುತ್ವ ಬಂದಿರದ ಬಾಲ್ಯದಲ್ಲಿಯ ಅನುಭವ-ಚಿತ್ರವೊಂದು ಈಗ ಮಾತಿನಲ್ಲಿ ಪುನರವತರಿಸಲು ಹವಣಿಸುತ್ತಿದೆ ಎನ್ನುವಂತಹ ಅನ್ನಿಸಿಕೆಯಿಂದಲೇ ಮನಸ್ಸು ಪುಲಕಿತವಾಯಿತು. ಎರಡು ದಿನಗಳ ಹಿಂದೆ ತನ್ನನ್ನು ದಾದಾ ಎಂದು ಕರೆದು ಹೂಜಡೆಯನ್ನು ಮಾರಿದ ಚಿಕ್ಕ ಹುಡುಗಿ ಕಣ್ಣಿಗೆ ಬೀಳುತ್ತಾಳೋ ಎಂದು ಅತ್ತಿತ್ತ ನೋಡಿದ. ಅವಳು ಬಂದಿರಲಿಲ್ಲವೆಂದು ತೋರಿತು. ಹೂವನ್ನು ಕೊಳ್ಳುವ ತವಕವನ್ನೂ (ಹೇಳದೇ ಕೇಳದೇ ಬಂದ ಜಾನಕಿಯ ನೆನಪನ್ನೂ) ಹತ್ತಿಕ್ಕಿ ಸೀದ ಹೊಟೆಲ್ಲಿನತ್ತ ಹೆಜ್ಜೆ ಹಾಕಹತ್ತಿದ. +ಹೊಟೆಲ್ಲಿನಲ್ಲಂದು ನಾಯಕನಿರಲಿಲ್ಲ. ಕೌಂಟರಿನಲ್ಲಿ ಅವನ ಶ್ರೀಧರ ಕಾಮತ ಕೂತಿದ್ದ.ನಾಯಕನದೇ ಯೂನಿಫಾರ್ಮು : ಅದೇ ಬಣ್ಣದ ಕುರ್ತಾ : ತಲೆಗೆ ಗಾಂಧೀ ಟೊಪ್ಪಿಗೆ. ಎರಡೂ ಕೈಗಳ ಬೆರಳುಗಳಿಗೆ ಮೂರು ಮೂರು ಉಂಗುರಗಳು. ಕವಳ ತಿಂದು ಕೆಂಪಾದ ತುಟಿಗಳು : ಎಲ್ಲ ಹೊಟೆಲ್ಲು ಮಾಲೀಕರೇ ರಂಗೇಲ ಸೂಳೇಮಕ್ಕಳು ಅನ್ನಿಸಿತು :ಕೌಂಟರಿನ ಮೇಲೆ, ಬೆಳ್ಳಿಯ ವಾಟಿಯಿಂದ ತುಂಬಿದ ಅಕ್ಕಿಕಾಳಿನಲ್ಲಿ ಕೆಂಪು ಕಾಲುಗಳನ್ನು ಹುಗಿದು ಬಾಯಿಂದ ಮಾದಕವಾದ ಹೊಗೆ ಬಿಡುತ್ತ, ಬೂದಿ ಉಗುಳುತ್ತ ನಿಂತ ಆರು ಊದಿನಕಡ್ಡಿಗಳು. ಕೇಳಿದರೆ ಮೈಸೂರಿನಿಂದಲೇ ತರಿಸಿದವುಗಳೆಂದು ಹೇಳದೇ ಇರಲಾರ. ಊದಿನಕಡ್ಡಿಗಳ ಮಗ್ಗುಲ ಹರಿವಾಣದಲ್ಲಿ ಚಿಗುರೆಲೆಗಳ ಬೀಡಾಗಳು_ಓರಣವಾಗಿ ಒಟ್ಟಿಟ್ಟ ರಾಶಿಯಲ್ಲಿ ಶಿಸ್ತಿನಿಂದ ಕುಳಿತಿದ್ದವು. ಬೆನ್ನ ಹಿಂದಿನ ಕಂಬದ ಮೇಲೆ ಲಕ್ಷ್ಮೀ,ಸರಸ್ವತೀ ಹಾಗೂ ಗಣಪತಿಗಳ ಗಾಜು ಹಾಕಿ ಫ್ರೇಮ್ ಮಾಡಿಸಿದ ಚಿತ್ರಗಳು. ಮೂರಕ್ಕೂ ಜಾಜೀಹೂಗಳ ಸರಗಳು. ಗಲ್ಲೆಯ ಮೇಲೇ ಇರಿಸಿದ ದೊಡ್ಡ ಚಿತ್ರ ಸ್ವಾಮಿಗಳದಿರಬೇಕು. ಅವರನ್ನು ತಾನೆಂದಿಗೂ ನೋಡಿಯೇ ಇರಲಿಲ್ಲ. ಅವರ ಚಿತ್ರಕ್ಕೂ ತುಳಸಿ, ಹೂಗಳ ದೊಡ್ಡ ಹಾರ-ಇದಿರುಗಡೆ, ಹಣೆಗೆ ಕುಂಕುಮ ಹಚ್ಚಿಕೊಂಡ ಸಣ್ಣಗೆ ಉರಿಯುವ ನೀಲಾಂಜನದ ದೀಪ. ಶ್ರೀಧರ ಇವನನ್ನು ಕಂಡದ್ದೇ ತಡ ತನ್ನ ಪೇಟೆಂಟ್ ನಗುವನ್ನು ಈ ಕಿವಿಯಿಂದ ಆ ಕಿವಿಯತನಕ ಹರಡುವಂತೆ ಬೆಳಗಿಸಿದ : ‘ಓಹೋಹೋ….ಪ್ರೊಫೆಸರರ ಸವಾರಿ ನಮ್ಮ ಕಡೆ ಬಹಳ ದಿನಗಳ ಮೇಲೆ ದಯಮಾಡಿಸಿತು. ಬನ್ನಿ ಬನ್ನಿ ಬನ್ನಿ….” ಎಂದು ಇವನ ಬರುವಿನಿಂದ ಬಹಳ ಸಂತೋಷವಾಯಿತೆನ್ನುವಂತೆ ಹರ್ಷೋದ್ಗಾರ ಮಾಡಿದ. “ಮೊನ್ನೆ ಬಂದಾಗ ನೀನಿರಲಿಲ್ಲ.” ಎನ್ನುತ್ತ ಅವನತ್ತ ಹೆಚ್ಚು ಲಕ್ಷ್ಯ ಕೊಡದೇ ಸೀದ ಒಳಗೆ ಹೋಗಿ ತಾನು ಹಿಂದಿನ ಸರತಿ ಬಂದಾಗ ಕೂತ ಮೇಲಿನ ರೂಮಿಗೇ ಹೋದ. ಮಾಣಿ ಬಂದ ಮೇಲೆ ಉತ್ತಪ್ಪ ಕಾಫಿಗಳಿಗೆ ಆರ್ಡರ್ ಕೊಟ್ಟ. ವಡೆ ಬಿಸಿಬಿಸಿಯಾಗಿವೆ ಎಂದು ಹೇಳಿ ಮಾಣಿ ಬಾಯಲ್ಲಿ ನೀರೂರುವಂತೆ ಮಾಡಿದಾಗ, ಒಂದು ಪ್ಲೇಟು ವಡೆಯನ್ನೂ ತರುವಂತೆ ಹೇಳಿ ಕನ್ನಡ ಪತ್ರಿಕೆ ಯಾವುದಾದರೂ ಇದ್ದರೆ ತಾ ಎಂದ. ಅವನು ಸಂಯುಕ್ತ ಕರ್ನಾಟಕ ಹಾಗೂ ಪ್ರಜಾಮತಗಳನ್ನು ತಂದು ಕೊಟ್ಟ. +ಪತ್ರಿಕೆಗಳನ್ನು ಓದದೇ ಎಷ್ಟು ದಿನಗಳಾದವು ! ಹಾಗೆ ನೋಡಿದರೆ_ ಏನನ್ನೂ ಓದದೇ ! ಕೈಗೆ ತೆಗೆದುಕೊಂಡ ಪತ್ರಿಕೆಯ ಪುಟಗಳನ್ನು ತಿರುವಿ ಹಾಕುತ್ತಿರುವಾಗ ಯಾವ ಸುದ್ದಿಯೂ ಮನಸ್ಸಿನ ಮೇಲೆ ನಾಟುತ್ತಿರಲೇ ಇಲ್ಲ. ಗುಪ್ತ-ರೋಗಗಳನ್ನು ಗುಣಪಡಿಸುವ ಗ್ಯಾರಂಟೀ ಕೊಡುವ ಡಾಕ್ಟರನೊಬ್ಬನ ಜಾಹೀರಾತು ; ಜೊತೆಗೇ ನಿಮ್ಮ ಭವಿಷ್ಯವನ್ನು ಈಗಲೇ ತಿಳಿಯಿರಿ ಎಂದು ಕೂಗುವ ಜ್ಯೋತಿಷಿಯ ಜಾಹೀರಾತು_ಎರಡರ ಮೇಲೂ ಆಸ್ಥೆ ಇಲ್ಲದೇ ಕಣ್ಣುಹಾಯಿಸಿದ. ಥಟ್ಟನೆ ಪ್ರಜಾಮತ ಕೂಡ ವಾರಭವಿಷ್ಯ ಪ್ರಕಟಿಸುತ್ತದೆ ಎಂಬುದು ನೆನಪಾಗಿ ಬರಿಯೆ ಕುತೂಹಲಕ್ಕಾಗಿ ಓದಿದರೇನಂತೆ ಎಂದುಕೊಂಡು ಅದರ ಪುಟ ಮಗುಚಿ ನೋಡಿದ : “ಸಿಂಹರಾಶಿ : ಆಗದವರ ಪಿತೂರಿಗೆ ಬಲಿ ಬೀಳಬಹುದು. ಸಹೋದ್ಯೋಗಿಗಳೊಂದಿಗೆ, ಬಂಧುಗಳೆಂದು ತೋರಿಸಿಕೊಳ್ಳುವವರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸಿರಿ. ತಾ. ೫. ೬ ಅಶುಭ ; ೮. ೯. ೧೦ ಶುಭ.” ಅಷ್ಟು ಹೊತ್ತಿಗೆ, ಮಾಣಿ ಉತ್ತಪ್ಪ, ವಡೆಗಳನ್ನು ತಂದಿದ್ದ. ಇದು ಬರೇ ಆಕಸ್ಮಿಕ ! ಯಾವುದಕ್ಕೆ ಹೆದರಿಕೊಂಡಿರುವನೋ ಅದೇ ಕಣ್ಣಿಗೆ ಬಿದ್ದಾಗ ಮನಸ್ಸಿಗೆ ನಾಟಿತು_ಅಷ್ಟೇ. ಎಂದುಕೊಳ್ಳುತ್ತ ತಿನಿಸುಗಳ ಕಡೆಗೆ ಲಕ್ಷ್ಯ ಹರಿಯಿಸಲು ಯತ್ನಿಸಿದ. ವಿಜ್ಞಾನದಲ್ಲಿ ವಿಶ್ವಾಸವಿದ್ದ ತಾನು ಇಂಥದ್ದಕ್ಕೆಲ್ಲ ಗಮನ ಕೊಡಬಾರದು…. +ಕಾಫಿ ಕುಡಿದು ಬಿಲ್ಲಿನ ಹಣವನ್ನು ಮಾಣಿಯ ಕೈಗೆ ಕೊಟ್ಟು ಬಾಕಿ ಹಣದ ಹಾದಿ ಕಾಯಹತ್ತಿದ. ಅದು ಬಂದ ಮೇಲೆ ಒಂದು ರೂಪಾಯಿ ನೋಟನ್ನು ಮಾಣಿಯ ಕೈಲಿಟ್ಟು, ನಿಚ್ಚಣಿಕೆಯ ಮೆಟ್ಟಿಲುಗಳನ್ನಿಳಿದು ಕೌಂಟರಿನತ್ತ ಹೊರಳಿ ಕೂಡ ನೋಡದೇ ಸೀದ ರಸ್ತೆ ಸೇರಿದ. ಪೋರ್ಚುಗೀಜ್ ಚರ್ಚಿನ ಕಡೆಗೆ ಹೊರಳಿ ಅಪೆರಾ_ಹೌಸ್ ಕಡೆ ರಸ್ತೆ ಹಿಡಿದ. ಟ್ರಾಮುಗಳನ್ನು ರದ್ದುಗೊಳಿಸಿ ಬಸ್ಸುಗಳೇ ಓಡಾಡುವಂತೆ ಮಾಡಿದ್ದರೂ ರಸ್ತೆಯ ನಡುವಿನ ಟ್ರಾಮ್ ಹಳಿಗಳನ್ನಿನ್ನೂ ತೆಗೆದಿರಲಿಲ್ಲ. ತೆಗೆಯುವದೂ ಇರಲಿಲ್ಲ. ಹೇಗೂ ರಸ್ತೆಗೆ ಹೊಸದಾಗಿ ಖಡಿ ಡಾಂಬರುಗಳನ್ನು ಹಾಕುವಾಗ ಇವೂ ಅವುಗಳ ಅಡಿಗೆ ಮುಚ್ಚಿಹೋಗುವವಲ್ಲ ! ತಾನು ಪೇಟೆಂಟ್ ಮಾಡಿದ ಒಂದು ಶೋಧ ರಸ್ತೆಗಳ ರಿಪೇರಿಗೇ ಸಂಬಂಧಪಟ್ಟದ್ದಾಗಿದೆ ಎಂಬುದನ್ನು ನೆನೆದ : ಆ ಶೋಧ ಕಾರ್ಯರೂಪಕ್ಕೆ ಬಂದರೆ ಮುನಿಸಿಪಾಲಿಟಿಯವರಿಗೆ ಲಕ್ಷಗಟ್ಟಲೆ ರೂಪಾಯಿಗಳ ಉಳಿತಾಯವಾಗಬಹುದು. ಕಂಪನಿಯವರಿಗೂ ದೊಡ್ಡ ಲಾಭ. ಲ್ಯಾಬೋರೇಟರಿಯ ಸಂಪರ್ಕ ತಪ್ಪಿ ಈಗ ವರ್ಷವಾಗುತ್ತ ಬಂದಿತಲ್ಲವೆ….? +ಕಣ್ಣು ಇದಿರಿಗೇ ಬೃಹದಾಕಾರದ ಸಿನೇಮಾ ಪೋಸ್ಟರುಗಳು. ಚೌಪಾಟಿಗೆ ಹೋಗುವ ಸೆಂಢರ್ಸ್ಟ್ ರೋಡಿಗೆ ಅಡ್ಡವಾಗಿ ಹರಿದ ದೊಡ್ಡ ರಸ್ತೆಯೇ ಕೆನಡೀ ಬ್ರಿಜ್. ಅದರ ನಟ್ಟನಡುವಿನ ಸೇತುವೆಯ ಕೆಳಗಿಂದ ಹೋಗುವ ರಸ್ತೆಗೆ ಇಳಿದದ್ದೇ ಹತ್ತುವ ಚಾಳೊಂದರಲ್ಲಿ ತನ್ನ ರಾಣೀ : ಎಷ್ಟೊಂದು ಬೇಸರ ಪಟ್ಟಿರುವಳೋ ಹುಡುಗಿ ! ಪರಿಚಯವಾದ ಕಳೆದ ನಾಲ್ಕು ತಿಂಗಳಲ್ಲಿ ತನ್ನನ್ನು ತುಂಬ ಹಚ್ಚಿಕೊಂಡಿದ್ದಾಳೆ. ಆಫೀಸು ಇದ್ದ ಕಟ್ಟಡದ ವೊಚ್‌ಮನ್ ನಿಂದಲೇ ಸಂಪರ್ಕ_ಅವನ ದೂರದ ತಂಗಿಯಂತೆ ! ಮೇರಿಯ ಪರಿಚಯವಾದಂದಿನಿಂದ, ತಮ್ಮ ಅಫೀಸಿನ ಮಗ್ಗುಲ ಆಫೀಸುಗಳಲ್ಲಿಯ ಹುಡುಗಿಯರ ಕೂಡ ಆಗೀಗ ಮಾತನಾಡುವ ಅವಕಾಶ ಸಿಕ್ಕಂದಿನಿಂದ ರಾಣಿ ತನ್ನ ಭಾವನೆಗಳ ಪರಿಧಿಯಲ್ಲಿ ತೆಳುವಾಗುತ್ತಿದ್ದಾಳೆಯೇ ? ಎನ್ನುವಂತಹ ಗುಮಾನಿ : ಭಾಷೆಯೇ ಇಲ್ಲದ ಸಂಬಂಧ ಇದೂ ಕೂಡ, ಹರಕು-ಮುರುಕು ಹಿಂದಿಯಲ್ಲಿ ರಾಣಿ, ಮಾತನಾಡುವುದಕ್ಕಿಂತ ಕಿಲಕಿಲ ನಗುವುದೇ ಹೆಚ್ಚು. ನಾನು ನಿನ್ನೊಬ್ಬನ ಹುಡುಗಿ ಮಾತ್ರ ಎನ್ನುವುದನ್ನು, ಒಂದು ದಿನ ಅತ್ಯಂತ ಖುಶಿಯ ಮೂಡಿನಲ್ಲಿದ್ದಾಗ, ಹಾವಭಾವಗಳಿಂದಲೇ ತಿಳಿಸುತ್ತ ಸುಖದ ಶಿಖರಕ್ಕೆ ಒಯ್ದಿದ್ದಳು. +ನಾಗಪ್ಪ ಸೆಂಢರ್ಸ್ಟ್ ರೋಡ್, ಕ್ವೀನ್ಸ್ ರೋಡ್, ಗಿರ್ಗಾಂವ್ ರೋಡ್‌ಗಳ ಕೂಟಸ್ಥಾನದಲ್ಲಿ ನಿಂತಿದ್ದ. ರಸ್ತೆಗಳ ಪ್ರತಿ ಮೂಲೆಯಲ್ಲಿ ದೊಡ್ಡದೊಡ್ಡ ಸಿನೇಮಾ ಪೋಸ್ಟರುಗಳು ತನ್ನತ್ತಲೇ ಕಣ್ಣುಬಿಟ್ಟು ನಿಂತಂತೆ ನಿಂತಿದ್ದರೂ ಯಾವುದೂ ಅರ್ಥವಾಗುತ್ತಿರಲಿಲ್ಲ. ಮನಸ್ಸು ಕೂಡ ಕೂಟಸ್ಥಾನದಲ್ಲಿ ನಿಂತ ರೀತಿ ಹೊಯ್ದಾಡುತ್ತಿತ್ತು. ಫುಟ್‌ಪಾಥಿನ ಮೇಲೆ ಚಪ್ಪಲಿ ರಿಪೇರಿಯ ಸರಂಜಾಮನ್ನು ಪಸರಿಸಿ ಕೂತ ಮೋಚಿ ಇವನು ತನ್ನ ಧಂದೆಗೆ ಅಡ್ಡಬರುವಂತೆ ನಿಂತಿದ್ದರಿಂದ_”ಸಾಬ್…. ಜರಾ ಬಾಜೂ,” ಎಂದು ಪ್ರಾರ್ಥಿಸಿದಾಗ ಥಟ್ಟನೆ ಒಂದು ನಿಶ್ಚಯಕ್ಕೆ ಬಂದವನ ಹಾಗೆ, ಅಪೆರಾ-ಹೌಸ್ ಬಸ್‌ಸ್ಟಾಪಿನಲ್ಲಿ ಅದೇ ಬಂದು ನಿಂತ ಒಂದು ಬಸ್ಸಿಗಾಗಿ ಓಡೋಡಿ ರಸ್ತೆದಾಟಿ ಹತ್ತಿದೆ. ಬಸ್ಸು ಸಿಕ್ಕಿತು. ಮೇಲಿನ ಡೆಕ್ಕಿಗೆ ಹೋಗಿ ಕೂತುಕೊಳ್ಳುವಾಗ ತನಗೆ ಬೇಡವಾದುದರಿಂದ ಬಿಡಿಸಿಕೊಂಡಂತಹ ಸುಖವಾಗಿತ್ತು. ಕಂಡಕ್ಟರ್ ಬಂದಾಗ, ವರ್ಲಿಯ ಬೆಂಗಾಲ್-ಕೆಮಿಕಲ್ಸ್-ಸ್ಟಾಪಿಗೆ ಟಿಕೆಟ್ ಬೇಡಿ ಹಣ ಕೊಟ್ಟ ಮೇಲೆಯೇ ತಾನು ಹೊರಟದ್ದು ಸೀತಾರಾಮನ ಮನೆಗೆ ಎಂಬುದು ಗೊತ್ತಾಯಿತು. ರಾಣೀ ಮನೆಗೆ ಹೋಗೋಣವೇ ಎಂದು ನಡೆದ ಹೊಯ್ದಾಟದಿಂದ ಗೆದ್ದೆ ಎಂಬ ಸಂತೋಷದ ಜೊತೆಗೇ ಹುಟ್ಟಿದ_ಅವಳನ್ನು ನಾನು ದೂರ ಮಾಡತೊಡಗಿದ್ದೇನೆಯೇ ? ಎಂಬ ವಿಚಾರದಿಂದ ಅಸ್ವಸ್ಥನಾದ. ಕೆಲ ಹೊತ್ತಿನ ಮೇಲೆ-ತಾನು ಅವಳಲ್ಲಿ ದಿನವೂ ಏನು ಹೋಗುತ್ತಿರಲಿಲ್ಲ. ಈಗಂತೂ ತಾನು ಆಫೀಸಿಗೆ ಕೂಡ ಬರದೇ ಇದ್ದದ್ದು ಅಣ್ಣನಿಂದಲೇ ಗೊತ್ತಾಗಿರಬೇಕು. ಊರಲ್ಲಿಲ್ಲವೇನೋ ಎಂದು ತಿಳಿದಾಳು….ಎಂದುಕೊಂಡ. +ಕಳಕೊಂಡ ನೆಮ್ಮದಿಯನ್ನು ಮಾತ್ರ ಮನಸ್ಸು ಬಹಳ ಹೊತ್ತಿನ ತನಕ ತಿರುಗಿ ಪಡೆಯಲೇ ಇಲ್ಲ. uಟಿಜeಜಿiಟಿeಜ +-ಅಧ್ಯಾಯ ಮೂವತ್ತು – +ಈ ಹೊತ್ತು ಶನಿವಾರ. ಶ್ರೀನಿವಾಸನಲ್ಲಿ ಊಟಕ್ಕೆ ಕರೆದಿದ್ದಾರೆ ಎಂಬುದನ್ನು ನೆನಪಿಟ್ಟುಕೊಂಡೇ ನಾಗಪ್ಪ ಹಾಸಿಗೆಯಿಂದ ಎದ್ದಿದ್ದ. ಅನೇಕ ರೀತಿಯ ಮುನ್‌ಸೂಚನೆಗಳಿಂದ ಮನಸ್ಸು ಒಂದಕ್ಕೊಂದು ವಿರುದ್ಧವಾದ ಭಾವನೆಗಳ ಎಳೆತಕ್ಕೆ ಸಿಕ್ಕಿಕೊಂಡಿತ್ತು. ನಿನ್ನೆ ಅಷ್ಟೆಲ್ಲ ಕಷ್ಟಪಟ್ಟು ಬಸ್ ಹಿಡಿದು ಸೀತಾರಾಮನಲ್ಲಿ ಹೋದರೆ ಮನೆಗೆ ದೊಡ್ಡ ಬೀಗ. ಥತ್ ಎರಡೂ ಮಗನೇ ಎಂದು ಬೈದು ಬೀಗಕ್ಕೊಂದು ಚೀಟಿ ಸಿಕ್ಕಿಸಿ ಬಂದಿದ್ದ._ಮಂಗಳವಾರ ಮುಂಜಾನೆ ಅವನ ಆಫೀಸಿನಲ್ಲೇ ಬಂದು ಭೆಟ್ಟಿಯಾಗುತ್ತೇನೆ ಎಂಬುದಾಗಿ. ಬಸ್ಸಿನಿಂದಲೇ ತಿರುಗಿ ಅಪೇರಾ-ಹೌಸ್ ಕಡೆ ಪ್ರಯಾಣ ಬೆಳೆಸಿದಾಗ ಬಸ್ಸಿನಿಂದ ಕಾಣುತ್ತಿದ್ದ ಪರಿಸರ ಅನೇಕ ಆಸೆ-ಆಕಾಂಕ್ಷೆಗಳ ಜೊತೆಗೆ ಆತಂಕಕ್ಕೂ ಕಾರಣವಾಯಿತು. ದಿನವೂ ಆಫೀಸಿಗೆ ಹೋಗುವಾಗ ಕಾಣುತ್ತಿದ್ದ ದೃಶ್ಯಗಳು ಮೈಮೇಲೆ ಮುಳ್ಳು ನಿಲ್ಲಿಸುತ್ತಿದ್ದಾಗಲೇ, ಇಷ್ಟು ದಿನ ತನಗೆ ಅತ್ಯಂತ ಪ್ರಿಯವಾದ ಪರಿಸರ ಪರಿಚಯ ಹಿಡಿಯಲು ನಿರಾಕರಿಸುವ ಗೆಳೆಯನಂತೆ ಕಂಡು ಮನಸ್ಸು ಭಾರವಾಗಿತ್ತು. ಕೆಲವು ತಿಂಗಳ ಹಿಂದೆ ಮುಂಬಯಿಯ ಪ್ರಖ್ಯಾತ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಪ್ರಕಟವಾದ_ಕನ್ನಡ ಸಣ್ಣ ಕತೆಗಳ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ತನ್ನ ಗೆಳೆಯನೇ ಬರೆದ_ಲೇಖನದಲ್ಲಿ ತನ್ನ ಹೆಸರಿನ ಉಲ್ಲೇಖ ಕೂಡ ಇರಲಿಲ್ಲ. ಓದಿದಾಗ ತುಂಬ ವೇದನೆಯಾಗಿತ್ತು. ಮುಂದೆ ಕೆಲವು ವಾರಗಳವರೆಗೆ ಪ್ರತಿ ವಾರಪತ್ರಿಕೆಯನ್ನು ಕೊಂಡು ಓದಿದ್ದ_ತನ್ನ ಸಣ್ಣ ಕತೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡವರು ಯಾರಾದರೂ ಪ್ರತಿಕ್ರಿಯಿಸುತ್ತಾರೋ ಎಂದು ನೋಡಲು. ಇಲ್ಲ, ಯಾರಿಂದಲೂ ಪ್ರತಿಕ್ರಿಯೆಯಿಲ್ಲ ! ತನ್ನ ಆಫೀಸಿನಲ್ಲಿಯ ಕೆಲ ಸಹೋದ್ಯೋಗಿಗಳು ಮಾತ್ರ ಆ ಲೇಖನದ ಬಗ್ಗೆ ಚ್ಚುಚ್ಚಿ ಕೇಳಿದ್ದರು. ಕನ್ನಡ ಸಾಹಿತ್ಯದ ಮಟ್ಟಿಗೆ ತಾನು ಸತ್ತು ಈಗಾಗಲೇ ಮೂರು ವರುಷಗಳೇ ಸಂದಿವೆ. +ಗ್ಲ್ಯಾಸ್ಕೋ ಲ್ಯಾಬೋರೇಟರಿಯ ದೊಡ್ಡ ಕಟ್ಟಡಗಳ ಸಾಲು. ಪೋದಾರ ಹಾಸ್ಪಿಟಲ್. ಜಪಾನೀ ಬುದ್ದ-ಮಂದಿರ. ದೂರ ಹಾಜೀ ಅಲ್ಲೀಯ ಆಚೆಯ ಪೋರ್ಜೆಟ್ ಹಿಲ್ ಗುಡ್ಡಗಳಲ್ಲಿ ತಲೆಯೆತ್ತಿ ನಿಂತ ಹೊಚ್ಚಹೊಸ ಸ್ಕಾಯ್‌ಸ್ಕ್ರೇಪರಗಳು….ಎಲ್ಲ ಎಲ್ಲ ತನ್ನ ಅಸ್ತಿತ್ವಕ್ಕೇ ನಿರಾಸಕ್ತವಾಗಿ ಬೆನ್ನು ತಿರುವಿ ನಿಂತುಬಿಟ್ಟಿವೆ ಎಂಬಂತಹ_ಸಾವನ್ನು ಹೋಲುವ_ಭಾವನೆಯನ್ನು ಹೊತ್ತೇ ಫ್ಲೋರಾ ಫೌಂಟನ್ ಸ್ಟಾಪಿನಲ್ಲಿ ಇಳಿದಿದ್ದ. ಚೌಕದಲ್ಲಿಯ_ಆಳೆತ್ತರ ನೀರು ಪುಟಿಸುತ್ತಿದ್ದ_ಕಾರಂಜಿಯು ಕೂಡ ಕಳೆದುಹೋದ ಉತ್ಸಾಹವನ್ನು ತಿರುಗಿ ಕೊಡಲು ಆಮರ್ಥವಾಯಿತು. ಯಾಂತ್ರಿಕವಾಗಿಯೇ ಚರ್ಚ್‌ಗೇಟು ಸ್ಟೇಶನ್ ಕಡೆ ನಡೆಯುತ್ತಿದ್ದ ಜನಸ್ತೋಮದಲ್ಲಿ ಒಂದಾಗಿ ಕಳೆದ ಎರಡು ದಿನಗಳಿಂದ ಬರಬೇಕೆಂದು ನಿಶ್ಚಯಿಸಿದ ಏಶಿಯಾಟಿಕ್ ರೆಸ್ಟೋರೆಂಟಿಗೆ ನಡೆದಿದ್ದ. ರಾತ್ರಿಯ ಊಟವನ್ನು ಅಲ್ಲಿ ಮುಗಿಸಿ ಮನೆಗೆ ಹಿಂತಿರುಗುವಾಗ ಅರ್ಜುನ್‌ರಾವ್ ತನ್ನ ಹಾದಿಯನ್ನೇ ಕಾಯುತ್ತ ನಿಂತಹಾಗಿತ್ತು ; “ನಿಮಗೆ ನಿದ್ದೆ ಬಂದಿರದಿದ್ದರೆ….” ಎಂದು ಬಾಗಿಲಲ್ಲಿ ನಿಂತು ಆರಂಭಿಸಿದಾಗ_”ತುಂಬ ನಿದ್ದೆ ಬಂದಿದೆ. ಬೆಳಿಗ್ಗೆ ಮಾತನಾಡೋಣ. ಆಗದೇ ? ಏಕೋ ಇತ್ತಿತ್ತ ನಿಮ್ಮ ವಾರಭವಿಷ್ಯದಲ್ಲಿ ವಿಶ್ವಾಸ ಮೂಡಲು ಹತ್ತಿದೆ ನೋಡಿ…” ಎಂದು ಹೇಳಿ ರೂಮಿನ ಕಡೆ ಹೋಗಲನುವಾದಾಗ ಅಷ್ಟರಲ್ಲೇ ಸಮಾಧಾನಪಟ್ಟುಕೊಂಡವರ ಹಾಗೆ_”ಬೆಳಿಗ್ಗೆ ಚಹಕ್ಕೆ ನಮ್ಮಲ್ಲೇ ಬನ್ನಿ,” ಎಂದಿದ್ದರು. ನಾಗಪ್ಪನಿಗೆ ಈಗ ನೆನಪಿಗೆ ಬಂತು. ಎದ್ದು ಸಿದ್ಧತೆ ಮಾಡತೊಡಗಿದ….. +ನಿರೀಕ್ಷಿಸಿದಂತೆ ೮-೩೦ ಕ್ಕೆ ಸರಿಯಾಗಿ ಅರ್ಜುನ್‌ರಾವ್ ಕದ ತಟ್ಟಿದರು. ಚಹದ ಜೊತೆಗೆ ಮರಾಠೀ ಬ್ರಾಹ್ಮಣರಲ್ಲಿ ಜನಪ್ರಿಯವಾದ ಬಟಾಟೇ ಪೋವೇ. ಮನೆಯಲ್ಲಿ ಹೆಂಡತಿ ಮಕ್ಕಳು ಮಾತ್ರ. ಮುದುಕಿ ಎಲ್ಲೂ ಕಾಣಲಿಲ್ಲ. “ಅಮ್ಮ ನಿನ್ನೆ ಸಂಜೆಗಷ್ಟೇ ದಾದರ್-ಹಿಂದೂ ಕೊಲೋನಿಯ ತಮ್ಮನ ಮನೆಗೆ ಹೋಗಿದ್ದಾಳೆ.” ಎಂಬ ವಿವರಣೆಯಿಂದ ನಾಗಪ್ಪನಿಗೆ ಬಹಳ ನಿರಂಬಳವಾಯಿತು. ಅವಲಕ್ಕಿಯನ್ನು ಪ್ರಶಂಸಿಸಿ ಇನ್ನೊಂದು ಪ್ಲೇಟು ಹೊಡೆದ. ಅರ್ಜುನ್‌ರಾವರ ಹೆಂಡತಿ ಖುಶಿಯಾದಳು : ಇನ್ನೆಷ್ಟು ದಿನ ರಜೆ ನಿಮ್ಮದು ? ಎಂದು ಕೇಳುತ್ತಿರುವಾಗ ಅರ್ಜುನ್‌ರಾವ್ ನಡುವೆಯೇ ಬಾಯಿಹಾಕಿ_ಕಾದಂಬರಿ ಎಲ್ಲಿಯವರೆಗೆ ಬಂದಿದೆ ? ಎಂದು ಕೇಳಿದರು. ಗಂಡ-ಹೆಂಡತಿ ಇಬ್ಬರ ಪ್ರಶ್ನೆಗಳಿಗೂ ಒಂದೇ ಉತ್ತರ ಆಗುವ ಹಾಗೆ : ಕಾದಂಬರಿ ಇನ್ನೂ ಬರೆಯಲು ಶುರುಮಾಡಿಲ್ಲ. ನನ್ನ ಆಫೀಸಿನದೇ ಒಂದು ಕಾದಂಬರಿಯಾಗಿ ಕುಳಿತಿದೆ. ಅದನ್ನು ಮೊದಲು ನಿಭಾಯಿಸಬೇಕು. ಬಹುಶಃ ಇನ್ನೆರಡು ದಿನಗಳಲ್ಲೇ ನಾನು ಆಫೀಸಿಗೆ ಹೋಗಲು ಶುರುಮಾಡಬಹುದು_ಎನ್ನಬೇಕೆಂದುಕೊಂಡದ್ದನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದ. ನಾಸ್ತಾದ ಈ ಔತಣ ವಾಗಲಿ ಗಂಡ-ಹೆಂಡಿರಿಬ್ಬರೂ ಒಂದೇ ಕಾಲಕ್ಕೆ ಕೇಳಿದ ಪ್ರಶ್ನೆಗಳಾಗಲಿ ತೋರುವಷ್ಟು ನಿರ್ಹೇತುಕವಾದವುಗಳಲ್ಲ ಎಂಬುದನ್ನು ಲಕ್ಷ್ಯಕ್ಕೆ ತಂದುಕೊಂಡವನಂತೆ_”ನೋಡಬೇಕು. ಕಾದಂಬರಿಯಂತೂ ನಾನು ಮೊದಲು ಯೋಜಿಸಿದ್ದರ ದುಪ್ಪಟ್ಟು ದೊಡ್ಡದಾಗಿ ಬೆಳೆಯಬಹುದೇನೋ ಎಂಬ ಭಯ. ಹಾಗಾದರೆ ಮಾತ್ರ ರಜೆಯ ಅವಧಿಯನ್ನು ಬೆಳೆಸಬೇಕಾಗುತ್ತದೆಯೇನೊ….” +ಅರ್ಜುನ್‌ರಾವರ ಮನೆಯಿಂದ ಹಿಂತಿರುಗಿ ಬಂದವನೇ ಶ್ರೀನಿವಾಸನ ಮನೆಗೆ ಹೋಗುವ ತಯಾರಿಗೆ ತೊಡಗಿದ. ಕ್ಷೌರ ಮಾಡಿಕೊಳ್ಳುವಾಗ ಶಿಂಪಿಯವರ ಮನೆಗೆ ಇನ್ನೂ ಬೀಗವಿದ್ದದ್ದು ಲಕ್ಷ್ಯಕ್ಕೆ ಬರದಿರಲಿಲ್ಲ. ಆದರೂ ಅದಕ್ಕೆ ವಿಶೇಷ ಮಹತ್ವ ಕೊಡಲಿಲ್ಲ. ಸ್ನಾನಕ್ಕೆ ನಿಂತಾಗ ಮೊನ್ನೆ ಹಾಕಿಕೊಂಡ ಕ್ರೀಮ್ ಕಲರ್ ಪ್ಯಾಂಟು ಹಾಗೂ ನೀಲೀ ಬಣ್ಣದ ಬುಶ್-ಶರ್ಟ್ ಧರಿಸುವದನ್ನು ನಿಶ್ಚಯಿಸಿದ. ಹಾಗೆ ನಿಶ್ಚಯಿಸುವಾಗ ಕಣ್ಣಮುಂದೆ ನಿಂತವರು : ಗಲ್ಲದಲ್ಲಿ ಗುಳಿ ಮೂಡಿಸಿ ಸ್ವಚ್ಛ ಹಲ್ಲು ತೋರಿಸಿ ನಕ್ಕು ಭೇಟಿಯಾದ ಮೊದಲ ದಿನವೇ ತನ್ನನ್ನು ಸಂಪೂರ್ಣವಾಗಿ ಗೆದ್ದ ಚೇತನಾ ಹಾಗೂ ಝೋಪಡಪಟ್ಟಿಯೊಳಗಿನ ಸರಸ್ವತಿ ! ಹೋಗುವಾಗ ಎರಡು ಚಾಕಲೇಟ್ ಪ್ಯಾಕೆಟ್ಟುಗಳನ್ನು ಒಯ್ಯಬೇಕು : ಚೇತನಾಳಿಗೊಂದನ್ನು, ಇನ್ನೊಂದನ್ನು ಸಿಕ್ಕರೆ ಸರಸ್ವತಿಗೆ ಕೊಡಬೇಕು…. ಸ್ನಾನ ಮುಗಿಸಿ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಶ್ರೀನಿವಾಸನ ಹೆಂಡತಿ ಶಾರದ ನೆನಪಿಗೆ ಬಂದಳು : ಥಟ್ಟನೆ ಹೊಳೆಯಿತು_ಡಾಯನಾ ತನ್ನನ್ನು ವರ್ಣಿಸಿದ ರೀತಿ ತನಗಿಂತ ಹೆಚ್ಚಾಗಿ ಶೋಭಿಸುತ್ತದೆ ಎನ್ನುವುದು : Sತಿeeಣ sಚಿಜ ಜಿಚಿಛಿe ! ತನ್ನ ಕಣ್ಣುಗಳನ್ನು ಆಗೀಗ ಸಂಧಿಸಿದ ಕಣ್ಣುಗಳಲ್ಲಿ ಒಂದು ಬಗೆಯ ವಿಷಾದ ನೆಲಸಿದ್ದು ಈಗ ಅರಿವಿಗೆ ಬಂದಿತು. ಕನ್ನಡಿಯ ಇದಿರು ನಿಲ್ಲುವ ಮೊದಲೇ ರಟ್ಟೆಯಿದ್ದ ಬನಿಯನ್ ಹಾಕಿಕೊಂಡು ಅದರ ಮೇಲೆ ಬುಶ್-ಶರ್ಟ್ ತೊಟ್ಟೇ ನಿಂತಿದ್ದ. ಸೊಂಟದ ಸುತ್ತ ಮಾತ್ರ ಬಾಥ್‌ಟಾವೆಲ್ಲು. ಕನ್ನಡಿಯಲ್ಲಿ ತನ್ನ ಛಾತಿ ನೋಡಿಕೊಳ್ಳುವ ಛಾತಿಯಿನ್ನೂ ಬಂದಿರಲಿಲ್ಲ…. +ಪ್ಯಾಂಟು ಏರಿಸಿ ಬೂಟು ಹಾಕಿಕೊಳ್ಳುವ ಹೊತ್ತಿಗೆ_ಇನ್ನೂ ಹತ್ತು ಗಂಟೆಯೂ ಆಗಿಲ್ಲ. ಹೊರಡಲು ಇನ್ನೂ ಒಂದು ತಾಸಾದರೂ ಇದೆ. ಅಲ್ಲಿಯವರೆಗೆ ಏನು ಮಾಡುವದೆಂದು ಗೊತ್ತಾಗದೇ ಕಪಾಟಿನೊಳಗಿಂದ ಒಂದು ಪುಸ್ತಕವನ್ನೆತ್ತಿಕೊಂಡ. ಕೈಗೆ ಬಂದದ್ದು ಬರ್ನಾರ್ಡ್ ಮಾಲ್ಮೂಡ್ ಅವನ ಕಾದಂಬರಿ_‘ಫಿಕ್ಸರ್’. ಬಹಳ ಹಿಂದೆಯೇ ಓದಿ ಮುಗಿಸಿದ ಕಾದಂಬರಿ. ಯಾಕೋವ್ ಬೋಕ್ : ತನ್ನಂತೆಯೇ ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ ! ಎಲ್ಲ ಬಿಟ್ಟು ಇದೇ ಪುಸ್ತಕ ಕೈಗೆ ಬಂದದ್ದು ಹೇಗೆ ಎಂದು ದಿಗಿಲುಗೊಂಡ : ಶುರುಮಾಡಿದೆಯೇನೋ ನಾಗಪ್ಪಾಽಽ, ಒಂದೂ ಮಗನೇ. ವಿಜ್ಞಾನದ ವಿದ್ಯಾರ್ಥೀಽಽ. ವಿಕಾಸವಾದದಲ್ಲಿ ದೃಢವಾದ ನಂಬಿಕೆಯುಳ್ಳವನೇ. ಹೆದರಿಕೊಂಡಿದ್ದೀಯಾ ಅಂಜುಬುರುಕಾಽಽ. ಕಂಡದ್ದಕ್ಕೆಲ್ಲ ಇಲ್ಲದ ಅರ್ಥ ಹಚ್ಚಿ ಇನ್ನಷ್ಟು ಹೆದರುತ್ತೀಯಾ…. +ನಾಗಪ್ಪನಿಗೆ ಈ ಭಾವಸರಣಿ ಸೇರಲಿಲ್ಲ. ಇಷ್ಟು ದಿವಸ ತಾನು ಹಾದಿ ಕಾಯುತ್ತಿದ್ದ ಕೊನೆಯ ಗಳಿಗೆಯನ್ನು ಇದಿರಿಸಲು ಆತುರಪಟ್ಟವನ ಹಾಗೆ_ತುಸು ಮೊದಲೇ ಹೋದರೇನಂತೆ, ಇಂತಿಷ್ಟೇ ಹೊತ್ತಿಗೆ ಬಾ, ಎಂದೇನು ತಿಳಿಸಿಲ್ಲವಲ್ಲ ! ಎಂದುಕೊಂಡವನೇ ಕೈಗೆತ್ತಿಕೊಂಡ ಪುಸ್ತಕವನ್ನು ತಿರುಗಿ ಕಪಾಟಿನಲ್ಲಿಟ್ಟು ಹೊರಟೇಬಿಟ್ಟ, ಕೆಳಗಿಳಿದು ಹೋಗುವ ರೀತಿಯಲ್ಲಿ ಒಂದು ಬಗೆಯ ನಿರ್ಧಾರ ಒಡೆದು ಕಾಣುತ್ತಿತ್ತು. +ರೂಮಿನಿಂದ ಹೊರಗೆ ಬಿದ್ದಾಗ ಅಪೇರಾ-ಹೌಸಿಗೆ ಹೋಗಿ ಬಸ್ಸಿನಿಂದಲೇ ಹೋಗುವ ವಿಚಾರವಿತ್ತು. ಆದರೆ ಖೇತವಾಡಿಯ ಮೇನ್ ರೋಡಿಗೆ ಬಂದಕೂಡಲೇ ಮೊದಲಿನ ವಿಚಾರ ಬದಲುಗೊಂಡು ರಸ್ತೆಯ ಮುರುಕಿನಲ್ಲಿ ನಿಂತ ಟ್ಯಾಕ್ಸಿಗೆ ಸನ್ನೆ ಮಾಡಿದ. ಟ್ಯಾಕ್ಸಿಯಲ್ಲಿ ಕೂತು, ಕೆಡೆಲ್ ರೋಡ್, ಶಿವಾಜೀ ಪಾರ್ಕ್, ಎಂದ. ಟ್ಯಾಕ್ಸಿ ಹೊರಟಾಗ ಮನಸ್ಸನ್ನು ಅಂತರ್ಮುಖವಾಗಲು ಬಿಡದ ನಿರ್ಧಾರಮಾಡಿ ಕೂತವನ ಹಾಗೆ ಕಣ್ಣುಗಳನ್ನು ಸುತ್ತಲಿನ ಪರಿಸರದ ಮೇಲೇ ಊರಿ ಕೂತ. “ನಾನಾ ಚೌಕಿನಿಂದ ಹೋಗೋಣವೇ ? ಅಥವಾ ಕೆಂಪ್ಸ್-ಕಾರ್ನರ್ ಮೇಲಿಂದ ? ಟ್ಯಾಕ್ಸಿವಾಲಾ ಕೇಳಿದ. ಸವಾರಿ ಮುಂಬಯಿಗೆ ಹೊಸತೋ ಎಂದು ಗೊತ್ತು ಮಾಡುವ ಹಿಕಮತ್ತಿದು. ನಾನಾ-ಚೌಕಿನ ದಾರಿ ಸಮೀಪದ್ದು. ಆದರೆ ಆ ದಾರಿಯಲ್ಲೇ ರಾಣಿಯ ಮನೆ ಕಾಣಿಸುವ ಕೆನಡೀ ಬ್ರಿಜ್ ಇದೆ. ಆದ್ದರಿಂದಲೇ ಕೆಂಪ್ಸ್-ಕಾರ್ನರ್ ರಸ್ತೆಯಿಂದಲೇ ಟ್ಯಾಕ್ಸಿ ಓಡಿಸಲು ಹೇಳಿದ : ಪ್ರಾರ್ಥನಾ-ಸಮಾಜ, ಅಪೇರಾ-ಹೌಸ್, ಸೆಂಡರ್ಸ್ಟ್-ಬ್ರಿಜ್‌ಗಳನ್ನು ದಾಟಿ ಟ್ಯಾಕ್ಸಿ ಪೆಡ್ಡರ್ ರೋಡ್ ಕಡೆಗೆ ಹೊರಳಿತು. ಇಕ್ಕೆಲಗಳಲ್ಲಿ ಶ್ರೀಮಂತರ ಮನೆಗಳಿದ್ದ ವಸತಿ. ಎಡಕ್ಕೆ ಎತ್ತರದಲ್ಲಿ ಮಲ್ಬಾರ್ ಹಿಲ್-ಗುಲ್ಮೊಹರದ ಗಿಡಗಳು. ಕೆಂಪ್ಸ್-ಕಾರ್ನರ್_(ಕಾಲ್‌ಗರ್ಲ್ಸ್ !) ಕ್ಯಾಡ್‌ಬರೀ ಪ್ರಾಯ್, ಹಾಜೀ ಹಾಲೀ ದರ್ಗಾ. ಎಡಕ್ಕೆ ಸಮುದ್ರ. ನೀರಿನೊಳಗೆ ಅರ್ಧ ಮುಳುಗಿದಹಾಜೀ ಹಾಲೀ ದರ್ಗಾಕ್ಕೆ ಹೋಗುವ, ಇಕ್ಕಟ್ಟಿನ ದಾರಿ ; ಶ್ರೀನಿವಾಸನ ಮನೆ ಹತ್ತಿರವಾಗುವ ತನಕವೂ ಆ ನೀರು, ಆ ಕಿರಿದಾದ ದಾರಿ ; ದೂರದಲ್ಲಿ ಕಾಣುವ ದರ್ಗಾ ಇದೇ ಮನಸ್ಸನ್ನು ಆವರಿಸಿ ನಿಂತವು : ಒಂದು ದಿನ ಹೋಗಬೇಕು, ದರ್ಗಾ ನೋಡಲು. ಭರತಿಯ ಹೊತ್ತಿಗೆ ದರ್ಗಾಕ್ಕೆ ಹೋಗುವ ದಾರಿ ನೀರಿನಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತದೆ….ಅಂಥ ಹೊತ್ತಿನಲ್ಲೇ ಅಲ್ಲಿ ಹೋಗುವ ಸಾಹಸ ಮಾಡಿದ ಒಂದಿಬ್ಬರು ನೀರಿನಲ್ಲಿ ಕಾಲು ಜಾರಿ ಮುಳುಗಿ ಸತ್ತ ಸುದ್ದಿ ಕೇಳಿದ್ದ…. ಟ್ಯಾಕ್ಸಿ ಕೆಡೆಲ್-ರೋಡ್ ಕೊನೆಯನ್ನು ಸಮೀಪಿಸುತ್ತಿರುವಾಗ ಟ್ಯಾಕ್ಸಿಯವನು ಕೇಳಿದ ಪ್ರಶ್ನೆಗೆ ಹಾಜಿ‌ಅಲೀ ದರ್ಗಾ ಮನಸ್ಸಿನಿಂದ ಆ ಕ್ಷಣದ ಮಟ್ಟಿಗಾದರೂ ಕಳಚಿಬಿದ್ದಿತು : ತುಸು ಮುಂದೆ ಹೋದಮೇಲೆ ಎಡಕ್ಕೆ ಹರಿಯುವ ರಸ್ತೆಗೆ ಹೊರಳಿಸುವಂತೆ ಆದೇಶ ಕೊಟ್ಟು ಟ್ಯಾಕ್ಸಿ ಝೋಪಡಪಟ್ಟಿಗಳಿದ್ದ ಜಾಗಕ್ಕೆ ಬಂದದ್ದೇ, ನಿಲ್ಲಿಸಲು ಹೇಳಿದ. +ಟ್ಯಾಕ್ಸಿಯಿಂದ ಇಳಿಯುವಾಗ ಅಘಾತದ ಬಲದಿಂದ ಅರಿವಿನಲ್ಲಿ ಮೂಡಿ ನಿಂತದ್ದು_ಝೋಪಡಪಟ್ಟಿಗಳೆಲ್ಲ ಮಟಾಮಾಯವಾಗಿರುವ ದುರಂತ ಸಂಗತಿ ! ಗರಾಜಿನವರಿಗೆ ಕೇಳಿದ. ಅವರು ಇವನ ಕಡೆಗೆ ವಿಚಿತ್ರ ಸಂಶಯದಿಂದ ನೋಡಿದರು. ‘ನಿಮಗೆ ಬೇಕಾದರೆ ನಾನು ವ್ಯವಸ್ಥೆ ಮಾಡುತ್ತೇನೆ, ಸಾಬ್ ವಿಳಾಸ ಕೊಡಿ,” ಎಂದ. ಅಲ್ಲಿಯ ಒಬ್ಬ ಮಿಕ್ಯಾನಿಕ್ : ಮೈಯಲ್ಲ ಕಪ್ಪು ಗ್ರೀಸ್ ಮೆತ್ತಿಕೊಂಡು ಜಿಗಿಜಿಗಿಯಾಗಿತ್ತು : ಬೆಳಿಗ್ಗೆ ಎದ್ದ ಕೂಡಲೇ ಕಳ್ಳ ಸರಾಯಿಗಾಗಿ ಬಂದಿದ್ದೇನೆಂದು ತಪ್ಪು ತಿಳಿದ ಆತನ ಮುಸುಡಿಗೆ ಹೊಡೆಯುವಷ್ಟು ಸಿಟ್ಟು ಬಂದಿತ್ತು. ಆದರೂ ತುಟಿ ಪಿಟ್ಟೆನ್ನದೇ ಅಲ್ಲಿಂದ ಹೆಜ್ಜೆ ಕಿತ್ತ. ಸರಸ್ವತಿಯನ್ನು ಕಾಣಲಾಗದ್ದಕ್ಕೆ ಮನಸ್ಸು ಖಿನ್ನವಾಗಿತ್ತು. ಝೋಪಡಪಟ್ಟಿಗಳು ನಿಂತ ಜಾಗದಲ್ಲಿ ಒಲೆ ಉರಿದ ಗುರುತುಗಳು ವಿಚಿತ್ರಭಾವನೆಗಳಿಗೆ ಕಾರಣವಾಗಹತ್ತಿದವು. +ಶ್ರೀನಿವಾಸನ ಮನೆ ತಲುಪಿದಾಗ ಕದ ತೆರೆದ ಹುಡುಗಿಯ ಪರಿಚಯ ಸಿಗದೇ ಗೊಂದಲಿಸಿದ. “ಶ್ರೀನಿವಾಸರಾವ್ ಅವರ ಮನೆ….?” ಎಂದು ಕೇಳುತ್ತಿದ್ದಾಗ ಚೇತನಾ ನಗು ಮಿಂಚುತ್ತ ಬಂದಳು: “ಬನ್ನಿ ಬನ್ನಿ, ಕಾಕಾ. ಇವಳು ನನ್ನ ಅಕ್ಕ_ಆಶಾ. ಹಾಗೂ ಈ ತುಂಟ ನನ್ನ ತಮ್ಮ_ಕಿರಣ. ಊರಿನಿಂದ ನಿನ್ನೆಯಷ್ಟೇ ಬಂದಿದ್ದಾರೆ.” ನಾಗಪ್ಪ ತನ್ನ ಕಣ್ಣುಗಳನ್ನು ನಂಬದಾದ. ಆಶಾ : ೧೬/೧೭ ರ ಹರೆಯದ ಹುಡುಗಿ. ಸೀರೆಯುಟ್ಟು ನಿಂತಿದ್ದಳು. ತಾಯಿಯದೇ ರೂಪ. ಗೌರವರ್ಣ. ಅಚ್ಚಹಸಿರು ಬಣ್ಣದ ನೈಲಾನ್ ಸೀರೆ, ಸ್ಲೀವ್‌ಲೆಸ್ ಮ್ಯಾಚಿಂಗ್ ಬ್ಲೌಸ್ : ಎಲ್ಲ ಭಾವನೆಗಳನ್ನು ಸೆರೆ ಹಿಡಿದು ನಿಂತಿದ್ದು ಅವಳ ಉದ್ದ ಕೇಶರಾಶಿ : ಶ್ಯಾಂಪೂ ಹಚ್ಚಿ ತಲೆಯ ಮೇಲೆ ಮಿಂದಿರಬೇಕು. ಇನ್ನೂ ಬಾಚಿಕೊಂಡಿರಲಿಲ್ಲ. ನೀರು ಒಣಗಲೆಂಬಂತೆ ಹಾಗೇ ಬೆನ್ನಮೇಲೆ ನೀಳವಾಗಿ ಹರಹಿಬಿಟ್ಟಿದ್ದಳು. ತಾನು ನೋಡುತ್ತಿದ್ದ ರೀತಿಗೆ ಆಶಾಳ ಗಲ್ಲಗಳು ಕೆಂಪಗಾದ ರೀತಿಯಿಂದ ಎಚ್ಚರಗೊಂಡವನ ಹಾಗೆ_”ಹೆಲ್ಲೋ ಆಶಾ, ಹೆಲ್ಲೋ ಕಿರಣ್,” ಎಂದು ತುಂಬ ಉಲ್ಲಸಿತನಾದ. ಇಬ್ಬರ ಗಲ್ಲಗಳನ್ನೂ ಪ್ರೀತಿಯಿಂದ ಚಿವುಟುತ್ತ ಚೇತನಾಳತ್ತ ತಿರುಗಿ_” ನೀನು ಹ್ಯಾಗಿದ್ದೀಯಾ ತುಂಟ ಹುಡುಗೀ.” ಎಂದು ಕೇಳಿದ. ಕಿಸೆಯೊಳಗಿಂದ ಚಾಕ್‌ಲೇಟ್ ಪ್ಯಾಕೆಟ್‌ಗಳನ್ನು ಹೊರತೆಗೆದು ಅವಳ ಕೈಗೆ ಕೊಟ್ಟು, “ಎಲ್ಲರಿಗೂ,” ಎನ್ನುತ್ತ ದಿವಾಣಖಾನೆಗೆ ಬಂದ. +ಸೋಫಾ ಒಂದರಲ್ಲಿ ಕೂಡುತ್ತಿರುವಾಗ_”ಅಪ್ಪ ಸ್ನಾನಕ್ಕೆ ಹೋಗಿದ್ದಾರೆ. ಊರಿಂದ ನಮ್ಮ ಅಜ್ಜಿ ಬಂದಿದ್ದಾಳೆ.”ಎಂದು ಚೇತನಾ ಸುದ್ದಿ ಕೊಟ್ಟಳು. ಅಜ್ಜಿ ! ತನ್ನ ಕತೆಯೊಳಗಿನ ಪದ್ದಕ್ಕ ! ಶ್ರೀನಿವಾಸ ಈ ಕಾರಣಕ್ಕಾಗಿಯೇ ಊಟಕ್ಕೆ ಕರೆದಿಲ್ಲ ತಾನೇ. ಶ್ರೀನಿವಾಸನ ಹೆಂಡತಿ ಒಮ್ಮೆ ಬಾಗಿಲಲ್ಲಿ ಪ್ರಕಟವಾಗಿ ಮುಗುಳುನಗೆ ಬೀರಿ ಒಳಗೆ ಹೋದಳು. ಮೂವರೂ ಮಕ್ಕಳು ತನಗೆ ಪ್ರೀತಿಯಿಂದ ಅಂಟಿಕೊಂಡ ರೀತಿಗೆ ನಾಗಪ್ಪ ತುಂಬ ಖುಶಿಯಾದ. ಶ್ರೀನಿವಾಸ ಇವರಾರ ಮುಂದೆಯೂ ತನ್ನ ಬಗ್ಗೆ ಡೊಂಕಾದದ್ದನ್ನೇನೋ ಮಾತನಾಡಿರಲಿಕ್ಕಿಲ್ಲ ಅನ್ನಿಸಿತು. +ಇವನು ಬಂದದ್ದರ ಸುಳಿವು ಹತ್ತಿದ ಶ್ರೀನಿವಾಸ, ಚೇತನಾಳನ್ನು ಕರೆದು ಬಚ್ಚಲುಮನೆಯಿಂದಲೇ ಆದೇಶವಿತ್ತ : “ಕಾಕಾಗೆ ಆಗ ಹೇಳಿದ ರೂಮು ತೋರಿಸು. ಡ್ರೆಸ್ಸು ಬದಲಿಸಲು ಹೇಳು. ಲುಂಗಿ ಕೊಡು.” +ಚೇತನಾ ಹಾಗೇ ಮಾಡಿದಳು. ಹಾಗೂ ಇವನು ತನಗಾಗಿ ಮೊದಲೇ ಸಿದ್ದಮಾಡಿ ಇಟ್ಟಂತಿದ್ದ ಕೋಣೆಗೆ ಹೋಗುವಾಗ_ಕಾಕಾ, ನೀವು ಈ ಡ್ರೆಸ್ಸಿನಲ್ಲಿ ತುಂಬ ಚಂದ ಕಾಣುತ್ತೀರಿ ಎಂದು ಮೋಹಕವಾಗಿ ನಕ್ಕಳು. ಇನ್ನೊಮ್ಮೆ ಅವಳ ಗಲ್ಲವನ್ನು ಚಿವುಟುತ್ತ_”ಹೌದೇ ? ಹಾಗಾದರೆ ಇಡೀ ದಿನ ಇದರಲ್ಲೇ ಇದ್ದುಬಿಡುತ್ತೇನೆ, ಎಂದ. ಲುಂಗಿ ಉಡುತ್ತಿದ್ದಾಗ_ಬುಶ್-ಶರ್ಟ್ ತೆಗೆಯುವದು ಬೇಡವೇನೋ, ಅಷ್ಟಾಗಿ ಶ್ರೀನಿವಾಸ ಒತ್ತಾಯಪಡಿಸಿದರೆ ಹೇಗಾದರೂ ಒಳಗೆ ಉದ್ದ ತೋಳಿನ ಬನಿಯನ್ ಇದ್ದೇ ಇದೆ_ಎಂದು ಸಮಾಧಾನ ಮಾಡಿಕೊಂಡ. ತೋಳಿಲ್ಲದ ಬನಿಯನ್ ತಾನು ಈವರೆಗೂ ತೊಟ್ಟಿರಲೇ ಇಲ್ಲ….ಶ್ರೀನಿವಾಸನ ಹರಟೆಯೋ ಇಂತಹ ಚಿಲ್ಲರೆ ವಿಷಯಗಳಿಂದಲೇ ಆರಂಭವಾಗಬೇಕು : ಡ್ರೆಸ್ಸು, ಅಡಿಗೆ, ಫರ್ನಿಚರ್_ಇಂತಹ ವಿಷಯಗಳನ್ನು ಬಿಟ್ಟರೆ ಮಾತನಾಡಲು ಬೇರೆ ವಿಷಯಗಳೆ ಇಲ್ಲ ಒಂದೂ ಮಗನ ಹತ್ತಿರ. ಹೆಂಗಸರ ಸೀರೆ ದಾಗೀನೆಗಳ ಮೇಲಂತೂ ನಿಷ್ಣಾತನಂತೆ ಗಂಟೆಗಟ್ಟಲೆ ಮಾತನಾಡಬಲ್ಲನೀತ_ಒಂದು ಬಗೆಯ ಸ್ವಾಪದ ಚೈತನ್ಯದಿಂದ…..ಸಂಬಾರ ಅವಲಕ್ಕಿ, ಬಿಸ್ಕೂಟಂಬೊಡೆಗಳ ಮೇಲೆ ಮಾತನಾಡುವಾಗ ನೋಡಬೇಕು : ನೀರೂರಿಸುತ್ತಿದ್ದ_ಬರೇ ಕೇಳುವವರ ಬಾಯಲ್ಲಷ್ಟೇ ಅಲ್ಲ ; ಸ್ವತಃ ತನ್ನ ಬಾಯಲ್ಲೂ ಜೊಲ್ಲು ಒಟ್ಟಾಗುತ್ತಿತ್ತು. ಶುದ್ಧ ದನ ! ಅಸಹ್ಯ ರೀತಿಯಲ್ಲಿ ಬಾಯಿ ಚಪ್ಪರಿಸುತ್ತ ಅಡಿಗೆಯ ವರ್ಣನೆ ಮಾಡುತ್ತಾನೆ. ಅವನ ಗಿಡ್ಡ ದೇಹಕ್ಕೆ ಶೋಭಿಸದ ಡೊಳ್ಳುಹೊಟ್ಟೆ. ಗುಂಡುಗುಂಡಾದ ದೇಹದ ಶಿಖರದಲ್ಲಿ ದೊಡ್ಡ ತಲೆ. ಹರೆವಾದ ಮೂಗು. ದಪ್ಪದಪ್ಪ ತುಟಿಗಳು. ಆಗೀಗ ಹುಕ್ಕಿ ಬಂದಾಗೊಮ್ಮೆ ಸಣ್ಣ ಚೆಂಡಿಕೆಬಿಟ್ಟು ತಲೆಯನ್ನು ತಕತಕ ಹೊಳೆಯುವಂತೆ ಬೋಳಿಸಿಕೊಂಡು ಬರುತ್ತಿದ್ದ. ಸದ್ಯ ತಿರುಗಿ ಕೂದಲು ಬೆಳೆಸಿದ್ದಾನೆ. ಖಾಕೀಬಣ್ಣದ ಚಡ್ಡಿ. ತೀರ ಹಳೇ ನಮೂನೆಯ ಅಂಗಿ. ಮನಸ್ಸು ಬಂದರೆ ಅತ್ಯಾಧುನಿಕ ಫ್ಯಾಶನ್ನಿನ ಬಟ್ಟೆಗಳನ್ನು ಧರಿಸಿದರೂ ಧರಿಸಿದನೇ. ಆದರದು ಕ್ವಚಿತ್ತ….. +ಚೇತನಾ ಈಗ ತೋರಿಸಿ ಹೋದ ಕೋಣೆ ಈ ಮೊದಲು ತಾನು ನಿಲ್ಲಲು ಬಂದ ಕೋಣೆಯಿಂದ ಬೇರೆಯಾಗಿತ್ತು. ಇಲ್ಲಿಂದ ಸಮುದ್ರ ಕಾಣಿಸುತ್ತಿರಲಿಲ್ಲ. ಬದಲು, ಝೋಪಡಪಟ್ಟಿಗಳ ಮಗ್ಗುಲಲ್ಲಿಯ ಗರಾಜು ಕಾಣುತ್ತಿತ್ತು. ಮೊದಲು ಝೋಪಡಪಟ್ಟಿಗಳಿದ್ದ ಜಾಗದಲ್ಲೀಗ ಇನ್ನೊಂದು ಹೊಸ ಕಟ್ಟಡ ಬರುತ್ತಿದ್ದಂತೆ ತೋರಿತು : ಅಲ್ಲಲ್ಲಿ ನೆಲದಲ್ಲಿ ಹೊಂಡ ತೋಡಿದ ಗುರುತುಗಳು. ಎಂಟೇ ದಿನಗಳಲ್ಲಿ ಎಷ್ಟೊಂದು ಮಾರ್ಪಾಡು ! ಸರಸ್ವತಿಯನ್ನು ಇನ್ನೆಂದೂ ಕಾಣಲಾರೆನೇನೋ : ನೆಟ್ಟ ದೃಷ್ಟಿಯಿಂದ ತನ್ನನ್ನು ನೋಡುತ್ತಿದ್ದಾಗ ಅವಳ ಕಣ್ಣುಗಳಲ್ಲಿ ಕೂಡ ಭಯದ ನೆನಪಾಗಿ ತಲ್ಲಣಗೊಂಡ. ಈ ನೆನಪಿನ ಹಿಂದೆಯೇ ಬಂದ ಒಂದು ವಿಚಾರಕ್ಕೆ ನಾಗಪ್ಪ ಸ್ಥಂಭಿತನಾದ : ಆಶಾ ಶ್ರೀನಿವಾಸನ ಚೊಚ್ಚಲ ಮಗಳಲ್ಲ. ಇರಲಾರಳು. ಶ್ರೀನಿವಾಸ ಮದುವೆಯಾಗಿ ಈಗ ಇಪ್ಪತ್ತು ವರುಷಗಳಾಗುತ್ತ ಬಂದವು. ಶಾರದೆಯ ವಿವಾಹ_ಪೂರ್ವ-ಚೆರಿತ್ರೆಯ ಬಗ್ಗೆ ಕೇಳಿದ ಕಂತೆ-ಪುರಾಣದ ಪಿಂಡ ಇವಳಿರಲಾರಳು. ಹಾಗಾದರೆ ಅವಳೇನಾದಳು ? ಅವಳು ಹುಟ್ಟಿದ್ದಾದರೂ ಹೌದೇ ? ಹುಟ್ಟಿದ ಕೆಲವೇ ತಿಂಗಳಲ್ಲಿ ಸತ್ತುಹೋದಳೆಂದು ಕೇಳಿರಲಿಲ್ಲವೇ ? ಕೇಳಿದ್ದೇನೇ ? ಯಾಕೆ ಇಷ್ಟೊಂದು ಅರೆವುಮರೆವು ? ಶಾರದೆಯ ಕಣ್ಣುಗಳಲ್ಲಿಯ ವ್ಯಾಕುಲತೆ, ಅವಳ ಮುಗ್ಧ ಸೌಂದರ್ಯಕ್ಕೆ ಮಾರುಹೋದ ತನ್ನ ಮರೆವಿಗೆ ಕಾರಣವಾಗುತ್ತಿರಬಹುದೇ ? ದೇವರೇ, ಎಷ್ಟೊಂದಕ್ಕೆ ಹೆದರಿಕೊಂಡು, ಎಷ್ಟೊಂದಕ್ಕೆ ಕಟ್ಟುಬಿದ್ದು, ನೆನಪಿನ ಕದಗಳನ್ನು ಒಂದೊಂದಾಗಿ ಮುಚ್ಚಿಕೊಳ್ಳುತ್ತಿದ್ದೇನೆ ! +ತಾನು ಅದೆಷ್ಟು ಹೊತ್ತು ಹೀಗೇ ವಿಚಾರಮಾಡುತ್ತ ಕಿಡಕಿಯ ಬಳಿ ನಿಂತಿದ್ದೆನೋ, ನಾಗಪ್ಪನಿಗೆ ತಿಳಿಯಲಿಲ್ಲ. ಅಡ್ಡ ಮಾಡಿದ ಕೋಣೆಯ ಕದ ದೂಡಿ ಶ್ರೀನಿವಾಸ ಒಳಗೆ ಬಂದ. ಬಂದವನೇ ಇವನ ಹೆಗಲ ಮೇಲೆ ಧೊಪ್ ಎಂದು ಕೈಯಿಟ್ಟು : “ಅದೇನು ನೋಡುವುದರಲ್ಲಿ ತಲ್ಲೀನನಾಗಿಬಿಟ್ಟೆ,” ಎನ್ನುತ್ತ ನಿಷ್ಕಾರಣವಾಗಿ ಹಹಹ ಎಂದು ನಕ್ಕ. ನಗುವಿನಲ್ಲಿಯ ಪೊಳ್ಳು ನಟನೆ ಸ್ಪಷ್ಟವಾಗಿತ್ತು : +“ನೀನು ಹೋದ ಸಾರೆ ಬಂದಾಗ ಇಲ್ಲಿ ಝೋಪಡಪಟ್ಟಿಗಳಿದ್ದವು. ಒಬ್ಬೊಬ್ಬರಿಗೆ ಐದೈದು ಸಾವಿರ ಕೊಟ್ಟು ಓಡಿಸಿಬಿಟ್ಟೆವು. ಒಟ್ಟೂ ಐವತ್ತು ಸಾವಿರ ಖರ್ಚು. ಇದೇ ಕೋ‌ಓಪರೆಟಿವ್-ಸೊಸೈಟಿಯ ಐದು ಮಜೆಲೆಯ ಇನ್ನೊಂದು ಕಟ್ಟಡ ಅಲ್ಲಿ ಬರುತ್ತದೆ. ಇನ್ನು ಆರು ತಿಂಗಳಲ್ಲಿ ನೀನಿಲ್ಲಿ ಬಂದರೆ ಈ ಜಾಗದ ಗುರುತೇ ನಿನಗೆ ಸಿಗಲಾರದು. ಮ್ಯಾನೇಜಿಂಗ್ ಕಮಿಟಿಯ ಪ್ರೆಸಿಡೆಂಟ್ ನಾನೇ. ಕಮಿಟಿಯ ಸದಸ್ಯ ಬೋಳೀಮಕ್ಕಳನ್ನು ಪುಸಲಾಯಿಸುವುದರಲ್ಲೇ ಆರು ತಿಂಗಳು ಕಳೆದುಹೋದವು. ಇಲ್ಲವಾದರೆ ಇಷ್ಟರಲ್ಲೇ ಕಟ್ಟಡ ಇಲ್ಲಿ ಎದ್ದು ನಿಲ್ಲುತ್ತಿತ್ತು. ಅಂದಹಾಗೆ, ನಿಮ್ಮ ಕಂಪನಿಯವರೇ ಈ ಹೊಸ ಕಟ್ಟಡದಲ್ಲಿ ಮೂರು ದೊಡ್ಡದೊಡ್ಡ ಫ್ಲ್ಯಾಟ್ಸ್ ಬುಕ್ ಮಾಡಿದ್ದಾರೆ. ಅದೆಲ್ಲ ಈಗ ಯಾಕೆ ? ಆಮೇಲೆ ಮಾತನಾಡೋಣವಂತೆ. ನಿಮ್ಮ ಕಂಪನಿಗೂ ನನಗೂ ಈಗ ಬಿಝಿನೆಸ್ ರಿಲೇಶನ್ಸ್ ಕೂಡ. ನಿಮ್ಮ ಬಂದೂಕವಾಲಾ_ಅವನಂತಹ ದೊಡ್ಡ ಜಂಟಲ್ಮನ್ನನನ್ನು ಇನ್ನೊಬ್ಬನನ್ನು ನೋಡಿಲ್ಲ ನೋಡು ! ಬಹಳ ದೊಡ್ಡ ಮನಸ್ಸಿನ ಮನುಷ್ಯ. ಚೊಕ್ಕತನದ ವ್ಯವಹಾರ….ಆಮೇಲೆ ಎಲ್ಲ ಹೇಳುತ್ತೇನೆ….ಮೊದಲು ಕೆಳಗೆ ಹೋಗೋಣ. ಊಟಕ್ಕಿನ್ನೂ ತಡವಿದೆ. ಅಮ್ಮ ಬಂದಿದ್ದಾಳೆ. ಇಲ್ಲವಾದರೆ ಫಸ್ಟ್‌ಕ್ಲಾಸಾಗಿ ಬಿಯರ್ ಕುಡಿಯಬಹುದಾಗಿತ್ತು. ನೀನು ಹೋದ ಸರತಿ ಬಂದಾಗ ನಮ್ಮ ಅಂಗಡಿಗೆ ಅಚ್ಯುತ ಇದ್ದ. ವಿಚಿತ್ರ ಪ್ರಾಣಿ. ಅವನಿದ್ದಷ್ಟು ದಿನ ಮನೆಯಲ್ಲಿ ಕುಡಿಯುವದು ಶಕ್ಯವೇ ಇರಲಿಲ್ಲ. ನಮ್ಮೆಲ್ಲರ ಮೇಲೆ ವಿಚಿತ್ರ ಸ್ವಭಾವ ಬೀರಿದ್ದ ನೋಡು ಅವನು ಇಲ್ಲಿ ಇದ್ದಷ್ಟೂ ತಿಂಗಳು. ಈಗ ಬಿಟ್ಟು ಹೋಗಿದ್ದಾನೆ. ಏನಾಯಿತೋ, ನೀನು ಇಲ್ಲಿಂದ ಹೋದಿಯಲ್ಲ, ಅದರ ಮರುದಿನವೇ ! ಮುಂಜಾನೆ ನಸುಕಿನಲ್ಲಿ ಎದ್ದವನೇ ಹೊರಟುಹೋಗಿರಬೇಕು. ಎಲ್ಲೂ ಮೂರು ತಿಂಗಳಿಂದ ಹೆಚ್ಚುಕಾಲ ನಿಂತವನಲ್ಲವಂತೆ. ಹೀದುಸ್ಥಾನದ ಮೂಲೆಮೂಲೆಯಲ್ಲೆಲ್ಲ ಸುತ್ತಾಡಿಬಂದಿದ್ದಾನಂತೆ. ನಿನ್ನನ್ನು ತುಂಬ ಹಚ್ಚಿಕೊಂಡಿದ್ದನೆಂದು ತೋರುತ್ತದೆ. ನೀನು ಹೊರಟುಹೋದ ದಿನ ಪದೇಪದೇ ನಿನ್ನ ಬಗ್ಗೆ ಕೇಳಿದ್ದೇ ಕೇಳಿದ್ದು. ಓದು ಬರಹ ಬಲ್ಲವನಂತೆ ಕಾಣಲಿಲ್ಲ….ಬಾ, ಕೆಳಗೆ ಹೋಗೋಣ. ಅಮ್ಮನಿಗೆ ನಿನ್ನನ್ನು ನೋಡುವ ಕುತೂಹಲ. ಬಿಸಿಬಿಸಿ ಚಹ ಕುಡಿಯೋಣ. ಇವಳು ಉದ್ದಿನ ಆಂಬೋಡೆ ಮಾಡಿದ್ದಾಳೆ. ನನ್ನ ಎಲ್ಲ ಮಕ್ಕಳೂ ಈವತ್ತು ಮನೆಯಲ್ಲೇ ಇದ್ದಾರೆ_” +ಇಷ್ಟೊಂದು ಚಂದವಾಗಿ, ಉತ್ಸಾಹದಿಂದ, ತನ್ನ ಬಗೆಗಿನ ಕಳಕಳಿಯಿಂದ ಮಾತನಾಡುವ ವ್ಯಕ್ತಿ ಒಳಗೊಳಗೇ, ಈಗ ವ್ಯಕ್ತವಾದ ಭಾವನೆಗಳಿಗೆ ವ್ಯತಿರಿಕ್ತವಾದ, ಬೇರೆಯೇ ಒಂದು ಕ್ರಿಯೆಗಾಗಿ ಹೊಂಚುಹಾಕುತ್ತಿರುವುದು ಶಕ್ಯವಿದೆಯೇ ? ನಾಗಪ್ಪ ಯಾವುದೇ ಒಂದು ನಿಲುಗಡೆಗೆ ಬರುವ ಸ್ಥಿತಿಯಲ್ಲಿ ಇದ್ದಂತಿರಲಿಲ್ಲ ; ಮನಸ್ಸು ಅದಾಗಲೇ ಅಚ್ಯುತನನ್ನು ಕುರಿತು ಧೇನಿಸುತ್ತಿತ್ತು. ಮೊದಲೊಮ್ಮೆ ಆದ ಸಂಶಯ ತಿರುಗಿ ಗಟ್ಟಿಯಾಗಹತ್ತಿತ್ತು. ಶ್ರೀನಿವಾಸನಿಗೆ ಏನೋ ಕೇಳಲು ಹೊರಟು ಬೇಡವೆಂದು ತೋರಿ ಸುಮ್ಮನಾದ. ಮರುಗಳಿಗೆ, ತಾನು ಪದ್ದಕ್ಕನನ್ನು ಕಾಣಲು ಉತ್ಸುಕನಾದವನ ಹಾಗೆ_”ಬಾ, ಅಮ್ಮನನ್ನು ನೋಡುವಾ,” ಎಂದ. “ಸೆಖೆಯಾಗುವದಿಲ್ಲವೆ ? ಬುಶ್‌ಕೋಟ್ ತೆಗೆ. ಬೇಕಾದರೆ ಕುರ್ತಾ ಇದೆ.” ಎಂದು ಶ್ರೀನಿವಾಸ ಸೂಚಿಸಿದಾಗ, “ಬೇಡ, ಚೇತನಾಗೆ ಈ ಬುಶ್-ಶರ್ಟಿನಲ್ಲಿ ಬಹಳ ಚಂದ ಕಂಡೆನಂತೆ,” ಎಂದು ನಕ್ಕ. ಇಬ್ಬರೂ ಕೋಣೆ ಬಿಟ್ಟು ಹಾಲಿಗೆ ಬಂದರು. +ನಾಗಪ್ಪನ ಹಾದಿಯನ್ನೇ ಕಾಯುತ್ತಿದ್ದ ಚೇತನಾ, ಕಿರಣರಿಬ್ಬರೂ_”ಕಾಕಾ ಕಾಕಾ, ಹಿತ್ತಲಿಗೆ ಹೋಗೋಣವೇ ? ನೋಡಿ ನಮ್ಮ ಗುಲಾಬಿ ಗಿಡದಲ್ಲಿ….”ಎನ್ನುತ್ತಿರುವಾಗ ಶ್ರೀನಿವಾಸ ಅವರ ಉತ್ಸಾಹಕ್ಕೆ ತಡೆ ಹಾಕಿದ; “ಕಾಕಾ ಮೊದಲು ಚಹ ಕುಡಿಯಲಿ. ಆಮೇಲೆ ನೋಡೋಣ, ಎಂದ ಹಿರಿಯ ಹುಡುಗಿ ಅಡುಗೆಮನೆಯಲ್ಲಿ ತಾಯಿಗೆ ನೆರವು ಕೊಡುತ್ತಿರಬೇಕೆ. ಆದರೆ ಪದ್ದಕ್ಕನೆಲ್ಲಿ ? ಅವಳನ್ನು ಕಾಣುವ ಉತ್ಸಾಹದ ಜಾಗದಲ್ಲೀಗ ಒಂದು ಬಗೆಯ ಕಾತರ ಮೆಲ್ಲನೆ ನೆಲಸಹತ್ತಿತ್ತು. ಚಹದ ಮಾತು ತೆಗೆಯುತ್ತಲೇ ಮಕ್ಕಳಿಬ್ಬರೂ ಅಡುಗೆಯ ಮನೆಯತ್ತ ಓಡಿದ್ದರು. ಮೊದಲೇ ತಾಲೀಮು ಮಾಡಿದ ನಾಟಕದ ದೃಶ್ಯದ ಹಾಗೆ. ಶ್ರೀನಿವಾಸ “ಕೂಡ್ರು” ಎನ್ನುತ್ತ ಸೋಫಾ ತೋರಿಸಿದ. ನಾಗಪ್ಪ ಕೂತುಕೊಂಡ ಕೂಡಲೇ ಅವನ ಕೈಗೆ ಕೆಲವು ಮೆಗೆಝಿನ್‌ಗಳನ್ನು ಕೊಡುತ್ತ, “ಓದು, ಚಹ ಬರುವಷ್ಟರಲ್ಲಿ ದೇವರ ತಲೆಗೆ ನಾಲ್ಕು ಹೂವುಗಳನ್ನೇರಿಸಿ ಬರುತ್ತೇನೆ,” ಎಂದು ಹೇಳಿ ಅವನೂ ಒಳಗೆ ಹೋದ. ಹಾಲಿನಲ್ಲಿ ನಾಗಪ್ಪನೊಬ್ಬನೇ. ತಲೆಯ ಮೇಲಿನ ಪಂಖ ತುಂಬು ವೇಗದಲ್ಲಿತ್ತು. ಎದ್ದು ಇನ್ನೊಂದು ಸೋಫಾಕ್ಕೆ ನಡೆದ. +ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದ ಆ ದಿವಾಣಖಾಣೆಯ ಸುತ್ತಲೂ ಕಣ್ಣುಹಾಯಿಸುವಾಗ_ಇದೇಕೆ ಮನಸ್ಸು ಹೀಗೆ ತಲ್ಲಣಗೊಳ್ಳುತ್ತಿದೆ ಎನ್ನುವದು ತಿಳಿಯದೇ ಕಳವಳಪಟ್ಟ. ವಿಶೇಷ ಎಚ್ಚರವಿಲ್ಲದೇನೆ ಶ್ರೀನಿವಾಸ ಕೊಟ್ಟುಹೋದ ಪತ್ರಿಕೆಗಳೊಳಗಿಂದ ಒಂದನ್ನು ಕೈಗೆತ್ತಿಕೊಂಡು ಪುಟ ತಿರುವಹತ್ತಿದ-ಅದು ಯಾವ ಭಾಷೆಯದು ಎಂಬುದು ಲಕ್ಷ್ಯಕ್ಕೆ ಬರುವ ಮೊದಲೇ ತನ್ನ ಬೆನ್ನ ಹಿಂದಿನ ಕೋಣೆಯೊಂದರ ಕದ ತೆರೆದ ಸದ್ದು ಕೇಳಿಸಿ, ಆಗಿನಿಂದಲೂ ಅತ್ತ ನೋಡದೆಯೂ ಕೂಡ ಆ ಕದ ತೆರೆಯುವದನ್ನೇ ತಾನು ಕಾಯುತ್ತಿದ್ದೆ ಎಂಬಂತಹ ಭಾವನೆಯಿಂದ ಹಿಂತಿರುಗಿ ನೋಡಿದ: “ಯಾರು, ನಾಗಪ್ಪನೇನೊ ?”ಎಂದು ದನಿ ಹುಟ್ಟಿಸಿದ ಆಕೃತಿ ಕಣ್ಣಮುಂದೆ ಮೂಡಿ ಅರಿವನ್ನು ತಟ್ಟಿದ್ದೇ ತಡ, ಧಡಕ್ಕನೆ ಎದ್ದು ನಿಂತ. ಮೈಮೇಲೆ ಮುಳ್ಳುನಿಂತು, ನಿಂತಲ್ಲೇ ಸಣ್ಣಗೆ ನಡುಗಿದ. “ಪದ್ದಕ್ಕನಲ್ಲವೆ ? ” ಎಂದು ಕೇಳಬೇಕೆಂದರೆ ಬಾಯಿಂದ ದನಿಯೇ ಹೊರಡದಾಯಿತು. ಬಾಗಿಲ ಪರದೆ ಸರಿಸಿ ಹೊರಗೆ ಬಂದದ್ದು ಮನುಷ್ಯಾಕೃತಿಯೇ ? ಎಂಬುದನ್ನು ಕೂಡ ನಂಬಲಾಗದವನ ಹಾಗೆ ಕಣ್ಣರಳಿಸಿ ನಿಂತ : ಈವರೆಗೂ ಅನುಭವಕ್ಕೆ ಬಂದಿರದ, ವಿಕಾಸವಾದದ ವಿದ್ಯಾರ್ಥಿಯಾಗಿಯೂ ಈವರೆಗೂ ಓದಿ ಕೂಡ ಗೊತ್ತಿರದ ಒಂದು ವಿಚಿತ್ರ ಪ್ರಾಣಿ ಧುತ್ ಎಂದು ಕಣ್ಣಮುಂದೆ ನಿಂತುಬಿಟ್ಟಿದೆ ಎಂಬಂತಹ ಅನ್ನಿಸಿಕೆಗೆ ನಾಗಪ್ಪ ಹೆದರಲಿಲ್ಲ. ಹೆದರಿದ್ದು_ಈ ಬಗೆಯಾಗಿ ತೋರುವ ಈ ಆಕೃತಿ ಪದ್ದಕ್ಕನದೇ ಎಂದು ಖಾತರಿಯಾದದ್ದಕ್ಕೆ : ಕೆಂಪುಸೀರೆ ಸುತ್ತಿಕೊಂಡ ದೇಹ ಮುದುಡಿ ಮುದ್ದೆಯಾಗಿ ಎರಡು ಕೈಗಳಂತಹ, ಎರಡು ಕಾಲುಗಳಂತಹ ಆವಯವಗಳು ಸೀರೆಯಿಂದ ಹೊರಗೆ ಚಾಚಿದ ಕಾರಣದಿಂದಲೇ ಇದು ಮನುಷ್ಯದೇಹವಿರಬಹುದೆಂಬ ಸಂದೇಹ ಹುಟ್ಟಿಸುವಂತಿತ್ತು. ತಲೆಯಿರುವ ಜಾಗದಲ್ಲಿಯ ಬೋಳುಬೋಳಾದ ಗೋಲಾಕೃತಿಯನ್ನು ಸೀರೆಯ ಸೆರಗು ಸಂಪೂರ್‍ಣವಾಗಿ ಮುಚ್ಚಿತ್ತು. ಮುಂದಿನ ತೆರವಿದ್ದ ಜಾಗದಲ್ಲಿ ಒಂದು ಹೆಣ್ಣಿನ ಮೂಗು ಆಗಿರಬಹುದಾದ, ಕಣ್ಣುಗಳಾಗಿರಬಹುದಾದ ಆವಯವಗಳ ಅವಶೇಷಗಳಂತಹ ಕುರುಹುಗಳು, ಬಾಯಿಯಂತಹ ದೊಡ್ಡ ತೂತಿನಲ್ಲಿ ಹಲ್ಲುಗಳಂತೆ ತೋರುವ ನಾಲ್ಕೈದು ಕಪ್ಪುಗಟ್ಟಿದ ತುಂಡುಗಳು, ಆ ವಿಚಿತ್ರ ತೂತಿನೊಳಗಿಂದಲೇ ಮತ್ತೆ ಸದ್ದು ಹೊರಟಿತು : “ನನ್ನ ಗುರುತು ಹತ್ತಿತೇನೋ. ಕೂತುಕೋ. ಶ್ರೀನಿವಾಸನಿಗೆ ನಾನೇ ಹೇಳಿದೆ- ನಿನ್ನನ್ನು ಕರೆಸು, ನೋಡದೇ ಎಷ್ಟು ವರ್ಷಗಳಾದವೂಽಽಽ ಎಂದು.” +ನಾಗಪ್ಪ ಕೂತುಕೊಂಡ_ನಿಂತುಕೊಂಡಿರುವದು ಶಕ್ಯವೇ ಇರಲಿಲ್ಲವಾದ್ದರಿಂದ ! ಮನುಷ್ಯನ ಸಹಜ ಸಂವೇದನೆಯ ಆಚೆ ಉಳಿದೂ ತೀರ ಸ್ಪಷ್ಟವಾಗಿ ದೃಷ್ಟಿ ಗೋಚರವಾದುದರ ಈ ಬೀಭತ್ಸ ವಾಸ್ತವತೆಯಿಂದ ಅರ್ಜುನ್‌ರಾವರ ಮನೆಯಲ್ಲಿ ನಾಸ್ತಾ ಮಾಡಿದ್ದೆಲ್ಲ ಹೊರಗೆ ಬರುವ ಭಯ : ಕಣ್ಣೆದಿರಿನ ಕೈಕಾಲುಗಳಿದ್ದ ಕೆಂಪುಮುದ್ದೆ ಮೆಲ್ಲಗೆ, ಅವನ ಇದಿರಿಗೇ, ನೆಲಕ್ಕೆ ಹಾಸಿದ ರತ್ನಗಂಬಳಿಯ ಮೂಲೆಯೊಂದರಲ್ಲಿ ಕುಸಿಯಿತು. ಎವೆ ಪಟಪಟಿಸುವ ಕಣ್ಣುಗಳಿಂದ_ಅಥವಾ ಹಾಗೇ ತೋರುವ ಇಂದ್ರಿಯಗಳಿಂದ ಅವನನ್ನು ಪಿಳಿಪಿಳಿ ನೋಡುತ್ತ ಕುಳಿತಿತ್ತು. ಬೊಚ್ಚಬಾಯಲ್ಲಿ ಉಳಿದುಕೊಂಡ ಹಲ್ಲುಗಳು ತುಟಿಗಳಲ್ಲಿ ಊರಿ ಅಸಹ್ಯವಾಗಿ ಕಂಡವು. “ನಮ್ಮ ಶ್ರೀನಿವಾಸಾಽಽ ಅರಮನೆಯಂಥಾಽಽ ಮನೆ ಕಟ್ಟಿಸಿದ್ದಾನೇ ಎಂದು ಗೋಕರ್ಣದಲ್ಲೆಲ್ಲಾಽಽ ಸುದ್ದಿ. ಸಾಯುವ ಮೊದಲೂಽಽನೋಡಿ ಹೋಗೋಣಾಽಽ ಅಂತ ಬಂದೆ.” ಹಲ್ಲಿಲ್ಲದ ಬಾಯಿಂದ ಬೊಚಬೊಚ ಎನ್ನುತ್ತ ಹೊರಟ ಆ ಶಬ್ದಗಳು ನಾಗಪ್ಪನ ಮೇಲೆ ವಿಚಿತ್ರ ಪರಿಣಾಮ ಮಾಡುತ್ತಿದ್ದವು…. +ತಮ್ಮಿಬ್ಬರನ್ನೇ ಹೀಗೆ ಒಂದೆಡೆಯಲ್ಲಿ ಬಿಟ್ಟುಹೋದದ್ದು ಆಕಸ್ಮಿಕವೋ ಅಥವಾ ಮೊದಲೇ ಯೋಜಿಸಿಕೊಂಡ ಹಿಕಮತ್ತೋ ಎಂದುಕೊಳ್ಳುವಷ್ಟರಲ್ಲಿ ಶ್ರೀನಿವಾಸನ ಹುಡುಗಿಯರಿಬ್ಬರೂ ಚಹದ ಸರಂಜಾಮನ್ನು ಅಲ್ಲಿ ತಂದು ಡೈನಿಂಗ್ ಟೇಬಲ್ ಮೇಲೆ ವ್ಯವಸ್ಥಿತವಾಗಿ ಇಡಹತ್ತಿದರು. “ಕಾಕಾ, ಆಂಬೋಡೆ ಬಿಸಿಬಿಸಿ ಇದ್ದಾಗಲೇ ತಿನ್ನುವಿರಂತೆ, ಬನ್ನಿ. ಅಪ್ಪ ಈಗ ಬರುತ್ತಾರೆ”_ ಹಿರಿಯ ಹುಡುಗಿ ಆಶಾ ತನ್ನೊಡನೆ ಮಾತನಾಡಿದ್ದು ಇದೇ ಮೊದಲಾಗಿತ್ತು. ಬಹಳ ಸಿಹಿಯಾದ ಕಂಠ. ಮಾತನಾಡುವಾಗ ನಗುವ ಮೋಡಿ, ಕಣ್ಣುಗಳಲ್ಲಿ ಮೂಡುವ ಹೊಳಪು. ಈ ಎಲ್ಲದಕ್ಕೂ ಕಳೆತರುವ ಮುತ್ತಿನಂತಹ ಹಲ್ಲುಗಳ ಸಾಲು _ ಇವುಗಳಲ್ಲಿ ಆಶಾ ಚೇತನಾಳನ್ನೇ ಹೋಲುತ್ತಿದ್ದಳು. ಆದರೆ ಅದೇ ವಯಸ್ಸಿಗೆ ಬರುತ್ತಿದ್ದ ಹುಡುಗಿ ತನ್ನ ಮೋಹಕತೆಯ ಬಗ್ಗೆ ತನಗೇ ಇದ್ದ ಅರಿವಿನಿಂದಾಗಿ ಚೇತನಾಳಿಗಿಂತ ಹೆಚ್ಚು ಆಕರ್ಷಕಳಾಗಿದ್ದಳು. ಚೇತನಾ ಕೂಡ ತನ್ನ ಅಕ್ಕನ ಕೋರಿಕೆಗೆ ದನಿಗೂಡಿಸಿದಳು. ಮುದುಕಿಯೂ ಹಿಂದೆ ಬೀಳಲಿಲ್ಲ: “ಹೋಗು ಹೋಗು ಶ್ರೀನಿವಾಸಾ ದೇವರ ಕೋಣೆಯಲ್ಲಿರಬೇಕು. ಇದೀಗ ಬರುವುದಾಯಿತು.” +ನಾಗಪ್ಪ ಎದ್ದು ಟೇಬಲ್ಲಿಗೆ ನಡೆದ. ಚೇತನಾ ತೋರಿಸಿದ ಕುರ್ಚಿಯಲ್ಲಿ ಕೂತರೆ ಮುದುಕಿ ಕಣ್ಣಿಗೆ ಬೀಳದಿರುವುದು ಅಸಾಧ್ಯವಾಗಿತ್ತು. ಆದರೆ ಬೇರೆಡೆಯಲ್ಲಿ ಕೂಡ್ರೋಣವೆಂದರೆ ಒಂದು ಕುರ್ಚಿಯ ಹತ್ತಿರ ಚೇತನಾ, ಇನ್ನೊಂದರ ಹತ್ತಿರ ಆಶಾ ನಿಂತಿದ್ದರು. ನಿರುಪಾಯನಾಗಿಯೇ ನಾಗಪ್ಪ ತನಗೆ ತೋರಿಸಿದ ಕುರ್ಚಿಯಲ್ಲೇ ಆಸನಾರೂಢನಾದ. ಮುದುಕಿಯ ಕಣ್ಣುಗಳು ಇನ್ನೂ ತನ್ನ ಮೇಲೇ ಊರಿದ್ದು ಲಕ್ಷ್ಯಕ್ಕೆ ಬಂದಾಗ ಆಂಬೋಡೆಗೆ ಕೈ ಹಚ್ಚುವುದೇ ದುಸ್ತರವಾಯಿತು. ಪುಣ್ಯಕ್ಕೆ ಅಷ್ಟು ಹೊತ್ತಿಗೆ ಶ್ರೀನಿವಾಸ ಬಂದ. ಇದಿರಿನ ಕುರ್ಚಿಯಲ್ಲಿ ಕೂತದ್ದರಿಂದ ತುಸು ನಿರಂಬಳವೆನಿಸಿತು : ಕೆಲವು ಕ್ಷಣಗಳ ಮಟ್ಟಿಗಾದರೂ ಶ್ರೀನಿವಾಸ ಮುದುಕಿಯ ದೃಷ್ಟಿಗೆ ಅಡ್ಡ ಬಂದಿದ್ದ ! ಆದರೂ ಆಂಬೋಡೆ ತಿನ್ನುವಾಗ, ಅವುಗಳ ರುಚಿಯನ್ನು ತನ್ನ ಕಡೆಗೆ ತುಂಬ ಸಲುಗೆಯಿಂದ ನೋಡುತ್ತ ನಿಂತ ಹುಡುಗಿಯರಿಬ್ಬರ ಮುಂದೆ ಪ್ರಶಂಸಿಸುವಾಗ, ಚಹ ಕುಡಿಯುವಾಗ ಮನಸ್ಸು ಕೆಲವೇ ಕಾಲದ ಮೊದಲು ಅನುಭವಿಸದ್ದನ್ನೇ ಮೆಲುಕು ಹಾಕುವುದರಲ್ಲಿ ಮಗ್ನವಾಗಿತ್ತು. +‘ಅಮ್ಮನನ್ನು ನೀನು ನೋಡದೇ, ಈಗ, ಎಷ್ಟು ಕಾಲವಾಯಿತೋ !” ಶ್ರೀನಿವಾಸ ಮಾತಿಗೆ ಆರಂಭಿಸಿದ್ದ. ಹಾಲಿನಲ್ಲಿಯ ಫ್ಯಾನು ತೀವ್ರಗತಿಯಲ್ಲಿ ತಿರುಗುವಾಗ ಬೇಡವಾದದ್ದನ್ನೇ ತಿರುತಿರುಗಿ ನೆನಪಿಗೆ ತರುವ ಕಿರಿಕಿರಿ ಮಾತಿನ ಹಾಗೆ ಸದ್ದು ಮಾಡುತ್ತಿತ್ತು. ಗರಾಜಿನಲ್ಲಿ ಕಬ್ಬಿಣದ ತುಂಡಿನ ಮೇಲೆ ಬೀಳುತ್ತಿದ್ದ ಸುತ್ತಿಗೆಯ ಪೆಟ್ಟು ಬೇಸರಕ್ಕೇ ಪುಟಕೊಡುತ್ತಿತ್ತು. ಸುತ್ತಲ ಕೇರಿಯ ಚಟುವಟಿಕೆಯ ಸದ್ದು ಸಮುದ್ರದ ನೀರಿನ ಸದ್ದನ್ನು ಸಂಪೂರ್ಣವಾಗಿ ಅಡಗಿಸಿತ್ತು. ಚಹದ ಬಿಸಿಗೋ ಆಂಬೋಡೆಯ ಜತೆಗಿರಿಸಿದ ಚಟ್ನಿಯ ಖಾರಕ್ಕೋ ಬನಿಯನ್ನಿನ ಕೆಳಗೆ ಬೆವರೊಡೆಯುತ್ತಿದ್ದ ಭಾಸ. ಕುತ್ತಿಗೆಯ ಮೇಲೆ ಕೂಡ. ತನಗೆ ಆಗ ಡ್ರೆಸ್ಸು ಬದಲಿಸುವಾಗ ಕೊಟ್ಟ ನ್ಯಾಪ್‌ಕಿನ್ನಿನಿಂದ ಕುತ್ತಿಗೆಯ ಮೇಲಿನ ಬೆವರೊರೆಸಿಕೊಳ್ಳುತ್ತಿರುವಾಗ_”ಕಾಕಾ, ಸೆಖೆಯಾಗುತ್ತಿದ್ದರೆ ಬುಶ್‌ಕೋಟ್ ಯಾಕೆ ತೆಗೆಯುವದಿಲ್ಲ ? ನಮ್ಮ ಅಕ್ಕ ಆಗ ನಿಮ್ಮ ಹರವಾದ ಛಾತಿಯ ತಾರೀಪು ಮಾಡುತ್ತಿದ್ದಳು.” ಎಂದಳು ಚೇತನಾ. ಆಶಾ ಸಿಟ್ಟು ನಟಿಸುತ್ತ ಚೇತನಾಳ ಕಿವಿ ಹಿಂಡಿದಳು. ನಾಗಪ್ಪ, ಮನಸ್ಸಿನ ತೋಲವನ್ನು ಕಳೆದುಕೊಳ್ಳದೇ_”ಹೌದೆ ? ಆದರೆ ನಿನಗೆ ನಾನು ಈ ಬುಶ್‌ಕೋಟು ಹಾಕಿಕೊಂಡದ್ದು ಸೇರುತ್ತದೆಯೆಂದು ತೊಟ್ಟೇ ಕುಳಿತಿದ್ದೇನೆ,” ಎಂದ. ಶ್ರೀನಿವಾಸ ನಡುವೆಯೇ ಬಾಯಿಹಾಕಿದ : “ಮೇಲಾಗಿ ಕಾಕಾನಿಗೆ ಛಾತಿ ತೆರೆದು ಫ್ಯಾನಿನ ಕೆಳಗೆ ಕೂತರೆ ಆರೋಗ್ಯಕ್ಕೆ ಸರಿಯಲ್ಲವೆಂದು ಡಾಕ್ಟರರೇ ಹೇಳಿದ್ದಾರಂತೆ.” ಹಿಂದೆ ಒಂದು ಸಂದರ್ಭದಲ್ಲಿ ತಾನು ಕೊಟ್ಟ ವಿವರಣೆಯನ್ನು ಶ್ರೀನಿವಾಸ ಈಗ ಪುನರುಚ್ಚರಿಸಿದ್ದರ ಉದ್ದೇಶ ನಾಗಪ್ಪನಿಗೆ ತಿಳಿಯಲಿಲ್ಲ. ಟೇಬಲ್ಲಿನಿಂದ ಏಳುವಾಗ ಮನಸ್ಸು ಒಂದನ್ನೇ ಕುರಿತು ಪ್ರಾರ್ಥಿಸುತ್ತಿತ್ತು : ಪದ್ದಕ್ಕನ ಮುದ್ದೆಯ ಮುಂದೆ ಕೂಡ್ರುವ ಪ್ರಸಂಗ ಮಾತ್ರ ಮತ್ತೆ ಬರದಿರಲಿ ! ಅದಾಗ ಶ್ರೀನಿವಾಸ ಅಂದ : “ಮಕ್ಕಳಿಬ್ಬರೂ ನಿನ್ನ ಕೂಡ ರಮ್ಮಿ ಆಡುವ ಪ್ಲ್ಯಾನ್ ಮಾಡಿ ಕುಳಿತಿದ್ದಾರೆ. ಊಟವಾದ ಮೇಲೆ ಆಡೋಣ. ಈಗ ಅಮ್ಮನೊಡನೆ ಮಾತನಾಡು. ಅಮ್ಮನಿಗೆ ನಿನ್ನೆಯಿಂದಲೂ ನಿನ್ನದೇ ಧ್ಯಾನ. ಬಾ. ನಿನ್ನ ಸಾಹಿತ್ಯಕ್ಕೂ ಸಾಮಗ್ರಿ ದೊರಕೀತು. ಅಮ್ಮನ ನೆನಪಿನಲ್ಲಿ ಏನೆಲ್ಲ ಎಷ್ಟೆಲ್ಲ ಭದ್ರವಾಗಿ ಕುಳಿತುಬಿಟ್ಟಿದೆ, ನೋಡು.” +ಹುಡುಗಿಯರಿಬ್ಬರಿಗೂ ನಿರಾಶೆಯಾಯಿತು. ಆದರೂ ಅದನ್ನು ತೋರಗೊಡದೆ ಖಾಲಿಯಾದ ಕಪ್ಪು-ಬಶಿಗಳನ್ನು, ಪ್ಲೇಟುಗಳನ್ನು ಒಳಗೆ ಒಯ್ಯಹತ್ತಿದರು. ಶ್ರೀನಿವಾಸನ ಹೆಂಡತಿ ಒಮ್ಮೆ ಬಾಗಿಲಲ್ಲಿ ಕಾಣಿಸಿಕೊಂಡು_”ಕಿರಣನೆಲ್ಲಿ ? ಇನ್ನೂ ಸ್ನಾನ ಮುಗಿಯಲಿಲ್ಲವೆ ?” ಎಂದು ಕೇಳಿದಳು. ಹೆಚ್ಚು ಹೊತ್ತು ಅಲ್ಲಿ ನಿಲ್ಲದೇ ತಿರುಗಿ ಅಡುಗೆಯ ಮನೆಯ ಕಡೆಗೆ ನಡೆದಳು. ಕಿರಣನೊಂದು ನೆಪವಾಗಿದ್ದ ; ಅವಳು ಬಂದದ್ದು ತನ್ನನ್ನು ನೋಡಿ ಹೋಗಲೆಂದೇ ಎಂದನ್ನಿಸಿತು ನಾಗಪ್ಪನಿಗೆ. ಕುರ್ಚಿಯಿಂದ ಏಳುವಾಗ, ಅವಳ ಕಣ್ಣುಗಳಲ್ಲಿ ಕಂಡಂತೆ ಭಾಸವಾದ ಆತಂಕದಿಂದ ಅಸ್ವಸ್ಥನಾದ. ಶ್ರೀನಿವಾಸ ನೇರವಾಗಿ ಸೋಫಾದ ಕಡೆಗೇ ನೋಡಹತ್ತಿದ್ದ. ಪದ್ದಕ್ಕನಿಗೆ ತೀರ ಹತ್ತಿರವಾದ ಸೋಫಾದ ಕಡೆಗೆ ಬೆರಳುಮಾಡಿ_”ಕೂಡ್ರು. ಅಮ್ಮನ ದೃಷ್ಟಿ ಇನ್ನು ಸ್ವಚ್ಛವಾಗಿದೆ ನೋಡು. ಆದರೆ ಕಿವಿ ಸ್ವಲ್ಪ ದೂರ….ಅಮ್ಮಾ, ನಾಗಪ್ಪನ ಹತ್ತಿರ ಮಾತನಾಡುವದು ಬಹಳವಿದೆ ಎಂದಿದ್ದೆಯಲ್ಲ. ನೋಡು, ಬಂದದ್ದಾನೆ. ನೀವಿಬ್ಬರೂ ಮಾತನಾಡಿಕೊಳ್ಳಿ. ನಾನು ಈ ಲೆಕ್ಕಪತ್ರಗಳನ್ನಷ್ಟು ನೋಡಿ ಮುಗಿಸುತ್ತೇನೆ,” ಎಂದು ಮೊದಲೇ ತಂದಿರಿಸಿದಂತಿದ್ದ ಫೈಲುಗಳನ್ನು ತೊಡೆಗಳ ಮೇಲಿರಿಸಿ, ಪರಿಶೀಲಿಸಹತ್ತಿದ. +ನಾಗಪ್ಪನಿಗೆ ಸಂಶಯ ಉಳಿಯಲಿಲ್ಲ ; ಈ ಮುಖಾಮುಖಿ ತೋರುವಷ್ಟು ಸರಳವಾದದ್ದಲ್ಲ. ಪದ್ದಕ್ಕ ತಾನಾಗಿಯೇ ಮುಂಬಯಿಗೆ ಬಂದದ್ದು ಸುಳ್ಳು, ಪೂರ್ವನಿಶ್ಚಿತ ಉದ್ದೇಶದಿಂದಲೇ ಅವಳನ್ನು ಕರೆಯಿಸಿರಬೇಕು. ತಾನು ಇಷ್ಟುದಿನ ಯಾವುದರಿಂದ ಪರಾರಿಯಾಗಿದ್ದೆನೋ ಆ ತನ್ನ ಭೂತಕಾಲ ಈಗ ಇವಳ ಮುಖಾಂತರ_ಇಂದೋ ನಾಳೆಯೋ ಸಾಯಲು ಹೊರಟ ಈ ಮುದಿ ಮುದ್ದೆಯ ಮುಖಾಂತರ ತನಗೆ ಇದಿರಾಗಲಿದೆ ! ಸಾಯಲು ಹೊರಟವಳಲ್ಲಿಯೂ ಕೊಲ್ಲುವ ಛಲದ ಪ್ರವೃತ್ತಿ ಇನ್ನೂ ಜೀವಂತವಾಗಿರಬಹುದೆಂಬ ಗುಮಾನಿಯಿಂದ ದಿಗ್ಭ್ರಮೆಗೊಂಡ. +uಟಿಜeಜಿiಟಿeಜ +– ಅಧ್ಯಾಯ ಮೂವತ್ತೊಂದು – +ನಾಗಪ್ಪ ಎಲ್ಲದಕ್ಕೂ ಸಿದ್ಧನಾಗಿ ಕೂತಂತೆ ಕೂತಿದ್ದ. ಹಾಲಿನಲ್ಲಿ ತುಸುಹೊತ್ತು ಯಾರೂ ಮಾತನಾಡಲಿಲ್ಲ. ಶ್ರೀನಿವಾಸ ತಾನು ಕೈಯಲ್ಲಿ ಹಿಡಿದದ್ದು ಅತ್ಯಂತ ತರಾತುರಿಯ ಕೆಲಸವೆಂಬಂತೆ ಅದರಲ್ಲಿ ಕೂಡಲೇ ಸಂಪೂರ್ಣವಾಗಿ ಮಗ್ನನಾದಂತೆ ತೋರಿಸಿಕೊಂಡ. ಮುದುಕಿ ಕೂಡ ಮಾತನಾಡದೇ ತದೇಕಚಿತ್ತದಿಂದ ನಾಗಪ್ಪನನ್ನೇ ನೋಡುತ್ತಿತ್ತು : ಅದು ನೋಡುವ ರೀತಿಗೆ, ತನ್ನನ್ನು ನೋಡುತ್ತಿದ್ದದ್ದು, ಇನ್ನೊಂದು ಮನುಷ್ಯ-ವ್ಯಕ್ತಿ ಎಂಬ ಭಾವನೆಯನ್ನು ಹುಟ್ಟಿಸಿಕೊಳ್ಳುವದು ಎಷ್ಟೊಂದು ಪ್ರಯತ್ನಪಟ್ಟರೂ ನಾಗಪ್ಪನಿಗೆ ಸಾಧ್ಯವಾಗಲಿಲ್ಲ. ಆ ಭಾವನೆ ಸಾಧ್ಯವಾಗದೇ ಇದ್ದುದ್ದಕ್ಕೋ ಏನೋ ತನ್ನ ಪ್ರಜ್ಞೆಗೆ ಸುಲಭವಾಗಿ ಗ್ರಹಿಸಲಾಗದ ಒಂದು ನೋಟ ತನ್ನ ಆಂತರ್ಯವನ್ನು ಹೊಕ್ಕು ಬೇರುಗಳವರೆಗೂ ತನ್ನನ್ನು ವೀಕ್ಷಿಸುತ್ತಿದೆ ಎಂಬಂತಹ ವಿಲಕ್ಷಣ ಅನುಭವವಾಗಿ ಕೈಗಳೆರಡನ್ನೂ ಎದೆಯ ಸುತ್ತ_ಗಟ್ಟಿಯಾಗಿ ಬಳಸಿ ಹಿಡಿಯುವಂತೆ_ಸುತ್ತಿಕೊಂಡಾಗ “ಚಳಿಯಾಗುತ್ತಿದ್ದರೆ ಆ ಪಂಖಾಽಽ ಏಕೆ ಬಂದುಮಾಡುವದಿಲ್ಲ ?” ಎಂದು ಮುದುಕಿಯ ಕಡೆಯಿಂದ ಬಂದ ಮಾತಿಗೆ ನಾಗಪ್ಪ ಅಕ್ಷರಶಃ ಸೋಫಾದಲ್ಲಿ ಜಿಗಿದುಬಿದ್ದ. ಶ್ರೀನಿವಾಸ ಕೂಡಲೇ ತನ್ನ ಫೈಲುಗಳೊಳಗಿಂದ ಲಕ್ಷ್ಯ ಹೊರತೆಗೆದವನ ಹಾಗೆ_ “ಅರೆ ! ನನ್ನ ಲಕ್ಷ್ಯಕ್ಕೇ ಬರಲಿಲ್ಲವಲ್ಲ. ಸಮುದ್ರ ದಂಡೆಯ ಮೇಲಿನ ಮನೆಯಾದರೂ ಬೆಳಗಿನ ಹೊತ್ತಿಗೆ ಇಲ್ಲಿ ಗಾಳಿಯೇ ಇಲ್ಲ ನೋಡು. ಆದರೆ ನಿನಗೆ ಪಂಖದ ಗಾಳಿ ಆಗುವದಿಲ್ಲ ಎನ್ನುವದು ಮರೆತೇಹೋಯಿತು,” ಎಂದು ಎದ್ದು ಪಂಖದ ವೇಗವನ್ನು ಕಡಿಮೆಮಾಡಿ ಬಂದವನೇ ತಿರುಗಿ ತನ್ನ ಕೆಲಸದಲ್ಲಿ ತಲ್ಲೀನನಾದ. +ನಾಗಪ್ಪನೇ ಸಹಿಸಲಸಾಧ್ಯವಾದ ಮೌನ ಮುರಿಯಲು ನಿಶ್ಚಯಿಸಿದ : +“ಪದ್ದಕ್ಕನಿಗೀಗ ಎಷ್ಟು ವಯಸ್ಸು ? ೭೦ ದಾಟಿರಬೇಕು, ಅಲ್ಲವೆ ?” ಎಂದು ಕೇಳಿದ ತನ್ನ ದನಿಯಲ್ಲಿ ನಡುಕವಿದ್ದದ್ದು ಲಕ್ಷ್ಯಕ್ಕೆ ಬಂದು ಮುಜುಗರವಾಯಿತು. ಆ ಒಂದು ಪ್ರಶ್ನೆಯ ಹಾದಿಯನ್ನೇ ಕಾಯುತ್ತಿದ್ದವಳ ಹಾಗೆ ಮುದುಕಿ ಬಾಯಿ ತೆರೆದದ್ದೇ ತಡ. ಮಾತು ಬೊಚಬೊಚ ಸದ್ದು ಮಾಡುತ್ತ ಹೊರಡಹತ್ತಿತ್ತು : ನಾಗಪ್ಪ ಬಿಸಿಲು ಕಾದ ಹಾಗೆ ಹೆಚ್ಚಾಗಹತ್ತಿದ ಸೆಖೆಯಲ್ಲಿ ಕೂಡ ಚಳಿ ಹತ್ತಿದವರ ಹಾಗೆ ನಡುಗುತ್ತ ಕೇಳಹತ್ತಿದ : +“ಎಪ್ಪತ್ತರ ವಯಸ್ಸಿನವಳ ಹಾಗೆ ಕಾಣುತ್ತೇನೆಯೇ ? ಚೇಷ್ಟೆ ಮಾಡುತ್ತೀಯಾ ?” ಎನ್ನುತ್ತಿರುವಾಗ ಶ್ರೀನಿವಾಸ_”ಅಮ್ಮನಿಗೀಗ ತೊಂಭತ್ತರ ಸಮೀಪ,” ಎಂದ. (ಬೋಳೀಮಗ, ಕಿವಿ ಇತ್ತವೇ ಇದ್ದೂ, ಓದುವ ನಟನೆ ಮಾಡುತ್ತಿರಬೇಕು !) +“ಇನ್ನು ೬ ತಿಂಗಳಿಗೆ ನನಗೆ ತೊಂಬತ್ತು ಮುಗಿದು ತೊಂಬತ್ತೊಂದಕ್ಕೆ ….ನನ್ನ ವಯಸ್ಸೇನು ಕೇಳಿತ್ತೀ ಬಿಡು. ನಾನು ನಿನ್ನ ಬಗ್ಗೆ ಯೋಚಿಸುತ್ತಾ ಇದ್ದೆ. ಯಾಕೆ, ಮದುವೆ ಮಾಡಿಕೊಳ್ಳುವ ವಿಚಾರ ಇಲ್ಲವೆ ? ನಿಮ್ಮ ಜಾತಿಯವರಲ್ಲೇನು ಚಂದ ಹುಡುಗಿಯರಿಗೆ ಕಡಿಮೆಯೆ ?” +ಹಿಂಸ್ರಪಶುವಿನ ಈ ಹಲ್ಲುಮಸೆತ ಕೇಳಿ ತನಗೆ ಆಶ್ಚರ್ಯವಾಗುತ್ತಿಲ್ಲವಲ್ಲ ಎಂಬ ಅರಿವಿನಿಂದ ನಾಗಪ್ಪನಿಗೆ ಸಂತೋಷವೇ ಆಯಿತು. ಅಂತೂ ತನ್ನ ಮೊದಲಿನ ಸಂಶಯವೇ ಗಟ್ಟಿಯಾಗುತ್ತಿದೆ. ಮುದುಕಿಗೆ ಉತ್ತರ ಕೊಡಬೇಕು ಎನ್ನುವಷ್ಟರಲ್ಲಿ ಶ್ರೀನಿವಾಸ ಗಾಬರಿ ಹಾಗೂ ಅಸಮಾಧಾನ ತುಂಬಿದ ದನಿಯಲ್ಲಿ_”ಅಮ್ಮಾ ! ಅದೆಲ್ಲ ಈ ಹೊತ್ತೇ ಬೇಕೆ ? ಊಟಕ್ಕೆ ಬಾ ಎಂದು ಕರೆಸಿದವನ ಇದಿರು ಈ ಜಾತಿ-ಪಾತಿಯ ಮಾತೇಕೆ ? ಇಂದಿನ ದಿನಗಳಲ್ಲಿ ಯಾರಿಗೆ ಅದರಲ್ಲೆಲ್ಲ ನಂಬಿಕೆ ಇದೆಯೆಂದಾಗಬೇಡವೆ ?” ಎಂದ. +ನಾಗಪ್ಪನಿಗೆ ಕೂಡಲೇ ಸಿಟ್ಟು ತರಿಸಿದ್ದು ಅವನ ಮಾತುಗಳಿಗಿಂತ ಹೆಚ್ಚಾಗಿ ಅವುಗಳಲ್ಲಿಯ ಢೋಂಗಿತನವನ್ನು ಮುಚ್ಚಲು ಅಸಮರ್ಥವಾದ ಅವನ ಗೊಗ್ಗರು ದನಿ. ತನಗೆ ಬಂದ ಸಿಟ್ಟನ್ನು ಅಡಗಿಸಿಕೊಳ್ಳುವ ಪ್ರಯತ್ನವನ್ನು ಎಳ್ಳಷ್ಟೂ ಮಾಡದೇ ಕೇಳಿದ : +“ನಿನ್ನ ಗಂಟಲು ಇದ್ದಕ್ಕಿದ್ದಂತೆ ಹಾಗೇಕಾಯಿತೋ (ಥತ್ ಸೂಳೇಮಗನೇ). ಚೇತನಾಗೆ ಹೇಳಿ ನೀರು ತರಿಸಲೇ ? ಆಂಬೋಡೆಯ ಜತೆಗಿನ ಚಟ್ಣಿಯ ಖಾರ ಎಲ್ಲಾದರೂ ಅಡಗಿರಬೇಕು ನೋಡು.” +ನಾಗಪ್ಪನ ಈ ಉದ್ಧಟತನದ ಆಹ್ವಾನ ನೇರವಾಗಿ ಮರ್ಮಸ್ಥಾನವನ್ನು ಕೆಣಕಿರಬೇಕು : ಕೈಯಲ್ಲಿ ಹಿಡಿದ ಫೈಲುಗಳನ್ನೆಲ್ಲ ಧೊಪ್ ಎಂದು ನೆಲಕ್ಕೆ ಒಗೆದ ರಭಸಕ್ಕೆ ತೆರೆದೇ ಇದ್ದ ಪೆನ್ನು ಕೂಡ ನೆಲಕ್ಕೆ ಅಪ್ಪಳಿಸಿ ಮಾರುದ್ದ ದೂರ ಸಿಡಿದುಬಿದ್ದಿತು. ಈ ಮುಖಾ-ಮುಖಿಯ ಪೂರ್ವಸೂಚನೆ ಮೊದಲೇ ಇದ್ದಂತಿದ್ದ ಮಕ್ಕಳೆಲ್ಲ ಎಲ್ಲೋ ಮಾಯವಾಗಿದ್ದರು : “ಚೇತನಾಽಽ,” ಎಂದು ಬಾಯಿಂದ ಹೊರಟ ಚೀತ್ಕಾರ ಗಂಟಲಲ್ಲಿಯ ಗೊಗ್ಗರು-ದನಿಯಲ್ಲಿ ಉಸಿರುಗಟ್ಟಿದರೂ ಅದಕ್ಕೆ ಕಾರಣವಾದ ಸಿಟ್ಟು ಮಾತ್ರ ಅಡುಗೆಯ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದು ಕಿವಿಗಳನ್ನು ಇತ್ತವೇ ಇರಿಸಿಕೊಂಡಿದ್ದ ಶಾರದೆಗೆ ಮುಟ್ಟುವುದರಲ್ಲಿ ಎಷ್ಟೂ ತಪ್ಪಲಿಲ್ಲ. ಅವಳು ಓಡೋಡಿ ಬಂದು ಬಾಗಿಲಲ್ಲಿ ನಿಲ್ಲುವ ಹೊತ್ತಿಗೆ ಶ್ರೀನಿವಾಸ ಸೋಫಾದಿಂದ ಎದ್ದು ಹಾಲಿನಲ್ಲಿ ಶತಪಥ ಹಾಕಹತ್ತಿದ. ಅವಳು ದೃಷ್ಟಿಗೆ ಬಿದ್ದದ್ದೇ_ನೀರು ತರಿಸುವುದಕ್ಕಾಗಿ ನಾನು ಚೇತನಾಳನ್ನ ಕರೆದಿದ್ದೆ ಎಂಬುದನ್ನು ಕೂಡ ಮರೆತು, “ನೀನ್ಯಾಕೆ ಬಂದೆ ಇಲ್ಲಿ_ನಿನ್ನ ದರಿದ್ರ ಮುಸುಡಿ ತಗೊಂಡು ?” ಎಂದು ಒದರಿದ. ಇದ್ದಕ್ಕಿದ್ದಂತೆ ಶ್ರೀನಿವಾಸನ ಗಂಟಲು ಬಿದ್ದುಹೋಗಿತ್ತು: ನಾಲ್ಕು ಕೇರಿ ಒಂದುಮಾಡುವಷ್ಟು ಎತ್ತರದ ದನಿಯಲ್ಲಿ ಆಡಿದ ಸಿಟ್ಟಿನ ಮಾತುಗಳಾದರೂ ಕಿವಿಯಲ್ಲಿ ಆಡಿದ ಮಾತುಗಳ ಹಾಗೆ ಪಿಸುಗುಟ್ಟಿದವು. ದಂಡನ ಅವತಾರ ನೋಡಿ ಕಂಗಾಲಾದ ಶಾರದೆ ಕೂಡಲೇ ಅಲ್ಲಿಂದ ಕಾಲು ಕಿತ್ತಳು. ಆಗ ಅವಳ ಮೋರೆಯ ಮೇಲೆ ಕಂಡ ನೋವು ನಾಗಪ್ಪನನ್ನು ತಟ್ಟದೇ ಇರಲಿಲ್ಲ : ಆ ನೋವೇ ಮುಂದಿನ ಕೆಲವುಕ್ಷಣಗಳ ಮಟ್ಟಿಗಾದರೂ ಇದೆಲ್ಲದರ ಸೋಕ್ಷಮೋಕ್ಷ ಆಗಲೇಬೇಕೆಂಬ ನಿರ್ಧಾರಕ್ಕೇ ಬಂದ ನಾಗಪ್ಪನ ಸಿಟ್ಟಿಗೆ ತಡೆ ಹಾಕಿತು. ಶ್ರೀನಿವಾಸ ಶತಪಥ ಹಾಕುತ್ತಲೇ ಉಳಿದ : ಯಾವುದೋ ಪಾಶವೀ ತಳದಿಂದ ಚಿಮ್ಮಿದ ಕ್ರೂರ ಸಿಟ್ಟು ಮಾನವಭಾಷೆಯ ತೆಕ್ಕೆಗೆ ಒಳಗಾಗಲು ಕೂಡಲೇ ಒಪ್ಪುತ್ತಿರಲಿಲ್ಲವೇನೋ ! +ಇತ್ತ, ಆಗಿನಿಂದಲೂ ತನ್ನ ಕ್ರೋಧವನ್ನೆಲ್ಲ ಕಣ್ಣಿನಲ್ಲಿ ಒಟ್ಟುಗೂಡಿಸಿ ಕೂತವಳ ಹಾಗೆ ಕೂತ ಪದ್ದಕ್ಕನೂ ಸಹ ಗುಡುಗುಡು ನಡುಗುತ್ತಿದ್ದಳು. ಆ ಅಸಹ್ಯ ದೃಷ್ಯವನ್ನು ನೋಡಿ ನಾಗಪ್ಪನಿಗೆ ದೊಡ್ಡಕ್ಕೆ ನಕ್ಕುಬಿಡಬೇಕೆನಿಸಿತು. ಹಾಲಿನಲ್ಲಿ ನಡೆಯುತ್ತಿದ್ದುದನ್ನು ನೋಡುತ್ತ ಕುಳಿತುಬಿಟ್ಟರೆ ನಗದೇ ಇರುವುದು ಅಸಾಧ್ಯವಾಗಿ ತೋರಿದಾಗ, ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಬರುವ ಮೊದಲೇ ಕೂತಲ್ಲಿಂದ ಎದ್ದು ಸೀದಾ ಅಡುಗೆಮನೆಯತ್ತ ನಡೆದೇಬಿಟ್ಟ. ಅಡುಗೆಯ ಮನೆಯಲ್ಲಿ ಶಾರದೆ ಒಬ್ಬಳೇ ಇದ್ದಳು. ಅವಳನ್ನು ತಾನು ಹೀಗೆ ಸಂಧಿಸುತ್ತಿದ್ದುದು ಇದೇ ಮೊದಲು ಎಂಬುದು ಲಕ್ಷ್ಯಕ್ಕೆ ಬಂದದ್ದು ಅವಳ ಭಯಗ್ರಸ್ಥ ಕಣ್ಣುಗಳು ತನ್ನ ಕಣ್ಣುಗಳನ್ನು ಸಂಧಿಸಿದಾಗಲೇ. ಅವಳೇ ಮೊದಲು ಮಾತನಾಡಿದಳು_”ಮಕ್ಕಳೆಲ್ಲ ಕೆಳಗಿನ ಮನೆಗೆ ಹೋಗಿದ್ದಾರೆ.” “ಶ್ರೀನಿವಾಸನಿಗೆ ಕುಡಿಯಲಿಕ್ಕೆ ನೀರು ಬೇಕೆಂದು ಕಾಣುತ್ತದೆ,” ಎಂದಾಗ ಸ್ಟೇನ್‌ಲೆಸ್ ತಂಬಿಗೆಯೊಂದರಲ್ಲಿ ರೆಫ್ರಿಜರೇಟರಿನಲ್ಲಿಟ್ಟ ಬಾಟಲಿಯೊಳಗಿನ ನೀರನ್ನು ಸುರಿಯುತ್ತ_”ಊಟಕ್ಕೆ ಇನ್ನರ್ಧ ಗಂಟೆಯಲ್ಲಿ ಕೂಡ್ರಬಹುದು.” ಎಂದಳು. ತಂಬಿಗೆ ಹಾಗೂ ಜೊತೆಗೆ ಕೊಟ್ಟ ಲೋಟಾಗಳೊಂದಿಗೆ ಹೊರಗೆ ಬಂದ ಶ್ರೀನಿವಾಸ ಶತಪಥ ಹಾಕುವದನ್ನು ನಿಲ್ಲಿಸಿ ಸೋಫಾದಲ್ಲಿ ಕುಸಿದಿದ್ದ. ನೀರಿನ ತಂಬಿಗೆಯನ್ನು ಹತ್ತಿರದ ಟೀಪಾಯಿಯೊಂದರ ಮೇಲಿಡುತ್ತ, “ನೀರು ಕುಡಿ, ಸಮಾಧಾನವಾದೀತು,” ಎಂದ ನಾಗಪ್ಪ. ನೆಲದ ಮೇಲೆ ಬಿದ್ದ ಪೆನ್ನು ಇನ್ನೂ ಬಿದ್ದಲ್ಲೇ ಇದ್ದುದನ್ನು ಕಂಡು ಅದನ್ನೆತ್ತಿ ಶ್ರೀನಿವಾಸನ ಕೈಗೆ ಕೊಡುತ್ತ, “ನನ್ನನ್ನು ಈ ಹೊತ್ತು ಕರೆದದ್ದು ಬರೇ ಊಟಕ್ಕಾಗಲೀ ಪದ್ದಕ್ಕನೊಡನೆ ಮಾತನಾಡುವುದಕ್ಕಾಗಲೀ ಅಲ್ಲ ಎಂಬುದನ್ನು ಬಲ್ಲೆ. ನಿನಗೆ ನನ್ನ ಬಗ್ಗೆ ಇಷ್ಟೊಂದು ದ್ವೇಷವೇಕೋ ಅರಿಯೆ. ನಿನ್ನ ಹಿತಾಸಕ್ತಿಗಳಿಗೆ ಅಡ್ಡಬರುವಂಥದ್ದೇನೂ ಮಾಡಿಲ್ಲ. ಆದರೂ ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆ.” ಎಂದ. ಹಾಗೂ ಪದ್ದಕ್ಕನತ್ತ ತಿರುಗಿ : “ಆಗ ನನ್ನ ಜಾತಿಯ ಬಗ್ಗೆ ಮಾತು ಎತ್ತಿದೆಯಲ್ಲ….” +ಅವನ ವಾಕ್ಯ ಪೂರ್ತಿಯಾಗುವ ಮೊದಲೇ ಶ್ರೀನಿವಾಸನ ಮೂಗಿನ ಹೊರಳೆಗಳು ಅರಳಹತ್ತಿದವು. ಆದರೆ ಬಾಯಿ ತೆರೆಯೋಣವೆಂದರೆ ಗಂಟಲಲ್ಲಿ ದನಿ ಮೂಡಬಹುದೆಂಬ ಭರವಸೆ ತೋರದೆ ಕೆಲಹೊತ್ತು ಸುಮ್ಮಗೆ ಉಳಿದ. ಆಮೇಲೆ, ಇನ್ನು ಸುಮ್ಮಗುಳಿಯುವುದು ಸಾಧ್ಯವಿಲ್ಲ. ಎನ್ನುವ ಹಾಗೆ “ಉಳಿದವರ ಚಾರಿತ್ರ್ಯದ ಬಗ್ಗೆ ಮಾತನಾಡುವ ಮೊದಲು ನಿನ್ನ ಚಾರಿತ್ರ್ಯವನ್ನಷ್ಟು ನೋಡಿಕೋ….ಎಂದ. ವಾಕ್ಯದ ಧಾಟಿ ನೋಡಿದರೆ, ಅದು “ಸಿಟ್ಟುಮೋರೆಯವನೇ,” ಇಲ್ಲವೇ ಇಂತಹದೇ ಬೈಗುಳವೊಂದರಲ್ಲಿ ಕೊನೆಗೊಳ್ಳುವಹಾಗಿತ್ತು. ದನಿ ಇನ್ನೂ ಗೊಗ್ಗರುಗೊಗ್ಗರಾಗಿತ್ತು. +“ನನ್ನ ಚಾರಿತ್ರ್ಯದ ಕಾಳಜಿ ನನಗೆ ಬಿಡು, ಆದರೆ ನಿನ್ನ…” +ನಿನ್ನ ಚಾರಿತ್ರ್ಯದ ಕತೆ ನಿನಗೇ ಗೊತ್ತಿದ್ದರಲ್ಲವೇ ಸೂಳೇಮಗನೇ….ಅಮ್ಮನನ್ನು ಕೇಳು….” ಶ್ರೀನಿವಾಸನ ಸಿಟ್ಟು ಮಸ್ತಕಕ್ಕೇರಿತ್ತು. +“ಕೇಳಿಯೇ ಕೇಳುತ್ತೇನೆ. ಅದಕ್ಕೇ ಬಂದಿದ್ದೇನೆ. ನಿನ್ನ ಮಿಷ್ಟಾನ್ನಭೋಜನಕ್ಕಲ್ಲ. ಆದರೆ ಜೋಕೆ ! ಬೈಗುಳಕ್ಕೆ ಇಳಿದೆಯೋ ಹಲ್ಲು ಉದುರಿಸುತ್ತೇನೆ. ಇದು ಬರೀ ಮಸ್ಕರಿಗೆಂದು ತಿಳಿಯಬೇಡ. ಎಲ್ಲದಕ್ಕೂ ಸಿದ್ಧನಾಗಿಯೇ ಬಂದಿದ್ದೇನೆಂದು ಹೇಳಿದೆನಲ್ಲ. ನನ್ನ ಕಂಪನಿಯವರು ಹೂಡಿದ ಪಿತೂರಿಯಲ್ಲಿ ನೀನು ಸಾಮೀಲಾದದ್ದು ನನಗೆ ಗೊತ್ತಿಲ್ಲವೆಂದು ತಿಳಿಯಬೇಡ. ಎಲ್ಲವನ್ನೂ ಸ್ಪಷ್ಟಮಾಡಿಕೊಳ್ಳಲು ನಾನೇ ಬರುವವನಿದ್ದೆ, ನೀನಾಗಿ ಕರೆದೆಯಲ್ಲ_ಉತ್ತಮ ಆಯಿತು.” +ಶ್ರೀನಿವಾಸನ ಮೋರೆ ಬಣ್ಣಗೆಡಹತ್ತಿತು. +“ಹಲ್ಲು ಉದುರಿಸುವ ಧಮಕಿ ಹಾಕ್ತೀಯೇನೋ ಅವನಿಗೆ ? ಆ ನೀರಿದೆಯೇನೋ ನಿನ್ನೊಳಗೆ ? ತನ್ನ ಸ್ವಂತ ಮೆಹನತ್ತಿನಿಂದ ಅವನು ಮೇಲೆ ಬಂದದ್ದು ಇಂದು ನಮ್ಮ ಜಾತಿಯವರ ಸಮಾಜದಲ್ಲಿ_ಮುಂಬಯಿಯಲ್ಲೇ ಯಾಕೆ ಪರ್ತಗಾಳಿಯ ಮಠದಲ್ಲಿ, ಗೋಕರ್ಣದ ಮಠದಲ್ಲಿ_ಅವನು ಗಳಿಸಿದ ಪ್ರತಿಷ್ಠೆ ನಿನ್ನಿಂದ ನೋಡಲಾಗುವುದಿಲ್ಲ ಅಲ್ಲವೇನೋ ? ಈ ದೊಡ್ಡ ಮನೆ, ಅವನ ಈಚಿನ ಚಂದವಾದ ಸಂಸಾರ ಕೂಡ ನಿನ್ನ ಕಣ್ಣು ಕುಕ್ಕಿಸುತ್ತಿರಬೇಕು ಅಲ್ಲವೇನೋ ? ಬರೀ ಸೂಳೆಯರ ಸಂಗ ಮಾಡಿ ಬೀದೀ ಬಸವನ ಹಾಗೆ ತಿರುಗುವ ನಿನಗೆ ಎಂಥಾ ಸ್ಥಾನಾ ಮಾನಾ ಇವೆಯೊ ? ನಿನ್ನನ್ನು ದೂರಿ ಏನು ಉಪಯೋಗ ಬಿಡೂ. ಹಲ್ಕಾ ಜನರಿಗೆ ಹುಟ್ಟಿದವನು ನೀನು. ರಕ್ತದ ಗುಣ ಎಲ್ಲಿ ಹೋಗಬೇಕು. ನಿನಗೆ ಗೊತ್ತಿದೆಯೋ ಇಲ್ಲವೋ ನಿನ್ನಮ್ಮ ನಮ್ಮ ಜಾತಿಯವಳಲ್ಲ_ಕಲಾವಂತರವಳು. ಗೋವೆಯ ಮಂಗೇಶೀ ದೇವಾಲಯದಲ್ಲಿ ಕುಣಿತ ಮಾಡುತ್ತಿದ್ದ ಹುಡುಗಿ. ಅವಳು ಅಮ್ಮ, ಅಜ್ಜಿ ಎಲ್ಲ ಕುಣಿತದ ಜೊತೆ ಸೂಳೇತನ ಕೂಡ ಮಾಡ್ತಿದ್ರೂ….” +ಪದ್ದಕ್ಕನಿಂದ ಮಿನಿಟಿಗೆ ಒಂದೊಂದರಂತೆ ಎಂಜಲು ಸಿಡಿಸುತ್ತ ಹೊರಬರುತ್ತಿದ್ದ ಈ ಮಾತುಗಳಿಂದ ನಾಗಪ್ಪನ ಮೋರೆಯ ಮೇಲೆ ಆಗುತ್ತಿರಬಹುದಾದ ಬದಲುಗಳನ್ನು ಊಹಿಸಿಯೇ ಎರಡೂ ಕೈಗಳಿಂದ ಗಟ್ಟಿಗಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಬಿಟ್ಟ, ಶ್ರೀನಿವಾಸ. ಆದರೆ ನಾಗಪ್ಪನ ಮೋರೆ ಅವನು ಊಹಿಸಿಕೊಂಡ ರೀತಿಯಲ್ಲಿ ಬದಲಾಗುತ್ತಿರಲೇ ಇಲ್ಲ : ವಿಲಕ್ಷಣ ಆಸ್ಥೆಯಿಂದ ಮುಗುಳುನಗುತ್ತ ಕೇಳುತ್ತಿದ್ದ : ಪದ್ದಕ್ಕಾ, ನಿಲ್ಲಿಸಬೇಡ…. ಕತೆ ಬಹಳ ರಸಭರಿತವಾಗಿದೆ….ಶ್ರೀನಿವಾಸ ನಿನಗೆ ಹೇಳಿರಬೇಕು_ನಾನು ಸದ್ಯ ಒಂದು ದೊಡ್ಡ ಕಾದಂಬರಿ ಬರೆಯುವದರಲ್ಲಿ ಮಗ್ನನಾಗಿದ್ದೇನೆ. ಆಗ ನೀನು ಹೊಗಳಿದ ನಮ್ಮ ಸಮಾಜದಲ್ಲಿಯ ದೊಡ್ಡದೊಡ್ಡ(ಕುಂಡೆಗಳುಳ್ಳ) ಪ್ರತಿಷ್ಠಿತರ ಧವಳ ಚೆರಿತೆಗಳ ಬಗ್ಗೆಯೇ ಇದೆ ಕಾದಂಬರಿ. ಈಗ ನೀನು ಹೇಳುತ್ತಿದ್ದ ಕತೆಯನ್ನು ಅದರಲ್ಲೆ ಒಂದು ಅಡ್ಡಕತೆಯಾಗಿ ಸೇರಿಸಿಬಿಡುತ್ತೇನೆ. ಪಂಚಪಕ್ವಾನ್ನದ ಜೊತೆಗೆ ನಂಜಿಕೊಳ್ಳಲಿಕ್ಕೇನಾದರೂ ಬೇಡವೇ ? ಹೇಳು ಹೇಳು….ಇಷ್ಟೇ : ನನ್ನ ಅಮ್ಮನ ಅಮ್ಮ, ಅಮ್ಮನ ಅಜ್ಜಿಯರ ಬಗ್ಗೆ ನಿನಗೆಲ್ಲ ಗೊತ್ತಿರಬೇಕಾದರೆ ನೀನೂ ಕೂಡ ಅವರ ಕೇರಿಯಲ್ಲೇನಾದರೂ….” +“ಮಸ್ಕರಿ ಮಾಡ್ತೀಯೇನೋ ನಿರ್ಲಜ್ಜ. ನಾನು ಹೇಳುತ್ತಿದ್ದದ್ದು ನಿನ್ನ ಮೇಲೆ ಏನೂ ಪರಿಣಾಮ ಮಾಡುತ್ತಿಲ್ಲ ಎಮ್ದು ನಟಿಸಬೇಡ.” +“ಪರಿಣಾಮ ಮಾಡುತ್ತಿಲ್ಲ ಎಂದು ಹೇಗೆ ಹೇಳಲಿ, ಪದ್ದಕ್ಕ (ಪರಿಣಾಮ ಮಾಡಲಿಕ್ಕೆಂದೇ ನೀನು ಈಗ ಹೇಳುತ್ತಿರುವಾಗ) ? ಆದರೆ ನೀನು, ಶ್ರೀನಿವಾಸ ತಿಳಕೊಂಡ ಕಾರಣಕ್ಕಾಗಿ ಅಲ್ಲ ನನ್ನ ಅಮ್ಮ ಕಲಾವಂತ ಹೆಣ್ಣಾಗಿದ್ದಳು.ಅವಳನ್ನು ಮದುವೆಯಾದ ಅಪ್ಪ ಕೂಡ ಹನೇಹಳ್ಲಿಯ ಸಾರಸ್ವತ ಸಮಾಜದ ಸಂಭಾವಿತರು ಅನೇಕ ವರ್ಷಗಳವರೆಗೆ ತಿಳಕೊಂಡಂತೆ ಬ್ರಾಹ್ಮಣನಾಗಿರದೇ ಯಾವುದೋ ಜಾತಿಯವನಾಗಿದ್ದ…” +“ನಿನಗಿದು ಗೊತ್ತಿತ್ತೇನೋ ?” ಶ್ರೀನಿವಾಸ ಬಾಯಿಬಿಟ್ಟ. ಗಂಟಲು ಸಡಿಲಿಸಿತ್ತು. +“ಗೊತ್ತಿರಲಿಲ್ಲ. ನೀನೇ ಇಂತಹ ಅಗಾಧ ಶೋಧವೊಂದರಲ್ಲಿ ತೊಡಗಿದ್ದೀ ಎನ್ನುವದು ‘ಸಂತೋಷಭವನ”ದನಾಯಕನಿಂದ ತಿಳಿಯಿತು.” ಎಂದ. ಶ್ರೀನಿವಾಸ ಹಾಗೂ ಪದ್ದಕ್ಕ ತನ್ನನ್ನೇ ಮಿಕಿಮಿಕಿ ನೋಡುತ್ತ ಕೂತದ್ದನ್ನು ನೋಡಿ ತನ್ನಷ್ಟಕ್ಕೇ, ‘ನನಗೆ ಮುಖ್ಯವೆಂದು ತೋರಿದ್ದು ನನ್ನ ಅಪ್ಪ-ಅಮ್ಮ ಯಾವ ಜಾತಿಯವರು ಎನ್ನುವದಲ್ಲ. ಈ ವಯಸ್ಸಿನಲ್ಲಂತೂ ಅದರ ಬಗ್ಗೆ ನನಗೆ ಏನೂ ಅನ್ನಿಸುವದಿಲ್ಲ. ಆದರೆ ನನಗಿನ್ನೂ ಅರ್ಥವಾಗದೇ ಇದ್ದದ್ದು _ ಇದನ್ನೆಲ್ಲ ಉಪಯೋಗಿಸಿ ನೀವು ನನ್ನನ್ನು ಹಣಿಯಲು ಹೊರಟಿದ್ದರ ಉದ್ದೇಶ ; ಇದ್ದಕ್ಕಿದ್ದಂತೆ ನಾವು ಮನುಷ್ಯಜಾತಿಯಿಂದ ಕೆಳಗಿಳಿಯುತ್ತಿದ್ದರ ಕಾರಣ. ಆದರೆ ಇಷ್ಟು ದಿನ ಯಾವುದನ್ನು ತಿಳಿಯಲು ನಾನು ಹೆದರಿದ್ದೇನೆ ಎಂದು ಅನ್ನಿಸಿತ್ತೋ ಅದೆಲ್ಲ ಈಗ ತೀರ ಹಾಸ್ಯಾಸ್ಪದವೆನ್ನಿಸಹತ್ತಿದೆಯಲ್ಲ. ಇಂತಹ ಯಾವ ಒಂದು ಭಾವನೆಯೂ ನಿಜವೆನ್ನಿಸುವದಿಲ್ಲವಲ್ಲ,” ಎಂದುಕೊಳ್ಳುತ್ತಿರುವಾಗ ಮೂವರೂ ಒಮ್ಮೆಲೇ ಮೌನ ತಳೆದದ್ದು ಲಕ್ಷ್ಯಕ್ಕೆ ಬಂದು: ‘ಪದ್ದಕ್ಕಾ, ನಮ್ಮಮ್ಮ ಇಂತಹದೇ ಮನೆತನದವಳು, ಅಪ್ಪ ಇಂತಹದೇ ಜಾತಿಯವನು ಎಂದು ನಿನಗೆ ಯಾವಾಗ ಗೊತ್ತಾಯಿತು ? ಹೇಗೆ ಗೊತ್ತಾಯಿತು ? ಅದಕ್ಕಿಂತ ಹೆಚ್ಚಾಗಿ ಇದನ್ನೆಲ್ಲ ನಿನ್ನಿಂದ ಹೇಳಿಸಲೆಂದೇ ನಿನ್ನನ್ನು ಇಲ್ಲಗೆ ಕರೆಸಿದ್ದರ ಹಿಂದಿನ ಹೇತು ಯಾವುದು ? ಇಂತಹ ಮುದಿವಯಸ್ಸಿನಲ್ಲಿ ನನಗಿದನ್ನೆಲ್ಲ ಹೇಳಿ ನನ್ನ ಮನಸ್ಸನ್ನು ನೋಯಿಸುವ ಚಪಲ ನಿನಗೆ ಯಾಕೆ ? ಹೇಳಿದೆನಲ್ಲ : ನನಗೀಗ ಇವೆಲ್ಲ ಬರೀ ಕುತೂಹಲದ ವಿಷಯಗಳಾಗೇ ಉಳಿದಿವೆ. ಆದರೂ….” ಇಲ್ಲ, ನಾಗಪ್ಪ ಈ ಯಾವ ಪ್ರಶ್ನೆಗಳನ್ನೂ ಕೇಳಲಿಲ್ಲ. ಕೇಳುವ ಗರಜೇ ತೋರಲಿಲ್ಲ. ಇದ್ದಕ್ಕಿದ್ದಂತೆ ಒಂದು ಬಗೆಯ ಅನಾಸಕ್ತಿ ಬಂದುಬಿಟ್ಟಿದೆ ಎಂಬ ಅನ್ನಿಸಿಕೆಯಿಂದ ತಾನೇ ಚಕಿತನಾದ : ಇದಾವುದರಲ್ಲೂ ತನಗೆ ನಂಬಿಕೆಯೇ ಇದ್ದಿರದಿದ್ದರೆ, ಶ್ರೀನಿವಾಸನೊಡನೆ ತಾನು ಇಷ್ಟು ದಿನ ಕಾದ, ಒಂದು ರೀತಿಯ ದ್ವೇಷಕ್ಕೆ ಅರ್ಥವೇನು ? ಇದೀಗಿನ ತನ್ನ ಔದಾಸಿನ್ಯಕ್ಕೆ ತಾನು ಇಷ್ಟು ದಿನ ಅನುಭವಿಸಿದ್ದು, ಅದರಿಂದಾಗಿ ಹುಟ್ಟಿರಬಹುದಾದ ಸುಸ್ತು ಇದೇ ಕಾರಣಗಳಿಗಾಗಿರಬಹುದೆ ? ಅಥವಾ ಅಪ್ಪ-ಅಮ್ಮರ ಜಾತಿಗಿಂತ (ಇವೂ ಈಗ ತನ್ನನ್ನು ಬಾಧಿಸುತ್ತಿಲ್ಲ ಎನ್ನುವದು ನಿರ್ವಿವಾದ) ತನ್ನನ್ನು ಕಾಡುತ್ತಿದ್ದ ಭಯದ ಜಾಗ ಫಕ್ಕನೆ ಈ ಮುದುಕಿಯ ಮಾತಿನಿಂದ ಪ್ರಕಟವಾದೀತೆಂದು ದಿಗಿಲುಗೊಂಡಿರುವೆನೆ ? ಇವಳಿಗೆ ಗೊತ್ತಿರಬಹುದೇ_ತನ್ನ ಅಂಗಿಗೆ ಬೆಂಕಿ ಬಿದ್ದ ಪ್ರಕರಣ ? ತಂಗಿ ಕಳೆದುಹೋದ ಪ್ರಸಂಗ ? ತನಗೆ ಒಬ್ಬ ಅಣ್ಣನಿದ್ದ ಎಂದು ಕೇಳಿದ್ದೆ_ಮುಂದೇನಾದ ? ಇವಳನ್ನು ಕೆಣಕಿದರೆ ಫಕ್ಕನೆ ಹೇಳಿಬಿಟ್ಟಾಳೆ ?…. +ಬಾಯಿಂದ ಹೊರಟ ಮಾತು ಮಾತ್ರ ಮನಸ್ಸಿನಲ್ಲಿ ಹೊಳಹು ಹಾಕಿದ್ದಕ್ಕೆ ತೀರ ವ್ಯತಿರಿಕ್ತವಾಗಿತ್ತು ; ಅದನ್ನು ಆಡುವಾಗ ಆಡುತ್ತಿದ್ದವನು ತನ್ನ ಅರಿವಿಗೆ ಈವರೆಗೂ ಬಂದಿರದ ಇನ್ನೊಬ್ಬನೇ ನಾಗಪ್ಪ ಎಂಬಂತಹ ಧಾಟಿ ಮೂಡಿತ್ತು : “ನೋಡು ಶ್ರೀನಿವಾಸ, ನನಗೂ ಕೂಡ ನಿನ್ನ ಹಾಗೇ_ನೀನೇ ಕೆಲಹೊತ್ತಿನ ಮೊದಲು ಅಂದಹಾಗೇ_ಜಾತಿ-ಪಾತಿಯಲ್ಲಿ ನಂಬಿಕೆ ಇಲ್ಲ. ಆದರೂ ಅಪ್ಪನ ದೃಷ್ಟಿಯಿಂದ ನೋಡಿದಾಗ ; ಅವನು ಬದುಕಿದ್ದ ಕಾಲದ ದೃಷ್ಟಿಯಿಂದ, ಹನೇಹಳ್ಳಿಯಂಥ ಸಣ್ಣ ಹಳ್ಳಿಯ ಸಮಾಜದ ದೃಷ್ಟಿಯಿಂದ ವಿಚಾರಮಾಡಿದಾಗ ನನಗೆ ಅವನ ಬಗ್ಗೆ ಅಪಾರ ಅಭಿಮಾನವೇ ಅನ್ನಿಸುತ್ತದೆ ನೋಡು : ಬ್ರಾಹ್ಮಣನಾಗಿಯೂ ಆ ಕಾಲದಲ್ಲಿ ಒಬ್ಬ ಕಲಾವಂತ ಹುಡುಗಿಯನ್ನು ಮದುವೆಯಾಗುವದೆಂದರೆ ನಿಜಕ್ಕೂ ದೊಡ್ಡ ಧೈರ್ಯದ ಕೆಲಸ ಎನ್ನಬೇಕು, ಇಲ್ಲವಾದರೆ, ಒಬ್ಬ ಹುಡುಗಿಗೆ ಲಗ್ನವಾಗುವ ಭರವಸೆ ಕೊಟ್ಟು, ಹೊಟ್ಟೆ ತರಿಸಿ ಅವಳ ಭಾವನೋ ಅಕ್ಕನ ಮಿಂಡನೋ ಯಾರೋ….. +ನಾಗಪ್ಪನ ಈ ವಾಕ್ಯ ಪೂರ್ಣಗೊಳ್ಳುವ ಮೊದಲೇ ಶ್ರೀನಿವಾಸ ಭಾರ ಬಂದವನ ಹಾಗೆ ಗಡಗಡ ನಡುಗಹತ್ತಿದ. ಸಿಟ್ಟಿನಿಂದ ಮೋರೆ ಕಪ್ಪುಗಟ್ಟಹತ್ತಿತ್ತು. ಕೊರಳ ಸೆರೆಗಳು ಉಬ್ಬಿಕೊಳ್ಳತೊಡಗಿದ್ದವು. ಬಾಯಿಂದ ಮಾತು ಹೊರಡುವದೇ ಕಠಿಣವಾಗಿ ಮೂಗಿನ ಹೊರಳೆಗಳಿಂದ ಕೆರಳಿದ ಗೂಳಿಯ ಹಾಗೆ ಹೂಂಕಾರದ ಗಾಳಿ ಬಿಡಹತ್ತಿದ : ಸಮಯ ಬಂದರೆ ತನಗೂ ಹೀಗೆ ಶಿಕಾರಿಯಾಡುವ ಹುಕ್ಕಿ ಬರುವದು ಸಾಧ್ಯವಿದೆ ಎಂಬ ಅರಿವಿನಿಂದ ನಾಗಪ್ಪನಿಗೆ ಮೋಜೆನಿಸಿತು. ಶ್ರೀನಿವಾಸನ ಹೂಂಕಾರ ಕೊನೆಗೊಮ್ಮೆ ಮಾತು ಕಂಡಿತು : +***** +ಮುಂದುವರೆಯುವುದು +ಅಧ್ಯಾಯ ಮೂರು ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_211.txt b/Kannada Sahitya/article_211.txt new file mode 100644 index 0000000000000000000000000000000000000000..06574bac765f885e4af6a377fe2d72fccfb63a22 --- /dev/null +++ b/Kannada Sahitya/article_211.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- ಅರಿವಿ ಅಂಗಡಿ ಯೊಳಗಿನ ಗೊಂಬಿ ನೊಡ್ಕೊಂಡ್ ನಿಂತಾಗ ಹಿಂದಿನಿಂದ ಯಾರೊ ಬಂದು ‘ಲುಕ್ ಹೂ ಈಸ್ ಹಿಯರ್’ ಅಂದಾಗ- ಎಚ್ಚರ. !! ತಿರಿಗಿ ನೊಡಿದ್ರ ಅರೇ! ನಮ್ ಪೆಟ್ರುಶಿಯಾ!! ಅದ- ತೀಡಿದ್ ಹುಬ್ಬು, ದಪ್ಪಗ ಮೇಕಪ್ ಮಾಡಿದ ನೀರಿಗಿ ಗಟ್ಟಿದ ಮುಖಾ, ನೀಟಾಗಿ ಇಸ್ತ್ರಿ ಮಾಡಿದ ಮೊಣಕಾಲುದ್ದ ಸ್ಕರ್ಟ್, ಅದಕ ಒಪ್ಪುನಂತ ಶರ್ಟ್, ಹೆಗಲ ಮ್ಯಾಲೆ ರೇಶಿಮಿ ಸ್ಕಾರ್ಫ್, ಕಿವಿಗೆ ದೊಡ್ಡ ಮುತ್ತಿನ‌ಓಲಿ, ಅದರ ಜೋಡಿ ಸರಾ. . ಇರುವಿಕಿ ಆಗ್ಲೀ, ಮುಖಾ ಆಗ್ಲೀ, ಆರು ತಿಂಗಳಿನ್ಯಾಗ ಒಂದಿಷ್ಟೊ ಬದಲಾಗಿಲ್ಲಾ! +ಅಂದಹಂಗ-, ಪೆಟ್ರುಶಿಯ ನನ್ ಗೆಳತಿ ನಾವು ಇಬ್ರೂ ಆಜೂ ಬಾಜೂ ಮನಿಯೊಳಗ ಇದ್ದವ್ರು. ಆ ಮನಿ ಬಿಟ್ಟು ಆರ್ ತಿಂಗಳದಾಗ ಇದ- ಮೊದಲ ಭೆಟ್ಟಿ! +೯-೧೧ ಆದ್ಮೇಲೆ, ಎಷ್ಟೋ ಜನ ಇಂಡಿಯನ್ಸಗೆ, ತೊಂದರೆ ಆಗಿದ್ದು ಕೇಳಿ ಭಯ ಆಗಿತ್ತು. ಸಧ್ಯ! ನಿನಗೇನೂ ಆಗ್ಲಿಲ್ವಲ್ಲಾ! ಅಂತ ಧಾಟಿ ಶುರು ಮಾಡಿ, ಉಭಯ ಕುಶಲೊಪರಿ ಮಾಡಕೋತ, ಕಾಫೀ ಅಂಗಡಿಗೆ ಬಂದು ಕುಂತ್ಕೊಂಡ್ ಮ್ಯಾಲೆ ಫೀನಿಶ್ ಬಗ್ಗೆ ಮಾತ್ ಹೊಂಟ್ತು. +ಫೀನಿಶ್ ಬಗ್ಗೆ ಕೇಳಿದ್ದ- ತಡ, ’ಯು ನೋ ನೊ ವಾಟ್ ಹ್ಯಾಪನ್ಡ್??’ ಅಂತ ಶುರು ಮಾಡಿ ಅವನಿಗೆ ಕಿವಿ ಆಪರೇಷನ್ ಆಗಿ ೩ ದಿನಾ ‘ಇಂಟೆನ್‌ಸಿವ್ ಕೇರ್’ ನ್ಯಾಗ್ ಇಟ್ಟಿದ್ದು, ಗಾಯ ಮುಟ್ಕೊಬಾರ್ದು ಅಂತ ಕೈ ಕಾಲ್ ಕಟ್ಟಿ ಹಾಕಿ ಟ್ಯೂಬಿನಿಂದ ಊಟಾ ಹಾಕಿದ್ದು ಹೇಳಿ, “ಆ ನೊವು ನನ್ನಿಂದ ನೊಡಾಕ್ ಆಗ್ಲಿಲ್ಲ” ಅಂತ ಮುಗುಸುವಷ್ಟು ಹೊತ್ತಿಗೆ ಆಕಿ ಕಣ್ಣಾಗ ನೀರು ಬಂದಿದ್ವು. +ಈ ಪೆಟ್ರುಶಿಯಾನ- ಹಿಂಗ- ಫೀನಿಶ್ ವಿಷಯದಾಗ ಸ್ವಲ್ಪ ಜಾಸ್ತೀನೇ (ಕೆಲವೊಮ್ಮೆ ಕೇಳವರಿಗೆ ಬ್ಯಾಸರ ಆಗುವಷ್ಟು!! ) ಭಾವುಕ ಆಗ್ಬಿಡ್ತಾಳ. ಪಾಪ ಅಕಿ ಆದ್ರೂ ಎನ್ ಮಾಡ್ತಳ ಈ ಊರಾಗ ಹತ್ರದ- ಜೀವ ಅಂದ್ರ ಅಂವ ಒಬ್ಬನ- . ಅಂವ ೩ ತಿಂಗಳಿನವ ಇದ್ದಾಗ ಈಕಿ ಕರಕೊಂಡು ಬಂದು ಸಾಕಿದಳಂತ, ನನಗ ಪೆಟ್ರುಶಿಯಾನ ಪರಿಚಯ ಆಗಿದ್ದ- ಫೀನಿಶನಿಂದ!! +ಕಗ್ಗತ್ತಲ ಡಿಸೆಂಬರಿನ ರಾತ್ರಿ ಸುರೀತಿದ್ದ ಹಿಮದ ನಡುವ ಗೊತ್ತೂ ಪರಿಚಯ ಇಲ್ಲದ ಈ ಊರಿಗೆ ಬಂದು ಇಳದಾಗ ಆ ಕೊರಿಯುವ ಥಂಡಿ, ಗೊತ್ತಿಲ್ಲದ ಮಂದಿ, ಎಲ್ಲಾದರ ನಡುವೆನೂ ಕೆಲಸ ಸಿಕ್ಕಿದ್ದ- ಖುಶಿ ಇತ್ತು. ೨೦೦೦ ಇಸವೀನ- ಹಂಗ ಇತ್ತು. ವೈ ಟು ಕೆ ಗದ್ಲ ತಣ್ಣಗಾಗಿತ್ತು, ಡಾಟ್ ಕಾಂ ಕಂಪನಿಗಳೂ ಒಂದೊಂದಾಗಿ ಮುಳುಗಾಕತ್ತಿದ್ವು. +ಎಂತಾ ಹಳ್ಳಿಯೊಳಗ ಕೆಲಸ ಸಿಕ್ರೂ ಖುಶಿ ಆಗುದ್ರಾಗ ಏನೂ ಈ ಕೊರೆಯುವ ಥಂಡಿ ಬಗಿಗಿ ವಿಪರೀತ ಅನಿಸ್ತಿರಲಿಲ್ಲ. +ಸ್ಟೇಷನ್ನಿಗೆ ಬಂದ ಗೆಳೆಯಾನ್ ನೋಡಿ ಸಮಾಧಾನ ಆತು. ಅವನ ಕಾರಿನ್ಯಾಗ್ ಮನಿ ಮುಟ್ಟುವತನಕ, ಯಾರ್ ಯಾರ್ ಕೆಲಸ ಹೋತು, ಯಾರ್ ಯಾವ್ ಊರಿಗೆ ಹೊದ್ರು ಬರೀ ಇದ ಸುದ್ದಿ! +ಹೊದ ವರ್ಷ ನಮ್ಮವರು ಯಾರ್ ಭೆಟ್ಟಿಯಾದ್ರೂ, ಯಾರು ಹೊಸ ಕಾರ್ ತೊಗೊಂಡ್ರು, ಯಾರು ಮನಿ ತೊಗೊಂಡ್ರು ಅಂತ ಮಾತಾಡ್ತಿದ್ ನೆನಪು. +ಇದ- ಊರಾಗ ನನ್ನ ಗೆಳೆಯಾನ ಪರಿಚಯದ ಹುಡುಗ್ರು ಇದ್ರು ಅವರ ಮನಿ ಯಳಗ್ ಇಬ್ಬರ ಜೊತಿ ಮೂರನೆದವ ಅಂತ ಸೇರ್ಕೊಂಡೆ. ಮನ್ಯಾಗ ಪರಿಚಯ ಇಲ್ಲದ ಹುಡ್ರು, ಆಫಿಸಿನ್ಯಾಗ ಮನಸಿಗೆ ಬಾರದ್ದ ಕೆಲಸಾ, ಎಲ್ಲಾ ಸೇರಿ ಭಾಳ ಬ್ಯಾಸರ ಅಕ್ಕಿತ್ತು. ಮನ್ಯಾಗ್ ಇರಾಕೂ ಬ್ಯಾಸರ ಆಫಿಸಿಗೆ ಹೊಗಾಕೂ ಬ್ಯಾಸರ ಆದರ ಯವ್ದೂ ಬಿಡುವಂಗಿಲ್ಲ. +ಅವಾಗ ನನಗ ಪೆಟ್ರುಶಿಯಾನ ಪರಿಚಯ ಆಗಿದ್ದು. +ನಾ ದಿನಾ ಆಫಿಸಿಗೆ ಬರೂಹೊತ್ನ್ಯಾಗ ಫೀನಿಶ್ ಮನಿ ಮುಂದಿನ ವರಂಡಾದಾಗ ಅಲ್ಲಿಂದ ಇಲ್ಲಿಗೆ ಇಲ್ಲಿಂದ್ ಅಲ್ಲಿಗೆ ಓಡಾಡಿಕೊತ, ಅಲ್ಲಿ ಬಿದ್ದಿರು ಎಲಿ ಜೊತೀನೊ, ಪ್ಲಾಸ್ಟಿಕ್ ಹಾಳಿ ಜೊತೀನೊ ಆಟಾ ಆಡ್ಕೊಂಡು ಇರ್ತಿದ್ದ, +ನಾ ಅಲ್ಲಿ ಹೊದರ ಆಟ ಎಲ್ಲ ಬಿಟ್ಟು ಸುಮ್ಮನ್- ನನ್ನ ನೋಡತ ನಿಂತ ಬಿಡ್ತಿದ್ದ! ನಾ ಅವನ ಕೂಡ ಒಂದೆರಡ ಸಾರಿ ಆಟಾ ಆಡಾಕ್ ನೊಡಿದೆ ಆದ್ರ ಈ ಫೀನಿಶ್ ಗ ಹೊಸಬ್ರು ಅಂದ್ರ ಆಗಂಗಿಲ್ಲ!! ಒಮ್ಮೆ ಅವನ ಜೊತಿ ಹಿಂಗ ಆಟಾ ಆಡಾಕ ಪ್ರಯತ್ನ್ ಪಡುವಾಗ, ಬಾಜು ಮನಿಯಾಗಿಂದ -ಅಂವ ಹೊಸಬರ್ ಜೊತಿ ಮಾತಡುದಿಲ್ಲ, ಸ್ವಲ್ಪ ರೂಢಿ ಆಗ್ಬೇಕು, ಅಂತ ಈ ಮುದುಕಿ ಹೊರಗ ಬಂದ್ಲು. ಹಿಂಗ ಪರಿಚಯ ಆಗಿದ್ದು, ಆಮೇಲೆ, ಅವಾಗ ಇವಾಗ ಫೀನಿಶ್ ಕೂಡ ಮುದುಕಿ ದರ್ಶನಾನೂ ಆಕ್ಕಿತ್ತು. ಫೀನಿಶ್ ಈಗ ನನಗ ಸ್ವಲ್ಪ ರೂಡಿಯಾಗಿದ್ದ. +ನಾವು ಇರೂ ಅಪಾರ್ಟಮೆಂಟ್ಸು, ಸುತ್ತ ಒಂದಿಷ್ಟು ಮನಿ, ಒಂದು ದೊಡ್ಡ ’ಮಾಲ್’, ಪೊಸ್ಟ್ ಆಫಿಸು, ಬ್ಯಾಂಕು, ನಂ ಆಫಿಸು, ಇದಿಷ್ಟ- ಈ ಊರು. ಹತ್ರದ ಬ್ಯಾರೆ ಊರಿಗೆ ಹೊಗಾಕ ಕಾರೂ ಇರ್ಲಿಲ್ಲ ಹಿಂಗಾಗಿ ಆಫಿಸು ಮುಗದ ಮ್ಯಾಗ, ಮನೀನ- ಗತಿ. ಕೆಲ್ವೊಮ್ಮೆ ಮನಿಗೆ ಹೊಗುವಾಗ ಅದ- ಹಳೆ ಜೊಕು, ರೂಂ ಮೇಟ್ ಜೊರಾಗಿ ಹಾಕು ತಮಿಳ್ ಹಾಡು, ರುಚಿ ಇಲ್ಲದ ಅಡಿಗಿ, ಎಲ್ಲ ನೆನಸಿಕೊಂಡು, ಛೆ!! ಈ ಮನಿ ಬಿಟ್ಟು ಬ್ಯಾರೆ ಎಲ್ಲರ ಹೊಗಿ, ಯಾರರ ಕೂಡ್- ಮಾತಾಡು ಹಂಗಿದ್ರ, ಎಷ್ಟು ಚೊಲೊ!!” ಅನ್ನಿಸ್ತಿತ್ತು. ಇಂತಾ ಹೊತ್ನ್ಯಾಗ ಪೆಟ್ರುಶಿಯ ಭೆಟ್ಟಿ ಆಕ್ಕಿದ್ಲು, ಅಕಿ ಊರು ಯಾವದು, ನನ್ ಊರು ಯವದು, ಅದೂ ಇದೂ ಮಾತಾಡಕೊಂತ ನಿಂತಬಿಡ್ತಿದ್ವಿ. ಕೆಲ್ವೊಮ್ಮೆ ನಾ ಅಫೀಸಿನಿಂದ ಬ್ಯಾಸರ್ ಆಗಿ, ಮನೀಗೆ ಹೊಗಿ ಎನಾರ ತಿಂದು ಮೊಕ್ಕೊಂಡ್ರ ಸಾಕು ಅಂತ ಬರೂವಾಗ ಈ ಪೆಟ್ರುಶಿಯ ಫೀನಿಶ್ ಕಾಲಿಗೆ ಗಾಯ ಮಾಡ್ಕೊಂಡಿದ್ದನ್ನ ಕತಿ ಮಾಡಿ ಹೆಳೂದ – ? ಬ್ಯಾಸರ ಮಡ್ಕೊಂಡ್ರೂ ಇಲ್ಲಿಯವರಂಗ “ಐ ಯಾಂ ರಿಯಲ್ಲಿ ಟೈರ್ಡ್ ” ಅಂತ ಕೊಸರಿಕೊಳ್ಳಾಕ ಆಗ್ದ – ಅಕಿಗೆ ಮನಸ್ಸನ್ಯಾಗ “ಇಕಿ ಓಳ್ಳೆ ಗಂಟು ಬಿದ್ಲು ” ಅಂದ್ಕೊತಿದ್ದೆ. +ಪೆಟ್ರುಶಿಯನಿಂದ ಅಕಿ ಗೆಳತಿರು, ಗೆಳಯಾರು ಪರಿಚಯ ಆದ್ರು. ಎಲ್ಲಾ ೫೦ ಅಥವಾ ಹೆಚ್ಚು ವರ್ಷದ ಮುದುಕ್ರು, ಮುದುಕ್ಯಾರು. ಮುದುಕ್ರು ಅಂದ್ರ ನಂ ಓಣ್ಯಾಗ ಬತ್ತೀ ಹೊಸಗೊಂತ ಕುಂದ್ರು ಅಜ್ಜಿ, ಅಂತವ್ರು ಅಲ್ರೀ!! ನನ್ ವಯಸ್ಸಿನ ಹುಡುಗೂರು ನಾಚೂವಂಗ ಇರ್ತಿದ್ರು! ಈ ಮುದುಕೀರು ಅಪಾರ್ಟಮೆಂಟಿನ ಹತ್ತನೇ ಮಾಡಿಯಿಂದ- ಕೆಳಗಡೆ ಇರೂ ಕ್ಲಬ್ ರೂಮಿಗೆ ಬ್ರಿಜ್ ಆಡಾಕೊ, ಬಿಂಗೊ ಆಡಾಕೊ ಬಂದ್ರ, ಮದ್ವಿಗೆ ಹೊಂತಂಗ ಉದ್ದುದ್ದನ ಗೌನು, ಛಂದನ ಸ್ಕರ್ಟ್, ಹಾಕ್ಕೊಂಡು, ಮಾಡ್ಕೊಂಡು ಜೋರಾಗಿ ನಕ್ಕೊಂತ ಕಾಲ್ ಎಳ್ಕೋಂತ ಹುರುಪೀಲೆ ಬರ್ತಿದ್ರು! ಅವ್ರನ್ನ ನೋಡಿದ್ರ, ಒಂದ ತರಹ ಖುಶಿ ಆಕ್ಕಿತ್ತು. ಕೆಲ್ವೊಮ್ಮೆ ನಗು ಬರ್ತಿತ್ತು. ಅವ್ರ‌ಒಳಗ ಮರಿಯಾ ಅನ್ನುವಾಕಿ ಹೆಚ್ಚುಕಡಿಮಿ ನಮ್ಮ ಅಜ್ಜಿ ಅಷ್ಟ ಎತ್ತರ, ದಪ್ಪ, ಅಕಿನ್ನ ನೊಡಿ, ಅಜ್ಜಿಗೆ ಸ್ಕರ್ಟ್ ಹಾಕ್ಸಿದ್ರ ಹಿಂಗ – ಕಾಣ್ತಾಳ ಅನ್ನಿಸಿ ಒಳಗೊಳಗ- ನಗ್ತಿದ್ದೆ. +ಅಲ್ಲಿ ಕ್ಲಬ್ ರೂಂ ನ್ಯಾಗ್ ಇ‌ಅವ್ರೆಲ್ಲ ಬುಕ್ ಒದ್ಕೊಂಡೊ, ಬ್ರಿಡ್ಜ್ ಆದ್ಕೊಂಡೊ, ಊರಿನ ಸುದ್ದಿ, ಮೊಮ್ಮಕ್ಕಳ ಸುದ್ದಿ ಮಾತಡ್ಕೊಂಡು ಟೈಂ ಪಾಸ್ ಮಾಡ್ತಿದ್ರು. +ಯಾವ್ ವಿಶ್ಯಾ ಮಾತಾಡಿದ್ರು ಅದ್ರಾಗ ಈ ಪೆಟ್ರುಶಿಯ ಫೀನಿಶ್ ಬಗ್ಗೆ ಒಂದರ- ಮಾತ ಹೇಳಾಕ ಬೇಕು!! +ನಾನು ಕೆಲ್ವೊಮ್ಮೆ, “ಎನ್ ಈಮುದುಕಿಗೆ ತೆಲಿ ತಿನ್ನಾಕ ಫೀನಿಶ್ ಬಿಟ್ರ ಬ್ಯಾರೆ ಎನೂ ಸುದ್ದಿ ಸಿಗಂಗಿಲ್ಲ??” ಅನ್ಕೊತಿದ್ದೆ. ಆದ್ರಾ ಒಳಗೊಳಗ- ಮನೀಗೆ ಹೂಗಿ ಮತ್ತ- ಗಂಟ್ಲ ಹರಿಯೂಹಂಗ ಹಾಡು ಹಾಡು, ಸಿಂಕ್ ತುಂಬ – ಬಿದ್ದಿರು ಮುಸುರಿ ಭಾಂಡೆ, ಉಪಯೊಗಕ್ಕ ಬಾರದ “ಗಾಂಧಿಜಿ ದೇಶಕ್ಕ ಎನೇನ ಕೆಟ್ಟಾ ಮಾಡ್ಯಾರ”, ಅನ್ನು ವಾದ ಇವೆಲ್ಲಾದಕ್ಕಿಂತ, ಈ ಮುದ್ಕ್ಯಾರ ಸುದ್ದಿನ- ಚೊಲೊ ಅಂತ ಯವ್ದೊ ಪುಸ್ತಕ ಹಿಡ್ಕೊಂಡು ಕ್ಲಬ್ ರೊಂ ನ್ಯಾಗ ಇವರ ಹರಟಿ ಕೇಳ್ಕೊಂಡ್ ಕುಂತಿರ್ತಿದ್ದೆ. +ಪರಿಚಯ ಆದಂಗೆಲ್ಲ, ಪೆಟ್ರುಶಿಯ, ಫೀನಿಶ್ ಇಬ್ರು ಹತ್ತರದವ್ರು ಆನ್ನಸ್ತಿದ್ರು. ನಾ ನನ್ ಬ್ಯಾಸರ ಹೇಳ್ಕೊಳ್ಳೂದು, ಅಕಿ ’ಡೊಂಟ್ ವರ್ರಿ ಥಿಂಗ್ಸ್ ವಿಲ್ ಬಿ ಒ ಕ್ಕೆ ’ ಅಂತ ಸಮಾಧಾನ ಹೇಳೂದು, ಅಕಿ ಬ್ಯಾಸರ್ ಮಾಡ್ಕೊಂಡಿದ್ರ, ನಾ “ಹೊಗ್ಲಿ ಬಿಡು” ಅನ್ನೋದು, ಎಲ್ಲ ಮನಸ್ಸಿಗೆ ಹಿತ ಅನ್ನಿಸ್ತಿತ್ತು. +ಈ ಪೆಟ್ರುಶಿಯ ಇಷ್ಟು ಜೂರಾಗಿ ಕಂಡ್ರೂ ಪಾಪ ಭಾಳ ಒಂಟಿ, ಅಕಿ ದೊಡ್ಡ ಲಾಯರ್ ಆಗಿದ್ದಾಕಿ, ಆಕಿ ಮನಿ ಓಳಗಿನ ದುಬಾರಿ ಗಾಜಿನ ಸಾಮಾನ, ಗೋಡಿ ಮ್ಯಾಲಿನ ಪೇಂಟಿಂಗ್ ನೊಡಿದ್ರ ಸ್ರೀಮಂತ ಮುದುಕಿ ಅಂತ ಅನ್ನಸೂದು ಸಹಜ. ಅಕೀನ ಹೆಳೂವಂಗ – , ಅಕಿಗೆ, ರೊಕ್ಕಾ, ಕೆಲ್ಸದ ಬೆನ್ನ ಹತ್ತಿ, ಹುಡುಗರ ಕಡೆ ಲಕ್ಷ್ಯಾನ ಹೊಗ್ಲಿಲ್ಲ ಅಂತ!! +ಅಕಿ ಜೊತೀ ಭಾಳ ಒಡಾಡಿದ್ದ ಒಂದಿಬ್ರು ಗೆಳೆಯಾರು, ಇನ್ನೆನು ಕೇಳಿ ಬಿಡ್ಬೇಕು ಅನ್ನುವದರೊಳಗ ಕೈ ತಪ್ಪಿ ಹೊದ್ರಂತ! ಈ ಸುದ್ದಿ ಹೇಳತಾ ಹೇಳತಾ, ಕೆಲ್ವೊಮ್ಮೆ “ದೇವ್ರು ನನಗ ಎಲ್ಲಾ ಕೊಟ್ಟಾನ ಆದ್ರ ನನಗ ಸರೀ ಹೋಗು ಒಂದು ಹುಡುಗನ್ನ ಕೊಡ್ಲಿಲ್ಲ” ಅಂತ- ಭಾಳ ಬ್ಯಾಸರ ಮಾಡ್ಕೊತಿದ್ಲು, ಪಾಪ, ನಂ ಊರಾಗಾದ್ರೂ ಹುಟ್ಟಿದ್ರ- ಅಪ್ಪಾ ಅವ್ವ, ಕಡೀಕ ಎಂತಾವನೊ ಒಬ್ಬ ಮನಿ ಅಳಿಯಾನ್ನಾದ್ರೂ ತರ್ತಿದ್ರು. ಸರಿ!! ಈಕಿ ಕಾಲೆಜ್ ಗೆ ಅಂತ ಮನಿ ಬಿಟ್ಟ್ ಅಂಯಾಲೆ ಅಪ್ಪ ಅವ್ವನ್ನ ನೋಡಿದ್ದು, ’ತ್ಯಾಂಕ್ಸಗಿವಿಂಗ್, ಕ್ರಿಸ್ಮಸ್’ ಅಂತ ವರ್ಷಕ್ಕ ಒಂದೊ ಎರಡ ಸರಿ. ಅವರು ಹೊದ್ಮ್ಯಾಲೆ ಅದೂ ಇಲ್ಲ. ಇರೂ ಒಬ್ಬ- ಅಣ್ಣ ಫ್ಲೊರಿಡಾದಾಗ ಎಲ್ಲೊ ಅದಾನಂತ!! ಇಕಿ ತಾನಾಗ್ಲೆ ಫೋನ್ ಮಾಡಿದ್ರ ಅವನಿಂದ ಸುದ್ದಿ! ಅವಾಗ ಇವಾಗ ಅಕಿನ್ನ ನೊಡಾಕ್ ಬರೂ ಒಬ್ಬಕೆ ಗೆಳತೀನ್ ಬಿಟ್ರ, ಫೀನಿಶ್ ಒಬ್ಬವ್ನ್- ಅಕಿಗೆ ಎಲ್ಲಾ!! ಅಂವ ಅಕಿ ವರಾಸದರನೂ ಹೌದು! ಅಂತ ಕೇಳಿ ನನಗ ಅರಿವಿಲ್ಲದ- ಎಲಾ ಇವ್ನ್!!! ಅಂದಿದ್ದೆ! +ನನ್ನ ರೂಂ ಮೇಟ್ ಒಬ್ಬ ಇಂಡಿಯಾಗೆ ಹೋದವ ವಾಪಾಸ್ ಬರಕ ಒಂದು ವಾರ ಇರುವಾಗ್ ಫೋನ್ ಮಾಡಿ +ನನಗ ಬ್ಯಾರೆ ಒಂದು ಅಪಾರ್ಟ್ಮೆಂಟ್ ನೋಡ್ರಿ ಅಂದು ಬಿಡೊದ. ! ಎನಾತು ಅಂತ ಕೇಳಿದಾಗ ನಮ್ಮ ಮನಸ್ಸಿನ್ಯಾಗ ಇದ್ದ ಸಂಶಯ ಖರೇ ಆತು. ನಮ್ಮ ಹುಡುಗ ಅಪ್ಪಾ ಅವ್ವನ ವತ್ತಾಯಕ್ಕ ಯಾವ್ದೊ ಹುಡುಗೀನ ನೋಡಿದನಂತ, ನೋಡಿದ್ದ ತಡಾ ಈವರ್ಷ ಮದುವಿ ಆಗಂಗಿಲ್ಲ ಅಂತಿದ್ದವಗ ಅದು ಏನ್ ಅನ್ನಿಸ್ತೋ ಎನೋ, ಹುಡುಗಿನ ಒಪ್ಪಿಕೊಂಡಿದ್ದಲ್ದ – ’ನಾ ಹೆಚ್ಚಿನ ಸೂಟಿ ತೊಗೊತೀನಿ, ಈಗ್ಲೆ ಲಗ್ನಾನೂ ಆಗಿಬಿಡ್ಲಿ’ ಅಂದ್ನನಂತ! ಆಯ್ತು ಅಂತ ಓಡಾಡಿ ನಮ್ಮ ಕಾಂಪ್ಲೆಕ್ಸನ್ಯಾಗ ಒಂದು ಅಪಾರ್ಟ್ಮೆಂಟ್ ನೋಡಿದ್ದಾತು. ಆದ್ರ ಈ ಪರಿ ಮೋಡಿ ಮಾಡಿರ್ಬೇಕಾದ್ರ ಎಂತಾ ಹುಡುಗಿ ಇರ್ಬೇಕು ಅಂತ – ಎಲ್ಲಾರೂ ಅವನ ಹೆಂಡ್ತಿನ ನೋಡಾಕ ಕಾಯಕತ್ತಿದ್ರು. ಪೆಟ್ರುಶಿಯಾ ಇದನ್ನ ಕೇಳಿ, ತನ್ನ ಜೊತೆ ಮತೂ ಆಡಾಕ ನಾಚಕೊಳ್ಳೊ ಹುಡುಗ +ಇಷ್ಟು ಲಗೂ ಹುಡುಗಿ ಹುಡುಕಿಕೊಂಡ್ನಾ? ಅಂತ ಆಶ್ಚರ್ಯ, ಓಹೊ !”ಹಿ ಮಸ್ಟ ಹ್ಯಾವ್ ಕ್ನೋನ್ ಹರ್’ ಅಂದ್ಲು, ಅಲ್ಲಾ ಅಂದೆ, “ಮೇ ಬ್ಬೀ ಹಿ ಹ್ಯಾಡ್ ಅ ಸೀಕ್ರೆಟ್ ಗರ್ಲ್ ಫ್ರೆಂಡ್ ಉ ಡಿಂಟ್ ಕ್ನೋ ಅಬೌಟ್” ಅಂದ್ಲು, ಇಲ್ಲಾ, ಅಂವ ಯಾವತ್ತು ಹುಡುಗೀರಜೊತೆ ಒಡಾಡಿದ್ದೇ ಇಲ್ಲ ಅಂದೆ, ಅವರ ಅಪ್ಪ ಅಮ್ಮ ಹುಡುಕಿದ್ರು ಅಂವ ಹೂಂ ಅಂದ ಅಂತ ಕೇಳಿ, ಅಕಿಗೆ ಗಾಬರಿ, ದಿಗಿಲು ಎಲ್ಲಾ ಒಟ್ಟೀಗೇ ಆಗಿತ್ತು. ಅಕೀನೂ ನಂ ಕೂಡ ಕೂಡಿ ಆ ಹುಡುಗೀಗ್ನ ನೊಡಾಕ ಕಾಯಾಕತ್ತಿದ್ಲು. +ಈ ಹುಡೂಗೀ ಬಂದಮ್ಯಾಲೆ, ಬೆಟ್ಟಿ ಯಾದವ್ರು ಎಲ್ಲಾ ಯಾವ್ ಹುಡುಗಾ ಆದ್ರೂ ಒಪ್ಕೊಂತಿದ್ದಾ ಅಂತ ಅನ್ನವರ – . ಭಾಳ ಓದಿದಾಕಿ, ಎಲ್ಲಾರ್ ಕೂಡ ನಕ್ಕೊಂತ ಮಾತಾಡಾಕಿ, ಎಲ್ಲಕಿಂತ ಹೆಚ್ಚಾಗಿ ನಂ ಇನ್ನೊಬ್ಬ ರೂಂ ಮೇಟಗ ಖುಶಿ ಆಗಿದ್ದು ಅಕಿ ಇಂದಿಯಾದಿಂದ ಬಂದಾಗ್ಲೆ, ವೆಸ್ಟರ್ನ್ ಅರಿವಿ ಎಲ್ಲಾ ಹಕ್ಕೊಂತಿದ್ಲು, ಮತ್ತ ಸ್ವಲ ಇಲ್ಲಿಯವರಹಂಗ ಮಾತಾಡ್ತಿದ್ಲು ಅನ್ನೂದು!! +ನನ್ನ ಈ ರೂಮ ಮೇಟ ಯಾವಾಗ್ಲೂ ಹಿಂಗ, ನನ್ನ ಅವನ್ ಅಭಿಪ್ರಾಯ ಸ್ವಲ್ಪ ಬ್ಯಾರೇನ – . ರೂಮ ಮೇಟ್ ಅಂದಮ್ಯಾಲೆ ಅಷ್ಟೂ ಭಿನ್ನಾಭಿಪ್ರಾಯ ಇರಲಿಕ್ಕರ ಹ್ಯಾಂಗ? +ಒಟ್ಟ – ನಮ್ಮ ದೇಸಿ ಗುಂಪನಿಂದ ಹೊಸ ಹುಡುಗೀ ಬಗ್ಗೆ ಅಕಿ ಗಂಡ, ಅಂದ್ರ ನನ್ನ ಹಳೇ ರೂ ಮೇಟ, ಎದ್ರಿಗೆ, “ವೆರಿ ಕಲ್ಚರ್ಡ್’” “ಯು ಆರ್ ಲಕ್ಕಿ” ಅಂತ ಎಲ್ಲಾ ತೀರ್ಪು ಸಿಕ್ಕು ಹುಡುಗ ಹೆಮ್ಮೆ ಪಡುವಂಗ್ ಆತು. ಒಂದು ವಾರ ದಿಂದ ಪರಿಚಯ ಇರೊ ಅವರ ನಡುವ ಇರೂ ಅನ್ಯೊನ್ಯತೆ ನೋಡಿ ನನಗ ಏನಿದು! ಇದ್ದಕ್ಕಿದ್ದಂಗ ಹಿಂಗ ಯಾರನರಾ ಇಷ್ಟು ಹಚಕ್ಕೊಳ್ಳಾಕ ಹೆಂಗ ಸಾದ್ಯ, ಅಂತ ಸಂಶಯ, ಆಮೆಲೆ, ಇದು ಎಲ್ಲರಿಗೂ ಅಗೂದ – , ಇದ್ದಕ್ಕಿದ್ದಂಗ ಗಟ್ಟಿಯಾಗೂ, ಸಂಬಂಧ ರಕ್ತದ್ದ ಇರಬೇಕು ಅಂತ ಎನಿಲ್ಲಾ ಅಂತ ಅನ್ನಸ್ತು ಗಂಡಾ ಹೆಂಡ್ತಿ ಸಂಬಂದ ಬಿಡ್ರಿ, ನಮ್ಮ ಪೆಟ್ರುಶಿಯಾ ಫೀನಿಶ್ ಇದಾರಲ್ಲ, – +ನನಗ ಆಫೀಸು, ಮನಿ, ಊರಿಗೆ ವಾರಕ್ಕೊಮ್ಮೆ ಮಾಡು ಫೋನು, ಅಡಿಗಿ, ರೂಂ ಮೇಟ್ ಕೂಡ ಹೊಡಿಯು ಹರಟಿ, ಭಾಂಡೆ ತೊಳಿಯುದು, ಮಾಲ್ ನ್ಯಾಗ ತಿರುಗಾಡುದು, ಕೈಗೆ ಸಿಕ್ಕಿದ್ದು ಸ್ವಲ ಓದುದು, ಇವೆಲ್ಲ ಹೆಂಗ ದಿನ ದಿನದ ಜೀವನದ ಕೆಲಸಾನೊ ಹಂಗ ಈ ಮುದುಕೀಗೆ, ಫೀನಿಶನ ಹಜಾಮನ ಹತ್ರ ಕರಕೊಂಡು ಹೋಗುದು, ಡಾಕ್ಟರ ಹತ್ರ ಕರಕೊಂಡು ಹೋಗುದು, ಬ್ಯಾಸ ಆದ್ರ ಅವನ ಜೊತಿ, ತನ್ನ ಐಶಾರಂ ಲೆಕ್ಸಸ್ ಕಾರನ್ಯಾಗ ಸುತ್ತಾಡಿಕೊಂಡ ಬರೂದು, ಇಲ್ಲಾ ಉಳಿದ ಮುದುಕ್ಯಾರ್ ಕೂಡ ಹೋಗಿ ಜೂಜ ಆಡಿ ಬರೂದು, ಗೆಳತಿ ಕೂಡ ಫೋನ ನ್ಯಾಗ ಮಾತಾಡೂದು, ಇದ – ಒಂದಿಷ್ಟು ಕೆಲಸ. . +ಹಿಂಗ, ಫೀನಿಸನ ಕೆಲಸಾನ – ಈ ಮುದುಕಿ ಅರ್ಧಾ ದಿನಚರಿ. +ತಾಯಿ ಮಕ್ಕಳ ನಡುವ ಇರೂ ಸಲಿಗೆ, ಪ್ರೀತಿ, ಎಲ್ಲ ಇವ್ರಿಬ್ಬರ ನಡುವ ಐತಿ. ಹಿಂಗಾಗಿ ಫೀನಿಶ್ ಅಕೀ ಖರೇ ಮಗನ- ಅಂತ ಅನಸೂದ್ರಾಗ ಆಶ್ಚರ್ಯ ಎನೂ ಇಲ್ಲ ಅಲ್ಲಾ?. +ಹಿಂಗ ದಿನಾ ಕಳೀತಿರುವಾಗ ಒಂದು ದಿನ, ನಮ್ಮ ಫೀನಿಶ್ ಹುಟ್ಟಿದ ಹಬ್ಬ ಬಂತು . ಪೆಟ್ರುಶಿಯ ಏನೊ ಒಡಾಡಿ ತಯಾರಿ ಮಾಡಾಕತ್ತಿದ್ಲು, ಆಫೀಸ್ನ್ಯಾಗ ಭಾಳ ಕೆಲಸ ಇದ್ದಿದ್ರಿಂದ, ನನಗೇನೂ ಅಷ್ಟು ಹುರುಪ ಇರಲ್ಲಿಲ್ಲಾ ಆದರ ಅಕಿ ಒಡಾಡೂದು ನೋಡಿ, ಸಡಗರ ಪಡೂದು ನೋಡಿ ನಾನು ಅಕೀಗೆ ಅದೂ ಇದೂ ಕೆಲ್ಸಾ ಮಾಡಿ ಕೊಟ್ಟೆ. +ಈ ಪೆಟ್ರುಶಿಯ ಸುಮ್ಮನ ಇರೂ ಹೆಣ್ಮಗಳ ಅಲ್ಲಾ! ಪರಿಚಯ ಇದ್ದವರಿಗೆಲ್ಲಾ ಕರದ ಬಂದಿದ್ಲು. ಹೋದ ವಾರ ಪರಿಚಯ ಮಾಡ್ಕೊಂದಿದ್ದ ನನ್ನ ಗೆಳೆಯಾನ್ ಹೆಂಡ್ತಿ ಭೆಟ್ಟಿ ಅದಾಗ “ಪಾಪ ಅವನ ಹೆಂಡ್ತಿ ಹೊಸಬ್ಳು, ಎಲ್ಲರ ಪರಿಚಯ್ ಅಕ್ಕೆತಿ” ಅಂತ ಅಕಿಗೂ ಬರಾಕ ಹೇಳಿದ್ಲು. +ಪೆಟ್ರುಶಿಯ ಅವತ್ತ ಫೀನಿಶ ಕೂದ್ಲ ಕತ್ರಿಸಿಕೊಂಡು ಬಂದು, ಉಗುರು ತಗದು, ತೆಲಿ ಮ್ಯಾಲಿನ ಕೂದ್ಲ ಬಾಚಿ, ಚಂದಮಾಡಿದ್ಲು, ಇದ್ದವರು ನಾವ- ಹತ್ತು ಹನ್ನೆರಡು ಮಂದಿ, ಅಷ್ಟು ಗದ್ದಲಾ ನೋಡಿ ಫೀನಿಶ್ ಕುಂತಲ್ಲೆ ಕುಂದ್ರಲಾರದ – , ನಿಂತಲ್ಲೆ ನಿಂದ್ರಲಾರದ – , ಅಲ್ಲಿ-ಇಲ್ಲಿ ಓಡ್ಯಾಡಕತ್ತಿದ್ದ, ಕಷ್ಟಾ ಪಟ್ಟು ಕೇಕಿನ್ ಎದ್ರಿಗೆ ಎತ್ಕೊಂಡು ಬಂದು, ತಾನೂ ಅವನ ಕೂಡ್ ಕ್ಯಾಂಡಲ್ ಊದಿ, ಕೈ ಹಿಡದು ಕೇಕ್ ಕತ್ರಿಸಿದ್ಲು, ಅಲ್ಲಿರು ಮುದ್ಕ್ಯಾರು ಕೇಕ್ ತಿನ್ಕೊಂತ ಒಬ್ಬೊಬ್ಬರ‘ ಫೀನಿಶ್ಗ ವಿಶ್ ಮಾಡೂದು, ಮಾತಾಡುದು, ನಡೆದಿತ್ತು. +ಅಶ್ಟರೊಳಗ ನನ್ನ ಗೆಳೆಯಾನ್ ಹೊಸಾ ಹೆಂಡತಿ ಲೇಟ್ ಆದ್ರೂ ಲಿಪ್ ಸ್ಟಿಕ್, ಕಾಡಿಗಿ ಸಮೇತ ಪೂರ್ತಿ ರೆಡಿಯಾಗಿ, ದೊಡ್ಡ ಗಿಫ಼್ಟ ಹಿಡ್ಕೊಂಡು ಬಂದ್ಲು, ಬಂದಕೀನ‘ ಪೆಟ್ರುಶಿಯಾನ್ ನೋಡಿ, +’ವೇರ್ ಇಸ್ ದ ಬ’ಡೇ ಬಾಯ್ ’ ಅನ್ನೊದುಕ್ಕೂ, ಪೆಟ್ರುಶಿಯಾ ಹುರುಪೊನಿಂದ, ಅಲ್ಲೆ ಟೇಬಲ್ ಮೇಲೆ ಕುಂತಿದ್ದ ಫೀನಿಶನ್ ಎತ್ಕೊಂಡು, ’ಹಿಯರ್ ಹಿ ಇಸ್’ ಅನ್ನೊದಕ್ಕೂ ಸರೀ ಹೊತ್!!! +ಆಮೇಲೆ ೩-೪ ನಿಮಿಶ ನಡದ ಘಟನೆ ಬಗ್ಗೆ ನನಗ ಸಿಟ್ಟು ಬಂದು, ನನ ಗೆಳೆಯಾನ ಹೆಂಡ್ತಿಗೆ ನನಗ- ಭಾಳ ವಾದ ಆತು. ನಾ ಯಾವತ್ತೂ ಹೆಚ್ಚ ಪರಿಚಯ ಇಲ್ಲದವರ ಕೂಡ, ಅದೂ ಪರಿಚಯ ಇಲ್ಲದ ಹುಡಿಗ್ಯಾರ್ ಕೂಡ, ಜಾಸ್ತೀ ಮಾತಾಡೂದಿಲ್ಲ. ಆದ್ರ ಈ ಹುಡುಗಿ ಜೊತಿ, ಜಗಳಾ ಆಡುವಶ್ಟು ಸಿಟ್ಟು ಬಂದಿತ್ತು. +ಅಯ್ಯೊ, ಏನ್ ಆತು ಅಂತ ಹೇಳೂದ ಮರತೆ! ಎನಾತೂ ಅಂದ್ರ, ಈ ಹುಡುಗಿ ಫೀನಿಶನ ನೊಡಿದ್ದ- ತಡ, ಇನ್ನೆನು ಮೂರ್ಛೆ ಹೊಕ್ಕಾಳ ಅನ್ನುವಂಗ ಮುಖಾ ಮಾಡಿ, ತಟ್ಟನ- ಸುಧಾರಿಸ್ಕೊಂಡು, ” ಓಹ್ ಕ್ಯಾಟ್ಸ- – ಬರ್ತ್ಡೇ ಯಾ!” ಅಂತ ನಕ್ ಬಿಟ್ಲು. ಪಾಪ ಪೆಟ್ರಿಶಿಯಾ ಮುಖ ಸಣ್ಣಮಾಡಿ, ಸಿಟ್ಟಾಗಿನೂ ಸಿಟ್ಟು ತೊರಿಸದ್-, ನೊವ ಆದ್ರೂ ನಗು ಮಖ ಮಾಡ್ಕೊಂಡು +’ಹಿ ಇಸ್ ಮಯ್ ಬಾಯ್. ಹಿ ಇಸ್ ನೋ ಕ್ಯಾಟ್!’ ಅಂದು ಹೊರಟ್ ಹೋದ್ಲು. ಆಮೆಲೆ ಅಕಿ ನಾವು ನಿಂತಿರೊ ಕಡೆ ಬರಲೇ‌ಇಲ್ಲ. ಫೀನಿಶನ್ ರೂಮನ್ಯಾಗ್ ಬಿಟ್ಟು ತನ್ನ ಗೆಳತ್ಯಾರಿಗೆ ಕೇಕ್, ತಿಂಡಿ, ಕೊಡುವವರ ತರಃ ಓಡಾಡ್ಕೊಂಡಿದ್ಲು. ಆದ್ರ್ ಅಶ್ಟು ಹುರುಪಿನಿಂದ ಆ ಬರ್ತ್ಡೇ ಶುರು ಮಾಡಿದ್ದ ಪೆಟ್ರುಶಿಯ ಅಲ್ಲಿರಲಿಲ್ಲ. ಆದರ ಈ ಹುಡಿಗಿ ಎನೂ ಅಗದವರಹಂಗ, ಅಲ್ಲೆ ನನ್ನ್ ರೊಂ ಮೇಟ್ ಜೊತೆ, ನಕ್ಕೊಂತ ನಿಂತು ಕೇಕ್ ತಿನ್ನಾಕತ್ತಿದ್ಲು. ನನಗ ಅಕಿ ಮುಖಾನೂ ನೊಡಾಕ್ ಮನ್ಸ್ ಬರಲಿಲ್ಲ! +ನಮ್ಮ ಮನಿ ಮುಂದ ಹೊಗಿ, ಈ ಕಡೆ ಬರ್ಲಿ ಅಂತ ಕಾಯ್ಕೊಂಡಿದ್ದೆ, ಅಕಿ ಅಲ್ಲಿ ಬಂದಿದ್ದ ತಡ, “ಎನ್ರೀ ಗೊತ್ತಿದ್ದು ಯಾಕ್ ಬರಬೇಕು, ನಿಮಗ ನಗು ಬಂದರ ಸುಮ್ಮನ ಇರಾಕ್ ಆಗುದಿಲ್ಲ. ” ಅಂತ ಕೈ ತೊಗೊಂಡೆ, ಆದ್ರ ಅಕಿಗೆ ಅದು ಅಷ್ಟು ಗಂಭೀರ ವಿಶಯ ಅನ್ನಸಲೇ ಇಲ್ಲೊ ಎನೊ, ಸುಮ್ಮನ-, ನಕ್ಕೊಂಡೊ. . “ಅಯ್ಯೊ ಎನ್ರೀ?? ’ಐ ಯಾಂ ಹ್ಯಾವಿಂಗ್ ಅ ಬ’ಡೆ ಟ್ರೀಟ್ ಫೊರ್ ಮೈ ಬಯ್, ವೈ ಡೊಂಟ್ ಯು ಕಂ ಒವರ್’” ಅಂದ್ರೆ ಅದು ಬೆಕ್ಕಿನ ಬರ್ತ್ಡೇ ಅಂತ ನನಗೇನ್ರೀ ಗೊತ್ತು ಅಂತಾ ಮತ್ತೆ ನಗಾಕ್ ಶುರು ಮಾಡಿದ್ಲು. ನನ್ನ ರೂಂ ಮೇಟ್ ಗೂ ನಗು. ಉಪಯೊಗ ಇಲ್ಲದ ಮಾತು ಅನಿಸಿ, ಇವರ ಜೊತಿ ಎನ್ ತೆಲಿ ಒಡಕೊಳ್ಳೂದು ಅಂತ ಹೊರಟು ಹೊದೆ. +ಅಂವ ಬೆಕ್ಕು ಖರೆ, ಬೆಕ್ಕಿಗೆ ಬರ್ತ್ಡೇ ಮಾಡುದು ಸ್ವಲ್ಪ ಅಪರೂಪಾನೂ ಖರೆ ಆದ್ರ ಅಕಿಗೆ ಅವ ಬೇಕಾದವ, ಅಕಿ ಮಗಾ ಇದ್ಧಂಗ-, ನಿಮಗ ಮಜ ಅನ್ಸಿದ್ರ ನಿಂ ಮನಿಗೆ ಬಂದ ನಗಬೇಕು ಪೆಟ್ರುಶಿಯ ಮಖ ಸಣ್ಣ ಮಾಡುವಂಗ ಅಕೀ ಎದ್ರಿಗೆ ನಗ್ಬೇಕ?? ಹೊಗ್ಲೀ, ವಾಪಸ್ ಹೊಗಿ, ತಪ್ಪಾತು, ನನಗ ಇದೆಲ್ಲ ಹೊಸತು ಅಂತ ಕ್ಷಮಾ ಆದ್ರೂ ಕೇಳಬಾರದ- ??? ಕಡೀ ಪಕ್ಷಾ “ಪಾಪ ಮುದುಕಿ ಬ್ಯಾಸರ ಮಾಡ್ಕೊಂತೊ ಎನೊ” ಅಂತ ಭಾವನೆ/ಪ್ರಾಯಶ್ಚಿತನೂ ಬ್ಯಾಡ?? +ಇವರೆಲ್ಲಾ ನಾ ವಾದ ಮಾಡಿದ್ದು ಕೇಳಿ, “ನಿಂದೊಳ್ಳೆ, ಬೆಕ್ಕಿನ ಸಹವಾಸ ಮಾರಾಯ!! ಅಂದ್ರು. +ನನಗೇನೂ ಬೆಕ್ಕು ಅಂದ್ರ ಪಂಚಪ್ರಾಣ ಅಲ್ಲಾ!! ಆದ್ರ ಫೀನಿಶ್ ವಿಶಯಾನ- ಬ್ಯಾರೆ, ಅಂವ ಬೆಕ್ಕ ಅನೂದಕ್ಕಿಂತ, ನನ್ನ ಗೆಳತಿ ಮಗಾ ಅನ್ನೂದ ಸರಿ. ಆ ಮುದುಕಿ ಪ್ರೀತಿ ಕೂಸ ಇದ್ದಹಂಗ. +ಇಷ್ಟೂ ಗೊತ್ತಾಗುದಿಲ್ಲಾ ಅಂದ್ರ-, ಹೊಗ್ಲಿ ಬಿಡ್ರೀ. . ಇಲ್ಲಿ ಎಲ್ಲಾರು ’ಕಲ್ಚರ್ಡ’ ಮಂದಿ, ಸುಮ್ನ ಯಾಕ ಮಾತು ಬೆಳಸೂದು, +ನಿಮಗೂ ಇದನ್ನ ಓದಿ, ನಗು ಬಂತೊ ಎನೊ?? +ಅಮೇರಿಕಾದ್ ಯಾವ್ದೋ ಮುದುಕಿ ಸುದ್ದಿ ನಿಮಗ್ಯಾಕ?? +ನಿಮಗ ನಗು ಬಂದ್ರ “ಹುಚ್ಚು ಮುದುಕಿ” ಅಂದೊಂಡು ನಕ್ಕು ಬಿಡ್ರೀ, +ಆದ್ರ ನಾಳೆ ಯವ್ದಾದ್ರೂ (ನಿಮ್ಮ ಮನ್ಯಾಗೊ ನಿಮ್ ಗೆಳೆಯಾರ ಮನ್ಯಾಗೊ, ) ಬರ್ತ್ಡೇ ಇರುವಾಗ ಒಂದು ಕೆಟ್ಟಮುಸುಡಿಯ, ಮುಟ್ಟಿದರ ಉಗುರಿಂದಾ ಪರಚಿ, ಮಾತಾಡಿಸಿದ್ರ, ಚೀರಾಡೊ ಮಗೂಗ ನೀವ್ ಎನಾದ್ರೂ ’ಹಿ ಇಸ್ ಸೋ ಕ್ಯೂಟ್’ ಅಂತ ಅನ್ನೊದನ್ನ ನಾ ಕೇಳಿಸಿಕೊಂಡ ನಕ್ಕರ್- ಸಿಟ್ಟಾ‌ಅಗಬ್ಯಾಡ್ರಿ. +***** +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […] +ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […] +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_212.txt b/Kannada Sahitya/article_212.txt new file mode 100644 index 0000000000000000000000000000000000000000..34e0b686ce5bce51a3b31a73f6ce6dbdc779b79d --- /dev/null +++ b/Kannada Sahitya/article_212.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂದರ್ಶನ: ಕಿರಣ್ ಎಂ, ಅವಿನಾಶ್ ಜಿ ಹೆಗ್ಗೋಡು +೧. ಮಲೆನಾಡಿನವರಾದ ನಿಮಗೆ ’ಇಗರ್ಜಿ..’ ಯಲ್ಲಿ ಉತ್ತರಕನ್ನಡ ದ ಭಾಷೆಯನ್ನು ಬಳಸಲು ಹೇಗೆ ಸಾಧ್ಯವಾಯಿತು? +ಉತ್ತರ: ನಮ್ಮ ತಂದೆ ಮುರ್ಡೇಶ್ವರದವರು..ನಮ್ಮ ನೆಂಟರೆಲ್ಲ ಹೊನ್ನಾವರ ಭಟ್ಕಳದವರು..ಆವಾಗಾವಾಗ ನಾನು ಹೋಗಿ ಬರ್ತಾ ಇರ್ತೀನಿ..ಹೀಗೆ ಒಂದು ತರಹ ನಾನು ಉತ್ತರ ಕನ್ನಡದವನೇ ಆಗಿ ಬಿಟ್ಟಿದೀನಿ. +೨. ಕಾದಂಬರಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿರುವುದು ಪಾದರಿ ಮತ್ತು ಗಂಗಮ್ಮನ ಮುಖಾಮುಖಿ..ಆದರೇ ಕಾದಂಬರಿ ಓದಿದ ಮೇಲೆ ಇದರ ಮೇಲೆ ಇನ್ನೂ ಹೆಚ್ಚಿನ ಗಮನ ಕೊಡಬಹುದಿತ್ತೇನೋ ಅನ್ನಿಸುತ್ತದೆ +ಉತ್ತರ: ನಾನು ಏನು ಹೇಳಬೇಕು ಆಂತ ಇದೀನಿ ಅಂದ್ರೆ ಅಲ್ಲಿ ಇಗರ್ಜಿಯ ಭೂತದ ಕಟ್ಟೆಗೆ ಕಾಯಿ ಒಡೆಯುವುದು ಅಲ್ಲಿನ ಜನರ ಪದ್ಧತಿ ಆಗಿತ್ತು. ಆದರೆ ಪಾದರಿಗೆ ಅದು ಬೇಕಿರಲಿಲ್ಲ. ಆ ತರ ಪಾದರಿಗಳು ಬಹಳ ಕಡೇ ಮಾಡಿದ್ದಾರೆ. ಗಂಗಮ್ಮ ಭಾರತೀಯತೆಯನ್ನು ಪ್ರತಿನಿಧಿಸುವವಳು. ಅವಳು ತೆಂಗಿನಕಾಯಿಯನ್ನು ತೊಗೊಂಡು ಹೋಗಿ ಇಗರ್ಜಿ ಮುಂದೇ ಇಟ್ಟು ಬಿಡ್ತಾಳೆ. ಇಲ್ಲಿ ಸೋತವರು ಯಾರಪ್ಪ ಅಂದ್ರೆ ಪಾದರಿ. ಕಾದಂಬರಿಯ ಕೊನೆಯಲ್ಲಿ ಆರ್ಕಿಲಾಜಿಕಲ್ ಡಿಪಾರ್ಟಮೆಂಟ್ ನವರು ಆ ದೇವಸ್ಥಾನವನ್ನ್ ಊರ್ಜಿತ ಮಾಡಲಿಕ್ಕೆ ಬರ್ತಾರೆ. ಅದು ಇವತ್ತಿನ ಸಮಸ್ಯೆಯಾಗಿ ಬಿಡುತ್ತದೆ. ಅದನ್ನ ಆ ಕತೇನ ಇನ್ನೂ ಬೆಳೆಸಬಹುದಿತ್ತು. ಅದೊಂದು ದೊಡ್ಡ ಸಮಸ್ಯೆಯಾಗಿ ಬಿಡುತ್ತೆ..ಅಷ್ಟನ್ನೆಲ್ಲ ಬೆಳಸಿದರೆ ಹೊಸ ಘರ್ಷಣೆ ಪ್ರಾರಂಭವಾಗಿ ಬಿಡುತ್ತೆ. ಅಷ್ಟಕ್ಕೆಲ್ಲ ಅವಕಾಶ ಕೊಡೋದು ಬೇಡ ಅಂತ ಅದನ್ನ ಅಲ್ಲಿಗೇ ನಿಲ್ಲಿಸಿಬಿಟ್ಟೆ. ಹೇಳಬೇಕಾದನ್ನೆಲ್ಲಾ ಸೂಚ್ಯವಾಗಿಯೇ ಹೇಳಿದ್ದೇನೆ. +೩. “ಇಗರ್ಜಿ..”ನಿಮ್ಮ ಬಾಲ್ಯದಿಂದ ಪ್ರೇರಿತವಾಗಿದ್ದ? ಅಥವಾ ಇಂದಿನ ಧರ್ಮ ಸಾಂಸ್ಥೀಕರಣವನ್ನ ಗಟ್ಟಿಗೊಳಿಸಲು ಬರೆದಿದ್ದ? +ಉತ್ತರ: ಹ..ಅದರಲ್ಲಿ ಎರಡೂ ಇದೆ..ಇವತ್ತಿನ ಈ ಧರ್ಮ ಸಾಂಸ್ಥೀಕರಣವನ್ನ ಬಲಗೊಳಿಸಲೇ ನಾನಿದನ್ನು ಬರೆದದ್ದು ಜೊತೆಗೆ ಅದರಲ್ಲಿ ನನ್ನ ಬಾಲ್ಯದ ನೆನಪುಗಳೂ ಇವೆ. +೪. ಇಗರ್ಜಿಯ ಸಹಿತ ನಿಮ್ಮ ಹಲವು ಬರಹಗಳಲ್ಲಿ ಕಾರಂತರ ಛಾಯೆ ಕಾಣುತ್ತದಲ್ಲ.. +ಉತ್ತರ: ಹೌದೌದು ನನ್ನ ಬರಹಗಳ ಮೇಲೆ ಕಾರಂತರ ಪ್ರಭಾವ ಇದೆ. ಅವರ ಪುಸ್ತಕಗಳು ಸಾಕಷ್ಟು ನನ್ನಲ್ಲಿ ಪ್ರಭಾವ ಬೀರಿದೆ. +೫. ’..ಹತ್ತು ಮನೆಗಳು ಎಲ್ಲೋ ಒಂದು ಕಡೆ ಬ್ಲ್ಯಾಕ್ ಅಂಡ್ ವೈಟ್ ಚಿತ್ರಣವನ್ನ ಕೊಡುತ್ತೆ ಅನ್ಸುತ್ತೆ….ಗೊನಸ್ವಾಲಿಸ್ ಮತ್ತು ಮಸ್ಕರಿನಾಸರ ನಡುವಿನ ವಿಭಿನ್ನತೆಯನ್ನು ಗುರುತಿಸುವಲ್ಲಿ.. +ಉತ್ತರ: ನಾನು ನೋಡಿದ್ದು ಅದು..ಅಲ್ಲಿ ಬರುವ ಶಿವಸಾಗರ ನಮ್ಮ ಸಾಗರವೇ..ಪ್ರಾರಂಭದಲ್ಲಿ ಬಂದ ಪಾದರಿಗಳ ಧರ್ಮನಿಷ್ಠೆ ಅಷ್ಟಿರುತ್ತಿತ್ತು, ಸಾಗರದಲ್ಲಿ ಕಟ್ಟಿದ ಈ ಇಗರ್ಜಿ ಇದೆ ಅಲ್ವಾ? ಅದನ್ನ ಇಟಲಿಯ ಒಬ್ಬ ಪಾದರಿ ಕಟ್ಟಿದ್ದು. ಅವನೆ ಹೆಗಲ ಮೇಲೆ ದೊಡ್ಡ ಕಲ್ಲು ಹೊತ್ಕೊಂಡು ಏಣಿ ಹತ್ತುತ್ತಿದ್ದ. ನಂತರ ಬಂದ ಪಾದರಿಗಳಿದ್ದಾರಲ್ಲ ಅವರದ್ದು ಐಶಾರಾಮಿ ಜೀವನ. ಅಪ್ಪ ಕೊಡಿಸೋ ಕಾರಲ್ಲಿ ಕುತ್ಕೊಳ್ಳೋದು,ದಿನ ಮೀನು ತಿನ್ನೋದು, ಒಂಚೂರೂ ಕಷ್ಟ ಅನುಭವಿಸಿದವರಲ್ಲ ಅವರು. ಅದೇನಾಯ್ತು ಅಂದ್ರೆ ಅಪ್ಪ ಕಷ್ಟ ಪಟ್ಟು ಮನೆ ಕಟ್ತಾನೆ ಮಗ ಆರಾಮಾಗಿ ಸುಖ ಪಡ್ತಾನೆ. ಮಗನಿಗೆ ಕಷ್ಟ ಗೊತ್ತಿಲ್ಲ. ಅದು ಅಪ್ಪನಿಗೆ ಗೊತ್ತು. ಇಂತಲ್ಲಿ ಬ್ಲ್ಯಾಕ್ ಅಂಡ್ ವೈಟ್ ಅನಿವಾರ್ಯವಾಗಿಬಿಡುತ್ತೆ. ಆ ಮೊದಲನೆ ಪಾದರಿ ಎಷ್ಟು ಕಷ್ಟಪಟ್ಟು ಅಲ್ಲಿ ಧರ್ಮವನ್ನ ಬೆಳೆಸಿದ. ನಂತರದವರು ಹೇಗೆ ಅದನ್ನ ಹಾಳು ಮಾಡಿಬಿಟ್ರು ಅನ್ನೋದು ಹೇಳ್ಬೇಕಿತ್ತು, ಅದನ್ನ ನೋಡಲಿಕ್ಕೆ ಆ ಪಾದರಿ ಮತ್ತೆ ಕೊನೆಯಲ್ಲಿ ಬರ್ತಾನೆ ಅದು ನಂತರದ ಕತೆ.. +೬. ಕಾದಂಬರಿಯಲ್ಲಿ ಭಕ್ತಿಯ ಸ್ವರೂಪ ಬದಲಾಗುವುದು ಕೂಡ ತುಂಬಾ ಚೆನ್ನಾಗಿ ಬಂದಿದೆ..ಗೋನಸ್ವಾಲಿಸರಲ್ಲಿನ ಆ ತಾದಾತ್ಮ್ಯ.. ಪಾದರಿ ಸಿಕ್ವೇರಾ ಬರುವ ವೇಳೆಗೆ ಅವನಲ್ಲಿ ಅದು ಆಡಂಬರವಾಗಿರುತ್ತದೆ.. +ಉತ್ತರ: ಹೌದು..ಹೌದು ಅದು ಆಡಂಬರವಾಗಿ ಬಿಡುತ್ತದೆ.. +೭. ಕಾದಂಬರಿಯಲ್ಲಿ ಈ ಮತಾಂತರದ ಪ್ರಕ್ರಿಯೆ ತುಂಬಾ ವಿಶಿಷ್ಠವಾಗಿ ಮೂಡಿಬಂದಿದೆ..ಕಾದಂಬರಿಯ ಮೊದಲಲ್ಲಿ ಕ್ರಿಶ್ಚಿಯನ್ನರು ಯಾವುದೇ ಬಲವಂತವಿಲ್ಲದೇ, ಹೊರಗಿನ ಒತ್ತಡಗಳಿಲ್ಲದೇ ಕಲ್ಲು ಕುಟಿಗನನ್ನು ಆರಾಧಿಸಲು ತೊಡಗುತ್ತಾರೆ..ಇದು ಅಲ್ಲಿಯ ಪರಿಸರದಿಂದ ಅಥವಾ ಆಂತರಿಕ ಒತ್ತಡಗಳಿಂದ ಹುಟ್ಟಿಕೊಂಡದ್ದು.. +ಉತ್ತರ: ಅಲ್ಲಿ ನೇರವಾಗಿ ಮತಾಂತರ ಪ್ರಸ್ತಾಪ ಮಾಡಿಲ್ಲ..ಅಲ್ಲಿ ಒಬ್ಬಳು ಕೆಲಸದವಳು ಕ್ರಿಶ್ಚಿಯನ್ ಆಗಿ ಮತಾಂತರವಾಗುತ್ತಾಳೆ ಆದರೆ ಅವಳು ಕ್ರಿಶ್ಚಿಯನ್ ಆಗುವುದು ಆ ಧರ್ಮದ ಮೇಲಿನ ಪ್ರೀತಿಯಿಂದ ಅಲ್ಲ..ಬದಲಿಗೆ ತಾನು ಪ್ರೀತಿಸಿದವನ ಮತ ಅದು ಎಂಬ ಕಾರಣಕ್ಕೆ. ಈ ತರಹದ ಕೆಲವು ಸನ್ನಿವೇಶಗಳು ನಾನಲ್ಲಿ ತಂದಿದ್ದೀನಿ. +೮. ಕಾದಂಬರಿಯ ತಂತ್ರವೂ ಕೂಡ ಹೊಸ ರೀತಿಯಲ್ಲಿದೆ..ಅದರಲ್ಲಿ ಉಪಯೋಗಿಸಿರುವ ಫ಼್ಲ್ಯಾಷ್ ಬ್ಯಾಕ್ ತಂತ್ರದಿಂದಾಗಿ ಬೇರೆ ಬೇರೆ ಘಟ್ಟದಲ್ಲಿ ಅದು ಬೇರೆ ಬೇರೆ ನೆಲೆಯಲ್ಲಿ ತೆರೆದುಕೊಳ್ಳುತ್ತದೆ +ಉತ್ತರ: ಬರೆಯುವವರಿಗೆ ಒಂದು ಕಷ್ಟ ಇದೆ..ನಾನು ಕೊಳಗ ಅನ್ನೋ ಕಾದಂಬರಿ ಬರೆದೆ..ಅದು ಐವತ್ತು ವರ್ಷದ ಹಿಂದಿನ ಕತೆ..ಅದನ್ನಿವತ್ತು ಹೆಳ್ಬೇಕು ಅಂದ್ರೆ ನಾನೊಂದು ತಂತ್ರ ಹುಡುಕಿಕೊಳ್ಳಬೇಕಲ್ವೇ? ಇವತ್ತಿನ ದಿನಕ್ಕೆ ಅದು ಪ್ರಸ್ತುತ ವಾಗಬೇಕು. ಹಳೆ ಕತೆನಾ ಹೇಳ್ಬೇಕು. ಅಲ್ಲಿ ನಾನು ಏನು ಮಾಡ್ತಿನಿ ಅಂದ್ರೆ ಯಾವುದೋ ವಿಶ್ವವಿದ್ಯಾನಿಲಯದವರು ಒಂದು ಮ್ಯೂಸಿಯಂ ಮಾಡ್ಲಿಕ್ಕೆ ಹೋಗ್ತಾರೆ ಅಲ್ಲಿ ಇಡಲಿಕ್ಕೆ ಆ ಊರಿನ ಹುಡುಗರು ಅಲ್ಲಿಯ ಹಳೆಯ ವಸ್ತುಗಳನ್ನ ಒಯ್ಯಲಿಕ್ಕೆ ಬರ್ತಾರೆ ಆಗ ಅಲ್ಲೊಂದು ಮನೆಯಲ್ಲಿ ಕೊಳಗ ಇರ್ತದೆ. ಅದನ್ನ ಒಯ್ಯಲಿಕ್ಕೆ ಅವರು ಬರ್ತಾರೆ..ಆವಾಗ ಇವನು ಕೊಳಗದ ಕತೆ ಹೇಳ್ತಾನೆ. ಕಾಗೋಡೂ ಸತ್ಯಾಗ್ರಹದ ಹಿಂದೆ ಒಂದು ಕೊಳಗದ ಕತೆ ಇದೆ. ಇಲ್ಲೂ ಹಾಗೆ ಮಾಡಿರೋದು..ಇವತ್ತಿನ ಕತೆ ಅಲ್ಲಾ ಅದು ..ಅಷ್ಟು ಹಿಂದಿನ ಕತೇನಾ ಇವತ್ತಿನವರಿಗೆ ಹೇಳಬೇಕು. +೯. ಈಗಿನ ತಲೆಮಾರಿನಲ್ಲಿ ಇನ್ನೂ ಆ ಮತಾಂತರದ ತಲ್ಲಣಗಳು ಉಳಿದುಕೊಂಡಿದ್ದಾವೆ ಅನ್ನಿಸುತ್ತದೆಯೇ? +ಉತ್ತರ: ಹೌದು..ಕ್ರಿಶ್ಚಿಯನ್ನರ ಮಟ್ಟಿಗೆ ಅದಿನ್ನೂ ಉಳಿದುಕೊಂಡಿದೆ. ಹೊರಗಡೆ ನೋಡಲಿಕ್ಕೆ ಕ್ರಿಶ್ಚಿಯನ್ನರೆಲ್ಲಾ ಒಂದೆ. ಆದರೆ ಅಂತರಂಗದಲ್ಲಿ ಸಾಕಷ್ಟು ಒಳ ಪಂಗಡಗಳಿವೆ. ಇವತ್ತು ಮಂಗಳೂರಿನಲ್ಲಿ ೨೫% ಕ್ರಿಶ್ಚಿಯನ್ನರು ಕೊಡವರು..ಅವರೆಲ್ಲ ಕೊಡವ ಜನಾಂಗದಿಂದ ಮತಾಂತರಗೊಂಡವರು…ಮತಾಂತರಗೊಂಡ ಸಾರಸ್ವತ ಬ್ರಾಹ್ಮಣರು ಇನ್ನೂ ತಮ್ಮ ಸುಪಿರಿಯಾಟಿಯನ್ನ ಅವರ ಮೇಲೆ ಉಳಿಸಿಕೊಂಡಿದೆ. ಮಂಗಳೂರಿನ ಸಿಮಿತ್ರಿನಾ ಮೂರು ಭಾಗ ಮಾಡಿದ್ದಾರೆ..ಬ್ರಾಹ್ಮಣರಿಗೊಂದು..ಅದಕ್ಕಿಂತ ಕೆಳಗಿನವರಿಗೊಂದು…ಇದನ್ನೆಲ್ಲಾ ನೋಡಿದಾಗ ಕೊಡಗರ ಜನಾಂಗದವರಿಗೆ ನೋವಾಗುತ್ತೆ. ಏಸು ಜಾತಿಯತೆಯನ್ನ ಹೊಡೆದಾಕಲು ಹೊರಟವನು, ಅವನ ಧರ್ಮದಲ್ಲೇ ಅದು ಉಳ್ಕೊಂಬಿಡ್ತಲ್ಲ ಅದು ನನ್ನ ಪ್ರಶ್ನೆ. +೧೦. ವೆಲ್ಲಾಂಗನಿ ಬಗ್ಗೆ.. +ಉತ್ತರ: ವೆಲ್ಲಾಂಗನಿಗೆ ನಾನೂ ಹೋಗಿದ್ದೆ..ತಮಿಳನಾಡು ನಾಗಪಟ್ಟಣಂ ಹತ್ರ ಒಂದು ದೊಡ್ಡ ದೇವಸ್ಥಾನ. ಮೊನ್ನೆ ಸುನಾಮಿ ಬಂದಾಗ ದೇವಸ್ಥಾನದೊಳಗೆಲ್ಲಾ ನೀರು ನುಗ್ಗಿ ನುರಾರೂ ಜನ ಪ್ರಾರ್ಥನೆ ಮಾಡುವವರೆಲ್ಲಾ ಸತ್ತು ಹೋದರು. ನನಗೆ ದೇವರ ಬಗ್ಗೆ ಆಸಕ್ತಿಯಿಲ್ಲ. ನಾನ್ಯಾವತ್ತು ದೇವರನ್ನ ಕೈ ಮುಗಿದವನೂ ಅಲ್ಲ ನಂಬಿದವನೂ ಅಲ್ಲ..ಅದು ಒಂದು ನಂಬಿಕೆ..ನನಗೆ ವೆಲ್ಲಾಂಗನಿ ಬಗ್ಗೆಯೆಲ್ಲ ನಂಬಿಕೆಯಿಲ್ಲ..ಮೇರಿ ಕಾಣಿಸಿಕೊಂಡಳು ಅಂತೆಲ್ಲ ಹೇಳ್ತಾರೆ..ಪೋರ್ಚುಗಿಸರು ಪ್ರವಾಸಿಗಳಿಗೆ ದೋಣಿಯಲ್ಲಿ ಹೋಗ್ತಿರಬೇಕಾದರೆ ಮೇರಿ ಕಾಣಿಸಿಕೊಂಡಳಂತೆ..ಮುಳುಗುತಿದ್ದ ದೋಣಿಯಲ್ಲಿದ್ದವರನ್ನು ಕಾಪಾಡಿದಳಂತೆ..ಆ ಊರಿನ ಹೆಸರು ವೆಲ್ಲಾಂಗನಿ ಅಂತ..ಅಲ್ಲಿ ದೇವರನ್ನ ಅದೇ ಹೆಸರನ್ನಿಟ್ಟು ಕರಿತಾರೆ. +(’ಇಗರ್ಜಿಯ..’ ಕೊಂಕಣಿಗೆ ಅನುವಾದವಾಗಿದೆ.) +***** +ಸಂದರ್ಶಕರು ಎನ್. ಮನು ಚಕ್ರವರ್ತಿ (ಅನುವಾದ ಎಲ್.ಜಿ.ಮೀರಾ) ಪು.ತಿ.ನ. ಅವರಿಗೆ ಕಾವ್ಯವೆಂಬುದು ಒಂದು ಜೀವನವಿಧಾನವೇ ಆಗಿತ್ತು. ದ.ರಾ.ಬೇಂದ್ರೆ ಮತ್ತು ಕುವೆಂಪು ಅವರ ಸಾಲಿಗೆ ಸೇರುವ ಪು.ತಿ.ನರಸಿಂಹಾಚಾರ್ ನವೋದಯ ಪಂಥದ ದಿಗ್ಗಜರಲ್ಲಿ ಒಬ್ಬರು. ಅರ್ಧ ಶತಮಾನಕ್ಕೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_213.txt b/Kannada Sahitya/article_213.txt new file mode 100644 index 0000000000000000000000000000000000000000..3d780f84d7bdb0a79887522f52c67a76914ae9e5 --- /dev/null +++ b/Kannada Sahitya/article_213.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಒಂದು…. ಎರಡು… ಮೂರು +ಒಂದೊಂದು ಹೂ ಹಗುರು +ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು +ಸೃಷ್ಟಿ ಕರ್ತ ! +ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು +ಶುಭ ಮುಹೂರ್‍ತ. +ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು +ಏಳುವನನಾಮತ್ತು +ಜೋಲಿ ಹೊಡೆಯುತ ತಂತಿ ಮೇಲೆ ಓಡುವ ನಡೆವ +ವಿವಿಧ ಕಸರತ್ತು; +ಅದರ ಗತ್ತುಗಳೆಲ್ಲ ಇವನಿಗೂ ಗೊತ್ತು ! +ಬಂದು ನೋಡಿರಿ ಒಮ್ಮೆ, ಗರ್ದಿಗಮ್ಮತ್ತು. +೨ +ಪದವಿಟ್ಟುದೇ ಭಂಗಿ +ನಡೆದದ್ದೆ ದಾರಿ, +ಕಣ್ಣು ತಪ್ಪಿದರಿವನು ವಿಶ್ವಸಂಚಾರಿ ! +ಹಿಡಿದದ್ದೆ ಹಟ +ಇವನು ನುಡಿದದ್ದೆ ವೇದ, +ತಳಕಿತ್ತು ಓಡುವವು ಎಲ್ಲ ವಾಗ್ವಾದ +ಎದ್ದನೊ,- +ತೊತ್ತಳಂದುಳಿವ ಯಜ್ಞದ ಕುದುರೆ ! +ಬಿದ್ದನೋ,- +ಇವಗಿಲ್ಲ ಅದರ ಪರಿವೆ, +ಎದ್ದೆದ್ದು ಬಿದ್ದು ಮುನ್ನುಗ್ಗಿ ನಡೆಯುವ ಹಿಗ್ಗು +ಸಾಹಸದ ದಂಡಯಾತ್ರೆ! +ನಡೆಯುತಿದೆ ಈಗಿನಿಂದಲೆ ಮುಂದಿನಾವ ಹೋರಾಟಕ್ಕೊ ಈ ಸಿದ್ಧತೆ! +೩ +ಇವನ ಅಧ್ಯಕ್ಷತೆಯ ಒಳಗೆ ಜರುಗಲು ಬೇಕು +ಈ ಮನೆಯ ಪ್ರತಿಯೊಂದು ಕೆಲಸ ಕಾರ್‍ಯ ! +ತಪ್ಪಿತೋ,- +ಹಿಂದು ಮುಂದೂ ನೋಡದಿವನು ಊದಿಯೆ ಬಿಡುವ +ಸಮರ ತೂರ್‍ಯ! +ನಮಗಿಲ್ಲ ಇವನೆದುರು ನಿಂತು ನುಡಿಯುವ ಧೈರ್‍ಯ +ಬೆಳಗಿನಿಂದಲು ಸಂಜೆವರೆಗು ಒಂದೇ ಸವನೆ ಉರಿವ ಸೂರ್‍ಯ ! +ಆಡಿದರೆ ಆಡಿಯೇ ಆಡುವನು ; ಮನಸುಖರಾಯ +(ನಮೋ ವಿಚ್ಚೇಶ್ವರಾಯ) +ಕಲ್ಲೊ ಮುಳ್ಳೊ -ಇವನು ಒಂದನೂ ಲೆಕ್ಕಿಸನು +ವಜ್ರಕಾಯ ! +(ಇತ್ತೀಚೆ ಬೇರೆ ಕಲಿತಿಹನು +ಕಣ್ಣಿನಲಿ ನೀರಿಲ್ಲದೆಯೆ ಆಳುವ ಹೊಸ ಉಪಾಯ) +ಮರುಗಳಿಗೆ- ಶುಭಗಳಿಗೆ- ಏನು ಹೊಳೆವುದೊ ಏನೊ +ಏನಿಳಿವುದೇ ಚಂದ್ರಲೋಕದಿಂದ +ಇಷ್ಟಗಲ ಅರಳುವದು ದುಂಡು ಮಲ್ಲಿಗೆ ನಗೆಯು +ಹೊಮ್ಮಿದೊಲು ಈ ಬಾಳಿನೆಲ್ಲ ಚೆಂದ ! +೪ +ಎತ್ತಲೋ ಹತ್ತು ದಿಕ್ಕಿಗು ಕೈಯನೆತ್ತುವನು +ಕಾಣದುದ ಕೈಮಾಡಿ ಕರೆಯುತಿಹನು ; +ಇವನ ಕಪ್ಪನೆ ಕಣ್ಣಿಗಿದಿರು ಕುಣಿಯುವ ನವಿಲು +ಯಾವುದೊ ಬೆರಳೆತ್ತಿ ತೋರಿಸುವನು ! +ಬಾನ ಮರೆಗಿರುವ ಚಂದ್ರನ ಹುಡುಕಿ ತೆಗೆಯುವನು +ಒಂದೆ ನೋಟಕೆ ಚಿಕ್ಕೆ ಜಾಲಾಡಿಸುವನು; +ಹೂವ ಕಂಡರೆ ಹಿಗ್ಗಿ ಮೂಸುವನು ಈ ರಸಿಕ- +ಬಾನುಲಿಗೆ ತಾನೆ ಹೊಸ ಹಾಡು ಕಲಿಸುವನು ! +ಬಿಸಿಲ ಕೋಲನು ಹಿಡಿದು ಮೇಲೇರ ಬಯಸುವನು +ಮಣ್ಣಿನಲಿ ಹೊನ್ನ ಕಣವಾರಿಸುವನು; +ಮೇಲೆ ಹಾರುವ ಹಕ್ಕಿ ಪುಚ್ಚಗಳನೆಣಿಸುವನು +ಮೌನಗಾಳಿಯ ಜಡಿದು ಮಾತಾಡಿಸುವನು ! +ಹಗಲು ಸತತೋದ್ಯೋಗಿ ಇರುಳು ಕಿಂದರಿಜೋಗಿ +ನಿದ್ದೆ ಎಲ್ಲೊ ಯಕ್ಷಲೋಕ ಸಂಚಾರಿ +ಇವನೆಳೆಯ ಕಂಗಳಲಿ ಹೊಳೆವ ತಿಂಗಳ ಬೆಳಕು- +ದಿನದ ದಾರಿಯೊಳಮಗೆ ದೀಪಧಾರಿ ! +***** +ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […] +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_214.txt b/Kannada Sahitya/article_214.txt new file mode 100644 index 0000000000000000000000000000000000000000..9c6a5dbc353b37f288676d55710b1a644ac5b0a9 --- /dev/null +++ b/Kannada Sahitya/article_214.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ +ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ +ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ +ವಿರಹದ ವಿಷವುಂಡು ದಿವಂಗತವಾಗಿದೆ +ಮುಚ್ಚಬೇಕೆ ಶಾಶ್ವತವಾಗಿ ಔದಾರ್ಯದ ಬಾಗಿಲು? +ಕೊಡದಿದ್ದರೂ ಶುದ್ಧ ಮಧು, ಬೇಡವೆ ಒಂದು ಚಿಕ್ಕ ಒಳಲು? +ಎಲ್ಲ ದಿವ್ಯಾನಂದಗಳ ಸೆಲೆ ನೀನು, ದೇವ ಕೃಪೆ +ನಿನ್ನಾ ಮೂಲಕವೇ ಆ ನೆಲೆಗೆ ದಾರಿ, ನಿನ್ನ ಕೃಪೆ +ಪ್ರೇಮದ ದಾರಿಯ ಧೂಳಾದರೆ ನಾನು, ಕಡೆಗಣಿಸಿ ಬಿಡು +ಸಮಾಗಮದ ಬಾಗಿಲು ಬಡಿವ ನನ್ನ ಹೇಗೆ ಕಡೆಗಣಿಸುತ್ತಿ? +ಹಿಡಿದು ತಡವಿದರೆ ಕತ್ತಲಲ್ಲಿ ಪ್ರೇಮದ ಪಹರೆ +ಇದ್ದೇಯಿದೆ ಚಂದ್ರಮುಖದ ಎದೆಯಾಸರೆ +ನಿನ್ನ ಕರುಣೆಯಿಂದ ವಾಪಸಾದರೆ ಅಲೆಮಾರಿಯ ಹೃದಯ +ಅದು ರಾತ್ರಿಯ ಕಥೆ, ಚಂದ್ರನ ಕಥೆ, ಒಂಟೆಯ ಕಥೆ +ಈ ಲೋಕಕ್ಕೀಗ ಕೊರೆವ ಥಂಡಿ, ಎಲ್ಲವೂ ಹೆಪ್ಪು ಹೆಪ್ಪು +ದೇಹದೊಳಗಿನ ರಕ್ತ, ಜೀವಜಲ, ಎಲ್ಲ ಸಿಹಿ ಸಿಹಿ +ಹೆಪ್ಪಾಗದಿರಲಿ ಮಾತಿನ ಜಲ, ಬತ್ತದಿರಲಿ ಅದರ ಚಿಲುಮೆ +ಆ ಕಡೆಗೆ ರೇಷ್ಮೆ, ಈ ಕಡೆಗದು ದೇವವಸ್ತ್ರ +***** +ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ ಪ್ರೀತಿ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_215.txt b/Kannada Sahitya/article_215.txt new file mode 100644 index 0000000000000000000000000000000000000000..5c2f2ba710b986466d39511abf8c470897694d9b --- /dev/null +++ b/Kannada Sahitya/article_215.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಿಗುರು ಚಿವುಟಿದರೆ +ಜಿನುಗುವ ಸೊಕ್ಕು ಪ್ರಕೃತಿಗೆ +ಹಸಿರುಕ್ಕುವ ಗೀಳು +ಖುಷಿ ಕನಸು ಋತು ಮನಸು +ಕೆನೆಗಟ್ಟಿ ಮಧುರ +ತುಷಾರದ ಗೊಂಬೆ +ಕೇಕೆ ತಮಾಷೆ +ಕೊನೆಮನೆಯ ಕಾಮಾಕ್ಷಿ +ಕಾಮ ಉಲಿಯುವದಿಲ್ಲ +ಕೆಟ್ಟ ಹುಡುಗಿಯ +ದಿಟ್ಟ ತೊಗಲಿನ ಒಳಗೆ +ಬೇಯುತ್ತಿದೆ ಹಾ ನನ್ನ ವರ್ತಮಾನ +ಸೊನ್ನೆ ನಾ +ಬಾಟನಿ ಲ್ಯಾಬಿನ ಎಲೆ ಹಸಿರು +ಹೂ ಕೊಯ್ಯುವ ಸೂಕ್ಷ್ಮ +ದರ್ಶಕದಲ್ಲಿ +ಪ್ರಾಯದ ಬಣ್ಣ ಹುಡುಕುತ್ತೇನೆ +ಹಹ್ಹಾ +ಬಂಡಾಯದ ಕನಸುಂಡ +ಗಂಡು ನಾ +ಪರಾಗ ಮುಕ್ಕಿ ಕಚ ಕಚ +ಪಕಳೆ ನೆಕ್ಕಿ +ತೊಯ್ದು ಹೋಗುತ್ತೇನೆ +ವಿಲಿವಿಲಿಸಿ +ಸೊಕ್ಕಿದ ಕಾಮಾಕ್ಷಿ +ಕದ್ದು ಕದ ತೆರೆದ ಕಣ್ಣಲ್ಲೆ +ಫಕ್ಕನೆ ಆರಿಹೋಗುತ್ತಾಳೆ +***** +ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […] +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_216.txt b/Kannada Sahitya/article_216.txt new file mode 100644 index 0000000000000000000000000000000000000000..c7ddfd30d768bc4103016bdf56635d7569de8caf --- /dev/null +++ b/Kannada Sahitya/article_216.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಓ ತಂದೆ! ನಿನಗಿದೋ ಈ ನೆಲದ ಕಣಕಣವು +ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ; +ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ. +ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು, +ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು +ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ +ಜೀವನದ ಕಿಲ್ಮಿಷವನುರೆತೊಳೆದ ಸತ್ಕೀರ್‍ತಿ +ಸಚ್ಚರಿತ, ಮಹಿಮಾತ್ಮ, ಹಿರಿಜೀವ, ಹಿರಿಬಾಳು +ನಿನ್ನದಿದೆ ಬಾಪೂಜಿ ಅಮರ ತೇಜಃಪುಂಜಿ! +ಯಾವ ನುಡಿಗಡಣಕೂ ನಿಲುಕದಿಹೆ ಸಿಲುಕದಿಹೆ +ಸದ್ಧರ್ಮ ಬೋಧನೆಯ ಶಾಂತಿಯಲಿ ಕರುಣಿಸಿಹೆ +ತತ್ವನಿಕಷಕ್ಕಿಟ್ಟ ತಾಪಸಿಯೆ ಅಪರಂಜಿ; +ಸಂದೇಶಕಿನಿನಿತು ಕುಂದಿಲ್ಲ ಭಾಸುರಂ +ಮರೆವುದೆಂತೀ ಜಗವು? ನಿನ್ನುಸಿರು ಶಾಶ್ವತಂ. +***** +ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ ಸಂಕಲ್ಪವೊಂದೇ ಮೋಡ; ಶಾಖ ಮರೆ, ಬರೆದರೆ ಬರೀ ಅಕ್ಷರಗಳ ಹೊರೆ; ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ ಒರಗಿದರೆ ಬರೆಯಿಸುವ ಅದೃಢತೆ; ಹೊರಗಾಗುವುದು ಕವಿತೆ. ಒಮ್ಮೊಮ್ಮೆ […] +“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_217.txt b/Kannada Sahitya/article_217.txt new file mode 100644 index 0000000000000000000000000000000000000000..ebf2e74f04c07b755e45892d93587a6c66483351 --- /dev/null +++ b/Kannada Sahitya/article_217.txt @@ -0,0 +1,1230 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. ಅಲ್ಲದೆ ಇನಾಸ ಅವನ ಹೆಂಡತಿ ಮಕ್ಕಳಿಗೂ ಈ ದೇವರು ಬೇಕು. ಬಹಳ ದಿನಗಳಿಂದ ಅವರು ಈ ಕಲ್ಲು ಕುಟಿಗನನ್ನು ನಂಬಿಕೊಂಡು ಬಂದಿದ್ದರು. +ಪಾದರಿ ಊರಿಗೆ ಬಂದ ಮೇಲೆ ಇನಾಸನ ಮನಸ್ಸಿನಲ್ಲಿ ಅಳುಕು ಬಲವಾಗುತ್ತ ಹೋಯಿತು. ತಾನು ನಿಜದೇವನಾದ ಕ್ರೈಸ್ತನನ್ನು ನಂಬುತ್ತ ಈ ಕಲ್ಲು ದೇವರಿಗೆ ಕೈ ಮುಗಿಯುತ್ತೇನಲ್ಲ ಎಂದು ಆತ ಕೊರಗುವುದಿತ್ತು. ಪ್ರತಿ ಬಾರಿ ಪಾಪನಿವೇದನೆಗೆ ಹೋದಾಗ ಈ ವಿಷಯ ಹೇಳಿ ಪಶ್ಚಾತಾಪ ಪಡುತ್ತಿದ್ದ. +“..ಈ ಇಬ್ಬರು ಯಜಮಾನರ ಸೇವೆ ಮಾಡುವುದನ್ನು ಬಿಡು” ಎಂದು ಹೇಳುತ್ತಿದ್ದರು ಪಾದರಿ. +ಕ್ರಮೇಣ ಈ ದೇವರಿಂದ ದೂರವಾಗಬೇಕು ಎಂದು ಯತ್ನಿಸಿದ್ದ. ಊದಿನ ಕಡ್ಡಿ ಹಚ್ಚಿ ಕೈ ಮುಗಿಯುವುದನ್ನು ಕಡಿಮೆ ಮಾಡಿದ್ದ. ಆಗಲೇ ಪಾದರಿ ಗೋನಸ್ವಾಲಿಸ್ ಒಂದು ದಾರಿ ತೋರಿಸಿದರು. +ಹೊಸ ಇಗರ್ಜಿಯ ಮರಗೆಲಸ ಮಾಡಲೆಂದು ಅಲ್ಲಿಗೆ ಹೋದಾಗ ಪಾದರಿ ಅವನನ್ನು ಕರೆದರು. +ಕಿವಿಗೆ ಬಳಪದ ಕಡ್ಡಿ ಸಿಕ್ಕಿಸಿಕೊಂಡು ಇನಾಸ ಹೋಗಿ ಅವರೆದುರು ನಿಂತ. +“..ಬಾ ಇನಾಸ..” ಎಂದರವರು. +“ಇಲ್ಲಿ ಇಗರ್ಜಿಯಂತೂ ಆಗತಿದೆ..ಜೊತೆಗೇನೆ ಕೇರಿಲಿ ಅಲ್ಲಿ ಇಲ್ಲಿ ಒಂದೊಂದು ಶಿಲುಬೆ ನಿಲ್ಲಿಸೋಣ ಅಂತ ಯೋಚನೆ ಮಾಡತಿದ್ದಿನಿ.” ಎಂದರವರು. +ಅಲ್ಲಲ್ಲಿ ಶಿಲುಬೆ ನಿಲ್ಲಿಸುವುದು ಘಟ್ಟದ ಕೆಳಗೆ ಸಾಮಾನ್ಯ ವಿಷಯವಾಗಿತ್ತು. ಕ್ರೀಸ್ತುವರ ಪ್ರತಿ ಮನೆಯ ಮುಂದೆ ಒಂದು ಶಿಲುಬೆ. ಗುಡ್ಡದ ಮೇಲೆ ಶಿಲುಬೆ. ತೋಟದಲ್ಲಿ ಶಿಲುಬೆ. ರಸ್ತೆ ಪಕ್ಕದಲ್ಲಿ ಶಿಲುಬೆ ಎಂದೆಲ್ಲ ನಿಲ್ಲಿಸಿ ಆಗಾಗ್ಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದು. ಸಂಜೆ ಮೇಣದ ಬತ್ತಿ ಹಚ್ಚುವುದು ಮುರುಡೇಶ್ವರ, ಹೊನ್ನಾವರ, ಭಟ್ಕಳಗಳಲ್ಲಿ ಬಹಳ ದಿನಗಳಿಂದ ನಡೆದು ಬಂದಿತ್ತು. ಇಲ್ಲಿ ಕೂಡ ಹಾಗೆಯೇ ಮಾಡುವುದು ಒಳ್ಳೆಯ ವಿಚಾರವೇ. +” ಮಾಡಬಹುದು ಪದ್ರಾಬ” ಎಂದ ಇನಾಸ. +“..ಮೊದಲು ನಿನ್ನ ಮನೆ ಅಂಗಳದಲ್ಲಿ ಒಂದು ಶಿಲುಬೆ ನಿಲ್ಲಿಸುವ ಅಂತ..ಏನಂತಿ?” ಪಾದರಿ ಅವನ ಮುಖ ದಿಟ್ಟಿಸಿದರು. +” ಆಯ್ತು ಪದ್ರಾಬ..ನನ್ನ ಒಪ್ಪಿಗೆ ಇದೆ..” +“ನಾಳೆಯಿಂದಾನೆ ಕೆಲಸ ಪ್ರಾರಂಭಿಸೋಣ..” ಎಂದರು ಪಾದರಿ. +ಇನಾಸ ಮತ್ತೆ ಇಗರ್ಜಿ ಕಟ್ಟಡದೊಳಗೆ ಹೋಗಿ ಕೆಲಸಕ್ಕೆ ತೊಡಗಿದಾಗ ತಟ್ಟನೆ ಅವನು ಗಾಬರಿಗೊಂಡ. ಅವನ ಮೈ ಕಂಪಿಸಿತು. ಸಣ್ಣಗೆ ಬೆವರಿತು. ಛೆ! ತಾನು ಒಪ್ಪಬಾರದಿತ್ತು ಎಂದು ಪೆಚಾಡಿದ. ಅಂಗಳದಲ್ಲಿ ಅದೆಷ್ಟು ದಿನಗಳಿಂದ ಕಲ್ಲು ಕುಟಿಗ ಇದ್ದಾನೆ. ಈಗ ಅವನ ಮುಂದೆ ಶಿಲುಬೆಯೇ? +“ಬೇಡ ಪದ್ರಾಬ, ಬೇಡ” ಎಂದು ಹೋಗಿ ಪಾದರಿಗೆ ಹೇಳಿ ಬಿಡಲೆ ಎಂದು ಯೋಚಿಸಿದ್ದ. +ರುದ್ರ ಮನೆ ಬಿಡುವಾಗ ಕಲ್ಲು ಕುಟಿಗನನ್ನು ಮರೆಯಬೇಡ, ಅವನು ನಿನ್ನನ್ನು ಬಿಡುವುದಿಲ್ಲ ಎಂದಿದ್ದ. ಕಲ್ಲು ಕುಟಿಗನಿಂದ ತನಗೆ ಒಳ್ಳೆಯದೇ ಆಗಿದೆ. ಈಗಲೂ ತಾನು ಭಾನುವಾರಗಳಂದು ಇಗರ್ಜಿಗೆ ಹೋಗುತ್ತೆನೆ. ಸಂಜೆ ಮನೆಯಲ್ಲಿ ತೇರ್ಸ ಮಾಡುತ್ತೇನೆ. ಬೆಳಿಗ್ಗೆ ಕಲ್ಲು ಕುಟಿಗನಿಗೆ ಊದಿನ ಕಡ್ಡಿ ಹಚ್ಚುತ್ತೇನೆ. ತನಗೆ ತನ್ನ ಕುಟುಂಬಕ್ಕೆ ಈವರೆಗೆ ಎನೂ ಕೆಡುಕಾಗಿಲ್ಲ. ಆದರೆ ನಾಳೆ ಕಲ್ಲು ಕುಟಿಗನ ಮುಂದೆ ಬೇರೊಂದು ದೇವರನ್ನು ತಂದು ನಿಲ್ಲಿಸಿದರೆ? ಬಹಳ ವಿಚಾರ ಮಾಡಿದ ಇನಾಸ. ಪಾದರಿಗಂತೂ ಬೇಡ ಅನ್ನುವಂತಿಲ್ಲ. ಮೊದಲೇ ಅವರು ತನ್ನ ಬಗ್ಗೆ ಅನುಮಾನವಿರಿಸಿಕೊಂಡಿದ್ದಾರೆ. ಮಾತು ಮಾತಿಗೆ ದೇವರ ಕಟ್ಟಳೆಯನ್ನು ಮುಂದೆ ಮಾಡುತ್ತಾರೆ. ತನ್ನ ಮನೆ ಅಂಗಳದಲ್ಲಿ ಶಿಲುಬೆ ನಿಲ್ಲಿಸುವುದು ಬೇಡವೆಂದರೆ ಉಗ್ರರಾಗುತ್ತಾರೆ ಇರಲಿ. ಏನು ಬೇಕಾದರೆ ಆಗಲಿ. ತಾನು ಪಾದರಿಯ ಇಚ್ಛೆಗೆ ವಿರುದ್ಧವಾಗಿ ಹೋಗಲಾರೆ ಎಂದು ಆತ ಯೋಚಿಸಿ ಯೋಚಿಸಿ ಅಂತಿಮವಾಗಿ ನಿರ್ಧರಿಸಿದ. +ಮಾರನೆ ದಿನ ಬೆಳಿಗ್ಗೆ ಇನಾಸ ಏಳುತ್ತಿರುವಾಗಲೇ ಸಿಮೋನನ ಎತ್ತಿನಗಾಡಿಯ ಸದ್ದಾಯಿತು. ಗಾಡಿಯಿಂದ ಆಳು ಕಲ್ಲು ಇಳಿಸಿದ. ಹಿಂದೆಯೇ ಪಾದರಿ ಕೆಲಸದಾಳುಗಳ ಜತೆ ಬಂದಾಯಿತು. ಕಲ್ಲುಕುಟುಗನಿಗೆ ತುಸು ಮುಂದೆ, ರಸ್ತೆಯ ಮೇಲೆ ಹಾದು ಹೊಗುವ ಕೇರಿಯವರಿಗೆ, ಊರಿನ ಜನರಿಗೆ ಕಾಣುವಂತೆ, ಮನೆ ಬಾಗಿಲಿಗೆ ಸರಿಯಾಗಿ ಪಾಯ ತೋಡಲು ಅವರು ಹೇಳಿದರು. ಅಲ್ಲಿ ಇದ್ದಷ್ಟೂ ಹೊತ್ತು ಪಾದರಿ ಕಲ್ಲು ಕುಟಿಗನತ್ತ ತಿರುಗಿಯೂ ನೋಡಲಿಲ್ಲ. ಆದರೆ ಏನೋ ಒಂದು ಬಗೆಯ ನೆಮ್ಮದಿ ತೃಪ್ತಿ ಅವರಲ್ಲಿತ್ತು. +ಮೂರು ದಿನಗಳಲ್ಲಿ ಅಲ್ಲಿ ಮೂರು ಅಡಿ ಎತ್ತರದ ಒಂದು ಕಟ್ಟೆ ಎದ್ದು ನಿಂತು ಬಿಟ್ಟಿತು. ಇದರ ಮೇಲೆ ಒಂದು ಅಡಿ ಎತ್ತರದ ಒಂದು ಶಿಲುಬೆ. ಕಟ್ಟೆಯ ಮೇಲೆ ಮೇಣದ ಬತ್ತಿ ಹಚ್ಚಲು ಒಂದು ತಗ್ಗು. ಶಿಲುಬೆ ಕಟ್ಟೆಗೆ ಗಾರೆ ತೆಗೆದು ಸುಣ್ಣ ಬಳಿದು ಎಲ್ಲ ಸಿದ್ಧವಾಗಲೂ ಮತ್ತೊಂದು ದಿನ ಬೇಕಾಯಿತು. +“ಶುಕ್ರವಾರ ಸಂಜೆ ಸುತಾರಿ ಇನಾಸರ ಮನೆ ಅಂಗಳದಲ್ಲಿ ಶಿಲುಬೆ ಪ್ರಾರ್ಥನೆ ಇದೆ..ಎಲ್ಲ ಬರಬೇಕು” ಎಂದು ಚಮಾದೋರ ಇಂತ್ರು ಮನೆ ಮನೆಗೆ ಹೋಗಿ ಹೇಳಿ ಬಂದ. +ಬೋನ ಮುಂಚಿತವಾಗಿ ಬಂದು ಒಂದು ಮಾವಿನ ಎಲೆ ತೋರಣ ಮಾಡಿದ. ಅಬ್ಬಲಿಗೆ ಹೂವಿನಿಂದ ಶಿಲುಬೆಯನ್ನು ಸಿಂಗರಿಸಿದ. ಶಿಲುಬೆಯ ಕಟ್ಟೆಗೂ ಚೆಂಡು ಹೂವು ಕಟ್ಟಿದ. ಮೇಣದ ಬತ್ತಿ ಹಚ್ಚಿದ. +ಇನಾಸ, ಅವನ ಹೆಂಡತಿ ಮೊನ್ನೆ, ಮಕ್ಕಳು ಸಂಭ್ರಮದಿಂದ ತಿರುಗಾಡಿದರು. ಕೇರಿ ಜನ ಬಂದರು. ಹೆಂಗಸರು ತಲೆಯ ಮೇಲೆ ಸೆರಗನ್ನು ಹೊದ್ದು ಬಂದರು. ಹುಡುಗಿಯರು ವೇಲ್ ಧರಿಸಿ ಬಂದರು. ಬಂದವರೆಲ್ಲ ಈ ಶಿಲುಬೆ ನೋಡಿ ಹಿಗ್ಗಿದರು. ಸಂತಸಪಟ್ಟರು. ಸರಿಯಾದ ಸಮಯಕ್ಕೆ ಬಂದ ಪಾದರಿ ಧೂಪ, ಪವಿತ್ರ ಜಲದಿಂದ ಶಿಲುಬೆಯನ್ನು ಮಂತ್ರಿಸಿದರು. ಅಂಗಳದಲ್ಲಿ ಶಿಲುಬೆಯ ಸುತ್ತ ಮೊಣಕಾಲೂರಿ ಜನ ಜಪಸರ ಪ್ರಾರ್ಥನೆ ಮಾಡಿದರು. +“ಜೂಜೆ ಬಾಪ ಪಾವತುಂ ಅಮ್ಮಾಂ” (ತಂದೆ ಜೋಸೆಫ಼ರೆ ನಮ್ಮನ್ನು ಕಾಪಾಡಿ) ಎಂದು ಎಲ್ಲರೂ ಒಕ್ಕೊರಲಿನ ಗಾಯನ ಮಾಡಿದರು. +ಪಾದರಿ ಗೋನಸ್ವಾಲಿಸ್ ನಾಲ್ಕು ಮಾತನಾಡಬೇಕು ಅಂದುಕೊಂಡರು. ಆದರೆ ಅಲ್ಲಿ ನೆರೆದ ಜನರ ಭಕ್ತಿಯ ಆವೇಶ ಕಂಡು ಮಾತು ಬೇಡ ಅನಿಸಿತು ಅವರಿಗೆ. ಇನ್ನು ಅಲ್ಲಿ ನಿಂತಿರುವ ಪವಿತ್ರ ಶಿಲುಬೆಯೆ ಎಲ್ಲವನ್ನೂ ಮಾಡಿಬಿಡುತ್ತದೆ ಅಂದುಕೊಂಡರು. +ಹಾಗೆಯೇ ಇನಾಸ, ಅವನ ಹೆಂಡತಿ ಮಕ್ಕಳನ್ನು ಕರೆದು, ಶಿಲುಬೆಯ ಮುಂದೆ ಮೊಣಕಾಲೂರಲು ಹೇಳಿ ಅವರನ್ನು ವಿಶೇಷವಾಗಿ ಆಶೀರ್ವದಿಸಿದರು. +“ಈ ಪವಿತ್ರ ಶಿಲುಬೆಯು ಇನ್ನು ಮುಂದೆ ನಿಮ್ಮ ಕುಟುಂಬವನ್ನು, ಈ ಕೇರಿಯನ್ನು ರಕ್ಷಣೆ ಮಾಡುತ್ತದೆ..ನೀವು ನಿತ್ಯ ಸಂಜೆ ಇದರ ಮುಂದೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ. ಇದರ ಪದತಲದಲ್ಲಿ ಯಾವುದೇ ಅಧಾರ್ಮಿಕ ಕೃತ್ಯಗಳನ್ನು ಮಾಡಬೇಡಿ…ಈ ಕುಟುಂಬದ ಏಕತೆ ಈ ಶಿಲುಬೆಯಿಂದ ಸಾಧ್ಯವಾಗುತ್ತದೆ.” ಎಂದು ನಾಲ್ಕು ಮಾತು ಹೇಳಿದರು. +ಆ ಶಿಲುಬೆ ಆ ರಸ್ತೆಗೆ ಮನೆಗೆ ಒಂದು ಶೋಭೆಯಾಗಿ ನಿಂತುಬಿಟ್ಟಿತು. +* +* +* +ಶಿಲುಬೆ ಪ್ರಾರ್ಥನೆಯಾದ ಮೂರನೇ ದಿನ ಗುರ್ಕಾರ ಸಿಮೋನ ಇಗರ್ಜಿ ಬಳಿ ನಿಂತು ಕೆಲಸದ ಮೇಲುಸ್ತುವಾರಿಯಲ್ಲಿ ತೊಡಗಿದಾಗ ಸುಣ್ಣದ ಅನ್ನಾಬಾಯಿ ಸಿಮೋನನ ಬಳಿ ಬಂದಳು. +” ಮಾಮ, ಕವಳ ಪೊತ್ತಿದೀ” (ಮಾಮ, ಎಲೆ ಅಡಿಕೆ ಚೀಲ ಕೊಡು) ಎಂದು ಕೇಳುತ್ತ ಸಿಮೋನ ಕುಳಿತ ಮರದ ಕೆಳಗೆ ತಾನು ಕುಳಿತು ಕೈಚಾಚಿದಳು. ಈ ಕೆಲಸದವರದ್ದು ಇದೊಂದು ಅಭ್ಯಾಸ. ಅದು ಹೆಣ್ಣಿರಲಿ ಗಂಡಿರಲಿ ಬಾಯಲ್ಲಿ ಕವಳ ಅಗಿಯುತ್ತಿರಬೇಕು. ಕೆಲವರು ಸ್ವಂತಕ್ಕೆ ಒಂದು ಚೀಲ ಇಟ್ಟುಕೊಂಡಿರುತ್ತಾರೆ. ಕೆಲವರು ಬೇರೆಯವರ ಮೇಲೆ ಅವಲಂಬಿಸಿಕೊಂಡಿರುತ್ತಾರೆ. ಕೆಲಸದ ನಡುವೆ ಬಿಡುವು ಮಾಡಿಕೊಂಡು ಕುಳಿತು ಎಲೆ ಅಡಿಕೆ ಮೆಲ್ಲದಿದ್ದರೆ ಅವರ ಕೆಲಸ ಮುಂದೆ ಸಾಗುವುದಿಲ್ಲ. +ಈ ಅನ್ನಾಬಾಯಿ ಹಂದಿ ಗುಸ್ತೀನನ ಹೆಂಡತಿ. ಇವನು ಗೇರುಸೊಪ್ಪೆಯಿಂದ ಇಲ್ಲಿಗೆ ಬಂದದ್ದು ಕಲ್ಲು ಕೆಲಸ ಮಾಡಲಿಕ್ಕಾದರೂ ಇವನು ಇಲ್ಲಿ ಮಾಡಿದ್ದು ಕಾಡು ಹಂದಿ ಬೇಟೆ. ಊರ ಸುತ್ತ ಒಳ್ಳೆಯ ಕಾಡಿತ್ತು. ಬಂದೂಕು ಇಟ್ಟುಕೊಂಡಿರುವ ಕೆಲವರ ಪರಿಚಯವನ್ನು ಈತ ಮಾಡಿಕೊಂಡ. ಪ್ರತಿ ಶನಿವಾರ ರಾತ್ರಿ ಒಬ್ಬರಲ್ಲಾ ಒಬ್ಬರನ್ನು ಪುಸಲಾಯಿಸಿ ಈತ ಬೇಟೆಗೆ ಕರೆದೊಯ್ಯುತ್ತಿದ್ದ. ಕಾಡು ಹಂದಿ, ಜಿಂಕೆ, ಕಡ, ಕಾಡು ಕುರಿ, ಮೊಲ, ಕಾಡು ಕೋಳಿ, ನವಿಲು ಎಂದು ಸಿಕ್ಕಿದ್ದನ್ನೆಲ್ಲ ಬೇಟೆಯಾಡುತ್ತಿದ್ದ. ಕಾಡು ಹಂದಿಯನ್ನು ಬೇಟೆಯಾಡುವುದರಲ್ಲಿ ಈತ ತುಂಬಾ ಪಳಗಿದ್ದ. ರಾತ್ರೋ ರಾತ್ರಿ ಹಂದಿಯನ್ನು ಹೊತ್ತು ತಂದು ಸುಲಿದು ಕತ್ತರಿಸಿ ಮನೆ ಹಿಂಬದಿಯಲ್ಲಿ ಪಾಲು ಹಾಕುತ್ತಿದ್ದ. ಒಂದು ಪಾಲಿಗೆ ಎರಡು ರೂಪಾಯಿ. ಭಾನುವಾರ ಬೆಳಿಗ್ಗೆ ಜನ ಪೂಜೆ ಮೂಗಿಸಿಕೊಂಡು ಮನೆಗೆ ಹೊರಟಾಗ ಕೊಪೆಲ ಬಳಿಯೇ ಈತ ಎಲ್ಲರ ಕಿವಿಗಳಲ್ಲೂ- +“…ಏಕ ವಂಟೋ ಹೋರ..ಬರೇಂ ಅಸ್ಸ” (ಒಂದು ಪಾಲು ತೆಗೆದುಕೊಂಡು ಹೋಗು ಚೆನ್ನಾಗಿದೆ) ಅನ್ನುತ್ತಿದ್ದ. +ಆದಿತ್ಯವಾರವನ್ನು ದೇವರ ದಿನವನ್ನಾಗಿ ಆಚರಿಸಬೇಕು ಎಂಬ ನಂಬಿಕೆಯ ಜೊತೆಗೇನೆ ಸೇರಿಕೊಂಡ ಇನ್ನೊಂದು ಆಚರಣೆ ಎಂದರೆ ಅಂದು ಮಾಂಸದ ಅಡಿಗೆ ಮಾಡಬೇಕು ಅನ್ನುವುದು. ಊಟಕ್ಕೆ ಮಾಂಸವಿಲ್ಲವೆಂದರೆ ಅದು ಭಾನುವಾರ ಅಲ್ಲವೇ ಅಲ್ಲ ಅನ್ನುವ ಮಟ್ಟಕ್ಕೆ ಜನ ಹೋಗಿದ್ದರು. ಕುರಿ ಮಾಂಸ ಸೇರಿಗೆ ಮೂರು ರೂಪಾಯಿ ಯಾದರೆ ಅದಕ್ಕಿಂತ ಹೆಚ್ಚಿರುವ ಹಂದಿಮಾಂಸದ ಬೆಲೆ ಎರಡು ರೂಪಾಯಿ. ಜನ ನೇರವಾಗಿ ಗುಸ್ತಿನನ ಮನೆಗೆ ಬರುತ್ತಿದ್ದರು. ಒಂದು ಎರಡು ಪಾಲು ಒಯ್ಯುತ್ತಿದ್ದರು. ಕಾಡು ಹಂದಿ ಮಾಂಸ ಊರ ಹಂದಿ ಮಾಂಸಕ್ಕಿಂತ ರುಚಿ ಶುಚಿ. ಬೆಲೆಯೂ ಕಡಿಮೆ. ಪಾಲು ಹಾಕಿದ ಗಂಟೆಯೊಳಗೆ ಮಾಂಸ ಮುಗಿದು ಹೋಗುತ್ತಿತ್ತು. ನಂತರ ಬಂದವರಿಗೆ ಗುಸ್ತೀನನ ಹೆಂಡತಿ- +“ನಾರೆ ಬಾಳ…ಜಾವ್ನಗೆಲ್ಲೆಂ” +“ಇಲ್ಲಾ ಮಗು ಮುಗಿದು ಹೋಯ್ತು” ಎಂದು ಹೇಳುತ್ತಿದ್ದಳು. +ಇತ್ತೀಚಿನ ಐದಾರು ವರ್ಷ ಇದೇ ಕೆಲಸ ಮಾಡಿಕೊಂಡಿದ್ದ ಗುಸ್ತೀನ. ಹಂದಿ ಗುಸ್ತೀನ ಎಂಬ ಹೆಸರೂ ಅವನಿಗೆ ಖಾಯಂ ಆಗಿತ್ತು. ಪಾದರಿ ಬರುವುದಕ್ಕೂ, ಜನ ಕೊಪೆಲಗೆ ಹೋಗುವುದನ್ನು ಆರಂಭಿಸುವುದಕ್ಕೂ, ಭಾನುವಾರಗಳನ್ನು ದೈವಭಕ್ತಿಯಿಂದ ಆಚರಿಸಲು ತೊಡಗಿಕೊಳ್ಳುವುದಕ್ಕೂ, ಹಂದಿ ಗುಸ್ತೀನ ಕಾಡು ಹಂದಿ, ಜಿಂಕೆಯನ್ನು ತಂದು ಪಾಲು ಮಾಡಿ ಜನರುಗೆ ಒದಗಿಸುವುದಕ್ಕೂ ತಾಳೆ ಬಿದ್ದು ಹಂದಿಗುಸ್ತೀನ ಪ್ರಖ್ಯಾತನಾಗಿದ್ದ. ಆದರ ಯಾರ ಶಿರಾಪ(ಶಾಪ) ಬಿದ್ದಿತೋ, ಹಂದಿ ಗುಸ್ತೀನ ಒಂದು ಶನಿವಾರ ಮಂಕಾಳೆ ಕಾಡಿಗೆ ಹೋದವ ಹೆಣವಾಗಿ ತಿರುಗಿ ಬಂದ. ಹಂದಿಯ ಬದಲು ಜನ ಅವನನ್ನೇ ಹೊತ್ತು ತಂದರು. +ಚಮಾದೋರ ಸ್ಮಿತ್ರಿಯಲ್ಲಿ ಹೊಂಡ ತೆಗೆದು ಮುಗಿಸಿ ಮನೆಮನೆಗೆ ಹೋಗಿ- +“ಸಂಜೆ ಹಂದಿ ಗುಸ್ತೀನನ ಮರಣ ಇದೆ.” ಎಂದು ಹೇಳಿ ಬಂದ. +ಸುತಾರಿ ಇನಾಸ ಮರಣದ ಪೆಟ್ಟಿಗೆ ಮಾಡಿದ. +ದರ್ಜಿ ಬಲಗಾಲುದ್ಧ ಬಾಲ್ತಿದಾರ ಗುಸ್ತಿನನ ಅಳತೆ ಊಹಿಸಿಕೊಂಡು ಬಿಳಿ ಶರಟು, ಇಜಾರ ಕೈ ಚೀಲ, ಕಾಲು ಚೀಲ ಹೊಲಿದ. +ಐದು ಗಂಟೆಗೆ ಪಾದರಿ, ಪೀಠ ಬಾಲಕರು, ಮಿರೋಣ ಶಿಲುಬೆ ಹಿಡಿದು ಶವ ಕೊಂಡೊಯ್ಯಲು ಗುಸ್ತೀನನ ಮನೆಗೆ ಬಂದರು. ಅವನ ಶವ ಪೆಟ್ಟಿಗೆ ಒಯ್ಯುವಾಗ ಪಸ್ಕೋಲ ಅನ್ನಾಬಾಯಿಯ ಬಳೆ ತುಂಬಿದ ಕೈಗಳನ್ನು ಶವ ಪೆಟ್ಟಿಗೆಗೆ ಬಡಿದು ಬಳೆ ಒಡೆದ. ಅವಳು ಹೋ ಎಂದು ಅತ್ತಳು. +ಗಂಡ ಸತ್ತ ನಂತರ ಅನ್ನಾಬಾಯಿ ಅನಾಥಳಾದಳು. ನಾಲ್ವರು ಮಕ್ಕಳನ್ನು ಇರಿಸಿಕೊಂಡು ಕಾಲ ನೂಕುವುದು ಕಷ್ಟವೆನಿಸಿತು. ಹಿಂದೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವಳು ಈಗ ಮನೆ ಮನೆಗೆ ಸುಣ್ಣ ತೆಗೆಯಲು ಹೋಗ ತೊಡಗಿದಳು. ಈ ಕೆಲಸವಿಲ್ಲವೆಂದರೆ ನೀರು ಹೊರಲು, ಮಣ್ಣು ಕಲಿಸಲು, ಕಲಿಸಿದ ಮಣ್ಣನ್ನು ಒಯ್ದು ಕೊಡಲು ಹೋಗುತ್ತಿದ್ದಳು. ಹೆಣ್ಣು ಮಕ್ಕಳು ಮನೆಗೆಲಸ ನೋಡಿಕೊಂಡಿದ್ದರು. +ಸಿಮೋನ ಕೊಟ್ಟ ಚೀಲದಿಂದ ಎಲೆ ತೆಗೆದು ಅದರ ನಾರು ಬಿಡಿಸುತ್ತ ಅತ್ತಿತ್ತ ನೋಡಿ ಅನ್ನಾಬಾಯಿ. +“ಸಿಮೋನ ಮಾಮಾ” ಎಂದಳು. ಅವಳ ದನಿಯಲ್ಲಿ ಅಪರೂಪದ ಒಂದು ರಾಗವಿತ್ತು. +“ಏನು?” +“ಸಾಂತಾಮೋರಿ ಮಗಳು ನಾತೆಲ್ ವಿಷಯ ಗೊತ್ತ?” +“ಏನು? ಏನದು?” +“ಮನೆ ಹಿಂದಿನ ನುಗ್ಗೆ ಮರದ ಕೆಳಗೆ ಕೂತು ವಾಂತಿ ಮಾಡಿಕೊಳ್ತ ಇದ್ಲು..” +ಸಿಮೋನನ ಮೈ ಬೆಚ್ಚಗಾಯಿತು. ಮುಖ ಹೇಸಿಗೆಯಿಂದ ಮುದುಡಿಕೊಂಡಿತು. ಅನ್ನಾಬಾಯಿ ಮಾತು ಮುಂದುವರೆಸಿದಳು. +“ನಿಮಗೆ ಗಂಡಸರಿಗೆ ಗೊತ್ತಾಗೋಲ್ಲ..ಅವಳಿಗೆ ಹೊಟ್ಟೆ ಬರತಿದೆ. ಈಗಾಗಲೇ ನಾಲ್ಕು ತಿಂಗಳಾಗಿದೆ…” +ಅನ್ನಾಬಾಯಿ ಅಲ್ಲಿಗೇನೆ ನಿಲ್ಲಿಸಲಿಲ್ಲ. ಮತ್ತೂ ಮುಂದುವರೆಸಿದಳು.- +“ನೀವು ಗುರ್ಕಾರ ಅಲ್ವ..ನಿಮಗೆ ತಿಳಿದಿರಬೇಕು..ನಮ್ಮ ಸಮೋಡ್ತ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇರಬೇಕಲ್ಲ..” +ಎತ್ತರದ ಗೋಡೆಯ ಮೇಲೆ ನಿಂತು ಕಲ್ಲು ಕಟ್ಟುವಾಗ ಕಣ್ಣಿಗೆ ಕತ್ತಲು ಕವಿದಂತಾಯಿತು. ಸಾವರಿಸಿಕೊಂಡು ಸಿಮೋನ ಎದ್ದು ನಿಂತ. ಅನ್ನಾಬಾಯಿ ಅತ್ತ ಕೆಲಸಕ್ಕೆ ಹೋದಳು. +* +* +* +ಸಾಂತಾಮೋರಿ, ಮಗಳು ನಾತೇಲ ಇದೇನು ಮಾಡಿಕೊಂಡಳು ಎಂದು ಮನಸ್ಸು ಕಸಿವಿಸಿ ಮಾಡಿಕೊಂಡನು. +ಸಾಂತಾಮೋರಿಯನ್ನು ಇಲ್ಲಿಗೆ ಕರೆತಂದವನು ತಾನೆ. ಮೊದಲು ಒಂದೆರಡು ವರ್ಷ ಸೊನಗಾರರ ಹುಡುಗ ತಮಗೆಲ್ಲ ಅಡಿಗೆ ಮಾಡಿ ಹಾಕುತ್ತಿದ್ದ. ಅವನು ತನಗೆ ಹೇಳದೆ ಕೇಳದೆ ಹೋದ ನಂತರ ಊರಿನಲ್ಲಿ ಸಾಂತಾ ಮೋರಿ ತನ್ನ ಕಣ್ಣಿಗೆ ಬಿದ್ದಳು. +ಮುರುಡೇಶ್ವರ ಇಗರ್ಜಿ ಹಿಂಬದಿಯಲ್ಲಿ ಸಂಪಿಗೆ ಹಣ್ಣಿನ ಮುಳ್ಳಿನ ಮರದ ಕೆಳಗೆ ಇವಳ ಮನೆ. ಮುದುವೆಯಾಗಿ ಕಾಯ್ಕಿಣಿಯಿಂದ ಬಂದ ನಂತರ ಮುರುಡೇಶ್ವರ ಬಿಟ್ಟವಳಲ್ಲ ಇವಳು. ಇವಳ ಗಂಡ ಒಂದು ಹಡಗಿನಲ್ಲಿ ಬಟ್ಲರ್ ಆಗಿದ್ದ. ಈ ಹಡಗು ಭಟ್ಕಳದಿಂದ ಮುಂಬಯಿಗೆ ಓಡಾಡುತ್ತಿತ್ತು. ಮುರುಡೇಶ್ವರದ ಕಡಲ ಕಿನಾರೆಯಲ್ಲಿ ನಿಂತು ಕಡಲಲ್ಲಿ ಮುಂಬಯಿಯತ್ತ ಮುಖಮಾಡಿಕೊಂಡು ಹೋಗುವ ಹಡಗುಗಳನ್ನು ನೋಡುತ್ತ ಅದರಲ್ಲಿ ಒಂದು ತನ್ನ ಗಂಡ ಇರುವ ಹಡಗೂ ಆಗಿರಬಹುದು ಎಂದು ಎಷ್ಟೋ ಸಾರಿ ಕಲ್ಪಿಸಿಕೊಳ್ಳುತ್ತಿದ್ದಳು ಸಾಂತಾಮೋರಿ. ಗಂಡ ಮನೆ ಬಿಟ್ಟು ಹೋದವ ಮೂರು ನಾಲ್ಕು ತಿಂಗಳ ನಂತರ ಬರುತ್ತಿದ್ದ. ಬಂದವ ಹತ್ತು ಹದಿನೈದು ದಿನ ಇರುತ್ತಿದ್ದ. ಈ ಅವಧಿಯಲ್ಲಿ ತನಗೆ ಕೆಲವೆಲ್ಲ ಅಡಿಗೆ ಮಾಡುವುದನ್ನು ಈತ ಕಲಿಸುತ್ತಿದ್ದ. +ಮನೆಯಲ್ಲಿ ಇವನ ತಾಯಿ ತಂದೆ ಓರ್ವ ತಮ್ಮ ಇದ್ದರು. +ಸಾಂತಾ ಮೋರಿ ಸುಖ ನೆಮ್ಮದಿಯಿಂದಲೇ ಇದ್ದಳು. ಇಬ್ಬರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು ಹುಟ್ಟಿದ್ದರು. ಮಗಳಿಗೆ ಆರು ತಿಂಗಳು ಅನ್ನುವಾಗ ಕಡಲಲ್ಲಿ ದೊಡ್ಡ ತೂಫ಼ಾನು ಎದ್ದಿತು. ಸಾಂತಾಮೋರಿಯ ಗಂಡ ಇದ್ದ ಹಡಗು ಗೋವೆಯ ಬಳಿ ಒಡೆದು ಹೋಯಿತು. ಹಡಗಿನಲ್ಲಿ ಯಾರೂ ಬದುಕಲಿಲ್ಲ. ಅವರ ಶವಗಳು ಕೂಡ ದೊರೆಯಲಿಲ್ಲ. +ಸಾಂತಾಮೋರಿ ದಿಕ್ಕುಗಾಣದಾದಳು. ಹಡಗಿನ ಕಂಪನಿಯವರು ಒಂದಿಷ್ಟು ಹಣ ಕೊಟ್ಟರು. ಗಂಡ ಸಾಯುವ ಮುನ್ನ ತಮ್ಮನ ಮದುವೆ ಮಾಡಬೇಕೆಂದು ಕುಮುಟೆಯ ಒಂದು ಹೆಣ್ಣನ್ನು ನೋಡಿ ಇರಿಸಿದ್ದ. ಗಂಡನ ಆಸೆ ನೆರವೇರಲೆಂದು ಸಾಂತಾಮೋರಿ ತಾನೇ ಮುಂದೆ ನಿಂತು ಮೈದುನನ ಮದುವೆ ಮಾಡಿಸಿದಳು. ಕಂಪನಿಯವರು ಕೊಟ್ಟ ಹಣ ಇಲ್ಲಿ ಕೈಬಿಟ್ಟಿತು. ಮನೆಗೆ ಮೈದುನನ ಹೆಂಡತಿ ಬಂದಳು. ಸಾಂತಾಮೋರಿ ಅವಳ ಮಕ್ಕಳಿಗೆ ಕಷ್ಟದ ದಿನಗಳು ಆರಂಭವಾದವು. +ಊರಿನ ಪಾದರಿ, ಗುರ್ಕಾರ, ಫ಼ಿರ್ಜಂತ, ಸಾಂತಾಮೋರಿ ಅವಳ ಮಕ್ಕಳಿಗೆ ಬಂದ ಕಷ್ಟಗಳನ್ನು ದೂರ ಮಾಡಲು ನೋಡಿದರು. ಆಗಲೇ ಮಳೆಗಾಲ ಮುಗಿದು ಘಟ್ಟದ ಮೇಲೆ ಹೋಗಲು ಪೊಟ್ಲಿಗಿಟ್ಲಿ ತಯಾರು ಮಾಡಿಕೊಳ್ಳುತ್ತಿದ್ದ ಸಿಮೋನ. +“ಸಾಂತಾಮೋರಿ..ಕಷ್ಟಾನೋ ಸುಖಾನೋ ನಿನಗೊಂದು ದಾರಿ ತೋರ್ಸತೀನಿ ನನ್ನ ಜತೆ ಬಾ..” ಎಂದ. +ಗಟ್ಟಿ ಮನಸ್ಸು ಮಾಡಿ ಸಾಂತಾ ಮೋರಿ ಸಿಮೋನನ ಜತೆ ಹೊರಟಳು. +ಶಿವಸಾಗರದಲ್ಲಿ ಸಿಮೋನನ ಬಿಡಾರಕ್ಕೆ ಅನತಿ ದೂರದಲ್ಲಿ ಒಂದು ಅಂಟುವಾಳದ ಮರದ ಕೆಳಗೆ ಸಾಂತಾ ಮೋರಿಯ ಬಿಡಾರ ಎದ್ದಿತು. ಓಟೆ ಕಡ್ಡಿ ನಿಲ್ಲಿಸಿ ಮಣ್ಣು ಮೆತ್ತಿ ಗೋಡೆ ಮಾಡಿಕೊಂಡಳು. ಮೇಲೆ ಬಿದಿರ ಹಂದರ ಹಾಕಿ ಹುಲ್ಲು ಹೊದೆಸಿದಳು. ಕುಂಬಾರ ಕೇರಿಯಿಂದ ಮಡಕೆ ಕುಡಿಕೆ ತಂದಳು. ಸಿಮೋನ ಒಂದಿಷ್ಟು ಹಣ ಕೊಟ್ಟ. +“ನಾವು ಏಳೆಂಟು ಜನ ಇದೀವಿ…ನಮಗೆ ಅಡಿಗೆ ಮಾಡಿ ಹಾಕು..ನಿನ್ನ ಜೀವನಕ್ಕೆ ದಾರಿಯಾಗುತ್ತೆ..ನಮಗೂ ಅನುಕೂಲವಾಗುತ್ತೆ..” ಎಂದ ಆತ. +ಸಾಂತಾಮೋರಿಯ ಊಟದ ಮನೆ ಹೀಗೆ ಆರಂಭವಾಯಿತು. +ಘಟ್ಟದ ಕೆಳಗಿನಿಂದ ಬಂದವರಿಗೆ ಅನುಕೂಲವಾಯಿತು. ಕುಸುಬಲಕ್ಕಿಯ ಅನ್ನ, ಮೀನಿನ ಸಾರು, ನಿತ್ಯ ಬೆಳಿಗ್ಗೆ ಗಂಜಿ, ಸಾಯಂಕಾಲ ಸ್ನಾನಕ್ಕೆ ಬಿಸಿ ಬಿಸಿ ನೀರು ಇಲ್ಲಿ ಯಾರು ಮಾಡಿಕೊಡುತ್ತಾರೆ? +ತಾನು, ಮುರುಡೇಶ್ವರದ ದುಮಿಂಗ, ಫ಼ರಾಸ್ಕ ಅರ್ಥರ, ಶಿರಾಲಿಯ ಜೂಜೆ, ಗೋಮ್ಸ, ಪಾಸ್ಕಲ, ಎಡ್ಡಿ ಮೊದಲಾದವರು ಇಲ್ಲಿ ಉಳಿದರು. ಹಡಗಿನಲ್ಲಿ ಬಟ್ಲರ್ ಆಗಿದ್ದ ಗಂಡ ಹೇಳಿಕೊಟ್ಟ ಅಡಿಗೆ ಕೆಲಬಾರಿ ಪ್ರಯೋಜನಕ್ಕೆ ಬರುತ್ತಿತ್ತು. ಕೋಳಿ ಕತ್ತರಿಸಿ ಆಗಾಗ್ಗೆ ಒಳ್ಳೆಯ ಅಡಿಗೆ ಮಾಡುತ್ತಿದ್ದಳು ಸಾಂತಾಮೋರಿ. +ಮಳೆಗಾಲ ಆರಂಭವಾದಂತೆ ಕೆಲಸಗಾರರೆಲ್ಲ ಊರಿಗೆ ಹೊರಡುತ್ತಿದ್ದರು. ಆಗ ಅನಿವಾರ್ಯವಾಗಿ ಸಾಂತಾಮೋರಿ ಇಲ್ಲೇ ಉಳಿಯುತ್ತಿದ್ದಳು. ಊರು ಬಿಟ್ಟು ಬಂದ ಅವಳಿಗೆ ಅಲ್ಲಿ ಓಂದು ಮನೆ ಎಂದು ಇರಲಿಲ್ಲ. +ಒಂದು ಮಳೆಗಾಲದಲ್ಲಿ ಪಾಸ್ಕೋಲ ಮೇಸ್ತ್ರಿ ಇಲ್ಲಿಯೇ ಉಳಿದ. ಮಳೆಗಾಲದ ನಂತರ ತಾವೆಲ್ಲ ಬಂದಾಗ ಪಾಸ್ಕೋಲ ಮೇಸ್ತ್ರಿಗೂ ಸಾಂತಾಮೋರಿಗೂ ತೀವ್ರ ಸಂಬಂಧ ಬೆಳೆದುದನ್ನು ತಾನು ನೋಡಿದೆ. +ಊಟ ಮುಗಿಸಿ ಎಲ್ಲರು ತಮ್ಮ ತಮ್ಮ ಬಿಡಾರಗಳಿಗೆ ಹೋದರೂ ಪಾಸ್ಕೋಲ ಇಲ್ಲಿರುತ್ತಿದ್ದ. ಅವನು ಸ್ನಾನ ಮಾಡುವಾಗೆಲ್ಲ ಸಾಂತಾಮೋರಿ ಅವನ ಬೆನ್ನು ಉಜ್ಜಲು ಹೋಗುತ್ತಿದ್ದಳು. ಒಂದೆರಡು ಸಾರಿ ತಾನು ಪಾಸ್ಕೋಲ ಸಾಂತಾಮೋರಿಯನ್ನು ತಬ್ಬಿಕೊಂಡು ಹೊರಳಾಡುವುದನ್ನು ಕೂಡ ನೋಡಿದೆ. +ತನಗೆ ಇದು ಕೆಡುಕೆನಿಸಿತು. +ಸುಳ್ಳೋ ನಿಜವೋ ಊರಿನಿಂದ ಜನರನ್ನು ಘಟ್ಟಕ್ಕೆ ಕರೆದುಕೊಂಡು ಹೋಗಿ ಅವರನ್ನು ಕೆಡಿಸುತ್ತಾನೆ ಎಂಬ ಅಪಾದನೆ ತನ್ನ ಮೇಲಿದೆ. ಈ ಅಪಾದನೆಯ ಜತೆ ಇದೂ ಸೇರಬಾರದಲ್ಲ. ಪಾಸ್ಕೋಲ ಮದುವೆಯಾದವ. ಹೆಂಡತಿ ಮಕ್ಕಳು ಊರಲ್ಲಿದ್ದಾರೆ. ಇಲ್ಲಿ ಇವರ ಸಂಬಂಧ ಹೀಗೇ ಮುಂದುವರೆದರೆ? +ತನ್ನಿಂದ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಒಂದು ದಿನ ಅವಕಾಶ ನೋಡಿ ಸಾಂತಾಮೋರಿಗೆ ಹೇಳಿದೆ- +“..ನೀನು ಮಾಡತಿರೋದು ತಪ್ಪು ಸಾಂತಾಮೋರಿ..” +ಇದು ದೇವರ ಒಂಭತ್ತನೆ ಕಟ್ಟಲೆಗೆ ವಿರೋಧ. ಮಹಾಪಾಪ ಕೂಡ..ನಾನು ನಿನ್ನನ್ನ ಈ ಕೆಲಸಕ್ಕೆ ಅಂತ ಕರಕೊಂಡು ಬಂದದ್ದಲ್ಲ..” +ಅವಳು ಅತ್ತಳು- +ಅವಳಿಗೆ ನೋವಾಯಿತು. ನಾಚಿಕೆಯಾಯಿತು. +“ಅಣ್ಣ…ನಾನು ದಾರಿ ತಪ್ಪಿದ್ದು ನಿಜ…ಇನ್ನು ಹೀಗೆ ಮಾಡಲ್ಲ..” ಎಂದಳು. +ಆಗಲೇ ತಾನು ಬೆರೊಂದು ಕೆಲಸ ಕೂಡ ಮಾಡಿದೆ. ಪಾಸ್ಕೋಲನಿಗೆ ಶಿವಸಾಗರದಲ್ಲೊಂದು ನಿವೇಶನ ಕೊಡಿಸಿದೆ. ಅಲ್ಲಿ ಆತ ಒಂದು ಮನೆಯನ್ನು ಕೂಡ ಕಟ್ಟಿದ. ಅಷ್ಟು ಹೊತ್ತಿಗೆ ತನ್ನ ಪಾಲಿನ ಗುತ್ತಿಗೆ ಕೆಲಸಗಳನ್ನು ಅವನು ಏನೋ ಉಪಾಯ ಮಾಡಿ ಕಸಿದುಕೊಂಡು ಇಲ್ಲಿ ಗುತ್ತಿಗೆದಾರ ಎನಿಸಿಕೊಂಡಿದ್ದ. +ತಾನು ಮನೆ ಮಾಡಿ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದದ್ದು ಅವನ ಅಭಿಮಾನಕ್ಕೆ ಪೆಟ್ಟು ಕೊಟ್ಟಿತೇನೋ ಅವನೂ ಅವನ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆ ತಂದ. +ಅನಂತರ ಸಾಂತಾ ಮೋರಿ ಒಳ್ಳೆಯವಳು ಎನಿಸಿಕೊಂಡಿದ್ದಾಳೆ. ಈಗ ಅವಳಿಗೆ ವಯಸ್ಸೂ ಆಗಿದೆ. +ಅವಳ ಊಟದ ಮನೆ ಮುಂದುವರೆದಿದೆ. ಗಂಡು ಮಕ್ಕಳು ಕಲ್ಲು ಕಟ್ಟುವ ಕೆಲಸ ಕಲಿತಿದ್ದಾರೆ. ಗಾರೆ ಕೆಲಸವನ್ನೂ ಕೂಡ ಚೆನ್ನಾಗಿ ಮಾಡುತ್ತಾರೆ. ಅಲ್ಲಲ್ಲಿ ಊಟದ ಹೋಟೆಲುಗಳು ಆಗಿರುವುದರಿಂದ ಇವಳಲ್ಲಿ ಊಟಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಜನ ಇದ್ದಾರೆ. +ಅವರಿಗೆಲ್ಲ ಕಾಲಕಾಲಕ್ಕೆ ಊಟ ಮಾಡಿ ಹಾಕುತ್ತಾಳೆ. ಸಾಂತಾ ಮೋರಿ ಮಗಳು ನಾತೇಲ ಬಡಿಸುತ್ತಾಳೆ. ಅವರ ಜತೆ ಸಲಗೆಯಿಂದ ಮಾತನಾಡುತ್ತಾಳೆ. ನಗುತ್ತಾಳೆ. ಮಗಳ ಮದುವೆ ಮಾಡಬೇಕೆಂಬ ಆಸೆಯೂ ಸಾಂತಾ ಮೋರಿಗಿದೆ. +“ಅಣ್ಣ ಒಳ್ಳೆ ಕಡೆ ಒಂದು ನೆಂಟಸ್ತಿಕೆ ನೋಡೀ” ಎಂದು ತನಗೂ ಐದಾರು ಬಾರಿ ಹೇಳಿದ್ದಳು. +ಪಾಸ್ಕೋಲ ಕೂಡ ಹಿಂದಿನ ಆ ಸಂಬಂಧವನ್ನು ನೆನಪಿನಲ್ಲಿ ಇಟ್ಟುಕೊಂಡೋ ಏನೋ ಊರಿನಲ್ಲಿ ಕೆಲವರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದೂ ತನಗೆ ಗೊತ್ತಿದೆ. +ಆದರೆ ಈಗ ನೋಡಿದರೆ ಹುಡುಗಿ ಈ ಭಾನಗಡಿ ಮಾಡಿಕೊಂಡಿದ್ದಾಳೆ. ಜಾತಿಗೆ ಕೆಟ್ಟ ಹೆಸರು ಬಂದಿದೆ. ದೇವರ ಕಟ್ಟಲೆಯನ್ನು ಮೀರಿ ಮೋಹ ಪಾಪಕ್ಕೆ ಗುರಿಯಾಗಿದ್ದಾಳೆ. ಧರ್ಮ ದೇವರ ಹೆಸರಿಗೆ ಅಂಟಿರುವ ಈ ಕಳಂಕವನ್ನು ತಾನು ದೂರ ಮಾಡಬೇಕಲ್ಲವೇ? +ಸಿಮೋನ ಗುರ್ಕಾರನಾಗಿ ಮಾಡಬೇಕಾದ ಕೆಲಸಕ್ಕೆ ಕೈ ಹಾಕಿದ. ಸೂಲಗಿತ್ತಿ ಕತ್ರೀನ ವಿಷಯ ನಿಜ ಎಂದಳು. ಏನಾದರೂ ಔಷಧಿ ಕೊಡಿ ಎಂದು ತಾಯಿ ಮಗಳು ಬಂದಿದ್ದರು. ತಾನು- +“ನಾನು ಅದೊಂದು ಕೆಲಸ ಮಾಡುವುದಿಲ್ಲ..ಭ್ರೂಣ ಹತ್ಯೆ ಪಾಪ..ನೀವು ವ್ಯಭಿಚಾರ ಮಾಡಿ ದೇವರ ಕಟ್ಟಲೆ ಮುರಿದಿದ್ದೀರಿ..ನಾನು ದೇವ ವಾಕ್ಯ ಮುರಿಯಲಾರೆ..” ಏಂದು ಬೈದು ಕಳಿಸಿದೆ ಎಂದು ತಾಯಿ ಮಗಳು ತನ್ನಲ್ಲಿಗೆ ಬಂದುದನ್ನು ವೈಜಿಣ ಕತ್ರೀನ ವಿವರವಾಗಿಯೇ ನುಡಿದಳು. +ಹೆರಿಗೆಗೆಂದು ಜನ ಅವಳನ್ನು ಕರೆದೊಯ್ಯುವುದು ಸಹಜವಾಗಿತ್ತು. ಬಾಣಂತಿಯರು, ಗರ್ಭಿಣಿಯರು ಕೆಲ ಸಮಸ್ಯೆಗಳಿಗೆ ನಿವಾರಣೆ ಹುಡುಕಿಕೊಂಡೂ ಅವಳಲ್ಲಿ ಬರುವುದಿತ್ತು. ಅಪರೂಪಕ್ಕೊಮ್ಮೆ ಕಳ್ಳ ಬಸಿರು ಹೊತ್ತವರೂ ಅವಳ ಬಳಿ ಬರುತ್ತಿದ್ದರು. ಆದರೆ ಹೀಗೆ ಬಂದವರ ಮುಖಕ್ಕೆ ಮಂಗಳಾರತಿ ಎತ್ತಿ ಓಡಿಸುತ್ತಿದ್ದಳು ಕತ್ರೀನ. +ವ್ಯಭಿಚಾರ ಮೊದಲ ಪಾಪ. ಎರಡನೆಯ ಮಹಾಪಾಪವೆಂದರೆ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲುವುದು. ಈ ಕೆಲಸ ನಾನು ಮಾಡುವುದಿಲ್ಲ. ಅನ್ನುತ್ತಿದ್ದಳು ಕತ್ರೀನಾ. ಅವಳು ಯಾವುದೇ ಪರಿಸ್ಥಿತಿಯಲ್ಲಿ ಈ ಕೆಲಸ ಮಾಡುತ್ತಲಿರಲಿಲ್ಲ. +“ಸಾಂತಾ ಮೋರಿ ಹಾಗೂ ನಾತೇಲ ಅವಳ ಬಳಿ ಬಂದದ್ದೂ ನಿಜ. ಅವಳು ಅವರನ್ನು ಬರಿಗೈಯಲ್ಲಿ ತಿರುಗಿ ಕಳುಹಿಸಿದ್ದೂ ನಿಜವೆ. ಇದಕ್ಕಿಂತ ಬಲವಾದ ಸಾಕ್ಷಿ ಇನ್ನೇನು ಬೇಕು?” +ಸಿಮೋನ ವಿಷಯವನ್ನು ಪಾದರಿಗಳಿಗೆ ತಿಳಿಸಿ ಹೇಳಿದ. ಗುರ್ಕಾರನಾಗಿ ತನ್ನನ್ನು ಹೆಸರಿಸಲಾದ ದಿನಗಳಲ್ಲಿ ಪ್ರಾರಂಭದಲ್ಲಿಯೇ ಈ ಬಗೆಯ ಘಟನೆ ನಡೆದು ಅದನ್ನು ತನಿಖೆ ಮಾಡಿ ಪಾದರಿಗಳ ಗಮನಕ್ಕೆ ಅದನ್ನು ತಂದ ಬಗ್ಗೆ ಒಂದು ಬಗೆಯ ಹೆಮ್ಮೆಯೂ ಅವನಿಗೆ ಆಯಿತು. ಯಾವುದೇ ಸಮಾಜದಲ್ಲಿ ಇಂತಹ ಅನೈತಿಕ ಕಾರ್ಯಗಳು ನಡೆಯಬಾರದು. ಒಂದು ವೇಳೆ ನಡೆದರೆ ಈ ಕಾರ್ಯಗಳ ವಿರುದ್ಧ ಕ್ರಮ ಕೈಕೊಳ್ಳಬೇಕು. ಇದಕ್ಕೆ ಕಾರಣರಾದವರನ್ನು ದಂಡಿಸಬೇಕು. ಮತ್ತೊಬ್ಬರು ಇಂತಹ ಕೆಲಸ ಮಾಡದ ಹಾಗೆ ನೋಡಿಕೊಳ್ಳಬೇಕು. ಗುರ್ಕಾರನ ಹೊಣೆಗಾರಿಕೆ, ಜವಾಬ್ದಾರಿ ಇರುವುದೇ ಇಂತಲ್ಲಿ. ಆ ಜವಾಬ್ದಾರಿಯನ್ನು ತಾನು ಸರಿಯಾಗಿ ನೆರವೇರಿಸುತ್ತಿದ್ದೇನೆ ಅಲ್ಲವೆ? +ಸಿಮೋನ ಪಾದರಿಗಳ ಅಭಿಪ್ರಾಯಕ್ಕಾಗಿ ಅವರ ಮುಖ ನೋಡಿದ. ಪಾದರಿ ಗೋನಸ್ವಾಲಿಸ್ ತುಂಬಾ ಚಿಂತಿತರಾದರು. ಛಿ! ನಮ್ಮ ಸಮಾಜದಲ್ಲಿಯೂ ಹೀಗೆ ಆಯಿತೇ ಎಂದು ನೊಂದುಕೊಂಡರು. ಆಡಂ ಈವರನ್ನು ಸೈತಾನ ಮಹಾಪಾಪಕ್ಕೆ ಎಳೆಯುವುದರ ಮೂಲಕ ಈ ಪಾಪದ ಬೀಜವನ್ನು ಲೋಕದಲ್ಲಿ ಬಿತ್ತಿದ. ದೇವರು ಈ ಪಾಪದಿಂದ ದೂರವಿರಬೇಕೆಂದೇ ದೇವರು ಮೊಸೆಸ್ ನಿಗೆ ನೀಡಿದ ಹತ್ತು ಕಟ್ಟಲೆಗಳಲ್ಲಿ ಆರನೆಯ ಕಟ್ಟಲೆಯ ಮೂಲಕ ’ಮೋಹ ಪಾಪ ಮಾಡಬೇಡ’ ಎಂಬ ಮಾತನ್ನು ಹೇಳಿದ. ಕ್ರೀಸ್ತುವರಾದವರು ಪರಿಶುದ್ಧರಾಗಿ ಬದುಕಬೇಕು ಎಂಬುದು ಕ್ರಿಸ್ತ ಪ್ರಭುವಿನ ಆಸೆ ಕೂಡ ಆಗಿತ್ತು. ಬೈಬಲಿನ ಪ್ರಕಾರ ದೇವರ ಚಿತ್ತವೇನೆಂದರೆ ನೀವು ಶುದ್ಧವಾಗಿರಬೇಕು ಎಂಬುದೇ. ದೇವರನ್ನು ಅರಿಯದ ಅನ್ಯ ಜನಗಳಂತೆ ಕಾಮಾಭಿಲಾಷೆಗೆ ಒಳಪಡದೇ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧವಾದ ಮನಸ್ಸಿನಿಂದಲೂ, ಘನತೆಯಿಂದಲೂ ತನ್ನ ಶರೀರವನ್ನು ಸ್ವಾಧಿನದಲ್ಲಿರಿಸಿಕೊಳ್ಳಲು ಅರಿತಿರಬೇಕು. ದೇವರು ನಮ್ಮನ್ನು ಶುದ್ಧವಾಗಿರುವುದಕ್ಕೆ ಕರೆದಿದ್ದಾನೆ. ಹೀಗಿರುವಾಗ ಸಾಂತಾಮೋರಿಯ ಮಗಳು ನಾತೇಲ ಇದೇನು ಕಾರ್ಯ ಮಾಡಿಕೊಂಡಳು? +ತಾವು ಈ ಊರಿಗೆ ಕೇವಲ ಇಗರ್ಜಿ ಕಟ್ಟಿಸಲು ಬರಲಿಲ್ಲ. ಜನರಿಗೆ ಜಪ ಪ್ರಾರ್ಥನೆ ಹೇಳಿ ಕೊಡಲು ಬರಲಿಲ್ಲ. ಅವರಲ್ಲಿ ನೈತಿಕತೆಯನ್ನು ಇಂದ್ರಿಯ ನಿಗ್ರಹವನ್ನು ಪ್ರೇರೇಪಿಸಲು ಬಂದೆನು. ಆದರ್ಶ ದಾಂಪತ್ಯದ ಮೂಲಕ ನೀತಿಯುತ ಪ್ರಜೆಗಳನ್ನು ಅವರು ಲೋಕಕ್ಕೆ ತರುವಂತೆ ನೋಡಿಕೊಳ್ಳುವುದು ಕೂಡ ತನ್ನ ಕರ್ತವ್ಯ. ಆದರೆ ಇಂತಹ ಅನೀತಿಯುತ ಕಾರ್ಯಗಳನ್ನು ತಾನು ಖಂಡಿಸಬೇಕು ದಂಡಿಸಬೇಕು. +“ಪದ್ರಾಬ..ಏನು ಮಾಡೋಣ?” +“ಜೂಂತ ಇಟ್ಟುಕೊಳ್ಳೋಣ..ಧಾಜಣರನ್ನು ಕರೆದುಬಿಡಿ..” ಎಂದರು ಪಾದರಿ. +ವಿಚಾರಣೆಯನ್ನು ಇರಿಸಿಕೊಳ್ಳುವುದು. ಹತ್ತು ಜನರ ತೀರ್ಮಾನಕ್ಕೆ ಇಂತಹ ವಿಷಯಗಳನ್ನು ಬಿಡುವುದು ಬೇರೆ ಕಡೆಗಳಲ್ಲಿ ನಡೆದು ಬಂದಿತ್ತು. ಇಲ್ಲಿಯೂ ಅದೇ ಹಾದಿ ಹಿಡಿಯುವುದು ಎಂದರು ಪಾದರಿ. +* +* +* +ಚಮಾದೋರ ಇಂತ್ರುವಿಗೆ ಮತ್ತೆ ಒಂದು ಕೆಲಸ ಬಂದಿತು. ಆತ ಮನೆ ಮನೆಗೆ ಹೋಗಿ ಈ ಭಾನುವಾರ ಪೂಜೆಯಾದ ನಂತರ ಕೊಪೆಲಿನಲ್ಲಿ ಜೂಂತ ಇದೆ. ಮನೆಗೊಬ್ಬರಂತೆ ಬರಬೇಕು ಎಂದು ಹೇಳಿ ಬಂದ. ಹೋದಲ್ಲಿ ಏನು? ಯಾರು? ಏಕೆ? ಹೇಗೆ ಗೊತ್ತಾಯಿತು ಎಂದು ಅವನನ್ನು ನಿಲ್ಲಿಸಿಕೊಂಡು ಜನ ಕೇಳಿದರು. ಅವರಿಗೆ ಉತ್ತರ ಹೇಳಿ ಸಾಕು ಸಾಕಾಯಿತು ಇವನಿಗೆ. ಆದರೆ ಚಮಾದೋರ ಮನೆಗಳಿಗೆ ಹೋಗುವ ಮುನ್ನವೇ ಊರ ಕ್ರೀಸ್ತುವರ ನಡುವೆ ಈ ವಿಷಯ ಸಾಕಷ್ಟು ಹರಡಿಕೊಂಡಿತ್ತು. ಸಾಂತಾಮೋರಿ ಮಗಳು ಕಳ್ಳತನದಲ್ಲಿ ಬಸುರಾಗಿದ್ದಾಳೆಂಬ ವಿಷಯ ಎಲ್ಲರಿಗೂ ತಿಳಿದಿತ್ತು. ಅದು ಈಗ ಖಚಿತವಾಯಿತು. +ಕೊಪೆಲ ಹೊರಗಿನ ಚಪ್ಪರದಲ್ಲಿ ಅದು ತುಂಬಿ ಹೊರ ಚೆಲ್ಲುವಷ್ಟು ಜನ ಸೇರಿದ್ದರು. ಜನರಿಗೆ ನಿಲ್ಲಲು, ಕುಳಿತುಕೊಳ್ಳಲು ಜಾಗವಿಲ್ಲದ್ದರಿಂದ ಹೊಸದಾಗಿ ಕಟ್ಟುತ್ತಿರುವ ಇಗರ್ಜಿ ಕಟ್ಟಡದ ಜಗಲಿ, ಬಾಗಿಲಲ್ಲಿಯೂ ಜನ ನಿಂತರು. +ಪೂಜೆ ಮುಗಿಯುತ್ತದೆನ್ನುವಾಗ ಸಾಂತಾಮೋರಿ ಸೆರಗಿನಲ್ಲಿ ಮುಖ ಮುಚ್ಚಿಕೊಂಡು , ಇಡಿ ಮೈಯನ್ನು ಸೀರೆಯಲ್ಲಿ ಹುದುಗಿಸಿಕೊಂಡು, ಕಣ್ಣುಗಳನ್ನು ನೆಲಕ್ಕೆ ನಾಟಿ ಬಂದಳು. ಅವಳ ಹಿಂದೆಯೇ ನಾತೇಲ ಅಂಜಿಕೆ ನಾಚಿಕೆ ತೋರಿಸಿಕೊಳ್ಳದೆ ನಡೆದು ಬಂದಳು. +ಸಾಂತಾಮೋರಿ ನೆಲಕ್ಕೆ ಕುಸಿದುಹೋಗಿದ್ದಳು. ಇತ್ತೀಚಿನ ವರ್ಷಗಳಲ್ಲಿ ಅವಳ ಬದುಕಿಗೊಂದು ಭರವಸೆ ದೊರಕಿತ್ತು. ಸ್ವಂತ ಮನೆ ಕಟ್ಟಿಕೊಂಡಳು. ಮಗಳಿಗೆ ಬಂಗಾರ ಮಾಡಿಸಿದಳು. ಇಪ್ಪತೈದರ ವಯಸ್ಸಿಗೆ ಬಂದ ಮಗಳಿಗೆ ವರ ಹುಡುಕುತ್ತಲೇ ಇದ್ದಳು. ನಾತೇಲ ಅವನು ಬೇಡ ಇವನು ಬೇಡ ಅನ್ನುತ್ತಲೇ ಹೀಗೆ ಮಾಡಿಕೊಂಡಳು. +ಶಿವಸಾಗರಕ್ಕೆ ಬಂದ ಪ್ರಾರಂಭದ ಕೆಲ ವರ್ಷಗಳವರೆಗೆ ಪಾಸ್ಕೋಲ ಮೇಸ್ತ್ರಿ ತನ್ನ ಬೆಂಗಾವಲಿಗೆ ನಿಂತಿದ್ದ. ಅವನ ಸ್ನೆಹವೂ ತನಗಿತ್ತು. ಆದರೆ ಇದು ತಪ್ಪು ಎನಿಸಿತು. ದೇವರ ಕಟ್ಟಲೆಗೆ ವಿರೋಧ ಹೋಗಬಾರದು ಎಂದುಕೊಂಡೆ. ಹಬ್ಬಕ್ಕೆಂದು ಊರಿಗೆ ಹೋಗಿ ಪಾದರಿಯ ಬಳಿ ಪಾಪ ನಿವೇದನೆ ಮಾಡಿಕೊಳ್ಳುವಾಗ ದೇವರು ನೀಡಿದ ಆರನೆ ಕಟ್ಟಲೆಯನ್ನು ತಾನು ಮುರಿದುದನ್ನು ಹೇಳಿದೆ. +“ಅದಕ್ಕಾಗಿ ಪಶ್ಚಾತ್ತಾಪ ಪಡು ಮತ್ತೆ ಹೀಗೆ ಮಾಡಬೇಡ. ನಾವು ದೇವರ ಇಚ್ಛೆಯಂತೆ ನಡೆಯ ಬೇಕಲ್ಲದೇ ಸೈತಾನನ ಇಚ್ಛೆಯಂತೆ ನಡೆಯಬಾರದು. ಕ್ರೀಸ್ತುವರಿಗೆ ಒಂದು ರೀತಿ ನೀತಿ ಧರ್ಮವಿದೆ. ಅದು ಮೀರಿದ ದಿನ ನಾವು ಕ್ರೀಸ್ತುವರಾಗಿರುವುದಿಲ್ಲ..” ಎಂದರು ಅವರು. ನಿತ್ಯ ಒಂದು ಪರಲೋಕ ಮಂತ್ರ ಮೂರು ನಮೋ ರಾಣೆ ಮಂತ್ರ ಹೇಳಲು ತಿಳಿಸಿದರು. +ಪಾಸ್ಕೋಲ ಮೇಸ್ತ್ರಿ ತನ್ನ ಹೆಂಡತಿಯನ್ನು ಕರೆ ತಂದು ಬೇರೆ ಮನೆ ಮಾಡಿದ. ತಾನು ಮತ್ತೆ ಬೇರೆ ಗಂಡಸರತ್ತ ಕಣ್ಣು ಹಾಕಲಿಲ್ಲ. +ಆದರೆ ತನ್ನ ಮಗಳು ನಾತೇಲ ಇದೇನು ಮಾಡಿಕೊಂಡಳು. ತನ್ನ ಮುಖಕ್ಕೆ ಮಸಿ ಬಳಿದು ಬಿಟ್ಟಳಲ್ಲ. +ಸಾಂತಾಮೋರಿ ಜೂಂತ ಪ್ರಾರಂಭವಾಗುವುದನ್ನು ನಿರೀಕ್ಷಿಸುತ್ತ ಕುಳಿತಳು. +ಪಾದರಿ ನೆರವಾಗಿ ನಾತೇಲಗೇನೆ ಕೇಳಿದರು. ನಿನ್ನ ಮೇಲೆ ಬಂದಿರುವ ಆಪಾದನೆ ನಿಜವೇ ಎಂದು ಪ್ರಶ್ನಿಸಿದರು. +“ಹೌದು ಪದ್ರಾಬಾ..” ಎಂದಳು ಹುಡುಗಿ ತುಸು ಕೂಡ ಅಳುಕಿಲ್ಲದೆ. +“ಇದು ದೇವದ್ರೋಹ. ಧರ್ಮದ್ರೋಹ ಗೊತ್ತೆ?” +ಅವಳು ಉತ್ತರಿಸಲಿಲ್ಲ. +“ಇದಕ್ಕೆ ಶಿಕ್ಷೆ ಏನು ಗೊತ್ತೆ?” +ಆಗಲೂ ಉತ್ತರವಿಲ್ಲ. +“ಇದಕ್ಕೆ ಕಾರಣ ಯಾರು? ನಮ್ಮ ಜನರೆ? ಹೊರಗಿನವರೆ? ಆತನಿಗೂ ನಿನಗೂ ಸ್ನೇಹ ಪರಿಚಯ ಉಂಟೆ? ಮದುವೆಯಾಗಲೂ ಒಪ್ಪಿಕೊಂಡಿರುವಿರಾ?” +ಈ ಪ್ರಶ್ನೆಗೂ ಉತ್ತರವಿಲ್ಲ. +ಚಪ್ಪರಕ್ಕೆ ಹೊದಿಸಿದ ಬಗನಿ ಸೊಪ್ಪಿನ ಹಸಿರು ಎಲೆಯ ಮೇಲೆ ಕಣ್ಣಾಡಿಸುತ್ತ ಕುಳಿತಿದ್ದಳು ಅವಳು. +” ಅವಳು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ” ಎಂದ ಬಾಲ್ತಿದಾರ. +“….ನಿಯಮದ ಪ್ರಕಾರ ಏನು ಮಾಡಬೇಕೋ ಮಾಡಿ..” +ಕೈತಾನ ಬಾಯಲ್ಲಿ ತುಂಬಿಕೊಂಡ ತಾಂಬುಲಕ್ಕೆ ತುತಿಯ ತಡೆಯೊಡ್ಡಿ ನುಡಿದ. +“ನಿಯಮ ಗಿಯಮ ಏನಿಲ್ಲ ಜಾತಿ ಕಟ್ ಮಾಡಿ” ಎಂದ ಇನಾಸ. +” ಬೇಡ..ಹಾಗೊಂದು ಮಾಡಬೇಡಿ” ಎಂದು ಗೋಳಾಡಿದಳು ಸಾಂತಾಮೋರಿ. +” ಅವಳಿಗೆ ಮೂರು ದಿನ ಕಾಲಾವಕಾಶ ಕೊಡಿ. ಅವನು ಯಾರು ಅನ್ನೋದನ್ನ ಅವಳು ಇಲ್ಲಿ ಹೇಳೋದು ಬೇಡ…ಪಾದರಿಗಳಿಗೆ..ಗುರ್ಕಾರಗೆ ಹೇಳಲಿ..ಅವನು ನಮ್ಮವನೇ ಆಗಿದ್ರೆ ಮದುವೆ ಮಾಡೋಣ..ಬೇರೆಯವನಾಗಿದ್ರೆ ನಮ್ಮಲ್ಲಿಗೆ ಸೇರಿಸಿಕೊಂಡು ಮದುವೆ ಮಾಡೋಣ..” +ಪಾಸ್ಕೋಲ ತುಸು ಕನವರಿಸಿಯೇ ನುಡಿದು ಎಲ್ಲರ ಮುಖ ನೋಡಿದ. +ಸಿಮೊನನಿಗೆ ಇದನ್ನು ಮುಂದುವರೆಸಿಕೊಂಡು ಹೋಗುವುದು ಬೇಕಿರಲಿಲ್ಲ. ಹುಡುಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆತ ಯಾರು ಎತ್ತ ಎಂಬುದನ್ನು ಅವಳು ಹೇಳಲು ಒಪ್ಪುತ್ತಿಲ್ಲ. ಈಗಿರುವ ಒಂದೇ ದಾರಿ ಎಂದರೆ ಅವಳ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡುವುದು. ಆ ಶಿಕ್ಷೆ ಎಂದರೆ ಸುತಾರಿ ಇನಾಸ ಹೇಳಿದ ಹಾಗೆ ಜಾತಿ ಕಟ್. ಘಟ್ಟದ ಕೆಳಗಿನ ಊರುಗಳಲ್ಲಿ ಈ ಶಿಕ್ಷೆ ಚಾಲ್ತಿಯಲ್ಲಿದೆ. ದೇವರ ಆರನೇ ಕಟ್ಟಲೆಯನ್ನು ಮೀರಿದವರನ್ನು ಜಾತಿಯಿಂದ ಹೊರ ಹಾಕಲಾಗುತ್ತದೆ. ಅಂಥವರ ಮನೆಗಳಿಗೆ ಯಾರೂ ಹೋಗುವುದಿಲ್ಲ. ಅವರನ್ನು ಯಾರೂ ತಮ್ಮ ಮನೆಗಳಿಗೆ ಸೇರಿಸುವುದಿಲ್ಲ. ಅವರಿಗೆ ಊರಿನಲ್ಲಿ ನೀರು ಸಿಗುವುದಿಲ್ಲ. ಅವರ ಮನೆಯಿಂದ ಯಾರೂ ನೀರು ತರುವುದಿಲ್ಲ. ಕೊಡುವುದು ತರುವುದು ಮಾತುಕತೆ ಸಂಭಂಧ ಯಾವುದೂ ಇಲ್ಲ. ಹೀಗೆ ಜಾತಿ ಕಟ್ ಗೆ ಒಳಗಾದವರು ಊರಿನಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ. ಅವರ ಅವಸ್ಥೆ ಕಂಡು ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ. +ಇಲ್ಲೂ ಹಾಗೆಯೇ ಆಗಬೇಕು. ಸಾಂತಾಮೋರಿಯ ಮಗಳನ್ನು ಜಾತಿಯಿಂದ ಹೊರ ಹಾಕಬೇಕು. ಈ ಬಗ್ಗೆ ಮತ್ತೆ ಯಾವುದೇ ರೀತಿಯ ವಿಳಂಬ ಆಗಬಾರದು. ಆದರೆ ಈ ಪಾಸ್ಕೊಲ ಏನೋ ನೆಪ ಮುಂದೆ ಮಾಡಿದ್ದಾನೆ. ಉಳಿದವರು ಕೂಡ ಇದನ್ನು ಒಪ್ಪಿಕೊಳ್ಳುವಂತೆ ಕಾಣುತ್ತಿದೆ. +“ಬೇಕಿಲ್ಲ” ಎಂದ ಗುರ್ಕಾರ ಸಿಮೋನ. +ಪಾದರಿ ಗೋನಸ್ವಾಲಿಸ್ ಸಿಮೋನನತ್ತ ತಿರುಗಿ- +“ಇರಲಿ..ಪಾಸ್ಕೋಲ ಹೇಳಿದ ಹಾಗೆ ನಾವು ಮೂರು ದಿನ ಕೊಡೋಣ..” ಎಂದರು. +ಅಲ್ಲಿಗೆ ಜೂಂತ್ ಮುಗಿಯಿತು. +ತುಸು ಅವಮಾನಿತನಾಗಿಯೇ ಸಿಮೋನ ಎದ್ದ. ಜನರೆಲ್ಲ ಚದುರಿ ಹೋದರು. +ಮೂರು ದಿನಗಳ ನಂತರ ಕತೆಯೇ ಬೆರೆಯಾಗಿತ್ತು. ಏಕೆಂದರೆ ನಾತೇಲ ಮನೆಯಲ್ಲಿ ಯಾರಿಗೂ ಹೇಳದೆ ಮಾಯವಾಗಿದ್ದಳು. +“ನಾವು ತಪ್ಪು ಮಾಡಿದ್ವಿ ಪದ್ರಾಬಾ..ಆವತ್ತೇ ನಾವು ಅವಳಿಗೆ ಶಿಕ್ಷೆ ವಿಧಿಸಬೇಕಿತ್ತು” ಎಂದು ಸಿಮೋನ ಅನಂತರ ಪಾದರಿ ಗೋನಸ್ವಾಲಿಸರ ಮುಂದೆ ಹೇಳಿಕೊಂಡ. +-೮- +ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಯ ಕಾಮಗಾರಿ ಮುಗಿಯಲು ಎರಡು ವರ್ಷಗಳೇ ಬೇಕಾದವು. ಮೊದಲ ವರ್ಷ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಹಂಚು ಹೊದೆಸಿ ಒಳಗಿನ ಕೆಲಸವನ್ನು ಮುಂದುವರೆಸಲಾಯಿತು. ಕಂಬ, ದೇವರ ಪೀಠ, ಪುಲಪತ್ರಿ, ದಿವ್ಯಪ್ರಸಾದ ಸ್ವೀಕರಿಸುವ ವೇದಿಕೆ. ಬಾಗಿಲಲ್ಲಿ ಪವಿತ್ರ ತೀರ್ಥ ತುಂಬಿರಿಸುವ ಕರಂಡಕಗಳು ಎಂದು ಸಣ್ಣ ಪುಟ್ಟ ಗಾರೆಯ ಕೆಲಸ ಮಾಡಲು ಮತ್ತೊಂದು ವರ್ಷ ಬೇಕಾಯಿತು. ಕಾಮಗಾರಿಗೆ ಯಾವುದೇ ತೊಂದರೆಯಾಗಲಿಲ್ಲ. ಹಣದ ಕೊರತೆಯಾಗಲಿಲ್ಲ. ಇಗರ್ಜಿಯ ಜೊತೆಗೇನೆ ಗಂಟೆ ಗೋಪುರ ಕೂಡ ಎದ್ದಿತು. ಇದೇ ಸಂದರ್ಭದಲ್ಲಿ ಹಳೆಯದಾದ ಕೊಪೆಲನ್ನು ದುರಸ್ತಿಪಡಿಸಿ, ಕಿಟಕಿ ಬಾಗಿಲು ಬದಲಾಯಿಸಿ ಪಾದರಿಗಳಿಗೆ ಉಳಿಯಲು ಒಂದು ವಸತಿಗೃಹವನ್ನು ರೂಪಿಸಲಾಯಿತು. ಬಟ್ಲರ ಬೋನನಿಗಾಗಿ ಒಂದು ಅಡಿಗೆ ಮನೆಯನ್ನು ಕೂಡ ಪಾದರಿ ಬಂಗಲೆಯ ಹಿಂದೆಯೇ ಕಟ್ಟಲಾಯಿತು. +ಇಲ್ಲಿ ಇಷ್ಟೂ ಕೆಲಸ ನಡೆದಿರುವಾಗ ಊರಜನ ಬಂದು ಅಚ್ಚರಿಯಿಂದ ನೋಡಿದರು. ಊರಿನಲ್ಲಿರುವ ಇಪ್ಪತ್ತು ಮೂವತ್ತು ಕ್ರೈಸ್ತ ಕುಟುಂಬಗಳು ಏನೆಲ್ಲ ಕಟ್ಟುತ್ತಾರೆ. ಏನೆಲ್ಲ ಮಾಡುತ್ತಾರೆ ಎಂದು ಅಚ್ಚರಿಪಟ್ಟರು. +ಫ಼ಿರ್ಜಂತ ಪಾಸ್ಕೋಲನ ಸಮ್ಮುಖದಲ್ಲಿ ಒಂದು ವರ್ಷದ ಹಬ್ಬ, ಸಣ್ಣ ಪ್ರಮಾಣದಲ್ಲಿ ನಡೆದು ಹೋಯಿತು. ಹೊಸ ಇಗರ್ಜಿಯಲ್ಲಿ ಮೊದಲ ಹಬ್ಬ ಆಗುವವರೆಗೆ ಅವನೇ ಫ಼ಿರ್ಜಂತ ಆಗಿ ಮುಂದುವರೆಯಬೇಕೆಂದು ಜನ ಪಾದರಿ ಅಭಿಪ್ರಾಯ ಪಟ್ಟಿದ್ದರಿಂದ ಇನ್ನೋರ್ವ ಫ಼ಿರ್ಜಂತನನ್ನು ಆಯ್ಕೆ ಮಾಡುವ ಸಂದರ್ಭ ಬರಲಿಲ್ಲ. ಹೀಗಾಗಿ ಪಾಸ್ಕೋಲ ಇಗರ್ಜಿ ಕೆಲಸ ಮುಗಿಯುವುದನ್ನೇ ಕಾಯುತ್ತಿದ್ದ. +ಮೇ ತಿಂಗಳಲ್ಲಿ ಹಬ್ಬ ಎಂದರೆ ಏಪ್ರಿಲ್ ಗೇನೆ ಹೊಸ ಇಗರ್ಜಿಯ ಕೆಲಸ ಮುಗಿಯಿತು. ಸಂತ ಜೋಸೆಫ಼ರ ಹಳೆಯ ಇಮಾಜ ಸಣ್ಣದಾದುದರಿಂದ ಹೊಸದನ್ನು ತರಿಸಲು ಪಾದರಿ ಗೋನಸ್ವಾಲಿಸ್ ವ್ಯವಸ್ಥೆ ಮಾಡಿದರು. ಈ ಇಮಾಜಿನ ಜೊತೆ ಜೊತೆಗೇನೆ ಆಳೆತ್ತರದ ಒಂದು ಶಿಲುಬೆ, ಸಂತ ಅಂತೋನಿ, ಸಂತ ತೆರೇಜ, ಸಂತ ಫ಼ಾತಿಮಾ, ಸಂತ ಸಬಸ್ತಿಯಾನ, ಮಾತೆ ಮೆರಿ ಹೀಗೆ ಇನ್ನೂ ಕೆಲವು ವಿಗ್ರಹಗಳನ್ನು ಕೂಡ ತರಿಸಲು ಪಾದರಿ ಮುಂದಾದರು. ಈ ಎಲ್ಲ ವಿಗ್ರಹಗಳನ್ನು ಇಗರ್ಜಿಯಲ್ಲಿ ಇರಿಸಲು ಸಣ್ಣ ಸಣ್ಣ ಪೀಠಗಳನ್ನು ನಿರ್ಮಿಸಲಾಗಿತ್ತು. ಈ ಎಲ್ಲ ವಿಗ್ರಹಗಳನ್ನು ಏಸು ಪ್ರಭು ಶಿಲುಬೆ ಹೊತ್ತು ನಡೆದಾಗಿನ ಹದಿನಾಲ್ಕು ಘಟ್ಟಗಳನ್ನು ಪ್ರತಿಬಿಂಬಿಸುವ ಹದಿನಾಲ್ಕು ಪೈನೆಲಗಳನ್ನು ಉಚಿತವಾಗಿ ನೀಡಲು ಗೋವಾದ ಒಂದು ಸಂಸ್ಥೆಯು ಮುಂದೆ ಬಂದಿತ್ತು. ಗೋವಾದಿಂದ ಕಾರವಾರದವರೆಗೆ , ಅಲ್ಲಿಂದ ಗಾಡಿಯಲ್ಲಿ ವಿಗ್ರಹಗಳಿರುವ ಪೆಟ್ಟಿಗೆಗಳು ಆಗಲೇ ಹೊರಟು ಬಿಟ್ಟಿದ್ದವು. +ಇನ್ನು ಇಗರ್ಜಿಗೆ ಬೇಕಾದ ಹೂವಿನ ವಾಸುಗಳು, ಮೇಣದ ಬತ್ತಿ ಸ್ಟ್ಯಾಂಡುಗಳು, ಪೂಜಾ ಸಲಕರಣೆ, ಪಾದರಿಯ ಉಡುಗೆ ತೊಡುಗೆ, ಪೀಠದ ಮೇಲೆ ಹಾಸುವ ವಸ್ತ್ರ, ದಿವ್ಯ ಪ್ರಸಾದ ಇರುವ ಪೆಟ್ಟಿಗೆ, ಪಾದರಿಗಳಿಗೆ ಕುಳಿತುಕೊಳ್ಳಲು ಕುರ್ಚಿ, ಪಾಪ ನಿವೇದನೆ ಸಂದರ್ಭದಲ್ಲಿ ಕುಳಿತುಕೊಳ್ಳಲು-ಪಾಪ ನಿವೇದನೆ ಮಾಡಿಕೊಳ್ಳುವವರಿಗೂ ಪಾದರಿಗೂ ನಡುವೆ ತೆಳು ಪರದೇ ಇರುವಂತಹ ವಿಶೇಷ ಆಸನ, ಧೂಪದ ತೀರ್ಥದ ಬಟ್ಟಲು, ಹೀಗೆ ಸಮಸ್ತವೂ ಹೊಸದಾಗಿ ಬಂತು. +ಇದೇ ಸಂದರ್ಭದಲ್ಲಿ ಪೋರ್ಚುಗಾಲಿನಿಂದ ಪಾದರಿ ಗೋನಸ್ವಾಲಿಸ್ ರ ಕುಟುಂಬದವರು, ಅವರ ದೇವ ಪಿತ, ದೇವ ಮಾತೆಯವರು ಇಲ್ಲಿ ಕಟ್ಟಲಾಗುತ್ತಿರುವ ಹೊಸ ಇಗರ್ಜಿಯ ವಿಷಯ ತಿಳಿದು ಹಣ ಸಹಾಯ ಮಾಡಲು ಮುಂದಾದದ್ದು ಗೋನಸ್ವಾಲಿಸರಿಗೆ ಮತ್ತೂ ಹುರುಪು ತಂದಿತು. ಸೂಜಿ ಎತ್ತಿದ ಹಾಗೆ ಎಲ್ಲ ಕೆಲಸಗಳೂ ಆಗುತ್ತಿರುವುದನ್ನು ಕಂಡು ಅವರು ಸಂತಸಪಟ್ಟರು. ತಮ್ಮ ನಿತ್ಯದ ಪ್ರಾರ್ಥನೆಯಲ್ಲಿ ಅವರು ದೇವರಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಿದರು. +ಊರಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಶಿವಮೊಗ್ಗದವರೆಗೆ ಬರುತ್ತಿದ್ದ ರೈಲು ಅಲ್ಲಿಂದ ಮುಂದುವರೆದು ಶಿವಸಾಗರಕ್ಕೂ ಬರತೊಡಗಿತು. ಚಾರ್ಕೋಲ ಬಸ್ಸುಗಳು ಹಿಂಬದಿಯಲ್ಲಿ ಒಂದೊಂದು ಪೀಪಾಯಿ ಕಟ್ಟಿಕೊಂಡು ಕೆಂಡ ಬೀಳಿಸುತ್ತ ತಿರುಗತೊಡಗಿದವು. ಜನರಲ್ಲಿಯ ಗ್ರಾಮೀಣತನ ಮಾಯವಾಗಿ ಆಧುನಿಕತೆ ಎಲ್ಲೆಲ್ಲೂ ತನ್ನ ಬಲೆ ಬೀಸುತ್ತಿರುವುದು ನಿಚ್ಚಳವಾಗಿ ಕಂಡಿತು. ಈ ಮಾತಿಗೆ ಶಿವಸಾಗರದ ಕ್ರೀಸ್ತುವರು ಕೂಡ ಹೊರತಾಗಿರಲಿಲ್ಲ. ಅದೇ ಎದ್ದು ನಿಲ್ಲತೊಡಗಿದ ಇಗರ್ಜಿ ಇದಕ್ಕೆ ಸಂಕೇತವಾಯಿತು. +* +* +* +ಆಗಲೇ ಇಗರ್ಜಿ ಹಬ್ಬ ಬಂದಿತು. ನಾಳೆ ಹಬ್ಬವೆಂದರೆ ಇಂದು ಬೇಸ್ಪುರ. ಇಗರ್ಜಿ ಮುಂದೆ ಒಂದು ಕಂಬ ನೆಟ್ಟು ಅದರ ಮೇಲೆ ಧ್ವಜವನ್ನು ಹಾರಿಸಿ ಹಬ್ಬದ ಆರಂಭವನ್ನು ಸಾರಲಾಯಿತು. ಹೊಸ ಇಗರ್ಜಿಯ ಮುಂದೆ ಚಪ್ಪರ, ತೋರಣ, ಒಳಗೆಲ್ಲ ಬಟ್ಟೆಯ ಬಂಟಿಂಗ್ಸಗಳು ಬಣ್ಣದ ಕಾಗದದ ಪಟ್ಟಿಗಳು, ಬಾವುಟಗಳು. ಇಗರ್ಜಿ ಹೊಸದು ಅನ್ನುವುದೇ ಒಂದು ಹೆಗ್ಗಳಿಕೆ. ಊರಿನಲ್ಲಿ ಅಷ್ಟು ಎತ್ತರದ ಅಷ್ಟು ದೊಡ್ಡದಾದ ಮತ್ತೊಂದು ಕಟ್ಟಡವಿರಲಿಲ್ಲ. ರೈಲು ನಿಲ್ದಾಣದ ಬಳಿ ನಿಂತರೆ ಇದರ ಗೋಪುರ ಕಾಣುತ್ತದೆ. ಊರ ಹೊರಗಿನ ಸೇತುವೆಯ ಬಳಿ ನಿಂತರೆ ಗೋಪುರದ ಮೇಲಿನ ಶಿಲುಬೆ ಕಾಣುತ್ತದೆ ಎಂದು ಜನ ಹೆಮ್ಮೆ ಪಟ್ಟುಕೊಂಡರು. ಸುತ್ತ ಬೆಳೆದ ಮರ ಗಿಡಗಳ ನಡುವೆ ಇಗರ್ಜಿ ಭವ್ಯವಾಗಿ ದಿವ್ಯವಾಗಿ ಕಂಡಿತು. ಇದರ ಗಂಟೆಯಂತೂ ಸುತ್ತಮುತ್ತಲಿನ ನಾಲ್ಕು ಐದು ಮೈಲಿಗಳವರೆಗೆ ಕೇಳಿಸುತ್ತಿತ್ತು. ಗಂಟೆ ಗೋಪುರದಲ್ಲಿ ಬಲವಾದ ಮರದ ತೊಲೆಗೆ ತೂಗು ಬಿದ್ದ ಗಂಟೆ ಹಗ್ಗ ಹಿಡಿದು ಎಳೆದಾಗ ಅತ್ತಿತ್ತ ಹೊರಳಾಡುವುದೇ ಒಂದು ಸೋಜಿಗದಂತೆ ಕಂಡಿತು. +ಶಿವಮೊಗ್ಗ, ತೀರ್ಥಹಳ್ಳಿ, ಹೊನ್ನಾವರ, ಕುಮಟಾ, ಸಿದ್ದಾಪುರ ಹೀಗೆ ಹೊರಗಿನಿಂದ ಬಂದ ಐವರು ಪಾದ್ರಿಗಳು, ಊರಿನ ಪಾದರಿ ಗೋನಸ್ವಾಲಿಸ್, ಆರೂಜನ ಮೊದಲು ಇಗರ್ಜಿಯನ್ನು ಮಂತ್ರಿಸಿದರು. ಗೋವಾದಿಂದ ಪ್ರಾವಿನ್ಶಿಯಲ್ ಅವರನ್ನು ಕರೆಸಬೆಕೆಂಬ ಯತ್ನ ಫಲಕಾರಿಯಾಗಲಿಲ್ಲ. ವಯಸಾಗಿದ್ದರಿಂದ ತಕ್ಕ ವ್ಯವಸ್ಥೆ ಇಲ್ಲದ್ದರಿಂದ ಅವರು ಬರಲಿಲ್ಲ. ಆದರೆ ಐವರು ಪಾದರಿಗಳು ಬಂದಿದ್ದಾರೆ ಅನ್ನುವುದೇ ಒಂದು ವಿಶೇಷವೆನಿಸಿತು. +ಫ಼ಿರ್ಜಂತ ಪಾಸ್ಕೋಲನನ್ನು ಗುರ್ಕಾರ ಸಿಮೋನ ಹೋಗಿ ಮೆರವಣಿಗೆಯಲ್ಲಿ ಕರೆತಂದ. ಸಂಗಡ ಕೇರಿಯ ಕೆಲವರಿದ್ದರು. ಹಳದಿ ಮಿಶ್ರಿತ ಕೆಂಪು ರೇಷ್ಮೆಯ ಚೌಕಾಕಾರದ ವಸ್ತ್ರದ ನಾಲ್ಕೂ ತುದಿಗೆ ನಾಲ್ಕು ಕೋಲುಗಳನ್ನು ಸಿಕ್ಕಿಸಿ ಈ ಕೋಲುಗಳನ್ನು ಎತ್ತಿ ಹಿಡಿದು, ಈ ವಸ್ತ್ರದಡಿಯಲ್ಲಿ ಫ಼ಿರ್ಜಂತನನ್ನು ನಡೆಸಿಕೊಂಡು ಬರಲಾಯಿತು. ಫ಼ಿರ್ಜಂತ ಪಾಸ್ಕೋಲ ಕೂಡ ಕಚ್ಚೆ ಪಂಜೆ, ಸರ್ಜ ಕೋಟು ಧರಿಸಿದ್ದ. ಮೇಲೆ ಫ಼ಿರ್ಜಂತುಗಳಿಗೆಂದೇ ಪಾದರಿ ಮಾಡಿಸಿದ್ದ ಕೆಂಪು ರೇಶ್ಮೆಯ ಮೇಲಂಗಿ ತೊಟ್ಟಿದ್ದ. ಕೇರಿಯ ಮೂಲಕ ಬರುವಾಗ ಅವನ ಜರ್ಬು ಬೆರೆಯಾಗಿತ್ತು. ಹೊಸ ಇಗರ್ಜಿಯ ತುಂಬ ಊರಿನವರೇ ಅಲ್ಲದೇ ತೀರ್ಥಹಳ್ಳಿ, ಕುಮಟ, ಹೊನ್ನಾವರದ ಜನಕೂಡ ತುಂಬಿದ್ದರು. ಊರಿಗೆ ರೈಲು ಬಸ್ಸು ಬಂದದ್ದು ಅನುಕೂಲವೇ ಆಗಿತ್ತು. ಇಲ್ಲದಿದ್ದರೆ ಇಷ್ಟು ಜನ ಎಲ್ಲಿ ಬರುತ್ತಿದ್ದರು? +ಶಿಲುಬೆಯಾಕಾರದ ಇಗರ್ಜಿಯಲ್ಲಿ ಮೂರೂ ಕಡೆ ಜನ. ಹೆಂಗಸರು ಮದುವೆ ಸಂದರ್ಭದಲ್ಲಿ ತಂದ ಧಾರೆ ಸೀರೆಗಳನ್ನು ಉಟ್ಟರೆ, ಗಂಡಸರು ಮದುವೆ ಕೋಟುಗಳನ್ನು ತೊಟ್ಟಿದ್ದರು. ಹುಡುಗರು, ಹುಡುಗಿಯರು ಹೊಸ ಬಟ್ಟೆ ಧರಿಸಿದ್ದರು. ಇಗರ್ಜಿಯ ತುಂಬ ದಾಂಬರು ಗುಳಿಗೆಯ ವಾಸನೆ. ಜನರ ಸಂಭ್ರಮ ಸಂತಸ. +ಬಂದ ಪಾದರಿಗಳಲ್ಲಿ ಹಿರಿಯರಾದ ಶಿವಮೊಗ್ಗೆಯ ಪಾದರಿಗಳೇ ಪ್ರಮುಖವಾಗಿ ಪೂಜೆ ಅರ್ಪಿಸಿದರು. ಉಳಿದ ಪಾದರಿಗಳು ಅವರಿಗೆ ನೆರವು ನೀಡಿದರು. ಪೂಜೆಯ ನಡುವೆ ದಿವ್ಯಪ್ರಸಾದ ಹಂಚುವುದೇ ಒಂದು ದೀರ್ಘ ಕೆಲಸವಾಯಿತು. ಬಂದವರೆಲ್ಲ ಹಿಂದಿನ ದಿನ, ಅಂದು ಬೆಳಿಗ್ಗೆ ಪಾಪ ನಿವೇದನೆ ಮಾಡಿ ಉಪವಾಸವಿದ್ದು ಭಯ ಭಕ್ತಿಯಿಂದ ದಿವ್ಯ ಪ್ರಸಾದ ಸ್ವೀಕರಿಸಿದರು. ಶಿವಮೊಗ್ಗೆಯ ಪಾದರಿ ಶೆರಮಾಂವಂಗೆ ನಿಂತವರು ಶಿವಸಾಗರದಲ್ಲಿ ಇಂತಹ ಭವ್ಯ ದಿವ್ಯ ಇಗರ್ಜಿಯನ್ನು ಕಟ್ಟಲು ಶ್ರಮಿಸಿದ ಪಾದರಿ ಗೋನಸ್ವಾಲಿಸ್ ರನ್ನು ಕೊಂಡಾಡಿದರು. +“ಇಗರ್ಜಿಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ…ನಮ್ಮ ಏಕತೆ..ಭಕ್ತಿಯ ಸಂಕೇತಗಳು..ನಾವೆಲ್ಲ ಒಂದೆಡೆ ಸೇರಿ ಪ್ರಾರ್ಥಿಸುವುದರಿಂದ ಆ ಪ್ರಾರ್ಥನೆ ದೇವರಿಗೆ ತಲುಪುತ್ತದೆ. ಹೀಗೆ ನಾವೆಲ್ಲ ಒಂದಾಗಿ ಸೇರುವುದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತದೆ. ನಾವು ಆತ್ಮೀಯರಾಗುತ್ತೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಇದು ನೆರವು ನೀಡುತ್ತದೆ. ಇಂದು ಈ ಊರಿನ ಕ್ರೈಸ್ತ ಸಮಾಜ ತಾನೂ ಇದ್ದೇನೆ ಅನ್ನುವುದನ್ನು ಊರಿನ ಜನರಿಗೆ ತೋರಿಸಿಕೊಟ್ಟಿದೆ”. ಎಂದೆಲ್ಲ ಅವರು ಹೇಳಿದ್ದು ಜನರಿಗೆ ಹಿಡಿಸಿತು. ಜನರು ತಲೆದೂಗಿ ತಮ್ಮ ಸಮ್ಮತಿಯನ್ನು ಸೂಚಿಸಿದರು. +ಅಂದು ಕೇರಿಯಲ್ಲಿ ಕಾಡು ಹಂದಿಯ ಮಾಂಸ ಚೆನ್ನಾಗಿ ಮಾರಾಟವಾಯಿತು. ಹಂದಿ ಗುಸ್ತೀನ ಸತ್ತ ನಂತರ, ಅವನ ಜತೆ ಕಾಡಿಗೆ ಹೋಗುತ್ತಿದ್ದ. ಅಲ್ಲಿಂದ ಹಂದಿ ಜಿಂಕೆ ತರುತ್ತಿದ್ದ ಮಿಂಗೇಲಿ ಈ ಕೆಲಸವನ್ನು ಮುಂದುವರೆಸಿದ್ದ. ಹಬ್ಬದ ಹಿಂದಿನ ದಿನವೇ ಈತ ಕಾಡಿಗೆ ಹೋಗಿ ಎರಡು ಕಾಡು ಹಂದಿಗಳನ್ನು ಹೊಡೆದಿದ್ದ. ಇವನ ಮನೆ ಅಂಗಳದಲ್ಲಿ ಹಾಕಿದ ಪಾಲುಗಳು ಅರ್ಧಗಂಟೆಯಲ್ಲಿ ಖರ್ಚಾಗಿದ್ದವು. ಬೇಲಿ ಗೂಟದ ಮೆಲೆ, ಮನೆ ಮಾಡಿನ ಮೇಲೆ ಕುಳಿತು ಕೂಗಾಡುತ್ತಿದ್ದ ಕಾಗೆಗಳನ್ನು ಒಂದು ಕೈಯಿಂದ ಓಡಿಸುತ್ತ ಮಿಂಗೇಲಿ ಬಂದ ಬಂದವರಿಗೆ ಮಾಂಸದ ಪಾಲುಗಳನ್ನು ಸುವರ್ಣಗೆಡ್ಡೆ ಎಲೆಯಲ್ಲಿ ಸುತ್ತಿ ಸುತ್ತಿಕೊಟ್ಟು ಹಣ ಎಣಿಸಿದ. ಹಬ್ಬದ ದಿನವೇ ಈ ಮಾಂಸ ಸಿಕ್ಕಿದ್ದು ಜನರಿಗೆ ಸಂತಸ ತಂದಿತು. +ಬಿಳಿಯಪ್ಪನ ಸಾರಾಯಿ ಅಂಗಡಿಗೂ ಸಾಕಷ್ಟು ವ್ಯಾಪಾರವಾಯಿತು. ಬಾಟಲಿಗೆ ಭದ್ರವಾಗಿ ಬಿರಡೆ ಹಾಕಿ ಜನ ಸಾರಾಯಿಯನ್ನು ಮನೆ ಮನೆಗೆ ತಂದರು. +ಊಟಕ್ಕೆ ಕುಳಿತಾಗ ನೆಂಟರ ಕೈಗೆ ಸಾರಾಯಿ ತುಂಬಿದ ಗಿಲಾಸು ನೀಡಿ, ಅವರು- +“ದೇವ್ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದರು. +” ಹಂ..ಹಂ..ಘೆ..ಘೆ..” (ಹಾಂ ಹಾಂ ತೋಕೋ ತೋಕೋ) ಎಂದು ಮತ್ತೆ ಮತ್ತೆ ಬರಿದಾದ ಗಿಲಾಸನ್ನು ತುಂಬಿದರು. +ಇದರಿಂದ ಏನಾಯಿತೆಂದರೆ ನಾಲ್ಕು ಗಂಟೆಗೆಲ್ಲ ಬಹಳ ಜನ ಗಂಡಸರು ಕೂರಲಾಗದೆ ನಿಲ್ಲಲಾಗದೆ ತೂರಾಡಿ ಅಲ್ಲಲ್ಲಿ ಮಲಗಿಕೊಂಡರು. ಸಂಜೆ ಇಗರ್ಜಿಯಿಂದ ಪುರುಶಾಂವಂ ಹೊರಟಾಗ ಅದರಲ್ಲಿ ಬರೀ ಹೆಂಗಸರು, ಯುವಕ, ಯುವತಿಯರು, ಹೊರಗಿನಿಂದ ಬಂದ ಪಾದರಿಗಳು, ಕೆಲವರೇ ಗಂಡಸರು ಇದ್ದರು. +ದೇವರ ಪ್ರತಿಮೆಯನ್ನು ಪೀಠದ ಸಮೇತ ಗಾಡಿಯೊಂದರ ಮೇಲೆ ಇರಿಸಿ ಅದಕ್ಕೆ ಅಲಂಕಾರ ಮಾಡಿ ಜನ ಪ್ರಾರ್ಥನೆ ಮಾಡುತ್ತ, ಕೀರ್ತನೆ ಹಾಡುತ್ತ ಊರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಇಗರ್ಜಿಯಿಂದ ಹೊರಬಿದ್ದ ಮೆರವಣಿಗೆ ಎಲ್ಲ ಕ್ರೀಸ್ತುವರ ಮನೆಗಳ ಮುಂದಿನಿಂದ ಹಾದು ಪೇಟೆಯನ್ನು ಹೊಕ್ಕಿತು. ಕ್ರೀಸ್ತುವರ ಮನೆಗಳ ಮುಂದೆ ದೇವರು ಬಂದಾಗ ಜಗಲಿಯ ಮೇಲೆ ಮೇಣದ ಬತ್ತಿಗಳನ್ನು ಹಚ್ಚಲಾಯಿತಾದರೆ ಪೇಟೆಯಲ್ಲಿ ಅಂಗಡಿ ಹೋಟೆಲುಗಳವರು ದೇವರಿಗೆ ಮೇಣದ ಬತ್ತಿ ಪಾಕೆಟುಗಳನ್ನು ನೀಡಿದರು. ಹೂವಿನ ಹಾರ ಹಾಕಿದರು. +ದೇವರ ಪ್ರತಿಮೆಯ ಜೊತೆಯಲ್ಲಿ ಕ್ರೀಸ್ತುವರು ತೆಗೆದ ಪ್ರಥಮ ಮೆರವಣಿಗೆ ಇದಾಗಿದ್ದರಿಂದ ಎಲ್ಲ ಜನ ಅಂಗಡಿ ಮುಂಗಟ್ಟುಗಳ ಮೇಲೆ ನಿಂತು ನೋಡಿದರು. ಕೈ ಮುಗಿದುಕೊಂಡು, ಉರಿಯುವ ಮೆಣದ ಬತ್ತಿಗಳನ್ನು ಹಿಡಿದು ಜಪ ಹೇಳುತ್ತ ಭಯ ಭಕ್ತಿಯಿಂದ ಸಾಲುಗಟ್ಟಿ ಹೋಗುವ ಈ ಜನ ಪಟ್ಟಣಿಗರ ಗಮನ ಸೆಳೆದರು. ಮೆರವಣಿಗೆ ಹೊರಡುವ ಮುನ್ನ ಪಾದರಿ ಗೋನಸ್ವಾಲಿಸ್ ಮೆರವಣಿಗೆಯಲ್ಲಿ ಹೇಗೆ ಹೋಗಬೇಕು ಎಂದು ಹೇಳಿದ್ದು ಇಲ್ಲಿ ಫಲಪ್ರದವಾಯಿತು. ಮೆರವಣಿಗೆ ಇಗರ್ಜಿಯಿಂದ ಹೊರಟು ಮತ್ತೆ ಇಗರ್ಜಿಗೆ ಬಂದು ಸೇರುವವರೆಗೂ ಇಗರ್ಜಿಯ ಗಂಟೆ ಹೊಡೆದುಕೊಳ್ಳುತ್ತಲೇ ಇತ್ತು. ಬಟ್ಲರ ಬೋನಾ ನಡುನಡುವೆ ಸುಧಾರಿಸಿಕೊಳ್ಳುತ್ತ ಈ ಕೆಲಸ ಮಾಡಿದ. ಗುರ್ಕಾರ ಸಿಮೋನ, ಫ಼ಿರ್ಜಂತ, ಪಾಸ್ಕೋಲ ಇನ್ನೂ ಒಂದಿಬ್ಬರು ಮೆರವಣಿಗೆ ಅಸ್ತವ್ಯಸ್ಥವಾಗದಂತೆ ನೋಡಿಕೊಂಡರು. +ಆ ದಿನವೂ ಸುತಾರಿ ಇನಾಸನ ಮನೆ ಮುಂದಿನ ಶಿಲುಬೆಯ ಬಳಿಯ ದೀಪ ಉರಿಯುತಲಿತ್ತು. +ಊರಿಗೆ ಬಂದ ಪಾದರಿಗಳಿಗೆ ಭರ್ಜರಿ ಊಟವಾಯಿತು. ಹಂದಿ, ಕೋಳಿ, ಕುರಿ ಎಂದು ಮೂರ್ನಾಲ್ಕು ಬಗೆಯ ಕರ್ರಿಯನ್ನು ಬೋನ ಮಾಡಿದ್ದ. ತನ್ನೊಬ್ಬನಿಂದ ಈ ಕೆಲಸ ಮಾಡಲಾಗುವುದಿಲ್ಲವೆಂದು ಸಿಮೋನ, ಇನಾಸ, ಕೈತಾನ್, ಪಾಸ್ಕೋಲ ಇವರೆಲ್ಲರ ಮನೆಯ ಹುಡುಗಿಯರನ್ನು ಕೂಜ್ನಗೆ ಕರೆಸಿಕೊಂಡಿದ್ದ. ಈ ಹುಡುಗಿಯರು ಕೂಡ ಅತೀ ಸಂಭ್ರಮದಿಂದ ಚುರುಕಾಗಿ ಓಡಾಡುತ್ತ ಎಲ್ಲ ಕೆಲಸಗಳನ್ನು ಮಾಡಿದ್ದರು. ಬಗೆ ಬಗೆಯ ಸಾರು, ಪಲ್ಯ, ಅನ್ನ, ಚಟ್ನಿ ಎಂದು ಬಿಡುವಿಲ್ಲದೆ ದುಡಿದರು. ಈ ತಂಡದ ನೇತೃತ್ವವನ್ನು ಬಲಗಾಲುದ್ದ ಬಾಲ್ತಿದಾರನ ಮಗಳು ರೆಮೀಂದಿ ವಹಿಸಿದ್ದಳು. ಬೋನ ಮಾತು ಮಾತಿಗೆ +” ರ್ಮೇಂದಿ…ಈಗ ಇದು ಆಗಬೇಕು..ಈಗ ಅದು ಆಗಬೇಕು” ಅನ್ನುತ್ತಿದ್ದ. +ರೆಮೆಂದಿ ಕೂಡಲೇ ಬಾಣದಂತೆ ಚಿಮ್ಮಿ ಬಂದು ಆ ಕೆಲಸ ಮಾಡಿಸುತ್ತಿದ್ದಳು. ರೆಮೇಂದಿ ಉರಿಯುವ ಒಲೆಯ ಬಳಿ, ಮಾಂಸ ತುಂಡರಿಸುವಲ್ಲಿ, ಖಾರ ಅರೆಯುವಲ್ಲಿ ನಿಂತಿದ್ದರೆ, ಬೋನಾ ಅವಳನ್ನೇ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿದ್ದ. +* +* +* +ಹಬ್ಬ ಮುಗಿದ ಎರಡು ದಿನಗಳ ನಂತರ ಪಾದರಿ ಗೋನಸ್ವಾಲಿಸರಿಗೆ ವಿಶ್ರಾಂತಿ ಎಂಬುದು ದೊರೆಯಿತು. ಒಂದು ಕೆಲಸವನ್ನು ಮಾಡಿ ಮುಗಿಸಿದೆ ಎಂಬ ತೃಪ್ತಿ, ಸಮಾಧಾನ. ಇಗರ್ಜಿ ಕಟ್ಟುವ ಕೆಲಸ ಅವರಿಗೆ ಹೊಸದಾಗಿತ್ತು. ಪಣಜಿಯಲ್ಲಿ ಇಂತಹ ಕಾಮಗಾರಿಯನ್ನು ಮಾಡಿಸುವ ಅವಶ್ಯಕತೆ ಇರಲಿಲ್ಲ. ಕಾರವಾರದಲ್ಲಿ ಅವರು ಪಾದರಿಗಾಗಿ ಒಂದು ಬಂಗಲೆಯನ್ನು ಕಟ್ಟಿಸಿದ್ದರು. ಹೊನ್ನಾವರದ ಮೇಲ್ ಪಾಳ್ಯದಲ್ಲಿ ಪಾದರಿಗಾಗಿ ಒಂದು ಬಂಗಲೆಯನ್ನು ಕಟ್ಟಿಸಿದ್ದರು. ಹೊನ್ನಾವರದ ಮೇಲ್ ಪಾಳ್ಯದಲ್ಲಿ ಒಂದು ಸಣ್ಣ ಕೊಪೆಲ ಇವರ ಕಾಲದಲ್ಲಿಯೇ ಆಗಿತ್ತು. ಆದರೆ ದೊಡ್ಡ ಪ್ರಮಾಣದ ಕೆಲಸವೆಂದರೆ ಇದೇನೆ. ಅಬ್ಬ! ಎಂದವರು ನಿಟ್ಟುಸಿರು ಬಿಟ್ಟರು. ಈ ಇಗರ್ಜಿ ಕಟ್ಟಿ ನಿಲ್ಲಿಸಲು ತಾವು ಮಾಡಿದ ಪ್ರಯತ್ನಗಳೆಲ್ಲ ಅವರಿಗೆ ನೆನಪಾದವು. +ನಕ್ಷೆ ತರಿಸಿದ್ದು, ಹಣಕ್ಕಾಗಿ ಮಾಡಿದ ಪ್ರಯತ್ನ, ಕಲ್ಲು ಮರಳು ಮರ ತರಿಸಿದ್ದು, ಕೆಲಸಗಾರರನ್ನು ಕರೆಸಿಕೊಂಡಿದ್ದು, ಹಗಲು ರಾತ್ರಿ ತಾನು ಕೆಲಸ ನಡೆಯುವಲ್ಲಿ ನಿಂತು ನಿರ್ದೇಶನ ನೀಡಿದ್ದು, ಈ ಬಗ್ಗೆ ನಿತ್ಯ ದೇವರಿಗೆ ಸಲ್ಲಿಸುತ್ತಿದ್ದ ಪ್ರಾರ್ಥನೆ, ಪ್ರಾರ್ಥನೆಗೆ ದೇವರು ಓಗೊಟ್ಟಂತೆ ಕೆಲಸಗಳು ಆಗುತ್ತಿದ್ದುದು. ಊರ ಇತರೇ ಮತಸ್ಥರ ಸಹಕಾರ ಬೆಂಬಲ. +ತಾನು ಇಲ್ಲಿ ಇಗರ್ಜಿಯನ್ನು ಮಾತ್ರ ಕಟ್ಟಲಿಲ್ಲ. ಅಲ್ಲವೇ? ಇಲ್ಲಿಯ ಕ್ರೈಸ್ತ ಸಮೋಡ್ತಿಯನ್ನೇ ಒಂದಾಗಿ ನಿಲ್ಲಿಸಿದೆ. ಅವರಲ್ಲಿ ಕ್ರೈಸ್ತ ಭಕ್ತಿಯನ್ನು, ಭೀತಿಯನ್ನು, ಕ್ರಿಸ್ತನ ಬಗ್ಗೆ ಅಪಾರ ನಂಬಿಕೆಯನ್ನು ಬಿತ್ತಿದೆ. ಬೆಳೆಸಿದೆ. +ಈಗ ಇಲ್ಲಿಯ ಮನೆಗಳಲ್ಲಿ ಸಾಯಂಕಾಲದ ಅಮೋರಿ, ಗಾಯನ ಕೇಳಿ ಬರುತ್ತದೆ. ಭಾನುವಾರಗಳಂದು ಇಗರ್ಜಿಗೆ ಜನ ತಾವಾಗಿ ಬರುತ್ತಾರೆ. ಶನಿವಾರ ಪಾಪ ನಿವೇದನೆಗೆ ಜನ. ಕ್ರೀಸ್ತುವರ ಮನೆಗಳಲ್ಲಿ ಕ್ರೈಸ್ತ ಪರಿಸರದ ವಾತಾವರಣ. +“ಎಲ್ಲ ನಿನ್ನ ಅನುಗ್ರಹ” +ಅವರು ತಮ್ಮ ಕೊಠಡಿಯಲ್ಲಿ ಸಂತನ ಪ್ರತಿಮೆಗೆ ಕೈ ಮುಗಿದರು. ಇಗರ್ಜಿಗೆ ಹೊಸ ಪ್ರತಿಮೆ ತಂದ ನಂತರ ಹಳೆಯದನ್ನು ಅವರು ತಮ್ಮ ಕೊಠಡಿಯಲ್ಲಿ ಇರಿಸಿಕೊಂಡಿದ್ದರು. ಇದರ ಮಗ್ಗುಲಲ್ಲಿಯೇ ಶಿಲುಬೆ ಏರಿದ ಏಸು ಪ್ರಭುವಿನ ಪ್ರತಿಮೆ. ಮತ್ತೊಂದು ಕಡೆ ಮಾತೆ ಮೇರಿ. ಇವರು ನಿತ್ಯ ಪ್ರಾರ್ಥನೆ ಮಾಡುವುದು ಈ ಪ್ರತಿಮೆ ಮುಂದೆಯೇ. +ತಟ್ಟನೆ ಅವರಿಗೆ ತಾವು ಮಾಡಬೇಕಾಗಿರುವ ಮತ್ತೊಂದು ಕೆಲಸದ ನೆನಪಾಯ್ತು. +ಬಟ್ಲರ್ ಬೋನನಿಗೊಂದು ಮದುವೆ ಮಾಡಬೇಕು. ಕಳೆದ ಸುಮಾರು ಹದಿನೆಂಟು ವರ್ಷಗಳಿಂದ ಈತ ತಮ್ಮೊಡನೆ ಇದ್ದಾನೆ. ಬೋನ ಅನಾಥನಾಗಿ ತಮ್ಮ ಬಂಗಲೆ ಬಾಗಿಲಿಗೆ ಬಂದಾಗ ಅವನಿಗೆ ಸುಮಾರು ಹತ್ತು ವರ್ಷ. ಈಗ ಅವನಿಗೆ ಇಪ್ಪತ್ತೈದು ಆಗಿದೆ. ಮದುವೆಗೆ ಸೂಕ್ತ ವಯಸ್ಸು. ನೈಸರ್ಗಿಕವಾದ ಎಲ್ಲೆ ಪ್ರಕ್ರಿಯೆಗಳಿಗೆ ಮನಸ್ಸು ಮೈ ತೆರೆದುಕೊಳ್ಳುವ ಸಮಯ. ತಾವು ಕೂಡ ಈ ವಯಸ್ಸನ್ನು ದಾಟಿ ಬಂದವರೆ. ದೇಹದ ಯಾವುದೋ ಮೂಲೆಯಲ್ಲಿ ಇಂತದ್ದೆಂದು ಹೇಳಲಾಗದ ಆಸೆಯೊಂದು ಚಿಗುರಿ ಇಡೀ ಮೈಗೆ ಅದು ಆವರಿಸಿಕೊಳ್ಳುತ್ತಿತ್ತು. ಆದರೆ ಆ ಕ್ಷಣದಲ್ಲಿ ಇದು ಸೈತಾನನ ಕೀಟಲೆ ಎನಿಸಿ ದೇವರ ಧ್ಯಾನದಲ್ಲಿ ತೊಡಗುತ್ತಿದ್ದೆ. ಇಲ್ಲವೇ ದೇವರ ಪೀಠದ ಮುಂದೆ ಹೋಗಿ ಕೂರುತ್ತಿದ್ದೆ. ಬೈಬಲಿನ ಮರೆ ಹೊಗುತ್ತಿದ್ದೆ. ಕ್ರಮೆಣ ಜಪ, ಪ್ರಾರ್ಥನೆ, ಪೂಜೆ, ದೇವರ ಸೇವೆ, ಜನರ ಶಿಕ್ಷಣ ಎಂದು ಕಾಲ ಕಳೆಯುತ್ತಿತ್ತು. ಲೈಂಗಿಕ ಆಕರ್ಷಣೆಗೂ ಪ್ರಬಲವಾದ ಬೇರೊಂದು ಉದ್ದೇಶವನ್ನು ತಾವು ಬೆಳೆಸಿಕೊಂಡಿದ್ದರಿಂದ ತಾವು ಸೈತಾನನ ಬಲೆಗೆ ಬೀಳಲಿಲ್ಲ. +ಆದರೆ ಬೋನ ಕೂಡ ತಮ್ಮಂತೆ ಬದುಕಬೇಕೆಂದು ಬಯಸುವುದು ತಪ್ಪು. ಅವನು ಪಾದರಿಯಲ್ಲ. ದೇವರ ಸೇವೆ, ಜನ ಸೇವೆಗೆ ತನ್ನ ಬದುಕನ್ನು ಮೀಸಲಿಟ್ಟವನಲ್ಲ. ತಮ್ಮ ಹಾಗೆ ಲೈಂಗಿಕ ಭಾವನೆಗಳಿಂದ ದೂರವಿರುವ ಬಗ್ಗೆ ಯಾವುದೇ ತರಬೇತಿ ಅವನಿಗೆ ಆಗಿಲ್ಲ. ಈಗೀಗ ಬೋನ ಹುಡುಗಿಯರನ್ನು ನೋಡುವ ದೃಷ್ಟಿ ಭಿನ್ನವಾಗುತ್ತಿದೆ. ತಾವು ಸಾಮಾನ್ಯವಾಗಿ ಹುಡುಗಿಯರನ್ನು ತಮ್ಮ ಕೊಠಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಹುಡುಗಿಯರು ಚೆಲ್ಲು ಚೆಲ್ಲಾಗಿ ಆಡುತ್ತ ತಮ್ಮ ಸುತ್ತ ಯಾವತ್ತೂ ನಿಲ್ಲುವುದಿಲ್ಲ. ತಮ್ಮ ಬಳಿ ಮಾತನಾಡಲು ಬರುವುದಿಲ್ಲ. ಆದರೆ ಬೋನನ ಕೂಜ್ನಿನೊಳಗೆ ಯಾವಾಗಲೂ ಹುಡುಗಿಯರು ಇರುತ್ತಾರೆ. ಅವನಿಗೆ ಒಂದಲ್ಲಾ ಒಂದು ಕೆಲಸ ಮಾಡಿಕೊಡಲು ಧಾವಿಸಿ ಬರುತ್ತಾರೆ. +ಮುಖ್ಯವಾಗಿ ಅವರು ಒಂದು ವಿಷಯ ಗಮನಿಸಿದ್ದಾರೆ. ದರ್ಜಿ ಬಲಗಾಲುದ್ದ ಬಾಲ್ತಿದಾರನ ಮಗಳು ರೆಮೇಂದಿ ನಿತ್ಯ ಬೋನನನ್ನು ಹುಡುಕಿಕೊಂಡು ಬರುತ್ತಾಳೆ. +ಮೊನ್ನೆ ಹೀಗೇ ಆಯಿತು. +ಭಾನುವಾರಗಳಂದು ಎಲ್ಲ ಮಕ್ಕಳು, ಮದುವೆಯಾಗದ ಯುವಕ ಯುವತಿಯರು ಜ್ಞಾನೋಪದೇಶಕ್ಕೆ ಬರಲೇಬೇಕೆಂದು ತಾನು ನಿಯಮ ಮಾಡಿದ್ದೇನೆ. ಬಾರದವರಿಗೆ ಏಟು ಬಿದ್ದಿದೆ. ಅವರ ಮನೆಯಿಂದ ತಾನೇ ಕಿವಿ ಹಿಡಿದು ಎಳೆದು ತಂದಿದ್ದೇನೆ. ಬರಲಿಲ್ಲ ಎಂದರೆ ಮದುವೆ ಮಾಡುವುದಿಲ್ಲ ಎಂದಿದ್ದೇನೆ. ತಂದೆ ತಾಯಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಹೀಗಾಗಿ ಎಲ್ಲ ಮಕ್ಕಳನ್ನೂ ತಂದೆ ತಾಯಂದಿರು ಕಳುಹಿಸುತ್ತಾರೆ. ತರುಣ, ತರುಣಿಯರು ಬರುತ್ತಾರೆ. +ಭಾನುವಾರ ಬಂದ ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಜಪ ಪ್ರಾರ್ಥನೆ ಇತ್ಯಾದಿ ಕಲಿಯಲು ಹೇಳಿದೆ. ದೊಡ್ಡವರಿಗೆ ದೇವರ ವಾಕ್ಯ, ಬೈಬಲ್ಲಿನ ಕತೆಗಳು, ಸ್ವರ್ಗ ನರಕಗಳ ಪರಿಚಯ, ಪಾಪ, ಮಹಾಪಾಪಗಳ ವ್ಯತ್ಯಾಸ ತಿಳಿಸಿಕೊಟ್ಟೆ. ಒಂದು ಗಂಟೆಯ ಅವಧಿ ಮುಗಿಯುತೆನ್ನುವಾಗ- +“ಇನ್ನು ಸಾಕು ..ಮುಂದಿನ ವಾರ ಬರುವಾಗ ಎಲ್ಲ ಕಲಿತು ಬನ್ನಿ” +ಎಂದು ಹೇಳಿ ವಾಡಿಕೆಯಂತೆ ಎಲ್ಲರಿಗೂ ಕಿತ್ತಳೆ ತೊಳೆ ಪೆಪ್ಪರಮೆಂಟನ್ನು ಕೊಟ್ಟೆ. +“ಬೆಸಾಂವ ದಿಯಾ ಪದ್ರಾಬ..ಬೆಸಾಂವ ದಿಯಾ ಪದ್ರಾಬ..” +ಎಂದು ಕೈ ಮುಗಿದು ಆಶೀರ್ವಾದ ಕೇಳಿ ಮಕ್ಕಳೆಲ್ಲ ಹೋದರು. ತಾನು ಎಂದಿನಂತೆ ಪ್ರಾವಿನ್ಶಿಯಲಗೆ ಇಲ್ಲಿ ನಡೆದಿರುವ ಕೆಲಸ ಕಾರ್ಯಗಳ ವರದಿ ಮಾಡಲು ಕುಳಿತೆ. +ತಾನು ಬರೆಯುತ್ತಿದ್ದ ಪೆನ್ನಿನಲ್ಲಿಯ ಇಂಕು ಮುಗಿದು ಕಾಗದದ ಮೇಲೆ ಬರಿ ಗೆರೆಗಳು ಮುಡಿದವು. ಅಕ್ಷರಗಳು ಕಾಣಲಿಲ್ಲ. ಪೆನ್ನಿನ ಹೋಲ್ಡರ್ ತೆಗೆದು ಇಂಕು ಹಾಕಲು ನೋಡಿದೆ. ಹೊಲ್ಡರ್ ಸುಲಭವಾಗಿ ತಿರುಗಲಿಲ್ಲ. ಬೆರಳಿಗೆ ಸುಣ್ಣ ಹಚ್ಚಿಕೊಂಡು ತಿರುಗಿಸಿದೆ. ಬಟ್ಟೆ ಹಿಡಿದು ತಿರುಗಿಸಿದೆ. ಕೊಂಚ ಬಿಸಿ ಮಾಡಿದರೆ ಹೋಲ್ಡರ್ ಬರಬಹುದೆಂದು ಎನಿಸಿ ಎದ್ದು ಹಿಂಬದಿಯ ಅಡಿಗೆ ಮನೆಯತ್ತ ನಡೆದೆ. +ಅಡಿಗೆ ಮನೆ ಬಾಗಿಲು ಅರ್ಧ ತೆರೆದಿತ್ತು. ಒಲೆಯಲ್ಲಿ ಬೆಂಕಿ. ಪಾತ್ರೆಯಲ್ಲಿ ಮಾಂಸಕ್ಕೆ ಕುದಿ ಬಂದಿತ್ತು. ತಾವು ಪೆನ್ನನ್ನು ಬೆಂಕಿಗೆ ಹಿಡಿದು ಬಿಸಿಮಾಡುವಾಗ ಒಳ ಕೋಣೆಯಲ್ಲಿ ಯಾರೋ ನಕ್ಕರು. ಚಿರಿದರು. ನರಳಿದರು. +ಮೈ ಬೆಚ್ಚಗಾಯಿತು. ಕೆಲಸ ಮುಗಿಸಿ ಬಗ್ಗಿ ನೋಡಿದೆ. +ಬೋನನ ತೋಳಿನಲ್ಲಿ ರೆಮೇಂದಿ. ಅವಳನ್ನು ತೋಳುಗಳಲ್ಲಿ ಹಿಡಿದು ತನ್ನ ಎದೆಗೆ ಅವುಚಿಕೊಂಡು ಅವಳ ಕೆನ್ನೆ ಕಚ್ಚುತ್ತ ಅವಳ ತೋಳು ಎದೆಯ ಮೇಲೆ ಕೈಯಾಡಿಸುತ್ತಿದ್ದಾನೆ ಬೋನ. +ತುಂಬಾ ಕಷ್ಟವಾಯಿತು ಕೊಠಡಿಗೆ ತಿರುಗಿ ಬರುವುದು. ಬೋನ ಅಪರಿಚಿತನೇನೂ ಆಗಿರಲಿಲ್ಲ. ಅವನ ಗುಣ ಸ್ವಭಾವವೆಲ್ಲ ಗೊತ್ತಿತ್ತು. ಅವನ ಬಗ್ಗೆ ಗೌರವ ಪ್ರೀತಿಯೂ ಇತ್ತು. ಆದರೆ ಈಗಿನ ಅವನ ರೂಪ ಹೊಸದು. ಈ ಉದ್ರೇಕ ಆವೇಶ ಹೊಸದು. ಅಂದೇ ನಿರ್ಧರಿಸಿದೆ ಬೋನನಿಗೆ ಬೇಗನೆ ಮದುವೆ ಮಾಡಬೇಕು. ಇಲ್ಲವೆಂದರೆ ಇಲ್ಲಿ ಮತ್ತೊಂದು ಪ್ರಕರಣವಾಗುತ್ತದೆ. +ಈಗ ಇಗರ್ಜಿ ಉಗಾವಣೆ ಕೆಲಸವಾಗಿದೆ. ಮುಂದೆ ಬೋನನ ಮದುವೆ. +ಒಂದು ದಿನ ಪಾದರಿ ಗೋನಸ್ವಾಲಿಸ ಬೋನನನ್ನೇ ಮಾತಿಗೆ ಎಳೆದರು. +“ಬೋನ ಎಲ್ಲರ ಹಾಗೆ ನೀನೂ ಮದುವೆಯಾಗಬೇಕು..ಮನೆ ಮಾಡಬೇಕು..” +ಬೋನ ಕುತೂಹಲದಿಂದ ಅವರ ಮುಖ ನೋಡಿದ. ಅವನಿಗೂ ಅವರು ಹೇಳುವ ವಿಷಯದ ಬಗ್ಗೆ ಆಸಕ್ತಿ ಇದ್ದ ಹಾಗಿತ್ತು. ಮುಂದೆ ಹೇಳಿ ಎಂಬಂತೆ ಆತ ಅವರ ಮುಂದೆ ನಿಂತಿದ್ದ. +“ನಿನ್ನ ಮನಸ್ಸಿನಲ್ಲಿ ಯಾರಾದರೂ ಇದ್ದಾರೆಯೇ?” +ಬೇಕೆಂದೇ ಕೇಳಿದರವರು. ನಿಜವಾದ ಕ್ರೈಸ್ತ ಪಾದರಿಯಿಂದ ಏನನ್ನೂ ಮುಚ್ಚಿಡಲಾರ. ಬೋನ ನಿಜವನ್ನೇ ಹೇಳಿದ. +ಶಿವಸಾಗರಕ್ಕೆ ಬಂದ ದಿನದಿಂದ ಆತಾ ರೆಮೆಂದಿಯನ್ನು ನೋಡುತ್ತ ಬಂದಿದ್ದರೂ ಅವಳು ಆಕರ್ಷಕವಾಗಿ ಕಾಣತೊಡಗಿದ್ದು ಮೂರು ನಾಲ್ಕು ವರ್ಷಗಳಿಂದ. ಲಂಗ ಝಂಪರಿನಲ್ಲಿ ಅವಳ ಮೈ ಅರಳತೊಡಗಿದಾಗ, ಮುಖದಲ್ಲಿ ಕೆಂಪು ಆವರಿಸಿಕೊಂಡು, ಕಣ್ಣು ಮೂಗು ಕೆನ್ನೆಗಳಲ್ಲಿ ಬಣ್ಣ ಬರಲಾರಂಭಿಸಿದಾಗ. ಅವಳ ಮಾತು ಇಂಪಾಗಿ, ನಡಿಗೆಯಲ್ಲಿ ಬಳುಕಾಟ ಕಂಡು ಬಂದು ಅವಳು. +“ಬೋನಾ ಮಾಮ..” ಅಂದಾಗ ಇವನಲ್ಲಿ ಅವಳ ಬಗ್ಗೆ ಕುತೂಹಲ ಆಸಕ್ತಿ ಮೂಡಿತು. +ಹಿಂದೆ ಸಿಮೋನನ ಮನೆಯ ಬಳಿ ಒಂದು ಮನೆ ಮಾಡಿಕೊಂಡಿದ್ದ ಬೋನ. ಆಗ ಬಲಗಾಲುದ್ದನ ಮನೆ ಹತ್ತಿರವಾಗಿತ್ತು. ದಿನಾ ಬಲಗಾಲುದ್ಧನ ಮಗಳ ಭೇಟಿಯಾಗುತ್ತಿತ್ತು. ಇತ್ತೀಚೆಗೆ ಕೊಪೆಲ ಹತ್ತಿರವೇ ಬೋನ ತನ್ನ ಕೂಜ್ನ ಮಾಡಿಕೊಂಡ. ಆದರೇನಂತೆ ಬೇಲಿ ಸುತ್ತಿಕೊಂಡು ಕೊಪೆಲ ಎದುರಿನಿಂದ ಹಾದು ಬೋನನಲ್ಲಿಗೇ ಬರುತ್ತಾಳೆ ಹುಡುಗಿ. +“ಯಾರಾದ್ರು ನೋಡಬಹುದು..” +“ನೋಡಲಿ…ಏನೀಗ?” ಎಂದು ಕೇಳುತ್ತಾಳೆ. +ಅವಳಿಗೂ ಮನಸ್ಸಿದೆ. ತನಗೂ ಇದೆ. ಪಾದರಿ ಕೂಡ ಇದೇ ಪ್ರಸ್ತಾಪವನ್ನು ಮಾಡಿದ್ದಾರೆ. ಇನ್ನು ಮುಚ್ಚು ಮರೆ ಏಕೆ? +* +* +* +ಬಲಗಾಲುದ್ದ ಪಾದರಿ ಹೇಳಿ ಕಳುಹಿಸಿದ್ದಾರೆ ಎಂದಾಗ ಕಾಲೆಳೆದುಕೊಂಡು ಬಂದ. ಅಂಗಡಿಯಲ್ಲಿ ಕಾಜಾ ಮಡುವ ಹುಡುಗನನ್ನು ಕೂರಿಸಿ ಓಡಿ ಬಂದ. ಪೇಟೆಗೆ ಹೋಗುವ ಸಿಮೋನನ ಮಗ ಫ಼ೆಡ್ಡಿಯ ಹತ್ತಿರ ಪಾದರಿಗಳು ಬಲಗಾಲುದ್ದನಿಗೆ ಬರುವಂತೆ ಹೇಳಿ ಕಳುಹಿಸಿದ್ದರು. +ಪಾದರಿ ಹೇಳಿ ಕಳುಹಿಸಿದ್ದಾರೆಂದರೆ ಗಾಬರಿಯಾಗುವುದೇ, ಯಾರಾದರೂ ಭಾನುವಾರದ ಪೂಜೆಗೆ ಹೋಗದಿದ್ದರೆ, ಮನೆಯಲ್ಲಿ ಸಾಯಂಕಾಲದ ಪ್ರಾರ್ಥನೆ ಮಾಡದಿದ್ದರೆ, ಮಕ್ಕಳು ಜ್ಞಾನೋಪದೇಶಕ್ಕೆ ತಪ್ಪಿಸಿಕೊಂಡರೆ ಪಾದರಿ ಕೂಡಲೇ ಹೇಳಿ ಕಳುಹಿಸುತ್ತಾರೆ. ಏಕೆ ಏನು ಎಂದು ಕೇಳುತ್ತಾರೆ. ಇದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡುತ್ತಾರೆ. ಈ ಕಾರಣದಿಂದಾಗಿ ಶಿವಸಾಗರದ ಕ್ರೀಸ್ತುವರು ಪಾದರಿ ಗೋನಸ್ವಾಲಿಸರ ಬಗ್ಗೆ ಸದಾ ಒಂದು ಭೀತಿಯ ಕಲ್ಪನೆ ಬೆಳೆಸಿಕೊಂಡಿದ್ದರು. ಇದು ತಮ್ಮ ಒಳಿತಿಗಾಗಿಯೇ ಎಂಬ ನಂಬಿಕೆಯೂ ಜನರಲ್ಲಿತ್ತು. ಒಂದು ಅರ್ಥದಲ್ಲಿ ಹೆದರಿಸಿ ಬೆದರಿಸಿ ಮಕ್ಕಳನ್ನು ಸರಿದಾರಿಗೆ ತರುವಂತೆ ಪಾದರಿ ಜನರನ್ನು ಇರಿಸಿಕೊಂಡಿದ್ದರು. ಬಂದು ಹೋಗಬೇಕಂತೆ ಎಂದಾಗ ಕಾಲುದ್ದ ಹೊರಡಲು ಇದೇ ಕಾರಣ. +ಆತ ಪೇಟೆ ಬೀದಿಯಿಂದ ಶಾಲೆ ಬಳಿ ಹೊರಳಿ ಪಳ್ಳಿ ದಾಟಿ ಇಗರ್ಜಿಯತ್ತ ಬಂದ. ಪಾದರಿಗಳ ಮನೆ ಬಾಗಿಲು ತೆರೆದಿತ್ತು. +’ಬೆಸಾಂವ ದಿಯಾ ಪದ್ರಾಬ’ +ಎನ್ನುತ್ತ ಬಲಗಾಲುದ್ದ ಗೋನಸ್ವಾಲಿಸರ ಎದುರು ನಿಂತ. +” ಬನ್ನಿ ಬನ್ನಿ” ಎಂದರು ಪಾದರಿ. +“ಬರಲಿಕ್ಕೆ ಹೇಳಿದ್ದಿರಂತೆ?” +“ಹೌದು ನಿಮ್ಮ ಮಗಳ ಬಗ್ಗೆ ಮಾತನಾಡುವ ಅಂತ” +ಬಲಗಾಲುದ್ದ ಮುಖ ಕತ್ತು ಒರೆಸಿಕೊಂಡ.. +“ಏನು ಮಾಡಿದ್ಲು ರೆಮೆಂದಿ..” ಆತ ನಿಜಕ್ಕೂ ಗಾಬರಿಯಾದ. +ಪಾದರಿ ನಿಧಾನವಾಗಿಯೇ ಬೋನನ ವಿಷಯ ಪ್ರಸ್ತಾಪಿಸಿದರು. ತಾವು ಸಾಕಿದ ಹುಡುಗ ತಮ್ಮ ಜತೆ ಇದ್ದಾನೆ. ಒಳ್ಳೆಯವ. ದೈವ ಭಕ್ತ. ಅವನಿಗೊಂದು ಸ್ವತಂತ್ರ ಕೆಲಸ ಹುಡುಕಿಕೊಡಲು ನೋಡುತ್ತಿದ್ದೇನೆ. ರೆಮೇಂದಿ ಅವನಿಗೆ ಸೂಕ್ತ ಹೆಂಡತಿ. ನೀವು ಒಪ್ಪಬೇಕು ಎಂದರು. ಬಾಲ್ತಿದಾರನಿಗೆ ಸಂತೋಷವಾಯಿತು. ಅವನ ಮನಸ್ಸಿನಲ್ಲಿ ಕೂಡ ಬೋನ ಇದ್ದ. ಆದರೆ ಅವನಿಗೊಂದು ಕೆಲಸವಿಲ್ಲ ಎಂಬ ಕೊರಗು. ಒಂಟಿಯಾಗಿದ್ದಾನೆ ಪಾದರಿ ಜತೆ ಸರಿ ಹೋಗುತ್ತೆ. ನಾಳೆ ಮದುವೆಯಾಗಿ ಮಕ್ಕಳಾದ ಮೇಲೆ ಪಾದರಿ ಅಷ್ಟೂ ಜನರನ್ನು ಸಾಕುತ್ತಾರೆಯೇ? ಎಂಬುದೇ ಅವನ ಸಮಸ್ಯೆಯಾಗಿ ಆತ ಮುಂದುವರಿದಿರಲಿಲ್ಲ. ಪಾದರಿಯೇ ಈಗ ಅವನಿಗೊಂದು ದಾರಿ ತೋರಿಸುವುದಾಗಿ ಹೇಳುತ್ತಿರುವುದರಿಂದ ಆ ಒಂದು ಸಮಸ್ಯೆ ಬಗೆಹರಿಯುತ್ತದೆ ಅಂದು ಕೊಂಡ ಬಾಲ್ತಿದಾರ. +“ನನಗೆ ಮನಸ್ಸಿದೆ ಪದ್ರಾಬ..” +ಎಂದು ಆತ ಕೊಂಚ ತಡೆದ. ಹೆಂಡತಿ ಅನರಿತಾ ಕಡೆಯುವರು ಸಾಕಷ್ಟು ಜನ ನೆಂಟರಿದ್ದಾರೆ. ಅವರಿಗೆಲ್ಲ ಒಂದು ಮಾತು ಕೇಳಿ ಈ ಕೆಲಸಕ್ಕೆ ಮುಂದುವರಿಯುವುದು ಸೂಕ್ತವೆನಿಸಿತು. ಅವರು ಯಾರೂ ಬೇಡ ಅನ್ನಲಿಕ್ಕಿಲ್ಲ. ಆದರೂ ಒಂದು ಮಾತು ಕೇಳಬೇಕಲ್ಲ. +“..ಹಾಗೇ ಮಾಡಿ- ನಿಧಾನ ಹೇಳಿ” ಎಂದರು ಪಾದರಿ. +ಬಲಗಾಲುದ್ದ ಬಾಲ್ತಿದಾರ ಈಗ ತುಸು ಹುಮ್ಮಸ್ಸಿನಿಂದಲೇ ಅಂಗಡಿಗೆ ಹೊರಟ. ಅಂಗಡಿಗೆ ಬಾಗಿಲು ಹಾಕಿ ಬಂದೇ ಹೆಂಡತಿಗೆ ವಿಷಯ ತಿಳಿಸುವುದು ಎಂದು ನಿರ್ಧರಿಸಿದ. +ಇತ್ತ ಬೋನ ಬಾಲ್ತಿದಾರ ಪಾದರಿಗಳಲ್ಲಿಗೆ ಬಂದುದನ್ನು , ತಿರುಗಿ ಹೋದುದನ್ನು ನೋಡಿ ಸಂತಸಪಟ್ಟ. ಅಂದು ಕುರಿ ಮಾಂಸದ ಕೀಮಾ ಮಾಡಿಸಿಕೊಂಡು ಬಂದವ ಪಾದರಿಗಳಿಗೆ ಕೀಮಾ ಉಂಡೆ ಮಾಡಲು ತೊಡಗಿದ. +ವಿಷಯ ರೆಮೇಂದಿಯಾ ಕಿವಿಗೆ ಬಿದ್ದು ಅವಳು ಬೋನನಲ್ಲಿಗೆ ಬರುವುದನ್ನೇ ಬಿಟ್ಟಳು. ಇಗರ್ಜಿಯಲ್ಲಿ ಕಂಡರೂ ನಾಚಿ ಓಡಿಹೋದಳು. ದಿವ್ಯಪ್ರಸಾದ ಸ್ವೀಕರಿಸುವಾಗ, ಕೀರ್ತನೆ ಹಾಡುವಾಗ, ಪ್ರಾರ್ಥನೆ ಮಾಡುವಾಗ, ಬೋನ ಅವಳನ್ನು ನೋಡಿಯೇ ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ಆ ನಗೆಯೇ ಸಾಕಾಯಿತು ಬೋನನಿಗೆ. ಅವಳಿಗೂ ಕೂಡ. +* +* +* +ಕೆಲವೇ ದಿನಗಳಲ್ಲಿ ಬಾಲ್ತಿದಾರನ ಮನೆಯಲ್ಲಿ ರೆಮೇಂದಿಗೆ ಹೂ ಮುಡಿಸುವ ಕಾರ್ಯಕ್ರಮ. +ಸಿಮೋನ, ಅವನ ಹೆಂಡತಿ, ತಾಯಿ ಮಕ್ಕಳು ಬೋನನ ಪರವಾಗಿ ತುಪ್ಪ ಬೆಲ್ಲ ಹಾಕಿ ಕಲಸಿದ ಅವಲಕ್ಕಿ, ರವೆ, ಎಳ್ಳಿನ ಉಂಡೆ, ಅಬ್ಬಲಿಗೆ ಹೂವು ಇತ್ಯಾದಿ ಹಿಡಿದು ಬಾಲ್ತಿದಾರನ ಮನೆಗೆ ಬಂದರು. ಸಿಮೋನನ ಹೆಂಡತಿಯೇ ರೆಮೇಂದಿಗೆ ಹೂ ಮುಡಿಸಿದಳು. ಬೋನ ರೆಮೇಂದಿಗೆ ಜಪಸರವನ್ನು ಕಾಣಿಕೆ ಎಂದು ನೀಡಿದ. +ಪಾದರಿ ಸಮ್ಮುಖದಲ್ಲಿ ನೆಂಟಸ್ತಿಕೆಯೂ ಆಯಿತು. +ಮುಂದಿನ ಮೂರು ಭಾನುವಾರ, ಪೂಜೆಯ ನಡುವೆ ಪಾದರಿ ಮೂರು ಚೀಟಿಗಳನ್ನು ಓದಿದರು. +“ದೇವರ ಕೃಪೆಯಿಂದ ಬಾಲ್ತಿದಾರ ಹಾಗೂ ಅನರೀತಾರ ಮಗಳು ಕುಮಾರಿ ರೆಮೇಂದಿಯನ್ನು ಪಾದರಿಗಳ ಕುಜ್ನೇರ ಆಗಿರುವ ಕುಮಾರ ಬೆನಡಿಕ್ಟಾ ಮದುವೆಯಾಗಲಿದ್ದಾನೆ. ಈ ಮದುವೆಗೆ ಯಾವುದೇ ಅಡ್ಡಿ ಆತಂಕಗಳಿದ್ದರೆ ಇಗರ್ಜಿ ಮಾತೆಗೆ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ. +ಇಗರ್ಜಿಯಲ್ಲಿ ನೆರೆದ ಯುವತಿಯರು ಪಿಶ್ ಎಂದು ನಕ್ಕರು. ರೆಮೆಂದಿ ನಾಚಿ ಕೆಂಪಗಾಗಿ ಮುಖವನ್ನು ಮುಚ್ಚಿಕೊಂಡಳು. ಪ್ರಾರ್ಥನೆ ಹೇಳಿಕೊಡುತ್ತಿದ್ದ ಮಿರೋಣ್ ಬೋನಾ ತುಟಿಯಲ್ಲಿಯೇ ನಕ್ಕು ಹಿಗ್ಗಿದ. +-೯- +ಬಲಗಾಲುದ್ದ ಬಾಲ್ತಿದಾರ ಮಗಳ ಮದುವೆಯನ್ನು ಚೆನ್ನಾಗಿಯೇ ಮಾಡಿಕೊಟ್ಟ. ತನ್ನ ಮನೆಯ ಮುಂದೆಯೇ ಚಪ್ಪರ ಹಾಕಿದ. ಮನೆ ಮನೆಯಿಂದ ಪಾತ್ರೆ ತಂದು ಗಂಡಸರು ಅಡಿಗೆ ಮಾಡಿದರೆ ಹೆಂಗಸರು ಬೇರೆ ಕೆಲಸಗಳಲ್ಲಿ ನೆರವಾದರು. ಮೂರು ದಿನಗಳ ಮದುವೆ. ಶನಿವಾರದ ಊಟ, ಭಾನುವಾರದ ಧಾರೆ, ಸೋಮವಾರ ತಲೆಯ ಮೇಲೆ ನೀರು, ಒಪ್ಪಿಸಿಕೊಡುವುದು ಎಂದು ಊರ ಕ್ರೀಸ್ತುವರೆಲ್ಲ ಭಾಗವಹಿಸಿದರು. ಶಿವಸಾಗರದಲ್ಲಿ ವಾಲಗವಿತ್ತಲ್ಲದೆ ಬ್ಯಾಂಡ್ ಸೆಟ್ ಇರಲಿಲ್ಲ. ಬೋನನ ಮದುವೆಗೆ ವಾಲಗ ಊದಿಸುವುದನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳದ ಪಾದರಿ ಗೋನಸ್ವಾಲಿಸ್ ಕಾರವಾರದಿಂದ ಮಾರ್ಟಿನ್ ಪಿರೇರನ ಬ್ರ್ಯಾಸ್ ಬಾಂಡನ್ನು ತರಿಸಿದರು. ಶಿರಸಿಯಿಂದ ಶಿವಸಾಗರಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಈ ಜನ ಬಂದಿಳಿದರು. ಹೊನ್ನಾವರದಿಂದ ಮದ್ದಿನ ಫ಼ರ್ನಾಂಡಿಸ ಗರ್ನೆಲು ಇತ್ಯಾದಿಗಳನ್ನು ಕಳುಹಿಸಿದ. +ಪಿರೇರನ ಬ್ರ್ಯಾಸ್ ಬ್ಯಾಂಡಿನದೇ ಒಂದು ಪ್ರಮುಖ ಆಕರ್ಷಣೆಯಾಯಿತು. ಬ್ಯಾಂಡಿನವರ ಸಮವಸ್ತ್ರ. ವಿವಿಧ ಬಗೆಯ ಅವರ ವಾದ್ಯಗಳು. ಅವರು ಹೆಜ್ಜೆ ಹಾಕುವ ರೀತಿ ಊರ ಜನರಿಗೆಲ್ಲ ಬೆರಗು ಹುಟ್ಟಿಸಿತು. ವಧು ಬಿಳಿ ಉಡುಪು ಧರಿಸಿ ವರ ಬಿಳಿ ಪಂಜೆ, ಹಸಿರ ಕೋಟು ಧರಿಸಿ ಹೊಸ ಇಗರ್ಜಿಯಲ್ಲಿ ಮದುವೆಯಾದ ಮೊಟ್ಟ ಮೊದಲ ವಧು ವರರು ಎಂಬ ಗೌರವಕ್ಕೆ ಪಾತ್ರರಾದರು. ವರನ ಮನೆಯನ್ನು ತಾತ್ಕಾಲಿಕವಾಗಿ ಸಿಮೋನನ ಮನೆಗೆ ಬದಲಾಯಿಸಿದ್ದರಿಂದ ಮನೆಯಲ್ಲೂ ಕುಳೀತು ಬ್ಯಾಂಡ್ ಬಾರಿಸಿದರು. ಸಿಮೋನನ ಮನೆಗೆ ಬದಲಾಯಿಸಿದ್ದರಿಂದ ಬ್ಯಾಂಡಿನವರು ಸಿಮೋನನ ಮನೆಗೂ ಬಂದರು. +ಹಿಂಬದಿಯಲ್ಲಿ ಸಾಕ್ಷಿಗಳನ್ನು ನಿಲ್ಲಿಸಿಕೊಂಡು ಪಾದರಿ ಗೋನಸ್ವಾಲಿಸ್ “ನಿನಗೆ ಬಾಲ್ತಿದಾರ ಹಾಗೂ ಅನರಿತಾಳ ಮಗಳು ರೆಮೇಂದಿಯ ಕೈ ಹಿಡಿಯುವ ಮನಸ್ಸಿದೆಯೇ?” ಎಂದು ಬೋನಾಗೆ ಕೇಳಿದರು. ಹಾಗೆಯೇ ರೆಮೇಂದಿಯತ್ತ ತಿರುಗಿ “ನಿನಗೆ ಬರ್ನಾಡೆಟ ಎಂಬ ಯುವಕನ ಕೈ ಹಿಡಿಯುವ ಮನಸ್ಸಿದೆಯೇ?” ಎಂದು ಕೇಳಿದರು. ಬೋನ ತಟ್ಟನೆ ಹೌದು ಎಂದ. ಆದರೆ ರೆಮೇಂದಿ ಹೌದು ಎಂದು ಹೇಳಿದ್ದು ಸಾಕ್ಷಿದಾರರಿಗೆ ಕೇಳಿಸಲಿಲ್ಲ. “ಜೋರಾಗಿ ಹೇಳು”, “ಮತ್ತೊಮ್ಮೆ ಜೋರಾಗಿ ಹೇಳು” ಎಂದದ್ದು ಪಾದರಿ. ಎರಡು ಮೂರು ಬಾರಿ ಹೇಳಿದ ನಂತರ ರೆಮೇಂದಿ “ಹೌದು” ಎಂದದ್ದು ಇಗರ್ಜಿಗೆಲ್ಲಾ ಕೇಳಿಸಿತು. ಪಾದರಿ ವಧುವರರು ತಂದ ಉಂಗುರಗಳನ್ನು ಮಂತ್ರಿಸಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಹೇಳಿ ಕೈಹಿಡಿದ ಸತಿ-ಪತಿಯರನ್ನು ಪಿತಸುತ ಸಾಂತುವಿನ ಹೆಸರಿನಲ್ಲೇ ಆಶೀರ್ವದಿಸಿದರು. +“ದೇವರು ಒಂದು ಗೂಡಿಸಿದವರನ್ನು ಬೇರೆ ಯಾರೂ ಅಗಲಿಸದಿರಲಿ” ಎಂದು ದೇವರ ವಾಕ್ಯವನ್ನು ನುಡಿದರು. ಪೂಜೆಯ ನಡುವೆ ಶೆರಮಾಂವಂಗೆ ನಿಂತ ಅವರು- +ಸತಿ ಪತಿಗಳ ಕರ್ತವ್ಯದ ಬಗ್ಗೆ ನಾಲ್ಕು ಮಾತುಗಳನ್ನು ಹೇಳಿದರು. ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ದೇವರು ನಿಮಗೆ ಕೊಡುವ ಮಕ್ಕಳನ್ನು ಒಳ್ಳೆಯ ಕ್ರೀಸ್ತುವರನ್ನಾಗಿ ಮಾಡಿ. ನಮ್ಮ ಧರ್ಮದ ಕಟ್ಟಲೆಗಳನ್ನು ಎಂದೂ ಮೀರದೆ ಆದರ್ಶ ದಂಪತಿಗಳಾಗಿ ಎಂದರು. ಏಕೋ ಅವರ ದನಿ ನಡುಗುತ್ತಿತ್ತು. ನೆಂದರ ಸಂಬೇಲನ ಮಗ ಪಣಜಿಯ ತಮ್ಮ ಬಂಗಲೆ, ಬಾಗಿಲಲ್ಲಿ ಅಳುತ್ತ ನಿಂತ ದೃಶ್ಯ ನೆನಪಿಗೆ ಬಂದಿತು. ಗೇಣಗಲದ ಕಷ್ಠಿ ಕಟ್ಟುಕೊಂಡು ಮೈ ತುಂಬ ಕಜ್ಜಿಯಾಗಿ ಆತ ಮುಟ್ಟಲೂ ಅಸಹ್ಯವಾಗಿದ್ದ. ಆದರೆ ಈಗ? +“ಪ್ರಭುವೆ ನಿನಗೆ ಸ್ತುತಿಯಾಗಲಿ..ಮನುಷ್ಯನ ಬದುಕಿನಲ್ಲಿ ಈ ಪರಿವರ್ತನೆಯನ್ನು ತಂದೆಯಲ್ಲ…ನಿನಗೆ ನಮಸ್ಕಾರ..” +ಎಂದವರು ಮನಸ್ಸಿನಲ್ಲಿಯೇ ದೇವರಿಗೆ ವಂದಿಸಿದರು. +ಬೋನ ರೆಮೇಂದಿಯರು ಉಂಗುರ ವಿನಿಮಯ ಮಾಡಿಕೊಂಡು ಪಾದರಿಗಳ ಆಶೀರ್ವಾದ ಪಡೆಯುತ್ತಿರಲು ಇಗರ್ಜಿ ಗಂಟೆ ಢಣ್ ಢಣ್ ಎಂದಿತು. ಗರ್ನಾಲುಗಳು ಹಾರಿದವು. ಪಿರೇರ ಕ್ಲಾರಿಯನೆಟ ಅನ್ನು ಸಂಭ್ರಮದಿಂದ ಊದಿದ. +ಸಿಮೋನ ಮೊದಲ ಸಾಲಿನಲ್ಲಿ ಬೀಗಿನಿಂತ. ಪಾಸ್ಕೋಲ ಮೊಣಕಾಲೂರಿದವ ಎದ್ದು ನಿಂತ. ಬಾಲ್ತಿದಾರ ಕಣ್ಣೊರೆಸಿಕೊಂಡ. ಸನಬವಿಪೆದ್ರು, ಬಳ್ಕೂರಕಾರ, ಕೈತಾನ ಮೊದಲಾದವರು ಮದುವೆಯ ಕೆಲಸ ನೆನಪಿಗೆ ತಂದುಕೊಂಡು ನಿಧಾನವಾಗಿ ಇಗರ್ಜಿಯಿಂದ ಹೊರಬಿದ್ದರು. ಹೆಂಗಸರು ಸಡಗರ ಸಂಭ್ರಮದಲ್ಲಿ ಓಲಾಡಿದರು. ಸಾಂತಾಮೋರಿ ಸಂತ ಅಂತೋನಿಯ ಪ್ರತಿಮೆಯ ಕೆಳಗೆ ಕುಳಿತವಳು ಮಗಳ ಮದುವೆ ಹೀಗೇ ಮಾಡಬೇಕೆಂದಿದ್ದೆ..ಹಾಳಾದವಳು ಹೊಟ್ಟೆ ತಂದುಕೊಂಡು ಎಲ್ಲಿಗೋ ಓಡಿ ಹೋದಳಲ್ಲ ಎಂದು ಸೆರಗನ್ನು ಬಾಯಿಗೆ ತುರುಕಿಕೊಂಡು ಬಿಕ್ಕಿದಳು. ಸುತಾರಿ ಇನ್ರಾಸ ತನ್ನ ಮಗಳ ಮದುವೆಯನ್ನು ಹೀಗೆಯೇ ಮಾಡಬೇಕು ಅಂದು ಕೊಂಡ. ಇಗರ್ಜಿಯಲ್ಲಿ ನೆರೆದ ಯುವತಿಯರು ತಲೆಯ ಮೆಲಿನ ಏವನ್ನು ಸರಿಪಡಿಸಿಕೊಂಡು ಏನೋ ಕನಸು ಕಂಡು ನಾಚಿದರು. ಯುವಕರು ಇಗರ್ಜಿಯ ಕಂಬಗಳ ಮರೆಯಲ್ಲಿ ನಿಂತು ಬಗ್ಗಿ ಬಗ್ಗಿ ಹುಡುಗಿಯರನ್ನು ಕದ್ದು ಕದ್ದು ನೋಡಿದರು. ಇಂದು ಮಾತ್ರ ಮಿರೋಣ್ ಬೋನನ ಜಾಗ ಖಾಲಿಯಾಗಿತ್ತು. ಪಾದರಿಯ ಪ್ರಾರ್ಥನೆಯನ್ನು ಪೂರ್ಣಗೊಳಿಸುವ, ಕೀರ್ತನೆ ಹೇಳುವ ಕೆಲಸವನ್ನು ಇಂದು ಸಿಮೋನನ ಮೂರನೆ ಮಗ ರಾಬರ್ಟಿ ಮಾಡಿದ. ಬೋನಾ ಈಗಾಗಲೇ ಕೆಲ ತರುಣರನ್ನು ಸಿದ್ಧಪಡಿಸಿದ್ದು ಅವರು ಈತನ ಕೆಲಸವನ್ನು ಹೀಗೆ ಮುಂದುವರಿಸಿಕೊಂಡು ಹೋಗಬಲ್ಲವರಾಗಿದ್ದರು. +ಬೋನನ ಮದುವೆಯಿಂದಾಗಿ ಪಾದರಿ ಗೋನಸ್ವಾಲಿಸರಿಗೂ ತೊಂದರೆಯಾಯಿತು. ಅವರ ಊಟ, ತಿಂಡಿಯ ವ್ಯವಸ್ಥೆಯನ್ನು ಸಿಮೋನನ ಹೆಂಡತಿ ನೋಡಿ ಕೊಂಡಳು. ಸಿಮೋನನ ಮತ್ತೋರ್ವ ಮಗ ಫ಼ೆಡ್ಡಿ ಅವರಿಗೆ ಸ್ನಾನಕ್ಕೆ ನೀರು ಕಾಯಿಸಿಕೊಟ್ಟ. +ಮೂರ ನಾಲ್ಕು ದಿನಗಳ ನಂತರ ಬೋನ ರೆಮೇಂದಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದ. ಅವನಿಗೆ ಬಳುವಳಿಯಾಗಿ, ಮುಯ್ಯಿ ಎಂದು ಜನ ನೀಡಿದ ಪಾತ್ರೆ ಹಂಡೆ, ಪೆಟ್ಟಿಗೆ, ತಟ್ಟೆ, ಚೆಂಬು, ಹಿತ್ತಾಳೆ ಪಾತ್ರೆಗಳು ಬಲಗಾಲುದ್ದನ ಮನೆಯಲ್ಲಿಯೇ ಉಳಿದವು. +“ಅಲ್ಲಿ ಎಲ್ಲಿ ಇಡತೀಯ..ಸಣ್ಣ ಮನೆ ಅದು” ಎಂದಳು ಅವಳ ತಾಯಿ ಅನರೀತಾ. +* +* +* +ಪಾದರಿ ಗೋನಸ್ವಾಲಿಸ್ ಇಲ್ಲಿಗೆ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನುಳಿಯಲಿಲ್ಲ. ಇಗರ್ಜಿಯ ಕೆಲಸಕ್ಕೆಂದು ತಂದ ಕಲ್ಲು, ಮಣ್ಣು ಉಳಿದಿತ್ತು. ಕೆಲಸಗಾರರೂ ಇದ್ದರು. ಇಗರ್ಜಿ ಮಗ್ಗುಲಲ್ಲಿ ಸಿಮಿತ್ರಿಗೆಂದು ನೀಡಲಾದ ಜಾಗದ ಸುತ್ತ ಒಂದು ಗೋಡೆ ಕಟ್ಟಿಸಿದರು. ಸಿಮಿತ್ರಿಯ ನಡುವೆ ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿಸಲು ಒಂದು ಪೂಜಾ ವೇದಿಕೆಯನ್ನು ನಿರ್ಮಿಸಿದರು. ಈ ವೇದಿಕೆಯ ಹಿಂಬದಿಯಲ್ಲಿ ಎಂಟು ಅಡಿ ಎತ್ತರದ ಒಂದು ಶಿಲುಬೆ ಎದ್ದು ನಿಂತಿತು. ಹೀಗೆಯೇ ಇಗರ್ಜಿಯ ಮುಂದೆ ಮುಖ್ಯ ರಸ್ತೆಗೆ ಅಂಟಿಕೊಂಡಂತೆ ಒಂದು ಮಂಟಪವನ್ನು ಕಟ್ಟಿಸಿದರು. ಹತ್ತು ಹನ್ನೆರಡು ಅಡಿ ಎತ್ತರದ ನಿರ್ಮಾಣ. ಕೆಳಗೆ ಒಂದು ಕಟ್ಟೆ, ಅದರ ಮೇಲೆ ಗೋಪುರದ ಆಕೃತಿಯಲ್ಲಿ ಒಂದು ಮಂಟಪ. ಗಾಜಿನ ಬಾಗಿಲು. ಒಳಗೆ ಸಂತ ಜೋಸೆಫ಼ರ ಮೂರು ಅಡಿ ಎತ್ತರದ ಪ್ರತಿಮೆ. ಬಾಲ ಏಸುವನ್ನು ತೊಳುಗಳಲ್ಲಿಡಿದು ಎತ್ತಿಕೊಂಡು ನಿಂತಿರುವ ಸಂತರ ಮುಖದ ಮೇಲಿನ ಪ್ರಸನ್ನತೆ. +ಇಗರ್ಜಿಯಲ್ಲಿ ನಿಂತು ಪೂಜೆ ಪ್ರಾರ್ಥನೆ ಮುಗಿಸಿ ಹೋಗುವಾಗ ಒಂದೆರಡು ನಿಮಿಷ ಇಲ್ಲಿ ನಿಲ್ಲಿರಿ. ನಿಂತು ಒಂದು ಪರಲೋಕ ಮಂತ್ರ, ಎರಡು ನಮೋರಾಣೆ ಮಂತ್ರ ಹೇಳಿ. ಇದಕ್ಕೂ ನಿಮಗೆ ಬಿಡುವು ಇಲ್ಲವೆಂದರೆ ಪ್ರತಿಮೆಯ ಮುಂದೆ ನಿಂತು ಶಿಲುಬೆಯ ವಂದನೆ ಮಾಡಿ, ಸಂತ ಜೋಸೆಫ಼ರು ಈ ಊರಿನ ಪತ್ರೋನ. ನಿಮ್ಮನ್ನು, ನಿಮ್ಮ ಊರನ್ನು ರಕ್ಷಿಸಬೇಕಾದವರು ಅವರೆ. ಅವರನ್ನು ಗೌರವಿಸಿ, ಭಕ್ತಿಯಿಂದ ಕಾಣಿ. ಇತರ ಧರ್ಮಿಯರು ನಿಮ್ಮನ್ನು ಗಮನಿಸುವುದರಿಂದ ನಿಮ್ಮ ಭಕ್ತಿ ಸಹಜವಾಗಿರಲಿ. ಅವರಿಗೆ ಮಾರ್ಗದರ್ಶಕವಾಗಿರಲಿ ಎಂದರು ಪಾದರಿ ಗೋನಸ್ವಾಲಿಸ್. +ಇದರಿಂದಾಗಿ ಊರ ಜನ ಒಂದು ಅಭ್ಯಾಸವನ್ನು ಬೆಳೆಸಿಕೊಂಡರು. ಸಂತ ಜೋಸೇಫ಼ರ ಈ ಪ್ರತಿಮೆಗೆ ಮೇಣದ ಬತ್ತಿ ಕೊಡುವ, ಅಲ್ಲಿ ಇರಿಸಿರುವ ಗೋಲಕದಲ್ಲಿ ಹಣ ಹಾಕುವ, ಅಲ್ಲಿ ನಿಂತು ಕೈ ಮುಗಿಯುವ ಪರಿಪಾಠ ಬೆಳೆಯಿತು. +ಚಂದಾವರದ ಸಂತ ಅಂತೋನಿಯ ಹಾಗೆ, ಮಲ್ಕೋಡೀನ ಫ಼ಾತಿಮಾ ಮಾತೆಯ ಹಾಗೆ, ಮೈಸೂರಿನ ಸಂತ ಫ಼ಿಲೊಮೆನಳ ಹಾಗೆ, ಶಿವಸಾಗರದ ಸಂತ ಜೋಸೆಫ಼ರ ಹೆಸರು ಎಲ್ಲೆಲ್ಲಿಯೋ ಕೇಳಿ ಬರತೊಡಗಿತು. +ಈ ಸಂದರ್ಭದಲ್ಲಿಯೇ ಗೋವಾದ ಪ್ರಾವಿನ್ಶಿಯಲರ ಒಂದು ಪತ್ರ ಪಾದರಿ ಗೋನಸ್ವಾಲಿಸರಿಗೆ ಬಂದಿತು. +“ವಿಗಾರ, ನೀವು ಶಿವಸಾಗರದಲ್ಲಿ ಅಷ್ಟೆಲ್ಲ ಕೆಲಸ ಮಾಡಿದ್ದು ಕೇಳಿ ಸಂತೋಷವಾಯಿತು. ನಿಮ್ಮ ಸೇವೆ ಒಂದೇ ಕ್ಷೇತ್ರಕ್ಕೆ ಊರಿಗೆ ಮೀಸಲಾಗಿರಬಾರದು. ಕಾರಣ ನಿಮ್ಮನ್ನು ಶಿರಸಿಯ ಸಂತ ಅಂತೋನಿಯವರ ಇಗರ್ಜಿಗೆ ವರ್ಗ ಮಾಡುತ್ತಿದ್ದೇವೆ. ನಿಮಗೆ ವಯಸ್ಸಾಗಿರುವುದನ್ನು ಗಮನಿಸಿ ಶಿರಸಿ ಇಗರ್ಜಿಗೆ ಇಬ್ಬರು ಪಾದರಿಗಳನ್ನು ನೀಡುತ್ತಿದ್ದೇನೆ. ನೀವು ಅಲ್ಲಿ ಹಿರಿಯ ಪಾದರಿಗಳಾಗಿದ್ದು ಜನರಿಗೆ ಕ್ರಿಸ್ತನ ಪ್ರೀತಿ, ದಯೆ, ಭಕ್ತಿಯನ್ನು ತಿಳಿಸಿಕೊಡಬೇಕು…ನಿಮ್ಮ ಜಾಗಕ್ಕೆ ಭಟ್ಕಳದ ಪಾದರಿ ಮಸ್ಕರಿನಾಸರನ್ನು ಹಾಕಿದ್ದೇನೆ..” +ನಿತ್ಯ ಹೋಗಿ ಅಂಚೆ ಕಛೇರಿಯಿಂದ ಪಾದರಿಗಳ ಟಪಾಲು ತರುವುದು ಸಿಮೋನನ ಮಗ ಫ಼ೆಡ್ಡಿ, ಕೈತಾನನ ಮಗ ದುಮಿಂಗ, ಮಿಂಗೇಲಿ ಮಗ ಜಾನಿ ಇವರ ಕೆಲಸ. ನಿತ್ಯ ಅವರಿಗೆ ಟಪಾಲು ಇರುತ್ತಿತ್ತು. ಹೊರ ದೇಶಗಳಿಂದಲೂ ಪತ್ರಗಳು ಬರುತ್ತಿದ್ದವು. ಹೊರ ದೇಶದ ಪತ್ರಗಳ ಮೇಲೆ ಹಚ್ಚಿದ ಅಂಚೆ ಚೀಟಿಗಳನ್ನು ಕಲೆ ಹಾಕುವ ಹುಚ್ಚು ಈ ಹುಡುಗರಿಗೆ. ಈ ಅಂಚೆ ಚೀಟಿ ಆಸೆಗಾಗಿ ಟಪಾಲು ತರುವ ಕೆಲಸ ಮಾಡುತ್ತಿದ್ದರು. ಜತೆಗೆ ಪಾದರಿಯ ಸೇವೆ ಮಾಡುವುದೆಂದರೆ ಅವರಿಗೆ ಹುಮ್ಮಸ್ಸು ಹುರುಪು. +ಅಂದು ಈ ಹುಡುಗರು ತಂದ ಪತ್ರಗಳ ರಾಶಿಯಲ್ಲಿ ಪ್ರಾವಿನ್ಶಿಯಲ್ ರ ಪತ್ರವೂ ಇತ್ತು. +ಈ ಪತ್ರವನ್ನು ಓದಿ ಬದಿಗಿಟ್ಟರು. ಹಾಗೆಯೇ ಉಳಿದ ಪತ್ರಗಳ ಮೇಲೆ ಕಣ್ಣು ಆಡಿಸಿದರು. ತಮ್ಮ ಜೊತೆಯಲ್ಲಿ ಓದಿದ ಓರ್ವ ಮಿತ್ರ ಓರ್ವ ಉನ್ನತ ಹುದ್ದೆಗೆ ಏರಿದ್ದ ಅವನ ಪತ್ರ; ಇನ್ನೋರ್ವನ ಮಗಳ ಮದುವೆಯ ಕರೆಯೋಲೆ, ಮೂರನೆಯವ ಇಟಲಿಯ ಬಿಷಪ್ ಆಗಿದ್ದ. ಅವನ ಪಟ್ಟಾಧಿಕಾರದ ಕರೆಯೋಲೆ. ಇನ್ನೂ ಕೆಲ ಪತ್ರಗಳು. ಎಲ್ಲ ಪತ್ರಗಳನ್ನು ಓದಿ ನೋಡಿ, ಸ್ಟಾಂಪ್ ಇರುವ ಕವರುಗಳನ್ನು ಜಾನಿ, ಡುಮಿಂಗ, ಫ಼ೆಡ್ಡಿಯವರಿಗೆ ಹಂಚಿ- +“..ಹೋಗಿ ಜಗಳವಾಡಬೇಡಿ” +ಎಂದು ಹೇಳಿ ಮತ್ತೊಮ್ಮೆ ಪ್ರಾವಿನ್ಶಿಯಲ್ ಪತ್ರವ್ನ್ನು ಕೈಗೆತ್ತಿಕೊಂಡರು ಪಾದರಿ ಗೋನಸ್ವಾಲಿಸ್. +ಶಿವಸಾಗರದ ಋಣ ಮುಗಿಯಿತು. ಇನ್ನು ಇಲ್ಲಿಂದ ಹೊರಡಬೇಕು. ಶಿರಸಿ ಹೊಸದೇನಲ್ಲ. ಬಸ್ಸು ಬೇರೆ ಇದೆ. ಶಿವಸಾಗರದ ಹಾಗೆ ಇಗರ್ಜಿಯ ಪಾದರಿ ಇಲ್ಲದ ಊರಲ್ಲ. ಅಲ್ಲಿ ಬಹಳ ವರ್ಷಗಳಿಂದ ಕ್ರೀಸ್ತುವರಿದ್ದಾರೆ. ಇನ್ನೂರು ಮುನ್ನೂರು ಮನೆಗಳಿರಬಹುದು. ಸುತ್ತಮುತ್ತಲು ಹಳ್ಳಿಗಳಲ್ಲೂ ಕ್ರೀಸ್ತುವರಿದ್ದಾರೆ. ಇಲ್ಲಿ ಎಲ್ಲವನ್ನೂ ಹೊಸದಾಗಿ ಪ್ರಾರಂಭಿಸಿದೆ. ಅಲ್ಲಿ ಹಾಗಲ್ಲ, ಯಾರೋ ಪ್ರಾರಂಭಿಸಿರುವುದನ್ನು ಮುಂದುವರೆಸಬೇಕು ಅಷ್ಟೇ. +ಇಲ್ಲಿ ತಾವು ಮಾಡಿದ ಕೆಲಸದ ಬಗ್ಗೆ ತಮಗೆ ತೃಪ್ತಿ ಇದೆ. ಮತ್ತೆ ಇಲ್ಲಿ ಉಳಿಯುವ ಮನಸ್ಸಿಲ್ಲ. ಆದರೆ ಒಂದು ಕೆಲಸ ಆಗಲಿಲ್ಲ. ಬೋನನಿಗೆ ಒಂದು ದಾರಿ ತೋರಿಸಬೇಕಿತ್ತು. ರೆಮೇಂದಿ ಆರು ತಿಂಗಳ ಗರ್ಭಿಣಿ ಈಗ. ಮೊನ್ನೆ ಅವಳ ತಾಯಿ ತಂದೆ ಬಂದು ಕರೆದೊಯ್ದರು. ಇನ್ನು ಕೆಲವೇ ತಿಂಗಳಲ್ಲಿ ಬೋನ ತಂದೆಯಾಗುತ್ತಾನೆ. ಅವನನ್ನು ಶಿರಸಿಗೆ ಕರೆದೊಯ್ಯುವುದು ಸೂಕ್ತವಲ್ಲ. ಈ ಗಂಡ ಹೆಂಡತಿ ಮಗುವನ್ನು ಸಾಕುವುದು ತಮಗೆ ಕಷ್ಟವಾಗುತ್ತದೆ. ಬೋನ ಕೂಡ ಮನೆ ನೋಡಿಕೊಂಡು ತಮ್ಮ ಸೇವೆ ಮಾಡಲಾರ. ಅಲ್ಲದೆ ಶಿರಸಿಯಲ್ಲಿ ಯಾರೋ ವಯಸ್ಸಾದ ಬಟ್ಲರ್ ಅವನ ಹೆಂಡತಿ ಇದ್ದಾರೆಂದು ಕೇಳಿದೆ. ಅವರಿಗೂ ತೊಂದರೆಯಾಗುತ್ತದೆ. ಬೋನನನ್ನು ಇಲ್ಲಿಯೇ ಬಿಟ್ಟು ಹೋಗುವುದಾದರೆ ಅವನಿಗೊಂದು ದಾರಿ ತೋರಿಸಬೇಕಲ್ಲ. +ಅವನಿಗಾಗಿ ಏನಾದರೂ ಮಾಡುವ ವಿಚಾರವಿತ್ತು. ಒಂದು ಅಂಗಡಿ ಇರಿಸಿಕೊಡುವ ವಿಚಾರ ಮಾಡಿದೆ. ಎಲ್ಲಿಯಾದರೂ ಕೆಲಸ ಹುಡುಕಿ ಕೊಡೋಣ ಎಂದು ಯೋಚಿಸಿದೆ. ತನಗೆ ತೊಂದರೆಯಾಗುತ್ತದೆ ಎಂದು ಹಿಂದೇಟು ಹೊಡೆದೆ. ಈಗ ಬೇರೆ ದಾರಿ ಇಲ್ಲ ಏನಾದರೂ ಮಾಡಲೇಬೇಕು. +ಪಾದರಿ ಗೋನಸ್ವಾಲಿಸ ಈ ವಿಚಾರವನ್ನು ತಲೆಯಲ್ಲಿ ಹಾಕಿಕೊಂಡು ಯೋಚಿಸುತ್ತಿರಬೇಕಾದರೇನೆ ಅವರ ವರ್ಗಾವಣೆಯ ವಿಷಯ ಕೇರಿಗೆಲ್ಲ ತಿಳಿದು ಹೋಯಿತು. +ಗುರ್ಕಾರ ಸಿಮೋನ ಓಡಿ ಬಂದ, ಪಾಸ್ಕೋಲ ಮೇಸ್ತ್ರಿ, ಬಾಲ್ತಿದಾರ ಇನಾಸ, ಹೊಸದಾಗಿ ಶಿವಸಾಗರದಲ್ಲಿ ಮನೆ ಮಾಡಿದ ಹಸಿಮಡಲು ಪತ್ರೋಲ ದೇಡಮಂಡೆ ಸಜಾಂವ, ಶಿರಾಲಿಯ ಲಿಯಾಂವಂ, ಭಟ್ಕಳದ ಸಾನಪುತ್ತು ಡಾ.ರೇಗೋ, ಜಾನ ಡಯಾಸ ಚಾರ್ಲಿ ಕೂಡ ಬಾರದಿರಲಿಲ್ಲ. +“ಪದ್ರಾಬ….ನೀವು ಊರು ಬಿಟ್ಟು ಹೋಗಬಾರದು” ಎಂದರು ಇವರು. +“ಛೇ ಛೇ! ನಾನು ಪ್ರಾವಿನ್ಶಿಯಲ್ ಆದೇಶವನ್ನು ಮೀರಲಾರೆ…ಅವರು ನಮಗೆಲ್ಲ ಮಣಿಯಾರಿ..ಅವರ ಮಾತನ್ನ ಮೀರುವುದೆಂದರೆ ದೇವರ ವಾಕ್ಯವನ್ನು ಮೀರಿದ ಹಾಗೆ”. +“ನಾವು ಅವರಲ್ಲಿಗೆ ಹೋಗಿ ಬರತೀವಿ ಪದ್ರಾಬ..” +“ಬೇಡ ಬೇಡ…ಅದೊಂದು ಕೆಲಸ ಮಾಡಬೇಡಿ. ಇಲ್ಲಿ ನಾನು ಮಾಡಬೇಕಾದ್ದು ಮುಗಿದಿದೆ..ನನ್ನನ್ನ ಕಳಿಸಿಕೊಡಿ..” +“ಪದ್ರಾಬಾ..” ಅವರೆಲ್ಲರ ಮುಖಗಳು ಬಾಡಿದವು. ಬೋನ ಒಳ ಬಾಗಿಲಲ್ಲಿ ನಿಂತು ದೀನನಾಗಿ ನೋಡಿದ. +“ಮಸ್ಕರಿನಾಸ ಬಂದ ಕೂಡಲೇ ನಾನು ಹೊರಡ್ತೀನಿ..ನೀವು ಯಾರೂ ಬೇಸರ ಪಡಬಾರದು..” ಎಂದರು ಪಾದರಿ ವಿನಯದಿಂದ. +ಬಂದವರೆಲ್ಲ ಭಾರವಾದ ಹೃದಯಗಳನ್ನು ಹೊತ್ತು ತಿರುಗಿ ಹೋದರು. ಆದರೆ ಬಲಗಾಲುದ್ದ ಬಾಲ್ತಿದಾರ ಓರ್ವನೇ ಹಿಂದೆ ಉಳಿದ. +“ಏನು ಬಾಲ್ತಿದಾರ” +“ಒಂದು ವಿಷಯ ಪದ್ರಾಬ” +“ಏನು ಹೇಳಿ..” +“ಇನ್ನು ನನ್ನ ಅಳಿಯ ಮಗಳನ್ನ ಏನು ಮಾಡತೀರ ಪದ್ರಾಬ..” +“ಏನೂ ಯೋಚನೆ ಮಾಡಿಲ್ಲ..ಆದರೆ ಅವರನ್ನ ಇಲ್ಲಿ ಬಿಟ್ಟು ಹೋಗೋದೆ ಸೂಕ್ತ ಎನಿಸುತ್ತೆ ನನಗೆ..” +“ನನ್ನದೊಂದು ವಿಚಾರ ಇದೆ..” +“ಏನು ಹೇಳಿ..” +“ನನಗೂ ವಯಸ್ಸಾಯ್ತು..ಕಣ್ಣು ಕಾಣೋದಿಲ್ಲ..ಈ ಕಾಲು ಈಗೀಗ ತುಂಬಾ ನೋವು ಕೊಡುತ್ತೆ…ನನ್ನ ಅಂಗಡೀನ ಅಳಿಯನಿಗೇನೆ ಬಿಟ್ಟು ಕೊಡೋಣ ಅಂತ..ಅವನು ಇಲ್ಲಿ ಕುಳಿತು ವ್ಯಾಪಾರ ಮಾಡಿದರೆ ಸಾಕು..ಬಟ್ಟೆ ಹೊಲೀಲಿಕ್ಕೆ ಬೇರೆ ಜನ ಇದಾರೆ..” +ಪಾದರಿ ಗೋನಸ್ವಾಲಿಸರಿಗೆ ಸಂತಸವಾಯಿತು. ದೇವರು ಒಂದಲ್ಲಾ ಒಂದು ದಾರಿ ತೋರಿಸುತ್ತಾನೆ ಎಂಬ ವಿಶ್ವಾಸ ಅವರಿಗಿತ್ತು. +“ಬೋನನ ಅಭಿಪ್ರಾಯ ಹೇಗೆ?” +“ನಿಮ್ಮನ್ನ ಬಿಡಲಿಕ್ಕೆ ಅವನಿಗೂ ಮನಸ್ಸಿಲ್ಲ..ಆದರೂ ಶಿರಸಿನಲ್ಲಿ ಬಟ್ಲರ್ ಇದಾರಂತಲ್ಲ..ನಾನು ಅಲ್ಲಿಗೆ ಹೋಗಿ ಏನು ಮಾಡಲಿ ಅಂತಾನೆ..” +“ನೀವು ಹೇಳಿದ ಹಾಗೇನೆ ಮಾಡಿ ನನಗೂ ಸಂತೋಷ..ನಾನು ಅವನಿಗೆ ಅಂತ ಒಂದಿಷ್ಟು ಹಣ ತೆಗೆದು ಇಟ್ಟಿದೀನಿ…ಅದರಲ್ಲಿ ಅಂಗಡೀನ ಅಭಿವೃದ್ದಿ ಪಡಿಸಿಕೊಳ್ಳಲಿ..ಮುಖ್ಯ ಅವನು ಸುಖವಾಗಿ ಸಂತೋಷವಾಗಿ ಇರಬೇಕು..” ಎಂದರು ಪಾದರಿ. ಈ ಸಮಸ್ಯೆ ಸುಲಭವಾಗಿ ಬಗೆ ಹರಿಯಿತಲ್ಲ ಎಂಬ ಸಂತಸದಲ್ಲಿ. +* +* +* +ಸಂಜೆಯ ಐದು ಗಂಟೆಯಾಗಿರಬೇಕು. ಸರಕಾರಿ ಶಾಲೆ ಬಿಟ್ಟು ಹುಡುಗರೆಲ್ಲ ಪಾಟಿಚೀಲ ಸಮೇತ ಮನೆಗಳಿಗೆ ಬರುತ್ತಿದ್ದಾರೆ. ತಟ್ಟನೆ ಇಗರ್ಜಿ ಗಂಟೆ ಹೊಡೆದುಕೊಳ್ಳುತ್ತದೆ. ಏನು ಇದ್ದಕ್ಕಿದ್ದ ಹಾಗೆ ಗಂಟೆ ಸದ್ದು ಮಾಡುತ್ತಿದೆ ಎಂದು ಮನೆಯಲ್ಲಿಯ ಹೆಂಗಸರು ಹೊರಬರುತ್ತಿರುವಾಗ, ಶಾಲೆಯಿಂದ ಇಗರ್ಜಿಗೆ ಹೋಗಿ ಅಲ್ಲೊಂದು ಪ್ರಾರ್ಥನೆ ಸಲ್ಲಿಸಿ ಮನೆಗೆ ಬರುವ ಇಗರ್ಜಿ ಶಾಲೆ ಹುಡುಗರು.. +“ನೇವ ಪದ್ರಾಬ ಈಲೋ…ನೇವ ಪದ್ರಾಬ ಈಲೊ” (ಹೊಸ ಪಾದರಿಗಳು ಬಂದರು, ಹೊಸ ಪಾದರಿಗಳು ಬಂದರು) ಎಂದು ಕೂಗುತ್ತಾ ಬಂದರು. +“ಹೌದಾ..ಹೌದಾ” ಎಂದು ಕೇರಿಯ ಜನರೆಲ್ಲ ಗಡಬಡಿಸಿದರು. +ಗುರ್ಕಾರ ಸಿಮೋನ ಯಾವುದೋ ಕೆಲಸಕ್ಕೆಂದು ಮನೆಗೆ ಬಂದವ ಮಕ್ಕಳ ಕೂಗು ಕೇಳಿ ಕೊಳೆಯಾದ ಅಂಗಿ ಕಳಚಿ ಬೇರೊಂದು ಅಂಗಿಯ ತೊಳಿನೊಳಗೆ ತೋಳು ತೂರಿಸುತ್ತ- +“ಕೇಳಸ್ತೇನೆ ಹೊಸ ಪಾದರಿ ಬಂದರಂತೆ…ನಾನು ಇಗರ್ಜಿ ಹತ್ತಿರ ಹೋಗಿ ಬರತೇನೆ..” ಎಂದು ಹೇಳಿ ರಸ್ತೆಗೆ ಇಳಿದ. +* +* +* +ಪಾದರಿ ಮಸ್ಕರಿನಾಸ ಕುಳ್ಳಗಿದ್ದರು. ಬಣ್ಣ ಕಪ್ಪು ಕೆಂಪು. ಸಣ್ಣ ಕಣ್ಣು. ಮೀಸೆ ಗಡ್ಡ ಮುಖದ ತುಂಬ. ಹೀಗಾಗಿ ಅವರು ನಗುವುದೂ ತಿಳಿಯುತ್ತಿರಲಿಲ್ಲ. ಪುಟು ಪುಟು ನಡೆದುಕೊಂಡು ಇಗರ್ಜಿ ತುಂಬಾ ಓಡಿಯಾಡುತ್ತಿದ್ದರು. +“ಇವರು ಗುರ್ಕಾರ ಸಿಮೋನ” +ಎಂದು ಗೋನಸ್ವಾಲಿಸರು ಸಿಮೋನನ ಪರಿಚಯ ಮಾಡಿಕೊಟ್ಟಾಗ- +“ಹಾಂ” ಎಂದು ಸಣ್ಣಗೆ ಚೀರಿ ಸಿಮೋನನ ಮುಖ ನೋಡಿದರು. +ಇವರು ಇಗರ್ಜಿ ಹಬ್ಬಕ್ಕೆ ಬಂದ ಗುರುತು ಸಿಕ್ಕಿತು ಸಿಮೋನನಿಗೆ. +ಕೈಗಾಡಿಯಲ್ಲಿ ಹೊಸ ಪಾದರಿ ತುಂಬಿ ತಂದ ಸಾಮಾನನ್ನು ಇಳಿಸುತ್ತಿದ್ದ ಬೋನನಿಗೆ ಸಹಾಯ ಮಾಡಲು ಸಿಮೋನ ಓಡಿದ. ಹೊಸ ಪಾದರಿ ಜೊತೆ ಬಂದ ಅವರ ಬಟ್ಲರ್ ಫ಼ರಾಸ್ಕ ಸಾಮಾನು ಇಳಿಸತೊಡಗಿದ್ದ. +ಏಕೋ ಆ ವಾತಾವರಣವೇ ಉಸಿರು ಬಿಗಿ ಹಿಡಿಯುವಂತೆ ಮಾಡಿತು. ಬೋನನ ಮುಖ ದೇವರ ಪೀಠದ ಮೇಲಿನ ಹೂದಾನಿಯಲ್ಲಿಯ ಹೂವು ಭಾನುವಾರ ನಳನಳಿಸುತ್ತಿದ್ದುದು ಮಂಗಳವಾರ ಬುಧುವಾರದ ಹೊತ್ತಿಗೆ ಸೊರಗಿ ಒಣಗಿ ಜೋತು ಬಿದ್ದಂತೆ ಆಗಿತ್ತು. +“ಈಗ ಪಾದರಿ ಒಬ್ಬರನ್ನೇ ಕಳುಹಿಸಬೇಕಲ್ಲ” +ಎಂದಾತ ತೊದಲಿದ. +ಪಾದರಿ ಗೋನಸ್ವಾಲಿಸರ ಸಮಸ್ತ ಕೆಲಸಗಳನ್ನೂ ಇವನೊಬ್ಬನೇ ಮಾಡಿಕೊಂಡು ಬಂದಿದ್ದ. ಅದು ಒಂದೆರಡು ವರ್ಷಗಳಿಂದಲ್ಲ. ಗೋವ, ಕಾರವಾರ, ಹೊನ್ನಾವರ ಈಗ ಶಿವಸಾಗರ-ಇಲ್ಲೆಲ್ಲ ಆತ ಅವರ ನೆರಳಾಗಿದ್ದ. ಒಂದೇ ಒಂದು ಬಾರಿ ಅವರು ಅದು ಸರಿಯಾಗಲಿಲ್ಲ, ಇದು ಸಿಗಲಿಲ್ಲ ಎಂದು ಗೊಣಗಲಿಲ್ಲ. ಪ್ರಾರಂಭದಲ್ಲಿ ಪಣಜಿಯ ಪಾದರಿಗಳ ಬಂಗಲೆಯ ಹಿಂದೆಯೇ ಕೂಜ್ನ ಇತ್ತು. ಅಲ್ಲೊಬ್ಬ ಕುಜ್ನೇರ. ಅವನಿಂದ ತಾನು ಎಲ್ಲ ಕಲಿತ. ಗೋನಸ್ವಾಲಿಸ ಕೂಡ ತನಗೆ ಕಲಿಸಿಕೊಟ್ಟರು. ಕೊನೆ ಕೊನೆಗೆ ಗೋನಸಾಲಿಸ್ವರ ಕೆಲಸ ತಾನೊಬ್ಬನೇ ಮಾಡಿಕೊಂಡು ಬರತೊಡಗಿದೆ. +ಅವರಿಗೆ ಬ್ರೆಡ್ ಜಾಮ ಮಾಡಿ ಕೊಡುವ, ಟೀ ಮಿಕ್ಸ್ ಮಾಡಿಕೊಡುವ, ಮೇಜಿನ ಮೇಲೆ ಅವರ ಊಟ ತಂದಿರಿಸುವ ಎಲ್ಲ ಕೆಲಸಗಳನ್ನು ತಾನು ಮಾಡುತ್ತಿದ್ದೆ. ಅವರು ಪೂಜೆಗೆ ಸಿದ್ದವಾಗುವಾಗ ತಾನು ಅಲ್ಲಿರಬೇಕು. ಅವರ ಆಲ್ಬ, ಗರ್ಡಲ್, ಮಾನಿಪಲ್, ಸ್ತೋಲ ಚಾಸುಬಲ ಬಿರೆಟ್ಟಾ ಇತ್ಯಾದಿಗಳನ್ನು ತೊಡಲು ನಾನೇ ಹಿಂದೆ ನಿಂತು ಸಹಾಯ ಮಾಡಬೇಕು. ನಂತರ ಚಾಲಿಸ, ಪಾಟೆನ, ಹೋಸ್ಟಪಾಲ ಮೊದಲಾದವುಗಳನ್ನು ಅವರ ಕೈಗೆ ಕೊಡಬೇಕು.ಸತ್ ಪ್ರಸಾದ ತುಂಬಿದ ಸಿಬೋರಿಯಂ ಅನ್ನು ಕೂಡ ತಾನೆ ಸಿದ್ಧಮಾಡಿ ಇರಿಸಬೇಕು. ತಾನು ಸ್ಯಾಕ್ರಸ್ಟಿಯಲ್ಲಿದ್ದೇನೆ ಎಂದರೆ ಅವರು ನಿಶ್ಚಿಂತರು. ಬಂಗಲೆಯಲ್ಲಿ ಕೂಡ ಕಾಲ ಕಾಲಕ್ಕೆ ಅವರ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದೆ. ನಿತ್ಯ ಮಾಂಸ, ಶುಕ್ರವಾರ ಮಾಂಸ ನಿಶಿದ್ಧಿ ದಿನವಾದ್ದರಿಂದ ಅಂದು ಮೀನು. ತಪಸ್ಸಿನ ಕಾಲದಲ್ಲಿ ಅವರು ಉಪವಾಸ ಆಚರಿಸುತ್ತಿದ್ದರು. ಆಗ ಒಂದು ಹೊತ್ತು ಗಂಜಿ. ಅವರ ಚಟುವಟಿಕೆಯ ಬದುಕಿಗೆ ನಾನು ಚಾಲನೆ ನೀಡುತ್ತಿದ್ದೆ. +ಮುಂದೆ ಅವರು ಏನು ಮಾಡುತ್ತಾರೋ? ಏಷ್ಟು ತೊಂದರೆ ಅನುಭವಿಸುತ್ತಾರೋ? +ಬೋನ ಕಣ್ಣೊರಿಸಿಕೊಂಡ. +ಆ ಪತ್ರ ಬಂದ ದಿನದಿಂದ ಅವನ ವ್ಯಥೆ ಇದೇ ಆಗಿತ್ತು. +“ಪದ್ರಾಬ..ಏನಾದರೂ ಮಾಡಿದರಾಯ್ತು…ನಾನು ನಿಮ್ಮ ಜತೆ ಬಂದು ಇರುತ್ತೇನೆ” ಎಂದಿದ್ದ. +“ದುಡುಕಬಾರದು ಬೋನ…ಹೇಗೋ ಎಲ್ಲ ನಡೆದು ಹೋಗುತ್ತದೆ..ನೀನು ಇಲ್ಲೇ ಇರು..” ಎಂದಿದ್ದರು ಅವರು. +“ನಾನು ನಂಬಿರುವ ದೇವರು ಒಂದು ದಾರಿ ತೋರಿಸುತ್ತಾನೆ..ಬಂದು ಹೋಗು ಶಿರಸಿಗೆ..” ಎಂದು ಇವನಿಗೆ ಸಾಂತ್ವನ ಹೇಳಿದ್ದರು. +ಬೋನ ಸಿಮೋನ ಹೊಸ ಪಾದರಿಗಳ ಸಾಮಾನನ್ನು ಇಳಿಸಿದರು. ಸಿಮೋನ ಹೊರಗೆ ನಿಂತಾಗ ಪಾದರಿ ಗೋನಸ್ವಾಲಿಸ್ ಹೊರಬಂದವರು.. +“ಸಿಮೋನ” ಎಂದರು. +“ಪದ್ರಾಬಾ..” +“ನಾಳೆ ಬೆಳಿಗ್ಗೆ ಈ ಇಗರ್ಜಿಯಲ್ಲಿ ನನ್ನ ಕೊನೆಯ ಪೂಜೆ ಸಲ್ಲಿಸಿ..ಏಳುವರೆ ಬಸ್ಸಿಗೆ ನಾನು ಹೊರಡತೇನೆ..ನಿನ್ನ ಗಾಡಿಯಲ್ಲಿ ನನ್ನ ಸಾಮಾನುಗಳನ್ನು ಬಸ್ ಸ್ಟ್ಯಾಂಡಿನವರೆಗೆ ತಂದು ಹಾಕುವ ವ್ಯವಸ್ಥೆ ಮಾಡು..” ಎಂದರು ಗೋನಸ್ವಾಲಿಸ್. +ಸಿಮೋನ ಏನೂ ನುಡಿಯಲಿಲ್ಲ. ಅವನ ತುಟಿಗಳು ಅಂಟಿಕೊಂಡಿದ್ದವು. ಗಂಟಲ ನರ ಬಿಗಿದುಕೊಂಡಿತ್ತು. +ಪಾದರಿ ಗೋನಸ್ವಾಲಿಸ ಊರ ಜನರ ಮೇಲೆ ಬೀರಿದ ಪ್ರಭಾವ ಎಂತಹದು ಎಂಬುದನ್ನು ಬಹಳ ಹತ್ತಿರದಿಂದ ನೋಡಿದವ ಸಿಮೋನ. +ಪಾದರಿ ಗೋನಸ್ವಾಲಿಸರಿಗೆ ಸಿಟ್ಟು ಬರುತ್ತಿತ್ತು. ಅದು ಒಂದೇ ಕಾರಣಕ್ಕಾಗಿ. ದೇವರ ಬಗ್ಗೆ ಗೌರವ, ಭಕ್ತಿ ಇರಿಸಿಕೊಳ್ಳದವರನ್ನು, ಇಗರ್ಜಿಗೆ ಬಾರದವರನ್ನು ಅವರು ಎಂದೂ ಕ್ಷಮಿಸುತ್ತಿರಲಿಲ್ಲ. ತಟ್ಟನೆ ಬೆತ್ತವನ್ನು ಸೆಳೆದು ಹೊಡೆಯಲು ಕೂಡ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದರೆ ಇದರ ಪರಿಣಾಮ ವಿಪರೀತವಾದಾಗ ನೊಂದುಕೊಳ್ಳುತಿದ್ದರು. +ಭಟ್ಕಳದ ಗ್ಯಾಬ್ರಿಯೆಲನಿಗೆ ಅವರು ಮೂರು ನಾಲ್ಕು ಬಾರಿ ಭಾನುವಾರಗಳಂದು ಪೂಜೆಗೆ ಬರುವಂತೆ ಹೇಳಿದ್ದರು. ಆತ ಕೂಡ “ಬರತೀನಿ ಪದ್ರಾಬ” “ಬರತೀನಿ ಪದ್ರಾಬ” ಎಂದು ಹೇಳುತ್ತಿದ್ದನಲ್ಲದೆ, ಪೂಜೆಗೆ ಬರುತ್ತಿರಲಿಲ್ಲ. ಒಂದು ದಿನ ಬಾಚಿ ಹೆಗಲಿಗೇರಿಸಿಕೊಂಡು ಹೋಗುವಾಗ ಪಾದರಿಗಳ ಕೈಗೆ ಸಿಕ್ಕಿಬಿದ್ದ. ಅವನ ಹೆಗಲ ಮೇಲಿನ ಬಾಚಿ ಕಿತ್ತು ಎಸೆದು ಅವನ ಬೆತ್ತಲೆ ಕಾಲು ತೊಡೆಗಳ ಮೇಲೆ ಚರ್ಮ ಕಿತ್ತು ಬರುವಂತೆ ಪಾದರಿ ಹೊಡೆದರು. ಆ ನೋವಿನಲ್ಲೇ ಆತ ಇಗರ್ಜಿಗೂ ಬಂದ. ಸಂಜೆ ಅವನ ಕಾಲಿನ ಗಾಯಗಳು ವೃಣವಾಗಿ ಬಾತುಕೊಂಡಿವೆ ಎಂಬುದು ಗೊತ್ತಾಗಿ ಪಾದರಿ ಅವನ ಮನೆಗೆ ಓಡಿದರು. +“ಗಾಬ್ರು..ಗಾಬ್ರೆ..” ಎಂದು ಅವನ ಕೈ ಹಿಡಿದು, ಮುಖ ತಡವಿ ತಾವೇ ಗಾಯಗಳಿಗೆ ಔಷಧಿ ಹಚ್ಚಿದರು. ನಾಲ್ಕು ದಿನ ನಿತ್ಯ ಗಾಬ್ರಿಯೆಲ್ಲನನ್ನು ಕಂಡು ಬಂದರು. +“ನನಗೆ ಸಿಟ್ಟು ತಡೆಯಲಾಗಲಿಲ್ಲ” ಎಂದು ಅವನ ಎದುರು ಹೇಳಿದಾಗ ಗಾಬ್ರಿಯೆಲ್ +“ನನ್ನದೇ ತಪ್ಪು ಪದ್ರಾಬ. ನಾನು ಇಗರ್ಜಿಗೆ ಬರುವುದನ್ನು ತಪ್ಪಿಸಿಕೊಳ್ಳಬಾರದಿತ್ತು..” ಎಂದ. +ಪಾದರಿ ಗೋನಸ್ವಾಲಿಸರ ಈ ಸಿಟ್ಟು ಕೋಪವನ್ನು ಜನ ಸಹಿಸಿಕೊಂಡಿದ್ದರು. “ರಾಗಿಷ್ಟ ಪಾದರಿ” ಎಂದು ಅವರನ್ನು ಕರೆದರು. ಅವರ ’ದೈವ ಭಕ್ತಿ, ಪ್ರೀತಿ, ಸ್ನೇಹ ’ ಎಲ್ಲರನ್ನೂ ಕಟ್ಟಿಹಾಕಿತ್ತು. +ಹೊರಗೆ ಉಗ್ರವಾಗಿ ಕಾಣುತ್ತಿದ್ದ ಅವರ ವ್ಯಕ್ತಿತ್ವ ದೇವರ ಪೀಠದ ಮೇಲೆ ಭಕ್ತಿಯ ಪ್ರವಾಹದಲ್ಲಿ ತೇಲಿ ಹೋಗುತ್ತಿತ್ತು. ಅವರು ದೇವರನ್ನು ಸ್ತುತಿಸುವಾಗ, ಜಪ ಹೇಳಿ ಕೊಡುವಾಗ, ದಿವ್ಯ ಪ್ರಸಾದವನ್ನು ಎತ್ತಿ ಎತ್ತಿ ಹಿಡಿದಾಗ, ದಿವ್ಯ ಪ್ರಸಾದವನ್ನು ಹಂಚುವಾಗ, ಪ್ರವಚನ ನೀಡುವಾಗ ದೇದಿಪ್ಯಮಾನವಾಗಿ ಕಂಗೊಳಿಸುತ್ತಿದ್ದರು. ಅವರ ದನಿ, ಹಾವ ಭಾವಗಳಲ್ಲಿ, ಕಣ್ಣುಗಳಲ್ಲಿ ಅವರು ಆಶೀರ್ವದಿಸುವಾಗ ಅವರು ಬೇರೆಯೇ ಆಗಿ ಕಾಣುತ್ತಿದ್ದರು. +ಅವರ ಈ ಭಕ್ತಿಯೇ ಜನರನ್ನು ಇಗರ್ಜಿಗೆ ಬರುವಂತೆ ಮಾಡಿತ್ತು. ಹೆದರಿಸಿ ಬೆದರಿಸಿ ಜನರನ್ನು ಇಗರ್ಜಿಗೆ ಕರೆತಂದ ಪಾದರಿ ನಂತರ ಅವರನ್ನು ಇಲ್ಲಿ ಬಂಧಿಸಿಟ್ಟಿದ್ದು ಈ ಭಕ್ತಿಯಿಂದ. +ಇಂತಹಾ ಪಾದರಿ ಈಗ ಊರು ಬಿಟ್ಟು ಹೊರಟಿದ್ದಾರೆ ಎಂದು ಸಿಮೋನ ಕಣ್ಣೊರೆಸಿಕೊಂಡ. +ಗೋವೆಯ ಪ್ರಾವಿನ್ಶಿಯಲರ ಪತ್ರ ಗೋನಸ್ವಾಲಿಸರಿಗೆ ಬಂದು ಅವರು ಶಿರಸಿಗೆ ಹೋಗುವುದು ಖಚಿತವಾದಾಗ ಊರಿನ ಕ್ರೀಸ್ತುವರೆಲ್ಲ ಸಿಮೋನನ ಮನೆಯಲ್ಲಿ ಸೇರಿದರು. ಚಮಾದೋರ ಕೇರಿಯ ಧಾಜಣರಿಗೆ ಸುದ್ದಿ ಮುಟ್ಟಿಸಿ ಬಂದಿದ್ದ. +“ಪಾದರಿಗಳಿಗೆ ವರ್ಗವಾಗಿದೆ..ಅವರು ಹೋಗುತ್ತಿದ್ದಾರೆ…ನಾವು ಏನಾದರೂ ಮಾಡಬೇಕಲ್ವ?” +ಎಂದು ಸಿಮೋನ ನೆರೆದವರನ್ನು ಕುರಿತು ಹೇಳಿದಾಗ ಎಲ್ಲರೂ- +“ಹೌದು..ಹೌದು” ಎಂದರು. +ಆದರೆ ಏನು ಮಾಡಬೇಕೆಂಬುದು ಯಾರಿಗೂ ಗೊತ್ತಿರಲಿಲ್ಲ. +ಸಿಮೋನನಿಗೆ ಆಗಲಿ, ಬಾಲ್ತಿದಾರ, ಪಸ್ಕೋಲ, ಕೈತಾನರಿಗೇ ಆಗಲಿ ಕೆಲಸ ಮಾಡಿ ಗೊತ್ತಿತ್ತೆ ಹೊರತು, ಏನ ಮಾಡಬೇಕು? ಹೇಗೆ ಮಾಡಬೇಕು ಎಂಬಂತಹ ಜ್ಞಾನ ಇರಲಿಲ್ಲ. ಈ ಕೆಲಸ ಮಾಡಿ ಎಂದರೆ ಅವರು ಮಾಡುತ್ತಿದ್ದರಷ್ಟೇ. ಪಾದರಿ ಗೋನಸ್ವಾಲಿಸರು ಬರುವ ತನಕ ಈ ಜನ ತಮ್ಮ ಅನಕ್ಷರತೆ, ಅಜ್ಞಾನ, ಕೀಳರಿಮೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಪುರಸಭೆಯಲ್ಲಿ ಇವರ ಕೆಲಸ ಆಗುತ್ತಿರಲಿಲ್ಲ. ಯಾವುದೇ ಸರ್ಕಾರಿ ಕಛೇರಿಗಳ ಪರಿಚಯ ಇವರಿಗಿರಲಿಲ್ಲ. ಗೋನಸ್ವಾಲಿಸ ಬಂದ ನಂತರ ತಮ್ಮ ತೊಂದರೆ ಕಷ್ಟ ಹೇಳಿಕೊಳ್ಳಲು ತತ್ ಕ್ಷಣದ ಓರ್ವ ವ್ಯಕ್ತಿ ಅವರಿಗೆ ಸಿಕ್ಕಿದ್ದರು. +“ಪದ್ರಾಬಾ..ಹೇಗೆ ಆಗಬೇಕು” ಎಂದು ಇವರು ಗೋನಸ್ವಾಲಿಸರ ಬಳಿ ಹೋದರೆ ಅವರು- +“ಹೌದಾ ಸರಿ ಬಿಡು ನಾನು ಹೋಗಿ ಮಾಡಿಸಿಕೊಂಡು ಬರತೀನಿ. ನೀನು ಸಂಜೆ ಬಾ..” ಎಂದು ಆತನನ್ನು ಕಳುಹಿಸಿ ಪಾದರಿ ತಾವೇ ಹೋಗಿ ಆ ಕೆಲಸಮಾಡಿಕೊಂಡು ಬರುತ್ತಿದ್ದರು. +ಹೀಗಾಗಿ ಶಿವಸಾಗರದ ಮೂಲ ನಿವಾಸಿಗಳಾದ ಕ್ರೀಸ್ತುವರು ಒಂದು ಬಗೆಯ ಅಜ್ಞಾನದಲ್ಲಿಯೇ ಉಳಿದರು. ಇದ್ದುದರಲ್ಲಿ ಸಿಮೋನ ಮೇಸ್ತ್ರಿ ಕೊಂಚ ಚಾಲಾಕಿನವನಾಗಿದ್ದ. ಆದರೆ ಅವನಿಗೂ ಕೆಲವೊಂದು ವಿಷಯಗಳಲ್ಲಿ ಏನು ಮಾಡಬೇಕೆಂಬುದು ತಿಳಿಯುತ್ತಿರಲಿಲ್ಲ. +ಪಾದರಿ ಗೋನಸ್ವಾಲಿಸರಿಗೆ ವರ್ಗವಾಗಿದೆ ಎಂದಾಗ ಅವರನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡಬೇಕು ಎಂದವರು ಬಯಸಿದರು. ಆದರೆ ಈ ಸಮಾರಂಭವನ್ನು ಏರ್ಪಡಿಸುವುದು ಹೇಗೆ” ಎಂಬುದು ಅವರಿಗೆ ಯಾರಿಗೂ ಹೊಳೆಯಲಿಲ್ಲ. ಈವರೆಗೆ ಅಂತಹ ಒಂದು ಸಂದರ್ಭವೇ ಬಂದಿರಲಿಲ್ಲವೆ? +ಕೊನೆಗೆ ಅವರು ಅದೇ ಬಂದು ಊರಿನಲ್ಲಿ ನೆಲಸಿದ ರೆಗ್ಯೊಡಯಾಸ್, ವಿನ್ಸೆಂಟರ ನೆರವನ್ನು ಪಡೆಯಬೇಕಾಯಿತು. +* +* +* +ಪಾದರಿ ಗೋನಸ್ವಾಲಿಸರ ವರ್ಗಾವಣೆಯ ಪ್ರಸಂಗ ನಡೆಯಲು ಕೆಲವೇ ದಿನಗಳಿವೆ ಅನ್ನುವಾಗ ಊರ ರಾಮಣ್ಣನ ಛತ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಒಂದು ಕಛೇರಿಯನ್ನು ತೆರೆದಿತ್ತು. ಎರಡು ಮೂರು ವರ್ಷಗಳಿಗೊಮ್ಮೆ ಬಂದು ಪೀಡಿಸುತ್ತಿದ್ದ ಪ್ಲೇಗು, ಕಾಲರಾ, ಸಿಡುಬು ಮುಂತಾದ ಕಾಯಿಲೆಗಳನ್ನು ಮೂಲೋತ್ಪಾಟನೆ ಮಾಡಲು ಕೆಲವು ವೈದ್ಯರು, ಸಿಬ್ಬಂದಿಗಳವರು ಚಾಲಕರು ಇಲ್ಲಿಗೆ ಬಂದು ಇಳಿದರು. ಇವರಲ್ಲಿ ಡಾಕ್ಟರ್ ರೇಗೊ, ಹೆಲ್ತ ವಿಸಿಟರ್ ವಿನ್ಸೆಂಟ, ಡ್ರೈವರ್ ಚಾರ್ಲಿ, ಆಫ಼ೀಸ್ ಮ್ಯಾನೇಜರ್ ಜಾನ್ ಡಯಾಸ್ ಮೊದಲಾದವರೂ ಇದ್ದರು. ಶಿವಸಾಗರದಲ್ಲಿ ಈಗಾಗಲೇ ಇದ್ದ ಕ್ರೀಸ್ತುವರು ಹೀಗೆ ಬಂದವರನ್ನು ’ಬಾಮಣರು’ ಎಂದು ಗುರುತಿಸುವುದರ ಜೊತೆಗೆ ಅವರನ್ನು ಆಸಕ್ತಿ ಕುತೂಹಲದಿಂದ ನೋಡುವಂತಾಯಿತು. +ಬಂದವರೆಲ್ಲ ಸಿಮೋನನ ಮನೆ ಇರುವ ರಸ್ತೆ ಬಿಟ್ಟು ಇದರ ಹಿಂದಿನ ರಸ್ತೆಯಲ್ಲಿ ಮನೆಗಳನ್ನು ಬಾಡಿಗೆಗೆ ಹಿಡಿದು ಉಳಿದರು. ಈ ಜನ ತುಸು ಬೆಳ್ಳಗೆ ಇದ್ದುದರ ಜೊತೆಗೆ ಇವರೆಲ್ಲ ವಿದ್ಯಾವಂತರಾಗಿದ್ದರು. ಅತ್ಯಾಧುನಿಕವಾದ ರೀತಿಯಲ್ಲಿ ಉಡುಗೆ ತೊಡುಗೆ ಧರಿಸುತ್ತಿದ್ದರು. ಇವರ ಮಾತಿನ ರೀತಿ ಧಾಟಿ ಬೇರೆಯಾಗಿತ್ತು. ಶಿವಸಾಗರದಲ್ಲಿದ್ದ ಕ್ರೀಸ್ತುವರ ಮನೆಗಳಲ್ಲಿ ಊಟದ ಮೇಜು, ಕಬ್ಬಿಣದ ಬೀರುಗಳು, ಸೈಕಲ್ ಗಳು ಇರಲಿಲ್ಲವಾದರೆ ಅವೆಲ್ಲ ಇವರ ಮನೆಗಳಲ್ಲಿದ್ದವು. +ಡಾಕ್ಟರ್ ರೇಗೋ ಹೆಂಡತಿ ಕೂದಲು ಕತ್ತರಿಸಿಕೊಂಡು ತುಟಿಗೆ ಕೆಂಬಣ್ಣ, ಕೆನ್ನೆಗೆ ಕೆಂಪು ಹಚ್ಚಿಕೊಳ್ಳುತ್ತಿದ್ದಳು. ಮ್ಯಾನೇಜರ ಜಾನ್ ಡಯಾಸ್ ನ ಹೆಂಡತಿ ಕ್ಕೊಡ ಹೀಗೆಯೇ ಹೆಗಲ ಮೇಲೆ ತುಂಡು ಕೂದಲು ಬಿಟ್ಟುಕೊಂಡು ಮೊಣಕಾಲು ಕಾಣುವ ಹಾಗೆ ಲಂಗ ಧರಿಸಿ, ಹಿಮ್ಮಡಿ ಎತ್ತರವಿರುವ ಚಪ್ಪಲಿ ತೊಟ್ಟು ಕೈಯಲ್ಲೊಂದು ಚೀಲ ಹಿಡಿದು ಕೊಪೆಲಗೆ ಬರತೊಡಗಿದಳು. +ಇವರೆಲ್ಲ ಕೊಂಕಣಿಗಿಂತಲೂ ಇಂಗ್ಲೀಷನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದರು. +ಮನೆಯಲ್ಲಿ ನಾಯಿಗಳನ್ನು ಸಾಕಿಕೊಂಡಿದ್ದರು. +ಈ ನಾಯಿಗಳಿಗೆ ಟೈಗರ್, ಟಾಮಿ, ರೂಬಿ ಎಂದೆಲ್ಲ ಹೆಸರು ಇಟ್ಟಿದ್ದರು. ಅಲ್ಲದೆ ಈ ನಾಯಿಗಳ ಕೂಡ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರು. +ಇಗರ್ಜಿ ಸುತ್ತಲಿನ ಬೀದಿಗಳಲ್ಲಿ ಸದಾ ಬೊಗಳುತ್ತ ಕಚ್ಚಾಡುತ್ತ ತಿರುಗಾಡುವ ಕಂತ್ರಿ ನಾಯಿಗಳೇ ಅಲ್ಲಿಯ ಕ್ರೀಸ್ತುವರು ಸಾಕಿಕೊಂಡ ನಾಯಿಗಳಾಗಿದ್ದವು. ಈ ನಾಯಿಗಳಿಗೆ ಇಲ್ಲಿಯವರು ಹಂಡ ಪುಂಡ, ಮಾರ್ಸೆಲ, ಟಿಪ್ಪು ಎಂದು ಹೆಸರಿಟ್ಟಿದ್ದರು. ಆದರೆ ಟೈಗರ್ ಟಾಮಿಗಳು ಬಂದ ನಂತರ ಈ ಹಂಡ ಬಂಡಗಳನ್ನು ಸಾಕಿಕೊಂಡವರು ನಾಚಿದರು. +ಮಂಗಳೂರು, ಬೆಂಗಳೂರು, ಮೈಸೂರಿನಿಂದ ವರ್ಗವಾಗಿ ಬಂದ ಈ ಹೊಸ ಕ್ರೀಸ್ತುವರು ಹಳಬರನ್ನು ಬೇರೆ ಬೇರೆ ಕಾರಣಗಳಿಗೆ ಬೇರೊಂದು ರೀತಿಯಲ್ಲಿ ನೋಡ ತೊಡಗಿದ್ದು ಕೂಡ ನಿಜವೆ. +ಇದರ ಬೆನ್ನಲ್ಲೇ ರಾಮಣ್ಣನ ಛತ್ರದಲ್ಲಿ ಕಛೇರಿ ತೆರೆದು ಕೆಲಸ ಆರಂಭಿಸಿದವರು ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಆರಂಭಿಸಿದರು. +ಈ ಕಛೇರಿಯ ವ್ಯಾನುಗಳ ಓಡಾಟ ಊರ ತುಂಬಾ ಅಧಿಕವಾಯಿತು. ಇಲಿ ಬೋನುಗಳನ್ನು ಮನೆ ಮನೆಗಳಿಗೆ ಹಂಚಿದರು. ಇಲಿ ಹಿಡಿದು ತಂದರೆ ಇಲಿಗೆ ನಾಲ್ಕು ಆಣೆ ಕೊಡುವುದು. ಮನೆಗಳಿಗೆ ಸೈನೋಗ್ಯಾಸ್ ಹೊಡೆಯುವುದು ಮೊದಲಾದ ಚಟುವಟಿಕೆಗಳನ್ನು ಇವರು ಆರಂಭಿಸಿದರು. ಈ ಚಟುವಟಿಕೆಗಳ ಹಿಂದಿದ್ದವರು ಡಾಕ್ಟರ್ ರೇಗೋ, ವಿನ್ಸೆಂಟ್, ಚಾರ್ಲಿ ಮುಂತಾದವರು. ಈ ಚಟುವಟಿಕೆಗಳ ಮೂಲಕ ಪ್ಲೇಗು, ಸಿಡುಬು ಮುಂತಾದ ಕಾಯಿಲೆಗಳ ಬಗ್ಗೆ ತೀರಾ ಭಿನ್ನವಾದ ಒಂದು ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಇವರು ಶಕ್ತರಾದರು. +ಈ ಜನ ಶಿವಸಾಗರದ ಹೊಸ ಇಗರ್ಜಿಯಲ್ಲಿಯೂ ಕೆಲ ಅಪರೂಪದ ಪದ್ದತಿಗಳನ್ನು ಜಾರಿಗೆ ತಂದಿದ್ದರು. ತ್ರಿಕೋಣಾಕಾರದ ಇಗರ್ಜಿಯ ಒಂದು ಕಡೆ ಹೊಸದಾಗಿ ಕುಳಿತುಕೊಳ್ಳುವ ಒಂದು ಬೆಂಚು ಕಂಡು ಬಂದಿತು. ಡಾಕ್ಟರ್ ರೇಗೋ, ಅದನ್ನು ಅಲ್ಲಿಗೆ ತಂದು ಹಾಕಿಸಿದರು. ಇದರ ಮೇಲೆ ಅವರು, ಅವರ ಹೆಂಡತಿ ಮೇಡಂ ನ್ಯಾಸ್ಸಿ, ಹೆಲ್ತ್ ಆಫ಼ೀಸಿನ ಮ್ಯಾನೇಜರ್ ಜಾನ್ ಡಯಾಸ್ ಅವನ ಹೆಂಡತಿ ಸಿಲ್ವಿಯ ಕುಳಿತುಕೊಂಡು ಪೂಜೆ ಕೇಳುವ ಪರಿಪಾಠ ಜಾರಿಗೆ ಬಂತು. ಇಗರ್ಜಿಯ ಪ್ರಾರ್ಥನೆ ಕೊಂಕಣಿಯಲ್ಲಿ ಮಾತ್ರ ನಡೆಯುತ್ತಿದ್ದ ಕಡೆ ಈ ಭಾನುವಾರ ಇಂಗ್ಲೀಷ ಸೇರಿಕೊಂಡಿತು. ಡಾಕ್ಟರ್ ರೇಗೋ, ಜಾನ್ ಡಯಾಸ್, ವಿನ್ಸೆಂಟ್ ಚಾರ್ಲಿ ಮೊದಲಾದವರೆಲ್ಲ ಎಲ್ಲರಿಗಿಂತಲೂ ಮೊದಲು ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವುದು ಚಾಲ್ತಿಗೆ ಬಂದಿತು. +ಬೋನನ ಕೀರ್ತನೆ ಗಾಯನಕ್ಕೆ ತನ್ನ ಪಿಟೀಲಿನ ಹಿನ್ನೆಲೆಯನ್ನು ನೀಡುತ್ತಿದ್ದ ಜಾನ ಡಯಾಸನ ತಂದೆ, ವಲೇರಿಯನ್ ಡಯಾಸ ನಿಧಾನವಾಗಿ ಬೋನನನ್ನು ಮೂಲೆಗೆ ತಳ್ಳುವ ಯತ್ನ ಮಾಡತೊಡಗಿದಂತಿತ್ತು. ಮಂಗಳೂರಿನ ಒಂದು ಇಗರ್ಜಿಯಲ್ಲಿ ಕ್ವಾಯರ್ ಮಾಸ್ಟರ್ ಆಗಿದ್ದರಿಂದ ಈ ಕೆಲಸ ಅವನಿಗೆ ಸುಲಭ ಕೂಡ ಆಗಿತ್ತು. +ಈ ಬಾಮಣರು ಸ್ಥಳೀಯ ಕ್ರೀಸ್ತುವರನ್ನು ಮೂರ್ಖರು, ದಡ್ಡರು, ಅನಕ್ಷರಸ್ಥರು ಎಂದು ಪರಿಗಣಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತಮ್ಮ ಕೈ ಮೇಲಾಗುವಂತೆ, ತಮ್ಮ ಮಾತು ನಡೆಯುವಂತೆ ನೋಡಿಕೊಳ್ಳಲಾರಂಭಿಸಿದರು. +ಪಾದರಿ ಗೋನಸ್ವಾಲಿಸರ ಹತ್ತಿರ ಇಂಗ್ಲೀಷಿನಲ್ಲಿ ಮಾತನಾಡುವ ಈ ಜನ ಅವರಿಗೆ ಆತ್ಮೀಯರಾದಂತೆ ಹತ್ತಿರದವರಾಗಿ ಮಾರ್ಪಟ್ಟಂತೆ ಕಂಡು ಬಂದು ಸ್ಥಳಿಯರು ಸಹಜವಾಗಿ ಹಿಂದೆ ಸರಿಯತೊಡಗಿದರು. +ಆಗಲೇ ಪಾದರಿ ಗೋನಸ್ವಾಲಿಸರಿಗೆ ಶಿರಸಿಗೆ ವರ್ಗವಾದ ಸುದ್ದಿ ಬಂದಿತು. ಅವರನ್ನು ಬೀಳ್ಕೊಡಲು ಒಂದು ಸಭೆ ಇರಿಸಿಕೊಂಡ ಬಗ್ಗೆ ಊರಿನ ಚಮಾದೋರ ಇಂತ್ರು ಮನೆಮನೆಗೆ ಹೋಗಿ ಹೇಳಿದಂತೆಯೆ ಡಾಕ್ಟರ್ ರೇಗೋ, ಜಾನ ಡಯಾಸ, ವಲೇರಿಯನ, ವಿನ್ಸೆಂಟ, ಚಾರ್ಲಿ ಇವರಿಗೂ ಹೇಳಿದ. +ಊರಿನ ಕ್ರೀಸ್ತುವರ ಮಾತು, ವರ್ತನೆ, ಅವರ ರೀತಿ ನೀತಿಯ ಬಗ್ಗೆ ಅಂತಹ ಗೌರವ ಇರಿಸಿಕೊಂಡಿರದ ಡಾಕ್ಟರ್ ರೇಗೋ, ಜಾನ ಡಯಾಸ ಮತ್ತಿತರರು ಪಾದರಿ ಗೋನಸ್ವಾಲಿಸರಿಗಾಗಿ ಸಭೆಗೆ ಬಂದರು. ಊರವರೆಲ್ಲ ಕುಳಿತು ಏನೋ ಒಂದು ತೀರ್ಮಾನ ಮಾಡುವಾಗ ತಾವು ಅಲ್ಲಿ ಇಲ್ಲದಿದ್ದರೆ ಹೇಗೆ ಎಂದೇ ಅವರೆಲ್ಲ ಸಭೆಗೆ ಆಗಮಿಸಿದರು. +ಆದರೆ ಇಲ್ಲಿ ನೋಡಿದರೆ ಈ ಜನರಿಗೆ ಏನೂ ಗೊತ್ತಿರುವಂತಿಲ್ಲ. ಏನಾದರೂ ಮಾಡಬೇಕು ಅನ್ನುತ್ತಾರೆ. ಅದೇನು? ಹೇಗೆ ಮಾಡಬೇಕು ಗೊತ್ತಿಲ್ಲ. ಇಂತಹ ವಿಷಯಗಳಲ್ಲಿ ಅನುಭವವಿಲ್ಲ. ಬೇಕಾದ ವಿದ್ಯಾ ಅರ್ಹತೆ ಇಲ್ಲ. +ಕೊನೆಗೆ ಡಾಕ್ಟರ್ ರೇಗೋ ಎದ್ದು. +“…ಹೊಸ ಪಾದರಿಗಳು ಬಂದ ನಂತರ ಇವರು ಹೋಗುವುದು ಖಚಿತ..ಇವರಿಗೆ ನಾವು ನಮ್ಮ ನೆನಪಿಗಾಗಿ ಏನಾದರೂ ಕೊಡಬೇಕು..ನೀವೆಲ್ಲ ಹಣ ಹಾಕಿದರೆ ಒಂದು ಬೆಳ್ಳಿಯ ಪೂಜಾ ಪಾತ್ರೆಯನ್ನು-ಪಾಟಿನ್-ಕೊಡುವುದು ಸೂಕ್ತ..” ಎಂದು ಹೇಳಿದ್ದು ಎಲ್ಲರಿಗೂ ಸರಿ ಎನಿಸಿ- +“ಹಾಗೇ ಮಾಡೋಣ..ಹಣದ ಚಿಂತೆ ಮಾಡಬೇಡಿ…ನಿಮ್ಮಿಂದಾದಷ್ಟು ಕೊಡಿ..” ಎಂದ ಗುರ್ಕಾರ ಪಾಸ್ಕೋಲ ಕೂಡ ತನ್ನ ದನಿ ಸೇರಿಸಿದ…ಬಾಮಣ ಪಂಗಡದವರು ಕೈ ಎತ್ತಿದರು. +ಶಿವಸಾಗರದ ಜಗನ್ನಾಥ ಶೇಟ್ ಕೆಲವೇ ದಿನಗಳಲ್ಲಿ ಆಕರ್ಷಕವಾದ ಪಾಟೆನ ಒಂದನ್ನು ಮಾಡಿಕೊಟ್ಟ ಕೂಡ. ಊರ ಕ್ರೀಸ್ತುವರು ಡಾ. ರೇಗೋ ಸಲಹೆಯಂತೆ ಮಾಡಿಸಿದ ಬೆಳ್ಳಿಯ ಪೂಜಾ ಪಾತ್ರೆಯನ್ನು ನೋಡಿ ಸಂತಸಪಟ್ಟರು. +* +* +* +ಪಾದರಿ ಮಸ್ಕರಿನಾಸ ಊರಿಗೆ ಬಂದ ಮಾರನೇ ದಿನಬೆಳಿಗ್ಗೆ ಇಗರ್ಜಿಯಲ್ಲಿ ವಿಶೇಷ ಪೂಜೆಯೊಂದನ್ನು ಇರಿಸಿಕೊಳ್ಳಲಾಗಿತ್ತು. ಬೋನ ಫ಼ೆಡ್ಡಿ, ಜಾನಿ ಮೊದಲಾದವರನ್ನು ಕರೆದುಕೊಂಡು ಅಲ್ತಾರನ್ನು ಸಂದರವಾಗಿ ಸಜ್ಜುಗೊಳಿಸಿದ. ಒಳಗೆ ಇರಿಸಿದ ಏಳೆಂಟು ಬತ್ತಿ ಸ್ಟ್ಯಾಂಡುಗಳನ್ನು ತಂದು ಮೇಣದ ಬತ್ತಿ ಹೊತ್ತಿಸಿದ. ಹೂವಿನ ಕರಂಡಕಗಳನ್ನು ಇರಿಸಿದ. ದಿವ್ಯ ಪ್ರಸಾದದ ಪೆಟ್ಟಿಗೆಗೆ ಹೊಸ ಮುಸುಕು ಹಾಕಿದ. ಪೂಜಾ ಸಂದರ್ಭದಲ್ಲಿ ಹಾಡಲೆಂದು ಕೆಲ ಹುಡುಗಿಯರಿಗೂ ಜೊತೆಗೆ ಕರೆಸಿಕೊಂಡ. +ಎಂದಿನಂತೆ ಪಾದರಿ ಗೋನಸ್ವಾಲಿಸ್ ಭಕ್ತಿಯಿಂದ ಪೂಜೆಯನ್ನು ಅರ್ಪಿಸಿದರು. +ಊರಿನ ಎಲ್ಲ ಕ್ರೀಸ್ತುವರ ಮುಖಗಳೂ ಅಲ್ಲಿ ಕಂಡು ಬಂದವು. +ಭಾನುವಾರಗಳಂದು ಬಾಚಿ ಹೆಗಲಿಗೇರಿಸಿ ಕೆಲಸಕ್ಕೆ ಹೊರಟು ಗೋನಸ್ವಾಲಿಸರಿಂದ ನಾಗರ ಬೆತ್ತದ ಏಟು ತಿಂದು ಪೂಜೆಗೆ ಬಂದವರು. ಮನೆಬಾಗಿಲಲ್ಲಿಯೇ ಪಾದರಿಯ ಕೈಗೆ ಸಿಕ್ಕಿ ಬಿದ್ದವರು. +“ಏನು ಇಗರ್ಜಿಗೆ ಬರೋದಿಲ್ವ?” ಎಂದು ಕೇಳಿಸಿಕೊಂಡು ಬಂದವರು. +ಪಾದರಿಗಳ ಪಾಮಿಸ್ತ್ರಿಗೆ, ಬಾಯಿಗೆ, ಕಣ್ಣಿನ ನದರಿಗೆ, ಪಾದರಿಗಳ ಶೆರಮಾಂವಂಗೆ ಹೆದರಿಕೊಂಡವರು. +“ನೀವು ಪೂಜೆಗೆ ಬರಲಿಲ್ಲ ಅಂದರೆ ನೀವು ಕ್ರೀಸ್ತುವರಲ್ಲ. ನಿಮಗೆ ಮದುವೆ ಇಲ್ಲ. ನಿಮ್ಮ ಮಕ್ಕಳಿಗೆ ಜ್ಞಾನ ಸ್ನಾನವಿಲ್ಲ. ಅಷ್ಟೇ ಅಲ್ಲ ಸತ್ತರೆ ನಿಮಗೆ ಸಿಮಿತ್ರಿಯಲ್ಲಿ ಜಾಗವಿಲ್ಲ…” ಎಂಬ ಪಾದರಿಗಳ ಮಾತನ್ನು ಕೇಳಿದವರು. +” ಇಗರ್ಜಿ ಮಾತೆಯ ಕಟ್ಟಲೆ ಮುರಿಯುವುದು ಪಾಪ…ನಿಮಗೆ ರೌರವ ನರಕ ಕಾದಿದೆ.” ಎಂಬ ಮಾತಿಗೆ ಭೀತಿಗೊಂಡವರು. +ಎಲ್ಲ ಬಂದರು. +ಇಗರ್ಜಿ ತುಂಬಿ ಹೋಯಿತು. ಮೂರೂ ಬಾಗಿಲಲ್ಲಿ ಒಳಹೋಗಲು ಜಾಗವಿಲ್ಲದ ಹಾಗೆ ಜನ ನಿಂತರು. +ಪೂಜೆಯ ನಡುವೆ ಪಾದರಿ ಗೋನಸ್ವಾಲಿಸ್ ಹೆಚ್ಚು ಮಾತನಾಡಲಿಲ್ಲ. +“ಇಲ್ಲಿ ನಾನು ಏನಾದರೂ ಮಾಡಿದ್ದರೆ ಅದಕ್ಕೆ ದೇವರ ಪ್ರೇರಣೆ ಕಾರಣ..ದೈವಭಕ್ತಿ ಕಾರಣ..ಕ್ರಿಸ್ತ ಪ್ರಭುವಿನ ಅಪೇಕ್ಷೆಯನ್ನು ನೆರವೇರಿಸಲು ನಾನು ಯತ್ನಿಸಿದೆ..ಅವನ ದಯೆಯಿಂದ ಕೆಲಸ ಸಾಧ್ಯವಾಯಿತು. ಮುಂದೆ ಕೂಡ ನೀವು ಸೈತಾನನ ಶೋಧನೆಗೆ ಒಳಪಡದೆ..ದಿವ್ಯ ಜೀವನವನ್ನು ಮುಂದುವರೆಸಿ..” ಎಂದರು. +ಪೂಜೆಯ ನಂತರ ಪಾದರಿ ಮಸ್ಕರಾನಿಸ್ ಜನರ ಪರವಾಗಿ ಅವರಿಗೆ ಬೆಳ್ಳಿಯ ಪೂಜಾ ಪಾತ್ರೆಯನ್ನು ನೀಡಿದನು. ಈ ಪಾತ್ರೆಯನ್ನು ಸ್ವೀಕರಿಸುವಾಗ ಮಾತ್ರ ಗೋನಸ್ವಾಲಿಸರ ಕಣ್ಣುಗಳು ತುಂಬಿ ಬಂದವು. +* +* +* +ಅಂದು ಶಿವಸಾಗರದ ಬಸ್ ನಿಲ್ದಾಣದಲ್ಲಿ ಜನ ಒಂದು ಅಪರೂಪದ ದೃಶ್ಯವನ್ನು ಕಂಡರು. ಊರಿನ ಕ್ರೈಸ್ತರೆಲ್ಲ ಅಲ್ಲಿ ನೆರೆದಿದ್ದರು. ಇಗರ್ಜಿಗೆ ಬಂದ ಜನ ನೇರವಾಗಿ ಅಲ್ಲಿಗೆ ನಡೆದು ಬಂದಿದ್ದರು. +ಈ ಜನರ ನಡುವೆ ಇನ್ನೂ ಕೆಲವರನ್ನು ಪಾದರಿ ಗೋನಸ್ವಾಲಿಸ್ ಕಂಡರು. +ಪುರಸಭೆಯ ಅಧಿಕಾರಿ ನೌಕರರು, ಊರಿನ ವಕೀಲರು, ವೈದ್ಯರು, ಪೇಟೆ ಬೀದಿಯ ವ್ಯಾಪಾರಿಗಳು, ಕೂಲಿಕಾರರು, ಇವರನ್ನೆಲ್ಲ ಅಲ್ಲಿ ಕಂಡು ಗೋನಸ್ವಾಲಿಸರು ಅಚ್ಚರಿಪಟ್ಟರು. ತಾನು ಈ ಜನರಿಗಾಗಿ ಏನೂ ಮಾಡಲಿಲ್ಲವೆ ಎಂದು ಬೆರಗಾದರು. +ಸಾಲು ಸಾಲಾಗಿ ನಿಂತ ಅವರು ಹಾಕಿದ ಹಾರಗಳಿಂದ ಇವರ ಕುತ್ತಿಗೆ ತುಂಬಿ ಹೋಯಿತು. ಪಾದರಿ ಅವರೆಲ್ಲರ ಕೈಗಳನ್ನು ಪ್ರೀತಿಯಿಂದ ಕುಲಕಿದರು. +ಅವರ ನಡುವೆ ಗಾಡಿ ಮಂಜಣ್ಣನ ತಾಯಿ ರುದ್ರಮ್ಮನನ್ನೂ ಅವರು ಕಂಡರು. +“ಬುದ್ದಿ..” ಎಂದು ಅವಳು ಏನನ್ನೋ ಹೇಳಲು ಹೋದಳು. +ಎಲ್ಲಿಂದಲೋ ಬಂದ ಈ ಪಾದರಿ ಇಲ್ಲಿ ಮಾಡಿದ ಕೆಲಸಗಳನ್ನು ಅವಳು ನೋಡಿದವಳಾಗಿದ್ದಳು. ಇಗರ್ಜಿಯ ದೊಡ್ಡ ಗಂಟೆ ಇಡೀ ಊರಿಗೇನೆ ಕೇಳಿಸುತ್ತಿತ್ತು. ಇಗರ್ಜಿಯಲ್ಲಿ ಹಬ್ಬವೆಂದರೆ ಊರವರೆಲ್ಲ ಮೇಣದ ಬತ್ತಿ ನೀಡಲು ಮುಂದಾಗುತ್ತಿದ್ದರು. ಪ್ಲೇಗು ಮಾರಿ ಬಂದರೆ ಕಿರಸ್ತಾನದ ದೇವರ ಮೆರವಣಿಗೆ ಊರ ಬೀದಿಗಳಲ್ಲಿ ನಡೆದು ಇಗರ್ಜಿಗೆ ಬರುತ್ತಿತ್ತು. ಹೀಗೆ ತುಂಬಾ ಕೆಲಸಗಳು ಆಗಿದ್ದವು. ಇವುಗಳಿಗೆಲ್ಲ ಕಾರಣ ಇವರು. +” ರುದ್ರಮ್ಮ..” +ಪಾದರಿ ಗೋನಸ್ವಾಲಿಸ ರುದ್ರಮ್ಮನ ಕೈ ಹಿಡಿದುಕೊಂಡರು. ಅಂದು ಕೊಪೆಲಿನ ಎದುರು ಅವಳು ಆಡಿದ ಮಾತನ್ನು ಅವರು ಮರೆತಿರಲಿಲ್ಲ. ಎಷ್ಟೋ ಬಾರಿ ತನಗೆ ಈ ಮಾತು ಅರ್ಥವಾಗುವುದಿಲ್ಲವೇನೋ ಅನಿಸಿತ್ತು. ಈ ಮಾತನ್ನು ಒಪ್ಪಿಕೊಳ್ಳಲು ಕೂಡ ಅವರು ಸಿದ್ದವಿರಲಿಲ್ಲ. ಆದರೂ ಸಾಮಾನ್ಯ ಹೆಂಗಸಾದ ರುದ್ರಮ್ಮನ ವ್ಯಕ್ತಿತ್ವ ದೊಡ್ಡದು ಅನ್ನುವುದರಲ್ಲಿ ಅವರಿಗೆ ಅನುಮಾನವಿರಲಿಲ್ಲ. +“ರುದ್ರಮ್ಮ….ಹೋಗಿ ಬರತೀನಿ” ಎಂದರವರು. +“..ಹೋಗ ಬನ್ನಿ ಬುದ್ದಿ..ನಿಮಗೆ ಒಳ್ಳೇದಾಗಲಿ” ಏಂದಳವಳು. +ನೆರಿಗೆ ಗಟ್ಟಿದ ಅವಳ ಕೆನ್ನೆಗಳ ಮೇಲಿನಿಂದ ನೀರ ಹನಿಗಳು ಉದುರಿದವು. ಮುಂದಿನ ಕ್ಷಣದಲ್ಲಿ ತಮ್ಮ ಹೃದಯವೂ ಕರಗಿ ನೀರಾಗಿ ಹೊರ ಉಕ್ಕುತ್ತದೆ ಅನಿಸಿ ಅವರು ಅಲ್ಲಿಂದ ಕದಲಿದರು. +ಶಿವಸಾಗರಕ್ಕೆ ತಾನು ಓರ್ವ ಅಪರಿಚಿತನಾಗಿ ಬಂದಿದ್ದೆ. ಅಂದು ಯಾರೂ ತನ್ನನ್ನು ಗುರುತಿಸಿರಲಿಲ್ಲ. ಆದರೆ ಇಂದು? +ಸುತ್ತ ನಿಂತ ಜನರನ್ನು ನೋಡಿ ಅವರು ಮಾತು ಮರೆತರು. +ತನ್ನನ್ನು ಬೀಳ್ಕೊಡಲೆಂದು ಬಂದು ನಿಂತ ಇತರೇ ಜನರನ್ನು ಮಾತನಾಡಿಸಲೆಂದು ಅವರ ಬಳಿ ಹೋದರು. ಅವರೆಲ್ಲರನ್ನೂ ಕಂಡು ಮಾತನಾಡಿಸಿ ಬಂದರು. ಸಿಮೋನನ ಎತ್ತಿನ ಗಾಡಿಯಲ್ಲಿಯ ಸಾಮಾನನ್ನು ಶಿರಸಿಯ ಬಸ್ಸಿಗೆ ಏರಿಸಲಾಯಿತು. ಬಸ್ಸಿಗೆ ಪಾದರಿ ಗೋನಸ್ವಾಲಿಸರ ಹಿಂದೆಯೆ ಸಿಮೋನ, ಬೋನ, ಪಾಸ್ಕೋಲ, ಬಾಲ್ತಿದಾರ ಮೊದಲಾದವರೂ ಹತ್ತಿ ಕುಳಿತರು. +“ಬೇಡ ನೀವೆಲ್ಲ ಯಾಕೆ?” ಎಂದು ಪಾದರಿ ಹೇಳಿದರೂ ಆ ಜನ ಕೇಳಲಿಲ್ಲ. +“ನಿಮಗೆ ಶಿರಸಿಗೆ ಮುಟ್ಟಿಸಿಯೇ ನಾವು ತಿರುಗಿ ಬರತೇವೆ…” ಎಂದರವರು. +ಕೆಳಗೆ ನಿಂತ ಗಂಡಸರ ಮುಖಗಳಲ್ಲಿ ಬೆಳಕು ಇರಲಿಲ್ಲ. ಹೆಂಗಸರು ಅಳುತ್ತಿದ್ದರು. ಯುವಕ ಯುವತಿಯರು ಬೆಪ್ಪಾಗಿ ನಿಂತಿದ್ದರು. +ಬಸ್ಸಿನ ಕಂಡೆಕ್ಟರ್ ಹಿಂಬದಿಯಲ್ಲಿ ಡಬ್ಬಿಗೆ ಹೊಸದಾಗಿ ಇದ್ದಿಲು ತುಂಬಿ ಗಾಳಿಯನ್ನು ಪಂಪ ಮಾಡಿದ. ಚಾಲಕನ ಪಕ್ಕದಲ್ಲಿ ಯಾವಾಗಲೂ “ಕಾದಿರಿಸಲಾಗಿದೆ” ಎಂಬ ಬರಹದೊಡನೆ ಖಾಲಿಯಾಗಿಯೇ ಇರುತ್ತಿದ್ದ. ಸೀಟು ಪಾದರಿಗಳಿಗೆ ಬಿಟ್ಟು ಕೊಡಲಾಯಿತು. ಇದರ ಹಿಂದಿನ ಉದ್ದ ಸಾಲಿನಲ್ಲಿ ಸಿಮೋನ ಮತ್ತಿತರರು ಕುಳಿತರು. +ಏಜಂಟು ಎಲ್ಲರಿಗೂ ಟಿಕೇಟು ಕೊಟ್ಟು ತಲೆ ಎಣಿಸಿ ರೈಟ್ ಎಂದಾಗ ಏಳು ಮುಕ್ಕಾಲು ಆಗಿತ್ತು. +ನಿಧಾನವಾಗಿ ಬಸ್ಸು ಮುಂದಿನ ಚೌಕದಲ್ಲಿ ಕಣ್ಮರೆಯಾಗಿದ್ದೇ ನಿಲ್ದಾಣದಲ್ಲಿ ತುಂಬಿಕೊಂಡ ಜನ ಚದುರತೊಡಗಿದರು. ಸೂರ್ಯ ಮೇಲೇರಿದ್ದರೂ ಮಂಜು ದಟ್ಟವಾಗಿ ಊರನ್ನು ತಬ್ಬಿಕೊಂಡಿತ್ತು. +* +* +* +ಎಲ್ಲವನ್ನೂ ಕಳೆದುಕೊಂಡವನಂತೆ ಭಾರವಾದ ಮನಸ್ಸಿನಿಂದ ಶಿವಸಾಗರಕ್ಕೆ ಬಂದ ಬೋನ ಮಾಡಿದ ಕೆಲಸವೆಂದರೆ ಅಡಿಗೆ ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತನ್ನ ಮಾವನ ಮನೆಗೆ ಸಾಗಿಸಿದ್ದು. +ಹೆಂಡತಿ ರೆಮೇಂದಿ ಅಲ್ಲಿದ್ದಳು. ಮಗನಿಗೆ ಕೆಲ ತಿಂಗಳುಗಳಾಗಿದ್ದವು. +ಬಾಲ್ತಿದಾರ- +“ಬೇರೆ ಮನೆಗಿನೆ ಮಾಡೋದು ಯಾಕೆ? ನನ್ನ ಅಂಗಡೀನ ನೀವೇ ನೋಡಿಕೊಳ್ಳಿ..ನಮ್ಮ ಮನೇನೆ ನಿಮ್ದು ಅಂತ ತಿಳಿಕೊಳ್ಳಿ.” +ಎಂದು ಬೇರೆ ಹೇಳಿದ್ದ. +ಹೋಗಿ ಹೋಗಿ ಮಾವನ ಮನೆ ಸೇರಿಕೊಳ್ಳಬೇಕೆ ಎಂಬ ಪ್ರಶ್ನೆ ಬೋನನನ್ನು ಕಾಡದಿರಲಿಲ್ಲ. +ಇನ್ನು ಜೀವನಕ್ಕೆ ಬೇರೊಂದು ದಾರಿ ಕಂಡುಕೊಂಡಾಗಿದೆ. ಬಾಲ್ತಿದಾರನ ಅಂಗಡಿಯನ್ನೇ ತಾನೀಗ ನೋಡಿಕೊಳ್ಳುತ್ತಿದ್ದೇನೆ. ಇನ್ನು ಅವರ ಮನೆಯಲ್ಲಿರುವುದರಲ್ಲಿ ಏನು ತಪ್ಪು ಅಂದುಕೊಂಡ ಬೋನ ಅಡಿಗೆ ಮನೆಯನ್ನು ಫ಼ರಾಸ್ಕನಿಗೆ ಬಿಟ್ಟು ಕೊಟ್ಟ. ಪಾದರಿಯ ಹಿಂದೆಯೇ ಬಂದ ಫ಼ರಾಸ್ಕ ತನ್ನ ಹೆಂಡತಿ ಕೂಡ ಬರಲಿದ್ದಾಳೆ ಎಂದು ಹೇಳಿದ್ದರಿಂದ ಬೋನನಿಗೆ ಬೇರೆ ದಾರಿ ಉಳಿದಿರಲಿಲ್ಲ. +ಮಧ್ಯಾಂತರ………. +” ಅವತ್ತು ಹೀಗೆ ನಾನು ಶಿವಸಾಗರಾನ ಬಿಟ್ಟೆ” ಎಂದರು ಪಾದರಿ ಗೋನಸ್ವಾಲಿಸ್. +ಕತೆ ಕೇಳುತ್ತ ಕುಳಿತ ನಾನು ಅವರು ಮಾಡಿದ ಕೆಲಸ ಊಹಿಸಿಕೊಂಡು ಅಚ್ಚರಿಪಟ್ಟೆ. ಯಾವುದೋ ದೇಶದಲ್ಲಿ ಹುಟ್ಟಿ ಇನ್ನೆಲ್ಲಿಗೋ ಬಂದು ಇಲ್ಲಿಯ ಜನರಿಗಾಗಿ ಇಷ್ಟೆಲ್ಲ ಮಾಡಿದ ಅವರ ಬಗ್ಗೆ ನನ್ನಲ್ಲಿ ಅಭಿಮಾನ ಹುಟ್ಟಿತು ಕೂಡ. +ಪಾದರಿ ಗೋನಸ್ವಾಲಿಸ್ ನಂತರ ಶಿರಸಿಗೆ ಬಂದರು. ಅಲ್ಲಿ ಐದು ವರ್ಷ. ಅಲ್ಲಿಂದ ಸಿಂಗನಮನೆ, ಫ಼ತ್ತೇ ಪೇಟೆ, ಮಡಿಕೇರಿ, ಸುಳ್ಯ, ಈ ಊರುಗಳಲ್ಲಿ ಕೂಡ ಅಷ್ಟೇ ನಿಷ್ಠೆ, ಬಿಗಿ. ನಾಗರ ಬೆತ್ತ ಪಾಮಿಸ್ತ್ರಿಯನ್ನು ಅವರು ದೂರ ಇಡಲಿಲ್ಲ. +ನಡುವೆ ಏನೇನೋ ಬದಲಾವಣೆಗಳಾದವು. +ಗೋವೆಯ ಪ್ರಾವಿನ್ಶಿಯಲ್ಲರ ಆಡಳಿತದಿಂದ ಈ ಪ್ರದೇಶ ಪ್ರತ್ಯೇಕವಾಯಿತು. ಪೋರ್ಚುಗೀಸರು ಗೋವೆ ಬಿಟ್ಟು ಹೋದರು. ಅವರು ಗೋವೆ ಬಿಡುವ ಮುನ್ನ ಇಲ್ಲಿದ್ದ ವಿದೇಶೀ ಪಾದರಿಗಳಿಗೆ ಅವರವರ ತಾಯಿನಾಡಿಗೆ ಹೋಗಲು ಒಂದೊಂದು ಅವಕಾಶ ಮಾಡಿಕೊಟ್ಟರು. ಪಾದರಿ ಗೋನಸ್ವಾಲಿಸರಿಗೂ ಪ್ರಾವಿನ್ಶಿಯಲ್ ಅವರಿಂದ ಒಂದು ಪತ್ರ ಬಂದಿತು. +“ನೀವು ಗೋವೆಗೆ ಬರಬಹುದು. ಬೇಕೆಂದರೆ ಪೋರ್ಚುಗಲ್ಲಿಗೂ ತಿರುಗಿ ಹೋಗಬಹುದು..ಏನು ಮಾಡುತ್ತೀರಿ ತಿಳಿಸಿ.” ಗೋನಸ್ವಾಲಿಸ್ ವಿಚಾರ ಮಾಡಿದರು. +ಪೋರ್ಚುಗಲ್ ಈಗ ತನಗೆ ಅಪರಿಚಿತ. ಹತ್ತಿರದ ಬಂಧುಗಳು ಯಾರೂ ಇಲ್ಲ. ದೂರದವರು ಎಷ್ಟೆಂದರೂ ದೂರದವರೆ. ಬೇಡ ಅನಿಸಿತು ಅವರಿಗೆ. ಗೋವೆ ಕೂಡ ದೂರವಾಗಿತ್ತು. ಗೋವೆಯನ್ನು ಬಿಟ್ಟು ಇಂದು ಮೂವತ್ತು ನಾಲವತ್ತು ವರ್ಷಗಳಾಗಿದ್ದವು. ಗೋವೆಯಲ್ಲಿ ಕ್ರೈಸ್ತ ಧರ್ಮ ಭದ್ರವಾಗಿ ತಳವೂರಿದೆ. ಆದರೆ ಇಲ್ಲಿ ಅದು ತಳ ಊರಬೇಕಾಗಿದೆ. ಶಿವಸಾಗರ, ಶಿರಸಿ, ಸಿಂಗನಮನೆಗಳಲ್ಲಿ ತಾನು ಮನಸ್ಸಿಗೆ ತೃಪ್ತಿಕರವಾಗಿ ಕೆಲಸ ಮಾಡಿದ್ದೇನೆ. ಮುಂದೂ ಇಲ್ಲಿಯೇ ಇರೋಣ. ಅವರು ಗೋವೆಗೂ ತಾನು ಬರುವುದಿಲ್ಲ ಎಂದು ತಿಳಿಸಿದರು. ಇಲ್ಲಿಯ ಡಯಾಸಿಸನಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ಇಲ್ಲಿಯ ಬಿಶಪ್ ಗಳಿಗೆ ಬರೆದರು. ಅವರ ಕೋರಿಕೆಗೆ ಮನ್ನಣೆ ಸಿಕ್ಕಿತು. ಗೋನಸ್ವಾಲಿಸ್ ಇಲ್ಲಿಯವರೇ ಆದರು. +ಕೊನೆಯದಾಗಿ ಅವರು ಇಗರ್ಜಿಯ ಪಾದರಿಯಾದುದು ಸುಳ್ಯದಲ್ಲಿ. ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ನೀಡುವುದು ಎಂದೆಲ್ಲ ಕೆಲಸ ಮಾಡಲಾಗುವುದಿಲ್ಲ ಎಂದಾಗ ಅವರು ಸುಳ್ಯದಿಂದ ನೇರವಾಗಿ ವೃದ್ದಾಶ್ರಮ ಸೇರಿದರು. ಅಲ್ಲೂ ಪೂಜೆ, ಪ್ರಾರ್ಥನೆ ಮುಂದುವರೆದಿತ್ತು. ಆದರೆ ಜನ ಬರುತ್ತಿರಲಿಲ್ಲ. ಊರಿನ ಸಮಸ್ಯೆ, ಕುಟುಂಬದ ಸಮಸ್ಯೆ ತಮ್ಮ ಬಳಿ ತರುತ್ತಿರಲಿಲ್ಲ. ಪೂಜೆಗೆ ಬನ್ನಿ ಎಂದು ಜನರಿಗೆ ಹೇಳುವುದಿರಲಿಲ್ಲ. ಒಂದು ಬಗೆಯ ವಿಶ್ರಾಂತ ನಿವೃತ್ತ ಜೀವನ. ತಮ್ಮ ಬಗ್ಗೆಯೇ ಚಿಂತನೆ ಮಾಡುವುದು. ವಿಶೇಷವೆಂದರೆ ಪ್ರಾರ್ಥನೆ ಮಾಡುವಾಗ ಜನರಿಗಾಗಿ, ಬಿಶಪ್, ಪೊಪ್ ಗುರುಗಳಿಗಾಗಿ ಬೇಡಿಕೊಳ್ಳುವುದು. +ಹಿಂದೆ ಕೆಲಸ ಮಾಡಿದ ಊರುಗಳಿಂದ ಕೆಲವರು ಯಾವಾಗಲೋ ಒಂದು ಸಾರಿ ಬರುತ್ತಿದ್ದರು. ಆ ಊರಿನ ತುಂಡು ತುಂಡು ಸುದ್ದಿಗಳು ತಿಳಿದು ಬರುತ್ತಿದ್ದವು. +“ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ?” ಎಂದು ಕೇಳುತ್ತಿದ್ದರು. +ಉತ್ತರ ಕಿವಿಗೆ ಬಿದ್ದಾಗ ತಪ್ಪಿ ಹೋದ ಕೊಂಡಿ ಸೇರಿಕೊಂಡಂತಾಗಿ ಮನಸ್ಸಿಗೆ ನೆಮ್ಮದಿಯಾಗುತ್ತಿತ್ತು. +“ದೇವರು ಎಲ್ಲರನ್ನ ಸುಖವಾಗಿಡಲಿ” ಎಂದು ಹಾರೈಸುತ್ತಿದ್ದರು. ಈ ಹಾರೈಕೆಯೊಂದೇ ಈಗ ಇರುವುದು. ಜನರಿಗೆ ಒಳ್ಳೆಯದಾಗಲಿ ಎಂದೇ ಅಲ್ಲವೆ ತಾನು ಈವರೆಗೆ ದುಡಿದದ್ದು? ಎಲ್ಲ ಜನ ಕ್ರಿಸ್ತ ಪ್ರಭು ತೋರಿದ ಮಾರ್ಗದಲ್ಲಿ ನಡೆಯಲೆಂದು ಬಯಸಿದೆ. ಜನರನ್ನು ತಾನು ದಂಡಿಸಿದ್ದು ಕೂಡ ಈ ಉದ್ದೇಶದಿಂದಲೇ. ಈ ಉದ್ದೇಶ ಯಾವ ಪ್ರಮಾಣದಲ್ಲಿ ಈಡೇರಿದೆಯೋ ನೋಡಬೇಕು. +ಪಾದರಿ ಗೋನಸ್ವಾಲಿಸ್ ಮಾತು ನಿಲ್ಲಿಸಿ ಹೊರಗೆ ದೃಷ್ಟಿ ಬೀರಿದರು. +ಶಿವಸಾಗರ ದೂರದಲ್ಲಿ ಕಂಡಿತು. ತಾರಸಿ ಕಟ್ಟಡಗಳು, ನೀರಿನ ಟ್ಯಾಂಕುಗಳು. ಆಂಟೆನಾಗಳು ಡಿಶ್ ಗಳು ಕಂಡವು. +“ಓ! ಊರು ದೊಡ್ಡದಾಗಿದೆ..ಬದಲಾಗಿದೆ” ಎಂದರು ಗೋನಸ್ವಾಲಿಸ್. +ತಟ್ಟನೆ ಅವರು ಮುಂದೆ ಚಿಮ್ಮಿದರು. +“ನೋಡು ಸನ್ ಅಲ್ಲಿ ನೋಡು” ಅವರು ತೋರು ಬೆರಳನ್ನು ಕಾರಿನಿಂದ ಹೊರಗೆ ತೋರಿ ಕೂಗಿಕೊಂಡರು. +“.ಇಗರ್ಜಿ ಗೋಪುರ ಕಾಣುತ್ತೆ ನೋಡು” ತಟ್ಟನೆ ಅವರು ಹಣೆ, ಎದೆ, ಭುಜಗಳಿಗೆ ಬಲಗೈ ಬೆರಳುಗಳನ್ನು ಮುಟ್ಟಿಸಿ ಶಿಲುಬೆ ವಂದನೆ ಮಾಡಿದರು. +ಹೌದು ಗೋಪುರದ ಮೇಲಿನ ಶಿಲುಬೆ ಸ್ಪಷ್ಟವಾಗಿ ಕಾಣುತ್ತಿತ್ತು. ಸಂಜೆ ಸೂರ್ಯನ ಕೆಂಪು ಬೆಳಕು ಗೋಪುರದ ಮೇಲೆ ಮೈ ಚೆಲ್ಲಿತ್ತು. +“ದೇವರು ದೊಡ್ಡವನು” ಎಂದು ತೊದಲಿದರು ಗೋನಸ್ವಾಲಿಸ್. +“ಹೀಗೆ ಊರ ನಡುವೆ ನಮ್ಮ ಇಗರ್ಜಿ ಎಲ್ಲ ಕಟ್ಟಡಗಳಿಗೂ ಮಿಗಿಲಾಗಿ ಎತ್ತರವಾಗಿ ನಿಲ್ಲಬೇಕು ಅನ್ನುವ ಆಸೆ ನನಗಿತ್ತು…ನಾನು ದೊಡ್ಡ ಪ್ರಮಾಣದ ಇಗರ್ಜಿ ಕಟ್ಟಲಿಕ್ಕೂ ಅದೇ ಕಾರಣ..ಇಗರ್ಜಿ! ಈವತ್ತು ಹಾಗೇ ನಿಂತಿದೆ..ದೇವರ ಕರುಣೆ ಅಪಾರವಾದದ್ದು..” ಎಂದರವರು ಕುತ್ತಿಗೆಯಲ್ಲಿನ ಶಿಲುಬೆಯನ್ನು ತುಟಿಗೊತ್ತಿಕೊಂಡು. +ಕಾರು ಮುಂದೆ ಸಾಗಿತು. +“ಊರು ಬೆಳೆದಿದೆ..ರಸ್ತೆಗಳನ್ನು ಗುರುತು ಹಿಡಿಯಲಿಕ್ಕೆ ಆಗೋಲ್ಲ..” ಎಂದರು ಗೋನಸ್ವಾಲಿಸ್. +ಊರ ನಡುವಣ ಹೆದ್ದಾರಿಯೊಂದು ಇಗರ್ಜಿಯವರೆಗೂ ಹೋಗಿ ಅಲ್ಲಿಂದ ಮುಂದೆ ಹೊರಳಿತ್ತು. ಕಾರು ಇಗರ್ಜಿಯ ಕಡೆ ತಿರುಗಿತು. ನಾನು ನಡುವೆ ಅರಸೀಕೆರೆಯಿಂದ ಶಿವಸಾಗರದ ಪಾದರಿಗೆ ದೂರವಾಣಿ ಮಾಡಿ ತಿಳಿಸಿದ್ದೆ. ಕಾರು ನೋಡಿ ಅವರು ಓಡಿ ಬಂದರು. ಜೊತೆಗೆ ಊರಜನ. ಇಗರ್ಜಿಯ ಮುಂದೆ ಚಪ್ಪರ ಹಾಕುವ ಕಾರ್ಯದಲ್ಲಿ ತೊಡಗಿದ್ದವರೂ ಸರಿದು ನಿಂತರು. +ಕಾರಿನಿಂದ ಪಾದರಿ ಗೋನಸ್ವಾಲಿಸ್ ಇಳಿಯುತ್ತಿರಲು ಇಗರ್ಜಿಯ ದೊಡ್ಡ ಗಂಟೆ ಢಣಾ ಢಣ ಢಣಾ ಢಣ ಎಂದು ಸದ್ದು ಮಾಡಿತು. ಜನರ ನಡುವಿನಿಂದ ಎಪ್ಪತ್ತರ ಗಡಿ ದಾಟಿರುವ ಓರ್ವ ಮುಂದೆ ಬಂದು +“ಪದ್ರಾಬ..” ಎಂದು ಗೋನಸ್ವಾಲಿಸರ ಕೈ ಹಿಡಿದುಕೊಂಡ. +“ಬೋನಾ..ಬೋನಾ..” ಎಂದು ಗೋನಸ್ವಾಲಿಸರು ಅವನನ್ನು ಅಪ್ಪಿಕೊಂಡರು. ಅವರ ಕಣ್ಣುಗಳು ಮಂಜಾದವು. +ಬೆತ್ತ ಊರಿಕೊಂಡೇ ಗೋನಸ್ವಾಲಿಸ ಇಗರ್ಜಿಯಲ್ಲಿ ತಿರುಗಾಡಿದರು. ಮೂಲೆ ಮೂಲೆಗೆ ಹೋಗಿ ಅಲ್ಲಿರಿಸಿದ ಪ್ರತಿಮೆಗಳನ್ನು ಕಂಡರು. ಮೇಲೆ ಪಂಕಗಳು ತಿರುಗುತಿದ್ದವು. ಗೋಡೆಗಳು ಬಣ್ಣದಿಂದ ಮಿಂಚುತ್ತಿದ್ದವು. ಸಾಲು ಸಾಲಾಗಿ ಆಸನಗಳನ್ನು ಇರಿಸಿತ್ತು. ಬರಲಿರುವ ಹಬ್ಬಕ್ಕಾಗಿ ಇಗರ್ಜಿ ಅಲಂಕೃತಗೊಂಡಿತ್ತು. ಹೆಬ್ಬಾಗಿಲಿನಿಂದ ಸಂತ ಜೋಸೇಫ಼ರ ಮಂಟಪದ ವರೆಗೂ ಬಣ್ಣದ ಬಾವುಟಗಳು ತೂಗು ಬಿದ್ದಿದ್ದವು. ಪಾದರಿ ಗೋನಸ್ವಾಲಿಸ ಮಂಟಪದವರೆಗೂ ಹೋಗಿ ದೇವರನ್ನು ಸ್ತುತಿಸಿ ಬಂದರು. ಬೋನ ಅವರ ಜೊತೆಗೇನೆ ಇದ್ದ. +ಬಂಗಲೆಯಲ್ಲಿ ರಾತ್ರಿಯ ಊಟವಾಯಿತು. +ಬಂಗಲೆ ಮುಂದಿನ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಪಾದರಿ ಕುಳಿತರು. +“ಕುಳಿತುಕೋ ಸನ್” ಎಂದು ನನಗೂ ಹೇಳಿದರು. +ನಾನೂ ಒಂದು ಕುರ್ಚಿ ತಂದುಕೊಂಡು ಕುಳಿತೆ. +“ಬೋನಾ ಬಾ” ಎಂದು ದೂರ ನಿಂತ ಬೋನನನ್ನ ಕರೆದರು. ಆತ ಬಂದು ಅಷ್ಟು ದೂರದಲ್ಲಿ ಕುಳಿತ. +“ನಾನು ಶಿವಸಾಗರ ಬಿಟ್ಟು ಇಪ್ಪತ್ತು ಇಪ್ಪತೈದು ವರ್ಷ ಆಗಿ ಹೋಯಿತು ಅಲ್ವೆ?” ಎಂದು ಕೇಳಿದರು. +“ಹೌದು ಪದ್ರಾಬ..ನೀವು ಹೋಗಬೇಕಾದರೇನೆ ಪಾದರಿ ಮಸ್ಕರಿನಾಸ್ ಬಂದಿದ್ದರು..” ಎಂದು ಬೋನ ಹಳೆಯದನ್ನು ನೆನಪು ಮಾಡಿಕೊಂಡ. +-೧- +ಭಾನುವಾರ ೮ ಗಂಟೆಗೆ ಪ್ರಾರಂಭವಾದ ಗಾಯನ ಪೂಜೆ ಒಂಬತ್ತೂವರೆಗೆ ಮುಗಿದು ಮನೆಗೆ ಹೊರಟ ಜನ ಸಂತ ಜೋಸೆಫ಼ರ ಮಂಟಪದೆದುರು ನಿಂತು ಪ್ರಾರ್ಥನೆ ಸಲ್ಲಿಸಿ, ಅವರಿವರ ಕ್ಷೇಮ ಸಮಾಚಾರ, ಉಟ್ಟ ಸೀರೆ, ಮಾಡಿಸಿದ ಆಭರಣ, ನಾಪತ್ತೆಯಾದ ಸಾಂತಾಮೋರಿ ಮಗಳು ನಾತೇಲ ಪತ್ತೆಯಾಗಿರುವುದು, ಸಾನಬಾವಿ ಪೆದ್ರು ಹೆಂಡತಿ ಸೊಗಸಾಗಿ ಎಲ್ಲರ ಹಾಗೆ ಕೊಂಕಣಿ ಮಾತನಾಡಲು ಕಲಿತಿರುವುದು, ಮಿರೋಣ್ ಬೋನನ ಹೆಂಡತಿಗೆ ಈಗೀಗ ತುಸು ಜಂಬ ಬಂದಿರುವುದು ಹೀಗೆ ನಾನಾ ವಿಷಯಗಳ ಬಗ್ಗೆ ಮಾತನಾಡುತ್ತ ಇಗರ್ಜಿ ಮುಂದೆ ನಿಂತಿರುವಾಗ ಹುಸೇನ ಸಾಬಿಯ ಜಟಕಾ ಗಾಡಿ ಬಂದು ಇಗರ್ಜಿಯ ಮುಂದೆ ನಿಂತು ಬಿಟ್ಟಿತು. +“ಯಾರು ಯಾರು” ಎಂದು ಜನ ನೋಡುತ್ತಿರಲು ಯುವತಿಯೇ ಅನ್ನಬಹುದಾದ ಹೆಂಗಸೋರ್ವಳು ಗಾಡಿಯಿಂದ ಇಳಿದು ಒಂದು ಸಣ್ಣ ಟ್ರಂಕು, ಚೀಲವನ್ನು ಇಳಿಸಿಕೊಂಡು ಗಾಡಿಯವನ ಹತ್ತಿರ ಚೌಕಾಶಿ ಮಾಡಿ ಅವನಿಗೆ ಹಣ ಕೊಟ್ಟು ಟ್ರಂಕನ್ನು ಗಂಟನ್ನು ಒಂದೊಂದು ಕೈಯಲ್ಲಿ ಹಿಡಿದು ಇಗರ್ಜಿ ಮುಂದಿನ ಪಾದರಿ ಮನೆಯತ್ತ ತಿರುಗುತ್ತಿರಲು ಅದೆಲ್ಲೋ ಇದ್ದ ಬಟ್ಲರ್ ಓಡಿ ಬಂದು ಈ ಎರಡನ್ನೂ ಅವಳ ಕೈಯಿಂದ ತೆಗೆದುಕೊಂಡಾಗ ಯಾರು ಯಾರು ಎಂದು ಪ್ರಶ್ನಾರ್ಥಕ ಚಿಹ್ನೆಗಳನ್ನು ಮುಖದ ಮೇಲೆ ಮೂಡಿಸಿಕೊಂಡ ಜನಕ್ಕೆ ಉತ್ತರ ಸಿಕ್ಕಿತು. +“ಬಟ್ಲರ್ ಹೆಂಡತಿ..” ಎಂದರು ಯಾರೋ. +ಇಗರ್ಜಿಗೆ ಬಂದ ಕ್ರೀಸ್ತುವರು ಎರಡು ಹೋಳಾಗಿ ಓಡೆದುಕೊಂಡರು. ಇಗರ್ಜಿಯ ಬಲಗಡೆಯಿದ್ದ ಮನೆಗಳಲ್ಲಿ ಇದ್ದವರೆಲ್ಲ ಆ ಕಡೆಗೆ, ಎಡಗಡೆ ಸಾಲಿನ ಮನೆಗಳವರು ಆ ಕಡೆ ಹೊರಳಿಕೊಂಡರೆ ಹಿಂಬದಿಯ ಮನೆಗಳವರಲ್ಲಿ ಕೆಲವರು ಆ ಗುಂಪನ್ನು ಕೆಲವರು ಈ ಗುಂಪನ್ನು ಸೇರಿಕೊಂಡರು. ಈ ಹಿಂಬದಿ ಸಲಿನವರು ಯಾವ ಕಡೆಯಿಂದ ಹೋದರೂ ಒಂದೇ ದಾರಿಯನ್ನು ಕ್ರಮಿಸಬೇಕಾಗುತ್ತಿತ್ತು. +ಕ್ರೀಸ್ತುವರ ಕೇರಿ ತೀರಾ ದೊಡ್ಡದೇನೂ ಆಗಿರಲಿಲ್ಲ. ಶಿವಸಾಗರದ ಎರಡು ಮೂರು ರಸ್ತೆಗಳಲ್ಲಿ ಕ್ರೀಸ್ತುವರ ಮನೆಗಳು ಹರಡಿಕೊಂಡಿದ್ದವು. ನಿತ್ಯ ಅವರನ್ನು ಇವರು ಇವರನ್ನು ಅವರು ನೋಡುವುದು ಇತ್ತು. +ಆದರೆ ಭಾನುವಾರಕ್ಕೆ ಬೇರೆಯೇ ಆದ ಒಂದು ಮಹತ್ವವಿತ್ತು. ಇಗರ್ಜಿಯಲ್ಲಿ ಎಲ್ಲ ಜನ ಒಟ್ಟಿಗೇನೆ ಸೇರುತ್ತಾರೆ. ಭೇಟಿಯಾಗುತ್ತಾರೆ. ಮಾತನಾಡಲು ಸಿಗುತ್ತಾರೆ ಎಂಬುದೇ ಮುಖ್ಯ ವಿಷಯವಾಗಿತ್ತು. ಭಾನುವಾರಗಳಂದು ಮಾತ್ರ ಇಗರ್ಜಿಯಲ್ಲಿ ಎರಡು ಪೂಜೆಗಳು. ನಿತ್ಯದ ಸಾಧಾರಣ ಪೂಜೆ ಬೆಳಿಗ್ಗೆ ಆರು ಗಂಟೆಗಾದರೆ ಭಾನುವಾರದ ಗಾಯನ ಪೂಜೆ ಎಂಟು ಗಂಟೆಗೆ. ಸಾಧಾರಣ ಪೂಜೆ ಅರ್ಧ ಗಂಟೆಯಲ್ಲಿ ಮುಗಿಸಿದರೆ ಗಾಯನ ಪೂಜೆಗೆ ಒಂದೂವರೆ ಗಂಟೆ. +ದಿವ್ಯ ಪ್ರಸಾದ ಸ್ವೀಕಾರಿಸುವವರು ಅದನ್ನು ತೆಗೆದುಕೊಳ್ಳುವ ತನಕ ಉಪವಾಸವಿರಬೇಕಾದ್ದು ಪದ್ದತಿ. ಗಾಯನ ಪೂಜೆಗೆ ಬಂದು ಪ್ರಸಾದ ಸ್ವೀಕರಿಸುವವರು ಗಂಜಿ ನೀರು ಕುಡಿದು ಉಪವಾಸ ಮುರಿಯುವುದು ಹತ್ತು ಗಂಟೆಗೆ. ಅಲ್ಲಿಯ ತನಕ ಉಪವಾಸ ಮಾಡಲಾರದ ಮುದುಕರು, ವಯಸ್ಸಾದವರು ಬೆಳಿಗ್ಗೆ ನಡೆಯುವ ಸಾಧಾರಣ ಪೂಜೆಗೆ ಬಂದು ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದರು. ಉಪವಾಸ ಇರಬಲ್ಲ ಹೆಂಗಸರು, ಗಂಡಸರು , ಯುವಕ ಯುವತಿಯರು ಗಾಯನ ಪೂಜೆಗೆ ಬರುತ್ತಿದ್ದರು. +ಗಾಯನ ಪೂಜೆಗೆ ಬಂದ ಹಾಗಾಯಿತು. ಯಾರು ಬಂದಿದ್ದಾರೆ, ಯಾರು ಬಂದಿಲ್ಲ, ಯಾರಿಗೆ ಏನಾಯಿತು ಎಂದೆಲ್ಲ ವಿಷಯ ಸಂಗ್ರಹಿಸಿದ ಹಾಗೂ ಆಯಿತು, ಪೂಜೆ ಆಲಿಸಿದ ಪುಣ್ಯ ಕೂಡ ದೊರೆಯಿತು ಎಂಬುದು ಹಲವರ ಆಂಬೋಣವಾಗಿತ್ತು. ಹೀಗೆ ಇಗರ್ಜಿಗೆ ಬಂದವರಿಗೆ ಒಂದಲ್ಲಾ ಒಂದು ವಿಷಯವಂತೂ ಸಿಗುತ್ತಿತ್ತು. ತಮ್ಮ ಗುಂಪಿನಲ್ಲಿ ಇಲ್ಲದವರ ಬಗ್ಗೆ ಮಾತನಾಡುತ್ತ ಅವರು ಸಾಗುತ್ತಿದ್ದರು. ಎರಡು ಹೋಳಾಗಿ ಮನೆಯತ್ತ ಹೊರಟವರು ತಮ್ಮ ಜತೆ ಸೇರಿಕೊಳ್ಳದ ಮೂರನೆಯ ಗುಂಪಿನ ಬಗ್ಗೆಯೂ ಗಮನ ಹರಿಸಿದರು. +ಡಾಕ್ಟರ್ ರೇಗೋ ಇಗರ್ಜಿಯಿಂದ ಹೊರ ಬಂದು ಚಿರೋಟಿಗೆ ಬೆಂಕಿ ಮುಟ್ಟಿಸಿ ಕ್ವಾಯರ ಮಾಸ್ಟರ್ ವಲೇರಿಯನ ಹತ್ತಿರ ಮಾತನಾಡುತ್ತ ನಿಂತಿದ್ದರು. ರೇಗೋ ಹೆಂಡತಿ ಮ್ಯಾನೇಜರ ಡಯಾಸನ ಹೆಂಡತಿಯ ಹತ್ತಿರ ಮಾತಿಗೆ ತೊಡಗಿದ್ದಳು. ಡ್ರೈವರ್ ಚಾರ್ಲಿ ತನ್ನ ಹೆಂಡತಿ ಮಕ್ಕಳ ಜತೆ ಪಾದರಿ ಬಂಗಲೆ ಬಳಿ ನಿಂತಿದ್ದ. ವಿನ್ಸೆಂಟ ತನ್ನ ತಾಯಿ ತಂಗಿಯರ ಜತೆ ಸಂತ ಜೋಸೆಫ಼ರ ಮಂಟಪದೆದುರು ನಿಂತು ಪ್ರಾರ್ಥನೆಗೆ ತೊಡಗಿದ್ದ. +ಎಲ್ಲರೂ ಕೋಟು, ಪ್ಯಾಂಟು, ಟೈಗಳಲ್ಲಿ ಮಿರುಗುತ್ತಿದ್ದರು. ಕಾಲಿಗೆ ಹೊಳೆಯುವ ಕಪ್ಪು ಬೂಟುಗಳು. ಇವರ ಕಡೆಯಿಂದ ಬೀಸಿ ಬರುವ ಗಾಳಿಯಲ್ಲಿ ಏನೋ ಪರಿಮಳ. ಇವರ ಹೆಂಗಸರಂತೂ ಯುರೋಪಿಯನ ಹೆಂಗಸರ ಹಾಗೆ ತುಟಿ, ಕೆನ್ನೆಗಳಿಗೆ ಕೆಂಪು ಬಳಿದುಕೊಂಡು, ಹಿಮ್ಮಡಿ ಉದ್ದದ ಬೂಟು ತೊಟ್ಟು, ತಲೆಗೂದಲು ಕತ್ತರಿಸಿಕೊಂಡು ಕಿಲ ಕಿಲ ನಗುವುದು, ಬಳಕುವುದು ಎಷ್ಟೊಂದು ಚಂದ ಅಲ್ಲವೇ? +ಡಾಕ್ಟರ್ ರೇಗೋ, ಜಾನ ಡಯಾಸನ ಮಕ್ಕಳೆಲ್ಲ ಬೆಂಗಳೂರು, ಮಂಗಳೂರನಲ್ಲಿ ಓದುತ್ತಿವೆಯಂತೆ. ಇಲ್ಲಿ ಅಂತಹ ಶಾಲೆಗಳು ಇಲ್ಲದಿರುವುದರಿಂದ ಮಕ್ಕಳನ್ನು ಅಲ್ಲಿ ಬಿಟ್ಟಿದ್ದಾರೆ. +ಡಾಕ್ಟರ್ ರೇಗೋಗೆ ಇಲ್ಲಿಯ ಇಗರ್ಜಿ ಕೂಡ ಮನಸ್ಸಿಗೆ ಬಂದಿಲ್ಲ. +“ನೀವು ಏನೇ ಹೇಳಿ ಫ಼ಾದರ್..ಇಂಗ್ಲೀಷ ಮಾಸ ಕೇಳಲಿಲ್ಲ ಅಂದರೆ ನನಗೆ ಸಮಾಧಾನವೇ ಆಗುವುದಿಲ್ಲ”. +ಎಂದು ರೇಗೋ ಪಾದರಿ ಮಸ್ಕರಿನಾಸರಿಗೆ ಹೇಳಿದ್ದನ್ನು ಸಿಮೋನನ ಮಗ ವಿಕ್ಟರ ಕೇಳಿಸಿಕೊಂಡು ಬಂದು ತಾಯಿಗೆ ಹೇಳಿದ್ದು ಈಗ ಊರಿಗೆಲ್ಲ ತಿಳಿದಿದೆ. +ಈ ಎಲ್ಲ ಜನರಿಗೂ ಈ ಕೊಂಕಣಿ ಪೂಜೆ ಹೊಸದಂತೆ. ವಿಚಿತ್ರವಾಗಿ ಕೇಳುತ್ತದಂತೆ. ಏನಿದ್ದರೂ ಇಂಗ್ಲೀಷಿನಲ್ಲಿ ಪೂಜೆ ನಡೆಯಬೇಕು. ಇಂಗ್ಲೀಷಿನಲ್ಲಿ ಪ್ರಾರ್ಥನೆ ಮಾಡಬೇಕು ಅಂದರೆ ಅದು ದೇವರಿಗೆ ತಲುಪುತ್ತದೆ ಅನ್ನುತ್ತಾರೆ ಇವರು. +ಈ ವಿಷಯ ಕೂಡ ತಮಗೆ ಹೊಸದೆ. +ಕಲ್ಲು ಕೆತ್ತುವ, ಕಲ್ಲು ಕಟ್ಟುವ ತಮಗೂ ಇವರಿಗೂ ಎಂತಹ ವ್ಯತ್ಯಾಸವಲ್ಲವೇ? +“ಅವರೆಲ್ಲ ಬಾಮಣರು..ನಮಗಿಂತ ಶ್ರೇಷ್ಠರು.” +ಇರಬಹುದು ಅಂದುಕೊಳ್ಳುತ್ತಾರೆ. ಇಲ್ಲವೆಂದರೆ ಪ್ಲೇಗು ಕಾಲರಾದಂತಹ ಕಾಯಿಲೆಗಳನ್ನು ಊರಿನಿಂದ ಓಡಿಸಲು ಇವರು ಬರುತ್ತಿದ್ದರೆ! +ಮನೆಗಳತ್ತ ಹೊರಟವರು ಇವರ ಬಗ್ಗೆಯೇ ಮಾತನಾಡುತ್ತಾರೆ. +ಇವರ ಉಡಿಗೆ ತೊಡಿಗೆ ಮಾತು ದಿವ್ಯಪ್ರಸಾದ ಸ್ವೀಕರಿಸಿ ಬರುವಾಗಿನ ಭಕ್ತಿ, ಪಾದರಿಗಳ ಹತ್ತಿರ ಇವಿರಿಗಿರುವ ಸಲಿಗೆ, ಪಾದರಿ ಇವರಿಗೆ ನೀಡುವ ಗೌರವ, ಇತ್ಯಾದಿ ವಿಷಯಗಳು ಇಲ್ಲಿ ಪ್ರಧಾನವಾಗಿ ಗಮನಕ್ಕೆ ಬರುತ್ತವೆ. +ಅವರವರ ಮನೆಗಳು ಬರುವ ತನಕ ಇದೇ ಮಾತಾಯಿತು. ಇಂದು ಈ ಮಾತುಗಳ ಜತೆಗೆ ಅದೇ ತಾನೆ ಜಟಕಾದಲ್ಲಿ ಬಂದಿಳಿದ ಹೆಂಗಸಿನ ವಿಷಯವೂ ಬಂದಿತು. +“ಪಾದರಿಗಳೇ ಮಾಡಿಸಿದ್ದಂತೆ ಈ ಮದುವೇನ” ಎಂದಳು ಸಿಮೋನನ ಹೆಂಡತಿ ಅಪ್ಪಿಬಾಯಿ. +ಎಲ್ಲ ಹೆಂಗಸರೂ ಅವಸರದಲ್ಲಿ ಇದ್ದರು. ಭಾನುವಾರ ಪೂಜೆ ಮುಗಿದ ತಕ್ಷಣ ಹುಡುಗ ಹುಡುಗಿಯರು ದತೋರ್ನ ಕಲಿಯಲು ಇಗರ್ಜಿಗೆ ಹೋಗಬೇಕಿತ್ತು. ಹೀಗೆ ಹೋಗದವರಿಗೆ ಪಾಮಿಸ್ತ್ರಿಯ ಏಟು, ಮೊಣಕಾಲೂರಿ ನಿಲ್ಲುವುದು, ರಾಗಿಯ ಮೇಲೆ ಮೊಣಕಾಲೂರುವುದು. ಇಗರ್ಜಿ ತೊಳೆಯುವುದು ಮೊದಲಾದ ಶಿಕ್ಷೆಗಳು ಕಾದಿರುತ್ತಿದ್ದವು. ಹೀಗಾಗಿ ಹುಡುಗ ಹುಡುಗಿಯರು, ಮದುವೆಯಾಗದ ಯುವಕ ಯುವತಿಯರು ಪೂಜೆ ಮುಗಿಸಿಕೊಂಡು ಮನೆಗೆ ಬಂದು ತಿಂಡಿ ಕಾಫ಼ಿ ಮುಗಿಸಿ ಮತ್ತೆ ಇಗರ್ಜಿಗೆ ಹೋಗಲು ಅವಸರ ಮಾಡುತ್ತಿದ್ದರು. ಹೀಗಾಗಿ ಹೆಂಗಸರೆಲ್ಲ ಗಡಿಬಿಡೀಯಲ್ಲಿ ಮನೆಗಳತ್ತ ಧಾವಿಸಿದರು. ನಡುವೆ ಅದು ಇದು ಮಾತನಾಡಲು ಅವಕಾಶ ಮಾಡಿಕೊಂಡರು. +ಅಲ್ಲದೆ ಪೂಜೆ ಮುಗಿದದ್ದೇ! ಎಲ್ಲ ಗಂಡಸರೂ ಮಾರ್ಕೆಟಗೆ ಹೋಗುವುದು ಭಾನುವಾರದ ರೂಢಿ. ಅವರು ಮಾಂಸ ತೆಗೆದುಕೊಂಡು ಬರುವಷ್ಟರಲ್ಲಿ ಖಾರ ಅರೆದಿಡಬೇಕು. ಊಟದ ಜೊತೆಗೆ ದೋಸೆಯನ್ನೋ ಇಡ್ಡಲಿಯನ್ನೋ ಮಾಡಬೇಕು. ಭಾನುವಾರಗಳಂದು ಊಟಕ್ಕೆ ತುಸು ತಡವಾಗುವುದು ಸಹಜವೆ ಆದರೂ ಅಡಿಗೆ ಆಗಬೇಕು. +ಮಾತು ನಿಲ್ಲಿಸಿ ಹೆಂಗಸರು ಉಟ್ಟ ಸೀರೆಗಳನ್ನು ಸಡಲಿಸಿ ಬೇರೆ ಸೀರೆ ಉಡುತ್ತ ಕೆಲಸ ಆಗಬೇಕು. ಕೆಲಸ ಆಗಬೇಕು ಅನ್ನುವಾಗ ಇಗರ್ಜಿಯಿಂದ ಜ್ಞಾನೋಪದೇಶದ ಗಂಟೆ ಕೇಳಿಸಿತು. +* +* +* +ಇಗರ್ಜಿಯಲ್ಲಿ ಕಿರು ಪ್ರಾರ್ಥನೆ ಮುಗಿಸಿ ಪಾದರಿ ಮಸ್ಕರಿನಾಸ ತಮ್ಮ ಬಂಗಲೆಗೆ ಬಂದರು. +ಶಿವಸಾಗರಕ್ಕೆ ಬಂದ ಪಾದರಿ ಮಸ್ಕರಿನಾಸ ತಮ್ಮ ಬಂಗಲೆಗೆ ಬಂದರು. +ಶಿವಸಾಗರಕ್ಕೆ ಬಂದ ಪಾದರಿ ಮಸ್ಕರಿನಾಸ ಅವರಿಗೆ ಊರನ್ನು ನೋಡಿ, ಇಗರ್ಜಿಯನ್ನು ನೋಡಿ ಸಂತಸವಾಯಿತಾದರೆ ತಾವು ಇರಬೇಕಾಗಿರುವ ಮನೆ ನೋಡಿ ಮುಜುಗರವಾಯಿತು. +ಭಟ್ಕಳ ಅಂತಹಾ ದೊಡ್ಡ ಪಟ್ಟಣವೇನೂ ಆಗಿರಲಿಲ್ಲ. ಅವರು ಇದ್ದುದು ಕೂಡ ಊರ ಹೊರಗಿನ ಒಂದು ಪ್ರದೇಶದಲ್ಲಿ. ತೆಂಗಿನ ಮರಗಳ ನಡುವೆ ಹುದುಗಿದ್ದ ಇಗರ್ಜಿ. ಮುಂದೆ ಹಳ್ಳಿಮನೆಗಳು. ಹಿಂದೆ ಉದ್ದಕೆ ಮಲಗಿದ್ದ ಒಂದು ಗುಡ್ಡ ಸಣ್ಣ ಇಗರ್ಜಿ. ಆದರೆ ಐದು ವರ್ಷ ಅಲ್ಲಿದ್ದ ಅವರು ತಮ್ಮದಾಗಿ ಒಂದು ಬಂಗಲೆ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಂಗಲೆಯ ಸುತ್ತ ಒಂದು ಹೂದೋಟ. ಹಿಂದೆ ಎಲ್ಲ ವ್ಯವಸ್ಥೆಗಳಿರುವ ಒಂದು ಅಡಿಗೆ ಮನೆ ಎಂದೆಲ್ಲ ಅವರು ಮಾಡಿಕೊಂಡಿದ್ದರು. +ಆದರೆ ಇಲ್ಲಿಯ ತಮ್ಮ ಈಗಿನ ಮನೆ ಹಿಂದಿನ ಕೊಪೆಲ. ನಡುವೆ ಒಂದು ಪರದೆ ಹಾಕಿ ಪಾದರಿ ಮಲಗುವ ಕೋಣೆಯನ್ನು ಪ್ರತ್ಯೇಕವಾಗಿ ಮಾಡಿಕೊಂಡಿದ್ದರು. ಪಾದರಿ ಮನೆ ಎಂದರೆ ದನದ ಕೊಟ್ಟಿಗೆಯ ಹಾಗಿತ್ತು. ನೆಲಕ್ಕೆ ಶಗಣಿ, ಮಣ್ಣಿನ ಗೋಡೆಗಳು, ಮೇಲೆ ಹಂಚು, ಒಂದು ಲಕ್ಷಣವಿಲ್ಲ, ವ್ಯವಸ್ಥೆ ಇಲ್ಲ. ಛೇ ಎಂದು ತಲೆ ಕೊಡವಿದರು ಮಸ್ಕರಿನಾಸ. +ಪಾದರಿ ಗೋನಸ್ವಾಲಿಸರ ಬಳಿ ಈ ಬಗ್ಗೆ ಮಾತನಾಡಲು ಅವರು ಹೋಗಲಿಲ್ಲ. ಸದಾ ಇಗರ್ಜಿ ದೇವರು ಜನ ಎಂದು ದುಡಿಯುತ್ತಿದ್ದ ಈ ವ್ಯಕ್ತಿ ತಮ್ಮ ಬಗ್ಗೆ ಏನೂ ಮಾಡಿಕೊಂಡಿರಲಿಲ್ಲ. ಆದರೆ ಮುಂದೆ ಹೀಗೆ ಆಗಬಾರದು. ಈ ಊರಿನಲ್ಲಿ ಮತ್ತೆ ಐದು ಆರು ವರ್ಷ ಇರಬೇಕಾದ ತಾವು ತಮ್ಮ ಉಳಿಯುವಿಕೆಗೆ ಒಳ್ಳೆಯದೊಂದು ಏರ್ಪಾಟು ಮಾಡಿಕೊಳ್ಳದಿದ್ದರೆ ಹೇಗೆ? +ಹೀಗೆಂದೇ ಅವರು ಗುರ್ಕಾರ ಸಿಮೋನನನ್ನು ಹೇಳಿ ಕರೆಸಿಕೊಂಡರು. +“ಸಿಮೋನ ಮಾಮ..ನಿಮ್ಮ ಊರಿನಲ್ಲಿ ಪಾದರಿ ಸುಖವಾಗಿ ಇರಬಾರದು ಅಂತೀರಾ ನೀವು?” ಎಂದು ಕೇಳಿದರು. +“ಯಾಕೆ ಪದ್ರಾಬ?” ಎಂದ ಆತ ಗಾಬರಿಯಿಂದ. +“ಇದೇನು ಪಾದರಿ ಮನೇನ ಇಲ್ಲವೆ ಗ್ರೊಟ್ಟೋನ? ನೆಲ ಸರಿ ಇಲ್ಲ ಗೋಡೆ ಸರಿ ಇಲ್ಲ..ಬೇರೆ ಕೊಠಡಿಗಳಿಲ್ಲ..” +ಸಿಮೋನ ಮುಂದೆ ಏನು ಹೇಳಬೇಕು ಎಂಬುದು ಅರಿಯದೆ ನಿಂತಾಗ ಮಸ್ಕರಿನಾಸದಲ್ಲಿ – +“….ಈಗೊಂದು ಕೆಲಸ ಮಾಡೋಣ..ಇದು ಹೀಗೇ ಇರಲಿ..ಇದರ ಪಕ್ಕದಲ್ಲಿ ಒಂದು ಕಟ್ಟಡ ಕೆಲಸ ಶುರುಮಾಡಿ ಅದಕ್ಕೆ ತಗುಲಿಕೊಂಡಂತೆ ಕೂಜ್ನ ಕಟ್ಟಿ..” +“ಪದ್ರಾಬ…ಹಣ..” ಎಂದು ರಾಗ ಎಳೆದ ಸಿಮೋನ…. +“ನಾನು ಅದರ ವ್ಯವಸ್ಥೆ ಮಾಡತೇನೆ..ನೀವು ಕೆಲಸ ಪ್ರಾರಂಭಿಸಿ..” ಎಂದರು ಅವರು. +ಅವರ ಮಾತಿನಂತೆಯೇ ಸಿಮೋನ ಕೆಲಸ ಪ್ರರಂಭಿಸಿದ. ಇಗರ್ಜಿ ಕೆಲಸಕ್ಕೆಂದು ತರಿಸಿದ ಕಲ್ಲು, ಮರ ಇನ್ನೂ ಉಳಿದಿತ್ತು. ಇಗರ್ಜಿ ಕೆಲಸ ಮಾಡಲು ಬಂದವರಲ್ಲಿ ಕೆಲವರಂತೂ ಆಗಲೇ ಶಿವಸಾಗರದವರೇ ಆಗಿದ್ದರು. ಒಂದು ಭಾನುವಾರ ಸಿಮೋನ ಬಂಗಲೆ ಕೆಲಸ ಆರಂಭಿಸಿದ. +ತಮ್ಮ ಬಂಗಲೆ ಸಿದ್ದವಾಗುವ ಮುನ್ನವೇ ಪಾದರಿಗಳ ಬಂಗಲೆ ಎಂಬ ಮಾತನ್ನು ಮಸ್ಕರಿನಾಸ ಜನರ ಬಾಯಲ್ಲಿ ಚಾತಿಗೆ ತಂದರು. ’ಜನ ಪಾದರಿ ಮನೆ’ ’ಪಾದರಿ ಮನೆ’ ಎಂದು ಕರೆಯುವುದು ಅವರಿಗೆ ಸರಿ ಎನಿಸುತ್ತಿರಲಿಲ್ಲ. +ಸಿಮೋನನ ಮನೆ, ಇಂತ್ರು ಮನೆ, ಬಾಲ್ತಿದಾರನ ಮನೆ ಅನ್ನುವ ಹಾಗೆ ಇದು ಏನು ಪಾದರಿ ಮನೆ? ಪಾದರಿ ಬಂಗಲೆಯಲ್ಲಿ ಇರಬೇಕಲ್ಲವೇ? ಹೀಗೆಂದೇ ಅವರು ಮಾತಿನ ನಡುವೆ, ಸೆರಮಾಂವಂ ನಡುವೆ ಪಾದರಿ ಬಂಗಲೆ ಎಂಬ ಮಾತನ್ನೇ ಬಳಸುತ್ತ ಈ ಮಾತಿನ ಮೇಲೆ ಹೆಚ್ಚು ಒತ್ತು ನೀಡತೊಡಗಿದರು. ಜನ ಕ್ರಮೇಣ ಹೀಗೆಯೇ ಹೇಳತೊಡಗಿದರು. +ಸಿಮೋನ ಪಾದರಿ ಕೊಟ್ಟ ನಕ್ಷೆಯ ಪ್ರಕಾರ ಒಂದು ವೆರಾಂಡ, ಹಾಲು, ಎರಡು ಬೆಡ್ ರೂಮುಗಳು, ಒಂದು ಸಿಟ್ಟಿಂಗ, ಹಿಂಬದಿಯಲ್ಲಿ ಊಟದ ಮನೆ, ಅದರಾಚೆಗೆ ಅಡಿಗೆ ಮನೆ ಎಂದು ವಿಸ್ತಾರವಾದ ಕಟ್ಟಡಕ್ಕೆ ತಳಪಾಯ ಹಾಕಿ ಗೋಡೆ ಎಬ್ಬಿಸ ತೊಡಗಿದ. ಗೋವಾದ ಪ್ರಾವಿನ್ಶಿಯಲ್ ಅವರಿಗೆ ಬರೆದು, ತಮ್ಮ ಪರಿಚಯದ ಇನ್ನೂ ಕೆಲವರಿಗೆ ಸಂಪರ್ಕಿಸಿ ಮಸ್ಕರಾನಿಸ ಬಂಗಲೆಗೆ ಹಣ ತರಿಸಿಕೊಳ್ಳತೊಡಗಿದರು. ತಮ್ಮ ಬಂಗಲೆಯ ನಿರ್ಮಾಣ ತ್ವರಿತಗತಿಯಲ್ಲಿ ಆಗುತ್ತಿದೆ ಎಂಬ ಸಂತಸ, ತೃಪ್ತಿ ಅವರಲ್ಲಿ ಮೂಡಿತು. ಎದ್ದು ನಿಂತ ಬಂಗಲೆಯನ್ನು ಒಂದು ಬಾರಿ ನೋಡಿ. ಹಳೆ ಕಟ್ಟಡ ಹೊಕ್ಕಾಗ ಒಳಗೆ ಬಳೆಯ ಸದ್ದಾಗಿ- +“…ಫ಼ರಾಸ್ಕ…ಕೋಣ್ರೆ..ಭೀತರ?” ಎಂದು ಕೇಳಿದರು. +(ಫ಼ರಾಸ್ಕ ಒಳಗೆ ಯಾರೋ?) ಎಂಬ ಅವರ ಪ್ರಶ್ನೆಗೆ ಫ಼ರಾಸ್ಕ ಉತ್ತರ ಕೊಡಲಿಲ್ಲ. ಅದರ ಬದಲು ಅವನ ಹೆಂಡತಿ ರಜೀನಾ- +“ಹಾಂವುಂ ಪದ್ರಾಬ” (ನಾನು ಪದ್ರಾಬ) ಎಂದು ಹೇಳುತ್ತ ಪರದೆ ಸರಿಸಿ ಈ ಬದಿಗೆ ಬಂದಳು. +“ಅರೆ ಯಾವಾಗ ಬಂದದ್ದು?” ಎಂದವರು ಕೇಳಿದರು ರಜೀನಾಳ ಮುಖವನ್ನು ಕಣ್ಣರಳಿಸಿ ನೋಡುತ್ತ. +* +* +* +ಫ಼ರಾಸ್ಕ ಅಭ್ಯಾಸ ಬಲದಿಂದೆಂಬಂತೆ ಹತ್ತೂವರೆಗೆ ಒಂದು ಬಾರಿ ಇಗರ್ಜಿಯ ಗಂಟೆ ಹೊಡೆದು ಎಲ್ಲ ಮಕ್ಕಳಿಗೆ ಜ್ಞಾನೋಪದೇಶಕ್ಕೆ ಬರುವಂತೆ ತಿಳಿಸಿ ಕೈಯಲ್ಲಿ ಚೀಲ ಹಿಡಿದು ಮಾಂಸ ತರಲು ಹೊರಟ. ಆತನ ಚಡ್ಡಿ ಜೇಬಿನಲ್ಲಿ ಚಿಲ್ಲರೆ ಹಣ ಭಾರದಿಂದ ತೂಗಾಡುತಲಿತ್ತು. ಪಾದರಿಯ ಬಟ್ಲರ್ ಆಗಿ ಸೇರಿಕೊಂಡ ನಂತರ ಇದೊಂದು ಹಿಂಸೆ ಅವನನ್ನು ಕಾಡುತ್ತ ಬಂದಿತು. ಮಾಂಸ ತರಲು ಎಲ್ಲರೂ ಎಂಟಾಣೆ, ಒಂದು ರೂಪಾಯಿ ತೆಗೆದುಕೊಂಡು ಹೋದರೆ ತಾನು ಒಯ್ಯುತ್ತಿದ್ದುದು ಬಿಲ್ಲೆ, ಅರ್ಧ ಆಣೆ, ಆಣೆ, ಎರಡಾಣೆ. ಒಂದೊಂದು ಬಾರಿ ಬರೀ ಬಿಲ್ಲೆ ಅರ್ಧ ಆಣೆಗಳೇ ಇರುತ್ತಿದ್ದವು. ಮಾಂಸದ ಅಂಗಡಿಯಲ್ಲಿ ಈ ಬಿಲ್ಲೆಗಳನ್ನು ಎಂಟು ಎಂಟು ಆಣೆ ಮೊತ್ತದಲ್ಲಿ ಗುಪ್ಪೆ ಇರಿಸಿದಾಗ ಅಂಗಡಿಯಾತ- +“..ಫ಼ರಾಸ್ಕ ಇದು ಎಂತದ್ದು ಮಾರಾಯ..ಬಿಲ್ಲೆ ವ್ಯವಹಾರ..ನಾವು ಬೇರೆಯವರಿಗೆ ಕೊಡೋದು ಹ್ಯಾಗೆ?” ಎಂದು ಕೇಳುತ್ತಿದ್ದ. +ಈ ಪರಿಸ್ಥಿತಿ ಇಂದಿಗೂ ಮುಂದುವರೆದಿತ್ತು. ಪಾದರಿ ಕಾಣಿಕೆ ಡಬ್ಬಿಯಲ್ಲಿ ಪ್ರತಿ ಭಾನುವಾರ ಸಂಗ್ರಹವಾಗುತ್ತಿದ್ದ ಹಣವನ್ನು ತೆಗೆದು ಒಂದೆಡೆ ಎಣಿಸಿ ಇಡುತ್ತಿದ್ದರು. ಪೂಜೆಯ ನಡುವೆ ತಾನೇ ಕಾಣಿಕೆ ಡಬ್ಬಿ ಹಿಡಿದು ಜನರ ನಡುವೆ ಹೋಗುತ್ತಿದ್ದೆ. ಪ್ರತಿಯೊಬ್ಬರ ಮುಂದೆಯೂ ಹೋಗಿ ಡಬ್ಬಿ ಹಿಡಿಯುವುದು ಅನಾನೂಕುಲವಾಗಿದ್ದರಿಂದ ತಗಡಿನ ಡಬ್ಬಿಗೆ ಉದ್ದವಾದ ಒಂದು ಕೋಲನ್ನು ಜೋಡಿಸಲಾಗಿತ್ತು. ಈ ಕೋಲನ್ನು ತುದಿಯಲ್ಲಿ ಹಿಡಿದು ಎಷ್ಟು ದೂರ ಬೇಕಾದರೂ ಕಾಣಿಕೆ ಡಬ್ಬಿಯನ್ನು ಚಾಚಬಹುದಾಗಿತ್ತು. ಹೀಗೆ ತಾನು ಚಾಚಿದ ಡಬ್ಬಿಗೆ ಜನ ಹಣ ಹಾಕುತ್ತಿದ್ದರು. ಎಂಟಾಣಿ ಒಂದು ರೂಪಾಯಿ ಹಾಕುವವರು ಬೆರಳ ತುದಿಯಲ್ಲಿ ಅದನ್ನು ಹಿದಿದುಕೊಂಡು ಗತ್ತಿನಿಂದ ಎಲ್ಲರಿಗೂ ಕಾಣಲಿ ಎಂಬಂತೆ ಡಬ್ಬಿಯೊಳಗೆ ಟೊಣಕ ಎನಿಸಿದರೆ ಬಿಲ್ಲೆ ಅರ್ಧ ಆಣೆ ಹಾಕುವವರು ಮೂರು ಬೆರಳುಗಳ ನಡುವೆ ಅದನ್ನು ಮುಚ್ಚಿ ಇರಿಸಿಕೊಂಡು ಟೊಣಕ ಅನಿಸುತ್ತಿದ್ದರು. ಕೆಲವರಿಗೆ ಹಣ ಹಾಕುವುದಕ್ಕಿಂತ ಈ ಸದ್ದು ಬರುವುದೇ ಮುಖ್ಯವೆನಿಸುತ್ತಿತ್ತು. ಹೀಗಾಗಿ ಕಾಣಿಕೆ ಡಬ್ಬಿಯಲ್ಲಿ ಸವೆದು ಹೋದ ಬಿಲ್ಲೆ, ಹುಡುಗರ ಸೊಂಟಕ್ಕೆ ಕಟ್ಟಿದ ಬಿಲ್ಲೆ, ಬೇರೆ ಯಾವುದೋ ದೇಶದ್ದು. ಹೈದರಾಲಿ ಕಾಲದ್ದು ಇಲ್ಲವೇ ಬಿಲ್ಲೆಯ ಹಾಗೆಯೇ ಇರುವ ತಗಡಿನ ಚೂರು ಕೂಡ ಸಿಗುತ್ತಿತ್ತು. ಎಲ್ಲ ಮಕ್ಕಳೂ ಇಗರ್ಜಿಗೆ ಹೊರಡುವಾಗ. +“ಬಾಬಾ ಇಜ್ಮೋಲಾಕ ದುಡ್ಡು” ಎಂದು ಹೇಳುತ್ತಿದ್ದರು. ಕಾಣಿಕೆಗೆ ಹಣವಿಲ್ಲದೆ ಇಗರ್ಜಿಗೆ ಹೋಗಲೇ ಬಾರದು ಎಂಬುದು ಮಕ್ಕಳ ಅಭಿಪ್ರಾಯ. ತಂದೆ ತಾಯಂದಿರು ಕೂಡ- +“ಘೆಪುತ್ರ…, ಇಜ್ಮೋಲ ಡಬ್ಬೀಕ ಘಾಲ..” (ತೊಕೋ ಮಗ ಕಾಣಿಕೆ ಡಬ್ಬಿಗೆ ಹಾಕು) ಎಂದು ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಬಿಲ್ಲೆ, ಅರ್ಧ ಆಣೆ ಕೊಡುತ್ತಿದ್ದರು. ಎಲ್ಲ ಮಕ್ಕಳೂ ತಪ್ಪದೆ ಹಣ ಹಾಕುತ್ತಿದ್ದರು. ಎಲ್ಲೋ ಕೆಲ ಮಕ್ಕಳು ಮಂಡಕ್ಕಿ, ಉಂಡೆ, ಬೆಲ್ಲದ ಮಿಠಾಯಿ ಕೊಂಡು ತಿನ್ನುತ್ತಿದ್ದರು. ತಾನು ಹಣ ಹಾಕಿಲ್ಲ ಎಂಬುದು ಎಲ್ಲಿ ತಂದೆ ತಾಯಂದಿರು ಗಮನಿಸುತ್ತಾರೋ ಎಂದು ಈ ಮಕ್ಕಳು ಬೆರಳುಗಳ ನಡುವೆ ಏನೋ ಒಂದನ್ನು ಮುಚ್ಚಿ ಇರಿಸಿಕೊಂಡು ಟೊಣಕ್ ಎಂದು ಶಬ್ದ ಮಾಡುತ್ತಿದ್ದರು. +ಇದು ಬಟ್ಲರ್ ಫ಼ರಾಸ್ಕನಿಗೆ ತೊಂದರೆಯನ್ನುಂಟು ಮಾಡುತ್ತಿತ್ತು. ಹೀಗೆಂದು ಬೇರೊಂದು ದಾರಿ ಅವನಿಗೆ ಕಂಡಿರಲಿಲ್ಲ. ಕೆಲ ಬಾರಿ ಅಂಗಡಿಗಳವರಿಗೆ ಆತ ಚಿಲ್ಲರೆ ಕೊಟ್ಟು ಗಟ್ಟಿ ರೂಪಾಯಿ ತರುತ್ತಿದ್ದ. ಅದು ಭಟ್ಕಳದಲ್ಲಿ ಸಾಧ್ಯವಾಗುತ್ತಿತ್ತು. ಕಾಣಿಕೆ ಡಬ್ಬಿ ತುಂಬಾ ಹಣ ಸಂಗ್ರಹವಾಗಿ ಡಬ್ಬಿಯನ್ನು ಒಂದು ಕೈಯಲ್ಲಿ ಹಿಡಿಯಲು ಕಷ್ಟವಾಗುತ್ತಿತ್ತು. ಕೋಲನ್ನು ಜನರತ್ತ ಬಾಚಲು ಆಗದೆ ಆತ ಸ್ಯಾಕ್ರಿಷ್ಟಿಗೆ ಬಂದು ಬೇರೊಂದು ಡಬ್ಬಿ ಒಯ್ಯುವುದೂ ಇತ್ತು. ಆದರೆ ಇಲ್ಲಿ ಅಂತಹ ಪರಿಸ್ಥಿತಿ ಬರಲಿಲ್ಲ. ಡಬ್ಬಿ ಕೂಡ ತುಂಬುತ್ತಿರಲಿಲ್ಲ. +ಮಾರ್ಕೆಟಿನತ್ತ ಹೋಗುತ್ತ ಡಬ್ಬಿಯ ನೆನಪು ಬಂದದ್ದರಿಂದ ಹಿಂದೆಯೇ ಬೇರೊಂದು ವಿಷಯ ಅವನಿಗೆ ನೆನಪಾಯಿತು. +ಭಟ್ಕಳದಿಂದ ಇಲ್ಲಿಗೆ ಬಂದದ್ದಾಯಿತು. ಪಾದರಿಗಳ ಬಂಗಲೆ ಹಿಂದಿನ ಅಡಿಗೆ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಂಡೆ. ಹಿಂದಿನ ಕುಜ್ನೇರ ಬೋನ ಎಲ್ಲವನ್ನೂ ತನಗೆ ಒಪ್ಪಿಸಿ ಅವನ ಮಾವನ ಮನೆಗೆ ಹೋದ. ಅಡಿಗೆ ಮನೆಯಲ್ಲಿ ಹೇಳಿಕೊಳ್ಳುವಷ್ಟು ಪಾತ್ರೆಗಳು ಇರಲಿಲ್ಲ. ಪಿಂಗಾಣಿ ತಟ್ಟೆ, ಕಪ್ಪುಗಳು, ಪೋರ್ಕ, ಚಾಕು, ಚಮಚಗಳು ಐದಾರು ಸೆಟ್ಟಿನಷ್ಟು ಇದ್ದವು. ಅಡಿಗೆ ಮಾಡುವ ಪಾತ್ರೆಗಳು ಕೂಡ. ಪಾದರಿಗಳಲ್ಲಿ ಈ ಬಗ್ಗೆ ಹೇಳಿದಾಗ ಅವರು- +“ಇಲ್ಲಿ ಏನಿದೆ ಅಂತ..ಎಲ್ಲ ತರಿಸೋಣ ಸ್ವಲ್ಪ ದಿನ ಹೋಗಲಿ..” ಎಂದಿದ್ದರು. +ಆಗಲೆ ತಾನು ಇನ್ನೊಂದು ವಿಷಯ ಗಮನಿಸಿದೆ. ಪೂಜೆಯ ನಡುವೆ ಕೀರ್ತನೆಯನ್ನು ಆರಂಭಿಸಿ, ಜನ ಅದನ್ನು ಹಾಡುತ್ತಿರಲು ಬೋನ ಅದೆಲ್ಲೋ ಇರಿಸಿದ ಕಾಣಿಕೆ ಡಬ್ಬಿ ಹಿಡಿದು ಕಾಣಿಕೆ ಸಂಗ್ರಹಿಸಲು ಹೊರಟ. ಮೊದಲಿನಿಂದ ನಡೆದು ಬಂದದ್ದು ಮುಂದುವರೆಯಲಿ ಅಂದುಕೊಂಡು ತಾನು ಸುಮ್ಮನಾದೆ. +ಒಂದೆರಡು ವಾರ ಇದು ಹೀಗೆಯೇ ಸಾಗಿತ್ತು. +ಮಾರನೇ ಭಾನುವಾರ ಪಾದರಿ- +’ಫ಼ರಾಸ್ಕ’ ಎಂದರು. +“ಫ಼ಾದರ್..” ಎಂದು ಹೋಗಿ ಅವರ ಮುಂದೆ ನಿಂತೆ. +“ಕಾಣಿಕೆ ಡಬ್ಬೀನ ನೀನು ತೆಗೆದುಕೊಂಡು ಹೋಗಲ್ವ?” +“ಇಲ್ಲ ಫ಼ಾದರ್..ಮಿರೋಣ ಬೋನ ಆ ಕೆಲಸ ಮಾಡತಿದ್ದಾನೆ” ಮಸ್ಕರಿನಾಸ ಕೊಂಚ ಯೋಚಿಸಿದರು. +“ಇಗರ್ಜಿ ತುಂಬ ಜನ ಇರ್ತಾರೆ…ಆದರೆ ಡಬ್ಬಿಯಲ್ಲಿ ಹಣ ಸಂಗ್ರಹವಾಗೋದು ಕಡಿಮೆ..” +ಎಂದರವರು. ಬೋನ ತಂದು ಒಳಗೆ ಇರಿಸಿದ ಡಬ್ಬಿಯಲ್ಲಿಯ ಹಣವನ್ನು ಮೇಜಿನ ಮೇಲೆ ರಾಶಿ ಹಾಕಿಕೊಂಡು ಅವರು ಲೆಕ್ಕ ಹಾಕಿ ನೋಡಿದ್ದರು. +“ಹೌದು ಪದ್ರಾಬ?” +“ಹೌದು ಮುಂದಿನ ಭಾನುವಾರದಿಂದ ಈ ಕೆಲಸ ನೀನು ಮಾಡು..” +“ಅಲ್ಲ ಪದ್ರಾಬ..” +“ನಾನು ಹೇಳತಿದೀನಲ್ಲ..” +ಈಗ ಈ ಕೆಲಸ ತನ್ನ ಪಾಲಿಗೆ ಬಂದಿದೆ. ಸಂಗ್ರಹವಾಗುತ್ತಿರುವ ಹಣದ ಬಗ್ಗೆ ಪಾದರಿ ಏನೂ ಹೇಳಿಲ್ಲ. ಹಿಂದಿಗಿಂತ ಈಗ ಹೆಚ್ಚು ಹಣ ಸಂಗ್ರಹವಾಗುತ್ತಿರಬಹುದು. ತನಗೆ ಮಾತ್ರ ಈ ಬಿಲ್ಲೆ ಲೆಕ್ಕ ಮಾಡುವುದು ತಪ್ಪಿಲ್ಲ. +ಬಟ್ಲರ್ ಫ಼ರಾಸ್ಕ ಮಾಂಸದ ಮಾರುಕಟ್ಟೆಯೊಳಗೆ ಕಾಲಿಟ್ಟ. ಸಾಲು ಸಾಲಾಗಿ ಅಂಗಡಿಗಳಿದ್ದರೂ ಮೂರು ಕಡೆಗಳಲ್ಲಿ ಮಾತ್ರ ಮೂರು ಕುರಿಗಳನ್ನು ತೂಗು ಹಾಕಲಾಗಿದ್ದು, ಚರ್ಮ ಸುಲಿದು ಚರಬಿಯನ್ನು ಮಾಂಸದ ಮೇಲೆ ಹೊದಿಸಿದ್ದರು. ಗಿರಾಕಿಯೋರ್ವ ಮಾರುಕಟ್ಟೆಯೊಳಗೆ ಕಾಲಿಟ್ಟ ತಕ್ಷಣ- +“ಬನ್ನಿ ಸ್ವಾಮಿ..ಬನ್ನಿ” +“ಒಳ್ಳೆ ಮಾಂಸ ಕೊಡತೀನ ಬನ್ನಿ” +“ಕಂಬಳಿ ಕುರಿ ಮಾಂಸ ಮಾತ್ರ ಕೊಡತೀನಿ ಬನ್ನಿ” ಎಂದು ಕೂಗುವುದು ಅಲ್ಲಿಯ ರೂಢಿ. +ಫ಼ರಾಸ್ಕ ಅಲ್ಲಿ ಕಾಣಿಸಿಕೊಂಡ ಕೂಡಲೇ ಯಾರೂ ಕೂಗಲಿಲ್ಲ. ಏಕೆಂದರೆ ಈತ ನಿತ್ಯದ ಗಿರಾಕಿ. ಈತ ಕೊಂಡೊಯ್ಯುವುದು ಅರ್ಧ ಸೇರು ಮಾಂಸ. ಜೊತೆಗೆ ಅದು ಬೇಡ ಇದು ಹಾಕಿ ಎಂಬ ಚೌಕಾಶಿ. ಕೊನೆಯಲ್ಲಿ ಕೊಡುವ ಬಿಲ್ಲೆಗಳ ಗುಪ್ಪೆ. +“..ಹಾಂ..ಹುಸೇನಿ ನೋಡಪ್ಪ..ನಿನ ಗಿರಾಕಿ” ಎಂದ ಓರ್ವ ಅಂಗಡಿಯವ. +“..ಬನ್ನಿ..ಬನ್ನಿ…ಏನು ಬರೀ ಬಿಲ್ಲೇನೋ..ಇಲ್ಲ ನೋಟುಗೀಟು ತಂದಿದೀರೋ…” ಎಂದು ಹುಸೇನಿ ಫ಼ರಾಸ್ಕನನ್ನು ಸ್ವಾಗತಿಸಿದ. +* +* +* +ಇಲ್ಲಿ ಜ್ಞಾನೋಪದೇಶ ಕಲಿಯಲು ಬಂದ ಮಕ್ಕಳಿಗೆ ಯುವಕ ಯುವತಿಯರಿಗೆ ಒಂದು ಸಂತಸದ ಸುದ್ದಿ ಕಾದಿತ್ತು. +ದತೋರ್ನ ಕಲಿಸಲು ಬರುವ ಪಾದರಿ ಎಲ್ಲಿ ಪರಲೋಕ ಮಂತ್ರ, ನಮೋರಾಣೆ ಮಂತ್ರ, ಪರಮ ತ್ರಿತ್ವರ ಪ್ರಾರ್ಥನೆ ಕೇಳುತ್ತಾರೋ ಎಂದು ಮಕ್ಕಳು ಹೆದರಿಕೊಂಡಿದ್ದರೆ, ಯುವಕ ಯುವತಿಯರು ದೇವರ ಹತ್ತು ಕಟ್ಟಲೆಗಳು ಇಗರ್ಜಿ ಮಾತೆಯ ಕಟ್ಟಲೆಗಳು. ಪಾಪ ನಿವೇದನಾ ಪ್ರಾರ್ಥನೆ, ಪಶ್ಚಾತ್ತಾಪದ ವಿಧಾನ. ಇತ್ಯಾದಿಗಳನ್ನು ಪೂರ್ಣವಾಗಿ ಒಪ್ಪಿಸಲು ಎಲ್ಲಿ ಹೇಳುತ್ತಾರೋ ಎಂದು ಅಂಜಿದ್ದರು. +ಆದರೆ ಈಗೀನ ದತೋರ್ನ ಎಂದರೆ ಹಿಂದಿನಷ್ಟು ಹೆದರಿಕೆಯಾಗುತ್ತಿರಲಿಲ್ಲ. ಹಿಂದೆ ಪಾದರಿ ಗೋನಸ್ವಾಲಿಸರು ಎಲ್ಲ ಕ್ರೀಸ್ತುವರ ಮಕ್ಕಳೂ ದತೋರ್ನಗೆ ಬರಲೇ ಬೇಕೆಂದು ಹೇಳುತ್ತಿದ್ದರು. ಒಂದು ವಾರ ಯಾರಾದರೂ ತಪ್ಪಿಸಿಕೊಂಡರೆ ಮುಂದಿನ ವಾರ ಅವರಿಗೆ ಪಾಮಿಸ್ತ್ರೀಯ ಶಿಕ್ಷೆ ಕಾದಿರುತ್ತಿತ್ತು. ಕೇರಿಯಲ್ಲಿ ತಿರುಗಾಡುವಾಗ ಈ ಹುಡುಗ ಎದುರಾದರೆ- +“ನೀನು ದರ್ತೋರ್ನಗೆ ಬರಲಿಲ್ಲ. ಯಕೆ?” ಎಂದು ಕೇಳಿ ಬಗ್ಗಿ ತೊಡೆಗೆ ಕೈ ಹಾಕುತ್ತಿದ್ದರು. ತೊಡೆಯ ಮಾಂಸ ಹಿಡಿದು ಎಳೆದು ಅಲ್ಲಿ ಕಪ್ಪೆ ಮೂಡುವಂತೆ ಮಾಡುತ್ತಿದ್ದರು. +ದತೋರ್ನಗೆ ಬಂದರೂ ಶ್ರದ್ಧೆ ಆಸಕ್ತಿಯಿಂದ ಕಲೆಯಬೇಕು. ಈ ವಾರ ಕಲಿಸಿದ್ದನ್ನು ಮುಂದಿನವಾರ ಒಪ್ಪಿಸಬೇಕು. ಒಂದು ಸಾಲು, ಒಂದು ಶಬ್ದ ಮರೆತರೂ ಶಿಕ್ಷೆ. ಬೆಳಿಗ್ಗೆ ಎದ್ದಾಗಿನ ಪ್ರಾರ್ಥನೆ, ಊಟ ಮಾಡುವ ಮುನ್ನ ಹೇಳುವ ಪ್ರಾರ್ಥನೆ, ನಂತರ ಕೃತಜ್ಞತೆ. ರಾತ್ರಿ ಮಲಗುವಾಗ ಹೇಳುವ ಜಪ, ದಿವ್ಯ ಸಂಸ್ಕಾರಗಳೆಷ್ಟು? ದೇವರ ಕಟ್ಟಲೆಗಳೆಷ್ಟು? ತ್ರಿತ್ವ ಎಂದರೇನು? ಜ್ಞಾನಸ್ನಾನ ವೆಂದರೇನು? ಎಂದು ಅವರು ಕೇಳುವ ಪ್ರಶ್ನೆಗಳಿಗೆಲ್ಲ ಕೂಡಲೇ ಉತ್ತರ ಹೇಳಬೇಕು. ಹೇಳದಿದ್ದರೆ, ಗೊತ್ತಿಲ್ಲವೆಂದರೆ, ತಪ್ಪು ಹೇಳಿದರೆ ದಂಡನೆ. +ಈ ಎಲ್ಲ ಕಾರಣಗಳಿಂದ ದತೋರ್ನ ಎಂದರೆ ಹುಡುಗರಿಗೆ ಸಿಂಹ ಸ್ವಪ್ನ ಬರುವಂತಿಲ್ಲ ಬರದೆ ಇರುವಂತಿಲ್ಲ. +ಆದರೆ ಈ ಭೀತಿ ಈಗ ಕಡಿಮೆಯಾಗಿತ್ತು. +ಭಾನುವಾರ ಪೂಜೆ ಆದ ನಂತರ ಮಕ್ಕಳಿಗೆ ದತೋರ್ನ ಹೇಳಿಕೊಡಬೇಕು ಎಂಬುದು ಒಂದು ನಿಯಮ. ಪಾದರಿ ಮಸ್ಕರಿನಾಸ ಹೇಳಿಕೊಡುತ್ತಿದ್ದರು. ಅದು ಬರುತ್ತದೆಯೇ? ಇದು ಬರುತ್ತದೆಯೇ ಎಂದು ಕೇಳುತ್ತಿದ್ದರು. ಹಾಗೆಂದರೇನು? ಹೀಗೆಂದರೇನು? ಎಂದು ಪ್ರಶ್ನಿಸುತ್ತಿದ್ದರು. ಗೊತ್ತಿಲ್ಲ ಎಂದರೆ ಕಲಿತು ಬಾ ಎಂದು ಹೇಳುತ್ತಿದ್ದರು. ಕೆಲ ಬಾರಿ ಏಟೂ ಬೀಳುತ್ತಿತ್ತು. ಬೈಯುವುದೂ ಇತ್ತು. +ಒಂದೊಂದು ಭಾನುವಾರ ಅರ್ಧ ಗಂಟೆಯ ತರಗತಿ ನಡೆಸಿ- +“ಹಾಂ ಇನ್ನು ಹೊರಡಿ..ಮುಂದಿನ ಭಾನುವಾರ ಬನ್ನಿ” ಎಂದು ಹೇಳುತ್ತಿದ್ದರು. +ಇಲ್ಲವೇ ಮಕ್ಕಳು ಯುವಕರನ್ನೆಲ್ಲ ಹೋಗುವಂತೆ ಹೇಳಿ ಹುಡುಗಿಯರನ್ನಷ್ಟೇ ಇರಿಸಿಕೊಂಡು ಅವರಿಗೆ ಗಾಯನ ಕೀರ್ತನೆಗಳನ್ನು ಹೇಳಿಕೊಡುತ್ತಿದ್ದರು. ಈ ಪಾದರಿ ಬಂದ ಮೇಲೆ ಹುಡುಗಿಯರು ಕೆಲ ಹೊಸ ಕೀರ್ತನೆಗಳನ್ನು ಹಾಡುಗಳನ್ನು ಹೇಳಲು ಪ್ರಾರಂಭಿಸಿದ್ದರು. ಕೈಯಲ್ಲಿ ಒಂದು ಬೆತ್ತ ಹಿಡಿದುಕೊಂಡು ಎಲ್ಲಿ ಏರಿಸಬೇಕು. ಎಲ್ಲಿ ಇಳಿಸಬೇಕು ಎಂಬುದನ್ನು ಹಾಡಿ ತೋರಿಸುತ್ತಿದ್ದರು. ಕೆಲ ಬಾರಿ ಕೈಯಲ್ಲಿ ವಾಯಲಿನ ಹಿಡಿದು ಕಮಾನನ್ನು ತಂತಿಗಳ ಮೇಲೆ ಎಳೆಯುತ್ತ ಬಾರಿಸಿ ತೋರಿಸುತ್ತಿದ್ದರು. ಹುಡುಗಿಯರು ತಪ್ಪಿದಾಗ ಕಾಲುಗಳನ್ನು ನೆಲಕ್ಕೆ ಬಡಿದು, ಎರಡೂ ಕೈಗಳನ್ನು ಕೊಡವಿ- +“..ಹೋ..ಎಲ್ಲ ಕೆಟ್ಟು ಹೋಯ್ತು..ಎಲ್ಲ ನಾಶವಾಯ್ತು..” ಎಂದು ದೊಡ್ಡ ಸ್ವರದಲ್ಲಿ ಕೂಗಿ ಗದ್ದಲವೆಬ್ಬಿಸಿ ಹುಡುಗಿಯರು ಬೆರಗಾಗುವಂತೆ ಮಾಡುತ್ತಿದ್ದರು. ಮುಂದಿನ ಕ್ಷಣದಲ್ಲಿ ಹುಡುಗಿಯರು ಗೊಳ್ಳನೆ ನಕ್ಕಾಗ ಇವರೂ ಅವರ ಜತೆ ಸೇರಿಕೊಳ್ಳುತ್ತಿದ್ದರು. +ಇಂದು ಜ್ಞಾನೋಪದೇಶ ಕಲಿಯಲು ಬಂದ ಮಕ್ಕಳು ಇಗರ್ಜಿಯ ಬಾಲಕನಿಯಲ್ಲಿ ಅದು ಇದು ಮಾತನಾಡುತ್ತ ಕುಳಿತಿರಲು ಪಾದರಿ ಮಸ್ಕರಿನಾಸ ಅವಸರದಲ್ಲಿಯೇ ಬಂದರು. +“ಹಂ…ಎಲ್ರು ಬಂದಿದೀರಾ?..” ಎಂದು ಎಲ್ಲರ ಮುಖ ನೋಡಿದ್ದಾರು. +“ಪರಲೋಕ ಮಂತ್ರ ಎಲ್ಲರಿಗೂ ಹೇಳಲಿಕ್ಕೆ ಬರುತ್ತೆ ಅಲ್ವೆ?” ಎಂದು ಸಣ್ಣವರ ಬಳಿ ಹೋಗಿ ಕೇಳಿದರು. +“ದೇವರ ಕಟ್ಟಲೆಗಳು ಎಷ್ಟು ಗೊತ್ತಲ್ಲ? ಇಗರ್ಜಿ ಮಾತೆಯ ಕಟ್ಟಲೆಗಳು ಗೊತ್ತಲ್ಲ?” ಎಂದು ಹುಡುಗರ ಬಳಿ ಹೋಗಿ ಪ್ರಶ್ನಿಸಿದರು. +“ಲಿಲ್ಲಿ ನಿನಗೆ ಪಾಪನಿವೇದನಾ ಪ್ರಾರ್ಥನೆ ಬಾಯಿಪಾಠ ಬರುತ್ತೆ ಅಲ್ಲವೇ?” +“ಜಿಲ್ಲಿ ನಿನಗೆ ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ ಸಂಪೂರ್ಣವಾಗಿ ಬರುತ್ತದೆ ಅಲ್ಲವೆ?” ಎಂದು ಪ್ರತಿ ಹುಡುಗಿಯ ಬಳಿ ನಿಂತು ಕೇಳಿದರು. +“ಹಾಂ..ಹಾಂ..ಎಲ್ಲ ಚೆನ್ನಾಗಿ ಕಲೀರಿ.” +ಎಂದು ಕಿಟಕಿಯ ಬಳಿ ಹೋಗಿ ತಮ್ಮ ಬಂಗಲೆಯತ್ತ ನೋಡಿದರು. ತಿರುಗಿ ಬಂದು ತ್ರಿತ್ವಕ್ಕೆ ಸ್ತುತಿ ಮಾಡಿ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ..ಮುಂದಿನವಾರ ಮಾತ್ರ ಜ್ಞಾನೋಪದೇಶಕ್ಕೆ ಯಾರೂ ತಪ್ಪಿಸಿಕೊಳ್ಳಬೇಡಿ..” ಎಂದರು. +ಅಷ್ಟೂ ಹುಡುಗರು ಒಂದೇ ಬಾರಿಗೆ ಆನಂದಾತಿರೇಕದಿಂದ ಹೋ ಎಂದು ಕೂಗಿಕೊಳ್ಳುವರು. ಆದರೆ ಕಷ್ಟ ಪಟ್ಟು ತಡೆದುಕೊಂಡರು. ಕಾರಣ ಎದುರು ಪಾದರಿ. ತಾವಿರುವುದು ಇಗರ್ಜಿ . ಆದರೂ ಈ ಸಂತಸವನ್ನು, ಸಡಗರವನ್ನು ನಡಿಗೆಯ ಮೂಲಕ, ಕೈ ಬೀಸುವುದರ ಮೂಲಕ, ಇಗರ್ಜಿಯೊಳಗೆ ಹೋಗುವ ರಭಸದ ಮೂಲಕ ವ್ಯಕ್ತಪಡಿಸುತ್ತ ಹುಡುಗರು ಇಗರ್ಜಿಯನ್ನು ಪ್ರವೇಶಿಸಿದರು. +ಪಾದರಿ ಮಸ್ಕರಿನಾಸ ಇಗರ್ಜಿಯಿಂದ ಹೊರ ಬೀಳುವಾಗ ಒಳಗಿನಿಂದ- +-ಪಿತನಿಗೂ, ಸುತನಿಗೂ ಸ್ವಿರಿತು ಸಾಂತ್ರುವಿಗೂ ಸ್ತೋತ್ರವುಂಟಾಗಲಿ! ಆದಿಯಲ್ಲಿದ್ದ ಹಾಗೆ ಈಗಲೂ ಯಾವಾಗಲೂ ಸದಾಕಾಲದಲ್ಲಿಯೂ ಸ್ತೋತ್ರ ಉಂಟಾಗಲಿ” +ಎಂಬ ದನಿ ಇಪ್ಪತ್ತು ಮೂವತ್ತು ಸ್ವರಗಳ ಮೂಲಕ ಒಂದಾಗಿ ಕೇಳಿ ಬಂದು ಅಂತ್ಯದಲ್ಲಿ- +“ಅಮೆನ” ಅನ್ನುವುದರ ಮೂಲಕ ಕೊನೆಯಾಯಿತು. +ಮಕ್ಕಳು ಇಗರ್ಜಿಯಿಂದ ಹೊರಬಿದ್ದರು. +ಅಂದು ಯಾವ ಮಕ್ಕಳೂ ಕೂಡಲೇ ಮನೆಗೆ ಹೋಗಲಿಲ್ಲ. +ಸಾಮಾನ್ಯವಾಗಿ ಭಾನುವಾರಗಳಂದು ಜ್ಞಾನೋಪದೇಶ ಮುಗಿಸಿಕೊಂಡು ಅವರೆಲ್ಲ ಮನೆಗೆ ಹೋಗುವ ಹೊತ್ತಿಗೆ ಫ಼ರಾಸ್ಕ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಹೊಡೆಯುತ್ತಿದ್ದ ಆದರೆ ಇಂದು ಇಷ್ಟು ಬೇಗನೆ ಮನೆಗೆ ಹೋಗಿ ಏನು ಮಾಡುವುದು? ಒಂದು ವೇಳೆ ಹೋದರೂ ಮನೆಯಲ್ಲಿ ಅಪ್ಪ ಅಮ್ಮ- +“..ಏನು ಬೇಗ ಬಂದೆ? ಇಗರ್ಜಿಗೆ ಹೋಗಲಿಲ್ವ? ದತೋರ್ನ ಇಲ್ವ?..ಇಲ್ಲ ಏನೋ ನೆಪ ಮಾಡಿಕೊಂಡು ತಪ್ಪಿಸಿಕೊಂಡು ಬಂದಿದ್ದೀಯ?” ಎಂದೆಲ್ಲ ಕೇಳುತ್ತಾರೆ. ಅವರಿಗೆ ಸಮಾಧಾನ ಹೇಳುವುದೇ ಆಗುತ್ತದೆ. +ಇಲ್ಲವೆ ಬಂದೆಯಲ್ಲ ಏನಾದರೂ ಕೆಲಸ ಮಾಡು ಎಂದು ಹೇಳುತ್ತಾರೆ. +ಈ ರಗಳೆಯೇ ಬೇಡ ಎಂದು ಒಬ್ಬೊಬ್ಬರು ಒಂದೊಂದು ಕೆಲಸ ಆರಿಸಿಕೊಂಡರು. +ನೆಲದ ಮೇಲೆ ಗೆರೆಗಳನ್ನೆಳೆದು ಕುಂಟಬಿಲ್ಲೆ ಆಡತೊಡಗಿದರು. ಅಮಟೆ,ಯೆಸ್, ಅಮಟೆ,ಯೆಸ್ ಎಂದು ಒಂಟಿಕಾಲಿನಲ್ಲಿ ಕುಂಟತೊಡಗಿದರು. +ಕೆಲವರು ಐಸ್ ಪೈಸ್ ಆಡಲು ತೊಡಗಿದರು. +ಕೆಲವರಿಗೆ ಜೂಟಾಟ. +ಇಗರ್ಜಿ ಹಿಂಬದಿಯಲ್ಲಿ ನೆಲಕ್ಕೆ ತಾಗುವಂತೆ ಬೆಳೆದ ಮಾವಿನ ಮರಗಳನ್ನೇರಿ ಮರಕೋತಿ ಆಡಲು ಒಂದು ತಂಡ ಸಿದ್ಧವಾಯಿತು. +ಗಂಟೆ ಗೋಪುರ ಕೆಳಗೆ ಯುವತಿಯರು ಲಂಗ ಹರಡಿ ಕೊಂಡು ಕುಳಿತರು. +ಯುವಕರು ಹಲಸಿನ ಮರದ ದಟ್ಟ ನೆರಳಿನಲ್ಲಿ ಕುಳಿತರು. +ಬಟ್ಲರ ಫ಼ರಾಸ್ಕ ಮಾರ್ಕೆಟಿನಿಂದ ಬಂದ. +ಮತ್ತೇನೋ ತರಲು ಪೇಟೆಗೆ ಹೋದ. +ಆಡಿ ಕುಣಿದು ಹಾರಿ ನೆಗೆದು ದಣಿವಾಗಿದ್ದರಿಂದ, ಹೊಟ್ಟೆ ಹಸಿಯತೊಡಗಿದ್ದರಿಂದ ಹುಡುಗ ಹುಡುಗಿಯರು ಒಬ್ಬೊಬ್ಬರಾಗಿ ಅಲ್ಲಿಂದ ಕಾಣೆಯಾಗತೊಡಗಿದರು. +ಫ಼ರಾಸ್ಕ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಹೊಡೆಯಲು ಗಂಟೆ ಗೋಪುರದ ಬಳಿ ಬಂದಾಗ ಅಲ್ಲಿ ಯಾರೂ ಇರಲಿಲ್ಲ. +ಬಂಗಲೆ ಮುಂದಿನ ಚಪ್ಪರದಲ್ಲಿ ಪಾದರಿ ಮಸ್ಕರಿನಾಸ ಮರದ ಆರಾಮಾಸಾನದ ಮೇಲೆ ಕೈ ಕಾಲುಗಳನ್ನು ಚಾಚಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. +“ಢಣ್…ಢಣ್…ಢಣ್” +“ಢಣ್….ಢಣ್…ಢಣ್” +ಮೂರು ಬಾರಿ ಮೂರು ಮೂರರಂತೆ ಗಂಟೆ ಹೊಡೆದು ಕೊಂಡಿತು. ನಂತರ ಢಣಾಢಣ ಢಣಾಢಣ ಎಂದು ನಿಲ್ಲಿಸದೆ ಗಂಟು ಸದ್ದು ಮಾಡಿತು. ಅಂಗಳದಲ್ಲಿ, ಮನೆಯಲ್ಲಿ, ರಸ್ತೆಯ ಮೇಲೆ ಇದ್ದ ಕ್ರಿಸ್ತುವರು ಶಿಲುಬೆಯ ಗುರುತು ಮಾಡಿದರು. ಮನೆಗಳಲ್ಲಿ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಮಾಡತೊಡಗಿದರು. +-೨- +ಶಿವಸಾಗರದ ಪೇಟೆ ಚೊಕದಲ್ಲಿ ಮೊದಲನೆಯದು ’ಸಂತ ಜೋಸೆಫ಼ರ ಬಟ್ಟೆ ಅಂಗಡಿ’ ಬೋನನದ್ದು. ಬೆಳಿಗ್ಗೆ ಎಂಟುವರೆಗೆಲ್ಲ ಮನೆಯಿಂದ ಹೊರಟು, ಇಗರ್ಜಿ ಬಳಿ ಹೊರಳುವಾಗ ಅಲ್ಲಿಯ ಜೋಸೆಫ಼ರ ಮಂಟಪದ ಮುಂದೆ ನಿಂತು ಒಂದು ಪರಲೋಕ ಮಂತ್ರ, ಮೂರು ನಮೋರಾಣೆ ಮಂತ್ರ ಹೇಳಿ ಜೋಸೆಫ಼ರ ಪ್ರತಿಮೆಯ ಪಾದಗಳನ್ನು ಮುಟ್ಟಿ ಬೆರಳುಗಳನ್ನು ತುಟಿಗೆ ಹಚ್ಚಿಕೊಂಡು, ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಎದುರಾಗುವ ಹಲವರನ್ನು ಮಾತನಾಡಿಸಿ, ಹಲವರಿಗೆ ನಮಸ್ಕಾರ ಹೇಳಿ ಆತ ಅಂಗಡಿ ಬಾಗಿಲು ತೆರೆಯುತ್ತಾನೆ. ಅವನಿಗಿಂತಲೂ ಮುಂಚೆ ಅಲ್ಲಿಗೆ ಬಂದು ನಿಂತ ಚಿಪ್ಪಿಗರ ನಾಮದೇವ, ಲಕ್ಷ್ಮಣ, ಕಾಜಾ ಮಾಡುವ ಇಂತ್ರು ಮಗ ಬಸ್ತು ಮೂವರೂ ಅಂಗಡಿ ಬೀಗ ತೆಗೆದು, ಹಲಗೆಗಳನ್ನು ತೆಗೆದು ಪಕ್ಕದಲ್ಲಿ ಜೋಡಿಸಿ ನಿಲ್ಲಿಸುತ್ತಾರೆ. ಬೋನ ಒಳಗೆ ಹೋಗಿ ಮೇಜು, ಬೀರುಗಳನ್ನು ಒರೆಸಿ, ಚಪ್ಪಲಿ ಕಳಚಿ ಅಂಗಡಿಯ ನಡುವಣ ಗೋಡೆಯ ಮೇಲಿನ ಕ್ರಿಸ್ತನ ಪಟದ ಎದುರು ಮೇಣದ ಬತ್ತಿ ಹಚ್ಚಿ ಕೈ ಮುಗಿದ ಒಂದೆರಡು ನಿಮಿಷ ನಿಲ್ಲುತ್ತಾನೆ. +ಅಷ್ಟರಲ್ಲಿ ನಾಮದೇವ ಮುಂತಾದವರು ಹೊಲಿಗೆ ಯಂತ್ರ ಒರೆಸಿ ಪೆಟ್ಟಿಗೆಯಲ್ಲಿಯ ಹೊಸ ಬಟ್ಟೆ, ಅಳತೆ ಬಟ್ಟೆ-ಅರ್ಧ ಹೊಲಿದ ಬಟ್ಟೆಗಳನ್ನು ಹೊರತೆಗೆದು, ಯಂತ್ರವನ್ನು ಒಂದೆರಡು ಬಾರಿ ತುಳಿದು, ಎಣ್ಣಿ ಹಾಕಿ ಸದ್ದು ಮಾಡುತ್ತಾರೆ. ಅಷ್ಟು ಹೊತ್ತಿಗೆ ಪೇಟೆಯಲ್ಲಿ ಜನರ ಓಡಾಟ ಆರಂಭವಾಗಿ ಯಾರೋ ಜವಳಿ ಕೊಳ್ಳಲು, ಬಟ್ಟೆ ಹೊಲೆಯಲು ಹಾಕಲು ಅಂಗಡಿಯೊಳಗೆ ಬರುತ್ತಾರೆ. +“ಬನ್ನಿ..” ಎಂದು ಬೋನ ಅವರನ್ನು ಸ್ವಾಗತಿಸುತ್ತಾನೆ. +ಯಾರೂ ಇಲ್ಲವೆಂದರೆ ಪಕ್ಕದ ದಿನಸಿ ಅಂಗಡಿಯ ವಿಶ್ವನಾಥ ಶೆಟ್ಟಿ, ಇಲ್ಲ ಎದುರು ಅಂಗಡಿಯ ಸೈಕಲ್ ನಾಗಪ್ಪ- +“ಏನು ಸಾಹುಕಾರ್ರೆ ಕೂತು ಬಿಟ್ಟಿರಿ..” ಎಂದು ಇವನ ಅಂಗಡಿಗೆ ಬರುತ್ತಾರೆ. +ಈಗ ಊರಿನವರಿಗೆ ಬೋನ- +“ಜವಳಿ ಅಂಗಡಿ ಬೋನ ಸಾಹುಕಾರ್ರು” ಎಂದೇ ಪ್ರಖ್ಯಾತನಾಗಿದ್ದಾನೆ. +ಬಲಗಾಲುದ್ದ ಬಾಲ್ತಿದಾರ ಮನೆಬಿಟ್ಟು ಬರುವುದಿಲ್ಲ. ಕಾಲೆಳೆದುಕೊಂಡು ಬರಬೇಕು ಎಂಬುದು ಒಂದು ಕಷ್ಟವಾದರೆ ಬಂದವರನ್ನೆಲ್ಲ ಸುಧಾರಿಸಿ ಕಳುಹಿಸುವುದು ಮತ್ತೊಂದು ಕಷ್ಟ. ಇಡೀ ದಿನ ನಿಂತು ಬಟ್ಟೆ ಥಾನುಗಳನ್ನು ತೆಗೆದು, ದರ ಹೇಳಿ, ಅಳತೆ ಮಾಡಿ, ಚೌಕಾಶಿ ಮಾಡುವವರ ಹತ್ತಿರ ಮಾತನಾಡಿ ಅವರನ್ನು ಕಳುಹಿಸುವುದು ಈಗೀಗ ಆಗುತ್ತಿರಲಿಲ್ಲ. ಬಟ್ಟೆ ಹೊಲಿಯುವುದನ್ನು ಆತ ಹಿಂದೆಯೇ ಬಿಟ್ಟು ಬಿಟ್ಟಿದ್ದ. ಕಣ್ಣು ಮಂದವಾಗತೊಡಗಿದಾಗ ಬಟ್ಟೆ ಹೊಲಿಯಲು ಬೇರೆಯವರನ್ನು ಇರಿಸಿಕೊಂಡು ಈತ ಜವಳಿ ವ್ಯಾಪಾರ ಮಾಡತೊಡಗಿದ್ದ. ರೆಮೇಂದಿಯ ಮದುವೆಯಾಗಿ ಬೋನ ಅಂಗಡಿಗೆ ಬಂದ ನಂತರ ಈ ಕೆಲಸ ಕೂಡ ಸಾಕು ಎನಿಸಿದ್ದರಿಂದ ಆತ ಬೋನನಿಗೆ- +“..ಅಲ್ಲ ಇನ್ನು ನೀವೇ ಅಂಗಡಿ ನೋಡಿಕೊಳ್ಳಿ” ಎಂದ. +“ಇದು ನನಗೆ ಹೊಸದು..” ಎಂದು ಬೋನ ನುಡಿದಾಗ.. +“ನಾನು ನಾಲ್ಕು ದಿನ ನಿಮ್ಮ ಜತೆ ಇರತೀನಿ ಬಿಡಿ” ಎಂದು ಹೇಳಿದ್ದ. ಅಂತೆಯೇ ನಾಲ್ಕು ದಿನ ಅಂಗಡಿಯಲ್ಲಿ ಕುಳಿತು ಇವನೇ ವ್ಯಾಪಾರ ಮಾಡುತ್ತ ಎಲ್ಲವನ್ನೂ ಬೋನನಿಗೆ ಹೇಳಿ ಕೊಟ್ಟಿದ್ದ. +ಪಾದರಿ ಗೋನಸ್ವಾಲಿಸರ ಬಟ್ಲರ್ ಆಗಿದ್ದ ಬೋನ ಜವಳಿ ಅಂಗಡಿ ಮಾಲೀಕನಾದದ್ದು ನಾಲ್ಕು ದಿನ ತಮಾಷೆಯ ವ್ಯಂಗ್ಯ ವಿಷಯವಾಗಿತ್ತು. ಪಾದರಿಗಳು ಕೊಟ್ಟ ಹಣದಿಂದ ಬೋನ ಅಂಗಡಿಯಲ್ಲಿ ಕೆಲ ಬದಲಾವಣೆ ಮಾಡಿದ, ಬಟ್ಟೆ ಇರಿಸಲು ಹೊಸ ಗಾಜಿನ ಬೀರು ತರಿಸಿದ. ತಾನು ಕುಳಿತುಕೊಳ್ಳಲು ಒಂದು ಆಸನ ಮೇಜು ಮಾಡಿಸಿದ. ಈವರೆಗೆ ಅಂಗಡಿಗೊಂದು ಹೆಸರು ಇರಲಿಲ್ಲ. ಊರಿನ ಪಾತ್ರೋನ ಆದ ಸಂತ ಜೋಸೆಫ಼ರ ಹೆಸರನ್ನೇ ಅಂಗಡಿಗೆ ಇರಿಸಿದ. ಮೊದಲು ತಮಾಷೆ ಮಾಡಿದ ಜನ ಕ್ರಮೇಣ ತಾವು ಮಾತನಾಡುತ್ತಿದ್ದ ಎಲ್ಲ ವಿಷಯಗಳನ್ನು ಮರೆತರು…ಅಂಗಡಿ ಸಾಹುಕಾರ ಎಂದು ಕರೆಸಿಕೊಳ್ಳುವುದು ಸುಲಭವಾಗಿರಲಿಲ್ಲ. ಸಿಮೋನ, ಪಾಸ್ಕೋಲ ಮುಂತಾದವರನ್ನು ಜನ ಮೇಸ್ತ್ರಿ ಎಂದು ಒಪ್ಪಿಕೊಂಡಿದ್ದರಾದರು ಇವರ ಕೆಲಸ ಕಲ್ಲು ಕೆತ್ತುವುದು, ಕಲ್ಲು ಕಟ್ಟುವುದು, ಸಂಜೆಯಾದ ತಕ್ಷಣ ಮೈತುಂಬ ಕೆಂಬಣ್ಣ ಮಾಡಿಕೊಂಡು ಮನೆಗೆ ಬರುತ್ತಾರೆ. ಆದರೆ ಈತ ಹಾಗಲ್ಲ ಇಡೀ ದಿನ ಗಲ್ಲದ ಮೇಲೆ ಕುಳಿತು ಹಣ ಎಣಿಸಿಕೊಳ್ಳುತ್ತಾನೆ. ಊರಿನ ಇತರೆ ಅಂಗಡಿಗಳವರು ಇವನನ್ನು ತಮ್ಮ ಸರಿ ಸಮಾನರೆಂದು ತಿಳಿಯುತ್ತಾರೆ. ಹೀಗಾಗಿ ಬೋನನ ಸ್ಥಾನ ಅಂತಸ್ಥ ಹೆಚ್ಚಿತು. ಪಾದರಿಗಳ ಬಟ್ಲರ್ ಆಗಿ ಇಗರ್ಜಿಯ ಮಿರೋಣ ಅಗಿ ಜನರಿಗೆ ಚಿರಪರಿಚಿತನಾಗಿದ್ದ ಈತ ಅನಂತರ ಮತ್ತೂ ಗೌರವಕ್ಕೆ ಪಾತ್ರನಾದ. +ಆದರೆ ಒಂದು ವಿಷಯಕ್ಕೆ ಈತ ತುಂಬಾ ನೊಂದುಕೊಂಡ. ಬಾಲ್ತಿದಾರ ಅಂಗಡಿಗೆ ಬರುವುದು ನಿಲ್ಲಿಸಿ, ತಾನೆ ಅಂಗಡಿಯ ಸಮಸ್ತ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದ ನಂತರವೂ ಇಗರ್ಜಿಯ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ, ತಿರಸ್ಕಾರ ವ್ಯಕ್ತಪಡಿಸಿರಲಿಲ್ಲ ಈತ. ಅದು ದೇವರ ಕೆಲಸ, ಅದು ಮಾಡುವುದರಲ್ಲಿ ಯಾವುದೇ ಸಣ್ಣತನ, ಕೀಳರಿಮೆ ಇಲ್ಲ ಅಂದುಕೊಂಡಿದ್ದ. ಹಿಂದಿನಂತೆಯೆ ಬಾಗಿಲು ತೆಗೆ, ಗಂಟೆ ಹೊಡಿ, ದೇವರ ಪೀಠದ ಮೇಲೆ ಹೊಸ ಬಟ್ಟೆ ಹಾಸು, ಮೇಣದ ಬತ್ತಿ ಹಚ್ಚಿಡು, ಹೂದಾನಿಗಳನ್ನು ಸಜ್ಜು ಮಾಡು ಎಂದು ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದ. +ಇಲ್ಲಿಯ ಕೆಲವೊಂದು ಕೆಲಸಗಳು ಕ್ರಮೇಣ ಕಷ್ಟಕರವೆನಿಸಿದವು. ಮನೆಯಿಂದ ಬಂದು ಇದನ್ನೆಲ್ಲ ಮಾಡಬೇಕಲ್ಲ ಅಂದುಕೊಂಡಾಗ ಫ಼ರಾಸ್ಕ ಈ ಕೆಲಸಗಳನ್ನು ತನ್ನ ಕೈಗೆತ್ತಿಕೊಂಡ. ಇಗರ್ಜಿಯ ಬಳಿಯೇ ಇರುತ್ತಿದ್ದ ಅವನಿಗೆ ಈ ಎಲ್ಲ ಕೆಲಸಗಳನ್ನು ಮಾಡುವುದು ಸುಲಭವೂ ಆಗಿತ್ತು. ಆದರೂ ಮಿರೋಣ ಕೆಲಸವನ್ನು ಈಗ ಮುಂದುವರೆಸಿದ. ಜತೆಗೆ ಪೂಜೆಯ ನಡುವೆ ಜನರಿಂದ ಕಾಣಿಕೆ ಸಂಗ್ರಹಿಸುವ ಕೆಲಸವನ್ನೂ. +ಎಲ್ಲ ಇಗರ್ಜಿಗಳಲ್ಲೂ ಈ ಸೇವೆ ಮಾಡಲು ಎಲ್ಲರಿಗೂ ಅವಕಾಶವಿರಲಿಲ್ಲ. ಪಾದರಿಗೆ ಹತ್ತಿರವಿರುವವರು, ಜನರ ಗೌರವಕ್ಕೆ, ನಂಬಿಕೆಗೆ ಅರ್ಹರಾಗಿರುವವರು, ಪ್ರಾಮಾಣಿಕರು ಈ ಕಾರ್ಯ ಮಾಡುತ್ತಿದ್ದರು. ಹಿರಿಯರು, ವಯಸ್ಸಾದವರು, ವಿಶೇಷವಾಗಿ ಗುರ್ಕಾ ಇಲ್ಲವೆ ಮಿರೋಣ ಕಾಣಿಕೆ ಡಬ್ಬಿಯನ್ನು ಹಿಡಿದು ಜನರಿಂದ ಕಾಣಿಕೆ ಸಂಗ್ರಹಿಸುವುದಿತ್ತು. ಅಂತೆಯೇ ಬೋನ ತನ್ನ ಪಾಡಿನ ಕೆಲಸವನ್ನು ಮುಂದುವರೆಸಿದ್ದ. +ಒಂದು ದಿನ ಆತ ಕಾಣಿಕೆ ಡಬ್ಬಿಯನ್ನು ಪಾದರಿ ಮಸ್ಕರಿನಾಸರ ಬಂಗಲೆಯಲ್ಲಿ ಇರಿಸಿ ತಿರುಗಿ ಹೊರಟಾಗ ಅವರು +“ಬರ್ನಾಡೆಟ..” ಎಂದು ಕರೆದರು. +“ಪದ್ರಾಬ..” ಆತ ನಿಂತ. +“ಅಲ್ಲ ಇಲ್ಲಿಯ ಜನರಿಗೆ ಇಜ್ಮೋಲ ಹಾಕುವ ಅಭ್ಯಾಸವಿಲ್ಲವೇನು?” ಅಚ್ಚರಿಯಾಯಿತು ಬೋನನಿಗೆ. ಈವರೆಗೆ ಈ ಬಗ್ಗೆ ಆತ ವಿಚಾರ ಮಾಡಿರಲಿಲ್ಲ. ಪಾದರಿ ಗೋನಸ್ವಾಲಿಸ್ ಎಂದೂ ಇಂತಹ ಪ್ರಶ್ನೆ ಕೇಳುತ್ತಿರಲಿಲ್ಲ. ಎರಡು ಮೂರು ತಿಂಗಳಿಗೊಮ್ಮೆ ತುಂಬಿಕೊಂಡಿರುವ ಕಾಣಿಕೆ ಡಬ್ಬಿಗಳ ಬೀಗ ತೆಗೆದು ಚಿಲ್ಲರೆಯನ್ನು ಅಂಗಡಿಗಳಿಗೆ ಕೊಟ್ಟು ಗಟ್ಟಿ ರೂಪಾಯಿ ತರಲು ಹೇಳುತ್ತಿದ್ದರು. ಆ ಕೆಲಸವನ್ನು ತಾನು ಮಾಡುತ್ತಿದ್ದೆ. +“ಪದ್ರಾಬ..ಹಣ..” ಎಂದು ನೋಟುಗಳನ್ನು ಗಟ್ಟಿ ನಾಣ್ಯಗಳನ್ನು ಅವರ ಮುಂದಿರಿಸಿದಾಗ ಅವರು +“ಸರಿ” ಅನ್ನುತ್ತಿದ್ದರು. +ಆದ್ರೆ ಈಗ ಇದೇನು ಇಂತಹಾ ಪ್ರಶ್ನೆ? +“ಎಲ್ಲ ಜನ ಕಾಣಿಕೆ ಹಾಕತಾರೆ ಪದ್ರಾಬ..” +“ಆದರೂ ಜನ ತುಂಬಾ ಇರತಾರೆ..ಕಾಣಿಕೆ ಕಡಿಮೆ ಇರುತ್ತೆ..” +ಪಾದರಿ ಮಸ್ಕರಿನಾಸರ ಮಾತಿನಲ್ಲಿ ಯಾವುದೋ ಕೆಟ್ಟ ವಾಸನೆ ಮೂಗಿಗೆ ಹೊಡೆದು ಬೋನ ಕಸಿವಿಸಿಗೊಂಡ. ಇಗರ್ಜಿಗೆ ಬರುವ ಜನ ಕಾಣಿಕೆ ಡಬ್ಬಕ್ಕೆ ಹಣ ಹಾಕುತ್ತಾರೆ. ಆದರೆ ಅದು ಪಾದರಿಯ ಕೈಗೆ ಬರುವಷ್ಟರಲ್ಲಿ ಹಣ ಮಾಯವಾಗಿರುತ್ತದೆ ಎಂಬುದು ಇವರ ಅಭಿಪ್ರಾಯವಾಗಿರಬಹುದೆ? ಕೆಲ ಇಗರ್ಜಿಗಳಲ್ಲಿ ಹೀಗೂ ಆಗುವುದನ್ನು ತಾನು ಬಲ್ಲೆ. ಕಾಣಿಕೆ ಡಬ್ಬಿಯ ಬೀಗದ ಕೈ ಮಿರೋಣ ಇಲ್ಲವೇ ಗುರ್ಕಾರ ಇರಿಸಿಕೊಂಡು ಈ ಡಬ್ಬಿಯಿಂದ ಹಣ ತೆಗೆಯುವುದೂ ಉಂಟು. ಈ ಬಗೆಯ ಅನುಮಾನಕ್ಕೆ ಆಸ್ಪದವಿಲ್ಲದ್ದರಿಂದ ಬೀಗದ ಕೈ ತನ್ನ ಬಳಿಯಿತ್ತು. ಹೊಸ ಪಾದರಿ ಬಂದ ತಕ್ಷಣ ಬೀಗದ ಕೈಯನ್ನು ಅವರಿಗೆ ಒಪ್ಪಿಸಿದ್ದೆ. ಆದರೂ ಈ ಅಪವಾದವೇ? ಬೇರೊಂದು ಬೀಗದ ಕೈ ಇರಿಸಿಕೊಂಡು ತಾನು ಈ ಕೆಲಸ ಮಾಡುತ್ತಿರುವುದಾಗಿ ಪಾದರಿ ನಂಬುತ್ತಿರಬಹುದೆ? +ಆ ವಾರವಿಡೀ ಯೋಚಿಸಿದ ಬೋನ. +ನಂತರದ ಭಾನುವಾರ, ಬೆಳಿಗ್ಗೆ ಇಗರ್ಜಿಗೆ ಬಂದಾಗ ಪಾದರಿ- +’ಬೆರ್ನಾಡೆಟ’ ಎಂದರು. +“ಪದ್ರಾಬ” +“ಇವತ್ತಿನಿಂದ ಇಜ್ಮೋಲಿನ ಡಬ್ಬೀನಾ ಫ಼ರಾಸ್ಕ ತೊಕೊಂಡು ಹೋಗಲಿ..” +ಒಂದೆರಡು ನಿಮಿಷ ಏನೂ ಮಾತನಾಡಲಾಗಲಿಲ್ಲ ಬೋನನಿಂದ. ನಂತರ +“ಆಯ್ತು ಪದ್ರಾಬ” ಎಂದ ಆ ಭಾನುವಾರ ಏಕೋ ತಾನು ಭಾಗವಹಿಸಿದ ಪೂಜೆ ಅಪೂರ್ಣ ಎನಿಸಿತು. +ಮನೆಗೆ ಹೋದಾಗ ರೆಮೇಂದಿ- +“ಏನು ಹಾಗೆ..ಅವನು ಕಾಣಿಕೆ ಡಬ್ಬಿ ಹಿಡಿದುಕೊಂಡು ಬಂದಿದ್ದ” ಎಂದು ಕೇಳಿದಳು. +“ಇನ್ನು ಮುಂದೆ ಹಾಗೇನೆ” ಎಂದ ಬೋನ. ಆದರೆ ಈ ನೋವು ಕಡಿಮೆಯಾಗುತ್ತಿದೆ ಅನ್ನುವಾಗ ಬೇರೊಂದು ನೋವನ್ನು ಅವನು ಎದುರಿಸಬೇಕಾಯಿತು. +ಪಾದರಿ ಗೋನಸ್ವಾಲಿಸರು ಊರು ಬಿಡುವ ಸಂದರ್ಭದಲ್ಲಿ ಬಂದು ಊರು ಸೇರಿಕೊಂಡ ವಲೇರಿಯನ ಡಯಾಸ ಇಗರ್ಜಿಯ ಗಾಯನಕ್ಕೆ ಪಿಟೀಲಿನ ನೆರವು ನೀಡುತ್ತಿದ್ದವನು ಕ್ರಮೇಣ ಎಲ್ಲ ವಿಷಯಗಳಲ್ಲೂ ಮೂಗು ಹಾಕತೊಡಗಿದ. ಪಾದರಿ ಗೋನಸ್ವಾಲಿಸ್ ಹೋಗಿ ಪಾದರಿ ಮಸ್ಕರಿನಾಸ ಬಂದ ನಂತರವಂತೂ ಇವನ ಪ್ರಾಬಲ್ಯ ಹೆಚ್ಚತೊಡಗಿತು. +ಪೂಜೆಗೆ ಮುನ್ನ ಜಪ ಹೇಳಿಕೊಡುವುದನ್ನು ಈತ ಚಾಲ್ತಿಗೆ ತಂದ. ಪೂಜಾ ಸಮಯದಲ್ಲಿ ಜನ ಯಾವಾಗ ನಿಲ್ಲಬೇಕು, ಯಾವಾಗ ಕೂರಬೇಕು ಎಂಬುದನ್ನು ತನ್ನ ಕೈಲಿರುವ ಕೀರ್ತನೆಗಳ ಪುಸ್ತಕದ ಮೇಲೆ ಟಪ ಎಂದು ಹೊಡೆದು ಜನರಿಗೆ ತಿಳಿಸುವ ಒಂದು ಕ್ರಮ ರೂಢಿಗೆ ಬಂದಿತು. ಇಗರ್ಜಿಯಲ್ಲಿ ತೂಕಡಿಸುವ, ತಂಟೆ ಮಾಡುವ, ಮಾತನಾಡುವ ಮಕ್ಕಳ ತಲೆಗೆ ಈ ಪುಸ್ತಕದಿಂದಲೇ ಹೊಡೆದು ಬುದ್ಧಿ ಕಲಿಸತೊಡಗಿದ. ಬೋನನಿಗೆ ಗೊತ್ತಿಲ್ಲದ ಕೆಲ ಕೀರ್ತನೆಗಳನ್ನು ಹಾಡತೊಡಗಿದ. ಹ್ಯಾಗೋ ಇವನ ಕಡೆಯವರಾಗಿ ಡಾಕ್ಟರ್ ರೇಗೊ, ಜಾನ ಡಯಾಸ ಮತ್ತಿತರರು ಇದ್ದುದರಿಂದ ಈ ಕೀರ್ತನೆಗಳನ್ನು ಹಾಡುವವರೂ ಇವನಿಗೆ ಸಿಕ್ಕರು. ಈ ಕೀರ್ತನೆಗಳು ಇವರ ಜನರಿಗೆ ಹಿಡಿಸಿದ್ದರಿಂದಲೂ ಇವನಿಗೆ ಅನುಕೂಲವಾಯಿತು. ಪೂಜೆಯ ನಡುವೆ ಬೋನ ಒಂದು ಕೀರ್ತನೆ ಹಾಡಬೇಕೆಂದಿರುವಾಗ ಈತ ಬೇರೊಂದು ಕೀರ್ತನೆ ಎತ್ತಿಕೊಂಡು ಬೋನನನ್ನು ಗಲಿಬಿಲಿಗೊಳಿಸಿದ. ಹೀಗೆ ಐದಾರು ಬಾರಿ ಆಗಿ ಕೊನೆಗೆ ಬೋನ ಹಾಡುವುದನ್ನು ವಲೇನಿಯನಗೇನೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿತು. +ಬೋನನಲ್ಲಿ ಒಂದು ಬಗೆಯ ವಿನಯವಿತ್ತು. ತಾನು ಪಾದರಿ ಗೋನಸ್ವಾಲಿಸರ ಬಟ್ಲರ್ ಆಗಿದ್ದವ ಎಂಬ ಭಾವನೆ ಇತ್ತು. ನಾನು ಮಾಡುತ್ತಿರುವುದು ದೇವರ ಸೇವೆ ಎಂಬ ಭಕ್ತಿ ಇತ್ತು. ಹೀಗಾಗಿ ಆತ ಇಗರ್ಜಿಯಲ್ಲಿ ಎಂದೂ ಅಹಂಕಾರ, ಆಟಾಟೋಪ ಗಳನ್ನು ಪ್ರದರ್ಶಿಸುತ್ತಿರಲಿಲ್ಲ. ಭಯ ಭಕ್ತಿಯಿಂದ ಮೆಲುದನಿಯಲ್ಲಿಯೇ ವರ್ತಿಸುತ್ತಿದ್ದ. ಆದರೆ ವಲೇರಿಯನ ಇದಕ್ಕೆ ವಿರುದ್ಧವಾಗಿದ್ದ. ಆತ ಹಿಂದೆಲ್ಲ ಈ ಕಾರ್ಯವನ್ನು ಸಾಕಷ್ಟು ಮಾಡಿದ್ದರಿಂದ ಏನೋ ಅಧಿಕಾರ ವಾಣಿಯಿಂದ ತನ್ನ ಕೆಲಸ ಮಾಡಲಾರಂಬಿಸಿದ. ಟಪಟಪ್ ಎಂದು ಬೂಟುಗಾಲಿನಿಂದ ನೆಲ ಒದೆಯುತ್ತ ಆತ ಇಗರ್ಜಿಯಲ್ಲಿ ತಿರುಗಾಡುತ್ತಿದ್ದರೆ ಜನ ಬೆಚ್ಚಿ ಬೀಳುತ್ತಿದ್ದರು. +ಒಂದು ದಿನ ಪಾದರಿ ಮಸ್ಕರಿನಾಸ ಬೋನನನ್ನು ಕರೆದು- +“ಇನ್ನು ಮುಂದೆ ಮಿರೋಣ ಕೆಲಸ ಅವರು ಮಾಡಲಿ..ಅವರಿಗೆ ಎಲ್ಲ ಗೊತ್ತಿದೆ..” ಎಂದರು. +ಬೋನ ಎರಡನೇ ಮಾತನಾಡಲಿಲ್ಲ. ಅಂದಿನಿಂದ ಆತ ಬಾಗಿಲ ಬಳಿ ಪವಿತ್ರ ಜಲ ಇರಿಸುವ ಕರಂಡಕದ ಬಳಿ ತನಗೊಂದು ಜಾಗ ಮಾಡಿಕೊಂಡ. +“ಬೋನ ಯಾಕೆ ಹೀಗಾಯಿತು?” ಎಂದು ಕೇಳಿದವರಿಗೆ- +“ಇರಲಿ ಬಿಡಿ..ಯಾರು ಮಾಡಿದರೇನು?” ಎಂದು ಉತ್ತರಿಸಿದ. ಆದರೆ ಅವನ ಹೃದಯದ ಈ ನೋವು ಕಡಿಮೆಯಾಗಲು ದಿನಗಳೇ ಬೇಕಾದವು. +ಬಹಳ ಜನ ಈ ವಿಷಯವನ್ನು ಪ್ರಸ್ತಾಪಿಸಿದರು. +ಗುರ್ಕಾರ ಸಿಮೋನ, ಪಾಸ್ಕೋಲ ಮೇಸ್ತ್ರಿ, ಕೈತಾನ, ಇಂತ್ರು, ಕೊನೆಗೆ ಸುಣ್ಣದ ಅನ್ನಾಬಾಯಿ ಕೂಡ ಈ ವಿಷಯವನ್ನು ಅಲ್ಲಲ್ಲಿ ಎತ್ತಿ ಮಾತನಾಡಿಕೊಂಡರು. +ಬಹಳ ವರ್ಷಗಳಿಂದ ಕಾಣಿಕೆ ಡಬ್ಬಿ ಹಿಡಿದು ಜನರ ನಡುವೆ ಬಂದು ಕಾಣಿಕೆ ಸಂಗ್ರಹಿಸುತ್ತಿದ್ದ ಬೋನನ ಬದಲಿಗೆ ಫ಼ರಾಸ್ಕ ಬರತೊಡಗಿದ್ದ. ಬೋನ ಎಂದೂ ಕಾಣಿಕೆ ಹಾಕುವಂತೆ ಜನರನ್ನು ಬಲಾತ್ಕರಿಸುತ್ತಿರಲಿಲ್ಲ. ಕಾಣಿಕೆ ಹಾಕಬೇಕೆನ್ನುವವರು ಕೈ ಚಾಚಿದರೆ ಈತ ಅವರತ್ತ ಹೋಗುತ್ತಿದ್ದ. ಆದರೆ ಫ಼ರಾಸ್ಕ ಪ್ರತಿಯೊಬ್ಬರ ಮುಂದೆ ಕಾಣಿಕೆ ಡಬ್ಬಿ ಹಿಡಿದು ಕುಲುಕಿಸಿ ಅವರಿಂದ ಹಣ ಕೀಳುವಂತೆ ವರ್ತಿಸತೊಡಗಿದ. +ಮಿರೋಣ ಬೇರೊಂದು ರೀತಿಯಲ್ಲಿ ಜನರನ್ನು ಹದ್ದು ಬಸ್ತಿನಲ್ಲಿ ಇಡತೊಡಗಿದ. ದಿವ್ಯ ಪ್ರಸಾದ ಸ್ವೀಕರಿಸಲು ಹೋಗುವವರನ್ನು ಸಾಲಾಗಿ ಹೋಗಿ. ನಿಧಾನ ಹೋಗಿ ಅವರದ್ದು ಆಗಲಿ ನಿಲ್ಲಿ ಎಂದು ತಡೆಯುವುದು, ಮಕ್ಕಳ ಕಿವಿ ಹಿಂಡುವುದು, ಹೆಂಗಸರನ್ನು ಬೈಯುವುದು. ಗಂಡಸರಿಗೆ- +“ನಿಮಗೆ ಅಷ್ಟೂ ತಿಳಿಯುವುದಿಲ್ಲವೇ?” ಎಂದು ವಿನಾಕಾರಣ ಗದರಿಸುವುದು ಮಾಡತೊಡಗಿದ. ಫ಼ರಾಸ್ಕ, ವಲೇರಿಯನ ಡಯಾಸ ಈರ್ವರನ್ನೂ ಜನ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಹೀಗೆಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು ಕೂಡ. +ಈ ವಿಷಯ ಬೋನನವರೆಗೂ ಬಂದಿತು. ಆದರೆ ಬೋನ ಇದನ್ನು ಬೆಳೆಸಲು ಹೋಗಲಿಲ್ಲ. +“ಹೋಗಲಿ ಬಿಡಿ ಪಾದರಿಗಳಿಗೆ ಯಾರ ಮೇಲೆ ನಂಬಿಕೆ ಇದೆಯೋ ಅವರೇ ಈ ಕೆಲಸ ಮಾಡಿದರೆ ಚೆಂದ..” ಎಂದ. +ಈ ನೋವನ್ನು ನುಂಗಿಕೊಂಡು ಉಳಿದ ಬೋನ. +ತಟ್ಟನೆ ಅವನಿಗೆ ಹಿಂದಿನದೆಲ್ಲ ನೆನಪಿಗೆ ಬರುತ್ತಿತ್ತು. ತಾಯಿ ತನ್ನನ್ನು ಬಿಟ್ಟು ಹೋದದ್ದರ ಅಸ್ಪಷ್ಟ ನೆನಪು. ನಂತರ ಪಾದರಿ ಗೋನಸ್ವಾಲಿಸರು ತಾಳ್ಮೆಯಿಂದ, ಪ್ರೀತಿಯಿಂದ ತನ್ನನ್ನು ಬೆಳೆಸಿದ್ದು. ಅವರಿಂದಲೇ ತನಗೊಂದು ವ್ಯಕ್ತಿತ್ವ ಬಂದದ್ದು ಪಾದರಿಯ ಸೇವೆ. ಆ ಮೂಲಕ ಇಗರ್ಜಿ ಮಾತೆಯ ಸೇವೆ ತಾನು ತೊಡಗಿದ್ದು. ಕ್ರಿಸ್ತ ಪ್ರಭುವಿನ ಮೇಲೆ ತನ್ನ ನಂಬಿಕೆ ಗಾಢವಾಗುತ್ತ ಹೋದದ್ದು. ನಿತ್ಯ ಪ್ರಾರ್ಥನೆ, ಭಾನುವಾರದ ಪೂಜೆ, ಪಾಪ ನಿವೇದನೆ, ದಿವ್ಯಪ್ರಸಾದ ಸ್ವೀಕಾರ ಇತ್ಯಾದಿಗಳಿಂದ ಬದುಕಿಗೊಂದು ಅರ್ಥ ಭರವಸೆ ಮೂಡಿದ್ದು. ದಿನಗಳು ಉರುಳಿದ ಹಾಗೆ ಪೂರ್ವ ನಿಶ್ಚಿತವೆಂಬಂತೆ ತನ್ನ ಜೀವನ ಒಂದು ದಾರಿ ಹಿಡಿದಿರುವುದು. ಇಲ್ಲಿ ಗೌರವ, ಮಾನ, ಸನ್ಮಾನ, ಸಂತಸ, ಶ್ರೀಮಂತಿಕೆ ಎಲ್ಲವೂ ಒದಗಿ ಬಂದಿದೆ. ಈ ನಡುವೆ ಇಂತಹ ಸಣ್ಣ ಪುಟ್ಟ ವಿದ್ಯಮಾನಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬಾರದು ಅಂದುಕೊಂಡ ಆತ. ದೇವರ ಮನಸ್ಸಿನಲ್ಲಿ ಏನಿದೆಯೋ ಅದು ಆಗುತ್ತದೆ. ಹೀಗಾಯಿತಲ್ಲ ಎಂದು ಕೊರಗುವುದು ಏಕೆ? ಯಾರೋ ಬಂದರೆಂದು ಬೋನ ಏಳುತ್ತಾನೆ. +“ಬನ್ನಿ…ಏನು ಬೇಕು” ಎಂದು ಕೇಳುತ್ತಾನೆ. +ಹತ್ತಿರದ ಮಡೆನೂರಿನವರು ಮದುವೆ ಜವಳಿ ತೆಗೆಯಲೆಂದು ಅಂಗಡಿಗೆ ಬಂದು ನುಗ್ಗಿದರು. ಅಧಿಕ ಸಂಖ್ಯೆಯ ಹೆಂಗಸರು, ಅವರ ಜತೆ ಮಕ್ಕಳು, ಮೂರು ನಾಲ್ಕು ಜನ ಗಂಡಸರು, ಬೋನನ ಅಂಗಡಿ ತುಂಬಿ ಹೋಯಿತು. ಗಲಾಟೆಯೋ ಗಲಾಟೆ. ಸೀರೆ ಪಂಚೆ, ಅಂಗಿ ಬಟ್ಟೆ, ಚಡ್ಡಿ ಬಟ್ಟೆ, ನಿತ್ಯ ಉಡುವುದು ಧಾರೆ ಸೀರೆ ಎಂದು ಬಟ್ಟೆಯನ್ನು ಹೊರತೆಗೆದು ಮುಂದೆ ರಾಶಿ ಹಾಕಿಕೊಂಡರು. ಬೆಲೆ ಬಾಳುವ ಸೀರೆಗಳನ್ನು ಗಂಟು ಕಟ್ಟಿ ಇರಿಸಿದ್ದು ಆ ಗಂಟುಗಳನ್ನೂ ಬಿಚ್ಚಿ ನೋಡಿದರು. ಜರಿ, ಅಂಚು, ಮೈ, ಸೆರಗು ಎಂದೆಲ್ಲ ಪರೀಕ್ಷೆಯಾಯಿತು. ದಾರ ಎಳೆದು ಕಡ್ಡಿ ಗೀರಿ ಪರೀಕ್ಷೆ ಮಾಡಿದರು. ಒಳಗೆ ಬೆಳಕಿಲ್ಲವೆಂದು ಹೊರಗೆ ಕೊಂಡೊಯ್ದು ಬಿಸಿಲಲ್ಲಿ ನೋಡಿದರು. +“ಅಪ್ಪಿ..ಇದು ಗನಾಗೈತೇನೆ?” +“ತೆಂಗಿ ಇದು ಆದೀತೇನೋ ನೋಡೆ” +“ಅವ್ವ..ಇದಕೇ ಏನಾಗೈತೆ?” +“ಚಿಗವ್ವ ಇದು ಆಗಾಕಲ್ಲೇ” +ಎಂದು ಪರಸ್ಪರ ಕೇಳಿದರು. +ಊಟವನ್ನು ಮರೆತು ಜವಳಿಯ ನಡುವೆ ಮಾತನಾಡುತ್ತ ಕುಳಿತರು. ಮಕ್ಕಳಿಗೆ ಹಾಲು ಕುಡಿಸಿದರು. ಇವರು ಕವಳ ಜಗಿದರು. ಗಂಡಸರು ಹೊರ ಹೋಗಿ ಬಂದರು. ಮೂರು ಗಂಟೆಗೆ ವ್ಯಾಪಾರ ಮುಗಿದು- +’ಏಷ್ಟಾತು ನೋಡ್ರಿ..ದರ ನೋಡಿ ಹಾಕಿ..ಮದುವೆ ಜವಳೀನೆಲ್ಲ ನಾವು ಇಲ್ಲೇ ಕೊಂಡಿದೀವಿ..” ಎಂದ ಯಜಮಾನ. +ಬೋನ ಕುಳಿತು ಪಟ್ಟಿ ಮಾಡಿದ. ಇಷ್ಟು ಹಣವಾಯಿತು ಎಂದ. ಅಲ್ಲೂ ಅವರು ಚೌಕಾಶಿ ಮಾಡಿದರು. ನಂತರ ಯಜಮಾನ ಎದ್ದು ನಿಂತ. ಚೀಲದಿಂದ ತೆಂಗಿನಕಾಯಿ ವಿಳೇದೆಲೆ ಅಡಕೆ ತೆಗೆದು ಮುಂದೆ ಚಾಚಿದ. ಬೋನ ಅದನ್ನು ಬೊಗಸೆಯೊಡ್ಡಿ ತೆಗೆದುಕೊಂಡ. ಒಂದು ಬಿಳಿ ವಸ್ತ್ರದಲ್ಲಿ ಕಟ್ಟಿದ ಜವಳಿಯ ಗಂಟನ್ನು ಯಜಮಾನನ ಕೈಗಿತ್ತ. ಅವರು ಹಣ ಎಣಿಸಿ ಕೊಟ್ಟು ಅಂಗಡಿಯಿಂದ ಹೊರಟರು. ಪ್ರಾರಂಭದಲ್ಲಿ ಇದೆಲ್ಲ ವಿಚಿತ್ರವೆನಿಸುತ್ತಿತ್ತು ಬೋನನಿಗೆ. ಮದುವೆ ಜವಳಿಕೊಳ್ಳಲು ಬಂದವರು ಅದೊಂದು ಪವಿತ್ರ ಕಾರ್ಯ ಎಂದು ತಿಳಿಯುತ್ತಿದ್ದರು. ಬೋನ ಈಗ ಅದಕ್ಕೆ ಹೊಂದಿಕೊಂಡಿದ್ದ. ಅವರು ಕೊಟ್ಟ ಹಣವನ್ನು ಟ್ರೆಜರಿಯಲ್ಲಿರಿಸಿ ಕಿಲಿ ತಿರುಗಿಸಿ ಏಳುತ್ತಿರಲು ಅಂಗಡಿ ಬಾಗಿಲಲ್ಲಿ ಮತ್ತಾರೋ ಕಾಣಿಸಿಕೊಂಡರು. ತಿರುಗಿ ನೋಡಿದರೆ ಗುರ್ಕಾರ ಸಿಮೋನ. +“ಬನ್ನಿ ಸಿಮೋನ ಮಾಮ” ಎಂದು ಎದ್ದು ನಿಂತ ಬೋನ. +ಸಿಮೋನನ ಮುಖ ಎಂದಿನಂತಿರಲಿಲ್ಲ. ಎಲ್ಲಿಯೋ ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವ ಅಲ್ಲಿಂದಲೇ ಬಂದಂತಿತ್ತು. ಕಾಲಿನ ಚಪ್ಪಲಿಗಳಿಗೆ ಕೆಂಪು ಮಣ್ಣು ಮೆತ್ತಿಕೊಂಡಿತ್ತು. ಅವನು ಉಟ್ಟ ಬಟ್ಟೆಯೂ ಮಲಿನವಾಗಿತ್ತು. ಮುಖ್ಯವಾಗಿ ಏನೋ ಸಿಟ್ಟು ಉದ್ವೇಗದಿಂದ ಆತ ತುಸು ಕೆಂಪೇರಿದ್ದ. +“ಕುತ್ಕೊಳಿ” ಎಂದು ಮರದ ಕುರ್ಚಿಯನ್ನು ಮುಂದೆ ಮಾಡಿದ ಬೋನ. ಸಿಮೋನ ಕುಳಿತ. ಅತ್ತ ಇತ್ತ ನೋಡಿದ. ರಸ್ತೆಯ ಮೇಲಿನ ಚಟುವಟಿಕೆಗಳನ್ನು ಗಮನಿಸಿದ. ನಂತರ ತಾನು ಹೇಳಲು ಬಂದ ವಿಷಯವನ್ನು ಹೇಳಲೇಬೇಕೆಂಬ ಒತ್ತಡದಿಂದ +“ಬೋನಾ..” ಎಂದ. +ಪಾದರಿ ಗೋನಸ್ವಾಲಿಸ್ ಇರುವ ತನಕ ಕುಜ್ನೇರ ಬೋನನನ್ನು ಬೇರೊಂದು ಹೆಸರಿನಿಂದ ಕರೆಯಬೇಕಾಗಿರಲಿಲ್ಲ. ಆತ ಊರಿನ ಎಲ್ಲರ ಪಾಲಿಗೂ ಬೋನಾ ಆಗಿದ್ದ. ಆದರೆ ಈಗ ಆತ ಬೋನಾ ಸಾಹುಕಾರ, ಬಲಗಾಲುದ್ಧ ಬಾಲ್ತಿದಾರನ ಅಳಿಯ. ಊರಿನಲ್ಲಿ ಅವನಿಗೆ ಹೆಚ್ಚಿನ ಸ್ಥಾನಮಾನಗಳಿವೆ. ಊರ ಇತರೇ ಜಾತಿಯವರು ಅವನನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಹೀಗಾಗಿ ಸಿಮೋನನಿಗೆ ಬೋನನನ್ನು ಹಿಂದಿನಂತೆ ಕರೆಯಲು ಮುಜುಗರವಾಗುತ್ತದೆ. ಇತರರು ಎದಿರು ಇದ್ದಾಗ ಅವನು ಏಕವಚನದಲ್ಲಿ ಕರೆಯಲು ಮಾತ್ರ ಇಷ್ಟ ಪಡುವುದಿಲ್ಲ. ಅವರಿಬ್ಬರೇ ಇದ್ದಾಗ ಮಾತ್ರ ಬೋನ ಅನ್ನುತ್ತಾನೆ. ಈ ಎರಡು ಅಕ್ಷರಗಳನ್ನು ಉಚ್ಚರಿಸುವಾಗಲೂ ಅವುಗಳಲ್ಲಿ ಏನೋ ಒಂದು ಮಾಧುರ್ಯ ತುಂಬುತ್ತಾನೆ. +“ಹೇಳಿ ಸಿಮೋನ ಮಾಮ ಏನು ವಿಷಯ?” +“ಆ ಕೈತಾನ ನಿನ್ನಲ್ಲಿಗೆ ಬಂದಿದ್ದನೇನು?” +“ಯಾರು ಅಂಕೋಲದ ಕೈತಾನನ?” +ಊರಿನಲ್ಲಿ ಇಬ್ಬರು ಕೈತಾನನಿರುವುದು ಒಂದು ಸಮಸ್ಯೆಯೆ. ಓರ್ವ ಬಳ್ಕೂರಿನವ ಇನ್ನೋರ್ವ ಅಂಕೋಲದವ. ಅಂಕೋಲದ ಕೈತಾನ ತಟ್ಟನೆ ಎಲ್ಲರ ಗಮನಕ್ಕೂ ಬರುತ್ತಿದ್ದ. ಭಾರಿ ವಂಚನೆಗೆ ಒಳಗಾಗಿ ತಂದೆಯ ಆಸ್ತಿಯಲ್ಲಿ ಒಂದು ತೆಂಗಿನಮರವೂ ಸಿಗದೆ ಕಲ್ಲು ಕೆತ್ತುವ ಕಷ್ಟದ ಕೆಲಸ ಮಾಡಿಕೊಂಡು ಬರುತ್ತಿದ್ದ ಕೈತಾನ. +ಮನೆ ತುಂಬ ಹೆಣ್ಣು ಮಕ್ಕಳಾಗಿದ್ದರು. ಕೊನೆಯವನಾಗಿ ಮಗ ದುಮಿಂಗ ಹುಟ್ಟಿದ್ದ. ಒಬ್ಬೊಬ್ಬರಾಗಿ ಹೆಣ್ಣು ಮಕ್ಕಳ ಮದುವೆ ಮಾಡಿ ಅವರವರ ಗಂಡಂದಿರ ಮನೆಗೆ ಕಳುಹಿಸಿದ್ದ. ಕೊನೆಯ ಮಗಳ ಮದುವೆ ಮಾಡಬೇಕಿತ್ತು. ಮಗ ಓದಿನಲ್ಲಿ ತುಸು ದಡ್ಡ. ಹೆಣ್ಣು ಮಕ್ಕಳ ಮದುವೆಯ ಹಿಂದೆಯೇ ಅವರ ಹೆರಿಗೆಯ ಹೊರೆ ಬೇರೆ. ಬಾಣಂತನ, ಮಗುವಿನ ನಾಮಕರಣ ಎಲ್ಲ ಮುಗಿಸಿ ಮಗಳನ್ನು ತಿರುಗಿ ಗಂಡನ ಮನೆಗೆ ಕಳುಹಿಸುವಷ್ಟರಲ್ಲಿ ಕೈತಾನ ಒಣಗಿದ ಕುಂಬಳ ಬಳ್ಳಿಯಂತೆ ನೆಲ ಹಿಡಿಯುತ್ತಿದ್ದ. +ಆತ ನಾಲ್ಕನೇ ಮಗಳು ಸಿಲ್ವಿಯಾಳ ಮದುವೆ ಮಾಡಿದ್ದ. ಹಳೆಯ ಕೊಪೆಲಿನಲ್ಲಿ ಪಾದರಿ ಗೋನಸ್ವಾಲಿಸ್ ಅವಳ ಮದುವೆಯನ್ನೂ ಮಾಡಿದ್ದರು. ಮಗಳನ್ನು ಹೆರಿಗೆಗೆ ಕರೆತಂದೂ ಆಯಿತು. ವೈಜೀಣ್ ಕತ್ರೀನ ಬಂದು ಮಗಳ ಹೆರಿಗೆಯನ್ನು ಮಾಡಿದಳು. ಮನೆಯಲ್ಲಿ ಸಂತಸ ಸಂಭ್ರಮ. ಮೊಮ್ಮಗನ ಅಳುವಿನಿಂದ ಮನೆ ತುಂಬಿಕೊಂಡಿತು. +ನಲವತ್ತನೆಯ ದಿನ ದಬಾಜಿನಿಂದ ಮೊಮ್ಮಗನ ನಾಮಕರಣ ಇರಿಸಿಕೊಳ್ಳಬೇಕು ಎಂದು ಕೈತಾನ ನಿರ್ಧರಿಸಿದ. ಮಗುವಿನ ದೇವಪಿತ ದೇವಮಾತೆಯಾಗಲು ಸಾನಬಾವಿ ಪೆದ್ರು ಅವನ ಹೆಂಡತಿ ಫ಼್ಲೊರಿನಾ ಮುಂದೆ ಬಂದರು. ಮಗುವಿಗಾಗಿ ಅವರು ಒಂದು ಬಂಗಾರದ ಉಂಗುರವನ್ನು ಮಾಡಿಸಿದರು. ಚಮಾದೋರ ಇಂತ್ರು ಮನೆ ಮನೆಗೆ ಹೋಗಿ ’ಮಗುವಿನ ಅಜ್ಜ ಅಜ್ಜಿ ಉಪಕಾರ ಬೇಡಿದ್ದಾರೆ. ಈವತ್ತು ಮಧ್ಯಾಹ್ನ ಮಗುವನ್ನು ತೊಟ್ಟಿಲಿಗೆ ಹಾಕುತ್ತಾರಂತೆ, ನೀವೆಲ್ಲ ಬರಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ’ ಎಂಬ ಹೇಳಿಕೆಯನ್ನು ನೀಡಿ ಬಂದ. +ಗುರುವಾರ ಊರಿಗೆ ರೈಲು ಬಂದ ಸ್ವಲ್ಪ ಹೊತ್ತಿಗೆಲ್ಲ ಸುತಾರಿ ಇನಾಸನ ಮಗ ಡೈಮಂಡನ ಪಿತಳೀ ಬ್ಯಾಂಡಿನ ಸದ್ದು ಕೇಳಿಸಿತು. +ಪಾದರಿ ಗೋನಸ್ವಾಲಿಸ್ ಇಲ್ಲಿ ಮಾಡಿದ ಮತ್ತೊಂದು ಕೆಲಸವೆಂದರೆ ಊರಿಗೆ ಪಿತಳೀ ಬ್ಯಾಂಡನ್ನು ತರಿಸಿದ್ದು. ಕಾರವಾರದ ಮಾರ್ಟಿನ ಪಿರೇರನ ಬ್ರ್ಯಾಸ ಬ್ಯಾಂಡ್ ಊರಿಗೆ ಬಂದದ್ದು ಬೋನ ರೆಮೇಂದಿಯರ ಮದುವೆಗೆ. ಇದಕ್ಕೂ ಮೊದಲು ಇಂತಹ ಬ್ಯಾಂಡು ಊರಿನಲ್ಲಿ ಇರಲಿಲ್ಲ. ಊರಿನಲ್ಲಿ ಇದ್ದುದು ಅರಮನೆ ಕೇರಿಯ ವಾಲಗ ಒಂದೇ. ಪೇಂ ಡುಂ ಡುಂ ಎಂದು ಎಲ್ಲೋ ಅಪರೂಪಕ್ಕೊಮ್ಮೆ ಹಿಂದುಗಳ ಮದುವೆ, ಉತ್ಸವಗಳಲ್ಲಿ ಇದು ಕೇಳಿ ಬರುತ್ತಿತ್ತು. ಕ್ರೀಸ್ತುವರು ಇದನ್ನು ಬಳಸುತ್ತಿರಲಿಲ್ಲ. ಪಾದರಿ ಊರಿಗೆ ಬರುವ ಮುನ್ನ ಒಮ್ಮೆ ಸಿಮೋನ ಮೇಸ್ತ್ರಿ ಈ ವಾಲಗವನ್ನು ತರಿಸಿದ್ದ. ಅವನ ಹಿರಿಯ ಮಗ ರಾಬರ್‍ಟನನ್ನು ತೊಟ್ಟಿಲಿಗೆ ಹಾಕುವಾಗ ಈ ವಾಲಗದವರು ಮನೆಬಾಗಿಲಿಗೆ ಬಂದು ಪೇಂ ಎಂದು ಊದಿದ್ದರು. ಇದನ್ನು ಗಮನಿಸಿದ ಅವನ ತಾಯಿ- +“ಸಿಮೋನ..ಇದೆಲ್ಲ ಕೂಡದು..ನಾವು ಈ ಬಗೆಯ ವಾದ್ಯಗಳನ್ನು ಬಳಸಬಾರದು..” ಎಂದು ಹೇಳಿದ ನಂತರ ಮತ್ತೆ ಯಾವ ಕ್ರೀಸ್ತುವರೂ ವಾಲಗ ತರಿಸಿರಲಿಲ್ಲ. +ಮಾರ್ಟಿನ ಪಿರೇನನ ಬ್ಯಾಂಡು, ಅದರ ವೈಭವ, ಶ್ರೀಮಂತಿಕೆ, ಬ್ಯಾಂಡು ಬಾರಿಸುವವರ ಶಿಸ್ತಿನ ನಡಿಗೆ ನೋಡಿದ ಮೇಲೆ ಊರವರಿಗೆ ಈ ಬ್ಯಾಂಡಿನ ಹುಚ್ಚು ಹಿಡಿಯಿತು. ಇಂತಹ ಒಂದು ಬ್ಯಾಂಡಿದ್ದರೆ ಎಷ್ಟು ಚಂದ ಎಂದವರು ವಿಚಾರ ಮಾಡಿದರು. ಜನರ ಹಾಗೆಯೇ ಪಾದರಿ ಗೋನಸ್ವಾಲಿಸ್ ಕೂಡ ಯೋಚಿಸಿ ಒಂದು ದಿನ ಸುತಾರಿ ಇನಾಸನ ಮಗ ರೈಮಂಡಗೆ- +“ನೀನು ಬ್ಯಾಂಡಕಾರ ಆಗತೀಯ?” ಎಂದು ಕೇಳಿದರು. +ಮಾರ್ಟಿನ ಪಿರೇರ ಬಂದು ಹೋದ ನಂತರ ಕ್ರೀಸ್ತುವರ ಮಕ್ಕಳೆಲ್ಲ ಮನೆಯ ಹಿಂದೆ ಮುಂದೆ ಕುಳಿತು ಡಬ್ಬಿ ಬಡಿಯುವುದು, ಹೆಬ್ಬೆರಳನ್ನು ಬಾಯಿಗೇರಿಸಿಕೊಂಡು ಉಳಿದ ಬೆರಳುಗಳನ್ನು ಕುಣಿಸುತ್ತ ಕ್ಲಾರಿಯೋನೆಟ ಬಾರಿಸುವುದು ಹೆಚ್ಚಾಗಿತ್ತು. ಈ ಹುಚ್ಚನ್ನು ತುಂಬಾ ಹಚ್ಚಿಕೊಂಡವ ರೈಮಂಡ- +’ಓ..’ ಎಂದು ಕುಣಿದಾಡಿದ. +ಪಾದರಿ ಅವನನ್ನು ಕಾರವಾರಕ್ಕೆ ಕಳುಹಿಸಿಯೂ ಆಯಿತು. ಒಂದು ತಿಂಗಳಲ್ಲಿ ತಿರುಗಿ ಬಂದ ಅವನ ಕೈಯಲ್ಲಿ ಕ್ಲಾರಿಯೋನೆಟ್, ಹಿತ್ತಳೆಯ ಡ್ರಮ್ಮು, ಸೈಡ್ ಡ್ರಮ್ಮು ತಾಳಗಳಿದ್ದವು. ಊರಿನಲ್ಲಿಯೇ ಒಂದಿಬ್ಬರಿಗೆ ಡ್ರಮ್ಮು ಸೈಡ್ ಸೈಡ್ ಡ್ರಮ್ಮು ಹೊಡೆಯುವುದನ್ನು ಕಲಿಸಿ ಆತ ಬ್ಯಾಂಡಕಾರ ಆದ. ಊರಿಗೆ ಇಂಗ್ಲೀಷ ಬ್ಯಾಂಡು ಬಂದಿತು. ಪಾದರಿಯೇ ಬ್ಯಾಂಡು ಹೊಡೆಯುವ ಹುಡುಗರಿಗೆ ಹಳದಿ ಸಮವಸ್ತ್ರವನ್ನೂ ಹೊಲಿಸಿ ಕೊಟ್ಟರು. ಹೊಸ ಇಗರ್ಜಿಯಲ್ಲಿ ಪೂಜೆಯಾದಾಗ ಈ ಬ್ಯಾಂಡಿನವರು ಮೊದಲ ಬಾರಿಗೆಂಬಂತೆ ಬ್ಯಾಂಡು ಬಾರಿಸಿದರು. ಈಗ ಕೇರಿಯಲ್ಲಿ ಏನೇ ಆದರೂ ಬ್ಯಾಂಡು ಬೇಕು. +ಕೈತಾನ ಕೂಡ ರೈಮಂಡನಿಗೆ ಎಂಟು ದಿನಗಳ ಮೊದಲೇ ಹೇಳಿ ಇರಿಸಿದ್ದ. ರೈಮಂಡ್ ಕೆಲಸಕ್ಕೆಂದು ಅಲ್ಲಿ ಇಲ್ಲಿ ಹೋಗುವ ತನ್ನ ಹುಡುಗರಿಗೂ ಹೇಳಿ ಕಳುಹಿಸಿದ್ದ. ಬೆಳಿಗ್ಗೆ ಹಳದಿ ಸಮವಸ್ತ್ರ ಧರಿಸಿ ಇವರು ಕೈತಾನನ ಮನೆಯ ಮುಂದೆ ಸಿದ್ಧರಾದರು.. ಡರ್ರರ್ರ ಢಂ ಡರ್ರರ್ರ ಢಂ ಎಂದು ಡ್ರಮ್ಮನ್ನು ಬಾರಿಸಿ ಕೇರಿಗೆಲ್ಲ ರೋಮಾಂಚನವಾಗುವಂತೆ ಮಾಡಿದರು. ಮಕ್ಕಳೆಲ್ಲ ಮನೆಗಳಿಂದ ಹೊರಗೋಡಿ ಬಂದವು. +ಈ ಸಮಾರಂಭಕ್ಕೆಂದೇ ಬಂದ ಸಿಲ್ವಿಯಾಳ ಅತ್ತೆ ಮಗುವನ್ನು ಎತ್ತಿಕೊಂಡಳು. ಅವಳ ಜತೆ ದೇವಪಿತ ದೇವಮಾತೆಯರು, ರೀಟಾಳ ತಾಯಿ, ತಂದೆ, ಕೇರಿಯ ಇತರರು, ಬಂಧು ಬಳಗದವರು. ಎಲ್ಲರೂ ರೈಮಂಡಿನ ಬ್ಯಾಂಡಿನ ಸದ್ದಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತ ಇಗರ್ಜಿಯತ್ತ ಹೊರಟರು. ಕೊಟ್ಟಿಗೆಯಿಂದ ಹೊರ ಬಂದ ಒಂದೆರಡು ದನಗಳು ಬ್ಯಾಂಡಿನ ಸದ್ದಿಗೆ ಬೆದರಿ ಕಿವಿ ನಗುರಿಸಿ ಕಣ್ಣರಳಿಸಿ, ಬಾಲ ಎತ್ತಿಕೊಂಡು ಹುಚ್ಚುಹುಚ್ಚಾಗಿ ನೆಗೆದು ಮೆರವಣಿಗೆಯಲ್ಲಿ ಇದ್ದವರನ್ನು ಹೆದರಿಸಿ ನೆಗೆ ಹಾರಿದವು. +ಮೆರವಣಿಗೆ ಇಗರ್ಜಿಯ ಒಳ ಹೊಕ್ಕಿತು. +ಕೈತಾನ ತನ್ನ ಬೀಗರ ಜತೆ ಪಾದರಿಯ ಬಳಿ ಹೋದ. ಫ಼ರಾಸ್ಕನ ಹೆಂಡತಿ ಬಾವಿಯ ಬಳಿ ಸೀರೆಯನ್ನು ತೊಡೆ ಕಾಣುವ ಹಾಗೆ ಎತ್ತಿ ಕಟ್ಟಿ ಬಟ್ಟೆ ಒಗೆಯುತ್ತಿದ್ದಳು. ಪಾದರಿ ಮಸ್ಕರಿನಾಸರು ಬಂಗಲೆ ಮುಂದೆ ಕುಳಿತು ಅಂದಿನ ಪತ್ರಿಕೆ ಓದುತ್ತಿದ್ದರು. ಕೈತಾನ ಬಳಿ ಬಂದುದನ್ನು ನೋಡಿ ಅವರು- +“ಕೋಣ್ರೆ?” +(ಯಾರು?) ಎಂದು ಕೇಳಿದರು. +ಅವರದು ಅದೊಂದು ಪದ್ಧತಿ. ಏನು ಬಂದದ್ದು ಎಂದು ಕೇಳುವುದರ ಬದಲು ಅವರು ಹೀಗೆ ಕೇಳುತ್ತಾರೆ ಎಂಬುದು ಊರಿಗೆಲ್ಲಾ ಗೊತ್ತಿತ್ತು. +“..ನಮ್ಮ ಮಗುವಿಗೆ ಜ್ಞಾನಸ್ನಾನ ಆಗಬೇಕಿತ್ತು ಪದ್ರಾಬ..” +ಪೇಪರನ್ನು ಮುಂದಿನ ಟೀಪಾಯಿಗೆ ಬಡಿದು ಪಾದರಿ ಬೆಂಕಿ ತುಳಿದ ಗರ್ನೇಲಿನಂತೆ ಸಿಡಿದರು. +“…ಜ್ಞಾನ ಸ್ನಾನ! ಯಾರಿಗೆ ಕೇಳಿ ಮಗೂನ ಕರಕೊಂಡು ಬಂದೆ ನೀನು? ಇದಕ್ಕೊಂದ್ ನೀತಿ ನಿಯಮ ಇಲ್ಲ..ನಿಮಗೆ ತೋಚಿದಾಗ ಬರೋದಕ್ಕೆ ಇದೇನು ಮೀನು ಮಾರ್ಕೇಟ್ಟ..” ಅವರು ಎದ್ದು ನಿಂತು ಅತ್ತಿತ್ತ ಹೆಜ್ಜೆ ಹಾಕಿದರು. ನೆಲವನ್ನು ಕಾಲಿನಿಂದ ಒದ್ದು ಗುದ್ದಿ ಕುಣಿದಾಡಿದರು. +“..ನನಗೆ ಗೊತ್ತಾಗಲಿಲ್ಲ ಪದ್ರಾಬ..” ಕೈತಾನ ಕೈ ಹಿಸುಕಿಕೊಂಡ. +“..ಹ್ಯಾಗೆ ಗೊತ್ತಾಗಬೇಕು..ಪಾದರಿ ಅಂದರೆ ನಿಮ್ಮ ಮನೆ ಕೆಲಸದ ಆಳು..ನೀವು ಬಂದ ಕೂಡಲೇ ನಿಮ್ಮ ಸೇವೆಗೆ ಆತ ಸಿದ್ಧನಾಗಬೇಕು..ಅಲ್ಲ..” +“ಹಾಗಲ್ಲ ಪದ್ರಾಬ..” ಕೈತಾನ ಮತ್ತೂ ದೀನನಾದ. +ಶಿವಸಾಗರದ ಕ್ರೀಸ್ತುವರಿಗೆ ಇದೆಲ್ಲ ಹೊಸದಾಗಿತ್ತು. ಪಾದರಿಗಳ ಬಗ್ಗೆ ಅಪಾರವಾದ ಗೌರವವಿರಿಸಿಕೊಂಡ ಅವರು, ಪಾದರಿಗಳು ಸದಾ ತಮ್ಮ ನೆರವಿಗೆ ಲಭ್ಯವಾಗುತ್ತಾರೆ ಎಂದು ತಿಳಿದಿದ್ದರು. +ಹಂದಿಗುಸ್ತೀನನ ತಾಯಿ ಮಧ್ಯರಾತ್ರಿ ಒಂದು ಗಂಟೆಗೆ ಗೊರಗೊರ ಸದ್ದು ಮಾಡಿ ಅಕ್ಕಿಯ ತಿಳಿಗಂಜಿಕೂಡ ಒಳಗೆ ಹೋಗದ ಪರಿಸ್ಥಿತಿ ಉದ್ಭವವಾದಾಗ ಸಿಮೋನ ಆಕೆಗೆ ಅಂತಿಮ ಅಭ್ಯಂಜನ ಕೊಡಿಸಲು ಪಾದರಿ ಗೋನಸ್ವಾಲಿಸರಲ್ಲಿಗೆ ಓಡಿದ್ದ. ಕೇರಿಯ ನಾಯಿಗಳೆಲ್ಲ ಬೋ ಎಂದು ಬೊಬ್ಬೆ ಹೊಡೆಯುತ್ತಿರಲು ಗೋನಸ್ವಾಲಿಸರು ತೀರ್ಥದ ಬಟ್ಟಲು, ದಿವ್ಯಪ್ರಸಾದದ ಕೈ ಪೆಟ್ಟಿಗೆ, ಪರಿಶುದ್ಧ ಎಣ್ಣೆಯ ಕುಡಿಕೆ ಹಿಡಿದು ಓಡಿ ಬಂದರು. ಗುಸ್ತೀನನ ತಾಯಿಯ ಮೈಮೇಲೆ ಪ್ರಜ್ಞೆ ಇರಲಿಲ್ಲ. ಪಾಪ ನಿವೇದನೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇರದ ಆಕೆ ಇನ್ನೇನು ಕೊನೆಯ ಉಸಿರನ್ನು ಎಳೆಯುತ್ತಿದ್ದಳು. ಕೂಡಲೇ ಪಾದರಿಗಳು ಅವಳು ಮಾಡಿರುವ ಪಾಪಗಳಿಗಾಗಿ ಕ್ಷಮಿಸಿ, ಅವಳ ಹಣೆಗೆ ಪವಿತ್ರ ತೈಲವನ್ನು ಲೇಪಿಸಿ, ಅವಳಿಗೆ ದಿವ್ಯಪ್ರಸಾದವನ್ನು ನೀಡಿ- +“ಕರ್ತರಾದ ಏಸು ಕ್ರಿಸ್ತರೆ, ನೀವು ಪುನರುತ್ಥಾನವೂ ಜೀವವೂ ಆಗಿರುತ್ತೀರಿ. ಈಕೆಗೆ ಕಠಿಣ ವ್ಯಾಧಿಯು ಬಂದು ಮರಣಾವಸ್ಥೆಯಲ್ಲಿರುವಾಗ ಈ ಅಂತಿಮ ಅಭ್ಯಂಜನದಿಂದ ಈಕೆ ಬಲಪಡೆದು, ಪವಿತ್ರ ತೈಲದ ಲೇಪನದಿಂದಲೂ ದಿವ್ಯಪ್ರಸಾದದ ಸ್ವೀಕಾರದಿಂದಲೂ ನಿಮ್ಮ ಸ್ನೇಹದಲ್ಲಿ ಮರಣ ಹೊಂದಿ ನಿತ್ಯ ಜೀವಕ್ಕೆ ಏಳುವಂತಾಗಲಿ, +ಎಂದು ಪ್ರಾರ್ಥಿಸಿದ್ದರಲ್ಲದೆ, +ಆ ರಾತ್ರಿ ದುಃಖಿತರಾದವರ ನಡುವೆ ಬಹಳ ಹೊತ್ತು ಕಳೆದಿದ್ದರು. +ಇಂತಹ ಹಲವಾರು ಘಟನೆಗಳನ್ನು ಕಂಡ ಶಿವಸಾಗರದ ಕ್ರೀಸ್ತುವರು ಪಾದರಿಗಳಿಗೂ ಒಂದು ಸಮಯ ಸಂದರ್ಭ ಇರುತ್ತದೆ ಎಂಬ ವಿಷಯವನ್ನು ಮರೆತಿದ್ದರು. +ಆದರೆ ಈಗ ಪಾದರಿ ಮಸ್ಕರಿನಾಸರ ಮಾತು ಕೇಳಿದ ಮೇಲೆ ತಾನು ತಪ್ಪು ಮಾಡಿದೆ ಎನಿಸಿತು ಕೈತಾನನಿಗೆ. ಬೀಗರ ಎದುರು ತನಗೆ ಅವಮಾನವಾಯಿತು ಎಂದು ಆತ ಪೇಚಾಡಿಕೊಂಡ. +“ಪದ್ರಾಬ..ನಿಮಗೆ ಮೊದಲು ತಿಳಿಸಬೇಕಿತ್ತು..ತಿಳಿಸಲಿಲ್ಲ ಕ್ಷಮಿಸಿ..” ಎಂದು ಬೇಡಿಕೊಂಡ. +ಮಸ್ಕರಿನಾಸರ ಕೋಪ ಇಳಿಯಿತು. +“ಹುಂ” +ಎಂದು ಹೂಂಕರಿಸಿ ಅವರು ಒಳ ಹೋದರು. ಅವರು ತಿರುಗಿ ಬಂದಾಗ ಅವರ ಕೈಯಲ್ಲಿ ಒಂದು ದಪ್ಪ ಪುಸ್ತಕವಿತ್ತು. +* +* +* +ಪಾದರಿ ಮಸ್ಕರಿನಾಸ ಇಲ್ಲಿಗೆ ಬಂದಾಗ ಮಾಡಿದ ಮೊದಲ ಕೆಲಸ ಅದು. ಐನೂರು ಆರುನೂರು ಪುಟಗಳಿರುವ ದಪ್ಪ ರಟ್ಟಿನ ಒಂದು ಪುಸ್ತಕ ತರಿಸಿ ಪ್ರತಿ ಪುಟದ ತುದಿಯಲ್ಲೂ ಕೇರಿಯಲ್ಲಿರುವ ಒಂದೊಂದು ಕ್ರೈಸ್ತ ಕುಟುಂಬದ ವಿವರಗಳನ್ನು ಬರೆದಿದ್ದರು. ಕುಟುಂಬಕ್ಕೆ ಒಂದು ಪುಟ ಮೀಸಲು. ಈ ಪುಟದಲ್ಲಿ ಕುಟುಂಬದ ಹಿರಿಯ, ಯಜಮಾನಿ, ಮಕ್ಕಳು, ಅವರ ಹೆಸರು, ವಯಸ್ಸು, ನಂತರ ಪ್ರತಿ ವರುಷ ಅವರು ಇಗರ್ಜಿಗೆ ನೀಡಿದ ಅನ್ಯಾಲ ಕಾಯಿದೆಯ ಮೊಬಲಗು, ಹಬ್ಬಕ್ಕೆ ನೀಡಿದ ದೇಣಿಗೆ, ಇಗರ್ಜಿ ಕೆಲಸಗಳಿಗಾಗಿ ಕೊಟ್ಟ ಹಣ ಇತ್ಯಾದಿಗಳಿಗೆ ಪುಟದಲ್ಲಿ ಜಾಗವನ್ನು ಮೀಸಲಾಗಿಟ್ಟಿದ್ದರು. +ಇಂತಹ ದಾಖಲೆಗಳ ಪುಸ್ತಕವಿದೆಯೆ ಎಂದು ಅವರು ಗೋನಸ್ವಾಲಿಸರನ್ನು ಕೇಳಿದಾಗ ಅವರು- +“ಇಲ್ಲ..ಇದೀಗ ಇಲ್ಲೊಂದು ವ್ಯವಸ್ಥೆ ರೂಪುಗೊಳ್ಳುತ್ತಿದ್ದೆ..ಮುಂದೆ ಇದನ್ನೆಲ್ಲ ಮಾಡಬಹುದು..” ಎಂದಿದ್ದರು. +ಇದನ್ನು ಈಗಾಗಲೇ ಮಾಡಬೇಕಿತ್ತು. ಕ್ರೀಸ್ತುವರ ಕೇರಿ ಇದೆ. ಇಗರ್ಜಿ ಇದೆ. ಸಿಮಿತ್ರಿ ಇದೆ. ಪಾದರಿ ಇದ್ದಾರೆ. ಗುರ್ಕಾರ, ಮಿರೋಣ ಇದ್ದಾರೆ. ಇದು ಆಗಿಲ್ಲ ಎಂದರೆ ಏನು ಅರ್ಥ? ಕ್ರೀಸ್ತುವರ ಎಲ್ಲ ಆಧ್ಯಾತ್ಮಿಕ ಬೇಡಿಕೆಗಳನ್ನು ಇಗರ್ಜಿ, ಅಲ್ಲಿಯ ಪಾದರಿ ನೆರವೇರಿಸಬೇಕು. ಈ ಪಾದರಿ, ಇಗರ್ಜಿಯನ್ನು ಕ್ರೀಸ್ತುವರು ಪೋಷಿಸಿ ರಕ್ಷಿಸಿಕೊಂಡು ಬರಬೇಕಾಗಿಲ್ಲವೇ? ಬೇರೆ ಊರುಗಳಲ್ಲಿ ಪ್ರತಿ ಕುಟುಂಬದವರೂ ಇಗರ್ಜಿಗೆ ಇಂತಿಷ್ಟು ಹಣವನ್ನು ಅನ್ವಾಲ್ ಕಾಯಿದೆ ರೂಪದಲ್ಲಿ ಕೊಡಬೇಕೆಂದಿದೆ. ಪ್ರತಿ ಹಬ್ಬಕ್ಕೆ ಹಣ ಕೊಡಬೇಕು. ಹೊಸ ಇಗರ್ಜಿ ಕಟ್ಟಲು ಇತರೆ ಕಾಮಗಾರಿಗಳಿಗೆ ಹಣ ಕೊಡಬೇಕು. ಇಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದಿಲ್ಲವೇ? ಹಿಂದೆ ಏನೋ ಆಯಿತು. ಮುಂದೆ? +ಕೂಡಲೇ ಮಸ್ಕರಿನಾಸ ಈ ವಹಿಯನ್ನು ತೆರೆದರು. ಅಷ್ಟೇ ಅಲ್ಲ, ಇಗರ್ಜಿಯಲ್ಲಿ ಶೆರಮಾಂವಂಗೆ ನಿಂತಾಗ ಪ್ರತಿ ಕ್ರೀಸ್ತುವರು ಇಗರ್ಜಿಗೆ ಸಲ್ಲಿಸಬೇಕಾದ ಅನ್ಯಾಲ ಕಾಯಿದೆಯನ್ನು ವರ್ಷಕ್ಕೊಮ್ಮೆ ಸಲ್ಲಿಸಲು ಹೇಳಿದರು. ಗುರ್ಕಾರನನ್ನು ಕರೆದು- +“ನೀವೂ ಜನರಿಗೆ ಹೇಳಬೇಕು..ಇಗರ್ಜಿಯ ಹಣವನ್ನು ಅವರು ಇಗರ್ಜಿಗೆ ಕೊಡಬೇಕಲ್ಲವೇ?” ಎಂದರು. +ಈ ಅನ್ವಾಲ ಕಾಯಿದೆ ನೀಡುವ ಕ್ರಮ ಬೇರೆ ಊರುಗಳಲ್ಲಿಯೂ ಇತ್ತು. ಹೊನ್ನಾವರ, ಮುರ್ಡೇಶ್ವರ, ಭಟ್ಕಳಗಳ ಜನರಿಗೂ ಇದು ಪರಿಚಿತವಾಗಿತ್ತು. ಕೊಡೋಣ ಎಂದರು ಜನ. ಆದರೆ ಯಾರೂ ಕೊಡಲಿಲ್ಲ. ತಾವಾಗಿ ಕೊಡಲು ಮುಂದಾಗಲಿಲ್ಲ. ಆಗ ಪಾದರಿ ಮಸ್ಕರಿನಾಸ ಒಂದು ದಾರಿ ಕಂಡು ಹಿಡಿದರು. +ಕೈತಾನನ ಮೊಮ್ಮಗನಿಗೆ ಜ್ಞಾನಸ್ನಾನ ಕೊಡಿ ಎಂದು ಬಂದಾಗ ಅವರಿಗೆ ಇದು ನೆನಪಾಯಿತು. +ಪುಸ್ತಕದ ಹಾಳೆಗಳನ್ನು ತಿರುವಿ ಹಾಕಿ ಕೈತಾನನ ಹೆಸರಿರುವ ಪುಟ ಬಂದಾಗ ಅವರು- +“ನೀನು ಹದಿನೈದು ವರ್ಷಗಳ ಅನ್ವಾಲ ಕಾಯಿದೆ ಕೊಡಬೇಕು..ಐದು ವರ್ಷಗಳ ಹಬ್ಬದ ಕಾಣಿಕೆ ಕೊಡಬೇಕು..ಇಗರ್ಜಿ ಕಟ್ಟಲಿಕ್ಕೆ ನೀನು ಏನೂ ಕೊಟ್ಟಿಲ್ಲ..” ಎಂದರು. +ಪಾದರಿ ಶಿವಸಾಗರಕ್ಕೆ ಬಂದು ಹದಿನೈದು ವರ್ಷಗಳು ಉರುಳಿದ್ದವು. ಹೊಸ ಇಗರ್ಜಿಯಾಗಿ ಐದು ವರ್ಷ ಆಗಿತ್ತು. ಪ್ರತಿ ವರುಷ ಇಗರ್ಜಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಅವಧಿಯ ಹಣವನ್ನು ಜನರಿಂದ ವಸೂಲು ಮಾಡಬೇಕೆಂದು ಅವರು ನಿರ್ಧರಿಸಿದ್ಧರು. ಅನ್ವಾಲ ಕಾಯಿದೆ ವರ್ಷಕ್ಕೆ ಇಪ್ಪತ್ನಾಲ್ಕು ರೂಪಾಯಿ. ಹಬ್ಬದ ಕಾಣಿಕೆ ವರ್ಷಕ್ಕೆ ಹತ್ತು, ಇಗರ್ಜಿ ಕಟ್ಟೋಣಕ್ಕೆ ನೂರು ಹೀಗೆ ಸುಮಾರು ಐನೂರು ರೂಪಾಯಿಗಳನ್ನು ಅವರು ಬರೆದಿಟ್ಟಿದ್ದರು. +“ನೋಡು ಕೈತಾನ..ಐನೂರು ರೂಪಾಯಿ ಕಟ್ಟು..ನಿನ್ನ ಮೊಮ್ಮಗನಿಗೆ ನಾನು ಜ್ಞಾನಸ್ನಾನ ಕೊಡತೀನಿ.” ಎಂದರವರು ಯಾವುದೇ ಮುಲಾಜು, ಭೀಡೆ ಇಲ್ಲದೆ.. +“ಇಗರ್ಜಿಗೆ ಬರಬೇಕಾದ ಹಣ ಪರಿಹಾರವಾಗದೆ ಇಗರ್ಜಿಯ ಯಾವ ಸವಲತ್ತೂ ಜನರಿಗೆ ದೊರಕೋದಿಲ್ಲ..” ಅವರು ದೃಢ ನಿರ್ಧಾರದಲ್ಲಿ ಹೇಳಿದರು. +ಕೈತಾನ ನಿಂತಲ್ಲಿಯೇ ಕರಗಿ ಕರಗಿ ಹೋಗತೊಡಗಿದ. ತನ್ನ ಇಡೀ ದೇಹ ಕುಬ್ಜವಾಗುತ್ತ ಬಂದು ಹಿಡಿಯಾಗಿ ಮಣ್ಣಿನಲ್ಲಿ ಮಣ್ಣಾಗಿ ಹೋದಂತೆ ಅವನಿಗೆ ಭಾಸವಾಯಿತು. ತಾನು ಇದೇನು ಕೇಳುತ್ತಿದ್ದೇನೆ ಎಂದು ಗಾಬರಿಗೊಂಡ. ಶಿವಸಾಗರದ ಪುರಸಭೆ ಊರ ನಾಲ್ಕೂ ದಿಕ್ಕಿನಲ್ಲಿ ನಾಲ್ಕು ಸುಂಕದ ಕಟ್ಟೆಗಳನ್ನು ತೆರೆದು ಅಲ್ಲಿಂದ ಊರ ಒಳಗೆ ಬರುವ ಗಾಡಿಗಳವರು ಸುಂಕಕೊಡಬೇಕೆಂಬ ನಿಯಮ ಮಾಡಿತ್ತು. ಈ ಸುಂಕದ ಕಟ್ಟೆಯ ಬಳಿ ಕೊಡಲು ಒಂದಾಣೆ ಇಲ್ಲದೆ ಗಾಡಿಗಳವರು ಗಾಡಿಬಿಟ್ಟುಕೊಂಡು ಗೋಳಾಡುತ್ತ ನಿಲ್ಲುವುದನ್ನು ಆತ ಹಲವು ಬಾರಿ ಕಂಡಿದ್ದ. ಈಗ ತನ್ನದೂ ಅದೇ ಅವಸ್ಥೆಯಾಯಿತೆ? ಮನೆಯಲ್ಲಿ ಊರ ಕ್ರೀಸ್ತುವರ ಊಟದ ವ್ಯವಸ್ಥೆ ಆಗುತ್ತಿದೆ. ಜನ ಬರುತ್ತಿರಬಹುದು. ಇಲ್ಲಿ ಇಗರ್ಜಿಯಲ್ಲಿ ಮೊಮ್ಮಗನನ್ನು ಎತ್ತಿಕೊಂಡು ತನ್ನ ಬೀಗತಿ ಕಾಯುತ್ತಿದ್ದಾಳೆ. ಪೆದ್ರು ಅವನ ಹೆಂಡತಿ ಕಾಯುತ್ತಿದ್ದಾರೆ. ಬ್ಯಾಂಡಿನವರು ಇಗರ್ಜಿ ಹೊರಗೆ ನಿಂತಿದ್ದಾರೆ. ಇಲ್ಲಿ ಪಾದರಿ ಅನ್ವಾಲ ಕಾಯಿದೆ ಬಾಕಿ ಉಳಿದಿದೆ. ಕೊಟ್ಟರೆ ಮುಂದಿನ ಕೆಲಸ ಅನ್ನುತ್ತಿದ್ದಾರೆ. ಅದೂ ಹತ್ತು ಐವತ್ತು ರೂಪಾಯಿಯಲ್ಲ. ಐನೂರು ರೂಪಾಯಿ. +ತಾನು ಹಿಂದೆಯೇ ಕೊಡಬೇಕಿತ್ತು. ಕೊಡಲಿಲ್ಲ. ಕೊಡಬಾರದು ಅನ್ನುವುದು ತನ್ನ ಉದ್ದೇಶವಾಗಿರಲಿಲ್ಲ. ಅಷ್ಟು ಇಷ್ಟು ಕೊಡೋಣ ಅಂದು ಕೊಂಡಿದ್ದೆ. ಊರ ಎಲ್ಲ ಕ್ರೀಸ್ತುವರ ಇರಾದೆ ಕೂಡ ಇದೇನೆ. ಯಾರು ತಾನೆ ದೇವರ ಹಣ ಬಾಕಿ ಉಳಿಸಿ ಕೊಳ್ಳುತ್ತಾರೆ. ಆದರೆ ಈ ತಪ್ಪಿಗೆ ಈ ಶಿಕ್ಷೆಯೆ? ಅಳಿಯ ಬೀಗರ ಸಮ್ಮುಖದಲ್ಲಿ ಈ ದಂಡನೆಯೆ? +“ಪದ್ರಾಬಾ..” ಎಂದು ಗೋಗರೆದ ಕೈತಾನ. ತಟ್ಟನೆ ತೆಗೆದು ಕೊಡಲು ಅವನಲ್ಲಿ ಹಣವಾದರೂ ಎಲ್ಲಿತ್ತು? ಹಿಂದಿನಿಂದ ತಂದುಕೊಡುವೆ ಎಂದು ಹೇಳಲಾದರೂ ಅವಕಾಶವಿತ್ತೆ? ಅಷ್ಟು ಹಣವನ್ನು ಇಂದಲ್ಲ ನಾಳೆ ತರುವುದೂ ಕಷ್ಟವೆ. ಹಾಗಾದರೆ ಬೇರೆ ದಾರಿ ಏನಿದೆ? ಸುತ್ತ ಕತ್ತಲೆ ಕವಿದು ದಾರಿಗಾಗಿ ಹುಡುಕಾಡುವ ಪರಿಸ್ಥಿತಿ ಬಂದು ಊರಿನ ಪಾತ್ರೋನ ಸಂತ ಜೋಸೆಫ಼ರೆ, ಚಂದಾವರ ಸಂತ ಫ಼್ರನ್ಸಿಸರೆದ, ಮೈಸೂರಿನ ಸಂತ ಫ಼ಿಲೋಮೆನಾ ನೀವೇ ಕಾಪಾಡಬೇಕು ಎಂದು ಹೃದಯ ಚೀರುತ್ತಿರಲು ಕೈತಾನನ ಬೀಗ, ಅವನ ಅಳಿಯನ ತಂದೆ ಹೊನ್ನಾವರದ ಲಾದ್ರು ಫ಼ರ್ನಾಂಡಿಸ ಸೊಂಟದ ಕಪ್ಪು ಬೆಲ್ಟಿನ ಪಾಕೇಟಿನ ಗುಂಡಿಯೊತ್ತಿ ತೆರೆದುಕೊಂಡ ಪಾಕೇಟಿನೊಳಗಿಂದ ಐದು ನೂರರ ನೋಟುಗಳನ್ನು ಹೊರತೆಗೆದು- +“ಪದ್ರಾಬ..ತೊಕೊಳ್ಳಿ ದುಡ್ಡು..” ಎಂದ. +ಕೈತಾನ ಬೇಡ ಬೇಡ ಎನ್ನಲಾಗದೆ ಕಂಗಾಲಾಗಿ ನೋಡುತ್ತಿರಲು ಪಾದರಿ ಮಸ್ಕರಿನಾಸರು ಕೈ ಚಾಚಿ ಹಣ ತೆಗೆದುಕೊಂಡು ಒಳ ಬಾಗಿಲತ್ತ ತಿರುಗಿ- +“ಫ಼ರಾಸ್ಕ..ಒಂದು ಜ್ಞಾನೋಪದೇಶವಿದೆ..ಸ್ಯಾಕ್ರಿಷ್ಟ ಬಾಗಿಲು ತೆಗಿ..ಇಗರ್ಜಿನಲ್ಲಿ ಅಲ್ತಾರ ಮುಂದೆ ಮೇಣದ ಬತ್ತಿ ಹಚ್ಚು..” ಎಂದು ಉತ್ಸಾಹದಿಂದ ಪುಟಿದೆದ್ದರು. +“ಈಗ ಮಾತುಬೇಡ..ಬನ್ನಿ..” ಎಂದು ಕೈತಾನನ ಬೀಗ ಅವನನ್ನು ಎಳೆದುಕೊಂಡು ಅಲ್ಲಿಂದ ಹೊರಟ. +* +* +* +ಏನೂ ಆಗಿಲ್ಲ ಎಂಬಂತೆ ಪಾದರಿ ಇಗರ್ಜಿಗೆ ಬಂದರು. ಮಗುವಿನ ಜ್ಞಾನಸ್ನಾನ ಆಗುತ್ತಿದೆ ಅನ್ನುವಾಗ ಇಗರ್ಜಿಯ ಗಂಟೆ ಸದ್ದು ಮಾಡಿತು. ಗರ್ನೆಲ ಸಿಡಿಯಿತು. ರೈಮೆಂಡ ಕ್ಲಾರಿಯೋನೆಟ್ಟಿನ ಗುಂಡಿಗಳನ್ನು ಅದುಮಿ ಕೇರಿಗೆಲ್ಲ ಕೇಳಿಸುವಂತೆ ಕೊಂಕಣಿ ಗೀತೆಯೊಂದನ್ನು ನುಡಿಸಿದ. ಮರಿಯಾಣ ಎಂಬ ನಾಮಕರಣವನ್ನು ಜೊತೆಗೆ ಅಜ್ಜನ ಹೆಸರನ್ನು ಪಡೆದ ಮಗು ಅಜ್ಜಿಯ ಕೈಯಲ್ಲಿ ಬ್ಯಾಂಡಿನ ಸದ್ದಿಗೆ ಎಚ್ಚೆತ್ತು ಮಿಸುಕಾಡುತ್ತ ಮನೆಯತ್ತ ತಿರುಗಿತು. +“..ನೀವು ನನ್ನ ಮರ್ಯಾದೆ ಉಳಿಸಿದಿರಿ..ಅದು ನಾನು ಕೊಡಬೇಕಾದ ಹಣ..ನೀವು ಊರಿಗೆ ತಿರುಗಿ ಹೋಗುವಷ್ಟರಲ್ಲಿ ನಾನು ಹಣಾನ ನಿಮಗೆ ತಲುಪಿಸುತ್ತೇನೆ..” +ಎಂದು ಸಂತ ಜೋಸೆಫ಼ರ ಮಂಟಪದ ಬಳಿಯೇ ಕೈತಾನ ಲಾದ್ರು ಫ಼ರ್ನಾಂಡಿಸನ ಕೈ ಕುಲುಕಿದ. ಹೀಗೆ ಅವನ ಕೈ ಕುಲುಕುವಾಗ ಲಾದ್ರು ಫ಼ರ್ನಾಂಡಿಸನ ಕೈ ಮೇಲೆ ಎರಡು ಬಿಸಿ ಹನಿಗಳು ಬಿದ್ದು ಆತ- +“ಇರಲಿ..ಇರಲಿ..” ಎಂದ ತುಸು ಭಾವಪರವಶನಾಗಿ.. +“ಈ ಪದ್ರಾಬಾಗಳು ಈಗೀಗ ಹೀಗೆ ಆಗತಿದಾರೆ..ಇಲ್ಲಿ ಅಂತ ಅಲ್ಲ ಎಲ್ಲಾ ಕಡೇನು ಇದೇ ಕತೆ..ಇವರಿಗೆ ದಿನಾ ಹೋದ ಹಾಗೆ ಹಣಾನೇ ಮುಖ್ಯ ಆಗತಿದೆ..” ಎಂದ ಲಾದ್ರು ಫ಼ರ್ನಾಂಡಿಸ. +ನಾಮಕರಣಗೊಂಡು ಕ್ರೈಸ್ತ ಪ್ರಭುವಿನ ತೆಕ್ಕೆಗೆ ಬಂದ ಮಗು ಮನೆ ಸೇರಿಕೊಂಡಿತು. ಕೈತಾನ ಅಡಿಗೆ ವ್ಯವಸ್ಥೆ, ಬಂದವರು ಕುಳಿತುಕೊಳ್ಳಲು ಮಾಡಬೇಕಾದ ವ್ಯವಸ್ಥೆ ಎಲ್ಲ ನೋಡಿಕೊಳ್ಳಲು ಅತ್ತಿತ್ತ ತಿರುಗಾಡುತ್ತಿರುವಾಗ ತನ್ನ ಮನೆಗೆ ಬಂದು ತಿರುಗಿ ಹೋಗುತ್ತಿರುವ ಗುರ್ಕಾರ ಸಿಮೋನ ಅವನಿಗೆ ಕಂಡ. +“ಸಿಮೋನ..ಮರೀಬಾರದು..” ಎಂದ ಕೈತಾನ ಅವನನ್ನು ನಿಲ್ಲಿಸಿಕೊಂಡು. ಊಯ್ಟಕ್ಕೆ ಬರಲು ಮರೆಯ ಬೇಡ ಎಂಬುದು ಅವನ ಮಾತಿನ ಅರ್ಥ. +“ಕೈತಾನ..ಸಾಧ್ಯವಾದರೆ ಬರತೀನಿ..ನನ್ನ ಹೆಂಡತಿ ತಾಯಿ ಮಕ್ಕಳಂತೂ ಬರತಾರೆ..ಬೇಜಾರು ಮಾಡಿಕೋ ಬೇಡ..ಸಂಜೆ ಇಲ್ಲ ನಾಳೆ ಬಂದು ಮಗೂಗೆ ಆಶೀರ್ವಾದ ಮಾಡತೀನಿ..” ಎಂದ ಸಿಮೋನ. +“ಆಯ್ತು..ಆಯ್ತು..ಸಾಧ್ಯವಾದರೆ ಬಾ..” +ಇಲ್ಲಿಗೇನೆ ಮಾತು ಮುಗಿಸಲು ಆಗಲಿಲ್ಲ ಕೈತಾನನ ಕೈಲಿ. ಮುಖದ ಮೇಲೆ ನಗೆ ಇದ್ದರೂ ಹೃದಯದಲ್ಲಿ ನೋವಿತ್ತು. +“ಸಿಮೋನ ನಾನು ನಿನಗೆ ಹೇಳದೆ ಇರಲಾರೆ..ಆ ಸಂತ ನನ್ನ ಮರ್ಯಾದೆ ಉಳಿಸಿದ ಈವತ್ತು…” ಎಂದ ಕೈತಾನ ಗದ್ಗದಿತನಾಗಿ. +“ಏನಾಯ್ತು..ಏನಾಯ್ತು..” +ಸಿಮೋನನ ಜತೆ ನಾಲ್ಕು ಹೆಜ್ಜೆ ಇರಿಸಿ..ಇಗರ್ಜಿಯ ಕಾಂಪೌಂಡಿನ ಈ ಬದಿಯಲ್ಲಿ ಹಲಸಿನ ಮರದ ನೆಳಲಿಗೆ ನಿಂತು ಕೈತಾನ ಸೂಕ್ಷ್ಮವಾಗಿ ಹೇಳಿದ. ಮತ್ತೊಮ್ಮೆ ಅವನ ಕಣ್ಣುಗಳಲ್ಲಿ ನೀರು ಹಣಕಿತು. +“ಹೌದೆ..ಹೌದೆ..” ಎಂದು ಸಿಮೋನ ಕೂಡ ಪೇಚಾಡಿದ. +“ಹೌದು..ಸಾಯಂಕಾಲದೊಳಗೆ ನಾನು ಐನೂರು ರೂಪಾಯಿ ಹಿಂತಿರುಗಿಸಬೇಕು..ನನ್ನ ಮರ್ಯಾದೆ ಪ್ರಶ್ನೆ.” +“ಅದರ ಬಗ್ಗೆ ಚಿಂತೆ ಮಾಡಬೇಡ..ನಾನು ಜವಳಿ ಅಂಗಡಿ ಬೋನನಿಗೆ ಹೇಳತೇನೆ..ನಡಿ..ಈ ಕೆಲಸ ಒಂದು ಮುಗಿಸು. ದೇವರು ಎಲ್ಲವನ್ನು ನಡೆಸಿ ಕೊಡತಾನೆ ಹೋಗು.” +ಕೈತಾನನನ್ನು ಅತ್ತ ಕಳುಹಿಸಿ ಸಿಮೋನ ತಾನು ಕೆಲಸ ಹಿಡಿದಲ್ಲಿಗೆ ನಡೆದ. +ಮಧ್ಯಾಹ್ನ ಪೇಟೆಗೆ ಬಂದವ ನೇರವಾಗಿ ಬೋನನ ಅಂಗಡಿಗೆ ಬಂದ. ಸಿಮೋನ ಯಾವ ಕಾರಣದಿಂದ ಬೇಕಾದರೂ ಪೇಟೆಗೆ ಬರಲಿ ಆತ ಬೋನನ ಅಂಗಡಿಗೆ ಬರಲೇಬೇಕು. +“ಆ ಕೈತಾನ ನಿನ್ನಲ್ಲಿಗೆ ಬಂದಿದ್ದನೇನು?” ಎಂದು ಕೇಳುತ್ತ ಮರದ ಕುರ್ಚಿ ಎಳೆದುಕೊಂಡು ಕುಳಿತ. +ಎಲ್ಲವನ್ನು ವಿವರವಾಗಿ ಹೇಳಿ. +“ಅವನು ಬಂದರೆ ಅವನಿಗೊಂದು ಐನೂರು ರೂಪಾಯಿಕೊಡು..ಇಂದಲ್ಲ ನಾಳೆ ಅವನು ಪರತ ಕೊಡತಾನೆ.” ಎಂದ ಸಿಮೋನ. +“ಪಾದರಿಗಳು ಹೀಗೆ ಮಾಡಿದ್ದು ಮಾತ್ರ ಸರಿಯಲ್ಲ” ಎಂದ ಬೋನ. +“ನಾವು ಆ ಪಾದರಿಗಳನ್ನು ನೋಡಿದ್ವಿ..ಈಗ ಇವರನ್ನು ನೋಡತಿದೀವಿ..ಮುಂದೆ ಮತ್ತೆ ಯಾರು ಯಾರು ಬರತಾರೊ..” ಎಂದು ಎದ್ದ ಸಿಮೋನ. +ಬೋನ ಕೈತಾನನ ದಾರಿ ಕಾಯುತ್ತ ಕುಳಿತ. ತುಸು ಬೇಸರ ವಿಷಾದದಿಂದ. +-೩- +ಶುಕ್ರವಾರ ಬಂತೆಂದರೆ ಸುತಾರಿ ಇನಾಸನ ಮನೆ ಮುಂದೆ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಅವನ ಮೂಕಿ ಹೆಂಡತಿ ಮೊನ್ನೆ. ಸಿಮೋನನ ಮನೆ ಹಿಂಬದಿಯ ಕೊಟ್ಟಿಗೆಗೋ ಇಲ್ಲವೆ ಮರಿಯಮ್ಮನ ಮನೆ ಕೊಟ್ಟಿಗೆಗೋ ಹೋಗಿ ಶಗಣಿ ತರುತ್ತಾಳೆ. ಇಡೀ ಅಂಗಣವನ್ನು ಸಾರಿಸುತ್ತಾಳೆ. ಬೇಲಿ ಬದಿಯಲ್ಲಿ ಬೆಳೆದ ಗಿಡಗಳನ್ನು ಕಿತ್ತು ಎಸೆಯುತ್ತಾಳೆ. ಇನಾಸನ ಎರಡನೇ ಮಗ ಪಾಸ್ಕು ಶಿಲುಬೆಯ ಮುಂದೆ ಈವರೆಗೆ ಜನ ಹೊತ್ತಿಸಿ ಹೆಪ್ಪುಗಟ್ಟಿ ಹೋದ ಮೇಣದ ಬತ್ತಿಯ ಮೇಣವನ್ನು ಕಿತ್ತು ತೆಗೆಯುತ್ತಾನೆ. ಇನಾಸನ ಎರಡನೇ ಮಗ ಪಾಸ್ಕು ಶಿಲುಬೆಯ ಮುಂದೆ ಈವರೆಗೆ ಜನ ಹೊತ್ತಿಸಿ ಹೆಪ್ಪುಗಟ್ಟಿ ಹೋದ ಮೇಣದ ಬತ್ತಿಯ ಮೇಣವನ್ನು ಕಿತ್ತು ತೆಗೆಯುತ್ತಾನೆ. ಇನಾಸನ ಹೆಣ್ಣು ಮಕ್ಕಳು ಸಂಜೆ ಹೊತ್ತಿಗೆ ಅಬ್ಬಲಿಗೆ ಹೂವಿನ ಹಾರಕಟ್ಟಿ ಶಿಲುಬೆಗೆ ಅಲಂಕಾರ ಮಾಡುತ್ತಾರೆ. ಆರು ಗಂಟೆಗೆಲ್ಲ ಒಬ್ಬರಾಗಿ ಇಬ್ಬರಾಗಿ ಹೆಂಗಸರು ಬರುತ್ತಾರೆ. ಮಕ್ಕಳು ಬಂದು ಮೊದಲೇ ರಸ್ತೆಯ ಮೇಲೆ ಗಲಾಟೆ ಮಾಡುತ್ತಿರುತ್ತವೆ. ಮೊನ್ನೆ ಮನೆಯೊಳಗಿನಿಂದ ಈಚಲ ಚಾಪೆಗಳನ್ನು ತಂದು ತಂದು ಅಂಗಳದಲ್ಲಿ ಹಾಸಿ ಬಂದವರಿಗೆ ಕುಳಿತುಕೊಳ್ಳುವಂತೆ ಸಂಜ್ಞೆ ಮಾಡುತ್ತಾಳೆ. +ಪಾದರಿ ಗೋನಸ್ವಾಲಿಸ್ ಕಟ್ಟಿಸಿದ ಈ ಶಿಲುಬೆ ಕೇರಿಯ ಜನರನ್ನು ಕಾಪಾಡುತ್ತ ಅವರ ಮನಸ್ಸಿನಲ್ಲಿ ದೈವ ಭಕ್ತಿಯನ್ನು ಸ್ಫುರಿಸುತ್ತ ನಿಂತಿದೆ. ಶಿಲುಬೆಯ ಹಿಂಬದಿಯಲ್ಲಿ ಅನ್ನುವಹಾಗಿದ್ದ ಕಲ್ಲು ಕುಟಿಗ ಜನರ ಮನಸ್ಸಿನಿಂದ ಮರೆಯಾಗುವಂತೆಯೇ ತಾನಿದ್ದ ಜಾಗದಿಂದಲೂ ಕಾಣೆಯಾಗಿದ್ದಾನೆ. +ಶಿಲುಬೆ ಇಲ್ಲಿ ಎದ್ದುನಿಂತ ನಂತರವೂ ಕಲ್ಲುಕುಟಿಗನಿಗೆ ಊದಿನಕಡ್ಡಿ, ಹೂವು ಕುಂಕುಮದ ಸೇವೆ ಸಲ್ಲುತ್ತಿತ್ತು. ಬಂದ ಜನ ಕಲ್ಲು ಕುಟಿಗನಿಗೆ ಊದಿನಕಡ್ಡಿ ಹಚ್ಚಿ ಶಿಲುಬೆ ದೇವರಿಗೆ ಮೇಣದ ಬತ್ತಿ ಹಚ್ಚಿ ಒಟ್ಟಿಗೇನೆ ಇಬ್ಬರಿಗೂ ಕೈ ಮುಗಿದು ಹೋಗುತ್ತಿದ್ದರು. ಆಸುಪಾಸಿನಲ್ಲಿದ್ದ ಕೆಲವೇ ಹಿಂದುಗಳು ಕಲ್ಲು ಕುಟಿಗನನ್ನು ಸುಲಭವಾಗಿ ಮರೆಯಲಿಲ್ಲ. ಆದರೆ ಕ್ರೀಸ್ತುವರು ಮರೆಯಬೇಕಾಯಿತು. ಇನಾಸನ ಹೆಂಡತಿ ಮಕ್ಕಳು ನಿತ್ಯ ಸಂಜೆ ಅಂಗಳದಲ್ಲಿಯೇ ಜಪ, ತೇರ್ಸ ಮಾಡತೊಡಗಿದ್ದು ಕಲ್ಲು ಕುಟಿಗನನ್ನು ಇವರಿಂದ ದೂರ ಮಾಡಿತು. +ಪಾದರಿ ಗೋನಸ್ವಾಲಿಸ್ ಪ್ರತಿ ಶುಕ್ರವಾರ ಕೇರಿಯ ಎಲ್ಲ ಜನ ಇಲ್ಲಿ ಬಂದು ಸೇರಿ ಜಪಸರ ಪ್ರಾರ್ಥನೆ ಮಾಡಬೇಕೆಂದು ಹೇಳಿದ್ದು, ಎಷ್ಟೋ ಬಾರಿ ಅವರೇ ಬಂದು ಪ್ರಾರ್ಥನೆ ಕಲಿಸುತ್ತಿದ್ದುದು, ಶಿಲುಬೆಯ ಮೇಲೆ ಜನರ ಭಕ್ತಿ ಅಧಿಕವಾಗಲು ಕಾರಣವಾಯಿತು. ಆಗಲೂ ಕಲ್ಲು ಕುಟಿಗ ಅಲ್ಲಿ ಇದ್ದ. ನೆಲಮಟ್ಟದಿಂದ ತುಸು ಮೇಲೆ ಮೂಡಿನಿಂತ ಆ ಕಲ್ಲನ್ನು ಇನಾಸ ನಿತ್ಯ ನೋಡುತ್ತಲಿದ್ದ. ಆದರೆ ಒಂದು ದಿನ ಬೆಳಿಗ್ಗೆ ಕೈ ಕಾಲು ಮುಖ ತೊಳೆದು ಶಿಲುಬೆಗೆ ಕೈ ಮುಗಿದು ಬಗ್ಗಿ ನೋಡಿದಾಗ ಅಲ್ಲಿ ಹಸಿ ಮಣ್ಣು ಕಂಡಿತು. ಅಷ್ಟಗಲ ಜಾಗವನ್ನು ಕೆದರಿ ಕೆತ್ತಿ ಸಣ್ಣದೊಂದು ತಗ್ಗನ್ನು ಅಲ್ಲಿ ಮಾಡಲಾಗಿತ್ತು. +“ದೇವರೇ..” ಎಂದು ಚೀರಿದ ಇನಾಸ. +“ಇದೇನು ಆಯಿತು..” ಎಂದು ಅವನ ಮುಖ ವಿವರ್ಣವಾಯಿತು. ರುದ್ರ ಬಿಟ್ಟು ಹೋದ ಅವನ ದೇವರು ಅಲ್ಲಿ ಇರಲಿಲ್ಲ. ’ದೇವರೆ ಇದರಲ್ಲಿ ನನ್ನ ಪಾತ್ರ ಏನಿಲ್ಲ..ಇದು ಯಾವುದೂ ನನಗೆ ಗೊತ್ತಿಲ್ಲ’. ಎಂದು ಆತ ಕೆನ್ನೆ ತಟ್ಟಿಕೊಂಡ. +ಕೂಡಲೇ ಒಳ ಹೋಗಿ ಮೇಣದ ಬತ್ತಿ ಹಚ್ಚಿ ತಂದು ಶಿಲುಬೆಯ ಮುಂದೆ ಹಚ್ಚಿ- +“ದೇವರೆ..ನೀನೇ ಕಾಪಾಡಬೇಕು” ಎಂದ. +ಮನಸ್ಸಿನ ಮೂಲೆಯಲ್ಲಿ ಏನೋ ಭೀತಿ ಆತಂಕ ಇದ್ದೇ ಇತ್ತು. ಕಲ್ಲು ಕುಟಿಗ ಅಷ್ಟೊಂದು ಸುಲಭವಾಗಿ ತೆಗೆದು ಹಾಕುವ ದೈವವಲ್ಲ ಅನ್ನುತ್ತಿದ್ದ ರುದ್ರ. ಆದರೂ ಅಂತಹದೇನೂ ಆಗಲಿಲ್ಲ. ಅದರ ಬದಲು ಶಿಲುಬೆ ದೇವರು ಕೇರಿಯಲ್ಲೆಲ್ಲ ಬೇಕಾದವನಾದ. ಎಲ್ಲ ಜನ ಚೌಡಿಯನ್ನು ಮರೆತಂತೆ ಕಲ್ಲುಕುಟಿಗನನ್ನೂ ಮರೆತರು. +ಪಾದರಿ ಮಸ್ಕರಿನಾಸ ಬಂದದ್ದೇ ಬೇರೊಂದು ನಿಯಮ ಜಾರಿಗೆ ತಂದರು. ತಿಂಗಳಿಗೊಮ್ಮೆ ಒಂದೊಂದು ಮನೆಯವರು ಇಲ್ಲಿ ಜಪಸರ ಪ್ರಾರ್ಥನೆ ಮಾಡಬೇಕು ಎಂದರು. ತಿಂಗಳ ಮೊದಲ ಶುಕ್ರವಾರ ಒಂದು ಮನೆಯವರಿಂದ ಪ್ರಾರ್ಥನೆ. ಉಳಿದ ಮನೆಗಳವರೆಲ್ಲ ಬರಬೇಕು, ಪ್ರಾರ್ಥನೆಯಲ್ಲಿ ಪಾಲುಗೊಳ್ಳಬೇಕು. ಅಂತ್ಯದಲ್ಲಿ ಬಂದವರಿಗೆ ಅಲ್ಪ ಉಪಹಾರದ ವ್ಯವಸ್ಥೆಯನ್ನು ಮಾಡಬಹುದು. ಇದು ಕಡ್ಡಾಯವೇನಿಲ್ಲ. ಅವಲಕ್ಕಿ, ಮಂಡಕ್ಕಿ ಏನಾದರೂ ಕೊಡಿ. ಮುಖ್ಯವಾಗಿ ಪ್ರತಿ ತಿಂಗಳೂ ಎಲ್ಲ ಸೇರಿ ಇಲ್ಲಿ ಪ್ರಾರ್ಥನೆ ಮಾಡಿ ಎಂದರು. ಶುಕ್ರವಾರದ ಸಾಮಾನ್ಯ ಪ್ರಾರ್ಥನೆ, ತಿಂಗಳ ವಿಶೇಷ ಆರಾಧನೆ. ನಿತ್ಯದ ಜಪ ಎಂದೆಲ್ಲ ಶಿಲುಬೆ ದೇವರ ಬಳಿ ಜನ ಕಲೆಯುವುದು ನಿತ್ಯದ ವಿಷಯವಾಯಿತು. +ಒಂದು ದಿನ ಸಿಮೋನ ಶಿಲುಬೆಯ ಪ್ರಾರ್ಥನೆ ಇರಿಸಿಕೊಂಡ. ಶಿಲುಬೆಗೆ ಭರ್ಜರಿ ಅಲಂಕಾರ. ಸಾಲು ಸಾಲು ಮೇಣದ ಬತ್ತಿಗಳು ಸುತ್ತ ಮಾವಿನ ಎಲೆ ತೋರಣ. ಪ್ರಾರ್ಥನೆ ಮುಗಿಯುವಾಗ ಹರಿವಾಣಗಳಲ್ಲಿ ತುಪ್ಪದ ಅವಲಕ್ಕಿ ಬಂದಿತು. ತುಂಡು ಬಾಳೆ ಎಲೆಯಲ್ಲಿ ಎಲ್ಲರಿಗೂ ಸಾಕು ಸಾಕು ಅನ್ನುವಷ್ಟು ಅವಲಕ್ಕಿ ನಂತರ ಲೋಟಗಳಲ್ಲಿ ಕಾಫ಼ಿ, ನೀರು. +ಮುಂದಿನ ತಿಂಗಳು ಎಮ್ಮೆ ಮರಿಯ ನಂತರ ಸಾನಬಾವಿ ಪೆದ್ರು ಮನೆ ಮನೆಗೆ ಹೋಗಿ ಜನರನ್ನು ಕರೆಯುವುದು. +“ಈವತ್ತು ನಮ್ಮ ಪ್ರಾರ್ಥನೆ..ಬರಬೇಕು” +“ಮರಿಬೇಡಿ ಆಯ್ತ?” +ಚಮಾದೋರ್ ಇಂತ್ರು ಮೂಲಕ ಹೇಳಿ ಕಳುಹಿಸುವುದು. ಮನೆ ಮನೆಯವರೇ ಬಂದು ಶಿಲುಬೆಯ ಸುತ್ತ ಅಲಂಕರಿಸುವುದು. +ಪಾಸ್ಕೋಲ ಮೇಸ್ತ್ರಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇನಾಸನ ಮಗನಿಗೇನೆ ಹೇಳಿ ಬ್ಯಾಂಡ್ ಬಾರಿಸಿದ್ದೂ ಆಯಿತು. ಅವಲಕ್ಕಿ ಬದಲು ಎಳ್ಳಿನ ಉಂಡೆ ಹಂಚಿದ್ದೂ ಆಯಿತು. ಪ್ರಾರ್ಥನೆ ಮಾಡುವವರ ಪ್ರತಿಷ್ಠೆಯ ಜತೆಗೆ ಈ ಶಿಲುಬೆ ದೇವರ ಪ್ರತಿಷ್ಠೆಯೂ ಹೆಚ್ಚಿತು. +ಹೀಗಾಗಿ ತಿಂಗಳ ಮೊದಲ ಶುಕ್ರವಾರ ಇಲ್ಲಿ ಒಂದು ಪರಿಸೆ ಸೇರಲಾರಂಬಿಸಿತು. +ಅಂತಹ ಒಂದು ಶುಕ್ರವಾರ ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಸೇರಿದ ಜನರನ್ನು ನೋಡಿದ ಮೇಲೆ ಅವರ ತಲೆಯಲ್ಲಿ ಒಂದು ವಿಚಾರ ಹೊಕ್ಕಿತು. ಈ ವಿಚಾರ ಹೊಕ್ಕಿದ್ದೆ ಅವರು ಗುರ್ಕಾರ ಸಿಮೋನನಿಗೆ ಹೇಳಿ ಕಳುಹಿಸಿದರು. +“ಬೆಸಾಂವಂ ದಿಯಾ ಪದ್ರಾಬ” ಎಂದು ಸಿಮೋನ ಬಂದು ಕೈಮುಗಿದ. +“ಅಲ್ಲ ಸಿಮೋನ, ಇನಾಸನ ಮನೆ ಮುಂದೆ ಒಂದು ಶಿಲುಬೆ ಇರಿಸಿದ್ದಾರಲ್ಲ..ಅದು ಯಾರು ಕಟ್ಟಿಸಿದ್ದು?” +ಇನಾಸನ ಮನೆಯ ಮುಂದೆ ಶಿಲುಬೆ ಕಟ್ಟಿಸಿದ ಬಗ್ಗೆ ಇಗರ್ಜಿಯಲ್ಲಿ ದಾಖಲೆ ಇತ್ತು. ಅದನ್ನು ಈಗಾಗಲೇ ಮಸ್ಕರಿನಾಸ ಓದಿದ್ದರು. ಆದರೂ ಈ ವಿಚಾರಕ್ಕೆ ಬೇರೊಂದು ರೂಪ ಕೊಡುವ ಅಭಿಪ್ರಾಯ ಅವರದ್ದಾಗಿತ್ತು. ಹೀಗೆಂದೇ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. +“ಇಗರ್ಜಿಯಿಂದಾನೆ ಅಲ್ಲಿ ಶಿಲುಬೆ ಇತ್ಯಾದಿ ಕಟ್ಟಿಸಿದ್ದು ಪದ್ರಾಬಾ..” ಎಂದ ಆತ. +ಅವನಿಗಂತೂ ಗೊತ್ತಿತ್ತಲ್ಲ. +“ಅಂದರೆ ಅದು ಇಗರ್ಜಿ ಆಸ್ತಿ ಅಲ್ಲವೆ?” ಎಂದು ಅವರು ಹೇಳಿದಾಗ ಅವರ ಮಾತಿನ ತಲೆ ಬುಡ ಸಿಮೋನನಿಗೆ ಆಗಲಿಲ್ಲ. ಪಾದರಿ ಈ ವಿಷಯವನ್ನು ಒಂದೆರಡು ಮಾತಿನಲ್ಲಿ ಮುಗಿಸಿಬಿಟ್ಟರು. ಆದರೆ ಮುಂದೊಂದು ದಿನ ಅವರು ಸಿಮೋನನನ್ನು ಕರೆದುಕೊಂಡು ಇನಾಸನ ಮನೆಗೆ ಬಂದರು. ಓರ್ವ ಆಳನ್ನು ಒಂದೆರಡು ಸಲಕರಣೆಗಳನ್ನು ತರಲು ಅವರು ಹೇಳಿದ್ದರು. ಅವರ ಕೈಯಲ್ಲಿ ಕಬ್ಬಿಣದ ಒಂದು ಕರಂಡಕ ಕೂಡ ಇತ್ತು. ಅದಕ್ಕೊಂದು ಬೀಗ ಬೇರೆ. +ಸಿಮೋನನಿಗೆ ಎಲ್ಲ ಅರ್ಥವಾಯಿತು. ಪಾದರಿಗಳ ಅಭಿಪ್ರಾಯದಂತೆ ಕಬ್ಬಿಣದ ಕರಂಡಕನ್ನು ಆತ ಶಿಲುಬೆಯ ಕೆಳಗೆ ಕಲ್ಲು ಕೊರೆದು ಕೂಡಿಸಿ ಗಾರೆ ಮಾಡಿದ. ಅದರ ಮುಚ್ಚಳ ತೆಗೆದು ನೋಡಿ ಪರೀಕ್ಷೆ ಮಾಡಿ ಪಾದರಿ ಬೀಗ ಜಡಿದರು. ಇನಾಸನ ಮಕ್ಕಳನ್ನು ಕರೆದು ಪಾದರಿ- +“ಇದನ್ನು ನೋಡಿಕೊಳ್ಳಿ..” ಎಂದರು. +ಅದರ ಬೀಗದ ಕೈ ಮಾತ್ರ ಪಾದರಿಗಳ ಬಳಿ ಉಳಿಯಿತು. +ಅನಂತರದ ಶುಕ್ರವಾರ ಜಪಸರ ಪ್ರಾರ್ಥನೆಗೆ ಬಂದ ಜನ. ಮೇಣದ ಬತ್ತಿ ಹಚ್ಚಲು ಬಂದವರು. ಶಿಲುಬೆ ದೇವರಿಗೆ ಹೂವು, ಮೇಣದ ಬತ್ತಿ ನೀಡಲು ಬಂದವರು ತಮ್ಮ ಕೆಲಸ ಮುಗಿಸಿ ಕೈ ಮುಗಿದು ಈ ಗೋಲಕಕ್ಕೆ ಹಣ ಹಾಕಲು ಮರೆಯಲಿಲ್ಲ. +ಇನಾಸ ಇದ್ದನ್ನು ವಿಪರೀತವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅವನ ಎರಡನೇ ಮಗ ಪಾಸ್ಕು ಕಾಣಿಕೆ ಡಬ್ಬಿಯನ್ನು ಅದಕ್ಕೆ ತೂಗು ಬಿದ್ದ ಬೀಗವನ್ನು ನೋಡಿ ಮುಖಗಂಟು ಮಾಡಿಕೊಂಡ. +* +* +* +ಪಾದರಿ ಮಸ್ಕರಿನಾಸರು ಊರಿಗೆ ಬಂದ ಮೇಲೆ ಇನ್ನೂ ಕೆಲವರ ಮುಖದ ಮೇಲೆ ಹೀಗೆ ಗಂಟುಗಳು ಬಿದ್ದಿದ್ದವು. +ಮಸ್ಕರಿನಾಸರು ಪ್ರತಿ ಭಾನುವಾರ ಪೂಜೆಯ ನಡುವೆ ಶರಮಾಂವಂಗೆ ನಿಂತವರು- +“ನೀವು ಯಾರೂ ಅನ್ವಾಲ ಕಾಯಿದೆ ಕೊಡುತ್ತಿಲ್ಲ” +“ನೀವು ಕಾಣಿಕೆ ಡಬ್ಬಿಗೆ ಹಣ ಹಾಕುವುದಿಲ್ಲ” +“ನೀವು ಕಾಣಿಕೆ ಡಬ್ಬಿಗೆ ಸವಕಲು ನಾಣ್ಯ. ಯಾವುದೋ ಕಾಲದ ಕಾಸು ಬಿಲ್ಲೆ ಹಾಕುತ್ತೀರಿ”. +“ನೀವು ಸತ್ತವರ ಆತ್ಮಕ್ಕೆ ಪಾಡು ಪೂಜೆಗಳನ್ನು ಕೂಡಿಸುವುದಿಲ್ಲ.” ಎಂದ ಪದೇ ಪದೇ ಹೇಳುವುದು ಬಹಳ ಜನ ಕ್ರೀಸ್ತುವರಿಗೆ ಹಿಡಿಸುತ್ತಿರಲಿಲ್ಲ. +ಈ ಪಾದರಿಗೆ ದುಡ್ಡಿನ ರಾಹು ಬಡಿದಿದೆ ಎಂದೂ ಕೆಲವರು ಇಳಿ ದನಿಯಲ್ಲಿ ಮಾತನಾಡಿಕೊಂಡರು. +ಪಾದರಿ ಚಾಲ್ತಿಗೆ ತಂದ ಮತ್ತೂ ಒಂದು ಕಾರ್ಯಕ್ರಮವೆಂದರೆ ಇಗರ್ಜಿಯಲ್ಲಿ ಕಾಯಿಪಲ್ಲೆಗಳ ಹರಾಜು. +ಒಂದು ಭಾನುವಾರ ಅವರು ಜನರಿಗೆ ಹೇಳಿದರು- +“ನೀವು ನಿಮ್ಮ ಮನೆಗಳಲ್ಲಿ ಏನಾದರೂ ಬೆಳೆಯಬಹುದು..ತೆಂಗಿನಕಾಯಿ..ತರಕಾರಿ..ಹಣ್ಣು..ಮೊದಲ ಫ಼ಸಲನ್ನು ನೀವು ದೇವರಿಗೆ ನೀಡಬೇಕು..ಅದು ಇಗರ್ಜಿಗೆ ತಂದುಕೊಡಬೇಕು.” +ಇದು ಜನರಿಗೆ ಸರಿ‌ಎನಿಸಿತು. +ಪ್ರಥಮ ಫ಼ಲ ದೇವರಿಗೆ ಕೊಡುವುದು ಸೂಕ್ತ. ಒಳ್ಳೆಯ ಸಲಹೆ. ಅವರು ತೆಂಗಿನಕಾಯಿ, ಕುಂಬಳಕಾಯಿ, ಹೀರೆಕಾಯಿ, ಐವತ್ತು ತೊಂಡೇಕಾಯಿ, ಪಡುವಲ ಕಾಯಿ, ಹಲಸಂದೆ, ಚೌಳೀಕಾಯಿ, ಬೀನ್ಸು ಎಂದೆಲ್ಲ ಹೆಗಲಮೇಲೆ ಹೊತ್ತು, ಚೀಲದಲ್ಲಿ ತುಂಬಿಕೊಂಡು ಇಗರ್ಜಿಗೆ ಬಂದರು. ಎಲ್ಲ ಕ್ರೀಸ್ತುವರ ಮನೆಗಳ ಹಿಂದೆ ಹಿತ್ತಲಿತ್ತು. ಮುಂದೆಯೂ ಜಾಗವಿತ್ತು. ಬಿಡುವಾದಾಗ ಅದು ಇದು ಬೆಳೆಸುತ್ತಿದ್ದರು. ಹಬ್ಬಿಸಿದ ಬಳ್ಳಿಗಳಿಗೆ, ಬೆಳೆಸಿದ ಗಿಡಗಳಿಗೆ ಅದು ಇದು ಬೆಳೆಸುತ್ತಿದ್ದರು. ಹೀಗೆ ಹೂವು, ಕಾಯಿ ಬಿಟ್ಟಾಗ ಸಂತಸವಾಗುತ್ತಿತ್ತು. ಅದನ್ನು ದೇವರಿಗೆ ಕೊಡಿ ಎಂದಾಗ ಅವರು ಸಂಭ್ರಮ ಪಡುತ್ತಿದ್ದರು. ಹೆಮ್ಮೆಯಿಂದ ತಂದು ದೇವರ ಪೀಠದ ಮುಂದೆ ಇಡುತ್ತಿದ್ದರು. +ಪೂಜೆ ಮಾಡುವಾಗ ಪಾದರಿ ಮಸ್ಕರಿನಾಸರು ಇದನ್ನೆಲ್ಲ ನೋಡಿದರು. ಪ್ರಾರಂಭದಲ್ಲಿ ಪವಿತ್ರ ಜಲವನ್ನು ಜನರ ಮೇಲೆ ಸಿಂಪಡಿಸುವಾಗ ಒಂದು ಕ್ಷಣ ನಿಂತು ಈ ತರಕಾರಿಯ ಮೇಲೂ ಜಲವನ್ನು ಸಿಂಪಡಿಸಿದರು. ಪೂಜೆಯ ನಡುವೆ +’ಮೋಗಾಚ ಕ್ರೀಸ್ತಾಂವಾನುಂ’ (ಪ್ರೀತಿಯ ಕ್ರೀಸ್ತುವರೆ) ಎಂದು ಸಂಬೊಧಿಸಿ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ನೀವು ಬೆಳೆದ ಫ಼ಸಲಿನ ಮೊದಲ ಫ಼ಲವನ್ನು ದೇವರಿಗೆ ಕೊಡುವುದರ ಮೂಲಕ ದೇವರಿಗೆ ಕೃತಜ್ಞತೆ ಅರ್ಪಿಸಿದ್ದೀರಿ. ನಿಮ್ಮ ಈ ಕೃತಜ್ಞತೆ ನಿಮಗೆ ನೂರು ಪಟ್ಟಾಗಿ ಹಿಂತಿರುಗುತ್ತದೆ..ಈ ಬಗ್ಗೆ ನಿಮಗೆ ಸಂದೇಹ ಬೇಡ..” ಎಂದರು. ಹಾಗೆಯೇ- +“ಪೂಜೆಯ ನಂತರ ನಿಮ್ಮ ಕಾಣಿಕೆಯನ್ನು ಗುರ್ಕಾರ ಹರಾಜು ಹಾಕುವರು..ನೀವು ಇದನ್ನು ಒಂದು ವಸ್ತು ಎಂದು ತಿಳಿಯದೆ ದೇವರ ಪ್ರಸಾದ ಎಂದು ತಿಳಿದು ಬೆಲೆ ಕಟ್ಟಿ ತೆಗೆದುಕೊಳ್ಳಿರಿ..’ ಎಂದೂ ಹೇಳಿದರು. +ಪೂಜೆ ಮುಗಿದ ನಂತರ ಬಹಳ ಜನ ಉಳಿದರು. +ಇಗರ್ಜಿಯ ಹೊರ ಬಲಕಾಂನಲ್ಲಿ ಗುರ್ಕಾರ ಸಿಮೋನ ತರಕಾರಿ ಮುಂದಿರಿಸಿಕೊಂಡು ಹರಾಜು ಹಾಕಿದ. ಕುಂಬಳಕಾಯಿ, ಸೌತೆಕಾಯಿ ಇತ್ಯಾದಿಗಳು ಹೆಚ್ಚಿನ ಬೆಲೆಗೇನೆ ಹೋದವು. ಪಾಸ್ಕೋಲ, ಬಾಲ್ತಿದಾರ, ಪೆದ್ರು, ಕೈತಾನ, ಸಾನಪುತ್ರು ಮೊದಲಾದವರು ಪೈಪೋಟಿಯ ಮೇಲೆ ಬೆಲೆ ಏರಿಸಿದರು. ಇದು ಕೇವಲ ತರಕಾರಿಯಲ್ಲ ದೇವರ ಪ್ರಸಾದ ಎಂಬುದು ಒಂದು ಕಾರಣವಾದರೆ ಬೆಲೆ ಏರಿಸಿದವನು ಪೆದ್ರು, ಕೈತಾನ ನಾನು ಅವನಿಗಿಂತ ಏನು ಕಡಿಮೆ ಎಂಬುದು ಮತ್ತೊಂದು ಕಾರಣವಾಯಿತು. +“ಹೋಗಲಿ..ಹಣ ಇಗರ್ಜಿಗೇನೆ ಅಲ್ವೆ?” ಎಂದು ಪಾಸ್ಕೋಲ ಮೇಸ್ತ್ರಿ ಐದು ರೂಪಾಯಿ ಎಂದ. +’..ಹೌದು..ನೀವು ಹೇಳುವುದು ಸರಿ..ನಂದು ಎಂಟು ರೂಪಾಯಿ’ ಎಂದು ಕೂಗಿದ ವಿನ್ಸೆಂಟ್. +ನಿಂತು ನೋಡುವವರಿಗೆ ಮೋಜೆನಿಸಿತು. ಹಣ ಎಣಿಸಲು ಕುಳಿತ ಪಾದರಿಗಳ ಬಟ್ಲರ ಫ಼ರಾಸ್ಕ ಎಲ್ಲ ಮುಗಿದಾಗ ನೂರ ಹತ್ತು ರೂಪಾಯಿ ಎಂಟಾಣೆ ಎಣಿಸಿದ. +“ರಜೀನಾ ಇದನ್ನ ಒಳಗಿಡು” ಎಂದು ಪಾದರಿ ಮಸ್ಕರಿನಾಸರು ಫ಼ರಾಸ್ಕ ಹೆಂಡತಿಯ ಕೈಗೆ ಹಣ ನೀಡಿದರು. +ಎಮ್ಮೆ ಮರಿಯ- +“ಆ ಪಾದರಿ ಹಾಗೆ ಈ ಪಾದರಿ ಹೀಗೆ” ಎಂದು ಎಮ್ಮೆಗಳನ್ನು ಕೊಟ್ಟಿಗೆಯಿಂದ ಹೊರಬಿಡುತ್ತ ನುಡಿದಳು. +ಬೋನ ಇಗರ್ಜಿಯಲ್ಲಿ ದಿವ್ಯಪ್ರಸಾದ ಸ್ವೀಕರಿಸಿ ಬಂದವನು ಮೊದಲು ಒಂದು ಗುಟುಕು ಗಂಜಿ ನೀರು ಕುಡಿದು, ಉಪವಾಸ ಮುರಿದು ನಂತರ ತಿಂಡಿ ತಿನ್ನಲು ಕುಳಿತವ- +“ಇದೆಲ್ಲ ಗೋನಸ್ವಾಲಿಸರ ಮನಸ್ಸಿಗೆ ಬರತಿರಲಿಲ್ಲ.” ಎಂದ. +ಸಿಮೋನ ಹಣ ಎಣಿಸಿಕೊಂಡು ಫ಼ರಾಸ್ಕ ಪಾದರಿ ಬಂಗಲೆಗೆ ಹೋದ ನಂತರ ಪೀಠದತ್ತ ತಿರುಗಿ ಶಿಲುಬೆಯ ಗುರುತು ಮಾಡಿ ಮನೆಯತ್ತ ತಿರುಗಿದ. ಇಗರ್ಜಿ ಮುಂದಿನ ಸಂತರ ಮಂಟಪದ ಬಳಿ ನಿಂತು ಕಿರು ಪ್ರಾರ್ಥನೆ ಮಾಡಲು ಆತ ಮರೆಯಲಿಲ್ಲ. ಮನೆಗೆ ಬಂದಾಗ ಹೆಂಡತಿ ಅಪ್ಪಿಬಾಯಿ ಎದುರು ದಿಕ್ಕಿನಿಂದ ಬಂದು ಅಂಗಳ ದಾಟಿದಳು. ಇಗರ್ಜಿಗೆ ಹೋಗುವಾಗ ಉಟ್ಟ ಸೀರೆಯನ್ನು ಅವಳಿನ್ನೂ ಬಿಚ್ಚಿರಲಿಲ್ಲ. ತೊಟ್ಟ ಆಭರಣಗಳನ್ನು ತೆಗೆದಿರಲಿಲ್ಲ್. ಕಾಪು, ಕೆನ್ನೆಸರಪಳಿ, ಮುಡಿ ಮುಳ್ಳು, ಕೈ ಬಳೆಗಳಲ್ಲಿ ಅವಳು ಹುಡುಗಿಯಂತೆಯೇ ಕಾಣುತ್ತಿದ್ದಳು. +“..ಏನು..ಇಗರ್ಜಿಗೆ ಬಂದೋರೆಲ್ಲ ಮನೆ ಸೇರಿ ಅಡಿಗೆ ಮುಗಿಸಿರಬೇಕು..ನೀನೇನು ಇನ್ನೂ ಮನೆ ಸೇರುವ ವಿಚಾರದಲ್ಲಿ ಇಲ್ಲವಲ್ಲ..” ಎಂದ ಗುರ್ಕಾರ ಸಿಮೋನ. +“ಹಾಗೆ ಏನಿಲ್ಲ..ಇನಾಸಜ್ಜಿ ಹಾಸಿಗೆ ಹಿಡಿದಿದ್ದಾರೆ ಅಂತ ಕೇಳ್ದೆ..ಈವತ್ತು ಅವರು ಇಗರ್ಜಿಗೂ ಬರಲಿಲ್ಲ..ನೋಡಿಕೊಂಡು ಬರೋಣ ಅಂತ ಹೋಗಿದ್ದೆ..” +ಇನಾಸಜ್ಜಿ ಎಂದ ಕೂಡಲೆ ಸಿಮೋನನ ಮುಖದ ಮೇಲಿನ ಭಾವನೆ ಬದಲಾಯಿತು. +“ಹೌದಲ್ಲ..ಹೇಗಿದಾಳೆ ಅಜ್ಜಿ..” +“ಗುರುತು ಪರಿಚಯ ಹಿಡೀತಾರೆ..ಆದರೆ ಸಾವು ಹತ್ತಿರ ಬಂದಿರೋದು ಅವರಿಗೆ ಗೊತ್ತಾಗಿದೆ..ಶುಕ್ರವಾರ ಶುಕ್ರವಾರ ಅಂತ ಹೇಳ್ತಿರತಾರೆ…” ಎಂದಳು ಅಪ್ಪಿ. +“ನಾನೂ ಹೋಗಿ ಬರಬೇಕು..ದೈವಭಕ್ತಿ ಮುದುಕಿ” ಎಂದ ಸಿಮೋನ ತನ್ನ ಸರ್ಜಕೋಟನ್ನು ತೆಗೆಯುತ್ತ. +“ಅಲ್ಲ..ಹರಾಜಿನಲ್ಲಿ ನೀವು ಏನೂ ಹಿಡಿಲಿಲ್ವ?” ಅವಳು ಬಳ್ಕೂರಕಾರ ಮನೆಗೆ ಹೋಗಿ ತಿರುಗಿ ಬರುವಾಗ ಹಲವರು ಹೆಗಲ ಮೇಲೆ, ಕೈಯಲ್ಲಿ ಇಗರ್ಜಿಯಲ್ಲಿ ಹರಾಜು ಕೂಗಿ ತೆಗೆದುಕೊಂಡ ಹೀರೆಕಾಯಿ, ಕುಂಬಳಕಾಯಿ ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಿದ್ದಳು. ಇಗರ್ಜಿಯಲ್ಲಿ ಪಾದರಿ ದಿವ್ಯ ಪ್ರಸಾದವನ್ನು ಭಯ ಭಕ್ತಿಯಿಂದ ಹಿಡಿದುಕೊಳ್ಳುವಂತೆ ಇವರು ತರಕಾರಿಯನ್ನು ಹಿಡಿದುಕೊಂಡಿದ್ದರು. +“..ಇಗರ್ಜಿನಲ್ಲಿ ಹರಾಜಿಗೆ ಹಿಡಿದದ್ದು” ಎಂದು ಬೇರೆ ಕೇಳದಿದ್ದರೂ ಹೇಳಿದ್ದರು. ಹರಾಜು ಮಾಡಲು ನಿಂತ ತನ್ನ ಗಂಡ ಏನಾದರೂ ತರಬಹುದು ಅಂದುಕೊಂಡಿದ್ದಳು ಅಪ್ಪಿ. ಮಾಂಸ ತರಲು ಮಗ ವಿಕ್ಟರ್ ಗೆ ಹೇಳಿ ಹೋಗಿದ್ದಳು. ಆತ ಮಾಂಸ ತರುತ್ತಾನೆ. ಪಲ್ಯ ಮಾಡಲು ಗಂಡ ತರುವ ತರಕಾರಿ ಅಂದುಕೊಂಡು ಬಂದರೆ, ಗಂಡ ಬರಿಗೈಯಲ್ಲಿ ಬಂದಿದ್ದ. +“..ಹುಂ..ನನಗ್ಯಾಕೋ..ಈ ಹರಾಜು ಪರಾಜು ಹಿಡಿಸಲಿಲ್ಲ..” ಎಂದ ಸಿಮೋನ. +ಮುಂದೆ ಮಾತು ಬೆಳೆಸುವುದು ಬೇಡವೆನಿಸಿ, +ಅಪ್ಪಿಬಾಯಿ ಅಡಿಗೆ ಕೆಲಸಕ್ಕೆ ತೊಡಗಿದಳು. +“ಸಿಮೋನ ಎಂದಿನ ಉಡುಪು ಧರಿಸಿ ಹೊರಬಂದವ “ಅಪ್ಪಿ ನಾನು ಬಳ್ಕೂರಕಾರ ಮನೆಗೆ ಹೋಗಿ ಬರತೀನಿ..” ಎಂದು ಹೇಳಿ ರಸ್ತೆಗೆ ಇಳಿದ. +* +* +* +ಬಳ್ಕೂರಕಾರ ಕೈತಾನನ ಅತ್ತೆ ಅಸಾಧಾರಣ ದೈವ ಭಕ್ತೆ. ಬಳ್ಕೂರಿಗೆ ಹತ್ತಿರದ ಗುಂಡಬಾಳೆ ಅವಳ ಊರು. ಅವಳ ಜೀವಮಾನದ ಮುಕ್ಕಾಲು ಭಾಗ ಕಳೆದು ಹೋದದ್ದು ಗುಂಡಬಾಳೆ ಇಗರ್ಜಿಯಲ್ಲಿ. ಮನೆಯಲ್ಲಿ ಹೊರಬಂದು ಒಳ ಹೋಗುವಾಗೊಮ್ಮೆ ಅವಳು ಗೋಡೆಯ ಮೇಲಿನ ಅಲ್ತಾರಿನತ್ತ ತಿರುಗಿ ಕೈಬೆರಳುಗಳನ್ನು ದೇವರತ್ತ ಚಾಚಿ ಆ ಬೆರಳುಗಳಿಗೆ ಮುತ್ತಿಕ್ಕಬೇಕು. ಆಗಾಗ್ಗೆ ಕುತ್ತಿಗೆಯಲ್ಲಿಯ ಅರ್ಲೂಕಿಗೆ ಅವಳು ಮುತ್ತು ಕೊಡಬೇಕು. ಇಗರ್ಜಿಗೆ ಹೋಗುವಾಗ ಹಳೆ ಪದ್ದತಿಯಂತೆ ಸೀರೆಯ ಮೇಲೆ ಬಿಳಿಯ ವಸ್ತ್ರ ಉಟ್ಟೆ ಹೋಗಬೇಕು. ಅಲ್ಲಿ ಬಾಗಿಲಲ್ಲಿಯ ಪವಿತ್ರ ಜಲವನ್ನು ತುಟಿ, ಹಣೆ, ಭುಜಗಳಿಗೆ ಹಚ್ಚಿಕೊಂಡು, ಒಳಹೋಗಿ ನೆಲದ ಮೇಲೆ ಶಿಲುಬೆಯ ಗುರುತು ಬರೆದು ಅದಕ್ಕೆ ಮುತ್ತಿಟ್ಟು ಮುಂದಿನ ಪ್ರಾರ್ಥನೆಗೆ ಅವಳು ತೊಡಗಿಕೊಳ್ಳಬೇಕು. +ಗಂಡ ಇರುವ ತನಕ ಭಾನುವಾರ ಪೂಜೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಗಂಡ ಸತ್ತ ನಂತರ ನಿತ್ಯ ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಂಡಳು. ಬೆಳಕು ಹರಿಯುವಾಗ ಇಗರ್ಜಿಯ ಗಂಟೆ ಕೇಳಿದ್ದೇ ಅವಳು ಇಗರ್ಜಿಗೆ ಹೋಗುತ್ತಿದ್ದಳು. ದಿನದಲ್ಲಿ ಮೂರು ಬಾರಿ ಪ್ರಾರ್ಥನೆ. ಸಂಜೆ ಜಪಸರ ಪ್ರಾರ್ಥನೆ. ನಲವತ್ತು ದಿನಗಳ ತಪಸ್ಸಿನ ಕಾಲದಲ್ಲಿ ಉಪವಾಸ. ಶಿಲುಬೆಯ ಹಾದಿಯಲ್ಲಿ ಭಾಗವಹಿಸಿ ಕ್ರಿಸ್ತನ ಕಷ್ಟಗಳಿಗಾಗಿ ನೋವು ಅನುಭವಿಸುವುದು. ಹೀಗೆ ಅವಳ ಬದುಕಿನ ತುಂಬ ದೇವರು, ದೇವರ ಧ್ಯಾನ ತುಂಬಿಕೊಂಡಿತ್ತು. +ಇದ್ದ ಒಬ್ಬಳೆ ಮಗಳು ನಮಾಮೋರಿಯನ್ನು ಬಳ್ಕೂರಿನ ಕೈತಾನನಿಗೆ ಕೊಟ್ಟು ಮದುವೆ ಮಾಡಿದಳು. ಗುಂಡಬಾಳೆಯ ತನ್ನ ಮನೆಯಲ್ಲಿ ಒಂಟಿಯಾಗಿ ಉಳಿದಳು. +“ಅತ್ತೆ ಬಳ್ಕೂರಿಗೆ ಬಂದು ಬಿಡು..ಇಲ್ಲಿ ಒಬ್ಬಳೇ ಯಾಕೆ ಇರೋದು?” ಎಂದರೆ- +“ಇಲ್ಲಪ್ಪ..ನಿನ್ನ ಊರಲ್ಲಿ ಒಂದು ಇಗರ್ಜಿನೇ ಒಬ್ಬ ಪಾದರೀನೆ?” ಎಂದು ಕೇಳಿದಳು. +ಮಗಳ ಹೆರಿಗೆಯನ್ನು ಅವಳು ಇಲ್ಲಿಯೇ ಮಾಡಿದಳು. ಆಗ ಮೂರು ತಿಂಗಳು ಪ್ರತಿ ಭಾನುವಾರ ಹರಕಂತಾರರ ಕನ್ನನ ದೋಣಿಯಲ್ಲಿ ಗುಂಡಬಾಳೆಗೆ ಹೋಗಿ ಪೂಜೆ ಕೇಳಿಕೊಂಡು ಬರುತ್ತಿದ್ದಳು. ಇನಾಸಜ್ಜಿ ಮಗಳ ಹೆರಿಗೆಯಾಗಿ ಮೊಮ್ಮಕ್ಕಳು ದೊಡ್ಡವರಾದಂತೆ ಇನಾಸಜ್ಜಿ ಮತ್ತೆ ಗುಂಡಬಾಳೆಗೆ ಹೋದಳು. ಅಲ್ಲಿ ಅವಳದ್ದೇ ಆದ ಆಸ್ತಿಯೇನೂ ಇರಲಿಲ್ಲ. ದೊಡ್ಡ ಶಾನುಭೋಗರ ತೆಂಗಿನ ತೋಟವನ್ನು ಅವಳ ಗಂಡ ನೋಡಿಕೊಂಡಿದ್ದ. ಸಣ್ಣ ಬಿಡಾರದಲ್ಲಿ ಗಂಡ ಹೆಂಡತಿ ಮಗಳು ವಾಸಿಸುತ್ತಿದ್ದರು. ಅವನು ಸತ್ತ ನಂತರ ಅದೇ ಬಿಡಾರದಲ್ಲಿ ತಾಯಿ, ಮಗಳು ಮುಂದುವರೆದರು. ಮಗಳ ಮದುವೆಯಾದ ನಂತರ ಈಕೆಗೆ ಅಲ್ಲಿ ಕೆಲಸವೇನಿಲ್ಲ. ಬಿದ್ದ ಮಡಲುಗಳನ್ನು ಹೆಣೆಯುವುದು, ತೆಂಗಿನ ಸಿಪ್ಪೆಯ ನಾರು ಬಿಡಿಸಿ ಹಗ್ಗ ಹೆಣೆಯುವುದು. ಅವರವರ ಮನೆಗೆಲಸ. ದೇವರ ಧ್ಯಾನ. ಯಾರಿಗೂ ಹೊರೆಯಾಗಿ ಇದ್ದವಳಲ್ಲ ಇವಳು. ಇವಳ ಮೇಲೆಯೇ ಸುತ್ತಲಿನ ಹತ್ತು ಹಳ್ಳಿಗಳ ಜನ ನಿಂತಿದ್ದರು. +ಮದ್ದುಕೊಡುವುದು ಇನಾಸಜ್ಜಿಯ ಒಂದು ಹವ್ಯಾಸ. ನಿತ್ಯ ಮನೆ ಬಾಗಿಲಿಗೆ ಹತ್ತು ಜನ ಬರುತ್ತಾರೆ. +ಮಗುವಿಗೆ ಸನ್ನಿ. +ಹುಡುಗನಿಗೆ ಜ್ವರ. +ಹುಡುಗಿಗೆ ಗಂಟಲ ನೋವು. +ಮನೆ ಯಜಮಾನಿಗೆ ವಾಂತಿ. +ಮನೆ ಹೆಂಗಸಿಗೆ ಮೂರ್ಛೆ. +ಅಜ್ಜಿ ವಿವರ ಕೇಳುತ್ತಾಳೆ. ಕೂಡಲೆ ಬೇರೆ ಸೀರೆಯುಟ್ಟು ತೋಟದ ಹಿಂದಿನ ಕಾಡಿಗೆ ಹೋಗುತ್ತಾಳೆ. ಅಲ್ಲಿಂದ ಬಂದವಳೆ- +“..ನಡೀರಿ ..ಹೋಪ” ಎಂದು ಬಂದವರ ಜತೆ ಹೊರಡುತ್ತಾಳೆ. ಇಲ್ಲವೆ ಯಾವುದೋ ಬೇರು, ತೊಗಟೆ ಕೊಟ್ಟು ಕಷಾಯ ಮಾಡಿ ಕುಡಿಸಲು ತೇದಿ ತಿನ್ನಿಸಲು ಹೇಳುತ್ತಾಳೆ- +“ಉಪ್ಪು ಖಾರ ಕೂಡದು..” ಅನ್ನುತ್ತಾಳೆ. +ಬಂದವರಿಂದ ಅವಳು ತೆಗೆದುಕೊಳ್ಳುವುದು ಎರಡು ಎಲೆ ಒಂದು ಅಡಿಕೆ ಎರಡಾಣೆಯ ಒಂದು ಪಾವಲಿ. ಕೆಲವರಿಂದ ಇದೂ ಇಲ್ಲ. +ಬೇರೆ ಸಂದರ್ಭಗಳಲ್ಲಿ ಅಂಗಳದಲ್ಲಿ ಕುಳಿತು ಮಡಿಲು ಹೆಣೆಯುತ್ತಾಳೆ. ಹಗ್ಗ ಹೊಸೆಯುತ್ತಾಳೆ. ಕೊಳೆತ ತೆಂಗಿನ ಸಿಪ್ಪೆಯಿಂದ ನಾರು ಬಿಡಿಸುತ್ತಾಳೆ. ಆಗಾಗ್ಗೆ ಜಪ, ಪ್ರಾರ್ಥನೆ, ಕುತ್ತಿಗೆಯಲ್ಲಿಯ ದೇವರ ಪದಕಕ್ಕೇ ಮುತ್ತುಕೊಡುವುದು, ಇಗರ್ಜಿಗೆ ಹೋಗಿ ಬರುವುದು ತೋಟದ ಮೂಲಕ ತಿರುಗಾಡುವವರನ್ನು- +“..ಅಪ್ಪಿ..ಯಾರೇ? ತಿಮ್ಮ ಮಗಳಾ?” +“ಕುಪ್ಪ ಪೇಟೆಗೆ ಹೊಂಟ್ಯ ಮಗ?” +“ಶರಾವತಿ..ಮಗಳು ಮೈ ನೆರೆದ್ಲೋ ಹೆಂಗೆ?” +“ಜೂಜ..ಹೆಂಡತಿ ಚೆಂದಾಗಿದಾಳ” +“ಮೇಸ್ತ್ರ..ಗಾಯ ಮಾಗಬೇಕು ಅಂದ್ರೆ ನೀನು ಹೆಂಡ ಕುಡಿಯೋದ್ನ ನಿಲ್ಸು ಮಾರಾಯ..” ಎಂದೆಲ್ಲ ಮಾತನಾಡುವುದು. +ಹೀಗೆಯೇ ಗುಂಡ ಬಾಳೆಯಲ್ಲಿ ಅವಳ ದಿನಗಳು ಉರುಳಿದವು. ವಾರದಲ್ಲಿ ಎರಡು ದಿನ ಬಳ್ಕೂರಿಗೂ ಬಂದು ಮಗಳ ಮನೆಯಲ್ಲಿ ಒಂದು ಹೊತ್ತು ಇದ್ದು ಹಿಂತಿರುಗುತ್ತಿದ್ದಳು ಅವಳು. +ಆಗಲೆ ಅಳಿಯ ಕೈತಾನ ಘಟ್ಟದ ಮೇಲೆ ಹೋಗುವ ವಿಚಾರ ಹೇಳಿದ. ಬಹಳ ದಿನಗಳಿಂದ ಆತ ಒಂದು ವಿಷಯ ಗಮನಿಸುತ್ತ ಬಂದಿದ್ದ. ಮಳೆಗಾಲ ಕಡಿಮೆಯಾಗಿ ಕಡಲಲ್ಲಿ ತೂಫ಼ಾನು ಮರೆಯಾಗಿ ದೋಣಿಗಳ ಓಡಾಟ ಆರಂಭವಾದಂತೆ ಹೊನ್ನಾವರದಿಂದ ಬರುವ ದೋಣಿಗಳಲ್ಲಿ ಬಹಳ ಜನ “ಘಟ್ಟಕ್ಕೆ ಹೋಗುತ್ತೇನೆ” “ಘಟ್ಟಕ್ಕೆ ಹೋಗುತ್ತೇನೆ” ಎಂದು ಹೇಳಿಕೊಂಡು ಹೋಗುತ್ತಿದ್ದರು. ಮಳೆಯ ಮೋಡಗಳು ತಲೆಯ ಮೇಲೆ ತೂಗಾಡುತ್ತಿವೆ ಅನ್ನುವಾಗ ಈ ಜನ ಪರತು ಬರುತ್ತಿದ್ದರು. ಇದೇನು ಕತೆ ಎಂದು ಆತ ಒಂದಿಬ್ಬರನ್ನು ಕೇಳಿದ. +“ಅರೆ..ನಿಮಗೆ ಗೊತ್ತಿಲ್ದ? ಈ ಜನ ದುಡ್ಡು ಮಾಡಾಕೆ ಹೋತಾರೆ.ದುಡ್ಡು.” ಎಂದಿದ್ದರು ಅವರು. +ಕೆಲವರನ್ನು ಈತ ಪರೀಕ್ಷೆ ಮಾಡಿಯೂ ನೋಡಿದ. ಅವರೆಲ್ಲ ದುಡ್ಡು ಮಾಡಿದ್ದರು..ಹೆಂಡತಿ ನಮಾಮೋರಿ ಜತೆ ಪ್ರಸ್ತಾಪಿಸಿದ. +ಬಳ್ಕೂರಿನಲ್ಲಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಪರೂಪಕ್ಕೆ ಕೆಲಸ ಸಿಗುತ್ತಿತ್ತು. ಬೇರೆ ಸಂದರ್ಭಗಳಲ್ಲಿ ದೋಣಿಗಳಿಗೆ ಸುಪಾರಿ ತುಂಬುವುದು, ತೆಂಗಿನಕಾಯಿ ಸುಲಿಯುವುದು, ಎಣ್ಣೆ ಗಾಣ ಆಡಿಸುವುದು ಎಂದು ಅದು ಇದು ಕೆಲಸ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ತಿನ್ನಲು ಐದು ಬಾಯಿಗಳು-ಹಾಡ ಹಾಡ (ತೆಗೆದುಕೊಂಡು ಬಾ ತೆಗೆದುಕೊಂಡು ಬಾ) ಅನ್ನುತ್ತಿರಲು ಇವನು ಎಲ್ಲಿಂದ ತಂದಾನು? ಹೆಂಡತಿ ಕೂಡ ’ನೋಡಿ’ ಎಂದಳು. ಆದರೆ ಗುಂಡುಬಾಳೆಯ ಈ ಮುದುಕಿ ತಟ್ಟನೆ ಒಪ್ಪಿಗೆ ಕೊಡಲಿಲ್ಲ. +“ಹ್ಯಾಗೋ ಆಗುತ್ತೆ..ಇಲ್ಲೇ ಇದ್ರೆ ಆಗಲಿಕ್ಕಿಲ್ಲ” ಎಂದು ಕೇಳಿದಳು ಅವಳು. +ಕೊನೆಗೆ ಅಳಿಯ ಓರ್ವನೇ ಹೋಗುತ್ತೇನೆ ಎಂದಾಗ “ಹೋಗಿ ಬನ್ನಿ..ದೇವರು ಒಳ್ಳೆಯದನ್ನು ಮಾಡತಾನೆ” ಎಂದಳು. ಅವಳಿಗೂ ಮಗಳ ಬದುಕು ಹಸನಾಗಲಿ ಎಂಬ ಆಸೆ ಇತ್ತು. +* +* +* +ಬಳ್ಕೂರಕಾರ ಕೈತಾನ ಶಿವಸಾಗರಕ್ಕೆ ಬಂದ. ಸಿಮೋನ ಕರೆದು ಅವನಿಗೆ ಕೆಲಸ ಕೊಟ್ಟ. ಸೇತುವೆ ನಿರ್ಮಾಣ, ಸರಕಾರಿ ಕಟ್ಟಡಗಳು, ಸಾಹುಕಾರಿ ಕಟ್ಟಡಗಳು ಎಂದು ಸಾಕಷ್ಟು ಕೆಲಸಗಳಿದ್ದವು. ಅಲ್ಲೆಲ್ಲ ಕಲ್ಲು ಕೆತ್ತುತ್ತ, ವಾರಕ್ಕೊಮ್ಮೆ ಸೈದೂರನ ಕುಲುಮೆಯಲ್ಲಿ ಬಾಚಿ ಸರಿಪಡಿಸಿಕೊಳ್ಳುತ್ತ ಸಾಂತಾಮೋರಿ ಮನೆಯಲ್ಲಿ ಊಟ ಮಾಡಿಕೊಂಡು ಆತ ಉಳಿದ. +ಒಂದು ಎರಡು ವರುಷ ಇಲ್ಲಿ ಇರಬೇಕು ಎಂದು ಬಂದವ ಕೊನೆಗೆ ಶಿವಸಾಗರದಲ್ಲಿಯೇ ತಾನು ಉಳಿಯಬೇಕೆಂದು ವಿಚಾರ ಮಾಡಿದ. ಕೊಪೆಲಗೆ ಹತ್ತಿರವೇ ಒಂದು ಜಾಗ ಕೂಡ ಅವನಿಗೆ ಮಂಜೂರಾಯಿತು. ಅವನೇ ಮನೆ ಕಟ್ಟಿದ. ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದ. +ಗುಂಡಬಾಳೆಗೆ ಹೋಗಿ ಇನಾಸಜ್ಜಿಗೂ ಶಿವಸಾಗರಕ್ಕೂ ಬರಲಿಕ್ಕೆ ಹೇಳಿದ- +“ಅತ್ತೆ ಬಂದು ಬಿಡು ಹೋಗೋಣ” ಎಂದ. +ಇಷ್ಟು ಹೊತ್ತಿಗೆ ಇನಾಸಜ್ಜಿಯ ಕೈಯಲ್ಲೂ ಏನೂ ಮಾಡಲಾಗುತ್ತಿರಲಿಲ್ಲ. ಕಾಡಿಗೆ ಹೋಗಿ ಸೊಪ್ಪು, ಬೇರು ಹುಡುಕಿ ತರಲು ಕಷ್ಟವಾಗುತ್ತಿತ್ತು. ಮಡಲು ಹೆಣೆಯುತ್ತಿದ್ದಳಲ್ಲದೆ, ತೆಂಗಿನ ನಾರು ಬಿಡಿಸಿ ಹಗ್ಗ ಹೆಣೆಯಲು ಆಗುತ್ತಿರಲಿಲ್ಲ. ದೊಡ್ಡ ಶಾನುಭೋಗರು ಯಾವುದೋ ಅಭಿಮಾನದಿಂದ ಅಕ್ಕಿ ಅದು ಇದು ಕೊಡುತ್ತಿದ್ದರು. ಗುಂಡಬಾಳೆಯ ಇಗರ್ಜಿಯೊಂದೇ ಅವಳಿಗೆ ಆಧಾರ. ಎರಡನೆಯ ಆಧಾರವೆಂದರೆ ಬಳ್ಕೂರಿನ ಮಗಳು, ಅಳಿಯ, ಮೊಮ್ಮಕ್ಕಳು. ಈಗ ಅವರೂ ದೂರವಾಗುತ್ತಾರೆ ಅಂದಾಗ ಮನಸ್ಸು ಖಾಲಿ ಖಾಲಿಯಾದಂತೆ ಭಾಸವಾಯಿತು. ಇಲ್ಲಿ ಏನಿದೆ ಎಂದು ತಾನಿರಬೇಕು ಎಂದು ಒಂದು ಕ್ಷಣ ಯೋಚಿಸಿದಳು. ಅಳಿಯನಂತೂ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮೊಮ್ಮಕ್ಕಳೂ ಕೂಡ. ಅವರ ಜತೆಗೇನೆ ಕೊನೆಯ ದಿನಗಳನ್ನು ಕಳೆಯುವುದು ಅಂದುಕೊಂಡ ಅವಳು- +“ಹೌದು ಕೈತಾನ..ಅಲ್ಲಿ ಇಗರ್ಜಿ ಪಾದರಿ ಅಂತ ಇದ್ದಾರೆ ಅಲ್ವ?” ಎಂದು ಸಹಜವಾಗಿ ಕೇಳಿದಳು.ಇಗರ್ಜಿ ಇಲ್ಲದ ಪಾದರಿ ಇಲ್ಲದ ಊರುಗಳೂ ಇರುತ್ತವೆ ಅಲ್ಲವೇ? ಈಗ ಇಗರ್ಜಿ ಹೊನ್ನಾವರ ಗುಂಡುಬಾಳೆಯಲ್ಲಿದೆ ಆದರೆ ಬೇರೆ ಕೆಲ ಊರುಗಳಲ್ಲಿ ಇಲ್ಲ. ಅಲ್ಲಿ ಹೇಗೋ ಯಾರಿಗೆ ಗೊತ್ತು? +ಅವಳ ಮಾತಿಗೆ ಕೈತಾನ ನಕ್ಕ. +“ಇಲ್ಲ ಅತ್ತೆ ನಮ್ಮವರ ಮನೆಗಳು ಹತ್ತು ಹದಿನೈದಿವೆ. ಒಂದು ಕೊಪೆಲ ಇದೆ. ಪಾದರಿ ಮಾತ್ರ ಇಲ್ಲ..ಮುಂದೆ ಬರಬಹುದು..” +“ಹಾಗಾದ್ರೆ ನಾನು ಬರೋದಿಲ್ಲ” ಎಂದು ಬಿಟ್ಟಳು ಇನಾಸಜ್ಜಿ. +ಇಗರ್ಜಿ ಪಾದರಿ ಇಲ್ಲದ ಊರಿಗೆ ಹೋಗಿ ದೈವಿಕತೆಯ ಗಂಧಗಾಳಿ ಇಲ್ಲದಲ್ಲಿ ಬದುಕಲು ಅವಳು ಸಿದ್ಧಳಿರಲಿಲ್ಲ. +“ಈವತ್ತಲ್ಲ ನಾಳೆ ಇಗರ್ಜಿಯಾಗುತ್ತೆ ಅತ್ತೆ” ಎಂದು ಕೈತಾನ ಹೇಳಿದರೂ ಅವಳು ಕೇಳಲಿಲ್ಲ. +“ಅದು ಆಗಲಿ..ನಾನು ಬರತೀನಿ” ಎಂದು ಬಿಟ್ಟಳು. +ಕೈತಾನ ಶಿವಸಾಗರಕ್ಕೆ ಬಂದು ಬಳ್ಕೂರಕಾರ ಆದ. ಅವನ ಹೆಂಡತಿ ಬಳ್ಕೂರಕಾರ ಹೆಂಡತಿಯಾದಳು. ಮಕ್ಕಳು ಬಳ್ಕೂರಕಾರ ಮಕ್ಕಳಾದರು. +ಇಲ್ಲಿಗೆ ಬಂದದ್ದು ಬಳ್ಕೂರಕಾರಗೆ ಒಳಿತಾಯಿತು. ಆತ ಒಳ್ಳೆಯ ಹಣ ಮಾಡಿದ. ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಮನೆಯನ್ನು ಹೊಸದಾಗಿ ಕಟ್ಟಿಸಿದ್ದಾನೆ. ಮನೆಯಲ್ಲಿ ಮೇಜು, ಕುರ್ಚಿ, ಮಂಚಗಳನ್ನೆಲ್ಲ ಮಾಡಿಸಿದ್ದಾನೆ. ಈಗ ಕಲ್ಲು ಕೆತ್ತುವ ಕೆಲಸ ಬಿಟ್ಟು ಮೇಸ್ತ್ರಿಯ ಕೆಲಸಕ್ಕೆ ತೊಡಗಿದ್ದಾನೆ. ಊರಿನಲ್ಲಿ ಇಗರ್ಜಿ ಬೇರೆ ಆಗಿದೆ. ಪಾದರಿ ಗೋನಸ್ವಾಲಿಸ್ ಬಂದಿದ್ದಾರೆ. +ಅವನಿಗೆ ತಟ್ಟನೆ ಇನಾಸಜ್ಜಿಯ ನೆನಪಾಗಿದೆ. ಅವನ ಹೆಂಡತಿ ನಮಾಮೋರಿ ಒಂದು ಬಾರಿ “ಇಲ್ಲಿ ಇಗರ್ಜಿ ಎಲ್ಲ ಆಗಿದೆ..ಅಮ್ಮ ಬರತಿದ್ಲೋ ಏನೋ..” ಎಂದು ಹೇಳಿದ್ದು ಕೂಡ ಕೈತಾನ ಈ ವಿಷಯ ಮರೆಯದಂತೆ ಮಾಡಿತು. +ಅತ್ತೆಯನ್ನು ನೋಡುವ ನೆಪದಲ್ಲಿ ಗುಂಡಬಾಳೆಗೆ ಹೋದ ಕೈತಾನ ಅಲ್ಲಿಂದ ತಿರುಗಿ ಬರುವಾಗ ಇನಾಸಜ್ಜಿಯನ್ನು ಕರೆತಂದ. ದೋಣಿಯಲ್ಲಿ ಅನಂತರ ಬಸ್ಸಿನಲ್ಲಿ ಜಪಸರದ ಮಣಿಗಳನ್ನು ಎಣಿಸುತ್ತ ಬಂದ ಇನಾಸಜ್ಜಿ ಶಿವಸಾಗರದ ಇಗರ್ಜಿಯನ್ನು ನೋಡಿ ಸಂತಸಪಟ್ಟಳು. ಮಗಳು ಮೊಮ್ಮಕ್ಕಳನ್ನು ನೋಡಿಯೂ ಅವಳಿಗೆ ಆನಂದವಾಯಿತು. +ಗುಂಡಬಾಳೆಯಲ್ಲಿಯ ಅವಳ ದಿನಚರಿ ಇಲ್ಲಿಯೂ ಹಾಗೆಯೇ ಮುಂದುವರೆಯಿತು. +ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗುತ್ತಿದ್ದ ಸಿಮೋನನ ತಾಯಿ, ವೈಜೀಣ್ ಕತ್ರೀನರ ಜತೆ ಇನಾಸಜ್ಜಿಯೂ ಸೇರಿಕೊಂಡಳು. +ಮೊದಲ ದಿನ ಇಗರ್ಜಿಗೆ ಹೋಗಿ ಬಂದ ಅಜ್ಜಿ ಗೋನಸ್ವಾಲಿಸ್ ರನ್ನು ತುಂಬಾ ಮೆಚ್ಚಿಕೊಂಡಳು. +“ಈ ಪಾದರಿಗಳು ತುಂಬಾ ದೈವಭಕ್ತರು…ಅವರು ಅರ್ಪಿಸುವ ಪೂಜೆಯನ್ನು ಕೇಳೋದೇ ಒಂದು ಪುಣ್ಯ..” ಎಂದಳವಳು. +ಅವರ ಕೋಪ, ಸಿಟ್ಟು, ಅವರ ನಾಗರಬೆತ್ತ, ಪಾಮಿಸ್ತ್ರಿ ಹಿಡಿದು ಹೊಡೆಯುವುದು ಅವಳ ಗಮನಕ್ಕೇನೆ ಬರಲಿಲ್ಲ. ಇದು ಅನಿವಾರ್ಯ ಎನಿಸಿತ್ತೇನೋ ಅವಳಿಗೆ. ಅವಳು ದಿವ್ಯಪ್ರಸಾದ ಸ್ವೀಕರಿಸುತ್ತ ಉಳಿದುಬಿಟ್ಟಳು. +ಆದರೆ ಮಸ್ಕರಿನಾಸರು ಊರಿಗೆ ಬಂದ ನಂತರ ಮಾತ್ರ ಅವಳ ಪ್ರತಿಕ್ರಿಯೆ ಬೇರೆಯಾಗಿತ್ತು. +“ಈ ಪಾದರಿ ಯಾಕೆ ಪದೇ ಪದೇ ಜನರ ಕಡೆ ತಿರುಗಿ ನೋಡೋದು ..” ಎಂದವಳು ಕೇಳುತ್ತಿದ್ದಳು. +“ಬರೀ ಕಾಣಿಕೆ ಕಾಣಿಕೆ ಅಂತಾರೆ ಪಾದರಿ..” ಎಂದು ರಾಗ ಎಳೆದರು. +ಆದರೂ ಅವಳ ನಿತ್ಯದ ಭೇಟಿ ನಿಲ್ಲಲಿಲ್ಲ. ಮನೆಯಲ್ಲಿ ಪೂಜೆ ಪ್ರಾರ್ಥನೆ ಬಿಡಲಿಲ್ಲ. ಶುಕ್ರವಾರದ ಶಿಲುಬೆಯ ಪ್ರಾರ್ಥನೆ ನಿಲ್ಲಿಸಲಿಲ್ಲ. +ಆದರೆ ಈಗ ಒಂದು ತಿಂಗಳಿಂದ ಅವಳು ಹಾಸಿಗೆ ಬಿಟ್ಟು ಏಳುತ್ತಿಲ್ಲ. ಮಗಳು ಅಳಿಯ ಅಕ್ಕಪಕ್ಕದ ಮನೆಗಳವರು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಸರಕಾರಿ ವೈದ್ಯರೂ ಮನೆಗೆ ಬಂದು ನೋಡಿದ್ದಾರೆ. +“ಕಾಯಿಲೆ ಏನಿಲ್ಲ..ವಯಸ್ಸಾಯಿತಲ್ಲ” ಎಂದವರು ಹೇಳಿದ್ದಾರೆ. +ಇನಾಸಜ್ಜಿಗೆ ತೊಂಬತ್ತು ಆಗಿದೆ. ಮಲಗಿದಲ್ಲಿಯೇ ಕರಗಿ ಹೋಗಿದ್ದಾಳೆ ಆಕೆ. ಎಲ್ಲರ ಗುರುತು ಹಿಡಿಯುತ್ತಾಳೆ, ಮಾತನಾಡಿಸುತ್ತಾಳೆ. ಕೆಲ ಬಾರಿ ಎಲ್ಲ ಮರೆತು ಹೋದಂತೆ ಪಿಳಿ ಪಿಳಿ ನೋಡುತ್ತಾಳೆ. +ಸಿಮೋನ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಬಳ್ಕೂರಕಾರ್ ಎದುರಾದ. +“ಬನ್ನಿ ..ಗುರ್ಕಾರ ಮಾಮ” ಎಂದ. +“ಯಾರು ಸಿಮೋನನ?” ಎಂದು ಕೇಳಿದಳು ಮುದುಕಿ. +“ನಿನ್ನ ಹೆಂಡತಿ ಬಂದು ನೋಡಿಕೊಂಡು ಹೋದಳು” ಎಂದು ನಕ್ಕಳು. +“ಮಕ್ಕಳೆಲ್ಲ ಚೆನ್ನಾಗಿದಾರ? ಮಗಳ ಮದುವೆ ಮಾಡಬೇಕಾ?” ಎಂದೆಲ್ಲ ವಿಚಾರಿಸಿದಳು. +ಒಳ್ಳೆ ಕಡೆ ನೋಡಿ ಮದುವೆ ಮಾಡು..ನಾನು ಇರೋದಿಲ್ಲ ಮದುವೆ ನೋಡಲಿಕ್ಕೆ?..ನಾನು ಹೊರಟೆ” ಎಂದಳು ಯಾವುದೇ ಉದ್ವೇಗ ಉದ್ವಿಗ್ನತೆಗೆ ಒಳಗಾಗದೆ. +“ನಮಾಮೋರಿ..ಕುಡಿಲಿಕ್ಕೆ ಏನಾದರೂ ಮಾಡಿಕೊಡು” ಎಂದು ಮಗಳಿಗೆ ಕೂಗಿ ಹೇಳಿದಳು. +“ಶುಕ್ರವಾರ ಶಿಲುಬೆ ಪ್ರಾರ್ಥನೆ ಬಂದಿದೆ..” ಎಂದೇನೋ ಹೇಳಲು ಹೋಗಿ ಮಾತು ನಿಲ್ಲಿಸಿದಳು. ಸಿಮೋನ ಸುಮ್ಮನೆ ಕೊಂಚ ಹೊತ್ತು ಕುಳಿತಿದ್ದು ನಮಾಮೋರಿ ತಂದುಕೊಟ್ಟ ಕಾಫ಼ಿ ಕುಡಿದು ಎದ್ದು ಬಂದ. +* +* +* +ಉದ್ದ ಸಾಲಿನ ಮೂರನೆ ಮನೆ ಸುತಾರಿ ಇನಾಸನದಾದರೆ ಅಡ್ಡ ಸಾಲಿನ ಮೂರನೇ ಮನೆ ಬಳ್ಕೂರಕಾರನಾದು. ಶುಕ್ರವಾರ ಸಂಜೆ ಅಲ್ಲಿ ಪರಲೋಕ ಮಂತ್ರ ಹೇಳಿದರೆ, ಕೀರ್ತನೆ ಹಾಡಿದರೆ ಅದು ಇಲ್ಲಿ ನೇರವಾಗಿ ಕೇಳುತ್ತದೆ. ನಲವತ್ತು ಐವತ್ತು ಜನ ಸೇರಿ ಹಾಡುವುದರಿಂದ ಸಂಜೆಯ ಮೌನದಲ್ಲಿ ಇಂಪಾಗಿ ಕೇಳಿಸುತ್ತದೆ. +ಈ ಶಿಲುಬೆ ಪ್ರಾರ್ಥನೆಗೆ ಮುಂಚಿತವಾಗಿಯೇ ಕೈತಾನ ಪಾದರಿ ಮಸ್ಕರಿನಾಸರನ್ನು ಮನೆಗೆ ಕರೆಸಿಕೊಂಡಿದ್ದ. +“..ನಮ್ಮ ಅತ್ತೆಗೊಂದು ಅಂತ್ಯಾಭ್ಯಂಜನ ನೀಡಿಬಿಡಿ ಪದ್ರಾಬ..” ಎಂದು ಹೇಳಿದ್ದ. +ಅವನಿಗೆ ಏನೋ ಅನುಮಾನ. ಸಂಜೆಯ ರೈಲು ಊರು ಬಿಡುವಾಗ ಈ ಮುದುಕಿಯೂ ಹೊರಟು ಬಿಡುತ್ತಾಳೇನೋ ಎಂಬ ಆತಂಕ. +ಹೀಗಾಗಿ ಪಾದರಿ ಬಂದರು. +ಪಾಪ ನಿವೇದನೆಗೆ ಕಿವಿಗೊಟ್ಟರು. +ದಿವ್ಯಪ್ರಸಾದ ನೀಡಿದರು. +ಪರಿಶುದ್ಧ ಎಣ್ಣೆಯನ್ನು ಇನಾಸಜ್ಜಿಯ ಹಣೆಯ ಮೇಲೆ ಲೇಪಿಸಿ- +“ಈ ಲೇಪನದಿಂದಲೂ ತಮ್ಮ ಮಹತ್ವಾಕಾಂಕ್ಷೆಯಿಂದಲೂ, ಕರ್ತರು ನಿನ್ನ ಪಂಚೇಂದ್ರಿಯಗಳಿಂದ ನೀನು ಮಾಡಿದ ಪಾಪಗಳನ್ನು ಕ್ಷಮಿಸಲಿ” ಎಂದರು. +ಅವರು ತಮ್ಮ ಕೆಲಸಮುಗಿಸಿ ಹೋಗುತ್ತಿರಲು ಇನಾಸನ ಮನೆ ಮುಂದಿನಿಂದ ಪ್ರಾರ್ಥನೆ ಕೇಳಿ ಬರತೊಡಗಿತು. +ಅಜ್ಜಿ ಆಲಿಸುತ್ತ ಕುಳಿತಳು. +ಬೆನ್ನಿಗೆ ಕೊಟ್ಟ ತಲೆದಿಂಬನ್ನು ತೆಗೆಯಲು ಬಂದ ಮಗಳಿಗೆ ಬೇಡ ಎಂದವಳು ತಿಳಿಸಿದಳು. ತಲೆದಿಂಬಿನ ಅಡಿಯಿಂದ ಜಪಸರ ತೆಗೆದು, ಅದರಲ್ಲಿಯ ಶಿಲುಬೆಗೆ ಮುತ್ತಿಟ್ಟು ಮಣಿ ಮಣಿ ಎಣಿಸತೊಡಗಿದಳು. +ಏಳು ಗಂಟೆಗೆ ರೈಲು ಶಿವಮೊಗ್ಗೆಗೆ ಹೊರಟಿದ್ದು ಕೂ ಎಂದಿತು. ಇಲ್ಲಿ ಜನ ಕೀರ್ತನೆ ಹಾಡುತ್ತಿದ್ದರು. +ಇನಾಸಜ್ಜಿ ನಿಧಾನವಾಗಿ ಪಕ್ಕಕ್ಕೆ ಹೊರಳಿದಳು. +* +* +* +ಬೆಳಿಗ್ಗೆ ಸಿಮಿತ್ರಿಯಲ್ಲಿ ಹೊಂಡ ತೋಡಲೆಂದು ಅನುಮತಿ ಕೇಳಲು ಚಮಾದೋರ ಇಂತ್ರು ಪಾದರಿಗಳ ಬಂಗಲೆ ಬಳಿ ಹೋದ. ತನ್ನ ಸಂಗಡಿಗನನ್ನು ಸಲಕರಣೆಗಳ ಸಹಿತ ಸಿಮಿತ್ರಿಗೆ ಕಳುಹಿಸಿ ಇಂತ್ರು ಪಾದರಿಗಳ ಎದುರು ಹೋಗಿ ನಿಂತ. +ಮರಣದ ಗಂಟೆ ಕೂಡ ಆಗಲೇ ಸದ್ದು ಮಾಡುತಲಿತ್ತು. +“ಕೋಣ್ರೆತೋ?” ಎಂದು ಎಂದಿನಂತೆ ಕೇಳುತ್ತ ಬಂದರು ಪಾದರಿ. +ಫ಼ರಾಸ್ಕನ ಹೆಂಡತಿ ರಜೀನಾ ಕೆಂಪು ಸೀರೆಯುಟ್ಟು ಅಲ್ಲೆಲ್ಲ ತಿರುಗಾಡುತ್ತಿದ್ದಳು. +“ಪದ್ರಾಬಾ..ಬಳ್ಕೂರಕಾರ ಅತ್ತೆ ತೀರಿಕೊಂಡರಲ್ಲ” ಎಂದು ಪೀಠಿಕೆ ಹಾಕಿದ ಇಂತ್ರು. +“ಹೌದು ಏನೀಗ?” ಏಕೋ ಅವರ ಮಾತು ಗಡುಸಾಗಿತ್ತು. +“ನಾನು ಹೊಂಡ ತೆಗೀಲಿಕ್ಕೆ ಹೊರಟಿದ್ದಿ” +“ಅವರಿಗೆ ಇಲ್ಲಿ ಬರಲಿಕ್ಕೆ ಹೇಳು. ಅವರಿಂದ ಇಗರ್ಜಿಗೆ ಬರಬೇಕಾದ ಬಾಕಿ ಯಾರಂತೆ ಕೊಡೋದು” ಎಂದರು ಪಾದರಿ ಮಸ್ಕರಿನಾಸ ತುಸು ಒರಟಾಗಿ. ಇಂತ್ರು ಎರಡು ನಿಮಿಷ ನಿಂತು ಅಲ್ಲಿಂದ ಹೊರಟ. +* +* +* +ಸುತಾರಿ ಇನಾಸನ ಮಗ ಪಾಸ್ಕು ತಂದೆಯ ಕೆಲಸ ಮುಂದುವರೆಸಿದವ ಬಳ್ಕೂರಕಾರ ಮನೆ ಅಂಗಳದಲ್ಲಿಯೇ ಮರಣದ ಪೆಟ್ಟಿಗೆ ಮಾಡತೊಡಗಿದ. ಜನ ಬಂದು ಬಂದು ಹೋಗುತ್ತಿದ್ದರು. ಇನಾಸಜ್ಜಿಗೆ ಸ್ನಾನ ಮಾಡಿಸಿ ಬಿಳಿ ಸೀರೆ ಉಡಿಸಿ ತಂದು ಮಲಗಿಸಲಾಗಿತ್ತು. ಎಷ್ಟೋ ವರ್ಷಗಳಿಂದ ಅವಳ ಸಂಗಾತಿಯಾಗಿದ್ದ ಜಪಸರವನ್ನು ಜೋಡಿಸಿದ ಅವಳ ಕೈಗೆ ಸುತ್ತಲಾಗಿತ್ತು. ಜಪಸರದಲ್ಲಿನ ಬೆರಳುದ್ದದ ಶಿಲುಬೆ ಎದ್ದು ಕಾಣುತ್ತಿತ್ತು. ಶಾಂತಳಾಗಿ ಮಲಗಿದ್ದಳು ಅಜ್ಜಿ. ಬಂದ ಜನತಂದ ಹೂವು, ಮೇಣದ ಬತ್ತಿ ಪ್ಯಾಕೇಟುಗಳನ್ನು ಶವದ ಬಳಿ ಇರಿಸಿ, ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗಂಡಸರು ಅಂಗಳದಲ್ಲಿ ಹಾಕಿದ ಅಡ್ಡ ಬೆಂಚಿನ ಮೇಲೆ ಕುಳಿತು ಅಲ್ಲಲ್ಲಿ ನಿಂತು ಮಾತಿಗೆ ತೊಡಗಿದ್ದರು. ಸಾವಿನ ಕರಿ ನೆರಳು ಅಲ್ಲೆಲ್ಲ ತೆಳುವಾಗಿ ಹರಡಿಕೊಂಡಿತು. +ಇಂತ್ರು…ದಣಪೆ ದಾಟಿ ಒಳಬಂದವನೇ ಸಿಮೋನ, ಬೋನರ ಜತೆ ಮಾತನಾಡುತ್ತ ನಿಂತಿದ್ದ ಬಳ್ಕೂರಕಾರನನ್ನು ಕರೆದ. +“..ಏನು ಇಂತ್ರು..ಕೆಲಸ ಆಯಿತೆ?” ಎಂದು ಅಲ್ಲಿಂದಲೇ ಕೇಳಿದ ಸಿಮೋನ. +“ಅಲ್ಲ ಅದೇನೋ ಇಗರ್ಜಿಗೆ ಕೊಡಬೇಕಾದ ಬಾಕಿ ಇದೆಯಂತಲ್ಲ..ಅದು ಕೊಡದೆ ಹೊಂಡ ತೆಗೀಲಿಕ್ಕೆ ಅನುಮತಿ ಕೊಡಲ್ವಂತೆ ಪಾದರಿಗಳು” ಎಂದು ಇಂತ್ರು ದೊಡ್ಡ ದನಿಯಲ್ಲಿ ಹೇಳುತ್ತಿರಲು ಅಲ್ಲಿ ಸೇರಿದವರೆಲ್ಲ ಕೇಳುತ್ತ ನಿಂತರು. +ಬಳ್ಕೂರಕಾರ್ ಕೂಡಲೇ ಎಚ್ಚೆತ್ತ. ಈ ಪ್ರಸಂಗವನ್ನು ಬೆಳೆಯಲು ಬಿಡಬಾರದು ಎನಿಸಿ ಆತ ಮನೆಯಿಂದ ಹೊರಟ. ಸಿಮೋನ, ಬೋನ ಕೂಡ ಅವನಿಗೆ ಜತೆಯಾದರು. +ಪಾದರಿ ಮಸ್ಕರಿನಾಸ ಸಹಜವಾಗಿ ಎಂಬಂತೆ ಅನ್ವಾಲ ಕಾಯಿದೆಯ ವಹಿ ತೆಗೆದರು. +“ನೋಡಿ ವರ್ಷಕ್ಕೊಂದು ಸಾರಿ ಕೊಡಬೇಕಾದ್ದನ್ನ ಕೊಟ್ಟರೆ ಈ ಎಲ್ಲ ರಗಳೆಗಳೂ ಇರೋದಿಲ್ವೆ..ನಮ್ಮ ಜನರಿಗೆ ಎಲ್ಲದಕ್ಕೂ ಹಣ ಇರುತ್ತೆ..ಇಗರ್ಜಿಗೆ ಕೊಡಲಿಕ್ಕೆ ಮಾತ್ರ ಇರಲ್ಲ..” ಎಂದು ಕೇಳುತ್ತ ಬಳ್ಕೂರಕಾರ ಕೊಟ್ಟ ಹಣವನ್ನು ಲೆಕ್ಕ ಮಾಡಿ ಅದಕ್ಕೊಂದು ರಶೀದಿ ಬರೆದುಕೊಟ್ಟರು. +ಸಿಮೋನನಿಗಾಗಲಿ, ಬೋನನಿಗಾಗಲಿ ಅಲ್ಲಿ ಮತ್ತೊಂದು ಮಾತು ಹೇಳಲು ಅವಕಾಶವಾಗಲಿಲ್ಲ. +ಇಂತ್ರು ಸಿಮಿತ್ರಿಯತ್ತ ತಿರುಗಿದ್ದನ್ನು ನೋಡಿ ಈ ಮೂವರೂ ಕೇರಿಗೆ ಹಿಂತಿರುಗಿದರು. +ಇನಾಸಜ್ಜಿಯನ್ನು ಮಣ್ಣಿಗೆ ತಲುಪಿಸಲು ಊರ ಕ್ರೀಸ್ತುವರೆಲ್ಲ ಬಂದರು. +ವಿಶೇಷವಾಗಿ ಗಮನ ಸೆಳೆದವರೆಂದರೆ ಬಾಮಣ ಪಂಗಡದವರು, ಹೆಂಗಸರು ಗಂಡಸರಾಗಿ ಎಲ್ಲರೂ ಕರಿ ಬಟ್ಟೆ ಧರಿಸಿ, ಕೈ ಮುಂದೆ ಕಟ್ಟಿಕೊಂಡು, ಇಂಗ್ಲೀಷಿನಲ್ಲಿ ಜಪ ಮಾಡುತ್ತ ಶವದ ಹಿಂದೆಯೇ ನಡೆದು ಬಂದದ್ದು ಉಳಿದ ಕ್ರೀಸ್ತುವರ ಮೆಚ್ಚುಗೆ ಗಳಿಸಿತ್ತು. +* +* +* +ಇನಾಸಜ್ಜಿ ತೀರಿಕೊಂಡ ಕೆಲವೇ ದಿನಗಳಲ್ಲಿ ಇಗರ್ಜಿಯ ಗಂಟೆ ಮರಣ ಸೂಚಕವಾದ ಸದ್ದನ್ನು ಮತ್ತೊಮ್ಮೆ ಮಾಡಿ- +“ಯಾರು..ಯಾರಂತೆ?” ಎಂದು ಕೇರಿಯ ಜನ ಮನೆಯಿಂದ ಹೊರಬಂದು ಇಗರ್ಜಿಯತ್ತ ನೋಡುವಂತೆ ಮಾಡಿತು. +ಬಲಗಾಲುದ್ಧ ಬಾಲ್ತಿದಾರ ಈಗ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಅವನ ಕತೆ ಮುಗಿದು ಹೋಯಿತು ಎನ್ನುವಂತಾಗಿ ಪಾದರಿ ಮಸ್ಕರಿನಾಸ ಹೋಗಿ ಆತನಿಗೆ ಅಂತ್ಯಾಂಭ್ಯಂಜನ ನೀಡಿ ಬಂದಿದ್ದರು. ಪೆಟ್ಟಿಗೆ ಮಾಡುವವರು, ಬಟ್ಟೆ ಹೊಲಿಯುವವರು, ಸಮಾಧಿ ತೋಡುವವರು ಇಂದು ನಾಳೆ ಎಂದು ಕ್ಷಣಗಳನ್ನು ಎಣಿಸುತ್ತಿದ್ದಾಗ ಬಾಲ್ತಿದಾರ.. +“ರೇಮೆಂದಿ..” ಎಂದು ಮಗಳ ಹೆಸರನ್ನು ಹಿಡಿದು ಕೂಗುತ್ತ ಎದ್ದು ಕುಳಿತಿದ್ದ +“ಹೋ..ಈ ಮುದುಕ ಇಷ್ಟು ಬೇಗ ಸಾಯೋದಿಲ್ಲಪ್ಪ..” ಎಂದು ಜನ ಮಾತನಾಡಿಕೊಂಡರು. +ಬಾಲ್ತಿದಾರ ಕಾಲೆಳೆದುಕೊಂಡು ಜಗಲಿಗೆ ಬಂದ. ಅಂಗಳಕ್ಕೂ ಬಂದ. ಮೊಮ್ಮಗನ ಜತೆ ಮಾತನಾಡಿದ. ಅಳಿಯನ ಸಂಗಡ ಹರಟೆ ಹೊಡೆದ. ಸಿಮೋನ, ಪಾಸ್ಕೋಲ ಹೋದಾಗ ಅವರೊಂದಿಗೂ ಅದು ಇದು ಪ್ರಸ್ತಾಪ ಮಾಡಿದ. ನಾಲ್ಕನೆಯ ದಿನ ಮತ್ತೆ ಹಾಸಿಗೆ ಹಿಡಿದ. +ಹೀಗೆಯೇ ಆಟವಾಡಿದವ ಒಂದು ದಿನ ಗೊರಗೊರ ಎಂದು ಸದ್ದು ಮಾಡಿ ಕತ್ತು ಹೊರಳಿಸಿದ. +ಎಂದಿನಂತೆ ಸಿಮೋನ ಓಡಿ ಬಂದ. +ಶಿರಾಲಿಯಿಂದ ಕರೆತಂದ ಈತನಿಗೆ ತಾನು ಜವಳಿ ಅಂಗಡಿ ಭುಜಂಗನಲ್ಲಿ ಕೆಲಸ ಕೊಡಿಸಿದ್ದನ್ನು ಸಿಮೋನ ಮರೆತಿರಲಿಲ್ಲ. ಕಲ್ಲು ಮಣ್ಣಿನ ಕೆಲಸ ಮಾಡಲಾಗದ ಈತ ದರ್ಜಿಯಾದ. ಜವಳಿ ಅಂಗಡಿ ಮಾಲಿಕನಾದ. ಬೋನ ಅಳಿಯನಾಗಿ ಬಂದ ನಂತರ ಇವನ ಅಂಗಡಿಯೂ ಅಭಿವೃದ್ದಿ ಹೊಂದಿತು. ಅಳಿಯ ಮಗ ಒಳ್ಳೆಯ ರೀತಿಯಲ್ಲಿದ್ದಾರೆ ಎಂಬ ಸಂತಸವೂ ಇವನಲ್ಲಿತ್ತು. +“ಎಲ್ಲ ಆಯಿತು ಸಿಮೋನ..ಈ ಹುಡುಗನದೊಂದು ಮದುವೆ ನೋಡಬೇಕು ಅಂತ ಆಸೆ..” ಎಂದು ಹೇಳುತ್ತಿದ್ದ ಆಗಾಗ್ಗೆ. +“ನೋಡುವಿಯಂತೆ..ಆ ಇಗರ್ಜಿ ಸಂತನನ್ನು ಕೇಳಿಕೊ..ಅವನು ಒಪ್ಪಿದರೆ ಇದು ಕಷ್ಟ ಅಲ್ಲ..” ಎಂದು ಹೇಳುತ್ತಿದ್ದೆ ತಾನು, ಈಗೀಗ ಬಾಲ್ತಿದಾರ ಸದಾ ಜಪಸರ ಹಿಡಿದು ಕೂರುತ್ತಿದ್ದ. ಆಗದಿದ್ದರೂ ಭಾನುವಾರ ಇಗರ್ಜಿಗೆ ಬರುತ್ತಿದ್ದ. ಆದರೆ ಇಗರ್ಜಿ ಸಂತನಿಗೆ ಇವನು ಇರುವುದು ಬೇಕಿರಲಿಲ್ಲವೇನೋ. ಆತ ಬಾಲ್ತಿದಾರನನ್ನು ತನ್ನಲ್ಲಿಗೆ ಕರೆದುಕೊಂಡ. +ಸಿಮೋನ ಬೋನನ ಮನೆಗೆ ಹೋದಾಗ ಬಾಲ್ತಿದಾರನ ಹೆಂಡತಿ ಅನರಿತಾ ಗಂಡನ ಶವದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. +“..ಅಣ್ಣಾ..ನನಗಿನ್ನು ಯಾರಿದಾರೆ..ನನ್ನದೆಲ್ಲ ಹೋಯ್ತು..” ಎಂದವಳು ನೆಲಕ್ಕೆ ಹಣೆ ಚಚ್ಚಿಕೊಳ್ಳುವಾಗ ಸಿಮೋನ- +“ಅನರಿತಾ..ಸಾಕು ಮಾಡು…ಯಾರೂ ಇಲ್ಲ ಅಂತ ಹೇಳಬೇಡ..ದೇವರ ಹಾಗಿರೋ ಅಳಿಯ ಇದಾನೆ..ಮಗಳು ಇದಾಳೆ..ಮೊಮ್ಮಗ ಇದ್ದಾನೆ…ಏನು ಮಾತು ಅಂತ ಹೇಳ್ತಿಯಾ..ನೀನೇನು ಇಲ್ಲಿ ಖಾಯಂ ಆಗಿ ಇರಲಿಕ್ಕೆ ಬಂದವಳ..ನಿನ ಗಂಡನಿಗೆ ಬೇಗನೆ ಸದ್ಗತಿ ಸಿಗಲಿ ಅಂತ ಬೇಡಿಕೋ..” ಎಂದು ದನಿ ಎತ್ತರಿಸಿ ಕೂಗಾಡಿದ. +ಅನರಿತಾ ನಿಧಾನವಾಗಿ ಚೇತರಿಸಿಕೊಂಡು ಕುಳಿತಳು. +ಮನೆ ಮನೆಗಳಿಂದ ಬಂದವರು ಅಲ್ತಾರಿನ ಮುಂದೆ ಮೇಣದ ಬತ್ತಿ ಹಚ್ಚಿ ತೇರ್ಸ, ಕೀರ್ತನೆಯಲ್ಲಿ ತೊಡಗಿದರು. +ಬೋನ ಕಾಲಕಾಲಕ್ಕೆ ಇಗರ್ಜಿಗೆ ಕೊಡಬೇಕಾದುದನ್ನೆಲ್ಲ ಕೊಡುತ್ತ ಬಂದದ್ದರಿಂದ ಪಾದರಿ ಮಸ್ಕರಿನಾಸ ಯಾವುದೇ ತಕರಾರು ಮಾಡದೆ ಶವಸಂಸ್ಕಾರಕ್ಕೆ ಮುಂದಾದರು. +ಬಲಗಾಲುದ್ದನ ಹೆಂಡತಿ ಅನರಿತಾ ತುಸು ಮಂಕಾದಳು. ನಿಧಾನವಾಗಿ ಅವಳು ಕೂಡ ಜಪಸರ ಪ್ರಾರ್ಥನೆ, ಇಗರ್ಜಿಗೆ ಹೋಗುವುದು ಎಂದು ದೇವರತ್ತ ತಿರುಗಿಕೊಂಡಳು. +ಆದರೆ ಮನೆಗೆ ಹೊಸದಾಗಿ ಬಂದ ಮೊಮ್ಮಗ ಅವಳ ಸಮಯವನ್ನೆಲ್ಲ ತೆಗೆದುಕೊಳ್ಳತೊಡಗಿದ್ದ. ಫ಼ಿಲಿಪ್ಪ ತಾಯಿಯ ಬಣ್ಣವನ್ನು ತಂದೆಯ ಮುಖ ಚಹರೆಯನ್ನು ಪಡೆದಿದ್ದ.ಸದಾ ಚಟುವಟಿಕೆಯಲ್ಲಿರುವ ತುಂಟ. ಅವನಿಗೆ ನಿದ್ದೆಯೇ ಕಡಿಮೆ ಅನ್ನುವುದು ಅವನ ತಾಯಿಯ ದೂರು. +ಬೆಳಿಗ್ಗೆ ಇಗರ್ಜಿ ಗಂಟೆ ಆಗುತ್ತಿರುವಂತೆಯೇ ಎದ್ದು ಮಲಗಿದವರನ್ನೆಲ್ಲ ಎಚ್ಚರಿಸಿ ಅವರ ಹಾಸಿಗೆಯಿಂದ ಇವರ ಹಾಸಿಗೆಗೆ ತಿರುಗಾಡೀ ಎಲ್ಲರೂ ಎದ್ದು ಕೂಡುವಂತೆ ಮಾಡುತ್ತಿದ್ದ. +ಫ಼ಿಲಿಪ್ಪ ಬೋನ ರೇಮೇಂದಿಗಿಂತಲೂ ತನ್ನ ಅಜ್ಜಿಗೇನೆ ಹೆಚ್ಚಾಗಿ ಹಚ್ಚಿಕೊಂಡದ್ದು ಅವಳು ತನ್ನ ಗಂಡನನ್ನು ಮರೆಯಲು ಕಾರಣವಾಯಿತು. +-೪- +ಇನಾಸಜ್ಜಿಯ ತಿಂಗಳ ಪೂಜೆಯನ್ನು ಬಳ್ಕೂರಕಾರ ಒಳ್ಳೆಯ ರೀತಿಯಲ್ಲಿಯೇ ಇರಿಸಿಕೊಂಡ. ಬೆಳಿಗ್ಗೆ ಇಗರ್ಜಿಯಲ್ಲಿ ಇರಿಸಿಕೊಂಡು ಪಾಡುಪೂಜೆ ಹನ್ನೆರಡು ರೂಪಾಯಿಯ ಗಾಯನ ಪೂಜೆಯೇ. ಮಿರೋಣ ವಲೇರಿಯನ ಪಿಟಿಲು ಬಾರಿಸಿಕೊಂಡು ಹಲವು ಕೀರ್ತನೆಗಳನ್ನು ಹಾಡಿದ. ಪಾದರಿ ಮಸ್ಕರಿನಾಸ ಕರಿ ಉಡುಪು ಧರಿಸಿ ಪೂಜಾ ಸಲ್ಲಿಸಿದರು. ಇಗರ್ಜಿಯ ನಡುವೆ ಅಲ್ತಾರನ ಮುಂದೆ ಕಪ್ಪು ಬಟ್ಟೆ ಹೊದಿಸಿದ ಶವಪೆಟ್ಟಿಗೆಯನ್ನು ಇರಿಸಲಾಗಿತ್ತು. ಪೂಜೆಯ ನಂತರ ಬಳ್ಕೂರಕಾರ, ಅವನ ಹೆಂಡತಿ ಮಕ್ಕಳು, ಪೂಜೆಗೆ ಬಂದ ಇನ್ನೂ ಹಲವರು ಇಗರ್ಜಿಯ ಹಿಂಬದಿಯಿಂದ ಸಿಮಿತ್ರಿಗೆ ಹೋದರು. ಇನಾಸಜ್ಜಿಯ ಸಮಾಧಿಯ ಮೇಲೆ ಮೇಣದ ಬತ್ತಿ ಹಚ್ಚಿ ಇರಿಸಿದರು. ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಮತ್ತೆ ಪ್ರಾರ್ಥನೆಯಾಯಿತು. ಕುಟುಂಬದ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಇನಾಸಜ್ಜಿಯ ಆತ್ಮವನ್ನು ಕೇಳಿಕೊಳ್ಳಲಾಯಿತು. ಏಕೆಂದರೆ ಅವಳು ಈಗ ದೇವರಿಗೆ ಹತ್ತಿರವಾಗಿದ್ದಾಳೆ ಅಲ್ಲವೆ? +ಬಳ್ಕೂರಕಾರ ಮನೆಯಲ್ಲಿ ಮಧ್ಯಾಹ್ನದ ಊಟ. ಒಂದು ಬಾಳೆ ಎಲೆಯಲ್ಲಿ‌ಒಂದು ಎಡೆ ತೆಗೆದಿರಿಸಿ ಅದನ್ನು ಸಿಮೋನನ ಮನೆಯ ಬೆಳ್ಳಿಗೆ ಕೊಡಲಾಯಿತು. ನಂತರ ಗಂಡಸರ ಪಂಕ್ತಿಗೆ ಸಿಮೋನನೇ ಮುಂದೆ ನಿಂತು ಶರಾಬು ಹಂಚಿದ. ಊಟದ ಎಲೆಯ ಮುಂದೆ ಕುಳಿತ ಪ್ರತಿಯೊಬ್ಬರೂ ಶರಾಬಿನ ಗ್ಲಾಸನ್ನು ತೆಗೆದುಕೊಂಡು ಎರಡು ಹನಿ ಶರಾಬನ್ನು ನೆಲಕ್ಕೆ ಚಲ್ಲಿ ಗ್ಲಾಸನ್ನು ಹಿಡಿದುಕೊಂಡು- +ನಮ್ಮನ್ನು ಅಗಲಿಹೋದ ಇನಾಸಜ್ಜಿಗಾಗಿ, ಈ ಕುಟುಂಬದ ಅಗಲಿದ ಆತ್ಮಗಳಿಗಾಗಿ ಒಂದು ಪರಲೋಕ ಒಂದು ನಮೋರಾಣೆ ಮಂತ್ರ ಅರ್ಪಿಸೋಣ ಎಂದು ಹೇಳಿ ಅದನ್ನು ಮುಗಿಸಿ ಎಲ್ಲರತ್ತ ತಿರುಗಿ. +“ಹ್ವಾಯ..ದೇವ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದು ಹೇಳಿ ಗ್ಲಾಸನ್ನು ಬರಿದಾಗಿಸಿ ಬಳ್ಕೂರಕಾರಗೆ ಹಿಂತಿರುಗಿಸಿದರು. +ಅದೇ ಗ್ಲಾಸು ಎಲ್ಲರ ಕೈಗೂ ಹೋಯಿತು.. ಮತ್ತೆ ಪ್ರಾರ್ಥನೆ. ದೇವರು ಒಳ್ಳೆಯದನ್ನು ಮಾಡಲಿ ಎಂಬ ಹಾರೈಕೆ. +ಬಳ್ಕೂರಕಾರ ಎರಡು ಮೂರು ಬಾರಿ ಬೇಡ ಬೇಡ ಅನ್ನುತ್ತಿದ್ದರೂ ಗ್ಲಾಸನ್ನು ತುಂಬಿಕೊಟ್ಟ. ಅವನ ಹೆಂಡತಿ ನಮಾಮೋರಿ- +“ಮಾವ ಊಟ ಮಾಡಿ” +“ದೊಡ್ಡಪ್ಪ ಊಟ ಮಾಡಿ” +“ಅಣ್ಣ ನಾಚಿಕೋ ಬೇಡ” +“ತಮ್ಮ ಹೊಟ್ಟೆಗೆ ಕಮ್ಮಿ ಮಾಡಕೋಬಾರದು” ಎಂದು ಹೇಳಿ ಮತ್ತೆ ಮತ್ತೆ ಬಡಿಸಿದಳು. ಆಗ ಊಟಕ್ಕೆ ರಂಗೇರಿತು. ಮಾತುಗಳು ಕೊಂಚ ಬಿರುಸಾದವು. +ಪಾಸ್ಕೋಲ ಮೇಸ್ತ್ರಿ ಹಣೆಯ ಮೇಲೆ ಬಂದು ಬಿದ್ದ ಕೂದಲನ್ನು ಹಿಂದೆ ತಳ್ಳಿ- +“ಗುರ್ಕಾರ ಸಿಮೋನ..ನೀನು ಏನೇ ಹೇಳು..ಈ ಪಾದರಿ ನನ್ನ ಮನಸ್ಸಿಗೆ ಬರಲಿಲ್ಲ..” ಎಂದ. +“ನನ್ನ ಮನಸ್ಸಿಗೂ..” ಅಂಕೋಲದ ಕೈತಾನ ನಡುವೆ ಬಾಯಿ ಹಾಕಿದ. +“ಯಾಕೆ ಮನಸ್ಸಿಗೆ ಬರಲಿಲ್ಲ..ನಿನಗೆ ಗೊತ್ತಲ್ಲ..ಈತ ನಮ್ಮ ಬೀಗರ ಎದುರು ನನ್ನನ್ನು ಮೂರು ಕಾಸಿನವನಾಗಿ ಮಾಡಿಬಿಟ್ಟ..ಬೋನ ಸಾಹುಕಾರ ಇಲ್ಲದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೊ..” ಎಂದು ಆತ ಒತ್ತರಿಸಿ ಬಂದ ನೋವನ್ನು ತಡೆದುಕೊಳ್ಳುತ್ತ ತೊದಲಿದ. +ಕೈತಾನ ಮೊಮ್ಮಗನನ್ನು ನಾಮಕರಣಕ್ಕೆ ಕರೆದೊಯ್ದದ್ದು. ಅಲ್ಲಿ ಪಾದರಿ ಬಾಕಿ ಕೇಳಿದ್ದು. ಕೈತಾನನ ಬೀಗರು ಹಣ ಕೊಟ್ಟದ್ದು. ಬೋನ ಸಾಹುಕಾರನಿಂದ ಸಾಲ ತಂದು ಆತ ಹಣ ಹಿಂದಿರುಗಿಸಿದ್ದು. ಈ ಬಗ್ಗೆ ಕೈತಾನನ ಬೀಗರು – +“ಪಾದರಿಗಳು ಹೀಗೂ ಇರತಾರೆಯೇ” ಎಂದು ಹೇಳಿದ್ದು ಊರಿಗೆಲ್ಲಾ ಗೊತ್ತಾಗಿತ್ತು. +“ಛೆ ಛೆ ಛೆ” ಎಂದು ಉಳಿದವರು ಲೊಚಗುಟ್ಟಿದರು. +“ನಾನು ಹೇಳತೀನಿ ಕೇಳು ಸಿಮೋನ” ತನ್ನ ಮಾತು ಮುಗಿದಿಲ್ಲ ಎಂಬಂತೆ ನಡುವೆ ಧುಮುಕಿದ ಪಾಸ್ಕೋಲ- +“..ಈ ಹಿಡಿ ಅಕ್ಕಿ ಪಾದರಿಗೆ ಹಣ ಎಷ್ಟಿದ್ದರೂ ಸಾಲದು ಮಾರಾಯ..ಇವನ ಹೊಸ ಪಿಲಾನ ಏನು ಗೊತ್ತ?” +ಆತ ಎಲ್ಲರ ಮುಖ ನೋಡಿದ. +“ಏನು ಏನು?” ಬಾಲ್ತಿದಾರ ಕುರಿಯ ಎಲುಬು ಚೀಪುತ್ತ ಕೇಳಿದ. +ಪಾದರಿ ಮಸ್ಕರಿನಾಸರಿಗೆ ’ಹಿಡಿ ಅಕ್ಕಿ ಪಾದರಿ’ ಎಂಬ ಹೆಸರು ಹೊಸದಾಗಿ ಬಿದ್ದಿತ್ತು. ಮನೆ ಹೆಂಗಸರಿಗೆಲ್ಲ ಅವರು ಒಂದು ಸಲಹೆ ನೀಡಿದರು. +“ನೀವು ದಿನಾ ಅನ್ನ ಮಾಡಲು ಅಕ್ಕಿ ಹಾಕುತ್ತೀರಲ್ಲ..ಅದರಲ್ಲಿ ಒಂದು ಹಿಡಿ ತೆಗೆದು ಬೇರೆ ಇಡಿ..ಒಂದು ವಾರಕ್ಕೆ ಹದಿನಾಲ್ಕು ಅಡಿ ಆದರೆ ಅರ್ಧ ಸೇರು ಆಗಬಹುದು. ಭಾನುವಾರ ಪೂಜೆಗೆ ಬರುವಾಗ ಅದನ್ನು ತಂದು ಇಗರ್ಜಿಗೆ ಕೊಡಿ..ನಿಮಗೆ ದೇವರ ಆಶೀರ್ವಾದ ದೊರೆಯುತ್ತದೆ.” +ಪಾದರಿ ಮಾತಲ್ಲವೇ? ಹೆಂಗಸರು ಇಗರ್ಜಿಗೆ ಬರುವಾಗ ಬಿಳಿ ವಸ್ತ್ರದಲ್ಲಿ ಸಣ್ಣ ಕೈಚೀಲದಲ್ಲಿ ಅಕ್ಕಿ ತಂದರು. ದೇವರ ಪೀಠದ ಮುಂದೆ ರಾಶಿ ಹಾಕಿದರು. ಪೂಜೆಯ ನಂತರ ಅದನ್ನು ತರಕಾರಿಯ ಜತೆ ಹರಾಜು ಹಾಕಲಾಯಿತು. ಜನರಿಗೆ ದೇವರ ಆಶೀರ್ವಾದ ಲಭ್ಯವಾಯಿತು. ಇಗರ್ಜಿಗೆ ಹಣ ಬಂದಿತು. ಪಾದರಿ ಮಸ್ಕರಿನಾಸ ಅವರಿಗೆ ಹಿಡಿ ಅಕ್ಕಿ ಪಾದರಿ ಎಂಬ ಹೆಸರು ಬಿದ್ದಿತು. +“ಈಗ ಮತ್ತೆ ಏನು ಉಪಾಯ ಹುಡುಕಿದ್ದಾರೆ ಈ ಪಾದರಿ?” +ಎಲ್ಲ ತಲೆ ಎತ್ತಿ ಪಾಸ್ಕೋಲನ ಮುಖ ನೋಡಿದರು. +“ನಿಮಗೆ ಬೇಕಾಗಿರೋ ಮೇಣದ ಬತ್ತಿನ ಇಗರ್ಜಿನಲ್ಲಿ ಕೊಂಡುಕೊಳ್ಳಿ ಅಂತ ಪಾದರಿ ಹೇಳೋದು ಯಾಕೆ ಗೊತ್ತೆ?” +ಪಾಸ್ಕೋಲ ಸುತ್ತ ಕುಳಿತವರ ಮುಂದೆ ಇನ್ನೊಂದು ಸವಾಲು ಇರಿಸಿದ. +“ಯಾಕೆ ಯಾಕೆ?” ಮತ್ತೆ ಪ್ರಶ್ನೆಗಳು ಕೇಳಿ ಬಂದವು. +ಹೋದ ಭಾನುವಾರ ಪಾದರಿ ಹೀಗೊಂದು ಫ಼ರಮಾನ ಹೊರಡಿಸಿದ್ದರು. +“ಪ್ರಿಯ ಕ್ರೀಸ್ತುವರೆ..ನೀವು ಮೇಣದ ಬತ್ತಿಗಳನ್ನು ಅಂಗಡಿಯಲ್ಲಿ ಕೊಳ್ಳುವುದರ ಬದಲು ಇನ್ನು ಮುಂದೆ ಇಗರ್ಜಿಯಲ್ಲಿ ಕೊಳ್ಳಿ..ಮಿರೋಣ ಆಗಲಿ ಕುಜ್ನೇರ ಆಗಲಿ ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ನಿಮಗೆ ಕೊಡತಾರೆ..ಅಲ್ಲಿ ಕೊಡುವಷ್ಟೇ ಹಣಾನ ನೀವು ಇಲ್ಲಿ ಕೊಟ್ಟರಾಯ್ತು..” ಎಂದಿದ್ದರು ಅವರು. +ಪಾದರಿಯ ಮಾತಲ್ಲವೆ? ಯಾರೂ ಇದರ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ. ಕೆಲವರು ಕೂಡಲೇ ಹಣಕೊಟ್ಟು ಮೇಣದ ಬತ್ತಿಗಳನ್ನು ಕೊಂಡು ಕೊಂಡರು. ಆದರೆ ಈಗ ಪಾಸ್ಕೋಲ ಮೇಸ್ತ್ರಿ ಇದರ ಗುಟ್ಟು ಹೊರಗೆ ಎಳೆದ. +ಕ್ರೀಸ್ತುವರು ಮಾತ್ರವಲ್ಲದೆ ಇತರೆ ಮತಸ್ಥರು ಕೂಡ ಸಂತ ಜೋಸೆಫ಼ರ ಮಂಟಪಕ್ಕೆ ಇಗರ್ಜಿಗೆ ಬೇರೆ ಬೇರೆ ಸಂತರಿಗೆ ಮೇಣದ ಬತ್ತಿಗಳನ್ನು ಕೊಡುವ ಪದ್ದತಿಯನ್ನು ರೂಢಿಸಿಕೊಂಡಿದ್ದರು. ಮಕ್ಕಳಿಗೆ ಕಾಯಿಲೆಯಾದರೆ, ಏನೋ ಕೆಡುಕಾದರೆ, ಒಳ್ಳೆಯದಾಗಬೇಕು ಎಂದೆನಿಸಿದರೆ, ಎತ್ತಿಗೋ ದನಕ್ಕೋ ತೊಂದರೆ ಉಂಟಾದರೆ ಕೂಡಲೆ ಜನ- +“ಶಿಲುಬೆ ದೇವರಿಗೆ ಮೇಣದ ಬತ್ತಿ ಕೊಡತೇನೆ” ಎಂದು ಹೇಳುತ್ತಿದ್ದರು. +ಈ ದೇವರು ಹಣ್ಣು, ಕಾಯಿ, ಉದ್ದಿನಕಡ್ಡಿ, ಕರ್ಪೂರ ಸ್ವೀಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ ಹರಕೆ ಹೇಳಿಕೊಂಡವರು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಹಚ್ಚಿ ಕೈ ಮುಗಿದು ಹೋಗುತ್ತಿದ್ದರು. ಈ ಬತ್ತಿಗಳು ಸಾಲು ಸಾಲಾಗಿ ಉರಿದು, ಕರಗಿದ ಮೇಣ ಅಲ್ಲೆಲ್ಲ ಗಟ್ಟಿಯಾಗಿ ನಿಂತಿರುತ್ತಿತ್ತು. +ಮಸ್ಕರಿನಾಸ ಬಂದ ಕೂಡಲೆ ಮೇಣದ ಬತ್ತಿಗಳನ್ನು ಉರಿಸುವುದನ್ನು ನಿಲ್ಲಿಸಿದರು. ದೇವರಿಗೆ ಮೇಣದ ಬತ್ತಿ ಕೊಟ್ಟರೆ ಸಾಕು. ಹಚ್ಚಲೇಬೇಕೆಂದಿಲ್ಲ ಎಂದರು. ಒಂದೆರಡು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಸದಾ ಹಚ್ಚಿಡಿ ಉಳಿದ ಬತ್ತಿ ಬಂಡಲುಗಳನ್ನು ಹಾಗೆಯೇ ತೆಗೆದಿಡಿ ಎಂದು ಅಲ್ಲಿರುವ ಹುಡುಗರಿಗೆ ಹೇಳಿದರು. +ಜನ ಈ ಹೊಸ ಪದ್ದತಿಗೆ ಹೊಂದಿಕೊಂಡರು. ಮೇಣದ ಬತ್ತಿ ದೇವರಿಗೆ ತಲುಪಿಸಿದರಾಯಿತು. ಹಚ್ಚುವ ಕೆಲಸ ಅವರು ಮಾಡುತ್ತಾರೆ ಎಂದು ಜನ ತಿಳಿದರು. +ಇದರಿಂದಾಗಿ ಇಗರ್ಜಿಯಲ್ಲಿ ಮೇಣದ ಬತ್ತಿ ಬಂಡಲುಗಳು ರಾಶಿ ಬಿದ್ದಿದ್ದವು. ಆಗ ಪಾದರಿ ಮಸ್ಕರಿನಾಸರು ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ಇಗರ್ಜಿಯಲ್ಲಿ ಕೊಳ್ಳಿರಿ ಎಂದರು. +“ಗೊತ್ತಾಯ್ತ ನಿಮಗೆ?” ಎಂದು ಮೀಸೆ ಕುಣಿಸಿದ ಪಾಸ್ಕೋಲ ಮೇಸ್ತ್ರಿ. +“ಹೌದು..ಈ ಪಾದರಿ ಹೀಗೆ ಹಣ ಮಾಡತಾನಲ್ಲ..ಅದು ಯಾರಿಗೆ? ಇವನಿಗೇನು ಸಂಸಾರನೆ? ಮಕ್ಕಳೆ?” +ಆ ವರೆಗೆ ಸುಮ್ಮನೆ ಕುಳಿತ ಸಾನಬಾವಿ ಪೆದ್ರು ಮುಖ್ಯವಾದ ಪಾಯಿಂಟ್ ಎತ್ತಿದ. ಈಗಾಗಲೇ ಓರ್ವ ಮಗನ ತಂದೆಯಾಗಿದ್ದ ಅವನಿಗೆ ತಾಪತ್ರಯಗಳು ಪ್ರಾರಂಭವಾಗಿದ್ದವು. ಕೆಲಸಕ್ಕೆ ಹೋಗುವುದು ಬೇಡ ಎಂದು ರಂಗಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ. ಊರಿನಲ್ಲಿ ಕಲ್ಲು ಕೆಲಸದವರ ಸಂಖ್ಯೆ ಅಧಿಕವಾಗಿತ್ತು. ಹೊಸದಾಗಿ ಮಲೆಯಾಳಿ ಮೇಸ್ತ್ರಿಗಳು ಬಂದು ಸೇರಿಕೊಂಡು ಕ್ರೈಸ್ತ ಮೇಸ್ತ್ರಿಗಳ ಕೆಲಸಕ್ಕೇನೆ ಕಲ್ಲು ಹಾಕಿದ್ದರು. ಆದಾಯ ಕಡಿಮೆಯಾಗುತ್ತಿದೆ ಅನ್ನುವಾಗ ಪಾದರಿಗಳು ಅನ್ವಾಲ ಕಾಯಿದೆ..ಹಬ್ಬದ ವಂತಿಗೆ..ಪೂಜೆಗೆ ಹಣ..ಕಾಣಿಕೆ ಡಬ್ಬಿಗೆ ಹಣ..ಹಿಡಿ ಅಕ್ಕಿ ಎಂದೆಲ್ಲ ಹಣ ಕೇಳುತ್ತಿದ್ದರು. ಹೀಗೆಂದೇ ಸಿಡಿಮಿಡಿಗೊಂಡ ಪೆದ್ರು ಹೀಗೊಂದು ಪ್ರಶ್ನೆ ಕೇಳಿದ. +ಆಗಲೇ ಬಳ್ಕೂರಕಾರ ನಾಲ್ಕನೇ ಬಾರಿ ಬಾಟಲಿ ಗ್ಲಾಸಿನ ಜತೆ ಹೊರಬಂದು ಊಟ ಮಾಡುತ್ತಿರುವವರ ನಡುವೆ ನಿಂತ. +“..ಅದು..ನಾನು ಹೇಳತೇನೆ…” ಎಂದ ಹಸಿಮಡಲು ಪಾತ್ರೋಲ. +ಈತ ಶಿವಸಾಗರಕ್ಕೆ ಹೊಸದಾಗಿ ಎಂದರೆ ಇಗರ್ಜಿ ಕಟ್ಟಲು ಬಂದವರಲ್ಲಿ ಇವನೂ ಒಬ್ಬ. ಹೀಗೆ ಬಂದವ ಶಿವಸಾಗರದ ನಯ ನಾಜೂಕುತನ, ನಾಗರೀಕತೆ, ಪಟ್ಟಣದ ಸೊಬಗಿಗೆ ಮರುಳಾಗಿ ಇಲ್ಲಿಯೇ ಮನೆ ಮಾಡಿದ. ಊರಿನಿಂದ ಹೆಂಡತಿ ಮಕ್ಕಳನ್ನು ಕರೆತಂದ. ಈಗ ಈ ಊರಿನವನೆ ಈತ. ಆದರೆ ಹಸಿ ಮಡಲು ಪತ್ರೋಲ ಎಂಬ ಹೆಸರು ಇವನನ್ನು ಬಿಟ್ಟಿಲ್ಲ. +ಮುರುಡೇಶ್ವರದ ಚಂದ್ರ ಹಿತ್ತಲಿನಲ್ಲಿ ಇವನ ಮನೆ. ಒಡೆಯರ ಐನೂರು ಆರುನೂರು ತೆಂಗಿನ ಮರಗಳನ್ನು ನೋಡಿಕೊಂಡಿದ್ದ ಇವನ ಅಜ್ಜ ಹಸಿ ಮಡಲು ಲಾದ್ರು. ಇವನ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮುಖ್ಯ ಉದ್ಯಮವೆಂದರೆ ಮಡಲು ಹೆಣೆಯುವುದು. ತೆಂಗಿನ ಹೆಡೆ ಬಿದ್ದ ತಕ್ಷಣ ಇಲ್ಲವೆ ಕಾಯಿ ಕೀಳಲು ಮೇಲೆ ಹತ್ತಿದಾಗ ಬೇಡದ ಗರಿ ನೋಡಿ ಕತ್ತರಿಸಿ ಕೆಳಗೆ ಹಾಕಿ ಅದನ್ನು ಹೆಣೆಯುವುದು. ಹೆಣೆದು ಹೆಣೆದು ಮಡಲಿನ ರಾಶಿಯನ್ನು ಒಂದೆಡೆ ಒಟ್ಟುವುದು. ಮನೆಗೆ ಹೊದಿಸಲು, ಬಚ್ಚಲಿಗೆ ಮರೆಯಾಗಿ ಕಟ್ಟಲು, ಚಪ್ಪರದ ಮೇಲೆ ಹಾಸಲು, ನೆಲಕ್ಕೆ ಹಾಸಲು ಇದು ಬಳಕೆಯಾಗುತ್ತಿತ್ತು. ಮೀನಿನ ಅಂಗಡಿಗಳವರು, ಜಾತ್ರೆ ಅಂಗಡಿಗಳವರು, ಗುಡಿಸಲು ಕಟ್ಟುವವರು ಬಂದು ಈ ಮಡಲನ್ನು ಕೊಂಡುಕೊಳ್ಳುತ್ತಿದ್ದರು. ಮನೆಯಲ್ಲಿ ಲಾದ್ರು, ಅವನ ಹೆಂಡತಿ, ಹೆಂಡತಿಯ ತಂಗಿ, ಲಾದ್ರುವಿನ ತಾಯಿ, ಅವನ ಅಣ್ಣನ ಹೆಂಡತಿ, ಹೀಗೆ ಏಳೆಂಟು ಜನರಿಗೆ ಇದೇ ಕೆಲಸ. ಯಾರಿಗೇ ಆಗಲಿ ಮಡಲು ಬೇಕೆಂದರೆ ಅವರು ಇವನಲ್ಲಿಗೆ ಬರುತ್ತಿದ್ದರು. ಲಾದ್ರು ನಂತರ ಅವನ ಮಗ ಇದನ್ನು ಮುಂದುವರೆಸಿದ. ಆದರೆ ಪಾತ್ರೋಲ ಇಲ್ಲಿಗೆ ಬಂದದ್ದರಿಂದ ಅಲ್ಲಿ ಈ ಕೆಲಸ ಸೊರಗಿತು. ಆ ಹೆಸರು ಮಾತ್ರ ಇವನಿಗೆ ಖಾಯಂ ಆಯಿತು. +ಪಾದರಿಗೆ ಹಣ ಏಕೆ ಎಂಬ ಪ್ರಶ್ನೆ ಬಂದಾಗ ಅದನ್ನು ನಾನು ಹೇಳುತ್ತೇನೆ ಎಂದು ಪಾತ್ರೋಲ ಮುಂದೆ ಬರಲು ಒಂದು ಕಾರಣವಿತ್ತು. ಇವನ ಹೆಂಡತಿ ಭಟ್ಕಳದವಳು. ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಏನಿದ್ದಾನೆ ಅವನ ಹತ್ತಿರದ ಸಂಬಂಧಿ ಇವನ ಹೆಂಡತಿ. +ಈ ಫ಼ರಾಸ್ಕನಿಗೆ ಮದುವೆ ಮಾಡಿದವರೇ ಪಾದರಿ ಮಸ್ಕರಿನಾಸ್. ಫ಼ರಾಸ್ಕ ಭಟ್ಕಳದ ಇಗರ್ಜಿಯ ಬಟ್ಲರ್ ಆಗಿದ್ದವ. ಬಹಳ ವರ್ಷಗಳಿಂದ ಮಸ್ಕರಿನಾಸರು ಅಲ್ಲಿಗೆ ಬರುವುದಕ್ಕೂ ಮೊದಲು ಅವನು ಅಲ್ಲಿಯ ಬಟ್ಲರೇ. ಮಸ್ಕರಿನಾಸ ಅಲ್ಲಿಗೆ ಬಂದದ್ದು ಸುಂಕೇರಿಯಿಂದ. ಬಂದವರೇ ಬಟ್ಲರ್ ಮದುವೆ ಬಗ್ಗೆ ಗಡಿಬಿಡಿ ಮಾಡಿದರು. ಫ಼ರಾಸ್ಕನಿಗೆ ಭಟ್ಕಳ, ಶಿರಾಲಿ, ಮುರುಡೇಶ್ವರ, ಹೊನ್ನಾವರದಲ್ಲಿ ಹೆಣ್ಣು ಕೊಡುವವರು ಇರಲಿಲ್ಲ ಎಂದಲ್ಲ, ಇದ್ದರು, ಆದರೆ ಮಸ್ಕರಿನಾಸರು ಸುಂಕೇರಿಯಿಂದ ಒಂದು ಹೆಣ್ಣನ್ನು ತಂದರು. ಈಗ ಇಲ್ಲಿಗೂ ಈ ಬಟ್ಲರನನ್ನು ಅವನ ಹೆಂಡತಿಯನ್ನು ಕರೆತಂದಿದ್ದಾರೆ. +“..ಈ ಬಗ್ಗೆ ನಾನು ವಿಶೇಷವಾಗಿ ಹೇಳೋದು ಏನಿಲ್ಲ..” ಎಂದು ಬೇರೆ ಹಸಿಮಡಲು ಪಾತ್ರೋಲ ನುಡಿದ. +“ಹಣ ಯಾಕೆ ಅಂತ ಕೇಳಿದ್ರಲ್ಲ ಅದಕ್ಕೆ ಹೇಳತೇನೆ. ಈ ಫ಼ರಾಸ್ಕನ ಹೆಂಡತಿ ರಜೀನಾ ಇದ್ದಾಳಲ್ಲ ಅವಳ ತಮ್ಮ ವಕೀಲ ಓದ್ತಿದಾನೆ..ಎಲ್ಲಿ? ಮುಂಬೈನಲ್ಲಿ..ಅವನನ್ನು ನಮ್ಮ ಪಾದರಿ ಓದಸ್ತಿದಾರೆ..ಈಗ ತಿಳೀತಲ್ಲ..” ಎಂದು ಪಾತ್ರೋಲ ನಾಲ್ಕನೇ ಗ್ಲಾಸಿಗೆ ಕೈ ಒಡ್ಡಿದ. +ಒಂದೇ ಗ್ಲಾಸನ್ನು ಮುಗಿಸಿ ಊಟ ಮಾಡುತ್ತಿದ್ದ ಬೋನ ಸಣ್ಣದಾಗಿ ಕೆಮ್ಮಿದ- +“ಇನ್ನು ಈ ವಿಷಯ ಬೇಡ” ಎಂದು ಆತ ನುಡಿದ. +“ಪಾದರಿ ಅಂದರೆ ದೇವರ ಮಣಿಯಾರಿ..ಅವರು ನಮಗೋಸ್ಕರ ಇದಾರೆ..ನಾವು ಅವರಿಗೋಸ್ಕರ ಅಲ್ಲ..ಅವರನ್ನು ನೋಡಿಕೊಳ್ಳೋನು ದೇವರು..ಅವನಿಗೆ ಬಿಡೋಣ..” +ಅರ್ಧ ಅಮಲಿನಲ್ಲಿದ್ದವರು, ಅದೇ ಅಮಲೇರುತ್ತಿದ್ದವರು ಈ ಮಾತಿಗೆ ತಲೆದೂಗಿದ್ದರು. ಸಿಮೋನ ಕೂಡ- +“ಅದು ಖರೆ..ಬೋನ ಸಾಹುಕಾರ್ರು ಹೇಳುವ ಮಾತು ಒಪ್ಪಬೇಕಾದ್ದೆ..” ಎಂದ. +ಬಳ್ಕೂರಕಾರಗೂ ಮಾತು ಈ ದಿಕ್ಕಿನಲ್ಲಿ ಸಾಗುವುದು ಬೇಕಿರಲಿಲ್ಲ. +“ಮಾತು ಸಾಕು ಊಟ ಮಾಡಿ” ಎಂದೂ ಅವನು ಹೇಳಿದ. +ಊಟ ಮುಂದುವರೆಯಿತು. ಬಳ್ಕೂರಕಾರ್ ಕರೆದ ಎಲ್ಲರೂ ಊಟಕ್ಕೆ ಬಂದಿದ್ದರು. ಆದರೆ ಅವನಿಗೆ ಬೇಸರವಾದುದೆಂದರೆ ಬಾಮಣರು ಯಾರೂ ಅವನ ಮನೆಯತ್ತ ಸುಳಿದಿರಲಿಲ್ಲ. +…ಇರಲಿ…ಎಂದು ಆತ ನೊಂದುಕೊಂಡ. +ಇನಾಸಜ್ಜಿಯ ತಿಂಗಳ ಪೂಜೆ ಮುಗಿಯುತ್ತಿದ್ದಂತೆಯೇ ನವೆಂಬರ ತಿಂಗಳು ಬಂದಿತು. +* +* +* +ನವೆಂಬರ ತಿಂಗಳ ಮೊದಲ ವಾರದಲ್ಲಿಯೇ ಸರ್ವ ಆತ್ಮರ ಹಬ್ಬ . ಸಿಮಿತ್ರಿಯಲ್ಲಿರುವ ಎಲ್ಲ ಸಮಾಧಿಗಳನ್ನು ಸಂಬಂಧಪಟ್ಟವರು ಶುಚಿಮಾಡಿ ಸುತ್ತ ಬೆಳೆದ ಪೊದೆ ಗಿಡಗಳನ್ನು ಕತ್ತರಿಸಿ, ಸುತ್ತ ಶಗಣಿ ಸಾರಿಸಿ, ಸಮಾಧಿಗಳಿಗೆ ಸುಣ್ಣ ಬಳಿದು, ತಲೆಯ ಬಳಿ ನೆಟ್ಟ ಶಿಲುಬೆ ಮುರಿದು ಬಿದ್ದಿದ್ದರೆ ಅದನ್ನು ಸರಿ ಮಾಡಿ, ಸಮಾಧಿ ಮಂತ್ರಿಸಲು ಬರುವ ಪಾದರಿಗಾಗಿ ಕಾಯುವುದು ಒಂದು ಪದ್ಧತಿ. ಇದರ ಹಿಂದಿನ ದಿನ ರಾತ್ರಿ ಮನೆಗಳಿಗೆ ಆಲ್ಮ(ಆತ್ಮ)ಗಳು ಬರುತ್ತವೆ ಎಂಬುದು ಒಂದು ನಂಬಿಕೆ. ಆಲ್ಮಗಳಿಗಾಗಿಯೇ ಅಡಿಗೆ ಮಾಡಿರಿಸಿ ವಿಶೇಷವಾಗಿ ಪಾಯಸ ಮಾಡಿ ಅದನ್ನು ಯಾರಿಗೂ ಬಡಿಸದೆ ಹಾಗೆಯೇ ಇರಿಸುವುದು ಕೂಡ ಒಂದು ಪದ್ಧತಿ. ಪಾಯಸ ಬಡಿಸು ಬಡಿಸು ಎಂದು ಹಟ ಹಿಡಿದ ಮಕ್ಕಳಿಗೆ- +“ಇಲ್ಲ ಮಗ ರಾತ್ರಿ ಅಜ್ಜ ಬರತಾರೆ..ಅಜ್ಜಿ ಬರತಾಳೆ ಅವರು ಊಟ ಮಾಡಿ ಹೋದ ನಂತರ ಬೆಳಿಗ್ಗೆ ನಾವು ಊಟ ಮಾಡೋಣ..” ಎಂದು ತಾಯಂದಿರು ಸಮಾಧಾನ ಹೇಳುವುದು ಎಲ್ಲ ಕ್ರೀಸ್ತುವರ ಮನೆಗಳಲ್ಲೂ ನಡೆದು ಬಂದಿತ್ತು. ಮನೆಯ ಸಣ್ಣ ಮಕ್ಕಳು ನಂಬುತ್ತಿದ್ದರು ಕೂಡ. +ಅದೇ ದಿನ ದೊಡ್ಡವರ ಕೆಲಸವೆಂದರೆ ಸಮಾಧಿ ಸರಿಪಡಿಸುವುದು. +ಶಿವಸಾಗರದ ಸಿಮಿತ್ರಿಯಲ್ಲಿ ಆಗಲೇ ಸಾಕಷ್ಟು ಸಮಾಧಿಗಳು ತಲೆ ಎತ್ತಿದ್ದವು. ಸಿಮಿತ್ರಿಯಲ್ಲಿ ಸುತ್ತ ಪಾಗಾರ ಹಾಕಲಾಗಿತ್ತು. ಪಾದರಿ ಗೋನಸ್ವಾಲಿಸ್ ಎತ್ತರದ ಒಂದು ಶಿಲುಬೆಯನ್ನು, ಒಂದು ವೇದಿಕೆಯನ್ನು ಮಾಡಿಸಿದ್ದರು. ಪ್ಲೇಗು ಮಾರಿಗೆ ಬಲಿಯಾದ ಜೂಜನ ಸಮಾಧಿಯೇ ಸಿಮಿತ್ರಿಯ ಮೊದಲ ಸಮಾಧಿಯಾದದ್ದು ಒಂದು ವಿಪರ್ಯಾಸವೆ. ಜೂಜ ಸತ್ತ ಸುಮಾರು ಆರು ತಿಂಗಳ ನಂತರ ಶಿರಾಲಿಯ ತಾರಿ ಬಾಗಿಲಿನಿಂದ ಅವನ ತಾಯಿಯ ಅಣ್ಣ ತಮ್ಮಂದಿರು ಎಂದು ಈರ್ವರು ಬಂದು ಊರಿನಲ್ಲಿ ಗಲಾಟೆ ಬೇರೆ ಮಾಡಿದ್ದರು. +“ನಮ್ಮವನು ಅಂತ ಅವನಿದ್ದ..ಅವನ ಹೊಂಡಕ್ಕೆ ಹಿಡಿ ಮಣ್ಣು ಹಾಕಲಿಕ್ಕೆ ನೀವು ನಮಗೆ ಅವಕಾಶ ಮಾಡಿಕೊಡಲಿಲ್ಲ..ನೀವು ನಮಗೊಂದು ಮಾತು ಹೇಳಿ ಕಳುಹಿಸಲಿಲ್ಲ..” ಎಂದು ಸಿಮೋನ ಜೂಜೆಯ ಕತೆಯನ್ನು ವಿಸ್ತಾರವಾಗಿ ಹೇಳಿದ. +ಅರಮನೆ ಕೊಪ್ಪದ ಜೂಜನ ಮನೆಯನ್ನು ರಿಪೇರಿ ಮಾಡಿ, ಅದನ್ನು ಯಾರೋ ಸಾಹೇಬರಿಗೆ ಕುರಿ ದೊಡ್ಡಿ ಮಾಡಿಕೊಳ್ಳಲು ಬಾಡಿಗೆಗೆ ಕೊಟ್ಟು, ತಿಂಗಳ ಬಾಡಿಗೆ ಎಂದು ಒಂದೂವರೆ ಸಾವಿರ ರೂಪಾಯಿಗಳನ್ನು ಮುಂಗಡ ತೆಗೆದುಕೊಂಡ ಹೊರಟ ಅವರು ಮಾಡಿದ್ದ ಒಂದು ಕೆಲಸವೆಂದರೆ ಜೂಜನ ಸಮಾಧಿಯನ್ನು ಕಲ್ಲಿನಿಂದ ಕಟ್ಟಿ, ಕಲ್ಲಿನ ಶಿಲುಬೆ ಇರಿಸಿ ಹೋದದ್ದು. ಹೀಗಾಗಿ ಸಿಮಿತ್ರಿಯ ಮೊದಲ ಸಮಾಧಿ ಒಳ ಹೋದ ತಕ್ಷಣ ಕಣ್ಣಿಗೆ ಬೀಳುತ್ತಿತ್ತು. +ಈ ಸಮಾಧಿಯ ಸಾಲಿನಲ್ಲಿಯೇ ಗಾಡಿ ಸಿಮೋನನ ತಾಯಿಯ ಸಮಾಧಿ ಕೂಡ ಮೊನ್ನೆ ಮೊನ್ನೆ ಕಾಣಿಸಿಕೊಂಡಿತ್ತು. ಮಗನನ್ನು ಮೊಮ್ಮಕ್ಕಳನ್ನು ಬಿಟ್ಟಿರಲಾರದ ಈ ಮುದುಕಿ ಮುರುಡೇಶ್ವರದಿಂದ ಇಲ್ಲಿಗೆ ಬಂದು, ನಿತ್ಯ ಮೊಮ್ಮಕ್ಕಳಿಗೆ ಜಪ, ಪ್ರಾರ್ಥನೆ ಹೇಳಿಕೊಟ್ಟು, ಪಾದರಿ ಊರಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ ತಪ್ಪದೆ ಪೂಜೆ ಕೇಳಿ ಒಂದು ಅರ್ಥದಲ್ಲಿ ದೈವಿಕ ಬದುಕನ್ನು ಸಾಗಿಸಿ ಭಾಗ್ಯವಂತ ಮರಣವನ್ನೇ ಅನುಭವಿಸಿದಳು. +ಬೂದಿ ಬುಧುವಾರದಿಂದ ಆರಂಭವಾಗುವ ತಪಸ್ಸಿನ ಕಾಲವನ್ನು ಕಟ್ಟು ನಿಟ್ಟಾಗಿ ಆಚರಿಸಿದಳು. ಉಪವಾಸ ಹಿಡಿದಳು. ವಯಸ್ಸಾದವರು ಉಪವಾಸ ಇರಬೇಕಾಗಿಲ್ಲ ಎಂದು ಪಾದರಿ ಹೇಳಿದರೂ ಇವಳು ಕೇಳಿರಲಿಲ್ಲ. ಈ ಕಾಲದಲ್ಲಿ ಹೂ ಮುಡಿಯ ಬೇಡಿ ಎಂದು ಸೊಸೆಗೆ ಕೇರಿಯ ಹೆಣ್ಣುಮಕ್ಕಳಿಗೆ ಹೇಳಿದಳು. ಮನೆಯಲ್ಲಿ ಸೀಟಿ ಹೊಡೆಯಬೇಡಿ, ಹಾಡು ಹೇಳಬೇಡಿ, ಕೇಕೆ ಹಾಕಿ ನಗಬೇಡಿ ಎಂದು ಮೊಮ್ಮಕ್ಕಳಿಗೆ ಹೇಳಿದಳು. ಪ್ರತಿ ಶುಕ್ರವಾರ ಇಗರ್ಜಿಗೆ ಹೋಗಿ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡಳು. ಈ ಅವಧಿಯಲ್ಲಿ ಹೇಳುವ ಎಲ್ಲ ಕೀರ್ತನೆಗಳನ್ನು ನೋವು, ವಿಷಾದದ ದನಿಯಲ್ಲಿ ಹೇಳುವಂತೆ ಮಕ್ಕಳಿಗೆ ಸಲಹೆ ನೀಡಿದಳು. ಕ್ರಿಸ್ತ ಪ್ರಭು ಅವನ ಜೀವಿತದ ಈ ನಲವತ್ತು ದಿನ ಏನೆಲ್ಲ ನೋವು, ಹಿಂಸೆ, ಅವಮಾನಗಳನ್ನು ಎದುರಿಸಿದನೋ ಅದನ್ನೆಲ್ಲ ಸ್ಮರಿಸಿಕೊಳ್ಳುವಂತೆ ಪದೇ ಪದೇ ಮೊಮ್ಮಕ್ಕಳಿಗೆ ಹೇಳಿದಳು. ಶುಭ ಶುಕ್ರವಾರದಂದು ಕ್ರಿಸ್ತಪ್ರಭುವನ್ನು ಶಿಲುಬೆಗೆ ಏರಿಸಿದ ಘಟನೆಯನ್ನು ಪಾದರಿ ಗೋನಸ್ವಾಲಿಸ್ ಇಗರ್ಜಿಯಲ್ಲಿ ತಿಳಿಸಿಕೊಟ್ಟರು. ಈ ಘಟನೆಯನ್ನು ವಿವರಿಸುತ್ತ ಅವರ ಧ್ವನಿ ಗದ್ಗದಿತವಾಯಿತು. ಮಾತು ನಿಲ್ಲಿಸಿ ಅವರು ಎರಡು ನಿಮಿಷ ನಿಂತರು. ನಿಲುವಂಗಿಯ ಜೇಬಿನಿಂದ ಬಿಳಿವಸ್ತ್ರ ತೆಗೆದು ಕಣ್ಣೊರೆಸಿಕೊಂಡರು. ಸೆರಮಾಂವಂ ಕೇಳುತ್ತ ಕುಳಿತವರ ಅನುಭವ ಕೂಡ ಇದೇ ಆಯಿತು. +ಶಿಲುಬೆಗೆ ಏರಿಸಿದ ಕ್ರಿಸ್ತನ ಪ್ರತಿಮೆಗೆ ಎಲ್ಲ ಮುತ್ತಿಟ್ಟು ಮನೆಗೆ ಬಂದರು. +ಆ ರಾತ್ರಿ ಏಕೋ ಸಿಮೋನನ ತಾಯಿ ಎದ್ದು ಕುಳಿತಳು. +“ಸಿಮೋನ ಮಕ್ಕಳೆಲ್ಲ ಮಲಗಿದ್ದಾರಾ?” ಎಂದು ಕೇಳಿದರು. +ಸಿಮೋನನಿಗೆ ಅನುಮಾನವಾಗಿ ಆತ ಮಕ್ಕಳನ್ನು, ಹೆಂಡತಿಯನ್ನು ಕೂಗಿ ಎಬ್ಬಿಸಿ ಅವರನ್ನು ತಾಯಿಯ ಬಳಿ ಕರೆತರುವಷ್ಟರಲ್ಲಿ ಈ ಮುದುಕಿ ಎದ್ದು ದೇವರ ಪೀಠದ ಬಳಿ ಹೋಗಿದ್ದವಳು ಅಲ್ಲೇ ಕುಸಿದಿದ್ದಳು. +ಶಿವಸಾಗರದ ಸಿಮಿತ್ರಿಗೆ ಇನ್ನೊಂದು ಸೇರ್ಪಡೆಯಾಯಿತು. ಸಿಮೋನ ತಾಯಿಗಾಗಿ ಕಲ್ಲಿನ ಸಮಾಧಿ ಕಟ್ಟಿಸಿದ. +ಬಳ್ಕೂರಿನ ಕೈತಾನನ ಅತ್ತೆ ಗಂಡಬಾಳೆಯ ಇನಾಸಜ್ಜಿ ಕೊನೆಗಾಲದಲ್ಲಿ ಇಲ್ಲಿ ಬಂದು ಸತ್ತಳು. ಇವಳ ಸಮಾಧಿ ಕಟ್ಟಿಸಿ ಬಳ್ಕೂರಕಾರ ಅತ್ತೆಗೊಂದು ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟ. +ಹೀಗೆಯೇ ಪಾಸ್ಕೋಲ ಮೇಸ್ತ್ರನ ಹೆಂಡತಿ ರೀತಾಳ ತಮ್ಮ ಬಹಳ ವರ್ಷ ಹೆಸರು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ಸಿಮಿತ್ರಿ ಸೇರಿಕೊಂಡ. +ಊರಿಗೆಲ್ಲ ಆಗಾಗ್ಗೆ ಕಾಡು ಹಂದಿ ಮಾಂಸವನ್ನೋ ಜಿಂಕೆ ಮಾಂಸವನ್ನೋ ಬೇಟೆಯಾಡಿ ತಂದು ಪಾಲು ಮಾಡಿ ಮಾರುತ್ತಿದ್ದ ಹಂದಿಗುಸ್ತೀನ ಕೂಡ ಇಲ್ಲಿಯೇ ಇದ್ದ. ಬಲಗಾಲುದ್ದ ಬಾಲ್ತಿದಾರನ ಸಮಾಧಿ ಕೂಡ ಇದೇ ಸಾಲಿನಲ್ಲಿತ್ತು. +ಊರಿನ ಹೊಸ ಇಗರ್ಜಿ ಕಟ್ಟಲೆಂದೇ ಬಂದು ಶಿವಸಾಗದವನೇ ಆಗಿ ಹೋದ ಭಟ್ಕಳದ ಸಾನ್ ಪುತ್ತು ಮೂರು ತಿಂಗಳು ಕ್ಷಯರೋಗದಿಂದ ನರಳಿ, ಗುಣಕಾಣದೆ ಸತ್ತಿದ್ದ. ಅವನನ್ನು ಕೂಡ ಈ ಸಿಮಿತ್ರಿಯಲ್ಲಿಯೇ ಮಣ್ಣು ಮಾಡಲಾಗಿತ್ತು. +ಮೊನ್ನೆ ಮೊನ್ನೆ ಬಂದ ಹೆಲ್ತ ವಿಸಿಟರ್ ವಿನ್ಸೆಂಟನ ಮಾವ ಅಳಿಯನ ಮನೆಗೆ ಬಂದವ, ಬಂದ ಮೂರನೇ ದಿನ ಕುಡಿದದ್ದು ಜಾಸ್ತಿಯಾಗಿ ಸತ್ತಿದ್ದ. ಮೊದಲಿನಿಂದಲೂ ಅತಿಯಾಗಿ ಕುಡಿಯುತ್ತಿದ್ದ ಆತ ಶಿವಸಾಗರಕ್ಕೆ ಬಂದವನೇ ಕುಡಿಯಲಾರಂಭಿಸಿ, ಕೊನೆಗೆ ಅದು ಹೆಚ್ಚಾಗಿ ಪ್ರಾಣ ಬಿಟ್ಟಿದ್ದ. ಅವನ ಶವವನ್ನು ದೂರದ ಮಂಗಳೂರಿಗೆ ಒಯ್ಯುವ ಅನುಕೂಲತೆ ಇಲ್ಲದ್ದರಿಂದ ಅವನನ್ನು ಇಲ್ಲಿ ಹುಗಿಯಲಾಗಿತ್ತು. ವಿನ್ಸೆಂಟ್ ತನ್ನ ಮಾವನ ಸಮಾಧಿಯನ್ನು ಉಳಿದೆಲ್ಲ ಸಮಾಧಿಗಿಂತಲೂ ಉತ್ತಮವಾಗಿ ಭವ್ಯವಾಗಿ ಕಟ್ಟಿಸಿ ಸಮಾಧಿಯ ಶಿಲುಬೆಗಲ್ಲಿನ ಮೇಲೆ ತನ್ನ ಮಾವನ ಹೆಸರನ್ನು, ಹುಟ್ಟಿದ ತಾರೀಖನ್ನು ಸತ್ತ ತಾರೀಖನ್ನು ಬರೆಸುವುದರ ಜೊತೆಗೆ-ನಿಮ್ಮ ನೆನಪು ಸದಾ ನಮ್ಮಲ್ಲಿ ಹಸಿರಾಗಿರುತ್ತದೆ ಎಂದು ಇಂಗ್ಲೀಷಿನಲ್ಲಿ ಬರೆಸಿದ್ದ. ಶಿವಸಾಗರದ ಸಿಮಿತ್ರಿಯಲ್ಲಿ ಹೀಗೆ ಬರೆಸಲಾದ ಸಮಾಧಿ ಇದೊಂದೆ ಆಗಿತ್ತು. +ಹೀಗೆ ಸಿಮಿತ್ರಿಯಲ್ಲಿ ಇಪ್ಪತ್ತು ಇಪ್ಪತೈದು ಸಮಾಧಿಗಳು ಎದ್ದು ನಿಂತಿದ್ದವು. ಒಂದೆರಡು ಸಮಾಧಿಗಳು ಕಟ್ಟಿಸದೇ ಇದ್ದುದರಿಂದ ನೆಲಮಟ್ಟಕ್ಕೆ ಇಳಿದು ನಾಶವಾಗಿದ್ದವು. ಕೆಲವು ಸಮಾಧಿಗಳ ಬಳಿ ನೆಟ್ಟ ಶಿಲುಬೆ ಮುರಿದಿತ್ತು. +ಮುಖ್ಯವಾಗಿ ಸಿಮಿತ್ರಿಯ ತುಂಬ ಗಿಡ, ಪೊದೆಗಳು, ತುಂಬೆ ಗಿಡಗಳು, ಕಾಡು ಬಳ್ಳಿ ಹಬ್ಬಿತ್ತು. ನಾಳೆ ಸಮಾಧಿಗಳ ಪೂಜೆ ಮಾಡಬೇಕೆಂದರೆ ಸಿಮಿತ್ರಿ ಮೊದಲು ಶುಚಿಯಾಗಬೇಕು. ಸಮಾಧಿಗಳನ್ನು ಸಂಬಂಧಪಟ್ಟವರು ನೋಡಿಕೊಳ್ಳುತ್ತಾರೆ. ಆದರೆ ಸಿಮಿತ್ರಿಯನ್ನು ಶುಚಿ ಮಾಡುವವರು ಯಾರು? +ಪಾದರಿ ಮಸ್ಕರಿನಾಸ ಇದಕ್ಕೊಂದು ದಾರಿ ಕಂಡು ಹಿಡಿದರು. ಹಿಂದಿನ ಭಾನುವಾರ ಜ್ಞಾನೋಪದೇಶಕ್ಕೆ ಬಂದ ಯುವಕರಿಗೆ- +“ನೀವು ಈ ಬಾರಿ ಸಿಮಿತ್ರಿ ಶುಚಿ ಮಾಡಬೇಕು..ಶನಿವಾರ ಸರ್ವ ಆತ್ಮರ ಹಬ್ಬ..ಶುಕ್ರವಾರ ನೀವೆಲ್ಲ ಈ ಕೆಲಸ ಮಾಡಬೇಕು..” ಎಂದರು. ಹಾಗೆಯೇ ಜನರನ್ನು ಕುರಿತು ಇಗರ್ಜಿಯಲ್ಲಿ- +“ಯಾರ ನೆಂಟರ ಇಷ್ಟರ ಸಮಾಧಿಗಳು ಸಿಮಿತ್ರಿಯಲ್ಲಿವೆಯೋ ಅವರೆಲ್ಲ ಅಂತಹ ಸಮಾಧಿಗಳನ್ನು ಶುಚಿ ಮಾಡಿ, ಸುಣ್ಣ ಬಣ್ಣ ಮಾಡಿಸಿ..ಬಂಗಲೆಗೆ ಬಂದು ಹೆಸರು ಹೇಳಿ ಒಂದು ರೂಪಾಯಿ ಕೊಟ್ಟು ಚೀಟಿ ಮಾಡಿಸಿ..ನಾನು ಸಮಾಧಿ ಮಂತ್ರಿಸಲು ಬಂದಾಗ ಹೀಗೆ ಯಾರ ಚೀಟಿ ಇದೆಯೋ ಅಂತಹ ಸಮಾಧಿಗಳನ್ನು ಮಾತ್ರ ಮಂತ್ರಿಸುತ್ತೇನೆ..ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೂವು ಹಾಕಿ ನೀವು ನಿಮ್ಮ ನಿಮ್ಮ ಸಂಬಂಧಿಗಳ ಸಮಾಧಿ ಬಳಿ ಕಾದು ನಿಂತಿರಬೇಕು. ಸಮಾಧಿ ಮಂತ್ರಿಸುವ ಸಂದರ್ಭದಲ್ಲಿ ಗೌರವ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಅಂದರೆ ಸತ್ತು ಪುಲಗತ್ತಿಯಲ್ಲಿರುವ ಆತ್ಮಗಳಿಗೆ ಬೇಗನೆ ಸದ್ಗತಿ ದೊರೆಯುತ್ತದೆ”. ಎಂದು ಹೇಳಿದ್ದರು. +ಜ್ಞಾನೋಪದೇಶ ನಡೆಯುವಾಗ ಪಾದರಿಗಳು ಕೇವಲ ಯುವಕರಿಗೇನೆ ಕೆಲಸ ಹೇಳಿದ್ದು ಯುವತಿಯರಿಗೆ ಸಂತೋಷವನ್ನುಂಟು ಮಾಡಿತು. ಹೀಗಾಗಿ ಯುವತಿಯರ ನಡುವೆ ಇದ್ದ ಪಾಸ್ಕೋಲನ ಮಗಳು ಜೊಸೆಫ಼ಿನ, ಸುತಾರಿ ಇನಾಸನ ಕೊನೆಯ ಮಗಳು ಪಾವಲೀನಾ, ಎಮ್ಮೆ ಮರಿಯಳ ಮಗಳು ಫ಼ಿಲೋಮೆನಾ. +“ಪದ್ರಾಬಾ,…ಪದ್ರಾಬಾ..ನಮಗೆ ಏನೂ ಕೆಲಸ ಇಲ್ಲವೇ?” ಎಂದು ಕೇಳಿದರು. +ಈ ಹುಡುಗಿಯರ ತಂಡ ಯಾವಾಗಲೂ ಪಾದರಿ ಮಸ್ಕರಿನಾಸರ ಸುತ್ತ ಘೇರಾಯಿಸಿಕೊಂಡಿರುತ್ತಿತ್ತು. ಹಾ ಹೂ ಎಂದು ಕೂಗುತ್ತ ಅವರ ಹೊಟ್ಟೆ, ಬೆನ್ನು ತೋಳುಗಳನ್ನು ತೋರು ಬೆರಳಿನಿಂದ ತಿವಿಯುತ್ತ, ಕೈಯಲ್ಲಿ ಬೆತ್ತ ಹಿಡಿದು ಅವರತ್ತ ಬೆತ್ತ ಬೀಸಿದಂತೆ ಹೆದರಿಸುತ್ತ ತರುಣಿಯರ ತಂಡದ ಚೀತ್ಕಾರಕ್ಕೆ ಹುಸಿ ಮುನಿಸಿಗೆ ನಗೆಗೆ ಕಾರಣವಾಗುತ್ತಿದ್ದರು, ಪಾದರಿ ಮಸ್ಕರಿನಾಸ. +ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಹುಡುಗರಿಗೆ ಮಾತ್ರ ಕೆಲಸ ಹೇಳಿದರಲ್ಲ ಎಂದು ಇವರಿಗೆ ಸಂತಸವಾದರೂ, ಈ ನೆಪದಲ್ಲಿ ಇಗರ್ಜಿಗೆ ಬರುವ, ಇಲ್ಲಿ ತಿರುಗಾಡುವ ಅವಕಾಶ ತಪ್ಪಿ ಹೋಯಿತಲ್ಲ ಎಂದು ವ್ಯಥೆಯಾಯಿತು. ಹೀಗೆಂದೇ ಫ಼ಿಲೋಮೆನಾ ಬಾಯಿ ಬಿಟ್ಟು ಕೇಳಿದಳು. ಜೋಸೆಫ಼ಿನ ಪಾವಲಿನಾ ತಮ್ಮ ದನಿ ಸೇರಿಸಿದರು. +“…ಹೋ!” ಎಂದು ಅಚ್ಚರಿ ವ್ಯಕ್ತಪಡಿಸಿದರು ಪಾದರಿ. +“..ನೀವೂ ಬರಬೇಕು..ನನ್ನ ಜತೆ..ಸಮಾಧಿ ಮಂತ್ರಿಸುವಾಗ ಕೀರ್ತನೆ ಹೇಳಲಿಕ್ಕೆ ನೀವು ಬೇಕು..” ಎಂದರು. +“ಬರ್ತೀರಿ ಅಲ್ಲ? ಎಂದು ಬೇರೆ ಕೇಳಿದರು. +“ಬರ್ತೀವಿ..ಬರ್ತೀವಿ..” +ಎಂದು ರಾಗವಾಗಿ ಎಲ್ಲ ಹುಡುಗಿಯರೂ ಒಂದೇ ಸಾರಿ ಆಲಾಪಿಸಿದರು. +* +* +* +ಜ್ಞಾನೋಪದೇಶ ಮುಗಿದು ಮಕ್ಕಳು, ಯುವಕ ಯುವತಿಯರು ಚದುರಿ ಹೋಗತೊಡಗಿದಾಗ ಸುತಾರಿ ಇನಾಸನ ಮಗ ಪಾಸ್ಕು ಕೊಂಚ ಹಿಂದೆಯೇ ಉಳಿದ. ಎಲ್ಲ ಯುವಕರೂ ಇಗರ್ಜಿಯಿಂದ ಹೊರಬಿದ್ದ ನಂತರ ಹೊರಬಂದ ಹುಡುಗಿಯರ ತಂಡ ಕೂಡ ಎರಡು ಮೂರು ಗುಂಪುಗಳಾಗಿ ಒಡೆದುಕೊಂಡು ಪಾಸ್ಕೋಲ ಮೇಸ್ತ್ರಿಯ ಕೊನೆಯ ಮಗಳು ಜೋಸೆಫ಼ಿನ್ ಇಗರ್ಜಿ ಬಾವಿಯತ್ತ ತಿರುಗಿ- +“ನಾನು ಹೀಗೇ ಬರತೀನಿ ಕಣೆ ಫ಼ಿಲೋಮಿನಾ” ಎಂದು ಹೇಳಿ ಇಗರ್ಜಿ ಬಾವಿಯತ್ತ ತಿರುಗಿದಾಗ ಗಂಟೆಯ ಗೋಪುರದ ಕೆಳಗೆ ನಿಂತ ಪಾಸ್ಕುವಿನ ಮೈ ಎಲ್ಲ ಬಿಸಿಯಾಗಿ ಎದೆ ಬಡಿದುಕೊಳ್ಳತೊಡಗಿತು. ಜತೆಗೆ ಅಪಾರ ಸಂತೋಷವೂ ಆಯಿತು. +ಪಾದರಿ ಗೋನಸ್ವಾಲಿಸರು ಶಿವಸಾಗರ ಬಿಡುವ ಮುನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಇಗರ್ಜಿಯ ಬಲ ಪಾರ್ಶ್ವದಲ್ಲಿ ಪಾಸ್ಕೋಲ ಮೇಸ್ತ್ರಿಯ ಮನೆಯ ನೇರಕ್ಕೆ ಒಂದು ಬಾವಿ ತೆಗೆಸಿದ್ದು. ಮೊದಲೆಲ್ಲ ಗಾಡಿ ಸಿಮೋನನ ಮನೆಯ ಬಾವಿಯಿಂದಲೇ ಬೋನನೀರು ತರುತ್ತಿದ್ದ. ಇಗರ್ಜಿಯ ಸುತ್ತ ಬೇಲಿ ಕಟ್ಟಿದ ಮೇಲೂ ಇಲ್ಲಿಂದಲೇ ನೀರು ತರುವ ಅವನ ಕಾಯಕ ಮುಂದುವರೆದಿತ್ತು. ಇಲ್ಲಿ ಇಗರ್ಜಿ ಕೆಲಸ ಪ್ರಾರಂಭವಾದಾಗ ಆ ಕಾಮಗಾರಿಗೆ ಸಿಮೋನ ಗಾಡಿಯಲ್ಲಿ ಊರ ಕೆರೆಯಿಂದ ನೀರು ತರಿಸಿ, ತಾತ್ಕಾಲಿಕವಾಗಿ ಕಟ್ಟಲಾದ ನೆಲ ಟ್ಯಾಂಕಿಯಲ್ಲಿ ಅದನ್ನು ತುಂಬಿ ಇರಿಸಿಕೊಳ್ಳುತ್ತಿದ್ದ. +ಇಗರ್ಜಿ ಕಟ್ಟಿ ಮುಗಿದ ನಂತರ ಇಗರ್ಜಿಗೆ ಒಂದು ಬಾವಿ ಇದ್ದರೆ ಅನುಕೂಲ ಎನಿಸಿತು ಗೋನಸ್ವಾಲಿಸರಿಗೆ. ಹಸಿರು ಕಡ್ಡಿ ಹಿಡಿದು ಜಲ ನೋಡುವ ಓರ್ವರು ಇಗರ್ಜಿಯ ಸುತ್ತ ತಿರುಗಾಡಿ ಕೊನೆಗೆ ಬಲ ಪಾರ್ಶ್ವದಲ್ಲಿ ತುಸು ದೂರ ಒಂದು ಜಾಗ ಗುರುತಿಸಿದರು. ಅಲ್ಲಿ ಬಾವಿ ತೆಗೆದಾಗ ಒಳ್ಳೆಯ ನೀರು ಸಿಕ್ಕಿತು. ಇಗರ್ಜಿಯ ನೀರಿನ ಸಮಸ್ಯೆ ಕೊನೆಗೂ ಬಗೆಹರಿಯಿತು. ಆದರೆ ಇಲ್ಲಿ ಬಾವಿಯಾದದ್ದು, ಬಾವಿಯಲ್ಲಿ ಹೇರಳ ನೀರಿರುವುದು, ಬಾವಿಯ ಆಚೆಗೆ ಇರುವ ಎರಡು ಮೂರು ಮನೆಗಳವರಿಗೆ ಆಸೆ ಕೆರಳಿಸಿತು. +ಜಿಲ್ಲಾಧಿಕಾರಿ ಮೆಗ್ಗಾನ ಸಾಹೇಬ ಇಗರ್ಜಿಗೆ ಬಂದು ಹೋದ ನಂತರ ಇಗರ್ಜಿ ಕೇರಿಯಲ್ಲಿ ಒಂದು ಸರಕಾರಿ ಬಾವಿ ತೋಡಲಾಗಿದ್ದರೂ ಅದರಲ್ಲಿ ನೀರು ತುಂಬಾ ಆಳದಲ್ಲಿತ್ತು. ಬೆಳಗಿನ ಜಾವ ಸೇದುಕೊಂಡರೆ ನೀರು ಸಿಗುತ್ತಿತ್ತಲ್ಲದೆ ಅನಂತರ ಕೊಡಪಾನದ ಬದಲು ತಂಬಿಗೆ ಹಾಕಿ ನೀರನ್ನು ಗೋರಬೇಕಾಗುತ್ತಿತ್ತು. ಹೀಗಾಗಿ ಸಾನ ಬಾವಿ ಪೆದ್ರು, ಪಾಸ್ಕೋಲ ಮೇಸ್ತ್ರಿ,ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ ಮೊದಲಾದವರೆಲ್ಲ ಸರಕಾರಿ ಬಾವಿ ಆಯಿತೆಂದು ಸಂತಸ ಪಟ್ಟವರು. ಆ ಬಾವಿಯ ಕತೆ ಹೀಗಾದುದರಿಂದ ಮತ್ತೆ ಹಿಂದಿನಂತೆಯೇ ಸಿಮೋನ ಮೇಸ್ತ್ರನ ಬಾವಿ, ಎಮ್ಮೆ ಮರಿಯಾಳ ಬಾವಿ, ಈ ತುದಿಯಲ್ಲಿ ಮಿಂಗೇಲಿ ಬಾವಿ ಎಂದು ನೀರಿಗೆ ಹೋಗತೊಡಗಿದರು. +ಆದರೆ ಇಗರ್ಜಿ ಜಾಗದಲ್ಲಿ ಒಂದು ಬಾವಿ ಆದದ್ದು, ಪಾದರಿ ಅವರ ಬಟ್ಲರ್ ಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಬಾವಿ ಸದಾ ತುಂಬಿರುವುದು ನೀರಿಗಾಗಿ ಪರದಾಡುತ್ತಿದ್ದವರಿಗೆ ಸಂತಸವನ್ನುಂಟು ಮಾಡಿತು. ಆದರೆ ನಡುವೆ ಬೇಲಿ ಇತ್ತು. ಒಂದು ಕಂದಕವಿತ್ತು. ಪಾದರಿಯ ಹೆದರಿಕೆ ಬೇರೆ. ಕೊನೆಗೆ ಪಾಸ್ಕೋಲ ಮೇಸ್ತ್ರಿ ಧೈರ್ಯ ಮಾಡಿ ಗೋನಸ್ವಾಲಿಸರಲ್ಲಿ ಬಂದ. +“ಪದ್ರಾಬಾ..” ಎಂದ. +“ಕೋಣ್ರೆ ತೋ..” ಎಂದವರು ಕೇಳಿದರು, ಟಪಾಲು ನೋಡುತ್ತ ಕುಳಿತವರು. +“ನಾನು ಪದ್ರಾಬ ಪಾಸ್ಕೋಲ” +“ಹಾಂ..ಏನು?” +ವಿನಯದಿಂದಲೇ ಪಾಸ್ಕೋಲ ತನ್ನ ಹಾಗೂ ಅಕ್ಕಪಕ್ಕದ ಮನೆಗಳವರ ನೀರಿನ ತಾಪತ್ರಯ ತೋಡಿಕೊಂಡ. +“ಹಾ..ಹೇಳು ಏನು ಮಾಡಬೇಕು”? ಅವನನ್ನೇ ಕೇಳಿದರು ಅವರು. +“ಅಲ್ಲಿ ಓಡಾಡಲಿಕ್ಕೆ ಒಂದು ದಣಪೆ ಇಟ್ಟರೆ ನಮಗೆ ನೀರು ಸಿಗುತ್ತಿತ್ತು” +“ನೀರು ತೊಗೊಂಡು ಹೋಗಿ..ಅದು ಇಗರ್ಜಿ ಬಾವಿ..ಧಾಜಣರಿಗೆ ಸೇರಿದ್ದು..ಆದರೆ..” ಅವರು ಮಾತು ನಿಲ್ಲಿಸಿದರು. +ಮತ್ತೆ ಜನ ಚೌಡಿ ಬನಕ್ಕೆ ಬರತೊಡಗಿದರೆ? +“ಇಲ್ಲ..ಪದ್ರಾಬ..ನೀರಿಗಲ್ಲದೇ ನಾವು ಬೇರೆ ಯಾವ ಕಾರಣಕ್ಕೂ ಅಲ್ಲಿಂದ ಬರೋದಿಲ್ಲ..” ಎಂದ ಆತ. +ಅಂತೆಯೇ ಅಲ್ಲೊಂದು ದಣಪೆ ತೆರೆದುಕೊಂಡಿತ್ತು. ಆ ನಾಲ್ಕು ಮನೆಗಳವರು ನೀರು ಕೊಂಡೊಯ್ಯತೊಡಗಿದರು. ಆದರೆ ಕ್ರಮೇಣ ಅಲ್ಲೊಂದು ಕಾಲು ದಾರಿ ಮೈತಳೆಯಿತು. ಇಗರ್ಜಿಗೆ ಬರುವವರು, ಇಗರ್ಜಿಯಿಂದ ಹೋಗುವವರು ಹೀಗೆಯೇ ತಿರುಗಾಡಲಾರಂಭಿಸಿದರು. ಪಾದರಿ ಮಸ್ಕರಿನಾಸ ಬಂದ ನಂತರವಂತೂ ಈ ದಾರಿ ಮತ್ತೂ ತೆರೆದುಕೊಂಡು ಅಗಲವಾಯಿತು. +ಹೀಗೆಂದು ಹಿಂದಿನಂತೆಯೇ ಪೊದೆಗಳು, ಮರಗಳು, ಗಿಡಗಳು, ಬಿದಿರ ಹಿಂಡು ಇದ್ದೇ ಇತ್ತು. ಸುತ್ತು ಬಳಸಿಕೊಂಡು ಬರುವುದರ ಬದಲು ಇದು ಸಮೀಪವಾಗಿದ್ದರಿಂದ ಇಗರ್ಜಿ ಸುತ್ತಲಿನ ಸಮೀಪದ ಏಳೆಂಟು ಮನೆಗಳವರು, ಮಕ್ಕಳು ಇದನ್ನೇ ಬಳಸಿಕೊಳ್ಳತೊಡಗಿದರು. +* +* +* +ಜೋಸೆಫ಼ಿನಾ ತಲೆಯ ಮೇಲಿನ ಏವ್ ತೆಗೆದು ಮಡಚಿ ಕೈಯಲ್ಲಿರಿಸಿಕೊಂಡು ಕಾಲುದಾರಿಯತ್ತ ತಿರುಗಿ ಅಷ್ಟು ದೂರ ಹೋದವಳು ತುಸು ತಡೆದು ನಿಂತಳು. ಹಿಂದಿನಿಂದ ಪಾಸ್ಕು ಬಂದು ಅವಳ ಜತೆ ಸೇರಿಕೊಂಡ- +” ಈದತೋರ್ನ ಯಾವಾಗ ಮುಗಿಯುತ್ತೆ ಅನ್ನಿಸಿ ಬಿಡುತ್ತೆ ಅಲ್ಲ?” ಎಂದು ಆತ ತಟ್ಟನೆ ಮಾತಿಗೆ ತೊಡಗಿದಾಗ. +ಇಬ್ಬರೂ ಕಾಲುದಾರಿ ಬಿಟ್ಟು ವಿಶಾಲವಾಗಿ ನೆಲದವರೆಗೂ ರೆಂಬೆಕೊಂಬೆ ಬಿಟ್ಟು ಹರಡಿಕೊಂಡ ಮಾವಿನ ಮರದ ಮರೆಗೆ ಸರಿದರು. +“..ದತೋರ್ನ ಕಲೀಬೆಕಲ್ಲ” +“ಏನದು ಕಲಿತದ್ದೆ ಕಲಿಯೋದು..ದೇವರ ಹತ್ತು ಕಟ್ಟಲೆಗಳು..ಇಗರ್ಜಿ ಮಾತೆಯ ಕಟ್ಟಲೆಗಳು..ಪಾಪ ನಿವೇದನಾ ಪ್ರಾರ್ಥನೆ. ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ..ಥೂ! ಥೂ! ಬೇಸರ ಬಂದು ಹೋಗುತ್ತೆ..” +ಮಾವಿನ ಮರದ ಸಣ್ಣ ರೆಂಬೆ ಮುರಿದು ಎಲೆಗಳನ್ನು ಹರಿದು ಚೆಲ್ಲುತ್ತ ಸಿಡಿಮಿಡಿಗೊಂಡ ಪಾಸ್ಕು. +“ದತೋರ್ನಗೆ ಬರಲಿಲ್ಲ ಅಂದರೆ ನಾಳೆ ಮದುವೆ ಇಲ್ಲ..ಮದುವೆ ಬೇಕು ಅನ್ನೋದಾದ್ರೆ ದತೋರ್ನ ಕಲೀಬೇಕು.” +ನಗು ನಗುತ್ತ ಕೆಣಕಿದಳು ಜೋಸೆಫ಼ಿನಾ. +ಕೆಲವೇ ತಿಂಗಳ ಹಿಂದೆ ಸಾಂತಾ ಮೋರಿ ಮಗ ಬಸ್ತು ಸಿದ್ಧಾಪುರದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಸಿದ್ಧಾಪುರದಲ್ಲಿ. ಆದರೆ ನಿಯಮದ ಪ್ರಕಾರ ಇಲ್ಲಿಯ ಪಾದರಿ ಚೀಟಿಕೊಡಬೇಕು. ಈ ಚೀಟಿ ತೆಗೆದುಕೊಂಡು ಹೋಗಿ ಅಲ್ಲಿಯ ಪಾದರಿಗೆ ಕೊಟ್ಟರೆ ಮದುವೆ. +ಬಸ್ತು ಮಸ್ಕರಿನಾಸರ ಬಳಿ ಹೋಗಿ +“ಪದ್ರಾಬ…ಚೀಟಿ ಕೊಡಿ” ಎಂದು ಕೇಳಿದಾಗ ಅವರು- +“ಸಾಂತಾಮೋರಿ ಎರಡು ವರ್ಷದಿಂದ ಅನ್ವಾಲ ಕಾಯಿದೆ ಕೊಟ್ಟಿಲ್ಲ..” ಎಂದು ಮೊದಲ ತಕರಾರು ತೆಗೆದರು. ನಂತರ “ನೀನು ಪ್ರತಿ ಭಾನುವಾರ ಇಗರ್ಜಿಗೆ ಬರುವುದಿಲ್ಲ”. ಇದು ಎರಡನೇ ತಕರಾರು. +“ವರ್ಷಕ್ಕೆ ಒಂದು ಸಾರಿಯಾದರೂ ಪಾಪ ನಿವೇದನೆ ಮಾಡಿ ದಿವ್ಯಪ್ರಸಾದ ಸ್ವೀಕರಿಸಬೇಕು ಎಂಬುದು ಇಗರ್ಜಿ ಮಾತೆಯ ಕಟ್ಟಲೆ..ಅದನ್ನು ಈಡೇರಿಸುತ್ತಿದ್ದೀಯಾ?” ಎಂದು ಮೂರನೇ ಪ್ರಶ್ನೆ ಕೇಳಿದರು. +ಈ ಮೂರೂ ಪ್ರಶ್ನೆಗಳನ್ನು ಕೇಳಿಯೂ ಬಸ್ತು ನೀಡಿದ ಉತ್ತರಗಳನ್ನು ಒಪ್ಪಿಕೊಂಡ ಮಸ್ಕರಿನಾಸರು- +“ಅದೆಲ್ಲ ಸರಿ..ನಿನಗೆ ಎಲ್ಲ ಜಪಮಂತ್ರಗಳು ಬರುತ್ತಾ? ಎಲ್ಲಿ ಪರಲೋಕ ಮಂತ್ರ ಹೇಳು..ದೇವರ ಹತ್ತು ಕಟ್ಟಲೆಗಳನ್ನು ಹೇಳು? ಪಾಪ ನಿವೇದನಾ ಪ್ರಾರ್ಥನೆ ಹೇಳು” ಎಂದು ಕೇಳಿ ಬಸ್ತುವನ್ನು ಗೊಂದಲದಲ್ಲಿ ಕೆಡವಿದರು. ಅವನಿಗೆ ಎಲ್ಲವೂ ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು- +“ನಾಳೆಯಿಂದ ಬಾ..ಎಲ್ಲ ಕಲಿತ ನಂತರ ನಿನಗೆ ಚೀಟಿ..” ಎಂದು ನುಡಿದು ಬಿಟ್ಟರು. +ಬಸ್ತು ನಿತ್ಯ ಕೆಲಸ ಮುಗಿಸಿಕೊಂಡು ಬಂದು ಪಾದರಿಯ ಬಂಗಲೆಗೆ ಹೋಗುವುದನ್ನು ನೋಡಿ ಜನ ನಕ್ಕರು. ಏಪ್ರಿಲ್ ತಿಂಗಳಲ್ಲಿ ತಪಸ್ಸಿನ ಕಾಲ ಮುಗಿದ ಕೂಡಲೇ ಆಗಬೇಕಾದ ಬಸ್ತು ಮದುವೆ ಮಳೆಗಾಲದ ಜೂನ್ ತಿಂಗಳಲ್ಲಿ ಆಗಿ ಜನ- +“ದತೋರ್ನ ಕಲೀದಿದ್ದರೆ ಹೀಗೆ..ಪಾಯಸ ಮಳೆನೀರಿನಿಂದ ತೆಳ್ಳಗಾಗಿ ಹೋಗುತ್ತೆ..” ಎಂದು ನಕ್ಕರು. +ಇದು ಎಲ್ಲ ಯುವಕ ಯುವತಿಯರಿಗೂ ಒಂದು ಎಚ್ಚರಿಕೆಯಾಯಿತು. +“ಅದು ಹೌದು” ಎಂದ ಪಾಸ್ಕು ಬಸ್ತುವಿಗಾದ ಅವಸ್ಥೆಯನ್ನು ನೆನಸಿಕೊಂಡು +ಪಾಸ್ಕು ಹಾಗೂ ಜೋಸೆಫ಼ಿನ ಮದುವೆ ಬಗ್ಗೆ ಮಾತನಾಡುವಲ್ಲಿ ಒಂದು ಉದ್ದೇಶವಿತ್ತು. ತಾವಿಬ್ಬರೂ ಮುಂದೆ ಮದುವೆಯಾಗಬೇಕೆಂದು ಇವರು ನಿರ್ಧರಿಸಿದ್ದರು. ಇಬ್ಬರ ನಡುವೆ ಬಹಳ ದಿನಗಳಿಂದ ನಡೆದು ಬಂದ ಸ್ನೇಹ ಅವರಿಗೆ ಗೊತ್ತಿಲ್ಲದೇನೆ ಪ್ರೇಮವಾಗಿ ಪರಿವರ್ತನೆ ಹೊಂದಿತ್ತು. ಚಿಕ್ಕಂದಿನಿಂದಲೂ ಇವರು ಒಟ್ಟಿಗೇನೆ ಆಟವಾಡಿಕೊಂಡು ಬೆಳೆದಿದ್ದರು. ಒಂದೆರಡು ವರ್ಷ ಶಾಲೆಗೂ ಒಟ್ಟಿಗೇನೆ ಹೋಗಿ ಬಂದಿದ್ದರು. ಪಾದರಿ ಗೋನಸ್ವಾಲಿಸ್ ಶಿವಸಾಗರಕ್ಕೆ ಬರುವ ಹೊತ್ತಿಗೆ ಇಲ್ಲಿಯ ಕ್ರೀಸ್ತುವರು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಜತೆಗೇನೆ ಕೆಲಸಕ್ಕೆ ಕರೆದೊಯ್ಯುವುದನ್ನು ಅಭ್ಯಾಸ ಮಾಡಿದ್ದರು. ಈ ಮಕ್ಕಳು ಕೂಡ ತಂದೆಯ ಕೆಲಸವನ್ನೇ ಕಲಿತು ಅದನ್ನೇ ಮುಂದುವರಿಸುವ ನಿರ್ಧಾರ ಕೂಡ ಮಾಡಿದ್ದರು. ಹೀಗಾಗಿ ಶಾಲೆಗೆ ಹೋಗುವ ಕ್ರೀಸ್ತುವರ ಮಕ್ಕಳು ಯಾರೂ ಆಗ ಇರಲಿಲ್ಲ. +ಪಾದರಿ ಗೋನಸ್ವಾಲಿಸ್ ಬಂದವರೇ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದಾಗ ಸಿಮೋನ, ಇನಾಸ, ಮರಿಯ, ಪಾಸ್ಕೋಲ, ಬಾಲ್ತಿದಾರ, ಕೈತಾನ ಮೊದಲಾದವರು ತಮ್ಮ ಮಕ್ಕಳಲ್ಲಿ ತೀರಾ ಚಿಕ್ಕವರಾಗಿದ್ದವರನ್ನು ಶಾಲೆಗೆ ಸೇರುವ ವಯಸ್ಸಿನ ಒಳಗೆ ಇದ್ದವರನ್ನು ಶಾಲೆಗೆ ಕಳುಹಿಸಲು ಯತ್ನಿಸಿದರು. ಆದರೆ ಈ ಕ್ರಿಯೆ ಈ ಮಕ್ಕಳ ಪಾಲಿಗೆ ಹೊಸದಾಗಿತ್ತು. ಹಳ್ಳಿಗೆ ಅನತಿ ದೂರದಲ್ಲಿದ್ದ ಮಂಕಾಳೆ ಹಳ್ಳದಲ್ಲಿ ಏಡಿ ಹಿಡಿಯುತ್ತ, ಕಂಬಳಿಕೊಪ್ಪದ ಬ್ಯಾಣದಲ್ಲಿ ಕಾಡು ಗೇರು ಹಣ್ಣು, ಕವಳಿ ಹಣ್ಣು, ನೇರಲೆ ಹಣ್ಣು ಆರಿಸುತ್ತ, ಕೊಪೆಲ ಹಿಂಬದಿಯಲ್ಲಿ ಮರಕೋತಿ ಆಡುತ್ತ, ಮನೆ ಅಂಗಣದಲ್ಲಿ ಕುಂಟಾ ಬಿಲ್ಲೆ, ಜಗಲಿಯ ಮೇಲೆ ಎತಗಲ್ಲಾಟ, ಚೆನ್ನಮಣೆ, ಕವಡೆ ಆಡುತ್ತ ಕಾಲ ಕಳೆಯುತ್ತಿದ್ದ ಈ ಮಕ್ಕಳು ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಳ್ಳುವುದೇ ಕಷ್ಟವಾಯಿತು. ಇವರು ಶಾಲೆಗೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಹೋದರೂ ಒಂದು ವರ್ಷ ಆರು ತಿಂಗಳು ಹೋಗಿ ಬಿಟ್ಟರು. +ಕ್ರೀಸ್ತುವರ ಮಕ್ಕಳಲ್ಲಿ ನಿರಂತರವಾಗಿ ಶಾಲೆಗೆ ಹೋದವರೆಂದರೆ ಸಿಮೋನನ ಮೂರನೇ ಮಗ ಫ಼ೆಡ್ಡಿ, ಪಾಸ್ಕೋಲನ ಮಗ ಅಂತೋನಿ, ಬಳ್ಕೂರಕಾರರ ಮಗ ಸಾಮ್ಸನ್, ಇಂತ್ರು ಮಗ ಸಿರಿಲ, ಇವರಲ್ಲೂ ಒಂದಿಬ್ಬರು ಶಾಲೆ ಬಿಟ್ಟರು. ಉಳಿದವರೆಲ್ಲ ತಂದೆಯ ಕೆಲಸ ಕಲಿಯುತ್ತ, ಪೋಲಿ ತಿರುಗುತ್ತ, ಪಾದರಿಗಳ ಕೆಲಸ ಮಾಡುತ್ತ ಉಳಿದರು. +ಪಾಸ್ಕೋಲನ ಮಗಳು ಜೋಸೆಫ಼ಿನ ಪ್ರೈಮರಿ ನಾಲ್ಕನೇ ತರಗತಿ ತನಕ ಓದಿ ಬಿಟ್ಟಳು. ಸುತಾರಿ ಇನಾಸನ ಮಗ ಪಾಸ್ಕು ಮಿಡಲ್ ಸ್ಕೂಲಿಗೆ ಹೋಗಿ ಅಲ್ಲಿ ಟೋಪಿ ಮೇಸ್ಟ್ರಿಗೆ ಬೈದು ಓಡಿ ಬಂದ. ಸ್ವಲ್ಪ ಅಣ್ಣನ ಬ್ಯಾಂಡ್‌ಸೆಟ್ಟಿನೊಂದಿಗೆ ತಾಳ ಬಾರಿಸಲು ಹೋದ. ಅದೂ ಬೇಸರವಾಯಿತು. ಕೊನೆಗೆ ತಂದೆಯ ಉಳಿ, ಗರಗಸ ಹಿಡಿದು ಕೆಲಸ ಕಲಿತ. ಅಷ್ಟು ಹೊತ್ತಿಗೆ ತನ್ನ ಮನೆಯಿಂದ ಎರಡೇ ಮನೆಗಳ ಆಚೆಗಿದ್ದ ಪಾಸ್ಕೋಲನ ಮಗಳು ಜೋಸೆಫ಼ಿನ ದುಂಡು ದುಂಡುಗೆ ಬೆಳೆದಿರುವುದು ಇವನಿಗೆ ಆಕರ್ಷಕವಾಗಿ ಕಂಡಿತು. ಮೊದಲೇ ಪರಿಚಯವಿದ್ದುದರಿಂದ ಮಾತನಾಡುವುದು ಕಷ್ಟವಾಗಲಿಲ್ಲ. ಪ್ರತಿ ಭಾನುವಾರ ಜ್ಞಾನೊಪದೇಶದ ನೆಪದಲ್ಲಿ ಒಂದೆರಡು ಗಂಟೆ ಒಟ್ಟಿಗೇನೆ ಕಳೆಯುತ್ತಿದ್ದರು. ಇಗರ್ಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಅವಳು ದಿವ್ಯ ಪ್ರಸಾದ ಸ್ವೀಕರಿಸಲು ಹೊಗುವಾಗ ಈತ ನೋಡುತ್ತಿದ್ದ. ಕೀರ್ತನೆ ಹಾಡುವಾಗ ಅವಳು ಇವನತ್ತ ದೃಷ್ಟಿ ಹಾಯಿಸಿ ನಗುತ್ತಿದ್ದಳು. +ಕ್ರಮೇಣ ಮಾತನಾಡಬೇಕು. ಹತ್ತಿರವಿರಬೇಕು ನೋಡಬೇಕು, ನಗಬೇಕು ಎಂಬ ಮನೋವಾಂಛೆ ಹೆಚ್ಚತೊಡಗಿತು. ಅದಕ್ಕಾಗಿ ಸಮಯ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುವುದು, ಸೃಷ್ಟಿಸಿಕೊಳ್ಳುವುದು ಪ್ರಾರಂಭವಾಯಿತು. +“ಆ ವಿಷಯ ಹಾಗಿರಲಿ….ಶುಕ್ರವಾರ ಬೆಳಿಗ್ಗೆ ಬೇಗ ಬಂದು ಬಿಡು…ಸಿಮಿತ್ರಿ ಹತ್ತಿರ” ಎಂದ ಪಾಸ್ಕು, ಮದುವೆಯ ವಿಷಯ ಪಕ್ಕಕ್ಕಿರಿಸಿ. +“ಬೆಳಿಗ್ಗೆ ಯಾಕೆ..ಪದ್ರಾಬ ಸಮಾಧಿ ಮಂತ್ರಿಸಲಿಕ್ಕೆ ಬರತಾರಲ್ಲ..ಅವರ ಜತೆ ಬಂದರೆ ಸಾಕಲ್ಲ..” ಎಂದಳು ಜೊಸೆಫ಼ಿನಾ. ಪಾದರಿ ಕೂಡ ಹಾಗೆಯೇ ಹೇಳಿದ್ದರಲ್ಲ. +“ಬೆಳಿಗ್ಗೆ ಬಾ..ನಾವೆಲ್ಲ ಸೇರಿ ಸಿಮಿತ್ರಿ ಕ್ಲೀನ್ ಮಾಡೋಣ..” ಎಂದ ಆತ ಏನೋ ಆಸೆಯಿಂದ. +“ಅದೆಲ್ಲ ನಿಮ್ಮ ಕೆಲಸ..” +“ಮತ್ತೆ ನಿಮ್ಮ ಕೆಲಸ ಏನು? ಪಾದರಿ ಲೋಬ ಹಿಡಿದುಕೊಂಡು ಡ್ಯಾನ್ಸ್ ಮಾಡೋದ?” ಎಂದ ಸಿಡುಕಿನಿಂದ. +ಈ ಹುಡುಗಿಯರು ಅದರಲ್ಲೂ ತನ್ನ ಜೋಸೆಫ಼ಿನ ಪಾದರಿಯ ಭುಜಕ್ಕೆ ಅಂಟಿ ನಿಂತು ನಗುವುದು, ಕೇಕೆ ಹಾಕುವುದು, ಅವನಿಂದ ತಿವಿಸಿಕೊಳ್ಳುವುದು ಇವನಿಗೆ ಹಿಡಿಸುತ್ತಿರಲಿಲ್ಲ. ಮುಖ್ಯವಾಗಿ ಈ ಪಾದರಿಯ ಬಗ್ಗೇನೆ ಅವನಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. +ಈ ಹಿಂದೆ ಆಗಿ ಹೋದ ತಪಸ್ಸಿನ ಕಾಲದ ಕೊನೆಯ ದಿನಗಳಲ್ಲಿ ಆತ ಕಂಡ ದೃಶ್ಯವನ್ನು ಮರೆಯಲಾರದವನಾಗಿದ್ದ. ಶುಭ ಶುಕ್ರವಾರ ಏಸು ಪ್ರಭುವಿನ ವಧೆಯಾಗಿತ್ತು. ಮತ್ತೆ ಪ್ರಭು ಪುನರುತ್ಥಾನವಾಗುವವರೆಗೆ ಲೋಹದ ಗಂಟೆ ಹೊಡೆಯುವಂತಿರಲಿಲ್ಲ. ಈ ಮೂರು ದಿನ ಬಾರಿಸಲೆಂದೇ ಒಂದು ಮರದ ಗಂಟೆಯನ್ನು ಮಾಡಿ ತನಗೆ ನೀಡಿ- +“ತೊಕೊಂಡು ಹೋಗಿ ಪದ್ರಾಬಾಗೆ ಕೊಡು” ಎಂದು ಹೇಳಿದ್ದ. +ಹಲ್ಲುಗಳಿರುವ ಒಂದು ಹಿಡಿ. ಅದಕ್ಕೆ ತೂಗು ಬಿದ್ದಿರುವ ಒಂದು ಹಲಗೆ ಹಿಡಿಯನ್ನು ಹಿಡಿದು ಬೀಸುತ್ತ ತಿರುಗಿಸಿದರೆ ಈ ಹಲಗೆ ಹಲ್ಲುಗಳಿಗೆ ತಾಗಿ ಕಿರ್ರ ಎಂದು ಸದ್ದು ಮಾಡುತ್ತಿತ್ತು. ಈ ಹಿಂದೆ ಇದ್ದು ಮುರಿದು ಹೋದ ಅದನ್ನು ಅಪ್ಪ ಸರಿ ಮಾಡಿದ್ದ. ಇದನ್ನು ಇಗರ್ಜಿಯ ಸುತ್ತ ತಿರುಗಿಸುತ್ತ ಮೂರು ಸುತ್ತು ಬಂದರೆ ಇಗರ್ಜಿಯ ಆಸುಪಾಸಿನ ಮನೆಗಳಿಗೆ ಕೇಳಿಸಿ ಜನ ಇಗರ್ಜಿಗೆ ಬರುತ್ತಿದ್ದರು. +ಈ ಮರದ ಗಂಟೆ ಹಿಡಿದು ತಾನು ಮೊದಲು ಇಗರ್ಜಿಗೆ ಹೋದೆ. ಇಗರ್ಜಿಯಲ್ಲಿ ಎಲ್ಲ ದೇವರ ಪ್ರತಿಮೆಗಳಿಗೂ ಮುಸುಕು ಹಾಕಲಾಗಿತ್ತು. ಇಗರ್ಜಿಯಲ್ಲಿಯ ಬಣ್ಣದ ತೋರಣಗಳನ್ನು ತೆಗೆಯಲಾಗಿತ್ತು. ಶಿಲುಬೆಗೇರಿಸಿದ ಏಸುವಿನ ಪ್ರತಿಮೆಯ ಎದುರು ಕೆಲವರು ದುಃಖ ವೇದನೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಪಾದರಿ ಅಲ್ಲಿ ಎಲ್ಲೂ ಕಾಣದ್ದರಿಂದ ತಾನು ಬಂಗಲೆಗೆ ಹೋದೆ. +ಬಂಗಲೆಯ ಬಾಗಿಲು ಅರ್ಧ ತೆರೆದುಕೊಂಡಿತ್ತು. ’ಪದ್ರಾಬ’ ಎಂದು ಕೂಗುತ್ತ ಬಾಗಿಲು ತಳ್ಳಿಕೊಂಡು ಒಳಹೋದೆ. ಪಾದರಿಗಳ ಜೊತೆಗಿದ್ದ ರಜೀನಾ ಗಾಬರಿಯಿಂದ ಎದ್ದು ಒಳಗೆ ಓಡಿ ಹೋದಳು. ಧಡಬಡಿಸಿ ಎದ್ದು ನಿಂತ ಪಾದರಿ- +“..ಯಾರು? ಏನು?” ಎಂದು ಕೇಳಿದರು. +ಮರದ ಗಂಟೆಯನ್ನು ಅವರ ಮುಂದೆ ಇರಿಸಿ ಬಂದೆ. +ತನ್ನ ಮೈ ಬೆವೆತು ಹೋಗಿತ್ತು. ತಾನೂ ಗಾಬರಿಯಾಗಿದ್ದೆ. ಅದೇ ಹೊಸ ಅನುಭವಗಳಿಗೆ ಹಾತೊರೆಯುತ್ತಿದ್ದ ತಾನು ಒಂದು ಕ್ಷಣ ವಿಚಲಿತನಾಗಿದ್ದೆ. ನೇರ ಬಂದವನೇ ಮನೆ ಜಗಲಿಯ ಮೇಲೆ ಕುಳಿತೆ. ಅಂಗಳದಲ್ಲಿ ಶಿಲುಬೆಗೆ ಅಪ್ಪ ಸುಣ್ಣ ಬಳಿಯುತ್ತಿದ್ದ. ಈಸ್ಟರ ಬಂತೆಂದು ಮನೆಗೆಲ್ಲ ಸುಣ್ಣ ಬಣ್ಣ ಆಗುತ್ತಲಿತ್ತು. +“ಕೊಟ್ಟೆಯಾ?” ಎಂದು ಕೇಳಿದ. +“ಹುಂ..” ಎಂದೆ. +ಅಪ್ಪನಿಗೆ ಈ ವಿಷಯ ಹೇಳಬೇಕು ಎನಿಸಿತು, ಹೇಳಲಿಲ್ಲ. ಈ ದೊಡ್ಡವರೇ ಒಂದು ರೀತಿ. ಇದೇ ಪಾದರಿ ತಮ್ಮ ಮನೆ ಅಂಗಳದಲ್ಲಿ ಯ ಶಿಲುಬೆ ದೇವರ ಮುಂದೆ ಕಬ್ಬಿಣದ ಕಾಣಿಕೆ ಡಬ್ಬಿ ತಂದಿರಿಸಿದಾಗ ತಾನು ಅಪ್ಪನ ಎದುರು ಕೂಗಾಡಿದ್ದೆ. +“ಪಾದರಿ ಇದನ್ನ ಯಾಕೆ ಇಲ್ಲಿ ತಂದಿಡಬೇಕು?” ಎಂದು ಕೇಳಿದ್ದೆ. +ವಾರಕ್ಕೊಮ್ಮೆ ಆತ ಬಂದು ಪೆಟ್ಟಿಗೆಯಿಂದ ಹಣ ತೆಗೆದುಕೊಂಡು ಹೋಗುವುದು ತನಗೆ ಸರಿ ಕಂಡಿರಲಿಲ್ಲ. ಶಿಲುಬೆಯ ರಕ್ಷಣೆ ಮಾಡುವವರು, ಅದರ ಮುಂದೆ ಮೇಣದ ಬತ್ತಿ ಹಚ್ಚಿ ಅದಕ್ಕೆ ಸುಣ್ಣ ಬಳಿದು, ಕೆಳಗೆ ಶಗಣಿ ಸಾರಿಸಿ ಬರುವವರಿಗೆ ವ್ಯವಸ್ಥೆ ಮಾಡಿಕೊಡುವವರು ನಾವು. ಹಣ ಮಾತ್ರ ಪಾದರಿಗೆ? ಎಂದು ಕೇಳಿದಾಗ ಅಪ್ಪ- +“..ಪಾದರಿಗಳ ಬಗ್ಗೆ ಹಾಗೆಲ್ಲ ಮಾತನಾಡಬಾರದು ಪಾಸ್ಕು..” ಎಂದಿದ್ದ. +ಈಗಲೂ ಹಾಗೆಯೇ ಆತ ಹೇಳುತ್ತಾನೆ. ಪಾದರಿ ಎಂದರೆ ಅಪ್ಪನಿಗೆ ಮಾತ್ರವಲ್ಲ ಊರ ಎಲ್ಲರಿಗೂ ದೇವರ ಪ್ರತಿರೂಪ. ಅವರ ಬಗ್ಗೆ ಭಿನ್ನವಾಗಿ ವಿಚಾರ ಮಾಡಲು ಅವರು ಸಿದ್ಧರಿಲ್ಲ. ಹೀಗೆಂದೇ ಮರದ ಗಂಟೆಯ ಪ್ರಕರಣವನ್ನು ತಾನು ಯಾರಿಗೂ ಹೇಳಲಿಲ್ಲ. ಆದರೆ ಪಾದರಿಯನ್ನು ನೋಡಿದಾಗಲೆಲ್ಲ ಮೈ ಉರಿಯುತ್ತದೆ. ಈ ಹುಡುಗಿಯರು ಅವನ ಸುತ್ತ ಕುಣಿಯುವುದನ್ನು ಕಂಡಾಗ ಸಿಟ್ಟು ಬರುತ್ತದೆ. ಈ ಹುಡುಗಿಯರಿಗೂ ಏನೂ ಗೊತ್ತಾಗುವುದಿಲ್ಲ. ಈಗ ಜೋಸೆಫ಼ಿನ ಕುಣಿಯುತ್ತಿಲ್ಲವೆ? +“..ಏನೀಗ? ಅವರು ಪಾದರಿ ಅಲ್ವ?” ಎಂದು ತಿರುಗಿ ಕೇಳಿದಳು ಜೋಸೆಫ಼ಿನಾ. +“ಸರಿ..ನಾನು ಬರತೀನಿ..ನಿನಗೆ ಮನಸ್ಸಿದ್ದರೆ ಬೆಳಿಗ್ಗೆ ಬಾ..ನಾನು ಅಲ್ಲಿ ಇರತೀನಿ”. +ಎಂದವನೇ ಪಾಸ್ಕು ಅಲ್ಲಿಂದ ಹೊರಟ. ಅವನಿಗೆ ಜೊಸೆಫ಼ಿನಳ ಮೇಲೆ ಸಿಟ್ಟು ಬಂದಿರಲಿಲ್ಲ. ಸಿಟ್ಟು ಬಂದದ್ದು ಪಾದರಿ ಮಸ್ಕರಿನಾಸರ ಮೇಲೆ. +* +* +* +ಪಾದರಿ ಮಸ್ಕರಿನಾಸರ ಮಾತಿಗೆ ಬೆಲೆ ಕೊಟ್ಟಂತೆ ಎಲ್ಲ ಯುವಕರು ಬೆಳಗಾಗುತ್ತಿರಲು ಸಿಮಿತ್ರಿಯ ಬಳಿ ಹಾಜರಾದರು. ಕತ್ತಿ, ಕುಡುಗೋಲು, ಗುದ್ದಲಿ ಹೊತ್ತುಕೊಂಡೇ ಅವರು ಬಂದರು. ಬಟ್ಲರ್ ಫ಼ರಾಸ್ಕ ಬಂದು ಸಿಮಿತ್ರಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳಿದ. ಸಿಮಿತ್ರಿಯೊಳಗೆ ಪ್ರವೇಶ ಮಾಡುವಲ್ಲಿ ಬೆಳೆದ ಗಿಡ, ಪೊದೆ ಸವರಿ ಬಿಡಿ ಎಂದ. ನಂತರ ಪ್ರತಿ ಸಮಾಧಿಯ ಬಳಿ ಹೋಗಲು ದಾರಿ ಮಾಡಿ. ಅಲ್ಲೆಲ್ಲ ಹುಲ್ಲು ಕೆತ್ತಿ ಹಾಕಿ. ಪೊದೆ ಬೆಳೆದಿದ್ದರೆ ತೆಗೆಯಿರಿ ಎಂದ. +ಪಾಸ್ಕು ಅವನ ಸ್ನೇಹಿತರು ಕೈಗೆ ಹತ್ಯಾರಗಳನ್ನು ಎತ್ತಿಕೊಂಡರು. ಶರಟು ತೆಗೆದು ಮರದ ರೆಂಬೆಗಳಿಗೆ ತೂಗು ಹಾಕಿ, ಥು ಎಂದು ಅಂಗೈಗಳ ಮೇಲೆ ಉಗಿದುಕೊಂಡು ಸಲಿಕೆ, ಗುದ್ದಲಿ ಹಿಡಿದರು. +ಪಾಸ್ಕು ತಲೆ ಎತ್ತಿ ನೋಡಿದ. ಯಾವ ಹುಡುಗಿಯರೂ ಬರಲಿಲ್ಲ. ಜೋಸೆಫ಼ಿನಾ ಕೂಡ ಬರಲಿಲ್ಲ. +ಜನ ಬಂದು ತಮ್ಮ ತಮ್ಮ ಬಂಧುಗಳು ಸಮಾಧಿಗಳನ್ನು ಸರಿಪಡಿಸತೊಡಗಿದರು. ಅಲ್ಲೂ ಕೂಡ ಹುಲ್ಲು ಕೀಳುವ, ಶಗಣೆ ಸಾರಿಸುವ, ಸುಣ್ಣ ತೆಗೆಯುವ ಕೆಲಸ ಆರಂಭವಾಯಿತು. +ಜೋಸೆಫ಼ಿನಾ ಬರಬಹುದು ಅಂದುಕೊಂಡಿದ್ದ ಪಾಸ್ಕು. ಈವತ್ತು ಇಲ್ಲಿಗೆ ಬರಲು ಯಾರೇ ತರುಣ ತರುಣಿಯರಿಗೆ ಅಡ್ಡಿ ಇರಲಿಲ್ಲ. ಸಿಮಿತ್ರಿಯಲ್ಲಿ ಸಮಾಧಿಗಳನ್ನು ಪಾದರಿ ಮಂತ್ರಿಸುತ್ತಾರೆಂಬುದು, ಸಿಮಿತ್ರಿಯಲ್ಲಿ ಜ್ಞಾನೋಪದೇಶಕ್ಕೆ ಬರುವವರೇ ಶುಚಿ ಮಾಡಬೇಕು ಎಂಬುದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಷಿಸಿದ ಹಾಗೆ ಕೆಲ ಹುಡುಗಿಯರು ಬಂದು ಅದು ಇದು ಕಿತ್ತು ಹುಡುಗರ ಹತ್ತಿರ ನಿಂತು ಮಾತನಾಡಿಯೂ ಹೋಗಿದ್ದರು. ಆದರೆ ಜೋಸೆಫ಼ಿನಾ ಮಾತ್ರ ಬರಲಿಲ್ಲ. +ಪಾಸ್ಕು ಹಾಗೂ ಜೋಸೆಫ಼ಿನಾ ಬಹಳ ಸಾರಿ ಇಲ್ಲಿಗೆ ಬಂದಿದ್ದರು. +ಸಿಮಿತ್ರಿಯ ಹೊರಗೋಡೆಯ ಮಗ್ಗುಲಲ್ಲಿ ಪೊದೆ ಪೊದೆಯಾಗಿ ಬೆಳೆದಿರುವ ತುಂಬೆ ಗಿಡಗಳಲ್ಲಿ ಅರಳುವ ನೀಲಿ ಹೂವುಗಳಿಂದ ಮಕರಂದ ಹೀರಲು ಕರೀ ದುಂಬಿಗಳು ಹೇರಳವಾಗಿ ಬರುತ್ತಿದ್ದವು. ಇವುಗಳಲ್ಲಿ ಭೀಮ ಎಂಬ ಕಪ್ಪು ದುಂಬಿಯನ್ನು ಹಿಡಿದು ಅದರ ಕಾಲಿಗೆ ದಾರಕಟ್ಟಿ ಹಾರ ಬಿಡುವುದು ಹುಡುಗರ ಒಂದು ಹವ್ಯಾಸವಾಗಿತ್ತು. ಪಾಸ್ಕು ಇಂತಹ ಮೂರು ನಾಲ್ಕು ಭೀಮ ದುಂಬಿಗಳನ್ನು ಬೆಂಕಿಪೆಟ್ಟಿಗೆಯಲ್ಲಿ ಹಾಕಿ ಇರಿಸಿಕೊಳ್ಳುತ್ತಿದ್ದ. ತಿನ್ನಲೆಂದು ಚೆಂಡು ಹೂವಿನ ಸೊಪ್ಪನ್ನು ಕೂಡ ಈ ಪೆಟ್ಟಿಗೆಯಲ್ಲಿ ಹಾಕುತ್ತಿದ್ದ. ಈ ಭೀಮನನ್ನು ಹಿಡಿಯಲು ಆತ ಬಂದಾಗೆಲ್ಲ ಜೋಸೆಫ಼ಿನಾ ಅವನ ಹಿಂದಿರುತ್ತಿದ್ದಳು. ಇಗರ್ಜಿಗೆ ಪೂಜೆಗೆ, ಪಾಪ ನಿವೇದನೆಗೆ, ಇಗರ್ಜಿ ಗುಡಿಸಿ ತೊಳೆಯಲು, ಇಗರ್ಜಿಯ ಪೀಠದ ಮೇಲಿರಿಸುವ ಮೇಣದ ಬತ್ತಿ ಸ್ಟ್ಯಾಂಡು, ಹೂವಿನ ದಾನಿಗಳನ್ನು ಬೆಳಗಲು, ಜ್ಞಾನೋಪದೇಶಕ್ಕೆ ಇಲ್ಲಿ ಬಂದಾಗಲೆಲ್ಲ ಅವರು ದುಂಬಿ ಹಿಡಿಯಲು ಬರುವುದಿತ್ತು. ಇಲ್ಲಿ ಆಡಿ ಓಡಿ ನೆಗೆದು, ಪಾಸ್ಕು ಜೋಸೆಫ಼ಿನಾಳನ್ನು ಹೆದರಿಸಿ ಬೆದರಿಸಿ, ಅರ್ಧ ಗಂಟೆ ಕಳೆದು ಹಿಂದಿರುಗುತ್ತಿದ್ದರು. ಅದನ್ನೆಲ್ಲ ನೆನಸಿಕೊಳ್ಳುತ್ತ ಪಾಸ್ಕು ಕೆಲಸ ಮಾಡಿದ. +ಹನ್ನೆರಡು ಗಂಟೆಗೆ ಇಗರ್ಜಿಯ ಗಂಟೆ ಸದ್ದು ಮಾಡಿತು. ನಿಂತಲ್ಲೆ ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ಕೆಲವರು ಜಪ ಮಾಡಿದರು. +ಜೋಸೆಫ಼ಿನಾ ಮಾತ್ರ ಬರಲಿಲ್ಲ. +* +* +* +ಸಂಜೆಯಾಗುತ್ತಿರಲು ಸಿಮಿತ್ರಿಯಲ್ಲಿ ಜನ ಸಂದಣಿ ಅಧಿಕವಾಯಿತು. ಸಮಾಧಿಗಳೆಲ್ಲ ಹೂವು ಬಣ್ಣದ ಕಾಗದಗಳಿಂದ ಸಿಂಗರಿಸಲ್ಪಟ್ಟವು. ಮೇಣದ ಬತ್ತಿಗಳನ್ನು ಶಿಲುಬೆಯ ಕೆಳಗೆ ಅಂಟಿಸಿ ಅವುಗಳನ್ನು ಹೊತ್ತಿಸಲು ಪಾದರಿ ಬರಲೆಂದು ಜನ ಕಾದರು. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದವರು ಊಟ ಮುಗಿಸಿಕೊಂಡು ಮತ್ತೆ ಸಂಜೆ ಬಂದರು. ಸಮಾಧಿಗಳನ್ನು ಮಂತ್ರಿಸ ಬಯಸುವವರು ಪಾದರಿಗಳ ಬಂಗಲೆಗೆ ಹೋಗಿ ಹಣ ಕಟ್ಟಿ ಚೀಟಿ ತಂದರು. ಚೀಟಿ ಹಿಡಿದುಕೊಂಡು ಸಮಾಧಿಗಳ ಬಳಿ ಕಾದು ನಿಂತಾಗ ಪಾದರಿ ಬಂದರು. +ಅವರ ಹಿಂದೆ ಹುಡುಗಿಯರ ಹಿಂಡು. +ಜತೆಗೆ ಪಿಟೀಲು ಹಿಡಿದ ವಲೇರಿಯನ್ ಡಯಾಸ್, ಪಾಸ್ಕು ಹಾಗೂ ಇತರ ತರುಣರು ಕೂಡ ಈ ತಂಡದಲ್ಲಿ ಸೇರಿಕೊಂಡರು. +ಪಾದರಿ ಮಸ್ಕರಿನಾಸ ಒಂದೊಂದೇ ಸಮಾಧಿಯ ಬಳಿ ನಿಂತು ಚೀಟಿ ಕೈಗೆ ತೆಗೆದುಕೊಂಡು ಸಮಾಧಿಯನ್ನು ಪವಿತ್ರ ಜಲದಿಂದ ಮಂತ್ರಿಸಿದರು. ಸಾಮೂಹಿಕ ಪ್ರಾರ್ಥನೆ ನಡೆಯಿತು. ಕೀರ್ತನೆಗಳನ್ನು ಹಾಡಲಾಯಿತು. ಜನ ಕೂಡ ಎಲ್ಲ ಸಮಾಧಿಗಳ ಬಳಿ ಸೇರಿ ತಾವೂ ಪ್ರಾರ್ಥನೆಯಲ್ಲಿ ಸೇರಿಕೊಂಡರು. +ಆಗೆಲ್ಲ ಪಾಸ್ಕು ಗುಂಪಿನ ನಡುವೆ ನಿಂತು ಪಾದ್ರಿಗೆ ಹತ್ತಿರದಲ್ಲಿದ್ದ ಜೋಸಿಫ಼ಿನಾಳನ್ನು ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ತಲೆಯ ಮೇಲಿನ ಏವ್ ಸರಿಪಡಿಸಿಕೊಂಡು ತುಟಿ ಕಚ್ಚಿಕೊಂಡಳು. ಶಿಲುಬೆಯ ಗುರುತು ಮಾಡುತ್ತ ಕತ್ತು ಹೊರಳಿಸಿದಳು. ಪಾಸ್ಕು ಮುಖ ಮಾತ್ರ ಬಿಗಿದುಕೊಂಡೇ ಇತ್ತು. ಹುಡುಗಿಯರ ಮುಖ ನೋಡುತ್ತ, ನಗುತ್ತ ಪುಟ ನೆಗೆಯುತ್ತ ಸಮಾಧಿಯಿಂದ ಸಮಾಧಿಗೆ ನಡೆದ ಪಾದರಿ ಮಸ್ಕರಿನಾಸರನ್ನೇ ದುರುಗುಟ್ಟಿ ನೋಡುತ್ತ ಆತ ಆ ಗುಂಪನ್ನು ಹಿಂಬಾಲಿಸಿದ. +ಎಲ್ಲ ಸಮಾಧಿಗಳನ್ನು ಮಂತ್ರಿಸಿ ಆಯಿತು. ಕೊನೆಯದಾಗಿ ಒಂದು ಪ್ರಾರ್ಥನೆ ಸಲ್ಲಿಸಲು ಜನ ಸಮಾಧಿಗಳನ್ನು ದಾಟಿಕೊಂಡು ಸಿಮಿತ್ರಿಯ ಪ್ರವೇಶ ದ್ವಾರದ ಬಳಿ ಇದ್ದ ಶಿಲುಬೆಯ ವೇದಿಕೆಯತ್ತ ನಡೆಯಲಾರಂಭಿಸಿದರು. ಆಗ ಕೊಂಚ ನೂಕು ನುಗ್ಗಲಾಯಿತು. ಬೆಳೆದ ಗಿಡಗಳ ನಡುವೆ ದಾರಿ ಮಾಡಿಕೊಳ್ಳುವಾಗ ಒಬ್ಬರಿಗೆ ಒಬ್ಬರು ಅಡ್ಡಿ ಬಂದರು. ಪಾಸ್ಕು ನೇರವಾಗಿ ಪಾದರಿ ಮಸ್ಕರಿನಾಸರ ನಿಲುವಂಗಿಯನ್ನು ತುಳಿದದ್ದರಿಂದ ಅವರು ಶಿರಾಲಿ ಜೂಜನ ಸಮಾಧಿಯ ಮೇಲೆ ಬೋರಲಾಗಿ ಬೀಳಬೇಕಿದ್ದವರು ಮುಗ್ಗರಿಸಿ ಸಮಾಧಿಯ ಶಿಲುಬೆಯನ್ನು ಹಿಡಿದು ಸಾವರಿಸಿಕೊಂಡು ನಿಂತರು. ಅದೇ ತಮ್ಮನ್ನು ದಾಟಿದ ಪಾಸ್ಕುವಿನ ತೋಳು ಹಿಡಿದು ಅವರು. +“ಏಯ್ ಲುಸಿಫ಼ೇರ್…ಕಣ್ಣು ಕಾಣೋದಿಲ್ವ ನಿನಗೆ?” ಎಂದು ಅಬ್ಬರಿಸಿದರು. +ಪಾಸ್ಕು ಇದನ್ನು ನಿರೀಕ್ಷಿಸಿದ್ದನೋ ಇಲ್ಲವೋ ಅಂತು ಲುಸಿಫ಼ೇರ ಎಂದು ಪಾದರಿ ತನ್ನನ್ನು ಕರೆದರಲ್ಲ ಎಂಬುದೇ ಅವನಿಗೆ ಸಾಕಾಯಿತು. +ಮುಂದೆ ಹೋದ ಆತ ತಟ್ಟನೆ ತಿರುಗಿ ನಿಂತನು. ಬೀಳಲಿದ್ದ ಪಾದರಿಯನ್ನು ಹುಡುಗಿಯರೆಲ್ಲ ತಡೆದು ನಿಲ್ಲಿಸಿದ ಹಾಗೆ ಮಸ್ಕರಿನಾಸರ ಸುತ್ತ ಈ ಹುಡುಗಿಯರು ನಿಂತಿರಲು, ಪ್ರಧಾನವಾಗಿ ಜೋಸೆಫ಼ಿನಾ ಮಸ್ಕರಿನಾಸರ ಬಲಗಡೆಯಲ್ಲಿ ಕಾಣಿಸಿಕೊಳ್ಳಲು ಪಾಸ್ಕು ಕೈಚಾಚಿ ಪಾದರಿಗಳ ಎದೆಯ ಮೇಲೆ ಅಂಗೈ ಊರಿ- +“ಲುಸಿಫ಼ೇರ್ ನಾನಲ್ಲ..ನೀನು..” +ಅನ್ನುತ್ತಿರಲು ಪಾದರಿ ಮಸ್ಕರಿನಾಸರ ಪಾಸ್ಕುವಿನ ಕೆನ್ನೆಗೆ ಅಪ್ಪಳಿಸಲು ಕೈ ಎತ್ತುತ್ತಿರಲು ಪಾಸ್ಕು ಕೈ ಬೀಸಿ ಆಯಿತು. +ಇಗರ್ಜಿಯಿಂದ ಸಾಯಂಕಾಲದ ಪ್ರಾರ್ಥನಾ ಗಂಟೆ ಕೇಳಿ ಬರುತ್ತಿರಲು ಇಲ್ಲಿ ಸಿಮಿತ್ರಿಯಲ್ಲಿ ಶಿಲುಬೆಯ ವೇದಿಕೆಯ ಬಳಿ ಶಿವಸಾಗರದ ಕ್ರೈಸ್ತರು, ಬಾಮಣ ಪಂಗಡದವರು. +“..ಜೇಜು ಅಮ್ಕಾಂರಾಕ್” +“ದೇವರೇ ನಮ್ಮನ್ನು ರಕ್ಷಿಸು” +“ಮೈ ಲಾರ್ಡ್ ಸೇವ್ ಅಸ್” ಎಂದು ಚೀರಿ ದಿಙ್ಮೂಢರಾಗಿ ನಿಂತರು. +-೫- +“ನಿಮ್ಮ ನಡುವೆಯೇ ಓರ್ವ ಅಂತಃ ಕ್ರಿಸ್ತ ಹುಟ್ಟಿಕೊಂಡಿದ್ದಾನೆ” ಎಂದು ಪಾದರಿ ಮಸ್ಕರಿನಾಸ ನುಡಿದಾಗ ಇಗರ್ಜಿಯಲ್ಲಿ ಕುಳಿತ ಜನರ ಮೈ ಮೇಲೆ ಹಾವು ಹರಿದಾಡಿತು. ಹಿಂದಿನ ಸಂಜೆ ನಡೆದ ಘಟನೆಗೆ ಎಲ್ಲರೂ ಸಾಕ್ಷಿಗಳಾಗಿದ್ದರು. ಕೆಲಸ ಕಾರ್ಯಗಳಿಗೆ ಹೋದ ಗಂಡಸರಿಗೆ ಮನೆಯಲ್ಲಿ ಹೆಂಗಸರು ಹೀಗೆ ಹೀಗೆ ಎಂದು ಹೇಳಿದರು. ಸಿಮೋನ, ಇನಾಸ, ಪೆದ್ರು, ಪಾಸ್ಕೋಲ, ಕೈತಾನ ಮೊದಲಾದವರಿಗೆ ಪೇಟೆ ಚೌಕದಲ್ಲಿಯೇ ವಿಷಯ ತಿಳಿದುಹೋಯಿತು. +“ಬೋನ ಸಾಹುಕಾರ್ರೆ ಯಾರೋ ನಿಮ್ಮ ಪಾದರೀನ ಹೊಡೆದರಂತೆ ಹೌದೆ?” ಎಂದು ಸೈಕಲ್ ಶಾಪ್ ನಾಗಪ್ಪ ಬೋನನ ಅಂಗಡಿಗೇನೆ ಬಂದು ಕೇಳಿದಾಗ ಬೋನ ಗಾಬರಿಗೊಂಡ. ಗೋಡೆ ಮೇಲಿನ ದೇವರ ಪಟ ಕಿತ್ತು ತಲೆಯ ಮೇಲೆ ಬಿದ್ದಂತಾಗಿ ಆತ ಕೂಡಲೆ ಅಂಗಡಿಯಿಂದ ಹೊರ ಬಂದ. ಬಾಚಿಯನ್ನು ಹೆಗಲ ಮೇಲೆ ಹೇರಿಕೊಂಡು ಅವಸರದಲ್ಲಿ ಹೊರಟ ಬಳ್ಕೂರಕಾರ್ ಕೈತಾನನ ಮಗನನ್ನು ನೋಡಿ, ’ಅರೇ ದುಮಿಂಗಾ? ಯೋ ಹಂಗಾ?” ಎಂದು ಕೂಗಿದ. +ಬಳಿ ಬಂದ ದುಮಿಂಗನಿಗೆ ಮಾತ್ರ ಕೇಳುವ ಹಾಗೆ- +“ಏನದು ಗಲಾಟೆ ಇಗರ್ಜಿ ಹತ್ತಿರ?” ಎಂದು ಕೇಳಿದ. +“ನನಗೂ ಗೊತ್ತಿಲ್ಲ..ಚಾ ಹೋಟೆಲಿನ ಹತ್ತಿರ ಮಾತನಾಡಿ ಕೊಳತಿದ್ರು..ಇನಾಸನ ಮಗ ಪಾಸ್ಕು ಪದ್ರಾಬ ಅವರನ್ನ ಹೊಡೆದನಂತೆ..” ಎಂದ ಆತ. +ಅರ್ಧ ಗಂಟೆ ಮುಂಚಿತವಾಗಿಯೇ ಅಂಗಡಿ ಬಾಗಿಲು ಹಾಕಿ ಕೇರಿಗೆ ಬಂದ ಬೋನ. ಅವನಂತೆಯೇ ಉಳಿದವರೂ ಅಲ್ಲಿ ಸೇರಿದ್ದರು. ಸಿಮೋನ ಆಗಲೆ ಬಂದು ಮನೆಗೆ ತಲುಪಿದ್ದ. +ಏನು ನಡೆಯಿತು ಎಂಬುದು ತಿಳಿಯಿತು. ಕೂಡಲೆ ಹೋಗಿ ಪಾದರಿ ಮಸ್ಕರಿನಾಸರನ್ನು ಮಾತನಾಡಿಸಬೇಕು ಎಂಬ ವಿಚಾರ ಬಂದಾಗ ಇನ್ನರೋ. +“ಅವರು ಪ್ರಾರ್ಥನೆ ಮಾಡಿದ್ದೇ ಹೋಗಿ ಬಂಗಲೆ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು” ಎಂದರು. +ಇಡೀ ಕೇರಿಗೇನೆ ಬರ ಸಿಡಿಲು ಬಡಿದಂತೆ ಆಗಿತ್ತು. ಆ ದೃಶ್ಯವನ್ನು ಕಣ್ಣಾರೆ ಕಂಡವರು ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದೆರಡು ನಿಮಿಷ ತೆಗೆದುಕೊಂಡಿದ್ದರು. ಪಾದರಿ ಮುಗ್ಗರಿಸಿದ್ದು, ಶಿಲುಬೆ ಹಿಡಿದು ನಿಂತು ಪಾಸ್ಕುವನ್ನು ಹಿಡಿದುಕೊಂಡದ್ದು, ಏನೋ ಹೇಳಿದ್ದು, ಆತ ತಿರುಗಿದ್ದು, ಮುಂದಿನ ಕ್ಷಣದಲ್ಲಿ ರಪರಪನೆ ಪಾದರಿಗಳ ಕೆನ್ನೆಗೆ ಪಾಸ್ಕು ಹೊಡೆದದ್ದು , ದೇವರ ಲಾರ್ಡು ಎಂದೆಲ್ಲ ಜನ ಕೂಗುತ್ತಿರಲು ಇನಾಸನ ಹೆಂಡತಿ ಮೊನ್ನೆ ಕೂಗುತ್ತ ತನ್ನ ಮಗನ ಮುಖ ಮೈ ಮೇಲೆ ಗುದ್ದುತ್ತ ಆತನನ್ನು ಸಿಮಿತ್ರಿಯ ಹೊರಗೆ ತಳ್ಳಿಕೊಂಡು ಹೋದದ್ದು, ಪಾದರಿಗಳು ವೇದಿಕೆಯನ್ನೇರಿ ಶಿಲುಬೆಯ ಮುಂದೆ ಮೊಣಕಾಲೂರಿದ್ದು ಎಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಗಿತ್ತು. +ಎಲ್ಲ ಜನ ನಾಲಿಗೆ ಒಣಗಿ ಹೋಗಿ, ಉಸಿರಾಟ ನಿಂತಂತಾಗಿ, ಕಲ್ಲು ಕಂಬಗಳ ಹಾಗೆ ನಿಂತಿರಲು ಶಿಲುಬೆಯ ಮುಂದೆ ಮೊಣಕಾಲೂರಿದ ಪಾದರಿ ಮಸ್ಕರಿನಾಸ ಎದ್ದು ನಿಂತು ಹಣೆ, ಎದೆ, ಭುಜಗಳ ಮೇಲೆ ಶಿಲುಬೆಯ ಗುರುತು ಬರೆದುಕೊಂಡು- +“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ” ಎಂದಾಗ ಜನ ಎಚ್ಚೆತ್ತಿದ್ದರು. ನಂತರ ನಿಧಾನವಾಗಿ ಪ್ರಾರ್ಥನೆಗೆ ತೊಡಗಿದ್ದರು. +ಪ್ರಾರ್ಥನೆ ಮುಗಿದ ನಂತರ ಪಾದರಿ ಅಲ್ಲಿ ನಿಲ್ಲಲಿಲ್ಲ. ಯಾರ ಹತ್ತಿರವೂ ಮಾತನಾಡಲಿಲ್ಲ. ಎಲ್ಲರಿಗಿಂತಲೂ ಮುಂದೆ ಹೋಗಿ ಬಂಗಲೆ ಸೇರಿಕೊಂಡರು. +ಜನ ಕೇರಿಗೆ ಬಂದರು. +ಹೀಗೆ ಈವರೆಗೆ ಎಲ್ಲಿಯೂ ನಡೆದಿರಲಿಲ್ಲ. ನಡೆಯಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಹೀಗೆ ನಡೆಯಬಾರದು. +ಏಕೆಂದರೆ ಮನುಷ್ಯರಿಗೆ ಸತ್ಯವನ್ನು ಭೋದಿಸಲು, ದಿವ್ಯ ಜೀವನವನ್ನು ಅವರಿಗೆ ತಂದುಕೊಡಲು, ದೇವರ ಮಕ್ಕಳಾಗಿ ಜೀವಿಸುವುದಕ್ಕೆ ಅವರಿಗೆ ಸಹಾಯ ಮಾಡಲು, ಮಹಾ ಯಾಜಕರಾದ ಏಸು ಪ್ರಭು ಇಗರ್ಜಿ ಮಾತೆಗೆ ಪಾದರಿಗಳನ್ನು ದಯಪಾಲಿಸಿದ್ದಾರೆ. ಈ ಪಾದರಿಗಳು ದೇವರ ಪ್ರತಿನಿಧಿ. ಕ್ರಿಸ್ತ ಪ್ರಭುವಿಗೆ ಸೇವಕರು. ಕ್ರೀಸ್ತುವರಿಗೆ ಹಲವು ಸಂಸ್ಕಾರಗಳನ್ನು ನೀಡುತ್ತ ಅವರ ಬದುಕನ್ನು ಆಧ್ಯಾತ್ಮಿಕ ಜೀವನವನ್ನು ಗಟ್ಟಿಗೊಳಿಸುವವರು ಈ ಪಾದರಿ. +ಈ ಕಾರಣದಿಂದಲೇ ಪಾದರಿಗಳ ಬಗ್ಗೆ ಕ್ರೀಸ್ತುವರಿಗೆ ಅಪಾರ ಗೌರವ. ರಸ್ತೆಯಲ್ಲಿ ಎದುರಾದರೆ ಮಣ್ಣಿನಲ್ಲಿ ಮೊಣಕಾಲೂರಿ ದೇವರ ಆಶೀರ್ವಾದ ಬೇಡುತ್ತಾರೆ. ಅವರಿಗೆ ಗೌರವ ನೀಡುತ್ತಾರೆ. ಯಾವ ಕಾರಣಕ್ಕೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಲೋಪ ದೋಷಗಳ ಬಗ್ಗೆ ವ್ಯಂಗ್ಯ ಮಾಡುವುದಿಲ್ಲ. ತಂದೆ ಎಂದು ಅವರನ್ನು ಕರೆಯುತ್ತಾರೆ. ಅಂತಹ ಆತ್ಮದ ತಂದೆಯನ್ನು ನಿನ್ನೆ ಮೊನ್ನೆಯ ಈ ಹುಡುಗ ಹೊಡೆಯುವುದೇ? +ಎಲ್ಲೆಲ್ಲೂ ಇದೇ ಮಾತಾಯಿತು. +ಮರಿಯ ದನಕರು, ಎಮ್ಮೆಗಳಿಗೆ ಹುಲ್ಲು ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಪೆದ್ರು ಹೆಂಡತಿ ರಂಗಿ- +“ದೇವರೇ ಹೀಗೂ ಉಂಟ” ಎಂದಳು. +ವೈಜಿಣ್ ಕತ್ರೀನ್- +“ದೇವರೆ ನಾನು ಇದೇನು ಕೇಳುತ್ತಿದ್ದೇನೆ” ಎಂದು ಮೂಗಿನ ಮೇಲೆ ಬೆರಳಿರಿಸಿಕೊಂಡಳು. ಬೆಳಿಗ್ಗೆ ಪೂಜೆಗೆ ಹೋದ ಅವಳು ಸಂಜೆ ಸಿಮಿತ್ರಿಗೆ ಹೋಗಿರಲಿಲ್ಲ. ಈಗೀಗ ಇಗರ್ಜಿಗೆ ಹೋಗಿ ಬರುವುದೇ ಶ್ರಮದಾಯಕವಾಗುತ್ತಿತ್ತು. ಹೀಗೆಂದೇ ಆತ್ಮಗಳಿಗೆ ಶಾಂತಿಕೋರಲು ಅವಳು ಹೋಗಿರಲಿಲ್ಲ. ಈ ಸುದ್ದಿ ಕೇಳಿದ ಮೇಲೆ ಅಲ್ಲಿಗೆ ಹೋಗದಿದ್ದುದು ಒಳ್ಳೆಯದಾಯ್ತು ಅಂದುಕೊಂಡಳು. +ಮನೆಗಳ ದೇವರ ಪೀಠದ ಮುಂದೆ ಮೇಣದ ಬತ್ತಿಗಳು ಉರಿಯಲಿಲ್ಲ. ಹೊರಗೆ ಬಿಟ್ಟ ಕೋಳಿಗಳನ್ನು ಜನ ಗೂಡಿಗೆ ತುಂಬಿ ಗೂಡಿನ ಬಾಗಿಲು ಹಾಕಲಿಲ್ಲ. ಅಡಿಗೆ ಮನೆಯಲ್ಲಿ ಒಲೆಗೆ ಬೆಂಕಿ ಮಾಡಲಿಲ್ಲ. ಸಿಮಿತ್ರಿಯ ಪ್ರಾರ್ಥನೆಗೆ ಹೋಗಿ ಬಂದವರು ಬೇರೆ ಸೀರೆ ಉಡಲಿಲ್ಲ. ಹುಡುಗಿಯರು ಬಟ್ಟೆ ಬದಲಾಯಿಸಲಿಲ್ಲ. ಎಲ್ಲ ಕಡೆ ಇದೇ ಮಾತು ನಡೆಯುತ್ತಿರಲು ಕೆಲಸಕ್ಕೆ ಹೋದ ಗಂಡಸರೂ ಧಾವಿಸಿ ಬಂದರು. +ಇನಾಸ ಕೆಲಸಕ್ಕೆ ಹೋಗುತ್ತಿರಲಿಲ್ಲ. ಭಾರವಾದ ಕೆಲಸಗಳನ್ನು ಮಾಡಲು ಅವನಿಂದ ಆಗುತ್ತಿರಲಿಲ್ಲ. ಇಂದು ಹಬ್ಬ ಬೇರೆ. ದೊಡ್ಡ ಹಬ್ಬ ಅಲ್ಲವಾದರೂ ಸರ್ವ ಆತ್ಮಗಳಿಗೆ ಸದ್ಗತಿ ಕೋರುವ ಹಬ್ಬವೆಂದು ಮನೆಯಲ್ಲಿಯೇ ಇದ್ದ. ಸಂಜೆ ಸಿಮಿತ್ರಿಗೆ ಹೋಗುವುದೂ ಬೇಡವೆನಿಸಿತ್ತು. +ಹೆಂಡತಿ ಮೊನ್ನೆ ಜರಿ ಸೀರೆಯುಟ್ಟು ಅಬ್ಬಲಿಗೆ ಮುಡಿದು ತಾನು ಪ್ರಾರ್ಥನೆಗೆ ಹೋಗುವುದಾಗಿ ಸಂಜ್ಞೆ ಮಾಡಿ ಹೇಳಿ ಹೋದಳು. ಇಗರ್ಜಿ ಗಂಟೆ ಹೊಡೆದ ಕೊಂಚ ಹೊತ್ತಿಗೆ ಮಗನನ್ನು ಹೊಡೆಯುತ್ತ ದಬ್ಬುತ್ತ ತಾನೂ ಕೆಟ್ಟದಾಗಿ ಕಿರುಚುತ್ತ ಬಂದಾಗ ಇನಾಸನಿಗೆ ಅಚ್ಚರಿಯಾಯಿತು. +ಪಾಸ್ಕು ಮುಖ ಮುಚ್ಚಿಕೊಂಡು ಬಂದವನೇ ಮನೆಯೊಳಗೆ ಸೇರಿಕೊಂಡ. ಮೊನ್ನೆ ಜಗಲಿಯ ಮೇಲೆ ಕುಳಿತು ಹೋ ಎಂದಳು. +ಎಲ್ಲದಕ್ಕೂ ಅವಳು ಒಂದೊಂದು ಸಂಕೇತ ಇರಿಸಿಕೊಂಡಿದ್ದಳು. ಇಗರ್ಜಿ ಅನ್ನುವುದಕ್ಕೆ ಶಿಲುಬೆಯ ಗುರುತು. ಪ್ರಾರ್ಥನೆ ಅನ್ನುವುದಕ್ಕೆ ಕೈ ಮುಗಿಯುವುದು. ಪೂಜೆ ಅನ್ನುವುದಕ್ಕೆ ನಾಲಿಗೆ ಹೊರಹಾಕಿ ದಿವ್ಯಪ್ರಸಾದ ಸ್ವೀಕರಿಸುವುದು ಹೀಗೆ, ತನಗೆ ಮಾತ್ರ ಅರ್ಥವಾಗುವ ಸಂಕೇತಗಳು ಇವು. ಪಾದರಿ ಅನ್ನುವುದಕ್ಕೇ ಅವಳು ಎತ್ತರದ ವ್ಯಕ್ತಿ ಎಂದು ಕೈ ಮಾಡಿ ತೋರಿಸಿ ನಂತರ ಕನ್ನಡಕದ ಗುರುತು ಹೇಳುತ್ತಿದ್ದಳು. ಈಗ ಮಾತಿನ ನಡುವೆ ಐದಾರು ಬಾರಿ ಪಾದರಿ ಪಾದರಿ ಎಂದು ಹೇಳಿ ಕೆನ್ನೆಗೆ ಬಡಿದಂತೆ ತೋರಿಸಿ ಒಳಗೆ ಸೇರಿಕೊಂಡ ಮಗನತ್ತ ಬೆರಳು ಮಾಡಿದಳು. +“ಏನು ಇವನು ಪದ್ರಾಬಾಗೆ ಹೊಡೆದನೆ?” ಎಂದು ಇನಾಸ ಬೆರಗಾಗಿ ಬೆದರಿ ಎದ್ದು ನಿಂತು ಗದರಿಸಿ ಕೇಳಿದ. +“ಹೌದು ಹೌದು” ಎಂದು ತಲೆಯಾಡಿಸಿದಳು ಮೊನ್ನೆ. ಅವಳ ಕಣ್ಣುಗಳಿಂದ ನೀರು ಕೂಡ ಧುಮುಕಿತು. +“ಪಾಸ್ಕು..ಏನಾಯ್ತು?” ಎಂದು ಇನಾಸ ಒಳ ಹೋಗಿ ಮಗನ ಎದುರು ನಿಂತು ಅಬ್ಬರಿಸಿದ. ಆತ ಮಾತನಾಡದೆ ಕುಳಿತಾಗ ಏನೋ ಆಗಿದೆ ಎಂಬುದು ಖಚಿತವಾಯ್ತು. +ಸಿಮಿತ್ರಿಯ ಬಳಿ ಏನು ನಡೆಯಿತೆಂಬುದು ವಿವರವಾಗಿ ಇನಾಸನಿಗೆ ತಿಳಿದುಬಂದದ್ದು ಅಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಕೇರಿಯ ಜನ ತಿರುಗಿ ಬಂದಾಗಲೇ. ಪಾಸ್ಕು ಪಾದರಿಗಳಿಗೆ ಹೊಡೆದನೆಂಬುದಂತೂ ನಿಜವಾಗಿತ್ತು. ಅವರು ಲುಸಿಫ಼ೆರ್ ಎಂದು ಇವನನ್ನು ಬೈದದ್ದು. ಇವನು ಅದಕ್ಕೆ ನೀಡಿದ ಪ್ರತಿಕ್ರಿಯೆ ತಿಳಿಯಿತು. ಪಾಸ್ಕು ಅಷ್ಟು ದೂರ ಹೋಗಬಾರದಿತ್ತು. ಆದರೆ ಇದು ಇಂದೇ ಆಕಾರ ಪಡೆದ ಕ್ರಿಯೆಯಲ್ಲ. ಪಾಸ್ಕು ಯಾವತ್ತಿನಿಂದಲೋ ಪಾದರಿ ಮಸ್ಕರಿನಾಸರ ವಿರುದ್ಧ ಒಂದಲ್ಲಾ ಒಂದು ವಿಷಯ ಹೇಳುತ್ತ ಬಂದಿದ್ದ. ಆ ವಿಷಯ ಇಂದು ಹೀಗೆ ಸ್ಪೋಟಗೊಂಡಿದೆ. +ಇನಾಸ ಹೋಗಿ ಮಗನನ್ನು ಕೇಳಬೇಕೆಂದು ಬಯಸಿದ. ಆದರೆ ಅಷ್ಟುಹೊತ್ತಿಗೆ ಅವನ ಸಿಟ್ಟು ಕ್ರೋಧವೆಲ್ಲ ಇಳಿದು ಹೋಗಿತ್ತು. +ಮಗ ಹೀಗೆ ಮಾಡಬಾರದಿತ್ತು ಎಂದು ಈತ ಪೇಚಾಡುತ್ತ ಕುಳಿತನಲ್ಲದೆ ಮಗನನ್ನು ಇದಕ್ಕಾಗಿ ದಂಡಿಸಬೇಕು. ಏಕೆ ಹೀಗೆ ಮಾಡಿದೆ ಎಂದು ಕೇಳಬೇಕು ಎಂದು ಅವನಿಗೆ ಅನಿಸಲಿಲ್ಲ. +ನಿಧಾನವಾಗಿ ಕತ್ತಲು ಗಾಢವಾಯಿತು. ರಾತ್ರಿಯ ಗಂಟೆಗಳು ಉರುಳಿದವು. ಒಂದು ಬಗೆಯ ವಿಷಾದ ಉಸಿರುಗಟ್ಟಿಸುವ ವಾತಾವರಣ ಇಗರ್ಜಿಯ ಸುತ್ತ ಹಬ್ಬಿಕೊಂಡಿತು. +ಮಾರನೆ ದಿನ ಬೆಳಿಗ್ಗೆ ಪ್ರಾರ್ಥನೆಯ ಗಂಟೆಯಾಯಿತು. ನಂತರ ಸಾದಾ ಪೂಜೆಯ ಗಂಟೆ. +ಭಾನುವಾರದ ವಿಶೇಷ ಪೂಜೆಯ ಗಂಟೆ. +ಘಂಟಾನಾದದಲ್ಲಿ ಕೂಡ ಎಂದಿನ ಲವಲವಿಕೆ ಇಂಪು ಇರಲಿಲ್ಲ. ಜನ ಆತಂಕದಿಂದಲೇ ಇಗರ್ಜಿಗೆ ಹೋದರು. ಬಾಗಿಲಲ್ಲಿಯ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಂಡು, ಗಂಡಸರು ತಲೆಯ ಮೇಲಿನ ಟೋಪಿ ತೆಗೆದು, ಹೆಂಗಸರು ತಲೆಯುಡುಗೆ ಧರಿಸಿ, ಸೀರೆ ಸೆರಗನ್ನು ಎಳೆದುಕೊಂಡು ಒಳ ಹೋದರು. ಪ್ರಾರ್ಥನೆ, ಕೀರ್ತನೆ, ಪಾದರಿ ಪೀಠಬಾಲಕರ ಜತೆ ಅಲ್ತಾರಿಗೆ ಬಂದು ಪೂಜೆಯನ್ನು ಆರಂಭಿಸಿದರು. ಅವರು ಎಂದಿನಂತಿದ್ದರು. ಅದೇ ಚುರುಕು, ಅದೇ ಮುಖಭಾವ, ಏನೂ ಆಗಿಲ್ಲ ಎಂಬಂತೆ. +ಪೂಜೆಯ ನಡುವೆ ದಿವ್ಯಪ್ರಸಾದದ ಮೇಜಿಗೆ ಒರಗಿ ಅವರು ನಿಂತರು.ಇಡೀ ಇಗರ್ಜಿಯ ತುಂಬ ದೃಷ್ಟಿ ಬೀರಿದರು. ಕೈಲಿದ್ದ ಕರವಸ್ತ್ರವನ್ನು ಮೇಲಂಗಿಯ ತೆರೆದ ತೋಳಿನೊಳಗೆ ತುರುಕಿಸಿದರು. ಆಳವಾಗಿ ಉಸಿರೆಳೆದುಕೊಂಡರು. +“ಮೊಗಚಾ ಕ್ರೀಸ್ತಾಂವನೂಂ” (ಪ್ರೀತಿಯ ಕ್ರೀಸ್ತುವರೆ) ಎಂದರು. ತುಸು ತಡೆದು ಅವರೆಂದರು.- +“ನಿಮ್ಮ ನಡುವೆಯೇ ಓರ್ವ ಅಂತಃಕ್ರಿಸ್ತ ಹುಟ್ಟಿಕೊಂಡಿದ್ದಾನೆ.” +ಹತ್ತಿಯ ಬಿಳಿ ಉಂಡೆಯಂತಿದ್ದ ಮುಗಿಲು ತಟ್ಟನೆ ಕಡು ಕಪ್ಪಾಗಿ, ಭಾರವಾಗಿ ಭರ್ಜಿಯಂತಹ ಒಂದು ಹೊನ್ನ ಶೂಲ ಅದರ ಒಡಲಿಂದ ಚಿಮ್ಮಿ ನೆಲಕ್ಕೆ ಅಪ್ಪಳಿಸಿತು. ಜನ ಬೆಚ್ಚಿದರು. +“ಕ್ರಿಸ್ತನನ್ನು ವಿರೋಧಿಸುವವರು, ಕ್ರಿಸ್ತ ಪ್ರಭುವಿನ ಪ್ರತಿನಿಧಿಗಳನ್ನು ಅವಮಾನಿಸುವವರು, ಪ್ರಭುವಿನ ಬೋಧನೆ ತತ್ವಗಳನ್ನು ಅವಹೇಳನಗೊಳಿಸುವವರು ನಿಮ್ಮ ನಡುವಿನಿಂದಲೇ ಹುಟ್ಟಿ ಬರುತ್ತಾರೆ ಎಂಬ ವಾಕ್ಯ ಪವಿತ್ರ ಗ್ರಂಥದಲ್ಲಿದೆ. ಈ ವಾಕ್ಯ ನಿಜವಾಗಿದೆ. ಯಾವ ತಂದೆಯೂ ರೊಟ್ಟಿಯನ್ನು ಕೇಳಿದ ಮಗನಿಗೆ ಕಲ್ಲನ್ನು, ಮೀನನ್ನು ಕೇಳಿದ ಮಗನಿಗೆ ಹಾವನ್ನು ಕೊಡುವುದಿಲ್ಲ. ನಿಮ್ಮೆಲ್ಲರನ್ನು ಪ್ರೀತಿ, ಮಮತೆ ದೈವ ಭಕ್ತಿಯನ್ನು ನೀಡಿ ಸಾಕುತ್ತಿರುವ ನಿಮ್ಮ ತಂದೆಗೆ ನೀವು ಏನು ಕೊಟ್ಟಿರುವಿರಿ ಯೋಚನೆ ಮಾಡಿ..” +ಪಾದರಿ ಮಸ್ಕರಿನಾಸರು ಕ್ಷಣ ಕ್ಷಣಕ್ಕೂ ಕೋಪಿಷ್ಟರಾಗುತ್ತ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲು ಪೊದೆಗಳನ್ನು ತನ್ನ ಒಡಲೊಳಗೆ ಸೆಳೆದುಕೊಂಡು ಹೊತ್ತಿ ಉರಿಯುವ ಕಾಡು ಗಿಚ್ಚಿನಂತೆ ಚಟಪಟಿಸುತ್ತ ಮಾತನಾಡಿದರು. ಸಾಮಾನ್ಯವಾಗಿ ಬೈಬಲಿನ ಒಂದು ಪ್ರಸಂಗವನ್ನು ಆರಿಸಿಕೊಂಡು ಅದನ್ನೇ ವಿಸ್ತರಿಸಿ, ವಿಶ್ಲೇಷಿಸಿ ಜನತೆಗೆ ಸಂದೇಶ ನೀಡುವ ಕೆಲಸವನ್ನು ಅಂದು ಮಾಡದೆ ಕ್ರಿಸ್ತ ವಿರೋಧಿ ಧೋರಣೆಯ ಕುರಿತೇ ಸ್ವಲ್ಪ ಹೊತ್ತು ಮಾತನಾಡಿ ಕೊನೆಯಲ್ಲಿ. +“ಪ್ರೀತಿಯ ಕ್ರೀಸ್ತುವರೆ..ನಿಮ್ಮ ಕಣ್ಣೆದುರು ಒಂದು ಅಕೃತ್ಯ ನಡೆದಿದೆ…ಈ ಬಗ್ಗೆ ನೀವು ಏನು ತೀರ್ಮಾನ ಕೈ ಕೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ..ಧರ್ಮ ಸಮ್ಮತವಾದ ಒಂದು ತೀರ್ಮಾನವನ್ನು ಕೈಕೊಳ್ಳಲು ಕ್ರಿಸ್ತ ಪ್ರಭುವು ನಿಮಗೆ ಮನಸ್ಸನ್ನು ಶಕ್ತಿಯನ್ನು ನೀಡಲೆಂದು ನಾನು ಅವನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ..” ಎಂದು ತಮ್ಮ ಶೆರಮಾಂವಂ ಮುಗಿಸಿದರು. +ಪಾದರಿ ಈ ಎಲ್ಲ ಮಾತುಗಳನ್ನು ಆಡುವುದರ ಮೂಲಕ ಜನರ ಹೆಗಲ ಮೇಲೇನೆ ಒಂದು ಹೊರೆ ಹೊರಿಸಿದ್ದರು. ಸುತಾರಿ ಇನಾಸನ ಮಗ ಪಾಸ್ಕುವಿನಿಂದ ಪಾದರಿಗಳ ಅವಮಾನವಂತೂ ಆಗಿತ್ತು. ಅವರಿಗೆ ನೋವಾಗಿತ್ತು. ಇದರ ಪರಿಹಾರ ಹೇಗೆ ಎಂಬುದನ್ನು ಜನ ನಿರ್ಧರಿಸಬೇಕಿತ್ತು. ಇಗರ್ಜಿಯಿಂದ ಹೊರ ಬಂದ ಜನ ಅಲ್ಲಲ್ಲಿ ನಿಂತು ಇದೇ ವಿಷಯ ಮಾತನಾಡಿದರು. ಪಾಸ್ಕೋಲ, ಕೈತಾನ, ಬಾಲ್ತಿದಾರ ಮೊದಲಾದವರು ಗುರ್ಕಾರ ಸಿಮೋನನನ್ನು ಹುಡುಕಿಕೊಂಡು ಬಂದರು. ಮಿರೋಣ ವಲೇರಿಯನ ಜಾನಡಯಾಸ್ ವಿನ್ಸೆಂಟ್, ಜಾನಿ ಸಂತ ಜೋಸೆಫ಼ರ ಮಂಟಪಕ್ಕೆ ಅನತಿ ದೂರದಲ್ಲಿ ಒಂದೆಡೆ ನಿಂತರು. ಗುಡ್ ಮಾರ್ನಿಂಗ್ ಹೇಳುತ್ತ ಹೋಗಿ ಇವರ ಜತೆ ಸೇರಿಕೊಂಡರು. +ಈ ಬಗ್ಗೆ ಏನು ಮಾಡುವುದು ಎಂದು ಪಾದರಿ ಮಸ್ಕರಿನಾಸರನ್ನು ಕೇಳುವಂತಿರಲಿಲ್ಲ. ಅವರು ಈಗ ವಿಷಯವನ್ನು ಜನರ ನಿರ್ಧಾರಕ್ಕೆ ಬಿಟ್ಟು ತಾವು ದೂರ ಸರಿದಿದ್ದರು. ಎಲ್ಲ ಜನ ಗುರ್ಕಾರನ ಮುಖ ನೋಡುವ ಪರಿಸ್ಥಿತಿ ಉದ್ಭವವಾಗಿತ್ತು. +ನಿನ್ನೆ ರಾತ್ರಿಯೇ ಗುರ್ಕಾರ ಸಿಮೋನ ಇನಾಸನ ಮನೆಗೆ ಹೋಗಿದ್ದ. +“ಪಾಸ್ಕು ಎಂತಹ ಕೆಲಸ ಮಾಡಿಬಿಟ್ಟೆಯಲ್ಲ” ಎಂದು ಪಾಸ್ಕುವನ್ನು ಎದುರು ಕೂಡಿಸಿಕೊಂಡು ಸಿಮೋನ ಗೋಳಾಡಿದ್ದ. +ಈ ಪಾದರಿಯ ಬಗ್ಗೆ ತನಗಾಗಲಿ, ಊರಿನಲ್ಲಿ ಇತರ ಯಾರಿಗೇ ಆಗಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗೆಂದು ತಮ್ಮ ಅಭಿಪ್ರಾಯವನ್ನು ಅಸಹನೆಯಿಂದ ಹೀಗೆ ವ್ಯಕ್ತಪಡಿಸಬೇಕೆಂದು ಯಾರೂ ಬಯಸಿರಲಿಲ್ಲ. ಪಾದರಿ ಏನೆಂದರೂ ದೇವರ ಪ್ರತಿನಿಧಿ. ತಮಗೂ ದೇವರಿಗೂ ನಡುವೆ ಸಂಬಂಧ ಸೇತುವೆಯಾಗಿ ನಿಂತಿರುವಾತ. ಆತನ ಮಾತು ಕೇಳಿಕೊಂಡು, ಹಿಂಸೆಯಾದರೆ ಸಹಿಸಿಕೊಂಡು ಹೋಗುವುದೇ ಸೂಕ್ತ ಎಂದು ಎಲ್ಲ ಜನ ನಿರ್ಧರಿಸಿದ್ದರು. ಊರಿನಲ್ಲಿ ಈ ಪಾದರಿ ಬಂದ ನಂತರ ಕಿರಿ ಕಿರಿಯುಂಟು ಮಾಡುವ ಹಲವು ಪ್ರಸಂಗಗಳು ನಡೆದಿದ್ದರೂ ಜನ ಅವುಗಳನ್ನು ನುಂಗಿಕೊಂಡಿದ್ದರು. ಆದರೂ ಈ ಹುಡುಗ ಹೀಗೆ ಮಾಡಿಬಿಟ್ಟನಲ್ಲ ಎಂದು ಸಿಮೋನ ಪೇಚಾಡಿದ. +ಪಾಸ್ಕು ತಾನು ತಪ್ಪು ಮಾಡಿಲ್ಲ, ತಪ್ಪು ಏನಿದ್ದರೂ ಪಾದರಿಗಳದ್ದು ಎಂದು ಹೇಳಲು ಬಾಯಿ ತೆರೆದನಾದರೂ ಸಿಮೋನ ಅದಕ್ಕೆ ಆಸ್ಪದ ಕೊಡಲಿಲ್ಲ. +“ನೀನು ದುಡುಕಬಾರದಿತ್ತು..ಅವರು ಲುಸಿಫ಼ೇರ ಅಂದರು..ಒಂದು ಏಟು ಹೊಡೆದರು. ಏನಾಯಿತು? ನಮ್ಮ ಆತ್ಮದ ತಂದೆ ಅಧ್ಯಾತ್ಮದ ಗುರು..ಅವರಿಗೆ ತಗ್ಗಿ ಬಗ್ಗಿ ನಾವು ನಡೆಯಬೇಕಲ್ಲವೇ? ” ಎಂದು ಪಾಸ್ಕುಗೇನೆ ಉಪದೇಶ ನೀಡಿದ. +“ನಿನ್ನ ಮನೆಗೆ ಎಂತಹ ಗೌರವ ಇದೆಯಲ್ಲ ಊರಿನಲ್ಲಿ..” ಎಂದು ಬೇರೆ ಮನೆಯ ಹಿರಿಮೆ ಬಗ್ಗೆ ಹೇಳಿದ. +ಸುತಾರಿ ಇನಾಸನ ಮನೆ ಈಗ ಒಂದು ಪವಿತ್ರ ತಾಣವಾಗಿತ್ತು. ತೇರ್ಸಗೆ ಬರುವವರು, ಮೇಣದ ಬತ್ತಿ ಕೊಡಲು ಬರುವವರು, ರಸ್ತೆಯ ಮೇಲೆ ಹೋಗುವಾಗ ನಿಂತು ಶಿಲುಬೆಯ ಗುರುತು ಮಾಡುವವರು ಹೆಚ್ಚಾಗಿದ್ದಾರು. ಖುರ್ಸಾ ಘರ್(ಶಿಲುಬೆಯ ಮನೆ) ಎಂಬ ಆಡ್ಡ ಹೆಸರು ಬಿದ್ದಿತ್ತು ಈ ಮನೆಗೆ. ಈ ಒಂದು ಪ್ರಕರಣದಿಂದಾಗಿ ಮನೆಯ ಹೆಸರೇ ಹಾಳಾಯಿತಲ್ಲ ಎಂದು ಆತ ವಿವರವಾಗಿ ಹೇಳಿದ. +“ಏನು ಮಾಡೋಣ ಇನಾಸ?” ಎಂದು ಇನಾಸನ ಮುಖ ನೋಡಿದ… +ತಾನಾಯಿತು ತನ್ನ ಕೆಲಸವಾಯಿತು ಮನೆ ಅಂಗಳದ ಶಿಲುಬೆಯಾಯಿತು ಎಂದು ಒಂದು ರೀತಿಯ ಸಂತನ ಬದುಕನ್ನು ಸಾಗಿಸಿದ್ದ ಇನಾಸ. ಅವನ ಹೆಂಡತಿ ಮೂಕಿಯಾಗಿದ್ದರಿಂದಲೋ ಏನೋ ಕೇರಿಯ ಉಸಾಬರಿಗೂ ಈಗೀಗ ಹೋಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಅಷ್ಟೆಯೇ ಊರ ಅಡಿಕೆ ಮಂಡಿಯಲ್ಲಿ ಅಡಕೆ ಆರಿಸುವ ಕೆಲಸ ಮಾಡಿಕೊಂಡು ತನಗೆ ತಮಗೆ ಏನು ಬೇಕೋ ಅದನ್ನೆಲ್ಲ ಮಾಡಿಕೊಂಡಿದ್ದರು. ಇಬ್ಬರಿಗೂ ನೆಂಟಸ್ತಿಕೆಯಾಗಿತ್ತು. ಕೊನೆಯವಳಾದ ಪಾವೇಲಿನ ಕೂಡ ಒಳ್ಳೆಯ ಹುಡುಗಿಯೇ. ಇನಾಸನ ಹಿರಿಯ ಮಗ ಬ್ಯಾಂಡ್ ಸೆಟ್ ಇರಿಸಿಕೊಂಡು ತನ್ನ ಜೀವನಕ್ಕೊಂದು ದಾರಿ ಕಲ್ಪಿಸಿಕೊಂಡಿದ್ದ. ಈ ಪಾಸ್ಕು ಕೂಡ ತಂದೆಯ ಕೆಲಸವನ್ನು ಮುಂದುವರೆಸಿಕೊಂಡು ಒಳ್ಳೆಯ ಹೆಸರು ಮಾಡಿದ್ದ. ಈಗ ಇದೊಂದು ಕಳಂಕ ಅಂಟಿಕೊಂಡಿತೆ? +ಇನಾಸ ಕಣ್ಣೊರೆಸಿಕೊಂಡು ಸಿಮೋನನನ್ನೇ ಕೇಳಿದ. +“ಏನು ಮಾಡೋಣ ಹೇಳು ಸಿಮೋನ. ಮಗ ಮಾಡಿದ ತಪ್ಪಿಗೆ ಶಿಲುಬೆಯ ಮೇಲೆ ಮೊಳೆ ಹೊಡೆಸಿಕೋ ಅಂದರೂ ನಾನು ಸಿದ್ಧ..” ಎಂದ ಆತ ನೋವನ್ನು ತಡೆದುಕೊಳ್ಳಲಾರದೆ. +“ನೋಡೋಣ..ನೋಡೋಣ..” ಎಂದು ಸಿಮೋನ ರಾತ್ರಿ ಇನಾಸನ ಮನೆಯಿಂದ ತಿರುಗಿಬಂದಿದ್ದ. +ಈಗ ಭಾನುವಾರದ ಬೆಳಿಗ್ಗೆ ಪೂಜೆ ಮುಗಿದ ನಂತರ ಸಿಮೋನ ಹತ್ತು ಜನರಿಗೆ ಉತ್ತರ ಕೊಡಬೇಕಾಯಿತು. ಪಾಸ್ಕೋಲ- +“ಏನಾದರೊಂದು ತೀರ್ಮಾನ ಮಾಡಿ” ಎಂದ. +ಸಿಮೋನ ಸುತ್ತಲೂ ಸೂಕ್ಷ್ಮವಾಗಿ ಗಮನಹರಿಸಿದ. ಇಗರ್ಜಿಗೆ ಬಂದ ಎಲ್ಲ ಗಂಡಸರೂ ಅಲ್ಲಲ್ಲಿ ಗುಂಪುಗೂಡಿ ನಿಂತಿದ್ದರು. ಯುವಕರೂ ಇದ್ದರು. ಹೆಂಗಸರು, ಮಕ್ಕಳು, ಯುವತಿಯರು ನಿಧಾನವಾಗಿ ಕರಗಿ ಹೋಗಲಾರಂಭಿಸಿದರು. ಚಮಾದೋರ ಇಂತ್ರು ಗುರ್ಕಾರನ ಬಾಯಿಯಿಂದ ಬರುವ ಮಾತಿಗಾಗಿ ಎಂಬಂತೆ ಅವನ ಹತ್ತಿರವೇ ನಿಂತಿದ್ದ. +ಸಿಮೋನ, ಪಾತ್ರೋಲ, ಬೋನ, ಬಾಲ್ತಿದಾರ, ಕೈತಾನ ಎಂದು ಬಳಿ ಇದ್ದ ಕೆಲ ಹಿರಿಯರ ಬಳಿ ಸಮಾಲೋಚನೆ ನಡೆಸಿದ. +ಮಧ್ಯಾಹ್ನ ಮೂರು ಗಂಟೆಗೆ ಇಗರ್ಜಿಯಲ್ಲಿ ಒಂದು ಸಭೆ ಕರಿಯಬೇಕೆಂಬ ನಿರ್ಧಾರವಾಯಿತು. ಅಂತೆಯೇ ಇಂತ್ರುಗೆ ಎಲ್ಲರಿಗೂ ವಿಷಯ ತಿಳಿಸಲು ಹೇಳಲಾಯಿತು. ಏನೋ ಒಂದು ತೀರ್ಮಾನವಾಗಬಹುದು ಎಂಬ ಆಶಯದೊಂದಿಗೆ ಇಗರ್ಜಿಗೆ ಬಂದು ಉಪವಾಸವಿದ್ದು ದಿವ್ಯ ಪ್ರಸಾದ ಸ್ವೀಕರಿಸಿದ ಜನ ಉಪವಾಸ ಮುರಿಯಲು ಮನೆಗಳತ್ತ ತಿರುಗಿದರು. ಆದರೆ ಯಾರಲ್ಲೂ ಉತ್ಸಾಹವಿರಲಿಲ್ಲ. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ […] +ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_218.txt b/Kannada Sahitya/article_218.txt new file mode 100644 index 0000000000000000000000000000000000000000..4dc70565089f23b54005461aae1c47163f7d5d65 --- /dev/null +++ b/Kannada Sahitya/article_218.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […] +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […] +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_219.txt b/Kannada Sahitya/article_219.txt new file mode 100644 index 0000000000000000000000000000000000000000..5e5ba492b4e68a248779f5430799c7c8399b753e --- /dev/null +++ b/Kannada Sahitya/article_219.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಂಕರಾಭರಣ ಚಾಪು +ತೂಗಿರೆ ರಂಗನ ತೂಗಿರೆ ಕೃಷ್ಣನ +ತೂಗಿರೆ ಅಚ್ಯ್ತಾನಂತನ ಪ +ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ +ತೂಗಿರೆ ಕಾವೇರಿ ರಂಗಯ್ಯನ ಅ +ನಾಗಲ್ಕದ ನಾರಾಯಣ ಮಲಗ್ಯಾನೆ +ನಾಗಕನ್ನಿಕೆಯರು ತೂಗಿರೆ +ನಾಗವೇಣಿಯರು ನೇಣಿ ಪಿಡಿದುಕೊಂಡು +ಬೇಗನೆ ತೊಟ್ಟಿಲ ತೂಗಿರೆ ೧ +ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ +ಇಂದುಮುಖಿಯರೆಲ್ಲ ತೂಗಿರೆ +ಇಂದ್ರ ಕನ್ನಿಕೆಯರು ಚಂದದಿ ಬಂದು ಮು +ಕುಂದನ ತೊಟ್ಟಿಲ ತೂಗಿರೆ ೨ +ಆಲದೆಲೆಯ ಮೇಲೆ ಶ್ರೀಲೊಲ ಮಲಗ್ಯಾನೆ +ನೀಲಕುಂತಳೆಯರು ತೂಗಿರೆ +ವ್ಯಾಳಶಯನ ಹರಿ ಮಲಗು ಮಲಗುಯೆಂದು +ಬಾಲಕೃಷ್ಣಯ್ಯನ ತೂಗಿರೆ ೩ +ಸಾಸಿರನಾಮನೆ ಸರ್ವೊತ್ತನೆಂದು +ಸೂಸುತ್ತ ತೊಟ್ಟಿಲ ತೂಗಿರೆ +ಲೇಸಾಗಿ ಮಡುವಿನೋಳ್ ಶೇಷನ ತುಳಿದಿಟ್ಟ +ದೋಷವಿದೂರನ ತೂಗಿರೆ ೪ +ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ +ತೆರಳನ ತೊಟ್ಟಿಲ ತೂಗಿರೆ +ಸಿರಿದೇವಿ ರಮಣನೆ ಪುರಂದರ ವಿಠಲನೆ +ಕರುಣದಿ ಮಲಗೆಂದು ತೂಗಿರೆ ೫ +***** +ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […] +ರಾಗ — ಕಾಂಬೋದಿತಾಳ — ಅಟ್ಟ ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ |ಕುರುಹ ಪೇಳಿ ಕುಳೀತಿದ್ದ ಜನರು ||ಪ|| ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ |ಗಂಟಲು ಮೂರುಂಟು ಮೂಗಿಲ್ಲವು ||ಕುಂಟಮನುಜನಂತೆ […] +ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_22.txt b/Kannada Sahitya/article_22.txt new file mode 100644 index 0000000000000000000000000000000000000000..7cf1643048ba74a53bdbf2145682d5bec5b813b6 --- /dev/null +++ b/Kannada Sahitya/article_22.txt @@ -0,0 +1,69 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಸದುವಿನಯದ ತುಂಬಿದ ಕೊಡ +ತಂದಳು ನೀಲಾಂಬಿಕೆ, +ಕಲ್ಯಾಣದ ಅಂಗಳದಲಿ +ತಳಿ ಹೊಡೆದಳು ಛಂದಕೆ. +ಸಮಚಿತ್ತದ ರಂಗೋಲಿಯು +ಒಳಹೊರಗೂ ಧೂಪವು, +ಹಾರಾಡುವ ಹೊಸತಿಲಲ್ಲಿ +ಹೊಯ್ದಾಡದ ದೀಪವು. +೨ +ಮಹಾಮನೆಯ ಮಹಾತಾಯಿ +ಮಾಸದ ಮಡಿ ಹಾಸಲು, +ದಾಸೋಹಕೆ ಮೀಸಲಾದ +ತೃಪ್ತಿಯ ನಗೆ ಸೂಸಲು, +ಎಲ್ಲೆಲ್ಲಿಯ ಗಣ ತಿಂಥಿಣಿ +ತಣಿದು ಹಾಡಿ ಹರಸಲು +ಭಕ್ತಿಯ ಭಂಡಾರ ತುಂಬಿ +ಹರಡಿರು ಬೆಳುದಿಂಗಳು. +೩ +ಅಯ್ಯನ ಕೈ ನೋವುದೆನಲು +ಆಭರಣವ ಕೊಟ್ಟಳು- +ಅನುಭಾವದ ಅಲಂಕಾರ +ಆಚರಣೆಯ ತೊಟ್ಟಳು. +ನೆರಳಾದಳು ಬಸವಣ್ಣನ +ಹರಳಾದಳು ಬೆರಳಿಗೆ, +ಅರಳಾದಳು ಲಿಂಗದಲ್ಲಿ +ಪರಿಮಳಿಸುತ ಪೂಜೆಗೆ. +೪ +ಏನು ನೋವೊ ಹೇಳಲಿಲ್ಲ +ಕೇಳಲಿಲ್ಲ ಮಡದಿಗೆ +ಹಾಗೆ ಹೊರಟು ಹೋದರಣ್ಣ +ಕಲ್ಯಾಣದ ಹುಡದಿಗೆ. +ಕೂಡಲದಲಿ ನೀರು ಹರಿದು +ತಿಳಿಗೊಂಡಿತು ಬನ್ನಿರಿ- +ನೀಲಾಂಬಿಕೆ ನೆನಪಾದಳು +ಬೇಗನೆ ಕರೆತನ್ನಿರಿ. +೫ +ಕರಸ್ಥಲದಿ ಬಸವರೂಪು +ಪರಿಣಾಮವ ಮೀರಿಸಿ, +ಬಸವಯ್ಯನು ಮಾಡಿದಾಟ +ಲಿಂಗದೆಡೆಗೆ ತೋರಿಸಿ, +ಅಲ್ಲಿ ಇಲ್ಲಿ ಉಭಯವಳಿದು +ಅಂಗೈಯಲಿ ಸಂಗಮ +ಅಲ್ಲಿದ್ದರು, ಇಲ್ಲಿಲ್ಲವೆ? +ಜಗದ ಜೀವ ಜಂಗಮ. +೬ +ನೀಲಾಂಬೆಯ ನಿಲವಿನಲ್ಲಿ +ಮಹಾಲಿಂಗ ಹೊಳೆಯಲು +ಬಸವಣ್ಣನ ಭಕ್ತಿ ಕಲಶ +ಸಂಗಮನಡಿ ತೊಳೆಯಲು- +ಗಾಳಿಯಲ್ಲಿ ಗಾಳಿಯಾಗಿ +ಮಹಾಬೆಳಗು ಸಂದಿತು: +ಪ್ರಾಣಲಿಂಗದಲ್ಲಿ ಕರಗಿ +ನೀಲಾಂಬರ ಮಿಂಚಿತು. +***** +೧೯೬೯ +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […] +ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […] +ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. ಅರೆ, ಎಂದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_220.txt b/Kannada Sahitya/article_220.txt new file mode 100644 index 0000000000000000000000000000000000000000..7e2d899197956a1aefd8035b5962953190cfa1f8 --- /dev/null +++ b/Kannada Sahitya/article_220.txt @@ -0,0 +1,140 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ ಒಳಗಿನ ನಿಜವ ಮತ್ತಷ್ಟೂ ಬಿಚ್ಚಿಡುತ್ತಾ ಸುಮ್ಮನೆ ನಗುತ್ತ ಸುಮ್ಮನೆ ನಿದ್ದೆ ಮಾಡಿದಂತೆ ನಟಿಸುತ್ತಿದ್ದರು. ನನಗೆ ರೈಲು ಪ್ರಯಾಣ ಅಷ್ಟಾಗಿ ಹಿಡಿಸುವುದಿಲ್ಲವಾದರೂ ಯಾವುದೋ ಒಂದು ಗುಜುರಿ ವ್ಯವಹಾರಕ್ಕೆ ಸಿಲುಕಿ ಸಾಲಕ್ಕೆ ಜಾಮೀನಾಗಿ ಆ ಮಹಾಶಯ ಸಾಲ ತೀರಿಸದೆ ಅದು ನನ್ನ ಕುತ್ತಿಗೆಗೆ ಬಂದು ದಿನವೂ ಬಡ್ಡಿ ವ್ಯವಹಾರದ ಧಾಂಡಿಗರು ಮನೆಯ ಮುಂದೆ ಬಂದು ಸ್ವತಃ ಇವನೇ ಸಾಲ ಮಾಡಿ ತಿಂದು ಕುಡಿದು ದುಂದು ಮಾಡಿ ಈಗ ಸಾಲ ತೀರಿಸಲಾರದೆ ಕಳ್ಳಾಟ ಆಡುತ್ತಿದ್ದಾನೆಂಬಂತೆ ರಾದ್ಧಾಂತ ರೂಪಿಸಿ ವಠಾರದ ಜನರೆದುರು ನನ್ನನ್ನು ಏವನ್ ಧೋಖಾ ಪಾರ್ಟಿ ಎಂಬಂತೆ ಇಕ್ಕಟ್ಟನ್ನೂ ಸೃಷ್ಟಿಸಿದ್ದರು. ಬಡ್ಡಿ ವಸೂಲಿಯ ಧಾಂಡಿಗರ ಜೊತೆ ನಾನು ರಗಳೆಗೆ ಇಳಿದಷ್ಟು ಅಪಾಯವೇ ಹೆಚ್ಚಿತ್ತು. ‘ದೂಸ್ರಾ ಮಾತಾಡಿದ್ರೆ ಒಂದೇ ಏಟ್ಗೆ ನಿನ್ ಬುರುಡೆ ಬಿಚ್ಚಿ ಕೈಗೆ ಕೊಡಬೇಕಾಗ್ತದೆ, ಉಷಾರ್’ ಎಂದು ಬೆದರಿಕೆ ಹಾಕಿ ಇನ್ನು ಒಂದು ವಾರದಲ್ಲಿ ಎಲ್ಲ ಹಣವನ್ನು ತಂದೊಪ್ಪಿಸಬೇಕು ಎಂದು ತುರ್ತು ಪರಿಸ್ಥಿತಿಯನ್ನು ತಂದೊಡ್ಡಿದ್ದರು. +ನನ್ನ ಆ ಮೂರ್ಖ ಮಿತ್ರ ಸಾಲ ಪಡೆದು ನುಣ್ಣಗೆ ಮಾತಾಡಿ ಬಿಸಿನೆಸ್ ಮಾಡಿ ಮುಂದೆ ಬರುತ್ತೇನೆಂದು ನನ್ನನ್ನು ನಂಬಿಸಿದ್ದ. ಬಿಸಿನೆಸ್‌ನ ಎಬಿಸಿಡಿ ತಿಳಿಯದ ನಾನು ಅವನ ನೀಲಿ ನಕ್ಷೆಗಳಿಗೆ ರೋಸಿ ಹೋಗಿದ್ದೆ. ಎಲ್ಲೋ ನಾನೇ ಅವನಿಗಿಂತ ಪರಮಾವಧಿ ಮೂರ್ಖ ಎಂದು ಈಗ ಅನಿಸುತ್ತದೆ. ಮುಂಬಯಿಗೆ ಹೋಗಿ ಅಲ್ಲಿ ಚೋರ್ ಬಜಾರಿನಲ್ಲಿ ಬಹಳ ಸಸ್ತಾ ಆಗಿ ಸಿಗುವ ಎಂತೆಂತದೋ ಮಾಲುಗಳನ್ನು ಈ ಪೇಟೆಗೆ ತಂದು ಅವನ್ನು ಒಂದಕ್ಕೆ ಐದರಷ್ಟು ಬೆಲೆ ಕಟ್ಟಿ ಮಾರಿದರೆ ಈ ತನಕ ಮಾಡಿರುವ ತನ್ನೆಲ್ಲ ಸಾಲವೂ ಚುಕ್ತ ಆಗ್ತವೆಂದೂ ಜೊತೆಗೆ ಸಾಲ ಕೊಡಿಸಿದ್ದಕ್ಕಾಗಿ ಮುಫತ್ತಾಗಿ ನಿನಗೂ ಕೂಡ ಒಂದಷ್ಟು ಪರ್ಸೆಂಟ್ ದುಡ್ಡು ಕೊಡುವುದಾಗಿಯೂ ಇದರಿಂದ ಇಬ್ಬರ ಸಾಲಗಳಿಗೂ ಒಂದು ದಾರಿ ಆಗುತ್ತದೆಂದು ಆ ಗೆಳೆಯ ಒಂದು ರಾತ್ರಿಯೆಲ್ಲ ಪ್ಯಾಕೆಟ್ ಪರಮಾತ್ಮನ ಅಮಲಿನಲ್ಲಿ ನಂಬರ್ ‘ಟೆನ್ ಮಟನ್’ ತಿಂತಾ ನನ್ನನ್ನು ನಂಬಿಸಿಬಿಟ್ಟಿದ್ದ. ಹಾಗಾಗಿಯೇ ಬಹಳ ಹಿಂದೆ ಯಾವುದೋ ಒಂದು ಜುಜುಬಿ ಕಾರಣಕ್ಕೆ ಪರಿಚಯವಾಗಿದ್ದ ಬಡ್ಡಿ ವ್ಯವಹಾರದ ಮಿತ್ರನೊಬ್ಬನಿಂದ ಅಂತೂ ಕೊನೆಗೆ ಸಾಲ ಕೊಡಿಸಿ ಸಿಕ್ಕಿಹಾಕಿಕೊಂಡಿದ್ದ. +ಮಿತ್ರನಾದ ತಿಮ್ಮಯ್ಯ ಬೊಂಬಾಯಿಗೆ ಹೋಗಿ ಮೂರೇ ದಿನಗಳಲ್ಲಿ ಹಿಂದಿರುಗುತ್ತೇನೆಂದು ಹೇಳಿದ್ದವನು ಆರು ತಿಂಗಳಾದರೂ ವಾಪಸ್ಸು ಬಂದಿರಲಿಲ್ಲ. ಅವಿವಾಹಿತನಾದ ಅವನು ಮತ್ತೆ ಇಲ್ಲಿಗೆ ಮರಳಿ ಬರುವನೆಂಬ ಆಸೆಯೆ ನನಗೆ ಉಳಿಯದೆ ಹೋಯಿತು. ಯಾವಾಗಲೋ ಒಂದೆರಡು ಬಾರಿ ಪತ್ರ ಬರೆದು ಸಾಲ ಕೊಡಿಸಿದ್ದಕ್ಕಾಗಿ ಕೃತಜ್ಞತೆ ಹೇಳಿ ತಾನಿಲ್ಲಿ ಯಾವುದೊ ಒಂದು ಪಾರ್ಟಿಯಿಂದ ಮೋಸ ಹೋದೆನೆಂದು ತಿಳಿಸಿ ಸದ್ಯ ಎಂತದೋ ಒಂದು ಕಂಪನಿಯಲ್ಲಿ ದುಡಿಯುತ್ತಿರುವೆನೆಂದೂ ಆದಷ್ಟು ಬೇಗ ದುಡ್ಡು ಕಳಿಸುವೆ ಎಂದು ಬರೆದಿದ್ದ. ಆ ಪತ್ರವನ್ನೇ ಬಡ್ಡಿಗರಿಗೆ ನಾನು ತೋರಿಸಿ ತೋರಿಸಿ ಅದು ಅವರ ತಾಳ್ಮೆಯನ್ನೇ ಗೇಲಿ ಮಾಡಿ ಧ್ವಂಸ ಮಾಡಿಬಿಟ್ಟಿತ್ತು. ಒಮ್ಮೆ ಹಾಗೆ ಆ ಪತ್ರವನ್ನು ಅತಿ ವಿನಯದಿಂದ ಬಡ್ಡಿ ವಸೂಲಿಯ ಧಾಂಡಿಗನಿಗೆ ತೋರಿಸಿ ಕನಿಕರಿಸಿ ಸ್ವಲ್ಪ ತಡೆದುಕೊಳ್ಳಬೇಕೆಂದು ಪ್ರಾರ್ಥಿಸಿದ್ದೆ. ಆ ವಸೂಲಿಗಾರ ರಭಸವಾಗಿ ಆ ಸವೆದು ಹಣ್ಣಾಗಿ ಹೋಗಿದ್ದ ಪತ್ರವನ್ನು ಪಟಾರೆಂದು ಕಿತ್ತುಕೊಂಡು ಸಿಟ್ಟಿನಿಂದ ಅದನ್ನು ಮುದುರಿ ಬಿಸಾಡಲೂ ಆಗದೆ ಆ ನನ್ ಮಗ ಕೈಗೆ ಸಿಕ್ಕಿದ್ರೆ ಅವನನ್ನ ಇಂಗೇ ಅಗಿದು ಹಾಕ್ತಿದ್ದೆ ಎಂದು ಆ ಪತ್ರವನ್ನು ಬಾಯಿಗೆ ಕಬಾಬನ್ನು ಎಸೆದುಕೊಂಡಂತೆ ಹಾಕಿಕೊಂಡು ಅಗಿದು ವ್ಯಾ ಥ್ಯೂ ಎಂದು ಉಗಿದು ರೀ ಆ ಲೋಫರ್ ನನ್ ಮಗನ್ನ ಕಾಯ್ತಾ ನಾವ್ಯಾಕ್ರೀ ಕುತ್ಗೋಬೇಕು. ನೀವಿದ್ದೀರಲ್ಲಾ ಎಮ್ಮಾ ನಿಮ್ದೇರೀ ನಾಟ್ಕಾ. ತಿಕಾ ಮುಚ್ಕೊಂಡು ದುಡ್ಡು ನೀವು ಕೊಟ್ರಾ ಸರಿ ಇಲ್ಲಾ ಅಂದ್ರೆ ಮುಂದಿಂದು ಬಾಳಾ ಡೇಂಜರ್ ಐತೆ ಎಂದು ವೀರಾವೇಶದಿಂದ ನನ್ನ ಎದುರು ಕೂಗಾಡಿ ನನ್ನ ಹೆಂಡತಿ ಮಕ್ಕಳು ಎದಿರು ನನ್ನನ್ನೇ ಜರ್ದಾ ಅಗಿದು ಉಗಿದು ಹಾಕುವಂತೆ ಮೇಲೆ ಕೆಳಗೆ ನೋಡಿದ್ದ. ನನ್ನ ಎರಡು ಹೆಣ್ಣು ಮಕ್ಕಳು ಅವನು ಹೊರಟ ಮೇಲೆ ಅಪ್ಪಾ ನೀವು ಆತ ಅಂದಂತೆಲ್ಲ ಅನಿಸಿಕೊಂಡು ನಿಂತಿದ್ದೀರಲ್ಲಾ ನಾಲ್ಕು ಬಾರಿಸಬಾರದಿತ್ತೇ ಎಂದವು. ಜೊತೆಗೆ ನನ್ನ ಧರ್ಮಪತ್ನಿಯೂ ದನಿಗೂಡಿಸಿ ಕೊನೆ ಪಕ್ಷ ಜೋರಾಗಿ ಮಾತಾಡಿಯಾದ್ರೂ ಅವರಿಗೆ ಎದುರುತ್ತರ ಕೊಡಬಾರದಿತ್ತಾ. ಆ ಹಣ ಪಡೆದು ನಾವೇನಾದ್ರೂ ತಿಂದಿದ್ದೆವಾ ಎಂದು ರೇಗಾಡಿದ್ದಳು. ಸಿಟ್ಟಾದಾಗ ಮಕ್ಕಳು ಸರಿಯಾಗಿ ಓದದೆ ಕಳ್ಳಾಟ ಆಡುವಾಗ ನಾನು ನಾಲ್ಕಾರು ಏಟುಗಳನ್ನು ಕೊಡುವುದರ ರುಚಿ ಕಂಡಿದ್ದ ನನ್ನ ಹೆಣ್ಣು ಮಕ್ಕಳು ತಮಗೆ ಹೊಡೆದಷ್ಟೇ ಸುಲಭವಾಗಿ ಆ ಧಾಂಡಿಗರಿಗೂ ಹೊಡೆಯಬಹುದಿತ್ತಲ್ಲವೇ ಎಂದು ಸಹಜವಾಗಿ ಹಾಗೆ ಕೇಳಿದ್ದರು. ಆ ಗೆಳೆಯ ತಿಮ್ಮಯ್ಯನ ಮೇಲಿನ ಸಿಟ್ಟನ್ನೂ ಈ ದಾಂಡಿಗರ ಮೇಲಿನ ಕೋಪವನ್ನೂ ನಾನು ನನ್ನ ಹೆಂಡತಿ ಮಕ್ಕಳ ಮೇಲೆ ಸಾದ್ಯಂತ ಯಶಸ್ವಿಯಾಗಿ ಉಡಾಯಿಸಿ ಅಂತೂ ಕೊನೆಗೆ ಆ ತಿಮ್ಮಯ್ಯನನ್ನು ಮುಂಬಯಿಯ ಯಾವುದೋ ಮೂಲೆಯಲ್ಲಿ ಇದ್ದರೂ ಸರಿಯೆ ಹಿಡಿದು ತರಬೇಕೆಂದು ಆ ರಾತ್ರಿಯೇ ಯಾರ್‍ಯಾರ ಬಳಿಯೋ ಸಾಲ ಮಾಡಿ ರೈಲು ಹತ್ತಿ ಹೊರಟುಬಿಟ್ಟಿದ್ದೆ. +ರೈಲು ಭರ್ತಿಯಾಗಿತ್ತು. ಹೇಗೋ ಟಿ.ಸಿ.ಗೆ ದುಂಬಾಲು ಬಿದ್ದು ಒಂದು ಜಾಗವನ್ನು ಹೊಡೆದುಕೊಂಡಿದ್ದೆ. ಮನೆ ಮಠ ತೊರೆದು ಎಲ್ಲೊ ಕದ್ದು ದೇಶಾಂತರ ಹೋಗುತ್ತಿರುವಂತೆ ಅನಿಸುತ್ತಿತ್ತು. ದಪ್ಪ ದಪ್ಪವಾದ ಜನ ಅವರ ಆಕಾರದಂತೆಯೇ ಇದ್ದ ಲಗೇಜುಗಳನ್ನು ಸೀಟಿನ ಕೆಳಗೆ ಮೇಲೆ ಅಲ್ಲೆಲ್ಲ ಜೋಡಿಸಿಟ್ಟುಕೊಂಡು ಆರಾಮವಾಗಿ ಕುಳಿತವರಂತೆ ಕಾಣುತ್ತಿದ್ದರು. ಇವನಾರೋ ಪರದೇಶಿ ಎಂಬಂತೆ ಅಲ್ಲಿದ್ದ ಅನೇಕರು ನನ್ನನ್ನು ಅನುಮಾನದಿಂದ ನೋಡುತ್ತಿದ್ದರು. ನನಗೆ ಆ ರೈಲು ಜನ ಗೌರವ ಕೊಡದಿದ್ದರೂ ಕೆಟ್ಟ ಅನುಮಾನದಿಂದ ನೋಡುವುದಂತೂ ಬಹಳ ಕಿರಿಕಿರಿಯನ್ನು ಸೃಷ್ಟಿಸುತ್ತಿತ್ತು. ನನ್ನ ಎದುರೆ ಕುಳಿತಿದ್ದ ಪೆಡಂಭೂತದಂತಹ ಒಬ್ಬ ಆಸಾಮಿ ತನ್ನ ಕೋಮಲವಾದ ಪುಟಾಣಿ ಮುದ್ದು ಮೊಲದಂತಹ ಹೆಂಡತಿಯನ್ನು ಕಿಟಕಿಯ ಬಳಿಗೆ ಹಾಕಿಕೊಂಡು ಈಕೆಯನ್ನು ಯಾರೂ ನೋಡಬಾರದು ಎಂಬಂತೆ ಇಡೀ ತನ್ನ ಗಜಗಾತ್ರದ ದೇಹದಿಂದ ಒತ್ತರಿಸಿ ಮೂಲೆಗೆ ಹಾಕಿಕೊಂಡು ಹಿಂದಿಯಲ್ಲಿ ಏನೇನೋ ಗೊಣಗುತ್ತಿದ್ದ. ಪದೇ ಪದೇ ನನ್ನನ್ನೇ ದಿಟ್ಟಿಸಿ ಇವನು ನಿಜವಾಗಿಯೂ ನ್ಯಾಯೋಚಿತ ಪ್ರಯಾಣಿಕನೇ ಅಲ್ಲ. ಎಲ್ಲೋ ಕದ್ದು ಹೇಗೋ ಇಲ್ಲಿ ಬಂದು ಕುಳಿತು ಟಿಕೇಟ್ ಇಲ್ಲದೆ ಕಳ್ಳ ಪಯಣಿಗನಾಗಿ ನನ್ನೆದುರೇ ಬಂದು ವಕ್ಕರಿಸಿಕೊಂಡಿದ್ದಾನಂತೆ ಭಾವಿಸಿ ತನ್ನ ಲಗೇಜುಗಳನ್ನು ಮತ್ತೆ ಮತ್ತೆ ಆಗಾಗ ನೋಡಿಕೊಳ್ಳುತ್ತಾ ಒಮ್ಮೆ ಕೋಪದಿಂದ ಎಚ್ಚರಿಕೆಯಿಂದ ಇನ್ನೊಮ್ಮೆ ತನಗೇನೂ ಮೋಸ ಮಾಡಬೇಡಯ್ಯೋ ಎಂಬಂತೆ ವಿನಂತಿ ಭಾವದಲ್ಲೂ ಹಾಗೇ ಮತ್ತೊಮ್ಮೆ ತನ್ನ ಹೆಂಡತಿಯ ಕಡೆ ಪಿಸು ಮಾತಿನಲ್ಲಿ ಎನೋ ಹೇಳಿ ಈಕೆಯ ಮೈಮೇಲಿರುವ ಬಂಗಾರವನ್ನಾದರೂ ಕಿತ್ತುಕೋ ಆದರೆ ಅವಳ ದೇಹದ ಒಳಸಿರಿಯ ಬಗ್ಗೆ ಕಲ್ಪಿಸಿಕೊಂಡೆಯೋ ನಿನ್ನ ಜೀವನವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕಿಬಿಡುತ್ತೇನೆಂಬಂತೆ ನನ್ನನ್ನೇ ನೋಡುತ್ತಿದ್ದ. +ಆ ದಡೂತಿ ಪತಿಯನ್ನು ಆ ಹೆಂಗಸು ಯಾವ ಬೇಸರ ನಿರಾಶೆಯೂ ಇಲ್ಲದೆ ಅವನಿಗೆ ಅಂಟಿಕೊಂಡು ಪುಟ್ಟ ಪಿಂಚ್ ಹಕ್ಕಿಯಂತೆ ರೈಲು ಕಿಟಕಿಯ ಕಂಬಿಗಳನ್ನು ಹಕ್ಕಿಗಳು ಕಾಲಿನಿಂದ ಹಿಡಿದುಕೊಂಡಂತೆ ಕೋಮಲವಾದ ರಕ್ತ ತುಂಬಿಕೊಂಡ ಬೆರಳುಗಳಿಂದ ಹಿಡಿದುಕೊಂಡು ಆಕಾಶದ ನಕ್ಷತ್ರದ ತೋಟಕ್ಕೆ ತಾನೀಗ ಹಾರಿ ಹೋಗುತ್ತಿರುವಂತೆ ಹಾಗೇ ನೋಡುತ್ತಿದ್ದಳು. ಅವಳ ಕಡೆ ನೋಡಿದರೆ ಈ ಮನುಷ್ಯ ರಗಳೆ ಮಾಡಿಯೇ ತೀರುತ್ತಾನೆ ಎಂಬ ಪ್ರಜ್ಞೆ ಒಳಗಿಂದ ತಿಳಿಸುತ್ತಿತ್ತು. ಯಾರ್‍ಯಾರೋ ಪಯಣಿಗರು ಒಂದು ಬೋಗಿಯಿಂದ ಇನ್ನೊಂದು ಬೋಗಿಯ ತನಕ ಉದ್ದವೂ ಓಡಾಡುತ್ತಾ ಯಾವ ಬೋಗಿಯಲ್ಲಿ ಯಾವ್ಯಾವ ಚೆಲುವೆಯರು ಕುಳಿತಿದ್ದಾರೆ ಎಂಬಂತೆ ಅಂಕಿ ಅಂಶಗಳ ಹಾಕುತ್ತಾ ತಿರುಗುತ್ತಿದ್ದರು. ನನ್ನ ಪಕ್ಕದಲ್ಲೂ ಇನ್ನೊಬ್ಬ ಮಧ್ಯವಯಸ್ಕ ಆಗಲೇ ತೂಕಡಿಕೆಯಲ್ಲಿ ರೈಲಿನ ವಾಲಾಟಕ್ಕೆ ಹೊಂದಿಕೊಳ್ಳಲಾರದೆ ಆಗಾಗ ನನ್ನ ಭುಜದ ಮೇಲೆ ಒರಗಿಕೊಳ್ಳುತ್ತಾ ತಟ್ಟನೆ ಮೇಲೆದ್ದು ಬಹಳ ಘಾಟಾದ ಸಿಗರೇಟನ್ನು ಹಚ್ಚಿ ಎಲ್ಲರ ಮುಖದ ಮೇಲು ಧೂಪ ಹಾಕುತ್ತಿದ್ದ. +ನಾನು ಹೀಗೆ ಹೊರಟ ಮೇಲೆ ಆ ಬಡ್ಡಿ ವಸೂಲಿಗರು ನನ್ನ ಮನೆಗೆ ಹೋಗಿ ಏನೇನು ತಗಾದೆ ತೆಗೆದು ಎಲ್ಲೋ ಹೆದರಿ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಇನ್ನು ಅವನನ್ನು ಕಾಯುವುದರ ಬದಲು ಮನೆಯಲ್ಲಿರುವ ಅಂತಿಂತಹ ವಸ್ತುಗಳನ್ನೇ ಎತ್ತಿಕೊಂಡು ಹೋಗಿ ಸಾಲಕ್ಕೆ ಸಮ ಮಾಡಿಕೊಳ್ಳಲು ಸಂಚು ಮಾಡುತ್ತಿರಬಹುದೆ ಎಂಬ ಒಂದು ಅನುಮಾನ ಬಂದು ಹೋಯಿತು. ರೈಲಿನ ಒಳಗೆಲ್ಲ ತರತರದ ತಿಂಡಿ ಸಾಮಾನುಗಳನ್ನು ಮಾರಾಟ ಮಾಡುವವರು ಪೈಪೋಟಿಯಿಂದ ಎಲ್ಲರ ಮುಖದ ಎದಿರು ಹಿಡಿದು ನುಗ್ಗಾಡಿದಂತೆ ಒಡಾಡುತ್ತಿದ್ದರು. ನನ್ನ ಕಡೆ ನೋಡಿ ಇವನ ಮೋರೆ ನೋಡಿದರೇ ಗೊತ್ತಾಗುತ್ತೆ. ಇವನಿಂದ ಒಂದು ಪೈಸೆಯ ವ್ಯಾಪಾರವೂ ತಮಗಾಗದು ಎಂಬಂತೆ ಲೆಕ್ಕಿಸಿ ಹಾಗೇ ಹೊರಟು ಹೋಗುತ್ತಿದ್ದರು. ನನ್ನ ವೇಷಭೂಷಣಗಳು ಅವರವರ ಊಹೆಗೆ ಪುಷ್ಟಿ ಕೊಡುವಂತೆಯೇ ಇದ್ದವು. ನಾನು ನನ್ನ ಹಳೆಯ ಕಾಲದ ಬೆಲ್‌ಬಾಟಂ ಪ್ಯಾಂಟಿನ ವಾಂಛೆಯಿಂದ ಇನ್ನೂ ಬಿಡಿಸಿಕೊಂಡಿರಲಿಲ್ಲ. ಬೆಲ್‌ಬಾಟಂ ಪ್ಯಾಂಟೇ ಆಗಬೇಕೆಂದು ಟೈಲರ್‌ಗಳ ಬಳಿ ನಾನು ರೋಪು ಹಾಕಿ ಯಾವ ಹೊಸ ಫ್ಯಾಷನ್ ಕೂಡ ನನಗೆ ಬೇಡವೆಂದೂ ನನಗೆ ನನ್ನದೇ ಇಷ್ಟದ ಶೈಲಿಯಲ್ಲಿ ಸ್ಟಿಚ್ ಮಾಡಿಕೊಡಬೇಕೆಂದು ತಾಕೀತು ಮಾಡಿದ್ದೆ. ನಾನೀಗ ಅಂತಹ ಒಂದು ಲಡ್ಡಾದ ಪ್ಯಾಂಟಿನ ಮೇಲೆ ಕಡಿಮೆ ಬೆಲೆಗೆ ರಸ್ತೆ ಬದಿ ಅಂಗಡಿಗಳಲ್ಲಿ ಸಿಕ್ಕಿದ್ದ ಬಹು ದೊಗಳೆ ಅಂಗಿಯನ್ನು ಹಾಕಿಕೊಂಡಿದ್ದೆ. ನನ್ನ ಮಂಡಿಗಳ ತನಕ ಆ ಅಂಗಿ ಜೋಲಾಡುತ್ತಿತ್ತು. ಗಡ್ಡ ಬೇರೆ ಕತ್ತರಿಸಿರಲಿಲ್ಲ. ನೋಡಿದರೆ ಥೇಟ್ ಗಮಾರನಂತೆ ವಿಜೃಂಭಿಸುತ್ತಿದ್ದೆ. ಅವರ ಕಲ್ಪನೆ ನ್ಯಾಯಬದ್ಧವಾಗಿತ್ತು. ಅದೇ ಬೋಗಿಯಲ್ಲಿದ್ದ ಮೂರ್ನಾಲ್ಕು ಹುಡುಗಿಯರು ಅಲ್ಲಿ ನನ್ನ ಪ್ರಸ್ತುತತೆಯ ಬಗ್ಗೆಯೇ ಸಮಾಧಾನಗೊಂಡಂತಿತ್ತು. ಅವರೆಲ್ಲ ರಂಗು ರಂಗಿನ ಚೆಂದಗಳಲ್ಲಿ ಗೋಚರಿಸುತ್ತ ನನ್ನೊಳಗೆ ವಿಚಿತ್ರ ಕೀಳರಿಮೆಯನ್ನು ಉಲ್ಬಣಿಸುತ್ತಿದ್ದರು. ಆದರೂ ಮದುವೆ ಆಗಿ ಮಕ್ಕಳಾಗಿ ಅದೂ ಈಗ ಬಡ್ದಿ ದುಡ್ಡಿನ ಗಾಳಕ್ಕೆ ಸಿಲುಕಿ ಎಲ್ಲೋ ಇರುವ ಆ ತಿಮ್ಮಯ್ಯನನ್ನು ಹುಡುಕಿ ಬರಲು ಹೋಗುತ್ತಿರುವಾಗ ಆ ಹುಡುಗಿಯರ ಉಪೇಕ್ಷೆಯ ಬಗ್ಗೆ ತಾನೇಕೆ ತಲೆ ಕೆಡಿಸಿಕೊಳ್ಳಬೇಕೆಂದರೂ ಏನೋ ಒಂಥರದ ಯೌವ್ವನದ ಅವಮಾನವಾಗುತ್ತಿತ್ತು. ಅವರೆಲ್ಲರ ಎದಿರು ಏನಾದರೂ ತಿಂಡಿ ತೆಗೆದುಕೊಂಡು ತಿನ್ನಲು ಅಧೈರ್ಯವಾಗಿ ತೆಪ್ಪಗೆ ಕಿಟಕಿ ಕಡೆ ಮುಖ ಮಾಡುತ್ತ ಆ ಧಾಂಡಿಗನ ಕಡೆ ನೋಡಿದೆ. ಅವನೊಳಗೆ ಅದೇನು ಅನಿಸಿತೋ ಯಾಕೋ ಒಟ್ಟಿನಲ್ಲಿ ಬಹಳ ಹರಿತವಾದ ಒಂದು ಚಾಕನ್ನು ಮೆಲ್ಲಗೆ ಹೊರಗೆ ತೆಗೆದು ನನ್ನ ಕಡೆ ಎಚ್ಚರಿಕೆ ಎಂಬಂತೆ ತೋರುತ್ತ ಗಂಭೀರವಾಗಿ ನೋಡುತ್ತಿದ್ದ. ನನಗೆ ಬಹಳ ಗಾಬರಿಯಾಗಿ ನಾನು ಮುಂಬಯಿಗೆ ತಲುಪುವೆನೋ ಇಲ್ಲಾ ಅರ್ಧ ದಾರಿಯಲ್ಲೇ ಏನಾದರೂ ಆಗಿ ಹೋಗುವೆನೋ ಏನೋ. ಇವನ ಕಣ್ಣಿಗೆ ನಾನು ಹೇಗೆ ಕಾಣುತ್ತಿರುವೆನೋ ಗೊತ್ತಿಲ್ಲವಲ್ಲಾ ದೇವರೇ. ಎಲ್ಲೋ ಇವನಿಗೆ ಬೇಕಾಗಿರುವ ಶತ್ರು ಥೇಟ್ ನನ್ನಂತೆಯೇ ಇರಬಹುದೇನೋ. ನನ್ನನ್ನೇ ಆ ವ್ಯಕ್ತಿ ಎಂದು ತಿಳಿದು ಮಲಗಿದ್ದಾಗ ಚಾಕು ಹಾಕಿಬಿಟ್ಟರೆ ಏನಪ್ಪಾ ಗತಿ ಎಂದು ಸಣ್ಣಗೆ ಒಳಗೆ ನಡುಕ ಹುಟ್ಟಿ ಆ ಸೂಳೆಮಗ ತಿಮ್ಮಯ್ಯನ ದೆಸೆಯಿಂದ ನಾನು ಯಾವ್ಯಾವ ಪಡಬಾರದ ಪಾಡು ಪಡಬೇಕಾಗುತ್ತದೋ ಎಂದು ಉಕ್ಕಿಬಂದ ಸಿಟ್ಟನ್ನು ಗುಟ್ಟಾಗಿ ಒಳಗೇ ಉಗುಳಿನ ಜೊತೆ ನುಂಗಿಕೊಂಡು ನಿಷ್ಪಾಪಿಯಂತೆ ಆಕಾಶದ ಕಡೆ ನೋಡಿದೆ. ನನ್ನೆದುರಿನವನು ಒಮ್ಮೆ ಭೀಕರವಾಗಿ ಕೆಮ್ಮಿ ನನ್ನೆಡೆಗೆ ‘ನೋಡೀಯೆ ಜೋಕೆ’ ಎಂಬಂತೆ ಆ ಶಬ್ದದಲ್ಲೇ ಸೂಚಿಸಿದಾಗ ಬೆಳಗಾನ ನಿದ್ದೆ ಮಾಡಬಾರದು ಎಂದು ತೀರ್ಮಾನಿಸಿದೆ. +ಕಾಲ ಓಡುತ್ತಿತ್ತು. ನನ್ನ ಮನಸ್ಸು ತರಲೆ ತಾಪತ್ರಯಗಳಲ್ಲಿ ಇರುಕಿಸಿಕೊಂಡು ವದ್ದಾಡುತ್ತಿತ್ತು. ರೈಲಿನ ಜನ ಬಹಳ ಸಡಗರ ಸಂಭ್ರಮ ಆನಂದಗಳಲ್ಲಿ ಯಾವುದೋ ಗ್ರಹಕ್ಕೆ ಹೊರಟವರಂತೆ ಕಂಗೊಳಿಸುತ್ತಿದ್ದರು. ಅವರ ನಡುವೆ ಕೆಂಪು ಮೂತಿಯ ಕೆಲವರು ಲೆಫ್ಟಿನೆಂಟ್ ಜನರಲ್ ತರದಲ್ಲಿ ಆಗಾಗ ದಿಟ್ಟಿಸುತ್ತಾ ಇದ್ದರು. ವಿದೇಶಿ ವೇಷ ತೊಟ್ಟಕೆಲವು ಭಾರತೀಯರು ಇಂಗ್ಲೀಷರನ್ನೇ ನಾಚಿಸುವಂತೆ ಟಸ್‌ಪುಸ್ ಎಂದು ಏನೇನೋ ಇಂಗ್ಲೀಷಿನಲ್ಲಿ ಅರಚುತ್ತಿದ್ದರು. ಎದುರಿನ ಸೀಟಿನ ಕೊನೆಯಲ್ಲಿದ್ದ ತೆಳ್ಳಗಿನ ಆದ್ಮಿಯೊಬ್ಬ ಜಗತ್ತಿನ ಷೇರು ಪೇಟೆಯನ್ನೆಲ್ಲ ಅರೆದು ಕುಡಿದವನಂತೆ ಏನೇನೋ ಯಾರ ಜೊತೆಯೋ ಚರ್ಚಿಸುತ್ತ ಬೀಗುತ್ತಿದ್ದ. ಕೆಲವು ಲಲನೆಯರು ವಯ್ಯಾರದಿಂದ ಸುಂದರಾಂಗರ ಕಡೆ ಲೈನು ಹೊಡೆಯುತ್ತ ಮಜಾ ತೆಗೆದುಕೊಳ್ಳುತ್ತಿದ್ದರು. ಅವರ ಕಡೆ ನಾನೂ ನೋಡಿ ಏನಾದರೂ ಸ್ವಲ್ಪ ನನಗೂ ಸಿಗಬಹುದೇ ಎಂದು ನೋಡೋಣ ಎಂದರೆ ಎದುರಿಗಿದ್ದ ಪೆಡಂಭೂತ ಆಗಾಗ ಕ್ಯಾಕರಿಸಿ ಕೆಮ್ಮಿ ನನ್ನ ಮೇಲೆ ಹದ್ದಿನ ಕಣ್ಣಿಟ್ಟಿರುವಂತೆ ಕಾಣುತ್ತಿದ್ದರಿಂದ ಅವರನ್ನು ನೋಡಿ ನಗಲು ಅಂಜಿಕೆಯಾಗುತ್ತಿತ್ತು. +ಎಷ್ಟೇ ಆಗಲಿ ಅವರೆಲ್ಲ ರೈಲಿನ ಜನ. ಬ್ರಿಟಿಶರು ಬಿಟ್ಟು ಹೋದ ಹಳಸಲು ರೈಲಿನ ಒಳಗೆ ದಿವಾನ್‌ಗಿರಿಯಲ್ಲಿ ಮೆರೆಯುವಂತೆ ಕಾಣುತ್ತಿದ್ದರು. ನಮ್ಮ ಊರು ಕೇರಿಯಂತಲ್ಲ ಈ ರೈಲು ಎಂದುಕೊಂಡು ಅರೆತೆರೆದಂತೆ ಕಣ್ಣು ಮುಚ್ಚಿಕೊಂಡು ಆ ಹುಡುಗಿಯರ ಕಡೆ ನೋಡಿದೆ. ಅವರಲ್ಲೊಬ್ಬಳು ಬರ್ತ್ ಹತ್ತಿ ಕಾಲು ಚಾಚಿಕೊಂಡು ತನ್ನ ದಪ್ಪ ಮೊಲೆಗಳ ಮೇಲೆ ಎರಡೂ ಅಂಗೈಗಳನ್ನು ಮೃದುವಾಗಿ ಹಿಡಿದುಕೊಂಡಳು. ಅಂದರೆ ಅವನ್ನು ತಾನಾರಿಗೂ ಕೊಡುವುದಿಲ್ಲ ಎಂಬಂತೆಯೋ ಅಥವಾ ಈ ಹೂಗಳನ್ನು ಹೀಗೆ ಹಿಡಿದುಕೊಳ್ಳಬೇಕು ಎನ್ನುವಂತೆಯೋ ಹಾಗೇ ಮೇಲೆ ಮಲಗಿದ್ದಳು. ಅವಳ ಮೀನಖಂಡ ಲೈಟು ಬೆಳಕಿಗೆ ಮಿನುಗುತ್ತ ರೇಶಿಮೆಯಂತಹ ಕಾಲ ಮೇಲಿನ ಕೂದಲುಗಳು ಸೂಕ್ಷ್ಮವಾಗಿ ಕಾಣಿಸುತ್ತಿದ್ದವು. ಮತ್ತೊಬ್ಬಳು ಪ್ಯಾಂಟಿನ ಬೆಲ್ಟನ್ನು ಸಡಿಲ ಮಾಡಿಕೊಳ್ಳುತ್ತಿದ್ದಳು. ಇದ್ದಕ್ಕಿದ್ದಂತೆ. ನನ್ನ ನೋಟ ಧ್ಯಾನಕ್ಕೆ ಭಂಗ ತರುವಂತೆ ಎದುರಿಗಿದ್ದ ಪೆಡಂಭೂತನ ಕಡೆಗೆ ಆ ರೈಲಿನ ಶಬ್ದದಲ್ಲೂ ಡೊಯ್ ಎಂದು ಹೂಸೊಂದು ತೇಲಿ ಬಂದು ಅದರ ವಿಕಾರ ವಾಸನೆಗೆ ಅಸಹ್ಯವಾಗಿ ಇವನು ಅಂತಾದ್ದೇನನ್ನು ತಿಂದಿದ್ದನೋ ದೇವರೇ ಎಂದುಕೊಂಡು ಗಾಳಿಯನ್ನು ಒಳಗೇ ಎಳೆದುಕೊಳ್ಳದೆ ಉಸಿರು ಹಿಡಿದುಕೊಂಡು ಸುಮಾರು ಹೊತ್ತಾದ ಮೇಲೆ ಉಸಿರೆಳೆದುಕೊಂಡೆ. ಆಗಲೂ ಅವನ ಹೂಸಿನ ವಾಸನೆ ಕರಗದೆ ಅಲ್ಲೆಲ್ಲ ತೆಳ್ಳಗೆ ವ್ಯಾಪಿಸಿಕೊಂಡು ವಿಚಿತ್ರವಾದ ವಾಕರಿಕೆಯನ್ನು ಸೃಷ್ಟಿಸಿತ್ತು. ಸುತ್ತಮುತ್ತ ಇದ್ದವರಾಗಲಿ ಆ ಹುಡುಗಿಯರಾಗಲಿ ಅವನ ಹೂಸಿಗೆ ಪ್ರತಿಭಟನೆಯಾಗಿ ಮೂಗು ಮುರಿದು ಕೊಂಡೋ ಇಸ್ಸೀ ಎಂದೋ ಏನನ್ನು ಮಾಡದೆ ತಮಗೇನೂ ಆಗೇ ಇಲ್ಲ ಎಂಬಂತೆ ಇದ್ದರು. ಅವನ ಪಕ್ಕದಲ್ಲಿದ್ದವನು ಬಹಳ ದೀರ್ಘವಾಗಿ ಆಕಳಿಕೆಯನ್ನು ಅವನ ಹೂಸಿನ ಜೊತೆ ತೆಗೆದು ಮೈ ಮುರಿದು ಶ್ವಾಸಕೋಶಗಳ ತುಂಬ ಹೂಸಿನ ವಾಸನೆಯನ್ನು ಎಳೆದುಕೊಂಡು ಯಾಕೋ ಆ ಹುಡುಗಿಯರ ಕಡೆ ಸುಮ್ಮನೆ ನಕ್ಕು ಕನ್ನಡಕ ಸರಿ ಮಾಡಿಕೊಂಡು ಸುತ್ತ ಕಣ್ಣಾಡಿಸಿದ. ಬ್ಯಾಗಿನಿಂದ ತೆಗೆದು ಏನನ್ನೋ ಮೇಯುತ್ತಿದ್ದ ಪೆಡಂಭೂತವನ್ನು ಕಣ್ಣು ಕೆಕ್ಕರಿಸಿಕೊಂಡು ನೋಡಿದೆ. ಅವನ ಹೆಂಡತಿ ಅವನ ಭುಜಕ್ಕೆ ಒರಗಿ ನಿದ್ದೆ ಮಾಡುತ್ತಿದ್ದಳು. ಆಗಾಗ ಮೆಲ್ಲಗೆ ಕಣ್ಣರಳಿಸಿ ಪತಿರಾಯನನ್ನು ಮೃದುನಗೆಯ ಲಾಸ್ಯದಲ್ಲಿ ನೋಡಿ ಅವನ ಕಾಲುಕೇಜಿಯಷ್ಟು ತೂಕವಿರುವ ಹೆಬ್ಬೆರಳನ್ನು ಹಿಡಿದುಕೊಂಡು ಕೆಂಪುರಂಗಿನ ತನ್ನ ಸಣ್ಣ ತುಟಿಗಳನ್ನು ಸ್ವಲ್ಪವೇ ಬಿಚ್ಚಿ ಹಾಗೇ ಮುದುಡಿಕೊಳ್ಳುತ್ತಿದ್ದಳು. ಗಾಳಿ ಜೋರಾಗಿ ಬೀಸಿದ್ದರಿಂದ ಅನೇಕರ ಹೂಸುಗಳು ತೂರಿಹೋಗಿದ್ದವು. +ಹೀಗೇ ಸುಮಾರು ಹೊತ್ತು ಕಳೆಯಿತು. ನಾನಿದ್ದ ಬೋಗಿಯಲ್ಲಿ ಯಾರೊಬ್ಬರೂ ಕನ್ನಡ ಮಾತನಾಡುವವರು ಇಲ್ಲ ಎಂದು ಭಾವಿಸಿದ್ದೆ. ಸದ್ಯ ನನಗೊಬ್ಬ ಆ ಬೋಗಿಯಲ್ಲಿ ಕನ್ನಡ ಮಾತನಾಡುವ ಮನುಷ್ಯ ಸಿಕ್ಕಿದ. ಬೇಸರ ಕಳೆಯಲೆಂದು ಎಂತದೋ ಒಂದು ಪತ್ರಿಕೆಯನ್ನು ತೆಗೆದುಕೊಂಡು ಬ್ಯಾಗಿನಲ್ಲಿ ತುರುಕಿದ್ದೆ. ಆ ಪತ್ರಿಕೆಯನ್ನು ಹೊರಗೆ ತೆಗೆದ ಕೂಡಲೆ ಎದುರಿನ ಸಾಲಿನ ಕೊನೆಯಲ್ಲಿ ಕುಳಿತು ಭಯಂಕರ ಇಂಗ್ಲೀಷಿನ ಮಳೆಗರೆಯುತ್ತಿದ್ದವನು ನನ್ನೆಡೆ ನಗುಮೊಗದಿಂದ ನೋಡಿ ಎಕ್ಸ್‌ಕ್ಯೂಸ್‌ಮೀ ಸ್ವಲ್ಪ ಪೇಪರ್ ಕೊಡ್ತೀರಾ ಎಂದು ಕನ್ನಡದಲ್ಲಿ ಕೇಳಿದ್ದ. ಅಬ್ಬಾ ಒಬ್ಬ ಸಹಭಾಷಿಕ ನನಗೆ ಇಂತಹ ವೇಳೆಯಲ್ಲಿ ಸಿಕ್ಕಿದನಲ್ಲಾ ಎಂದು ಜೀವ ಬಂದಂತಾಗಿ ಅದೇ ನೀವು ಕನ್ನಡದವರು ಅಂತಾ ಗೊತ್ತಾಗ್ಲೇ ಇಲ್ಲ. ನೀವು ಹೀಗೆ ಹ್ಯಾಟು ಟೈ ಹಾಕ್ಕೊಂಡು ಜಬರ್‌ದಸ್ತಾಗಿ ಇಂಗ್ಲೀಷ್ ಮಾತಾಡ್ತಿದ್ರಿಂದ ನೀವೆಲ್ಲೋ ಇಂಗ್ಲೀಷ್ ಕಡೆಯೋರು ಅಂತಾ ತಪ್ಪಾಗಿ ತಿಳಿದುಬಿಟ್ಟಿದ್ದೆ ಎಂದು ಪತ್ರಿಕೆಯನ್ನು ಅವನ ಕೈಗೆ ರವಾನಿಸಿದೆ. ಅವನ ಮಾತುಕತೆಗಳನ್ನು ಗಮನಿಸಿಯೇ ಇವನೆಲ್ಲೊ ಭಯಂಕರ ಡಿಬೇಟ್ ಫೆಲೋ ಎಂದು ಗ್ರಹಿಸಿದೆ. ಭಾರತೀಯತೆಯ ಬಗ್ಗೆ ಘನವಾಗಿ ನಾನು ಕೇಳದೇ ಇದ್ದರೂ ಮಾತು ತೆಗೆದು ಹೊಗಳಿ ಹಾಡುತ್ತಿದ್ದ. +ಹೇಗೋ ದಾರಿ ಸವೆಸಲು ಎಂತಹ ಮಾತಾದರೂ ಸರಿಯೆ. ಅದರಿಂದ ನಾನೀಗ ಕಳೆದುಕೊಳ್ಳುವುದು ಏನೂ ಇಲ್ಲವೆಂದೂ, ಮುಖ್ಯವಾಗಿ ಎದುರಿಗಿದ್ದವನ ಭಯದಿಂದ ಕೊಂಚ ಬಿಡಿಸಿಕೊಳ್ಳಲು ಇದರಿಂದ ಅನುಕೂಲವೆಂದು ಅವನು ಹೇಳುತ್ತಿದ್ದ ವಿಚಾರಗಳಿಗೆ ಹೌದೌದು ಎಂದು ತಲೆ ಆಡಿಸುತ್ತಾ ಬರದ ನಗೆಯನ್ನು ಬರಿಸುತ್ತಾ ನನಗೂ ಒಬ್ಬ ಸಪೋರ್ಟಿಗೆ ಈ ರೈಲಿನಲ್ಲಿ ನನ್ನ ಭಾಷೆಯವನು ಇದ್ದಾನೆ, ಹುಷಾರ್ ಎಂದು ಪೆಡಂಭೂತನಿಗೆ ಗೊತ್ತಾಗಲಿ ಎಂದು ಏನೋ ನಾನೂ ಕೂಡ ಹರಕು ಮುರುಕಾದ ವಿಚಾರದ ಕೆಲವು ವಾಕ್ಯಗಳನ್ನು ಜೋಡಿಸುತ್ತಾ ಆ ಕನ್ನಡಿಗನ ಜೊತೆ ಗುರುತಿಸಿಕೊಳ್ಳುತ್ತಿದ್ದೆ. ಎಂತೆಂತದೋ ಪುಸ್ತಕಗಳಿಂದೆಲ್ಲ ವಿಚಾರಗಳನ್ನು ಕೋಟ್ ಮಾಡುತ್ತಾ ಆ ಸಾಹಿತಿ ಗೊತ್ತಾ ಈ ಸಾಹಿತಿ ಬಗ್ಗೆ ತಿಳಿದಿದ್ದೀಯಾ ಎಂದು ನನ್ನ ಬುದ್ಧಿ ಪರೀಕ್ಷೆಗೆ ಈಗ ಇಳಿದಿದ್ದ. ಇವನನ್ನು ಮಾತನಾಡಿಸಿದ್ದೇ ತಪ್ಪಾಯ್ತಲ್ಲಾ ಎಂದು ನಾನೇ ನೊಂದುಕೊಂಡು ಪ್ರಯಾಣದ ವೇಳೆ ವಾದ ವಿವಾದ ರಗಳೆ ಜಗಳ ಸರಿ ಇಲ್ಲವೆಂದು ತಿಳಿದು ಇವನ ಜೊತೆ ನಾನು ನಾಟಕ ಆಡಬೇಕೆಂದು ತೀರ್ಮಾನಿಸಿದೆ. ಅವನು ಚರ್ಚೆ ಆರಂಭಿಸಿದ. +“ಅಲ್ಲಾರೀ ಹೋಗಿ ಹೋಗಿ ಇಂತಾ ಪತ್ರಿಕೆಗಳನ್ನೇನ್ರಿ ಓದೋದು. ಈ ಪತ್ರಿಕೆಯ ಎಡಿಟರ್ ಯಾರು ಗೊತ್ತೇನ್ರಿ. ನಂಬರ್ ಒನ್ ಈಡಿಯಟ್ ಬಾಸ್ಟರ್‍ಡ್ ಅವನು. ಅಂತವರೇ ಇದ್ರಲ್ಲಿ ಬರೆಯೋದು ಹೆಚ್ಚು. ಅವನ್ನೆಲ್ಲ ಓದಿ ತಲೆ ಕೆಡಿಸ್ಕೊಳೋ ಬದಲು ಗುಪ್ತ ಸಮಾಚಾರ ಓದೋದು ಒಳ್ಳೇದು. ಈ ಪತ್ರಿಕೆನಾ ಕೊಂಡ್ಕೊಂಡು ಮನೆಗೆ ಹೋದ್ರೆ ಸಂಸಾರ ಶ್ಮಶಾನ ಆಗೋಗ್ತದೆ. ಬ್ಲಡಿ ಇಂಡಿಯನ್ ಜರ್ನಲಿಸ್ಟ್…” ಎನ್ನುತ್ತಾ ಗೊತ್ತಾಗ್ತಿದೆಯಾ ಎಂದು ನೋಡಿದ. +“ಹೌದಾ ಸಾರ್. ನನಗೆ ಅದೆಲ್ಲ ಗೊತ್ತಿರ್‍ಲಿಲ್ಲ ಸಾರ್. ಸುಮ್ನೆ ಜರ್‍ನಿ ಟೈಂನಲ್ಲಿ ಬೇಜಾರಾಯ್ತದಲ್ಲಾ ಅಂತಾ ತಕಂಡಿದ್ದೆ” ಎಂದು ಪತ್ರಿಕೆಯನ್ನು ಹಿಂತಿರುಗಿ ಪಡೆದು ಅದರ ಮೇಲೆ ಹುಸಿ ಕೋಪ ತೋರುತ್ತ ಮುದುರಿ ಬ್ಯಾಗಿನ ಒಳಕ್ಕೆ ಹಾಕುತ್ತಾ ತಟ್ಟನೆ ಅವನ ಕಡೆ ನೋಡುತ್ತಾ ಇದು ಇರ್‍ಲೋ ಅಥವಾ ಕಿಟಕಿ ಹೊರಗೆ ಹಾಕಿಬಿಡ್ಲೋ ಸಾರ್ ಎಂದೆ. ಅರೇ ಬಿಸಾಕ್ರಿ ಅದನ್ಯಾವನು ಓದ್‌ತಾನೆ ಎಂದ. ಬಿಸಾಡಿ ಕೈಕಟ್ಟಿ ಅವನ ಮುಂದೆ ಕುಳಿತೆ. ಆತ ನನ್ನನ್ನು ಬಹಳ ನಿಯತ್ತಿನವನು ಹೇಳಿದಂತೆಲ್ಲ ಕೇಳಬಲ್ಲ ಮನುಷ್ಯ, ಏನೂ ಅರಿಯದ ಮುಗ್ಧ ಎಂದು ತಿಳಿದುಕೊಳ್ಳಲಿ ಎಂದು ಅವನಣತಿಯಂತೆ ಪತ್ರಿಕೆಯನ್ನು ಬಿಸಾಡಿ- +“ಬಾಳ ವಿಷ್ಯ ತಿಳ್ಕಂಡಿದ್ದಿರಿ ಸಾರ್, ನಮ್ಗಂತವೆಲ್ಲ ತಲೆಗೆ ವಳಿಯದೆ ಇಲ್‌ವಲ್ಲಾ…. ನೀವೇಳಿದ್ದು ಕರೆಕ್ಟಾಗಿದೆ ಅನಿಸ್ತದೆ ಸಾರ್.” +“ಅಲ್ರೀ ವಿಷ್ಯ ತಿಳ್ಕಳ್ದೇ ಏನಾರ ಹೇಳೋಕಾಗುತ್ತಾ, ಈ ಕಾಲ್ದಲ್ಲಿ. ಬಾಳ ಕೇರ್‌ಫುಲ್ಲಾಗಿ ಇರ್‌ಬೇಕ್ರೀ” ಎಂದವನು ವಿಷಯ ಬದಲಿಸಿ ಬಾಂಬೆಗೆ ಯಾವ ಕೆಲಸದ ಮೇಲೆ ಹೋಗ್ತಾ ಇದ್ದೀರಿ ಎಂದು ಕೇಳಿದ ಮೇಲೆ ನನ್ನ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸತೊಡಗಿದ. +“ಯಾವೂರು” +“ನಂದು ಮೈಸೂರು ಸಾರ್” +“ಮೈಸೂರಲ್ಲಿ ಎಲ್ಲಿ. ಯಾವ್ ಏರಿಯಾ” +“ಮೈಸೂರಲ್ಲಿ ದೊಂಬರ ಕೇರಿ ಕಡೆ ಇದ್ದೀನಿ ಸಾರ್” +(ಆಶ್ಚರ್ಯದಿಂದ) ‘ಹಾ, ದೊಂಬರ ಕೇರೀ… ಅರೇ ದೊಂಬರ ಕೇರಿ. ಕ್ಯಾ ಕ್ಯಾ ಕೇರಿ ಹೈ ಮೇರಾ ಭಾರತ್ ಮೇ. ದೊಂಬರ ಕೇರಿ ಅಂತಾಲೂ ಇದೆಯಾ?’ +‘ಒಂದೇಸ್ ಒಂದ್ ಪ್ಯಾಟೆ ಅಂದ್ಮೇಲೆ ಅಂತವೆಲ್ಲ ಇರ್‍ತವೆ ಸಾರ್. ಇಂತಾ ಕೇರಿನಾ ನೀವು ಕೇಳೇ ಇರ್‍ಲಿಲ್ಲ ಅನಿಸ್ತದೆ.” +‘ನಾನು ಹೊಲಗೇರಿ ಮಾದಿಗರ ಕೇರಿ ಅಂತಾ ಕೇಳಿದ್ದೆ. ಹಾಗೆನೇ ಬೆಸ್ತರ ಕೇರಿ ವಕ್ಕಲಗೇರಿ ಅಂತೆಲ್ಲಾ ಐ ಹರ್‍ಡ್. ಬಟ್ ಅಪ್‌ಟು ನೌ ನಾನು ಈ ದೊಂಬರ ಕೇರಿನಾ ಕೇಳೇ ಇರ್‍ಲಿಲ್ಲ. ಮೈಸೂರಿನ ಮಹಾರಾಜರ ಊರಲ್ಲಿ ದೊಂಬರ ಕೇರಿ ಇರೋದು ಅಂದ್ರೆ ಅವಮಾನ ಕಣ್ರೀ.’ +‘ಯಲ್ಲಾ ನಾವೇ ಮಾಡ್ಕಂದಿರುದು ಸಾರ್. ಕೇರಿ ಅಂದ್ರೆ ಅದ್ರೆಲೇನ್ ಕೀಳು ಸಾರ್, ನಂ ದೊಂಬ್ರು ಎಂತೆಂತಾ ಸರ್ಕಸ್ ಮಾಡ್ತರೆ ಅನ್ನುದಾ ನೀವು ನೋಡಿಲ್ಲವೆ ಸಾರ್.?’ +‘ಮೈಸೂರಿನ ಯಾವ ಏರಿಯಾದಲ್ಲಿರೀ ನಿಮ್ಮ ದೊಂಬರ ಕೇರಿ ಇರೋದು.’ +‘ಅದೇ ಸಾರ್ ಒಂಟಿಕೊಪ್ಪಲ್ ಕಡೆ ಇದೆ.’ +‘ಓಹೋ ಐ ಸೀ. ಅದೇ ಆ ಒಂಟಿಕೊಪ್ಪಲ್ ಪಂಚಾಂಗದ ಏರಿಯಾನಾ? ಲವ್ಲೀ. ಪರವಾಗಿಲ್ಲ ದೊಂಬರು ಒಳ್ಳೆ ಜಾಗನೇ ಹಿಡ್ದಿದ್ದಾರೆ.’ +‘ಅಂಗೇನಿಲ್ಲ ಸಾರ್ ಮುನ್ಸಿಪಾಲ್ಟಿಯವರು ಯಾವಾಗ ಬೇಕಾದ್ರೂ ಜಾಗ ಖಾಲಿ ಮಾಡಿಸಬಹುದು.’ +‘ಅದಿರ್‍ಲೀ, ಐ ಥಿಂಕ್ ಯೂ ಬಿಲಾಂಗ್ಸ್ ಟು ದೊಂಬಾ?’ +‘ಹಾ ಹಾ, ಅರ್ಥ ಆಗ್ಲಿಲ್ಲಾ.’ +‘ಅಂದ್ರೆ ನೀವು ದೊಂಬ್ರಾ’ +‘ಇಲ್ಲಾ ಸಾರ್ ನನ್ನೇರಿಯಾ ದೊಂಬರಕೇರಿ ಅಷ್ಟೇ.’ +‘ನಿಮ್ಮ ಜಾತಿ’ +‘ಸಾರ್ ನಂದು ದಮಕಿ ಕ್ಯಾಸ್ಟು’ +‘ಅರೇ, ಸರ್‌ಪ್ರೈಸ್. ವಾಟ್ ಕೈಂಡ್ ಆಫ್ ದಿಸ್ ಕ್ಯಾಸ್ಟ್. ಇಂತಾ ಒಂದು ಜಾತಿ ಹೆಸರನ್ನೇ ನಾನು ಕೇಳಿಲ್ಲಾರೀ. ಇದೆಲ್ಲಿತ್ರೀ ಇಲ್ಲೀತನಕ. ಎಷ್ಟಿದೆ ನಿಂ ಪಾಪುಲೇಷನ್.’ +‘ಏನ್ ಹೆಚ್ಚು ಕಡಿಮೆ ನಾನೂರಿಪ್ಪತ್ತಿದೆ ಅಂತಾ ನಂ ಜಾತಿಯೋರೊಬ್ರು ಹೇಳವರೆ ಸಾರ್.’ +‘ಓಹ್, ಫೋರ್‌ಟ್ವೆಂಟೀ ಬರೀ ನಾನೂರಿಪ್ಪತ್ತೆನಾ. ಯುವರ್ ಕಮ್ಯುನಿಟೀ ಈಸ್ ಜಸ್ಟ್ ಫೋರ್‌ಟ್ವೆಂಟಿ.’ +‘ಹೌದು ಸಾರ್ ಬಾಳ ಹಿಂದುಳಿದ ಜಾತಿ ಸಾರ್ ನಮುದು. ಇಡೀ ಕರ್ನಾಟಕದಲ್ಲೆಲ್ಲ ಹುಡುಕಂಡ್ರೂ ಅಷ್ಟೆಯಾ. ನಂಗೆ ಯಾರೂ ಲೀಡ್ರು ಇಲ್ಲಾ ಏನೂ ಇಲ್ಲಾ ಸಾರ್.’ +‘ಏನ್ ಓದಿದ್ದೀಯಪ್ಪಾ’ +‘ಯೆಸೆಲ್ಸಿ ಫೇಲ್ ಸಾರ್’ +‘ಕೆಲ್ಸ?’ +‘ಮುನ್ಸಿಪಾಲಿಟಿ ಡ್ರೈನೇಜ್ ಸೂಪರ್‌ವೈಸರ್ ಆಗಿದ್ದೀನಿ ಸಾರ್’ +‘ಸಂಬ್ಳ’ +‘ಐನೂರು ಸಾರ್’ +‘ಮಕ್ಕಳು’ +‘ನಾಲ್ಕು, ಮೂರೆಣ್ಣು ಒಂದ್ ಗಂಡು’ +‘ಕಷ್ಟ ಅಲ್ಲಾ’ +‘ಅಂಗನಿಸ್ತದಷ್ಟೇ ಸಾರ್. ಆದ್ರೆ ನಾನು ಇನ್ನೂ ಬೇರ್ ಬೇರೆ ಕೆಲ್ಸ ಮಾಡಿ ಸಂಪಾದ್ಸುದ್ರಿಂದ ಸರೋಯ್ತದೆ.’ +ಏನೇನ್ ಕೆಲ್ಸಾ…. ಏನ್ ಬಿಸಿನೆಸ್ ಉಂಟಾ’. +‘ಅಯ್ಯೋ ಬಿಸಿನೆಸ್ ನಮ್ಮಂತೋರಿಗೆ ಯಾಕ್ ಬೇಕು ಸಾರ್. ಏನೋ ಸಂಜೆ ಹೊತ್ತು ನಮ್ಮ ಏರಿಯಾದ ಸರಾಯಿ ಅಂಗಡಿಗಳಲ್ಲಿ ಬೋಂಡ ಚಕ್ಕಲಿ ಬಜ್ಜಿ ಅಂತಾ ಅದೂ ಇದೂ ಚಾಕ್ಣ ಅಂತಾ ಮಾರೋದ್ರಿಂದ ಸ್ವಲ್ಪ ಕಾಸ್ ಸಿಕ್ತದೆ.’ +‘ಅದಷ್ಟ್ರಲ್ಲಿ ಏನ್ರಿ ಸಿಗ್ತದೆ.’ +‘ಅಂಗಲ್ಲಾ ಸಾರ್ ಯೀ ಕಸುಬಿನ ಜೊತೆ ಇನ್ನೊಂದ್ ಕೆಲ್ಸ ಮಾಡ್ತೀನಿ ಸಾರ್. ನಂ ಮುನಿಸ್ಪಾಲ್ಟಿಲಿ ಡ್ರೈನೇಜ್ ವರ್ಕರ್‍ಸ್‌ಗೆ ಬಡ್ಡಿ ದುಡ್ಡು ಕೊಡೋ ಜನ ಸಾಕಷ್ಟಿದ್ದಾರೆ. ಸರಿಯಾಗಿ ದುಡ್ಡು ಕೊಡದೆ ತಡಾ ಮಾಡೋರತ್ರಾ ರೋಪು ಹಾಕಿ ಹೆದುರ್‍ಸಿ ಬೆದುರ್‍ಸಿ ಹಣ ವಸೂಲ್ ಮಾಡಿದ್ರೆ ಕಮಿಸನ್ ಸಿಕ್ತದೆ. ಅಂಗೆನೇ ಸಾಲ ಬೇಕಾದೋರಿಗೆ ಸಾಲ ಕೊಡಿಸಿದ್ರೆ ಎರುಡ್ ಕಡೆನು ವಸಿ ಸಿಗ್ತದೆ. ಎಂಗೋ ಅದ್‌ಕಿದ್‌ಕೆ ಬ್ಯಾಲೆನ್ಸ್ ಮಾಡ್ಕಂಡು ಸಂಸಾರ ತೂಗ್ತಿನಿ ಸಾರ್.’ +‘ಲವ್ಲೀ, ಎಕ್ಸಲೆಂಟ್, ಪರವಾಗಿಲ್ಲಾ, ನೋಡಿದ್ರೆ ಅಂಗ್ ಕಾಣೋದಿಲ್ಲವಲ್ರೀ. ಬಾಳ ಜೋರಿದ್ದೀಯ ಅನಿಸ್ತದೆ. ತುಂಬ ಒಪನ್ ಆಗಿದ್ದೀಯೆ. ಇಂಗಿರಬೇಕಪ್ಪ. ಏನ್ ನಿನ್ ಹೆಸರು.’ +‘ಜಿ. ಜಿ. ಗುರುವಾ ಅಂತ ಸಾರ್’. +‘ಏನ್ ಜಿ. ಜಿ. ಅಂದ್ರೆ’ +‘ಜಿ.ಜಿ. ಅಂದ್ರೆ ಇನ್ಸೆಲ್ಲು ಸಾರ್, ಗುಡೇಮಾರ್‍ನಳ್ಳಿ ಗುರುಡಯ್ಯನ ಮಗ ಗುರುವಾ ಅಂತಾ.’ +‘ಆಡ್ಕೊಂಡ್ ನಗ್ತಿದ್ದಿನಿ ಅಂತಾ ತಿಳ್ಕೋಬ್ಯಾಡಾ…. ದೊಂಬ್ರತ್ರಾ ಏನಾದ್ರೂ ಸರ್ಕಸ್ಸು ಗಿರ್ಕಸ್ಸು ಕಲ್ತಿದ್ದಿಯೋ?’ +‘ಕಲ್ತಿದ್ದಿನಿ, ಆದ್ರೆ ಅವ್ನೇನೂ ಎಲ್ಲೂ ತೋರಿಸ್‌ಬ್ಯಾಡ ಅಂತಾ ದೊಂಬ್ರು ಬಾಸೆ ತಕಬುಟ್ಟವರೆ ಸಾರ್. ಅಂಗಾಗಿ ನಾನು ಏನೂ ಏಳಂಗಿಲ್ಲ ತೋರ್‍ಸಂಗಿಲ್ಲ’ +‘ಅಯ್ಯೋ ಆ ದೊಂಬುನ್ ಮಾತ್ ಅತ್ತಾಗಿ ಬಿಸಾಕ್ರಿ. ಏನಾದ್ರೂ ಒಂದಾಟ ತೋರಿಸ್ರಿ. ಎಂಗೂ ಇಲ್ಲಿ ರೈಲಿನ ತುಂಬ ಜನಾ ಇದ್ದೇವೆ. ಏನಾದ್ರೂ ಗಿಟ್ಟಬಹುದು.’ +‘ಅಂಗೆಲ್ಲ ಅನ್ನುಕ್ಕಾಗುತ್ತಾ ಸಾರ್. ದೊಂಬ್ರು ವಿದ್ಯೆನಾ ನಾನು ಇಲ್ಲಿ ರೈಲೆಲಿ ಎಂಗೆಂಗೋ ತೋರ್‍ಸಿ ಅವುರ್ ಕಲೆಗೆ ಅವಮಾನ ಮಾಡಿ ಗೌರವ ಕಡಿಮೆ ಮಾಡಬಾರ್‍ದು ಸಾರ್.’ +‘ಗೌರವ ಕೊಡಬೇಡ ಅಂತಾ ನಾನೆಲ್ರಿ ಹೇಳ್ದೇ. ಯಾರೇ ಆದ್ರೂ ಗೌರವಕ್ಕೆ ಮೊದಲು ಅರ್ಹತೆ ಪಡೀಬೇಕು, ಅರ್ಹತೇನ. ಅದೇನಯ್ಯಾ ಮುಖ್ಯ.’ +‘ಅರ್ಹತೆ ಅಂದ್ರೆ ಬಾಳ ಕಸ್ಟ ಆಯ್ತದೆ ಸಾರ್. ನಮ್ಮಾಪಿಸಲಿರೊ ಸಾಹೆಬ್ರುಗಳೆಲ್ಲ ಏನೇನ್ ಕಲ್ತು ಏನೇನ್ ಮಾಡ್ತಾರೆ ಎಂತೆಂತಾ ಗೌರವ ತಕತರೆ ಅಂತಾ ನಾನು ಬಾಳ ಚೆನ್ನಾಗಿ ಕಂಡಕಂದಿವಿನಿ ಸಾರ್. ಏಲ್ ಮೇಲೆ ಬಿದ್ದಿರು ಕಾಸ ನಾಲ್ಗೆಲೆತ್ಕತರೆ. ಅಂತಾ ಜನ ಅವರು ಸಾರ್.’ +‘ಅರೆ ಏನಯ್ಯಾ ಇಂತಾ ದೊಡ್ ಮಾತಾಡ್ತಿಯೆ. ಅರ್ಹತೆ ಅಂದ್ರೆ ಏನು ಗೊತ್ತಾ ಮೊದ್ಲು ಅದನ್ನ ಸ್ವಲ್ಪ ಡೀಪಾಗಿ ಅಂಡರ್‌ಸ್ಟ್ಯಾಂಡ್ ಮಾಡ್ಕೋ.’ +‘ಅಂಗೇನಿಲ್ಲಾ ಸಾರ್ ನಿಮ್ಮಂತವರು ಏನೋ ದೊಡ್ಡದಾಗಿ ಓದಿ ತಿಳ್ಕಂಡಿದ್ದೀರಿ. ನಿಮಗೆ ಸರೋಯ್ತದೆ. ನಮ್ಮಂತವರ ಕತೆ ಯೇಳಿ.’ +‘ಬುದ್ಧಿವಂತರಿಗೆ ಅನ್ಯಾಯ ಆಗಬಾರದು ಅನ್ನೋದು ನನ್ನ ಅರ್ಹತೆಯ ಅರ್ಥ. ಯಾವನು ಬುದ್ಧಿವಂತನೋ ಅರ್ಹನೋ ಅವನಿಗೆ ಇಲ್ಲಿ ಈ ದೇಶದಲ್ಲಿ ಏನ್ರಿ ಸಿಗ್ತಾ ಇದೆ, ಬರಿ ಮಣ್ಣು. ಎಲ್ಲಾನು ಉರಿದು ತಿಂದಾಕ್ತಾ ಇರ್‍ತಾರೆ ದರಿದ್ರ ನಾಯಿಗಳು. ಈಗ ನೋಡು ಈ ರಿಜರ್ವೇಷನ್ ಅಂತಾ ಅದ್ನೇ ಈ ದೇಶ ಮುಳುಗಿ ಹೋಗೊತನಕ ಈ ಜನ ಬಿಡ್ದೆ ಹಿಡ್ಕಂಡು ಕಿರುಚ್ತಾ ಕುಂತಿರ್‍ತವೆ. ಮೀಸಲಾತಿ ಹೆಸ್ರಲ್ಲಿ ಎಷ್ಟೊಂದು ಅನ್ಯಾಯ ಆಗ್ತಿದೆ ಗೊತ್ತ. ನಮ್ಮಂತವರಿಗೆ ಇದರಿಂದ ಜೀವ್ನವೇ ಹಾಳಾಗ್ತಿದೆ. ನಾನು ರ್‍ಯಾಂಕ್ ಬಂದ್ರೂ ಕೆಲ್ಸ ಇಲ್ಲಾ. ಆದ್ರೆ ಈ ಲಫಡ ಯಾವನೋ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ರೂ ಕೆಲ್ಸನಾ ಕರ್‍ದು ಕೊಟ್‌ಬಿಡ್ತಾರೆ. ಇಂತಾದ್ರಿಂದ್ಲೇ ರೀ ಈ ದೇಶಾ ಹಾಳಾಗ್ತಿರೋದು. ವೀ ಮಸ್ಟ್ ಬ್ಯಾನ್ ದಿ ರಿಜರ್ವೇಷನ್. ಅದರ್‌ವೈಸ್ ಇಂಡಿಯಾ ಹ್ಯಾವ್ ನೋ ಫ್ಯೂಚರ್ ಅಟ್ ಆಲ್.’ +ನಾನೀಗ ಮಹಾಪರಾಧವಾಯ್ತು ಬುದ್ಧೀ ಎಂಬಂತೆ ಮುಖ ಮಾಡಿಕೊಂಡು ‘ಸಾರಿ ಸಾರ್ ಬೇಜಾರಾಯಿತೇನೋ ನಾನಂಗಂದಿದ್ರಿಂದ. ಅದೇನೇನೋ ಇಂಗ್ಲೀಷಿಲಿ ಹೇಳ್ತಿದ್ದಿರಿ. ವಸಿ ಕನ್ನುಡುದಲ್ಲಿ ಹೇಳಿ ಸಾರ್. ನನಗೆ ಇಂಗ್ಲಿಷ್ ಅಂದ್ರೆ ಏನೇನೂ ಅರ್ಥ ಆಗೋಲ್ತು. ನಾನು ಎಂಟು ಸಾರಿ ಯೆಸೆಲ್ಸಿಲಿ ಇಂಗ್ಲಿಷ್ ಕಟ್ಟಿ ಕಟ್ಟಿ ಕೊನೆಗೆ ಯೇಗಲಾರದೆ ಬಿಟ್ಟು ಬಿಟ್ಟೆ. ದೇವರು ಆ ಬಾಸೆಯ ನನಗೆ ದಕ್ಕಿಸ್‌ಕೊಡ್ದೆ ವೋದ. ಎಷ್ಟೊಂದ್ ಚನ್ನಾಗಿ ಇಂಗ್ಲಿಷ್ ಮಾತಾಡ್ತಿರಿ….’ +-ಆತ ಮಿಕಿ ಮಿಕಿ ನನ್ನನ್ನೇ ನೋಡಿ- +‘ಇಂಗ್ಲೀಷ್ ಬರೋದೆ ಇಲ್‌ವೇನ್ರೀ. ಇನ್ನೂ ಯಾವ್ ಕಾಲ್ದಲಿದ್ದೀರಿ. ಅದೂ ರೈಲು ಜನಗಳ ಜೊತೆ ರೈಲು ಪ್ರಯಾಣ ಮಾಡಲು ಬಂದಿದ್ದೀಯಲ್ಲಪ್ಪಾ. ಇಂಗ್ಲೀಷ್‌ನವರು ಕೊಟ್ಟು ಹೋದ ರೈಲಿನಲ್ಲಿ ಕೂತು ಪಯಣ ಮಾಡೋದಿಕ್ಕೆ ಒಂದಿಷ್ಟಾದ್ರೂ ಇಂಗ್ಲಿಷ್ ಇರಬೇಕು. ಹೋಗ್ಲಿ ಹಿಂದಿಯಾದ್ರೂ ಬರ್‍ತದಾ?’ +ನಮ್ಮಿಬ್ಬರ ಸುತ್ತ ರೈಲು ಜನ ತರಾವರಿಯಾಗಿ ಅವರಿಚ್ಛೆಯಲ್ಲಿ ಇದ್ದರು. ಒಳಗಿನ ಜನ ಓಡಾಡುತ್ತಿದ್ದರು. ಮಲಗುವವರು ಮಲಗುತ್ತಿದ್ದರು. ಪೆಡಂಭೂತ ಗರಗಸದ ಗೊರಕೆಯನ್ನು ಆ ಪುಟ್ಟ ಹೆಂಗಸಿನ ಮೈ ಮೇಲೆ ಕೊರೆಯುತ್ತಿದ್ದ. ಇಂಗ್ಲಿಷ್ ಮಾತನಾಡುವ ಹರಟೆಕೋರರು ಕಾರ್ಡ್ಸ್ ಆಡುತ್ತ ನಗಾಡುತ್ತಿದ್ದರು. ನಮ್ಮಿಬ್ಬರ ಮಾತು ಸಾಗಿತ್ತು- +‘ಸದ್ಯ ಹಿಂದಿಯಾದ್ರೂ ಬರ್‍ತದಲ್ಲಾ’-ಬಂದ್ರು ಈಗ ನನ್ನೊಡನೆ ಮಾತನಾಡಲು ಮನಸ್ಸಿಲ್ಲ ಎಂಬಂತೆ ಕಿಟಕಿಯ ಕಡೆ ನೋಡಿ ಆಕಳಿಸಿದ. ನಾನು ಬಿಡದೆ- +‘ನಮುದು ದಮಕಿ ಕ್ಯಾಸ್ಟ್ ಅಲ್ಲವಾ, ಅದ್ಕೇ ನಮಗೆ ಇಂಗ್ಲೀಸು ಹಿಂದಿ ಕನ್ನಡ ಇವೆಲ್ಲ ಅಷ್ಟಾಗಿ ಸರಿಯಾಗಿ ಬರೊಲ್ಲಾ ಸಾರ್. ಏನೋ ಆ ದೇವರ ದಯದಿಂದ ಸ್ವಲ್ಪ ಕನ್ನಡ ಮಾತು ಕಲ್ತುಬಿಟ್ಟಿವಿನಿ. ನಮ್ಮ ತಾಯಿ ಭಾಷೆ ದಮಕಿ ಅಂತಾ ಸಾರ್. ದಮಕಿ ಬಾಸೆಲಿ ಏನ್ ಬೇಕಾದ್ರು ಕೇಳಿ ಜಗತ್ತೆಲಿ ಏನಿರ್‍ತದೋ ಅದೆಲ್ಲನು ಅದ್ರೆಲಿ ಸರಾಗವಾಗಿ ಎಲ್ಲು ನಿಲ್ಲಿಸ್ದಂಗೆ ಹೇಳ್ತಿನಿ ಮಾತಾಡ್ತಿನಿ. ನಮ್ ದಮಕಿ ಬಾಸೆನ ಈಗ ಮಾತಾಡೋರೆ ಇಲ್ಲಾ ಸಾರ್.’ +ಈಗಾತ ನನ್ನೆಡೆಗೆ ಸಿಟ್ಟಿನ ಉಪೇಕ್ಷೆಯನ್ನು ಹರಿಯ ಬಿಡುತ್ತಿದ್ದ. ನನ್ನ ಭಾಷೆಯ ತಂಟೆಗೆ ಏನು ಮಾಡಿದರೂ ಬರದೇ ಹೋದ. ಬಂದಿದ್ದರೆ ನನ್ನ ಮನಸೋ ಇಚ್ಛೆಯಾಗಿ ಎಂತೆಂತದೋ ಅಪಸ್ವರದ ಧ್ವನಿ ಪದ ಸಂಕೇತ ಉಚ್ಚಾರಗಳನ್ನೆಲ್ಲ ಸೃಷ್ಟಿಸಿ ಇದಾವುದೋ ಒಂದು ಪೈಶಾಚಿಕ ಭಾಷೆಯೇ ಇರಬೇಕೆಂಬಂತೆ ನಂಬಿಸಿ ಅವನ ಕೆಡಿಸಿ ಅಂತಹ ಉಚ್ಚಾರಣೆಗಳನ್ನೇ ಅತಿ ಕೆಟ್ಟ ಬೈಗಳ ಎಂದು ರೂಪಿಸಿಕೊಂಡು ಒಟ್ಟು ಈ ಬಡ್ಡಿ ದುಡ್ಡಿನ ಇಕ್ಕಳದಲ್ಲಿ ಸಿಲುಕಿದ ನನ್ನೆಲ್ಲ ಸಿಟ್ಟನ್ನು ಕಕ್ಕಿಕೊಂಡು ತೀರಿಸಿಕೊಳ್ಳುವಾ ಎಂದು ಲೆಕ್ಕ ಹಾಕಿದ್ದೆ. ನನ್ನ ದುರಾದೃಷ್ಟಕ್ಕೆ ಅವನು ಮಲಗಲು ತೊಡಗಿದ. +ಎರಡನೆ ಸಾಲು +ಆಕ್ರೋಶದಿಂದ ಕತ್ತಲನ್ನು ಸೀಳುವಂತೆ ರೈಲು ಕೂಗುತ್ತ ವೇಗವಾಗಿ ನುಗ್ಗುತ್ತಿತ್ತು. ಅದರೊಳಗಿನ ಲೋಕ ಅರೆ ಎಚ್ಚರ ಅರೆನಿದ್ದೆ ಅರೆ ಅರಿವುಗಳಲ್ಲಿ ಮುಳುಗಿತ್ತು. ನನ್ನೆದುರಿನ ಪೆಡಂಭೂತ ಈಗ ಗಾಢವಾದ ನಿದ್ದೆಯಲ್ಲಿ ಮುಳುಗಿದ್ದ. ಅವನ ದೇಹ ಅಲುಗಾಟದಲ್ಲಿ ತೂಗಾಡುತ್ತಿತ್ತು. ಚೆಲುವ ಕನ್ನಡಿಗ ತನ್ನ ಆಡಿನ ಕಣ್ಣುಗಳಲ್ಲಿ ಅರೆತೆರೆದಂತೆ ನಿದ್ದೆ ಮಾಡುತ್ತಿದ್ದ. ನನ್ನ ಪಕ್ಕದವನು ವಿಪರೀತ ಕುಡಿದಿದ್ದರಿಂದ ವಾಸನೆ ಸುತ್ತಿಕೊಳ್ಳುತ್ತಿತ್ತು. ಹುಡುಗಿಯರಿಬ್ಬರೂ ಶಾಲು ಹೊದ್ದು ನಿದ್ದೆಯಲ್ಲೂ ನಗುಮೊಗದಲ್ಲಿ ಯಾವುದೋ ಹೂ ತೋಟದಲ್ಲಿ ವಿಹರಿಸುತ್ತಿರುವಂತೆ ಕಾಣುತ್ತಿದ್ದರು. ನನಗೆ ನಿದ್ದೆ ಬಂದಿರಲಿಲ್ಲ. ಪೆಡಂಭೂತ ಆಗ ಕೈಯಲ್ಲಿ ಹಿಡಿದಿದ್ದ ಚಾಕನ್ನು ನಿದ್ದೆಯಲ್ಲೂ ಹಾಗೇ ಹಿಡಿದು ಗೊರಕೆ ಹೊಡೆಯುತ್ತಿದ್ದ. ನನ್ನಂತಹ ಒಬ್ಬ ಯಃಕಶ್ಚಿತ್ ಮನುಷ್ಯನನ್ನು ಕಂಡು ಅವನಿಗೆ ಅಂತಹ ಗಾತ್ರದವನಿಗೂ ಯಾಕೆ ಭಯ ಆವರಿಸಿತು ಎಂದು ಅರ್ಥವಾಗಲಿಲ್ಲ. ಯಾವುದೋ ಸೇತುವೆಯ ಮೇಲೆ ರೈಲು ಹೋಗುತ್ತಿತ್ತೋ ಅಥವಾ ಯಾವ ಸುರಂಗ ನುಗ್ಗಿ ಯಾವ ಭೋರ್ಗರೆವ ಸದ್ದನ್ನು ಕಕ್ಕುತ್ತಿತ್ತೋ ಅತ್ತ ಕಡೆಗೆ ನನ್ನ ಗಮನ ಹೋಗಲಿಲ್ಲ. ಮನಸ್ಸಿನ ಒಳಗೆ ಏನೋ ನುಲಿಯತೊಡಗಿತು. ತಿಮ್ಮಯ್ಯ ಸಿಗದೆ ಹೋದರೆ ಅಥವಾ ಸಿಕ್ಕಿದರೂ ಹಣ ಕೊಡದಿದ್ದರೆ ಹೇಗೆ ಹಿಂತಿರುಗುವುದು ಎಂದು ಗಾಬರಿಯಾಯಿತು. ನನ್ನ ಹೆಂಡತಿ ಮಕ್ಕಳು ಈ ಅವೇಳೆಯಲ್ಲಿ ನಿದ್ದೆ ಮಾಡುತ್ತ ಕನಸು ಕಾಣುತ್ತಿರಬಹುದೋ ಏನೋ ಎಂದುಕೊಂಡೆ. ರೈಲು ಸೃಷ್ಟಿಸುವ ವಿಪರೀತ ಶಬ್ದ ಮತ್ತಷ್ಟು ತಲೆನೋವು ತರಿಸುತ್ತಿತ್ತು. ಪೆಡಂಭೂತನ ಪತ್ನಿ ಆಗಾಗ ಎಚ್ಚರಗೊಂಡು ಸುತ್ತ ಒಮ್ಮೆ ಗಮನಿಸಿ ಕಣ್ಣು ಮುಚ್ಚುತ್ತಿದ್ದಳು. ಚಳಿಗಾಳಿ ಒಳಕ್ಕೆ ನುಗ್ಗುತ್ತಿತ್ತು. ಮಧ್ಯ ರಾತ್ರಿ ಮೀರುತ್ತಿತ್ತು. ಭಾಗಶಃ ಎಲ್ಲರೂ ಮಲಗಿರುವಂತೆ ಕಾಣುತ್ತಿತ್ತು. ಇನ್ನೊಂದು ಬರ್ತಿನಲ್ಲಿ ಮಲಗಿದ್ದ ನಡುವಯಸ್ಕ ಹೆಂಗಸಿನ ಸೀರೆ ಮಂಡಿ ಮೇಲೆ ಹೋಗಿ ಅವಳ ತೊಡೆ ಅಸ್ಪಷ್ಟ ಬೆಳಕಿನಲ್ಲಿ ಕಾಣದಿದ್ದರೂ ಕಂಡಂತೆ ಭಾಸವಾಗುತ್ತಿತ್ತು. ಯಾವನೋ ನಿದ್ದೆಯಿಲ್ಲದ ಮುದುಕ ಹಿಂದಿನ ಸೀಟಿನಲ್ಲಿ ಪದೇ ಪದೇ ಕೆಮ್ಮುವುದು ಕಿರಿಕಿರಿ ತರುತ್ತಿತ್ತು. ಇದ್ದಕ್ಕಿದ್ದಂತೆ ಈ ರೈಲು ಹಳಿ ತಪ್ಪಿದರೆ ಎಂತಹ ಸಾವುನೋವು ಒಂದೇ ಕ್ಷಣದಲ್ಲಿ ಉಂಟಾಗಬಹುದೆಂದು ಊಹಿಸಿಯೇ ಅಂತಹ ಕಲ್ಪನೆಗಳೇ ಅಪರಾಧ ಎಂದು ಸುಮ್ಮನಾಗಿಬಿಟ್ಟೆ. ನಿದ್ದೆಗೆ ಬರುವೆಯಾ ಎಂದು ರೈಲು ಸವಾಲು ಹಾಕಿ ಕರೆದು ಸಿಳ್ಳು ಊದಿದಂತಾಗುತ್ತಿತ್ತು. ಅಹೋರಾತ್ರಿಯಲ್ಲಿ ಯಾವುದೋ ಊರು ಯಾವುದೋ ಪೇಟೆ ಎಂತದೋ ದೂರ ದಿಬ್ಬದ ಒಂದು ಹಳ್ಳಿ ಇನ್ನೆಲ್ಲಿಯದೋ ಕಣಿವೆ ದಾರಿಯ ಪ್ರಪಾತದ ಒಳಗಿರುವಂತಹ ಕೇರಿಯ ಮಿಣುಕು ದೀಪಗಳು ಆ ಕತ್ತಲಲ್ಲಿ ಯಾರ್‍ಯಾರಿಗಾಗಿಯೋ ಯಾರೋ ಹಚ್ಚಿಟ್ಟು ಯಾಕಾಗಿಯೋ ಯಾರನ್ನೋ ಹಗಲೂ ರಾತ್ರಿ ಕಾಯುತ್ತ ಕುಳಿತಿರುವಂತೆ ಕಿಟಕಿಯ ಒಳಕ್ಕೆ ಒಂದು ಕ್ಷಣ ಬಂದು ಕಣ್ಣಿಗೆ ಮುಟ್ಟಿ ಮಾಯವಾಗುತ್ತಿದ್ದವು. ಯಾವುದೋ ಒಂದು ನಗರ ಅದರ ಹರಕು ಮುರುಕು ಬೀದಿ ದೀಪಗಳಲ್ಲಿ ಕಲ್ಲು ನೀರು ಕರಗುವಂತಹ ವೇಳೆಯಲ್ಲಿ ಈ ರೈಲಿನೊಳಗಿನ ನನ್ನ ಕಣ್ಣುಗಳಿಗೆ ಹತ್ತಿಕೊಂಡು ಉರಿಯುತ್ತಿರುವ ನಗರದಂತೆ ಕಂಡು ಬೆಚ್ಚಿದೆ. +ಕೆಲವೇ ಕ್ಷಣಗಳಲ್ಲಿ ಬೆಂಕಿಯ ಆ ನಗರವನ್ನು ರೈಲು ದಾಟಿಕೊಂಡು ಬಂದಿತ್ತು. ಆಕಾಶದ ನಕ್ಷತ್ರಗಳು ಇಣುಕಿ ನೋಡುತ್ತ ಕರಗುತ್ತಿದ್ದವು. ಯಾವುದೋ ಸ್ಟೇಷನ್‌ನ ಯಾವುದೋ ಬೆಳಕು ಕಣ್ಣನ್ನು ಕುಕ್ಕುತ್ತಿತ್ತು. ಚಾಯ್ ಚಾಯ್ ಎಂದು ಅಂತಹ ವೇಳೆಯಲ್ಲೂ ಮಾರಾಟ ಮಾಡುವವರು. ಪ್ಲಾಟ್‌ಫಾರ್ಮ್ ಉದ್ದಕ್ಕೂ ಓಡಾಡುತ್ತ ನಿದ್ದೆಯಿಲ್ಲದೆ ಜರ್ಜರಿತವಾದ ಧ್ವನಿಪೆಟ್ಟಿಗೆಯ ವಿಚಿತ್ರ ಸ್ವರದಲ್ಲಿ ಕೂಗುತ್ತಿದ್ದರು. ಯಾರೋ ಹೇಸಿಗೆ ಮಾಡಲು ಹೋದಂತೆ ಬಂದಂತೆ ಮತ್ಯಾರೋ ಎಲ್ಲೊ ಯಾವುದೋ ಊರಿನಲ್ಲಿ ಕೆಳಗಿಳಿದಂತೆ ಅಥವಾ ಜಿಗಿದಂತೆ ಇಲ್ಲವೇ ಬಿದ್ದು ಹೋದಂತೆ ಭಾಸವಾಗುತ್ತಿತ್ತು. ಬರುವ ನಿದ್ದೆಯನ್ನು ವಿಷಾದದಿಂದ ತಳ್ಳಿ ಬಿಟ್ಟಿದ್ದೆ. ಹತ್ತು ಸಾವಿರ ರೂಪಾಯಿಗಳನ್ನು ಬಡ್ಡಿಯವರಿಂದ ಕೊಡಿಸುವಾಗ ನನಗೆ ಏನೂ ಅನಿಸಿರಲಿಲ್ಲ. ಅದಕ್ಕೂ ನನಗೂ ಸಂಬಂಧ ಕೇವಲ ಆಕಸ್ಮಿಕ ಅಥವಾ ಏನೂ ಇಲ್ಲವೇ ಇಲ್ಲ ಎಂದುಕೊಂಡಿದ್ದೆ. ಗೆಳೆಯ ತಿಮ್ಮಯ್ಯ ಆ ಹಣದಲ್ಲಿ ನನಗೆ ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ನನ್ನ ಜೀವಮಾನದಲ್ಲಿ ಒಂದೇ ಸಂಪಾದನೆಯಲ್ಲಿ ಒಂದೇ ಬಾರಿಗೆ ಅಷ್ಟು ದುಡ್ಡನ್ನು ನೋಡುವುದು ಸಾಧ್ಯವೇ ಇರಲಿಲ್ಲ. ನಾನೆಂತಹ ಮೂರ್ಖ ಎಂದರೆ ದುಡ್ಡು ಕೊಡುವವನು ಒಬ್ಬ ಅದನ್ನು ತೀರಿಸುವವನು ಇನ್ನೊಬ್ಬ. ಇದರ ಮಧ್ಯೆ ನನ್ನದೇನೂ ಇಲ್ಲ. ಏನೋ ವಿಶ್ವಾಸಕ್ಕೆ ಇವನಿಗೆ ಸಾಲ ಕೊಡಿ ಎಂದಷ್ಟೇ ನನ್ನ ಜವಾಬ್ದಾರಿ ಎಂದು ಭಾವಿಸಿದೆ. ಈ ರೈಲು ಜನಕ್ಕೆ ನನ್ನ ಸಮಸ್ಯೆ ಅರ್ಥವಾಗಿದ್ದರೆ ಮತ್ತಷ್ಟು ನನ್ನನ್ನು ಗೇಲಿಗಣ್ಣಿನಿಂದ ನೋಡುತ್ತಿದ್ದರೇನೋ. +ಎರಡು ಮೂರು ಬಾರಿ ಬಂದ ತೂಕಡಿಕೆಯನ್ನು ಹಿಂದಕ್ಕೆ ತಳ್ಳಿದೆ. ಪೆಡಂಭೂತನ ಹೆಂಡತಿ ಆ ಕತ್ತಲೆಯಲ್ಲಿ ಎದ್ದು ಕುಳಿತಳು. ಸೀರೆಯನ್ನು ಸರಿ ಮಾಡಿಕೊಂಡು ಮೈತುಂಬ ಸೆರಗು ಸರಿ ಮಾಡಿಕೊಳ್ಳುತ್ತಿದ್ದಳು. ಈಗ ನಾನೇನಾದರೂ ನಿದ್ದೆ ಇಲ್ಲದಂತೆ ಎಚ್ಚರವಾಗಿರುವುದನ್ನು ಇವಳ ಪತಿರಾಯ ಎದ್ದು ನೋಡಿದರೆ ಇವರಿಬ್ಬರೂ ಏನೋ ಸರಸದ ಮಾತುಗಳಲ್ಲಿ ಮೈಥುನದ ಅಮಲುಗಳಲ್ಲಿ ಮುಳುಗೇಳುತ್ತಿದ್ದಾರೆಂದೇ ಭಾವಿಸಿ ಕೈಯಲ್ಲಿ ಹಿಡಿದಿರುವ ಚಾಕುವಿನಿಂದಲೇ ತಿವಿದು ಹಾಕಿಯಾನು ಎಂದು ಕಣ್ಣು ಮುಚ್ಚಿಕೊಂಡೆ. ಆದರೂ ಕಣ್ಣ ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳದೆ ಮೆಲ್ಲಗೆ ಸ್ವಲ್ಪವೇ ತೆರೆದುಕೊಂಡು ಯಾಕೋ ಆಕೆಯ ಕಡೆಗೇ ನೆಟ್ಟವು. +ಸುಮಾರು ಹೊತ್ತು ಹಾಗೇ ಎದ್ದು ಕೂತಿದ್ದವಳು ಗಂಡನ ಮೈಯನ್ನೊಮ್ಮೆ ಮೆಲ್ಲಗೆ ತಡವಿದಳು. ಆ ಮಹಾಶಯನಿಗೆ ಎಚ್ಚರವೇ ಇರಲಿಲ್ಲ. ರೈಲು ಅದರ ಪಾಡಿಗೆ ಅದು ಕರ್ಕಶವಾಗಿ ಕೂಗುತ್ತಿತ್ತು. ಅದು ಯಾರನ್ನು ಯಾವ ಹೊತ್ತಿನಲ್ಲಿ ಯಾವ ವರಸೆಯಲ್ಲಿ ಯಾರ್‍ಯಾರನ್ನು ಕರೆದುಕೊಳ್ಳುತ್ತದೋ ನನಗೊಂದೂ ಅರಿವಾಗದ ಮಂದ ಮಂಪರಿನಲ್ಲಿ ತಾನೆಲ್ಲೊ ಯಾವುದೋ ಲೋಕಕ್ಕೆ ಸತ್ತು ಕೇವಲ ಜೀವ ಮಾತ್ರ ಈ ರೈಲಿನ ಮೂಲಕ ಹೋಗುತ್ತಿದೆ ಎನಿಸಿ ಒಂಥರಾ ಸಂಕಟ ಹೊಂಡತೊಡಗಿತು. ನನ್ನ ಎರಡೂ ಹೆಣ್ಣು ಮಕ್ಕಳು ಪದೇ ಪದೇ ಕಾಡತೊಡಗಿದವು. ಎದ್ದು ಕುಳಿತಿದ್ದ ಈ ಕೋಮಲ ಹೆಂಗಸು ಗಂಡನ ಕೈಲಿದ್ದ ಚಾಕುವನ್ನು ಮೆಲ್ಲಗೆ ಬಿಡಿಸಿಕೊಂಡಳು. ಅದು ಅವನ ಕೈಯಿಂದ ಮೆಲ್ಲಗೆ ಹೂವಿನಂತೆ ಕಳಚಿ ಅವಳ ಕೈಸೇರಿ ಆ ಮೇಲೆ ಅದು ಎಲ್ಲೋ ಅವಳ ಸೊಂಟದ ಮರೆಯಲ್ಲಿ ಅವಿತುಕೊಂಡಿತು. ನೋಡ ನೋಡುತ್ತಿದ್ದಂತೆಯೇ ಅವಳು ಅಲ್ಲಿಂದ ಎದ್ದು ಗಂಡನಿಗೆ ಗೊತ್ತಾಗದಂತೆ ಹುಷಾರಿನಿಂದ ಜಾರಿದಂತೆ ಹೊರಳಿ ಆ ಕಡೆ ನಡೆದೇಬಿಟ್ಟಳು. ನನಗೆ ಕುತೂಹಲ ತಡೆಯಲಾಗಲಿಲ್ಲ. ಆಕೆ ಎದ್ದು ಕುಳಿತ ಪರಿ ಹೊರಟ ರೀತಿ ಮತ್ತೆ ಮತ್ತೆ ಹಿಂತಿರುಗಿ ನೋಡಿದ ತರ ಇವೆಲ್ಲ ಏನೋ ಒಂದು ನಿಗೂಢವನ್ನು ಒಳಗೊಂಡಿರುವಂತೆ ಕಂಡವು. ನಾನೂ ಎದ್ದು ಅವಳು ನಡೆದ ಕಡೆ ಬಂದೆ. ಜನ ಜನ ಕಾಲು ಕಾಲಿಗೂ ಜನ ರೈಲಿನ ತುಂಬ ಮಲಗಿದ್ದರು. ರೈಲಿನ ಸಪ್ಪಳ ಬಿಟ್ಟರೆ ಮನುಷ್ಯರ ಗದ್ದಲ ತಗ್ಗಿ ಹೋಗಿತ್ತು. ಅವಳು ಎದ್ದು ಗಂಡನನ್ನು ಅವಲೋಕಿಸಿದ ರೀತಿಯನ್ನು ಕಂಡೇ ನನಗೆ ಭಯವಾಗಿತ್ತು. ಎಲ್ಲಿ ಚಾಕುವಿನಿಂದ ಅವನ ದುಂಡು ಹೊಟ್ಟೆಯನ್ನು ಬಗೆದುಹಾಕುವಳೋ ಎಂಬ ಅನುಮಾನ ಬಂದಿತ್ತು. ಅದಾಗಿರಲಿಲ್ಲ. ಟಾಯ್ಲೆಟ್ ರೂಮಿನ ಕಡೆ ಆಕೆ ಹೋಗಬಹುದು ಎಂದು ನೋಡಿದೆ. ಹಿಂತಿರುಗಿ ನಾನು ಬಂದದ್ದನ್ನು ನೋಡಿ ಹಗುರವಾಗಿ ಒಮ್ಮೆ ನಗಾಡಿದಳು. ಅಲ್ಲೇ ಒಂದು ಮೂಲೆಯಲ್ಲಿ ನಿಂತಳು. ನನಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅವಳ ಕೈಯಲ್ಲಿ ಹೊಳೆವ ಹರಿತವಾದ ಚಾಕು ನನ್ನನ್ನೇ ನೋಡಿದಂತಿತ್ತು. ಅಪರಿಚಿತರನ್ನು ಹೀಗೆ ಎದುರಾಗುವುದು ಬಹಳ ಅಪಾಯ ಎಂದು ಅನುಮಾನ ಆಕೆಗೆ ಬರದಿರಲಿ ಎಂದು ಟಾಯ್ಲೆಟ್ ಕಡೆಗೆ ಬಂದೆ. ಆಕೆ ನಿರುದ್ವಿಗ್ನಳಾಗಿ ಮಂದಹಾಸದಲ್ಲಿರುವಂತೆ ಹೊರಗಿನ ಕತ್ತಲನ್ನೇ ನುಂಗುವಂತೆ ನೋಡುತ್ತಿದ್ದಳು. ಅವಳ ಮೈ ತುಂಬ ಬಂಗಾರವಿತ್ತು. ಅವಳ ರೇಶಿಮೆಯಂತಹ ನೀಳ ಕೂದಲು ಗಾಳಿಗೆ ರೊಯ್ಯನೆ ಹಾರಾಡುತ್ತಿತ್ತು. ಏನೋ ಮಾತನಾಡಿಸಲು ಬಾಯಿ ತೆಗೆದಂತೆ ಕಾಣುತ್ತಿತ್ತಾದರೂ ನೆಟ್ಟಗೆ ಟಾಯ್ಲೆಟ್ ಕ್ಯಾಬಿನ್ ಒಳಕ್ಕೆ ಹೊರಟು ಹೋದೆ. ಎಂತದೋ ಅಧೀರತೆ ಸುತ್ತಿಕೊಂಡಿತು. ಉಚ್ಚೆ ಹೊಯ್ದು ಹೊರಬಂದಂತೆ ನಾಟಕ ಮಾಡಿದೆ. ಆಕೆ ಆ ಬಾಗಿಲ ಬಳಿಯೇ ನಿಂತು ಕಠೋರ ವೇಗದ ರೈಲಿನ ಆರ್ಭಟವನ್ನು ಆನಂದಿಸುತ್ತಿರುವಂತೆ ಇಲ್ಲಾ ಆ ಆನಂದದ ನೆಪದಲ್ಲಿ ಕಣ್ಣಾಳದಿಂದ ಜಿನುಗುವ ದುಃಖದ ಛಾಯೆಯಂತೆ ಏನನ್ನೋ ಯಾರನ್ನೋ ಕಾಯುತ್ತಿರುವಂತೆ ಕರೆಯುತ್ತಿರುವಂತೆ ನೋಡುತ್ತಿರುವಂತೆ ನಿಂತೇ ಇದ್ದಳು. ಅವಳ ಸೆರಗು ಗಾಳಿಗೆ ಪಟಪಟಿಸುತ್ತಿತ್ತು. ಮೈಮೇಲೆ ಆಕೆಗೆ ಎಚ್ಚರವಿದ್ದಂತಿರಲಿಲ್ಲ. ಅವಳ ಮೃದುವಾದ ಎಳೆಯ ಮೊಲೆಗಳು ಏದುಸಿರಿಗೆ ಬೆದರುತ್ತಿರುವಂತೆ ಕಾಣುತ್ತಿದ್ದವು. ಅಂತಹ ಚೆಲುವಾದ ಪರಂಗಿಹಣ್ಣಿನ ಹೋಳಿನ ಬಣ್ಣದಂತಹ ಅವಳ ಹೊಟ್ಟೆ ಪುಕಪುಕಾ ಎಂದು ಉಸಿರಾಡುತ್ತಿತ್ತು. ಅವಳಿಗೆ ಅನುಮಾನ ಬರದಿರಲಿ ಎಂಬಂತೆ ತಾನೊಬ್ಬ ಅನಾಥ ರೋಗಿ ಆರಾಮವಿಲ್ಲ ಎಂಬಂತೆ ಕೆಮ್ಮುತ್ತಾ ಕುಂಟುತ್ತಾ ಅಲ್ಲೇ ಒಂದೆರಡು ನಿಮಿಷ ನಿಂತು ಅವಳನ್ನೇ ನೋಡಿದೆ. ಆಕೆ ಸುಮ್ಮನೆ ಅವಳ ಪಾಡಿಗೆ ಅವಳೇ ನಗಾಡಿಕೊಂಡಂತೆ ಅಥವಾ ಈ ನಗೆಸಾರಿಕೆಗಳ ಸಹವಾಸ ಬೇಡ ಎಂಬಂತೆ ಒಮ್ಮೆ ನಕ್ಕು ನನ್ನೆಡೆಗೆ ತಿರುಗಿ ನೋಡಿದಳು. ಅವಳ ವೇಷ ಭೂಷಣವನ್ನು ನೋಡಿದರೆ ಗುಜರಾತಿನ ಯಾವುದೋ ಶೇಠ್‌ಜೀ ಮನೆತನದವಳೆಂದು ತಿಳಿಯುತ್ತಿತ್ತು. ಕ್ಷಣ ಕ್ಷಣಕ್ಕೂ ನಗುತ್ತಿರುವಂತೆ ಇಲ್ಲಾ ಇಲ್ಲಾ ಅದು ಬಿಕ್ಕುತ್ತಿರುವಂತೆ ಅಥವಾ ಯಾವುದೋ ಹುಚ್ಚು ಸೆಳೆತದಲ್ಲಿ ಯಾರನ್ನೋ ನೋಡಿ ಪೆಚ್ಚಾಗಿ ನಗುತ್ತಿರುವಂತೆ ಇಲ್ಲವೇ ತಾನೊಂದು ದೊಡ್ಡ ಸುಖದ ಪರಿಸರದಲ್ಲಿ ಹಾರಾಡುತ್ತಿರುವೆನೆಂಬಂತೆ ಅರಿವಿಗೆಟುಕದ ಮರುಭಾವದಲ್ಲಿ ನಿಂತೇ ಇದ್ದಳು. +ಇಂತಹ ಅವೇಳೆಯಲ್ಲಿ ಅಪರಿಚಿತ ಹೆಂಗಸಿನ ಪಕ್ಕ ನಿಂತು ಮಾತಿಗೆಳೆಯುವುದು ಸರಿಯಿಲ್ಲವೆಂದು ಯಾರೋ ನನ್ನ ಮನಸ್ಸು ಜಗ್ಗಿದ್ದರಿಂದ ನಾನು ಕುಳಿತಿದ್ದಲ್ಲಿಗೇ ಹಿಂತಿರುಗತೊಡಗಿದ. ಆಕೆ ನನ್ನನ್ನೇ ನೋಡುತ್ತಿದ್ದಳು. ನಗುತ್ತಿದ್ದಳು. ಅಳುತ್ತಿದ್ದಳು ವ್ಯಂಗ್ಯವಾಗಿ ಸಿಟ್ಟಿನಿಂದ ಮುಖ ಕಿವುಚುತ್ತಿದ್ದಳು. ಹತಾಶೆಯಿಂದ ದೂರದ ಆಗಸದ ತಾರೆಯರ ಕೂಗಿಕೊಳ್ಳುವಂತೆ ಅವಳ ಕಣ್ಣುಗಳು ಪಟಪಟಿಸುತ್ತಿದ್ದವು. +ಎಂದೂ ಇಲ್ಲದಂತಹ ಉದ್ವೇಗ ನನ್ನೊಳಗೆ ಹುಟ್ಟಿ ಆಕೆಯನ್ನು ಮಾತನಾಡಿಸಿಯೇ ಬಿಡುವಾ ಎಂದು ಹಿಂದಿರುಗತೊಡಗಿದೆ. ಆಕೆ ಅರಿತುಕೊಂಡಂತೆ ಬರಬೇಡ ಬರಬೇಡಾ ಹೋಗು ಹೋಗೂ ಎಂಬಂತೆ ತಲೆ ಆಡಿಸುತ್ತಾ ಆಕ್ರೋಶದಿಂದ ರಭಸವಾಗಿ ಓಡುತ್ತಿದ್ದ ರೈಲು ಬೋಗಿಯ ಬಾಗಿಲ ತುದಿಯಲ್ಲಿ ನಿಂತಿದ್ದವಳು ದಡಕ್ಕೆಂದು ಒಂದೇ ಬಾರಿಗೆ ಆಚೆಗೆ ಜಿಗಿದು ಬಿಟ್ಟಳು. ನನಗೆ ನಿಲ್ಲಲೂ ಶಕ್ತಿ ಇಲ್ಲದಂತಾಗಿ ಗಂಟಲು ಒಣಗಿ ಮಾತು ಹೊರಡದೆ ಕೈಕಾಲು ನಡುಗಿ ತೂರಾಡುತ್ತ ಬಂದು ನನ್ನ ಜಾಗದಲ್ಲಿ ಕುಳಿತುಬಿಟ್ಟೆ. +ಆ ದಡೂತಿ ಮನುಷ್ಯ ಅವಳ ಗಂಡ ಹಾಗೇ ಗೊರಕೆಯಲ್ಲಿ ಮಲಗಿದ್ದ. ಅವನ ಕೈಯಲ್ಲಿ ಈಗ ಚಾಕು ಇರಲಿಲ್ಲ. ಹಾಗೆ ಹೊರಕ್ಕೆ ಜಿಗಿದು ಸಾವನ್ನು ಆಯ್ಕೆ ಮಾಡಿಕೊಳ್ಳಲು ಹೊರಟವಳ ಕೊನೆಯ ನಗು ಕೊನೆಯ ಅಳು ಕೊನೆ ನೋಟ ನನ್ನೊಳಗೆ ಭೂತಾಕಾರವಾಗಿ ತುಂಬಿಕೊಂಡವು. ನಿನ್ನ ಮಡದಿ ಹೊರಗೆ ಬಿದ್ದು ನಜ್ಜಿ ಬಜ್ಜಿಯಾದಳು. ಹೋಗಿ ನೋಡು ಹೋಗು ಎಂದು ಹೇಳಲು ಎಷ್ಟೇ ಪ್ರಯತ್ನಿಸಿದರೂ ಧೈರ್ಯ ಬರಲಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೂ ಇವನೆಲ್ಲೋ ಅವಳ ಮೈಮೇಲಿನ ಬಂಗಾರ ಕಿತ್ತುಕೊಳ್ಳಲು ಹೋಗಿ ಏನೋ ಯಡವಟ್ಟಾಗಿ ಆಕೆ ಹೊರಕ್ಕೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿರಬೇಕೆಂದು ಆಮೇಲೆ ಕತೆ ಹುಟ್ಟಿಕೊಂಡು ನನ್ನನ್ನೂ ಜೈಲಿಗೆ ನೂಕಿದರೆ ಆಮೇಲೆ ನನ್ನ ಗತಿ ಏನಾಗಬೇಕು ಎಂದು ತೆಪ್ಪಗಾಗಿಬಿಟ್ಟೆ. ಏನೇ ಆಗಲಿ ಯಾರೂ ಕೂಡ ಸಾವಿಗೆ ಹೊರಟವರ ಅದರಲ್ಲೂ ಆತ್ಮಹತ್ಯೆಗೆ ನಿಂತವರ ಕೊನೆಯ ಆ ಸ್ಥಿತಿಯನ್ನು ಕಣ್ಣಿಂದ ನೋಡಬಾರದೆಂದು ಅನಿಸಿತು. ಬಡ್ಡಿ ಸಾಲದವರಿಗಿಂತಲೂ ಭೀಕರವಾಗಿ ಅವಳ ಕೊನೆಯ ನಗು ನನ್ನನ್ನು ಇರಿಯತೊಡಗಿತು. ಸಾಯುವ ಕೊನೆ ಗಳಿಗೆಯಲ್ಲಿ ಅವಳ ಪಾಲಿಗೆ ನಾನು ನಕ್ಕುಬಿಟ್ಟಿದ್ದಿದ್ದರೆ ಏನಾಗುತ್ತಿತ್ತು. ಅದರಲ್ಲೂ ಅಂತಹ ವೇಳೆಯಲ್ಲಿ ಗಂಡನ ಕೈಯಿಂದ ಚಾಕು ಬಿಡಿಸಿಕೊಂಡು ಬಂದು ಅದನ್ನಾಗೆ ಹಿಡಿದು ಸಾಯಲು ಯಾಕೆ ಇಚ್ಛಿಸಿದಳು. ಅಯ್ಯೋ ದೇವರೇ, ಆ ಚಾಕುವನ್ನು ಪೆಡಂಭೂತ ಯಾಕಾದರೂ ಹೊರಗೆ ತೆಗೆದು ಕೈಯಲ್ಲಿ ಇಟ್ಟುಕೊಂಡಿದ್ದನೋ ಗೊತ್ತಾಗಲಿಲ್ಲವಲ್ಲಾ. ಇನ್ನು ಬೆಳಿಗ್ಗೆ ಏನೇನು ಕತೆಯಾಗುತ್ತದೇ ಎಂದು ದಂಗಾಗಿ ಕುಳಿತೆ. +ರೈಲು ಅದರ ಪಾಡಿಗೆ ಅದು ಹೋಗುತ್ತಿತ್ತು. ಅದರೊಳಗಿನ ಜನ ಅವರ ಪಾಡಿಗೆ ಅವರು ಮಲಗಿದ್ದರು. ನನಗೆ ನನ್ನ ಪಾಡಿಗೆ ನಾನಿರಲು ಸಾಧ್ಯವಿರಲಿಲ್ಲ. ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದ ಸಾವು ನನ್ನ ಪಕ್ಕವೇ ಸುಳಿದಾಡು ನಗಾಡಿ ಹೋದಂತೆನಿಸುತ್ತಿತ್ತು. ಮುಂಜಾವು ಹತ್ತಿರ ಹತ್ತಿರವಾಗುತ್ತಿದ್ದಂತೆ ನನ್ನ ಆತಂಕ ಹೆಚ್ಚುತ್ತಿತ್ತು. ಚೆಲುವ ಕನ್ನಡಿಗ ನಿದ್ರಾದೇವಿಯ ಬಂಧನದಿಂದ ಇನ್ನೂ ಬಿಡಿಸಿಕೊಂಡಿರಲಿಲ್ಲ. ಎಷ್ಟು ಬೇಗ ಕಾಲ ಜಾರುತ್ತಿದೆ ಎನಿಸಿತು. ಆಗಲೇ ಅನೇಕರು ಎದ್ದು ಟಾಯ್ಲೆಟ್ ಕಡೆಗೆ ದೌಡಾಯಿಸಿದರು. ನನಗೆ ಅಸಾಧ್ಯವಾದ ಬೇಸರ ಕಳವಳ ಆ ಮುಂಜಾವಿನಲ್ಲೇ ಹಿಡಿದುಕೊಂಡಿತ್ತು. +ನನ್ನೆದುರಿದ್ದ ಆತ ದಡಬಡನೆ ತನ್ನ ಹೆಂಡತಿ ಕುಳಿತಿದ್ದ ಕಡೆ ನೋಡಿ ಸುತ್ತಮುತ್ತ ತಿರುಗಿ ಕೈಯಲ್ಲಿಡಿದಿದ್ದ ಚಾಕೂ ಇಲ್ಲವಲ್ಲ ಎಂದು ಯೋಚಿಸಿದಂತೆ ಕಂಡು ಎದ್ದು, ಟಾಯ್ಲೆಟ್ ಕಡೆ ಹೋದ. ಹೆದರಿಕೆಯಿಂದ ನನ್ನ ಹೊಟ್ಟೆ ನುಲಿಯತೊಡಗಿತು. ಅವನಿಗೆ ಆಕೆ ಜಿಗಿದು ಬಿದ್ದು ಸತ್ತಳೆಂದು ನನ್ನಿಂದ ಹೇಳಲು ಸಾಧ್ಯವೇ ಇರಲಿಲ್ಲ. ನನಗೂ ಅದಕ್ಕೂ ಯಾವ ಸಂಬಂಧವೂ ಇರದಿದ್ದರೂ ಯಾರದೋ ಸಾವು ನನ್ನದೇ ಸಾವಿನಂತೆ ಆತಂಕದಂತೆ ನಾವೇ ಅದರಲ್ಲಿ ಬಂಧಿಯಾದಂತೆ ಯಾಕೆ ಪರಿತಪಿಸಬೇಕೆಂದು ಗೊತ್ತಾಗದೆ ಸುಮ್ಮನೆ ಕುಳಿತೆ. ಕಾಫಿ, ಟೀ, ಮಾರುವವರು ಪದೇಪದೇ ಬಂದು ಬಂದು ಹೋಗುತ್ತಿದ್ದರು. ಒಂದಾದ ಮೇಲೊಂದರಂತೆ ನಾನು ಟೀ ಹೀರುತ್ತ ಸಿಗರೇಟು ಸೇದುತ್ತ ಕಿಟಕಿಯ ಬಳಿ ಆಕೆ ಕುಳಿತಿದ್ದ ಜಾಗವನ್ನೇ ದಿಟ್ಟಿಸುತ್ತ ಮುಂದೇನಾಗುವುದೋ ಎಂದು ಕಾದೆ. ಚಲುವ ಕನ್ನಡಿಗ ಮೇಲೇಳುವ ಪ್ರಯತ್ನ ಮಾಡುತ್ತಿದ್ದ. ಏನಾದರಿರಲಿ, ಎದ್ದ ಕೂಡಲೆ ಅವರ ಜೊತೆ ವಿಶ್ವಾಸದಿಂದ ಮಾತನಾಡಿಸಬೇಕೆಂದುಕೊಂಡೆ. ರೈಲು ಮುಂಬಯಿಯ ಹತ್ತಿರ ಬಂದಿತ್ತು. ಆ ರಾತ್ರಿ ಅವರ ಜೊತೆ ನಾನೊಬ್ಬ ದಮಕಿ ಕ್ಯಾಸ್ಟಿನ ಮನುಷ್ಯ ಎಂದು ಹೇಳಿಕೊಳ್ಳಬಾರದಿತ್ತು. ಹಾಗೆಲ್ಲ ಸುಳ್ಳು ಹೇಳಿದ್ದೇ ಆಗ ಆತ ನನ್ನನ್ನು ಮಹಾ ಉಪೇಕ್ಷೆಯಿಂದ ಕಾಣುವಂತೆ ಮಾಡಿತ್ತು. ಬಹಳ ಲಘುವಾದ ಕೆಳದರ್ಜೆಯ ಈ ವ್ಯಕ್ತಿಯ ಜೊತೆ ತಾನು ಆಪ್ತವಾಗಿ ಸಹಪ್ರಯಾಣಿಕ ಎಂಬ ಭಾವನೆಯಲ್ಲಿ ಮಾತನಾಡಿಸಲು ಕಷ್ಟವಾಗುತ್ತದೆ ಎಂಬ ಭಾವನೆಯನ್ನು ಆ ರಾತ್ರಿಯೇ ತೋಡಿಕೊಂಡಿದ್ದ. ಅತ್ಯಂತ ಲಡ್ಡಾದ ನಿರುಪಯುಕ್ತವಾದ ಇಂಥವರ ಜೊತೆ ಹರಟೆಹೊಡೆಯುವುದು ತನ್ನ ಘನತೆಗೆ ಕುಂದಾಗುತ್ತದೆಂದು ಭಾವಿಸಿದಂತಿತ್ತು. ರೈಲು ನಿಧಾನವಾಗಿ ಚಲಿಸುತ್ತಿತ್ತು. ಆಗದು ಯಾವುದೋ ಸ್ಲಂ ಹಾಯ್ದು ಬರುತ್ತಿತ್ತು. +ಮುಂಜಾವು ಎಂದಿನಂತೆ ಬೆಳಗುತ್ತಿತ್ತು. ರೈಲು ಹಳಿಗಳ ಉದ್ದಕ್ಕೂ ಸಾವಿರಾರು ಜೋಪಡಿಗಳ ಜನ ಸಾಲುಸಾಲಾಗಿ ಕಕ್ಕಸ್ಸಿಗೆ ಕುಳಿತಿದ್ದರು. ಹಾಳಾದ ರೈಲು ಇಂತಹ ಜಾಗದಲ್ಲೇ ಬಹಳ ನಿಧಾನವಾಗಿ ಚಲಿಸುವುದಕ್ಕೂ ಆ ಸ್ಲಮ್ಮಿನ ವಾಸನೆಗೂ ಅಲ್ಲಿ ರೈಲು ಹಳಿಗಳ ಪಕ್ಕದಲ್ಲೇ ಕುಳಿತು ಹೇತುಕೊಳ್ಳುತ್ತಿರುವುದಕ್ಕೂ ಮತ್ತೂ ಮಿಗಿಲಾಗಿ ಬೆಳಗ್ಗೆ ಟಾಯ್ಲೆಟ್ ಕ್ಯಾಬಿನ್‌ನಲ್ಲಿ ಅನೇಕರು ಪಾಯಿಖಾನೆ ಮಾಡಿಕೊಂಡು ಗಬ್ಬೆಬ್ಬಿಸಿರುವುದಕ್ಕೂ ಇಡೀ ವಾತಾವರಣವೇ ಹೇಲುಮಯವಾಗಿಬಿಟ್ಟಿತ್ತು. ಅರ್ಧ ದಾರಿಯಲ್ಲೇ ಹಿಂದಿರುಗುವಂತಹ ಮನಸ್ಸು ನನ್ನೊಳಗೆ ಹೆಡೆಬಿಚ್ಚುತ್ತಿತ್ತು. ಹೊತ್ತಾರೆಯ ಹೊಂಗಿರಣಗಳು ಕಿಟಕಿಯಿಂದ ತೂರಿ ಬರುತ್ತಿದ್ದವು. ಪೂರ್ವಾಕಾಶದಲ್ಲಿ ಕೆಂಪು ಕಂದು ಹಳದಿ ಬಿಳಿ ಮಿಶ್ರಿತ ಮೋಡಗಳು ಬೇಗ ಬೇಗನೆ ವರ್ಣ ಕಳೆದುಕೊಳ್ಳುತ್ತಿದ್ದವು. ಆ ಪೆಡಂಭೂತ ಹಿಂದಿರುಗಿ ಬಂದು ಆಕೆ ಟಾಯ್ಲೆಟ್ ಒಳಗಿರಬಹುದೆಂದು ಭಾವಿಸಿ ಕೆಳಗೆ ಬಗ್ಗಿ ಲಗ್ಗೇಜೆಲ್ಲ ಸರಿಯಾಗಿದೆಯೇ ಎಂದು ನೋಡಿಕೊಂಡು ನನ್ನ ಕಡೆಗೆ ನೋಡಿ ಮೆಲ್ಲಗೆ ನಕ್ಕು ಏನನ್ನೋ ಲೆಕ್ಕ ಹಾಕುವವನಂತೆ ಆ ಕಡೆ ತಿರುಗಿದ. ಈ ಕ್ಷಣದಲ್ಲಿ ಇವನಿಗೆ ಅವನ ಹೆಂಡತಿ ಸಾವನ್ನು ಹೇಳಿದರೆ ಹೇಗಿರುತ್ತದೆಂದು ಊಹಿಸಿಕೊಂಡೆ. ಕೂತಲ್ಲಿ ಕೂರಲಾರದೆ ಅತ್ತಿತ್ತ ಬಂದು ಹುಡುಕಾಡುತ್ತಿದ್ದ. ಟಾಯ್ಲೆಟ್ ಕ್ಯಾಬಿನ್ನಿನ ಬಾಗಿಲು ಬಡಿದು ಎಷ್ಟು ಹೊತ್ತು ಒಳಗೇ ಇದ್ದೀ, ಹೊರಗೆ ಬಾ. ನಾನು ನಿನ್ನ ಗಂಡ ಕರೆಯುತ್ತಿರುವುದು ಎಂಬಂತೆ ಅವಳಿಗೆ ಸೂಚನೆ ಕೊಡುವ ಸಲುವಾಗಿ ಅವಳು ಒಳಗಿದ್ದಾಳೆಂದು ಭ್ರಮಿಸಿ ಕರೆಯುತ್ತಿದ್ದ. ಆ ಮುಂಜಾವಿನಲ್ಲೂ ಬೆವರಿದಂತಿದ್ದ. ಚಾಯ್‌ವಾಲಾಗಳ ಮೇಲೆ ಅನಗತ್ಯವಾಗಿ ರೇಗುತ್ತಿದ್ದ. ಬ್ಯಾಗುಗಳ ಜಿಪ್ಪು ಎಳೆದು ಏನೇನೋ ಹುಡುಕಾಡುತ್ತಿದ್ದ. ಅವನ ದೇಹ ಅವನ ಭಾರವನ್ನೇ ಹೊರಲಾರದೆ ಕಷ್ಟಪಡುತ್ತಿತ್ತು. +ರೈಲಿನ ಒಳಗಿನಿಂದ ನಾನು ಸೂರ್ಯೋದಯವನ್ನು ನೋಡಿ ಆಗಿತ್ತು. ಆ ಸ್ಲಂ ದಾರಿಯಲ್ಲೇ ಯಾಕೋ ರೈಲು ನಿಂತುಬಿಟ್ಟಿತು. ಚೆಲುವ ಕನ್ನಡಿಗ ಎದ್ದವನೇ ನನ್ನ ಮುಖ ನೋಡಲು, ಅದೂ ಡ್ರೈನೇಜ್ ಸೂಪರ್‌ವೈಸರ್ ಎಂದು ಹೇಳಿಕೊಂಡಿದ್ದ ನನ್ನ ಮೂತಿ ನೋಡಲು ಸುತರಾಂ ಮನಸ್ಸಿಲ್ಲ ಎಂಬಂತೆ ತನ್ನ ಬೊಗಸೆಕೈಗಳನ್ನು ನೋಡಿಕೊಂಡು ಕಣ್ಣು ಮುಚ್ಚಿದಂತೆ ಕೆಳಗಿಳಿದು ಬಂದು ಕಿಟಕಿಯ ಹೊರಗೆ ಯಾವುದಾದರೂ ಗಿಡ ಮರದ ದರ್ಶನ ಮಾಡುವಾ ಎಂದು ಕಣ್ಣುತೆರೆದ. ಅವನ ಅದೃಷ್ಟ ಅನೇಕರ ಅದೃಷ್ಟದಂತೆ ಸರಿ ಇರಲಿಲ್ಲ. ಕಿಟಕಿಯ ಮುಂಭಾಗದಲ್ಲೇ ವಿವಿಧ ವಯಸ್ಸಿನ ಗಂಡಸರು ಮುದುಕಿಯರು ಬಹಿರ್ದೆಸೆಗೆ ಕುಳಿತು ಇದೆಲ್ಲ ತಮಗೆ ಬಹಳ ಮಾಮೂಲು ಎಂಬಂತೆ ಹೇಲು ಹೊರಹೋಗಲು ಅನುವಾಗುವಂತೆ ವಿವಿಧ ಭಂಗಿಗಳಲ್ಲಿ ಕುಳಿತು ದೇಹವನ್ನು ಆಗಾಗ ಅತ್ತಿತ್ತ ತಿರುವುತ್ತ ಎತ್ತುತ್ತ ಕೂರುತ್ತ ಅಮೇಧ್ಯದ ಪರ್ವತವನ್ನೇ ಸೃಷ್ಟಿಸುವವರಂತೆ ಅಂತಹ ಕಾಯಕಕ್ಕಾಗಿಯೇ ಶತಶತಮಾನಗಳಿಂದ ತಾವಿಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿ ಕೂತಿರುವಂತೆ ಕಾಣುತ್ತಿದ್ದರು. +ಇಂತಹ ಸುಂದರ ದೃಶ್ಯಾವಳಿಗಳಲ್ಲೇ ಆ ಚೆಲುವ ಕನ್ನಡಿಗ ಅಲ್ಲಿ ಗಿಡಮರ ಕಾಣಬಹುದೆಂದು ಇಳಿದು ಕಿಟಕಿಯಲ್ಲಿ ಮುಖವಿಟ್ಟು ಕಣ್ಣರಳಿಸಿದ್ದ. ಅವನಿಗೆ ಈಗ ಏನೂ ಮಾಡುವಂತಿರಲಿಲ್ಲ. ಒಂದೇ ಏಟಿಗೆ ಹತ್ತಾರು ನೂರಾರು ಜನರ ಅಮೇಧ್ಯ ದರ್ಶನವಷ್ಟೇ ಅಲ್ಲದೇ ಗುಪ್ತಾಂಗಗಳ ನೋಟವೂ ಸಿಕ್ಕಿ ಆ ಬಗೆಯ ದರ್ಶನದಿಂದಲೇ ಮೂರ್ಛೆ ಹೋದವನಂತಾಗಿ, ಛೇ ಛೇ ವಾಟ್ ಎ ಡರ್ಟಿ ಕಂಟ್ರಿ ದಿಸ್ ಈಸ್? ರಿಯಲಿ ದಿಸ್ ಈಸ್ ಆನ್ ಹೆಲ್, ಥೂ ಥೂ ರಾಮಾ ರಾಮಾ ಎಂದು ನನ್ನೆಡೆ ನೋಡಿದ. ಗುಡಿಯ ನೋಡಿರಣ್ಣಾ ದೇವರ ಗುಡಿಯ ನೋಡಿರಣ್ಣಾ ಇಂತಹ ಪ್ರಸಂಗಗಳ ವೇಳೆ ಹಿಂದೆ ಹಾಡಿಕೊಳ್ಳುತ್ತಿದ್ದ ಹಾಡು ನನಗೆ ನೆನಪಾದರೂ ನಗು ಬರಲಿಲ್ಲ. ರೇಶಿಮೆಯ ಹಣ್ಣು ಹುಳದಂತಹ ಆ ಕೋಮಲ ಚೆಲುವೆ ಆ ರಾತ್ರಿ ಜಿಗಿದು ಬಿದ್ದದ್ದೇ ತಲೆ ತುಂಬ ಹಿಡಿದುಕೊಂಡಿತ್ತು. +ನಾನೆಲ್ಲೋ ನರಕಕ್ಕೆ ಹೋಗುತ್ತಿದ್ದೇನೆಂದು ಆಗಲೇ ಅನಿಸಿಬಿಟ್ಟಿತ್ತು. ಆ ಹುಡುಗಿಯರು ಆಗಲೇ ಮುಂಜಾವಿನ ಕ್ರಿಯಾವಿಧಿಗಳನ್ನು ಮುಗಿಸಿ ಹೊಳೆವ ಕಣ್ಣುಗಳಲ್ಲಿ ಹಸನಾಗಿ ಕಾಣುತ್ತಿದ್ದರು. ದಡೂತಿ ತನ್ನ ಹೆಂಡತಿ ಎಲ್ಲಿ ಹೋದಳೆಂದು ಅರಿಯದೆ ಕೇಳುತ್ತಿದ್ದ.ದುಗುಡದ ಅವನ ದೇಹ ರಕ್ತದೊತ್ತಡದಿಂದ ತತ್ತರಿಸುತ್ತಿದೆ ಎಂದು ಊಹಿಸಿಕೊಂಡೆ. ಅವನ ಮುಖದಲ್ಲಿ ಅಪಶಕುನದ ಅಲೆಗಳೇಳುತ್ತಿದ್ದವು. ತನಗೆ ಕೈಕೊಟ್ಟು ಯಾವನ ಜೊತೆ ಓಡಿಹೋದಳೋ ಎಂದು ಕುದಿಯುತ್ತ ಸಂಕಟಪಡುತ್ತಿದ್ದ. ಅವಳಿಗಾಗಿ ಎಷ್ಟು ಕಷ್ಟಪಟ್ಟು ಮದುವೆ ಮಾಡಿಕೊಂಡು ಬಂದಿದ್ದೆ ಗೊತ್ತಾ ಎಂದು ಹಲುಬುತ್ತಿದ್ದ. ಕಣ್ಣಂಚಲ್ಲಿ ವ್ಯಾಕುಲ ದುಃಖ ಅವಮಾನ ಹಾಗೂ ಕಿಚ್ಚುಗಳಲ್ಲಿ ಬೆರೆತ ಕಣ್ಣೀರು ಇಣುಕಿ ನೋಡುತ್ತಿತ್ತು. ನನ್ನ ಕಡೆ ಅನುಮಾನದಿಂದ ನೋಡುವುದನ್ನು ಮತ್ತೆ ಆರಂಭಿಸಿದ್ದ. ನನ್ನ ಚೆಲುವ ಕನ್ನಡಿಗ ಯಾವುದಕ್ಕೂ ಸಪೋರ್ಟಿಗಿರಲೆಂದು ಅವನ ಮುಂದೆ ನಿಯತ್ತಿನ ನಿನ್ನ ಹಿಂಬಾಲಕ ಎಂಬಂತೆ ನಡೆದಿರುವ ಘಟನೆಯ ಬಗ್ಗೆ ತನಗೆ ಏನೊಂದೂ ಗೊತ್ತಿಲ್ಲವೆಂಬಂತೆ ಅಯ್ಯೋ ಪಾಪ ಎಂದು ಕನಿಕರ ತೋರುತ್ತಿದ್ದ. ಕನ್ನಡಿಗನಿಗೆ ಆ ತಲೆ ಬಿಸಿಯೆಲ್ಲ ಬೇಕಾಗಿರಲಿಲ್ಲ. ಅಯ್ಯೋ ಬಿಡ್ರೀ, ಯಾವನೋ ಘರ್‌ವಾಲಿಗೆ ಬುಕ್ ಮಾಡಿರ್‍ತಾನೆ, ಕರ್‍ಕಂಡೋಗಿರ್‍ತಾನೆ. ಇಷ್ಟು ಹೊತ್ತಿಗಾಗಲೇ ಫಸ್ಟ್ ಗಿರಾಕಿಯ ಭೆಟ್ಟಿಯೂ ಆಗಿ ಕೆಲ್ಸ ಮುಗ್ದಿರ್‍ತದೆ. ಇವೆಲ್ಲ ರೈಲಲ್ಲಿ ಮಾಮೂಲು ಕಣ್ರೀ. ನಾನೊಬ್ಬ ಸೇಲ್ಸ್‌ಮನ್ ಆಗಿ ಇಂತಾವನ್ನೆಲ್ಲ ಎಷ್ಟೊಂದು ಕಂಡಿದ್ದೇನೆ ಗೊತ್ತಾ. ನನಗೆ ಎಲ್ಲೋ ಇವನೇ ಘರ್‌ವಾಲಿಯ ಏಜೆಂಟ್ ಇರಬೇಕೆಂದು ಅನಿಸ್ತಾ ಇತ್ತು. ಆದ್ರೆ ಅವಳೇ ಪಾಕ್ಡಾ ಇದ್ದಾಳೆ. ಇವನಿಗೆ ಟೋಪಿ ಹಾಕಿ ಹೋಗಿದ್ದಾಳೆಂದು ಹೇಳುತ್ತ ಪೆಡಂಭೂತನ ಕಡೆಗೊಮ್ಮೆ ನೋಡಿ, ಅಯ್ಯೋ ಪಾಪ ಪೂರ್ ಫೆಲೋ, ಎನ್ನುತ್ತಿದ್ದ. ಒಂದು ವೇಳೆ ಇಲ್ಲಿ ಜನ ಹೆಚ್ಚಿದ್ದಾರೆ ಎಂದು ಅಲ್ಲೆಲ್ಲಾದರೂ ಬೇರೆ ಬೋಗಿಯ ಟಾಯ್ಲೆಟ್‌ಗೆ ಹೋಗಿರಬಹುದೇ ಎಂದು ಎಲ್ಲ ಬೋಗಿಗಳನ್ನು ತಲಾಶ್ ಮಾಡಿ ಬಂದು ಉದ್ವೇಗದಿಂದ ಮನದೊಳಗೇ ಹುಡುಕಾಡುತ್ತಿದ್ದ. +ಆ ಸ್ಲಮ್ಮಿನಿಂದ ಮುಂದೆ ಬರುತ್ತಿದ್ದಂತೆಯೇ ಅಮೇಧ್ಯದ ನದಿಯೊಂದು ವಿಸ್ತಾರವಾಗಿ ಹರಿಯುತ್ತಾ ಗತನಾತವನ್ನು ಚೆಲ್ಲುತ್ತಾ ಎದುರಾಯ್ತು. ರೈಲುಜನ ಅದನ್ನೂ ಒಂದು ಜಲ ನದಿಯಂತೆ ನೋಡುತ್ತಿದ್ದರು. ನನಗೆ ಇಡೀ ರೈಲೇ ಒಂದು ನಿಗೂಢವಾಗಿ ರೈಲು ಜನರೇ ಒಂದು ದೊಡ್ಡ ನಾಟಕದ ಕಂಪನಿಯಂತೆ ಭಾಸವಾಗಿ ಕಕರುಮಕರು ಹಿಡಿಯಿತು. ಯಾವುದೋ ಒಂದು ನಿಷ್ಠುರವಾದ ಖಾಸಗೀ ಸಾವಿನಂತೆ ಆ ಹೆಂಗಸಿನ ಸಾವನ್ನು ನಾನು ನನ್ನೊಳಗೆ ಬಚ್ಚಿಟ್ಟುಕೊಂಡೇ ಎಲ್ಲವನ್ನೂ ನೋಡುತ್ತಿದ್ದೆ. ಅವಳು ಕದ್ದು ಓಡಿಹೋಗಿದ್ದಾಳೆಂದೇ ಎಲ್ಲರೂ ತೀರ್ಮಾನಿಸುತ್ತಿದ್ದರು. ಸದ್ಯ ಅವಳು ಸತ್ತಳು ಎಂಬ ಅಂತಿಮ ನಿಲುವಿಗೆ ಬರದೆ ಕೊನೆ ಪಕ್ಷ ಬದುಕಿ ದಾರಿ ತಪ್ಪಿ ಎಲ್ಲಿಗೋ ಹೋದಳೆಂದು ಅವರು ಜರಿದಾಡುತ್ತಿರುವುದೇ ಸದ್ಯಕ್ಕೆ ಹಿತವಾಗಿ ಕಂಡಿತು. +ನನಗೆ ತಿಮ್ಮಯ್ಯನ ಮೂರ್‍ನಾಲ್ಕು ವಿಳಾಸಗಳು ನೆನಪಾದವು. ಮುಂಬಯಿಗೆ ಬಂದಾಗಿತ್ತು. ರೈಲು ಇಳಿದು ನಡೆದಂತೆ ಏನೋ ಒಂದು ವಿಪತ್ತಿನಿಂದ ಬಿಡುಗಡೆ ಹೊಂದಿದ ಭಾವನೆಯಿಂದ ಮನಸ್ಸು ಹಗುರಾಗಿ ಮುಂದಿನ ಕೆಲಸಕಾರ್ಯಗಳು ರಭಸವಾಗಿ ನೆನಪಾಗುತ್ತಿದ್ದವು. +ಮೂರನೆ ಸಾಲು. +ಅಂತೂ ತಿಮ್ಮಯ್ಯನೊಬ್ಬ ಬೇತಾಳ ಎಂಬಂತೆ ನಾನು ಅದನ್ನು ಹಿಡಿಯಲು ಬಂದ ವಿಕ್ರಮ ರಾಜನಂತೆ ಆ ದೊಡ್ಡ ಮುಂಬೈ ಷಹರಿನಲ್ಲಿ ಎರಡು ಮೂರು ದಿನ ಎಲ್ಲೆಲ್ಲೋ ಇದ್ದು ಅಲೆದು ಹುಡುಕಾಡುವುದರಲ್ಲಿ ನನ್ನ ಅರ್ಧ ಆಯಸ್ಸಿನ ತಾಳ್ಮೆ ನೆಮ್ಮದಿಗಳೆಲ್ಲ ಸುಟ್ಟು ಹೋದಂತೆ ಅನಿಸಿದವು. ಎಲ್ಲಿ ಹೋದರೂ ಅವನನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಜೀವನ ಮರಣದ ಸವಾಲಿನಂತೆ ಕಾಣತೊಡಗಿತು. ಬಾಂದ್ರಾ ಮುಲುಂದ್‌ಗಳಲ್ಲಿನ ಎಲ್ಲ ಸ್ಲಮ್ಮುಗಳಲ್ಲೆ ಅವನಿಗಾಗಿ ತಲಾಶ್ ಮಾಡಿ ಮಾಡಿ ಬೇಸತ್ತು ಹೋದೆ. ಅವನ ಮೂರು ವಿಳಾಸಗಳು ಹೆಚ್ಚು ಕಡಿಮೆ ಮುನ್ನೂರು ವಿಳಾಸದ ಅವನ ರಹಸ್ಯ ನೆಲೆಗಳನ್ನು ತೋರಿಸಿ ಅಲ್ಲೆಲ್ಲೂ ಅವನ ನೆರಳೂ ನನಗೆ ಸಿಗದಾಗಿತ್ತು. ನಾನು ಅವನ ಅಣ್ಣನೆಂದೂ ನಮ್ಮ ತಂದೆ ತಾಯಿಗಳಿಬ್ಬರೂ ವ್ಯಾಧಿಯಿಂದ ಒಂದೇ ದಿನದಲ್ಲಿ ಸತ್ತು ಹೋದರೆಂದೂ ಈಗ ನನಗೂ ನನ್ನ ತಂಗಿ ತಮ್ಮಂದಿರಿಗೂ ಈ ತಿಮ್ಮಯ್ಯನೇ ಆಶ್ರಯವಾಗಬೇಕಾಗಿದೆ ಎಂದೂ ತಿಥಿಗಾಗಿ ಅವನನ್ನು ಕರೆದೊಯ್ಯಲು ಬಂದಿರುವುದಾಗಿ ಒಂದೊಂದು ವಿಳಾಸದ ನೆಲೆಯಲ್ಲೂ ನಾನು ಪರಿಪರಿಯಾಗಿ ನನ್ನ ಕಷ್ಟಗಳನ್ನು ವಿವರಿಸಿದರೂ ಪ್ರಯೋಜನವಾಗಲಿಲ್ಲ. ತಿಮ್ಮಯ್ಯ ಇಲ್ಲಿ ಮುಂಬೈಗೆ ಬಂದು ಎಂತೆಂತದೋ ತರಲೆ ತಾಪತ್ರಯಗಳಲ್ಲಿ ಸಿಕ್ಕಿಬಿದ್ದು ದಾರಿ ತಪ್ಪಿದ್ದಾನೆಂದೂ ಹೋದ ಎಲ್ಲ ಜಾಗಗಳಲ್ಲೂ ನನಗೆ ಸುಳಿವು ದೊರೆಯುತ್ತಿತ್ತು. ಅವನಿಂದ ಹತ್ತು ಸಾವಿರವನ್ನು ಪಡೆಯುವ ಮಾತು ಆ ಕಡೆ ಬಿದ್ದಿರಲಿ, ಸದ್ಯ ಅವನು ಜೀವಂತವಾಗಿ ನನ್ನ ಕೈಗೆ ಸಿಕ್ಕಿ ಕನಿಷ್ಠ ಪಕ್ಷ ಈ ಕಡೆಯಿಂದ ಊರಿಗೆ ಹಿಂತಿರುಗಿ ಹೋಗಲು ರೈಲು ಚಾರ್ಜನ್ನಾದರೂ ಗಿಟ್ಟಿಸಿಕೊಂಡು ಹೋಗುವಾ ಎಂದರೆ ಎಲ್ಲೂ ಅವನ ಸುಳಿವಿರಲಿಲ್ಲ. ಅನೇಕರು ನನ್ನನ್ನು ಅವನ ಅಣ್ಣ ಎಂದು ತಿಳಿದ ಕೂಡಲೆ ಕೆಂಡ ಕಾರಿ ಆ ದುಷ್ಮನ್ ಕಾ ಅಣ್ಣಾ ನೀನೂ ಎನ್ನುತ್ತಾ ಹಲ್ಲು ಮಸೆದು ಚಲ್ ಚಲ್ ಚಲ್‌ರೇ ಬದ್ಮಾಷ್ ಎಂಬಂತೆ ಬೈಸಿಕೊಂಡು ಅಲ್ಲಿಂದ ಬದುಕಿದೆಯಾ ಬಡ ಜೀವವೇ ಎಂದು ಬಂದಿದ್ದೆ. +ಮೂರೂ ದಿನವು ನನಗೆ ಊಟದ ನೆನಪಾಗಿರಲಿಲ್ಲ. ತಿಮ್ಮಯ್ಯ ಮುಂಬೈ ಷಹರದ ಮಾಫಿಯಾ ಜಗತ್ತಿನ ಭೂಗತ ಕಳ್ಳ ಸಾಗಾಣಿಕೆಯ ಅನೇಕ ಕೃತ್ಯಗಳಲ್ಲಿ ಸಹಭಾಗಿಯಾಗಿದ್ದ ಎಂಬುದು ಅಲ್ಲಿಗೆ ಹೋದ ಮೇಲೇ ತಿಳಿಯಿತು. ನನ್ನ ಹಳೆ ಕಾಲದ ಬೆಲ್‌ಬಾಟಂ ವೇಷ ಇವನೆಲ್ಲೊ ಬೆಂಗಳೂರಿನಿಂದ ಬಂದಿರಬಹುದಾದ ಗುಪ್ತದಳದ ಪೊಲೀಸೇ ಇರಬೇಕೆಂಬ ಅನುಮಾನವನ್ನು ಅದರಲ್ಲಿ ಬಿತ್ತಿದ್ದವು. ಅಂತಹ ಒಬ್ಬನ ಕಡೆಯಿಂದ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದೆ. ನೀನು ಯಾವ ಸಿ.ಐ.ಡಿ. ಹೇಳೋ ಬೋಸುಡಿ ಮಗನೇ ಎಂದು ಮುಖದ ಮೇಲೆಲ್ಲ ಅದಾವನೋ ಒಬ್ಬ ರೌಡಿ ಗುದ್ದಿ ಕೆಂಪೆಣ್ಣೆ ಹರಿಸಿ ನನ್ನ ನಡವೇ ಮುರಿದು ಹೋಗುವಂತೆ ಒದ್ದು ತುಳಿದು ಕುತ್ತಿಗೆಯ ಕುಳಿಯಲ್ಲಿರುವ ಮೃದುವಾದ ಮೂಳೆಗಳ ಸಹಿತ ಕೊರಳ ನರಗಳನ್ನು ಒತ್ತಿ ಬಿಗಿ ಹಿಡಿದು ಅರೇ ಬೋಲೋ ಮಗನೇ ಎಂದು ಹಿಂಡಿಬಿಟ್ಟಿದ್ದ. ಇದ್ದ ಒಂದಿಷ್ಟು ಧೈರ್ಯ ಶಕ್ತಿಗಳ ಜೊತೆ ಯುಕ್ತಿ ಬಳಸಿ ಅಯ್ಯೋ ಸ್ವಾಮೀ ನಾನಂತವನಲ್ಲಾ ನಾನು ಇವನ ಅಣ್ಣಾ. ತಿಥಿಗೆ ತಲೆ ಬೋಳಿಸಲು ಕರೆದುಕೊಂಡು ಹೋಗಲು ಬಂದಿರುವುದಾಗಿ ಕಣ್ಣೀರ್‌ಗರೆಯುತ್ತ ಬೇಡಿಕೊಂಡ ಮೇಲೆ ಬಿಟ್ಟು ಕಳಿಸಿದ್ದ. ಇನ್ನು ಮುಂದೆ ಅವನನ್ನು ಹುಡುಕಿ ಯಾವ ಲಾಭವೂ ಇಲ್ಲ. ಹಠ ಹಿಡಿದು ಹುಡುಕಿದರೆ ಅದಕ್ಕೆ ಬೆಲೆಯಾಗಿ ನನ್ನ ಪ್ರಾಣವನ್ನೇ ಕೊಡಬೇಕಾಗುತ್ತದೆ. ಇಲ್ಲಿಯ ನರಕಕ್ಕಿಂತ ಅಲ್ಲಿ ನಮ್ಮೂರಿನ ಬಡ್ಡಿ ವಸೂಲಿಗರ ಹಿಂಸೆಯೇ ಸಾವಿರ ಪಾಲು ಹಿತವಾಗಿದೆ ಎಂದುಕೊಂಡು ಹಿಂತಿರುಗಲು ದಾರಿ ಹುಡುಕಿದೆ. +ತಿಮ್ಮಯ್ಯ ಎಂತೆಂತದೋ ದಂಧೆಯಲ್ಲಿದ್ದ ಎಂಬುದಂತೂ ಖಾತ್ರಿಯಾಯಿತು. ಹುಡುಗಿಯರನ್ನು ನಮ್ಮೂರ ಕಡೆಗಳಿಂದ ಅಪಹರಿಸಿ ಇಲ್ಲಿಗೆ ರವಾನಿಸಿ ಮಾರಾಟದ ಏಜೆಂಟಾಗಿ ಕೆಲಸ ಮಾಡಿದ್ದಾನೆಂದು ತಿಳಿಯಿತು. ಅವನ ವಿಳಾಸ ಹುಡುಕುತ್ತ ಯಾವುದೋ ಒಂದು ವೇಶ್ಯಾವಾಟಿಕೆಯ ಕೇಂದ್ರಕ್ಕೆ ಹೋದರೆ ಅಲ್ಲಿ ನಮ್ಮೂರಿನ ಕಡೆಯ ಒಂದು ಹೆಂಗಸು ಬಂದು ಆತ ಇನ್ನೆಂದೂ ನಿನಗೆ ಸಿಗುವುದಿಲ್ಲವೆಂದೂ ಭೂಗತ ಜಗತ್ತಿನ ಹೊಡೆದಾಟಗಳಲ್ಲಿ ಆತ ಕೊಲೆಯಾಗಿ ಹೋದನೆಂದು ಹೇಳಿದಳು. ಅದರ ಹಿಂದೆಯೇ ಗಳಗಳನೇ ಕಣ್ಣೀರ್ ಗರೆಯುತ್ತಾ ನನ್ನನ್ನು ನಂಬಿಸಿ ಕರಕೊಂಡು ಬಂದು ಇಲ್ಲಿ ನನ್ನನ್ನು ಆ ಹಾಳಾದವನು ಮಾರಿಬಿಟ್ಟ. ಅದಕ್ಕೆ ದೇವರು ಅವನಿಗೆ ಸರಿಯಾದ ಶಿಕ್ಷೆಯನ್ನೇ ಕೊಟ್ಟ ಎಂದು ಅವನ ಸಾವನ್ನು ತೀರಾ ಅಸಡ್ಡೆಯಿಂದ ವಿವರಿಸಿ ದಯಮಾಡಿ ನೀನಾದರೂ ನನ್ನನ್ನು ಬಿಡಿಸಿ ಕರೆದುಕೊಂಡು ಹೋಗು. ಅಷ್ಟು ದಿನದಿಂದ ನಾನಿಲ್ಲಿ ದುಡಿದಿರುವುದರಿಂದ ಈಗ ಏನಿಲ್ಲ ಎಂದರೂ ಆರೇಳು ಸಾವಿರವನ್ನು ಘರ್‌ವಾಲಿಗೆ ಕೊಟ್ಟರೆ ನನ್ನನ್ನು ನಿನ್ನ ಜೊತೆ ಕಳಿಸಿಬಿಡುತ್ತಾರೆಂದೂ ಅದಕ್ಕಾಗಿ ವಿನಂತಿಸುತ್ತಿದ್ದಳು. ನನಗೆ ಬದುಕಿನ ಬಗ್ಗೆಯೇ ಹೇಸಿಗೆ ಅನಿಸತೊಡಗಿತು. ಊರಿಗೆ ಹಿಂತಿರುಗಿ ಆ ಬಡ್ಡಿಗರಿಗೆ ಸಬೂಬು ಹೇಳುವುದೂ ಅಸಾಧ್ಯವಾಗಿತ್ತು. ಯಾರೂ ದಿಕ್ಕಿಲ್ಲದ ಈ ಷಹರದಲ್ಲಿ ಅಷ್ಟು ಹಣವನ್ನು ನಾನೆಂದೂ ಹುಟ್ಟಿಸುವಂತಿರಲಿಲ್ಲ. ಅವಳಿಗೆ ಏನನ್ನೂ ಹೇಳದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. +ಒಟ್ಟಿನಲ್ಲಿ ತಿಮ್ಮಯ್ಯನ ಬಗ್ಗೆ ಅಸಾಧ್ಯವಾದ ಸಿಟ್ಟು ಬಂದರೂ ನನ್ನ ಕೈಗೆ ಈಗವನ ಮೂಳೆಗಳೂ ಸಿಗುವಂತಿರಲಿಲ್ಲ. ಅಂತೂ ನಾನೂ ಕೊನೆಗೆ ಅಲ್ಲಿದ್ದ ಕನ್ನಡಿಗರನ್ನು ಭೆಟ್ಟಿ ಮಾಡಿ ನನ್ನ ಪಡಪಾಟಲೆಲ್ಲವನ್ನು ಸವಿವರವಾಗಿ ವರ್ಣಿಸಿ ಹೇಗಾದರೂ ಮಾಡಿ ನಾನು ನನ್ನ ಊರು ತಲುಪುವ ವ್ಯವಸ್ಥೆ ಮಾಡಿ ಎಂದು ಬೇಡಿಕೊಂಡಿದ್ದೆ. ಹೇಗೋ ನನ್ನ ಅದೃಷ್ಟ ಚೆನ್ನಾಗಿತ್ತು. ಅವರ ಕರುಣೆ ಕೆಲಸ ಮಾಡಿತ್ತು. ಬಸ್ ಚಾರ್ಜಿಗೆ ಹಣ ಕೊಟ್ಟಿದ್ದೇ ತಡ ಬೆಂಗಳೂರಿನ ಬಸ್ಸು ಹತ್ತಿ ಬಂದು ಬಿಟ್ಟಿದ್ದೆ. ಅಸಾಧ್ಯವಾದ ದಣಿವು ಮೆಟ್ಟಿಕೊಂಡಿತ್ತು. ಮನೆಗೆ ಹೋಗಿ ಯಾವ ಮುಖ ತೋರಿಸಿ ಏನು ಹೇಳುವುದೆಂಬ ಚಿಂತೆಗಿಂತ ಹೇಗೆ ಆ ಸಾಲವನ್ನು ನಾನೇ ಈಗ ತೀರಿಸಬೇಕೆಂಬುದರ ಬಗೆ ಅಲೋಚಿಸುತ್ತಿದ್ದೆ. +ಮನೆಗೆ ಬಂದೆ. ಯಾವತ್ತೂ ಹೀಗೆ ಬರಿಗೈ ದಾಸಯ್ಯನಾಗಿ ಹಿಂತಿರುಗುವುದನ್ನು ಕಂಡಿದ್ದ ನನ್ನ ಹೆಂಡತಿ ಮಕ್ಕಳು ಮೌನಿಯಾಗಿ ಒಂದೆಡೆ ಯಾವುದೋ ಗಹನವಾದ ಚಿಂತನೆಯಲ್ಲಿ ಮುಳುಗಿರುವಂತೆ ಕಂಡರು. ತಿರಸ್ಕಾರದ ಕಣ್ಣುಗಳಲ್ಲೇ ನನ್ನ ಪತ್ನಿ ಕಾಲಾಂತರದ ತನ್ನ ಸೇಡೆಲ್ಲವನ್ನೂ ತೀರಿಸಿಕೊಳ್ಳುವಂತೆ ನೋಡುತ್ತಿದ್ದಳು. ಒಬ್ಬರಿಗೊಬ್ಬರು ಮಕ್ಕಳು ಜಡೆ ಹೆಣೆದುಕೊಂಡು ಅಪ್ಪನನ್ನು ಮಾತನಾಡಿಸಬಾರದು ಎಂಬಂತೆ ಎತ್ತ ಕಡೆಯೋ ನೋಡುತ್ತಿದ್ದರು. ಬಡ್ಡಿ ದುಡ್ಡಿನವರನ್ನು ಹೆದರಿಸುವುದರ ಜೊತೆಗೆ ಇವರನ್ನೂ ಹೇಗೆ ನಿಭಾಯಿಸುವುದೆಂದು ಬೇಸರಗೊಂಡೆ. ಆದದ್ದೆಲ್ಲ ಆಗಿಹೋಗಲಿ ಎಂದು ಮಾತು ತೆಗೆದೆ. ಇಡೀ ಮನೆ ಸ್ಮಶಾನದಂತಹ ಮೌನದಲ್ಲಿ ತುಂಬಿತ್ತು. ಯಾಕೆ ಯಾರೂ ಮಾತನಾಡುವುದಿಲ್ಲವೇ ಆ ದೇವರು ನಿಮಗೆ ಬಾಯಿ ಕೊಟ್ಟಿಲ್ಲವೇ ಅಲ್ಲಿಂದ ನಾನು ಬದುಕಿ ಬಂದಿರುವುದೇ ಹೆಚ್ಚು. ನಿಮಗಾರಿಗೂ ಮನುಷ್ಯತ್ವವೇ ಇಲ್ಲ, ನಿಮ್ಮೆಲ್ಲರನ್ನು ಕಟ್ಟಿಕೊಂಡು ನನಗೆ ಸಾಕಾಗಿ ಹೋಗಿದೆ ಎಂದು ರೇಗಾಡಿದೆ. ನನ್ನ ಯಾವ ಮಾತಿಗೂ ಅವರು ಸೊಪ್ಪು ಹಾಕಲಿಲ್ಲ., ಊಟ ಮಾಡು ಎನ್ನಲಿಲ್ಲ. ಭಾಗಶಃ ಅಡಿಗೆ ಮಾಡಲು ಏನೂ ಇರಲೂ ಇಲ್ಲವೇನೇ. ನಿನ್ನಂತಹ ಪರಮ ಪಾಷಂಡಿ ಯಮ ಭಯಂಕರ ದರಿದ್ರನ ಕೈಹಿಡಿದಿದ್ದಕ್ಕೆ ತನಗೆಂತಹ ಸುಖ ಸಿಕ್ಕಿತೆಂದು ಹೆಂಡತಿ ರೇಗಾಡುತ್ತಾ ಆ ಸಿಟ್ಟನ್ನು ನನ್ನ ಮೇಲೆ ಕಾರಿ ಏನೂ ಉಪಯೋಗವಿಲ್ಲೆಂದು ತಿಳಿದು ಮಕ್ಕಳಲ್ಲಿ ಏನೂ ತಪ್ಪಿಲ್ಲದಿದ್ದರೂ ಮಹಾಪರಾಧ ಕಂಡು ಹಿಡಿದವಳಂತೆ ಅವರಿಬ್ಬರಿಗೂ ಪೊರಕೆಯಿಂದ ಬಾರಿಸತೊಡಗಿಡಳು. ನನ್ನ ಪರಮ ಸಂಪತ್ತಾಗಿದ್ದ ಆ ಎರಡೂ ಹೆಣ್ಣು ಮಕ್ಕಳು ಓಡೋಡಿ ಬಂದು ಈಗ ಅಪ್ಪಾ ಕಾಪಾಡು ಎಂಬಂತೆ ಹಿಡಿದುಕೊಂಡಿದ್ದರು. ಈ ಮೂರೂ ಜನರು ನನ್ನನ್ನೊಬ್ಬ ರಣಹೇಡಿ ಮೂರ್ಖ ಸೋಂಬೇರಿ ಮುಠ್ಠಾಳ ಎಂದೇ ತಿಳಿದು ಮಂಗನನ್ನು ಆಡಿಸುವಂತೆ ಆಡಿಸುತ್ತಿದ್ದಾರೆಂದು ಸಿಟ್ಟಾಯಿತು. ಹೇಯ್ ಸುಮ್ನೆ ಒಂದೆಡೆ ಬಿದ್ದಿರ್‍ತಿರೋ ಇಲ್ಲಾ ಮೂರೂ ಜನಕೆ ಹಬ್ಬ ಮಾಡಲೋ ಎಂದು ಭಯೋತ್ಪಾದಕರ ಶೈಲಿಯಲ್ಲಿ ಬೆದರಿಕೆ ಹಾಕಿದೆ. ಅದಕ್ಕೆ ಅವರಾರೂ ಸಣ್ಣ ಭಯವನ್ನೂ ತೋರಿದಂತೆ ಕಾಣಲಿಲ್ಲ. ನಮ್ಮ ಕಷ್ಟಗಳೇ ಇವರಿಗೆ ಬೇಕಾಗಿಲ್ಲವೇ ಇವರ ಕೊಬ್ಬು ಎಷ್ಟರ ಮಟ್ಟಿಗೆ ಹೆಚ್ಚಿದೆ. ನೋಡಿದೆಯಾ ಇವರ ಜಂಭವಾ ಎಂದು ನಾಲ್ಕು ಬಾರಿಸುವಾ ಎನ್ನುವ ವೇಳೆಗಾಗಲೇ ಆ ಎರಡೂ ಮಕ್ಕಳು ಮತ್ತಷ್ಟು ನನ್ನ ಸುತ್ತ ತಪ್ಪಿಸಿಕೊಳ್ಳುವ ಆಟ ಆಡುತ್ತ ನನಗೆ ಪೊರಕೆ ಏಟು ಬೀಳಲಿಲ್ಲ ಎಂದು ನಗಾಡುತ್ತಾ ದಣಿದು ಸುಸ್ತಾಗಿ ನಿತ್ರಾಣವಾಗಿ ಬಂದಿದ್ದ ನನ್ನನ್ನು ಯಾವುದೋ ಆಟದ ಒಂದು ಕಂಬ ಎಂದು ಭಾವಿಸಿ ಹಿಡಿದು ಎಳೆದಾಡಿದರು. ಅವರಿಬ್ಬರ ರಭಸದ ಮೇಲೆ ನನ್ನ ಧರ್ಮಪತ್ನಿ ಪೊರಕೆ ಹಿಡಿದು ಚಾಮುಂಡಿಯಂತೆ ಸಿಟ್ಟು ಕಾರುತ್ತಿದ್ದಳು. ಮಕ್ಕಳಿಬ್ಬರೂ ಜಡಿದು ಎಳೆದಿದ್ದರಿಂದ ನಾನು ಆಯತಪ್ಪಿ ಕೆಳಕ್ಕೆ ಬಿದ್ದೆ. ಅವರೂ ಬಿದ್ದರು. ಹೆಂಡತಿ ಅವರಿಗೆ ಹೊಡೆಯಲು ಪಟಪಟನೆ ಬಡಿದ ಪೊರಕೆ ಏಟು ನನ್ನ ಮುಖ ತಲೆಗೆಲ್ಲ ಬಿದ್ದು ರೋಸಿ ಹೋಯಿತು. +ಓಹೋ ಅಪ್ಪ ಪೊರಕೆ ಏಟು ತಿಂದ್ರೂ ಪೊರಕೆ ಏಟು ತಿಂದ್ರೂ ಎಂದು ಎದ್ದು ಕುಣಿದಾಡಿದರು. ನನ್ನ ಹೆಂಡತಿ ಪೆಚ್ಚು ಪೆಚ್ಚಾಗಿ ನಗುತ್ತ ಕೋಣೆಯ ಒಳಕ್ಕೆ ಹೋಗಿ ನಗತೊಡಗಿದಳು. ಇವರು ಬೇಕೆಂದೇ ಈ ನಾಟಕ ಮಾಡಿ ತನ್ನ ಅಸಮಾಧಾನವನ್ನು ಹೀಗೆ ತೋರಿಕೊಂಡರೇ ಎಂಬ ಸಣ್ಣ ಅನುಮಾನವೂ ಬಂತು. ತಾರಾಮಾರಾ ಬಡಿದು ಹಾಕುವಾ ಎಂದು ಎದ್ದು ನಿಂತ ಕೂಡಲೇ ಯಾವ ದುರಾದೃಷ್ಟಕ್ಕೋ ಏನೋ ಆ ಲಫಡಾ ಬಡ್ಡಿ ದುಡ್ಡಿನ ವಸೂಲಿಗಾರರು ಬಾಗಿಲಿಗೆ ಬಂದು ನಿಂತು ಏನ್ಸಾರ್ ಬಾಳಾ ಖುಷಿಯಾಗಿದ್ದೀರಿ. ಹೋದ ಕೆಲ್ಸ ಆಯ್ತು ಅನಿಸ್ತದೆ. ಸದ್ಯ ನಿಮಗೂ ಒಳ್ಳೇದಾಯ್ತು ಎಂದು ಒಳಕ್ಕೆ ಬಂದವರೇ ಮುರುಕಲು ಮಂಚದ ಮೇಲೆ ಕೂತುಕೊಂಡು ಕಾಫಿ ಟೀ ಕೊಟ್ಟು ಸತ್ಕರಿಸಿ ನೀಲಿ ನೋಟುಗಳ ಕಂತೆಯನ್ನು ತಟ್ಟೆಯಲ್ಲಿ ತಂದಿಟ್ಟು ಕೈಮುಗಿಯಬಹುದು ಎಂಬಂತೆ ಅವರು ಭಾವಿಸಿದರು. ನಾನೀಗ ಅವರಿಗೂ ಹೊಡೆಯುವಂತಿರಲಿಲ್ಲ. ಇವರನ್ನೂ ದಬಾಯಿಸುವಂತಿರಲಿಲ್ಲ. ಹಲ್ಲಿ ಗಿಂಜುತ್ತಾ ಬನ್ನಿ ಬನ್ನಿ ಎಂದು ಬರ ಮಾಡಿಕೊಂಡು ಬಹಳ ಸಂತೋಷದಲ್ಲಿ ಇದ್ದೇನೆಂಬಂತೆ ತೋರಿಸಿಕೊಳ್ಳುತ್ತಾ ‘ಏನೋ ಬಂದಾಯ್ತು ಸದ್ಯ ನಿಮ್ಮ ಋಣದಿಂದ ಪಾರಾಗುವ ಕಾಲ ಬಂತು. ನಾನೇ ನಿಮ್ಮ ಯಜಮಾನರ ಬಳಿ ಬಂದು ಮಾತಾಡ್ತೀನಿ ನಡೀರಿ’ ಎಂದು ಹೊರಕ್ಕೆ ಸಾಗಾಕಿದೆ. +ಮೈಯಲ್ಲೆಲ್ಲ ವಿಚಿತ್ರ ನಡುಕ ಆತಂಕ ಸಂಕಟ ಅವಮಾನದ ಕಜ್ಜಿಗಳು ಸೇರಿಕೊಂಡಿವೆ ಎನಿಸಿತು. ಕಣ್ಣು ಮುಚ್ಚಿಕೊಂಡು ಮಲಗಿಬಿಟ್ಟೆ. ಹೆಂಡತಿ ಮಕ್ಕಳನ್ನು ಹೊಡೆದುರುಳಿಸುವ ಮನಸ್ಸೂ ಇರಲಿಲ್ಲ. ಮಕ್ಕಳಿಬ್ಬರೂ ಹೊರಗೆ ಅಂಗಳದಲ್ಲಿ ಚಿಗುರಿದ್ದ ಹೊಂಗೆ ಮರಕ್ಕೆ ಹಗ್ಗ ಕಟ್ಟಿಕೊಂಡು ಈಗ ಉಯ್ಯಾಲೆ ಆಡುತ್ತಿದ್ದರು. ಸುಮಾರು ಹೊತ್ತಾದ ಮೇಲೆ ಹೆಂಡತಿ ಘಮಘಮಿಸುವ ಕಾಫಿ ಮಾಡಿಕೊಂಡು ಬಂದು ಏಳ್ರಿ ಮೇಲೆ, ರೀ ಏಳ್ರೀ ಕಾಫಿ ಕುಡಿಯೋರಂತೇ ಎಂದು ಮೃದುವಾಗಿ ಈಗ ತಾನೆ ಹೊಸದಾಗಿ ಮದುವೆ ಆಗಿ ಮೊದಲ ರಾತ್ರಿಯ ಆಟಗಳನ್ನು ಮುಗಿಸಿ ಬೆಳಿಗ್ಗೆ ಎದ್ದು ಮಡಿ ಸ್ನಾನ ಮಾಡಿ ಪೂಜೆ ಮಾಡಿ ಹೂ ಮುಡಿದು ಬಂದು ನಲ್ಲನನ್ನು ಕಾಫಿಗೆ ಎಬ್ಬಿಸುವಂತೆ ಎಲ್ಲೊ ಸ್ವತಃ ನನ್ನ ಹೆಂಡತಿಯೇ ಹಾಗೆ ಈಗ ಎದುರಿಗೆ ಬಂದಿದ್ದಾಳೆಂಬಂತೆ ಭ್ರಾಂತು ಬಡಿದು ಅರೇ ಎಂದು ಎದ್ದು ಕುಳಿತೆ. ಅದೇ ನನ್ನ ಹೆಂಡತಿ. ನನ್ನೆಲ್ಲ ರಗಳೆಗಳಿಂದ ನೊಂದು ಹಣ್ಣಾಗಿದ್ದ ಮಡದಿ ಪೊರಕೆ ಏಟು ಬಿದ್ದಿದ್ದರಿಂದ ಬೇಜಾರು ಮಾಡಿಕೊಳ್ಳಬೇಡಿರಿ ಎಂಬಂತೆ ನೋಡುತ್ತಿದ್ದಳು. +ನಾನೂ ಸುಮ್ಮನೆ ನಗಾಡಿದೆ. ಕಾಫಿ ಕುಡಿದೆ. ಮುಂಬೈಯಲ್ಲಿ ತೆಗೆದುಕೊಂಡಿದ್ದ ಐದು ರೂಪಾಯಿಗಳ ಚಾಕಲೇಟುಗಳ ನೆನಪಾಗಿ ಮಕ್ಕಳಿಬ್ಬರನ್ನು ಕರೆದು ಅವರಿಗೆ ಕೊಟ್ಟೆ. ಓಹೋ ಅಪ್ಪಾ ಎಷ್ಟು ಒಳ್ಳೆಯವರು ಮುಂಬಯಿಂದ ನಮಗೆ ಚಾಕಲೇಟ್ ತಂದಿದ್ದಾರೆ ಎಂದು ಉಯ್ಯಾಲೆಯ ಕಡೆಗೆ ಓಡಿದರು. +ನನ್ನ ಹೆಂಡತಿ ನನ್ನನ್ನೇ ದಿಟ್ಟಿಸಿ ನೋಡುತ್ತಾ ಕಣ್ಣಲ್ಲಿ ನೀರು ಬಟ್ಟಾಡಿಸುತ್ತಿರುವುದು ಅರಿವಾಯಿತು. ಯಾಕೆ ಎಂಬಂತೆ ಮುಖ ನೋಡಿದೆ. ರೀ ದಯಮಾಡಿ ಏನಾದ್ರೂ ಮಾಡಿ ಆ ಬಡ್ಡಿ ದುಡ್ಡಿನವರು ಇನ್ನೆಂದೂ ನಮ್ಮ ಮನೆ ಕಡೆ ಬಾರದಂತೆ ಮಾಡ್ರಿ. ಆ ದುಡ್ಡು ಕೊಟ್ಟವನು ನೀವು ಹೋದ ಮೇಲೆ ಬಂದು ಏನೇನೋ ಬಾಳ ಕೆಟ್ಟದಾಗಿ ನಾನೊಬ್ಬಳೆ ಇರುವಾಗ ಮಾತಾಡಿದ. ಆ ನೀಚನ ಮುಖದ ಮೇಲೆ ಹಣ ಬಿಸಾಕಿ ಬಿಡ್ರಿ. ಈ ಜನ ಬಾಳ ಕೆಟ್ಟೋರು. ಏನ್ ಬೇಕಾದ್ರೂ ಮಾಡೋದಕ್ಕೆ ಹೇಸದವರು ಎಂದು ಗಳಗಳ ಅತ್ತುಬಿಟ್ಟಳು. ಮುಂದಿನದನ್ನೆಲ್ಲ ಅವಳು ಹೇಳಬೇಕಾಗಿರಲಿಲ್ಲ. ನಾನು ಕೇಳುವಂತೆಯೂ ಇರಲಿಲ್ಲ. ನನಗಂತೂ ತಲೆ ಕೆಟ್ಟುಹೋಯಿತು. ಹೊರಗೆ ಮಕ್ಕಳು ಅವರಿಚ್ಛೆಯಲ್ಲಿ ಆನಂದದಲ್ಲಿ ಉಯ್ಯಾಲೆ ಆಡುತ್ತಿದ್ದವು. +ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುವುದಕ್ಕೂ ನನ್ನಲ್ಲಿ ಚೈತನ್ಯ ಉಳಿದಿರಲಿಲ್ಲ. ಹತ್ತು ಸಾವಿರಗಳನ್ನು ಒಂದೇ ಏಟಿಗೆ ಎಲ್ಲಿಂದ ತರಲಿ ಎನಿಸಿ ಎಲ್ಲಿಯಾದರೂ ಕಳ್ಳತನ ಮಾಡಲೆ ಎನಿಸುವಷ್ಟು ತಾಳ್ಮೆ ಕೆಟ್ಟು ಹೋಯಿತು. ಗೆಳೆಯ ತಿಮ್ಮಯ್ಯನ ಅಧ್ಯಾಯ ಮುಗಿದಿದ್ದರೂ ತನ್ನ ಉಳಿದ ಪಾಠಗಳನ್ನು ನೀನು ಮುಂದುವರಿಸು ಎಂಬಂತೆ ಆತ ನನ್ನನ್ನು ಸಿಕ್ಕಿಸಿ ಹೋಗಿದ್ದ. ಸತ್ತ ಅವನ ಮೇಲೆ ನನಗೀಗ ಕೋಪವಿರಲಿಲ್ಲ. ಬಡ್ಡಿ ವಹಿವಾಟಿನವರ ಮೇಲೂ ಸಿಟ್ಟಿರಲಿಲ್ಲ. ಎಲ್ಲೋ ನಾನೇ ಈ ಬದುಕಿನ ಅಂಗಡಿಯಲ್ಲಿ ಎಲ್ಲಕ್ಕೂ ಸರಿಯಾಗಿ ಲೆಕ್ಕ ಹೊಂದಿಸದೆ ಎಲ್ಲವನ್ನೂ ಕ್ರಮವಾಗಿ ಜೋಡಿಸದೆ ಎಲ್ಲವೂ ಅಸಹ್ಯವಾಗಿ ಕಾಣುತ್ತಿದೆ ಎಂಬ ಬೇಸರ ನಿರಾಶೆ ಸಿಟ್ಟು ನನ್ನ ಮೇಲೇ ಬರತೊಡಗಿದವು. +ಎದ್ದು ಹೊರಬಂದೆ. ಮಟಮಟ ಮಧ್ಯಾಹ್ನ ಬಿರಿಯುತ್ತಿತ್ತು. ಇರುವ ಆ ಒಬ್ಬ ಗೆಳೆಯನನ್ನಾದರೂ ಭೆಟ್ಟಿ ಆಗಿ ಎಲ್ಲ ಸಮಸ್ಯೆಗಳನ್ನು ಅವನ ಮುಂದೆ ವಿವರಿಸೋನ ಮುಂದಿನದಕ್ಕೆ ಆತ ದಾರಿ ತೋರಿಸಬಹುದು ಎಂದು ಇನ್ನೊಬ್ಬ ಗೆಳೆಯ ರಾಮಚಂದ್ರನ ಮನೆಗೆ ಹೋದೆ. ಅವನಾಗಲೇ ಕಛೇರಿಗೆ ಹಿಂದಿರುಗಿದ್ದ. ಆ ಸಣ್ಣ ಪೇಟೆಯಲ್ಲಿ ಅವನ ಕಛೇರಿ ಹುಡುಕಲು ಕಷ್ಟವಾಗಲಿಲ್ಲ. ಅವನೊಂದು ಸಣ್ಣ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ನಾಲ್ಕಾರು ಜನಗಳಿಗೆ ಬೇಕಾಗಿದ್ದ. ಎಂತೆಂತದೋ ದೊಡ್ಡವರೆಲ್ಲ ಅವನಿಗೆ ಫೋನು ಮಾಡುತ್ತಿದ್ದರು. ರಾಜಕಾರಣಿಗಳು ವಿಶೇಷ ಗುಂಡು ಪಾರ್ಟಿಗಳಿಗೆ ಆಹ್ವಾನಿಸುತ್ತಿದ್ದರು. ಪತ್ರಿಕೆಗಳಲ್ಲಿ ತಮ್ಮ ಪರವಾದ ಒಳ್ಳೆಯ ಸುದ್ದಿ ಬರೆಸಿಕೊಳ್ಳಲು ಅವನ ಮುಂದೆ ತುದಿಗಾಲಲ್ಲಿ ಅನೇಕರು ನಿಲ್ಲುತ್ತಿದ್ದರು. ಇಂತಹ ಒಬ್ಬ ಗೆಳೆಯನನ್ನು ನಾನು ಈ ಮೊದಲೇ ಭೆಟ್ಟಿ ಮಾಡಿದ್ದರೆ ಚೆನ್ನಾಗಿತ್ತೇನೊ. ಅಂತೂ ಒಟ್ಟಿನಲ್ಲಿ ಗೆಳೆಯ ರಾಮಚಂದ್ರ ನನ್ನನ್ನು ನೋಡಿ ಬಹಳ ಅಚ್ಚರಿ ಆನಂದ ಪಟ್ಟು ಇಷ್ಟು ವರ್ಷಗಳ ತನಕ ಎಲ್ಲಿಗೆ ಹಾಳಾಗಿ ಹೋಗಿದ್ದೆಯೋ ಎಂದು ಹೆಗಲ ಮೇಲೆ ಕೈ ಹಾಕಿ ಬಾ ಕೆಳಗೆ ಕಾಫಿ ಕುಡಿಯೋಣ ಎಂದು ಕರೆದುಕೊಂಡು ಬಂದ. ಅವನೂ ನಾನೂ ಹಿಂದೆ ಕಾಲೇಜಿನಲ್ಲಿ ಬಹಳ ದೋಸ್ತ್‌ಗಳಾಗಿ ಒಟ್ಟಿಗೇ ಯಾವಾಗಲೂ ಇರುತ್ತಿದ್ದೆವು. ಕ್ರಾಂತಿ ಪ್ರಾಂತಿ ಎಂದು ಆಗವನು ಏನೆನೋ ಮಾಡುತ್ತಿದ್ದ. ಅವನ ಜೊತೆಯಲ್ಲೇ ನಾನೂ ಸೇರಿಕೊಂಡಿದ್ದೆ. ಓದು ಬರಹಕ್ಕಿಂತ ಹೋರಾಟವೇ ಮುಖ್ಯ ಎಂದು ಇಬ್ಬರೂ ಆಗ ಭಾವಿಸಿದ್ದೆವು. ಅದು ಯಾವ ಕೇಡಿಗೋ ಏನೋ ನಾನು ಹೋರಾಟದ ಪ್ರಭಾವಗಳಿಂದಾಗಿ ಗೋಡೆಗಳ ಮೇಲೆ ಸ್ಲೋಗನ್ ಬರೆಯಲು ಸ್ಟ್ರೈಕ್‌ಗಳಲ್ಲಿ ಅಂತವನ್ನು ಕೂಗಲು ಕರಪತ್ರ ಬರೆದು ಹಂಚಲು ವಿಶೇಷವಾಗಿ ಬೇಕಾಗಿದ್ದ ಭಾಷಾ ಪಾಂಡಿತ್ಯವನ್ನು ಪಡೆದುಬಿಟ್ಟಿದ್ದೆ.ನಾನು ಬರೆದ ಕರಪತ್ರ ಸ್ಲೋಗನ್‌ಗಳು ಆಗ ಬಹಳ ಚಾಲ್ತಿಯಲ್ಲಿದ್ದವು. ಕರಪತ್ರಗಳನ್ನು ಮನ ಮಿಡಿಯುವಂತೆ ತೀವ್ರವಾಗಿ ಮೈದುಂಬಿ ಬರೆಯುತ್ತಿದ್ದುದು ನನಗೀಗಲೂ ನೆನಪಿದೆ. ನೀನೊಬ್ಬ ಸಾಹಿತಿಯಾಗಬೇಕಾದವನು ಎಂದು ಬಲ್ಲವರು ಹೇಳುತ್ತಿದ್ದರು. ನನಗೆ ಆ ಸಾಹಿತ್ಯ ಸಾಹಿತಿಗಳಾಗುವುದು ಎಂದರೆ ಬಹಳ ಕೀಳು ಎಂಬ ಭಾವನೆಯಿದ್ದ ಕಾರಣ ಆ ಕಡೆಗೆ ಹೋಗಲೇ ಇಲ್ಲ. ಆ ಮೇಲೆ ಕಾಲದ ಸೆಳೆತದಲ್ಲಿ ರಾಮಚಂದ್ರ ಮತ್ತೆ ಸಿಕ್ಕಿದ್ದು ಕೂಡ ಬಹಳ ಆಕಸ್ಮಿಕವಾಗಿ. ಕಾಫಿ ಕುಡಿಯುತ್ತ ನನ್ನೆಲ್ಲ ಅಳಲನ್ನು ಅವನ ಮುಂದೆ ವಿನಂತಿಸಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕೆಂದು ಪಟ್ಟುಹಿಡಿದೆ. +ರಾಮಚಂದ್ರ ಒಂದು ಸಿಗರೇಟು ಸೇದಿ ಬಿಸಾಡಿದಂತೆ ನನ್ನ ಸಮಸ್ಯೆಯನ್ನು ಪರಿಗಣಿಸಿ ಇಷ್ಟೇನಾ, ಅಲ್ಲಯ್ಯ ಇದೊಂದು ದೊಡ್ಡ ಸಮಸ್ಯೆ ಎಂದು ದಂಗಾಗಿ ಹೋಗಿದ್ದೀಯಲ್ಲಾ ಇಷ್ಟೊಂದು ಸೆನ್ಸಿಟೀವ್ ಆದ್ರೆ ಹೇಗೆ. ಬಿಡು ಆ ಸಮಸ್ಯೆನಾ ಮರ್‍ತು ಬಿಡು. ಈ ಸಂಜೆಯೇ ನಾನು ಇದನ್ನು ಫೈನಲೈಜ್ ಮಾಡ್ತೇನೆ. ಹೆದರಬೇಡ ಕಾಫಿ ಕುಡಿ ಎಂದು ಎಲ್ಲವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಬಿಟ್ಟ. +ಮೇಲೆ ಬಂದು ತನ್ನ ಕಛೇರಿಯ ಸೀಟಿನಲ್ಲಿ ಕುಳಿತು ಯಾರಿಗೋ ಫೋನು ಮಾಡಿದ. ಈ ಸಂಜೆ ಆರು ಗಂಟೆಗೆ ನಿಮ್ಮನ್ನು ನೋಡಲು ಬರುತ್ತಿರುವುದಾಗಿ ತಿಳಿಸಿದ. ಆ ಕಡೆಯಿಂದ ಆಯ್ತು ಬನ್ನಿ ಕಾದಿರ್‍ತೇನೆ ಎಂಬಂತೆ ಸಂದೇಶ ಬಂತು. ಗೆಳೆಯ ರಾಮಚಂದ್ರ ನಗುತ್ತಾ ಬ್ರದರ್ ನೀವು ಸಂಜೆ ಐದುವರೆಗೆ ಕರೆಕ್ಟಾಗಿ ಇಲ್ಲಿಗೆ ಬಂದು ಬಿಡಿ. ಆ ಮೇಲೆ ನಾನೊಂದು ಕಡೆಗೆ ಕರೆದುಕೊಂಡು ಹೋಗ್ತೇನೆ. ಅಲ್ಲಿ ಎಲ್ಲ ಫಿನಿಸ್ಸ್ ಆಗ್ತದೆ. ಯೋಚ್ನೆ ಮಾಡ್‌ಬ್ಯಾಡಿ. ನಾನಿದ್ದೇನೆ ಹೋಗಿದ್ ಬನ್ನಿ ಎಂದು ಹೇಳಿ ಕಳುಹಿಸಿ ಕೊಟ್ಟ. ಅವನೇ ಮತ್ತೆ ಕೆಳಗಿಳಿದು ಬಂದು ಹೊಗುತ್ತಿದ್ದ ನನ್ನನ್ನು ಕೂಗಿ ಬನ್ನಿ ಇಲ್ಲಿ ಎಂದು ಅಲ್ಲಿದ್ದ ಬೇಕರಿಯಲ್ಲಿ ತರಾವರಿ ಸಿಹಿತಿಂಡಿಗಳನ್ನು ಪ್ಯಾಕ್ ಮಾಡಿಸಿ ಮನೆಗೆ ತೆಗೆದುಕೊಂಡು ಹೋಗಿ ಎಂದ. ನನಗೆ ಮರು ಮಾತಿರಲಿಲ್ಲ. +ಮನೆಗೆ ನೆಮ್ಮದಿಯಿಂದ ಬಂದೆ. ಹೆಂಡತಿ ಮಕ್ಕಳು ಈ ಪರಿಯ ಸಿಹಿಯನ್ನು ನೋಡಿ ಎಲ್ಲಿಯಾದರೂ ಯಾರಾದರೂ ಪ್ಯಾಕ್ ಮಾಡಿಸಿ ಇಟ್ಟಿದ್ದನ್ನು ಕದ್ದು ತಂದೆಯೋ ಏನೋ ಎಂಬಂತೆ ನೋಡುತ್ತ ಸದ್ದಿಲ್ಲದೆ ತಿನ್ನತೊಡಗಿದರು. ನಾನು ಸಂಜೆ ಆಗುವುದನ್ನೇ ಕಾಯತೊಡಗಿದೆ. ಅಂತೂ ಆದಷ್ಟು ಬೇಗ ನನಗಾಗಿಯೇ ಎಂಬಂತೆ ಸಂಜೆ ಸಮೀಪಿಸಿತು. ಮತ್ತೆ ಗೆಳೆಯನ ಕಛೇರಿಯ ಕಡೆ ನಡೆದೆ. +ಸಂಜೆಯಾಗುತ್ತಿತ್ತು. ಆಟೋ ಹತ್ತಿ ಇಬ್ಬರೂ ಹೊರಟೆವು. ದಾರಿಯ ಉದ್ದಕ್ಕೂ ಚುನಾವಣೆಯ ರಭಸ ಮೆಲ್ಲಗೆ ಅಂಟಿಕೊಳ್ಳುತ್ತಿತ್ತು. ಗೋಡೆಗಳ ಮೇಲೆಲ್ಲ ಎಂತೆಂತವರೋ ದಪ್ಪ ಅಕ್ಷರದ ಹೆಸರು ಚಿತ್ರಗಳಲ್ಲಿ ಮೆರೆಯುತ್ತಿದ್ದರು. ಚುನಾವಣೆಯ ಪ್ರಚಾರಗಳು ಅಲ್ಲಲ್ಲಿ ಕೇಳಿಸುತ್ತಿದ್ದವು. ನನ್ನ ನೂರೆಂಟು ಸಮಸ್ಯೆಗಳಿಂದ ಆ ಚುನಾವಣಾ ಪ್ರಕ್ರಿಯೆಯನ್ನೇ ಗಮನಿಸಿರಲಿಲ್ಲ. ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಕೈ ಬಿಟ್ಟಿದ್ದೆ. ಜೊತೆಗೆ ನಾನೆಂದೂ ಯಾರಿಗೂ ಮತ ಚಲಾಯಿಸಿರಲಿಲ್ಲ. ಓಟಿನ ರಾಜಕೀಯದಲ್ಲಿ ವಿಶ್ವಾಸವೇ ಇರಲಿಲ್ಲ. ಆಟೋ ಹತ್ತಾರು ತಿರುವು ಮುರುವುಗಳನ್ನು ದಾಟಿ ಒಂದು ದೊಡ್ಡ ಭವ್ಯ ಬಂಗಲೆಯ ಮುಂದೆ ನಿಂತಿತು. ಆ ವಿಶಾಲವಾದ ಅರಮನೆಯಂತಹ ಕಟ್ಟಡ ಗೇಟಿನ ಮುಂದೆ ನಿಂತ ಆಟೋ ಒಂದು ಕಾಗೆಯಂತೆ ಕಂಡು ತಾವೀಗ ಕಾಗೆ ವಾಹನದಲ್ಲಿ ಇಂತಹ ಅರಮನೆಗೆ ಬಂದೆವಲ್ಲಾ ಎಂದು ನನಗೆ ನಾನೇ ಅಂದುಕೊಂಡು ಗೆಳೆಯನನ್ನು ಹಿಂಬಾಲಿಸಿದೆ. +ಮುಂದಿನದೆಲ್ಲ ನನ್ನ ನಿರೀಕ್ಷೆಯನ್ನೇ ತಲೆಕೆಳಗು ಮಾಡುವಂತೆ ಏನೇನೋ ಆಯಿತು. ಆ ಭವ್ಯವಾದ ಬಂಗಲೆಯ ಒಳಗೆ ನೂರಾರು ರೀತಿಯ ಜನರಿದ್ದರು. ಗೆಳೆಯ ಯಾರಿಗೋ ಭೇಟಿ ಕೊಟ್ಟು ತಾನು ಬಂದಿರುವುದನ್ನು ತಿಳಿಸಬೇಕೆಂದು ಹೇಳಿದ. ನನಗೆ ಅರ್ಥವಾಗಿತ್ತು. ‘ಅರ್ಥ’ ಪ್ರಾಪ್ತವಾಗಿತ್ತು. ಅದೊಂದು ಮಂತ್ರಿಗಳ ಮನೆಯಾಗಿತ್ತು. ಸಚಿವರ ಎದುರು ಮೊಟ್ಟಮೊದಲ ಬಾರಿಗೆ ನನಗೆ ಕುಳಿತುಕೊಳ್ಳಲೂ ಬಾರದೆ ಉಸಿರುಗಟ್ಟಿದಂತಾಗಿ ಪೆಂಗನಂತಾಗಿಬಿಟ್ಟಿದ್ದೆ. ಗೆಳೆಯ ರಾಮಚಂದ್ರ ಮೊದಲೇ ಫೋನಿನಲ್ಲಿ ತನ್ನ ಸಮಸ್ಯೆಯನ್ನು ತಿಳಿಸಿಬಿಟ್ಟಿದ್ದ. ಸಚಿವರು ಬಹಳ ಸಜ್ಜನಿಕೆಯಿಂದ ಇಂಥಾದ್ದಕ್ಕೆಲ್ಲ ಹೆದರಿ ಬದುಕಿಗೆ ವಿಮುಖವಾಗಬಾರದು. ನೀವೇನೂ ಚಿಂತಿಸಬೇಡಿ. ಆ ಹತ್ತು ಸಾವಿರವನ್ನ ಆಗಲೆ ನಮ್ಮ ಕಡೆಯವರು ಆ ಫೈನಾನ್ಸ್‌ನವರಿಗೆ ತಲುಪಿಸಿ ಆಗಿದೆ. ಆರಾಮಾಗಿರಿ ಎಂದು ಧೈರ್ಯ ಹೇಳುತಿದ್ದರು. ಗೆಳೆಯ ಅವರಿಂದ ಸಿಗರೇಟು ಪಡೆದು ಹೊಗೆ ಉಗುಳುತ್ತಿದ್ದ. ಇಂತಹ ಮಂತ್ರಿಗಳೂ ಇಂತಹ ಕಾಲದಲ್ಲೂ ಇರಲು ಸಾಧ್ಯವೇ. ಇಷ್ಟು ಹಣವನ್ನು ಲೆಕ್ಕಿಸದೇ ಯಾವುದೋ ನನ್ನಂತಹ ಒಬ್ಬ ಜುಜುಬಿ ಮನುಷ್ಯನ ಸಾಲದ ಹೊಣೆಯನ್ನು ಇವರು ಯಾಕೆ ತೀರಿಸುತ್ತಾರೆಂಬ ವಿಚಿತ್ರ ಭಾವನೆಗಳೆಲ್ಲ ಬಂದು ಅಂತೂ ಈ ಶನಿಕಾಟಮುಗಿಯಿತಲ್ಲಾ ಎಂದು ನಿಟ್ಟುಸಿರು ಬಿಟ್ಟೆ. ಗೆಳೆಯ ಮಂತ್ರಿಗಳ ಜೊತೆ ಚುನಾವಣೆಯ ಡೆವಲಪ್‌ಮೆಂಟ್ ಹಾಗೂ ಟ್ರೆಂಡ್ಸ್ ಹೇಗೇಗೆ ನಡೆಯುತ್ತಿದೆ ಎಂದು ಚರ್ಚಿಸುತ್ತಿದ್ದ. ಸಚಿವರು ಎಲ್ಲಿಂದಲೋ ಬಂದ ಫೋನೆತ್ತಿಕೊಂಡು ಓ ಹೌದಾ, ನಾನೀಗಲೇ ಬಂದೆ. ಒಂದೈದು ನಿಮಿಷ, ಬಂದುಬಿಡುತ್ತೇನೆ. ಅಲ್ಲೇ ಇರಿ ಎಂದು ಹೇಳುತ್ತಿದ್ದರು. ಗೆಳೆಯ ನಾನೂ ಹಾಗೂ ಸಚಿವರೂ ಎದ್ದು ಹೊರಬಂದೆವು. ಭೆಟ್ಟಿ ಆಗಲು ಸಾಧ್ಯವಾಗದ ಜನ ಮಂತ್ರಿಗಳ ಹಿಂದೆಯೇ ಹೋಗುತ್ತಿದ್ದರು. +ನಾವು ಬಂದುಬಿಟ್ಟೆವು. ಖರ್ಚಿಗೆ ಇಟ್ಟುಕೋ ಎಂದು ಗೆಳೆಯ ರಾಮಚಂದ್ರ ಒಂದಿಷ್ಟು ದುಡ್ಡನ್ನು ಜೇಬಿಗಿಟ್ಟು ನಾನು ಇನ್ನು ಒಂದು ವಾರದ ನಂತರ ಸಿಗ್ತೇನೆ. ಎಲೆಕ್ಷನ್ ಬಿಸಿಯಲ್ಲಿರುವೆ. ಇಡೀ ಜಿಲ್ಲೆಯ ಚುನಾವಣಾ ಸಮೀಕ್ಷೆಗೆ ಹೋಗ್ತಾ ಇದ್ದೇನೆ. ಇನ್ನು ಒಂದು ವಾರ ಬಿಟ್ಟುಕೊಂಡು ಬಂದು ನನ್ನನ್ನು ಕಾಣಿ ಎಂದು ತಿಳಿಸಿ ಹೊರಟುಹೋದ. +ನಾನೆಂದೂ ಇಲ್ಲದಷ್ಟು ಸರಾಗವಾಗಿ ಮನೆಗೆ ಬಂದೆ. ಹೆಂಡತಿ ಈ ವಿಷಯ ಹೇಳಿದ ಕೂಡಲೆ ಕುಣಿದುಕುಪ್ಪಳಿಸುವಷ್ಟು ಸಂತೋಷಪಟ್ಟು ಯಾವತ್ತೂ ಹಗಲಿನಲ್ಲಿ ಮಕ್ಕಳ ಎದುರು ನನ್ನನ್ನು ಅಪ್ಪಿಕೊಳ್ಳದಿದ್ದವಳು. ಅಪ್ಪಿಕೊಂಡು ಮುತ್ತು ಕೊಟ್ಟುಬಿಟ್ಟಳು. ಕಿರಿಯ ಮಗಳು ಓಹೋ ಮಮ್ಮಿ ಪಪ್ಪಾ ಇಬ್ರೂ ಲವ್ ಮಾಡ್ತಿದ್ದಾರೆ. ಬಾರೇ, ನೋಡೇ ಲವ್ ಮಾಡ್ತಿದ್ದಾರೆ ಎಂದು ಬೀದಿಯಲ್ಲಿ ಆಟ ಆಡುತ್ತಿದ್ದ ಅವಳಕ್ಕನಿಗೆ ತೋರಿಸಲು ಹೋಗಿ ಅಲ್ಲಿ ಜೋರಾಗಿ ಕೂಗಿಕೊಳ್ಳುತ್ತಿದ್ದಳು. ನನಗೇ ನಾಚಿಕೆಯಾಗಿ ಹೇ ಹೇ, ಇಲ್ಲಾ ಇಲ್ಲಾ, ಹಂಗೆಲ್ಲಾ ಹೇಳಬೇಡ ಬಾ, ಎಂದು ಓಡಿಹೋಗಿ ಹಿಡಿದುಕೊಂಡೆ. ಹಿರಿಮಗಳು ದಿಢೀರನೆ ಕೇಳಿಸಿಕೊಂಡು ಬಂದವಳೇ ಅಪ್ಪಾ ಅಪ್ಪಾ ನನಗೂ ತೋರ್‍ಸಿ, ಮಮ್ಮಿಗೆ ಹೇಗೆ ಲವ್ ಮಾಡಿದ್ರಿ ಅಂತಾ ಎಂದು ಮುಗ್ಧವಾಗಿ ಕೇಳಿದಳು. ಅವಳ ಅಮ್ಮ ನಾಚಿ ನೀರಾಗಿ ಕೋಣೆಗೆ ಹೋಗಿ ಅವಿತುಕೊಂಡಳು. ಮಕ್ಕಳಿಬ್ಬರೂ ನಾವು ಹೇಗೆ ಅಪ್ಪಿಕೊಂಡು ನಿಂತಿದ್ದೆವು ಎಂಬುದನ್ನು ಪ್ರಾಕ್ಟೀಸ್ ಮಾಡಿ ತೋರಿಸುವಂತೆ ಆಟ ಮಾಡಿಕೊಂಡವು. ನನ್ನ ಹೆಂಡತಿ ಬಂದು ಇಬ್ಬರಿಗೂ ಎರಡೆರಡು ಬಾರಿಸಿದ ಮೇಲೆ ತೆಪ್ಪಗಾದರು. ಅಂತೂ ಆ ರಾತ್ರಿ ನೆಮ್ಮದಿಯಿಂದ ಊಟ ಮಾಡಿ ಮಲಗಿದೆವು. ಹೀಗೇ ಹೀಗೇ ಐದಾರು ದಿನಗಳು ಕಳೆದುಹೋದವು. ಗೆಳೆಯನ ಬಗ್ಗೆ ನನ್ನ ಗೌರವ ಅಪಾರವಾಯ್ತು. ತಿಮ್ಮಯ್ಯ ಕೈ ಕೊಟ್ಟರೂ ಇನ್ನೊಬ್ಬ ಗೆಳೆಯ ನನ್ನನ್ನು ಉಳಿಸಿಕೊಂಡನಲ್ಲಾ ಎಂದು ಮನುಷ್ಯರ ಬಗ್ಗೆ ವಿಶ್ವಾಸ ಹೆಚ್ಚಾಯ್ತು. ದುಡ್ಡು ತಲುಪಿದೆಯೋ ಇಲ್ಲವೋ ಎಂದು ನಾನೇ ಖುದ್ದಾಗಿ ಹೋಗಿ ಬಡ್ಡಿಯವರನ್ನು ಕಂಡು ಕೇಳಿದೆ. ಅವರೆಲ್ಲ ಬೆಚ್ಚಿಬಿದ್ದಿದ್ದರು. ಸಾರ್, ನೀವು ಇಷ್ಟು ದೊಡ್ಡವರು ಎಂದು ತಿಳಿದಿರಲಿಲ್ಲ. ಮೊದಲೇ ನಾನು ಸಾಹೇಬರ ಕಡೆಯವನು ಎಂದು ಹೇಳಬಾರದಿತ್ತಾ? ಸಾಹೇಬ್ರು ಕರೆಸಿ ನಮಗೆಲ್ಲ ಸರಿಯಾಗಿ ಮುಖಕ್ಕೆ ಉಗಿದು ಉಪ್ಪು ಹಾಕಿದ್ರು. ನೀವು ಕೊಡಬೇಕಾಗಿದ್ದ ಹತ್ತು ಸಾವಿರ ರೂಪಾಯಿಗಳನ್ನು ಖುದ್ದಾಗಿ ಸ್ವತಃ ಸಾಹೇಬರೇ ತಮ್ಮ ಅಕೌಂಟಿನ ಲೆಕ್ಕಕ್ಕೆ ಮಾಡಿಕೊಂಡುಬಿಟ್ಟರು. ಎಷ್ಟೇ ಆಗ್ಲಿ, ಈ ಫೈನಾನ್ಸ್ ಸೊಸೈಟಿ ಅವರದೇ ಅಲ್ಲವೇ. ನೀವು ದುಡ್ಡು ಕೊಡಬೇಕಾಗಿಲ್ಲ. ಸಾಹೇಬ್ರ ಲೆಕ್ಕಕ್ಕೆ ಅದು ಸೇರೋಯ್ತು ಬನ್ನಿ ಸಾರ್, ಕೂತ್ಕೊಳ್ಳಿ ಎಂದು ಕೈಕೈ ಹಿಸುಕಿಕೊಳ್ಳುತ್ತಾ ಈ ಹಿಂದೆ ರೋಪು ಹಾಕಲು ಬರುತ್ತಿದ್ದ ವಸೂಲಿಗರು ನನ್ನೆದುರು ದೈನ್ಯವಾಗಿ ನಿಂತಿದ್ದರು. +ನನಗೆ ನನ್ನನ್ನೇ ನಂಬಲಿಕ್ಕಾಗದಷ್ಟು ಕನ್‌ಫ್ಯೂಸ್ ಆಗಿ, ಅರೇ ಇದೆಲ್ಲ ಏನು ಮ್ಯಾಜಿಕ್ ಮಾಡಿಬಿಟ್ಟ ಆ ರಾಮಚಂದ್ರಾ ಎಂದು ಹಿಂತಿರುಗಿ ಬಂದುಬಿಟ್ಟಿದ್ದೆ. ಒಂದು ವಾರ ಕಣ್ಣು ಮುಚ್ಚಿ ಬಿಡುವುದರಲ್ಲಿ ಬಂದು ಹೋಗಿತ್ತು. ಗೆಳೆಯನನ್ನು ಕಾಣಲು ಹೋದೆ. ಓಹೋ, ಸರಿಯಾದ ಟೈಮಿಗೆ ಬಂದೆ. ಬಾ, ಮಂತ್ರಿಗಳು ಈಗ ತಾನೆ ಫೋನು ಮಾಡಿದ್ದರು. ಅವರನ್ನು ನೋಡಿ ಬರಬೇಕೆಂದು ಆಟೋ ಹತ್ತಿಸಿ ಹೊರಟೇಬಿಟ್ಟ. +ಮೊದಲಿನಂತೆಯೇ ಆ ಭವ್ಯ ಮನೆ ಮುಂದೆ ನಾನು ಅಧೀರನಾಗಿ ನಿಂತೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು, ಬಂಧುಗಳು ಎಲ್ಲ ಮಂತ್ರಿಯ ಮನೆಯಲ್ಲಿ ತುಂಬಿದ್ದರು. ಹೊರಗೆ ಪ್ರಚಾರ ವಾಹನಗಳು ಚುನಾವಣೆಯ ದಣಿವಿನಿಂದ ನಿಂತಿದ್ದವು. ಈಗ ಚುನಾವಣೆಯ ಪ್ರಚಾರ ಬಹಳ ಬಿರುಸಿನಿಂದ ನಡೆಯುತ್ತಿತ್ತು. ಮಂತ್ರಿಗಳು ಭಾಷಣ ಮುಗಿಸಿ ಬಂದಿದ್ದರು. ಅವರ ಪಕ್ಷದ ಪ್ರತಿಷ್ಠೆಯ ಕ್ಷೇತ್ರದಲ್ಲಿ ಸ್ವತಃ ಅವರ ಬಂಧುವೊಬ್ಬರೇ ಎಲೆಕ್ಷನ್ನಿಗೆ ನಿಂತಿದ್ದರು. ಅವರನ್ನು ಗೆಲ್ಲಿಸಿದರೆ ಸೆಂಟ್ರಲ್‌ನಲ್ಲಿ ಸಚಿವರ ಘನತೆ ಹೆಚ್ಚುವುದಿತ್ತು. ಜೊತೆಗೆ ಅವರು ರಾಜಕೀಯ ಜೀವನದ ಮಹತ್ವದ ತಿರುವುಗಳಲ್ಲೀಗ ಮುಳುಗಿದ್ದರು. ಅವರಿಗೆ ಅನೇಕ ಕಡೆಯಿಂದ ಅನೇಕ ಬಗೆಯಿಂದ ಜನರ ಬೆಂಬಲ ಬೇಕಿತ್ತು. ಗೆಳೆಯ ರಾಮಚಂದ್ರನ ಜೊತೆ ಮೊದಲೇ ನನ್ನ ವಿಷಯದ ಬಗ್ಗೆ ಮಾತಾಡಿದ್ದರೆಂದು ಕಾಣುತ್ತದೆ. ನೋಡಿ, ನಿಮ್ಮ ಕಷ್ಟಕ್ಕೆ ನಾವಾಗಿದ್ದೇವೆ. ಈಗ ನನ್ನ ಕಷ್ಟಕ್ಕೆ ನೀವಾಗಬೇಕು. ಏನಿಲ್ಲ, ನಿಮ್ಮ ಕೈಲಾದಷ್ಟನ್ನು ನೀವು ಪ್ರೀತಿಯಿಂದ ಹಾರೈಸಿ ಮಾಡಿಕೊಟ್ಟರೆ ಅದೇ ನಮ್ಮ ಪುಣ್ಯ. ದಯಮಾಡಿ ನೀವು ಇದೊಂದು ಕೆಲಸ ಮಾಡಿಕೊಡಲೇಬೇಕು. ಮುಂದೆ ನಿಮ್ಮ ಪಾಲಿಗೆ ನಾನಿದ್ದೇನೆ ಎಂದು ಹೇಳುತ್ತಿದ್ದರು. +ನನಗೆ ‘ಅರ್ಥ’ದ ಸ್ಪಷ್ಟತೆ ಉಂಟಾಯಿತು. ಹೂಂ, ಆಯ್ತು ಎಂದು ತಲೆ ಆಡಿಸಿ ಗೆಳೆಯನ ಜೊತೆಗೆ ಹೊರ ಬಂದುಬಿಟ್ಟೆ. ಕಾಲೇಜಿನ ದಿನಗಳಲ್ಲಿ ಗೆಳೆಯ ರಾಮಚಂದ್ರನಂತೆಯೇ ನಾನೂ ಭಯಂಕರ ಕ್ರಾಂತಿ, ಪ್ರಾಂತಿಗಳ ಭಾಷಣಗಳಲ್ಲಿ ಹೆಸರುವಾಸಿಯಾಗಿದ್ದವನು. ಆಗ ಕಲಿತಿದ್ದ ನನ್ನ ಅಂತಃಸಾಕ್ಷಿಯ ಕನಸಿನ ಬದಲಾವಣೆಯ ಅರಿವನ್ನು ನಾನೀಗ ಮಂತ್ರಿಗಳ ಪ್ರತಿಷ್ಠೆಯ ಚುನಾವಣೆಯ ತಂತ್ರ ಮಂತ್ರಗಳ ಪ್ರಚಾರಕ್ಕೆ ಅವನ್ನೆಲ್ಲ ಬಳಸಬೇಕಾಗಿತ್ತು. ಹಳ್ಳಿ ಹಳ್ಳಿಗಳಿಗೆ ಹೋಗಿ ನನಗೆ ಗುರುತು ಪರಿಚಯವೇ ಇಲ್ಲದ ನಾನೆಂದೂ ಆತ ಸಜ್ಜನ, ಒಳ್ಳೆಯ ಮನುಷ್ಯ ಎಂದು ಕೇಳಿಯೇ ಇರದವರನ್ನು ಈ ದೇಶದ ಜೀವ, ಈ ನಾಡಿನ ಶಕ್ತಿ, ಈ ಜನರ ಉಸಿರಾಗಿರುವ ನಮ್ಮ ಶ್ರೀಶ್ರೀಶ್ರೀ ಅವರಿಗೆ ಮತ ಚಲಾಯಿಸಿ ಗೆಲ್ಲಿಸಬೇಕೆಂದು ಸುಳ್ಳು ಹೇಳಬೇಕಾದ ಸಂದರ್ಭ ಬಂದೊದಗುತ್ತದೆಂದು ನಾನೆಂದೂ ಭಾವಿಸಿರಲಿಲ್ಲ. ಅಂತಹದನ್ನೆಲ್ಲ ಹೇಳಬೇಕಾದ ತಪ್ಪನ್ನು ನಾನೆಂದೂ ಮಾಡಿರಲಿಲ್ಲ. ಸುಳ್ಳು ಹೇಳುತ್ತಾ ಒಬ್ಬ ಕಳ್ಳನನ್ನು, ಮೋಸಗಾರನನ್ನು, ವಂಚಕನನ್ನು, ಕೊಲೆಗಾರನನ್ನು ನಮ್ಮ ನಾಯಕ, ನಮ್ಮ ಕನಸಿನ ಕಿರೀಟ ಎಂದು ಮೈಕುಗಳ ಮುಂದೆ ಸಾರಿ ಸಾರಿ ಹೇಳಬೇಕಾಗಿತ್ತು. ಅವನ ಪರವಾಗಿ ಕರಪತ್ರ ಬರೆದು ಅವನ ಘನತೆ, ವ್ಯಕ್ತಿತ್ವ, ಸಾಧನೆ, ಜನಸೇವೆ ಇವನ್ನೆಲ್ಲ ಸೃಷ್ಟಿಸಿ ನನ್ನ ಭಾಷೆಯನ್ನು ಕಟುಕರಿಗಾಗಿ ವ್ಯರ್ಥವಾಗಿ ಬಳಸಬೇಕಾಗಿತ್ತು. ಮಾನವೀಯತೆಯ ಸಾಕಾರ ಮೂರ್ತಿ ಎಂಬಂತೆ ಆ ಪಕ್ಷದ ಬಗ್ಗೆ ಸ್ಲೋಗನ್‌ಗಳನ್ನು ದುಂಡಾಗಿ, ಮುದ್ದಾಗಿ ನಾನು ಗೋಡೆಗಳ ಮೇಲೆ ಬರೆದು ಕೊಡಬೇಕಾಗಿತ್ತು. ನನಗೀಗ ನಿಜವಾಗಿಯೂ ರೋಸಿ ಹೋಗಿತ್ತೆನ್ನುವುದಕ್ಕಿಂತ ತಲೆ ಕೆಟ್ಟು ಹೋಗಿತ್ತು. ಚುನಾವಣೆಗೆ ನಿಂತಿರುವವನು ಎಂತಹ ನೀಚ ಎಂಬುದನ್ನು ಹೊರಗೆ ಜನ ನಿರ್ಭಿಡೆಯಿಂದ ಮಾತನಾಡಿಕೊಳ್ಳುವುದು ನನ್ನನ್ನೇ ಗೇಲಿ ಮಾಡಿದಂತೆ ಕೇಳಿಸುತ್ತಿತ್ತು. ಗೆಳೆಯ ರಾಮಚಂದ್ರ ಖರ್ಚಿಗೆಂದು ದುಡ್ಡು ಕೊಡಲು ಬಂದ. ಬೇಡ ಎಂದು ತಿರಸ್ಕರಿಸಿದೆ. ವಿಪರೀತ ಬಿಸಿಲು ಬಾ, ಚಿಲ್ಡ್‌ಬಿಯರ್ ಕುಡಿಯುವಾ ಎಂದು ಬಲವಂತವಾಗಿ ಬಾರೊಂದಕ್ಕೆ ಎಳೆದುಕೊಂಡು ಹೋದ. ನನ್ನಿಂದ ಇಂತಹ ಕೆಲಸ ಸಾಧ್ಯವಿಲ್ಲ ಎಂದು ಹೇಳಲು ನನ್ನಿಂದಾಗಲಿಲ್ಲ. ಒಳಗೆ ಆ ಕೆಲಸದ ಬಗ್ಗೆ ಹೆದರಿಕೆ ಉಕ್ಕಿ ಬರುತ್ತಿದ್ದರೂ ನನ್ನ ಬಾಯಿ ಕಟ್ಟಿಹೋಗಿತ್ತು. ಗೆಳೆಯ ಈ ಕೆಲಸವನ್ನು ನೀನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿಯೋ ಅಷ್ಟೇ ಚೆನ್ನಾಗಿ ನಿನ್ನ ಮುಂದಿನ ದಿನಗಳು ಇರುತ್ತವೆ ಎಂದು ಕಿವಿಮಾತು ಹೇಳುತ್ತಿದ್ದ. ಹೊಟ್ಟೆ ತುಂಬ ಬಿಯರು ಕುಡಿದೆ. ಏನೇನೋ ತೊದಲಾಡಿದೆ. ರಾಮಚಂದ್ರ ತಣ್ಣಗೇ ಇದ್ದ. ಚುನಾವಣೆಯಲ್ಲಿ ಯಾರು ಎಷ್ಟೆಷ್ಟು ಮತ ಗಳಿಸಬಲ್ಲರೆಂಬ ಒಟ್ಟು ಚಿತ್ರದ ಸಮೀಕ್ಷೆಯನ್ನು ನನ್ನೆದುರು ವಿವರವಾಗಿ ಹೇಳುತ್ತಿದ್ದ. ರಾಜಕಾರಣದ ಎಲ್ಲ ತಂತ್ರ ಮಂತ್ರಗಳನ್ನು ತನ್ನ ಮಾತಿಗೆ ಬಳಸಿಕೊಳ್ಳುತ್ತಿದ್ದ. ತಿಮ್ಮಯ್ಯನ ಬಳಿ ಬಿಸಿನೆಸ್ ನೀಲಿನಕ್ಷೆಗಳನ್ನು ಕೇಳಿಸಿಕೊಂಡು ಸಿಟ್ಟಾಗಿದ್ದುದು ನೆನಪಾಗಿ ಆ ಪಾಪಿ ತಿಮ್ಮಯ್ಯ ಯಾಕಾದರೂ ಮುಂಬಯಿಗೆ ಹೋಗಿ ಅಲ್ಲಿ ಎಲ್ಲಾ ಹಲ್ಕಟ್ ಲಫಡಾ ಕೆಲಸಗಳನ್ನು ಮಾಡಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡನೋ ಎಂದು ಬೇಸರವಾಯಿತು. +ರಿಪೋರ್ಟ್ ಬರೆಯಬೇಕೆಂದು ಗೆಳೆಯ ಹೊರಟ ಮೇಲೆ ನನಗೆ ಏನೆಲ್ಲ ನೆನಪುಗಳು ಅಟ್ಟಿಸಿಕೊಂಡು ಬಂದವು. ಮನೆಗೆ ಬಂದವನೇ ಮಲಗಿ ಬಿಟ್ಟೆ. ಹೆಂಡತಿ ರಾಶಿ ರಾಶಿ ಬಟ್ಟೆಗಳನ್ನು ಒಗೆಯಲು ಹಾಕಿಕೊಂಡು ಆ ಕಾಯಕದಲ್ಲಿ ಮಗ್ನಳಾಗಿದ್ದಳು. ಎಷ್ಟೋ ಹೊತ್ತಿನ ತನಕ ನಿದ್ದೆ ಮಾಡಿ ಎದ್ದೆ. ಇಲ್ಲಾ ನನ್ನ ಹೆಂಡತಿಯೇ ಎಬ್ಬಿಸಿ ಯಾರೋ ಬಂದಿದ್ದಾರೆ ಎಂದಳು. ನನ್ನ ಗೆಳೆಯನ ಪರಿಚಯವೇ ಆಕೆಗೆ ಆಗಿರಲಿಲ್ಲ. ಏನೆಂದು ಕೇಳುವುದಕ್ಕಿಂತ ಗೆಳೆಯನಿಗೆ ಕಾಫಿ ಮಾಡಿಕೊಟ್ಟು ಆಯ್ತು ಈ ರಾತ್ರಿ ಕರಪತ್ರಗಳನ್ನೆಲ್ಲ ಬರೆದು ಬಿಡ್ತೇನೆ. ನಾಳೆ ಗೋಡೆ ಬರಹಕ್ಕೆ ಖಂಡಿತ ಬರ್‍ತೇನೆ ಎಂದು ಹೇಳಿ ಕಳಿಸಿ ಬಿಟ್ಟೆ. +ಹೆಂಡತಿಗೆ ಇದನ್ನೆಲ್ಲ ಹೇಳಲೋ ಬೇಡವೋ ಎಂದು ಒಬ್ಬನೇ ಟೇರೇಸಿನಲ್ಲಿ ಕುಳಿತು ವಿವರವಾಗಿ ಯೋಚಿಸಿದೆ. ಎಂದೂ ಇಲ್ಲದ ವ್ಯಾಕುಲತೆ ಬಂದು ಈ ಮಹಡಿ ಮೇಲಿಂದ ಕೆಳಕ್ಕೆಬಿದ್ದು ಸತ್ತು ಹೋಗಲಾ ಎನಿಸಿ ಅಯ್ಯೋ ಆ ರೈಲಿನಲ್ಲಿ ಆ ಹೆಣ್ಣು ಮಗಳು ಹಾಗೇಕೆ ಜಿಗಿದು ಪ್ರಾಣ ಕಳೆದುಕೊಂಡಳೆಂದು ಹೆದರಿಕೆಯಾಗಿ ಕೆಳಗಿಳಿದು ಬಂದು ಬಿಟ್ಟೆ. ಆಗಲೇ ಸಂಜೆ ಮುಳುಗಿ ರಾತ್ರಿ ಬಂದಿತ್ತು. ಬದುಕಿನಲ್ಲಿ ಯಾವುದೂ ತಾರ್ಕಿಕವಾಗಿರುವುದಿಲ್ಲವೆಂದರೂ ಇಡೀ ಜೀವಮಾನದ ಎಲ್ಲ ಸ್ಥಿತಿಯನ್ನು ನಿಭಾಯಿಸುವ ಕೈಗಳು ಅಗಾಧವಾಗಿ ಚಾಚಿಕೊಂಡಿರುತ್ತವೆ ಎನಿಸಿತು. +ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದೂ ನಡೆದುಕೊಂಡಿರಲಿಲ್ಲ. ನಾನು ಯಾವುದೋ ಇನ್ನೊಂದು ದೊಡ್ಡ ಬಲೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದೇನೆನಿಸಿತು. +ಎಲ್ಲೆಲ್ಲೋ ಯಾರ್‍ಯಾರೊ ಎಂತೆಂಥವರನ್ನೋ ಬಲೆ ಬೀಸಿ ಹಿಡಿದು ಹಾಕುತ್ತಿರುತ್ತಾರೆಂಬ ಹಳೆಯ ಭಯ ಮತ್ತೆ ಎದುರಾಯಿತು. ನನ್ನ ಮಕ್ಕಳು ಗೋವಿನ ಹಾಡು ಪದ್ಯವನ್ನು ಹಾಡುತ್ತ ನಾನು ಹುಲಿ ನೀನು ಹಸು ಎಂದು ಎರಡೂ ಪಾತ್ರಗಳನ್ನು ಅಭಿನಯಿಸುತ್ತಾ ಹಜಾರದಲ್ಲಿ ಆಟ ಆಡುತ್ತಿದ್ದರು. ಕತ್ತಲು ಕರಗುತ್ತಿತ್ತು. ಯಾವ ರೀತಿಯಲ್ಲೂ ಕರಪತ್ರ ಬರೆಯಲು ಸ್ಲೋಗನ್‌ಗಳನ್ನು ರಚಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಇಂತಹ ಹೇಯ ಕೆಲಸಕ್ಕಿಂತ ಎಲ್ಲಿಯಾದರೂ ಭಿಕ್ಷೆಬೇಡಿ ಬದುಕುವುದು ಉತ್ತಮ ಎನಿಸಿತು. ನನ್ನ ಕಾಲೇಜು ದಿನಗಳು ನೆನಪಾದವು. ಅರೇ ಇದೆಲ್ಲ ಯಾಕೆ ಹೀಗಾಗುತ್ತದೆಂದು ಪೆಚ್ಚಾದೆ. +ನನ್ನ ಸಮಸ್ಯೆಗಳಲ್ಲಿ ಮನಸ್ಸು ಕಲೆಸಿ ಹೋಯಿತು. ಇಲ್ಲ ಆ ನೀಚ ಎಂತಹ ಕೊಲೆಗಾರ ಎಂದು ನಾನು ಬಲ್ಲೆ. ಅವನನ್ನು ಹೊಗಳಲಾರೆ. ಸತ್ಯವಂತ ಎಂದು ಬರೆಯಲಾರೆ. ಇಲ್ಲಾ ನಾನೊಂದು ತೀರ್ಮಾನಕ್ಕೆ ಈ ರಾತ್ರಿಯೇ ಬಂದು ಬಿಡಬೇಕೆಂದು ಹಠ ತೊಟ್ಟೆ. ಊಟ ಮಾಡಲು ಮನಸ್ಸಾಗಲಿಲ್ಲ. ಆದರೂ ಒಂದೆರಡು ಗಚ್ಚು ತಿಂದೆ. ಹೆಂಡತಿ ಯಾಕ್ರೀ ಹೀಗೆ ಸಪ್ಪಗಿದ್ದೀರಿ, ಹುಷಾರಿಲ್ಲವಾ ಎಂದು ತಲೆ ನೀವಿದಳು. ಬಹಳ ಸಮಯ ಜಾರಿ ಹಾರಿಹೋಯಿತು. ಮಕ್ಕಳು ಮಡದಿ ಎಲ್ಲರೂ ಮಲಗತೊಡಗಿದರು. ಎಲ್ಲೆಲ್ಲೂ ಕತ್ತಲು ತುಂಬಿತ್ತು. ನೀರವತೆ-ವ್ಯಾಪಿಸಿತ್ತು. ಅದು ಮಧ್ಯರಾತ್ರಿಯ ಹೊತ್ತು. ಎದ್ದೆ, ಒಂದೇ ದೃಢದಲ್ಲಿ ಧೈರ್ಯದಲ್ಲಿ ಗುರಿಯಲ್ಲಿ ಮೇಲೆದ್ದು ಕುಳಿತೆ. ಹೆಂಡತಿ ಮಕ್ಕಳನ್ನು ಮತ್ತೆ ಮತ್ತೆ ನೋಡಿದೆ. ಅವರು ನಿದ್ರಿಸುತ್ತಿರುವಂತೆ ಕಂಡಿತು. ಮೆಲ್ಲಗೆ ಬಾಗಿಲು ತೆಗೆದೆ. ಬೀದಿಗೆ ಬಂದೆ. ಸುತ್ತಮುತ್ತ ನೋಡಿದೆ. ಯಾರೂ ಇಲ್ಲ. ಯಾವ ತಡೆಯೂ ಇಲ್ಲ. ಓಡತೊಡಗಿದೆ. ಓಡಿ ಓಡಿ ಜಿಗಿದಂತೆಲ್ಲ ಹಾರಿ ಹಾರಿ ಮೇಲೇರಿ ತೇಲಿ ಹೋದಂತಾಯಿತು. ವೇಗವಾಗಿ ಹಾರತೊಡಗಿದೆ. ಈ ಊರು ಬೇಡ ಈ ಜನಾ ಬೇಡ. ಈ ದಂಧೆ ಬೇಡ ಈ ಹಿಂಸೆ ನರಕ ಯಾವೊಂದು ಬೇಡ ಬೇಡ ಎಂದು ಎಲ್ಲೂ ನಿಲ್ಲದೆ ಚಲಿಸಿದೆ. ಸುಮಾರು ಹೊತ್ತಾದ ಮೇಲೆ ಹಿಂತಿರುಗಿ ನೋಡಿದರೆ ಅರೇ ನನ್ನ ಹೆಂಡತಿ ಮಕ್ಕಳೂ ನನ್ನಂತೆಯೇ ಹಾರಿ ಹಾರಿ ಬರುತ್ತಿದ್ದಾರೆ. ನೀನು ಯಾವ ಮೂಲೆಗೆ ಹೋದರೂ ಸರಿಯೆ ನಿನ್ನನ್ನು ನಾವೆಂದಿಗೂ ಬಿಡುವುದಿಲ್ಲ ಎಂಬಂತೆ ರಭಸವಾಗಿ ಬೆನ್ನಟ್ಟಿ ಹಾರಿ ಬರುತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತೆ ನಾನು ನನ್ನ ವೇಗವನ್ನು ಹೆಚ್ಚಿಸಿದೆ. ಅನೇಕ ಹಳ್ಳಕೊಳ್ಳ ಕೆರೆ ನದಿ ಸರೋವರ ಬೆಟ್ಟಗುಡ್ಡ ಕಣಿವೆ ಕಾಡು ಬಯಲು ಎಲ್ಲೆಲ್ಲೋ ನಾನು ಹಾರಿ ಹಾರಿ ದೂರ ದೂರ ಹಾರತೊಡಗಿದೆ. +ನನ್ನ ಮಕ್ಕಳು ಕೂಗುತ್ತಿದ್ದವು. ಹಿಂಬಾಲಿಸಲಾರದ ಮರಿ ಹಕ್ಕಿಗಳಂತೆ ಕರೆಯುತ್ತಿದ್ದವು. ನನ ಹೆಂಡತಿ ಅವರಿಬ್ಬರನ್ನು ತನ್ನ ರೆಕ್ಕೆ ಮೇಲೆ ಕೂರಿಸಿಕೊಂಡು ಅಪಾರ ವೇಗದಲ್ಲಿ ನನ್ನನ್ನೇ ನುಂಗುವಂತೆ ನೋಡುತ್ತ ಬರುತ್ತಿದ್ದಳು. +ನಾನು ತೀರ್ಮಾನಿಸಿದೆ. ಅಲ್ಲೊಂದು ಬೆಟ್ಟದ ಮೇಲೊಂದು ಮಹಾ ವೃಕ್ಷ ಗೋಚರಿಸಿತು. ಅದು ಎಂತಹುದೋ ಒಂದು ಮಾಯಾ ಮರವೇ ಇರಬೇಕು. ಇಲ್ಲ ಇಲ್ಲಾ ಅದು ಬೋಧೀ ವೃಕ್ಷವೇ ಇರಬೇಕು. ಅದರ ಕೆಳಕ್ಕೆ ಇಳಿಯತೊಡಗಿದೆ. ಇಳಿದೇ ಬಿಟ್ಟೆ. ನಿಜವಾಗಿಯೂ ಅದು ಮಹಾ ಮರ. ಜೀವದ ಮರ ನೆರಳಿನ ಮರ ಹಸುರಿನ ಮರ ಫಲಗಳ ಮರ. ನನ್ನಂತೆಯೇ ಹೆಂಡತಿ ಮಕ್ಕಳೂ ನನ್ನೊಡನೆ ಕೆಳಕ್ಕೆ ಇಳಿದರು. ನನ್ನನ್ನು ಸುತ್ತಿಕೊಂಡರು. ಅಹೋ ರಾತ್ರಿ ಹೀಗೆ ಓಡಿ ಹೋಗಲು ಬಿಡುವುದಿಲ್ಲ ಎಂಬಂತೆ ನೀನು ಎಲ್ಲೇ ಹೋದರೂ ನಾವೂ ಬರುತ್ತೀವೆಂಬಂತೆ ಅಪ್ಪಿಕೊಂಡರು. ನಾನು ತೀರ್ಮಾನಿಸಿ ಆಗಿತ್ತು. ಬೆಳಕು ಹರಿಯುತ್ತಿತ್ತು. ಈ ಮರಕ್ಕೆ ತೊಟ್ಟಿಲು ಕಟ್ಟುವಾ. ಉಯ್ಯಾಲೆ ಕಟ್ಟುವಾ. ಇದರ ಕೆಳಗೊಂದು ಗುಡಿಸಲು ಕಟ್ಟುವಾ. ಅಲ್ಲಿ ಎದುರಿನ ನದಿಯಲ್ಲಿ ಮೀಯುವಾ ಬನ್ನಿ. ನಾನೆಲ್ಲೂ ಹೊರಟು ಹೋಗುವುದಿಲ್ಲ. ಇನ್ನು ಮುಂದೆ ಇಲ್ಲೇ ಇರುವ ಎಂದು ಅವರ ಜೊತೆ ಕೂಡಿಕೊಂಡೆ. +ನನ್ನ ಮಕ್ಕಳಿಬ್ಬರೂ ಗುಡಿಸಲು ಕಟ್ಟಲು ನೆರವಾಗುತ್ತಿದ್ದವು. ಗೂಡು ಕಟ್ಟಲು ನನಗೂ ನನ್ನ ಹೆಂಡತಿಗೂ ಹೊಸ ಚೈತನ್ಯವೊಂದು ಮೊಳಕೆ ಒಡೆಯುತ್ತಿತ್ತು. ಅಲ್ಲಿಂದ ಹಾರಿ ಬಂದ ಮೇಲೆ ನಮಗೆ ದಣಿವೇ ಇರಲಿಲ್ಲ. ಇನ್ನು ಮುಂದೆ ನಮಗೆ ಸಾವುನೋವು ಹಿಂಸೆ ನರಕ ಯಾವುದೂ ಇಲ್ಲ ಎಂಬಂತೆ ಅಲ್ಲಿದ್ದ ಉಯ್ಯಾಲೆಯಲ್ಲಿ ಒಬ್ಬೊಬ್ಬರೂ ಒಬ್ಬೊಬ್ಬರನ್ನು ಕೂರಿಸಿಕೊಂಡು ಹಾಡುತ್ತ ತೇಲತೊಡಗಿದೆವು. ಕಾಲ ನಮ್ಮ ಮುಂದೆ ನಡೆದು ಹೋಗುತ್ತಿತ್ತು. +***** +ಬರೆದದ್ದು: ೧೯೯೫ ಪ್ರಕಟವಾದದ್ದು: ೧೯೯೮ (ಕನ್ನಡಪ್ರಭ ದೀಪಾವಳಿಯ ವಿಶೇಷಾಂಕ) +ಕೀಲಿಕರಣ: ಶ್ರೀನಿವಾಸ (ಚೀನಿ), ಮತ್ತು ಗುರುಪ್ರಸಾದ್ (ಪಚ್ಚಿ) +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […] +[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […] +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_221.txt b/Kannada Sahitya/article_221.txt new file mode 100644 index 0000000000000000000000000000000000000000..59c4a6beb562034875c7b3c7595db115624a76f8 --- /dev/null +++ b/Kannada Sahitya/article_221.txt @@ -0,0 +1,79 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ನೀಲ ನೀಲ ನಿರ್ವಿಕಾರ ನಿರುತ ಬಾನಲಿ +ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ +ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ +ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. +ಒಳಿತು ಕೆಡಕು +ಮನದ ಮಿಡುಕು +ಮೇರೆ ಮೀರಿ ಹಾತೊರೆದಿರೆ +ದೇಹವೆಲ್ಲ ತತ್ತರಿಸಿರೆ +ಕಿರಣಕಂಡೆನು +ಹರುಷಗೊಂಡೆನು; +ಆದರೇಕೊ ಶಾಂತಿ ಬಾರದಯ್ಯೊ ಮನಸಿಗೆ +ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ. +೨ +ಕಲ್ಲು-ಮುಳ್ಳು ತುಳಿದು ದಾರಿ ಸಾಗುತಿರುವೆಡೆ +ಹೆಜ್ಜೆಗೊಂದು ಬಿಜ್ಜೆನುಡಿಯ ನೆನಪು ಬರುವೊಡೆ, +ನಂಬಿದಂಥ ಬಿಂಬ ಕಣ್ಣ ಸೂರೆಗೊಂಡೊಡೆ +ಒಲವಿನೊಂದು ಸೂತ್ರವಿಡಿದು ಬರುವೆ ನಿನ್ನೆಡೆ. +ನನ್ನದೇನು? +ನಾನೆ ನಾನು! +ಉಳಿದ ಒಡವೆ ವಸ್ತುವಿಲ್ಲ +ಅದರ ಬಯಕೆ ನನಗೆ ಹೊಲ್ಲ; +ಇದುವೆ ಪಂಥವು +ನನ್ನ ಹಂತವು. +ಬಾಡುತಿಹುದು ಎದೆಯ ಮುಗುಳು ಬೆಳಕಿನಾಸೆಗೆ +ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ. +೩ +ಬಿಡುವಿನೆಡೆಗೆ ಸಾಗಲೆಂದೆ; ಇಲ್ಲ ಬಿಡುಗಡೆ. +ಬಯಸಿದನಿತು ಬಿಗಿಯುತಿಹುದು ಬಂಧವೊಂದೆಡೆ. +ಎನ್ನ ಪಾಡಿಗೆನ್ನ ಬಿಡದು, ಎಲ್ಲಿ ನಿಲುಗಡೆ? +ಬೇರೆಯೊಂದು ಶಕ್ತಿ ಎಳೆಯುತಿಹುದು ತನ್ನೆಡೆ. +ಸಾಗಲೇನು, +ನೀಗಲೇನು? +ಎದೆಯು ಮಿಡಿದು ಕಾತರಿಸಿರೆ +ಬಾಳಿನಾಸೆ ಪೂತ್ಕರಿಸಿರೆ +ಕಣ್ಗೆ ಕತ್ತಲು +ಸುತ್ತು ಮುತ್ತಲು, +ಗಾಢತಮದ ಗೂಢ ನಿಬಿಡ ಕಾಡಿನೊಡಲಿಗೆ +ಉರುಳುತಿಹುದು ಜೀವ ಝರಿಯು ಆಳು ಕಡಲಿಗೆ. +೪ +ನನ್ನ ನಿನ್ನ ನಡುವೆ ನೂರು ಕೋಟೆ ಕೊತ್ತಲ, +ಇದ್ದರೇನು, ಇಲ್ಲವೆನಿಸಿಬಿಡುವ ಹಂಬಲ. +ಮತಿಯು ಕಲಕದಿರಲಿ, ಆಗದಿರಲಿ ಚಂಚಲ +ಸೋಲು-ಗೆಲವು, ನೋವು-ನಲವು ನೆಳಲು ಬೆಳಕಲ; +ಬಿಗಿದ ಮುಷ್ಟಿ +ನೆಗೆದ ದೃಷ್ಟಿ +ಕಲ್ಲಿಗಿಂತ ಕಲ್ಲಾಗಿರೆ +ಉಕ್ಕಿಗಿಂತ ಉಕ್ಕಾಗಿರೆ +“ಸಿಡಿಲ ಹಿಡಿವೆನು! +ಕಡಲ ಕುಡಿವೆನು!” +ಅಂತರಂಗ ನುಡಿವುದಿಂತು ಬಾರಿ ಬಾರಿಗೆ +ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ. +೫ +ಬಾನ ಗುರಿಯ ಬೆಳ್ಳಿ ಚಿಕ್ಕೆ ಮಿನುಗು ಮಿನುಗೆಲೆ +ನೊಂದ ಬೆಂದ ಜೀವಿಗಿನಿತು ಬೆಳಕ ತೋರೆಲೆ +ಪಂದೆಯಾಗಿ ಜೀವಿಸುವದು ಬೇಡ ಬೇಡೆಲೆ +ಮುಂದಿನೊಳಿತು ಬಟ್ಟೆಯಲ್ಲಿ ಜೀವ ತೇಯೆಲೆ. +ಇಂದಿನಿಂದ +ಗಂಧ ಚಂದ +ಕೀಳು ಬಾಳಿನಿಂದ ನೀನು +ಮೇಲಕೆತ್ತಲಾರೆಯೇನು? +ಹೇಳು ಒಳ್ಗುರಿ, +ತಾಳೆ ಬಾಳುರಿ +ನನ್ನದಲ್ಲವನ್ನು ಧಾರೆಯೆರೆಯ ಮಹಾದರ್ಶಕೆ +ಉರುಳುತಿಹುದು ಜೀವಝರಿಯು ಅಳಲ ಕಡಲಿಗೆ. +***** +ಹರ ಹರ ಮಹಾದೇವ! ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. ಕಂಠದ ವಿಷ ನರ ನಾಡಿಗಳಲ್ಲಿ- ಕಹಿ ಮನಸ್ಸಿನ ಮೈಯೆಲ್ಲ ನೀಲಿ; ಆಕಾಶದುದ್ದಗಲಕ್ಕೂ ಹರಡಿ ನೀಲಿ ಸಮುದ್ರದಾಳದ ಹವಳ ಮುತ್ತುಗಳೆಲ್ಲ ನೀಲಿ ನೀಲಿ. ಸಾವ […] +ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ? ದುಃಖ ಸುಖವು ನಗೆಯು ಹೊಗೆಯು ಎಲ್ಲ ಅಂತೆ ಅಂತೆ. ನಾವು ಗೈದ ಒಳಿತು ಕೆಡಕು ಜೀವ ಪಡೆವ ಭೋಗ; ನಮ್ಮ ನುಡಿಯ ನಡೆಯ ಒಡಲ ಕಡೆದ […] +೧ ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ ಆಶೆ ಬೀಜಗಳೆನಿತೊ ಮಡಿಲೊಳಿರಿಸಿ ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ ಹೊತ್ತು ನಿಂತಿಹಳಮಿತ ವೃಕ್ಷರಾಶಿ. ೨ ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು ಹುಣಿಸೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_222.txt b/Kannada Sahitya/article_222.txt new file mode 100644 index 0000000000000000000000000000000000000000..637e21d6142e2ca5a660bb69b48893311e941f20 --- /dev/null +++ b/Kannada Sahitya/article_222.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ ಕಾಗದ. ಊರಿನ ಸುದ್ದಿಯನ್ನೆಲ್ಲ ಹೊತ್ತು ತಂದ ಕಾಗದ! ರಾಮ ಭಟ್ಟರ ಮಗನಿಗೆ ಮದುವೆ, ಹುಡುಗಿ ಕಪ್ಪಾದರೂ ಲಕ್ಷಣವಾಗಿದ್ದಾಳೆ, ಮೂಲೆ ಮನೆ ವತ್ಸಲನಿಗೆ ಮಗುವಾಯಿತು, ತುಂಬ ದಿನದಿಂದ ನರಳುತ್ತಿದ್ದ ಶಾಮಾಚಾರ್ರು ಕಡೆಗೂ ಹೋಗಿಬಿಟ್ಟರು, ಹೀಗೇ ಏನೇನೋ ಸುದ್ದಿ. ಕೊನೆಯಲ್ಲಿ ಬರೆದಿದ್ದ ಆ ಸಾಲು ಸೀತಮ್ಮನನ್ನು ಚುಚ್ಚಿದಂತಾಯಿತು. “ನೀನು ಅಮೆರಿಕಾದಲ್ಲಿ ಸುಖವಾಗಿದ್ದೀಯಾ?” ಎಂದು ಬರೆದಿದ್ದಳು ಶಾರದೆ. +“ಸುಖವಾಗಿಲ್ಲದೆ ಏನು? ಮಗ, ಸೊಸೆ, ಮೊಮ್ಮಕ್ಕಳ ಮಧ್ಯೆ ಆರಾಮವಾಗಿ ಜೀವನ ನಡೀತಾ ಇದೆ.” ಎಂದು ಗಟ್ಟಿಯಾಗೇ ಹೇಳಿಕೊಂಡರು ಸೀತಮ್ಮ ತಮಗೆ ತಾವೇ ಆಶ್ವಾಸನೆ ಕೊಡುವವರಂತೆ. ಆದರೂ ಯಾಕೋ ಆ ಮಾತು ಪೂರ್ತಿಯಾಗಿ ’ಸತ್ಯ’ ಎನ್ನಿಸಲಿಲ್ಲ. ಕೊನೆಗೆ “ಸುಖ ಅಂದರೆ ಏನು?” ಎಂಬ ಪ್ರಶ್ನೆಗೆ ಉತ್ತರವೇ ಸಿಕ್ಕದೆ ಆ ಯೋಚನೆಯನ್ನು ಬಿಟ್ಟುಕೊಟ್ಟರು. +ಅವರ ಗಂಡ ಸ್ವರ್ಗಸ್ಥರಾಗಿ ಹಲವು ವರ್ಷಗಳಾಗಿದ್ದವು. ಇದ್ದ ಮನೆಯನ್ನು ಮಾರಿ ಒಬ್ಬನೇ ಮಗ ವಾಸುವಿನ ಮನೆಗೆ ಅಮೆರಿಕಾದಲ್ಲಿ ಬಂದು ನೆಲೆಸಿದ್ದರು ಅವರು. ಈಗ ಇದೇ ನನ್ನ ಮನೆ. ಸುಖ, ದುಃಖ ಎಲ್ಲ ಇಲ್ಲೇ ಎಂದುಕೊಂಡರು. +“ಅಜ್ಜಿ, ಡಿನ್ನರ್ ರೆಡಿ” ಎಂದು ಕರೆದ ಮೊಮ್ಮಗ ಹತ್ತು ವರ್ಷದ ರವಿ. ತಡವರಿಸಿಕೊಂಡು ಹರಕು ಮುರುಕು ಕನ್ನಡದಲ್ಲಿ ಅವನು ಅಜ್ಜಿಯ ಹತ್ತಿರ ಅಪರೂಪಕ್ಕೆ ಮಾತಾಡಿದರೆ ಅದು ಇಂಗ್ಲಿಷ್ ಹಾಗೇ ಕೇಳಿಸುತ್ತಿತ್ತು. ಹತ್ತಿರ ಬಂದು ಅಜ್ಜಿಯ ಹತ್ತಿರ ಕುಳಿತುಕೊಳ್ಳುವುದಾಗಲಿ, ಮಾತಾಡುವುದಾಗಲಿ ಮಾಡುತ್ತಿರಲಿಲ್ಲ. ಅವನಿಗೆ ಇಷ್ಟವಾಗಬಹುದು ಎಂದು ಸೀತಮ್ಮ ಏನಾದರೂ ತಿಂಡಿ ಮಾಡಿದರೆ ಸ್ವಲ್ಪ ತಿಂದು ’ಖಾರ’ ಅಂತ ಬಿಟ್ಟು ಹೋಗಿಬಿಡುತ್ತಿದ್ದ. ಅವನಿಗೆ ಗೊತ್ತಿರುವ ಕನ್ನಡ ಅಷ್ಟಕ್ಕಷ್ಟೆ ಆದ್ದರಿಂದ ಸೀತಮ್ಮನಿಗೆ ಮೊಮ್ಮಗನ ಜೊತೆ ಮಾತಾಡಿ ಸಂತೋಷ ಪಡುವ ಭಾಗ್ಯ ಲಭಿಸಿರಲಿಲ್ಲ. ಊರಿನಲ್ಲಿ ಶಾರದೆ ತನ್ನ ಮೊಮ್ಮಕ್ಕಳನ್ನು ಮನದಣಿಯೆ ಮುದ್ದಾಡಿ ಆಮೇಲೆ “ಏನು ಪೀಡಿಸ್ತಾರಪ್ಪ!” ಎಂದು ಹುಸಿ ಮುನಿಸು ತೋರಿಸುತ್ತಿದ್ದದ್ದು ನೆನಪಾಗಿ ಏನೋ ಸಂಕಟವಾಯಿತು ಸೀತಮ್ಮನಿಗೆ. +ಊಟವಾದ ಮೇಲೆ ರವಿ ಅದೇನೋ ವೀಡಿಯೊ ಗೇಮ್ ಅಂತೆ ಅದನ್ನು ಆಡ್ತೀನಿ ಅಂತ ಹೊರಟು ಹೋದ. ಮೊಮ್ಮಗಳು ಹದಿಮೂರು ವರ್ಷದ ಆರತಿ ತನ್ನ ಕೋಣೆಯಲ್ಲಿ ಕಂಪ್ಯೂಟರ್ ಹಾಕಿಕೊಂಡು ಕುಳಿತಳು. ಅವಳ ಹತ್ತಿರ ಮಾತಾಡಬೇಕೆಂಬ ಬಯಕೆಯಾಗಿ ಹತ್ತಿರ ಬಂದು ಕುಳಿತರು ಸೀತಮ್ಮ. “ಆರತಿ ನಿನಗೆ ಈಗ ಹದಿಮೂರು ವರ್ಷ ಅಲ್ಲವೆ? ನಾನು ನಿನ್ನಷ್ಟು ವಯಸ್ಸಾಗಿದ್ದಾಗ ಮದುವೆಯಾಗಿ ಗಂಡನ ಮನೆ ಸೇರಿದ್ದೆ. ಅಲ್ಲಿ ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ನಾನು, ನಮ್ಮತ್ತೆ ಎದ್ದು ಬಚ್ಚಲ ಒಲೆಗೆ ಬೆಂಕಿ ಹಾಕಿ ಕಾಫಿ, ತಿಂಡಿ ಮಾಡಬೇಕಾಗಿತ್ತು.” ಎಂದರು. “ಹೌದಾ ಅಜ್ಜಿ?” ಎಂದಳು ಆರತಿ ಕಂಪ್ಯೂಟರ್‌ನಿಂದ ಕಣ್ಣು ಕೀಳದೆ. +“ಆಗ ಶುರುವಾಗಿದ್ದು ಈವತ್ತಿನವರೆಗೂ ನಾನು ದಿನಾ ಬೆಳಿಗ್ಗೆ ಐದು ಗಂಟೆಗೇ ಏಳೋದು. ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿದ ಹೊರತು ಒಂದು ತೊಟ್ಟು ನೀರು ಸಹ ಬಾಯಿಗೆ ಹಾಕಲ್ಲ.” ಎಂದರು. ಮತ್ತೆ “ಹೌದಾ ಅಜ್ಜಿ” ಎಂದಳು ಆರತಿ. ಕಣ್ಣು ಮಾತ್ರ ಕಂಪ್ಯೂಟರ್ ಮೇಲೇ ಇತ್ತು. ಆರತಿಯ ಮುಖವನ್ನು ದಿಟ್ಟಿಸಿದರು ಸೀತಮ್ಮ. ಯೌವನದ ಹೊಸಿಲಲ್ಲಿ ನಿಂತಿದ್ದ ಅವಳ ಮುಖದಲ್ಲಿ ಅರೆ ಬಿರಿದ ಹೂವಿನ ಚೆಲುವು ತುಂಬಿತ್ತು. ಭುಜದ ಮೇಲೆ ಇಳಿ ಬಿದ್ದಿದ್ದ ಅವಳ ರಾಶಿ ಕೂದಲನ್ನು ನೋಡಿ ಸೀತಮ್ಮ ಹೇಳಿದರು “ಆರತಿ, ನೀನು ತಲೆಗೆ ಎಣ್ಣೆ ಹಾಕ್ಕೋಬೇಕು. ಕಣ್ಣಿಗೂ ತಂಪು, ಮೈಗೂ ಒಳ್ಳೇದು. ನಾಳೆ ನಾನು ಎಣ್ಣೆ ಹಾಕಿ ಎರೀತೀನಿ.” +ಬೆಚ್ಚಿಬಿದ್ದವಳಂತೆ ಕಂಪ್ಯೂಟರ್‌ನಿಂದ ಕಣ್ಣು ಕಿತ್ತು ಅಜ್ಜಿಯ ಕಡೆಗೆ ನೋಡುತ್ತಾ ಹೇಳಿದಳು ಆರತಿ “ಐ ಡೋಂಟ್ ವಾಂಟ್ ಆಯಿಲ್ ಆನ್ ಮೈ ಹೇರ್!” ಕಣ್ಣು ಮೂಗನ್ನು ಸುರುಟಿಸಿದ್ದ ಅವಳ ಮುಖ ಭಾವ ನೋಡಿದ ಸೀತಮ್ಮನಿಗೆ ಅದು ಗಾಭರಿಯೆ? ಹೇಸಿಗೆಯೆ? ತಿರಸ್ಕಾರವೆ? ತಿಳಿಯದಾಯಿತು. +ಅಷ್ಟರಲ್ಲಿ ಮಗ “ಅಮ್ಮಾ” ಎಂದು ಕರೆದಿದ್ದು ಕೇಳಿ ಬಂತು. ಅವನು ಹಾಗೆ ಕರೆದಾಗ ಸೀತಮ್ಮನಿಗೆ ಹೇಗೆಹೇಗೋ ಆಗುತ್ತಿತ್ತು. ಕರುಳು ತುಡಿಯುತ್ತಿತ್ತು. ಈಗಲೇ ಹೋಗಿ ಅವನ ಬಯಕೆ ಏನಿದ್ದರೂ ಪೂರೈಸಬೇಕು ಎನ್ನಿಸುತ್ತಿತ್ತು. ಅವರು ಎದ್ದು ಹೋದರು. ವಾಸು ಸೀತಮ್ಮನ ಕೋಣೆಯಲ್ಲೇ ಬೆಡ್ ಮೇಲೆ ಕುಳಿತಿದ್ದ. +“ಬಾ ಅಮ್ಮ, ಇಲ್ಲೇ ಕೂತ್ಕೊ.” ಎಂದು ಪಕ್ಕ ತೋರಿಸಿದ. ಅವರು ಕುಳಿತ ಮೇಲೆ ಅವನು ಏನೋ ಹೇಳಲು ಬಯಸುತ್ತಿದ್ದರೂ ತಡವರಿಸುತ್ತಾ ಕುಳಿತಿದ್ದಾನೆ ಎನ್ನಿಸಿತು ಅವರಿಗೆ. ಕಡೆಗೆ ವಾಸು ಹೇಳಿದ. “ಅಮ್ಮ ಏನಿಲ್ಲ ನೀನು ನಾಳೆಯಿಂದ ಬೆಳಿಗ್ಗೆ ಸ್ವಲ್ಪ ತಡವಾಗಿ ಏಳೋಕೆ ಆಗುತ್ತಾ? ನೀನು ಬೇಗ ಎದ್ದು ಬಾತ್‌ರೂಮಿನಲ್ಲಿ ಸದ್ದು ಮಾಡುತ್ತಿದ್ದರೆ ಗೀತಾಗೆ ಡಿಸ್ಟರ್ಬ್ ಆಗುತ್ತೆ. ಅವಳೂ ಪಾಪ ಇಡೀ ದಿನ ಹೊರಗೆ ದುಡಿಯಬೇಕಲ್ಲ. ರೆಸ್ಟ್ ಬೇಕು ಅವಳಿಗೆ.” ಎಂದ. +ಇದೇನಿದು ವಿಚಿತ್ರ! ನಮ್ಮ ಕಾಲದಲ್ಲಿ ಸೊಸೆಯರು ಅತ್ತೆಯನ್ನು ಹೊಂದಿಕೊಂಡು ಹೋಗುತ್ತಿದ್ದರು. ಈಗ ಅತ್ತೆಯೇ ಸೊಸೆಗೆ ಅಡ್ಜಸ್ಟ್ ಆಗಬೇಕಾಗಿ ಬಂತೆ! ಎನ್ನಿಸಿತು ಅವರಿಗೆ. ಮಗನ ಕೈಲಿ ಹೀಗೆ ಹೇಳಿಸಿಕೊಳ್ಳಬೇಕಾಯಿತಲ್ಲ! ಎನ್ನಿಸಿ ಅವರ ಕಣ್ಣುಗಳು ತುಂಬಿ ಬಂದವು. ಅದನ್ನು ಮಗನಿಗೆ ತೋರಗೊಡದೆ ಬೆಡ್ ಸರಿ ಮಾಡುವ ನೆಪದಲ್ಲಿ ಮುಖವನ್ನು ಆಚೆ ತಿರುಗಿಸಿ “ಆಗಲಿ ಬಿಡು ನಾಳೆಯಿಂದ ತಡವಾಗೇ ಏಳ್ತೀನಿ.” ಎಂದರು. +ಈ ಅಮೆರಿಕಾದಲ್ಲಿ ಎಲ್ಲವೂ ತಲೆ ಕೆಳಗೆ! ಹೆಂಗಸರು ಪ್ಯಾಂಟ್ ಹಾಕ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲ. ಕೊರಳಲ್ಲಿ ಕರಿಮಣಿ ಇಲ್ಲ. ಮಕ್ಕಳು ಎದುರುತ್ತರ ಕೊಡುತ್ತಾರೆ. ಅವರಿಗೆ ಬೈದಿದ್ದಾಗಲಿ ಹೊಡೆದಿದ್ದಾಗಲಿ ಕಾಣೆ. ಹೆಂಗಸರು ಅಂಗಡಿಗೆ ಹೋಗಿ ಸಾಮಾನು ತರ್ತಾರೆ. ಗಂಡಸರು ಮನೆಯಲ್ಲಿ ಅಡಿಗೆ ಮಾಡ್ತಾರೆ, ಪಾತ್ರೆ ತೊಳೀತಾರೆ! +ಒಂದು ದಿನ ಗೀತಾ ಮತ್ತು ಸೀತಮ್ಮ ಶಾಪಿಂಗ್ ಹೋಗಿ ಬರುವಾಗ ವಾಸು ಅಡಿಗೆ ಮಾಡಿ ಇಟ್ಟಿದ್ದ. ಮನೆಯಲ್ಲಿ ಹೆಂಡತಿ, ತಾಯಿ ಇರುತ್ತಾ ಇವನಿಗೆ ಅಡಿಗೆ ಮಾಡುವ ಪ್ರಮೇಯ ಏನಿತ್ತು? ಎನ್ನಿಸಿತು ಸೀತಮ್ಮನಿಗೆ. ತಾನು ಚಿಕ್ಕಂದಿನಲ್ಲಿ ರುಬ್ಬುವುದು, ಕುಟ್ಟುವುದು ಮಾಡಿ, ಹಳೆಯ ಕಾಲದ ಒಲೆಯಲ್ಲಿ ಅಡಿಗೆ ಮಾಡಿ, ಬಟ್ಟೆ ಒಗೆದು, ಕಸ ಗುಡಿಸಿ, ನೆಲ ಸಾರಿಸಿ ಮನೆ ಸಂಭಾಳಿಸಲಿಲ್ಲವೆ? ಗಂಡನಿಗೆ ಮನೆ ಕೆಲಸ ಮಾಡಿ ಎಂದು ಎಂದಾದರೂ ಹೇಳಿದ್ದುಂಟೆ? ಯಾಕೋ ಮಗನನ್ನು ನೆನೆದು ಅನುತಾಪವಾಯಿತು ಅವರಿಗೆ. +ಆ ದಿನಗಳ ನೆನಪಾದಂತೆ ಅವರ ಹೃದಯ ತುಂಬಿ ಬಂದಿತು. ಮನೆಯಲ್ಲಿ ಗಂಡ ಮತ್ತು ಮಗ ಎಲ್ಲದಕ್ಕೂ ಸೀತಮ್ಮನ ಮುಖ ನೋಡುತ್ತಿದ್ದರು. “ಸೀತಾ ನನ್ನ ಅಂಗಿ ಎಲ್ಲಿ?”, “ಅಮ್ಮಾ ಮಳೆ ಬರ್ತಾ ಇದೆ. ಸ್ಕೂಲಿಗೆ ಹೋಗೋಕೆ ಕೊಡೆ ಎಲ್ಲಿ?”, “ಸೀತಾ ಇವತ್ತು ಆಲೂಗಡ್ಡೆ ಈರುಳ್ಳಿ ಹುಳಿ ಮಾಡು.”, “ಅಮ್ಮಾ ಈವತ್ತು ಕೋಡುಬಳೆ ಮಾಡು.” ಒಂದೇ, ಎರಡೇ ಅವರ ಬೇಡಿಕೆಗಳು! ಎಲ್ಲಾದರೂ ಅಪರೂಪಕ್ಕೆ ಸೀತಮ್ಮನಿಗೆ ಹುಶಾರಿಲ್ಲದಿದ್ದರೆ ಅವರಿಬ್ಬರಿಗೂ ದಿಕ್ಕೇ ತೋಚದ ಹಾಗೆ ಆಗುತ್ತಿತ್ತು. ಪೂರ್ತಿ ಖಾಯಿಲೆ ಗುಣವಾಗುವ ಮೊದಲೇ ಎದ್ದು ಮತ್ತೆ ಮನೆಗೆಲಸ ಶುರು ಮಾಡುತ್ತಿದ್ದರು ಸೀತಮ್ಮ. ಆದರೂ ಆ ದಿನಗಳು ಮತ್ತೆ ಬರಬಾರದೆ! ಎಂದು ಹಂಬಲಿಸಿತು ಅವರ ಹೃದಯ. ಇಂದು ತನ್ನ ಅಗತ್ಯ ಯಾರಿಗೂ ಇಲ್ಲವೆ? ಎಂದು ಯೋಚಿಸುವಾಗ ಮನಸ್ಸು ಬಿಕೋ ಎನ್ನುತ್ತಿತ್ತು. +ಒಮ್ಮೊಮ್ಮೆ ಮತ್ತೆ ಭಾರತಕ್ಕೆ ವಾಪಸ್ಸು ಹೋಗಿಬಿಡಲೆ? ಎಂದು ಯೋಚಿಸುತ್ತಿದ್ದರು ಸೀತಮ್ಮ- ಈ ಅಮೆರಿಕಾದ ಜೀವನ ತಮಗೆ ಒಗ್ಗದು ಎನ್ನಿಸಿದಾಗ. ಅಲ್ಲಿ ಅವರ ದಿನ ದಿನದ ಬದುಕಿನಲ್ಲಿ ಒಂದಾದ ತರಕಾರಿ ಮಾರುವವನ ಜೊತೆ ಚೌಕಾಶಿ, ಕೆಲಸದಾಕೆಯೊಡನೆ ಊರ ಪುರಾಣ, ನೆರೆ ಮನೆಯವರ ಜೊತೆ ಹರಟೆ…ಯಾವುದೂ ಇಲ್ಲದೆ ಜೀವನ ನೀರಸ ಎನ್ನಿಸುತ್ತಿತ್ತು. ಆದರೆ ಹಾಗೆ ಹೋದರೆ ಜನ ಏನು ಮತಾಡಿಕೊಳ್ಳಬಹುದು? ಎಂದು ಯೋಚಿಸಿ ಹಿಂಜರಿಯುತ್ತಿದ್ದರು. “ನೀವು ಪುಣ್ಯಾತ್ಗಿತ್ತಿ ಸೀತಮ್ಮ. ಮಗ ಅಮೆರಿಕಾದಲ್ಲಿದ್ದರೂ ನಿಮ್ಮನ್ನು ನೆನಪಿನಲ್ಲಿ ಕರೆಸಿಕೊಳ್ತಾ‌ಇದ್ದಾನೆ. ಅಂಥಾ ಮಗ ಇದ್ದ ಮೇಲೆ ನಿಮಗೆ ಇಲ್ಲೇನಿದೆ?” ಎಂದೆಲ್ಲ ಹೇಳಿದ್ದರು ಅಕ್ಕ ಪಕ್ಕದ ಮನೆಯವರು ತಾನು ಹೊರಟು ನಿಂತಾಗ. ಈಗ ಹಿಂದೆ ಹೋದರೆ? ” ಅಯ್ಯೋ ಈ ಮುದುಕಿಯ ಜೊತೆ ಏಗೋಕೆ ಯಾರ ಕೈಲಿ ಸಾಧ್ಯ!” ಎನ್ನಬಹುದು. “ಅವಳೆಂಥಾ ಘಟವಾಣಿ ಸೊಸೆ! ಅತ್ತೆಯನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳೋದು ಬಿಟ್ಟು ಹೀಗೆ ಕಳಿಸಿಬಿಡೋದಾ!” ಎನ್ನುತ್ತಾರೋ ಏನೋ. ಎಲ್ಲಕ್ಕಿಂತ ಕರ್ಣ ಕಠೋರವಾದದ್ದು “ಇಂಥಾ ಮಗ ಇದ್ದರೆಷ್ಟು, ಬಿಟ್ಟರೆಷ್ಟು. ಸ್ವಂತ ತಾಯಿಯನ್ನು ಮುದಿತನದಲ್ಲಿ ಸಾಕಲಾರದೋನು!” ಎಂದುಬಿಟ್ಟರೆ! ತನ್ನ ದೆಸೆಯಿಂದ ತನ್ನ ಮಗನಿಗೆ ಅಪನಿಂದೆ ಬರುವುದು ಅವರಿಗೆ ಬೇಕಾಗಿರಲಿಲ್ಲ. +* +* +* +ಹಗಲು ಹೊತ್ತು ಮನೆಯಲ್ಲಿ ಯಾರೂ ಇಲ್ಲ. ಹೊತ್ತು ಹೋಗುವುದಿಲ್ಲವೆಂದು ಸಂಡಿಗೆ ಮಾಡಲು ನಿರ್ಧರಿಸಿದರು ಸೀತಮ್ಮ. ಹೊರಗೆ ಸುಡು ಬಿಸಿಲು. ಹಿತ್ತಿಲ ಅಂಗಳವೂ ಚೆನ್ನಾಗಿದೆ. ಬಿಸಿಲನ್ನು ಯಾಕೆ ದಂಡ ಮಾಡಬೇಕು? ಸೀತಮ್ಮ ಸಬ್ಬಕ್ಕಿ ಸಂಡಿಗೆಯ ಹಿಟ್ಟು ಮಾಡಿ ಹೊರಗೆ ಅಂಗಳದಲ್ಲಿ ಒಣ ಹಾಕಲು ಕುಳಿತರು. ಪಕ್ಕದ ಮನೆಯ ಹೆಂಗಸು ಕಿಟಕಿಯಿಂದ ತನ್ನನ್ನೇ ನೋಡುತ್ತಿದ್ದದ್ದು ಕಾಣಿಸಿತು. ಸೀತಮ್ಮ ಅವಳ ಕಡೆಗೆ ಮುಗುಳು ನಗೆ ಬೀರಿದರು. ಅವಳು ನಗಲಿಲ್ಲ. +ಮಧ್ಯಾಹ್ನ ಮೂರು ಗಂಟೆಗೆ ರವಿ, ಮತ್ತು ಆರತಿ ಸ್ಕೂಲಿಂದ ಬಂದರು. ತಮ್ಮ ಪಾಡಿಗೆ ಕುಕೀಸ್ ತಿಂದುಕೊಂಡು ಟಿ ವಿ ನೋಡುತ್ತಾ ಕುಳಿತರು. ಅವರು ತಮ್ಮೊಡನೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಈ ವೇಳೆಗಾಗಲೇ ತಿಳಿದುಕೊಂಡಿದ್ದ ಸೀತಮ್ಮ ಅವರನ್ನು ತಾವಾಗಿ ಮೇಲೆ ಬಿದ್ದು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಮೂರೂವರೆಗೆ ವಾಸು ಬಂದ. ಈ ದಿನ ಸ್ವಲ್ಪ ಬೇಗ ಬಂದಿದ್ದ! ದಣಿದು ಬಂದ ಮಗನನು ನೋಡಿ ’ಅಯ್ಯೋ’ ಎನ್ನಿಸಿತು ಸೀತಮ್ಮನಿಗೆ. ಅವನಿಗೆ ಕಾಫಿ ಮಾಡಿಕೊಟ್ಟು ಒಗ್ಗರಿಸಿದ ಅವಲಕ್ಕಿ ಕೊಟ್ಟರು. ” ಅಮ್ಮಾ ಈ ಒಗ್ಗರಿಸಿದ ಅವಲಕ್ಕಿ ನಿನ್ನ ಕೈಯ ರುಚಿ ಇನ್ಯಾರ ಕೈಲೂ ಬರೋದಿಲ್ಲ ನೋಡು.” ಎಂದು ಆಸೆಯಿಂದ ತಿನ್ನುತ್ತಿದ್ದ ಮಗನನ್ನು ಕಣ್ತುಂಬ ನೋಡಿದರು. ಚಿಕ್ಕಂದಿನಲ್ಲಿ ಅವನು ಶಾಲೆಯಿಂದ ಬಂದಾಗಲೂ ಹೀಗೇ ಅವಲಕ್ಕಿ ಕೊಟ್ಟಿದ್ದ ನೆನಪು ಉಕ್ಕಿ ಬಂತು. ಒಂದು ಕ್ಷಣ ಅಂದು ಮಾಡಿದಂತೆ ಈಗಲೂ ಅವನ ಬಾಯಿಗೆ ಅಂಟಿಕೊಂಡಿದ್ದ ಅವಲಕ್ಕಿಯನ್ನು ಸೆರಗಿನಲ್ಲಿ ಒರೆಸಲೆ? ಎಂಬ ಬಯಕೆಯಾಯಿತು. ಮಗ ಒಬ್ಬನೇ ಸಿಕ್ಕುವುದೇ ಅಪರೂಪ. ಇವತ್ತೇನೋ ನನ್ನ ಪುಣ್ಯ ಚೆನ್ನಾಗಿತ್ತು! ಎಂದುಕೊಂಡರು. +ಈಗಲೀಗ ಗೀತಾ ಬಂದ ಸದ್ದಾಯಿತು. ಅವಳ ಕೆನ್ನೆ ಕೆಂಪಾಗಿತ್ತು. ಮುಖ ಬಿಗಿದುಕೊಂಡಿತ್ತು. ಅದನ್ನು ಗಮನಿಸಿದ ವಾಸು “ಏನಾಯಿತು ಗೀತಾ?” ಎಂದು ಹತ್ತಿರ ಬಂದ. “ಏನೂ ಇಲ್ಲ.” ಎಂದು ಗೀತಾ ಮುಖವನ್ನು ಆಚೆ ತಿರುಗಿಸಿ ಅವನಿಂದ ದೂರ ಹೋದಳು. ವಾಸು ಏನು ಮಾಡಬೇಕೋ ತಿಳಿಯದೆ ಜೇಬಿನಲ್ಲಿ ಕೈ ಇಳಿ ಬಿಟ್ಟು ಅಸಹಾಯಕನಾಗಿ ನಿಂತ. ತಕ್ಷಣ ಮಗನ ಸಲುವಾಗಿ ಸೊಸೆಯ ಮೇಲೆ ಸಿಟ್ಟು ಬಂದಿತು ಸೀತಮ್ಮನಿಗೆ. ಆದರೂ ಏನೂ ಹೇಳದೆ ತಟ್ಟೆಯಲ್ಲಿ ಅವಲಕ್ಕಿ ಹಾಕಿ ಅವಳಿಗೆ ಕೊಟ್ಟರು. ಗೀತಾ “ನಂಗೆ ಬೇಡ” ಎಂದು ಬಿರುಸಾಗಿ ಹೇಳಿದಳು. ಅವಮಾನವಾದಂತಾಗಿ ಸೀತಮ್ಮ ನಿಧಾನವಾಗಿ ಎದ್ದು ಹೋಗಿ ಮಹಡಿಯಲ್ಲಿ ತಮ್ಮ ಕೋಣೆಯನ್ನು ಸೇರಿದರು. +“ನೀನು ಅಮೆರಿಕಾದಲ್ಲಿ ಸುಖವಾಗಿದ್ದೀಯಾ?” ತೆರೆದಿಟ್ಟಿದ್ದ ಗೆಳತಿಯ ಪತ್ರ ಪ್ರಶ್ನೆ ಹಾಕುತ್ತಾ ಕುಳಿತಿತ್ತು. ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ ಅವರಿಗೆ. ತಲೆ ಸುತ್ತುತ್ತಿತ್ತು. ಸ್ವಲ್ಪ ಹೊತ್ತು ಹಾಗೇ ಕುಳಿತು ಯಾವುದೋ ಪುಸ್ತಕದ ಮೇಲೆ ಕಣ್ಣಾಡಿಸಿದರು. ಓದಿದ್ದು ಯಾವುದೂ ತಲೆಯೊಳಗೆ ಇಳಿಯಲಿಲ್ಲ. ಆಗ ನೆನಪಾಯಿತು. ಹೊರಗೆ ಒಣ ಹಾಕಿದ ಸಂಡಿಗೆ ಹಾಗೇ ಇತ್ತು. ಒಳಗೆ ತರುತ್ತೇನೆ ಎಂದು ಮಹಡಿಯಿಂದ ಇಳಿದು ಬಂದರು. ಗೀತಾ ಜೋರಾಗಿ ಸಿಟ್ಟಿನಲ್ಲಿ ಮಾತಾಡುತ್ತಿದ್ದ ಶಬ್ದ ಕೇಳಿ ಸ್ತಬ್ಧರಾಗಿ ಹಾಗೇ ನಿಂತರು. +“ಇವರಿಗೆ ನನ್ನನ್ನು ಒಂದು ಮಾತು ಕೇಳದೆ ಸಂಡಿಗೆ ಮಾಡಬೇಕಾದ ಅಗತ್ಯ ಏನಿತ್ತು? ಮನೆಗೆ ಬಂದು ನಾನು ಹಿಂದುಗಡೆ ರವಿ ಆಡುತ್ತಿರಬಹುದು ಅಂತ ನೋಡೋಕೆ ಹೋದಾಗ ಪಕ್ಕದ ಮನೆ ಮೇರಿ ಸಿಕ್ಕಿದಳು. ಸಂಡಿಗೆ ತೋರಿಸಿ ’ವಾಟ್ ಈಸ್ ದಟ್! ಸಮ್‌ಥಿಂಗ್ ಯು ಈಟ್?’ ಎಂದು ಒಂದು ಥರಾ ಕೇಳಿದಳು. ನಂಗೆ ಎಷ್ಟು ಅವಮಾನವಾದ ಹಾಗೆ ಆಯ್ತು ಗೊತ್ತಾ? ಈ ಜನರ ಜೊತೆ ನಾವು ಸರಿಸಮಾನರ ಹಾಗೆ ಇರಬೇಕು ಅಂತ ನಾನು ಎಷ್ಟು ನಿಗಾ ಇಡ್ತೀನಿ ಬಟ್ಟೆ ಬರೆ ಮನೆ ಡೆಕೊರೇಶನ್ ಎಲ್ಲಾದರಲ್ಲೂ. ಅಂಥಾದ್ದರಲ್ಲಿ ಇವರು ಹೋಗಿ ಹೀಗೆಲ್ಲಾ ಮಾಡಬೇಕಾ?” ಅಡಿಗೆ ಮನೆಯ ಕುರ್ಚಿಯಲ್ಲಿ ಕುಳಿತಿದ್ದಳು ಗೀತಾ. +“ಪಾಪ, ಅಮ್ಮಂಗೆ ಗೊತ್ತಾಗಲ್ಲ. ನಾನು ಹೇಳ್ತೀನಿ ಗೀತಾ” ಎಂದ ವಾಸು. +“ಹೌದು ನೀವು ಯಾವಾಗಲೂ ಹಾಗೇ, ಅಮ್ಮನ್ನ ವಹಿಸಿಕೊಂಡು ಮಾತಾಡ್ತೀರಾ. ಇಲ್ಲಿ ನನ್ನ ಪಾಡು ಏನಾಗಿದೆ ಅಂತ ನಿಮಗೆ ಹೇಗೆ ಗೊತ್ತಾಗ್ಬೇಕು! ಸರಿಯಾಗಿ ಶವರ್ ಕರ್ಟನ್ ಹಾಕ್ಕೊಳ್ಳಲ್ಲ. ದಿನಾ ಬಾತ್‌ರೂಮ್ ನೆಲ ಸಾರಿಸಬೇಕು ಇವರು ಸ್ನಾನ ಮಾಡಿದ ಮೇಲೆ. ಆರತಿಗೆ ಕಂಪ್ಯೂಟರ್‌ನಲ್ಲಿ ಹೋಮ್‌ವರ್ಕ್ ಮಾಡೋಕೆ ಬಿಡಲ್ಲ. ಹತ್ತಿರ ಕುಳಿತು ಏನೇನೋ ಮಾತಾಡಿ ಡಿಸ್ಟರ್ಬ್ ಮಾಡ್ತಾರೆ. ರವಿ ಅವರು ಮಾಡಿಕೊಟ್ಟ ತಿಂಡಿ ತಿನ್ನದೆ ಹೋದರೆ ಮುಖ ಒಂಥರಾ ಮಾಡ್ತಾರೆ.”ಎನ್ನುತ್ತಾ ತಲೆಯ ಮೇಲೆ ಕೈ ಹೊತ್ತು ಸುಸ್ತಾದವರಂತೆ ಕುಳಿತಳು ಗೀತಾ. ಮಕ್ಕಳು ಇದನ್ನೆಲ್ಲ ನೋಡುತ್ತಾ ನಿಂತಿದ್ದರು. ಅವರಿಗೆ ಏನೆನ್ನಿಸಿತೋ! ರವಿ ಅವಳನ್ನು ಸಮಾಧಾನ ಪಡಿಸಲೆಂಬಂತೆ ಹತ್ತಿರ ಮಂಡಿಯೂರಿ ಕುಳಿತು ಅವಳ ತೊಡೆಯ ಮೇಲೆ ತಲೆ ಇರಿಸಿದ. ಆರತಿ “ಡೋಂಟ್ ವರಿ ಮಾಮ್” ಎನ್ನುತ್ತಾ ಹಿಂದಿನಿಂದ ಬಂದು ಅವಳ ಕೊರಳ ಸುತ್ತ ತನ್ನ ತೋಳುಗಳನ್ನು ಸುತ್ತಿದಳು. ಪಕ್ಕದಲ್ಲಿ ಕುಳಿತಿದ್ದ ವಾಸು ಅವಳ ಕೈಗಳನ್ನು ಮೃದುವಾಗಿ ಅದುಮಿದ. ಗೋಡೆಯಿಂದಾಚೆ ತುಸು ದೂರದಲ್ಲಿ ನಿಂತಿದ್ದ ಸೀತಮ್ಮ ಯಾರ ದೃಷ್ಟಿಗೂ ಬೀಳಲಿಲ್ಲ. +ಹೌದು ಗಂಡ, ಹೆಂಡತಿ, ಮಕ್ಕಳು…..ಒಂದು ಸಂಸಾರ….ಒಂದು ಗುಂಪು. ಇಲ್ಲಿ ತಾನು ಪರಕೀಯಳು. ಅನಗತ್ಯವಾದ ನಿರುಪಯೋಗಿ ವಸ್ತು ಎನ್ನಿಸಿತು. ಸೀತಮ್ಮ ಹನಿಗೂಡಿದ ಕಣ್ಣುಗಳಿಂದ ಮಂಜಾದ ದೃಷ್ಟಿಯಲ್ಲಿ ತಡವರಿಸುತ್ತಾ ತಮ್ಮ ಕೋಣೆಯ ಕಡೆಗೆ ಹೆಜ್ಜೆ ಹಾಕಿದರು. +ಈಗ ಎರಡು ವಾರಗಳ ಕೆಳಗೆ ಗೀತಾಗೆ ಹುಶಾರಿರಲಿಲ್ಲ. ಜ್ವರ, ವಾಂತಿಯಿಂದ ಸೋತು ಹೋಗಿದ್ದಳು. ಆಗ ಸೀತಮ್ಮನವರೇ ಅಡಿಗೆಯ ಜವಾಬ್ದಾರಿ ವಹಿಸಿಕೊಂಡು ನಿಭಾಯಿಸಿದ್ದರು. ಹಾಸಿಗೆಯಲ್ಲಿ ಮಲಗಿದ್ದ ಗೀತಾ “ಅತ್ತೆ, ನೀವಿರೋ ಹೊತ್ತಿಗೆ ನಾನು ಈಗ ಮಲಗಿ ರೆಸ್ಟ್ ತಗೋಭೊದು. ಇಲ್ಲದಿದ್ದರೆ ಹುಶಾರಿಲ್ಲದಿದ್ದರೂ ನಾನೇ ಎದ್ದು ಎಲ್ಲ ಸಂಭಾಳಿಸಬೇಕಾಗುತ್ತಿತ್ತು.” ಎಂದಿದ್ದು ನೆನಪಾಯಿತು. ಗೀತಾಳ ಕಣ್ಣುಗಳಲ್ಲಿ ಕೃತಜ್ಞತೆ ತುಂಬಿದ್ದನ್ನು ಅವರೂ ಗಮನಿಸಿದ್ದರು. ತಾವೂ ಮುಂಚೆ ಖಾಯಿಲೆ ಗುಣವಾಗುವ ಮೊದಲೇ ಎದ್ದು ಮನೆಗೆಲಸ ಶುರು ಮಾಡುತ್ತಿದ್ದರಲ್ಲವೆ! ತಮಗಿಲ್ಲದ ಮಗಳ ಛಾಯೆಯನ್ನು ಗೀತಾಳ ಮುಖದಲ್ಲಿ ಕಂಡಿದ್ದರು ಆಗ! ಮೊಮ್ಮಕ್ಕಳೂ ಆಗ ತಮ್ಮೊಡನೆ ನಗುತ್ತಾ ಹರಕು ಮುರುಕು ಕನ್ನಡದಲ್ಲಿ ಮಾತಾಡಿದ್ದರು! ತನ್ನ ಅಗತ್ಯ ಇವರಿಗೆ ಇದೆ! ಎಂಬ ಭಾವದಲ್ಲಿ ಸೀತಮ್ಮನ ಮನಸ್ಸು ತೃಪ್ತಿಯನ್ನು ತಾಳಿತ್ತು. ಈಗ ಹೀಗೇಕೆ? +ತಮ್ಮ ದೀರ್ಘ ಜೀವನದಲ್ಲಿ ಮನುಷ್ಯನ ಸ್ವಭಾವ ಚಂಚಲ ಎಂಬ ಸತ್ಯವನ್ನಂತೂ ಮನಗಂಡಿದ್ದರು ಅವರು. ಕೋಣೆಯಲ್ಲಿ ಕುಳಿತು ತಮಗರಿವಿಲ್ಲದೆ ಸಾವಿತ್ರಿಯ ಕೈಯಲ್ಲಿ ಮನಸ್ಸಿನಲ್ಲೇ ಸಂಭಾಷಣೆ ನಡೆಸಿದರು ಸೀತಮ್ಮ. ಸುಖ ಅಂದರೆ ಏನು ಹೇಳು ಸಾವಿತ್ರಿ? ಈ ದೊಡ್ಡ ಬಂಗಲೆಯೆ? ಕಾರೇ? ಮೊಮ್ಮಕ್ಕಳೇ? ಸೊಸೆಯೆ? ಮಗನೇ? ಬಹುಶಃ ನಾನು ಮುಂದಿನ ಸಾರಿ ಭಾರತಕ್ಕೆ ಬಂದಾಗ ನೀನೂ ನಾನೂ ಕೂಡಿ ಕುಳಿತುಕೊಂಡು ಈ ವಿಷಯ ಚರ್ಚಿಸಬೇಕು. ನನಗನ್ನಿಸುತ್ತೆ – ಸುಖ ಅಂದರೆ ಪ್ರೀತಿ. ಆದರೂ ನಾವು ಯಾರನ್ನಾದರೂ ಉತ್ಕಟವಾಗಿ ಪ್ರೀತಿಸಿದಾಗ ಆ ಪ್ರೀತಿಯೂ ನಮ್ಮನ್ನು ನೋವಿಗೀಡು ಮಾಡುತ್ತದೆ ಅಲ್ಲವೆ? ಹಾಗಾದರೆ ಸುಖ ಅಂದರೆ ಏನು?……. +ಇತ್ತ ತನ್ನ ಆಯಾಸ, ಆಕ್ರೋಶವನ್ನೆಲ್ಲ ಕೂಗಾಡಿ ಚೆಲ್ಲಿದಮೇಲೆ ಗೀತಾ ತಣ್ಣಗಾಗಿದ್ದಳು. ಮಕ್ಕಳು ಮತ್ತೆ ಟಿವಿ ನೋಡಲು ಹೋಗಿದ್ದರು. ವಾಸು ಬೇರೇನೋ ಕೆಲಸದಲ್ಲಿದ್ದ. ಕೈಯಲ್ಲಿ ಒಂದು ಕಪ್ ಟೀ ಹಿಡಿದು ಕುಳಿತ ಅವಳ ಮನಸ್ಸು ಯೋಚಿಸುತ್ತಿತ್ತು. ತನಗೆ ಹುಶಾರಿಲ್ಲದಾಗ ಅತ್ತೆ ದೇವರಿಗೆ ಐದು ಡಾಲರುಗಳನ್ನು ಮುಡಿಪಾಗಿಟ್ಟು “ನನ್ನ ಸೊಸೆಯನ್ನು ಗುಣ ಮಾಡು, ದೇವರೆ” ಎಂದು ಬೇಡಿಕೊಂಡಿದ್ದನ್ನು ಅವಳು ಕಂಡಿದ್ದಳು. ತಿಳಿ ಸಾರು, ಗಂಜಿ ಎಲ್ಲವನ್ನೂ ತಾನಿದ್ದಲ್ಲಿಗೇ ತಂದು ಕೊಟ್ಟಿದ್ದರು. ಈ ಊರಿನಲ್ಲಿ ಒಂದು ಎಳನೀರು ಕೂಡಾ ಸಿಕ್ಕಲ್ವೇನೋ? ಈ ಖಾಯಿಲೆಗೆ ಎಳನೀರಿಗಿಂತ ಒಳ್ಳೆಯ ಪಥ್ಯ ಇನ್ನಿಲ್ಲ. ಎಂದು ಅಲವತ್ತುಕೊಂಡಿದ್ದರು. ಈಗ ಯೋಚಿಸಿದಾಗ ಅವರು ಮಾಡಿದ ಪ್ರತಿಯೊಂದು ಕೆಲಸವೂ ಅವರು ಬೆಳೆದು, ಬಾಳಿದ ಸಂಸ್ಕೃತಿಯ ಸಂಕೇತವಾಗಿತ್ತು! ಈ ಹೊಸ ದೇಶದಲ್ಲಿ ಇದ್ದಕ್ಕಿದ್ದಂತೆ ಬದಲಾಯಿಸಲು ಸಾಧ್ಯವೆ? ಸಾಧುವೆ? ಹೊಸ ದೇಶಕ್ಕೆ ಹೊಂದಿಕೊಳ್ಳುವ ತವಕದಲ್ಲಿ ನಮ್ಮ ಭಾರತೀಯತೆಯನ್ನು ಕೈ ಬಿಡುತ್ತಿರುವ ನಾವು ಇವರಿಂದ ಕಲಿಯಬೇಕಾದ್ದು ಬಹಳವಿದೆ. ಈಗಲಾದರೂ ಈ ಹಿರಿಯ ಜೀವ ನಮ್ಮ ಮಕ್ಕಳಿಗೆ ತಮ್ಮ ಅಮೆರಿಕನ್ನತೆಗೂ ತಮ್ಮ ಪೂರ್ವಿಕರ ಭಾರತೀಯತೆಗೂ ನಡುವಣ ಕೊಂಡಿಯಾಗಿ ನಿಲ್ಲುವವರಲ್ಲವೆ? +ಬಾಗಿಲ ಬಳಿ ಏನೋ ಸದ್ದಾದಂತಾಗಿ ಸೀತಮ್ಮ ತಿರುಗಿ ನೋಡಿದರು. “ಅತ್ತೆ, ಊಟಕ್ಕೆ ಬರ್ತೀರಾ?” ಎಂದಳು ಗೀತಾ. ಅವಳ ದನಿ ಈಗ ಮೃದುವಾಗಿತ್ತು. ಮುಖದಲ್ಲಿ ನಗುವಿತ್ತು. “ಓಹೋ ಅಮ್ಮನವರ ಕೋಪ ಇಳಿದಿದೆ!” ಎಂದು ಮನಸ್ಸಿನಲ್ಲೇ ಅಂದುಕೊಂಡರು ಸೀತಮ್ಮ. ತಾವೂ ಮುಗುಳ್ನಗುತ್ತಾ ಮಹಡಿಯಿಂದ ಇಳಿದು ಬಂದರು. +ರಾತ್ರಿ ಮಲಗಿದಾಗ ಸೀತಮ್ಮನ ಮನಃ ಪಟಲದಲ್ಲಿ ಮತ್ತೆ ಮತ್ತೆ ಆ ದೃಶ್ಯ ಮರುಕಳಿಸುತ್ತಿತ್ತು….ಗಂಡ, ಹೆಂಡತಿ, ಮಕ್ಕಳು…ಒಂದು ಸಂಸಾರ, ಒಟ್ಟುಗೂಡಿದ ಗುಂಪು. ಇಲ್ಲಿ ತಾನು ಪರಕೀಯಳು. ತನ್ನ ಅಗತ್ಯ ಯಾರಿಗೂ ಇಲ್ಲ! ಸುಖ ಅಂದರೆ ತನ್ನ ಅಗತ್ಯ ಇನ್ನೊಬ್ಬರಿಗಿದ್ದು ಆ ಸೇವೆಯಲ್ಲಿ ತೃಪ್ತಿಯನ್ನು ಕಾಣುವುದಿರಬಹುದೆ? ಎಂದುಕೊಳ್ಳುತ್ತಾ ಸೀತಮ್ಮ ನಿದ್ದೆ ಹೋದರು. +***** +ಆಧಾರ: Citra Divakaruni avara `Mrs. Dutta writes a letter’ ಇಂಗ್ಲಿಷ್ ಕಥೆ +ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […] +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_223.txt b/Kannada Sahitya/article_223.txt new file mode 100644 index 0000000000000000000000000000000000000000..814e4acbe7e15a6c33a0183016eecf226b3b3455 --- /dev/null +++ b/Kannada Sahitya/article_223.txt @@ -0,0 +1,73 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇರುಳು ಇನ್ನೂ ಹೊದ್ದಿಲ್ಲ +ಧರೆಯ +ಇಂದ್ರನ ಸಹಸ್ರ ಸಹಸ್ರ ನಯನ +ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ +ಮೈಯ +ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ +ತೂಗಿ , ನಿತ್ಯ ಹರಿತ್ತಿನ ಮಳೆಕಾಡು +ಭವ್ಯ +ಸುಳಿದಾಡುವ +ವನ್ಯ +ಅದೋ +ಬೂದಿ ಮುಚ್ಚಿದ ಕೆಂಡ, ಕುಟೀರ +ಒಳಗಾದವಳು ಐವರಿಗೆ. +ಅಡುವ ಅಗ್ನಿಹೋತ್ರದಗ್ನಿ ಮುಂದೆ +ಮಣ್ಣ ಗೋಡೆಗೊರಗಿದ +ದೇವಿ +ಕೆಸರಿಗಂಟಿದ ನಿರೀಕ್ಷೆ +ಕಣ್ಗಳ , ಪದ್ಮ, ಸೂರ್ಯಮುಖಿ. +ಸಂಧಿ ಪ್ರಕಾಶ ರಾಗದ , ಅಲೆ ಅಲೆ +ಹರಡಿ – ಹಬ್ಬಿದ ಸಾಗರ +ಜೀವ ಭಾವದ ಚೆಲುವು +ತನ್ನೊಡಲೊಮ್ಮೆ ತೀರಕ್ಕೆ ಹೊರಳಿಸ +ಬಲ್ಲ ಭೂಮ್ಯಾಂತರಿಕ್ಷದ ತೆರೆ – +ಕೃಷ್ಣ ಬಂದ ಪಾಂಡವರ ಮನೆಗೆ +ಸಹಜ, ಮುರಳೀರವ +ಕೇಳಿದ , ಕುಶಲವೇ? +ಕರೆದಿರಾ ನನ್ನ? +ಹೊಯ್ದಾಟದ ಜ್ವಾಲೆ ಧಿಗ್ಗನೆದ್ದು ಉರಿದು +ಕೃಷ್ಣೆ ಕೂಗಿದಳು +ಕೃಷ್ಣಾ , ಕರೆದ್ದದ್ದು ನಾನು ! +ಅವ ನಸುನಗುತ ಕೇಳಿದ – ತಂಗಿ +ನೀನೆಂದೆಯಾ? ಕರೆದದ್ದು? +ಯಾರು ನೀನು? +ದ್ರುಪದ ಕುವರಿ , ದ್ರೌಪದಿಯೇ? +ಪಾಂಚಾಲದ ಬೆಡಗಿ , ಪಾಂಚಾಲಿಯೇ? +ಕೃಷ್ಣೆಯೇ ? +ಯಾರಮ್ಮ ನೀನು? +ಕುರುಕುಲ ವಧು? ಐವರಿಗೊಮ್ಮೆಗೆ ಹೊದ್ದವಳು ! +ಎಲ್ಲೋ ಏನೋ ಖತಿಗೊಂಡು +ವಿಲವಿಲನೆ ಒದ್ದಾಡಿ ಸಾವರಿಯದ್ದು +ಕೆಳಗೆ ಬಿದ್ದು ಕೃಷ್ಣೆಯ +ಕಣ್ಣು ತುಂಬೆಲ್ಲಾ ನೀರೇ ನೀರು. +ಬೆಂಕಿಯ ಕಪ್ಪು ಹೊಗೆ +ಕಾಣುವಷ್ಟು ದೂರ +ಅದಕ್ಹುಟ್ಟಿದ್ದು ಕೆಂಪು ತುಂಬೆ ! +ಮೈತುಂಬಿ ರಸದುಂಬಿಯಾದ ಹಳ್ಳ +ಪಡೆದದ್ದು +ಕಾರ್ಮುಗಿಲ ಪ್ರಾಣದೊಲವ +ತಣ್ಣನೆಯ ಬೆಳ್ಳನೆಯ ಕೊರೆವ ಹಿಮದಪ್ಪುಗೆ +ಆ ಒಳಗು ಬೆಳಗು, ಕರಗನಾವರಿ +ಸಿದ್ದು ಕಡಲು, ಕಂಡಿದ್ದು ಮುಗಿಲು +ಉಳಿದವರು ನಿನ್ನಂತೆ -ನನ್ನಂತೆ +***** +ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […] +ಮೊದಲ ಮಳೆ ಸುರಿದಾಗ ಮನೆಯ ನುಣ್ಣನಂಗಳಕೆಲ್ಲ ಪರಿಮಳದ ಮಾತು ಮುಂಜಾನೆ ಎದ್ದು ಕಣ್ಣುಜ್ಜುತ ಬೆಚ್ಚನೆ ಹಾಸಿಗೆ ಬಿಟ್ಟು ಹೊಸ್ತಿಲಿಗೆ ಬಂದಾಗ ಮೆಟ್ಟಿಲಿನೆತ್ತರಕೂ ಕರಗಿದ ಕಾಗದ ಕಸ ಮಣ್ಣು ಚೂರು ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ […] +ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_224.txt b/Kannada Sahitya/article_224.txt new file mode 100644 index 0000000000000000000000000000000000000000..31a17cf1484790af82c52fefd3f3d135f6005f19 --- /dev/null +++ b/Kannada Sahitya/article_224.txt @@ -0,0 +1,118 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ ಮುಗಿಸಲೇಬೇಕಿದ್ದ ಒಂದಿಷ್ಟು ಕೆಲಸಗಳು.. ಚಿಕ್ಕಪುಟ್ಟ ಹೊಂದಾಣಿಕೆಗಳು.. ಬಟ್ಟೆಬರೆ ಜೋಡಿಸಿಕೊಳ್ಳುವುದು.. ತುಸು ಛೆಂದದ ಸೀರೆಗಳನ್ನು ಆರಿಸಿಕೊಂಡು ಅವಕ್ಕೆ ಗಂಜಿ, ಇಸ್ತ್ರಿ.. ಕೊಡಬೇಕಿರುವ ಬಿಲ್‌ಗಳು, ಬಾಡಿಗೆಹಣ.. ಪ್ರತಿ ಬಾರಿಯಂತೆ. ಅವಳಿಗೆ ಕೆಲವು ಸಲವಚಿತೂ ಥತ್ತೇರಿಕಿ ಹೋಗೋದು ಬೇಡ ಏನೂ ಬೇಡ ಎಲ್ಲಾದ್ರೂ ಛೆಂದ ಕುಳಿತು ಒಂದಿಷ್ಟು ಅತ್ತು ಹಗುರಾಗಿಬಿಡಬೇಕು ಎನ್ನಿಸುತ್ತಿತ್ತು. +ಬಸ್ ನಿಲ್ದಾಣ.. ಕಟ್ಟಡಗಳು.. ಸಿಗ್ನಲ್‌ಗಳು ಎಲ್ಲ ದಾಟಿ ಬಸ್ಸು ನಗರದ ಹೊರವಲಯ ದಾಟುತ್ತಿದೆ.. ಹೆದ್ದಾರಿಯ ದೃಶ್ಯಗಳು ತೆರೆದುಕೊಳ್ಳುತ್ತಿದೆ. ಸಂಜೆಗತ್ತಲಲ್ಲಿ ದಾರಿಯ ಪಕ್ಕದ ಹೊಲಗದ್ದೆಗಳು ಕೆಲವೆಡೆ ಕಪ್ಪು ಹಸಿರಾಗಿ.. ಕೆಲವೆಡೆ ಒಣಗಿ ..ಕೆಲವೆಡೆ ಸೂರ್‍ಯಕಾಂತಿ ಹೂಗಳಿಂದ ಕಂದುಹಳದಿಯಾಗಿ ಕಾಣುತ್ತಿದೆ. ಕಂಡಕ್ಟರ್‌ನಿಗೆ ರಿಸರ್‍ವೇಶನ್ ಟಿಕೆಟ್ ತೆಗೆದು ತೋರಿಸುತ್ತಿರುವಂತೆ ಮಡಿಕೆಯಾಗಿದ್ದ ಪುಟ್ಟ ಕಾಗದ ಕಾಣಿಸಿತು. ಊರಿಗೆ ಹೋಗುವ ಮುಂಚೆ ಅಪ್ಪನಿಗೆ ತೆಗೆದುಕೊಳ್ಳುವ ಎಂದು ಬರೆದಿದ್ದ ನಾಲ್ಕಾರು ಪುಸ್ತಕದ ಹೆಸರು.. ಅಮ್ಮನಿಗೆ ಏನಾದರೂ ತೆಗೆದುಕೊಳ್ಳಲೇ ಬೇಕೆಂದಿದ್ದ ಪಟ್ಟಿ ದುಡ್ಡಿನ ಹೊಂದಾಣಿಕೆಯ ಬೆವರಲ್ಲಿ ಮುದ್ದೆಯಾಗಿ ಪರ್ಸ್‌ನ ಮೂಲೆ ಹಿಡಿದು ಕುಳಿತುಬಿಟ್ಟಿದೆ. +’ಪ್ರತಿಸಲ ಹೀಗೇ ಆಗ್ತಿದೆ.. ಶ್ಯೀ’ +’ಇದಕ್ಕಿಂತ ಒಳ್ಳೆಯ ಕೆಲಸದಲ್ಲಿದ್ದಿದ್ರೆ..’ +’ಆವಾಗ್ಲೇ ಇನ್ನೊಂಚೂರು ಚೆನ್ನಾಗಿ ಓದಿದ್ರೆ…’ +’ಓದುವಾಗ ಯಾರಾದ್ರೂ ಒಂಚೂರು ಮಾರ್ಗದರ್ಶನ ಮಾಡಿದ್ರೆ..’ +’ಒಳ್ಳೆಯ ಕೋರ್ಸ್‌ಗೆ ಸೇರಿಕೊಂಡಿದ್ದರೆ..’ +’ಬೇರೆಯ ಅವಕಾಶಗಳ ಬಗ್ಗೆ ನಾನೇ ಒಂಚೂರು ಯೋಚಿಸಿದ್ರೆ’ +’ಹಳವಂಡಗಳ ಬೆನ್ನತ್ತುವುದನ್ನು ಬಿಟ್ಟು ಕ್ರಿಯಾಶೀಲತೆಯಿಂದ ನನ್ನ ಆಕಾಶ ನಾನೇ ವಿಸ್ತರಿಸಿಕೊಂಡಿದ್ದರೆ..’ +ಈಗ ಹೆದ್ದಾರಿಯಲ್ಲಿ ಭರ್ರನೆ ಸಾಗಿ ಹೋಗುವ ವಾಹನಗಳ ಹೆಡ್‌ಲೈಟ್ ಒಂದೊಂದೇ ವಾಕ್ಯಗಳ ’ರೆ’ ಮೇಲೆ ಬಿದ್ದು ಫಳಫಳನೆ ಹೊಳೆಯುತ್ತಿದೆ. ಕಿಟಕಿಯ ಹೊರಗೆ ಗೆರೆಯಾಗಿದ್ದ ಚಂದ್ರ ಮೆಲ್ಲನೆ ಅಗಲವಾಗುತ್ತ ಇದೀಗ ಅರೆಮುಕ್ಕಾದ ಚಂದ್ರ ಬಿಂಬವಾಗಿದೆ. ಫಕ್ಕನೆ ಅವಳಲ್ಲಿ ಒಂದು ನೆನಪು. ಈ ಸಲವೂ ಹಡಪ ಜೋಡಿಸಿಡುವಾಗ ’ಅದು’ ಸಿಗಲಿಲ್ಲ. ಆಗೀಗ ತನ್ನ ಇಡೀ ಹಳೆಯ ಹಡಪ ಕಿತ್ತು, ಕುಡುಗಿ ಸಮಾ ಜೋಡಿಸಿಡುವಾಗ ಅವಳು ಮರೆಯದೇ ಮುಲೆಮೂಲೆಯನ್ನು ಶೋಧಿಸುತ್ತಿದ್ದಳು. ಒಂದಾನೊಂದು ಕಾಲದಲ್ಲಿ ಬರೆದಿದ್ದ ಡೈರಿಯಂತಿದ್ದ ಆ ಕಥೆ ಯಾವುದಾದರೂ ಮೂಲೆಯಲ್ಲಿ ಇನ್ನೂ ಮೆತ್ತಗೆ ಉಸಿರಾಡುತ್ತಿರಬಹುದೇ ಎಂದು. ಹಾಗೆ ನೋಡಿದರೆ ಅವಳು ಹಡಪ ಜೋಡಿಸಿಡುವುದೇ ಅದನ್ನು ಹುಡುಕಲು. +ಎದುರಿನ ಯಾವುದೋ ವಾಹನದ ಬೆಳಕು ತುಂಬ ಪ್ರಖರವಾಗಿರಬೇಕು. ರಸ್ತೆಯ ಆಚೆ ಗದ್ದೆಯಲ್ಲಿನ ಗೋಧಿ ತೆನೆಗಳು.. ಅದರ ಪಕ್ಕದ ಸೂರ್ಯಕಾಂತಿ ಹೂಗಳು ಹಳದಿಯಾಗಿ ಹೊಳೆದು ಕಣ್ಣೆದುರು ಮೋಹಕ ದೃಶ್ಯವೊಂದು ಅರೆಕ್ಷಣ ತೆರೆದುಕೊಂಡು ಮತ್ತೆ ಮಾಯವಾಯಿತು. ಹರಡಿದ ಹಳದಿ ಬೆಳಕಲ್ಲಿ ಪುಟ್ಟ ಪ್ರಶ್ನೆಯೊಂದು ಮಿಂಚಿತು. +’ಅಂದಹಾಗೆ ಅದು ಡೈರಿಯಂತಿದ್ದ ಕಥೆಯೋ ಅಥವ ಕಥೆಯಂತಿದ್ದ ಖರೇ ಖರೇ ಡೈರಿಯೋ..?’ +ಎಷ್ಟೋ ವರ್ಷಗಳ ಹಿಂದೆ ಬರೆದಿದ್ದು .. ಕಥೆ ಏನಿತ್ತು ಅಂತ ಪೂರ್ಣ ನೆನಪಾಗುವುದೇ ಇಲ್ಲ. ಆದರೂ ಮಣಿಸರದಲ್ಲಿ ಪೋಣಿಸಿದ್ದ ಪುಟ್ಟಪುಟ್ಟ ಮುತ್ತಿನ ಹಾಗಿದ್ದ ಆ ಕೈಬರಹದ ಮಡಿಸಿದ ಹಾಳೆಗಳು ನೆನಪಾದಾಗೆಲ್ಲ ಅವಳು ತೀವ್ರ ಭಾವತೀವ್ರತೆಗೆ ಪಕ್ಕಾಗುತ್ತಾಳೆ. ಹೊರಗಿನ ಚಿಟ್ಟೆ ಮೇಲೆ ಕುಳಿತು ಬರೆದಿದ್ದು.. ಎದುರಿನ ತಂತಿ ಬೇಲಿ.. ಬೇಲಿಗಂಟಿಕೊಂಡಿದ್ದ ಹಾಗೆ ಬೆಳೆದಿದ್ದ ಜಾಜಿ ಕರವೇರದ ಮರಗಳು.. ಬೇಲಿಯಾಚೆಗಿನ ಲೈಟು ಕಂಬ.. ಆ ಮುಸ್ಸಂಜೆಯ ಗಂಧ ಗಾಳಿ ಅವಳನ್ನು ಇವತ್ತಿಗೂ ಗಾಢವಾಗಿ ಆವರಿಸಿಕೊಳ್ಳುತ್ತದೆ. +ಬಸ್ಸು ಈಗ ಸೇತುವೆ ಮೇಲೆ ಹೋಗುತ್ತಿದೆ. ಬಸ್ಸಿನ ಡ್ರೈವರ್ ವೇಗ ಕಡಿಮೆ ಮಾಡಿದ. ಹಾಗೆ ಹೋಗುವಾಗ ಕೇಳಿ ಬರುವ ಬೇರೆಯದೇ ಆದ ಗಾಳಿಯ ಸದ್ದು.. ಸೇತುವೆ ಕೆಳಗೆ ಕೃಷ್ಣೆಯ ನೀರು ಎಷ್ಟಿರಬಹುದು.. ಬಿರು ಬೇಸಿಗೆ ಬೇರೆ ಬತ್ತಿ ಹೋಗಿದೆಯಾ ಎಂಥ… ಅವಳು ಕೆಳಗೆ ಬಗ್ಗಿ ನೋಡಲು ಪ್ರಯತ್ನಿಸಿದಳು. ಈ ಬಸ್ಸಿನ ಬೆಳಕು.. ಎದುರಿನಿಂದ ಬಂದ ವಾಹನದ ಬೆಳಕು ಎರಡೂ ಅರೆಕ್ಷಣ ತಳ ಕಾಣುವಂತೆ ನಿಧಾನ ಹರಿಯುತ್ತಿದ್ದ ಕೃಷ್ಣೆಯ ಮೇಲೆ ಬಿದ್ದು ತುಸುಭಾಗ ನೀರು ಮಾತ್ರ ನಸು ಹಳದಿಯಾಗಿ ಹೊಳೆಯುತ್ತಿದೆ. ಅದರಾಚೆ, ಈಚೆ ಬದಿಯ ನೀರು ಮಂದ ತಿಂಗಳ ಬೆಳಕಿನಲ್ಲಿ ನಸುಕಂದು ಛಾಯೆಯಲ್ಲಿ ಹೊಳೆಯುತ್ತಿದೆ. ಆಗೀಗ ನೆನಪಾಗುವ ಕಥೆಯ ಸಾಲುಗಳು ಹರಡಿದಂತೆ ಸೇತುವೆಯ ಕೆಳಗೆ ಕೃಷ್ಣೆಯ ದೃಶ್ಯ ಮತ್ತು ಮೆಲ್ಲ ಜುಳು ಜುಳು ನಾದ.. ಸಾಲುಗಳು ಅಕ್ಷರವಾಗಿ ತೆರೆದುಕೊಳ್ಳದೇ.. ಅಕ್ಷರದೊಳಗಿನ ಭಾವ ಮಾತ್ರವಾಗಿ ಎದೆಯಾಳಕ್ಕೆ ಇಳಿದಂತೆ ಕೆಳಗೆ ಹರಿಯುವ ತಣ್ಣಗಿನ ಕೃಷ್ಣೆಯಂತೆ ಆತ್ಮವಿಡೀ ಒದ್ದೆ. +ಒದ್ದೆ ಆತ್ಮದಡಿ ತೇವಗೊಳ್ಳುತ್ತಿರುವ ಚಿತ್ರ.. +ಅತ್ತೆ ಮನೆಯಲ್ಲಿ ಓದುತ್ತಿರುವಾಗ ತನಗೆ ಅಪ್ಪನನ್ನು ನೋಡದೆ ಇರುವುದು ಹೇಗೆ ಕಷ್ಟವಾಗುತ್ತಿದೆ ಪೆನ್ಸಿಲ್ ನೋಟ್‌ಪುಸ್ತಕ ಬೇಕಾದಾಗ ಅವರಲ್ಲಿ ಕೇಳುವುದೂ ಎಷ್ಟು ಸಂಕೋಚವೆನ್ನಿಸುತ್ತದೆ.. ಅತ್ತೆ ಮನೆಯಲ್ಲಿ ಎಲ್ಲರ ಪ್ರೀತಿಯಲ್ಲಿ ಬೆಚ್ಚಗೆ ಇರುವಾಗಲೂ ಅಪ್ಪ ಅಮ್ಮನ ಹನಿಪ್ರೀತಿಗಾಗಿ ಮನಸ್ಸು ಎಷ್ಟು ಒದ್ದಾಡುತ್ತೆ, ಅಪ್ಪ ಬಂದಾಗ ಏನೆಲ್ಲ ಮಾತಾಡಬೇಕೆನ್ನಿಸಿದರೂ ಯಾವ ಭಾವವೂ ಶಬ್ದವಾಗದೇ ಒಳಗೊಳಗೇ ನಿರಂತರ ತಲ್ಲಣವಾಗಿ ಪ್ರತೀಕ್ಷೆಯಾಗಿ ಉಳಿದು… +ಇದೀಗ ಕಿಟಕಿಯಲ್ಲಿ ಕಥೆಯ ಪುಟ್ಟ ಹುಡುಗಿ. +ಮತ್ತು ಅರೆಮುಕ್ಕಾದ ಚಂದ್ರಬಿಂಬ ಕಿಟಕಿಯ ಸಮಾ ಎದುರಿಗೆ. +ಮತ್ತು ಹಾಗೆ ಉಳಿದೇಬಿಟ್ಟ ಕನವರಿಕೆ, ಪ್ರತೀಕ್ಷೆ… +ಅರೇ ಹೌದಲ್ಲ ಮನೆಗೆ ವಾಪಾಸಾಗಿ ಕಾಲ್ಭೆಜಿಗೆ ಹೋಗುವ ದಿನಗಳಲ್ಲಿಯು ಇದೇ ಕನವರಿಕೆ, ಇಂಥದೊಂದು ಪ್ರತೀಕ್ಷೆ ಹಾಗೇ ಉಳಿದುಬಿಟ್ಟಿತಲ್ಲ. ಯಾವುದೋ ಹುಡುಗ ಸ್ನೇಹದಿಂದ ನಾಲ್ಕು ಮಾತಾಡಿದ್ದನ್ನು ಅನುಮಾನಿಸಿದ ಅಮ್ಮ.. ಬೆಂಬಲಿಸಿದ ಅಪ್ಪ.. ಸೂಕ್ಷ್ಮ ಕ್ರ್ರೌರ್ಯದಂತಹುದೇನೋ ಬಾಧಿಸಿದ ಹಾಗೆ. ತದನಂತರ ತಾನು ಒಳಗೊಳಗೇ ಅಷ್ಟೆಲ್ಲ ಪ್ರೀತಿಸುವ ಅಪ್ಪನ ಕಣ್ಣಲ್ಲಿ ಬೇರೆಯದೇ ಭಾವ ಇರುವಂತೆ ಭಾಸವಾಗುತ್ತ.. ಸದಾ ಕಣ್ಣೋಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಯಾವ ಪ್ರೀತಿಜಲದ ಅಲೆಗಳು ತಟ್ಟದೆ ಇಡೀ ಜಗತ್ತಿನಲ್ಲಿ ಒಂಟಿಯಾದ ಹಾಗೆ… ವಿಚಿತ್ರವಾಗಿ ಕಾಡುವ ಅಸುರಕ್ಷಿತ ಭಾವ.. ಗಾಢಾಂಧಕಾರದಲ್ಲಿ ಅಗಾಧ ಕತ್ತಲು ತನ್ನ ಮೇಲೆ ಕವುಚಿ ಬಿದ್ದು ಭಯದಿಂದ ಥರಗುಟ್ಟಗುಡತೊಗಿದ ಅದೆಷ್ಟು ರಾತ್ರಿಗಳು.. +ಎದುರಿನಿಂದ ಬರುತ್ತಿರುವ ಒಂದು ದೊಡ್ಡ ಟ್ರಕ್‌ನ ತೀರಾ ಪ್ರಖರ ಎನ್ನಿಸುವಂತಿದ್ದ ಬೆಳಕು.. +ಕಿಟಿಯಾಚೆಗಿನ ಪುಟ್ಟ ಹುಡುಗಿ ಮಾಯವಾದಳು. +ಕಿಟಕಿಯಿಂದ ಬೀಸತೊಡಗಿದ ತಣ್ಣಗಿನ ಗಾಳಿ. ಕಿಟಕಿಯಾಚೆ ಅಲ್ಲೊಂದು ಇಲ್ಲೊಂದು ಮೋಡದ ತುಣುಕಗಳು ಕೆನೆ ಮೊಸರು ಚೆಲ್ಲಿದಂತೆ. ದೂರದಲ್ಲಿ ಯಾವುದೋ ಪಟ್ಟಣದ ದೀಪಗಳು ಸಾಲುಸಾಲಾಗಿ ಮಿನುಗುತ್ತಿದೆ. +ಹಾಗೆ ಶುರುವಾದ ಆ ಪಯಣ ತನ್ನನ್ನು ಯಾವ್ಯಾವುದೋ ತಿರುವಿನಲ್ಲಿ ಹಾದು ಯಾವ್ಯಾವ ಬಿಂದುವಿಗೆ ತನ್ನನ್ನು ಎಳೆತಂದುಬಿಟ್ಟಿತಲ್ಲ.. ಯಾವ ಬಿಂದುವಿನಲ್ಲಿಯೂ ಹುಡುಕಾಟ ಕೊನೆಗೊಳ್ಳಲಿಲ್ಲ. ಯಾವ ಬಿಂದುವೂ ಪೂರ್ಣ ಪರಿಚಿತ ಭಾವ, ಸುರಕ್ಷಿತ ಭಾವ ಹುಟ್ಟಿಸಲಿಲ್ಲ.. +ತಟ್ಟನೆ ಕಿಟಕಿ ಮುಚ್ಚಿ ಸೀಟಿಗೊರಗಿ ಬಿಗಿಯಾಗಿ ಕಣ್ಮುಚ್ಚಿದಳು. +ಕತೆಯ ಹುಡುಗಿಯ ಹುಡುಕಾಟದ ದಿನಚರಿ ಮತ್ತು ಕತೆ ಹೊರಗಿನ ದಿನಚರಿಯಲ್ಲಿ ಹುಡುಗಿಯ ತಪ್ತ ಆತ್ಮದ ಅಲೆದಾಟ.. ಏನೇನೋ ನೆನಪುಗಳು.. ಅಕ್ಷರಗಳ ಸಾಲುಗಳಾಗದೇ ಹಾಗೇ ಉಳಿದ ತುಂಡು ತುಂಡು ಭಾವಗಳು.. ಅವಳೀಗ ನಿಧಾನ ಮಂಪರಿಗೆ ಜಾರಿದಳು. +* +* +* +ಓ ಸವಾರಿ ಯಾವಾಗ ಬಂದಿದ್ದು .. ಬೆಳಗಿನ ಝಾವ ಬಂದಿದ್ದನೇ.. ಎಲ್ಲ ಆರಾಮನೇ.. ಮತ್ತೆಂಥೇ ವಿಶೇಷ.. ಇದು ಎಷ್ಟು ತೊಲದ್ದೇ… ಇಂಥ ಹೊಸಾ ನಮೂನಿದೆಲ್ಲ ಕಪ್ಪಾಗುತ್ತೆ ಮಾರಾಯ್ತಿ… ಈ ಸರ ಇನ್ನೊಂಚೂರು ದಪ್ಪ ಮಾಡಿಸ್ಕೋಬೆಕಿತ್ತೇ.. ಮತ್ತೇನೇನು ತಂಗಂಡೆ.. ಮತ್ತೆ ಈ ಸಲವಾದ್ರೂ ಮದುವೆಯಾಗ್ತೀಯ ಹೆಂಗೆ .. ನಿಂಗೇನು ಸುಮಾರು ಜನ ಪರಿಚಯ ಆಯ್ದ.. ನೀನೆ ನೋಡ್ಕ್ಯಂಬಿಂಡು… +ಪಕ್ಕದ ಮನೆಯ ಭಾಗ್ಯ ಚಿಕ್ಕಿಯ ವಿಚಾರಣೆ ಸಾಗುತ್ತಲೇ ಇದೆ. +ಈಗೆಲ್ಲ ಅಷ್ಟು ದಪ್ಪದ ಸರ ಯಾರು ಹಾಕ್ಕೆತ್ತ.. ಅದೆಲ್ಲ ಮದ್ಲಿನ ಕಾಲ್ದಲ್ಲಾತು.. ಅವಳು ಹಂಗೆ ತಾನೆ ನೋಡ್ಕ್ಯಳಾದಾಗಿದ್ರೆ ಯಾವಾಗ್ಲೋ ಮದ್ವೆಯಾಗ್ತಿದ್ದ.. ಎಲ್ಲ ಕೂಡಿ ಬರಕು ಅಷ್ಟೇ… ಇವಳ ಚುಟುಕಾದ ಉತ್ತರಕ್ಕೆ ಅವಳಮ್ಮ ತುಸುತುಸು ಸೇರಿಸಿ ಮುಂದುವರಿಸ್ತಿದ್ದಾಳೆ. +ಅಲ್ಲಿಯ ನಾಟಕವನ್ನು ಇಲ್ಲಿಯೂ ಮುಂದುವರೆಸುವ ಪಾತ್ರಧಾರಿಯ ರೀತಿ ಅವಳು ಭಾಗ್ಯ ಚಿಕ್ಕಿಯನ್ನು, ಅಮ್ಮನನ್ನು ನೋಡುತ್ತ ಅದೂ ಇದೂ ಮಾತಾಡ್ತಾಳೆ. +ಇವಳ ವಿಚಾರಣೆ ಮುಗಿಸಿದ ಭಾಗ್ಯಚಿಕ್ಕಿ ತನ್ನ ಸೊಸೆಯ ಬಗ್ಗೆ ಒಂದಿಷ್ಟು ದೂರುಗಳನ್ನು ಹೇಳತೊಡಗಿದಳು. ತಾನು ಚಿಕ್ಕವಳಿದ್ದಾಗ ಇದೇ ಭಾಗ್ಯಚಿಕ್ಕಿ ತನ್ನತ್ತೆಯ ಸುದ್ದಿಯನ್ನು ಅಮ್ಮನಿಗೆ ಪಿಸಿಪಿಸಿ ಹೇಳುತ್ತ ಕಣ್ಣುಮೂಗು ಎಲ್ಲ ಒರೆಸಿಕೊಳ್ಳುವುದು ನೆನಪಾಗಿ ಅವಳ ಮೂಗಿನ ಸೊರ್‌ಸೊರ್ ಸದ್ದು ಕೇಳುತ್ತ ತಾನು ಹೇಸಿಗೆ ಪಟ್ಟುಕೊಳ್ಳುತ್ತಿದ್ದದ್ದು ನೆನಪಾಯಿತು. ಸೊಸೆಯ ಸುದ್ದಿಯೂ ಮುಗಿಯಿತು. +ಹೊರಡುವ ಸೂಚನೆಯೇ ಇಲ್ಲದ ಭಾಗ್ಯ ಚಿಕ್ಕಿ ಆರಾಮಾಗಿ ಅಕ್ಕಿ ಮರಿಗೆಯ ಮೇಲೆ ಕೂಲಿತು ಹರಟುತ್ತಿದ್ದಾಳೆ. +ಭಾವ ನಾಳೆ ಬರ್‍ತಾನೇನೆ.. ಹಂಗಾರೆ ಅವಂಗೆ ಮಗಳು ಬಂದಿದ್ದು ಗೊತ್ತಿಲ್ಲೆ ಎಂದಳು. ಮದುವೆಯೊಂದಕ್ಕೆ ಹೋದ ಅವಳಪ್ಪ ನಾಳೆ ಬರುವುದನ್ನು ಇವಳು ಬಂದೊಡನೆ ಹೇಳಿದ್ದನ್ನೇ ಅವಳಮ್ಮ ವಿವರಿಸ ತೊಡಗಿದಂತೆ ಇವಳಲ್ಲಿ ಸಣ್ಣನೆಯ ಮಿಂಚು. ಅರೆ… ಹೌದಲ್ಲ… ಹಾಗಾದ್ರೆ ಇವತ್ತು ಮನೆಯಲ್ಲಿ ತಾನು ಮತ್ತು ಅಮ್ಮ ಇಬ್ಬರೇ ಎಂಬ ಸಂಗತಿ ಈಗ ಬೇರೆ ಆಯಾಮದೊಡನೆ ತೆರೆದುಕೊಳ್ಳತೊಡಗಿತು. +ಆ ಕಥೆ ಇಲ್ಲೇ ಎಲ್ಲಾದ್ರೂ ಅಪ್ಪನ ಹಳೇ ಪುಸ್ತಕಗಳ ಮಧ್ಯೆ ಇದ್ದರೆ ಎಂಬ ಪುಟ್ಟ ಅನುಮಾನ ಫಕ್ಕನೆ ಹುಟ್ಟಿಬಿಟ್ಟಿತು. ಆ ಸನ್ನಿವೇಶದಲ್ಲಿ ಅದಕ್ಕೆ ತೀರಾ ಹೊರತಾದ ರೀತಿಯಲ್ಲಿ ಹುಟ್ಟಿದ ಇಂಥದೊಂದು ಅನುಮಾನ ಸಣ್ಣಗೆ ಪುಳಕವನ್ನೂ ಹುಟ್ಟಿಸಿತು. ಅಪ್ಪ ಮನೆಯಲ್ಲಿ ಇಲ್ಲ ಎನ್ನುವ ಸಂಗತಿ ಕಥೆ ಹುಡುಕುವ ಸಾಧ್ಯೆತೆಯೊಂದನ್ನು ತೆರೆಯುತ್ತಿದೆಯೇ.. ಒಂದು ಹಳೇ ಟ್ರಂಕ್‌ನಲ್ಲಿ ಕಾಲೇಜಿನ ತನ್ನ ಹಳೇ ಪುಸ್ತಕಗಳನ್ನಿಟ್ಟದ್ದು ಈಗಲೂ ಹಾಗೆಯೇ ಇದೆ.. ಅದರೊಳಗೆ ಎಲ್ಲಾದ್ರೂ ಆ ಕಥೆ ಅಡಗಿ ಕುಳಿತಿರಬಹುದೇ ಅಥವಾ ಅಪ್ಪನ ಹಳೇ ಪುಸ್ತಕಗಳ ಮಧ್ಯೆ.. +ಭಾಗ್ಯಚಿಕ್ಕಿ ಮತ್ತು ಅಮ್ಮ ಮನೆಯ ಸುದ್ದಿ ಮುಗಿಸಿ ಕೇರಿಯ ಮತ್ತಾರದೋ ಸುದ್ದಿಗೆ ಹಾರುತ್ತಿದ್ದಾರೆ.. ಇವಳು ಕಸಬರಿಗೆ ಒದ್ದೆ ಬಟ್ಟೆ, ಚಿಕ್ಕ ಬಕೆಟ್ ಹಿಡಿದವಳೇ ಆನು ಮೆತ್ತು ಕಸ ಹೊಡಿತಿ ಎಂದವಳೇ ಮಹಡಿ ಏರತೊಡಗಿದಳು. +ಇವತ್ತಷ್ಟೇ ಬೈಂದೆ ಅಮ್ಮಿ.. ನಾಳೆ ಮಾಡ್ಲಕ್ಕಡೇ ಅಮ್ಮನ ಕಾಳಜಿ +ಮದ್ಲಿನ ಹಾಗೇ ಇದ್ದಾಳಪ್ಪ.. ಖಾಲಿ ಕೂತ್ಗಳ ಪೈಕಿನೇ ಅಲ್ಲ ಅವಳು .. ಪಾಪ ದಿನಾ ನೀನೆ ಮಾಡ್ತೆ ಇವತ್ತಾರೂ ಮಾಡ್ಲಿ ತಗ ಭಾಗ್ಯಚಿಕ್ಕಿಯ ಮೆಚ್ಚಿಗೆ ಬೆರೆತ ಮಾತು ಏಣಿಯೇರುತ್ತಿದ್ದವಳ ಹಿಂಬಾಲಿಸಿತು. +ಅವಳ ಹಳೇ ಟ್ರಂಕ್‌ನಲ್ಲಿ ಕಂದು ಹಳದಿ ಛಾಯೆಗೆ ತಿರುಗಿದ್ದ ನಾಲ್ಕಾರು ನೋಟ್‌ಪುಸ್ತಕ, ಪಠ್ಯಪುಸ್ತಕ ಬಿಟ್ಟರೆ ಮತ್ತೇನೂ ಇರಲಿಲ್ಲ. ಹಳೇ ಪುಸ್ತಕಗಳ ವಾಸನೆಯಲ್ಲಿ ಅದು ಇಲ್ಲ ಎಂಬ ಸತ್ಯ ಮಿಳಿತವಾಗಿರುವಮತೆ ಅನ್ನಿಸುತ್ತಿದ್ದರೂ ಮತ್ತೆ ಮತ್ತೆ ಎತ್ತಿಟ್ಟು, ತಿರುವಿ ಹಾಕಿದಳು. ಕಡೆಗೆ ಆ ಟ್ರಂಕ್ ಬಾಗಿಲು ಮುಚ್ಚಿ ಆಚೆ ಬೇರೆ ಪೆಟ್ಟಿಗೆಯಲ್ಲಿದ್ದ ಅಪ್ಪನ ಹಳೆಯ ಪುಸ್ತಕಗಳನ್ನು ನೋಡತೊಡಗಿದಳು. ಒಂದೊಂದಾಗಿ ಮಗುಚುತ್ತ, ಧೂಳು ಝಾಡಿಸತೊಡಗಿದಳು. ಪುಸ್ತಕಗಳನ್ನು ಕೊಡವುತ್ತ, ಅವುಗಳನ್ನು ತೆರೆದು ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತ, ಮುನ್ನುಡಿ ಬೆನ್ನುಡಿ ಯಾರು ಬರೆದಿದ್ದಾರೆ, ಮೊದಲ ಮಾತು, ನನ್ನ ಮಾತು ಇತ್ಯಾದಿಗಳಲ್ಲಿ ಆ ಬರೆಹಗಾರರು ಏನು ಹೇಳಿದ್ದಾರೆ, ಯಾರ್‍ಯಾರಿಗೆ ಕೃತಜ್ಞತೆ ಹೇಳಿದ್ದಾರೆ, ಅವರಿಗೆ ಹತ್ತಿರದವರು ಯಾರು ಅಂತ ಆ ಬರಹಗಳಲ್ಲಿ ಹೊಳೆಯುವಂತಿದೆಯೇ ಅಂತೆಲ್ಲ ನೋಡತೊಡಗಿದಳು. +ಆ ಕಂದು ಹಳದಿ ಪುಸ್ತಕಗಳಿಗೆ ಅವುಗಳೆದೇ ವಿಶಿಷ್ಟ ವಾಸನೆಯಿತ್ತು. ಆ ಎಲ್ಲ ಪುಸ್ತಕಗಳು.. ಅವುಗಳೊಳಗಿನ ಅಪ್ಪನ ಕೈಬೆರಳ ಸ್ಪರ್ಶ ಎಲ್ಲ ಅತ್ಯಂತ ಪರಿಚಿತ ಎನ್ನಿಸುತ್ತ ಹಳೇ ಪುಸ್ತಕಗಳಲ್ಲಿ ಕಾಣ ತೊಡಗಿದ ಅಪ್ಪನ ಚಹರೆ ತನಗೆ ತೀರ ಹತ್ತಿರದ್ದು ಎನ್ನಿಸುತ್ತ ಅದನ್ನೆಲ್ಲ ಬೆರಳಿಂದ ಮೆಲ್ಲ ತಟ್ಟುತ್ತ್ತಿದ್ದೇನೆ ..ಅರೆ ತಾನು ತೆರೆದುಕೊಳ್ಳಬೇಕಾಗಿದ್ದೇ ಇಂಥ ಕ್ಷಣಗಳಿಗೆ ಎಂಬಂತೆ ಮೋಡಿಗೊಳಗಾದಂತೆ ಕುಳಿತಿದ್ದಳು. ಅದನ್ನು ಪೂರ್ಣ ಜೋಡಿಸಿಡುವಷ್ಟರಲ್ಲಿ ಅವಳಿಗೆ ಬೆವರು ಕಿತ್ತುಕೊಂಡು ಬರಲಾರಂಭಿಸಿತ್ತು. ಜತೆಗೆ ಕುಕ್ಕುರುಗಾಲಲ್ಲಿ ಕುಳಿತಿದ್ದು ಬೇರೆ.. ಅದನ್ನೆಲ್ಲ ನೋಡುವ ಭರದಲ್ಲಿ ತಾನು ಹಾಗೆ ಕುಳಿತಿದ್ದೇನೆ ಎಂಬುದೂ ಅರಿವಿಗೆ ಬಂದಿರಲಿಲ್ಲ. ಈಗ ಮಂಡಿಯೆಲ್ಲ ನೋಯ ತೊಡಗಿ ಎದ್ದು ಹೊರಟವಳಿಗೆ ಪೆಟ್ಟಿಗೆಯ ಪಕ್ಕದ್ದಲ್ಲಿದ್ದ ಇನ್ನೊಂದು ಪುಟ್ಟ ಟ್ರಂಕ್ ಕಾಣಿಸ್ತು. ಅದನ್ನೊಂದು ಜೋಡಿಸಿಟ್ಟುಬಿಡುವ ಎನ್ನಿಸಿ, ಈ ಸಲ ಚಕ್ಕಳಮಕ್ಕಳ ಹಾಕಿ ಕುಳಿತಳು. ಒಂದೊಂದಾಗಿ ಎಲ್ಲ ಪುಸ್ತಕಗಳ ಧೂಳು ಕೊಡವಿ, ತುಸು ತೆರೆದು ನೋಡುತ್ತ ಹೊರಗಿಟ್ಟಳು. ಮೂಲೆಯಲ್ಲಿ ಹಳೇ ನೋಟ್‌ಪುಸ್ತಕವೊಂದು ಕಾಣಿಸಿತು. ಮೇಲಿನ ರಟ್ಟು ತುಂಬ ಶಿಥಿಲಗೊಂಡಿತ್ತು. ಹಿಂದಿನಿಂದ ಪುಟ ತೆರೆದವಳಿಗೆ ತುಂಬ ಪುಟ ಖಾಲಿಯಾಗಿರುವಂತೆ ಕಾಣಿಸಿ ಮೇಲಿನ ಧೂಳು ಝಾಡಿಸಿ ಹಾಗೇ ಇಟ್ಟು ಮುಂದಿನ ಪುಸ್ತಕಕ್ಕೆ ಕೈಹಾಕಿದವಳಲ್ಲಿ ಪುಟ್ಟ ಕುತೂಹಲ…ಅದರಂಚಿಗೆ ಅನುಮಾನದ ಚಿಕ್ಕ ಎಳೆ ಕೂಡ. ನೋಟ್ ಪುಸ್ತಕ ಮತ್ತೆ ತೆಗೆದುಕೊಂಡು ಮೊದಲಿನಿಂದ ನಿಧಾನವಾಗಿ ಪುಟ ತೆರೆಯತೊಡಗಿದಳು. ಮೊದಲೊಂದೆರೆಡು ಪುಟ ಖಾಲಿ.. ನಂತರದ ಪುಟದಲ್ಲಿ ಯಾವುದೋ ಕವಿಯ ಅಪೂರ್ಣ ಕವನದ ಸಾಲುಗಳಂತೆ +ನಾನು ಕರಗಿ ಹೋಗುತ್ತಿರುವೆ.. +ಕಳೆದುಹೋಗುತ್ತಿರುವೆ.. +ಬಸಿದು ಹೋಗಿದೆ ಚೈತನ್ಯ.. +ಕುಸಿದು ಹೋಗಿರುವೆ ಒಳಗೊಳಗೇ.. ಎಂದು ಬರೆಯಲಾಗಿತ್ತು. +ವೇಗವಾಗಿ ಮುಂದಿನ ಪುಟ ತೆರೆದಳು. ಖಾಲಿ ಇತ್ತು. ಮತ್ತೆ ಮುಂದಿನ ಪುಟದಲ್ಲಿ ಒಂದು ಚಿಕ್ಕ ವಾಕ್ಯ.. +ರವಿ ಮೈಸೂರಿಗೆ ಓದಲು ಹೋಗ್ತಿದಾನೆ.. ಹೋಗಲು ಸಾಧ್ಯವಾಗದೇ ನಾನೊಬ್ಬನೇ ಇಲ್ಲಿ +ಅರೆ ಏನಾಯಿತು.. ಅಪ್ಪನಿಗೆ ಸೀಟು ಸಿಗಲಿಲ್ಲವೋ ಅಥವ ಬೇರೆ ಯಾವುದೋ ಸಮಸ್ಯೆ ಇತ್ತೋ.. ಅಂದಹಾಗೆ ಯಾರಿದು ರವಿ.. ರವಿ ರವಿ ಗುಣುಗಣುಸಿದವಳಿಗೆ ಫಕ್ಕನೆ ನೆನಪಾಯಿತು. ಇದೀಗ ತಾನೆ ಯಾವುದೋ ಪುಸ್ತಕದ ಮೇಲೆ ರವಿ ಅಂತ ಹೆಸರು ನೋಡಿದ ಹಾಗಿತ್ತು… ಪಟ್ಟನೆ ಜೋಡಿಸಿಟ್ಟ ಪುಸ್ತಕಗಳಲ್ಲಿ ಮತ್ತೆ ಹುಡುಕಿದಳು. ಹೌದು.. ಒಂದು ಪುಸ್ತಕ ರವಿ ಅಪ್ಪನಿಗೆ ಉಡುಗೊರೆಯಗಿ ಕೊಟ್ಟಿದ್ದ.. ಓ ಹಾಗಾದ್ರೆ ಅಪ್ಪನ ಆಪ್ತ ಸ್ನೇಹಿತ.. ಈಗ ನೋಟ್‌ಪುಸ್ತಕದ ಪ್ರತಿಪುಟವನ್ನೂ ಎಚ್ಚರಿಕೆಯಿಂದ ತೆರೆಯತೊಡಗಿದಳು. ಕೆಲವು ಪುಟ ಖಾಲಿ.. ಕೆಲವೆಡೆ ಚಿಕ್ಕ ಚಿಕ್ಕ ಒಂದೆರಡು ವಾಕ್ಯಗಳು +ರವಿಯಿಂದ ಪತ್ರ ಬಂದಿದೆ. ಅವನಲ್ಲಿ ಬರವಣಿಗೆಯಲ್ಲಿ.. ನಾನಿಲ್ಲಿ ದೊಡ್ಡ ಸೊನ್ನೆ +ಅಣ್ಣ ದುಡ್ಡು ಕಳಿಸಿದ್ದಾನೆ +ರವಿ ಅರಳುತ್ತಿದ್ದಾನೆ.. ಎಂಥ ಖುಷಿಯ ಸಂಗತಿ .. ನಾನಿಲ್ಲಿ ನಾಯಿಯ ಹಾಗೆ ಅಂಡಲೆದುಕೊಂಡಿದ್ದೇನೆ +ಅಣ್ಣನ ಪತ್ರ ಬಂದಿದೆ ಈ ಸಾರಿ ಮುಳುಗಡೆ ಖಚಿತವಂತೆ. +ತರೀಕೆರೆ ಬಳಿ ಜಮೀನು ಕೊಟ್ಟಿದ್ದಾರಂತೆ.. ಅಣ್ಣ ಮುಂದಿನ ವಾರ ಬರ್‍ತೀನಿ, ಇಬ್ಬರೂ ನೋಡಿಕೊಂಡು ಬರೋಣ ಎಂದಿದ್ದಾನೆ +ರವಿ ಇಲ್ಲದೆ ಇಲ್ಲಿಯ ಬದುಕು ನಿಸ್ಸಾರ. ಸಾಹಿತ್ಯ ಓದು ಎಲ್ಲ ಹಿಂದೆ ಸರಿಯುತ್ತಿದೆ +ಅಣ್ಣನೊಬ್ಬನಿಗೇ ನಿಭಾಯಿಸಲು ಕಷ್ಟವಾಗ್ತಿದೆ. ಓದು ಮುಗಿದೊಡನೆ ಹೊಸ ಜಮೀನು ನೋಡಿಕೊಳ್ಳಬೇಕಾಗಬಹುದು. +ರವಿಯ ಪತ್ರ ಕಡಿಮೆಯಾಗಿದೆ. ಹೊಸ ಗೆಳೆಯರು.. ಮುಕ್ತ ಆಗಸ.. ರವಿ ಮೇಲೆ ಮೇಲೆ ಹಾರ್‍ತಿದಾನೆ.. ನನ್ನ ರೆಕ್ಕೆಗಳು ಸುಟ್ಟುಹೋಗಿದೆ ಇಲ್ಲಿ. +ಅಣೆಕಟ್ಟು ಕೊನೆಯಹಂತದಲ್ಲಿದೆ. ಈ ಸಲದ ಮಳೆಗಾಲದಲ್ಲಿ ಮನೆವರೆಗೆ ನೀರು. ಇನ್ನೆರಡು ತಿಂಗಳಲ್ಲಿ ಎಲ್ಲರೂ ತರೀಕೆರೆಗೆ. +ಇನ್ನು ಕಾಲೇಜಿಗೆ ಮಂಗಳ ಹಾಡಿದಂತೆ. +ಅದರಲ್ಲಿದ್ದಷ್ಟು ಇಷ್ಟೇ.. ಮತ್ತು ಉಳಿದದ್ದು ಖಾಲಿ ಪುಟ.. +ಬರೀ ಇಷ್ಟೇನಾ.. ಉಳಿದದ್ದು ನಿಜಕ್ಕೂ ಖಾಲಿಪುಟಗಳೇ..? ಕೆಲವು ಪುಟ ಹರಿದಿರಬಹುದೇ.. ಅದನ್ನು ಕೈಯಲ್ಲಿ ಹಿಡಿದು ಸೂಕ್ಷ್ಮವಾಗಿ ಗಮನಿಸಿದಳು.. ಹೌದು ನಡುನಡುವೆ ಪುಟ ಹರಿದಿದ್ದರ ಗುರುತು ಇದೆ. ಅದಿಷ್ಟು ಹರಿದು ಇಷ್ಟನ್ನು ಇಟ್ಟದ್ದು ಯಾಕೆ.. ಬರೆಯುತ್ತಿದ್ದಂತೆ ಬೇಡ ಎನ್ನಿಸಿ ಹರಿದಿರಬಹುದೇ.. ಹರಿದ ಪುಟದಲ್ಲಿ ದಾಖಲಾದ ಹುಡುಗ ಎಲ್ಲಿ ಮಾಯವಾದ..? ಬರೆದು ಹಾಗೇ ಉಳಿಸಿದ ಈ ಪುಟಗಳಲ್ಲಿಯ ಹುಡುಗ ಬದುಕಿನ ಅದಾವ ಸಂದಿಯಲ್ಲಿ ಕಳೆದುಹೋದ..? ಆ ಹರಿದ ಪುಟಗಳಿಂದ ಮಾಯವಾದ ಹುಡುಗ ಮತ್ತು ಉಳಿದ ಈ ಪುಟಗಳಲ್ಲಿ ದಾಖಲಾಗಿದ್ದ ಹುಡುಗ ಇಬ್ಬರೂ ಅವಳಿಗೆಲ್ಲಿಯೂ ಮುಖಾಮುಖಿಯಾಗಿರಲಿಲ್ಲ. ಅವಳು ಕಂಡ ಅಪ್ಪನ ಭಾವಭಂಗಿ ಚಹರೆಯಲ್ಲಿ ಆ ಯಾವ ಛಾಯೆಯೂ ಕಾಣಿಸಿರಲೇ ಇಲ್ಲ. +ದೇವರೇ ಬದುಕಿನ ಅದಾವ ಮಜಬೂರಿ ಆ ಹುಡುಗನನ್ನು ಹೀಗೆ ಮಾಯವಾಗಿಸಿಬಿಟ್ಟಿತು.. ಅದಾವ ದುರ್ಭರತೆ ಅವನ ಮುಕ್ತ ಆಗಸವನ್ನು, ಅವಕಾಶವನ್ನು ಕಿತ್ತುಕೊಂಡು ಅದಾವ ಬಿಸಿ ಗಳಿಗೆಯಲ್ಲಿ ಅವನ ಆತ್ಮದ ರೆಕ್ಕೆಗಳನ್ನು ಸುಟ್ಟುಹಾಕಿತು..? ಆ ಹಳದಿಕಂದು ಬಣ್ಣದ ನೋಟ್ ಪುಸ್ತಕವನ್ನು ಕೈಯಲ್ಲಿ ಹಿಡುದುಕೊಂಡು ತನಗೆ ಪರಿಚಿತವಾದ ಅಪ್ಪನ ಕೈ ಬರಹವನ್ನು ಮೆಲ್ಲನೆ ಬೆರಳಿಂದ ಸವರುತ್ತ ಅವಳಿಡಿಯಾಗಿ ದ್ರವಿಸತೊಡಗಿ, ಕಣ್ಣಾಲಿಗಳಲ್ಲಿ ನೀರು ತುಂಬಿ ಹಾಗೇ.. ತುಂಬ ಹೊತ್ತು ಹಾಗೇ ಕುಳಿತಿದ್ದಳು. +* +* +* +ಸಂಜೆಗತ್ತಲು ಗಾಢವಾಗುತ್ತ ಮನೆ ಎದುರಿನ ತೋಟದಲ್ಲಿ, ಹಿಂದಿನ ಕಾಡಿನಲ್ಲಿ ರಾತ್ರಿ ಮೆಲ್ಲನೆ ಸೆರಗು ಹಾಸ್ತಿದೆ. ತೋಟದ ಅಡಿಕೆ ಮರಗಳ ಸಂಧಿಯಿಂದ ಮತ್ತೆ ಚಂದ್ರಬಿಂಬ ಗೆರೆಯಂತೆ ಕಾಣುತ್ತಿದೆ. ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಮಸುಕಾಗಿ ಮಿನುಗುತ್ತಿವೆ. ಜೀರುಂಡೆಯ ಸದ್ದು ಕೂಡ ಮೆಲ್ಲನೆ ತೀವ್ರವಾಗುತ್ತಿದೆ. ಅವಳು ಅಂಗಳದಲ್ಲಿ ನಿಧಾನವಾಗಿ ಓಡಾಡುತ್ತ ತನಗೆ ಅತ್ಯಂತ ಪರಿಚಿತಭಾವದ ರಾತ್ರಿಯ ಈ ಗಂಧ ಗಾಳಿಯನ್ನು ಅನುಭವಿಸುತ್ತಿರುವಾಗ ಅಂಗೈಯಲ್ಲಿ, ಕೈ ಬೆರಳಲ್ಲಿ ಆ ನೋಟ್‌ಪುಸ್ತಕದ ಸ್ಪರ್ಶವಿನ್ನೂ ಉಳಿದೇ ಬಿಟ್ಟಿರುವ ಹಾಗೆ. +ಅದಾವ ಸನ್ನಿವೇಶದ ಅದಾವ ಗಳಿಗೆಯಲ್ಲಿ ಅಪ್ಪನ ಆತ್ಮವೂ ಹಿಂದೆ ಸರಿದು ಬಿಟ್ಟಿತು.. ನೋಟ್ ಪುಸ್ತಕದ ಪುಟಗಳಲ್ಲಿ ದಾಖಲಾದ ಹುಡುಗನ ನವಿರು ಚೈತನ್ಯ ಅದಾವುದೋ ಗಳಿಗೆಯಲ್ಲಿ ಆವಿಯಾಗಿದ್ದೇ ತಾನು ಹುಡುಕುತ್ತಿದ್ದ ಆ ಕತೆಯ ಹುಡುಗಿಯ ಹುಡುಕಾಟಕ್ಕೂ ಕಾರಣವಾಗಿಬಿಟ್ಟಿತೇ.. ಆ ಹುಡುಗ ಹಾಗೆ ಆವಿಯಾಗಿರದಿದ್ದರೆ ಬಹುಶಃ ಕಥೆಯ ಪುಟ್ಟ ಹುಡುಗಿಗೂ ತಲ್ಲಣ ತಡಕಾಟಗಳು ಅಷ್ಟಿರದೇ ಅವಳಿಗೂ ಒಂದು ಸುರಕ್ಷಿತ ಭಾವ ಸಿಗುತ್ತಿತ್ತೇ..? ನಡೆದಾಡುತ್ತ ದಣಪೆಯ ಬಳಿ ಬಂದಳು. ಎದುರಿನ ಎತ್ತರದ ಮರದ ಸುತ್ತ ಮಿಂಚುಹುಳಗಳು .. ಫಳ್ ಫಳಕ್ ಎಂದು ನಸುಹಳದಿಗೆಂಪು ಬೆಳಕನ್ನು ಮಿಂಚಿಸುತ್ತ ಕತ್ತಲಲ್ಲಿ ಮಾಯವಾಗುತ್ತಿದೆ. ಅರೆ ಎಷ್ಟೆಲ್ಲ ಹಿಂಸೆ ಅವಮಾನದ ಕ್ಷಣಗಳು.. ಹುಡುಕಾಟದಲ್ಲಿ ಸೋತುಸುಣ್ಣವಾದ ಎಷ್ಟೆಲ್ಲ ಗಳಿಗೆಗಳು.. ಯಾವುದೂ ತನ್ನ ಆತ್ಮದಾಳದ ನಿಜದ ಹುಡುಕಾಟವನ್ನು ಸುಟ್ಟುಹಾಕಲಿಲ್ಲವಲ್ಲ.. ಇದು ಹೀಗೆಯೇ ತನ್ನ ಸಹಜ ತೀವ್ರತೆಯಲ್ಲಿ ಜೀವಂತ ಉಳಿದು, ತನ್ನನ್ನೂ ಎಷ್ಟೆಲ್ಲ ಸೃಜನಶೀಲ ಗಳಿಗೆಗೆ ಪಕ್ಕಾಗಿಸಿದೆಯಲ್ಲ..ಅರೆ ಎಂಬ ಪುಟ್ಟ ಅಚ್ಚರಿಗೆ ಪಕ್ಕಾಗಿ ಅವಳು ನಿಂತೇ ಇರುವಾಗ ಎದುರಿನ ದೊಡ್ಡ ಮರ ಫಳ್‌ಫಳಕ್ ಹಳದಿಗೆಂಪು ಬಣ್ಣದಲ್ಲಿ ಮಿಂಚುಹುಳದ ತೇರಿನಂತೆ ಹೊಳೆಯುತ್ತಿತ್ತು. +* +* +* +ವಾಪಾಸು ಹೋಗುವ ದಿನ ಬರುತ್ತಿದೆ.. ತಾನು ಎಂದೋ ಬರೆದ ಕಥೆಯ ಪುಟ್ಟ ಹುಡುಗಿ.. ತನಗೆ ಸಿಕ್ಕ ನೋಟ್ ಪುಸ್ತಕದ ವಾಕ್ಯಗಳಲ್ಲಿ ತೆರೆದುಕೊಂಡ ಕಥೆ.. ಅದರೊಳಗೆ ತುಸು ದಾಖಲಾಗಿ, ತುಸು ದಾಖಲಾಗದೇ ಒಟ್ಟಾರೆ ವಾಸ್ತವದಲ್ಲಿ ಕಳೆದುಹೋದ ಹುಡುಗ ಮತ್ತು ಇದೀಗ ಸದ್ಯದ ದೈನಂದಿನ ಬದುಕಿಗೆ ತೆರೆದುಕೊಂಡಿರುವ ತಾನು ಮತ್ತು ಅಪ್ಪ.. ಎಲ್ಲ ಒಂದು ಥರ ಕಲಸು ಮೇಲೋಗರವದಂತೆ; ಯಾವುದು ನಿಜ ಯಾವುದು ಭ್ರಮೆ ತಿಳಿಯೇ ಅವಳಿಗೆ ವಿಚಿತ್ರ ಭಾವಗಳಿಗೆ ಪಕ್ಕಾಗಿ ಅಲ್ಲಿ ಇಲ್ಲಿ ನಿಂತುಬಿಡುವಂತಾಗುತ್ತಿತ್ತು. +ಆ ರಾತ್ರಿ ಊಟಕ್ಕೆ ಕೂತಾಗ ಮುಳುಗಡೆ ಆದ ಊರನ್ನು ಇವಳು ನೋಡಿಯೇ ಇಲ್ಲ ಎಂಬ ವಿಷಯ ಅದು ಹೇಗೋ ಮಾತಿನ ನಡುವೆ ತೂರಿ ಬಂದು. ಮುಳುಗಡೆ ಆದ ಸ್ಥಳದಿಂದ ಸ್ವಲ್ಪ ದೂರದ ಹಳ್ಳಿಯಲ್ಲಿ ಇವರ ದಾಯಾದಿಗಳು ಇದ್ದರು. ಅವರು ಯಾವಾಗಲಾದರೂ ಅವಳ ವಿಷಯ ವಿಚಾರಿಸುವುದು, ಅವರ ಮನೆಯಲ್ಲಿ ’ಯಾರ ಉಪನಯನವಾಯಿತು’, ’ಯಾರ ಮದುವೆ ಆಯಿತು’, ’ಬಾಣಂತನ ಆಯಿತು’ ಎಂದು ಅವಳಮ್ಮ ಕಥೆ ಹೇಳುವಾಗ ’ಹೌದ..’, ’ಆಮೇಲೆ ಎಂಥ ಆಯ್ತು…’, ’ಓ ನಂಗೊತ್ತೆ ಇರಲಿಲ್ಲ’ ಎಂಬಂಥ ಪ್ರತಿಕ್ರಿಯೆ ನೀಡುತ್ತಿದ್ದ ಇವಳಿಗೆ ಇದ್ದಕ್ಕಿದ್ದಂತೆ ಮುಳುಗಡೆ ಆದಲ್ಲಿಗೆ ಹೋಗುವ ಹುಕಿ ಬಂದುಬಿಟ್ಟಿತು. ನಾಳೆ ಹೋಪನ ಅಪ್ಪಾ ಎನ್ನುತತಿದ್ದಂತೆ ಅವಳಪ್ಪ, ಅಮ್ಮನಿಗೂ ತುಸು ಉಮೇದು ಬಂದು ಯಾವ ಬಸ್ಸಿಗೆ ಹೊರಡುವುದು ಎಷ್ಟು ಹೊತ್ತಿಗೆ ಎಂದೆಲ್ಲ ನಿರ್ಧರಿಸಿಯೂ ಆಯ್ತು. +* +* +* +ಬೆಳಿಗ್ಗೆ ದಾಯಾದಿ ನೆಂಟರ ಮನೆಯಲ್ಲಿ ಅಣ್ಣಯ್ಯ ತೋರಿಸುತ್ತಿದ್ದ ತೋಟದಲ್ಲಿ ಓಡಾಡುವಾಗಲೂ ಅವಳ ಕಣ್ಣೆಲ್ಲ ತೋಟದಾಚೆ ತುಂಬ ದೂರದಲ್ಲಿ ಮಸಕಾಗಿ ಕಾಣುತ್ತಿದ್ದ ನೀರಿನ ಮೇಲೆಯೇ. +ಮಧ್ಯಾಹ್ನ ಊಟ ಮುಗಿಸಿ ಹೊರಟಾಗ ಅಣ್ಣಯ್ಯನೊಂದಿಗೆ ಅಪ್ಪ ತೋಟದ ಯಾವತ್ತೂ ಆಗುಹೋಗುಗಳ ಕುರಿತು ಮಾತಾಡುತ್ತ ನಡೆಯುವಾಗ ಆಗೀಗ ಫಕ್ಕನೆ ಮೂವತ್ತು ನಲವತ್ತು ವರ್ಷದ ಹಿಂದೆ ಹೋಗುತ್ತಿದ್ದರು. +ಓ ಅಲ್ಲಿ ಕಾಣಿಸುತ್ತಲ್ಲ.. ಆ ಮನೆಗಳು.. ಇಲ್ಲಿಂದ ಅವಾಗ ಇದೇ ರಸ್ತೆಯಲ್ಲಿ ಹೋಗಿ ಆಮೇಲೆ ಬಲಕ್ಕೆ ತಿರುಗಿ ಗುಡ್ಡದ ಬುಡದಲ್ಲೇ ಹೊಗ್ತಿದ್ವಿ… ಹೇಳುತ್ತಲೇ ಒಮ್ಮೆ ಹಾಗೆ ಹೋಗುವಾಗ ಕತ್ತಲಾಗಿ ದಿಕ್ಕು ತಪ್ಪಿ ತುಂಬ ಹೊತ್ತು ಕಾಡಲ್ಲಿಯೇ ತಿರುಗಾಡಿದ್ದನ್ನು, ಒಳಗೊಳಗೇ ಹೆದರಿಕೆಯಾಗಿದ್ದನ್ನು, ಮತ್ತೊಮ್ಮೆ ಗಬ್ಬದ ಎಮ್ಮೆಯೊಂದು ಆಚೆ ಬದಿ ಕಾನಿನಲ್ಲಿ ದಾರಿ ತಪ್ಪಿ ಎರಡು ದಿನವಾದರೂ ಮನೆಗೆ ಬಾರದೆ ಆಮೇಲೆ ಕರು ಜತೆ ಸೋತು ಬಸವಳಿದು ಬಂದಿದ್ದನ್ನು ಹೀಗೆ ಆಗಿನ ಏನಾದರೂ ಘಟನೆಯನ್ನು ವಿವರಿಸುತ್ತಿದ್ದರು. ಅಲ್ಲಿ ಕಂಡ ಯಾವುದೋ ಬೇರು ಮತ್ತಾವುದೋ ಎಲೆಯ ಔಷದಿ ಗುಣವನ್ನ ಹೇಳುತ್ತಿದ್ದರು. ಕಾಡಿನ ಚಿಕ್ಕ ಕಾಲ್ದಾರಿಯಲ್ಲಿ ಹತ್ತಿ ಇಳಿದು ನಡೆಯುತ್ತಿರುವಾಗ ಅಣ್ಣಯ್ಯ ಇಲ್ಲೊಂದು ಚೌಡಿ ಬಣ್ಣ ಇದೆಯಲ್ಲ.. ನಮಸ್ಕಾರ ಮಾಡಿ ಹೋಪನನ ಎಂದ. +ಕಾಯಿ ತಂದಿದ್ರೆ ಒಡ್ಕೊಂಡು ಹೋಗ್ಬಹುದಿತ್ತಲಾ.. ಅವಾಗೆಲ್ಲ ಚೌಡಿಗೆ ಎಷ್ಟು ನಡ್ಕತಿದ್ವಿ ಮಾರಾಯ.. ಈಗ… ಅಪ್ಪ ಮೆಲ್ಲನೆ ನಿಟ್ಟುಸಿರು ಬಿಡುತ್ತಲೇ ನಮಸ್ಕಾರ ಮಾಡಿದರು. ಅಣ್ಣಯ್ಯ ಕೂಡ ಹೂಂ ಎನ್ನುತ್ತ ನಮಸ್ಕಾರ ಮಾಡಿದ. +’ಯಾವ ದೇವರೂ ನಮ್ಮನ್ನು ಉದ್ದಾರ ಮಾಡುವುದು ಅಷ್ಟರಲ್ಲಿಯೇ ಇದೆ.. ಚೌಡಿ ನಮ್ಮನ್ನು ನಿಜವಾಗಿಯೂ ಕಾಯ್ದಿದ್ದರೆ ಏನೆಲ್ಲ ಕಷ್ಟಗಳನ್ನು ಹಾದುಕೊಂಡು ಬರುವಂತಾಗ್ತಿತ್ತೇ..’ ಅವಳ ಮನದಲ್ಲಿ ಎಂದಿನ ಹಾಗೆ ಚಿಕ್ಕ ಚಿಕ್ಕ ವಾಕ್ಯಗಳು. ತಾನು ಸುಮ್ಮನೆ ನಿಂತಿದ್ದರೆ ಅಪ್ಪನ ಮನಸ್ಸಿಗೆ ಬೇಸರವಾಗುತ್ತೆ ಎನ್ನಿಸಿ ಒಂದು ಸುತ್ತು ತಿರುಗಿ ಕಣ್ಮುಚ್ಚಿ ನೆಲಕ್ಕೆ ಹಣೆಯೂರಿದವಳ ಕಣ್ಣಿನಲ್ಲಿ ನಿಜಕ್ಕೂ ಏನಿತ್ತು? +ಅಲ್ಲಿಂದ ತುಸು ಕೆಳಗೆ ನಡೆದರು. +ಮೊದಲು ಅಲ್ಲಿ ತೋಟ ಇತ್ತು. ಮನೆ ಅಲ್ಲೇ ಒಂಚೂರು ಮೇಲೆ.. ಆ ಕಡೆಯಿಂದ ಸಣ್ಣಕ್ಕೆ ನೀರು ಹರಿದು ಬರ್‍ತಿತ್ತು. ಮಳೆಗಾಲದಲ್ಲಿ ಭಾರಿ ಜೋರು ಮಾರಾಯ. ಮನೆ ಎದ್ರಿಗೇ ಆಗ್ತಿತ್ತಲಾ ಹಂಗಾಗಿ ಅದನ್ನ ದಾಟಕ್ಕೆ ಅಂತ ಎನ್ನಪ್ಪ ಇಲ್ಲಿ ಸಂಕದ ಹಾಕಿದ್ದ. ಮುಳುಗಡೆ ಆದಮೇಲೆ ಎಷ್ಟು ಕೀಳಕ್ಕೆ ಬತ್ತು ಅಷ್ಟು ನಾಟ ತಗಂಡ್ಹೋಗಿ ಅಲ್ಲಿ ಮನೆ ಮಾಡಿದ್ದಾತು. ಮುಳುಗಡೆ ಆದಮೇಲೂ ಎರಡು ಮೂರು ವರ್ಷ ಫಸಲು ಕೈಗೆ ಸಿಕ್ತು. ಆವಾಗ ಇಲ್ಲಿ ಹಂಗೇ ಒಂದು ಲಾಯದ ಥರ ಮನೆ ಮಾಡಿದ್ದ. ಅಪ್ಪ, ಅಮ್ಮ ಇರ್‍ತಿದ್ದ. ಒಂದೆರಡು ದನಕರು ಅಷ್ಟೇ ಕಟ್ಕಂಡಿದ್ದ. ಆ ಲಾಯದ ಎದುರು ಬಾಗಿಲು ಇಲ್ಲೇ ಇತ್ತು ಆ ಕಡಿಗೆ ಕೊಟ್ಟಿಗೆ. ಹೋಗಿ ಬರೋ ದಾರಿ ಇದೇ ಆಗಿತ್ತು. +ಅವಳಪ್ಪ ಇವರಿಬ್ಬರನ್ನೂ ಕರೆದುಕೊಂಡು ಹೋಗಿದ್ದು ಬರಿಯ ಜಾಗ ತೋರಿಸಲಿಕ್ಕೆ ಮಾತ್ರವಾಗಿರಲಿಲ್ಲ. ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಬದುಕಿನ ಒಂದು ಝಲಕ್, ಒಂದು ದೃಶ್ಯದ ತುಣುಕು ಅಪ್ಪನ ಶಬ್ದಗಳಲ್ಲಿ ಫಳಕ್ಕನೆ ಮೂಡಿ ಮರೆಯಾಗತಿತ್ತು. ಲಾಯ ಇತ್ತು ಎಂದು ವರ್ಣಿಸಿದ ಸಪಾಟಾದ ಜಾಗದಲ್ಲಿ ಅಲ್ಲೊಂದು ಇಲ್ಲೊಂದು ಬಿಕ್ಕೆ ಗಿಡ, ಲಂಟಾನ ಪೊದೆಗಳು, ಕೌಳಿಮಟ್ಟಿ, ಮತ್ತಿ ಮರ ಇತ್ತು. ಮನೆ ತೋಟ ಇತ್ತು ಎಂದು ತೋರಿಸಿದ ಜಾಗದಲ್ಲಿ ನೀರು ಮಾತ್ರ ನಿಂತಿತ್ತು. ಅವಳಪ್ಪ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಬದುಕನ್ನು ಮೆಲ್ಲನೆ ಸ್ಪರ್ಶಿಸುತ್ತಿರುವಚಿತೆ ಅದರೆಲ್ಲ ಭಾವಭಾವನೆಗಳಿಗೆ ಪಕ್ಕಾದವರಂತೆ ತುಸು ಭಾರವಾದ ದನಿಯಲ್ಲಿ ಹೇಳುವಾಗ ಇವಳು ಅಣ್ಣಯ್ಯನಿಗೆ ಬರಿದೇ ಹೂಂಗುಡುವುದು ಮಾತ್ರ ಸಾಧ್ಯವಾಗುತ್ತಿತ್ತು. ಅಪ್ಪ ಹೇಳಿದ ಮಾತನ್ನು ಅನುಸರಿಸಿ ಆ ಜಾಗದತ್ತ ನೋಡಿದರೆ ಅಲ್ಲಿ ಏನೂ ಇರಲಿಲ್ಲ. ಆದರೆ ಅದನ್ನು ಕೇಳುತ್ತ ಅರೆಕ್ಷಣ ಕಣ್ಮುಚ್ಚಿದರೆ ಮಾತ್ರ ವರ್ಷಗಳ ಹಿಂದಿನ ಬದುಕು ಮಿಂಚಿ ಮಾಯವಾಗುತ್ತಿತ್ತು. +ಅಲ್ಲಿಂದ ಮತ್ತೆ ಸ್ವಲ್ಪ ಕೆಳಗೆ ಇಳಿಜಾರಿನಲ್ಲಿ ನಡೆದು ನೀರು ನಿಂತ ಕಡೆ ಬಂದರು. ಎರಡೂ ಕಡೆ ಎತ್ತರದ ಜಾಗದಲ್ಲಿ ದಟ್ಟ ಕಾಡು… ನಡುವೆ ಅಗಳದಲ್ಲಿ ಕಣಿವೆಯಲ್ಲಿ ಹಿನ್ನೀರು ಆವರಿಸಿ ನಿಂತಿತ್ತು. ಕಡುಹಸಿರಿನ ಮಧ್ಯದ ನೀರು ನೀಲ ನೀಲ.. ಅದಕ್ಕೂ ದೂರದಲ್ಲಿ ಬೆಟ್ಟಗುಡ್ಡವನ್ನು, ನೀರನ್ನು ಸ್ಪರ್ಶಿಸುತ್ತಿರುವ ಆಗಸ ಕೂಡ ನೀಲನೀಲ. ಅದೆಂಥಹ ಮಾಂತ್ರಿಕ ಮೋಹಕತೆಯ ದೃಶ್ಯವಾಗಿತ್ತೆಂದರೆ ಹಾಗೆ ನೀರಿಗೆ ಎದುರಾಗಿ ಬಂದು ನಿಲ್ಲುತ್ತಲೇ ಮೂರು ಜನರೂ ಮಾತು ಹೊರಡದೇ ಸುಮ್ಮನೆ ನಿಂತು ಬಿಟ್ಟರು. +ಈ ನೀಲನೀಲದಡಿಯಲ್ಲಿ ಮುಳುಗಡೆಯಾಗಿದ್ದು ಬರಿಯ ಮನೆ, ತೋಟ, ಕಾಡು ಮಾತ್ರವಾಗಿರಲಿಲ್ಲ. ಅದರೊಂದಿಗೆ ಸಮ್ಮಿಳಿತವಾಗಿದ್ದ ಅಷ್ಟೆಲ್ಲ ಕುಟುಂಬಗಳ ಬದುಕು.. ಸುತ್ತಣ ಚರಾಚರದೊಂದಿಗೆ ಬೆರೆತಿದ್ದ ಭಾವಭಾವನೆಗಳು.. ಮೂರ್ತ‌ಅಮೂರ್ತ ಸಂಬಂಧಗಳು ಎಲ್ಲವೂ ಮುಳುಗಿತ್ತು. ಮುಳುಗಿದ್ದು ಇಷ್ಟು ಮಾತ್ರವಾಗಿರಲಿಲ್ಲ.. ಬಹುಶಃ ಅಪ್ಪನ ನೋಟ್‌ಪುಸ್ತಕದೊಳಗಿನ ಹುಡುಗನ ಆತ್ಮವೂ ಆಳದಲ್ಲಿ ಮುಳುಗಿ ಹೋಗುವಂತಹ ಸನ್ನಿವೇಶಗಳು ಸೃಷ್ಟಿಯಾಗಿಬಿಟ್ಟಿತ್ತೇ… ಇದು ಮಾತ್ರ ಅಷ್ಟು ಸುಲಭವಾಗಿ ಅವಳ ಗ್ರಹಿಕೆಗೆ ಸಿಗುವಂತಿರಲಿಲ್ಲ. +ಈ ಸಲ ನೀರು ಅಷ್ಟು ಹೆಚ್ಚು ಬಂದಿಲ್ಲ. ಮಳೆ ಕಡಿಮೆ ಆತಲ್ಲ ಅದಕ್ಕೇ.. ಮದ್ಲಿನಂಗೆ ಕಾಡೂ ಇಲ್ಲ.. ಮಳೇನೂ ಇಲ್ಲ… +ಅಣ್ಣಯ್ಯ ವಿವರಿಸುತ್ತಿದ್ದಾನೆ. +ಭರ್‍ತಿ ನೀರು ಬಂದರೆ ಅಲ್ಲೀವರೆಗೆ ಬತ್ತು ಅಲ್ದನಾ ಅವಳಪ್ಪ ಗುರುತಿನ ಕಲ್ಲೊಂದನ್ನು ತೋರಿಸಿ ಹೇಳಿದರು. ಅವರಿಬ್ಬರೂ ಹಾಗೆಯೇ ಲೋಕಾಭಿರಾಮ ಮಾತಿಗೆ ತೊಡಗುತ್ತಿದ್ದಂತೆ ಅವಳು ಅವರಿಂದ ಸ್ವಲ್ಪ ದೂರ ಆಚೆ ಹೋಗಿ ನೀರಿನಲ್ಲಿ ಕಾಲು ಇಳಿಬಿಟ್ಟುಕೊಂಡು ಬಂಡೆಯ ಮೇಲೆ ಕುಳಿತಳು. ತಣ್ಣಗಿನ ನೀರು.. ಆಗೀಗ ತುಸು ಜೋರಾಗಿ ಗಾಳಿಗುಂಟ ಬರುವ ನೀರಿನ ಅಲೆಗಳು. +ಈ ನೀರಲ್ಲಿ ಮೂವತ್ತೈದು ವರ್ಷಗಳ ಹಿಂದಿನ ನೀರಿನ ಕಣಗಳೂ ಇರಬಹುದೇ.. ಈ ನೀರಿನ ಕಣಗಳಲ್ಲಿ ಆಗಿನ ಅಪ್ಪನನ್ನು ನೋಡಿದ ನೀರಕಣಗಳೂ ಇರಬಹುದೇ.. ಅವಳಿಗೆ ಕಣ್ಣು ತುಂಬಿ ಬರತೊಡಗಿತ್ತು. ಕಣ್ಣಿನಿಂದ ನೀರಹನಿಗಳು ಕಾಲ ಕೆಳಗಿನ ನೀರಿಗೆ ಬಿದ್ದು ಕಣ್ಣೀರು ಹಿನ್ನೀರಿಗೆ ಸೇರುತ್ತಿರುವ ಗಲಿಗೆಯಲ್ಲಿ ಸಂಜೆಯಾಗುತ್ತಿದೆ. ಮೋಡದ ಮರೆಯಲ್ಲಿರುವ ಸೂರ್ಯನ ಬೆಳ್ಳಿಬೆಳಕಿನ ರೇಖೆಗಳು ನೀರ ಮೇಲೆ ಪ್ರತಿಫಲಿಸುತ್ತಿದೆ. ಅಲೆಗಳು ಬೆಳ್ಳಗೆ ಹೊಳೆಯುತ್ತಿವೆ. +ಅರೆ ಎಂಥ ಅದು ಅಲೆಗಳ ಮೇಲೆ ಬೆಳ್ಳಿ ರೇಖೆಯಂತೆ ಮಿಂಚಿದ್ದು… ಸೂರ್ಯನ ಕಿರಣ ಮಾತ್ರವೇ.. ಊಹೂಂ… ಬರಿಯ ಕಿರಣಗಳಲ್ಲ… ಶಬ್ದಗಳಿಗೆ ಸರಿಯಾಗಿ ನಿಲುಕದ ಭಾವವೊಂದು ರೇಖೆಯಂಚಿನಲ್ಲಿ ಹೊಳೆಯುತ್ತಿದೆ. ಎಷ್ಟೆಲ್ಲ ಬದುಕು ಮುಳುಗಿ ಹೋಗಿರುವುದನ್ನು ನೋಡಿದ ಈ ನೀರಿನ ಕಣಗಳು ತಾನೊಂದು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿರುವುದುಕ್ಕೂ ಸಾಕ್ಷಿಯಾಗುತ್ತಿದೆಯೇ… ಏನೆಲ್ಲದರ ನಡುವೆಯೂ ತನ್ನೊಳಗಿನ ಚೈತನ್ಯವನ್ನು ಕಾಪಿಟ್ಟುಕೊಳ್ಳಲು ತಾನು ನಡೆಸುವ ಸಂಗರ್ಷಕ್ಕೂ ಸಾಕ್ಷಿಯಾಗುತ್ತಿದೆಯೇ..’ +ಲೋಕಾಭಿರಾಮ ಮಾತಿನಲ್ಲಿ ಮುಳುಗಿದ್ದ ಅಣ್ಣಯ್ಯನೊಂದಿಗೆ ಅಪ್ಪ ಕತ್ಲಾಗ್ತಿದ್ದು. ಇನ್ನು ಹೋಪನ. ಕೊನಿಗೆ ರಸ್ತೇನೂ ಕಾಣದಿಲ್ಲೆ ಎನ್ನುತ್ತ ಎದ್ದರು. +ಅಣ್ಣಯ್ಯ, ಅಪ್ಪ ಇಬ್ಬರೂ ಕರೆಯುತ್ತಿದ್ದರೆ ಅವಳು ಧ್ಯಾನಸ್ಥಳಂತೆ ಕುಳಿತೇ ಇದ್ದಾಳೆ. +ಮತ್ತೆ ಮುಂದಿನ ವರ್ಷ ಬಂದಾಗ ಬಪ್ಪನ. ಈಗ ಬಾರೆ ಹೋಪನ +ಮತ್ತೆ ಬರ್‍ತೇವೆ ಎಂಬಂಥ ಭರವಸೆಯಲ್ಲಿ ಅಣ್ಣಯ್ಯ ನಸುನಗುತ್ತಿದ್ದಾನೆ. +ನೀರ ಮೇಲೆ ಮೃದುವಾಗಿ ಹಾಯ ತೊಡಗಿದ ತಂಗಾಳಿ.. ಆಗಸದಂಚಿನಿಂದ ಮೆಲ್ಲಮೆಲ್ಲಗೆ ಹಸಿರು ಕಾಡಿಗೆ ಇಳಿಯತೊಡಗಿದ ಕತ್ತಲು.. ಕಣ್ಣೆದುರಿನ ಅಗಾಧ ಹಿನ್ನೀರು.. ಹಿನ್ನೀರಿನಲ್ಲಿ ಮುಳುಗಿದ ಕಣ್ಣಳತೆಗೆ ಸಿಗದ ಸಂಗತಿಗಳು.. ಕಾಡಿನಾಚೆ ದೂರದಲ್ಲೆಲ್ಲೋ ಉಸಿರಾಡುತ್ತಿರುವ ನಾಗರಿಕ ಜಗತ್ತಿನಿಂದ ಆ ಕ್ಷಣದಲ್ಲಿ ಪ್ರತ್ಯೇಕಗೊಂಡಂತೆ ದಡದಲ್ಲಿ ನಿಂತ ತಾವು ಮೂವರು.. ಅವಳಿಗೇಕೋ ವಿಚಿತ್ರ ಅಚ್ಚರಿಯೆನ್ನಿಸಿತು. ಹಿನ್ನೀರಿನೆಡೆಯಿಂದ ಬಸ್ಸು ಬರುವ ಟಾರ್ ರಸ್ತೆಯತ್ತ ಇವರನ್ನ ಕರೆದೊಯ್ಯಲಿರುವ ಕಾಲುದಾರಿ ಮಲಗಿದೆ ಸದ್ದಿಲ್ಲದೆ. +’ಇದೀಗ ತಾನೆ ನೀರಿನ ಮೇಲೆ ಅಮೂರ್ತವಾಗಿ ಮಿಂಚಿದ ಭಾವನೆಯ ತುಣುಕೊಂದನ್ನು ಮೂರ್ತವಾಗಿಸುವ ಆತ್ಮವಿಶ್ವಾಸದತ್ತ ಈ ಕಾಲುದಾರಿ ತನ್ನನ್ನು ಕೊಂಡೊಯ್ಯಲಿದೆಯೇ…’ +ಮರಳ ದಡದಿಂದ ಕಾಲುದಾರಿಯತ್ತ ಸಾಗಿದ ಅಪ್ಪ ಅಣ್ಣಯ್ಯನ ಹಿಂದೆ ಹೆಜ್ಜೆ ಹಾಕತೊಡಗಿದಳು. ಗಾಢವಾಗುತ್ತಿರುವ ನಸುಗ್ತತಲಲ್ಲೂ ಇವರ ಕಣ್ಣಿಗಷ್ಟೇ ಕಾಣುವಂತೆ ಇವರು ಕಾಲಿಟ್ಟಲ್ಲಿ ಕಾಲುದಾರಿ ತೆರೆದುಕೊಳ್ಳತೊಡಗಿತು. +***** +ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. […] +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_225.txt b/Kannada Sahitya/article_225.txt new file mode 100644 index 0000000000000000000000000000000000000000..5ea436af9eda6bad3548de552e7c4937169f796d --- /dev/null +++ b/Kannada Sahitya/article_225.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ +ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, +ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ +ದೇಹ ರೋಮಾಂಚಿತವು ಎದೆಯ ರನ್ನೆ. +ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು +ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; +ಬೇರಿಂದ ಕೊನೆವರೆಗು ರಸವೀಂಟಿ ಹಬ್ಬುವದು +ನಿನ್ನ ಪ್ರೇರಣೆ ಕರುಣೆ-ಕಣ್ಣ ಸನ್ನೆ, +ನಿನ್ನ ಕಣ್ಣೆರಡರಲಿ ಸೃಷ್ಟಿ ಮರುಬಿಂಬಿಸಿದೆ +ಬೆಳಕಿನೈಸಿರಿಯಲ್ಲಿ ಸೆರೆಯಾಗಿದೆ; +ಮುತ್ತುರತ್ನದ ಕಾಂತಿ, ಬಾನ ನೀಲಿಮೆ- ಶಾಂತಿ +ನವಿಲುಗರಿ ಎವೆಗಳಲಿ ಮರೆಯಾಗಿದೆ. +ಶಶಿಕಾಂತ ಮೇಘದೊಲು ಕವಿಬದುಕ ಸಿಂಗರಿಸಿ +ಎದೆಯೊಲುಮೆ ತಂಪೆರೆಯೆ ಸಮ್ಮೋಹದಿ, +ಅವನ ಬಾಳಿನ ನೋವು ನಲಿವುಗಳೆ ಹಾಡಾಗಿ +ಜೇನಾಗಿ ಪುಟಿಯುವವು ನವರಾಗದಿ. +ಅವನ ಪ್ರತಿಭೆಯ ಹೂವನರಳಿಸುವ ಬೆಳಕಾಗಿ +ಅವನ ದುಃಖದ ಕಡಲ ನಾವೆಯಾಗಿ, +ಅವನ ನೈರಾಶ್ಯದಾಕುಂಚನಕೆ ಮಿಂಚಾಗಿ +ಅವನದೆಲ್ಲಕು ನೀನ ಸ್ಫೂರ್ತಿಯಾಗಿ- +ನಿನ್ನ ಬಿಗಿಯಪ್ಪುಗೆಗೆ ದೈತಭಾವವನುಳಿದು +ನಿನ್ನಧರ ಜೇನುಂಡು ಮತ್ತನಾಗಿ, +ಭಾವರತಿ ಸೌಖ್ಯಪೀಯೂಷರಸವಶನಾಗಿ +ವಿಶ್ವಗೀತವನುಲಿವ ಹಕ್ಕಿಯಾಗಿ. +ಎಂದಾದರೊಮ್ಮೆ ನೀ ಬಂದು ಮರೆಯಾಗುತಿಹೆ +ಸಂಜೆ ಮುಗಿಲಿನ ಸ್ವರ್ಣವರ್ಣದಂತೆ; +ಬಂದೆದೆಯ ಕದ ತೆರೆವೆ ಚೇತರಿಸಿ ಹಾಡಿಸುವೆ +ಕಳೆಗೂಡುವೆ ಹೊಸಮಳೆಯ ಸಳಕಿನಂತೆ. +ಹೂತಳೆದ ಬಳ್ಳಿಗೊನೆ, ನಳನಳಿಪ ಅರಳಿಯೆಲೆ +ಗಾಳಿಯೂದಲು ತಾನೆ ಪಟಪಟಿಸುವಂತೆ, +ನಿನ್ನ ಬರವಿಗೆ ಹೃದಯ ವೀಣೆ ತಂತಿಗಳೆಲ್ಲ +ಮಿಡಿದು ನುಡಿಗೊಳ್ಳುವವು ಎಂದಿನಂತೆ. +ಭಾವಗಡಲಿನ ತೆರೆಗಳೋಳಿಯಲಿ ಕಲ್ಪನೆಯ +ಕಿರಣನಟಿ ಕುಣಿದು ಕುಪ್ಪಳಿಸುತಿರಲು +ರಾಗರಸಪಾಕದಲಿ ಛಂದೋವಿಲಾಸದಲಿ +ಕಮನೀಯ ಕವಿತೆ ತಾ ಕಣ್ಣೆರೆವಳು. +ಲಕ್ಷನಕ್ಷತ್ರಗಳ ಥಾಳಥಳ್ಯವ ಹಿಡಿದು +ಬಿರುಗಾಳಿ ಜಲಪಾತದಬ್ಬರವ ಸೆಳೆದು, +ಜೀವನದ ಕುಲಿಮೆಯಲಿ ಕಿಲ್ಮಿಷಾಮಿಷ ಸುಟ್ಟು +ರನ್ನಪುತ್ಥಳಿಯಾಗಿ ಎರಕಹೊಯ್ದು – +ಸುಖದುಃಖ ಆಸೆ ಆಕಾಂಕ್ಷೆಗಳ ಜೇವೊಡೆದು +ಬಾಳಹೊಂಗನಸಿನಲಿ ರೂಹುವಡೆದು, +ಮೋಡಗಳ ಕರುಮಾಡದಲ್ಲಿ ದಿವ್ಯಾತ್ಮದಲಿ +ಕರೆಯುವನು ಕವಿ ಜನದ ಮೇಲೆ ವಡೆದು. +ಸ್ಫೂರ್ತಿಸುಂದರಿ ರಸೋನ್ಮಾದಿನಿಯು, ಚಂಚಲೆಯು +ಕಟ್ಟುಕಟ್ಟಳೆಗೆಲ್ಲ ಸಿಲುಕದವಳು; +ಜೀವನದ ವಿವಿಧಾಂಗ ರಂಗದಲಿ ಮೈಮರೆತು +ನಿಂತಿರಲು ಅರಿಯದೆಯೆ ಮಿಂಚಿ ಬಹಳು. +***** +ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […] +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […] +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_226.txt b/Kannada Sahitya/article_226.txt new file mode 100644 index 0000000000000000000000000000000000000000..878b8dfc5c1ffc5ec298cdf4d8f2e3a482c59273 --- /dev/null +++ b/Kannada Sahitya/article_226.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ +ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ +ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ +ಪ್ರೀತಿ ಹೇಳಿತು: ದಾರಿ ಇದೆ ಅಲ್ಲೊಂದು, ನಾನೇ ಹೋಗಿದ್ದುಂಟು +ತರ್ಕ ಸಂತೆ ಸೇರಿಸಿತು, ಶುರುವಾಯಿತು ವ್ಯಾಪಾರ +ಅದರಾಚೆಗೆ ಕೂಡಿತು, ಪ್ರೇಮದ ಸಂತೆಗಳ ಮಹಾಪೂರ +ಪ್ರೇಮದಾತ್ಮದೊಳಗೆ ಅಡಗಿದ್ದ ಅನುಭಾವಿ ಹಲ್ಲಜ್ ನೂರ್ಮಡಿಸಿ +ಏಣಿ ಹತ್ತಿ ಎಲ್ಲಿಗೊ ಆಯ್ತು ಪಯಣಿಸಿ +ತಳಮಟ್ಟ ಕುಡಿದ ಉನ್ಮತ್ತ ಅಂತರಂಗ +ಕಂಡಿತು ಕನಸು ಅಲ್ಲಿ ಕಪ್ಪು ತರ್ಕದ ನೇತಿಯ ರಣರಂಗ +ತರ್ಕ ಹೇಳಿತು, ಕಾಲಿಡಬೇಡ ಇಲ್ಲಿ ಈ ಬಯಲಲ್ಲಿ ಬರೀ +ಮುಳ್ಳು, ಪ್ರೀತಿ ನುಡಿಯಿತು – ಇಲ್ಲ ಈ ಮುಳ್ಳು ನಿನ್ನ ತರ್ಕದ ದಾರಿ +ಶ್, ಮೌನ, ಹೃದಯ ಪಾದಕ್ಕೆ ಚುಚ್ಚಿರುವ ಮುಳ್ಳು ಕೀಳು +ಅಂತರಂಗದೊಳಗೆ ಅರಳಲಿ ಗುಲಾಬಿಯ ಸಾಲು +ಶಂಸ್, ಶಬ್ದಗಳ ಮೋಡದ ನಡುವೆ ನೀನು ಸೂರ್ಯ +ಆ ಸೂರ್ಯ ಬಂದಾಗ ಎಲ್ಲ ಶಬ್ದಕ್ಕೆ ಸಹಜ ವಿದಾಯ +***** +ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_227.txt b/Kannada Sahitya/article_227.txt new file mode 100644 index 0000000000000000000000000000000000000000..045a490c7a119dc9a1fd59566855a31ff9d82761 --- /dev/null +++ b/Kannada Sahitya/article_227.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ ಒಂದು ಫೋಟೋ ಮತ್ತು ಸಂದರ್ಶನ ಕೂಡ ಬರುತ್ತಿರಲಿಲ್ಲ. ಅಂದು ಕಾನಿಷ್ಕ ಹೋಟೆಲ್ ಬಳಿ ಸಿನಿಮಾದಲ್ಲಿ ಅವಕಾಶಕ್ಕೆ ಕೈಚಾಚಿ ಹಪಹಪಿಸುತ್ತಿದ್ದ ವ್ಯಕ್ತಿಗಳಲ್ಲಿ ಜಗ್ಗೇಶ್ ಸಹಾ ಒಬ್ಬರು. ಆದರೆ ಈ ಹಠಮಾರಿ ಗಾಂಧೀನಗರದ ಚಕ್ರವ್ಯೂಹ ಭೇದಿಸಿದ ಯಾವ ಗಾಡ್‌ಫಾದರ್‍ ನೆರವಿಲ್ಲದೆ. +ಇಂದು ಜಗ್ಗೇಶ್ ಸೆಟ್ ಮೇಲೆ ಏನೇ ಮಾಡಿದರೂ ಶುಕ್ರವಾರದ ಸಿನಿಮಾ ಸಂಚಿಕೆಗಳಲ್ಲಿ ಕಲರ್‌ಫೋಟೊ ಸಮೇತ ಬರುತ್ತದೆ. ಎಷ್ಟಾಗಲೀ ಶಂಖದಿಂದ ಬಂದರೇ ತೀರ್ಥ ಅಲ್ಲವೆ. +ಮೊನ್ನೆ ಆದದ್ದೂ ಅದೇ. ಜೇಡ್‌ಗಾರ್ಡನ್‌ನಲ್ಲಿ ‘ರುಸ್ತುಂ’ ಶೂಟಿಂಗ್ ನಡೆದಿತ್ತು. ನಾಯಕಿ ಸ್ವಾತಿ ಕುಣಿಯಲನುವಾಗುತ್ತಿದ್ದಳು. ನರ್ತಕಿಯರ ಹಿಂಡು ನೃತ್ಯದ ರಿಹರ್‍ಸಲ್ ನಡೆಸಿದ್ದರು. ಜಗ್ಗೇಶ್ ಮೊದಲು ಮಾತಿಗೆ ಸಿಕ್ಕರು. ಇಂದಿನ ಕಾಲೇಜ್ ಯುವಕ-ಯುವತಿಯರ ಡ್ರೆಸ್ ಬಗ್ಗೆ, ಅವರ ಕಂಗ್ಲಿಷ್ ಮಾತಿನ ವೈಖರಿಯ ಬಗ್ಗೆ, ವ್ಯಾಖ್ಯಾನ ತಮ್ಮದೇ ಟಿಪಿಕಲ್ ಶೈಲಿಯಲ್ಲಿ ಬಣ್ಣಿಸಿದರು ಮಲ್ಲೇಶ್ವರ ಅಡ್ಡೆಯಲ್ಲಿ ಯುವಜನಾಂಗದ ಮಾತಿನ ಶೈಲಿ ಮುಂದೆ ನನ್ನ ಡೈಲಾಗ್ಸ್ ಸಪ್ಪೆ ಎಂದು ಹೇಳಿ ಸುಮ್ಮನಾಗಿದ್ದರೆ ಚೆನ್ನಿತ್ತು. +“ಮುಂಚೆ ನೋಡಿ ಬೀದಿನಾಟಕಗಳಿಗೆ ಜನ ಉತ್ಸಾಹದಿಂದ ಬರ್‍ತಿದ್ದರು. ಈಗ ಬೀದಿ ನಾಟಕವಾಡಿದರೆ ಕೇಳೋರಿಲ್ವಂತೆ. ಬೀದಿನಾಟಕ ತನ್ನ ಸ್ವಂತಿಕೆ ಕಳಕೊಂಡಿದೆ. ಮುಂಚೆ ಅದೆಷ್ಟು ಜನ ಸೇರೋರು” ಅಂದಾಗ ನಾನು ಕೇಳಿದೆ. +“ನೀವು ಬೀದಿನಾಟಕ ಆಡಿಲ್ಲ. ಒಂದು ಬೀದಿನಾಟಕವೂ ನೋಡಿಲ್ಲ. ಯಾವ ಆಧಾರದ ಮೇಲೆ ಈ ಮಾತು ಹೇಳ್ತಿದೀರಿ” ಅಂದೆ. +“ನಿನ್ನೆ ಡಾ. ನಾಗೇಂದ್ರಪ್ರಸಾದ್ ಬಂದಿದ್ರು-ಅವರು ಹೇಳಿದ್ರು” ಅಂದ್ರು. +“ಆ ಹುಡುಗನ ಮಾತು ನೆಚ್ಕೊಂಡು ನೀವು ಹೀಗೆ ಹೇಳೋದು ಸರಿ ಅಲ್ಲ. ನಿಮಗೀಗ ಹೆಸರಿದೆ. ನೀವು ಹೇಳಿದ್ದು ಪ್ರಿಂಟ್ ಆಗುತ್ತೆ ಅನ್ನೋ ಕಾರಣಕ್ಕೆ ಈ ಥರಾ ಹೇಳಿಕೆ ನೀಡಬಾರದು. ಈ ನಾಗೇಂದ್ರಪ್ರಸಾದ್ ನಮ್ಮ ಅಭಿನಯ ತರಂಗದಲ್ಲಿದ್ದ ಹುಡುಗ. ಆ ವ್ಯಕ್ತಿ ಡಾ. ಕಂಬಾರ, ಅನಂತಮೂರ್ತಿ, ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯನವರ ಥರದ ಡಾಕ್ಟರಲ್ಲ. ಆತ ಒಬ್ಬ ಅಳಲೆಕಾಯಿ ಪಂಡಿತ. ಚಿತ್ರರಂಗದವರು ಸಾಹಿತ್ಯದ ಡಾಕ್ಟರ್‍ ಅಂತ ಭಾವಿಸಿದೀರಿ. ಹೀಗಾಗಿಯೇ ಆತ ಜಯಶ್ರೀದೇವಿಯವರ ಕಂಪನೀಲಿ ಆಸ್ಥಾನ ಕವಿಯಾಗಿರುವುದು. ನನ್ನ ಜತೆ ಕೆಲವು ಬೀದಿನಾಟಕದಲ್ಲಿ ಭಾಗವಹಿಸಿದ ಮಗು ಅವನು. ಆಮೇಲೆ ತರಂಗದ ವಿದ್ಯಾರ್ಥಿಗಳನ್ನು ಕ್ಲಾಸ್‌ಗೆ ಚಕ್ಕರ್‍ ಹಾಕಿಸಿ ರೇಡಿಯೋ ನಾಟಕ-ಗೀಟಕ ಅಂತ ಕರ್‍ಕೊಂಡು ಹೋದವನು. ತರಂಗದಲ್ಲಿದ್ದಾಗ್ಲೇ ಚಿಕ್ಕ-ಪುಟ್ಟ ಪತ್ರಿಕೆಗಳಲ್ಲಿ ವಿಮರ್ಶೆಗಳು ಬರೀತೀನೀಂತ ಸಿನಿಮಾ ಛಾನ್ಸ್‌ಗೆ ಕೈ ಒಡ್ಡುತ್ತಿದ್ದವ್ನು. ಬೀದಿನಾಟಕದ ಬಗ್ಗೆ ಅವನು ಹೇಳಿದ್ದು ಇರ್‍ರೆಲವೆಂಟ್” ಎಂದೆ. +“ಆತ ಹೇಳಿದ ಮತ್ತೆ” +“ಇನ್ನೊಂದು ಸಲ ಸಿಕ್ಕಾಗ ಕೇಳಿ? ಯಾವ ಬೀದಿನಾಟಕ ಆಡಿದಾನೆ ಆಡಿಸಿದಾನೆ ಈಚೆಗೆ ಅಂತ”. ಅವನ ಗೆಳೆಯ ಒಬ್ಬ ಇವತ್ತೂ ಬೀದಿನಾಟಕ ಮಾಡ್ತಾನೆ, ಕೃಷ್ಣಮೂರ್ತಿ ಅಂತ. ಅದ್ಭುತವಾದ ಟೈಮಿಂಗ್ಸ್ ಇರೋ ನಟ. ವಾಯ್ಸ್ ರೇಂಜ್ ಅನ್ನೋದು ಆತನಿಂದ ಕಲೀಬೇಕು. ಮುಂಚೆ ಬೀದಿಲಿ ತರಕಾರಿ ಮಾರ್‍ತಿದ್ದ ವ್ಯಕ್ತಿ ಆತ. ‘ಮಿಸ್ ಸೇವಂತಿ’ ‘ಅಗ್ನಿ ಮತ್ತು ಮಳೆ’ಲಿ ಅದ್ಭುತವಾಗಿ ಅಭಿನಯಿಸಿದವ. ನಿರ್ದೇಶಕ ಬಸವಲಿಂಗಯ್ಯ, ಪ್ರಮೋದ್ ಶಿಗ್ಗಾಂವ್ ಯಾವುದೆ ನಾಟಕ ಮಾಡಲಿ ಆ ‘ಕಿಟ್ಟಿ’ ಬೇಕು ಅಂತಾರೆ”. +“ನಂಗೊತ್ತಿರಲಿಲ್ಲ ಮೂರ್ತಿಗಳೇ-ಆ ಕಿಟ್ಟೀನ ನನ್ನ ಹತ್ರ ಕಳಿಸಿ. ಮುಂದಿನ ತಿಂಗಳು ಒಂದು ಚಿತ್ರ ಮಾಡ್ತಿದೀನಿ. ಅದರಲ್ಲಿ ಮುಖ್ಯ ಪಾತ್ರ ಕೊಡ್ತೀನಿ. ನಂಗೆ ಗೊತ್ತಿರಲಿಲ್ಲ ಯಾವ್ಯಾವ ಪ್ರತಿಭೆ ಎಲ್ಲೆಲ್ಲಿ ಇರುತ್ತೆ” ಅಂತ ತಮ್ಮ ಸ್ಪಷ್ಟ ಅನಿಸಿಕೆ ಬಿಚ್ಚಿಟ್ಟರು. +“ಜಗ್ಗೇಶ್, ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದಿರುವವರು ಬಹಳ ಜನ. ಟೀವಿ, ಸಿನಿಮಾಗೆ ವಾಲಿದವರು ನಾಟಕ ಮರೀತಿದಾರೆ ಅನ್ನೋ ಆಪಾದನೆ ನಿರಂತರವಾಗಿದೆ. ಅಂಥ ವೇಳೇಲಿ ತಾವು ಬೀದಿನಾಟಕ ಮಾಡದೆ ಇದ್ರೂ ಚಿಂತೆಯಿಲ್ಲ-ಬೀದಿ ಚಳವಳಿಗೆ ಮಾರಕವಾಗೋ ಹಾಗೆ ಅಭಿಪ್ರಾಯ ರೂಪಿಸುವ ಯತ್ನ ಬೇಡ. ಹಾಗೆ ಮಾಡುವವರನ್ನು “ಯಾಂಟಿ ಥಿಯೇಟರ್‌”ನವರು ಅನ್ನಬೇಕಾಗುತ್ತೆ. +“ಸಿನಿಮಾ ಬೇರೆ-ನಾಟಕ ಬೇರೆ. ಆದ್ರೆ ಬೀದೀಲಿ ಯಾವುದೋ ಕೆಲಸಕ್ಕೆ ಹೊರಟಿರೋ ಜನಗಳನ್ನು ೧/೨ ಘಂಟೆ, ೩/೪ ಘಂಟೆ ನಾಟಕ ನೋಡೋಕೆ ಹಿಡಿದಿಟ್ಕೊಳ್ಳೋದು ಒಂದು ಛಾಲೆಂಜ್. ಯಾವ ಗಿಮಿಕ್ಸೂ ಇಲ್ಲದೆ ಜನಮನವನ್ನ ಗೆಲ್ಲೋದು ಸಾಮಾನ್ಯವಲ್ಲ ಅಂತ ನಾನೂ ಒಪ್ತೀನಿ.” +“ಸಿ.ಜಿ.ಕೆ ‘ಬೆಲ್ಜಿ’ ಅಂಥ ಬೀದಿ ನಾಟಕ ಬರೆದು ನಿರ್ದೇಶಿಸಿದ್ದರು. ‘ಅಲ್ಲೇ ಇದ್ದವರು’ ಹಾರ್‍ಸ್ ಷೂಷೇಪ್‌ನಲ್ಲಿ ಆಡಿದಾಗ ಶಶಿಧರ್‍ ಅಡಪ ಸಜಸ್ಟೀವ್ ಸೆಟ್ಸ್ ಮಾಡಿದ್ದರು ಅಂಥೋವನ್ನೂ ನೀವು ಯಾವಾಗ್ಲಾರೂ ನೋಡಬೇಕು ಜಗ್ಗೇಶ್” +“ಖಂಡಿತಾ ಬೀದಿನಾಟಕವಿದ್ದಾಗ ಹೇಳಿ. ನಾನೂ ಬಂದು ನೋಡ್ತೀನಿ”. +“ಗ್ರಾಮಾಂತರ ಪ್ರದೇಶದಲ್ಲಿ ಇವತ್ತೂ ಬೀದಿ ನಾಟಕವಿದೆ ಅಂತ ತಮಟೆ ಹೊಡೆದ ತಕ್ಷಣ ನೂರಾರು ಜನ ಸೇರ್‍ತಾರೆ. ಟೀವಿ, ಸಿನಿಮಾದಲ್ಲಿ ಹೆಣ್ಣು ಮಕ್ಕಳು ಅಭಿನಯಿಸಿದರೆ ಹಣ, ಹೆಸರು, ಪ್ರಚಾರ ಎಲ್ಲ ಬರತ್ತೆ. ಬೀದಿನಾಟಕಗಳ್ಲಿ ಮಾಡಿದರೆ ಏನು ಬರುತ್ತೆ? ಆದ್ರೂ ಅಭಿನಯಿಸ್ತಾರೆ ಅಂದ್ರೆ ನಾಟಕ ಬಗ್ಗೆ-ಅಭಿನಯದ ಬಗ್ಗೆ ಅವರಿಗೆ ಒಲವಿದೆ ಅಂತ ಲೆಕ್ಕ” ಅಂದೆ. +ಪರಾಕು ಪಂಪು ಪ್ರವೀಣನ ಮಾತು ನಂಬಿ ಆದ ಪ್ರಮಾದಕ್ಕೆ ಜಗ್ಗೇಶ್ ಅವರ ಮೊಗದಲ್ಲಿ ಪಶ್ಚಾತ್ತಾಪವಿತ್ತು. +ಆನಂತರ ಜೇಡ್ ಗಾರ್ಡನ್ನಿನಲ್ಲಿರುವ ಓಪನ್ ಏರ್‍ ಥಿಯೇಟರ್‍ ನೋಡಹೋದೆವು. ಎಲ್ಲ. ನಮ್ಮ ಸಂಸ ರಂಗಮಂದಿರವನ್ನೂ ಮೀರಿಸುವಂತಿರುವ ಓಪನ್ ಏರ್‍ ಥಿಯೇಟರ್‍ ಅದು. ಆ ಇಂಟಿಮೇಟ್ ಥಿಯೇಟರ್‌ನಲ್ಲಿ ಒಂದು ಮೇಜರ್‍ ನಟಕವಾಡಬೇಕೆಂಬ ಮನಸಾದುದು ನಿಜ. +***** +(೫-೧೦-೨೦೦೧) +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […] +ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_228.txt b/Kannada Sahitya/article_228.txt new file mode 100644 index 0000000000000000000000000000000000000000..0fec2af8042ae126f744687e21fcf9c8517447b5 --- /dev/null +++ b/Kannada Sahitya/article_228.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಾಂಬೋದಿ +ತಾಳ — ಝಂಪೆ +ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | +ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| +ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | +ಕಾಕುಶಕಟನ ತುಳಿದು ಕೊಂದ ಪಾದ || +ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ | +ಲೋಕಪಾವನೆ ಗಂಗೆ ಜನಿಸಿದಾ ಪಾದ ||೧|| +ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ | +ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ || +ಕೊಲಿಸಿ ಕೌರವರ ಕಾಳಗದಿ ಕೆಡಹಿದ ಪಾದ || +ಬಲಿದ ಕಾಳಿಂಗನನು ತುಳಿದ ಪಾದ ||೨|| +ಗರುಡ – ಶೇಷಾದಿಗಳು ಪೊತ್ತುಕೊಂಡಿಹ ಪಾದ | +ಧರೆಯ ಈರಡಿ ಮಾಡಿ ಅಳೆದ ಪಾದ || +ಸಿರಿ ತನ್ನ ತೊಡೆಯಮೇಲಿರಿಸಿ ಸೇವಿಪ ಪಾದ | +ವರ ಕಾಗಿನೆಲೆಯಾದಿಕೇಶವನ ಪಾದ ||೩|| +***** +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ರಾಗ — ಶಂಕರಾ‌ಅಭರಣ ತಾಳ — ಏಕ ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| ಹುತ್ತದೊಳಾಡುವ ಸರ್ಪ ಮತ್ತ […] +ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_229.txt b/Kannada Sahitya/article_229.txt new file mode 100644 index 0000000000000000000000000000000000000000..a6e9e0c32fc43c589feda0114e07d23032a44596 --- /dev/null +++ b/Kannada Sahitya/article_229.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ ಬೆಳೆಗಾರರು-ವರ್ತಕರಲ್ಲಿ ಕೆಲವರು ಕೂಡಿ ನಡೆಸಿದ್ದು. ಸನ್ಮಾನವನ್ನು ಅದ್ದೂರಿಯಾಗಿ ನಡೆಸಲಾಯಿತು ಮತ್ತು ಅದರಲ್ಲಿ ಕೇಂದ್ರ-ರಾಜ್ಯಮಂತ್ರಿಗಳು ಪಾಲ್ಗೊಂಡಿದ್ದರು ಎಂಬ ಕಾರಣದಿಂದ ಅದಕ್ಕೆ ಪ್ರಾಮುಖ್ಯತೆ ದೊರೆಯಿತು. ಅಡಕೆ ಬೆಳೆಗಾರರು ಮತ್ತು ವರ್ತಕರಿಗೆ ಶ್ರೀ ಕೊಠಾರಿ ಹಾಗೂ ಅವರ ಸಹೋದ್ಯಮಿಗಳಿಂದ ಉಪಕಾರವಾಗಿದೆ. ಅದರಲ್ಲೂ ಮೊದಲು ಈ ಉದ್ಯಮವನ್ನು ದೊಡ್ಡದಾಗಿ ಮೇಲೆಬ್ಬಿಸಿದವರು ಶ್ರೀ ಕೊಠಾರಿ. ಸನ್ಮಾನಕ್ಕೆ ಇದು ಕಾರಣ. +ಅಡಕೆಯ ಸುಗಂಧ ವಸ್ತುಗಳೊಡನೆ ಪರಿಷ್ಕರಿಸುವ ಉದ್ಯಮ ಹಿಂದೆಯೂ ಇತ್ತು. ಕೊಠಾರಿ ಸಂಸ್ಥೆ ಅದನ್ನು ಹೆಚ್ಚು ಆಕರ್ಷಕವಾಗಿಸಿ ದೊಡ್ಡದಾಗಿ ಬೆಳೆಸಿತು. ಕ್ರಮೇಣ ಈ ಪರಿಷ್ಕರಣದಲ್ಲಿ ತಂಬಾಕಿನ ಅಂಶವನ್ನು ಸೇರಿಸಿ ‘ಗುಟಕಾ’ ಎಂಬ ಚರ್ವಣವನ್ನು ತಯಾರಿಸಲಾಯ್ತು. ಗುಟಕಾ ತಯಾರಾಗಲು ತೊಡಗಿದ ಮೇಲೆ ಅದು ರಾಷ್ಟ್ರಾದ್ಯಂತ ಜನರನ್ನು ಆಕರ್ಷಿಸಿ ತನ್ನ ಮಾರಾಟವನ್ನು ಭಾರೀ ಹೆಚ್ಚಿಸಿಕೊಂಡಿತು. ಈಗ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಉದ್ಯಮಿಗಳು ನೂರಾರು ಗುಟಕಾ ಉದ್ಯಮ ಘಟಕಗಳನ್ನು ಪ್ರಾರಂಭಿಸಿದಾರೆ. ಇದಕ್ಕೆ ಅಷ್ಟು ವ್ಯಾಪಕ ಬೇಡಿಕೆ ಇದೆಯೆನ್ನುತ್ತಾರೆ. ಈಚೆಗೆ, ಕೆಲವು ಲಾಂಛನಗಳ ಗುಟಕಾಗಳಲ್ಲಿ ತಂಬಾಕು ಮಾತ್ರವಲ್ಲದೆ ಬೇರೆ ಮಾದಕ ವಸ್ತುಗಳನ್ನೂ ಸೇರಿಸುತ್ತಿರಬಹುದು ಅಂತ ಹಲವರ ಅನುಮಾನ. ಹೇಗೂ ರಾಷ್ಟ್ರಾದ್ಯಂತ, ಯುವಪೀಳಿಗೆಯಲ್ಲಿ ವ್ಯಾಪಕವಾಗಿ, ಗುಟಕಾದ ಚಟ ಬೆಳೆಯುತ್ತಿದೆಯೆನ್ನುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಈ ಚಟದಿಂದ ಮುಖ್ಯವಾಗಿ ನಮ್ಮ ತರುಣ ಜನಾಂಗವು ದೈಹಿಕವಾಗಿ ಮಾನಸಿಕವಾಗಿ ದುರ್ಬಲಗೊಳ್ಳುತ್ತಿದೆಯೆನ್ನುವುದು ನಿಜವಾಗಿ ಎಲ್ಲರಿಗೂ ಆತಂಕಕಾರಿಯೇ. +ಬೆಳೆಗಾರರ ವಿಷಯಕ್ಕೆ ಬಂದರೆ, ನಮ್ಮ ಎಲ್ಲ ಬೆಳೆಗಾರರ ಹಾಗೆ ಅಡಕೆ ಬೆಳೆಗಾರರೂ ಮಾರುಕಟ್ಟೆಯ ನಿರಂಕುಶ ಹುಚ್ಚು ಲಹರಿಗಳಿಗೆ, ಅದೃಷ್ಟ ದುರದೃಷ್ಟಗಳ ಜೂಜಾಟಕ್ಕೆ ಸಿಕ್ಕು ಯಾವ ರಕ್ಷಣೆ ಸ್ಥಿರತೆಗಳಿಲ್ಲದೆ ಬಾಳಿಕೊಂಡು ಬಂದಿದ್ದಾರೆ. ಎಲ್ಲ ಸಾಮಾನ್ಯರ ಹಾಗೆ ಅಡಕೆ ಬೆಳೆಗಾರರೂ ಕುಟುಂಬಸ್ಥರಾಗಿ ತಮ್ಮ ತಮ್ಮ ವ್ಯಾವಸಾಯಿಕ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ್ದು ಅನಿವಾರ್ಯವಾಗಿರುವ ಕಾರಣ, ಯಾವುದೇ ಮಾಯಕದಿಂದ ಒಮ್ಮೆ ಬೆಲೆಯೇರಿಕೆ ಕಂಡರೆ, ಸದ್ಯ ತಮ್ಮ ಅದೃಷ್ಟ ಅಂತ ಭಾವಿಸಿ ಹರ್ಷಗೊಳ್ಳುತ್ತಾರೆ. ಇದು ಸಹಜವಾದ್ದೇ. ಹಿಂದಿನ ಕಷ್ಟಕಾಲಗಳನ್ನು ಬಿಟ್ಟು ಈಚೆಗೆ ಹೇಳುವುದಾದರೂ ಎಪ್ಪತ್ತರ ದಶಕದಲ್ಲೊಮ್ಮೆ ಮತ್ತು ಎಂಬತ್ತರ ದಶಕದಲ್ಲೂ ಒಮ್ಮೆ ಧಾರಣೆ ತಳಕ್ಕಿಳಿದು ಬೆಳೆಗಾರರು ಕಂಗಾಲಾಗಿದ್ದರು. ಇನ್ನು, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಬೆಲೆ ಹೆಚ್ಚುತ್ತ ಬಂದಿದೆಯಾದರೂ ಅದು, ಬೇಯಿಸಿದ ಕೆಂಪು ಅಡಕೆಯ ಕೆಲವು ದರ್ಜೆಗಳಿಗೆ ಮಾತ್ರ. ಗುಟಕಾಕ್ಕೆ ಬಳಸಲು ಬಾರದ ಚಾಲಿ ಮತ್ತಿತರ ಬಗೆಯ ಅಡಕೆಗೆ ಧಾರಣೆಯ ಹೆಚ್ಚಳವಾಗಿಲ್ಲ. ಧಾರನೆ ಏರಿರುವುದು ಒಟ್ಟೂ ಅಡಕೆ ಉತ್ಪನ್ನದ ಸುಮಾರು ಶೇಕಡಾ ಇಪ್ಪತ್ತಕ್ಕೆ ಮಾತ್ರ. ಇಷ್ಟರ ಮೇಲೆ, ಈ ಏರಿಕೆಯ ದಿನಗಳಲ್ಲೂ ಅದರ ಬೆಲೆ ಸ್ಥಿರವಾದದ್ದೇ ಇಲ್ಲ; ಹುಚ್ಚು ಏರುಪೇರುಗಳು ಮುಂದುವರೆದಿವೆ. +ಈ ಸಂಗತಿಗಳೆಲ್ಲ ಇದ್ದೂ ಇವತ್ತು ನಾವು ಬೆಳೆಗಾರರು, ನಾವೇ ಬೆಳೆದ ಅಡಕೆಯ ದುರ್ಬಳಕೆಯಾಗುತ್ತಿರುವುದನ್ನು ಕಂಡು-ಅದರಿಂದ ನಮಗೆ ಕೊಂಚ ಲಾಭವೊದಗುತ್ತದೆ ಎಂಬ ಕಾರಣಕ್ಕೆ-ಆ ಹಾನಿಯನ್ನು ಕಡೆಗಣಿಸಲಿಕ್ಕಾಗುತ್ತದೆಯೇ? ಸನ್ಮಾನದ ಸಂಗತಿಯನ್ನು ಮಾತ್ರ ಹೇಳುತ್ತಿಲ್ಲ; ಅದರಲ್ಲಿ ಪಾಲುಗೊಂಡ ಬೆಳೆಗಾರರು ವರ್ತಕರ ಸಂಖ್ಯೆ ತೀರಾ ಚಿಕ್ಕದು. ಸನ್ಮಾನದ ವಿಷಯವನ್ನೂ ಬಿಟ್ಟೂ ಗುಟಕಾಗೆ ಸಂಬಂಧಿಸಿದ ಬೆಳೆಗಾರರು ಎದುರಿಸಬೇಕಾದ ನೈತಿಕ ಸವಾಲನ್ನು ಕಡೆಗಣಿಸಲಿಕ್ಕಾದೀತೆ? ಈ ವಿಷಯಗಳ ಬಗ್ಗೆ ಹತ್ತಿರದ ರೈತ ಸಹೋದ್ಯೋಗಿಗಳ ಜೊತೆ ಮಾತಾಡಿದ್ದೇನೆ. ಬೇರೆ ಬೇರೆಯವರ ಅಭಿಪ್ರಾಯಗಳನ್ನು ಕೇಳಿಕೊಂಡಿದ್ದೇನೆ. ನಮ್ಮೆದುರಿನ ನೈತಿಕ ಸವಾಲನ್ನು ಕಡೆಗಣಿಸದೆ ಎದುರಿಸಬೇಕಾದ್ದು ನಮ್ಮ ಕರ್ತವ್ಯ ಅಂತ ಹಲವರು ಹೇಳಿದ್ದನ್ನು ಕೇಳಿ ನನಗೆ ದೊಡ್ಡ ಭರವಸೆಯುಂಟಾಗಿದೆ. ಅದೇ ನನಗೆ ಈ ಬರಹವನ್ನು ಬರೆಯಲಿಕ್ಕೆ ಸ್ಫೂರ್ತಿ ಕೊಟ್ಟಿದೆ. ಈ ಸಂದರ್ಭದಲ್ಲಿ ಅನೇಕರು ಗೊಂದಲದಲ್ಲಿ ಬಿದ್ದಿದ್ದಾರೆ ಎನ್ನುವುದೂ ನಿಜವೇ. ಗೊಂದಲಗೊಂಡಾಗ, ಜಾರಿಕೆಯ ಮಾತುಗಳಿಂದ ನಾವು ನುಣುಚಿಕೊಳ್ಳಲೆತ್ನಿಸುವುದೂ ಉಂಟು. +ವ್ಯಾಪಕವಾದ ಮಾರುಕಟ್ಟೆಯಲ್ಲಿ ನಮಗೆ ತಿಳಿಯದ ಮತ್ತು ನಮ್ಮ ಹತೋಟಿಯಿಲ್ಲದ ಎಷ್ಟೋ ಸಂಗತಿಗಳು ನಡೆಯುತ್ತವೆ, ಅವಕ್ಕೆಲ್ಲಾ ನಾವು ಹೊಣೆ ಹೊತ್ತುಕೊಳ್ಳಲು ಸಾಧ್ಯವೆ-ಅಂತ ಅಸಹಾಯಕತೆಯ ಮಾತು ಬಂತು. ನಿಜ, ಮಳೆ, ಬಿಸಿಲು, ಬೆಳೆಹೊಳೆಗಳ ಮೇಲೆ, ಜನರ ಆಲೋಚನೆ ನಡಾವಳಿಗಳ ಮೇಲೆ, ಒಟ್ಟಿನಲ್ಲಿ ಜಗತ್ತಿನ ಯಾವುದರ ಮೇಲೂ ನಮಗೆ ಹತೋಟಿಯಿಲ್ಲ. ಹಾಗಿದ್ದೂ ನಾವು, ಕಂಡ ಕೇಳಿದಾ ಎಲ್ಲ ಸಂಗತಿಗಳನ್ನೂ ನಮ್ಮ ಅಭಿಪ್ರಾಯದ ಹತೋಟಿಗೆ ತಂದುಕೊಂಡು ನಮ್ಮ ಮಟ್ಟಿಗಾದರೂ ರೂಪಿಸಿಕೊಳ್ಳುತ್ತಿರುತ್ತೇವೆ. ಹಾಗೆ ಸ್ವಂತ ಅಭಿಪ್ರಾಯ ನಿರ್ಧಾರಗಳನ್ನು ರೂಪಿಸಿಕೊಳ್ಳುವ ಮೂಲಕವೇ ನಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುತ್ತೇವೆ. ಸ್ವಂತ ವ್ಯಕ್ತಿತ್ವ ಅಂದರೆ ಏನು? ನಮ್ಮದೇ ಭಂಗಿ ಭಣಿತ ಚಲನೆ ಚೇಷ್ಟೆಗಳ ಒಂದು ವಿಶಿಷ್ಟ ದೇಹಾಕಾರವಿರುತ್ತದಲ್ಲ. ನಮಗೆ, ಹಾಗೆ ನಮ್ಮ ಅಭಿಪ್ರಾಯ ನಿರ್ಧಾರಗಳ ಒಂದು ಚಿದಾಕಾರವನ್ನೂ ನಾವು ಕಟ್ಟಿಕೊಳ್ಳುತ್ತಿರುತ್ತೇವೆ. ಅದು ವ್ಯಕ್ತಿತ್ವ. ಖಚಿತ ಅಭಿಪ್ರಾಯ ನಿರ್ಧಾರಗಳಿಂದ ನಮ್ಮ ವ್ಯಕ್ತಿತ್ವವು ಘನವಾಗುತ್ತದೆ. ಅದಿಲ್ಲದಿದ್ದರೆ ನಮ್ಮ ವ್ಯಕ್ತಿತ್ವದ ಆಕೃತಿಯು ಆಕಾರವಿಲ್ಲದೆ ರಾಶಿಯಾದೀತು ಮತ್ತು, ಸ್ವಯಂನಿರ್ಣಯವು ಮನುಷ್ಯನಿಗೆ ದತ್ತವಾಗಿರುವ ಮಹಾಶಕ್ತಿ. ಉದಾಹರಣೆಗೆ-ಈ ಕ್ಷಣದಿಂದ ಜೀವನಪರ್ಯಂತ ನಾನು ಸುಳ್ಳು ಹೇಳುವುದಿಲ್ಲ ಅಂತ ಯೋಚಿಸಿಕೊಂಡು ಸಂಕಲ್ಪಿಸಿ ಅದನ್ನು ಕೈಗೊಂಡರೆ, ಜಗತ್ತಿನ ಯಾವುದೇ ಶಕ್ತಿಯು ನನ್ನನ್ನು ನನ್ನ ನಿರ್ಧಾರದಿಂದ ವಿಚಲಿತಗೊಳಿಸಲಾರದು. ಜಗತ್ತನ್ನು ಹತೋಟಿಗೆ ತೆಗೆದುಕೊಳ್ಳಲಿಕ್ಕಾದೀತೆ, ಬದಲಿಸಲಿಕ್ಕಾದೀತೆ ಅಂತ ಯೋಚಿಸುತ್ತ ಕೂತರೆ, ನಮ್ಮ ವ್ಯಕ್ತಿತ್ವವನ್ನಾದರೂ ನಮ್ಮ ಹತೋಟಿಗೆ ತೆಗೆದುಕೊಳ್ಳಬಹುದಾದ ಬದಲಿಸಿಕೊಳ್ಳಬಹುದಾದ ಸ್ವಾತಂತ್ರ್ಯವನ್ನು, ಮನುಷ್ಯನಿಗೆ ದತ್ತವಾಗಿರುವ ಅಂಥ ಮಹಾಸ್ವಾತಂತ್ರ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಮಾರುಕಟ್ಟೆಯ ಲಹರಿಗಳನ್ನು ಬದಲಿಸಲಿಕ್ಕಾದೀತೆ ಅಂತ ಚಿಂತೆ ಮಾಡುವುದನ್ನು ಬಿಟ್ಟು ನಾವು ನಮ್ಮ ಸ್ವಂತದ ನಿರ್ಧಾರ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವ ಬಗ್ಗೆ ಯೋಚಿಸಬೇಕು. +ತಂಬಾಕಿನ ಚಟ ಮತ್ತು ಇಂಥ ಇನ್ನೂ ಇತರ ಹಾನಿಕಾರಕ ಚಟಗಳು ಯಾವತ್ತಿನಿಂದ ಇವೆ, ಗುಟಕಾ ಬಗ್ಗೆಯೇ ಯಾಕೆ ಅಷ್ಟೆಲ್ಲಾ ತಲೆಬಿಸಿ ಅಂತ ಕೆಲವರ ಪ್ರಶ್ನೆ. ಚಟಗಳಿವೆ ನಿಜ. ದೂರ ಯಾಕೆ, ನಾನೇ ಸ್ವತಃ ತಂಬಾಕು ತಿನ್ನುವ ಚಟವಿರುವವನು; ಅದನ್ನು ಬಿಡಲಿಕ್ಕಾಗದ ದೌರ್ಬಲ್ಯವುಳ್ಳವನು. ಆದರೆ, ಈ ಚಟದಿಂದಾಗುವ ಹಾನಿ ನನಗೇ ಮತ್ತು ಅದಕ್ಕೆ ನಾನೇ ಹೊಣೆ. ಇದು ಬೇರೆ, ಜಾಸ್ತಿ ನಫೆ ಕಮಾಯಿಸಲಿಕ್ಕಾಗಿ ಅನ್ಯರ ದೌರ್ಬಲ್ಯವನ್ನು ಹಿಡಿದು ಮೀಟಿ ಅವರಲ್ಲಿ ಹಾನಿಕಾರಕ ಚಟ ಬೆಳೆಯುವಂತೆ ಸಂಚು ನಡೆಸುವುದು ಬೇರೆ. ನಮ್ಮ ಬೆಳೆಗಾರರು ಸ್ವತಃ ಸಂಚುಮಾಡಿದವರಲ್ಲ; ಆದರೆ, ಸಂಚು ಮಾಡುವವರಿಗೆ ಮೌನ ಸಮ್ಮತಿ ನೀಡುವುದೂ ಸಂಚಿನಲ್ಲಿ ಕಿಂಚಿತ್ ಪಾಲ್ಗೊಂಡಂತೆ. ಕಡೆಯಪಕ್ಷ, ನಮ್ಮ ಬೆಳೆಯಿಂದ ಅನ್ಯರಿಗೆ ಹಾನಿಯಾಗುವುದನ್ನು ಒಪ್ಪುವುದಿಲ್ಲ ಎಂಬ ದೃಡ ಅಭಿಪ್ರಾಯವಾದರೂ ನಮ್ಮಲ್ಲಿ ಬೆಳೆಯಬೇಕು. ಚಟಗಳುಳ್ಳವರು ಕೂಡಾ ಆ ಚಟವು ತಮ್ಮ ಮಕ್ಕಳಲ್ಲಿ ಮತ್ತು ಸಮುದಾಯದ ಮಕ್ಕಳಲ್ಲಿ ಬೆಳೆಯಲಿ ಅಂತ ಹಾರಯಿಸುವುದಿಲ್ಲ. +ಅಷ್ಟೆಲ್ಲ ಇದ್ದರೆ ಸರ್ಕಾರವೇ ಗುಟಕಾವನ್ನು ನಿಷೇಧಿಸಬಹುದಲ್ಲ ಅಂತ ಹೊಣೆಯನ್ನು ಸರ್ಕಾರಕ್ಕೆ ಅಂಟಿಸುವ ಮಾತುಗಳು ಬಂದಿವೆ. ಅದೂ ಸರಿಯಿಲ್ಲ. ಮೊದಲನೆಯದಾಗಿ ಗುಟಕಾದಲ್ಲೇನಾದರೂ ಅಪಾಯಕಾರಿ ರಾಸಾಯನಿಕಗಳಿದ್ದರೆ ಮಾತ್ರ ನಿಷೇಧ ವಿಧಿಸಬಹುದು. ನಮ್ಮ ನ್ಯಾಯವ್ಯವಸ್ಥೆಯ ಚೌಕ್ಕಟ್ಟಿನಲ್ಲಿ, ತಂಬಾಕಿಗೋಸ್ಕರ ಗುಟಕಾವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಹಾಗೆ ಮಾಡುವುದಾದರೆ ಅದಕ್ಕೆ ಮೊದಲು ಸಿಗರೇಟು ಬೀಡಿ ನಶ್ಯ ತಂಬಾಕುಗಳನ್ನು ಮೊದಲು ನಿಷೇಧಿಸಬೇಕಾಗುತ್ತದೆ. ಮೇಲಾಗಿ, ಮದ್ಯ, ಜೂಜು, ಲಾಟರಿಗಳಿಂದಲೂ ಹಣ ಮಾಡಿಕೊಳ್ಳಲು ಹಾತೊರೆವ ನಮ್ಮ ಸರ್ಕಾರಗಳಿಗೆ ಅಂಥ ನೈತಿಕ ಅಧಿಕಾರವೇ ಇಲ್ಲ. ಎರಡನೆಯದಾಗಿ-ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಇಂಥವನ್ನು ಸಮುದಾಯಗಳೇ ಸ್ವಯಂ ನಿಯಂತ್ರಣಗಳಿಂದ ಸಾಧಿಸಿಕೊಳ್ಳಬೇಕಾದ್ದು ಹೆಚ್ಚು ಅಪೇಕ್ಷಣೀಯ. ಹಾಗಲ್ಲದ ಸರ್ಕಾರವು ಇಂಥದರಲ್ಲಿ ಮಧ್ಯಪ್ರವೇಶ ಮಾಡಲು ಅವಕಾಶ ಕೊಟ್ಟರೆ, ಶಾಸಕರೂ ಅಧಿಕಾರಿಗಳೂ ಆಡಳಿತವೂ ಭ್ರಷ್ಟವಾಗಲು ಅವಕಾಶ ಮಾಡಿಕೊಟ್ಟಂತೆಯೇ. +ನಾವು ಬೆಳೆಗಾರರು ಸಾಮಾನ್ಯ ಜನ, ಸ್ವಾರ್ಥ ಬಿಟ್ಟ ಕೇವಲ ಪರೋಪಕಾರಿ ಸಾಧು ಸಂತರಲ್ಲ, ಸಂಸಾರವಂದಿಗರಾಗಿ ಹೇಗೋ ಅದನ್ನು ನಿರ್ವಹಿಸುವುದೇ ಸಾಕಾಗಿರುವಾಗ ನೈತಿಕತೆ ಇತ್ಯಾದಿ ದೊಡ್ಡವರ ಉಪದ್ವ್ಯಾಪಗಳೆಲ್ಲಾ ನಮಗೆ ಯಾತಕ್ಕೆ ಅನ್ನುವವರುಂಟು. ಸಾಮಾನ್ಯ ಸಂಸಾರವಂದಿಗನ ಸಹಜವೂ ಸಾಧ್ಯವೂ ಅಗತ್ಯವೂ ಆಗಿರುವ ನೈತಿಕತೆಯನ್ನು ಮೀರಿ ಇನ್ನಾವುದೋ ಮಹಾದಿವ್ಯವನ್ನು ನಾನು ಖಂಡಿತವಾಗಿಯೂ ಪ್ರತಿಪಾದಿಸುತ್ತಿಲ್ಲ. ಸಂಸಾರವಂದಿಗರ ಸಹಜ ನೈತಿಕತೆಯನ್ನು ಮೀರಿದ ದೊಡ್ಡ ತಪಸ್ಸು ಜಗತ್ತಿಗೆ ಬೇಕೇ ಇಲ್ಲ. ಕುಟುಂಬದಲ್ಲಿ ನಾವು ಒಬ್ಬರಿಗೊಬ್ಬರು ಒಳ್ಳೆಯದನ್ನು ಹಾರಯಿಸಿಕೊಳ್ಳುತ್ತಿರುತ್ತೇವೆ; ಗಂಡನ, ಮಗನ ಹಿತಕ್ಕಾಗಿ ಸುಖಕ್ಕಾಗಿ ತಾಯಿಯು ಮುದದಿಂದ ತೇಯ್ದುಕೊಳ್ಳುತ್ತಿರುತ್ತಾಳೆ; ಅಪ್ಪನು ತನ್ನ ಒಳಿತಿನ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚಾಗಿ ಮಗನ ಒಳಿತಿನ ಬಗ್ಗೆ ಚಿಂತಿಸುತ್ತಿರುತ್ತಾನೆ. ಅಡಿಗರ ‘ವರ್ದಮಾನ’ ಕವಿತೆಯಲ್ಲಿ ತಂದೆಯು, ನಡುಮಧ್ಯಾಹ್ನ ಸುಡುಬಿಸಿಲಲ್ಲಿ ಕಾದ ಬಂಡೆಯ ಮೇಲೆ ಕೂತು ಸಿಗರೇಟು ಸೇದುತ್ತ ತಾನೇ ತನ್ನನ್ನು ಸುಟ್ಟುಕೊಳ್ಳುತ್ತಿದ್ದರೂ ತನ್ನ ತಾಪದ ಪರಿವೆಯೇ ಇಲ್ಲದೆ, “….ಅಳಲುತ್ತಾನೆ ಪಂಚಾಗ್ನಿ ಮಧ್ಯಸ್ಥ ಮಗ, ಕೂಗಿ ಕೂಗಿ ಕರೆಯುತ್ತೇನೆ, ಮಂಡೆ ಬಿಸಿ, ಕಂದ ಕಿವುಡಾಗಿದ್ದಾನೆ…. ಕಿವುಚುವ ಕರುಳ ಹಿಡಿದು ಕೊರಗುತ್ತೇನೆ….” ಅಂತ, ತನ್ನ ಮಗನ ತಾಪದ ಬಗ್ಗೆಯೇ ತಪಿಸುತ್ತಾನೆ. +ಸಾಮಾನ್ಯರಲ್ಲಿ ಸಾಮಾನ್ಯರೂ ಇಂಥ ಕೌಟುಂಬಿಕ ಸಾಮುದಾಯಿಕ ಸಂಬಂಧಗಳನ್ನು ಬಲು ಸಹಜವಾಗಿ ರೂಢಿಸಿಕೊಂಡಿರುವುದರಿಂದಲೇ ಮನುಷ್ಯಕುಲ ಬಾಳಿ ಬಂದಿದೆ. ನಮ್ಮ ಮಲೆನಾಡಿನಲ್ಲಿ ಹೊಸದಾಗಿ ಅಡಕೆ ನೆಟ್ಟರೆ ಅದು ಹೂವು ಕಾಣಿಸಲಿಕ್ಕೆ ಹದಿನೈದು ವರ್ಷ, ತುಂಬು ಫಸಲು ಕೊಡಲಿಕ್ಕೆ ಇಪ್ಪತ್ತೈದು ವರ್ಷ ಹಿಡಿಯುತ್ತದೆ. ಹೊಸ ತೋಟ ಮಾಡುವವರು, ಅದು ತಮಗಲ್ಲ ತಮ್ಮ ಮಕ್ಕಳಿಗೆ ಅಂತಲೇ ಮಾಡುತ್ತ ಬಂದಿದ್ದಾರೆ. ಈ ಬೆಳೆಗಾರರು ತಮ್ಮ ಬೆಳೆಯಿಂದಲೇ ದೊಡ್ಡ ಪಾಠ ಕಲಿತುಕೊಂಡು ಬಂದಿದ್ದಾರೆ. ಈ ಮಟ್ಟದ ಸರಳ ಸಾಮಾನ್ಯ ಸಹಜ, ಸಹೃದಯತೆ, ಸಹಾನುಭೂತಿ, ಪ್ರೀತಿ-ಕೊಡುಕೊಳೆಗಳನ್ನಷ್ಟೇ ನಾವು ಕಾಪಾಡಿಕೊಂಡರೆ ಸಾಕು, ಸಾಕೇಸಾಕು. ನಾವು ಬೆಳೆಯುವ ಬೆಳೆಯು ಮುಂದೆ ಅದೇನೋ ಆಗಿ ನಮ್ಮ ದೇಶದ ಎಳೆಯರನ್ನು ಹಾಳು ಮಾಡುತ್ತಿದೆ ಅಂತ ತಿಳಿದಾಗ ಸಂಸಾರಿಯಾದವನಿಗೆ ನಿಜವಾಗಿ ಕರುಳು ಕಿವುಚಿದಂತಾಗುತ್ತದೆ-ಅತಿ ಸ್ವಾರ್ಥದ ಅರಿವಳಿಕೆಯಿಂದ ಕರುಳು ಜಡಗೊಳ್ಳದೆ ಉಳಿದಿದ್ದರೆ. +ಜಗತ್ತನ್ನು ಬಾಳಿಸಿಕೊಂಡು ಬಂದದ್ದೇ ಈ ಕುಟುಂಬ-ಸಮುದಾಯ ಸಂಸ್ಕೃತಿ. ‘ನಾನೆಂಬುದು ಪ್ರತ್ಯೇಕ ವಸ್ತುವಲ್ಲ, ಜಗತ್ತಿನ ಒಂದು ಅಣುಭಾಗವೇ’ ಎಂಬ ಅರಿವು, ನಂಬಿಕೆ ಮತ್ತು ಅದರಿಂದ ಕಲ್ಪಿತವಾಗುವ ಆಸ್ತಿಕತೆ ಧಾರ್ಮಿಕತೆಗಳು-ಇವೇ ಈ ಸಂಸ್ಕೃತಿಯ ಮೂಲ. ಇದೇನೂ ಮಹಾ ತಾತ್ವಿಕ ದರ್ಶನವಲ್ಲ; ಕ್ಷಣಕ್ಷಣವೂ ಒಳಹೊರಗೆ ಉಸಿರಾಡುವಾಗ ನಾವು ಒಮ್ಮೆ ಜಗತ್ತನ್ನು ನಮ್ಮೊಳಗೆ ಕೊಳ್ಳುತ್ತೇವೆ, ಇನ್ನೊಮ್ಮೆ ನಮ್ಮನ್ನು ಜಗತ್ತಿಗೆ ಹಂಚಿಕೊಳ್ಳುತ್ತೇವೆ; ಇಂಥ ನಿಜನಿತ್ಯ ಕ್ರಿಯೆಯಿಂದಲೇ ಬಂದ ಅರಿವು. ಈ ಅರಿವು ನಂಬಿಕೆಗಳಿಂದ ಸಹಾನುಭೂತಿ-ಪ್ರೀತಿ-ಸಹಕಾರ-ತ್ಯಾಗಗಳು ಸಹಜವಾಗಿ ಅರಳಿಕೊಳ್ಳುತ್ತವೆ, ಅವು ಕುಟುಂಬ ಸಮುದಾಯಗಳನ್ನು ರಚಿಸಿ ಬಾಳಿಸುತ್ತವೆ. ಆದಿಮವಾದ ಈ ನಂಬಿಕೆ ನಡಾವಳಿಗಳನ್ನು ಗ್ರಾಮೀಣ ಸಂಸ್ಕೃತಿ, ಕೃಷಿಸಂಸ್ಕೃತಿ ಅಂತಲೂ ಅನ್ನಬಹುದು. ಇದಕ್ಕೆ ಪ್ರತಿಯಾಗಿ, ‘ನಾನು ಬೇರೆ ಜಗತ್ತು ಬೇರೆ, ಸ್ವಂತ ಬಲದಿಂದ ನಾನು ಜಗತ್ತನ್ನು ಆಕ್ರಮಿಸಿ ಅಧೀನವಾಗಿಸಿ, ನನಗೆ ಬೇಕಾದ್ದನ್ನು ಅದರಿಂದ ಬಾಚಿಕೊಂಡು ಬದುಕುತ್ತೇನೆ’ ಎಂಬ ಅಸಹಜ ಕಲ್ಪನೆಯೂ ಆಗಾಗ ಬೆಳೆದುಕೊಳ್ಳುವುದುಂಟು. ಅದನ್ನು ವಾಣಿಜ್ಯ ಸಂಸ್ಕೃತಿ, ನಾಗರಿಕ ಸಂಸ್ಕೃತಿ ಎನ್ನಬಹುದು. ಮೊದಲನೆಯದು ಸಹಕಾರ-ಪ್ರೀತಿ ಸಂಸ್ಕೃತಿಯಾಗಿದ್ದರೆ, ಎರಡನೆಯದು ಸ್ಪರ್ಧಾಸಂಸ್ಕೃತಿ ಯುದ್ದಸಂಸ್ಕೃತಿಯಾಗಿರುತ್ತದೆ. ಈ ಎರಡನೆಯ ಸಂಸ್ಕೃತಿಯು ಪರಸ್ಪರ ಸ್ಪರ್ಧಿಸುವ, ಆಕ್ರಮಿಸುವ, ಶೋಷಿಸುವ ಮತ್ತು ಅಂತಿಮವಾಗಿ ಸರ್ವನಾಶಕ್ಕೆ ಕಾರಣವಾಗುವ ಸಂಸ್ಕೃತಿ. +ಈಚಿನ ದಿನಗಳಲ್ಲಿ ಜಗತ್ತಿನ, ಮಾತ್ರವಲ್ಲ ನಮ್ಮ ದೇಶದಲ್ಲೂ, ಜಾಗತೀಕರಣ ಉದಾರೀಕರಣ ಸ್ಪರ್ಧೆ ಪ್ರಗತಿ ಇತ್ಯಾದಿ ಹೆಸರುಗಳಲ್ಲಿ ಮೇಲಿನ ವಿನಾಶಕಾರಿ ನಾಗರಿಕತೆಯು ಹಬ್ಬಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾವು ಗ್ರಾಮೀಣರು, ಕೃಷಿಕರು ಜೀವಪೋಷಕವಾದ ನಮ್ಮ ಜನಸಾಮಾನ್ಯ ಸಂಸ್ಕೃತಿಯನ್ನು ಮೇಲೆತ್ತಿ ರಕ್ಷಿಸಿಕೊಳ್ಳಬೇಕು. ಹಾಗೆ ರಕ್ಷಿಕೊಳ್ಳುವುದಕ್ಕೆ ನಾವೆಲ್ಲ ಟೊಂಕಕಟ್ಟಿ ಕತ್ತಿಹಿಡಿದು ರಣಾಂಗಣಕ್ಕೆ ಧಾವಿಸಿ ಮಹಾಸಮರವನ್ನು ಹೂಡಬೇಕಾಗಿಲ್ಲ. ನಾವು ಸಾಮಾನ್ಯ ಜನರು ನಮ್ಮ ಕುಟುಂಬ-ಸಮುದಾಯ ಪ್ರಜ್ಞೆ ಸಂಬಂಧಗಳನ್ನು ಮರೆಯದೆ ಅಥವಾ ಕೈಬಿಡದೆ, ವಾಣಿಜ್ಯ-ಲಾಭ- ಸ್ವಾರ್ಥಗಳ ಅರಿವಳಿಕೆಗೆ ಬಲಿಬಿದ್ದು ಜಡರಾಗದೆ, ಕೊಂಚ ಎಚ್ಚರದಿಂದ ಸಾದಾ ಜೀವಂತ ಸ್ಪಂದಿಸುತ್ತ ಬದುಕಿಕೊಂಡರೆ ಸಾಕು. ನಮ್ಮ ಕುಟುಂಬಗಳೂ ಸಮುದಾಯಗಳೂ ಬದುಕುತ್ತವೆ. ಈಗ ನಾವು ಅಡಕೆ ಬೆಳೆಗಾರರು ಮಾಡಬೇಕಾದ್ದು ಇಷ್ಟನ್ನೇ. +ಇನ್ನು-ಗುಟಕಾ ನಿಂತರೆ ಅಡೆಕೆಯ ಬೆಲೆ ಪಾತಾಳಕ್ಕೆ ಇಳಿದುಹೋಗುತ್ತದೆ ಎನ್ನುವುದೂ ನಿಜವಲ್ಲ. ಅದು ಭ್ರಮೆ. ಈಗಲೂ ಗುಟಕಾಕ್ಕೆ ಹೋಗುವುದು ಒಟ್ಟು ಅಡೆಕೆ ಬೆಳೆಯ ಕಾಲುಭಾಗ ಅಥವಾ ಮೂರರಲ್ಲೊಂದು ಪಾಲು. ಗುಟಕಾ ಬರುವುದಕ್ಕೆ ಮೊದಲೂ ಅಡೆಕೆ ಮಾರಾಟವಾಗುತ್ತಿತ್ತು, ಬೆಳೆಗಾರರು ಬದುಕಿಕೊಂಡಿದ್ದರು. ಹಿಂದೊಮ್ಮೆ ತಂಬಾಕು ತಿನ್ನುವ ಚಟ ಬೆಳೆದಿರುವುದರಿಂದಲೇ ಅಡೆಕೆ ಖರ್ಚಾಗುತ್ತಿದೆ ಅಂತ ಹೇಳುವವರಿದ್ದರು. ನಮ್ಮಲ್ಲಿ ತಂಬಾಕು ತಿನ್ನುವ ಚಟ ವ್ಯಾಪಕವಾಗಿದ್ದರೂ ಅಡಕೆ ಬಳಸುವವರು ಒಟ್ಟೂ ಸಂಖ್ಯೆಯಲ್ಲಿ ತಂಬಾಕಿನ ಚಟವಿರುವವರ ಸಂಖ್ಯೆ ಚಿಕ್ಕದೇ. ಅಲ್ಲದೆ, ತಂಬಾಕು ಈ ದೇಶಕ್ಕೆ ಬಂದದ್ದೇ ಸುಮಾರು ನಾನೂರು ವರ್ಷಗಳ ಹಿಂದೆ. ಆದರೆ ಅಡಕೆಯು ಅಜಂತಾ ಚಿತ್ರಗಳ ಕಾಲದಿಂದ, ಕಾಳಿದಾಸನ ಕಾವ್ಯಗಳ ಕಾಲದಿಂದ ನಮ್ಮ ಎಲ್ಲ ಭಾರತೀಯ ಸಮುದಾಯಗಳೂ ನಿತ್ಯ ಬಳಸುವ ಮಂಗಳೋಲ್ಲಾಸದ ವಸ್ತುವಾಗಿದೆ ಎಂಬುದನ್ನು ಮರೆಯಬಾರದು. +ಭೂಮಿಯಲ್ಲಿ ಬೆಳೆಯುವ ಎಲ್ಲಾ ಸಸ್ಯಗಳೂ ಪ್ರಯೋಜನಕಾರಿಗಳೇ-ಅಡಕೆ ಯಾಕೆ, ತಂಬಾಕು ಕೂಡಾ. ‘ಗಾಳಿಯೂ ಸಮುದ್ರವೂ ಸಸ್ಯಗಳೂ ನಮಗೆ ಜೇನಾಗುತ್ತವೆ, ಅಮೃತವಾಗುತ್ತವೆ’ ಅಂತ ಪ್ರಾಚೀನ ಖುಷಿ ನಂಬಿ ಹಾಕಿದ್ದ. ಒಂದೊಂದೂ ಸಸ್ಯದ ಸದುಪಯೋಗವೇನು ಎಂಬುದನ್ನು ನಾವು ಕಂಡುಕೊಳ್ಳಬೇಕು, ದುರುಪಯೋಗವನ್ನು ತಡೆಯಲು ಯತ್ನಿಸಬೇಕು. +ಅಡೆಕೆಯನ್ನು ಇನ್ನೆಷ್ಟು ಹೊಸ ರೀತಿಗಳಲ್ಲಿ ಪ್ರಯೋಜನಕಾರಿಯಾಗಿ ಬಳಸಬಹುದು ಎಂಬ ಬಗ್ಗೆ ಸಂಶೋಧನೆಗಳಾಗಬೇಕು. ಬೆಳೆಗಾರರೂ ವರ್ತಕರೂ ಆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನಮ್ಮ ಮಾಮ್‌ಕೋಸ್, ಕ್ಯಾಂಪ್‌ಕೋ, ತೋಟಗಾರ್ಸ್ ಮುಂತಾದ ಬೃಹತ್ ಸಹಕಾರಿ ಸಂಸ್ಥೆಗಳು ಈ ದಿಶೆಯಲ್ಲಿ ಕೇಂದ್ರೀಕೃತ ಪ್ರಯತ್ನವನ್ನು ನಡೆಸಬೇಕು. ಇಂಥ ಪ್ರಯತ್ನಗಳಿಂದ ಅಡಕೆಯು ಸದುಪಯೋಗವಾಗಿ ಬೆಳೆಗಾರರಿಗೂ ತಕ್ಕ ಬೆಲೆ ಬರಲು ಸಾಧ್ಯ. +ಈಚಿನ ದಶಕಗಳಲ್ಲಿ ಅಡಕೆಗೆ ಧಾರಣೆ ಬಂದಹಾಗೆ, ಅನೇಕರು ಈ ಕೃಷಿಯ ಕಡೆಗೆ ಧಾವಿಸಿ ಬಂದಿದ್ದಾರೆ. ಅಡಕೆ ತೋಟಗಳು ಯಾವ ತಡೆಯಿಲ್ಲದೆ ಒಂದಕ್ಕೆ ಹತ್ತಾಗಿ ಬೆಳೆದಿವೆ. ಇಂಥ ಪ್ರವೃತ್ತಿಯು ಯಾವತ್ತೂ ಕೃಷಿಗೆ ಮಾರಕವೇ. ಎಲ್ಲಾದರಲ್ಲಿ ಗಿಡ ನೆಟ್ಟು ಅದಕ್ಕೆ ಬಲವಂತದಿಂದ ನೀರು ಸುರಿದು ರಸಗೊಬ್ಬರ ಮುಕ್ಕಿಸಿ ಕಡ್ಡಾಯವಾಗಿ ಬೆಳೆಯನ್ನು ಸೆಳೆಯುವ ಈ ಪ್ರಯತ್ನವು ಕೃಷಿಯ ಉತ್ಸಾಹವಲ್ಲದೇ ಅಲ್ಲ, ಇದು ವಾಣಿಜ್ಯ ಲಾಭದ ದಾಹ. ನಿಜವಾದ ಕೃಷಿಕನು ನೆಲಗಿಡಗಳು ಒಂದನ್ನೊಂದು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಸ್ನೇಹಸಂಧಾನವನ್ನು ಕಾತರದಿಂದ ಕಾಯುತ್ತಾನೆ, ಅದು ಸಿದ್ದಿಸಿದಾಗ ಅದಕ್ಕೆ ತನ್ನ ಶ್ರಮ ಪ್ರೀತಿಗಳನ್ನುಣ್ಣಿಸಿ ಅದು ಹಡೆಯುವ ಫಲವನ್ನು ಎತ್ತಿಕೊಳ್ಳುತ್ತಾನೆ. +ಸನ್ಮಾನವೆಂಬ ಮಾತಿನಿಂದ ಪ್ರಾರಂಭಿಸಿದೆ. ಈ ಮಾನಸನ್ಮಾನಗಳು ಮನುಷ್ಯನಿಗೆ ಮಾತ್ರವಲ್ಲ, ಸಮಸ್ತ ವಸ್ತುಗಳಿಗೂ ಇರುವ ಘನತೆ ಅಂತ ನಮ್ಮ ಹಿರಿಯರು ಭಾವಿಸಿದ್ದರು. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆಯು ನಮ್ಮಲ್ಲಿ ಹಿಂದಿನಿಂದ ಪ್ರಚಲಿತವಿದೆ. ಸುಮಾರು ಐನೂರು ವರ್ಷ ಹಿಂದಣ ಕನ್ನಡ ಕಾವ್ಯದಲ್ಲಿ, ‘ಒಂದಡಕೆಯ ಹಂಗು’ ಎಂಬ ಮಾತು ಬರುತ್ತದೆ. ಕೇವಲ ವಾಣಿಜ್ಯೋತ್ಸಾಹಿಗಳಿಗೆ, ಹಣದ ಮಾನದಲ್ಲಿ ಅಳೆದಾಗ ಅಡಕೆಯಿಂದ ದೊರಕುವ ‘ಅತಿರಿಕ್ತ ಮೌಲ್ಯ’ವೇ ಅಡಕೆಯ ಮಾನ ಅಂತ ಅನ್ನಿಸಬಹುದು. ಹಣವೆನ್ನುವುದೂ ಒಂದು ಮಾನವೇ. ಆದರೆ ಅದು ಸರ್ವಮಾನವಲ್ಲ. ಅದನ್ನು ಮಿಕ್ಕ, ಮೀರಿದ ಅನೇಕ ಮಾನ ಸಂಮಾನ ಮಹಾಮಾನಗಳಿವೆ. +ಬೆಟ್ಟ ತಪ್ಪಲಿನ ಕಣಿವೆಗಳ ತಳ ಆಳದಲ್ಲಿ ನೆಟ್ಟುಕೊಂಡು, ಆಕಾಶಕ್ಕೆ ಹಂಬಲಿಸುತ್ತ, ಹಂಬಲದಲ್ಲಿ ಕೃಶಕಾಂಡವಾಗಿ ಮೇಲಕ್ಕೆ ಬೆಳೆಯುತ್ತ, ತನ್ನನ್ನು ದಿವದ ಕಡೆಗೆ ಚಾಚಿಕೊಳ್ಳುವುದೇ ಅಲ್ಲದೆ ತಾನುಂಡು ನೆಲದ ಸತ್ವವನ್ನು ದಿವಕ್ಕೆ ಸಾಗಿಸಿಕೊಂಡವ ಈ ‘ಕಣಿವೆಯ ಎತ್ತರ’ವನ್ನು, ಚಂದದ ನೀಳ ಲತಾಕಾಯವನ್ನು ಕಂಡು ವಿಸ್ಮಯಗೊಂಡವರು ಇದು ಕಲ್ಪವೃಕ್ಷ ಸಮಾನವೆಂದು ಭಾವಿಸಿದರು. ಕಣ್ಣಿನ ಗಾತ್ರದ ಇದರ ಫಲವನ್ನು ‘ಮಹಾದಿವ್ಯ’ ಅಂತ ತಿಳಿದರು; ದೇವರಿಗೆ ಸಲ್ಲತಕ್ಕದ್ದು ಅಂತ ಭಾವಿಸಿದರು. ಅಡಕೆಯು ಭಾರತೀಯ ಸಮುದಾಯಗಳಲ್ಲಿ ನಿತ್ಯವಾದ ಅನಿವಾರ್ಯವಾದ ಮಂಗಲವಸ್ತುವೆನ್ನಿಸಿಕೊಂಡಿತು. +ಈ ವಸ್ತುವನ್ನು ಇವತ್ತು ನಾವು ದೇವಸಂಬಂಧದ ಕಲ್ಪನೆಯಲ್ಲಿ ಪರಿಗಣಿಸುವುದಿರಲಿ, ಮನುಷ್ಯಸಂಬಂಧಗಳ ಕಲ್ಪನೆಯಲ್ಲೂ ಪರಿಗಣಿಸದೆ ಹಣದ ಸಂಬಂಧದಲ್ಲಿ ಮಾತ್ರವೇ ಪರಿಗಣಿಸುತ್ತೇವೆ. ಅಂದರೆ, ಅಡಕೆಯ ಮಾನವನ್ನು ಕಳೆದುಬಿಡುತ್ತೇವೆ. ಅಡಕೆಯ ಮಾನಭಂಗವಾದರೆ ಕೃಷಿಕರಿಗೆ ತಮ್ಮ ಮಕ್ಕಳದ್ದೇ ಮಾನಭಂಗವಾಯಿತು ಅನ್ನಿಸಬೇಕು. ನಿಜವಾದ ಬೆಳೆಗಾರನು ತನ್ನ ಹೆಣ್ಣುಮಕ್ಕಳನ್ನು ಸಾಕುವ ಹಾಗೇ ಈ ಚಂದದ ಕಲ್ಪವೃಕ್ಷವನ್ನು ನೀರೆರೆದು ಉಣಿಸಿ ತಿನಿಸಿ ಮೈಮುಟ್ಟಿ ತಲೆ ಮೂಸಿ ಹಿಗ್ಗು ತುಂಬಿಕೊಂಡು ಸಾಕುತ್ತಾನೆ. +***** +-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […] +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […] +ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_23.txt b/Kannada Sahitya/article_23.txt new file mode 100644 index 0000000000000000000000000000000000000000..57118eb471fe343d44388bdf7d14a51bd18f66a8 --- /dev/null +++ b/Kannada Sahitya/article_23.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು ನನ್ನಮ್ಮನ ಹಾಗೆ. +ಪೀಚು ದೇಹ, ಎಲುಬು ಕಾಣುವ ಕೆ, +ಕಣ್ಣ ಕೆಳಗೆ ಹರಡಿದ ಕಪ್ಪು +ಒಳಗೆ ಹೊರೆಹೊರೆ ದುಃಖ +ಹೊತ್ತ ಎದೆ ಭಾರ +ಹೊರಲಾರದ ಚಿಂತೆ ಮನಸ್ಸಿಗೆ +ಮೇಲೊಂದು ಮುಗುಳ್ನಗೆ. +ನಾನು ನನ್ನಮ್ಮನ ಹಾಗೆ +ನನ್ನ ಕಣ್ಣೊಳಗೆ ಅವಳ ಕಣ್ಣೀರು. +***** +ಈ ದಿನ ಭಾನುವಾರ- ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ ನನ್ನ ದಡದಲ್ಲಿರುವ ಗಿಡಮರ ಬಳ್ಳಿ ಪ್ರತಿಫಲಿಸಿ, ಏನೋ ಸಮಾಧಾನ. ಅಂಥ ಅವಸರವಿಲ್ಲ, ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು. ಬೆಳೆದಿರುವ ಗಡ್ಡ ಇನ್ನೂ ಒಂದೆರಡು […] +ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […] +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_230.txt b/Kannada Sahitya/article_230.txt new file mode 100644 index 0000000000000000000000000000000000000000..59c84f1c902e1bb0206962ccbef566d0cee67bad --- /dev/null +++ b/Kannada Sahitya/article_230.txt @@ -0,0 +1,130 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ +ಮಂದಿ ಗಿಜಿಗಿಟ್ಟಿರುವ ನಿಲ್ದಾಣ; +ಯಾವುದೋ ಊರು +ಎಲ್ಲಿಯೋ ಏತಕೋ ಅವಸರದ ಕೆಲಸ +ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; +ನಿಂತಲ್ಲಿಯೆ +ಕುಳಿತಲ್ಲಿಯೆ +ಎದೆಯ ಮಗ್ಗದಲಿ ಮಿಂಚಿನ ಲಾಳ ಓಡಾಡಿದೆ ! +ಕೈಯ ಗಡಿಯಾರದಲಿ ಕಾಲದ ನಾಡಿ ಮಿಡಿಯುತಿದೆ +ಅಲ್ಲಿಗೂ ಇಲ್ಲಿಗೂ ಎಲ್ಲಿಗೊ ಎಳೆಯನೆಳೆದಾಡುತಿದೆ ಜೀವಜೇಡ! +ದೂರ ತಾರಸ್ವರದಿ ಕೂಗಿಕೊಂಡಿತು ಗಾಡಿ +(ಮುಗಿಲ ಭೇದಿಸಿ ಬರುವ ಅಶರೀರವಾಣಿ !) +ಅಡಪು ಹತ್ತಿದ ಮೈಯ ತುರಿಸಿಕೊಳ್ಳುತ ನಾಯಿ +ಎದ್ದು ಕಿವಿ ಝಾಡಿಸಿದೆ- +ಧಡ್….ಧಡ್…. ಧಡ್ …ಧಡ್…. +ಕಂಪಿಸಿದಬೆರಡೂ ಕಂಬಿ +ನೂರು ಗಾಲಿಗಳುರುಳ ದಡ್ಡು ಬಿದ್ದಿರುವದೆಯು +ಹೊಡೆದುಕೊಂಡಿದೆ ಮತ್ತೆ ಧಡಧಡಿಸಿ- +ಓ ಬಂತು ! ಬಂದು ನುಗ್ಗಿತು ಗಾಡಿ +ಬಂದಂತೆ ಕೊನೆಗೊಮ್ಮೆ ಬೇರುಕಿತ್ತು ! +(‘ಬಂದಿತೆಂದರು ಇದ್ದುದಿದ್ದೆ ಇತ್ತು.’) +೨ +ಸಾಮಾನು ಸಟ್ಟು ಎಲ್ಲಾ ಒಳಗಿಟ್ಟು ಕುಳಿತೆಯಾ?- +ಇಲ್ಲವೋ ಇಲ್ಲಿ ಜಾಗ ಡಬ್ಬಿ ಭರ್ತಿ +ಮೋಟಾರು ಬಸ್ಸು ಸಿನಿಮಾ ಸರ್ಕಸೊ ಎಲ್ಲಿ ಹೋದರೂ ಇದೇ ಫಜೀತಿ ! +ಎಂಥ ಹುಚ್ಚನೊ ನೀನು +ಸುಮ್ಮನೆ ದಂಗು ಬಡಿದೇಕೆ ನಿಂತಿ ? +ಹೂಂ ಹತ್ತು, ಜೋರಾಗಿ ಆ ಕಡೆ ಒತ್ತು ಈಗ ನಿನ್ನ ಸರತಿ +‘ಮಹಾಜನೋಯೇನ ಗತಸ್ಸಪಂಥಾ’ +ಯಾರಾದರೇನು, ತಮಗಿಷ್ಟು ಆರಾಮುಜಾಗ ಸಿಕ್ಕರೆ ಸಾಕು +ಸಾಕಪ್ಪ ಸಾಕು ; ಕುತ್ತಿಗೆ ಹಿಡಿದು ದಬ್ಬುವುದೊಂದೆ ಬಾಕಿ ! +ಎಲಾ ಅವಿವೇಕಿ ! +ಗುಂಪಿನಲ್ಲಿ ನೀನು ಮಾತ್ರ ಏಕಾಕಿ. +* * * * +ಇದು ಹೊರಟಿದ್ದೆ ಲೇಟು +ಬಂದು ಮುಟ್ಟಿದ್ದು ಇನ್ನೂಲೇಟು ; +ಸುಮ್ಮನೆ ಹೋಗಿ ಬಿಡುತ್ತಿದೆ ಸಾಹೇಬರ ಬಾಯ ಚಿರೂಟು +ಫುಸ್….ಫುಸ್…. ಫುಸ್…. +ಉಶ್‍ಶ್…. ಎಲ್ಲಿ ಸತ್ತಿತೊ ಗಾಳಿ +ಒಂದೇಸವನೆ ಸೆಖೆ ಕುಚ್ಚುತಿದೆ +ಬಂದ ಬೆವರೆಲ್ಲ ಇಂಗಿ ಒಳ‌ಅಂಗಿ ಒಣಗಿ ಒತ್ತು ಗರಡಾಗಿದೆ! +‘ಸೋಡಾ ಲೆಮನ್ ಆರೆಂಜ್….’ +‘ಗರಮಾ ಗರಂ ಚಹಾ ….’ +‘ಒಂದಾಣೆ ದಿನಪತ್ರಿಕೆ ’ +ಆರೆ, ಎಲ್ಲಿ ಹೋಯಿತು ಕೋಟಿನೊಳಗಿಟ್ಟ ಪಾಕೀಟು ! +ಅದರ ಜೊತೆಗೇ ಇತ್ತು ಈಗ ತೆಗೆಸಿದ ತಿಕೀಟು +ಐದರದೊಂದು ನೋಟು ! +ನನ್ನ ಪಾಲಿಗೇ ಬರಬೇಕೆ ಇಂಥ ಪಡಿಪಾಟು ! +ಅಪರೂಪಕ್ಕೆ ಭೆಟ್ಟಿ ಯಾಗಿದ್ದ ಗೆಳೆಯರಿಗೆ +ಚಹ ಕುಡಿಸಲೊಂದಾಣೆ ಉಳಿಯಲಿಲ್ಲ, +ಅವರಾದರೂ ನನ್ನ ಕರೆಯಲಿಲ್ಲ ; +ಯಾವ ಡಬ್ಬಿಯನೇರಿ ಯಾರ ಡುಬ್ಬದ ಮೇಲೆ ಕುಳಿತರೋ ಯಾವಬಲ್ಲ ! +ಕಿಡಿಕಿಯೊಳಗಿಂದಲೇ ಒಳಗೆ ತುರುಕಿರಬೇಕು ಅವರ ಹಮಾಲ. +ಬೆನ್ನ ಹಿಂದೆಯೆ ಬೆಕ್ಕಿನೊಲು ಬಂದು ನಿಲ್ಲುವನೀಗ ಚೆಕ್ಕರು +ಇದ್ದುದನು ಹೇಳಿದರೆ ನಂಬಬಹುದೇ ಅವನು +ಹಾಗು ಹೀಗೂ ಜಡಿದು ವಸೂಲು ಮಾಡದೆ ಬಿಡನು. +ಇಲ್ಲಿ ಗದ್ದಲದಲ್ಲಿ ಕಣ್ಣು ತಪ್ಪಿಸಿ ನುಸುಳಿ ಪಾರಾಗಬಹುದು +ಅಲ್ಲಿ ಏನೋ ಎಂತೊ +ನಾನಿಳಿವ +ಆ +ಕೊನೆಯ ನಿಲ್ದಾಣದಲ್ಲಿ! +(ಜಪ್ತು ಮಾಡಿದರೆ ಮಾಡಲಿ, ನನ್ನ ಕಿಸೆಯೆಲ್ಲ ಖಾಲಿ) +* * * * +ಇದು ದೊಡ್ಡ ನಿಲ್ದಾಣಕೂಟ +ಇಲ್ಲಿಂದಲೇ ಹೊರಟು ಇಲ್ಲಿಗೇ ಬಂದು ಕೂಡುವವೆಲ್ಲ ಕಡೆಯಗಾಡಿ +ದೇಹಾದ್ಯಂತ ಸಂಚರಿಸಿ ಪುಪ್ಪುಸಕೆ ಹರಿವಂತೆ ರಕ್ತನಾಡಿ. +ನಮ್ಮ ಗಾಡಿಗೆ ಏನು ಬಂತೊ ಧಾಡಿ +ನಿಂತು ನಿಂತಲ್ಲಿಯೇ ಗೊರಕೆ ಹೊಡೆಯುತ ಮಲಗಿಬಿಡುವ ರೂಢಿ; +ಎಲ್ಲಿ ಹೋದನೊ ಪುಣ್ಯಾತ್ಮ ಗಾರ್ಡ +ತ್ರಿಶಂಕುವಿನಂತೆ ನಮ್ಮಲ್ಲಿಯೆ ಬಿಟ್ಟು, ಕೈಯಲ್ಲಿ ತಾಳಕೊಟ್ಟು +ಕುಣಿಯ ಹಚ್ಚಿದನಲ್ಲ ಇವನೊಬ್ಬ ದೊಡ್ಡ ಕೀರ್ತನಕಾರನೇ ಥೇಟು. +ಆಕಳಿಸಿ ತೂಕಡಿಸಿ ಓಕರಿಸಿ ಸಾಕಾಯ್ತು ಮೂಗು ತಿಕ್ಕಿ! +ಒಬ್ಬರಮೇಲೊಬ್ಬರು ಹತ್ತಿ ಹತ್ತಿಕ್ಕಿ ಹತ್ತಿಯಂಡಿಗೆಯಂತೆ ತುಳಿಯುತ್ತಿಹರು- +ಹೊಡೆಯಬಾರದೆ ಗಂಟೆ +ಊದಬಾರದೆ ಸೀಟಿ +ಉರುಳಬಾರದೆ ಒಮ್ಮೆಲೇ ನೂರುಗಾಲಿ ! +“ಉಧೋ ಉಧೋ ಒಳಗಿದ್ದ ಬೆಳಕೆ ಬೆಳಕೇ +ಉಧೋ ಉಧೋ ಹೊರಗೆ ಬಾ ಏಕೆ ಒಳಕೆ!” +೩ +ಧಡಗ್….ಗಡಗ್….ಧಡಗ್….ಗಡಗ್…. +ಇದ್ದ ಶಕ್ತಿಯನೆಲ್ಲ ಒಟ್ಟುಗೂಡಿಸಿ ಮುಂದಕೆಳೆಯಿತೆಂಜಿನ್ನು +ಒಂದೊಂದೆ ಸುತ್ತು ಎಣಿಸುತ್ತ ಉರುಳಿದವು ಗಾಲಿ +ಉಸಿರಾಡಿಸಿತು ಗಾಳಿ +ಸಾಗಿದವು ಡಬ್ಬಿ ಹೊಯ್ದಾಡುತ್ತ ಒಂದರ ಹಿಂದೆ ಒಂದು…. +ದೊಡ್ಡ ಸಂಸಾರಕ್ಕೆ ಒಬ್ಬನೇ ದುಡಿಯುವವ +ಹಬ್ಬಿ ಬೆಳೆದಿದೆ ಬಳಗ ತೂಗು ತೊಟ್ಟಿಲವಾಗಿ ಬೆಳ್ಳಿ ಬಟ್ಟಲವಾಗಿ +ಒಂದಕ್ಕೆ ಹತ್ತಾಗಿ ಹತ್ತು ನೂರಾಗಿ ! +ವರುಷ ವರುಷಗಳೆಷ್ಟೊ ಗತಿಸಿದವು ಹೀಗೆಯೇ ಹಳಿಗುಂಟ ಸಾಗಿ. +ಜಗ್ ಜಗ್ ಝುಕು ಝುಕು +ಜಗ್ ಜಗ್ ಝುಕು ಝಕು ಜಗ್ ಜಗ್…. +ಓಹೋ! ಕುಣಿಯಲೂ ಬಲ್ಲುದೀ ಗಾಡಿ ಒಮ್ಮೊಮ್ಮೆ ಉನ್ಮಾದಗೂಡಿ +ಒಳ್ಳೆ ಪ್ರಾಯದ ಮೋಡಿಃ +ಹತ್ತಿದಿಬ್ಬವ ಸಿಳ್ಳು ಹೊಡೆದು ಹುಬ್ಬನು ಕುಣಿಸಿ +ಹಸಿರ ಸೆರಗನು ಜಗ್ಗಿ ಸರಸವಾಡಿ +ಸೇತುವೆಯನೊತ್ತಿ ಮುತ್ತಿಟ್ಟು ಆಲಿಂಗಿಸುತ +ಕಣಿವೆ ಕಂದರಗಳಲಿ ಕಟ್ಟಾಡಿಸಿ- +ಜಗ್ ಜಗ್ ಝುಕು ಝುಕು +ಜಗ್ ಜಗ್ ಝುಕು ಝುಕು +ಜಗ್ ಜಗ್……… +ಕೊಂಚ ಮುಗ್ಗರಿಸಿತ್ತು ಗಾಡಿ ಬಿತ್ತು ಬ್ರೇಕು ! +ಅಂತು ಇಂತೂ ಕೊನೆಗೆ ಬಂದು ಮುಟ್ಟಿತು ಇಗೊ ಬಂತು ನಿಲ್ದಾಣ +ನಿಟ್ಟುಸಿರುಗರೆದು ನಿಂತಿತೋ ಆಗಿ ನಿತ್ರಾಣ ! +ಹತ್ತುವರು ಇಳಿಯುವರು ಮುತ್ತಿ ಮುಗಿ ಬೀಳುವರು +ಮತ್ತೆ ನಿನ್ನಂಥವರು ಎಷ್ಟೋ ಜನ ! +ಎಡಬಲದ ಗಿಡಮರಗಳೋಡಿ ಡಿಕ್ಕಿಯ ಹೊಡೆದು +ಗಿರಿದರಿಗಳೆಲ್ಲ ಗರಗರ ತಿರುಗಿ ಎಲ್ಲಿಗೋ ಬೀಸಿ ಒಗೆದು +ಗಕ್ಕನೆ ಚೇನು ಜಗ್ಗಿ ನಿಲ್ಲಿಸಿದಂತೆ ಬಹುದೂರ ನೆನಪು- +ಇಡಿಯ ಹಾಡಿನಲಿ ಎದೆಯ ಮಿಡಿದಂತೆ ಯಾವುದೋ ಒಂದು ಚರಣ +ಇರಲಿ; ಹೊತ್ತಾಯ್ತು ಮತ್ತೇಕೆ ಆ ಎಲ್ಲ ಹಳೆ ಪುರಾಣ +ಹೊರು ನಿನ್ನ ಹೋಲ್ಡಾಲು +ಹಿಡಿದುಕೋ ಕೈ ಚೀಲ +ಇಳಿದು ಬಿಡು ಸಾವಧಾನ +ಜಗ್….ಜಗ್….ಜಗ್ …ಜಗ್ … +ಚಲಿಸುತಿವೆ ಗಾಲಿ, ಮತ್ತೆ ಎಲ್ಲಿಂದಲೋ ಬಂತು ತ್ರಾಣ +ಎಲ್ಲಿಹುದೊ ಈ ಇದರ ಕೊನೆಯ ನಿಲ್ದಾಣ ?! +***** +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […] +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_231.txt b/Kannada Sahitya/article_231.txt new file mode 100644 index 0000000000000000000000000000000000000000..903067653b9045991ee42480f8a21a67fcddb8a9 --- /dev/null +++ b/Kannada Sahitya/article_231.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಚಿತ್ತಾಲರ ೫೦ನೇ ಕಥೆ) +ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ ಮಗಳ ಜೊತೆಗೆ ಚಹಕ್ಕೆ ಬರಲಿದ್ದಾಳೆ. ನಾಳೆ ಊರಿಗೆ ಹೊರಟಿದ್ದಾಳಂತೆ. ಸದ್ಯ ಬಂದದ್ದು ದಿಲ್ಲಿಯಿಂದಂತೆ. ಊರಿಗೆ ಹೋಗುವ ಮೊದಲು ನಿಮ್ಮನ್ನೊಮ್ಮೆ ನೋಡುವ ಆಸೆಯಂತೆ. ನಾನು ಊಟಕ್ಕೇ ಬನ್ನಿ ಎಂದೆ. ಬೇಡವೆಂದಳು.” +ಕೆಲಸದ ಹೊತ್ತಿಗೆ ಆಫೀಸ್ಗೆ ಪೋನ್ ಮಾಡಕೂಡದೆಂದು ನಾನು ಹಲವು ಸಾರೆ ಬಜಾಯಿಸಿ ಹೇಳಿದ್ದೆನಾದ್ದರಿಂದ ತಿಳಿಸಬೇಕಾದ್ದನ್ನು ಸಂಕ್ಷಿಪ್ತವಾಗಿ ತಿಳಿಸಿ ಹೆಂಡತಿ ಫೋನ್ ಕೆಳಗಿಟ್ಟುಬಿಟ್ಟಿದ್ದಳು. ಹಾಗೆ ಕೆಳಗಿಡುವಾಗ ಒಳಗೊಳಗೇ ಖುಕ್ ಎಂದು ನಕ್ಕದ್ದು ಕೇಳಿಸಿದಂತಾಗಿ ನಾನು ಗೊಂದಲಗೆಟ್ಟೆ. +ಗೋದಾವರಿ ಪದಾ ಹೇಳೆ ಎಂಬ ವಿಚಿತ್ರ ಹೆಸರಿನ ಹುಡುಗಿ ಈ ಧರಣಿ ಮಂಡಲದ ಮೇಲೆ ನಿಜಕ್ಕೂ ಇದ್ದಾಳೆ ಎಂದು ಗೊತ್ತಾದದ್ದು ಒಂದು ದಿನ ನಸುಕಿನಲ್ಲಿ ರವಕಿ-ಕಿರುಗಣೆ ತೊಟ್ಟು, ತಲೆಗೆ ಕೆಂಪು ರಿಬ್ಬನ್ ಕಟ್ಟಿದ ಎರಡು ಜಡೆಗಳನ್ನು ಹಾಕಿಕೊಂಡು ತನ್ನ ಅಮ್ಮನ ಕೈಹಿಡಿದು ಅವಳು ನಮ್ಮ ಅಂಗಳದಲ್ಲಿ ಪ್ರಕಟಗೊಂಡಮೇಲೇ. +ಇದು ನಡೆದದ್ದು ಇಪ್ಪತ್ತೆರಡು ವರ್ಷಗಳ ಹಿಂದೆ. ಅದಾಗ ಎರಡು ದಿನಗಳ ಮೇಲೆ ನಡೆಯಲಿದ್ದ ಅಕ್ಕನ ಮದುವೆಗೆ ಪರ ಊರಿನ ನೆಂಟರಿಷ್ಟರೆಲ್ಲ ನೆರೆಯ ತೊಡಗಿದ್ದರು. ಅಂಗಳಕ್ಕೆ ದೊಡ್ಡ ಚಪ್ಪರ ಹಾಕಿದ್ದರು. ಪ್ರವೇಶದ್ವಾರಕ್ಕೆ ಬಾಳೆ, ಮಾವಿನ ಎಲೆಗಳ ತೋರಣ ಕಟ್ಟಿದ್ದರು. ಮಡಿವಾಳ ಮಾದೇವ ಚಪ್ಪರದ ಮಾಡಿಗೆ ತಟ್ಟಿಗಳಿಗೆ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಅಚ್ಛಾದಿಸಿದ ಬಿಳಿಯ ಬಟ್ಟೆಯಿಂದಾಗಿ ಚಪ್ಪರಕ್ಕೆ ಚಪ್ಪರವೇ ಶುಭ್ರ ಶೋಭೆಯಿಂದ ಬೆಳಗಿತ್ತು. ಚಪ್ಪರದ ಒಂದು ಕೊನೆಯಲ್ಲಿ ಬಣ್ಣದ ಕಾಗದಗಳಿಂದ, ಝಗಝಗಿಸುವ ಬೇಗಡೆಯಿಂದ ಅಲಂಕೃತವಾದ ಲಗ್ನಮಂಟಪ ನಿಂತಿತ್ತು. ಸರಿಮಧ್ಯದಲ್ಲಿ ತುಳಸಿ ವೃಂದಾವನ. ಓಲಗದವರು ಬೆಳಿಗಿಗೇ ಒಮ್ಮೆ ಬಂದು ಪಂಚವಾದ್ಯ ಬಾರಿಸಿ, ಮದುವೆಯ ಶುಭ ಸಮಾಚಾರವನ್ನು ಕೇರಿಗೆಲ್ಲ ಸಾರಿ, ಅಂದು ಮನೆಯಲ್ಲಿದ್ದ ದೇವಕಾರ್ಯಕ್ಕೆ ಶುಭ ಕೋರಿ ಹೋಗಿದ್ದರು. ತುಳಸಿ ವೃಂದಾವನದಿಂದ ಹಿಡಿದು ಹಿತ್ತಲ ದಣಪೆಯವರೆಗೆ ವಾತಾವರಣವೆಲ್ಲ ಉತ್ಸಾಹದಿಂದ ದುಮುಗುಡುತ್ತಿತ್ತು. ಆದರೆ ಇದೀಗ ಅಂಗಳದಲ್ಲಿ ಅದೇ ಕಾಲಿಡುತ್ತಿದ್ದ ಆಗಂತುಕರಿಬ್ಬರನ್ನು ಬರಮಾಡಿಕೊಂಡ ಉತ್ಸಾಹ ನನ್ನ ಮನಸ್ಸಿನಲ್ಲಿ ಬೇರೆಯಾಗಿ ನಿಂತಿತು- +“ಅದೋ! ಕಾವೇರಕ್ಕ ಬಂದಳು. ಗೋದಾವರಿ ಪದಾ ಹೇಳೆ ಬಂದಳು” ಎಂದು ಕುಣಿಯುತ್ತ ಅಕ್ಕ ಆಡಿದ ಮಾತುಗಳು ಅಂಗಳದಲ್ಲಿನ್ನೂ ನಿನದಿಸುತ್ತಿರುವಾಗಲೇ ಒಳಗೆಲ್ಲೋ ಕೆಲಸದಲ್ಲಿದ್ದ ಅಮ್ಮ ಸೋದರತ್ತೆ ಕೂಡಿಯೇ ಜಗಲಿಗೆ ಬಂದು- +“ಕಾವೇರಕ್ಕಾ, ಸೀದಾ ಬಚ್ಚಲಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಅಡುಗೆಮನೆಗೇ ಬನ್ನಿ. ತಿಂಡಿ, ಅಸರಿ ಮುಗಿಸಿಯೇ ಕೆಲಸಕ್ಕೆ ಕೈ ಹಚ್ಚುವಿರಂತೆ” ಎಂದು ಅಮ್ಮನೂ, “ಸ್ನಾನವಾಗಬೇಕಾದರೆ ಹಂಡೆಯಲ್ಲಿ ನೀರು ಕಾದದ್ದೇ ಇದೆ” ಎಂದು ಸೋದರತ್ತೆಯೂ ಬಂದವರಿಗಿತ್ತ ಸ್ವಾಗತದ ಸಂಭ್ರಮ ನೋಡಿ ನಮ್ಮ ಕುಟುಂಬದಲ್ಲಿ ಅವರಿಗೆ ವಿಶೇಷ ಸ್ಥಾನವಿದೆಯೆಂದು ಆಗಲೇ ಹೊಳೆದಿತ್ತು. +ಕಾವೇರಕ್ಕ ನಮ್ಮ ಸಾಂತಯ್ಯ ಬಾಪ್ಪಾನ ತಂಗಿಯೆಂದೂ ಸಾಣೀಕಟ್ಟೆಯಲ್ಲಿ ಚಾ ದುಕಾನು ಇರಿಸಿದ್ದ ಅವಳ ಗಂಡ ನೀಲಕಂಠ ಹಾವು ಕಚ್ಚಿ ಸತ್ತ ಮೇಲೆ ಅವರಿವರಲ್ಲಿ ಅಡುಗೆಯ ಕೆಲಸಕ್ಕೂ ನಿಲ್ಲಬೇಕಾದ ಪರಿಸ್ಥಿತಿ ಉಂಟಾಯಿತೆಂದೂ ಹಿಂದಿನಿಂದ ಗೊತ್ತಾಯಿತು. ಈಗ ಬಂದದ್ದು ನಮ್ಮ ಮನೆಯವರಿಗೆಲ್ಲ ಬೇಕಾಗಿದ್ದ ಆಪ್ತರಾಗಿ. ಅಮ್ಮನಿಗೆ ಮದುವೆಯ ಕೆಲಸದಲ್ಲಿ ನೆರವಾಗಲು. +ಗೋದಾವರಿ ಪದಾ ಹೇಳೆಯನ್ನು ನಾನು ಈ ಮದುವೆಯ ನಂತರ ಮತ್ತೆ ನೋಡಿರಲಿಲ್ಲ. ನೋಡಿದ್ದು ಅಂದು ಅವಳು ತನ್ನ ಗಂಡ ಹಾಗೂ ಮಗಳ ಜೊತೆಗೆ ನಮ್ಮ ಮುಂಬಯಿಯ ಈ ಮನೆಗೆ ಭೇಟಿಯಿತ್ತಮೇಲೇ. ಈ ನಡುವಿನ ಇಪ್ಪತ್ತೆರಡು ವರ್ಷಗಳಲ್ಲಿ ಅವಳು ಏನಾದಳು? ಎಲ್ಲಿಗೆ ಹೋದಳು? ನನಗೆ ತಿಳಿಯುವ ಉಪಾಯವಿರಲಿಲ್ಲ. ಈ ಕಾಲದಲ್ಲಿ ನಾವೂ ಊರು ಬಿಟ್ಟು ಧಾರವಾಡದಲ್ಲಿ ನೆಲೆಸಿದ್ದೆವು. ಅಪ್ಪ-ಅಮ್ಮ ತೀರಿಕೊಂಡ ಮೇಲೆ ನಾನು ಧಾರವಾಡವನ್ನೂ ಬಿಟ್ಟು ಮುಂಬಯಿಯಲ್ಲಿ ಅಣ್ಣನ ಮನೆಗೆ ಬಂದೆ. ಬಂದು ಎಂಜಿನಿಯರಿಂಗ್ ಮುಗಿಸಿ ನೌಕರಿ ಹಿಡಿದೆ. ಎಂಟು ವರ್ಷಗಳ ಹಿಂದಷ್ಟೇ ಮದುವೆಯಾದ ಮೇಲೆ ಹೆಂಡತಿಯೊಡನೆ ಈಗಿನ ಮನೆಯಲ್ಲಿ ಬಿಡಾರ ಹೂಡಿದೆ. +ಮದುವೆಯಾದ ಹೊಸತರಲ್ಲಿ ಒಂದು ರಾತ್ರಿ, ನಾನು ಹೆಂಡತಿ ತುಂಬಾ ಉಲ್ಲಾಸದ ಮೂಡಿನಲ್ಲಿದ್ದಾಗ, ಇದ್ದಕ್ಕಿದ್ದ ಹಾಗೆ ನನಗೆ ಗೋದಾವರಿ ಪದಾ ಹೇಳೆಯ ಬಗ್ಗೆ, ನಮ್ಮ ಮೊದಲ ಭೇಟಿಯಲ್ಲಿ ನಡೆದ ಒಂದು ಚಿಕ್ಕ ಘಟನೆಯ ಬಗ್ಗೆ ಹೇಳುವ ಮನಸ್ಸಾಯಿತು. ಘಟನೆ ನಡೆದ ಹೊತ್ತಿಗೆ ನಾವಿಬ್ಬರೂ ಚಿಕ್ಕವರು. ನಾನು ಹನ್ನೆರಡು-ಹದಿಮೂರು ವರ್ಷದವನಿರಬೇಕು. ಅವಳು ಒಂದೆರಡು ವರ್ಷಗಳಿಂದ ಚಿಕ್ಕವಳು. ನಡೆದದ್ದರ ಬಗ್ಗೆ ಹೇಳೆಂದು ಯಾರೂ ಒತ್ತಾಯಿಸಿರಲಿಲ್ಲ. ನಾನಾಗಿ ಹೇಳಲು ಹೊರಟಿದ್ದೆ. ಆದರೂ ಆರಂಭ ಮಾಡುವ ಮೊದಲೇ ಹೆಂಡತಿಗೆ ಇದು ಬಹಳ ಹಿಂದೆ ನಡೆದದ್ದೆಂದೂ, ವಿಚಾರ ಮಾಡಿ ನೋಡಿದರೆ ಅಂಥ ವಿಶೇಷ ಸಂಗತಿಯೇನಲ್ಲವೆಂದೂ ವಿವರಣೆ ನೀಡುವ ಗರಜು ಏಕೆ ಭಾಸವಾಯಿತೋ! ಅಂದೇ ಹೇಳುವ ಹುಕ್ಕಿ ಏಕೆ ಬಂತೋ! ನನ್ನ ಉಲ್ಲಾಸದ್ದೇ ಕಿತಾಪತಿ ಇದ್ದೀತು. ಅಂತೂ ನಾನು ಹೇಳಿ ಮುಗಿಸಿದ್ದೇ ಹೆಂಡತಿ, ಮೊದಲು ಜೋರಾಗಿ ನಕ್ಕುಬಿಟ್ಟಳು; ಆ ಮೇಲೆ ಒಮ್ಮೆಲೇ ಗಂಭೀರವಾದಳು. ನಾನೂ ಮೊದಲು ನಕ್ಕೆ; ಆಮೇಲೆ ತುಸು ಪೆಚ್ಚಾದೆ. ಆಮೇಲೆ ಗೋದಾವರಿ ಪದಾ ಹೇಳೆ ಮತ್ತೆಂದೂ ನಮ್ಮ ಮಾತಿನಲ್ಲಿ ಬರಲಿಲ್ಲ. ಮುಂದೆ ಯಥಾಕಾಲದಲ್ಲಿ ನಮಗೆ ಇಬ್ಬರು ಮಕ್ಕಳಾದುವು-ಒಂದು ಗಂಡು, ಒಂದು ಹೆಣ್ಣು. ನಮ್ಮ ಕಟ್ಟಡದಲ್ಲಿ ವಾಸಿಸುತ್ತಿದ್ದ ಹಲವರಿಂದ ಸುಖದ ಸಂಸಾರವೆನ್ನುವ ಸರ್ಟಿಫಿಕೇಟೂ ನಮಗೆ ದೊರಕಿತು. +ಹೀಗಿರುವಾಗ, ಈಗ ಇದ್ದಕ್ಕಿದ್ದಹಾಗೆ ಹೆಂಡತಿ, ಗೋದಾವರಿ ಪದಾ ಹೇಳೆ ನಮ್ಮ ಮನೆಗೆ ಬರಲಿದ್ದ ಸುದ್ದಿ ಕೊಡುತ್ತ ‘ಖುಕ್’ ಎಂದು ನಕ್ಕಂತೆ ಕೇಳಿಸಿದಾಗ, ಇವಳಿಗೆ ಗೋದಾವರಿ ಪದಾ ಹೇಳೆಯ ಬಗ್ಗೆ ಹೇಳಿದ್ದೇ ತಪ್ಪಾಯಿತೇನೋ ಅನ್ನಿಸಿತು. ಹೆಣ್ಣು ಗಂಡು ಸಣ್ಣ ಪ್ರಾಯದವರಾದರೇನಂತೆ ಹೆಣ್ಣು-ಗಂಡುಗಳೇ ತಾನೇ! +ನಿಜ ಒಪ್ಪುವುದಾದರೆ, ಹೆಂಡತಿ ನಕ್ಕುದರ ಪರಿಣಾಮ ಹೆಚ್ಚು ಹೊತ್ತು ಬಾಳಲಿಲ್ಲ. ಇಪ್ಪತ್ತೆರಡು ವರ್ಷಗಳ ಹಿಂದೆ ನೋಡಿದವಳನ್ನು ಇನ್ನೊಮ್ಮೆ ನೋಡುವ ಈ ಅವಕಾಶಕ್ಕೆ ನಾನು ಪುಲಕಗೊಂಡಿದ್ದೆ ಎನ್ನುವ ತರಹ ಬಾಸ್ನನ್ನು ಕಂಡು, ಒಂದು ಅರ್ಧ ಗಂಟೆ ಮೊದಲೇ ಆಫೀಸು ಬಿಡುವುದಕ್ಕೆ ಪರವಾನಗಿ ಪಡೆದೆ. ಒಮ್ಮೆ ಪರವಾನಗಿ ಪಡೆದ ಮೇಲೆ ಅರ್ಧ ಗಂಟೆಯೇನು, ಮುಕ್ಕಾಲು ಗಂಟೆಯೇನು-ಕೇಳುವವರಿರಲಿಲ್ಲ. ಈಗ ಆದದ್ದೂ ಹಾಗೆಯೇ. ಎಂದಿಗಿಂತ ಒಂದು ಗಂಟೆ ಮೊದಲೇ ಮನೆಗೆ ಬಂದವನನ್ನು ನಗುನಗುತ್ತ ಸ್ವಾಗತಿಸಿದ ಹೆಂಡತಿ, “ನಿಮ್ಮನ್ನು ನೋಡಲು ಬರುವವರು ಇಷ್ಟರಲ್ಲೇ ಬಂದಾರು. ಕೈಕಾಲು ಮೋರೆ ತೊಳೆದುಕೊಂಡು ಫ್ರೆಶ್ ಆಗಿರಿ. ಇನ್ನೊಮ್ಮೆ ಸ್ನಾನಮಾಡಿಯೇ ಬರುತ್ತೀರೋ ನೋಡಿ. ಮಲಗುವ ಕೋಣೆಯಲ್ಲಿ ಮಂಚದ ಮೇಲೆ ನಿಮ್ಮ ಮೆಚ್ಚುಗೆಯ ಜರ್ಸೀ-ಪ್ಯಾಂಟು ಇರಿಸಿದ್ದೇನೆ. ಇವತ್ತೇ ಲಾಂಡ್ರಿಯಿಂದ ಬಂದಿವೆ. ಅವನ್ನು ತೊಟ್ಟುಕೊಳ್ಳಿ. ಅವುಗಳಲ್ಲಿ ನೀವು ಏಕದಮ್ ಎದ್ದು ಕಾಣಿಸುತ್ತೀರಿ” ಎಂದು ಪುಸಲಾಯಿಸುವಂತೆ ಹೇಳಿ, ಟೆಲಿಫೋನ್ ಮೇಲೆ ನಕ್ಕ ರೀತಿಯಲ್ಲೇ ಇನ್ನೊಮ್ಮೆ ನಕ್ಕಳು. ತುಸು ತಡೆದು, “ಅಂದಹಾಗೆ ಮದುವೆಯ ನಂತರದ ಅವಳ ಹೆಸರು ಶಾರದಾ ಅಂತೆ. ನಿಮಗೆ ತಾನು ಯಾರೆಂದು ಗೊತ್ತಾಗಲಿ ಎಂದಷ್ಟೇ ಗೋದಾವರಿ ಪದಾ ಹೇಳೆ ಎಂದು ಕರೆದುಕೊಂಡದ್ದಂತೆ. ಮಾತನಾಡುವಾಗ ಕಾಳಜಿ ತೆಗೆದುಕೊಳ್ಳಿ” ಎಂದಳು. +* +* +* +* +ಗೋದಾವರಿ ಪದಾ ಹೇಳೆ ಎನ್ನುವ, ಎಲ್ಲೂ ಕೇಳಿ ಗೊತ್ತಿರದ ಹೆಸರು, ಯಾರೋ ಚೇಷ್ಟೆಖೋರರು ಬರೇ ಪ್ರಾಸಕ್ಕೆಂದೇ ರಚಿಸಿರಬಹುದಾದರೆ ಈ ರಚಿಸಿದ ಹೆಸರೇ ಎಲ್ಲರ ಬಾಯಲ್ಲಿ ಏಕೆ ನಿಂತಿತು? ನನಗೆ ತಿಳಿಯದಾಯಿತು. ಅವಳು ನಮ್ಮಲ್ಲಿದ್ದ ನಾಲ್ಕು ದಿನಗಳಲ್ಲಿ ಯಾರೂ ತಪ್ಪಿ ಕೂಡ ಅವಳನ್ನು ಗೋದಾವರಿಯೆಂದು ಕರೆದದ್ದು ನಾನು ಕೇಳಲಿಲ್ಲ. ಅವಳ ಮೋರೆ ನೋಡಿದರಂತೂ ಪದಾ ಹೇಳುವವಳಂತೆ ತೋರಲಿಲ್ಲ, ಯಾರೂ ಅವಳಿಂದ ಹಾಡಿಸಲಿಲ್ಲ. ಮತ್ತೆ ಯಾರಿಗೆ ಗೊತ್ತು, ಎಲ್ಲರೂ ತೋರುವಂತೆ ಇರಲಾರರೇನೋ. ಗೋದಾವರಿ ಪದಾ ಹೇಳೆಯಂತೂ ಖಂಡಿತ ಇರಲಿಲ್ಲ. +ನಾನು ಅರುಹಲು ಹೊರಟಿದ್ದ ಘಟನೆ ನಡೆದದ್ದು ಅಕ್ಕನ ಮದುವೆಯ ದಿವಸ. ಅಭಿಜಿನ್ಮುಹೂರ್ತದ ಮದುವೆ. ಮೂಹೂರ್ತಕ್ಕೆ ಇನ್ನೇನು ಒಂದು ಗಂಟೆಯಿದೆ ಎನ್ನುವಾಗಲೇ ಚಪ್ಪರ ಜನರಿಂದ ಕಕ್ಕಿರಿದಿದೆ. ಶಹನಾಯಿಯ ಮಧುರ ಸ್ವರ, ಭಟ್ಟರ ಮಂತ್ರಘೋಷ. ಹೆಂಗಸರ ಮಕ್ಕಳ ಉಮೇದು ಹುಟ್ಟಿಸಿದ ಗದ್ದಲ-ಎಲ್ಲವೂ ಮದುವೆಯ ಸಂಭ್ರಮಕ್ಕೆ ವಿಶೇಷ ಕಳೆ ತಂದಿವೆ. ನಾನು ಮದುವೆಗಾಗಿಯೇ ಹೊಲಿಸಿದ ಚಡ್ಡಿ ಪೈರಣ ತೊಟ್ಟು, ತಲೆಗೂದಲನ್ನು ಸುಂದರವಾಗಿ ಬೈತಲೆ ತೆಗೆದು ಬಾಚಿಕೊಂಡು ಇಷ್ಟರಲ್ಲೇ ಬರಬೇಕಾಗಿದ್ದ ನನ್ನ ಗೆಳೆಯರ ಹಾದಿ ಕಾಯುತ್ತ ಚಪ್ಪರದ ಪ್ರವೇಶದ್ವಾರದಲ್ಲಿ ನಿಂತು ಕೊಂಡಿದ್ದೆನಷ್ಟೇ. ಎಲ್ಲಿಂದಲೋ ಓಡೋಡುತ್ತ ಬಂದಂತೆ ಬಂದ ಗೋದಾವರಿ ಪದಾ ಹೇಳೆ ಗಪ್ಪನೆ ನನ್ನ ಕೈರಟ್ಟೆ ಹಿಡಿದು, “ಏ ಹುಡುಗಾ, ನಿಮ್ಮ ಹಿತ್ತಿಲಲ್ಲಿ ಬಿಂಬಲೀ ಮರವಿದೆಯಂತೆ. ನನಗೆ ತೋರಿಸುತ್ತೀಯಾ?” ಎಂದು ಕೇಳಿದವಳು, ನನಗೆ ವಿಚಾರಮಾಡಲೂ ಸಮಯ ಕೊಡದೇ ಬಾವೀಕಟ್ಟೆಯ ಬಳಿಯ ನೀರಹಲಸಿನ ಮರದ ಕಡೆಗೆ ಎಳೆದೊಯ್ದಳು. ಇವಳು ಏನು ಮಾಡಲು ಹೊರಟಿದ್ದಾಳೆ ಎಂದು ಗೊತ್ತಾಗುವ ಮೊದಲೇ ನನ್ನ ಮೋರೆಯನ್ನು ತನ್ನ ಬೊಗಸೆಯಲ್ಲಿ ಹಿಡಿದು, ತುಟಿಗಳನ್ನು ತುಟಿಗೊತ್ತಿ, ನನ್ನನ್ನು ಗಟ್ಟಿಯಾಗಿ ಮುದ್ದಿಸಿದವಳೇ ಅಲ್ಲಿಂದ ಓಟ ಕಿತ್ತಳು. ಇಡೀ ಘಟನೆ ಎಷ್ಟೊಂದು ವೇಗದಲ್ಲಿ ನಡೆದುಹೋಗಿತ್ತೆಂದರೆ ನಡೆದದ್ದರ ಅರ್ಥವನ್ನು ನಾನು ಕೂಡಲೇ ಗ್ರಹಿಸದಾದೆ. ನಾನು ನೀರಹಲಸಿನ ಮರದ ಕೆಳಗೆ ನಿಂತಲ್ಲೇ ಕಲ್ಲುಕಂಬವಾಗಿಬಿಟ್ಟಿದ್ದೆ. ಭಟ್ಟರು ದೊಡ್ಡ ದನಿಯಲ್ಲಿ, “ಓಲಗದವರು ವಾದ್ಯಾ ಬಾರಿಸಿರೋ” ಎಂದದ್ದು ಕೇಳಿಸಿರದಿದ್ದರೆ ಅದೆಷ್ಟು ಹೊತ್ತು ನಿಂತಲ್ಲೆ ನಿಂತಿರುತ್ತಿದ್ದೆನೋ! +ಪರಿಸ್ಥಿತಿಯ ಅರಿವು ಮೂಡಿದ್ದೇ ನನ್ನನ್ನು ನಾನು ಸಾವರಿಸಿಕೊಳ್ಳುತ್ತ ಚಪ್ಪರದತ್ತ ಧಾವಿಸಿ ಚಪ್ಪರದ ಬಾಗಿಲ್ಲಲಿ ನನ್ನ ಹಾದಿ ಕಾಯುತ್ತ ನಿಂತಿದ್ದ ಗೆಳೆಯರನ್ನು ಕೂಡಿಕೊಂಡೆ. +ಗೋದಾವರಿ ಪದಾ ಹೇಳೆ ಆಮೇಲೆ ಮತ್ತೆ ನನ್ನ ಕಣ್ಣಿಗೆ ಬೀಳಲಿಲ್ಲ. ಅವಳೇ ನನ್ನ ಕಣ್ಣು ತಪ್ಪಿಸುತ್ತಿದ್ದಳೋ, ನಾನು ಅವಳಿಂದ ಅಡಗಿರುತ್ತಿದ್ದೆನೋ-ಪರಿಣಾಮ ಮಾತ್ರ ಒಂದೇ ಆಗಿತ್ತು. ಮದುವೆಯ ನಂತರವೂ ಅವಳು, ಕಾವೇರಕ್ಕ ನಮ್ಮ ಮನೆಯಲ್ಲಿ ಮೂರು ದಿನ ಇದ್ದದ್ದು ಅಮ್ಮನಿಂದ ತಿಳಿಯಿತು. ಅವರು ಹೊರಟುಹೋದದ್ದು ತಿಳಿದಮೇಲೇ ಗೋದಾವರಿ ಪದಾ ಹೇಳೆ ಆ ದಿನ ಉಟ್ಟ ಉಡುಪು, ಮಾಡಿಕೊಂಡ ಶೃಂಗಾರ ಅರಿವಿನಲ್ಲಿ ಮೂಡಹತ್ತಿದುವು. ಆದರೆ ಅವಳ ರೂಪ ಮಾತ್ರ ಸುತರಾಮ್ ಕಣ್ಣೆದುರು ನಿಲ್ಲದಾಯಿತು. ಅವಳು ಕಾಣಲು ಸುಂದರಳೋ ಅಲ್ಲವೋ ಎನ್ನುವುದು ಕೂಡ ನೆನಪಾಗದಾಯಿತು, ನನಗೆ ಮುತ್ತು ಕೊಟ್ಟ ಮೊಟ್ಟಮೊದಲ ಹುಡುಗಿ ಎನ್ನುವ ಕಾರಣಕ್ಕೋ ಏನೋ ಅವಳು ಸುಂದರಳೇ ಎನ್ನುವ ಕಲ್ಪನೆ ಮಾಡಿಕೊಳ್ಳುತ್ತ ಅವಳ ರೂಪಕ್ಕೆ ನಾನೇ ವಿವರ ಮೂಡಿಸಿದೆ: ನೀಳವಾದ ಮೂಗು, ದೊಡ್ಡ ದೊಡ್ಡ ದುಂಡಗಿನ ಕಣ್ಣುಗಳು, ತಿದ್ದಿ ತೀಡಿದಂಥ ಕಮಾನಿನ ಆಕೃತಿಯ ಹುಬ್ಬುಗಳು, ಬೇಕಷ್ಟು ಹದವಾದ ಸುಂದರ ಹಣೆ, ಇತ್ಯಾದಿ. ಎಷ್ಟೊಂದು ಪ್ರಯತ್ನಪಟ್ಟರೂ ನನ್ನ ಮೈಮರೆವಿಗೆ ಕಾರಣವಾದ ಅವಳ ತುಟಿಗಳನ್ನು ಕಲ್ಪಿಸುವುದು ಸಾಧ್ಯವಾಗಲಿಲ್ಲ ಅವುಗಳ ಸ್ಪರ್ಶವಷ್ಟೇ ಕೆಲವು ದಿನ ನೆನಪಿನಲ್ಲಿ ಸುಳಿದಾಡಿ ಆಮೇಲೆ ಮಾಯವಾಯಿತು. ಗೋದಾವರಿ ಪದಾ ಹೇಳೆ ನನ್ನೆದುರು ಕಾಣಿಸಿಕೊಂಡಷ್ಟೇ ವೇಗದಿಂದ ಅದೃಶ್ಯಳಾಗಿದ್ದಳು-ಅವ್ ಜಾವ್ ಫೊಕ್! ಇಲ್ಲ, ಅದೃಶ್ಯಳಾಗಿರಲಿಲ್ಲವೇನೋ. ಇಲ್ಲವಾದರೆ ಅಂದು-ಇದೆಲ್ಲ ನಡೆದು ಹದಿನಾಲ್ಕು ವರ್ಷಗಳ ಮೇಲೆ-ಎಲ್ಲರನ್ನು ಬಿಟ್ಟು ಕೈಹಿಡಿದ ಹೆಂಡತಿಯ ಎದುರು ಈ ಘಟನೆಯನ್ನು ಹೇಳುವ ತಲಬು ಬರುತ್ತಿರಲಿಲ್ಲ! +ನನ್ನ ಮಾತು ಮುಗಿಯುತ್ತಲೇ ದೊಡ್ಡಕ್ಕೆ ನಕ್ಕುಬಿಟ್ಟ ಹೆಂಡತಿ ಬರೇ ನಕ್ಕಿರಲಿಲ್ಲ. ನಗುವಿನ ಕೊನೆಯಲ್ಲಿ, “ಅಯ್ಯೋ ನನ್ನ ಕರ್ಮವೇ! ಇದು ನಿಜಕ್ಕೂ ನಡೆದದ್ದೇನರಿ? ಅವಳು ಚೆಂದಳಿದ್ದಳೇನರಿ? ನನಗಿಂತ ಚೆಂದಳೇನರಿ? ಆ ಮೇಲೆ ಮತ್ತೆ ಭೇಟಿಯಾಗಿಲ್ಲವೆಂದರೆ ಯಾರೂ ನಂಬುವ ಮಾತೇನರಿ?” ಎಂದು ಕೇಳಿದ್ದಳು. ರೀ ರೀ ಎಂದು ಕೊನೆಗೊಂಡ ಪ್ರಶ್ನೆಗಳಲ್ಲಿ ಮಸ್ಕರಿಯಿದ್ದದ್ದು ಗೊತ್ತಿದ್ದೂ ನಾನು ಪೆದ್ದನಂತೆ, “ಹದಿನಾಲ್ಕು ವರ್ಷಗಳ ಹಿಂದೆ ನಡೆದ ಪ್ರಸಂಗವಿದು. ಆಗವಳು ಬರೇ ಹನ್ನೊಂದೋ ಹನ್ನೆರಡೋ ವರ್ಷದವಳು” ಎಂದೆ. ಹೆಂಡತಿ ತನ್ನ ಪಟ್ಟುಬಿಡದೆ, “ಚಿಕ್ಕವಳಾದರೇನು, ಹೆಣ್ಣು ಹೆಣ್ಣೇ ಅಲ್ಲವೆ?” ಎಂದು ಚುಡಾಯಿಸಿದಳು. ಅವಳ ಮಾತಿನಲ್ಲೀಗ ರೀ ರೀ ಇಲ್ಲದ್ದು ನೋಡಿ ಧೈರ್ಯ ಕುದುರಿದವನ ಹಾಗೆ, “ಅಷ್ಟೊಂದು ಸುಂದರಳಲ್ಲ. ಹಳ್ಳಿಯ ಗುಗ್ಗು, ಮೇಲಾಗಿ” ಎಂದೆ. ಹಾಗೇಕೆ ಅಂದೆನೋ ಗೊತ್ತಾಗದೇ ಇನ್ನಷ್ಟು ಪೆದ್ದನಾದೆ. ಈ ಮಾತಿಗೂ ಈಗ ಏಳು ವರ್ಷಗಳ ಮೇಲಾಗಿದೆ. +ಸುಂದರಳೋ ಕುರೂಪಳೇ-ಇಷ್ಟು ವರ್ಷ ಬರೇ ಒಂದು ನೆನಪಾಗಿ ಉಳಿದವಳು ಇನ್ನು ಕೆಲಹೊತ್ತಿನಲ್ಲಿ ನಮ್ಮೆದುರು ಪ್ರತ್ಯಕ್ಷಳಾಗಲಿದ್ದಾಳೆ. ನಾನು, ಹೆಂಡತಿ ಅವಳ ಬರವನ್ನೇ ಕಾಯುತ್ತಿದ್ದೇವೆ. ಕಾಯುತ್ತಿದ್ದಂತೆ ಕೇವಲ ಆಟಕ್ಕೆಂಬಂತೆ ಹುಟ್ಟಿ ಬಂದ ಪ್ರಶ್ನೆಯೊಂದು ತಲೆಯಲ್ಲಿ ಸುತ್ತತೊಡಗಿತು: ಅವಳು ಹೇಗಿದ್ದರೆ ಒಳ್ಳೆಯದು-ಸುಂದರಳೋ? ಕುರೂಪಳೊ? ಹೆಂಡತಿಯ ಭಾವನೆಗಳ ದೃಷ್ಟಿಯಿಂದ ಒಳ್ಳೆಯದೆಂದು ತೋರಿದ್ದು ನನಗೆ ಕೊಟ್ಟ ಮುತ್ತಿನ ಸಾರ್ಥಕತೆಯ ದೃಷ್ಟಿಯಿಂದ ಅಲ್ಲವೆನ್ನಿಸಿತು. +“ರಾಯರು ಅದೆಂಥ ವಿಚಾರದಲ್ಲಿ ಮುಳುಗಿದ್ದಾರೆ?” ಹೆಂಡತಿ ಕೇಳಿದ ಪ್ರಶ್ನೆಗೆ ನನ್ನ ಬಾಯಿಂದ ತಟಕ್ಕನೆ ಹೊರಟ ಉತ್ತರದಿಂದ ನಾನು ಚಕಿತನಾದೆ- “ನಾನು ನಿನಗೆ ಹೇಳಿದ್ದನ್ನು ಇವಳೂ ತನ್ನ ಗಂಡನಿಗೆ ಹೇಳಿರಬಹುದೆ?” “ನಿಮ್ಮಷ್ಟೇ ವಿನೋದಬುದ್ಧಿಯವಳಾದರೆ ಹೇಳಿರಬೇಕು” ಎಂದಳು ಹೆಂಡತಿ. ಇದರಲ್ಲಿ ವಿನೋದಬುದ್ಧಿ ಎಲ್ಲಿ ಬಂತು ಎಂದು ಸರಿಯಾಗಿ ತಿಳಿಯದಿದ್ದರೂ ಇದು ನನ್ನ ಪ್ರಶಂಸೆಯೆಂದು ತಿಳಿದು ಖುಶಿಪಡುವಷ್ಟರಲ್ಲಿ, “ಮತ್ತೆ ಯಾರಿಗೆ ಗೊತ್ತು! ಹೇಳಿರಲಾರಳು. ನೀವು ಕೂಡ ಯಾರಿಗೂ ಹೇಳಿರಲಾರಿರಿ ಎಂದೇ ತಿಳಿದಿರಬಹುದು, ಹಾಗೆ ಸಹಜಾಸಹಜೀ ಹೇಳುವ ಸಂಗತಿಗಳೇ ಇಂಥವು! ಮುತ್ತು ಕೊಟ್ಟವಳು ಸಣ್ಣವಳಾದರೇನಂತೆ- ಮುತ್ತು ಮುತ್ತೇ!” +ಹೆಂಡತಿಯ ಏರುತಗ್ಗುಗಳಿಲ್ಲದ ಮಾತಿನ ಪಲ್ಲವಿ ಕೇಳುತ್ತಿದ್ದಂತೆ ತಲೆ ಚಿಟ್ಟು ಹಿಡಿಯುತ್ತಿರುವ ಭಾವನೆಯಾಯಿತು. ಸಂದರ್ಭವನ್ನು ನೆನೆದು ಸೈರಿಸಿಕೊಂಡೆ: ಇನ್ನು ಕೆಲ ಹೊತ್ತಿನಲ್ಲಿ ಕಣ್ಣೆದುರು ಪ್ರತ್ಯಕ್ಷವಾಗಲಿದ್ದವಳು ಹನ್ನೊಂದು ವರ್ಷದ ಬಾಲೆಯಲ್ಲ, ಒಬ್ಬ ಗಂಡನ ಹೆಂಡತಿ. ಒಂದು ಮಗುವಿನ ತಾಯಿ. ಮುವ್ವತ್ತು ದಾಟಿದ ಹರೆಯದ ಹೆಣ್ಣು. ತಾನಾಗಿಯೇ ನನ್ನನ್ನು ನೋಡುವ ಆಸೆ ಪ್ರಕಟಿಸಿದ್ದಾಳೆ-ಸಣ್ಣ ಸಂಗತಿಯೆ! +* +* +* +* +ಬರಬೇಕಾದವರು ಕೊನೆಗೂ ಬಂದು ಕದದ ಕರೆಗಂಟೆ ಬಾರಿಸಿದ್ದೇ ಹತ್ತಿದ ತಂದ್ರಿಯಿಂದ ಎಚ್ಚೆತ್ತೆ. ಎದ್ದುಹೋಗಿ ಕದ ತೆಗೆದು ಬಂದವರನ್ನು ಒಳಗೆ ಬಿಡುತ್ತ, “ನೀನು ನೀನಲ್ಲವೆ?” ಎಂದು ಕೇಳಿದೆ ನನ್ನ ಪ್ರಶ್ನೆಯೊಳಗಿನ ಮಳ್ಳತನಕ್ಕೆ ನಾನು ಮುಜುಗರಪಡುತ್ತಿದ್ದಂತೆ “ಹೌದು ನಾನು ನಾನೇ-ನಿನ್ನ ಗೋದಾವರಿ ಪದಾ ಹೇಳೆ, ಇವರ ಶರದೆ. ಇವರು ನನ್ನ ಪತಿ, ಶರದ್. ಇವಳು ವೀಣಾ, ನಮ್ಮ ಮುದ್ದಿನ ಮಗಳು.” ಮುಂಬಾಗಿಲಿನಿಂದ ಹಾಲಿಗೆ ಬರುವ ಕಿರುದಾರಿಯ ನಸುಗತ್ತಲೆಯಲ್ಲಿ ಪರಿಚಯದ ಮಾತುಗಳು ಕಿವಿಯ ಮೇಲೆ ಬೀಳುತ್ತಿದ್ದುವೇ ಹೊರತು ಅವುಗಳಿಗೆ ಒಳಪಟ್ಟವರ ಮೋರೆಗಳು ಸರಿಯಾಗಿ ಕಾಣುತ್ತಿರಲಿಲ್ಲ. ಹಾಲಿನೊಳಗಿನ ಬೆಳಕಿಗೆ ಬಂದಾಗ ಹೆಂಡತಿಯ ಎದುರು ಪರಿಚಯದ ಕಾರ್ಯಕ್ರಮ ಇನ್ನೊಮ್ಮೆ ನಡೆದು ನಾವೆಲ್ಲ ಸೋಫಾಗಳಲ್ಲಿ ತಂಗಿದೆವು. ಪರಸ್ಪರರ ಬಗ್ಗೆ ಮಾಡಿಕೊಂಡ ಎಷ್ಟೆಲ್ಲ ಕಲ್ಪನೆಗಳು ಈಗ ಮಾತಿನಲ್ಲಿ ಆಸ್ಫೋಟಗೊಳ್ಳುತ್ತವೆ ಎನ್ನು ನಿರೀಕ್ಷೆಯಲ್ಲಿದ್ದಾಗಲೇ ನಾವೆಲ್ಲ ಐನು ಗಳಿಗೆಯಲ್ಲಿ ಬಾಯಿ ಕಟ್ಟಿದವರಂತೆ ಮೌನ ಧರಿಸಿ ಕುಳಿತುಬಿಟ್ಟೆವು. ಕಲ್ಪಿಸಿಕೊಂಡಿದ್ದಕ್ಕೂ ಕಣ್ಣೆದುರಿನ ಪ್ರತ್ಯಕ್ಷಕ್ಕೂ ನಡುವೆ ಬಾಯ್ದೆರೆದ ಭಯಾನಕ ಕಂದರ ಈ ಬಾಯ್ಕಟ್ಟಿಗೆ ಕಾರಣವಾದದ್ದು ಸ್ಪಷ್ಟವಿತ್ತು. +ನನ್ನ ಹೆಂಡತಿಯ ಲಕ್ಷ್ಯವೆಲ್ಲ ಶಾರದೆಯ ಮೇಲೆ ಅವಳ ಅಸಾಧಾರಣ ಸೌಂದರ್ಯಕ್ಕೆ ಇವಳು ಮಾರುಹೋದದ್ದು ಇವಳ ಮೋರೆಯೇ ಸಾರುತ್ತಿತ್ತು. ನನಗಂತೂ ಕಣ್ಣೆದುರು ಪ್ರಕಟಗೊಂಡ ರೂಪಕ್ಕೆ ಗೋದಾವರಿ ಪದಾ ಹೇಳೆ-ಈ ಹೆಸರನ್ನು ಆರೋಪಿಸುವುದೇ ಅಸಾಧ್ಯವಾಯಿತು. ಮೋರೆಯ ಮೇಲೆ ವಿಚಿತ್ರ ಭಾವನೆಯನ್ನು ಮೂಡಿಸಿ ನನ್ನ ಮಗ್ಗುಲಲ್ಲಿ ಹೆಂಡತಿ ಇದ್ದಾಳೆ ಎನ್ನುವುದರ ಪರವೆ ಮಾಡದೇ ನನ್ನ ಮೋರೆಯನ್ನೇ ನೆಟ್ಟ ನೋಟದಿಂದ ನೋಡುತ್ತಿದ್ದ ಶಾರದೆಯನ್ನು ನೇರವಾಗಿ ನೋಡುವುದೇ ಅಸಾಧ್ಯವಾಗಿ, ನಾನು ಅವಳ ಗಂಡನತ್ತ ತಿರುಗಿ, “ಮುಂಬಯಿಗೆ ಬರುವುದು ಇದೇ ಮೊದಲೊ?” ಎಂದು ಕೇಳಿದೆ. ಅವರೂ ಮುಗುಳ್ನಗುತ್ತ ಉತ್ತರ ಕೊಡಲು ಮುಂದಾದರು. ನನ್ನ ಮನಸ್ಸು ಮಾತ್ರ, ಕೆಲವೇ ಕ್ಷಣಗಳ ಮಟ್ಟಿಗೆ ಪೂರ್ಣ ದೃಷ್ಟಿಗೆ ಬಿದ್ದೂ ಈಗ ಕುಡಿನೋಟಕ್ಕಷ್ಟೇ ಹೊಳೆಯುತ್ತಿದ್ದ ಶರದೆಯ ಕಣ್ಣು, ಮೂಗು, ತುಟಿಗಳಿಂದಾಗಿ, ವ್ಯಗ್ರಗೊಂಡಿತ್ತು. ಇಪ್ಪತ್ತೆರಡು ವರ್ಷಗಳ ಹಿಂದೆ ಬಿಂಬಲೀ ಮರ ನೋಡುವುದನ್ನೇ ನೆಪಮಾಡಿ ಹಿತ್ತಿಲಿಗೆ ಎಳೆದೊಯ್ದ ಹೆಣ್ಣು ಇವಳೇನೆ? ನಾನು ಕುಳಿತಲ್ಲೇ ಬಿಗಿಗೊಳ್ಳತೊಡಗಿದೆ. ಒಂದು ಕಡೆಗೆ ಶಾರದೆಯನ್ನು ಎವೆಯಿಕ್ಕದ ಕಣ್ಣುಗಳಿಂದ ನೋಡುತ್ತಿದ್ದ ಹೆಂಡತಿ. ಇನ್ನೊಂದು ಕಡೆಗೆ ನನ್ನನ್ನು ಅವಲೋಕಿಸುತ್ತಿದ್ದ ಶಾರದೆ. ನನಗೆ ಅತ್ತಿತ್ತ ತಿರುಗಲು ಆಗದೇ ಕತ್ತು ನೋಯಹತ್ತಿತ್ತು. +ನಾನು ಕೇಳಿದ ಪ್ರಶ್ನೆಗೆ ಉತ್ತರಕೊಟ್ಟು ಮುಗಿಸಿದ ಶರದರು ನನ್ನ ಮುಂದಿನ ಪ್ರಶ್ನೆಗೆ ಕಾದಿರಬೇಕು. ಅದು ಬಾರದೇ ಹೋದಾಗ ತಾವೇ ಅದನ್ನು ಊಹಿಸಿಕೊಂಡವರ ಹಾಗೆ- +“ಶಾರದೆಯನ್ನು ನೋಡಿದ್ದು ನಿಮಗೆ ನೆನಪಿದೆಯೋ ಇಲ್ಲವೋ, ತೀರ ಚಿಕ್ಕಂದಿನಲ್ಲೊಮ್ಮೆ ಯಾರದೋ ಮದುವೆಯ ಗದ್ದಲದಲ್ಲಿ ಪರಸ್ಪರರನ್ನು ನೋಡಿದ್ದಂತೆ, ಆಗ ಅವಳಿಗಿದ್ದ ಹೆಸರೂ ವಿಚಿತ್ರವಾಗಿತ್ತಲ್ಲವೆ? ಮದುವೆಯ ನಂತರ ನಾನು ಮೊದಲು ಮಾಡಿದ ಕೆಲಸವೆಂದರೆ ಇವಳ ಹೆಸರನ್ನು ಬದಲಿಸಿದ್ದು. ನಿಮ್ಮನ್ನವಳು ನೋಡಿದ್ದು ಒಂದೇ ಒಂದು ಸಲವಾದರೂ ಆ ಭೇಟಿ ಅವಳ ಮೇಲೆ ಜಬರ್ದಸ್ತು ಪರಿಣಾಮ ಮಾಡಿರಬೇಕು. ಅವಳೇ ನನಗೆ ಹೇಳಿದ ಪ್ರಕಾರ ನೀವು ಇನ್ನೊಮ್ಮೆ ಕಣ್ಣಿಗೆ ಬೀಳದೇ ತಾನು ಮದುವೆ ಆಗ ಲಾರಳೆಂದು ನಿಶ್ಚಯಿಸಿದ್ದಳಂತೆ-ನಂಬುವಿರಾ? ಆ ಭೇಟಿಯ ನಂತರ ನೀವಂತೂ ಕಣ್ಣಿಗೆ ಬೀಳಲಿಲ್ಲ. ನೀವು ಮುಂದೆ ಎಲ್ಲಿಗೆ ಹೋದಿರಿ-ಅದು ಕೂಡ ತಿಳಿಯಲಿಲ್ಲ. ತಿಳಿಯದಿದ್ದದ್ದು ಒಳ್ಳೆಯದಾಯಿತು. ಅದಕ್ಕೆ ಮೊದಲೇ ನಾನಿವಳ ಕಣ್ಣಿಗೆ ಬಿದ್ದೆ. ನಾನಿವಳನ್ನು ನೋಡಿ ಪಸಂದು ಮಾಡಿದ ಹೊತ್ತಿಗೆ ಕುಮಟೆಯ ಸಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ನಾನು ಮೂಲತಃ ಹೆರವಟ್ಟೆಯ ಹುಡುಗ. ಇವಳನ್ನು ನೋಡಿದ ಮೇಲೆ ಮಾತ್ರ ಇವಳು ನನ್ನನ್ನು ಒಪ್ಪಿದರೆ ಸಾಕು ಎಂದು ಸಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಹರಕೆ ಹೊತ್ತಿದ್ದೆ-ಈಗ ನಿಮ್ಮೆಲರ ಎದುರು ಒಪ್ಪಿಕೊಳ್ಳುತ್ತಿದ್ದೇನೆ. ಇಷ್ಟು ದಿನ ಇವಳಿಗೂ ಗೊತ್ತಿರಲಿಲ್ಲ. ಮುಂದೆ, ನಮಗೆ ಮೊದಲ ಮಗು ಹುಟ್ಟಿದ ಮೇಲೆ, ಒಂದು ದಿನ ರಾತ್ರಿ ನಾವಿಬ್ಬರೂ ತುಂಬಾ ಖುಶಿಯಲ್ಲಿದ್ದಾಗ ಈ ಸುರಸುಂರಿ ನನ್ನನ್ನು ಸಹಜವಾಗಿ ಒಪ್ಪಿಕೊಂಡದ್ದಕ್ಕೆ ಕಾರಣ ತಿಳಿಸಿದಳು-‘ನಾನು ಚಿಕ್ಕಂದಿನಲ್ಲಿ ತುಂಬಾ ಮೆಚ್ಚಿಕೊಂಡ ಹುಡುಗನ ಬಗ್ಗೆ ಹಿಂದೊಮ್ಮೆ ಹೇಳಿದ್ದೆನಲ್ಲ, ಅವನು ಹುಬೇಹೂಬ್ ನಿಮ್ಮ ಹಾಗೇ ಇದ್ದ!’ ಹಾಗಾದರೆ ಅವನನ್ನು ಹುಡುಕಿ ತಗೆಯಲೇಬೇಕಾಯಿತಪ್ಪಾ ಎಂದು ಚೇಷ್ಟೆ ಮಾಡಿದ್ದೆ. ನಿನ್ನೆ ರಾತ್ರಿಯಷ್ಟೇ ನಮ್ಮಿಬ್ಬರನ್ನೂ ಬಲ್ಲ ಗೆಳೆಯರೊಬ್ಬರಿಂದ ನೀವು ಮುಂಬಯಿಯಲ್ಲಿ ಇದ್ದದ್ದು ಗೊತ್ತಾಗಿ ಈಗ ಕರಕೊಂಡು ಬಂದೆ. ನಂಬುವಿರಾ?-ಈ ಹೊತ್ತೇ ಬಸ್ಸಿನಿಂದ ಕುಮಟೆಗೆ ಹೊರಡಬೇಕಿತ್ತು. ಇಲ್ಲಿಗೆ ಬರುವುದು ನಕ್ಕಿಯಾಗುತ್ತಲೇ ಬಸ್ ಟಿಕೆಟ್ಟುಗಳು ಕ್ಯಾನ್ಸಲ್! ನಾನು ನೌಕರಿ ಮಾಡುತ್ತಿದ್ದದ್ದು ಬರೋಡಾದಲ್ಲಿ. ಈಗ ಬಂದದ್ದು ದಿಲ್ಲಿ-ಆಗ್ರಾಗಳ ಪ್ರವಾಸ ಮುಗಿಸಿ. ಇಲ್ಲಿಗೆ ಬರಲು ಸಾಧ್ಯವಾದದ್ದು ಇವಳಿಗೆ ತಾಜ್ಮಹಲ್ ನೋಡಿ ಬಂದದ್ದಕ್ಕಿಂತ ಹೆಚ್ಚಿನ ಖೂಶಿ ಕೊಟ್ಟಿದೆ. ಆ ಖುಶಿಯಲ್ಲೇ ಇಲ್ಲಿಗೆ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗ ಇನ್ನೊಂದು ನಿರ್ಧಾರಕ್ಕೆ ಬಂದಿದ್ದಾಳೆ. ಈ ಬಾರಿ ಊರಿಗೆ ಹೋದಾಗ ನಿಮ್ಮ ಹಳ್ಳಿಗೂ ಹೋಗಿ ನಿಮ್ಮ ಹಿತ್ತಿಲಲ್ಲಿಯ ಬಿಂಬಲೀ ಮರವನ್ನು ಇನ್ನೊಮ್ಮೆ ನೋಡುವ ಆಸೆಯಾಗಿದೆಯಂತೆ. ನಿಮ್ಮಿಬ್ಬರ ಮೊದಲ ಭೇಟಿ ಈ ಮರದ ಕೆಳಗೇ ಆಗಿರಬೇಕೆಂದು ನನ್ನ ಊಹೆ. ಹಿಂದೆಯೂ ಒಂದೆರಡು ಬಾರಿ ಈ ಮರವನ್ನು ನೆನದಿದ್ದಳು. ಆ ಮರದ ಕೆಳಗೆ ಮತ್ತೆ ಏನೇನು ಭಾನಗಡಿ ನಡೆಯಿತು-ನಿಮ್ಮಲ್ಲೊಬ್ಬರು ಹೇಳಿದರೆ ತಾನೇ ಗೊತ್ತಾಗಬೇಕು? ನಿಮ್ಮನ್ನು ನೋಡಿ ಬಹಳ ಖುಶಯಾಯಿತು ಮಾರಾಯರೇ. ಬಾಲ್ಯದ ನೆನಪುಗಳಷ್ಟು ಸಿಹಿಯಾದ ಸಂಗತಿ ಇನ್ನೊಂದಿಲ್ಲ.” ಎಂದವರೇ ಸಿಹಿಯಾಗಿ ನಗುತ್ತ ನಮ್ಮ ಮನೆಯ ಬಾಲ್ಕನಿ, ಅದರ ಎದುರಿನ ಸಮುದ್ರ ಇವುಗಳ ಪ್ರಶಂಸೆಗೆ ತೊಡಗಿದರು. +ಶರದರ ಮಾತಿನಲ್ಲಿ ಆರೋಗ್ಯಕರವಾದ ವಿನೋದವಿತ್ತು, ನಾಟಕ ಮಾಡುವ ತಲಬು ಇತ್ತು. ಸಂತೃಪ್ತ ವಿವಾಹಿತನ ಅಪಾರ ಖುಶಿಯಿತ್ತು. ಖುಶಿಯಿಂದಾಗಿಯೇ ಹುಟ್ಟಿದ ಔದಾರ್ಯವಿತ್ತು. ಮೊದಲ ಭೇಟಿಯಲ್ಲೇ ಶರದರು ನನಗೆ ಮೆಚ್ಚುಗೆಯಾದರು. ನನ್ನ ಹೆಂಡತಿ ಕೂಡ ಅವರು ಹರಟುಹೋದ ಮೇಲೆ ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುವ ಹಾಗೆ ಅವರ ತಾರೀಫು ಮಾಡುತ್ತಾಳೆ ಎನ್ನುವ ಬಗ್ಗೆ ನನಗೆ ಸಂಶಯವಿರಲಿಲ್ಲ. +ತಾಮಾಷೆಯೆಂದರೆ, ಇತ್ತ ಈ ಇಡೀ ನಾಟಕಕ್ಕೆ ಮುಖ್ಯಪಾತ್ರವಾದವಳೇ ವಿಚಿತ್ರ ಸಂಕಟಕ್ಕೆ ಒಳಪಟ್ಟವಳಂತೆ ಕಂಡಳು. ಆಗಿನಿಂದಲೂ ನನ್ನನ್ನು ತದೇಕ ಚಿತ್ತಿದಿಂದ ನೋಡುತ್ತಿದ್ದವಳ ಕಣ್ಣುಗಳಲ್ಲಿ ನಿಗ್ರಹಿಸಿದ ಅಳುವಿದ್ದ ಗುಮಾನಿಯಾಯಿತು. ಚಕಾರವೆತ್ತದೇ ಬಾಯಿ ಕಟ್ಟಿದವಳಂತೆ ಕುಳಿತುಬಿಟ್ಟವಳ ಗಂಟಲಲ್ಲಿ ತಡೆಹಿಡಿದ ಬಿಕ್ಕಳಿಕೆ ಇದ್ದದ್ದು ಲಕ್ಷ್ಯಕ್ಕೆ ಬಂದಿತು. ಹೆಂಡತಿ, ಎಲ್ಲರಿಗೆ ಚಹಕ್ಕಿಟ್ಟು ಬರುತ್ತೇನೆಂದು ಹೇಳಿ ಒಳಗೆ ಹೋಗಲು ಏಳುತ್ತಲೇ ತಾನೂ ಎದ್ದು ನಿಂತ ಶಾರದೆ ಅವಳನ್ನು ಹಿಂಬಾಲಿಸಿದಳು. ಹಾಲ್ನಲ್ಲಿ ನಾನು, ಶರದ್, ಇಬ್ಬರೇ. ಶರದ್ ತಮ್ಮ ನೌಕರಿಯ ಬಗ್ಗೆ, ಇದೀಗ ಮುಗಿಸಿ ಬಂದ ಉತ್ತರ ಹಿಂದುಸ್ತಾನದ ಪ್ರವಾಸದ ಬಗ್ಗೆ ಮಾತನಾಡಿದರು. ಒಳಗೆ ಶಾರದೆ, ಹೆಂಡತಿ ಮಾತಿನಲ್ಲಿ ತೊಡಗಿದ್ದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೇಳುತ್ತಿದ್ದಂತೆ ಇಪ್ಪತ್ತೆರಡು ವರ್ಷಗಳ ಹಿಂದೆ ನಮ್ಮ ಹಿತ್ತಿಲಲ್ಲಿ ಕಂಡ ನೀರ ಹಲಸಿನ ಮರಕ್ಕೀಗ ಬೇರೆಯೇ ಒಂದು-ಅಲೌಕಿಕ ಎನ್ನಬಹುದಾದ-ಪ್ರಭೆ ಬಂದದ್ದು ನೋಡಿ ಮನಸ್ಸು ಮುದಗೊಂಡಿತು. ಆದರೆ ಶಾರದೆಯನ್ನು ಅಷ್ಟೊಂದು ಭಾವುಕಗೊಳಿಸಿದ ಬಿಂಬಲೀ ಮರ ಮಾತ್ರ ಕಣ್ಣೆದುರು ನಿಲ್ಲದಾಯಿತು. ಅಂಥ ಮರ ನಮ್ಮ ಹಿತ್ತಿಲಲ್ಲಿತ್ತು ಎನ್ನುವ ಬಗೆಗೇ ಖಾತ್ರಿಯಾಗದಾಯಿತು. +ಹೆಂಡತಿ ಇವರೆಲ್ಲ ಬರುವ ಮೊದಲೇ ತಯಾರಿಸಿಟ್ಟ ತಿಂಡಿಯ ಸರಂಜಾಮನ್ನೂ ಶಾರದ ಚಹದ ಸರಂಜಾಮನ್ನೂ ಹೊತ್ತು ಹೊರಗೆ ಬಂದರು. ಶರದರು ಬದಿಯ ಕೋಣೆಗೆ ಹೋಗಿ ಆಡುವುದರಲ್ಲಿ ಮಗ್ನರಾಗಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. +ತಿಂಡಿ ಚಹ ಸೇವಿಸುತ್ತಿದ್ದಾಗ ನಾವೆಲ್ಲ ಪರಸ್ಪರರತ್ತ ಯಾವ ಸಂಕೋಚವೂ ಇಲ್ಲದೇ ನೋಡುತ್ತ, ಎಷ್ಟೋ ವರ್ಷಗಳ ಮೇಲೆ ಒಂದೆಡೆ ಸೇರಿದ ಆತ್ಮೀಯ ಗೆಳೆಯರ ಹಾಗೆ ಉಮೇದಿನಿಂದ ಹರಟತೊಡಗಿದೆವು, ನಾನು, ಶಾರದೆ ಮೊದಲ ಬಾರಿಗೇ ಒಬ್ಬರನ್ನೊಬ್ಬರು ನೋಡಿ ಮುಗಳ್ನಕ್ಕೆವು. ಅವಳ ಗಂಟಲಲ್ಲೀಗ ತಡೆಹಿಡಿದ ಬಿಕ್ಕಳಿಕೆ ಇರಲಿಲ್ಲ. ಕಣ್ಣುಗಳಲ್ಲಿ ನಿಗ್ರಹಿಸಿದ ಕಂಬನಿಯಿರಲಿಲ್ಲ. ನನಗೆ ನಿರಂಬಳವಾಯಿತು. ನಾವು ಸಿಕ್ಕಿಕೊಂಡ ಪರಿಸ್ಥಿತಿಯ ಅರ್ಥ, ನನಗೆ ಎಂದೋ ನಿಚ್ಚಳವಾಗಿತ್ತು. ಹಾಗೆಂದೇ ಅವಳ ಕಣ್ಣು, ಮೂಗು, ತುಟಿಗಳನ್ನು ಭಿಡೆ ಬಿಟ್ಟು ನೋಡುತ್ತ, ಯಾವುದೇ ಬಗೆಯ ನಾಟಕೀಯತೆಗೆ ಎಡೆಯಾಗದ ಹಾಗೆ, ಸಹಜವಾದ ವಿನೋದಬುದ್ಧಿಯಿಂದ ಶಾರದೆಯನ್ನು ಉದ್ದೇಶಿಸಿ ಮಾತನಾಡುವುದು ಸಾಧ್ಯವಾಯಿತು- +“ನೋಡು ಶಾರದಾ, ಚಿಕ್ಕಂದಿನಲ್ಲಿ ನೋಡಿದ ನನ್ನ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡು ಬಂದ ನಿನಗೆ ನನ್ನನ್ನಿಂದು ಖುದ್ದು ನೋಡಿದ ಮೇಲೆ ನಿರಾಸೆಯಾಗಿರುವುದು ಸಹಜವಿದೆ. ನಿನ್ನ ಕಣ್ಣಿಗೆ ಅಂದು ಹೊಳೆದ ನನ್ನ ರೂಪಕ್ಕೂ, ಇವತ್ತು ನೀನು ನೋಡುತ್ತಿದ್ದುದಕ್ಕೂ ತಾಳೆಯಾಗದ್ದಕ್ಕೆ ಕಾರಣವಿದೆ, ಹೆಂಡತಿಗೂ ಇದು ಗೊತ್ತಿಲ್ಲ. ನಿನ್ನ ಸಮಾಧಾನಕ್ಕೆಂದು ಈಗ ಹೇಳುತ್ತೇನೆ. ನಾನು ಕಾಲೇಜು ದಿನಗಳಿಂದಲೇ ದಾಡಿ ಮೀಸೆ ಬೆಳೆಸಿದ್ದರ ಹಿಂದಿನ ನಿಜವಾದ ಗುಟ್ಟು ನನ್ನ ಹೆಂಡತಿಗೆ ಈಗ ಗೊತ್ತಾದೇತು: ನನ್ನ ಬಲಗಲ್ಲದ ಮೇಲೆ ತುಂಬಾ ಅಸಹ್ಯ ಕಾಣಿಸುವ ಕಂತೆ ಗಾಯವಿದೆ. ನನ್ನ ಮೂಗು ಕೂಡ ಈಗ ಇದ್ದ ಹಾಗೆ ತುಸು ಚಪ್ಪಟೆಯಾಗಿರದೇ ನಿನ್ನ ಗಂಡನ ಮೂಗಿನ ಹಾಗೆ ಚೂಪಾಗಿದ್ದಿತ್ತು. ನನ್ನ ದುರ್ದೈವ. ಧಾರವಾಡದಲ್ಲಿ ಸಾಲೆ ಕಲುಯುತ್ತಿದ್ದಾಗ ನನಗಾದ ಒಂದು ಕೆಟ್ಟ ಅಪಘಾತದಲ್ಲಿ…” +ನನ್ನ ಮಾತು ಕೊನೆಗೊಳ್ಳುವ ಮೊದಲೇ ಶಾರದೆ ಸುಳ್ಳು ಮುನಿಸು ವ್ಯಕ್ತಪಡಿಸುತ್ತ, “ಸುಳ್ಳು ಸುಳ್ಳು ಸುಳ್ಳು! ತುಂಬಾ ದುಷ್ಟ ನೀನು. ಆಗ ಅಡುಗೆಮನೆಯಲ್ಲಿ ಯಾವುದೋ ಉದ್ವೇಗದ ಭರದಲ್ಲಿ ನಿನ್ನ ಹೆಂಡತಿಗೆ ಕೇಳಿದ ಪ್ರಶ್ನೆಯನ್ನು ಕೇಳಿಸಿಕೊಂಡು ಈಗ ನನ್ನನ್ನು ಸತಾಯಿಸುತ್ತೀ” ಎಂದು ಏರಿದ ದನಿಯಲ್ಲಿ ನನ್ನನ್ನು ತರಾಟೆಗೆ ತೆಗೆದುಕೊಂಡಳು. ಈಗಿವಳು ನಿಜಕ್ಕೂ ಅಳುತ್ತಾಳೆ ಎಂದು ಭಯಪಡುವಷ್ಟರಲ್ಲಿ ಫಳ್ಳೆಂದು ಮುತ್ತಿನಂಥ ಹಲ್ಲುಗಳ ಸಾಲು ತೋರಿಸುತ್ತ, “ನಿನ್ನ ಹೆಂಡತಿ ನನಗೆ ಎಲ್ಲ, ಎಲ್ಲ ಹೇಳಿದ್ದಾಳೆ. ನನ್ನನ್ನು ಪೂರ್ತಿಯಾಗಿ ಮರೆತೇ ಹೋಗಿರಬಹುದೆಂದು ತಿಳಿದಿದ್ದೆ. ಮರೆಯುವುದುಳಿಯಲಿ, ಬಿಂಬಲೀ ಮರದ ಕೆಳಗೆ ನಡೆದ ಭಾನಗಡಿಯನ್ನು ನಿನ್ನ ಹೆಂಡತಿಗೆ ಉಘಡಾ ಉಘಡೀ ಹೇಳಿದಿಯಂತೆ. ನಿನ್ನ ಧೈರ್ಯವಾದರೆ ಧೈರ್ಯವಪ್ಪಾ. ಏನೆಂದರೂ ಗಂಡಸಲ್ಲವೇ! ಇವರಿಗಿನ್ನೂ ಹೇಳಿರಲಿಲ್ಲ, ಇವತ್ತು ಹೇಳುತ್ತೇನೆ. ನೀನು ನನ್ನನ್ನು ಇವತ್ತು ನೋಡಿದ್ದೇ ಅದೆಲ್ಲದರ ನೆನಪಿದ್ದವನಂತೆ ತೋರಿಸಿಕೊಂಡಿದ್ದರೆ ಇಷ್ಟೆಲ್ಲ ರಾದ್ಧಾಂತವಾತ್ತಿರಲೇ ಇಲ್ಲ. ನನ್ನ ಗುರುತೂ ಹತ್ತದವನ ಹಾಗೆ ಮೋರೆ ತಿರುವಿಸಿ ಕುಳಿತರೆ ನನಗೆ ಹೇಗೆ ಅನ್ನಿಸಬೇಡ?” +ತನ್ನ ಆಗಿನ ವರ್ತನೆಯನ್ನು ಸಮರ್ಥಿಸಿಕೊಂಡ ರೀತಿಗೆ ನಗು ಬಂತು. ಅವಳ ಈಗಿನ ಮೂಡು ನೋಡಿ ನನಗೂ ಧೈರ್ಯ ಕುದುರಿತು-“ನಿಜ ಹೇಳಲೆ? ಚಿಕ್ಕಂದಿನಲ್ಲಿ ನೀನೂ ಈಗಿನಷ್ಟು ಸುಂದರಳಿರಲಿಲ್ಲ” ಎಂದೆ. +“ಈಗಲಾದರೂ ಸುಂದರಳೆಂದು ಒಪ್ಪಿದೆಯೋ ಇಲ್ಲವೋ, ನಾನು ಧನ್ಯಳಾದೆ. ಹೆಂಡತಿಯ ಎದುರು ನನ್ನನ್ನು ಹಳ್ಳಿಯ ಗುಗ್ಗು ಎಂದು ಕರೆದಿಯಂತೆ…” +“ನನ್ನ ಹೆಂಡತಿ ಅದನ್ನೂ ಹೇಳಿದಳೆ? ಪಡ್ಚಾ!” ಎಂದು ಹೆಂಡತಿಯನ್ನು ದುರುಗುಟ್ಟಿ ನೋಡುತ್ತಿದ್ದಂತೆ ಆಗಿನಿಂದಲೂ ಮೌನ ಧರಿಸಿದ್ದ ಶರದರು, “ಈಗ ಜಗಳ ಬೇಡ. ಎಷ್ಟು ವರ್ಷಗಳ ಮೇಲೆ ಭೇಟಿಯಾಗಿದ್ದೀರಿ. ಈಗ ಬರೋಡಾಕ್ಕೊಮ್ಮೆ ಬನ್ನಿ, ನಮ್ಮ ಮನೆಗೆ-ನೀವೆಲ್ಲ. ಮನೆಯೆದುರು ಸಮುದ್ರವಿಲ್ಲ, ಆದರೆ ಮನೆಯ ಸುತ್ತಲೂ ಬಗೀಚಾ ಇದೆ. ಸುಂದರ ಗಿಡ ಮರಗಳಿವೆ. ಆದರೆ ಬಿಂಬಲೀ ಮರವಿಲ್ಲ. ಅದು ಎಂಥ ಮರವೆನ್ನುವುದು ಕೂಡ ನನಗೆ ಗೊತ್ತಿಲ್ಲ” ಎಂದು ಹೇಳಿ ಮನಸೋಕ್ತ ನಕ್ಕರು. +ಶಾರದೆ “ನಿನಗದು ಇನ್ನೂ ಅಷ್ಟು ಪ್ರಿಯವಾಗಿದ್ದರೆ ಈ ಬಾರಿ ಊರಿಗೆ ಹೋದಾಗ ಒಂದು ಸಸಿ ತಂದು ನೆಡುತ್ತೇನೆ. ಬಂದಾದರೂ ಬಾ” ಎನ್ನುತ್ತ ಸಣ್ಣಗೆ ಕಣ್ಣು ಮಿಟುಕಿಸಿದಳು. ಇವಳ ಧೈರ್ಯವಾದರೆ ಧೈರ್ಯವಪ್ಪಾ ಎಂದುಕೊಳ್ಳುತ್ತಿರುವಾಗ ಗಡ್ಡದ ಕೆಳಗೆ ನನ್ನ ಮೋರೆ ಕೆಂಪಗಾಗುತ್ತಿದ್ದ ಅನುಭವವಾಯಿತು. +ಮುಂದಿನ ಅರ್ಧ ಗಂಟೆಯವರೆಗೆ ಅದು ಇದು ಎಂದು ಎಷ್ಟೆಲ್ಲ ವಿಷಯಗಳ ಮೇಲೆ ಹರಟೆ ಕೊಚ್ಚಿದೆವು. ನನ್ನ ರೂಪದ ಬಗೆಗೆ ಈ ಮೊದಲು ಉಂಟಾದ ನಿರಾಶೆ ದೂರವಾದಹಾಗೆ ಶಾರದೆಯ ಸ್ವಭಾವಸಹಜವಾದ ಅದಮ್ಯ ಉತ್ಸಾಹ ಅವಳ ದೇಹದ ರಂಧ್ರರಂಧ್ರದಿಂದ ಹೊರಹೊಮ್ಮ ಹತ್ತಿತು. ನೋಡುತ್ತಿದ್ದಂತೆ ಈ ಉತ್ಸಾಹಕ್ಕೆ ಹಿಂದುಸ್ತಾನೀ ಸಂಗೀತದ ರಾಗವೊಂದರ ಆಕಾರವಿದ್ದ ಭಾಸವಾಗಹತ್ತಿತು. ಮುಸ್ಸಂಜೆಯ ಹೊತ್ತಾದ್ದರಿಂದ ಸಂಗೀತದ ಜ್ಞಾನವುಳ್ಳ ನನ್ನ ಅಣ್ಣ ಇದು ‘ಮಧುವಂತಿ’ಯೆಂದು ಗುರುತಿಸುತ್ತಿದ್ದನೇನೋ. “ಎಂಥ ಹಗಲುಗನಸಿನಲ್ಲಿ ಕಳೆದುಹೋಗಿದ್ದೀರಿ, ಅವರೆಲ್ಲ ಹೋಗಲು ಹೊರಟು ನಿಂತಿದ್ದಾರೆ” ಎಂದು ಹೆಂಡತಿ ಕಿವಿಯ ಹತ್ತಿರ ಪಿಸುಗುಟ್ಟಿದ ಮೇಲೇ ಭಾವಸಮಾಧಿಯಿಂದ ಹೊರಗೆ ಬಂದು, ಬಂದವರನ್ನು ಬಾಗಿಲವರೆಗೆ ಮುಟ್ಟಿಸಿ, ಯಥೋಪಚಾರ ಬೀಳ್ಕೊಟ್ಟು ಕದವಿಕ್ಕಿದೆ. +ಹಾಲಿಗೆ ಹಿಂತಿರುಗಿ ಬಂದದ್ದೇ ಹೆಂಡತಿಯನ್ನು ಚುಡಾಯಿಸುವ ಲಹರಿ ಬಂದವನ ಹಾಗೆ, “ನೀನು ಏನೇ ಹೇಳು, ಅವಳು ಈಗಲೂ ಸುಂದರಳಲ್ಲ. ಏನನ್ನುತ್ತೀ?” ಎಂದು ಕೇಳಿದೆ. +“ಗುಣಕ್ಕೆ ಮತ್ಸರವೇಕೆ? ಚಿಕ್ಕಂದಿನಲ್ಲಿ ನಿಮಗೆ ಮರುಳಾದ ಹುಡುಗಿ ಈಗಲೂ ಸುಂದರಳೇ ಅಪ್ಪಾ! ಹಳ್ಳಿಯ ಗುಗ್ಗು ಅಂತೂ ಅಲ್ಲವೇ ಅಲ್ಲ, ಗಂಡುಬೀರಿ. ಗೋದಾವರಿ ಪದಾ ಹೇಳೆ ಎನ್ನುವ ಹೆಸರಿಟ್ಟರೂ ಅಡ್ಡಿಯಿಲ್ಲ, ಶೋಭಿಸುತ್ತದೆ. ಬಿಂಬಲೀಕಾಯಿ ಸಸಿ ಮುಂಬಯಿಯಲ್ಲೇ ಎಲ್ಲಾದರೂ ಸಿಗುತ್ತದೆಯೋ ನೋಡಿ. ನಮ್ಮ ಬಾಲ್ಕನಿಯ ಕುಂಡವೊಂದರಲ್ಲಿ ಹಚ್ಚೋಣ” ಎಂದ ಹೆಂಡತಿಯ ಮಾತಿನಲ್ಲಿ ವಿನೋದವಿತ್ತು. ಆದರೆ ಮಾತು ಮುಗಿಯುವುದರೊಳಗೆ ಎಷ್ಟೊಂದು ಗಂಭೀರಳಾಗಿ ಕಂಡಳೆಂದರೆ, ‘ಅವಳು ನನ್ನನ್ನು ನಿಜಕ್ಕೂ ಕರೆದೊಯ್ದದ್ದು ನೀರಹಲಸಿನ ಗಿಡಕ್ಕೆ ಆಗಿತ್ತೇ ಹೊರತು ಬಿಂಬಲೀ ಮರಕ್ಕೆ ಅಲ್ಲ’ ಎಂದು ಹೇಳಬೇಕೆಂದುಕೊಂಡಿದ್ದ ಮಾತು ಸದ್ಯ ಬಾಯಲ್ಲೇ ಕರಗಿತು. ಮೇಲಾಗಿ ಬಿಂಬಲೀ ಮರದಲ್ಲಿದ್ದ ಕಾವ್ಯ ನೀರಹಲಸಿನ ಗಿಡದಲ್ಲಿಲ್ಲ. ಎಲ್ಲಕ್ಕೂ ಮಿಗಿಲಾಗಿ, ನೀರಹಲಸಿಗೆ ನಮ್ಮ ಬಾಲ್ಕನಿಯಲ್ಲಿ ಜಾಗವಿಲ್ಲ ಎಂದು ಮನಸ್ಸಿನಲ್ಲೇ ಅಡಿಕೊಂಡದ್ದನ್ನು ಕೇಳಿಸಿಕೊಂಡವಳ ಹಾಗೆ ಹೆಂಡತಿ, ತುಂಬಾ ಸುಂದರವಾಗಿ ನಗುತ್ತ, “ವಸಯಿಯಲ್ಲಿ ಇವೆಯಂತೆ, ಅಂಥ ಗಿಡಗಳು. ಒಂದು ದಿನ ನಾವಿಬ್ಬರೂ ಹೋಗಿ ಒಂದು ಸಸಿ ತರೋಣ” ಎಂದಳು. ತುಸು ತಡೆದು, “ಅದಕ್ಕಾಗಿ ಬರೋಡಾಕ್ಕೆ ಹೋಗಬೇಕೆಂದಿಲ್ಲ” ಎಂದು ಫರ್ಮಾನು ಹೊರಡಿಸಿದಳು. ನಾನು ತಕ್ಷಣ ತಲೆಬಾಗಿದೆ. +***** +೧೯೯೬ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ಪ್ರತಿದಿನದ ಸೂರ್ಯೋದಯದ ಬಿಳಿರಂಗು, ರುದ್ರಿಯ ಮನಸ್ಸಿನಲ್ಲಿ ನಿರೀಕ್ಷೆಯ ರಂಗವಲ್ಲಿ ಮೂಡಿಸುತ್ತದೆ. ಇನ್ನೇನು ಇಹದ ಎಲ್ಲ ವ್ಯಾಪರವೂ ಮುಗಿದೇ ಹೋಯಿತೇನೋ ಎಂಬಂತೆ ರಾತ್ರಿಯ ಸಮಯದಲ್ಲಿ ತಣ್ಣಗಿದ್ದ ಆ ದೇಹದ ಸಮಸ್ತ ಅಂಗಾಂಗಗಳೂ ಬಿಸಿಯಾಗುತ್ತವೆ. ಯಾರದ್ದಾದರೊಬ್ಬರ ನೆರವಿನಲ್ಲಿ […] +ನೇಪಥ್ಯ ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ […] +ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_232.txt b/Kannada Sahitya/article_232.txt new file mode 100644 index 0000000000000000000000000000000000000000..975b8c975a35e3fb3d06c5ccbb85f67273b26e2c --- /dev/null +++ b/Kannada Sahitya/article_232.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು +ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು +ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ ವಿಜ್ಞಾನ ಚೂರು ಚೂರಾದೀತು +ನಿನ್ನ ಪ್ರತಿಫಲಿಸಿದ ನೀರು ಹಾಗೇ ಮುತ್ತಾದೀತು, ಭಗ್ಗೆಂದ ಬೆಂಕಿ ಉರಿವುದೇ ಬಿಟ್ಟಿತು +ನಿನ್ನ ಚೆಲುವಿದ್ದಲ್ಲಿ, ಚಂದ್ರಮನೆ ಬೇಡ, ಲೋಲಾಡುವ ಲಾಂಧ್ರಗಳೂ ಬೇಡ +ನಿನ್ನ ಮುಖವಿದ್ದಲ್ಲಿ, ಆ ತುಕ್ಕು ಹಿಡಿದ ಪ್ರಾಚೀನ ಸ್ವರ್ಗವೆಂಬ ಕನ್ನಡಿಯೂ ಬೇಡ +ಮಾಡು, ನಿನ್ನ ಉಸಿರಿನಿಂದ ಈರೇಳು ಲೋಕಗಳ, ನವಸೃಷ್ಟಿ +ಹಾಡು, ನಿನ್ನ ದಿವ್ಯ ದೃಷ್ಟಿಯ ಆಶೆಗಾಗಿ, ನಾದಸೃಷ್ಟಿ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_233.txt b/Kannada Sahitya/article_233.txt new file mode 100644 index 0000000000000000000000000000000000000000..b35a94fd9b08cf4eaf9ddd0cb20c9bb8c865965c --- /dev/null +++ b/Kannada Sahitya/article_233.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇರುಳು +ನಕ್ಷತ್ರ ಮಿನುಗುತ್ತವೆ- +ಎಂದರೆ, +ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ +ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ +ಕಿವಿಗೊಟ್ಟು ಕೇಳುತ್ತದೆ. +ಮಂದ ಬೆಳಕಿನಲ್ಲಿ ಗಿರಿ ಶಿಖರ +ಗಿರಿಗಿರಿ ಬುಗುರಿಯಾಡಿ +ಇದ್ದಲ್ಲೆ ನಿದ್ದೆ ಹೋಗುತ್ತವೆ. +ಗಿಡಮರಗಳು ಆಕಾಶದಲ್ಲಿ +ಬೇಕಾದ ಹಾಗೆ ಹಾರಾಡಿ +ಬಂದು ತೂಕಡಿಸುತ್ತವೆ. +ಮರೆಯಲ್ಲಿ ನಿಂತು ಕವಿತೆ +ಬಟ್ಟಲುಗಣ್ಣು ತೆರೆದು ನೋಡುತ್ತದೆ. +ಹಳ್ಳ -ಹೊಳೆ ನಿರಂತರ ಹರಿದು +ಕಡಲ ಒಡ ಹಾಯ್ದು +ಮಿಂಚಿ, ಗುಡುಗಿ, ಕಾವ್ಯಮೇಘದಮೋಘ ಸಾಲು +ಅನುಸರಣಿಸಿ ಮಣ್ಣರಳಿಸುತ್ತದೆ. +ಹೂ- ಮಕ್ಕಳ ನಗೆಯರಳಿ, ಕೊಳದಲ್ಲಿ +ಮೀನು ಹೊಡಮರಳಿ; +ಬಾಗಿ ನೇಗಿಲು ಹೊಡೆದು ಇಳಿದ ಬೆವರಿಗೆ +ಮುತ್ತು-ಕಾಳು ತೆನೆ ಹಿಡಿದು +ಕವಿತೆ ಹೊಳೆಯುತ್ತದೆ. +ಕಸದ ತೊಟ್ಟಿಗೆ ಹಸಿವೆ +ಮುಗಿಬಿದ್ದು ಅನ್ನದಗುಳನು ಹೆಕ್ಕಿ +ತೆಗೆವಾಗ- +ಮಂತ್ರಿಗಿಂದ್ರ ಪದವಿಯ ಭೋಗ; +ಕವಿತೆ ತುಟಿ ಕಚ್ಚಿ ತಲೆ ತಗ್ಗಿಸುತ್ತದೆ. +ಹಲವು ದಾರಿಗೆ ಹಲವು ಗುರಿ ನೇರೆ-ವಕ್ರ, +ಅತಿಕ್ರಮಿಸಿದ ವೇಗ ಎಡರು-ತೊಡರಾಗಿ +ಅಪಘಾತ; ಲಯ ತಪ್ಪಿಹೋದ ಕವಿತೆ +ಮಾನವ ಭಗ್ನ ಪ್ರತಿಮೆ. +ಕಣ್ಣಲ್ಲಿ ಕಣ್ಣಿಟ್ಟು ಕಡೆದ ಶಿಲಾ- +ಬಾಲಿಕೆಯರೆದ್ದು ಬರುವಂತೆ +ವಾದ್ಯವೃಂದೋನ್ಮಾದವಿಳಿದಾಗ, ಬಳಿಗೆ +ನುಸುಳಿತು ಕಾವ್ಯದೇಕತಾರಿ. +ಬಟ್ಟ ಬಯಲಿನ ನಡುವೆ ಬೆಟ್ಟ- +ಬಂಡೆ ಅಖಂಡ ಗೊಮ್ಮಟ ಕಲೆ: +ನೆಲದಿಂದ ಮುಗಿಲವರೆಗೂ +ಕವಿತೆ, ಬರಿಬತ್ತಲೆ. +***** +ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […] +೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […] +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_234.txt b/Kannada Sahitya/article_234.txt new file mode 100644 index 0000000000000000000000000000000000000000..54b2f2a51715c2edc647926fbeb47f1855c63eb0 --- /dev/null +++ b/Kannada Sahitya/article_234.txt @@ -0,0 +1,117 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ ಎದ್ದಿದ್ದರೆ ನಾಲ್ಕಕ್ಕೇ ಎದ್ದೆ ಎನ್ನುವವರು. +ಅವರ ಮುಖ್ಯ ಠಿಕಾಣಿ ರಂಗಪ್ಪಯ್ಯನ ಮನೆಯಾದರೂ ತನಗೆ ಆಯಿತೆನಿಸಿದವರ ಮನೆಗೆಲಸಕ್ಕೆ ಕೂಡ ಅವರು ಕರೆದರೆಂದರೆ ಹೋಗದಿರುವವರಲ್ಲ. ಹೊಕ್ಕ ಯಾರ ಮನೆಯೂ ಅವರಿಗೆ ಯಾರದೋ ಮನೆಯಲ್ಲ, “ನಮ್ಮ ಶಾರದೆಯ ಮನೆ” “ನಮ್ಮ ಕಲ್ಯಾಣಿ ಮನೆ” ಹೀಗೆ ಎಲ್ಲವೂ ಅವರದೇ. ಆದರೆ ಎಲ್ಲಿಗೇ ಹೋಗಲಿ, ರಾತ್ರಿ ಮಾತ್ರ ತನ್ನ ಮನೆಗೇ ವಾಪಾಸು! ಒಂದು ತೆಂಗಿನಕಾಯಿ ಬಿಟ್ಟು ಎರಡು ಕಾಯಿ ಒಡೆಯಿತೇ, ಪುಟ್ಟಮ್ಮತ್ತೆಗೆ ಕರೆ ಹೋಯಿತಂದೇ ಲೆಕ್ಕ. “ಯೇನಾಯ್ಕ್ ಹೇಳ್!” ಎನ್ನುತ್ತ ಸೀರೆಯನ್ನು ಅವರ ಕಾಲದ ರೀತಿಯಂತೆ ಹೊರನಿರಿಗೆ ಹಾಕಿಯುಡುವ ಪುಟ್ಟಮ್ಮತ್ತೆ, ನಿರಿಗೆಗೆ ಬಿಗಿದ ಗಂಟನ್ನೊಮ್ಮೆ ಕತ್ತಲೆಯ ಮೂಲೆಯಲ್ಲಿ ಬಿಚ್ಚಿ ಪುನಃ ಬಿಗಿದು ಗಟ್ಟಿಯಾಗಿ ಕಟ್ಟಿ ಅವಸರವಸರದಿಂದ ರವಕೆ ಕೊಳಿಸಿಕೊಳ್ಳಲು ತೊಡಗುವಾಗ ಇತ್ತೀಚೆಗೆ ರವಕೆಯ ‘ಗುಬ್ಬಿ’ ಹಾಕಿಕೊಳ್ಳಲೂ ಅಧ್ವಾನವಾಗುತ್ತಿದೆ. “ಕುಡ್ತ ಹೊಲ್ದದ್ದು ಆ ಮೀನಾಶ್ಚಿ ಹೆಣ್ಣ್. ಒಂದೋ ಲಾಡಿ ಇಡ್. ಇಲ್ಲ, ಶರ್ಟಿನ್ ಗುಬ್ಬಿ ಇಡ್ ಅಂದ್ರೆ ಹುಕ್ಸ್ ಇಡತ್ತಪ್ಪ!” ಎಂದು ಊರಿನಲ್ಲಿರುವ ಏಕಮಾತ್ರ ಹೊಲಿಗೆಯಾಕೆ ಮೀನಾಕ್ಷಿಗೆ ಬೈಯ್ದು “ಮಗ, ಒಂಚೂರು ಗುಬ್ಬಿ ಹಾಕು ಕಾಂಬ. ನಂಗ್ ಇನ್ನಿನ್ ಇದೆಲ್ಲ ಆತ್ತನಾ?” ಎಂದು ಒಳಕೋಣೆಯಲ್ಲಿ ಎದೆ ತೆರೆದು ನಿಲ್ಲುತ್ತಾರೆ. ಆಗ ಎಲ್ಲಾದರೂ ರಂಗಪ್ಪಯ್ಯನ ಮೊಮ್ಮಗ ಗುಂಡ್ಮಣಿ ಬಂದನೇ, ಎಂಜಿಲು ಸೀರಿಸುತ್ತ ನಕ್ಕಾನು, “ಪುತ್ತಮ್ಮತ್ತೆ, ನಿನ್ನ ಅಮ್ಮಣಿಯೆಲ್ಲಾ ನಂಗೆ ಕಾಂತೊ” ಎಂದು ಕೈಯನ್ನು ಕಣ್ಣಿಗಡ್ಡ ಇಟ್ಟುಕೊಂಡೇ ಚಡಿಯಲ್ಲಿ ಕಂಡಾನು. “ಮಾ ಸಾಭ್ಯಸ್ಥ ಮಣಿ ನೀನ್! ಹೆಚ್ಚಿಗೆ ಹೈಲ ಮಾಡ್ಬೇಡ. ನಿನ್ ತುಮಣಿಕಾಯಿ ತೊಳೆದು ಮೀಸಿದ್ ಯಾರಂತೆಳಿ ಮಾಡ್ದೆ?” ಎಂದರೆ ಸಾಕು. ಗುಂಡ್ಮಣಿ ಜಾರುತ್ತಿದ್ದ ಚಡ್ಡಿಯನ್ನು ಎಳೆದುಕೊಳ್ಳುತ್ತಾ ಹೊಸಲು ಹಾರಿ ಅಲ್ಲಿಂದ ಕುಟ್ಟಿಕೀಸಿಯಾನು. +ಈಗ ರಂಗಪ್ಪಯ್ಯನ ಮನೆಯಲ್ಲಿ ರಂಗಪ್ಪಯ್ಯನೂ ಇಲ್ಲ, ಅವರ ಹೆಂಡತಿಯೂ ಇಲ್ಲ. ಆದರೆ ರಂಗಪ್ಪಯ್ಯನ ಮಗನ ದರ್ಬಾರಿನಲ್ಲಿಯೂ ಪುಟ್ಟಮ್ಮತ್ತೆ ಮುಂಚಿನಂತೆಯೇ ಹೊಕ್ಕು ಹೊರಡುತ್ತಿದ್ದಾರೆ. ಮುಂಚಿನ ತ್ರಾಣವಿಲ್ಲ. “ಯಡ್ಡಷ್ಟ್ ದಿವ್ಸ ಬತ್ತೆ” ಎನ್ನುತ್ತಾರೆ. “ಯಡ್ಡಷ್ಟ್ ದಿವ್ಸ ಬಾರ್‍ದೆ ಇರ್‍ಬೇಡಿ” ಎಂದು ರಂಗಪ್ಪಯ್ಯನ ಸೊಸೆಯೂ ಹೇಳುತ್ತಾಳೆ. +ಪುಟ್ಟಮ್ಮತ್ತೆ ಯಾವ ಅತ್ತೆ? ಹೇಗೆ ಅತ್ತೆ? ಇರುವುದು ಸಂಬಂಧವಲ್ಲ ಬರೀ ಸಂಬಂಧದ ಮರೆ ಅಷ್ಟೇ. ಬಹುಶಃ ಯಾರೂ ತಲೆಕೆಡಿಸಿಕೊಳ್ಳದ ವಿಚಾರವದು. ಊರಿಗೊಬ್ಬ ಅತ್ತೆ ಪುಟ್ಟಮ್ಮತ್ತೆ ಅಂದರೆ ಸಾಕೇನೋ. +ಹೆಸರಿಗೆ ತಕ್ಕಂತೆ ಪುಟ್ಟಮ್ಮತ್ತೆ ಪುಟ್ಟದಾಗೇನೂ ಇಲ್ಲ. ದೊಡ್ಡ ಜೀವವೂ ಅಲ್ಲ. ಅವರ ಸಾಕಬ್ಬೆ ಅವರನ್ನು “ಹದವಾದ ಕಡಸು” ಎಂದು ಹೇಳಿದ್ದೂ ಇದೆ. ಕುಂಕುಮವಿಡುವಲ್ಲಿ ಒಂದು ಹಚ್ಚೆ. ಮುಂಗೈಯಲ್ಲಿ ತುಲಸೀಕಟ್ಟೆಯ ಹಚ್ಚೆ. ಬೆಳಗ್ಗೆ ಬಾವಿಯಿಂದ ಒಂದು ಚೊಂಬು ನೀರು ಎಳೆದು ತುಲಸೀಕಟ್ಟೆಗೆ ಸುತ್ತು ಬಂದು ಗಿಡಕ್ಕೆ ನೀರು ಸುರಿದು ಬೆರಳು ಜೋಡಿಸಿ – ಸೂರ್ಯ ಮೂಡಿರಲಿ ಇಲ್ಲದಿರಲಿ “ಸೂರ್ಯದರ್ಶನ” ಮಾಡಿದವರಿಗಿಂತಲೂ ಒಂದು ತೂಕ ಮೇಲಾಗಿಯೇ ಕೈ ಮುಗಿದರೆ, ಬೈಗಿನಲ್ಲಿ ದೇವಸ್ಥಾನಕ್ಕೆ ಹೋಗಿ ಮೂರು ಸುತ್ತು ಬಂದು ತುಲಸೀ ದಳವನ್ನು ಕಿವಿಗೆ ಸಿಕ್ಕಿಸಿಕೊಂಡು ಮನೆಗೆ ಬಂದವರೇ, ದೇವರ ಮುಂದೆ ಹಾಗೂ ತುಳಸೀಕಟ್ಟೆಗೆ ಎಷ್ಟು ಸಾಧ್ಯವೋ ಅಷ್ಟು ಒಟ್ಟು ಮಿಗಿಲೆ ಸಂಖ್ಯೆಯ ಸುತ್ತು ಹಾಕಿದರೆ, ಅವರ ದೇವತಾರ್ಚನೆ ಮುಗಿದಂತೆ. +ಬೇಸಿಗೆ ಬಂತೆಂದರೆ ಪುಟ್ಟಮ್ಮತ್ತೆ ಯಾರಿಗೆ ಬೇಡ? “ಪುಟ್ಟಮ್ಮತ್ತೆ ಇದ್ರಾ?” ಎಂದು ಕೇಳಿಕೊಂಡು ರಂಗಪ್ಪಯ್ಯನ ಮನೆಗೆ ಬರವವರಿಗೇನು ಕಡಿಮೆ ಇಲ್ಲ. +ಹೀಗೇ ಒಂದು ದಿನ ‘ದೋಣಿಮಂಡೆ’ ಆನಂದರಾಯರ ಹೆಂಡತಿ ಕಳಿಸಿದ ಜನ ಇವರನ್ನು ಕೇಳಿಕೊಂಡು ಬಂದಿತ್ತು. ಆ ಜನದ ನೆತ್ತಿಯನ್ನು ಓ ಅಷ್ಟು ದೂರದಿಂದ ಕಂಡದ್ದೇ ಜಗಲಿಯಲ್ಲಿ ಗುಂಡ್ಮಣಿಯೊಂದಿಗೆ ಅಬಲಕ ತಬಲಕ ಆಡುತ್ತಿದ್ದ ಪುಟ್ಟಮ್ಮತ್ತೆ ಚಟಕ್ಕನೆ ಒಳಗೋಡುತ್ತ “ಮಣಿ, ಯಾರೋ ಬತ್ತೊ ಈಗ. ನನ್ನನ್ನು ಕೇಣ್ಕಂಡ್. ಅವ್ರಿಲ್ಲೆ ಅಂತೆಳಿ ಹೇಳ್” – ಎಂದು ಅಲ್ಲೇ ಆಚೆಗಿದ್ದ ಅಕ್ಕಿ ಕೋಣೆ ಹೊಕ್ಕು ಬಾಗಿಲು ಹಾಕಿಕೊಂಡರು. ಬಾಗಿಲು ಮಾತ್ರ ಅಂಗಳಕ್ಕೆ ಕಾಣುವಂತೆಯೇ ಇತ್ತು. +ಬಂದ ಜನ “ಪುಟ್ಟಮ್ಮತ್ತಿ ಇದ್ರಾ?” – ಎನ್ನಲು “ಇಲ್ಲಪ್ಪ” – ಎಂದಿತು ಗುಂಡ್ಮಣಿ, ಹಿಡಿದು ಬಿಟ್ಟವರಂತೆ. “ಎಲ್ಲೀಗ್ ಹೋಯಿದ್ರ್?” ಎಂದರೆ ಉತ್ತರ ತಿಳಿಯದೆ ತನ್ನ ಕೈಗೆ ತಾನೇ ಅಬಲಕ ತಬಲಕ ಮಾಡಿಕೊಂಡಿತು. ಬೆಪ್ಪಣ್ಣನಂತೆ ಅಂಗಳ ನೋಡಿತು. ಅಕ್ಕಿಕೋಣೆ ಬಾಗಿಲು ನೋಡಿತು. ಮತ್ತೆ ಅಂಗಳ, ಮತ್ತೆ ಬಾಗಿಲು! ಬಂದವರು ತುಸು ವಾಸನೆ ಹಿಡಿದು “ಹ್ಹೇ! ಅಮ್ಮನ್ ಕರಿಯ” ಎಂದರು. ಅಮ್ಮನ್ನ ಕರೆದ ಗುಂಡ್ಮಣಿ ಅವಳ ಹಿಂದೆಯೇ ಬಂತು. “ಈ ಮಗುಯಂತ ಹೇಳತ್ತೇ? ಪುಟ್ಟಮ್ಮತ್ತಿ ಇಲ್ಲ ಅನ್ನತ್ತ್, ಕ್ವಾಣಿ ಬಾಗ್ಲ್ ಕಾಣತ್ತ್!”- +ಆಗ ರಂಗಪ್ಪಯ್ಯನ ಸೊಸೆ ಶೇಷಮ್ಮ ಅಕ್ಕಿ ಕೋಣೆಯ ಬಾಗಿಲು ನೋಡಿದಳು. ಅವಳಿಗೆ ಎಲ್ಲವೂ ಅಂದಾಜಾಯಿತು. ಪುಟ್ಟಮ್ಮತ್ತೆಯ ಈ ಶೀಲ ಎದೇ ಹೊಸದೇ? “ಯಂತ ಮಣ್ಯಾ, ಆ ಕ್ವಾಣಿಯೊಳ್ಗ್ ಹಂಯಿಂಸರ ಇಲ್ಲೆ ಅಂತೆಳಿ ಆಗ್ಳೆ ಹೇಳಿದ್ದಲ್ದ ನಾನ್? ಅದ್ಯಂತಾ ಹೆದ್ರಿಕಿ ಹಾಂಗಾರೆ? ಹೋಗ್ ಮೀಯುಕೆ. ನೀರ್ ತೋಡಿಟ್ ಯಾವ್ ಕಾಲ ಆಯ್ತ್!” – ಎಂದು ಬಾಯಿ ತೆರೆಯಲು ಹವಣಿಸುತ್ತುದ್ದ ಗುಂಡ್ಮಣಿಯನ್ನು ಅಲ್ಲೇ ಗಪ್ಪ ಮುಚ್ಚಿಸಿ ಅಕ್ಷರಶಃ ದೊಡಿ ಆಚೆ ಕಳಿಸಿದಳು. “ಹೌದ್ ಮಾರಾಯ್ರೆ, ಪುಟ್ಟಮ್ಮತ್ತಿ ಇಲ್ಲಪ್ಪ, ಬೆಳ್ಗಾಪುದ್ರೊಳ್ಗ್. ಎಲ್ಲೀಗ್ ಸವಾರಿ ಹೊರ್‌ಟ್ತೋ” +ಬಂದ ಜನ ಬೆಲ್ಲ ನೀರು ಕುಡಿದು ಆನಂದರಾಯರ ಹೆಂಡತಿ ಮುಟ್ಟು. ಮೂರು ದಿನ ಅಡಿಗೆ ಮಾಡಿ ಹಾಕುವವರಿಲ್ಲ. ಹಾಗಾಗಿ ಪುಟ್ಟಮ್ಮತ್ತೆಗೆ ಹೇಳಿ ಬಾ ಅಂತ ಕಳಿಸಿದರು – ಅಂತೆಲ್ಲ ವಿವರ ಹೇಳಿ ಬೆನ್ನು ತಿರುಗಿಸಿದ್ದೇ. ಶೇಷಮ್ಮ ಅಕ್ಕಿ ಕೋಣೆಯ ಹೊರಗೆ ನಿಂತು “ಹ್ವಾಯ್, ಜನ ಹೋಯ್ತೇ ಬನ್ನಿ ಹೊರ್‍ಗೆ” ಎನ್ನುತ್ತಾ ತಡೆಯದ ನಗುವಿನಲ್ಲಿ “ಅಲ್ಲ! ಹೊಕ್ಕಂಬುಕೆ ಬೇರೆ ತಾವ್ ಸಿಕ್ಕದ್ ಸಾಕ್ ನಿಮ್ಗೆ” ಎನ್ನಲು ಮೀಯಲು ಹೋದಂತೆ ಮಾಡಿ ಕದಲದಿದ್ದ ಗುಂಡ್ಮಣಿ ಬಾಯಿ ಕಳೆದು ನಿಂತೇ ಬಿಟ್ಟಿತು. “ಈ ಮಾಣಿನ್ ಕಟ್ಕಂಡ್ರ್ ಹೌದಾ?” ಎಂದು ನಕ್ಕರು ಪುಟ್ಟಮ್ಮತ್ತೆ. ಮೈ ಕೈ ಸೀರೆಗೆ ಹತ್ತಿಕೊಂಡಿದ್ದ ಉಮಿಯನ್ನು ಕೊಡಕಿ ಕೊಳ್ಳುತ್ತ ಸೆಟೆದ ಬೆನ್ನಿಗೆ ಕೈ ಆನಿಸಿ ನಿಂತರು. +“ಅಲ್ದನ ಮತ್ತೆ. ಬೇಕೆಂದ್ ಕೂಡ್ಲೆ ನನ್ ನೆನ್ಪ್. ಮಳಿಗಾಲಕ್ ಹೋಯಿಕಾಂತ್ಯಾ? ‘ಪುಟ್ಟಮ್ಮತ್ಯಾ, ಅನ್ನ ಸಾಕಾತ್ತೋ ಇಲ್ಯೋ. ನೀ ಕಡೀಗ್ ಉಣ್, ಅಕ್ಕಾ?’ – ಅಂಬುದು ಎಲ್ಲರ ಊಟ ಆದ್ಮೇಲೆ ಬಡ್ಸುದು! ‘ಇಷ್ಟೇ ಉಳೀತಪ್ಪ. ಇವತ್ ಎಲ್ಲ ಸಮಾ ಉಂಡೋ!’ ಅಂತೆಳಿ ರಾಗ ತೆಗಿಯೂದ್. ಒಂದಿವ್ಸ ಹೌದೆಂಬೆ, ಯರ್‍ಡ್‌ದಿವ್ಸ ಹೌದೆಂಬೆ. ವಾರಂತೆ ಹಾಂಗೇ ಅಂದ್ರೆ? ಬೇಕಂತ ಮಾಡುದಲ್ದಾ? ಅವ್ಳ್ ಡೌಲೋ, ಲೋಲಾವತಿಯೋ; ಮುಟ್ಟಾರೆ, ಎದೆಯೆತ್ರ ಬೆಳ್ಕಂಡ್ ಹೆಣ್ಮಕ್ಳ್ ಇಲ್ಯಾ? ಅಡುಗೆ ಮಾಡುಕೆ ಹೇಳುಕಾಗ್ದ ಅಯ್ಯ, ಗಂಡ್ ಮಕ್ಳನ್ನಾರೂ ನುರ್‍ಸಿಯಾಳ್. ಹೆಣ್‌ಮಕ್ಳಿಗೆ ಹನಿಹಂದುಕೆ ಬಿಟ್ರ್ ಹೇಳ್!” +ಸೂರ್ಯ ಮಾತು ಕೇಳುತ್ತ ಮೇಲೆ ಮೇಲೆ ಬಂದ. ಅಂದು ಮಾಡಲಿದ್ದ ಹಪ್ಪಳದುಂಡೆಯನ್ನು ತಂದು ಒರಳಿಗೆ ಹಾಕಿ ಕುಟ್ಟಿದರು ಪುಟ್ಟಮ್ಮತ್ತೆ. ಶೇಷಮ್ಮನ ಮಕ್ಕಳು ಮಾಲಿನಿ, ಭಾಮಿನಿ ಆಗಲೇ ಹಪ್ಪಳ ಮಾಡಲು ಕೆಂಪು ಜಗಲಿ ಗುಡಿಸಿ ಒರೆಸಿ ಮಣೆಕೊಳವೆ ಇಟ್ಟು ಅಣಿ ಮಾಡಿದ್ದರು. ಗಂಡನ ಮನೆಯಿಂದ ಬಂದ ಮಗಳು ಸೌದಾಮಿನಿಯೂ ಹಪ್ಪಳಕ್ಕೆ ಕೈ ಸೇರಿಸಿದಳು. +ಹಪ್ಪಳ ಸುರುವಾಯಿತೆಂದರೆ ಪುಟ್ಟಮ್ಮತ್ತೆಯ ಯಾವುದಾದರೂ ಕತೆ ಸುರುವಾಯಿತೆಂದೇ. +ಇಂದಂತೂ ಪುಟ್ಟಮ್ಮತ್ತೆಗೆ ಮನಸ್ಸು ಸಮನಿಲ್ಲ. ಹಾಗಾದರೆ ಕಷ್ಟ ಪಡುವವರು ಕಷ್ಟ ಪಡುತ್ತಲೇ ಇರಬೇಕೇ ಇತ್ಯಾದಿ ಪ್ರಶ್ನೆ ಕಾಡುತ್ತಿದೆ. ಸರಿಯಾಗಿ ಸೌದಾಮಿನಿ ಕೇಳಿಯೂ ಬಿಟ್ಟಳು. “ಪುಟ್ಟಮ್ಮತ್ತೆ, ಕಮಲಾವತಿ ಇನ್ನೂ ರೆಡಿಮೇಡು ಬಟ್ಟೆ ಹೊಲಿಯೂಕೆ ಹೋತ್ಲಾ?” +* +* +* +ಪುಟ್ಟಮತ್ತೆಯ ಅಪ್ಪಯ್ಯನಂತಹ ವಿದ್ಯಾವಂತ ಅಷ್ಟು ರಾಷ್ಟ್ರದಲ್ಲಿ ಯಾರೂ ಇರಲಿಲ್ಲ. ಆದರೆ ಆತ ದಿನಗಳಿದ್ದದ್ದೆಲ್ಲ ಕಂಡವರ ಮನೆಗೆ ಹೇಳದೆ ಪರ್ಸಿ ಹೋಗಿ ಉಂಡು. ಮನುಷ್ಯ ಮಾತ್ರರಿಗೆ ಒಂದಕ್ಷರ ಹೇಳಿ ಕೊಟ್ಟ ಪ್ರಾಣಿಯಲ್ಲವಾದ್ದರಿಂದ ಜೀವ ಇದ್ದಂತೆಯೇ ಅವನನ್ನು ಬ್ರಹ್ಮರಾಕ್ಷಸ ಎನ್ನುತ್ತಿದ್ದರು. ಪಿತ್ರಾರ್ಜಿತ ಮನೆ ಮತ್ತು ಮನೆಯಡಿ ಸ್ಥಳವೊಂದಿತ್ತು. ಊಟದ ದಕ್ಷಿಣೆಯಲ್ಲಿ ಖರ್ಚು ಕಳೆಯುತ್ತಿತ್ತು. +ಪುಟ್ಟಮ್ಮತ್ತೆಯ ಅಬ್ಬೆಯೇ? ಮೂರು ಮಾವಿನ ಮಿಡಿಯಷ್ಟಿದ್ದಳಂತೆ. ಮನೆ ಹಿತ್ತಲಲ್ಲಿ ಬೆಂಡೆ, ಬದನೆ, ಹೀರೆ ಬೆಳೆಸಿ, ತೊಂಡೆ ಚಪ್ಪರ ಸ್ವತಃ ಹಾಕಿ ಅವರಿವರ ಗದ್ದೆಯಲ್ಲಿ ಬೆನ್ನು ಬಗ್ಗಿಸಿ ದುಡಿದು ದಿನ ತೆಗೆದಳಂತೆ. ಕೇರಿ ಮನೆಗಳ್ಲಿ ಅರೆದು ಕೊಟ್ಟು, ಅವರಿವರು ಉಟ್ಟು ಬಿಟ್ಟ ಸೀರೆಯನ್ನೇ ಉಟ್ಟು, ರವಿಕೆ ಇದ್ದರೆ ಹಾಕಿ, ಇಲ್ಲವೆ ಸೆರಗನ್ನೇ ಮೈ ತುಂಬ ಹೊದ್ದು ದಿನ ಕಳೆದವಳು. ಇಂದಿನ ದಿನ ಮರ್ಯಾದೆಯಲ್ಲಿ ಕಳೆಯಿತೇ, ಬಚಾವಾದೆ ಎಂದ ಹೆಂಗಸು. ಅಪ್ಪಂಥ ಗಂಡನೆಂಬವ ಒಬ್ಬ ಇಲ್ಲದ ಮೇಲೆ, ಸ್ವಂತವಾಗಿ ಬೇಕಷ್ಟು ದುಡಿಯುವ ಸಾಮರ್ಥ್ಯವೂ ಇಲ್ಲದ ಮೇಲೆ ವಿದ್ಯೆ ನೈವೇದ್ಯವೆಂದ ಮೇಲೆ, ಪ್ರಪಂಚದಲ್ಲಿ ಹೆಣ್ಣು ಹೆಂಗಸಿನ ಅವಸ್ಥೆ ಅಂದಿನಿಂದ ಇಂದಿಗೂ ಇಷ್ಟೇ. ಇದಕ್ಕಿಂತ ಊಂಚಿರಲು ಸಾಧ್ಯವೇ? ಗಂಡನೆದುರು ನಿಲ್ಲಲೂ ಹೆದರಿದವಳು. ಹಾಡಿನ ಮರವಾದರೂ ಸೋಬಾನೆಗೆ ದನಿಗೂಡಿಸಲು ನಾಲ್ಕು ಹೆಂಗಳೆಯರ ಹಿಂದೆ ಅಡಗುವವಳು. ಹಾಗೆಂತ ಕೆಲಸದಲ್ಲಿಯೇ? ಕಟ್ಟಾಣಿ. ತಲೆ ಅಡಿ ಹಾಕಿಕೊಂಡು ಅರೆಯಲು ಕುಳಿತಳೆಂದರೆ ತಲೆ ನೆಗ್ಗುವುದು ಎಲ್ಲ ಮುಗಿದ ಮೇಲೆಯೇ. +ಒಂದು ದಿನ ಆಕೆ ಹಾಡಿಯಿಂದ ಆಗಷ್ಟೇ ಒಣಚಪ್ಪು ಹೆಕ್ಕಿಕೊಂಡು ಅಂಗಳದಲ್ಲಿ ಹೊರೆ ಹೊತ್ತು ಹಾಕಿ ಬೆನ್ನು ಲಟಲಟನೆಂದು ನೆಟ್ಟಗೆ ಮಾಡುವ ಹವಣಿಕೆಯಲ್ಲಿದ್ದಾಳಷ್ಟೆ. ಗಂಡ ಸ್ನಾನಕ್ಕೆ ನೀರು ಕಾದಿಲ್ಲವೆಂದು ಜಗಳ ಕೆರೆದ. ಆಕೆ ಕಣ್ಣಿಗೆ ರೆಪ್ಪೆಗಳನ್ನು ಗಟ್ಟಿಯಾಗೊಮ್ಮೆ ಒತ್ತಿ ತೆರೆದಳು. ಭಾರಕ್ಕೆ ಜಗ್ಗಿದ ಗೋಣನ್ನು ಒಮ್ಮೆ ಉದ್ದಕ್ಕೆ ನೇರ್ವಿಸಿಕೊಂಡು ಒಳಗೆ ಹೋದಳು. ಹೆಂಡತಿಯಾದವಳು ಮಾತಾಡದೆ ಆಲಕ್ಷ್ಯದಿಂದೆಂಬಂತೆ ಒಳಹೋದದ್ದು ಡಬ್ಬಿ ಬಡಿದಂತೆ ವರಲುತ್ತಿದ್ದ ಗಂಡನೆಂಬವನಿಗೆ ಕೆಪ್ಪೆಯ ಮೇಲೆ ಬಾರಿಸಿದಂತಾಯಿತು. ಚೋಟುದ್ದದ ಹೆಣ್ಣಿಗೆ ಈ ಪಾಟಿ ಸೊಕ್ಕೇ? ಇದು ಉಂಡದ್ದು ಹೆಚ್ಚಾದದ್ದಲ್ಲವೇ ಎಂದಾತ ಎನ್ನಲು ಹೆಂಡತಿಗೆ ಈ ಬಾರಿ ತಡೆಯಲಿಲ್ಲ. ಉರಿಬಿಸಿಲೋ, ಒಣಗಿದ ಗಂಟಲೋ ಉತ್ತರ ಕಕ್ಕಿಸಿತು. “ನಾ ರಟ್ಟೆ ಜಪ್ಪಿಯೆ, ನಾ ಉಂಡೆ. ನೀವೊಂದು ವಡೇನಾರೂ ನನ್ ಕೈಮೇಲ್ ಹಾಕಿದ್ದಂತೆಳಿ ಇತ್ತಾ?” ಅಷ್ಟು ಹೇಳಿದವಳು ಒಂದು ಮುದ್ದೆ ಬೆಲ್ಲ ಬಾಯಿಗೆಸೆದುಕೊಂಡು ಗಂಟಲಿಗೆ ನೀರನ್ನು ಸುರಿದುಕೊಳ್ಳುತ್ತಿದ್ದಂತೆ ಗಂಡ ದರ್ಶನ ಬಂದವರಂತೆ ನಡುಗುತ್ತ ಒಳಗೆ ಬಂದ. ಆಕೆಯನ್ನು ಮುದ್ದೆ ಮಾಡಿ ಎತ್ತಿದ. ನೀರು ಗಂಟಲೊಳಗೆ ಪೂರ್ತಿ ಇಳಿದಿರಲಿಕ್ಕಿಲ್ಲ, ಮನೆಯೆದುರಿನ ಬಗ್ಗು ಬಾವಿಗೆ ಹೊತ್ತು ಹಾಕಿದ. +ಇದನ್ನೆಲ್ಲ ಆಚೆಮನೆ ಅಜ್ಜಿ ನೋಡುತ್ತಲೇ ಇತ್ತು. “ಅಯ್ಯಯ್ಯ ಈ ನಸ್ರಾಣಿಗೆ ಆತ್ತೆಂತದ! ಹೆಂಡ್ತಿನ್ನ ಬಾವಿಗೆ ಹೊತ್ತಾಕಿತೋ” ಎಂದು ಬೊಬ್ಬೆ ಎಬ್ಬಿಸಿತು. ಸುತ್ತು ಮುತ್ತಿನವರು ಬರುವಾಗ ಗಂಡನೆಲ್ಲಿ? ಕಣ್ಣು ಕಾಣದ ಊರಿಗೆ ಹಾರು! ಪುಟ್ಟಮ್ಮತ್ತೆಯ ಅಬ್ಬೆ ಒಂದೇ ಮುಳಿಕಿಗೆ ಮಣ್ಣು ಕಚ್ಚಿತು. +ಆಗ ಪುಟ್ಟಮ್ಮನಿಗೆ ಆರು ತಿಂಗಳು. ಮಗು ಕವುಚಿದಲ್ಲೇ ಉಚ್ಚೆಹೊಯ್ದು ತಚಪಚ ತಟ್ಟುತ್ತಾ ಸುತ್ತಿರುಗುತ್ತಿತ್ತು. ಕಾಕು ಹಾಕುತ್ತಿತ್ತು. ಆಚೆಮನೆ ಅಜ್ಜಿ ಸೀದಾ ಒಳಗೆ ಬಂತು. ಮಗುವನ್ನೆತ್ತಿಕೊಂಡಿತು. ಅನುತನು ನೋಡಿಕೊಂಡಿತು. “ನಾ ತೊಡುವಾಗಿ ಮರಕಿರೆ ಅಜ್ಜಿಯ ಮೊಲೆಯಲ್ಲಿ ಹಾಲು ಒಸರುತ್ತಿತ್ತಂತೆ” ಎಂದು ಪುಟ್ಟಮ್ಮತ್ತೆ ಹೇಳದೆ ಬಿಡರು. ಆಗ ಹಪ್ಪಳ ಮರೆತು ಎಲ್ಲರೂ ಹೋ ಎಂದು ನಕ್ಕರು. “ಪ್ರೀತಿಯೆಂದ್ರೆ ಮಕ್ಕಳೇ, ಕರುಳಿನಲ್ಲಿ ಇಪ್ಪುದಲ್ಲ. ಇಲ್ಲಿ, ಇಲ್ಲಿ ಇಪ್ಪುದು” ಎಂದು ಆಕೆ ಎದೆತಟ್ಟಿ ತೋರಿಸಿಯಾರು. ಅವರ ಅಬ್ಬೆ ದನದಂತಹ ಹೆಂಗಸು, ಒಂದಿನವೂ ಭೂತವಾಗಿ ಕಾಡಿದ್ದಿಲ್ಲ ಎಂಬ ಮಾತನ್ನೂ ಸೇರಿಸಿಯಾರು. +ಅಜ್ಜಿಯ ಮನೆಯಲ್ಲಿಯೇ ಬೆಳೆದರು ಪುಟ್ಟಮ್ಮತ್ತೆ. ಹದಿಮೂರು ವರ್ಷ ಕಳೆದಿರಬಹುದು. ಮೈ ನೆರೆದಿದ್ದರಷ್ಟೆ. ಒಳಗೆ ಅನ್ನ ಕುದಿ ಬಂದಿತ್ತು. ಕಡಿಗೆ ಹುಳಿಗೆ ಮೆಣಸು ಹುರಿಯುತ್ತಿದ್ದರು ಪುಟ್ಟಮ್ಮತ್ತೆ. ಹೊರಗಿನಿಂದ ಅಜ್ಜಿ “ನಾಲ್ಕೇ ನಾಲ್ಕು ಅಕ್ಕಿಕಾಳು ಹಾಕು ರಸ ಕೂಡಿ ಬತ್ತ್.” ಎಂತೆಲ್ಲ ಹದ ಹೇಳುತ್ತಿತ್ತು. ಇದ್ದಕ್ಕಿದ್ದಂತೆ ಅಜ್ಜಿ “ಹೋ! ಬಂದ್ಯ? ಭಾಳ ಸಾಪಾಯ್ತ್. ಬಂದ್ ದಾರಿಗೆ ಸುಂಕ ಇಲ್ಲೆ, ನಡೆ ವಾಪಾಸು” ಎಂದದ್ದು ಕೇಳಿಸಿ ಪುಟ್ಟಮ್ಮ ‘ಅಜ್ಜಿಗೇನಾದರೂ ಸೋಂಕಾ?’ ಎಂದುಕೊಂಡು ಹೊರಬಂದಳು. ಬೇಲಿ ಕಡುವಿನಲ್ಲಿ ಅಡ್ಡ ಹಾಕಿದ ಅಗುಳಿ ಜಲ್ಲನ್ನು ಸರಿಸುತ್ತ ಪಾಣಿಪಂಚೆಯುಟ್ಟ ಪ್ರಾಣಿಯೊಂದು ನಿಂತಿತ್ತು. +“ಯಾರಜ್ಜಿ?” +“ಯಾರೆಂತ ಹೇಳಲಿ ಮಗ? ಅಪ್ಪಯ್ಯ, ಇದು ತಪ್ಪಯ್ಯಾ….” ಎಂದು ಕುಟ್ಟಾಣಿಯನ್ನು ಕೈಬಿಟ್ಟು ಸದಾ ಜಗಿತದ ತನ್ನ ಕಾಲನ್ನು ತಿಕ್ಕಿಕೊಳ್ಳುತ್ತ ಆನೆಯಾಡಿ ನಕ್ಕಿತು. “ಯೇ ಶೀನ, ಇನ್ನು ನೀನು ಇಲ್ಲಿಗೆ ಬಪ್ಪುಕಾಗ, ನಿನ್ನ ಮಗಳನ್ನ ನಾನು ಕೊಡುದೂ ಇಲ್ಲೆ, ಅದ್ಕೆ ಮದ್ವೆ ಗಿದ್ವೆ ಆಯ್ಕಾ ಬೇಡ್ದ?” – ಎಂದಿತು. ತಂದೆಯೆಂದು ಒಂದು ಸೊಲಿಗೆ ವಾಂಛೆಯೂ ಪುಟ್ಟಮ್ಮನಲ್ಲಿ ಹುಟ್ಟಲಿಲ್ಲ. ಸೀದ ಒಳಗೆ ಬಂದುಬಿಟ್ಟಳು. +ಅರ್ಧ ಸರಿಸಿದ ಜಲ್ಲಿನ ಮೇಲಿಂದ ಕೈ ತೆಗೆಯದೆ ಪುಟ್ಟಮ್ಮತ್ತೆಯ ಅಪ್ಪ ಒಂದುಕ್ಷಣ ಆಕಾಶ ನೋಡಿದ, ನೆಲ ನೋಡಿದ. ಸುಮ್ಮನೆ ನಿಂತ. ಜಲ್ಲು ಬಿಟ್ಟ, ನಡೆದ. “ಥತ್, ಪುರುಷ ಮೃಗ” ಎಂದಿತು – ಅಜ್ಜಿ, ಜೋರಾಗಿ. ಮುಂದೊಂದು ದಿನ ಯಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆಯೂಟ ಉಂಡು ಉರಿ ಬಿಸಿಲಿನಲ್ಲಿ ತಲೆಯ ಮೇಲೊಂದು ಬೈರಾಸು ಹಾಕಿಕೊಂಡು ಬೇಣದಲ್ಲಿ ನಡೆದು ಬರುತ್ತಿದ್ದಂತೆ ಬಾಯಲ್ಲಿ ನೊರೆ ಬಂದು ಅಪ್ಪನು ಸತ್ತ ಎಂಬ ಸುದ್ದಿ ಬಂತು. ‘ನಬಿದು ಸಾಯುತ್ತಾನೆ ಎಂದು ಊರೆಲ್ಲ ಅಂದುಕೊಂಡಿದ್ದರೆ ದೇವರ ಪ್ರಸಾದ ತಿಂದು ಯಾರ ಕೈಯಡಿ ಆಗದೆ ತೀರಿಕೊಂಡನಲ್ಲ, ಅಜಾಮಿಳನಂತೆ! ಏನನ್ನೋಣ’ ಎಂದು ಸ್ಮಶಾನದಲ್ಲಿ ಹೆಣದ ತಲೆಬುರುಡೆ ಹೊಟ್ಟುವವರೆಗೂ ಆಶ್ಚರ್ಯ ತತ್ವ ವೇದಾಂತ ಕೊಯ್ದರು ಕೇರಿ ಜನ. ಹಾಗೆ ಸತ್ತ ಅಪ್ಪ ಮುಂದೆ ಬ್ರಹ್ಮರಾಕ್ಷಸನೇ ಆದದ್ದೂ, ಆಲದ ಮರದಲ್ಲಿ ವಾಸಿಸಿ ಊಟದ ಮನೆಗಳಿಗೆ ಹೋಗುವವರ ಮೇಲೆ ಹೊಯ್ಗೆ ಬಿಸಾಡುತ್ತಿದ್ದುದೂ, ಮಗಳೆಂಬ ಕಕ್ಕುಲತೆಯೇ ಇಲ್ಲದೆ ತನ್ನ ಮೇಲೆಯೂ ಬಿಸಾಡಿದ್ದೂ, ಅಜ್ಜಿ ಹೇಳಿದಂತೆ ತಾನು ನರಸಿಂಹ ದೇವರನ್ನು ನೆನೆದ ಮೇಲೆ ಈ ಉಪಟಳ ತಪ್ಪಿದ್ದು-ಇದೆಲ್ಲ ಬೇರೆಯೇ ಒಂದು ದೊಡ್ಡ ಕತೆ. ಈಗಲ್ಲ, ಮುಸ್ಸಂಜೆಗೋ ರಾತ್ರಿಗೋ ಮಕ್ಕಳೆದುರು ಪುಟ್ಟಮ್ಮತ್ತೆ ಬಿಡಿಸುವ ಹಸೆ. +ಅಜ್ಜಿ, ಪುಟ್ಟಮ್ಮ ನಿನ್ನನ್ನು ಯಾರ ಕೈ ಮೇಲಾದರೂ ಹಾಕಿ ನಾನು ಸತ್ತೆನೇ ನನಗೆ ಶಾಂತಿ ಸಿಕ್ಕೀತು ಎನ್ನುತ್ತ ಇದ್ದಂತೆ ಒಂದು ದಿನ ಚಟ್ಟವೇರಿತು. ಅಶನಾರ್ಥ ವ್ಯಾಜ್ಯ ಹೂಡಿ ಗುತ್ತುಗುಳಿಯಂತೆ ವಕೀಲರ ಮನೆ ಬೆಂಚು ಕಾದು ಹೇಳಿಕೊಟ್ಟ ಉತ್ತರ ಕಲಿತು ನಂಬ್ರ ಗೆದ್ದು ಒಂಟಿಯಾಗಿ ಬದುಕಿ ಪುಟ್ಟಮ್ಮೆತ್ತೆಯ ವ್ಯಾಮೋಹಕ್ಕೆ ಕಟ್ಟು ಹಾಕಿಕೊಂಡು ಕಡೆಗೂ ನಡೆದೇಬಿಟ್ಟಿತ್ತು. +ಅಜ್ಜಿಯ ಕಡೆಯವರೆಲ್ಲ ದೊಡ್ಡ ದೊಡ್ಡ ಕುಳವಾರಿಗಳೇ. ಹೆಚ್ಚಿನವರು ಬರಿಗಾಲಲ್ಲಿ ಘಟ್ಟ ಹತ್ತಿ ಮೇಲೆ ಹೋಗಿ ಕೆಳಗೆ ಬರುವಾಗ ಕಾರಿನಲ್ಲೇ ಬಂದವರು. ಹೆಣ್ಣು ಮಕ್ಕಳು ನೂಲಿನಲ್ಲಿ ಸುರಿದ ಕರಿಮಣಿ ಕಟ್ಟಿಸಿಕೊಂಡು ಗಂಡನ ಹಿಂದೆಯೇ ತಲೆಬಾಗಿ ಹೆಜ್ಜೆಯಿಡುತ್ತ ಹೋದವರು ನಾಲ್ಕು ವರ್ಷಕಳೆದು ಊರಿಗೆ ಬರುವಾಗ ಮಡ್ಡಮ್ಮಗಳಾಗಿ ತಲೆ ಕಿವಿ ಕುತ್ತಿಗೆ ಕೈ ತೋಳು ಎಲ್ಲೆಂದರಲ್ಲಿ ಚಿನ್ನದ ತಗಡು ಹೊಡೆಸಿಕೊಂಡು ಏರುಸ್ವರದಿಂದ ಮಾತನಾಡಲು ಕಲಿತವರು. ಬರೀ ಆಡು ಪಳೆಯಂತಿದ್ದವರೂ, ದುಡ್ಡು ಸೇರಿತೆಂದರೆ ಭರಮು ಬೇರೆಯೇ. +ವೈಕುಂಠದ ರಾತ್ರಿ, ಸಾವಿರಿದ್ದವನಿಗೆ ಚಾರೆ ಬಯಕೆ ಎಂಬ ಗಾದೆ ಇದೆಯಲ್ಲ ಹಾಗೆ – ಅಜ್ಜಿಯ ಚೂರು ಗದ್ದೆಗಾಗಿ ಮಾತು ಮಾತು ಏರಿ ಬಿಸಿಯಾಗಿ ಕತ್ತಿ ಚೂರಿಯವರೆಗೂ ಮುಂದುವರಿದು ತಣ್ಣಗಾಗಿ ಎಲ್ಲ ಹೊದಿಕೆಯೊಳಗೆ ನಿಶ್ಶಬ್ದವಾಗಿದ್ದಾರಷ್ಟೆ. ಪುಟ್ಟಮ್ಮತ್ತೆ ಏನು ಎತ್ತ ತೋರದೆ ತಬ್ಬಿಬ್ಬಾಗಿದ್ದಳು. ಅಜ್ಜಿಯನ್ನು ನೆನೆಯುತ್ತ, ಅವಳದೇ ಪರಿಮಳವಿರುವ ಅವಳ ಸೀರೆಯನ್ನು ಹೊದ್ದುಕೊಂಡು, ಏಣಿ ಮೆಟ್ಟಲಿನ ಬುಡದ ಅಂಗೈಯಗಲದ ಜಾಗೆಯಲ್ಲಿ ಜಾಲಿ ಚಾಪೆ ಹಾಸಿಕೊಂಡು ಮಲಗಿದಳು. ಸ್ವಲ್ಪ ಹೊತ್ತಿನಲ್ಲಿ ಯಾರೋ ಹೊದೆ ವಸ್ತ್ರ ಎಳೆದಂತಾಯ್ತು. ಹೊದಿಕೆಯೊಳಗೆ ಯಾರೋ ಹೊಕ್ಕಿಕೊಂಡಂತಾಯಿತು. +“ನನ್ನ ಎದೆ ಬಾಯಲ್ಲಿ ನೀರಿತ್ತಾ? ರಾಮರಾಮಾ! ಯಾರೋ ಏನು ಕತಿಯೋ! ಮಾಡ್ತೆ ಬಗೆ ಅಂದೇ, ಬಳೆಯಿಂದ ದೊಡ್ಡ ಸಪ್ಟಿಪಿನ್ನು ಬಿಚ್ಚಂಡೇ, ಆ ಬೇವರ್ಸಿ ತೊಡೆಗೆ ಚಂಯ್ಯ ಚುಚ್ಚಿಯೆ. ಅಂವ ನಡ್ಗಿ ಬಾಯಿ ಮೇಲಿಂದ್ ಕೈ ತೆಗ್ದದ್ದೇ ‘ಅಯ್ಯಯ್ಯೋ’ ಅಂತೆಳಿ ಬೊಬ್ಬೆ ಹೊಡ್ಡೆ.” +ಏನು ಎಂದು ಎಲ್ಲ ಓಡಿ ಬರುವುದರೊಳಗೆ ಅಜ್ಜಿಯ ಸೀರೆ ಅಪ್ಪಿಕೊಂಡು ಪುಟ್ಟಮ್ಮತ್ತೆ ನಡುಗುತ್ತಿದ್ದಳು. ಒತ್ತಿ ಹಿಡಿದವನು ಮಹಾ ಫಟಿಂಗ. ಹೋದಲ್ಲಿವರೆಗೂ ಅವಂಗೆ ಇದೇ ಕೆಲಸ ಅಂತೆಲ್ಲ ಮಾತಾಡಿಕೊಂಡವರು ಒಬ್ಬರೂ ಅವನನ್ನು ಹಿಡಿಯಲು ಹೋಗಲಿಲ್ಲ. ನಿದ್ದೆಗೆಟ್ಟಿತಲ್ಲ, ಈಗ ರೆಪ್ಪೆಗೆ ರೆಪ್ಪೆ ಕೂಡಿತ್ತಷ್ಟೆ ಎಂದು ಗೊಣಗಿಕೊಂಡರು. “ಇಲ್ಬಾ ಹೆಣೆ. ನನ್ಹತ್ರ ಮನಕೋ” – ಎಂದಿತು ಅಡ್ಡ ಕುಂಕುಮದ ಹೆಣ್ಣು ದನಿಯೊಂದು. +ಬೆಳಗಾಗಿ ಎದ್ದಾಗ ಈ ಹೆಣ್ಣನ್ನು ಇನ್ನು ಹೀಗೇ ಬಿಡುವುದು ಸಮನಲ್ಲ ಎಂಬ ವಿಚಾರ ಎಲ್ಲರಲ್ಲೂ. ಅವರೇ ಎಲ್ಲ ಸೇರಿ ಮದುವೆ ಮಾಡುವುದೆಂದಾಯಿತು. ‘ಗಂಡಿಗೆಲ್ಲಿ ಹೋಪ?’ ‘ಹ್ವಾಯ್, ನಿಮ್ ಹೋಟ್ಲೊಳ್ಗೆ ದೋಸೆ ಹೊಯ್ಯು ವಾಸು ಭಟ್ಟ ಹೇಂಗೆ?’-ಅಂದರು ಯಾರೋ, ಅಜ್ಜಿ ಕಡೆಯ ಹೊಟೇಲು ಮಾಲಿಕರೊಂದಿಗೆ. ಚಿನ್ನದಸರ ಥಳಗುಟ್ಟುತ್ತಿದ್ದಂತೆ ಅವ ಗಂಟಲಿನೊಳಗಿಂದ ಬಲವಾಗಿಯೇ ಹೂಂಗುಟ್ಟಿದ. ಅಂತರಪಟದ ಈಚೆ ಬಗ್ಗಿನಿಂತ ಪುಟ್ಟಮ್ಮತ್ತೆಗೆ ಕಂಡದ್ದು ವರನ ಕೆಂಪೊಡೆಯುವ ಬೆರಳಿನ ತುದಿ ಮಾತ್ರ. ಅಂತರಪಟ ತೆಗೆದ ಮೇಲೆ ಏನು ನೋಡುವುದು! ಎಷ್ಟುದ್ದ, ಹನೆಮರ! ಪುಟ್ಟಮ್ಮನನ್ನೆತ್ತಿ ಮಾಲೆ ಹಾಕಿಸಿದರು. ‘ಮಾಲೆ ಹಾಕಿದಳು ಭಾಮೆ ದ್ವಾರಕಾಪತಿಗೆ’, ‘ಸತ್ಯಭಾಮೆಯೆ ನೀ ಬೇಗ ಬಾ ಹಸೆಗೆ’ ಇತ್ಯಾದಿ ಹಾಡುಗಳ ನಡುವೆ. +ಹೋಗಿ ಬಿಡಾರ ಮಾಡಲು ದುಡ್ಡು ಸಾಲದು. ನೀನಿಲ್ಲೇ ಇರು. ದುಡ್ಡು ಕೂಡಿದ ಹಾಗೆ ಹೋಟೆಲಿಡುತ್ತೇನೆ. ಅರೆದು ಕೊಡಲು ನೀನಿದ್ದಿ. ತಿಂಡಿ ಮಾಡಲು ನಾನಿದ್ದೇನೆ…. ಮದುವೆಯಾದ ನಾಲ್ಕು ದಿನ ಜೊತೆಗಿದ್ದ ವಾಸುದೇವ ಹೇಳಿದ್ದಕ್ಕೆಲ್ಲ ಹೂಂಗುಟ್ಟಿದಳು ಪುಟ್ಟಮ್ಮೆ. ಪುಟ್ಟಮ್ಮನ ಅಪ್ಪನ ಮನೆಯಡಿ ಜಾಗವನ್ನು ಮಾರಿದರೆ ಹೇಗೆ? ಹೋಟೆಲು ಈಗಲೇ ಇಟ್ಟರೆ ಹೇಗೆ? ನೀವು ಮಾಡಿದ್ದೆಲ್ಲ ಸಮವೆನ್ನಲು ಪುಟ್ಟಮ್ಮ ತಯಾರಿದ್ದಳು. ಆತನಿಗೆ ಮತ್ತೆ ಏನನ್ನಿಸಿತೋ, ಎರಡು ವರ್ಷ ಕಳೆಯಲಿ ಎಂದ. ಬೆಂಗಳೂರಿನಲ್ಲಿ ತನ್ನ ಕಣ್ಣ ಮುಂದೆಯೇ ಎಷ್ಟು ಜನ ಬರಿಗೈಯಲ್ಲಿ ಬಂದವರು ಬಂಗಲೆ ಕಟ್ಟಿದರು, ಕಾರು ಇಟ್ಟರು, ಮಕ್ಕಳನ್ನು ಫಾರಿನ್ನಿಗೆ ಕಳಿಸಿದರು. ತಾನಿನ್ನೂ ದೋಸೆ ಹೊಯ್ಯುವುದರಲ್ಲಿಯೇ ಇದ್ದೇನೆ. ಮೆನೆ ಮಠ ಮಾಡಿಕೊಳ್ಳಬೇಕೆಂದು ತಲೆಗೇ ಬರಲಿಲ್ಲವಲ್ಲ ಎನ್ನುತ್ತ ಬೆನ್ನ ಹಿಂಗಡೆ ಕೈಕಟ್ಟಿಕೊಂಡು ಹೆಂಡತಿಯ ಹಿಂದೂ ಮುಂದೂ ಓಡಾಡಿದ. ಮೆನಯ ಗೋಡೆಯನ್ನು ತೋರುಬೆರಳ ಬೆನ್ನಿನಿಂದ ಬಡಿದು ನೋಡಿದ. ಮಾಡು ಇಳಿದ ಹಾಗೆ ಕಾಣಿಸುತ್ತದೆಯೇ? ಪಕಾಸಿ ಹೊಸತು ಹಾಕಬೇಕು. ಕೈಯಲ್ಲಿ ದುಡ್ಡಾಗಲಿ ನೋಡುತ್ತಿರು, ಬೆಂಗಳೂರು ಮನೆಗಳಂತೆ ಮಾಡಿಬಿಡುತ್ತೇನೆ’-ಎಂದ ಕನಸುಗಾರ. ಹೊರಟುಹೋದ. ದೇವರ ತಲೆಯ ಮೇಲೆ ಹೂವು ತಪ್ಪಿದರೂ ತಿಂಗಳು ತಿಂಗಳು ಆತ ಹಣ ಕಳಿಸುವುದನ್ನು ತಪ್ಪಿಸಲಿಲ್ಲ. ಬಂದಷ್ಟು ಅಕ್ಷರಗಳನ್ನೇ ಮಗುಚಾಡಿ ‘ದುಡ್ಡು ಉಳಿಸಿದ್ದೇನೆ. ಎರಡೇ ವರ್ಷ, ನಿನ್ನನ್ನು ಕರೆಸಿಕೊಳ್ಳುತ್ತೇನೆ. ದೇವರು ಬಿಟ್ಟು ಹಾಕ, ಹೋಟೆಲು ಇಟ್ಟೆನೆಂದರೆ, ಅದು ಮೇಲೆ ಬಂತೆಂದರೆ, ಇಬ್ಬರೂ ಒಂದು ಸಲ ಮಂತ್ರಾಲಯಕ್ಕೆ ಹೋಗಿ ಬರುವ’-ಅಂತೆಲ್ಲ ಬರೆಯುತ್ತಿದ್ದ. ಓದಿಸಿ ಕೇಳಿ ಗಂಡನನ್ನು ನೋಡ ಬೇಕೆನ್ನಿಸಿದಾಗೆಲ್ಲ ಅವನ ಕಾಗದವನ್ನು ನೊಡುವಳು ಪುಟ್ಟಮ್ಮತ್ತೆ. +ಬಿಡಾರ ಮಾಡದಿದ್ದರೇನಂತೆ? ಬಸುರು ಬಂತೇ. ಬಸುರು ಮಾಗಿತು. ಮಗು ಭೂಮಿಗೆ ಬಿತ್ತು. ಇನ್ನೂ ಹೊಕ್ಕಳು ಚೊಟ್ಟೂ ಕೊಯ್ದಿರಲಿಲ್ಲ. ಪುಟ್ಟಮ್ಮ ಎಂತ ಮಗು? ಎಂದು ಕೇಳಿದ್ದೊಂದೇ, ಉತ್ತರ ಸಿಕ್ಕಿದ್ದು ಬಾಗಿಲ ಹೊರಗಿನಿಂದ. “ಹ್ವಾಯ್, ವಾಸುಭಟ್ಟರು ಪಡ್ಚ ಅಂಬ್ರಲೆ!” +ಬಾವಿ ಗುಂವಿ ನೋಡಬೇಕೆ? ಹೂವಿನ ಮಿಟ್ಟೆಯಂತಿದ್ದ ಮಗುವನ್ನು ನೋಡಬೇಕೆ? ಹೆಣ್ಣು ಮಗು. ಎಲ್ಲ ಅಪ್ಪನದೇ ರೂಪು. ಮಗುವಿನ ಪಾಶ ಪುಟ್ಟಮ್ಮತ್ತೆಯನ್ನು ಭೂಮಿಗೆ ಕಟ್ಟಿ ಹಾಕಿತು. ಯಮ ಬಂದರೂ ತಾರಮ್ಮಯ್ಯ ಹೇಳಿ ವಾಪಾಸು ಕಳಿಸಿಬಿಡುವಂತಹ ಪಾಶವಲ್ಲವೆ ಅದು? +“ಮಗುವನ್ನು ಸೊಂಟದಾಗೆ ಚಚ್ಚಿಕೊಂಡೇ ಮೆಟ್ಟಿಲಿಳಿದೆ. ಅಬ್ಬೆ ಬಿಟ್ಟ ಪಟ್ಟ ಖಾಲಿಯಿತ್ತು. ಅಕ್ಕಿ ಎಷ್ಟು ನೆನ್ಸಿದ್ರಿ? ಎಂದು ಕೇಂಬ ಜಾಯಮಾನವೇ ನಂದು? ಐತಾಳರ ಮನೆಯಲ್ಲಿ ಪ್ರತಿವರ್ಷ ಒಂದು ಮುಡಿ ಅಕ್ಕಿ ಹಪ್ಪಳ ಮಾಡ್ತ್ರಲೆ! ಅರೆಯೂದು ಯಾರು? ರಾತ್ರಿಯಿಡೀ ಕೂತು ಹೊಯ್ಯೂದು ಯಾರು? ಇದೇ ಕೈಯಿಂದ ಎಷ್ಟು ಮುಡಿ ಉದ್ದಿಗೆ ಎಣ್ಣೆ ಹಚ್ಚಿ ಬಿಸಿಲಿಗೆ ಹರಡಿಪ್ಪೆ! ನಾನುಂಡದ್ದೆಲ್ಲ ಕಡಿಯಕ್ಕಿ. ನೆನೆಸಿದ್ದು ಕಡಿ‌ಉದ್ದು. ಪ್ರಪಂಚ ನೀನೆಂತ ಉಂಡೆ ಅಂತೇಳಿ ಹೊಟ್ಟೆಗೆ ಕೈ ಹಾಕಿ ಕಾಣುತ್ತಾ? ಇಷ್ಟು ರಾಷ್ಟ್ರದಾಗೆ ನನ್ನಷ್ಟ್ ಉರುಟಾಗಿ ವಡೆ ಬಡಿದವರು ಯಾರಿದ್ರ್?”- +ಹೀಗೇ ಇದ್ದಂತೆ ಒಂದಿನ ತಿಳಿಯಿತು. ವಾಸುಭಟ್ಟ ಸತ್ತದ್ದು ಸುದ್ದಿ ಬಂದ ಹಾಗೆ ಜ್ವರ ತಲೆಗೇರಿ ಅಲ್ಲ. ಕೆಲಸ ಸರಿಯಾಗಲಿಲ್ಲವೆಂದು ಹೋಟೆಲಿನ ಉಸ್ತುವಾರಿಯವರು ಸೌದೆಯಿಂದ ಜಪ್ಪಿದರಂತೆ. ಎಲ್ಲಿ ಪೆಟ್ಟಾಯಿತೋ, ಜೀವವೇ ಹೋಯಿತು. ಹೋಟೆಲು ಕೆಸದವರ ಬಾಯಿ ಬಂದು ಮಾಡಿಸಿ ದೋಸೆ ಒಲೆಯೊಳಗೆ ಹೆಣ ತುಂಬಿ ರಾತ್ರಿ ಬೆಳಗಾಗುವುದರೊಳಗೆ ಮುಗಿಸಿದರಂತೆ. ಸುತ್ತಿನಲ್ಲಿರುವವರು ವಾಸನೆ, ಏನೋ ವಾಸನೆ ಎನ್ನುತ್ತಿದ್ದಂತೆ, ದಿನಕಳೆದು ವಾಸನೆ ಕರಗಿತು. ಕತೆ ಘಟ್ಟದ ಮೇಲಿಂದ ಇಳಿದು ಪುಟ್ಟಮ್ಮನ ಕಿವಿಯವರೆಗೆ ಬಂದು ಮುಟ್ಟವಾಗ ಅವಳ ಮನಸ್ಸು ಥಂಡಿಯೇರಿತ್ತು. ಕೆಲವರೆಂದರು “ಬಿಡ್ಬೇಡ ನಂಬ್ರಮಾಡ್, ನಿಂಗೇ ಗುಣ ಆತ್ತ್ ಕಾಣ್”-ಆದರೆ ಪುಟ್ಟಮ್ಮತ್ತೆ ತಾನು ಕೋರ್ಟು ಮೆಟ್ಟಲು ಹತ್ತಲಿಲ್ಲ ಎನ್ನುವಾಗ ತುಸು ಬೀಗಿಯೇ ಬೀಗುತ್ತಾಳೆ. ದುಡ್ಡಿದ್ದವರೆದುರು ತನ್ನಂಥ ಬಡವಿ ವ್ಯಾಜ್ಯ ಮಾಡುವುದು ಹೌದೆ? ತನ್ನ ಸಾಕಜ್ಜಿಯ ಧೈರ್ಯ ತನ್ನದಲ್ಲ. +ಮಗುವನ್ನೆತ್ತಿಕೊಂಡು ಮೆಟ್ಟಿಲಿಳಿದ ಪುಟ್ಟಮ್ಮತ್ತೆ ರಂಗಪ್ಪಯ್ಯನ ಮನೆಗೆ ಖಾಯಂ ಆದಳು. ಎಲ್ಲಿಯವರೆಗೆಂದರೆ ಅವಳು ವಿಶೇಷಗಟ್ಟಲೆಯ ಅಡುಗೆಗೋ ಊಟಕ್ಕೋ ಇನ್ನೊಬ್ಬರ ಮನೆಗೆ ಹೋದಳೆಂದರೆ ರಂಗಪ್ಪಯ್ಯನ ಹೆಂಡತಿ ಈದಪ್ಪ ಮುಖ ಮಾಡಿಕೊಂಡಳೆಂದೇ. ಪುಟ್ಟಮ್ಮನಿಲ್ಲವೇ ಎಂದು ಕೇಳಿಕೊಂಡು ಬಂದವರಿಗೆ “ಇಲ್ಲದೆ ಸತ್ತಿತೇ? ಯಾರ ಮನೆ ಕೂಳು ಹೆಕ್ಕುಕೆ ಹೋಯಿತ್ತೋ” ಎಂದು ಆಕೆ ಸೊಡ್ಡು ಮುರಿಯುವ ಸುದ್ದಿ ಪುಟ್ಟಮ್ಮನ ಕಿವಿಯ ಮೇಲೆಯೂ ಬಿದ್ದಿಲ್ಲವೆಂದಲ್ಲ. ಆದರೆ ಗಂಡು ದಿಕ್ಕು ಇಲ್ಲದಿದ್ದ ಮೇಲೆ ಅಂಥ ಮಾತು ಕೇಳಬಾರದು. ಇಂಥ ಮಾತು ಬೀಳಬಾರದು ಅಂದುಕೊಳ್ಳುತ್ತ ಹೋದರೆ ‘ಹಸೆಗೆ ಹಿಡಿದ ಹೇಲಿನ ಹಾಂಗೆ ಅಲ್ಲೇ ಇದ್ದರೆ ಸೈ ಚಂಯ್ಯ ಮರ್‍ಕುತ್ತ’ ಸೊಡ್ಡು ಮುರಿದರೆ ಅವಳ ಕುತ್ತಿಗೆಯೇ ವಾರೆಯಾದೀತು ಎಂದ ಪುಟ್ಟಮ್ಮ ಊಟಕ್ಕೆ ಹೋಗುವುದನ್ನು ಬಿಡಲಿಲ್ಲ. ಬಿಟ್ಟರೆ ದಕ್ಷಿಣೆ ದುಡ್ಡನ್ನೂ ಬಿಟ್ಟಂತಲ್ಲವೇ? +ಮನುಷ್ಯ ಜೀವಿ ಎಂದಮೇಲೆ ಯಾವುದು ಬೇಕು. ಯಾವುದು ಬೇಡ? ಪುಟ್ಟಮ್ಮತ್ತೆಯ ಮಾತಿನಲ್ಲಿ ಹೇಳುವುದಾದರೆ “ಕಡೆಗೆ ಉಡುದಾರವೂ ಬೇಕಾದ್ದೇ.” ಊಟ ತಿಂಡಿ ಕೆಲಸ ಮಾಡಿದವರ ಮನೆಯಲ್ಲಿ ಕಳೆಯುತ್ತದೆ ಸೈ. ಆದರೆ ಕಾಸು? “ಅಳ್ಳೆ ಅಳ್ಳೆ ಭರ್ತಿ ಆಪ ಹಾಂಗೆ ಉಂಡು ತೇಗಿದ್ ಮೇಲೆ ದುಡ್ಡ ಮತ್ತೇನ? ಮುಂಡೇರಿಗೆಲ್ಲ ಎಂತ ಖರ್ಚ್? ತಿಂಗ್ಳಿಗೊಂದ್ಸಲ ತಲೆಬೋಳ್ಸಿಕೊಂಬುದು ಬಿಟ್ರೆ!” ಅಂತ ಒಮ್ಮೆ ದೋಣಿಮಂಡೆ ಆನಂದರಾಯರ ಮನೆಯಲ್ಲಿ ಕೇಳಿದ ಮಾತನ್ನು ಕೇಳಿಯೇ ಇಲ್ಲವೆಂಬಂತೆ ಜೋರಾಗಿ ಮಜ್ಜಿಗೆ ಕಡೆದಿದ್ದಳು ಪುಟ್ಟಮ್ಮತ್ತೆ. ಜಗಳ ಮಾಡಿದರೆ ಏನು ಬಂತು? ತನ್ನ ಯೋಗ್ಯತೆಯೇ ಅಷ್ಟು ಅಂತ ಅಂದುಕೊಂಡು ಬಿಟ್ಟರೆ ಮರುದಿನ ಬೆಳಿಗ್ಗೆ ಏಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೂಡುವ ಸೂರ್ಯನನ್ನು ಕಲ್ಲುಹೊಡೆದು ಉರುಳಿಸುವ ಅಂತಲೇ ಕಾಣುತ್ತದೆ. +ಅಂದಮೇಲೆ ಏನಾದರೂ ಕಾರುಬಾರು ಮಾಡುವುದೆಂದರೆ ದಕ್ಷಿಣೆ ದುಡ್ಡೇ ಬೇಕು ಅಂತಾಯಿತಲ್ಲ. ಸಾಲಿಗ್ರಾಮ ತೇರಿಗೆ ಮೇಲಿನೂರಿಂದ ಊರವರು ಬರುತ್ತಾರೆ. ಗುರುತಿನವರು, ಅಂದಿಗರು ಸಿಕ್ಕರೆ ಚಿನ್ನ ಕಂಡಷ್ಟು ಹಿಗ್ಗಿ ಮಾತನಾಡಿಸುತ್ತಾರೆ. ಕೈ ಮೇಲೆ ಹಬ್ಬದ ಖರ್ಚಿಗೆ ಯಥಾನುಶಕ್ತಿ ದುಡ್ಡನ್ನು ಇಡುತ್ತಾರೆ. ಹಾಗೆ ಪುಟ್ಟಮ್ಮತ್ತೆಯನ್ನು ಮಾತಾಡಿಸುವವರಿದ್ದಾರೆ. ಅವಳಿಗೂ ಅವಳ ಕೈ ಹಿಡಿದುಕೊಂಡು ತೇರಿನ ಸಂಭ್ರಮದಲ್ಲಿರುವ ಮಗಳಿಗೂ ದುಡ್ಡು ಕೊಡುತ್ತಾರೆ. ಒಟ್ಟಾದ ದುಡ್ಡಿನಿಂದ ಆಕೆ ತನಗೆ ಬೇಕೆಂಬಷ್ಟು ಅಲದಿದ್ದರೂ ಮಳೆಗಾಲ ಕಳೆಯುವ ಮಟ್ಟಿಗಾದರೂ ಹಬ್ಬಕ್ಕೆ ಘಟ್ಟದ ಮೇಲಿಂದ ಬರುವ ಮೆಣಸು, ಪುಟಾಣಿ ಇತ್ಯಾದಿ ಕೊಂಡಾಳು. ಓಲೆ ಚಾಪೆಗೋ, ಪಟ್ಟೆ ನೂಲಿಗೋ, ಹೆಣ್ಣಿನ ರಿಬ್ಬನು ಬಳೆಗೋ ಸಾಲಿಗ್ರಾಮ ತೇರಿನ ಹಸರ ಒಂದೇ. ದುಡ್ಡು ಉಳಿಯಿತೆಂದರೆ ಮಳೆಗಾಲದಲ್ಲಿ ಓಲಿ ಕೊಡಿಗೂ ಸಾಕಾಗುತ್ತದೆ. ಡಾಂಬರು ಬಳಿಸಿದರೆ ಆ ಕೊಡೆ ಮೂರು ನಾಲ್ಕು ವರ್ಷಕ್ಕೂ ಹೆಚ್ಚು ಬಾಳೀತು. +ಹಬ್ಬಕ್ಕೆ ಬಂದವರಲ್ಲಿ ಕೆಲವರು ಪುಟ್ಟಮ್ಮನಿಗೆ ಘಟ್ಟದ ಆಸೆ ತೋರಿಸಿದ್ದುಂಟು. ಆದರೆ ಹಾಗೆ ಹೋಗಿ ಒಂದು ಹೋಗಿ ಒಂದಾದರೆ ಎಂಬ ಹೆದರಿಕೆ ಪುಟ್ಟಮ್ಮತ್ತೆಯನ್ನು ಕಾಡಿತ್ತು. ಅದಕ್ಕೆ ಸರಿಯಾಗಿ ರಂಗಪ್ಪಯ್ಯನ ಹೆಂಡತಿ, ಬಾರಾಬಾಯಿ ಹೆಂಗಸು, “ಮೇಲಿನೂರಿಗೆ ಹೋಗಿ ಹೊಟ್ಟೆ ಬರಿಸಿಕೊಂಡು ಕಡೆಗೆ ಯಾರ ಮನೆ ಗಂಡಸ್ರ ಮೈಗೆ ಹೆಸರು ಒರೆಸಲಿಕ್ಕೆ?” ಎಂದು ಕೊಂಕಿದಾಗ ಪುಟ್ಟಮ್ಮನ ಆಸೆ ಅಲ್ಲಿಗೆ ಕಂತಿಯೇ ಹೊಗಿತ್ತು. ಹಾಗೆ ಒಮ್ಮೆ ರಂಗಪ್ಪಯ್ಯನ ತಂಗಿ ಜಯಲಕ್ಷ್ಮಿ ಎಂಬಾಕೆ ಮುಟ್ಟಾದಾಗ ಹಿಂಬದಿ ಜಗಲಿಯ ಮೂಲೆಯಲ್ಲಿ ಹಿಡಿಕಟ್ಟೆಗೆಂದು ತೆಂಗಿನಗರಿ ಕೀಸುತ್ತಾ ಕೇಳಿದ್ದಳು. “ಪುಟ್ಟಮ್ಮಾ, ನನ್ನದೇ ಸರಿಯಾಣಿ ನೀನು. ನಿಂಗೂ ಹಸಿವು ಬಾಯಾರಿಕೆ ಆಗದಿದ್ದೀತೇ?” +ಜಯಲಕ್ಷ್ಮೀ, ಹಸಿವು ಬಾಯಾರಿಕೆ ಆಗದವರು ಯಾರಿಲ್ಲ. ಆದರೆ ಅದೆಲ್ಲ ಇರುವುದು ಇಗಾ ಇಲ್ಲಿ. ಈ ಎದೆಯಲ್ಲಿ, ಇದನ್ನೊಂದು ಕಲ್ಲುಮಾಡಿ ಕೊಂಡರೆ ಎಲ್ಲ ಪಸೆ ಒಣಗಿ ಬೇಗ ಚಿರುಟಿ ಹೋದೀತು – ಆಕೆ ಹಾಗೆಂದ ರೀತಿಗೆ ಜಯಲಕ್ಷ್ಮಿ ನಕ್ಕಾಗ ಪುಟ್ಟಮ್ಮನಿಗೂ ನಗೆಯೇ. ನಗೆಯೂ ಹಲವೊಮ್ಮೆ ಖಾಲಿ ಇರುತ್ತದೆಯಲ್ಲ! +ಮನೆಯಲ್ಲೆ ಉಣ್ಣುವ ಪ್ರಸಂಗ ಬಂದರೆ ನಾಲ್ಕು ಕೆಸುವಿನ ದಡಿಕಿತ್ತಳು. ಒಂದು ಹುಳಿ ಮಾಡಿದಳು. ಎರಡು ಬೆಳ್ಳುಳ್ಳಿ ಬೇಳೆ ಒಗ್ಗರಣೆ ಹಾಕಿ ಒಂದು ಬಟ್ಟಲು ಅನ್ನ ಉಂಡಳು. ತೊಂಡೆಸೊಪ್ಪು ಕೊಯ್ದು ಹುರಿದು ಕಾಯಿ ಸುಳಿಯೊಂದಿಗೆ ಒಂದು ಸೊಲಿಗೆ ಮಜ್ಜಿಗೆ ಬಿಟ್ಟುಕೊಂಡು ಅರೆದು ಮಾಡಿದ ತಂಬುಳಿಯಲ್ಲಿಯೇ ಅವಳೂ ಮಗಳೂ ಉಂಡ ದಿನ ಎಷ್ಟು! ಏನೂ ಇಲ್ಲದ ದಿನ ಇದ್ದ ಒಂದೇ ಕದಿರಿಗೆ ಒಂಚೂರು ಬಡಿಸಿದಳು. ತಾನು ಅನ್ನಕ್ಕೆ ನೀರು ಎಣ್ಣೆ ತಟಕು ಬಿಟ್ಟುಕೊಂಡು ಉಪ್ಪಿನಕಾಯಿ ರಸ ಮುಟ್ಟಿಕೊಂಡು ಉಂಡಳು. ಎದ್ದಳು. ಮಗಳಂತೂ ಒಂದಿನ ಇಂಥ ವಸ್ತು ತನಗೆ ಬೇಕು ಎಂದು ಹಟ ಮಾಡಿದ್ದಿಲ್ಲ. +ಅದರ ಅದೃಷ್ಟಕ್ಕೆ ರಂಗಪ್ಪಯ್ಯನೇ ನೆಂಟಸ್ತಿಕೆ ಹುಡುಕಿಕೊಟ್ಟರು. ಮದುವೆ ಖರ್ಚನ್ನೂ ವಹಿಸಿಕೊಂಡರು. ಹೆಣ್ಣು ಇದ್ದದ್ದೇ ಗೊತ್ತಾಗಲಿಲ್ಲ. ಅವಳನ್ನು ಸಾಕಿದ್ದೇ ಗೊತ್ತಾಗಲಿಲ್ಲವೆಂದು ಅದು ಗಂಡನ ಮನೆಗೆ ಹೋಗುವಾಗ ತಂಪಿನ ದುಃಖ ಮೇಲೆ ಮೇಲೆ ಬಂತು. ಆದರೆ ವರ್ಷದೊಳಗೆ ದುಃಖ ವಿಕರಾಳವಾಗಿ ಎರಗಿತು. ಮಗಳು ಬಸುರಾಗಿಯಾಯಿತು, ಹೆತ್ತಾಯಿತು. ಪುಟ್ಟಮ್ಮತ್ತೆಯ ಕರುಳಿಗೆ ಬೆಂಕಿಕೊಟ್ಟು ನಡೆದಾಯಿತು. ಅಳಿಯನಾದವ ಬಂದ. ಹೆಣ ನೋಡಿದ. ಮಗು ಹೇಗಿದೆ ಎಂದು ಇಣುಕಿದ. ಹೊರಟುಹೋದ. ಕ್ರಿಯೆಯನ್ನು ಗೋಕರ್ಣದಲ್ಲಿ ಮಾಡಿದೆ ಎಂದು ಸುದ್ದಿ ಕಳಿಸಿದ. ಮಗು, ಹೆಣ್ಣು ಮಗು, ಪುಟ್ಟಮ್ಮತ್ತೆಯ ಹತ್ತಿರ ಉಳಿಯಿತು. “ನಾನದನ್ನು ಅಂದೇ ಅಪ್ಪನೊಟ್ಟಿಗೆ ಕಳಿಸಿಪ್ಪೆನಲೆ, ಗೆದ್ದು ಹೊಡೀತಿದ್ದೆ. ಹೊಸ್ತಾಗಿ ಬಪ್ಪವಳು ತಾಟಕಿಯೋ ಲಂಕಿಣಿಯೋ ಆಯಿದ್ರೆ! ಮಗುವಿನ ಕೈಯಲ್ಲಿ ಹೆಡಿಗೆಯಲ್ಲಿ ನೀರು ಹೊರಿಸಿರೆ! ಹೆತ್ತ ಕರುಳೆಂಬುದು ಇತ್ತಲೆ, ತಾವರೆದಂಟಿಗಿಂತ ಮೃದು, ಕದಿರು ಉದುರಿತೆಂದು ಕದಿರಿನ ಕುಡಿಯನ್ನು ಒಣಗಿ ಸುಕಾತ್ತಾ? ಚೋಟುದ್ದದ ಮಗುವನ್ನು ಇಷ್ಟುದ್ದ ಬೆಳೆಸಬೇಕಾರೆ ಈ ಪುಟ್ಟಮ್ಮತ್ತೆಯೆಂಬವಳ ಬೆನ್ನು ಬಗ್ಗಿಯೇ ಹೋಯ್ತ್….” +ಪುಟ್ಟಮ್ಮತ್ತೆಯ ತುಟಿಗಳು ಅಲುಗತೊಡಗಿದವು. ದುಃಖ ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಅವಳ ಮುಖದ ಸ್ನಾಯುಗಳು ಬಿಗಿದುಕೊಂಡವು. “ಈಗ, ಇಷ್ಟು ತಡವಾಗಿ ಆ ಹೆಣ್ಣನ್ನು ಕೂಡಿಸಿಕಂಡ್ ‘ಮಗ, ವಿಷಯ ಹೀಂಗೆ ಹೀಂಗೆ. ಬದುಕೆಂಬುದು ನಾನು, ನೀನು ತಿಳ್ಕಂಡ ಹಾಗೆ ಇಲ್ಲೆ. ಮೇಲೊಬ್ಬ ಇದ್ದ. ಕಾಂತ. ಮರ್ಯಾದೆ ಇಟ್ಕಂಬುದು ನಮ್ ಕೆಲ್ಸ. ನಂಗೂ ಸಣ್ಣದಿನಲ್ಲಿಯೇ ಅಬ್ಬೆ ಸತ್ತಳು. ಕಮಲಾವತೀ, ನಾನೇನು ಸತ್ತೆನ? ಬೆಳೆದೆ. ಮದುವೆ, ಮಗು ಎಲ್ಲ ಆಯ್ಲಿಲ್ಯ? ಆಮೇಲೆಯೂ ನೀತಿ ನಿಯತ್ತು ಹದ್ದುಬಸ್ತಿನಲ್ಲಿದ್ದೆ. ಅಡುಗೆ ಬಟ್ಟರ ಹಿಂಡಿನ ಮಧ್ಯೆ ಇದ್ದೂ, ‘ಏನು ಪುಟ್ಟಮ್ಮತ್ತೆಯ ಅರೆಯುವ ಗುಂಡು ಜೋರು ಅಲ್ಲಾಡತ್ತಲೆ!’ ಎಂಬ ಹಡೆ ಮಾತಿನ ಮಧ್ಯೆಯೂ ಸೆರಗುಬಿಗಿದು ಕಟ್ಕಂಡೆ, ಮುಖ ಅಡಿ ಹಾಕ್ಕಂಡೆ, ಅರೆದೆ….” ಅಂತೆಲ್ಲ ಬೋಧೆ ಕೊಡುವ ದಿನ ಬಂತು. ಅದಕ್ಕೆ ಕಮಲಾವತಿ ಏನಂತು ಗೊತ್ತೇ ಸೌದಾಮಿನೀ? ‘ಅಜ್ಜೀ, ನೀ ಯಾಕೆ ಅಷ್ಟೆಲ್ಲ ಕಷ್ಟ ಬಂದದ್ದ್? ಏನು ಉಪಯೋಗ ಆಯ್ತ್ ಅಂತಳಿ ಬೇಕಲೆ. ನಿನ್ ಜಾಗದಗೆ ನಾನಿದ್ದಿದ್ರೆ ಕೋರ್ಟ್ ಹತ್ತುತ್ತಿದ್ದೆ. ಸಿಕ್ಕಿದಷ್ಟನ್ನ ಹಿಡಿದು ಒಂದು ದಾರಿ ಕಾಂತಿದ್ದೆ. ಬದಲು ‘ನನ್ನ ಅಮ್ಮ ಅರೆದಳು, ನಾನೂ ಅದೇ ಪಟ್ಟ ಏರ್‍ಕಂಡೆ. ಅಂತೆಳಿ ಅರೆಪಚ್ಚೆ ಹಾಂಗೆ ಹೇಳ್ತ ಸಾಯುವರೆಗೂ ರಂಗಪ್ಪಯ್ಯನ ಮನೆ ಅರೆಯುವ ಕಲ್ಲಿನ ಪೀಠ ಆತಿರ್‍ಲಿಲ್ಲೆ. ನೆನಪಿಟ್ಕೋ’ ಅಂತ ಬಾಯಿ ವಾರೆಮಾಡಿ ಚಾಳಿಸಿತು! ಈ ಮಾತಿನರ್ಥ ನೀನೇ ಹೇಳು ಹೆಂಗ್ಸೆ….” +ಪುಟ್ಟಮ್ಮತ್ತೆ ಕೊಳವೆ ಅತ್ತ ದೂಡಿದಳು. ಕಂಬಕ್ಕೆ ಒರಗಿದಳು. ಸೆರಗನ್ನು ಕಣ್ಣಿಗೊತ್ತಿಕೊಂಡಳು. ಮೂಗು ಹಿಂಡಿ ಬೆನ್ನ ಹಿಂದಿನ ಗೋಡೆಗೊರಗಿ ಬಿಕ್ಕಿದಳು. ಮತ್ತೆ ಮಾತಾಡದಾದಳು. +ಅರ್ಥವಾದರೂ ಆಗದಿದ್ದರೂ ಕೇಳುತ್ತ ಇದ್ದ ಮಕ್ಕಳು ಬೆಪ್ಪುಗಟ್ಟಿದುವು. ಸೌದಾಮಿನಿ “ಹೋಯ್ಲಿ ಬಿಡಿ ಪುಟ್ಟಮ್ಮತ್ತೆ” ಎಂದು ಮುಂತಾಗಿ ಸಮಾಧಾನ ಹೇಳಿದಳು. ಗುಂಡ್ಮಣಿ ಹಪ್ಪಳದ ಚಾಪೆಯ ಮೇಲೆ ಕಾಲು ಹಿಸಿದುಕೊಂಡು ಪುಟ್ಟಮ್ಮತ್ತೆಯನ್ನೇ ನೋಡುತ್ತಿತ್ತು. ಹೊರಗಿನಿಂದ ಮಣೆಕೊಳವೆಗಳ ದನಿ ಕೇಳದೆ ಅಚ್ಚರಿಯಿಂದ ಶೇಷಮ್ಮ ಹೊರಬಂದು ಇಣುಕಿ “ಆಹ! ಇದೀಗ ಸಮನೇ. ಸೂರ್ಯ ಸೋರಲಿಗೆ ಬಂದರೂ ಹಪ್ಪಳ ನೆರಿಲಿಲ್ಲೆ ಅಂದ್ರೆ! ಏಳಿ ಎಲ್ಲ. ಊಟವಾರೂ ಮುಗ್ಸಿ. ಹೆಣೆ ಮಂದಾಕಿನೀ, ಬಟ್ಟಲಿಡು”. ಎನ್ನಲು ಗುಂಡ್ಮಣಿ ಮೆಲ್ಲ ಎದ್ದು ಬಂದು ಪುಟ್ಟಮ್ಮತ್ತೆಯ ಕಣ್ಣುನೀರನ್ನೇ ಅಚ್ಚರಿಯಿಂದ ನೋಡುತ್ತ ಅವರನ್ನಲ್ಲಾಡಿಸಿ “ಪುಟ್ಟಮ್ಮತ್ತೇ, ಹಸಿವು ಬಾಯಾರಿಕೆ ಅಂದ್ರ್ಯಲೆ, ಏಳಿ, ಉಂಬುಕೆ ಹೋಗಿ” – ಎಂದ. +* * * * +ಹಿಂದೆ ಪುಟ್ಟಮ್ಮತ್ತೆ ಎಲ್ಲಿಗೆ ಹೋಗುವುದಾದರೂ ಮೊಮ್ಮಗಳನ್ನು ಬಿಟ್ಟು ಹೋಗಲಾರಳು. ಹೊರ ಜಗಲಿಯಲ್ಲಿ ತನ್ನ ಪ್ರಾಯದ ಮಕ್ಕಳೊಂದಿಗೆ ಆಕೆ ಆಟವಾಡುತ್ತ ಅಜ್ಜಿಯ ಕೆಲಸ ಮುಗಿಯುವವರೆಗೂ ಕುಳಿತ್ತಿರುತ್ತಿದ್ದಳು. ಕರವೀರ ಬೀಜ ಬೇಕೇ, ಚನ್ನೆಕಾಳು ಬೇಕೇ, ಕಿಸ್ಕಾರ ಹಣ್ಣು? ಎಲ್ಲದಕ್ಕೆ ಪುಟ್ಟಮ್ಮತ್ತೆ ಮೊಮ್ಮಗಳ ಹತ್ತರ ಕೇಳಿದರೆ ಸಿಕ್ಕಿತೆಂದೇ ಲೆಕ್ಕ. ಅವಳಿಗೆ ಪುಟ್ಟಮ್ಮತ್ತೆ ‘ಕಮಲಾವತೀ’ ಎಂದೇ ಹೆಸರಿಟ್ಟಳು. ದೀರ್ಘವನ್ನೂ ಕೂಡಿಸಿ ಇಡೀ ಹೆಸರನ್ನೇ ಕರೆದಾಳು ಹೊರತು ಎಂದಿಗೂ ಅರ್ಧ ಮಾಡಳು. ಹೆಣ್ಣಿನ ಮೂಗಲ್ಲಿ ಒಂದು ದಿನ ಸಿಂಬಳಸುರಿದದ್ದಿಲ್ಲ. ಕಣ್ಣಿಗೆ ಕಾಡಿಗೆ ತಪ್ಪಿದ್ದಿಲ್ಲ. ಅವಳ ಕಿವಿಗೊಂದು ಸಣ್ಣ ಲೋಲಾಕನ್ನು ಮಡಿಸಿ ಹಾಕಿದ್ದಳು ಪುಟ್ಟಮ್ಮತ್ತೆ. ಅಬ್ಬೆ ಸತ್ತ ಮಗು ಎನ್ನುವಾಗ ಮಾತ್ರ ಯಾವತ್ತೂ ಅವಳ ಗಂಟಲು ಕಟ್ಟಿಬರುತ್ತದೆ. ಏನು ಕೊಟ್ಟರೂ ಮಡಿಲೊಳಗೆ ತುಂಬಿಕೊಂಡಾಳು. ಮೊಮ್ಮಗಳಿಗೆ ಕೊಟ್ಟಾಳು. +“ಇದು ಮಹಾ ಗರಾಸಿಯಾದೀತು. ನನ್ನ ಮಗಳಂತಲ್ಲ” ಎಂದು ಕೊಂಗಾಟದಿಂದ ಬೈಯುತ್ತ “ಶೇಷಮ್ಮ, ಒಂಚೂರು ಎಣ್ಣೆ ಕೊಡು ಕಾಂಬ.” ಎಂದು ಕೇಳಿ ಅದರ ತಲೆಗೆ ಪೂಸಿ ಬಿಗಿಯಾಗಿ ಜಡೆ ಕಟ್ಟಿ ಬಾಳೆನಾರು ಸುತ್ತಿದರ ನಾಳೆ ಬಿಚ್ಚುವವರೆಗೂ ಆ ಜಡೆ ಅತ್ತಿತ್ತ ಆಗಲಿಕ್ಕಿಲ್ಲ. +“ಪುಟ್ಟಮ್ಮತ್ತೆ, ಅತೀ ಹಚ್ಕಂಬೇಡ. ನಾಳೆ ತಲಿ ಮೇಲೆ ಹೇಲೀತು” ಎಂದು ಎಚ್ಚರಿಸಿದವರಿಗೇನೂ ಕಡಿಮೆಯಿಲ್ಲ. +ದಿನ ಕಳೆಯಿತು. ಪುಟ್ಟಮ್ಮತ್ತೆಯ ತಲೆಗೂದಲು ಸೆರಗು ಮುಚ್ಚಿಟ್ಟಲ್ಲೇ ಬೆಳ್ಳಗಾಯಿತು. ಕಾಲ ಯಾರಪ್ಪನ ಗಂಟು? ಅದು ಕರಗುವುದೋ, ಹೆಚ್ಚಾಗುವುದೋ ಎಂಬುದು ಯಾವತ್ತೂ ಬಗೆಹರಿಯದ್ದು. ಸುಲಭವಾಗಿ ಹೇಳಬೇಕೆಂದರೆ ಪುಟ್ಟಮ್ಮತ್ತೆಯ ಮಟ್ಟಿಗೆ ಕಾಲ ಕರಗುತ್ತದೆಯಾದರೆ ಕಮಲಾವತಿಯ ಪಾಲಿಗೆ ತುಂಬುತ್ತ ಬಂತು ಎನ್ನುವುದೇ ಸಮನಷ್ಟೆ! +ಕಮಲಾವತಿಯ ಪ್ರಾಯ ತನ್ನ ಪ್ರಾಯದಂತಲ್ಲ. ದಕ್ಷಿಣೆ ದುಡ್ಡಿನಲ್ಲಿ ತಾನು ದಿನ ದೂಡಿದೆನೆಂದರೆ ಕಮಲಾವತಿಗೆ ಅದು ಸಾಧ್ಯವಿಲ್ಲವೆಂದು ಪುಟ್ಟಮ್ಮತ್ತೆಗೂ ಗೊತ್ತಾಗಿದೆ. “ದುಡ್ಡು ಕೇಂಡ್ರೆ ಏನಾತ್?” ಎಂದು ಕೆಲಸ ಮುಗಿಸಿ ಮರಳುವ ಅಜ್ಜಿಯನ್ನು ಕಮಲಾವತಿ ಕೇಳುತ್ತಾಳೆ. ಅವತ್ತೊಂದು ದಿನ ಬೇಣದ ಮನೆ ಶಾಮರಾಯರ ಮನೆಯಲ್ಲಿ ಪುಟ್ಟಮ್ಮತ್ತೆ ಬಡಿಸಲು ಹೋದಾಗ ತಾನೂ ಸೇರಿಕೊಂಡಳು. ಆಗ ಊಟಕ್ಕೆ ಕುಳಿತ್ತಿದ್ದ ಕೆಳಕೇರಿ ಬಾಬು ಎಂಬವ ಕಣ್ಣು ಹೊಡೆದನಂತೆ. ಒಂದು ಸೌಟು ಬಿಸೀ ಸಾರನ್ನೇ ಅವನ ತಲೆಯ ಮೇಲೆ ಹೊಯ್ದೇಬಿಟ್ಟಳು. ಮನೆಗೆ ಮರಳುವಾಗ ಅಜ್ಜಿಯ ಪರವಾಗಿ ಶಾಮರಾಯರ ಹೆಂಡತಿಯ ಬಳಿ ತಾನೇ ಐದು ರೂಪಾಯಿ ಕೇಳಿ ಗೆದ್ದುಕೊಂಡೇ ಬಂದಳು. ಎದುರುಮನೆ ಅಚ್ಚುಮಾಣಿಯನ್ನು ಕರೆದುಕೊಂಡು ಸಿನಿಮಾಕ್ಕೆ ಎದ್ದಳು. ಸಿನೆಮಾ ಎಂದರೆ ಅನ್ನ ನೀರು ಬಿಟ್ಟು ನೋಡಿಯಾಳು ಕಮಲಾವತಿ. ಆಕೆ ‘ಎಲ್ಲಿರಬೇಕೋ ಅಲ್ಲಿಲ್ಲ’ ಎಂಬ ಮಾತುಗಳು ಇನ್ನಷ್ಟು ಪುಕ್ಕ ಕುತ್ತಿಕೊಂಡು ಮದುವೆಗೆ ಕಷ್ಟವಾಗುತ್ತಿರುವ ಸಂಕಟವನ್ನು ಪುಟ್ಟಮ್ಮತ್ತೆ ಅವಳೊಡನೆ ಹೇಳಲೂ ಆರಳು. +“ಬೀಜ ಅಂಥದ್ದು ಏನು ಮಾಡೂದು? ಇಲ್ದಿದ್ರೆ ಜಗಲಿ ಮೇಲೆ ತಲೆ ಬಾಚೂಕೆ ಕೂತ್ರೆ ಎದುರುಮನೆ ಮೀನಾಶ್ಚಿ ‘ಆಯ್ಲಿಲ್ಯನಾ ಇನ್ನೂ? ಎಷ್ಟುದ್ದ ಕೂದ್ಲೂ, ಏನು ಕತೀ’ ಎಂದು ಇವಳ ಚೋಂಟು ಕೂದಲಿಗೆ ಹೇಳಿರೂ ಗೆರೆ ಮುಟ್ಟುವುದಿಲ್ಲೆ. ಮೀನಾಶ್ಚಿ ತನ್ನ ಗಂಡ ಒಳ ಹೊರ ಓಡಿಯಾಡುವ ಕೋಣಿ ಕಂಡಿಯನ್ನ ಭಡಾರಂತೆಳಿ ಮುಚ್ಚಿರೂ ಹೆಣ್ನು ಅಜುಕತ್ತಿಲ್ಲೆ. ಬದಲು ‘ಅವಳ ಗಂಡನ್ನೇ ಹಿಡೀಕಾ ನಾನ್? ಬೇರೆ ಗಂಡಸ್ರಿಲ್ಯ ಊರಗೆ?’ ಎಂದು ಮಾನ ಇಲ್ದಿದ್ದವ್ರ ಹಾಂಗೆ ಗೊಣಗತ್” ಎಂದು ಗುಟ್ಟಲ್ಲಿ ಶೇಷಮ್ಮನೊಡನೆ ಹೇಳಿಯೂ ತಣಿಯಲಾರಳು ಪುಟ್ಟಮ್ಮತ್ತೆ. +ಶೇಷಮ್ಮನ ಮಗಳು ಸೌದಾಮಿನಿಯನ್ನು ನೋಡಲಿಕ್ಕೆ ಬಂದ ದಿನದ ಕತೆಯಂತೂ ಈಗ ನೆನೆದರೂ ಪುಟ್ಟಮ್ಮತ್ತೆಗೆ ಹೇಲು ಮೆಟ್ಟಿದಂತಾಗುತ್ತದೆ. ಪುಟ್ಟಮ್ಮತ್ತೆಯ ಮನೆ ಬಾವಿಕಟ್ಟೆಯನ್ನು ದಾಟಿಕೊಂಡೇ ಹುಡುಗನ ಕಡೆಯವರು ಆ ಮನೆಗೆ ಹೋದರು. ಕಮಲಾವತಿ ಕಂಡಿಯಿಂದಲೇ ಇಣುಕಿದಳು. ‘ಆಗ! ಬಹುಶಃ ಅವನೇ, ಫುಲ್‌ಕೈ ಶರ್ಟ್ ಹಾಕ್ಕಂಡಿದ್ನಲೆ, ಅವ’ ಎಂದಳು. ಪುಟ್ಟಮ್ಮತ್ತೆಯೂ ಇಣುಕಿದಳು. ಆಯಿತು, ಒಳಬಂದು ಹುಳಿ ಮಡಲಿಕ್ಕೆ ಹಿಂದಿನ ದಿನ ಶೇಷಮ್ಮ ಕೊಟ್ಟ ಒಂದಷ್ಟು ಸಾಂಬ್ರಾಣಿಯನ್ನು ಗೋಣಿಯೊಳಗೆ ತುಂಬಿ ಬಡಿದು ಸಿಪ್ಪೆ ತೆಗೆಯುತ್ತ ಕುಳಿತಳು. ಎಸರು ಕುದಿಯುತ್ತಿತ್ತು. ‘ಹೆಣೆ, ಅನ್ನಕ್ಕೆ ಅಕ್ಕಿ ಹಾಕು’ – ಎಂದರೆ ಹ್ಞೂಂ ಇಲ್ಲ ಹ್ಞಾಂ ಇಲ್ಲ. +ಈ ಹೆಣ್ಣು ಎಲ್ಲಿಗೆ ಹಾರಿತಪ್ಪ ಎಂದುಕೊಳ್ಳುವುದರೊಳಗೆ ರಂಗಪ್ಪಯ್ಯನ ಮನೆಯಿಂದ ಅರ್ಜೆಂಟ್ ಬರಲು ಕರೆಬಂತು. ಹಿಂಬಾಗಿಲಿನಿಂದ ಮೆಲ್ಲ ಒಳಗೆ ಹೋದರೆ “ಯಂತ ಪುಟ್ಟಮ್ಮತ್ತೆ, ನಿಂಗಾರೂ ಬುದ್ಧಿ ಬೇಡ್ದ? ಹೆಣ್ಣು ಕಾಂಬುಕೆ ಬಂದಿದ್ರ್. ನಿನ್ನ ಮೊಮ್ಮಗಳು ಅವರೆದುರೆ ಮೈ ಕುಣ್ಸಿಕಂಡು ಈಗ ಬಂದದ್ ಯಾಕೆ? ಬಂದವ ಕಮಲಾವತಿಯನ್ನೇ ಆಯ್ತು ಎಂದ್ರೂ ಎಂದ್ನೇ. ಈಗಿನವಕ್ಕೆ ಬೇಕಾದ್ದು ಬಿಳಿಚರ್ಮ ಮಾತ್ರ ಅಲ್ದ?” ಎಂದು ಸಿಡುಕಿದಳು ಶೇಷಮ್ಮ. ಪುಟ್ಟಮ್ಮತ್ತೆ ‘ಆ ದಿಗಡದಿಮ್ಮಿ ಎಲ್ಲಿದೆ?’ ಎಂದು ಕೇಳಿದರೆ ಚಾವಡಿಗೆ ಕಾಣುವಂತೆ ಪಡಸಾಲೆಯ ಕಂಬದ ಸುತ್ತಲೂ ಕೈಹೊಸೆದುಕೊಂಡು ಓಲಾಡುತ್ತಾ ಸೌದಾಮಿನಿಯೊಂದಿಗೆ ಪಟ್ಟಾಂಗದ ಪೆಟ್ಟಿಗೆ ಬಿಚ್ಚಿಕೊಂಡಿತ್ತು. ಎರಡು ಬಡಿದು ಕರೆದುಕೊಂಡು ಹೋಗುವಂತಿದೆಯೇ? ನಿಂತಲ್ಲಿಂದಲೇ ಕಣ್ಣು ಕೆಂಚರಿಸಿದಳು ಪುಟ್ಟಮ್ಮತ್ತೆ. ಏನು ಕಂಡಿತೋ, ಸೀದ ಬಂದಳು. ಮನೆ ಮುಟ್ಟುವವರೆಗೂ ಉಪ್ಪು ಉಪ್ಪಿನ ಕಲ್ಲೆನ್ನಲಿಲ್ಲ. ಬಾವಿಕಟ್ಟೆ ತಲುಪಿದ ಮೇಲೆ ಅಲ್ಲಿಂದ ಒಳಗೆ ಬರಲಿಲ್ಲ. ‘ಆಟ ಪೂರ್ತಿ ಕಾಂಬೆ’ – ಎಂದಳು ಪುಟ್ಟಮ್ಮತ್ತೆ ದೊರಸಾಗಿ. +ಮೈಮೇಲೆ ದೈವ ಆಳಿದಂತೆ ಹುಡುಗಿ ನೀರು ಎತ್ತಿ ಎತ್ತಿ ಕೈತೊಳೆಯುವ ಬಾನಿ ತುಂಬಿತು. ಮಲ್ಲಿಗೆ, ಜಾಜಿ, ಪಾರಿಜಾತ, ಇರುವಂತಿಗೆ, ಕಾಶಿತುಂಬೆ – ಎಲ್ಲ ಗುತ್ತಿಗಳಿಗೂ ನೀರಿನ ಸಮಾರಾಧನೆಯಾಯಿತು. “ಏನೇ ಆಗಲಿ, ಗಿಡದ ಒಡಲು ತಂಪಾಯಿತಾ ಇಲ್ಲ್ಯ?” – ಎಂದು ಕಸಕ್ಕನೆ ನಕ್ಕಳು ಪುಟ್ಟಮ್ಮತ್ತೆ. ಸಾಂಬ್ರಾಣಿ ತುಂಬಿದ ಪಾತ್ರೆ ಒಳಗೊಯ್ದು ಅಡುಗೆ ಮುಂದರಿಸಿದಳು. ಸ್ವಲ್ಪ ಹೊತ್ತಿನಲ್ಲಿಯೇ ಬಂದವರು ರಂಗಪ್ಪಯ್ಯನ ಮನೆ ಮೆಟ್ಟಲು ಇಳಿಯುವುದು ಕಿಂಡಿಯಿಂದ ಕಾಣಿಸಿತು. ಹೊರಗೆ ಬಂದು ಕಂಡರೆ ಕಮಲಾವತಿ ಮೇಲಿಂದ ಉಂಗುಷ್ಠದವರೆಗೂ ಒದ್ದೆಯಾಗಿ ಬಾವಿಗೆ ಕೊಡಪಾನ ಇಳಿಸಿ ನಿಂತಿದ್ದಳು. “ಅಬ್ಬೆ ಹ್ಯಾಂಗೂ ಹೋಯಾಯಿತು. ಅಪ್ಪನೂ ಸತ್ತನಾ ಎಂತ?” – ಮಾತಿಲ್ಲ. “ಮದ ಏರಿತ್ತನಾ ನಿಂಗೆ? ಒಳಗೆ ಬಂದು ಏನಾರೂ ಕೆಲಸ ಕಾಂಬುಕಾತ್ತಿಲ್ಯ?” – ಮಾತಿಲ್ಲ. “ಬಾ ಮಾರಾಯ್ತೀ ಕಮಲಾವತೀ, ಅವ್ರೆಲ್ಲ ಬಪ್ಪಹೊತ್ತಿಗೆ ಈ ವೇಷ ಬೇಡ.” +“ಅಜ್ಜೀ. ಇದು ನಮ್ಮನೆ ಬಾಮಿಕಟ್ಟೆ. ರಂಗಪ್ಪಯ್ಯನ ಮನೆ ಪಡಸಾಲೆಯಲ್ಲ” ಕಮಲಾವತಿಯ ಸ್ವರ ಹೊತ್ತಿ ಉರಿಯುತ್ತಿತ್ತು. ಅಷ್ಟರೊಳಗೆ ಗಂಡಿನ ದಂಡು ಬಂತು. ಬಾಗಿಲೊಳಗಿಂದಲೇ ಇಣುಕಿದಳು ಪುಟ್ಟಮ್ಮತ್ತೆ. ಕಮಲಾವತಿಯೂ ಹುಡುಗನೂ ಒಬ್ಬರನ್ನೊಬ್ಬರು ಕಂಡು ಮುಗುಳಾದದ್ದು ಕಣ್ಣಿಗೆ ಬಿತ್ತು. ಒಂದು ಕ್ಷಣ ಇಡೀ ದಂಡೇ ಈಚೆ ತಿರುಗಿತು. ಹೊರಟುಹೋಯಿತು. ದರಗುಟ್ಟಿ ನೀರು ಸುರಿಯುತ್ತಿದ್ದ ಸೀರೆಯನ್ನು ಮೊಣಕಾಲಿನವರೆಗೂ ಎತ್ತಿಕೊಂಡು ಹಿಂಡುತ್ತಾ ಕಮಲಾವತಿ ಮನೆಯೊಳಗೆ ಬಂದಳು. ’ಒಳಗೆಲ್ಲ ನೀರು ಮಾಡ್ಬೇಡ’ ಎಂದರೆ ಬೇಕೆಂದೇ ಓಡಿಯಾಡಿ ‘ನಾ ಒರೆಸಿರೆ ಸೈಯಲ್ಲ’ ಎಂದಳು. ಸ್ವರದಲ್ಲಿ ಗೆಲವೆಂದರೆ! ಈ ರಂಡೆ ಮನಸ್ಸಿನಗೆ ಅವ ತನ್ನನ್ನೇ ಮದುವೆಯಾತ ಅಂತವೋ ಏನೋ, ಅತೀ ಸಿನೆಮಾ ಕಂಡ್ರೆ ಯಾಕಾತ್ತ್? ‘ಮಗೂ ಕಮಲಾವತೀ, ಗುಂವಿಯೊಳಗೆ ತಾವರೆ ಅರಳಿರೂ ಅದನ್ನ ಕೋಳೆ ಹೂವು ಅಂಬರೇ ಹೊರ್‍ತು ತಾವರೆಯೆನ್ನರು’- ಪುಟ್ಟಮ್ಮತ್ತೆ ಗೊಣಗಿಕೊಂಡಳು. ಶೇಷಮ್ಮನ ಮಾತು ಬದ್ಧವೇ. ಕಮಲಾವತಿಯನ್ನು ಆ ದಸಾಲು ಬುಡ್ಕಿ ಸೌದಾಮಿನಿಯೆದುರು ಸುಳಿದಿಡಬೇಕು. ಆದರೂ ಸೌದಾಮಿನಿಯ ಗಂಡ ಎಂದಿಗೂ ಕಮಲಾವತಿಯವನು ಆಗಲಾರ. ಹಾಗೆಂತ ತನಗೆ ಗೊತ್ತು. ಕಮಲಾವತಿಗೆ ಗೊತ್ತೇ? ಯಾಕಾಗಬಾರದು ಎಂದಾಳು. ಎರಡು ನೋವು ತಿನ್ನಲಿ ಎಂದುಕೊಂಡಳು ಪುಟ್ಟಮ್ಮತ್ತೆ. +ಕೆಲವೇ ದಿನಗಳಲ್ಲಿ ರಂಗಪ್ಪಯ್ಯನ ಮನೆ ಮುಂದೆ ಚಪ್ಪರವೆದ್ದಿತು. ಸ್ವತಃ ಶೇಷಮ್ಮನೇ-ಕಮಲಾವತಿ ಮದುವೆಗೆ ಬಂದಾಗ ನಾಲ್ಕು ಜನ ಕಂಡಾರು. ಮೇಲಿಂದ ಪರಮೇಶ್ವರ, ತನ್ನ ಹಿರಿಯಮಗ ಬರುತ್ತಾನೆ. ಅವನೇನಾದರೂ ದಿಕ್ಕುದೆಸೆ ತೋರಿಸಿಯಾನು ಎಂದು ಹೇಳಿದಳು. ಮದುವೆಯ ದಿನ ಸವುಳು ಸವುಳಾಗಿ ಎತ್ತರವಿದ್ದ ಹುಡುಗನೆದುರು ಬುಡ್ಕ-ಬುಡ್ಕಾದ ಸೌದಾಮಿನಿಯನ್ನು ತಂದು ನಿಲ್ಲಿಸಿದಾಗ ಒಂದೇ ಪೆಟ್ಟಿಗೆ ಹುಡುಗ ಚಂಯ್ಕ ಆಗದಿದ್ದರೆ ಸಾಕು ಎಂದು ಅವರಿವರು ಮಾತಾಡಿಕೊಂಡು ನಕ್ಕಾಗ ಸಂತೋಷಪಟ್ಟವಳೆಂದರೆ ಕಮಲಾವತಿಯೇ. ದುಃಖಪಟ್ಟವಳೂ ಅವಳೇ. ಮತ್ತೆ ಪುಟ್ಟಮ್ಮತ್ತೆಯೂ. ಕಮಲಾವತಿಗಾದರೆ ಎಷ್ಟು ಚಂದದ ಜೋಡಿ ಆತ್ತಿತ್ತಲೆ! ಎಂದು ಕೆನ್ನೆಗೆ ಕೈಕೊಟ್ಟು ಯೋಚಿಸಿದಳು. ಹಾಗಾದರೆ ಅವಳ ಗಂಡ ಎಲ್ಲಿ ಕೂತಿದಾನು ಎಂದೂ ಅವರಿವರೊಡನೆ ಹೇಳಿಕೊಂಡು ವಿಲಿಗುಟ್ಟಿದಳು. +ಮದುವೆ ಮನೆಯ ತುಂಬ ಕಮಲಾವತಿಯ ಓಡಾಟವೆಂದರೆ! ಆದರೆ ‘ಯಾರು ಆ ಹೆಣ್ಣು?’ ಎಂದು ಕೇಳಿದವರು ಮುಂದಿನ ಆಸ್ಥೆ ತೋರಿಸಲಾರರು. ಖಾಲಿ ಹೆಣ್ಣು ಮಾತ್ರವೆಂದ ಮೇಲೆ, ಹಿಂದೆಮುಂದೆ ಆಧಾರವೋ ಚಿನ್ನವೋ ಅಂತಸ್ತೋ ಇಲ್ಲದ ಮೇಲೆ ಖಾಲಿ ಸಂಬಂಧವನ್ನೇ ಇಷ್ಟಪಟ್ಟಾರು ಹೊರತು ಮದುವೆಯ ಬಂಧನವನ್ನು ಕೇಳುವವರು ಆ ಫಾಸಲೆಯಲ್ಲಿ ಎಲ್ಲಿದ್ದಾರೆ? “ಅದು ಯಾರಾ ಪುಟ್ಟಮ್ಮ, ನಿನ್ನ ಮೊಮ್ಮಗಳಂಬ್ರಲೆ! ಯಾ ಪಾಟಿ ಮಿಡ್ಕತ್” ಎಂಬಂತಹ ಬಾಣಗಳಿಗೊಂದು ಕೊರತೆಯಾಗಲಿಲ್ಲ. ಕಮಲಾವತಿಗೆ ಯಾಕೋ ತಾನು ಒಳಗೆ ಕುಳಿತರೆ ಯಾರ ಕಣ್ಣಿಗೂ ಬೀಳಲಾರೆನು ಎನಿಸಿತೇ? ಅಂತೂ ಆಕೆ ಶೇಷಮ್ಮನ ಹಳೆಯ ರೇಷ್ಮೆ ಸೀರೆಯುಟ್ಟು, ಅವರದೇ ಒಂದು ಸರ ತೊಟ್ಟು ಶರಬತ್ತು ಲೋಟ ಹೆಕ್ಕಿದಳು; ಎಂಜಲೆಲೆ ಎಳೆದಳು, ಎಂಜಲು ಬಳಿದಳೂ. ತಾ, ಬಾ ಕೆಲಸಕ್ಕೆ ಕೈಯಾದಳು. ಘನ ಕೆಲಸಗಳಿಗೆಲ್ಲ ಅಂದಿಗರಿದ್ದಾರೆ. ಕಮಲಾವತಿಗೆ ಆ ಪಟ್ಟ ಬಿಟ್ಟುಕೊಡರು. +ಅಂತೂ ಯಾವ ಹುಳಿ ತೋರದೆ ಮೊಮ್ಮಗಳು ಓಡಾಡಿದ್ದು ಬಾಣಗಳ ನಡುವೆಯೂ ಪುಟ್ಟಮ್ಮತ್ತೆಗೆ ಖುಷಿಯಾಯಿತು. ಕಮಲಾವತಿ ಹೀಗೆ ಇದ್ದದ್ದು ನೋಡಿ ಶೇಷಮ್ಮನಿಗೂ ಹರ್ಷವೇ. ಕರೆದು ಒಂದು ಹೊಸ ಸೀರೆ ಕೊಟ್ಟರು. ಸಂಜೆ ಎಲ್ಲರೆದುರು ಅದನ್ನುಟ್ಟು ಅತ್ತಿತ್ತ ಓಡಿಯಾಡಿದಳು ಕಮಲಾವತಿ, “ಓಹೋ, ಮದುಮಗಳೆಂದರೆ ನೀನೇ ಅಂಬಂಗೆ ಕಾಣುತ್ತೀ!” ಎಂಬ ಮಾತುಗಳನ್ನೆಲ್ಲ ತಲೆಯಲ್ಲಿನ ಮಲ್ಲಿಗೆ ಹೂವಿನ ಎಸಳೂ ಉದುರುವಂತೆ ಸಂಭ್ರಮದ ಮುಖವಲ್ಲಾಡಿಸಿ ಬಗಲಿಗೆ ಹಾಕಿಕೊಂಡಳು. “ನನ್ನ ಕಮಲಾವತೀ, ನಂಗೂ ಒಂದಿಷ್ಟು ಹುಟ್ಟುವಳಿ ಇದ್ದಿದ್ರೆ ನಿಂಗೆ ಬೇಕಾದ ಹಾಂಗೆ ಮಾಡ್ತಿದ್ದೆನಲೆ!” ಎಂದು ಕೊರಗಿದಳು ಪುಟ್ಟಮ್ಮತ್ತೆ. ಅವಳ ಹರವಾದ ಬೋಳು ಕುತ್ತಿಗೆಗೊಂದು ಸರ ಮಾಡಿಸಿ ಹಾಕುವ ಯೋಗ್ಯತೆಯೂ ತನಗಿಲ್ಲದೆ ಹೋಯಿತೇ? +ಕೆಲಸವೆಲ್ಲ ಮುಗಿಸಿ ರಾತ್ರಿ ಪುಟ್ಟಮ್ಮತ್ತೆಯೂ ಮೊಮ್ಮಗಳೂ ಹೊರಟು ನಿಂತಾಗ “ಪುಟ್ಟಮ್ಮತ್ತೇ, ಹೆಣ್ಣು ಪಾಪದ್ದೇ. ನಿಂಗೆ ಬೇಡದ ಚಿಂತೆ” – ಎಂದು ಶೇಷಮ್ಮ ಹೇಳುವ ಹೊತ್ತಿಗೆ ಸರಿಯಾಗಿ ಘಟ್ಟದ ಮೇಲಿರುವ ಅವರ ಹಿರಿಯ ಮಗ ಪರಮೇಶ್ವರ ಏನು ಪಾಪ, ಯಾರು ಪಾಪ? ಎಂದು ಕೇಳುತ್ತಾ ಒಳಗೆ ಬಂದ. ಪುಟ್ಟಮ್ಮತ್ತೆ ಎಂದಳು – “ಅದಿರ್‍ಲಿ ಮಾರಾಯ, ಇಗ, ಇವಳು ನನ್ನ ಮೊಮ್ಮಗಳು, ಒಂದು ಗಂಡು ಗೊತ್ತು ಮಡಿಕೊಡು ಕಾಂಬ.” +“ಓಹೋ, ಅದಕ್ಕೇನಾಯ್ಕ್?” ಎಂದವ ತುಸು ತಡೆದು, “ಪುಟ್ಟಮ್ಮತ್ತೆ, ನಮ್ಮಲ್ಲಿರುವ ಮರಿಯಣ್ಣ ಹೆಂಗೆ? ಇಲ್ಲಿಗ್ ಬಂದಿದ್ನಲೆ, ನೀವೂ ಕಂಡಿಪ್ರಿ. ನಿಮ್ಮ ಮೊಮ್ಮಗಳೂ. ಎಂಥಾ ಚುರುಕಂತೀ ನೀರಿಲ್ಲದಲ್ಲಿ ನೀರು ಹುಟ್ಟಿಸಿಕಂಡ್‌ಬಪ್ಪ. ನನ್ನ ವ್ಯವಹಾರ ಎಲ್ಲ ಕಂಡ್ಕಂಬುದು ಯಾರೆಂತ ಮಾಡ್ದೆ. ಕಂಬೂಕೂ ಮನ್ಮಥ. ಹಣ್ಣುಗೆಂಪು, ಹಣ್ಣುಗೆಂಪು ಒಡೀತಾ”- +ಅವ ಹೇಳಿದ್ದು ಪುಟ್ಟಮ್ಮತ್ತೆಯ ತಲೆಯೊಳಗೆ ಪೂರ್ತಿ ಇಳಿಯುವುದರೊಳಗೆ “ಪರಮೇಶ್ರರಾಯರೆ, ನಿಮ್ ಮರಿಯಣ್ಣ ಅಷ್ಟು ಹಣ್ಣುಗೆಂಪಾಗಿ ಸಾಪಿದ್ರೆ ನಂಗೇನು? ಕಚ್ಚಿ ತಿಂಬುಕಾತ್ತಾ? ಬೇಕಾದ್ರೆ ನಿಮ್ಮ ಮಗ್ಳನ್ನೇ ಕೊಟ್ಟಿಡಿ”- +ಅರರೆ ಕಮಲಾವತೀ ಎಂದು ಪುಟ್ಟಮ್ಮತ್ತೆ ನರಳುವುದರೊಳಗೆ ಹಾಗೆಂದ ಕಮಲಾವತಿ ಎಲ್ಲಿದ್ದಳು? ಆ ಅಪರಾತ್ರಿಯಲ್ಲಿ ಹೊಸ ಸೀರೆಯ ಪೊಟ್ಟಣವನ್ನು ಅವಚಿಕೊಂಡು ಹೊರಟುಹೋಗಿದ್ದಳು. +ಕಂಡ್ಯ, ಕಂಡ್ಯಾ ಆ ದಗಡಿಯನ್ನು!” ಎಂದರೆ ಪರಮೇಶ್ವರನ ಹೆಂಡತಿ “ಪುಟ್ಟಮ್ಮತ್ತೇ, ಸಮಾ ನಾಕು ದಿವ್ಸ ಉಪಾಸ ಹಾಕ್. ಉಡಾಪೆಲ್ಲ ಇಳೀದೆ ಎಲ್ಲಿಗ್ ಹೋತ್!” ಎಂದು ಅಷ್ಟು ಮಾತಾಡಿದ್ದೇ ಸುಸ್ತಾಯಿತೆಂಬಂತೆ ಸೂಗರೆದಳು. ಹಾಗೆಂತ ಪರಮೇಶ್ವರನ ಮುಖದಲ್ಲಿ ಮಾತ್ರ ಒಂಚೂರೂ ಬೇಸರವಿಲ್ಲ. “ಪುಟ್ಟಮ್ಮತ್ತೇ, ಆ ಪ್ರಾಯವೇ ಹಾಂಗೆ. ಮರಿಯಣ್ಣನ ಮದುವೆಯಾದ್ರೆ ಗಂಡ ಹೆಂಡ್ತಿಗೆ ನನ್ನ ಮನೆ ಔಟ್‌ಹೌಸನ್ನೇ ಬಿಟ್ಟು ಕೊಡ್ತೆ ಬೇಕಾರೆ. ಆಯ್ತು, ಮರಿಯಣ್ಣ ತನಗೆ ಬೇಡ ಅಂದ್ರೆ ಅವಳನ್ನ ನಮ್ಮನೆಗೆ ಕಳಿಸು. ಇವ್ಳಿಗೂ ಹುಶಾರಿಲ್ಲೇ. ಸಹಾಯಕ್ಕಾಯ್ತು. ನಾಲ್ಕು ಜನ ಬಂದು ಹೋಪ ಮನೆ. ಯಾರಾದ್ರೂ ಒಪ್ಪಿಯಾರು. ನಮ್ಮನೆಯಲ್ಲಿದ್ದ ಹೆಣ್ಣು ಎಂದ್ಮೇಲೆ ಮದುವೆಗೂ ನಾವು ಸಹಾಯ ಮಾಡುದೇ ಆಯ್ತಲೆ!” +ಪುಟ್ಟಮ್ಮತ್ತೆಗೆ ಮೂರು ಮೂರು ಬಾರಿ ಯೋಚಿಸಿದರೂ ಹೀಂಗೆ ಮಾಡುವುದೇ ಸಮವೆಂತ ಕಂಡಿತು. +* +* +* +ಮನೆಗೆ ಬಂದ ಕಮಲಾವತಿಗೆ ಮೈ ಮೇಲೆ ಎಚ್ಚರವೇ ಇದ್ದಂತಿರಲಿಲ್ಲ. ಈ ಸೌದಾಮಿನಿ, ಕಲಿಯುವುದರಲ್ಲಿಯೂ ಹೆಡ್ಡೆ. ಅವಳಿಗೆ ಯಾವುದರಲ್ಲಿಯೂ ಕಡಿಮೆಯಿಲ್ಲದ ಗಂಡ! ತನಗೇಕೆ ಯಾವುದೂ ಇಲ್ಲ? ಕಡೆಗೆ ಏಳರ ಮುಂದೆ ವಿದ್ಯೆಯೂ ಇಲ್ಲ. ಮಾಸ್ಟರು ಹೇಳಿದ್ದರು. ‘ನೀನು ಜಾಣೆ, ಸ್ಕಾಲರ್‌ಶಿಪ್ ಸಿಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕಲಿ’ ಎಂದು. ಅಜ್ಜಿ ಬಿಡಲಿಲ್ಲ. ಮದುವೆಗೆ ಕಷ್ಟ ಎಂದಳು. ಅಯ್ಯೋ, ಅಜ್ಜಿಯೇಕೆ ಸಾಯಬಾರದು? ತನ್ನನ್ನು ಹುಟ್ಟಿಸಿದ ಅಪ್ಪ ಯಾಕೆ ಸಾಯಬಾರದು? ತಾನಂತೂ ಖಂಡಿತ ಸಾಯಲಾರೆ. ಅಜ್ಜಿ ಹೇಳಿದಂತೆ ಈಗ ಮದುವೆಯಾದರೂ ಆಯಿತೇ? ಎಲ್ಲ ಪರಿಚಾಕರಿ ವರರು. +ಒಂದು ಸಣ್ಣ ಗೂಡಿನಲ್ಲಿ ಹೊಗೆ ಹಿಡಿದ ಅಡುಗೆಮನೆಯಲ್ಲಿ ತನ್ನನ್ನು ಕಂಡರೆ ಬಹುಶಃ ತಾನದಕ್ಕೆ ಲಾಗ್ತು ಎನಿಸೀತು ಇವರಿಗೆಲ್ಲ. ಸುತ್ತ ಏಕೆ ಪರಮೇಶ್ವರರಂತವರೇ ತುಂಬಿಕೊಂಡಿದ್ದಾರೆ? ಸೌದಾಮಿನಿಯನ್ನು ಮದುವೆಯಾದವ ಬಾವಿಕಟ್ಟೆಯ ಹತ್ತಿರ ನಿಂತಿದ್ದ ತನ್ನನ್ನು ನೋಡಿ ನಕ್ಕ, ಅಷ್ಟೇ, ಮುಂದುವರಿಯಲಿಲ್ಲ. ಆಕೆಯನ್ನೇ ಮದುವೆಯಾದ! ಮದುವೆ ಮನೆಯಿಂದ ಬರುವಾಗ ಬೇಕೆಂದೇ ಸೌದಾಮಿನಿಯ ಕೋಣೆ ದಾಟಿ ಬಂದೆ. ಅಲ್ಲಿ ಸಂಬಂಧಿಕರು ತುಂಬಿಕೊಂಡಿದ್ದರು. ‘ಹೆಣ್ಣು ಕೊಡುತ್ತೀಯಾ ಹೊನ್ನು ಕೊಡುತ್ತೀಯಾ’ ಎಂದು ಗಂಡಿನೊಂದಿಗೆ ಕೇಳುತ್ತಿದ್ದರು. ಆತ ಕಚ್ಚೆ ಪಂಚೆಯಲ್ಲಿ ನಗುತ್ತಾ ನಿಂತಿದ್ದ. ದಾಟುತ್ತಿದ್ದ ತನ್ನನ್ನು ನೋಡಿದ. ನಕ್ಕ. ಅಷ್ಟೇ – ಖಾಲಿ ನಗೆ. ಖಾಲಿ ನಗೆಯೇ? +ಈಗ ಅವ ಬೆಚ್ಚಗೆ, ಸಾದಾಮಿನಿಯೊಂದಿಗೆ. ಎರಡೂ ಮೊಣಕಾಲುಗಳನ್ನು ಇನ್ನಷ್ಟು ಬಿಗಿಯಾಗಿ ಸರಿಸಿ ತಲೆಯಾನಿಸಿ ಬಿಕ್ಕಿದಳು ಕಮಲಾವತಿ. ಅಲ್ಲಿದ್ದ ಹುಡುಗಿಯರಿಗೂ ತನಗೂ ಯಾವ ಸಂಬಂಧವಿಲ್ಲ. ತನಗವರು ಅರ್ಥವೇ ಆಗದ ಬೆರಗು. ಅವರೆದುರು ತಾನು ದೊಣ್ಣಗೆ ನಿಂತಂತಾಗುತ್ತಿದೆ…. ಅವರಿಗೂ ಬಹುಶಃ ತಾನು ಅರ್ಥವಾಗುವುದಿಲ್ಲ. ಆದರೆ ಅವರ ಕಣ್ಣಲ್ಲಿ ಬೆರಗಿಲ್ಲ. ಹಸಿವಿನ ಬಿಸಿ ಅವರಿಗೆ ಬೇಡ. ಅವರಿಗೂ ಕಷ್ಟಗಳಿರಬಹುದು. ಆದರೆ ಅವರ ಕಷ್ಟಗಳ ಎತ್ತರ ಬೇರೆಯೇ. ತನಗಿರುವಂಥ ಹೊಗೆಗೂಡಿನ ಉಸಿರುಗಟ್ಟಿಸುವ ಕಷ್ಟ ಅವರಿಗಿಲ್ಲ. ಅಲ್ಲಿಂದೆದ್ದಳು. ಗೋಡೆಗೆ ತೂಗು ಹಾಕಿದ್ದ ಒಂದಡಿ ಉದ್ದದ ಕನ್ನಡಿಯೆದುರು ನಿಂತಳು. ಅತ್ತಳು. ಅಳುವ ತಾನು ಇನ್ನೂ ಚಂದ ಕಾಣಿಸಿ ಮತ್ತಷ್ಟು ಅತ್ತಳು. ಯಾವುದೋ ಸಿನಿಮಾದಲ್ಲಿಯೂ ಹೀಗೇ ಕಂಡ ನೆನಪಾಯಿತು. ಬಿಕ್ಕಿ ಬಿಕ್ಕಿ ಅತ್ತಳು. +ಹೀಗೆ ಆ ದಿನ ಮಗ್ಗುಲು ಹೊರಳಿ ರಾತ್ರಿಯಾಗಿ ನರಳಿತು. +ಬೆಳಗಾಗುತ್ತಲೆ ಎದುರುಮನೆ ಅಚ್ಚು ಮಾಣಿಯನ್ನು ಕರೆದು ‘ಮ್ಯಾಟಿನಿ ಸಿನೆಮಕ್ಕೆ ಹೋಪ ಬತ್ಯಾ?’ ಎಂದು ಕೇಳಿದಳು. ಅಚ್ಚುಮಾಣಿ ತಯಾರು. ಪುಟ್ಟಮ್ಮತ್ತೆಗೂ ಅವಳಿಗೂ ಅವತ್ತಿಡೀ ಮಾತಿಲ್ಲ. ಮಧ್ಯಾಹ್ನ ಹಟ್ಟಿಯಲ್ಲಿ ದನಕ್ಕೆ ಬಾಯಾರು ಹಾಕುತ್ತ ಅದರೊಂದಿಗೆ ಮಾತಾಡುತ್ತ ನಿಂತಿದ್ದ ಪುಟ್ಟಮ್ಮತ್ತೆಯ ಹತ್ತಿರ ಹೋಗಿ “ಸಿನಿಮಕ್ಕೆ ಹೋಯಿ ಬತ್ತೆ” – ಎಂದು ಹೇಳಿ ನಡೆದಳು. ಅಚ್ಚುಮಾಣಿ ಬಂತು. ಪಾಪದ್ದು. ಕರೆದಕೂಡಲೆ ಬರುತ್ತದೆ. ಮನೆಯಲ್ಲಿ ಹೇಳಬೇಡ ಎಂದರೆ ಬಾಯಿಗೆ ಬೀಗವನ್ನೇ ಹಾಕಿಕೊಳ್ಳುತ್ತದೆ. +ಸಿನೆಮಾ ಮುಗಿದು ಬರುವಾಗ ಗಂಟೆ ಆರಾಗಿತ್ತು. ಬರೀ ದುಃಖದ ಸಿನೆಮಾ. ಅತ್ತು ಅತ್ತು ಕಣ್ಣು ಮೂಗೆಲ್ಲ ಉರಿಯುತ್ತಿತು. ಪುಟ್ಟಮ್ಮತ್ತೆ ಯಾರೋ ಬೇಳೆ ಬೀಸಿಡಲು ತಂದಿಟ್ಟು ಹೋದ ಉದ್ದಿಗೆ ಎಣ್ಣೆ ತಿಕ್ಕುತ್ತ ಇದ್ದರು. ಕೈ ಕಾಲು ತೊಳೆದು ಒಲೆದಂಡೆಯ ಮೇಲೆ ಮುಚ್ಚಿಟ್ಟಿದ್ದ ಕಾಫಿ ಅಕ್ಕಿ ಹಪ್ಪಳ ಮುಗಿಸಿ ಕೈಗಂಟಿದ ಹಪ್ಪಳದ ಎಣ್ಣೆಯನ್ನು ಕಾಲಿಗೆ ಮುಂಗೈಗೆ ಒರೆಸಿಕೊಳ್ಳುತ್ತ “ಅಜ್ಜೀ ನಾನೂ ಮಾಡುತ್ತೇನೆ” ಎಂದು ಬಂದಳು. ಅಜ್ಜಿ ಮಾತಾಡಲಿಲ್ಲ. ಸಿನೆಮಾಕ್ಕೆ ಹೋದಾಗ ಈ ಅವತಾರ ಹೊಸದಲ್ಲ ಎಂದುಕೊಂಡ ಕಮಲಾವತಿ ಎಣ್ಣೆಮಿಳ್ಳೆಯಿಂದ ಎಣ್ಣೆ ಸುರಿದುಕೊಂಡು ಉದ್ದಿನ ಕಾಳಿಗೆ ತಿಕ್ಕಲು ತೊಡಗಿದಳು. ಯಾರೋ ಸೋಮಾರಿಗಳ ಮನೆ ಉದ್ದು, ಎಣ್ಣೆಹಚ್ಚಿ ಬಿಸಿಲಿಗಿಡಲು ಏನಾಗಬೇಕು? ಇವರೆಲ್ಲ ಸೇರಿ ಅಜ್ಜಿಯ ಬೆನ್ನು ಮುರಿಸುತ್ತಾರೆ. ಅಗ್ಗದಲ್ಲಿ ದುಡಿಸಿಕೊಳ್ಳುತ್ತಾರೆ. ಒಂದು ಕೆಲಸ ತನಗಿದ್ದಿದ್ದರೆ, ಅಜ್ಜಿಯನ್ನು ಸಾಕಿಕೊಳ್ಳುತ್ತಿದ್ದೆ…. ಅಜ್ಜಿಯ ಮೇಲೆ ತನಗೂ ಪ್ರೀತಿಯಿದೆ ಎಂದು ತೋರಿಸುತ್ತಿದ್ದೆ…. +“ಅಜ್ಜೀ, ಸಿನೆಮಾ ಎಷ್ಟು ಲಾಯ್ಕಿತ್ತು! ಊರ ಮೇಲಿನ ಕತೆಯೇ, ನೀನೂ ಬರಲಕ್ಕಿತ್ತು….” ಉತ್ತರವಾಗಿ ಪುಟ್ಟಮ್ಮತ್ತೆ ಹೇಳಿದಳು. “ಇಗಾ ಕಮಲಾವತೀ, ನನ್ನ ಮಾತು ಕೇಣು, ಮರಿಯಣ್ಣನ್ನ ಮದುವೆಯಾದ್ರೆ ಪರಮೇಸ್ರ ಔಟ್ ಹೌಸನ್ನೇ ಬಿಟ್ಟು ಕೊಡ್ತ ಅಂಬ್ರ್. ನೀನು ಅವನ ಹೆಂಡತಿಗೂ ಅದೂ ಇದೂ ಮಾಡಿಕೊಡ್ತಿದ್ರೆ ದಿನ ಹೋಯ್ತಲೆ! ಪರಮೇಸ್ರನ ಹೆಂಡ್ತಿ ಬಾಯಿ ಕೆಟ್ಟದು ಇಪ್ಪುಕೂ ಸಾಕು. ಆದ್ರೆ ಮನಸು ಮಾ ಒಳ್ಳೇದು. ಉಟ್ಟ ಸೀರೆ ಕೇಂಡ್ರೂ ಬಿಚ್ಚಿ ಕೊಡುವಂಥ ರಾಜಗುಣ.” +“ಅಜ್ಜೀ, ಆ ಅಪ್ಪಚ್ಚಿ ಕಿಟ್ಟನ್ನ ನಾನು ಮದುವೆಯಾತ್ತಿಲ್ಲೆ. ನಂಗೆ ಬೇಡ ಅಂದ್ರೆ ಬೇಡ್ದೇ”. +“ನಿಂದೇ ಹಠಸಾಧನೆ ಆಯ್ತಲೆ! ಪರಮೇಸ್ರನ ಮನೆಗಾರೂ ಹೋಗಿ ನಾಕು ತಿಂಗಳು ಇರು. ತಿಳುವಳಿಕೆ ಬಂದೀತು.” +“ಯಂತ ಅಜ್ಜಿ ನೀ ಹೇಳುದು! ನಾ ಹುಟ್ಟಿದ್ದು ಆ ಪರಮೇಸನ ಹೆಂಡ್ತಿ ಕಚ್ಚೆ ತಿಕ್ಕುಕಾ?” +“ಹಾಂಗೆಲ್ಲ ಕೇಂತ ಹೋದ್ರೆ ಹ್ಯಾಂಗೆ ಮಗ?” +ಕಮಲಾವತಿ ಮಾತಾಡಲಿಲ್ಲ. ತನ್ನೊಳಗೆ ಇಂಥದ್ದಾಗುತ್ತದೆ ಎಂದಬುದೇ ತಿಳಿಯಲಿಕ್ಕಾಗದೆ ಉದ್ದನ್ನು ಕುಕ್ಕಿ ಬಿಸಾಕಿ ಅಲ್ಲಿಂದೆದ್ದಳೂ. ತನಗೆ ಗೊತ್ತಿಲ್ಲವೆ ಪರಮೇಶ್ವರನ ಹೆಂಡತಿಯ ಗುಣ? ಹಂದುವ ಜಾತಿಯಲ್ಲ. ಎಲ್ಲವನ್ನೂ ಅವಳು ಕುಳಿತಲ್ಲಿಗೇ ಸರಬರಾಜು ಮಾಡಬೇಕು. ಎಷ್ಟು ಮಾಡಿದರೂ ಯಾವಾಗ ಕಂಡರೂ ಸೊಂಟದ ಕೆಳಗಿನ ಬೈಯ್ಗಳೇ… ಇತ್ಯಾದಿ ಹೇಳಿದ್ದಳು ಅವರ ಮನೆಗೆ ಅಡುಗೆಗೆಂದು ಹೋಗಿದ್ದ ವನಮಾಲಾ ಎಂಬ ಹುಡುಗಿ. ಮದುವೆ ಮನೆಯಲ್ಲಿ ಸಕ್ಕಿ, ರಾತ್ರಿಯೊಮ್ಮೆ ಪರಮೇಶ್ವರ ತನ್ನನ್ನು ಎಳೆಯಲಿಕ್ಕೆ ಬಂದದ್ದನ್ನೂ ಆಕೆ ಒಂದು ರೀತಿ ಖುಷಿ ಮಿಶ್ರಿತದಿಂದಲೇ ಹೇಳಿದ್ದಳು. ಬಲಿಯಾಗಲಿಲ್ಲವೆಂಬ ಮಾತು ಬೇರೆ ಧೀರಭಾವದಿಂದ ಸೇರಿಸಿ. ಎಲೇ ಪರಮೇಶ್ವರಾ, ಈ ಕಮಲಾವತಿ ಅಷ್ಟು ಸುಲಭದವಳಲ್ಲ ತಿಳಕೋ. +ಪರಮೇಶ್ವರನ ಹಸಿದ ಒಡ್ಡುಗಣ್ಣುಗಳು ನೆನಪಾಗಿ ನಡುಗಿದಳು ಕಮಲಾವತಿ. ಸೀದಾಹೋಗಿ ಚಾವಡಿಕಂಬಕ್ಕೆ ಒರಗಿ ಕುಳಿತಳು. ಈ ಕಂಬಕ್ಕಾದರೂ ಒರಗಿಯೇನು ಆ ಕಿಸಬಾಯಿದಾದನಿಗೆ ಅಲ್ಲ ಎಂದು ಗಟ್ಟಿಯಾಗಿ ಹೇಳುತ್ತ. ಪುಟ್ಟಮ್ಮತ್ತೆ ತಲೆ ಕುಟ್ಟಿಕೊಂಡಳು. +ಪುಟ್ಟಮ್ಮತ್ತೆಯ ಮನೆಯ ಹತ್ತಿರವೇ ಕಡಲು ಹಾಸಿದೆ. ಅಬ್ಬರ ಕೇಳುತ್ತದೆ. ಆಲಿಸುವಳು ಕಮಲಾವತಿ. ಮುತ್ತುವ ಕನಸುಗಳನ್ನು ಸೊಳ್ಳೆ ಓಡಿಸುವಂತೆ ಓಡಿಸಲು ಯತ್ನಿಸುವಳು. ಹಿಂದೆಲ್ಲ ಕಾಲಾಡಿಕೊಂಡು ಒಬ್ಬಳೇ ಸಮುದ್ರದ ಬದಿಗೆ ಹೋಗಬಹುದಿತ್ತು. ಈಗೀಗ ಹಾಗೆ ಹೋಗುವಂತೆಯೂ ಇಲ್ಲ. ಈಗ ತನಗಿರುವುದೆಲ್ಲ ಒಂದೇ, ಸಿನೆಮಾ. ಆ ಮೂರು ಗಂಟೆಯ ಕಾಲ ಮಾತ್ರ! ಅದೂ ಮಳೆಗಾಲದ ನಾಲ್ಕು ತಿಂಗಳು ಇಲ್ಲ. +ಕಮಲಾವತಿಯ ಕಣ್ಮುಂದೆ ಚಂದದ ರೀಲೇ ಹಾದುಹೋಗುತ್ತದೆ. ಯಾ ಯಾವುದೋ ನೋಟಗಳು. ಮಿಂಚು ಸೆಳೆತವನ್ನು ಕೊಟ್ಟಂಥದು. ಬಲುಗುಟ್ಟಿನಲ್ಲಿ, ಸಂದಿ ಗೊಂದಿಗಳಲ್ಲಿ. ಆದರೆ ಬರೀ ನೋಟಗಳೂ, ಅಲೆಯ ನೊರೆಯಂತೆ, ಮಾಯ. ಪ್ರಪಂಚವೆಂದರೆ ಒಂದು ನಗೆ, ಒಂದು ಆಳು, ಒಂದು ಕಣ್ಣರಳು. +ಅಲ್ಲಿಗೆ ಮುಗಿಯುತ್ತಯೇ? ಕಣ್ಣಿನಲ್ಲಿ ಮಾತನಾಡುತ್ತಾರೆ. ಹೃದಯದಿಂದ ಒಬ್ಬರೂ ಮಾತನಾಡಲಾರರು. ತನಗೆ ಮರಿಯಣ್ಣನಂಥವರೇ ಗಂಟೆಂದು ತೀರ್ಮಾನಿಸಿಬಿಟ್ಟಿದ್ದಾರೆ. ಅಚ್ಚುಮಾಣಿಯ ಹತ್ತಿರ ಹೇಳಬೇಕು. ಈ ಸಿನೆಮಾ ಎಲ್ಲ ಸುಳ್ಳು ಎಂದು. +ತಾನು ಏನಾದರೂ ಮಾಡಬೇಕು? ಏನು? +ಮಿಮಲಾಕ್ಷಿ ಮೆಶಿನು ಮೆಟ್ಟಲು ಹೇಳಿಕೊಡಲು ಒಪ್ಪಿದಳು. ಮೆಶಿನು ಮೆಟ್ಟಲು ಕಲಿತ ಮೇಲೆ ಎರಡು ಅಂಗಿ ಕತ್ತರಿಸಿ ಹೊಲಿಯುವುದನ್ನೂ ಕಲಿತಳು. ತನು ದುಡಿಯಬೇಕೆಂಬ ಆಸೆಯನ್ನು ವಿಮಲಾಕ್ಷಿಯ ಹತ್ತಿರ ಹೇಳಿಕೊಂಡಳು. ಊರಲ್ಲಿರುವ ಏಕಮಾತ್ರ ಹೊಲಿಗೆಗಾತಿ ಮಿಮಲಾಕ್ಷಿ ಕೊಟ್ಟ ಸಲಹ ಸರಿಕಂಡಿತು. ಮಿಮಲಾಕ್ಷಿಯೊಂದಿಗೇ ಬಸ್ಸಿನಲ್ಲಿ ಹೊರಟು ಐದು ಮೈಲು ದೂರದಲ್ಲಿರುವ ರೆಡಿಮೇಡು ಬಟ್ಟೆ ಹೊಲಿಯುವಲ್ಲಿಗೆ ಹೋದಳು. ಮಿಮಲಾಕ್ಷಿಯ ನೆರವಿನಿಂದ ಅವಳಿಗೊಂದು ಕೆಲಸವೂ ಸಿಕ್ಕಿತು. ತಿಂಗಳಿಗೆ ನೂರೈವತ್ತು ಕೊಡುತ್ತೇವೆಂದೂ, ಮುಂದೆ ಜಾಸ್ತಿ ಮಾಡುವ ಎಂದೂ ಮಾತುಕತೆಯಾಯಿತು. ಹಿಂದಿರುಗುವಾಗ ಕಮಲಾವತಿಗಿಂತಲೂ ಊರಿನ ಏಕಮಾತ್ರ ಹೊಲಿಗೆಗಾತಿಯಾಗಿಯೇ ಉಳಿದ ವಿಮಲಾಕ್ಷಿ ಹೆಚ್ಚು ಸಂತೋಷದಿಂದಿದ್ದಳು. +“ನಾಳೆಯಿಂದ ನಾನು ರೆಡಿಮೇಡ್ ಅಂಗಿ ಹೊಲಿಯುಕೆ ಹೋತೆ” ಎಂದಳು ಕಮಲಾವತಿ. “ತುದಿ ಕಡೆಕಾಲಕ್ಕೆ ಇದೊಂದು ಹಗಲು ವೇಷ ಬೇಡ ಮಾರಾಯ್ತಿ. ಇಷ್ಟರವರೆಗೆ ಮರ್ಯಾದೆ ಒಂದಾದರೂ ಇತ್ತು. ಇನ್ನು ಅದೂ ಇಲ್ಲ ಅಂತಾಪುದು ಬೇಡ” ಎಂದದ್ದಕ್ಕೆ “ಅಯ್ಯೋ ನನ್ನ ಮರ್ಯಾದೆಯನ್ನಾರೂ ಯಾರಾದರೂ ಅಪ್ಪಂಥವ್ರು ತೆಗೆಯುಕಾಗದಾ?” ಎಂದಳು. ಪುಟ್ಟಮ್ಮತ್ತೆ ಬಾಯಿ ಕಳೆದು ನಿಂತದ್ದೊಂದೇ. +ಕಮಲಾವತಿಗೆ ಕಾಲರು ಹೊಲಿಯುವ ಕೆಲಸ. ಆ ಕಾಲರು ಮುಂದೆ ಹೋಗಿ ಎಲ್ಲಿ ಜೋಡುತ್ತದೆ, ಯಾರನ್ನು ಹೋಗಿ ತಲುಪುತ್ತದೆ…. ಇತ್ಯಾದಿ ಮೊದಮೊದಲು ಯೋಚಿಸಿದ್ದುಂಟು. ಮುಂದೆ ಅದೂ ಇಲ್ಲ. ತಂಗಳುಂಡು, ಮಧ್ಯಾಹ್ನದೂಟ ಕಟ್ಟಿಕೊಂಡು ವಾಪಾಸು ಬರುವವರೆಗೆ ಎಷ್ಟು ಕಾಲರು ಹೊಲಿದು ಹಾಕಿದೆ ಎಂಬುದೇ ಲೆಕ್ಕ. ಕಡೆಗೆ ಆ ಲೆಕ್ಕವೂ ಮುಳುಗಿ ಶೂನ್ಯದಲ್ಲಿ ಟಕಟಕ ಸದ್ದೊಂದೇ. “ಸ್ವಲ್ಪ ಬೇಗ ಬಪ್ಪುಕಾಗ್ದ? ಕತ್ತಲೆ ಕಟ್ಟುವ ಮುಂಚೆಯೇ? ಮಧ್ಯ ಓಣಿಯಲ್ಲಿ ಯಾರು ಒತ್ತಿ ಹಿಡಿದರೂ ಕೇಂಬವರಿಲ್ಲೆ” ಎಂದರೆ “ಹಾಂಗೆ ಒತ್ತಿ ಹಿಡಿಯೂಕೆ ಯಂತ ಅಂತ ಮಾಡಿದೆ?” ಎಂದಳು. +ಒಂದುದಿನ ಯಾರೋ ಸೆರಗು ಹಿಡಿದನೆಂದು ಅವನ ಕಣ್ಣಿಗಷ್ಟು ಹೊಯಿಗೆ ಚೊಗೆದು ಮುಂಡುಗನ ಓಲಿಯ ಬೇಲಿಯ ಮೇಲೆ ದೂಡಿಹಾಕಿ ಬಂದಳು. “ಯಾಕೆ, ಮರ್ಯಾದೆ ಹೋಪುಕೆ ಬಿಡ್ಲಕ್ಕಿತ್ತಲೆ”-ಎಂದು ಪುಟ್ಟಮ್ಮತ್ತೆ ಹೇಳಿದರೆ “ಎಂಥವರಿಂದ ಅದು ಹೋಯ್ಕ್ ಅಂತೆಳಿ ನಂಗೊತ್ತಿತ್” ಎಂದಳು. ಆವತ್ತು ರಾತ್ರಿಯಿಡೀ ಮಲಗಿದಲ್ಲೇ ಉರುಳಿದಳು, ನರಳಿದಳು. ಒಂದು ಗಳಿಗೆ ಕಣ್ಣು ಮುಚ್ಚಲಿಲ್ಲ. ನಿದ್ದೆ ಬಂದಂತೆ ಮಲಗಿದ್ದ ಪುಟ್ಟಮ್ಮತ್ತೆ ಇದೆಲ್ಲವನ್ನೂ ನೋಡುತ್ತ “ಉಡಾಪು ಕಡಿಮೆ ಆಯ್ಕಾದರೆ ದೇವರು ಮದ್ದು ಅರೀದೆ ಇರ್‍ತನಾ? ಎಂದಳು. ಮನ ಒಪ್ಪುವವನಿಗಾಗಿ ಕಾದು ಕುಳಿತಿದ್ದ ಕಮಲಾವತಿಗೆ ಕೊನೆಗೂ ಒಬ್ಬ ‘ಅಕ್ಕೆನಿಸುವಂಥವ’ ಬಂದ. ಮೊಮ್ಮಗಳು ಕಂಬಕ್ಕೊರಗಿ ಸಣ್ಣಗೆ ನಗುತ್ತ ಕೂತದ್ದು ಕಂಡು ಪುಟ್ಟಮ್ಮತ್ತೆಯ ಹೊಟ್ಟೆಯೊಳಗೆ ತಂಪು ಹುಟ್ಟಿತು. ಆದರೆ ಹಾಗೆ ಒಪ್ಪಿದವ ಊರ ಗಾಳಿಯಲ್ಲಿ ಹಾರುತ್ತಿದ್ದ ರೆಕ್ಕೆಪುಕ್ಕಗಳಿಗೆ ಹೆದರಿ ಮತ್ತೆ ಬೇಡವೆಂದ. ಮಿಂಚು ಹೊಡೆದಂತೆ ಸುರುಟಿಕೊಂಡು ಕಮಲಾವತಿ ನಾಲ್ಕು ದಿನವಿಡೀ ತಟ್ಟಡಿಯಾಗಿ ಮಲಗಿದಳು. ಐದನೆಯ ದಿನ ಆ ಕೆಲಸಕ್ಕೆ ಕಿಚ್ಚು ಹಾಕೆಂದರೂ ಕೇಳದೆ ಯಥಾಪ್ರಕಾರ ಹೊರಟಳು. ತನಗೆ ಕೆಲಸ ಕೊಡಿಸಿದ ಮಿಮಲಾಕ್ಷಿಯ ಕುರಿತು ಇದ್ದ ಕೃತಜ್ಞತೆಯನ್ನು ನಿಧಾನವಾಗಿ ಒರೆಸಿಕೊಂಡುಬಿಟ್ಟಳು. +ವರ್ಷವಲ್ಲ. ನಾಲ್ಕು ವರ್ಷ ಕಳೆದರೂ ಕಮಲಾವತಿಯ ಸಂಬಳದಲ್ಲಿ ಜಾಸ್ತಿ ಕೊಡಲಿಲ್ಲ. ಕಮಲಾವತಿಗೆ ಕೆಲಸ ಬಿಟ್ಟು ಕೂಡಲಿಕ್ಕೂ ಸಾಧ್ಯವಾಗಲಿಲ್ಲ. ಅಜ್ಜಿಯನ್ನು ಕರೆದುಕೊಂಡು ತಾನು ಸ್ವಂತ ಬದುಕನ್ನು ಮಾಡುವ ಕನಸನ್ನು ಕಡಲಿಗೆ ಒಗೆದ ಕಮಲಾವತಿಗೆ ಈಗೀಗ ಪುಟ್ಟಮ್ಮನೂ ಏನೂ ಹೇಳುವುದಿಲ್ಲ. +ಇತ್ತಲಾಗೆ ರೆಡಿಮೇಡ್ ಕಾರ್ಯಾಲಯದ ಧನಿಗಳು ಹೊಸಮನೆ ಕಟ್ಟಿಸಿದರು. ಆ ಊರಿಗೆ ಅದು ಅರಮನೆಯೇ, ಗೃಹಪ್ರವೇಶದ ದಿನ ಅಂಗಡಿ ಹುಡುಗಿಯರು ಸಮಾರಂಭಕ್ಕೆ ಹೊರಟರೂ ಕಮಲಾವತಿ ಹೊರಡರಲಿಲ್ಲ. ತಡೆಯದೆ ಪುಟ್ಟಮ್ಮತ್ತೆಯೇ ಹೇಳಿದರು “ಸುಮ್ಮನೆ ಯಾಕೆ ಕೂತ್ಕಂಡಿದ್ದೆ? ನೀನು ಹೋಗ್ ಬೇಕಾರೆ”. +ಈ ಮಾತು ಕಿವಿಗೆ ಬಿದ್ದದ್ದೇ ಕಮಲಾವತಿ ದಢಕ್ಕನೆ ಎದ್ದಳು. ಒಳಗಿದ್ದ ಸಮಸ್ತ ಬಟ್ಟೆ ಬರೆಗಳನ್ನು ಗಂಟುಗಟ್ಟಿ ಬಾವಿಕಟ್ಟೆಗೆ ಕೊಂಡೊಯ್ದು ನೆನೆಸಿದಳು. ಒಳಗೆ ಬಂದು ಒಂದು ಹರಕು ವಚ್ಚಡಿಕೆ ತುಂಡನ್ನು ಜ್ವಾಲಾಮಾಲೆಯಾಗಿ ಉಟ್ಟು ಕೊಡಪಾನದಿಂದ ನೀರು ಎತ್ತಿ ಎತ್ತಿ ಬಾನಿ ತುಂಬಿದಳು. ಬಟ್ಟೆಗಳಿಗೆ ಸಾಬೂನು ತೇಪಿ ತೇಪಿ ಬಡಿದು ಒಗೆದಳು. ಒಗೆಯುವಾಗ ನೂರು ಬಾರಿ ಉಮಿದು ಉಮಿದು ಬಾಯಿ ಒರೆಸಿಕೊಂಡಳು. ಪುಟ್ಟಮ್ಮತ್ತೆ ನಿಂತವರು ನಿಂತಲ್ಲೇ ಇದ್ದರು. +ಎಲ್ಲ ಬಟ್ಟೆ ಒಣಗಿಸಿ ಬಂದು ಚಾವಡಿಯ ಮೊಳೆಗೆ ಸಿಕ್ಕಿಸಿದ್ದ ಓಲಿ ಬೀಸಣಿಗೆಯನ್ನು ಹರಿಯುವಷ್ಟು ರಭಸದಿಂದ ಎಳೆದು ನೆಲದ ಮೇಲೆ ಅಂಗಾತ ಮಲಗಿ ಕಣ್ಮುಚ್ಚಿ ಗಾಳಿ ಬೀಸಿಕೊಂಡಳು. ಉಣಲಿಲ್ಲ ತಿನಲಿಲ್ಲ ಕಮಲಾವತಿ ಸೂರ್ಯ ಕಂತುವ ಹೊತ್ತಾದರೂ ಏಳಲಿಲ್ಲ. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು […] +“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […] +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_235.txt b/Kannada Sahitya/article_235.txt new file mode 100644 index 0000000000000000000000000000000000000000..e10f9a9303d4b705639543a4bcd6f1dc79116df9 --- /dev/null +++ b/Kannada Sahitya/article_235.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗರಿಮುರಿ +ಹುಲ್ಲುಗರಿಕೆ +ಚೂಪಾಗಿ +ಸೀರಾಗಿ +ಪುಳಕಿಸಿ ನಿಂತಂತೇ +ನನ್ನ ಭಾವನೆಗಳಿಗೆಲ್ಲ +‘ಹಿಟ್’-ಆಗುವ +ಆಕಾರ ತುಂಬುವ-ಜಿಜ್ಞಾಸೆ +ವ್ಯರ್‍ಥ +ಕಂಡ +ಕೆಂಡಸಂಪಿಗೆಗೆಲ್ಲ +ನಿಗಿನಿಗೀ ಮುತ್ತಿಕ್ಕಿ +ತುಟಿಯ ಕುಡಿ ಸುಟ್ಟ +ಕಲ್ಪನೆಗೂ +ಅನುಭವದ ಅರ್‍ಥ +ಹೀಗೆಷ್ಟೋ +ಮಾತು, ಮನಸಿಗೂ ಮೀರಿ +ಬಾಯಿಂದ +ಫಳ್ -ಎಂದು ಜಾರುವ +ಉಸಿರಿಗೆಲ್ಲ +ಜೀವ ಅನ್ವರ್ಥ +***** +೧ ಕಾಸಾರದ ಕೆಸರಿನಿಂದ ಪಾಚಿ ಜೊಂಡು ನೀರಿನಿಂದ ವಿಮಲ ಕಮಲ ಮೇಲಕ್ಕೆದ್ದು ಕೊಳದ ಎದೆಯನಮರಿ ಗೆದ್ದು ದಲ ದಲ ದಲವರಳುವಂತೆ ಥಳ ಥಳ ಥಳ ತೊಳಗುವಂತೆ ಎತ್ತು ಮೇಲಕನ್ನನು ಜೀವಪಥದಿ ಪತಿತನು. ೨ ಮುಳ್ಳು […] +ಕವಿತೆ ಬರೆಯುತ್ತೇನೆಯೆ ನಾನು? ಇಲ್ಲ ಬಿಡು ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ ನೀನೇನೋ ಅಂದುಕೊಂಡಿದ್ದೀಯ ಎಂದು ಅವರಂತಾಗಲು ವ್ಯಕ್ತಿತ್ವ ಸ್ಖಲಿಸಿಕೊಂಡು ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ. ತಪ್ಪಿಸಿಕೊಳ್ಳುತ್ತ ಹಗುರು […] +ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_236.txt b/Kannada Sahitya/article_236.txt new file mode 100644 index 0000000000000000000000000000000000000000..058fff1e161ed1082d477b414e6569b3e80e6ffd --- /dev/null +++ b/Kannada Sahitya/article_236.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಂಗಾಲಿ ಮೂಲ ಲೇಖಕರು : ಅರುಣಕುಮಾರ್ ಚಟರ್ಜಿ ಕನ್ನಡಕ್ಕೆ: ಸುಮತೀಂದ್ರ ನಾಡಿಗ್ +ಪೃಥ್ವಿ ಹುಟ್ಟಿದಾಗಿನಿಂದಲೂ ದಕ್ಷಿಣ ಸಮುದ್ರದ ಕಪ್ಪು ನೀಲಜಲ ಬೆಟ್ಟದ ತಪ್ಪಲಿಗೆ ಬಡಿಯುತ್ತಲೇ ಇದೆ. ಬೆಟ್ಟದ ಸಂದು ಸಂದುಗಳಲ್ಲಿ ನೀರು ನಿಂತ ಕಡೆ ಪಚ್ಚೆಯ ಮೊಸಾಯಿಕ್‌ನ ಹಾಗೆ ಪಾಚಿ ಬೆಳೆದಿದೆ. ಅಲ್ಲೊಬ್ಬ ಮನುಷ್ಯ ಒಂದು ಮರದ ಮೇಲಿದ್ದ ಒಂದು ಹಿಡಿ ಪಾಚಿಯನ್ನು ತೆಗೆದುಕೊಂಡು, ಅದರ ಜೊತೆಗೆ ಒಂದಿಷ್ಟು ಸಮುದ್ರದ ನೊರೆಯನ್ನು ಸೇರಿಸುತ್ತಾನೆ. ಸಮುದ್ರ, ಬೆಟ್ಟದ ಕಾಲನ್ನು ಮುಟ್ಟುವ ಜಾಗದಿಂದಲೇ ಕಾಡು ಶುರುವಾಗುತ್ತದೆ. ದಟ್ಟವಾದ, ವಿಸ್ತಾರವಾದ ಹಸಿರುಕಾಡಿನ ಸೃಷ್ಟಿ ದಕ್ಷಿಣ ದೇಶಕ್ಕೆ ಅಗಸ್ತ್ಯ ಬಂದಾಗ ಆದದ್ದು. ಆಗ ವಿಂಧ್ಯಪರ್ವತ ತಲೆಬಗ್ಗಿಸಿ ಎಷ್ಟು ವರ್ಷಗಳು ಆದವೊ ಏನೊ? ಈ ಕಾಡಿನ ಮರಗಳು ಅವನ ಸ್ಥಾವರ ಸಂತತಿ. ಈ ಹಸಿರುಮಕ್ಕಳು ಎಣಿಕೆಗೆ ಸಿಕ್ಕದ ಕಾಲನ ಸಂಗಾತಿಗಳು; ಬಿರಿಗಾಳಿಗಳನ್ನೂ ಮತ್ತು ಬರಗಾಲಗಳನ್ನೂ ಎದುರಿಸಿದ್ದಾರೆ. ಈ ವೃಕ್ಷಗಳಿಗೆ ಇದನ್ನು ಬೆಳೆಸಿದ ಮನುಷ್ಯ ‘ಅಶಿರಾ’ ಎಂದು ನಾಮಕರಣ ಮಾಡಿದ್ದ. ರಾತ್ರಿಯ ಬಿರುಗಾಳಿಯಲ್ಲಿ ಕೈಮುರಿದ ಒಬ್ಬ ‘ಅಶಿರಾ’ ನಿಂತಿದ್ದಾನೆ. ರೆಂಬೆ-ಕೊಂಬೆಗಳೇ ಅವನ ಕೈಗಳು. ಅಲ್ಲಿದ್ದ ಮನುಷ್ಯ ‘ಅಶಿರಾ’ನ ಮುರಿದಿದ್ದ ಕೊಂಬೆಗೆ ಪಾಚಿಯನ್ನು ಮತ್ತು ನೊರೆಯನ್ನು ಸವರುತ್ತಾನೆ. ಅವನೇ ಆ ವೃಕ್ಷಗಳ ಸಾಕುತಂದೆ. ಚಲಿಸಲಿಕ್ಕಾಗದ ಹಸಿರು ವೃಕ್ಷಗಳ ಈ ಪ್ರದೇಶದಲ್ಲಿ ಅವನೊಬ್ಬನೇ ಚಲಿಸುವವನು. ತನ್ನ ಕೈಯ್ಯಾರೆ ಬೆಳೆಸಿದ ಸಸ್ಯ – ಶಿಶುಗಳಿಗೆ ಅವನೇ ಆರೈಕೆ ಮಾಡುತ್ತಾನೆ. ಅವುಗಳನ್ನು ನೇವರಿಸುತ್ತಾನೆ, ಪ್ರೀತಿಸುತ್ತಾನೆ. ಹಸಿರು ಶಿಶುಗಳು ಎಲೆತುಂಬಿದ ಕೊಂಬೆಗಳನ್ನು ಆಡಿಸುತ್ತ ಅವನ ಜೊತೆ ಆಟವಾಡುತ್ತದೆ. ಹಿರಿಯ ವೃಕ್ಷ ಸಂತತಿಗಳು ಛತ್ರಿಯ ಹಾಗೆ ಕೊಂಬೆಗಳನ್ನು ಎತ್ತಿ ಹಿಡಿದು ಕಠಿಣವಾದ ಬಿಸಿಲಿನಿಂದ ಅವನನ್ನು ರಕ್ಷಿಸುತ್ತಾರೆ. ಕೊಂಬೆಗಳನ್ನು ತಗ್ಗಿಸಿ ಜಡಿಮಳೆಯಿಂದ ಅವನು ನೆನೆಯದ ಹಾಗೆ ನೋಡಿಕೊಳ್ಳುತ್ತದೆ. ಅಶಿರಾ ವೃಕ್ಷಗಳು ದಿಕ್ಕನ್ನು ಬದಲಿಸಿ ಫಲಭರಿತ ವೃಕ್ಷಗಳ ಜೊತೆ ನಿಂತಹಾಗೆ ಅವನು ಕನಸು ಕಾಣುತ್ತಾನೆ. ಅವನು ಆನಂದ ತುಂಬಿ ಕುಣಿದಾಡುತ್ತಾನೆ. ವೃಕ್ಷಗಳ ನಾಡಿನಲ್ಲಿ ಒಂದು ಉತ್ಸವ ಶುರುವಾಗುತ್ತದೆ. ಎಲೆಗಳ ನಡುವೆ ಗಾಳಿಗಳು ಮರಕ್ಕಾಸ್ ವಾದ್ಯದ ಶಬ್ದಗಳನ್ನು ಹೊರಡಿಸುತ್ತದೆ. ಠೊಳ್ಳು ಬಿದಿರಿನ ಮೂಲಕ ಕ್ಲಾರಿನೆಟ್ ನಾದಗಳು ಕೇಳಿಸುತ್ತವೆ. ವನವನಾಂತರದಲ್ಲಿ ಆಶ್ಚರ್ಯಕರವಾದ ಸಿಂಫೊನಿ ಹರಡುತ್ತದೆ. ಕಲ್ಲುಕಲ್ಲಿನ ನಡುವೆ ಸಮುದ್ರವೂ ಸಂಗೀತವನ್ನು ನುಡಿಸುತ್ತದೆ. ಪರ್ವತ ಶಿಖರವೂ ಕುಣಿಯಲಾರಂಭಿಸುತ್ತದೆ. ಅವನು ಬ್ಯಾಂಡ್ ಮಾಸ್ಟರಿನ ಹಾಗೆ ಕೈಗಳನ್ನು ಆಡಿಸುತ್ತಾನೆ. ಅವನ ಶರೀರ ತೂಗುತ್ತದೆ. ಉತ್ಸವವು ಮುಂದುವರಿಯುತ್ತದೆ. ಸಮುದ್ರದ ಹಕ್ಕಿಗಳು ಹಾಡುತ್ತವೆ. ಅವುಗಳ ರೆಕ್ಕೆಗಳ ರಿಣ್ ರಿಣ್ ಶಬ್ದ ಅಲೆಗಳ ಮೇಲೆ ಹಾರಿ, ಹಸಿರು ಪ್ರಾಂತವನ್ನು ಆವರಿಸುತ್ತದೆ. +ಬೆಂಕಿಯ ಬುಟ್ಟಿ +ಹಳೆಯ ಆಲ, ಅಶ್ವತ್ಥ ಮತ್ತು ಬೇವಿನ ಮರಗಳು ಹತಾಶವಾಗಿ ಕಂಡವು. ಅವನು ಬೆಳಗಿನ ಹೊತ್ತು ಅವುಗಳ ತೊಗಟೆಗಳು, ರೆಂಬೆಗಳು ಮತ್ತು ಎಲೆಗಳ ಮೇಲೆ ತನ್ನ ಕೈಯಾಡಿಸಿ ಸಮಾಧಾನಗೊಳಿಸಲಿಕ್ಕೆ ಯತ್ನಿಸಿದ. ವಿಧ್ವಂಸಕಾರಿ ಗಾಳಿ ಪೂರ್ವದ ಬೆಟ್ಟಗಳ ಕಡೆಯಿಂದ ಜೋರಾಗಿ ಬೀಸುತ್ತಿತ್ತು. ಅದರಲ್ಲಿ ದಾವಾನಲದ ವಾಸನೆ ಇದೆ ಅಂತ ಅವನಿಗೆ ಗೊತ್ತಾಯಿತು. ವೃದ್ಧ ವೃಕ್ಷಗಳಿಗೆ ಅದರ ಸೂಚನೆ ಆಗಲೇ ತಿಳಿದಿತ್ತು. ಅವಕ್ಕೂ ವಾಸನೆ ಬಂತು. ವೃಕ್ಷಗಳ ಗುಂಪು ಹುಯ್ಲಿಡಲಿಕ್ಕೆ ಆರಂಭಿಸಿತು. ಈ ಮಣ್ಣಿನ ಹಂಗನ್ನು ಬಿಡಿಸಿಕೊಂಡು ಅವು ಇನ್ನೆಲ್ಲಾದರೂ ಹೋಗಬೇಕು ಅಂದುಕೊಂಡವು. ಸಣ್ಣ ಸಸಿಗಳ ಪಾಡೇನು ಅಂತ ಅವನು ಯೋಚಿಸಿದ. ಆ ಭಯಂಕರ ತಾಪವನ್ನು ಅವು ಸಹಿಸಲಾರವು: ಏನಾದರೂ ತಿಳಿಯುವ ಮುಂಚೆಯೇ ಅವು ನಾಶವಾಗುವುದು ಖಂಡಿತ. ಅವನು ಸಮುದ್ರದ ಕಡೆ ಓಡಿದ. ಕಾಡುಭೂಮಿ ನೀರಲ್ಲಿ ಮುಳುಗಿಹೋಗಲಿ ಅಂತ ಪ್ರಾರ್ಥಿಸಿದ. ಕಾಳ್ಗಿಚ್ಚು ಮೌನವಾಗಿ ಹಿಂತಿರುಗಲಿ ಅಂತಲೂ ಪ್ರಾರ್ಥಿಸಿದ. +ನಟ್ಟ – ನಡುರಾತ್ರಿಯಲ್ಲಿ ಮೃಗಶಿರದ ಕೆಳಗಿದ್ದ ಬೆಟ್ಟದ ತುದಿಯಿಂದ ಬೆಂಕಿ ಉರುಳುರುಳಿ ಬರುತ್ತಿತ್ತು. ಸುಟ್ಟವಾಸನೆಯಿದ್ದ ಗಾಳಿಯನ್ನು ಹಿಂಬಾಲಿಸುತ್ತಿತ್ತು. ವೃಕ್ಷಗಳ ನಾಡಿನಿಂದ ಒಂದು ಆಸಹಾಯ ಧ್ವನಿ ಕೇಳಿಸಿತು. ಅವನು ಸಮುದ್ರವನ್ನು ಸಮೀಪಿಸಿದ. ಒಂದು ಕ್ಷಣದಲ್ಲಿ ಅಂಧಕಾರ ನುಚ್ಚುನೂರಾಯಿತು. ಬಿರುಗಾಳಿಯು ಹಿಡಿತದಲ್ಲಿದ್ದ ಬೆಂಕಿ ಕಾಡನ್ನು ಸುಡಲು ಪ್ರಾರಂಭಿಸಿತು. ಅದೇ ಸಮಯದಲ್ಲಿ ವೃಕ್ಷಗಳ ಮಕ್ಕಳ ಮೇಲೆ ತೇವವಿರುವ ಗಾಳಿಯೊಂದು ಬೀಸಿತು. ವಟವೃಕ್ಷ ಬಿಳಿಲುಗಳಿಂದ ತನ್ನನ್ನು ಮುಚ್ಚಿಕೊಂಡಿತು. ಎಲ್ಲ ಕಡೆಯಲ್ಲಿಯೂ ಲವಣಪೂರಿತ ಜಲರಾಶಿ ಥೈಥೈ ಕುಣಿದಾಡುತ್ತ ನುಗ್ಗಿತು. ತನ್ನ ತಲೆಯು ನೀರಿನ ಗೋಡೆಗೆ ಬಡಿದದ್ದರಿಂದ ನಿರಾಶೆಗೊಂಡ ಕಾಳ್ಗಿಚ್ಚು ಹಿಂತಿರುಗಿತು. ಬೆಂಕಿ ಆರಿತು. ಕ್ರುದ್ಧವಾದ ಸಮುದ್ರ ಶಾಂತವಾಯಿತು. +ಅವನೊಂದು ಕನಸು ಕಂಡ. ಕನಸನ್ನು ಹೆಣೆದ. ಮಾತಾಡಲಿಕ್ಕೆ ಬರದ ಹಸಿರು ಜಗತ್ತಿನ ಭಾಷೆಯನ್ನು ತನ್ನ ಮಜ್ಜೆಯಲ್ಲಿ ಅನುಭವಿಸಿದ. ಅವನಿಗೆ ಸೂರ್ಯನಾಗಲಿ, ಅಂಧಕಾರವಾಗಲಿ, ಕಾಲದ ಒಂದೇ ರೂಪವಾಗಿ ಗೋಚರಿಸಿತು. ಅನಂತಕಾಲದ ಸ್ರೋತದಲ್ಲಿ ತೇಲುತ್ತಿದ್ದ ಅವನಿಗೆ ಯಾವ ಬಗೆಯ ಭಾಷೆಯೂ ಗೊತ್ತಿರಲಿಲ್ಲ. ದಿನ, ಮಾಸ, ವರ್ಷ, ಹೆಸರು, ದೇಶ, ಕಾಲ, ಏನೂ ತಿಳಿಯಲಿಲ್ಲ. ವೃಕ್ಷ ಶಿಶುಗಳಿಂದ ಆವೃತವಾದ ಈ ಅರಣ್ಯಭೂಮಿ ಮಾತ್ರ, ಆ ಬೆಟ್ಟ, ಆ ಸಮುದ್ರ ಮಾತ್ರ ಅವನಾಗಿದ್ದ. +ಚರಿತ್ರೆ ಮಾತಾಡುತ್ತದೆ. +ಹಿಂದೆ ಗೋದಾವರಿ ಬೆಟ್ಟಗಳಲ್ಲಿ ಒಂದು ಗುಟ್ಟಾದ ಸಭೆ ನಡೆಯಿತು. ಆ ಮುಖದ ಮೇಲೆ ದೊಂದಿಯ ಬೆಳಕು ಬಿದ್ದಿತ್ತು. ಭಾರತೀಯರ ಕ್ರಾಂತಿಯ ಮುಖಂಡನಾಗಿ ದೇಶದ್ರೋಹಿ ಎನಿಸಿಕೊಂಡ ಚಿತರಾಮರಾಜುವಿನ ಕಡೆಗೆ ಬ್ರಿಟಿಷ್ ಸರ್ಕಾರದ ಬಂದೂಕಗಳೆಲ್ಲ ತಿರುಗಿದ್ದಾಗ, ಚಿತಾರಾಮರಾಜು ಹಳ್ಳಿ-ಹಳ್ಳಿಗಳಲ್ಲಿ ಕಾಡು-ಮೇಡುಗಳಲ್ಲಿ ಕ್ರಾಂತಿಯನ್ನು ಹರಡುತ್ತಿದ್ದ. ಏನವನ ಹೆಸರು…..ಏನು ಹೆಸರು…..ತನ್ನ ಹೆಸರೇ ಅವನಿಗೆ ಮರೆತು ಹೋಗಿತ್ತು. ಚಿತಾರಾಮರಾಜು ಅಭಿಮನ್ಯುವಿನಂತೆ ಇದ್ದ. ಅವನ ಸುತ್ತಲೂ ಬ್ರಿಟಿಷ್, ಸೈನಿಕರು ಸುತ್ತುವರೆದಿದ್ದರು. ಅವನ ಮೃತದೇಹ ಸಿಕ್ಕಲಿಲ್ಲ. ಅವನು ದೇಶಭ್ರಷ್ಯ, ನಿರಾಶ್ರಿತ, ರೆನಗೇಡ್! ಯಾವಾಗಿನಿಂದ? ಬಹಳ ಕಾಲದಿಂದ! ಆ ದಿನದ ವೃಕ್ಷಗಳ ಸಭೆಯಲ್ಲಿ ಅವನು ಹಾಜರಾಗಿದ್ದ. ಅಂದು ಅವನು ನೆಟ್ಟ ಬೇವಿನ ಬೀಜ ಇಂದು ವೃಕ್ಷವಾಗಿದೆ. ಅದಕ್ಕೆಷ್ಟು ವಯಸ್ಸು? ತನ್ನಷ್ಟೇ ಇರಬಹುದು, ಸ್ವಲ್ಪ ಕಮ್ಮಿ ಇರಲೂ ಬಹುದು. ನಿನ್ನೆಯ ತೊಗಟೆಗಳ ಮೇಲೆ ಮತ್ತು ನಿನ್ನೆಯ ಹಸಿರು ಎಲೆಗಳ ಮೇಲೆ ಕಾಲರಾಯನ ಬರಹವಿದೆ. ಹಾಗೆಯೇ ಅವನ ಮುಖ, ಕಣ್ಣು, ಚರ್ಮದ ಮೇಲೆ ಕೂಡ ಕಾಲರಾಯನ ಬರಹವಿದೆ. +ಮಾಡರನೈಸೇಶನ್ನಿನ ದೂತ +ಅವನು ಸ್ನಾನ ಮಾಡುತ್ತ ಸಮುದ್ರದ ನೊರೆಯನ್ನು ಮತ್ತು ಹಸಿರು ಪಾಚಿಯನ್ನು ಎತ್ತಿಕೊಳ್ಳುವುದರಲ್ಲಿದ್ದ ಪ್ರತೀದಿನ ದೂರದಲ್ಲಿ ಸಮುದ್ರದ ಮೇಲೆ ಹೋಗುವ ಹಡುಗುಗಳನ್ನು ಆಗಾಗ ನೋಡುತ್ತಿದ್ದ. ಉಹ್ಞು…. ಈ ಸಾರಿ ನೋಡಿದ್ದು ಬೇರೆ. ದೂರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಅವನು ನೋಡಲಿಲ್ಲ. ಆ ಹಡುಗು ಸ್ಥಿರವಾಗಿತ್ತು, ಅಚಲವಾಗಿತ್ತು. ದೊಡ್ಡ ತೆರೆಯ ಮೇಲಿನ ಮಹಾತಿಮಿಂಗಲದ ಹಾಗೆ ಆ ‘ಹಡಗಿನ ಶರೀರ ಕಾಣಿಸಿತು. ದೊಡ್ಡ ಬೇವಿನ ಮರ ಒಂದು ಕೊಂಬೆಯನ್ನು ಕೆಳಗಿಳಿಸಿತು. ಅವನು ಅದನ್ನು ಹಿಡಿದುಕೊಂಡು ಮೇಲೇರಿದ. ಇನ್ನೂ ಮೇಲೇರಿದ. ದೂರದ ಸಮುದ್ರದ ಮೇಲೆ ಕೂತು, ಎರಡೂ ಕೈಗಳನ್ನು ಕಪಾಲದ ಮೇಲಿಟ್ಟುಕೊಂಡು ನೋಡಿದ. ಪಶ್ಚಿಮ ಘಟ್ಟದ ಮೇಲೆ ಸೂರ್ಯ ತನ್ನ ಕಾಲುಗಳನ್ನು ಊರಿದ್ದ. ಸಮುದ್ರದ ಮೇಲಿನಿಂದ ಏನೋ ಒಂದು ರೀತಿಯ ವಾಸನೆಯನ್ನು ಗಾಳಿ ಹೊತ್ತು ತಂದಿತು. ಹಡಗಿನಿಂದ ಏನೋ ಒಂದು ವಸ್ತು ನೀರಿಗೆ ಇಳಿಯಿತು. ಮೋಟರ್ ಬೋಟ್. ಕೆಂಪುಮೀನಿನ ಹಾಗಿತ್ತು. ಹಡಗಿನಿಂದ ಒಬ್ಬೊಬ್ಬರಾಗಿ ಹಗ್ಗವನ್ನು ಹಿಡಿದುಕೊಂಡು ಜನ ಇಳಿದರು-ಒಂದು, ಎರಡು, ಮೂರು…. ಆರು ಜನ. ನೀರಿಗಿಳಿಯುವ ಹಸಿರು ಬಟೆಯನ್ನು ತೊಟ್ಟ ಅವರು, ಕೆಂಪು ಮೀನಿನ ಮೇಲೆ ತೇಲುವ ಹಸಿರು ಪಾಚಿಯ ಹಾಗೆಯೇ ಕಂಡರು. ಅವರು ಹೊರಟರು. ಶಬ್ದತರಂಗಗಳು ಅಲೆ ಅಲೆಯಾಗಿ ಬಂದವು. ಕೆಂಪುಮೀನು ಓಡಿತು. ಓಡುತ್ತ ಓಡುತ್ತ ಅವನಿದ್ದ ದಿಕ್ಕಿಗೇ ಬಂತು. +ಅವರ ಕತೆ +ಅವರು ಕಲ್ಲುಮರಳಿದ್ದ ಜಾಗದಲ್ಲಿ ಬೋಟನ್ನು ಕಟ್ಟಿಹಾಕಿದರು. ಯಾರೋ ಕೂಗಿದರು: “ಸಿಂಗ್, ಇದೇ ಸ್ಪಾಟ್ ಅದು. ಕಾಡು ಬೆಟ್ಟ ಸಮುದ್ರ- ಪೆಟ್ರೋಲ್ ಸೆಕ್ಟರ್. ನಿನ್ನ ಮ್ಯಾಪ್ ಏನು ಹೇಳುತ್ತೆ?” ಅವರು ಭೂಗರ್ಭಶಾಸ್ತ್ರಜ್ಞರು, ಇಂಜಿನಿಯರ್‌ಗಳು. ಐದು ಜನ ಗಂಡಸರು, ಇನ್ನೊಂದು ಹೆಂಗಸು.ಪೃಥಾ ಕೂಡಾ ಒಬ್ಬ ಭೂಗರ್ಭಶಾಸ್ತ್ರ – ಪೆಟ್ರೋಖೆರಿ ಇಂಜನಿಯರ್: ಮರಗಳ ನೆರಳಿನಲ್ಲಿ ಅವರು ಟೆಂಟ್ ಎಬ್ಬಿಸಿದರು. ಮೋಟಾರ್ ಬೋಟ್‌ನಿಂದ ಕೆಲವು ಮರದ ಪೆಟ್ಟಿಗೆಗಳನ್ನು ಮತ್ತು ಉಪಕರಣಗಳನ್ನು ಹೊತ್ತು ತಂದರು. +ಸ್ಟೋವ್‌ನಿಂದ ಚಾ ಕೈಗೆ ಬರಲಿಕ್ಕೆ ಹತ್ತು ನಿಮಿಷ ಹಿಡಿಯಿತು. ಒಂದು ಕಪ್ಪು ಚಾ ಕೈಯಲ್ಲಿ ಹಿಡಿದು ಪೃಥಾ ದಟ್ಟವಾದ ಕಾಡಿನ ಒಳಗೆ ಹೋದಳು. ಎಷ್ಟೊಂದು ವೃಕ್ಷ ಶರೀರಗಳು. ನೆಟ್ಟಗೆ ನಿಂತ ಭಾರೀ ಬಡ್ಡೆಗಳು, ಅವುಗಳ ವಯ್ಯಸ್ಸೆಷ್ಟು ಅನ್ನುವುದನ್ನು ತೊಗಟೆಯ ಮೇಲೆ ಬರೆದಂತಿತ್ತು. ರಾಜನ್ ಅವುಗಳ ವಯಸ್ಸನ್ನು ಹೇಳಬಲ್ಲವನಾಗಿದ್ದ. ಅರವತ್ತೊ, ನೂರೋ, ಅವನಿಗೆ ಗೊತ್ತಾಗುತ್ತಿತ್ತು. ದೊಡ್ಡ ಬೇವಿನ ಮರದ ಕೆಳಗೆ ಪೃಥಾ ನಿಂತಳು. ನಾಲ್ಕೂ ದಿಕ್ಕಿನಲ್ಲಿ ಒಂದು ರೀತಿಯ ಅಲೌಕಿಕ ಮೌನ ಹರಡಿದಂತಿತ್ತು. ಮರಗಳ ಕೊಂಬೆಗಲಲ್ಲಿ ಏನೋ ಸದ್ದು, ಪೃಥಾಳ ಕಂಠಗಳ ಒಂದು ವಿಹ್ವಲ ಚೀತ್ಕಾರ ಹೊರಟಿತು. ಎದುರಿಗೊಬ್ಬ ಮನುಷ್ಯ ನಿಂತಿದ್ದ. ಮನುಷ್ಯನ? ಅಲ್ಲ ಅದೊಂದು ಮರ! ಮರದ ಹಾಗಿರುವ ಮನುಷ್ಯ. ಅವನ ಇಡೀ ಮೈ ತೊಗಟೆಯಿಂದ ಮುಚ್ಚಿತ್ತು. +ಅವಳಲ್ಲಿ ವಿಶ್ವಾಸ ಹುಟ್ಟಿಸುವುದಕ್ಕಾಗಿ ಅವನು ಕೈಯೆತ್ತಿದ, ನಕ್ಕ, ಬೇವಿನ ಎಲೆಯಿಂದ ಉಜ್ಜಿದ ಅವನ ಹಲ್ಲುಗಳು ಸೂರ್ಯ ರಶ್ಮಿಯನ್ನು ಪ್ರತಿಫಲಿಸಿದವು. ಚೇತನಹೀನಳಂತೆ ಹತ್ತಿರದ ಎಲೆಗಳ ಮೇಲೆ ಬಿದ್ದಿದ್ದ ಪೃಥಾ ಕಣ್ಣು ತೆರೆದಳು. ಅವಳ ಹತ್ತಿರ ಮರದ ಹಾಗೆ ಕಾಣುತ್ತಿದ್ದ ಒಬ್ಬ ಮನುಷ್ಯ ನಿಂತಿದ್ದ. ಪೃಥಾ ಎದ್ದು ಕುಳಿತಳು. ಅವಳ ಕೂದಲು ಬೆನ್ನ ಹಿಂದೆ ಹರಡಿತ್ತು. ಕಿತ್ತುಹೋದ ಗುಂಡಿಗಳ ಷರಟಿನ ಮೂಲಕ ಅವಳ ಬ್ರಾ ಕಾಣಿಸುತ್ತಿತ್ತು. ಅವಳ ಎದೆಯಿಂದ ಕಾಳ್ಗಿಚ್ಚಿನ ಗಂಧ ಹೊರಸೂಸುತ್ತಿತ್ತು. ದೊಡ್ಡ ಬೇವಿನಮರ ಎಲೆಗಳನ್ನು ಉದುರಿಸಿತು. ವೃದ್ಧ ವಟವೃಕ್ಷ ಗಾಳಿ ಬೀಸಿತು. ಸಮುದ್ರ ಗಂಭೀರ ಮೌನವನ್ನು ತಾಳಿತ್ತು. +ಅವನು ದೇಶಭ್ರಷ್ಟ +ಈ ಮರಕ್ಕೆ ಆ ಮರಕ್ಕೆ ಸಿಂಗ್ ಆರು ಹ್ಯಾಮಕ್‌ಗಳನ್ನು ಕಟ್ಟಿದ್ದ. ‘ಗುಪ್ತ’ ಟಿನ್ನಿನಿಂದ ಮಾಂಸವನ್ನು ತೆಗೆದು ಪ್ಲೇಟುಗಳ ಮೇಲೆ ಇಡುತ್ತಿದ್ದ. ಬಾಟನಿಸ್ಟ್ ಕುಲಕರ್ಣಿ ಮತ್ತು ರಾಜನ್ ‘ಓ ಮೈ ಸ್ವೀಟ್ ಹಾರ್ಟ್’ ಅಂತ ಹಾಡುತ್ತಾ, ಗ್ಯಾಸ್‌ಲ್ಯಾಂಪಿನ ಬೆಳಕಿನಲ್ಲಿ ಮ್ಯಾಪ್ ನೋಡುವುದರಲ್ಲಿ ಮಗ್ನರಾಗಿದ್ದರು. ದಡದಲ್ಲಿದ್ದ ಒಂದು ಕಲ್ಲಿನ ಮೇಲೆ ಕುಳಿತು ದಿಲ್‌ಬಾರ್ ಸಂಜೆಯ ಹೊತ್ತಿನಲ್ಲಿ ಭೈರವ್‌ರಾಗವನ್ನು ಕೊಳಲಿನಲ್ಲಿ ಬಾರಿಸುತ್ತಿದ್ದ. ಪೃಥಾ ಮತ್ತು ವೃಕ್ಷದ ಹಾಗಿದ್ದ ಮನುಷ್ಯ ತಂಬೂರಿ ಎದುರಿಗಿಟ್ಟುಕೊಂಡು ಮಾತಾಡುತ್ತಿದ್ದರು. ಇಷ್ಟು ದಿವಸ ಯಾವ ಭಾಷೆಯಲ್ಲಿ ಮಾತಾಡುತ್ತಿದ್ದೆನೆನ್ನುವುದು ಅವನಿಗೆ ಮರೆತುಹೋಗಿತ್ತು. ಈ ಹೊತು ಪ್ರವಾಹ ನುಗ್ಗಿ ಅಣೆಕಟ್ಟು ಒಡೆದುಹೋಗಿತ್ತು. ಅವನು ಮನುಷ್ಯನೆನ್ನುವುದೂ ಅವನಿಗೆ ಮರೆತುಹೋಗಿತ್ತು. ಪೃಥಾ ಹೇಳಿದಳು – “ ಈ ಇಡೀ ಪ್ರದೇಶದಲ್ಲಿ ಪೆಟ್ರೋಲ್ ಸಿಗುತ್ತದೆ. ಎಲ್ಲ ಮರಗಳನ್ನು ಕಡಿದುಹಾಕಬೇಕು. ನಾಳೆ ಸಂಜೆಯ ಒಳಗಾಗಿ ಪೂರ್ವದಿಕ್ಕಿನ ಪ್ರವತವನ್ನು ದಾಟುತ್ತಾರೆ. ನಾಲ್ಕುದಿನ ತಿರುಗಾಟ ಹಿಡಿಯುತ್ತದೆ. ನಾನು ಕಾಂಪ್‌ನಲ್ಲೇ ಇದ್ದು ಸ್ಟಡಿ ರಿಪೋರ್ಟ್ ತಯಾರಿಸಬೇಕಾಗುತ್ತೆ.” ಮರದಹಾಗಿದ್ದ ಆ ಮನುಷ್ಯ ಮಾತಾಡದೆ, ಅರಣ್ಯ ಜಗತ್ತಿನಲ್ಲಿ ಅಂಧಕಾರದ ಆಶ್ರಯಕ್ಕೆ ಹೊರಟುಹೋದ. ಇವತ್ತು ವೃದ್ಧ ವಟವೃಕ್ಷ ಬಿಳಿಲುಗಳನ್ನಾಡಿಸಿ ಅವನನ್ನು ಮಾತಾಡಿಸಲಿಲ್ಲ. ಅಶ್ವತ್ಥ ವೃಕ್ಷದ ಶಾಖೆಗಳಿಂದ ತಂಗಾಳಿಯು ಬಂದು ಅವನನ್ನು ಆಲಂಗಿಸಲಿಲ್ಲ. ದೊಡ್ಡ ಬೇವಿನ ವೃಕ್ಷದ ತೊಗಟೆ ಮರದಿಂದ ಇನ್ನೊಂದು ಮರದ ಹತ್ತಿರ ಹೋಗಿ ಗೋಳಾಡಿದ – “ನನ್ನನ್ನು ನಂಬಿ, ನಂಬಿ, ನಾನು ದೇಶಭ್ರಷ್ಟನಲ್ಲ, ದೇಶದ್ರೋಹಿ ಅಲ್ಲ. ನಾನು ನಿಮ್ಮಲ್ಲಿ ಒಬ್ಬ, ನಿಮ್ಮವನೆ.” +ಹೀಗೆ ವರ್ಷಗಳಾದ ಮೇಲೆ ಮನುಷ್ಯರ ಭಾಷೆಯನ್ನು ಮಾತಾಡಿದ್ದ. ಅವನನ್ನು ನಂಬದ ಸಾವಿರಾರು ಮರಗಳು ಅಂಧಕಾರದಲ್ಲಿ, ಅಕ್ಕಪಕ್ಕದಲ್ಲಿ ನಿಂತು, ಬಿಗುಮಾನದಿಂದ ನಿಂತಿದ್ದವು. ಪೂರ್ವದ ಬೆಟ್ಟಗಳಿಂದ ಹತಾಶೆಯ ರೋಧನ ಕೇಳಿಸುತ್ತಿತ್ತು. ಅರಣ್ಯ ಭೂಮಿಯನ್ನು ಹಾದುಹೋದ ಆ ರೋಧನ ಸಮುದ್ರವನ್ನು ಮುಟ್ಟಿತು. +ಪ್ರಕೃತಿಗೇ ಗೊತ್ತು +ಅವರು ಪೂರ್ವದ ಬೆಟ್ಟಗಳಿಗೆ ಹೋದರು. ಪೃಥಾ ಹ್ಯಾಮಕ್‌ನಲ್ಲಿ ಮಲಗಿದ್ದಳು. ಅವಳು ಕಟ್ಟಿದ್ದ ರೇಡಿಯಂ ಡೈಯಲ್ ವಾಚ್‌ನಲ್ಲಿ ಬೆಳಗಾಗುವುದಕ್ಕೆ ಹೆಚ್ಚು ಹೊತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಹ್ಯಾಮಕ್ ತೂಗಾಡಿ ಹರಿತುಬಿತ್ತು. ಅವಳು ಬೀಳುವಾಗ ಬಲೆಯಿಂದ ಮಾಡಿದ ತೂಗಾಡಿ ಹರಿದುಬಿತ್ತು. ಅವಳು ಬೀಳುವಾಗ ಬಲೆಯಿಂದ ಮಾಡಿದ ಹ್ಯಾಮಕ್‌ನ ದಾರಗಳನ್ನು ಹಿಡಿದಿದ್ದಳು. ವೃಕ್ಷಮಾನವನ ಕೊಂಬೆಗಳ ಸಾಗಿಸುವ ಶಕ್ತ ತೋಳುಗಳು ನೆಲದ ಮೇಲೆ ಬಿದ್ದಿದ್ದ ಅವಳನ್ನು ಸುತ್ತಿಕೊಂಡಿದ್ದವು. ವೃಕ್ಷಮಾನವನ ಬೇರುಗಳು ಅವಳಲ್ಲಿ ಇಳಿಯುವುದಕ್ಕೆ ಅವಳು ಆಶ್ರಯ ಕೊಟ್ಟಳು. ದೊಡ್ಡ ಬೇವಿನ ಮರದ ಒಂದು ಕೊಂಬೆ ಭಯಂಕರ ಶಬ್ದವನ್ನು ಮಾಡುತ್ತ ಕೆಳಗೆ ಬಿತ್ತು. ಆ ದೊಡ್ಡ ಕೊಂಬೆಯ ಆಘಾತವನ್ನು ಅವನ ಬೆನ್ನು ತಡೆಯಿತು. ವೃಕ್ಷಮಾನವ ತಾನು ಕೈಯಾರೆ ಬೆಳೆಸಿದ್ದ ಶಿಶು ಸಸಿಗಳ ಮೇಲೆ ಬಿದ್ದ. ಸಣ್ಣ ಸಣ್ಣ ರೆಂಬೆಗಳು ತೀಕ್ಷ್ಣ ಸೂಜಿಗಳ ಹಾಗೆ ಅವನ ಬೆನ್ನಿಗೆ ಮತ್ತು ಹೊಟ್ಟೆಗೆ ಚುಚ್ಚಿಕೊಂಡವು. ಬೆಳಿಗ್ಗೆ ಬೆಳಕು ಮೂಡುತ್ತಿದ್ದ ಹಾಗೆ ದೊಡ್ಡ ಬೇವಿನ ಕೊಂಬೆ ವೃಕ್ಷಮಾನವನ ಬೆನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದು ಪೃಥಾಗೆ ಕಾಣಿಸಿತು. ಅವಳು ಫಸ್ಟ್ ಏಡ್‌ಬಾಕ್ಸ್ ತರಲಿಕ್ಕೆ ಕ್ಯಾಂಪ್‌ಗೆ ಓಡಿದಳು. ಅದು ಅಲ್ಲಿರಲಿಲ್ಲ. ಡಾ. ದಿಲ್‌ಬಾರ್ ಅದನ್ನು ತೆಗೆದುಕೊಂಡು ಹೋಗಿದ್ದ. ಏನೂ ತೋಚದ ಪೃಥಾ ಪೂರ್ವದ ಬೆಟ್ಟಗಳ ಕಡೆಗೆ ಓಡಿದಳು. +ಖಾಂಡವ ದಹನ +ಅವರು ವೇಗವಾಗಿ ಬೆಟ್ಟದಿಂದ ಇಳಿಯುತ್ತಿದ್ದರು. ಸಿಂಗ್ ಕಿರುಚಿದ – “ಅಲ್ನೋಡಿ ಬೆಂಕಿ ಹತ್ತಿದೆ.” ಅಗ್ನಿಯ ಒಂದು ಸ್ರೋತ ಬೆಟ್ಟದಿಂದ ಕಾಡಿನ ಕಡೆಗೆ ವೇಗದಿಂದ ಇಳಿಯುತ್ತಿತ್ತು. ಆ ಅಗ್ನಿಕುಂಡದಲ್ಲಿ ವೃಕ್ಷ ಸಂತತಿ – ಜಹರ್‌ವ್ರತ’ ನಡೆಸುತ್ತಿದ್ದವು. ಪೃಥಾ ಓಡುತ್ತಿದ್ದಳು. ಐದು ಜನ ಅವಳನ್ನು ಹಿಂಬಾಲಿಸಿದ್ದರು. ಸುತ್ತುವರಿದಿದ್ದ ಅಗ್ನಿ ಒಂದೇ ಕ್ಷಣದಲ್ಲಿ ಗ್ರಾಸವಾಗಿ ತೆಗೆದುಕೊಂಡಿತ್ತು. ಸುತ್ತುವರಿದಿದ್ದ ಅಗ್ನಿಯ ಸುತ್ತಲೂ ಸುತ್ತುತ್ತ ಪೃಥಾ ಕೂಗುತ್ತಿದ್ದಳು – “ಅಗಸ್ತ್ಯ! ಅಗಸ್ತ್ಯ!” ಅಗ್ನಿಕುಂಡದಲ್ಲಿ ವೃದ್ಧ ವಟವೃಕ್ಷ ಮತ್ತು ದೊಡ್ಡ ಬೇವಿನಮರಗಳು ಉರಿಯುತ್ತಿದ್ದವು. ಇವತ್ತಿನ ಖಾಂಡವ ದಹನದಲ್ಲಿ ಸಮುದ್ರದ ನೀರು ಚಿಲುಮೆಗಳ ಹಾಗೆ ಉಕ್ಕು ಬರಲಿಲ್ಲ. ಅಗಸ್ತ್ಯರ ಸಂತತಿ ಮತ್ತು ಬಂಧು-ಬಳಗದವರು ನಿಶ್ಶೇಷವಾಗಿ ಹೋದರು. +ನಾಭಿಯ ಶೋಧನೆ +ಆ ರಾತ್ರಿ ಬಿಯರ್‌ಕ್ಯಾನಿನ ಮುಚ್ಚಳ ತೆಗೆಯುತ್ತ ಸಿಂಗ್ ಹೇಳಿದ: “ಈ ದಾವಾನಲ ನಮ್ಮ ಕೆಲಸವನ್ನು ಸುಗಮಗೊಳಿಸಿತು.” ದಿಲ್‌ಬಾರ್ ಹೇಳಿದ. “ದಾವಾನಲವಲ್ಲ, ಈ ವೃಕ್ಷಮಾನವ, ಪೃಥೆಯ ಅಗಸ್ತ್ಯ.” ಎಲ್ಲರೂ ಅಗಸ್ತ್ಯನಿಗೆ “ಥ್ರೀ ಛಿಯರ್ಸ್” ಹೇಳಿದರು. ಈಗಲೂ ಪೃಥೆ ಬೂದಿಯ ರಾಶಿಯಲ್ಲಿ ಅಗಸ್ತ್ಯನ ನಾಭಿಯನ್ನು ಹುಡುಕುತ್ತಿದ್ದಾಳೆ. +***** +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […] +ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […] +ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_237.txt b/Kannada Sahitya/article_237.txt new file mode 100644 index 0000000000000000000000000000000000000000..d6ccd6d4cb6f9cff4006ff52fe9512cb1cfaf96b --- /dev/null +++ b/Kannada Sahitya/article_237.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಅಯ್ಯೋ, ನಿನ್ ಸೊಲ್ಲಡ್ಗ, ಸುಮ್ನಿರೋ, ಯಾಕಿ ಪಾಟಿ ವಟ್ಟುರ್ಸ್ಕಂದಿಯೇ, ನನ್ನಾ” : ವತಾರಿಂದ್ಲು. ಇದೇ ಗೋಳಾಗದಲ್ಲಾ’ ’ ಎಂದು ಮಗ ಹೂವನಿಗೆ ಶಾಪ ಹಾಕಿ ಕಣ್ಣು ವಂಡರಿಸಿ ಜೋರು ಸ್ವರದಲ್ಲಿ ಕೂಗಿ ಕೊಂಡಳು. ಹೂವ ಯಾವ ಕೇರೂ ಮಾಡದಂತೆ ಅಳುವುದೊಂದೇ ಈ ಜಗತ್ತಿನಲ್ಲಿ ತನಗೆ ಗೊತ್ತಿರುವುದು ಎಂಬಂತೆ ರಾಗಬದ್ಧವಾಗಿ ಪಾಡುತ್ತಿದ್ದ. ಹಾಳಾದ್ ಜಲ್ಮುವೇ ವೂಗು: ಅದ್ಯಾವ್ ಕರ್ಮ ಮಾಡಿ ನನ್ನ ಎತ್ತುಬುಟ್ಟು ಸತ್ತೋದ್ಲೋ ಆ ನಮ್ಮವ್ವಾ ಅನ್ನಿಸ್ಸೋಳು’ ’ ಎಂದು ಮತ್ತೆ ಗೊಣಗಿಕೊಂಡು ‘ಅಂಗೇ ಮಾಡ್ತಿರು ಬತ್ತೆನೆ : ಚನ್ನಗೆ ಬಿಟ್ಟಿ ಯಂಡ ನೆಕ್ಕಂಡು. ಆಗ್ಲೂ ಅವುನ್ ಮುಂದೆ ಬಾರ್ಸುವಂತೆ ನಿನ್ ಕಿನಿಡಿಯಾ’ ಎಂದು ಹೊರ ಬಂದಳು. +ಹೂವ ನಿಧಾನಗತಿಯಲ್ಲಿ ಅಳುವಿನ ಸಾವಿರಾರು ರೂಪವನ್ನು ಬಿಚ್ಚುಡುತ್ತೇನೆ ಎನ್ನುವ ಹಾಗೆ ಒಮ್ಮೆ ಜೋರಾಗಿ ಇನ್ನೊಮ್ಮೆ ಮೆಲ್ಲಗೆ ಮತ್ತೊಮ್ಮೆ ದುಕ್ಕು ದುಕ್ಕಳಿಸುತ್ತಾ ಮಗದೊಮ್ಮೆ ಸೊರಸೂರೆನ್ನುತ್ತ, ನಿರ್ಜೀವಿಯಂತ ತನ್ನ ಕಣ್ಣುಗಳನ್ನು ಕೀಲಿಸಿ ಅಳತೊಡಗಿದ್ದ. ಮನೆಯವರು ಇವನ ಬಗ್ಗೆ ಸಿಟ್ಟು ಮಾಡಿಕೊಳುತ್ತ‘ಇದೇನ್ ಮೂದೇವಿಯಾಗುಟ್‌ಬುಡ್ತು ಇದು. ವತಾರಿಂದ್ಲು ತಕಕುಂತವನಲ್ಲಾ ವಾಲುಗ್ವ’ ಎಂದು ಬಗೆಬಗೆಯಾಗಿ ಬೈಯ್ದುಕೊಂಡರು. ಆದರೂ ಆ ಅಳು ಯಾಕೋ ಅವನ ಬಾಯಿಂದ ನಿಲ್ಲದೇ ಹೋಯಿತು. ತಳತಳಾರಿಸಿಕೊಂಡು ಅಳುವಿನ ಎಳೆಗಳೆಲ್ಲವನ್ನು ಆ ಕಡು ಕುಟುಂಬದ ದೊಡ್ಡ ಮನೆಯೊಳಗಿದ್ದವರ ಎದುರೆಲ್ಲ ಗೊಳೋ ಎನ್ನುತ್ತಿದ್ದ. ಅಕ್ಕ ಪಕ್ಕದ ಮನೆಯ ಜನ ‘ಯಾಕೋ ಅಳ್ತಾವ್ನೆ, ಬಿಡು, ಎಷ್ಟಂತ ಅತ್ತನು : ಅಮೆಕವನೆ ಬಾಯ್ ಮುಚ್ಕಂಡ್ ಬಿದ್ಕತನೆ’ ಎಂದು ನಂಬಿದ್ದೆಲ್ಲ ಈಗ ಸುಳ್ಳಾಗಿ ಒಂದು ಸಮಸ್ಯೆಯಾಗಿ ಗುಯ್‌ಗುಡುವ ಗುಂಗೆಹುಳುವಂತೆ ಬಾದಿಸತೊಡಗಿದ. +ಇಷ್ಟೆಲ್ಲ ಆಗುತ್ತಿರುವಂತೆ ಅವನ ಅವ್ವ ಸಿದ್ದಿ ತಡೆಯಲಾರದೆ, ತನ್ನ ಜೀವನದ ಎಷ್ಟೋ ಹತಾಶೆ, ಸಂಕಟ, ಸಿಟ್ಟುಗಳಿಂದೆಲ್ಲ ಚಿಟ್ಟ ಹಿಡಿದಿದ್ದವಳು ಅವನ ಅಳು ಕೇಳಲಾರದೆ ಓಡಿಬಂದು ಬಿದ್ದಿದ್ದ ಹೂವನ ಬೆನ್ನ ಮೇಲೆ ಢಮಢಮ ಎಂದು ನಗಾರಿಗೆ ಬಡಿದಂತೆ ಬಡಿದಳು. ‘ನಿಲ್ಸು ನಿನ್ನ ಸದ್ದಾ, ನಿಲ್ಸು, ನಿಲ್ಸೂ. ನಿಲ್‌ಸ್ಲಾ” ಸಾಯ್‌ಸ್ ಬುಡ್ತೀನಿ ನೋಡು’ ಎಂದು ಹಲ್ಲುಕಡಿಯುತ್ತಾ ‘ಎಷ್ಟಿದ್ದದು ನಿನ್ ತಿರಾಣ. ಮುಚ್ಚು ಬಾಯ. ಹಾಂ ! ನನ್ನೇ ತಳ್ಳಿಯ. ನಿನ್ನಿಂದ ಇವತ್ತು ನಾ ಸತ್ರು ಸರಿಯೇ. ನಿನ್ನಳಾ ನಿಲ್ಲುಸ್ದೆ ಬಿಡೂದಿಲ್ಲ’ ಎಂದು ರೋಷದಿಂದ ಮೈಮೇಲಿನ ಪ್ರಜ್ಞೆ ತಪ್ಪಿದವಳಂತೆ ‘ಯಾವ್ ಸನೀ ವಕ್ಕಂದಿದ್ದದೋ ಗೊತ್ತಿಲ್ವಲ್ಲಪ್ಪಾ ?’ ಎಂದು ಆವೇಶಕ್ಕೀಡಾಗಿ ಹೂವನ ಬಾಯನ್ನು ಬಿಗಿ ಹಿಡಿದು ; ಹಾಗೂ ಸದ್ದು ಬರಲು ಆತನ ಕುತ್ತಿಗೆಯನ್ನು ಇಚುಗುತ್ತ ‘ಸಾಯಿ ಸಾಯಿ’, ಯಾವ ಸುಕುಕ್ಕೆ ನಿನ್ನೆತ್ತುದ್ನೋ’ ಎಂದು ಅವನ ಮೃದು ಕೊರಳ ಬಿಗಿಗೊಳಿಸಿದಳು. +ಹೂವ ರಾಕ್ಷಸನಂತೆ ದೊಡ್ಡ ಗಂಟಲನ್ನೇ ತೆಗೆದ. ಎಲ್ಲಿಂದಲೋ ಓಡಿಬಂದ ಹೂವನ ತಾತ ಸಿದ್ದಿಯ ಅವತಾರ ಕಂಡು ‘ರಾಮರಾಮಾ” ಸಾಯ್ಸುಬುಡಮ್ಮಿ. ಮೇಯ್ ಯಾಕ್ ಬಿಟ್‌ಬುಟ್ಟಿ ಸಾಯ್ಸಮ್ಮಿ, ಒಬ್ಬೊಬ್ಬ್ರೂ ಯಣಾ ವುಳ್ಸಕೆ ಬಂದಿದ್ದೀರಾ ? ದೇವ್ರೇ ಈ ಕರ್ಮವ ಯಾವತ್‌ಗೆ ತಪ್ಸೀಯಪ್ಪಾ, ಅರಿವೈದುನ್ಗೆ ಇಂಗೆ ಇಂಸೆ ಕೊಟ್ಟರೆ ಲೋಕ್ದೆಲ್ಯಾರಾರ ?’ ಎಂದು ಗದ್ಗದಿತ ಸ್ವರದಲ್ಲಿ ಮಾತನಾಡುತ್ತ ಹೂವನ ಬಳಿ ಹೋಗಿ ಆತನ ಮೈ ಸವರಿ ತಲೆ ನೀವಿ ‘ಸುಂನಿರು, ಅತ್ತೂ ಅತ್ತು ಸುಸ್ತ್ ಮಾಡ್ಕಬ್ಯಾಡ’ ಎಂದು ಆತನ ಕೆನ್ನೆ ಮೇಲೆ ಇಳಿದಿದ್ದ ನೀರನ್ನು ಚೌಕದಿಂದ ಹೊರೆಸುತ್ತಾ ಸಮಾಧಾನಿಸಲು ತೊಡಗಿದ.ಕೂಲಿಗೆ ಹೋಗಿದ್ದ ಅವರಿವರೆಲ್ಲ ಮನೆ ತುಂಬಿಕೊಂಡರು. ಮಧ್ಯಾಹ್ನದ ಹಸಿವು ಮರೆಸಲು ಇರುತ್ತಿದ್ದ ಟೀ ಬೋಂಡವನ್ನು ಅಂಗಡಿಯಿಂದ ತಂದು ಮೊದಲೇ ಇವನಿಗೆ ಕೊಟ್ಟು ತಿನ್ನಿಸಿ ಸಮಾಧಾನ ಮಾಡಬೇಕೆಂದು ಅವನ ಅಜ್ಜಿ ಅಣಿಯಾಗಿ ಮುಂದೆ ಬಂದು ಪ್ರೀತಿಯಿಂದ ಕರೆಯುತ್ತಾ ‘ಬಾಪ್ಪಾ ಬಾ, ಅತ್ತೂ ಕರ್ದು ಇಂಗ್ಮಾಡೂಕೆ ಏನಪ್ಪಾ ಕಟ್ಟ ನಿನ್ಗೆ. ತಕೋ, ತಿನ್ನು ತಿನ್ನು’ ಎಂದು ಬೋಂಡ ಟೀಯನ್ನು ಮುಂದಿಟ್ಟಳು. ಹೂವ ಇವಾವುದಕ್ಕೂ ಸೊಪ್ಪು ಹಾಕದೆ ಕೊಸರಾಡಿ ಅಂಗಡಿಯಿಂದ ಕೊಂಡು ತಂದಿದ್ದ ಟೀಯನ್ನು ಕಾಲಿಂದ ತಳ್ಳಿ ಉರುಳಿಸಿಬಿಟ್ಟ. ಆ ಜೀವಿಗಳ ಹೊಟ್ಟೆ ಹಸಿವನ್ನು ಮರೆಸಬೇಕಿದ್ದ ಟೀ ತೊಪ್ಪೆ ನೆಲದ ಮೇಲೆ ಹರಿದು ನೆಲದ ಬಾಯಲ್ಲಿ ಅವಿತುಕೊಂಡಿತು. ‘ಇಂಗ್ಮಾಡುದ್ನಲ್ಲಾ’ ಎಂದು ಸಿಟ್ಟೆದ್ದು ಅವನ ಅಜ್ಜಿ ‘ಥೂತ್ ಸನಿಗೇಡಿದೆ ವೋಗು. ಇದ್ಯಾವ್ ರೋಗಂದಾರು. ಅನಿಸೀಸೀ” ಮುಖ ನೋಡ್ರಪ್ಪ ಮುಖವಾ, ಊರಗಲ ಬಾಯ್ ಕಿಸ್ಕಂದು ವಂಗ್ಲೋ ಅಂತ ಬಡ್ಕತದೆ. ಯಾರ್ ಸತ್ತೋಗಿದ್ದಾರೋ ಕಾಣ್‌ನಲ್ಲಪಾ ; ಏನ್ ನಿಮ್ಮವ್ವ ಸತ್ತೋಗಿದ್ದಾಳ್‌ಲಾ?’ ಎಂದು ಮುಖಕ್ಕೆ ತಿವಿದು ಒಂದೆಡೆ ಮಂಕಾಗಿ ಕುಳಿತಳು. ಟೀ ತಪ್ಪಿ ಹೋಗಿದ್ದರಿಂದ ಎಲ್ಲರಿಗೂ ಹಸಿವಿನಿಂದ ಹೂವನ ಬಗ್ಗೆ ಸಿಟ್ಟು ಏರಿತು. ಇನ್ನೂ ಅಳುತ್ತಲೇ ಇದ್ದ ಅವನ ರಾಗಕ್ಕೆ ಪಕ್ಕದ ಮನೆಯವಳು ಬಂದು ‘ಅತ್ತೆಯೋವ್ ; ಇವುಂದೇನಂತಾ ನೋಡ್ರವ್ವಾ. ಈ ಅಮಾಸೆ ದಿನ್ದೇಲಿ ಇಂಗ್ ಗೋಳಾಡುದು ಏನ್ ವೊಳ್ಳೆದಂತಾ ತಿಳ್ಕಂಡಿದ್ದೀರಾ’ ಎಂದು ಹೇಳಿ ಅವನ ಅಳ ನಿಲ್ಲಿಸಿ ಎಲ್ಲರ ಮೆಚ್ಚಿಗೆ ಪಡೆದು ; ಕೇರಿಯಲ್ಲಿ ಹೂವ ತನ್ನೊಬ್ಬಳ ಮಾತನ್ನೇ ಕೇಳುತ್ತಾನೆ ಎಂದು ಪ್ರದರ್ಶಿಸಲು ಪ್ರಯತ್ನಿಸಿದಳು. ‘ಮೊಗಾ ಯಾರೊಡುದ್ರಪ್ಪಾ. ಮಾತಾಡಪ್ಪಾ”. ನೋಡ್ದಾ ನೋಡ್ದಾ” ನಿನ್ ಬೆಲ್ಲ ಚೀಪ್ಕತೀನಿ ಸುಂನಿರಪ್ಪಾ’ ಎಂದು ಎಳೆದುಕೊಂಡು ಆತನ ಬಾಯಿಂದ ಸದ್ದು ಹೊರಬರದಿರಲಿ ಎಂಬಂತೆ ತನ್ನ ಎದೆಗೆ ಅವನ ಮುಖವನ್ನು ಒತ್ತಿಹಿಡಿಹುಕೊಂಡಳು. ತಕ್ಷಣವೇ ‘ಅಯ್ಯೋ ಸ್ಸು””’ ಎಂದು ಹೌಹಾರಿ ನೋವಿನಿಂದ ‘ಹಾಳಾದೋನೆ ವೋಗು, ಇದೇನ್ ಬಂದಿದ್ದದೋ ನಿನ್‌ನೆಲ್‌ಪಟ್ವಡಿಯಾ’ ಅಲ್ಲಳ್ನೋವಂಗೆ ಮೊಲೆ ಕಚ್ ಬುಡ್ನಲ್ರವ್ವಾ’ ಎಂದು ಸಿದ್ದಿಯ ಕಡೆ ತಿರುಗಿ – ‘ಇದೆಂತಾ ಮಗನ್ನಾ ಎತ್ತಿದ್ದೀಯಮ್ಮೀ. ಅಯ್ಯಯ್ಯೋ, ನೋಡವ್ವಾ ಯಂಗ್ ಅಲ್ಲಳ್ನೋವಂಗೆ ಕಚ್ಚವನೆ’ ಎಂದು ತನ್ನ ಮೊಲೆಗಳನ್ನು ತೋರಿಸತೊಡಗಿದಳು. +ಸಿದ್ದಿ ತನ್ನ ಮಗನ ರಂಪ ಕಂಡು ಏನೂ ಮಾಡಲಾರದೆ ‘ತೊಟ್ಲಲ್ಲಿದ್ದಾಗ್ಲೇ ಕತ್ ಚಿಮ್ಮಿ ಸಾಯಿಸ್‌ಬೇಕು ಅನ್ಕಂಡಿದ್ದೆ. ಏನ್ ಮಾಡ್ಲವ್ವಾ, ಗ್ರಾಚಾರ ಹಿಡ್ಕಂದದೆ ಅವುನಿಂದ ನಾ ಬದ್ಕುವಂಗಿಲ್ಲ’ ಎಂದು ಹಣೆ ಹಣೆ ಚಚ್ಚಿಕೊಂಡು ಧಾರಂದಕ್ಕೆ ತಲೆ ಆನಿಸಿ ತದೇಕಚಿತ್ತದಿಂದ ಎತ್ತಲೋ ನೋಡುತ್ತಾ. .. ‘ಈ ಮಗನಾ ಎರುವಾಗ ಎಂತಾ ಬಾಧೆ ತಿಂದೆ. ಸತ್ತೇ ವೋಯ್ತಳೆ ಅಂತಾ ಎಲ್ರೂ ಮ್ತಿದ್ರಲ್ಲಾ. ಎತ್ಮೇಲಾದ್ರೂ ಆಳಾದ್ ಗಂಡ ಅನ್ನಿಸ್ಕೋನು ಬಾಣಂತನಾ ಅಂತ ಒಂದಿನಾರೂ ಸೀಗ್ಡಿ ಕರ್ಮೀನು ಅಂತಾ ತಂಡ್ಕೊಡ್ಲಿಲ್ಲ. ಒಂದೆಣ್ಣೆ ಒಂದೂಟ ಅಂತಾ ಮಾಡ್ಲಿಲ್ಲ. ಯಾವ್ ನನ್ ಸವುತಿಯೂ ಎಂಗಿದ್ದೀಯಮ್ಮಿ ಅನ್ಲಿಲ್ಲಾ. ನನುಗ್ ನಾನೇ ಈದ್ ನಾಯಂಗೆ ಏನೂ ತಿನ್ನುಕಿಲ್ದೆ, ಕೊಳ್ತ್‌ಬಾಡ್ನೇ ಅವ್ರಿವ್ರು, ಎಲ್ಲೋ ಸತ್ ದನುದ್ನೆ ತಂದ್ಕೊಟ್ಟುದಾ ತಿನ್ಕಂದು ಇವ್ನ ಸಾಕುದ್ನಲ್ಲಾ. ಚನ್ನಗೆ ಎಂಜ್ಲೆಂಡ್ವ ನೆಕ್ಕ ಬಂದು ‘ಇದೂ” ನನ್ನುಗುಟ್ಟಿದ್ದದೆ ಈ ಕರಿ ಮೋರೆ ವೊತ್ತಿರುದು’ ಅಂತ ಒಂದ್ವಾರವಾದ್ರೂ ಒಂದಿನ್‌ವಾದ್ರೂ ಎತ್ತಿ ಮುತ್ತಿಕ್ಕದಕ್ಕೆ ಬುಟ್ ಬುಟ್ಟಾ ಗಂಡಾ ಅನ್ನಿಸ್ಕೋನು..ಹಾಳಾದೆಲಿ ಒಂತೊಟ್ಟೂ ಹಾಲಿಲ್ದೆ ವಂಗ್ಲೋ ಅಂತ ಆಗಲೂ ಇಂಗೇ ಬಡ್ಕತಿದ್ನಲ್ಲಾ. .. ಏನ್ ಕೊಡ್ಲಿಲ್ಲ ಅಂತ ಇಂಗತ್ತನು. ಯಾವ್ ಬಾಡ್ಮಡ್ಕಂದು ಅನ್ನ ಮಾಡ್ಕಂದು ತಿಂಡಿಮಾಡ್ಕಂದು ; ಬನ್ನಿಂತ್ರನೂ ಕೊಡ್ದಂಗೇನಾರ ನಾವೇ ತಿನ್ಕಂದಿದೇವಾ’ ಎಂದು ತನಗೆ ಅನಿಸಿದಂತೆಲ್ಲ ಲೆಕ್ಕ ಹಾಕತೊಡಗಿದಳು. ಆದರೂ ಅಳುವಿಗೆ ನಿಖರ ಕಾರಣ ಯಾರಿಗೂ ಗೊತ್ತಾಗಿಲ್ಲ.ಹೂವ ಮುಸುಮುಸುನೆ ಏರಿಳಿದ ದೀರ್ಘ ಉಸಿರುಬಿಡುತ್ತಾ ವದ್ದಾಡ ತೊಡಗಿದ. ಮನೆಯ ಮುರುಕಲು ಹೆಂಚುಗಳಿಂದ ಕೊರೆವ ಬಿಸಿಲ ಕಿರಣಗಳು ಸುಸ್ತಾಗಿ ಹೆಪ್ಪುಗಟ್ಟಿದ ತೋಯ್ದಿದ್ದ ಅವನ ಮುಖದ ಮೇಲೆ ಬಿದ್ದು ವಿಚಿತ್ರ ರೂಪವನ್ನು ಆರೋಪಿಸಿದ್ದವು. ಅವನ ವರ್ತನೆ ವಿಚಿತ್ರ ಪ್ರಾಣಿಯಂತೆ ಕಂಡು ಎಲ್ಲರೂ ಗಬರಿಯಗಿ ಅಲ್ಲಲ್ಲಿದ್ದವರು ಬಂದು ನೋಡಿದರು. ಜಡ್ಡು ತತ್ತರಿಸಿ ಹೋಗಿದ್ದ ಆ ಮನೆಯ ಜನರ ನಂಬಿಕೆಗಳು ತಳಾಮಳಗೊಂಡು ಏನೋ ಗ್ರಹಿಸಿ : ‘ದೇವ್ರೇನಾದ್ರೂ ಬಂದಿದ್ದದೇ ನೋಡ್ರಪ್ಪಾ’ ಎಂದರು. ಹೀಗೆ ಹಿಂದೆ ಯಾವಾಗಲೋ ಒಮ್ಮೆ ದೊಡ್ಡವರನ್ನು ಅನುಕರಿಸಿ ಹೂವ ದೇವರು ಬಂದಿದೆ ಎಂಬ ಆಟ‌ಆಡಿ ಎಲ್ಲರಿಗೂ ಬೆರಗು ಹುಟ್ಟಿಸಿ ಆಗ ನಂಬಿಸಿ ಬಿಟ್ಟಿದ್ದ. ಆ ನೆನಪಲ್ಲೇ ಈಗ ಆ ಮನೆಯ ಜನ ತರ್ಕಿಸಿ ಇವನ ಮೇಲೆ ಯಾವುದೋ ಹೊರಗಿನ ದೇವರು ಬಂದಿರಬಹುದೆಂದು ತೀರ್ಮಾನಿಸಿದರು. +ಹೂವನ ವಿಕಾರ ಕಂಡವರು ‘ಇರಬೇಕು, ಇಂಗೇ ವತರಿಂದ್ಲು ಚಂಡಿ ಇಡ್ಕಂಡು ಏಟ್ಗೂ ಪಾಟ್ಗೂ ಯಾರ್ಗೂ ಜಗ್‌ದಂಗೆ ಇರ್ಬೇಕಂದ್ರೆ : ಇದು ದೇವ್ರೇ ಆಗಿರ್‌ಬೋದು’ ಎಂದು ಹೆದರಿ ಎಲ್ಲರೂ ಅವನ ಎದುರು ಬಂದು ಮೂಕವಿಸ್ಮಿತರಾದರು. ಹೂವ ಮೆಲ್ಲಗೆ ಎದ್ದು ಕುಳಿತು ಎಲ್ಲರೂ ಸೇರಿ ತನಗೆ ಹೊಡೆಯಲು ಬಂದಿದ್ದಾರೋ? ಎಂದುಕೊಂಡು ಅಳು ತಗ್ಗಿಸಿ ಕೆಂಪಾಗಿ ಊದಿಕೊಂಡಿದ್ದ ಕಣ್ಣುಗಳನ್ನು ವಕ್ರವಾಗಿ ಎಲ್ಲರ ಮೇಲೂ ಬೀರಿದ. +ಅವನ ಅಜ್ಜಿ ದೀರ್ಘದಂಡ ನಮಸ್ಕಾರ ಹಾಕಿ ಗಂಧದ ಕಡ್ಡಿ ಹಚ್ಚಿ ಹಣೆಗೆ ಕುಂಕುಮ ಹಚ್ಚಿ ಭಯಭಕ್ತಿಯಿಂದ ‘ಸ್ವಾಮಿ” ನನ್ನಪ್ನೆ ಎಲ್ಲಾ ತಪ್ನೂ ವಟ್ಕಾಕಂಡು ಈ ಪಾಪಿಗೋಳ ನೋಡೂಕೆ ಕೊನೆಗೂ ಬಂದ್ಯಲ್ಲಾ’ ಎಂದು ಆರಭಿಸಿ ಈ ದೇವರು ತಮಗಾಗಿ ಏನನ್ನಾದರೂ ದರಿತೋರುತ್ತದೆಂಬಂತೆ ಬಗ್ಗಿ ನಿಂತಳು. ಎಲ್ಲ ಜನ್ ಈಗ ವಿಚಿತ್ರ ಮುಖಾಮುಖಿಯಲ್ಲಿ ದೇವರ ಕೈಯಲ್ಲಿ ಸೆರೆಸಿಕ್ಕಂತೆ ತತ್ತರಿಸಿ : ಅದು ಏನಾದರೂ ಮಾತಾಡಲಿ ಎಂದು ಕಾದರು. ಹೂವ ಏನನ್ನೂ ಕಾಣದವನಾಗಿ : ಸ್ವತಃ ತನ್ನ ಈ ದೀರ್ಘ ದುಃಖಕ್ಕೂ ಕಾರಣ ಗೊತ್ತಗದಗಿ : ವಾಸ್ತವವ್ವು ಮರೆತು ನಿಚ್ಚಳವಾಗಿ ಸದ್ದಿಲ್ಲದೆ ಕಣ್ಣೀರು ಇಳಿಸತೊಡಗಿದ. ಅವನ ತಾತ ನಡುಗುವ ಸ್ವರದಲ್ಲಿ ‘ದೇವ್ರೇ ಅಳುವಂತಾ ತಪ್ಪು ನಾವೇನ್ ಮಾಡಿದ್ದೆವೋ ಕಾಣ್‌ನಲ್ಲಪ್ಪಾ’ ಎಂದು ದೇವರು ಮಾತನಾಡುತ್ತದೆಂದು ಅವನೂ ಕಾದ. ಹೂವನ ಅವ್ವ ತನ್ನ ಮಗನ ಮೇಲೆ ದೇವರೇ ಬಂದಿದೆ ಎಂದು ತಿಳಿದು ಬೆಳಿಗ್ಗೆ ಕಾಣದೆ ಕತ್ತು ಹಿಸುಕಲು ಹೋಗಿದ್ದೆನಲ್ಲಾ ಎಂದು ಬೆವರತೊಡಗಿದಳು. ‘ನನ್ನಪ್ನೇ ಈ ವುಳಗೋಳ ಸಕನೆ ಪರೀಕ್ಸೆ ಮಾಡ್ಬೇಡ. ನೀವೆ ಇಂಗತ್ರೆ ಇನ್ನು ನಮ್ಮಂಥ ನರಪ್ರಾಣಿಗೋಳ ಪಾಡೇನು. ಹಾಳಾದ್ ಕಣ್ಣೆಲಿ ನೋಡಿ ನೋಡಿ ಇದೆಲ್ಲಾ ಸಾಕಾಗೋಗದೆ. ಎನಾರ ಒಂದ್ ವಚನ ಕೊಡಿ. ನಮ್ಮ್ ತಪ್ಪ್ ತಿದ್ತಿ ಒಂದ್ ಸಮಾಚಾರ ಏಳಿ ಎಂದು ಬೇಡಿಕೊಂಡ. ತಾತನ ಮುಖವನ್ನು ಹೂವ ದಿಟ್ಟಿಸಿದ. ಯಾರಿಗೂ ಯಾವ ಉತ್ತರವೂ ಬರಲಿಲ್ಲ. ಹೊಳೆಯಲಿಲ್ಲ. ದೇವರು ಮುನಿದಿದ್ಡಾನೆ ಎಂದೆನ್ನುಕೊಳ್ಳುತ್ತಿರುವಂತೆಯೇ ಹೂವನ ಚಿಕ್ಕಪ್ಪ ‘ನೀವು ಮಾತಾಡ್ದೆ ಇದ್ರೆ ನಾವು ಮೆಣುಸುನ್ ಕಾಯ್ ವಗೆ ಕೊಡ್ತೀವಷ್ಟೆ’ ಎಂದು ದೇವರನ್ನೇ ಹೆದರಿಸಿದ. ಹೂವನ ಕೊನೆಯ ತಂಗಿ ಇದೆಲ್ಲವೂ ಸಾಕ್ಷಿಯೆಂಬಂತೆ ಜರ್ಜರಿಳತಳಾಗಿ ಅಳುವ ಮನಸ್ಸಿಂದ ನೋಡುತ್ತ ಸಿದ್ದಿಯ ಮರೆಯಲ್ಲಿ ಕುಳಿತಿದ್ದಳು. ಒಬ್ಬೊಬ್ಬರೂ ಆ ಸಮೂಹದಲ್ಲಿ ತರತರದಲ್ಲಿ ಕಲ್ಪಿಸುತ್ತಾ ಈ ಬಗ್ಗೆ ಯೋಚಿಸತೊಡಗಿದರು. ಹೆಂಗಸರು ಇದು ಹೆಣ್ಣು ದೈವವೋ ಗಂಡು ದೈವವೋ ವಿಚಾರ ಮಾಡಿ ಅಳೋದ್ರಿಂದ ಇದು ಹೆಣ್ಣು ದೈವವೇ ಇರಬೇಕೆಂದು ಕಂಡು ಹಿಡಿದು ಈಗ ಇನ್ನೊಂದು ಬಗೆಯಾಗಿ ದೇವರ ಎದಿರು ಮಾತನಾಡಲು ತೊಡಗಿದರು. +ಇಷ್ಟಾದರೂ ಹೂವ ಅಳುವುದನ್ನು ಬಿಟ್ಟಿರಲಿಲ್ಲ. ಶಬ್ದವಿಲ್ಲದೆಯೇ ಉಮ್ಮಳದ ದುಕ್ಕಳಿಕೆಯನ್ನು ಎದೆಗೆ ಗುದ್ದಿಕೊಳ್ಳುತ್ತಾ ಕಣ್ಣೀರು ಹರಿಸುತ್ತಾ ‘ನಂಗೆ ನೀರು ಬೇಕು’ ಎಂದ. ಮುಂಜಾವಿನಿಂದ ಆತ ಏನನ್ನೂ ತಿಂದಿರಲಿಲ್ಲ. ಕುಡಿದಿರಲಿಲ್ಲ. ಅತ್ತೂ ಅತ್ತೂ ಸುಸ್ತಾಗಿದ್ದ. ದಢಾರೆಂದು ಹೋಗಿ ಅವನ ಅವ್ವ ಕಂಚಿನ ದೊಡ್ಡ ತಪ್ಪಲೆಯಲ್ಲಿ ನೀರು ತಂದಿಟ್ಟಳು. ಹೂವ ಮೇಲೂ ಕೆಳಗೂ ಉಸಿರಾಡುತ್ತಾ ನಡುಗುವ ಕೈಗಳಿಂದ ಗಟಗಟ ಕುಡಿಯಲು ತಪ್ಪಲೆ ಮೇಲೆ ಎತ್ತಿ ಹಿಡಿಯಲಾರದೆ ದಢಕ್ ಎಂದು ಬೀಳಿಸಿ ಮೈ ತುಂಬಾ ನೀರು ಚೆಲ್ಲಿಕೊಂಡು ಆ ತಪ್ಪಲೆ ಬಂಡಿಯಂತೆ ಢಣಾರೆಂದು ಬಿದ್ದು ಜಾರಿ ಅಷ್ಟು ದೂರ ಹೋಗಿ ನಿಂತಿತು. ಏನೋ ಕೆಟ್ಟದಾಯಿತು ಎಂದುಕೊಂಡರು. +ಅಂತೂ ಹೊತ್ತು ಏರುತ್ತಾ ಹೋಯಿತು. ಹೂವನ ಕಣ್ಣುಗಳು ಅವನ ದುಃಖಕ್ಕೆ ನೀರಿನ ಹಾಡು ಹೇಳುತ್ತಿದ್ದವು. ಹಣೆಗೆ ಹಚ್ಚಿದ ಅಷ್ಟು ಕುಂಕುಮವೂ, ಬೆವರೂ, ನೀರೂ, ಕಣ್ಣೀರೂ ಎಲ್ಲ ಮಿಶ್ರಗೊಂಡು ಮುಖದ ತುಂಬಾ ಹರಡಿ ಮುಡಿ ಬಿಟ್ಟಿದ್ದ ಅವನ ಕೋಮಲ ಅಷ್ಟೂ ಕೂದಲು ಕುಣಿಯುತ್ತಾ ಹೆದರಿಸುವಂತೆ ಮಾರ್ಪಾಟಾಗಿದ್ದವು. ಎಷ್ಟೋ ಹೊತ್ತಾದ ಮೇಲೆ ಹೂವ ‘ಇನ್ಮೇಲೆ ನಾ ಅಳೂದಿಲ್ಲ ವಲದತಕೆ ವೋಯ್ತೀನಿ’ ಎಂದ. ಆತನ ಚಿಕ್ಕಪ್ಪ ಸಿಟ್ಟೆದ್ದು ‘ಬಂದ್ಮೇಲೆ ಒಂದು ವಾಕ್ಷ ಕೊಟ್ಟು ವೋಗ್‌ಬೇಕು. ವತಾರದಿಂದ ಇಂಗ್ ಮಾಡ್‌ಬುಟ್ಟು ಈಗ ಏನೂ ಯೇಳ್ದೆ ವೊಂಟೋದ್ರೆ ನಾನಂತೂ ಬಿಡೂದಿಲ್ಲ’ ಎಂದು ಎಚ್ಚರಿಸಿದ. +ಹೂವನಿಗೆ ದಟ್ಟ ಭೀತಿ ಮುಸುಕಿಕೊಂಡಿತು. ಓಡಿಹೋಗಲೂ ಎಲ್ಲೂ ಜಾಗ ಇಲ್ಲ ಎನಿಸಿತು. ಎದುರಿಗೆ ಭದ್ರವಾದ ಪಡೆಯಂತೆ ಸುತ್ತಲೂ ಮನೆ ಜನವೆಲ್ಲ ಕೂತಿದ್ದು ಅವನ ಮನೆಯ ಗೋಡೆಗಳು ಸುತ್ತುವರಿದಿದ್ದವು. ಅವನ ಕಣ್ಣುಗಳು ಸುಸ್ತಾಗಿ ತನ್ನ ಮನಸ್ಸನ್ನು ತಾನೆ ಹಿಡಿದಿಡಲು ಆಗದಾಗಿ ಎಲ್ಲೋ ತಾನು ಒಂದು ಪಾತಾಳದಲ್ಲಿ ಕುಸಿಯುತ್ತಿರುವನೆಂಬ ಭ್ರಮೆ ಹುಟುತಿರುವಂತಾಗಿ ಅವನ ಕಲ್ಪನೆಗಳೆಲ್ಲ ಕೊಚ್ಚಿ ಆಳ ಆಳಕ್ಕೆ ಅಳಿದವನಂತೆ ; ಯವುದೋ ಕಾಣದ ದಾರಿಯಲ್ಲಿ ತಾನೊಬ್ಬನೇ ಕತ್ತಲೆಯಲ್ಲಿ ಓಡುತ್ತಿದ್ದರೂ, ಅಲ್ಲೇ ನಿಂತೇ ಇರುವಂತೆ ಅಗುತ್ತ ಆಗುತ್ತಾ ಆಗುತ್ತಾ” ಯಾರೋ ಅಟ್ಟಿಸಿಕೊಂಡು ಬಂದಂತಾಗಿ ; ತನ್ನ ಪ್ರಜ್ಞೆಯನ್ನು ಕಳೆದುಕೊಂಡು ತನಗೆ ಗೊತ್ತಿಲ್ಲದ ವಿಚಿತ್ರ ರೀತಿಯಲ್ಲಿ ಎದುರು ಕುಳಿತಿದ್ದ ಜನರೊಡನೆ ಸಂವಾದಿಸತೊಡಗಿದ. +‘ನಂಗೆ ಸುತ್ತ ಯಮುನ್‌ಪಟ್ಣದೋರು ಇಡ್ಕತಾವ್ರೆ. ಕಿರೀಟ ಹಾಕಂದು ಬಾಣ್ದೆಲೇ ನಿಂತ್ಕಂಡು ‘ಹಿಡೀರಿ ಅವುನಾ ಹಿಡೀರಿ’ ಅವರವ್ವನ್ಗೆ ಹೇಳಿ ನಿನ್ ಮಗುನ್ನಾ ಕರ್ಕವೋಯ್ತಿದ್ದೀವಿ ಅಂತಾ ತಿಳಿಸಿ. ಯಾವ್ದೇ ಅರಕೆ ಕಟ್ಕಂದಿದ್ರೂ ಯಾವ್ ದೇವುರ್ನೇ ಬೇಡ್ಕಂದ್ರೂ ಬಿಡಬೇಡಿ ಎಳ್ಕಬನ್ನಿ’ ಅಂತಾ ಬತ್ತಾವ್ರೆ. ಏನೇನೋ ಯೇಳ್ತಾವ್ರೆ. .. ‘ಅವುನ್ ತಾತ ಇದ್ದಾನಲ್ಲ ಅವುನ್ಗೇ ಇನೂ ಅಯಸ್ಸಿದೆ ಆ ಮನೇಲಿ ಈ ಹುಡುಗ್ನ ಕಂಡ್ರೆ ಬಲೇ ಆಸೆ ಇದೆ. ಅವುನು ಅನ್ಕಂದಿರಬಹುದು. ಈ ಹುಡುಗ್ನಾ ದೊಡ್ದಾಗಿ ಓದ್ಸಿ ಇಡೀ ಊರ್ಗೇ ರಾಜನಂಗೆ ಮೆರಿಸ್‌ಬೇಕು ಅಂತಾ ಅಂಗೆಲ್ಲ ಅಂತಾ ಅಂಗೆಲ್ಲ ಕನಸ್ ಕಾಣ್‌ಬೇಡ ಅಂತ ಅವುನ್ ಕನುಸ್‌ಗೋಗಿ ಯೇಳ್‌ಬುಡಿ., ಆ ಮನೇಲಿರೋ ಜನವೆಲ್ಲಾ ಸತ್ರೂ ಈ ಮುದ್ಕ ಅಂಗೇ ಉಳ್ಕಂಡು ಎಲ್ರೂ ತಿಥಿ ಮಾಡುಕ್ಕೆ, ಎಲ್ರೂ ದುಃಖಾನು ಲೆಕ್ಕ ಹಾಕೂಕೆ ಇರ್ಬೇಕಾಗದೆ.’ ಅಂತಾವ್ರೆ. ನಂಗೆ ಯೆದುರ್ಕೆ ಆಯ್ತದೆ ಯವ್ವೋ ಅವುರೆಲ್ಲಾ ಬತ್ತಾವ್ರೆ. ನಿನ್ನಾ ಕೇಳ್ತಾವ್ರೆ. ಮಾಯದ ಬೂದಿ ಎರಚಿ ಹಿಡೀರಿ ಅವನಾ, ಅವನ ತಾಯೀನಾ ಹಿಡ್ಕೋಕ್ಕೆ ಹೋಗ್ತಿದ್ದಾನೆ ; ಅವಳಿಂದ ಬಚಾವಾಗೂಕೆ ನೋಡ್ತಾವ್ನೆ’ ಅಂತಾ ಕೂಗ್‌ತಾವ್ರೆ. ‘ಅವುನ್ ತಾಯಿ ಅವಳ ಗಂಡನಿಂದ ಎಷ್ಟೋ ಶಿಕ್ಷೆಪಟ್ಟು ಸಾಯೋತನಕ ಆ ನರಕದ ಮನೆಯಲ್ಲೇ ಇನ್ನೂ ಸಾಯಬೇಕಾಗದೆ. ..’ ‘ತಗೊಳ್ಳಿ ಈ ಹಗ್ಗನ. .. ಎಸಿರಿ ಅವುನ್ ಕುತ್‌ಗೇ ಅಂತಾವು. .. ಅವ್ವೋ ಅವ್ವೋ. ..’ ಎಂದು ಪ್ರಜ್ಞೆಯಿಲ್ಲದೆ ಹೊರಳಾಡಿ ಮತ್ತೆ ಮೆಲ್ಲಗೆ ಉಸಿರಾಡುತ್ತ ನಿಧಾನಕ್ಕೆ ಕಣ್ಣು ತೆರೆಯುವುದನ್ನು ಮಾಡುತ್ತಾ ನಿಶ್ಶಬ್ದನಾದ. +ಎಂದೋ ಯಮಲೋಕದ ಕತೆಗಳನ್ನೆಲ್ಲ ಕೇರಿಯಲ್ಲಿ ಹಲವಾರು ಬಾರಿ ಎಷ್ಟೋ ಸಾರಿ ಕನಸು ಕಂಡು ಹೆದರಿ ಹೆದರಿ ನಡುಗುತ್ತಿದ್ದ ಹೂವ ಈ ಕ್ಷಣದಲ್ಲೇ ತನ್ನ ಅಚೇತನದಲ್ಲಿ ತುಂಬಿದ್ದ ಭೀತಿಗಳೆಲ್ಲವನ್ನೂ, ಆ ಅಳಲನ್ನೂ, ತಾನು ಆ ಮನೆಯ ಕೇರಿಯ, ಊರಬೀದಿ, ಮನೆ, ಎಲ್ಲೆಂದರಲ್ಲಿ ಏನೆಲ್ಲ ಕಂಡು ಉಂಡು ಬೆದರಿ ಅಸ್ವಸ್ಥನಾಗಿದ್ದವನು, ತನ್ನ ಅಳು ಎಲ್ಲೆಲ್ಲೋ ಹೋಗಿ ತನ್ನನ್ನು ಎಲ್ಲೆಲ್ಲೋ ಹೀಗೆ, ಹೀಗೆ ಬಿಸಾಡುತ್ತದೆಂದು ; ಆ ಹೂವನಿಗೆ ಗೊತ್ತಿರಲಿಲ್ಲ. ಮನೆಯ ಜನ ಆ ಗೊಂದಲದಲ್ಲಿ ಸಿಲುಕಿ ‘ಓಹೋ ದೇವರೋ ಇಲ್ಲವೆ ಯಮರಾಜರೋ ಬಂದು ಇಂಗೇ ಈ ಮನೆಗೂ ಆ ನರಕಕ್ಕೂ ಏನೇನೋ ಏಳ್ತಾ, ನಮ್ಮ ಹುವನ್ನ ಕರ್ಕವೋಗುಕೆ ಬಂದವ್ರೆ’ ಎಂದು ತರ್ಕಿಸಿದರು. +‘ಸ್ವಾಮಿ ಯಾವ್ ಪಾಪ ಮಾಡಿದ್ದದು ಅಂತಾ ಈ ಕಂದನ್ನಾ ಕರ್ಕವೋಗ್ ಬೇಕೂ ಅಂತಿದ್ದೀರಿ. ಅರ್‌ಗಿಸಾ ಇದಾಗುದಿಲ್ಲ. ಇನ್ನೂ ನಾನಿಲ್ಲಿ ಸಾಯ್ತಾ ಇರೂ ಮುದ್ಕ ಇದ್ದೀನಲ್ಲಾ: ನನ್ನ ಕರ್ಕಂಡು, ಇವನ್ನ ಬುಟ್‌ಬುಡಿ’ ಎಂದು ತಾವೆಲ್ಲ ಯಾವುದೋ ಮಹಾ ತಪ್ಪಿಗೆ ಸಿಕ್ಕಿದ್ದು, ಆ ತಪ್ಪಿಗೆ ತಾನೇ ಶಿಕ್ಷೆಗೆ ಒಳಗಾಗಿ ಸಾಯಲು ಸಿದ್ದ, ಎಂಬಂತೆ ನಿವೇದಿಸಿ ಕೊಂಡ. ಹೂವ ಮೆಲ್ಲಗೆ ಎಚ್ಚರವಾಗಿದ್ದ.ಹೀಗೆ ಹೂವ ಇಡೀ ಮನೆಗೆ ಒಂದು ಬಿಡಿಸಲಾಗದ ಒಗಟಾಗಿ, ಆ ಒಗಟೇ ಅವರ ವಸ್ತುವಾಗಿ ಬದುಕಾಗಿದೆಯೋ ಎಂಬಂತೆ ಇನ್ನೂ ಹುಡುಕಾಡುತ್ತಿರುವಾಗಲೂ ಸೂರ್ಯ ಏರಿ‌ಏರಿ ಇಳಿದಿಳಿದು ಸಂಜೆಯ ತಂಗಾಳಿಯನ್ನು ಚೆಲ್ಲುವ ತವಕದಲ್ಲಿದ್ದ. ಮನೆಯ ಜನ ಕದಲದಂತೆ ಉಚ್ಚೆ ಬಂದರೂ ಬಿಗಿ ಹಿಡಿದು ಕುಳಿತಿದ್ದರು. ಎಲ್ಲೋ ಪ್ರತ್ಯಕ್ಷವಾಗಿ ಇನ್ನೇಲ್ಲೋ ಅದೃಶ್ಯನಾಗಿ ಮತ್ತೆಲ್ಲೋ ಕೂಗುಹಾಗಿ ಹೇಗೇಗೋ ಇರುತ್ತಿದ್ದ ಹೂವನ ಅಪ್ಪ ಈಗ ಇದ್ದಕಿದ್ದಂತೆಯೇ ಆ ಮನೆಯ ದೊಡ್ಡ ಹಜಾರದಲ್ಲಿ ಪ್ರತ್ಯಕ್ಷನಾದ. ಎಲ್ಲರತ್ತ ಕುಡಿದು ಮಂಜಾಗಿದ್ದ ಕಣ್ಣುಗಳನ್ನು ಹರಿಸಿ ‘ಏನಿದೆಲ್ಲಾ’ ಎಂದುಕೊಂಡು ಹೂವನ ಮೇಲೆ ದೃಷ್ಟಿಹರಿಸಿ ಎಂತದೋ ಇಲ್ಲಿ ಘಟಿಸಿದೆ ಎನ್ನುತ್ತಾ ‘ಯಾಕಿಂಗ್ ಕುಂತಿದ್ದೀರಿ. ಏನಿದು. ’ ಎಂದು ಎಲ್ಲರನ್ನು ಕೇಳಿದ. ಹೂವನ ಅವ್ವಾ ‘ಏನಾದದೋ ಕಾಣ್‌ನಲ್ಲೋ ಭಗವಂತಾ’ ಎಂದು ನಿಟ್ಟುಸಿರು ಬಿಟ್ಟು ; ‘ಎಲ್ಲಾನು ಬಂದಿರು ಆ ದೇವ್ರೆ ನೋಡ್ಕಲಿ’ ಎಂದುಕೊಂಡಳು. +ಹೂವನ ಅಪ್ಪ ದೊಡ್ಡದಾಗಿ ತೇಗಿ ‘ಬಿಡ್ರಮ್ಮಿ ಇಲ್ಲಿ ಜಾಗವ್ವಾ”. ನಾಮೂ ಒಂದ್ ಮಾತು ಕೇಳ್ಮ; ದೇವ್ರೇನೀಲದು ಅನ್ನುದಾ. ’ ಎನ್ನುತ್ತಾ ನುಗ್ಗಿದ. ಯಾರೋ ತಡೆದರು ‘ಕುಡ್ದಿದಿಯೆ ಬ್ಯಾಡಾ. ದೇವ್ರು ಅನ್ನೋ ಬಯಾ ಇಲ್ಲುವೆ’ ಎಂದರು.ಲೆಕ್ಕಿಸದೆ ಮುಂದೆ ಹೋಗಿ ನಮಸ್ಕರಿಸಿ ‘ಎಲ್ಲಿಯಳವ್ವಾ ನೀನು ವತಾರಿಂದ್ಲೂ ನನ್ಮಗುನ್ ಮ್ಯಾಲೆ ಬಂದಿದಿಯಂತಲ್ಲಾ ; ಅದೂ ಬ್ಯಾರೆ ಅವುನಾ ಕರ್ಕಂಡೋಗ್ ಬೇಕಂತಿದ್ದಿಯೇ’ ಎಂದು ತೂರಾಡಿ ನಿಂತ. +ಅಲ್ಲಿ ಈಗ ಇದ್ದದ್ದೇ ಬೇರೆ. ತಂದೆಯ ಅಗಲವಾದ ಮುಖ, ಕೆಂಪನೆ ಮೇಣಸಿನ ಹಣಿನಂತೆ ಹೊಳೆವ ಕಣ್ಣುಗಳು, ಮಾತು ಮಾತಿಗೂ ಕುಣಿಯುವ ಮೀಸೆ, ಕ್ಷಣಕ್ಷಣವೂ ಬೀಸಾಡುವ ಬಲಿಷ್ಟ ಕೈಗಳು ಹೂವನಿಗೆ ಇನ್ನಿಲ್ಲದ ಭಯ ತರಿಸಿ, ದುಕ್ಕುದುಕ್ಕಳಿಸುತ್ತಾ ಇನ್ನೆಲ್ಲಿ ತನ್ನನ್ನು ತುಳಿದೇ ಸಾಯಿಸಿಬಿಡುವನೋ ಎಂದು ತತ್ತರಿಸುತ್ತಾ ಗಡಗಡ ನಡುಗುತ್ತಾ – ‘ಇನ್ಮೇಲೆ ಅಳೊಲೆ. ವಡೀಬ್ಯಾಡ. ಹೆಚ್ಚಿಗೇನಾರ ವೊಡುದ್ರೆ ನಾ ಎತ್ತಗರ ವೊಂಟೋಯ್ತೀನಿ’ ಎಂದು ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡರೂ, ಬಿಡದಂತೆ ನುಗ್ಗುವ ದುಕ್ಕಳಿಕೆಯ ದುಃಖವನ್ನು ಅತಿ ಸಾಹಸದಿಂದ ಒಳಕ್ಕೇ ನುಂಗಿಕೊಳ್ಳುತ್ತ ತನ್ನ ಅಪ್ಪನನ್ನು ಬೇಡಿಕೊಂಡ. ಅವನ ಅಪ್ಪನಿಗೆ ಇದೇನೋ ಕಾಟ ಎನಿಸಿ ‘ದೇವ್ರು ಬಂದ್ರೆ ವತಾರಿಂದ ಸಂದ್ಗಂಟ ಇರೂದಿಲ್‌ವಲ್ಲಾ’ ವಡೀಬ್ಯಾಡಾ, ವಡುದ್ರೆ ಎತ್ತಗರ ಎದುಬುಡ್ತೀನಿ ಅಂತಾವ್ನಲ್ಲಾ’ ಎಂದು ಮನದಲ್ಲೇ ಅಂದುಕೊಂಡು – ‘ಹೇಯ್ ಒಂದೇ ಮಾತ್ನಲ್ಲಿ ವುತ್ರಾಕೊಡು, ಯಾರು ನೀನು’ ಎಂದು ಕಿರುಚಿದ. ಹೂವ ಅಷ್ಟಕ್ಕೇ ಭೀತಿಯಿಂದ ಉಚ್ಚೆ ಉಯ್ದುಕೊಂಡು ‘ನಿನ್ ದಮ್ಮಯ್ಯ ವಡೀಬ್ಯಾಡ, ವಂಟೋಯ್ತೀನಿ . .. ವಲುತ್ತಾ’ ‘ಹಾಂ”””’ ಎಂದು ಹೂಂಕರಿಸೋ ಅವನ ಹಾವಾಭಾವಗಳಿಗೆ ಹೂವ ಮತ್ತೂ ನಡುಗಿ ಹೊರಗೆ ಓಡಿಹೋಗಲು ಎದ್ದು ನಿಂತು ಪ್ರಯತ್ನಿಸುತ್ತಿರುವಂತೆಯೇ ಅವನ ಅಪ್ಪ ‘ಲೇಯ್ ಹೇಳು ನೀನು ದೇವ್ರೋ ದೆವ್ವನೋ’ ಎಂದು ಮುಡಿಬಿಟ್ಟಿದ್ದ ಉದ್ದನೆಯ ಕೂದಲನ್ನು ಮುಂಗೈಗೆ ನುಲಿದು ಜಡಿದು ಕೇಳಿದ. ಎಲ್ಲರಿಗೂ ಈಗ ಅನುಮಾನವಾಗತೊಡಗಿತ್ತು. ಅವನ ಅವ್ವ ಕಣ್ಣೀರು ತುಂಬಿಕೊಳ್ಳುತ್ತಾ ವತಾರಿಂದ ತನ್ನ ಮಗ ತಿಂದ ಏಟುಗಳು, ಬೈಸಿಕೊಂಡ ಬೈಗಳು, ಈಗ ಅವನ ಅಪ್ಪನ ಎದಿರು ‘ಒಡೀಬ್ಯಾಡಾ ನಿನ್ನ ದಮ್ಮಯ್ಯ’ ಎಂದು ಬೇಡಿಕೊಳ್ಳುತ್ತಿರುವ ಬಗೆಯನ್ನು ಕಂಡು ದುಃಖ ತಡೆಯಲಾಗದೆ ಮರೆಯಲ್ಲಿ ನಿಂತು ಬಿಕ್ಕತೊಡಗಿದಳು. ಹೂವ ಹಿಂಸೆಯಿಂದ ಬಿಡಿಸಿಕೊಳ್ಳಲಾಗದೆ ಕಿಟಾರೆಂದು ಕಿರುಚಿಕೊಂಡ. ಅಕ್ಕಪಕ್ಕದ ಜನರೂ, ಬೀದಿ ಜನರೂ ಈಗ ಎಲ್ಲ‌ೠ ಆ ಶಬ್ದಕ್ಕೆ ಸೇರಿದರು. ಮಗ ಮತ್ತು ಅಪ್ಪ ಇಬ್ಬರೂ ಎರಡು ಬಗೆಯಲ್ಲಿ ಕಿರುಚಿಕೊಳ್ಳುತ್ತಿದ್ದರು. ಅವನ ಅಪ್ಪನಿಗೆ ಈಗ ಯಾವ ಅನುಮಾನವೂ ಉಳಿದಿರಲಿಲ್ಲ. ಇದು ದೆವ್ವ ಎಂತಲೇ ತೀರ್ಮಾನಿಸಿದ. ಹೂವನಿಗೆ ದೇವರು ಬಂತೋ, ದುಃಖ ಬಂತೋ, ಸಾವು ನೋವು ಅಸಾಧ್ಯ ವಿಷಾದ ಬಂತೋ ಯಾವುದೂ ಕೇಡ ಅಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಆದರೂ ಎಲ್ಲರೂ ಎದ್ದು ನಿಂತು ‘ಗಾಳಿ ಕಣ್ರಪ್ಪೋ, ಗಾಳಿ. ಗಾಳಿ ಮೆಟ್ಕಂದದೆ ವೂವ್ರುನ್‌ಗೇ’ ಎಂದು ಮಾತನಾಡಿಕೊಂಡರು. ‘ಈ ಅನ್ನಾಡಿಗೋಳು ವತಾರಿಂದ ದೇವ್ರಂತೆ, ಶನಿಯಂತೆ, ಅಮ್ಮನಂತೆ ಅಂತಾ ಕುಂತವರೆ ; ಗಾಳಿಗುಟ್ಟ ಇಡೀಲಾರ್ದೆ’ ಎಂದು, ತನ್ನ ಮಗನನ್ನು ಮುರಿದುಕೊಳ್ಳಲು ಓ‌ಈ ದುಷ್ಟ ಶಕ್ತಿ ಬಂದಿದೆ ಎನ್ದು ಹೂವನ ಅಪ್ಪ ಬೆಂಕಿಯಂತೆ ಉರಿಯುತ್ತಾ ‘ಬೇವುನ್ ಸೊಪ್ಪೆ ವುಣುಸೆ ಚೆಬೆನೋ ಮುರ್ಕ ಬನ್ನಿ’ ಎಂದು ಕೂಗಿದ. +‘ಬುಟ್ ಬುಡೂ” ಅಳೊಲೇ, ವಂಟೋಯ್ತೀನಿ’ ಎಂದ ಈ ಹೂವನ ಮಾತಷ್ಟೆ ಎಲ್ಲರಿಗೂ ಸಾಕ್ಷಿಯಾಗಿ ಬೇಕಾಗಿದ್ದದ್ದು. ‘ನೋಡ್ದಾ – ಯಂಗ್ ಬಿಚ್ಚದು ಬಾಯ’ ವೊಂಟೋದದಂತೆ ಎಲ್ಲೋ’ ಎಂದು ಈ ಉದ್ದ ಮುಡಿಯ ನುಲಿಯುತ್ತಾ ಕುಕ್ಕರಿಸಿದ. ಬೇವಿನ ದೊಡ್ಡ ಕೋಲುಗಳನ್ನು ಯಾರೋ ಅಲ್ಲಿ ಹಿತ್ತಲಲ್ಲಿ ರಭಸವಾಗಿ ಮುರಿದು ಕೊಟ್ಟರು. ಬುಗುಬುಗುನೇ ಆ ಹೂವನ ಸುತ್ತಿಸಿ ಬಡಿಯುತ್ತಾ ‘ಏಳು ಎಲ್ಲಿದ್ದೇ ಎಲ್ ಸಿಕ್ಕಾ ಇವ್ನು. ಯಾಕ್ ಬಂದೆ, ಯಾರುನ್ನಾ ಕರ್ಕೊಂಡೋಗ್‌ಬೇಕನ್ಕಂದಿದ್ದಿಯೇ’ ಎಂದು ಹೂವನ ಅಪ್ಪ ಕುಣಿದಾಡಿದ. ಇದೆಲ್ಲವನ್ನೂ ನೋಡಿ ಅವನ ಅವ್ವ ಅಳಲಾರದೆ ಅಳತೊಡಗಿದಳು. ಇಡೀ ಮನೆ ಈಗ ಭೂತ ಅವರೂಪವಾಗಿ ಏರ್ಪಟ್ಟಿತು. ಹೂವನ ತಾತ ‘ಮೆತ್ಗೊಡೀಯೋ, ಎಳೇಮೈ ತಡಿಲಾರ್ದು ಏಟಾ, ಅಯ್ಯೋ ಮೆತ್ಗೆಕಲಾ, ಅಟ್‌ಮ್ಯಾಕೆ ಎತ್ತಿ ಕುಕ್ಕುದ್ರೆ ಬದ್ಕನ್ಲಾ’ ಎಂದು ಆ ದೇವರು, ಆ ದೆವ್ವ ಆ ಹೂವ, ಆ ಅಪ್ಪ, ಆ ಜನ, ಆ ಅರ್ಥ ಕಳಕೊಂಡ ಆ ಕ್ಷಣ ವಾತಾವರಣದಲ್ಲಿ ಅಲುಬತೊಡಗಿದ. ಹೂವನ ಅವ್ವ ನೋಡಲಾರದೆ ‘ಅಯ್ಯೋ ಭಗವಂತಾ, ಈ ಕೋಲ್ಲೆನೆಲಾ ನೋಡುಕೆ ಆಗುದಿಲ್ಲ, ಕರ್ಕೊಳ್ಳೋ ನಿನ್ ಮಗುನ್ ತಿನ್ನಾ’ ಎಂದು ಅಳ ತೊಡಗಿದಳು. +ಏಟುಗಳಿಂದ ಬಿಡಿಸಿಕೊಳ್ಳಲು ಹೂವ ‘ಅಪ್ಪೋ, ವಡೀಬ್ಯಾಡ ಸತ್ತೋಯ್ತೀನಿ. ನೀನೇಳ್ದಂಗೆ ಕೇಳ್ತೀನಿ ವಡೀಬ್ಯಾಡಾ ಬಿಟ್‌ಬುಡು’ ಎಂದು ಅಂಗಲಾಚಿದ. ಅವನ ಅಪ್ಪ ಹೂಂಕರಿಸಿ ‘ಹೊಂಟೋದೀಯಾ ಇನ್‌ಮ್ಯಾಲೆ ಯಾವತ್ತೂ ಇಂಗ್ ಮಾಡೋಲ್ಲ. ಇತ್ತಗ್ ತಲೆ ಆಕೋಲ್ಲಾ’ ಎಂದು ಕೇಳುತ್ತಿರುವಂತೆಯೇ, ‘ಅಳೋದಿಲ್ಲ. ಇನ್ಮೆಲೆ ಯಾವತ್ತೂ ಅಳೂದಿಲ್ಲ. ಇನ್ನೊಂದ್ಸಲ ಇಂಗ್ ಮಾಡುದ್ರೆ ಸಾಯಿಸ್ ಬುಡು’ ಎಂದು ಯಾತನೆಯಿಂದ ಬೇಡಿದ. ‘ನಿನ್ನ ಅಟ್ಟೂ ಸುಲ್‌ಬೇಟೀಲಿ ಬಿಟ್ಟೆನೆ. ಬನ್ನಿ ಮರುತ್ತಕೆ ’ ಎಂದು ಹಜಾರದಿಂದ ಹೊರಕ್ಕೆ ಮೆಟ್ಟಿಲಮೇಲೆ ದರದರ ಎಳೆದುಕೊಂಡು ‘ನನ್ ಮಗ್ನಾ ಮುರ್ಕೋಕ್ ಬಂದಿದ್ದಾ, ಅಷ್ಟು ಸುಲಬ್ರೇಟೆಲಿ ನನ್ ಮಗ್ನ ಬಿಟ್‌ಕೊಟ್ಟೇನೋ ಮುರ್ಕ ವೋಗೂಕೆ ನಿನ್ಗೆ’ ಎಂದು ಅಮಲಿನಲ್ಲಿ ಹೂವನ ಅಪ್ಪ ಮತ್ತೂ ಹೊಡೆಯತೊಡಗಿದ. ಒಂದು ಏಟಿಗೆ ‘ಲವ್ವೊ, ಲಪ್ಪೋ’ ಎನ್ನುತ್ತಾ ಇನ್ನೊಂದೇಟಿಗೆ ‘ಲಮ್ಮೋ ಲತ್ತೆಯೋ, ಲಕ್ಕೋ’ ಎನ್ನುತ್ತಾ ‘ಯಾರಾರ ಬಿಡುಸ್ರೀ’ ಎನ್ನುತ್ತಾ ಅಳುತ್ತಾ ಅಪ್ಪನ ಬಿಗಿಯಾದ ಹಿಡಿತದಲ್ಲಿ ಹುಳುವಿನಂತೆ ಒದ್ದಾಡತೊಡಗಿದ. ಅವನ ಅಪ್ಪನ ವಿಕಾರ ಕೋಪದ ಎದಿರು ಯಾರೂ ಮುಂದೆ ಬರುತ್ತಿಲ್ಲ. ‘ಕಬ್ಬಿಣ ಬಗ್ಗೋರ್ಗೆ ಬಗ್ಗುದು, ನೋಡ್ದಾ ಗಾಳಿಯ ಎಂಗ್ ಇಡ್ದ ?’ ಎಂದು ಹೂವನ ಅಪ್ಪ ದೆವ್ವ ಬಿಡಿಸುವುದರಲ್ಲಿ ಪಡೆದಿದ್ದ ಬಿರುದುಗಳನ್ನು ನೆನೆಸಿಕೊಂಡರು. ಮತ್ತೆ ಕೆಲವರು ‘ಆ ಏಟೆಲ್ಲ ಗಾಳಿಗೆ ತಾನೆ. ಅದು ವಂಟೋದ್ ಮ್ಯಾಕೆ ಆ ನೂವು ಇರೂದಿಲ್ಲ’ ಎನ್ನುತ್ತಿದ್ದರು. +ಹೊತ್ತು ಇಳಿದು ಹೋಗಿತ್ತು. ‘ನಿನ್ನ ಬನ್ನಿ ಮರುತ್ತಾವು, ಮೊಳೆವೊಡ್ದು ಕಟ್ಟಾಕ್ದೆ ಇಂಗೇ ಬಿಟ್ರೆ ತಿರ್ಗಾ ಬತ್ತೀಯೆ ?’ ಎನ್ನುತ್ತಾ ಬನ್ನಿ ಮರಕ್ಕೆ ಕೂದಲು ಕಿತ್ತು ಅದಕ್ಕೆ ಮೊಳೆ ಜಡಿದು ಬಿಟ್ಟರೆ, ಆ ದೆವ್ವವನ್ನು ಯಾರೂ ಬಿಡಿಸಲಾರದ ಹಾಗೆ ಕಟ್ಟುಹಾಕಿಬಿಟ್ಟಿವೊ ಎಂಬ ನಂಬಿಕೆಯಲ್ಲಿ ಹೂವನ ಅಪ್ಪ ವಿಕಾರವಾಗಿ ದರದರ ಎಳೆದು ಬೀದಿಗೆ ಹೊರಟ. ಕತ್ತಲು ಕವಿಯುತ್ತಿತ್ತು. ಜನವೆಲ್ಲ ‘ಇದು ಎಂತಾ ರಾಕಾಸಿ ಗಾಳಿಯಪ್ಪಾ ವತಾರಿಂದ ಬಿಡ್ದೆ ಅದಲ್ಲಾ’ ಎನ್ನುತ್ತಿದ್ದರು. +ಹೂವನ ತಾತ ‘ಇನ್ನೂ ಎಟ್ಟಿದ್ದದೋ ಅಟ್ಟೂ ಅಗೋಗ್ಲಿ. ಈ ಜೀವ ಅನ್ನುದು ನಮ್ಮ ಬದ್ಕುಕೇ ಬಿಡೋಲ್ಲ. ಕುಯ್ಕನ್‌ಕುಯ್ಕಂದು ನಂನೆ ತಿಂತದೆ’ ಎಂದು ಅವನ ಮಗನ ರಭಸವಾದ ಹೆಜ್ಜೆಗಳನ್ನು ಹಿಂಬಾಲಿಸಿದ. ಎಲ್ಲರೂ ಬನ್ನಿ ಮರದ ಬಳಿ : ಊರ ಹೊರಭಾಗಕ್ಕೆ ಬಂದರು. ‘ವಂಟೋಯ್ತಿನಿ’ ಅಂತಾ ಭಾಷೆ ಕೊಡು ಎಂದು ಹೂವನ ಅಪ್ಪ ಹೂವನಿಂದ ಭಾಷೆ ತೆಗೆದುಕೊಂಡ. ಅಪ್ಪನ ಮಾತಿಗೆ ತಕ್ಕಂತೆ ಹೂಂಗುಟ್ಟಿ ಅದರಂತೆ ಹಾಡಿದರೆ ಈಗ ತಾನು ಬದುಕಲು ಸಾಧ್ಯ ಎಂಬಂತೆ ಹೂವ ವದ್ದಾಡುತ್ತಿದ್ದ. ‘ನೀನು ಏಳುತ್ತಕ್ಕೆ ವಂಟೋಯ್ತೀನಿ, ಇನ್ ಮ್ಯಾಲೆ ಅಳೊಲೆ’ ಎಂದಿದ್ದೇ ತಡ, ಉದ್ದ ಮುಡಿಯನ್ನು ನುಲಿದಿದ್ದವನು ಪಟಕ್ಕೆಂದು ಎತ್ತಿ ಕುಕ್ಕರಿಸಿ ಹೂವನ ಸಮೇತ ಎಳೆದಾಡಿ ಜಡಿದ. ಕೈತುಂಬಾ ಅಷ್ಟೂ ಕೂದಲೂ ಪತ್ ಎಂದು ಬಂದವು. ಕೂದಲ ಬುಡದಿಂದ ರಕ್ತ ಹರಿಯುತ್ತಾ ಹರಿಯುತ್ತಾ ಹೂವನ ಪಾ ಕುಣಿಯುತ್ತಾ, ಈ ದೆವ್ವವನ್ನು ಗೆದ್ದೇ ಎಂಬ ಉತ್ಸಾಹದಲ್ಲಿ ಬನ್ನಿ ಮರಕ್ಕೆ ಮೊಳೆ ಜಡಿಯುತ್ತಿದ್ದಂತೆಯೇ ಹೂವ ಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದ. ಹೂವನನ್ನೂ ಯಾರೋ ಇಬ್ಬರು‌ಊ ಹೊತ್ತುಕೊಂಡರು. ‘ಆಯ್ತು ನಡೀರಿ’ ಎಂದು ಊರಿಗೆ ಹೊರಟರು. ಕತ್ತಲು ಮೆತ್ತಿಕೊಳ್ಳುತ್ತಿತ್ತು. ಸ್ಮಶಾನ ಮೌನವೋ ಇಲ್ಲವೇ ಸ್ಮಾಶಾನದಿಂದ ಹಿಂದಿರುಗಿ ಬರುತ್ತಿರುವವರಂತೆಯೇ ಎಲ್ಲರೂ ನಡೆಯುತ್ತಿದ್ದರು. ಅಸ್ಪಷ್ಟ ಬೆಳಾಕಿಗೆ ಪ್ರಜ್ಞೆ‌ಇಲ್ಲದ ಹೂವನ ಕೈಕಾಲುಗಳು ತೇಲಾಡುತ್ತಿದ್ದವು. ಅವನ ಅವ್ವ ಎಲ್ಲವನ್ನೂ ನೋಡಿ ನೋಡಿ ಬೇಸತ್ತು ; ಈ ಮಗನ ಅಳು ನಿಲ್ಲಿಸಲು ಆ ಮುಂಜಾವು ಅಳು ನಿಲ್ಲಿಸಲು ಕುತ್ತಿಗೆ ಹಿಚುಕಲು ಹೋಗಿದ್ದವಳು-ಎಲ್ಲವನ್ನು ನೆನೆಸಿಕೊಂಡು ಇದ್ದಕಿದ್ದಂತೆ ಇಡೀ ಆ ಬಯಲು, ಕತ್ತಲು ಎಲ್ಲವೂ ಬಿರಿಯುವ ಹಾಗೆ ಈ ಅಳು ನಿಲ್ಲಿಸೋಕ್ಕೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಮಗನನ್ನು ನೋಡುತ್ತಾ ಅಳತೊಡಗಿದಳು. +***** +ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […] +ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […] +ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_238.txt b/Kannada Sahitya/article_238.txt new file mode 100644 index 0000000000000000000000000000000000000000..b40e410efff7735ecb11501dd7488bcb7e731122 --- /dev/null +++ b/Kannada Sahitya/article_238.txt @@ -0,0 +1,348 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ – ೮ +– ೧ – +ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ ಲೆಕ್ಕಕ್ಕೆ ರೂಲು ಹಾಕಿ, ಗಂಡ ಖುಷ್ಕಿ ತರಿ ಬಾಗಾಯ್ತುಗಳ ಮೇಲೆ ಹೋಗಿ ಬರೆದು ತಂದ ಪಹಣಿಯ ಗೋಶ್ವರೆ ತಯಾರಿಸುವುದನ್ನು ಮಾತ್ರ ನಿಲ್ಲಿಸಲಾಗಲಿಲ್ಲ. +ಅಕ್ಕಮ್ಮನನ್ನು ಊರಿಗೆ ಕರಕೊಂಡು ಹೋಗಲು ಕಲ್ಲೇಶ ಬಂದಿದ್ದ. ಅವರು ಇಬ್ಬರೂ ನಾಳೆ ಬೆಳಗ್ಗೆ ಊರಿಗೆ ಪ್ರಯಾಣ ಮಾಡಬೇಕು ಎನ್ನುವಾಗ ಈ ದಿನ ಸಂಜೆ ಕುಳವಾಡಿ ಬಂದು ಶ್ಯಾನುಭೋಗರನ್ನು ಕರೆದ: ‘ಅಂಗ್ಡಿ ಚನ್ನಸೆಟ್ಟಿ ಮನ್ಲಿ ಪಂಚಾತಿಗೆ ಮಡಗ್ಯವ್ರೆ. ಬರ್ಬೇಕಂತೆ.’ +‘ಅದೇನೋ ಪಂಚಾಯ್ತಿ?’ – ನಂಜಮ್ಮ ಕೇಳಿದಳು. +‘ಚನ್ನಸೆಟ್ಟಿ ಅವ್ನ ಸ್ವಸೆ ನರಸೀನ ಮಡಿಕ್ಕಂಡವ್ನಂತೆ. ಅವ್ಳ ಗಂಡ ಪಂಚಾತಿ ಕುಂಡ್ರುಸವ್ನೆ.’ +‘ಅದೇನಿದ್ರೂ ಮುಖ್ಯ ಮುಖ್ಯವಾದೋರೇ ಮಾಡ್ಕುಳುಕ್ ಹೇಳಪ್ಪ. ನಮ್ಮನಿಗೆ ನ್ಯಂಟ್ರು ಬಂದವ್ರೆ, ಅವ್ರು ಬರಾಕುಲ್ಲ ಅಂತ ಹೇಳು.’ +‘ಶ್ಯಾನುಬಾಗ್ರು ಬರ್ಲೇಬೇಕಂತೆ. ಯಲ್ಲಾ ಕರ್ಕಂಬರಾಕೆ ಏಳವ್ರೆ.’ +ಗ್ರಾಮದ ನ್ಯಾಯ ಪಂಚಾಯಿತಿಗಳಲ್ಲಿ ಶ್ಯಾನುಭೋಗರು ಇರಬೇಕೆಂಬುದೇನೋ ಪದ್ಧತಿ. +ಚೆನ್ನಿಗರಾಯರನ್ನು ನ್ಯಾಯಸ್ಥಾನದಲ್ಲಿ ಕೂರಿಸಿದರೆ ಹಿಟ್ಟು, ತರಿ, ಯಾವುದೂ ತಿಳಿಯುವುದಿಲ್ಲವೆಂಬುದು ಎಲ್ಲರಿಗೂ ಗೊತ್ತು. ಎಂಥವರೇ ಆದರೂ ಕರಣಿಕರೆಂಬುವವರು ಇರಲೇಬೇಕಲ್ಲ. ಚೆನ್ನಿಗರಾಯರು ಹೊರಟರು. ಭಾವನ ಹಿಂದೆ ಕಲ್ಲೇಶನೂ ಹೋದ. +ಚನ್ನಸೆಟ್ಟಿಯ ಮನೆಯ ಒಳ ಅಂಗಳದಲ್ಲಿ ಗ್ರಾಮದ ಮುಖ್ಯರೆಲ್ಲ ಸೇರಿದ್ದರು. ಪಟೇಲ ಶಿವೇಗೌಡ, ಅವನ ಭಾಮೈದ ಮಾಜೀ ಶ್ಯಾನುಭೋಗ ಸಿವಲಿಂಗ, ರೇವಣ್ಣಸೆಟ್ಟಿ, ನಾಲ್ಕು ಜನ ಪಂಚಾಯ್ತಿ ಮೆಂಬರುಗಳು, ಇಬ್ಬರು ಜೋಯಿಸರೇ ಅಲ್ಲದೆ ಇತರ ಹತ್ತು ಹದಿನೈದು ಜನ ಸೇರಿದ್ದರು. ಎಲ್ಲರಿಗೂ ಎಲೆ, ಅಡಿಕೆ, ಹೊಗೆಸೊಪ್ಪು ಬೀಡಿಗಳನ್ನು ತಂದು ಮುಂದೆ ಇಟ್ಟಿದ್ದರು. ಪಂಚಾಯ್ತಿಯನ್ನು ಶುರುಮಾಡುವ ಮೊದಲು ನ್ಯಾಯಪೀಠದಲ್ಲಿ ಯಾರು ಕೂರಬೇಕೆಂಬ ಪ್ರಶ್ನೆ ಎದ್ದಿತು. ಶ್ಯಾನುಭೋಗರು ಎಂದು ಯಾರೋ ಎಂದುದಕ್ಕೆ ಪಟೇಲ ಶಿವೇಗೌಡ, ‘ಆ ಮಂಕಪ್ಪುಂಗೇನ್ ತಿಳೀತೈತೆ?’ ಎಂದ. ಪಟೇಲರು ಎಂದು ಮತ್ತೊಬ್ಬರು ಸೂಚಿಸಿದುದಕ್ಕೆ ರೇವಣ್ಣಶೆಟ್ಟಿ ವಿರೋಧಿಸಿದ. ‘ಸ್ಥಳದೋರು ಯಾರೂ ಬ್ಯಾಡ. ಪೋಲೀಸ್ನಲ್ಲಿದ್ದೋರು, ಶ್ಯಾನುಭೋಗರ ಭಾಮೈದ ಕಲ್ಲೇಶದೋಸರು ಆಗ್ಲಿ’ – ಎಂದು ಫಿರ್ಯಾದಿ ಗಿರಿಯನೇ ಸೂಚಿಸಿದುದಕ್ಕೆ ಎಲ್ಲರೂ ಒಪ್ಪಿದರು. ಎಲ್ಲರ ಅಭಿಮತದ ಮೇರೆಗೆ ಕಲ್ಲೇಶ ಮಧ್ಯದ ಜಾಗದಲ್ಲಿ ಕುಳಿತು ಹೊಗೆಸೊಪ್ಪು ಹಾಕಿಕೊಂಡು ಕೇಳಿದ: ‘ಈಗ ನ್ಯಾಯ ಏನು? ಯಾರಿಗೆ ಅನ್ಯಾಯ ಆಗಿದೆ, ಸಭೆ ಮುಂದೆ ಹೇಳಿ.’ +ಗಿರಿಯಶೆಟ್ಟಿ ಹೇಳಿದ: ‘ನಮ್ಮಪ್ಪ ನನ್ನ ಹೆಂಡ್ತೀನ ಮಡೀಕಂಡವ್ನೆ. ಇಬ್ರಿಗೂ ದಂಡ ಆಕುಸ್ಬೇಕು.’ +‘ನಿಮ್ಮಪ್ಪ ಯಾರು?’ +‘ಅವ್ನೇಯ, ಅಲ್ಲಿ ಕುಂತಿರೋ ಅಲಾಲ್‌ಕೋರ ನನ್ಮಗ’ – ಎಂದು ಗಿರಿಯ, ಕಂಬದ ಹತ್ತಿರ ತಲೆ ತಗ್ಗಿಸಿ ಕುಳಿತಿದ್ದ ಚನ್ನಶೆಟ್ಟಿಯ ಕಡೆಗೆ ಕೈತೋರಿಸಿದ. +ಕಲ್ಲೇಶ ವಿವರವಾಗಿ ವಿಚಾರಿಸಿದಾಗ ತಿಳಿಯಿತು; ಗಿರಿಯಶೆಟ್ಟಿ ಹೊಲಕ್ಕೆ ಗೇಯಲು ಹೋಗುತ್ತಾನೆ. ಚನ್ನಶೆಟ್ಟಿ ಯಾವಾಗಲೂ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುತ್ತಾನೆ. ಮನೆಯ ಜಗುಲಿಯ ಮೇಲೆ ಅಂಗಡಿ ಇದೆ ಗಿರಿಯನ ಹೆಂಡತಿ ನರಸಿ ಮನೆಯಲ್ಲೇ ಇರುತ್ತಾಳೆ.ಅವಳ ಮದುವೆಯಾಗಿ ಎಂಟು ವರ್ಷವಾಯಿತಂತೆ. +ಇಂತಹ ನ್ಯಾಯಗಳಲ್ಲಿ ಪ್ರತಿಯೊಬ್ಬರ ವಿವರವನ್ನೂ, ಹೇಳಿಕೆಯನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಕಲ್ಲೇಶ ಹೇಳಿದ. +ಚನ್ನಸೆಟ್ಟಿಯ ಹೆಂಡತಿ ಸತ್ತು ಇಪ್ಪತ್ತು ವರ್ಷವಾಯಿತು. ಅವನು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ತಾಯಿ ಇಲ್ಲದೆ ಬೆಳೆದ ಗಿರಿಯಶೆಟ್ಟಿ ಸ್ವಲ್ಪ ಪೀಚು ಅಂತಲೇ ಅನ್ನಬೇಕು. +ಕಲ್ಲೇಶ ಚನ್ನಶೆಟ್ಟಿಯ ಹೇಳಿಕೆ ಕೇಳಿದ. ತಲೆ ತಗ್ಗಿಸಿಕೊಂಡೇ ಅವನು ಹೇಳಿದ: ‘ಸ್ವಾಮಿ, ನಾನು ಸನಿ ಸೂಳೆ ಮಗುನ್ನ ಎತ್ತ ಹಂಗಾತು. ನನ್ನ ಮರ್ವಾದಿ ಕಳೀಬೇಕು ಅಂತ, ಏಳ್ಕೊಟ್ಟೋರ ಮಾತು ಕೇಳ್ಕಂಡು ಈ ನನ್ಮಗ ಹಿಂಗ್ ನ್ಯಾಯ ಕುಂಡ್ರಸವ್ನೆ. ನನ್ನ ಅಂಗ್ಡಿ ಸಂಪಾದ್ನೇಲಿ ಈ ಪಾಪರ್ ನನ್ ಮಗುಂಗೆ ಒಂದು ದಮ್ಡಿ ಕೊಡಾಕುಲ್ಲ. ನನ್ ಜಮೀನು ಕೊಡಾಕುಲ್ಲ. ’ +‘ನಮ್ಮವ್ವಾಣೆ ನಾ ಸುಳ್ ಏಳಾಕುಲ್ಲ. ನಾನೇ ಕಂಡಿದ್ದೀನಿ’ – ಎಂದು ಗಿರಿಯ ಶೆಟ್ಟಿ ಪ್ರಮಾಣ ಮಾಡಿದ. +‘ಆಯ್ತು, ನಿನ್ನ ಹೆಂಡ್ತೀ ಹೇಳಿಕೇನೂ ಕೇಳ್ಬೇಕು, ಕರಿ ಇಲ್ಲಿ’ – ನ್ಯಾಯಪೀಠದ ಕಲ್ಲೇಶ ಕೇಳಿದ. +‘ಬಾರಮ್ಮಾ ಇಲ್ಲಿಗೆ’ – ಎಂದು ಅಯ್ಯಾಶಾಸ್ತಿಗಳು ಕೂಗಿದರು. ನರಸಿ ಬರಲಿಲ್ಲ. ‘ನ್ಯಾಯ ಕರೀತೈತೆ. ಬರ್ಬೇಕು’ – ಎಂದು ಅವರು ಒತ್ತಾಯ ಮಾಡಿದರು. ಶಾನುಭೋಗ ಚೆನ್ನಿಗರಾಯರ ಬಾಯಿಯಲ್ಲಿ ಹೊಗೆಸೊಪ್ಪಿನ ರಸವಿಲ್ಲವಾದುದರಿಂದ ಅವರು, ‘ಹೂಂ’ ಎಂದರು. ನರಸಿ ಅಡಿಗೆಮನೆಯ ಬಾಗಿಲಿನ ಹತ್ತಿರ ಬಂದು ನಿಂತುಕೊಂಡಳು. ಈ ಊರಿನಲ್ಲಿ ಅವಳನ್ನು ನೋಡದವರು ಯಾರೂ ಇಲ್ಲ. ಕಲ್ಲೇಶ ಅವಳನ್ನು ನೋಡಿದ ತಕ್ಷಣ ಬೆರಗಾಗಿಬಿಟ್ಟ. ಕೆಂಪಗೆ, ಗುಂಡು ಮುಖದ, ಗತ್ತುಗಾರಿಕೆ ಎದೆಯ, ಎತ್ತರವಾದ ಅವಳು ನಿಂತ ರೀತಿಯಲ್ಲಿಯೇ ಏನೆಂದು ನ್ಯಾಯ ಹೇಳಬೇಕೆಂಬುದು ಅವನಿಗೆ ತಿಳಿಯದಂತೆ ಆಯಿತು. ಅವಳು ಬಂದು ನಿಂತಮೇಲೆ ಅಯ್ಯಶಾಸ್ತ್ರಿಗಳು ಹೇಳಿದರು: ‘ಅಮ್ಮಾ, ಗಂಡನ ತಂದೆ ಮಾವ ಅಂದ್ರೆ ತಂದೆ ಸಮಾನ, ಸೊಸೆ ಅಂದ್ರೆ ಮಗಳ ಸಮಾನ. ಇದೆಲ್ಲಾದ್ರೂ ಉಂಟೆ? ಹೀಗಾದ್ರೆ ಮಳೆ ಬೆಳೆ ಆಗುತ್ತೆಯೆ? ನಾನ್ಹೇಳೋದು ಗೊತ್ತಾಗ್ಹೋಯ್ತ? ಆಂ, ಏನಯ್ಯಾ ಚೆನ್ನಶೆಟ್ಟಿ?’ +ಅಣ್ಣಾಜೋಯಿಸರು ಮಂತ್ರಗಳನ್ನೇ ಹೇಳಿ ಧರ್ಮಾಧರ್ಮ ವಿವೇಚನೆಯ ಬಗೆಗೆ ವ್ಯಾಖ್ಯಾನ ಶುರುಮಾಡಿದರು. ಈ ಇಬ್ಬರು ಪುರೋಹಿತರ ಧರ್ಮಸೂಕ್ಷ್ಮ ಜ್ಞಾನಕ್ಕೆ ಉಳಿದವರೆಲ್ಲ ತಲೆಹಾಕುತ್ತಿದ್ದರು. ಶಾನುಭೋಗ ಚೆನ್ನಿಗರಾಯರು ಅದೇ ತಾನೇ ಬಾಯಿಗೆ ತುಂಬಿಕೊಂಡ ಹೊಗೆಸೊಪ್ಪಿನ ಸ್ವಾದವನ್ನು ತಮ್ಮಲ್ಲಿಯೇ ಸವಿಯುತ್ತಿದ್ದರು. ಆದರೆ ರೇವಣ್ಣಶೆಟ್ಟಿ ಹೇಳಿದ: ‘ಉಳಿದೋರ ಮಾತು ಬ್ಯಾಡಿ, ಆ ವಮ್ಮ ಏನಂತಾಳೆ ಕೇಳಿ,’ +‘ಹೂಂ, ಹೂಂ. ನೀನೇನಂತೀಯಾ ಹೇಳಮ್ಮ’ – ಕಲ್ಲೇಶ ಹೇಳಿದ. +‘ಸ್ವಾಮಿಯೋರೇ, ನೀವು ಈಟೊಂದೆಲ್ಲ ಏಳ್ತೀರಲಾ, ನಾನೊಂದ್ ಕೇಳ್ತೀನಿ ಜವಾಬ್ ಕೊಡ್ತೀರಾ?’ – ನರಸಿ ಪುರೋಹಿತದ್ವಯರನ್ನು ಕೇಳಿದಳು. +‘ಕೇಳು, ಕೇಳು. ಅಗತ್ಯವಾಗಿ ಕೇಳು’ – ಇಬ್ಬರೂ ಕೂಡಿ ಎಂದರು. +‘ಅನ್ನೆಲ್ಡಾಳುದ್ದ ಬಾವಿಗೆ ಆರಾಳುದ್ದ ಅಗ್ಗ ಬುಟ್ರೆ ಎಟುಕ್ತೈತಾ?’ +‘ಆಂ’ – ಉತ್ತರ ಹೊಳೆಯದೆ ಅಯ್ಯಾಶಾಸ್ತ್ರಿಗಳು ಕಕ್ಕಾವಿಕ್ಕಿಯಾದರು. ಉಳಿದ ಪಂಚಾಯಿತರೆಲ್ಲ ಸ್ತಬ್ಧರಾಗಿಬಿಟ್ಟರು. ರೇವಣ್ಣಶೆಟ್ಟಿ ಕಲ್ಲೇಶನಿಗೆ ಹೇಳಿದ: ‘ಸ್ವಾಮಿ, ಇನ್ನು ತೀರ್ಮಾನ ಏಳ್ಬುಡಿ.’ +‘ಈ ಮುಂಡೆಕುಟ್ಟೆ ನಾನು ಇನ್ ಇರಾಕುಲ್ಲ’ – ಎಂದು ಗಿರಿಯಶೆಟ್ಟಿ ತನ್ನ ಷರತ್ತು ಹಾಕಿದ. +ಕಲ್ಲೇಶ ಐದು ನಿಮಿಷ ಯೋಚಿಸಿ ತೀರ್ಮಾನ ಹೇಳಿದ: ‘ಹೆಂಡ್ತಿ ಜೊತೆ ಇನ್ನು ಇರುಲ್ಲ ಅಂತ ಗಂಡ ಹೇಳ್ತಾನೆ. ಅವ್ನ ಇಚ್ಛೆಗೆ ವಿರೋಧವಾಗಿ ಇರು ಅಂತ ಹೇಳುವುದೂ ನ್ಯಾಯವಲ್ಲ. ಆದ್ರೆ ಮಾವ ಸ್ವಸೆ ಇಬ್ರಿಗೂ ಸಂಬಂಧ ಇದೆ ಅಂತ ಅವನಂತಾನೆ. ಅದು ಸುಳ್ಳು ಅಂತ ಚನ್ನಶೆಟ್ಟಿ ಪ್ರಮಾಣ ಮಾಡಿದಾನೆ. ಇಲ್ಲದ್ದನ್ನ ಒಬ್ಬ ಮನುಷ್ಯನ ಮ್ಯಾಲೆ ಹೇಳ್‌ಬಾರ್ದು. ಆದ್ರೂ ಆ ಮಗುಂಗೆ ಸಮಾಧಾನವಾಗ್ಲಿ ಅಂತ ಸ್ವಸೆ ಮಾವ ಬ್ಯಾರೆ ಬ್ಯಾರೆ ಇರೂಹಾಗೆ ಮಾಡಬೇಕು. ಆದ್ರೆ ಗಂಡ ಅವ್ಳಕುಟ್ಟೆ ಇರುಲ್ಲ ಅಂತ ಆಗ್ಲೇ ಹೇಳಿಬಿಟ್ಟಿದ್ದಾನೆ. ಆದ್ರಿಂದ ಅವ್ಳು ಒಬ್ಳೇ ಬ್ಯಾರೆ ಒಂದು ಮನ್ಲಿ ಇರ್ಲಿ. ತನ್ನ ಸ್ವಸೆಯೇ ಆದದ್ದರಿಂದ ಚನ್ನಶೆಟ್ಟಿ ಅವಳಿಗೆ ಒಂದು ಸಣ್ಣ ಮನೆ ಕಟ್ಟಿಸಿ ಕೊಡಲಿ. ಇನ್ನು ಅಪ್ಪ ಮಗ ತಮಗೆ ತಿಳಿದ ಹಾಗೆ ಇರಭೌದು.’ +ಈ ತೀರ್ಮಾನದ ಧರ್ಮಸೂಕ್ಷ್ಮ ಉಳಿದವರಿಗೆ ತಿಳಿಯಲಿಲ್ಲ. ಅವರು ಕಕ್ಕಾವಿಕ್ಕಿಯಾದರು. +‘ಇದೇನು ನ್ಯಾಯ?’ – ಎಂದು ಶಿವೇಗೌಡ ಪ್ರಶ್ನಿಸಿದ. +‘ಕಲ್ಲೇಶಪ್ನೋರುನ್ನ ನ್ಯಾಯಪೀಠದಾಗೆ ಕುಂಡ್ರುಸಿದೀವಿ. ಅವ್ರು ಏಳಿದ್ದ ಕೇಳ್ಬಿಡ್ಬೇಕು. ಯಾರೂ ದೂಸ್ರಾ ಮಾತಾಡ್ಬ್ಯಾಡ್ದು. ನೀನು ಸುಮ್ಕೆ ಒಪ್ಕಳಮ್ಮಾ, ನಾನ್ಹೇಳ್ತೀನಿ’ – ಎಂದು ರೇವಣ್ಣಶೆಟ್ಟಿ ನರಸಿಯ ಕಡೆಗೆ ತಿರುಗಿ ಹೇಳಿದ. +‘ನಾಕು ಜನ ಯಜಮಾನ್ರು ಏಳಿದ್ದುಕ್ಕೆ ನಾನ್ ಹ್ಯಂಗೆ ವಲ್ಲೆ ಅನ್ಲಿ?’ – ಎಂದು ನರಸಿ ನ್ಯಾಯನಿರ್ಣಯವನ್ನು ಧರಿಸಿದಳು. +ಇನ್ನು ಮತ್ತೆ ಏನಾದರೂ ಮಾತುಕತೆ ಆಗುವ ಮೊದಲೇ ರೇವಣ್ಣಶೆಟ್ಟಿ ಮೇಲೆ ಎದ್ದ. ಕಲ್ಲೇಶನೂ ನ್ಯಾಯಪೀಠದಿಂದ ಎದ್ದುನಿಂತ. ಇನ್ನು ಎಲ್ಲರೂ ಜಾಗ ಬಿಟ್ಟರು. +ಮನೆಗೆ ಬಂದಮೇಲೆ ಚನ್ನಿಗರಾಯರು ಕಲ್ಲೇಶನನ್ನು ಕೇಳಿದರು: ‘ಅವ್ಳು ಅದೇನೋ ಅಂದ್ಲಲಾ, ಏನು?’ +‘ತಿಳೀಲಿಲ್ವೆ?’ +‘ಇಲ್ಲ’ +‘ಅದ್ಕೇ ನಿನ್ನ ನ್ಯಾಯತೀರ್ಮಾನಕ್ಕೆ ಕೂರುಸ್ಲಿಲ್ಲ, ತಿಳೀದೇ ಇದ್ರೆ ಏನೂ ಪರವಾಗಿಲ್ಲ. ನಿಂಗ್ಯಾಕೆ ಬಿಡು.’ +ಚೆನ್ನಿಗರಾಯರು ಇನ್ನೊಮ್ಮೆ ಹೊಗೆಸೊಪ್ಪು ತಿಕ್ಕಿ ಬಾಯಿಗೆ ಹಾಕಿಕೊಂಡರು. +– ೨ – +ರೇವಣ್ಣಶೆಟ್ಟಿ ಇಸ್ಪೀಟಿಗೆ ಹೋಗುತ್ತಿದ್ದುದು ಕೋಡೀಹಳ್ಳಿಗೆ. ಗ್ರಾಮದ ಪಟೇಲ ಚಿಕ್ಕೇಗೌಡನ ಮನೆಯ ಮುಂಭಾಗದ ದನ ಕಟ್ಟುವ ಸಾಲೆಯ ಅಟ್ಟದ ಮೇಲೆ ಇಸ್ಪೀಟಿಗೆ ಅನುಕೂಲವಾದ ಜಾಗವಿದೆ. ಚಿಕ್ಕೇಗೌಡ ರೇವಣ್ಣಶೆಟ್ಟಿಯರೇ ಅಲ್ಲದೆ ಕಂಬನಕೆರೆಯ ಚೇರ್‌ಮನ್ ಲಿಂಗದೇವರು, ಶೆಂದಿ ಕಂಟ್ರಾಕ್ಟರ್ ಚಿನ್ನಸ್ವಾಮಿ, ಚರ್ಮದ ವ್ಯಾಪಾರಿ ಹಯಾತ್‌ಸಾಬಿ ಮೊದಲಾದವರು ಅಲ್ಲಿ ಸೇರುವುದುಂಟು. +ಒಂದು ದಿನ ಮಧ್ಯಾಹ್ನ ರೇವಣ್ಣಶೆಟ್ಟಿ ಚಿಕ್ಕೇಗೌಡನನ್ನು ಕೇಳಿದ; ‘ಒಂದ್ ಐವತ್ ರೂಪಾಯಿ ಇದ್ರೆ ಕೊಟ್ಟಿರಣ್ಣಾ, ಕೊಪ್ರಿ ಹಾಕ್ ಕೋಡ್ತೀನಿ.’ +‘ನೀನ್ ಇಲ್ಲೀಗಂಟ ಇಸ್ಕಂಡುದ್ ಏಟಾಗೋಗೈತೆ. ಇನ್ ನನ್ ತವ್ವ ದುಡ್ಡಿಲ್ಲ.’ +‘ಏ, ಹಂಗನ್ಬ್ಯಾಡಿ ಕೊಡ್ರಣ್ಣ.’ +ಇವನಿಗೆ ಸಾಲ ಕೊಡುವುದರಿಂದ ಚಿಕ್ಕೇಗೌಡನಿಗೆ ನಷ್ಟವಾಗುತ್ತಿರಲ್ಲಿಲ್ಲ. ಆ ಹಣದ ಒಂದು ಪಾಲು ಆಟದಲ್ಲಿ ಅವನಿಗೇ ಬರುತ್ತಿತ್ತು. ಪ್ರೋನೋಟಿನ ಫಾರಂ ಮತ್ತು ರೆವಿನ್ಯೂಸ್ಟಾಂಪುಗಳು ಲೇವಾದೇವಿಯ ಚಿಕ್ಕೇಗೌಡನ ಹತ್ತಿರವೇ ಇರುತ್ತಿದ್ದುವು. ಅದರ ಮೇಲೆ ಐವತ್ತು ರೂಪಾಯಿ ಮೊಬಲಗು, ತಾರೀಖು ಮತ್ತು ರೇವಣ್ಣಶೆಟ್ಟಿಯ ರುಜು ಹಾಕಿಸಿಕೊಂಡು ಒಂದು ವರ್ಷದ ಬಡ್ಡಿ ಆರು ರೂಪಾಯಿ ಕಟಾಯಿಸಿ ನಲವತ್ತನಾಲ್ಕು ರೂಪಾಯಿಯನ್ನು ಕೊಟ್ಟಾಗ ಅದು ಒಂದು ಸಲ ರೇವಣ್ಣಶೆಟ್ಟಿಯ ಜೇಬಿನ ಒಳಗೂ ಹೋಗಿ ಬರಲಿಲ್ಲ. ನೇರವಾಗಿ ಆಟದ ಚಾಪೆಯ ಮೇಲೆ ಕುಳಿತಿತು. ನಲವತ್ತನಾಲ್ಕು ರೂಪಾಯಿ ತೀರ ಸಣ್ಣ ಗಂಟಾದುದರಿಂದ ಅವನು ಮೂರೆಲೆ ಹಾಕಲು ಒಪ್ಪಲಿಲ್ಲ. ಒಂದು ರೂಪಾಯಿ ಮೇಜು ಹಾಕಿ ಇಪ್ಪತ್ತೆಂಟು ಶುರು ಮಾಡಿದರು. ಆ ದಿನ ಇನ್ನು ಯಾರೂ ಆಟಕ್ಕೆ ಬರಲಿಲ್ಲವಾದುದರಿಂದ ರೇವಣ್ಣಶೆಟ್ಟಿ, ಚಿಕ್ಕೇಗೌಡ, ಇಬ್ಬರೇ ಆಡಿದರು. ಸಂಜೆ ಆರು ಗಂಟೆಯ ಹೊತ್ತಿಗೆ ನಲವತ್ತನಾಲ್ಕು ರೂಪಾಯಿಯೂ ಚಿಕ್ಕೇಗೌಡನ ಕಡೆಗೆ ಹೋಯಿತು. ಆದರೆ ಮತ್ತೆ ಆಡಿ ಅದನ್ನು ಗೆಲ್ಲುವ ಹಟ ರೇವಣ್ಣಶೆಟ್ಟಿಯದು. ಹಾಗೆಯೇ ಸಾಲ ಕೊಡುವುದಿಲ್ಲವೆಂದು ಗೌಡ ಹೇಳಿಬಿಟ್ಟ. ‘ಭಾಂಚೋತ್ ನನ್ಮಗುಂದು. ಆದುದ್ ಆಯ್ತಳೆ. ಇನ್ನೊಂದೈವತ್ತು ಕೊಡಿ. ಕಾಗದ ಬರಕೊಡ್ತೀನಿ’ – ಎಂದು ಪ್ರೋನೋಟಿಗೆ ರುಜು ಹಾಕಿ ಮತ್ತೆ ನಲವತ್ತನಾಲ್ಕು ರೂಪಾಯಿ ಇಸಕೊಂಡು ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಅದನ್ನೂ ಗೌಡನಿಗೆ ಒಪ್ಪಿಸಿ, ಪಕ್ಕದಲ್ಲಿದ್ದ ತನ್ನ ಚೌಕವನ್ನು ಕೊಡವಿ ಹೆಗಲಮೇಲೆ ಹಾಕಿಕೊಂಡು ಊರಿಗೆ ನಡೆದ. +ಮನೆಯಲ್ಲಿ ಸರ್ವಕ್ಕ ತನ್ನ ಐದು ಮಕ್ಕಳೊಡನೆ ಮಲಗಿ ನಿದ್ರಿಸುತ್ತಿದ್ದಳು. ಕದ ಬಡಿದು ಹೆಂಡತಿಯನ್ನು ಎಬ್ಬಿಸಿ, ಉಣ್ಣುವುದಕ್ಕೆ ನೀಡುವಂತೆ ಹೇಳಿದ. ಕಂಚಿನ ಗಂಗಾಳದಲ್ಲಿ ಆರಿದ ಮುದ್ದೆ ಕೊಮ್ಮೆಸೊಪ್ಪಿನ ಮಶಪ್ಪು ಸಾರುಗಳನ್ನು ಇಕ್ಕಿದ ಹೆಂಡತಿಯನ್ನು ಗದ್ದರಿಸಿದ; ‘ಬಿಶಿಯಾಗಿ ಮಾಡಾಕ್ ಏನಾಗಿತ್ತೇ?’ +‘ಬಿಶಿಯಾಗಿ ಮಾಡಿ ಮಡಗಿದ್ದೆ. ನೀವೇಟೊತ್ತಿಗ್ ಬತ್ತಿರೋ ಆರಿ ಹೋಗೈತೆ.’ +‘ಅಯ್ಯೋ ನಿನ್ ಹೆತ್ತೋಳ್ನಾ, ನಾನೆಟೊತ್ತಿಗ್ ಬತ್ತೀನಿ ಅಂತ ಕೇಳಾಕ್ ನೀನ್ಯಾವಳೆ ಬೋಸುಡಿ ಭಾಂಚೋತ್? ಎದಿಗ್ ಒದ್ದು ಕೊಂದ್ಹಾಕ್‌ಬುಡ್ತೀನಿ ನೋಡು’ – ಎಂದು ಮುದ್ದೆಯನ್ನು ಸಾರಿನಲ್ಲಿ ಹೊರಳಿಸಿ ಬಾಯಿಗಿಟ್ಟುಕೊಂಡು ನುಂಗಿ, ಅದು ಗಟ್ಟಿಯಾಗಿ ಗಂಟಲಿನಿಂದ ಸುಲಭವಾಗಿ ಇಳಿಯದೆ ಕಷ್ಟವಾಗಲು, ಮೇಲೆ ಎದ್ದು ಅವಳನ್ನು ಒಂದು ಸಲ ಒದೆದು, ‘ಬಿಶಿಯಾಗ್ ಅನ್ನ ಮಾಡು’ ಎಂದ. +‘ಅಕ್ಕಿ ಇಲ್ವಲ್ಲ’ – ನೋವಿನಿಂದ ಬರುತ್ತಿದ್ದ ಅಳುವಿನ ಮಧ್ಯೆ ಅವಳು ಬಿಕ್ಕಿದಳು.’ +‘ಯಾವಾಗ ಕೇಳಿದ್ರೂ ಇಲ್ಲ ಇಲ್ಲ ಅಂತೀಯ ದರಿದ್ರದ ಮುಂಡೆ’ – ಎಂದು ಇನ್ನೊಂದು ಸಲ ಅವಳನ್ನು ಒದೆದು, ಗಂಗಾಳದಲ್ಲಿದ್ದ ಒಣಗಿದ ಮುದ್ದೆಯನ್ನೇ ಮುರಿದು ನುಂಗಿ ಹೋಗಿ ಮಂಚದ ಮೇಲೆ ಪವಡಿಸಿದ. ಸರ್ವಕ್ಕ ಗಂಗಾಳ ತೊಳೆದಿಟ್ಟು ಕೆಳಗೆ ನೆಲದ ಮೇಲೆ ಕೊನೆಯ ಮಗು ರುದ್ರೇಶನ ಜೊತೆ ಮಲಗಿಕೊಂಡಳು. +– ೩ – +ತನಗೆ ತಿಳಿಯದಿದ್ದಾಗ ನಂಜಮ್ಮನೇ ಪುಸ್ತಕಗಳನ್ನು ಕುಳವಾಡಿ ನಿಂಗನ ಕೈಲಿ ಹೊರಿಸಿ ಕೊಂಡು ತಿಮ್ಲಾಪುರಕ್ಕೆ ಹೋಗುತ್ತಿದ್ದಳು. ದ್ಯಾವರಸಯ್ಯನವರು ಹೇಳಿಕೊಟ್ಟು, ಲೆಕ್ಕದಲ್ಲಿ ಒಂದಕ್ಕೂ ಮತ್ತೊಂದಕ್ಕೂ ಇರುವ ತಾಳೆಯನ್ನೂ ತೋರಿಸಿ ಮನದಟ್ಟು ಮಾಡಿಸುತ್ತಿದ್ದರು. ವಸೂಲಿ ಮಾಡುವಾಗ ಸಾಮಾನ್ಯವಾಗಿ ಗ್ರಾಮದ ಪಟೇಲರು ಎದುರಿಗಿರುತ್ತಿದ್ದರು. ರಾಮಸಂದ್ರದ ವಸೂಲಿಯನ್ನಂತೂ ಶಿವೇಗೌಡ ತನ್ನದೆಂದೇ ಹೇಳಿದ. ‘ಕಂದಾಯದ ವಸೂಲಿ ಏನಿದ್ರೂ ಪಟೇಲ್ರುದ್ದು. ಶಾನುಬಾಗ ಪಟೇಲ ಏಳ್ದಂಗೆ ಲ್ಯಕ್ಕ ಬರ್ಕಂಡ್ ಬಿದ್ದಿರ್‍ಬೇಕು’ – ಎಂಬುದು ಅವನ ಧೋರಣೆಯಾಗಿತ್ತು. ಅವನನ್ನು ವಿರೋಧಿಸುವ ಶಕ್ತಿ ಇಲ್ಲದುದರಿಂದ ಆ ಊರಿನಲ್ಲಿ ಹಾಗೆಯೇ ನಡೆಯುತ್ತಿತ್ತು. ಮಿರಾಶೆ ಹಣ ಪಟೇಲನಿಗೆ ಹೋಗಿ ಇವರಿಗೆ ಒಂದು ಆಣೆಯೂ ಸಿಕ್ಕುತ್ತಿರಲಿಲ್ಲ. ಈ ಗ್ರಾಮದಲ್ಲಿ ಯಾವುದಾದರೂ ಖರೀದಿ, ಆಧಾರ, ಮೊದಲಾದ ರಿಜಿಸ್ಟ್ರಿಗಳಾಗಬೇಕಾದರೆ ಜನಗಳು ಮಾಜಿ ಹಂಗಾಮಿ ಶಾನುಭೋಗ ಸಿವಲಿಂಗನ ತಾವ ಹೋಗುತ್ತಿದ್ದರೇ ವಿನಾ ಚನ್ನಿಗರಾಯರನ್ನು ಮೂಸುತ್ತಿರಲಿಲ್ಲ. ಚನ್ನಿಗರಾಯರಿಗೆ ಸರಿಯಾಗಿ ದಸ್ತಾವೇಜು ಬರವಣಿಗೆ ಬರುವುದಿಲ್ಲವೆಂಬುದು ಒಂದು ಕಾರಣವಾದರೆ, ‘ಆ ವಯ್ಯನ ತಾವ ಬರುಸ್ಕಂಡು ಅದ್ಯಾವ್ನು ರಿಕಾಲ್ಡು ದಕ್ಕುಸ್ಕತ್ತಾನ್ಲಾ?’ – ಎಂದು ಪಟೇಲ ಹೆದರಿಸುದ್ದುದು ಇನ್ನೊಂದು ಕಾರಣವಾಗಿತ್ತು. ಸಿವಲಿಂಗನಿಗಿಂತ ನಂಜಮ್ಮ ರಿಜಿಸ್ಟ್ರಿ ಕಾಗದ ಪತ್ರಗಳನ್ನು ಚೆನ್ನಾಗಿ ಬರೆಯಬಲ್ಲಳಾದರೂ, ಸರ್ಕಾರೀ ಪತ್ರವನ್ನು ಹೆಂಗಸಿನ ಕೈಲಿ ಬರೆಸಿದರೆ ಊರ್ಜಿತವಾಗುವುದಿಲ್ಲವೆಂಬ ನಂಬಿಕೆ ಬೇರೆ, ಹೀಗಾಗಿ ರಾಮಸಂದ್ರದಿಂದ ಮೂರು ಕಾಸಿನ ಸಂಪಾದನೆಯೂ ಆಗುತ್ತಿರಲಿಲ್ಲ. +ಕುರುಬರಹಳ್ಳಿಯದೇ ಒಂದು ನೆಚ್ಚಿಗೆ. ಪಟೇಲ ಗುಂಡೇಗೌಡರು ವಸೂಲಿಯ ದಿನ ಕೂಡುತ್ತಿದ್ದರೂ ಅದನ್ನು ಮಾಡುತ್ತಿದ್ದವರು ಚನ್ನಿಗರಾಯರೇ. ಕುಳುವಾರು ಅವರವರ ಕಂದಾಯಕ್ಕೆ ತಕ್ಕಂತೆ ಗುಂಡೇಗೌಡರೇ ಶ್ಯಾನುಭೋಗರ ಮಸಿಕಾಣಿಕೆ ಕೊಡಿಸುಬಿಡುತ್ತಿದ್ದುದೇ ಅಲ್ಲದೆ ತಾವೇ ಎರಡು ರೂಪಾಯಿ ಕೊಡುತ್ತಿದ್ದರು. ಆ ಊರಿನಲ್ಲಿ ಒಟ್ಟು ನಲವತ್ತು ರೂಪಾಯಿ ವರಮಾನವಿತ್ತು. ಅಲ್ಲದೆ ಇವರು ಬೇರೆಯಾದ ಮೇಲೆ ತಮ್ಮ ಗ್ರಾಮದಲ್ಲಿ ಸುಗ್ಗಿಯಲ್ಲಿ ಒಟ್ಟು ಖಂಡುಗ ರಾಗಿ ಐವತ್ತು ಸೇರು ಅವರೇಕಾಳು ಎತ್ತಿಕೊಡುವುದಾಗಿ ಗುಂಡೇಗೌಡರು ಹೇಳಿದ್ದರು. ಅದರಂತೆ ನಡೆಸುತ್ತಲೂ ಇದ್ದರು. ಕುರುಬರಹಳ್ಳಿಯಲ್ಲಿ ಖರೀದಿ, ಅಧಾರಪತ್ರಗಳು ಆಗುತ್ತಿದ್ದುದೇ ಅಪರೂಪ. ಆದುದರಿಂದ ಆ ಬಾಬ್ತು ಏನೂ ವರಮಾನವಿರಲಿಲ್ಲ. +ಇವರ ಫಿರ್ಕಾದ ಇನ್ನೊಂದು ಊರಾದ ಲಿಂಗಾಪುರ ಮೂವತ್ತು ಹಳ್ಳಿಯ ಗ್ರಾಮ ಎಲ್ಲರೂ ತಕ್ಕಮಟ್ಟಿಗೆ ಅನುಕೂಲವಿದ್ದ ಜನರೇ. ಆದರೆ ಆ ಊರಿನವರಿಗೆ ರಾಮಸಂದ್ರದ ಶಿವೇಗೌಡನೊಡನೆ ದೂರದ ನಂಟು. ಶ್ಯಾನುಭೋಗನಿಗೆ ಯಾಕೆ ಮಸಿಕಾಣಿಕೆ ಕೊಡಬೇಕು ಎಂಬುದು ಶಿವೇಗೌಡನ ವಾದ ಅಲ್ಲಿಯವರಿಗೂ ಹಬ್ಬಿತು. ಪಟೇಲ ಪುರದಪ್ಪ ಅದು ತನಗೇ ಸೇರಬೇಕೆಂದು ಹಟಮಾಡಿದ. ಚನ್ನಿಗರಾಯರ ತಂದೆ ರಾಮಣ್ಣನವರು ಶ್ಯಾನುಭೋಗರಾಗಿದ್ದಾಗ ಈ ಊರಿನವರೆಲ್ಲ ಮನೆಗೆ ಒಂದು ರೂಪಾಯಿಯಂತೆ ಕೊಡುತ್ತಿದ್ದ ರಿವಾಜು ಇತ್ತು. ಅದಕ್ಕೆ ಗ್ರಾಮದ ಕೆಲವು ಹಿರಿಯರು ಇವತ್ತಿಗೂ ಸಾಕ್ಷಿ ಹೇಳುತ್ತಾರೆ. ಆದರೆ ಈಗ ಕಾಲ ಬದಲಾಯಿಸಿದೆ. ಹೀಗಾಗಿ ಆ ಊರಿನಲ್ಲಿಯೂ ಏನೂ ಮೇಲು ಸಂಪಾದನೆ ಆಗುತ್ತಿರಲಿಲ್ಲ. +ನಂಜಮ್ಮ ಕುರುಬರಹಳ್ಳಿಯ ವಸೂಲಿಗೆ ಹೋಗುತ್ತಿದ್ದಳು. ಉಳಿದ ಎರಡು ಗ್ರಾಮಗಳದನ್ನು ಪಟೇಲರೇ ನೋಡಿಕೊಳ್ಳುತ್ತಿದ್ದರು. ಲೆಕ್ಕವನ್ನು ಮಾತ್ರ ಅವಳು ಮನೆಯಲ್ಲಿ ಕೂತು ಬರೆಯುತ್ತಿದ್ದಳು. ಜಮೀನಿನ ಮೇಲೆ ಹೋಗಿ ಪಹಣಿಯನ್ನೂ, ಕುಳಗಳನ್ನೇ ಕರೆಸಿ ಖಾನೀಷುಮಾರಿಯನ್ನೂ ಚೆನ್ನಿಗರಾಯರು ಗುರುತು ಹಾಕುತ್ತಿದ್ದರು. ಅದರ ಗೋಶ್ವಾರೆಯಿಂದ ಹಿಡಿದು ಜಮಾಬಂದಿಯ ಲೆಕ್ಕದವರೆಗೆ ಎಲ್ಲವನ್ನೂ ನಂಜಮ್ಮ ನಿಭಾಯಿಸುತ್ತಿದ್ದಳು. ತಿಳಿಯದುದಕ್ಕೆ ತಿಮ್ಲಾಪುರಕ್ಕೆ ಹೋಗಿಬರುತ್ತಿದ್ದಳು. ಚೆನ್ನಿಗರಾಯರು ಕೋಟು ಹಾಕಿ, ತಲೆಗೆ ರುಮಾಲು ಸುತ್ತಿ ಕೊರಳ ಸುತ್ತ ಮಡಿಸಿದ ಉತ್ತರೀಯ ಹೊದೆದು ಜಮಾಬಂದಿಗೆ ಹೋಗಿ ಕೈ ಕಾಲು ನಡುಗಿಸಿಕೊಂಡು ಹೆಡ್‌ಕ್ಲಾರ್ಕಿನ ಸಂಭಾವನೆ ಸಲ್ಲಿಸಿ ಸಾಹೇಬರ ರುಜು ಪಡೆದು ಗಂಡಸಿನಂತೆ ಊರಿಗೆ ಹಿಂತಿರುಗುತ್ತಿದ್ದರು. ಗ್ರಾಮಕ್ಕೆ ಶೇಕ್‌ದಾರರೋ ಅಮಲ್ದಾರರೋ ದಯಮಾಡಿಸಿದಾಗ, ನಂಜಮ್ಮ ಮಕ್ಕಳ ಬಾಯಿಕಟ್ಟಿ ಇಟ್ಟಿದ್ದ ತುಪ್ಪ ಹಾಕಿ, ಅನ್ನ ಸಾರು ಪಲ್ಯ ಹಪ್ಪಳಗಳನ್ನು ರುಚಿ ರುಚಿಯಾಗಿ ಮಾಡಿ ಬಡಿಸಿ – ‘ನಾವು ಬಡವರು. ಲೆಕ್ಕದಲ್ಲಿ ತಪ್ಪಿದ್ದರೆ ಸ್ವಾಮಿಯೋರು ಸರಿ ಮಾಡಿಕೊಂಡು ಹೋಗಬೇಕು’ ಎನ್ನುತ್ತಿದ್ದಳು. ಆದರೆ ಅದನ್ನು ಬರೆಯುತ್ತಿದ್ದವಳು ತಾನು ಎಂಬ ಗುಟ್ಟನ್ನು ಬಿಡುತ್ತಿರಲಿಲ್ಲ. +ಇದರ ಜೊತೆಗೆ ಈ ಗಂಡನನ್ನು ನಿಭಾಯಿಸುವುದೂ ಒಂದು ಕೆಲಸವಾಗಿತ್ತು. ವರ್ಷವೆಲ್ಲ ಕಷ್ಟಪಟ್ಟು ಇವಳು ಲೆಕ್ಕ ಬರೆದುಕೊಟ್ಟರೆ ಸಾಲಾಖೈರಿನಲ್ಲಿ ಪೋಟಿಗೆಗೆ ಹೋದ ಚೆನ್ನಿಗರಾಯರು ಹದಿನೈದು ದಿನ ಊರಿಗೆ ಬರಲೇ ಇಲ್ಲ. ಅನಂತರ ಬಂದವರು ಒಟ್ಟು ಐದು ರೂಪಾಯಿ ಇರುವುದಾಗಿ ಹೇಳಿದರು. ಅದನ್ನೂ ಹೆಂಗಸಾದ ಅವಳ ಕೈಗೆ ಕೊಡದೆ, ಗಂಡಸಾದ ತಾವು ತಿಪಟೊರಿನಿಂದ ತಂದಿದ್ದ ತಗಡಿನ ಪೆಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿ. ಬೀಗದ ಕೈಯನ್ನು ಉಡಿದಾರಕ್ಕೆ ನೇತುಹಾಕಿಕೊಂಡರು. ಅಮಲ್ದಾರರು, ಶಿರಸ್ತಾರರು, ಹೆಡ್ ಗುಮಾಸ್ತೆ, ಹೋಬಳಿ ಗುಮಾಸ್ತೆ, ಮತ್ತು ಜವಾನರಿಗೆಲ್ಲ ಕೊಡುವುದು ಕೊಟ್ಟ ಮೇಲಾದರೂ ಒಂದು ನೂರು ರೂಪಾಯಿಯಾದರೂ ಉಳಿಯಬೇಕು. ಅದರಲ್ಲಿ ಪಟೇಲ ಗುಂಡೇಗೌಡರ ಮುಂಗಡ ಕಂದಾಯ ಕಳೆದರೆ ಇನ್ನು ಐವತ್ತು ರೂಪಾಯಿ ಮನೆಗೆ ಬರಬೇಕು. ದುಡ್ಡೆಲ್ಲ ಏನಾಯಿತು? ಚೆನ್ನಿಗರಾಯರೇ ಹೇಳಿದರು; ‘ನೀನು ಹಾಕೂ ಹಿಟ್ಟು ಅವರೇಬ್ಯಾಳೆ ಸಾರು ತಿಂದು ನಂಗೆ ಬಾಯಿ ಕೆಟ್ಟಿತ್ತು ಕಣೆ ಮುಂಡೆ. ಒಂದ್ ಹದಿನೈದು ದಿನ ಓಟ್ಳಾಗೆ ಆಲೂಗೆಡ್ಡೆ ನೀರುಳ್ಳಿ ಹುಳಿ, ವಡೆ, ದ್ವಾಸೆ, ಮೈಸೂರುಪಾಕ್ ತಿಂದ್ಕಂಡ್ ಹಾಯಾಗಿದ್ದೆ.’ +‘ನೀವೇನೋ ತಿಂದ್ಕಂಡಿದ್ರಿ. ಮನೇಲಿ ಮಕ್ಳು ಒಂದಿನವೂ ಮೈಸೂರುಪಾಕು ಕಣ್ಣಲ್ಲೂ ನೋಡಿಲ್ಲ. ನಿಮ್ಗೆ ಅದ್ ಹ್ಯಾಗೆ ನಾಲಿಗೆ ಬಂತು ತಿನ್ನೋಕೆ?’ +ಚೆನ್ನಿಗರಾಯರಿಗೆ ಉತ್ತರ ತಿಳಿಯಲಿಲ್ಲ. ‘ಮುಂಡೆ, ಥೂ ಮುಂಡೆ, ಮುಂಡೆ, ಮಾದರ್‍ಚೋದ್ ಮುಂಡೆ, ಮಾತಾಡ್ಬ್ಯಾಡ ಸುಮ್ನಿರೇ ಪೋಲಿ ಮುಂಡೆ’ – ಎಂದು ಕೊಂಡು ಮಾದೇವಯ್ಯನವರ ಗುಡಿಗೆ ಹೊರಟುಹೋದರು. ಇನ್ನು ಇಡೀ ವರ್ಷ ಜೀವನ ಸಾಗಿಸುವುದು ಹೇಗೆ? ಮೂರನೇ ಮಗು ವಿಶ್ವನಿಗೆ ಈಗ ಎಂಟು ತಿಂಗಳು. ಅವಳ ಹೊಟ್ಟೆಯಲ್ಲಿ ಆಗಲೇ ಎರಡು ಮೂರು ತಿಂಗಳಿನ ಇನ್ನೊಂದು ಮಗುವಿದೆ. ಪೋಟಿಗೆ ಎಂದು ಕಾಣುವುದು ವರ್ಷಕ್ಕೊಂದು ಸಲ. ಅದೂ ಹೀಗೆ ಆಗಿಹೋದರೆ ಇನ್ನು ಮಕ್ಕಳು ಉಪವಾಸ ಸಾಯಬೇಕು. ದೊಡ್ಡವರಿಗಾದರೂ ದಿನಕ್ಕೆ ಎರಡು ಮುದ್ದೆ ಇಲ್ಲದಿದ್ದರೆ ಜೀವ ಶರೀರಕ್ಕೆ ಅಂಟಿಕೊಳ್ಳುವುದು ಹೇಗೆ? ಪೋಟಿಗೆ ನನಗೆ ಕೊಡಿ ಅಂತ ಸರ್ಕಾರ್‍ದೋರನ್ನ ಕೇಳಿದ್ರೆ ಏನಂತಾರೋ! ಇನ್ನೇನು ದಿಕ್ಕು? – ಎಂದು ಅವಳು ಎರಡು ದಿನ ಯೋಚನೆ ಮಾಡಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು. +ಮರುದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಕ್ಕಳಿಗೂ ಮಡಿ ಉಡಿಸಿ ರೊಟ್ಟಿ ಚಟ್ನಿ ಕೊಟ್ಟು, ಎರಡನೆಯ ರಾಮಣ್ಣ ಮತ್ತು ಹಿರಿಯ ಪಾರ್ವತಿಯನ್ನು ಮಗ್ಗದ ಬೀದಿಯ ಪುಟ್ಟವ್ವನ ಮನೆಯಲ್ಲಿ ಬಿಟ್ಟು ಕೈಯಿಯಲ್ಲಿ ವಿಶ್ವನನ್ನು ಎತ್ತಿಕೊಂಡು ಕುರುಬರಹಳ್ಳಿಗೆ ಹೋದಳು. ಗುಂಡೇಗೌಡರ ಮನೆಗೆ ಹೋದರೆ ಒಳಗಿನ ಅಂಗಳದಲ್ಲಿ ಗಂಗಮ್ಮ ಒಂದು ಮಣೆಯ ಮೇಲೆ ಕುಳಿತಿದ್ದಾಳೆ. ಅವಳ ಮುಂದೆ ಹಾಸಿದ ಕೆಂಪಿನ ಸೀರೆಯ ಮೇಲೆ ಗೌಡರ ಹೆಂಡತಿ ಲಕ್ಕಮ್ಮ ಮೊರದಲ್ಲಿ ರಾಗಿ ಸುರಿಯುತ್ತಿದ್ದಾಳೆ. ಗೌಡರು ಗೋಡೆಯೊರಗಿ ಕೂತು ತಮ್ಮ ಎಲೆ ಅಡಿಕೆ ಚೀಲದೊಳಗೆ ಕೈ ಹಾಕಿ ಏನೋ ತಡಕುತ್ತಿದ್ದಾರೆ. ಸೊಸೆ ಅಲ್ಲಿಗೆ ಬಂದುದನ್ನು ನೋಡಿದ ಗಂಗಮ್ಮನಿಗೆ ಕೋಪ ಬಂತು. ‘ನಾನು ತಿರುಪೆ ಮಾಡ್ಕಂಡ್ ಹ್ವಟ್ಟಿ ಹ್ವರಿತಿದೀನಿ. ಅದಕ್ಕೂ ಕಲ್ ಹಾಕುಕ್ಕೆ ಬಂದೆ ಏನೇ ತಾಟಗಿತ್ತಿ?’ – ಎಂದು ಸಿಡಾರನೆ ಕೇಳಿದಳು. ನಂಜಮ್ಮ ಮಾತನಾಡದೆ ಸುಮ್ಮನೆ ನಿಂತುಬಿಟ್ಟಳು. +ಗೌಡರೇ – ‘ಬಾರವ್ವಾ, ಈಚಿಕಡೀಕ್ ಬಾ. ಕುಂತ್ಕ’ ಎಂದಮೇಲೆ ಹೋಗಿ ಚಾಪೆಯ ಮೇಲೆ ಕುಳಿತಳು. ಗಂಗಮ್ಮ ಸೀರೆಯಲ್ಲಿ ರಾಗಿ ಕಟ್ಟಿಕೊಂಡು ಎದ್ದು ಹೊರಟುಹೋದಳು. ಲಕ್ಕವ್ವ ಕೇಳಿದಳು: ‘ನಿಮ್ಮತ್ತೆ ನಿಮ್ಮುನ್ನ ಎಲ್ಡು ಮಂಕ್ರಿ ದೂರಿದ್ಲಲ್ಲವ್ವಾ. ನೀನು ಅವ್ಳ ಕಂಡ್ರೆ ಉರೀತೀಯಂತೆ, ಗಂಡುನ್ನ ಕೈಯಾಗೆ ಹಾಕ್ಯಂಡ್ ಕುಣಿಸ್ತೀಯಂತೆ. ನೀನೇ ಗಂಡ್ಸು ಅಂತ ಬೀದೀಲೆಲ್ಲ ತಿರುಗ್ತೀಯಂತೆ. ಇನ್ನು ಏನೇನೋ ಏಳಿದ್ಲು. ಸ್ಯಾನುಬಾಕೀಲಿ ಏನೂ ಪಾಲು ಕೊಡಾಕಿಲ್ವಂತೆ.’ +‘ಆ ಯಮ್ಮ ಅಂದ್ರೆ ಅಂದ್ಕತೈತೆ. ನೀನ್ ಸುಮ್ಕುರು’ – ಎಂದು ಹೆಂಡತಿಗೆ ಹೇಳಿದ ಗೌಡರು ಕೇಳಿದರು: ‘ಏನವ್ವ ಬಂದ್ಬುಟ್ಟೆ, ಪೋಟಿಕೆ ಆಯ್ತಾ?’ +‘ಗೌಡ್ರೇ, ಅದುನ್ನೇ ನಿಮ್ ಕೈಲಿ ಹೇಳಾಣ ಅಂತ ಬಂದೆ’ – ಎಂದು ನಂಜಮ್ಮ ಗಂಡ ಮಾಡಿದುದನ್ನೆಲ್ಲ ಹೇಳಿದಳು. ‘ಆ ವಯ್ಯಂಗೆ ಇಡಕಂಡಿ, ಕುತ್ಕೆ ಚಂಡ್ ಬಗ್ಗಿಸ್ಕಂಡಿ, ಎಲ್ಡು ಇಡಬೇಕು’ – ಲಕ್ಕವ್ವ ಎಂದಳು. +‘ಇಡುದ್ರೆ ಅದುಕ್ ಬುದ್ದಿ ಬರಾಕಿಲ್ಲ. ಈಗ ಏನ್ ಮಾಡ್‌ಬೇಕು ನೀನೇ ಏಳವ್ವ, ನಿಂಗಿಂತಾ ನಂಗ್ ತಿಳೀತೈತಾ?’ +‘ಪೋಟಿಗೆ ಹಣ ಅವರ ಕೈಗೆ ಸಿಕ್ಕದ ಹಾಗೆ ಮಾಡಿದ್ರೆ ಸರಿಯಾಗುತ್ತೆ.’ +‘ಇನ್ನೇನು, ನಿನ್ ಕೈಲಿ ಕೊಡ್ತಾರಾ ಗೌರ್‌ಮೇಟ್‌ನೋರು?’ +‘ಅದು ಬ್ಯಾಡ. ಒಟ್ಟು ಪೋಟಿಗೆ ನೂರ ಇಪ್ಪತ್ತು ರೂಪಾಯಿ. ಅದರಲ್ಲಿ ಪೋಟಿಗೆ ಖರ್ಚು ಹಾಕುವಾಗ ಅಮಲ್ದಾರರು, ಸಿರಸ್ತಾರರು, ಇವರುದ್ದೆಲ್ಲ ಒಟ್ಟು ಹದಿನೈದು ರೂಪಾಯಿ ಹೋಗುತ್ತೆ. ಅದ ಬಿಟ್ಬಿಡಿ. ಉಳಿದ ನೂರು ರೂಪಾಯಿಗೆ ನೀವು ಈಗಲೇ ಇವರಿಂದ ಕಂದಾಯ ಮುಂಗಡ ತಗಂಡಿದೀನಿ ಅಂತ ಹೋದ ವರ್ಷ ಮಾಡಿದ ಹಾಗೆ ರಶೀತಿ ಬರುಸ್ಕಂಡ್ಬಿಡಿ. ನಿಮ್ಮದೇ ಹ್ಯಾಗೂ ಎಂಬತ್ತು ರೂಪಾಯಿ ಕಂದಾಯ ಇದೆ. ಇನ್ನು ಯಾರುದ್ದಾರೂ ಇಪ್ಪತ್ತಕ್ಕೆ ಬರುಸ್ಕಳಿ. ಅದುನ್ನ ಪೋಟ್ಕಿ ಕೊಡೋವಾಗ್ಲೇ ಕಟಾಯಿಸ್ಕತ್ತಾರೆ. ಇನ್ನು ಇವರ ಕೈಗೆ ದುಡ್ಡು ಸಿಕ್ಕುಲ್ಲ. ಆ ದುಡ್ನಲ್ಲಿ ನೀವು ನಾನು ಕೇಳ್ದಾಗ ರಾಗಿ, ಕಾಳು, ಮೆಣಸಿನಕಾಯಿ, ಮೇಲೆ ಐದು ಹತ್ತು ರುಪಾಯಿನ ಹಾಗೆ ಕೊಡ್ತಾ ಬನ್ನಿ.’ +‘ವೈನ, ವೈನ. ನಿಂಗೆ ದಿವಾನಿಕೆ ಮಾಡಾ ತಲೆಯೈತೆ. ಈ ಬಶಣ್ಣಯ್ಯನ ಆಳಾದ್ ಕಲುತ್ರೆ ಮೈಸೂರು ಶೀಮೇನೇ ಆಳ್ಬೈದು. ನಾಳೆ ನಾಡಿದ್ರಲ್ಲಿ ನಾನು ಬತ್ತೀನಿ. ಆಗ ಬರುಸ್ಕಳಾನ ಬುಡು.’ +ಬಸವಣ್ಣನ ಗುಡಿಯಲ್ಲಿ ಅಡಿಗೆ ಮಾಡಿಕೊಂಡು ಉಂಡು ಹೋಗುವಂತೆ ಗೌಡಮ್ಮ ಬಲವಂತ ಮಾಡಿದಳು. ಆದರೆ ಊರಿನಲ್ಲಿ ಮಕ್ಕಳನ್ನು ಬಿಟ್ಟು ಬಂದಿರುವುದರಿಂದ ತಾನು ನಿಲ್ಲುವುದಿಲ್ಲವೆಂದು ಹೇಳಿ ನಂಜಮ್ಮ ಹೊರಟುಬಿಟ್ಟಳು. ಮಕ್ಕಳಿಗೆಂದು ಗೌಡಮ್ಮ ಕೊಟ್ಟ ಎರಡು ಗಿಟುಕು ಕೊಬ್ಬರಿ ಎರಡು ಉಂಡೆ ಬೆಲ್ಲವನ್ನು ಸೆರಗಿಗೆ ಕಟ್ಟಿಕೊಂಡಳು. ನಂತರ ತುಪ್ಪ ಬೆಲ್ಲ ಹಾಕಿ ಮುಂದಿಟ್ಟ ಹಾಲನ್ನು ಮಗುವಿಗೂ ಕುಡಿಸಿ ತಾನೂ ಕುಡಿದು ಊರಿಗೆ ಬಂದಳು. +ಮನೆಯಲ್ಲಿ ಚನ್ನಿಗರಾಯರು ಹೆಂಡತಿಯನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲಿಲ್ಲ. ಇನ್ನೂ ಅಡಿಗೆಯಾಗಿಲ್ಲವೆಂದು ರೇಗಿದರು. ಅವಳ ಸೆರಗಿನಲ್ಲಿದ್ದ ಕೊಬ್ಬರಿ ಬೆಲ್ಲ ಕಣ್ಣಿಗೆ ಬಿದ್ದಾಗ ತೆಗೆದುಕೊಂಡು ಮುರಿದು ತಿನ್ನಲು ಶುರುಮಾಡಿದರು. ಪುಟ್ಟವ್ವನ ಮನೆಯಲ್ಲಿದ್ದ ಮಕ್ಕಳು ಮನೆಗೆ ಬರುವ ವೇಳೆಗೆ ಎರಡು ಗಿಟುಕು ಎರಡು ಉಂಡೆಗಳೂ ಮುಗಿದುಹೋಗಿ ಅವರು ಅಂಟು ಕೈಯನ್ನು ತೊಳೆದುಕೊಂಡಿದ್ದರು. +ಗುಂಡೇಗೌಡರು ಮರು ದಿನವೇ ಇಲ್ಲಿಗೆ ಬಂದರು. ಅವರು ಹೇಳಿದಂತೆ ನಂಜಮ್ಮ ಗಂಡನ ಮುಂದೆ ರಶೀತಿ ಕಾಗದ ಮತ್ತು ದೌತಿ ಸ್ಟೀಲುಗಳನ್ನು ಇಟ್ಟಳು. ‘ಆ ಯಮ್ಮ ಏಳ್ದಂಗೆ ಬರೆಯಯ್ಯಾ’ -ಗೌಡರು ಆದೇಶವಿಟ್ಟರು. ‘ಕುರುಬರ ಹಳ್ಳಿಯ ಪಟೇಲ ಗುಂಡೇಗೌಡರ ರೆವೆನ್ಯೂ ಕಂದಾಯದ ಬಾಬ್ತು ಎಂಬತ್ತು ರೂಪಾಯಿಗಳು ಮಾತ್ರ ಸಂದಾಯವಾಗಿದೆ’ -ಎಂದು ನಂಜಮ್ಮ ಹೇಳುತ್ತಿರುವಂತೆಯೇ ಶ್ಯಾನುಭೋಗರು ಸ್ಟೀಲನ್ನು ಕೆಳಗಿಟ್ಟು. ‘ಅದ್ಯಾಕ್ ಬರೀಬೇಕೋ ಕಾಣೆ. ಪೋಟಿಗೇಲಿ ನನ್ನ ಕೈಗೆ ಏನೂ ಸಿಕ್ಕುಲ್ಲ’ ಎಂದು ಕುಳಿತುಬಿಟ್ಟರು. +ಗೌಡರಿಗೆ ರೇಗಿತು: ‘ಸಿಕ್ಕಾಕುಲ್ವಂತೆ. ತಿಗಾ ಮುಚ್ಕಂಡ್ ಬರೀತೀಯೋ ಇಲ್ವಯ್ಯೋ’ -ಎಂದು ಅವರು ಕೇಳಿದರೂ ಶ್ಯಾನುಭೋಗರು ಸ್ಟೀಲನ್ನು ಮುಟ್ಟಲಿಲ್ಲ. ‘ಬರೆಯಾದಿಲ್ವೇನಯ್ಯಾ? ನಮ್ಮೂರಿಗ್ ಬಂದ್ರೆ ನಿನ್ನ ಕಾಲು ಮುರಿದ್ಬುಡ್ತೀನಿ. ಏನಂತ ತಿಳ್ಕಂಡಿದೀಯಾ?’ +‘ನನ್ ಖರ್ಚಿಗೆ ಏನ್ ಮಾಡ್ಲಿ?’ +‘ಅದುಕ್ಕೆ ನಾನ್ ಕೊಡ್ತೀನಿ ಬರಿ.? +ಅಂತೂ ಒಟ್ಟಿನಲ್ಲಿ ನೂರು ರೂಪಾಯಿ ಕಂದಾಯದ ರಶೀತಿ ಬರೆದು ಅವರು ರುಜು ಮಾಡಿಕೊಟ್ಟರು. ‘ನಂಗೇನಾರಾ ಕೊಡ್ರಿ ಮತ್ತೆ?’ -ಎಂದು ಕೇಳಿದುದಕ್ಕೆ ಗೌಡರೇ ತಮ್ಮ ಸೊಂಟದ ದಟ್ಟಿಯ ಮಡಿಕೆಗೆ ಕೈ ಹಾಕಿ ಎರಡು ರೂಪಾಯಿಗಳನ್ನು ತೆಗೆದು ಅವರ ಮುಂದೆ ಉರುಳಿಸಿ -‘ತಗ ನಿನ್ ಮಿರಾಶೆ ಹಣ ಈಗ್ಲೇ ಕೊಟ್ಟಿದೀನಿ’ ಎಂದರು. +ಶ್ಯಾನುಭೋಗರು ಆತುರದಿಂದ ಕೈಲಿ ಹಿಡಿದು ಜೇಬಿಗೆ ಹಾಕಿಕೊಂಡರು. ಗೌಡರು ಊರಿಗೆ ಹೋದರು. ಮರುದಿನ ಶುಕ್ರವಾರವಾಗಿತ್ತು. ಚೆನ್ನಿಗರಾಯರು ಬೆಳಗ್ಗೆ ಮನೆಯಲ್ಲಿ ರೊಟ್ಟಿ ತಿಂದವರೇ ಕಂಬನಕೆರೆಯ ಸಂತೆಗೆ ಹೊರಟುಹೋದರು. ಸಂತೆಗೆ ತಿಪಟೂರಿನವರು ಬಂದು ಡೇರೆ ಹೊಡೆದು ಹೋಟಲು ಹಾಕುತ್ತಾರೆ. ತಿಪಟೂರು ಪೇಟೆಯಲ್ಲಿ ಮಾಡುವ ಮಸಾಲೆ ದೋಸೆ, ಆಲೂಗೆಡ್ಡೆಪಲ್ಯ, ಮೈಸೂರುಪಾಕು, ಬಾಳೇಕಾಯಿ ಬೋಂಡಗಳನ್ನೆಲ್ಲ ಮಾಡಿರುತ್ತಾರೆ. +– ೪ – +ಬರೀ ಶ್ಯಾನುಭೋಗಿಕೆಯಲ್ಲಿ ಜೀವನವಾಗುವುದಿಲ್ಲವೆಂಬುದನ್ನು ನಂಜಮ್ಮ ಬಹು ಬೇಗ ಅರ್ಥ ಮಾಡಿಕೊಂಡಳು. ಭೂಮಿ ಕಾಣಿಗಳೇನೂ ಇಲ್ಲದವರಿಗೆ ಈ ಕಸುಬಿನಿಂದ ಸಂಸಾರ ನೀಯುವುದಿಲ್ಲ. ತಾನು ಬೇರೆ ಏನು ಮಾಡಬಹುದು? ತಿಮ್ಲಾಪುರಕ್ಕೆ ಹೋಗಿದ್ದಾಗ ದ್ಯಾವರಸಯ್ಯನವರ ಪಕ್ಕದ ಒಂದು ಮನೆಯವರು ಮುತ್ತುಗದ ಎಲೆ ಹಚ್ಚಿಸಿ ಪಿಂಡಿ ಕಟ್ಟಿಟ್ಟದ್ದನ್ನು ನೋಡಿದ್ದಳು. ಅವೆಲ್ಲವನ್ನೂ ತಿಪಟೂರಿಗೆ ಕಳಿಸುತ್ತಾರಂತೆ. ನೂರಕ್ಕೆ ಆರಾಣೆಯಂತೆ ಅಂಗಡಿಯವರು ಉಂಡೆಯಾಗಿ ತೆಗೆದುಕೊಂಡು ದುಡ್ಡು ಕೊಡುತ್ತಾರಂತೆ. ಮನೆಗೆಲಸ, ಶ್ಯಾನುಭೋಗಿಕೆಯ ಲೆಕ್ಕದ ಜೊತೆಗೆ ತಾನೂ ದಿನವೂ ಒಂದು ಐವತ್ತೋ ನೂರೋ ಎಲೆ ಹಚ್ಚಿದರೆ ಆದೀತು-ಎಂದು ಯೋಚಿಸಿದಳು. +ರಾಮಸಂದ್ರದ ಬ್ರಾಹ್ಮಣರು ಮುತ್ತುಗದ ಎಲೆಯನ್ನು ಚೋಳೇಶ್ವರನಗುಡ್ಡದ ಹತ್ತಿರದ ಮರಳಹಳ್ಳದಿಂದ ತರುತ್ತಾರೆ. ಎಂದರೆ ಮೂರು ಮೈಲಿಯಾಗುತ್ತೆ. ಚೋಳೇಶ್ವರನ ಗುಡ್ಡವಿರುವುದು ಅವಳ ತೌರೂರು ನಾಗಲಾಪುರದ ದಾರಿಯಲ್ಲಿಯೇ. ಈ ಸಲ ಮುತ್ತುಗದ ಎಲೆಯ ಕಾಲವಾದ ಫಾಲ್ಗುಣ ಮಾಸ ಬಂದಾಗ ಅವಳು ಎಲೆ ತರಲು ಹೊರಟಳು. ಅಷ್ಟು ದೂರ ಒಂಟಿಯಾಗಿ ಹೆಂಗಸಾದ ತಾನೊಬ್ಬಳೇ ಹೋಗುವುದು ಸಮನಲ್ಲ. ಆದರೆ ಜೊತೆಗೆ ಯಾರನ್ನು ಕರೆಯುವುದು? ಗಂಡನನ್ನು ಕರೆದು ನೋಡಿದಳು. ಅವರ್‍ಯಾಕೆ ಬಂದಾರು? ‘ತೀಟೆ ಇದ್ದವಳು ಇದನ್ನೆಲ್ಲ ಮಾಡ್ಲಿ ನನಗೇನು ತೆವ್ಲು ? -ಎಂದುಹೇಳಿದರು. ಮಗ್ಗದಕೇರಿಯ ಪುಟ್ಟವ್ವನನ್ನು ಜೊತೆಗೆ ಕರೆದುಕೊಂಡು ಚಿಕ್ಕ ಮಕ್ಕಳನ್ನು ಪಕ್ಕದ ಚನ್ನಶೆಟ್ಟಿಯ ಮನೆಯಲ್ಲಿ ಬಿಟ್ಟು ಬೆಳಿಗ್ಗೆ ಕಾಗೆ ಕರ್‌ಯೆನ್ನುವ ಮುಂಚೆಯೇ ಗೋಣಿಚೀಲ ರೊಟ್ಟಿ ಚಟ್ಣಿಗಳನ್ನು ತೆಗೆದು ಕೊಂಡು ಹೊರಟಳು. ಪುಟ್ಟವ್ವನಿಗೆ ದಿನಕ್ಕೆ ಮೂರಾಣೆ ಕೂಲಿ. ಇಬ್ಬರೂ ಸರಸರನೆ ನಡೆದು ಹೊತ್ತು ಹುಟ್ಟುವ ಮೊದಲೇ ಪಟಪಟನೆ ಮುತ್ತುಗದ ಎಲೆಗಳನ್ನು ಮುರಿದು ಎದೆಗೆ ಕೊಟ್ಟುಕೊಂಡು ಜೋಡಿಸಿ ಹಿಡಿಯುವುದು. ಎಂಟು ಗಂಟೆಯ ತನಕ ಮುರಿದ ಮೇಲೆ ಇಬ್ಬರೂ ರೊಟ್ಟಿ ತಿಂದು ಮರದ ಹಳ್ಳದ ನೀರು ಕುಡಿದು ಮತ್ತೆ ಎಲೆ ಮುರಿಯುವುದು. ಗೋಣಿಚೀಲಕ್ಕೆ ಬಿಗಿಯಾಗಿ ಅದುಮಿ ತುಂಬಿ ಬಾಯಿ ಕಟ್ಟಿ ಹೊರಕ್ಕೆ ಕೊಡವಿದ ಮೇಲೆ ದಬ್ಬಳಕ್ಕೆ ಹುರಿ ಹಾಕಿ ಕೊಟ್ಟರೆ ಪಾರ್ವತಿ ಎಲೆಯನ್ನು ತೊಟ್ಟಿನ ಹತ್ತಿರ ಚುಚ್ಚಿ ಪೋಣಿಸುತ್ತಿತ್ತು. ರಾಮಣ್ಣ ಸಹ ನಿಧಾನವಾಗಿ ಇನ್ನೊಂದು ಸರ ಪೋಣಿಸುತ್ತದೆ. ಅಷ್ಟರಲ್ಲಿ ಅವಳು ಅಡಿಗೆ ಮಾಡುತ್ತಾಳೆ. ಊಟದ ಹೊತ್ತಿಗೆ ಯಜಮಾನರು ಮನೆಗೆ ಬರುತ್ತಾರೆ. ಅವರಿಗೆ ಹಸಿ ಮುತ್ತುಗದ ಎಲೆಯ ಮೇಲೆ ಭೋಜನ ಮಾಡುವುದೆಂದರೆ ಇಷ್ಟ. ಒಂದು ದೊಡ್ದ ಎಲೆಯನ್ನು ಜೊಪ್ಪೆಯಂತೆ ಮಾಡಿಕೊಂಡು ಚಕ್ಕಲಮಕ್ಕಲ ಹಾಕಿ ಕುಳಿತು ಕವಳ ಕತ್ತರಿಸುತ್ತಾರೆ. ನಂತರ ಅವರು ವಿಶ್ರಾಂತಿಗೆಂದು ಪವಡಿಸಿದಾಗ ಅವಳು ಪಾತ್ರೆ ತೊಳೆದಿಟ್ಟು, ಉಳಿದ ಎಲೆಗಳನ್ನು ಪೋಣಿಸಿ ಸರ ಮಾಡಿ, ಇನ್ನೂ ಉಳಿದಿರುತ್ತಿದ್ದುದನ್ನು ಸಂಜೆಯ ಬಿಸಿಲಿಗೆ ಒಣಗಹಾಕುತ್ತಾಳೆ. ಅಷ್ಟರಲ್ಲಿ ಆ ದಿನವೇ ಕಳೆಯುತ್ತದೆ. ನಾಳೆ ಬೆಳಗ್ಗೆ ತನಕವೂ ಪುಟ್ಟವ್ವನಿಗೂ ತೆಗೆದುಕೊಂಡು ಹೋಗಲು, ಮತ್ತು ಗಂಡನಿಗೆ ಮಕ್ಕಳಿಗೆ ಮನೆಯಲ್ಲಿ ತಿನ್ನಲು ರೊಟ್ಟಿ ಮಾಡಿ ಚಟ್ನಿ ತಿರುವಿ ಇಡಬೇಕು. ಹೊತ್ತಿಗೆ ಮುಂಚೆ ಏಳಬೇಕಾದುದರಿಂದ ರಾತ್ರಿ ಬೇಗ ಮಲಗಬೇಕು. +ಒಟ್ಟಿನಲ್ಲಿ ಮುಂಗಾರು ಮಳೆ ಬಂದು ಎಲೆಗಳು ಒಡೆದು ತೂತು ಬೀಳುವುದರೊಳಗೆ ನೂರ ಐವತ್ತು ಸರವಾಯಿತು. ಎಲ್ಲವನ್ನೂ ಹಚ್ಚಿದರೆ ಕೊನೆಯ ಪಕ್ಷ ಒಂದು ನೂರರ ಇನ್ನೂರು ಪಿಂಡಿಯಾದರೂ ಆಗುತ್ತೆ. ಒಂದು ಪಿಂಡಿಗೆ ಆರಾಣೆಯಾದರೆ ಎಪ್ಪತ್ತೈದು ರೂಪಾಯಿ ಸಿಕ್ಕುತ್ತೆ. ಇನ್ನು ಇದಕ್ಕೆ ವರ್ಷವಿಡೀ ಹಂಚೀಕಡ್ಡಿ ಸೀಳಿ ಅಂಗೈಯ ಚರ್ಮ ಒಡೆದುಕೊಂಡು ಚುಚ್ಚಬೇಕು. ಕಷ್ಟಪಡದೆ ಜೀವನವಾಗುವುದಾದರೆ ಹ್ಯಾಗೆ? ಇವಳು ಎಲೆ ತಂದು ಮುಗಿಸುವ ಹೊತ್ತಿಗೆ ಕಂದಾಯ ವಸೂಲಿಯ ಕಾಲ ಬಂತು. ನಾಲ್ಕನೆಯ ಕಿಸ್ತಿನಲ್ಲಿ ಕುರುಬರಹಳ್ಳಿಯವರು ಮಸಿಕಾಣಿಕೆ ಕೊಡುತ್ತಾರೆ. ಅಷ್ಟು ಹೊತ್ತಿಗೆ ಅವಳಿಗೆ ಆರು ತಿಂಗಳು ನಡೆಯುತ್ತಿತ್ತು. ‘ನೀನ್ಯಾಕ್ ಬರ್ಬೇಕೋ ಕಾಣೆ’ ಎಂದು ಗಂಡ ಜಬರಿಕೊಂಡರೂ ಬಿಡದೆ ಅವಳು ವಸೂಲಿಯ ದಿನ ಹೋದಳು. ಗುಂಡೇಗೌಡರು ಮಸಿಕಾಣಿಕೆ ಹಣವನ್ನು ವಸೂಲು ಮಾಡಿ ತಾವೇ ಇಟ್ಟುಕೊಂಡರು. ಶ್ಯಾನುಭೋಗರ ಕೈಗೆ ಐದು ರೂಪಾಯಿ ಕೊಟ್ಟು, ‘ನಿಂಗ್ ಬೇಕಾದಾಗ ಕೊಡ್ತೀನಿ. ಈಗ ಯಾಕ್ ದುಡ್ಡು?’ ಎಂದರು. ಅವರನ್ನು ನುಂಗಿಹಾಕುವಂತೆ ಚೆನ್ನಿಗರಾಯರು ಒಂದು ಸಲ ನೋಡಿದರೇ ವಿನಾ, ಬಾಯಿ ಬಿಟ್ಟು ಬೈಯಲು ಧೈರ್ಯವಿರಲಿಲ್ಲ. ಆದರೆ ಮನೆಗೆ ಬಂದ ಮೇಲೆ ಗುಂಡೇಗೌಡ ಮತ್ತು ಅವರ ಹೆಂಡತಿ ಇಬ್ಬರನ್ನೂ ಜೋಡಿಸಿ ಊರಿನ ಇತರ ಹೆಂಗಸರು ಗಂಡಸರೊಡನೆ ಹಾದರ ಮಾಡಿಸಿ ಬೈದು ತಮ್ಮ ಕೋಪ ಶಮನ ಮಾಡಿಕೊಂಡರು. ಹೇಗೂ ಐದು ರೂಪಾಯಿ ಸಿಕ್ಕಿತು. ಇರ್ಸಾಲಿಗೆ ತಿಪಟೂರಿಗೆ ಹೋದಾಗ ಸುಖಪಡುವ ಕಲ್ಪನೆಯಿಂದ ಮನಸ್ಸಿನಲ್ಲೇ ಹಿಗ್ಗುತ್ತಿದ್ದರು. ಈಗ ತಿಪಟೂರಿಗೆ ಗುಬ್ಬಿ ಈರಣ್ಣನ ನಾಟಕ ಬಂದಿದೆಯಂತೆ. ಅರಮನೆಯೇ ಕಾಣುವ ಹಾಗೆ ಸೀನರಿ ಹಾಕುತ್ತಾರಂತೆ. ನಾಕಾಣೆ ಬಿಸಾಕಿ ನೋಡಿ ಬರಬೇಕು. ಅವತ್ತು ರಾತ್ರಿ ಊಟದ ಬದಲು ಬರೀ ಬೊಂಬಾಯಿ ಬೋಂಡಾನೇ ತಿನ್ನಬೇಕು. ಸೂಳೇಮಗ ಗುಂಡೇಗೌಡ ನೂರು ರೂಪಾಯಿಗೆ ರಸೀತಿ ಬರುಸ್ಕಂಡ. ಪೋಟಿಗೆ ಹಣದಲ್ಲಿ ತಾಲ್ಲೂಕು ಆಫೀಸಿನೋರಿಗೆ ಕೊಡೂದು ಕೊಟ್ಟ ಮೇಲೆ ಕೈಗೆ ನಾಕು ರೂಪಾಯಿ ಉಳಿಯುತ್ತೋ ಐದು ಉಳಿಯುತ್ತೋ. ಅದರ ಜೊತೆಗೆ ಈ ಐದು. ಒಟ್ಟು ಹತ್ತು ರುಪಾಯಿನಲ್ಲಿ ಎಷ್ಟು ದಿನ ತಿನ್ನೋದು! ಒಂದು ಮೈಸೂರುಪಾಕಿಗೆ ಒಂಬತ್ತು ಕಾಸು. ನಾಕಾಣೆ ಒಟ್ಟಿಗೆ ಕೊಟ್‌ರೆ ಆರು ಕೊಡ್ತಾರೆ ಸೂಳೇಮಕ್ಳು. ಇನ್ನೊಂದೆರಡು ಕೊಟ್ರೆ ಇವರಪ್ಪನ ಗಂಟು ಏನು ಓಗುತ್ತೆ? ಇವರವ್ವನ….. +ಅಷ್ಟರಲ್ಲಿ ರಾಮಸಂದ್ರಕ್ಕೆ ಸರ್ಕಾರೀ ಪ್ರೈಮರಿ ಸ್ಕೂಲು ಬಂತು. ಸ್ಕೂಲಿಗೆ ತಕ್ಷಣ ಕಟ್ಟಡವಿಲ್ಲುದುದರಿಂದ ಇದನ್ನು ಎಲ್ಲಿ ನಡೆಸಬೇಕೆಂದು ಸರ್ಕಾರದವರು ಗ್ರಾಮಸ್ಥರನ್ನು ಕೇಳಿದರು. ಹನುಮಂತರಾಯನ ಗುಡಿಯಾಗಬಹುದೆಂದು ಶಿವೇಗೌಡ ಹೇಳಿದ. ಎಂದರೆ ಗಂಗಮ್ಮ ಅಪ್ಪಣ್ಣಯ್ಯರು ಅದನ್ನು ಖಾಲಿ ಮಾಡಬೇಕು. ಗಂಗಮ್ಮ ಹೋಗಿ ಶಿವೇಗೌಡನ ಮನೆಯ ಮುಂದೆ ಬೊಗಸೆಯಲ್ಲಿ ಮಣ್ಣು ಹಿಡಿದು ನಿಂತಳು. ಗುಡಿಯ ಪೂಜಾರಿ ಅಣ್ಣಾಜೋಯಿಸ ಸಹ ದೇವಸ್ಥಾನದಲ್ಲಿ ಇಸ್ಕೂಲು ಆಗಕೂಡದೆಂದ ಮೇಲೆ ಗಂಗಮ್ಮನ ವಸತಿಗೆ ಭಯವಿಲ್ಲದಂತೆ ಆಯಿತು. ಶಿವೇಗೌಡನದೇ ಒಂದು ಮನೆ ಖಾಲಿ ಇತ್ತು. ಅದನ್ನು ಸರ್ಕಾರದವರು ವರ್ಷಕ್ಕೆ ಮೂವತ್ತಾರು ರೂಪಾಯಿಗೆ ಬಾಡಿಗೆಗೆ ತೆಗೆದುಕೊಳ್ಳುವಂತೆ ಅವನೇ ಮಾಡಿಸಿದ. ಕಿಕ್ಕೇರಿ ಕಡೆಯ ಸೂರಪ್ಪನವರು ಎಂಬ ಮೇಷ್ಟರೂ ಬಂದರು. ಕೆಲವು ಹುಡುಗರನ್ನು ಸ್ಕೂಲಿಗೆ ಸೇರಿಸಿದರು. ಹೆಣ್ಣು ಹುಡುಗಿಯರನ್ನು ಅಕ್ಷರ ಕಲಿಯಲು ಕಳಿಸಬೇಕೋ ಬೇಡವೋ ಎಂಬ ಚರ್ಚೆ ಇನ್ನೂ ನಡೆಯುತ್ತಲೇ ಇತ್ತು. ಹೆಣ್ಣು ಹುಡುಗರನ್ನು ಸೇರಿಸಿ; ಪರವಾಗಿಲ್ಲ. ‘ಈಗ ದೊಡ್ಡ ಊರಿನಲ್ಲೆಲ್ಲ ಹೆಣ್ಣು ಮಕ್ಳು ಹೈಸ್ಕೂಲಿಗೂ ಹೋಗ್ತಾರೆ’ – ಎಂದು ಮೇಷ್ಟರೇ ಹೇಳಿದರೂ ಉಳಿದವರು ಯಾರೂ ಒಪ್ಪಲಿಲ್ಲ. ‘ಅಮ್ಮ, ಎರಡಕ್ಷರ ಕಲ್ತಿದ್ರೆ ಕಷ್ಟಕಾಲದಲ್ಲಿ ಹೆಣ್ಣು ಹುಡುಗಿಯಾದ್ರೂ ಒಂದು ಇಪ್ಪತ್ತು ರೂಪಾಯಿ ಸಂಬಳ ತರುತ್ತೆ. ವಿದ್ಯಾವಂತೆಯಾದ ನಿಮಗೆ ಇದ ನಾನು ಹೇಳ್ಬೇಕೇ?’ – ಎಂದಾಗ ನಂಜಮ್ಮ ಯಾರ ಚರ್ಚೆಗೂ ಕೇಳದೆ ತಾನೇ ಹೋಗಿ ಪಾರ್ವತಿಯನ್ನು ದಾಖಲು ಮಾಡಿ ಬಂದಳು. ‘ನೋಡ್ದ್ಯಾ ಆ ವಮ್ಮನ ಗಟ್ಟಿಗಿತ್ತಿತನಾವ?’ – ಎಂದು ಊರಿನವರೆಲ್ಲ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು. ಪಾರ್ವತಿಯ ಜೊತೆಗೆ ರಾಮಣ್ಣನನ್ನೂ ಸ್ಕೂಲಿಗೆ ಕಳಿಸಿದಳು. ಈ ಸ್ಕೂಲಿನಲ್ಲಿ ಮೇಷ್ಟರು ಹೊಡೆಯುವುದಿಲ್ಲ. ಮರಳ ಮೇಲೆ ತಿದ್ದಿಸುವುದಿಲ್ಲ. ಸ್ಲೇಟಿನ ಮೇಲೆ ಬರೆಸುತ್ತಾರೆ. +ಈ ಸಲವೂ ಬಾಣಂತಿತನಕ್ಕೆ ಅಕ್ಕಮ್ಮ ಬಂದಳು. ಆದರೆ ನಂಜಮ್ಮ ಹೆತ್ತ ಮಗು, ಹೊರಗೆ ಬಂದ ಅರ್ಧ ಗಂಟೆಗೆ ತೀರಿಹೋಯಿತು. ‘ನಂಜಾ, ಬಸುರಿ ಹೆಂಗಸು ಇಷ್ಟೊಂದು ಮುತ್ತುಗದೆಲೆ ಹೊತ್ತು ಹಚ್ಚಿದರೆ ಆಗುತ್ತೆಯೇ? ಉಷ್ಣಕ್ಕೇ ಮಗೂಗೆ ಏನಾಗಿತ್ತೋ ಏನೋ! ಹುಟ್ಟಿದ ಕೂಡ್ಲೇ ಸತ್ತುಹೋಯಿತು’ – ಅಕ್ಕಮ್ಮ ಎಂದಳು. +ನಂಜು ಮಾತನಾಡಲಿಲ್ಲ. ಸುಮ್ಮನೆ ತನ್ನಲ್ಲಿಯೇ ಅಳುತ್ತಿದ್ದಳು. ‘ಅಳ್ಬ್ಯಾಡ ಮಗು, ನಂಜಾಗುತ್ತೆ. ನಿಂಗೆ ಏನಾದ್ರು ಹೆಚ್ಚುಕಮ್ಮಿಯಾದ್ರೆ ಈ ಮಕ್ಕಳ ಗತಿ ಏನೂ?’ – ಎಂದು ಅಕ್ಕಮ್ಮ ಎರಡು ದಿನ ಹೇಳಿದಮೇಲೆ ಅವಳು ಸಮಾಧಾನ ತಂದುಕೊಂಡಳು. ಗಂಗಮ್ಮ ದೇವಸ್ಥಾನದಲ್ಲಿಯೇ ಹತ್ತು ದಿನ ಪುರುಡು ಮತ್ತು ಅದರೊಳಗೇ ಮೂರು ದಿನ ಸೂತಕ ಇದ್ದಳೇ ಹೊರತು ಸೊಸೆಯ ಮನೆಗೆ ಬಂದು ಒಂದು ಮಾತೂ ಆಡಲಿಲ್ಲ. ಮಗು ಸತ್ತರೂ ಅಕ್ಕಮ್ಮ ಮೂರು ತಿಂಗಳು ಬಾಣಂತಿತನ ಮಾಡಿದಳು. ಅವಳು ಊರಿಗೆ ಹೊರಡುವ ಹಿಂದಿನ ದಿನ ಮೊಮ್ಮಗಳಿಗೆ ಹೇಳಿದಳು: ‘ನಂಜಾ, ನಿನ್ನ ಗಂಡನ ಯೋಗ್ತಿ ಇಂತದು. ತಾನು ಹುಟ್ಟಿಸಿದ ಮಕ್ಳಮೇಲೆ ಪ್ರೀತಿ ಇಲ್ಲ. ತಾನಾಯ್ತು ತನ್ನ ಹೊಟ್ಟೆಯಾಯ್ತು. ಮಕ್ಳ ಸಾಕೂದು ನಿಂಗೂ ಕಷ್ಟ. ಇನ್ನು ಅವನನ್ನ ಹಾಸಿಗೆ ಹತ್ರುಕ್ ಸೇರುಸ್ಬ್ಯಾಡ.’ +ನಂಜು ಏನೂ ಮಾತನಾಡಲಿಲ್ಲ. ಅಕಮ್ಮನೇ, ‘ಅವ್ನು ಸಿಟ್ಕಂಡ್ರೂ ಸಿಟ್ಕಳ್ಳಿ. ದೂರ ಇಡು’ ಎಂದಾಗ ಹೇಳಿದಳು: ‘ಅಕ್ಕಮ್ಮಾ, ಇವೆಲ್ಲ ಪ್ರಾರಬ್ಧ ಕರ್ಮ. ಹಾಗೆ ಮಾಡಿದ್ರೆ ಇವರಿಗೆ ಮಾನ ಮರ್ಯಾದೆ ಇರುಲ್ಲ. ಬೀದೀಲಿ ನಿಂತು ಕೆಟ್ಕೆಟ್ದಾಗಿ ಕಿರುಚಿಕಳುಕ್ಕೆ ಶುರುಮಾಡ್ತಾರೆ. ನಾನಾಗ್ಲೇ ಹಾಗೆ ಮಾಡಿ ನೋಡಿದೀನಿ.’ +‘ಹಣೆಬರ’ – ಎಂದು ಅಕ್ಕಮ್ಮ ಸುಮ್ಮನಾದಳು. +ಆಗಲೇ ಎಪ್ಪತ್ತೆಂಟು ನಡೆಯುತ್ತಿದ್ದ ಅಕ್ಕಮ್ಮ, ತಾನು ನಡೆದೇ ಹೋಗುವುದಾಗಿ ಜೊತೆಗೆ ಒಬ್ಬ ಆಳನ್ನು ಕಳಿಸುವಂತೆ ಕೇಳಿದಳು. ಆದರೆ ಮೊಮ್ಮಗಳು ಹೇಗೆ ಕಳಿಸಿಯಾಳು? ಮೂರು ರೂಪಾಯಿ ಕೊಟ್ಟು ಒಂದು ಕೆಂಪಿನ ಸೀರೆ ಉಡಿಸಿ, ಒಂದೂವರೆ ರೂಪಾಯಿಗೆ ಬಾಡಿಗೆ ಗಾಡಿ ಗೊತ್ತುಮಾಡಿ ಕಳಿಸಿಕೊಟ್ಟಳು. +– ೫ – +ಒಂದು ದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತಿನಲ್ಲಿ ರೇವಣ್ಣಶೆಟ್ಟಿಯ ಹೆಂಡತಿ ಸರ್ವಕ್ಕ ಬಂದು ಕೇಳಿದಳು: ‘ನಂಜಮ್ಮಾರೇ, ಸದ್ಯ ಸುತರಾಮಾಗಿಬಿಟ್ಟಿದೆ. ಎಲ್ಡು ಸೇರು ಹಸಿಟ್ಟು ಕೊಡ್ತೀರಾ?’ +‘ಬೀಸಿದ ಹಿಟ್ಟು ಇಲ್ವಲ್ಲ ಸರ್ವಕ್ಕ, ಬನ್ನಿ ಕೂತ್ಕಳಿ.’ +‘ಹಂಗಾರೆ ಎಲ್ಡು ಸೇರು ರಾಗೀನೇ ಕೊಡಿ.’ +ಸರ್ವಕ್ಕ ತಂದಿದ್ದ ಡಬ್ಬದ ಕುಕ್ಕೆಗೆ ನಂಜಮ್ಮ ಎರಡು ಸೇರು ರಾಗಿಯನ್ನು ಅಳೆದು ಕೊಟ್ಟಳು. ಹೆಚ್ಚು ಮಾತನಾಡದೆ ಸರ್ವಕ್ಕ ಹೊರಟುಹೋದಳು. ಆದಿನ ಸಂಜೆಗೆ ಅವಳೇ ಮತ್ತೆ ಬಂದಾಗ ನಂಜಮ್ಮ ಮುತ್ತುಗದೆಲೆ ಹಚ್ಚಿಸುತ್ತಿದ್ದಳು. ಹತ್ತಿರವೇ ಕೂತುಕೊಂಡು ಸರ್ವಕ್ಕ ಎಂದಳು: ‘ಯಾರುನ್ನ ಕೇಳಾದು ಅಂತಿದ್ದೆ. ಇವತ್ತು ಉಡುಗ್ರೆಲ್ಲ ಅಸ್ಕಂಡಿದ್ದು. ನಂಗೂ ಉಪಾಸ ಮಾಡಿ ಸುಸ್ತಾಗಿತ್ತು. ನೀವು ರಾಗಿ ಕೊಟ್ಟಿ ಉಣ್ಣಾಕ್ ಇಕ್ಕಿದ್ರಿ.’ +‘ಇದೇನ್ ಸರ್ವಕ್ಕ ಹಿಂಗಂತೀರೀ? ಜಮೀನು ಗಿಮೀನು ಇರೋ ನೀವು ಹೀಗಂದ್ರೆ ಹ್ಯಾಗೆ ನಂಬೋದು?’ +‘ನಿಜ ಹೇಳಿ. ನಿಮ್ಗೆ ಏನೂ ಗೊತ್ತಿಲ್ವರಾ?’ +‘ಸ್ವಲ್ಪ ಸ್ವಲ್ಪ ಕೇಳಿದೀನಿ. ಆದ್ರೆ ಮನೇಲಿ ಊಟಕ್ಕೆ ರಾಗಿ ಇಲ್ಲದ ಹಾಗಾಗಿದೆ ಅಂತ ಗೊತ್ತಿರ್ಲಿಲ್ಲ.’ +‘ನಾನ್ ಪಡುದ್ಬಂದುದ್ದು. ಹಿಂದಿನ ಜನ್ಮದಾಗೆ ನ್ಯಟ್ಟಗೆ ಸಿವಪೂಜೆ ಮಾಡಿರ್ನಿಲ್ಲ’ – ಎಂದು ಸರ್ವಕ್ಕ ಕಣ್ಣೀರು ಹಾಕಿಕೊಂಡು, ತಾನೇ ಎಲ್ಲವನ್ನೂ ಹೇಳಿದಳು. +ರೇವಣ್ಣಶೆಟ್ಟಿ ಕೋಡಿಹಳ್ಳಿಗೆ ಹೋಗಿ ಇಸ್ಪೀಟಿಗೆ ಬರೆದುಕೊಟ್ಟ ಪ್ರೋನೋಟುಗಳ ಒಟ್ಟು ಮೂರು ಸಾವಿರ ರೂಪಾಯಿ ತನಕ ಆಗಿತ್ತು. ಅದೆಲ್ಲಕ್ಕೂ ಬದಲಾಗಿ ಶೆಟ್ಟಿಯ ಊರ ಮುಂದಿನ ಹೊಲ ಬರೆದುಕೊಡಬೇಕು, ಇಲ್ಲದಿದ್ದರೆ ದಡಿ ತಗಂಡು ಹೇರುವುದಾಗಿ ಚಿಕ್ಕೇಗೌಡ ಒಂದು ದಿನ ಹಿಡಿದು ನಿಲ್ಲಿಸಿದನಂತೆ. ಹಾಗಿಂದಹಾಗೇ ತಿಪಟೂರಿಗೆ ಹೋಗಿ ರಿಜಿಸ್ಟ್ರೀ ಮಾಡಿ, ಕಾಗದದಲ್ಲಿ ಪ್ರೋನೋಟುಗಳನ್ನು ಹೊಗಳಿ ಮುಗಿಸಿ ಬಂದನಂತೆ. ಇನ್ನು ಅವರಿಗಿದ್ದುದು ಮೂರು ಆರಿನ ಉಕ್ಕೆಗದ್ದೆ. ಮಳೆ ನಡೆದು ಕೆರೆ ತುಂಬಿ ನೆಲಗೇಯ್ದು ಬೆಳೆ ಬಂದರೆ ಹನ್ನೆರಡು ಕಂಡುಗವಾದರೂ ಬತ್ತ ಬರುತ್ತಿತ್ತು. ಆದರೆ ಬಿಳೀ ಪಂಚೆಯುಟ್ಟು ಹೊಳೆಯುವ ಬಾರಿನ ಚಪ್ಪಲಿ ಮೆಟ್ಟುವ ಪೋಟು – ಲಾಯರು ರೇವಣ್ಣಶೆಟ್ಟ ಅಟ್ಟಲುಗದ್ದೆ ಹೇಗೆ ಗೇಯ್ದಾನು? ಹೀಗಾಗಿ ವಾರಪಾಲಿಗೆ ಕೊಟ್ಟಿದ್ದರಲ್ಲಿ ನಾಲ್ಕು ಖಂಡುಗ ಬರುತ್ತಿತ್ತು. ಆ ಗದ್ದೆಯನ್ನೂ ಕಾಶಿಂಬಡ್ಡಿ ಸಾಹುಕಾರರಿಗೆ ಆಧಾರ ಮಾಡಿ ಎಂಟು ನೂರು ರೂಪಾಯಿ ತೆಗೆದುಕೊಂಡಿದ್ದನಂತೆ. +‘ಆಧಾರ ಮಾಡಿ ಸಾಲ ಮಾಡುಕ್ಕೆ ಏನು ಬಂದಿದ್ದುದು ಖರ್ಚು? ರುದ್ರಾಣೀ ಮದ್ವೆ ಗಿದ್ವೆ ಏನಾರ ಗೊತ್ತು ಮಾಡಿದಾರಾ?’ +‘ನಂಜಮ್ಮಾರೇ, ಮನ್ಲಿ ಋತುವಾದ ಮಗಳವ್ಳೆ. ಅನ್ನಾ ಗ್ಯಾನವಿದ್ರೆ ಅದ್ಯಾಕ್ ಮಾತು? ಗಂಡನ್ನ ಬುಟ್ಟ ಆ ಹಾದರಗಿತ್ತಿ ಅವ್ಳಲ್ಲ, ಮಾವನ್ನ ಮಡೀಕಂಡಿದ್ದ ಸ್ವಸೆ? – ಅವ್ಳು ಈಗ ಊರ ಮುಂದೆ ತೋಪಿನ್ತಾವ ಸಣ್ಣ ಹೆಂಚಿನ ಮನೆ ಕಟ್ಕಂಡಿ ಅಂಗ್ಡಿ ಮಡೀಕಂಡವ್ಳಲಾ, ಅದ್ಕೆ ದುಡ್ಡೆಲ್ಲಿ ಬಂತು ಅಂತೀರಾ? ಈ ಎಂಟು ನೂರು ರೂಪಾಯಿ ಆ ಮುಂಡೆ ಬಾಯಿಗೆ ಆಕಿದ್ರಂತೆ.’ +ಇನ್ನು ಅವರಿಗೆ ಇದ್ದುದು ಐವತ್ತು ಮರದ ತೋಟ. ತೆಂಗಿನಕಾಯಿ ಬಲಿಯುವ ಮೊದಲೇ ಸಿಕ್ಕಿದಷ್ಟನ್ನು ಕೆಡವಿಸಿ ಮಾರಿಬಿಡುತ್ತಾರೆ. ಇಲ್ಲದಿದ್ದರೆ ರೇವಣ್ಣಶೆಟ್ಟಿಯ ಬಿಳಿ ಪಂಚೆ, ಕಾಲರಿನ ಶರಟುಗಳನ್ನು ಒಗೆಯಲು ಸಾಬೂನು, ಮುಖಕ್ಷೌರದ ಬ್ಲೇಡು, ಸೇದಲು ಎಲಿಫಂಟ್ ಸಿಗರೇಟುಗಳಿಗೆ ದುಡ್ಡೇ ಇಲ್ಲ. +ನರಸಿ ಈಗ ಊರ ಮುಂದೆ ಅಮ್ಮನ ತೋಪಿನ ಹತ್ತಿರ ತನ್ನದೇ ಮೂರು ಅಂಕಣದ ಮನೆ ಕಟ್ಟಿಸಿ ಅಂಗಡಿ ಇಟ್ಟುಕೊಂಡಿದ್ದಾಳೆ. ಅವಳ ಸುದ್ದಿ ಗೊತ್ತಿಲ್ಲದವರೇ ಇಲ್ಲ. ಅವಳ ಮಾವ ಚನ್ನಶೆಟ್ಟಿ ಅವಮಾನಿತನಾಗಿ ರಾಮಸಂದ್ರವನ್ನೇ ಬಿಟ್ಟು ತಿಪಟೂರಿನ ಆಚೆಯ ಚನ್ನಾಪುರದಲ್ಲಿ ಅಂಗಡಿ ಹಾಕಿಕೊಂಡಿದ್ದಾನೆ. ಅವಳ ಗಂಡ ಗಿರಿಯಶೆಟ್ಟಿಯೂ ಊರು ಬಿಟ್ಟು ಎಲ್ಲಿಗೋ ಹೋದ. ಅರಸೀಕೆರೆಯ ಹತ್ತಿರದ ಯಾವುದೋ ಊರಿನಲ್ಲಿ ಅವನು ಈಗ ಮನೆವಾಳತನಕ್ಕೆ ಇದ್ದಾನೆಂದು ಕೆಲವರು ಹೇಳುತ್ತಾರೆ. +ರೇವಣ್ಣಶೆಟ್ಟಿಗೆ ಬುದ್ಧಿಹೇಳಲು ಯಾರೂ ಇರಲಿಲ್ಲ. ಅವನ ನಾಲಿಗೆಯ ಮುಂದೆ ನಿಲ್ಲಲು ಯಾರೂ ಇಷ್ಟಪಡುವುದಿಲ್ಲ. ಸರ್ವಕ್ಕನ ತೌರಿನಲ್ಲಿ ಅಣ್ಣ ತಮ್ಮಂದಿರಿದ್ದಾರೆ. ಇವಳಿಗೆ ಇವಳ ಮಕ್ಕಳಿಗೆ, ಮಾಡುವಷ್ಟು ಮಾಡಿದ್ದಾರೆ. ಆದರೆ ಅವರಿಗೂ ತಮ್ಮದೇ ಸಂಸಾರವಿದೆ. ಇವಳು ಎಷ್ಟೆಂದು ತನ್ನ ಗೋಳನ್ನು ಅವರಿಗೆ ಹೇಳಿಯಾಳು? ಒಂದು ಸಲ ಭಾವನಿಗೆ ಬುದ್ಧಿ ಹೇಳಲು ಅವಳ ಹಿರಿಯಣ್ಣ ಬಂದಿದ್ದಾಗ, ಅವ್ವ ಅಜ್ಜಿ ಎಂದೆಲ್ಲ ಬೈಸಿಕೊಂಡು, ಇನ್ನು ಮುಂದೆ ಇವನ ಕೈಲಿ ಮಾತನಾಡುವುದಿಲ್ಲವೆಂದು ಹೇಳಿ ಹೋಗಿದ್ದ. +ಸರ್ವಕ್ಕ ಹೇಳಿದಳು: ‘ನಂಜಮ್ಮಾರೇ, ಎತ್ತ ತ್ಯಪ್ಪಿಗೆ ಮಕ್ಳುನ್ನ ಹ್ಯಂಗಾದ್ರೂ ಸಾಕ್ಬೇಕು. ನಿಮ್ಮ ಜನ್ರ ಹಂಗೆ ಎಲೆ ಹಚ್ಚಾಕೆ ನಮ್ಗೆ ಬರಾಕಿಲ್ಲ. ನೀವು ನನ್ನ ಕುಂಡ್ರುಸ್ಕಂಡ್ ಏಳ್ಕೊಡಿ. ಕಲ್ತ್ಕತೀನಿ. ಈ ವರ್ಸದಿಂದ ನೀವು ಎಲೆ ತರಾಕೆ ಚ್ವಾಳನಗುಡ್ಡದ ಅಳ್ಳುಕ್ ಓಗೂವಾಗ ನನ್ನೂ ಕರ್ಕಂಡ್ ಓಗಿ.’ +‘ನೀವು ಎಲೆ ಹೊರುಕ್ಕೆ ಬಂದ್ರೆ ಶೆಟ್ರು ಸುಮ್ನಿರ್ತಾರಾ?’ +‘ಸುಮ್ನಿದ್ರೆ ಏನ್ ಮಾಡ್ತಾರೆ? ಇವತ್ ಮದ್ಯಾನ ನಿಮ್ಮನ್ಲಿ ಕೊಂಡೋದ ರಾಗಿ ಬೀಸಿ ಮುದ್ದೆ ಮಾಡ್ದಾಗ ನಾಯಿ ತಿಂದ್ಹಂಗೆ ನುಂಗ್ಲಿಲ್ವಾ?’ +ಮರುದಿನದಿಂದ ಸರ್ವಕ್ಕ ದಿನವೂ ಸ್ವಲ್ಪ ಸ್ವಲ್ಪ ಹೊತ್ತು ಬಂದು ಎಲೆ ಹಚ್ಚುವುದು ಹೇಳಿಸಿಕೊಳ್ಳುತ್ತಿದ್ದಳು. ಹಂಚೀಕಡ್ಡಿ ಹೇಗೆ ಸೀಳಬೇಕು, ಎಲೆಯ ತೊಟ್ಟು ಮುರಿದು ಹೇಗೆ ನೀರು ಚಿಮುಕಿಸಿ ಜೋಡಿಸಿ ಮಣೆ ಹೇರಿ, ಮೇಲೆ ಭಾರವಾದ ಒಂದು ಗುಂಡುಕಲ್ಲು ಏರಿಸಬೇಕು, ಮಧ್ಯಕ್ಕೆ ಎಂತಹ ದುಂಡಗಿರುವ ಎಲೆಯನ್ನೇ ಹಾಕಿ ಅದಕ್ಕೆ ಒಂದು ತಳ ಎಲೆಯ ತೇಪೆ ಕೊಟ್ಟು ಕಡ್ಡಿ ಮುರಿಯಬೇಕು ಎಂಬುದನ್ನು ವಿವರವಾಗಿ ಹೇಳಿಸಿಕೊಂಡು ತಕ್ಕಮಟ್ಟಿಗೆ ಹಚ್ಚುವುದನ್ನೂ ಕಲಿತಳು. ‘ಹೀಗೆ ಹಚ್ಚಿ ಕೈ ಕುದುರಿದ ಮ್ಯಾಲೆ ಬ್ಯಾಗ ಬ್ಯಾಗ ಆಗುತ್ತೆ’ – ಎಂದು ನಂಜಮ್ಮ ಭರವಸೆ ಕೊಟ್ಟಮೇಲೆ ಅವಳಿಗೆ ಸ್ವಲ್ಪ ಧೈರ್ಯ ಬಂತು. +– ೬ – +ಒಂದು ಮಧ್ಯಾಹ್ನ ನಂಜಮ್ಮ ಊರಿನ ಸರ್ಕಾರೀ ಬಾವಿಯಲ್ಲಿ ಕುಡಿಯುವ ನೀರು ಸೇದಲು ಹೋಗಿದ್ದಾಗ ಕುಣಿಕೆ ಹರಿದು ಬಿಂದಿಗೆ ಬಾವಿಯೊಳಕ್ಕೆ ಬಿದ್ದುಬಿಟ್ಟಿತು. ಮನೆಯಲ್ಲಿ ಇದ್ದುದು ಒಂದೇ ಬಿಂದಿಗೆ. ಇನ್ನು ಬಾವಿ ಮುಳುಗಲು ಕಂಬನಕೆರೆಯ ಕಾಸಿಂಸಾಬಿ ಬಂದಾಗಲೇ ಬಿಂದಿಗೆ ಸಿಕ್ಕುವುದು. ಮನೆಗೆ ಹೋಗಿ ಗಡಿಗೆಯನ್ನಾದರೂ ತರಬೇಕು. ಸರ್ಕಾರೀ ಬಾವಿಯಿಂದ ಗಡಿಗೆಯಲ್ಲಿ ನೀರು ಹೊತ್ತುಕೊಂಡು ಹೋಗಲು ಅವಳಿಗೆ ಸಂಕೋಚವೆನಿಸಿತು. ಆದರೆ ಮಾಡುವುದೇನು – ಎಂದುಕೊಂಡು ಮನೆಗೆ ಬಂದಾಗ ಕಲ್ಲೇಶ ಬಂದು ಕುಳಿತಿದ್ದ. ಹುಡುಗರೆಲ್ಲ ಅವನು ತಂದಿದ್ದ ಪೆಪ್ಪರುಮೆಂಟನ್ನು ದವಡೆಗೆ ಕೊಟ್ಟುಕೊಂಡು ಚಪ್ಪರಿಸುತ್ತಿದ್ದರು. +‘ನೀರಿಗೆ ಹೋಗಿದ್ಯಂತೆ. ಇದೇನು ಬರೀ ಕೈಲಿ ಬಂದೆ?’ – ಅವನು ಕೇಳಿದ. +‘ಬಿಂದಿಗೆ ಕಣ್ಣಿ ಹರ್‌ಕಂಡು ಬಿದ್‌ಬಿಡ್ತು.’ +‘ನಡಿ, ನಾನು ತೆಗೀತೀನಿ’- ಎಂದು ಅವನು ಎದ್ದು ಹೊರಟ. ಅವನ ಹಿಂದೆಯೇ ನಂಜು ಹೋದಳು. ಮಾವ ಬಾವಿ ಮುಳುಗುವುದನ್ನು ನೋಡಲು ಹುಡುಗರೂ ಉತ್ಸುಕರಾಗಿ ಬಂದರು. ನಂಜು ಮನೆಯ ಬಾಗಿಲಿಗೆ ಬೀಗ ಮೆಟ್ಟಿಕೊಂಡಳು. +ಊರಿನ ಇತರ ಎಲ್ಲ ಬಾವಿಗಳಲ್ಲಿಯೂ ಇದ್ದ ನೀರು ಸ್ವಲ್ಪ ಸಪ್ಪೆ. ಆದರೆ ಸರ್ಕಾರದವರು ಈಗ ಎರಡು ವರ್ಷದಲ್ಲಿ ತೆಗೆಸಿ ಕಲ್ಲಿನ ಕಟ್ಟಡ ಕಟ್ಟಿಸಿರುವ ಈ ಬಾವಿಯ ನೀರು ರುಚಿಯಾಗಿತ್ತು: ಶುಚಿಯಾಗಿಯೂ ಇತ್ತು. ಎಡಗೈ ಬಲಗೈಯವರು ವಿನಾ ಉಳಿದ ಎಲ್ಲ ಮತಸ್ತರೂ ಅಲ್ಲಿಯೇ ಕುಡಿಯುವ ಮತ್ತು ಅಡಿಗೆಯ ನೀರು ತರುತ್ತಿದ್ದರು. ಬ್ರಾಹ್ಮಣ, ಲಿಂಗಾಯತ, ಅಕ್ಕಸಾಲಿ, ಚಾತಾಳಿ, ಮೊದಲಾದ ಮೇಲುಜಾತಿಯ ಹೆಂಗಸರು ಮಾತ್ರ, ಸೇದಲು ತಮ್ಮ ಹಗ್ಗ ಬಿಡುವ ಮೊದಲು, ಮನೆಯಿಂದ ತಂದ ನೀರಿನಲ್ಲಿ ಒಂದು ಶಾರೆಯನ್ನು ರಾಟಿಗೆ ಎರಚಿ ಮಡಿ ಮಾಡಿಕೊಳ್ಳುತ್ತಿದ್ದರು. +ಕಲ್ಲೇಶ ಸೇದುವ ಹಗ್ಗವನ್ನು ಬಾವಿಯೊಳಕ್ಕೆ ಇಳಿಬಿಟ್ಟು ಮೇಲ್ಭಾಗವನ್ನು ರಾಟೆಯ ಕಬ್ಬಿಣದ ಗಡಾರಿಗೆ ಬಂದೋಬಸ್ತಾಗಿ ಕಟ್ಟಿದ. ಉಟ್ಟಿದ್ದ ಪಂಚೆ ಮತ್ತು ತೊಟ್ಟಿದ್ದ ಶರಟು ಕೋಟುಗಳನ್ನು ಬಿಚ್ಚಿ ಕೆಳಗೆ ಇಟ್ಟು, ನೋಡಿಕೊಳ್ಳುವಂತೆ ತಂಗಿಗೆ ಹೇಳಿ ಹಗ್ಗ ಹಿಡಿದು ಬಾವಿಗೆ ಇಳಿದ. ಪಾತಾಳದಷ್ಟು ಆಳದಲ್ಲಿ ನೀರಿದ್ದ ಆ ಬಾವಿ, ಎರಡು ಮೂರು ಉದ್ದ ಎರಡು ಮಾರು ಅಗಲವಾಗಿತ್ತು. ಆದರೆ ಹತ್ತಿ ಇಳಿಯಲು ಮೂಲೆಯಲ್ಲಿ ಸಣ್ಣ ಸಣ್ಣ ನಾಲಗೆ ಕಲ್ಲುಗಳಿದ್ದವು. ನೀರನ್ನು ಮುಟ್ಟಿ ಒಂದು ಸಲ ಮುಳುಗಿ ಅವನು ಮೇಲೆ ಬಂದಾಗ ಒಂದು ಬಿಂದಿಗೆ ಎತ್ತಿ ತಂದಿದ್ದ. ಹಗ್ಗದ ಕುಣಿಕೆಗೆ ಕಟ್ಟಿ – ‘ಮೇಲೆ ಎಳಕೋ’ ಎಂದು ಕೂಗಿ ಸನ್ನೆ ಮಾಡಿದಮೇಲೆ ನಂಜು ಎಳೆದುಕೊಂಡಳು. ಆದರೆ ಅದು ಅವಳ ಬಿಂದಿಗೆಯಲ್ಲ. ‘ಅದ ಅಲ್ಲೇ ಮೇಲೆ ಇಟ್ಟುಕೊ, ಯಾರ್ ಬಂದ್ರೂ ಕೊಡ್‌ಬ್ಯಾಡ. ಮತ್ತೆ ಹಗ್ಗ ಬಿಡು’ – ಎಂದು ಕೂಗಿ ಹೇಳಿ ಮತ್ತೊಮ್ಮೆ ಮುಳುಗಿದ. ಇನ್ನೊಂದು ಬಿಂದಿಗೆ ಸಿಕ್ಕಿತು. ಕೆಳಗೆ ಇನ್ನೂ ಹತ್ತು ಹನ್ನೆರಡು ಬಿಂದಿಗೆಗಳಿದ್ದುದು ನೀರಿನೊಳಗೆ ತಡಕುವಾಗ ತಿಳಿಯಿತು. ಎಲ್ಲವನ್ನೂ ತೆಗೆದು ಮೇಲೆ ಕಳುಹಿಸಿದ. +ಹಗ್ಗ ಹಿಡಿದು ನಾಲಗೆ – ಕಲ್ಲುಗಳ ಮೇಲೆ ಕಾಲುಗಳನ್ನಿಟ್ಟು ಅವನು ಮೇಲೆ ಏರಿ ಬರುವ ಹೊತ್ತಿಗೆ ಬಾವಿಯ ದಡದಲ್ಲಿ ಇಪ್ಪತ್ತಕ್ಕೂ ಮೇಲ್ಪಟ್ಟು ಗಂಡಸರು ಹೆಂಗಸರು ಸೇರಿದ್ದರು. +‘ನಂಜಾ, ನಿನ್ನ ಬಿಂದಿಗೆ ತಗಂಡು ಬ್ಯಾರೆ ಇಟ್ಕ’ – ಎಂದು ತಂಗಿಗೆ ಹೇಳಿದ ಕಲ್ಲೇಶ ಜನಗಳಿಗೆ ಹೇಳಿದ: ‘ಬಿಂದಿಗೆ ವಾರಸ್ದಾರು ಒಂದೊಂದುಕ್ಕೆ ಎಂಟೆಂಟಾಣೆ ತಂದು ಕೊಟ್ಟು ಬಿಡಿ. ಇಲ್ದೆ ಇದ್ರೆ ನಾನು ಇವನ್ನೆಲ್ಲ ನಮ್ಮೂರಿಗೆ ತಗಂಡು ಹೋಕ್ತೀನಿ.’ +ಕೆಲವರು ದುಡ್ಡು ತರಲು ಮನೆಗೆ ಹೋದರು. ಅಲ್ಲಿಗೆ ಬಂದಿದ್ದ ಮಾಜೀ ಹಂಗಾಮಿ ಶ್ಯಾನುಭೋಗ ಸಿವಲಿಂಗ ಪ್ರಶ್ನಿಸಿದ: ‘ನಮ್ಮೂರ ಬಾವಿ ಮುಳುಗಿ ಕೊಡಪಾನ ತೆಗ್ದು ಕುಂಡೊಯ್ಯಕ್ಕೆ ನಿಮ್ಗೆ ಯಾರ್ರೀ ಅತಾಲ್ಟಿ ಕೊಟ್ಟೋರು?’ +‘ಹಾಗಾದ್ರೆ ನಾನು ಇವುನ್ನೆಲ್ಲ ನೀರು ತುಂಬಿ ಮತ್ತೆ ಬಾವಿ ಒಳಿಕ್ಕೆ ಮುಳುಗುಸ್ತೀನಿ. ಉಸುರು ಹಿಡಿದು ಮುಳುಗಿದ್ದು ಬಿಟ್ಟಿಯಾ?’ +ಸಿವಲಿಂಗನಿಗೆ ಇನ್ನು ಉತ್ತರ ಹೊಳೆಯಲಿಲ್ಲ. ಎಲ್ಲರೂ ಎಂಟೆಂಟಾಣೆ ಕೊಟ್ಟರು. ಕಲ್ಲೇಶನಿಗೆ ಒಟ್ಟೂ ಆರೂವರೆ ರೂಪಾಯಿ ಗಿಟ್ಟಿತು. ಹಣವನ್ನು ಕೋಟಿನ ಜೇಬಿಗೆ ಹಾಕಿಕೊಂಡು ಪಂಚೆ, ಶರಟು, ಕೋಟುಗಳನ್ನು ಕೈಲಿ ಹಿಡಿದು ಒದ್ದೆ ನಿಕ್ಕರಿನಲ್ಲಿ ಅವನು ಮನೆಗೆ ಬಂದ. +ಅಪರೂಪಕ್ಕೆ ಬಂದಿರುವ ಅಣ್ಣ ಎರಡು ದಿನವಾದರೂ ಇರುತ್ತಾನೆಂದು ಭಾವಿಸಿದ ನಂಜು ನಾಳೆ ಏನಾದರೂ ವಿಶೇಷ ಮಾಡಬೇಕೆಂದು ಯೋಚಿಸಿ, ಹೋಗಿ ಶ್ಯಾವಿಗೆ ಮಾಡುವುದಕ್ಕೆ ಸಾಮಾನು ತಂದಳು. ಮಧ್ಯಾಹ್ನ ಊಟವಾದ ಮೇಲೆ ಒಂದು ಗಳಿಗೆ ಮಲಗಿ ಎದ್ದ ಕಲ್ಲೇಶ ಕೇಳಿದ: ‘ಇದೇನು ತಂದೆ?’ +‘ಶ್ಯಾವಿಗೆ ಮಾಡಾಣಾ ಅಂತ. ನಿಂಗೆ ಇಷ್ಟವಲ್ವೇ?’ +‘ನಾನಿರುಲ್ಲ. ಈಗ ಹೊತ್ತು ಮುಳುಗೂ ಹೊತ್ತಿಗೆ ಹೋಗ್ತೀನಿ.’ +‘ಇದೇನು ಹಾಗೆ ಬಂದೆ, ಹೀಗೆ ಹೊರಟೆ. ಇರು ಇರು.’ +‘ಇಲ್ಲ, ಅರ್ಜೆಂಟ್ ಕೆಲ್ಸವಿದೆ. ನಿನ್ನ ನೋಡ್ಕಂಡ್ ಹೋಗಾಣಾ ಅಂತ ಬಂದೆ. ನಂಗೆ ಒಂದು ಲೋಟ ಕಾಫಿ ಮಾಡ್ಕೊಡು ಸಾಕು.’ +ರಾಮಣ್ಣನನ್ನು ಅಂಗಡಿಗೆ ಕಳಿಸಿ ಆರು ಕಾಸಿನ ಪುಡಿ ತರಿಸಿ ಬೆಲ್ಲ ಹಾಕಿ ಅವಳು ಒಂದು ಕಂಚಿನ ಗಳಾಸು ಮಾಡಿಕೊಟ್ಟಳು. ಅದನ್ನು ಕುಡಿದ ಕಲ್ಲೇಶ ಹೊರಟೇಬಿಟ್ಟ. ಆಗಲೇ ಹೊತ್ತು ಮುಳುಗಿ ಕತ್ತಲೆಯಾಗುತ್ತಿತ್ತು. ಅವನಿಗೂ ಅಷ್ಟೆ – ಅವನ ಅಪ್ಪನಂತೆಯೇ ಕತ್ತಲೆಂದರೆ ಸ್ವಲ್ಪವೂ ಭಯವಿಲ್ಲ. +ಅವನು ಹೋದ ಸ್ವಲ್ಪ ಹೊತ್ತಿಗೆ ಸರ್ವಕ್ಕ ಬಂದು ಹೇಳಿದಳು: ‘ನಂಜಮ್ಮಾರೇ, ಚ್ವಾಳನಗುಡ್ಡದ್‌ತಾವ ಮುತ್ತುಗದೆಲೆ ಬಂಗಾರದ ಎಲೆ ಹಂಗವಂತೆ. ಗುಡಿ ಮಾದೇವಯ್ನೋರು ಹೂವಿನಹಳ್ಳಿಗೆ ಬಿಕ್ಸುಕ್ ಓದೋರು ಕಣ್ಣಲ್ಲಿ ನೋಡಿ ಮನ್ಸು ತಡೀದೆ ಕಿತ್ಕಂಡ್ ಬಂದಿದ್ರು. ನಾನೇ ನೋಡ್ದೆ.’ +‘ಇನ್ನೂ ಮಾಘಮಾಸ ಕಳೆದಿಲ್ವಲಾ ಸರ್ವಕ್ಕ?’ +‘ಮಾರ್ಗಶೀರದಾಗೆ ಈ ವರ್ಸ ಮಳೆಯಾಯ್ತಲ್ರ, ಅದ್ಕೆ ಬ್ಯಾಗ ಬಂದೈತೆ. ನಾಳೀಕ್ ಹ್ವಾಗಾನ ನಡೀರಿ.’ +ಎಲೆಯ ಕಾಲದಲ್ಲಿ ಬೇಗ ಬೇಗ ಮಾಡಿಕೊಳ್ಳದೆ ಇದ್ದು ಬೇಗ ಮುಂಗಾರು ಹನಿತರೆ ಅದಕ್ಕೂ ಎಪ್ಪೆಯಾಗುತ್ತದೆಂದು ಯೋಚಿಸಿದ ನಂಜಮ್ಮ, ಆಗಲಿ ಎಂದಳು. ಕಾಗೆ ಕರ್ ಎನ್ನುವ ಮೊದಲೇ ಸಿದ್ಧವಾಗಿ ಬರುವುದಾಗಿ ಹೇಳಿ ಸರ್ವಕ್ಕ ಮನೆಗೆ ಹೋದಳು. ಅವಳಿಗೆ ಅದು ಮೊದಲನೆಯ ದಿನದ ಅನುಭವ. ಆದುದರಿಂದ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಅಂತೂ ಇಂತೂ ರಾತ್ರಿಯನ್ನು ಕಳೆದು ಕಾಗೆಯ ಶಬ್ದ ಕೇಳಿದವಳೇ ಎದ್ದು, ಗೋಣಿಚೀಲ ಮತ್ತು ರೊಟ್ಟಿಯ ಗಂಟನ್ನು ಕೈಲಿ ಹಿಡಿದು, ತಲೆಗೆ ಮುಸುಗು ಹಾಕಿಕೊಂಡು ಬಂದು ನಂಜಮ್ಮನ ಮನೆಯ ಕದ ತಟ್ಟಿದಳು. ನಂಜಮ್ಮನೂ ಸಿದ್ಧವಾಗಿ ಬಂದಳು. ಇನ್ನೂ ಬೆಳದಿಂಗಳಿತ್ತು. ಬೆಳದಿಂಗಳ ಬೆಳಕಿಗೆ ಕಾಗೆ ಕೂಗಿರಬಹುದೆಂಬ ಅನುಮಾನ ನಂಜಮ್ಮನಿಗೆ ಆದರೂ, ‘ಇಲ್ಲ ಕಣ್ರಿ, ಬಿಸಿಲೇರಿದ್ರೆ ಕಷ್ಟ. ನಡೀರಿ’ ಎಂದು ಸರ್ವಕ್ಕ ಮುಂದೆ ನಡೆದಳು. ಇಬ್ಬರೂ ಊರನ್ನು ದಾಟುವಾಗ ಊರ ಮುಂದಿನ ತೋಪಿನ ಹತ್ತಿರ ನರಸಿ ಹೊಸದಾಗಿ ಕಟ್ಟಿಕೊಂಡಿದ್ದ ಚಿಲ್ಲರೆ ಅಂಗಡಿಯ ಮನೆಯ ಬಾಗಿಲನ್ನು ತೆರೆದಂತಾಯಿತು. ಯಾರೋ ಗಂಡಸರು ’ಖಂಡಿತ’ ಎಂದು ಮೆಲ್ಲಗೆ ಹೇಳುತ್ತಾ ಹೊರಗೆ ಬಂದು, ಇವರು ಹೋಗುವ ದಾರಿಯಲ್ಲಿಯೇ ಸರಸರನೇ ನಡೆದು ಹೋದರು. ನರಸಿ ಬಾಗಿಲು ಹಾಕಿಕೊಂಡಳು. +ಆ ಗಂಡಸು ಕಲ್ಲೇಶನೇ ಎಂಬುದು ನಂಜಮ್ಮನಿಗೆ ತಕ್ಷಣ ತಿಳಿಯಿತು. ತಲೆಗೆ ಸೆರಗಿನ ಮುಸುಕು ಹಾಕಿ, ಗೋಣಿಯ ಚೀಲವನ್ನು ಹೆಗಲಿಗೆ ಹಾಕಿಕೊಂಡು ನೆಡೆಯುತ್ತಿದ್ದುದರಿಂದ ಇವರಿಬ್ಬರ ಪೈಕಿ ಒಬ್ಬಳು ತನ್ನ ತಂಗಿ ಎಂಬುದು ಅವನಿಗೆ ತಿಳಿಯಲಿಲ್ಲ. ಇವರಾರೆಂಬ ಗೊಡವೆಯೂ ಇಲ್ಲದೆ ಅವನು ಬೇಗ ಬೇಗ ನಡೆದ. ನಂಜುವೇ ನಡಿಗೆಯನ್ನು ನಿಧಾನ ಮಾಡಿ ಸ್ವಲ್ಪ ಹಿಂದೆ ಉಳಿದಳು. ಕಾರಣವನ್ನು ಸರ್ವಕ್ಕನಿಗೆ ಹೇಳಬಾರದೆಂದು ಅವಳು ಸುಮ್ಮನೆ ಇದ್ದಳು. ಮುಂದೆ ನಡೆದು ಹೋಗುತ್ತಿದ್ದ ಗಂಡಸು ಇವರ ಕಣ್ಣಿಗೆ ಕಾಣಿಸದಷ್ಟು ಮುಂದೆ ಹೋಗಿ ಮರೆಯಾದ ಮೇಲೆ ಸರ್ವಕ್ಕನೇ ಕೇಳಿದಳು: ‘ಅವ್ರು ನಿಮ್ಮಣ್ಣಯ್ಯ ಅಲ್ವರಾ?’ +‘ಅದ್ಯಾರೋ ಕಾಣವ್ವ.’ +‘ಊ ಕಣ್ರೀ ಅವ್ರೆಯಾ. ಅತ್ ಅದ್ನೈದು ದಿನಕ್ಕೆ ಒಂದ್ಸಲಿ ಬತ್ತಾರಂತೆ. ರಾತ್ರಿನಾಗ ಕತ್ಲಾದ ಮ್ಯಾಲೆ ಬಂದು ಬ್ಯಳಿಗ್ಗೆ ಕೋಳಿ ಕೂಗೂಕ್ ಮದ್ಲೇ ಹ್ವಂಟೋಯ್ತರಂತೆ. ಆ ನರಸಿಯೇ ಯಾರ್ಯಾರ ಕೈಲೋ ಹಂಗಂದ್ಲಂತೆ.’ +ನಂಜಮ್ಮ ಮಾತನಾಡಲಿಲ್ಲ. ತನಗೆ ಈ ಮಾತು ಕೇಳಲೇ ಇಲ್ಲವೇನೋ ಎಂಬಂತೆ ಮೌನವಾಗಿ ಹೆಜ್ಜೆ ಹಾಕಿದಳು. +ಅಧ್ಯಾಯ ೯ +– ೧ – +ಅದು ಅನುಭವಕ್ಕೆ ಬಂದು ಇದ್ದವರದೇ ಆಗುವಂತೆ, ಹನುಮಂತರಾಯನ ಗುಡಿಯು ಗಂಗಮ್ಮ ಅಪ್ಪಣ್ಣಯ್ಯರದಾಯಿತು. ಗುಡಿಯ ಪೂಜೆಯ ಹಕ್ಕಿನ ಮೇಲೆ ಅಣ್ಣಾಜೋಯಿಸನ ಅಧಿಕಾರವೇನೂ ಕಡಿಮೆಯಾಗಲಿಲ್ಲ. ಆದರೆ ಈಗ ಅದನ್ನು ಹನುಮಂತರಾಯನ ಗುಡಿ ಎನ್ನುವ ಬದಲಿ ಎಷ್ಟೋ ಜನರು ಗಂಗಮ್ನೋರ ಮನೆ ಎಂದು ಕರೆಯುತ್ತಾರೆ. +ಗಂಗಮ್ಮ ಅಪ್ಪಣ್ಣಯ್ಯರು ಆಗಾಗ್ಗೆ ಹಳ್ಳಿಯ ಮೇಲೆ ಹೋಗುವುದೂ ಉಂಟು. ರಾಮಸಂದ್ರದ ಶಿವೇಗೌಡನ ಹೆಸರು ಸುತ್ತ ಮೂರು ಮೈಲಿಯ ಆಚೆ ಮೊದಲು ತಿಳಿದಿರಲಿಲ್ಲ. ಈಗ ಅದು ಇಪ್ಪತ್ತು ಮೈಲಿ ಸುತ್ತಿಗೂ ತಿಳಿದಿದೆ. ತಾಯಿ ಮಗ, ಇಬ್ಬರೂ ಹಳ್ಳಿಹಳ್ಳಿಗೆ ಹೋಗುತ್ತಾರೆ. ‘ನಮ್ಮ ಆಸ್ತೀನೆಲ್ಲ ಒಬ್ಬ ಪಾಪಿ ಸೂಳೇಮಗ ಮೋಸ ಮಾಡಿ ತಿಂದ್‌ಹಾಕಿಬಿಟ್ಟ. ನಮಗೆ ಜೀವನಕ್ಕಿಲ್ಲ. ಏನಾದ್ರೂ ಕೊಡಿ’ – ಎಂದು ಮನೆ ಮನೆಗಳಲ್ಲಿಯೂ ಕೇಳುತ್ತಾರೆ. ಹಾಗೆಂದು ಕೇಳಿ ತನ್ನ ಹಳೆಯ ಕೆಂಪಿನ ಸೀರೆಯನ್ನು ನೆಲದ ಮೇಲೆ ಹಾಸುವವಳು ಗಂಗಮ್ಮ. ಅದರ ಮೇಲೆ ಮೊರದಲ್ಲಿ ತಂದು ಸುರಿದ ರಾಗಿ, ಅವರೇಕಾಳು, ಮೆಣಸಿನ ಕಾಯಿಗಳನ್ನು ಕಟ್ಟಿ ತಂದುಕೊಟ್ಟರೆ ಎಲ್ಲವನ್ನೂ ಒಟ್ಟು ಗೋಣಿಯ ಚೀಲದಲ್ಲಿ ತುಂಬಿ ತಲೆಯಮೇಲೆ ಹೊತ್ತು ಊರಿಗೆ ತರುವವನು ಅಪ್ಪಣ್ಣಯ್ಯ. ಮಾದೇವಯ್ಯನವರೂ ಹೀಗೆಯೇ ಮಾಡುತ್ತಾರೆ. ಆದರೆ ಅವರಿಗೆ ಭಿಕ್ಷೆ ಬೇಡಲು ಯಾವ ಕಾರಣವೂ ಇಲ್ಲ. ಹೇಳಿ ಕೇಳಿ ಜಂಗಮರು. ಕೆಂಪು ಅಂಗಿ ಕೆಂಪು ಅರಿವೆ ತೊಟ್ಟು ಕೆಂಪು ಮುಂಡಾಸು ಧರಿಸಿ ವಿಭೂತಿ ಬಳಿದ ಸಂನ್ಯಾಸಿ ಅವರು. ಹೊಸಿಲ ಒಳಗೆ ನಿಂತು – ‘ಭಿಕ್ಷಾ, ಗುರು ರೇವಣ್ಣರ ಭಿಕ್ಷಾ’ ಎನ್ನುವುದಷ್ಟೇ ಅವರ ಕೆಲಸ. ಒಂದು ಬೊಗಸೆ ರಾಗಿ ಬಂದು ಬೀಳುತ್ತದೆ. ಆದರೆ ಗಂಗಮ್ಮ ಪ್ರತಿ ಮನೆಯಲ್ಲೂ ತನ್ನ ಪ್ರವರ ಹೇಳಿ ಶಿವೇಗೌಡನ ಸುಳಿಯನ್ನು ಶಪಿಸುತ್ತಾಳೆ. ಕೊಡುವವರು ಅರ್ಧ ಮೊರದಷ್ಟಾದರೂ ಕೊಡುತ್ತಾರೆ. ಕೊಡದವರು ಶಾಪ ಪಡೆಯುತ್ತಾರೆ. +ಗಂಗಮ್ಮನ ಮನೆಯಲ್ಲಿಯೂ ಪೆಟ್ಟಿಯಿದೆ. ಪೆಟ್ಟಿಯ ಭರ್ತಿ ರಾಗಿ. ಎರಡು ಮೊಡೆ ಅವರೇಕಾಳು. ಒಂದು ಗುಡಾಣದ ಭರ್ತಿ ಮೆಣಸಿನಕಾಯಿ ಇದೆ. ಶಿವೇಗೌಡ ಬದುಕಿದ್ದೇನು, ನಾನು ಕೆಟ್ಟಿದ್ದೇನು ಎಂದು ಗಂಗಮ್ಮ ಧರ್ಮ ಕರ್ಮದ ಸಮಗುಣವನ್ನು ಹೇಳುತ್ತಾಳೆ. +ಒಂದು ಮಧ್ಯಾಹ್ನ ಎರಡು ಎರಡೂವರೆ ಗಂಟೆಯ ಹೊತ್ತಿಗೆ ಹನುಮಂತರಾಯನ ಗುಡಿಯ ಮುಂದೆ ಎರಡು ಗಾಡಿಗಳು ಬಂದು ನಿಂತುವು. ಗಾಣಿಗರ ಶಿಂಗಶೆಟ್ಟಿಯದೊಂದು, ಉಪ್ಪಾರರ ಮುಕ್ಕಣ್ಣನದು ಇನ್ನೊಂದು. ಎರಡು ಗಾಡಿಗಳ ಭರ್ತಿ ಪಾತ್ರೆ ಪರಟಿ ಸಾಮಾನುಗಳೂ ಇದ್ದುವು. ಅವುಗಳ ಹಿಂದೆಯೇ ಐವತ್ತು ವರ್ಷದ ಒಬ್ಬ ವಿಧವೆ, ಇಪ್ಪತ್ತೈದರ ಸುಮಾರಿನ ಒಬ್ಬ ಹೆಂಗಸು, ಏಳು ವರ್ಷದ ಒಂದು ಹುಡುಗಿ, ಮತ್ತು ನಾಲ್ಕು ವರ್ಷದ ಒಬ್ಬ ಹುಡುಗ, ಇಷ್ಟು ಜನ ಬಂದರು. ಬಂದ ಇವರನ್ನು ಮೊದಲು ಕಂಡ ಅಪ್ಪಣ್ಣಯ್ಯ ಕಳ್ಳ ತಪ್ಪಿಸಿಕೊಳ್ಳುವವನಂತೆ ಗುಡಿಯ ಹಿಂಭಾಗಕ್ಕೆ ಹೋಗಿ ಅಲ್ಲಿಂದ ಹುಲ್ಲುಕೊಪ್ಪಲುಗಳ ಸಂಧಿಯಲ್ಲಿ ನುಸಿದು ಎಲ್ಲಿಗೋ ಹೋಗಿಬಿಟ್ಟ. ಗಾಡಿಯ ಕೊರಳು ಇಳಿಸಿದ ಮುಕ್ಕಣ್ಣ – ‘ಇದೇ ಕಣ್ರವ್ವಾ, ಗಂಗವ್ವಾರ ಮನೆ’ ಎಂದು ಹೇಳಿ ಗಾಡಿಯ ಸಾಮಾನುಗಳನ್ನು ಇಳಿಸಲು ಪ್ರಾರಂಭಿಸಿದ. ಬಂದವರ ಪೈಕಿ ಹಿರಿಯಳು ಅನುಮಾನಿಸಿಕೊಂಡು ಬಾಗಿಲನ್ನು ಪ್ರವೇಶಿಸಿದಳು. ಗಂಗಮ್ಮನಿಗೆ ಗುರುತು ಸಿಕ್ಕಲಿಲ್ಲ. ಅವಳೇ – ‘ನುಗ್ಗೀಕೆರೆ ನಮ್ಮದು. ಯಜಮಾನ್ರು ತೀರಿಹೋದರು. ಎರಡು ವರ್ಷವಾಯಿತು. ಸಾತೂನು, ಮಕ್ಳೂನು, ಬಂದು ನಿಮ್ಮ ಸೇವೆ ಮಾಡ್ಕಂಡಿರ್‌ಬೇಕು ಅಂತಿದ್ರು. ಕರ್ಕಂಡ್ ಬಂದೆ’ ಎಂದಳು. +ಅವರ ಮಾತಿನ ಭಾವವು ಪೂರ್ತಿಯಾಗಿ ತಿಳಿಯಬೇಕಾದರೆ ಗಂಗಮ್ಮನಿಗೆ ಎರಡು ನಿಮಿಷ ಆಯಿತು. ಅಷ್ಟರಲ್ಲಿ ಸಾತು ಎರಡು ಮಕ್ಕಳ ಕೈಯ್ಯನ್ನೂ ಹಿಡಿದುಕೊಂಡು ಬಂದಳು. ಗಂಗಮ್ಮನ ಕಲ್ಪನೆ ಮಿಂಚಿನಂತೆ ಹಾಯಿತು. ‘ಏನೇ ಮುಂಡೆ, ಈ ಹಿರಿ ಹುಡುಗಿಯಂತೂ ನಮ್ಮಪ್ಪಣ್ಣಯ್ಯಂಗೇ ಹುಟ್ಟಿದ್ದು. ನೀನಿಲ್ಲಿದ್ದಾಗ್ಲೇ ಅದುಕ್ ಬಸುರಿಯಾಗಿದ್ದೆ. ಈ ಎರಡನೇ ಹುಡುಗನನ್ನು ಅದ್ಯಾವನಿಗೆ ಹೆತ್ತೆ ಬೊಗುಳೇ ಹಾದರಗಿತ್ತಿ? ಶ್ಯಾನುಭೋಗ ರಾಮಣ್ಣೋರ ವಂಶ ಕೆಡುಸ್ಬೇಕು ಅಂತ ಇಲ್ಲಿಗ್ ಬಂದ್ಯೇನೇ? ನಿಂಗೇನ್ ಮಾಡ್ತೀನಿ ನೋಡೂವಂತೆ ತಾಳು’ – ಎಂದು ಮೇಲೆ ಎದ್ದು, ಮೂಲೆಯಲ್ಲಿದ್ದ ಕಸ ಪೊರಕೆ ತೆಗೆದುಕೊಂಡು ನಿಂತಳು. +‘ಅದ್ಯಾಕ್ ಹೀಗೆ ಕೆಟ್ಟ ಮಾತಾಡ್ತೀರಾ? ನಿಮ್ಮ ಮಗನೇ ನಮ್ಮೂರಿಗೆ ಬಂದಿದ್ದ. ನನ್ನ ಮಗಳು ಅಂಥಾ ನಡತೆಯೋಳಲ್ಲ. ಬೇಕಾದ್ರೆ ನಿಮ್ಮಗನ್ನೇ ಕರ್ದು ಕೇಳಿ. ನಾಮಕರಣಕ್ಕೆ ಬನ್ನಿ ಅಂತ ಕಾಗದ ಬರೆದರೂ ಯಾಕೆ ಬರಲಿಲ್ಲ?’ – ಎಂದು ಬೀಗಿತ್ತಿ ಕೇಳಿದರೆ ಅದು ಗಂಗಮ್ಮನ ಕಿವಿಗೆ ಹೋಗಲಿಲ್ಲ. +ಸಾತು ತಾನು ಗುಡಿಯಿಂದ ಹೊರಗೆ ಬಂದುಬಿಟ್ಟಳು. ಹುಡುಗರಿಬ್ಬರೂ ಹೆದರಿ ತಾಯಿಯ ಹಿಂದೆ ಸೆರಗು ಹಿಡಿದು ನಿಂತುಕೊಂಡುವು. ಸಾತುವಿನ ತಾಯಿ – ‘ಇಂಥಾ ಹೆಂಗ್ಸುನ್ನ ನಾನೆಲ್ಲೂ ನೋಡಿಲ್ಲ. ಒಳ್ಳೇದಾಯ್ತು’ ಎಂದುಕೊಂಡು ಹೊರಗೆ ಬಂದಿದ್ದರು. ಅವರು ಗಾಡಿಯನ್ನು ಹಿಂತಿರುಗಿ ಹೊಡೆಸುತ್ತಿದ್ದರೋ ಎನೋ, ಸಾತುವೇ, ‘ಅಮ್ಮಾ, ಅವರ ಕೈಲಿ ಮಾತಾಡದೇ ಹೋಗೋದು ಬ್ಯಾಡ. ನನ್ನ ಓರಗಿತ್ತಿ ಬ್ಯಾರೆ ಇದಾರಂತಲ್ಲ, ಸಧ್ಯಕ್ಕೆ ಅವರ ಮನೆಗೆ ಹೋಗಾಣ’ ಎಂದಾಗ ತಾಯಿ ಒಪ್ಪಿದಳು. ಮುಕ್ಕಣ್ಣ, ಶಿಗಶೆಟ್ಟಿ, ಎರಡು ಗಾಡಿಗಳನ್ನು ಕೊರಳೆತ್ತಿ ತಂದು ನಂಜಮ್ಮನ ಮನೆಯ ಮುಂದೆ ಬಿಟ್ಟು ಸಾಮಾನುಗಳನ್ನು ಒಂದೊಂದಾಗಿ ಇಳುಕಿದರು. ನಂಜಮ್ಮ ಇವರು ಬಂದ ಕಾರಣ ಕೇಳಲಿಲ್ಲ. ಸಾತುವಿನ ತಾಯಿಯ ಮಡಿವೇಷ ನೋಡಿದರೆ ಯಜಮಾನರು ಸತ್ತಿರುವುದು ತಿಳಿಯುತ್ತಿತ್ತು. ಯಾವ ಕಷ್ಟದಲ್ಲಿದ್ದಾರೋ ಏನೋ! ಮೊದಲು ಒಳಗೆ ಕರೆದು ಊಟ ಗೀಟ ಆದಮೇಲೆ ತಾನೆ ಮುಂದಿನ ಏನಿದ್ದರೂ ವಿಚಾರಿಸಬೇಕಾದುದು? ಎಲ್ಲರನ್ನೂ ಒಳಗೆ ಕರೆದು ಕೂರಿಸಿದಳು. ಈ ಗಂಡು ಹುಡುಗನನ್ನು ನೋಡಿ ಅವಳಿಗೂ ಆಶ್ಚರ್ಯ. ಆದರೆ ಗಂಡನಿಗೆ ಹುಟ್ಟಿರದ ಮಗುವನ್ನು ಯಾವ ಹೆಂಗಸು ತಾನೆ ಇಷ್ಟು ಧೈರ್ಯವಾಗಿ ಕರೆದುಕೊಂಡು ಬರುತ್ತಾಳೆ? – ಎಂಬ ಒಂದು ವಿಶ್ವಾಸ ಮಾತ್ರ ಅವಳಿಗೆ ಹೋಗಲಿಲ್ಲ. ಸಾತು ಕಣ್ಣೀರು ಹಾಕುತ್ತಲೇ ಇದ್ದಳು. ಅವಳ ತಾಯಿ ತಂಗಮ್ಮನೇ ಹೇಳಿದಳು: ‘ಆಗ ಅಪ್ಪಣ್ಣಯ್ಯ ಎರಡು ಸಲ ಬಂದು ಹದಿನೈದು ಹದಿನೈದು ದಿನ ಇದ್ದ. ಆಗಲೇ ರಾಮಕ್ರಿಷ್ಣ ಹುಟ್ಟಿದ್ದು. ಸಾತು ಕೆಟ್ಟ ಕೆಲಸ ಮಾಡಿದಾಳೆ ಅಂತ ಬೀದಿಗೆಲ್ಲ ಕೇಳೂಹಾಗೆ ಅವಳ ಅತ್ತೆ ಕಿರುಚಿಕಂಡ್ಲು ಚಾಂಡಾಳಿ.’ +‘ಆಯ್ತು, ಮದ್ಲು ಎದ್ದು ಮಡಿ ಉಟ್ಕಳಿ. ಯಜಮಾನ್ರು ಹೋಗಿ ಎಷ್ಟು ದಿನ ಆಯ್ತು?’ +‘ಎರಡು ವರ್ಷವಾಯ್ತು. ಅವರಿರೂತಂಕ ಪೌರೋಹಿತ್ಯದಲ್ಲಿ ಸುಖವಾಗಿ ಜೀವನ ಆಗ್ತಾ ಇತ್ತು. ಆಮ್ಯಾಲೆ ಗಂಡು ದಿಕ್ಕಿಲ್ಲದ ನಮ್ಮನ್ನ ಯಾರು ಕರೀತಾರೆ? ಏನೋ ಗಂಡನ ಜೊತೆ ಹೆಂಡ್ತಿಯಾದೋಳು ಬಾಳ್ವೆ ಮಾಡ್‌ಬೇಕು. ಆಗ ಬಂದಿದ್ದಾಗ ಅಪ್ಪಣ್ಣಯ್ಯ, ಅವ್ನೇ ಬಂದು ಕರ್ಕಂಡ್ ಹೋಗ್ತೀನಿ ಅಂತ ಹೇಳಿದ್ದ. ಈಚೆಗೆ ಅವ್ನೂ ಬರ್ಲಿಲ್ಲ. ಅದುಕ್ಕೆ ನಾವೇ ಬಂದುಬಿಟ್ವು. ತಿಪಟೂರಿಂದ ಮೋಟರಿನಲ್ಲಿ ಬಂದು ಇಳಿದುವು. ಈ ಎರಡು ಗಾಡಿಯೋರು ಗೊಬ್ಬರ ತುಂಬಿಕೊಂಡು ಅಲ್ಲೇ ಹ್ವಲದ ಕಡೆಗೆ ಬಂದಿದ್ರು. ನಾಕು ನಾಕಾಣಿ ತಗಂಡು ಸಾಮಾನು ಹೇರ್ಕಂಡ್ ಬಂದ್ರು.’ +‘ಸಾತು, ಹುಡುಗ್ರಿಗೆ ಮದ್ಲು ಮಡಿ ಉಡ್ಸು. ಅವುಕ್ಕೆ ಹ್ವಟ್ಟಿ ಹಸಿದಿದೆ’ – ಎಂದು ನಂಜಮ್ಮ ಹೇಳುತ್ತಿದ್ದಳು. ಅಷ್ಟರಲ್ಲಿ – ‘ಈ ಹಾದರಗಿತ್ತಿ ಮುಂಡೇರ ತಲೆ ಕೂದ್ಲು ಉದುರೂ ಹಾಗೆ ಮೆಟ್ನಲ್ಲಿ ಹ್ವಡಿಸಿ ಊರು ಬಿಟ್ಟು ಓಡುಸ್ದೆ ಇದ್ರೆ ನನ್ನ ಹೆಸರು ಗಂಗಮ್ಮ ಅಲ್ಲ’ ಎಂದು ಗುಡುಗುತ್ತ ಗಂಗಮ್ಮ ಅಲ್ಲಿಗೆ ಬಂದದ್ದು ಕೇಳಿಸಿತು. ಹಿಂದೆಯೇ ಬಂದ ಅವಳು – ‘ಏನೇ ಹಾದರಗಿತ್ತಿ, ಇವ್ಳ ಜೊತೆಗೆ ನೀನೂ ಶುರು ಮಾಡಬೇಕು ಅಂತ ಇವ್ಳುನ್ನ ಮನಿಗ್ ಸೇರ್ಸಿದೀ ಏನೇ? ನಿಂಗೂ ತಕ್ಕುದ್ ಮಾಡುಸ್ದೆ ಇದ್ರೆ ನನ್ ಮೂಗ್ ಕುಯ್ಯುಸ್ಕತ್ತೀನಿ ನೋಡೇ ಮುಂಡೆ’ ಎನ್ನುತ್ತಿದ್ದಂತೆಯೇ ಹಿಂದಿನಿಂದ ಅಯ್ಯಾಶಾಸ್ತ್ರಿಗಳು ಅಣ್ಣಾಜೋಯಿಸರು ಕಾಣಿಸಿಕೊಂಡರು. ಒಂದೇ ನಿಮಿಷದಲ್ಲಿ ಶಿವೇಗೌಡ, ಸಿವಲಿಂಗ ಒಳಗೆ ಬಂದರು. ಇನ್ನು ಹತ್ತು ಎಣಿಸುವುದರಲ್ಲಿ ರೇವಣ್ಣಶೆಟ್ಟಿ ಬಂದ. ಮತ್ತೆ ಐದು ಆರು ಜನರು ಒಳಗೆ ಯಾವುದೋ ಕರಡಿ ಕುಣಿಯುತ್ತಿದೆ ಎಂಬುದನ್ನು ನೋಡುವಷ್ಟು ಉತ್ಸಾಹದಿಂದ ಗುಡ್ಡೆ ಹಾಕಿಕೊಂಡರು. ಇವರನ್ನೆಲ್ಲ ಹೋಗಿ ಗಂಗಮ್ಮನೇ ಕರೆದುಕೊಂಡು ಬಂದಿದ್ದಾಳೆ ಎಂಬ ವಿಷಯದಲ್ಲಿ ಅಲ್ಲಿ ಯಾರಿಗೂ ಸಂದೇಹ ಉಳಿಯಲಿಲ್ಲ. +‘ನನ್ನ ಮನೆಗೆ ನೀವ್ಯಾಕೆ ಬಂದ್ರಿ, ನಿಮ್ಮುನ್ನ ಯಾರು ಕರೆದೋರು?’ – ಎಂದು ಕೇಳಿಬಿಡುವಷ್ಟು ಕೋಪ ನಂಜಮ್ಮನಿಗೆ. ಆದರೆ ಗ್ರಾಮದ ಈ ಮುಖ್ಯರನ್ನು ಎದುರುಹಾಕಿಕೊಳ್ಳಬಾರದೆಂಬ ತಾಳ್ಮೆ ಬೇರೆ. ಯಾರನ್ನೂ ಒಳಗೆ ಬನ್ನಿ ಎನ್ನಲೂ ಇಲ್ಲ: ಕೂರಲು ಒಂದು ಚಾಪೆಯನ್ನೂ ಹಾಕಿಕೊಡಲಿಲ್ಲ. ಅದುವರೆಗೂ ಮಲಗಿ ನಿದ್ರಿಸುತ್ತಿದ್ದು ಈಗ ಪೂರ್ತಿ ನಿದ್ರೆ ಹರಿದ ಚೆನ್ನಿಗರಾಯರು ಎದ್ದು ಎರಡು ಚಾಪೆ ಹಾಸಿದರು. ಜೋಯಿಸರಿಬ್ಬರಿಗೂ ಬೇರೆ ಮಂದಲಿಗೆ ಹಾಕಿಕೊಟ್ಟರು. ಸಾತು, ಇಬ್ಬರು ಮಕ್ಕಳು, ಮತ್ತು ತಂಗಮ್ಮ, ಎಲ್ಲರೂ ಅಡಿಗೆಯ ಮನೆಗೆ ಹೋಗಿಬಿಟ್ಟರು. +‘ಅದ್ಯಾಕ್ ಒಳಿಕ್ ಹೋಗ್ತೀಯಾ ಬಾರೇ, ಸೂಳೆಗಾರಮುಂಡೆ, ಊರ ಒಟ್ನಲ್ಲಿ ನ್ಯಾಯ ಕೊಡು’ – ಗಂಗಮ್ಮ ಕೂಗಿದಳು. +‘ನ್ಯಾಯ, ನ್ಯಾಯ. ಇಲ್ಲಿಗೇ ಬನ್ರಮ್ಮ’ – ರೇವಣ್ಣಶೆಟ್ಟಿ ಧರ್ಮಪ್ರತಿನಿಧಿಯ ಪಾತ್ರ ವಹಿಸಿಕೊಂಡು ಆದೇಶವಿತ್ತ. +‘ರೇವಣ್ಣಶೆಟ್ರೇ ಕರೀತಾರೆ, ಬಾರೇ’ – ಗಂಗಮ್ಮ ಮತ್ತೆ ಕೂಗಿದಳು. +ರೇವಣ್ಣಶೆಟ್ಟಿ ಇಲ್ಲಿಗೆ ಬಂದದ್ದಾಗಲಿ, ಅವನು ದೊಡ್ಡ ಧರ್ಮಿಷ್ಠನಂತೆ ನ್ಯಾಯದ ಮಾತನ್ನಾಡಿದುದಾಗಲಿ ನಂಜಮ್ಮನಿಗೆ ಸಹಿಸಲಿಲ್ಲ. ಇವರ ಬಾಯಿಮುಚ್ಚಿಸಿ ಮೇಲೆ ಏಳಿಸುವ ಉಪಾಯವೂ ಹೊಳೆಯಲಿಲ್ಲ. ಒಂದು ದಾರಿ ಮಾತ್ರ ಕಂಡಿತು. ಅದೇ ಹೊತ್ತಿಗೆ ಸ್ಲೇಟು ಪುಸ್ತಕ ಹಿಡಿದುಕೊಂಡು ಪಾರ್ವತಿ, ರಾಮಣ್ಣ, ಇಬ್ಬರೂ ಸ್ಕೂಲಿನಿಂದ ಮನೆಗೆ ಬಂದರು. ‘ಲೇ ಪಾರ್ವತಿ, ಗುಡಿ ಮಾದೇವಯ್ನೋರುನೂವೆ, ನಿಮ್ಮ ಮೇಷ್ಟ್ರನ್ನೂವೇ ನಾನ್ ಹೇಳ್ದೆ ಅಂತ ಕರ್ಕಂಡ್ ಬಾ. ಈಗ್ಲೇ ಬರಬೇಕಂತೆ ಅನ್ನು. ಓಡಿ ಹೋಗು’ – ಎಂದಳು. ಇಬ್ಬರು ಮಕ್ಕಳೂ ಹಾಗೆಯೇ ಓಡಿದುವು. +‘ಯಾಕ್ರಮ್ಮ, ನಾವು ನ್ಯಾಯ ಹೇಳಿದ್ರೆ ಆಗಾಕುಲ್ವ?’ – ನಂಜಮ್ಮನ ಮುಖ ನೋಡುತ್ತಾ ರೇವಣ್ಣಶೆಟ್ಟಿ ಕೇಳಿದ. ಅವಳು ಒಳಗೆ ಹೊರಟುಹೋದಳು. +‘ಯಾಕೆ ಒಳೀಕ್ ಹೋದ್ಯೇ ಲಾಯ್ರೀ?’ – ಎಂದು ಗಂಗಮ್ಮ ಕೂಗಿದರೂ ಹೊರಗೆ ಬರಲಿಲ್ಲ. +ಈಗ ಅಣ್ಣಾಜೋಯಿಸ, ಅಯ್ಯಾಶಾಸ್ತಿಗಳು ತಮ್ಮ ಧರ್ಮಶಾಸ್ತ್ರದ ಜ್ಞಾನವನ್ನು ಪ್ರಕಟಿಸಲು ನಿಂತರು. ಅಣ್ಣಾಜೋಯಿಸ ಯಾವುದೋ ಮಂತ್ರ ಹೇಳಿದ. +‘ವ್ಯಭಿಚಾರ ಮಾಡಿದ ಹೆಂಗಸಿನ ಶಿರಚ್ಛೇದ ಮಾಡಬೇಕು ಅಂತ ಮನು ಧರ್ಮಶಾಸ್ತ್ರದಲ್ಲಿದೆ. ಇಲ್ಲದಿದ್ದರೆ ಸಹಸ್ರ ನಾಣ್ಯ ಖರ್ಚುಮಾಡಿ ಪ್ರಾಯಶ್ಚಿತ್ತ ಮಾಡಬೇಕು ಅಂತ ವೇದದಲ್ಲಿದೆ. ಅವರು ಪ್ರಾಯಶ್ಚಿತ್ತ ಮಾಡಿಸಿಕೊಳ್ಳೂತನಕ ಒಳೀಕ್ಕೆ ಸೇರಿಸಿದ್ದು ನಂಜಮ್ಮನ ತಪ್ಪು’ – ಎಂದು ಅಯ್ಯಾಶಾಸ್ತಿಗಳು ವ್ಯಾಖ್ಯಾನ ಹೇಳಿದರು. +ಅಷ್ಟರಲ್ಲಿ ಮಾದೇವಯ್ಯನವರು ಬಂದರು. ಗಂಗಮ್ಮ ಬೀದಿಯಲ್ಲೆಲ್ಲ ಕಿರುಚಿಕೊಂಡು ತಿರುಗಿದ್ದುದರಿಂದ ವಿಷಯ ಊರಿನವರಿಗೆಲ್ಲ ಗೊತ್ತಾಗಿ ಮನೆಯ ಮುಂಭಾಗದಲ್ಲಿ ಒಂದು ಜಾತ್ರೆಯ ಜನವೇ ಸೇರಿತ್ತು. ಸಂದಿನಿಂದ ಜಾಗ ಬಿಡಿಸಿಕೊಂಡು ಬಂದ ಮಾದೇವಯ್ಯನವರಿಗೆ ವಿಷಯವನ್ನು ಹೊಸದಾಗಿ ಹೇಳುವ ಅಗತ್ಯವಿರಲಿಲ್ಲ. ಅವರು ಬಂದದ್ದನ್ನು ಬಾಗಿಲು ಸಂದಿನಿಂದ ಕಂಡ ನಂಜಮ್ಮ ಹೊರಗೆ ಬಂದು ಹೇಳಿದಳು: ‘ಅಯ್ನೋರೇ, ಧರ್ಮ ಕರ್ಮ ಎಲ್ಲಾ ತಿಳ್ಕಂಡಿರೋರು ನೀವು. ನ್ಯಾಯವಿಚಾರಣೆ ನೀವು ಮಾಡಬೇಕು. ಉಳಿದೋರೆಲ್ಲ ತಲಾತಟ್ಟಿ ಮಾತಾಡಕೂಡದು. ಅಪ್ಪಣ್ಣಯ್ಯನೇ ಬಂದಿದ್ದ, ಅವನಿಗೆ ಈ ಗಂಡುಮಗೂನ ಬಸುರಿಯಾದುದ್ದು ಅಂತ ಅವರು ಒಳಗೆ ಕೂತ್ಕಂಡು ಈಗಲೂ ದೇವರ ಆಣೆ ಇಟ್ಟು ಹೇಳ್ತಿದಾರೆ.’ +ಇಲ್ಲಿ ಇಷ್ಟರಲ್ಲಿ ಏನು ನಡೆದಿರಬಹುದೆಂಬುದು ಅಯ್ಯನವರಿಗೆ ಅರ್ಥವಾಯಿತು. ಅವರು ಎಂದರು: ‘ಮದ್ಲು ಅಪ್ಪಣ್ಣಯ್ಯನ ಕರ್ಸಿ. ಆಮ್ಯಾಲೆ ನ್ಯಾಯ ಕೇಳ್‌ಬೌದು.’ +‘ನನ್ನ ಕಂದುಂದೇನೂ ತಪ್ಪಿಲ್ಲ. ಅದು ಅಂಥಾ ಕೆಟ್ಟ ಮುಂಡೇದಲ್ಲ’ – ಗಂಗಮ್ಮ ಬಾಯಿ ಹಾಕಿದಳು. +‘ ತಪ್ಪೈತೋ ಇಲ್ವೋ ಇಚಾರ ಮಾಡಾನಾ. ಗಂಡ ಅನ್ನಿಸ್ಕಂಡೋನು ಎಂಡ್ತಿ ಮನ್ಗೆ ಓಗಿದ್ರೆ ಅದೇನೂ ತಪ್ಪಿಲ್ವಲಾ’ -ಎಂದು ಅವಳಿಗೆ ಸಮಾಧಾನ ಹೇಳಿದ ಅಯ್ಯನವರು ಬಾಗಿಲ ಹತ್ತಿರ ನಿಂತಿದ್ದವರಿಗೆ, ಅಪ್ಪಣ್ಣೈನೋರು ಎಲ್ಲಿದ್ರೂ ಬಿಡ್ದೆ ಕರ್ಕಂಡ್ ಬಾ ಹೋಗ್ರಿ’ ಎಂದರು. ಹತ್ತು ಹನ್ನೆರಡು ಜನರು ಅನ್ವೇಷಣೋತ್ಸುಕತೆಯಿಂದ ಓಡಿದರು. ಈ ನಡುವೆ ಮತ್ತೆ ಮಾತು ಶುರು ಮಾಡಿದ ಪುರೋಹಿತದ್ವಯರಿಗೆ, ‘ಅಪ್ಪಣ್ಣಯ್ಯ ಬರಾಗಂಟ ಯಾರೂ ಮಾತಾಡ್ ಬ್ಯಾಡ್ದು’ ಎಂದು ಹೇಳಿ ಬಾಯಿ ಮುಚ್ಚಿಸಿದರು. +ಹದಿನೈದು ನಿಮಿಷದಲ್ಲಿ ಅಪ್ಪಣ್ಣಯ್ಯ ಬಂದ. ಅವನು ಬಸಪ್ಪಶೆಟ್ಟರ ಕೊಪ್ಪಲಿನ ಹುಲ್ಲು ಮೆದೆ ಸಂದಿಯಲ್ಲಿ ಕೂತಿದ್ದನಂತೆ. ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟನಾದರೂ ಹುಡುಕಲು ಹೋದ ಇಬ್ಬರು ನೆಗೆದು ಕೈ ಹಿಡಿದು ಕರೆದುಕೊಂಡು ಬಂದರು. ಸಭೆಯ ಮಧ್ಯದ ಕಂಬದ ಹತ್ತಿರ, ಗಂಟು ಬಿಚ್ಚಿಹೋಗಿ ಕೂದಲು ಮುಖ ಮುಚ್ಚುವಂತೆ ತಲೆ ಬಗ್ಗಿಸಿಕೊಂಡು ನಿಂತ. ಮಾದೇವಯ್ಯನವರು ಅವನನ್ನು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಒಳಗಿನಿಂದ ದೀಪ ಹೊತ್ತಿಸಿಕೊಂಡು ಬಂದು ಒಂದು ದೇವರ ಪಟ ತರುವಂತೆ ನಂಜಮ್ಮನಿಗೆ ಹೇಳಿದರು. ನಂಜಮ್ಮ ಒಂದು ಮಣೆ ತಂದುಹಾಕಿ, ಜೋಡಿ ಸೊಡಲು ಹೊತ್ತಿಸಿ, ರಾಮದೇವರ ಪಟದೊಡನೆ ಮಣೆಯ ಮೇಲೆ ಇಟ್ಟಳು. ಅಯ್ಯನವರು ಕುಂಕುಮದ ಭರಣಿ ಕೇಳಿದರು. ಅದೂ ಬಂದ ಮೇಲೆ, ಅವರೇ ಭರಣಿಯಿಂದ ಕುಂಕುಮ ತೆಗೆದು ಅಪ್ಪಣ್ಣಯ್ಯನ ಹಣೆಗೆ ಇಟ್ಟು ದೇವರ ಪಟವನ್ನು ಅವನ ಕೈಲಿ ಹಿಡಿಸಿ ಕೇಳಿದರು; ‘ನೋಡಣ್ಣಾ, ಸುಳ್ಳು ಏಳಿದ್ರೆ ದೇವ್ರು ನಿನ್ನ ಕೈಕಾಲು ಕತ್ರಿಸ್ಬಿಡ್ತಾನೆ. ಸುಂಕ್ಲಮ್ಮಮಾರಿ ಬಂದು ನಿನ್ನ ಬಡಕಂಡ್ ಓಯ್ತದೆ. ನಿಜ ಏಳ್ಬುಡು. ನೀನು ನಿಮ್ಮಮ್ಮಾರಿಗೆ ಕಾಣದ ಹಂಗೆ ಎಂಡ್ತಿ ಊರಿಗೆ ಓಗಿದ್ಯೋ ಇಲ್ವೋ?. +ಅಪ್ಪಣ್ಣಯ್ಯ ಮಾತನಾಡಲಿಲ್ಲ. ‘ನನ್ನ ಕಂದನ ಕೈಲಿ ಸುಳ್ಳು ಸುಳ್ಳೇ ಯಾಕೆ ಪ್ರಮಾಣ ಮಾಡುಸ್ತೀಯೋ ಜಂಗಮಯ್ಯ?’ -ಎಂದು ಗಂಗಮ್ಮ ಕೂಗಿದಳು. ಆದರೆ ಅದು ಕೇಳಿಸದವರಂತೆ ಅಯ್ಯನವರು, ‘ಮಾತಾಡ್ಬೇಕು. ನಿಜ ಏಳ್ದೆ ಇದ್ರೆ ನಿನ್ನ ಕೈ ಕಾಲಿಗೆ ಲಕ್ವಾ ಹ್ವಡೀತೈತೆ. ಅಲ್ಲಿ ಉರೀತಿರಾ ದೀಪ ಬುಗ್ ಅಂತ ಹತ್ಕಂಡು ಸುಟ್ಟುಬುಡ್ತೈತೆ. ಶನಿಮಹಾತ್ಮೆ ನೋಡಿಲ್ವ? ವಿಕ್ರಮಾರ್ಕರಾಯನ ಕೈ ಕಾಲು ಹ್ಯಂಗೆ ಕತ್ರಿಸ್ ಓಯ್ತದೆ. ಊಂ, ಮಾತಾಡ್ ಬುಡು’ +ಅಪ್ಪಣ್ಣಯ್ಯನ ಮನಸ್ಸಿನಲ್ಲಿ ಭಯ ಹುಟ್ಟಿಬಿಟ್ಟಿತು. ನಾಯಿಸಿಂಗೇನಹಳ್ಳಿಯ ದೊಂಬೀ ದಾಸರು ಆಡಿದ ಶನಿಮಹಾತ್ಮೆ ಯಕ್ಷಗಾನದಲ್ಲಿ ವಿಕ್ರಮಾರ್ಕ ತೊಡೆ ಕತ್ತರಿಸಿಕೊಂಡು ಅಳುತ್ತಿದ್ದ ಚಿತ್ರ ಕಣ್ಣುಮುಂದೆ ಬಂತು. ಮಾದೇವಯ್ಯನವರು ಇನ್ನೊಂದು ಸಲ -‘ಸುಳ್ಳು ಏಳಿದ್ರೆ ಸನಿದೇವರು…..’ ಎನ್ನುವ ಮೊದಲೇ ಅವನು ‘ನಾ ಸುಳ್ಹೇಳಲ್ಲ ಕಣ್ರಿ. ನಾನೆಲ್ಡು ಸಲ ನುಗ್ಗೀಕೆರೆಗೆ ಹೋಗಿದ್ದೆ’ ಎಂದುಬಿಟ್ಟ. +‘ಎಷ್ಟೆಷ್ಟು ದಿನ ಇದ್ದೆ?’ +ಹದಿನೈದು ದಿನ ಒಂದ್ ಸಲ, ಇನ್ನೊಂದ್ ಸಲ ನಂಗೆ ಗ್ಯಾಪಕವಿಲ್ಲ.’ ‘ಈಗ ಎಷ್ಟು ದಿನದಲ್ಲಿ ಹೋಗಿದ್ದೆ?’ +ಈಗ ಎರಡನೇ ಸಲಿ ಪ್ಲೇಗು ಬಂದಿತ್ತಲ್ಲಾ ಆಗ.’ +ಎಂದರೆ ಹೆಚ್ಚು ಕಡಿಮೆ ಆರು ವರ್ಷವಾಗಿತ್ತು. ನಂಜಮ್ಮ ಒಳಗೆ ಹೋಗಿ ಸಾತುವಿನ ಹುಡುಗನ ಕೈ ಹಿಡಿದು ತಂದು ನಿಲ್ಲಿಸಿದಳು. ಸುಮಾರು ಐದು ವರ್ಷದ ಅವನ ಮುಖ ಅಪ್ಪಣ್ಣಯ್ಯನನ್ನೇ ಹೋಲುತ್ತಿತ್ತು. +‘ಮುಂಡೇಗಂಡ ಜಾವಗಲ್ಲಿಗೆ ಹೋಗ್ತೀನಿ ಅಂತ ಹೇಳಿ ಹೀಗ್ ಮಾಡ್ದೇನೋ? ನಾಳೆ ದಿನದಿಂದ ನೀನು ಅಲ್ಲಿಗೇ ಹೋಗು. ನಿಂಗೆ ನಾನು ಹಿಟ್ ಹಾಕುಲ್ಲ. ಹಾದರಕ್ ಹುಟ್ಟಿದ ಸೂಳೇಮಗನೆ’ -ಎಂದು, ಮೇಲಿದ್ದ ಗಂಗಮ್ಮ ಅಲ್ಲಿಂದ ಹೋಗಿಬಿಟ್ಟಳು. ಇನ್ನು ಯಾವ ಸ್ವಾರಸ್ಯವೂ ಉಳಿಯುವುದಿಲ್ಲವೆಂದು ತಿಳಿದ ಗ್ರಾಮಪ್ರಮುಖರೂ ಪುರೋಹಿತರುಗಳೂ ಒಬ್ಬೊಬ್ಬರಾಗಿ ಎದ್ದು ಹೊರಟುಹೋದರು. +– ೨ – +ಅದೇದಿನ ಗಂಗಮ್ಮ ಮಗನನ್ನು ಕರೆದುಕೊಂಡು ಹಳ್ಳಿಯ ಕಡೆ ಹೊರಟುಹೋದಳು. ಅವಳು ಹೀಗೆ ಹೋಗುವುದು ಇದು ಮೊದಲ ಸಲವೇನಲ್ಲ. ಅಣ್ಣಾಜೊಯಿಸನ ಹತ್ತಿರ ಗುಡಿಯ ಬಾಗಿಲಿನ ಬೇರೊಂದು ಬೀಗದಕೈ ಇದ್ದುದರಿಂದ ತಾನು ಆಗ ಬಾಗಿಲು ತೆಗೆದು ದೇವರ ಪೂಜೆ ಮಾಡುತ್ತೇನೆಂದು ಹೇಳಲು ಅನುಕೂಲವಾಗಿತ್ತು. +ಸಾತು, ಇಬ್ಬರು ಮಕ್ಕಳು, ಮತ್ತು ತಂಗಮ್ಮ, ನಂಜಮ್ಮನ ಮನೆಯಲ್ಲಿಯೇ ಉಳಿದರು. ಈ ಜನರಿಗೂ ಆಗುವಷ್ಟು ರಾಗಿ ಅವರೇಕಾಳೇನೋ ನಂಜಮ್ಮನ ಮನೆಯಲ್ಲಿತ್ತು. ಆದರೆ ಅವರಿಗೆ ರಾಗಿಹಿಟ್ಟು ತಿಂದರೆ ಹೊಟ್ಟೆ ಅಳ್ವಕವಾಗುತ್ತಿತ್ತು. ಅವರೇಬೇಳೆಯ ಸಾರಿನಿಂದ ವಾಯುವಾಗುತ್ತಿತ್ತು. ಅಕ್ಕಿ ತೊಗರಿಬೇಳೆಗಳನ್ನು ಹೊಂದಿಸಿ ದಿನವೂ ಮಾಡುವುದು ನಂಜಮ್ಮನ ಶಕ್ತಿಗೆ ಸಾಧ್ಯವಿರಲಿಲ್ಲ. ಯಾವುದಾದರೂ ಹಬ್ಬ ಬಂದರೆ ದಪ್ಪ ಕೆಂಪು ಅಕ್ಕಿಯ ಅನ್ನ, ತೊಗರಿಬೇಳೆ ಸಾರು ಮಾಡುವುದು ಅವಳ ಶಕ್ತಿಯಾಗಿತ್ತು. ಆದರೆ ವಿಧಿಯಿಲ್ಲ, ಅಸಮಾಧಾನ ತೋರಿಸದೆ ನಂಜು ಅವರಿಗೆ ದಿನವೂ ಅನ್ನ ತೊಗರಿಬೇಳೆಗಳನ್ನೇ ಮಾಡಿ ಬಡಿಸುತ್ತಿದ್ದಳು. ಅನ್ನ ಕಂಡರೆ ಅವಳ ಮಕ್ಕಳು ಬಿಡುವುದಿಲ್ಲ. ಇನ್ನು ಚನ್ನಿಗರಾಯರು ಯಾಕೆ ಬಿಟ್ಟಾರು? ಎಲ್ಲರಿಗೂ ಅನ್ನವೇ ಆದರೆ ತಾನೊಬ್ಬಳು ಹಿಟ್ಟು ತಿಂದು ಆಗುವ ಉಳಿತಾಯವೇನು? ಒಟ್ಟಿನಲ್ಲಿ ಖರ್ಚನ್ನು ನಿಭಾಯಿಸುವುದು ಕಷ್ಟವಾಯಿತು. +ಹದಿನೈದು ದಿನದ ನಂತರ ತಾಯಿ ಮಗ ಊರಿಗೆ ಬಂದರು. ವಿಷಯ ತಿಳಿದ ನಂಜಮ್ಮ ಆ ದಿನ ರಾತ್ರಿ ದೀಪ ಹಚ್ಚಿದ ಮೇಲೆ, ‘ನಿಮ್ಮ ಚಿಕ್ಕಪ್ಪುನ್ನ ಕರ್ಕಂಡ್ ಬಾ. ಅಜ್ಜಿ ಎದುರಿಗೆ ಕರೀಬ್ಯಾಡ’ ಎಂದು ಹೇಳಿ ಪಾರ್ವತಿಯನ್ನು ಕಳಿಸಿದಳು. ಸೂಕ್ಷ್ಮ ತಿಳಿದಿದ್ದ ಹುಡುಗಿ ಹೋಗಿ ಅಪ್ಪಣ್ಣಯ್ಯನನ್ನು ಕರೆದುಕೊಂಡೇ ಬಂದಳು. ಇಲ್ಲಿ ಹೆಂಡತಿಯನ್ನು ನೋಡಿದ ಅಪ್ಪಣ್ಣಯ್ಯನಿಗೆ ಒಂದು ಕಡೆ ಆಶೆ, ಇನ್ನೊಂದುಕಡೆ ಭಯ, ಮತ್ತೊಂದು ರೀತಿಯಲ್ಲಿ ನಾಚಿಕೆ ಮೊದಲಾಗಿ, ಬಂದವನು ಸುಮ್ಮನೆ ಕಂಬದ ಹತ್ತಿರ ನಿಂತು ಕೊಂಡ. ನಂಜಮ್ಮನೇ ಅವನನ್ನು ಮಾತನಾಡಿಸಿ ಕೂರಿಸಿದಳು. ಒಳಗೆ ಸಾತು ಅಡಿಗೆ ಮಾಡುತ್ತಿದ್ದಳು. +ಅಪ್ಪಣ್ಣಯ್ಯ ಇಲ್ಲೇ ಊಟ ಮಾಡಿ. -ನಂಜಮ್ಮ ಎಂದಳು. +‘ಅಮ್ಮ….’ +‘ಅವರೇನೂ ಅನ್ನುಲ್ಲ. ರಾತ್ರಿ ಹೊತ್ತು ಅವರು ಹ್ಯಾಗೂ ಫಲಾರಕ್ಕೆ ರೊಟ್ಟಿ ಹಾಕ್ಕಂಡು ತಿಂತಾರೆ. ಏಳಿ ಕೈ ಕಾಲು ತೊಳ್ಕಳಿ.’ +ಅಪ್ಪಣ್ಣಯ್ಯ ಕೈ ಕಾಲು ತೊಳೆದುಕೊಂಡ. ಚೆನ್ನಿಗರಾಯರೂ ಎದ್ದರು. ಹುಡುಗರನ್ನೂ ಕೂರಿಸಿ ಬಡಿಸುವಂತೆ ನಂಜಮ್ಮ ಸಾತುವಿಗೆ ಹೇಳಿದಳು. ಸಾಕು ಬೇಕು ಎನ್ನಲೂ ಅಪ್ಪಣ್ಣಯ್ಯನಿಗೆ ಸಂಕೋಚ. ಬೇಕೆ ಬೇಡವೆ ಎಂದು ಕೇಳಲು ಅವಳಿಗೂ ನಾಚಿಕೆ, ಅವಮಾನ, ತಿರಸ್ಕಾರ. ಊಟ ಮಾಡುವಾಗ ನಂಜಮ್ಮ ತಂಗಮ್ಮರು ಅಂಗಳದಲ್ಲಿ ಇದ್ದರು. ಆಮೇಲೆ ಅಣ್ಣ ತಮ್ಮ ಎಲೆ ಅಡಿಕೆ ಹೊಗೆಸೂಪ್ಪು ಹಾಕಿಕೊಂಡರು. ನಂಜಮ್ಮ ಒಳಗೆ ಹೋಗಿ ಸಾತುವಿನ ಕೈಲಿ ಸ್ವಲ್ಪ ಹೊತ್ತು ಏನೋ ಪಿಸುಮಾತು ಆಡಿದಳು. ಆ ಮಾತಿಗೆ ವಿಧವೆ ತಂಗಮ್ಮನೂ ಸೇರಿಕೊಂಡರು. +ಆ ಮನೆಯಲ್ಲಿ ದಿನಸಿ ತುಂಬುವ ವಾಡೆಗಳ ಒಂದು ಕತ್ತಲೆ ಕೋಣೆ ಇತ್ತು. ಬಾಗಿಲಿದ್ದ ಅದರ ಕಸ ಗುಡಿಸಿ ನಂಜಮ್ಮ ಚಾಪೆ ಹಾಕಿ, ಸಾತು ತನ್ನ ಸಂಗಡ ತಂದಿದ್ದುವುಗಳಲ್ಲಿ ಎರಡು ಹಾಸಿಗೆಗಳನ್ನು ಜೊತೆಯಲ್ಲಿ ಹಾಕಿದಳು. ಅಪ್ಪಣ್ಣಯ್ಯ ಮೇಲೆ ಎದ್ದಾಗ, ‘ಇವತ್ತು ಇಲ್ಲೇ ಮಲಕ್ಕಳಿ’ ಎಂದಳು. +ಅವನಿಗೆ ಈ ಅನಿರೀಕ್ಷಿತದಿಂದ ಆದ ಸಂತೋಷದ ಜೊತೆಗೆ ಗಾಬರಿಯೂ ಹುಟ್ಟಿತು. ಅವನ ಅರಿವಿಗೇ ತಿಳಿಯದಂತೆ ‘ಅಮ್ಮ….’ ಎಂದ. ನಂಜುವೇ ‘ಅಮ್ಮನ ಜೊತೆಗೆ ಬೇಕಾದ್ರೆ ಪಾರ್ವತೀನೂ ರಾಮಣ್ಣನನ್ನೂ ಕಳಿಸ್ತೀನಿ. ಅವರಿಗೇನು ಒಬ್ಬರೇ ಇರುಕ್ಕೆ ಭಯವಿಲ್ಲ. ನೀವು ವಾಡೆಮನೇಲಿ ಮಲೀಕ ನಡೀರಿ’ ಎಂದಳು. ಚನ್ನಿಗರಾಯರು ಮಾತ್ರ, ‘ನಿನಗ್ಯಾಕೆ ಇಲ್ಲದ ಪುಲಾರ?’ ಎಂದು ಕಣ್ಣು ಕೆಕ್ಕರಿಸಿ ಹೆಂಡತಿಯನ್ನು ನೋಡಿದರು. ಶಿವಪೂಜೆ ಮಧ್ಯೆ ಕರಡಿ ಬಿಟ್ಟಂತೆ ಮಾತನಾಡಿದ ಗಂಡನನ್ನು ದುರುಗುಟ್ಟಿಕೊಂಡು ನೋಡುತ್ತ ನಂಜು ಎಂದಳು; ‘ನೀವೊಂದಿಷ್ಟು ಬಾಯಿ ಮುಚ್ಕಂಡು ಕೂತ್ಕಳಿ. ತಿರುಮಲೇಗೌಡರ ಮನ್ಲಿ ಗಿಣ್ಣು ಹಾಲು ತಂದ್ ಕೊಟ್ಟಿದ್ದಾರೆ. ಒಳಗೆ ಕಾಯ್ಸಿ ಪಾಯ್ಸ ಮಾಡ್ತಿದೆ. ನಿಮಗೆ ಬೇಕೋ ಬ್ಯಾಡ್ವೋ ಹೇಳಿ.’ +ಗಿಣ್ಣು ಹಾಲಿನ ಪಾಯಸದ ಹೆಸರು ಕೇಳಿದ ತಕ್ಷಣ ಚೆನ್ನಿಗರಾಯರು ಎದ್ದು ಅಡಿಗೆ ಮನೆಗೆ ಹೋದರು. ಅಪ್ಪಣ್ಣಯ್ಯ ವಾಡೆ ಮನೆ ಹೊಕ್ಕ. ಅಡಿಗೆ ಮನೆಗೆ ಬಂದ ನಂಜು- ‘ನಾವು ಮಾಡಿ ಕೂಗ್ತೀವಿ. ನೀವು ಅಲ್ಲೀತಂಕ ಇನ್ನೊಂದ್ಸಲ ಹೊಗೆಸೊಪ್ಪು ಹಾಕ್ಕತ್ತಿರಿ’ ಎಂದು ಹೊರಗೆ ಕಳಿಸಿದಳು, ಸಾತುವಿಗೆ ಹೇಳಿ ಅವಳನ್ನು ಅಪ್ಪಣ್ಣಯ್ಯನ ಜೊತೆಗೆ ಕಳಿಸಿ ತಾನೇ ಹೊರಗಿನಿಂದ ಬಾಗಿಲು ಎಳೆದುಕೊಂಡಳು. +ಸಮಯಸ್ಪೂರ್ತಿಯಿಂದ ಗಿಣ್ಣಿನ ಮಾತನಾಡಿ ಅವಳು ಸಂದರ್ಭವನ್ನು ನಿಭಾಯಿಸಿದ್ದಳು. ಆದರೆ ಈಗ ಯಾವ ಹಸು ಅಥವಾ ಎಮ್ಮೆಯನ್ನು ಈಯಿಸಿ ಗಿಣ್ಣು ಕರೆದು ಪಾಯಸ ಕಾಯಿಸುವುದು? ಆದರೂ ಅವಳು ಬುದ್ದಿ ಕಳೆದುಕೊಳ್ಳಲಿಲ್ಲ. ಹುಡುಗರಿಗೆಲ್ಲ ಹಾಸಿಗೆ ಹಾಕಿಕೊಟ್ಟು ಅಂಗಳದಲ್ಲಿ ಮಲಗಿಸಿದಳು. ಒಂದು ತೆಂಗಿನಕಾಯಿ ತುರಿದು ಬರ -ಅಕ್ಕಿಯ ಜೊತೆಗೆ ತಿರುವಿ ಎರಡು ಉಂಡೆ ಬೆಲ್ಲ ಮುಳುಗಿಸಿ ಪಾಯಸ ಕಾಯಿಸಿದ ಮೇಲೆ ಒಂದಿಷ್ಟು ಸಾದಾ ಹಾಲು ಹಾಕಿದಳು. ತಂಗಮ್ಮನನ್ನು ಹೊರಗೆ ಕಳಿಸಿ ಗಂಡನನ್ನು ಒಳಗೆ ಕೂಗಿದಳು. ಎಚ್ಚರವಾಗಿ ಕಾಯುತ್ತಾ ಕುಳಿತಿದ್ದ ಶ್ಯಾನುಭೋಗರು, ಕರೆದತಕ್ಷಣ ಎದ್ದು ಬಂದು ಕುಕ್ಕುರುಗಾಲಿನಲ್ಲಿ ಕೂತಮೇಲೆ ಪಾಯಸದ ಡಬರಿಯನ್ನೇ ಮುಂದೆ ಇಟ್ಟು ಒಂದು ಅಲ್ಲ್ಯೂಮಿನಿಯಂ ತಟ್ಟೆ ಹಾಕಿ ಹೇಳಿದಳು; ‘ನೀವೇ ಬಡುಸ್ಕಂಡು ತಿನ್ನಿ. ಅವರ ಮನೆ ಎಮ್ಮೆ ಕರು ಹಾಕಿ ಆಗಲೇ ಹದಿನೈದು ದಿನ ಆಗಿತ್ತಂತೆ. ಆ ಗಿಣ್ಣು ಹಾಲು ಒಡೀಲೇ ಇಲ್ಲ. ಆದ್ರೂ ಪಾಯ್ಸ ಚನ್ನಾಗಿದೆ,’ +ಚೆನ್ನಿಗರಾಯರು ಒಂದು ಸೌಟನ್ನು ತಟ್ಟೆಗೆ ಹಾಕಿಕೊಂಡು ನೆಕ್ಕಿದರು. ಸಿಹಿ ಸಿಹಿಯಾದ ಗಿಣ್ಣಿನ ಪಾಯಸ ಚಪ್ಪರಿಸುವ ಹಾಗಿತ್ತು. ‘ನಾನು ಹೋಗ್ಲೇ, ನೀವು ತಿಂತೀರಾ?’ -ಎಂದು ಅವಳು ಕೇಳಿದುದಕ್ಕೆ, ‘ಊ’ ಎನ್ನಲೂ ಅವರಿಗೆ ವ್ಯವಧಾನವಿರಲಿಲ್ಲ. +ಬೆಳಗ್ಗೆ ಎದ್ದವನೇ ಅಪ್ಪಣ್ಣಯ್ಯ ಕೆರೆ ಏರಿಯ ಕಡೆಗೆ ಹೋದಮೇಲೆ ಗುಡಿಗೆ ಬಂದು ಅಮ್ಮನಿಗೆ ಹೇಳಿದ; ‘ಅವ್ರುನ್ನ ಇಲ್ಲಿಗೇ ಕರ್ಕಂಡ್ ಬರಾಣೇನಮ್ಮ?’ +‘ಯಾರನ್ನೋ?’ +‘ಆ, ನುಗ್ಗಿಕೆರೆಯೋರುನ್ನ’ +ಗಂಗಮ್ಮ ಅವಾಕ್ಕಾದರು. ಒಂದು ನಿಮಿಷದಲ್ಲಿ ಅವಳಿಗೆ ಎಲ್ಲವೂ ಹೊಳೆದುಹೋಯಿತು. ‘ಅಯ್ಯೋ ಸೂಳೇಮಗನೇ, ನೀನೆಲ್ಲೋ ರಾತ್ರಿ ದ್ಯಾವಲಾಪುರದಾಗೆ ಮ್ಯಾಳ ನೋಡುಕ್ಕೆ ಹೋಗಿದ್ದೆ ಅಂತ ನಾನು ತಿಳ್ಕಂಡಿದ್ದೆ. ಹೋಗಿ ಆ ಹಾದರಗಿತ್ತಿ ಜೊತೆ ಮಲಕ್ಕಂಡಿದ್ದೇನೋ? +ಅಪ್ಪಣ್ಣಯ್ಯ ತಲೆ ತಗ್ಗಿಸಿಕೊಂಡು ನಿಂತಿದ್ದ. ಒಂದು ಹತ್ತು ನಿಮಿಷ ತನಗೆ ತಿಳಿದಂತೆ ಆಶೀರ್ವಚನ ನುಡಿದಮೇಲೆ ಗಂಗಮ್ಮ ಕೇಳಿದಳು: ‘ನಮ್ಮನ್ನೂ ಅಲ್ಲಿಗೇ ಕರ್ಕಂಡ್ ಹೋಗು ಅಂತ ಆ ಹಾದರಗಿತ್ತಿಯೇ ಅಂದ್ಲೇನೋ?’ +ಅಪ್ಪಣ್ಣಯ್ಯ ಸ್ವಲ್ಪ ಧೈರ್ಯ ಮಾಡಿದ: ‘ಅವ್ಳೇನು ಹೇಳಾದು? ನಾನೇ ಹಾಗಂದೆ. ಕರ್ಕಂಡ್ ಬರಾಣ. ಅವ್ರುನ್ನ ಅಲ್ಲಿ ಯಾಕ್ ಬಿಟ್ಟಿರಬೇಕು?’ +‘ಕರ್ಕಂಡ್ ಹೋಗ್ತೀನಿ ಅಂತ ಅವ್ಳಿಗೆ ಹೇಳಿ ಬಂದಿದೀ ಏನೋ ಮಿಂಡ್ರಿಗ್ ಹುಟ್ಟಿದ ಸೂಳೇಮಗನೆ? ತಡೀ, ಅಣ್ಣಾಜೋಯಿಸರಿಗೆ ಹೇಳಿ ನಿಂಗ್ ಮಾಡುಸ್ತೀನಿ’ – ಎಂದು ಮೇಲೆ ಎದ್ದವಳೇ ನೇರವಾಗಿ ಹೋಗಿ ಜೋಯಿಸನ ಮನೆಯ ಸೂರಿನ ಕೆಳಗೆ ನಿಂತು ಕೂಗಿದಳು: ‘ಜೋಯಿಸ್ರೇ, ಇಲ್ಲಿ ಬನ್ನಿ ಸ್ವಲ್ಪ.’ +ಇವಳು ಕೂಗಿದ ಜೋರಿಗೆ ಸುತ್ತಮುತ್ತಲಿನ ಏಳೆಂಟು ಜನ ಸೇರಿದರು. ಹೊರಗೆ ಬಂದ ಜೋಯಿಸನಿಗೆ ಇವಳು ಹೇಳಿದಳು: ‘ನ್ಯನ್ನೆ ರಾತ್ರಿನಾಗೆ ಇವ್ನು ಹೋಗಿ ಆ ಹಾದರಗಿತ್ತಿ ತಾವ ಮಲೀಕ್ಕಂಡು ಬಂದಿದಾನೆ. ಇವತ್ತಿನಿಂದ ನಮ್ಮನೆಗೇ ಕರ್ಕಂಡ್ ಬತ್ತೀನಿ ಅಂತಾನೆ. ದೇವರ ಗುಡೀಲಿ ಗಂಡ ಹೆಂಡ್ತಿ ಇರಬೌದೆ ನೀವೇ ಹೇಳಿ.’ +ಹನುಮಂತರಾಯ ಮೊದಲೇ ಬ್ರಹ್ಮಾಚಾರಿ ದೇವರು. ಅವನ ಗುಡಿಯಲ್ಲಿ ಗಂಡ ಹೆಂಡತಿ ಜೊತೆಯಲ್ಲಿರುವುದರಿಂದ ಧರ್ಮನಿಷಿದ್ಧವೇ. ‘ಅವ್ನಿಗೆಲ್ಲೋ ಬುದ್ಧಿ ಕೆಟ್ಟದೆ. ಹಾಗೆ ಮಾಡಿದ್ರೆ ಎಲ್ರುನ್ನೂ ದೇವಸ್ಥಾನದಿಂದ ಹೊರಕ್ಕೆ ಕಳುಸ್ತೀನಿ. ಗ್ರಾಮದಲ್ಲಿ ಮಳೆ ಬೆಳೆ ಆಗ್ಬೇಕೋ ಬ್ಯಾಡ್ವೋ ಇಂಥ ಕೆಲ್ಸ ಮಾಡಿದ್ರೆ?’ – ಎಂದ ಅಣ್ಣಾಜೋಯಿಸ, ತಾನೇ ಗುಡಿಗೆ ಬಂದು ಎಚ್ಚರಿಕೆ ಹೇಳಿ ಹೋದ. ಅಪ್ಪಣ್ಣಯ್ಯನ ಮುಖ ಸಪ್ಪಗಾಯಿತು. ಆದರೆ ರಾತ್ರಿ ಪಟ್ಟ ಸುಖದ ನೆನಪಾಗಿ ಹೆಂಡತಿಯನ್ನು ಬಿಟ್ಟಿರುವುದೂ ಅಸಾಧ್ಯವೆನಿಸಿತು. ಎಲ್ಲಿಲ್ಲದ ಧೈರ್ಯ ತಂದುಕೊಂಡ ಅವನು ಅತ್ತಿಗೆಯ ಮನೆಗೆ ಹೋಗಿ, ನಡೆದ ಸಂಗತಿ ಹೇಳಿದ. ಅಷ್ಟರಲ್ಲಿ ಹಿಂದಿನಿಂದ ಬಂದ ಗಂಗಮ್ಮ ಬಾಗಿಲಿನ ಹೊರಗೇ ನಿಂತು ನಂಜಮ್ಮ, ಚೆನ್ನಿಗರಾಯ, ಇಬ್ಬರಿಗೂ ಸಹಸ್ರನಾಮ ಮಾಡಿದಳು. ಇನ್ನೂ ಮಲಗಿ ನಿದ್ರಿಸುತ್ತಾ ರಾತ್ರಿಯ ಪಾಯಸವನ್ನು ಅರಗಿಸಿಕೊಳ್ಳುತ್ತಿದ್ದ ಚೆನ್ನಿಗರಾಯರು ಎದ್ದು ಕುಳಿತರು. ಅವರು ಹೆಂಡತಿಯನ್ನು ಬಯ್ಯುತ್ತಿದ್ದರೋ ಏನೋ, ಆದರೆ ತಕ್ಷಣ ಕೆರೆಯ ಏರಿಯ ಹಿಂದಕ್ಕೆ ಹೋಗುವ ಅವಸರವಾಗಿದ್ದುದರಿಂದ ಒಂದು ಮಾತೂ ಆಡದೆ ಎದ್ದು ಬೇಗಬೇಗ ಅರೆ ಓಟದಿಂದ ಹೊರಟುಹೋದರು. ಈ ಮಗನೂ ತನಗೆ ವಿರೋಧವಾಗಿದ್ದಾನೆಂದು ಭಾವಿಸಿದ ಗಂಗಮ್ಮ ಅಲ್ಲಿ ನಿಲ್ಲದೆ ತನ್ನ ಮನೆಗೆ ಹಿಂದಿರುಗಿದಳು. +– ೩ – +ಅಪ್ಪಣ್ಣಯ್ಯ ಆ ದಿನವೂ ಅತ್ತಿಗೆಯ ಮನೆಯಲ್ಲಿ ಉಳಿದ. ಎರಡು ಮೂರು ದಿನದಲ್ಲಿ ಒಂದು ತೀರ್ಮಾನವಾಯಿತು: ಅಪ್ಪಣ್ಣಯ್ಯ ಹೆಂಡತಿ ಮಕ್ಕಳ ಜೊತೆಯಲ್ಲಿ ಬೇರೆಯಾಗಿ ಇರುವುದು. ಅವನ ಅತ್ತೆ ಅವರೊಂದಿಗೆ ಇರುವುದನ್ನಂತೂ ಪ್ರತ್ಯೇಕವಾಗಿ ನಿಶ್ಚಯಿಸಬೇಕಾಗಿರಲಿಲ್ಲ. ಇನ್ನು ಜೀವನೋಪಾಯಕ್ಕೆ ದಾರಿ: ಇಷ್ಟು ವರ್ಷಗಳು ತಾಯಿಯ ಜೊತೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ದೇಶಾವರಿ ಮಾಡಿ ಅನುಭವವಿದ್ದ ಅವನು, ‘ತಿರುಪೇನಾದ್ರೂ ಮಾಡಿ ಹೆಂಡ್ತಿ ಮಕ್ಳನ್ನ ಸಾಕ್ತೀನಿ. ಗಂಡ್ಸಲ್ವೇನು?’ ಎಂಬ ತಾಕತ್ತಿನ ಮಾತನಾಡಿದ. ಇನ್ನು, ವಾಸಿಸುವ ಜಾಗಕ್ಕೆ ಒಂದು ಏರ್ಪಾಟಾಗಬೇಕು. +ಕುರುಬರಹಳ್ಳಿಯ ಗುಂಡೇಗೌಡರದೇ ಈ ಊರಿನಲ್ಲಿ ಒಂದು ಹಿತ್ತಿಲಿದೆ. ಬೇಲಿಯೂ ಇಲ್ಲದ, ಸೊಪ್ಪುಸೆದೆ ಒಟ್ಟಲು ಯಾರೂ ಉಪಯೋಗಿಸುತ್ತಲೂ ಇಲ್ಲದ ಅದು ಹನುಮಂತರಾಯನ ಗುಡಿಗೆ ಮೂವತ್ತು ಮಾರು ದೂರದಲ್ಲಿದೆ. ನಂಜಮ್ಮ ಅಪ್ಪಣ್ಣಯ್ಯನನ್ನು ಕರೆದುಕೊಂಡು ಕುರುಬರಹಳ್ಳಿಗೆ ಹೋಗಿ ಗುಂಡೇಗೌಡರನ್ನು ಕೇಳಿದಳು. ಅದರಲ್ಲಿ ಅಪ್ಪಣ್ಣಯ್ಯ ಸ್ವಂತ ಖರ್ಚಿನಿಂದ ಒಂದು ಗುಡಿಸಲು ಕಟ್ಟಿಕೊಂಡು ಇರಲು ತಮ್ಮದೇನು ಅಡ್ಡಿ ಇಲ್ಲವೆಂದು ಗೌಡರೇ ಒಪ್ಪಿಗೆ ಕೊಟ್ಟರು. ಅಪ್ಪಣ್ಣಯ್ಯ ಚೆನ್ನಿಗರಾಯರಂತೆ ಮೈಗಳ್ಳನಲ್ಲ. ಹುಮ್ಮಸ್ಸು ಬಂದು ಯಾರಾದರೂ ಹೊಗಳಿ ದಾರಿ ತೋರಿಸಿದರೆ ದುಡಿಯುವ ಶಾರೀರಿಕ ಶಕ್ತಿ ಮತ್ತು ಉತ್ಸಾಹ, ಎರಡೂ ಇದ್ದುವು. ಬಹಳ ದಿನದಿಂದ ಕಾಣದ ಹೆಂಡತಿಯ ಸಹವಾಸ ಹುಮ್ಮಸ್ಸು ಕೊಟ್ಟಿತು. ನಂಜಮ್ಮನ ಮಾರ್ಗದರ್ಶನ ಲಭಿಸಿತು. ಸಾತು ತನ್ನೊಡನೆ ತಂದಿದ್ದ ಒಂದು ಸೇರಿನ ಬೆಳ್ಳಿಯ ಪಂಚಪಾತ್ರೆಯನ್ನು ಇಪ್ಪತ್ತೈದು ರೂಪಾಯಿಗೆ ಮಾರಿ ಹಣ ಕೊಟ್ಟಳು. ಹತ್ತು ಬಿದಿರು, ಹತ್ತು ಗಾಡಿಮಣ್ಣು, ಎರಡು ಕಲ್ಲುಕಂಬಗಳನ್ನು ದುಡ್ಡುಕೊಟ್ಟು ಹೇರಿಸುದುದಷ್ಟೇ. ಅಪ್ಪಣ್ಣಯ್ಯನೇ ಹದಿ ತೆಗ್ದು ಸೊಂಟದುದ್ದ ತಡಿಕೆ ಗೋಡೆ ಎಬ್ಬಿಸಿ ಕಲ್ಲುಕಂಬ ನೆಟ್ಟು ಬಿದಿರು, ಗಳು, ದಬ್ಬೆಕಟ್ಟಿದ. ಅವರಿವರ ತೋಟದಲ್ಲಿ ಕೇಳಿತಂದ ಆರು ಏಳು ನೂರು ಗರಿ ಸೋಗೆ ಹೊದಿಸಿಯಾಯಿತು. ಬಡಗಿಯ ಆಚಾರಿ ಮೂರು ರೂಪಾಯಿಗೆ ನಾಲ್ಕು ಅಡಿ ಎತ್ತರದ ಒಂದು ಬಾಗಿಲು ಕದ ಚಿಲಕವನ್ನೂ ಮಾಡಿ ಜೋಡಿಸಿಕೊಟ್ಟ. ಒಂದು ಶುಭ ದಿವಸ ಮಡಿಕೆಯಲ್ಲಿ ಹಾಲು ಉಕ್ಕಿಸಿ ಗೃಹಪ್ರವೇಶ ಮಾಡಿ ಆಯಿತು. ಇವರು ಗೃಹಪ್ರವೇಶ ಮಾಡುವ ತನಕ ಎಲ್ಲರ ಊಟವೂ ನಂಜಮ್ಮನ ಮನೆಯಲ್ಲೇ ಆಗುತ್ತಿತ್ತು. +ಇನ್ನು ಜೀವನಕ್ಕೆ ದಾರಿಯಾಗ ಬೇಕು. ಅಪ್ಪಣ್ಣಯ್ಯ ಈಗ ತಾಯಿಯ ಜೊತೆ ಬಿಟ್ಟು ಒಬ್ಬನೇ ಹಳ್ಳಿಯ ಕಡೆ ಹೋಗುತ್ತಾನೆ. ಶಿವೇಗೌಡನೆಂಬ ವ್ಯಕ್ತಿಯನ್ನು ಶಪಿಸಿ ಏನಾದರೂ ಕೊಡುವಂತೆ ಮನೆ ಮನೆಗಳಲ್ಲಿ ಕೇಳುತ್ತಾನೆ. ಅವನೇನು ಬೀದಿಯ ಬಾಗಿಲಿನಲ್ಲಿ ನಿಂತು ಜೋಳಿಗೆ ಹಿಡಿದು ಬೇಡುವ ಭಿಕ್ಷುಕನಲ್ಲ. ಆದುದರಿಂದ ಕೊಡುವವರು ಅಚ್ಚೇರಿಗೆ ಕಡಿಮೆಯಿಲ್ಲದೆ ಮೊರದಲ್ಲಿಯೇ ಕೊಡುತ್ತಾರೆ. ಅಷ್ಟರಲ್ಲಿ ಸುಗ್ಗಿಯ ಕಾಲ ಬಂತು. ಅವನು ಕಣಕ್ಕೇ ಹೋಗುತ್ತಾನೆ. ರಾಗಿ ಬಡಿದು ತೂರಿ ರಾಶಿಪೂಜೆ ಮಾಡಿದಾಗ, ಬಂದವರಿಗೆ ಮೊರದಲ್ಲಿ ದಾನ ಮಾಡಿದರೆ ರಾಶಿ ದೊಡ್ಡದಾಗುತ್ತದೆ ತಾನೇ? ಆದುದರಿಂದ ಅವನಿಗೆ ಮೊರದ ತುಂಬ ಸಿಕ್ಕುತ್ತದೆ. ಎಷ್ಟೋ ಸಲ ಒಂದೇ ಕಣದಲ್ಲಿ ಗಂಗಮ್ಮ. ಅಪ್ಪಣ್ಣಯ್ಯ, ಇಬ್ಬರೂ ಸಂಧಿಸುವುದುಂಟು. ಅವಳು ಮಗನನ್ನು ಮಾತನಾಡಿಸುವುದಿಲ್ಲ. ಇವನೂ ಮುಖವೆತ್ತಿ ನೋಡುವುದಿಲ್ಲ. ‘ಇಬ್ಬಿಬ್ಬರು ಬ್ಯಾರೆ ಅಂತ ವೇಸ ಕಟ್ ಕಂಡು ಬಂದಿದೀರಾ? ಎಲ್ಡೆಲ್ಡು ಸಲಿ ನಾವೆಲ್ಲಿ ತರಾಣ? -ಎಂದು ಮೂದಲಿಸುವ ರೈತರೂ ಉಂಟು. ಸುಮ್ಮನೆ ಇಬ್ಬರಿಗೂ ಕೊಡುವವರೂ ಉಂಟು. +ಇದೇ ಪರಿಸ್ಥಿತಿಯು ಹಳ್ಳಿಗಳ ಕಡೆಯೂ ಆಗುತ್ತಿತ್ತು. ಹಿಂದೆ ತಾಯಿ ಮಗ ಜೊತೆಯಲ್ಲಿ ಹೋಗುತ್ತಿದ್ದ ಮನೆಗಳಿಗೆ ಈಗ ಇವರಲ್ಲಿ ಯಾರಾದರೂ ಒಬ್ಬರು ಮೊದಲು ಹೋಗುತ್ತಿದ್ದರು. ಕೆಲವು ದಿನದ ನಂತರ ಹೋದವರನ್ನು ‘ಅವ್ವ ಮಗ ಬ್ಯಾರೆ ಅಂತ ಆಟ ಕಟ್ಕಂಡ್ ಎಲ್ಡೆಲ್ಡು ಸಲಿ ಬಂದ್ರೆ ನಾವೆಲ್ಲಿಂದ ತರಾಣ್ರಿ?’ ಎಂದು ಕೆಲವರು ಕೇಳುತ್ತಿದ್ದರು. ಇದನ್ನರಿತ ಗಂಗಮ್ಮ ಸುತ್ತಣ ಹಳ್ಳಿಗಳನ್ನೆಲ್ಲ ತಾನೇ ಮೊದಲು ಸುತ್ತುವರಿದು ಬಂದು ಬಿಟ್ಟಳು. ಅವಳದು ಎಷ್ಟಾದರೂ ಒಬ್ಬಳ ಹೊಟ್ಟೆ. ಖರ್ಚು ಕಡಿಮೆ. ಹೀಗಾಗಿ ಮೂರು ವರ್ಷ ತಿಂದು ಮುಗಿಸುವ ರಾಗಿ. ಕಾಳು, ಮೆಣಸಿನಕಾಯಿಗಳು ಅವಳ ಹತ್ತಿರ ದಾಸ್ತಾನಾದುವು. ಅಪ್ಪಣಯ್ಯ ಐದು ಹೊಟ್ಟೆ ಸಾಕಬೇಕು. ಅಲ್ಲದೆ ಗಂಡ ಸತ್ತ ಮುಪ್ಪಿನ ವಯಸ್ಸಿನ ವಿಧವೆ ಮನೆಗೆ ಬಂದು ಕೇಳಿದರೆ ಜನಕ್ಕೆ ಉಂಟಾಗುತ್ತಿದ್ದ ಕರುಣೆ ಗಟ್ಟಿಮುಟ್ಟಾದ ಪ್ರಾಯದ ಗಂಡಸು ಬಂದು ಕೇಳಿದರೆ ಹುಟ್ಟುತ್ತಿರಲಿಲ್ಲ. ‘ಕೂಲಿ ಮಾಡ್ಕಂಡ್ ತಿನ್ನಾಕೇನಾಗೈಯ್ತಯ್ಯಾ? ಕೈ ಕಾಲು ಬಿದ್ಹೋಗೈತಾ?’ ಎಂದು ಕೇಳುವವರೂ ಇದ್ದರು. +ಹೆಂಡತಿ ಬಂದ ಹೊಸತರಲ್ಲಿ ಅಪ್ಪಣಯ್ಯನಿಗೆ ತುಂಬ ಉತ್ಸಾಹವಿತ್ತು. ನಾಲ್ಕು ದಿನ ಕಳೆದಂತೆ ಅದು ಸ್ವಲ್ಪ ಕಡಿಮೆಯಾಯಿತು. ದಿನವೆಲ್ಲ ಊರೂರು ತಿರುಗಿ ಎಲ್ಲರ ಮನೆಯ ಹೊಸಲು ತುಳಿದು ಅವರು ಅಂದಂತೆ ಅನ್ನಿಸಿಕೊಳ್ಳುವ ಬವಣೆಯು ಮನಸ್ಸಿಗೆ ಹಿತಕರವಾಗಿರಲಿಲ್ಲ. ಹಿಂದೆ ತಾಯಿಯ ಸಂಗಡ ಇದ್ದಾಗ ಬೇಡಿ ತರುವ ಕೆಲಸ ಅವಳದಾಗಿತ್ತು. ಕೆಂಪಿನ ಸೀರೆಯಲ್ಲಿ ಕಟ್ಟಿಕೊಂಡು ಒಂದು ಕಡೆ ತಂದು ಸುರಿಯುತ್ತಿದ್ದುದನ್ನು, ಗೋಣಿ ಚೀಲಕ್ಕೆ ತುಂಬಿ ಹೊತ್ತು ತರುವುದಷ್ಟೇ ಅವನ ಹೊರೆಯಾಗಿತ್ತು. ಸ್ವತಃ ಬೇಡುವ ಕಿರಿಕಿರಿಯಿಂದ ಈಗ ಅವನು ಮನಸ್ಸಿನಲ್ಲೇ ವ್ಯಘ್ರನಾಗುತ್ತಿದ್ದ. +ಒಂದು ದಿನ ನಂಜಮ್ಮ ಇವರ ಮನೆಗೆ ಬಂದಳು. ಅಪ್ಪಣ್ಣಯ್ಯ ಹಳ್ಳಿಯ ಮೇಲೆ ಹೋಗಿದ್ದ. ಆ ಮಾತು ಈ ಮಾತು ಆಡುತ್ತಾ ನಂಜಮ್ಮ ಎಂದಳು; ‘ನಿಮ್ಮ ಜಯಲಕ್ಷ್ಮಿಗೆ ಆಗಲೇ ನಮ್ಮ ಪಾರ್ವತಿಯ ವಯಸ್ಸು. ಅವಳನ್ನೂ ಸ್ಕೂಲಿಗೆ ಸೇರಿಸಿ. ರಾಮಕೃಷ್ಣನನ್ನೂ ಸೇರಿಸಿ. ನಾಲ್ಕು ಅಕ್ಷರ ಕಲೀದಿದ್ರೆ ಮಕ್ಕಳ ಪಾಡೇನು?’ +‘ಸೇರುಸ್ಬೇಕು.’ +‘ಇನ್ನೊಂದು ವಿಷಯ ನಿಮಗೆ ಹೇಳ್ಬೇಕು ಅಂತಿದ್ದೆ. ನೀವು ಮನೆಗೆ ತಂದ ರಾಗೀನ ಮಾರ್‍ತಾ ಇರ್‍ತೀರಂತೆ. ಹಾಗೆ ಮಾರ್‍ಬಾರ್‍ದು. ಸುಗ್ಗೀಕಾಲದಲ್ಲಿ, ಸುಗ್ಗಿ ಕಳೆದ ಎರಡು ಮೂರು ತಿಂಗಳು ಜನ ದಿನಸಿ ಕೊಡ್ತಾರೆ. ಜ್ಯೇಷ್ಠಾ ಆಷಾಢ ಕಳೆದ ಮೇಲೆ ಯಾರೂ ಒಂದು ಕಾಳೂ ಕೊಡುಲ್ಲ. ದಿನಸಿ ಈಗ ಕಳುದ್ರೆ ಮುಂದೆ ತುಂಬ ಕಷ್ಟ. ಸಣ್ಣೇನಹಳ್ಳಿಯಿಂದ ಒಂದೆರಡು ಮಣ್ಣಿನ ವಾಡೆ ತರಿಸಿ ಗುಡ್ಡೆ ಹಾಕಿಡಿ.’ +‘ಹಾಳು ರಾಗಿ ಇಟ್ಕಂಡೇನು ಮಾಡೋದು? ಅದನ್ಯಾರು ತಿಂತಾರೆ?’ ವಿಧವೆ ತಂಗಮ್ಮ ಎಂದಳು. +ಇವರಿಗೆ ರಾಗಿ ತಿಂದರೆ ಮೈಗೆ ಆಗುವುದಿಲ್ಲವೆಂಬುದು ನಂಜಮ್ಮನಿಗೆ ಗೊತ್ತು. ಆದರೆ ಹಳ್ಳಿಯ ರಾಗಿಯಲ್ಲದೆ ಅಕ್ಕಿ ತಿನ್ನುವವರು ಎಷ್ಟು ಜನ ಇದ್ದಾರೆ? ಅಭ್ಯಾಸ ಮಾಡಿಕೊಂಡರೆ ತಾನಾಗಿಯೇ ಹೊಂದಿಕೊಳ್ಳುತ್ತದೆ. ಹೊಂದಿಸಿಕೊಳ್ಳದೆ ಜೀವನ ಮಾಡುವುದು ದಢೂತಿ ಜಮೀನ್ದಾರರಿಗೆ ಮಾತ್ರ ಸಾಧ್ಯ. ಇವರು ಹೀಗೆಂದರೆ ಹೇಗೆ? ಅವಳೇನೋ ತನಗೆ ತಿಳಿದ ವಿವೇಕ ಹೇಳಿದಳು. ವಿವೇಕದ ಇನ್ನೂ ಎರಡು ಮಾತನ್ನು ಹೇಳಿಯೇ ಬಿಡಬೇಕೆಂದು ಅವಳ ಮನಸ್ಸಿನಲ್ಲಿತ್ತು. ಅವರೆಲ್ಲರಿಗೂ ಕಾಫಿ ಕುಡಿಯುವ ಪದ್ಧತಿ. ಕಡೂರು ಸೀಮೆಯ ಅವರಿಗೆ ಚಿಕ್ಕ ವಯಸ್ಸಿನಿಂದ ಅಭ್ಯಾಸವಂತೆ. ಸಾತು ಮೊದಲು ಇಲ್ಲಿಗೆ ಬಂದಿದ್ದಾಗ ಅತ್ತೆಯ ಭಯ ಹೇಗೋ ಅದನ್ನು ತಡೆದುಕೊಂಡಿದ್ದಳು. ಈಗ ಕಾಫಿ ಕುಡಿಯುವ ಜನ ರಾಮಸಂದ್ರದಲ್ಲೂ ಹೆಚ್ಚುತ್ತಿದ್ದಾರೆ. ಅನುಕೂಲಸ್ಥರು ಕುಡಿಯಲೂ ಬಹುದು. ಆದರೆ ಅಪ್ಪಣ್ಣಯ್ಯನ ಸಂಸಾರ ಈ ನಾಲ್ವರಿಗೂ ದಿನಕ್ಕೆ ಎರಡು ಹೊತ್ತು ಬೇಕೇ ಆದರೆ ಎಲ್ಲಿಂದ ತರಬೇಕು? +‘ನೀವು ಅದನ್ನು ಬಿಟ್ಟುಬಿಟ್ಟರೆ ಎಷ್ಟೋ ಉಳಿತಾಯವಾಗುತ್ತೆ ಅಲ್ಲವೆ?’ +‘ನಮಗಂತೂ ಆಗುಲ್ಲಪ್ಪ. ಬೆಳಗ್ಗೆ ಎದ್ದು ಅದು ಹ್ಯಾಗೆ ಬರೀ ಹೊಟ್ಟೇಲಿರೋದು? ನೀವಂತೂ ಬರಿ ರೊಟ್ಟಿ ತಿಂದ್ಕಂಡ್ ಇರ್ತೀರಿ. ನಾವು ಹಾಗೆ ಇದ್ದೋರಲ್ಲ’ ತಂಗಮ್ಮ ಎಂದಳು. ನಂಜಮ್ಮ ಆ ಮಾತನ್ನು ಅಲ್ಲಿಗೇ ನಿಲ್ಲಿಸಿದಳು. +ಒಂದು ದಿನ ಸಾತು ಓರಗಿತ್ತಿಯ ಮನೆಗೆ ಬಂದು ಕುಳಿತು ಮಾತನಾಡುತ್ತಿದ್ದಳು. ನಂಜಮ್ಮ ಚಟಚಟನೆ ಕಡ್ಡಿ ಮುರಿಯುತ್ತಾ ಎರಡು ನಿಮಿಷಕ್ಕೆ ಒಂದರಂತೆ ಮುತ್ತುಗದೆಲೆ ಹಚ್ಚಿಸಿ ಹಾಕುತ್ತಿದ್ದಳು. ‘ಅಕ್ಕಾ, ನೀವು ಇಷ್ಟೊಂದು ಕೆಲಸ ಮಾಡ್ತೀರ ಮನೆ ಕೆಲಸದ ಜೊತೆಗೆ, ಶ್ಯಾನುಭೋಗಿಕೆ ಲೆಕ್ಕ ಬರೀತೀರಾ. ಎಲೆ ಹೊತ್ಕಂಡು ಬಂದು ಎಲೇನೂ ಹಚ್ತೀರ. ನಮ್ಮ ಕೈಲಿ ಆಗುಲ್ಲಮ್ಮ.’ +ನಂಜಮ್ಮ ಹೇಳಿದಳು; ‘ನೋಡು, ನಿನ್ನ ಕೈಲಿ ಹೇಳ್ಬೇಕು ಅಂತ ನಂಗೆ ಆಗಲೇ ಎರಡು ಮೂರು ತಿಂಗಳು ಅನ್ನುಸ್ತಿದೆ. ನೀವೇನು ತಿಳ್ಕತ್ತೀರೋ ಅಂತ ಸುಮ್ಮನಿದ್ದೆ.’ +‘ಏನ್ ಹೇಳಿ.’ +‘ನಿಮ್ಮನೇಲಿ ಒಟ್ಟು ಊಟ ಮಾಡೋರು ಐದು ಜನ. ಸಂಪಾದನೆ ಮಾಡೋನು ಒಬ್ಬ. ಅದೂ ಭಿಕ್ಷೆ ಬೇಡಿ ಯಾರೂ ಬದುಕಿಲ್ಲ. ಏನಾದ್ರೂ ಸ್ವಂತ ಮಾಡ್ಬೇಕು. ಸ್ವಂತ ಮಾಡು ತಿಳಿವಳಿಕೆ ಇದ್ರೆ ಈ ಸಂಸಾರ ಯಾಕೆ ಈ ಸ್ಥಿತಿಗೆ ಬರ್ತಾ ಇತ್ತು? ನೀವಾರೂ ಏನಾದ್ರೂ ಮಾಡಿ. ಮನ್ಲಿ ನೀವು ಇಬ್ರು ಹೆಂಗಸ್ರಿದ್ದೀರಿ. ಮನೆ ಕೆಲ್ಸ ಮಾಡ್ಕೊಂಡು ಆಡಾಡ್ಕಂಡು ಹಚ್ಚಿಸಿದ್ರೂ ದಿನುಕ್ಕೆ ಮುನ್ನೂರು ಎಲೆ ಹಚ್ಚಿಸ್ಬೌದು. ಈಗ ಎಲೆ ಧಾರಣೆ ಮೂರಕ್ಕೆ ಏಳಾಣೆಯಾಗಿದೆ. ತಿಪಟೂರಿನಿಂದ ಎಷ್ಟಾದ್ರೂ ಲಾರೀಲಿ ಬೆಂಗಳೂರಿಗೆ ಕಳುಸ್ತಾರಂತೆ. ತಿಂಗ್ಳಿಗೆ ಮೂವತ್ತು ರೂಪಾಯಿ ಸಂಪಾದನೆ ಆದ್ರೆ ಎಷ್ಟೋ ಆಯ್ತಲ್ಲ.’ +‘ಒಂದೇ ಸಮ ಮುತ್ತುಗದೆಲೆ ದಳದ್ರೆ ಉಷ್ಣವಾಗುಲ್ವೆ?’ +‘ಅಭ್ಯಾಸ ಮಾಡ್ಕಂಡ್ರೆ ಏನೂ ಆಗುಲ್ಲ. ಉಷ್ಣವಾದ್ರೂ ರಾತ್ರಿ ಮಲೀಕ್ಕಳೂವಾಗ ಅಂಗಾಲಿಗೆ ಹರಳೆಣ್ಣೆ ತಿಕ್ಕಂಡ್ರೆ ಸರಿಯಾಗುತ್ತೆ.’ +ತಾನೂ ಎಲೆ ಹಚ್ಚಿಸಬೇಕೆಂದು ಸಾತು ನಿಶ್ಚಯಿಸಿದಳು. ಮರುದಿನ ಓರಗಿತ್ತಿಯ ಮನೆಗೆ ಬಂದು ಅವಳ ಸಮಕ್ಕೂ ಕಡ್ಡಿ ಮುರಿದಳು. ನಂಜಮ್ಮ ನೂರ ಇಪ್ಪತ್ತು ಎಲೆ ಹಚ್ಚುವ ಹೊತ್ತಿಗೆ ಇವಳು ಹದಿನೆಂಟು ಮುಗಿಸಿದಳು. ಅಭ್ಯಾಸವಾದಂತೆ ಬೇಗಬೇಗ ಬರುತ್ತೆ ಎಂದು ನಂಜಮ್ಮ ಪ್ರೋತ್ಸಾಹದ ಮಾತನಾಡಿದಳು. ಆದರೆ ಮರುದಿನ ಹೊತ್ತಿಗೆ ಅವಳ ಕೈಕಾಲು ಉರಿಯಲು ಮೊದಲಾಯಿತು. ‘ಕಟ್ಕಂಡ್ ಗಂಡ್ಸು ಹೆಂಡ್ತಿ ಮಕ್ಳುನ್ ಸಾಕ್ಬೇಕು. ನೀನು ಎಲೆ ಪಲೆ ಹಚ್ಚಬ್ಯಾಡಮ್ಮ ಮಗು’ – ಎಂದು ತಂಗಮ್ಮ ಮಗಳಿಗೆ ಆರೈಕೆಯ ಮಾತು ಹೇಳಿದಳು. ಅಲ್ಲಿಗೆ ಅವಳ ಎಲೆ ಹಚ್ಚುವುದು ನಿಂತುಹೋಯಿತು. ಈ ನಡುವೆ ಅವಳು ಮುಟ್ಟು ಸಹ ಆಗಿರಲಿಲ್ಲ. ವಾಂತಿಯೂ ಪ್ರಾರಂಭವಾಯಿತು. +ಸಾತುವಿನ ತಂದೆ ಶ್ಯಾಮಭಟ್ಟರು ಪುರೋಹಿತರಾಗಿದ್ದವರು, ಪುರೋಹಿತರ ಮನೆತನಕ್ಕೆ ಸೇರಿದವರು. ಆದುದರಿಂದ ಮಡಿ ಮೈಲಿಗೆ, ಆಚಾರ ಕರ್ಮಗಳ ವಿಚಾರದಲ್ಲಿ ತಂಗಮ್ಮನಿಗೆ ಹೆಚ್ಚು ತಿಳಿವಳಿಕೆ ಇತ್ತು. ಗಂಗಮ್ಮನ ಮನೆಯಲ್ಲಿ ಮೊದಲಿಂದಲೂ ಮಡಿ ಸ್ವಲ್ಪ ಕಡಿಮೆಯೇ. ಅಲ್ಲದೆ ನಂಜಮ್ಮ ಹೊರಗೆ ಕಾಣಿಸುವಂತೆ ಅಲ್ಪಸ್ವಲ್ಪ ಮಾಡುತ್ತಿದ್ದಳೇ ಹೊರತು ಒಳಗಡೆಯಲ್ಲಿ ಏನೂ ಇಟ್ಟುಕೊಂಡಿರಲಿಲ್ಲ. ಮಡಿಕೆಯಲ್ಲಿ ಸಾರು ಮಾಡುತ್ತಾಳೆ. ಅನ್ನ ಮಾಡಿದ ದಿನ, ತಪ್ಪಲೆಗಿಂತ ತಂಪು ಎಂದು ಮಡಿಕೆಯಲ್ಲೇ ಮಾಡುತ್ತಾಳೆ. ಒಕ್ಕಲಿಗರಿಗೆ ಅದು ಸರಿ. ಬ್ರಾಹ್ಮಣರು ಹೀಗೆ ಮಾಡುವುದುಂಟೆ? ನಂಜಮ್ಮನ ಮಕ್ಕಳು ಎಷ್ಟೋ ದಿನ, ಮಾದೇವಯ್ಯನವರು ಕೊಟ್ಟುದನ್ನು ತಿಂದುಬಿಡುತ್ತಿದ್ದುವು. ಮೂರನೇ ಹುಡುಗ ನಾಲ್ಕು ವರ್ಷದ ವಿಶ್ವ ಮಾದೇವಯ್ಯನವರು ಅವರ ಜಾತಿಯವರ ಮನೆಯಲ್ಲಿ ಕಂತೆಭಿಕ್ಷೆ ಮಾಡಿಕೊಂಡು ಬಂದುದನ್ನು ಅವರ ತೊಡೆಯ ಮೇಲೆ ಕೂತುಕೊಂಡೇ ಎಷ್ಟೋ ದಿನ ಊಟ ಮಾಡಿ ಬಿಡುತ್ತಿತ್ತು. ಅದು ಗೊತ್ತಿದ್ದರೂ ನಂಜಮ್ಮ ಮಕ್ಕಳನ್ನು ಹೊಡೆದು ಬುದ್ಧಿ ಕಲಿಸುತ್ತಿರಲಿಲ್ಲ. ಇದೆಲ್ಲ ತಂಗಮ್ಮನಿಗಂತೂ ಸರಿಬೀಳುತ್ತಿರಲಿಲ್ಲ, ಸಾತುವಿಗೂ ಹಿಡಿಸುತ್ತಿರಲಿಲ್ಲ. +ಗ್ರಾಮದ ಪುರೋಹಿತರಾದ ಅಯ್ಯಾಶಾಸ್ತ್ರಿಗಳ, ಅಣ್ಣಾಜೋಯಿಸರ ಹೆಂಡತಿಯರಾದರೆ ಆಚಾರ ವ್ಯವಹಾರ ಮಡಿ ಮೈಲಿಗೆ ಇಟ್ಟುಕೊಂಡಿರುವ ಹೆಂಗಸರು. ಅಣ್ಣಾಜೋಯಿಸರ ಹೆಂಡತಿ ಮುಟ್ಟಾದಾಗ ಗಂಡನ ಕಣ್ಣಿಗೆ ಸಹ ಬೀಳುವುದಿಲ್ಲ. ಮುಟ್ಟಾದಾಗಲೂ ನಂಜಮ್ಮ ಕದ್ದು ಅಡಿಗೆ ಮಾಡುತ್ತಾಳೆ. ‘ನಮ್ಮ ಪಾರ್ವತಿ ಮಾಡ್ತು ಅಂತ ಸುಳ್ಳು ಸುಳ್ಳೇ ಹೇಳ್ತಾಳೆ ಕಣ್ರೀ’ – ಎಂದು ಅಣ್ಣಾಜೋಯಿಸನ ಹೆಂಡತಿ ವೆಂಕಟಲಕ್ಷ್ಮಿ ಹೇಳಿದಾಗ, ಇನ್ನೊಂದು ದಿನ ಅವಳ ಮನೆಗೆ ಹೋಗಬಾರದೆಂದು ತಂಗಮ್ಮ ನಿಶ್ಚಯಿಸಿಕೊಂಡಳು; ‘ಇತರ ಜಾತಿ ಹೆಂಗಸರು ಮುಟ್ಟಾದ ದಿನವೇ ನೀರು ಹಾಕ್ಕಂಡು ಒಳಗೆ ಹೋಗಿ ಅಡಿಗೆ ಮಾಡ್ತಾರೆ. ಬ್ರಾಹ್ಮಣರಾಗಿ ಹುಟ್ಟಿ ಹೀಗೆ ಮಾಡೋದು ಅಂದ್ರೆ ಕೀಳು ಜಾತಿ ಕೆಟ್ಹೋಯ್ತೆ? ಥೂ.’ +ಒಂದು ದಿನ ತಂಗಮ್ಮ, ಸಾತು, ಇಬ್ಬರೂ ಅಣ್ಣಾಜೋಯಿಸರ ಮನೆಗೆ ಹೋಗಿದ್ದಾಗ ಜೋಯಿಸರೇ ಒಂದು ಮಾತು ತೆಗೆದರು; ಪಿತ್ರಾರ್ಜಿತ ಆಸ್ತಿ ಅಂದಮೇಲೆ ಅಣ್ಣ ತಮ್ಮಂದಿರು ಇಬ್ಬರಿಗೂ ಸಮಪಾಲು ಬರಬೇಕು ಅಲ್ವೆ? ಉಳಿದ ಆಸ್ತಿಯಂತೂ ಹೋಯ್ತು. ಶ್ಯಾನುಭೋಗಿಕೇನ ಚೆನ್ನಿಗರಾಯ ಒಬ್ಬನೇ ಅನುಭವಿಸೋಸು, ಅಪ್ಪಣ್ಣಯ್ಯಂಗೆ ಅದರಲ್ಲಿ ಏನೂ ಇಲ್ಲ ಅಂದ್ರೆ ಏನೂ ನ್ಯಾಯ? ಅಣ್ಣ ತಮ್ಮ ಇಬ್ಬರಿಗೂ ಅದರ ಪೋಟಿಕೆ ಹಂಚಬೇಕು ಅಂತ ಸರ್ಕಾರದ ಕಾನೂನೇ ಇದೆ. ಹೀಗೆ ಎಷ್ಟು ದಿನ ಅಂತ ನಿಮಗೆ ಮೋಸ ಮಾಡ್ತಾರೆ ಅವ್ರು?’ +ತಂಗಮ್ಮನ ಕಿವಿ ನೆಟ್ಟಗಾಯಿತು. ತಮಗೆ ಸೇರಬೇಕಾದುದರ ಬಗೆಗೆ ಬಾಯಿಯೇ ಬಿಡದೆ ಬುದ್ಧಿವಂತಿಕೆ ಮಾಡುತ್ತಿರುವ ಓರಗಿತ್ತಿ ನಂಜಮ್ಮನ ವಿಷಯದಲ್ಲಿ ಸಾತುವಿಗೆ ಒಳಗೇ ಕಿಚ್ಚು ಕವರಿತು. ‘ಯಲ್ಲಾ ಬೂಟಾಟಿಕೆ ಇವಳದ್ದು’ – ಮನಸ್ಸಿನಲ್ಲಿ ಅಂದುಕೊಂಡಳು. +‘ನೀವೂ ಅಪ್ಪಣ್ಣಯ್ಯನೂ ಕೇಳಿ. ಅವ್ರು ಕೊಡುಲ್ಲ ಅಂದ್ರೆ ತಿಪಟೂರಿಗೆ ಹೋಗಿ ಅಮಲ್ದಾರ್ ಸಾಹೇಬರಿಗೆ ಅಡ್ಡಬಿದ್ದು ಕೇಳ್ಕಂಡ್ರೆ ಕೊಡುಸ್ತಾರೆ’ ಜೋಯಿಸರು ಸಲಹೆ ಕೊಟ್ಟರು. ಆ ದಿನ ಸಂಜೆಗೆ ಅಪ್ಪಣ್ಣಯ್ಯ ಹಳ್ಳಿಯಿಂದ ಮನೆಗೆ ಬಂದಾಗ ಸಾತುವೇ ಎಲ್ಲವನ್ನೂ ಹೇಳಿದಳು; ‘ನಮಗೂ ಮಕ್ಳು ಮರಿ ಇಲ್ವೆ? ಮುಂದೆ ಪಿತ್ರಾರ್ಜಿತವಾದುದ್ದು ಅಂತ ಅವುಕ್ಕೆ ಏನೂ ಸೇರಬ್ಯಾಡ್ವೆ? ನೂರ ಇಪ್ಪತ್ತು ರೂಪಾಯಿ ಪೋಟಿಗೇಲಿ ಅರ್ಧ, ಅಂದ್ರೆ ಅರವತ್ತು ಬರಬೇಕು. ಮೇಲೆ ಮಸಿ ಕಾಣಿಕೆ ಬರುವುದು ಬಿಟ್ಟಿಯೇನೋ?’ +ಅಪ್ಪಣ್ಣಯ್ಯನಿಗೆ ಹಿಂದು ಮುಂದು ತಿಳಿಯದು. ಶ್ಯಾನುಭೋಗಿಕೆ ಪಟೇಲಿಕೆಗಳು ಯಾವಾಗಲೂ ಹಿರಿಯ ಮಗನಿಗೆ ಸೇರುತ್ತವೆ ಎಂಬುದನ್ನು ಅವನು ಕೇಳಿದ್ದ, ಕಂಡಿದ್ದ. ಆದರೆ ಸರ್ಕಾರದ ಕಾನೂನೇ ಬೇರೆ ಥರ ಇದೆಯೇನೋ! ಅಣ್ಣಾಜೋಯಿಸರಿಗಿಂತ ನನಗೇನು ಗೊತ್ತು ಎಂದವನು, ರಾತ್ರಿಯಾಗಿದ್ದರೂ ಜೋಯಿಸರ ಮನೆಗೆ ಹೋಗಿ ಕೇಳಿದ. ಅಣ್ಣ ತಮ್ಮಂದಿರಿಗೆಲ್ಲ ಅದರಲ್ಲಿ ಸಮಪಾಲು ಬರಬೇಕೆಂದು ಹೇಳಿ, ‘ಇಷ್ಟು ವರ್ಷ ಅವರೇ ತಿಂದು ನಿನಗೆ ಎಪ್ಪೆ ಹಾಕಿದಾರಲ್ಲೋ ದಡ್ಡ’ ಎಂದು ಅವರು ಹಿತನುಡಿದಾಗ ಅವನಿಗೆ ರೇಗಿಬಿಟ್ಟಿತು. ದುಡುದುಡನೆ ಅಲ್ಲಿಂದ ಓಡಿ ಅಣ್ಣನ ಮನೆಗೆ ಬಂದ. ಚನ್ನಿಗರಾಯರು ಇರಲಿಲ್ಲ. ಸೀಮೆ‌ಎಣ್ಣೆಯ ಲ್ಯಾಂಪಿನಲ್ಲಿ ಪಾರ್ವತಿ ರಾಮಣ್ಣರಿಗೆ ಪಾಠ ಹೇಳಿಕೊಡುತ್ತಾ ಕುಳಿತಿದ್ದ ಅತ್ತಿಗೆಯ ಮುಂದೆ ನಿಂತು ಕೇಳಿದ; ‘ಹೀಗೆಲ್ಲ ಮೋಸ ಮಾಡಿದ್ರೆ ನಾನು ಕೇಳುಲ್ಲ. ಪೋಟಿಗೇಲಿ ಅರ್ಧ ನಂಗೂ ಕೊಟ್ಬಿಡಬೇಕು.’ +ಅವನ ಮಾತು ನಂಜಮ್ಮನಿಗೆ ಅರ್ಥವಾಗಲಿಲ್ಲ; ಯಾವ ಪೋಟಿಗೇಲಿ? ಏನು ನೀವು ಹೇಳೂದು?’ +‘ಶ್ಯಾನುಬಾಕಿದು. ನಮ್ಮಪ್ಪ ಬರೀ ಚಿನ್ನಯ್ಯ ಒಬ್ಬುನ್ನೇ ಹುಟ್ಸಿರಲಿಲ್ಲ. ನನ್ನೂ ಉಟ್ಸಿದ್ದ. ಸಮಪಾಲು ಕೊಡ್ದೆ ಇದ್ರೆ ನಾನು ಅಮಲ್ದಾರ್ರ ಹತ್ರುಕ್ಕೇ ಹೋಗ್ತೀನಿ. ಹೂ’ – ಎಂದು ಹೇಳಿದ ಅವನು, ಅಣ್ಣನು ಮಾದೇವಯ್ಯನವರ ಗುಡಿಯಲ್ಲಿರಬಹುದೆಂದು ಯೋಚಿಸಿ ಅಲ್ಲಿಗೆ ಹೊರಟ ದಾರಿಯ ಉದ್ದಕ್ಕೂ ಅವನ ಬಾಯಿ – ‘ನಮ್ಮಪ್ಪ ನನ್ನೂ ಉಟ್ಸಿದ್ದ. ನಂಗೂ ಅರ್ಧ ಪೋಟಿಕೆ ಕೊಡ್ಬೇಕು. ನಾನು ಹಳ್ಳಿ ಹಳ್ಳಿ ತಿರುಗಿ ತಿರುಪೆ ಮಾಡೂದೂ, ಈ ಬೋಳೀಮಕ್ಳು ಪೋಟಿಕೆ ತಿಂದ್ಕಂಡು ಸುಖವಾಗಿರೋದೇನು!’ ಎಂದು ಬೀದಿಯವರಿಗೆಲ್ಲ ಹೇಳುವಂತೆ ತನಗೆ ತಾನೇ ಬಡಿದುಕೊಳ್ಳುತ್ತಿತ್ತು. +ಅವನು ಮಾದೇವಯ್ಯನವರ ಗುಡಿಗೆ ಹೋದುದು ನಂಜಮ್ಮನಿಗೆ ತಿಳಿಯಲಿಲ್ಲ. ಅದೇನು ಪೂರ್ತಿಯಾಗಿ ವಿಚಾರಿಸಬೇಕೆಂದು ಅವಳೇ ಎದ್ದು ಅಪ್ಪಣ್ಣಯ್ಯನ ಮನೆಗೆ ಬಂದರೆ ಅವನಿರಲಿಲ್ಲ. ‘ಅಪ್ಪಣ್ಣಯ್ಯ ನಮ್ಮನೆಗೆ ಬಂದು, ನಮ್ಗೂ ಪೋಟಿಕೆ ಅರ್ಧ ಬರ್‍ಬೇಕು ಅಂತ ಏನೇನೋ ಕೂಗಾಡ್ಕಂಡು ಹೋದ್ರು. ಅದೇನು ಸಮಾಚಾರ?’ ಎಂದು ಓರಗಿತ್ತಿಯನ್ನು ಕೇಳಿದಳು. +ಸಾತು – ‘ಅಣ್ಣ ತಮ್ಮ ಅಂತ ಇದ್ಮ್ಯಾಲೆ ಇಬ್ಬರಿಗೂ ಬರ್‍ಬ್ಯಾಡ್ವೆ? ಇವರಿಗೆ ತಿಳಿವಳಿಕೆ ಇಲ್ಲ ಅಂತ ಇಷ್ಟು ದಿನ ನೀವೊಬ್ರೇ ತಿನ್ಬೌದೇನೋ? ಈ ಕಾಲದಲ್ಲಿ ಯಾರನ್ನೂ ನಂಬುಕ್ ಆಗಲ್ಲ’ ಎಂದಳು. +‘ಸರ್ಕಾರದ ಕಾನೂನು ಹಾಗಿಲ್ಲ. ನಿಮಗೆ ಯಾರು ಹೇಳಿದೋರು ಹಾಗಂತ? ಪೋಟಿಕೆ ನೂರಿಪ್ಪತ್ತೇನೋ ಬರುತ್ತೆ. ಅದಕ್ಕೆ ಆಗೋ ಖರ್ಚೆಷ್ಟು? ಲೆಕ್ಕದ ಪುಸ್ತಕದ ಕಾಗದ ಶಾಯಿಯ ಖರ್ಚೆಷ್ಟು? ಕಣ್ಣಿಗೆ ಎಣ್ಣೆ ಬಿಟ್ಕಂಡು ರೂಲು ಹಾಕಿ ಲೆಕ್ಕ ಬರೆಯೋದೆಷ್ಟು? ಯಾವುದೂ ಯೋಚ್ನೆ ಮಾಡ್ದೆ ಅಪ್ಪಣ್ಣಯ್ಯ ಹೀಗೆ ಬೀದೀಲೆಲ್ಲ ಕೂಗಾಡ್ಕಂಡು ಹೋಗ್ಬೌದೆ?’ +‘ಲೆಕ್ಕ ಏನು ಬರೆಯೋದು, ಬೇಕಾದ್ರೆ ನಾನೂ ಬರ್‍ಕೊಡ್ತೀನಿ. ಕೈ ಕೆಸರಾದ್ರೆ ತಾನೆ ಬಾಯಿ ಮೊಸರು?’ +ಇನ್ನು ಮಾತು ಬೆಳೆಸಬಾರದೆಂದು ನಂಜಮ್ಮ ಮನೆಗೆ ಹೊರಟುಹೋದಳು. ಚೆನ್ನಿಗರಾಯರು ಗುಡಿಯಲ್ಲಿರಲಿಲ್ಲ. ಕೆರೆಯ ಏರಿಯ ಕಡೆಗೆ ಹೋಗಿದ್ದವರು ಅಷ್ಟರಲ್ಲಿ ಮನೆಗೆ ಬಂದು ಸಂಧ್ಯಾವಂದನೆಗೆ ಕೂತಿದ್ದರು. ಹುಡುಗರು ಲ್ಯಾಂಪಿನ ಬೆಳಕಿನಲ್ಲಿ ಪಾಠ ಬರೆಯುತ್ತಿದರು. ಸಂಧ್ಯಾವಂದನೆ ಮಾಡುವವರನ್ನು ಮಧ್ಯದಲ್ಲಿ ಮಾತನಾಡಿಸಬಾರದೆಂದು ನಂಜಮ್ಮ ಒಳಗೆ ಹೋಗಿ, ಅಡಿಗೆ ಮನೆಯ ಕಸ ಗುಡಿಸಿ ತಟ್ಟೆ ಹಾಕಿ ದೇವರಿಗೆ ದೀಪ ಹಚ್ಚಿಸಿ ಪ್ರದಕ್ಷಿಣೆ ನಮಸ್ಕಾರ ಮಾಡಿದಳು. ಅಪ್ಪಣ್ಣಯ್ಯನ ಸ್ವಭಾವ ಅವಳಿಗೆ ತಿಳಿಯದುದಲ್ಲ. ಆದರೆ ಸಾತುವಿನ ವರ್ತನೆಯಿಂದ ಆಶ್ಚರ್ಯವಾಯಿತು. ಗಂಡನಿಗೆ ಅವಳೇ ಹೇಳಿಕೊಟ್ಟಿದ್ದಾಳೆ. ಅವಳಿಗೆ ಯಾರು ಹೇಳಿಕೊಟ್ಟಿದ್ದಾರೆಯೋ? ಯಾರೇ ಆಗಲಿ, ಅವಳು ಹೀಗೆ ಬದಲಾಯಿಸಬಾರದು. ಈ ಕಾಲದಲ್ಲಿ ಯಾರಿಗೂ ಉಪಕಾರ ಮಾಡಬಾರದು. ಜನಕ್ಕೆ ಉಪ್ಪು ತಿಂದ ಜ್ಞಾಪಕ ಉಳಿಯುಲ್ಲ – ಎಂದು ಯೋಚಿಸುತ್ತಾ ಸುಮ್ಮನೆ ಕುಳಿತಳು. +ಅಷ್ಟರಲ್ಲಿ ಅಪ್ಪಣ್ಣಯ್ಯ ಮತ್ತೆ ಬಂದ ಶಬ್ಧವಾಯಿತು. ಅವನ ಜೊತೆಯಲ್ಲಿ ಎಂಟು ಹತ್ತು ಜನ ಬಂದ ಹಾಗೆ ಆಯಿತು. ಹಿಂದೆಯೇ ಅತ್ತೆ ಗಂಗಮ್ಮನ ಗಂಟಲು ಕೇಳಿಸಿತು. ನಂಜಮ್ಮ ಹೊರಗೆ ಬಂದು ನೋಡುತ್ತಾಳೆ. ಅಣ್ಣಾಜೋಯಿಸ, ಅಯ್ಯಾಶಾಸ್ತ್ರಿಗಳು, ರೇವಣ್ಣಶೆಟ್ಟಿ, ಗಾಣಿಗರಶಿಂಗ, ಹಿಂದಿನ ಶ್ಯಾನುಭೋಗ ಸಿವಲಿಂಗ, ಮೊದಲಾಗಿ ಒಂದು ಪಂಚಾಯ್ತಿಯ ಜನವೇ ಸೇರಿದೆ. ಪಟೇಲ ಶಿವೇಗೌಡ ಮಾತ್ರ ಬಂದಿರಲಿಲ್ಲ. ನಡುಮನೆಯಲ್ಲಿ ಕೂತು ಸಂಧ್ಯಾವಂದನೆ ಮಾಡುತ್ತಿದ್ದ ಚನ್ನಿಗರಾಯರು ಎದ್ದು ಪಂಚಪಾತ್ರೆಯನ್ನು ಅಡಿಗೆಮನೆಯ ಒಳಬಾಗಿಲಿಗೆ ಇಟ್ಟು ಪಂಚೆ ಹೊದೆದುಕೊಂಡರು. ನಂಜಮ್ಮ ಹೊರಗೆ ಬರುವುದೇ ತಡ, ಗಂಗಮ್ಮ ಸುರು ಮಾಡಿದಳು: ‘ಬಾಕಿ ಜಮೀನಿನಲ್ಲಾದ್ರೆ ಅಜ್ಜಿ ಪಾಲು ಅಂತ ತೆಗೆಯೋಲ್ವೆ? ಪುಣ್ಯಾತ್ಮರು ಇವರಿಬ್ಬರನ್ನೂ ಹುಟ್ಸಿದ್ದು. ನಿಜ. ನಂಗೆ ತಾಳಿ ಕಟ್ಟಿದ್ದೇ ಸುಳ್ಳೇ? ಪೋಟಿಕೇಲಿ ನಂಗೂ ಒಂದು ಪಾಲು ಬರ್‍ಬೇಕು. ನೀನೇ ಹೇಳು ರೇವಣ್ಣಶೆಟ್ಟಿ.’ +ರೇವಣ್ಣಶೆಟ್ಟಿ ಎಂದ: ‘ಹಿಂದೆ ಶ್ಯಾನುಬಾಕಿ ಮಾಡಿದ್ದೋರು ಸಿವಲಿಂಗಣ್ಣಾರಿಗೆ ಎಲ್ಲಾ ಗೊತ್ತೈತೆ. ಅವ್ರೇ ನ್ಯಾಯ ಸ್ಥಾನದಲ್ಲಿ ಕುಂತ್ಕಳ್ಳಿ.’ +ಸಿವಲಿಂಗ ತಕ್ಷಣ ಎದ್ದು ಬಂದು ಕಂಬದ ಹತ್ತಿರ ಕೂತು – ‘ಏನಂತೀಯಯ್ಯಾ ಚಿನ್ನಯ್ಯ?’ ಎಂದ. ಚೆನ್ನಿಗರಾಯರಿಗೆ ಅಷ್ಟರಲ್ಲಿ ವಿಷಯ ಅರ್ಥವಾಗಿತ್ತು. ಆದರೆ ಏನು ಹೇಳುವುದಕ್ಕೂ ತೋಚಲಿಲ್ಲ. ‘ಅವ್ಳುನ್ನೇ ಕೇಳಿ’ – ಎಂದು ಹೆಂಡತಿಯ ಕಡೆಗೆ ಕೈ ತೋರಿಸಿ, ತಾವು ಬಚಾವ್ ಆದವರಂತೆ ಕುಳಿತರು. ‘ನೀವೇ ಅದೇನು ಹೇಳ್ರಮ್ಮ’ – ಎಂದು ರೇವಣ್ಣಶೆಟ್ಟಿ ನಂಜಮ್ಮನ ಮುಖವನ್ನೇ ದಿಟ್ಟಿಸಿ ನೋಡುತ್ತಾ ಹೇಳಿ, ಒಂದು ನಿಮಿಷದ ಮೇಲೆ, ‘ಹ್ಯದುರ್ಕಾಬ್ಯಾಡಿ’ ಎಂದ. +ಅಷ್ಟರಲ್ಲಿ ಸಾತು ಮತ್ತು ತಂಗಮ್ಮ, ಇಬ್ಬರೂ ಬಂದು ಹೊರಬಾಗಿಲಿನ ಹತ್ತಿರ ನಿಂತಿದ್ದರು. ನಂಜಮ್ಮನಿಗೆ ಕೋಪ ಏರಿಹೋಗಿತ್ತು. ಎಲ್ಲರಿಗೂ ಒಟ್ಟಿಗೆ ಹೇಳಿದಳು: ‘ನಿಮ್ಮುನ್ನೆಲ್ಲ ಇಲ್ಲಿ ಕರಸ್ದೋರು ಯಾರು? ಕಂಡೋರ ಮನೆ ಲೆಕ್ಕಾಚಾರ ಮಾಡುಕ್ಕೆ ಓಡಿ ಬತ್ತೀರಲ್ಲ, ನಿಮ್ಮ ನಿಮ್ಮ ಮನೆ ವ್ಯವಹಾರ ನೋಡ್ಕಂಡು ಮರ್ಯಾದೆಯಾಗಿರಿ. ನೀವೆಲ್ಲ ಈಗ ಎದ್ದು ಹೊರಿಕ್ ಹೋಗ್ತೀರೋ ಅಥವ ಮರ್ಯಾದೆ ಆಗ್ಬೇಕೋ?’ +ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಗಾಣಿಗರ ಶಿಂಗ, ಹೊರಕೇರಿ ಗುರುವಯ್ಯ ಮೊದಲಾದವರಿಗೆ ಹಿಂದುಮುಂದು ಏನೂ ಗೊತ್ತಿರಲಿಲ್ಲ. ‘ಪಂಚಾಯ್ತಿಯಾಗುತ್ತೆ ಬನ್ನಿ’ – ಎಂದು ಅಪ್ಪಣ್ಣಯ್ಯ ಬೀದಿಯಲ್ಲಿ ಕೂಗಿಕೊಂಡು ಹೋಗಿದ್ದ. ಅವರು ಎದ್ದು ಬಂದಿದ್ದರು. ಎಷ್ಟಾದರೂ ಗ್ರಾಮದ ಶ್ಯಾನುಭೋಗಿಕೆ ಲೆಕ್ಕ ಇವರ ಹತ್ತಿರ ಇದೆ. ತಮಗೇಕೆ ಇಲ್ಲದ ನಿಷ್ಠುರ ಎಂದುಕೊಂಡು, ಅವರೆಲ್ಲ ಎದ್ದು ಸುಮ್ಮನೆ ಹೊರಟುಹೋದರು. ಅವರು ಹೋದದ್ದೇ ತಡ ಉಳಿದವರ ಧೈರ್ಯವೂ ಕುಗ್ಗಿತು. ‘ಸುಮ್ನೆ ಎದ್ದು ಗಾಡಿಬಿಡ್ತೀರೋ ಇಲ್ವೋ ನೀವು?’ – ಎಂದು ಅವಳು ಇನ್ನೊಂದು ಸಲ ಎಂದುದಕ್ಕೆ ಸಿವಲಿಂಗ ರೇವಣ್ಣಶೆಟ್ಟಿ ಮೊದಲಾದವರು ಎದ್ದು ಹೋದರು. ‘ಅಪ್ಪಣ್ಣಯ್ಯ, ಅದ್ಯಾವ ಮನೆಹಾಳ ಹೇಳಿಕೊಟ್ಟ ನಿಮಗೆ?’ – ಎಂದು ನಂಜಮ್ಮ ಮತ್ತೆ ಕೇಳಿದಳು. ಅಪ್ಪಣ್ಣಯ್ಯ ಉತ್ತರ ಹೇಳಲಿಲ್ಲ. ಆದರೆ ಈ ಮಾತು ಬಂದ ತಕ್ಷಣ ಅಣ್ಣಾಜೋಯಿಸ ಮೇಲೆ ಎದ್ದು, ‘ಸಂಧ್ಯಾವಂದನೆಗೆ ಹೊತ್ತಾಗುತ್ತೆ. ನಿಮ್ಮ ನಿಮ್ಮ ಮನೆ ವ್ಯಾಜ್ಯ, ಸುಮ್ಮನೆ ಜನ ಕರೀಬ್ಯಾಡ ಅಂದ್ರೂ ಅಪ್ಪಣ್ಣಯ್ಯ ಊರೋರುನ್ನೆಲ್ಲ ಕೂಗಿದ. ಇವ್ನಿಗೆ ಬುದ್ಧಿ ಯಾವಾಗ ಬರುತ್ತೆ?’ ಎಂದು ಹೊರಟುಹೋದ. ಅಯ್ಯಾಶಾಸ್ತ್ರಿಗಳು, ಹೊದೆದಿದ್ದ ಶಾಲು ಸರಿಮಾಡಿಕೊಂಡು ಅವನನ್ನು ಅನುಸರಿಸಿದರು. +‘ಅಪ್ಪಣ್ಣಯ್ಯ, ಶ್ಯಾನುಭೋಗಿಕೆ ಯಾವಾಗ್ಲೂ ಹಿರೀ ಮಗಂದು. ನೀವು ಬೇಕಾದ್ರೆ ಹೋಗಿ ತಿಪಟೂರಲ್ಲೇ ಕೇಳ್ಕಂಡ್ ಬನ್ನಿ’ – ಎಂದು ನಂಜಮ್ಮ ಹೇಳಿದ ತಕ್ಷಣ ಅವನು ಅಲ್ಲಿಂದ ಎದ್ದುಬಿಟ್ಟ. ಪಂಚಾಯಿತರೆಲ್ಲ ತಮ್ಮ ಕೈಬಿಟ್ಟು ನಡೆದಾಗಲೇ ಅವನಿಗೆ ನೀರಿನಲ್ಲಿ ಮುಳುಗಿಸಿದಂತೆ ಆಗಿತ್ತು. ಗಂಗಮ್ಮ ಮಾತ್ರ – ‘ಈ ಮುಂಡೆ ನಾಲಿಗೆ ನೋಡು. ಊರೋರ್‍ನೆಲ್ಲ, ಹೀಗೆ ಅಟ್ಟಿಸ್ಕಂಡ್ ಮಾತಾಡಿದ್ಲಲ್ಲ. ಆಡ್ಲಿ. ನನ್ನ ಪಾಲು ಮಾತ್ರ ಬಿಡುಲ್ಲ’ – ಎಂದು ಕೂಗಾಡುತ್ತಾ ಎದ್ದು ಹೋದಳು. +ಊಟ ಮಾಡುವಾಗ ಚೆನ್ನಿಗರಾಯರು ಆ ವಿಷಯವಾಗಿ ಏನೂ ಮಾತನಾಡಲಿಲ್ಲ. ‘ನೋಡಿದ್ರಾ ಅವರ ಯೋಗ್ತೀನಾ?’ – ಎಂದು ನಂಜಮ್ಮ ಹೇಳಿದುದಕ್ಕೆ, ‘ಅಂದ್ರಂದ್ಕಂಡ್ರು’ ಎಂದು ತಮಗೆ ಈ ವಿಷಯ ಏನೂ ಸಂಬಂಧವೇ ಇಲ್ಲವೇನೋ ಎಂಬಂತೆ, ಮಧ್ಯಾಹ್ನದ ತಂಗಳು ಸೊಪ್ಪಿನ ಹುಳಿಯನ್ನು ಸುರಿದುಕೊಂಡರು. ಆ ದಿನ ರಾತ್ರಿ ನಂಜಮ್ಮನಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ತನ್ನ ಓರಗಿತ್ತಿಯ ಬದಲಾದ ಬಣ್ಣವನ್ನು ಕಂಡು ಮನಸ್ಸಿಗೆ ವ್ಯಥೆಯಾಗುತ್ತಿದ್ದರೆ, ನಿಜವಾಗಿಯೂ ಅವರಿಗೆ ಪಾಲು ಕೊಡಬೇಕೇನೋ ಎಂಬ ಅನುಮಾನ ಬೇರೆ. ಒಂದು ಹೆಜ್ಜೆ ತಿಮ್ಲಾಪುರಕ್ಕೆ ಹೋಗಿ ದ್ಯಾವರಸಯ್ಯನವರನ್ನೇ ಕೇಳಿಕೊಂಡು ಬರಬೇಕು ಎಂಬ ಯೋಚನೆ ನಡುರಾತ್ರಿಯ ಹೊತ್ತಿಗೆ ಹೊಳೆಯಿತು. +ಬೆಳಗಿನ ಜಾವದಲ್ಲಿ ಗಂಡನನ್ನು ಎಬ್ಬಿಸಿದರೆ – ‘ನನ್ ಕೈಲಾಗುಲ್ಲ. ನೀನೇ ಓಗ್ ಬಾ’ ಎಂದು ಅವರು ಮುಸುಕಿನ ಒಳಗೇ ಗೊಣಗಿದರು. ಪಾರ್ವತಿ, ರಾಮಣ್ಣ, ಇಬ್ಬರನ್ನೂ ಎಬ್ಬಿಸಿ ಮುಖ ತೊಳೆಸಿ, ಒಂದಿಷ್ಟು ಹುರಿಟ್ಟು ಕಲಸಿ ತಿನ್ನಿಸಿ ಕರೆದುಕೊಂಡು ಹೋದಳು. +ಇತ್ತೀಚೆಗೆ ವಯಸ್ಸಾಗಿ ದ್ಯಾವರಸಯ್ಯನವರ ಆರೋಗ್ಯ ಸರಿ ಇರುತ್ತಿರಲಿಲ್ಲ. ಹೀಗಾಗಿ ಅವರು ಚಳಿಯಲ್ಲಿ ಏಳದೆ ಮಲಗಿಯೇ ಇರುತ್ತಿದ್ದರು. ಹೊತ್ತು ಹುಟ್ಟಿದ ಒಂದು ಗಳಿಗೆಯಲ್ಲೇ ಬಂದ ನಂಜಮ್ಮನನ್ನು ಕಂಡು ಅವರಿಗೂ ಆಶ್ಚರ್ಯ. ಎರಡು ವರ್ಷದಿಂದ ಅವಳು ಇಲ್ಲಿಗೆ ಬಂದಿರಲಿಲ್ಲ. ಸ್ವತಂತ್ರವಾಗಿ ಶ್ಯಾನುಭೋಗಿಕೆಯ ಲೆಕ್ಕಪತ್ರಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ ಎಂಬುದನ್ನು ತಿಳಿದ ಅವರು ಅವಳ ಬಗೆಗೆ ತೃಪ್ತಿಯಿಂದಿದ್ದರು. ಈಗ ಬಂದ ಸಮಾಚಾರ ತಿಳಿದು ಹೇಳಿದರು: ‘ಅದರಲ್ಲೇನೂ ಅನುಮಾನವಿಲ್ಲ. ನಂಗೆ ಚನ್ನಾಗಿ ಗೊತ್ತು. ಹಿರೀ ಮಗ ಒಬ್ಬನಿಗೇ ಅದರ ಅಧಿಕಾರ. ಮಹಾರಾಜರ ಪಟ್ಟವೂ ಹಾಗೇ ಅಲ್ಲವೆ? ರಾಜ್ಯಾನಾ ಅಣ್ಣ, ತಮ್ಮ, ಇಬ್ಬರಿಗೆ ಹಂಚ್ತಾರೆಯೇ?’ +ನಂಜಮ್ಮ ಮತ್ತು ಮಕ್ಕಳ ಸ್ನಾನ ತಿಂಡಿ ಆದಮೇಲೆ ಹೇಳಿದರು: ‘ನಿಂಗೆ ಮನಸ್ಸಿಗೆ ಸಮಾಧಾನವಾಗಬೇಕು. ಕಂಬನಕೆರೆ ಏನೂ ಐಗಂಚಿ ಇಲ್ವಲ್ಲ. ಇಲ್ಲಿಗೆ ಮೂರು ಮೈಲಿ. ನೀನು ಒಂದು ಹೆಜ್ಜೆ ಅಲ್ಲಿಗೇ ಹೋಗಿ ಶೇಕ್ದಾರರನ್ನೇ ಕೇಳಿಬಿಡು. ಆಮ್ಯಾಲೆ ಮನುಸ್ನಲ್ಲಿ ಮುಳ್ಳು ಇರುಲ್ಲ.’ +ದಾರಿ ತೋರಿಸಲು ಅವರು ಒಬ್ಬ ಆಳನ್ನು ಕಳಿಸಿದರು. ಮಕ್ಕಳನ್ನೂ ನಡೆಸಿಕೊಂಡು ನಂಜಮ್ಮ ಹೋಬಳಿಯ ಸ್ಥಳವಾದ ಕಂಬನಕೆರೆಗೆ ಹೆಜ್ಜೆ ಹಾಕಿದಳು. ಶೇಕ್ದಾರರು ಅವಳಿಗೆ ಗೊತ್ತು. ರಾಮಸಂದ್ರಕ್ಕೆ ಬಂದಾಗಲೆಲ್ಲ ಅವಳೇ ಅವರಿಗೆ ಬಿಳಿ ಅನ್ನ, ಸಾರು, ಚಟ್ನಿಗಳನ್ನು ಮಾಡಿ ಬಡಿಸಿದ್ದಾಳೆ. ತುಂಬಾ ನಿಧಾನ ಸ್ವಭಾವದ ಅವರು ‘ಅಮ್ಮಾ’ ಎಂದೇ ಅವಳನ್ನು ಮಾತನಾಡಿಸಿ ಊಟ ಮಾಡಿದ್ದಾರೆ. ಆದುದರಿಂದ ಅವಳು ಹೆಚ್ಚು ಭಯ, ಆತಂಕವಿಲ್ಲದೆ ಅವರ ಮನೆಗೆ ಹೋದಳು. ಇವಳನ್ನು ಕಂಡ ಅವರೇ ಮಾತನಾಡಿದರು: ‘ಏನಮ್ಮಾ, ಶ್ಯಾನುಭೋಗಿಕೆ ಪೋಟಿಕೇಲಿ ತಮ್ಮನಿಗೂ ಪಾಲು ಕೊಡಬೇಕೇ ಬ್ಯಾಡವೇ ಅಂತ ಕೇಳೂಕೆ ಬಂದ್ರಾ?’ +ನಂಜಮ್ಮನಿಗೆ ಆಶ್ಚರ್ಯವಾಯಿತು. ಮೂಕಳಾಗಿ ನಿಂತ ಅವಳಿಗೆ ಅವರು ಹೇಳಿದರು: ‘ಈಗ ಒಂದರ್ಧ ಗಂಟೆಯೂ ಆಗಿಲ್ಲ. ನಿಮ್ಮ ಮೈದುನ ಅಪ್ಪಣ್ಣಯ್ಯ, ಅವನ ಹೆಂಡತಿ ಬಂದಿದ್ದರು. ನನ್ನ ಕೈಲಿ ಮಾತಾಡುಕ್ಕೆ ಇಬ್ರಿಗೂ ಭಯ. ಬಾಗಿಲ ಹೊರಗೇ ಕೈಮುಕ್ಕಂಡು ಮರೇಲಿ ನಿಂತಿದ್ರು. ಅಣ್ಣಾಜೋಯಿಸರು, ಸಿವಲಿಂಗೇಗೌಡ ಅಂತ ಇಬ್ರು ಅವರ ಪರವಾಗಿ ಮಾತಾಡಿದ್ರು. ನಾಕು ಜನಕ್ಕೂ ಸೇರಿಸಿ ಮುಖದ ತುಂಬ ಉಗುಳಿ ಕಳುಸ್ದೆ. ನೀವೇನೂ ಯೋಚ್ನೆ ಮಾಡ್ಬ್ಯಾಡಿ. ಇದು ಹಿರಿ ಮಗುಂಗೆ ಮಾತ್ರ ಅನ್ನೋದು ಯಾರಿಗೆ ಗೊತ್ತಿಲ್ಲ? ಇಷ್ಟುನ್ನ ಕೇಳೂಕ್ಕೆ ಇಷ್ಟು ದೂರ ಯಾಕ್ ಬಂದ್ರಿ ನಡ್ಕಂಡು?’ +ನಂಜಮ್ಮನಿಗೆ ಧೈರ್ಯವಾಯಿತು. ‘ಬಿಸಿಲಲ್ಲಿ ಬಂದಿದೀರ, ಒಳಗೆ ನಡೀರಿ’ – ಎಂದು ಶೇಕ್ದಾರರು ತಮ್ಮ ಹೆಂಡತಿಗೆ ಹೇಳಿದರು. ಎಲ್ಲರಿಗೂ ಊಟ ಮಾಡಿಸಿ, ಸ್ವಲ್ಪ ಬಿಸಿಲು ಕಂದಿದ ಮೇಲೆ ಅವಳು ಹೊರಡಲು ಶೇಕ್ದಾರರು ಅನುಮತಿ ಕೊಟ್ಟರು. ಅವರ ಹೆಂಡತಿ, ಮನೆಗೆ ಬಂದ ಈ ಮುತ್ತೈದೆಗೆ ಎಲೆ ಅಡಿಕೆ ಜೊತೆಗೆ ಒಂದು ರವಿಕೆಕಣ ಮತ್ತು ತೆಂಗಿನಕಾಯಿಗಳನ್ನು ಇಟ್ಟು ಹುಡುಗರಿಬ್ಬರ ಕೈಗೂ ಬೆಲ್ಲದ ಮುರುಕು ಕೊಟ್ಟರು. +ಕಂಬನಕೆರೆಗೂ ರಾಮಸಂದ್ರಕ್ಕೂ ನೇರವಾಗಿ ಐದು ಮೈಲಿ. ದಾರಿಯಲ್ಲಿ ಹುಡುಗರು ಕಾಲು ನೋವೆಂದು ಹಟ ಮಾಡುತ್ತಿದ್ದರು. ಶೇಕ್ದಾರರ ಮಾತಿನಿಂದ ನಂಜಮ್ಮನ ಮನಸ್ಸು ಸಮಾಧಾನವಾಗಿತ್ತು. ಹುಡುಗರನ್ನು ರಮಿಸುತ್ತಾ, ಎರಡು ಕೈಲೂ ಇಬ್ಬರ ಕೈಯನ್ನೂ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ಕತ್ತಲಾಗುವ ಮುನ್ನ ಊರು ಮುಟ್ಟಿದಳು. +– ೪ – +ಅಪ್ಪಣ್ಣಯ್ಯ ಹೆಂಡತಿಯ ಜೊತೆ ಬೇರೆ ವಾಸಮಾಡಲು ಪ್ರಾರಂಭಿಸಿದ ಮೇಲೆ ಗಂಗಮ್ಮನಿಗೆ ಒಂಟಿತನ ಸಹಿಸಲಾಗದುದು ಮಾತ್ರವಲ್ಲ, ತನ್ನ ಹೊಟ್ಟೆಯಲ್ಲಿ ಹುಟ್ಟಿದ ಕಂದನೇ ತನ್ನನ್ನು ದೂರ ಮಾಡಿದನೆಂಬ ಭಾವನೆ ಬೆಳೆಯಿತು. ಈ ಸೋಲನ್ನು ಹೇಗೆ ತಡೆದಾಳು? ತನ್ನಿಂದ ಮಗನನ್ನು ಬೇರೆ ಮಾಡಿಸುವುದಕ್ಕಾಗಿಯೇ ಹಿರಿಯ ಸೊಸೆ, ಇವನು ಗುಡಿಸಲು ಕಟ್ಟಿಕೊಳ್ಳಲು ಸಹಾಯ ಮಾಡಿದಳು ಎಂದೂ ಅವಳು ಅರ್ಥ ಮಾಡಿಕೊಂಡಳು. +ಅವನ ಅತ್ತೆ, ಹೆಂಡತಿ ಬಂದು ಒಂದೂವರೆ ವರ್ಷವಾಗಿತ್ತು. ಹಳ್ಳಿ ತಿರುಗಿ ಭಿಕ್ಷೆ ಬೇಡಿ ಜನಗಳು ಆಡಿದ ಮಾತುಗಳನ್ನು ಕೇಳಿ ಅವನಿಗೂ ಸಾಕಾಗಿಹೋಗಿತ್ತು. ಒಂದು ದಿನ ಅವನು ಕೆಂಚೇಗೌಡನ ಕೊಪ್ಪಲಿನಲ್ಲಿ ಕಲ್ಲೇಗೌಡನ ಮನೆಗೆ ಹೋದ. ಗೌಡ ಮನೆಯಲ್ಲಿದ್ದರೂ ಇವನಿಗೆ ಒಂದು ಮಣೆ ಹಾಕಿಕೊಡಲಿಲ್ಲ. ಹೇಳಿಸಿಕೊಳ್ಳದೆ ನೆಲದ ಮೇಲೆಯೇ ಕೂತು, ಒಂದಿಷ್ಟು ರಾಗಿ ಕೊಡಿಸುವಂತೆ ಇವನು ಕೇಳಿದುದೇ ತಡ, ಗೌಡ ಸಿಡಾರನೆ ಅಂದುಬಿಟ್ಟ; ‘ನಿಂಗೇನ್ ಗುರ್ಗುಟ್ತದೇನಯ್ಯ? ಈಗ ನಿಮ್ಮವ್ವ ಬಂದು ಕುಂಡೋದ್ಲು. ಮತ್ತೆ ನೀನು ಬಂದಿದೀಯಾ. ರಾಗಿ ಏನು ಪುಗ್‌ಶೆಟ್ಟೆ ಬತ್ತೈತಾ? ರೊಟ್ಟಿ ಕೊಡ್ತೀವಿ, ಬಾ. ಹ್ವಲದಾಗೆ ಗೇಯಿ. ಎಲ್ಡುಸೇರು ಕೂಲಿತಗಂಡ್ ಓಗೀವಂತೆ.’ +ಅಪ್ಪಣ್ಣಯ್ಯ ಕುಳಿತೇ ಇದ್ದ. ಗೌಡ -‘ಸುಮ್ಕೆ ಎದ್ ಓಯ್ತಿಯೋ, ನಿಂಗೆ ಕುತ್ಕೆಮ್ಯಾಲೆ ಇಡುಮಿ ಆಚೀಕ್ ನೂಕ್‌ಬೇಕಯ್ಯಾ?’ +ಅಪ್ಪಣ್ಣಯ್ಯನಿಗೆ ದುಃಖ ಒತ್ತರಿಸಿ ಬಂದು ಬಿಟ್ಟಿತು. ಕಳೆದ ಒಂದೂವರೆ ವರ್ಷದಿಂದ ಅವನು ಇಂಥ ನುಡಿಯನ್ನು ಹಲವು ಮನೆಗಳಲ್ಲಿ ಕೇಳಿದ್ದನಾದರೂ, ಕುತ್ತಿಗೆ ಮೇಲೆ ಇಡುಮಿ ಆಚೆಗೆ ನೂಕುವ ಮಾತನ್ನು ಯಾರೂ ಆಡಿರಲಿಲ್ಲ. ಕುಳಿತಿದ್ದವನು ಎದುರಿಗೆ ಇಟ್ಟುಕೊಂಡಿದ್ದ ಪಂಚೆ ಮತ್ತು ಪುಟ್ಟ ಗೋಣಿಯ ಚೀಲಗಳನ್ನು ಕೈಗೆ ತೆಗೆದುಕೊಂಡು, ತಾನೇ ಹೊರಗೆ ಬಂದ. ಅಷ್ಟರಲ್ಲಿ ಅವನಿಗೆ ಅಳು ಬಂದುಬಿಟ್ಟಿತು. ಕಣ್ಣೀರು ಒರೆಸಿಕೊಳ್ಳುತ್ತಾ ಮುಂದೆ ಹತ್ತು ಹೆಜ್ಜೆ ನಡೆದಿದ್ದ. ಮಡಿಲ ತುಂಬ ರಾಗಿ ಕಟ್ಟಿಕೊಂಡು ಎದುರಿಗೆ ಗಂಗಮ್ಮ ಸಿಕ್ಕಿದಳು. ಇಷ್ಟು ವಯಸ್ಸಿನ ಮಗ ಕಣ್ಣಿನಲ್ಲಿ ನೀರು ಸುರಿಸಿಕೊಂಡು ಅಳುವುದನ್ನು ಕಂಡ ಅವಳಿಗೆ ಕರುಳು ಚುರ್ ಎಂದಿತು. ಅವಳೇ -‘ಯಾಕೋ ನನ್ ಕಂದ ಹೀಗ್ ಅಳ್ತೀಯಾ?’ ಎಂದುದಕ್ಕೆ ಅವನ ಅಳು ಇನ್ನೂ ಹೆಚ್ಚಾಯಿತು. ನಡೆದ ಸಂಗತಿ ಹೇಳಿ, ಅವನು ಕೇಳಿದ; ‘ಕಲ್ಲೇಗೌಡ ಹೀಗನ್‌ಭೌದಾ?’ ‘ಅಪ್ಪಣ್ಣಾ, ಬಾ. ಬಸವಣ್ಣನಗುಡೀಲಿ ಕೂತ್ಕಂಡು ಮಾತಾಡಾಣ’ -ಎಂದು ಮಗನನ್ನು ಕರೆದು ಕೊಂಡು ಊರ ಮುಂದಿನ ಗುಡಿಯ ಜಗುಲಿಯ ಮೇಲೆ ಕೂರಿಸಿ ಹೇಳಿದಳು; ‘ತಾಯಿ, ಮಗ, ಇಬ್ಬಿಬ್ರೂ ಕೇಳೂಕ್ಕೆ ಹೋದ್ರೆ ಅವ್ರು ತಾನೇ ಯೇನಂತಾರೆ? ನೀನ್ಯಾಕೆ ಬಂದ್ಯಪ್ಪಾ ಇಲ್ಲಿ ಕೇಳುಕ್ಕೇ?’ +‘ಬರ್ದೇ ಇದ್ರೆ ಜೀವನುಕ್ ಏನ್ ಮಾಡ್ಲಿ?’ +‘ಅಯ್ಯೋ ನಿನ್ನ ಹಣೇಬರವೇ, ಮುಂಡೇದೇ? ನನ್ನ ಹ್ವಟ್ಟೀಲಿ ಹುಟ್ಟಿ ನೀನು ಜೀವನುಕ್ಕೆ ತಾಪತ್ರಯಪಡಬೇಕೇನೋ? ಇಷ್ಟು ದಿನವೂ ನಿನ್ನ ರಾಜನ್ಹಾಗೆ ಸಾಕ್ತಿರ್ಲಿಲ್ವೇನೋ?’ ಹಳ್ಳಿ ಹಳ್ಳಿ ತಿರುಗಿ ತಿರುಪೆ ಮಾಡಿ ಆ ಮುಂಡೇರುನ್ನೆಲ್ಲ ಸಾಕೂದು ನಿನಗ್ಯಾವ ಹಣೆಬರ? ನೀನು ಓ ಲಕ್ಷ್ಮಣ ಹ್ವಟ್ಟಿಗೆ ಹಿಟ್ಟಿಲ್ವೋ ಅಂತ ಅಸ್ ಅಂದ್ಕಂಡು ರಾಗಿ ಭಿಕ್ಷ ಮಾಡ್ಕಂಡು ಮನಿಗೆ ತಂದ್ ಹಾಕೂದು. ಆ ಮುಂಡೇದು ಅದ ಮಾರಿಹಾಕಿ ಸಣ್ಣಕ್ಕಿ ಅನ್ನ, ತಗರಿಬ್ಯಾಳೆ ಸಾರು ಸುರ್‍ಕಂಡು ಹ್ವಡಿಯೂದು. ಜೊತೆಗೆ ಅವುಕ್ಕೆಲ್ಲ ಕಾಪಿ ಬ್ಯಾರೆ ಬೇಕು ಪೀಪಿ. ಆ ಮುಂಡೇರು ಉಟ್ಕಂಡಿರಾ ಬಣ್ಣ ಬಣ್ಣದ ಸೀರೇನೂ ನೋಡು, ನೀನು ಸುತ್ಕಂಡಿರಾ ಈ ಹರಕಲು ಪಂಚೇನೂ ನೋಡು. ತನ್ನ ಸುಖ ಬಿಟ್ಟು ಮಿಂಡನ ಕಷ್ಟ ಸುಖ ಸೂಳೆಗ್ಯಾಕ್ ಬೇಕು?’ +ಅಪ್ಪಣ್ಣಯ್ಯನಿಗೆ ತಾಯಿಯ ಮಾತು ನಿಜವೆನಿಸುತ್ತಿತ್ತು. ಹೆಂಡತಿ ಮಕ್ಕಳು ಬರುವ ಮೊದಲು ಅವನು ಯಾರ ಮನೆಯಲ್ಲಿಯೂ ಭಿಕ್ಷೆ ಕೇಳಿರಲಿಲ್ಲ. ಬೇಡುವುದು ಅಮ್ಮನ ಕೆಲಸ. ಊರ ಹೊರಗೆ ಎಲ್ಲಾದರೂ ಸುತ್ತುತ್ತಾ ಹೊಗೆಸೊಪ್ಪು ಹಾಕಿಕೊಂಡು, ಕೊನೆಗೆ ಅಮ್ಮ ಗುಡ್ಡೆ ಹಾಕಿದುದನ್ನು ಗೋಣಿಚೀಲದಲ್ಲಿ ಹೊತ್ತು ತರುವುದಷ್ಟೇ ಅವನ ಕಾಯಕವಾಗಿತ್ತು. ಜೊತೆಗೆ, ಇಬ್ಬರ ಸಂಸಾರದಲ್ಲಿ ಮೂರು ತಿಂಗಳು ಹಳ್ಳಿ ತಿರುಗಿದ್ದರೆ, ಉಳಿದಂತೆ ಸುಖವಾಗಿ ಕೂತು ತಿನ್ನಬಹುದಾಗಿತ್ತು. ‘ನಿನ್ನ ಹೆಂಡ್ತಿ ಅಂತ ಅವ್ಳುನ್ನ ಸಾಕ್ತಾ ಇದೀಯಾ. ನಾಚಿಕೆ ಇಲ್ದೆ ಬಂದು ಸೇರ್ಕಂಡಿರೋ ಅತ್ತೆ ಅನ್ನೂ ಮುಂಡೆಗೆ ನೀನ್ಯಾಕೆ ತಂದು ಹಾಕ್ಬೇಕೋ?’ +ಆ ದಿನ ಮತ್ತೆ ಅಪ್ಪಣ್ಣಯ್ಯ ಯಾರ ಮನೆಗೂ ಕೇಳಲು ಹೋಗಲಿಲ್ಲ. ಅಮ್ಮ ಗುಡ್ಡೆ ಹಾಕಿದುದನ್ನು ತನ್ನ ಗೋಣಿಚೀಲಕ್ಕೆ ಬಾಯಿ ಕಟ್ಟಿ ತಲೆಯಮೇಲೆ ಇಟ್ಟುಕೊಂಡ. ಭಾರ ಹೊರುವುದೇನೂ ಅವನಿಗೆ ಕಷ್ಟದ ಕೆಲಸವಲ್ಲ. ದಾರಿಯಲ್ಲಿ ಗಂಗಮ್ಮ ಅಂದಳು: ‘ಆ ಮಾದೇವಯ್ಯ ಅಂದ್ರೆ ಹೆತ್ತವ್ವುಂಗೇ ಲಾಡಿ ಬಿಚ್ಚುವಂತ ಸೂಳೇಮಗ. ಅವ್ನು ನಿನ್ ಹತ್ರ ಸುಳ್‌ಸುಳ್ಳೇ ಪ್ರಮಾಣ ಮಾಡುಸ್ದ ಅಂತ ನೀನು ನಂಬಭೌದೇ? ನೀನು ಅವರ ಊರಿಗೆ ಒಂದು ಸಲಿ ಹೋಗಿದ್ಯೋ ಬಿಟ್ಟಿದ್ಯೋ. ಆ ಮಗು ನಿಂಗೇ ಹುಟ್ಟಿದ್ದು, ಅವ್ಳು ಆವಾಗ್ಲೇ ಬಸರಿಯಾದ್ಲು ಅಂತ ಹ್ಯಾಗೆ ಗೊತ್ತು?’ +ಅಪ್ಪಣ್ಣಯ್ಯ ಯಾವ ಮಾತನ್ನೂ ಆಡದೆ ಸುಮ್ಮನೆ ಭಾರ ಹೊತ್ತು ಬರುತ್ತಿದ್ದ. ಊರು ಹತ್ತಿರ ಬಂದಾಗ ಗಂಗಮ್ಮ ಹೇಳಿದಳು: ‘ನೀನು ಸುಮ್ನೆ ನನ್ ಜೊತೆ ಬಾ. ಮದ್ಲು ಇದ್ಹಾಗೆ ಸುಖವಾಗಿರು.’ +ಮಗ ಮತ್ತೆ ತಾಯಿಯ ಗೃಹಪ್ರವೇಶ ಮಾಡಿದ. ಅವನು ಯಾವ ಕೆಲಸವನ್ನೂ ಮಾಡಲಿಲ್ಲ. ಸುಮ್ಮನೆ ಮಲಗಿ ನಿದ್ರೆ ಮಾಡಿದ. ಗಂಗಮ್ಮ ಈರುಳ್ಳಿ, ಒಂದು ಹಿಲುಕು ಬೆಳ್ಳುಳ್ಳಿ ತಿರುವಿಹಾಕಿ ಚಿಲುಕಿಸಿದ ಅವರೇಬೇಳೆ ಮೇಲೋಗರ ಮಾಡಿ ಬಿಸಿಬಿಸಿಯಾಗಿ ರಾಗಿಹಿಟ್ಟು ತೊಳಸಿ ಮುದ್ದೆ ಕಟ್ಟಿ ಮಗನನ್ನು ಎಬ್ಬಿಸಿದಳು. ಊಟಕ್ಕೆ ಕೂತರೆ ಅವನಿಗೆ ಒಂದೂವರೆ ವರ್ಷದ ಹಿಂದಿನ ಸ್ವರ್ಗವೇ ಎದುರಿಗೆ ಬಂದಂತೆ ಆಗಿತ್ತು. ಅವನಿಗೆ ಮೊದಲಿನಿಂದಲೂ ಮುದ್ದೆ ಎಂದರೆ ಆಶೆ. ಚಿಲುಕಿಸಿದ ಅವರೇಬೇಳೆಯ ಮೇಲೋಗರಕ್ಕಿಂತ ಉತ್ತಮವಾದ ಅಡುಗೆ ಈ ಪ್ರಪಂಚದಲ್ಲಿ ಯಾವುದಿದೆ? ಅವನ ಹೆಂಡತಿ, ಅತ್ತೆ, ಒಂದು ದಿನವೂ ಮನೆಯಲ್ಲಿ ಮುದ್ದೆ ತೊಳಸಿಲ್ಲ. ಅವರೇಬೇಳೆ ವಾಯುವಂತೆ, ಇತರೇ ಜನ ತಿನ್ನುವುದಂತೆ. ‘ಬಾನ್‌ಜೋತ್‌ಮುಂಡೇರ ತಂದು’ – ಎಂದು ಮನಸ್ಸಿನಲ್ಲೇ ಬೈದುಕೊಂಡು ಮುದ್ದೆ ಮುರಿಯುತ್ತಾ ಸೌಟುಗಟ್ಟಲೆ ಮೇಲೋಗರ ಹೊಡೆದ. +ಆ ದಿನದಿಂದ ಅವನು ಹೆಂಡತಿಯ ಮನೆಗೆ ಹೋಗಲಿಲ್ಲ. ಮೊದಲ ದಿನ ಹಳ್ಳಿಯಿಂದ ಊರಿಗೆ ಬಂದಿಲ್ಲವೆಂದು ಭಾವಿಸಿದ ಅವರಿಗೆ, ಅವನು ತಾಯಿಯ ಮನೆಯಲ್ಲಿರುವುದು ತಿಳಿಯಿತು. ಆದರೆ ತಾವೇ ಹೋಗಿ ಕರೆಯುವಂತಿಲ್ಲ. ಮೂರನೆಯ ಹುಡುಗ ರಾಮಕೃಷ್ಣನನ್ನು ಕಳಿಸಿದರೆ ಹನುಮಂತರಾಯನ ಗುಡಿಯ ಬಾಗಿಲಿಗೆ ಬೀಗ ಹಾಕಿತ್ತು. ತಾಯಿ ಮಗ ಮತ್ತೆ ಹದಿನೈದು ದಿನ ಊರಿಗೆ ಬರಲಿಲ್ಲ. ಮಾರುವುದಕ್ಕೆ ಮನೆಯಲ್ಲಿ ರಾಗಿ ಇರಲಿಲ್ಲ. ಇದ್ದ ಅಕ್ಕಿ ಮುಗಿದು ಹೋಗಿದೆ. ಕಾಫಿಪುಡಿ ಇಲ್ಲ. ಕೆರೆಯ ಹಿಂದಿನ ಆಲೆಯಲ್ಲಿ ಅಡಿಗೆ ಇಳಿಸುವಾಗ ಜಯಲಕ್ಷ್ಮಿ, ರಾಮಕೃಷ್ಣ ಹೋಗಿ, ಅವರು ಕೊಡುತ್ತಿದ್ದ ಪಿಡಚೆ ಬೆಲ್ಲವೇನೋ ಇತ್ತು. ಆದರೆ ಬರೀ ಬೆಲ್ಲದಿಂದ ಕಾಫಿ ಆಗುವುದಿಲ್ಲ. ಅಪ್ಪಣ್ಣಯ್ಯ ಈಗ ಅಮ್ಮನ ಜೊತೆ ಸೇರಿಕೊಂಡನೆಂಬ ಸುದ್ದಿ ಇವರಿಗಿಂತ ಮೊದಲು ಊರಿನವರಿಗೆ ಗೊತ್ತಾಗಿತ್ತು. ಅಂಗಡಿಯಲ್ಲಿ ಕೇಳಿದರೆ ಸಾಲ ಹುಟ್ಟಲಿಲ್ಲ. ಉಪವಾಸವಂತೂ ಇರುವ ಹಾಗಿಲ್ಲ. ಕಾಫಿ ಕುಡಿಯದಿದ್ದರೆ ತಲೆನೋವು ಇಳಿಯುವುದಿಲ್ಲ. ಮನೆಯಲ್ಲಿದ್ದ ದೊಡ್ಡ ಬೆಳ್ಳಿಯ ಪಂಚೋಳ ತೆಗೆದುಕೊಂಡುಹೋಗಿ ಕಾಶಿಂಬಡ್ಡಿ ಸಾಹುಕಾರರ ಹತ್ತಿರ ಅಡವಿಟ್ಟು ಎರಡು ರೂಪಾಯಿ ತಂದರು. ಒಂದು ರೂಪಾಯಿಗೆ ಎಂಟು ಸೇರು ಅಕ್ಕಿ, ಮೇಲೆ ಎರಡಾಣೆ ಕಾಫಿಪುಡಿ, ಒಂದು ಆಣೆಯ ಹಾಲು ಮನೆಗೆ ಬಂದುವು. +ಅಪ್ಪಣ್ಣಯ್ಯ ತಾಯಿಯೊಡನೆ ಊರಿಗೆ ಬಂದರೂ ಹೆಂಡತಿಯ ಮನೆಗೆ ಬರಲಿಲ್ಲ. ನಾಲ್ಕು ತಿಂಗಳು ನಡೆಯುತ್ತಿದ್ದ ಸಾತು ರಾಮಕೃಷ್ಣನನ್ನು ಕಳಿಸಿದಳು. ಗಂಗಮ್ಮನೇ – ‘ಅವ್ನು ಬರುಲ್ಲವಂತೆ ಅನ್ನು. ಅವ್ಳು ಅದ್ಯಾವನ್ನ ಇಟ್ಕಂಡು ನಿನ್ನ ಹೆತ್ಳೋ ಅವ್ನುನ್ನೇ ಮನೆಗೆ ತಂದ್ಹಾಕು ಅಂತ ಹೇಳು’ ಎಂದು ಕಳಿಸಿದಳು. +ಹುಡುಗ ಮನೆಗೆ ಹೋಗಿ ತಾಯಿಯ ಕೈಲಿ ಅದೇ ಮಾತನ್ನು ಹೇಳಿದ. ಸಾತುವಿಗೆ ಸಿಟ್ಟು ಬಂತು. ಅವಳ ಅಮ್ಮ ತಂಗಮ್ಮನಂತೂ ಕಿಡಿಕಿಡಿಯಾದಳು. ‘ಅಮ್ಮ, ನೀನು ಯಾವ ಮಾತಿಗೂ ಹೋಗ್ಬ್ಯಾಡ’ – ಎಂದು ಮಗಳು ಹೇಳಿದರೂ ಕೇಳದೆ ಅವಳೇ ಹನುಮಂತರಾಯನ ಗುಡಿಯ ಮುಂದೆ ಹೋಗಿ ನಿಂತು, ‘ಇಷ್ಟು ದಿನದಿಂದ ಮನೇಲಿ ತಿನ್ನೂಕಿಲ್ಲ. ಹೆಂಡ್ತಿ ಮಕ್ಳುನ್ನ ಸಾಕೂ ಯೋಗ್ತಿ ಇಲ್ದೋನು ಮದುವೆ ಯಾವ ಸಂಪತ್ತಿಗೆ ಮಾಡ್ಕಬೇಕಾಗಿತ್ತು?’ ಎಂದು ಕೇಳಿಬಿಟ್ಟಳು. +‘ಹಾದರಗಿತ್ತಿ ಹೆಂಡ್ತಿ ನನ್ನ ಮಗ ಸಂಸಾರ ಮಾಡುಲ್ಲ ಕಣೇ ಜೋಯ್ಸಯ್ಯನ ಹೆಂಡ್ತೀ’ – ಗಂಗಮ್ಮ ಜಾಡಿಸಿದಳು. +‘ನನ್ನ ಮಗಳ್ಯಾಕೆ ಹಾದರಗಿತ್ತಿಯಾದಾಳು? ನೀನೇ ನಿನ್ನ ಮಗನ್ನೇ ಹಾದರಕ್ಕೆ ಹೆತ್ತಿದ್ದೆ ಏನೋ. ನಾವೇನೋ ಮರ್ಯಾದೆ ಕೊಟ್ರೆ ನಿನ್ನ ನಾಯಿಬುದ್ಧಿ ಎಲ್ಲಿ ಬಿಡ್ತೀಯ?’ – ಎಂದು ತಂಗಮ್ಮ ಹೇಳುತ್ತಿರುವಷ್ಟರಲ್ಲಿ ಸಾತುವೇ ಅಲ್ಲಿಗೆ ಬಂದಳು. ‘ಅಮ್ಮಾ, ನೀನ್ಯಾಕೆ ಮಾತಿಗೆ ಹೋದೆ? ಅವ್ರೇನಾದ್ರೂ ಅಂದ್ಕಳ್ಳಿ. ಅವ್ರು ಆಡಿದ ಪಾಪ ಅವ್ರುನ್ನೇ ತಿನ್ನುತ್ತೆ’ – ಎಂದು ಅವಳು ತಾಯಿಗೆ ಸಮಾಧಾನ ಹೇಳುತ್ತಿರುವಾಗಲೇ ಗಂಗಮ್ಮ, ‘ಅಪ್ಪಣ್ಣಯ್ಯ, ನೋಡಿದ್ಯೇನೋ ಈ ಉಮ್ಮೆ ಮರಳಿ ಮಾತ. ಹಿಂದಿನಿಂದ ಹೇಳ್ಕೊಟ್ಟು ಕಳ್ಸಿ ಈಗ ನಾನು ಮಾತಾಡಿದ್ದು ಪಾಪ ಅಂತಾಳೆ. ಗಂಡ ಇಲ್ದೆ ಇದ್ದಾಗ ಬಸುರಿಯಾಗಿ ಮಗು ಹೆರೂದು ಪಾಪ ಅಲ್ವೇನೋ!’ – ಎನ್ನುತ್ತಿರುವಷ್ಟರಲ್ಲಿ ಅಪ್ಪಣ್ಣಯ್ಯ ಗಂಡುಗಲಿಯಾಗಿ ಒಳಗಿನಿಂದ ಎದ್ದು ಬಂದು, ‘ಲೇ, ನಿನ್ನ ಮೆಟ್ನಲ್ಲಿ ಹ್ವಡ್ದುಬಿಡ್ತೀನಿ ನೋಡು ಮುಂಡೆ. ನಿನ್ನ ಯೇಕ್ತಿ ಎಲ್ಲ ನಂಗೆ ಗೊತ್ತಿಲ್ಲ ಅಂತ ತಿಳ್ಕಂಡಿದೀ ಏನೇ?’ ಎಂದು ಕೇಳಿದ. ಜಬರಿಗೆ ಹೆದರಿ ತಂಗಮ್ಮ, ಸಾತು, ಇಬ್ಬರೂ ತಮ್ಮ ಮನೆಯ ಕಡೆಗೆ ಓಡಿದರು. ಗಂಗಮ್ಮ – ‘ಅಲ್ಲೇನು ನೋಡ್ತಿಯೊ? ಅವಳ ತಾಳಿ ಕಿತ್ಕಂಡು ಓಡ್ಸೋ ಈ ಊರು ಬಿಟ್ಟು. ನೀನು ಕಟ್ಟಿದ ಮನೆ ಅದು. ಬೆಂಕಿ ಹಾಕ್ಬಿಡೋ ಅದುಕ್ಕೆ’ ಎಂದಳು. +ಅಪ್ಪಣ್ಣಯ್ಯ ಅವರನ್ನು ಓಡಿಸಿಕೊಂಡು ಹೋದ. ಮನೆಯ ಬಾಗಿಲನ್ನು ಬಗ್ಗಿ ಒಳಗೆ ಹೋಗುವುದರಲ್ಲಿದ್ದ ಹೆಂಡತಿಯ ಕುತ್ತಿಗೆಗೆ ಅವನ ಕೈ ಹೋಯಿತು. ಹಿಂಭಾಗದಿಂದ ಸಿಕ್ಕಿದ ಕರೀಮಣಿ ಮಾಂಗಲ್ಯವನ್ನು ಹಿಡಿದು ಒಂದೇ ಏಟಿಗೆ ಜಗ್ಗಿ ಎಳೆದುದಕ್ಕೆ ನೂಲಿನ ಸೂತ್ರ ಕಿತ್ತುಹೋಗಿ ಕರಿಮಣಿಗಳು ನೆಲಕ್ಕೆ ಉದುರಿದುವು. ಮಾಂಗಲ್ಯ ಕೋವಿ ಗುಂಡುಗಳು ದಾರದಲ್ಲಿ ಸಿಕ್ಕಿ ಉಳಿದುವು. ಕುತ್ತಿಗೆಯ ಬಲಪಾರ್ಶ್ವ ಕೊರೆದು ರಕ್ತ ಬರುವಂತಾದ ಸಾತು, ‘ಅಯ್ಯಯ್ಯಮ್ಮಾ’ ಎಂದು ಅರಚಿಕೊಳ್ಳುತ್ತಾ ಕೆಳಗೆ ಬಿದ್ದಳು. ಅಪ್ಪಣ್ಣಯ್ಯ ಒಳಗೆ ನುಗ್ಗಿದ. ಅಡಿಗೆಮನೆಯ ಒಲೆ ಉರಿಯುತ್ತಿತ್ತು. ಒಂದು ಕುರುಂಬಾಳೆಯ ಬೆನ್ನುಸಿಪ್ಪೆಯನ್ನು ಎತ್ತಿ ಸೋಗೆಯ ಮೇಲ್ಛಾವಣಿಗೆ ತಗುಲಿಸಿದ. ಸೋಗೆ ಹೊತ್ತಿಕೊಂಡಿತು. ಹೊಗೆ ಕವರಿಕೊಂಡು ಮೇಲ್ಭಾಗದಲ್ಲಿ ಉರಿ ಕಾಣಿಸಿತು. ಅಷ್ಟರಲ್ಲಿ ಈ ಹೊಯ್ಲಾಟವನ್ನು ಕೇಳಿ ಬೀದಿಗೆ ಬಂದಿದ್ದ ಜನಗಳು ಹತ್ತಿರ ಸೇರಿದರು. +‘ನಮ್ಮನೆ ಸಾಮಾನೆಲ್ಲ ಸುಟ್ಹೋಗುತ್ತೆ ಎಳ್ಕಳ್ರಪ್ಪಾ’ – ಎಂದು ತಂಗಮ್ಮ ಅರಚಿಕೊಂಡಳು. ಒಳಗೆ ನುಗ್ಗಿದ ಜನಗಳು ಕೈಗೆ ಸಿಕ್ಕಿದ ಪಾತ್ರೆ ಪರಟಿ, ಬಟ್ಟೆ, ಮರ, ಕುಕ್ಕೆ, ಮಣೆ, ಬೀಸುವ ಕಲ್ಲು ಮೊದಲಾಗಿ ಬೇಗ ಬೇಗ ಹೊತ್ತುತಂದು ದೂರ ಹಾಕಿದರು. ಸೋಗೆಯ ಮನೆಗೆ ಹೊತ್ತಿದ ಬೆಂಕಿಯನ್ನು ನೀರು ಹುಯ್ದು ಆರಿಸಲು ಸಾಧ್ಯವೂ ಇರಲಿಲ್ಲ. ಹತ್ತಿರದಲ್ಲಿ ನೀರೂ ಇರಲಿಲ್ಲ. ಒಂದೂವರೆ ವರ್ಷದ ಹಿಂದೆ ಅಪ್ಪಣ್ಣಯ್ಯನೇ ಗುದ್ದಲಿ ಹಿಡಿದು ಕಟ್ಟಿದ ಮನೆ ಅರ್ಧ ಗಂಟೆಯಲ್ಲಿ ಉರಿದು ಬೂದಿಯಾಗಿ, ಬಿದ್ದುಹೋಯಿತು. ನಾಲ್ಕು ಸುತ್ತಲೂ ಇದ್ದ ಗೋಡೆಗಳು ಮತ್ತು ಎರಡು ಕಲ್ಲುಕಂಬಗಳು ಮಾತ್ರ ಉರಿಗೆ ಸಿಕ್ಕಿ ಕಪ್ಪು ಬಣ್ಣಕ್ಕೆ ತಿರುಗಿ ನಿಂತಿದ್ದುವು. +‘ನೋಡ್ದೆ ಏನೇ ಮುಂಡೆ ಏನ್ ಮಾಡ್ದೆ ನಾನು?’ – ಎಂದು ಅಪ್ಪಣ್ಣಯ್ಯ ಹುಲಿಯಂತೆ ಕೇಳಿದ. +‘ನಿನ್ನ ಕೈ ಸೇದಿಹೋಗ’ – ತಂಗಮ್ಮ ಹೇಳುತ್ತಿದ್ದಳು. ಎಚ್ಚತ್ತು ದೂರ ನಿಂತಿದ್ದ ಸಾತು – ‘ಅಮ್ಮಾ ನನ್ನಾಣೆ, ನೀನು ಒಂದೂ ಮಾತಾಡಬ್ಯಾಡ’ ಎಂದಳು. +ಕೈಲಿದ್ದ ತಾಳಿಯನ್ನು ಎತ್ತಿ ಹಿಡಿದು, ‘ಆ ಮುಂಡೆ ತಾಳಿ ಕಿತ್ಕಂಡಿದೀನಿ. ಇನ್ನು ಅವ್ಳು ಹೆಂಡ್ತಿಯಲ್ಲ ನಾನು ಗಂಡನಲ್ಲ, ಹಾದರಗಿತ್ತಿ ತಂದು’ ಎಂದು ಕೂಗುತ್ತಾ ಅಪ್ಪಣ್ಣಯ್ಯ ಊರಿನ ಬೀದಿ ಓಣಿಗಳಲ್ಲೆಲ್ಲ ಒಂದು ಸುತ್ತು ತಿರುಗಿದ. +ಮನೆಗೆ ಬೆಂಕಿ ಹೊತ್ತಿದಾಗ ನಂಜಮ್ಮನೂ ಓಡಿಬಂದಿದ್ದಳು. ಉಳಿದವರ ಜೊತೆ ಸೇರಿ ಒಳಗೆ ನುಗ್ಗಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಎಳೆದು ಹೊರಗೆ ತಂದು ಹಾಕಿದ್ದಳು. ಮುಂದೆ ಏನು ಮಾಡಬೇಕು, ಏನು ಹೇಳಬೇಕು, ಎಂಬುದು ಅವಳಿಗೂ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಅಪ್ಪಣ್ಣಯ್ಯನನ್ನು ಮಾತನಾಡಿಸುವುದು ವಿವೇಕವಲ್ಲವೆಂದು ಅವಳಿಗೂ ಗೊತ್ತು. ಇನ್ನು ಅತ್ತೆ ಗಂಗಮ್ಮನೊಡನೆ ಮಾತನಾಡುವುದು ದೂರವೇ ಉಳಿಯಿತು. +‘ನಾನೇನು ಮಾಡ್ಲಿ ನೀನೇ ಹೇಳು’ -ಅವಳು ಕೇಳಿದಳು. +‘ಸದ್ಯಕ್ಕೆ ಒಂದೆರಡು ದಿನ ನಿಮ್ಮನೇಲಿ ಇರ್ತೀವಿ. ಆಮೇಲೆ ಏನಾದ್ರೂ ಮಾಡ್ಬೌದು.’ +ಇಲ್ಲವೆನ್ನುವುದು ನಂಜಮ್ಮನಿಗೆ ಸಾಧ್ಯವಾಗದ ಮಾತು. ‘ಈ ಸಾಮಾನು ನಮ್ಮನೆಗೆ ತಂದು ಹಾಕ್ರಪ್ಪ’ ಎಂದು, ಇನ್ನೂ ಅಲ್ಲಿದ್ದ ಕೆಲವು ಗಂಡಸರಿಗೆ ಹೇಳಿದಳು. ಅವರ ಜೊತೆಗೆ ಅವಳೂ ಕೈ ಸೇರಿಸಿದಳು. ಎಲ್ಲವನ್ನೂ ತಂದು ಅವಳ ಮನೆಯ ಒಂದು ಮೂಲೆಯಲ್ಲಿ ಗುಡ್ಡೆಹಾಕಿಯಾಯಿತು. ನಂಜಮ್ಮ ಅಡಿಗೆಮನೆ ಹೊಕ್ಕಳು. ಅವರು ರಾಗಿಹಿಟ್ಟು ತಿನ್ನುವವರಲ್ಲ. ಹಬ್ಬ ಹುಣ್ಣಿಮೆಗೆ ಇರಲಿ ಎಂದು ಇಟ್ಟಿದ್ದ ಅಕ್ಕಿಯನ್ನು ಹೊರಕ್ಕೆ ತೆಗೆದು ನೆನೆಸಿದಳು. ಮನೆಯಲ್ಲಿ ತೊಗರಿಬೇಳೆ ಇರಲಿಲ್ಲ. ಪಾರ್ವತಿಯನ್ನು ಕಳಿಸಿ ನಾಲ್ಕು ಆಣೆ ಕೊಟ್ಟು ಒಂದು ಸೇರು ತರಿಸಿದಳು. +ಇವರೆಲ್ಲ ಮತ್ತೆ ಹಿರಿಸೊಸೆಯ ಮನೆಗೆ ಹೋದುದರಿಂದ ಗಂಗಮ್ಮನಿಗೆ ಕಸಿವಿಸಿಯಾಯಿತು. ‘ಅವಳು ತಂತ್ರಗಾರ ಮುಂಡೆ. ಮತ್ತೆ ಏನಾರ ಮಾಡಿ ನನ್ನ ಕಂದನ್ನ ಬಲೆಗೆ ಕೆಡವುಸ್ತಾಳೆ.’ -ಎಂದು ಅವಳ ಬುದ್ಧಿ ಯೋಚಿಸಿತು. ತಕ್ಷಣ ಅಣ್ಣಾಜೋಯಿಸನ ಮನೆಗೆ ಹೋಗಿ; ಜೋಯಿಸರೇ, ಕೇಳೀದಿರಾ ಸಮಾಚಾರಾನಾ?’ +‘ಏನ್, ಗೊತ್ತಿಲ್ವಲ್ಲಾ?’ ಗಂಗಮ್ಮನ ಬಾಯಿಯಿಂದಲೇ ಎಲ್ಲವನ್ನೂ ಚಿತ್ರವತ್ತಾಗಿ ಕೇಳುವ ಆಸೆಯಿಂದ ಜೋಯಿಸ ಎಂದ. +ಮಗನು ಹೆಂಡತಿಯ ತಾಳಿ ಕಿತ್ತುಕೊಂಡ ಪ್ರತಾಪವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ ಗಂಗಮ್ಮ ಕೇಳಿದಳು; ‘ತಾಳಿ ಕೀಳುಸ್ಕಂಡೋಳ್ನ ಅವ್ಳು ಮನೆಗೆ ಸೇರಿಸ್ಕಂಡಿದಾಳಲ್ಲಾ, ನ್ಯಾಯಕ್ಕೆ ಕೂರ್‍ಸಿ ಅವ್ಳಿಗೆ ದಂಡ ಹಾಕುಸ್ ಬ್ಯಾಡವೇ ನೀವೇ ಹೇಳಿ.’ +ಧರ್ಮಶಾಸ್ತ್ರದ ಒಂದು ಹೊಸ ಪಾಯಿಂಟನ್ನು ಜೋಯಿಸರಿಗೆ ಹೇಳಿಕೊಟ್ಟಂತೆ ಆಯಿತು. ನಂಜಮ್ಮನನ್ನು ಪಂಚಾಯ್ತಿಗೆ ಕೂರಿಸಿ ಇಪ್ಪತ್ತೈದು ರೂಪಾಯಿಯಾದರೂ ತಪ್ಪು ದಂಡ ಹಾಕಬೇಕೆಂದು ಅವರ ಮನಸ್ಸು ಯೋಚಿಸಿತು. ಆದರೆ ಪೋಟಿಕೆಯಲ್ಲಿ ಪಾಲು ಕೊಡಬೇಕೆಂಬ ಪಂಚಾಯ್ತಿಯಲ್ಲಿ ಅವಳು ಎಲ್ಲರನ್ನೂ ಮುಖಕ್ಕೆ ಹೊಡೆದಹಾಗೆ ಅಂದದ್ದು, ಮರು ದಿನ ಶೇಕ್ದಾರರು ಮಂಗಳಾರತಿ ಮಾಡಿದ್ದು ನೆನಪಾಗಿ ಒಂದು ನಿಮಿಷ ಹಿಂಜರಿದರು. ಆಗ ಅಪಮಾನವಾಗಿತ್ತು; ಈಗ ಅದರ ಮುಯ್ಯಿ ತೀರಿಸಿಕೊಳ್ಳಬೇಕೆಂಬ ಧೈರ್ಯತಂದುಕೊಂಡು ತೀರ್ಮಾನಿಸಿದರು. ಅಲ್ಲಿಯೇ ಕೂತಿರುವಂತೆ ಗಂಗಮ್ಮನಿಗೆ ಹೇಳಿ, ತಮ್ಮ ಚಿಕ್ಕಪ್ಪ ಅಯ್ಯಾಶಾಸ್ರಿಗಳ ಮನೆಗೆ ಹೋದರು. ಇಂಥ ಒಳ್ಳೆಯ ಸಂದರ್ಭದಲ್ಲಿ ಮುದುಕ ಶಾಸ್ರಿಗಳದು ಸುಮ್ಮನಿರುವ ಜೀವವಲ್ಲ. ಇದು ಬ್ರಾಹ್ಮಣಿಕೆಗೆ ಸೇರಿದ ಪ್ರಶ್ನೆ. ಬ್ರಾಹ್ಮಣ ಧರ್ಮ ಉಳಿಯಬೇಕೋ ಸಾಯಬೇಕೋ? +ಈ ಇಬ್ಬರು ಧರ್ಮಪಾಲಕರು ಊರಿನ ಇತರ ನಾಲ್ಕು ಜನ ಬ್ರಾಹ್ಮಣರನ್ನು ಹೊರಡಿಸಿಕೊಂಡು ನಂಜಮ್ಮನ ಮನೆಗೆ ಬಂದರು. ಜೊತೆಯಲ್ಲಿ ಗಂಗಮ್ಮ, ಅಪ್ಪಣ್ಣಯ್ಯ. ಇವರೆಲ್ಲ ನ್ಯಾಯ ಮಾಡುವುದಕ್ಕೆ ಬಂದಿದ್ದಾರೆಂಬುದು ನಂಜಮ್ಮನಿಗೆ ತಕ್ಷಣ ತಿಳಿಯಲಿಲ್ಲ. ಅಣ್ಣಾಜೊಯಿಸರೇ ಮಾತು ತೆಗೆದು ಹೇಳಿದರು; ‘ಮಾಂಗಲ್ಯ ಹೋದ ಹೆಂಗಸು ವಿಧವೆಗೆ ಸಮಾನ. ಅಂಥೋಳ ಮುಖದರ್ಶನ ಸಹ ಮಾಡ್ಬಾರ್‍ದು. ಅಂಥೋಳುನ್ನ ಮನೆಗೆ ಸೇರಿಸಿ ನೀವು ತಪ್ಪು ಮಾಡಿದೀರಿ. ಪ್ರಾಯಶ್ಚಿತ್ತವಾಗಬೇಕು. ತಪ್ಪುದಂಡ ಕೊಡಬೇಕು.’ +ಚನ್ನಿಗರಾಯರು ಈ ಮಾತನ್ನು ಕೇಳಿ ಹೆದರಿದರು. ‘ನಂಗೇನೂ ಗೊತ್ತಿಲ್ಲ ಕಣ್ರೀ. ಇವಳೇ ಅವ್ರುನ್ನೆಲ್ಲ ಕರ್ಕಂಡ್ ಬಂದ್ಲು. ನಾನು ಬೇಕಾದ್ರೆ ಈಗ್ಲೂ ಕತ್ ಹಿಡ್ದು ಆಚಿಗ್ ನೂಕ್‌ಬಿಡ್ತೀನಿ.’ +‘ಹಾಗಾದ್ರೆ ಸರಿ. ಆದರೆ ಈಗ ಸೇರಿಸಿರೋದಕ್ಕೆ ಮೊದಲು ದಂಡಾನಂತು ಕೊಡಬೇಕು.’ +‘ಎಷ್ಟು ಕೊಡಬೇಕು?’ +‘ಎಷ್ಟು ಚಿಕ್ಕಪ್ಪ?’ -ಅಣ್ಣಾಜೋಯಿಸರು ಕೇಳಿದುದಕ್ಕೆ ಅಯ್ಯಾಶಾಸ್ತ್ರಿಗಳು, ಪಾಪ ಅವ್ರೂ ಬಡವ್ರು. ಇಪ್ಪತ್ತೈದಾದರೆ ಸಾಕು. ಎಂದರು. +‘ಅಷ್ಟೋಂದು ದುಡ್ಡು ಎಲ್ಲಿಂದ ತರಾಣ್ರೀ ನಾವು? ಒಂದಿಷ್ಟು ಕಮ್ಮಿ ಮಾಡಿ ಶಾಸ್ತ್ರಿಗಳೇ.’ +‘ದುಡ್ಡೇನು ನಮ್ಮಪ್ಪನ ಮನೆಗೆ ಬರುತ್ತೆ ಅಂತ ತಿಳ್ಕಂಡೆಯಾ ಚಿನ್ನಯ್ಯಾ? ಶೃಂಗೇರಿ ಮಠಕ್ಕೆ ಸೇರೂ ಹಣ.’ +ಇನ್ನು ಮಾತನಾಡುವಂತೆಯೇ ಇಲ್ಲ. ಚೆನ್ನಿಗರಾಯರು ಹೆಂಡತಿಯ ಕಡೆಗೆ ತಿರುಗಿ -‘ನಿಂಗ್ಯಾಕೆ ಮುಂಡೆ ಯಜಮಾನಿಕೆ? ಈ ಅನಿಷ್ಟದೋವುನ್ನ ಯಾಕೆ ಕರ್ಕಂಡ್ ಬಂದೆ? ಈಗ ಇವುನ್ನ ಕುತ್ತಿಗೆ ಹಿಡ್ದು ಅಟ್ತಿಯೋ ಇಲ್ವೋ?’ ಎಂದು ಗದರಿಸಿದರು. +ಅದುವರೆಗೂ ಅಡಿಗೆಮನೆಯ ಒಳಬಾಗಿಲಿನಲ್ಲಿ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ತಂಗಮ್ಮ ಹೊರಗೆ ಬಂದು ಕೇಳಿದಳು; ‘ಇಷ್ಟು ದಿನ ನಮಗೆ ಆಪ್ತರ ಹಾಗೆ ಇದ್ದೋರು, ಈಗ ಯಾಕೆ ಹೀಗ್ ಮಾಡ್ತೀರಾ ಜೋಯಿಸ್ರೇ? ನಾವೇನು ನಿಮ್ಗೆ ಮಾಡಿದ್ದು?’ +‘ನಿಮ್ಮುನ್ನ ಕಂಡ್ರೆ ನಮಗೇನೂ ಆಗದೇ ಇಲ್ಲ ಕಣ್ರಮ್ಮ. ಧರ್ಮಶಾಸ್ತ್ರ ಹಾಗಿದೆ. ಕಂಡೂ ಕಂಡೂ ನಾವು ಸುಮ್ನಿದ್ರೆ ಶೃಂಗೇರಿ ಮಠದೋರು ನಮ್ಮುನ್ನ ಸುಮ್ನೆ ಬಿಡ್ತಾರೆಯೇ?’ -ಅಣ್ಣಾಜೋಯಿಸರು ಹೇಳುತ್ತಿದ್ದರು. +ಇಲ್ಲಿಯ ತನಕ ಸುಮ್ಮನೆ ನಿಂತಿದ್ದ ನಂಜಮ್ಮ ಮಾತನಾಡಿದಳು; ‘ತಾಳಿ ಕಿತ್ಕಂಡೋರು ಅಪ್ಪಣ್ಣಯ್ಯ. ಹೆಂಡ್ತಿ ತಾಳಿ ಕಿತ್ಕಳೂ ಅಧಿಕಾರ ಶಾಸ್ತ್ರದಲ್ಲಿ ಅವರಿಗೆ ಇದೆಯೇ? ದಂಡ ಗಿಂಡ ಹಾಕ್ಬೇಕಾಗಿದ್ರೆ ಅವ್ರಿಗೆ ಹಾಕಿ. ಇನ್ನು ಮನೆ ಸುಟ್ಟುಹೋಗಿ ಹೆಂಗಸರು ಬೀದಿಪಾಲಾಗಿದ್ದಾಗ ಮನೆಗೆ ಸೇರುಸ್ದೇ ನಾವೇನು ಮಾಡಬೇಕಾಗಿತ್ತು? ಈ ಕಷ್ಟಕಾಲದಲ್ಲಿ ಒಪ್ಪತ್ತು ಸಹಾಯ ಮಾಡಕೂಡದು ಅಂತ ಬರೆದಿದೆಯೆ ನಿಮ್ಮ ಧರ್ಮಶಾಸ್ತ್ರದಲ್ಲಿ?’ +ಇಬ್ಬರು ಧರ್ಮಪಾಲಕರೂ ತಬ್ಬಿಬ್ಬಾದರು. ಈ ತಾಟಗಿತ್ತಿ ತಂತ್ರಗಾರ ಸೊಸೆ ತನ್ನ ಮಗನ ಮೇಲೆಯೇ ನ್ಯಾಯ ತಿರುಗಿಸಿದುದನ್ನು ನೋಡಿದ ಗಂಗಮ್ಮನಿಗೂ ಏಟು ಬಿದ್ದಂತೆ ಆಯಿತು. ‘ಅವ್ನು ಕಟ್ಟಿದ ತಾಳಿ, ಅವ್ನು….’ -ಎಂದು ಮುದುಕ ಅಯ್ಯಾಶಾಸ್ತ್ರಿಗಳು ಏನೋ ಹೇಳುತ್ತಿದ್ದರು. ಅಷ್ಟರಲ್ಲಿ ಅಣ್ಣಾಜೋಯಿಸರು -‘ಚಿಕ್ಕಪ್ಪ, ನೀವು ಸುಮ್ನಿರಿ. ನೀನು ಕಟ್ಟಿದ ತಾಳಿ ನಂಗೆ ಬ್ಯಾಡ ಅಂತ ಅವ್ಳೇ ಕಿತ್ತು ಕೊಟ್ಳಂತೆ. ಅಲ್ವೇನ್ ಗಂಗಮ್ಮ?’ ಎಂದರು. +‘ಹೂಂ, ಹೂಂ. ಆ ಮುಂಡೆಯೇ ನಂಗೆ ಈ ತಾಳಿ ಬ್ಯಾಡಿ ಅಂತ ಕಿತ್ತು ಎಸದ್ಲು.’ +‘ಅನ್ಯಾಯಕಾರ ಮಾತು ಯಾಕೆ ಆಡ್ತೀರಾ? ಹಾಗಂತ ಪ್ರಮಾಣ ಮಾಡ್ತೀರಾ ನೀವೆಲ್ಲಾ? -ಎಂದು ತಂಗಮ್ಮ ಕೇಳಿದುದಕ್ಕೆ ಗಂಗಮ್ಮ, ‘ಊರೆಲ್ಲ ಕಂಡಿರೂದಕ್ಕೆ ಪ್ರಮಾಣ ಯಾಕ್ ಮಾಡಬೇಕೇ ತಾಟಗಿತ್ತಿ?’ ಎಂದು ಉತ್ತರಕೊಟ್ಟಳು. +ಹೀಗೆ ನ್ಯಾಯ ಎಲ್ಲಿಂದೆಲ್ಲಿಗೋ ಹೋಯಿತು. ಇವರ ಪರವಾಗಿ ನಿಂತು ಜೋರಿನಿಂದ ಮಾತನಾಡುವ ಒಬ್ಬ ಗಂಡಸಿದ್ದರೆ ಬೇರೆಯ ರೀತಿಯಾಗುತ್ತಿತ್ತು. ಇದನ್ನು ಬಲ್ಲ ನಂಜಮ್ಮ ಎಂದಳು; ‘ಜೋಯಿಸರೇ, ನಡೆದ ವಿಷಯ ಏನು ಅಂತ ನೀವು ಕಣ್ಣಾರೆ ಕಂಡಿಲ್ಲ. ಸುಮ್ಸುಮ್ನೆ ಕಂಡೋರ ಮನೇಲಿ ಜಗಳ ಮಾಡ್ಸಿ ತಮಾಷೆ ಮಾಡ್ತೀರಾ ನೀವು. ಇದು ಮರ್ಯಾದಸ್ಥರು ಮಾಡೂ ಕೆಲಸವಲ್ಲ. ನಿಮ್ಮುನ್ನ ಯಾರೂ ಕರೆಸಿರಲಿಲ್ಲ. ಸುಮ್ನೆ ಎದ್ದು ಹೊರಟುಹೋಗಿ. ಇನ್ನು ಮ್ಯಾಲೆ ಹೇಳದೆ ಕೇಳದೆ ನಮ್ಮನಿಗೆ ಯಾರೂ ನ್ಯಾಯ ಪಾಯ ಅಂತ ಬರೂಕೂಡ್ದು.’ +‘ನೋಡಿದ್ರಾ ಜೋಯಿಸ್ರೇ ಈ ಮುಂಡೆ ಅಹಂಕಾರಾನಾ? -ಎಂದು ಗಂಗಮ್ಮ ಹೇಳುತ್ತಿದಂತೆಯೇ ಇದುವರೆಗೂ ಅಡಿಗೆಮನೆಯ ಒಳಬಾಗಿಲಿನಲ್ಲಿ ನಿಂತಿದ್ದ ಸಾತು, ಹತ್ತಿರದಲ್ಲೇ ಇದ್ದ ಹಂಚೀಕಡ್ಡಿ ಕಸಪೊರಕೆಯನ್ನು ಕೈಲಿ ಹಿಡಿದು ಹೊರಗೆ ಬಂದು, ಈ ಮನೆ ಹಾಳು ಮುಂಡೆಯಿಂದಲೇ ಇಷ್ಟೆಲ್ಲ ಆದದ್ದು’ ಎಂದು ಪೊರಕೆಯನ್ನು ಗಂಗಮ್ಮನ ಮುಖದ ಮೇಲೆ ಬೀಸಿದಳು. ಗಂಗಮ್ಮ ಒಂದು ನಿಮಿಷ ಅವಾಕ್ಕಾದಳು. ಅಪ್ಪಣ್ಣಯ್ಯ ಕಿಡಿಕಿಡಿಯಾಗಿ ಮೇಲೆ ಎದ್ದ. ಪರಿಸ್ಥಿತಿ ಇಷ್ಟಕ್ಕೆ ಹೋದುದನ್ನು ಕಂಡ ನಂಜಮ್ಮ ಗಾಬರಿಯಾಗಿ ಸಾತು ತಂಗಮ್ಮರನ್ನು ಅಡಿಗೆಮನೆಯ ಒಳಗೆ ಕೂಡಿ, ಬಾಗಿಲು ಎಳೆದುಕೊಂಡು ಅಡ್ಡವಾಗಿ ನಿಂತು ಹೇಳಿದಳು; ‘ಈಗ ನೀವೆಲ್ಲ ಎದ್ದು ನಮ್ಮನೆಯಿಂದ ಹೊರಗೆ ಹೋಗ್ತೀರೋ ಇಲ್ವೋ?’ +ಜೋಯಿಸರಿಬ್ಬರೂ ಜಾಗ ಬಿಟ್ಟರು. ಈ ಮಾತಿನಲ್ಲಿ ತಮ್ಮ ಜವಾಬ್ದಾರಿ ಇಲ್ಲವೆಂಬಂತೆ ಕುಳಿತಿದ್ದ ಇಬ್ಬರು ಬ್ರಾಹ್ಮಣರು ತಕ್ಷಣ ಮೇಲೆ ಎದ್ದರು. ಅಷ್ಟರಲ್ಲಿ ಗಂಗಮ್ಮನ ನಾಲಗೆಗೆ ಕಾವು ಬಂತು. ಮೂಲೆಯಲ್ಲಿದ್ದ ಒನಕೆಯನ್ನು ಕೈಲಿ ತೆಗೆದುಕೊಂಡು ಅವಳು ಅಡಿಗೆಮನೆಯ ಕಡೆಗೆ ನುಗ್ಗಿದಳು. ನಂಜಮ್ಮ ಬಾಗಿಲಿಗೆ ಅಡ್ಡ ನಿಂತು -‘ನಮ್ಮನೆ ಅಂದ್ರೆ ಶ್ಯಾನುಭೋಗಿಕೆ ಮನೆ. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ಶೇಕ್ದಾರ್ರಿಗೆ ಹೇಳಿ ಪೋಲೀಸ್ನೋರುನ್ನ ಕರುಸ್ತೀನಿ’ ಎಂದು ಜಬರಿದಳು. ಗಂಗಮ್ಮನಿಗೆ ಗಾಬರಿಯಾಯಿತು. ಅಪ್ಪಣ್ಣಯ್ಯನಂತೂ ಅರ್ಧ ಬೆವೆತುಬಿಟ್ಟ. ‘ಬಾರಮ್ಮ. ಈ ಮುಂಡೇರ ತಂಟೆ ಬ್ಯಾಡ’ -ಎಂದು ತಾಯಿಯ ಕೈಯ ಒನಕೆಯನ್ನು ಕಿತ್ತು ಇಟ್ಟು ಮನೆಯಿಂದ ಹೊರಗೆ ಹೋಗಿಬಿಟ್ಟ. ತಕ್ಷಣ ಹೊರಟರೆ ತನ್ನ ಗೌರವಕ್ಕೆ ಕಡಿಮೆ ಎಂಬ ಪ್ರಜ್ಞೆಯಿಂದ ಗಂಗಮ್ಮ ಮತ್ತೆ ಹತ್ತು ಮಾತು ಬೈದು, ನಂತರ ಮಗನನ್ನು ಅನುಸರಿಸಿದಳು. +ಅನ್ನ ಸಾರಿನ ಅಡಿಗೆಯಾಗಿದ್ದರೂ ಸಾತು, ತಂಗಮ್ಮ, ಊಟ ಮಾಡಲಿಲ್ಲ. ಆ ದಿನ ಮಧ್ಯಾಹ್ನದಿಂದ ನಡೆದುಹೋದ ಘಟನೆಗಳಿಂದ ಇಬ್ಬರೂ ಮೂಕರಾಗಿ ಹೋಗಿದ್ದರು. ಇನ್ನು ಮುಂದೆ ಜೀವನದ ಗತಿ ಏನು ಎಂಬ ಯೋಚನೆ ತಾಯಿ, ಮಗಳು, ಇಬ್ಬರನ್ನೂ ತಿನ್ನುತ್ತಿತ್ತು. +– ೫ – +ರಾತ್ರಿಯೆಲ್ಲ ತಾಯಿ ಮಗಳು ಮಾತನಾಡಿಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ತಂಗಮ್ಮ ನಂಜಮ್ಮನಿಗೆ ಹೇಳಿದಳು; ‘ಇನ್ನು ಈ ಊರಿನಲ್ಲಿದ್ದು ಏನು ಸುಖ? ಊರಿನಲ್ಲಿ ನಮ್ಮದು ಅಂತ ಒಂದು ಮನೆ ಇತ್ತು. ಇಲ್ಲಿಗೆ ಬರುವ ಆರು ತಿಂಗಳ ಮುಂಚೆ ಅದನ್ನೂ ಮಾರಿದ್ವು. ಈಗ ಪೌರೋಹಿತ್ಯದಲ್ಲಿ ಹಳ್ಳಿಗಳಿವೆ. ರಾಮಕೃಷ್ಣನಿಗೆ ಹ್ಯಾಗೂ ಎಂಟು ವರ್ಷವಾಗಿದೆ. ಅಲ್ಲೇ ಯಾರ ಕೈಲಾದ್ರೂ ಒಂದೆಳೆ ಜನಿವಾರ ಹಾಕಿಸಿ ಒಂದು ಪುಣ್ಯಾವರ್ತನೆ, ಒಂದು ನವಗ್ರಹ ದಾನ, ಇಷ್ಟಾದರೂ ಹೇಳಿಸಿದರೆ ಜೀವನವಾಗುತ್ತೆ. ಯಾರಾದರೂ ಪುಣ್ಯಾತ್ಮರ ಜಾಗದಲ್ಲಿ ಒಂದು ಗುಡಿಸಲು ಹಾಕ್ಕೊಂಡಿರ್ತೀವಿ.’ +ನಂಜಮ್ಮ ಅವರಿಗೆ ಮತ್ತೆ ಯಾವ ಸಲಹೆಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ. ಈ ತಾಯಿ, ಮಗಳು, ಇಬ್ಬರಿಗೂ ಕಷ್ಟದ ಕೆಲಸ ಮಾಡಿ, ಬಡತನದ ಹಿಟ್ಟು ರೊಟ್ಟಿ ತಿಂದು ಅಭ್ಯಾಸವಿರಲಿಲ್ಲ. ಅಭ್ಯಾಸ ಮಾಡಿಕೊಳ್ಳಬೇಕೆಂದು ಪ್ರಯತ್ನಿಸಿಯೂ ಇರಲಿಲ್ಲ. ಹಾಗೆ ಪ್ರಯತ್ನಿಸಿದ್ದರೆ ಅಪ್ಪಣ್ಣಯ್ಯ ಹೀಗೆ ಮಾಡುತ್ತಿರಲಿಲ್ಲವೇನೋ! ಇವರು ಮುಂದೆ ತಮ್ಮ ಊರಿಗೆ ಹೋದರೂ ಪರಿಪಾಟಲು ತಪ್ಪುವುದಿಲ್ಲ. ಆದರೆ ತಾನು ಏನೂ ಮಾಡುವಂತಿಲ್ಲ- ಎಂದು ಯೋಚಿಸಿದ ನಂಜಮ್ಮ, ಅವರ ಯೋಚನೆಗೆ ತನ್ನ ಸಮ್ಮತಿ ಕೊಟ್ಟಳು. ಈ ಊರನ್ನು ಯಾವ ನಿಮಿಷದಲ್ಲಿ ಬಿಟ್ಟೇವೆಯೋ ಎಂದು ಅವರ ಮನಸ್ಸು ತಪಗುಟ್ಟುತ್ತಿತ್ತು. ಸಾತು ತನ್ನ ಎರಡು ಓಲೆಗಳನ್ನೂ ತೆಗೆದು ಮಾರಲು ಹೊರಟಳು. ನಂಜಮ್ಮನ ಮನೆಯ ಕೇರಿಯ ಒಬ್ಬ ಹೆಂಗಸು ಇಪ್ಪತ್ತೈದು ರೂಪಾಯಿಗೆ ಕೊಂಡುಕೊಂಡಳು. ದಾರಿಯ ಖರ್ಚಿಗೆ ಆಯಿತು. ಅದೇ ದಿನ ನಂಜಮ್ಮ ಒಂದು ಪಾಯಸ ಮಾಡಿ ಬಡಿಸಿ ಸಾತು, ಜಯಲಕ್ಷ್ಮಿಯ ಹಣೆಗೆ ಕುಂಕುಮವಿಟ್ಟು ಮರುದಿನ ಗಾಡಿ ಹೊಡಿಸಿ ಇವರ ಸಾಮಾನೆಲ್ಲವನ್ನೂ ತುಂಬಿಸಿ ತಾನೂ ಜೊತೆಗೆ ಮೋಟಾರು ರಸ್ತೆಯ ಹತ್ತಿರಕ್ಕೆ ಹೋದಳು. ತಿಪಟೂರಿನ ಕಡೆಗೆ ಹೋಗುವ ಮೊದಲಿಯಾರ್ ಮೋಟಾರು ಬರುವುದಕ್ಕೆ ಸ್ವಲ್ಪ ಮುಂಚೆ ಸಾತು ಕಣ್ಣೀರು ಒರೆಸಿಕೊಳ್ಳುತ್ತಾ ಎಂದಳು; ‘ಅಕ್ಕಾ, ಈ ಮನೆಗೆ ಸ್ವಸೆಯರಾಗಿ ನಾವಿಬ್ಬರೂ ಬಂದೆವು. ನೀವು ಹ್ಯಾಗೂ ಹೆಣಗ್ತಾ ಇದೀರಾ. ನನ್ನ ಹಣೇಬರಹ ಹೀಗಾಯ್ತು.’ +ನಂಜಮ್ಮ ಅದಕ್ಕೆ ಏನೂ ಉತ್ತರ ಕೊಡಲಿಲ್ಲ. ಮದುವೆಯಾಗಿ ತಾನೂ ಈ ಊರಿಗೆ ಬಂದಾಗಿನಿಂದ ನಡೆದುದೆಲ್ಲವೂ ಅವಳ ಮನಸ್ಸಿನಲ್ಲಿ ಒಂದೊಂದಾಗಿ ಬರತೊಡಗಿತು. ನಾವು ಯಾಕೆ ಹುಟ್ಟಿದೆವೋ, ಇಂಥಾ ಮನೆಗೆ ಯಾಕೆ ಸೇರಿದೆವೋ- ಎಂಬ ಪ್ರಶ್ನೆಗಳು ಅವಳ ಮನಸ್ಸಿನಲ್ಲಿ ಹುಟ್ಟುತ್ತಿದ್ದವು. ಮೋಟಾರಿನ ಟಾಪಿನ ಮೇಲೆ ಸಾಮಾನುಗಳನ್ನೆಲ್ಲ ಹಾಕಿಸಿದಮೇಲೆ ಅವರು ಒಳಗೆ ಹತ್ತಿ ಕುಳಿತರು. ‘ನಮ್ಮೂರಿಗೆ ನೀವೊಂದು ಸಲ ಬರಬೇಕು’ -ಎಂದು ಹೇಳುವಾಗ, ಮುಂದೆ ತಾವು ಒಬ್ಬರನ್ನೊಬ್ಬರು ನೋಡುವ ಬಗೆಗೆ ಅವರಲ್ಲಿ ಯಾರಿಗೂ ನಂಬಿಕೆ ಇರಲಿಲ್ಲ. +ಖಾಲಿ ಗಾಡಿಯ ಮೇಲೆ ಕೂತು ನಂಜು ಮನೆಗೆ ಬಂದ ಸ್ವಲ್ಪ ಹೊತ್ತಿಗೆ ಸೂರಪ್ಪಮೇಷ್ಟರ ಹೆಂಡತಿ ರುಕ್ಕಮ್ಮ ಬಂದರು. ಆ ಮಾತು ಈ ಮಾತು ಆಡಿದ ಮೇಲೆ ಹೇಳಿದರು; ‘ನಿಮಗೆ ಬಹಿಷ್ಕಾರ ಹಾಕಿಸಬೇಕು ಅಂತ ಅಣ್ಣಾಜೋಯಿಸರು ಶೃಂಗೇರಿಗೆ ಕಾಗದ ಬರೆದಿದಾರಂತೆ. +‘ಬರ್‍ದು ಏನು ಮಾಡ್ತಾರಂತೆ?’ +‘ಅಯ್ಯೋ ನಿಮಗೆ ಗೊತ್ತಿಲ್ವೇನ್ರಿ? ಇವರ ಮನೆಗೆ ಯಾರೂ ಹೋಗಕೂಡದು, ಬರೂಕೂಡದು; ನೀರು ಬೆಂಕೀನೂ ಕೊಡೂಕೂಡ್ದು ಅಂತ ಮಠದಿಂದ ಅಪ್ಪಣೆಯಾಗುತ್ತೆ. ಜಾತಿಸ್ಥರು ದೂರ ಮಾಡಿದ್ರೆ ಜೀವನ ಮಾಡೋದು ಹ್ಯಾಗೆ?’ +ಈ ಮಾತಿನಿಂದ ನಂಜಮ್ಮನಿಗೆ ಗಾಬರಿ ಏನೋ ಆಯಿತು. ಆದರೆ ಜಾತಿಸ್ಥರಿಂದ ಅವಳಿಗೆ ಆಗಿರುವ ಆಗುತ್ತಿರುವ ಉಪಕಾರವಾದರೂ ಏನು? ಯಾರು ಮನೆಗೆ ಬರದಿದ್ದರೂ ಬ್ಯಾಡ-ಎಂದುಕೊಂಡು ಸುಮ್ಮನಾದಳು. +ಹದಿನೈದು ದಿನವಾದ ಮೇಲೆ ಒಂದು ದಿನ ಅಣ್ಣಾಜೋಯಿಸರು ಅಯ್ಯಾಶಾಸ್ತ್ರಿಗಳು ನಂಜಮ್ಮನ ಮನೆಗೆ ಬಂದು ಅವಳ ಕೈಗೆ ಒಂದು ಕಾಗದ ಕೊಟ್ಟರು. ಶೃಂಗೇರಿ ಸಂಸ್ಥಾನದ ಸರ್ವಾಧಿಕಾರಿಗಳ ರುಜುವಿನಿಂದ ಬಂದಿದ್ದ ಅದರಲ್ಲಿ, ‘ಗಂಡನೇ ಬೇಡವೆಂದು ಮಾಂಗಲ್ಯ ಹರಿದು ಎಸೆದು ಹೋದ ಆ ಹೆಂಗಸನ್ನು ಮನೆಗೆ ಸೇರಿಸಿಕೊಂಡ ಶ್ಯಾನುಭೋಗ ಚೆನ್ನಿಗರಾಯನ ಸಂಸಾರವನ್ನು ಬಹಿಷ್ಕರಿಸಲಾಗಿದೆ. ಶ್ರೀಮಠಕ್ಕೆ ಒಂದು ನೂರ ಒಂದು ರೂಪಾಯಿ ತಪ್ಪುದಂಡ ಕೊಟ್ಟು, ದರ್ಭೆಯಲ್ಲಿ ನಾಲಿಗೆ ಸುಡಿಸಿಕೊಂಡು ಸ್ಥಳಪುರೋಹಿತರಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವ ತನಕ ಆ ಸಂಸಾರದ ಜೊತೆಗೆ ಯಾರೂ ಬೆಂಕಿನೀರಿನ ಸಂಬಂಧ ಮಾಡಕೂಡದು. ಹಾಗೆ ಯಾರಾದರೂ ಮಾಡಿದ್ದೇ ಆದರೆ ಅವರನ್ನೂ ಬಹಿಷ್ಕರಿಸಿ ಶ್ರೀಮಠಕ್ಕೆ ನಿವೇದಿಸತಕ್ಕದ್ದು’ ಎಂದು ಬರೆದು ಮಠಮುದ್ರೆಯನ್ನೂ ಹಾಕಿತ್ತು. +ಅವಳು ಓದಿ ಮುಗಿಸಿದ ಮೇಲೆ ಅಯ್ಯಾಶಾಸ್ತ್ರಿಗಳು-‘ಏನು ಮಾಡ್ತಿಯಾ?’ ಎಂದರು. +‘ಇಷ್ಟು ವರ್ಷ ರಾಮನವಮಿ ದಿನ ಹ್ಯಾಗೋ ಪಾನಕ ಕೋಸಂಬರಿ ಮಾಡಿ ನಿಮಗೆಲ್ಲ ಕೊಡ್ತಿದ್ದೆ. ಇನ್ನು ಮಾಡೂ ಹಾಗಿಲ್ಲ’ ನಂಜಮ್ಮ ಎಂದಳು. +‘ಮಾಡಿದ್ರೆ ನಾವು ಬರುಲ್ಲ.’ +‘ನಿಮ್ಮ ಸಂತೋಷ.’ +‘ಅರಮನೆ ಎದುರಿಸಿ ಬದುಕಬಹುದು. ಗುರುಮನೆ ಬಹಿಷ್ಕಾರ ಹಾಕಿದ್ರೆ ಬದುಕೂಹಾಗಿಲ್ಲ ತಿಳ್ಕೋ’-ಎಂದು ಹೇಳಿ, ಇಬ್ಬರೂ ಹೊರಟು ಹೋದರು. ನಂಜಮ್ಮನಿಗೆ ಇದರಿಂದ ಅಪಮಾನವೆನಿಸಿತು; ಆದರೆ ಭಯವಾಗಿರಲಿಲ್ಲ. ಮರುದಿನ ಕೂತು ಇಲ್ಲಿ ನಡೆದ ವಿದ್ಯಮಾನವನ್ನೆಲ್ಲ ತಾನೇ ವಿವರಿಸಿ, ತಾಯಿಯ ಮಾತು ಕೇಳಿ ಗಂಡನೇ ಹೆಂಡತಿಯ ತಾಳಿ ಹರಿದುಕೊಂಡನೆಂದೂ ಅವಳ ತಪ್ಪೇನೂ ಇಲ್ಲವೆಂದೂ, ದಿಕ್ಕಿಲ್ಲದ ಹೆಂಗಸರನ್ನು ತಾವು ಒಂದು ದಿನ ಮನೆಯಲ್ಲಿ ಇಟ್ಟುಕೊಂಡಿದ್ದು ಊರಿಗೆ ಕಳಿಸಿಕೊಟ್ಟಿದ್ದು ನಿಜವೆಂದೂ, ಇದರಲ್ಲಿ ತಮ್ಮದೇನೂ ತಪ್ಪಿಲ್ಲವೆಂದೂ ಬರೆದು ಅದಕ್ಕೆ ಗಂಡನ ರುಜು ಹಾಕಿಸಿ, ಸೋಮವಾರದ ದಿನ ಪೋಸ್ಟ್‌ಮ್ಯಾನ್ ಬಂದಾಗ ಲಕೋಟೆ ತೆಗೆದು ಅವನಿಂದಲೇ ವಿಳಾಸ ಬರೆಸಿ ಕಳಿಸಿದಳು. ಆದರೆ ಎಷ್ಟು ದಿನವಾದರೂ ಅದಕ್ಕೆ ಮಠದಿಂದ ಉತ್ತರ ಬರಲಿಲ್ಲ. +ಪುಷ್ಯಮಾಸದಲ್ಲಿ ಅವಳ ಮಾವನವರ ಶ್ರಾದ್ಧ. ಇದುವರೆಗೂ ಅದು ಹಿರಿಯ ಮಗನಾದ ಚೆನ್ನಿಗರಾಯರ ಮನೆಯಲ್ಲಿಯೇ ನಡೆಯುತ್ತಿತ್ತು. ಯಾವ ಖರ್ಚನ್ನೂ ಕೊಡದೆ ಅಪ್ಪಣ್ಣಯ್ಯ ಇಲ್ಲಿಗೇ ಬಂದು ಕರ್ಮ ಮುಗಿಸಿಕೊಂಡು ಹೋಗುತ್ತಿದ್ದ. ಎಡಬಲಕ್ಕೆ ಹಾಕಿಕೊಳ್ಳುವುದು ಹಿರಿಯ ಮಗ ಚೆನ್ನಿಗರಾಯರ ಕೆಲಸ. ಪವಿತ್ರ ಇಟ್ಟುಕೊಂಡು ಸುಮ್ಮನೆ ಕೂತಿದ್ದು, ಜೋಯಿಸರು ಹೇಳಿದಾಗ ನಮಸ್ಕಾರ ಮಾಡುವುದಷ್ಟೇ ಕಿರಿಯನ ಕರ್ತವ್ಯವಾಗಿತ್ತು. ಇವರು ಬೇರೆಯಾದ ಕೆಲವು ದಿನ ಗಂಗಮ್ಮ ಗಂಡನ ಪ್ರಸಾದಕ್ಕೂ ಈ ಮನೆಗೆ ಬಂದಿರಲಿಲ್ಲ. ಆಮೇಲೆ, ಆ ಒಂದು ದಿನ ಬಂದು ಹೋಗುತ್ತಿದ್ದಳು. ಈ ವರ್ಷ ಇವರನ್ನು ಬಹಿಷ್ಕರಿಸಿರುವುದರಿಂದ ಶ್ರಾದ್ಧ ಮಾಡಿಸುವುದಕ್ಕಾಗಲಿ ಪೂರ್ವಪಂಕ್ತಿ ಭೋಜನಕ್ಕಾಗಲೀ ತಾವು ಬರುವುದಿಲ್ಲವೆಂದು ಜೋಯಿಸರಿಬ್ಬರೂ ಮೊದಲೇ ಹೇಳಿಬಿಟ್ಟರು. ಚೆನ್ನಿಗರಾಯರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಇದಕ್ಕೆಲ್ಲ ಯಾರು ಕಾರಣ? ಹೆಂಡತಿ ತಾನೆ? ‘ಅವ್ರುನ್ಯಾಕೆ ಮನೆಗೆ ಸೇರುಸ್ದೆಯೇ ಕತ್ತೆಮುಂಡೆ?’ – ಎಂದು ಹೆಂಡತಿಯನ್ನು ಬೈದುದರಿಂದ ಸಮಸ್ಯೆ ಬಗೆಹರಿಯಲಿಲ್ಲ. +ಈ ಬಾರಿ ಶ್ರಾದ್ಧವನ್ನು ಗಂಗಮ್ಮನ ದೇವಸ್ಥಾನದಲ್ಲಿಯೇ ಮಾಡಿಸುವುದು, ಅಪ್ಪಣ್ಣಯ್ಯ ಎಡಬಲಕ್ಕೆ ಹಾಕಿಕೊಳ್ಳುವುದು ಎಂದು ಪುರೋಹಿತರಿಬ್ಬರೂ ತೀರ್ಮಾನಿಸಿದರು. ಎಡಬಲಕ್ಕೆ ಹಾಕಿಕೊಳ್ಳುವುದೆಂದರೆ ಯಜಮಾನಿಕೆ ಬಂದಂತೆ. ತಾನೂ ಒಬ್ಬ ಮುಖ್ಯ ಮನುಷ್ಯನಾಗುತ್ತೇನೆ ಎಂಬ ಭಾವನೆಯಿಂದ ಅಪ್ಪಣ್ಣಯ್ಯನಿಗೆ ಒಂದು ತರದ ಹಿಗ್ಗೇ ಆಯಿತು. ಅಲ್ಲದೆ ತಿಥಿಯನ್ನು ತಮ್ಮ ಮನೆಯಲ್ಲೇ ಮಾಡಿದರೆ, ಉಳಿಯುವ ವಡೆ ಪೂರಿ ರವೆ ಉಂಡೆಗಳನ್ನು ಎಂಟು ದಿನವಾದರೂ ಇಟ್ಟುಕೊಂಡು ತಿನ್ನಬಹುದು. ಆದರೆ ಪೂರ್ತಿ ಖರ್ಚನ್ನು ತಾವೇ ಹಾಕಬೇಕೆಂಬ ಅಂಶ ಅವನ ಯೋಚನೆಗೆ ಬರಲಿಲ್ಲ. +ಗಂಗಮ್ಮನ ಯೋಚನೆ ಅದಲ್ಲ. ಹದಿನೈದು ಹದಿನಾರು ರೂಪಾಯಿಗಳನ್ನು ಅವಳು ಹೇಗಾದರೂ ಹೊಂದಿಸಿಯಾಳು. ಯಜಮಾನರ ತಿಥಿ ಎಂದು ತಾನು ತಿರುಗುವ ಹಳ್ಳಿಗಳಲ್ಲಿ ಕೇಳಿದರೆ ಪುಣ್ಯಾತ್ಮರು ನಾಲ್ಕಾಣೆ ಎರಡಾಣೆ, ಮೇಲೆ ಒಂದೊಂದು ತೆಂಗಿನಕಾಯಿ, ಬೆಳೆದವರು ಒಂದಿಷ್ಟು ಹುಚ್ಚೆಳ್ಳು, ಎಳ್ಳು, ಉದ್ದಿನಕಾಳು, ಅವರೇಕಾಳು ಕೊಟ್ಟರೆ ಮೂರು ತಿಥಿ ಮಾಡುವಷ್ಟು ಬಂದೀತು. ಆದರೆ ಹಿರಿಯ ಮಗ ಜೀವಂತ ಇದ್ದೂ ಪಿಂಡವು ಅವನ ಕೈಲಿ ಬೀಳದೆ ಕಿರಿಯವನು ಹಾಕಿದರೆ, ಅದನ್ನು ಸ್ವರ್ಗದಿಂದ ಕಾಗೆಯ ರೂಪದಲ್ಲಿ ಬರುವ ತನ್ನ ಗಂಡನು ಮುಟ್ಟುತ್ತಾರೆಯೋ ಇಲ್ಲವೋ! ಶ್ಯಾನುಭೋಗಿಕೆಯು ಹೇಗೆ ಹಿರಿಯ ಮಗನಿಗೆ ಸೇರಬೇಕೆಂದು ಸರ್ಕಾರೀ ಕಟ್ಲೆ ಇದೆಯೋ ಹಾಗೆಯೇ ಶ್ರಾದ್ಧಪಿಂಡವೂ ಹಿರಿಯನ ಕೈಯಿಂದಲೇ ಬೀಳಬೇಕಲ್ಲವೆ? ಅವಳು ಆಗಲೇ ಜೋಯಿಸರ ಹತ್ತಿರ ಹೋದಳು. ನೂರೊಂದು ರೂಪಾಯಿ ಕೊಡುವ ಶಕ್ತಿ ಯಾರಿಗೂ ಇಲ್ಲ. ಇವರು ಮಾಡಿರುವ ತಪ್ಪಿಗೆ ಸ್ವರ್ಗದಲ್ಲಿರುವ ಅವಳ ಗಂಡ ಫೌತಿ ರಾಮಣ್ಣನವರು ವರ್ಷಕ್ಕೊಂದು ದಿನದ ಅನ್ನವನ್ನೂ ಕಾಣದೆ ಉಪವಾಸವಿರಬೇಕೆ? ಅಲ್ಲದೆ ತಪ್ಪು ಮಾಡಿರುವವಳು ಸುಖನಾತಿ ಸೊಸೆಯೇ ಹೊರತು ತನ್ನ ಕಂದ ಚಿನ್ನಯ್ಯನಲ್ಲ. ಇದಕ್ಕೆ ಏನಾದರೂ ಮಾಡಲೇಬೇಕು. +ಅವಳ ವಾದವನ್ನು ಜೋಯಿಸರಿಬ್ಬರೂ ಒಪ್ಪಿಕೊಂಡರು. ಅಲ್ಪವೋ ಸ್ವಲ್ಪವೋ ತಪ್ಪುದಂಡ ತೆಗೆದುಕೊಂಡು ಚೆನ್ನಿಗರಾಯನನ್ನು ಜಾತಿಗೆ ಸೇರಿಸಿಕೊಳ್ಳುವುದು, ಅವನ ಹೆಂಡತಿಯನ್ನು ಮಾತ್ರ ಬಹಿಷ್ಕಾರದಲ್ಲಿಯೇ ಇಡುವುದೆಂದು ತೀರ್ಮಾನವಾಯಿತು. ದಂಡ ಕೊಡಲು ಚೆನ್ನಿಗರಾಯರ ಹತ್ತಿರ ಏನಾದರೂ ಇದ್ದರೆ ತಾನೆ! ಜೋಯಿಸರಿಬ್ಬರೂ ಸಮಾಲೋಚಿಸಿ ತೀರ್ಮಾನಿಸಿದರು: ಗ್ರಾಮದಲ್ಲಿ ಅಣ್ಣಾಜೋಯಿಸರದು ಒಟ್ಟು ಒಂಬತ್ತು ರೂಪಾಯಿ ಎಂಟಾಣೆ ರೆವಿನ್ಯೂ ಕಂದಾಯವಿದೆ. ಅಯ್ಯಾಶಾಸ್ತ್ರಿಗಳದ್ದು ಆರು ರೂಪಾಯಿ ಮೂರಾಣೆ ಐದು ಪೈ. ಚೆನ್ನಿಗರಾಯರು ಆ ವರ್ಷ ಇವರಿಬ್ಬರೂ ಸರ್ಕಾರಕ್ಕೆ ಕೊಡಬೇಕಾದ ಕಂದಾಯ ಸಂದಿದೆ ಎಂದು ಇಬ್ಬರಿಗೂ ಬೇರೆ ಬೇರೆಯಾಗಿ ರಶೀತಿ ಬರೆದು, ಪಟ್ಟೆಗೂ ನಮೂದಿಸಿ ಕೊಟ್ಟರು. ಹಣವನ್ನು ತಮ್ಮ ಪೋಟಿಗೆಯಲ್ಲಿ ಖಜಾನೆಯವರು ಕಠಾಯಿಸಿಕೊಳ್ಳುವ ವಿಧಾನ ಹೇಗೋ ಇದೆ. ಅಂತೂ ಶ್ಯಾನುಭೋಗ ಚೆನ್ನಿಗರಾಯರು ಅಪ್ಪನಿಗೆ ಶ್ರಾದ್ಧ ಮಾಡುವ ಧಾರ್ಮಿಕ ಅಧಿಕಾರವನ್ನು ಪುನಃ ಸಂಪಾದಿಸಿದರು. ಅವರೊಬ್ಬರೇ ತಾಯಿ ಮತ್ತು ತಮ್ಮನ ಮನೆಗೆ ಹೋಗಿ ಶ್ರಾದ್ಧ ಮಾಡುವುದು. ಆ ದಿನ ಅವರ ಹೆಂಡತಿಯಾಗಲಿ ಮಕ್ಕಳಾಗಲಿ ಆ ಕಡೆ ಬರಕೂಡದು ಎಂದು ನಿಶ್ಚಯವಾಯಿತು. +ಪೂರ್ವಪಂಕ್ತಿಗೆ ಕುಳಿತುಕೊಳ್ಳಬೇಕಾಗಿದ್ದ ಅಣ್ಣಾಜೋಯಿಸರು ಆ ದಿನ ಬೆಳಗಿನಿಂದ ಉಪವಾಸವಿರಬೇಕಾಗಿತ್ತು. ಇನ್ನು ಮಾಡಲು ಏನೂ ಕೆಲಸವಿರಲಿಲ್ಲ. ಹೆಂಡತಿ ವೆಂಕಟಲಕ್ಷ್ಮಿ ಅಡಿಗೆಮನೆಯಲ್ಲಿ ಸೊಪ್ಪು ಹೆಚ್ಚಿಸುತ್ತಿದ್ದಳು. ಉಪವಾಸವಿದ್ದುದರಿಂದಲೋ ಏನೋ, ಜೋಯಿಸರ ನೆನಪು ಅತ್ತೆಯ ಮನೆಯಲ್ಲಿ ಒಂದು ಸಲ ತುಪ್ಪದಲ್ಲಿ ಕರಿದ ಪೂರಿ ತಿಂದುದನ್ನು ಕುರಿತು ಸಾಗಿತ್ತು. ಅವರು ಹೆಂಡತಿಗೆ ಹೇಳಿದರು: ‘ನಿಮ್ಮಮ್ಮ ಒಂದ್ಸಲ, ತುಪ್ಪದಲ್ಲೇ ಕರಿದ ಪೂರಿ ಕೊಟ್ಟಿದ್ದರು. ಅದರ ರುಚಿಯೇ ರುಚಿ. ನೀನು ಹಾಗೆ ಒಂದೇ ಒಂದು ದಿನವೂ ನಂಗೆ ಮಾಡಿಕೊಟ್ಟಿಲ್ವಲ್ಲೇ?’ +‘ನೀವು ಅಷ್ಟೊಂದು ಬೆಣ್ಣೆ ತಂದುಕೊಡಿ. ನೀವು ಕೇಳಿ ಕೇಳಿದ್ದೆಲ್ಲ ತುಪ್ಪದಲ್ಲೇ ಕರಿದು ಕೊಡ್ತೀನಿ.’ +‘ಸೇರಿಗೆ ನಾಲ್ಕಾಣೆಯಾಗಿದೆ. ಎಲ್ಲಿಂದ ತರೂದು?’ +‘ಹಾಗಾದ್ರೆ ಯಾಕೆ ಬಯಸ್ತೀರಾ, ಸುಮ್ಮನಾದ್ರೂ ಇರೀ ಅಂದ್ರೆ.’ +ಜೋಯಿಸರಿಗೆ ಪೆಚ್ಚೆನಿಸಿತು. ಆದರೆ ತಕ್ಷಣ ಒಂದು ಉಪಾಯ ಹೊಳೆಯಿತು. ‘ಇವತ್ತು ಬೆಣ್ಣೆ ಕಾಯಿಸಿದ ತುಪ್ಪದಲ್ಲೇ ಕರಿದ ಭಕ್ಷ್ಯ ತಿಂತೀನಿ ನೋಡು ಬೇಕಾದರೆ’ – ಹೆಂಡತಿಗೆ ಸವಾಲು ಹಾಕಿದುದಕ್ಕೆ ಅವಳು, ‘ನಿಮಗೆ ಮಾಡಿ ಬಡಿಸದೆ ಕೆಟ್ಟಿದಾರೆ ಸುಮ್ನಿರಿ’ ಎಂದು ಅಣಕವಾಡಿದಳು. +‘ನೋಡ್ತಿರು ಬೇಕಾದ್ರೆ’ ಎಂದ ಜೋಯಿಸರು, ‘ಲೋ, ನರಸಿಂಹಾ, ಈಗಲೇ ಓಡಿಹೋಗಿ ಅಪ್ಪಣ್ಣಯ್ಯನ ಕರ್ಕಂಡ್ ಬಾ ಹೋಗು’ ಮಗನಿಗೆ ಆದೇಶವಿತ್ತರು. +ಮಡಿ ಉಟ್ಟು ಒದ್ದೆ ಚೌಕ ಕಟ್ಟಿಕೊಂಡು ಅಡಿಗೆಯಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದ ಅಪ್ಪಣ್ಣಯ್ಯ ಅರ್ಧ ಬರೀ ಮೈಯಲ್ಲಿ ಓಡಿಬಂದ. ‘ನೋಡು ಅಪ್ಪಣ್ಣಯ್ಯ, ನಂಗೆ ಹುಶಾರಿಲ್ಲ. ನೆಗಡಿ, ಜ್ವರ ಬಂದುಬಿಟ್ಟಿದೆ. ನಾನು ಬ್ರಾಹ್ಮಣಾರ್ಥ ಕೂತ್ಕಳ್ಳುಕ್ಕೆ ಆಗುಲ್ಲ.’ +‘ಈಗ ಹಾಗಂದ್ರೆ ಹ್ಯಾಗೆ ಜೋಯಿಸ್ರೇ, ಆಗಲೇ ಹೊತ್ತು ನಾಕಾಳುದ್ದ ಏರಿದೆ. ಇಷ್ಟು ಹೊತ್ನಲ್ಲಿ ಇನ್ಯಾರುನ್ನ ತರಾಣ?’ +‘ನಿಮ್ಮಮ್ಮುನ್ನ ಕರಿ ಹೇಳ್ತೀನಿ.’ +ಓಡಿಬಂದ ಗಂಗಮ್ಮ ವಿಷಯವನ್ನು ಕೇಳಿ, ‘ಜೋಯಿಸರೇ, ನನ್ನ ಗಂಡುನ್ನ ಉಪವಾಸ ಬೀಳುಸ್ಬ್ಯಾಡಿ’ – ಎಂದು ದೂರದಲ್ಲಿಯೇ ನೆಲ ಮುಟ್ಟಿ ಅಂಗಲಾಚಿದಳು. +‘ಆಯ್ತು, ನೀನು ಇಷ್ಟು ಹೇಳುವಾಗ ಇಲ್ಲ ಅನ್ನೂಕೆ ಆಗುಲ್ಲ. ಬ್ರಾಹ್ಮಣಾರ್ಥಕ್ಕೆ ಬಂದು ಭಕ್ಷ್ಯ ತಿನ್ನದೇ ಇದ್ರೆ ಶಾಸ್ತ್ರಸಮ್ಮತವಲ್ಲ. ಒಂದು ಕೆಲಸ ಮಾಡು. ಎಲ್ಲಾ ಭಕ್ಷ್ಯಾನೂ ತುಪ್ಪದಲ್ಲಿ ಕರಿದುಬಿಡು. ನಾನು ತಿಂತೀನಿ.’ +‘ಈಗ ಅಷ್ಟೊಂದು ತುಪ್ಪ ಎಲ್ಲಿ ಸಿಕ್ಕುತ್ತೆ ಜೋಯಿಸ್ರೆ?’ +‘ದುಡ್ಡು ತಗಂಡು ಬಾ. ಗೌಡಗಳ ಹಟ್ಟೀಲಿ ಬೇಕಾದ್ರೆ ನಾನು ಹೋಗಿ ಬೆಣ್ಣೆ ತಂದುಕೊಡ್ತೀನಿ. ನಂದು ಹ್ಯಾಗೂ ಸ್ನಾನವಾಗಿಲ್ಲ.’ +ಗಂಗಮ್ಮ ಮನೆಗೆ ಹೋದಳು. ಒಬ್ಬ ಬ್ರಾಹ್ಮಣರಿಗೆ ತುಪ್ಪದಲ್ಲಿ ಕರಿದುದನ್ನು ಬಡಿಸಿ ಇನ್ನೊಬ್ಬರಿಗೆ ಎಣ್ಣೆಯದನ್ನು ಬಡಿಸುವಂತಿಲ್ಲ. ತಮಗೇನೋ ಎಣ್ಣೆಯದೇ ಆಗುತ್ತೆ. ಇವರಿಬ್ಬರಿಗೆ ಆಗುವಷ್ಟು ಪೂರಿ, ವಡೆ, ಆಂಬೊಡೆ, ಚಿಕ್ಕಿನ ಉಂಡೆಗಳನ್ನು ಕರಿಯಬೇಕಾದರೆ ಅಳತೆ ಒಂದೂವರೆ ಸೇರು ತುಪ್ಪ ಬೇಕು. ಅಂದರೆ ಆರು ಏಳು ಸೇರು ಬೆಣ್ಣೆ. ಮನೆಯಲ್ಲಿ ಎರಡು ರೂಪಾಯಿ ಹೆಚ್ಚಾಗಿ ಇರಲಿಲ್ಲ. ಗಂಗಮ್ಮನ ಮದುವೆಯಲ್ಲಿ ಕೊಟ್ಟಿದ್ದ ಒಂದು ಬೆಳ್ಳಿಯ ಪಂಚಪಾತ್ರೆ ಇನ್ನೂ ಮನೆಯಲ್ಲಿತ್ತು. ಅಪ್ಪಣ್ಣಯ್ಯನನ್ನು ಅದರೊಡನೆ ಕಳಿಸಿದಾಗ ಕಾಶಿಂಬಡ್ದಿ ಸಾಹುಕಾರರು ತೂಕ ಮಾಡಿ ನೋಡಿ, ಹನ್ನೆರಡು ತೊಲದ ಬೆಳ್ಳಿಗೆ ಎರಡು ರೂಪಾಯಿ ಕೊಟ್ಟರು. ದಿನಕ್ಕೆ ಎರಡು ಕಾಸು ಬಡ್ಡಿ. +ಬೆಣ್ಣೆ ಕಾಯಿಸಿದ ತುಪ್ಪದ ಭಕ್ಷ್ಯವನ್ನುಂಡು, ತಮ್ಮ ಮನೆಯ ಮಕ್ಕಳಿಗೆ ಎಂದು ಹೇಳಿ, ಉಳಿದುದನ್ನು ಬಾಳೆ ಎಲೆಯಲ್ಲಿ ಕಟ್ಟಿಸಿಕೊಂಡು ಮನೆಗೆ ಬಂದ ಜೋಯಿಸರು ಹೆಂಡತಿಗೆ – ‘ನೀನೂ ತಿನ್ನೇ’ ಎಂದಾಗ ಆಕೆ, ‘ಇನ್ನೊಬ್ರ ಮನೆ ತಿಥಿ ಪ್ರಸಾದ ನಾವು ಹ್ಯಾಗೆ ತಿನ್ನೋದು ಅಂದ್ರೆ?’ ಎಂದಳು. +‘ಏನೂ ಹಿಡ್ಕಳುಲ್ಲ ತಿನ್ನೇ. ಹುಡುಗರಿಗೂ ಕೊಡು.’ +‘ನೋಡಿ, ನಾನು ಲೌಕಿಕರ ಮನೇಲಿ ಹುಟ್ಟಿದೋಳು. ಶಾಸ್ತ್ರ ಸಂಬಂಧ ಅಂದ್ರೆ ನಂಗೆ ತುಂಬ ಭಯ. ಜೋಯಿಸರಿಗೆ ಯಾವ ಭಯವೂ ಇಲ್ಲ ಅಲ್ವೆ?’ – ಎಂದು ಅವಳು ನಕ್ಕಾಗ ಜೋಯಿಸರಿಗೆ ತಮ್ಮ ಧೈರ್ಯಕ್ಕೆ ತಮಗೇ ಹೆಮ್ಮೆ ಎನಿಸಿತು. +– ೬ – +ಬ್ರಾಹ್ಮಣರ ಊಟವಾಗಿ ಶ್ರಾದ್ಧಕರ್ಮವೆಲ್ಲ ಮುಗಿದ ಮೇಲೆ ಚೆನ್ನಿಗರಾಯರು ದೇವರ ಎಲೆಯ ಮುಂದೆ ಕುಳಿತು ಪುಷ್ಕಳವಾಗಿ ಪ್ರಸಾದಭೋಜನ ಮಾಡಿದರು. ನಂತರ ಶರಟು ಹಾಕಿಕೊಂಡು ಕೆರೆಯ ಏರಿಯ ಕಡೆಗೆ ಹೋದರು. ಅಷ್ಟರಲ್ಲಿ ಮಧ್ಯಾಹ್ನಾನಂತರ ನಾಲ್ಕೂವರೆಯ ಸುಮಾರು. ಮಧ್ಯಾಹ್ನ ಸ್ನಾನ ಮಾಡಿದಾಗಿನಿಂದ ಅವರು ಹೊಗೆಸೊಪ್ಪು ಹಾಕಿಕೊಂಡಿರಲಿಲ್ಲ. ಹನುಮಂತರಾಯನ ಗುಡಿಯಲ್ಲಿ ಇದ್ದಿತಾದರೂ ಹತ್ತಿರ ಎಲೆ ಅಡಿಕೆಯೂ ಇರಲಿಲ್ಲ. ದುಡ್ದು ಕೊಟ್ಟು ಕೊಳ್ಳಲು ಜೇಬಿನಲ್ಲಿ ಬಿಡಿಗಾಸಿರಲಿಲ್ಲ. ಏರಿಯಿಂದ ಅಮ್ಮನ ತೋಪಿನ ಮೂಲಕ ಊರ ಕಡೆಗೆ ಬರುವಾಗ ನರಸಿಯ ಅಂಗಡಿ ಸಿಕ್ಕುತ್ತದೆ. ತಾನು ಕಟ್ಟಿಸಿಕೊಂಡಿರುವ ಮೂರು ಅಂಕಣದ ಹೆಂಚಿನ ಮನೆಯ ಮುಂಭಾಗದ ಅಂಕಣವೇ ಅವಳ ಅಂಗಡಿ. ಒಳಗಿನದು ಸಾಮಾನು ಇಟ್ಟುಕೊಳ್ಳುವ ಜಾಗ. ಹಿಂದಿನದರಲ್ಲಿ ಅವಳ ಅಡಿಗೆ ಸಾಮಾನು ಇಡುವ ಜಾಗದ ಅಟ್ಟದ ಮೇಲೂ ಅಂಗಡಿಯ ಸರಕು ತುಂಬಿಕೊಂಡಿರುತ್ತಾಳಂತೆ. +ಶ್ಯಾನುಭೋಗರು ಬರುತ್ತಿದ್ದಾಗ ಅವಳು ಅಂಗಡಿಯಲ್ಲಿ ಕೂತಿದ್ದಳು. ಅವಳ ಮುಂಭಾಗದಲ್ಲಿ ತೆರೆದ ವೀಳ್ಯದೆಲೆಯ ಪಿಂಡಿ ಇತ್ತು. ಬಾಯಿ ತಡೆಯದೆ ಇವರು ಬಾಗಿಲಿನ ಹತ್ತಿರ ಹೋಗಿ ಕೇಳಿದರು: ‘ನರಸಮ್ಮ, ಒಂದೆರಡು ಎಲೆ ಅಡಿಕೆ, ಒಂದು ಚೂರು ಹೊಗೆಸೊಪ್ಪು ಕೊಡ್ತಿಯಾ?’ +ನರಸಿಯೂ ಎಲೆ ಜಗಿಯುತ್ತಿದ್ದಳು. ಅಗಲವಾದ ಕಣ್ಣುಗಳ, ದೊಡ್ಡ ಮುಖದ ಅವಳ ಬಾಯಿ ಯಾವಾಗಲೂ ಎಲೆಯ ರಂಗಿನಿಂದ ತುಂಬಿ, ತಾಂಬೂಲದ ರಸವು ತುಟಿಗಳಿಂದ ಹರಿದು ಸುರಿಯುತ್ತದೆಂಬಷ್ಟು ಸಮೃದ್ಧವಾಗಿರುತ್ತಿತ್ತು. ಜೀವನದಲ್ಲಿ ಯಾವ ಕಷ್ಟವೂ ಇಲ್ಲವೆಂಬಂತಿದ್ದ ಅವಳು ನಕ್ಕರೆ, ಎದುರು ನಿಂತವರನ್ನು ತೂರಿ ಕೆಡಹುವಂತಹ ಹೊಳಪು ಕಣ್ಣಿನಲ್ಲಿ ಕುಣಿಯುತ್ತಿತ್ತು. ಅವಳು ಕೇಳಿದಳು: ‘ಇದೇನು ಶ್ಯಾನುಭೋಗ್ರೇ, ನನ್ನ ಎಲೆ ಕೇಳ್ತೀರಲ್ಲಾ, ನಿಮ್ಮ ಹೆಂಡ್ತಿ ಕೊಡಾಕುಲ್ಲ ಅಂದ್ರಾ?’ +‘ಮನ್ಲಿ ಎಲೆ ಇರ್ಲಿಲ್ಲ ಕಣಮ್ಮ. ನಮ್ಮಯ್ಯನ ವೈದಿಕ ಮಾಡಿಕೊಂಡು ಕೆರೆ ಕಡೆ ಹೋಗಿದ್ದೋನು ಹಾಗೇ ಬಂದೆ.’ +‘ಬಲ್ಲಿ ಬಲ್ಲಿ ಕೊಡ್ತೀನಿ. ಊರ ಶ್ಯಾನುಭಾಗ್ರು, ನಿಮ್ಗೆ ಇಲ್ಲ ಅಂದ್ರೆ ಆಯ್ತದಾ?’ – ಎಂದು ಅವಳು ಕಣ್ಣು ಹೊರಳಿಸಿ ನಕ್ಕಳು. ಗ್ರಾಮದ ತಮ್ಮ ಅಧಿಕಾರವನ್ನು ಇವಳಾದರೂ ಒಪ್ಪಿಕೊಂಡದ್ದಕ್ಕೆ ಸಂತೋಷಪಟ್ಟ ಅವರು ಅಂಗಡಿಯ ಒಳಗೆ ಹೋದರು. ‘ಒಳಗೇ ಬಲ್ಲಿ’ ಎಂದು ಮೇಲೆ ಎದ್ದು ಅವಳು ಇವರನ್ನು ಒಳಗಿನ ಅಂಕಣಕ್ಕೆ ಕರೆದೊಯ್ದಳು. ಒಳಗಿನ ಮಬ್ಬುಗತ್ತಲೆಯಲ್ಲಿ ಇವರಿಗೆ ಎಲ್ಲವೂ ಸರಿಯಾಗಿ ಕಾಣಲಿಲ್ಲ. ಅಂಗಡಿ ವ್ಯಾಪಾರದ ಹತ್ತಾರು ಮೂಟೆಗಳಿದ್ದುವು. ಗೋಡೆಯ ಮೂಲೆಗೆ ಹಾಕಿದ್ದ ಮಂಚದ ಮೇಲೆ ಹಾಸಿಗೆ ಹಾಕಿತ್ತು. ‘ಇಲ್ಲಿ ಕುಂತ್ಕಳಿ’ – ಅವಳೆಂದಳು. ‘ಕತ್ಲೆಯಲ್ಲಮ್ಮ’ – ಎಂದು ಅವರು ತಡಕಾಡಿದುದಕ್ಕೆ ‘ಕತ್ಲೆಯಾದ್ರೆ ಏನ್ ಮಾಡ್ತೈತೆ. ಕುಂತ್ಕ ಬಲ್ಲಿ’ – ಎಂದು ಹತ್ತಿರ ಬಂದು, ಅವರ ಎರಡೂ ತೋಳನ್ನೂ ಹಿಡಿದು ಎಳೆದು ಮಂಚದ ಮೇಲೆ ಕೂರಿಸಿ ತಾನೂ ಪಕ್ಕದಲ್ಲಿ ಕೂತಳು. ಹೊರಗಿನಿಂದ ಒಳಗೆ ಬಂದಿದ್ದ ಶ್ಯಾನುಭೋಗರ ಕಣ್ಣಿನ ಮಬ್ಬು ಈಗ ಸ್ವಲ್ಪ ಹರಿಯುತ್ತಿತ್ತು. ಆದರೆ ಅವರಿಗೇ ತಿಳಿಯದಂತೆ ಅವರ ಕೈ ಕಾಲು ಮೈಗಳೆಲ್ಲ ಮೂರರ ಚಳಿ ಬಂದಂತೆ ನಡುಗಲು ಮೊದಲಾಯಿತು. ಒಂದು ನಿಮಿಷದಲ್ಲಿ ನಡುಕವು ಮಿತಿ ಮೀರಿ ಎರಡೂ ದವಡೆಗಳೂ ಒಂದಕ್ಕೊಂದು ಕಟಕಟನೆ ಬಡಿದುಕೊಳ್ಳಲು ಶುರುವಾದುವು. +‘ಅದ್ಯಾಕಯ್ನೋರೇ ಹಿಂಗ್ ನಡುಕ್ತೀರಾ?’ +‘ನೀ ನೀ ನೀ ನೀನು ಹೀಗ್ ನನನ್ ಮುಟ್ಕಾ ಭೌ ಭೌದೇನಮ್ಮಾ?’ – ಉಸಿರನ್ನು ಸಂಪಾದಿಸಿಕೊಂಡು ಅವರು ಕೇಳಿದರು. +‘ನನ್ನ ತಾವುಕ್ ಬಂದು ಯಲೆ ಕೇಳಿದ್ರಲ್ರೀ?’ +ಅವಳ ಅರ್ಥ ಅವರಿಗೆ ಆಗಲೇ ಇಲ್ಲ: ‘ದು ದು ದುಡ್ಡಿರ್ಲಿಲ್ಲ, ಕೇಳ್ದೆ.’ +‘ನಾನೇನು ದುಡ್ಡು ಕೇಳ್ತಿಲ್ವಲ್ಲಾ?’ +‘ಮ ಮ ಮತ್ತೆ ನನನ್ ಯಾಕ್ ಮು ಮು ಮುಟ್ದೆ?’ +ಅವರ ತೋಳು ಹಿಡಿದು ಎಬ್ಬಿಸಿ ಹೊರಕ್ಕೆ ಕರೆತಂದು ಅವಳು ಹೇಳಿದಳು: ‘ಸುಮ್ಕೆ ಮನ್ಗೆ ನಡೀರಿ.’ +ಭಯದಿಂದ ನಡುಗುತ್ತಿದ್ದ ಅವರು ಬೇಗ ಬೇಗ ಹೆಜ್ಜೆಯಿಟ್ಟು ಹೊರಗೆ ನಡೆದರು. ‘ಒಂದು ಸಟಾಗ್ ನಿಂತ್ಕಳಿ’- ಎಂದು ಅವಳು ಕೂಗಿದುದಕ್ಕೆ ಅಷ್ಟೇ ಭಯದಿಂದ ನಿಂತುಕೊಂಡರು. +‘ವಸೀ ಇಲ್ಲಿ ಬಲ್ಲಿ, ನಾನೇನ್ ನಿಮ್ಮುನ್ನ ತಿಂದ್ಕಣಾಕಿಲ್ಲ.’ +ಅವರು ಮತ್ತೆ ಅಂಗಡಿಯ ಮುಂದೆ ನಿಂತರು. ಒಂದು ಕವಳಿಗೆ ಎಲೆ, ಒಂದು ಹಿಡಿ ಅಡಿಕೆ, ಎರಡು ದೊಡ್ಡ ಎಸಳು ಹೊಗೆಸೊಪ್ಪುಗಳನ್ನು ತೆಗೆದು ಅವರ ಕೈಗೆ ಹಾಕಿ ಹೇಳಿದಳು: ‘ಇದ ತಗಂಡ್ ಹ್ವಾಗಿ, ಮನ್ಲಿ ನಂಜವ್ವನ ಕುಟ್ಟಿ ಸುಣ್ಣಸವರಿಸ್ಕಂಡ್ ಹಾಕ್ಯಳಿ. ನೋಡಿ, ನಿಮ್ಮಂತೋರೆಲ್ಲ ಮನ್ಲಿ ಎಂಡ್ತಿ ಏಳ್ದಂಗೆ ಕೇಳ್ಕಂಡಿರ್ಬೇಕು. ಗೊತ್ತಾಯ್ತಾ?’ +ಶ್ಯಾನುಭೋಗರಿಗೆ ಸ್ವಲ್ಪ ಸಿಟ್ಟೇನೋ ಬಂತು. ಆದರೆ ಅವಳನ್ನು ಹೇಗೆ ಬಯ್ಯಬೇಕೆಂಬುದು ತಕ್ಷಣ ತಿಳಿಯಲಿಲ್ಲ. ಕೈಲಿದ್ದ ಎಲೆ ಅಡಿಕೆ ಹೊಗೆಸೊಪ್ಪನ್ನು ಹಿಡಿದುಕೊಂಡು ಊರೊಳಕ್ಕೆ ಹೊರಟರು. ನೇರವಾಗಿ ಮನೆಗೆ ಹೋದಾಗ, ಲೆಕ್ಕದ ಪುಸ್ತಕ ನೋಡುತ್ತಿದ್ದ ಹೆಂಡತಿ ಇವರನ್ನು ಮಾತನಾಡಿಸಲಿಲ್ಲ. ಇವರೂ ಏನೂ ಆಡಲಿಲ್ಲ. ಕಂಬದ ಹತ್ತಿರ ಹಾಸಿದ್ದ ಮಂದಲಿಗೆಯ ಮೇಲೆ ಉರುಟಿಕೊಂಡು ತಾಂಬೂಲ ಹೊಗೆಸೊಪ್ಪುಗಳನ್ನು ಜಗಿಯಲು ಪ್ರಾರಂಭಿಸಿದರು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್ +ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ […] +ತೃತೀಯಾಸ್ವಾಸಂ ನನಗೆ ಶಾಮ ಇಷ್ಟವಾಗಲಿಕ್ಕೆ ಕಾರಣ ಅವನು ಹೆಚ್ಚು ಗಲಿಬಿಲಿಗೊಳ್ಳುತ್ತಿದ್ದುದು. ಗಲಿಬಿಲಿಯ ಕಾರ್ಯ ಕಾರಣ ಹೆಚ್ಚು ಅಸ್ಪಷ್ಟವಾಗಿತ್ತು. ಲೇಕಖ ಸಹಜ ಸ್ವಭಾವದಿಂದ ಅವನ ಗೊಂದಲಪೂರ್‍ಣ ವ್ಯಕ್ತಿತ್ವದ ಮಹತ್ವದ ಅನ್ವೇಷಕನಾಗಿದ್ದೆ. ಸ್ತ್ರೀಲಿಂಗವಾಚಕ ನುಡಿದ ಕಡೆ ಪುಲ್ಲಿಂಗ […] +ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_239.txt b/Kannada Sahitya/article_239.txt new file mode 100644 index 0000000000000000000000000000000000000000..8080c84c4371a1e35846535cddaf575fe9360a19 --- /dev/null +++ b/Kannada Sahitya/article_239.txt @@ -0,0 +1,71 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?” +“ಐದಾಣೆಗೆ ಆಗೋದಾದರೆ ತರ್ತೆನೋಡೀ.” +“……” +“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ ಚೂಳೀನೂ ಇಲ್ಲ ಮಗುವೆ…ಒಂದಾಣೆಗೆ ಹಾಕು..ಒಂದಾಣೆಗೂ ಬೇಡಾ ಅದು, ಆದರೂ…” +“ಹೊದ್ರಾ ಅಮ್ಮಾ. ಅದಕ್ಕೇ ನಾ ಬರೋದೇ ಇಲ್ಲಾ ಇಲ್ಲಿ. ನೋಡ್ರಾ, ಅಡ್ಡಿ ನೋಡ್ರಾ, ಹುಲ್ಲಾದರೂ ನೋಡಿ ಮಾತಾಡಬೇಕರಾ. ಎಂಥಾ ಎಳೇ ಪಕಳೇ ಹುಲ್ಲು- ಆಣೆಗೆ ಯಾರಾದರೂ ಹಾಕೂರುರಾ?” +“……” +“ಓ ಸಣ್ತಂಗಿ ಮಗುವೆ, ಓ ಬೊಮ್ಮಿ…ಇಲ್ಲಿ ಬಾರೆ. ನಿಮ್ಮವ್ವಿ ಹೀಗಿರಲಿಲ್ಲಲ್ವೆ. ಹಾಗೇನು ಹರ್ಕೊಂಡು ಹೋಗ್ತೀಯೆ? ನಿಮ್ಮವ್ವಿ ಬಂದರೆ ಯಾವಾಗಲೂ ನಮ್ಮಲ್ಲೇ ಕೊಟ್ಟು ಹೋಗ್ತಿದ್ಲು..ಹೌದೇ, ನಿಮ್ಮವ್ವಿಗೆ ಹ್ಯಾಗೆ ಅದೆಯೆ ಈಗ?” +“ಹಾಗೇ ಅದೇರಾ…” +“ಮದ್ದು ಯಾರ್ದು ಮಾಡೀರಿ?” +“ಮದ್ದು ಏನ್ಮಾಡ್ತದ್ರಾ? ಸಾಯಲಿಕ್ಕೆ ಈ ಕುಂಟನ್ಮನೆ ಬೀರಾ ದೆವ್ವಾ ಮಾಡಿ ಹಾಕಿನ್ಕಂಡಾ. ನಿನ್ನೆ ಮುರ್ಕುಂಡಿ ದೇವ್ರ ಹೇಳ್ಕೆಯಾಯ್ತು.” +“ಹೊದೋ ನಿಮ್ಮವ್ವಿ ಗನಾ ಮನ್ಸ್ತಿ- ಯಾವಾಗ್ಲೂ ನಾವಂದ್ರೆ ಆಗಿತ್ತು. ಒಂದು ಹೇಳಿದ್ರೆ ಅಲ್ಲಾ ಅನ್ತಿದ್ದಿಲ್ಲ. ದೇವರು ಬಿಡಲಿಕ್ಕಿಲ್ಲವೇ ಆ ಬೀರನಿಗೆ.” +“ಅಮ್ಮಾ, ಹೋಗ್ತೇನ್ರಾ- ಹೊತ್ತು ಬಂತು.” +“ಅಮ್ಮಾ ತಡಿಯೇ- ಹಾಗೇನು ಮಾಡ್ತೀಯೆ? ಹೌದೆ, ನಿಮ್ಮಣ್ಣನಿಗೆ ಕಡೆಗೆ ಮದ್ವಿ ಆಯ್ತೆ?” +“ಇಲ್ಲರಾ-ಅವ್ವಿ ಒಬ್ಬಳಿಗೆ ಹಾಗೆ…” +“ನಿನಗಾದರೂ ಸರೀ ಮಾಡಿ ನೋಡ್ತ್ನಲ್ಲವೆ ಈಗ ನಿನ್ನ ಗಂಡ.” +‘…..” +“ನಾಚಿಕೊಳ್ತೀಯಲ್ಲವೆ, ಅಲ್ಲವೆ ಈ ದಿವಸ ನಿನ್ನಪ್ಪ ಬಂದಾಗ ಹೇಳ್ತಿದ್ದ: ಹುಡುಗ ಗುಣದಿಂದ ಬಹಳ ಚಲೋಂವ; ಕೇರಿಯ ಮೇಲಿನವರು ಚಾಡಿ ಹೇಳಿ ತಲೆ ಕೆಡ್ಸಿದ್ದರು; ಈಗ ಚಲೋ ಬುದ್ದಿ ಬಂದಿದೆ ಎಂದು. ನಂಗೆಲ್ಲಾ ಗೊತ್ತು ಮಗುವೆ- ನಮ್ಮ ನಿಮ್ಮ ಗುರುತು ಈಗಿನದಲ್ಲವೇ. ನಿಮ್ಮಜ್ಜಾ ಈ ಮನೆಯಲ್ಲೇ ಕೆಲಸಕ್ಕಿದ್ದ ನನ್ನ ತಂದಾಗ, ಉಂಬೋದು, ಮಲಗೋದು ಎಲ್ಲಾ ಇಲ್ಲೇ. ನಿನ್ನಪ್ಪ ಆ ಶಂಕರರಾಯ್ರ ಒಕ್ಕಲು. ಆದಂದಿನಿಂದ ನೀವೆಲ್ಲ ನಮಗೆ ದೂರಾದ್ರಿ. ನಿಮ್ಮಣ್ಣಾ ಚಲೋವ್ನೆ. ಆಗಲಿ, ಚಲೋ ರೊಕ್ಯಾ ಮಾಡೀನ್ಕಂಡಾ ಅಲ್ಲವೆ? ಆ ಶಂಕರರಾಯರು ನಿಮ್ಮಪ್ಪನ್ನ ಫಸಾಯಿಸಿದರೂ ದೇವರು ನಿಮ್ಮ ಕೈ ಬಿಡಲಿಲ್ಲ. ಈಗ ಎಲ್ಲಾ ಸುಳ್ಳಾದರೂ ಅವನೊಬ್ಬ ಇದ್ದಾನಲ್ಲ ಸತ್ಯವಂತ!…ಅಯ್ಯೋ, ಹೊತ್ತಾಯ್ತು…ಹೊದೇ, ನನ್ನ ಮಾತು ಕೇಳು ಮಗುವೆ, ಒಂದು ದಮಡಿ ಹೆಚ್ಚು ಮಾಡ್ತೇ- ಇಲ್ಲೇ ಹಾಕಿ ಹೋಗು, ಸುಮ್ಮನೆ ಅಲ್ಲಿ ಇಲ್ಲಿ ತಿರ್ಗಾಡಬೇಡ ಬಿಸಿಲೊಳಗೆ.” +“…..” +ಏನು ಮಾಡ್ತೀ?..ನಾನೇನು ನಿನ್ನ ಫಸಲಾಯಿಸಕ್ಕೆ ಹೇಳ್ತೇನೆ …ನೋಡು? ಹಾಕೂದಾದರೆ ಓ ಅಲ್ಲಿ, ಜಗುಲಿಯ ಮೇಲೆ ಹಾಕಿ ಹೋಗು.” +“ಸಾಯ್ಲ್ರಾ -ನೀವು ಆಷ್ಟು ಮಾಡಿ ಹೇಳಿದ್ಮೇಲೆ ಮಾತು ಮುರೀಲಿಕ್ಕೆ ಮನಸಾಗೋದಿಲ್ಲ. ಎಲ್ಲಿ ಹಾಕ ಹೇಳಿದ್ರಿರಿ?” +“ಇಲ್ಲಿ ಬಾ..ಓ ಅಲ್ಲಿ ಹಾಕಿಬಿಡು…ಏ ಏ ಏ ಮೇಲೆ ಅರಿವಿಗೆ ಮುಟ್ಟಿದ್ದೀ-ಸ್ವಲ್ಪ ಬಗ್ಗಿ ಹೋಗು..ಹುಂ ಅಲ್ಲೇ ಹಾಕಿಬಿಡು…” +“ಈಗ ಎಲ್ಲಿ ಹೋಗ್ತೀಯೇ?” +“ಇಲ್ಲೇ ಪೇಂಟೆ ಕಡೆ ಹೋಗ್ತೇನರಾ.” +“ಏನಾದರೂ ಹಸಿದು ಬಂದಿತ್ಕಂಡ್ವೆ?” +“ಇಲ್ಲರಾ, ನಿನ್ನೆ ಬಹಳ ಬಂದಿತ್ಕಂಡಾ. ನನಗೆ ಹೋಗಲಿಕ್ಕೆ ಆಗಲೇ ಇಲ್ಲಾ. ಇಂದೇನಾದರೂ ಒಣಗಿದ್ದು ತಗೊಂಡು ಹೋಗ್ತೆ.” +“ಅಲ್ಲವೇ ಇಷ್ಟು ಅಕ್ಕಿ ಬೀಸಿಕೊಡ್ತೀಯೋ ಏನು ಅಂತ ಕೇಳಬೇಕೆಂದು ಮಾಡಿದ್ದೆ. ಗನಾಕಿಷ್ಟು ಅನ್ನಾ, ನಿನ್ನೆಯ ಹಸಿ ಬಂಗಡೇ ‘ಆಸೆ’ ಉಂಟು. ಬೀಸಿಕೊಟ್ಟು ಊಟ ಮಾಡಿಕೊಂಡು ಹೋಗೀಯಂತೆ.” +“ಈಗ ಹೊತ್ತು ಬಂತ್ರಾ. ನಾಳೆ ಬಂದು ಬೇಕಾದರೆ ಬೀಸಿಕೊಡ್ತಿದ್ದೆ…” +“ನಾಳೆಗಾದರೆ ಆ ಪರಮೇಶ್ವರಿ ಬೀಸಿಕೊಡ್ತೇ ಹೇಳ್ಯದೆ.” +“ಎಷ್ಟದೆರಾ ಅಕ್ಕಿ.” +“ಒಂದು ಕೊಳಗ-ಕೊಳಗಾನೂ ಪೂರಾ ಇಲ್ಲ.” +“ರೊಕ್ಕ ಏನು ಕೊಡ್ತೀರಿ?” +“ಮತ್ತೇನು ರೊಕ್ಕವೆ?-ಅನ್ನಾ ಏನು ಪುಕ್ಸಾಟ ಬರ್ತದೆಯೆ? ಗನಾ ಇಷ್ಟು ಇದೆ. ಚಲೋ ಉಪ್ಪಿನಕಾಯಿ ಕೊಡ್ತೆ.” +“ಒಂದಾಣೆ ಆದರೂ ಹೆಚ್ಚಿನದು ಕೊಡಿ. ಕೊಳಗಕ್ಕೆ ನಾಲ್ಕಾಣೆ ಆಗ್ತದೆ. ಸುಮ್ಮನೆ ಚೌಕಶಿ ಮಾಡಬೇಡಿ.” +“ಇಲ್ಲಾ ನೋಡು, ಆ ಪರಮೇಶ್ವರಿಗೆ ಕೊಡ್ತೆ ಹೇಳಿದ್ದೆ. ಯಾಕೆ ಮತ್ತೆ ಅದಕ್ಕೆ ಕೊಡೋದು, ಅಪರೂಪ ಬಾಗಿಲಿಗೆ ಬಂದಿದ್ದೀ, ಉಂಡುಕೊಂಡು ಹೋಗಲಿ ಅಂತ ಹೇಳಿದೆ. ‘ಆಸೆ’ ಚಲೋ ಆಗಿದೆ-ಇಂದು ಇವರು ಯಾರಿಗೂ ಕೊಡಬೇಡ ಎಂತ ಹೇಳಿದ್ದರು. ಆದರೂ ಬರಿಯೇ ಒಣ ಅನ್ನ ಹೇಗೆ ಉಣ್ತಿ ಎಂದು ‘ಆಸೆ’ ಕೊಡ್ತೆ ಹೇಳಿದೆ.” +“ಹುಂ, ಕೊಡ್ರಾ-ನಿಮ್ಮ ಮಾತು ಮುರೀಲಿಕೆ ಬರೋದಿಲ್ಲ.” +“ಬೀಸ್ಕೊಟ್ಟೇ ಊಟ ಮಾಡು-ನೀವು ಒಕ್ಕಲ ಜಾತಿ ಉಂಡ ಮೇಲೆ ಅಳಸಿ, ಅದು ದೇವರ ಕೆಲಸಕ್ಕೆ. ನಿನ್ನ ಎಂಜಲ ಗಿಂಜಲ ಸಿಡಿಸಬೇಡ…ಮತ್ತೆ ಇದ್ನೋಡು- ಹೇಳ್ತೇ ಅಂತ ಸಿಟ್ಟಾಗಬೇಡ. ನಿನಗೆ ಬೇಕಾದರೆ ನುಚ್ಚುಗಿಚ್ಚು ಕೊಡೋಣ. ಆದರೆ ಅದ್ರಾಗಿಂದ ಮಾತ್ರ ಮಡಲಿಗೆ ಹಾಕ್ಕೋ ಬೇಡ.ನೀನು ಕದೀತಿ ಅಂತ ಅಲ್ಲವೆ-ಆದರೂ ಮನುಷ್ಯರಿಗೆ ಆಶೆ ಅಂದರೆ ದೊಡ್ಡದು. ನಾವಾಗ್ಲೀ ನೀವಾಗ್ಲೀ. ಹೀಗೇ ಆದರೆ ಏನೂ ಹೇಳ್ತಿದ್ದಿಲ್ಲ. ದೇವರ ಕಾರ್ಯಕ್ಕೆಂದು-ಮೇಲಾಗಿ ನಿನ್ನವ್ವಿಗೆ ಬೇರೆ ದೆವ್ವಾ…” +“ಇಲ್ಲರಾ ಅಮ್ಮಾ, ಅಂಥಾ ಕೆಲಸ ನನ್ನ ಕಡೆಯಿಂದ ಸಾಧ್ಯ ಇಲ್ಲರಾ.” +“ಅದು ನನಗೆ ಗೊತ್ತಿಲ್ಲವೇ? ನಿನ್ನವ್ವೀನೂ ಹಾಗೇ. ಮತ್ತು ಸುಳ್ಳು ಹೇಳಿ ಕದ್ದು ಎಷ್ಟು ದಿನ ಸಂಸಾರ ಮಾಡಬಹುದೇ?” +“ಓ ಪಾರ್ವತಮ್ಮನವರೂ…” +“ಯಾರೇ, ದೇವಿ-?” +“ದೇವೀ ಅಲ್ಲರಾ ನಾನು_ಪರಮೇಶ್ವರಿ.” +“ಏನೇ, ಅಕ್ಕಿ ಬೀಸಲಿಕ್ಕೆ ಬಂದಿದ್ದೆಯೇ?” +“ಇಲ್ಲರಾ ಅಮ್ಮಾ, ಇಂದಾಗೂದಿಲ್ಲರಾ. ರಟ್ಟೆಯೆಲ್ಲಾ ನೋಯ್ತದೆರಾ-ನಿನ್ನೆ ಅವರ ಮನೇಲಿ ಮೆಣಸಿನ ಹುಡಿ ಮಾಡಿದ್ದೆ. ಸಣ್ಣ ಜ್ವರ ಬಂದಾಂಗ ಆಗಿದೆ.” +“ಮತ್ತು ಅಕ್ಕಿನೂ ಇಲ್ಲ ಬೀಸೂದು. ಆ ಬೊಮ್ಮಿ ಬಂದಿತ್ತು. ಇದೇ ಈಗ ಬೀಸಿಕೊಟ್ಟು ಹೋಯ್ತು. ನನಗೆ ಮೊದಲೇ ಗೊತ್ತಿತ್ತು. ನಿನ್ನ ಕಡೆಯಿಂದ ಈ ಹೊತ್ತು ಆಗ್ಲಿಕ್ಕಿಲ್ಲ…ಆಗಬೇಕು ಹೇಗೆ? ಸಣ್ಣ ಮಕ್ಕಳ ತಾಯಿ ನೀನು. ನಿನ್ನೆ ಆ ಮೆಣಸು ಕುಟ್ಟುವಾಗಲೇ ಗೊತ್ತು, ನೀ ಶೀಕು ಬೀಳ್ತೀಯೆಂದು. ಮತ್ತು ಅವರಾದರೂ ಎಂಥವರೇ! ಸರಿಯಾಗಿ ಒಣಗಿಸಬೇಡಾ ಆ ಮೆಣಸನ್ನು?” +“ಎಲ್ಲಾ ಒಬ್ಬಳೇ ಬೀಸ್ತು? ಎಷ್ಟು ಒಂದೂವರೆ ಕೊಳಗ ಇತ್ತಲ್ಲರಾ? ಏನು ಕೊಟ್ಟಿರೀ?” +“ಎರಡಾಣೆ ಕೊಟ್ಟೆ. ಮೇಲೆ ಅನ್ನ, ‘ಆಸೆ’ ಇತ್ತು ಎಂದು ಹೇಳಿದ್ದೆನಲ್ಲ? ಎಲ್ಲ ಅದಕ್ಕೆ ಬಡಿಸಿದೆ. ತುಂಬ್ ಆಯ್ತು. ಪಾಪ ಬಡವಳು. ತಿಂದು ಹೋಗಲಿ ಎಂದು…ನಿನಗೆ ಕೊಡ್ತೆ ಅಂತ ಹೇಳಿದ್ದೆ-“ +“ಇರಲಿರಾ ಬೊಮ್ಮಿ ಚಲೋವ್ಳು. ಕಳವು ಗಿಳವು ಮಾಡುವಾಕೀ ಅಲ್ಲ.” +“ಮತ್ತೆ ನಾ ಆದರೂ ಸುಮ್ಮನೆ ಬಿಡಲಿಲ್ಲ. ದೇವರ ಕೆಲಸಕ್ಕೆ ಎಂದು ಮೊದಲೇ ಸೂಚ್ನೆ ಕೊಟ್ಟೆ. ದೇವರು ಅಂದರೆ ಬಹಳ ಹೆದರ್ತತೆ ಆ ಜಾತಿ. ಮತ್ತೆ ಇದು ನೋಡು. ಬೆಳಿಗ್ಗೆ ನಿನಗೆ ಹೇಳಲಿಕ್ಕೆ ಹೇಳ್ದೆ: ನಿನ್ನದು ಅನ್ನ, ‘ಆಸೆ’ ಇದೆ, ತಗೊಂಡು ಹೋಗು ಎಂದು. ಆದರೆ ನನ್ನ ಮನಸ್ಸಿಗೇ ಸರಿಬರಲಿಲ್ಲ. ನಿನ್ನೆ ಏನಾಯ್ತು ಗೊತ್ತದೆ? ಇವರು ಊಟ ಮಾಡಿ ಹೋದರೋ ಇಲ್ಲವೋ ಇವರ ಬಟ್ಟಲಲ್ಲೇ ಬಡಿಸಿ ಊಟಕ್ಕೆ ಕೂಡ್ರುವವಳು. ಅಷ್ಟರಲ್ಲಿ ನಾಣಿಗೆ ಒಲೆಯಲ್ಲಿ ಬೆಲ್ಲ ಗೆಂಡೆ ಸುಡಲಿಕ್ಕೆ ಹಾಕಿದ್ದು ನೆನಪಾಯ್ತು. ಊಟ ಮಾಡಿ ಏಳುವ ತನಕ ಪೂರಾ ಸುಟ್ಟೇ ಹೋದಾವು ಎಂದು ಹಾಗೇ ತಗೊಂಡೇ ಬರೋಣ ಅಂತ ಹೋದೆ. ಸಾಯಲಿಕ್ಕೆ ಆ ಸಾಡೇಸಾತಿ ನಾಯಿ ಎಲ್ಲಿ ನೋಡ್ತಾ ಇತ್ತೋ ಏನೋ. ಬರುವುದರೊಳಗೆ ಬಟ್ಟಲಲ್ಲಿ ಬಾಯಿ ಹಾಕೇಬಿಟ್ಟಿತು. ಕಣ್ಣಾರೆ ನೋಡಿದ ಮೇಲೆ ಉಣ್ಣಲಿಕ್ಕೆ ಬರ್ತದೆಯೆ? ಹೊಸತಾಗಿ ಅನ್ನ ಮಾಡಿ ಊಟಮಾಡಿದೆ. ಚಲೋ ಅನ್ನ! ದನಕ್ಕೆ ಹಾಕಲಿಕ್ಕೂ ಮನಸ್ಸಾಗಲಿಲ್ಲ. ಹಾಗೆಯೇ ಮುಚ್ಚಿಟ್ಟುಬಿಟ್ಟೆ. ಆಗ ನಿನಗೆ ಹೇಳಲಿಕ್ಕೆ ಹೇಳ್ದೆ, ಅನ್ನ ‘ಆಸೆ’ ಇದೆ, ತಗೊಂಡು ಹೋಗು ಎಂದು. ಆದರೆ ನನಗೇ ಮನಸ್ಸಾಗಲಿಲ್ಲ. ಏನೆಂದರೂ ಬೊಮ್ಮಿ ಒಕ್ಕಲು ಜಾತಿಯವಳು. ಹೆಚ್ಚು ಕಡಿಮೆನೇ ಇಲ್ಲ. ನಾನೇ ನಾಯಿ ಬಾಯಿಹಾಕಿದ್ದು ಎಂದರೂ ಬೇಡ ಅಂತಿದ್ದಿಲ್ಲ. ಆದರೂ ಹೇಳಿ ಯಾಕೆ ಇದ್ಮಾಡೋದು ಎಂದು…ನೀವು ಹಾಗಲ್ಲ. ದಿನಾ ಇಲ್ಲೇ ಇರ್ತೀರಿ; ಮೇಲಾಗಿ ಮಾಸ್ತೀ ಪೂಜೆ ಮಾಡ್ತೀರಿ. ನೋಡಿ ನೋಡಿ ಹ್ಯಾಗೆ ಕೊಡಲೀ ಎಂದು… ಅಯ್ಯೋ ಅಂಗಡಿಯಿಂದ ಇವರು ಬಂದರು. ಹೊತ್ತಾಯ್ತು, ಸಂಜೆಗೆ ಬಾ…” +೧೯೪೯ +ಕೀಲಿಕರಣ: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_24.txt b/Kannada Sahitya/article_24.txt new file mode 100644 index 0000000000000000000000000000000000000000..e8aa898e836dcbf7bdf74314f95d211cdead7561 --- /dev/null +++ b/Kannada Sahitya/article_24.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ ಸರಕನ್ನು ಕಲಬೆರಕೆ ಮಾಡಿ ಕಾಸು ಮಾಡುವ ಮಾಲಲ್ಲ ಇದು. ಬಚ್ಚಿಟ್ಟು, ಬೇಕೆಂದಾಗ ತೆಗೆದು ಕಳ್ಳತನದಲ್ಲಿ ಮಾರಿಕೊಳ್ಳುವ ವ್ಯಾಪಾರಿ ಸಾಮಾನೂ ಅಲ್ಲ…ನನ್ನ ೬೦ ವರ್ಷದ ವಯಸ್ಸನ್ನು ಏರಿ ನಿಂತು ಅದರ ಆಜುಬಾಜುಗಳಲ್ಲಿ ಬಗ್ಗಿ ನೋಡಿದಾಗ ಆಳದಲ್ಲೆಲ್ಲೋ ಅಡಗಿರುವ ಕೆಲವು ‘ನೆನಪುಗಳ ಸ್ಟಾಕ್’ ಇದು. +ಯಾರು ಏನನ್ನಾದರೂ ಕಾಂಟ್ರಡಿಕ್ಟ್ ಮಾಡಬಹುದು. ಆದರೆ ವ್ಯಕ್ತಿಗೆ ಆಗಿರುವ ವಯಸ್ಸಿನ ಬಗ್ಗೆ ಅದು ‘ಸುಳ್ಳು’ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಕಾರಣಗಳಿಗಾಗಿ ತಪ್ಪು ವಯಸ್ಸನ್ನು ದಾಖಲಿಸಿ ನಾವು ಚಿಕ್ಕ ವಯಸ್ಸಿನವರೆಂದು ಹೇಳುವವರ ಮಾತು ಬೇರೆ….ಹೇಳುವುದೇನೇ ಆದರೂ ವಯಸ್ಸು ಮಾತ್ರ ಆಗೇ ಇರುತ್ತದೆ. ಹಾಗೆ ನೋಡಿದರೆ ವಯಸ್ಸನ್ನು ಹಿಡಿದಿಟ್ಟುಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಕೋರ್ಟ್ ಸ್ಟೇ ಆರ್ಡರ್‌ನಿಂದಲೂ ಅದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ….ಅಸಲು ಇರುವ ತನಕ ಬ್ಯಾಂಕಿನಲ್ಲಿ ಬಡ್ಡಿಯೂ ಬೆಳೆಯುವಂತೆ ಜೀವವಿರುವವರೆಗೂ ವಯಸ್ಸು ಆಗುತ್ತಲೇ ಇರುತ್ತದೆ. +ಹಾಗೆ ನನಗಾಗಿರುವ ಈ ವಯಸ್ಸಿನ ಹಿಂದೆ ಏನೇನೋ ನೆನಪಿನ ರಾಶಿಗಳಿವೆ. ಅದರಲ್ಲಿ ಕೆಲವು ಮರೆವಿನ ಮರೆಯಲ್ಲಿ ಕರಗಿ ಹೋಗಿಬಿಡುವಂಥ ಅತಿ ಸಾಮಾನ್ಯರನ್ನು ಕುರಿತದ್ದಾಗಿರಬಹುದು. ಮತ್ತೆ ಕೆಲವು ಬದುಕಿನ ಒಳಾರ್ಥಗಳನ್ನು ತಿಳಿಸಿ ಹೇಳಲು ಸಹಾಯಕವಾಗುವಂಥ ಪ್ರಸಂಗಗಳಾಗಿರಬಹುದು. ಅಂಥ ನೆನಪುಗಳೆಷ್ಟೋ ಆಳದಲ್ಲಿ ಹೂತುಹೋಗಿವೆ. ಈ ನೆನಪಿನ ಹೊಂಡದಲ್ಲಿರುವ ‘ಹೂಳು’ ಆಗಾಗ ತೆಗೆಯುತ್ತಿರಬೇಕು. ನೆನಪುಗಳ ತಳವನ್ನು ತಡಕಿ, ಕೆದಕಿ, ಹುಡುಕಿ ಪಾತಾಳಗರಡಿಯನ್ನು ಹಾಕಿ ಹೆಕ್ಕಿ ಹೊರತೆಗೆದವುಗಳನ್ನು ತೊಳೆದು ತೋರಿಸುವ ಪ್ರಯತ್ನ ಈಗ ಮಾಡಲಾಗಿದೆ. +ಹೀಗೆ ಹಳೆಯದನ್ನೆಲ್ಲಾ ಹೊರತೆಗೆದು ದಾಖಲಿಸುವಾಗ ಏನಾಗಬಹುದು ಎಂದು ಯೋಚಿಸಿದಾಗ, ನನ್ನ ಕನ್ನಡ ಮೇಷ್ಟ್ರು ಹೇಳಿದ್ದ ‘ಮುತ್ತಜ್ಜ ಹೋಳಿಗೆ ಬಡಿಸಿದ ಕತೆ’ ಜ್ಞಾಪಕಕ್ಕೆ ಬರುತ್ತಿದೆ. ಮುತ್ತಜ್ಜನಿಗೆ ವಿಪರೀತ ವಯಸ್ಸಾಗಿದೆ. ತಲೆ, ಕೈ-ಕಾಲು-ಯಾಕೆ? ಇಡೀ ದೇಹವೇ ಗಡಗಡ ನಡುಗುತ್ತಿದೆ. ನಡೆಯುವುದು ಕಷ್ಟ, ಮೇಲಾಗಿ ಕಣ್ಣು ಕಾಣುವುದಿಲ್ಲ. ಡಬ್ಬದಿಂದ ತೆಗೆದ ನಶ್ಯವನ್ನು ತನ್ನ ಮೂಗಿಗೆ ತಾನೇ ಏರಿಸುತ್ತಿದ್ದ ನಶ್ಯದ ಪುಡಿಯಲ್ಲಿ ಕಾಲು ಭಾಗ ಮೂಗಿಗೆ, ಮುಕ್ಕಾಲುಭಾಗ ಮೈಗೆ…..ಒಂದು ಹಬ್ಬದ ದಿನ ಮೊಮ್ಮಕ್ಕಳಿಗೆಲ್ಲಾ ತನ್ನ ಕೈಯಾರೆ ಹೋಳಿಗೆ ಬಡಿಸಬೇಕೆಂಬ ಬಯಕೆ ಹುಟ್ಟಿತು. ಯಾರು ಎಷ್ಟು ಹೇಳಿದರೂ ಮುದುಕ ಕೇಳುವುದಿಲ್ಲ. ತನ್ನ ಕೈಯಿಂದಲೇ ಐವತ್ತು ಹೋಳಿಗೆ ಜೋಡಿಸಿಟ್ಟ. ಒಬ್ಬ ಅದನ್ನು ಹಿಡಿದು ಮುದುಕನ ಪಕ್ಕದಲ್ಲಿ ನಿಂತ. ಮತ್ತೊಬ್ಬ ಜೋಲಿ ಹೊಡೆದು ಬಿದ್ದಾನೆಂದು ಮುದುಕನ ಹತ್ತಿರವೇ ನಡೆಯುತ್ತಿದ್ದ. ಮುತ್ತಜ್ಜ ಅಂದಾಜಿನ ಮೇಲೆ ನಡೆಯುತ್ತ ಒಬ್ಬೊಬ್ಬ ಮೊಮ್ಮಗನ ಊಟದ ಎಲೆ ಮುಂದೆ ಬಂದು ನಿಂತು, ಒಂದೊಂದೇ ಹೋಳಿಗೆಯನ್ನು ತನ್ನ ನಡುಗುವ ಕೈಗಳಿಂದ ಎತ್ತಿ ಸಾಕಷ್ಟು ಬಗ್ಗಿರುವ ದೇಹವನ್ನು ಮತ್ತಷ್ಟು ಬಾಗಿಸಿ ಸ್ವಲ್ಪ ಎತ್ತರದಿಂದಲೇ ಹೋಳಿಗೆ ಬಡಿಸುತ್ತ ಹೊರಟ….ಮಂದವಾಗಿದ್ದ ದೃಷ್ಟಿ, ನಡುಗುವ ಕೈ. ಆ ದೊಡ್ಡ ಪರಾತದಿಂದ ಎತ್ತಿ ಹಿಡಿದ ಆ ಹೋಳಿಗೆಯೂ ಗಡಗಡ ನಡುಗುತ್ತ ತನ್ನೊಳಗೆ ಹುದುಗಿಸಿಕೊಟ್ಟುಕೊಂಡಿದ್ದ ಹೂರಣವನ್ನೆಲ್ಲಾ ಪರಾತದಲ್ಲಿ ಚೆಲ್ಲಿಸುತ್ತಿತ್ತು. ಹೂರಣ ರಹಿತ, ಆದರೆ ಪ್ರೀತಿಪೂರ್ಣ ಹೊರ ಪದರ ಮಾತ್ರ ಮೊಮ್ಮಕ್ಕಳಿಗೆ ದಕ್ಕಿದ್ದು…. +ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಆಗಬಹುದಾದುದೂ ಹೀಗೆಯೇ. ಆದರೆ ಈ ಹೊರಪದರಕ್ಕೆ ಅಂಟಿರುವ ಹೂರಣದ ಅಲ್ಪ ಸಿಹಿ ಅನುಭವ ಆದರೂ ಆಗಬಹುದೇನೋ ಅನ್ನುವ ನಂಬಿಕೆಯಿಂದ ನನ್ನ ಸ್ಟಾಕ್‌ನಿಂದ ತೆಗೆದ ಹೋಳಿಗೆಯನ್ನು ಬಡಿಸುತ್ತಿದ್ದೇನೆ….ಗಟ್ಟಿಯಾದ ಅಂಚನ್ನು ಮುರಿದು ಪಕ್ಕಕ್ಕಿಟ್ಟು, ಮದ್ಯದ ಮೃದುವಾದ ಕಣಕಕ್ಕೆ ಹತ್ತಿರುವ ಹೂರಣದ ಜೊತೆ ಚೂರು ಹೋಳಿಗೆಯ ಸಿಹಿಯನ್ನು ಅನುಭವಿಸಲು ಓದುಗರಿಗೆ ಸಾಧ್ಯವಾದರೆ ಅಷ್ಟೇ ಸಾಕು….. +ನನ್ನ ನೆನಪೆಲ್ಲ ವೈಯಕ್ತಿಕವಾದದ್ದಾದರೂ ಅವುಗಳಿಗೆ ಕೊಂಚಮಟ್ಟಿನ ಸಾರ್ವತ್ರಿಕ ಇರಬಹುದು, ಅರ್ಥಾತ್ ಅಂಥ ಪ್ರಸಂಗಗಳು, ಅನುಭವಗಳು, ಅನಿಸಿಕೆಗಳು ಬೇರೆ ಎಷ್ಟೋ ಮಂದಿಯ ಬದುಕಿನಲ್ಲೂ ಪ್ರೀತಿ-ದ್ವೇಷ, ನೋವು-ನಲಿವು, ಸುಷ್ಟತನ-ಅನುಕಂಪ ಇವೆಲ್ಲಾ ಇರುವಂಥದ್ದೇನೆ…. ‘ಟೇಕ್ ಸ್ಟಾಕ್ ಆಫ್’ ಅನ್ನುವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದೆ. ನಮ್ಮನ್ನು ಎತ್ತಿ ಏರಿಸಿದಂಥ ಅನುಭವಗಳು, ನಾಶ ಮಾಡಿದಂತಹ ಕೆಡಕುಗಳು, ಮೌಲ್ಯಗಳನ್ನೇ ಮರೆಮಾಡುವ ಕೆಟ್ಟತನಗಳು, ತೋರಿಸಿದ ಪ್ರೀತಿ, ಸೌಜನ್ಯ, ಸಜ್ಜನಿಕೆಗಳು, ಇವೆಲ್ಲದರ ಸೂಕ್ಷ್ಮವಾದ ಪರಿಶೀಲನೆಯೂ ಇಂಥ ಪ್ರಯತ್ನದಲ್ಲಿ ಅಡಗಿದೆ. +ನಾವು ಬೇಡ ಬೇಡವೆಂದರೂ ಬಂದೂ ಬಂದೂ ಕಾಡುವ ನೆನಪುಗಳೆಷ್ಟೋ ನಮ್ಮ ಮೂರ್ಖತನಗಳನ್ನು ಮುಚ್ಚಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನಗಳೆಷ್ಟೋ! ಮೃಗತ್ವ, ಕೌರ್ಯಗಳ ಜೊತೆಜೊತೆಗೆ ಇರಬಹುದಾದ ಮಾನವೀಯ-ದೈವಿಕ ಗುಣಗಳನ್ನು ಗುರುತಿಸದೆ ಹೋಗುವ ಪ್ರಸಂಗಗಳೆಷ್ಟೋ…. ಹಂಚಿಕೊಳ್ಳುವಾಗ ಸಂತೋಷವಾಗುತ್ತೆ, ಆದರೆ ಉಪಯೋಗವಾಗುವಂಥದ್ದು ಮಾತ್ರ ಉಳಿಯುತ್ತೆ. +ನನ್ನ ನೆನಪುಗಳ ಓದುವಿಕೆಯಿಂದ ಯಾರಿಗಾದರೂ ಎನಾದರೂ ಗಾಢವಾದ ಅನುಭವವಾಗಬಹುದೆಂಬ ಹಮ್ಮು ನನಗಿಲ್ಲ. ಇದರ ಉದ್ದೇಶವೂ ಅದಲ್ಲ. ಏಕೆಂದರೆ….. +‘ಕಿಡ್ನಿ’ ಕೊಡಬಹುದು. ಯೌವನ ಕೊಡಲಾಗುವುದಿಲ್ಲ. +‘ರಕ್ತ’ ಕೊಡಬಹುದು, ಯೌವನ ಕೊಡಲಾಗುವುದಿಲ್ಲ. +‘ವಿದ್ಯೆ’ ಹೇಳಿಕೊಡಬಹುದು. ಆಚರಣೆ ಹೇಳಿಕೊಡಲಾಗದು. +‘ಸ್ಟಾಕ್’ ಎಂದರೆ ವಂಶ, ಮನೆತನ ಅಂತಲೂ. ಮೂಲಧನ ಅನ್ನುವ ಅರ್ಥವೂ ಇದೆ. ನನ್ನ ವಂಶ-ಮನೆತನದ ಬಗ್ಗೆ ಎಲ್ಲರಿಗೂ ಇರುವಂತೆ ನನಗೂ ಹೆಮ್ಮೆ. ನನ್ನ ಪುರ್ವಿಕರಂತೆ ನಾನು ಬಾಳಲು ಸಾಧ್ಯವಾಗಲಿಲ್ಲ ಎಂಬ ಕೊರತೆ. ಅವರ ಅಷ್ಟಿಷ್ಟು ಗುಣಗಳನ್ನಾದರೂ ನನ್ನಲ್ಲಿ ಅಳವಡಿಸಿಕೊಳ್ಳಬೇಕೆಂಬ ಹಂಬಲ ಇದೆ. ಅವರ ಆಕಾಶದೆತ್ತರದ ಆಶೋತ್ತರಗಳನ್ನು ನನ್ನಿಂದ ಈಡೇರಿಸಲಾಗಲಿಲ್ಲ ಎಂಬ ಸಂಕಟವಿದೆ. ಅವರ ಬುದ್ಧಿ-ಚಾತುರ್ಯಗಳ ಒಂದು ಅಂಶವಾದರೂ ನನಗೆ ದಕ್ಕಲಿಲ್ಲವಲ್ಲ ಎಂಬ ನೋವಿದೆ….ಇಷ್ಟೆಲ್ಲ ಕೊರತೆ, ಹಂಬಲ, ಸಂಕಟ ನೋವುಗಳ ಮಧ್ಯೆಯೂ ನಾನು ಇಷ್ಟರ ಮಟ್ಟಿಗಾದರೂ ಇದ್ದೇನಲ್ಲ ಅನ್ನುವ ಸ್ವಲ್ಪ ಸಮಾಧಾನವಿದೆ…ನಾನೊಬ್ಬ ಸಾಮಾನ್ಯ ವ್ಯಕ್ತಿ. ಸಾಮಾನ್ಯರ ನಡುವೆ ಬದುಕಿದ್ದು. ಸಾಧಾರಣತೆಯನ್ನೇ ನನ್ನ ಸಂಪತ್ತನ್ನಾಗಿ ಬಳಸುತ್ತಿರುವವನು. +ಇಲ್ಲಿ ದಾಖಲಿಸುವ ಅನುಭವಗಳು ಒಬ್ಬ ಪ್ರಸಿದ್ಧ ವ್ಯಕ್ತಿಯ ಅಸಾಧಾರಣ ಅನುಭವದ ಕತೆಯಲ್ಲ. ನಾಗರೀಕತೆಯು ನಡೆದುಬಂದ ದಾರಿಯನ್ನು ತೋರಿಸುವ ವಿವರಣೆಯಲ್ಲ. ಸಾಮ್ರಾಜ್ಯಗಳ ಏಳುಬೀಳುಗಳನ್ನು ರಸವತ್ತಾಗಿ ಚಿತ್ರಿಸುವ್ ಚರಿತ್ರೆಯಲ್ಲ. ಸಾಮಾನ್ಯರ ನಡುವಿದ್ದು, ನನ್ನ ಮುಂದೆ ನನ್ನನ್ನೇ ವಸ್ತುವನ್ನಾಗಿಟ್ಟುಕೊಂಡು, ಹಾಯ್ದು ಹೋದ ಹಲವು ಸರಳ ಅನುಭವಗಳ ಗುಚ್ಚಗಳು. ವಸ್ತು ನಾವೇ ಆದಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ. ನಾನು ಬರೆದದ್ದು ನಿಜವೋ ಕಟ್ಟುಕತೆಯೋ ಎಂದು ಕೇಳುವವರು ಯಾರು? ಎಚ್ಚರದ ಪೋಷಾಕಿನಲ್ಲಿ, ನಿಜದ ಬೆಳಕಿನ ಮುಂದೆ, ನಾನು ಇರುವಂತೆಯೇ ನಿಲ್ಲುವ ಧೈರ್ಯಕ್ಕೆ ಮಾತ್ರ ನನ್ನಲ್ಲಿ ಕೊರತೆಯಿಲ್ಲ ಎಂದಷ್ಟೇ ಹೇಳಬಲ್ಲೆ….. +ನನ್ನ ತಂದೆಯ ಅಪ್ಪ ರಾಮಣ್ಣ ನಾಯಕ್. ನಾನು ನೊಡಿರಲಿಲ್ಲ. ಅವರ ಬಗ್ಗೆ ನನ್ನಪ್ಪನಿಂದ ಬೇಕಾದಷ್ಟು ಕೇಳಿದ್ದೆನೆ. ನನ್ನಜ್ಜ ಮತ್ತು ಅವರ ಹಿಂದಿನವರು ತುಂಬಾ ಶ್ರೀಮಂತರು. ಅವರೆಲ್ಲರ ಹೆಸರಿನ ಮೊದಲಿಗೆ ‘ಸಾಹುಕಾರ್’ ಅಂತ ಬರೆಯುತ್ತಿದ್ದುದು ನನಗೆ ಗೊತ್ತು. ಹಾಗೆಯೇ ಅದರ ನಂತರ ‘ಪತ್ತಾರ್’ ಅಂತಲೂ, ಹೆಸರಿನ ಕೊನೆಗೆ ‘ನಾಯಕ್’ ಅಂತಲೂ ಸೇರಿ ಅಜ್ಜನ ಹೆಸರು ಸಾಹುಕಾರ್ ಪತ್ತಾರ್ ರಾಮಣ್ಣ ನಾಯಕ್ ಎಂದಿರಬೇಕು. ಈ ಮನೆತನದವರು ದೊಡ್ಡ ಜಮೀನುದಾರರಾಗಿದ್ದು, ಬಡ್ಡಿ ವ್ಯವಹಾರವನ್ನೂ ಇಟ್ಟುಕೊಂಡಿದ್ದರು. ಜೊತೆಗೆ ಚಿನ್ನದ ವ್ಯಾಪಾರವೂ ನಡೆದಿತ್ತಂತೆ. ಆದರೆ ಚಿನಗಾರರ ಕೆಲಸ ಮಾಡಿದವರಲ್ಲ. ಹಾಗೆಯೆ ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಸೈನ್ಯದ ಒಂದು ತುಕಡಿಯ ಮುಖಂಡತ್ವ ವಹಿಸಿದ್ದರೆಂಬ ಕಾರಣಕ್ಕಾಗಿ ನಮ್ಮ ಪೂರ್ವಜರಲ್ಲಿ ಯಾರಿಗೋ ‘ನಾಯಕ್’ಪದವಿ ಬಂದಿರಬಹುದು…… +(ಬಡ್ಡಿ ವ್ಯವಹಾರದ ಬ್ಯಾಂಕಿಂಗ್ ಸಂಸ್ಥೆಯಲ್ಲಿ ನಾನು ಅಧಿಕಾರಿಯಾಗಿದ್ದುದು ನನ್ನ ಸಹೋದರ ದತ್ತಾತ್ರೇಯ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದುದೂ ಒಂದು ಕಾಕತಾಳೀಯ) +ಎಲ್ಲಿಂದ ಎಲ್ಲಿಗೆ ವಲಸೆ ಹೋದರೋ, ಯಾವ ಕಾರಣಕ್ಕೋ ನಾಕಾಣೆ. ಅಂತೂ ಧಾರವಾಡಜಿಲ್ಲೆಯ ರಾಣಿಬೆನ್ನೂರನ್ನು ತಮ್ಮ ಊರನ್ನಾಗಿಸಿಕೊಂಡರು. ಬೇಕಾದಷ್ಟು ಆಸ್ತಿಯ ಒಡೆತನ, ಮೈಲುಗಟ್ಟಲೆ ಹಾಸಿದ್ದ ಭೂಮಿಯ ಒಡೆಯರಾಗಿ ಬಾಳಿದರು. +ನಮ್ಮಜ್ಜ ರಾಮಣ್ಣ ನಾಯಕ್ ಪದವೀಧರರಲ್ಲ. ಅವರ ತಂಗಿಯ ಮಕ್ಕಳ ಕಡೆ ಇಬ್ಬರು ಪದವೀಧರರಾಗಿದ್ದು ವಕೀಲಿ ವೃತ್ತಿ ಹಿಡಿದಿದ್ದರಂತೆ. ರಾಮಣ್ಣ ಪದವೀಧರರಲ್ಲವಾದರೂ ಮಹಾಬುದ್ಧಿಶಾಲಿ. ಕಲಿತಷ್ಟು ವಿದ್ಯೆಯನ್ನೇ ಸ್ವಶಕ್ತಿಯಿಂದ ಬೆಳೆಸಿಕೊಂಡವರು. ಇವರಲ್ಲಿ ಪ್ರಮುಖವಾಗಿ ಕಂಡಂಥ ಎರಡು ಗುಣಗಳು ಅಥವಾ ಅವಗುಣಗಳು. ಒಂದು, ಅವರಲ್ಲಿದ್ದ ಬಂಡಾಯ ಪ್ರವೃತ್ತಿ. ಎರಡು ಅಹಂಕಾರ ಎಂದು ಅನುಮಾನಿಸುವಷ್ಟು ಸ್ವಾಭಿಮಾನ. ಈ ಬಂಡಾಯತನ ಮತ್ತು ಸ್ವಾಭಿಮಾನದ ಜೊತೆ ಸೇರಿಬಿಟ್ಟಿದ್ದ ಮತ್ತೊಂದು ದುರುಳ ಮಿತ್ರನೆಂದರೆ ಅಪಾರ ಕೋಪ. ಈ ಮೂರು ಗುಣಾವಗುಣಗಳು ಸಣ್ಣಗೆ ನಮ್ಮೆಲ್ಲರಲ್ಲೂ ರಕ್ತಗತವಾಗಿ ಬಂದುಬಿಟ್ಟಿದೆ. ಇದೊಂದುಕಡೆಗಾದರೆ ಮತ್ತೊಂದು ಕಡೆ ಈ ರಾಮಣ್ಣ ಸ್ನೇಹ ಜೀವಿಯೂ ಆಗಿದ್ದು ಬದುಕನ್ನು ಅಪಾರವಾಗಿ ಪ್ರೀತಿಸಿದವರೂ ಹೌದು. ಈ ಸ್ವಭಾವವೈಚಿತ್ರ್ಯಗಳು ಮುಂದಿನ ಮೂರು ಪ್ರಸಂಗಗಳಲ್ಲಿ ಪ್ರಕಟವಾಗಿದೆ. +ಒಂದು: ಎಷ್ಟೊಂದು ಆಸ್ತಿ-ಪಾಸ್ತಿ-ಭೂಮಿ ಕಾಣಿ! ತಮ್ಮ ಮನೆತನದವರಿಗಿದ್ದ ಒಟ್ಟು ಜಮೀನಿನ ವಿಸ್ತೀರ್ಣವನ್ನು ಯಾರೊಬ್ಬರೂ ಪೂರ್ತಿಯಾಗಿ ಕಂಡಿರಲಿಲ್ಲವಂತೆ! ಸುತ್ತು ಹತ್ತು ಹಳ್ಳಿಗಳಲ್ಲೆಲ್ಲಾ ಹರಡಿದ್ದ‌ಈ ಭೂಮಿಯಲ್ಲಿ ಎಷ್ಟು ಫಲವತ್ತಾದದ್ದೋ ಎಷ್ಟು ಬಂಜರಭೂಮಿಯೋ….ಇರಲಿ. ಇಷ್ಟೊಂದು ಶ್ರೀಮಂತಿಕೆ ಇದ್ದ ಅವರಪ್ಪನ ಎಕೈಕ ಪುತ್ರ ತನ್ನ ಊರು ಬಿಟ್ಟು ಯಾವುದೋ ನೌಕರಿ ಹಿಡಿಯುವ ಅನಿವಾರ್ಯತೆಯಾದರೂ ಹೇಗೆ ಬಂತು? ಜಗಳವಾಡಿ ಊರು ಬಿಟ್ಟಿರಬೇಕು, ಇಲ್ಲವೇ ತನಗೆ ಸರಿ ಹೊಂಉವ ಹಾಗೆ ಎಲ್ಲವೂ ನಡೆಯದೆ ಹೋಗಿರಬೇಕು. ನೌಕರಿಗೆ ಏಕೆ ಸೇರಿದರೆಂಬುದು-ಅದೂ ತಿಳಿಯದಾಗಿದೆ. ಬಹುತೇಕ ಅವರಲ್ಲಿದ್ದ ಬಂಡಾಯತನದಿಂದಾಗಿರಬೇಕು. ಅವರು ಇದ್ದ ಕೆಲಸ ದೊಡ್ಡ ಕೆಲಸವೇನಲ್ಲ. ಆದರೆ ಸರ್ಕಾರಿ ಕೆಲಸವಾಗಿದ್ದು ಮೇಲಾಧಿಕಾರಿಗಳೆಲ್ಲಾ ಇಂಗ್ಲಿಷ್ ಭಾಷೆಯಲ್ಲಿ ನಡೆಸುತ್ತಿದ್ದ ವ್ಯವಹಾರ ಸಂಬಂಧದ ಕಾಗದ ಪತ್ರಗಳಲ್ಲಿಯ ಕಾಗುಣಿತವನ್ನೋ ವಾಕ್ಯರಚನೆಯನ್ನೋ ವಿಷಯದ ಮಂಡನೆಯನ್ನೋ ತಿದ್ದಿ ಸರಿಪಡಿಸಿ ಮತ್ತೆ ಮತ್ತೆ ಬರೆಸುತ್ತಿದ್ದರಂತೆ. ಇವರ ಚಾಣಾಕ್ಷತೆ ಎಲ್ಲಿಗೆ ಮುಟ್ಟಿತೆಂದರೆ ಬರೆದ ಪತ್ರಗಳಲ್ಲೂ ತಪ್ಪು ಹುಡುಕಿ ವಾಪಸ್ಸು ಮಾಡುತ್ತಿದರಂತೆ. +ಈ ಚಿಕಿತ್ಸಕ ಬುದ್ಧಿಯಿಂದಾಗಿ ರಾಮಣ್ಣಕೆಲಸ ಕಳೆದುಕೊಂಡಿರಬೇಕು. +ಎರಡು: ಊರೂರು ಅಂಡಲೆಯುವ ಈ ಜಂಗಮ ಪ್ರವೃತ್ತಿಯಿಂದಾಗಿ ರಾಮಣ್ಣ ತನ್ನ ಊರು, ಸಂಸಾರ, ವ್ಯವಹಾರದ ಕಡೆ ಅಷ್ಟಾಗಿ ಗಮನಕೊಟ್ಟಿರಲಾರರು. ಇಷ್ಟರ ಮೇಲೆ ತಲೆಮಾರು ಕೂತು ತಿಂದರೂ ಕರಗದಷ್ಟು ಶ್ರೀಮಂತಿಕೆಗೆ ಒಡೆಯನೆಂಬ ಬಿಮ್ಮು-ಬಿಗಿ. ಈ ‘ಜಂಗಮ’ನನ್ನು ‘ಸ್ಥಾವರ’ವನ್ನಾಗಿ ಕೂಡಿಸುವ ಪ್ರಯತ್ನ ಸಫಲವಾಗಲಿಲ್ಲವೆಂದು ಕೇಳಿದ್ದೇನೆ. ಒಮ್ಮೆ ಊರಿನಲ್ಲಿದ್ದಾಗ ಗೆಳೆಯರೂ ಬಳಗದವರೂ ಇದ್ದ ಕಡೆ ತಮ್ಮ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡರಂತೆ. ಅವರಲ್ಲಿ ಯಾರೋ ಒಬ್ಬರು ಮತ್ತೊಬ್ಬರಲ್ಲಿ ಈ ವಿಷಯ ಪ್ರಸ್ತಾಪಿಸಿ “ಇವನಿಗೆ ಇರೋದು ಅಷ್ಟರಲ್ಲೇ ಇದೆ. ನನ್ನ ಹೆಂಡ್ತಿ ಮೈಮ್ಯಾಗೆ ಇರೋವಷ್ಟು ಒಡವೆ ಅವನ ಮನೇಲಿ ಇಲ್ಲ.” ಅಂತ ಅಂದನಂತೆ. ಈ ಮಾತು ರಾಮಣ್ಣನ ಕಿವಿಯ ಮೇಲೆ ಬಿತ್ತು. ಅವರ ಸ್ವಾಭಿಮಾನ ಕೆರಳಿತು. ಅಹಂಕಾರಕ್ಕೆ ಪೆಟ್ಟು ಬಿತ್ತು. ಕೋಪ ನೆತ್ತಿಗೇರಿತು. ಧಡ ಧಡ ಮನೆಗೆ ಬಂದರು. ಸಂಜೆ ಹೊತ್ತು… +“ಇಲ್ಲಿ ಬಾಯಿಲ್ಲಿ…..ಲಗೂನ.” ಅಂತ ಹೆಂಡತಿ ತುಳಸಾಬಾಯಿನ ಕರೆದರು. ಆಕೆ ಗಾಬರಿಯಾದಳು. ಮಾತಾಡಿಸೋದೆ ಅಪರೂಪವಾಗಿರೋ ಗಂಡ ಇಷ್ಟೊಂದು ಎತ್ತರದ ದನೀಲಿ ತನ್ನನ್ಯಾಕೆ ಕರೀತಾರೆ….? ತುಳಸಾಬಾಯಿ ಸಾತ್ವಿಕ ಹೆಣ್ಣುಮಗಳು. ಈ ಗಡಸುದನಿಯ ಕೂಗನ್ನು ಕೇಳಿ ನಡುಗಿದಳು. ಗಂಡನ ಮುಂದೆ ಮುಖ ಎತ್ತಿ ನಿಂತು ಮಾತಾಡುವ ಕಾಲವಲ್ಲ. ಕೋಪಿಷ್ಠ ಗಂಡ. ಏನು ಅನಾಹುತ ನಡೆದಿದೆಯೋ? ತನ್ನಿಂದೇನಾದರೂ ತಪ್ಪಾಯಿತೆ? ಊಟಕ್ಕೆ ಬಡಿಸುವಾಗ ಏನಾದರೂ ಅಪಚಾರವಾಯಿತೇ? ಮದ್ಯಾಹ್ನ ಚಹಾಪಾನಿ ಕೊಡುವಾಗ ಏನಾದರೂ ಅಪಚಾರವಾಯಿತೇ? ಇನ್ನೂ ಮಕ್ಕಳಾಗಿಲ್ಲ. ಚಿಕ್ಕ ವಯಸ್ಸು. ಮೃದುವಾಗಿ ಮಾತಾಡಿಸಬೇಕಾದ ಕಾಲದಲ್ಲಿ ಹೀಗೇಕೆ ಕೆಂಡಕಾರುತ್ತಿದ್ದಾರೆ? ಹೆದರಿಹೋದಳು ತುಳಸಾಬಾಯಿ. +“ಕರೆದ್ರಲ್ಲಾ….ಏನಾರ ಬೇಕಾಗಿತ್ತೇನು?” ಮೆಲ್ಲಗೆ ಕೇಳಿದಳು. +“….ನೋಡಿಲ್ಲೆ….ಲಗೂನ ಪೆಠಾರಿ ಬೀಗ ತಗದು ನಿನಗೇ ಅಂತ ನಮ್ಮ ಮನ್ಯಾಗ ಏನೇನು ಒಡವಿ ವಸ್ತ್ರ ಅದೆ. ಎಲ್ಲಾ ತೆಗಿ….” +“ಯಾಕೆ….ಏನಾಗಿದೆ?” +“ಹೇಳಿದಷ್ಟು ಮಾಡು….ನನ್ನನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಬ್ಯಾಡ….” +“….ಆಗಲ್ರಿ….”ಅಂದಾಕೆ ನೆಟ್ಟಿಗೆ ಒಳಕೋಣೆಗೆ ಹೋಗಿ, ಪೆಠಾರಿ ತೆಗೆದು ತನ್ನ ಹಿಂದೆ ಬಂದು ನಿಂತಿದ್ದ ಗಂಡನನ್ನು ನೋಡುತ್ತ ಹಿಂದೆ ಸರಿದಳು. ರಾಮಣ್ಣ ನೋಡಿದ….ಹೆಂಡತಿ ಕಡೆ ತಿರುಗಿ “ನೋಡು…ಇಲ್ಲಿ ಎಷ್ಟು ಒಡವೆ ಅದ ಅಷ್ಟನ್ನೂ ಮೈಮೇಲೆ ಹಾಕ್ಕೊಂಡು, ಬೇರೆ ಜರತಾರಿ ಶೀರಿ ಉಟ್ಕೊಂಡು ಬಾ….ಲಗೂನ….” +“ಅಲ್ರೀ, ಎಲ್ಲಾ ಒಮ್ಮೆಲೆ ಹಾಕ್ಕೊಂಡು ಎಲ್ಲಿಗೆ ಹೋಗೂದ್ರಿ…. ಒಂದೊಂದು ಒಡವಿ ನಾಕು ಐದು ತರಹದ್ದು ಅವೆ….ಎಲ್ಲಾ ಹಾಕ್ಕೋ ಬೇಕಂದ್ರ ಮೈಮ್ಯಾಗ ಜಾಗನಾರ ಬೇಕಲ್ಲ, ಹುಚ್ಚಿ ಅಂತಾರೆ ನನ್ನ…” +“ಅದರ ಉಸಾಬರಿ ನಿನಗ್ಯಾಕ?…..ಹೇಳಿದಷ್ಟು ಮಾಡು….” ಗಡುಸಾಗಿ ಹೇಳಿದ ರಾಮಣ್ಣ. +“…..ಹಾಂಗೇ ಆಗಲೇಳ್ರೀ……ಹಾಕ್ಕೊಂಡು ಬರ್‍ತೇನಿ….ಅನಕಾ….ಹೊರಗೆ ಹಜಾರದಾಗಿರ್ರೀ….” +ತುಳಸಾಬಾಯಿ ಜರತಾರಿ ಸೀರೆ ಉಟ್ಟು, ಇದ್ದಬದ್ದ ಒಡವೆಗಳನ್ನೆಲ್ಲಾ ಹೇರಿಕೊಂಡು ಹೊರಗೆ ಬಂದಳು. ಹೆಣ್ಣುಮಗಳು ಬಂಗಾರದ ಭಾರದಿಂದ ಬಗ್ಗಿ ಹೋಗಿರಬೇಕೆಂಬ ಭಾವನೆ ಬರುವ ಹಾಗೆ ನಿಧಾನವಾಗಿ ನಡೆಯುತ್ತ, ಹೆದರುತ್ತ, ಮುಖದ ಮೇಲಿನ ಬೆವರಿನ ಹನಿಗಳನ್ನು ಒರೆಸಿ ರಾಮಣ್ಣನ ಮುಂದೆ ನಿಂತಳು….ಈಗ ರಾಮಣ್ಣ ಹೆಂಡತಿಯನ್ನು ಅದುವರೆಗೂ ನೋಡಿರಲಿಲ್ಲವೋ ಎಂಬಂತೆ ಕಣ್ತುಂಬ ನೋಡುತ್ತ ನಿಂತರು. ಜಗ ಜಗ ಹೊಳೆಯುವ ಒಡವೆ ವಸ್ತ್ರಾಭರಣ ಭೂಷಿತೆ ಹೆಂಡತಿಯನ್ನು. ರಾಮಣ್ಣನ ಮುಖದ ಮೇಲೆ ಸಮಾಧಾನದ ಸಣ್ಣ ನಗು ಮಿನುಗಿತು. +“ಸರಿ, ಆತು ನೀನು ಹೋಗು…..” ಅಂದರು. ಗಂಡನ ಈ ವಿಚಿತ್ರ ವರ್ತನೆಯಿಂದ ವಿಹ್ವಲಳಾದ ಹೆಂದತಿ ಕಾರಣ ಕೇಳಲು ಅಂಜಿದಳು. +ಆದರೆ ರಾಮಣ್ಣನಿಗೆ ಹೆಂಡತಿಯ ಕಡೆ ನೆಟ್ಟಿದ್ದ ದೃಷ್ಟಿ ತೆಗೆಯುವುದು ಕಷ್ಟವಾಯಿತೇನೋ ! ನಮ್ಮಜ್ಜಿ ಆಗಿನ ಕಾಲದ ದೊಡ್ಡ ಅಂಚಿನ ಜರತಾರಿ ಸೀರೆ ಉಟ್ಟು, ಬರೀ ಜರತಾರೀನೇ ತುಂಬಿರುತ್ತಿದ್ದ ಆ ಸೀರೆಯ ಸೆರಗನ್ನು ತಲೆಯ ಮೇಲೆ ಅರ್ಧಕ್ಕೆ ಎಳೆದುಕೊಂಡು, ಮನೆತನದ ಬಂಗಾರದ ನಗನಾಣ್ಯಗಳನ್ನೆಲ್ಲಾ ಧರಿಸಿ ನಿಂತಿದ್ದರೆ ಪ್ರಾಯಶಃ ಒಂದು ಚಿನ್ನದ ಬೊಂಬೆಯೇ ನಿಂತಿರಬಹುದೆಂಬ ಭ್ರಮೆ ಹುಟ್ಟಿರಬೇಕೆಂದು ನನ್ನ ಊಹೆ….ರಾಮಣ್ಣ ಮತ್ತೆ ಮತ್ತೆ ನೋಡುತ್ತ ನಿಂತರು. ತಮಗೆ ತಾವೇ ಸಂತೋಷಪಟ್ಟರು. ಪಕ್ಕನೆ ಊರಿನಲ್ಲಿ ಆಡಿದ್ದ ಅಡ್ಡ ಮಾತಿನ ನೆನಪಾಯಿತು. ಇದೆಲ್ಲದರ ಉದ್ದಿಶ್ಯದ ಹಿನ್ನೆಲೆ ಹೊಳೆಯುತ್ತಿದ್ದಂತೆ ಹೆಂಡತಿಗೆ “ನೀನು ಒಳಗೆ ಹೋಗು” ಎಂದು ಹೇಳಿ, ಮನೆಯ ಮುಂದಿನ ಜಗುಲಿಗೆ ಬಂದು ನಿಂತರು. ಅಬ್ಜಿಮಾನ ಅಹಂಕಾರವಾಗಿಬಿಟ್ಟಿದೆ. ಅಹಂಕಾರದಿಂದಲೇ ಅಲಂಕೃತನಾದ ರಾಮಣ್ಣ ಊರಿನ ರಸ್ತೆಯಲ್ಲಿ ಬಿರಬಿರನೆ ನಡೆದರು. ಅಡ್ಡ ಮಾತಾಡಿದ್ದರ ಬಗ್ಗೆ ಇವರಿಗೆ ರಿಪೋರ್ಟ್ ಮಾಡಿದ್ದವನ ಜೊತೆ ಮಾಡಿಕೊಂಡು ತನ್ನ ಐಶ್ವರ್ಯದ, ಶ್ರೀಮಂತಿಕೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ವ್ಯಕ್ತಿಯ ಮನೆ ಬಾಗಿಲಿಗೆ ಬಂದು ನಿಂತರು….(ವ್ಯಕ್ತಿಯ ಹೆಸರು ನನಗೆ ಗೊತ್ತಿಲ್ಲ) ಜೋರಾದ ದನಿಯಲ್ಲಿ….“ಬಾರಲೇ ಹೊರಗ….ನೀ ಏನ್ ಅಂದಿ ಅಂಬೋದರ ಖಬರ್ ಅದಽ ಏನೋ ನಿನಗ…ಬಾ ಹೊರಗ…” ಅಂತ ಕೂಗಿದರು. ವ್ಯಕ್ತಿ ಹೊರಗೆ ಬಂದ. ಅವನ ಸಮೀಪಕ್ಕೆ ಸರಿದು “ಬಾರೋ…. ತೋರಿಸ್ತೀನಿ…. ಏನಂದಿ ನೀನು… ನಿನ್ನ ಹೆಂಡ್ತಿ ಮೈಮೇಲಿನ ಒಡವಿಯಷ್ಟು ನನ್ನ ಶ್ರೀಮಂತಿಕಿ ಇಲ್ಲ ಅಂದ್ಯಲ್ಲೋ….ಬಾ ತೋರಿಸ್ತೀನಿ. ಊರಾಗಿನ ಎಲ್ಲಾ ಮಂದಿ ಐಶ್ವರ್ಯ ಸೇರಿಸಿದರೂ ನನ್ನ ಹೆಂಡ್ತಿ ಮೈಮ್ಯಾಲಿನ ಒಡವಿ ಕಿಮ್ಮತ್ತಿಗೆ ಕಡಿಮಿ….ಗೊತ್ತಾತ….” ಅಂದು ಹೊರಟೇ ಬಿಟ್ಟರು. ಕಿವಿ ಮಾತು ಮನೆಮಾತಾಗಿ, ಹಾದಿಬೀದಿ ರಂಪಕ್ಕೆ ಇಳಿಯಿತು. ಆದರೆ ರಾಮಣ್ಣನನ್ನು ಅಷ್ಟು ಹಗುರವಾಗಿ ನಡೆಸಿಕೊಂಡವರು ವಿಚಿತ್ರ ರೀತಿಯಲ್ಲಿ ಪಾಠ ಕಲಿತಂತಾಯಿತು. +ಮೂರು: ರಾಮಣ್ಣನಿಗೆ ತನಗೆ ಹೇಗೆ ಬೇಕೋ ಹಾಗೆ ನಡೆದುಕೊಳ್ಳುವ ಸ್ವಾತಂತ್ರ್ಯ ಬೇಕು. ತನಗೆ ತೋಚಿದ ಹಾಗೆ ನಡೆಯುವ ವ್ಯಕ್ತಿ. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು, ತನ್ನ ಸ್ವಾಭಿಮಾನಕ್ಕೂ ಯಾರೂ ಪಿನ್ನು ಚುಚ್ಚಬಾರದು…. ಇವೆರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅವರಿಗೂ ಕಷ್ಟವಾಗಿ, ಇತರರಿಗೂ ಕಷ್ಟವಾಯಿತು. +ನಮ್ಮ ಪೂರ್ವಿಕರ ಮನೆ ಅತಿಥಿಗಳಿಗೆ ಒಂದು ಅನ್ನಛತ್ರ….ಊರಿಗೆ ಬಂದವರು, ಅವರು ಯಾವುದೇ ಕೆಲಸಕ್ಕೆ ಬಂದಿರಲಿ, ನೇರವಾಗಿ ನಾಯಕರ ಮನೆಗೆ ಬರಬಹುದು. ಸ್ನಾನ ಮಾಡಿ, ನಡುಮನೆಯ ಗಳದ ಮೇಲೆ ಸಾಲುಸಾಲಾಗಿ ಹರಡಿ ಹಾಕಿರುತ್ತಿದ್ದ ಪಂಚೆ-ಮೇಲುವಸ್ತ್ರ ಎಳೆದುಕೊಂಡು ಊಟದ ಪಂಕ್ತಿಯಲ್ಲಿ ಕುಳಿತು ಊಟಮಾಡಿ ಹೋಗಬಹುದಾಗಿತ್ತು. ಯಾರು ಯಾತಕ್ಕೆ ಬಂದಿದ್ದಾರೆ, ಅವರು ಇನ್ನೆಷ್ಟು ದಿನ ಊರಿನಲ್ಲಿರುತ್ತಾರೆ, ಬಂದಿರುವ ಉದ್ದಿಶ್ಯವೇನು-ಎಂಬುದನ್ನು ಯಾರೂ ಕೇಳುವಂತಿಲ್ಲ. ಇಂಥ ಒಂದು ದಿನ ಹತ್ತಿಪ್ಪತ್ತು ಮಂದಿ ಅತಿಥಿಗಳು ಊಟಕ್ಕೆ ಕುಳಿತಿದ್ದಾರೆ….ಹೊತ್ತಾಯಿತೆಂದು ಬಡಿಸಲು ಪ್ರಾರಂಭವಾಗಿದೆ. ರಾಮಣ್ಣ ಮನೆಯಲ್ಲಿಲ್ಲ….ಅವರನ್ನು ಕೂಡಲೇ ಊಟಕ್ಕೆ ಬರುವಂತೆ ತಿಳಿಸಲು ಆಳನ್ನು ಕಳಿಸಿದ್ದಾರೆ….ಅವನಾದರೂ ರಾಮಣ್ಣ ಎಲ್ಲಿ ಅಂತ ಹುಡುಕಬೇಕು? ಮನೆಯ ಹತ್ತಿರದ ದೇವಸ್ಥಾನದ ಹಜಾರದಲ್ಲಿ ನೋಡಿದ್ದಾಯಿತು. ಪಕ್ಕದ ಮರದಡಿಯ ಕಟ್ಟೆಯ ಮೇಲೆ ಕುಳಿತು ಸ್ನೇಹಿತರೊಡನೆ ಹರಟುತ್ತಿರಬಹುದೆಂಡು ಅಲ್ಲಿಗೂ ಹೋಗಿಬಂದಾಯಿತು. ಎಲ್ಲೂ ರಾಮಣ್ಣ ಕಾಣಲಿಲ್ಲ. ಊರಾಚೆಯ ಹೊಲದ ಅಂಚಿನಲ್ಲಿ ನಿಂತು ಯಾರದೋ ತಗಾದೆಯ ಬಗ್ಗೆ ಚರ್ಚಿಸುತ್ತಾ ನಿಂತಿದ್ದಾರೆ. ಆಳು ಅಲ್ಲಿಗೂ ಹೋದ….ಅತಿಥಿಗಳು ಕಾಯುತ್ತಿದ್ದಾರೆ, ಬರಬೇಕೆಂದು ತಿಳಿಸಿದ… ರಾಮಣ್ಣ ಮನೆಯ ಕಡೆ ಧಾವಿಸಿದ. ಅವರು ಮನೆಯ ಒಳಗಡೇ ಬಂದು, ಕೈಕಾಲು ತೊಳೆದು ಬಟ್ಟೆ ಬದಲಾಯಿಸಿ ಊಟದ ಮನೆಗೆ ಬಂದು ನೋಡುತ್ತಾರೆ. ಕಾಲ ಮೀರಿ ಹೋಗಿತ್ತು. ಅತಿಥಿಗಳು ಊಟ ಪ್ರಾರಂಭ ಮಾಡಲು ಯಾರೋ ಹುಕುಂ ಕೊಟ್ಟಾಗಿದೆ. ರಾಮಣ್ಣನ ಊಟದ ಸ್ಥಳ ಪಂಕ್ತಿಯ ಮೊದಲನೆಯದು. ಬಂದು ನೋಡುತ್ತಾರೆ ಈಗಾಗಲೇ ಊಟ ಪ್ರಾರಂಭವಾಗಿದೆ. ಅದಷ್ಟೇ ಅವರಿಗೆ ಸಾಕಾಯಿತಿ. ಸ್ವಾಭಿಮಾನದ ಪ್ರಶ್ನೆ! ಮನೆಯ ಯಜಮಾನ ತಾನು ಇನ್ನೂ ಕುಳಿತಿಲ್ಲ. ಊಟ ಪ್ರಾರಂಭವಾಗಿದೆ! ಅಷ್ಟಕ್ಕೆ ಬಿಡಬಾರದು! ರಾಮಣ್ಣನಿಗೆ ವಿನಾಕಾರಣ ಸಿಟ್ಟುಬಂದು, ಅದು ನೆತ್ತಿಗೇರಿ ಮುಖ ಕೆಂಪಾಗಿ, ಮೂಗು ಅರಳಿ ತನ್ನ ಸ್ಥಾನದಲ್ಲಿದ್ದ ದೊಡ್ಡ ಬೆಳ್ಳಿಯ ತಟ್ಟೆಯನ್ನು ದೂರಕ್ಕೆ ಎಸೆದುಬಿಟ್ಟರಂತೆ….ಅತಿಥಿಗಳು ಕಂಗಾಲಾದರು….ಮನೆಯವರಿಗೆಲ್ಲಾ ಮುಜುಗರವಾಯಿತು. ಹೆಂಡತಿತುಳಸಾಬಾಯಿ ಗಂಡನನ್ನು ಸಮಾಧಾನಪಡಿಸುವ ಪ್ರಯತ್ನಗಳೆಲ್ಲಾ ವಿಫಲವಾದವು. ಊಟ ನಡೆದೇ ಇದೆ. ಸಿಟ್ಟಿನಿಂದ ಸಿಡಿಯುತ್ತಿದ್ದ ರಾಮಣ್ಣ ಧಡ ಧಡ ಊಟದ ಮನೆಬಿಟ್ಟು ಹೊರಟುಹೋದವರು ಎಷ್ಟೋ ದಿನಗಳ ಮೇಲೆ ಊರಿಗೆ ವಾಪಸ್ಸಾದರಂತೆ ಎಲ್ಲಿಗೆ ಹೋಗಿದ್ದರೋ ಏನು ಮಾಡುತ್ತಿದ್ದರೋ ಯಾರಿಗೆ ಗೊತ್ತು. +ಇಷ್ಟೆಲ್ಲಾ ಐಶ್ವರ್ಯವನ್ನು ರಾಮಣ್ಣ ಸರಿಯಾಗಿ ನಿಭಾಯಿಸಿದರೆ? ಊರಿಗೊಬ್ಬ ಹಾಡುಗಾರ ಬಂದರೆ ಅವನ ಗಾಯನವನ್ನು ಎಷ್ಟು ದಿನ ಅಂದರೆ ಅಷ್ಟು ದಿನ ಕೇಳುತ್ತ ಕೂಡುವುದು. ನಾಟಕದವರು ಬಂದರೆ ಅವರು ಆಡುವ ನಾಟಕಗಳನ್ನು ನೋಡುತ್ತಾ ಸಂತೋಷದಿಂದ ಕಾಲ ಕಳೆದುಬಿಡುವುದು. ಹರಿಕಥೆದಾಸರು ಬಂದರೆ ತಮ್ಮ ಮನೆಯಲ್ಲಿ ಅವರನ್ನು ಉಳಿಸಿಕೊಂಡು ತಿಂಗಳುಗಟ್ಟಲೆ ಹರಿಕಥಾಶ್ರವಣದಲ್ಲಿ ಮಗ್ನರಾಗಿ ಬಿಡುವುದು….ಏನಿಲ್ಲವೆಂದರೂ ಊರಿನ ಸ್ನೇಹಿತರನ್ನು ಕೂಡಿಸಿಕೊಂಡು ಗಂಟೆಗಟ್ಟಲೆ ಹರಟೆ ಹೊಡೆಯುವುದು…. +ನಿತ್ಯ ವ್ಯವಹಾರದ ಜಂಜಾಟದಿಂದ ದೂರವಾಗಿ ಬಹುಶಃ ಬಡ್ಡಿ ವ್ಯವಹಾರ-ವ್ಯಾಪಾರ ಕುಂಠಿತವಾಗಿರಬೇಕು…ಇದರ ಮೇಲೆ ಹುಟ್ಟಿದ ಒಂದೆರಡು ಮಕ್ಕಳು ಸತ್ತು ಹೋದುದರ ಚಿಂತೆ….ಕೊನೆಗೂ ಹುಟ್ಟಿದ ಗಂಡುಮಗು ಉಳಿಯಿತು. +ಕಲೋನ್ನತಿಗಾಗಿ-ಹೆಸರಿಗೆ ಅನ್ವರ್ಥವಾಗಿ +ಅವರೇ ನನ್ನ ತಂದೆ ಗುಂಡಣ್ಣ ನಾಯಕ್. +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […] +– ನೊಮ್ ಚಾಮ್ಸ್‌ಕಿ (ಕನ್ನಡಕ್ಕೆ ಪ್ರೀತಿ ನಾಗರಾಜ್) ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ […] +ಈ ಶೀರ್ಷಿಕೆಯೇ ಒಂದರ್ಥದಲ್ಲಿ ನನಗೆ ಅಸಂಬದ್ಧವಾಗಿ ಕಾಣಿಸಿದರೂ ಅದನ್ನೆ ಉಳಿಸಿಕೊಳ್ಳಲು ಬಯಸುತ್ತಿರಲು ಕಾರಣ, ಸಂಶೋಧನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಾನು ಆ ಶಿಸ್ತಿನಲ್ಲಿ ಶಿಕ್ಷಣವನ್ನು ನನಗೆ ನೀಡಿದ ಹಿರಿಯ ಸಂಶೋಧಕರ, ಅವರ ಒಡನಾಟದ, ಅವರ ಬರಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_240.txt b/Kannada Sahitya/article_240.txt new file mode 100644 index 0000000000000000000000000000000000000000..8467ad36a75f5e76b5d538caa780076696b572d6 --- /dev/null +++ b/Kannada Sahitya/article_240.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವರ್ಣ ಸುಶೋಭಿತ +ಜಮಖಾನೆಯನ್ನು +ನೇಯುವ ವ್ಯಕ್ತಿಯ ಭಾಗ್ಯ +ಕಗ್ಗತ್ತಲಿನ ನೂಲಿನಿಂದ +ಹಾಸುಹೊಕ್ಕಾಗಿರುವುದು +ವಿಧಿ ನಿಯಮವೆ? +***** +ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. ***** +ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. ***** +ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_241.txt b/Kannada Sahitya/article_241.txt new file mode 100644 index 0000000000000000000000000000000000000000..7d800fe213ded2283fae517446a998e5caa1e343 --- /dev/null +++ b/Kannada Sahitya/article_241.txt @@ -0,0 +1,272 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೪ – +ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುರುಬರಹಳ್ಳಿಯಿಂದ ಎರಡು ಗಾಡಿ ಸೋಗೆಯ ಜೊತೆಗೆ ಇಬ್ಬರು ಗಂಡಾಳುಗಳು ಬಂದರು. ಅವರು ಈ ಬಿಟ್ಟ ಊರಿನೊಳಗೆ ಬರಲಿಲ್ಲ. ರಾಮಸಂದ್ರದ ಕುಳವಾಡಿ ಶ್ಯಾನುಭೋಗರ ಮನೆಯ ಮುಂದಿದ್ದ ಬಿದಿರುಗಳನ್ನು ಗಾಡಿಗೆ ತುಂಬಿ ತಂದ. ಅಮ್ಮನ ಗುಡಿಯ ಹಿಂಭಾಗದ ತೋಪಿನ ಹತ್ತಿರದ ಬಯಲಿನಲ್ಲಿ ಮಧ್ಯಾಹ್ನದ ಹೊತ್ತಿಗೆ ಒಂದು ಶೆಡ್ಡು ತಯಾರಾಯಿತು. ಮೇಷ್ಟರೇ ಏರಿ ಮೇಲಿನ ಗುಡಿಗೆ ಬಂದು ಇವರ ಮನೆಯ ಬೀಗದ ಕೈ ಒಯ್ದು ಪಾತ್ರೆ ಪರಟಿ ದಿನಸಿ ಬಟ್ಟೆ ಬರೆ ಮೊದಲಾಗಿ ತಮಗೆ ತಿಳಿದ ಸಮಾನುಗಳನ್ನು ಗಾಡಿಗೆ ತುಂಬಿ ಕಳಿಸಿದರು. ಆ ದಿನ ಸಂಜೆಯ ಒಳಗೆ ಊರು ಪೂರ್ತಿಯಾಗಿ ಖಾಲಿಯಾಗುತ್ತಿತ್ತು. +ವಿಶ್ವನಿಗೆ ಜ್ವರ ಒಂದೇಸಮನಾಗಿತ್ತು. ಆದರೆ ಗೆಡ್ಡೆಗಳು ಕಾಣಿಸಿಕೊಳ್ಳಲಿಲ್ಲ. ಪಾರ್ವತಿ ರಾಮಣ್ಣರಿಗೆ, ಜ್ವರ ಬಂದ ಇಪ್ಪತ್ತುನಾಲ್ಕು ಗಂಟೆಯೊಳಗೇ ಗೆಡ್ಡೆ ಹುಟ್ಟಿತ್ತು. ವಿಶ್ವನಿಗೆ ಜ್ವರ ಬಂದು ಎರಡು ದಿನವಾಗಿದೆ. ಆದರೂ ಗೆಡ್ಡೆ ಕಂಡಿಲ್ಲ. ಅಯ್ಯನವರು ಕುಡಿಸುತ್ತಿರುವ ಔಷಧಿಯ ಪರಿಣಾಮವಿರಬಹುದು. ಅಥವಾ ಜ್ವರ ಕಂಡಮೇಲೆ ನಿಧಾನಮಾಡದೆ ಹೊಸ ಸಾವು ಇಷ್ಟಕ್ಕೇ ನಿಲ್ಲುತ್ತದೆಂದು ಹೇಳಬಲ್ಲವರಿಲ್ಲ. ಅಯ್ಯನವರು ಹೇಳುತ್ತಿದ್ದರು: ‘ನಂಜವ್ವಾ, ಇದು ಈಸ್ವರದೇವರ ಗುಡಿ. ಇದರೊಳಕ್ಕೆ ಮಾರಿ ಹ್ಯಂಗೆ ಬಂದಾಳು? ಅದ್ಕೇ ವಿಶ್ವಣ್ಣಂಗೆ ಗೆಡ್ಡೆ ಬಂದಿಲ್ಲ. ನೀನು ಹ್ಯದರ್‌ಬ್ಯಾಡ.’ +ನಂಜಮ್ಮ ಒಂದು ಮಾತೂ ಆಡಲಿಲ್ಲ. ಕಲ್ಲುತುಂಡಿನಂತೆ ಸುಮ್ಮನೆ ದೂರದಲ್ಲಿ ಕೂತು ವಿಶ್ವನನ್ನೇ ನೋಡುತ್ತಾ, ಬೆಳಕು ಹರಿಯುವತನಕ ಕಣ್ಣು ಮುಚ್ಚದೆ ಕುಳಿತಿದ್ದಳು. ಬೆಳಗಾಗುವ ವೇಳೆಗೆ ಅಯ್ಯನವರು ಆಯಾಸದಿಂದ ಬಳಲಿಹೋಗಿದ್ದರು. ಇಡೀ ನೆನ್ನೆ ಮತ್ತು ಮೊನ್ನೆ ಎಲ್ಲ, ಅವರ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಮೊನ್ನೆ ರಾತ್ರಿ ಗಾಡಿಯ ಪ್ರಯಾಣದಲ್ಲಿ ಕಳೆದ ಸ್ವಲ್ಪ ನಿದ್ರೆ ಬಿಟ್ಟರೆ ಅವರು ಮತ್ತೆ ಕಣ್ಣು ಮುಚ್ಚಿರಲಿಲ್ಲ. ಅವರ ಸರಿಯಾದ ವಯಸ್ಸು ಈ ಊರಿನಲ್ಲಿ ಯಾರಿಗೂ ಗೊತಿಲ್ಲ. ಆದರೂ ಎಪ್ಪತ್ತೈದನ್ನು ಮೀರಿರುವುದರಲ್ಲಿ ಸಂದೇಹವಿಲ್ಲ. ಶರೀರ ಎರಡು ದಿನದಿಂದ ಒಂದೇಸಮನೆ ದುಡಿದಿತ್ತು. ಕಂಬವನ್ನೊರಗಿ ಕುಳಿತಿದ್ದ ಅವರು, ತಮಗೇ ತಿಳಿಯದಂತೆ ನೆಲಕ್ಕೆ ಉರುಟಿಕೊಂಡರು. ಹಾಗೆಯೇ ನಿದ್ದೆ ಹೋದರು. ನರಸಿ ಮಾತನಾಡಿದಳು: ‘ಅವ್ವಾರೇ, ನಂಗೆ ದೇವ್ರು ಮಕ್ಳು ಕೊಡ್ಳಿಲ್ಲ. ಮಕ್ಳಿಲ್ಲ ಅಂತ ಚಿಂತೆ ಮಾಡ್ತಿದ್ದೆ. ಮಕ್ಳಾದ್ರೂ ಚಿಂತೆಯಾಯ್ತದೆ.’ +ನಂಜಮ್ಮ ಸುಮ್ಮನೆ ಕೂತಿದ್ದಳು. ಅಷ್ಟರಲ್ಲಿ ಮೇಷ್ಟರು ಬಂದು, ಅಯ್ಯನವರ ಹತ್ತಿರವೇ ಇದ್ದ ನಂಜಮ್ಮನ ಮನೆಯ ಬೀಗದ ಕೈಯನ್ನು ಒಯ್ದರು. ನಂಜಮ್ಮ ಒಂದೇ ಸಮನೆ ಕೂತಿದ್ದಳು. ಮತ್ತೆ ಮಾತಾಡಲು ನರಸಿಗೂ ತಿಳಿಯಲಿಲ್ಲ. ಆದರೆ ಅವಳು ತಪ್ಪದೆ ಮಗುವಿಗೆ ಔಷಧಿ ಹಾಕುತ್ತಿದ್ದಳು. ಅದರ ತಲೆ ಅವಳ ತೊಡೆಯ ಮೇಲೆಯೇ ಇತ್ತು. ಸ್ವಲ್ಪ ಹೊತ್ತಿನಲ್ಲಿ ಮೇಷ್ಟರ ಹೆಂಡತಿ ಬಂದರು. ಅವರು ಕಣ್ಣಿನಲ್ಲಿ ನೀರು ಹಾಕಿಕೊಂಡರೂ ನಂಜಮ್ಮ ಅಳಲಿಲ್ಲ. +‘ಏಳಿ ನಮ್ಮ ಶೆಡ್ಡಿಗೆ ಹೋಗಾಣ. ಮಡಿ ಉಟ್ಕಳಿ. ಒಂದಿಷ್ಟು ಉಪ್ಪಿಟ್ಟು ಕೆದಕಿದೀನಿ. ನೀವು ನೆನ್ನೆ ಎಲ್ಲ ಏನೂ ತಿಂದಿಲ್ಲ.’ +ತಾನು ಬರುವುದಿಲ್ಲವೆಂದು ನಂಜಮ್ಮ ತಲೆಯಾಡಿಸಿದಳು. ಮೇಷ್ಟರ ಹೆಂಡತಿ ಸುಮ್ಮನೆ ಹಿಂತಿರುಗಿ ಹೋಗಿ, ತಾವೇ ಒಂದು ಚರುಕಿನಲ್ಲಿ ಉಪ್ಪಿಟ್ಟು ತಂದರು. ನಂಜಮ್ಮ ಮುಖ ತೊಳೆಯಲೂ ಸಹ ಮೆಲೆ ಏಳಲಿಲ್ಲ. ನರಸಿ ಕೇಳಿದಳು: ‘ಚಿನ್ನಯ್ಯಾರು ಎಲ್ಲಿ?’ +‘ರಾತ್ರಿ ಮಶಾಣದಿಂದ ಬಂದಮೇಲೆ ನಮ್ಮ ಶೆಡ್ಡಿನ ಹೊರಗೆ ಗೋಣೀಚೀಲ ಹಾಕ್ಕಂಡು ಮಲೀಕಂಡ್ರು. ಈಗ ತಾನೇ ಅವರಿಗೆ ಉಪ್ಪಿಟ್ಟು ಕೊಟ್ಟು ಬಂದೆ.’ +‘ಮಗ ಇಲ್ಲೈತೆ ಅಂತ ಅವ್ರಿಗೆ ಗೊತ್ತಿಲ್ವುರಾ?’ +‘ಗೊತ್ತಿದೆ. ನಮ್ಮನೆಯೋರೇ ಹೇಳಿದ್ರು. ಈಗ ಬರ್‌ಭೌದು.’ +‘ಅಮ್ಮಾರೇ, ಈ ನರಸಿ ಕೆಟ್ಟ ಮಾತಡ್ತಾಳೆ ಅನ್‌ಬ್ಯಾಡ್ರಿ. ನನ್ನಂತ ಸೂಳೆಗೆ ಮಕ್ಕಳಾದ್ರೆ ಅವುಕ್ಕೆ ಕಷ್ಟ ಸುಖ ಅಂದ್ರೆ ಯಾವನೂ ಬರಾಕಿಲ್ಲ. ಅವು ಯಾರಿಗೆ ಉಟ್ಟುದ್ವು ಅಂತ ಯಾವನ್ಗೂ ಗೊತ್ತಿಲ್‌ದ ಮ್ಯಾಲೆ ಯಾಕೆ ಬತ್ತಾನೆ? ಈ ಚಿನ್ನಯ್ಯ ತನ್ನ ಹ್ವಟ್ಟೇಲಿ ಉಟ್ಟಿದ ಮಗಾ ನೋಡಾಕೆ ಬರ್ದೆ ಉಪ್ಪಿಟ್ಟು ತಿಂತವ್ನಾ?’ +ಮಾತನಾಡಬೇಡವೆಂದು ನಂಜಮ್ಮ ನರಸಿಗೆ ಕೈಸನ್ನೆ ಮಾಡಿದಳು. ಮೇಷ್ಟರ ಹೆಂಡತಿ ನಂಜಮ್ಮನಿಗೆ ಹೇಳಿದರು: ‘ನೋಡಿ, ಈ ಗ್ರಾಮದೇವತೆ ಮಾರಮ್ಮ, ಸುಂಕ್ಲಮ್ಮ, ಇವೆಲ್ಲ ಒಳ್ಳೇವಲ್ಲ. ಇವು ಹಾಳು ಮಾಡ್ತವೆಯೇ ಹೊರತು ಕಾಪಾಡೂ ದೇವರಲ್ಲ. ಎಂಥ ಕಷ್ಟವಾದ್ರೂ ಶೃಂಗೇರಿ ಶಾರದಮ್ನೋರು ಪರಿಹಾರ ಮಾಡ್ತಾರೆ. ವಿಶ್ವನಿಗೆ ಹುಶಾರಾದ್ರೆ ಈ ಸಲ ನವರಾತ್ರೀಗೆ ನಿನ್ನ ಸನ್ನಿಧಿಗೆ ಬಂದು ಕುಂಕುಮಾರ್ಚನೆ ಮಾಡುಸ್ತೀನಿ ಅಂತ ಹರಕೆ ಕಟ್ಕಳಿ. ಖಂಡಿತಾ ಹುಶಾರಾಗುತ್ತೆ. ನಿಮಗೆ ಸೂತಕ. ನೀವೇನೂ ಮಾಡ್‌ಬ್ಯಾಡಿ. ನಾನು ಮನೆಗೆ ಹೋಗಿ ಮಡಿಸೀರೆ ಉಟ್ಕಂಡು ನಿಮ್ಮ ಹೆಸರಿನಲ್ಲಿ ನಾಲ್ಕಾಣೆ ಪಾವ್‌ಲಿ ಕಟ್ಟಿ ಇಡ್ತೀನಿ.’ +ಬೇಡವೆಂದು ನಂಜಮ್ಮ ತಲೆ ಅಲ್ಲಾಡಿಸಿದಳು. +‘ಅದ್ಯಾಕೆ ಹಾಗಂತೀರಿ?’ +‘ಯಾವ ದೇವರೂ ಏನೂ ಮಾಡುಲ್ಲ. ದೇವರು ಗೀವರೆಲ್ಲ ಸುಳ್ಳು. ಆಯುಸ್ಸಿದ್ರೆ ಬದುಕುತ್ತೆ. ಇಲ್‌ದಿದ್ರೆ ಇಲ್ಲ. +ನರಸಿ ಎಂದಳು: ‘ನಂಜವ್ವಾರೇ, ಕ್ವಾಪದಲ್ಲಿ ಹಂಗನ್‌ಬ್ಯಾಡಿ. ತಪ್ಪಾಯ್ತು ಅನ್ನಿ. ಹರಕೆ ಕಟ್ಸಿ.’ +‘ತಪ್ಪೂ ಇಲ್ಲ ಗಿಪ್ಪೂ ಇಲ್ಲ. ಯಾವ ದೇವರ ಹರಕೆಯೂ ಬ್ಯಾಡ’-ನಂಜಮ್ಮ ಖಂಡಿತವಾಗಿ ಅಂದುಬಿಟ್ಟಳು. ಮತ್ತೊಮ್ಮೆ ಅವರಿಬ್ಬರೂ ಬಲವಂತ ಮಾಡಿದಮೇಲೆ-‘ನಿಮಗೆ ತಿಳಿದ ಹಾಗೆ ಮಾಡಿ’ ಎಂದಳು. ಮೇಷ್ಟರ ಹೆಂಡತಿ ಹೊರಟುಹೋದರು. ಅಷ್ಟರಲ್ಲಿ ಗುಡಿಯ ಹತ್ತಿರಕ್ಕೆ ಒಬ್ಬೊಬ್ಬರಾಗಿ ಎಷ್ಟೋ ಜನ ಊರಿನವರು ಬರತೊಡಗಿದರು. ಎಲ್ಲರಿಗೂ ಅವರವರ ಶೆಡ್ಡನ್ನು ವ್ಯವಸ್ಥೆಗೊಳಿಸಿಕೊಳ್ಳುವ ಕೆಲಸ. ಆದರೆ ನಂಜಮ್ಮನಿಗೆ ಸಮಾಧಾನ ಹೇಳಬಂದವರು ಪೇಚಾಡಿದರು. ಪಾರ್ವತಿಯ ರೂಪ ಗುಣಗಳನ್ನು ಹೊಗಳಿದರು. ರಾಮಣ್ಣನ ಬುದ್ಧಿಶಕ್ತಿಯನ್ನು ಕೊಂಡಾಡಿದರು. ಬದುಕಿದ್ದರೆ ಮುಂದೆ ಅಮಲ್ದಾರಿ ಮಾಡುವ ಬುದ್ಧಿ ಇದ್ದ ಹುಡುಗ, ಇಂಥ ಬುದ್ಧಿವಂತರು ಈ ಪ್ರಪಂಚದಲ್ಲಿರಬ್ಯಾಡ್‌ದು, ತನ್ನ ತಾವ್‌ಲೇ ಇರ್‌ಬೇಕು ಅಂತ ಸಿವ ಎಳ್ಕಂಡ್‌ಬುಟ್ಟ. ಅಸೀ ಮೈಲಿ ಪಾರ್ವತಮ್ಮುನ್ನ ಹ್ವಸ ಸೀರೆ ಉಡಿಸಿ ಕರ್ಕಂಡ್ ಹ್ವಾಗ್‌ಬ್ಯಾಡ್‌ದಾಗಿತ್ತು. ಅಮ್ಮನ ಕಣ್ಣು ಮದ್ಲು ಆ ಉಡುಗೀಮ್ಯಾಲೇ ಬಿದ್ದುಬಿಡ್ತು-ಎಂದು ಎಲ್ಲರೂ ತಮಗೆ ತಿಳಿದಂತೆ ಮತನಾಡಿದರು. ಊರಿನಲ್ಲಿ ಇನ್ನೂ ಎಂಟು ಜನಕ್ಕೆ ಪ್ಲೇಗು ಆಗಿದೆಯಂತೆ. ನೆನ್ನೆ ರಾತ್ರಿಯೇ ನಾಲ್ಕು ಜನ, ಈ ದಿನ ಬೆಳಿಗ್ಗೆ ಇಬ್ಬರು ಸತ್ತರಂತೆ. ಊರ ಹೊರಗಿನ ದೇವಸ್ಥಾನದಲ್ಲಿದ್ದ ನಂಜಮ್ಮನಿಗಾಗಲಿ ನರಸಿಗಾಗಲಿ ಇದು ತಿಳಿದಿರಲಿಲ್ಲ. ಬಂದವರೆಲ್ಲ ಒಬ್ಬೊಬ್ಬರಾಗಿ ಹೋದರು. ಸರ್ವಕ್ಕ ಒಬ್ಬಳೇ ನಂಜಮ್ಮನ ಜೊತೆಗೆ ಉಳಿದಳು. +ನಂಜಮ್ಮ, ಸರ್ವಕ್ಕ, ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಆಗಿದ್ದ ಗೆಳತಿಯರು. ಸರ್ವಕ್ಕನೂ ವಯಸ್ಸಿಗೆಬಂದ ಮಗಳನ್ನು ಕಳೆದುಕೊಂಡವಳು. ತನ್ನ ಮಗಳ ಸಾವಿನ ಸಂಗಡವೇ ಅವಳಿಗೆ ನರಸಿಯ ನೆನಪಾಯಿತು. ಅದೇ ನರಸಿ ಈಗ ಇಲ್ಲಿ ಕೂತಿದಾಳೆ. ನಂಜಮ್ಮನವರ ಮಗ ಅವಳ ತೊಡೆಯ ಮೇಲಿದೆ. ಅದು ತನ್ನ ಮಗುವೇ ಅಲ್ಲವೇನೋ ಎಂಬಂತೆ ನಂಜಮ್ಮನವರು ದೂರ ಕೂತಿದ್ದಾರೆ. ನರಸಿ ಎಂದರೆ ಸರ್ವಕ್ಕನ ಮೈಕೈ ಎಲ್ಲ ಉರಿಯುತ್ತದೆ. ಉಳಿದ ಸಮಯದಲ್ಲಾಗಿದ್ದರೆ ಸರ್ವಕ್ಕ ಅವಳಿಗೆ ಕೆರದಲ್ಲಿ ಹೊಡೆಯುತ್ತಿದ್ದಳು. ಆದರೆ ಈಗ ಏನೂ ಅರ್ಥವಾಗದೆ ಸುಮ್ಮನೆ ಕುಳಿತುಬಿಟ್ಟಳು. ನಂಜಮ್ಮನನ್ನು ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ. ಏನಾದರೂ ಮಾತನಾಡಲೂ ತೋಚುತ್ತಿಲ್ಲ. +ಅಷ್ಟರಲ್ಲಿ ಮಗು ಗಟ್ಟಿಯಾಗಿ ಉಸಿರಾಡಲು ಪ್ರಾರಂಭಿಸಿತು. ಜ್ವರ ತುಂಬ ರೇಗಿದಂತೆ ಆಯಿತು. ‘ಅವ್ವಾರೇ, ಜ್ವರಕ್ಕೆ ನನ್ನ ತ್ವಡೆ ಎಲ್ಲಾ ಸುಡ್ತಾವೆ. ಮಗ ಗಟ್ಟಿಯಾಗಿ ಉಸುರು ಬಿಡ್ತೈತೆ. ನಂಗ್ ಹ್ಯದ್‌ರಿಕೆಯಾಯ್ತೈತೆ. ನೋಡಿ’-ನರಸಿ ಎಂದಳು. +‘ನಾನು ಕೈಯಿಂದ ಮುಟ್ಟುಲ್ಲ. ನೀವೇ ನೋಡಿ ಸರ್ವಕ್ಕ’-ನಂಜಮ್ಮ ಬಾಯಿಬಿಟ್ಟಳು. +ಸರ್ವಕ್ಕ ಹತ್ತಿರ ಹೋಗಿ ಮಗುವಿನ ಹೊದಿಕೆಯೊಳಗೆ ಕೈಯಿಟ್ಟು ನೋಡುತ್ತಾಳೆ: ಮೈ ಬೆವರುತ್ತಿತ್ತು. ಅವಳ ಅಂಗೈ ಸ್ಪಷ್ಟವಾಗಿ ಒದ್ದೆಯಾಯಿತು. ಇದರ ಅರ್ಥ ಅವಳಿಗೂ ತಿಳಿಯಲಿಲ್ಲ. ಸಮಾನ್ಯಸಮಯದಲ್ಲಾಗಿದ್ದರೆ ನಂಜಮ್ಮನಿಗೆ ತಿಳಿಯುತ್ತಿತ್ತೇನೋ. ಆದರೆ ಈಗ ಏನೂ ಗೊತ್ತಾಗುತ್ತಿಲ್ಲ. ನರಸಿ ಅಯ್ಯನವರನ್ನು ಕೂಗಿದಳು. ಅವರಿಗೆ ಗಾಢನಿದ್ರೆ. ಸರ್ವಕ್ಕನೇ ಅವರ ಭುಜ ಹಿಡಿದು ಅಲುಗಿಸಿದಮೇಲೆ ಎದ್ದುಕೂತರು. ಒಂದು ನಿಮಿಷ ಕಣ್ಣು ಹೊಸಕಿಕೊಂಡು ಸುತ್ತಮುತ್ತ ನೋಡಿದಮೇಲೆ ಇವರಿಗೆ ಸರ್ವಕ್ಕನ ಮಾತು ಅರ್ಥವಾಯಿತು. ಅವರೂ ಮಗುವಿನ ಎದೆಗೆ ಕೈಯಿಟ್ಟು ನೋಡಿ ಹೇಳಿದರು: ಮೈ ಬೆವರ್‌ತೈತೆ. ಜ್ವರ ಇಳಿಯಾಕೆ ಮುಂಚೆ ಹಿಂಗೇ ಆಗಾದು. ಗೆಡ್ಡೆ ಪಡ್ಡೆ ಬಂದಿಲ್ಲ. ನಂಜವ್ವಾ, ವಿಶ್ವಣ್ಣ ಬಚಾವಾದ, ಬಚಾವಾಯ್ತು ಜೀವ.’ +ನಂಜಮ್ಮ ಮೂಕಲಂತೆ ಮಗುವನ್ನು ನೋಡುತ್ತಲೇ ಕುಳಿತಿದ್ದಳು. ‘ಸದ್ಯ ಸಿವ ಕಣ್ ಬಿಟ್ಟು ನೋಡ್ದ’-ಸರ್ವಕ್ಕ ಎಂದಳು. ಮಗು ಹಾಗೆಯೇ ಬೆವರುತ್ತಿತ್ತು. ಸ್ವಲ್ಪ ಹೊತ್ತಿಗೆ ಜ್ವರ ಎಷ್ಟೋ ಕಡಿಮೆಯಾಯಿತು. ಅಷ್ಟರಲ್ಲಿ ರೇವಣ್ಣಶೆಟ್ಟಿ ಅಲ್ಲಿಗೆ ಬಂದ. ನಂಜಮ್ಮ ಇದುವರೆಗೆ ಒಂದು ಸಲವೂ ಅವನ ಕೈಲಿ ಮಾತನಾಡಿರಲಿಲ್ಲ. ಅವನೂ ನಂಜಮ್ಮನನ್ನು ನೇರವಾಗಿ ಮಾತನಾಡಿಸಿರಲಿಲ್ಲ. ಮಗುವಿನ ಮೈ ಬೆವರುತ್ತಿರುವುದನ್ನು ಕೇಳಿದ ಅವನೂ ಮೈ ಮುಟ್ಟಿ ನೋಡಿ, ‘ಬಚಾವಾಯ್ತು’ ಎಂದ. ‘ನಂಜಮ್ನೋರೇ, ಈ ಗ್ರಾಮಕ್ಕೇ ಬುದ್ಧಿ ಹೇಳೂ ತಿಳುವಳಿಕೆ ಇರೋರು ನೀವು. ನಿಮಗೆ ಯಾರು ಏನು ಸಮಾಧಾನ ಹೇಳ್‌ಭೌದು?’-ಎಂದು ತನಗೆ ತಿಳಿದಂತೆ ಮಾತನಾಡಿ ಹೆಂಡತಿಯ ಕಡೆಗೆ ತಿರುಗಿ, ‘ಅಯ್ನೋರಿಗೆ ಎಲ್ಡು ದಿನ್‌ದಿಂದ ಬಿನ್ನವಿಲ್ಲ ಅಂತ ಕಾಣ್ತೈತೆ. ಮನೆಗೆ ಹ್ವಾಗಿ ಮುದ್ದೆ ತ್ವಳಸ್ಕಂಡು ತಂದು ಮಡಗು’ ಎಂದು ಹೇಳಿ ಅವಳನ್ನು ಕರೆದುಕೊಂಡು ತಾನೂ ಮನೆಗೆ ಹೋದ. ಅಯ್ಯನವರು ಬಲವಂತ ಮಾಡಿ ನಂಜಮ್ಮನನ್ನು ಎಬ್ಬಿಸಿ ಮುಖ ತೊಳೆಸಿದರು. ಮೇಷ್ಟರ ಹೆಂಡತಿ ತಂದಿದ್ದ ಉಪ್ಪಿಟ್ಟು ಪಾತ್ರೆಯಲ್ಲೇ ಇತ್ತು. ‘ಇನ್ನು ವಿಶ್ವಣ್ಣನ ನಿಗಾ ನೀನು ತಗಾಬೇಕು. ಕೆಲ್ಸ ಮಾಡಾಕೆ ಸಗುತಿ ಇಲ್ದೆ ಇದ್ರೆ ಹ್ಯಂಗೆ? ನೀನ್ ತಿನ್ನವ್ವ’-ಎಂದರೂ ಅವಳು ಕೇಳಲಿಲ್ಲ. ಕೊನೆಗೆ ಅಯ್ಯನವರು ಗದರಿಸಿಕೊಂಡರು. ನರಸಿ ಬಲವಂತ ಮಾಡಿದಳು. ನಂಜಮ್ಮ ಒಂದು ಪಿಡಚೆ ಉಪ್ಪಿಟ್ಟು ತೆಗೆದು ಬಾಯಿಗಿಟ್ಟುಕೊಂಡು ನುಂಗಲಾರದೆ ಎದ್ದು ಹೋಗಿ ಉಗುಳಿ ಬಂದು ಪಾತ್ರೆಯನ್ನು ಅತ್ತ ಸರಿಸಿದಳು. ಅಯ್ಯನವರು ತಮ್ಮ ಸಾಮಾನಿನ ಮಧ್ಯದ ಒಂದು ಪುಟ್ಟ ಡಬ್ಬಿಯನ್ನು ಹುಡುಕಿ ತೆಗೆದು, ಅದರಲ್ಲಿದ್ದ ಎರಡು ಚಿಟಿಕೆ ಕಪ್ಪು ಬಣ್ಣದ ಪುಡಿಯನ್ನು ಹಿಡಿದು, ‘ಇದನ್ನ ಹೊಟ್ಟೆಗೆ ತಗ’ ಎಂದರು. +‘ಇದೇನು ಅಯ್ನೋರೇ?’ +‘ಶಿವನ ಪ್ರಸಾದ. ಕಾಶಿಯಿಂದ ತಂದಿದ್ದೆ. ಉಳ್ದಿತ್ತು. ಇದ ತಗಾ. ನಿನ್ನ ಗ್ರಾಚಾರ ಕಳೀತದೆ. ಮಗು ಹ್ಯಂಗೂ ಬೆವರ್ತಿದೆ. ಜ್ವರ ಇಳ್‌ದಾವೆ.’ +ನಂಜಮ್ಮ ಅದನ್ನು ಸುಮ್ಮನೆ ನುಂಗಿದಳು. ಒಂದು ತರಹ ಕಹಿ, ಒಗಚು, ಸಿಹಿಗಳ ಮಿಶ್ರಣವಾಗಿತ್ತು. ಮತ್ತೆ ಕಂಬವನ್ನೊರಗಿ ಮಗುವನ್ನೇ ನೋಡುತ್ತಾ ಕೂತುಕೊಂಡಳು. ಅಷ್ಟರಲ್ಲಿ ಚೆನ್ನಿಗರಾಯರು ಬಂದರು. +‘ಈಟಾತಂಕಾ ಏನ್ಮಾಡ್ತಿದ್ರಿ ಸ್ಯಾನುಬಾಗ್ರೆ?’-ನರಸಿ ಅವರನ್ನು ಕೇಳಿದಳು. +‘ಬರಾಣ ಅಂತ ಹ್ವರ್‌ಟಿದ್ದೆ. ಯಾರ್ಯಾರೋ ಬಂದು ಸಮಾಧಾನ ಹೇಳುಕ್ಕೆ ಅಂತ ನಿಲ್ಲಿಸ್ಕಂಡ್ರು. ಹಾಗೇ ಕೂತ್ಕಂಡೆ.’ +‘ವಾರೆ, ಹುಟ್ಟಿಸಿದ ಗಂಡೇ’-ನರಸಿ ಅಂದದಕ್ಕೆ ಅವರು ಅವಳನ್ನು ಮಿಕಮಿಕನೆ ನೋಡಿದರು. +‘ನರಸವ್ವಾ, ಏನೂ ಮಾತಾಡ್‌ಬ್ಯಾಡ’-ಅಯ್ಯನವರೆಂದರು. +ಹತ್ತು ನಿಮಿಷದಲ್ಲಿ ನಂಜಮ್ಮನ ಕಣ್ಣು ತೂಗುತ್ತಿತ್ತು. ಕಂಬವನ್ನೊರಗಿ ಕೂತಿದ್ದ ಅವಳು ಹಾಗೆಯೇ ಮಂಡಿಗೆ ತಲೆ ಕೊಟ್ಟುಕೊಂಡಳು. ನೆನ್ನೆ ರಾತ್ರಿ ಹೊತ್ತು ತಂದಿದ್ದ ಹಾಸಿಗೆಯನ್ನು ಹತ್ತಿರವೇ ಹಾಸಿ, ಅಯ್ಯನವರು ಅವಳ ಭುಜ ಹಿಡಿದು ಮಲಗಿಸಿ, ಮೇಲೆ ಒಂದು ಹಳೆಯ ದುಪ್ಪಟಿ ಹೊದ್ದಿಸಿದರು. ಮತ್ತೆ ಎರಡು ನಿಮಿಷದಲ್ಲಿ ಅವಳಿಗೆ ಗಾಢನಿದ್ರೆ ಬಂದುಬಿಟ್ಟಿತು. +‘ಅಯ್ಯಾರೇ ನೀವು ನಂಜಮ್ಮಾರಿಗೆ ಕೊಟ್ಟುದ್ದೇನು?’-ನರಸಿ ಕೇಳಿದಳು. +‘ನಿದ್ದೆ ಬರಾ ಔಸ್ತಿ. ಕಾಶೀಲಿ ಇದ ತಿಂತಾರೆ. ಅಲ್ಲಿಂದ ಬರೂವಾಗ ತಂದಿದ್ದೆ. ಹಳೇದು ಒಂದೀಟಿತ್ತು.’ +‘ಹಾಗಾರೆ ನಂಗೊಂದಿಷ್ಟು ಕೊಡ್ರೀ’-ಚೆನ್ನಿಗರಾಯರು ಕೇಳಿದರು. +‘ಅದು ಗಂಡಸರು ತಗಾಳಾದಲ್ಲ. ನಂಜವ್ವನಿಗೆ ರಾತ್ರಿ ಕಳೆದು ನಾಳೆಗಂಟ ಎಚ್ಚರವಾಗಾಕಿಲ್ಲ. ನೀವು ಇಲ್ಲೇ ಇರಿ. ನಿಮಗೆ ಇಲ್ಲಿಗೇ ಬಿನ್ನ ತಂದು ಮಡಗೂ ಹಂಗೆ ಮೇಷ್ಟರ ಹೆಂಗಸ್ರಿಗೆ ಏಳಿಕಳುಸ್ತೀನಿ’-ಎಂದು ಚೆನ್ನಿಗರಾಯರಿಗೆ ಆಶ್ವಾಸನೆಯಿತ್ತ ಅಯ್ಯನವರು ನರಸಿಗೆ ಹೇಳಿದರು. ‘ನರಸವ್ವಾ, ಇನ್ನು ಹೆದರಿಕೆಯಿಲ್ಲ ಮಗಾನ ಕೆಳಗೆ ಮನಗ್ಸು. ನೀನು ಮನಿಗೆ ಹ್ವಾಗಿ ಏನಾರ ಹ್ವಟ್ಟೆಗೆ ಮಾಡ್ಕ. ರಾತ್ರಿಯೆಲ್ಲ ನಿಂಗೂ ನಿದ್ದೆ ಇಲ್ಲ. ಮನೆಗೆ ಹ್ವಾಗಿ ಮನೀಕ್ಕ.’ +‘ಅಯ್ಯಾರೇ, ಉಡ್ಗ ಉಳ್ಕಂಡ್ರೆ ಸಾಕು. ಇನ್ನೂ ಎಲ್ಡು ದಿನ ಹಿಂಗೇ ಇರ್ತೀನಿ.’ +‘ಮನೀಗ್ ಹ್ವಾಗಿ ಊಟ ನಿದ್ದೆ ಮಾಡ್ಕಂಡ್ ಬಾ. +ಒಂದು ಪುಟ್ಟ ಕಂಬಳಿಯನ್ನು ಮಡಿಸಿ ಅಯ್ಯನವರು ಕೊಟ್ತರು. ಅದರ ಮೇಲೆ ಮಗುವಿನ ತಲೆಯನ್ನಿಟ್ಟು ನರಸಿ ಎದ್ದು ಮನೆಗೆ ಹೋದಳು. ನಂಜಮ್ಮನಿಗೆ ಎಚ್ಚರವಾಗಲೇ ಇಲ್ಲ. ಮಧ್ಯಾಹ್ನದ ಹೊತ್ತಿಗೆ ಕುರುಬರಹಳ್ಳಿಯ ಗುಂಡೇಗೌಡರಾದಿಯಾಗಿ ಹತ್ತಾರು ಜನ ಗುಡಿಯ ಹತ್ತಿರ ಬಂದರು. ಗಟ್ಟಿಯಾಗಿ ಮಾತನಾಡಿ ಸದ್ದು ಮಾಡಬಾರದೆಂದು ಅಯ್ಯನವರು ಹೇಳಿದುದರಿಂದ ಎಲ್ಲರೂ ಚೆನ್ನಿಗರಾಯರನ್ನೇ ಹೊರಗೆ ಕರೆದುಕೊಂಡು ಹೋಗಿ ಸಮಾಧಾನ ಹೇಳಿದರು. ‘ನಾವೂ ಕಂಡ ಬುದ್ಧಿಯೆಲ್ಲ ಖರ್ಚುಮಾಡಿಬಿಟ್ವು ಕಣ್ರೀ, ಮುಂಡೇವು ಉಳ್ಕಳ್ಲಿಲ್ಲ’-ಎಂದು ಹೇಳುವಾಗ ಚೆನ್ನಿಗರಾಯರಿಗೆ ಕಣ್ಣೀರು ಬರುತ್ತಿತ್ತು. +ಇಲ್ಲಿ ನಡೆದ ಕೆಟ್ಟ ಸಮಾಚಾರವನ್ನು ಸೂರ್ಯನಾರಾಯಣನಿಗೆ ಬರೆದು ‘ಕ್ಷೇಮ’ ಬರೆಯುವ ಜಾಗದಲ್ಲಿ ಕಪ್ಪುಬಣ್ಣ ಮಾಡಿ ಮೇಷ್ಟರು ಕಾರ್ಡನ್ನು ಪೋಸ್ಟಿಗೆ ಕಳಿಸಿದರು. +– ೫ – +ಇಬ್ಬರು ಮಕ್ಕಳೂ ಸತ್ತು ಇಂದಿಗೆ ಆರು ದಿನಗಳಾಗಿವೆ. ನಂಜಮ್ಮ ತನ್ನ ಶೆಡ್ಡಿಗೆ ಬಂದಿದ್ದಾಳೆ. ಈಗ ಶೆಡ್ಡಿನಲ್ಲಿ ಅವಳು ಮತ್ತು ಚೆನ್ನಿಗರಾಯರು, ಇಬ್ಬರೇ. ಜ್ವರ ಪೂರ್ತಿಯಾಗಿ ಬಿಟ್ಟು ವಿಶ್ವ ಹುಷಾರಾಗಿದ್ದಾನೆ. ‘ಸೂತಕದ ಮನೆಗೆ ಅವನು ಬರಾದು ಬ್ಯಾಡ. ಹತ್ತು ದಿನ ಕಳೆಯಾಗಂಟ ನಮ್ಮ ಗುಡೀಲೇ ಮಡಿಕ್ಕಂಡಿರ್ತೀನಿ’-ಎಂದು ಮಾದೇವಯ್ಯನವರು ಹೇಳಿದುದರಿಂದ ಅವನನ್ನು ಅಲ್ಲಿಯೇ ಬಿಟ್ಟಿದ್ದಾಳೆ. ಇಲ್ಲಿಗೆ ಕರೆದುತರಲು ಅವಳಿಗೇ ಹೆದರಿಕೆ. ಬೆಳಗ್ಗೆ, ಮಧ್ಯಾಹ್ನ, ಗುಡಿಗೆ ಹೋಗುತ್ತಾಳೆ. ತನಗೆ ಸೂತಕವೆಂಬ ನೆನಪಾಗಿ ಈಗ ಅವಳು ಗುಡಿಯ ಒಳಗೆ ಹೋಗುವುದಿಲ್ಲ. ವಿಶ್ವನಿಗೂ ಸೂತಕವಿದ್ದರೂ ಅವನು ಹುಡುಗ, ಎದ್ದುಕೂರುವ ಶಕ್ತಿಯಿದ್ದರೂ ಅವನನ್ನು ಅಯ್ಯನವರು ಯಾವಾಗಲೂ ಮಲಗಿಸಿರುತ್ತಾರೆ. ಗುಡಿಯ ಬಾಗಿಲಿನಲ್ಲಿ ಕೂತು ಅವನನ್ನು ನೋಡಿಕೊಂಡು, ಅಯ್ಯನವರ ಕೈಲಿ ಸಹ ಮಾತನಾಡದೆ ಅವಳು ಶೆಡ್ಡಿಗೆ ಹಿಂತಿರುಗುತ್ತಾಳೆ. ಪಾರ್ವತಿ ರಾಮಣ್ಣರಿಗೆ ತಂದಿದ್ದ ಹೇಮಾದಿ ಪಾನಕದ ಶೀಶೆಗಳನ್ನು, ಜ್ವರ ಬಿಟ್ಟಿದ್ದರೂ ಅಯ್ಯನವರು ಅವನಿಗೆ ಕುಡಿಸುತ್ತಿದ್ದಾರೆ. +ಹೆತ್ತ ತಾಯಿಯ ಎದುರಿಗೆ ಮಕ್ಕಳು ಯಾಕೆ ಸಾಯುತ್ತವೆ? – ಎಂಬ ಪ್ರಶ್ನೆ ಅವಳನ್ನು ಸದಾ ಬಾಧಿಸುತ್ತಿದೆ. ಎಷ್ಟು ಯೋಚಿಸಿದರೂ ಉತ್ತರ ಹೊಳೆಯುತ್ತಿಲ್ಲ. ಒಂದು ದಿನ ಅಯ್ಯನವರನ್ನೇ ಕೇಳಿದಳು. ಅವರು ಹೇಳಿದರು: “ಅವ್ವಾ, ಇದು ದೇವರ ಮಾಯ. ಕೃಷ್ಣ ಸಣ್ಣೋನಾಗಿದ್ದಾಗ ಅವನ ಅವ್ವುನ್ನ ಥರ ಥರಾವರಿಯಾಗಿ ಪರೀಕ್ಷೆ ಮಾಡಿದ್ನಂತೆ. ಅವ್ನು ಉಪಾಸ ಇದ್ರೆ ಅವ್ಳೂ ಉಪಾಸ ಮಾಡಿದ್ಲು. ಆವ್ನು ಹಾಲು ಕುಡಿಯೂ ತನಕ ಅವ್ಳು ನೀರೂ ಕುಡೀತಿರ್ನಿಲ್ಲ. ಈ ತಾಯಿಪ್ರೇಮ ಇನ್ನೂ ಪರೀಕ್ಷೆ ಮಾಡ್ಬೇಕು ಅಂತ ಒಂದು ದಿನ ಕೇಳಿದ್ನಂತೆ: ‘ಅವ್ವಾ, ನಾನ್ ಸತ್ಹೋದ್ರೆ ನೀನ್ ಏನ್ ಮಾಡ್ತೀಯಾ?’ +“ಮಗಾ, ನಿನ್ನ ಬಿಟ್ಟು ನಾನಿರ್ತೀನಾ? ಹಿದ್‌ಗುಟ್ಟೇ ನಾನೂ ಸಾಯ್ತೀನಿ’ – ಅಂದಳು. +“ನಿಜವಾ?’ -ಅಂತ ಕೇಳ್ದ. +“ನಿನ್ನಾಣೆಗೂ ನನ್ನ ಕಂದ’ -ಅಂತ ಆಣೆ ಮಾಡಿದ್ಲು. +“ಒಂದು ದಿನ ಅವ್ನು ಹತ್ರುದಲ್ಲೇ ಇದ್ದ ಮಡೂನ ಒಳಕ್ಕೆ ಕಾಲು ಜಾರಿ ಬಿದ್ದುಬಿಟ್ಟ. ಒಂದ್ ಸಲ ಮುಳುಗಿ ಮತ್ತೆ ಮೇಲಕ್ಕೆ ಎದ್ದಹಂಗೆ ಮಾಡಿ, ‘ಅವ್ವಾ, ಮ್ಯಾಲುಕ್ಕೆ ಯಳ್ಕ. ನೀನೂ ನೀರಿಗೆ ಬಾ. ನಾನು ಸಾಯ್‌ತಿದೀನಿ. ಬದುಕುಸ್ಕ’ ಅಂತ ಬಡಕಂಡ ಬಾಯಿಗೆಲ್ಲ ನೀರು ಹೋಯ್ತಿತ್ತು. ಗೋಪಮ್ಮ ದಡದಲ್ಲೇ ನಿಂತ್ಕಂಡು, ‘ಯಾರಾದ್ರೂ ನನ್ನ ಮಗೂನ ಯಳ್ಕ ಬನ್ರಪ್ಪಾ’ ಅಂತ ಕಿರುಚ್ಕಂಡ್ಳು. ಯಾರೂ ಬರ್ನಿಲ್ಲ. ಉಟ್ಟಿದ್ದ ಸೀರೇನೇ ಬಿಚ್ಚಿ, ಒಂದ್ ದಡ ಹಿಡ್ಕಂಡಿ, ಇನ್ನೊಂದು ಕಡೆ ಅವ್ನಿಗೆ ಎಸೆದ್ಲು. ಅದು ಸಿಕ್ಲಿಲ್ಲ. ‘ಅವ್ವಾ, ಅವ್ವಾ’ ಅಂತ ಕೂಕ್ಕಳ್ತಾಲೇ ಅವ್ನು ನೀರಿಗೆ ಮುಳುಗಿಬಿಟ್ಟ. ಸತ್ತೇ ಹ್ವಾಗಿಬಿಟ್ಟ. ಗೋಪಮ್ಮ ಸೀರೆ ಸುತ್ಕಂಡು ದಡದಲ್ಲೇ ಕುಂತ್ಕಂಡು ಅತ್ಲೂ ಅತ್ಲೂ, ಓಟೊಂತರ ಅತ್ಲು. ತಾನೂ ನೀರಿಗೆ ಬಿದ್ದು ಸಾಯಾಕೆ ಹೆದ್ರಿಕೆಯಾಯ್ತು. ವಳಿಕ್ಕೆ ಮಾತ್ರ ಬೀಳ್ಲಿಲ್ಲ. ಮಗನ್ನ ನುಂಗಿ ಹಾಕಿದ ಗಂಗಾಮಾತೇನ ಬಯ್‌ದ್ಳು. ಬಾಯಿ ಬಾಯಿ ಬಡಕಂಡ್ಳು. ದಡದಲ್ಲೇ ಕೂತ್‌ಳು. ನೀರಿಗೆ ಮಾತ್ರ ಬೀಳ್ಲಿಲ್ಲ. ಒಂದು ದಿನ ಕಳೀತು, ಎಲ್ಡು ದಿನ ಕಳೀತು, ಗೋಪಮ್ಮ ದಿನಾ ಬಂದು ಮಡೂನ ದಡದಲ್ಲಿ ಕುಂತು ಅಳ್ತಿದ್ಲು. ನೀರಿಗೆ ಮಾತ್ರ ಬೀಳ್ಲಿಲ್ಲ. ಮೂರನೇ ದಿನ ಕೃಷ್ಣನೇ ನೀರಿನೊಳಗಿನಿಂದ ಎದ್ದು ಬಂದು -‘ಅವ್ವಾ, ಈಟೇನಾ ನಿನ್ನ ಪ್ರೇಮ? ನಾನು ಸತ್ರೂ ನೀನು ಸಾಯ್‌ಲಿಲ್ಲ. ಇನ್ನುಮ್ಯಾಲೆ ತಾಯಿ ಎದುರಿಗೆ ಹೆತ್ತ ಮಕ್ಳು ಸಾಯಲಿ’ ಅಂತ ಶಾಪ ಕೊಟ್ಟ. ಅದುಕ್ಕೆ ಹಿಂಗೆ ಆಯ್ತಂತೆ.” +ಈ ಮಾತನ್ನು ಕೇಳಿದ ನಂಜಮ್ಮನಿಗೆ ಗೋಪಿಯ ಮೇಲೆ ವಿಪರೀತ ಸಿಟ್ಟು ಬಂತು. ಅವಳೊಬ್ಬಳು ನಿಶ್ಚಿಂತೆಯಿಂದ ಮಡುವಿಗೆ ಧುಮುಕಿದ್ದರೆ ಪ್ರಪಂಚದಲ್ಲಿ ತಾಯಿಯ ಕಣ್ಣೆದುರಿಗೆ ಮಕ್ಕಳು ಸಾಯುವುದೇ ಇರುತ್ತಿರಲಿಲ್ಲ. ಗೋಪಿ ಎಷ್ಟಾದರೂ ಮನುಷ್ಯಳು. ಶ್ರೀಕೃಷ್ಣ, ದೇವರು. ಮನುಷ್ಯತಾಯಿಯ ಪ್ರೇಮಪರೀಕ್ಷೆ ಮಾಡುಕ್ಕೇ ಅವನು ಹೀಗೆ ಮಾಡಿದ. ದೇವತಾಯಿ ಆಗಿದ್ದರೆ ಸತ್ತೇಬಿಡ್ತಿದ್ದಳೋ ಏನೋ! ಆದರೆ ದೇವತೆಗೆ ಸಾವೇ ಇಲ್ಲ. ಅವಳ ಮಗನಿಗೂ ಸಾವಿಲ್ಲ. ಆಗ ಈ ಕಥೆ ನಡೆಯುತ್ತಿರಲಿಲ್ಲ. +ಶೆಡ್ಡಿಗೆಬಂದ ಮೇಲೂ ಅವಳ ಮನಸ್ಸು ಇದನ್ನೆ ಚಿಂತಿಸುತ್ತಿತ್ತು. ಇದೇನು ಬರಿ ಕಥೆಯೋ ಅಥವಾ ನಿಜವೋ?-ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಕಥೆಯಾಗಿದ್ದರೂ ಇರಬಹುದು. ಪಾರ್ವತಿ ರಾಮಣ್ಣ ಸತ್ತುದಕ್ಕೆ ತಾನೇಕೆ ಸಾಯಲಿಲ್ಲ?-ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಅದು ಹುಟ್ಟಿದ ತಕ್ಷಣ ಅವಳಿಗೆ ಆಶ್ಚರ್ಯವಾಯಿತು. ಜೊತೆಗೆ, ತಾನೂ ಸಾಯಬೇಕೆಂಬ ಬಲವಾದ ನಿಶ್ಚಯ ಮನಸ್ಸಿನಲ್ಲಿ ಮೂಡಿತು. ಅಷ್ಟು ಹೊತ್ತಿಗೆ ರಾತ್ರಿ ಎಂಟು ಗಂಟೆ. ಚೆನ್ನಿಗರಾಯರು ಹೊಗೆಸೊಪ್ಪು ಅಗಿಯುತ್ತಾ ಶೆಡ್ಡಿನ ಎದುರಿನ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದರು. ನಂಜಮ್ಮ ಒಳಗೆ ಹಾಸಿಗೆ ಹಾಕಿ ಮಲಗಿಬಿಟ್ಟಳು. ನಿದ್ರೆ ಮಾತ್ರ ಬರಲಿಲ್ಲ. ತಾನು ಈ ದಿನ ಸಾಯಬೇಕು. ಪಾರ್ವತಿ ರಾಮಣ್ಣರನ್ನು ಹಿಂಬಾಲಿಸಬೇಕು ಎಂಬ ನಿಶ್ಚಯ ಅವಳನ್ನು ಬಲವಾಗಿ ಹಿಡಿಯಿತು. ತಾನು ದೃಢ ಮನಸ್ಸಿನಿಂದ ಸತ್ತರೆ ದೇವರು ತನ್ನನ್ನೂ ಬದುಕಿಸಿ, ತನ್ನ ಇಬ್ಬರು ಮಕ್ಕಳನ್ನೂ ವಾಪಸ್ಸು ಕೊಡುತ್ತಾನೆಯೋ ಎಂಬ ಒಂದು ಆಶಾಪೂರಿತ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಅವಳು ನೋಡಿದ ಯಕ್ಷಗಾನ ನಾಟಕಗಳಲ್ಲಿ, ಕಲಿತಿದ್ದ ಹಾಡುಗಳಲ್ಲಿ, ಓದಿದ್ದ ಪುರಾಣಗಳಲೆಲ್ಲಾ ಆಗುತ್ತಿದ್ದುದು ಹೀಗೆ. ತನಗೂ ಯಾಕೆ ಹಾಗೆ ಆಗಬಾರದು? ಆದರೆ ಇಬ್ಬರು ಮಕ್ಕಳೂ ಒಂದೇ ದಿನ ಸತ್ತ ದಿನದಿಂದ ಅವಳಿಗೆ ದೇವರು ಪುರಾಣಗಳಲ್ಲಿ ನಂಬಿಕೆ ಹಾಳಾಗಿತ್ತು. ಗೋಪಿ ಕೃಷ್ಣನಿಗಾಗಿ ಸಾಯಲು ಹಿಂಜರಿದಳೋ ಬಿಟ್ಟಳೋ ನನಗೆ ಅದು ಬ್ಯಾಡ. ಈಗ ನನ್ನ ಮಕ್ಕಳು ಸತ್ತಿವೆ. ಈ ಆರು ದಿನ ಅವಿಲ್ಲದೆ ನಾನು ನರಕ ಅನುಭವಿಸಿದೀನಿ. ಈ ನರಕ ಬ್ಯಾಡ. ನಾನೂ ಸಾಯಬೇಕು. +ಅಷ್ಟರಲ್ಲಿ ಅವಳ ಗಂಡ ಒಳಗೆ ಬಂದು ಮಲಗಿದ್ದರು. ಅವರ ಗೊರಕೆಯೂ ಸ್ಪಷ್ಟವಾಗಿ ಕೇಳುತ್ತಿತ್ತು. ನಂಜಮ್ಮ ಮೇಲೆ ಎದ್ದಳು. ಆಗಲೇ ಹತ್ತು ಹನ್ನೊಂದು ಗಂಟೆಯಾಗಿರಬಹುದು. ಅವಳು ಶೆಡ್ಡಿನ ಬಾಗಿಲು ಹಾಕಿಕೊಂಡು ಹೊರಗೆ ಬಂದಳು. ಎಲ್ಲಿಗೆ ಹೋಗುವುದು? ಹೇಗೆ ಸಾಯುವುದು?-ಎಂದು ವ್ಯಕ್ತವಾಗಿ ಯೋಚಿಸದೆಯೇ ಮನಸ್ಸು ಅವಳನ್ನು ಏರಿ ಇಳಿಸಿ, ಅವಳ ಇಬ್ಬರು ಮಕ್ಕಳನ್ನೂ ಭಸ್ಮ ಮಾಡಿದ ಶ್ಮಶಾನದ ಕಡೆಗೆ ಕರೆದೊಯ್ದಿತು. ಹೆಣ ಸುಡುವಾಗ ಅವಳು ಹೋಗಿರಲಿಲ್ಲ. ಹೆಂಗಸರು ಶ್ಮಶಾನಕ್ಕೆ ಹೋಗಬಾರದಂತೆ. ಈಗ ನೇರವಾಗಿ ಅಲ್ಲಿಗೆ ಹೋದಳು. ಯಾವ ಭಯವೂ ಇಲ್ಲ. ಅಳುಕು ಅಂಜಿಕೆಗಳಿಲ್ಲ. ಗಾಳಿ, ದೆವ್ವ ಪಿಶಾಚಿಗಳ ಯೋಚನೆ ಮನಸ್ಸಿನಲ್ಲಿ ಸುಳಿಯಲಿಲ್ಲ. ಕತ್ತಲೆಯಲ್ಲಿಯೂ, ಎರಡು ಹೆಣಗಳನ್ನು ಸುಟ್ಟ ಜಾಗ ಕಾಣುತ್ತಿತ್ತು. ಅವರ ಇಬ್ಬರು ಮಕ್ಕಳಲ್ಲದೆ ಸಧ್ಯದಲ್ಲಿ ಮತ್ತೆ ಯಾವ ಬ್ರಾಹ್ಮಣ ಹೆಣವೂ ಬಿದ್ದಿರಲಿಲ್ಲ. ಆದುದರಿಂದ ಈಗ ಕಾಣುತ್ತಿದ್ದ ಎರಡು ಜಾಗಗಳು ಅವಳ ಮಕ್ಕಳವೇ. ಅವುಗಳಲ್ಲಿ ಪಾರ್ವತಿಯದು ಯಾವುದು, ರಾಮಣ್ಣನದು ಯಾವುದು ಎಂಬುದು ಮಾತ್ರ ತಿಳಿಯಲಿಲ್ಲ. ಅದು ತಿಳಿದಾದರೂ ಏನಾಗಬೇಕು ಎಂಬ ಯೋಚನೆ ಬಂತು. ಮೂರನೇ ದಿನ ಎರಡು ಕಡೆಗಳಲ್ಲಿಯೂ ಬೂದಿ ಎತ್ತಿದ ಸಂಸ್ಕಾರ ಮುಗಿದಿತ್ತು. ಆದರೂ ಅವಳು ಬಾಗಿ ಎರಡರಲ್ಲಿಯೂ ಒಂದೊಂದು ಹಿಡಿ ಬೂದಿಯನ್ನು ತೆಗೆದು ತನ್ನ ಸೆರಗಿಗೆ ಕಟ್ಟಿಕೊಂಡಳು. ಶ್ಮಶಾನದ ಹತ್ತಿರದಲ್ಲಿ ಒಂದು ಕೊಳವಿದೆ. ಹೆಣ ಸುಟ್ಟಮೇಲೆ ಶವವಾಹಕರು, ಸಂಸ್ಕಾರಕರ್ತೃಗಳು ಸ್ನಾನ ಮಾಡಿ ಬರುವುದು ಅದರಲ್ಲಿಯೇ. ಉಳಿದಂತೆ ಅದನ್ನು ಯಾರೂ ಉಪಯೋಗಿಸುವುದಿಲ್ಲ. ಹೀಗಾಗಿ ನೀರು ಸ್ವಲ್ಪ ಮಟ್ಟಿಗೆ ಮಲೆತಿರುತ್ತದೆ. ತಾನು ಕೊಳಕ್ಕೆ ಬೀಳಬೇಕು. ಮೆಟ್ತಿಲಿನ ಎದುರು ಭಾಗದ ನಾಲಿಗೆಕಲ್ಲಿನ ಮೇಲೆ ನಿಂತು ಧುಮುಕಬೇಕು. ಹಾಗೆಯೇ ಕಣ್ಣು ಮುಚ್ಚಿದಳು. ಕಪ್ಪು ಮಬ್ಬಾಗಿದ್ದ ಕತ್ತಲೆಯು ಗಾಢ ಕತ್ತಲೆಯಾಯಿತು. ನರನರಗಳು ಉಬ್ಬಿದಂತಾಗಿ ಎರಡು ಕ್ಷಣ ಸ್ವಾಧೀನ ತಪ್ಪಿದವು. ಕೈ ಕಾಲು ಮೈಗಳೆಲ್ಲ ಹಿಡಿತ ತಪ್ಪಿ ನಡುಗಿದವು. ಬಾವಿಯ ನೀರು ಕಲಕಿ ಮೂಲೆ ಮೂಲೆಗೂ ಬಡಿಯುತು. ಆದರೆ ಕ್ರಮೇಣ ನರಗಳು ಶಾಂತವಾದುವು. ಶರೀರದ ನಡುಕ ನಿಂತಿತು. ಯಾವ ಯೋಚನೆ ಭಾವನೆಗಳೂ ಇಲ್ಲದೆ ಸಕವ ವ್ಯಾಪಾರವೂ ಸತ್ತಂತೆ ಆಗಿ, ಮನಸ್ಸು ಶೂನ್ಯವಾಯಿತು. ಸಾವು ಎಂದರೆ ಇದೇಯೆ?, ಇಷ್ಟೇಯೆ? ಅಲ್ಲಿ ಯಾರೂ ಇಲ್ಲ. ಪಾರ್ವತಿ, ರಾಮಣ್ಣ, ಕೊನೆಗೆ ತಾನೂ-ಏನೂ ಇಲ್ಲ. ಅರ್ಧ ಹೆಜ್ಜೆ ಮುಂದೆ ಇಟ್ಟು ನೀರಿಗೆ ಧುಮುಕುವುದೊಂದೇ ಉಳಿದಿದೆ. ಅದು ಸ್ವಲ್ಪವೂ ಕಷ್ಟವಿಲ್ಲದೆ ಪ್ರಯತ್ನವೇ ಬೇಡದೆ ನಿರಾಯಾಸವಾಗಿ ನಡೆದುಹೋಗುವ ಹೆಜ್ಜೆ. +ಆ ಹೆಜ್ಜೆಯನ್ನಿಡುವ ಮೊದಲು ಒಂದು ಸಲ, ಈ ಊರಿನಲ್ಲಿ ಉಳಿದವರ ನೆನಪು ಬಂತು. ಇನ್ನು ಉಳಿದಿರುವವರು ಇಬ್ಬರು: ಗಂಡ. ಅವರ ಪಾಡು ಅವರಿಗೆ. ವಿಶ್ವ? ವಿಶ್ವನ ನೆನಪು ಬಂದ ತಕ್ಷಣ ಮನಸ್ಸು ವಿಚಲಿತವಾಯಿತು. ಅವನು ಪ್ಲೇಗುಮಾರಿಯಿಂದ ಸಾಯಲಿಲ್ಲ; ಉಳಿದುಕೊಂಡಿದ್ದಾನೆ. ಅವನನ್ನು ಸಾಕುವವರಾರು? ಅಯ್ಯನವರೇ ಅವನಿಗೆ ದಿಕ್ಕು ಎಂದು ಮನಸ್ಸು ನುಡಿಯಿತು. ಮಕ್ಕಳು ಸತ್ತ ದುಖಃಕ್ಕೆ ನಂಜಮ್ಮ ಪ್ರಾಣ ಕಳಕೊಂಡಿದ್ದಾಳೆ ಅಂತ ತಿಳಿದ ಅಯ್ಯನವರು ಎಂದಿಗೂ ಅವನ ಕೈಬಿಡುಲ್ಲ-ಎಂಬ ಭರವಸೆ ಹುಟ್ಟಿತು. ಆದರೆ ತಾನಿಲ್ಲದೆ ಅವನು ತಬ್ಬಲಿಯಾಗುತ್ತಾನೆ. ಅಯ್ಯನವರು ಏನು ಮಾಡಿದರೂ ಅವನಿಗೆ ತಾಯಿ ಇದ್ದ ಹಾಗೆ ಎಲ್ಲಿ ಆಗುತ್ತೆ? ಪಾರ್ವತಿ ರಾಮಣ್ಣರಿಗೆ ರೋಗ ತಗುಲಿದಾಗ ತನಗೂ ಯಾಕೆ ತಗುಲಲಿಲ್ಲ? ವಿಶ್ವನನ್ನು ಸಾಕುಕ್ಕೆ ಅಂತಲೇ ನನ್ನನ್ನು ದೇವರು ಬದುಕಿಸಿದನೇನೋ. ನನ್ನಿಂದ ಸಾಕಿಸಿಕೋಬೇಕು ಅಂತಲೇ ಅವನನ್ನು ಉಳಿಸಿದನೇನೋ. ವಿಶ್ವನ ಮುಖ ನೆನಪಿಗೆ ಬಂತು. ಪಾರ್ವತಿಯ ಅಗಲವಾದ ತುಂಬುಮುಖ, ರಾಮಣ್ಣನ ಬುದ್ಧಿಶಕ್ತಿ, ಎರಡೂ ಅವನದು. ಅವರಿಬ್ಬರ ಪರವಾಗಿ ಅವನು ಉಳ್‌ಕೊಂಡಿದಾನೆ. ತಾನು ಪ್ರಾಣ ಕಳಕೊಂಡರೆ ಏನು ದಾರಿ? +ಈ ಯೋಚನೆಯೊಡನೆ ಅವಳು ನಾಲಿಗೆಕಲ್ಲಿನ ಮೇಲೆಯೇ ಕುಕ್ಕುರುಗಾಲಿನಲ್ಲಿ ಕುಳಿತಳು. ತಾನು ಮದುವೆಯಾಗಿ ಈ ಊರಿಗೆ ಬಂದದ್ದು, ಈ ಮಕ್ಕಳು ಹುಟ್ಟಿದ್ದು, ಎಲ್ಲವೂ ನೆನಪಿಗೆ ಬಂದುವು. ಮಧ್ಯೆ ಆದ ಕಷ್ಟಸುಖಗಳು. ಮಳೆ ಬೆಳೆ ಇಲ್ಲದೆ ಊರಿಗೇ ಬಂದ ಬರ. ಪಾರ್ವತಿ ರಾಮಣ್ಣ ಎಷ್ಟು ಸಮಾಧಾನದಿಂದ ಹಸಿವು ಸಹಿಸಿಕೊಳ್ಳುತ್ತಿದ್ದರು! ಅಷ್ಟು ಒಳ್ಳೆಯೋರು ಅಂತಲೇ ದೇವರು ಕರಕೊಂಡ. ವಿಶ್ವ ಹಸಿವು ತಡೆಯಲಾರದೆ ತನ್ನನ್ನು ಹಿಡಿದು ಹೊಡೆಯುತ್ತಿದ್ದ. ಅವನ ಸ್ವಭಾವವೇ ಹಾಗೆ. ಧೈರ್ಯ, ಸಿಟ್ಟು, ದುಡುಕು, ಊಟದಲ್ಲಿ ಮುಂದು. ಆದರೆ ಅಪ್ಪನ ಹಾಗೆ ತನ್ನ ಒಡಲು ಮಾತ್ರ ತುಂಬಿಕೊಳ್ಳುವ ನೀಚಬುದ್ಧಿಯಿಲ್ಲ. ತಿಪ್ಪೆಯ ಮೇಲೆ ಸುತ್ತಿ ಗಣಿಕೆಹಣ್ಣು ಬಿಡಿಸಿಕೊಂಡು ಬಂದರೂ ಅಮ್ಮನಿಗೆ ಅಣ್ಣ ಅಕ್ಕಯ್ಯರಿಗೆ ಕೊಡದೆ ಯಾವತ್ತೂ ತಿಂದವನಲ್ಲ. ಅವನನ್ನು ಹೀಗೆ ಬಿಟ್ಟು ತಬ್ಬಲಿಯಾಗಿ ಮಾಡಿ ನಾನು ಸತ್ತು, ಬರುವ ಭಾಗ್ಯವೇನು? ಈಗ ಸತ್ತು ಆ ಲೋಕಕ್ಕೆ ಹೋದರೂ ಅಲ್ಲಿ ಪಾರ್ವತಿ ರಾಮಣ್ಣ, ಇಬ್ಬರೂ, ‘ಅಮ್ಮ, ನೀನು ವಿಶ್ವನನ್ನು ಹೀಗೆ ಬಿಟ್ಟು ಬಂದೆಯಲ್ಲ, ಅವನ ಗತಿ ಏನು? ನಿನಗೆ ಅಷ್ಟೂ ಬುದ್ಧಿ ಇರಲಿಲ್ಲವೆ?’ ಅಂದ್ರೆ ಏನು ಹೇಳುವುದು? +ತನಗೇ ತಿಳಿಯದಂತೀದ್ದು ಅವಳು ನಾಲಿಗೆಕಲ್ಲಿನಿಂದ ಹಿಂದೆ ನಡೆದಳು. ಕಲ್ಲು ಮುಳ್ಳುಗಳನ್ನು ನೋಡಿಕೊಂಡು, ಬಂದ ದಾರಿಯಲ್ಲಿಯೇ ನಡೆದು ಶ್ಮಶಾನಕ್ಕೆ ಬಂದಳು. ಪಾರ್ವತಿ ರಾಮಣ್ಣರನ್ನು ಸುಟ್ಟ ಜಾಗಗಳ ನಡುವೆ ಸ್ವಲ್ಪ ಹೊತ್ತು ನಿಂತಿದ್ದಳು. ಅಲ್ಲಿಂದ ಹೊರಟು ತೋಟದ ಮಾರ್ಗವಾಗಿ ನಡೆದು ಕೆರೆಯ ಏರಿ ಹತ್ತಿದಳು. ಆದರೆ ಶೆಡ್ಡಿಗೆ ಹೋಗಲು ಬಲಕ್ಕೆ ತಿರುಗದೆ, ಹೆಜ್ಜೆಗಳು ದೇವಸ್ಥಾನದ ಕಡೆಗೆ ಎಡಕ್ಕೆ ತಿರುಗಿದವು. ಏರಿಯ ಮೇಲಿನ ದಾರಿ ಕತ್ತಲೆಯಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿತ್ತು. ಎತ್ತಿನ ಗಾಡಿಗಳು ಹೋಗಿ ಬರುವಷ್ಟು ಅಗಲವಾದ ಏರಿ ಅದು. ದೇವಸ್ಥಾನದ ಹತ್ತಿರ ಬರುವ ಹೊತ್ತಿಗೆ ಅಯ್ಯನವರು ಒಳಗೆ ಕೂತು ಹಾಡುತ್ತಿರುವುದು ಕೇಳಿಸುತ್ತಿತ್ತು. ಅವಳು ಒಳಗೆ ಹೋದಾಗ ಹರಳೆಣ್ಣೆಯ ಹಣತೆ ದೇವಸ್ಥಾನದ ನಡು ಅಂಕಣದಲ್ಲಿ ಉರಿಯುತ್ತಿತ್ತು. ವಿಶ್ವ ಹಾಸಿಗೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿತ್ತು. ಅದಕ್ಕೆ ಕಂಬಳಿ ಹೊದೆಸಿ, ಅದೇ ಹಾಸಿಗೆಯ ಒಂದು ಪಕ್ಕದಮೇಲೆ ಕುಳಿತು ಅಯ್ಯನವರು ಬಲಗೈಲಿ ಏಕತಾರಿ ಮೀಟಿಕೊಂಡು ಹಾಡುತ್ತಿದ್ದರು: +ಹಳ್ಳ ಕೊಳ್ಳದ ಬಳಿ ತನುವು ತಂಪಿದ ಬಳಿ +ಗುಳ್ಳದ ಹಣ್ಣು ಫಲಮಾದುದು +ಗುಳ್ಳದ ಹಣ್ಣು ನೆಲಕುದುರಿ ಬೀಳುವಾಗ +ಅದರ ಬಳ್ಳಿಗೆ ಹೇಳಿ ಹೋಯಿತೆ ಒಂದು ಮಾತ…… +ಬಾಗಿಲಲ್ಲಿ ಬಂದು ನಿಂತ ಆಕೃತಿಯನ್ನು ಗಮನಿಸಿದ ಅಯ್ಯನವರು ಈ ಕಡೆಗೆ ತಿರುಗಿ ನೋಡಿದರು. ಅವಳ ಗುರುತು ಸಿಕ್ಕಿ ಹೇಳಿದರು: ‘ಸಂಜೆ ತಾನೇ ಬಂದಿದ್ದೆ. ಈಗ ಮತ್ತೆ ಬಂದೆಯಲ್ಲವ್ವಾ. ಯಾಕೆ ಬಂದೆ? ಏನೂ ಯೇಚ್ನೆ ಬ್ಯಾಡ. ವಿಶ್ವಣ್ಣ ಕಲ್ಲುಗುಂಡಿನ ಹಂಗೆ ಅವ್ನೆ. ಇನ್ನುಮ್ಯಾಲೆ ಅವನನ್ನ ವಿಶ್ವಣ್ಣ ಅನ್ನಬ್ಯಾಡ. ಗುಂಡಣ್ಣ ಅನ್ನು. ಗುಂಡಿನ ಹಂಗೆ ಬೆಳೀತಾನೆ.’ +ಅಯ್ಯನವರ ಬಾಯಹರಕೆ ದೊಡ್ಡದು. ಅವರ ಮಾತೇ ಸರಿ. ಇನ್ನು ಮೇಲೆ ಅವನನ್ನು ಗುಂಡಣ್ಣ ಅಂತಲೇ ಕೂಗಬೇಕು-ಎಂದು ಮನಸ್ಸಿನಲ್ಲಿ ಮಾಡಿಕೊಂಡ ಅವಳು, ‘ಏನೂ ಇಲ್ಲ. ಹೋಗ್ತೀನಿ’ಎಂದಳು. +‘ಈಗ ಯಾಕೆ ಬಂದೆ?’ +‘ಸುಮ್ನೆ ಬಂದೆ.’ +‘ಬೇಕಾದ್ರೆ ಇಲ್ಲೇ ಇರು. ಆದ್ರೆ ನೋಡವ್ವ, ಜನದ ಬಾಯಿ ಒಂದೇ ತರ ಇರಾಕಿಲ್ಲ. ನೀನು ಮನೆಗೆ ಹ್ವಾಗು.’ +‘ಹೋಗ್ತೀನಿ’-ಎಂದು ಹೊರಟಳು. +‘ವಸೀ ದೂರ ಬಂದು ಕಳುಸ್ತೀನಿ ತಾಳವ್ವ.’ +‘ಬ್ಯಾಡಿ ಬ್ಯಾಡಿ. ಮಗು ಒಂದೇ ಮಲಗಿದೆ’-ಎಂದು ಹೇಳಿ ಬೇಗ ಬೇಗ ನಡೆದು ಅವಳು ಏರಿಯ ಮೇಲಕ್ಕೆ ಬಂದಳು. ಶೆಡ್ಡಿನ ಹತ್ತಿರಕ್ಕೆ ಬರುವ ಮೊದಲು ಸೆರಗಿಗೆ ಕಟ್ಟಿಕೊಂಡಿದ್ದ ಬೂದಿಯ ನೆನಪಾಯಿತು. ಏರಿಯ ಎಡಗಡೆ ಇಳಿದು ಸೆರಗಿನ ಗಂಟು ಬಿಚ್ಚಿ ಕೆರೆಯ ನೀರಿಗೆ ಅದನ್ನು ಕದಡಿ- ‘ಗಂಗಮ್ಮತಾಯಿ, ಇದು ನಿನ್ನ ಹೊಟ್ಟೆಯ ಒಳಕ್ಕೆ ಸೇರಿಕೊಳ್ಳಲಿ’ ಎಂದು ಹೇಳಿ ಮತ್ತೆ ಏರಿ ಹತ್ತಿ ನಡೆದು ಶೆಡ್ಡಿಗೆ ಬಂದು ಮಲಗಿದಳು. +– ೬ – +ಆ ದಿನ ಬೆಳಿಗ್ಗೆ ಅವಳು ದೇವಸ್ಥಾನಕ್ಕೆ ಹೋಗಿ ವಿಶ್ವನನ್ನು ನೋಡಿಕೊಂಡು ಬಂದು ತನ್ನ ಶೆಡ್ಡಿನಲ್ಲಿ ಕೂತಿದ್ದಳು. ಇವತ್ತಿಗೆ ಏಳನೆಯ ದಿನ. ಕ್ರಮವಾಗಿ ಶುರುವಾಗಿದ್ದರೆ ರಾಮಣ್ಣನ ತಿಥಿ ಕೆಲಸ ಇವತ್ತಿನಿಂದ ಶುರುವಾಗಬೇಕು. ಏನು ಶಾಸ್ತ್ರವೋ ಏನು ಸುಡುಗಾಡೋ, ಅವಳು ಆ ಬಗೆಗೆ ಹೆಚ್ಚಾಗಿ ಯೋಚಿಸಿಯೂ ಇಲ್ಲ. ಯಾರೂ ಜ್ಞಾಪಿಸಿಯೂ ಇಲ್ಲ. ಪಾರ್ವತಿಯ ಕೆಲಸ ಅವಳ ಗಂಡನದು. +ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ನಂಜಮ್ಮ ಮಂಡಿಗೆ ತಲೆ ಕೊಟ್ಟು ಶೆಡ್ಡಿನ ಒಳಗೆ ಕೂತಿದ್ದಳು. ಚೆನ್ನಿಗರಾಯರು ಎಲ್ಲೋ ಹೋಗಿದ್ದರು. ಬಿಳಿಯ ಬಟ್ಟೆ ಉಟ್ಟ ಯಾರೋ ಮನೆಗೆ ಬಂದಂತೆ ಆಯಿತು. ಕತ್ತೆತ್ತಿ ನೋಡುತ್ತಾಳೆ: ಬಂದವನು ಸೂರ್ಯನಾರಾಯಣ, ಪಾರ್ವತಿಯ ಯಜಮಾನರು. ಎಡಗೈಲಿ ಮಗು ರತ್ನನ ಕೈ ಹಿಡಿದಿದ್ದಾನೆ. ಕಂಕುಳಿಗೆ ನೇತುಹಾಕಿದ ಒಂದು ದೊಡ್ದ ಚೀಲ. ಬಲಗೈಲಿ ಹಿಡಿದಿದ್ದ ದೊಡ್ದದೊಂದು ತೂಕವಾದ ಬಿದಿರುಬುಟ್ಟಿ. ಬಂದವರಿಗೆ ನಂಜಮ್ಮ ಹುಳಿತುಕೊಳ್ಳಿ ಎಂದೂ ಹೇಲಲಿಲ್ಲ. ಅಳಿಯ ಬಂದರೆ ಲಜ್ಜೆ ಮರ್ಯಾದೆಗಳಿಂದ ಎದ್ದು ಒಳಗೂ ಹೋಗಲಿಲ್ಲ. ಸೂರ್ಯನಾರಾಯಣನೇ ರತ್ನನಿಗೆ-‘ಅಜ್ಜೀ ಹತ್ರುಕ್ಕೆ ಹೋಗು ಮಗು’ ಎಂದ. +ಮಗು ಈ ಅಜ್ಜಿಯ ಗುರುತು ಮರೆತಿರಲಿಲ್ಲ. ನೇರವಾಗಿ ಹತ್ತಿರ ಬಂದು ಅವಳ ಭುಜವನ್ನು ಮುಟ್ಟಿತು. ಅದರ ಕೈ ಹಿಡಿದುಕೊಂಡು ಅವಳು ತೊಡೆಯ ಮೇಲೆ ಕೂರಿಸಿಕೊಂಡಳು. ಸೂರ್ಯನಾರಾಯಣ ಬುಟ್ಟಿಯ ಬಾಯಿ ತೆಗೆದು-‘ಇದನ್ನ ತೆಗೆದಿಡಿ. ಶಖೆಗೆ ಬಾಡಿಹೋಗುತ್ತೆ’ ಎಂದು ಒಂದೊಂದಾಗಿ ಹೊರಗೆ ತೆಗೆದಿಟ್ಟ. ಗಮಗಮಿಸುವ ಮಲ್ಲಿಗೆ ಹೂವಿನ ಪೊಟ್ಟಣ. ಚಿಗುರು ವೀಳ್ಯದೆಲೆ ಕಟ್ಟು. ಕಿತ್ತಲೆ ಹಣ್ಣು, ಬಾಳೆಹಣ್ಣಿನ ಚಿಪ್ಪು. ಹೋಟೆಲು ತಿಂಡಿಯ ಕಾಗದದ ಪೊಟ್ಟಣಗಳು. ಅವನ್ನು ನೋಡುನೋಡುತ್ತಾ ನಂಜಮ್ಮನಿಗೆ ತಡೆಯಲಾಗಲಿಲ್ಲ. ರತ್ನನನ್ನು ತಬ್ಬಿಕೊಂಡು ಒಂದು ಸಲ ಬಿಕ್ಕಳಿಸಿದಳು. ಕಕ್ಕಾವಿಕ್ಕಿಯಾದ ಸೂರ್ಯನಾರಾಯಣ ಕತ್ತೆತ್ತಿ ನೋಡಿದ. ನಂಜಮ್ಮ ಮಗುವನ್ನು ಅಲ್ಲಿಯೇ ಬಿಟ್ಟು ಎದ್ದು ಅಡಿಗೆಯ ಭಾಗದ ಮರೆಗೆ ಹೊರಟುಹೋದಳು. ಅವನಿಗೆ ಏನೂ ತಿಳಿಯಲಿಲ್ಲ. ಒಳಗಿನಿಂದ ಬಿಕ್ಕಿಬಿಕ್ಕಿ ಅಳುವುದು ಮಾತ್ರ ಕೇಳುತ್ತಿತ್ತು. +‘ಅಮ್ಮಾ, ಏನು ಸಮಾಚಾರ? ಯಾಕೆ ಅಳ್ತೀರಿ?’-ಅವನು ಕೇಳಿದ. +ಅವಳು ಉತ್ತರ ಹೇಳಲಿಲ್ಲ. ತಾನೇ ಎದ್ದು ಅಡಿಗೆಯ ಭಾಗದ ಹತ್ತಿರ ಬಂದು ಕೇಳಲು ಅವನಿಗೆ ಸಂಕೋಚ. ಏನೂ ತಿಳಿಯದೆ ಸುಮ್ಮನೆ ಕೂತುಬಿಟ್ಟ. ಆದರೆ ಅವನ ಮನಸ್ಸಿನಲ್ಲಿಯೂ ಒಂದು ವಿಧವಾದ ಅವ್ಯಕ್ತ ಶಂಕೆ ಭೀತಿಗಳು ಹುಟ್ಟಿದುವು. ಅರ್ಧ ಗಂಟೆ ಹೀಗೆಯೇ ಕಳೆಯಿತು. ಸೂರ್ಯನಾರಾಯಣನೇ-‘ಅಮ್ಮಾ, ನನ್ನ ಕೈಲಿ ಬಾಯಿಬಿಟ್ಟು ಮಾತಾಡಬಾರದೇ?’ ಎಂದ. ನಂಜಮ್ಮ ಮಾತಾಡಲಿಲ್ಲ. ಅಲ್ಲಿಂದ ಬಂದು ಶೆಡ್ಡಿನ ಹೊರಗೆ ಹೋದಳು. ಹತ್ತಿರದ ಇನ್ನೊಂದು ಶೆಡ್ಡಿನ ಹತ್ತಿರ ಆಡುತ್ತಿದ್ದ ಒಬ್ಬ ಹುಡುಗನನ್ನು ಕೂಗಿ-‘ಮರಿ, ಮೇಷ್ಟರ ಶೆಡ್ಡಿಗೆ ಹೋಗಿ ನಾನು ಕರ್ದೆ ಅಂತ ಈಗಲೇ ಕರ್ಕಂಡ್‌ಬಾ ಹೋಗು’ ಎಂದು ಹೇಳಿಕಳಿಸಿದಳು. ಹುಡುಗ ಓಡಿಹೋದ. ಐದು ನಿಮಿಷದಲ್ಲೇ ಮೇಷ್ಟರು ಬಂದರು. ‘ಯಾಕೆ, ಹೇಳಿಕಳ್ಸಿದ್ರಂತೆ?’-ಎಂದು ಕೇಳಿದ ಅವರಿಗೆ, ‘ನಮ್ಮ ಶೆಡ್ಡಿಗೆ ಹೋಗಿ ನೋಡಿ’ ಎಂದು ಹೇಳಿದ ಅವಳು ಅಲ್ಲಿ ನಿಲ್ಲದೆ ಏರಿಯ ಕಡೆಗೆ ನಡೆದು ದೇವಸ್ಥಾನಕ್ಕೆ ಹೊರಟುಹೋದಳು. +ಏನೂ ಗೊತ್ತಾಗದೆ ಮೇಷ್ಟರು ಶೆಡ್ಡಿಗೆ ಬಂದು ನೋಡುತ್ತಾರೆ, ಸೂರ್ಯನಾರಾಯಣ ಬೆಪ್ಪು ಹಿಡಿದವನಂತೆ ಕುಳಿತಿದ್ದಾನೆ. ಅವನ ಎದುರಿಗೆ ಹಣ್ಣು, ಹೂವು, ವೀಳ್ಯೆದೆಲೆ, ತಿಂಡಿಗಳ ಪೊಟ್ಟಣಗಳು. +ಮಗು ರತ್ನ ತಂದೆಯ ಭುಜ ಹಿಡಿದುಕೊಂಡು ನಿಂತಿದೆ. ‘ಯಾವಾಗ ಬಂದ್ರಿ? ನನ್ನ ಕಾಗದ ತಲ್ಪ್‌ಲಿಲ್ವೆ?’ +‘ಯಾವ ಕಾಗದ? ಇಲ್ವಲ.’ +‘ಇವತ್ತಿಗೆ ಐದು ದಿನವಾಯ್ತು ಬರ್‌ದು.’ +ನಮ್ಮೂರಿಗೆ ಪೋಸ್ಟ್ ಬರೂದು ವಾರಕ್ಕೊಂದು ದಿನ.’ +ಮೇಷ್ಟರು ಬಾಯಿ ಬಿಟ್ಟು ಮಾತನಾಡಲಿಲ್ಲ. ‘ನಂಗೇನೂ ತಿಳಿತಾ ಇಲ್ಲ. ಅದೇನು ಮಾತಾಡಿ ವೆಂಕಟೆಶಯ್‌ನೋರೇ’-ಸೂರ್ಯನಾರಾಯಣನೇ ಕೇಳಿದ. +‘ಬಾಯಿಬಿಟ್ಟು ಹ್ಯಾಗೆ ಹೇಳ್ಲಿ?’ +‘ಇಲ್ಲ ಹೇಳಿ’-ಎನ್ನುವಾಗ ಅವನ ಧ್ವನಿಯಲ್ಲಿ ಆತಂಕ ಒಡೆಯುತ್ತಿತ್ತು. +‘ಪಾರ್ವತಮ್ಮ, ರಾಮಣ್ಣ, ಇಬ್ರೂ ಹೋಗಿಬಿಟ್ರು. ಇವತ್ತಿಗೆ ಏಳನೇ ದಿನ.’ +‘ಏನು?’- ಬಿಟ್ಟ ಬಾಯಿ ಬಿಟ್ಟಂತೆಯೇ ಅವನು ಕೇಳಿದ. +‘ಪ್ಲೇಗು. ಊರಿಗೆ ಬಂದ ಮಾರಿ ಇವರ ಮನೆಗೇ ಮೊದಲು ಬಡೀತು. ಅಕ್ಕ ತಮ್ಮ ಇಬ್ರೂ ಒಂದೇ ದಿನ ಒಬ್ಬರ ಹಿಂದೆ ಒಬ್ರು ಹೊರಟ್ಹೋದ್ರು. ವಿಶ್ವ ಸುಧಾರಿಸ್ಕತ್ತಾ ಇದಾನೆ’-ಎಂದು ಅವರು ಎಲ್ಲವನ್ನೂ ವರ್ಣಿಸಿದರು. +ಸೂರ್ಯನಾರಾಯಣ ಮೂಕನಂ,ತೆ ಕೂತು ಕೇಳುತ್ತಿದ್ದ. ಎಲ್ಲವನ್ನೂ ಹೇಳಿ ಮುಗಿಸಿದ ಮೇಷ್ಟರು-‘ಗ್ರಾಚಾರ ಕಣ್ರೀ, ಹಣಬರಹ ಯಾರು ತಪ್ಸುಕಾಗುತ್ತೆ?’ ಎಂದಾಗ ಅವನಿಗೆ ತಡೆಯಲಾಗಲಿಲ್ಲ. ಅದುಮಿ ಹಿಡಿದುಕೊಂಡರೂ ಒಳಗಿನಿಂದ ಅಳು ಉಕ್ಕಿ ಬಂತು. ಬಿಕ್ಕಿ ಬಿಕ್ಕಿ ಅಳುತ್ತಾ ತಡೆತಡೆದು ಉಸಿರು ಬಿಟ್ಟ. ತಂದೆಯೇ ಅಳುವುದನ್ನು ಕಂಡ ರತ್ನ ತಾನೂ ಅಳಲು ಪ್ರಾರಂಭಿಸಿತು. ಅದಕ್ಕೆ ಏನು ತಿಳಿಯಿತೋ ಏನು ಬಿಟ್ಟಿತೋ! +‘ವೆಂಕಟೇಶಯ್ನೋರೇ, ನಾನು ನತದೃಷ್ಟ’-ಎಂದು ಮಗುವನ್ನು ಎಳೆದು ತಬ್ಬಿಕೊಂಡು ಅವನು ತನ್ನ ಮುಖವನ್ನು ಅದರ ಬೆನ್ನಿನಲ್ಲಿ ಹುದುಗಿಸಿಕೊಂಡ. +ಮುಂದೆ ಆಡಲು ಮೇಷ್ಟರಿಗೆ ಏನೂ ತಿಳಿಯಲಿಲ್ಲ. ಹತ್ತು ನಿಮಿಷ ಸುಮ್ಮನೆ ಕೂತಿದ್ದ ಅವರು-‘ಏಳಿ, ನಮ್ಮನೆಗೆ ಹೋಗಾಣ’ ಎಂದರು. +‘ಇಲ್ಲ. ಈಗ ಏನೂ ಬ್ಯಡ. ನಾನು ವಾಪಸು ಹೊರಡ್ತೀನಿ.’ +‘ಹೊರ್‌ಡೋರಂತೆ. ಬನ್ನಿ, ಮಗೂಗಾದ್‌ರೂ ಏನಾದ್ರೂ ಒಂದಿಷ್ಟು ಹೊಟ್ಟೆಗೆ ಬೀಳಬೇಕಲ್ಲ’- ಎಂದು ಬಲವಂತ ಮಾಡಿ ಅವನನ್ನು ಎಬ್ಬಿಸಿ ಶೆಡ್ಡಿನ ಬಾಗಿಲು ಹಾಕಿ, ಬೀಸುವ ಕಲ್ಲಿನ ಮೇಲೆ ಇಟ್ಟಿದ್ದ ಬೀಗ ಮೆಟ್ಟಿಕೊಂಡು ಹೊರಟರು. ಅವರ ಶೆಡ್ಡಿಗೆ ಹೋದಮೇಲೆ ಸೂತಕದ ರತ್ನನಿಗೆ ಒಂದು ಮುತ್ತಗದೆಲೆ ಹಾಕಿ ಮೇಷ್ಟರ ಹೆಂಡತಿ ಊಟಕ್ಕೆ ಇಕ್ಕಿದರು. ಸೂರ್ಯನಾರಾಯಣ ಒಂದು ಲೋಟ ಕಾಫಿಯನ್ನೂ ಮುಟ್ಟಲಿಲ್ಲ. ರತ್ನನ ಊಟವಾದಮೇಲೆ ಅವನೇ ಎಲೆ ತೆಗೆದು ಎಸೆದು ಗೋಮಯ ಹಾಕಿ-‘ನಡೀರಿ, ದೇವಸ್ಥಾನಕ್ಕೆ ಹೋಗಿ ಮಗೂನ ನೋಡಿಕೊಂಡು ಬರಾಣ’ ಎಂದ. ಇಬ್ಬರೂ ಕೆರೆಯ ಏರಿಯ ಕಡೆಗೆ ಹೊರಟರು. ಸೂರ್ಯನಾರಾಯಣ ರತ್ನನನ್ನು ಎತ್ತಿಕೊಂಡ. +ಇವರು ದೇವಸ್ಥಾನಕ್ಕೆ ಹೋಗುವ ಹೊತ್ತಿಗೆ ನಂಜಮ್ಮ ಶೆಡ್ಡಿಗೆ ಹಿಂತಿರುಗಿದ್ದಳು. ಮೇಷ್ಟರು ಮನೆಗೆ ಒಬ್ಬ ಹುಡುಗನನ್ನು ಕಳಿಸಿ ಬೀಗದ ಕೈ ತರಿಸಿಕೊಂಡಳು. ಅಲ್ಲಿಯ ತನಕ ಚೆನ್ನಿಗರಾಯರ ಊಟ ಮೇಷ್ಟರ ಮನೆಯಲ್ಲೇ ಆಗುತ್ತಿತ್ತು. ಅವರ ಹೆಂಡತಿ ಶೆಡ್ಡಿಗೆ ತಂದು ಇಡುತ್ತಿದ್ದ ಅನ್ನವನ್ನು ನಂಜಮ್ಮ ಒಂದು ತುತ್ತು ತಿಂದರೆ ತಿನ್ನುತ್ತಿದ್ದಳು; ಇಲ್ಲದಿದ್ದರೆ ನಾಯಿಗೆ ಹಾಕಿಬಿಡುತ್ತಿದ್ದಳು. ಈಗ ಬಾಗಿಲು ತೆಗೆದು ಒಳಗೆ ಬಂದರೆ ಸೂರ್ಯನಾರಾಯಣ ತಂದು ಒಟ್ಟಿಗೆ ಇಟ್ಟಿದ್ದ ಹಣ್ಣು ಹೂವು ತಿಂಡಿಗಳು ಅಲ್ಲೇ ಇದ್ದುವು. ಅವುಗಳನ್ನು ನೋಡಲಾರದೆ ಅವಳು ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡು ಒಳಗೆ ಹೋದಳು. ಶ್ಯಾನುಭೋಗಿಕೆಯ ಲೆಕ್ಕದ ಪುಸ್ತಕಗಳನ್ನಿಡುವ ದೊಡ್ಡ ಪೆಟ್ಟಿಗೆಯಲ್ಲಿ ಪಾರ್ವತಿಯ ಮದುವೆಯ ಸೀರೆಗಳು, ಸೂರ್ಯನಾರಾಯಣನೇ ಇಟ್ಟಿದ್ದ ಬೆಂಡೋಲೆ, ಬೇಸರಿ, ಬೆಳ್ಳಿಯ ಬಳೆಗಳಿದ್ದುವು. ಎಲ್ಲವನ್ನೂ ಹೊರಕ್ಕೆ ತೆಗೆದು ಒಂದು ಬಿಳಿಯ ಚೌಕದಲ್ಲಿ ಕಟ್ಟಿ ಇಟ್ಟಳು. +ಒಂದು ಗಂಟೆಯ ಹೊತ್ತಿಗೆ ಅವರು ದೇವಸ್ಥಾನದಿಂದ ಹಿಂತಿರುಗಿ ಬಂದರು. ಸೂರ್ಯನಾರಾಯಣ ಸುಮ್ಮನೆ ನಿಂತಿದ್ದ. ಮೇಷ್ಟರೇ-‘ಅವರು ಹೊರಡ್ತಾರಂತೆ. ನಾಳೆ ಎಲ್ಲ ಏರ್ಪಾಡೂ ಮಾಡ್ಕಂಡು ನಾಡಿದ್ದು ಒಂಬತ್ತನೇ ದಿನದಿಂದಲಾದ್ರೂ ಕರ್ಮ ಶುರುಮಾಡ್‌ಬೇಕು’ ಎಂದರು. ನಂಜಮ್ಮ ಅದಕ್ಕೆ ಏನೂ ಹೇಳಲಿಲ್ಲ. ತಾನು ಕಟ್ಟಿಟ್ಟಿದ್ದ ಗಂಟನ್ನು ತಂದು ಮುಂದೆ ಇಟ್ಟು-‘ಇದು ಅವಳ ಸೀರೆ ವಡವೆ, ನಿಮಗೆ ಸೇರಿದ್ದು. ಚೀಲಕ್ಕೆ ಹಾಕ್ಕಳಿ’ ಎಂದಳು. +ಅವನಿಗೆ ಇದನ್ನು ಕಂಡು ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ‘ಅಮ್ಮ, ನನ್ನ ಮುಖ್ಯ ಪದಾರ್ಥವೇ ಹೋದಮೇಲೆ ಇದನ್ನ ತಗಂಡು ಹೋಗಿ ಏನು ಮಾಡ್ಲಿ? ನಂಗೆ ಬ್ಯಾಡ’-ಎಂದ. +‘ಧಾರೆ ಎರೆದ ತಕ್ಷಣ ಅವ್ಳು ನಿಮ್ಮ ವಸ್ತುವಾಗಿಹೋದ್ಲು. ಅವ್ಳ ಸೀರೆ ವಡವೆ ನಮ್ಮನ್ಲಿ ಇಟ್ಕಂಡು ಏನು ಮಾಡ್ಲಿ? ಅದು ಕಣ್ಣಿಗೆ ಬೀಳ್ತಿದ್ರೆ ನಂಗೂ ತಡೆಯುಕ್ಕಾಗುಲ್ಲ.’ +ಮೇಷ್ಟರೂ ಹೇಳಿದಮೇಲೆ ಅವನು ಅದನ್ನು ತೆಗೆದು ತನ್ನ ಕೈಚೀಲಕ್ಕೆ ಹಾಕಿಕೊಂಡ. ತಾನು ನಿಂತಲ್ಲಿಯೇ ಬಾಗಿ ನೆಲಮುಟ್ಟಿ ಅತ್ತೆಮ್ಮನಿಗೆ ನಮಸ್ಕರಿಸಿ ಮಗುವನ್ನೂ ಮಕಾಡೆ ಮಲಗಿಸಿ ಅಡ್ಡ ಬೀಳಿಸಿ ಒಂದು ಕೈಲಿ ಚೀಲ, ಇನ್ನೊಂದು ಕೈಲಿ ಮಗುವಿನ ಕೈಹಿಡಿದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೊರಟುಹೋದ. ಮೋಟಾರು ರಸ್ತೆಯ ತನಕ ಮೇಷ್ಟರೂ ಹೋದರು. +ಈಗ ರಸ್ತೆಯಲ್ಲಿ ಒಟ್ಟು ಮೂರು ಮೋಟಾರುಗಳು ತಿರುಗುತ್ತಿವೆ. ಮೊದಲಿಯಾರಿ ಬಸ್ಸಿನ ಜೊತೆಗೆ ಸಿ.ಪಿ.ಸಿ. ಕಂಪನಿಯವು ಎರಡು ನಡೆಯುತ್ತಿವೆ. ರಸ್ತೆಗೆ ಹೋದ ಹತ್ತು ನಿಮಿಷಕ್ಕೇ ಅವರಿಗೆ ತಿಪಟೂರಿನ ಕಡೆಯ ಬಸ್ಸು ಸಿಕ್ಕಿತು. ಬಸ್ಸು ಹತ್ತಿಸಿ ಹಿಂತಿರುಗಿ ಬರುವ ಹೊತ್ತಿಗೆ ನಂಜಮ್ಮ ಮೇಷ್ಟರ ಶೆಡ್ಡಿನಲ್ಲಿದ್ದಳು. ಮೇಷ್ಟರು ಅವಳ ಕೈಲಿ ಎಂದರು: ‘ಪಾರ್ವತಮ್ಮನ ಕೆಲಸ ಅವ್ರು ನಾಡಿದ್ದಿನಿಂದ ಮಾಡಿ ಚುಟುಕದಲ್ಲಿ ಮುಗುಸ್ತಾರಂತೆ. ರಾಮಣ್ಣ ಮುಂಜಿಯಾಗಿದ್ದ ಹುಡುಗ. ಎಂಥಾದದ್ರೂ ಶಾಸ್ತ್ರ ಅಂತ ಮಾಡಲೇಬೇಕು. ಈ ಜೋಯಿಸರ ಕೈಗೆ ಸಿಕ್ಕಿಹಾಕ್ಕಂಡ್ರೆ ಬೋಳಿಸಿಬಿಡ್ತಾರೆ. ಮನುಷ್ಯನ ಕಷ್ಟ ಸುಖ ಏನೂ ನೋಡುಲ್ಲ. ಎಲ್ಲಾ ಯಜಮಾನಿಕೇನೂ ನನಗೆ ಬಿಟ್ಟುಬಿಡಿ. ಒಂದು ಇಪ್ಪತ್ತೈದು ರೂಪಾಯೀಲಿ ಎಲ್ಲಾನೂ ಮುಗುಸ್ತೀನಿ. ಇಲ್ಲಿ ನಾವು ಏನು ಮಾಡಿದ್ರೂ ಅಲ್ಲಿ ಸತ್ತ ಜೀವಕ್ಕೆ ಏನೂ ಆಗುಲ್ಲ. ಬರೀ ನಮ್ಮ ಕರ್ಮ ಕಳ್ಕಳುಕ್ಕೆ ಅಂತ ನಾವು ಮಾಡೂದು.’ +‘ಈಗ ದುಡ್ಡಿಗೇ ತೊಂದರೆಯಾಗಿದೆ. ನೀವೇ ಒಂದು ಹೆಜ್ಜೆ ಕುರುಬರ ಹಳ್ಳಿಗೆ ಹೋಗಿ ಬನ್ನಿ. ಗುಂಡೇಗೌಡ್ರು ಇಂಥ ಸಮಯ ಅಂದ್ರೆ ಇಲ್ಲ ಅನ್ನುಲ್ಲ. ಮುಂದಿನ ವರ್ಷ ಕಂದಾಯಕ್ಕೆ ಹಾಕ್ಕಂಡ್ರೆ ಆಗುತ್ತೆ.’ +ಮೇಷ್ಟರು ಆಗಲೇ ಕುರುಬರಹಳ್ಳಿಗೆ ಹೊರಟರು. ನಂಜಮ್ಮ ತನ್ನ ಶೆಡ್ಡಿಗೆ ಬಂದಳು. +– ೭ – +ಅದೇ ದಿನ ಸಂಜೆಯ ಹೊತ್ತಿಗೆ ಗಾಡಿಯಲ್ಲಿ ಕುಳಿತು ಅಕ್ಕಮ್ಮ, ಕಲ್ಲೇಶ, ಇಬ್ಬರೂ ಬಂದರು. ಅಕ್ಕಮ್ಮ ಒಂದೇಸಮನೆ ಅಳುತ್ತಿದ್ದಳೆಂಬುದು ಗಾಡಿಯಿಂದ ಇಳಿಯುವಾಗಲೇ ಕಾಣುತ್ತಿತ್ತು. ಕಲ್ಲೇಶನ ಮುಖವೂ ಮ್ಲಾನವಾಗಿತ್ತು. ಶೆಡ್ಡಿನ ಒಳಗೆ ಬಂದ ಅಕ್ಕಮ್ಮ ಅಳುತ್ತಲೇ ಎಂದಳು: ‘ನಂಜಾ, ನಾವೆಲ್ಲಾ ಸತ್ತುಹೋಗಿದ್ದೆವೆ? ಇವತ್ತಿಗೆ ಏಳು ದಿನ ಆಯ್ತಂತಲ. ನಮಗೆ ಹೇಳಿಕಳುಸ್ಲೇಬ್ಯಾಡ್‌ವೇನೆ?’ +ಈ ಸಮಯದಲ್ಲಿ ತನ್ನ ತೌರಿನ ಬಂಧುಗಳನ್ನು ಕಂಡ ನಂಜಮ್ಮನಿಗೂ ಅಳು ಬಂತು. ಆದರೆ ಸಮಾಧಾನ ಮಾಡಿಕೊಂಡು ಹೇಳಿದಳು: ‘ಯಾವ ಸಂತೋಷದ ಸಮಾಚಾರ ಅಂತ ಹೇಳಿಕಳುಸ್ಲಿ ಹೇಳು.’ +‘ಕಷ್ಟ ಸುಖ ಅಂದ್ರೆ ನಾವು ಆಗ್‌ಲೇಬ್ಯಾಡವೆ? ನಾವೇನು ದೂರವಾಗಿಬಿಟ್ಟೆವೆ? ಏಳು, ಒಂದೆರಡು ತಿಂಗಳು ಊರಲ್ಲಿ ಇದ್ದು ಬರುವಂತೆ. ಇದೆಲ್ಲ ಸ್ವಲ್ಪ ಮರೆಯುತ್ತೆ’-ಕಲ್ಲೇಶ ಎಂದ. +ನಂಜಮ್ಮ ತಕ್ಷಣ ತೌರಿಗೆ ಹೋಗುವ ಸಾಧ್ಯತೆಯಂತೂ ಇಲ್ಲ. ವಿಶ್ವ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾನೆ. ನಾಡಿದ್ದಿನಿಂದ ಚುಟಕದಲ್ಲಾದರೂ ರಾಮಣ್ಣನ ಕರ್ಮವಾಗಬೇಕು. ಅಲ್ಲದೆ ತೌರಿಗೆ ಹೋಗಲು ಅದೇನೋ ಅವಳಿಗೇ ಇಷ್ಟವಿಲ್ಲ. ಅವಳು ಅಲ್ಲಿಗೆ ಹೋಗಿ ವರ್ಷಗಳೇ ಆಗಿಹೋಗಿವೆ. ಆದರೆ ಕಲ್ಲೇಶ ಬಲವಂತ ಮಾಡಿದ. ಅವನು, ಅಕ್ಕಮ್ಮ, ಇಬ್ಬರೂ ದೇವಸ್ಥಾನಕ್ಕೆ ಹೋಗಿ ವಿಶ್ವನನ್ನು ನೋಡಿಕೊಂಡು ಬಂದರು. ಅಕ್ಕಮ್ಮ, ಉಳಿದುಕೊಂಡ ಆ ಒಬ್ಬ ಮರಿಮಗನನ್ನು ತಬ್ಬಿ ಕಣ್ಣೀರು ಹಾಕಿದಳು. +ಹನ್ನೊಂದನೆಯ ದಿನ ಸೂತಕ ಕಳೆಯುವ ತನಕ ಇಬ್ಬರೂ ಅಲ್ಲಿಯೇ ಉಳಿದರು. ಅಕ್ಕಮ್ಮ ಕಲ್ಲೇಶರಿಗೆ ಮೂರನೆಯ ದಿನ ಸೂತಕ ಹೋಗಿದ್ದುದರಿಂದ ಅಕ್ಕಮ್ಮ ಈ ಶೆಡ್ಡಿನಲ್ಲೇ ಅಡಿಗೆ ಶುರುಮಾಡಿದಳು. ಕಲ್ಲೇಶ ರೇವಣ್ಣಶೆಟ್ಟಿಯ ಶೆಡ್ಡು ಹುಡುಕಿಕೊಂಡು ಹೋದ. +ಅಕ್ಕಮ್ಮ ನಂಜುವಿಗೆ ಹೇಳಿದಳು: ‘ನೋಡು, ಕಂಟಿ ಈಗಲೂ ಊರಲ್ಲಿರುಲ್ಲ. ಮೊದ್‌ಲಿತ್ತಲ್ಲ ಆ ಕುದುರೆ, ಅವನು ಕಾಶಿಗೆ ಹೋದ ನಾಲ್ಕು ವರ್ಷಕ್ಕೆ ಸತ್ತುಹೋಯ್ತು. ಈಗ ಇನ್ನೊಂದು ಕುದುರೆ ತಗಂಡಿದಾನೆ. ಎಲ್ಲೆಲ್ಲೋ ತಿರುಗ್ತಿರ್ತಾನೆ. ಕಾಶಿಯಿಂದ ಬಂದ ಮೇಲೆ ಎಂಥೆಂಥೆದೋ ಇನ್ನೂ ಹೊಸ ಮಂತ್ರ ತಂತ್ರ ಕಲ್ತುಕಂಡಿದಾನಂತೆ. ಮಾಟ ಮದ್ದು ಅಂತ ಚನ್ನರಾಯಪಟ್ಣ, ಶಾಂತಿಗ್ರಾಮ, ಹಾಸನ, ಅರಕಲುಗೂಡು ಆ ಕಡೆಯೋರೆಲ್ಲ ಕರ್ಕಂಡು ಹೋಗ್ತಾರೆ. ಅವ್ನು ಊರು ಬಿಟ್ಟು ಇಪ್ಪತ್ತು ದಿನವಾಯ್ತು.’ +ಆಮೇಲೆ ಹೇಳಿದಳು: “ಕುರುಬರಹಳ್ಳೀ ನಿಂಗೇಗೌಡ ಅನ್ನೋನ ಮಗಳ್ನ ನಮ್ಮೂರ ಕೋಳಿ ಚಿಕ್ಕಣ್ಣನ ತಮ್ಮಂಗೆ ಕೊಟ್ಟಿಲ್ವೆ? ನಿಂಗೇಗೌಡ ನೆನ್ನೆ ದಿನ ನಮ್ಮೂರಿಗೆ ಬಂದಿದ್ನಂತೆ. ಇವತ್ತು ಬೆಳಿಗ್ಗೆ ಚಿಕ್ಕಣ್ಣನೇ ಬಂದು-‘ನಿಮ್ಮ ಮಮ್ಮಗಳ ಎಲ್ಡು ಮಕ್ಳೂ ತೀರ್ಕಂಡ್ವಂತೆ. ಯಲ್ಲಾ ಊರು ಬಿಟ್ಟವ್ರಂತೆ. ನೀವು ಹ್ವಾಗಾಕಿಲ್ವಾ?’ ಅಂತ ಕೇಳ್ದ. ನಂಗೆ ಇದೇನು ಸುಳ್ಳೋ ನಿಜವೋ ಅನ್ನುಸ್ತು. ನಮ್ಮ ಬೀಗ್ರೇ ಅಂದ್ರು ಕಣವ್ವ ಅಂದ. ಕಲ್ಲೇಶ ಆಗಲೇ ಹೊನ್ನನಿಗೆ ಹೇಳಿ ಗಾಡಿ ಕಟ್ಟುಸ್ದ. ಹ್ವರಟೇಬಿಟ್ವು.” +‘ಅಣ್ಣಯ್ಯಂಗೆ ಇನ್ನೆಲ್ಲೂ ಹೆಣ್ಣು ಹುಡುಕ್‌ಲಿಲ್ವೆ?’ +“ಕಂಟಿ ಒಂದು ಕಡೆ ಗೊತ್ತುಮಾಡಿದ್ದ. ಆನೆಕೆರೆ ಹತ್ರದ ಆಲನಹಳ್ಳೀದು. ಈ ಉಮ್ಮೆಮರಳಿಗೆ ಗೊತ್ತಾಗಿ ಅವ್ಳು ಒಳಗೇ ಕದ್ದು ಅಪ್ಪುಂಗೆ ಕಾಗದ ಬರದಿದ್ಲು ಅಂತ ಕಾಣುತ್ತೆ. ಅವಳ ಅಪ್ಪ ಬಂದು ಕಲ್ಲೇಶನ ಕೈ ಹಿಡ್‌ಕಂಡು ಕಣ್ಣೀರು ಹಾಕ್ತಾ, ‘ನಿನ್ನ ಕಷ್ತಕಾಲದಲ್ಲಿ ಮಗ ಅಂತ ತಿಳ್ಕಂಡು ನಾನು ಸೇವೆಮಾಡಿದೀನಿ. ದೇವ್ರು ಕೊಡ್‌ಲಿಲ್ಲ, ಮಕ್‌ಳಾಗ್ಲಿಲ್ಲ. ಇನ್ನೊಂದು ಮದ್ವೆ ಮಾಡ್ಕಬ್ಯಾಡ’ ಅಂದ. ಅಲ್ಲೀತಂಕ ಮಾಡ್ಕತೀನಿ ಅಂತಿದ್ದ ಇವ್ನು ಮನಸ್ಸು ಬದಲಾಯಿಸಿಬಿಟ್ಟ. ನಂಗೆ ಮದ್ವೆ ಬ್ಯಾಡ ಅಂದ್ಬಿಟ್ಟ. ನಾನು, ಕಂಟಿ, ಎಷ್ಟು ಹೇಳಿದ್ರೂ ಕೇಳ್ಲಿಲ್ಲ.” +ಮೇಷ್ಟರ ನಿರ್ದೇಶನದಲ್ಲಿ ರಾಮಣ್ಣನ ಕರ್ಮ ಇಪ್ಪತ್ತೈದು ರೂಪಾಯಿಯಲ್ಲೇ ಮುಗಿಯಿತು. ಸೂತಕ ಕಳೆದಮೇಲೆ ನಂಜಮ್ಮ ವಿಶ್ವನನ್ನು ಎತ್ತಿಕೊಂಡು ಬಂದಳು. ಅವನು ಈಗ ಎದ್ದು ನಿಧಾನವಾಗಿ ಹೆಜ್ಜೆ ಇಡುವಂತೆ ಆಗಿದ್ದ. ಮೈ ಕೈ ತುಂಬಿಕೊಂಡು ಬಸವನಂತೆ ಬೆಳೆದಿದ್ದ ಹುಡುಗ ಈಗ ಬಡಕಲು ಕರುವಿನಂತೆ ಇಳಿದುಹೋಗಿದ್ದ. ಇವರು ಬಂದ ಬೆಳಿಗ್ಗೆಯೇ ಊರಿನಿಂದ ತಂದಿದ್ದ ಗಾಡಿಯನ್ನು ವಾಪಸು ಕಳಿಸಿಬಿಟ್ಟರು. ಈಗ ಕಲ್ಲೇಶ ಮತ್ತೆ ಕೇಳಿದ: ‘ನಂಜಾ, ಒಂದು ಕಮಾನು ಗಾಡಿ ಬಾಡಿಗೆಗೆ ಮಾಡ್ತೀನಿ. ನಡಿ ಊರಿಗೆ ಹೋಗಾಣ.’ +ಹೋಗಬಾರದೆಂದು ಅವಳ ಮನಸ್ಸು. ಆದರೆ ಒರಟುತನ ಮಾಡಬಾರದು. ಅತ್ತಿಗೆ ಕೆಟ್ಟವಳಾಗಿರಬಹುದು. ಅಣ್ಣ ತನಗೇನು ಕೆಟ್ಟದ್ದು ಮಾಡಿಲ್ಲ. ಹೆಣ್ಣು ಕೊಡಿ ಅಂತ ಕೇಳಿದರು. ನಾನು ಇಲ್ಲ ಅಂದೆ. ಸಿಟ್ಟುಮಾಡಿಕೊಂಡು ಮದುವೆಗೆ ಬರಲಿಲ್ಲ. ಈಗ ಅವರೇ ಬಂದು ಕರೀತಿದಾರೆ. ಯಾಕೆ ಹೋಗಬಾರದು? ಆದರೆ ಅದು ಕಂದಾಯದ ವಸೂಲಿಯ ಕಾಲ. ಇಷ್ಟು ದಿನವೂ ಆ ಕಡೆ ಗಮನವೇ ಕೊಟ್ಟಿಲ್ಲ. ತಾನು ತೌರಿಗೆ ಹೋದರೆ ಗಂಡ ಒಬ್ಬರೇ ಇಲ್ಲಿ ಇರುವುದೂ ಇಲ್ಲ; ಸರ್ಕಾರದ ಕೆಲಸ ಮಾಡುವುದೂ ಇಲ್ಲ. ಅವಳು ಹೇಳಿದಳು: ‘ಅಕ್ಕಮ್ಮ, ಇಲ್ಲಿ ಇರ್ಲಿ. ಈ ಕಿಸ್ತಿನ ವಸುಲಿ ಇರ್ಸಾಲು ಆದಮೇಲೆ ನಾನು ಅಕ್ಕಮ್ಮನ ಜೊತೆ ಬತ್ತೀನಿ. ಆಮೇಲೆ ಹತ್ತು ಹದಿನೈದು ದಿನ ಇದ್ದು ಮುಂದಿನ ಕಿಸ್ತಿನ ವಸೂಲಿ ಶುರುವಾಗೂ ಹೊತ್ತಿಗೆ ವಾಪಸು ಬಂದುಬಿಡಬೇಕು.’ +ಕಲ್ಲೇಶ ಒಬ್ಬನೇ ನಡಿಗೆಯಲ್ಲಿ ಊರಿಗೆ ಹಿಂತಿರುಗಿದ. +ಅಧ್ಯಾಯ ೧೪ +– ೧ – +ಆ ಬಾರಿ ಗಂಡಸಿ, ದುದ್ದದ ಕಡೆ ಹಳ್ಳಿಗಳಿಗೆ ಹೋದ ಗಂಗಮ್ಮ ಅಪ್ಪಣ್ಣಯ್ಯರು ಒಂದೂವರೆ ತಿಂಗಳ ನಂತರ ಊರಿಗೆ ಹಿಂತಿರುಗಿದರು. ಆದರೆ ಎಲ್ಲರೂ ಊರು ಬಿಟ್ಟಿದ್ದಾರೆಂಬ ಸಮಾಚಾರ ಇನ್ನೂ ಊರಿಗೆ ಹತ್ತು ಮೈಲಿ ದೂರದಲ್ಲಿರುವಾಗಲೇ ತಿಳಿಯಿತು. ಊರಿಗೆ ಬಂದರೆ ಗಳು, ಸೋಗೆ ಹೊಂದಿಸಿ ಶೆಡ್ಡು ಹಾಕಬೇಕು. ಪಾತ್ರೆ ಪರಟಿಗಳೆಲ್ಲ, ಬಿಟ್ಟ ಊರಿನ ಗುಡಿಯ ಕೋಣೆಯಲ್ಲಿವೆ. ಬಾಗಿಲು ತೆಗೆದು ಅವನ್ನು ತರಬಹುದೋ ಬಾರದೋ ಎಂಬ ಅನುಮಾನ ಬೇರೆ. ಈ ತೊಂದರೆಯೇ ಬೇಡವೆಂದ ಅವರು ಪುನಃ ಪಶ್ಚಿಮಾಭಿಮುಖವಾಗಿ ಹೊರಟುಬಿಟ್ಟರು. ಈ ಹಿಂದೆ ತಾಗಲಾಡದ ಸುತ್ತುಗಳನ್ನೆಲ್ಲ ತಿರುಗಿ ಹಬ್ಬನಘಟ್ಟ, ಹಾರನಹಳ್ಳಿಗಳ ಸೀಮೆಯನ್ನೆಲ್ಲ ಸುತ್ತಿ ನಿಧಾನವಾಗಿ ಊರು ಮುಟ್ಟುವ ಹೊತ್ತಿಗೆ ಮೂರು ತಿಂಗಳು ಕಳೆದಿತ್ತು. ಎರಡು ಹದ ಮಳೆಯಾಗಿ ಎಲ್ಲರೂ ಶೆಡ್ಡು ಬಿಟ್ಟು ಊರಿಗೆ ಹಿಂತಿರುಗಿದ್ದರು. +ಇಬ್ಬರು ಮೊಮ್ಮಕ್ಕಳೂ ಒಂದೇ ದಿನ ಸತ್ತದ್ದನ್ನು ಕೇಳಿದ ಗಂಗಮ್ಮನಿಗೆ ಸೊಸೆಯನ್ನು ಬೈಯಬೇಕೆನ್ನಿಸುವಷ್ಟು ಕೋಪ ಬಂತು. ಆದರೆ ಅವಳ ಎದುರು ನಿಂತು ಬಾಯಿ ತೆರೆಯಲು ಒಂದು ವಿಧವಾದ ಭಯ. ಸೊಸೆಯ ಮನೆಗೆ ಹೋದಾಗ ಅವಳಿಗೇ ತಿಳಿಯದಂತೆ ಅಳು ಬಂದುಬಿಟ್ಟಿತು. ‘ಆ ಹೆಂಡರು ಸತ್ತೋನಿಗೆ ಹೆಣ್ಣು ಕೊಟ್ರೆ ಅದು ಉಳಿಯುತ್ತಾ? ಆಗ ನನ್ನಾದ್ರೂ ಹೇಳಿ ಕೇಳಿ ನೀನು ಮದುವೆ ಗೊತ್ತು ಮಾಡ್‌ದ್ಯಾ?’-ಎಂದು ತನ್ನ ದುಃಖವನ್ನು ಪ್ರಕಟಿಸಿದಳು. ಇಬ್ಬರು ಮಕ್ಕಳೂ ಬದುಕಿದ್ದಾಗ ಅವಳಿಗೂ ಅವರಿಗೂ ಹೆಚ್ಚು ಸಂಪರ್ಕ ಇರಲಿಲ್ಲ. ಅವಳು ಆಗಾಗ್ಗೆ ಊರು ಬಿಟ್ಟು ಹೋಗುತ್ತಿದ್ದಳು. ಊರಿನಲ್ಲಿದ್ದಾಗ ಇವರ ಮನೆಗೆ ಬರುತ್ತಿರಲಿಲ್ಲ. ಮಕ್ಕಳು ಅವಳ ಮನೆಗೆ ಹೋಗುತ್ತಿರಲಿಲ್ಲ. ಒಂದೊಂದು ದಿನ ಸೊಪ್ಪಿನ ಮಡಿಯ ಹತ್ತಿರವೋ ಕೆರೆಯ ಹತ್ತಿರವೋ ಪಾರ್ವತಿ ಸಿಕ್ಕಿದರೆ, ‘ನಿಮ್ಮಮ್ಮ ವಸೂಲಿಗೆ ಹೋಗಿದ್ಲಂತಲಾ ಕುರುಬರಹಳ್ಳಿಗೆ, ಮಸೀಕಾಣಿಕೆ ಎಷ್ಟು ಸಿಕ್ತಂತೆ?’ ಎಂದು ಕೇಳುತ್ತಿದ್ದಳು. ‘ನಂಗೇನು ಗೊತ್ತಜ್ಜಿ?’ ಎಂದು ಅವಳು ಉತ್ತರ ಕೊಡುವುದರಲ್ಲಿ ಅಜ್ಜಿ ಮೊಮ್ಮಗಳ ಪ್ರೀತಿ ಮುಗಿಯುತ್ತಿತ್ತು. ‘ನೀನು ಇಂಗ್ಲೀಷ್ ಓದಿ ಶೇಕ್‌ದಾರಿಕೆ ಮಾಡ್ತೀಯಂತೆ. ನಂಗೊಂದು ಕೆಂಪಿನ ಪಟ್ಟೆಸೀರೆ ತಂದ್‌ಕೊಡ್ತೀ ಏನೋ?’ ಎಂದರೆ, ‘ಆಗ್ಲಿ ಕಣಜ್ಜಿ’ ಎಂದು ರಾಮಣ್ಣ ಹೇಳುವುದರಲ್ಲಿ ಸಂಭಾಷಣೆ ಕೊನೆಯಾಗುತ್ತಿತ್ತು. ಆದರೆ ಈಗ ಅವಲಿಗೆ ಅದೇಕೋ ಅವರಿಬ್ಬರ ನೆನಪು ಕಾದಲು ಶುರುವಾಯಿತು. ಮೂರು ನಾಲ್ಕು ದಿನ ಮೊಮ್ಮಕ್ಕಳನ್ನು ನೆನೆಸಿಕೊಂಡು ಸೊಸೆಯನ್ನು ಬೈಯುವ ಮೂಲಕ ತನ್ನ ದುಃಖವನ್ನು ವ್ಯಕ್ತಪಡಿಸುತ್ತಾ ಅವಳೂ ಗುಡಿಗೆ ಬಂದವರ ಹತ್ತಿರ ಪೇಚಾಡಿಕೊಂಡಳು. ಹೆಚ್ಚು ದುಃಖಪಟ್ಟವನು ಅಪ್ಪಣ್ಣಯ್ಯ. ಪಾರ್ವತಿಯ ಮದುವೆಯಲ್ಲಿ ಅವನು ಮೈ ಮುರಿದು ದುಡಿದಿದ್ದ. ಅದರಿಂದಲೋ ಏನೋ, ಅವನಿಗೆ ಅವಳ ಮೇಲೆ ತುಂಬ ಪ್ರೀತಿ ಹುಟ್ಟಿತ್ತು. ರಾಮಣ್ಣ ಅವನ ಕ್ಲಾಸಿಗೇ ಮೊದಲನೆಯವನಾಗಿ ಓದುತ್ತಾನೆಂದು ಕೇಳಿದುದರಿಂದ ಅವನ ಮೇಲೆ ಅಭಿಮಾನ ಹುಟ್ಟಿತ್ತು. ಶೇಕ್‌ದಾರರಿಗೇ ಲೆಕ್ಕ ಬರೆದುಕೊಟ್ಟಿದ್ದ ಹುಡುಗ ಅವನು. ಇಂಗ್ಲಿಷ್ ಕಲಿತು ಮುಂದೆ ಶೇಕ್‌ದಾರಿ ಮಾಡಬಹುದು. ಹೆಚ್ಚಾಗಿ ಅವನೊಡನೆ ಮಾತನಾಡಿರದಿದ್ದರೂ, ಅವು ತನ್ನವೇ ಮಕ್ಕಳು ಎಂಬ ಭಾವ ಅವನಲ್ಲಿ ಅದು ಹೇಗೋ ಬೆಳೆದಿತ್ತು. ಈಗ ಅಪ್ಪಣ್ಣಯ್ಯ ಹೋಗಿ ಅತ್ತಿಗೆಯ ಮುಂದೆ ನಿಂತು ಕಣ್ಣೀರು ಹಾಕಿ-‘ನಾವು ಪಾಪಿ ಮುಂಡೇಮಕ್ಳು. ಉಳಿಸ್ಕಳೂದು ಹಣೇಲಿ ಬರೀಲಿಲ್ಲ’ ಎಂದ. +ಆ ಬಾರಿ ಮಳೆ ಬೆಳೆ ಚೆನ್ನಾಗಿ ಆಗಿತ್ತು. ಪಹಣಿ ಲೆಕ್ಕ ಬರೆದು ಮುಗಿದಿತ್ತು. ಒಂದು ದಿನ ಮೇಷ್ಟರ ಹೆಂಡತಿ ಬಂದು ನಂಜಮ್ಮನಿಗೆ ಹೇಳಿದರು: ‘ನೋಡಿ, ಶೃಂಗೇರಿ ಶಾರದಮ್‌ನೋರ ದರ್ಶನಮಾಡಿ ಕುಂಕುಮಾರ್ಚನೆ ಮಾಡುಸ್ತೀನಿ ಅಂತ ನಾನು ನಿಮ್ಮ ವಿಶ್ವನ ಹೆಸರಿನಲ್ಲಿ ಹರಕೆಗಟ್ಟಿದ್ನಲ. ಅದು ನಮ್ಮನೆ ದೇವರಗೂಡಲ್ಲೇ ಇದೆ. ಇನ್ನು ಎಂಟು ದಿನಕ್ಕೆ ನವರಾತ್ರಿ ಬರುತ್ತಲಾ, ಆಗ ನೀವು ಮಗು ಕರ್ಕಂಡು ಹೋಗಿ ಬಂದುಬಿಡಿ. ನಾನು ಹರಕೆ ಕಟ್ಟಿದ ದಿನವೇ ಅವನಿಗೆ ಜ್ವರ ಇಳೀತು. ದೇವರ ಹರಕೆ ನಿಲ್ಲುಸ್ಕಾಬಾರ್ದು.’ +ತಾವು ಶೃಂಗೇರಿಗೆ ಹೋಗಿಬರಬೇಕೆಂದು ನಂಜಮ್ಮ ನಿಶ್ಚಯಿಸಿದಳು. ಯಾವ ದೇವರ ಶಕ್ತಿ ಹೇಗಿರುತ್ತೆಯೋ! ಅದನ್ನು ಮರೆತು ಕೂತರೆ ನಾಳೆ ಏನಾದರೂ ಆಪತ್ತು ಬರಬಹುದು. ನನಗಿರೂದು ವಿಶ್ವ ಒಂದೇ ಬಳ್ಳಿ. ಹೋಗಲೇಬೇಕು. ಅಲ್ಲಿಗೆ ಹೋಗುವ ಮಾರ್ಗವನ್ನು ಮೇಷ್ಟರು ಹೇಳಿದರು. ತಿಪಟೂರಿನಿಂದ ರೈಲು ಹತ್ತಿ ತರೀಕೆರೆಯಲ್ಲಿ ಇಳಿಯಬೇಕು. ಮಧ್ಯೆ ಬೀರೂರಿನಲ್ಲಿ ಬೇರೆ ಗಾಡಿಗೆ ಬದಲಾಯಿಸಬೇಕು. ರಾತ್ರಿ ತರೀಕೆರೆ ಸ್ಟೇಷನ್ನಿನಲ್ಲಿ ಮಲಗಿದ್ದು, ಬೆಳಿಗ್ಗೆ ಹೊರಡುವ ಸಣ್ಣ ರೈಲಿನಲ್ಲಿ ನರಸಿಂಹರಾಜಪುರಕ್ಕೆ ಹೋಗಬೇಕು. ಅಲ್ಲಿಂದ ಶೃಂಗೇರಿಗೆ ಮೋಟಾರಿದೆ. ಕೊಪ್ಪದ ಮೇಲೆ ಹೋಗುತ್ತೆ. ತಿಪಟೂರಿನಿಂದ ತರೀಕೆರೆಗೆ ಒಬ್ಬರಿಗೆ ಹದಿನೈದಾಣೆ. ಅಲ್ಲಿಂದ ನರಸಿಂಹರಾಜಪುರಕ್ಕೆ ಆರೂ ಮುಕ್ಕಾಲಾಣೆ. ಮುಂದೆ ಮೋಟಾರಿಗೆ ಎರಡು ರೂಪಾಯಿ. ಶೃಂಗೇರಿಯಲ್ಲಿ ಯಾತ್ರಾರ್ಥಿಗಳಿಗೆ ಇಳಿದುಕೊಳ್ಳಲು ಛತ್ರವಿದೆ. ಮಠದಲ್ಲಿ ಎರಡು ಹೊತ್ತೂ ಭೋಜನ ಸೌಕರ್ಯವಿದೆ. +ವಿಶ್ವನ ಜೊತೆ ತಾನು ಹೊರಡುವುದಂತೂ ಸರಿಯೆ. ರೈಲು ಪ್ರಯಾಣಮಾಡಿ, ದೂರ ದೇಶ ತಿರುಗಿರುವ ಯಾರಾದರೂ ಒಬ್ಬರು ಜೊತೆಗೆ ಬೇಕು. ಈಗ ಅಷ್ಟೊಂದು ದುಡ್ಡು ಹೊಂದಿಸುವುದೂ ಕಷ್ಟ. ಕುಂಕುಮಾರ್ಚನೆಗೆ ಐವತ್ತು ರೂಪಾಯಿ ಕೊಡಬೇಕು. ಅಪ್ಪಣ್ಣಯ್ಯ ತಾನೇ ಬಂದು ಒಂದು ದಿನ ಗುಟ್ಟಿನಲ್ಲಿ ಹೇಳಿದ: ‘ಯಾರಿಗೂ ಹೇಳ್‌ಬ್ಯಾಡಿ. ನನ್ನ ಹತ್ರ ಇಪ್ಪತ್ತು ರೂಪಾಯಿ ಇದೆ. ಕೊಟ್ಟಿರ್ತೀನಿ. ಆಮ್ಯಾಲೆ ನಾನು ಕೇಳಿದಾಗ ಕೊಡೂರಂತೆ. ಜೊತೆಗೆ ನಾನೂ ಬತ್ತೀನಿ.’ ದೇಶಾವರಿ ಮಾಡುವಾಗ ಸಿಕ್ಕಿದ ರಾಗಿ ಕಾಳುಗಳನ್ನು ಅವರು ಅಲ್ಲಲ್ಲಿಯೇ ಮಾರಿಬಿಡುತ್ತಿದ್ದರು. ಕೆಲವು ಸಲ ಅಪ್ಪಣ್ಣಯ್ಯ ತಾಯಿಗೆ ಕಾಣದಂತೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾರಿ ಎಲೆ ಹೊಗೆಸೊಪ್ಪಿನ ದುಡ್ಡು ಮಾಡಿಕೊಳ್ಳುತ್ತಿದ್ದ. +ಇಪ್ಪತ್ತು ರೂಪಾಯಿಯಲ್ಲಿ ಎಲ್ಲವೂ ಸಾಕಾಗುವುದಿಲ್ಲ. ಮಗಳ ಮದುವೆ, ನಂತರ ಆದ ಕೆಲಸಗಳು, ಹೀಗೆ ನಂಜಮ್ಮ ಇದ್ದಬದ್ದದ್ದನ್ನೆಲ್ಲ ಖರ್ಚುಮಾಡಿದ್ದಳು. ಕುರುಬರಹಳ್ಳಿಯವರನ್ನು ಎಷ್ಟೆಂದು ಕೇಳುವುದು? ಅಪ್ಪಣ್ಣಯ್ಯ ಹೇಳಿದ: ‘ಇಲ್ಲಿಂದ ತಿಪಟೂರಿಗೆ ನಡ್ಕಂಡೇ ಹೋಗ್‌ಭೌದು. ನರಸಿಂಹರಾಜಪುರದ ತಂಕ ರೈಲು ಆಗುತ್ತೆ. ಮುಂದಕ್ಕೆ ಮೋಟಾರು ದಾರೀನ ಮತ್ತೆ ನಡೀಭೌದು. ಇಪ್ಪತ್ತು ರೂಪಾಯಿ ಸಾಕಾಗುತ್ತೆ.’ +ಅಷ್ಟು ದುಡ್ಡು ಸಾಕು. ನಂಜಮ್ಮ, ವಿಶ್ವ, ಅಪ್ಪಣ್ನಯ್ಯ ಹೊರಡುವುದೆಂದು ತೀರ್ಮಾನಿಸಿದರು. ಆದರೆ ಚೆನ್ನಿಗರಾಯರು ಬಿಟ್ಟಾರೆಯೆ? ತಾವೂ ಬರುವುದಾಗಿ ಹಟ ಹಿಡಿದರು. ಮತ್ತೆ ದುಡ್ದು ಹೊಂದಿಸುವುದೆಲ್ಲಿ? ಅಲ್ಲದೆ ಅವರು ಇವರ ಹಾಗೆ ನಡೆಯುತ್ತಾರೆಂಬ ಭರವಸೆ ಇಲ್ಲ. ‘ನಾನೆಲ್ಲೋ ದುಡ್ಡು ತತ್ತೀನಿ ನಿಂಗ್ಯಾಕೆ?’-ಎಂದರು. ‘ಯಾರ ಹತ್ರವೂ ಕಂದಾಯದ ರಶೀತಿ ಬರ್‌ದು ತರಕೂಡದು’-ಅವಳು ನಿರ್ಬಂಧ ಹಾಕಿದಳು. ‘ಇಲ್ಲ’ವೆಂದು ಅವರು ಒಪ್ಪಿಕೊಂಡರು. ಅಂತೂ ಎಲ್ಲಿ ದುಡ್ಡು ಹೊಂದಿಸಿಕೊಂಡರೋ ಏನೋ, ಅವರ ಖರ್ಚೇ ಬೇರೆ. ಇವರು ಮೂವರ ಖರ್ಚೇ ಬೇರೆ. ನಂಜಮ್ಮ ಐದು ಸೇರು ಹುರಿಟ್ಟು ಬೀಸಿದಳು. ತಾವು ದೇಶಾವರಿ ಮಾಡಿ ತಂದಿದ್ದ ಪೈಕಿ ಅಪ್ಪಣ್ಣಯ್ಯ ಎಂಟು ಸೇರು ಭತ್ತವನ್ನು ಅಮ್ಮನಿಗೆ ಕಾಣದಂತೆ ತಂದುಕೊಟ್ಟ. ಅವಲಕ್ಕಿ ಹಾಕಿಸಿ ನಂಜಮ್ಮ ಅದನ್ನೂ ಕಟ್ಟಿಕೊಂಡಳು. ಯಾತ್ರೆಗೆ ಹೊರಡಲು ಗಂಗಮ್ಮನಿಗೂ ಆಶೆ. ಆದರೆ ಈ ಸೊಸೆಯ ಜೊತೆ ಹೋಗುವುದು ಬೇಡ. ಮಗನನ್ನೂ ಹೋಗಬೇಡವೆಂದಳು. ಆದರೆ ಖರ್ಚೆಲ್ಲ ಅತ್ತಿಗೆ ಕೊಡುವಾಗ ಯಾಕೆ ಹೋಗಬಾರದೆಂದು ಅವನು ಉತ್ತರ ಹೇಳಿ ಹೊರಟ. +ಪ್ಲೇಗು ಹುಶಾರಾದ ಈ ಆರು ತಿಂಗಳಿನಲ್ಲಿ ನಂಜಮ್ಮ ವಿಶ್ವನಿಗೆ ಸಾಕಷ್ಟು ಹಾಲು ತುಪ್ಪದ ಆರೈಕೆ ಮಾಡಿದ್ದಳು. ಅವನು ಮೊದಲಿನಿಂದಲೂ ಶಕ್ತಿವಂತ ಹುಡುಗ. ಒಂದು ದಿನ ಬೆಳಗಿನ ಜಾವಕ್ಕೆ, ಎಂದರೆ ಹಿಂದೆ ಅವಳು ಮುತ್ತುಗದ ಎಲೆಗೆ ಹೊರಡುತ್ತಿದ್ದುದಕ್ಕಿಂತ ಮುಂಚೆ, ನಂಜಮ್ಮ ವಿಶ್ವ ಅಪ್ಪಣ್ಣಯ್ಯರು ರೊಟ್ಟಿ ಚಟ್ನಿಗಳನ್ನು ಕಟ್ಟಿಕೊಂಡು ಹೊರಟರು. ಮೋಟಾರಿನವನು ಗುರುತಿರುವುದರಿಂದ ತಾವು ಅದರಲ್ಲಿ ತಿಪಟೂರಿಗೆ ಬಂದು ಇವರನ್ನು ಕೂಡಿಕೊಳ್ಳುವುದಾಗಿ ಚೆನ್ನಿಗರಾಯರು ಎಂದರು. ರೊಟ್ಟಿಯ ಬುತ್ತಿ, ಹುರಿಟ್ಟು, ಅವಲಕ್ಕಿ, ಬೆಲ್ಲ, ಹುಣಿಸೆಹಣ್ಣು, ನಾಲ್ಕು ಸುಲಿದ ತೆಂಗಿನಕಾಯಿ, ಎರಡು ಸೇರು ಅಕ್ಕಿ, ಎರಡು ಪಾತ್ರೆ ಒಂದೆರಡು ಬಟ್ಟೆಗಳನ್ನು, ಒಂದು ಪುಟ್ಟ ಗೋಣೀಚೀಲಕ್ಕೆ ತುಂಬಿ ಕಟ್ಟಿ ತಲೆಯಮೇಲೆ ಇಟ್ಟುಕೊಂಡು ಅಪ್ಪಣ್ಣಯ್ಯ ಹೊರಟ. ತನ್ನ ಎರಡು ಸೀರೆ ರೌಕೆ, ವಿಶ್ವನ ಬಟ್ಟೆ, ಎರಡು ದುಪ್ಪಟಿ ಒಂದು ಜಮಖಾನಗಳ ಸಣ್ಣ ಗಂಟನ್ನು ಕಂಕುಳಲ್ಲಿ ಇರುಕಿಕೊಂಡು, ಇನ್ನೊಂದು ಕೈಯಲ್ಲಿ ವಿಶ್ವನ ಕೈಹಿಡಿದು ನಂಜಮ್ಮ ನಡೆದಳು. ಬೆಳಕು ಹರಿಯುವ ಹೊತ್ತಿಗಾಗಲೇ ಅವರು ಒಂದು ಹರಿದಾರಿ ನಡೆದಿದ್ದರು. ವಿಶ್ವ ಅಮ್ಮನ ಕೈಬಿಟ್ಟು ಚಿಕ್ಕಪ್ಪನಿಗಿಂತ ಮುಂದೆ ಓಡುತಿದ್ದ. ‘ಅಮ್ಮ ನೋಡು, ನಿನಗಿಂತ ನಾನು ಶಕ್ತಿಯಾಗಿಲ್ವೋ?’ -ಎಂದು ಕೇಳುತ್ತಿದ್ದ. ಆರು ಮೈಲಿ ಕಳೆದಮೇಲೆ ದಾರಿಯಲ್ಲಿ ಸಿಕ್ಕಿದ ಒಂದು ಕಟ್ಟೆಯ ಹತ್ತಿರ ಕೂತು ಮೂವರೂ ರೊಟ್ಟಿ ಚಟ್ನಿ ತಿಂದರು. ಇನ್ನು ಎರಡು ಮೂರು ಮೈಲಿ ನಡೆಯುವ ಹೊತ್ತಿಗೆ ವಿಶ್ವನ ನಡಿಗೆ ನಿಧಾನವಾಗುತ್ತಿತ್ತು. ಈಗ ಮತ್ತೆ ಅಮ್ಮನ ಕೈಹಿಡಿದು ಹೆಜ್ಜೆ ಹಾಕಲು ಶುರುಮಾಡಿದ. ಕಾಲು ನೋಯುತ್ತದೆನ್ನಲು ಅವನಿಗೇ ಮರ್ಯಾದೆಗೆ ಕಮ್ಮಿ. ಅಷ್ಟರಲ್ಲಿ ಅವರ ಹಿಂದಿನಿಂದ ಬಂದ ಮೋಟಾರು ಭರ್ ಎಂದು ಮುಂದೆ ಹೋಯಿತು. +‘ಅವ್ನು ಹಿಂದ್‌ಗಡೆ ಸೀಟಿನಾಗೆ ಕೂತಿದ್ದ ನೋಡಿದ್ರಾ?’-ಅಪ್ಪಣ್ಣಯ್ಯ ಕೇಳಿದ. +‘ಇಲ್ಲ.’ +‘ಅಮ್ಮ, ಮೋಟ್ರುನೋರು ಅಣ್ಣೂನ್ನ ಹಾಗೇ ಕೂರಿಸ್ಕತಾರಲ, ನನ್ನೂ ಯಾಕೆ ಕೂರಿಸ್ಕಳುಲ್ಲ?’-ವಿಶ್ವ ಕೇಳಿದ. +‘ಹೂಂ. ಹಾಗೇ ಕೂರಿಸ್ಕತಾರೆ! ಬ್ಯಾಳೆಕಾಳು ತೊಸ್ಸೆ, ಅವನವ್ವನಾ…..’-ಅಪ್ಪಣ್ಣಯ್ಯ ಉತ್ತರ ಹೇಳಿದ. +‘ಹೋಗಲಿ ಬಿಡಿ’-ಎಂದು ನಂಜಮ್ಮ ಸಮಧಾನ ಹೇಳುತ್ತಿದ್ದರೂ ಅವನು ಮುಂದುವರಿಸಿದ: ‘ನೀವೇನೇ ಹೇಳಿ. ನಮ್ಮ ಚಿನ್ನಯ್ಯ ಅಂದ್ರೆ ನೀಚಮುಂಡೇಮಗ. ಚಿಕ್ಕಂದ್ನಿಂದ್ಲೂ ಅಷ್ಟೆ. ತಾನಾಯ್ತು ತನ್ನ ವಡ್ಳಾಯ್ತು. ಇಂಥಾ ನನ್‌ಮಕ್ಳಿಗೆ ಯಕ್‌ಡ ತಗಂಡು ಹ್ವಡೀಬೇಕು. ಇವರವ್ವನ……’ +‘ಅಪ್ಪಣ್ಣಯ್ಯ, ದೇವರ ಯಾತ್ರೆಗೆ ಹೋಗ್ತಿದೀವಿ. ನಮ್ಮ ಬಾಯಲ್ಲಿ ಕೆಟ್ಟ ಮಾತು ಯಾಕೆ ಬರ್‌ಬೇಕು? ಹೋಗ್‌ಲಿ ಬಿಡಿ’-ಎಂದ ನಂಜಮ್ಮ ವಿಶ್ವನಿಗೆ, ಮರೀ, ನಾನು ನಿಂಗೆ ಹೇಳ್‌ಕೊಟ್ಟಿದ್ನಲಾ, ಭಜ ಗೋವಿಂದಂ ಭಜ ಗೋವಿಂದಂ, ಅದ ಹೇಳು ನೋಡಾಣ. ಶೃಂಗೇರಿಗೆ ಹೋಗ್ತೀವಲ್ಲ, ಆ ಮಠದ ಶಂಕರಾಚಾರ್ಯರು ಹೆಣೆದಿದ್ದು ಅದು’ ಎಂದಳು. +ವಿಶ್ವ ರಾಗವಾಗಿ ನಿಧಾನವಾಗಿ ಹೇಳಲು ಶುರುಮಾಡಿದ. ಅವನು ತಪ್ಪಿದ ಕಡೆ ಅಮ್ಮ ತಿದ್ದುತ್ತಿದ್ದಳು. ಅಪ್ಪಣ್ಣಯ್ಯನ ಬಾಯಿಗೆ ಏನಾದರೂ ಬೇಕಿತ್ತು. ಮತ್ತೆ ಏನೂ ತೋಚದೆ ಜೇಬಿಗೆ ಕೈಹಾಕಿ ವೀಳ್ಯೆದೆಲೆ ಚೀಲ ತೆಗೆದು ಅರ್ಧ ಎಲೆಗೆ ಸುಣ್ಣ ತೀಡಿ ಒಂದು ಗೋಟು ಅಡಿಕೆಯೊಡನೆ ಹಾಕಿಕೊಂಡು, ಅದರಮೇಲೆ ಒಂದು ತುಂಡು ಹೊಗೆಸೊಪ್ಪು ಪುಡಿಮಾಡಿ ತುಂಬಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಬಾಯಿತುಂಬ ತಂಬುಲದ ರಸ ತುಂಬಿಕೊಂಡಿತು. ಉದ್ದಕ್ಕೂ ಉಗುಳಿಕೊಂಡು ನಡೆದ. +ರೈಲು ತಿಪಟೂರಿಗೆ ಬರುತ್ತಿದ್ದುದು ಒಂದು ಗಂಟೆಗೆ. ಮಧ್ಯೆ ಒಂದು ಸಲ ಸುಧಾರಿಸಿಕೊಂಡರೂ ಇವರು ನಡುನಡುವೆ ಹತ್ತಿರದ ಕಾಲುದಾರಿ ಹಿಡಿದುದರಿಂದ ಹನ್ನೆರಡು ಗಂಟೆಗೇ ಸ್ಟೇಷನ್ ಮುಟ್ಟಿದರು. ಈ ಮೂವರೂ ಮತ್ತೆ ಒಂದು ಸಲ ರೊಟ್ಟಿ ಚಟ್ನಿ ತಿಂದರು. ಅಷ್ಟರಲ್ಲಿ ಅರಳೀಕಟ್ಟೆ ಹತ್ತಿರದ ಮಾಧವಭಟ್ಟರ ಹೋಟೆಲಿನಲ್ಲಿ ಊಟ ಮಾಡಿಕೊಂಡು ಚೆನ್ನಿಗರಾಯರು ಅಲ್ಲಿಗೆ ಬಂದರು. ಎರಡೂವರೆ ಟಿಕೆಟ್ಟನ್ನು ಅಪ್ಪಣ್ಣಯ್ಯ ತಂದ. ತಮ್ಮದನ್ನು ಚೆನ್ನಿಗರಾಯರು ತೆಗೆದುಕೊಂಡರು. +ರಾತ್ರಿ ತರೀಕೆರೆ ಸ್ಟೇಷನ್ನಿನ ನಲ್ಲಿಯಲ್ಲಿ ನೀರು ಹಿಡಿದುಕೊಂಡು ಇವರು ಮೂವರೂ ರೊಟ್ಟಿಚಟ್ನಿ ತಿಂದರು. ಚೆನ್ನಿಗರಾಯರು ಊರು ನೋಡಿಕೊಂಡು ಬರುವುದಾಗಿ ಹೇಳಿ ಹೋದರು. ‘ಅವ್ನೀಗ ಎಲ್ಲಿಗ್ಹೋದ ಗೊತ್ತಾ?’-ಅಪ್ಪಣ್ಣಯ್ಯ ಕೇಳಿದ. ‘ಎಲ್ಲಿಗಾದ್ರೂ ಹೋಗ್ಲಿ, ನಮಗೆ ಆ ಮಾತು ಬ್ಯಾಡಿ ಸುಮ್ನಿರಿ’-ನಂಜಮ್ಮ ಹೇಳಿದಳು. ಜಮಖಾನ ಹಾಕಿಕೊಂಡು ವಿಶ್ವನ ಜೊತೆ ನಂಜಮ್ಮ ಸ್ಟೆಷನ್ನಿನ ಒಂದು ಮೂಲೆಯಲ್ಲಿ ಮಲಗಿದಳು. ಇವರ ತಲೆಯ ಕಡೆಯಲ್ಲಿ ಒಂದು ಗೋಣಿತಟ್ಟು ಹಾಸಿ ದುಪಟಿ ಹೊದೆದು ಚೀಲದ ಗಂಟನ್ನು ತಲೆ ಹಾಸಿಗೆ ಮಾಡಿಕೊಂಡು ಅಪ್ಪಣ್ಣಯ್ಯ ಮಲಗಿದ. ತಕ್ಷಣ ಮೂವರಿಗೂ ನಿದ್ರೆ ಹೊತ್ತಿತು. ಭೋಜನ ಮುಗಿಸಿ ಹಿಂತಿರುಗಿದ ಚೆನ್ನಿಗರಾಯರು ತಮ್ಮನ ಮಗ್ಗುಲಲ್ಲಿ ಒಂದು ಪಂಚೆ ಹಾಸಿಕೊಂಡು ಪವಡಿಸಿದರು. +ಮರುದಿನ ಬೆಳಿಗ್ಗೆಯ ಹೊತ್ತಿಗೆ ಇವರ ಬುತ್ತಿಯಲ್ಲಿ ಇನ್ನೂ ಹತ್ತು ರೊಟ್ಟಿ ಉಳಿದಿತ್ತು. ಮೊನ್ನೆ ರಾತ್ರಿ ಮಾಡಿದ ಅದು ಕಟುಕಾಗಿದ್ದರೂ ನೀರಿನಲ್ಲಿ ನೆನೆಸಿಕೊಂಡು ತಿನ್ನಬಹುದಾಗಿತ್ತು. ಆದರೆ ಚಟ್ನಿ ಹಳಸಿಹೋಗಿತ್ತು. ಹೋಟೆಲಿನಲ್ಲಿ ಒಂದು ಆಣೆಗೆ ಸಾಂಬಾರು ತರುವುದಾಗಿ ಅಪ್ಪಣ್ಣಯ್ಯ ಹೇಳಿದ. ಚೆನ್ನಿಗರಾಯರು ಅಷ್ಟರಲ್ಲಿ ಮುಖ ತೊಳೆದು ಹೋಟೆಲು ಹೊಕ್ಕಿದ್ದರು. ವಿಶ್ವ ಬಾಯಿ ಬಾಯಿ ಬಿಡುತ್ತಿತ್ತು. ನಂಜಮ್ಮ ಹೇಳಿದಳು: ‘ಒಂದಾಣೆಗೆ ಸಾಂಬಾರು ತನ್ನಿ, ಹಾಗೆಯೇ ವಿಶ್ವನಿಗೆ ಒಂದು ಇಡ್ಲಿ, ಎರಡು ಖಾಲಿ ದೋಸೆ ತನ್ನಿ. ಒಟ್ಟು ಮೂರಾಣೆಯಾಗುತ್ತೆ.’ +ನರಸಿಂಹರಾಜಪುರದ ಸಣ್ಣ ರೈಲು ಹೊರಟದ್ದೇ ತಡ, ವಿಶ್ವನಿಗೆ ಏನೋ ಒಂದು ವಿಧವಾದ ಹಿಗ್ಗು. ಕಿಟಿಕಿಯ ಹೊರಗೆ ಎಷ್ಟೊಂದು ಮರಗಳು! ಒಂದರ ಪಕ್ಕದಲ್ಲಿ ಒಂದರಂತೆ ಎಣಿಸುವುದಕ್ಕೇ ಆಗದಂತಹ ಹೆಮ್ಮರಗಳು. ಅವುಗಳಿಗೆ ಹಬ್ಬಿದ ಹಸುರು ಬಳ್ಳಿಗಳು. ಆಗ ತಾನೇ ಮಳೆಗಾಲ ಕಳೆದು ಆಶ್ವಯುಜದಲ್ಲಿ ಎಲ್ಲೆಲ್ಲಿಯೂ ಮರಗಿಡಗಳು ಕಳಕಳಿಸುತ್ತಿದ್ದವು. ವಿಶ್ವ ನೋಡುನೋಡುತ್ತಿರುವಂತೆಯೇ ಒಂದು ದೊಡ್ಡ ಪ್ರಾಣಿ ನಡೆದುಹೋಯಿತು. ತನ್ನ ಪುಸ್ತಕದಲ್ಲಿ ನೋಡಿದ್ದ ಚಿತ್ರದ ನೆನಪಿನಿಂದ ಅದು ಆನೆ ಎಂದು ಅವನು ಗುರುತು ಹಿಡಿದುಬಿಟ್ಟ. ‘ಅಮ್ಮ, ಕಾಡು ಅಂದ್ರೆ ಇದೇ ಏನಮ್ಮ?’-ಎಂದು ಕೇಳಿದ. ಇದೇ ಹೌದು ಎಂದು ಅಮ್ಮನಿಗೆ ಅರ್ಥವಾಯಿತು. ಆದರೆ ಅವಳು ಸಹ ಇದುವರೆಗೂ ಇಷ್ಟು ದಟ್ಟವಾದ ಮರಗಿಡಗಳನ್ನು ನೋಡಿರಲಿಲ್ಲ. +ಅಪ್ಪಣ್ಣಯ್ಯ ಹೇಲಿದ: ‘ಈ ಕಡೆಗೆಲ್ಲ ಹೀಗೆಯೇ. ಶಿವಮೊಗ್ಗದ ಆಚೆಗೆ ಹೋದರೆ ಇನ್ನೂ ಭಯಂಕರ ಕಾಡು.’ +‘ನೀವು ಶಿವಮೊಗ್ಗಕ್ಕೆ ಯಾವಾಗ ಹೋಗಿದ್ರಿ?’ +ಅದೇನೋ ನೆನಪಾಗಿ ಅಪ್ಪಣ್ಣಯ್ಯ ಸುಮ್ಮನಾಗಿಬಿಟ್ಟ. ತಕ್ಷಣ ನಂಜಮ್ಮನಿಗೂ ಅದು ಜ್ಞಾಪಕಕ್ಕೆ ಬಂತು. ತಾನು ಹಾಗೆ ಕೇಳಬಾರದಾಗಿತ್ತೆಂದು ಅವಳಿಗೂ ಎನ್ನಿಸಿತು. ಇದೇ ಅತ್ತಿಗೆಯನ್ನು ಕಾಲಿನಿಂದ ಒದೆದು, ಪೋಲೀಸರು ಹಿಡಿದುಕೊಂಡು ಹೋಗುತ್ತಾರೆಂದು ಹೆದರಿ ತಾನು ಈ ಹಿಂದೆ ಈ ಭಾಗಗಳಲೆಲ್ಲಸುತ್ತಿದ್ದ ನೆನಪಿನಿಂದ ಅವನು ಮಂಕಾಗಿ ಕಿಟಿಕಿಯ ಹೊರಗೆ ನೋಡುತ್ತಾ ಕುಳಿತ. ಚೆನ್ನಿಗರಾಯರು ಹೊಗೆಸೊಪ್ಪು ಉಜ್ಜುತ್ತಿದ್ದರು. +ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಸಣ್ಣ ರೈಲು ನರಸಿಂಹರಾಜಪುರ ಮುಟ್ಟಿದಾಗ ಬಸ್ಸಿನ ಏಜೆಂಟರುಗಳು ಬಂದು- ‘ಶೃಂಗೇರಿ ಶೃಂಗೇರಿ. ಅರ್ಜೆಂಟ್ ಶೃಂಗೇರಿ’ ಎಂದು ಮುತ್ತಿಕೊಂಡರು. +‘ನೀವು ಮೋತಾರಿಗೆ ಬತ್ತೀರೋ ನಡ್ಕಂಡ್ ಬತ್ತೀರೋ?’-ಚೆನ್ನಿಗರಾಯರು ಕೇಳಿದರು. +‘ಮೋಟಾರಿಗೆ ಬರುಕ್ಕೆ ದುಡ್ಡೆಲ್ಲಿದೆ?’-ಅಪ್ಪಣ್ಣಯ್ಯ ಉತ್ತರ ಹೇಳಿದ. +‘ನಂಗೆ ಕಾಲು ಉಳಿಕಿಬಿಟ್ಟಿದೆ. ನಾನು ಮೋಟಾರ್ನಲ್ಲಿ ಹೋಗ್ತೀನಿ. ಮದ್ಲೇ ಹೋಗಿ ಛತ್ರದಲ್ಲಿ ಕೇಳಿ ಜಾಗ ಮಾಡಿರ್ತೀನಿ. ನೀವು ಹಿಂದ್‌ಗಡಿಂದ ಬನ್ನಿ’-ಎಂದು ಅವರು ಮುಂದೆ ನಡೆದರು. +“ಚಿನ್ನಯ್ಯ ಸ್ವಲ್ಪ ನಿಂತ್ಕಳೋ. ಅತ್ತಿಗಮ್ಮುನ್ನೂ ವಿಶ್ವುನ್ನೂ ಕರ್ಕಂಡ್‌ಹೋಗೋ. ಮೂರು ರೂಪಾಯಾಗುತ್ತೆ. ವಿಶ್ವುಂಗೆ ಅರ್ಧ ಚಾರ್ಜು. ‘ನಾವು ಬದವ್ರು, ಹುಡುಗನ್ನ ತ್ವಡೇಮ್ಯಾಲೆ ಕೂರಿಸ್ಕತ್ತೀವಿ, ಚಾರ್ಜು ಮಾಫಿ ಮಾಡಿ’ ಅಂತ ಕೇಳಿದ್ರೆ ಅವ್ನುನ್ನ ಹಾಗೇ ಕೂರುಸ್ಕಾಭೌದು. ನಾನು ಹಿಂದ್ಗಡಿಂದ ನಡ್ಕಂಡ್ ಬತ್ತೀನಿ”-ಅಪ್ಪಣ್ಣಯ್ಯ ಕೂಗಿ ಹೇಳಿದ. +‘ನನ್ನ ಹತ್ರ ದುಡ್ಡಿಲ್ಲ. ಅವಳ ಹತ್ರ ಇದ್ರೆ ಬರ್ಲಿ’-ಎಂದು ಅವರು ಮುಂದೆ ಮುಂದೆ ನಡೆದರು. ನೂರುಗಟ್ಟಲೆ ಇಳಿದ ಪ್ರಯಾಣಿಕರ ಗುಂಪು ಓಡಿ ಓಡಿ ಹೋಗಿ ಬಸ್ಸುಗಳಿಗೆ ತುಂಬಿಕೊಳ್ಳುತ್ತಿತ್ತು. ಚೆನ್ನಿಗರಾಯರೂ ಹತ್ತಿ ಜಾಗ ಮಾಡಿಕೊಂಡರು. +ಒಣಗಿದ ರೊಟ್ಟಿಯನ್ನು ನೀರಿನಲ್ಲಿ ನೆನೆಸಿ ಈ ಮೂವರೂ ತಿಂದರು. ಅಲ್ಲಿಗೆ ರೊಟ್ಟಿಯ ಬುತ್ತಿ ಮುಗಿಯಿತು. ಅದು ಸಾಲಲಿಲ್ಲ. ನಂಜಮ್ಮ ಬೆಲ್ಲ ಹುಣಿಸೆ ಗೊಜ್ಜಿನಲ್ಲಿ ಒಂದೂವರೆ ಪಾವಿನಷ್ಟು ಹುರಿಟ್ಟು ಕಲಸಿದಳು. ಆಮೇಲೆ ವಿಶ್ವನ ಜೇಬಿಗೆ ಅವಲಕ್ಕಿ ತುಂಬಿ ಒಂದು ಮುರುಕು ಬೆಲ್ಲ ಕೊಟ್ಟಳು. ಅಪ್ಪಣ್ಣಯ್ಯ ಅತ್ತಿಗೆಯ ಗಂಟನ್ನೂ ತನ್ನ ಗೋಣೀಚೀಲಕ್ಕೆ ಹಾಕಿ ಕಟ್ಟಿ ತಲೆಯ ಮೇಲೆ ಇಟ್ಟುಕೊಂಡು ಹೊರಟ. ವಿಶ್ವನ ಕೈ ಹಿಡಿದು ಅವಳು ನಡೆದಳು. +– ೨ – +ಅಂತಹ ಕಾದನ್ನು ಅವಳು ಈ ಹಿಂದೆ ನೋಡಿಲ್ಲ. ಮರ, ಗಿಡ, ಹಸಿರೆಂದರೆ ಅವಳಿಗೆ ಯಾವಾಗಲೂ ಆಶೆ. ಒಂದು ತೆರನದ ಅಲೌಕಿಕ ಆಕರ್ಷಣೆ. ಮುತ್ತುಗದ ಎಲೆ ತರಲು ಚೋಳನ ಗುಡ್ಡಕ್ಕೆ ಹೋದಾಗ, ಊರ ಸುತ್ತ ಪೈರು ಬೆಳೆದು ಹೊಲ ಗದ್ದೆಗಳೆಲ್ಲ ತುಂಬು ಹಸಿರಿನಿಂದ ಕೂಡಿದಾಗ ಸುತ್ತಲೂ ನೋಡುತ್ತಾ ನಿಂತುಬಿಡುತ್ತಿದ್ದಳು. ಇಲ್ಲಿ ಎಲ್ಲೆಲ್ಲಿಯೂ ಕಾಡು-ಭಾರಿಭಾರಿಯಾದ ಹೆಮ್ಮರಗಳ ಕಾಡು. ಎನೊ ಒಂದು ರೀತಿಯ ಭಾವ ಮನಸ್ಸನ್ನು ಆಕ್ರಮಿಸಿಬಿಡುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಅದು ಅಂತರಂಗವನ್ನು ಕಲಕುತ್ತಿತ್ತು. ಮನಸ್ಸನ್ನು ಮುದಗೊಳಿಸುವ ಆ ಹಸಿರೇ ಮಕ್ಕಳಿಬ್ಬರ ನೆನಪನ್ನೂ ಹೊಡೆದೆಬ್ಬಿಸುತ್ತಿತ್ತು. ಈ ತೇಗದ ಎಲೆಗಳು ಎಷ್ಟು ಅಗಲವಾಗಿವೆ! ಒಂದೊಂದು ಎಲೆಯಮೇಲೆಯೇ ಬಡಿಸಿಕೊಂಡು ಊಟ ಮಾಡಬಹುದು. ಮುತ್ತುಗದೆಲೆ ಇಷ್ಟು ಅಗಲವಾಗಿದ್ದರೆ ಹಚ್ಚುವ ಕಷ್ಟವೇ ಇಲ್ಲ. ಮುತ್ತುಗದೆಲೆ ತರಲು ಬರುತ್ತಿದ್ದಾಗ ದೊಡ್ಡ ಎಲೆಗಳನ್ನು ಕಂಡರೆ ರಾಮಣ್ಣ ನಿಧಿ ಕಂಡವನಂತೆ-‘ಅಮ್ಮ, ನೋಡಿಲ್ಲಿ ಎಷ್ಟು ದೊಡ್ಡ ಎಲೆ’ ಎಂದು ಕೂಗಿಕೊಂಡು ಓಡಿ ಹೋಗಿ ಕುಯ್ದುಕೊಳ್ಳುತ್ತಿದ್ದ. ಎಲೆ ತುಂಬ ದೊಡ್ಡದಾದರೆ ಹಚ್ಚಿಸಲು ಸರಿಯಲ್ಲ. ಊರಗಲವಾಗಿಬಿಡುತ್ತೆ. ಮುತ್ತುಗದ ರಸ ಸಿಡಿದು ಅವನ ಶರಟೆಲ್ಲ ಕರೆಯಾಗಿತ್ತು. ಅದಕ್ಕೆಂತಲೇ ಬೇರೆ ಒಂದು ಹರಕಲು ಶರಟಿತ್ತು. +ಪಾರ್ವತಿ ಎಲೆಗೆ ಬರುತ್ತಿದ್ದಾಗ ಬಾಯಿಯಲ್ಲಿ ಎನದರೂ ಗುನುಗಿಕೊಳ್ಳುತ್ತಿದ್ದಳು. ಹಾಡು ಹಸೆ ಎಂದರೆ ಅವಳಿಗೆ ಎಷ್ಟು ಆಶೆ! ತನಗೆ ಬರುತ್ತಿದ್ದುದನ್ನೆಲ್ಲ ಅವಳು ಕಲಿತಿದ್ದಳು. ಹನ್ನೆರಡು ವರ್ಷವಾಗುವ ಹೊತ್ತಿಗೇ ರಾಗಿಬೀಸುವುದನ್ನು ತನ್ನಿಂದ ಪೂರ್ತಿ ಬಿಡಿಸಿಬಿಟ್ಟಿದ್ದಳು. ಬೆಳಗಿನಜಾವ ಬೀಸುವಾಗ ಅವಳು ರಾಗವಾಗಿ ಹಾಡು ಹೇಳುತ್ತಿದ್ದುದನ್ನು ಕೇಳುವುದೇ ಒಂದು ಚಂದ. ಮೇಷ್ಟರು ಹೇಳಿದ್ದರು: ಅವಳ ಗಂಡನಿಗೆ ಹಾಡು ಹಸೆ ಅಂದರೆ ಬಹಳ ಇಷ್ಟವಂತೆ. ಸೂರ್ಯನಾರಾಯಣ ಹಾರ್ಮೋನಿಯಂ ಶೃತಿ ಇಟ್ಟುಕೊಂಡು ಭಾರತದ ಪದ್ಯಗಳನ್ನು ರಾಗವಾಗಿ ಹೇಳುತ್ತಿದ್ದರೆ, ಕೇಳಿದವರ ಕಣ್ಣಿನಲ್ಲಿ ನೀರು ಬರುತ್ತಿತ್ತಂತೆ. ಅದಲ್ಲದೆ ಎಷ್ಟೋ ಶ್ಲೋಕಗಳು ದೇವರನಾಮಗಳು ಬರುತ್ತಿತ್ತಂತೆ. ಮನೆಯಲ್ಲಿ ಕೂತು ದಿನಾ ಭಾರತ ಓದಿಕೊಳ್ಳುತ್ತಿದ್ದನಂತೆ. ಅವನ ಸ್ವಭಾವ ತುಂಬ ಒಳ್ಳೆಯದು. ಕೋಪವಿಲ್ಲ, ತಾಪವಿಲ್ಲ. ಹೊಟ್ಟೆಯಲ್ಲಿ ಹುಟ್ಟಿದ ರತ್ನನ ಎಷ್ಟು ನಿಗವಾಗಿ ನೋಡಿಕೊಳ್ಳುತ್ತಿದ್ದ! ಗಂಡಸು ಅಂದರೆ ಹಾಗಿರಬೇಕು. ಅಂಥವನ ಜೊತೆ ಸಂಸಾರ ಮಾಡುಕ್ಕೆ ನಮ್ಮ ಪದಾರ್ಥಕ್ಕೆ ಯೋಗವಿರಲಿಲ್ಲವೋ ಏನೋ! ಅವಳ ಮನಸ್ಸು, ಸೂರ್ಯನಾರಾಯಣನ ಸಂಗಡ ತನ್ನ ಗಂಡ ಚೆನ್ನಿಗರಾಯರನ್ನು ಹೋಲಿಸುತ್ತಿತ್ತು. ಹೇಸಿಗೆ ಎನಿಸಿ, ಅದೆಲ್ಲ ಅವರವರ ಪೂರ್ವ ಜನ್ಮದ ಫಲ ಎಂದುಕೊಂಡು ಮನಸ್ಸು ಬೇರೆ ದಿಕ್ಕಿನಲ್ಲಿ ತೋಡಗುತ್ತಿತ್ತು. +ಕಾಡನ್ನು ನೋಡುನೋಡುತ್ತ ವಿಶ್ವ ಹಿಗ್ಗಿ ಹೀರೇಕಾಯಿಯಾಗುತ್ತಿದ್ದ. +‘ಅಮ್ಮ ನೋಡಲ್ಲಿ, ನಮ್ಮೂರ ತೋಪಿನ ಹುಳಿಮಾವಿನ ಮರಕ್ಕಿಂತ ದೊಡ್ಡದಾಗಿದೆ’- ಎನ್ನುವನು. ತಕ್ಷಣ-‘ಅದರ ಪಕ್ಕದ್ದು ನೋದು ಆಕಾಶದೆತ್ತರ ಇದೆ’ ಎಂದು ದೃಷ್ಟಿಯನ್ನು ಮುಂದೆ ತಿರುಗಿಸಿ, ನೋಡು, ಆ ಕೋತಿ ತಿಮ್ಮಣ್ಣ, ಮೂತಿ ಯಾಕೆ ಹಾಗಿದೆ? ನಮ್ಮೂರ ಕೋತಿ ತಿಮ್ಮಣ್ಣ ಇದಕ್ಕಿಂತ ಚೆನ್ನಾಗಿದೆ ಅಲ್ವಾ’? ಎಂದು ಕೇಳುತ್ತಿದ್ದ. +‘ಇದು ಕಾಡುಕೋತಿ ಮಗು.’ +‘ಹಾಗಾದ್ರೆ ನಮ್ಮೂರಲ್ಲಿರೋದು ಎಂಥಾ ಕೋತಿ?’ +‘ಊರ ಕೋತಿ.’ +‘ಹಾಗಾದ್ರೆ ಊರೊಳಗೆ ಇರೂದೇ ಇಲ್ವಲ? ಅದು ತ್ವಾಟದ ಕೋತಿ’-ಎಂದು ತಾನೇ ಉತ್ತರ ಹೇಳುವನು. +ರಸ್ತೆಯಲ್ಲಿ ಹೋಗುತ್ತಾ ಹೋಗುತ್ತ ಅವರಿಗೆ ಒಂದೆರಡು ಹಾವುಗಳೂ ಕಂಡವು. ಹಾವೆಂದರೆ ಅವರು ಕಾಣದ ಜಂತುವಲ್ಲ. ರಾಮಸಂದ್ರದಲ್ಲೂ ಇವೆ. ಇಲ್ಲಿ ಇಷ್ಟೊಂದು ಕಾಡಿರುವುದರಿಂದ ತುಂಬ ಇವೆ. ಎಚ್ಚರವಾಗಿ ನಡೆಯಬೇಕು. ಮಲೆನಾಡಿನಲ್ಲಿ ಹೆಬ್ಬಾವು ಇರುತ್ತವಂತೆ. ಒಬ್ಬೊಬ್ಬ ಮನುಷ್ಯನನ್ನೇ ನುಂಗುತ್ತವಂತೆ. ಮರದ ಕೊರಡಿನ ಹಾಗೆ ಬಿದ್ದಿರುತ್ತವಂತೆ. +ಒಂದೇಸಮನೆ ಅಮ್ಮನ ಕೈ ಹಿಡಿದುಕೊಂಡು ನಡೆದ ವಿಶ್ವನಿಗೆ ಬೇಸರವಾಗಿ ಕೈ ಕೊಡವಿಕೊಂಡು ಒಬ್ಬನೆ ನಡೆಯುತ್ತಿದ್ದ. ಒಮ್ಮೆ ಇಪ್ಪತ್ತು ಮಾರು ಮುಂದೆ ಓಡಿಬಿಡುತ್ತಿದ್ದ. ಇನ್ನೊಮ್ಮೆ ಹತ್ತು ಹೆಜ್ಜೆ ಹಿಂದೆ ಉಳಿಯುತ್ತಿದ್ದ. ಒಂದು ಬಾರಿ ಅಮ್ಮ ಅವಳ ಯೋಚನೆಯಲ್ಲೇ ಮುಲುಗಿ ಹೆಜ್ಜೆ ಹಾಕುತ್ತಿದ್ದಳು. ಅಪ್ಪಣ್ಣಯ್ಯ ಎಂದಿನಂತೆ ಇವರಿಗಿಂತ ಹತ್ತು ಮಾರು ಮುಂದೆ ಮುಂದೆ ನಡೆಯುತ್ತಿದ್ದ. ಇದ್ದಕ್ಕಿದ್ದಹಾಗೆಯೆ ಏನೋ ಎನ್ನಿಸಿ ನಂಜಮ್ಮ ತಿರುಗಿ ನೋಡುತ್ತಾಳೆ: ವಿಶ್ವನೇ ಇಲ್ಲ. ಅವಳಿಗೆ ಎದೆ ಜಗ್ ಎಂದಿತು. ಹಾಡಿನಲ್ಲಿ ಹುಲಿ ಕಿರುಬಗಳು ಇರುತ್ತವಂತೆ-ಎಂಬುದು ಮೊದಲಬಾರಿಗೆ ನೆನಪಿಗೆ ಬಂತು. ಹಾವು ಹುಳುಗಳ ಕಾಟವೂ ಕಮ್ಮಿಯಿಲ್ಲ. ‘ಅಪ್ಪಣ್ಣಯ್ಯ, ವಿಶ್ವ ಎಲ್ಲೋ ಕಾಣುಲ್ಲ ನೋಡಿ’-ಎಂದು ಕೂಗಿದಳು. ಇಬ್ಬರೂ ಹಿಂತಿರುಗಿ ನೋಡಿಕೊಂಡು ಹೊರಟರು. ಒಂದು ಫರ್ಲಾಂಗ್ ಹಿಂದೆ ರಸ್ತೆಯ ದಡದ ಒಂದು ಪುಟ್ಟ ತೇಗದ ಮರ ಹತ್ತಿ ಅವನು ‘ಕೀ ಕೀ ಕಲ, ಕೀ ಕೀ ಕಲ’-ಎಂದು ಎದುರು ಬದಿಯ ಮರದ ಮೇಲಿದ್ದ ಕೋತಿಗಳನ್ನು ಅಣಕಿಸುತ್ತಿದ್ದಾನೆ. ‘ಹೇಳ್ದೆ ಕೇಳ್ದೆ ಅದ್ಯಾಕೋ ಹೀಗೆ ಮಾಡ್ದೆ?’-ಎಂದು ಕೇಳಿದರೆ, ‘ಆ ಕೋತಿ ತಿಮ್ಮಣ್ಣ ನನ್ನ ಆಡ್ಕತಲ’ ಎಂದು ಉತ್ತರಕೊಟ್ಟ. +ಆಗಿನಿಂದ ಅವನನ್ನು ಹಿಂದೆ ಬಿಡದೆ ಮುಂದೆ ಮುಂದೆಯೇ ನಡೆಸಿಕೊಂಡು ಹೊರಟಳು. +ಅಪ್ಪಣ್ಣಯ್ಯನಿಗೆ ಕಾಡಿನ ಸೌಂದರ್ಯ ಗಿಂವ್ದದರ್ಯವೆಂಬುದು ತಿಳಿಯುತ್ತಿರಲಿಲ್ಲ. ಈ ಹಾಳು ಕಾಡಿಗಿಂತ ನಮ್ಮ ಬಯಲು ಸೀಮೆಯೇ ಚನ್ನ. ಇಲ್ಲಿ ಬರೀ ಬತ್ತ. ರಾಗಿಯೇ ಇಲ್ಲ. ಮುದ್ದೆ ತಿನ್ನದೆ ಕೈಕಾಲಿನಲ್ಲಿ ಶಕ್ತಿ ಹ್ಯಾಗೆ ಬರುತ್ತೆ? ಮಲೆಸೀಮೆಯೋರು ನಮ್ಮಷ್ಟು ಶಕ್ತಿಯಾಗಿರೂಲ್ಲವಂತೆ-ಎಂಬ ಯೋಚನೆಯ ಜೊತೆಗೆ ಅವನಿಗೂ ತನ್ನ ಜೀವನದ ಹಿಂದಿನ ಎಲ್ಲ ಘಟನೆಗಳ ನೆನಪಾಗುವುದು. ಅವನ ಮಗಳು ಜಯಲಕ್ಷ್ಮಿಗೆ ಪಾರ್ವತಿಯದೇ ವಯಸ್ಸು. ಎರಡನೆಯ ರಾಮಕೃಷ್ಣ ಅವಳಿಗಿಂತ ತುಂಬ ಚಿಕ್ಕವನು. ಮೂರನೆಯದು ಎಂಥದೋ! ರಾಮಕೃಷ್ಣ ನಿಜವಾಗಿಯೂ ನಂಗೇ ಹುಟ್ಟಿದ್ದು. ನಮ್ಮಮ್ಮ ಮಾತ್ರ, ಅಲ್ಲ ಅಂದ್ಳಲ್ಲ. ಅಲ್ಲಿಗೆ ಹೋಗಿದ್ದ ನಂಗೆ ಅದು ಗೊತ್ತಿಲ್‌ವೆ? ಅದೇನಾದ್ರೂ ಸ್ಕೂಲು ಗೀಲಿಗೆ ಹೋಗ್‌ತಿದೆಯೋ ಇಲ್ಲವೋ? ಮಂತ್ರ ಕಲಿಸಿ ಜೋಯಿಸಿಗೆ ಮಾಡುಸ್ತೀವಿ ಅಂದ್ರಂತೆ ಅವರು. ಇಷ್ಟು ಹೊತ್ತಿಗೆ ಅದು ಒಂದೇ ಹೋಗಿ ಹಳ್ಳೀಕಡೆ ದಾನ ಗೀನ ತರ್ತಿರ್‌ಭೌದು. ಅವ್ಳು ಈಗ ಹ್ಯಾಗಿದಾಳೋ. ನನ್ನೇನಾದ್ರೂ ಜ್ಞಾಪಿಸ್ಕತಿದಾಳೋ ಇಲ್ವೋ. ನಾನು ತಾಳಿ ಕಿತ್ಕಂಡು ಕಳಿಸಬಾರದಾಗಿತ್ತು. ಕತ್ತೆಮುಂಡೆ, ಅವ್ಳೂ ಒಂದಿಷ್ಟು ಎಲೆ ಪಲೆ ಹಚ್ಚಿ ಉಪ್ಪು ಮೆಣಸಿನಕಾಯಿ ಖರ್ಚು ಹೊಂದಿಸಿದ್ರೆ ಹ್ಯಾಗಾದ್ರೂ ಸುಖವಾಗಿರ್‌ಭೌದಾಗಿತ್ತು. ಇವುಕ್ಕ್ಯಾಕೆ ಬೆಳಗ್ಗೆದ್ರೆ ಕಾಫಿ? ಬಿಳಿ ಅನ್ನ, ತೊಗರಿಬೇಳೆ ಸಾರು ಕಾಪಿ ಬೇಕು ಅಂದ್ರೆ ದಿನಾ ಅದ್‌ಹ್ಯಾಗೆ ಆಗುತ್ತೆ? ಇವಳಪ್ಪ ಗಂಟು ಮಾಡಿ ಕೊಟ್ಟಿದ್ನೇ? ಆದ್ರೂ ಆ ಮುಂಡೆ ನನ್ನ ಬಿಟ್ಟು ಹೋಗಬಾರ್‌ದಾಗಿತ್ತು-ಎಂದುಕೊಳ್ಳುತ್ತಲೇ ಅವನಿಗೆ ತನ್ನ ಒಂಟಿತನದ ಅನುಭವವಾಗುವುದು. ಏನೋ ಒಂದು ವಿಧವಾದ ಬೇಸರ, ಜೀವನದಲ್ಲಿ ಸುಖವಿಲ್ಲವೆಂಬ ಭಾವ ‘ಕೇಳುಸ್ತೇ’-ಹಿಂದೆ ಬರುತ್ತಿದ್ದ ಅತ್ತಿಗೆಯನ್ನು ಅವನು ಕೇಳಿದ. +‘ಏನಂದ್ರಿ?’ +‘ಆ ಹುಡುಗೀಗೂ ಇಷ್ಟೊತ್ತಿಗೆ ಮದ್ವೆ ಗಿದ್ವೆ ಮಾಡಿರ್ತಾರಾ?’ +‘ಯಾರಿಗೆ ಅಂತೀರಿ?’ +ಇಂಥವಳು ಎಂದು ನಿರ್ದಿಷ್ಟವಾಗಿ ಬಾಯಿಬಿಟ್ಟು ಹೇಳಲು ನಾಚಿಕೆಯಾಗಿ ಅವನು ಸುಮ್ಮನಾದ. ‘ಯಾವ ಹುಡುಗಿಗೆ?’-ಎಂದು ಅತ್ತಿಗೆಯೇ ಇನ್ನೊಂದು ಸಲ ಕೇಳಿದುದಕ್ಕೆ, ‘ಯಾರಿಗೂ ಇಲ್ಲ ಬಿಡಿ. ನಂಗೆ ರೇವಣ್ಣಶೆಟ್ಟಿ ಮನೆ ರುದ್ರಾಣಿ ಜ್ಞಾಪಕವಾಯ್ತು’ ಎಂದ. +‘ರುದ್ರಾಣಿ ಸತ್ತು ಎಷ್ಟು ವರ್ಷವಾಯ್ತು! ಇದೇನು ಹೀಗಂತೀರಾ?’=ಎಂದುದಕ್ಕೆ ಅವನು ಉತ್ತರ ಹೇಳಲಿಲ್ಲ. ತನ್ನ ಯೋಚನೆಯಲ್ಲೆ ಒಳಸರಿದಿದ್ದ ಅವಳ ಮನಸ್ಸು ಅವನ ಮಾತಿನ ಹಿನ್ನೆಲೆಯನ್ನು ಊಹಿಸಿಕೊಳ್ಳಲಿಲ್ಲ. ಅವರು ಮತ್ತೆ ಮೌನವಾಗಿ ನಡೆಯಲು ಶುರುಮಾಡಿದರು. ಅವನು ಹತ್ತು ಮಾರು ಮುಂದೆ. ಅವಳು ಅಷ್ಟು ಹಿಂದೆ. ತನ್ನ ಪಾಡಿಗೆ ಏನಾದರು ಹರಟಿಕೊಳ್ಳುತ್ತಾ ವಿಶ್ವ ಒಂದೊಂದು ಸಲ ಚಿಕ್ಕಪ್ಪನಿಗಿಂತ ಮುಂದೆ ಹೋಗುವನು. ಇಲ್ಲದಿದ್ದರೆ ಇಬ್ಬರಿಗೂ ಮಧ್ಯೆ ನಡೆಯುವನು. ಬೇಸರವೆನಿಸಿದರೆ ಅಮ್ಮನ ಕೈ ಹಿಡಿದುಕೊಂಡು, ‘ಕಥೆ ಹೇಳಮ್ಮ’ ಎನ್ನುವನು. +ಮಧ್ಯ ಒಂದು ಸಲ ಕೂತು ಸುಧಾರಿಸಿಕೊಂಡು ಅವರು ರಾತ್ರಿ ಏಳು ಗಂಟೆಯ ಹೊತ್ತಿಗೆ, ಹದಿನಾಲ್ಕು ಮೈಲಿಯ ಕೊಪ್ಪವನ್ನು ಮುಟ್ಟಿದರು. ಒಂದು ಪಾತ್ರೆಯಲ್ಲಿ ಅವಲಕ್ಕಿ ನೆನಸಿ ಸೆಲ್ಲ ಹಾಕಿ, ಇನ್ನೊಂದರಲ್ಲಿ ಹುರಿಟ್ಟು ಕಲಸಬಹುದು. ಅಥವಾ ಯಾವುದಾದರೂ ಮರದ ಕೆಳಗೆ ಮೂರು ಕಲ್ಲು ಹೂಡಿ ಒಂದಿಷ್ಟು ಅನ್ನ ಬೇಯಿಸಿ ಹೋಟೆಲಿನಿಂದ ಎರಡಾಣೆ ಸಾರು ತರಬಹುದು-ಎಂದು ನಂಜಮ್ಮ ಯೋಚಿಸಿದಳು. +‘ಮಲ್ನಾಡು ಕಡೆ ಸಾವ್ಕಾರ್ರಮನ್ಲಿ ಎಷ್ಟು ಜನ ಬಂದ್ರೂ ಅನ್ನ ಹಾಕ್ತಾರೆ. ಹೋಗಿ ಊಟ ಮಾಡ್ಕಂಡ್ ಬರಾಣ’-ಅಪ್ಪಣ್ಣಯ್ಯ ಸೂಚಿಸಿದ. +ಅತ್ತಿಗೆ-‘ಯಾರ ಮನೆಗೂ ಊಟಕ್ಕೆ ಹೋಗೂದು ಬ್ಯಾಡ’ಎಂದಳು. +‘ಹಾಗಾದ್ರೆ ನಾನೂ ವಿಶ್ವ ಹೋಗಿ ಊಟ ಮಾಡ್ಕಂಡ್ ಬತ್ತೀವಿ. ನಿಮಗೆ ಕಲ್ಲು ಹೂಡಿಕೊಟ್ಟು ಹೋಟಲಲ್ಲಿ ಹುಳಿ ತಂದುಕೊಡ್ತೀನಿ.’ +‘ಯಾರು ಹೋಗೂದೂ ಬ್ಯಾಡ. ನಾವು ತಂದ ಪದಾರ್ಥ ತಿನ್ನಾಣ.’ +ಕೊನೆಗೆ ಅವಳು ಹೇಳಿದಂತೆಯೇ ಆಯಿತು. ಅಪ್ಪಣ್ಣಯ್ಯ ಕಲ್ಲು ಹೂಡು ಪುಳ್ಳೆ ತಂದು ಕೊಟ್ಟ. ಅವಳು ಅನ್ನ ಮಾಡಿದಳು. ಎರಡಾಣೆ ಕೊಟ್ಟಿದ್ದಕ್ಕೆ ಹೋಟೆಲಿನವರು ಅರ್ಧ ಕೊಳದಪ್ಪಲೆಗಿಂತ ಹೆಚ್ಚು ಹುಳಿ ಕೊಟ್ಟರು. ಮೂರು ಜನಕ್ಕೂ ಹೊಟ್ಟೆ ತುಂಬ ಊಟವಾಯಿತು. ಒಂದು ಅಂಗಡಿಯ ಜಗುಲಿಯ ಮೇಲೆ ಮಲಗಿದ್ದು ಬೆಳಗ್ಗೆ ಎದ್ದು ಹುರಿಟ್ಟು ಕಲಸಿದರು. ಒಂದು ತೆಂಗಿನಕಾಯಿ ಒಡೆದು ಅಪ್ಪಣ್ಣಯ್ಯ ಹೋಟೆಲಿಗೆ ಹೋಗಿ ಈಳಿಗೆ ಮಣೆಯಲ್ಲಿ ಒಂದು ಹೋಳು ತುರಿದುಕೊಂಡು ಬಂದ. ನೆನಸಿದ ಅವಲಕ್ಕಿಗೆ ಕಾಯಿತುರಿ ಬೆಲ್ಲ ಬೆರೆಸಿದರು. ಮೂವರೂ ಹೊಟ್ಟೆ ತುಂಬ ತಿಂದು ಉಳಿದ ನೆನೆದ ಅವಲಕ್ಕಿಯನ್ನು ವಿಶ್ವನಿಗೆಂದು ಇಟ್ಟುಕೊಂಡು ಮತ್ತೆ ಹೆಜ್ಜೆ ಹಾಕಿದರು. ಮೊನ್ನೆ ಊರಿನಿಂದ ತಿಪಟೂರಿಗೆ ಹದಿನಾರು ಮೈಲಿ, ನೆನ್ನೆ ನರಸಿಂಹರಾಜಪುರದಿಂದ ಕೊಪ್ಪಕ್ಕೆ ಹದಿನಾಲ್ಕು ಮೈಲಿ ಒಂದೇಸಮನೆ ನಡೆದದ್ದರಿಂದ ವಿಶ್ವನ ಎರಡು ತೊಡೆಗಳಲ್ಲೂ ನೋವು ಕಾಣಿಸಿಕೊಂಡಿತ್ತು. ಅವನ ಅಮ್ಮನ ಎರಡು ಹೆಜ್ಜೆಗಳೂ ನೋಯುತ್ತಿದ್ದುವು. ಆದರೆ ನಡೆಯದೆ ವಿಧಿಯಿಲ್ಲ. ‘ಕಾಲು ನೋಯುತ್ತೆ ಏನೋ ಮರಿ?’-ಎಂದು ಕೇಳಿದುದಕ್ಕೆ ವಿಶ್ವ, ‘ಗಂಡ್‌ಹುಡುಗುರ್ಗೆ ನೋಯುಲ್ಲ’ ಎಂದು ಮುಂದೆ ಓಡಿದ. ಅಲ್ಲಿಗೆ ಆರು ಮೈಲಿ ಹರಿಹರಪುರವಂತೆ. ಅಲ್ಲಿಯೂ ಶೃಂಗೇರಿಯ ಮಠವೇ ಇದೆಯಂತೆ. ನಿಧಾನವಾಗಿ ನಡೆದು ಹತ್ತುಗಂಟೆಯ ಹೊತ್ತಿಗೆ ಹರಿಹರಪುರ ಮುಟ್ಟಿದರು. ನದಿಯ ಸ್ನಾನ ದೇವರ ದರ್ಶನವಾದಮೇಲೆ ಮಠದಲ್ಲಿ ಊಟವಾಯಿತು. ಇವರಂತೆಯೇ ಬಂದಿದ್ದ ಸುಮಾರು ನೂರು ಜನ ಬ್ರಾಹ್ಮಣ ಮುತ್ತೈದೆಯರು ಊಟಕ್ಕೆ ಸೇರಿದ್ದುದರಿಂದ ನಂಜಮ್ಮನಿಗೆ ಸಂಕೋಚವೆನಿಸಲಿಲ್ಲ. ಊಟವಾದ ಮೇಲೆ ವಿಶ್ವ ತೂಕಡಿಸಲು ಶುರುಮಾಡಿದ. ಮುಂದೆ ಶೃಂಗೇರಿ ಹನ್ನೆರಡು ಮೈಲಿಯಂತೆ. ನಂಜಮ್ಮನ ಕಾಲು ನೋವು ಇನ್ನೂ ಹೆಚ್ಚಾಗಿತ್ತು. ರಾತ್ರಿ ಅಲ್ಲಿಯೇ ಉಳಿದಿದ್ದು ಬೆಳಿಗ್ಗೆ ಹೋಗುವುದೆಂದು ಅವರು ನಿಶ್ಚಯಿಸಿದರು. ಒಂದು ಸಾಲೆಯಲ್ಲಿ ವಿಶ್ವನನ್ನು ಮಲಗಿಸಿದರು. ಅವನ ಹತ್ತಿರ ಚಿಕ್ಕಪ್ಪನೂ ಮಲಗಿಕೊಂಡ. ಎದುರಿಗೆ ಹರಿಯುತ್ತಿದ್ದ ಹೊಳೆಯ ಹತ್ತಿರ ಕುಳಿತುಕೊಳ್ಳಬೇಕೆಂದು ನಂಜಮ್ಮನಿಗೆ ಆಶೆಯಾಯಿತು. ಮರಳಿನಲ್ಲಿ ನಡೆದು ಹೋಗಿ ನದಿಯ ನೀರಿನಲ್ಲಿ ಎರಡು ಹೆಜ್ಜೆಗಳನ್ನೂ ಮುಳುಗಿಸಿಕೊಂಡು ಅವಳು ಒಂದು ಕಲ್ಲಿನ ಮೇಲೆ ಕುಳಿತಳು. ಕಾಲಿಗೆ, ಹಾ ಎನಿಸುವಷ್ಟು ಹಿತವಾಗಿತ್ತು. ರಾಮಣ್ಣ ಪಾರ್ವತಿಯರ ನೆನಪು ಮನಸ್ಸನ್ನು ಆಕ್ರಮಿಸಿಬಿಟ್ಟಿತ್ತು. ಅವೂ ಬದುಕಿದ್ದು ಇಲ್ಲಿಗೆಲ್ಲ ಬಂದಿದ್ದರೆ ಎಷ್ಟು ಸಂತೋಷಪಡುತ್ತಿದ್ದವೋ! ಮಾತಾಡಿಕೊಂಡು ಜೊತೇಲಿ ನಡೀಭೌದಾಗಿತ್ತು. ನಾನೊಂದು ಪಾಪಿ-ಎಂದು ಕಣ್ಣೀರು ಒರೆಸಿಕೊಂಡು ಅವಳು, ಸಂಜೆಯ ಹೊತ್ತಿಗೆ ವಿಶ್ವ ಅಪ್ಪಣ್ಣಯ್ಯರು ಬಂದು ಕೂಗುವತನಕ ಹಾಗೆಯೇ ಕುಳಿತಿದ್ದಳು. +– ೩ – +ಇವರು ಮುಟ್ಟುವ ಹೊತ್ತಿಗೆ ಶೃಂಗೇರಿ ಚೆನ್ನಿಗರಾಯರಿಗೆ ಹಳೆಯದಾಗಿತ್ತು. ಮಠ, ಉಗ್ರಾಣ, ಪಾಕಶಾಲೆ, ಊಟಕ್ಕೆ ಬಡಿಸುವ ಎಷ್ಟು ತೊಟ್ಟಿಗಳಿವೆ, ಒಂದೊಂದು ತೊಟ್ಟಿಯಲ್ಲೂ ಎಷ್ಟೆಷ್ಟು ಜನರು ಕೂರಬಹುದು, ಯಾವ ತೊಟ್ಟಿಗೆ ಬಡಿಸುವವರು ಬೇಗ ಬರುತ್ತಾರೆ, ಎಂಬುದೇ ಅಲ್ಲದೆ ಹೊಳೆಯ ಆಚೆಯ ನರಸಿಂಹವನ, ಕಾಲಭೈರವಗುಡ್ದ, ಮೊದಲಾಗಿ ಎಲ್ಲವನ್ನೂ ತಿಳಿದು ಮುಗಿಸಿದ್ದರು. ಅವರು ಬಂದ ತಕ್ಷಣ ಛತ್ರದಲ್ಲಿ ಪ್ರತ್ಯೇಕ ಕೋಣೆಗೋಸ್ಕರ ಪ್ರಯತ್ನವೇನೋಪಟ್ಟರು. ಸಾವಿರ ಸಾವಿರ ಜನಗಳು ಬರುತ್ತಿದ್ದ ನವರಾತ್ರಿ ಕಾಲದಲ್ಲಿ ಎಂತೆಂತಹ ದೊಡ್ಡವರಿಗೇ ಜಾಗ ಸಿಕ್ಕದಿರುವಾಗ ಚೆನ್ನಿಗರಾಯರಿಗೆ ಸಿಕ್ಕುವುದು ಸಾಧ್ಯವಿರಲಿಲ್ಲ. ಪಾರುಪತ್ಯೆಗಾರರನ್ನು ಕಾಡಿ ಬೇಡಿದುದಕ್ಕೆ ಮಹಡಿ ಹತ್ತುವ ಮೆಟ್ಟಿಲಿನ ಕೆಳಗಿನ ಜಾಗವನ್ನು ಕೊಟ್ಟರು. ಹತ್ತಿ ಇಳಿಯುವವರ ದಢ ದಢ ಸದ್ದು ಇದ್ದರೂ ಅಷ್ಟಾದರೂ ಜಾಗ ಸಿಕ್ಕಿತು. ಛತ್ರದ ಕಾವಲುಗಾರ ಹತ್ತಿರವೇ ಇರುತ್ತಿದ್ದುದರಿಂದ ಅವರ ಪಂಚೆಯ ಗಂಟನ್ನು ನಿರ್ಭಯವಾಗಿ ಅಲ್ಲಿ ಇಟ್ಟು ಹೋಗಬಹುದಾಗಿತ್ತು. +ನಂಜಮ್ಮ ಬೆಳಗಿನ ಒಂಬತ್ತು ಗಂಟೆಯ ಶೃಂಗೇರಿ ತಲುಪಿದ ತಕ್ಷಣ ಪತಿದೇವರ ದರ್ಶನವಾಯಿತು. ಛತ್ರದಲ್ಲಿ ಅವರ ಜೊತೆಯೇ ತಮ್ಮ ಸಾಮಾನನ್ನೂ ಇಟ್ಟು, ವಿಶ್ವ ಅಪ್ಪಣ್ಣಯ್ಯರೊಡನೆ ಅವಳು ಮಠದ ಹತ್ತಿರಕ್ಕೆ ಬಂದಳು. ಹೊಳೆಯಲ್ಲಿ ಮಡಿ ಉಟ್ಟು ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿಕೊಂಡು ಹೋಗಿ ದೇವಸ್ಥಾನಗಳನ್ನೆಲ್ಲ ನೋಡಿದಳು. ಕುಂಕುಮಾರ್ಚನೆಗೆ ಆಗಲೇ ಹೊತ್ತಾಗಿಹೋಗಿದ್ದುದರಿಂದ ನಾಳೆ ಬೆಳಿಗ್ಗೆ ಮಾಡಿಸಿದರಾಯಿತೆಂದು ತೀರ್ಮಾನಿಸಿದಳು. ಮಧ್ಯಾಹ್ನ ಊಟವಾದ ಮೇಲೆ ಇವರು ಮೂವರೂ ದೋಣಿಯಲ್ಲಿ ಕೂತು ಹೊಳೆದಾಟಿ ನರಸಿಂಹವನಕ್ಕೆ ಹೊರಟರೆ ಜೊತೆಗೆ ಚೆನ್ನಿಗರಾಯರೂ ಸೇರಿಕೊಂಡರು. ‘ನಮ್ಮುನ್ನ ಬಿಟ್ತು ನೀನೊಬ್ನೇ ಮೋಟಾರಲ್ಲಿ ಬಂದೆಯಲ, ನೀನು ನಮ್ಮ ಜೊತೆ ಬರ್‌ಬ್ಯಾಡ’-ಎಂದು ವಿಶ್ವ ಅಪ್ಪನನ್ನು ದಬಾಯಿಸಿತು. ಅಪ್ಪಣ್ಣಯ್ಯನೂ ವಿಶ್ವನ ಜೊತೆ ಸೇರಿ ಮಾತನಾಡುತ್ತಿದ್ದ. ನಂಜಮ್ಮನೇ-‘ಯಾರೂ ಒಂದು ಮಾತೂ ಆಡಬೇಡಿ. ವಿಶ್ವ, ನೀನು ಜಾಣನಲ್ಲ ನೋಡು’ ಎಂದು ಗದ್ದರಿಸಿದಳು. +ನರಸಿಂಹವನಕ್ಕೆ ಹೋದರೆ ಅದೆಷ್ಟು ಗುಲಾಬಿ ಹೂವುಗಳು! ಇಷ್ಟೊಂದು ಗುಲಾಬಿಯ ಗಿಡಗಳನ್ನು ಇದುವರೆಗೆ ಮನಸ್ಸಿನಲ್ಲಿಯೂ ಕಲ್ಪಿಸಿಕೊಂಡಿರಲಿಲ್ಲ. ಭಕ್ತಾದಿಗಳು ಅವನ್ನು ಕೈತುಂಬ ಕುಯ್ದು ತೆಗೆದುಕೊಂಡು ಹೋಗಿ ಶಾರದಮ್ಮನವರಿಗೆ ಒಪ್ಪಿಸುತ್ತಾರಂತೆ. ಯಾರು ಬೇಕಾದರೂ ಕುಯ್ದು ಗುಡಿಗೆ ಒಯ್ಯಬಹುದು. ವಿಶ್ವ ಓಡಿಹೋಗಿ ಎರಡು ಹೂವು ಕುಯ್ದು, ಬೆರಳಿಗೆ ಮುಳ್ಳು ಚುಚ್ಚಿಕೊಂಡರೂ ಲೆಕ್ಕಿಸದೆ ತಂದು ಅಮ್ಮನಿಗೆ ಕೊಟ್ಟು, ‘ನೀನು ಮುಡ್ಕಳಮ್ಮ’ಎಂದಿತು. ‘ಇದು ನಾವು ಮುಡ್ಕಬಾರ್ದು ಮಗು. ದೇವರಿಗೆ’-ಎಂದು ಅವಳು ಅದನ್ನು ಕೈಲಿ ಹಿಡಿದುಕೊಂಡಳು. ತಕ್ಷಣ ಮಗಳ ನೆನಪಾಯಿತು. ಪಾರ್ವತಿಯದು ಒತ್ತಾಗಿ ಉದ್ದವಾದ ಕೂದಲು. ಬಾಚಿ ಹೆರಳು ಹಾಕಿದರಂತೂ ದೃಷ್ಟಿಯಾಗುವಷ್ಟು ದಪ್ಪನಾಗುತ್ತಿತ್ತು. ಸುರುಗಿ ಹೂವಿನ ಕಾಲದಲ್ಲಿ ರಾಮಣ್ಣ ನಸುಕಿನಲ್ಲಿಯೇ ಹೋಗಿ ಮರ ಹತ್ತಿ ಒಂದೊಂದು ಜೋಳಿಗೆ ಅರಳು ಮೊಗ್ಗು ತರುತ್ತಿದ್ದ. ಪಾರ್ವತಿ ಆಶೆಯಿಂದ ಅದನ್ನು ದಪ್ಪ ದಂಡೆಯಾಗಿ ಕಟ್ಟುತ್ತಿದ್ದಳು. ಅವಳು ಮೈನೆರೆದಮೇಲಂತೂ ಒಂದು ದಿನ ಹೆರಳು ಹಾಕಿ ಸುರಗಿ ದಂಡೆ ಮುಡಿಸಿದಾಗ ಎಷ್ಟು ಚೆನ್ನಾಗಿ ಕಾಣುತ್ತಿದ್ದಳೋ! ಅವನ ಸ್ಕೂಲಿನ ಕಾಂಪೌಂಡಿನಿಂದ ರಾಮಣ್ಣ ಒಂದು ದಿನ ಎರಡು ಗುಲಾಬಿ ಹೂವು ಕಿತ್ತು ತಂದಿದ್ದ. ಅದನ್ನು ಮುಡಿದರೂ ಚನ್ನಾಗಿ ಕಾಣುತ್ತಿದ್ದಳು. ಅಕ್ಕ ತಮ್ಮ ಅಂದರೆ ಒಬ್ಬರಿಗೊಬ್ಬರು ಅಷ್ಟು ಅಂತಃಕರಣ ಇಟ್ಟುಕೊಂಡಿದ್ದರು. +ಗುಲಾಬಿ ಹೂಗಳನ್ನು ನೋಡಿದ ನಂಜಮ್ಮನಿಗೆ ಮನಸ್ಸು ಮುದುಡಿಹೋದರೂ ಅವರೊಡನೆ ಅಲ್ಲೆಲ್ಲ ಸುತ್ತಿದಳು. ದೊಡ್ಡ ಗುರುಗಳು ತಪಸ್ಸು ಮಾಡುತ್ತಿದ್ದ ಗವಿ, ಭೈರವನ ಬೆಟ್ಟ, ಮೊದಲಾಗಿ ಚೆನ್ನಿಗರಾಯರು ಎಲ್ಲವನ್ನೂ ತಿಳಿಯ ಹೇಳಿದರು. ಹಿಂತಿರುಗುವಾಗ ಒಂದು ಒದ್ದೆ ಚೌಕದ ತುಂಬ ಗುಲಾಬಿ ಹೂವುಗಳನ್ನು ಕುಯ್ದು ತಂದು ಅವಳು ಅಮ್ಮನವರ ಗುಡಿಗೆ ಕೊಟ್ಟಳು. +ಮರುದಿನ ಬೆಳಿಗ್ಗೆ ಕುಂಕುಮಾರ್ಚನೆಗೆಂದು ಸ್ವಲ್ಪಮೊದಲೇ ಹೊರಟರು. ದೇವರ ಕೆಲಸವಾಗುವತನಕ ವಿಶ್ವನೂ ಉಪವಾಸವಿರಬೇಕು. ಆಗಲೇ ಬೆಳಿಗ್ಗೆ ಏಳೂವರೆ ಗಂಟೆಯ ಹೊತ್ತು. ಹೊರಗೆ ಹೋಗಿದ್ದ ಚೆನ್ನಿಗರಾಯರು ಛತ್ರಕ್ಕೆ ಹಿಂತಿರುಗಿದರು. ಪಂಚೆಯ ಸೆರಗಿನಲ್ಲಿ ದಪ್ಪನಾದ ಹದಿನೈದು ಇಪ್ಪತ್ತು ಹಾಗಲಕಾಯಿ ಇತ್ತು. +‘ಇದುನ್ನ ಯಾಕೆ ತಂದ್ಯೊ?’-ಅಪ್ಪಣ್ಣಯ್ಯ ಕೇಳಿದ. +‘ಒಳ್ಳೇ ಚನ್ನಾಗಿದೆ. ಒಂದೂವರೆ ಆಣೆಗೆ ಇಷ್ಟೊಂದು ಕೊಟ್ರು. ಇದರಲ್ಲಿ ಗೊಜ್ಜು ಮಾಡೇ’-ಅವರು ಹೆಂದತಿಗೆ ಆಜ್ಞಾಪಿಸಿದರು. +‘ನಿಮಗೇನು ಹುಡುಗಾಟವೇ? ನಾವೀಗ ದೇವಸ್ಥಾನಕ್ಕೆ ಹೊರಟಿದೀವಿ.’ +‘ಅಲ್ಲಿಂದ ಬಂದಮೇಲೆ ಮಾಡು. ನನ್ನ ಹತ್ರ ಇರೂ ಟಿಫನ್‌ಕ್ಯಾರಿಯರ್ನಲ್ಲಿ ತಗಂಡು ಹೋಗಿ ಅಲ್ಲಿ ಸಮಾರಾಧನೆ ಊಟದ ಜೊತೆಗೆ ಹಾಕ್ಕತ್ತೀನಿ. ಅವರು ಬಡಿಸೂ ಸಾರು ಹುಳಿ, ಉಪ್ಪು ಖಾರವಾಗಿರುಲ್ಲ.’ +‘ಸಾವಿರಾರು ಜನ ಊಟ ಮಾಡುತ್ತೆ. ನೀವು ಹೀಗೆ ತಗಂಡು ಹೋಗಿ ಮಧ್ಯೆ ಹಾಕ್ಕಂಡ್ರೆ ಯಾರಾದ್ರೂ ನಗುಲ್ವೆ?’ +‘ಅದ್ಯಾವ್‌ನು ನಗ್ತಾನೆ-ಅವನವ್ವನ.’ +‘ಪುಣ್ಯಕ್ಷೇತ್ರಕ್ಕೆ ಬಂದಿದೀರಿ. ಕೆಟ್ತ ಮಾತ್ಯಾಕಾಡ್ತೀರಿ?’ +ಅಪ್ಪಣ್ಣಯ್ಯ ಅಂದ: ‘ಇಲ್ಲಿ ವಲೆ ಎಲ್ಲಿದೆ, ಅದಕ್ಕೆ ಅರೆಯೂದೆಲ್ಲಿ ತಿರುವೂದೆಲ್ಲಿ? ಹಾಗಲಕಾಯಿ ಗೊಜ್ಜು ನೀನು ಇಲ್ಲೇ ಬಯಸಬೇಕೇನೋ?’ +‘ಛತ್ರದಲ್ಲಿ ಒರಳುಕಲ್ಲಿದೆ. ಇಲ್ಲೇ ಮೂರು ಇಟ್ಟಿಗೆ ಇಟ್ಕಂಡ್ರೆ ಆಗುತ್ತೆ. ಕಾವಲುಗಾರುಂಗೆ ಕೇಳಿದ್ರೆ ಒಂದೆರಡು ಸೌದೆ ಕೊಡ್ತಾನೆ.’ +‘ಅಮ್ಮ, ಅಲ್ಲಿ ಮಾಡ್‌ಬ್ಯಾಡ ಕಣಮ್ಮ’-ವಿಶ್ವ ಹೇಳಿತು. +‘ಮುಂಡ್ಹೆತ್ತುದ್ದೇ, ಹಾಗಂತ ಹೇಳ್ಕೊಡ್ತೀ ಏನೋ ನಿನ್ನವ್ವನ……’ +ಛತ್ರದ ಕಾವಲುಗಾರನಿಗೆ ಇದು ಕೇಳಿತು. ‘ಇಲ್ಲಿ ಕೆಟ್ಟ ಮಾತಾಡಕೂಡ್ದು ಕಣ್ರಿ. ಪಾರುಪತ್ತೆಗಾರ್ರಿಗೆ ಗೊತ್ತಾದ್ರೆ ಓಡಿಸಿಬಿಡ್ತಾರೆ’- ಎಂದು ಅವನು ಎಚ್ಚರಿಕೆಯಿತ್ತ. ಅಲ್ಲಿ ಇಟ್ಟಿಗೆ ಹೂಡಿ ಸೌದೆ ಗಲೀಜು ಮಾಡಕೂಡದೆಂದೂ ಹೇಳಿದ. ಚೆನ್ನಿಗರಾಯರಿಗೆ ನಿರಾಶೆಯಾಯಿತು. ಹಾಗಲಕಾಯಿ ಗೊಜ್ಜು ಎಂದರೆ ಅವರಿಗೆ ಅಷ್ಟೊಂದು ಪ್ರೀತಿ. ರಾಮಸಂದ್ರದಲ್ಲಿ ಇಂಥಾ ಒಳ್ಳೆಯ ಹಾಗಲಕಾಯಿ ಸಿಕ್ಕುವುದಿಲ್ಲ. ಇಲ್ಲಿ ಸಿಕ್ಕಿದರೂ ಪ್ರಯೋಜನವಾಗಲಿಲ್ಲ. ‘ಹಾಳು ಪಾರುಪತ್ತೆಗಾರನ’- ಎಂದು ಬೈದುಕೊಂಡು ಸುಮ್ಮನಾದರು. +ಕುಂಕುಮಾರ್ಚನೆ ಮಾಡಿಸುವಾಗ ನಂಜಮ್ಮನಿಗೆ ಒಂದು ತೆರನಾದ ಮನಶ್ಯಾಂತಿ ಸಿಕ್ಕಿತು. ಶಾರದಮ್ಮನವರನ್ನು ಅವಳು ಇದುವರೆಗೂ ಪಟದಲ್ಲಿ ನೋಡಿದ್ದಳು. ನೆನ್ನೆ ಮಧ್ಯಾಹ್ನ ಬಂದ ತಕ್ಷಣ ಇಲ್ಲಿಗೆ ಬಂದು ನೋಡಿದ್ದಳು. ಆಗ ಇನ್ನೂ ಅಲಂಕಾರ ಮಾಡಿರಲಿಲ್ಲ. ಈಗ ಅದೆಷ್ಟೋ ಜನ ಭಕ್ತರು ಒಟ್ಟಿಗೆ ಕುಂಕುಮಾರ್ಚನೆ ಮಾಡಿಸುತ್ತಿದ್ದಾರೆ. ಅಮ್ಮನವರು ಅಂದರೆ ಅದೇನು ಕಳೆ, ಅದೇನು ಗಂಭೀರ. ರಾಮಸಂದ್ರದ ಕಾಳಮ್ಮನ ಮುಖ ನೋಡಿದರೆ ಹೆದರಿಕೆಯಾಗುತ್ತೆ. ಆದರೆ ಶಾರದಮ್ಮನವರ ಮುಖ ನೋಡಿದರೆ ಎಂಥ ಹೆದರಿಕೆಯೂ ಹೋಗುತ್ತೆ. ಅಮ್ಮನವರ ಕೃಪೆಯಿಂದಲೇ ವಿಶ್ವ ಉಳಿದುಕೊಂಡದ್ದು. ಇನ್ನು ಮೇಲೆ ಕಷ್ಟ ಸುಖ ಜಡ್ಡು ಜಾಪತ್ತು ಏನಿದ್ದರೂ ಇವರೊಬ್ಬರಿಗೇ ಹರಕೆ ಕಟ್ಟಬೇಕು. ಉಳಿದ ಯಾವ ದೇವರೂ ಬೇಡ-ಎಂದು ತೀರ್ಮಾನಿಸಿದ ಅವಳು ವಿಶ್ವನನ್ನು ಮೂರು ಬಾರಿ ಅಡ್ದಗೆಡವಿ ತಾನೂ ಪ್ರದಕ್ಷಿಣೆ ನಮಸ್ಕಾರ ಮಾಡಿದಳು. ಹರಕೆಯ ಹಣ ನಾಲ್ಕು ಆಣೆಯ ಪಾವಲಿಯನ್ನೂ ಡಬ್ಬಗಡಿಗೆಗೆ ಹಾಕಿ, ಅವರು ಕೊಟ್ಟ ಪ್ರಸಾದದ ಕುಂಕುಮವನ್ನು ಇಸಿದುಕೊಂಡಳು. ಅಪ್ಪಣ್ಣಯ್ಯನೂ ಭಕ್ತಿಯಿಂದ ಪ್ರದಕ್ಷಿಣೆ ನಮಸ್ಕಾರ ಹಾಕಿದ. +ಮರುದಿನ ಇವರು ಎದ್ದು ಶೌಚ ಮುಗಿಸಿದ್ದರು. ಬೆಳಿಗ್ಗೆ ಏಳು ಗಂಟೆಯ ಸಮಯವಾಗಿತ್ತು. ಸ್ನಾನಕ್ಕೆ ಹೊಳೆಗೆ ಹೋಗಬೇಕು. ವಿಶ್ವ ಛತ್ರದ ಹೊರಗೆ ಎಲ್ಲೋ ಇರಬೇಕು. ಅವನನ್ನು ನೋಡಿದರೆ ಇಲ್ಲ. ಚೆನ್ನಿಗರಾಯರೇನೋ ಹೊಳೆಯ ಕಡೆ ಹೋಗುತ್ತೇನೆಂದು ಹೇಳಿ ಹೋಗುತ್ತಾರೆ; ಹಿಂತಿರುಗುವ ಹೊತ್ತು ಗೊತ್ತಿಲ್ಲ. ಅವರನ್ನು ಕಾಯುವ ಅಗತ್ಯವು ಇಲ್ಲ. ಜನಗಂಗುಳಿಯಲ್ಲಿ ಈ ಹುಡುಗ ಎಲ್ಲಿ ಹೋಯಿತೋ ಎಂದು ನಂಜಮ್ಮ ಅಪ್ಪಣ್ಣಯ್ಯ ಇಬ್ಬರೂ ಯೋಚಿಸುತ್ತಿರುವಷ್ಟರಲ್ಲಿ ಅವನೇ ಅಳುತ್ತಾ ಬಂದು ಅಮ್ಮನ ಸೆರಗು ಹಿಡಿದು-‘ನಂಗೆ ದ್ವಾಸೆ ಕೊಡ್ಸು ಬಾ’-ಎಂದು ಜಗ್ಗಿದ. +‘ಮಡಿ ಉಟ್ಕಂಡಮೇಲೆ ಹುರಿಟ್ಟುಕಲಸಿಕೊಡ್ತೀನಿ ಮರಿ’ – ಎಂದರೆ, ‘ಹ್ಞೂ, ಅಣ್ಣ ದ್ವಾಸೆ ತಿಂತಿದಾನೆ. ನಂಗೂ ಕೊಡ್ಸು’ ಎಂದು ಹಟ ಮಾಡಿದ. +‘ಈಗ ನೀನೆಲ್ಲಿಗೆ ಹೋಗಿದ್ಯೋ?’-ಅಪ್ಪಣ್ಣಯ್ಯ ಕೇಳಿದ. +“ಅಣ್ಣ ಒಬ್ನೇ ಹೋಟ್ಳಿಗೆ ಹೋಗ್ತಿದ್ದ. ನಾನೂ ಹಿಂದ್‌ಗಡೆ ಹೋದೆ. ಅವ್ನು ಕೂತ್ಕೊಂಡು, ಎರಡು ದ್ವಾಸೆ ಕೊಡಿ ಅಂತ ಕೇಳ್ದ. ಆಮ್ಯಾಲೆ ನನ್ನ ನೋಡಿ, ‘ನೀನ್ಯಾಕೆ ಬಂದ್ಯೋ?’ ಎಂದ. ‘ನಂಗೂ ದ್ವಾಸೆ ಕೊಡ್ಸು’ ಅಂದೆ. ‘ನನ್ಹತ್ರ ದುಡ್ದಿಲ್ಲ, ನಿಮ್ಮಮ್ಮನ್ನ ಕೈಲಿ ಹುರಿಟ್ಟು ಇಸ್ಕಂಡ್ ತಿನ್ಹೋಗು’ ಅಂದ. ‘ನಂಗೆ ದ್ವಾಸೆ ಕೊಡುಸ್ದೇ ಇರು, ಆಗಲ್ಲ’ ಅಂತ ನಾನೂ-‘ನಂಗೂ ದ್ವಾಸೆ ಕೊಡ್ರೀ’ ಅಂತ ಹೋಟ್ಳುನೋರುನ್ನ ಕೇಳ್ದೆ. ಅದುಕ್ಕೆ, ‘ಇದ್ಯಾವುದೋ ಹುಡ್ಗ ಕೇಳ್ತಿದೆ. ಆಮ್ಯಾಲೆ ನನ್ನ ದುಡ್ದು ಕೇಳ್‌ಬ್ಯಾಡಿ ಕಣ್ರೀ’ ಅಂತ ಅಣ್ಣ ಅಂದ. ಹೋಟ್ಲುನೋರು ನನ್ನ ಗದರಿಸ್ಕಂಡ್ ಓಡುಸ್‌ಬಿಟ್ರು.” +‘ಇಲ್ಲಿ ಅವಲಕ್ಕಿ ಹುರಿಟ್ಟಿನ ಪಾಲಿಗೂ ಬತ್ತಾನೆ. ಅಲ್ಲಿ ಕದ್ದು ಹೋಟ್ಳಿಗೂ ಹೋಗ್ತಾನೆ. ನೋಡಿದ್ರಾ ಆ ಕಳ್ಳ ಲೌಡಿಮಗುನ್ನ’- ಅಪ್ಪಣ್ಣಯ್ಯ ಎಂದ. +‘ಏನಾದ್ರೂ ಆಕ್ಕಳ್ಳಿ. ನೀವು ಮಾತಾಡ್‌ಬ್ಯಾಡಿ. ಮಗೂನ ಕರ್ಕಂಡ್ ಹೋಗಿ ಒಂದಾಣಿ ದೋಸೆ ಕೊಡ್ಸಿ.’ +ಅಮ್ಮ ಒಂದಾಣಿ ಕೊಟ್ಟಳು. ಚಿಕ್ಕಪ್ಪ ಹೋಗಿ ತಿನ್ನಿಸಿಕೊಂಡು ಬಂದ. ಆಮೇಲೆ ಇವರು ಮೂವರೂ ಸ್ನಾನಕ್ಕೆ ಹೊಳೆಗೆ ಹೋದರು. ಮೀನುಗಳಿರುವ ಕಡೆ ಸ್ನಾನ ಮಾಡಬೇಕೆಂದು ವಿಶ್ವನಿಗೆ ಆಶೆ. ಅಷ್ಟು ದಪ್ಪದ ಮೀನುಗಳನ್ನು ಅವನಾಗಲಿ ಅವನ ಅಮ್ಮನಾಗಲಿ ನೋಡಿರಲಿಲ್ಲ. ಅಂಥದನ್ನು ರಾಮನಾಥಪುರದಲ್ಲಿ ತಾನು ನೋಡಿರುವುದಾಗಿ ಅಪ್ಪಣ್ಣಯ್ಯ ಎಂದ. ಏನಾದರೂ ತಿಂಡಿ ಎರಚಿದರೆ ಮೀನುಗಳು ದಂಡು ಕಟ್ಟಿಕೊಂಡು ಬರುತ್ತಿದ್ದ ರಭಸವನ್ನು ಎಷ್ಟು ನೋಡಿದರೂ ವಿಶ್ವನಿಗೆ ತೃಪ್ತಿಯಿಲ್ಲ. ತನ್ನ ಚಡ್ಡೀಜೇಬಿಗೆ ಹಾಕಿಸಿಕೊಂಡಿದ್ದ ಅವಲಕ್ಕಿಯನ್ನೆಲ್ಲ ಅವನು ಮೀನುಗಳಿಗೇ ಎರಚಿದ. +ಸ್ನಾನಘಟ್ಟದಿಂದ ಸ್ವಲ್ಪ ಮೇಲ್ಭಾಗದ ಮರಗಳ ಹತ್ತಿರ ಹೋಗಿ ಮೊದಲು ನಂಜಮ್ಮ ಸ್ನಾನ ಮಾಡಿ ಬಟ್ಟೆ ಒಗೆದಳು. ನಂತರ ವಿಶ್ವನ ಜೊತೆಗೆ ಅಪ್ಪಣ್ಣಯ್ಯ ಇಳಿದ. ಆದರೆ ಅದಾವ ಮಾಯದಲ್ಲೋ ವಿಶ್ವ ಅವರಿಬ್ಬರ ಕಣ್ಣನ್ನೂ ತಪ್ಪಿಸಿಬಿಟ್ಟಿದ್ದ. ಎರಡೇ ನಿಮಿಷದಲ್ಲಿ ಅವನು ಸೆಳೆತಕ್ಕೆ ಸಿಕ್ಕಿ ಕೆಳಭಾಗಕ್ಕೆ ಹೋಗುತ್ತಿದ್ದ. ಆದರೆ ಈಜು ಬಲ್ಲವನಾದುದರಿಂದ ನೀರಿನಲ್ಲಿ ಮುಳುಗಿರಲಿಲ್ಲ. ‘ಮಗು ಮುಳಿಕ್ಕಳ್ತಿದೆ ಹಿಡ್ಕಳ್ರಪ್ಪಾ’-ನಂಜಮ್ಮ ಉಸಿರು ಕಟ್ಟಿದಂತೆ ಕೂಗಿದಳು. ಹಿಂದೆಯೇ ಅಪ್ಪಣ್ಣಯ್ಯ ಈಜುಬಿದ್ದು ನುಗ್ಗಿದ. ಆದರೆ ಅಷ್ಟರಲ್ಲಿ ವಿಶ್ವ ಎಷ್ಟೋ ಮುಂದೆ ಹೋಗಿಬಿಟ್ಟಿದ್ದ. ಒಂದೇ ಉಸಿರಿಗೆ ಕೈ ಬಗೆದು ಮುಂದೆ ಸಾಗಿದ ಅಪ್ಪಣ್ಣಯ್ಯ ವಿಶ್ವನನ್ನು ಹಿಡಿದ. ವಿಶ್ವನೂ ಕೈ ಬಗೆಯುತ್ತಿದ್ದ. ಅಂತೂ ಇಬ್ಬರೂ ದಡ ಮುಟ್ಟಿದರು. ನಂಜಮ್ಮನ ಹೋದ ಜೀವ ಬಂತು. ದಡದಲ್ಲಿಯೇ ಓಡಿ, ಅವರು ಬರುವ ಜಾಗಕ್ಕೆ ಬಂದಳು. ಅಷ್ಟರಲ್ಲಿ ಈ ದೃಷ್ಯವನ್ನು ಕಂಡ ಎಷ್ಟೋ ಜನ ಗುಂಪುಗಟ್ಟಿದರು. +ದಡ ಮುಟ್ಟಿದ ವಿಶ್ವ-‘ಅಮ್ಮ, ಕೆರೇಲಾದ್ರೆ ಹ್ಯಾಗೆ ಬೇಕಾದ್ರೂ ಈಜಾಡ್‌ಭೌದು. ಹ್ವಳೇಲಿ ಎತ್ತೆತ್ಲಗೋ ಯಳ್ಕಂಡ್ ಹೋಗಿಬಿಡುತ್ತೆ’ ಎಂದ. +ಅವಳಿಗೆ ತಡೆಯಲಾರದಷ್ಟು ಸಿಟ್ಟು ಬಂತು. ಹಿಡಕಂಡು ಬೆನ್ನಿನ ಮೇಲೆ ಬಲವಾಗಿ ನಾಲ್ಕು ಬಾರಿಸಿದಳು. ‘ನಂಗೆ ಈಜಾಡಬೇಕು ಅನ್ನಿಸ್ತು, ಬಿದ್ದೆ’-ಎಂದು ಅವನು, ತನ್ನನ್ನು ತಾನು ಸಮರ್ಥಿಸಿಕೊಂಡ. +‘ಇನ್ನೂ ಕ್ಯಳಗಡೆ ಹ್ವಾಗಿದ್ರೆ ಸುಳಿಗೆ ಸಿಕ್‌ಹಾಕ್ಕಬೇಕಾಗಿತ್ತು’-ಹತ್ತಿರದಲ್ಲಿಯೇ ಇದ್ದ ಒಬ್ಬರು ಎಂದರು. +ಅವರು ಶೃಂಗೇರಿಯಲ್ಲಿ ಒಟ್ಟು ಆರು ದಿನ ಇದ್ದರು. ದಿನವೂ ಬೆಳಿಗ್ಗೆ ಅಮ್ಮನವರಿಗೆ ಕುಂಕುಮಾರ್ಚನೆಯಾಗುವುದರಿಂದ ಹಿಡಿದು ರಾತ್ರಿ ಸ್ವಾಮಿಗಳು ಸಿಂಹಾಸನ ಏರುವ ತನಕ ನೋಡಿದರು. ಚಂಡೀ ಹೋಮವಾದ ಮರುದಿನವೇ ಊರಿಗೆ ಹೊರಟರು. ‘ಇರೂ ದುಡ್ಡು ಲೆಕ್ಕ ಹಾಕಿ. ತಿಪಟೂರು ತನಕ ರೈಲು ಚಾರ್ಜು ಆದರೆ ಸಾಕು. ದುಡ್ಡಿದ್ದರೆ ಚೆನ್ನಯ್ಯನ ಜೊತೆ ನೀವು ವಿಶ್ವ ಮೋಟಾರಲ್ಲಿ ನಾಡಿದ್ದು ಬನ್ನಿ. ನಾನು ಇವತ್ತೇ ಹೊರಟು ನರಸಿಂಹರಾಜಪುರಕ್ಕೆ ನಡಕಂಡು ಬರ್ತೀನಿ’-ಎಂದು ಅಪ್ಪಣ್ಣಯ್ಯ ಹೇಳಿದ. ಹಾಗೆ ಮಾಡಿದ್ದರೂ ಆಗುತ್ತಿತ್ತು. ಬಸ್ಸಿಗೆ ಮೂರು ರೂಪಾಯಿ ಖರ್ಚು ಮಾಡಿದರೆ, ದಾರಿಯಲ್ಲಿ ವಿಶ್ವ ಏನಾದರೂ ಕೇಳಿದರೆ ಕೊಡಿಸಲು ಚಿಲ್ಲರೆ ಕಾಸಿಗೆ ಸೊನ್ನೆ ಬೀಳುತ್ತಿತ್ತು. ಅಲ್ಲದೆ ಅಂತಹ ಕಾಡನ್ನು ಮತ್ತೆ ನೋಡುವೆನೋ ಇಲ್ಲವೋ! ತನಗೇ ತಿಳಿಯದಂತೆ ಅವಳು ಕಾಡನ್ನು ಅಷ್ಟೊಂದು ಪ್ರೀತಿಸತೊಡಗಿದ್ದಳು. ಕಾಲು ನೋಯ್ದರೂ ನಡೆಯುವುದಕ್ಕೆ ವಿಶ್ವನೇನೂ ಹೆದರುವವನಲ್ಲ. ಸರಿ, ಮೂವರೂ ನಡದೇ ಹೊರಟರು. ಗಂಟನ್ನು ಅಪ್ಪಣ್ಣಯ್ಯ ಹೊತ್ತ. ತಾನು ಕೊಂಡಿದ್ದ ಶಾರದಮ್ಮನವರ ಮೂರು ಪಟಗಳನ್ನು ಸುತ್ತಿ ಅವಳು ಕೈಲಿ ಹಿಡಿದುಕೊಂಡಳು. +ದಾರಿಯಲ್ಲಿ ನಂಜಮ್ಮನ ಮನಸ್ಸು ಪ್ರಸನ್ನವಾಗಿತ್ತು. ತನ್ನ ಇಬ್ಬರು ಮಕ್ಕಳೂ ಸಾಯುವುದು ದೇವರ ಇಚ್ಛೆಯಾಗಿತ್ತೇನೋ! ದೇವರ ಇಚ್ಛೆ ತಪ್ಪಿಸುವುದು ಯಾರಿಗೆ ಸಾಧ್ಯ? ಎಂಬ ಭಾವ ಅವಳಲ್ಲಿ ಬರುತ್ತಿತ್ತು. ವಿಶ್ವ ಹೊಳೆಯಲ್ಲಿ ಸೆಳೆಯಲ್ಪಟ್ಟು ಬದುಕಿ ಬಂದಿದ್ದಾನೆ. ಅವನಿಗೆ ಕಂಟಕವಿತ್ತೇನೋ; ಕಳೆದಂತೆ ಆಗಿದೆ. ಊರಿಗೆ ಹೋದಮೇಲೆ ತನ್ನ ಅಪ್ಪನಿಗೆ ಹೇಳಿಕಳಿಸಿ ಸರಿಯಾಗಿ ವಿಶ್ವನ ಜನ್ಮಭವಿಷ್ಯ ಬರೆಸಬೇಕು ಎಂದು ಯೋಚಿಸುತ್ತಿದ್ದಳು. ಅಪ್ಪಣ್ಣಯ್ಯ ಯಾಕೋ ತುಂಬ ಮಂಕಾಗಿದ್ದ. ಶೃಂಗೇರಿಯಲ್ಲಿ ಸಹ ಅದೇನೋ ಯೋಚಿಸುವವನಂತೆ ಮೌನಿಯಾಗಿದ್ದ. ಅವನು ಹೀಗೆ ತನ್ನ ಜೊತೆ ಇದ್ದುದೇ ಇಲ್ಲ. ಸದಾ ಅವರಮ್ಮನ ಜೊತೆ ಇರುತ್ತಿದ್ದ; ದೇಶಾವರಿ ಸಂಚಾರ ಮಾಡುತ್ತಿದ್ದ. ಸಂಕೋಚದಿಂದ ಹೀಗಿರಬಹುದೆಂದು ನಂಜಮ್ಮ ಸುಮ್ಮನಿದ್ದುಬಿಟ್ಟಳು. +ನರಸಿಂಹರಾಜಪುರಕ್ಕೆ ಬಂದು ಅನ್ನ ಮಾಡಿ ಹೋಟೆಲಿನಿಂದ ಹುಳಿ ತಂದು ಊಟ ಮುಗಿಸುವ ಹೊತ್ತಿಗೆ ನಾಡಿದ್ದು ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಉಳಿದಿದ್ದ ಅನ್ನವನ್ನು ಪಾತ್ರೆಯಲ್ಲಿ ಹಾಕಿ ಕಟ್ಟಿ ಇಟ್ಟಿದ್ದರು. ಅಷ್ಟರಲ್ಲಿ ಚೆನ್ನಿಗರಾಯರ ಮೋಟಾರು ಬಂತು. ವಿಶ್ವ ಅಪ್ಪನ ಮುಖ ಕಂಡ ತಕ್ಷಣ-‘ಅಮ್ಮ, ಅನ್ನಾನ ಅವ್ನಿಗೆ ಕೊಡ್‌ಕೂಡ್‌ದು. ಅವ್ನ್ಯಾಕೆ ನಂಗೆ ದ್ವಾಸೆ ಕೊಡುಸ್ದೆ ಒಬ್ನೇ ತಿಂದ-’ ಎಂದ. ಆ ಮಾತು ಇನ್ನಾರಿಗಾದರೂ ಕೇಳಿದರೆ ಏನೆಂದುಕೊಂಡಾರು ಎಂಬ ಅಂಜಿಕೆ ಅಮ್ಮನಿಗೆ. ಅವರ ರೈಲಿಗೆ ಇನ್ನೂ ಹೊತ್ತಿತ್ತು. ಇವರ ಅನ್ನವನ್ನು ಚೆನ್ನಿಗರಾಯರೇನೂ ಕೇಳಲಿಲ್ಲ. ಸ್ಟೇಷನ್ ಹತ್ತಿರ ಹೋಟೆಲಿನಲ್ಲಿ ಊಟವಿತ್ತು. +ರಾತ್ರಿ ತರೀಕೆರೆಯಲ್ಲಿ ನಾಲ್ಕೂ ಜನರೂ ಮಲಗಿದರು. ಮರುಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ರೈಲು ಬರುವ ಮುಂಚೆ ನಂಜಮ್ಮ ಅನ್ನ ಮಾಡಿದಳು. ಅಪ್ಪಣ್ಣಯ್ಯ ಹುಳಿ ತಂದ. ಚೆನ್ನಿಗರಾಯರು ಈಗಲೂ ಇವರ ಜೊತೆ ಊಟ ಮಾಡಲಿಲ್ಲ. +ಆ ಬೆಳಿಗ್ಗೆಯಿಂದಲೂ ಅಪ್ಪಣ್ಣಯ್ಯ ಹೆಚ್ಚು ಮಂಕಾಗಿದ್ದ. ರೈಲು ಹತ್ತಿದ ಮೇಲೂ ಸಪ್ಪಗೆ ಕುಳಿತಿದ್ದ. ಅವನ ಅಣ್ಣನೇ ಕೊಡಲು ಬಂದರೂ ಒಂದು ಸಲ ಹೊಗೆಸೊಪ್ಪು ಸಹ ಹಾಕಿಕೊಳ್ಲಲಿಲ್ಲ. ಬೀರೂರಿನಲ್ಲಿ ಗಾಡಿ ಬದಲಾಯಿಸಿದಮೇಲೆ ಅವನ ಮುಖದಾಲ್ಲಿ ಇನ್ನೂ ಚಿಂತೆ ಕಾಣುತ್ತಿತ್ತು. ಯಾಕೆ ಎಂದು ಮಾತನಾಡಿಸಬೇಕೆಂದು ನಂಜಮ್ಮನಿಗೆ ಎನ್ನಿಸಿದರೂ ಗಂಡನ ಎದುರಿಗೆ ಕೇಳಬಾರದೆಂದು ಸುಮ್ಮನಾದಳು. ಕಡೂರು ಸ್ಟೇಷನ್ನಿನಲ್ಲಿ ನೀರು ತುಂಬಿಕೊಳ್ಳಲು ಗಾಡಿ ತುಂಬ ಹೊತ್ತು ನಿಲ್ಲುತ್ತದೆಂದು ಅಕ್ಕಪಕ್ಕದವರು ಹೇಳಿದರು. ವಡೆ ಬೋಂಡ ಹುಡುಕಿಕೊಂಡು ಚೆನ್ನಿಗರಾಯರು ಕೆಳಗೆ ಇಳಿದರು. ಅಪ್ಪಣ್ಣಯ್ಯ ಅತ್ತಿಗೆಗೆ ಹೇಳಿದ: ‘ತಿಪಟೂರಿನಿಂದ ನೀವು ವಿಶ್ವ ಮೋಟಾರಲ್ಲಿ ಹೋಗೂವಷ್ಟು ದುಡ್ಡಿದೆಯೆ?’ +‘ಯಾಕೆ?’ +‘ನೀವು ಹೋಗಿ. ನಾನು ಇಲ್ಲೇ ನುಗ್ಗೀಕೆರೆಗೆ ಹೋಗಿಬತ್ತೀನಿ.’ +ಅನಿರೀಕ್ಷಿತವಾದರೂ ನಂಜಮ್ಮನಿಗೆ ಈ ಮಾತಿನಿಂದ ಸಂತೋಷವಾಯಿತು. ಇನ್ನಿಲ್ಲದ ರೀತಿಯಲ್ಲಿ ಹೊಡೆದು ಬಡಿದು, ಹೆಂಡತಿಯ ಮಾಂಗಲ್ಯ ಕಿತ್ತುಕೊಂಡು ಇಷ್ಟು ವರ್ಷಗಳಾಗಿವೆ. ಈಗ ಇವನು ಹೋದರೆ ಅವರು ಮಾತನಾಡಿಸುತ್ತಾರೆಯೋ ಇಲ್ಲವೋ? ಏನೋ ಅವ್ವನ ಮಾತು ಕೇಳಿಕೊಂಡು ಅಪ್ಪಣ್ಣಯ್ಯ ಹಾಗೆ ಮಾಡಿದ. ಈಗಲಾದರೂ ಸಂಸಾರ ಒಂದಾದರೆ ಚನ್ನ- ಎಂದು ಅವಳು ಯೋಚಿಸುತ್ತಿರುವಾಗ ಅವನೇ, ‘ಹುಡುಗ್ರನ್ನಾದ್ರೂ ನೋಡಬೇಕು ಅನ್ನುಸ್ತಿದೆ’ ಎಂದ. +ನಂಜಮ್ಮ ದುಡ್ಡು ಎಣಿಸಿ ನೋಡಿದಳು. ಒಟ್ಟು ಎರಡು ರೂಪಾಯಿ, ಎರಡೂವರೆ ಆಣೆ ಇತ್ತು. ತನಗೆ ವಿಶ್ವನಿಗೆ ಮೋಟಾರಿನಲ್ಲಿ ಒಟ್ಟು ಹನ್ನೆರಡಾಣೆ ಸಾಕು. ಒಂದು ರೂಪಾಯಿ ತೆಗೆದು ಅಪ್ಪಣ್ಣಯ್ಯನ ಕೈಗೆ ಕೊಟ್ಟು -‘ಹೋಗಿ ನೋಡ್ಕಂಡು ಬನ್ನಿ. ಜಯಲಕ್ಷ್ಮಿಗೆ ಈಗ ಮದುವೆಯ ವಯಸ್ಸು. ತಂದೆ ಅನ್ನಿಸ್ಕೊಂಡೋರು ಮಕ್ಕಳ ನಿಗಾ ನೋಡ್ದೆ ಇದ್ರೆ ಯಾರು ನೋಡಬೇಕು? ರಾಮಕೃಷ್ಣ ಸ್ಕೂಲಿಗೆ ಹೋಗ್ತಾ ಇದಾನೋ ಅಥವಾ ಬರೀ ದಾನದ ಹಳ್ಳಿ ಸುತ್‌ತಾ ಇದಾನೋ! ನೋಡ್ಕಂಡು ಬನ್ನಿ’ ಎಂದಳು. +ಗೋಣೀಚೀಲದ ಗಂಟು ಬಿಚ್ಚಿ ಅಪ್ಪಣ್ಣಯ್ಯ ತನ್ನ ಅಂಗಿ ಪಂಚೆಗಳನ್ನು ತೆಗೆದುಕೊಳ್ಳುವಾಗ ಚೆನ್ನಿಗರಾಯರು ಹಿಂತಿರುಗಿದರು. ‘ಎಲ್ಲಿಗ್ಹೋಗ್ತಿಯೋ?’-ಅವರು ಕೇಳಿದರು. ‘ನುಗ್ಗೀಕೆರೆಗೆ’-ಎಂದು ಅವನು ಏನೂ ಯೋಚಿಸದೆ ಹೇಳಿಬಿಟ್ತ. ಆದರೆ ಅದನ್ನು ಹೇಳಬಾರದಾಗಿತ್ತೆಂಬ ಅರಿವು ಅವನಿಗೆ ಬರುವ ಮೊದಲೇ ಶ್ಯಾನುಭೋಗರು-‘ಬಿಟ್ಟ ಹೆಂಡ್ತಿ ನೋಡುಕ್ಕೆ ಹೊರಟೆ ಏನೋ ಕೆಟ್ತರಾಮ?’ ಎಂದು ಕೇಳಿದರು. ಅಷ್ಟರಲ್ಲಿ ರೈಲು ಹೊರಟಿತು. ಅಪ್ಪಣ್ಣಯ್ಯ ಉತ್ತರ ಕೊಡಲಿಲ್ಲ. ಬೇಗ ಬೇಗ ಇಳಿದ. +ಮಧ್ಯಾಹ್ನ ಮೂರು ಗಂಟೆಗೆ ತಿಪಟೂರು ಮುಟ್ಟಿದ ಅವರು ಸಂಜೆ ಆರರ ಹೊತ್ತಿಗೆ ಊರು ಸೇರಿದರು. ರಾತ್ರಿಗೆ ಸ್ವಲ್ಪ ಅನ್ನವಿತ್ತು. ಅವಳು ಮತ್ತೆ ಅಡಿಗೆ ಮಾಡಲಿಲ್ಲ. ಅಮ್ಮನವರ ಪ್ರಸಾದ ಮತ್ತು ಪಟವನ್ನು ಕೊಟ್ಟುಬರಲು ಆಗಲೇ ಮೇಷ್ಟರ ಮನೆಗೆ ಹೋದಳು. +ಶೃಂಗೇರಿಯಿಂದ ತಂದ ಮನಶ್ಯಾಂತಿಯನ್ನು ಅವಳು ಉಳಿಸಿಕೊಳ್ಳುವುದು ಕಷ್ಟವಾಯಿತು. ಅಪ್ಪಣ್ಣಯ್ಯ ಹೆಂಡತಿಯ ಊರಿಗೆ ಹೋದ ಸಂಗತಿಯನ್ನು ಚೆನ್ನಿಗರಾಯರಿಂದ ತಿಳಿದ ಗಂಗಮ್ಮ ಮರುದಿನ ಮಧ್ಯಾಹ್ನ ಬಂದು- ‘ಮತ್ತೆ ಅವರಿಬ್ಬರಿಗೂ ಪ್ರಸ್ತ ಮಾಡಿಸ್ಬೇಕು ಅಂತ ಕಳುಸ್ದೆ ಏನೇ ತಲೆಹಿಡುಕ ಮುಂಡೆ?’ ಎಂದು ಎರಡು ಗಂಟೆ ನಡುಬೀದಿಯಲ್ಲಿ ನಿಂತು ಬೈದಳು. ನಂಜಮ್ಮ ಮಾತಿಗೆ ಹೋಗಲಿಲ್ಲ. ಅಜ್ಜಿಯನ್ನು ದಬಾಯಿಸುತ್ತೇನೆಂದು ಹೊರಟ ವಿಶ್ವನನ್ನು ಹಿಡಿದು ಒಳಗೆ ಕೂರಿಸಿದಳು. ಅತ್ತೆ ಸಹಸ್ರನಾಮ ಮುಗಿಸಿ ಹೋದಮೇಲೆ ಒಂದು ಪ್ರಶ್ನೆ ಅವಳ ಮನಸ್ಸನ್ನು ಕಾಡುತ್ತಿತ್ತು; ನಮ್ಮ ಪಾಡಿಗೆ ನಾವು ಇರ್ತೀವಿ ಅಂದ್‌ರೂ ದೇವರು ಯಾಕೆ ಹೀಗೆಲ್ಲ ಮಾಡುಸ್ತಾನೆ? ನಾನು ಬ್ಯಾಡ ಅಂದ್ರೂ ಯಾಕೆ ಇವರು ಬಂದು ಜಗಳ ಕಾಯ್ತಾರೆ? ಮಾದೇವಯ್ಯನವರನ್ನು ಕೇಳಿದರೂ ಇದಕ್ಕೆ ಸರಿಯಾದ ಉತ್ತರ ಸಿಕ್ಕಲಿಲ್ಲ. ‘ನಮ್ಮುನ್ನ ಪರೀಕ್ಷೆ ಮಾಡಾಕೆ ಶಿವ ಹಿಂಗೆ ಮಾಡ್ತಾನೆ’-ಎಂದು ಅವರೇನೋ ಶ್ರದ್ಧಾಪೂರ್ವಕ ನುಡಿದರು. ಇದೆಂತಹ ಪರೀಕ್ಷೆ? ಯಾಕೆ ಇದೆಲ್ಲ ಪರೀಕ್ಷೆ ಮಾಡಬೇಕು ಶಿವ?-ಎಂದು ಅವಳು ಮನಸ್ಸಿನಲ್ಲಿ ಕೇಳಿಕೊಳ್ಳುತ್ತಿದ್ದಳು. +ನಾಲ್ಕೈದು ದಿನಗಳ ಮೆಲೆ ಒಂದು ದಿನ ಸರ್ವಕ್ಕ ಬಂದಿದ್ದಾಗ ಹೇಳಿದಳು: ‘ನಂಜಮ್ಮಾರೇ, ನಿಮ್ಮ ಅಜ್ಜಿ ಪಾರ್ವತಮ್ಮುಂಗೆ ಚಿನ್ನದ ಶ್ಯಾವಂತಿಗೆ ಹೂವು ಕೊಟ್ಟಿತ್ತಲಾ, ಅದ ಏನ್ ಮಾಡಿದ್ರಿ?’ +ಅದು ಅವಳಿಗೆ ನೆನಪಿಲ್ಲ. ಪಾರ್ವತಿಯ ಒಡವೆಗಳನ್ನೆಲ್ಲ ಸೂರ್ಯನಾರಾಯಣನಿಗೆ ಕೊಟ್ಟಾಗ ಅದನ್ನೂ ಹಾಕಿದ್ದೆನೇನೋ ಎಂಬ ಅನಿಮಾನ ಬಂತು. ಆದರೆ ತನಗೆ ಜ್ಞಾಪಕವಿರುವ ಮಟ್ಟಿಗೆ ಹಾಕಿಲ್ಲ. ಈಗ ಮನೆಯಲ್ಲಿ ಹುಡುಕಿ ನೋಡಬೇಕು. ಆದರೆ ಮಗಳಿಗೆ ಸಂಬಂಧಿಸಿದ ಯಾವ ವಸ್ತುವನ್ನೂ ಹುಡುಕುವುದಾಗಲಿ ಕಣ್ಣಿನಿಂದ ನೋಡುವುದಾಗಲಿ ಅವಳಿಗೆ ಬೇಕಿರಲಿಲ್ಲ. ರಾಮಣ್ಣನ ಬಟ್ಟೆಗಳನ್ನು ಸಹ ಹೊಲೆಯರ ಮರಿಯನ ಮಗನಿಗೆ ಕೊಟ್ಟುಬಿಟ್ಟಿದ್ದಳು. +‘ನಂಗೆ ಗೊತ್ತಿಲ್ಲ. ಯಾಕೆ ಸರ್ವಕ್ಕ?’ +‘ನೀವು ಶೃಂಗೇರಿಗೆ ಹೋಗಾಕೆ ಮದ್ಲು ನಿಮ್ಮ ಯಜಮಾನ್ರು ಅದುನ್ನ ಕಾಶಿಂಬಡ್ಡಿಗೆ ಐವತ್ತು ರೂಪಾಯಿಗೆ ಖರೂದಿ ಮಾರಿದ್ರಂತೆ.’ +‘ನಿಮಗೆ ಯಾರು ಹೇಳಿದ್ರು?’ +‘ಶಿವೇಗೌಡನ ಮಗಳು. ಹಿಂದಿನ ಕಾಲ್‌ದಾಗೆ ಮಾಡಿದ್ದು. ತುಂಬ ವೈನಾಗೈತೆ ಅಂತ ಅವ್ಳು ಹಾಕ್ಯತಾ ಅವ್ಳೆ.’ +ತನ್ನ ಗಂಡನ ಶೃಂಗೇರಿ ಯಾತ್ರೆ ಎಲ್ಲ ಅವಳಿಗೆ ನೆನಪಾಯಿತು. ಮನಸ್ಸು ಸಿಟ್ಟಿನಿಂದ ಕುದಿಯಿತು. ಆದರೆ ಎರಡು ನಿಮಿಷದಲ್ಲಿ ತನಗೆ ತಾನೇ ಸಮಾಧಾನ ತಂದುಕೊಂಡಳು. ಈಗ ಆಗೂದು ಆಗಿದೆ. ಇನ್ನು ಅವರನ್ನ ಬೈದ್ರೆ ಏನು ಬಂತು? ಅವರ ಸ್ವಭಾವ ತಿದ್ದುಕ್ಕೆ ಯಾರಿಗೂ ಆಗುಲ್ಲ- ಎಂದು ಯೋಚಿಸಿ, ‘ಹೋಗ್ಲಿ ಬಿಡಿ ಸರ್ವಕ್ಕ. ಅದು ಮನೇಲಿದ್ರೆ ನಂಗೆ ಕಣ್ಣಲ್ಲಿ ನೋದುಕ್ಕೆ ಆಗ್ತಿರ್ಲಿಲ್ಲ’ ಎಂದು ಆ ಮಾತನ್ನು ಅಲ್ಲಿಗೆ ಮುಗಿಸಿದಳು. +– ೪ – +ಕಡೂರಿನಿಂದ ಒಂಬತ್ತು ಮೈಲಿ ದೂರದ ನುಗ್ಗೀಕೆರೆಗೆ ಹೋಗುವಾಗ ಅಪ್ಪಣ್ಣಯ್ಯನ ಮನಸ್ಸಿನಲ್ಲಿ ನಾನಾ ವಿಧವಾದ ಯೋಚನೆಗಳು. ಈಗ ಹುಡುಗರು ಹ್ಯಾಗೆ ಕಾಣ್ತಾರೆ? ಅವ್ಳು ನನ್ನ ಮಾತಾಡುಸ್ತಾಳೋ ಇಲ್ವೋ? ಮನೆ ಅಂದ್ರೆ ಒಂದು ಗಂಡು ದಿಕ್ಕು ಬೇಕು. ‘ಇಲ್ಲೇ ಇದ್‌ಬಿಡಿ. ನೀವೂ ಹಳ್ಳೀಲಿ ದಾನ ಪಾನ ತರೂರಂತೆ’-ಅಂದ್ರೆ ಏನು ಮಾಡೂದು? ಇಲ್ಲಿಂದ ಹೋಗುವಾಗ ಅವ್ಳು ಬಸುರಿಯಾಗಿದ್ಲು. ಎಂಥ ಮಗುವಾಗಿದ್ಯೋ ಏನೋ! ಒಂದು ತೆರನಾದ ಭಯವೂ ಅವನ ಮನಸ್ಸನ್ನು ಆವರಿಸಿತ್ತು. ‘ಇಲ್ಲಿಗ್ಯಾಕೆ ಬಂದೆ ನಡಿ’-ಅಂದ್‌ಬಿಟ್ರೆ ಏನ್ ಮಾಡೂದು? ಈಗಲೇ ವಾಪಸ್ ಹೊರಟುಹೋಗಿಬಿಡ್ಳೇ?-ಎಂದುಕೊಂಡು ಅವನು ನುಗ್ಗೀಕೆರೆ ತಲುಪುವ ವೇಳೆಗೆ ಸಂಜೆ ಆರು ಗಂಟೆಯಾಗಿತ್ತು. ಅವರು ಈಘ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ತಿಳಿಯಿತು: ಈ ಊರು ಬಿಟ್ಟು ಮೂರು ನಾಲ್ಕು ವರ್ಷದ ಮೇಲೆ ಆಯಿತಂತೆ. ಅಲ್ಲಿ ಜೀವನ ನಡೆಯುಲ್ಲ ಅಂತ ದೊಡ್ಡ ಊರು ಕಡೂರಲ್ಲೇ ಇದಾರಂತೆ. ಪೇಟೆಬೀದಿ ಗಂಗಾಧರಪ್‌ನೋರ ಅಂಗಡಿ ಹಿಂಭಾಗದಲ್ಲೇ ಅವರ ಮನೆಯಂತೆ. +‘ಅಲ್ಲಿ ಜೀವನಕ್ಕೆ ಏನ್ ಮಾಡ್ತಾರೆ?’ +‘ನಂಗೇನು ಗೊತ್ತು? ನೀವು ಅವ್ರಿಗೇನಾಗಬೇಕು?’-ಅವರು ನಕ್ಕು ಕೇಳಿದರು. +ತನ್ನ ಗುರುತು ಹೇಳಲು ಅವನಿಗೆ ಇಷ್ಟವಾಗಲಿಲ್ಲ. ಆದುದರಿಂದ ಮುಂದೆ ಯಾವ ಪ್ರಸ್ನೆಯನ್ನೂ ಕೇಳದೆ ಅಲ್ಲಿಂದ ಹೊರಟು ದಾರಿಯ ಕೆರೆ ಏರಿಯ ಈಚೆ ಕಡೆಗೆ ಸಿಕ್ಕುವ ವಡ್ಡರಹಳ್ಳಿಗೆ ಬಂದ. ಪರಸ್ಥಳದವರೆಂದು ಹೇಳಿ ಒಂದು ಮನೆಯಲ್ಲಿ ಜೋಳದ ಹಿಟ್ತು ಇಸಿದುಕೊಂಡು ರೊಟ್ಟಿ ತಟ್ಟಿ ತಿಂದು ರಾತ್ರಿ ಮಲಗಿದ್ದು, ಉಳಿದ ರೊಟ್ಟಿಯನ್ನು ಬೆಳಿಗ್ಗೆ ತಿಂದು ಮತ್ತೆ ಕಡೂರು ಕಡೆಗೆ ಕಾಲು ಹಾಕಿದ. +ಕಡೂರು ಅವನು ಕಾಣದ ಊರಲ್ಲ. ಹಿಂದೆ ಬಂದು ಹೋಗಿದ್ದ. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಅಲ್ಲಿಗೆ ಬಂದು ಪೇಟೆಬೀದಿ ಗಂಗಾಧರಪ್ಪನವರ ಅಂಗಡಿಯನ್ನು ವಿಚಾರಿಸಿಕೊಂಡು ಹೋದ. ಅಂಗಡಿಯ ಪಕ್ಕದಲ್ಲಿ ಒಂದು ಪುಟ್ಟ ಗಲ್ಲಿ. ಅದರಲ್ಲಿ ಹೋದರೆ ಹಿಂಭಾಗದಲ್ಲಿ ಒಂದು ಸಣ್ಣ ಮಂಗಳೂರು ಹೆಂಚಿನ ಮನೆ. ಬಾಗಿಲಿಗೆ ಗಾಜಿನ ಮಣಿಗಳ ತೋರಣ ಹಾಕಿದ್ದ ಅದು, ಇವರು ಇರುವ ಮನೆಯೋ ಅಲ್ಲವೋ ಎಂದು ಅನುಮಾನಪಡುತ್ತಾ ಅವನು ನಿಂತಿದ್ದಹಾಗೇ ಒಳಗಿನಿಂದ ಒಬ್ಬ ಹುಡುಗಿ ಬಂದಳು. ಹದಿನಾಲ್ಕು ಹದಿನೈದು ವಯಸ್ಸಿನ ಅವಳ ಕೈಲಿ ಪುಸ್ತಕಗಳಿದ್ದವು. ಮಿಣ ಮಿಣ ಮಿಂಚುವ ಸೀರೆ ಉಟ್ಟಿದ್ದಳು. ಮುಖಕ್ಕೆ ಪೌಡರ್ ಹಾಕಿದ್ದ ಅವಳನ್ನು ನೋಡಿದ ಒಂದು ನಿಮಿಷದಲ್ಲಿ ಗುರುತು ಸಿಕ್ಕಿತು: ಜಯಲಕ್ಷ್ಮಿ. ತನ್ನ ಹಿರೀ ಮಗಳು. +‘ಇದೇ ಏನೇ ಮನೆ?-ಇವನು ಕೇಳಿದುದಕ್ಕೆ ಹುಡುಗಿ ಗುರುತು ಸಿಕ್ಕದವಳಂತೆ ನೋಡಿ, ‘ಯಾರು ನೀವು?’ ಎಂದಳು. +‘ಗುರ್ತೇ ಸಿಕ್ಲಿಲ್ವೆ? ನಿಮ್ಮಣ್ಣಲ್ವೇ?’ +‘ಯಾವೂರಣ್ಣಾ?’-ಎನ್ನುತ್ತಾ ಅವಳು ಒಳಗೆ ಹೊರಟುಹೋದಳು. +‘ಎಲಾ ಇವಳವ್ವನ’-ಮನಸ್ಸಿನಲ್ಲಿಯೇ ಎಂದುಕೊಂಡು ಅವನೂ ಒಳಗೆ ಹೋದರೆ ಒಳಗಿನ ವೈಭವವೇನು! ಮೆತ್ತೆ ಹಾಕಿದ ಕುರ್ಚಿ. ಗೋಡೆಗೆಲ್ಲ ಪಟಗಳು. ಮೇಜದ ಮೇಲೆ, ಹೋಟೆಲಿನಲ್ಲಿ ಇರುವಂಥ ರೇಡಿಯೋ. ಅವನ ಹೆಂಡತಿ, ರೇಷ್ಮೆ ಸೀರೆ ಉಟ್ಟು ಹೆರಳು ಹಾಕಿಕೊಂಡು ಕುರ್ಚಿಯ ಮೇಲೆ ಕೂತಿದಾಳೆ. ಮುಖವೆಲ್ಲ ಪೌಡರು. ಈಗ ಎಷ್ಟು ಚೆನ್ನಾಗಿ ಕಾಣ್ತಿದಾಳೆ ಅವಳು. ತೊಡೆಯ ಮೇಲೆ ಎರಡು ವರ್ಷದ ಒಂದು ಹೆಣ್ಣು ಮಗು. ಹತ್ತಿರದ ಇನ್ನೊಂದು ದೊಡ್ಡ ಕುರ್ಚಿಯ ಮೇಲೆ ಆರಾಮವಾಗಿ ಒರಗಿಕೊಂಡು, ಸುಮಾರು ನಲವತ್ತು ವರ್ಷದ ಒಬ್ಬ ದೊಡ್ಡ ಮನುಷ್ಯರು ಸಿಗರೇಟು ಸೇದುತ್ತಿದ್ದಾರೆ. ಅವರ ಬೆರಳುಗಳಲ್ಲಿ ಹೊಳೆಯುವ ಉಂಗುರಗಳೇನು, ಕೊರಳಿನ ಚೈನು, ಕೈಗೆ ಬಂಗಾರದ ಗಡಿಯಾರವೇನು! +‘ಇದೆಯಾ ಮನೆ? ನಾನು ನುಗ್ಗೀಕೆರೆಗೆ ಹೋಗಿ ಬಂದೆ?’-ಅಪ್ಪಣ್ಣಯ್ಯ ಕೇಳಿದ. +ಸಾತು ದಿಗ್ಭ್ರಮೆ ಹಿಡಿದವಳಂತೆ ಒಂದು ಕ್ಷಣ ಆವನನ್ನೇ ನೋಡುತ್ತಾ ಮಂಕಾಗಿಬಿಟ್ಟಳು. ಆದರೆ ಅವನ ಮತ್ತೆ ಮಾತನಾಡಲು ಬಾಯಿತೆರೆಯುವ ಮೊದಲೇ-‘ಯಾರು ನೀವು ಇಲ್ಲಿಗ್ಯಾಕೆ ಬಂದ್ರಿ?’ ಎಂದಳು. +‘ನನ್ನ ಯಾರು ಅಂತಿ ಏನೆ?’ +‘ಇವ್ನುನ್ನ ಮನೆಯಿಂದ ಕಳ್ಸಿ’-ಎಂದು ಹೇಳಿ ಅವಳು ಪಕ್ಕದ ರೂಮಿಗೆ ಹೊರಟುಹೋದಳು. +‘ಯಾವನೋ ನೀನು?’-ಎಂದು ಆ ಗಂಡಸು ಕೇಳಿದ ರೀತಿಗೇ ಅಪ್ಪಣ್ಣಯ್ಯ ಹೆದರಿಬಿಟ್ಟ. ಅಲ್ಲಿ ನಿಲ್ಲದೆ ಒಂದೇ ಏಟಿಗೆ ಹಿಂತಿರುಗಿದವನು, ಹಿಂಭಾಗದಿಂದ ನಾಯಿ ಓಡಿಸಿಕೊಂಡು ಬಂದವನಂತೆ ಧಪಧಪನೆ ಕಾಲು ಹಾಕುತ್ತಾ ಓಡಿದ. ತಾನು ಎತ್ತ ಹೋಗುತ್ತಿದೀನಿ, ಯಾವ ದಿಕ್ಕಿನಲ್ಲಿ ಹೋಗುತ್ತಿದೀನಿ ಎಂಬ ಪರಿವೆಯೂ ಇಲ್ಲದೆ ಓಡಿದ ಅವನು ಸುಸ್ತಾಗಿ ದೊಡ್ಡ ದೊಡ್ಡ ಹೆಜ್ಜೆ ಹಾಕತೊಡಗಿದ. ಸ್ವಲ್ಪ ಹೊತ್ತಾದಮೆಲೆ ದೂರದಲ್ಲಿ ಒಂದು ಊರು ಕಾಣಿಸಿತು. ‘ಅದು ಯಾವೂರು?’-ಎಂದು ಕೇಳಿದುದಕ್ಕೆ ಯಾರೋ, ‘ಬೀರೂರು’ ಎಂದರು. ಬೇಗ ಬೇಗ ನಡೆದು ಅಲ್ಲಿಗೆ ಬಂದ. ತಿಪಟೂರಿಗೆ ಹೋಗುವ ರೈಲು, ಇನ್ನೇನು ಈಗ ಬರುತ್ತೆ ಎಂದು ಯಾರೋ ಹೇಳಿದರು. ಸ್ಟೇಷನ್ನಿಗೆ ಹೋಗಿ ಟಿಕೇಟು ತೆಗೆದುಕೊಂಡು ರೈಲು ಬಂದಮೇಲೆ ಕುಳಿತರೆ ಹಾಳು ರೈಲು ಮತ್ತೆ ಕಡೂರಿಗೇ ಬಂದು ನಿಂತಿತು. ಅವರು ತನ್ನನ್ನು ಹುಡುಕಿದರೆ ಏನು ಗತಿ ಎಂಬ ಭಯದಿಂದ ತನ್ನ ಕಡೆಯ ಕಿಟಿಕಿಯನ್ನು ಮುಚ್ಚಿ, ರೈಲು ಹೊರಡುವ ತನಕ ಮೈಗೂಡರಿಸಿಕೊಂಡು ಕೂತಿದ್ದ. ತಿಪಟೂರು ಮುಟ್ಟುವತನಕ ಹೆದರಿಕೆ ಇದ್ದೇ ಇತ್ತು. ಸ್ಟೇಷನ್ನಿನಲ್ಲಿ ಇಳಿದು, ಹತ್ತಿರ ಉಳಿದಿದ್ದ ಐದು ಆಣೆಗೆ ಖಾಲಿ ದೋಸೆ ತಿಂದು ಊರ ಕಡೆ ಹೆಜ್ಜೆ ಹಾಕುವಾಗ- ‘ಅವನು ಯಾರಿರಭೌದು?’-ಎಂಬ ಜಿಜ್ಞಾಸೆ ಮೂಡಿತು. ‘ಆ ಸೂಳೆಮಗುನ್ನ ಇಟ್ಕಂಡಿದಾಳೆ ಈ ಕತ್ತೆಮುಂಡೆ’- ಎಂಬ ಉತ್ತರ ಹೆಚ್ಚು ಕಷ್ಟವಿಲ್ಲದೆ ಹೊಳೆಯಿತು. ಹಾಗೆಯೇ ಹಿಂತಿರುಗಿ ಹೋಗಿ ಅವಳನ್ನು ಕಸಪೊರಕೆಯಿಂದಲಾದರೂ ಹೊಡೆಯಬೇಕೆಂದು ಮನಸ್ಸು ತವಕಿಸಲು ಮೊದಲುಮಾಡಿತು. ಆದರೆ ಆ ಕಡೆಗೆ ಹೆಜ್ಜೆ ತಿರುಗಿಸುವುದಕ್ಕೆ ಭಯವಾಗುತ್ತಿದೆ. +ಮಧ್ಯೆ ಎಲ್ಲೂ ನಿಲ್ಲದೆ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಊರಿಗೆ ಬಂದು ಹನುಮಂತರಾಯನ ಗುಡಿಯ ಬಾಗಿಲು ಬಡಿದು- ‘ನಾನು’ ಎಂದಾಗ ಅವನ ಅಮ್ಮ ಬಾಗಿಲನ್ನೇನೋ ತೆಗೆದಳು. ಸೀಮೆ ಎಣ್ಣೆ ಬುಡ್ಡಿ ಹೊತ್ತಿಸಿದಮೇಲೆ ಇವನು ಒಳಗೆ ಹೋಗಿ ಕೂರುವುದೇ ತಡ, ಕೇಳಿದಳು: ‘ಮತ್ತೆ ಆ ಸೂಳೆ ಹುಡಿಕ್ಕಂಡು ಹೋಗಿದ್ಯಲಾ, ಅವಳ ಸೆಜ್ಜೆಮನೆಗೆ ನಿನ್ನ ಸೇರ್ಸುಲ್ಲ ಅಂದ್ಲೇನೋ?’ +ಅಪ್ಪಣ್ಣಯ್ಯ ಮಾತನಾಡಲಿಲ್ಲ. ಅಮ್ಮನೇ-‘ಭಂಡಗೆಟ್ಟ ಸೂಳೇಮಗನೇ, ನಾಚಿಕೆಯಾಗುಲ್ವೇನೋ? ಶೃಂಗೇರಿ ಯಾತ್ರೆಗೆ ಹೋಗ್ತೀನಿ ಅಂತ ಸುಳ್ ಹೇಳಿ ಅವಳ ಹತ್ರ ಹಾದರ ಮಾಡುಕ್ಕೆ ಹೋಗಿದ್ಯಾ? ಈ ದೇವರ ಗುಡಿ ವಳೀಕ್ ಬಂದ್ ಕೂತಿದೀಯಲ, ಬೆಳಿಗ್ಗೆ ಅಣ್ಣಾಜೋಯಿಸರನ್ನ ಕರೆಸಿ ನಿಂಗೆ ಬಹಿಷ್ಕಾರ ಹಾಕುಸ್ತೀನಿ ತಾಳು. ಬಿಟ್ಟ ಹೆಂಡ್ತಿ ಕೂಡುಕ್ ಹೋಗಿದ್ದ ಕೆಟ್ಟರಾಮ.’ +ಅಪ್ಪಣ್ಣಯ್ಯನಿಗೆ ವಿಪರೀತ ಕೋಪ ಬಂತು. ‘ಸುಮ್ನೆ ಬಾಯಿ ಮುಚ್ಕತ್ತೀಯೋ ಇಲ್ವಮ್ಮ?’-ಎಂದ. +‘ನಾನ್ಯಾಕೆ ಬಾಯಿ ಮುಚ್ಕಬೇಕೋ ಭಂಡ? ಗಂಜಲು ಮೂಸಿಕಂಡು ಹೋದ್ಯಲೋ ವಾಸನೆ ಹಿಡ್ಕಂಡು, ನಾಯಿಮುಂಡೆ ಹೆತ್ತುದ್ದೇ…..’ +ಅವಳು ಬೈಯುವುದನ್ನು ಕೇಳುಕೇಳುತ್ತಾ ಅವನಿಗೆ ಮೈಕೈ ಉರಿಯುವಷ್ಟು ಕೋಪ ಬಂತು. ‘ಬಾಯಿ ಮುಚ್ಕತ್ತಿಯೋ ಇಲ್ವೋ’-ಎಂದು ಇನ್ನೊಂದು ಸಲ ಕಿರುಚಿದ. ಅವಳು ಇನ್ನೂ ಜೋರಾಗಿ ಬೈಯಲು ಶುರುಮಾಡಿದಳು. ಅವನ ಎದುರಿಗೇ ಈಚಲು ಕಸಪೊರಕೆ ಇತ್ತು. ಎದ್ದು ಅದನ್ನು ತೆಗೆದುಕೊಂಡು ಅಮ್ಮನ ಮುಖ ಮೋರೆ ಬೆನ್ನು ಮೈ ಕೈಗಳನ್ನು ನೋಡದೆ ರಪರಪನೆ ಇಪ್ಪತ್ತು ಮೂವತ್ತು ಏಟು ರಾಚಿದ. ‘ಅಯ್ಯಯ್ಯಪ್ಪೋ, ನನ್ನ ಸಾಯಿಸ್ತಾನಲೋ ಇವ್ನು’-ಎಂದು ಅವಳು ಊಳಿಟ್ತ ಸದ್ದಿಗೆ ಏಳು ಎಂಟು ಜನ ಎದ್ದು ಬಂದರು. ಇನ್ನೂ ನಾಲ್ಕು ಜನ ಸೇರಿದರು. ಗಂಗಮ್ಮನೇ ಅಣ್ಣಾಜೋಯಿಸರನ್ನು ಕರೆಸಿದಳು. ಅಯ್ಯಾಶಾಸ್ತ್ರಿಗಳೂ ಬಂದರು. +ಹೆತ್ತ ತಾಯೀನ ಕಸಪೊರಕೇಲಿ ಹೊಡೆಯುವಂಥ ಮಹಾಪಾಪ ಉಂಟೆ?’-ಅಯ್ಯಾಶಾಸ್ತ್ರಿಗಳು ಕೇಳಿದರು. +‘ನೂರ ಒಂದು ರೂಪಾಯಿ ದಂಡ ಕೊಟ್ತು ಪ್ರಾಯಶ್ಚಿತ್ತ ಮಾಡಿಸಿಕೋಬೇಕು’- ಅಣ್ಣಾಜೋಯಿಸರು ತೀರ್ಪು ಹೇಳಿದರು. +‘ನಂತಾವ ಒಂದು ಕೂದ್‌ಲೂ ಕಿತ್ಕಳಾಕಾಗುಲ್ಲ ಹೋಗ್ರುಲೇ’- ಅಪ್ಪಣ್ಣಯ್ಯ ರೇಗಿ ಅಂದ. +ಇಂಥವನನ್ನು ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದು ಹೇಗೆ? ಅವನಿಗೆ ಬಹಿಷ್ಕಾರ ಹಾಕಿ ಆ ಕ್ಷಣವೇ ಅಲ್ಲಿಂದ ಹೊರಡಿಸಿದರು. ‘ಇವ್ನು ಈ ಊರೇ ಬಿಡಬೇಕು’-ಎಂದು ಅಣ್ಣಾಜೋಯಿಸರ ವಾದ. ‘ಈ ಊರೇನು ನಿಮ್ಮಪ್ಪನ ಜಾಗೀರಿಯಲ್ಲ ಕಣ್‌ಲೇ ಜೋಯಿಸ!’-ಅಪ್ಪಣ್ಣಯ್ಯ ಹೇಳಿದ. ಅವನಿಗೆ ಇಷ್ಟೊಂದು ಧೈರ್ಯ ಬಂದದ್ದನ್ನು ಇದುವರೆಗೆ ಯಾರೂ ಕಂಡಿರಲಿಲ್ಲ. ಎಲ್ಲರೂ ಸ್ತಬ್ಧರಾದರು. ಅವನೇ ತನ್ನ ಬಟ್ಟೆ ಬರೆಗಳನ್ನು ಜೋಡಿಸಿಕೊಂಡು ಹೊರಟುಹೋದ. ‘ಈ ಸೂಳೇಮಗನ ಕೈಗೆ ಹುಳಬೀಳ’-ಎಂದು ಅವನ ಅಮ್ಮ ಶಾಪ ಹಾಕುತ್ತಿದ್ದಳು. +ಅತ್ತಿಗೆಯ ಮನೆಗೆ ಹೋಗಬೇಕೆಂದು ಅವನಿಗೆ ಮನಸ್ಸಾಯಿತು. ನುಗ್ಗೀಕೆರೆಯ ವಿಷಯ ಕೇಳಿದರೆ ಏನು ಹೇಳುವುದು?- ಎಂಬ ಯೋಚನೆಯಾಗಿ ಅಲ್ಲಿಗೆ ಹೋಗಲಿಲ್ಲ. ಸದ್ದು ಮಾಡದಂತೆ ನಡೆದು ಮಾದೇವಯ್ಯನವರ ಗುಡಿಯ ಜಗುಲಿಗೆ ಹೋಗಿ ಮಲಗಿ ರಾತ್ರಿಯನ್ನು ಕಳೆದ. ಮತ್ತೆ ಸುಮಾರು ಒಂದು ತಿಂಗಳು ಅವನು ಊರಿನಲ್ಲಿರಲೇ ಇಲ್ಲ. +ನೆನ್ನೆ ರಾತ್ರಿ, ನಡೆದ ಸಂಗತಿ ನಂಜಮ್ಮನಿಗೆ ತಿಳಿಯಿತು. ಅವನು ಹೆಂಡತಿಯ ಊರಿಗೆ ಹೋಗಿದ್ದ ಸಂಗತಿಯನ್ನು ಊರಿಗೆ ಬಂದ ತಕ್ಷಣ ಹೋಗಿ ಅಮ್ಮನಿಗೆ ಮುಟ್ಟಿಸಿದ ತನ್ನ ಗಂಡನ ಬಗೆಗೆ ಅವಳಿಗೆ ವಿಪರೀತ ಕೋಪ ಬಂತು. ಆದರೆ ಅವರನ್ನು ಕೇಳಿ ಪ್ರಯೋಜನವಿಲ್ಲ. ಗಂಗಮ್ಮ ಆ ಮಗನನ್ನೇ ಅಲ್ಲದೆ ಅವಳನ್ನೂ ಮನಸ್ಸಿಗೆ ಬಂದ ಹಾಗೆ ಬೈದುಕೊಂಡು ತಿರುಗುತ್ತಿದ್ದಳು. ಅದಕ್ಕೂ ನಂಜಮ್ಮ ಉಭ ಶುಭ ಅನ್ನಲಿಲ್ಲ. ಅಜ್ಜಿ ಬೀದಿಯಲ್ಲಿ ಸಿಕ್ಕಿ ಏನಾದರೂ ಅಂದರೂ, ಅವರ ಕೈಲಿ ಮಾತಾಡಕೂಡದೆಂದು ವಿಶ್ವನಿಗೆ ಹೇಳಿದಳು. +ಒಂದು ತಿಂಗಳಾದಮೇಲೆ ಒಂದು ದಿನ ಅಪ್ಪಣ್ಣಯ್ಯ ಅತ್ತಿಗೆಯ ಮನೆಗೆ ಬಂದ. ಚೆನ್ನಿಗರಾಯರು ಮನೆಯಲ್ಲಿರಲಿಲ್ಲ. ಅವನು ಹೇಳಿದ: ‘ಈ ಬೋಸುಡಿ ಮುಂಡೇ ಜೊತೆ ಇಲ್ದೆ ಇದ್ರೆ ನನ್ನ ಕೈಲೇನು ಜೀವನ ಮಾಡುಕ್ಕಾಗುಲ್ವೆ? ಹಿರೀಸಾವೆ ಸುತ್ತ ಹಳ್ಳೀಕಡೆಗೆ ಹೋಗಿ ಒಂದೂವರೆ ಪಲ್ಲ ರಾಗಿ, ಅವರೇಕಾಳು. ಮೆಣಸಿನಕಾಯಿ ಎಲ್ಲ ಗುಡ್ಡೆ ಹಾಕ್ಕಂಡ್ ಬಂದಿದೀನಿ. ನಂದು ಇಪ್ಪತ್ತು ರೂಪಾಯಿ ಇಸ್ಕಂಡಿದ್ರಲ, ಕೊಡಿ. ಒಂದೆರಡು ಪಾತ್ರೆ ಕೊಂಡ್ಕತೀನಿ.’ +‘ಎಲ್ಲಿರ್ತೀರಿ?’ +‘ಕುರುಬರಹಟ್ಟಿ ಬೀರೇಗೌಡನ ದನದ ಕೊಟ್ಟಿಗೆ ಜಗುಲೀಮ್ಯಾಲೆ ಒಂದು ಕ್ವಾಣೆ ಇದೆಯಲ. ಅವ್ನುನ್ನ ಕೇಳ್ದೆ. ನೀವು ಮಾರಾಯರ ಹಾಗೆ ಅಲ್ಲಿ ಅಡಿಗೆ ಮಾಡ್ಕಂಡು ಉಂಡ್ಕಂಡಿರಿ ಅಂತ ಬೀರೇಗೌಡ ಹೇಳಿದಾನೆ.’ +ಮೂರು ದಿನಗಳಲ್ಲಿ ನಂಜಮ್ಮ ಅವನ ದುಡ್ಡು ಹೊಂದಿಸಿಕೊಟ್ಟಳು. ಕಂಬನಕೆರೆಯ ಸಂತೆಗೆ ಹೋಗಿ ಅವನು ಅಲ್ಯೂಮಿನಿಯಂ ಚೆಟ್ಟಿ, ಡಬರಿ, ಲೋಟ, ಒಂದು ಗಡಿಗೆ, ಒಂದು ಹಿಟ್ಟು ತೊಳಸುವ ಮಡಕೆ, ಒಂದು ಮಂದಲಿಗೆಗಳನ್ನು ತಂದ. ಊರಿನಲ್ಲಿದ್ದ ದಿನ ಮುದ್ದೆ ತೊಳೆಸಿಕೊಳ್ಳುತ್ತಿದ್ದ. ಅದಕ್ಕೆ ಹುಳಿ ಮಾಡುತ್ತಿದ್ದುದು ಅಪರೂಪ. ಅತ್ತಿಗೆಯ ಮನೆಗೆ ಬಂದು ಎರಡು ಹೊತ್ತುಗೂ ಆಗುವಷ್ಟು ಇಸಿದುಕೊಂಡು ಹೋಗುತ್ತಿದ್ದ. ಒಂದೊಂದು ದಿನ ಇಲ್ಲಿಯೇ ಪೂರ್ತಿ ಊಟವನ್ನೂ ಮಾಡುತ್ತಿದ್ದ. ಅವನನ್ನು ಮನೆಗೆ ಸೇರಿಸುತ್ತಿರುವುದಕ್ಕೆ ಇವಲಿಗೆ ಬಹಿಷ್ಕಾರ ಹಾಕಬೇಕೆಂದು ಗಂಗಮ್ಮ ಜೋಯಿಸರಿಗೆ ಹೇಳಿದಳು. ಆದರೆ ಸರ್ಕಾರದ ಆಹಾರದ ಲೆಕ್ಕ ಬರೆಯುವ ಅವಳು ಸ್ವತಃ ಶೃಂಗೇರಿ ಯಾತ್ರೆ ಮಾಡಿ ಬಂದಿದಾಳೆ. ಅವಳ ಬಗೆಗೆ ಜೋಯಿಸರಿಗೇ ಭಯ ಹುಟ್ತಿತ್ತು. ಅವರಿಬ್ಬರಲ್ಲಿ ಯಾರೂ ಶೃಂಗೇರಿಯ ದಿಕ್ಕನ್ನೂ ಕಂಡಿರಲಿಲ್ಲ. +ಒಂದು ದಿನ ನಂಜಮ್ಮ ಅಪ್ಪಣ್ಣಯ್ಯನನ್ನು ಕೇಳಿದಳು: ‘ನುಗ್ಗೀಕೆರೇಲಿ ಅವರು ಏನಂದ್ರು?’ +‘ಆ ಮುಂಡೇರು ಆ ಊರಲ್ಲಿ ಇಲ್ವೇ ಇಲ್ಲ.’ +‘ಎಲ್ಲಿಗೆ ಹೋಗಿದಾರೆ ಅಂತ ಯಾರೂ ಹೇಳ್‌ಲಿಲ್ವೆ?’ +‘ಹೇಳೂದೇನು, ಕಡೂರಲ್ಲಿ ಯಾವನೋ ಸಾವ್ಕಾರುನ್ನ ಮಡೀಕಂಡಿದಾಳೆ ಹೊಲೆಮಾದಿಗಮುಂಡೆ’-ಎಂದು ಅವನು, ತಾನು ಕಂಡದ್ದನ್ನು ಪೂರ್ತಿಯಾಗಿ ವಿವರಿಸಿದ. +ಅದನ್ನು ಕೇಳಿದ ನಂಜಮ್ಮನ ಮನಸ್ಸು ಮುದುಡಿಹೋಯಿತು. ಈ ಮನೆಗೆ ತಾವಿಬ್ಬರು ಸೊಸೆಯರಾಗಿ ಬಂದೆವು. ಇಬ್ಬರಲ್ಲಿ ಯಾರೂ ತಮ್ಮ ಹೆಂಡಂದಿರನ್ನು ವಿವೇಕದಿಂದ ಬಾಳಿಸಲಿಲ್ಲ. ತಮಗೇ ವಿವೇಕದಿಂದ ಬಾಳುವುದು ಗೊತ್ತಿಲ್ಲದವರು ಹೆಂಡಂದಿರನ್ನು ಏನು ಬಾಳಿಸುತ್ತಾರೆ? ಆದರೆ ಅಣ್ಣನಿಗಿಂತ ತಮ್ಮ ಉತ್ತಮ. ಒಳ್ಳೆಯ ಮಾತನಾಡಿದರೆ ಹೇಳಿದ ಹಾಗೆ ಕೇಳುತ್ತಾರೆ. ಮೈಮುರಿದು ದುಡಿಯುತ್ತಾರೆ. ಸಾತು ವಿವೇಕವಾಗಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೇನೋ!- ಎಂಬ ಯೋಚನೆ ಬಂತು. ಆದರೆ ಕಷ್ಟ ಅನುಭವಿಸುಕ್ಕೆ ಎಲ್ಲರಿಗೂ ಒಂದೇ ಥರ ಶಕ್ತಿ ಇರುಲ್ಲ. ಈ ಅತ್ತೆ, ಈ ಗಂಡನ ಮಾತು, ಭಾಷೆ, ಇವಲ್ಲ ಸಹಿಸ್ಕಂಡಿರಕ್ಕೂ ಎಲ್ರಿಗೂ ಆಗುಲ್ಲ. ತಾಯಿಯ ಮಾತು ಕೇಳಿಯೇ ಅಪ್ಪಣ್ಣಯ್ಯ, ತಾನೇ ಕಟ್ಟಿದ್ದ ಗುಡಿಸಲಿಗೆ ಬೆಂಕಿ ಹಾಕಿ ಸುಟ್ಟು, ಹೆಂಡತಿಯ ತಾಳಿ ಕಿತ್ಕಂಡುಬಿಟ್ರು. ಆದರೂ ಈ ಮನೆಗೆ ಬಂದ ಇನ್ನೊಬ್ಬ ಸೊಸೆ, ತನ್ನ ಓರಗಿತ್ತಿ, ಹೀಗೆ ಮಾಡಬಾರದಾಗಿತ್ತು-ಎಂದು ಮನಸ್ಸಿನಲ್ಲೇ ಕೊರಗಿಕೊಂಡು ಅಪ್ಪಣ್ಣಯ್ಯನನ್ನು ಕೇಳಿದಳು: ‘ಈ ವಿಷಯ ಯಾರಿಗಾದ್ರೂ ಹೇಳಿದೀರಾ?’ +‘ಇಲ್ಲ.’ +‘ಹೇಳ್‌ಬ್ಯಾಡಿ. ನಮ್ಮ ಮರ್ಯಾದೆಯೇ ಹೋಗುತ್ತೆ.’ +‘ಆ ಮುಂಡೇರ ಮಾತ ನನ್ನ ನಾಲಿಗೇಲಿ ನುಡುದ್ರೆ ಹೇಲು ತಿಂದಷ್ಟು ಅಸಹ್ಯವಾಗುತ್ತೆ. ನಾನು ಆಡುಲ್ಲ.’ +‘ಹಾಗಲ್ಲ. ಒಂದೊಂದು ಸರ್ತಿ ಸಿಟ್ಟು ಬಂದಾಗ ನಿಮಗೆ ಏನು ಆಡ್ತೀನಿ ಏನು ಆಡುಲ್ಲ ಅಂತ ಜ್ಞಾಪಕವೇ ಇರುಲ್ಲ. ಖಂಡಿತ ಇದ ಯಾರ ಕೈಲೂ ಹೇಳುಲ್ಲ ಅಂತ ದೇವರಮೆಲೆ ಆಣೆ ಇಟ್ಟು ಹೇಳಿ.’ +ಶೃಂಗೇರಿ ಶಾರದಮ್‌ನೋರ ಆಣೆಗೂ ಹೇಳುಲ್ಲ’- ಎಂದು ಅವನು, ಗೋಡೆಯ ಮೇಲೆ ತೂಗುಹಾಕಿದ್ದ ಶಾರದಮ್ಮನವರ ಪಟವನ್ನು ಮುಟ್ಟಿ ಹೇಳಿದ. +***** +ಮುಂದುವರೆಯುವುದು +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […] +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_242.txt b/Kannada Sahitya/article_242.txt new file mode 100644 index 0000000000000000000000000000000000000000..92e74e5b1e8cb832e2e1ea98efa9ea3378efbd81 --- /dev/null +++ b/Kannada Sahitya/article_242.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಶೀರ್ಷಿಕೆಯೇ ಒಂದರ್ಥದಲ್ಲಿ ನನಗೆ ಅಸಂಬದ್ಧವಾಗಿ ಕಾಣಿಸಿದರೂ ಅದನ್ನೆ ಉಳಿಸಿಕೊಳ್ಳಲು ಬಯಸುತ್ತಿರಲು ಕಾರಣ, ಸಂಶೋಧನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಾನು ಆ ಶಿಸ್ತಿನಲ್ಲಿ ಶಿಕ್ಷಣವನ್ನು ನನಗೆ ನೀಡಿದ ಹಿರಿಯ ಸಂಶೋಧಕರ, ಅವರ ಒಡನಾಟದ, ಅವರ ಬರಹ ಚರ್ಚೆಗಳ ಹಿನ್ನೆಲೆಯಲ್ಲಿ ನಾನು ಆ ಕ್ರಿಯೆಯನ್ನು ಗ್ರಹಿಸಿರುವ ರೀತಿ, ಮಾಡಿದ ಕೆಲಸ, ಪಡೆದ ಅನುಭವ ಇವುಗಳನ್ನೇ ಇಲ್ಲಿ ಮೂಲ ಸಾಮಗ್ರಿಯನ್ನಾಗಿ ಭಾವಿಸಿರುವುದರಿಂದ ಈ ಲೇಖನದ ಶೀರ್ಶಿಕೆಯಲ್ಲಿ ‘ನನ್ನ’ ಎಂಬ ಮಾತು ಇರುವುದು ಅಗತ್ಯವಾಗಿದೆ. ಹಾಗೆ ನೋಡಿದರೆ ವಾಸ್ತವವಾಗಿ ಎಲ್ಲ ಶ್ರೇಷ್ಠ ಸಂಶೋಧಕರ ಗುರಿ ತಮ್ಮ ತಮ್ಮ ಕ್ಷೇತ್ರದ ಸತ್ಯವನ್ನು, ಇತರರು ಕಾಣದೆ ಇರುವ ಸಂಗತಿಯನ್ನು ವ್ಯಕ್ತದ ಹಿಂದೆ ೦೦೦೦ನಿಕ್ಷಿವಾಗಿರುವ ನಿಯಮವನ್ನು ಗುರಿತಿಸುವುದೇ ಆಗಿರುವುದರಿಂದ. ‘ಅವರ’ ‘ಇವರ’ ‘ನನ್ನ’ ‘ಇತರರ’ ಎಂಬ ಸಂಶೋಧನೆಯ ಪರಿಕಲ್ಪನೆಯಿರುವುದು ತಾತ್ವಿಕವಾಗಿ ಅಸಾಧ್ಯ. ಕ್ಷೇತ್ರಗಳು, ವಿಧಾನಗಳು, ವಸ್ತು ಬೇರೆ ಇರಬಹುದಾದರೂ ಎಲ್ಲ ಸಂಶೋಧನೆಯ ಗುರಿ ಒಂದೇ: ವಾಸ್ತವವನ್ನು ಕಾಣುವುದು. ‘ತಮಸೋ ಮಾ ಜ್ಯೋತಿರ್ಗಮಯ’: ತಮಸ್ಸಿನಿಂದ ಜ್ಯೋತಿಯೆಡೆಗೆ ಸಾಗುವ ಉಪನಿಷತ್ತಿನ ದಾರ್ಶನಿಕರು ಒಂದು ರೀತಿಯ ಏಕೆ, ನಿಜವಾಗಿಯೂ ಬಹು ದೊಡ್ಡ ಸಂಶೋಧಕರು. ಸಂಶೋಧನೆ ಸತ್ಯವನ್ನು ಕಾಣುವ ಹಂಬಲದ ಒಂದು ಮಾರ್ಗ, ನಿರಂತರ ಪ್ರಯತ್ನದ ಶ್ರಮದ ಮಾರ್ಗ. +ಈಶಾವಾಸ್ಸೋಪನಿಷತ್ತಿನಲ್ಲಿ ಇಂತಹ ಒಂದು ಪ್ರಾರ್ಥನೆಯಿದೆ ‘ಚಿನ್ನದ ಪಾತ್ರೆಯಂತಿರುವ ಈ ಜಗತ್ತಿನ ಹಿಂದೆ ಹುದುಗಿರುವ ಸತ್ಯವನ್ನು ನೋಡಲು ಬಯಸಿದ್ದೇನೆ. ಆ ಪಾತ್ರೆಯನ್ನು ಅತ್ತ ಸರಿಸು. ನನಗೆ ಬೇಕಾಗಿರುವುದು ಆ ಚಿನ್ನದ ಪಾತ್ರೆಯಲ್ಲ. ಸತ್ಯದ ದರ್ಶನ’ ಈ ಮಾತು ವಿಶ್ವದ ಹಿಂದಿನ ಸತ್ಯವನ್ನು ಕಾಣಲು ತವಕಿಸುತ್ತಿರುವ ಸತ್ಯಶೋಧಕ ಋಷಿಯೊಬ್ಬನ ಹಂಬಲ. ಪ್ರತಿಯೊಬ್ಬ ಸಂಶೋಧಕನಲ್ಲೂ ಆ ಋಷಿಯ ಸತ್ಯವನ್ನು ಕಾಣುವ ಹಂಬಲದ ಗುಣವಿರುತ್ತದೆ. ನಮ್ಮ ಕಣ್ಣಿಗೆ ಸಂಗತಿಗಳು ಕಾಣುತ್ತವೆ: ಆದರೆ ಆ ಸಂಗತಿಗಳ ಹಿಂದೆ ಅಡಗಿರುವ ವಾಸ್ತವವನ್ನು ಪ್ರವಹಿಸುವ ಒಂದು ನಿಯಮವನ್ನು ಗುರುತಿಸಲು ಬಯಸುತ್ತಾನೆ ಸಂಶೋಧಕ. ತಾನೂ ಸೇರಿದಂತೆ ಯಾರಿಗೂ ಕಾಣಿಸಿಕೊಳ್ಳದೆ. ತಾನು ಅಡಗಿದ್ದೇನೆ ಎಂಬುದರ ಸುಳುಹನ್ನೂ ಕೊಡದೆ ಯಾವ ಸಂಗತಿ ಅಡಗಿತ್ತೋ ಅಂತಹುದರ ಸುಳುಹನ್ನು ಪಡೆದುಕೊಂಡ ಸಂಶೋಧಕ ಅದನ್ನು ಕಾಣಲು ಒಂದು ವ್ಯವಸ್ಥಿತ, ಶಿಸ್ತುಬದ್ಧ, ವಸ್ತುನಿಷ್ಠ ಪ್ರಯತ್ನವನ್ನು ಕೈಗೊಳ್ಳುವ ಬೌದ್ಧಿಕ ಕ್ರಿಯೆಯೇ ಸಂಶೋಧನೆ. +ಒಂದು ಚಿಕ್ಕ ಉದಾಹರಣೆಯನ್ನು ನನ್ನ ಅನುಭವದಿಂದಲೇ ನೀಡಬಹುದು. ಕರ್ನಾಟಕದ ಹಲವು ಊರುಗಳ ಹೆಸರುಗಳು ‘-ವರ’ ಅಥವ ‘-ವಾರ’ ನಿಂದ ಕೊನೆಯಾಗುತ್ತದೆ. ಉದಾಹರಣೆಗೆ ಬಾಣಾವರ, ನಾಗವಾರ. ಅವುಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಕೇವೆಲ ಊಹೆಯಾಗಿಬಿಡುತ್ತವೆ. ಅಂತಹ ಊರುಗಳ ಹೆಸರುಗಳು ಕಾಣಿಸಿಕೊಳ್ಳುವ ಮುನ್ನೂರು ನಾನೂರು ವರ್ಷಗಳ ಹಿಂದಿನ ದಾಖಲೆಗಳನ್ನು ಪರಿಶೀಲಿಸಿದರೆ ಅವುಗಳ ಏನನ್ನು ಸೂಚಿಸುತ್ತವೆ ಎಂಬುದರ ಮೇಲೆ ಥಟ್ಟನೆ ಬೆಳಕು ಬಿದ್ದಂತಾಗುತ್ತದೆ. +ವರ, ‘ವಾರ’ ಜಾಗದಲ್ಲಿ ಹಿಂದೆ ‘-ಪುರ’ ಎಂಬ ಪ್ರತ್ಯಯವಿದ್ದಿತು. ಮತ್ತು ಹೆಸರಿನ ಅರ್ಥ ಸ್ಪಷ್ಟವಾದರೂ ಹ್ರಸ್ವ. ದೀರ್ಘಗಳಿರುವ ‘ವರ’ ‘ವಾರ’ ಎಂದಾದದ್ದು ಏಕೆ ಎಂಬ ಪ್ರಶ್ನೆಗೆ ವಿಜ್ಞಾನ ಉತ್ತರ ಕೊಡಲಾರದು: ‘ಹೇಗೆ?’ ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಬಲ್ಲದು. ‘ಪುರ’ ಪದವು ಹೆಸರುಗಳ ಕೊನೆಯಲ್ಲಿ ‘-ವರ’ ‘-ವಾರ’ ಆಗುವಲ್ಲಿ ಒಂದು ಚಿಕ್ಕ ನಿಯಮವು ಕಾಣಿಸಿಕೊಳ್ಳುತ್ತದೆ. ಆ ಪ್ರತ್ಯಯಗಳ ಹಿಂದಿನ ಸ್ವರವು ದೀರ್ಘವಾಗಿದ್ದರೆ ‘-ವರ’ ಎಂಬ ಹ್ರಸ್ವಾದಿ ಪ್ರತ್ಯಯವೂ, ಹ್ರಸ್ವಿವಾಗಿದ್ದರೆ ‘-ವಾರ’ ಎಂಬ ದೀರ್ಘಾದಿ ಪ್ರತ್ಯಯವೂ ಕಾಣಿಸಿಕೊಳ್ಳುತ್ತದೆ. ಕಾರವಾರ, ಮಾಯಾವರ, ಧರ್ಮಾವರ, ಸಿರಿವಾರ, ಇಂತಹ ಊರುಗಳ ಹೆಸರುಗಳನ್ನು ಗಮನಿಸಿ. ಆ ನಿಯಮವು ಯಾರೋ ಹಾಕಿಕೊಟ್ಟದ್ದಲ್ಲ. ಜನರ ಆಡುಮಾತಿನಲ್ಲಿ ತನಗೆ ತಾನೇ ರೂಪುಗೊಂಡಂತಹುದು. ಅಂತಹುವನ್ನು ಗುರುತಿಸುವ ಕ್ರಿಯೆ ಸಂಶೋಧನೆ. ಇದೊಂದು ಚಿಕ್ಕ ಉದಾಹರಣೆ ಮಾತ್ರ. +ಆಂಧ್ರದಲ್ಲಿ ವಾಸವಾಗಿದ್ದು ಅಲ್ಲೇ ಕೊನೆಯುಸಿರೆಳೆವ ಪಂಪ ತನ್ನದು ಧಾರವಾಡ ಜಿಲ್ಲೆಯ ಭಾಷೆ ಎಂದು ಹೇಳಿಕೊಳ್ಳಲು ಕಾರಣ ಏನು? ಪ್ರಭುತ್ವವನ್ನು ಧಿಕ್ಕರಿಸಿ ನಿಂತ ಹರಿಹರನಿಗೆ ಮನುಷ್ಯರ ಮೇಲೆ ಕಾವ್ಯ ಬರೆಯಬಾರದು ಎಂದು ಘೋಷಿಸುವ ಧೈರ್‍ಯ ಎಲ್ಲಿಂದ ಬಂದಿತು? ವಚನಕಾರರ ಅಂಕಿತಗಳು ವಾಸ್ತವವಾಗಿ ಏನನ್ನು ಸೂಚಿಸುತ್ತವೆ? ಇಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಒಂದೇ ಸಾಲಿನವಾಗಿದ್ದರೂ ಒಂದು ದೀಪ ಇಡೀ ಪ್ರದೇಶವನ್ನು ಬೆಳೆಗುವಂತೆ ಶ್ರಮಪೂರ್ಣ ಪ್ರಯತ್ನದಿಂದ ಅರ್ಥಾತ್ ಸಂಶೋಧನೆಯಿಂದ ಸಿದ್ಧವಾದ ಅಂತಹ ಉತ್ತರಗಳು ಕವಿಗಳ ಕಾವ್ಯಗಳ ಮೇಲೆ, ವಚನ ವಾಙ್ಮಯದ ಮೇಲೆ ಅಪೂರ್ವ ಬೆಳಕನ್ನು ಬೀರಿ ಅವುಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಲು ಸಹಾಯಕವಾಗುತ್ತದೆ. +ಯಾವುದೇ ಸಂಶೋಧನೆಯಲ್ಲಿ ಕಂಡುಕೊಂಡ ಉತ್ತರಕ್ಕಿಂತ ಆ ಉತ್ತರ ಹುಡುಕಲು ಪ್ರಚೋದನೆ ನೀಡಿದ ಪ್ರಶ್ನೆ, ಮತ್ತು ಆ ಉತ್ತರವನ್ನು, ಅರ್ಥಾತ್ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಲು ನಡೆಯಿಸಿದ ಮಾರ್ಗ ಮುಖ್ಯ. ಕೆಲವರ ಪ್ರಕಾರ, ಸಂಶೋಧನೆಯಲ್ಲಿ ಒಂದು ಸುಸಂಬದ್ಧ ಪ್ರಶ್ನೆಯನ್ನು ರೂಪಿಸಿಕೊಳ್ಳುವ ಹಂತವೇ ಅತ್ಯಂತ ಮುಖ್ಯವಾದುದು. ಪ್ರಶ್ನೆಯೇ ಹೊಳೆಯದಿದ್ದರೆ ಉತ್ತರ ಕಂಡುಕೊಳ್ಳುವ ಪ್ರಶ್ನೆಯಾದರೂ ಹೇಗೆ ಉದ್ಭವಿಸೀತು? ಯಾವನೇ ಸಂಶೋಧಕನನ್ನು ಗುರುತಿಸುವುದು ಅವನು ಸಮಸ್ಯೆಗಳಿಗೆ ಕಂಡು ಹಿಡಿದ ಪರಿಹಾರ ಅಥವಾ ಉತ್ತರಗಳಿಂದ ಅಲ್ಲ. ಅವನು ಕಂಡುಕೊಂಡ ಉತ್ತರವು ಅಸಮರ್ಪಕವಾಗಿದ್ದರೆ ಇನ್ನೊಬ್ಬ ಸಮಸ್ಯೆಯ ಬಗ್ಗೆ ಕೆಲಸ ಮಾಡಿ ಆ ಸರಿಯಾದ ಉತ್ತರವನ್ನು ಗುರುತಿಸಬಹುದು. ಮೊದಲನೆಯವನ ಅಂತಹ ಪ್ರಯತ್ನವೇ ಇಲ್ಲದಿದ್ದರೆ ಎರಡನೆಯವನಿಗೆ ಪ್ರಚೋದನೆ ದೊರಕುತ್ತಿರಲಿಲ್ಲ. +ಕನ್ನಡ ಸಂಶೋಧನೆಯ ಮೊದಲ ಹಂತವನ್ನೇ, ಮುಖ್ಯವಾಗಿ ಹತ್ತೊಂಬತ್ತನೇ ಶತಮಾನವನ್ನೇ ಗುರುತಿಸಬಹುದು. ಪಾಶ್ಚಾತ್ಯ ವಿದ್ವಾಂಸರು ನಮ್ಮ ಇಂದಿನ ಬದುಕು, ಅವು ರೂಪುಗೊಳ್ಳಲು ಕಾರಣವಾದ ಹಿಂದಿನ ಪರಂಪರೆಗಳ ಬಗ್ಗೆ ವಿಶೇಷ ಕುತೂಹಲವನ್ನು ತೋರಿದರಲ್ಲದೆ ಆ ಬಗ್ಗೆ ವಿಶೇಷ ಕೆಲಸವನ್ನೂ ಮಾಡಿದರು. ಬುಕನನ್ ಎಂಬ ಅಧಿಕಾರಿ ೧೮೦೦ರ ಸುಮಾರಿನಲ್ಲಿ ಮೈಸೂರು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ಸಂಚರಿಸಿ ಆ ಪ್ರದೇಶದ ಜನರ ನಂಬಿಕೆ, ಧಾರ್ಮಿಕ ವ್ಯವಸ್ಥೆ, ಕತೆಗಳು, ಆಚಾರ ವ್ಯವಹಾರಗಳೇ ಆದಿಯಾಗಿ ಹಲವು ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದುದಲ್ಲದೆ ಕಲ್ಲ ಮೇಲೆ ಕೆತ್ತಿದ್ದ ಶಾಸನಗಳನ್ನು ಓದಿಸಿದರು. ಆ ಶತಮಾನದಲ್ಲಿ (೧೯ ನೇ ಶ.) ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಪ್ರಾಚೀನ ಕನ್ನಡ ವಾಙ್ಮಯ ಮತ್ತು ಶಾಸನಗಳ ಸಂಗ್ರಹ ಪ್ರಕಟಣೆಗಳ ಕ್ಷೇತ್ರದಲ್ಲಿ ಬಹು ಶ್ರೇಷ್ಠ ಸಂಶೋಧಕರು ಶ್ರಮಿಸಿದರು. ಫ್ಲೀಟ್, ರೈಸ್, ಕಿಟಲ್, ಆರ್.ನರಸಿಂಹಾಚಾರ್, ಅ.ವೆಂಕಟ ಸುಬ್ಬಯ್ಯ, ಗೋವಿಂದ ಪೈ, ಫ.ಗು. ಹಳಕಟ್ಟಿ, ಎಸ್.ಸಿ. ನಂದಿಮಠ, ಎಂ.ಎಚ್.ಕೃಷ್ಣ, ತೀ.ನ.ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್, ಅ.ನೇ.ಉಪಾಧ್ಯ, ಪಿ.ಬಿ.ದೇಸಾಯಿ ಇವರು ಆ ಅಗ್ರಗಣ್ಯರಲ್ಲಿ ಕೆಲವರು. ಅವರ ಸಂಶೋಧನ ವಿಧಾನ ಒಂದೇ: ಅದು ಸತ್ಯಶೋಧದ ವಿಧಾನ. ಶಾಸನಗಳೋ ಕಾವ್ಯಗಳೋ ಅವುಗಳ ಸಂಗ್ರಹ ಮೊದಲ ಹೆಜ್ಜೆ; ಅವುಗಳ ಪ್ರಕಟಣೆ ಎರಡನೆಯ ಹೆಜ್ಜೆ. ಆ ವಿಷಯವಾಗಿ ಅವರು ಪಟ್ಟಿರುವ ಶ್ರಮ ನಮ್ಮ ಎಣಿಕೆಗೆ ಮೀರಿದ್ದು. +ಶಾಸನಗಳ, ಹಸ್ತಪ್ರತಿಗಳ ಸಂಗ್ರಹಕ್ಕಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಸುತ್ತಿ, ಅವುಗಳ ಪ್ರತಿ ಮಾಡಿ, ಅಚ್ಚಿಗೆ ಸಿದ್ಧಪಡಿಸಿ ಹೊರತರುವಲ್ಲು ಅವರು ಪಟ್ಟ ಸಾಹಸ ಅನೂಹ್ಯ. ಅವರು ಹೊರ ತಂದ ಆ ಪ್ರಾಚೀನ ಕೃತಿಗಳ ನೈಜತೆ, ಪಾಠ ಶುದ್ಧಿ, ಕಾಲ, ಕೃತಿಕಾರರು, ಆ ಕೃತಿಗಳು ಒಳಗೊಂಡಿರುವ ಮಾಹಿತಿಯ (ಸಾಹಿತ್ಯಕ, ಐತಿಹಾಸಿಕ ಅಥವಾ ಸಾಂಸ್ಕೃತಿಕ) ಚರ್ಚೆ, ವ್ಯಖ್ಯಾನಗಳೂ ನಡೆದುವು. ಅಲ್ಲೆಲ್ಲ ಆ ವಿದ್ವಾಂಸರಲ್ಲಿ ಕಂಡುಬರುವ ಒಂದು ಸಮಾನ ಅಂಶ; ಸತ್ಯಶೋಧದ ಬಗ್ಗೆ ಅವರಿಗಿದ್ದ ತುಡಿತ, ಆ ತುಡಿತದಿಂದಾಗಿ ಅವರು ಒಂದು ತೀವ್ರ ತನ್ಮಯತೆಯಿಂದ – ಸಾರಸ್ವತ ತಪಸ್ಸು ಎಂದು ಕರೆಯಬಹುದಾದ ಏಕಾಗ್ರ ಚಿತ್ತತೆಯಿಂದ ತಮ್ಮ ತಮ್ಮ ‘ಕಾಯಕ’ವನ್ನು, ‘ಸತ್ಯ-ಶುದ್ಧ-ಕಾಯಕ’ವನ್ನು ನಡೆಸಿದರು. ಅದು ಆಧುನಿಕ ಕಾಲದ ಸಂಶೋಧಕರಿಗೆ ಮಾರ್ಗದರ್ಶಿಯಾಗಬೇಕು. +ನಾವು ಗಮನಿಸಬೇಕಾದ ಸಂಗತಿ ಎಂದರೆ ಅದರಲ್ಲಿ ಬಹುತೇಕರಿಗೆ ಡಾಕ್ಟೋರೇಟ್ ಪದವಿ ಇರಲಿಲ್ಲ. ಪಿ‌ಎಚ್‌ಡಿ ಪಡೆದವರೂ ಕೂಡ ತಮ್ಮ ಪಿ‌ಎಚ್‌ಡಿ ಪದವಿಯು ತಾವು ಸಂಶೋಧನೆ ಮಾಡಲು ಅರ್ಹತೆ ಪಡೆದಿರುವ ಶಿಫಾರಸು ಪತ್ರವೆಂದೇ ಭಾವಿಸಿ, ಆ ಪದವಿಯನ್ನು ಪಡೆದ ಮೇಲೆ ಅಲ್ಲಿಗೇ ನಿಲ್ಲದೆ ಕೊನೆ ಉಸಿರಿರುವವರೆಗೂ ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು. ಅವರನ್ನು ಈಗಿನ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಜೊತೆ ಹೋಲಿಸಿದರೆ ಅವರ ಮಹತ್ವ ಅರ್ಥವಾಗುತ್ತದೆ. ಅಚ್ಚಾಗಿರುವ ಕೆಲವು ಪಿ‌ಎಚ್‌ಡಿ ನಿರ್ಬಂಧಗಳನ್ನು ನೋಡಿ ನನಗೆ ನಿಜವಾಗಿಯೂ ಗಾಬರಿಯಾಗಿದೆ. ಅವುಗಳ ತೀರ ಕಳಪೆಯಾಗಿರುವ ಗುಣಮಟ್ಟಕ್ಕೆ ನಾನು ಪಿ‌ಎಚ್‌ಡಿ ಅಭ್ಯರ್ಥಿಗಳಿಗಿಂತ ಅವರ ಮಾರ್ಗದರ್ಶಕರನ್ನು () ಹೊಣೆ ಮಾಡಲು ಬಯಸುತ್ತೇನೆ ಅವರಲ್ಲ (ಮಾರ್ಗದರ್ಶಕರಲ್ಲಿ) ಬಹುಪಾಲು ಜನ ಅಂಥದೇ ನಿಬಂಧಗಳನ್ನು ಸಿದ್ಧಪಡಿಸಿ ಪದವಿ ಪಡೆದವರು: ಮತ್ತು ಡಾಕ್ಟೋರೇಟ್ ಪದವಿ ಪಡೆದ ಮೇಲೆ ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾದವರು. ಗೊತ್ತಿರುವ ವಿಷಯವನ್ನೇ ಹೆಚ್ಚು ಆಕರ್ಷಕವಾಗಿ, ಈಚಿನ ಬಹು ಪ್ರಚಾರ ಪಡೆದಿರುವ ಪದಗಳನ್ನು ಪದ ಪುಂಜಗಳನ್ನು ಬಳಸಿ ಅದನ್ನೇ ಸುತ್ತಿ ಬಳಸಿ ಹೇಳುವುದು: ಜೊತೆಗೆ ರಂಜಕವಾಗಿ ಮಾಡಲು ಕೆಲವು ಕಲ್ಪನೆ ಬಳಸುವುದು ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕೆ ವಿನಾಯ್ತಿಗಳಿದ್ದರೂ ಕಡಿಮೆ. +ಸಂಶೋಧನೆಯ ಆರಂಭದ ಯುಗದ ಒಂದು ಕೊರತೆಯನ್ನು ಕಳೆದ ನಲವತ್ತು ವರ್ಷಗಳ ಸಂಶೋಧನೆಯು ಸ್ವಲ್ಪ ಮಟ್ಟಿಗೆ ಸರಿಪಡಿಸಿಕೊಂಡಿದೆ. ಮೊದ ಮೊದಲು ಸಂಶೋಧನೆಯು ಗ್ರಂಥಸ್ಥ ದಾಖಲೆಗಳನ್ನು ಸಂಪೂರ್ಣ ಅವಲಂಬಿಸಿದ್ದಿತು. ಹಸ್ತಪ್ರತಿಗಳು, ಶಾಸನ ತಾಮ್ರ ಪಟಗಳು, ನಾಣ್ಯಗಳು, ಭೂಶೋಧದ ಅವಶೇಷಗಳು ಇವು ಆ ದಾಖಲೆಗಳಲ್ಲಿ ಕೆಲವು, ಮತ್ತು ಅದು ಒಂದು ರೀತಿಯಲ್ಲಿ ಅನಿವಾರ್‍ಯವೂ ಆಗಿತ್ತು, ಸಹಜವೂ ಆಗಿತ್ತು. ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುವ ಕಾರ್‍ಯಕ್ಕೆ ಆ ಮೊದಲ ಘಟ್ಟದ ವಿದ್ವಾಂಸರು ಕೈಹಾಕಲಿಲ್ಲ. ಆಗ ಅವರಿಗೆ ಮುಖ್ಯವಾಗಿದ್ದುದು ಗತಕಾಲದ ಇತಿಹಾಸ. ಅದರ ಪುನಾರಚನೆ, ಜಾನಪದದ ಕಡೆ ಗಮನ ಹೋದುದು ಈಚಿನ ವರ್ಷಗಳಲ್ಲಿ. ಅದಕ್ಕಿಂತ ಭಾಷಾವಿಜ್ಞಾನದ ಉದಾಹರಣೆಯನ್ನೇ ನೋಡಬಹುದು. ಕನ್ನಡ ಭಾಷೆಯ ಚರಿತ್ರೆಯೇ ಮುಖ್ಯವಾಗಿದ್ದ ಆ ಕಾಲದಲ್ಲಿ ಸಹಜವಾಗಿಯೇ ಕಾವ್ಯ, ಶಾಸನಗಳು ಮುಖ್ಯ ಆಕರುಗಳಾದುದರಲ್ಲಿ ಆಶ್ಚರ್ಯವಿಲ್ಲ. ಭಾಷೆಗೆ ಒಂದು ಚರಿತ್ರೆ ಇರುವುದು ನಿಜವಾದರೂ ಅದು ಸಮಕಾಲೀನವೂ ಆಗಿರುವುದು ಮಾತ್ರವಲ್ಲ, ಅದು ಮನುಷ್ಯನ ಒಂದು ಭಾಗವೇ ಆಗಿರುವುದು ಅದಕ್ಕಿಂತ ಮುಖ್ಯ. +ಹೀಗಾಗಿ, ಭಾಷೆಯ ಹಿಂದಿನ ಚರಿತ್ರೆಗಿಂತ ಸಮಕಾಲೀನ ಆಡು ಭಾಷೆಯ ಕ್ಷೇತ್ರ ಕಾರ್ಯ ಮೂಲಕ ಅಧ್ಯಯನ, ವಿಶ್ಲೇಷಣೆ ಇವುಗಳತ್ತ ಕ್ರಮೇಣ ಭಾಷಾ ವಿಜ್ಞಾನಿಗಳ, ಗಮನ ಹರಿದುದು ತೀರ ಸ್ವಾಭಾವಿಕ. ಕನ್ನಡದಲ್ಲಿ ಜಾನಪದ ಅಧ್ಯಯನದ ಚರಿತ್ರೆ ಬಹಳ ಹಿಂದಕ್ಕೆ ಹೋಗುವುದಿಲ್ಲ. ಈಗಿನ ಸಂಶೋಧನೆಯಲ್ಲಿ ಕ್ಷೇತ್ರ ಕಾರ್‍ಯ ಸಹಜವಾಗಿಯೇ ಪ್ರಾಮುಖ್ಯವನ್ನು ಪಡೆದಿದೆ. ಕ್ಷೇತ್ರ ಕಾರ್‍ಯವು, ಅದು ಯಾವುದೇ ಸಂಶೋಧನೆಯಾಗಿರಲಿ, ತಂದುಕೊಡುವ ಫಲಿತಾಂಶಗಳು, ಕೆಲವೊಮ್ಮೆ ಅನಿರೀಕ್ಷಿತವೂ ಅಮೂಲ್ಯವೂ ಆಗಿರಬಲ್ಲುವು. +ನವೋದಯ ಕಾಲದ ಕನ್ನಡ ಸಂಶೋಧನೆಯ ಮಾರ್ಗ ಎಂದೆಂದಿಗೂ ಪ್ರಸ್ತುತವೇ; ಏಕೆಂದರೆ ಹಿಂದೆ ಹೇಳಿದಂತೆ ಮಾರ್ಗ, ವಿಧಾನ ಎಲ್ಲ ಕಡೆಗೂ ಎಲ್ಲ ಕಾಲಕ್ಕೂ ಒಂದೇ. ಸಂಶೋಧಕ ಆರಿಸಿಕೊಳ್ಳುವ ಕ್ಷೇತ್ರಗಳು ಬೇರೆಯಾಗಬಹುದು. ಸಮಕಾಲೀನ ಸಂಶೋಧನ ಕ್ಷೇತ್ರದ ಸುಮಾರಾದ ಪರಿಚಯ ಮಾತ್ರ ನನ್ನದಾಗಿರುವುದರಿಂದ ಅದರ ಒಟ್ಟು ಸಮೀಕ್ಷೆ ಮಾಡುವುದು ನನ್ನಿಂದ ಆಗದ ಕೆಲಸ; ಮತ್ತು ಈ ಲೇಖನದ ಉದ್ದೇಶವೂ ಅದಲ್ಲ. ಈಗ ಪಿ‌ಎಚ್‌ಡಿ ಪದವಿ ಆಕರ್ಷಣೆಯೇ ಮುಖ್ಯವಾಗಿರುವುದರಿಂದ ಕೆಲವು ತೀರ ಕಳಪೆ ನಿಬಂಧಗಳು ಹೊರಬಂದಿರುವುದನ್ನು ನಾನು ಬಲ್ಲೆ. ಒಂದು ಒಳ್ಳೆಯ ಲೇಖನ ಬರೆದು ಅಲ್ಲಿಗೆ ನಿಲ್ಲಿಸಬಹುದಾದಷ್ಟು ಸೀಮಿತ ವಿಸ್ತಾರದ ವಿಷಯವು ಪಿ‌ಎಚ್‌ಡಿ ಪದವಿಗೆ ವಸ್ತುವಾಗುತ್ತದೆ. ಆ ಪದವಿ ಪಡೆದ ಮೇಲೆ ತಮ್ಮನ್ನು ತಾವು ಸಂಶೋಧನೆಗೆ ಒಪ್ಪಿಸಿಕೊಂಡಿರುವವರ ಸಂಖ್ಯೆ ಅಷ್ಟಾಗಿ ಕಾಣಿಸುತ್ತಿಲ್ಲ ಎಂಬುದನ್ನು ನಾನು ಹಲವರ ಜೊತೆ ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ. ಹಿಂದೆ ಪ್ರಬುದ್ಧ ಕರ್ನಾಟಕ, ಸಾಧನೆ, ಕರ್ನಾಟಕ ಭಾರತಿ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳು ನಿಯತವಾಗಿ ಪ್ರಕಟಗೊಳ್ಳುತ್ತಿದ್ದವು. ಮತ್ತು ಎಲ್ಲ ಬಗೆಯ ಶ್ರೇಷ್ಠ ಲೇಖನಗಳಿಗೆ, ಕಾವ್ಯ, ಕತೆ, ಸಣ್ಣಕತೆ, ಸಂಶೋಧನ ಪ್ರಬಂಧಗಳು ಅಲ್ಲಿ ಬೆಳಕು ಕಾಣುತ್ತಿದ್ದವು. ಇಂದು ಅವು ಹೇಗೋ ಏನೋ ಜೀವ ಹಿಡಿದು ಬದುಕಿವೆ. ಹಳಗನ್ನಡದ ಕಾವ್ಯಗಳ ಬಗ್ಗೆ ಸಂಶೋಧನೆ ಇರಲಿ, ಅವುಗಳ ಪದಶಃ ಅರ್ಥವನ್ನು ಸರಿಯಾಗಿ ವಿವರಿಸುವವರೂ ಕಾಣೆಯಾಗುತ್ತಿದ್ದಾರೆ. ಅದು ಸಿನಿಕತನದ ಮಾತಲ್ಲ. ಸ್ನಾತಕೋತ್ತರ ತರಗತಿಗಳಲ್ಲಿ ಉಪಾಧ್ಯಾಯರು ತರಗತಿಗಳನ್ನೇ ತೆಗೆದುಕೊಳ್ಳುತ್ತಿಲ್ಲವೆಂದೂ ಕೇಳಿದ್ದೇನೆ. +ಇದನ್ನೆಲ್ಲ ಸರಿಪಡಿಸುವವರು ಯಾರು? ಭರವಸೆಯನ್ನು ಕೈ ಬಿಡಬಾರದೆಂಬ ಕಾರಣಕ್ಕಾಗಿ ಒಳ್ಳೆಯ ದಿನಗಳು ನಾಳೆ ಬಂದಾವು ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಸಾಹಿತ್ಯದಂತೆಯೇ ಸಾಹಿತ್ಯಕ ಸಂಶೋಧನೆ ಕ್ಷೇತ್ರದಲ್ಲೂ ಯಾವುದು ಶ್ರೇಷ್ಠವೋ ಅದು ಉಳಿಯುತ್ತದೆ. ಎಂದೆಂದಿಗೂ ಮಾನ್ಯವಾಗಿರುತ್ತದೆ. +***** +ಕೀಲಿಕರಣ: ಶ್ರೀನಿವಾಸ (ಚೀನಿ) ಮತ್ತು ಗುರುಪ್ರಸಾದ್.ಎಸ್ (ಪಚ್ಚಿ) +-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ) ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ […] +ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೇ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲಿಗಳಿಂದ ದೊರೆಗಳು, ಸೇನಾನಿಗಳು ಬಂದು ಈಶನನ್ನು […] +ಅನುವಾದ: ಶ್ರೀಧರ ಕಲ್ಲಾಳ ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_243.txt b/Kannada Sahitya/article_243.txt new file mode 100644 index 0000000000000000000000000000000000000000..63c758f9acd16d799362f599da6198e3b1563b53 --- /dev/null +++ b/Kannada Sahitya/article_243.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ ಎಷ್ಟು ತಗೊಂಡಿದಾರೆ ಎಂಬುದರ ಸುಳಿವಿನ ಸೂಕ್ಷ್ಮ ತಿಳಿದು ಮುಂದಿನ ಹೆಜ್ಜೆ ಇಡುತ್ತಾರೆ ಎಂಬುದೆಲ್ಲರಿಗೂ ತಿಳಿದ ವಿಷಯ. +ಆ ಕಾರಣಕ್ಕೆ ಈ ಬಾರಿ ಫಿಲಂ ಚೇಂಬರ್ಸ್ ಎಲ್ಲರ ಹೃದಯ ತಪಾಸಣೆಗೆ ತಜ್ಞ ವೈದ್ಯರನ್ನೇ ಕರೆಸುವ ನಿರ್ಧಾರ ಮಾಡಿದರೆಂದು ಕಾಣುತ್ತದೆ. +ಚಿತ್ರರಂಗದವರ ಅಂತರಾಳ ತಿಳಿದಿರಲೆಂದು ವಾರ್ತಾ ಸಚಿವ ಬಿ.ಕೆ.ಸಿ. ಹಾಗೂ ಎಂ.ಎಲ್.ಸಿ. ಆದ ಉಮಾಶ್ರೀ ಅವರನ್ನು ಆಹ್ವಾನಿಸಿದರು. ಟಿಪ್‌ಟಾಪಾಗಿ ಶೃಂಗರಿಸಿಕೊಂಡ ಸರೋಜಾದೇವಿ ಸಹಾ ಹಾಜರಾದರು ಯಾರ್‍ಯಾರ ಹೃದಯದ ಬಡಿತ ಯಾವ ಯಾವ ಹಾಡು ಕನಲುತ್ತಿದೆ ತಿಳಿಯಲು. +ಬಹುಮಂದಿ ಹೃದಯಗಳು “ಚಿತ್ರೋತ್ಸವದೊಳಗೆ ಫಿಲಂ ಚೇಂಬರ್ಸ್ ಚುನಾವಣೆ ನಡೆದು ಹೊಸ ಸಮಿತಿ ಬಂದಿಲ್ಲವೆ” ಎಂದು ಹಪಹಪಿಸುತ್ತಿತ್ತಂತೆ. +“ಯಾರೇ ಕೂಗಾಡಲಿ ಯಾರೇ ಹೋರಾಡಲಿ +ಚಿತ್ರೋತ್ಸವದ ನಂತರವೇ ಛೇಂಬರ್‍ ಚುನಾವಣೆ +ಹೇಳತ್ತೀನಿ ಕೇಳಿ ಇದು ನಮ್ಮಪ್ಪನಾಣೆ” +ಎಂದು ಕೆ.ಸಿ.ಎನ್. ಚಂದ್ರು ಹೃದಯ ರಾಗರಾಗವಾಗಿ ಹಾಡುತ್ತಿತ್ತಂತೆ. +ಕಾರ್ಗಿಲ್‌ಗೆ ‘ಸೈನಿಕ’ ಚಿತ್ರೀಕರಣಕ್ಕೆ ಅರ್ಜೆಂಟಾಗಿ ಹೊರಡಲಿದೆ ನಮ್ಮ ಯೂನಿಟ್. ಅದರಿಂದ ನನ್ ಹೃದಯ ಪರೀಕ್ಷಿಸಿ ಮುಂಚೆ ಎಂದು ಯೋಗೀಶ್ವರ್‍ ಮಲಗಿದಾಗ ಚೆಕ್ ಮಾಡಿದ ಡಾಕ್ಟರ್‍ ಬೆಚ್ಚಿದರಂತೆ “ಅರೆ! ಇದೇನಿದು ಮಹಾಸುಳ್ಳಿ ಸಾಕ್ಷಿ ಶಿವಾನಂದ್‌ನ ಜಪಿಸದೆ ಯೋಗಿಶ್ವರ್‍ ಹೃದಯ ‘ಐಶ್ವರ್ಯರೈ, ಐಶ್ವರ್ಯರೈ’ ಎಂದು ಪ್ರೇಮ ದುಂದುಭಿ ಬಾರಿಸುತ್ತಿದೆಯಲ್ಲ” ಎಂದು. ಆಗ ಬಿಂಕದ ಸಿಂಗಾರಿಯಂತೆ, ಬಂದ ಮೈ ಡೊಂಕಿನ ವೈಯ್ಯಾರಿ ಅನುಪ್ರಭಾಕರ್‍ ಬಂದಳು ಡಾಕ್ಟರ್‍ ಗಾಬರಿಯಾಗಿ ಹುಡುಕುತ್ತಾರೆ ಹೃದಯವೂ ಇಲ್ಲ ಹೃದಯ ಸಿಂಹಾಸವನವೂ ಇಲ್ಲ. ಅವರ ತಾಯಿ ಮುಖ ಸಪ್ಪಗೆ ಮಾಡಿಕೊಂಡು “ಅಲೆಮಾರಿ”ಯಂತೆ ಅಲೆದ ಪ್ರೀತಿಪಾತ್ರ ಮಗಳೆ, ಯಾರಿಗಿತ್ತೆ ಹೃದಯ ನೀನು? ಎಂದು ಕಂಪನಿ ಶೈಲಿಯಲ್ಲಿ ಹಾಡಿದಾಗ, ತಾರೆ ಜಯಂತಿ ಸಿನಿ ಶೈಲಿಯಲ್ಲಿ “ದೂರದಿಂದ ಬಂದಂತ ಸುಂದರಾಂಗ ಪಾಂಡು ಇವರ ಹಾರ್ಟು ನೋಡಿ ಈಗ ತುಂಬಾ ತುಂಬಾ ಸೌಂಡು” ಎಂದು ಹಾಡಿ-ನರ್ತಿಸಿದಾಗ, ಮಳ್ಳಿಯಂತೆ ಬಂದ ಪಾಂಡು ಹೀರೋನಂತೆ ಮಲಗಿದ. ಪರೀಕ್ಷಿಸಿದ ಡಾಕ್ಟರು ಬೆಚ್ಚಿಬಿದ್ದರು. ಏಕೆ? ಏಕೆ? ಎಂದು ಎಲ್ಲ ಕೋರಸ್‌ನಲ್ಲಿ ಅಬ್ಬರಿಸಿದಾಗ “ಎಲ್ಲರಿಗೂ ಒಂದು ಹೃದಯವಿದ್ದರೆ ಈ ಪಾಂಡುವಿಗೆ ಎರಡು ಹೃದಯವಿದೆ” ಎಂದು ಕೂಲಾಗಿ ಉತ್ತರಿಸಿದರು ಡಾಕ್ಟರು. “ಎರಡು ಹೃದಯ ಹೇಗೆ ಸಾಧ್ಯ” ಎಂಬುದು ಸರೋಜಾದೇವಿಯವರ ಪ್ರಶ್ನೆಯಾಗಿತ್ತು. ಚಿತ್ರರಂಗದ ಸೀನಿಯರ್‍ ತಾರೆ ಸರೋಜಾದೇವಿಯವರಿಗೆ ಸಿನಿ ಮುಹೂರ್ತದಲ್ಲಿ ಹೇಳುವಂತೆ ನಿರ್ದೇಶಕರು ಕಥೆ ಸಸ್ಪೆನ್ಸ್ ಎಂದು ಹೇಳುವಂತಿಲ್ಲ. ನಿಜ ಬೊಗಳಬೇಕಾದುದು ಅನಿವಾರ್ಯವಾಯಿತು ಆಗ ವಿಧಿಯಿಲ್ಲದೆ ಡಾಕ್ಟರ್‍ ಹೇಳಿದರು. “ಒಂದು ಪಾಂಡು ಹೃದಯಾ – ಮತ್ತೊಂದು ಅನು ಪ್ರಭಾಕರ್‍ ಹೃದಯ” ಎಂದು. +ತಕ್ಷಣವೇ ಮೈಕ್‌ನಿಂದ “ಮಾಂಗಲ್ಯಂ ತಂತು ನಾನೇನ” ರೆಕಾರ್ಡ್ ಹಾಕಿ ಆ ಕೇಸ್‌ಗೆ ಮಂಗಳ ಹಾಡಿದರು. +‘ಓಳಲ್ಲ ಓಳು – ಷೂರಪ್ಪ ಷೂರು ಹಂಡ್ರೆಡ್ ಡೇಸ್ ಗ್ಯಾರಂಟಿ ಸೂಪರ್‍ ಸ್ಟಾರ್‍ ಷೂರು’ ಎಂದು ವಿಚಿತ್ರ ವೇಷದಲ್ಲಿ ಉಪೇಂದ್ರ ಕುಣಿಯುತ್ತ ಬಂದಾಗ ನಾಗತಿಹಳ್ಳಿ ಚಂದ್ರಶೇಖರ್‍ ಕೋಲೇ ಬಸವನಂತೆ ತಲೆ ಆಡಿಸುತ್ತ ನಿಂತದ್ದನ್ನು ಸಾಹಿತ್ಯಮಿತ್ರರು ತದೇಕಚಿತ್ತದಿಂದ ನೋಡತೊಡಗಿದರು. +ಉಪೇಂದ್ರರ ಹೃದಯವಿರಬೇಕಾದ ಜಾಗದಲ್ಲಿ ‘ಹಂಸಲೇಖಾ’ ಕೂತಿದ್ದದ್ದು ಕಂಡು “ಅರರೆ-ಇದೇನಿದು ಸೂಪರ್‍ ಸ್ಟಾರ್‍ ಮುಹೂರ್ತದಂದು ಕಾಣಲಿಲ್ಲ. ಇಲ್ಲಿ ಕೂತಿದ್ದೀರಿ” ಎಂದು ಗಾಂಧಿನಗರಿಗರು ಒಕ್ಕೊರಲಿನಿಂದ ಅಬ್ಬರಿಸಿದಾಗ ಹಂಸಲೇಖಾ ನಗುತ್ತಾ ತಮ್ಮದೇ ಶೈಲಿಯಲ್ಲಿ ‘ನಾನಿಲ್ಲಿ ಅವಿತಿದ್ದರಿಂದಲೇ ಅಂದು ಈಚೆ ಬರಲಿಲ್ಲ. ಉಪೇಂದ್ರರದು ದಿಢೀರ್‍ ನಿರ್ಧಾಗಳೆಂದು ನನಗೆ ಗೊತ್ತು. ಯಾರನ್ನು ಯಾವಾಗ ಕಿತ್ತು ಬಿಸಾಡುತ್ತಾರೆ ಯಾರನ್ನು ಯಾವಾಗ ಬಾ ಎಂದು ಪ್ರೀತಿಯಿಂದ ಆಹ್ವಾನಿಸುತ್ತಾರೆ ಗೊತ್ತಾಗುವುದಿಲ್ಲ. ಎಲ್ಲಿ ಸಾಧು ಕೋಕಿಲಾ ಬಂದು ಕೂತು ಬಿಡುವರೋ ಎಂದು ಇಲ್ಲಿರುವೆ ಹಹಹಹ…. ಹ್ಯಾಗಿದೆ ನನ್ ಪ್ಲಾನು” ಎಂದು ಗಹಗಹಿಸಿ ನಕ್ಕಾಗ ಎಲ್ಲ ಸುಸ್ತು. +ರೆಹಮಾನ್, ಮಂಜು, ರಾಕ್‌ಲೈನ್, ಜಯಶ್ರೀದೇವಿ, ಕನಕಪುರ ಶ್ರೀನಿವಾಸ್, ಶಿಲ್ಪ ಶ್ರೀನಿವಾಸ್ ಹೃದಯಗಳು ‘ಡವ ಡವ’ ಸದ್ದೇ ಮಾಡುತ್ತಿರಲಿಲ್ಲವಂತೆ. ಕಿವಿಗೊಟ್ಟು ಆಲಿಸಿದರೆ ಎಲ್ಲರ ಹೃದಯಗಳೂ ‘ವಿಷ್ಣು ಕಾಲ್‌ಷೀಟ್ ಪ್ಲೀಸ್’ ಎಂದು ಗೋಗರೆಯುತ್ತಿರುವುದು ಮಾತ್ರ ಕೇಳಿಬರುತ್ತಿತ್ತಂತೆ. +ಡಾಕ್ಟರು ‘ಡೈರಕ್ಟರ್‍ ನಾರಾಯಣ್’ ಎಂದದ್ದೇ ತಡ ‘ಎಸ್’ ಎಂದು ನಾರಾಯಣ್ ಬಂದು ಬಿದ್ದುಕೊಂಡರು. “ಹೊಸ ಹುಡುಗರು ಬಂದ ಮೇಲೆ ಯಾರೂ ಕ್ಯಾರೆ ಅಂತಿಲ್ಲ. ಹೀರೋ ಆಗೋ ಹುಚ್ಚು ಬಿಟ್ಟು ಡೈರಕ್ಟರಾಗೋದೇ ಬೆಸ್ಟ್” ಅಂತ ಅವರ ಹೃದಯ ಹಾಡ್ತಿತ್ತಂತೆ. +ಸೆಟ್ ಮೇಲೆ ಲೇಟಾಗಿ ಬರುವಂತೆ ಚಿತ್ರದುರ್ಗದ ಎಂ.ಪಿ. ಶಶಿಕುಮಾರ್‍ ಹೃದಯ ತಪಾಸಣೆಗೂ ಲೇಟಾಗಿ ಬಂದರು. ‘ಚೆಕ್ ಮೈ ಹಾರ್‍ಟ್ ಪ್ಲೀಸ್’ ಅಂದರು. “ಹಾರ್ಟ್ ಎಲ್ರ್‍ಲೀ ಇದೆ. ಆ ಜಾಗದಲ್ಲಿ ಒಂದು ಗುಂಡುಕಲ್ಲಿದೆ” ಎಂದರು ಡಾಕ್ಟರು ಪರೀಕ್ಷಿಸಿ. “ಹಹಹ” ಎಂದು ಗಹಗಹಿಸಿ ನಕ್ಕ ಶಶಿ “ಹೇಳಿ ಆ ಮಾತನ್ನು ನನ್ನ ಮತದಾರರಿಗೆ ನನ್ನ ಹೃದಯ ನಾನು ಸಿನಿಮಾಗಾಗಿ ಗಾಂಧಿನಗರದಲ್ಲಿ ಬಚ್ಚಿಟ್ಟಿರುವೆ. ಆದರೆ ಗಂಗಾಧರ್‍ ಆಫೀಸಿನಲ್ಲಲ್ಲ ಎಲ್ಲಿ ಎನ್ನುವುದು ‘ಸಸ್ಪನ್ಸ್’ ಎನ್ನುತ್ತಾ “ಅಂಬಿ-ವೇರ್‍ ಆರ್‍ ಯು” ಎಂದು ಫೋನಿಸ ತೊಡಗಿದರು. +“ಸೆನ್ಸಾರ್‍ ಸಮಿತಿ ಸರಿ ಇಲ್ಲ. ವಯಸ್ಸಾದ ಪರಭಾಷಾ ನಟಿಯರನ್ನು ಕರೆತರೋದು ಸರಿ ಅಲ್ಲ. ಪರಭಾಷೆಯಲ್ಲಿ ಮಾರ್ಕೆಟಿಲ್ಲದ ಮುದುಕಿಯರನ್ನು ನಮ್ಮ ಕನ್ನಡದ ಹಿರೋಯಿನ್ನಗಳು ಮಾಡೋರು “ನಾನ್‌ಸೆನ್ಸ್” ಅಂಥವರು ಅಭಿನಯಿಸಿದ ಚಿತ್ರಗಳು ಕನ್ನಡದ ಜನ ಬಾಯ್ಕಾಟ್ ಮಾಡಬೇಕು ಎಂದು ಹೋರಾಟಗಾರರಂತೆ ಭಾಷಣ ಬಿಗಿದು ಬಂದ ರಾಜೇಂದ್ರಸಿಂಗ್ ಬಾಬು ಹೃದಯ ಪರೀಕ್ಷಿಸಿದರೆ ಅಲ್ಲಲ್ಲಿ ಒಂದು ಹಿಂಡು ಕುರಿಮಂದೆ ಕಂಡು ಡಾಕ್ಟರು ಬೆಪ್ಪಾದರೂ…. ‘ಬ್ಯಾ ಬ್ಯಾ’ ಎಂದು ಮಂದೆ ಅಬ್ಬರಿಸುತ್ತಿತ್ತು. +ಡಾಕ್ಟರಿಗೆ ದಿಕ್ಕು ತೋಚಲಿಲ್ಲ. ಇದೇನೋ ಸೈಕಾಲಜಿಕಲ್ ಕೇಸ್ ಇರಬೇಕೆಂದು ಡಾಕ್ಟರ್‍ ವಿಚಾರಿಸಿದರು. +“ಹೃದಯವಿರಬೇಕಾದ ಜಾಗದಲ್ಲಿ ಕುರಿಮಂದೆ ಏಕೆ ಬಿಟ್ಟುಕೊಂಡಿದ್ದೀರಿ” “ಅದು ನಾನು ಎಂ.ಎಸ್. ಸತ್ಯುಗೆ ತೋರುತ್ತಿರುವ ಗೌರವ”. ‘ಕುರಿ’ ನಾಟಕ ಡೈರಕ್ಟ್ ಮಾಡಿದ ಆ ಮಹಾನುಭಾವನ ಕೃಪೆಯಿಂದಲೇ ನಾನು ಈ ಬಾರಿ ಪ್ರಶಸ್ತಿ ವಿಜೇತನಾದದ್ದು. ಅದರಿಂದ ಕುರಿಗಳು ಸಾರ್‍-ಕುರಿಗಳು ಭಾಗ ಎರಡು ಚಿತ್ರೀಕರಿಸುವೆ. ಆಗ ಕುರಿಮಂದೆ ಆಚೆ ಹೋಗುತ್ತದೆ. ಅನಂತರ ಹೃದಯ ತನ್ನ ಜಾಗಕ್ಕೆ ಬರುತ್ತದೆ. ಆವರೆಗೆ ಹೃದಯಹೀನ “ನಾನು” ಎಂದು ದೀನರಾಗಿ ಹೇಳಿ ಇನ್ನೊಂದು ಲೇಖನ ಬರೀಬೇಕು ರೀಮೇಕ್ ಮಾಡುವವರನ್ನು ಝಾಡಿಸಿ ಎಂದು “ವಾಕಿಂಗ್ ಇನ್ ದಿ ಕ್ಲೌಡ್ಸ್” ಎಂಬಂತೆ ಕುರಿಗಳು ಸಾರ್‍ ಕುರಿಗಳು ಕಥೆ ನೀಡಿದ ತಮಿಳಿಗನನ್ನು ಹುಡುಕಿ ಹೊರಟೇಬಿಟ್ಟರು ರಾಜೇಂದ್ರಸಿಂಗ್ ಬಾಬು. +ರವಿಚಂದ್ರನ್ ನಿಮ್ಮ ಸರದಿ ಈಗ ಎಂದಾಗ “ನೀವೇನ್ರೀ ನನ್ನ ಹೃದಯ ಚೆಕ್ ಮಾಡೋದು. ನಾನು ರಾಜಕಪೂರ್‍ ಥರಾ. ಮೇರಾ ನಾಮ್ ಜೋಕರ್‍ ನೋಡಿದೀರಲ್ಲಾ ಹಾಗೆ. ನನ್ನ ಹೃದಯ ಕಿತ್ತು ‘ಹೃದಯದಿಂದ’ ಅಂತ ನಮ್ಮಪ್ಪನ ಹೆಸರಲ್ಲಿ ಸ್ಟುಡಿಯೋ ಮಾಡಿದೆ. ಆ ಸ್ಟುಡಿಯೋ ಹೃದಯ ಚೆಕ್ ಮಾಡಕ್ಕೆ ನೀವು ಯಾರಾದ್ರೂ ಬಂದ್ರಾ?…. ಇಲ್ಲ…. ಅಂದ್ಮೇಲೆ ನಾನ್ಯಾಕೆ ಬರ್‍ಲಿ. ನಂಗೀಗ ಹೃದಯ ಇಲ್ಲ. ಆ ಜಾಗದಲ್ಲೊಂದು ಸಿಂಹಾಸನ ಇಟ್ಕೊಂಡಿದೀನಿ. ರವೀನಾಗೆ, ಜೂಲಿ ಚಾವ್ಲಾಗೆ, ನಗ್ಮಾಗೆ ‘ಶಕುನಿ’ಗೆ ಪಾರ್ಟ್ ಮಾಡಕ್ಕೆ ಚಾನ್ಸ್ ಕೊಟ್ಟು ಇಷ್ಟಿಷ್ಟು ದಿನ ನೀವು ಇಲ್ಲಿ ಕೂತಿರಿ ಆಮೇಲೆ ಎದ್ದು ಹೋಗ್ತಿರಿ ಅಂತ ಹೇಳಿದ್ದೀನಿ. ಯಾವಾಗ್ಯಾವಾಗ ಯಾವ್ಯಾವ ಟಾಪ್ ಹೀರೋಯಿನ್‌ಗಳನ್ನ ಕರಸಬೇಕು ನಂಗೊತ್ತು ಒಳಗೊಂದು ಹೊರಗೊಂದು ನನ್ ಹತ್ರ ಇಲ್ಲವೇ ಇಲ್ಲ. ನನ್ನ ಮಾತೇ ಹಾಗೆ “ಏಕ್ ಮಾರ್‍ ದೋ ತುಕಡಾ” ಎಂದು ಹೇಳಿ “ಹೊಸ ಟ್ಯೂನ್ ಹೊಳೀತಾ ಇದೆ. ಹೊಸ ಸಾಹಿತ್ಯದ ಸಾಲುಗಳು ಈಚೆ ಬರಕ್ಕೆ ಒದ್ದಾಡ್ತಿದೆ. ಇನ್ನು ಇಲ್ಲಿದ್ರೆ ಟೈಮ್ ವೇಸ್ಟ್” ಎಂದು ಹೊರಟೇಬಿಟ್ಟರು ರವಿ. +ಸರೋಜಾದೇವಿಯ ಸರದಿ ಬಂತು. ಡಾಕ್ಟರು ಪರೀಕ್ಷಿಸಿದರು. ಚಿತ್ರೋತ್ಸವದ ಉದ್ಘಾಟನೆಗೆ ಕರೆದಿದ್ದಾರೆ. ಅವರು ನಕಾರ ಹೇಳಿದರೆ ಚಿತ್ರೋತ್ಸವದ ಉದ್ಘಾಟನೆಗೆ ‘ನಾನು ಸಿದ್ಧ ನಾನು ಸಿದ್ಧ, ಎಂದು ಪಿಸುಗುಟ್ಟುತ್ತಿತ್ತಂತೆ ಅದು ಯಾರಿಗೂ ಸ್ಪಷ್ಟವಾಗಿ ಕೇಳುತ್ತಿರಲಿಲ್ಲವಾಗಿ ‘ಮೈಕ್’ ತಂದು ಹೃದಯಕ್ಕೆ ಇಟ್ಟರು. ಆಗ ಮಾತುಗಳು ಸ್ಪಷ್ಟವಾದುವು. ನಟೀಮಣಿ ಬಿ.ಕೆ.ಸಿ. ಅವರತ್ತ ನೋಡಿದಾಗ ‘ಅರ್ಥವಾಯಿತು ಧರ್ಮ ಸೂಕ್ಷ್ಮ’ ಎಂಬಂತೆ ನಕ್ಕರು ಬಿ.ಕೆ.ಸಿ. +ಉಮಾಶ್ರೀ ಸರದಿ ಬಂದಾಗ ಅವರ ಹೃದಯ ‘ಥ್ಯಾಂಕ್ಸ್ ಥ್ಯಾಂಕ್ಸ್ ಥ್ಯಾಂಕ್ಸ್’ ಎನ್ನುತ್ತಿತ್ತು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ. +ಕಲಾವಿದರ ಸಂಘದ ಸದಸ್ಯರನೇಕರು ಬಂದರು. ಅವರೆಲ್ಲರ ಹೃದಯಗಳು ‘ಛಾನ್ಸ್-ಛಾನ್ಸ್-ಛಾನ್ಸ್’ ಎಂದು ಹೊಡೆದುಕೊಳ್ಳುತ್ತಿತ್ತು. +ಡಾಕ್ಟರು ಕತ್ತೆತ್ತಿದರು….. ಇನ್ನೂ ಒಂದು ಹಿಂಡು ಜನರಿದ್ದರು. ಎಲ್ಲ ಚಿತ್ರಮಂದಿರದ ಮಾಲೀಕರು. ಒಬ್ಬರಿಗಿಂತ ಒಬ್ಬರು ಶ್ರೀಮಂತರು ಎಂಬುದು ನೋಡಿದರೆ ಗೊತ್ತಾಗುತ್ತಿತ್ತು. ಎಲ್ಲರನ್ನು ಪರೀಕ್ಷಿಸಿದರು. ಗಂಭೀರವಾಗಿ ಕತ್ತೆತ್ತಿ “ಓಹೋ! ನೀವೆಲ್ಲ ಈ ವೃತ್ತಿಗಿಳಿದಾಗಲೇ ಹೃದಯ ಲಾಕರ್‍ ನಲ್ಲಿಟ್ಟಿದೀರಿ. ಅದರಿಂದಲೇ ಇಷ್ಟು ಶ್ರೀಮಂತರಾಗಿದೀರಿ” ಎಂದು ಹೇಳಿ ದುಡು ದುಡು ಹೊರಟೇಬಿಟ್ಟರು ಡಾಕ್ಟರು. ಆಗ ವಾರ್ತಾ ಸಚಿವರು ವ್ಯಂಗ್ಯ ನಗೆ ತೇಲಿಬಿಟ್ಟು ನಿಧಾನವಾಗಿ ಆಚೆ ತೆರಳಿದರು. +***** +(೧೩-೭-೨೦೦೧) +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […] +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಈ ಗೀತೆ ಪ್ರತಿವರ್ಷವೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಚಿತ್ರರಂಗದ ಅನವಶ್ಯಕವಾದ ವಿವಾದಗಳನ್ನು, ಬಾರದ ಟೀಕೆ ಟಿಪ್ಪಣಿಗಳನ್ನು ಕೇಳಿ ಕೇಳಿ ಸಾಕಾಗಿದೆ. ವಾದ ಬೆಳಸಿ ಯಾವ ಲಾಭ ಸಾಕು ನಿಲ್ಲಿಸು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_244.txt b/Kannada Sahitya/article_244.txt new file mode 100644 index 0000000000000000000000000000000000000000..c73d8732d787aeb3929c293e4d75c680831be090 --- /dev/null +++ b/Kannada Sahitya/article_244.txt @@ -0,0 +1,112 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, ಹಿಂಬಾಗಿಲಿಗೆ ತಲುಪಬೇಕೆನ್ನುವಷ್ಟರಲ್ಲಿ ಒಮ್ಮೆಲೆ ಜೂಲಿನಾಯಿ ಬೊಗಳಿದ್ದರಿಂದ ಗಡಿಬಿಡಿಯಲ್ಲಿ ಕಾಲಿಟ್ಟದ್ದೇ… ದಪ್ಪ ಕೆಸರಿನ ಹೊಂಡಕ್ಕೆ! ಪಾದವಿಡೀ ಮುಳುಗಿ ಕಪು ಶೂ ಹಾಕಿದಂತಾಗಿ ಹವಾಯಿ ಚಪ್ಪಲ್ ಕೆಸರೊಳಗೇ ಉಳಿಯಿತು. ಈ ಹಡಬೆ ನಾಯಿಂದಾಗಿ ಅಪ್ಪಂಗೆ ಈಗ ಎಚ್ರಿಗೆ ಆಗಿ ಕೈಗೆ ಸಿಕ್ಕಿಬುಟ್ಟರೆ, ಎರಡ್ ಪೆಟ್ ಸಿಕ್ಕಿರೂ ಸಿಕ್ಕುದು; ಬೊಯ್ಯೋದ್ಹೇಂಗೂ ಬೆಳ್ಜರ್ ವರೆಗೆ ಗ್ಯಾರಂಟಿ ಎಂದು ಬಗೆದು, ಕೆಸರಲ್ಲಿದ್ದ ಚಪ್ಪಲನ್ನು ಬೆಳಿಗ್ಗೆ ತೆಗೆದರಾಯಿತೆಂದು ಸಾರಣೆಯಾಗದ ಕೊಟಗೆಯ ಗೋಡೆಗೆ ಹಲ್ಲಿಯಂತೆ ಅಂಟಿ ನಿಂತ. ಕೆಲನಿಮಿಷ ಸುಮ್ಮಗೆ ಹಾಗೇ ನಿಂತವನಿಗೆ ಮನೆಯೊಳಗಿಂದ ಶಬ್ದವೇನೂ ಬಾರದ್ದರಿಂದ ಬಚಾವ್! ‘ಅಪ್ಪಂಗೆ ಎಚ್‌ರಿಗೆ ಆತ್‌ಲ್ಲೆ!’ ಎಂದು ಖಾತ್ರಿಯಾಗಿ ತರಚುತ್ತಿರುವ ಗೋಡೆಗೆ ಅಂಟಿಕೊಂಡೇ ಮೆಲ್ಲಗೆ ಹಿಂಬಾಗಿಲ ಬಳಿಗೆ ಬಂದ. ಮೆಟ್ಟಿಲ ಬದಿಯಲ್ಲಿ ಬಾಲ್ದಿಯಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮೆತ್ತಿಕೊಂಡಿದ್ದ ಕೆಸರನ್ನು ತೊಳೆದಂತೆ ಮಾಡಿ, ಮಾಡಿನ ಪಕ್ಕಾಸಿಗೆ ಮೊದಲೇ ಸಿಕ್ಕಿಸಿಟ್ಟ ಕೋಲನ್ನು ತೆಗೆದು ದಳಿಯ ಎಡೆಯಿಂದ ಒಳಗೆ ನಿಧಾನ ಕೈತೂರಿ ಚಿಲಕವನ್ನು ಮೆಲ್ಲ ಮೆಲ್ಲನೆ ಶಬ್ದವಾಗದಂತೆ ಸರಿಸಿದಾಗ ಅಮ್ಮನಿಗೆ ಎಚ್ಚರವಾಯಿತು. ನಿದ್ದೆಯೇ ಬಂದಿರಲಿಲ್ಲವೋ ಏನೋ! ಅಮ್ಮನೇ ಬಂದು ಬಾಗಿಲು ತೆಗೆದು ಹಲ್ಲುಕಚ್ಚಿ ಮೆಲುದನಿಯಲ್ಲಿ “ಎಲ್ಲಿ ಸಾಯಕೆ ಹೋಗಿದ್ದ ಗಂಟೆ ಎಷ್ಟಾತ್ ಗೊತ್ತುಟ್ಟೋ ನಿನ್ನ ಕರ್ಮದ ಆಟನೊ ಮತ್ತೊಂದೊ… ಬೇಗ ತಿಂದ್ ಬಿದ್ದ್‌ಕಾ… ನಿನ್ನ ಅಪ್ಪ ಎದ್ದರೇ ಮಿನಿ…” ಎಂದು ಗೊಣಗುತ್ತಾ ಊಟಕ್ಕೆ ಬಡಿಸಲು ಹೊರಟಾಗ “ಬಾತಾ ನಿನ್ನ ಕೋಂಬ್ಳೆ, ದಂಡಿಗೆ ಹೋದಂವ! ಎಂತರ ಕಡ್ದುಟ್ಟು ಗಡಾ ಬಿಕ್‌ನಾಸಿ…” ಗುಂಡ್ಯಡ್ಕ ಶೇಷಪ್ಪ ಗೌಡರ ಉರಿವ ಅಸಹನೆ ಆಕಳಿಕೆ, ಕೆಮ್ಮುಗಳ ಎಡೆಯಲ್ಲೇ ಕೆಟ್ಟ ಕಫದಂತೆ ಹೊರಬಿತ್ತು. ಅಪ್ಪ ಹೇಳಿದ್ದು ಕೇಳಿಸದವನಂತೆ ಅಮ್ಮ ಬಡಿಸಿದ್ದನ್ನು ಗಬಗಬನೆ ಉಂಡು ಮೊದಲೇ ಹಾಸಿಟ್ಟಿದ್ದ ಮೊಂದ್ರಿ, ಒಲ್ಲಿಯೊಳಗೆ ಸೇರಿಕೊಂಡ. +ತೋಟಕ್ಕೆ ಸೊಪು, ಬುಡಬಿಡಿಸುವುದಕ್ಕೆ, ಮದ್ದು ಬಿಡುವುದಕ್ಕೆ, ಅಡಿಕೆ ಕೊಯ್ಯುವುದಕ್ಕೆ, ಕೆಲಸದವರು ಬಾರದಿದ್ದರೆ ಯಾವುದಕ್ಕೂ ರಡಿಯಾಗಿರುವ ದಿನೇಶ ತೋಟ ಗದ್ದೆಯ ಎಂಥದ್ದೇ ಕೆಲಸವನ್ನು ಮಾಡುವುದರಲ್ಲಿ ಬಹಳ ಚುರುಕು. ಹಗಲಿಡೀ ತೋಟದಲ್ಲೇ ಕೆಲಸದಲ್ಲಿ ಮುಳುಗಿದವ ಸಂಜೆ ಕತ್ತಲಾದ ಮೇಲೆ ಮನೆಗೆ ಬರುವುದು. ಸ್ನಾನ ಮಾಡಿ ಕಾಪಿಯಾಗಿ ಅಂಗಡಿ ಬಳಿ ಹೋಗಿ ಬಂದಂವ ಮತ್ತೆ ರಾತ್ರಿ ಅಡಿಕೆ ಸುಲಿಯಲು ಕೂತರೆ ಒಂಭತ್ತು ಒಂಭತ್ತೂವರೆ ವರೆಗೆ ಅಡಿಕೆ ಸುಲಿಯುತ್ತಿರುತ್ತಾನೆ. ಹೀಗೆ ಕೆಲಸದಲ್ಲೇ ದಿನ ಕಳೆಯುವ ಗಟ್ಟಿ ದೇಹದ ದಿನೇಶ ಎಸ್ಸೆಲ್ಸಿ ದಾಟದಿದ್ದರೂ ಒಳ್ಳೆಯ ಕೆಲಸಗಾರನಾಗಿದ್ದ. ಶೇಷಪ್ಪ ಗೌಡರಿಗೆ ದಿನೇಶನಿಂದಲೂ ಮೊದಲನೇ ಮಗ ನಾರಾಯಣನಲ್ಲಿ ತುಂಬಾ ಸಲುಗೆಯ ಮಾತು. ನಾರಾಯಣ ಎಂ.ಎ. ಮಾಡಿ ಊರಿನ ಹೈಸ್ಕೂಲಿನಲ್ಲಿ ಉಪಾಧ್ಯಾಯನಾಗಿರುವುದು ಗೌಡರಿಗೆ ಬಹಳ ಹೆಮ್ಮೆಯ ವಿಚಾರ. ಎಸ್ಸೆಲ್ಸಿ ಮುಗಿಸಲಾಗದೆ ಮನೆಯಲ್ಲೇ ಸೊಪು, ಗೊಬ್ಬರ, ಪಂಪು ರಿಪೇರಿ, ಅಡ್ಂಚಿಲ್, ಹಂದಿ ಬೇಟೆ, ತಾಳಮದ್ದಲೆ, ಆಟ ಎಂದು ಹಲವೆಡೆ ಹಲವರಿಗೆ ಸಲ್ಲುವ ದಿನೇಶನೆಂದರೆ ಅಷ್ಟು ಸಮಾಧಾನವಿಲ್ಲ. ನಾರಾಯಣನಲ್ಲಿ ಅದೂ ಇದೂ ಊರಿನ, ಶಾಲೆಯ ವಿಚಾರ ಮಾತಾಡುವುದಿದೆ. ದಿನೇಶನಲ್ಲಿ ಮಾತೆಂದರೆ ಏನಾದರೂ ಬೈಗಳು, ಅಸಹನೆಯ ಮಾತು. ದಿನೇಶ ಎಂದೂ ಗೌಡರ ಎದುರು ನಿಂತು ಸರಿಯಾಗಿ ಮಾತನಾಡಿದ್ದಿಲ್ಲ. ಅಪ್ಪ ಒಳಗಿದ್ದರೆ ದಿನೇಶ ತೋಟದಲ್ಲೋ, ಗದ್ದೆಯಲ್ಲೋ, ಹಟ್ಟಿಯಲ್ಲೋ ಏನಾದರೂ ಕೆಲಸದಲ್ಲಿ ಮುಳುಗಿರುತ್ತಾನೆ. ದಿನೇಶ ಮನೆಯಲ್ಲಿದ್ದಾನೆಂದರೆ ಶೇಷಪ್ಪ ಗೌಡರು ಮನೆಯಲ್ಲಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು. ಈ ವ್ಯತ್ಯಾಸ ನೋಡಿ ನೋಡಿ ಸಾಕಾದ ಗಂಗಮ್ಮನವರು ದಿನೇಶನನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಏನೇ ಆದರೂ ಗೌಡರ ಕೃಷಿ ಕೆಲಸ ಸುಸೂತ್ರವಾಗಿ ನಡೆಯುತ್ತಿರುವುದು ಮಾತ್ರ ದಿನೇಶನಿಂದಲೇ ಎಂದು ಗೌಡರಿಗೂ ಗೊತ್ತಿದೆ. ಆದರೂ ವಿದ್ಯೆಯಿಲ್ಲದವನು ಎಂಬ ತಾತ್ಸಾರ. “ಈ ಕೋಣ ಗೆಯ್ಯಕೆ ಮಾತ್ರ ಆದು… ಬೇರೇನೂ ಆಕಿಲ್ಲೆ ಇವಂದ” ಎಂಬುದು ದಿನೇಶನ ಬಗ್ಗೆ ಗೌಡರ ತೀರ್ಮಾನ. +ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ನಾಟಕ, ಹಾಡು, ಕುಣಿತ, ಯಕ್ಷಗಾನದ ಅಪಾರ ಹುಚ್ಚು ಹಚ್ಚಿಕೊಂಡಿರುವ ಸಾಮಾನ್ಯ ಕಂಠದ ದಿನೇಶನಿಗೆ ಹಾಡುವುದೆಂದರೆ ಬಹಳ ಇಷ್ಟ. ಶಾಲಾ ವಾರ್ಷಿಕೋತ್ಸವದ ನಾಟಕಗಳಿಗೆ ಹಿನ್ನೆಲೆ ಗಾಯನ ಯಾವಾಗಲೂ ದಿನೇಶನದ್ದೇ. ಸಿನಿಮಾ ಹಾಡುಗಳ ಧಾಟಿಯಲ್ಲಿ ಬರೆದ ಪದ್ಯಗಳನ್ನು ನಾಟಕಕ್ಕೆ ಬೇಕಾಗುವಂತೆ ಹಾಡುತ್ತಿದ್ದ. ದಿನೇಶನಿಗೆ ಭಜನೆಯೆಂದರಾಯ್ತು, ಎಲ್ಲ ಬಿಟ್ಟು ಹೊರಡುವುದೇ! ಎಲ್ಲಿ ಭಜನೆಯಿದ್ದರೂ ಅಲ್ಲಿ ತಾಳಸಮೇತ ದಿನೇಶನಿದ್ದಾನೆಂದೇ ಲೆಕ್ಕ. ಯಾವಾಗ ಎಲ್ಲೆಲ್ಲಿ ಭಜನೆಯಿದೆಯೆಂಬ ನಿಖರವಾದ ಮಾಹಿತಿಗೆ ದಿನೇಶನನ್ನೇ ಎಲ್ಲರೂ ಕೇಳುತ್ತಿದ್ದುದರಿಂದ ಭಜನೆ ದಿನೇಶನೆಂದೇ ಎಲ್ಲರಿಗೂ ಪರಿಚಿತನಾಗಿದ್ದ. +ಊರಲ್ಲಿ ನಡೆಯುವ ಶಾಲೆ, ಹಳೆ ವಿದ್ಯಾರ್ಥಿ ಸಂಘಗಳ ವಾರ್ಷಿಕೋತ್ಸವದ ನಾಟಕಗಳಲ್ಲಿ ಹೇಗಾದರೂ ಮಾಡಿ ಪಾತ್ರ ಗಿಟ್ಟಿಸುವ ದಿನೇಶ ಒಂದು ಸಲ ನಾಟಕವೊಂದರಲ್ಲಿ ನಾಯಿಯ ಪಾತ್ರವೊಂದನ್ನು ಅಬಿನಯಿಸುವ ಸಂದರ್ಭ ಬಂದಿತ್ತು. ಸ್ಟೇಜಿನಲ್ಲಿ ಈತನ ಮುಖ ಕಂಡರೆ ಎಲ್ಲರೂ ತಮಾಷೆ ಮಾಡಿಯಾರೆಂದು ಮಂಗಳೂರಿನಿಂದ ನಾಯಿಯ ಮುಖವಾಡವೊಂದನ್ನು ನಿರ್ದೇಶಕರು ಮೊದಲೇ ತರಿಸಿದ್ದರು. ಹಿನ್ನೆಲೆ ಸಂಗೀತಗಾರರಿಗೆ ಸಹಾಯಕನಾಗಿ ತಮ್ಮಟೆಯೊಂದನ್ನು ಬಡಿಯುವ ಜವಾಬ್ದಾರಿಯೂ ದಿನೇಶನಿಗಿತ್ತು. ಪ್ರದರ್ಶನದಂದು ಖಾಕಿ ಪ್ಯಾಂಟ್, ಷರ್ಟ್ ತೊಟ್ಟು ನಾಯಿಯ ಮುಖವಾಡವನ್ನು ಕೈಯಲ್ಲಿ ಹಿಡಿದು ಸೈಡ್ ವಿಂಗ್ಸ್‌ನಲ್ಲಿ ಸಂಗೀತದವರೊಂದಿಗೆ ಸಹಕರಿಸುತ್ತಿದ್ದ ದಿನೇಶ ತನ್ನ ಪಾತ್ರ ಪ್ರವೇಶದ ಸಮಯ ಬಂದಾಗ ಮುಖವಾಡವನ್ನು ಮರೆತು ಹಾಗೇ ಸ್ಟೇಜಿಗೆ ಬಂದುಬಿಟ್ಟ! ಪ್ರೇಕ್ಷಕರಲ್ಲಿದ್ದ ದಿನೇಶನ ಗುರುತಿನವರೆಲ್ಲ “ನಾಯಿ ದಿನೇಶ; ನಾಯಿ ದಿನೇಶು” ಎಂದು ಕಿರುಚಾಡತೊಡಗಿದರು. ಶೇಷಪ್ಪ ಗೌಡರು ಅಂದು ನಾಟಕ ನೋಡಲು ಬಂದಿದ್ದರು. ದಿನೇಶ ಖಾಕಿ ಪ್ಯಾಂಟ್ ಶರ್ಟಲ್ಲಿ ಕುತ್ತಿಗೆಗೆ ನಾಯಿ ಸರಪಳಿ ಹಾಕಿಸಿಕೊಂಡು ನಾಯಕನ ಹಿಂದೆ ಕೇವಲ ಒಂದು ನಾಯಿಯ ಪಾತ್ರದಲ್ಲಿ ಕೈ, ಮೊಣಕಾಲು ಊರಿಕೊಂಡು ಸ್ಟೇಜಿಗೆ ಬಂದದ್ದು ನೋಡಿ ಗೌಡರು ಅಪಮಾನ, ಅಸಹನೆಯಿಂದ ಉರಿದುಹೋದರು. ಅಲ್ಲಿಂದಲೇ ಎದ್ದು ದಡ ದಡ ಕಾಲಿಡುತ್ತಾ ಮನೆಗೆ ಬಂದು ಹೆಂಡತಿ ಗಂಗಮ್ಮನೊಂದಿಗೆ “ನೋಡ್ದಾ ನಿನ್ನ ಮಂಙನ ಹಣೆಬರಾ! ಇಷ್ಟ್ ದಿನಾ ಪ್ರಾಟೀಸ್ ಮಾಡಿ ಅಂವ ಮಾಡ್ದ್ ಎಂತರಾ ಗೊತ್ತುಟ್ಟೋ ನಾಯಿ! ನಾಯಿ ವೇಸ! ಹಲ್ಕ, ಬಿಕ್‌ನಾಸಿ” ಎಂದು ದಿನೇಶನ ನಾಯಿ ಪ್ರಸಂಗ ಹೇಳಿ, ಹಂಗಿಸಿ ವಿಷಣ್ಣರಾಗಿ ಕುಳಿತರು. ಗಂಗಮ್ಮ ನೊಂದುಕೊಂಡು ಸುಮ್ಮನಾದರು. ಗೌಡರ ಜೂಲಿನಾಯಿ ಓಡಿ ಬಂದು ‘ಕುಂಯಿ… ಕುಂಯಿ’ ಎಂದು ಬಾಲ ಆಡಿಸುತ್ತಾ ಗೌಡರ ಕಾಲಿಗೆ ತನ್ನ ಮೂತಿ, ಹೊಟ್ಟೆಯನ್ನು ಒರಸತೊಡಗಿದಾಗ ಗೌಡರಿಗೆ ಕೋಪ ನೆತ್ತಿಗೇರಿ ಕಾಲೆತ್ತಿ ಜೂಲಿಯನ್ನು ಒದ್ದರು. ದೂರಕ್ಕೆ ಎಸೆಯಲ್ಪಟ್ಟ ಜೂಲಿನಾಯಿ ಕೈಂಕ್ ಎಂದು ಕಿರುಚಿ ಗೌಡರಿಗೇನಾಯ್ತಪ್ಪ! ಎಂದು ಆಶ್ಚರ್ಯದಿಂದ ನೋಡುತ್ತಾ ಬಾಲ ಮುದುರಿ ದೂರದಲ್ಲಿ ಕುಳಿತಿತು. ಅಂದಿನಿಂದ ದಿನೇಶನ ಭಜನೆ, ನಾಟಕದ ಸುದ್ದಿ ಎತ್ತಿದ್ದರೆ ಸಾಕು, ಶೇಷಪ್ಪ ಗೌಡರಿಗೆ ಮುಖ ಕೆಂಪಡರಿ ಭೂತಕ್ಕೆ ಅಕ್ಕಿ ಹಾಕಿದಂತಾಗಿ ದರ್ಶನ ಬರುತ್ತಿತ್ತು. +ಎಲಿಮೆಂಟರಿ ಶಾಲೆ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿಯ ಆಟ ದೇವಿ ಮಹಾತ್ಮೆ ಎಂದು ನಿಶ್ಚಯವಾದಂದಿನಿಂದಲೇ ಮಹಿಷಾಸುರನ ವೇಷ ತಾನೇ ಹಾಕುವುದೆಂದು ದಿನೇಶ ಹಟ ಹಿಡಿದಿದ್ದ. ಹವ್ಯಾಸಿ ಕಲಾವಿದರಾದ ಅಪ್ಪಯ್ಯ ಮಣಿಯಾಣಿಗೂ ಧನಂಜಯ ರೈಗೂ ಇದು ಸರಿಕಾಣದಿದ್ದರೂ ಚಂಡ ಮುಂಡರ ವೇಷ ತಮಗೇ ಕಟ್ಟಿಟ್ಟದ್ದು ಎಂಬ ಹೆಮ್ಮೆಯಿಂದ ಸುಮ್ಮಗಾಗಿದ್ದರು. ಮಧು- ಕೈಟಭರಾಗಿ ಅಂಬ್ರೋಟಿ ಗಿರಿಧರ ಮತ್ತು ಚಾಕೊಟೆ ದಾಮೋದರ, ರಕ್ತಬೀಜಾಸುರನ ವೇಷ ಹಾಕಲು ಮಾರಡ್ಕ ಶಿವರಾಮ ಒಪ್ಪಿದ್ದರೂ, ಮಹಿಷಾಸುರನ ವೇಷ ಹಾಕಲು ಅವನಿಗೆ ತುಂಬ ಆಸೆಯಿತ್ತು. ಭಜನೆ ದಿನೇಶ ಹಾಕಲಿ ಎಂದು ಉಳಿದವರೆಲ್ಲ ಹೇಳಿದ್ದರಿಂದ ಸುಮ್ಮಗಾದ. ಶುಂಭ ನಿಶುಂಭರಾಗಿ ದೊಡ್ಡೇರಿ ಶೀನ ಮತ್ತು ಓಡಬಾ ಕರ್ಣನೂ, ಮತ್ತುಳಿದ ಪಾತ್ರಗಳಿಗೆ ಉಳಿದ ಕೆಲವರೂ ಆಯ್ಕೆಯಾದರು. ಸ್ತ್ರೀ ವೇಷ ಮಾಡಲು ಯಾರೂ ಸರಿಯಾದವರು ಇಲ್ಲದ್ದರಿಂದ ದೇವಿ ಪಾತ್ರಕ್ಕೆ ಹೆಣ್ಣೇ ಆಗಬೇಕೆಂದು ಏನೇನೋ ಕಸರತ್ತು ಮಾಡಿ ಕಾಯರಡಿ ಚೆನ್ನಪ್ಪ ಗೌಡರ ಮಗಳು ಸುಹಾಸಿನಿಯನ್ನು ಒಪ್ಪಿಸಿದ್ದರು. ಕಟೀಲು ದುರ್ಗಾಪರಮೇಶ್ವರಿಯ ಮಹಾಭಕ್ತರಾದ ಚೆನ್ನಪ್ಪ ಗೌಡರು ವರ್ಷದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಕಟೀಲಿಗೆ ಹೋಗಿ ಬರುತ್ತಿದ್ದರು. ಮುಂಜಾನೆ ಸ್ನಾನ ಮಾಡಿ ಮಡಿಯುಟ್ಟು ದೇವರಿಗೆ ದೀಪ ಹಚ್ಚಿದ ನಂತರವೇ ಅವರ ದಿನಚರಿ ಆರಂಭವಾಗುವುದು. ಹಣೆಯಲ್ಲಿ ಉದ್ದ ನಾಮ ಯಾವಾಗಲೂ ಅವರ ಭಕ್ತಿಯ ಲಾಂbನವಾಗಿ ಎದ್ದು ಕಾಣುತಿತ್ತು. ಅದರಿಂದಲೋ ಏನೋ ಎಲ್ಲಾ ಹುಡುಗರೇ ಇರುವ ಬಳಗದಲ್ಲಿ ಸುಹಾಸಿನಿಯೊಬ್ಬಳೇ ಪಾತ್ರ ಮಾಡಲು ಹಲವು ಶರ್ತಗಳನ್ನು ವಿದಿಸಿಯೇ ನಂತರ ಒಪ್ಪಿಗೆ ನೀಡಿದ್ದು. ಸಂಘದ ಹುಡುಗರ್‍ಯಾರೂ ಅಂಥ ಕಿತಾಪತಿಯವರಲ್ಲದ್ದರಿಂದ ಸುಹಾಸಿನಿಯ ಅಮ್ಮನೂ ಹೆಚ್ಚು ಒತ್ತಾಯವಿಲ್ಲದೆ ಸಮ್ಮತಿಸಿದ್ದರು. ಭರತನಾಟ್ಯ, ಸಂಗೀತ ಕಲಿತಿರುವ ಸುಹಾಸಿನಿಗೂ ಅಬಿನಯಿಸುವುದರಲ್ಲಿ ಉಮೇದು ಇತ್ತು. ಆದರೆ ಆಕೆಯನ್ನು ಪ್ರಾಕ್ಟೀಸಿಗೆ ಕರಕೊಂಡು ಹೋಗಿ ಬರಲು ಯಾವಾಗಲೂ ತಮ್ಮ ಸುರೇಶ ಮತ್ತು ಕೆಲಸದ ತಿಮ್ಮ ಇರಲೇಬೇಕಾಗುತಿತ್ತು. ಕೆಲವೊಮ್ಮೆ ರಾತ್ರಿ ಚೆನ್ನಪ್ಪ ಗೌಡರೇ ಪ್ರಾಕ್ಟೀಸ್ ಮುಗಿಯುವ ಹೊತ್ತಿಗೆ ಬಂದಿರುತ್ತಿದ್ದರು. ಕಾಯರಡಿ ಚೆನ್ನಪ್ಪ ಗೌಡರ ಮನೆ ಪ್ರಾಕ್ಟೀಸು ಮಾಡುವ ಎಲಿಮೆಂಟರಿ ಶಾಲೆ ಗ್ರೌಂಡಿನ ಬದಿಯಲ್ಲೇ ಇರುವುದು ಎಲ್ಲರಿಗೂ ದೊಡ್ಡ ಅನುಕೂಲ ಮತ್ತು ಸಮಾಧಾನ. ಪ್ರಾಕ್ಟೀಸು ಮುಗಿಯುವಾಗ ಗಂಟೆ ಹನ್ನೆರಡು ದಾಟುತ್ತಿದ್ದುದರಿಂದ ದಿನೇಶ ಮನೆ ಸೇರುವಾಗ ಯಾವಾಗಲೂ ಹನ್ನೆರಡೂವರೆ, ಒಂದು ಆಗುತ್ತಿತ್ತು. ಅಪ್ಪನಿಗೆ ತಿಳಿಯದಂತೆ ಮನೆಯೊಳಗೆ ತೂರಿಕೊಳ್ಳವುದು ದಿನೇಶನ ದೈನಂದಿನ ಸಾಹಸವಾಗಿತ್ತು. “ನಾಯಿ ವೇಸ ಹಾಕಿಕೆ ಆಗದಂವ… ಮೈಶಾಸುರನ ವೇಸ ಹಾಕಿಕೆ ಹೊರ್ಟುಟು! ಈ ಊರುಲಿ ಬೇರೆ ಯಾರೂ ಇಲ್ಲೆನೊಲು” ಎಂದು ಗೌಡರು ಮೊದಲ ದಿನವೇ ದಿನೇಶನನ್ನು ಹರಸಿಯಾಗಿತ್ತು. +ಆಟದ ದಿನಕ್ಕೆ ಎರಡು ತಿಂಗಳ ಮೊದಲೇ ಪ್ರಾಕ್ಟೀಸು ಆರಂಭವಾಯಿತು. ದಿನಾ ರಾತ್ರಿ ಎಂಟು ಎಂಟೂವರೆಗೆ ಎಲ್ಲರೂ ಎಲಿಮೆಂಟರಿ ಶಾಲೆಯ ಸ್ಟೇಜ್‌ನಲ್ಲಿ ಸೇರಿ, ಬೊಳುಬೈಲು ಸುಬ್ಬಣ್ಣ ಭಟ್ರ ಭಾಗವತಿಕೆ, ದಾಮೋದರ ಆಚಾರಿಯ ಚೆಂಡೆ, ಶೇಖರ ಶೆಟ್ಟಿಯ ಮದ್ದಲೆಗೆ ಸರಿಯಾಗಿ ಹೆಜ್ಜೆ ಹಾಕಿ ಕುಣಿಯುತ್ತಾ ಪ್ರಾಕ್ಟೀಸು ಆರಂಬಿಸುತ್ತಿದ್ದರು. ಶ್ರುತಿಪೆಟ್ಟಿಗೆ ಹಿಡಿಯಲು ಶಿವರಾಯರ ಹೋಟ್ಲಿನ ಮಾಣಿ ಕಮ್ ಕ್ಲೀನರ್ ಜಗ್ಗ ಎಲ್ಲರಿಂದ ಮೊದಲು ರೆಡಿಯಾಗುತ್ತಿದ್ದ. ಆಟವಿದೆಯೆಂದು ಗೊತ್ತಾದ ಒಂದೂವರೆ ತಿಂಗಳ ಮೊದಲಿಂದಲೇ ಭಜನೆ ದಿನೇಶ ಕೂದಲು ಕತ್ತರಿಸದೆ ಉದ್ದಕ್ಕೆ ಬಿಟ್ಟಿದ್ದ. ಅಪ್ಪಯ್ಯ ಮಣಿಯಾಣಿ, ಧನಂಜಯ ರೈ ಇಬ್ಬರೂ ಹವ್ಯಾಸಿ ಕಲಾವಿದರಾದ್ದರಿಂದ ಅವರಿಬ್ಬರಿಗೆ ಯಾವಾಗಲೂ ಸ್ವಲ್ಪ ಉದ್ದಕ್ಕೆ ಕೂದಲಿರುತ್ತಿತ್ತು. ಉಳಿದವರು ಇನ್ನು ಕೂದಲು ತೆಗೆಸುವುದು ಯಕ್ಷಗಾನ ಕಳೆದು ಅಂದರೆ ಇನ್ನು ಮೂರು ತಿಂಗಳು ಕಳೆದು ಎಂದು ಕ್ಷೌರಿಕ ಸುಬ್ರಾಯನಿಗೆ ಗೊತ್ತಿದ್ದರಿಂದಲೋ ಏನೋ ಆಟದ ಬಗ್ಗೆ ಏನೂ ಆಸಕ್ತಿ ತೋರಿಸುತ್ತಿರಲಿಲ್ಲ.“ಮಂಗ್ಳೂರ್ಂದ ಒಳ್ಳೆ ಆರ್ಕೆಸ್ಟ್ರಾ ಇಲ್ಲರೆ… ತುಳು ನಾಟಕ ತರ್‍ಸಿದ್ದರೆ ಗಮ್ಮತ್ ಇರ್‍ತಿತ್, ಇವರ ಈ ದೇವಿ ಮಹಾತ್ಮೆ ಎಂತದಿಕ್ಕೆ ಅದೂ ಭಜನೆ ದಿನೇಶ ಮೈಶಾಸುರನ ವೇಸ ಹಾಕುದು ಗಡಾ! ಹ್ಯಾಂಗಿರ್‍ದು?” ಎಂದು ಸುಬ್ರಾಯ ಕೆಲವರಲ್ಲಿ ತಮಾಷೆ ಮಾಡುತ್ತಿದ್ದ. +ಯಕ್ಷಗಾನದ ವೇಷಭೂಷಣಗಳನ್ನು ಬಾಡಿಗೆಗೆ ಒದಗಿಸುವ ಕೋಡಾರ್ ಗಣೇಶ ಭಟ್ರು ಶಾಲೆಯಲ್ಲಿ ಮೊದಲೇ ಯಕ್ಷಗಾನ ನಾಟ್ಯ ತರಬೇತಿ ನಡೆಸುತ್ತಿದ್ದುದರಿಂದ ಎಲ್ಲರಿಗೂ ಅಲ್ಪಸ್ವಲ್ಪ ನಾಟ್ಯ ಬರುತಿತ್ತು. ಅರ್ಥಗಾರಿಕೆಗೆ ಮಾತ್ರ ಗಣೇಶ ಭಟ್ರು ಬರೆದು ತಂದು ಓದಿಸಿ ಬಾಯಿಪಾಠ ಮಾಡಿಸುತ್ತಿದ್ದರು. ಅಪ್ಪಯ್ಯ ಮಣಿಯಾಣಿ, ಧನಂಜಯ ರೈಯಂಥ ಕೆಲವರಿಗೆ ಇದರ ಅಗತ್ಯ ಇರಲಿಲ್ಲ. ಭಾಗವತರ ಪದ್ಯ ಕೇಳಿ ಸ್ವಯಂಸ್ಫೂರ್ತಿಯಿಂದ ಅರ್ಥ ಹೇಳುತ್ತಿದ್ದರು. ತಪ್ಪಿದಲ್ಲಿ, ಅಭಾಸವಾದಲ್ಲಿ ತಿದ್ದುವುದಕ್ಕೆ ಗಣೇಶ ಭಟ್ರು ಇರುತ್ತಿದ್ದರು. ಭಜನೆ ದಿನೇಶನಿಗೆ ಬಾಯಿಪಾಠವೇ ಗತಿ. ಕಷ್ಟದಿಂದ ಹಠತೊಟ್ಟು ಬಾಯಿಪಾಠ ಮಾಡಿದರೂ ಎಡೆ ಎಡೆಯಲ್ಲಿ ಮರೆತು ಹೋಗುತಿತ್ತು. ಮರೆತು ಹೋದಾಗ ಒಮ್ಮೆ ಜೋರಾಗಿ ಆರ್ಭಟ ಕೊಡುತ್ತಿದ್ದ. ಆಗ ಗಣೇಶ ಭಟ್ರು ಮೆಲ್ಲಗೆ ಹಿಂದಿನಿಂದ ಉಸುರುತ್ತಿದ್ದರು. ಮತ್ತೆ ಸರಾಗವಾಗಿ ಮುಂದುವರೆಯುತ್ತಿತ್ತು. ಮತ್ತೆ ಮರೆತುಹೋದಾಗ ಮತ್ತೊಂದು ಆರ್ಭಟ. ಆದರೆ ದೇವಿ ಪಾತ್ರದ ಸುಹಾಸಿನಿಗೆ ಭರತನಾಟ್ಯ ತಿಳಿದಿದ್ದರೂ, ಯಕ್ಷಗಾನದ ನಾಟ್ಯ ಮತ್ತು ಅರ್ಥಗಾರಿಕೆಯನ್ನು ಹೇಳಿಕೊಡಬೇಕಾಗುತಿತ್ತು. ಸುಹಾಸಿನಿ ಬೇಗನೆ ಕಲಿತುಕೊಳ್ಳುತ್ತಿದ್ದಳು. ಒಂದೊಂದು ದಿನ ಯಾರಾದರೂ ಪ್ರಾಕ್ಟೀಸು ನೋಡಲು ಬಂದವರು ಶಿವರಾಯರ ಹೋಟೆಲಿಂದ ಚಾ, ಬಿಸ್ಕೆಟ್ ತರಿಸುತ್ತಿದ್ದರು. ದಿನೇಶನ ಅಣ್ಣ ನಾರಾಯಣನೂ ಪ್ರಾಕ್ಟೀಸ್ ನೋಡಲು ಆಗಾಗ ಬರುತ್ತಿದ್ದ. ಹೀಗೆ ಪ್ರಾಕ್ಟೀಸಿನಲ್ಲಿ ದಿನ ಕಳೆದದ್ದೇ ಗೊತ್ತಾಗದೆ ಆಟದ ದಿನವೂ ಬಂದುಬಿಟ್ಟಿತು. +ಎಲ್ಲರೂ ಅಂದು ಬೆಳಗ್ಗಿನಿಂದಲೇ ಆಟದ ತಯಾರಿಯಲ್ಲಿದ್ದರು. ಹಗಲಿಡೀ ದಿನೇಶನಿಗೂ, ಶಿವರಾಯರ ಮಾಣಿ ಜಗ್ಗನಿಗೂ ಮೈಕ್‌ನಲ್ಲಿ “ಇಂದು ಎಲಿಮೆಂಟರಿ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀದೇವಿ ಮಹಾತ್ಮೆ ಆಟ…ಅ ಬನ್ನಿರಿ ನೋಡಿರಿ ಆನಂದಿಸಿರಿ… ಅರಿತ ನುರಿತ ಹವ್ಯಾಸಿ ಕಲಾವಿದರಿಂದ ಒಂದೇ ಒಂದು ಆಟ… ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಪ್ರಸಂಗವನ್ನು ನೋಡಲು ಮರೆಯದಿರಿ” ಎಂದು ಎನೌನ್ಸ್ ಮಾಡುವುದೇ ಕೆಲಸವಾಗಿ ಸಂಜೆಯಾದದ್ದೇ ಗೊತ್ತಾಗಿರಲಿಲ್ಲ. +ಸಂಜೆ ಆರಕ್ಕೆ ಆರಂಭವಾದ ವಾರ್ಷಿಕೋತ್ಸವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಊರಗಣ್ಯರು, ಶಾಸಕರು ಭಾಗವಹಿಸಿದರು. ಭಾಷಣಗಳಾದ ಮೇಲೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಯಾಯಿತು. ಸಭಾ ಕಾರ್ಯಕ್ರಮ ಮುಗಿದಾಗ ಎಂಟು ಗಂಟೆ. ಮೊದಲು ಮಕ್ಕಳದ್ದು. ಆ ಮೇಲೆ ಹುಡುಗಿಯರ ಸ್ವಾಗತ ಡಾನ್ಸ್, ಕೋಲಾಟ, ಬೆಸ್ತರ ನೃತ್ಯ, ಜಾನಪದ ನೃತ್ಯ, ಎಲ್ಲಾ ಮುಗಿದಾಗ ಗಂಟೆ ಒಂಭೂತ್ತೂವರೆ. ಮತ್ತೆ ಹುಡುಗರ ಹಾಸ್ಯಮಯ ಸಾಮಾಜಿಕ ನಾಟಕ ಹೆಣ್ಣು ಸಮಾಜದ ಕಣ್ಣು ಆರಂಭವಾಯಿತು. +ಚೌಕಿಯೊಳಗೆ ಉದ್ದ ನೇಕೆಯಲ್ಲಿ ಯಕ್ಷಗಾನದ ವೇಷಭೂಷಣಗಳು ನೇತಾಡುತ್ತಾ ಪಾತ್ರಗಳಿಗೆ ಜೀವ ತುಂಬಲು ಕಾಯುತ್ತಿದ್ದವು. ಕೋಡಾರ್ ಗಣೇಶ ಭಟ್ರು, ಮತ್ತಿಬ್ಬರು ಬಣ್ಣ ಹಾಕುವುದರಲ್ಲಿ, ವೇಷ ತೊಡಿಸುವುದರಲ್ಲಿ ಮಗ್ನರಾಗಿದ್ದರು. ಚಂಡ ಮುಂಡರ ವೇಷದ ಅಪ್ಪಯ್ಯ ಮಣಿಯಾಣಿ, ಧನಂಜಯ ರೈ ಅವಳಿಗಳಂತೆ ಕಾಣುತ್ತಿದ್ದರು. ಕೆದರಿದ ಉದ್ದ ಕೂದಲಿನಲ್ಲಿ ಕಟ್ಟುಮಸ್ತಾದ ಇಬ್ಬರೂ ಆಕರ್ಷಕವಾಗಿ ಕಾಣುತ್ತಿದ್ದರು. ಭಜನೆ ದಿನೇಶ ಮಹಿಷಾಸುರನ ವೇಷದಲ್ಲಿ ಭಯಂಕರವಾಗಿ ಕಾಣುತ್ತಿದ್ದ. ಹಣೆಯಲ್ಲಿ ಕಣ್ಣಿನಂಥ ಆಕಾರ ಬರೆದು ಸುತ್ತ ಕಪು ಕಾಡಿಗೆ ಮೆತ್ತಿ ಅರಸಿನದಲ್ಲಿ ಪಟ್ಟಿ ಬರೆದು ಸಪೇದ್, ಇಂಗ್ಲೀಕದ ಗೆರೆ ಎಳೆದು ಹತ್ತಾರು ಬಟ್ಟೆಗಳ ಗಂಟಿನ ಅಂಡು ಕಟ್ಟಿ, ಬಾಲುಮುಂಡು ಧರಿಸಿ ಮೇಲೆ ದಗಲೆ ಹಾಕಿ ಜಟ್ಟಿಯನ್ನು ಬಿಗಿದು ಹೆಗಲ ಮೇಲೆ ನಾಲ್ಕು ಬಣ್ಣದ ಸೋಗಲಿ ಹಾಕಿ, ಅಗಲಡ್ಡಿಗೆ, ಸಪೂರಡ್ಡಿಗೆ, ಎದೆಪದಕ, ದಂಬೆಗಿಳಿಯೆಂಬ ಭುಜಕೀರ್ತಿಯ ಕೆಳಗೆ ತೋಳ್ಕಟ್ಟು, ಕೈಕಟ್ಟು, ಡಾಬು, ವೀರಗಾಸೆ, ಹಿಂದೆ ಉಲ್ಲನ್ ಡಾಬು ಧರಿಸಿ ಕಾಲಿಗೆ ಸಾಕ್ಸಿನಂತೆ ಪಟ್ಟಿ ಕಟ್ಟಿ ಗೆಜ್ಜೆ ಧರಿಸಿದ ಮೇಲೆ ತಲೆಗೆ ಕೇಸರಿ ಕಟ್ಟಿ, ಓಲೆಗಳನ್ನು ತೊಡಿಸಿ ಕೊಂಬಿನ ಕಿರೀಟವಿಟ್ಟ ದಿನೇಶ ಅತಿಮಾನುಷನಾಗಿ ಭಯಂಕರವಾದ ವಿಚಿತ್ರ ಜೀವಿಯಂತೆ ಕಾಣುತ್ತಿದ್ದ. ದೇವಿ ಮಾತ್ರ ಸಾPತ್ ದೇವಿಯೇ! ನಿಜಕ್ಕೂ ಸುಂದರಿಯಾದ ಸುಹಾಸಿನಿ ದೇವಿಯ ಕಿರೀಟ, ಆಭರಣ, ಮೇಕಪ್‌ನಿಂದಾಗಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಳು. ಎಲ್ಲರೂ ಆಕೆಯನ್ನೇ ನೋಡುವುದರಲ್ಲಿ ಖುಷಿಪಡುತ್ತಿದ್ದರು. ಚೌಕಿಯ ಒಂದು ತುದಿಯಲ್ಲಿ ದೇವೇಂದ್ರನ ಕಿರೀಟ ಇಟ್ಟು ಸ್ವಸ್ತಿಕಕ್ಕೆ ಕೊಡಿ ಬಾಳೆಲೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಕುಂಕುಮ, ಐದು ವೀಳ್ಯದೆಲೆಯ ಮೇಲೆ ಒಂದಡಿಕೆ ಒಂದೂಕಾಲು ರೂಪಾಯಿ ಇಟ್ಟು ಕಾಲುದೀಪ ಉರಿಸಿ, ಊದುಬತ್ತಿ ಹಚ್ಚಿ ಅದಾಗಲೇ ಪೂಜೆ ಮಾಡಿಯಾಗಿತ್ತು. ಪಕ್ಕದಲ್ಲೇ ಕುಳಿತಿದ್ದ ಸುಹಾಸಿನಿ ಸಾPತ್ ದೇವಿಯೇ ಪ್ರತ್ಯಕ್ಷವಾದಂತೆ ಕಾಣುತ್ತಿದ್ದಳು. ಚೌಕಿಯೊಳಗೆ ವೇಷ ನೋಡಲು ಬಂದ ಕೆಲವರು ಸುಹಾಸಿನಿಯ ದೇವಿರೂಪವನ್ನು ಭಯ, ಭಕ್ತಿ, ಆಶ್ಚರ್ಯಗಳಿಂದ ನೋಡುತ್ತಾ ಆಕೆಯ ಮುಂದೆ ನಾಣ್ಯಗಳನ್ನು ಹಾಕಿ ಕೈಮುಗಿದು ಹೋಗುತ್ತಿದ್ದರು. +ರಾತ್ರಿ ಹತ್ತೂವರೆಗೆ ಸರಿಯಾಗಿ ಗಜಮುಖದವಗೆ ಗಣಪಗೆ ಚೆಲ್ವ ತ್ರಿಜಗವಂದಿತನಿಗಾರತಿ ಎತ್ತಿರೆ … ಭಾಗವತರ ಕಂಚಿನ ಕಂಠದ ಪದ್ಯ, ಚೆಂಡೆಯ ಅಮೋಘ ರಿಂಗಣ, ಮದ್ದಲೆ, ತಾಳಗಳ ಶಿಸ್ತಿನ ಲಯದೊಂದಿಗೆ ಚೌಕಿ ಪೂಜೆ ಆರಂಭವಾಯಿತು. ಚೌಕಿ ಪೂಜೆ ಆರಂಭವಾದುದರಿಂದ ಹೆಣ್ಣು ಸಮಾಜದ ಕಣ್ಣು ನಾಟಕದ ಕೊನೆಯ ದೃಶ್ಯವನ್ನು ಅವಸರದಲ್ಲಿ ಮುಗಿಸಬೇಕಾಯಿತು. ರಂಗಸ್ಥಳಕ್ಕೆ ಮೇಳದೊಂದಿಗೆ ಕಥಾಪಾತ್ರಗಳು ಆಗಮಿಸಿದುವು. ಕಥೆ ಬಿಚ್ಚಿಕೊಳ್ಳುತ್ತಿದ್ದಂತೆ ಪಾತ್ರಗಳು ಒಂದರ ನಂತರ ಒಂದು ರಂಗಸ್ಥಳಕ್ಕೆ ಬಂದು ಕುಣಿದು ಅಬಿನಯಿಸಿ ಸಾಗಿದವು. ಶ್ರೀದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರ ರಂಗಸ್ಥಳ ಪ್ರವೇಶಿಸುವುದು ಮಧ್ಯರಾತ್ರಿ ಒಂದೂವರೆ ಎರಡು ಗಂಟೆಯ ವೇಳೆಗೆ. ದಿನವಿಡೀ ಮೈಕ್ ಎನೌನ್ಸ್ ಮಾಡಿ ಮಾಡಿ ಆಯಾಸಗೊಂಡಿದ್ದರೂ ಭಜನೆ ದಿನೇಶ ಸಂಜೆಯೇ ವೇಷ ಧರಿಸಿ ಕುಳಿತಿದ್ದ. ಹೇಗೂ ತನ್ನ ಪಾತ್ರ ಪ್ರವೇಶಕ್ಕೆ ಇನ್ನೂ ಬಹಳ ಹೊತ್ತು ಇರುವುದರಿಂದ ದಿನೇಶ ಚೌಕಿಯಿಂದ ಮೆಲ್ಲಗೆ ಹೊರಗೆ ಬಂದು ಗ್ರೌಂಡಿನ ಬದಿಯಲ್ಲೇ ಯಾರಿಗೂ ಗೊತ್ತಾಗದಂತೆ ಕತ್ತಲೆಯಲ್ಲೇ ಸರಿದು ಹಿಂದೆ ನಿಂತು ನೋಡುತ್ತಿದ್ದ ಪ್ರೇಕ್ಷಕರೆಲ್ಲರ ಹಿಂದೆ ಬಂದ. ಮಹಿಷಾಸುರ ರಂಗಸ್ಥಳಕ್ಕೆ ಪ್ರವೇಶಿಸುವುದು ಪ್ರೇಕ್ಷಕರ ನಡುವಿಂದ. ಎರಡೂ ಬದಿಗಳಲ್ಲಿ ಹಿಡಿದ ಉರಿಯುತ್ತಿರುವ ದೊಂದಿಗೆ ರಾಳದ ಹುಡಿಯನ್ನು ರಾಚಿ ಎಸೆಯುತ್ತಾ ಭಯಂಕರವಾಗಿ ಆರ್ಭಟಿಸುತ್ತಾ ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ ದಿಟ್ಟಿಸುತ್ತಾ, ಚೆಂಡೆಯ ಲಯಕ್ಕೆ ಸರಿಯಾಗಿ ನಾಲ್ಕು ಹೆಜ್ಜೆ ಮುಂದೆಯಿಟ್ಟು ಮತ್ತೆ ಎರಡು ಹೆಜ್ಜೆ ಹಿಂದಕ್ಕೆ ಎತ್ತಿಡುತ್ತಾ, ಆಗಾಗ ಹಿಂದಕ್ಕೆ ವಾಲಿ ರಂಗಸ್ಥಳ ನೋಡಿ ಮತ್ತೆ ಮತ್ತೆ ಹೂಂಕರಿಸಿ ಅಟ್ಟಹಾಸಗೈಯುತ್ತಾ ರಂಗಸ್ಥಳದೆಡೆಗೆ ಬರುವ ಆ ದೃಶ್ಯ ಭಯಾನಕ. ಪಕ್ಕದಲ್ಲಿರುವ ದೊಂದಿಗೆ ರಾಳದ ಹುಡಿಯನ್ನು ಎಸೆದಾಗ ಒಮ್ಮೆಗೆ ಉದ್ಭವಿಸುವ ಎತ್ತರದ ಬೆಂಕಿ ಜ್ವಾಲೆಯಲ್ಲಿ ಮಹಿಷಾಸುರನ ರೂಪ ಅತ್ಯಂತ ಬಿಕರವಾಗಿ ಕಾಣುತ್ತದೆ. ಮಹಿಷಾಸುರನ ಪ್ರವೇಶವೊಂದು ಅತ್ಯಂತ ಕುತೂಹಲ ಮತ್ತು ಅದ್ಭುತ ಮನರಂಜನೆಯ ಭಾಗವಾದುದರಿಂದ ಪ್ರೇಕ್ಷಕರು ಒಬ್ಬರ ಮೇಲೆ ಒಬ್ಬರು ಬಿದ್ದು ಕಾತರದಿಂದ ಕಾಯುತ್ತಿರುತ್ತಾರೆ. ಆದ್ದರಿಂದ ದಿನೇಶ ಪ್ರೇಕ್ಷಕರೆಲ್ಲರ ಹಿಂಭಾಗಕ್ಕೆ ಬಂದು ನಿಂತಿದ್ದ. ಅಲ್ಲದೆ ಉಳಿದ ಪಾತ್ರಗಳನ್ನು ನೋಡುವ ಕುತೂಹಲವು ಇತ್ತೇನೊ. ಕತ್ತಲೆಯಲ್ಲಿ ಯಾರಿಗೂ ಕಾಣದೆ ನಿಂತ ದಿನೇಶನಿಗೆ ಎಲ್ಲಾದರೂ ಅಂಡು ಊರಬೇಕೆನಿಸಿತು. +ಅರಂತೋಡು ಸಂಪಾಜೆ ಕಡೆ ಮಣ್ಣಿನ ಮಡಿಕೆ, ಅಳಗೆ, ನೆಸಲೆ ಮಾರಲು ಹೋಗಿದ್ದ ಕೌಡಿಚ್ಚಾರಿನ ಓಡಾರಿ ಕೂಸ ಹಿಂದಿರುಗುವ ಹಾದಿಯಲ್ಲಿ ಆಟವಿದೆಯೆಂದು ತಿಳಿದು ತನ್ನ ಎತ್ತಿನ ಗಾಡಿಯನ್ನು ನಿಲ್ಲಿಸಿ ಮುಂದೆಲ್ಲೋ ಕುಳಿತು ಆಟ ನೋಡುವುದರಲ್ಲಿ ಮಗ್ನನಾಗಿದ್ದ. ಗಾಡಿಯೆತ್ತುಗಳನ್ನು ಅಲ್ಲೇ ಇದ್ದ ದೇವದಾರ ಮರವೊಂದಕ್ಕೆ ಕಟ್ಟಿದ್ದ. ಗಾಡಿಯ ಮೂಕಿ ಮೇಲಕ್ಕಿದ್ದು ಹಿಂಭಾಗ ನೆಲಕ್ಕೆ ತಾಗಿಕೊಂಡಿತ್ತು. ಭಜನೆ ದಿನೇಶ ತನ್ನ ಭಯಂಕರ ವೇಷಭೂಷಣಗಳೊಂದಿಗೆ ಆ ಗಾಡಿಯ ಹಿಂಭಾಗದಲ್ಲಿ ಹರಡಿದ್ದ ಬೈಹುಲ್ಲಿನ ಮೇಲೆ ಕುಳಿತ. ಇಳಿಜಾರಾಗಿದ್ದ ಮೆತ್ತನೆಯ ಸೋಪಾನದಲ್ಲಿ ಒರಗಿ ಕುಳಿತು ಕಾಲು ನೀಡಿದ. ಅಲ್ಲಿಂದ ಸರಿಯಾಗಿ ರಂಗಸ್ಥಳ ಕಾಣುತ್ತಿದ್ದುದರಿಂದ ಆರಾಮವಾಗಿ ಒರಗಿದ. ಆಟ ನೋಡುತ್ತಾ ಒರಗಿದವನಿಗೆ ಅಲ್ಲೇ ಜೊಂಪು ಹತ್ತಿತು. ಏಳೆಂಟು ದಿನಗಳಿಂದ ಆಟದ ತಯಾರಿಗೆ ಪುರುಸೊತ್ತಿಲ್ಲದೆ ಓಡಾಡಿಕೊಂಡಿದ್ದು ರಾತ್ರಿಯೆಲ್ಲ ಪ್ರಾಕ್ಟೀಸ್ ಮಾಡಿ, ದಿನವಿಡೀ ಮೈಕ್ ಎನೌನ್ಸ್ ಮಾಡಿ ಸುಸ್ತಾಗಿದ್ದ ದಿನೇಶನಿಗೆ ಗಾಢ ನಿದ್ದೆ ಆವರಿಸಿತು. +ಆಟವನ್ನು ರೆಪ್ಪೆಯಾಡಿಸದೆ ಬಾಯಿಬಿಟ್ಟು ನೋಡುತ್ತಿದ್ದ ಓಡಾರಿ ಕೂಸ ಫಕ್ಕನೆ ಎಚ್ಚರವಾದವನಂತೆ ಬಳಿಯಿದ್ದವನಲ್ಲಿ ಗಂಟೆ ಎಷ್ಟಾಯಿತೆಂದು ಕೇಳಿದ. ಒಂದ್ ಗಂಟೆ ಎಂದಾಗ ಹಾಂ… ಈಗ ಇಲ್ಲಿಂದ ಗಾಡಿ ಬುಟ್ಟರೆ… ಬಿಸ್‌ಲ್ ಏರಿಕೆ ಮುಂದೆ ಕೌಡಿಚ್ಚಾರ್ ಮುಟ್ಟಿ, ಮನೆ ಸೇರಿ ಉಂಡು ಮೊಲ್‌ಗಕ್ ಎಂದು ಯೋಚಿಸಿ, ಎದ್ದು ಸೀದಾ ಗಾಡಿ ಬಳಿ ಬಂದ ಕೂಸ ಎತ್ತುಗಳ ಹಗ್ಗ ಬಿಚ್ಚಿ ತಂದು ಗಾಡಿಯ ಮೂಕಿಯನ್ನು ಹಾರಿ ಹಿಡಿದು ಕೆಳಕ್ಕೆ ಬಾಗಿಸಿ, ಎತ್ತುಗಳೆರಡನ್ನು ನೊಗಕ್ಕೆ ಕಟ್ಟತೊಡಗಿದ. ಗಾಡಿ ಮೂಕಿಯನ್ನು ಬಗ್ಗಿಸುವಾಗ ಹಿಂಭಾಗ ಮೇಲಕ್ಕೇರಿ ಹಿಂದೆ ಮಲಗಿದ್ದ ಮಹಿಷಾಸುರನೆಂಬ ದಿನೇಶನ ಕಾಲುಗಳು ನೇತಾಡತೊಡಗಿದವು. ಮೊಣಕಾಲಿಂದ ಕೆಳಗಿನ ಗೆಜ್ಜೆ ಕಟ್ಟಿದ ಕಾಲುಗಳು ಗಾಡಿಯಿಂದ ನೇತಾಡುತಿದ್ದವು. ಮೊಣಕಾಲಿಂದ ಮೇಲ್ಭಾಗದ ದೇಹ ಪೂರ್ತಿ ಗಾಡಿಯೊಳಗಿದ್ದುದರಿಂದ ದಿನೇಶನಿಗೆ ಎಚ್ಚರವಾಗಲೇ ಇಲ್ಲ. ಗಾಡಿಯ ಕೆಳಗೆ ನೇತಾಡುವ ಲಾಟಾನನ್ನು ಉರಿಸಿ ಓಡಾರಿ ಕೂಸ ದಬಕ್ಕ ಮೇಲೆ ಹಾರಿ ಕುಳಿತು ಗಾಡಿ ಹೊಡೆದ. ನಿಧಾನವಾಗಿ ಚಲಿಸಿದ ಗಾಡಿಯ ಕುಲುಕಾಟದಿಂದ ತೂಗಿದಂತಾಗಿ ದಿನೇಶನ ನಿದ್ರಾವಸ್ಥೆ ಮುbವಸ್ಥೆಗೆ ತಲುಪಿತು. ಎತ್ತುಗಳು ನಿಧಾನವಾಗಿ ಹೆಜ್ಜೆಯಿಡುತ್ತಿದ್ದಂತೆ ಗಾಡಿ ಮುಂದಕ್ಕೆ ಹೋಯಿತು. ಎತ್ತುಗಳ ಗೊರಸಿನ ಸದ್ದು, ಗಾಡಿ ಎಡ ಬಲಕ್ಕೆ ಜರುಗುವ ಸದ್ದು, ಚಕ್ರದ ಕೀಲಿನಲ್ಲಿರುವ ಗೆಜ್ಜೆಯ ಖಣ ಖಣ ಎಲ್ಲ ಸೇರಿ ಉಂಟಾದ ವಿಶಿಷ್ಟವಾದ ಲಯ ಕೂಸನಿಗೆ ಏನನ್ನೋ ಗುನುಗಲು ಪ್ರೇರೇಪಿಸುತಿತ್ತು. ಆಟವನ್ನು ಸವಿಯುತ್ತಾ ಕುಳಿತ್ತಿದ್ದ ಓಡಾರಿ ಕೂಸನಿಗೆ ಈಗ ಗಾಡಿಯಲ್ಲಿ ಕುಳಿತರೂ ತಲೆತುಂಬ ಚೆಂಡೆಯ ಸದ್ದು. ಬಣ್ಣ ಬಣ್ಣದ ವೇಷಗಳ ಕುಣಿತ. ಅದೇ ಗುಂಗಿನಲ್ಲಿ ಏನೋ ಹಾಡು ಗುನುಗುತ್ತಾ ಸಾಗಿದ ಕೂಸನಿಗೆ ಗಾಡಿ ಮುಂದೆ ಹೋಗಿ ಪೈಚಾರಿನ ಬಳಿಯ ಓಡಬಾ ಎಂಬಲ್ಲಿಗೆ ತಲುಪಿದಾಗ ಕೊಂಚ ಭಯವೆನಿಸಿತು. ಗಾಡಿಯ ಚಕ್ರದ ಕೀಲಿನ ಗೆಜ್ಜೆಯ ಖಣ ಖಣ ಸದ್ದಿನೊಂದಿಗೆ ಸಣ್ಣಗೆ ದಿನೇಶನ ಕಾಲಿನ ಗೆಜ್ಜೆಯ ಸದ್ದೂ ಸೇರಿ ಆ ಕಗ್ಗತ್ತಲೆಯ ನೀರವತೆಯನ್ನು ಬೇದಿಸುತಿತ್ತು. ಓಡಬಾ ಎಂಬ ಆ ಪ್ರದೇಶದಲ್ಲಿ ದೊಡ್ಡ ದೊಡ್ಡ ದೈತ್ಯ ಮರಗಳಿಂದ ಕೂಡಿದ ದಟ್ಟ ಕಾಡು ಇತ್ತು. ಪ್ರೇತ, ಪಿಶಾಚಿ, ರಣ ಮುಂತಾದವು ಅಲ್ಲಿವೆ ಎಂದು ಎಲ್ಲರೂ ಹೇಳುತ್ತಿದ್ದುದು ಕೂಸನಿಗೂ ಗೊತ್ತಿತ್ತು. ಆದ್ದರಿಂದ ನಿಜವಾಗಿಯೂ ಹೆದರಿಹೋಗಿದ್ದ ಕೂಸ b…ಅ ನಾ ಆಟ ನೋಡಿಕಂಡ್ ಅಲ್ಲೇ ಇರಕಾಯ್ತ್… ಇಷ್ಟ್ ಬೇಗ ಹೊರ್ಟದ್ ತೊಪ್ಪಾತ್… ಎಂದು ಪರಿತಪಿಸುತ್ತಾ ಈಗ ಮೈಶಾಸುರ ರಂಗಸ್ಥಳಕ್ಕೆ ಬಾವ ಸಮಯ ಆತೋಂತಾ… ಎಂದು ನೆನಪಿಸಿಕೊಂಡು ಅತ್ತು ಪಲವೇನಿನ್ನು ಸುಮ್ಮನೇ ಸತ್ತವರು ಜೀವಿಪರೇ ಮರ್ಥನಾಗಿಹ… ತರಳ ಮೈಶಾಸುರಗೆ ಹದನಗಳ… ಬಿತ್ತರಿಸಿ ಹದನಗಳ ಸುಮನಸ… ಮೊತ್ತವನು ಸದೆಬಡಿದು ನಾಕವ… ಅರ್ತಿಯಲಿ ವಶಗೈವೆನೆನುತಲೆ… ಕರೆದಳಾ ಮಗನ… ಎಂದು ಗಟ್ಟಿಸ್ವರದಲ್ಲಿ ಮಹಿಷಾಸುರನ ಪ್ರವೇಶದ ಪದ್ಯವನ್ನು ಹಾಡಲಾರಂಬಿಸಿದ. ತರಗೆಲೆಯ ಸಣ್ಣ ಮಿಸುಕಾಟವೂ ಕೂಸನಿಗೆ ಅಪಾರ ಭಯವನ್ನುಂಟುಮಾಡುತ್ತಿದ್ದುದರಿಂದ ಯಾವ ಶಬ್ದವೂ ಕೇಳಿಸಬಾರದೆಂಬಂತೆ ಗಟ್ಟಿಯಾಗಿ ಹಾಡುತ್ತಿದ್ದ. +ಗಾಡಿಯ ಹಿಂಬದಿಯಲ್ಲಿ ಕಾಲುಗಳೆರಡನ್ನೂ ಕೆಳಬಿಟ್ಟು ಗಾಢ ನಿದ್ದೆಯಲ್ಲಿ ಲೀನಗೊಂಡಿದ್ದ ಮಹಿಷಾಸುರ ವೇಷದ ಭಜನೆ ದಿನೇಶನಿಗೆ ತಟ್ಟನೆ ಎಚ್ಚರವಾಯಿತು. ಓಯ್… ಮೈಶಾಸುರನ ರಂಗಸ್ಥಳ ಪ್ರವೇಶದ ಪದ್ಯ ಕೇಳ್ತಾ ಉಟ್ಟು… ಇನ್ನ್ ಕಳ್ಕಿಕ್ಕಂಡ್, ಕೊಣ್ಕಂಡ್, ಕೊಣ್ಕಂಡ್ ದೊಂದಿಗೆ ರಾಳದ ಹುಡಿನ ಬಿಸಾಡಿಕ್ಕಂಡ್ ರಂಗಸ್ಥಳಕ್ಕೆ ಹೋಕು… ಎಂದು ನೆನಪಾಗಿ… ಭಯಂಕರವಾಗಿ ಒಮ್ಮೆ ಆರ್ಭಟಿಸಿ ಗಾಡಿಯಿಂದ ಕೆಳಕ್ಕೆ ಜಿಗಿದ. ಸುತ್ತ ನೋಡಿದರೆ ಭಯಾನಕ ಕತ್ತಲೋ ಕತ್ತಲು. ರಂಗಸ್ಥಳ ಕಾಣಿಸುತ್ತಲೇ ಇಲ್ಲ! ಜನರೂ ಕಾಣುವುದಿಲ್ಲ! ಒಟ್ಟಾರೆ ಬೆಳಕೇ ಕಾಣುತ್ತಿಲ್ಲ! ಎಂಥದಿದ್!ಲು ಎಂದು ಏನೂ ಅರ್ಥವಾಗದೆ ದಿನೇಶ ಇನ್ನೊಮ್ಮೆ‌ಆರ್ಭಟಿಸುವ ಮೊದಲೇ ಹಿಂಬದಿಯಿಂದ ಓಡಾರಿ ಕೂಸನ ವಿಚಿತ್ರ ಕಿರುಚಾಟ ಕೇಳಿಸಿತು! ಹಾಂ… ಇದೆಂಥ… ಇದ್ ಯಾರ್ ಕಿರ್‍ಚುದು…ಲು ಎಂದು ದಿನೇಶ ಅತ್ತಿತ್ತ ನೋಡಿದ. ಮೊದಲೇ ರಣ, ಪಿಶಾಚಿಗಳ ಭಯದಿಂದ ಉಸಿರು ಕಟ್ಟಿಕೊಂಡಿದ್ದ ಕೂಸ ಈಗ ಮಹಿಷಾಸುರನ ಪ್ರತ್ಯಕ್ಷ ದರ್ಶನವಾಗಿ ಹೆದರಿ ಕಂಗಾಲಾಗಿ ಕಣ್ಣುಮುಚ್ಚಿ ಕರ್ಕಶವಾಗಿ ಕಿರುಚಿದ್ದ. ಗಲಿಬಿಲಿಗೊಂಡ ದಿನೇಶ ಹಿಂದೆ ತಿರುಗಿ ನೋಡಿದರೆ ಕಂಡದ್ದು ಮಿಣಿ ಮಿಣಿ ಉರಿಯುವ ಲಾಟಾನು. ನಿದ್ದೆಯ ಮತ್ತಲ್ಲಿ ಕಂಡ ಲಾಟಾನೇ ದೊಂದಿಯಂತೆ ಕಂಡಿರಬೇಕು. ಕೂಡಲೇ ಕೈಯಲ್ಲಿದ್ದ ರಾಳದ ಹುಡಿಯನ್ನು ಲಾಟಾನಿನ್ನತ್ತ ಎಸೆದ. ಲಾಟಾನು ಭಗ್ಗನೆ ಉರಿದು ಬೆಂಕಿಯ ಆಳೆತ್ತರದ ಜ್ವಾಲೆಗಳು ಭಯಂಕರವಾಗಿ ಹರಡಿದವು. ಕೂಸ ಗಾಡಿಯಿಂದ ಧುಮುಕಿ ಹಿಂದಕ್ಕೆ ತಿರುಗದೆ ಯ್ಯಾಮ್ಮೋ…ಅ ಎಂದು ಕರ್ಕಶವಾಗಿ ಕಿರುಚುತ್ತಾ ಓಡತೊಡಗಿದ. ಬೆಂಕಿಯ ಬಿಸಿತಾಗಿದ ಎತ್ತುಗಳೆರಡೂ ಕಕ್ಕಾಬಿಕ್ಕಿಯಾಗಿ ಓಡತೊಡಗಿದವು. ಅವುಗಳ ಹಿಂದೆ ಬೈಹುಲ್ಲಿಗೆ ಬೆಂಕಿ ಹತ್ತಿಕೊಂಡ ಗಾಡಿ ದಡಬಡನೆ ಸಾಗುತಿತ್ತು. ಇದೇನೆಂದು ಅರ್ಥವಾಗದ ದಿನೇಶ ಮತ್ತೊಮ್ಮೆ ಜೋರಾಗಿ ಆರ್ಭಟಿಸಿದ. ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಗಾಡಿಯನ್ನು ಎಳೆದಾಡಿಕೊಂಡು ಗಾಬರಿಯಿಂದ ಅಡ್ಡಾದಿಡ್ಡಿ ಓಡುತ್ತಿದ್ದ ಎತ್ತುಗಳು ದಿನೇಶನ ಆರ್ಭಟ ಕೇಳಿ ಮತ್ತೂ ಹೆದರಿ ಹಾರಿ ಹಾರಿ ಓಡತೊಡಗಿದವು. ಕೂಸ ಎಲ್ಲಿ ಹೋದನೋ ಕಾಣುತ್ತಿರಲಿಲ್ಲ. ದಿನೇಶ ಅತ್ತ ಇತ್ತ ನೋಡಿದ. ಏನೂ ಕಾಣುತ್ತಿಲ್ಲ, ಅಪಾರ ಕತ್ತಲರಾಶಿ! ಮಾರ್ಗ ಮಧ್ಯದಲ್ಲಿ ಮಹಿಷಾಸುರನ ವೇಷದಲ್ಲಿ ದಿನೇಶ ಬೆರ್ಚಪ್ಪನಂತೆ ನಿಂತಿದ್ದ. ತಾನೆಲ್ಲಿದೇನೆಂದು ದಿನೇಶನಿಗೆ ಗೊತ್ತಾಗಲಿಲ್ಲ. ರಂಗಸ್ಥಳವೂ ಇಲ್ಲ, ಜನರೂ ಇಲ್ಲ. ಏನೂ ಇಲ್ಲ… ಏನು ಮಾಡುವುದೆಂದು ತೋಚದೆ ದಿನೇಶ ಅಲ್ಲೇ ನಿಂತ. ದೂರದಲ್ಲಿ ಮರವೊಂದರ ಅಡ್ಡದಲ್ಲಿ ಕೂಸ ಏದುಸಿರು ಬಿಡುತ್ತಾ ಬೆಂಕಿಯ ಉಂಡೆಯಂಥ ತನ್ನ ಗಾಡಿಯನ್ನು ಎಳೆದಾಡಿ ಓಡಿ ಕುತ್ತಿಗೆ ನೊಗದಲ್ಲಿ ಸಿಕ್ಕಿಕೊಂಡು ಓರೆಕೋರೆ ನಿಂತು ಅಡ್ಡಾದಿಡ್ಡಿ ಎಳೆದಾಡುತ್ತಿರುವ ಎತ್ತುಗಳನ್ನೇ ನೋಡುತ್ತಿದ್ದ. ಎತ್ತ ಹೋಗುವುದೆಂದು ತಿಳಿಯದೆ ದಿನೇಶ ಅಲ್ಲೇ ಕುಳಿತ. +ಇತ್ತ ರಂಗಸ್ಥಳದಲ್ಲಿ ಭಾಗವತ ಬೊಳುಬೈಲು ಸುಬ್ಬಣ್ಣ ಭಟ್ರು ಭಾಮಿನಿ ಷಟ್ಪದಿಯಲ್ಲಿ +ಅತ್ತು ಫಲವೇನಿನ್ನು ಸುಮ್ಮನೇ ಸತ್ತವರು ಜೀವಿಪರೇ ಮರ್ಥನಾಗಿಹ +ತರಳ ಮಹಿಷಾಸುರಗೆ ಹದನಗಳ ಬಿತ್ತರಿಸಿ ಹದನಗಳ ಸುಮನಸ +ಮೊತ್ತವನು ಸದೆಬಡಿದು ನಾಕವ ಅರ್ತಿಯಲಿ ವಶಗೈವೆನೆನುತಲೆ ಕರೆದಳಾ ಮಗನ ೧ +ಮಹಿಷಾಸುರನ ತಂದೆ ವಿದ್ಯುನ್ಮಾಲಿ ಬ್ರಹ್ಮನಿಂದ ವದಿಸಲ್ಪಟ್ಟು ಶೋಕತಪ್ತಳಾದ ತಾಯಿ ಮಾಲಿನಿ ಮಗ ಮಹಿಷಾಸುರನನ್ನು ಕರೆಯುವ ಪದ್ಯವನ್ನು ಹಾಡಿದರು. ತಾಯಿ ಮಾಲಿನಿ ಮಹಿಷಾ… ಬಾ… ಬಾ… ಮಹಿಷಾ… ಎಂದು ಹಲವು ಬಾರಿ ಕರೆದರೂ ಮಹಿಷಾಸುರ ಬರಲಿಲ್ಲ. ಮಗನೇ ಬಾ… ನಿನ್ನ ತಂದೆಯನ್ನು ಕೊಂದವರನ್ನು ವದಿಸಿ, ನನ್ನ ಮನಸ್ಸಿಗೆ ನೆಮ್ಮದಿಯನ್ನು ನೀಡು… ಎಲಿದ್ದೀಯಾ ಮಹಿಷಾ… ಬಾ… ಭಾಗವತರು ಪದ್ಯವನ್ನು ಮತ್ತೆ ಮತ್ತೆ ಹಾಡಿದರು. ಆದರೂ ಮಹಿಷಾಸುರ ಬರಲಿಲ್ಲ. ಎಲ್ಲರೂ ಹುಡುಕಾಡಿದರು. ದಿನೇಶನೂ ಇಲ್ಲ! ಮಹಿಷಾಸುರನೂ ಇಲ್ಲ! ಚೌಕಿಯಲ್ಲಿ ನೋಡಿದರು… ಇಲ್ಲ. ಸುತ್ತಮುತ್ತ ಎಲ್ಲಿ ಹುಡುಕಿದರೂ ಮಹಿಷಾಸುರ ಇಲ್ಲ! ಏನೂ ತೋಚದೆ ಹಾಗೇ ಮುಂದುವರಿಸಿ ಕಡೆಗೆ ದೇವಿ ಪಾತ್ರದ ಸುಹಾಸಿನಿಯ ಮಾತಿನಲ್ಲೇ ಮಹಿಷಾಸುರನನ್ನು ವದಿಸಿದೆನೆಂದು ಹೇಳಿಸಿದಾಗ ಪ್ರೇಕ್ಷಕರ ನಡುವೆ ಗುಜು ಗುಜು ಆರಂಭವಾಯಿತು. ಮಹಿಷಾಸುರನ ಪ್ರವೇಶವನ್ನು ಕಾತರದಿಂದ ಕಾಯುತ್ತಿದ್ದವರಿಗೆ ನಿರಾಶೆಯಾಯಿತು. ಸಂಘಟಕರು ಮೈಕ್‌ನಲ್ಲಿ ಮಹಿಷಾಸುರ ಪಾತ್ರದ ಭಜನೆ ದಿನೇಶನವರು ಎಲ್ಲಿ ಹೋದರೆಂದು ಯಾರಿಗೂ ತಿಳಿದಿಲ್ಲ. ಪ್ರಸಂಗವನ್ನು ಹೀಗೆ ಮುಂದುವರಿಸುತ್ತಿರುವುದಕ್ಕೆ ಕಲಾಬಿಮಾನಿಗಳು ದಯವಿಟ್ಟು ಕ್ಷಮಿಸಿ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಹೀಂಗಾದರೆ ಯಾರಿಗಾರೂ ದೇವಿ ಶಾಪ ತಟ್ಟದಿರಿಕ್ಕಿಲ್ಲೆ ಎಂದು ಅಲ್ಲೇ ಇದ್ದ ಬೊಳಿಯಾರ್ ಗಂಗಣ್ಣ ಹೇಳಿದಾಗ ಖಂಡಿತ…ಅ ಎಂದು ಕೆಲವರು ತಲೆದೂಗಿದರು. ಬೆಳಗಾಗುತ್ತಿದ್ದಂತೆ ಅದೆಂತೋ ಕತೆಯನ್ನು ಮುಗಿಸಿ ಮಂಗಳಾರತಿ ಹಾಡಿದರು. +ಬೆಳಗಾಗುತ್ತಿದ್ದಂತೆ ದಿನೇಶ ತಾನೆಲ್ಲಿದ್ದೇನೆಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸತೊಡಗಿದ. ಕತ್ತಲು ಸರಿಯುತ್ತಿದ್ದಂತೆ ತಾನಿರುವ ಜಾಗ ಯಾವುದೆಂದು ದಿನೇಶನಿಗೆ ನಿಧಾನಕ್ಕೆ ಗೊತ್ತಾಗತೊಡಗಿತು. ಓ… ಇದ್ ಓಡಬಾ… ನಾ ಹೇಂಗೆ ಇಲ್ಲಿಗೆ ಬಂದದ್‌ಲು ದಿನೇಶ ಗೊಂದಲಗೊಂಡ. ಆಟಕ್ಕೆ ಹೋದ ಕೆಲವರು ಹಿಂತಿರುಗಿ ಬರುತ್ತಿದ್ದರು. ದಿನೇಶನಿಗೆ ಈಗ ಸ್ವಲ್ಪ ಸ್ವಲ್ಪವೇ ಅರಿವಾಗತೊಡಗಿತು. ಗಾಡಿಯಲ್ಲಿ ಮಲಗಿದ್ದು… ನಿದ್ದೆ ಹೋದದ್ದು… ಎಲ್ಲವೂ! ದಿನೇಶ ಅಲಿಯಾಸ್ ಮಹಿಷಾಸುರ ನಿಧಾನಕ್ಕೆ ಊರಿನ ಕಡೆಗೆ ನಡೆದ. ಆಟ ನೋಡಿ ಹಿಂತಿರುಗುತ್ತಿದ್ದ ಕೆಲವರು ದಾರಿಯಲ್ಲಿ ಮಹಿಷಾಸುರನನ್ನು ಕಂಡು ಸಂಶಯ, ಆಶ್ಚರ್ಯದಿಂದ ಬದಿಗೆ ಸರಿದು ಕಣ್ಣರಳಿಸಿ ತಿರುಗಿ ತಿರುಗಿ ನೋಡುತ್ತಾ ಹೋದರು. ಕೆಲವರು ಪಕ ಪಕ ನಗತೊಡಗಿದರು. ಮಹಿಷಾಸುರ ನಡೆಯುತ್ತಾ ಊರು ತಲುಪಿ ಎಲ್ಲರಿಗೂ ವಿಷಯ ಅರ್ಥವಾದಾಗ ನಗಲೂ ಆಗದೆ ದಿನೇಶನನ್ನು ಬೈಯಲೂ ಆಗದೆ ವಿಚಿತ್ರ ಸಂಕಟ ಅನುಭವಿಸಿದರು. +ಇದೆಲ್ಲಾ ನಡೆದ ಮೇಲೆ ದಿನೇಶ ಮಂಕುಹಿಡಿದಂತಾದ. ಯಾರು ಏನು ಕೇಳಿದರೂ ಸರಿಯಾದ ಉತ್ತರವಿಲ್ಲ. ಯಾರೊಡನೆಯೂ ಮಾತೂ ಇಲ್ಲ, ಏನೂ ಇಲ್ಲ. ದಿನೇಶನ ಅಮ್ಮನಿಗೆ ಚಿಂತೆ ಶುರುವಾಯಿತು. ಕಲಿಯಲು ದಡ್ಡನಾಗಿದ್ದರೂ ಇತರ ಕೆಲಸಗಳಲ್ಲಿ ಚುರುಕಾಗಿದ್ದ ದಿನೇಶನಿಗೆ ಏನಾಯಿತೆಂದು ಆಕೆ ಹಗಲು ರಾತ್ರಿ ಯೋಚಿಸುವಂತಾಯಿತು. ದಿನೇಶನ ಅಪ್ಪನಲ್ಲಿ ಹೇಳಿದರೆ, ಅವಂಗೆ ಮೊರ್ಲು ಮಾರಾಯ್ತಿ… ಕೆಲ್ಸ ಮಾಡಿಕೆ ಉದಾಶೀನ… ಅದಿಕ್ಕೆ ಹೀಂಗೆ ಮಾಡ್ದು… ಅಂವ ಮೈಶಾಸುರ, ಅಂದರೆ… ಕೋಣ ಗೋತ್ತಾತೋ…ಲು ಎಂದು ವ್ಯಂಗ್ಯವಾಡುತ್ತಿದ್ದರು. ಯಾರು ಏನು ಬೈದರೂ, ತಮಾಷೆ ಮಾಡಿದರೂ ಸಹಿಸಬಲ್ಲ ದಿನೇಶ ಬಹಳ ಸಮಯದಿಂದ ಕಟ್ಟಿಕೊಂಡ ಒಳ್ಳೆಯ ಕಲಾವಿದನಾಗಬೇಕೆಂಬ ಕನಸು ನನಸಾಗಲಿಲ್ಲ. ನನಸಾಗದಿದ್ದರೂ ತೊಂದರೆಯಿರಲಿಲ್ಲ; ಕನಸೇ ಭಗ್ನಗೊಂಡಿತ್ತು. ರಂಗಸ್ಥಳಕ್ಕೆ ಬಂದು ಅಬಿನಯಿಸಿ ವೇಷ ಸಾಧಾರಣ ಎಂದಾಗಿದ್ದರೂ ಸಾಕಾಗಿತ್ತು. ಆದರೆ ತಾನು ರಂಗಸ್ಥಳಕ್ಕೇ ಬಾರದಂತಹ ನಾಚಿಕೆಗೇಡಿನ ಪರಿಸ್ಥಿತಿ ಉಂಟಾದುದು ದಿನೇಶನಿಗೆ ಅತೀವ ದುಃಖವನ್ನು, ಕೀಳರಿಮೆಯನ್ನು, ಜಿಗುಪ್ಸೆಯನ್ನು, ನಿರಾಶೆಯನ್ನು ಏಕಕಾಲದಲ್ಲಿ ಉಂಟುಮಾಡಿತ್ತು. ಅಪ್ಪ ಹೇಳುತ್ತಿದ್ದಂತೆ ತಾನು ಯಾ&ಂgಡಿಚಿve;ದಕ್ಕೂ ಆಗದವನು ಎಂದು ಎಲ್ಲರೂ ತಿಳಿಯುವಂತಾಯಿತಲ್ಲ! ಏನಾದರೂ ತಾಪತ್ರಯದ ಕಷ್ಟದ ಕೆಲಸಗಳಿದ್ದರೆ ತನ್ನನ್ನೇ ಹುಡುಕಿಕೊಂಡು ಬರುವ ಎಲ್ಲರೂ ಈಗ ತನ್ನನ್ನು ನೋಡಿ ಮಾತಿಗೆ ಮೊದಲೇ ನಗುವುದರಿಂದ ಯಾರೊಂದಿಗೂ ಮಾತಾಡಲು ಇಷ್ಟವಾಗುವುದಿಲ್ಲ. ಮನೆಯಿಂದ ಹೊರಗೆ ಬಂದರೆ ಎಲ್ಲರೂ ತನ್ನನ್ನು ವಿದೂಷಕನಂತೆ ಕಾಣುತ್ತಾರಲ್ಲಾ ಎಂದು ಬೇಸರದಿಂದ ತೋಟಕ್ಕೆ ಹೋಗಿ ಕಂಗಿನ ಬುಡದಲ್ಲಿ ಕುಬೆ ನೋಡುತ್ತಾ ಕುಳಿತ್ತಿರುತ್ತಾನೆ. ಇಲ್ಲದಿದ್ದರೆ ಪಂಪ್‌ಶೆಡ್ಡಿನ ಬದಿಯ ಕಲ್ಲಿನ ಮೇಲೆ ಕುಳಿತು ಕೆರೆಯ ನಿಶ್ಚಲ ನೀರಿನಲ್ಲಿ ಕಪ್ಪೆಗಳು ಮುಳುಗೇಳುವುದನ್ನೇ ಧ್ಯಾನಸ್ತನಂತೆ ದಿಟ್ಟಿಸುತ್ತಿರುತ್ತಾನೆ. ಕೆಲವೊಮ್ಮೆ ಗುಡ್ಡೆಗೆ ಹೋಗಿ ಮುಡ್ಕಣೆ ಹಾಕಿ ಯಾವುದಾದರೂ ಹಕ್ಕಿ ಸಿಕ್ಕಿಕೊಳ್ಳುತ್ತದೋ ಎಂದು ದಡ್ಡಲ್ ಮರದ ಬುಡದ ತಂಪಾದ ನೆರಳಿನಲ್ಲಿ ಮಳಂಕಣಿ ಮಲಗಿ ಗಾಳಿಗೆ ಅಲ್ಲಾಡುವ ಎಲೆ, ಗೆಲ್ಲುಗಳ ಎಡೆಯಲ್ಲಿ ಆಗಾಗ ಕಾಣುವ ಬಾನನ್ನು ನೋಡುತ್ತಾ ಇರುತ್ತಾನೆ. ಮಹಿಷಾಸುರನ ಪಾತ್ರವನ್ನು ಅದ್ಭುತವಾಗಿ ಮಾಡಿ, ಚಪ್ಪಾಳೆ ಗಿಟ್ಟಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಬೇಕೆಂದು ಬಹಳ ಆಸೆಯಿಂದಿದ್ದ ದಿನೇಶನ ಎಲ್ಲಾ ಯೋಜನೆ ತಲೆಕೆಳಗಾಗಿತ್ತು. ನಾ ನಿದ್ದೆ ಮಾಡ್ರೂ… ಯಾರಾರ್ ಎಬ್‌ಸಾಕಾಯ್ತಲ್ಲಾ ಈ ಆಟಕ್ಕೆ ನಾ ಎಷ್ಟ್ ಗೈದೊಳೆ! ಎಲ್ಲವೂ ಮೋಸ…ಅ ಯಾರ್‍ನೂ ನಂಬಿಕೆ ಬೊತ್ತ್..ಅ ಎಂದು ಜಿಗುಪ್ಸೆಯಿಂದ ಯಾರಲ್ಲೂ ಮಾತಾಡುತ್ತಿರಲಿಲ್ಲ. ಎಲ್ಲರೂ ಮೈಶಾಸುರ, ಮೈಶಾಸುರು ಎಂದು ಗೇಲಿ ಮಾಡುವಾಗ ಅಪ್ಪ ಕೋಣ… ಕೋಣ… ಎಂದು ಹೀಯಾಳಿಸದಂತಾಗುತ್ತಿತ್ತು. ದಿನೇಶಂಗೆ ಕುಂಭಕರ್ಣನ ವೇಸ ಪಸ್ಟ್ ಎಂದು ಹುಡುಗರು ತಮಾಷೆ ಮಾಡುವಾಗ ಅಸಾಧ್ಯ ಸಿಟ್ಟು ಬರುತಿತ್ತು. ಆದರೆ ತನ್ನದೇ ತಪು ಎಂಬ ಕೀಳರಿಮೆಯಿಂದ ಏನೂ ಹೇಳದೆ ಸುಮ್ಮಗೆ ಇರುತ್ತಿದ್ದ. +ಅಂಗಡಿ ಬಳಿ ಈಗ ದಿನೇಶ ಕಾಣಸಿಗುವುದೇ ಇಲ್ಲ. ಹಂದಿ ಬೇಟೆಗೋ, ರಾತ್ರಿ ಗದ್ದೆಗೆ ಬರುವ ಹಂದಿಗೆ ಕೋವಿ ಕಟ್ಟಲಿಕ್ಕೋ ತೋಟಕ್ಕೆ ನುಗ್ಗುವ ಕಾಟಿ, ಆನೆಗಳನ್ನು ಹೆದರಿಸಿ ಓಡಿಸಲೋ, ನೀರು ಬಿಡುವ ಪಂಪಿನ ಸಣ್ಣ ಪುಟ್ಟ ರೀಪೇರಿಗೋ, ಗದ್ದೆ ಹೂಡುವಾಗ ನೊಗ ತಪ್ಪಿಸಿ ಸರಿಯಾಗಿ ನಿಲ್ಲದ ಎತ್ತುಗಳನ್ನು ಪಳಗಿಸಲೋ, ಇನ್ನಾವುದಕ್ಕೋ ಬೇಕಾದರೆ ದಿನೇಶನನ್ನು ಹುಡುಕಿಕೊಂಡು ಎಲ್ಲರೂ ಮನೆಗೇ ಬರಬೇಕಾಗುತ್ತದೆ. ದಿನೇಶ ಯಾರು ಯಾವುದಕ್ಕೇ ಕರೆದರೂ ಈಗ ಹೋಗುತ್ತಿರಲಿಲ್ಲ. ಸುಮ್ಮನೆ ಏನಾದರೂ ನೆಪವೊಡ್ಡಿ ಗುಡ್ಡೆಗೆ ಹೋಗಿ ಮುಡ್ಕಣೆ ಹಾಕಿ ಕುಳಿತುಕೊಳ್ಳುತ್ತಿದ್ದ. ಆದರೆ ಯಾರಾದರೂ ಭಜನೆಗೆ ಕರೆದರೆ ಮಾತ್ರ ಯಾಗ ಎಲ್ಲಿಲು ಎಂದು ವಿಚಾರಿಸಿ ನೋಡೋಮೊ ಎನ್ನುತ್ತಿದ್ದ. ಆದರೆ ಭಜನೆಗೆ ಹೋಗದೇ ಎಲ್ಲೋ ತೋಟದಲ್ಲೋ, ಗುಡ್ಡೆಯಲ್ಲೋ ದಿನ ಕಳೆಯುತ್ತಿದ್ದ. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಅಮ್ಮನೇ ಹುಡುಕಿಕೊಂಡು ತೋಟಕ್ಕೆ ಹೋಗುವುದೂ ಇದೆ. ದಿನೇಶ ಈ ಬಗೆಯಲ್ಲಿ ಬದಲಾದದ್ದು ನೋಡಿ ಶೇಷಪ್ಪ ಗೌಡರಿಗೆ ಆಶ್ಚರ್ಯವಾಗಿತ್ತು! ದಿನಾ ಏನಾದರೊಂದು ಊರವರ ತಾಪತ್ರಯಗಳನ್ನು ಹಚ್ಚಿಕೊಂಡು ಪರದಾಡುವ ದಿನೇಶ ಇದ್ದಕ್ಕಿದ್ದಂತೆ ಎಲ್ಲ ಮರೆತವನಂತೆ ಇರುವುದು ಕಂಡು ಕೊಂಚ ಚಿಂತೆಗೀಡಾದರು. ದಿನೇಶ ಊಟ ಮಾಡ್ತ್‌ಲ್ಲೇನೆ…ಲು ಎಲ್ಲಿ ಹೋವುಟ್ಟು… ದಿನೇಶಲು ಎಂದು ಹೆಂಡತಿಯಲ್ಲಿ ವಿಚಾರಿಸುವಷ್ಟು ಮೃದುವಾಗಿದ್ದರು. +ಸುಹಾಸಿನಿ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಳು. ಗೆಳತಿಯರೆಲ್ಲ ತಮಾಷೆಗೆ ಸುಹಾಸಿನಿ ದೇವಿಯೆಂದೇ ಕರೆಯುತ್ತಿದ್ದರು. ಸುಹಾಸಿನಿ ಇತ್ತೀಚೆಗೆ ಏನೋ ಯೋಚಿಸುತ್ತಾ ಸುಮ್ಮನೆ ಕುಳಿತಿರುತ್ತಾಳೆ. ಕೆಲವೊಮ್ಮೆ ಕೆದರಿದ ಕೂದಲನ್ನೂ ಕಟ್ಟಿಕೊಳ್ಳಲು ನೆನಪಾಗದೆ ಎತ್ತಲೋ ದೃಷ್ಟಿನೆಟ್ಟು ಕುಳಿತವಳಿಗೆ ಯಾರಾದರೂ ಕರೆದಾಗಲೇ ಎಚ್ಚರವಾಗುವುದು. ಒಮ್ಮೊಮ್ಮೆ ಸುಮ್ಮನೆ ಕುಳಿತವಳು ಏನೂ ಆಗದಿದ್ದರೂ ಮೈಮೇಲೆ ಹಲ್ಲಿ ಬಿದ್ದವಳಂತೆ ಒಮ್ಮೆಗೆ ಬೆಚ್ಚಿ ಬೀಳುತ್ತಿದ್ದಳು. ಏನಾತ್ ನಿಂಗೆಲು ಎಂದು ಅಮ್ಮ ಕೇಳಿದರೆ ಊಂ… ಏನೂ ಇಲ್ಲೆ… ಎಂದು ಮತ್ತೆ ಮೇಲೆ ನೋಡುತ್ತಾ ಕುಳಿತ್ತಿರುತ್ತಿದ್ದಳು. ದಿನ ಇಡೀ.. ದೆವ್ವ ಹಿಡ್ದವರ್‍ಹಾಂಗೆ ಎಂತಕೆನೆ ಕುದ್ರುದು…ಲು ಎಂದು ಅಪ್ಪ ಆಗಾಗ ಆಕ್ಷೇಪಿಸಿದರೂ ಒಳಗೊಳಗೇ ಸಣ್ಣಗೆ ಕಳವಳ ಪಡುತ್ತಿದ್ದರು. +ಸುಹಾಸಿನಿಗೆ ಕಾಲೇಜಿನಲ್ಲಿ ಲೆಕ್ಚರ್ ಶಂಕರ್ ನಾಯಕ್‌ನೊಂದಿಗೆ ಗೆಳೆತನವಿರುವುದರ ಸಣ್ಣ ಸೂಚನೆ ಚೆನ್ನಪ್ಪ ಗೌಡರಿಗೆ ಸಿಕ್ಕಿ ತಲೆಬೇನೆ ಶುರುವಾಗಿತ್ತು. ಆದಷ್ಟು ಬೇಗನೆ ಸುಹಾಸಿನಿಯ ಮದುವೆ ಮಾಡುವ ಯೋಚನೆಯಲ್ಲಿದ್ದರು. ಗುಂಡ್ಯಡ್ಕ ಶೇಷಪ್ಪ ಗೌಡರ ಮಗ ನಾರಾಯಣ ಹೈಸ್ಕೂಲ್ ಉಪಾಧ್ಯಾಯನಾಗಿದ್ದು, ತಮ್ಮ ಹೆಮ್ಮನ ಬಳಿಗೂ ಶೇಷಪ್ಪ ಗೌಡರ ಬಂಗಾರ್ ಬಳಿಗೂ ಸರಿಹೊಂದುವುದರಿಂದ ಸುಹಾಸಿನಿಯನ್ನು ನಾರಾಯಣನಿಗೆ ಮದುವೆ ಮಾಡಿ ಕೊಡಲು ಚೆನ್ನಪ್ಪಗೌಡರು ಮೊದಲೇ ಯೋಚಿಸಿದ್ದರು. ಬಹಳ ಹಿಂದಿನಿಂದಲೇ ಗೊತ್ತಿರುವ ಒಳ್ಳೆ ಕುಳ, ಹತ್ತು ಹದಿನೈದು ಖಂಡಿ ಅಡಿಕೆ ಆಗುತ್ತದೆ, ರಬ್ಬರ್, ಬೀಜದಕೊಚ್ಚಿ, ಚಾಳೆ ಕೊಪ್ಪಳ, ಗದ್ದೆ ಬೇಸಾಯ ಎಲ್ಲಾ ಇದೆ; ಊರಲ್ಲೇ ಕೆಲಸ, ಮತ್ತೇನು ಬೇಕು ಆದರೆ ಸುಹಾಸಿನಿಯ ಅಮ್ಮ ಇಂದನಿ..; ಈ ಗೂಡೆಗೆ ಎಂತಾವುಟ್ಟೂಂತ… ಸುಮ್ಮ ಸುಮ್ಮಂಗೆ ಹನ್‌ಕಿ ಬೀಳ್ದು…ಅ ಎಂದು ಆತಂಕ ವ್ಯಕ್ತಪಡಿಸಿದ ಮೇಲೆ ಚೆನ್ನಪ್ಪ ಗೌಡರ ಓಡಾಟ, ಪರದಾಟ ಹೆಚ್ಚಾಗಿತ್ತು. ಗುಂಡ್ಯಡ್ಕ ಶೇಷಪ್ಪ ಗೌಡರು ಗೊತ್ತಿರುವವರೇ ಆದರೂ ಗೂಡೆ ನೋಡುವುದು, ಹೈದನ ಮನೆ ನೋಡುವುದು, ನೆಂಟರು ಬರುವ ಹೋಗುವ ಕ್ರಮ ಎಲ್ಲ ಆಗಬೇಕಲ್ಲ. ತಮ್ಮ ಕುಟುಂಬದ ಊರುಗೌಡರಾದ ಜೋತಿಷ್ಯ ಹೇಳುವ ಬೊಳಿಯಾರ್ ಗಂಗಣ್ಣನ ಮೂಲಕ ಪ್ರಸ್ತಾಪ ಕಳಿಸಿದರು. ಎಲ್ಲಾ… ಆದು ಅಲ್ಲೆ…ಅ ಆದರೆ… ಗೂಡೆಗೆ ಆಟ, ನಾಟಕಾಂತ.. ಒಸಿ ಮೊರ್ಲು ಉಟ್ಟಲ್ಲೆ…ಅಲು ಎಂದು ಶೇಷಪ್ಪ ಗೌಡರು ಬಾಯಲ್ಲಿದ್ದ ಎಲೆ ಅಡಿಕೆ ರಸ ಹೊರ ಚಿಮ್ಮದಂತೆ ಮುಖ ಮೇಲೆ ಮಾಡಿ ಕೆಳ ದವಡೆಯನ್ನು ಮುಂದಕ್ಕೆ ತಂದು ತಮ್ಮ ಅನುಮಾನದ ಸೂಕ್ಷ್ಮ ಕಾರಣ ಬಿಚ್ಚಿದರು. ಆದರೆ ಎಂಥವರನ್ನೂ ತನ್ನ ಮಾತಿನ ಜಾಲದಲ್ಲಿ ಸಿಕ್ಕಿಸಿ ಒಪುವಂತೆ ಮಾಡಬಲ್ಲ ಬೊಳಿಯಾರ್ ಗಂಗಣ್ಣನ ಜಾಣ್ಮೆಯಿಂದಾಗಿ ಶೇಷಪ್ಪ ಗೌಡರು ಕೊ&ಇಚಿಛಿuಣe;ಗಂತೂ ಪ್ರಸ್ತಾಪಕ್ಕೆ ಒಪ್ಪಿದರು. ಕೂಡಲೆ ಶೇಷಪ್ಪ ಗೌಡರ ಕಡೆಯಿಂದ ನೆಂಟರಿಷ್ಟರು ಬರುವುದು, ಚೆನ್ನಪ್ಪಗೌಡರ ಕಡೆಯಿಂದ ಹೋಗುವುದೂ, ಎಲ್ಲ ಗಡಿಬಿಡಿಯಲ್ಲೇ ಆಗಿ ವೀಳ್ಯಶಾಸ್ತ್ರಕ್ಕೆ ದಿನವೂ ನಿಗದಿಯಾಯಿತು. +ಆ ದಿನ ಸುಹಾಸಿನಿಯ ಮದುವೆ ವೀಳ್ಯಶಾಸ್ತ್ರ. ಗುಂಡ್ಯಡ್ಕ ಶೇಷಪ್ಪ ಗೌಡರು, ನಾರಾಯಣ, ಗಂಗಮ್ಮ, ಸೋದರ ಮಾವ ಕೂಟೇಲ್ ಲಿಂಗಪ್ಪಗೌಡರು, ಶೇಷಪ್ಪಗೌಡರ ಕಡೆಯ ಊರುಗೌಡರಾದ ನೀರ್ಕಜೆ ಸಾಂತಪ್ಪಗೌಡರು ಮತ್ತು ನೆಂಟರು ಎಲ್ಲಾ ಬಂದಿದ್ದರು. ಗಂಗಮ್ಮನವರ ಒತ್ತಾಯಕ್ಕೆ ದಿನೇಶನೂ ಬಂದಿದ್ದ. ಕಾಯರಡಿ ಚೆನ್ನಪ್ಪ ಗೌಡರ ಮನೆಯಲ್ಲಿ ಸಡಗರವೋ ಸಡಗರ. ನೆಂಟರಿಷ್ಟರೆಲ್ಲ ಬಂದಿದ್ದರು. ಅಡಿಗೆ ಕೋಣೆಯಿಂದ ಹೊರಟ ಪದ್ಂಜಿ ಪಾಯಸ, ಕೋಳಿಗೈಪಿನ ಪರಿಮಳ ಎಲ್ಲ ಕಡೆ ಹರಡಿ ಅಹ್ಲಾದಕರ ವಾತಾವರಣವುಂಟಾಗಿತ್ತು. ಕನ್ನೆಗಂಬದ ಅಡಿಯಲ್ಲಿ ಕೊಡಿ ಬಾಳೆಲೆಯಲ್ಲಿ ಅಕ್ಕಿ ತೆಂಗಿನಕಾಯಿ ಇಟ್ಟು ದೀಪ ಹಚ್ಚಿ ಗುರು ಕಾರ್ನೂರಿಗೆ ಕೈ ಮುಗಿದ ಮೇಲೆ ಚಾವಡಿಯಲ್ಲಿ ಇನ್ನೊಂದು ಕೊಡಿ ಬಾಳೆಲೆಯಲ್ಲಿ ಸೇರು ಬೆಳ್ತಿಗೆ ಅಕ್ಕಿಯ ಮೇಲೊಂದು ತೆಂಗಿನಕಾಯಿ, ಐದು ವೀಳ್ಯದೆಲೆಯ ಮೇಲೆ ಒಂದಡಿಕೆ ಇಟ್ಟು ಮಧ್ಯದಲ್ಲಿ ಕಾಲುದೀಪ ಉರಿಸಿ ಇನ್ನೊಂದು ತುಂಡು ಬಾಳೆಲೆಯಲ್ಲಿ ಗಂಧ ಪ್ರಸಾದ ಇರಿಸಿ ಸುತ್ತಲೂ ಚೌಕಾಕಾರವಾಗಿ ಹಾಸಿದ ಒಲಿ ಚಾಪೆಯಲ್ಲಿ ಎಲ್ಲರೂ ಕುಳಿತರು. ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರು ಪೂರ್ವ ಪಶ್ಚಿಮಕ್ಕೆ ಸರಿಯಾಗುವಂತೆ ಎದುರುಬದುರಾಗಿ ಕುಳಿತರು. ಉಳಿದವರು ಉತ್ತರ ದಕ್ಷಿಣಕ್ಕಾಗುವಂತೆ ಚಾಪೆಗಳಲ್ಲಿ ಎದುರುಬದುರಾಗಿ ಕುಳಿತರು. ಕಾಲುದೀಪಕ್ಕೆ ನಾಲ್ಕು ಅಕ್ಕಿ ಹಾಕಿ ನೆಲ, ಹಣೆ ಮುಟ್ಟಿ ಕೈಮುಗಿದ ಹುಡುಗನ ಕಡೆಯ ಊರುಗೌಡರಾದ ನೀರ್ಕಜೆ ಸಾಂತಪ್ಪಗೌಡರು ಮತ್ತು ಹುಡುಗಿ ಕಡೆಯ ಊರುಗೌಡರಾದ ಬೊಳಿಯಾರ್ ಗಂಗಣ್ಣ ಹೇಂಗೆ… ಇನ್ನ್ ಸುರು ಮಾಡಕ್ಕಲ್ಲ…ಲು ಎಂದು ಒಮ್ಮೆ ಸುತ್ತಲೂ ನೋಡಿ ಹತ್ತು ಕುಟುಂಬ ಹದಿನೆಂಟು ಗೋತ್ರ ಬಂಧು ಬಾಂಧವರೆಲ್ಲಾ ಸೇರಿ… ಇಂದ್ ಇಲ್ಲಿ ಗುರು ಕಾರ್ನೂರಿಗೆ ಇಸಿ… ಸುರುಮಾಡುವ ಶುಭಕಾರ್ಯ ಏನ್ಂತ ಹೇಳ್ರೆ… ಹೆಮ್ಮನ ಬಳಿಯ ಕಾಯರಡಿ ಮನೆ ಚೆನ್ನಪ್ಪಗೌಡ್ರ ಮೊಗುಳು ಸುಹಾಸಿನಿ ಗೂಡೆಗೂ… ಬಂಗಾರ್ ಬಳಿಯ ಗುಂಡ್ಯಡ್ಕ ಮನೆ ಶೇಷಪ್ಪಗೌಡರ ಮೊಂಙ ನಾರಾಯಣ ಹೈದಂಗೂ… ಮೊದುವೆ ಮಾಡ್ದೂಂತ… ಗುರು ಹಿರಿಯರಿದ್ದ್ ನಿಗಂಟ್ ಮಾಡ್ದ ವೀಳ್ಯ ಶಾಸ್ತ್ರಕ್ಕೆ ವೀಳ್ಯ ಎತ್ತುವೇಂತ ಹೇಳುವೇ… ಎಂದು ಒಂದೇ ಸ್ವರದಲ್ಲಿ ಹರಿವಾಣದಲ್ಲಿಟ್ಟ ಐದು ಕವಳಿಗೆ ವೀಳ್ಯದೆಲೆ ಐದಡಿಕೆಯನ್ನು ಎರಡು ಕೈಗಳಲ್ಲಿ ಎತ್ತಿ ಹಿಡಿದು ಗಟ್ಟಿಯಾಗಿ ಘೂಷಿಸಿದಾಗ ಎರಡೂ ಕಡೆಯವರು ದೇವರಪ್ಪಣೇಂತ ಹೇಳುವೇ… ಎಂದು ಒಕ್ಕೊರಲಿನಲ್ಲಿ ಒಪ್ಪಿಗೆ ಸೂಚಿಸಿದರು. ವೀಳ್ಯಶಾಸ್ತ್ರಕ್ಕೆ ಎಲ್ಲರ ಒಪ್ಪಿಗೆ ಪಡೆದ ಮೇಲೆ ಕಟ್ಟಲಿರುವ ಹನ್ನೆರಡು ವಿಧದ ವೀಳ್ಯದಲ್ಲಿ ಮೊದಲಿಗೆ ಹೆಣ್ಣು ಮಾತಾಡಿಸುವ ವೀಳ್ಯಕ್ಕೆ ಐದು ಕವಳಿಗೆ ವೀಳ್ಯ ಮತ್ತು ಐದಡಿಕೆ ಹರಿವಾಣದಲ್ಲಿಟ್ಟು ಶೇಷಪ್ಪಗೌಡರ ಕೈಯಲ್ಲಿ ಎತ್ತಿ ಹಿಡಿಸಿ ಊರುಗೌಡ ನೀರ್ಕಜೆ ಸಾಂತಪ್ಪಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರ ಬಂಧು ಬಾಂಧವರೆಲ್ಲ ಸೇರಿ… ಹೆಮ್ಮನ ಬಳಿಯ ಕಾಯರಡಿ ಮನೆ ಸುಹಾಸಿನೀಂತ ಹೇಳುವ ಗೂಡೆಗೂ… ಬಂಗಾರ್ ಬಳಿಯ ಗುಂಡ್ಯಡ್ಕ ಮನೆ ನಾರಾಯಣಾಂತ ಹೇಳುವ ಹೈದಂಗೂ… ಮೊದುವೆ ವಿಚಾರಲಿ… ಹೆಣ್ಣ್ ಮಾತಾಡ್ಸುವ ವೀಳ್ಯ ಕಟ್ಟುವೇಂತ ಹೇಳುವೇ… ಎಂದು ಹೇಳಿದಾಗ ಸಭೆಸರ್ವರೂ ಒಳ್ಳೇದ್ಂತ ಹೇಳುವೇ… ಎಂದು ಒಟ್ಟಿಗೆ ಸಮ್ಮತಿಸಿದರು. ಹೆಗಲಲ್ಲಿದ್ದ ಶಾಲನ್ನು ಮುಂದಕ್ಕೊಡ್ಡಿ ಬಗ್ಗಿ ಚೆನ್ನಪ್ಪಗೌಡರು ವೀಳ್ಯವನ್ನು ಸ್ವೀಕರಿಸಿ ದೀಪಕ್ಕೆ ಕೈಮುಗಿದರು. +ಹೀಗೆ ಬಳಿ ನಿರ್ಣಯದ ವೀಳ್ಯ, ಹೆಣ್ಣು ಒಪ್ಪಿಕೊಳ್ಳುವ ವೀಳ್ಯ, ಲಗ್ನ ನಿಶ್ಚಯದ ವೀಳ್ಯ, ದೇವರ ವೀಳ್ಯ ಕಟ್ಟಿ ಹಿರಿಯರ ವೀಳ್ಯ ಕಟ್ಟುವ ಗೌಜಿ ಗದ್ದಲದ ಖುಷಿಯಲ್ಲಿದ್ದಾಗಲೇ ತಿಳಿಹಸಿರಿನ ಸೀರೆಯುಟ್ಟು, ಎರಡೆಳೆ ಚಕ್ರಸರ, ಒಂದು ಪೆಂಡೆಂಟ್ ಚೈನ್, ಕಿವಿಗೆ ಹವಳದ ಜುಮ್‌ಕಿ ಹಾಕಿ, ಜಡೆ ತುಂಬ ಮಲ್ಲಿಗೆ ಮುಡಿದ ಸುಹಾಸಿನಿ ತಲೆಸುತ್ತು ಬಂದು ಬಿದ್ದುಬಿಟ್ಟಳು! ಗಡ ಗಡ ನಡುಗತೊಡಗಿದಳು! ಎಲ್ಲರೂ ಗಾಬರಿಗೊಂಡು ಯಾರಾರ್ ಡಾಕ್ಟ್ರ ಕರ್‍ಕಂಡ್ ಬನ್ನಿ… ಎಂದರು. ಚೆನ್ನಪ್ಪ ಗೌಡರು ಹೆಂಡತಿಯೊಂದಿಗೆ ಸುಹಾಸಿನಿ ಬೊಳ್ಪಿಗೆ ಎಂತ ತಿಂದುಟ್ಟು…ಲು ಎಂದು ಕೇಳಿ, ಮತ್ತೆ ಕಿವಿಯ ಸಮೀಪ ಬಾಯಿ ತಂದು ಯಾರಿಗೂ ಕೇಳಿಸದಂತೆ ಮೆಲುದನಿಯಲ್ಲಿ ಕಕ್ಕುದು ಮಿನಿ ಇತ್ತಾ…ಲು ಎಂದು ಗುಟ್ಟಾಗಿ ವಿಚಾರಿಸಿದರು. ಉಮ್ಮ…ಅ ಎಂದ ಅವರು ತುಟಿ ಜಗ್ಗಿಸಿ ಮುಖ ತಿರುಗಿಸಿದರು. ಎಂತರ ಮಾಡ್ದು ಈಗ…ಲು ಎಂಬ ಚಿಂತೆಯಲ್ಲಿ ಸುಹಾಸಿನಿಯನ್ನು ಉಪಚರಿಸುವುದನ್ನೂ ಮರೆತು ಸುಮ್ಮಗೆ ನೋಡುತ್ತಾ ನಿಂತ ಗೌಡರು ಬೆವರುತ್ತಾ ಮರಗಟ್ಟಿ ಹೋದರು! ಮಕ್ಕಳ ಬಾಲಗ್ರಹಕ್ಕೆ, ಬಾಣಂತಿಯರಿಗೆ, ಕೊಲೆ, ಪೀಡೆ ಬಾಧೆಗೆ ನೂಲು, ಭಸ್ಮ ಮಂತ್ರಿಸಿಕೊಡುವ ಜೋತಿಷ್ಯ, ಮಂತ್ರ, ತಂತ್ರ, ತಿಳಿದಿರುವ ಊರುಗೌಡರಾದ ಬೊಳಿಯಾರ್ ಗಂಗಣ್ಣ ಬೇಡ! ಬೇಡ… ಡಾಕ್ಟ್ರ್ ಎಂತಕ್ಕೆ ಇದ್ ದೇವಿ…ಅ ಇದಿಕ್ಕೆ ದೇವಿ ದರ್ಸನ ಬಂದುಟ್ಟು… ಖಂಡಿತಾ ಇದ್ ಅದೇ… ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿದರು. ಎಲ್ಲರೂ ಭಯಾಶ್ಚರ್ಯದಿಂದ ಅವಾಕ್ಕಾಗಿ ನಿಂತರು. ಹೌದು… ನೋಡ್ರೆ ಲಕ್ಷಣ ಹಾಂಗೇ ಉಟ್ಟು…ಅ ದೇವಿನೇ ಇರೊಕು…ಅ ಸೇರಿದ ಹತ್ತಿರದ ನೆಂಟರಲ್ಲಿ ಕೆಲವರು ಸಂಶಯಿಸಿದರು. ಏನು ಕಂಡರೋ ಊರುಗೌಡ ಗಂಗಣ್ಣನವರೇ ಸುಹಾಸಿನಿಯ ಎದುರು ಕೈ ಮುಗಿದು ನಿಂತರು. ದೇವಿ! ಎಂತಕ್ಕೆ ಬಂದದ್ ನೀ….ಅ ಏನಾಕು ನಮ್ಮಂದ…ಲು ನಡುಬಗ್ಗಿಸಿ ಭಯಭಕ್ತಿಯಿಂದ ಕೇಳಿದರು. ಜೋತಿಷ್ಯ, ಮಂತ್ರ, ಭಸ್ಮ, ಎಲ್ಲ ತಿಳಿದಿರುವ ಗಂಗಣ್ಣನೇ ಕೈಮುಗಿದದ್ದು ನೋಡಿ ಅಲ್ಲಿದ್ದವರೆಲ್ಲಾ ತಮಗರಿವಿಲ್ಲದೇ ಕೈಜೋಡಿಸಿ ನಿಂತರು. ಚೆನ್ನಪ್ಪಗೌಡರಿಗೆ ಈ ಅನಿರೀಕ್ಷಿತ ಬೆಳವಣಿಗೆಯಿಂದ ಆಶ್ಚರ್ಯ ಆತಂಕವಾದರೂ ಸದ್ಯ ಡಾಕ್ಟ್ರ್ ಬರುವುದು ತಪ್ಪಿತಲ್ಲಾ ಎಂದು ಕೊಂಚ ನಿರಾಳವಾಯಿತು. ಅಮ್ಮ ಮತ್ತೆ ಕೆಲ ಹೆಂಗಸರು ಸುಹಾಸಿನಿಯನ್ನು ಎತ್ತಿ ಹಿಡಿದು ಅಲ್ಲೆ ಗೋಡೆಗೆ ಒರಗಿಸಿ ಕುಳ್ಳಿರಿಸಿ ಮುಖಕ್ಕೆ ನೀರು ಚಿಮುಕಿಸಿದರು. ಸುಹಾಸಿನಿ ಮಿಸುಕಾಡಿದಳು. ಅರೆ ಎಚ್ಚರವಾದಂತಾಗಿ ನಂಗೆ ಮೈ ಹುಶಾರಿಲ್ಲೆ… ಎನ್ನಬೇಕೆಂದು ಬಾಯಿ ತೆರೆದು ಮೈ ಹುಶಾ…. ಎನ್ನುವಷ್ಟರಲ್ಲಿ ಮಧ್ಯದಲ್ಲೇ ಬಾಯಿ ಹಾಕಿದ ಅಂಬ್ರೋಟಿ ಗಿರಿಧರ… ಓಯ್… ವೆ&;ಂumಟ;ಶಾಸುರ…ಅ ಮೈಶಾಸುರನ ಕೇಳ್ತಾ ಉಟ್ಟು ದೇವಿ…ಅ ಎಂದ. ಹಾಂ.. ಸರಿಸರಿ… ಅಂದ್ ಆಟಲಿ ದೇವಿಗೆ ಮೈಶಾಸುರನ ಕೊಲ್ಲಿಕೆ ಆತ್‌ಲ್ಲೆಲ್ಲೋ… ಅದಿಕ್ಕೆ ಈಗ ಬಂದ್ ಮೈಶಾಸುರನ ಕೇಳ್ದು…ಅ ಹಾಂ… ಹೌದು… ಎಲ್ಲವೂ ದೂರ ನಿಲ್ಲಿ…ಅ ಎಂದು ಚಾಕೊಟೆ ದಾಮೋದರ ಬೊಬ್ಬಿಟ್ಟ. ಸೇರಿದ್ದ ಜನ ಎಲ್ಲಾ ಬೆವತು ಹೋದರು. ಹೌದು! ಸತ್ಯ! ಅಂದ್ ಮೈಶಾಸುರ ವೇಸ ಹಾಕಿದ ದಿನೇಶ ರಂಗಸ್ಥಳಕ್ಕೆ ಬಾತ್‌ಲ್ಲೆಲ್ಲಾ…ಅ ಹಾಂಗೆ ಈಗ ದೇವಿ ಇಲ್ಲಿ ಬಂದಿರೊಕು…ಅ ಎಂತ ಮಾಡ್ದು ಈಗ…ಲು ಒಬ್ಬರನ್ನೊಬ್ಬರು ಕೇಳಿಕೊಂಡರು. ನಾ ಅಂದೇ ಹೇಳ್ದೆ… ಈ ಆಟಂದಾಗಿ ಏನಾರ್ ಆದೇಂತ… ಈಗ ನೋಡಿ… ಎಂದು ಊರುಗೌಡ ಬೊಳಿಯಾರ್ ಗಂಗಣ್ಣ ಮೊದಲೇ ಭವಿಷ್ಯ ಹೇಳಿದವರಂತೆ ಬೀಗುತ್ತಾ ಸುತ್ತಲೂ ನೋಡಿದರು. ಯಾರೋ ಕಾಲುದೀಪವನ್ನು ತೆಗೆದು ಈಚೆಗಿಟ್ಟರು. ಇನ್ಯಾರೋ ಕುಂಕುಮ ತಂದಿಟ್ಟರು, ಮತ್ತೊಂದು ಕೊಡಿ ಬಾಳೆಲೆ, ದಾಸಾವಾಳ ಹೂ ಎಲ್ಲವೂ ಎಲ್ಲೆಲ್ಲಿಂದಲೋ ಬಂದು ಸೇರಿದವು. ಊದುಬತ್ತಿಯೂ ಬಂತು. ಒಟ್ಟಾರೆ ಕೆಲನಿಮಿಷದಲ್ಲೇ ವೀಳ್ಯಶಾಸ್ತ್ರದ ಕ್ರಮ ಹೋಗಿ ಅಲ್ಲೊಂದು ಪೂಜೆಯ ವಾತಾವರಣ ಉಂಟಾಯಿತು. ಎಲ್ಲರೂ ಭಯಭಕ್ತಿಯಿಂದ ಗಂಬಿರವಾಗಿ ಇದೊಂದು ಅನಾಹುತವೋ ಸಂಭ್ರಮವೋ ತಿಳಿಯದೆ ಉಸಿರು ಬಿಗಿ ಹಿಡಿದು ನಿಂತರು. ಬಂದ ಹೊಸ ನೆಂಟರೂ ಏನೂ ತೋಚದೆ ಎಲ್ಲರಂತೆ ಕೈ ಮುಗಿದು ನಿಂತರು. ಅಡಿಗೆ ಮಾಡುತ್ತಿದ್ದವರೂ ಕುತೂಹಲದಿಂದ ಎಲ್ಲಾ ಅಲ್ಲೇ ಬಿಟ್ಟು ಚಾವಡಿಗೆ ಬಂದು ಅಚ್ಚರಿಯಿಂದ ಕೈ ಮುಗಿದು ನಿಂತರು. +ದಿನೇಶನಿಗೆ ಭಯವಾಯಿತು! ನನ್ನಂದಾಗಿ ಸುಹಾಸಿನಿಗೆ ದೇವಿ ಮೈಗೆ ಹಿಡ್ಡುಟ್ಟೂಂತ ಎಲ್ಲೊವೂ ನಂಬಿಕೊಂಡೊಳೊ… ನಾ… ಇಲ್ಲಿ ನಿತ್ತರೆ ನಂಗೇನಾರ್ ಆಪತ್ತ್ ಬಾದು ಈಗ ಖಂಡಿತ… ಎಂದು ಯೋಚಿಸುತ್ತಿರಬೇಕಾದರೆ ಶೇಷಪ್ಪ ಗೌಡರು ಕೆಂಗಣ್ಣಿಂದ ದಿನೇಶನನ್ನೇ ಸುಟ್ಟುಬಿಡುವವರಂತೆ ನೋಡುತ್ತಿದ್ದರು. ಎಲ್ಲಾ ಆದ್ದ್ ಈ ದಿನೇಶಂದಾಗಿ … ಎಂದು ಮಾರಡ್ಕ ಶಿವರಾಮ ತನ್ನ ಅಸಹನೆ ಹೊರಗೆಡಹಿದ. ಎಲ್ಲರೂ ಒಮ್ಮೆ ದಿನೇಶನನ್ನೂ ಒಮ್ಮೆ ಸುಹಾಸಿನಿಯನ್ನೂ ನೋಡತೊಡಗಿದರು. bಅ ನಾ ಇಲ್ಲಿಗೆ ಬಂದದೇ ತೊಪ್ಪಾತ್ ಎಂದು ಯೋಚಿಸಿದ ದಿನೇಶ ಮೆಲ್ಲ ಮೆಲ್ಲನೆ ಹಿಂದೆ ಸರಿಯತೊಡಗಿದ. ಅಡಿಗೆ ಕೋಣೆಯಿಂದ ಪಾಯಸವೋ, ಪಲ್ಯವೋ, ಕೋಳಿಗೈಪೋ, ಯಾವುದೋ ಒಂದು ಬಗೆ ಕರಟಿದ ಹೊಗೆ ವಾಸನೆ ಎಲ್ಲ ಕಡೆ ಹರಡಿತು. ಎಲ್ಲ… ಅಡಿಹಿಡ್ದ್ ಹೋತ್… ಎಂದು ಯಾರೋ ಕೂಗಿದರು. ಎಲ್ಲರೂ ಸುಹಾಸಿನಿಯನ್ನೇ ಭಯಭಕ್ತಿಯಿಂದ ನೋಡುತ್ತಿದ್ದಂತೆ ಭಜನೆ ದಿನೇಶ ಎಲ್ಲರಿಂದ ಹಿಂದೆ ಸರಿದು ಅಂಗಳಕ್ಕೆ ಬಂದ. ಅಂಗಳದ ಮೂಲೆಯ ಬಸಲೆ ದೊಂಪದ ಬಳಿ ಕೋಳಿ ಸಜ್ಜಿ ಮಾಡಿ ಎಸೆದ ಪೊಟ್ಟೆರಾಶಿಗೆ ಮೂರ್‍ನಾಲ್ಕು ನಾಯಿಗಳು ಎಳೆದಾಡಿ ಜಗಳಾಡುತ್ತಿದ್ದವು. ಅಲ್ಲೇ ಇದ್ದ ಕೂಂದ್ರಿ ಚಾಳೆ ಮಡಲಿನ ಮೇಲೆ ಕುಳಿತ ಏಳೆಂಟು ಕಾಗೆಗಳು ಖಾ… ಖ್ರಾ… ಎನ್ನುತ್ತಾ ಆಗಾಗ ಕೆಳಕ್ಕೆ ಬಾಣದಂತೆ ಎರಗಿ ಪೊಟ್ಟೆಯನ್ನು ಕಚ್ಚಿ ಎತ್ತಿಕೊಂಡು ಹೋಗಲು ಹವಣಿಸುತ್ತಿದ್ದವು. ರೋಮಕಂಟ ಬೆಕ್ಕೊಂದು ಒಳ್ಳೆಯ ಅವಕಾಶಕ್ಕಾಗಿ ಹೊಂಚು ಹಾಕಿ ಕಾಯುತ್ತಾ ದೂರದಲ್ಲಿ ಕುಳಿತಿತ್ತು. ಹೆದರಿ ಕಂಗೆಟ್ಟ ದಿನೇಶ ಬೇಲಿ ಹಾರಿ ಮಣ್ಣಿನ ಮಾರ್ಗದಲ್ಲಿ ಹಿಂದೆ ತಿರುಗದೆ ಓಡಿದ. ಮನೆಗೆ ಹೋಗಲು ಮನಸ್ಸಾಗದೆ ದನಗಳನ್ನು ಮೇಯಲು ಗುಡ್ಡೆಗೆ ಅಟ್ಟುವ ಹಾದಿಯಲ್ಲಿ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಓಡತೊಡಗಿದ. +ಕೆಲವು ಶಬ್ದಗಳ ಅರ್ಥ +ಉದ್‌ಗಿಲ್: ಬದಿಗೆ ಸರಿಸಲು ಸಾಧ್ಯವಿರುವ ಸಪೂರ ಕೋಲುಗಳ ಗೇಟಿನಂಥ ತಡೆ; +ಕೊಟಗೆ: ಕೊಟ್ಟಿಗೆ; +ದಳಿ: ದೊಡ್ಡ ಕಿಟಕಿಯ ಪಟ್ಟಿ; +ಮೊಂದ್ರಿ: ಹೊದಿಕೆ/ಚಾಪೆ; +ಒಲ್ಲಿ: ತೆಳು ಹೊದಿಕೆ; +ಚೌಕಿ: ಗ್ರೀನ್ ರೂಂ; +ಆಟ: ಯಕ್ಷಗಾನ ಆಟ; +ಮಿನಿ: ಏನಾದರೂ; +ಬಾತಾ: ಬಂದನೋ; +ಕೋಂಬ್ಳೆ: ಮುದ್ದಿನ ಕೂಸು; +ದಂಡಿಗೆ: ಯುದ್ಧಕ್ಕೆ; +ಮಂಙ: ಮಗ; +ನೇಕೆ: ಬಟ್ಟೆ ನೇತು ಹಾಕುವ ಹಗ್ಗ; +ಮಳಂಕಣಿ: ಅಂಗಾತ; +ಬೆಳ್ಜರ್: ಬೆಳಿಗ್ಗೆ; +ಸಪೇದ್: ಬಿಳಿ ಬಣ್ಣ; +ಇಂಗ್ಲೀಕ: ಕೆಂಪು; +ಬಾಲುಮುಂಡು: ಲಂಗ; +ದಗಲೆ: ಅಂಗಿಯಂತಹ ಉಡುಗೆ; +ಜಟ್ಟಿ : ಸೊಂಟ ಪಟ್ಟಿ; +ಸೋಗಲಿ: ಶಾಲು; +ಅಗಲಡ್ಡಿಗೆ: ಅಗಲ ಹಾರ; +ಸಪೂರಡ್ಡಿಗೆ: ಸಪೂರ ಹಾರ; +ದೊಂದಿ: ಕೊಳ್ಳಿ/ದೀಟಿಗೆ; +ಓಡಾರಿ: ಕುಂಬಾರ; +ಅಳಗೆ: ಮಣ್ಣಿನ ಪಾತ್ರೆ; +ನೆಸಲೆ: ಮಣ್ಣಿನ ಅಗಲವಾದ ಪಾತ್ರೆ; +ಬಾವ ಸಮಯ: ಬರುವ ಸಮಯ; +ಮೊಲ್‌ಗಕ್: ಮಲಗಬಹುದು; +ಲಾಟಾನನ್ನು: ಲಾಟೀನನ್ನು; +ಕಂಗಿನ: ಅಡಿಕೆ ಮರದ; +ಕುಬೆ: ಅಡಿಕೆ ಮರದ ತುದಿ; +ಮುಡ್ಕಣೆ: ಹಕ್ಕಿ ಹಿಡಿಯಲು ಮಾಡುವ ಒಂದು ಬಗೆಯ ತಂತ್ರ; +ಅಡ್ಂಚಿಲ್: ಮೊಲದಂತ ಚಿಕ್ಕ ಪ್ರಾಣಿಗಳನ್ನು ಹಿಡಿಯುವ ಇನ್ನೊಂದು ಬಗೆಯ ತಂತ್ರ; +ಕಳ್ಕಿಕಂಡ್: ಆರ್ಭಟಿಸುತ್ತಾ; +ಕೊಣ್ಕಂಡ್: ಕುಣಿದುಕೊಂಡು; +ನೋಡೋಮೊ: ನೋಡೋಣ; +ಬಾದು: ಬರುವುದು; +ಕುದ್ರುದು: ಕುಳಿತುಕೊಳ್ಳುವುದು; +ಎಂತಕೆನೆ: ಯಾಕೆ ಕಣೆ; +ವೀಳ್ಯಶಾಸ್ತ್ರ: ಮದುವೆ ನಿಶ್ಚಿತಾರ್ಥ; +ಊರು ಗೌಡ: ಮನೆತನದ ಮದುವೆ, ಬೊಜ್ಜ, ಎಲ್ಲಾ ಕಾರ್ಯಗಳನ್ನು ಪೂಜಾರಿಯಂತೆ ನಿರ್ವಹಿಸಿಕೊಡುವ ಗೌರವಾನ್ವಿತ ಮುಂದಾಳು; +ಬಳಿ: ಗೋತ್ರ; +ಗುರು ಕಾರ್ನೂರು: ಗುರು ಹಿರಿಯರು; +ಕನ್ನೆಗಂಬ: ಶಿವಲಿಂಗ; +ನಿಗಂಟ್: ನಿಶ್ಚಯ; +ಕವಳಿಗೆ: ಇಪ್ಪತ್ತೈದು ವೀಳ್ಯದೆಲೆಗಳಿರುವ ಒಂದು ಕಟ್ಟು; +ಮೊರ್ಲು: ಹುಚ್ಚು; +ಬೀಜದಕೊಚ್ಚಿ: ಗೇರುತೋಟ; +ಚಾಳೆ ಕೊಪ್ಪಳ: ತೆಂಗಿನ ತೋಟ; +ಇಂದನಿ: ಇವರೇ; +ಇಸಿ: ಇಟ್ಟು; +ದೊಂಪ: ಚಪ್ಪರ; +ಪದ್ಂಜಿ: ಹೆಸರು ಬೇಳೆ; +ಕೋಳಿಗೈಪು: ಕೋಳಿ ಪದಾರ್ಥ; +ರೋಮಕಂಟ: ರೋಮಭರಿತ; +ಅಡಿಹಿಡ್ದ್: ಸೀದು; +ಉಟ್ಟು: ಉಂಟು; +ಹನ್‌ಕಿ: ಬೆಚ್ಚಿ; +ಕಕ್ಕುದ: ವಾಂತಿ; +ಸಜ್ಜಿ: ಹದ ಮಾಡುವುದು; +ಪೊಟ್ಟೆ: ಕೋಳಿಯ ಕರುಳು; +ಕೂಂದ್ರಿ ಚಾಳೆ: ಗಿಡ್ಡ ಜಾತಿಯ ತೆಂಗಿನ ಗಿಡ +***** +ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು […] +ನೀವು ಕಾಣದ ನಾಳೆಗಳಲ್ಲಿ… ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ. […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_245.txt b/Kannada Sahitya/article_245.txt new file mode 100644 index 0000000000000000000000000000000000000000..6302f72406ad0fe27377e6d64b8aa124dcd6725f --- /dev/null +++ b/Kannada Sahitya/article_245.txt @@ -0,0 +1,24 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-ಬರ್ಟೋಲ್ಟ್ ಬ್ರೆಕ್ಟ್ +ಅನಿವಾರ್ಯ ಎಂದು ನಾವು ಭಾವಿಸುವ ಈ ಮಹಾಮಹಿಮ ಕುಪಿತನಾದರೆ +ಎರಡು ಸಾಮ್ರಾಜ್ಯಗಳು ತಲ್ಲಣಿಸುತ್ತವೆ +ಈ ಅನಿವಾರ್ಯ ಮನುಷ್ಯ ಅಕಸ್ಮಾತ್ ಸತ್ತೇಬಿಟ್ಟ ಎನ್ನಿ +ಕೂಸಿಗೆ ಮೊಲೆಯಲ್ಲೆ ಹಾಲಿಲ್ಲದ ತಾಯಿ ದಿಕ್ಕೆಟ್ಟಂತೆ +ಪ್ರಪಂಚವೇ ದಿಕ್ಕೆಡುತ್ತದೆ +ಸತ್ತಮೇಲೆ ಈ ಅನಿವಾರ್ಯ ಮನುಷ್ಯ +ಒಂದೇ ಒಂದು ವಾರದ ನಂತರ ಹಿಂದಕ್ಕೆ ಬಂದ +ಎಂದು ಊಹಿಸಿಕೊಳ್ಳಿ-ಆಗ? +ಇಡೀ ನಾಡಿನಲ್ಲಿ ಅವನಿಗೆ ಒಂದು ಕಾವಲುಗಾರನ ಕೆಲಸವೂ ಸಿಗಲ್ಲ +***** +ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] +ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […] +೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_246.txt b/Kannada Sahitya/article_246.txt new file mode 100644 index 0000000000000000000000000000000000000000..9aca91a13ca93721c073584e4c1812cf1ffca38c --- /dev/null +++ b/Kannada Sahitya/article_246.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. +‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ ಫಿಲಂ ಹೀರೋ ಎನ್ನಿ ಅದೂ ಒಂದು ಬಗೆಯ ಕಥೆಯಾದಾಗ ಒಪ್ಪಬಹುದು. ಆದರೆ ಥ್ರಿಲ್ಲರ್‍ ಮಂಜು ನಿರ್ಮಾಪಕನಾದ ನಿರ್ದೇಶಕನಾದ-ನಾಯಕನಾದ ಖಳನಾಯಕನಾದ. ೨೦೦೧ರಲ್ಲಿ ಕನ್ನಡ ಕವಿಯೂ ಆದ ಎಂದಾಗ ಕನ್ನಡಮ್ಮ ಕಕ್ಕಾಬಿಕ್ಕಿಯಾಗಿ ಕಣ್ಣೀರಿಟ್ಟಳಂತೆ. ಥ್ರಿಲ್ಲರ್‍ ಮಂಜು ಕೈಲಿ ‘ಉತ್ಸವ’ ಎಂದು ಹೇಳಿಸಲು ವಿಲಿವಿಲಿ ಒದ್ದಾಡಿದ ವ್ಯಕ್ತಿ ‘ಉಸ್ತವ’ ಎಂದು ಕೇಳಿ ಕೇಳಿ ಸಾಕಾಗಿ ಅವರ ನಾಲಿಗೆ ಅರ ಹಾಕಿ ಉಜ್ಜಿ – ಫಿನೈಲ್ ಹಾಕಿ ತೊಳೆಸುವುದೆಂದು ಅಂತಿಮವಾಗಿ ತೀರ್ಮಾನಿಸಿದನಂತೆ. +ಅದೇ ರೀತಿ ‘ಮೈಕೆಲ್ ಜಾಕ್ಸನ್’ ಎಂದು ಹೇಳ ಹೋದ ಥ್ರಿಲ್ಲರ್‍ ಮಂಜು ‘ಮೈಕಲ್ ಜಾಸ್‌ಕನ್’ ಅಂದುದನ್ನು ಕಂಡು ‘ಕವಿಯಾಗುವ ಕನಸು’ಹೊತ್ತ ಮೇಲೆ ‘ಇಂಥವೆಲ್ಲ ರಿಪೇರಿ ಮಾಡಿಕೊಳ್ಳಲೇಬೇಕು ಎಂದು ಬಹುಮಂದಿ ಅವರ ಕಿವಿ ಹಿಂಡಿದರಂತೆ. ಆದರೆ ಥ್ರಿಲ್ಲರ್‍ ಮಂಜುಗೆ ತನ್ನದೇ ಆದ ಪಟ್ಟಾಲಂ ಇದೆ. ಅವರೆಲ್ಲ “ಗುರುವೆ-ಸಖತ್ತಾಗಿ ಬರ್‍ದಿದಿ ಗುರು ಸಾಯಿತ್ಯ. ಥತ್ ಇವ್ನಯ್ಯನ್ ಇದನ್ನ ಚೆನ್ನಾಗಿಲ್ಲ ಅನ್ನೋ ಗಾಂಡೂ ನನ್ಮಗ ಯಾರು ಗುರುವೆ? ನೀವು ಸುಮ್ನೆ ಹಾಡು ಬರೆದು ಉಪ್ಪಿ ಕೈಲಿ ಹಾಡ್ಸು ಗುರೂ…. ನಾ ಮುಂದು…. ತಾ ಮುಂದು ಅಂತ ಕ್ಯಸೆಟ್ ಕೊಳ್ಳೋಕೆ ಕಂಪನಿಗಳೋರು ಓಡೋಡಿ ಬರ್‍ತಾರೆ” ಅಂತ ಶಿಷ್ಯವೃಂದ ಹೇಳಿದ್ದೇ ತಡ, ಥ್ರಿಲ್ಲರ್‍ ಮಂಜು ನಿಜಕ್ಕೂ ಥ್ರಿಲ್ ಆಗಿ -ಬರೆಯ ಕೂತೇ ಬಿಟ್ಟರು ಪೆನ್ ಹಿಡಿದು. +ಗುರುವರೇಣ್ಯ ಕನ್ನಡ ಪದಗಳಿಗೆ ಬೇಟೆ ಆಡುತ್ತಿದ್ದಾಗ ಮಂಜು ಭಕ್ತಾದಿಗಳು ಪಾನಕ-ಪರಿಹಾರ ಸೇವಿಸಿ ನಮ್ಮ ‘ಥ್ರಿಲ್ಲರ್‍ ಮಂಜೂನ ಕವಿ ಮಾಡೇ ತಾಯಿ’ ಎಂದು ಕನ್ನಡ ರಾಜರಾಜೇಶ್ವರಿಯನ್ನು ಭಜನೆ ಮಾಡತೊಡಗಿದರು. +ಇವರ ಆರ್ತನಾದ ಕನ್ನಡ ರಾಜರಾಜೇಶ್ವರಿಗೆ ತಟ್ಟಿತು ಎಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆಕೆ ಬಿಕ್ಕಿಬಿಕ್ಕಿ ಅಳ ತೊಡಗಿದಳು. +“ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕನ್ನಡ ನಾಡು ಎಂಬುದು ನನಗೆ ಹೆಮ್ಮೆ. ದ.ರಾ.ಬೇಂದ್ರೆ, ಕುವೆಂಪು, ತೀನಂಶ್ರೀ, ಬಿಎಂಶ್ರೀ, ವೀಸಿ, ಮಾಸ್ತಿ, ವಿ.ಕೃ.ಗೋಕಾಕ್ ಮುಂತಾದವರೆಲ್ಲ ಕನ್ನಡದ ಕೀರ್ತಿ ಬೆಳಗಿದರು. ಅವರಿಂದ ಸ್ಫೂರ್ತಿಗೊಂಡ ಕಣಗಾಲ ಪ್ರಭಾಕರಶಾಸ್ತ್ರಿ, ಕುರಾಸಿ, ಹುಣಸೂರು ಕೃಷ್ಣಮೂರ್ತಿ, ಚಿ. ಉದಯಶಂಕರ್‍ ಮುಂತಾದವರು ಸಿನಿಮಾ ಹಾಡುಗಳಿಗೆ ಸಾಹಿತ್ಯದ ಮೌಲ್ಯ ಬರುವಂತೆ ಮಾಡಿದರು. ಆ ನಂತರ ಹಂಸಲೇಖಾ ಹೊಸ ಟ್ರೆಂಡ್ ಆರಂಭಿಸಿ ಆಡುಮಾತನ್ನು ‘ಹಾಡು ಮಾತು’ ಮಾಡಿದರು. ಅವರ ದಾರಿಯಲ್ಲೇ ನಡೆದರು ಕಲ್ಯಾಣ್ ಮುಂತಾದವರು. ಅನಂತರ ರವಿಚಂದ್ರನ್ ತಾವೇ ಸಂಗೀತ ನಿರ್ದೇಶನವೂ ಮಾಡಿ, ಸಾಹಿತ್ಯವೂ ಬರೆಯಲಾರಂಭಿಸಿದರು. ಕನ್ನಡಿಗನೆಂಬ ನಿಸ್ಸಹಾಯಕ ಪ್ರೇಕ್ಷಕ ಇವೆಲ್ಲ ಸಹಿಸಿಕೊಳ್ಳಬೇಕಾದದ್ದು ಅನಿವಾರ್ಯ. +ಹೀಗಾದಾಗ ಕಳ್ಳ ಬೆಕ್ಕಿನಂತೆ ಹೊಂಚುಕಾದು ದಿಡೀರ್‍ ಕವಿಗಳಾಗುತ್ತಾರೆ ಥ್ರಿಲ್ಲರ್‍ ಮಂಜು ಅಂಥವರು. ‘ಶಬ್ದ’ ಚಿತ್ರಕ್ಕಾಗಿ ಅವರ ಮಹಾನ್ ಕವಿತೆ ಸಾಲುಗಳು ಹುಟ್ಟಿದ್ದೂ ಹೀಗೆ. +“ಹುಬ್ಬಳ್ಳಿ ಹುಡುಗಿ ನೀನು-ನನ್ನ ಧಾರವಾಡದ ಚೆಲುವಿ ನೀನು” ಹೀಗೆ ಒಂದಾಗುತ್ತಲೊಂದು ಐದು ಹಾಡುಗಳು ತೊಪ ತೊಪ ಉದುರಿದವು ಸಗಣಿಯಂತೆ. ತಕ್ಷಣ ಎಂ.ಎಸ್. ಕೃಪಾಕರ್‍ ಬಿಟ್ಟರೆ ಅವಕಾಶ ತಪ್ಪೀತೆಂದು ಸರಸರ ಟ್ಯೂನ್ ಹಾಕೇ ಬಿಟ್ಟರು. ಮಂಜು ಭಕ್ತಾದಿಗಳು ಟ್ಯೂನ್ ಕೇಳಿ ‘ಟಪ್ಪಾಂಗುಚ್ಚಿ’ ಕುಣಿತ ಕುಣಿದು ಸುಸ್ತಾದರು. +ಈ ಕುಣಿತದ ಅಬ್ಬರ ಕಂಡು ಉಪೇಂದ್ರ ಬಂದವರೇ ಹೆಚ್‌ ಟು ಓ ಪ್ಲೀಸ್ ಎಂದ. ಥ್ರಿಲ್ಲರ್‍ ಮಂಜು ಬಿಸಿಲೇರಿ ಬಾಟಲಲ್ಲಿ ಬೇಕಾದ ಪಾನಕ ಪರಿಹಾರ ತರಿಸಿದ ನಂತರ-ಥ್ರಿಲ್ಲರ್‍ ಮಂಜು “ಮೈಡಿಯರ್‍ ಉಪ್ಪಿ” ಶಬ್ದ ಚಿತ್ರಕ್ಕೆ ಒಂದು ಹಾಡು ನೀವು ಹಾಡಲೇ ಬೇಕು ಎಂದಾಗ “ನಿಂಗೆ ಇಲ್ಲ ಅಂತೀನಾ ಹಾಡು ಕೊಡಲಾ” ಎಂದದ್ದೇ ತಡ-ಮುಂಚೆ ಕವಿಗೆ ಕಿವಿಯಾದರು. ಅನಂತರ ತಾವೇ ಹಾಡಿ ಹಾರೈಸಿದರು. +“ನಾನೇ ಈ ಐದು ಆಡು ಬರೆದಿವ್ನಿ. ತಪ್ಪೇನೇನಾ ಅದಾ – ಓದಿ ಒಸಿ ಎಂಗದೆ ಅಂಗನ್ನಿ” ಎಂದ ಮಂಜು. +ತಕ್ಷಣ ಉಪ್ಪಿ ತನ್ನ ಗಾಯನದಿಂದ “ಒಬ್ಬನ ಬದುಕು ಉದ್ಧಾರವಾಗುವುದಾದರೆ ಆಗಲಿ, ಆ ಕ್ಯಾಸೆಟ್ಟು ತನ್ನ ಹಾಡಿನಿಂದ ಲಕ್ಷ-ಲಕ್ಷಕ್ಕೆ ಸೇಲ್ ಆಗುವುದಾದರೆ ಗ್ರಾಂಡ್ ಎಂದು ಈಗ ನಾನು ಗಾಯಕ ಮಾತ್ರ ಅಲ್ಲ, ವಿಮರ್ಶಕ ಸಹಾ ಎಂದು ತನಗೆ ತಾನೇ ಬೆನ್ನು ತಟ್ಟಿಕೊಂಡು ಅಭಿಪ್ರಾಯ ಬರೆಯ ತೊಡಗಿದರು ಉಪ್ಪಿ. +“ಹೌದು ಈ ಉಪ್ಪಿ ಮನಸ್ಸಿಗೆ ಫಿಲ್ಟರ್‍ ಇಲ್ಲದ ಉಪ್ಪಿ. ನಿರ್ಮಾಪಕ-ನಾಯಕ ನಿರ್ದೇಶಕ ಮಾತ್ರ ಅಲ್ಲ ಗಾಯಕನೂ ಹೌದು ವಿಮರ್ಶಕನೂ ಹೌದು. ನಮ್ಮ ಥ್ರಿಲ್ಲರ್‍ ಮಂಜೂನ ನೋಡಿ ನಂಗೆ ಎಷ್ಟು ಹೊಟ್ಟೆಕಿಚ್ಚು ಆಗುತ್ತೆ ಗೊತ್ತಾ. +ದ.ರಾ.ಬೇಂದ್ರೇನ, ಕುವೆಂಪೂನ ಮೀರಿಸ್ತಾನ್ರಿ ಥ್ರಿಲ್ಲರ್‍ ಮಂಜು…. ಹುಬ್ಬಳ್ಳಿ ಹುಡುಗಿ ನೀನು – ನನ್ನ ಧಾರವಾಡದ ಚೆಲುವಿ ನೀನು ಅಂಥ ಅದ್ಭುತವಾದ ಸಾಲು ಬರೆದಿದ್ದಾನೆ ನೋಡಿ ಥ್ರಿಲ್ಲರ್‍…. ಇವನ ಐದು ಕವಿತೆಗಳು ಓದಿದ ಮೇಲೆ ಯಾವ ವಿಮರ್ಶಕನಿಗೇನೂ ಕಮ್ಮಿ ಇಲ್ಲ. ಚಿನ್ನದ-ವಜ್ರದ ಕಿರೀಟದ ಕಲ್ಚರ್‍ ಶುರು ಆಗಿರೋದೇ ನನ್ನಿಂದ. ನಾನೇನಾದ್ರೂ ಈಗ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ನಿಲ್ತೀನಿ ಅಂದ್ರೆ ಚಂದ್ರಶೇಖರ್‍ ಪಾಟೀಲ್ ಪುನರೂರು ಎಲ್ಲ ಚಿಂದಿ ಚಿಂದಿ ಎದ್ದೋಗ್ತಾರೆ. ನಾನೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗೋದು ಗ್ಯಾರಂಟಿ. ಆದರೆ ನನಗೆ ‘ನಾನು’ ಅನ್ನೋದ್ರಲ್ಲಿ ನಂಬಿಕೆ ಇಲ್ಲ. ಅದಕ್ಕೆ ಈಗ ಎಲ್ಲ ಕಡೆ ನನ್ನ ಶಿಷ್ಯರನ್ನು ನಾನೇ ಬೆಳಸ್ತಿದೀನಿ…. ‘ಸ್ಟಾರ್ಟ್’ ಹೇಳೋನೂ ನಾನು-ಕಟ್ ಹೇಳೋರು ನನ್ನ ಶಿಷ್ಯರು. +ಹೆಚ್‌ಟುಓ ಹಾಲಿವುಡ್ ಎಲ್ಲ ಈ ಲೈನ್‌ನಲ್ಲೇ ನಡೀತಿದೆ. +ಈ ಶಿಷ್ಯರ ಪಟ್ಟೀಲಿ ನಮ್ಮ ಥ್ರಿಲ್ಲರ್‍ ಮಂಜು ಸಹ ಒಬ್ಬ. ಸ್ವಲ್ಪ ವ್ಯಾಕರಣ ತಿದ್‌ಕೊಂಡ್ರೆ, ಕವಿತಾ ಸಂಕಲನಗಳನ್ನೆಲ್ಲಾ ತಂದಿಟ್ಕೊಂಡು ಅಲ್ಲಿಂದ ಇಲ್ಲಿಂದ ಗೊತ್ತಾಗದ ಹಾಗೆ ಸಾಲುಗಳು ಕದಿಯೋದು ಹ್ಯಾಗೆ ಎಂದು ಕಲಿತುಬಿಟ್ರೆ ಮುಂದಿನ ಸಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅವನೇ. ಅವನು ಅಧ್ಯಕ್ಷನಾದ್ರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಮೇಲೆ ನಾನೇ. ಆಗ ನೋಡ್ರಪ್ಪ ಭಕ್ತಾದಿಗಳು. ಲಕ್ಷಾಂತರ ಜಮಾಯಿಸಿ ದಾವಣಗೆರೆಯ ಅಂಬಿ ಫಂಕ್ಷನ್‌ನೂ ಮೀರಿಸಿ ಗಿನ್ನೆಸ್ ರೆಕಾರ್ಡ್ ಸಾಧ್ಯ ಮಾಡ್ತೀವಿ. ಆಗ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಫಿಲಂ ಸ್ಟಾರ್‍ಸ್ ಕಟೌಟ್ಸ್…. ಆ ಅಂಥ ದಿನ ಬರುವ ಮುನ್ಸೂಚನೆ ಈಗ ಜೋರಿನಿಂದ ನಡೆದಿದೆ. +***** +(೮-೬-೨೦೦೧) +ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […] +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […] +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_247.txt b/Kannada Sahitya/article_247.txt new file mode 100644 index 0000000000000000000000000000000000000000..6c9272dacbeed648753a8ebaabd149cdff72e621 --- /dev/null +++ b/Kannada Sahitya/article_247.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೊತ್ತಾರೆಯ ಮಂಜಿನಲ್ಲಿ +ಹೂ ತಳೆದ ಪಿಚಕಾರಿಯ ಮರ +ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ +ಬಿಳಿ ನಾಯಿ ಮರಿಯ ಥರ. +***** +ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. ***** +History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. ***** +ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_248.txt b/Kannada Sahitya/article_248.txt new file mode 100644 index 0000000000000000000000000000000000000000..656514763709c791275c3c14f4f524ca78c997ef --- /dev/null +++ b/Kannada Sahitya/article_248.txt @@ -0,0 +1,72 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ ಆ ಠಕ್ಕರ ಜೊತೆಯಲ್ಲಿ ಬಿಟ್ಟುಬಂದೆಯಾ?” ಎಂದು, ಅಪ್ಪ ತೀರ ಕೆಳದನಿಯಲ್ಲಿ ಕೇಳಿದ ಪ್ರಶ್ನೆಯೊಳಗೆ ಮೂಡಿದ ಅಸಮಾಧಾನ ಅವಳನ್ನು ತಟ್ಟದೇ ಇರಲಿಲ್ಲ. ಅಪ್ಪನ ಕೋಣೆಯ ಹೊಸಲಲ್ಲಿ ಕಾಣಿಸಿಕೊಂಡ ಅವಳನ್ನು ಅಮ್ಮನೇ ಸನ್ನೆ ಮಾಡಿ ಒಳಗೇ ಕರೆಸಿಕೊಂಡು, “ಇದೆಂತಹ ಉತಾವಳಿಯ ಕೆಲಸ ಮಾಡಿ ಕೂತಿದ್ದೀ! ಈಗ ಬಂದವರು ಝೋಪಡಪಟ್ಟಿಗಳ ಒಡೆಯರಿಗೆ ಸಂಬಂಧಪಟ್ಟ ಜನವಿರಬಹುದಂತೆ. ಒಬ್ಬರೂ ಅಪ್ಪನ ಪರಿಚಯದವರಲ್ಲ. ನೀನೀಗ ಹೊರಗೆ ಹೋಗು. ಚಹ ಬೇಕಾದರೆ ಸೀತೆಗೆ ಹೇಳು,” ಎಂದಳು. ಬಂದವರು ಅಪ್ಪನ ಪರಿಚಯದವರಲ್ಲ ಎಂದು ತಿಳಿದಾಗ ಶಿರೀನಳಿಗೆ ಇದ್ದ ಬಿದ್ದ ಧೈರ್ಯವೂ ಉಡುಗಿಹೋಯಿತು. ಪಾರ್ವತಿಗೂ ಗೊತ್ತಿದ್ದ ಜನವಲ್ಲ ಎಂಬುದನ್ನು ಅಪ್ಪನಿಗೆ ಈಗ ತಿಳಿಸುವುದು ಸಾಧ್ಯವಿರಲಿಲ್ಲ. ಕ್ಷಣಗಳ ಮೊದಲು ಕರುಣಾಕರನ್ನನ ರಕ್ಷಣೆಯನ್ನು ಕುರಿತು ಪಣತೊಟ್ಟವಳಿಗೆ ಈಗ ಅವನ ಬಗೆಗೇ ಸಿಟ್ಟು ಮೊಳೆಯತೊಡಗಿದಾಗ-ಇವನೊಬ್ಬ ಎಲ್ಲಿಂದ ಬಂದು ಹಾಜರಾದನೋ ಎಂದುಕೊಂಡಳು. +ಶಿರೀನ್ ತಿರುಗಿ ದಿವಾಣಖಾನೆಗೆ ಬರುವಷ್ಟರಲ್ಲಿ ಕರುಣಾಕರನ್ ತಾನು ಕೂತ ಸೋಫಾ ಅನ್ನು ಬೆಹರಾಮನಿಗೆ ಬಿಟ್ಟುಕೊಟ್ಟು ತಾನು ಹೊಸತಾಗಿ ಹಾಕಿದ ಕುರ್ಚಿಯೊಂದರಲ್ಲಿ ಕುಳಿತಿದ್ದ. ಶಿರೀನಳನ್ನು ಕಂಡಕೂಡಲೇ ತಾನು ಕೂತ ಕುರ್ಚಿಯನ್ನು ಅವಳಿಗೆ ಕೂರಲು ಅನುಕೂಲವಾಗುವಂತೆ ಸರಿಸಿಟ್ಟು ಅವನು ಇನ್ನೊಂದರಲ್ಲಿ ಕೂರುತ್ತಿರುವಾಗ ಬಂದವರಲ್ಲೊಬ್ಬ ಬಾಯಿಬಿಟ್ಟ: +“ಹಾಗಾದರೆ ನಿಮ್ಮ ಮಾತೇ ಕೊನೆಯದು.” +ಹೌದು-ಇದು ನನ್ನ ಮನೆಯಾದ್ದರಿಂದ, ಈ ಮನೆಗೆ ನೀವು ನಮ್ಮಲ್ಲಿಯ ಯಾರೂ ಕರೆಯದೇ ಇರುವಾಗಲೂ ಸುಳ್ಳುನೆಪ ಹೇಳಿ ನುಗ್ಗಿದ್ದರಿಂದ, ಈಗಲೂ ನೀವು ನಿಮ್ಮ ಪರಿಚಯ ಹೇಳಲು ನಿರಾಕರಿಸಿದ್ದರಿಂದ.” +“ನಾವು ಬಂದದ್ದು ನಿಮ್ಮ ಒಳಿತಿಗಾಗಿಯೆ, ಮುದುಕಪ್ಪ. ನಾವು ಬಂದಂಥ ಕಾರ್ಯಕ್ಕೆ ನಮ್ಮ ಪರಿಚಯದ ಅಗತ್ಯವಿಲ್ಲ. ಪರಿಚಯ ಮಾಡಿಕೊಟ್ಟರೂ ಯಾವ ಕೆಲಸಕ್ಕೂ ಅದು ಬರಲಾರದು. ಯಾಕೆಂದರೆ ನೀವು ನಮ್ಮನ್ನು ಇನ್ನೊಮ್ಮೆ ಕಾಣಬಹುದೆಂಬ ಭರವಸೆಯಿಲ್ಲ.” +“ಧಮಕಿಯ ಮಾತು ಬೇಡ. ನೀವೀಗ ಹೊರಡಬಹುದು.” +“ಇವಳು ಜಮ್‌ಶೇದ್‌ಪೂರದಿಂದ ಬಂದ ನಿಮ್ಮ ಮಗಳೆಂದು ತೋರುತ್ತದೆ. ನಾವು ಹೇಳಿದ್ದು ಅವಳಿಗೂ ಗೊತ್ತಿರಲಿ ಎಂದು ಇನ್ನೊಮ್ಮೆ ಹೇಳುತ್ತೇವೆ; ನಿಮಗೂ ನಮ್ಮ ಮಾತಿನ ಅರ್ಥ ಹೆಚ್ಚು ಸ್ಪಷ್ಟವಾದೀತು.” +“ಗರಜು ಇಲ್ಲ. ನನಗೆ ಅರ್ಥವಾಗಿದೆ. ಅವಳಿಗೆ ಆಮೇಲೆ ನಾನೇ ಹೇಳುತ್ತೇನೆ, ನೀವು ಮಾಡುತ್ತಿರುವ ಒಳ್ಳೆಯ ಕೃತ್ಯಗಳ ಬಗ್ಗೆ. ಈಗ ಹೊರಡಿ.” +ಬಂದವರಿಗೆ ಹೊರಡುವ ಮನಸ್ಸು ಇದ್ದಹಾಗೆ ತೋರಲಿಲ್ಲ. ಶಿರೀನಳಿಗೆ ಬಂದವರು ಎಂಥ ಜನ ಎಂಬುದರ ಬಗೆಗೆ ಸಂಶಯವೇ ಉಳಿಯಲಿಲ್ಲ. ತಾನು ಮಲಗುವ ಕೋಣೆಯಿಂದ ಬರುವಷ್ಟರಲ್ಲಿ ತಾವು ಬಂದ ಉದ್ದೇಶವನ್ನು ಅಪ್ಪನಿಗೆ ಆಗಲೇ ತಿಳಿಸಿರಬೇಕು. ತಾನು ಅದನ್ನು ಕೇಳುವುದು ಅಪ್ಪನಿಗೆ ಬೇಡವಾಗಿರಬೇಕು. ಹಾಗೆಂದೇ ಅವರನ್ನು ಆದಷ್ಟು ಬೇಗ ಇಲ್ಲಿಂದ ಓಡಿಸಲು ಯೋಚಿಸಿರಬೇಕು ಎಂದುಕೊಂಡರೂ ಶಿರೀನಳಿಗೆ ಬಾಯಿ ತೆರೆಯುವ ಧೈರ್ಯವಾಗಲಿಲ್ಲ. ಕರುಣಾಕರನ್ ಕೂಡ ತುಟಿ ಎರಡು ಮಾಡದೇ ಕೂತಿದ್ದ. ಅಪ್ಪ ಹೊರಟುಹೋಗಲು ಇತ್ತ ಆಜ್ಞೆಯನ್ನು ಇವರು ಹೇಗೆ ಪಾಲಿಸುವರೋ ಎಂದು ಕಾತರಪಟ್ಟವಳು ಅವರ ಮುಂದಿನ ಕ್ರಮದ ಹಾದಿಯನ್ನು ಕಾಯುತ್ತ ಕುಳಿತಳು. ಕೋಣೆಯಲ್ಲಿಯ ವಾತಾವರಣ ಇದ್ದಕ್ಕಿದ್ದ ಹಾಗೆ ಬಿಗಿಗೊಳ್ಳತೊಡಗಿದ ರೀತಿ ಎಲ್ಲರಿಗಿಂತ ಹೆಚ್ಚಾಗಿ ಶಿರೀನಳನ್ನೇ ಕಾಡತೊಡಗಿತು. ಸಾಯ್ಕಾಲಜಿಯಲ್ಲಿ ಎಂ. ಎ. ಮಾಡಿದ ಅವಳಿಗೆ- ಅಪ್ಪ ‘ಹೊರಡಿ’ ಎಂದು ಹೇಳಿದಮೇಲೂ ಇತ್ತ ಹೊರಟೂಹೋಗದೇ ಅತ್ತ ಮಾತೂ ಆಡದೇ ಮೌನ ಧರಿಸಿ ಕುಳಿತುಬಿಟ್ಟವರ ಚತುರೋಪಾಯದ ಅರ್ಥ ಹೊಳೆಯದೇ ಇರಲಿಲ್ಲ. ಅಪ್ಪನ ಪ್ರತಿರೋಧವನ್ನು ಮುರಿಯುವ ಹಿಕ್ಮತಿಯಿದು. ಕೂರಲಿ. ನಾನೂ ಮಾತನಾಡಲಾರೆ ಎಂದು ಮನಸ್ಸನ್ನು ಗಟ್ಟಿಮಾಡಿಕೊಂಡು ಕುಳಿತುಬಿಟ್ಟಳು. +ಇದಾವುದನ್ನೂ ಅರಿಯದ ಕರುಣಾಕರನ್‌ಗೆ ಈ ಅನಪೇಕ್ಷಿತ ವಾತಾವರಣದ ಬಿಗಿತ ಅಸಹನೀಯವಾಗತೊಡಗಿತು: ಈಗಿನ ಸ್ಥಿತಿಯಲ್ಲಿ ಇನ್ನು ಕೆಲವು ನಿಮಿಷಗಳಷ್ಟು ಕಾಲ ಮುಂದುವರಿದರೂ ತಾನು ಕೂತಕೂತಲ್ಲೇ ಒಡೆದು ಪುಡಿಯಾಗುವುದು ನಿಶ್ಚಿತ ಎಂದುಕೊಳ್ಳುವಷ್ಟು ಬಿಗಿಗೊಂಡಿದ್ದ. ಅವನು ಕುರ್ಚಿಯಲ್ಲಿ ಚಡಪಡಿಸುವ ರೀತಿಯನ್ನು ಕಂಡು ಆಡಬಾರದ್ದನ್ನೆಲ್ಲಿ ಆಡಿಬಿಡುವನೋ ಎಂದು ಆತಂಕಪಟ್ಟ ಬೆಹರಾಮ್ ತಾನೇ ಬಾಯಿಬಿಟ್ಟ: +“ನೋಡಿ ಇವರೆ, ಈ ವಿಷಯದಲ್ಲಿನ ಜವಾಬ್ದಾರಿಯನ್ನು ನನಗೆ ಬಿಡಿ. ನೀವೇ ಹೇಳಿರದಿದ್ದರೂ ನಿಮ್ಮನ್ನು ಇಲ್ಲಿಗೆ ಯಾರು ಕಳಿಸಿರಬಹುದು, ಇಲ್ಲಿಗೇ ಯಾಕೆ ಕಳಿಸಿರಬಹುದು ಎಂಬುದನ್ನು ಸರಿಯಾಗಿ ಊಹಿಸಬಲ್ಲೆ. ಅವರ ಭಯವನ್ನೂ ಅರ್ಥಮಾಡಿಕೊಳ್ಳಬಲ್ಲೆ. ಅವರಿಗೆ ತಿಳಿಸಿರಿ: ಝೋಪಡಪಟ್ಟಿಗಳ ಬಗ್ಗೆ ಈ ಹುಡುಗ ಒಟ್ಟುಮಾಡಿರಬಹುದಾದ ಮಾಹಿತಿಯಿಂದ ಯಾರಿಗೂ ಹಾನಿ ತಟ್ಟದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದೆಂದು. ಹಾಗಲ್ಲದೇನೆ ಈ ಹುಡುಗ ನಿಮ್ಮ ಗ್ಯಾಂಗಿನವ, ಯಾರೋ ಹಚ್ಚಿದ ಆಮಿಷದಿಂದಾಗಿ ನಿಮಗೆ ಪಿತೂರಿಯಾಗಿದ್ದಾನೆ, ಅವನನ್ನು ಕೂಡಲೇ ಒಪ್ಪಿಸದಿದ್ದರೆ ಆ ಆಮಿಷ ಹಚ್ಚಿದವನು ನಾನೇ ಎಂಬ ಗುಮಾನಿಗೆ ನಾನು ಗುರಿಯಾಗುತ್ತೇನೆ ಎಂಬಂತಹ ಧಮಕಿಗೆ ನಾನು ಬಗ್ಗುವುದು ಹೆಡ್ಡತನವಾದೀತು. ಈ ಎಳೆಯ ಪ್ರಾಯದ ಹುಡುಗನನ್ನು ಹಾನಿ ತಟ್ಟದಂತೆ ಕಾಪಾಡುವ ಜವಾಬ್ದಾರಿ ಕೂಡ ನನ್ನದೆಂದು ತಿಳಿದಿದ್ದೇನೆ. ಹೇಗೂ ನೀವು ನನ್ನನ್ನು ನೋಡಿದ್ದೀರಿ, ನಾನಿರುವ ಜಾಗವನ್ನೂ ನೋಡಿಕೊಂಡಿದ್ದೀರಿ. ನಿಮ್ಮ ಯಜಮಾನನಿಗೆ ನನ್ನ ಮಾತುಗಳಿಂದ ಸಮಾಧಾನವಾಗದೇ ಇದ್ದರೆ ಮತ್ತೆ ಬಂದು ನನ್ನನ್ನು ಕಾಣಬಹುದು. ನಾವೇನು ಓಡಿ ಹೋಗುವ ಜನವಲ್ಲ.” +“ಪೋಲೀಸರ ಆಸರೆಯನ್ನು ಪಡೆಯುವಂಥ ಜನವೂ ನೀವಲ್ಲ. ಅಂದರೆ ಪಡೆಯುವ ಸಾಹಸ ಮಾಡಬೇಡಿ ಎಂದು ಸೂಚನೆ ಕೊಡುತ್ತಿದ್ದೇವೆ. ಯಾಕೆಂದರೆ ಯಾವಾಗಲಾದರೂ ಒಮ್ಮೆ ಪಡೆಯಬಹುದಾದ ಆಸರೆ ಅದು; ಕಾಯಮ್ ಆಗಿ ಅಲ್ಲ ತಾನೇ! ಹುಡುಗನನ್ನು ಸದ್ಯ ಇಟ್ಟುಕೊಳ್ಳಿ. ಆದರೆ ಬಹಳ ಕಾಲ ನಮ್ಮನ್ನು ತಪ್ಪಿಸಿಕೊಂಡಿರಲಾರ. ಬರ್ತೇವೆ.” +ನಾಲ್ವರು ಅಪರಿಚಿತರು ಅನಿರೀಕ್ಷಿತವಾಗಿ ಬಂದು ಮನೆ ಹೊಕ್ಕ ಬಗೆ, ಬಂದ ಮೇಲೆ ಮಾತನಾಡಿಸಿದ ಬಗೆ, ತಿರುಗಿ ಹೋಗುವಾಗಲೂ ನೆಲದ ಮೇಲೆ ಬೂಟುಗಳಿಂದ ಸದ್ದು ಎಬ್ಬಿಸಿದ ಬಗೆ ಮನೆಯೊಳಗಿನ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದೇ ಹೊತ್ತಿಗೆ ಹಲವು ಚಿತ್ರಗಳನ್ನು ಮೂಡಿಸಲು ಕಾರಣವಾದರೂ, ಆ ಚಿತ್ರಗಳ ಪರಿಣಾಮ ಕರುಣಾಕರನ್‌ನ ಪಾಲಿಗೆ ಮಾತ್ರ ಒಂದೇ ಆಗಿತ್ತು: ಬಂದವರು ಮನೆಯ ಹೊರಗೆ ಬಿದ್ದಿದ್ದೇ ತಡ ಪಾರ್ವತಿ, ಶಿರೀನ್, ಅವಳ ತಾಯಿ-ಮೂವರು ಅವನನ್ನು ಸುತ್ತುವರಿದು ನಿಂತರು. ಬೆಹರಾಮ್ ಕಟ್ಟಡದ ಆರೂ ಮಜಲುಗಳು ಜನಕ್ಕೆ ಕೇಳಿಸುವಷ್ಟು ದೊಡ್ಡ ದನಿಯಲ್ಲಿ “ಬೇಡಾ,” ಎಂದು ಆಕ್ರೋಶ ಮಾಡುತ್ತಿರುವಾಗಲೂ ಅವನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ‘ಇನ್ನು ನಾವು ಸುಮ್ಮಗುಳಿಯುವುದು ಶಕ್ಯವಿಲ್ಲ,’ ಎಂಬಂತೆಯೋ, ‘ಈವರೆಗೂ ಹೆಸರನ್ನೂ ಕೂಡ ಕೇಳಿ ಗೊತ್ತಿರದ ಹಾದಿಹೋಕ ಹುಡುಗನನ್ನು ಹೀಗೆ ಏಕಾ‌ಏಕಿ ಮನೆ ಹೊಗಲು ಬಿಟ್ಟು ನಮ್ಮ ಜೀವಕ್ಕೆ ಧಕ್ಕೆ ತಂದುಕೊಳ್ಳಲು ಸಿದ್ಧರಿಲ್ಲ,’ ಎಂಬಂತೆಯೋ ಗವಗವ ಮಾತನಾಡುತ್ತ ಕರುಣಾಕರನ್ ಮೇಲೆ ಮುಗಿಬಿದ್ದರು. ಕರುಣಾಕರನ್ ಕಂಗಾಲಾಗಿ ಅಲ್ಲಿಂದ ಓಟ ಕಿತ್ತ. ಜಿನ್ನೆಯ ಮೆಟ್ಟಿಲುಗಳ ಮೇಲೆ ಮುಗ್ಗುರಿಸಿ ಬೀಳಬಹುದೆಂಬುದರ ಪರಿವೆಯೆ ಇಲ್ಲದೆ ಬೆಹರಾಮ್-“ತಡೆ, ಕರುಣಾಕರನ್, ತಡೆ,” ಎನ್ನುತ್ತ ಕಾಲಲ್ಲಿ ಮೆಟ್ಟಿದ ಪ್ಲ್ಯಾಸ್ಟಿಕ್ ಸ್ಲಿಪ್ಪರ್ಸ್ಗಳಲ್ಲೇ ಅವನ ಹಿಂದೆಯೇ ರಸ್ತೆಯವರೆಗೂ ಓಡಿಹೋದ. ಅವನು ಕತ್ತಲಲ್ಲಿ ಸೇರಿ ಕಾಣದಾಗುವವರೆಗೂ ನೋಡುತ್ತ ನಿಂತವನು ಹಿಂತಿರುಗಿ ಮನೆ ಸೇರುವಷ್ಟರಲ್ಲಿ ಮಾತನಾಡುವ ಬಲವನ್ನೇ ಕಳಕೊಂಡಹಾಗೆ, ಯಾರೊಡನೆಯೂ ಮಾತನಾಡದೇ ನೇರವಾಗಿ ಬಾಲ್ಕನಿಗೆ ನಡೆದವನು ಅಲ್ಲಿಯ ಕುರ್ಚಿಯೊಂದರಲ್ಲಿ ಕುಸಿದು ಎರಡೂ ಕೈಗಳಿಂದ ಮೋರೆ ಮುಚ್ಚಿಕೊಂಡು ಕುಳಿತುಬಿಟ್ಟ. +ಅಧ್ಯಾಯ ಮೂರು +ಕರುಣಾಕರನ್ ಡೊಂಬಿವ್ಲಿಯ ತನ್ನ ಕೋಣೆಯನ್ನು ತಲುಪುವ ಹೊತ್ತಿಗೆ ಮಧ್ಯರಾತ್ರಿ ಮೀರಿತ್ತು. ಮನೆ ತಲುಪಲು ತನಗೆ ಎಂದಿಗಿಂತ ಬಹಳ ತಡವಾಗಿದೆ ಎಂಬುದರ ಬಗೆಗಾಗಲಿ, ತಡವಾಗಿದ್ದರೆ ಯಾಕೆ ತಡವಾಯಿತು ಎಂಬುದರ ಬಗೆಗಾಗಲಿ ವಿಚಾರ ಮಾಡುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ರಸ್ತೆಗಳಲ್ಲಿ ಉರಿಯುವ ಮ್ಯುನಿಸಿಪಾಲಿಟಿಯ ಕುರುಡುದೀಪಗಳು, ಅವುಗಳ ದಾರುಣಸ್ಥಿತಿಯನ್ನು ಒತ್ತಿಹೇಳುವ ವಾತಾವರಣದೊಳಗಿನ ನಿಶ್ಶಬ್ದ-ಎರಡೂ ವಿಚಾರ ಮಾಡುವಂಥ ಮನೋವ್ಯಾಪಾರಕ್ಕೆ ಪುಟಕೊಡುವಂತಹವಾಗಿರಲಿಲ್ಲ. ತನ್ನ ಮನೆಯಿದ್ದ ಕೇರಿಯನ್ನು ಸೇರುವಾಗಿನ ಒಂದೇ ಒಂದು ಅನ್ನಿಸಿಕೆಯೆಂದರೆ: ಆದಷ್ಟು ಬೇಗ ಕೋಣೆ ಸೇರಬೇಕು, ಹಾಸಿಗೆಯಲ್ಲಿ ನಿಡಿದಾಗಿ ಮೈಚಾಚಿ ಗಡದ್ದಾಗಿ ಮಲಗಬೇಕು! ತನಗೆ ಅತೀವ ದಣಿವಾಗಿದೆ ಎಂದು ಸ್ಪಷ್ಟವಾಗಿ ಹೊಳೆಯುವ ಹೊತ್ತಿಗೆ, ತಾನು ಎಷ್ಟೋ ಗಂಟೆಗಳವರೆಗೆ ಓಡಿದ್ದು ಈ ದಣಿವಿಗೆ ಕಾರಣವಾಗಿದೆ ಎಂದೂ ಹೊಳೆಯಿತು. ಯಾಕೆ ಓಡಿದ್ದೆ? ಎಲ್ಲಿಂದ ಎಲ್ಲಿಗೆ ಓಡಿದ್ದೆ? ಕೂಡಲೇ ನೆನಪಾಗುವುದು ಶಕ್ಯವಿರಲಿಲ್ಲ. ಓಡಿದ್ದಂತೂ ಹೌದು. ಕೇವಲ ಮನೆ ತಲುಪುವ ತ್ವರೆಯಿಂದಾಗಿ ಓಡಿರಲಿಲ್ಲ ಎನ್ನುವುದೂ ನಿಜ, ಯಾಕೆಂದರೆ ಈಗಲೂ ಓಡಬೇಕು ಅನ್ನಿಸುತ್ತಿತ್ತು. ದಣಿವು ಹತ್ತಿದ್ದರಿಂದಲೇ ತಾನು ಮನೆಗೆ ಬಂದೆನೇ ಹೊರತು ಮನೆಗೆ ಬರುವ ಅವಸರದಿಂದಾಗಿ ಓಡಿಬಂದಿರಲಿಲ್ಲ. ಇಷ್ಟುಹೊತ್ತಿಗೆ ಕಟ್ಟಡದೊಳಗಿನ ಎಲ್ಲ ಮನೆಗಳ ಜನವೂ ನಿದ್ದೆಹೋಗಿರಬೇಕು. ಇದೀಗ ದಾಟಿಬಂದ ಹಲವು ಕಟ್ಟಡಗಳಲ್ಲಿಯ ದೀಪಗಳೆಲ್ಲ ಆರಿದ್ದುವು. +ಎಲ್ಲರೂ ನಿದ್ದೆಹೋಗಿರುವ ಹೊತ್ತಿಗೇ ಕೋಣೆ ಸೇರುವುದರಲ್ಲಿ ಸಮಾಧಾನ ಕಂಡಂತಿದ್ದ ಕರುಣಾಕರನ್ ಅಂಥ ಭಾವನೆಯನ್ನು ಹೊತ್ತು ಮನೆಯ ಕಂಪೌಂಡಿನಲ್ಲಿ ಕಾಲಿಡುತ್ತಿರುವಾಗ ನಿದ್ದೆ ದಣಿವುಗಳನ್ನು ಸಂಪೂರ್ಣವಾಗಿ ಮರೆಸುವಮಟ್ಟಿಗೆ ದಂಗುಬಡೆಸುವಂಥ ಸನ್ನಿವೇಶವೊಂದು ಅವನ ಬರವನ್ನು ಕಾದು ನಿಂತಂತಿತ್ತು: ಏನೋ ಕೋಲಾಹಲ-ಅದುವೂ ನೇರವಾಗಿ ಅವನಿಗೇ ಸಂಬಂಧಪಟ್ಟದ್ದು. ಅವನ ಮನೆಯೊಡತಿಯ ಮನೆಯಲ್ಲಿ ಮಾತ್ರವೇ ಅಲ್ಲ, ಕಟ್ಟಡದ ಉಳಿದ ಐದೂ ಮನೆಗಳ ಜನ ಕೂಡ ಎಚ್ಚರವಾಗಿದ್ದು ಕರುಣಾಕರನ್ನನ ಹಾದಿಯನ್ನೇ ಕಾಯುತ್ತಿದ್ದಹಾಗಿತ್ತು. ಅವನು ತಳಮಜಲೆಯ ತನ್ನ ಮನೆಯ ಅಂಗಳದಲ್ಲಿ ಕಾಲಿರಿಸುವ ಪುರಸತ್ತಿಲ್ಲ, ನೆರೆದ ಜನವೆಲ್ಲ ಅವನ ಮೇಲೆ ಎರಗಿದ ರೀತಿಗೆ ಸಂಜೆಯಿಂದಲೂ ತನ್ನನ್ನು ಓಡಿಸಲು ಕಾರಣವಾದ ಸನ್ನಿವೇಶದಂತಹದೇ ಸನ್ನಿವೇಶ ಮತ್ತೆ ಇಲ್ಲಿಯೂ ಉದ್ಭವಿಸಿದೆ ಎಂಬುದು ಹೊಳೆದು ಹೋದರೂ ತಾನು ಒಂದು ಮುಗ್ಧ ಹುಚ್ಚಿನ ಭರದಲ್ಲಿ ತೊಡಗಿಸಿಕೊಂಡ ಉಪದ್ವ್ಯಾಪ ಈ ಒಂದು ರಾತ್ರಿಯಲ್ಲಿ ತನ್ನ ಶಿಖರಾವಸ್ಥೆಯನ್ನು ಮುಟ್ಟುತ್ತಿದ್ದ ಬಗೆಯ ಸರಿಯಾದ ಅರ್ಥವನ್ನು ಗ್ರಹಿಸುವ ಸ್ಥಿತಿಯಲ್ಲಿ ಅವನು ಇರಲಿಲ್ಲ. ತನ್ನನ್ನು ಸುತ್ತುವರಿದು ನಿಂತ ಜನ ಎಬ್ಬಿಸುತ್ತಿದ್ದ ಕೋಲಾಹಲ ರಾತ್ರಿಯ ಊಟವನ್ನು ಮಾಡಿರದ ಹೊಟ್ಟೆಯೊಳಗಿನಿಂದಲೇ-ಕುಲುಕುಲು ನಡುಗುತ್ತಿದ್ದ ಕರುಳುಗಳೊಳಗಿಂದಲೇ-ಎದ್ದುಬಂದು, ಭಗಭಗ ಉರಿಯುವ ಪಂಜು, ಹಿಲಾಲುಗಳು, ಕಿವಿಗಡಚಿಕ್ಕುವಂತೆ ಬಡೆದುಕೊಳ್ಳುತ್ತಿದ್ದ ಸಂಬಾಳ, ತಮ್ಮಟೆ, ಜಾಗಂಟೆಗಳು ಒಂದನ್ನೇ ಒದರಿ ಹೇಳುತ್ತಿದ್ದುವು: ಹೊರಡು ಎನ್ನುವ ಹಾಗೆ, ಈಗಿಂದೀಗ ನಿನ್ನ ಗಂಟುಮೂಟೆ ಕಟ್ಟಿಕೊಂಡು ಓಡು ಎನ್ನುವ ಹಾಗೆ, ತಡ ಮಾಡಬೇಡ ಎನ್ನುವ ಹಾಗೆ. +ಯಾರೋ ಬೀಗ ಮುರಿದು ಬಾಗಿಲು ತೆರೆದಂತಿದ್ದ ತನ್ನ ಕೋಣೆಯೊಳಗಿನ ಅಸ್ತವ್ಯಸ್ತ ಸ್ಥಿತಿಯನ್ನು ಕಂಡಮೇಲೆ ಮಾತ್ರ ಸುತ್ತಲಿನ ಜನಕ್ಕೆ ಬಂದ ಸಿಟ್ಟಿನ ಕಾರಣ ಹೊಳೆಯದಿರಲಿಲ್ಲ. ಬೆಹರಾಮನ ಮನೆಯಲ್ಲಿ ಅವನು ಕಂಡ ಜನ ಇಲ್ಲಿಗೂ ಬಂದಿದ್ದರು. ಬೆಹರಾಮನ ಇದಿರು ಅವನ ಬಗ್ಗೆ ಆಡಿದ ಮಾತನ್ನು ಇಲ್ಲಿಯೂ ಆಡಿದ್ದರು. ತಮ್ಮ ಗ್ಯಾಂಗಿನಿಂದ ಪಿತೂರಿಯಾದವನನ್ನು ಇಲ್ಲಿ ನಿಲ್ಲಿಸಿಕೊಂಡರೆ ಕಟ್ಟಡದ ಜನಕ್ಕೆ ಓಳಿತಾಗಲಿಕ್ಕಿಲ್ಲ ಎಂಬಂತಹ ಆಕ್ರೋಶ ತುಂಬಿದ ಮಾತುಗಳಲ್ಲಿ ಬೆದರಿಸುತ್ತ ಧಿಮಿಧಿಮಿ ಹಾರಾಡಿದ್ದರು. ಕೋಣೆಗೆ ಹಾಕಿದ ಬೀಗ ಮುರಿದು ಒಳನುಗ್ಗಿ ಯಾತಕ್ಕಾಗಿಯೋ ಹುಡುಕಾಡಿ, ಕೊನೆಗೊಮ್ಮೆ ಅದು ಸಿಕ್ಕಿತೆಂಬ ಸಂಭ್ರಮದಲ್ಲಿ ಹೊರಟುಹೋಗಿದ್ದರು. ಕಳ್ಳಭಟ್ಟಿಯವರೋ! ಕಳ್ಳಸಾಗಣೆದಾರರೋ! ಇಂಥವರೊಂದಿಗೆ ಸೇರಿಕೊಂಡ, ಸರಿಯಾದ ಪರಿಚಯವೂ ಇಲ್ಲದ, ಈ ಲಫಂಗ ಹುಡುಗನನ್ನು ಬರಿಯ ಬಾಡಿಗೆಯ ಹಣದ ಆಸೆಗಾಗಿ ತಮ್ಮ ಮನೆಯಲ್ಲಿ ಆಶ್ರಯವಿತ್ತವರ ಮೇಲೆಯೂ ಜನ ಸಿಟ್ಟಾಗಿದ್ದರು. ಈಗ ಬಂದ ಜನಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎನ್ನಬೇಕು ಅನ್ನಿಸಿತು, ಕರುಣಾಕರನ್‌ಗೆ. ಆದರೆ ಇಂತಹದೇನೋ ಇದೆಯೆಂದೇ ಹೀಗೆ ಮಧ್ಯರಾತ್ರಿ ಕಳೆದಮೇಲೆ ಕಳ್ಳಹೆಜ್ಜೆಯಲ್ಲಿ ತಾನುಕೋಣೆ ಸೇರುತ್ತಿದ್ದೇನೆ ಎಂದು ಇವರೆಲ್ಲ ತಪ್ಪು ತಿಳಿಯಲು ಕಾರಣವಾದ ಸನ್ನಿವೇಶದಲ್ಲಿ ಬಾಯಿ ತೆರೆಯುವ ಧೈರ್ಯವಾಗದಾಯಿತು. ಹಸಿದ ಹೊಟ್ಟೆ, ಎಲ್ಲಿಂದ ಎಲ್ಲಿಗೋ ಓಡಿಹೋದದ್ದರಿಂದ ಹತ್ತಿದ ದಣಿವು, ಅಪರಾತ್ರಿಯಲ್ಲಿ ತನ್ನ ಬಗ್ಗೆ ಪ್ರಕ್ಷುಬ್ಧಗೊಂಡ ಜನ: ಕರುಣಾಕರನ್ ಮತ್ತೆ ಓಡಲು ಶುರುಮಾಡಿದ್ದ. ಇಲ್ಲಿಗೆ ಬರುವಾಗ ತಂದ, ರೆಕ್ಸಿನ್ ಹೊದಿಕೆಯುಳ್ಳ, ಫಾಯ್ಬರ್ ರಟ್ಟಿನಲ್ಲಿ ಸಣ್ಣ ಸೂಟ್ ಕೇಸಿನಲ್ಲಿ ರೂಮಿನೊಳಗಿನ ತನ್ನ ಸಾಮಾನು ಎಲ್ಲವನ್ನೂ ಕೈಗೆ ಬಂದ ಕ್ರಮದಲ್ಲಿ ತುರುಕಿ ಮನೆ ಬಿಟ್ಟಿದ್ದ. ಒಳಗಿಂದ ಎದ್ದುಬರುತ್ತಿದ್ದ ಭಯ ಸಾವಿರ ಪ್ರತಿಮೆಗಳಾಗುವ ಪ್ರಕ್ರಿಯೆಯೇ ಓಡಲುಬೇಕಾದ ಶಕ್ತಿ ಒದಗಿಸುತ್ತಿತ್ತು ಎನ್ನುವ ಹಾಗೆ ಓಡುತ್ತಿದ್ದ. ಆ ಪ್ರಕ್ರಿಯೆಯೇ ಹೆಜ್ಜೆಗಳ ದಿಕ್ಕನ್ನು ನಿರ್ಧರಿಸುತ್ತಿತ್ತು ಎನ್ನುವ ಹಾಗೆ ಡೊಂಬಿವ್ಲಿ ಸ್ಟೇಶನ್ನಿನ ಕಡೆಗೇ ಬೀಳುತ್ತಿದ್ದುವು. ವೀಟೀ ಕಡೆಗೆ ಮೋರೆ ಮಾಡಿದ ಟ್ರೇನ್ ಒಂದು ಸ್ಟೇಶನ್ನಿಗೆ ಬರುತ್ತಿದ್ದುದು ಲಕ್ಷ್ಯಕ್ಕೆ ಬಂದಕೂಡಲೇ ತನ್ನ ಶಕ್ತಿಯ ಸರ್ವಸ್ವವನ್ನೂ ಸ್ಟೇಶ್ನ್ನಿಗೆ ತಲುಪುವ ಕ್ರಿಯೆಯಲ್ಲಿ ತೊಡಗಿಸಿದವನ ಹಾಗೆ ಹತ್ತಿದ ದಣಿವಿನದಾಗಲಿ, ಕೈಯಲ್ಲಿ ಹೊತ್ತ ಸೂಟ್‌ಕೇಸಿನ ಭಾರದ್ದಾಗಲಿ ಪರಿವೆ ಮಾಡದೆ. ಓಟದ ವೇಗವನ್ನು ಅದರ ಪರಕಾಷ್ಠೆಗೆ ಒಯ್ದಿದ್ದ. +ಪ್ಲ್ಯಾಟ್‌ಫಾರ್ಮ ಸೇರುವ ಹೊತ್ತಿಗೆ ಟ್ರೇನ್ ಹೊರಟುಹೋಗಿ ಕೆಲವು ನಿಮಿಷಗಳೇ ಕಳೆದುಹೋಗಿದ್ದುವು. ತನ್ನ ಕಡೆದೆ ಕುಂಡೆ ತಿರುಗಿಸಿ ನಡೆದವನ ಹಾಗೆ ದೂರ ಸರಿಯುತ್ತಿದ್ದ ಟ್ರೇನಿನ ಹಿಂಭಾಗವನ್ನು ನೋಡುತ್ತಿದ್ದ ಹಾಗೆ ತನ್ನ ಆಗಿನ ಕಂಗಾಲ ಸ್ಥಿತಿಯಲ್ಲೂ ನಕ್ಕುಬಿಡಬೇಕು ಅನ್ನಿಸಿತು. ಆದರೆ ಹತ್ತಿದ ದಣಿವಿನಿಂದಲೋ ಎಂಬಂತೆ ನಕ್ಕುಬಿಡಬೇಕು ಎಂದುಕೊಂಡದ್ದು ಬಿಕ್ಕಳಿಕೆಯಾಗಿ ರೂಪಾಂತರಗೊಳ್ಳುತ್ತ ಮುಂದಿನ ಕೆಲಹೊತ್ತಿನಲ್ಲೇ ಕೋಡಿವರಿದ ಅಳುವಾಗಿತ್ತು. ಆ ಹೊತ್ತಿಗೆ ಕರುಣಾಕರನ್ ನಿರ್ಜನವಾದ ಪ್ಲ್ಯಾಟ್‌ಫಾರ್ಮಿನ ಬೆಂಚೊಂದರ ಮೇಲೆ ಕುಸಿದಿದ್ದ. ಕುಸಿದಲ್ಲೇ ಒರಗಿದ್ದ. ಒರಗಿದಲ್ಲೇ ಇದೀಗ ಹೊರಟುಹೋದದ್ದು ರಾತ್ರಿಯ ಕೊನೆಯ ಗಾಡಿ ವೀಟೀಗೆ ಹೋಗುವುದಾದರೆ ಬೆಳಗಿನವರೆಗೂ ಹಾದಿ ಕಾಯುವುದನ್ನು ಬಿಟ್ಟು ಬೇರೆ ಉಪಾಯವಿಲ್ಲ ಎಂಬುದನ್ನು ಅರಿವಿಗೆ ತಂದುಕೊಳ್ಳುತ್ತಿರುವಷ್ಟರಲ್ಲಿ ನಿದ್ದೆಗೆ ತಿರುಗುವುದರಲ್ಲಿದ್ದ ದಣಿವು ಬಗೆಬಗೆಯ ಬಣ್ಣಗಳುಳ್ಳ, ವಾಸನೆಯುಳ್ಳ, ಸದ್ದು ಮಾಡುವ ಆಕೃತಿಗಳಾಗುತ್ತ ಸಂಜೆಯಿಂದಲೂ, ಅಷ್ಟೇಕೆ, ಕೇರಳ ಬಿಟ್ಟಂದಿನಿಂದಲೂ ತಾನು ಅನುಭವಿಸುತ್ತ ಬಂದುದೆಲ್ಲದರ ಅರ್ಥವನ್ನು ಹೊಳೆಯಿಸಿಬಿಟ್ಟಿತ್ತು. ತನ್ನ ಅಣ್ಣನ ಕೊಲೆಯಾದದ್ದು ಕೊನೆಗೂ ನಿಜ! ಮೂರು ವರ್ಷಗಳ ಹಿಂದೆ ಅಪ್ಪನಿಗೆ ಬಂದ ಈ ಮೂಕಪತ್ರ ಬಣ್ಣಿಸಿದ ಭೀಕರ ಘಟನೆ ನಿಜಕ್ಕೂ ನಡೆದು ಹೋದದ್ದಾಗಿತ್ತು. +ಬೆಹರಾಮನ ಮನೆಯಲ್ಲಿ ಕಂಡ ಆ ನಾಲ್ವರು ಅಪರಿಚಿತರು ಕೆಲವೊಮ್ಮೆ ಗುಜರಾಥಿಯಲ್ಲಿ, ಕೆಲವೊಮ್ಮೆ ಹಿಂದಿಯಲ್ಲಿ ಮಾತನಾಡಿದ್ದರು. ಗುಜರಾಥಿ ಕರುಣಾಕರನ್‌ಗೆ ಎಳ್ಳಷ್ಟೂ ತಿಳಿಯದ ಭಾಷೆ. ಹಿಂದಿಯ ಒಂದೆರಡು ಶಬ್ದಗಳು ಅರ್ಥ ಹೊಳೆಯಿತು ಎನ್ನುವಂಥ ಭಾವನೆ ಹುಟ್ಟಿಸುವಮಟ್ಟಿಗೆ ಕೇಳಿಗೊತ್ತಿದ್ದುವು. ಯಾರು ಯಾವ ಭಾಷೆಯಲ್ಲಿ ಮಾತನಾಡಿದ್ದರೆನ್ನುವುದು ನೆನಪಿರುವುದು ಶಕ್ಯವಿರಲಿಲ್ಲ. ನಾಲ್ಕು ಬೇರೆಬೇರೆ ಜನ ಮಾತನಾಡುತ್ತಿದ್ದಾರೆ ಎಂದು ಅನ್ನಿಸಿರಲೇ ಇಲ್ಲ! ಆಡಿದ್ದು ಕಿವಿಯ ಮೇಲೆ ಬೀಳುವ ಶಬ್ದಗಳಾಗುವ ಬದಲು ಗಾಳಿಯಲ್ಲಿ ಅಲ್ಲಾಡುವ ಅಚ್ಚಬಿಳಿಯ ಬಟ್ಟೆಯಂತಹದೇನೋ ಆಗುತ್ತ ಕಣ್ಣು ತುಂಬಿ ನಿಂತಂತಹ ಭಾಸ, ಆ ‘ಅದು’ ಮಾಡುತ್ತಿದ್ದ ಸದ್ದೇ ಭೀಕರವಾದ ಸುದ್ದಿಯನ್ನು ಮುಟ್ಟಿಸಿತು ಎನ್ನುವಂತಹ ಭ್ರಮೆ; ಬೆಹರಾಮನ ಮನೆಯಿಂದ ಅವನು ಓಟ ಕಿತ್ತಿದ್ದು ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿದ್ದ ಆ ನಾಲ್ವರಿಗೆ ಹೆದರಿ ಅಲ್ಲವೇ ಅಲ್ಲವಾಗಿತ್ತು. ಅವನ ಮನೆಯ ಹೆಂಗಸರು ತನ್ನ ಮೇಲೆ ಮುಗಿಬಿದ್ದ ಕ್ರೂರ ರೀತಿಗೆ ಅಂಜಿಯೂ ಅಲ್ಲವಾಗಿತ್ತು. ಬೆಳ್ಳಗಿನದೇನೋ ಕಿವಿಯಲ್ಲಿ ಅಣ್ಣನ ಕೊಲೆಯ ಸುದ್ದಿಯನ್ನು ಉಸುರಿಸಿದ ಹಾಗೆ ಕೇಳಿಸಿದಾಗ ಕುರ್ಚಿ ಬಿಟ್ಟು ಭಡಕ್ಕನೆ ಎದ್ದು ನಿಂತಿದ್ದ. +ಬೆಹರಾಮನ ಮನೆಯಿಂದ ಹೊರಗೆ ಬೀಳುತ್ತಲೇ ಕರುಣಾಕರನ್ ನೇರವಾಗಿ, ಅವನು ಈವರೆಗೂ ಕಂಡಿರದ ‘ಲ್ಯಾಂಡ್ಸ್ ಎಂಡ್’ ಕಡೆಗೆ-ಅಂದರೆ, ಸಂಜೆ ಅವನು ಇಳಿದ ಬಸ್‌ಸ್ಟಾಪಿನ ವಿರುದ್ಧ ದಿಕ್ಕಿನಲ್ಲಿ-ಓಡಿದ್ದ. ಹೊತ್ತು ಮುಳುಗಿ ಬಹಳ ಹೊತ್ತಾಗಿದ್ದರಿಂದ ರಸ್ತೆಯಲ್ಲಿ ಓಡಾಡುವ ಜನರ ಮೋರೆಗಳ ಗುರುತು ಹಿಡಿಯುವುದು ಕಠಿಣವಾಗಿತ್ತು. ಆದರೆ ಹಾಗೆ ತನ್ನ ಗುರುತು ಹಿಡಿದಾರೆಂಬ ಅರಿವು ಅವನಿಗಿರಲಿಲ್ಲ; ಅಚಾನಕವಾಗಿ ಮನೆ ಹೊಕ್ಕು ಅಣ್ಣನ ಕೊಲೆಯ ಬಗ್ಗೆ, ಅದರ ತನಿಖೆ ನಡೆಸುತ್ತಿದ್ದ ತನ್ನ ಬಗ್ಗೆ, ಗಾಳಿಯಲ್ಲಿ ಅಲ್ಲಾಡುವ ಬಿಳಿಯ ಬಟ್ಟೆಯಂಥ ಮಾತನ್ನಾಡಿ ಹೊರಟುಹೋದವರು ಇಲ್ಲೆಲ್ಲೋ ಹಾದಿಯ ಬದಿಯಲ್ಲಿ, ಬಸ್‌ಸ್ಟಾಪಿನಲ್ಲಿ ತನ್ನ ಹಾದಿ ಕಾಯುತ್ತಿರಬಹುದೆಂಬುದರ ಬಗ್ಗೆ ವಿಚಾರ ಮಾಡಿದವನೇ ಅಲ್ಲ. ಆದರೆ ಅವನು ಆ ಕ್ಷಣಕ್ಕೆ ಹಿಡಿದ ದಿಕ್ಕನ್ನು ನೋಡಿದರೆ ಅವನ ಪ್ರಜ್ಞೆಯ ಆಚೆಯದೇನೋ ಅವರಿಂದ ದೂರವಾಗುವ ದಿಕ್ಕಿನಲ್ಲೇ ಅವನನ್ನು ಓಡಲು ಹಚ್ಚಿದಂತಿತ್ತು. ‘ಲ್ಯಾಂಡ್ಸ್ ಎಂಡ್’ನವರೆಗೂ ಓಡಿಹೋದವನು, ಅಪಾರ ಜಲರಾಶಿಯ ಅಂಚಿನಲ್ಲಿ ಎದ್ದು ನಿಂತ ಕಪ್ಪು ಶಿಲೆಗಳ ಶಿಖರದಲ್ಲಿ ಕಟ್ಟಿಸಿದ ಅರ್ಧಗೋಲಾಕಾರದ ಕಟ್ಟೆಯ ಗಿಡ್ಡ ಗೋಡೆಯ ಮೇಲೆ ಹತ್ತಿ ಏದುಸಿರು ಬಿಡುತ್ತ ಒಬ್ಬನೇ ಕುಳಿತುಕೊಂಡ. ಕಟ್ಟೆ ಇಷ್ಟು ಹೊತ್ತಿಗಾಗಲೇ ನಿರ್ಜನವಾದದ್ದನ್ನು ಕಂಡು ಬಹುಶಃ ಕತ್ತಲೆಯಾದಮೇಲೆ ಈ ಜಾಗ ಕೂರಲು ಸುರಕ್ಷಿತವಾದುದಲ್ಲವೇನೋ ಎಂಬ ವಿಚಾರ ಬಂದರೂ ಕೂತಲ್ಲಿಂದ ಏಳಬೇಕು ಅನ್ನಿಸಲಿಲ್ಲ; ತಾನು ಸದ್ಯ ಸಿಲುಕಿಕೊಂಡ ಅನಿರೀಕ್ಷಿತ ಸನ್ನಿವೇಶದಿಂದ ರಕ್ಷಿಸಿಕೊಳ್ಳಲು ಈ ಜಾಗಕ್ಕಿಂತ ಭದ್ರವಾದ ಜಾಗವಿಲ್ಲ ಎಂದುಕೊಂಡವನಹಾಗೆ ಗೋಡೆಯ ಕಲ್ಲೊಂದಕ್ಕೆ ಗಟ್ಟಿಯಾಗಿ ಹಿಡಿದು ಕೂತೇ ಉಳಿದ. ಕರುಳೊಳಗೆ ಸೇರಿಕೊಳ್ಳತೊಡಗಿದ ನಡುಕಕ್ಕೆ ಗಾಳಿಯಲ್ಲಿ ಮೂಡಹತ್ತಿದ ತಂಪು ಒಂದೇ ಕಾರಣವೆಂದು ತೋರಲಿಲ್ಲ. ಮುಂಬಯಿಗೆ ಬಂದು ಆರು ತಿಂಗಳಾಗುತ್ತ ಬಂದರೂ ಹೀಗೆ ಒಬ್ಬಂಟಿಯಾಗಿ ಸಮುದ್ರದ ಅಂಚಿನಲ್ಲಿ ಕೂತಿರಲಿಲ್ಲ. ಅರ್ಧವೃತ್ತಾಕಾರದ ಅದರ ದಂಡೆಯಲ್ಲಿ ಬಹು ದೂರದವರೆಗೂ ಹೊಳೆಯುತ್ತಿದ್ದ ದೀಪಗಳು; ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಉಬ್ಬಸಪಡುವ ನೊರೆ ಕಾರದ ಕಪ್ಪು ನೀರು; ಚುಕ್ಕೆಗಳು ಮಿಂಚತೊಡಗಿದ ನಿರಭ್ರ ಆಕಾಶದ ಹಿನ್ನೆಲೆಯಲ್ಲಿ ಕಪ್ಪಿನ ರಾಶಿಯಾಗಿ ಕಾಣುತ್ತಿದ್ದ ಗುಡ್ಡದ ನೆತ್ತಿಯಲ್ಲಿ ಹಳೆಯ ಕೋಟೆಯೊಂದರ ಅವಶೇಷಗಳು. ಅವುಗಳೊಳಗಿಂದಲೇ ಎದ್ದುಬಂದು ಆಕಾಶದತ್ತ ನೆಗೆದಂತೆ ತೋರುವ ತಾಳೆ ಮರಗಳ ಕಪ್ಪು ಹಿಂಡು; ತುಸು ದೂರದಲ್ಲಿ ಈ ಗುಡ್ಡದಷ್ಟೇ ಎತ್ತರವಾದ, ಹಲವು ಮಜಲುಗಳುಳ್ಳ ಹೊಟೆಲ್ಲಿನ ಹಾಗೆ ತೋರುವ, ದೊಡ್ಡ ಕಟ್ಟಡವೊಂದರ ನೂರು ಕಿಡಕಿಗಳಿಂದ ಹೊರಬಿದ್ದ ವಿಚಿತ್ರ ಬೆಳಕು. ತೀರ ಪರಿಚಿತವಾದ ಪರಿಸರವಿಶೇಷಗಳೇ ಸೃಷ್ಟಿಸಿದ ಅಪರಿಚಿತ ವಿಶ್ವವೊಂದು ತನ್ನ ಸುತ್ತಲೂ ಎದ್ದು ನಿಂತುದನ್ನು ಕಂಡು ಮಾತಿಗೆ ನಿಲುಕದ್ದೇನೋ ಅಂತಃಕರಣವೆಲ್ಲವನ್ನೂ ವ್ಯಾಪಿಸಿಕೊಂಡುಬಿಟ್ಟಂತಾಗಿ ಜಿಗಿದಾಡಹತ್ತಿದ ಹೃದಯ ಬಾಯಿಗೇ ಬರುತ್ತದೆಯೇನೋ ಎಂದು ದಿಗಿಲಾಯಿತು. ಆಗ ಮಾತಿನಲ್ಲಿ ಹಿಡಿಯಲಾಗದ್ದನ್ನು ಓಟದಲ್ಲಿ ಹಿಡಿದಿಡುವೆನೆಂಬಂತೆ ಕೂತಲ್ಲಿಂದ ಮತ್ತೆ ಓಡತೊಡಗಿದ್ದ. +‘ಲ್ಯಾಂಡ್ಸ್ ಎಂಡ್’ನ ಆ ಕಟ್ಟೆಯನ್ನು ಇಳಿದವನೇ ಬ್ಯಾಂಡ್ ಸ್ಟ್ಯಾಂಡ್ ಇದಿರಿನ ಮೌಂಟ್ ಮೇರಿ ಚರ್ಚಿಗೆ ಹೋಗುವ-ತಾನು ಈವರೆಗೆ ಹತ್ತಿ ಗೊತ್ತಿರದ-ಸಾಲುಪಾವಟಿಗೆಗಳನ್ನು ಭರಭರನೆ ಹತ್ತಿ ಗುಡ್ಡದ ತುದಿ ಸೇರಿ ಎಡಕ್ಕೆ ಹೊರಳಿ, ಸರ್ಪಾಕಾರದಲ್ಲಿ ಗುಡ್ಡವನ್ನು ಬಳಸಿದ ದಾರಿಯಿಂದ ಇಳಿದು, ಗುಡ್ಡದ ಪೂರ್ವದಿಕ್ಕಿನ ಹಿಲ್‌ರೋಡ್ ಬಸ್‌ಸ್ಟಾಪನ್ನು ತಲುಪಿ, ಅಲ್ಲಿಂದ ಕ್ರಿಶ್ಚಿಯನ್ನರ ಹಲವು ಕೇರಿಗಳೊಳಗಿಂದ ಹಾದು, ತಾನು ಕಳೆದ ಮೂರು ತಿಂಗಳಿಂದಲೂ ಸುತ್ತಾಡುತ್ತಿದ್ದ ಝೋಪಡಪಟ್ಟಿಗೇ ಬಂದು ಮುಟ್ಟಿದ್ದ. ಇಲ್ಲಿಯ ಯಾವುದೋ ಗುಡಿಸಿಲೊಂದರಲ್ಲಿ ಅವನ ಅಣ್ಣ ವಾಸಿಸುತ್ತಿದ್ದಿರಬೇಕು. ಎಂಥ ಕೆಲಸ ಮಾಡಿ ಬುದುಕಿದ್ದನೋ ಅವನಿಗೆ ತಿಳಿಯುವುದು ಶಕ್ಯವಿರಲಿಲ್ಲ. ಅಪ್ಪನಿಗೆ ಮಾತ್ರ ತಪ್ಪದೇ ತಿಂಗಳಿಗೆ ಐವತ್ತು ರೂಪಾಯಿ ಕಳುಹಿಸುತ್ತಿದ್ದುದು ಗೊತ್ತಿತ್ತು. ಝೋಪಡಪಟ್ಟಿಯನ್ನು ನೋಡಿದ್ದೇ ಕರುಣಾಕರನಿಗೆ ಅದೇನಾಯಿತೋ-ಅಡ್ಡತಿಡ್ಡವಾಗಿ ಹಬ್ಬಿಕೊಂಡ ಝೋಪಡಿಗಳ ಸುತ್ತಲೂ ಏನನ್ನೋ ಹುಡುಕುವವನ ಹಾಗೆ ಓಡುತ್ತಿದ್ದ. ತನ್ನ ಅಣ್ಣನನ್ನು ಕೊಂದ ಈ ಮುಂಬಯಿ ಮನಸ್ಸಿನಲ್ಲಿ ಮೂಡಿಸಿದ್ದ ಭಯದ ಆಕೃತಿಯನ್ನು ಓಟದ ಮುಖಾಂತರ ಗ್ರಹಿಸುವ ಪ್ರಯತ್ನದಲ್ಲಿ ತೊಡಗಿದವನಹಾಗೆ ಓಡುತ್ತಿದ್ದ. ಓಡಿ ಓಡಿ ದಣಿದ ಮೇಲೆಯೇ ಎನ್ನುವುದಕ್ಕಿಂತ ಹೆಚ್ಚಾಗಿ ತನ್ನನ್ನು ಗಾಸಿಗೊಳಿಸುತ್ತಿದ್ದುದರ ಆಕಾರವನ್ನು ಓದಿ ಅನುಭವಿಸಿದ ಮೇಲೆಯೇ ಅನ್ನುವ ಹಾಗೆ ರಾಜರಸ್ತೆಗಳ ಕೂಟಸ್ಥಾನದಲ್ಲೊಮ್ಮೆ ನಿಂತ. ಝೋಪಡಪಟ್ಟಿಯಿದ್ದ ಈ ಕೇರಿಗೆ ಕೊನೆಯ ವಿದಾಯ ಹೇಳುವ ಮೊದಲೊಮ್ಮೆ ಎಲ್ಲವನ್ನೂ ಕಣ್ಣಿನಲ್ಲಿ ತುಂಬಿಕೊಳ್ಳುವ ಹಾಗೆ ಮತ್ತೆ ನೋಡಿ ಅಲ್ಲಿಂದ ಮತ್ತೆ ಓಟ ಕಿತ್ತ, ಸಾವಕಾಶ ಹೆಜ್ಜೆ ಹಾಕುವುದು ಸಾಧ್ಯವೇ ಇಲ್ಲ ಎನ್ನುವ ರೀತಿ. ಈಗ ಓಡಿದ್ದು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಗುಂಟ. ಮೊದಲ ಕೂಟಸ್ಥಾನದಲ್ಲಿ ಬಲಕ್ಕೆ ಹೊರಳಿ ‘ಡ್ರೈವ್ ಇನ್ ಥಿಯೇಟರ್’ ಇದಿರಿನ ದುರ್ಗಂಧ ಸೂಸುವ ಖಾಡಿಯಗುಂಟ ಸಾಗಿದ ರಸ್ತೆ ಸೇರಿ, ಧಾರಾವಿಯ-ಏಶಿಯಾ ಖಂಡದಲ್ಲಿಯೇ ದೊಡ್ಡದೆನಿಸಿಕೊಂಡ-ಝೋಪಡಪಟ್ಟಿಯನ್ನು ಹಾದುಹೋಗುವ ರಸ್ತೆಗೆ ಹೊರಳಿ ಓಡಾಡುತ್ತಿದ್ದಾಗ ಸುತ್ತಲಿನದೆಲ್ಲ ಕೇವಲ ಓಟವಾಗಿ ಪ್ರಜ್ಞೆಗೆ ಬರುತ್ತಿದ್ದ ಹಾಗಿತ್ತು. ಸಾಯನ್ ರೇಲ್ವೇ ಸ್ಟೇಶನ್ ತಲುಪಿದ ಮೇಲೆ ಇದು ಸಾಯನ್ ಸ್ಟೇಶನ್ ಎಂಬುದನ್ನು ಗ್ರಹಿಸಲು ಹೊತ್ತು ಹಿಡಿಯಿತು. ಹಾಗೆ ಗ್ರಹಿಸಿದ ಮೇಲೆಯೇ ತನ್ನ ಓಟ ತನ್ನನ್ನು ಇಲ್ಲಿಗೆ ತಂದು ಮುಟ್ಟಿಸಿದ್ದು ಡೊಂಬಿವ್ಲಿಗೆ ಹೋಗುವ ಟ್ರೇನ್ ಹತ್ತಿಸಲು ಎಂಬುದು ಹೊಳೆಯಿತು. ಆಗ ರಾತ್ರಿಯ ಹೊತ್ತು ದಾಟಿತ್ತು. ಹೊಟ್ಟೆಯೂ ಅತೀವ ಹಸಿದಿತ್ತು. ಆದರೆ ಊಟ ಮಾಡುವ ಮನಸ್ಸಿರಲಿಲ್ಲ. ಅನ್ಯ ಮನಸ್ಕನಾಗಿ ಟ್ರೇನು ಹತ್ತಿಕುಳಿತ ಕೂಡಲೇ ಕೋಣೆ ತಲುಪಿದ ಮೇಲೆ ತಾನು ಮಾಡಬೇಕಾದ ಮೊಟ್ಟ ಮೊದಲಿನ ಕೆಲಸವೆಂದರೆ ದಿನವೂ ಬರೆಯುತ್ತಿದ್ದ ಡಾಯರಿಯಲ್ಲಿ ಅಣ್ಣನ ಕೊಲೆಯ ಬಗ್ಗೆ ಬರೆಯುವುದು ಎಂದುಕೊಂಡು ಯೋಚಿಸುತ್ತಿದ್ದ: ಈ ಝೋಪಡಪಟ್ಟಿಗಳು, ಅವುಗಳ ಸುತ್ತಲಿನ ಆಕಾಶದೆತ್ತರದ ಕಟ್ಟಡಗಳು-ಇವು ಒಂದರೊಳಗೊಂದು ಹೆಣೆದುಕೊಂಡು ಸೃಷ್ಟಿಸಿರುವ ನಿಗೂಢ ಭಯಾನಕತೆಗೆ ಅಣ್ಣ ಬಲಿಯಾದ ದಾರುಣ ರೀತಿ ತನ್ನ ಡಾಯರಿಯ ಕೊನೆಯ ಅಧ್ಯಾಯವಾಗಬೇಕು; ತಾನು ಕಳೆದ ಮೂರು ತಿಂಗಳಿಂದಲೂ ತೊಡಗಿಸಿಕೊಂಡ ಚಟುವಟಿಕೆಯ ನಿಜವಾದ ಅರ್ಥವನ್ನು ವಿವರಿಸಿ ಲಲಿತಳಿಗೂ ಪತ್ರ ಬರೆಯಬೇಕು. +ಭಡಕ್ಕನೆ, ಹತ್ತಿದ ನಿದ್ದೆಯಿಂದ ಎಚ್ಚರವಾದವನಿಗೆ ತಾನಿನ್ನೂ ಡೊಂಬಿವ್ಲಿ ಸ್ಟೇಶನ್ನಿನ ಪ್ಲ್ಯಾಟ್‌ಫಾರ್ಮಿನ ಮೇಲಿನ ಬೆಂಚೊಂದರ ಮೇಲೆ ಅಡ್ಡವಾದಲ್ಲೇ ಇದ್ದೇನೆ ಎನ್ನುವ ಅರಿವು ಮೂಡಿತು. ಅದರ ಹಿಂದೆಯೇ ಹೊಳೆದು ಹೋದ ಇನ್ನೊಂದು ಸಂಗತಿಯನ್ನು ಒಪ್ಪಿಕೊಳ್ಳಲು ಅವನಿಗೆ ಕೂಡಲೇ ಸಾಧ್ಯವಾಗಲಿಲ್ಲ. ಅಣ್ಣನ ಹುಡುಕಾಟದಲ್ಲಿದ್ದವನ ಭಾವನೆಗಳಲ್ಲಿ ಮೂಡಿಬರುತ್ತಿದ್ದ ಮುಂಬಯಿ ನಗರದ ಬಗ್ಗೆ ಬರೆದ ಡಾಯರಿ ತಾನು ಬ್ಯಾಗಿನಲ್ಲಿ ತುರುಕಿದ ವಸ್ತುಗಳಲ್ಲಿ ಇದ್ದ ನೆನಪಿಲ್ಲ. ಮೇಜಿನ ಡ್ರಾವರಿಯಿಂದ ತೆಗೆದು ಬ್ಯಾಗಿನಲ್ಲಿ ತುರುಕಿದ ಪ್ರತಿಯೊಂದು ವಸ್ತು ನೆನಪಿಗೆ ಬಂತು. ಆದರೆ ಡಾಯರಿ ಕೈಗೆತ್ತಿಕೊಂಡದ್ದು ನೆನಪಾಗಲಿಲ್ಲ. ನೆನಪಾಗದೆ ಉಳಿದಷ್ಟೂ ಅದು ಡ್ರಾವರಿನಲ್ಲಿ ಇರಲಿಲ್ಲ ಎಂಬುದರ ಬಗೆಗೆ ಖಾತ್ರಿಯಾಗ ಹತ್ತಿತು. ಕೋಣೆಯ ಬೀಗ ಮುರಿದು ಒಳನುಗ್ಗಿದವರು ಅದಕ್ಕಾಗಿಯೇ ಬಂದಿರಬಹುದೆ? ಟಿಪ್ಪಣಿಗಳು ಮಲೆಯಾಳಮ್ ಭಾಷೆಯಲ್ಲಿದ್ದುವು. ಬೇಕಾದ ಮಾಹಿತಿ ಒಟ್ಟು ಮಾಡಿದ ಮೇಲೆ ಈ ಟಿಪ್ಪಣಿಗಳಿಂದಲೇ ಆಫೀಸಿನಲ್ಲಿ ಕೂತು ಇಂಗ್ಲೀಷಿನಲ್ಲಿ ತನ್ನ ರಿಪೋರ್ಟನ್ನು ಸಿದ್ಧಗೊಳಿಸುವವನಿದ್ದ. ವೃತ್ತಪತ್ರಿಕೆಯ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ತನ್ನ ಯೋಗ್ಯತೆಯನ್ನು ಪರೀಕ್ಷೆ ಮಾಡಲು ತನಗೆ ಒಪ್ಪಿಸಿದ ಈ ಕೆಲಸ- ಮುಂಬಯಿ ಝೋಪಡಪಟ್ಟಿಗಳ ಮೇಲೆ ಬೆಳಕು ಚೆಲ್ಲ ಬಹುದಾದ ರಿಪೋರ್ಟ್-ಅಣ್ಣನ ಹುಡುಕಾಟಕ್ಕೆ ತಳಕು ಹಾಕಿಕೊಂಡದ್ದು ಬಾಂದ್ರಾಕ್ಕೆ ಬಂದ ಒಂದು ಆಕಸ್ಮಿಕ ಗಳಿಗೆಯಲ್ಲಿ. ತಾನು ಬೆಳಗ್ಗೆ ತಂಗಲಿದ್ದ ಜಾಗಕ್ಕೆ ಹೋದಕೂಡಲೇ ಬ್ಯಾಗಿನಲ್ಲಿ ಡಾಯರಿಯನ್ನು ಹುಡುಕಿ ನೋಡಬೇಕು ಎಂದು ಕೊಂಡರೂ ಅದು ಸಿಗುವ ಭರವಸೆ ತೋರಲಿಲ್ಲ. ಆದರೆ ಅದುವೇ ಒಂದು ಹೊಸ ನಿರ್ಧಾರಕ್ಕೆ ಆಹ್ವಾನವಾಯಿತು ‘ನೇರವಾಗಿ ಇಂಗ್ಲೀಷಿನಲ್ಲೇ ಬರೆಯುವೆ-ಈವರೆಗೆ ಇಂಥ ಕೊಲೆಗಳ ಬಗ್ಗೆ, ಝೋಪಡಿಪಟ್ಟಿಗಳ ಬಗ್ಗೆ, ಅಣ್ಣನ ಹುಡುಕಾಟದಲ್ಲಿದ್ದವನ ಮೇಲೇ ಮುಗಿಬೀಳುವ ನಮ್ಮೆಲ್ಲರ ಬಗ್ಗೆ ಯಾರೂ ಬರೆದಿರದ ರೀತಿಯಲ್ಲಿ ಬರೆಯುವೆ. ವಾಸ್ತವವನ್ನು ಕೇವಲ ಸುದ್ದಿಯನ್ನಾಗಿ ಸವಿಯುವ ಚಟವನ್ನು ಪೂರೈಸುವ ಮಸಾಲೇದಾರ ವರದಿಯನ್ನಾಗಲ್ಲ; ನಮ್ಮ ಹಾಗೆಯೇ ಇದ್ದ ಇನ್ನೊಬ್ಬನನ್ನು ಹಾಗೆ ಇದ್ದ ಕಾರಣಕ್ಕಾಗಿಯೇ ಕೊಲ್ಲಲು ಕಾರಣವಾಗುವ ವಾಸ್ತವವನ್ನು ಅದರ ಎಲ್ಲ ಬಣ್ಣ, ವಾಸನೆ, ಸದ್ದುಗಳೊಂದಿಗೆ ಎಲ್ಲರ ಮೋರೆಗೆ ಹಿಡಿಯುವೆ.’ +ಪ್ಲ್ಯಾಟ್‌ಫಾರ್ಮಿನ ಗಡಿಯಾರದಲ್ಲಿ ಐದು ಹೊಡೆಯಲು ಬಂದಿತ್ತು. ವೀಟೀಗೆ ಹೋಗುವ ಮೊದಲ ಗಾಡಿ ಬರುವ ಹೊತ್ತಿಗಾಗಿರಬೇಕು. ಆಗಲೇ ಪ್ಲ್ಯಾಟ್‌ಫಾರ್ಮಿನ ಮೇಲೆ ಐದಾರು ಜನ ಕಾಣಿಸಿಕೊಂಡಿದ್ದರು. ತಾನೂ ಹೋಗುವ ಸಿದ್ಧತೆ ಮಾಡಬೇಕೆಂದುಕೊಂಡು ಎದ್ದು ನಿಲ್ಲುವ ಪ್ರಯತ್ನ ಮಾಡಿದರೆ ಮುಗ್ಗರಿಸಿ ಬೀಳುವಂತಾಯಿತು. ಬೆಂಚಿನ ಮೇಲೆ ಮಲಗಿ ಮಾಡಿದ ನಿದ್ದೆಯ ಸ್ವರೂಪ ಆಗ ಅರಿವಿಗೆ ಬಂದಿತು.ತಂಪು ನೀರಿನಿಂದ ಮೋರೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳೋಣವೆಂದರೆ ಹತ್ತಿರವೆಲ್ಲೂ ನೀರಿನ ನಲ್ಲಿಯಿದ್ದಂತೆ ತೋರಲಿಲ್ಲ. ಎದ್ದು ನಿಂತಲ್ಲೇ ಕೈಕಾಲುಗಳನ್ನು ಅಲ್ಲಾಡಿಸಿ ಸಡಿಲಗೊಳಿಸಿ ಕೊಳ್ಳುವಷ್ಟರಲ್ಲಿ ದೂರ, ಬೆಳಗುಜಾವದ ಮಬ್ಬುಗತ್ತಲನ್ನು ಸೀಳಿಬರುತ್ತಿದ್ದ ಟ್ರೇನು ಕಾಣಿಸಿತು. ತಾನು ಹತ್ತಲಿದ್ದ, ಬಹುಶಃ ಡೊಂಬಿವ್ಲಿಯಿಂದ ಖಾಯಮ್ ಆಗಿ ಬೇರ್ಪಡಿಸಲಿದ್ದ ಆ ಟ್ರೇನಿನ ಮುಂಭಾಗವನ್ನು ಕಂಡೊಡನೆ ಅತ್ತು ಬಿಡಬೇಕು ಎನ್ನುವಷ್ಟು ಭಾವುಕನಾದ ತಾನು ನಿಂತ ಬೆಂಚಿನ ಇದಿರೇ ಬಂದು ತಲುಪಿದ ಡಬ್ಬಿಯಲ್ಲಿ, ಜೊತೆಗೆ ತಂದ ಬ್ಯಾಗಿನೊಂದಿಗೆ ಹತ್ತಿದ. ಡಬ್ಬಿಯಲ್ಲಿ ಆ ಹೊತ್ತಿಗೆ ಯಾರೂ ಇರಲಿಲ್ಲ. ಪ್ಲ್ಯಾಟ್‌ಫಾರ್ಮ್ ಮೇಲೆ ಇಡೀ ರಾತ್ರಿ ಕಳೆದವನಿಗೆ ಏಕೋ ವಿಚಿತ್ರ ರೀತಿಯಿಂದ ಭಯವಾಗತೊಡಗಿತು. ಮುಂದಿನ ಸ್ಟೇಶನ್ನುಗಳಲ್ಲಿ ಜನ ಬರಬಹುದೆಂದು ಸಮಾಧಾನ ತಂದುಕೊಂಡ. +ವೀಟೀ ತಲುಪಿದೊಡನೆ ‘ಜೀಪೀ‌ಓ’ನ ಇದಿರುಗಡೆಯಲ್ಲಿದ್ದ ‘ಸಮ್ರಾಟ್’ ಹೋಟೆಲಿನಲ್ಲಿ ರೂಮು ಹಿಡಿಯುವುದು ಅವನ ಯೊಚನೆಯಾಗಿತ್ತು. ಕೇರಳದಿಂದ ಬಂದ ಮೊದಲಲ್ಲಿ ಡೊಂಬಿವ್ಲಿಯಲ್ಲಿ ಕೋಣೆ ಸಿಗುವ ತನಕ ಅವನು ಈ ಹೋಟೆಲಿನಲ್ಲೇ ರೂಮು ಹಿಡಿದಿದ್ದ. ಅಲ್ಲಿದ್ದ ಹತ್ತು ದಿನಗಳಲ್ಲಿ ಹಲವರ ಪರಿಚಯವಾಗಿತ್ತು. ರೂಮು ಸಿಗದೆ ಇರಲಾರದು ಎಂಬ ಭರವಸೆಯೇ ಸಿಗದೇ ಇದ್ದರೆ ಎಲ್ಲಿಗೆ ಹೋಗುವುದು ಎನ್ನುವ ಪ್ರಶ್ನೆಯನ್ನೇ ಅಪ್ರಸ್ತುತಗೊಳಿಸಿದಂತಿತ್ತು. ಹಾಗೆ ನೋಡಿದರೆ ಕರುಣಾಕರನ್‌ಗೆ ಗೆಳೆಯರಿಲ್ಲದಿರಲಿಲ್ಲ. ಠಾಣಾದಲ್ಲೇ ಕೇರಳದವರೇ ಆದ ಇಬ್ಬರು ಗೆಳೆಯರಿದ್ದರು. ಹೋದರೆ ಬೇಡವೆನ್ನುತ್ತಿರಲಿಲ್ಲ. ಆದರೆ ಇಂದಿನ ಮನಃಸ್ಥಿತಿಯಲ್ಲಿ ಯಾರಲ್ಲೂ ಹೋಗಬೇಕೆಂದು ತೋರಲಿಲ್ಲ. ಹೊಟೆಲ್ಲು ಸೇರಿದ ಮೇಲೆ ಮಾಡಬೇಕೆಂದುಕೊಂಡ ಕೆಲಸಕ್ಕಂತೂ ಹೊಟೆಲ್ಲಿನಂಥ ಜಾಗ ಬೇರೆ ಇರಲಿಲ್ಲ. ಮೇಲಾಗಿ ಯಾವುದರ ಬಗ್ಗೆ ಕೂಲಂಕಷವಾಗಿ ವಿಚಾರ ಮಾಡುವ ಸ್ಥಿತಿಯಲ್ಲಿ ಅವನಾಗ ಇರಲಿಲ್ಲ. ಹಸಿವು ದಣಿವು ನಿದ್ದೆಗಳನ್ನು ಮೀರಿ ನಿಂತಂತಿದ್ದ ದೇಹ ಮನಸ್ಸುಗಳೆರಡೂ ಧೇನಿಸುತ್ತಿದ್ದುದೆಂದರೆ ಆದಷ್ಟು ಬೇಗ ವೀಟೀ ತಲುಪಬೇಕು. ಹೊಟೆಲ್ಲಿನಲ್ಲಿ ರೂಮು ಹಿಡಿಯಬೇಕು. +ಸೀಟಿನ ಮೇಲೆ ಕಿಡಕಿಗೆ ತಾಗಿ ಕೂತಲ್ಲಿಂದ ಮುಂದಿನ ಸೀಟಿನ ಮೇಲೆ ಕಾಲುಗಳೆರಡನ್ನೂ ಚಾಚಿದ. ನಿನ್ನೆ ಬೆಹರಾಮನ ಮನೆಗೆ ಹೋಗುವಾಗಿನಿಂದಲೂ ಹಾಕಿಕೊಂಡಿದ್ದ ಬೂಟುಗಳನ್ನು ಕಳಚಿಯೇ ಇರಲಿಲ್ಲ ಎಂಬುದು ಈಗ ನೆನಪಾದವನ ಹಾಗೆ ಭಡಭಡನೆ ಬೂಟು ಸಾಕ್ಸ್‌ಗಳನ್ನು ತೆಗೆದು ಸೀಟಿನ ಕೆಳಗಿಟ್ಟ. ಸೂಟ್‌ಕೇಸನ್ನು ತೆರೆದು ಡಾಯರಿಯನ್ನು ಹುಡುಕುವ ಮನಸ್ಸಾಯಿತು. ಮರುಗಳಿಗೆ ಈಗ ಬೇಡವೆನ್ನಿಸಿ ದೃಷ್ಟಿಯನ್ನು, ಅದಾಗಲೇ ಸ್ಟೇಶನ್ ಬಿಟ್ಟು ವೇಗ ಪಡೆಯ ಹತ್ತಿದ, ಟ್ರೇನಿನ ಕಿಡಕಿಯ ಹೊರಗೆ ಚಾಚಿದ. ಹಲವು ಸಾರೆ ಕಂಡು ಹೆಸರು ಗೊತ್ತಿರದ ಇಬ್ಬದಿಯ ಜನವಸತಿಗಳು, ಕಾರ್ಖಾನೆಗಳು ಬೆಳಗಿನ ನಸುಗತ್ತಲಲ್ಲಿ ಕಣ್ಣ ಪರದೆಯ ಮೇಲೆ ಆಕೃತಿಯಾಗುವ ಬಲವಿಲ್ಲದೆಯೂ ತಮ್ಮ ಅಸ್ತಿತ್ವವನ್ನು ತಪ್ಪದೇ ಪ್ರಕಟಿಸುತ್ತಿದ್ದುವು. ನಿನ್ನೆ ತಾನು ತನಗೆ ದಿಗ್ಭ್ರಮೆಯಿಡಿಸುವ ಹಾಗೆ ಓಡುವಾಗ ಗ್ರಹಿಸಿದ ಮುಂಬಯಿಯ ಅಕರಾಳವಿಕರಾಳ ಆಕಾರದಲ್ಲಿ ಒಂದಾಗಿ ಹೋದ ಈ ಪರಿಸರವಿಶೇಷಗಳಿಗೆ ಬಿಡಿಯಾಗಿ ಅರ್ಥವಿದ್ದಂತೆ ಅನ್ನಿಸಲಿಲ್ಲ. ಬೆಳಗಿನ ತಂಪಿಗೋ, ಬೆಳಕಾಗುವ ಹವಣಿಕೆಯಲ್ಲಿದ್ದ ಮಬ್ಬುಗತ್ತಲೆಗೋ ಅಥವಾ ಏಕ ಸ್ವರದ ಸಪ್ಪಳ ಮಾಡುತ್ತ ಓಡುತ್ತಿದ್ದ ಟ್ರೇನಿನ ವೇಗಕ್ಕೋ, ತನ್ನ ತಂಗಿಯಾಗಲಿ, ಬೆಹರಾಮನಾಗಲಿ ಸದ್ಯ ನೆನಪಿನಲ್ಲಿ ಮೂಡುತ್ತಲಿರಲೇ ಇಲ್ಲ. ಆ ಕ್ಷಣಕ್ಕೆ ಮನಸ್ಸು ತುಂಬಿದ್ದು ಮೂಡಿ ಮೂಡಿ ಮುಳುಗುವ, ಮುಳುಗುವಷ್ಟರಲ್ಲಿ ಮತ್ತೆ ಮೂಡುವ ಹಲವು ಪ್ರತಿಮೆಗಳು. ‘ಖೋ’ ಆಟವನ್ನು ಆಡುವವರ ಹಾಗೆ ಒಂದು ಇನ್ನೊಂದನ್ನು ಬೆನ್ನಟ್ಟುತ್ತ ಇನ್ನೊಂದರ ಜಾಗದಲ್ಲಿ ತಾನೇ ಕೂರುತ್ತ ಹೊಸಹೊಸ ವಿನ್ಯಾಸಗಳಿಗೆ ಎಡೆಮಾಡಿಕೊಡುತ್ತಿದ್ದುವು: ಝೋಪಡಿಪಟ್ಟಿಯ ಗುಡಿಸಲುಗಳು; ಆಕಾಶದೆತ್ತರಕ್ಕೆ ತಲೆ ಚಾಚಿದ ಸಿಮೆಂಟ್ ಕಟ್ಟಡಗಳು; ಕದದ ಹಿಂದೆ ಕದಗಳುಳ್ಳ ಸುಭದ್ರ ಬಾಗಿಲುಗಳು; ಒಳಗೆ ಬರಮಾಡಿಕೊಂಡು ಏನೋ ನೆನಪಾದವರ ಹಾಗೆ, ಏನೂ ಗೊತ್ತಿಲ್ಲದವರ ಹಾಗೆ ಹೆದರುತ್ತ ಮಾತನಾಡಿದವರು; ಮಾತನಾಡುತ್ತ ಆಡುತ್ತ ಹೆದರಿದವರು, ಹೆದರಿ ಓಡಿಸಿದವರು; ಕದ ತೆರೆಯಲೂ ನಿರಾಕರಿಸಿದವರು; ಸಮುದ್ರ ಕಾಣುವ ಬಾಲ್ಕನಿಗಳಲ್ಲಿ ಹಗ್ಗಗಳ ಬುಟ್ಟಿಗಳಲ್ಲಿ ತೂಗುವ ಕುಂಡಗಳಲ್ಲಿ ನೀರು ಹನಿಸಿ ಬೆಳೆಯಿಸಿದ ಗಿಡಗಳು; ಬಿದಿರಿನ ತಟ್ಟೆಗಳು, ತಗಡಿನ ಮಾಡುಗಳು, ಹೊಲಸು ನೀರು ಹರಿಯುವ ತೋಡುಗಳು; ಚಾರಪಾಯಿಗಳು; ಕೆದರಿದ ಕೂದಲಿನ ಹೆಣ್ಣುಗಳು, ಬಿಕ್ಕೆ ಬೇಡುವ ಮುದುಕರು; ಮಣ್ಣಿನ ಮಡಕೆಗಳು, ಅಲ್ಯುಮಿನಿಯಮ್ ತಟ್ಟೆಗಳು; ಬೊಗಳುವ ನಾಯಿಗಳು; ಬೈದಾಡುವ, ಕೈಕೈ ಎನ್ನುವ, ಬರೀ ಕೈಗಳಾಗುವ, ಕಣ್ಣುಬಾಯಿಗಳಾಗುವ ಪಟ್ಟೆಪಟ್ಟೆಯ ಲುಂಗಿ ಉಟ್ಟವರು; ಬಣ್ಣದ ಬನಿಯನ್ ತೊಟ್ಟವರು; ಹಣ ಮಾಡುವವರು, ಹಣ ಮಾತಾಡುವವರು, ಬರೀ ಹಣವಾಗುವವರು. ಅಣ್ಣನ ಕೊಲೆ ಈಗಿನ ಈ ಓಟಕ್ಕೆ ಪ್ರೇರಣೆಯಾಗಿರುವಾಗಲೂ ಅದೊಂದು ಮಾತ್ರ ನೆನಪಿಗೆ ಬರದಿರಲಿ ಎಂಬಂತೆ ಕೈಮುಷ್ಟಿಗಳನ್ನು ಬಿಗಿಮಾಡುತ್ತ ಕೂತಲ್ಲೇ ಚಡಪಡಿಸಿದ. ಸರಕ್ಕನೆ ಎದ್ದು ನಿಂತು ಸರಕ್ಕನೆ ಕೂತ. +ಠಾಣಾ ಸ್ಟೇಶನ್ನಿನಲ್ಲಿ ಜನರ ದೊಡ್ಡ ಗುಂಪೊಂದು ಡಬ್ಬಿ ಹತ್ತಿದ್ದನ್ನು ನೋಡಿ ಪುಲಕಿತನಾದ. ಬಂದವರಲ್ಲೊಬ್ಬ ತನ್ನ ಮುಂದಿನ ಸೀಟಿನಲ್ಲಿ ಕೂರುತ್ತಿದ್ದಾಗ ಅವನನ್ನು ನೋಡಿ ಮುಗುಳುನಗೆ ನಕ್ಕ. ಕೆಲಸಕ್ಕೆ ಹೊರಟಿರುವ ಕಾರ್ಮಿಕರಿರಬೇಕು ಎಂದುಕೊಳ್ಳುತ್ತಿರುವಾಗ ಇದಿರು ಕೂತವನು ಇವನು ನಕ್ಕದ್ದನ್ನು ಕಂಡು ತಾನೂ ಮುಗುಳುನಕ್ಕ: ಮನಸ್ಸಿಗೆ ಗೆಲುವು ಆಯಿತು. ಮಾತನಾಡಿಸುವ ಮನಸ್ಸಾದರೂ ತನ್ನ ಹಿಂದೀ ಸಾಲದೆನಿಸಿತು. ಇಂಗ್ಲಿಷ್ ತಿಳಿದವನಂತೆ ಕಾಣಲಿಲ್ಲ. ಅವನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ ತಾನು ಹೋಗುತ್ತಿದ್ದುದು ಭಾಂಡೂಪ್‌ಗೆ ಸಮೀಪವಾದ ಕಾಂಜೂರ್ ಸ್ಟೇಶನ್ನಿಗೆ ಎಂದೂ ಅಲ್ಲಿಯ ಕ್ರಾಂಪ್ಟನ್ಸ್ ಫ್ಯಾಕ್ಟರಿಯಲ್ಲಿ ಮೊದಲ ಪಾಳಿಯ ಕೆಲಸಗಾರನೆಂದೂ ಹಿಂದಿಯಲ್ಲಿ ತಿಳಿಸಿದ. ಕರುಣಾಕರನ್‌ಗೆ ಅರ್ಥವಾದಂತೆ ಅನ್ನಿಸಿ ಇನ್ನೊಮ್ಮೆ ನಕ್ಕನೇ ಹೊರತು ತನ್ನ ಬಗ್ಗೆ ಹೇಳಲು ಹೋಗಲಿಲ್ಲ. ಅವನೇ ಊಹಿಸಿದ: “ನೀವು ಮುಂಬಯಿಗೆ ಹೊಸಬರೇನೋ. ಕೆಲಸದ ಶೋಧದಲ್ಲಿ ಇದ್ದೀರೇನೋ. ಸಿಕ್ಕೇ ಸಿಗುತ್ತದೆ. ಇಷ್ಟು ದೊಡ್ಡ ಮುಂಬಯಿಯಲ್ಲಿ ಯಾರಿಗೂ ಕೆಲಸ ಸಿಗುವುದು ಕಷ್ಟವಲ್ಲ.” ಅವನು ಇದೇ ಧಾಟಿಯಲ್ಲಿ ಇನ್ನೂ ಕೆಲಹೊತ್ತು ಮಾತನಾಡಿಸಿದರೆ ತಾನು ಅತ್ತುಬಿಡುವುದು ಖಾತ್ರಿಯೆನಿಸಿತು. ಪುಣ್ಯಕ್ಕೆ ಅವನು ಹಾಗೆ ಮಾತನಾಡಿಸಲಿಲ್ಲ. ಅವನ ಲಕ್ಷ್ಯವನ್ನು ಅಷ್ಟರೊಳಗೆ ಅವನ ಜೊತೆಗಾರನೊಬ್ಬನು ಸೆಳೆದುಕೊಂಡಿದ್ದ. ಮಾತನಾಡದೆಯೂ ಇದಿರು ಕುಳಿತವನ ಸಾನ್ನಿಧ್ಯ ತನ್ನ ಖುಶಿಗೆ ಕಾರಣವಾಗುತ್ತಿದೆ ಎಂಬ ಅರಿವಿನಿಂದ ಕೃತಜ್ಞತೆಯಿಂದ ಎದೆ ತುಂಬಿಬಂತು. ಹೆಸರು ಗೊತ್ತಿಲ್ಲದ ಆ ಕಾರ್ಮಿಕ ಕಾಂಜೂರ್ ಸ್ಟೇಶನ್ನಿನಲ್ಲಿ ಇಳಿಯುವ ಸಿದ್ಧತೆ ಮಾಡುತ್ತಿದ್ದಾಗ ಎದ್ದುನಿಂತು ಕೈಕುಲುಕಿ ಅವನನ್ನು ಬೀಳ್ಕೊಟ್ಟ. ತಾನು ಬರೆಯಲಿದ್ದ ರಿಪೋರ್ಟಿನಲ್ಲಿ ಕತ್ತಲಲ್ಲಿ ಮಿಂಚಿದ ಬೆಳಕಿನ ಕಿಡಿಯ ಹಾಗೆ ಈ ಭೇಟಿ ಸೇರಿಕೊಳ್ಳಬಹುದೇನೋ ಎಂಬ ಕಲ್ಪನೆಯಿಂದಲೇ ಖುಶಿಪಟ್ಟ. +ಹಾಗೆ ಖುಶಿಯಿಂದ ಮನಃಸ್ಥಿತಿಯಲ್ಲೇ ಕರುಣಾಕರನ್ ವೀಟೀ ತಲುಪಿದ್ದ. ‘ಸಾಮ್ರಾಟ್’ ಹೊಟೆಲ್ಲಿನಲ್ಲಿ ರೂಮು ಹಿಡಿದಿದ್ದ. ಕೋಣೆಯ ಕದ ಮುಚ್ಚುವ ಪುರಸೊತ್ತಿಲ್ಲ, ಕಾಲಿಗೆ ಹಾಕಿದ ಬೂಟುಗಳನ್ನು ತೆಗೆದು ಮಂಚದ ಮೇಲೆ ಒರಗಿದವನಿಗೆ ನಿದ್ದೆಹತ್ತಿದ್ದೇ ಗೊತ್ತಾಗಲಿಲ್ಲ. ಎಚ್ಚರವಾದಾಗ ಮಧ್ಯಾಹ್ನದ ಮೂರು ಗಂಟೆ. ಗಡಿಯಾರ ನೋಡಿಕೊಂಡಾಗ ನಂಬುವುದು ಕಷ್ಟವಾಯಿತು. ಬದಿಯ ಇರಾನೀ ರೆಸ್ಟೊರೆಂಟಿಗೆ ಹೋಗಿ ಆಮ್ಲೆಟ್-ಬ್ರೆಡ್ ತಿಂದು, ಚಹ ಕುಡಿದು ಅದೇ ರೆಸ್ಟೊರೆಂಟಿನಿಂದ ಆಫೀಸಿಗೆ ಫೋನ್ ಮಾಡಿದ. ಕೋಣೆಗೆ ಹಿಂದಿರುಗಿ, ಸ್ನಾನಮಾಡಿ, ಲುಂಗಿ ಬನಿಯನ್ ತೊಟ್ಟು ಮತ್ತೆ ಹಾಸಿಗೆ ಸೇರಿದವನಿಗೆ ಎಚ್ಚರವಾದದ್ದು ಮರುದಿನ ಬೆಳಿಗ್ಗೆ, ಪರದೆ ಬಿಚ್ಚಿರದ ಕಿಡಕಿಯಿಂದ ತೂರಿಬಂದ ಸೂರ್ಯನ ಕಿರಣ ಕಣ್ಣುಗಳ ಮೇಲೆಯೇ ಬಿದ್ದಾಗ. ಎರಡು ದಿನಗಳಿಂದ ಹತ್ತಿದ ದಣಿವು ಎಲ್ಲಿಂದೆಲ್ಲಿಗೋ ಹಾರಿಹೋಗಿತ್ತು; ಮಾತ್ರವಲ್ಲ, ಬರೆಯಬೇಕೆಂದು ಯೋಜಿಸಿಕೊಂಡ ಇಡಿಯ ರಿಪೋರ್ಟು ಕಾಗದ ಪೆನ್ನುಗಳನ್ನು ಕೈಗೆತ್ತಿಕೊಳ್ಳುವುದೇ ತಡ ತಂತಾನೆ ಆಕೃತಿ ಪಡೆಯಲು ಸಿದ್ಧವಾಗಿರುವಂತೆ ತೋರಿತು. ಪ್ರಾತರ್ವಿಧಿ, ಸ್ನಾನಗಳನ್ನು ಮುಗಿಸಿ, ನಾಸ್ತಾ ಮಾಡಿ ಬಂದವನೇ, ಹಾಸಿಗೆಯ ಮೇಲೆ ಕುಳಿತೇ ಬರೆಯಲು ತೊಡಗಿದ. +ಭಾಗ : ಎರಡು +ಅಧ್ಯಾಯ ನಾಲ್ಕು +ಕರುಣಾಕರನ್ನನ ಬೆನ್ನಹಿಂದೆಯೇ ಓಡಿಹೋದ ಬೆಹರಾಮ್ ಅವನು ಹೋಗಿರಬಹುದೆಂದು ಬಗೆದ ಬಸ್‌ಸ್ಟಾಪಿನವರೆಗೂ ಓಡಿಹೋಗಿ ಅವನು ಅಲ್ಲಿ ಕಾಣದಾದಾಗ ಅದರ ಮೊದಲಿನ ‘ಬ್ಯಾಂಡ್‌ಸ್ಟ್ಯಾಂಡ್’ ಸ್ಟಾಪಿಗೆ ಹೋಗಿರಬಹುದೆಂದು ಅತ್ತಕಡೆಗೆ ಓಡಿಹೋಗುತ್ತಿರುವಷ್ಟರಲ್ಲಿ ಬಸ್ ಒಂದು ಸ್ಟಾಪನ್ನು ಅದೇ ಬಿಡುತ್ತಿರುವುದು ಕಂಡುಬಂದಿತು. ಕರುಣಾಕರನ್ ಆ ಬಸ್ಸನ್ನು ಹತ್ತಿರುವುದರಲ್ಲಿ ಸಂಶಯವೇ ಇಲ್ಲದವನ ಹಾಗೆ ಬೆಹರಾಮ್ ಸಮಾಧಾನದ ನಿಟ್ಟುಸಿರು ಬಿಟ್ಟ. ಆದರೂ ಬಸ್‌ಸ್ಟಾಪಿನವರೆಗೂ ಹೋಗಿಯೇ ಮನೆಗೆ ಹಿಂತಿರುಗಿದ. ಯಾರೊಡನೆಯೂ ಮಾತನಾಡುವ ಮನಸ್ಸೇ ಇಲ್ಲದವನ ಹಾಗೆ ಸೀದಾ ಬಾಲ್ಕನಿಗೆ ಹೋಗಿ ಆರಾಮಕುರ್ಚಿಯಲ್ಲಿ ಮೈಚೆಲ್ಲಿ ಕಣ್ಣು ಮುಚ್ಚಿದ. ಕರುಣಾಕರನ್ನನನ್ನು ಮನೆಯಿಂದ ಓಡಿಸಿದ ಶಿರೀನ್-ಪಾರ್ವತಿಯರ ಮೇಲೆ ಅವನಿಗೆ ಸಿಟ್ಟುಬಂದಿತ್ತು. ಕರುಣಾಮಯಿಯಾದ ಹೆಂಡತಿಯೂ ಅವರೊಡನೆ ಸಾಮೀಲಾದದ್ದು ಆಶ್ಚರ್ಯದಂತೆ ನೋವಿಗೂ ಕಾರಣವಾಗಿತ್ತು. ಅಪ್ಪನ ಮೂಡು ಅರಿತ ಶಿರೀನಳಿಗೆ ಅವನನ್ನು ಮಾತನಾಡಿಸುವ ಧೈರ್ಯ ಇರಲಿಲ್ಲ. ಆದರೂ ತನ್ನ ಕೃತ್ಯವನ್ನು ಕೂಡಲೇ ಸಮರ್ಥಿಸಿಕೊಳ್ಳುವ ಹುಕ್ಕಿ ಬಂದವಳ ಹಾಗೆ, “ಅಪ್ಪಾ” ಎಂದು ಕರೆದದ್ದೇ ತಡ, “ಪ್ಲೀಜ್, ನನ್ನನ್ನು ನನ್ನಷ್ಟಕ್ಕೇ ಬಿಟ್ಟುಬಿಡು,” ಎಂದು ಅಪ್ಪ ಚೀರಾಡಿದ ರೀತಿಗೆ ಥಕ್ಕಾಗಿ ನಿಂತಲ್ಲೇ ನಿಂತು ಬಿಟ್ಟಳು. ಅಡುಗೆಮನೆಯಲ್ಲಿದ್ದ ಶಿರೀನಳ ತಾಯಿಯೂ ಹೊರಗೆ ಬಂದಳು. +“ನಿಮಗೆ ಏನು ಹೇಳಬೇಕಾಗಿದೆ ಎನ್ನುವುದು ನನಗೆ ಗೊತ್ತಿದೆ. ಅದಾವುದರ ಬಿಸಾತೂ ಇಲ್ಲ ನನಗೆ. ಅಷ್ಟು ಸಣ್ಣ ಪ್ರಾಯದ, ವ್ಯವಹಾರಜ್ಞಾನವಿಲ್ಲದ ಹುಡುಗನನ್ನು ಹಿಂದುಮುಂದಿನ ವಿಚಾರ ಮಾಡದೇನೆ ಈ ಮುಂಬಯಿಯ ಕ್ರೌರ್ಯಕ್ಕೆ ಒಡ್ಡಿದ ನಮ್ಮ ನಡತೆಯ ಬಗ್ಗೆ ನಮಗೆಲ್ಲ ನಾಚಿಕೆಯಾಗಬೇಕು. ಬಂದವರು ಯಾರೆಂಬುದು ನಿನಗೇ ಗೊತ್ತಿಲ್ಲ. ಫೋನ್ ಮೇಲೆ ಮಾತನಾಡಿದವರು ಯಾರೋ, ಬಂದವರು ಯಾರೋ. ಅವರು ಹೇಳಿದ್ದನ್ನೇ ನಂಬಿ ನಿಷ್ಪಾಪ ಎಳೆಯನನ್ನು ಅವರ ವಶಕ್ಕೆ ಒಪ್ಪಿಸಲು ಸಿದ್ಧರಾದಿರಿ. ಈ ಹುಡುಗನನ್ನು ಕುರಿತು ನನಗೆ ಈ ಮೊದಲೇ ಒಂದೆರಡು ಫೋನ್ ಕರೆಗಳು ಬಂದಿದ್ದುವು. ಯಾರಿಗೂ ಹೇಳಿರಲಿಲ್ಲ, ಅಷ್ಟೆ. ಅವನು ಒಂದು ದಿನ ನಮ್ಮ ಮನೆಗೂ ಬಂದಾನು ಎಂದು ನಿರೀಕ್ಷಿಸಿಯೂ ಇದ್ದೆ. ಯಾಕೆಂದರೆ ಅವನು ಹುಡುಕುತ್ತಿದ್ದುದು ನನ್ನನ್ನೇ ಆಗಿತ್ತು. ಅವನ ತತ್‌ಕ್ಷಣದ ಪ್ರಶ್ನೆ ರದ್ದೀವಾಲಾನ ಖೂನಿಯನ್ನು ಕುರಿತಂತೆ ತೋರಿದರೂ ಅವನು ನಿಜಕ್ಕೂ ಬಂದದ್ದು ಮೂರು ವರ್ಷಗಳ ಹಿಂದೆ ನಡೆದ ಕೊಲೆಯ ಬಗ್ಗೆ ತಿಳಿಯಲು. ನಾನೇ ನೇರವಾಗಿ ಕೇಳುವ ಹಾಗಿರಲಿಲ್ಲ. ಹಾಗೆಂದೇ ಈ ಖೂನಿಯಲ್ಲಿ ಅವನಿಗಿದ್ದ ಆಸ್ಥೆಯನ್ನು ಕುರಿತು ಮತ್ತೆ ಮತ್ತೆ ಪ್ರಶ್ನೆ ಕೇಳಿದ್ದೆ. ಅಮ್ಮ, ನಿನಗೆ ಅಣ್ಣತಮ್ಮಂದಿರೆಷ್ಟು ಎಂದು ಕೇಳಿದಾಗ ದಡಬಡಿಸಿದ್ದು ನೆನಪಿದೆಯೆ? ನನಗೆ ಬಲವಾದ ಸಂಶಯ ಶಿರೀನ್. ಅವನು ಠಕ್ಕನಲ್ಲ. ಕೊಲೆಯಾದವನ ಹತ್ತಿರದ ಸಂಬಂಧಿಯಾಗಿರಬಹುದು. ತಮ್ಮನೇ ಆಗಿರಬಹುದು.” ಪ್ರತ್ಯಕ್ಷವಾಗಿ ಆಡಿತೋರಿಸುವ ಮೊದಲು ಎಳ್ಳಷ್ಟೂ ಸಂಶಯವಿಲ್ಲವೆಂದು ಬಗೆದ ತನ್ನ ಊಹೆಯ ಬಗ್ಗೆ ಆಡಿ ಮುಗಿಸಿದ ಕೂಡಲೇ ಬೆಹರಾಮನಿಗೆ ಸಂಶಯ ಮೂಡಹತ್ತಿತು. ಬೆಕ್ಕಸಬೆರಗಾಗಿ ತನ್ನನ್ನೇ ನೋಡುತ್ತ ನಿಂತ ಹೆಂಡತಿ, ಶಿರೀನರ ಮೋರೆಗಳನ್ನು ನೋಡಿದ ಮೇಲಂತೂ ತನ್ನ ಕಲ್ಪನೆ ವಾಸ್ತವದ ಸ್ಪರ್ಶವಿಲ್ಲದ್ದೇನೋ ಅನ್ನಿಸತೊಡಗಿದಾಗ ಮಾತನಾಡುವುದನ್ನು ಗಪಕ್ಕನೆ ನಿಲ್ಲಿಸಿಬಿಟ್ಟ. ಆದರೂ, ಮೂರುಸಂಜೆಯ ಹೊತ್ತಿಗೆ ಬಂದ ಆ ನಾಲ್ವರು ಠಕ್ಕರಿಂದಾಗಿ ಕರುಣಾಕರನ್ ಅಪಾಯಕ್ಕೆ ಬರದಿದ್ದರೆ ಸಾಕು ಎಂದು ಮನಸ್ಸಿನಲ್ಲೇ ಪ್ರಾರ್ಥಿಸಹತ್ತಿದ. +ಅವನ ಮನಸ್ಸು ಹಾಗೆ ಮಿದುವಾಗುತ್ತಿರುವ ಹೊತ್ತಿಗೇ, ಶಿರೀನ್ ಅಷ್ಟೇ ಗಟ್ಟಿಯಾದ ಆತ್ಮವಿಶ್ವಾಸದಿಂದ-“ಕರುಣಾಕರನ್ ತುಂಬ ಸ್ಮಾರ್ಟ್ ಆದ ಹುಡುಗ, ಸಂಶಯವಿಲ್ಲ. ಸರಿಯಾದ ಸಹವಾಸ, ಮಾರ್ಗದರ್ಶನ ಸಿಕ್ಕರೆ ತೀರ ಬೇರೆ ಬಗೆಯ ಜೀವನ ನಡೆಸಬಹುದಾಗಿತ್ತೇನೋ. ಆದರೆ ಸದ್ಯ ಅವನು ಈ ಠಕ್ಕರ ಗ್ಯಾಂಗಿಗೆ ಸೇರಿದವನು ಎಂಬುದರಲ್ಲಿ ನನಗಂತೂ ಅನುಮಾನವಿಲ್ಲ. ನಾಳೆ ಪಾರ್ವತಿಯಿಂದಲೇ ಕೇಳಿ ತಿಳಿಯುವಿರಂತೆ. ನಾವೇನು ಅಂತಃಕರಣವಿಲ್ಲದವರೆ? ಇಷ್ಟಕ್ಕೂ, ಅವನು ತಾನು ಬಂದ ಉದ್ದೇಶವನ್ನು ಕೊನೆಯವರೆಗೂ ಸ್ಪಷ್ಟಪಡಿಸಲಿಲ್ಲ. ಬಳಸಂಬಳಸಾಗಿ ನಮಗೇ ಪ್ರಶ್ನೆ ಕೇಳಿದನೇ ಹೊರತು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ.” +ಶಿರೀನಳ ಈ ಮಾತು ಮುಗಿಯುವುದರೊಳಗೆ ಕದದ ಕರೆಗಂಟೆ ದೀರ್ಘವಾಗಿ ಕಿರುಚಿತು. ಕಿರುಚಿದ ರೀತಿಯಿಂದ ಬಂದವರು ಒಳಗೆ ಬರುವ ತರಾತುರಿಯಲ್ಲಿದ್ದಂತೆ ತೋರಿತು. ಕದ ತೆರೆಯಲು ಮುಂದಾದ ಸೀತೆಯನ್ನು ತಡೆದು ಶಿರೀನ್ ತಾನೇ ಕದದ ಕಡೆಗೆ ಧಾವಿಸಿದಳು. ಕದಕ್ಕೆ ಹಚ್ಚಿದ ಗಾಜುಗಣ್ಣಿಗೆ ಕಣ್ಣುಹಚ್ಚಿ ಹೊರಗೆ ನಿಂತವನನ್ನು ನೋಡುತ್ತಿದ್ದಹಾಗೆ ಸರಕ್ಕನೆ ಕದದಿಂದ ದೂರ ಸರಿದು, “ಅಪ್ಪಾ” ಎಂದಳು. ತನ್ನಿಂದತಾನೆ ಅವಳ ಬಾಯಿಂದ ಹೊರಟಂತಿದ್ದ ಆ ಉದ್ಗಾರವೇ ಹೊರಗೆ ಹಾಜರಾದವನು ಅನಪೇಕ್ಷಿತ ಆಗಂತುಕನೆಂಬ ಸುದ್ದಿ ಮುಟ್ಟಿಸುವಲ್ಲಿ ತಪ್ಪಲಿಲ್ಲ. ಕರುಣಾಕರನ್ ಹಾಗೂ ಆಗ ಬಂದ ನಾಲ್ವರ ನಿರ್ಗಮನದಿಂದ ಎಲ್ಲವೂ ಮುಗಿಯಲಿಲ್ಲವೇನೋ ಅನ್ನಿಸಿ ಮೊದಲ ಬಾರಿಗೇ ಎನ್ನುವಂತೆ ಪ್ರಜ್ಞೆಗೆ ಮೀರಿದ ಕಳವಳದಿಂದ ಬೆಹರಾಮನ ಕೈಕಾಲುಗಳಲ್ಲಿ ನಡುಕ ಸೇರಿಕೊಂಡಿತು. ಈಗ ಬಂದವನು ಸಂಜೆ ನಡೆದದ್ದಕ್ಕೆ ಸಂಬಂಧವುಳ್ಳವನು ಎಂಬುದರಲ್ಲಿ ಅವನಿಗೆ ಸಂಶಯವಿರಲಿಲ್ಲ. ಮುಂದೆ ಬಂದು ನಿಂತ ಗಾಬರಿಗೊಂಡ ಮಗಳ ಕಡೆಗೆ ‘ಯಾರು?’ ಎಂದು ಪ್ರಶ್ನಾರ್ಥಕ ದೃಷ್ಟಿಯಿಂದ ನೋಡುತ್ತ ಕುರ್ಚಿಯಿಂದ ಏಳುತ್ತಿದ್ದಾಗ, “ನಿನಗೆ ಪರಿಚಯ ಇಲ್ಲದವರಾದರೆ ಕದ ತೆರೆಯಲೇಬೇಡ, ಕದದ ಮರೆಯಿಂದಲೇ ಮಾತನಾಡಿಸು,” ಎಂದು ಪಿಸುಗುಟ್ಟಿದ ಬೆಹರಾಮನ ಹೆಂಡತಿಗೆ ಕರುಣಾಕರನ್ ಬಗ್ಗೆ ಇದ್ದಬಿದ್ದ ಸಹಾನುಭೂತಿಯೂ ಈಗ ಹೊರಟುಹೋಯಿತು. ಇವನೊಬ್ಬ ಎಲ್ಲಿಂದ ಬಂದು ಗಂಟುಬಿದ್ದುನೋ, ಸಾಡೇಸಾತಿಯ ಹಾಗೆ ಎಂದುಕೊಂಡಳು. ಕುರ್ಚಿಯಿಂದ ಏಳುವಾಗ ಕೈಕಾಲುಗಳಲ್ಲಿ ಸೇರಿಕೊಂಡಿದ್ದ ನಡುಕ, ಹೆಂಡತಿಯ ಮಾತು ಕೇಳುತ್ತಲೇ ಇದ್ದಕ್ಕಿದ್ದಹಾಗೆ ಇಲ್ಲವಾಯಿತು ಎನ್ನುವಹಾಗೆ ಧೈರ್ಯದಿಂದ ಹೆಜ್ಜೆಹಾಕಿದ. ಹೊರಗೆ ನಿಂತವನು ಯಾರೆಂಬುದನ್ನು ತಾನು ಚೆನ್ನಾಗಿ ಬಲ್ಲೆನೆಂಬ ಧರ್ತಿಯಲ್ಲಿ ಕದ ತೆರೆದಾಗ ಕಣ್ಣಮುಂದೆ ಪ್ರಕಟಗೊಂಡ ಆಕೃತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದವನ ಹಾಗೆ ಕಣ್ಣರಳಿಸಿ ನೋಡುತ್ತ ನಿಂತುಬಿಟ್ಟ. ಕೆದರಿದ ತಲೆಗೂದಲು, ಸದ್ಯವೇ ಬಿಟ್ಟಂತಿದ್ದ ದಾಡಿ, ತುಟಿಗಳಿಂದ ಕೆಳಗೆ ಬಾಗಿದ ಮೀಸೆ, ಅಂತಃಕರಣದ ಆಳದಿಂದ ನೋಡುವಂತೆ ತೋರುವ ಬೆದರಿದ ಕಣ್ಣುಗಳು, ಅರೆತೆರೆದ ತುಟಿಗಳಿಂದ ಬೆಳ್ಳಗೆ ಹಣಿಕಿಕ್ಕಿದ ಒಂದೆರಡು ಹಲ್ಲುಗಳು: ಬೆಹರಾಮನ ದೃಷ್ಟಿಯೆಲ್ಲ ಆ ಮೋರೆಯ ಮೇಲೆಯೆ ನೆಲೆಸಿತ್ತು. ಬಂದವನು ಉಟ್ಟ ಖಾಕಿಯ ಯೂನಿಫಾರ್ಮು ಅರಿವಿನ ಅಂಚಿನಲ್ಲಿ ಸುಳಿದು ಹೋಯಿತೇ ಹೊರತು ಕಣ್ಣುತುಂಬಲಿಲ್ಲ. ಅವನ ಹಿಂದೆ ನಿಂತ ಶಿರೀನ್ ಹಾಗೂ ಅವಳ ತಾಯಿಗೆ ಬಾಗಿಲ ಹೊರಗಿನ ಮಂದ ಬೆಳಕಿನಲ್ಲಿ ನಿಂತವನ ಹೊಳಹು ಪಡೆಯುವುದಷ್ಟೇ ಸಾಧ್ಯವಾಯಿತು. ಆದರೂ ಬಂದ ಹೊತ್ತು, ಬಂದ ರೀತಿ ಇವುಗಳಿಂದಾಗಿ ಈ ಭೇಟಿ ಕರುಣಾಕರನ್‌ಗೆ ಸಂಬಂಧಿಸಿದ್ದೆನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೆ ಇಷ್ಟೆಲ್ಲ ವಿದ್ಯಮಾನಗಳು ಈ ಒಂದು ಸಂಜೆಯಲ್ಲಿ, ಅದೂ ತಮ್ಮ ಮನೆಯಲ್ಲೇ ನಡೆಯಲು ಕಾರಣವೇನು? ತಾಯಿ ಮಗಳು ಇಬ್ಬರೂ ಕಳವಳಕ್ಕೆ ಒಳಗಾದರು. ಉಸಿರು ಬಿಗಿಹಿಡಿದು, ತಮಗೆ ಮುಖಾಮುಖಿಯಾಗಿ ನಿಂತವನ ಬಾಯಿಂದ ಹೊರಡುವ ಮಾತಿಗಾಗಿ ಕಾದು ನಿಂತರು: “ಸರ್, ನಾನು ನಿಮ್ಮ ವಾಸು-ವಾಸುದೇವನ್.” ಕೇಳಿದಂತಿದ್ದ ಹೆಸರು, ಪರಿಚಯವುಳ್ಳಂತಿದ್ದ ದನಿ. ಬೆಹರಾಮನ ಮೈಮೇಲೆ ಮುಳ್ಳು ನಿಂತರೂ ಆ ಗಳಿಗೆಯಲ್ಲಿ ಮನಸ್ಸಿನಲ್ಲಿ ಮೂಡಿನಿಂತ ಆಕೃತಿ ನೆನಪಿನಲ್ಲಿ ಯಾವುದರೊಡನೆಯೂ ಹೊಂದಿಕೊಳ್ಳದಾಯಿತು. ಹಿಂದೆ ನಿಂತ ಹೆಂಡತಿ ಮಾತ್ರ ಕಿವಿಯ ಮೇಲೆ ಬಿದ್ದ ಧ್ವನಿಯನ್ನು ಗುರುತಿಸಲು ತಪ್ಪಲಿಲ್ಲ. ತನ್ನಷ್ಟಕ್ಕೇ ಆಡಿಕೊಂಡ ಮಾತುಗಳ ಧಾಟಿಯಲ್ಲಿ-“ಓ! ಮೂರು ವರ್ಷಗಳ ಹಿಂದೆ ನಮ್ಮಲ್ಲಿ ಕೆಲಸಕ್ಕಿದ್ದ ಹುಡುಗ,” ಎಂದಳು, ಕೆಳದನಿಯಲ್ಲಿ. ತೀರ ಅಸ್ಪಷ್ಟವಾಗಿ ಕೇಳಿಸಿದ ಮಾತಾದರೂ, ಮುಂದೆ ನಿಂತವನು ಮನಸ್ಸಿನಲ್ಲಿ ಅದೇ ಆಗ ಎಬ್ಬಿಸುತ್ತಿದ್ದ ಭಾವನೆಯ ಅಲೆಗಳಿಗೆ ಅಷ್ಟೇ ಸಾಕಾಯಿತು ಎನ್ನುವಂತೆ-“ಅರೆ! ನಮ್ಮ ವಾಸೂ! ಬಾಬಾಬಾ,” ಎಂದವನೇ ಭಾವುಕನಾಗಿ, ಬಂದವನ ಕೈಕುಲುಕಿ ಅವನನ್ನು ಒಳಗಡೆ ಬರಮಾಡಿಕೊಂಡ. +ಇದಾವುದರ ತುದಿಬುಡ ಗೊತ್ತಿಲ್ಲದ ಶಿರೀನ್ ಮಾತ್ರ ಈ ಭೇಟಿ ಆಕಸ್ಮಿಕವಾದುದಲ್ಲ ಎಂದು ಆತಂಕಕ್ಕೆ ಒಳಗಾಗುತ್ತಿರುವಾಗ ಮಲಗುವ ಕೋಣೆಯ ಬಾಗಿಲಲ್ಲಿ ನಿಂತ ಅವಳ ತಾಯಿ ಸಮಾಧಾನ ಹೇಳಿದಳು: “ಹೆದರಬೇಡ. ಬಹಳ ಒಳ್ಳೆಯ ಹುಡುಗ, ಕೆಲವುಕಾಲ ನಮ್ಮಲ್ಲೇ ಕೆಲಸಕ್ಕಿದ್ದ. ದುಬಾಯಿಗೋ, ಅಂತಹದೇ ಇನ್ನಾವ ಊರಿಗೋ ಹೋಗಿದ್ದವನು ಈಗ ಬಂದಿರಬೇಕು, ಆಗ ಬಂದ ಹುಡುಗನ ಪ್ರಾಂತದವನೇ. ಅವನ ಬಗ್ಗೆ ಗೊತ್ತಿದ್ದವನಿರಬೇಕು.” ಶಿರೀನಳಿಗೆ ಸಮಾಧಾನವಾಗಲಿಲ್ಲ. ಈ ಎಲ್ಲ ಸಂಗತಿಗಳು ಈ ಒಂದು ಸಂಜೆಯಲ್ಲಿ ತಮ್ಮ ಮನೆಯಲ್ಲೇ ನಡೆಯಲು ಕಾರಣವೇನೆಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಪ್ಪ ತನ್ನ ಭೋಳೇತನದಿಂದ ಇಲ್ಲದ ಉಪದ್ವ್ಯಾಪದಲ್ಲಿ ಸಿಕ್ಕಿಕೊಳ್ಳುತ್ತಾನೆ. ಮಾತನಾಡಲು ಹೋದರೆ ಬರಿಯ ಪತ್ರಿಕೆಗಳನ್ನು ಓದಿ ಹುಟ್ಟಿಸಿಕೊಂಡ ಭಯ ನಿನ್ನದು ಎಂದು ಅವಳನ್ನೇ ಹಂಗಿಸುತ್ತಾನೆ. ದಿನಪತ್ರಿಕೆಗಳ ಬಗ್ಗೆ ಅಪ್ಪನಿಗಿದ್ದ ತಿರಸ್ಕಾರ ಅವಳಿಗೆ ಅರ್ಥವಾಗದ್ದು. +ವಾಸುದೇವನ್‌ನನ್ನು ದಿವಾಣಖಾನೆಗೆ ಕರೆದೊಯ್ಯುತ್ತಿದ್ದ ಅಪ್ಪನನ್ನು ತಾಯಿಯೂ +ಹಿಂಬಾಲಿಸುತ್ತಿದ್ದುದನ್ನು ನೋಡಿ ಶಿರೀನ್ ಇನ್ನೊಂದು ಬೆಡ್‌ರೂಮ್‌ನಲ್ಲಿಂದ ಕೇಳಿಸುತ್ತಿದ್ದ ಮಕ್ಕಳ ಕೋಲಾಹಲ ಲಕ್ಷ್ಯಕ್ಕೆ ಬಂದವಳ ಹಾಗೆ ದುಡುದುಡು ಹೆಜ್ಜೆಹಾಕಿ ಅತ್ತಸಾಗಿ ಕದ ತೆರೆದು ನೋಡಿದಳು. ಸೀತೆಯ ಜೊತೆಗೆ ಆಡುತ್ತಿದ್ದವರನ್ನು ಕಂಡು-ಇಲ್ಲ, ಅಂಥ ಅನಾಹುತವೇನೂ ನಡೆಯುವ ಸಂಭವ ಕಾಣುತ್ತಿಲ್ಲ ಎಂದು ಮನಗಂಡು-“ಹೀಗೆಯೇ ಆಡುತ್ತಿರಿ” ಎಂದು ಹೇಳಿ ಕದ ಮುಚ್ಚಿಕೊಂಡು, ತಾನೂ ದಿವಾಣಖಾನೆಗೆ ಬಂದಳು. ವಾಸುದೇವನ್ ಸೋಫಾದಲ್ಲಿ ಕೂರದೆ ಕೆಲಹೊತ್ತಿನ ಮೊದಲು ಬಂದವರ ಸಲುವಾಗಿ ಹಾಕಿಸಿದ ಕುರ್ಚಿಯೊಂದರಲ್ಲಿ ಕೂತಿದ್ದ. ಅಮ್ಮ ಆಗಲೇ ಒಂದು ಗ್ಲಾಸು ನೀರನ್ನು ತಂದು ಟೀಪಾಯಿಯ ಮೇಲೆ ಇರಿಸಿದ್ದಳು. ಚಹದ ಬಗೆಗೂ ಕೇಳಿರಬೇಕು “ಈ ಹೊತ್ತು ಬೇಡ, ಇನ್ನೊಮ್ಮೆ ಬರುತ್ತೇನೆ” ಎಂದದ್ದು ಇಲ್ಲಿ ಬರುತ್ತಿರುವಾಗಲೇ ಕೇಳಿಸಿತ್ತು. ಏನೋ ತುರ್ತಾದುದನ್ನು ಹೇಳಿ ಹೋಗುವ ಅವಸರದಲ್ಲಿ ಇದ್ದಂತೆ ಇದ್ದವನು, ಈಗ ದಿವಾಣಖಾನೆಯ ಬೆಳಕಿನಲ್ಲಿ, ಕದದ ಗಾಜುಕಣ್ಣಿನೊಳಗಿಂದ ನೋಡಿದಾಗ ಹೆದರಿಸಿದವನಿಗಿಂತ ಬೇರೆಯಾಗಿ ಕಂಡ. ಮಾತುನಾಡುವಾಗ ಅವನ ಮುಖದ ಮೇಲೆ ಮೂಡಿದ ಅಪ್ಪ-ಅಮ್ಮರ ಬಗೆಗಿನ ಆದರ ಪ್ರೀತಿ, ಹೇಳಲು ಬಂದುದರ ಬಗೆಗಿನ ಕಾಳಜಿ, ತನ್ನನ್ನು ನೋಡಿದ ಪ್ರತಿಸಾರೆ ನಾಚಿಕೊಳ್ಳುತ್ತಿದ್ದ ರೀತಿ-ಇವೆಲ್ಲವುಗಳಿಂದಾಗಿ ಅವನು ಆತ್ಮೀಯನಾಗತೊಡಗಿದ್ದು, ಮನುಷ್ಯ ತನ್ನನ್ನು ಪ್ರಕಟಿಸುವುದು ಕೊನೆಗೂ ತನ್ನ ಮೋರೆಯ ಮುಖಾಂತರ ಅನ್ನಿಸಿತು. ಅವಳ ಮೋರೆಯ ಮೇಲೆ ಅವಳಿಗೆ ಅರಿವಿಲ್ಲದೇನೆ ಮಂದವಾದ ಮುಗುಳುನಗೆ ಮೂಡಿತ್ತು. ಅದನ್ನು ಕಂಡ ವಾಸುದೇವನ್ನನ ಮೋರೆಯ ಮೇಲೂ ಮುಗುಳುನಗೆ ಪಸರಿಸಿತು. ಹುಡುಗ ತುಂಬ ಸ್ಮಾರ್ಟಾಗಿ ಕಂಡ. ಕೇರಳದಿಂದ ಬಂದ ಎಲ್ಲ ಹುಡುಗರೂ ಹೀಗಿರಬೇಕು ಎಂದುಕೊಂಡಳು. ಜೀವನದ ಬಗೆಗಿನ ಅವರ ಆರೋಗ್ಯಪೂರ್ಣ ಲವಲವಿಕೆ ಯಾರನ್ನೂ ತಟ್ಟುವಂಥದ್ದು. ಹೆಚ್ಚು ಕಲಿತಿರಲಿಕ್ಕಿಲ್ಲ. ಆದರೂ ಇಂಗ್ಲಿಷ್‌ನಲ್ಲಿ, ಹಿಂದಿಯಲ್ಲಿ ಮಾತನಾಡುತ್ತಿದ್ದ. ಅವನು ಹಾಕಿಕೊಂಡ ಖಾಕಿ ಯೂನಿಫಾರ್ಮು ಕೂಡ ಈಗ ಲಕ್ಷ್ಯಕ್ಕೆ ಬಂದವಳ ಹಾಗೆ, ಎಲ್ಲೋ ಕಟ್ಟಡವೊಂದರ ‘ವಾಚ್‌ಮನ್’ನಾಗಿ ಕೆಲಸ ಮಾಡುತ್ತಿರಬೇಕೆಂದು ಬಗೆದಳು. ಉಪಜೀವಿಕೆಗಾಗಿ ಎಂಥ ಕೆಲಸವನ್ನೂ ಮಾಡಲು ಸಿದ್ಧರಿವರು. ಕೆಲವು ವರ್ಷಗಳ ಹಿಂದೆ ತಮ್ಮ ಮನೆಯಲ್ಲೇ ಮನೆಗೆಲಸಕ್ಕೆ ಇದ್ದನಂತೆ… +“ಇಲ್ಲ, ಇಲ್ಲಿಯ ಕೆಲಸ ಬಿಟ್ಟ ನಂತರ ನಾಲ್ಕು ಕಾಸು ಮಾಡುವ ಉದ್ದೇಶದಿಂದ ಮಸ್ಕತ್ತಿಗೆ ಹೋಗಿಬಂದೆ. ಒಂದು ಗರಾಜಿನಲ್ಲಿ ಮಿಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೆ. ಕಾಸೇನೋ ಮಾಡುತ್ತಿದ್ದೆ. ಆದರೆ ಅಲ್ಲಿ ಯಾವುದೂ ಮನಸ್ಸಿಗೆ ಒಗ್ಗಲಿಲ್ಲ. ಈಗ ಒಂದು ವರ್ಷದಿಂದ ಮುಂಬಯಿಯಲ್ಲೇ ಚೌಕೀದಾರನಾಗಿ ಕೆಲಸ ಮಾಡುತ್ತಿದ್ದೇನೆ. ಸದ್ಯವೇ ಮದುವೆಯಾಗುವವನಿದ್ದೇನೆ. ಇಲ್ಲೇ ಧಾರಾವಿಯ ಝೋಪಡಪಟ್ಟಿಯ ಗುಡಿಸಲೊಂದರಲ್ಲಿ ಮನೆ ಮಾಡಿದ್ದೇನೆ. ಈ ಮೊದಲೇ ಬಂದು ಕಾಣುವವನಿದ್ದೆ…” +ಪೀಠಿಕೆ ಉದ್ದವಾಯಿತೇನೋ ಅನ್ನಿಸಿ ಮುಂದುವರಿಯಲು ಸಂಕೋಚವಾಯಿತು. ಮಾತನ್ನು ಸರಕ್ಕನೆ ತಾನು ಬಂದಂಥ ಉದ್ದೇಶದ ಕಡೆಗೆ ಹೊರಳಿಸುವಷ್ಟರಲ್ಲಿ ತುಂಬ ಆತಂಕಕ್ಕೆ ಕಳವಳಕ್ಕೆ ಒಳಗಾಗುತ್ತಿದ್ದುದು ವಾಸುದೇವನ್‌ನ ಮೋರೆಯ ಮೇಲೆ ಸ್ಪಷ್ಟವಾಗಿ ಪ್ರಕಟವಾಗತೊಡಗಿತ್ತು. ತಾನು ಹೇಳಲು ಬಂದದ್ದು ಹೇಗೆ ಗೊತ್ತಾಯಿತು ಎಂಬುದನ್ನೆಲ್ಲ ವಿವರಿಸಲು ಈಗ ಹೊತ್ತೇ ಇಲ್ಲವಾದ್ದರಿಂದ ನೇರವಾಗಿ ವಿಷಯಕ್ಕೇ ಬರುತ್ತೇನೆ ಎನ್ನುವವನ ಹಾಗೆ ಹೇಳತೊಡಗಿದ: +“ಸರ್, ನಿಮ್ಮ ಮನೆಗೆ ಈ ಹೊತ್ತು ಒಬ್ಬ ಹುಡುಗ ಬಂದಿದ್ದನಲ್ಲ, ಅವನನ್ನೊಮ್ಮೆ ನೋಡಬೇಕಾಗಿತ್ತು. ಹಾಗೆಂದೇ ಬಂದೆ. ನಾನು ಬರುವುದರೊಳಗೇ ಅವನು ಹೊರಟುಹೋದಂತಿದೆ. ಕೆಲವು ತಿಂಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ‘ಸೀ ನೆಸ್ಟ್’ ಕಟ್ಟಡಕ್ಕೂ ಬಂದಿರಬೇಕು. ಅಲ್ಲಿಯ ಜನ ಮಾತನಾಡಿಕೊಳ್ಳುತ್ತಿದ್ದ ರೀತಿ ನೋಡಿದರೆ ಅವನು ನಿಜಕ್ಕೂ ಮೂರು ವರ್ಷಗಳ ಹಿಂದಿನ ಖೂನಿಯ ಬಗ್ಗೆ ತಿಳಿಯಲು ಬಂದಿರಬೇಕು ಅನ್ನಿಸುತ್ತದೆ. ಹುಡುಗ ತನ್ನ ಭೋಳೇತನದಲ್ಲಿ ಮೊನ್ನೆ ಮೊನ್ನೆ ನಡೆದ ರದ್ದೀವಾಲಾನ ಖೂನಿಗೂ ಮೂರು ವರ್ಷಗಳ ಹಿಂದಿನದಕ್ಕೂ ಸಂಬಂಧವಿದ್ದಂತೆ ಮಾತನಾಡಿ ಇಲ್ಲಿಯ ಪಾತಾಳಲೋಕದ ವ್ಯವಹಾರಗಳಿಗೆ ಸಂಬಂಧಪಟ್ಟ ಹಲವರ ಸಂಶಯ ಕೆರಳಿಸಿದ್ದಾನೆ. ಪಾಪ, ಅಂದು ಸತ್ತವನು ಹುಡುಗನ ಹತ್ತಿರದ ಸಂಬಂಧಿಯಾಗಿರಬೇಕು. ಯಾರುಯಾರಿಂದಲೋ ಸುದ್ದಿ ತಿಳಿದು ಖಾತ್ರಿಮಾಡಿಕೊಳ್ಳಲು ಈಗ ಬಂದಿರಬೇಕು. ಇಂದಿನ ದಿನಗಳಲ್ಲಿ ಈ ಮುಂಬಯಿಯಲ್ಲಿ ಖುದ್ದು ಅಣ್ಣನ ಕೊಲೆಯಬಗೆಗೂ ಹೀಗೆ ಮಾತಾಡಿಕೊಳ್ಳುವುದು ಎಷ್ಟೊಂದು ಗಂಡಾಂತರದ್ದು ಎಂದು ಅರಿಯದ ಹುಡುಗ ತನ್ನ ಜೀವಕ್ಕೇ ಅಪಾಯ ತಂದುಕೊಂಡಿದ್ದಾನೆ.” +ಇದು ಬೆಹರಾಮನ ಭಯವೂ ಆಗಿತ್ತು. ಆದರೆ ಅದನ್ನು ಇನ್ನೊಬ್ಬನ ಬಾಯಿಂದ ಕೇಳುತ್ತಿದ್ದಂತೆ ಭಯ ಕೇವಲ ಭಯವಾಗಿಯೇ ಉಳಿಯದೆ ಕರುಣಾಕರನ್ನನ ಸಂರಕ್ಷಣೆಗಾಗಿ ತಾನು ತೆಗೆದುಕೊಳ್ಳಬಹುದಾದ ಕ್ರಮವಾಗಿ ಮನಸ್ಸಿನಲ್ಲಿ ಆಕಾರ ಪಡೆಯಹತ್ತಿತು. ಆದರೂ ಈ ಆಗಂತುಕ ತನ್ನಿಂದ ಖಚಿತವಾಗಿ ಬಯಸುತ್ತಿದ್ದುದಾದರೂ ಏನೆಂಬುದನ್ನು ತಿಳಿಯಲಿಲ್ಲ. ಸುಮ್ಮನೆ ಬಾಯಿಮುಚ್ಚಿ ಕುಳಿತ. ವಾಸುದೇವನ್‌ನೇ ಮುಂದರಿಸಿದ: +“ಸರ್, ಮಾಹಿತಿ ಒಟ್ಟುಮಾಡುವುದಕ್ಕೆ ಹುಡುಗ ಒಂದೊಂದು ಕಡೆಯಲ್ಲಿ ಒಂದೊಂದು ಕಾರಣ ಕೊಟ್ಟಿದ್ದಾನಂತೆ. ಒಂದೆರಡು ಕಡೆಗಳಲ್ಲಿ ಒಂದು ಪೇಪರಿಗಾಗಿ ಝೋಪಡಿಪಟ್ಟಿಗಳ ಮೇಲೆ ಬರೆಯುತ್ತಿದ್ದ ರಿಪೋರ್ಟಿಗೆಂದು ಹೇಳಿದ್ದಾನಂತೆ. ಮೂರು ವರ್ಷಗಳ ಹಿಂದಿನ ಕೊಲೆ ಈ ರಿಪೋರ್ಟಿನ ವಿಷಯವೆಂದು ಈ ದುಷ್ಟರ ಗುಮಾನಿ. ಅವನು ಬರೆದಿಟ್ಟಿರಬಹುದಾದ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆದಂತಿದೆ. ಕಳೆದ ಹಲವು ದಿನಗಳಿಂದ ಆಫೀಸಿಗೇ ಹೋಗುತ್ತಿಲ್ಲವಂತೆ. ಮನೆಯಲ್ಲಿ ಕುಳಿತೇ ರಿಪೋರ್ಟು ಬರೆಯುತ್ತಿರಬೇಕಂತೆ.” +ವಾಸುದೇವನ್ ಧ್ವನಿಯಲ್ಲಿ ಮೂಡಿದ್ದ ಆತಂಕ ಪ್ರಾಮಾಣಿಕವಾದದ್ದು ಎನ್ನುವುದರ ಬಗ್ಗೆ ಬೆಹರಾಮನಿಗೆ ಸಂಶಯವಿರಲಿಲ್ಲ. ಆದರೂ, ಈ ಅಕಸ್ಮಾತ್ತು ಭೇಟಿಯ ಪ್ರೇರಣೆಯನ್ನು ಕುರಿತು ಸಣ್ಣ ಗುಮಾನಿ ಮನಸ್ಸಿನಲ್ಲಿ ಏಳದೇ ಇರಲಿಲ್ಲ. ಮೂರು ವರ್ಷಗಳ ಹಿಂದಿನ ಈ ಭೀಕರ ಕೊಲೆಯ ಬಗೆಗೆ ನನಗೆ ತಿಳಿಸಿದವನು ಇದೇ ವಾಸುದೇವನ್. ಮುಂದೆ ನಡೆದ ವಿದ್ಯಮಾನಗಳಿಂದಾಗಿ, ನನಗೆ ತಿಳಿದ ಸಂಗತಿಗಳನ್ನೆಲ್ಲ ನನ್ನೊಳಗೇ ಇಟ್ಟುಕೊಂಡು ಬಾಯಿ ಮುಚ್ಚಿಕೊಂಡದ್ದು ಇವನ ರಕ್ಷಣೆಗಾಗಿಯೆ. ನನ್ನ ಸಲಹೆಯ ಮೇರೆಗೇ ಇವನು ಮಸ್ಕತ್ತಿಗೆ ಪರಾರಿಯಾದದ್ದು. ಈಗ ಕೊಲೆಯಾದವನ ತಮ್ಮನೋ ಇನ್ನಾರೋ ಬಂದು ಆ ಕೊಲೆಯ ತನಿಖೆ ಮಾಡುತ್ತಿರುವ ಹೊತ್ತಿಗೆ ಮಸ್ಕತ್ತಿನಿಂದ ಹಿಂತಿರುಗಿ ಬಂದಿರುವ ಇವನಿಗೆ ನನ್ನಿಂದಾಗಿ ತನ್ನ ಹೆಸರು ಈ ಹುಡುಗ ಒಟ್ಟು ಮಾಡುತ್ತಿದ್ದ ಮಾಹಿತಿಯಲ್ಲಿ ಸೇರಿಕೊಳ್ಳಬಹುದೆಂಬ ಭಯವಾಗಿರಬಹುದೆ? ‘ನೀನು ಕೊಟ್ಟ ಮಾಹಿತಿಯನ್ನು ನಾನು ಇನ್ನಾರಿಗೂ ತಿಳಿಸಿಲ್ಲ’ ಎಂದು ಹೇಳಬೇಕೆನ್ನಿಸಿತು. ಆದರೆ ಅವನಾಗಿಯೇ ಅದರ ಬಗ್ಗೆ ಮಾತೆತ್ತಿರದಾಗ ಹಾಗೆ ಗ್ರಹೀತ ಹಿಡಿದು ಮಾತನಾಡುವ ಮನಸ್ಸಾಗಲಿಲ್ಲ. ಮೇಲಾಗಿ ಕರುಣಾಕರನ್ನನನ್ನು ಕಾಣಲು, ಇವರೆಲ್ಲ ತಮ್ಮ ಮನೆಗೇ ಬಂದದ್ದು ಹೇಗೆ ಎಂದು ಆಶ್ಚರ್ಯವೂ ಅಗತೊಡಗಿತ್ತು. ಈ ಬಗ್ಗೆ ನೇರವಾಗಿ ಕೇಳಿದಾಗ ವಾಸುದೇವನ್ ಹೇಳಿದ: +“ಹುಡುಗ ಈ ಒಂದು ವಿಷಯದಲ್ಲಿ ತುಸು ದಕ್ಷತೆ ವಹಿಸಿದಂತೆ ತೋರುತ್ತದೆ, ಸರ್! ಅವನ ಭೇಟಿಗಳಲ್ಲಿ ಒಂದು ನಿಶ್ಚಿತವಾದ ಯೋಜನೆ ಇದ್ದ ಹಾಗಿದೆ. ಒಂದು ಮನೆಗೆ ಭೇಟಿಯಿತ್ತನಂತರ ಅವನು ಭೇಟಿ ಮಾಡಬಹುದಾದ ಮುಂದಿನ ಮನೆಯನ್ನು ಊಹಿಸುವುದು ಶಕ್ಯವೇ ಇರಲಿಲ್ಲ. ಒಂದು ಮನೆಗೆ, ಅಷ್ಟೇಕೆ, ಒಂದೇ ಕಟ್ಟಡಕ್ಕೆ ಎರಡು ಸಾರೆ ಭೇಟಿ ಇತ್ತದ್ದಿಲ್ಲ. ನಿಮ್ಮ ಮನೆಗಷ್ಟೇ ಹೀಗೆ ಎರಡನೇ ಸಾರೆ ಬಂದದ್ದು. ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ ನಾನು ಚೌಕೀದಾರನಾಗಿರುವ ಕಟ್ಟಡದಲ್ಲೇ ಇಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳು ನನ್ನನ್ನು ಬಲ್ಲಳು. ಮೊನ್ನೆ ಮೊನ್ನೆ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ಅವಳಿಗೆ ಬಹಳಷ್ಟು ಗೊತ್ತಿದ್ದಂತಿದೆ-ಅವಳೇ ಹೇಳಿದಳು. ಈಗ ಹುಡುಗನ ಬಗೆಗೂ ಅವನನ್ನು ನಾನು ನೋಡಬೇಕಾಗಿದೆ, ಸರ್! ಅವನು ನಾನು ತಿಳಕೊಂಡ ಹುಡುಗನು ಹೌದೋ ಅಲ್ಲವೋ ಎಂಬುದನ್ನು ಅರಿಯಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಝೋಪಡಪಟ್ಟಿಗಳಿಗೆ, ಪಾತಾಳಲೋಕದ ವ್ಯವಹಾರಗಳಿಗೆ ಸಂಬಂಧಪಟ್ಟವರಿಂದಾಗಿ ಅವನ ಜೀವಕ್ಕೆ ಇರುವ ಅಪಾಯ ಅವನಿಗೆ ತಿಳಿಸಬೇಕಾಗಿದೆ. ಮಧ್ಯಾಹ್ನದ ಪಾಳಿಯನ್ನು ಮುಗಿಸುತ್ತಲೇ ಓಡೋಡಿಬಂದರೂ ತಪ್ಪುಗಂಟಾದ. ಅವನನ್ನು ಕೂಡಲೇ ಕಾಣಬೇಕಾಗಿದೆ, ಸರ್…” ವಾಸುದೇವನ್ ಮಾತಿನಲ್ಲಿ ದಮ್ಮಯ್ಯ ಹಾಕುವ ಧಾಟಿ ಸೇರಿಕೊಂಡಿತ್ತು. +ಇವನು ಬಂದದ್ದು ಕರುಣಾಕರನ್ನನ ಮನೆಯ ವಿಳಾಸ ಪಡೆಯಲು ಎನ್ನುವುದು ಬೆಹರಾಮನಿಗೆ ಹೊಳೆಯದೆ ಇರಲಿಲ್ಲ. ಅವನ ಹತ್ತಿರ ಕರುಣಾಕರನ್ನನ ಮನೆಯ ವಿಳಾಸವೇ ಮೊದಲು ಇರಲಿಲ್ಲ. ಅವನಿತ್ತ ತೀರ ಅಲ್ಪಕಾಲದ ಎರಡು ಭೇಟಿಗಳಲ್ಲಿ ಮಾತುಕತೆ ಅಂಥ ಆತ್ಮೀಯ ವಿಷಯಗಳತ್ತ ಸಾಗಿರಲೇ ಇಲ್ಲ. ಆದರೆ ತನಗೆಗೊತ್ತಿದ್ದರೂ ಈಗಬಂದವನಿಗೆ ಅದನ್ನು ಕೊಡುತ್ತಿರಲಿಲ್ಲವೇನೋ ಎಂಬ ಅನ್ನಿಸಿಕೆಯಿಂದ ಮಾತ್ರ ಬೆಹರಾಮನಿಗೆ ತನ್ನ ಬಗೆಗೇ ಮುಜುಗರವಾಗದೇ ಇರಲಿಲ್ಲ. ಇದ್ದಕ್ಕಿದ್ದಂತೆ ಹಾಗೆ ಮುಂದೆ ಕುಳಿತವನಲ್ಲಿ ತನಗಿರಬೇಕಾದ ವಿಶ್ವಾಸ ಕುಸಿಯುತ್ತಿದೆ. ಆತ್ಮರಕ್ಷಣೆಗಾಗಿ ದೇಶವನ್ನೇ ಬಿಟ್ಟು ಓಡಿಹೋಗಿದ್ದ ಈತ ಈಗ ಕೊಲೆಯಾದವನ ಸಂಬಂಧಿಯಿರಬಹುದೆಂಬ ಗುಮಾನಿಗೆ ಕಾರಣನಾದವನ ರಕ್ಷಣೆಗೆ ಹಾತೊರೆಯುವುದು ಸಾಧ್ಯವೆಂದು ಈ ಗಳಿಗೆಯಲ್ಲಂತೂ ತೋರಲಿಲ್ಲ. ಈ ಎಲ್ಲ ಉಪದ್ವ್ಯಾಪಗಳಿಂದ ದೂರ ಉಳಿಯುವ ಅವಶ್ಯಕತೆ ಇವನಿಗೆ ಎಂದಿಗಿಂತ ಈಗ ಹೆಚ್ಚಿದೆ ಅನ್ನಿಸಿತು. ಅಷ್ಟೇ ಅಲ್ಲ, ನಿನ್ನೆ ಕರುಣಾಕರನ್ ಬಂದದ್ದು ಕೇವಲ ರದ್ದೀವಾಲಾನ ಕೊಲೆಯ ಬಗ್ಗೆ ಮಾಹಿತಿ ದೊರಕಿಸಲು ಅಲ್ಲವೇನೋ ಎಂಬ ಅನುಮಾನ ಮೂಡಿದ ಕ್ಷಣದಲ್ಲಿ ಅವನನ್ನು ತನ್ನ ಬಳಿಗೆ ಕಳಿಸಿರಬಹುದಾದವರನ್ನು ನೆನೆಯುವಾಗ ವಾಸುದೇವನ್‌ನ ಹೆಸರೂ ಮನಸ್ಸನ್ನು ಹಾಯ್ದುಹೋದಂತಹ ಅನ್ನಿಸಿಕೆ. ‘ಈ ಕೊಲೆಯ ಬಗ್ಗೆ ನನ್ನ ಮಾಹಿತಿ ಇದೆಯೆಂದು ಯಾರು ಹೇಳಿದರು?’-ನಿನ್ನೆ ತಾನು ಕರುಣಾಕರನ್‌ನಿಗೆ ಕೇಳಿದ ಈ ಪ್ರಶ್ನೆಯ ಹಿಂದೆ ಇಂಥ ಗುಮಾನಿ ಇತ್ತೆ? ಮಸ್ಕತ್ತಿನಿಂದ ಬಂದು ಒಂದು ವರ್ಷವಾಗುತ್ತ ಬಂತಂತೆ. ನಮ್ಮ ಕಡೆಗೆ ಯಾಕೆ ಇಷ್ಟು ದಿನ ಬರಲಿಲ್ಲ? ಬೆಹರಾಮ್ ಇಂಥ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಒಳಗಿನ ಗುಮಾನಿ ಇಂಥ ಶಬ್ದಗಳಲ್ಲಿ ಆಕಾರ ಪಡೆದಿರದೆ ಕೇವಲ ಬಾಯಿ ಕಟ್ಟಿಹಿಡಿದ ಶಕ್ತಿಯಾಗಿತ್ತು. ಮುದುಕ ಬಾಯಿ ಬಿಡಲು ಅನುಮಾನಿಸುತ್ತಿದ್ದುದನ್ನು ನೋಡಿ ಮುಂದೆ ಕೂತವನ ಧೈರ್ಯ ಕುಗ್ಗಹತ್ತಿತು. ಅದಾಗ ಶಿರೀನಳೇ ಬಾಯಿಬಿಟ್ಟಳು: +“ನೋಡಿ, ಅಪ್ಪ ಈಗ ತುಂಬ ದಣಿದಿದ್ದಾರೆ. ಕರುಣಾಕರನ್ನನೇನು ಮಳ್ಳನಲ್ಲ. ಇಂದು ಸಂಜೆ ಇಲ್ಲಿ ನಡೆದದ್ದರ ಅರ್ಥವನ್ನು ಗ್ರಹಿಸದೇ ಇರಲಾರ. ಮೇಲಾಗಿ, ನಮ್ಮಲ್ಲಿ ಯಾರಿಗೂ ಅವನ ವಿಳಾಸ ಗೊತ್ತಿಲ್ಲ. ಈಗ ನೀವು ಇಲ್ಲಿ ಹೆಚ್ಚು ಹೊತ್ತು ಕೂರುವುದು ಸರಿಯಲ್ಲ. ನಾವೇ ನಮ್ಮ ನಡತೆಯಿಂದಾಗಿ ಈ ಜನರಲ್ಲಿ ಸಲ್ಲದ ಸಂಶಯ ಹುಟ್ಟಿಸಿ ಕರುಣಾಕರನ್ನನಿಗಿದ್ದ ಅಪಾಯವನ್ನು ಹೆಚ್ಚಿಸಬಹುದು” ಎಂದು ಹೇಳಿ ಸಂಜೆ ನಡೆದದ್ದನ್ನು ಯಾವುದೇ ಬಗೆಯ ನಾಟಕೀಯತೆಗೆ ಎಡೆಕೊಡದೆ ಸಂಕ್ಷಿಪ್ತವಾಗಿ ತಿಳಿಸಿದಳು. +ಶಿರೀನಳ ಮಾತಿನಲ್ಲಿಯ ದಣಿವಿನ ಉಲ್ಲೇಖವೇ ತನಗಾದ ದಣಿವನ್ನು ಅರಿವಿಗೆ ತಂದುಕೊಟ್ಟಿತೆನ್ನುವಂತೆ ಬೆಹರಾಮ್ ಒಮ್ಮೆಲೇ ತನ್ನ ಬಾಯನ್ನು ಆವರಿಸತೊಡಗಿದ ಆಕಳಿಕೆಯನ್ನು ನಿಗ್ರಹಿಸುವ ಪ್ರಯತ್ನ ಮಾಡುತ್ತ, “ಇನ್ನೊಮ್ಮೆ ಬಾ. ಸದ್ಯ, ನಾನೇ ಈ ಬಗ್ಗೆ ಏನು ಮಾಡಲಾಗುತ್ತದೆಯೋ ನೋಡುತ್ತೇನೆ” ಎಂದ. ಏನೋ ಹೇಳಲು ಹೊರಟು ಹೇಳಲು ಆಗದವನ ಹಾಗೆ ಕೂತಲ್ಲಿಂದ ಎದ್ದು ವಾಸುದೇವನ್ ಬಾಗಿಲ ಕಡೆಗೆ ಹೊರಟ. ಕಾರಿಡಾರಿನಲ್ಲಿ ಇದುರಾದ ಮುದುಕಿಯನ್ನು ನೋಡಿ “ಇನ್ನೊಮ್ಮೆ ಬರುತ್ತೇನಮ್ಮಾ,” ಎಂದು ಚುಟುಕಾಗಿ ಹೇಳಿ ಮುಗುಳುನಗುವ ಪ್ರಯತ್ನ ಮಾಡಿದ. ಶಿರೀನಳೇ ಅವನನ್ನು ಬಾಗಿಲವರೆಗೆ ಮುಟ್ಟಿಸಿ, ಅವನು ಹೊರಗೆ ಹೋದಮೇಲೆ ಕದ ಮುಚ್ಚಿಕೊಂಡಳು. +ಅಧ್ಯಾಯ ಐದು +ಬೆಹರಾಮ್ ನೇರವಾಗಿ ಮಲಗುವ ಕೋಣೆಗೆ ಹೋದವನೇ ಹಾಸಿಗೆಯಲ್ಲಿ ಅಡ್ದವಾದ. ಕೋಣೆಯ ಬಾಗಿಲಲ್ಲಿ ಬಂದು ನಿಂತ ಮಗಳಿಗೆ, “ಕೆಲಹೊತ್ತು ಹೀಗೆಯೇ ಬಿದ್ದಿರುತ್ತೇನೆ, ಊಟಕ್ಕೆ ಎಬ್ಬಿಸು” ಎಂದವನು ಇನ್ನೊಮ್ಮೆ ಆಕಳಿಸಿದ. “ಈ ವಾಸುದೇವನ್ ಒಳ್ಳೆಯ ಹುಡುಗ. ಆದರೂ ಈ ಹೊತ್ತು ಅವನಲ್ಲಿ ಕೊನೆತನಕವೂ ವಿಶ್ವಾಸವೇ ಮೂಡದೇಹೋಯಿತು. ಬರುತ್ತಬರುತ್ತ ನಾವು ಯಾವ ಸ್ಥಿತಿಗೆ ಬಂದು ಮುಟ್ಟುತ್ತಿದ್ದೇವೆ ನೋಡು. ಇನ್ನೊಬ್ಬನ ಜೊತೆ ಸಹಜಸ್ಪೂರ್ತಿಯಿಂದ ಮಾತನಾಡುವುದನ್ನು ಅಸಾಧ್ಯ ಮಾಡಿಕೊಂಡುಬಿಟ್ಟಿದ್ದೇವೆ. ಇನ್ನೊಬ್ಬನ ಒಳಹೇತುಗಳನ್ನು ಅರಿಯುವುದರಲ್ಲಿಯೇ ಅರ್ಧ ಆಯುಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಈಗ ಯಾಕೆ ಬಂದೆ? ಈಗಲೇ ಯಾಕೆ? ಇಷ್ಟು ದಿನ ಯಾಕಲ್ಲ? ನಾಳೆ ಯಾಕಲ್ಲ? ಈ ಝೋಪಡಪಟ್ಟಿಗಳು ಕೇವಲ ಒಂದು ಭೌತಿಕ ಅಸ್ತಿತ್ವವುಳ್ಳ ಬಾಬಲ್ಲವೇನೋ-ಕೇವಲ ಭೌಗೋಲಿಕ ಸತ್ಯಗಳಾಗಿರದೆ, ನಮ್ಮ ಅಂತಃಕರಣದ ಸ್ಥಿತಿಯ ದ್ಯೋತಕವೂ ಆಗಿವೆಯೇನೋ. ನಮಗೆ ನಮ್ಮ ಭಯದ ಆಕಾರವೇ ತಿಳಿದಿಲ್ಲ. ಹಾಗೆಂದೇ ಮನೆಮನೆಗೆ ಹಾಕಿಸಿಕೊಂಡ ಸುಭದ್ರ ಬಾಗಿಲುಗಳೇ ಉತ್ತರವೆಂದು ತಿಳಿದಿದ್ದೇವೆ. ಇಂದಿನ ಮನುಷ್ಯ ತನ್ನನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದುದು ಕೊನೆಗೂ ಒಬ್ಬ ಮನುಷ್ಯನಿಂದ! ಮನುಷ್ಯ ಮನುಷ್ಯನಿಗೇ ಹೆದರಿಕೊಂಡಿದ್ದಾನೆ! ಸಣ್ಣ ನಿದ್ದೆ ಮಾಡುತ್ತೇನೆ”-ಎಂದವನು ಮಗಳನ್ನೇ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತ ಉಳಿದುಬಿಟ್ಟನು. ಹೇಳಬೇಕೆಂದುಕೊಂಡದ್ದೆಲ್ಲ ಕಣ್ಣ ನೋಟದಲ್ಲೆದ್ದ ಅಲೆಗಳಾಗುತ್ತಿದ್ದುವು. ಅವುಗಳನ್ನು ನೇರವಾಗಿ ಗ್ರಹಿಸುವ ಶಕ್ತಿ ಕೂಡ ಪರಸ್ಪರರ ಕಣ್ಣುಗಳಿಗಿದ್ದುದಾದರೆ! ಬೆಹರಾಮ್ ಇನ್ನೊಮ್ಮೆ ಆಕಳಿಸಿದ. ಶಿರೀನ್ ಹತ್ತಿರ ಹೋಗಿ ಹಾಸಿಗೆಯ ಅಂಚಿನಲ್ಲಿ ಕುಳಿತಳು. ಈ ಆಕಳಿಕೆಯಲ್ಲಿ ದಣಿವಿಗಿಂತ ಬೇಸರವೇ ಹೆಚ್ಚಾಗಿದ್ದಂತೆ ತೋರಿತು ಶಿರೀನಳಿಗೆ. ಎಲ್ಲದರ ಬಗೆಗೆ ಒಂದು ಬಗೆಯ ಉದಾಸೀನ ಹುಟ್ಟುತ್ತಿದ್ದುದರ ಕುರುಹೆ ಇದು? ಅಲ್ಲಗಳೆಯುವವನ ಹಾಗೆ ಬೆಹರಾಮ್-“ವಾಸುದೇವನ್ ಬಂದ ಉದ್ದೇಶ ಕೊನೆಗೆ ಏನೂ ಆಗಿರಲಿ, ಕರುಣಾಕರನ್ನನಿಗೆ ಅಪಾಯ ತಟ್ಟದ ಹಾಗೆ ನೋಡಿಕೊಳ್ಳಬೇಕು,” ಎಂದ. ಶಿರೀನ್ ಕೂಡಲೇ ಅನುಮೋದಿಸುವ ರೀತಿ ತಲೆದೂಗಿದಳು. “ಈಗ ಸ್ವಲ್ಪ ಹೊತ್ತು ಮಲಗಿಕೋ, ಊಟಕ್ಕೆ ಎಬ್ಬಿಸುತ್ತೇನೆ. ಊಟದ ಹೊತ್ತಿಗೆ ಮಾತನಾಡೋಣ” ಎನ್ನುತ್ತಿರುವಾಗ ಒಪ್ಪಿಕೊಂಡವನಹಾಗೆ ಕಣ್ಣು ಮುಚ್ಚಿದ. ತುಸು ಹೊತ್ತಿನಲ್ಲೇ ಗಾಢನಿದ್ದೆ ಸೇರಿ ಗೊರಕೆ ಹೊಡೆಯಹತ್ತಿದ. ಅಪ್ಪನ ನಿಷ್ಪಾಪ ಮೋರೆಯನ್ನು ನೋಡುತ್ತಿದ್ದಹಾಗೆ ಶಿರೀನ್‌ಗೆ ಅನ್ನಿಸಿತು: ಈ ವಿದ್ಯಮಾನಗಳೆಲ್ಲ ಆಕಸ್ಮಿಕವಾದವುಗಳೆಂದು ತೋರುವುದಿಲ್ಲ. ಮುಂಬಯಿ ಈಗ ಮುಂಚಿನ ಮುಂಬಯಿಯಾಗಿ ಉಳಿದಿಲ್ಲ. ಅಪ್ಪ-ಅಮ್ಮರನ್ನು ನಾವಿದ್ದಲ್ಲಿಗೇ ಕಾಯಮ್ ಆಗಿ ಕರೆದೊಯ್ದರೆ ಹೇಗೆ ಎಂಬ ವಿಚಾರ ಮನಸ್ಸಿನಲ್ಲಿ ಹಾಯ್ದುಹೋದರೂ ಅದು ಕೆಲಸಕ್ಕೆ ಬರುವಂತಹದಾಗಿ ತೋರಲಿಲ್ಲ. ಕಳ್ಳಹೆಜ್ಜೆಯಿಂದ ಅಪ್ಪನ ಕೋಣೆ ಬಿಟ್ಟು ಅಡುಗೆಯ ಮನೆಯಲ್ಲಿದ್ದ ತಾಯಿಯನ್ನು ಕೂಡುವಷ್ಟರಲ್ಲಿ ಈ ವಿಚಾರ ಬೇರೆ ರೂಪವನ್ನು ಧರಿಸಿದಂತಿತ್ತು. “ಅಮ್ಮಾ, ನಾವೆಲ್ಲ ಈ ವಾರವೇ ಜಮ್‌ಶೇದ್‌ಪೂರಕ್ಕೆ ಹೋದರೆ ಹೇಗೆ?” ಎಂದು ಕೇಳಿದಳು. ಮಗಳು ಹೆದರಿಕೊಂಡಿದ್ದಾಳೆಂಬುದು ಸ್ಪಷ್ಟವಿತ್ತು. ಇಷ್ಟಕ್ಕೆ ಹೆದರಿಕೊಳ್ಳುವ ಗರಜಿಲ್ಲ ಎಂಬಂತೆ ಮುಗುಳುನಕ್ಕು-“ಇದೇನು ಹೊಸತಲ್ಲ. ಈ ಝೋಪಡಪಟ್ಟಿಗಳು, ಸುತ್ತಲಿನ ಕಟ್ಟಡಗಳು ಇವುಗಳ ನಡುವೆ ನಡೆದದ್ದೇ ಇದು. ಮೂರು ವರ್ಷಗಳ ಹಿಂದೆ ಇದೇ ವಾಸುದೇವನ್‌ನಿಂದಾಗಿ ಅಪ್ಪನಿಗೆ ಧಮಕಿ ಕೊಡುವ ಫೋನ್ ಕರೆಗಳೆಷ್ಟು!” +“ಅದೇ! ಯಾರುಯಾರೆಲ್ಲರ ಸಲುವಾಗಿ ನಿಮ್ಮ ಜೀವಕ್ಕೇ ಅಪಾಯ!” +“ಅಂಥ ಧೈರ್ಯ ಈ ಜನಕ್ಕಿಲ್ಲ ಬಿಡು. ನಿನ್ನ ಅಪ್ಪನ ವಜನು ಇಲ್ಲಿಯ ಜನರಲ್ಲಿ ಸಾಕಷ್ಟು ಇದೆ. ನೀನು ಚಿಂತೆ ಮಾಡಬೇಡ. ನನಗೀಗ ಕೆಡುಕೆನಿಸುತ್ತಿದ್ದುದು ಆ ಹುಡುಗನ ಬಗೆಗೇ. ನಾವು ಅವನನ್ನು ಹಾಗೆ ಓಡಿಸಬಾರದಿತ್ತು.” +ಹೊರಗೆ ಆಗಲೇ ಗಾಢಕತ್ತಲೆ ಕವಿದಿತ್ತು. ಸಮುದ್ರದ ಎಡೆಬಿಡದ ಸದ್ದನ್ನು ಮೀರಿದ ಸದ್ದೊಂದು ಕೇಳಿಸಿಯೂ ಕೇಳಿಸದಹಾಗಿತ್ತು. ಸುತ್ತುಮುತ್ತಲಿನ ಜನವಸತಿಗಳೆಲ್ಲ ಒಂದರೊಳಗೊಂದು ಕರಗಿ, ತಮ್ಮ ಘನತ್ವವನ್ನು ಕಳೆದುಕೊಂಡು ಬರಿಯ ಭಯದಂತಹ ಅಸ್ಪಷ್ಟ ಭಾವನೆಯ ರೂಪದಲ್ಲಿ ಹೆಪ್ಪುಗಟ್ಟಿ ಹೀಗೆ ಸದ್ದು ಮಾಡುತ್ತಿದೆ ಎನ್ನುವಂತಹ ವಿಚಿತ್ರ ಕಲ್ಪನೆಗೆ ಶಿರೀನಳ ಮೈಮೇಲೆ ತೆಳುವಾಗಿ ಮುಳ್ಳುನಿಂತವು. ಮಕ್ಕಳ ಕೋಣೆಯಿಂದ ಹೊರಗೆ ಬಂದ ಸೀತೆ ಅಡುಗೆಯ ಮನೆಯ ಬಾಗಿಲಲ್ಲಿ ನಿಂತದ್ದನ್ನು ನೋಡಿದ ಕೂಡಲೇ ಸರಕ್ಕನೆ ಅವಳ ಗಲ್ಲ ಚಿವುಟಿದಳು-ಎಲ್ಲವೂ ಕರಗಿ ಬರೀ ಬಯಲು ಆಗಿಲ್ಲ ಎಂಬುದನ್ನು ಖಾತ್ರಿಮಾಡಿಕೊಳ್ಳುವ ಹಾಗೆ! +ಗಾಢನಿದ್ದೆಯಲ್ಲೂ ಗಟ್ಟಿಯಾದ ನಿರ್ಧಾರಕ್ಕೆ ಬಂದವನಹಾಗೆ ಹಾಸಿಗೆ ಬಿಟ್ಟೆದ್ದ ಬೆಹರಾಮ್ ನೇರವಾಗಿ ಬಚ್ಚಲುಮನೆಗೆ ಹೋಗಿ ತಂಪು ನೀರಿನಿಂದ ಮೋರೆ ತೊಳೆದುಕೊಂಡು, ಹಾಲಿಗೆ ಬಂದು ಟೆಲಿಫೋನ್ ರಿಸೀವರ್ ಕೈಗೆತ್ತಿಕೊಂಡು ಬಾಯಿಪಾಠವಿದ್ದಂತಿದ್ದ ನಂಬರನ್ನು ತಿರುಗಿಸಿದ ತನಗೆ ಬೇಕಾದ ವ್ಯಕ್ತಿಯೇ ನೇರವಾಗಿ ಫೋನ್ ಎತ್ತಿಕೊಂಡದ್ದನ್ನು ಅವನ ಧ್ವನಿಯಿಂದಲೇ ಗುರುತಿಸಿ, “ಹಲ್ಲೋ ಗೌರೀ, ನಾನು ಬೆಹರಾಮ್. ನಿನ್ನಿಂದ ಒಂದು ಕೆಲಸ ಆಗಬೇಕಾಗಿದೆ. ನಿಮ್ಮಲ್ಲಿ ಸದ್ಯವೇ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರಿದ ಕರುಣಾಕರನ್ ಎಂಬವನ ಮನೆಯ ವಿಳಾಸ ಸಿಗಬಹುದೆ?” +ಬೆಹರಾಮನಿಗೆ ತಾನು ಸರಿಯಾದ ವ್ಯಕ್ತಿಯೊಡನೆ ಮಾತನಾಡುತ್ತಿರುವ ಬಗೆಗೇ ಸಂಶಯ ಬರಹತ್ತಿತು: ಆ ಬದಿಯ ಮನುಷ್ಯ ಮಾತನಾಡುತ್ತಿರಲಿಲ್ಲ, ಬರಿದೆ ನಗುತ್ತಿದ್ದ-ಸಾದಾ ರೀತಿಯಲ್ಲಲ್ಲ, ಹಿಸ್ಟೀರಿಯಾ ಬಡಿದವನ ಹಾಗೆ. “ಇದು ವಿನೋದಕ್ಕೆ ಸಮಯವಲ್ಲ, ಗೌರೀ. ಪ್ಲೀಜ್ ಬೀ ಸೀರಿಯಸ್. ಕರುಣಾಕರನ್‌ನ ಜೀವಕ್ಕೆ ಅಪಾಯವುಂಟಾಗಿದೆ,” ಎನ್ನುವಷ್ಟರಲ್ಲಿ ಆ ಬದಿಯಿಂದ ಬಂದ ಉತ್ತರದಿಂದ ದಂಗುಬಡೆದವನ ಹಾಗೆ ಬೆಹರಾಮ್-“ನೋ! ಇದು ಸಾಧ್ಯವಿಲ್ಲ,” ಎಂದು ಚೀರಿದ. ಅದಾಗಲೇ ತನ್ನ ಸುತಲೂ ನೆರೆದ ಹೆಂಡತಿ ಹಾಗೂ ಮಗಳಿಗೆ “ಈ ಹುಚ್ಚ ಹೇಳ್ತಾ ಇದಾನೆ-ದೇ ಹ್ಯಾವ್ ಆಲ್‌ರೆಡಿ ಕಿಲ್ಡ್ ಯುವರ್ ಕರುಣಾಕರನ್. ಹೀ ಈಜ್ ಡೆಡ್-ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಭೆಂಛೋದ್,” ಎಂದು ಹೇಳಿ, ಟೆಲಿಫೋನ್ ರಿಸೀವರ್ ಅನ್ನು ಮತ್ತೆ ಬಾಯಿಗೆ ಎತ್ತಿದ-“ನೋಡು ಗೌರೀಪ್ರಸಾದ್, ನಂಬು ಬಿಡು. ಇಂಥ ಮಾತನ್ನು ನೀನು ಆಡಕೂಡದು.” ಬೆಹರಾಮನಿಗೆ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಸಿಟ್ಟಿನ ಭರದಲ್ಲಿ ಆಡಿದ ಮಾತುಗಳೆಂದು ತೋರುವಾಗಲೂ ಆ ಕ್ಷಣಕ್ಕೆ ಅವು ಮಾಡಿದ ಪರಿಣಾಮದಿಂದ ಚೇತರಿಸಿಕೊಳ್ಳುವುದು ಶಕ್ಯವಿರಲಿಲ್ಲ. ಆ ಬದಿಯ ವ್ಯಕ್ತಿಗೆ ತಿಳಿಸುವ ಮನಸ್ಸಾಗಿತ್ತು, ‘ನೋಡಪ್ಪಾ ಗೌರೀಪ್ರಸಾದ್ ಅಗರವಾಲ್ , ಕೊನೆಗೂ ನಿನಗೆ ನಿನ್ನ ವೃತ್ತಪತ್ರಿಕೆಯೇ ದೊಡ್ಡದಾಗಿಬಿಟ್ಟಿತು ಮನುಷ್ಯನೊಬ್ಬನ ಕೊಲೆಯಂಥ ಕೊಲೆಯನ್ನು ಕೂಡ ಹಣ ಮಾಡುವ, ಹೆಸರು ಗಳಿಸುವ ಸರಕನ್ನಾಗಿಸುವುದರಲ್ಲೆ ನಿನ್ನ ಜನ್ಮ ಹಾಳಾಯಿತು. ಮೂರು ವರ್ಷಗಳ ಹಿಂದೆ ಕೊಲೆಯಾದವನ ತಮ್ಮ ಈ ಕರುಣಾಕರನ್ ಎಂಬುದನ್ನು ಬಲ್ಲೆಯಾ? ಅಥವಾ ಬಲ್ಲೆಯೆಂದೇ ಅವನನ್ನು ಈ ಕೆಲಸಕ್ಕೆ ಹಚ್ಚಿದಿಯಾ?’ ತನ್ನ ಕಲ್ಪನೆಯಲ್ಲೇ ಹುಟ್ಟಿದ ವಿಚಾರವೇ ಆದರೂ ಅದರಿಂದಾಗಿ ಬೆನ್ನುಹುರಿಯಲ್ಲಿ ಬರ್ಫ್ ಅಂತಹದೇನೋ ಹರಿಯಹತ್ತಿದ ಅನುಭವವಾದಾಗ ಬೆಹರಾಮ್ ತನ್ನ ವಿಚಾರಸರಣಿಯನ್ನು ಬಿಟ್ಟುಕೊಡುವ ಪ್ರಯತ್ನದಲ್ಲಿ ತಲೆಯನ್ನೊಮ್ಮೆ ಗಲಗಲ ಅಲ್ಲಾಡಿಸಿದ. ಭೆಂಛೋದ್ ಎಂದು ಬಾಯಲ್ಲಿ ಬಂದ ಬೈಗುಳವನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡು-“ನನ್ನದೇ ಹುಚ್ಚುತನವಾಯಿತು. ಮೊನ್ನೆಮೊನ್ನೆ ಕೆಲಸಕ್ಕೆ ಹತ್ತಿದವನ ಗುರುತು ಸಹ ಇವನಿಗೆ ಇದೆಯೋ ಇಲ್ಲವೋ. ಸುಳ್ಳೇ ಹೆದರಿಸಿದ. ಆಯಿತು,” ಎಂದ. ಮುಂದೆನಿಂತ ಹೆಂಡತಿ-ಮಗಳನ್ನು ಸಂಬೋಧಿಸಿ ಮಾತನಾಡಿದ ಮಾತುಗಳಲ್ಲಿ ತನ್ನಷ್ಟಕ್ಕೆ ಆಡಿಕೊಂಡ ಮಾತುಗಳ ಧ್ವನಿಯಿತ್ತು. ಸಮಾಧಾನವಾಗುವ ಬದಲು ಮನಸ್ಸಿನ ಕಿರಿಕಿರಿ ಹೆಚ್ಚೇ ಆಯಿತು: ಈ ವಾಸುದೇವನ್‌ನನ್ನು ನಂಬಬಹುದೇ? ಕರುಣಾಕರನ್ನನ ಮನೆಯ ವಿಳಾಸ ಗೊತ್ತಿಲ್ಲದಿದ್ದರೂ ಆಫೀಸಿನ ವಿಳಾಸ ಗೊತ್ತಿತ್ತು. ಆದರೆ ಅದನ್ನು ಕೊಡುವ ಮನಸ್ಸಾಗಲಿಲ್ಲ. ಐನ್ ಗಳಿಗೆಯಲ್ಲಿ ಮನಸ್ಸು ಸಂದೇಹಗ್ರಸ್ತವಾಗಿತ್ತು-ಮುಖ್ಯವಾಗಿ ಅವನು ಬಂದ ರೀತಿಯಿಂದಾಗಿ, ಬರಲು ಆರಿಸಿಕೊಂಡ ಮುಹೂರ್ತದಿಂದಾಗಿ. ನಮ್ಮ ಪಾರ್ವತಿಯನ್ನು ಬಲ್ಲೆನೆಂದನಲ್ಲ, ನಾಳೆ ಅವಳನ್ನೇ ಕೇಳಿನೋಡಬೇಕು. ನಾನೇ ಕರುಣಾಕರನ್ನನ ಆಫೀಸಿಗೆ ಹೋಗಿ ವಿಚಾರಿಸಬೇಕು.’ ಈ ನಿರ್ಧಾರದ ಆಳದಲ್ಲೇ ಎಲ್ಲೋ ‘ಆ ಹುಚ್ಚ ಮನುಷ್ಯ’ ಕರುಣಾಕರನ್ನನ ಸಾವಿನ ಬಗೆಗೆ ಮಾಡಿದ ಕ್ರೂರ ವಿನೋದ ಮತ್ತೆ ಅರಿವನ್ನು ತಟ್ಟುವ ಪ್ರಯತ್ನ ಮಾಡುತ್ತಿರುವ ಭಯವಾದಾಗ-‘ಆಗ ಪಾರ್ವತಿ ಕರುಣಾಕರನ್ನನ ಬಗ್ಗೆ ಹೇಳಿದ್ದನ್ನು ನಾಳೆ ತಿಳಿಸುತ್ತೇನೆ ಎಂದಿದ್ದೆಯಲ್ಲ, ಈಗಲೇ ಹೇಳು,’ ಎಂದು ಶಿರೀನಳನ್ನು ಕೇಳುವ ಮನಸ್ಸಾಯಿತು. ಮರುಗಳಿಗೆ, ಅವನ ಬಗ್ಗೆ ಕೆಟ್ಟದ್ದೇನೂ ಕೇಳುವ ಮನಸ್ಸಿಲ್ಲದವನ ಹಾಗೆ, ಟೆಲಿಫೋನ್ ಮೇಲೆ ಮಾತನಾಡುವಾಗ ಕುಳಿತುಕೊಂಡ ಸೀಟನ್ನು ಬಿಟ್ಟು ಬಾಲ್ಕನಿಗೆ ನಡೆದ. ಸಮುದ್ರದ ನೀರು ಮೆಲ್ಲಗೆ ಏರುತ್ತ ರಸ್ತೆಗೆ ಹತ್ತಿರವಾಗತೊಡಗಿತ್ತು. ನಕ್ಷತ್ರಗಳು ಮೆರೆಯುತ್ತಿದ್ದ ಮೋಡಗಳಿಲ್ಲದ ಆಕಾಶದ ಕೆಳಗೆ ಹೊರಳಾಡುವ ಸಮುದ್ರದ ನೀರು ಸ್ಪಷ್ಟವಾಗಿ ಕಾಣಿಸಿಕೊಳ್ಳದೆಯೂ ದಣಿದ ಮನಸ್ಸಿಗೆ ಶಾಂತಿ ಒದಗಿಸುವಂತಹದೇನನ್ನೋ ಹೇಳಲು ಹೊರಟಂತೆ ಪಿಸುಗುಡುತ್ತಿತ್ತು. ಜುಹೂ, ವರ್ಸೋವಾ, ಮಾರ್ವ, ಮಡ್ ಆಯ್ಲಂಡ್ಸ್‌ಗಳ ಮೈಲುಗಟ್ಟಲೆ ಉದ್ದವಾದ ಮರಳುದಂಡೆಗಳಲ್ಲಿ ಬೆಳಗಿದ ವಿದ್ಯುದ್ದೀಪಗಳು ಕೂಡ ಗೂಢವಾದದ್ದು ಏನನ್ನೋ ತಿಳಿಸಲು ಹೊರಟ ರೀತಿ ಕಣ್ಣುಮಿಟುಕಿಸುತ್ತಿದ್ದುವು. ಬಾಲ್ಕನಿಯ ಕಟಕಟೆಯ ಮರದ ದಡಿಯ ಮೇಲೆ ಕೈಯೂರಿ ದೂರದವರೆಗೆ ಕಣ್ಣುಚಾಚಿ ನಿಂತಲ್ಲೇ ನಿನ್ನೆ, ಇಂದು ಎರಡು ದಿನ ತನ್ನನ್ನು ಕಂಡು ಮಾತನಾಡಿಸಿದ ಈ ಕರುಣಾಕರನ್ ತನಗೆ ಯಾರು? ತನಗೆ ಯಾವ ರೀತಿಯಿಂದಲೂ ಸಂಬಧವಿಲ್ಲದ ಉದ್ಯೋಗದಲ್ಲಿ ತೊಡಗಿಸಿಕೊಂಡವನ ಬಗ್ಗೆ ತಾನೇಕೆ ಹೀಗೆ ತಲೆ ಕೆಡಿಸಿಕೊಳ್ಳಬೇಕು? ಸಂಜೆ, ಹೆಂಡತಿ-ಮಗಳು ಆಡಿದ ಮಾತುಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು ಈ ಅಪಾರ ಜಲರಾಶಿಯ ಇದಿರು ನಿರರ್ಥಕವಾಗಿ ಕಂಡವು. ಪ್ರಶ್ನೆ ಕೇಳಿ ಉತ್ತರ ಕಂಡುಕೊಂಡು ಬದುಕುತ್ತ ಬಂದವನಲ್ಲವೇ ಅಲ್ಲ ಅವನು. ಕರುಣಾಕರನ್ನನಿಗೆ ಅಪಾಯ ತಟ್ಟಕೂಡದು. ತನ್ನಿಂದೇನಾಗುತ್ತದೆಯೋ ಅದನ್ನು ಮಾಡಬೇಕು ಅನ್ನಿಸುತ್ತದೆ. ಮಾಡಿಯೇ ಮಾಡುತ್ತೇನೆ, ಬಸ್! ಉಳಿದದ್ದೆಲ್ಲ ಗೌಣ. ಯಾಕೆ ಎಂಬ ಪ್ರಶ್ನೆಯೇ ಮೊದಲು ಅರ್ಥವಿಲ್ಲದ್ದು ಎಂದುಕೊಳ್ಳುತ್ತ ಊಟಕ್ಕೆ ನಡೆದ. +ಊಟ ಮುಗಿಸಿ, ಕಾಂಪೋಜಿನ ಇಡೀ ಗುಳಿಗೆಯನ್ನು ನುಂಗಿ ನಿದ್ದೆಹೋದ ಬೆಹರಾಮನನ್ನು ಎಚ್ಚರಿಸಿದ್ದು ಕರ್ಣಕರ್ಕಶವಾಗಿ ಕಿರಿಚಿದ ಟೆಲಿಫೋನ್ ಗಂಟೆಯಾಗಿತ್ತು. ಆಗ ರಾತ್ರಿ ಹನ್ನೊಂದು ದಾಟಿತ್ತು. ಟೆಲಿಫೋನ್ ಮೇಲೆ ಕೇಳಿದ ಮಾತುಗಳಿಂದಾಗಿಯೋ, ಕಾಂಪೋಜ್ ಗುಳಿಗೆಯ ಗುಂಗಿನಿಂದಾಗಿಯೋ ಬೆಹರಾಮನಿಗೆ ತನಗೇನಾಗುತ್ತಿದೆ? ತಾನು ಎಲ್ಲಿ ಇದ್ದೇನೆ? ಏನು ಮಾಡುತ್ತಿದ್ದೇನೆ? -ಯಾವುದೂ ತಿಳಿಯಲಿಲ್ಲ. ಹತ್ತಿರ ನಿಂತವಳು ಹೆಂಡತಿಯೆ? ಪ್ರಶ್ನೆ ಕೇಳಿದವಳು ಶಿರೀನಳೆ? ಯಾವುದೂ ಸ್ಪಷ್ಟವಾಗುತ್ತಿರಲಿಲ್ಲ. ನಿದ್ದೆಗಣ್ಣಿನಲ್ಲಿ ಟೆಲಿಫೋನ್ ಎತ್ತಿಕೊಂಡವನು ನಿದ್ದೆಗಣ್ಣಿನಲ್ಲಿಯೇ ತಿರುಗಿ ಹಾಸಿಗೆ ಸೇರಿದ್ದನು. ಟೇಲಿಫೋನ್ ಮೇಲೆ ಆ ಬದಿಯಿಂದ ಬಂದ ಮಾತುಗಳು ನೆನಪಿಗೆ ಬಂದದ್ದು ಬೆಳಿಗ್ಗೆ ಐದು ಗಂಟೆಗೆ! ರಾತ್ರಿ ಆಡಿದವುಗಳು ಆಡಿದಹಾಗೆಯೆ ಹೆಪ್ಪುಗಟ್ಟಿ ಬೆಳಗಾಗುತ್ತಲೇ ಬಿಡಿಸಿಕೊಂಡವೋ ಎನ್ನುವಂತೆ ಸ್ಪಷ್ಟವಾಗಿ ಕಿವಿಯ ಮೇಲೆ ಬೀಳತೊಡಗಿದ್ದುವು: ‘ಮುದುಕಪ್ಪಾ, ನಿನ್ನ ಪೇಪರ್‌ವಾಲಾ ಹುಡುಗನ ಕೋಣೆಗೆ ಹೋಗಿಬಂದೆವು, ಇದೇ ಈಗ. ಇನ್ನೂ ಮನೆ ತಲುಪಿಲ್ಲ ಎಂದಮೇಲೆ ಅವನು ನಿನ್ನ ಮನೆಯಲ್ಲೇ ಅಡಗಿಕೊಂಡಿರಬೇಕು. ಬೆಳಿಗ್ಗೆ ಬಂದು ಒಮ್ಮೆ ಫೇರಿ ಹಾಕಿ ಹೋಗುತ್ತೇವೆ.’ +ಬೆಹರಾಮ್ ಹಾಸಿಗೆಯಲ್ಲಿ ಎದ್ದು ಕುಳಿತ. ಇನ್ನೂ ಗಾಢನಿದ್ದೆಯಲ್ಲಿದ್ದ ಹೆಂಡತಿಗೆ ಎಚ್ಚರವಾಗದಿರಲಿ ಎಂದುಕೊಂಡು ಮತ್ತೆ ಹಾಸಿಗೆಯಲ್ಲಿ ಅಡ್ಡವಾದ. ಅವನಿಗೆ ತಾನು ಉತ್ತರ ಕೊಟ್ಟಿದ್ದೆನೆ? ಇಲ್ಲವೆಂದೇ ತೋರಿತು. ಆದರೆ ಉತ್ತರ ಕೊಡಲು ಸಿದ್ಧನಾದವನ ಹಾಗೆ-‘ಬಾ, ನಿನ್ನ ಹಾದಿ ಕಾಯುತ್ತೇನೆ,’ ಎಂದು ತನ್ನಷ್ಟಕ್ಕೇ ಆಡಿಕೊಂಡ. ಮುಂದಿನ ಕೆಲಹೊತ್ತಿನಲ್ಲೇ ಬೆಹರಾಮ್ ಮತ್ತೆ ನಿದ್ದೆಸೇರಿ ಗೊರಕೆ ಹೊಡೆಯತೊಡಗಿದ್ದ. +ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಬಿಸಿಲು ಚಲೋ ಬೆಚ್ಚಗಾಗಿತ್ತು. ಈ ಹೊತ್ತು ಸೋಮವಾರ. ಆಫೀಸು ಇದೆ. ಆದರೆ ಹೋಗಲಾರೆ ಎಂದುಕೊಂಡು ಬೆಡ್ ಟೀದ ಹಾದಿ ಕಾಯುತ್ತಿರುವಾಗ ಕರೆಗಂಟೆ ಬಾರಿಸಿದ್ದು ಕೇಳಿಸಿತು. ‘ಅವನು ಬಂದಿರಬೇಕು,’ ಎಂದುಕೊಳ್ಳುತ್ತ ಹಾಸಿಗೆಯಿಂದ ಎದ್ದು ಹೊರಗೆ ನಡೆದ. ಒಳಗೆ ಬಂದವಳು ಪಾರ್ವತಿಯೆಂದು ತಿಳಿದಾಗ ತುಸು ನಿರಾಸೆಪಟ್ಟು ಬಚ್ಚಲುಮನೆಗೆ ಹೋಗಿ ಪ್ರಾತರ್ವಿಧಿಗಳನ್ನು ಮುಗಿಸಿ ಬಾಲ್ಕನಿಯಲ್ಲಿ ಕೂತು ಚಹ ಕುಡಿಯಹತ್ತಿದ. ಬೆಳಗಿನ ಹೂಬಿಸಿಲಲ್ಲಿ ನೊರೆ ಕಾರುತ್ತ ಭೋರ್ಗರೆಯುತ್ತಿದ್ದ ಸಮುದ್ರವನ್ನು ನೋಡುತ್ತಿದ್ದಹಾಗೆ ರಾತ್ರಿ ಬಂದ ಟೆಲಿಫೋನ್ ಕರೆಯ ಒಂದು ಮುಖ್ಯ ಸಂದೇಶ ಈಗ ನೆನಪಾದವನ ಹಾಗೆ ತನ್ನಷ್ಟಕ್ಕೇ ಮುಗುಳುನಕ್ಕ. ಕರುಣಾಕರನ್ ಇವರ ಕೈಗೆ ಸಿಕ್ಕಿರಲಿಲ್ಲ! ಹಾಸಿಗೆಯಿಂದ ಏಳುವಾಗಿನ ಅವನ ಗಂಭೀರ ಮುಖ ನೋಡಿ ಅವನನ್ನು ಮಾತನಾಡಿಸಲೂ ಹೆದರಿದ ಹೆಂಡತಿ ಹಾಗೂ ಮಗಳು ಈಗ ಹತ್ತಿರ ಬಂದು ಮಾತನಾಡಿಸಿದಾಗ-“ಕರುಣಾಕರನ್ ಈ ಲಫಂಗರ ಕೈಗೆ ಸಿಕ್ಕಿಲ್ಲ. ಹುಡುಗ ನಿನ್ನೆ ರಾತ್ರಿ ಕೋಣೆಗೇ ಹೋದಂತಿಲ್ಲ,” ಎನ್ನುತ್ತಿರುವಾಗಲೇ, ರಾತ್ರಿ ಆ ಲಫಂಗರು ಟೆಲಿಫೋನ್ ಕೆಳಗಿಡುವ ಮೊದಲಷ್ಟೇ ಹೇಳಿದ ಇನ್ನೊಂದು ಮಾತು ಈಗ ಮೊದಲ ಬಾರಿಗೇ ನೆನಪಿಗೆ ಬಂದಿತು-‘ಇನ್ನೊಂದು ಸಣ್ಣ ಮಾತು ಮುದುಕಪ್ಪಾ, ಸದ್ಯ ಅವನು ಟಿಪ್ಪಣಿ ಬರೆಯುತ್ತಿದ್ದ ಡಾಯರಿ ನಮಗೆ ಸಿಕ್ಕಿದೆಯೆಂದು ಅವನಿಗೆ ತಿಳಿಸಿಬಿಡು!’ “ಅರೆ! ಇವರಿಗೆ ಅವನ ವಿಳಾಸ ಯಾರು ಕೊಟ್ಟರೋ-” ತನ್ನಷ್ಟಕ್ಕೇ ಆಡಿಕೊಂಡಂತಿದ್ದ ಮಾತುಗಳಲ್ಲಿ ಒಮ್ಮೆಗೆಲೇ ಸೇರಿಕೊಂಡ ದುಗುಡವನ್ನು ದೂರ ಮಾಡುವ ಬಲ ಹೊರಗಿನ ಸಮುದ್ರದ ತೆರೆಗಳ ಉಲ್ಲಾಸಕ್ಕೂ ಇರಲಿಲ್ಲ. ಆ ದುಗುಡದಲ್ಲಿ ಸ್ಪಷ್ಟವಾದ ಆಕೃತಿ ಪಡೆಯಲು ದೃಢಪಡಿಸುವ ಮೂರು ಸಂಗತಿಗಳು ಪಾಲುಗೊಂಡಂತಿತ್ತು: ತಮ್ಮ ಕೈಗೆ ಸಿಕ್ಕಿದೆಯೆಂದು ಹೇಳಿದ ಕರುಣಾಕರನ್ನನ ಡಾಯರಿ; ಈ ಹುಡುಗನ ಬಗ್ಗೆ ಬಹಳಷ್ಟು ಗೊತ್ತಿದ್ದವಳು ಎನ್ನಲಾದ ಪಾರ್ವತಿ; ನಿನ್ನೆ ರಾತ್ರಿ ಅಲ್ಪಕಾಲದ ಪ್ರವೇಶದಲ್ಲೇ ಹಲವು ಕುತೂಹಲಕಾರಿಯಾದ ಸಂಗತಿಗಳನ್ನು ತಿಳಿಸಿಹೋದ ವಾಸು. +ರಾತ್ರಿ ತೆಗೆದುಕೊಂಡ ಕಾಂಪೋಜ್ ಗುಳಿಗೆಯ ಪ್ರಭಾವ ಇನ್ನೂ ಸಂಪೂರ್ಣವಾಗಿ ಕಳೆದಿರಲಿಲ್ಲ. ಮೌಂಟ್ ಮೇರಿ ಗುಡ್ಡದ ಸುತ್ತಲ ಕೇರಿಯ ಹಲವು ಎತ್ತರದ ಕಟ್ಟಡಗಳ ಸಂದಿಗಳೊಳಗಿಂದ ಹಾದುಬಂದ ಎಳೆಬಿಸಿಲು ಸಮುದ್ರದ ನೀರ ಮೇಲೆ ಮೂಡಿಸಿದ ಕಟ್ಟಡಗಳ ನೆಳಲುಗಳ ವಿಚಿತ್ರವಿನ್ಯಾಸ ಸ್ಪಷ್ಟವಾಗಿ ವಿಚಾರ ಮಾಡುವ ಶಕ್ತಿಯನ್ನು ಕುಗ್ಗಿಸಿಬಿಟ್ಟಂತೆ ತೋರಿತು. ಇಡಿಯ ದಿನ ಹೀಗೆ ಈ ಕರುಣಾಕರನ್ನನನ್ನು ತಲೆಯಲ್ಲಿ ತುಂಬಿಕೊಂಡಿರುವುದು ತನ್ನ ಇಂದಿನ ಆರೋಗ್ಯದ ಸ್ಥಿತಿಗೆ ಸಾಧ್ಯವಾದ ಸಂಗತಿಯಲ್ಲ. ಆಫೀಸಿಗೆ ಹೋಗುವುದೇ ಒಳ್ಳೆಯದೇನೊ. ಹೆಂಡತಿಯಿಂದಾಗಲಿ ಶಿರೀನಳಿಂದಾಗಲಿ ಆಫೀಸಿಗೆ ಹೋಗುವುದು ಬೇಡವೆನ್ನುವ ಸೂಚನೆ ಬರುವ ಮೊದಲೇ ಹೊರಡುವ ಸಿದ್ಧತೆಗೆ ತೊಡಗುವ ಮನಸ್ಸಾದವನ ಹಾಗೆ ಹೆಂಡತಿಗೆ, “ಆಫೀಸಿಗೆ ಹೋಗಬೇಕು. ಸೀತೆಗೆ ಸ್ನಾನದ ಮನೆಯಲ್ಲಿ ಬಟ್ಟೆಗಳನ್ನು ಇರಿಸಲು ಹೇಳು” ಎಂದು ಹೇಳಿದ. +***** +ಮುಂದುವರೆಯುವುದು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […] +ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […] +ಇದ್ದಕ್ಕಿದ್ದಂತೆ ಒಂದು ಬಗೆಯ ಜಿಗುಪ್ಸೆ. ನಿರುತ್ಸಾಹ, ದಣಿವು ಕೂಡಿದಂತಿದ್ದ ನಾಗಪ್ಪನ ದನಿ ದಸ್ತೂರನ ಉಕ್ಕುತ್ತಿದ್ದ ಉತ್ಸಾಹಕ್ಕೆ ಭಂಗ ತಂದಿತು. ಆದರೂ ಹಾಗೆಯೇ ತೋರಗೊಡದೆ, ತನಿಖೆಯನ್ನು ಆರಂಬಿಸಿದ ರೀತಿಯಲ್ಲಿಯ ಅವನ ಜಾಣ್ಮೆಯನ್ನು ಮೆಚ್ಚಿಕೊಂಡ ಫಿರೋಜ್ ಹಾಗೂ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_249.txt b/Kannada Sahitya/article_249.txt new file mode 100644 index 0000000000000000000000000000000000000000..fffd782e9b925fd2ee8cd1bb461a0a47e4857a36 --- /dev/null +++ b/Kannada Sahitya/article_249.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ +ಪಾರಿಜಾತವು ಹೂವ ಸುರಿಸಿದಂತೆ, +ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ +ಸೃಷ್ಟಿ ಸಂಪೂರ್‍ಣತೆಯ ಬಿಂಬಿಪಂತೆ, +ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ +ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, +ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು +ಮರವನಪ್ಪಿದ ಬಳ್ಳಿ ಬಳುಕುವಂತೆ, – +ನಾವು ಆಡುವ ಮಾತು ಹೀಗಿರಲಿ ಗೆಳೆಯ +ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ; +ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ +ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ. +***** +(ಅಗಸ್ಟ ಹದಿನೈದು) ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- ಬಳಿಸಾರಿ ಬಂದಿಹುದು ಸೌಖ್ಯ […] +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ ಹರಿವರಿದು ಬರುವ ಗಂಧೋದಕದಿ ಮಿಂದ ತಂ- ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! ದಿವ್ಯಾನುಭೂತಿಯಲಿ ರಸದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_25.txt b/Kannada Sahitya/article_25.txt new file mode 100644 index 0000000000000000000000000000000000000000..f5b40c9871ab478ab25a8e34f66f8ce49033a2ac --- /dev/null +++ b/Kannada Sahitya/article_25.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಗವತಿ ಇಸ್ತಾರು +ಸಕಲ ಸೃಷ್ಠಿಯ ಮಾತೃದೇವತೆ +ಸಮರದ ದೇವತೆ, ಕಾಮದ ದೇವತೆ. +ಜಗಭಂಡೆ. +ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿ +ಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? +ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರ +ಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ ಪುರಾತನ ತಾಯಿ +ಸಲಹುವ ತಾಯಿ, ಕೊಲ್ಲುವ ತಾಯಿ +ಒಬ್ಬ ಗಂಡನನ್ನು ಕಪ್ಪೆ ಮಾಡಿದ ದೇವಿ; +ಇನ್ನೊಬ್ಬನನ್ನು ಅಮೃತ ಹುಡುಕಲು ಅಟ್ಟಿದ ತಾಯಿ; +ತಾನೊಲಿದ ಮಗದೊಬ್ಬನನ್ನು ಅಧೋಲೋಕದಲ್ಲಿ ಹುಡುಕಿ ಪಡೆದ ತಾಯಿ. +ಕಾಮಿಸಿ ಕೂಡಿದರೂ ಅಕ್ಷತ ಕನ್ಯೆ. +ನೆಬುಷೆಡ್ನಸಾರ್ ಎಂಬ ಮಹಾ ಸಾಮ್ರಾಟ ಇಸ್ತಾರಳ ಭಕ್ತಿಗಾಗಿ +ಇವಳಿಗೊಂದು ಮಹಾದ್ವಾರ ನಿರ್ಮಿಸಿದ +ಗ್ರೀಕ್ ಭಾಷೆಯಲ್ಲಿ ಇದು ಬಾಬಿಲು, ದೇವರ ಬಾಗಿಲು. +ಬ್ಯಾಬಿಲೋನಿನ ಅದ್ಭುತವಾದ ತೂಗು ತೋಟವನ್ನು ಇವನೇ ನಿರ್ಮಿಸಿದ +ಸಾಕುವ, ಸಲಹುವ, ಔಷಧ ಕ್ಷೇತ್ರದ ಅಧಿದೇವತೆಯಾಗಿ +ನರಳುವ ರೋಗಿಗಳ ದಣಿವಾರಿಸುವ +ಈ ದೇವಿಗಾಗಿ ನೆಬುಷೆಡ್ನಸಾರ್ ಕಾಲಾನುಕ್ರಮದಲ್ಲಿ ಮಾಡಿದ್ದೆಲ್ಲ ಮಣ್ಣಾಗಿದೆ. +ಮಣ್ಣಿನ ರಾಣಿಯೂ ಇಸ್ತಾರಳೆ! +ನೆಬುಷೆಡ್ನಸಾರ್ ಕೆತ್ತಿಸಿಕೊಂಡಿದ್ದ ಅವನ ಹೆಸರು ಮಾತ್ರ ಕಲ್ಲಿನ ಇಟ್ಟಿಗೆಗಳಲ್ಲಿ +ಬಾಗ್ದಾದ್ ಬಳಿ ಸಿಗುವ ಅವಶೇಷಗಳಾಗಿ ಉಳಿದಿವೆ. +ಅವನು ಆಳಿದ್ದಾಯಿತು ಅಳಿದದ್ದಾಯಿತು. +ಈ ಅವಶೇಷಗಳ ಮೇಲೆಯೇ +ಈಚೆಗೆ ಬಾಗ್ದಾದ್ ಆಳಿದ ಧಿಮಾಕಿನ ದೊರೆ ಸದ್ದಾಮ್ ಹುಸೇನ್‌ +ತನ್ನ ಹೆಸರು ಕೆತ್ತಿಸಿಕೊಂಡಿದ್ದಾನೆ. +ಅವನು ಆಳಿದ್ದೂ ಆಯಿತು, ಆಳಿದದ್ದೂ ಆಯಿತು +ಅವಿತ ಬಿಲದಿಂದ ಈ ಸದ್ದಾಮನನ್ನು ಹೊರಗೆಳೆದು ತಂದು ಕೊಂದ +ಇನ್ನೊಬ್ಬ ಬುಷ್ ಎನ್ನುವ +ಹಣದ ಹುಂಬು ಗುಲಾಮರ ಮಹಾದೊರೆ +ಈ ಅವಶೇಷಗಳನ್ನು ರಕ್ಷಿಸುವ ಯಜಮಾನಿಕೆ ಹೊತ್ತಿದ್ದನಂತೆ. +ಅವನೂ ಆಳಿದ್ದಾಯಿತು. ಅಳಿದದ್ದೂ ಆಯಿತು. +ಪ್ರತಿ ಹುಣ್ಣಿಮೆ ರಜಸ್ವಲೆಯಾಗುವ ನಮ್ಮ ತಾಯಿ ಇಸ್ತಾರು +ಮಡಿವಂತರ ಶತ್ರು, ನಿತ್ಯ ಕನ್ಯೆ, ಸಿಂಹವನ್ನು ತನ್ನ ಚಿಹ್ನೆಮಾಡಿಕೊಂಡ +ಭೂಮ್ಯಾಕಾಶಗಳ ಮಹಾಕಾಮಿ, +ಬರೆದಿಟ್ಟದ್ದು ಹೀಗಿದೆ: +‘ಕಾಮ ವಿರೋಧಿಗಳು ಜೀವ ವಿರೋಧಿಗಳು ಸಾವನ್ನು ಒಲ್ಲದವರು ಜೀವ ಹೇಡಿಗಳು +ಇವರಿಗೆ ಜೀವನದಲ್ಲಿ ಸಂತೋಷವಿಲ್ಲ +ಸುಖ ಮರಣವೂ ಇಲ್ಲ’ +***** +ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು ಬಿಡಿಸಲಾಗದ ಒಗಟು; ಆ ಗೂಢತಮ ತಮೋ ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ? ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ ಭವ್ಯತೆಗೆ […] +ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […] +ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_250.txt b/Kannada Sahitya/article_250.txt new file mode 100644 index 0000000000000000000000000000000000000000..864d70d054a197a7198b9a9fbd3d667c0f3be970 --- /dev/null +++ b/Kannada Sahitya/article_250.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್‍ ಪತ್ತೇಲಾಲ್ ಬಳಿ. “ಯಾವ ಚಿತ್ರ ಮಾಡಿದರೂ ಕಾಸು ಆಗ್ತಿಲ್ಲ. ರೀಮೇಕ್ ಫಿಲ್ಮ್‌ಗಳು ಸೋತು ಸೊರಗಿ ಡಬ್ಬದಲ್ಲಿ ಮಲಗಿದೆ. ಅದನ್ನು ಹಂಚಿಕೆಗೆ ತಗೊಂಡೋರು ಮೆಡಿಕಲ್ ಷಾಪ್‌ಗ್ಹೋಗಿ ಪಾಯಿಸನ್ ಕೊಳ್ಳಬೇಕಾದ ಸ್ಥಿತಿ ಬಂದಿದೆ. ಅಂದ್ಮೇಲೆ ನಿಮ್ಮ ಕಥೇ ಮೇಲೆ ಹ್ಯಾಗ್ರೀ ಹಣ ಹಾಕ್ಲಿ” +“ಸಾರ್‍, ನನ್ನ ಕಥೆಗೆ ಲಕ್ಷ ಲಕ್ಷ ಡಿಮ್ಯಾಂಡ್ ಮಾಡೋ ಸ್ಟಾರ್‍ಸೇ ಬೇಕಿಲ್ಲ. ಅವರೇ ಕಾಸು ಕೊಟ್ಟು ಪಾರ್ಟು ಮಾಡೋ ಅಂಥ ನಟ-ನಟಿಯರಾದ್ರೂ ಸಾಕು. ಬಾಕ್ಸ್ ಆಫೀಸ್ ಚಿಂದಿ ಎಬ್ಬಿಸಿಬಿಡ್ತೀನಿ” +“ಅದು ಹ್ಯಾಗ್ರೀ” +“ಇದು ದೇವರ ಮಹಿಮೆ ಸಾರುವ ಚಿತ್ರ ಸಾರ್‍. ಗ್ರಾಫಿಕ್ಸ ಗ್ರೀಫಿಕ್ಸ್ ಅಂತ್ಲೂ ನೀವೇನೂ ಖರ್ಚು ಮಾಡಬೇಕಿಲ್ಲ. ಸ್ಟಾಪ್ ಬ್ಲಾಕ್ ಟೆಕ್ನಿಕ್ ಇಟ್ಕೊಂಡ್ರೆ ಸಾಕು” +“ಕತೆ ಏನ್ರೀ?” +“ಈ ದೇವರಿಗೆ ಪ್ರದಕ್ಷಿಣೆ ಹಾಕಿದ್ರೆ-ಬಂಜೆಯರಿಗೆ ಮನೆಗೆ ಹೋಗೋದ್ರಲ್ಲಿ ಮಗುವಾಗುತ್ತೆ ಅನ್ನೋ ಸಂದೇಶವಿರುತ್ತೆ ಸಾರ್‍” +“ಹೌದೆ. ನಂಗೂ ಮಕ್ಕಳಿಲ್ಲಾರೀ, ನನ್ನಂತೋರು ಎಷ್ಟೋ ಜನವಿರತಾರೆ. ಅವರಿಗೆಲ್ಲ ಈ ಕತೆ ಇಷ್ಟವಾಗುತ್ತೆ” +“ಇಂಥ ಸಿಚುಯೇಷನ್ಸ್ ಚಿತ್ರದಲ್ಲಿ ತುಂಬಿ ತುಳುಕಿದೆ ಸಾರ್‍. ಸಾರ್‍ ಈ ಸೀನ್ ಕೇಳಿ ಸಾರ್‍. ಮನೆ ಹರಾಜಿಗೆ ಬಂದಿರುತ್ತೆ. ಗಂಡ ಅಂಗಲಾಚಿ ಬೇಡ್ತಿರ್‍ತಾನೆ. ಬೀದಿ ಜನ ತಮಾಷೆ ನೋಡ್ತಾ ನಿಂತಿರ್‍ತಾರೆ, ಮಹಾ ಮುತ್ತೈದೆ ಮಹಾಲಕ್ಷ್ಮಮ್ಮ ‘ದೇವಿ’ ಮುಂದೆ ತನ್ನ ಕಷ್ಟ ತೋಡಿಕೊಂಡು ಬಿಕ್ಕಿ ಬಿಕ್ಕಿ ಅಳ್ತಾ ಹಾಡ್ತಾಳೆ ಸಾರ್‍. ಅಲ್ಲೀಗೆ ಆಗೋ ಹಾಗೆ ಹಂಸಲೇಖಾ ಕೈಲಿ ಒಂದು ಹಾಡು ಬರೆಸಿ ಟ್ಯೂನ್ ಮಾಡಿಸ್‌ಬಿಟ್ರೆ ಚಿತ್ರ ಹಂಡ್ರೆಡ್ ಡೇಸ್ ಗ್ಯಾರಂಟಿ ಸಾರ್‍. ಹಾಡು ಮುಗಿಯೋ ಹೊತ್ತಿಗೆ ದೇವಿ ಪ್ರತ್ಯಕ್ಷವಾಗಿ ಆಕೆ ಬೇಡಿದ ೨೫ ಸಾವಿರ ಕ್ಯಾಷ್ ಕೊಡ್ತಾಳೆ ಸಾರ್‍. ಭಕ್ತೆಗೆ ದೇವಿ ಬಗ್ಗೆ ನಂಬಿಕೆ ಇಲ್ಲ ಅಂತಲ್ಲ-ಆದ್ರೂ ಎಣಿಸಿ ನೋಡ್ತಾಳೆ ಕೇವಲ ೨೦ ಸಾವಿರ ಇದೆ. ೫ ಸಾವಿರ ಕಡಿಮೆ ಅಂದಾಗ ದೇವಿ ‘ಡೋಂಟ್‌ವರಿ ಅಂದು ಇನ್ನು ಐದು ಸಾವಿರ ಕೊಡ್ತಾಳೆ’ +“ದೇವಿಗೆ ಇಂಗ್ಲೀಷ್ ಬರುತ್ತಾ ಅನ್ನಲ್ವಾ ‘ವಿಮರ್ಶಕರು” +“ವಿಮರ್ಶಕರಿಗೆ ಯಾವೋನು ಸಾರ್‍ ಚಿತ್ರ ತೆಗೀತಿರೋನು. ಇದೇನಿದ್ರೂ ಸಾಮಾನ್ಯ ಜನತೆಗೆ ತೆಗಿತಿರೋ ಚಿತ್ರ. ಇಷ್ಟರ ಮೇಲೆ ಪ್ರೆಸ್ ಷೋ ಆದ್ಮೇಲೆ ಪಾರ್ಟಿಲಿ ಯಾರ್‍ಯಾರೂ ಪ್ರಶ್ನೆ ಕೇಳಿದ್ರೆ ‘ದೇವಿ’ಗೆ ಎಲ್ಲಾ ಭಾಷೆಯ ಭಕ್ತಾದಿಗಳು ಬಂದಿರ್‍ತಾರೆ. ಅವರ ಬೇಡಿಕೆಗಳು ಅರ್ಥವಾಗಬೇಕಾದ್ರೆ ಭಾಷೆ ಬಂದಿರಲೇಬೇಕಲ್ವ ದೇವೀಗೆ. ದೇವಿ ಅಂದ್ಮೇಲೆ ಮುಗೀತು ಆಕೆ ಸಕಲ ಭಾಷಾ ಪ್ರವೀಣೆ ಅಂದ್ರಾಯಿತು” +“ನೋಡಿ ಎಷ್ಟು ನಿಸೂರಾಗಿ ಉತ್ತರ ಹೇಳಿಬಿಡ್ತೀರಿ ಮಿಸ್ಟರ್‍ ರಂಗಣ್ಣ”. +“ಇದೆಲ್ಲಾ ಏನು ಮಹಾ ಬಿಡಿ. ಈ ಪ್ರಪಂಚದಲ್ಲಿ ಯಾವ ಖಾಯಿಲೆಗೆ ಬೇಕಾದ್ರೂ ಔಷಧಿ ಕೊಡೋ ಮಹಾತಾಯಿ ಈ ದೇವಿ ಅಂತ ಒಂದು ದೃಶ್ಯವಿದೆ. ಡಾಕ್ಟರು ಹೊಟ್ಟೆ ಆಪರೇಷನ್‌ಗೆ ೫೦ ಸಾವಿರ ಕೇಳಿರ್‍ತಾರೆ. ಆಗ ದೇವರ ಪೂಜೆ ಮಾಡಿದ ಯಜಮಾನ ದೇವರೇ-ನಾಳೆ ಬೆಳಿಗ್ಗೆ ಸೂಸೈಡ್ ಮಾಡ್ಕೋತೀನಿ ಅಂತಾನೆ. ತಕ್ಷಣ ದೇವಿ ಪ್ರತ್ಯಕ್ಷವಾಗಿ ಇಂಥ ಶ್ರೀಮಂತನ್ನ ನೋಡು. ನೆರವಾಗ್ತಾನೆ ಅಂದಾಗ-ಷಾಟ್‌ಕಟ್ ನೆಕ್ಸ್ಟ್ ಷಾಟ್‌ನಲ್ಲೇ ಶ್ರೀಮಂತ ೫೦ ಸಾವಿರ ನೀಡಿ ಹಾರೈಸುತ್ತಾನೆ” ಮಾರನೆ ದಿನ ‘ದೇವಿ ಪೂಜೆ ಭರ್ಜರಿಯಾಗಿರುತ್ತೆ. ಹಾಡು-ಕುಣಿತಕ್ಕೆ ಅಲ್ಲಿ ಫುಲ್ ಸ್ಕೋಪ್. +“ದೇವಿ ಪಾತ್ರಕ್ಕೆ ಕೆ.ಆರ್‍. ವಿಜಯಾನ ವಿಚಾರಿಸಿದರೆ ಹ್ಯಾಗೆ”. +“ಸಾರ್‍ ದುಡ್ಡು ಜಾಸ್ತಿ ಇದೆಯಾ ಸಾರ್‍ ನಿಮ್ಮ ಹತ್ತಿರ ಅಂತಾ ಸ್ಟಾರ್‍ಸ್ನ ವಿಚಾರಿಸಕ್ಕೆ. ಪಾರ್ಟು ಪಾರ್ಟು ಅಂತ ಹಲುಬ್ತಿರೋ ಯಾವೋಳನ್ನಾರೂ ಹಿಡ್ಕಂಬನ್ನಿ ಸಾರ್‍. ದೇವಿ ಪಾತ್ರ ದೇವರ ಪಾತ್ರ ಯಾರುಬೇಕಾರೂ ಮಾಡಬಹುದು ಸಾರ್‍. ಜನಕ್ಕೆ ಕಥೆ ಮುಖ್ಯವೇ ಹೊರತೂ ಅವರು ಹ್ಯಾಗಿದಾರೆ ಅನ್ನೋದು ಮುಖ್ಯ ಅಲ್ಲ ಸಾರ್‍”. +“ಹಾಗಿದ್ರೆ ಒಳ್ಳೆದಾಯಿತು ಬಿಡಿ. ಖರ್ಚು ಜಾಸ್ತಿ ಏನಾಗಲ್ಲ” +‘ದೇವಿ ಮಹಾತ್ಮೆ ಸಾರೋ ತಾಯಿತಕ್ಕೆ ಪಬ್ಲಿಸಿಟಿ ಕೊಡೋ ದೃಶ್ಯ ಇದೆ ಸಾರ್‍. ಅದು ಕಟ್ಟಿಕೊಂಡರೆ ಮನಸಲ್ಲಿ ಇದ್ದದ್ದೆಲ್ಲ ಆಗುತ್ತೆ ಅನ್ನಕ್ಕೆ ಸಖತ್ ಸೀನ್ಸ್ ಇಟ್ಟಿದೀನಿ ಸಾರ್‍” +“ಅದನ್ನು ನಂಬಬೇಕಲ್ಲ ಜನ” +“ಜನ ಜಾಣರಾಗಿದಾರೆ ಅಂತ ನಿಮಗೆ ಯಾರು ಹೇಳಿದರು ಸಾರ್‍? ಕಷ್ಟದ ಸರಮಾಲೆ ಚಿತ್ರಿಸಿ – ಕಣ್ಣೀರು ಬರೋ ಅಂತ ಚಿತ್ರ ತೆಗೀರಿ. ಪ್ರೊಡ್ಯೂಸರ್‍ ಕಣ್ಣೀರು ಹಾಕ್ತಾ ಕೂತ್ಕೋ ಬೇಕಾಗುತ್ತಷ್ಟೆ. ಅದೇ ದೇವರು-ದಿಂಡರು-ಮೂಢನಂಬಿಕೆಗಳು ಬಿಂಬಿಸ್ತಾ ಹೋಗಿ ಹೌಸ್‌ಫುಲ್ ಕಲೆಕ್ಷನ್ ಗ್ಯಾರಂಟಿ. ನೀವು ಓದ್ಲೇಬೇಡಿ-ಆದರೂ ರ್‍ಯಾಂಕ್ ಬರೋದು ಸಾಧ್ಯ ಅನ್ನಿ. ಥಿಯೇಟರ್‍ ಫುಲ್ ಆಗುತ್ತೆ”. +“ಆದ್ರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲವೇ?” +“ಇಂಥ ತರ್ಕಕ್ಕೆ ಬೆಂಕಿ ಬಿತ್ತು. ಕಾಸು ಮಾಡೋದು ನೋಡಿ ಸಾರ್‍. ಒಬ್ಬ ದಡ್ಡ ವಿದ್ಯಾರ್ಥಿ ‘ದೇವಿ ಮಹಾತ್ಮೆ’ಯಿಂದ ಸ್ಟೇಟ್‌ಗೆ ಫಸ್ಟ್ ಬಂದಾ ಅನ್ನಿ. ಬೊಂಬಾಟ್ ಕಲೆಕ್ಷನ್ ಆಗುತ್ತೆ” +“ನಿಜ. ಹಣ ಹಾಕಿದ್ದು ವಾಪಸ್ಸು ಬರೋ ಹಾಗೆ ನೋಡ್ಕೋಳ್ಳೋದು ನಮ್ಮ ಕೆಲಸ. ಸಾಮಾಜಿಕ ಜವಾಬ್ದಾರಿ-ಗಿವಾಬ್ದಾರಿ ಅನ್ನೋದು ಅರ್ಥವಿಲ್ಲದ್ದು” +“ಅಷ್ಟು ಅರ್ಥ ಮಾಡ್ಕೊಳ್ರೀ. ಉದ್ಧಾರವಾಗ್ತೀರಿ” +“ನನ್ನ ಕ್ಯಾಷ್ ಮಾಡ್ಕೋತಿದಾರೆ ಅಂತ ದೇವರಿಗೆ ಕೋಪ ಬಂದು ನಮಗೇನು ಶಾಪ-ಗೀಪ ಕೊಡಲ್ಲತಾನೆ” +“ಅರೇ! ತನ್ನ ಭಕ್ತಾದಿಗಳು ಹಾಯಾಗಿದ್ರೆ ದೇವ್ರಿಗೂ ಖುಶಿ ಅಲ್ಲವೆ. ದೇವರ ಮಹಾತ್ಮೆ, ದೇವಿ ಮಹಾತ್ಮೆ, ಉಪೇಂದ್ರ ತನ್ನ ಕಟೌಟ್ ಕಪಾಲಿ ಟಾಕೀಸ್ ಹತ್ರ ನಿಲ್ಲಿಸಿರೋ ಹಾಗೆ ಒಂದೊಂದು ಚಿತ್ರ ಮಂದಿರದ ಮುಂದೂ ಒಂದೊಂದು ಮಿನಿ ದೇವಸ್ಥಾನದ ಸೆಟ್ ಹಾಕಿ ದೇವರನ್ನು ನಿಲ್ಲಿಸಿದ್ರೆ ಜನ-ಆರ್‍ತಿ ಎತ್ತತಾರೇ ಮಂಗಳಾರತಿ ಮಾಡ್ತಾರೆ-ತಾಯಿತ ಇಟ್ಟಿದ್ರೆ ಕೊಂಡ್ಕೋತಾರೆ-ಡಬ್ಬಿ ಇಟ್ಟಿದ್ರೆ ಕಾಸೂ ಹಾಕ್ತಾರೆ. ಅದೃಷ್ಟ ಚೆನ್ನಾಗಿದ್ರೆ ಭರ್ಜರಿ ಕಲೆಕ್ಷನ್ನೂ ಆಗುತ್ತೆ. ಆಗ ಕಲೆಕ್ಷನ್ ಡಬ್ಬಿ ಹರಾಜು ಹಾಕಿ ಕಾಂಟ್ರಾಕ್ಟ್ ಕೊಟ್ ಬಿಡೋದು” +“ಹೌದು ಹಾಗೂ ಮಾಡಬಹುದು” +“ಹಿಂದೆ ಶನಿ ಮಹಾತ್ಮೆ ನಾಟಕ ಮಾಡಿದಾಗ-ನಾಟಕಕ್ಕೆ ಬರೋರು ಆಚೆ ಇದ್ದ ಶನಿದೇವರಿಗೆ ನಮಸ್ಕಾರ ಹಾಕಿ ಕಾಯಿ ಒಡೆಸಿ ಬರೊರು”. +“ಈ ಕಾಲದಲ್ಲೂ ಅಂತಾ ಜನಾ ಇದಾರಾ” +“ಯಾವ ಕಾಲಕ್ಕೂ ಅಂತಾ ಜನ ಇದ್ದೇ ಇರ್‍ತಾರೆ. ಸಿನಿಮಾ ಅನ್ನೋ ಮ್ಯಾಜಿಕ್ ಮೀಡಿಯಂನಾಗೆ ಜನನ್ನ ಸುಲಭವಾಗಿ ನಂಬಿಸಬಹುದು. ಜನ ಸುಳ್ಳನ್ನ ನಂಬೋ ಅಷ್ಟು ಸಲೀಸಾಗಿ ನಿಜವನ್ನು ನಂಬಲ್ಲ. ಅದಕ್ಕೇ ಇಷ್ಟು ಆಸ್ಪತ್ರೆಗಳಿದ್ದರೂ ಯಂತ್ರ, ತಂತ್ರ, ಹವನ ಹೋಮಕ್ಕೆ ಗಂಟು ಬಿದ್ದಿರೋರು ಜಾಸ್ತಿ ಅಲ್ಲವಾ” +“ಅದ್ನಿಜ, ನಿನ್ನೆ ತಾನೆ ಒಬ್ಬರು ಬಂದು ವಿದ್ಯೆ ಮಹತ್ವ ಕುರಿತು ಒಂದು ಚಿತ್ರ ಮಾಡ್ತೀನಿ ಅಂದ್ರು. ಫೈನಾನ್ಸ್ ಮಾಡ್ತೀನಿ ಅಂದಿದ್ದೆ. ನಿಮ್ಮ ಕತೆ ಕೇಳಿದ ಮೇಲೆ ಈಗ ಇದಕ್ಕೆ ‘ಜೈ ಅನ್ನೋಣ ಅನ್ನಿಸ್ತಿದೆ’ ಎನ್ನುವ ಹೊತ್ತಿಗೆ ಫೈನಾನ್ಷಿಯರ್‍ ಹೆಂಡತಿಗೆ ಸೀರಿಯಸ್ ಅಂತ ಫೋನ್ ಬಂತು. ರಂಗಣ್ಣ ಆಗ ‘ಯಾಕೆ ಓಡ್ತೀರಿ. ದೇವೀನ ಕೇಳ್ಕೊಳ್ಳಿ. ಇಲ್ಲೇ ದಯ ಪಾಲಿಸ್ತಾರೆ ಔಷಧಿ” ಎಂದ. +“ನಿನ್ನ ಯೋಗ್ಯತೆಗೆ ಬೆಂಕಿ ಬಿತ್ತು. ಅದು ನಿನ್ನ ಕತೇಲಿ ಮಾತ್ರ ಸಾಧ್ಯ. ನಿಜ ಜೀವನದಲ್ಲಲ್ಲ. ನನಗೆ ನನ್ನ ಹೆಂಡ್ತಿ ಮುಖ್ಯ” ಎಂದು ಓಡಿದ ಫತ್ತೇಲಾಲ್. +“ಅರೆರೆ, ಕೈಗೆ ಬಂದ ತುತ್ತು ಬಾಯಿಗಿಲ್ವೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ಫೋನ್ ಬಂದಿದ್ರೆ ೫ ಸಾವಿರ ಗಿಟ್ಟಿಸಿರುವೆ” ಎಂದು ಎದ್ದ ರಂಗಣ್ಣ. +***** +(೨೧-೧-೨೦೦೦) +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […] +ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […] +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_251.txt b/Kannada Sahitya/article_251.txt new file mode 100644 index 0000000000000000000000000000000000000000..75a0b4473492c321e86276759c3a6498e62c0814 --- /dev/null +++ b/Kannada Sahitya/article_251.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ +ತೋರಿಕೊಳ್ಳದ +ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; +ಅಧೋಮುಖಿಯಾದ +ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; +ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ +ನಮ್ಮೆಲ್ಲ ನಿತ್ಯ ರಾಮಾಯಣಗಳ ಕವಿ +ಈ ತಿರುಳು ತೊಗಟೆ ಬೇರುಗಳ ಸಂಯುಕ್ತ ಕಾಯಕದಲ್ಲಿ +ಪಾಲಾಗಲು +ಆಕಾಶ ಉಣ್ಣುತ್ತ ಬಿಸಿಲು ಕಾಯುವ ಎಲೆಗಳು; +ಬಿರಿದ ದಳಗಳ ಸಡಗರ ಗರ್ಭಿಸುವಂತೆ +ದುಂಬಾಲು ಬೀಳುವ ದುಂಬಿಗಳ ಹಿತದ ಪೀಡೆಗೆ +ಗಂಧವತಿ ಕುಸುಮ ಕಳೆದು ಹಣ್ಣಾಗುವ ಹೂವುಗಳು; +ಫಲಿತದ್ದು ಕಾಲಾನುಸಾರ ಕೊಳೆತು ಒಣಗಿ +ಹುಟ್ಟಲೆಂದೇ ಬೀಳುವ ಬೀಜಗಳು +ಬೀಸುವ ಗಾಳಿಗೆ ತೊಟ್ಟಿಗಂಟಿ ನರ್‍ತಿಸುವ +ಎಲೆ ಎಲೆ ಎಲೆ ಎಲೆಗಳ ಹಸಿರಿನ ಐಸಿರಿಯಲ್ಲಿ +ನೆರಳು ಬೆಳಕಿನ ಕ್ಷಣ ಕ್ಷಣದ +ಈ ಸದ್ಯದ +ಆ ಸತತದ ಮಾಯಾಜಾಲ +***** +ಸಮುದ್ರ ಸೀಳಿ ಲಾಗ ಹೊಡೆಯುವತಿಮಿಂಗಲಆಕಾಶವನ್ನೇ ಹರಿದು ಸುರಿಯುವಮಳೆಚಂದ್ರ ತಾರೆಗಳನ್ನೆ ನುಂಗಿಬಿಡುವಮೋಡಭೂಮಿಯೊಳಗಿಂದ ಹಟಾತ್ತನೆ ಸಿಡಿದುನಡುಗಿಸುವ ಕಂಪನ; ನುಡಿಸಿದರೆ ರಾಗ,ಹೀಗಿರಬೇಕು! ರೋಮ ರೋಮಕ್ಕೂ ಲಗ್ಗೆ ಇಟ್ಟುಕೊಲ್ಲುವ ಹಾಗೆ! ಕೀಲಿಕರಣ: ಕಿಶೋರ್‍ ಚಂದ್ರ +ಈ ಇಜಿಪ್ಷಿಯನ್ ಹುಡುಗಿಯ ನಿರಾಕಾರ ಮಸ್ತಿಷ್ಕ, ನಿರಾಕಾರ ಗಣಿತದಲ್ಲೆಲ್ಲೋ ಹುದುಗಿ, ಅಲ್ಲೇಲ್ಲೋ ಒಳಗೆ- ಮಾನಸ ಪಪೈರಸ್‌ನ ಮೇಲೆ, ಗಣ-ಉಪಗಣ ಅಂತೆಲ್ಲಾ ವಿಭಾಜಿಸಿ, ಕೂಡಿ ಕಳೆದು, ಗುಣಿಸಿ, ಅನುಲೋಮ ವಿಲೋಮ, ಕ್ರಯ ವಿಕ್ರಯ ಮಾಡಿ, ಆಕಾರ […] +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_252.txt b/Kannada Sahitya/article_252.txt new file mode 100644 index 0000000000000000000000000000000000000000..fb05ed533277890a1dc618e789743f0ea01edaff --- /dev/null +++ b/Kannada Sahitya/article_252.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನ್ಯಮನಸ್ಕನಾಗಿ ಬೆಳಗಿನ ಝಾವ +ಗೇಟ್ ತೆರೆದು ಎಂದಿನಂತೆ ಒಳಬರುವಾಗ +ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ +ಸುಸ್ತಾದ ಹೆಂಡತಿ +ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ +ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು +ರಗ್ಗಿಗೆ ಪಾದ ಜುಲುಮೆಯಲ್ಲಿ ಗೊರಸಾಗುವುದು +ಮುಂಗಾಲು ಕೆರೆದು ಜಗಳಕ್ಕೆ ಹೊಂಚುವುದು +ಅಡುಗೆಮನೆಯಿಂದ ಕಾಫಿ ವಾಸನೆ ಬರುವುದು +ಕಾಂಪೌಂಡಿನ ಮೇಲೆ ಗೊತ್ತಿರುವ ಬೆಕ್ಕೇ ಕುತೂಹಲದಿಂದ +ಯಾರನ್ನೊ ಎಂಬಂತೆ ನನ್ನನ್ನು ನೋಡುವುದು +ಎತ್ತಣಿಂದೆತ್ತಿನ ಸಂಬಂಧ? +ಹೀಗೆ ಏನೇನೊ ಸುಖಾಸುಮ್ಮನೆ ಅಂದುಕೊಳ್ಳುವಾಗ +ಇನ್ನೇನೊ ಹೊಳೆದಂತಾಗಿ +ಮುಖತೊಳೆದು ಪೇಪರ್ ಓದುತ್ತ ಆರಾಮಾಗಿ ಕೂತವನು +ಓದುತ್ತ ಹೋದದ್ದನ್ನು ಓದುತ್ತಲೇ ಮರೆಯುತ್ತ +ಮೈಮುರಿಯುತ್ತ ಎದ್ದು ನಿಲ್ಲುವಾಗ +ಏನದು ಮತ್ತೆ ಹೊಳೆದಂತಾಗುತ್ತದೆ? +ಹೇಳಲು ಬಾಯಿ ಬರುವುದಿಲ್ಲ +ಮತ್ತೆ ಕೂತು ಹೀಗೆ ಬರೆದುಕೊಳ್ಳುವಾಗ +ಗೊತ್ತಿರುವ ಮಾತಿನಲ್ಲಿ +ಗೊತ್ತಾಗದಂತೆ ಹೊಳೆದದ್ದನ್ನು +ಹಿಮ್ಮುಖಿಯಾಗಿ ಹೊಳೆಯಿಸಿಕೊಳ್ಳಲೆಂದು +ಈ ಮಾತುಗಳು. +****** +ತಾಯ ಶ್ರೀಮುಖ ಕಂಡು ಮನವು ನೆಮ್ಮದಿಗೊಂಡು ಎದೆ ಹಿಗ್ಗಿ ಸಂತಸದಿ ಹಾಡುತಿಹುದು; ಅವಳ ಕರುಣೆಯ ಕೊಂಡು ವಾತ್ಸಲ್ಯ ಸವಿಯುಂಡು ಮಮತೆಯಲಿ ಅದನಿದನು ಬೇಡುತಿಹುದು. ಇಲ್ಲಿ ಎದಗುದಿಯಿಲ್ಲ ಕವಡುಗಂಟಕವಿಲ್ಲ ಭಾವ ಪಾವನ, ಲಾಲಿ ಹಾಲಿನೊಡಲು; ಅಕ್ಕರದಿ […] +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_253.txt b/Kannada Sahitya/article_253.txt new file mode 100644 index 0000000000000000000000000000000000000000..dcfe3daaa9db13775ebf73b61f33b51abf9d9fa5 --- /dev/null +++ b/Kannada Sahitya/article_253.txt @@ -0,0 +1,225 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀವು ಕಾಣದ ನಾಳೆಗಳಲ್ಲಿ… +ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ. +“ಮೈಸೂರಿಗಾ….?” ಮೈಸೂರಿನ ನಾನ್‌ಸ್ಟಾಪ್‌ನಲ್ಲಿ ಕೂತರೂ ಕಣಿ ಕೇಳ್ತಾನಲ್ಲಪ್ಪಾ… +“ಹೂಂ….” ಎಂದೆ. +“ಅಂದಹಾಗೆ ಮೈಸೂರಿನಲ್ಲಿ ಎಲ್ಲಿಗೋ….’ ಈ ಮನುಷ್ಯನಿಗೆ ಅದೇನು ಕುತೂಹಲವೋ…. ಗೊಣಗಿಕೊಳ್ಳುತ್ತಲೇ, +“ಗೋಕುಲಕ್ಕೆ….” ಎಂದೆ. +“ಓಹ್ ಗೋಕುಲ, ಅದೇ ಒಂಟಿಕೊಪ್ಪಲ್ ಹತ್ತಿರ ತಾನೆ….” ಇನ್ನು ಈತನ ಉತ್ಸಾಹ ಒತ್ತಿಡುವಂತೆಯೇ ಇಲ್ಲ. +“ಅಲ್ಲಿ ರಾಜಾರಾಮ್ ಅಂತ ಇದ್ದಾರೆ, ನಿಮಗೆ ಗೊತ್ತಾ?” +“ಇಲ್ಲ….” ಉದಾಸೀನವಾಗಿ ಉತ್ತರಿಸಿದೆ. +“ಅದೇ ಮಾಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ರು….”ಬಿಡದೆ ಹೇಳಿದ. ಇಲ್ಲಾ ಮಾರಾಯ ಗೊತ್ತಿಲ್ಲ. ಗೊತ್ತಾಗಬೇಕೂ ಇಲ್ಲ. ನೀ ಸ್ವಲ್ಪ ಹೊತ್ತು ಸುಮ್ಮನಿರ್‍ತೀಯ…. ಒಳಗೇ ಬೇಸರದಿಂದ ಬಯ್ದುಕೊಂಡು ಮೇಲೆ ಮಾತ್ರ…. +‘ಉಹುಂ….” ಎಂದಿಷ್ಟೆ ತಲೆಯಾಡಿಸಿದೆ. +“ಫಾರಿನ್‌ಗೆಲ್ಲ ಹೋಗಿ ಬಂದಿದ್ದಾರೆ. ಅವರ ಮಗ ‘ಏಪ್ರೋ’ದಲ್ಲಿ ಇಂಜಿನಿಯರ್ರು, ನನ್ನ ಸೋದರತ್ತೆಯ ಸಂಬಂಧಿ….” ನಾನು ಬೇಡ ಅಂದರೂ, ಅಂತೂ ರಾಜಾರಾಯರ ಸಂಪೂರ್ಣ ಚರಿತ್ರೆ ನನ್ನ ತಲೆಗೆ ಕೊರೆದು ಸಂತೃಪ್ತನಾದ. ಕಡೆಗೂ ಸ್ವಲ್ಪ ಪುರುಸೊತ್ತು ಕೊಟ್ಟಾಗ, ಕಿಟಕಿಯಾಚೆ ತಿರುಗಿ ತಟ್ಟನೆ ನಿದ್ದೆ ನಟಿಸಿದೆ. ಏನು ಜನರೋ, ಬಸ್‌ನಲ್ಲಿ ಮೂರು ಗಂಟೆ ನಿಂತು ಹೋಗುವವರ ಇತಿಹಾಸ, ಪುರಾಣ ಸಂಗ್ರಹಿಸಿ ಅದೇನು ಮಾಡುತ್ತಾರೋ, ನಮ್ಮ ಚಿಂತೆಗಳೊಡನೆ ಏಕಾಂತಕ್ಕೂ ಅವಕಾಶವಿಲ್ಲ ಈ ಹಾಳು ಬಸ್ಸಿನಲ್ಲಿ. +ಮರುಕ್ಷಣ ನನ್ನ ಯೋಚನೆಯ ಧಾಟಿಗೆ ನಾಚಿಕೊಂಡೆ. ಸಹಪ್ರಯಾಣಿಕನ ಸಹಜ ಸಂಭಾಷಣೆಯೂ ಏಕಿಷ್ಟು ಕೆಡುಕೆನಿಸಬೇಕು. ನನ್ನ ಮನಸ್ಸಿನ್ನೂ ಹತೋಟಿಗೆ ಬಂದಿಲ್ಲ. ಆದದ್ದು ಆಗಿ ಹೋಯಿತು. ಪ್ರಕ್ಷುಬ್ಧಗೊಂಡ ಮನಸ್ಸನ್ನು ಸ್ತಿಮಿತಕ್ಕೆ ತರಬೇಕು. +ಆರು ತಿಂಗಳಾಗಿತ್ತು ಮೈಸೂರಿಗೆ ತಲೆ ಹಾಕಿ. ‘ನಾ ಮೊದಲೇ ಹೇಳಿರಲಿಲ್ಲವೇನೋ….’ ಎಂದು ಭವಿಷ್ಯವನ್ನೆಲ್ಲ ಬಲ್ಲವನಂತೆ ಪ್ರವರ ಪ್ರಾರಂಭಿಸುವ ಮನೆಯವರನ್ನು ನೆನೆದಾಗಲೆಲ್ಲ, ಮೈಸೂರಿಗೆ ಹೋಗುವ ಧೈರ್ಯ ಉಡುಗಿ ಹೋಗುತ್ತಿತ್ತು, ಸುಮ್ಮನೆ ನಾನಾಗಿ ಹೋಗಿ ಆ ಕಸಿವಿಸಿ, ಮುಜುಗರದ ವಾತಾವರಣದಲ್ಲಿ ಮೇಣಕ್ಕೆ ಸಿಕ್ಕಿಬಿದ್ದ ನೊಣದಂತೆ ಏಕೆ ಒದ್ದಾಡಲಿ ಎನಿಸದೆ ಇರಲಿಲ್ಲ. ಅದ್ಯಾರು ಹೇಳಿದ್ದು, ರಮೇಶ ಅಲ್ಲವೆ_‘ತೊಂಬತ್ತೊಂಬತ್ತು ಪರ್ಸೆಂಟ್ ಪ್ರೇಮ ವಿವಾಹಗಳು ವಿಫಲವಾಗುತ್ತೆ ಕಣೋ,’ ತಾನೇ ಅಂಕಿ ಸಂಖ್ಯೆ ಕಲೆ ಹಾಕಿದಂತೆ ಹೇಳಿದ್ದ. ‘ನೀವೇನೇ ಹೇಳಿ ರವಿ, ಈ ಪ್ರೀತಿ ಪ್ರೇಮ ಅನ್ನೋದೆಲ್ಲ ನಾಲ್ಕು ದಿನ ಅಷ್ಟೆ. ಏನೋ ಒಳ್ಳೆಯದಾಗಲಿ’ ಆಮಂತ್ರಣ ಪತ್ರ ಹಿಡಿದು ಹೋದಾಗಲೂ ಹೇಳಿದ್ದರು ಸುಬ್ಬರಾಯರು. ಅದು ಅವರ ಅನಿಸಿಕೆಯೋ, ಅನುಭವವೋ, ಇಲ್ಲ ವಿಕೃತ ಹಾರೈಕೆಯೋ, ಅರ್ಥವಾಗಿರಲಿಲ್ಲ. ಅವರ ಮಗಳನ್ನು ನನಗೆ ಕೊಡಬೇಕೆಂದು ನಾನು ‘ಬಿ. ಇ. ಸೇರಿದಾಗಲೇ ಅಮ್ಮನಲ್ಲಿ ಹೇಳಿಕೊಂಡಿದ್ದರಂತೆ! ಈ ಎಲ್ಲ ಜನರನ್ನು ಮತ್ತೊಮ್ಮೆ ಭೇಟಿಯಾಗಬೇಕು! ಈ ಜನ ತಮ್ಮ ಸಂಪ್ರದಾಯಗಳ ಮುಸುಕಿನಡಿ ಏನೆಲ್ಲ ಒದ್ದಾಡಿದರೂ ‘ಇದೇ ನಾಕ’ ಎಂದು ನಟಿಸುವವರು. ಅದರಾಚೆ ಜಿಗಿದವರ ಏರುಪೇರುಗಳಿಗೆ ಭೂತಕನ್ನಡಿ ಹಿಡಿದವರು. ಈ ನಗುವ ಜನರೆದುರು ಇಂದು ನಾ ಬೆತ್ತಲು! +ಕಣ್ಣು ತೆರೆದು ಕಿಟಕಿಯಾಚೆ ನೋಡಿದೆ. ರಾಮನಗರದ ದೊಡ್ಡ ಬೆಟ್ಟಗಳು ಹಿಂದೆ ಸರಿಯುತ್ತಿದ್ದವು ಮೊದಲ ಬಾರಿ ಶಶಿ ಈ ಹಾದಿಯಲ್ಲಿ ಬಂದಾಗ ಸಂಜೆಗೆಂಪಿನಲ್ಲಿ ಕಪ್ಪಾಗುತ್ತಿದ್ದ ಗುಡ್ಡಗಳನ್ನು ಕಣ್ಣರಳಿಸಿ ನೋಡಿದ್ದಳು. ‘ಒಂದು ಸಾರಿ ಈ ರಾಮನಗರಕ್ಕೆ ಪಿಕ್‌ನಿಕ್‌ಗೆ ಬರೋಣವಾ?’ ಎಷ್ಟೆಲ್ಲ ಉತ್ಸಾಹದಿಂದ ಕೇಳಿದ್ದಳು ‘ಸದ್ಯ ಊರು ತಲುಪಿ ಅಮ್ಮ ಅಪ್ಪ ಅದೇನು ಎಗರಾಡ್ತಾರೆ ನೋಡಿದರೆ ಸಾಕು’ ಎಂದೇನೋ ಸಿಡುಕಿದ್ದ. ಶಶಿ ಸಪ್ಪೆಯಾಗಿ ಕುಳಿತಿದ್ದಳು. ಪ್ರತಿ ವಿಷಯಕ್ಕೂ ಇಷ್ಟು ಶೀಘ್ರವಾಗಿ ನಾನೇಕೆ ಉದ್ರೇಕಗೊಳ್ಳುತ್ತೇನೆ ಎನಿಸುತ್ತಿತ್ತು. ಯಾವುದೋ ವಿಷಯ ನನ್ನ ಮನಃಸ್ಥಿತಿಯನ್ನು ಕ್ಷಣದಲ್ಲಿ ಕಲಕಿ ಬಿಡುತ್ತಿತ್ತು. +ಮೂರು ವರ್ಷಗಳ ಹಿಂದೆ ನನ್ನ-ಶಶಿಯ ವಿವಾಹವಾಗಿತ್ತು. ಎರಡು ವರ್ಷಗಳ ಪರಿಚಯ ನಮ್ಮದು. ಶಶಿ ಕಾನ್‌ಪುರ್ ‘ಐ. ಟಿ. ಐ. ನಲ್ಲಿ ನನ್ನ ಸಹಪಾಠಿ. ವಾರಕ್ಕೊಮ್ಮೆ ಅಮ್ಮನಿಗೆ ಬರೆವ ಪತ್ರಗಳಲ್ಲಿ ಶಶಿಯೂ ಸಾಕಷ್ಟು ಕಡೆ ಇಣುಕಿರುತ್ತಿದ್ದಳು. ಒಬ್ಬ ಬೆಳೆದ ಮಗ ತನ್ನ ಪ್ರೇಮದ ಹಂತಗಳನ್ನು ಎಷ್ಟು ಸೂಕ್ಷ್ಮವಾಗಿ ತಿಳಿಸಬಲ್ಲನೋ ಅವಿಷ್ಟೂ ಪತ್ರಗಳಲ್ಲಿ ಇರುತ್ತಿತ್ತು. ತಮ್ಮ ರಾಮುಗೆ ಮೈಸೂರಲ್ಲೆ ದೊಡ್ಡ ಹುದ್ದೆಯಾದ ಮೇಲೆ, ಅಮ್ಮ-ಅಪ್ಪ ಉತ್ತರ ಭಾರತ ಪ್ರವಾಸಕ್ಕೆ ಬಂದವರು ಕಾನ್‌ಪುರಕ್ಕೂ ಬಂದಿಳಿದಿದ್ದರು. ಶಶಿಯನ್ನು ‘ಸಹಪಾಠಿ’ಯಾಗಿ ಪರಿಚಯಿಸಿದ್ದ. ಆಗೆಲ್ಲ ಅಮ್ಮನ ಬಗ್ಗೆ ನನ್ನ ಭಾವನೆಗಳು ಎಷ್ಟೊಂದು ಮೃದುವಾಗಿದ್ದವು! ಅಪ್ಪ ಎಂದೂ ಆತ್ಮೀಯರಾಗಿರಲೇ ಇಲ್ಲ. ಮಕ್ಕಳನ್ನು ಅದೂ ಗಂಡು ಮಕ್ಕಳನ್ನು ಶಿಸ್ತಿನಿಂದ ಮಾರು ದೂರ ಇಟ್ಟು ಬೆಳೆಸಬೇಕು ಎಂಬ ಚಿಂತನೆಯವರು. ನಮ್ಮ ಅಹವಾಲೆಲ್ಲ ಅಮ್ಮನ ಮುಖಾಂತರವೇ. ಮಹಾ ಕೋಪದ ಅಪ್ಪನದು ಮೂರು ಹೊತ್ತೂ ಸಿಡಿಮಿಡಿವ ಸ್ವಭಾವ. ಅಮ್ಮನನ್ನು ಗದರಿ ಬಿಸಾಡುವುದೇ ಗಂದಸುತನ ಅಂದುಕೊಂಡವರು. ‘ಅನಕ್ಷರಸ್ಥ ಹಳ್ಳಿ ಹುಡುಗಿ, ಓದಿ ಪೇಟೆ ಸೇರಿದ ತನಗೆ ಸಾಟಿಯಲ್ಲ’ ಎಂಬ ತಾತ್ಸಾರವೂ ಅಪ್ಪನ ಪ್ರತಿ ಮಾತಿನಲ್ಲಿ ಇಣುಕುತ್ತಿತ್ತು. ತಾತನ ಬಲವಂತಕ್ಕೆ ಅಪ್ಪ ಅಮ್ಮನನ್ನು ಕಟ್ಟಿಕೊಂಡದ್ದಂತೆ. ಕಟ್ಟಿಕೊಂಡರು, ಮಕ್ಕಳ ಹುಟ್ಟಿಸಿದರು, ಅದರಾಚೆ ಅಮ್ಮನ ಯಾವ ಅಗತ್ಯವನ್ನೂ ನೋಡಲಿಲ್ಲ. ಸ್ವಾತಂತ್ರ್ಯವನ್ನೂ ಕೊಡಲಿಲ್ಲ. ಮಕ್ಕಳಿಗೆ ಎಂದೂ ಸಲಿಗೆ ನೀಡಲಿಲ್ಲ. +ಅಮ್ಮ ಎಂದಾಗೆಲ್ಲ ನನ್ನ ಬಾಲ್ಯದ ಸಿಹಿ ಸಿಹಿ ನೆನಪುಗಳು ಎದ್ದು ನಿಲ್ಲುತ್ತಿದ್ದವು_ನಾನಾಗ ಎಂಟು ವರ್ಷವಿರಬೇಕು. ದೊಡ್ಡವರ ಸೈಕಲ್‌ನಲ್ಲಿ ‘ಕತ್ತರಿ’ ಹೊಡೆಯಲು ಹೋಗಿ ಟಾರ್ ನೆಲಕ್ಕೆ ದಢಾರನೆ ಬಿದ್ದು ‘ಹೋ’ ಎಂದು ಅರಚಿಕೊಂಡಾಗ, ಅಡಿಗೆ ಮನೆಯಿಂದ ಅಮ್ಮ ದಡಬಡಿಸಿ ಹಿಟ್ಟು ಕಲೆಸಿದ ಕೈಯಲ್ಲೇ ಓಡಿ ಬಂದಿದ್ದಳು. ‘ರವಿ ಏನಾಯ್ತೋ…. ಎಲ್ಲಿ ಬಿದ್ಯೋ… ನನ್ನ ರಾಜ….’ ಎಂದು ಲಗುಬಗೆಯಿಂದ ಅಪ್ಪಿಕೊಂಡು ರಕ್ತ ಸೋರುತ್ತಿದ್ದ ಅಂಗೈ ಅದುಮಿ ಹಿಡಿದು ಒಳಗೋಡಿದ್ದಳು. ಕಾಲು ಬೇರೆ ಉಳುಕಿ ಅಸಾಧ್ಯ ನೋವಿನಿಂದ ಬೊಬ್ಬೆ ಹಾಕುತ್ತಿದ್ದ ನನಗೆ ‘ಯಾಕೋ ಬಿದ್ದೆ…. ಎಲ್ಲಿ ನೋವಾಯಿತಪ್ಪ ನನ್ನ ರಾಜಂಗೆ… ನನ್ನ ಬಂಗಾರ ನೀನು… ಈಗೆಲ್ಲ ಸರಿಹೋಗುತ್ತೆ… ಇನ್ನೇನು ನೋವು ಹೊರಟೇ ಹೋಯ್ತು’ ಎಂದು ಮುದ್ದುಗರೆಯುತ್ತಾ, ಗಾಯಕ್ಕೆ ಅರಿಶಿನ ಒತ್ತಿಕಟ್ಟಿ, ನೋಯುತ್ತಿದ್ದ ಕಾಲನ್ನು ನೀವುತ್ತಾ, ಉಪ್ಪಿನ ಶಾಖ ನೀಡುತ್ತಾ ಲಲ್ಲೆಗರೆದ ಅಮ್ಮನ ಕಣ್ಣಲ್ಲಿ ಎಂಥಾ ಹೊಳಪಿತ್ತು! ಆ ರಾತ್ರಿ ನನಗಂತೂ ಅಮ್ಮನ ಹಿತವಾದ ಒತ್ತಿಗೆ ಸುಖ ನಿದ್ರೆ, ಬೆಳಿಗ್ಗೆ ಕಣ್ಣು ಬಿಟ್ಟಾಗ ಅಮ್ಮ ಇನ್ನೂ ಕಾಲು ನೀವುತ್ತಲೇ ಇದ್ದಳು….! +ನಾ ಓದಲು ಕುಳಿತಾಗೆಲ್ಲ ಅಮ್ಮನ ಉಪಚಾರ ಮುಗಿಲು ಮುಟ್ಟುತ್ತಿತ್ತು. ರಾತ್ರಿ ಹನ್ನೆರಡಕ್ಕೆ ಎದ್ದು, ಓದುತ್ತಿದ್ದ ನನಗೆ ‘ಕಾಫಿ ಮಾಡಲೇನೋ’ ಕೇಳುತ್ತಿದ್ದಳು. ‘ಬೆಳಿಗ್ಗೆ ಎದ್ದು ಓದಪ್ಪ, ಆರೋಗ್ಯ ಕೆಟ್ಟೀತು….’ ಎಷ್ಟೆಲ್ಲ ಕಳಕಳಿ ಇತ್ತು. ‘ನೀ ಮಲಕ್ಕೋ ಹೋಗಮ್ಮಾ….’ ಎಂದು ಐದಾರು ಬಾರಿ ಹೇಳಿದರೂ ಅಮ್ಮನಿಗೆ ನಿದ್ದೆ ಹತ್ತುತ್ತಿದ್ದುದು ನಾನು ರೂಮಿನಲ್ಲಿ ದೀಪ ಆರಿಸಿ ಮಲಗಿದ ಮೇಲೆಯೇ. +ನಾನು ಬಿ. ಇ. ಗೆ ಸೇರಿದಾಗ, ಅಮ್ಮನಿಗೆ ನನ್ನ ಬಗ್ಗೆ ಅದೆಷ್ಟು ಹೆಮ್ಮೆ. ‘ರ್‍ಯಾಂಕ್ ಬರಬೇಕು ಕಣೋ…. ಕಾಸೂ ಖರ್ಚಿಲ್ಲದೆ ಇಂಜಿನಿಯರ್ ಸೀಟು ತಗೊಂಡಿದ್ದೀಯಾ. ನಾಳೆ ನೋಡ್ತಾ ಇರು. ಕರೆದು ಕೆಲಸ ಕೊಡ್ತಾರೆ’ ಓದಲು ಎಷ್ಟೆಲ್ಲ ಹುರಿದುಂಬಿಸಿದ್ದಳು. ಬೆಳಗ್ಗೆ ಐದಕ್ಕೇ ಎದ್ದು, ಎಂಟು ಗಂಟೆಗಿದ್ದ ನನ್ನ ಕಾಲೇಜಿಗೆ ಸಡಗರದಿಂದ ತಿಡಿ ಊಟ ಎರಡೂ ತಯಾರಿಸುತ್ತಿದ್ದಳು. ಬಂದು ಹೋಗುವವರ ಮುಂದೆ ನನ್ನ ಗುಣಗಾನ. ಶ್ರೀಮಂತ ಹೆಂಡತಿ ಪಡೆದ ಮಾವ, ಬಡ ಶಾಲಾ ಮೇಷ್ಟರ ಕೈ ಹಿಡಿದ ಅಮ್ಮನನ್ನು ಎಂದೂ ಆದರಿಸಿರಲಿಲ್ಲ. ಮುವತ್ತು ಸಾವಿರ ಕೊಟ್ಟು ತಮ್ಮ ಮಗನಿಗೆ ಇಂಜಿನಿಯರಿಂಗ್ ಸೇರಿಸಿ, ಯಾರ್‍ಯಾರದೋ ಕಾಲು ಹಿಡಿದು ಪಾಸು ಮಾಡಿಸಿ, ಹಣದಿಂದಲೇ ಕೆಲಸವೂ ಕೊಡಿಸಿ ಈಗ ಊರೆಲ್ಲ ತನ್ನ ಪುತ್ರರತ್ನಕ್ಕೆ ತಕ್ಕ ಹೆಣ್ಣೇ ಇಲ್ಲ ಎಂಬಂತೆ ಬೀಗುತ್ತಿರುವ ಮಾವನ ಮೇಲೆ ಅಮ್ಮನ ಪೈಪೋಟಿ. ತನ್ನ ಮಕ್ಕಳು ಅಖಂಡವಾಗಿ ಓದಬೇಕು, ಕೈ ತುಂಬಾ ಸಂಪಾದಿಸಬೇಕು, ಅವರ ತಲೆಯ ಮೇಲೆ ಹೊಡೆದಂತೆ ಬಾಳಿ ತೋರಿಸಬೇಕು. ಅಮ್ಮನ ‘ಬೇಕು’ಗಳ ಪೂರೈಸುವುದೇ ನನ್ನ ಧ್ಯೇಯವಾಗಿ ಹೋಗಿತ್ತು. ಹಗಲಿರುಳೂ ಓದುತ್ತಿದ್ದೆ. ಬಹಳ ಬೆಲೆಯ ಪುಸ್ತಕಗಳನ್ನು ಕೊಳ್ಳಲಾರದೆ, ಲೈಬ್ರರಿಯಲ್ಲಿ ಕುಳಿತು ಇಡೀ ಪುಸ್ತಕವನ್ನೇ ಕಾಪಿ ಮಾಡುತ್ತಿದ್ದೆ. ನನ್ನ ಮನಸ್ಸಿನ ಬಯಕೆಗಳನ್ನು ಮುದುಡಿ ಮೂಟೆ ಕಟ್ಟಿ, ಅಮ್ಮನ ಕನಸುಗಳಿಗೆ ಜೀವಕೊಡಲು ಹೊರಟಿದ್ದೆ. +ಅಂತೂ ಶಶಿಯೊಡನೆ ವಿವಾಹವಾದೊಡನೆ ಅಮ್ಮನ ಅಷ್ಟೆಲ್ಲ ಪ್ರೀತಿ, ಮರಳುಗಾಡಿನಲ್ಲಿ ಸುರಿದ ಬೊಗಸೆ ನೀರಿನಂತೆ ಇಂಗಿ ಹೋಯಿತು. ಬಾಲ್ಯದಲ್ಲಿ ಅಷ್ಟೆಲ್ಲ ಪ್ರೀತಿಸಿದ ಅಮ್ಮ…. ನನ್ನ ಒಂದು ನಗುವಿಗಾಗಿ ಏನೆಲ್ಲ ಉಪಚರಿಸುತ್ತಿದ್ದವಳು…. ಅದೇಕೋ ಬೆಳೆದಂತೆ, ಅವಳ ಬಯಕೆಗಳೂ ಭಯಂಕರವಾಗಿ ಬೆಳೆದುಬಿಟ್ಟವು. ನಿರೀಕ್ಷೆಗಳ ಗುಡ್ಡ ಪರ್ವತವಾಗಿ, ನಾಳೆಗಳಿಗೆ ಜಾರಿ ಹೋಗುತ್ತಿರುವ ಪುತ್ರನನ್ನು ಮುಷ್ಟಿಯಲ್ಲಿ ಬಿಗಿದಿಡಲು ಬಯಸಿದಳು. ಹೊತ್ತಾಗ, ಹೆತ್ತಾಗ, ಹೂಮೈಯ ಎದೆಗಪ್ಪಿ, ಜೋಗುಳ ಹಾಡುವಾಗ ಉಕ್ಕಿ ಹರಿದಿದ್ದ ಪ್ರೇಮ, ಮಗ ಬಲಿತಂತೆ ಸ್ವಾರ್ಥದ ರಂಗು ಪಡೆಯಿತು. ‘ಅವನ ಬದುಕು ತಾನಿತ್ತ ವರ, ಅವನ ಬದುಕಿನ ಪ್ರತಿ ನಿರ್ಣಯ ತನ್ನದಾಗಬೇಕು, ಅವನು ಕೂರುವುದು, ನಿಲ್ಲುವುದು, ಓದುವ ಓದು, ಕಟ್ಟಿಕೊಳ್ಳುವ ಹೆಂಡತಿ, ಹುಟ್ಟಿಸುವ ಮಕ್ಕಳು, ಎಲ್ಲವೂ ತನ್ನ ಆಯ್ಕೆಯಾಗಬೇಕು’ ಎಂಬ ಅಗಾಧ ಆಸೆ! ಕಡೆಗೆ ಅಮ್ಮನ ಪ್ರೀತಿಯೂ ಎಷ್ಟು ವ್ಯವಹಾರಿಕವಾಗಿ ಹೋಯಿತು! +ಮೂರು ವರ್ಷಗಳ ಹಿಂದೆ…. ನನ್ನ ‘ಎಂ. ಟೆಕ್.’ ಮುಗಿದಿತ್ತು. ಬೆಂಗಳೂರಿನಲ್ಲಿ ನನಗೂ ಶಶಿಗೂ ಒಂದೇ ಕಾರ್ಖಾನೆಯ ಒಂದೇ ವಿಭಾಗದಲ್ಲಿ ಕೆಲಸವಾಗಿತ್ತು. ಎಲ್ಲ ಒಂದು ಹಂತ ತಲುಪಿ ನಿರಾಳವಾದ ಖುಷಿ. ಅಮ್ಮನಿಗೆ ನನ್ನ-ಶಶಿಯ ಮದುವೆಯ ಬಗ್ಗೆ ಬರೆದಿದ್ದೆ. +ಬಂದದ್ದು ಎಂಥದ್ದೋ ಉದಾಸೀನದ ಉತ್ತರ_‘ಈಗಲೇ ನಿನಗೆ ಮದುವೆ ವಯಸ್ಸೇನೂ ಆಗಿಲ್ಲ. ಎರಡು-ಮೂರು ವರ್ಷ ಕೆಲಸ ಮಾಡಿ ಕೈಯಲ್ಲಿ ನಾಲ್ಕು ಕಾಸು ಮಾಡಿಕೋ. ತಂಗಿ ಆಶಾಳ ಮದುವೇನೂ ಆಗಬೇಕಲ್ಲ’ ಎಂಬ ಧಾಟಿಯ ನಾಲ್ಕು ಸಾಲು ಗೀಚಿ ಅಲ್ಲಿಗೇ ಮದುವೆ ಮಾತುಕತೆಗೆ ಮುಕ್ತಾಯ ಹಾಡಿ, ಮತ್ತೇನೇನೋ ಊರಲ್ಲಿರುವ ಪುರಾಣವೆಲ್ಲ ಬರೆದು, ‘ಆರೋಗ್ಯ ನೋಡಿಕೊ. ಚಳಿ ನಿನಗೆ ಆಗೋಲ್ಲ. ಸ್ವಟರ್ ಹಾಕಿಕೊಂಡೇ ಓಡಾಡು. ಸಂಜೆ ಹಿಮದಲ್ಲಿ ತಲೆ ಒಡ್ಡಿ ತಿರುಗಬೇಡ’ ಎಂಬೆಲ್ಲ ಉಪದೇಶಗಳಲ್ಲಿ ಪ್ರೀತಿಗಿಂತ ಯಾಂತ್ರಿಕತೆ ಮುಗ್ಗು ಬಡಿವಂತಿತ್ತು. +‘ಅಮ್ಮ ಮದುವೆ ಬಗ್ಗೆ ನನಗೆ ಅವಸರ ಇಲ್ಲದಿದ್ರೂ ಶಶಿ ಅಪ್ಪ-ಅಮ್ಮನ ಬಗ್ಗೆಯೂ ಯೋಚಿಸಬೇಕು. ಅದೂ ಅಲ್ಲದೆ ಒಬ್ಬರನ್ನೊಬ್ಬರು ಒಪ್ಪಿ ಆದ ಮೇಲೆ, ಸುಮ್ಮನೆ ಮದುವೇನ ಮುಂದೂಡೋದು ಏಕೆ?’ ಎಂದೆಲ್ಲ ಬರೆದ ಮೇಲೆ ತೀರಾ ಮೊಟಕಾಗಿ, ಕಟುವಾಗಿ ಎರಡೇ ಸಾಲುಗಳ ಉತ್ತರ ಬಂತು_“ನಿನ್ನ ಮದುವೆ ಬಗ್ಗೆ ಮುಖತಃ ಮಾತಾಡುವೆಯಂತೆ, ರಜೆ ಹಾಕಿ ಬಾ.’ +ಶನಿವಾರ ಊರು ತಲುಪಿದ್ದೆ. ಏಕೋ ಎಲ್ಲ ಇದ್ದಂತಿರಲಿಲ್ಲ. ಗೇಟು ದಾಟಿ ಒಳ ಹೊಕ್ಕಾಗೆಲ್ಲ ‘ರವಿ ಬಂದನಾ, ಹೇಗಿದ್ದೀಯೊ?’ ಎಂಬ ಅಮ್ಮನ ಸಂಭ್ರಮದ ಸ್ವಾಗತ ಇರಲಿಲ್ಲ. ಆಶಾ ಬಾಗಿಲು ತೆರೆದವಳು ಮುಖದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ‘ಅಮ್ಮ ರವಿ ಬಂದ’ ಎಂದು ಹೇಳಿ ರೂಮು ಸೇರಿ ಪುಸ್ತಕ ಹಿಡಿದಳು. ‘ಬಂದ್ಯಾ….? ಎಂದಷ್ಟೆ ಉದಾಸೀನವಾಗಿ ಕೇಳಿ ಅಡಿಗೆ ಮನೆ ಸೇರಿದಾಗ, ಎಂಥದ್ದೋ ಪ್ರಳಯದ ಪೀಠಿಕೆ ಸ್ಪಷ್ಟವಾಗಿತ್ತು. +ಸಂಜೆ ಅಪ್ಪ ಬರುವವರೆಗೆ ಮತ್ತೇನೂ ಜರುಗಲಿಲ್ಲ. ಮುಚ್ಚಳ ಮುಚ್ಚಿಟ್ಟ ಪ್ರೆಷರ್ ಕುಕರ್‍ನಲ್ಲಿ ಹಾಕಿದಂತೆ ತಕ ತಕ ಕುದಿದವು ಪ್ರಶ್ನೆಗಳು. ಊಟ ಮಾಡುತ್ತಲೇ ಕೇಳಿದೆ_ +“ಯಾಕಮ್ಮಾ ಒಂದು ತರಹ ಇದ್ದೀಯಾ? ಏನೋ ಮಾತಾಡಬೇಕು ಅಂತ ಬರೆದಿದ್ದೆ.” +“ನಿಮ್ಮಪ್ಪ ಬರಲಿ ಕಣೋ…. ಅವರನ್ನೇ ಕೇಳು” ಎಂದಷ್ಟೇ ಹೇಳಿ ಸರಕ್ಕನೆ ಮುಖ ಮರೆಸಿ ಹೋದ ಅಮ್ಮ ಅಪ್ಪಟ ಅಪರಿಚಿತಳಂತೆ ಕಂಡುಬಿಟ್ಟಳು. +ರಾತ್ರಿ ಹನ್ನೆರಡಕ್ಕೂ ಕಾಫಿ ಕಪ್ ಹಿಡಿದ ಅಮ್ಮ… +ಉಳುಕಿದ ಕಾಲನ್ನು, ಕೈ ನೋವೆನ್ನದೆ ಗಂಟೆಗಟ್ಟಲೆ ಕತೆ ಹೇಳುತ್ತಾ ಒತ್ತಿದ ಅಮ್ಮ _ +‘ನನಗೀಗ ಸೀರೆಯೇಕೆ, ಕಾಲೇಜಿಗೆ ಹೋಗೋ ಹುಡುಗ-ರವಿಗೊಂದು ಪ್ಯಾಂಟ್ ಹೊಲಿಸಿ’ ಎಂದು ಸಾದಾ ಸೀರೆಯಲ್ಲೇ ನಳನಲಿಸಿದ ಅಮ್ಮಾ…. +ತಟ್ಟನೆ ಅಪರಿಚಿತಳಾದಳು! +ರಾತ್ರಿ ಮಾತಿಲ್ಲದೆ ಊಟವಾದ ನಂತರ ಅಪ್ಪ _ +“ಏನೋ ಮದುವೆ ಮದುವೆ ಅಂತ ಬರೆದಿದ್ದೆಯಲ್ಲೋ….” ನನ್ನ ಮುಖಕ್ಕೂ ಮುಖ ಕೊಡದೆ ಪೇಪರ್ ಮರೆಯಲ್ಲೇ ಗುಡುಗಿದರು. +“ಹೂಂನಪ್ಪ…. ನಮ್ಮದೂ ಓದು ಮುಗಿದಿದೆ, ಒಳ್ಳೆ ಕೆಲಸಾನೂ ಸಿಕ್ಕಿದೆ. ಕ್ವಾರ್ಟರ್‍ಸ್ ಕೂಡ ಸಿಗುತ್ತೆ….” ನಾ ಹೇಳುತ್ತಿದ್ದಂತೆ _ +“ನಿನಗೀಗಲೇ ಎಂಥದ್ದೋ ಅವಸರ. ನಾಲ್ಕು ದಿನ ಹಾಯಾಗಿದ್ದು ನಾಲ್ಕು ಕಾಸು ಮಾಡಿಕೊ. ನಾಲ್ಕು ಗೋಡೆ ಇರೋ ಕ್ವಾರ್ಟರ್ಸ್ ಸಿಕ್ಕಿ ಬಿಟ್ರೆ ಸಂಸಾರ ಆಗೋಲ್ಲ.” +“ಮನೆ ಅನ್ನೋದು ನಾನೊಬ್ಬ ಕಟ್ಟಿ, ಹೆಂಡತೀನ ಅತಿಥಿ ತರಹ ಸ್ವಾಗತಿಸಬೇಕಾದ್ದಲ್ಲ ಅಪ್ಪ. ಅದೇನಿದ್ರೂ ನಾವಿಬ್ಬರೂ ಒಟ್ಟಿಗೇ ಕಟ್ತೀವಿ” ಎಂದೇನೋ ಹೇಳಿದ. +“ಆಶಾದೂ ಮದುವೆ ಆಗಲಿ. ಒಂದೆರಡು ವರ್ಷ ತಡೆ. ಆಮೇಲೆ ಮಾಡಿಕೊಂಡರಾಯ್ತು” ಎಂಥದ್ದೋ ಹಾರಿಕೆಯ ಉತ್ತರ. ನನ್ನ ಮದುವೆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿದಂತೇ ಇರಲಿಲ್ಲ. ಇವರೆಲ್ಲ ಏನೋ ಹೇಳಲು ಹೊರಟು, ಮತ್ತೇನೋ ಬಳಸುತ್ತಿದ್ದಾರೆ ಅನಿಸಿತು. +“ಆಶಾಗಿನ್ನೂ ಹದಿನೇಳೂ ತುಂಬಿಲ್ಲ. ಈಗಲೇ ಎಂಥಾ ಮದುವೆ ಅಪ್ಪಾ. ಒಂದು ಬಿ. ಎ. ಮಾಡಿಕೊಳ್ಳಲಿ.” +“ಹದಿನೇಳು ಏನೂ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಲ್ವೋ” ಅಮ್ಮ ಮೂಲೆಯಿಂದಲೇ ಗೊಣಗಿದಳು. ನನಗೂ ಕೊಂಚ ಸಹನೆ ಕದಡಿತು. +“ಇನ್ನೂ ಆಶಾಗೆ ಹುಡುಕಲೂ ಗಂಭಿರವಾಗಿ ಶುರು ಮಾಡಿಲ್ಲ. ಆಗ್ಲೇ ಮದುವೆ ಅಂತೀರಲ್ಲಮ್ಮ. ಹದಿನೇಳಕ್ಕೆ ಇಷ್ಟು ಚಿಂತೆ ಆದ್ರೆ, ಇಪ್ಪತ್ತೈದರ ಶಶಿ ಅಪ್ಪ, ಅಮ್ಮನಿಗೆ ಆತಂಕ ಇರೋಲ್ಲವೆ?” +“ಉದ್ದಕ್ಕೆ ಓದೋರಿಗೆಲ್ಲ ಮದುವೆ ಚಿಂತೆ ಎಲ್ಲಿರುತ್ತೋ? ಅಷ್ಟೆಲ್ಲ ಓದಿದೋರು ಸಂಸಾರ ಮಾಡ್ತಾರಾ? ಹುಡುಗರ ಜೊತೆ ಓಡಾಡಿಕೊಂಡು ಹಾಸ್ಟಲ್‌ನಲ್ಲಿದ್ದುಕೊಂಡು ಬಂದ ಹುಡುಗಿ….”ತಟ್ಟನೆ ಇವರೆಲ್ಲಾ ಹೇಳಬೇಕಾದುದು ಸ್ಪಷ್ಟವಾಯಿತು. +“ಅಮ್ಮ, ಮದುವೆ ಆಗ್ತಾ ಇರೋನು ನಾನು. ಅವಳ ಓದು, ವಿದ್ಯೆ, ಲೈಫ್‌ಸ್ಟೈಲ್ ಎಲ್ಲ ಒಪ್ಪಬೇಕಾದವನು ನಾನು” ಸ್ವಲ್ಪ ಗಡುಸಾಗಿ ಹೇಳಿದೆ. ಅಪ್ಪನ ಎದುರು ಇಷ್ಟು ನಿಂತು ಮಾತಾಡಿದ್ದು ಇದೇ ಮೊದಲ ಬಾರಿ! +“ಇದು ಬರೀ ನಿನ್ನ ಪ್ರಶ್ನೆ ಅಲ್ಲವೋ, ನಾವೂ ನಾಲ್ಕು ಮಂದಿ ನಡುವೆ ತಲೆ ಎತ್ತಿ ಬಾಳಬೇಕು.” ಇವರ ವಿರೋಧವೇ ಅರ್ಥವಾಗದೆ ಕೇಳಿದೆ _ +“ಅಲ್ಲಮ್ಮ ಶಶಿ ಏನಾಗಿದ್ದಾಳೆ?” +“ಕರ್ರಗೆ, ಕುಳ್ಳಗೆ, ಒಂದು ಲಕ್ಷಣವಿಲ್ಲ ಮುಖದಲ್ಲಿ….” ಥಳ ಥಳ ಹೊಳೆವ ಮೂರು ಮಕ್ಕಳನ್ನು ಹೆತ್ತ ಅಮ್ಮ, ಕ್ಷಣಕಾಲ ಅಪ್ಪನ ಮುಖವನ್ನೇ ಮರೆತು ಹೇಳಿದಳು. +“ಅವಳ ಅಂದಚಂದದಿಂದ ಏನಾದ್ರೂ ಉಪಯೋಗವಿದ್ರೆ ಅದು ನನಗೆ ಮಾತ್ರ. ಅವಳನ್ನು ಅವಳಿರುವಂತೆ ನಾನು ಒಪ್ಪಿ ಆಗಿದೆ” ದೃಢವಾಗಿ ಹೇಳಿದೆ. +“ನನಗಂತೂ ಆ ಹುಡುಗಿ ಸೊಸೆಯಾಗಿ ಬರೋಲ್ಲ” ಗಂಟೆ ಹೊಡೆದಂತೆ ಅಮ್ಮ ಉತ್ತರ ಕೊಟ್ಟಳು. ತಬ್ಬಿಬ್ಬಾದ. ಇವರ ಕಾರಣಗಳು ಸ್ಪಷ್ಟವಿಲ್ಲ. ಬಾಯಿಬಿಟ್ಟು ಪೂರಾ ಹೇಳುವುದೂ ಇಲ್ಲ. ಹಣವೇ? ರೂಪವೇ? ಇಲ್ಲ ಎಲ್ಲಕ್ಕಿಂತ ‘ತಾನು ಹೆತ್ತ ಮಗ ತಾನು ಆರಿಸಿದ ಹುಡುಗಿಯನ್ನು ವರಿಸಿ, ತಾನು ಹಾಕಿದ ಗೆರೆ ದಾಟಲಿಲ್ಲ’ ಎಂದು ಬೀಗುವ ಬಯಕೆಯೆ? +“ಅಮ್ಮ ನಿನಗವಳ ಬಗ್ಗೆ ಇಷ್ಟವಿಲ್ಲದಿದ್ದರೆ ಮೊದಲೇ ಏಕೆ ತಿಳಿಸಲಿಲ್ಲ. ನಾ ಕಾನ್‌ಪುರಕ್ಕೆ ಹೋದಾಗಿನಿಂದ ಶಶಿ ಬಗ್ಗೆ ಬರೆಯುತ್ತಲೇ ಇದ್ದೇನೆ….” +“ಅದೆಲ್ಲ ಇಷ್ಟು ಮುಂದುವರೆದು ತಾಳಿ ಕಟ್ಟೋವರೆಗೂ ಬರುತ್ತೆ ಅಂತ ಯಾರು ಕಂಡಿದ್ದರೋ….?” ಆರಾಮವಾಗಿ ಉತ್ತರಿಸಿದಳು ಅಮ್ಮ! +“ಏನಮ್ಮ ಹಾಗೆಂದರೆ? ಯೌವನದಲ್ಲಿ ಒಂದು ಹುಡುಗ-ಹುಡುಗಿ ಆತ್ಮೀಯರಾಗುವುದು, ಸ್ನೇಹವಾಗುವುದು ಈ ದಿಕ್ಕಿಗೆ ತಿರುಗುತ್ತೆ ಅಂತೆ ನಿಮಗೆ ಗೊತ್ತಿರಲಿಲ್ಲವೆ?” +“ಏನೋ ಅಲ್ಲಿ ಒಬ್ಬನೇ ಬೇಜಾರು ಅಂತೇನೋ ಸುತ್ತುತ್ತಾ ಇದ್ದೀಯ. ನಾಳೆ ಮದುವೆಯಾಗುವಾಗ ಮರ್ಯಾದಸ್ಥರ ಮನೆಯಲ್ಲೇ ಮಾಡಿಕೊಳ್ತೀಯಾ ಅಂತ ಅಂದುಕೊಂಡಿದ್ವಿ.” +“ಅಂದರೆ…. ಸುತ್ತೋಕೆ ಪರವಾಗಿಲ್ಲ, ಮದುವೆ ಮಾತ್ರ ನೀವು ಆರಿಸುವ ಹುಡುಗಿಯೊಡನೆಯೇ ಆಗಬೇಕು. ನಾಳೆ ಆಶಾ ಜೊತೆಗೂ ಯಾವೋನಾದ್ರೂ ಎರಡು ವರ್ಷ ಸುತ್ತಿ ಹೀಗೇ ಕೈ ಕೊಟ್ಟರೆ?” ಕೋಪದಿಂದ ಕುದಿದು ಕೇಳಿದೆ. ಅಪ್ಪ ಕಿಡಿಕಿಡಿಯಾಗಿ ಗುಡುಗಿದರು _ +“ರವಿ, ಹಲ್ಲಿಡಿದು ಮಾತಾಡು, ನಮ್ಮ ಮನೆ ಮಗಳು ಹೀಗೆಲ್ಲ ಹುಡುಗರನ್ನ ಬಲೆಗೆ ಹಾಕಿಕೊಂಡು ತಿರುಗೋ ಅಂಥವಳಲ್ಲ.” +“ಅಪ್ಪ…. ನೀವು ಸಭ್ಯತೆ ಮೀರುತ್ತಾ ಇದ್ದೀರ. ನೀವು ಮಾತಾಡ್ತಾ ಇರೋದು ನನ್ನ ಭಾವೀ ಪತ್ನಿಯ ಬಗ್ಗೆ….” +“ಹೆತ್ತು ಹೊತ್ತು ಸಾಕಿದ ತಂದೆ-ತಾಯಿಗಳಿಗಿಂತ ಅವಳೇ ಹೆಚ್ಚೇನೋ ನಿನಗೆ….” ಅಮ್ಮ ಆಗಲೇ ತಲೆ ತಲೆ ಲಟ್ಟಿಸುತ್ತಾ ಗೊಳೋ ಎಂದು ರಾದ್ಧಾಂತ ಪ್ರಾರಂಭಿಸಿದಳು. ನನ್ನ ಮೈಯಲ್ಲೂ ಆವೇಶ ತುಂಬಿಬಂದಿತ್ತು _ +“ಹೆತ್ತ ಋಣಕ್ಕೆ ಬದುಕು ಪೂರಾ ನಿಮ್ಮ ಕೈಗಿಟ್ಟು ಜೀತದಾಳುಗಳಾಗಬೇಕಾ ಅಮ್ಮ…. ಹೆತ್ತೊಡನೆ ಯಾರೂ ದೈವತ್ವಕ್ಕೆ ಏರೋಲ್ಲಾ….” ಛಟೀರನೆ ಕೆನ್ನೆಗೆ ಏಟು ಬಿತ್ತು. ಕೋಪದಿಂದ ಮೈ ಉರಿಯುತ್ತಿತ್ತು. ಹುಟ್ಟಿಸಿದ ಹಕ್ಕಿನಿಂದ ಎತ್ತಿದ ಕೈ! ತನ್ನೆತ್ತರ ಬೆಳೆದು ನಿಂತ ಮಗ ತನ್ನ ಬದುಕಿನ ಮೊಟ್ಟ ಮೊದಲ ನಿರ್ಣಯಕ್ಕೆ ಅನುಮತಿ ಕೇಳುವಾಗ ಬಿದ್ದ ಪೆಟ್ಟು. ಮೆಲ್ಲನೆ ಕೆನ್ನೆ ಸವರಿಕೊಂಡೆ_ +“ಅಮ್ಮ ಹುಟ್ಟಿಸಿದ ಪುಣ್ಯಕಾರ್ಯಕ್ಕೆ ನಮ್ಮ ಬದುಕನ್ನೆ ಕೇಳುವ ಮಹಾನುಭಾವರು ನೀವು. ನನಗೂ ನನ್ನದಾದ ನಿರ್ಣಯಗಳಿಗೆ ನಿರ್ಧಾರಗಳಿವೆ. ನಾನು ಶಶೀನ ಮದುವೆ ಆಗ್ತಾ ಇದ್ದೇನೆ. ಇಷ್ಟವಿದ್ದರೆ ಬನ್ನಿ….” ಹೇಳಿ ರೂಮಿಗೆ ಹೋಗಿ ಧಡಾರನೆ ಬಾಗಿಲು ಹಾಕಿಕೊಂಡೆ. ಆಗಲೇ ಸೂಟ್‌ಕೇಸಿಗೆ ಅಟ್ಟೆ ತುರುಕಿ ಹೊರಟು ಬಿಡಲು ಜೀವ ತವಕಿಸಿತು. ಆದರೆ ಗಂಟೆ ಹತ್ತು ದಾಟಿತ್ತು. ಅಮ್ಮ ಹಾಲಿನಲ್ಲಿ ಎದೆ ಎದೆ ಬಡಿದುಕೊಂಡು ಅಳುತ್ತಿದ್ದಳು_“ಇನ್ನು ನಾ ಬದುಕಿರೋಲ್ಲಾರೀ…. ನಾ ಬದುಕೋಲ್ಲ. ಒಂಬತ್ತು ತಿಂಗಳು ಹೊತ್ತು, ಎದೆ ಹಾಲು ಕೊಟ್ಟು ಸಾಕಿದ ಮಗ…. ಇಂದು ಅವನಿಗೆ ಯಾರೂ ಬೇಡ, ಈ ಮುದಿ ಅಮ್ಮ ಅಪ್ಪ ಏಕೆ….” ಕಿವಿಗೆ ಬೆರಳು ತೂರಿಸಿ ಕಣ್ಣು ಮುಚ್ಚಿದೆ. +“ನೋಡೇ…. ಮಗ ಮಗ ಅಂತ ಮುದ್ದುಗರೆಯುತ್ತಾ ಇದ್ದೆಯಲ್ಲ ನೋಡು…. ಅವನಿಗೆ ಆ ಹುಡುಗಿ ಬಿಟ್ಟರೆ ಬೇರೆ ಪ್ರಪಂಚ ಬೇಕಿಲ್ಲ. ಇಂತ ಕೃತಘ್ಞ ಮಗನನ್ನು ಹಡೆದೆಯಲ್ಲ, ಚಚ್ಚಿಕೋ ಹಣೇನಾ…. ನೀ ಬೆಳೆಸಿದ ರೀತೀನೇ ಅಂಥಾದ್ದು, ಹಿರಿ ಮಗ ಅಂತ ತಲೆ ಮೇಲೆ ಏರಿಸಿಕೊಂಡಿದ್ದೆ… ಅನುಭವಿಸು ನಿನ್ನ ಕರ್ಮಾನಾ….” ಅಪ್ಪನ ಬಾಯಿಗೆ ಬಿಡುವಿದ್ದಂತೆ ಇರಲಿಲ್ಲ. ಇಲ್ಲದ ದುಃಖಗಳನ್ನು ಸೃಜಿಸುವ, ಅವಕ್ಕೆ ನಮ್ಮನ್ನು ಹೊಣೆಯಾಗಿಸುವ ಇವರ ಪರಿಗೆ ಏನೆನ್ನಲಿ! +ಅರ್ಧರಾತ್ರಿ ಕಳೆವ ಹೊತ್ತಿಗೆ ಎಲ್ಲರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ನನಗೆ ನಿದ್ದೆ ಹತ್ತುವಂತೆಯೇ ಇರಲಿಲ್ಲ. ಅಮ್ಮನ ಈ ಅವತಾರ ನಾನು ಹಿಂದೆಂದೂ ಕಂಡಿರಲಿಲ್ಲ. ಎಲ್ಲರಿಗೂ ಮಗು ಬೇಕು. ಆ ಅನುಭವದ ಸವಿ ಬೇಕು. ನಮ್ಮ ಕ್ಷಣಿಕ ಬದುಕನ್ನು ಉದ್ದಕ್ಕೆ ಚಾಚುವ ಒಂದು ವಿಧದಲ್ಲಿ ಅಮರವಾಗುವ ಜೀವದ ಬಯಕೆ ಇದು. ಸೃಷ್ಟಿಯ ಸಹಜಕ್ರಿಯೆಯನ್ನೂ ತ್ಯಾಗದ ಅಟ್ಟಕ್ಕೆ ಏರಿಸಿ ‘ಮಾರ್ಟರ್’ ಆಗುತ್ತಿದ್ದಾಳೆ ಅಮ್ಮ. ತಿಂಗಳುಗಟ್ಟಲೆ ಹೂ ಜಡಿದು, ಕಾಯಿ ಜಿನುಗಿ ಬೀಜ ಉದುರಿಸುವ ವೃಕ್ಷ ತನ್ನಡಿಯಲ್ಲಿ ಚಿಗುರಿದ ಸಸಿಗಳಿಗೆ ತನ್ನ ಮಹತ್ಕಾರ್ಯದ ಬಗ್ಗೆ ಭಾಷಣ ಬಿಗಿಯೋಲ್ಲ. ಈ ಅಪ್ಪ-ಅಮ್ಮ ಜನ್ಮಕೊಟ್ಟ ಋಣಕ್ಕೆ ಏನೆಲ್ಲ ಬಯಸುತ್ತಿದ್ದಾರೆ. ಛೀ… ಏಕೋ ನನ್ನ ಯೋಚನೆಯ ಧಾಟಿಯೇ ಕ್ಲೀಷೆಯಾಗುತ್ತಿದೆ, ತಲೆಕೊಡವಿ ಮಲಗಿದ್ದೆ. +ರಿಜಿಸ್ಟಾರ್ ಆಫೀಸಿನಲ್ಲಿ ನಮ್ಮ ವಿವಾಹವಾಗಿತ್ತು. ಏನೊಂದೂ ಆಡಂಬರವಿಲ್ಲದೆ ಸ್ನೇಹಿತರ ಎದುರು ಸಹಿ ಹಾಕಿದ್ದೆ. ಮರುದಿನವೇ ಇಬ್ಬರೂ ಕೆಲಸಕ್ಕೆ ಹಿಂದಿರುಗಿದ್ದೆವು. ಕೈಯಲ್ಲಿದ್ದ ಸ್ವಲ್ಪ ಹಣ ಮನೆ ಬಾಡಿಗೆಯ ಮುಂಗಡಕ್ಕೆ ಹೋಗಿತ್ತು. ಕ್ವಾರ್ಟರ್‍ಸ್ ಸಿಗಲು ಇನ್ನೂ ಆರು ತಿಂಗಳು ಕಾಯಬೇಕಿತ್ತು. ನೆಲದ ಮೇಲೆ ಚಾಪೆ ಹಾಸಿ ಮಲಗಿದ ದಿನಗಳು. ಮೊದಲೆರಡು ತಿಂಗಳ ಸಂಬಳ ಕೈ ಸೇರಿದಾಗ ಮಧುಚಂದ್ರಕ್ಕೆ ಹೋಗಲು ಯೋಚಿಸಿದೆವು. ಊಟಿಗೆ ಮರುದಿನ ರೈಲು ಬುಕ್ ಕೂಡಾ ಆಗಿತ್ತು. ಅಂದು ಬೆಳಿಗ್ಗೆ ಅಮ್ಮನ ಒಲವಿನ ಪತ್ರ ಬಂದಿಳಿಯಿತು. ನಾಲ್ಕು ತಿಂಗಳ ನಂತರ ಬಂದ ಮೊದಲ ಪತ್ರ! +“ಪ್ರೀತಿಯ ರವಿಗೆ_ +ಆಶೀರ್ವಾದಗಳು. +ನಿನ್ನ ಇಚ್ಛೆಯಂತೆ ಮದುವೆ ಆದ ಮೇಲೂ ನಿನ್ನ ಈ ಅಸಮಾಧಾನ, ಮೌನ ಅರ್ಥವಾಗುತ್ತಿಲ್ಲ. ಮೂರು ಗಂಟೆಯ ದೂರದ ಮೈಸೂರಿಗೆ ನಾಲ್ಕು ತಿಂಗಳಾದರೂ ಬಂದಿಲ್ಲ. ಅಂತೂ ನಮ್ಮ ಇಚ್ಛೆಗೆ ವಿರುದ್ಧವಾಗಿಯೇ ವಿವಾಹವಾಗಿದ್ದೀಯ. ಕಡೇ ಪಕ್ಷ ಆಶಾಳ ಭವಿಷ್ಯದ ಬಗ್ಗೆಯಾದರೂ ಹಿರಿಯ ಮಗನಾಗಿ ಸ್ವಲ್ಪ ಕಳಕಳಿ ಇರಬೇಕಿತ್ತು. ಸರಿ ನಿನ್ನಿಷ್ಟ. ದೇವರು ನಿನಗೆ ಒಳ್ಳೆಯದು ಮಾಡಲಿ. ನಿನ್ನ ಹೆಂಡತಿಯನ್ನು ಕರೆದುಕೊಂಡು ಯಾವಾಗ ಬರ್ತಾ ಇದ್ದೀಯ? +ಇಂತಿ ನಿನ್ನ ಅಭಾಗ್ಯ ತಾಯಿ.” +ಅಮ್ಮನ ಪತ್ರ ಎರಡೆರಡು ಬಾರಿ ಓದಿಕೊಂಡೆ. ಅಂತೂ ಶಶಿಯನ್ನು ತನ್ನ ಸೊಸೆಯಾಗಿ ಅಲ್ಲದಿದ್ದರೂ ತನ್ನ ಹೆಂಡತಿಯಾಗಿ ಆಹ್ವಾನಿಸಿದ್ದಳು. ಪ್ರೀತಿಯ ವಿಚಿತ್ರ ತಿರುವುಗಳು ತಬ್ಬಿಬ್ಬುಗೊಳಿಸಿತು. ನಿನ್ನೆ ಮೊನ್ನೆಯವರೆಗೆ ಮೆಚ್ಚಿನ ಮಗನಾಗಿದ್ದ ನಾನು ರಾತ್ರೋ ರಾತ್ರಿ ಕೃತಘ್ಞ ಪುತ್ರನ ಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿದ್ದೆ. +“ಯಾರದು ಪತ್ರ?”_ಶಶಿ ಕೇಳಿದಳು. +“ಅಮ್ಮಂದು….” ಎನ್ನುತ್ತಾ ಮೇಜಿನ ಮೇಲಿಟ್ಟೆ. +“ಓದಲಾ…?” ಆತಂಕದಿಂದಲೇ ಕೇಳಿದಳು. +“ನಿನ್ನಿಂದ ಮುಚ್ಚಿಡೋದು ಏನಿದೆ….” ಎನ್ನುತ್ತ ಆದಷ್ಟು ತಣ್ಣಗೆ ವರ್ತಿಸಲು ಯತ್ನಿಸಿದೆ. ಆಗಲೇ ಎದೆಯಲ್ಲಿ ಆಂದೋಲನ ಆರಂಭವಾಗಿತ್ತು. ನಿಧಾನವಾಗಿ ಪತ್ರ ಓದಿ ಕೆಳಗಿಡುತ್ತಾ ಕೇಳಿದಳು_ +“ಹೋಗಬೇಕಾ ಮೈಸೂರಿಗೆ?” +“ಹೂಂ….” ತಲೆಯಾಡಿಸಿದೆ. +“ನನಗೇಕೋ ಅಳುಕಾಗುತ್ತಿದೆ.” +“ಎಂದಿದ್ರೂ ಎದುರಿಸಲೇಬೇಕಲ್ಲ….” +ನಮ್ಮ ಊಟಿ ಪ್ರವಾಸ ರದ್ದಾಯಿತು. ಮೈಸೂರಿನ ಬಸ್ ಹಿಡಿದೆವು. ಮೈಸೂರಲ್ಲಿ ಮೊದಲ ಬಾರಿಗೆ ಬಂದಿಳಿದ ಶಶಿಗೆ ಕ್ಷಣಕಾಲ ಆತಂಕ ಮರೆತು ಉತ್ಸಾಹ ಉಕ್ಕಿತ್ತು. +“ಅರಮನೆ, ಬೃಂದಾವನ ಎಲ್ಲ ಹೋಗೋಣಲ್ಲ….” ಹೇಳಿದಳು. ನಾನೋ ಮೊದಲ ಭೇಟಿಯ ಸಿಡಿಮದ್ದಿನ ಆಸ್ಪೋಟಕ್ಕೆ ಸಿದ್ಧವಾಗುತ್ತಿದ್ದೆ. +“ಅದೆಲ್ಲ ಆಮೇಲಿರಲಿ, ಮೊದಲು ಪರಿಸ್ಥಿತಿ ಹೇಗಾಗುತ್ತೆ ನೋಡೋಣ” ಎಂದೇನೋ ಗದರಿ, “ಹೋದ ತಕ್ಷಣ ಅಮ್ಮನ ಕಾಲಿಗೆ ನಮಸ್ಕಾರ ಮಾಡಿಬಿಡು. ಅಮ್ಮ ಸ್ವಲ್ಪ ಪೂರ್ವಕಾಲದವಳು” ಎಂದೆ. ತಟ್ಟನೆ ಶಶಿಯ ಕಣ್ಣುಗಳು ಕಿರಿದಾದವು_ +“ರವಿ ನಾನು ನಾಟಕ ಮಾಡಲಾರೆ” ಅಂದುಬಿಟ್ಟಳು. +“ಹಾಂ….” ಅವಳ ಉತ್ತರ ಅರಗಿಸಿಕೊಳ್ಳುತ್ತಿದ್ದಂತೆ, +“ನನಗೆ ಗೌವರ ಇಲ್ಲದ ವ್ಯಕ್ತಿಯ ಕಾಲಿಗೆ ಬೀಳೋಕೆ ಮನಸ್ಸಿಲ್ಲ….” ಎಂದವಳು ತಡೆ ಹಿಡಿದು ಮುಂದುವರಿಸಿದಳು. “ನಿನಗೆ ಗೊತ್ತಿದೆ ನನ್ನ ಬಗ್ಗೆ ಅವರಾಡಿದ, ಆಡಬಾರದ ಮಾತುಗಳು.” +“ಶಶಿ ಅವಳೇನೇ ಆದ್ರೂ ನನ್ನ ತಾಯಿ ಕಣೇ….” ಮೊದಲ ಬಾರಿಗೆ ಶಶಿ ಮೇಲೆ ಹರಿಹಾಯ್ದು ಹೇಳಿದ. ಅಮ್ಮನ ಪರ ವಹಿಸಬೇಕೆಂಬ ಕಾರಣಕ್ಕಲ್ಲ. ಅಮ್ಮನ ವರ್ತನೆ ನನಗೆ ಸರಿ ಕಂಡಿತ್ತು ಅಂತಲೂ ಅಲ್ಲ. ಆದರೂ ಅದೇಕೋ ಶಶಿ ಹಾಗೆ ಹೇಳಿದಾಗ ಅಮ್ಮನನ್ನು ಎತ್ತಿ ಹಿಡಿದಿದ್ದೆ. +“ನಿನಗೆ ಜನ್ಮ ಕೊಟ್ಟವಳು, ನನ್ನ ಬದುಕು ಮುಗಿಸಲೂ ಸಿದ್ಧವಿದ್ದವಳು. ಮಾತೃತ್ವ ಅನ್ನೋದು ತನ್ನ ಮಕ್ಕಳ ಸುಖವೊಂದಕ್ಕೆ ತಿರುಗಿ, ಇತರ ಯಾರನ್ನೂ ಬಲಿ ಏರಿಸಲು ಸಿದ್ಧವಿದ್ರೆ ಅಂತಹ ಮಾತೃತ್ವ ನನಗೆ ಎಂದಿಗೂ ಬೇಡ!” ಶಶಿ ದೃಢವಾಗಿ ಹೇಳಿದಳು. ಸುಮ್ಮನೆ ಕಣಿ ಮಾಡ್ತಾಳೆ ಒಂದು ನಮಸ್ಕಾರ ಮಾಡು ಅಂದದ್ದಕ್ಕೆ, ನನಗೆ ರೇಗಿತ್ತು_ +“ಅಮ್ಮ ನಮಗೋಸ್ಕರ ಎಷ್ಟು ಒದ್ದಾಡ್ತಾ ಇದ್ದಾಳೆ ನಿನಗೇನು ಗೊತ್ತು…” ಶಶಿ ಮಾತಿಲ್ಲದೆ ನಿಂತಳು. ಮನೆಯಲ್ಲಿ ಆದ ರಾದ್ಧಂತವನ್ನೆಲ್ಲ, ಅಮ್ಮ ಅಪ್ಪ ಅಂದದ್ದೆಲ್ಲ ಶಶಿಯೊಡನೆ ತೋಡಿಕೊಂಡದ್ದು ತಪ್ಪಾಯಿತೇನೋ. ನನ್ನವರ ಬಗ್ಗೆ ಶಶಿಗೆ ಗೌರವವೇ ಉಳಿದಿಲ್ಲ! ತಟ್ಟನೆ ಶಶಿಯ ಭುಜದ ಮೇಲೆ ಕೈ ಇರಿಸಿ ಹತ್ತಿರ ಎಳೆದುಕೊಂಡೆ. +‘ಶಶಿ ನನಗರ್ಥ ಆಗುತ್ತೆ. ಆದ್ರೂ ಸುಮ್ಮನೆ ‘ಸೀನ್’ ಏಕೆ? ಯಾರೇನೇ ಅನ್ನಲಿ, ನಾನಂತು ನಿನ್ನ ಜೊತೆ ಇದ್ದೀನಲ್ಲ….” ಶಶಿ ಕಣ್ಣು ಒರೆಸಿಕೊಂಡಳು. ಆಟೋ ಹತ್ತಿ ಗೋಕುಲ ತಲುಪಿದೆವು. +ಆಟೋ ನಿಂತ ಸದ್ದು ಕೇಳಿ ಕಿಟಕಿಯಿಂದ ಹೊರಗಿಣುಕಿದ ಆಶಾ ನಮ್ಮನ್ನು ಕಂಡೊಡನೆ ಮುಖ ಉಬ್ಬಿಸಿಕೊಂಡು ಬಾಗಿಲು ತೆರೆದು, ಸರ್ರನೆ ಒಳಗೋಡಿದಳು. ಅಮ್ಮ, ಜೋಲು ಮುಖ ಹಾಕಿಕೊಂಡು ನಿಧಾನವಾಗಿ ಇನ್ನಿಲ್ಲದ ನಿತ್ರಾಣದಲ್ಲಿ ಹೊರಬಂದಳು. ಅಮ್ಮ ಏಕಿಷ್ಟು ಇಳಿದು ಹೋಗಿದ್ದಾಳೆ….? ಜನ ತಾವೇ ಕೊಂಡು ತಂದ ದುಃಖದಲ್ಲಿ ನರಳುವುದರಲ್ಲೇ ಪುರುಷಾರ್ಥ ಕಾಣುತ್ತಾರೆಯೇ? +“ಅಂತೂ ನೆನಪಾಯಿತೇನೋ….” ಎಷ್ಟೊಂದು ವ್ಯಂಗ್ಯ! ಶಶಿ ಕಾಲಿಗೆ ಬಿದ್ದಾಗಲೂ ಅವಳ ಕಡೆ ತಿರುಗಿಯೂ ನೋಡದೆ- +“ನೀನ್ಯಾಕೋ ಇಷ್ಟು ಇಳಿದು ಹೊಗಿದ್ದೀಯಾ…. ನಿನ್ನ ಇಚ್ಛೆಯಂತೆ ಮದುವೆ ಆಗಿದ್ದೀಯ, ಸುಖವಾಗಿರು” ಎಂದವಳು, “ನೋಡಿದಿರೇನ್ರೀ ನಿಮ್ಮ ಮಗ ಬಂದಿದ್ದಾನೆ” ಕೂಗಿ ಹೇಳಿದಳು. ಅಪ್ಪ ಒಳಗೇ ಇದ್ದಾರೆಯೆ! ಶಶಿ ಎಲ್ಲಿಲ್ಲದ ಮುಜುಗರದಿಂದ ಮುದ್ದೆಯಾಗಿ ನಿಂತಿದ್ದಳು. ಇದಕ್ಕಿಂತ ಅಮೋಘ ಸ್ವಾಗತವನ್ನೇನೂ ನಿರೀಕ್ಷಿಸಿರದ ನಾನು ಏನೋ ಅಂತೂ ಮುಗಿದರೆ ಸಾಕು ಎಂಬಂತೆ ನಿಂತಿದ್ದೆ. ಅಪ್ಪ ಪೇಪರ್‍ನಿಂದ ಮುಖ ಎತ್ತದೆಯೇ “ಹೂಂ… ಹೂಂ….” ಎಂದು ಹೂಂಕರಿಸಿದರು. ಆ ದಿನ ಹೆಚ್ಚು ಮಾತುಕತೆ ಏನೂ ಆಗಲಿಲ್ಲ. ಅಪರಿಚಿತರ ನಡುವೆ ಎತ್ತಿ ಹಾಕಿದಂತೆ ನನಗೇ ಅನ್ನಿಸಿತ್ತು. ಇನ್ನು ಶಶಿಗೆ ಹೇಗಿತ್ತೊ. ಅಮ್ಮನದೋ ಮಾತು ಮಾತಿಗೂ ಅಳು. “ಹಿರಿಯ ಮಗನ ಮದುವೆ ಕೂಡ ನೋಡಲಾರದ ಹತಭಾಗ್ಯರು ಕಣೋ ನಾವು…. ನಿನಗೆ ಬಿಡು ನಮ್ಮ ನೆನಪೂ ಆಗಲಿಲ್ಲ….’ ಸಾವಿರದೊಂದು ಬಾರಿ ಹೇಳಿದಳು. ಅವಳ ಮೈ ಕೈ ನೋವು, ಎದೆಯಲ್ಲಿ ಎಂಥದ್ದೋ ನೋವು… ಎಲ್ಲಕ್ಕೂ ನಾನೇ ಕಾರಣವೆಂಬಂಥ ದೂರು ಧ್ವನಿ ಇತ್ತು. ಅಂತೂ ಇಲ್ಲಿಂದ ಹೊರಟರೆ ಸಾಕಪ್ಪ ಎಂಬಂಥ ವಾತಾವರಣವನ್ನು ಅಮ್ಮ-ಅಪ್ಪ-ಅಶಾ ಯಶಸ್ವಿಯಾಗಿ ಸೃಷ್ಟಿಸಿದ್ದರು. ತಮ್ಮ ರಾಮು ನನ್ನ ಪರವಿದ್ದನೋ, ವಿರೋಧವಿದ್ದನೋ ಅವನಿಗೇ ಗೊತ್ತು. ಏನೊಂದು ಆಡಿ ತೋರಿಸದ ತಟಸ್ಥ ಸ್ವಭಾವದವ. +ಇಷ್ಟಕ್ಕೆ ಮುಗಿದಿದ್ದರೆ ಸಾಕಿತ್ತು. ಆದರೆ ಮರುದಿನ ದೊಡ್ಡ ರಾದ್ಧಾಂತವೇ ಕಾದಿತ್ತು. ಆ ರಾತ್ರಿ ವರಾಂಡದಲ್ಲೇ ಮಲಗಿದ್ದೆವು. ಬಹಳ ಹೊತ್ತಿಗೆ ನಿದ್ರೆ ಹತ್ತಿತ್ತು. ಬೆಳಿಗ್ಗೆ ಕಿಟಕಿಯಿಂದ ಚುರು ಚುರು ಸೂರ್ಯನ ಕಿರಣಗಳು ಬಿದ್ದಾಗಲೂ ಎಚ್ಚರವಾಗದೆ ಬಿದ್ದುಕೊಂಡ ನನಗೆ, ಅಪ್ಪನ ಹಾರಾಟ ಕೇಳಿ ತಟ್ಟನೆ ಗಲಿಬಿಲಿಯಿಂದ ನಿದ್ದೆ ಕಣ್ಣಲ್ಲೇ ಎದ್ದು ಕುಳಿತೆ. ಶಶಿ ಪಕ್ಕದಲ್ಲಿರಲಿಲ್ಲ. ಅವಳ ಹಾಸಿಗೆಯನ್ನು ನೀಟಾಗಿ ಮಡಚಿ ಇಟ್ಟಿದ್ದಳು. +“ರವೀ…. ನಿನ್ನ ಹೆಂಡತಿಗೆ ಸ್ವಲ್ಪ ಮರ್ಯಾದೆಯಾಗಿ ಬಟ್ಟೆ ಹಾಕಿಕೊಳ್ಳಲು ಹೇಳು” ಅಪ್ಪ ಕೂಗಿ ಹೇಳಿದಾಗ, ಶಶಿ ಕಡೆ ತಿರುಗಿದ್ದೆ. ನೈಟಿಯಲ್ಲಿ ಎದ್ದು ಬಂದಿದ್ದಳು. ಅಪ್ಪನ ಮಾತಿನ ಧೋರಣೆ ತೀರಾ ಕೆಡುಕೆನಿಸಿತು. +“ಅಪ್ಪ ಅವಳೇನೂ ಹಾಕಬಾರದ್ದು ಹಾಕಿಲ್ಲ….” ಸಾವಧಾನವಾಗೇ ಹೇಳಲು ಪ್ರಯತ್ನಿಸಿದೆ. ಸರ್ರನೆ ಸಿಡುಕಿಬಿಟ್ಟರು. +“ಏನಂದ್ಯೋ…. ನನಗೇ ಎದುರು ವಾದಿಸ್ತೀಯಾ? ಕುಲಗೋತ್ರ ಮನೆತನ ಒಂದೂ ನೋಡದೆ ಹೆಣ್ಣು ತಂದ್ರೆ ಇನ್ಹೇಗಿರುತ್ತೆ. ಮರ್ಯಾದೆಯಿಂದ ಸೀರೆ ಉಡಲು ಹೇಳು…” ತಟ್ಟನೆ ನನಗೂ ಪಿತ್ತ ಕೆರಳಿತು. +“ಅಪ್ಪ…. ನೀವು ಬಾಯಿಗೆ ಬಂದ ಹಾಗೆ ಮಾತಾಡಬೇಡಿ…. ಶಶಿ ನನ್ನ ಹೆಂಡತಿ. ಅವಳು ಉಡೋದು ಬಿಡೋದು ನನಗೆ ಸೇರಿದ್ದು….” ಅಪ್ಪನ ಕಣ್ಣು ಕೆಂಪಾಗಿ ಕೋಪದಿಂದ ಇಡೀ ಶರೀರ ಅದುರುವಂತೆ ಕಂಡಿತು. ತಮ್ಮ ಮನೆಯಲ್ಲಿ ತಮ್ಮ ಸರ್ವಾಧಿಕಾರವನ್ನು ಯಾರೂ ಪ್ರಶ್ನಿಸಿದ್ದಿಲ್ಲ. +“ಏನೋ ಅಂದೆ ಮುಠ್ಠಾಳ…. ನೀನು ಮನೆತನ ಗೌರವ ಎಲ್ಲ ಬಿಟ್ಟು ಓಡಿಹೋದೆ ಅಂದರೆ, ನಮಗಿನ್ನು ನಾಲ್ಕು ಜನರ ನಡುವೆ ತಲೆ ಎತ್ತಿ ಬಾಳಬೇಕಿದೆ….” ಏನೇನೋ ಹಾರಾಡತೊಡಗಿದರು. ನಾನು ತಟಕ್ಕನೆ ಎದ್ದು_ +“ನಡೀ ಶಶಿ, ಇಂಥಾ ಆತಾವರಣದಲ್ಲಿ ಒಂದು ನಿಮಿಷಾನೂ ಇರಬಾರದು” ಎಂದವನು, ಅಡಿಗೆ ಮನೆಯ ಹೊಸಿಲಲ್ಲಿ ಅಮ್ಮ ನಿಂತದ್ದು ಕಂಡು_ +“ಈ ಸಂಪತ್ತಿಗೆ ನನ್ನ ಕರೆದದ್ದು ಯಾಕೆ? ನಿಮಗಿಬ್ಬರಿಗೂ ನಮ್ಮನ್ನು ಒಪ್ಪಿಕೊಳ್ಳೋ ಉದ್ದೇಶ ಇಲ್ಲದ ಮೇಲೆ?” ಗರಬಡಿದಂತೆ ನಿಂತ ಅಮ್ಮ ತಟ್ಟನೆ ಜೋರುದನಿಯಲ್ಲಿ ಅಳುತ್ತಾ “ರವಿ, ಮಗ ಅಂತ ಒಂದು ಮಾತು ಹೇಳೋ ಅಧಿಕಾರಾನೂ ಇಲ್ಲವೇನೋ ಅವರಿಗೆ, ಅವರೇನೋ ಹೇಳಬಾರದ್ದು ಹೇಳಿದ್ದಾರೆ? ಯಾಕೋ ಹೀಗೆ ಹೊಟ್ಟೆ ಉರಿಸ್ತೀಯಾ?” +“ಹೇಳೋ ಮಾತುಗಳು ನಾಗರೀಕವಾಗಿರಬೇಕಮ್ಮ. ಹೇಳೊ ಕೇಳೋ ರೀತಿ ಇದೆ….” ಬುಸುಗುಡುತ್ತಲೇ ಸೂಟ್‌ಕೇಸಿಗೆ ಬಟ್ಟೆತುರುಕಿದೆ. ಶಶಿ ನನ್ನ ಕೈ ತಡೆದು ಸಮಾಧಾನ ಮಾಡಲು ಯತ್ನಿಸಿದಳು. ಅಪ್ಪ ಮಾತ್ರಾ…. +“ಹೋಗಲಿ ಬಿಡೇ…. ಒಬ್ಬ ಮಗ ಸತ್ತ ಅಂದ್ಕೋತೀನಿ….” ಎಂದೇನೋ ಹಾಲಲ್ಲಿ ಎಗರಾಡುತ್ತಿದ್ದರು. ಅಶಾ ಎಲ್ಲರಿಗಿಂತಲೂ ಜೋರಾಗಿ ಗೊಳೋ ಎಂದು ಅಳುತ್ತಾ ಶಶಿಯ ಕೈ ಹಿಡಿದು_ +“ರೀ ನಿಮಗೆ ಕೈ ಮುಗಿದು ಕೇಳ್ಕೋತೀನಿ, ಬೆಂಗಳೂರಲ್ಲಿ ಹೇಗೆ ಬೇಕಾದ್ರೂ ಇರಿ, ಇಲ್ಲಿ ನಮ್ಮ ಸಂಪ್ರದಾಯದ ಮನೆಯಲ್ಲಿ ಅಪ್ಪನಿಗೆ ಹೊಂದ್ಕೊಳ್ಳಿ….” ಎಂದದ್ದು ಎಷ್ಟು ನಾಟಕೀಯವಾಗಿತ್ತು! ಅಂತೂ ಹೇಗೋ ಆದಿನ ಅಲ್ಲೇ ಉಳಿದೆವು. ಹೆಚ್ಚು ಮಾತಿಲ್ಲದೆ ಊಟ, ತಿಂಡಿ, ಬೇಕು, ಬೇಡ ಇಷ್ಟೆ. ಅಪ್ಪನಿಗೂ ಏರಿದ್ದ ಧ್ವನಿ ಇಳಿದ ಮೇಲೆ ಅರ್ಥವಾಗಿರಬೇಕು-ಮಗ ಬೆಳೆದಿದ್ದಾನೆ. ಇನ್ನು ತಮ್ಮ ಗತ್ತಿನ ಶಿಸ್ತಿನ ಮುಷ್ಟಿಯಲ್ಲಿ ಹಿಡಿದಿಡುವ ವಯಸ್ಸಲ್ಲ. +ಅಲ್ಲಿಂದ ಮುಂದೆ ಶಶಿ ಹಬ್ಬ ಹರಿದಿನಗಳನ್ನು ಬಿಟ್ಟರೆ ಮೈಸೂರಿಗೆ ಹೆಚ್ಚಾಗಿ ಬರಲೇ ಇಲ್ಲ. ನಾನು ಆಗಾಗ್ಗೆ ಕರ್ತವ್ಯವೆಂಬಂತೆ ಹೋಗಿಬರುತ್ತಿದ್ದೆ. ತಿಂಗಳಿಗೊಮ್ಮೆಯಾದರೂ ಅಮ್ಮನಿಂದ ‘ತಕ್ಷಣ ಹೊರಟು ಬಾ, ಮೈ ಹುಷಾರಿಲ್ಲ’ ಎಂದೋ ಇಲ್ಲ ‘ನನಗೆ ಹೇಗೆ ಹೇಗೋ ಆಗ್ತಾ ಇದೆ, ನಿನ್ನ ನೋಡಬೇಕು ಈ ಬಗೆಯ ಧಿಡೀರ್ ಪತ್ರಗಳು ಬರುತ್ತಲೇ ಇದ್ದವು. ಪ್ರತಿ ಬಾರಿ ನಾನು ಅಲ್ಲಿ ಇಳಿದಾಗ ಅಮ್ಮ ನಿಶ್ಶಕ್ತಿಯಿಂದ ಕುಳಿತು ‘ಇನ್ನು ನಾನು ಉಳಿಯೋಲ್ವೊ ರವಿ’ ಎಂದೇನೋ ಗೋಳಾಡುವುದು, ನಂತರ ಸ್ವಲ್ಪ ಹೊತ್ತಿಗೆ ಸರಿ ಹೋಗುವುದು ಎಷ್ಟು ಮಾಮೂಲಾಗಿತ್ತು ಎಂದರೆ, ಅಮ್ಮ ತನ್ನ ಅನಾರೋಗ್ಯದ ಬಗ್ಗೆ ತನ್ನನ್ನೇ ನಂಬಿಸಿಕೊಂಡು ಬಿಟ್ಟಿದ್ದಳು. ನಾನು ಹೊರಟು ಬರುವಾಗ ಅಪ್ಪನಿಗೆ ಕಾಣದಂತೆ ಅಮ್ಮನ ಕೈಗೆ ಇನ್ನೂರೋ-ಮುನ್ನೂರೋ ಕೊಡುತ್ತಿದ್ದೆ. ಎಂದೂ ಎರಡು ಕಾಸು ಸ್ವತಂತ್ರವಾಗಿ ಖರ್ಚು ಮಾಡದ ಅಮ್ಮನ ಬಗ್ಗೆ ಕನಿಕರವಿತ್ತು. ಮೂವತ್ತು ವರ್ಷಗಳ ವಿವಾಹ ಜೀವನದಲ್ಲಿ ಅಪ್ಪ ಅಮ್ಮನ ಕೈಗೆ ದುಡ್ಡು ಕೊಟ್ಟದ್ದನ್ನು ನಾನು ಕಂಡೇ ಇರಲಿಲ್ಲ. ಮನೆಯಲ್ಲಿ ಏನು ಮುಗಿದರೂ ನಾಲ್ಕಾರು ಬಾರಿ ಹೇಳಿದ ಮೇಲೆ ತಾವೇ ತಂದು ಹಾಕುತ್ತಿದ್ದರು. ‘ಹಣ ಏನಾದರೂ ಕಳುಹಿಸಲಾ ಅಮ್ಮ’ ಅಂತ ಕೇಳಿಯೂ ಇದ್ದೆ. ‘ಬೇಡ ಬಿಡೋ, ಅವರಿಗೆ ಇನ್ನೂ ಸರ್ವೀಸ್ ಇದೆ. ರಾಮೂನೂ ಕೈತುಂಬ ಸಂಬಳ ತರ್ತಾನೆ. ಹೇಗಿದ್ರೂ ಈ ಮನೆ-ಮಠ ಎಲ್ಲ ಅವನಿಗೇ ಸೇರೋದು. ಅಶಾ ಮದುವೆಗೆ ಒಂದಿಷ್ಟು ಹೊಂದಿಸಿಡು’ ಎಂದು ನನ್ನಲ್ಲಿ ಹೇಳಿದರೂ, ಅದೇಕೋ ಅಮ್ಮ ಊರ ತುಂಬೆಲ್ಲ ‘ಅವರಿಗೇನು ಇಬ್ಬರು ದುಡೀತಾರೆ. ನಾವು ಒಂದು ಕಾಸು ಕೇಳಿಲ್ಲ. ನಮ್ಮ ರವೀ ತೀರಾ ಧಾರಾಳ, ಆದರೆ ಸೊಸೆ ಬಿಡಬೇಕಲ್ಲ’ ಎಂದು ಸಾರಿಕೊಂಡು, ಅಂತೂ ಶಶಿಯ ಮೇಲೆ ಗೂಬೆ ಕೂರಿಸಿದ್ದಳು. ಪ್ರತಿ ಬಾರಿ ಊರಿಂದ ಬಂದಾಗ ಅಮ್ಮನ ಗೋಳು ಕೇಳಿ ಕೇಳಿ ತಲೆ ಅರ್ಧ ಕೆಟ್ಟಿರುತ್ತಿತ್ತು. ಶಶಿ ಸಹಜವಾಗಿ ಏನು ಕೇಳಿದರೂ ರೇಗಿಬಿಡುತ್ತಿದ್ದೆ. ಮತ್ತೆರಡು ದಿನಕ್ಕೆ ಮನಸ್ಸು ಸಮತೋಲಕ್ಕೆ ಬಂದಾಗ ‘ಸಾರಿ’ ಕೇಳಿ ನೋಯುತ್ತಿದ್ದೆ. ಶಶಿ ನನ್ನ ಕೋಪ ಪಶ್ಚಾತ್ತಾಪ ಎರಡಕ್ಕೂ ಪ್ರತಿಕ್ರಿಯಿಸುವುದನ್ನೇ ಮರೆತಳು. +ಅಮ್ಮನ ಗೋಳುಗಳ ಪಟ್ಟಿಗೆ ಮತ್ತಷ್ಟು ಸೇರಿಸಿದ ಪ್ರಶಶ್ತಿ ಆಶಾಗೇ ಸಲ್ಲಬೇಕು. ಆಶಾ ಬೆಂಗಳೂರಿಗೆ ಒಮ್ಮೆ ಬಂದಿದ್ದಳು. ಅವಳು ಬರುವ ಹೊತ್ತಿಗೆ ಸರಿಯಾಗಿ ನಾನು ಕಸಗುಡಿಸುತ್ತಿದ್ದೆ. ಆಶಾ ಸೀದಾ ಒಳಗೆ ಬರುತ್ತಾ ನನ್ನ ಕೈಯಲ್ಲಿನ ಪೊರಕೆಯನ್ನು ಗೇಲಿಯಿಂದ ನೋಡಿ_ +“ಓಹೋ ಬಹಳ ಕೆಲಸ ಮಾಡ್ತಾ ಇದ್ದಾರೆ ಅಮ್ಮಾವ್ರ ಗಂಡ” ಎಂದು ವ್ಯಂಗ್ಯವಾಗಿ ನಕ್ಕಳು, ಸ್ವಲ್ಪ ಕೆಡುಕೆನಿಸಿದರೂ ಗುಡಿಸುವುದು ಮುಂದುವರಿಸುತ್ತಲೇ, +“ಶಶಿ ನೋಡು ಯಾರು ಬಂದಿದ್ದಾರೆ….” ಕರೆದೆ. ಉಪ್ಪಿಟ್ಟು ತಯಾರಿಸುತ್ತಿದ್ದ ಶಶಿ ಆಶಾಳನ್ನು ನೋಡಿ_ +“ಯಾವಾಗ ಬಂದ್ರಿ? ಒಬ್ಬರೇ ಬಂದ್ರಾ?” ಎಂದು ಉಪಚರಿಸುತ್ತಲೇ ಉಪ್ಪಿಟ್ಟು ಮೇಜಿನ ಮೇಲಿರಿಸಿ_“ರವಿ ತಟ್ಟೆ ಲೋಟಾ ತಂದಿಡ್ತೀಯಾ, ನಾನು ಸ್ನಾನ ಮುಗಿಸಿ ಬಂದುಬಿಡ್ತೀನಿ” ಎಂದು ಹೇಳಿದ್ದಳು. ಇಬ್ಬರೂ ದುಡಿಯುವ ಈ ಮನೆಯಲ್ಲಿ ನಾನು ಯಾವ ಕೆಲಸಕ್ಕೂ ಹಿಂಜರಿದಿರಲಿಲ್ಲ. ನಾ ಒಳಗೆ ಹೋಗಿ ತಟ್ಟೆ ಕಪ್ಪು ಜೋಡಿಸುವಾಗ_ +“ಪರವಾಗಿಲ್ಲವೋ ರವಿ, ಎಲ್ಲ ಕೆಲಸದಲ್ಲೂ ಪ್ರವೀಣನಾಗಿದ್ದೀಯ, ಮೈಸೂರಲ್ಲಿ ಅತ್ತಲ ಕಡ್ಡಿ ತೆಗೆದು ಇತ್ತ ಹಾಕ್ತಾ ಇರಲಿಲ್ಲ” ಎಂದು ಕೊಂಕಿ ನುಡಿದಳು. ಇಲ್ಲಿ ಕಂಡ ಪ್ರತಿಯೊಂದನ್ನು ರಂಗು ಬಳಿದು ಅಮ್ಮನಲ್ಲಿ ಹೇಳಿದ್ದಳು ಎಂದು ಕಾಣುತ್ತದೆ. ಮುಂದಿನ ಬಾರಿ ಮೈಸೂರಿನಲ್ಲಿ ಇಳಿದಾಗ ಅಮ್ಮ ಮೂತಿ ಸೊಟ್ಟ ಮಾಡಿ_ +“ಯಾಕೋ ಹೀಗೆ ಇಳಿದು ಹೋಗಿದ್ದೀಯೋ? ಆ ಫ್ಯಾಕ್ಟರಿ ಊಟ ಮೈಗೆ ಹತ್ತುತ್ತೇನೋ, ಬೆಳಿಗ್ಗೆ ಅವಳಿಗೊಂದು ಅಡುಗೆ ಮಾಡೋಕ್ಕೂ ಆಗೋಲ್ಲವೆ. ಈ ಚಂದಕ್ಕೆ ಸಂಸಾರ ಯಾಕೆ?” ಎಂದೆಲ್ಲ ಗೊಣಗಿದ್ದಳು. +“ಅಲ್ಲಮ್ಮ ಅವಳೂ ಎಷ್ಟೊತ್ತಿಗೆ ಅಂತ ಎದ್ದು ಮಾಡ್ತಾಳೆ. ಅವಳಿಗೂ ದುಡಿದು ಸಾಕಾಗಿರುತ್ತೆ.” +“ಅದಕ್ಕೇ ಹೇಳೋದು ಈ ದುಡಿಯೋ ಹುಡುಗೀರು ಬೇಡ ಅಂತಾ. ಅಚ್ಚುಕಟ್ಟಾಗಿ ನಿನ್ನ ಹೊಟ್ಟೆ ನೆತ್ತಿ ನೋಡೋ ಅಂತ ಹುಡುಗಿ ತರ್ತಾ ಇದ್ದೆ. ದುಡಿದು ಏನು ಉದ್ಧಾರ ಮಾಡ್ತಾಳೆ, ಗಂಡನ ಕೈಲೇ ಎಲ್ಲ ಮಾಡಿಸೋಳು….” +ಅಂತೂ ಅಮ್ಮ ನಾನು ಇದ್ದ ಎರಡೂ ದಿನವೂ ರುಚಿ ರುಚಿಯಾಗಿ ಮಾಡಿಟ್ಟು ನನ್ನ ತೂಕದ ಬಗ್ಗೆ ಅತಿ ಕಾಳಜಿ ತಳೆದು, ಕಡೆಗೆ ನನಗೇ ನಮ್ಮ ಜೀವನ ಶೈಲಿಯ ಬಗ್ಗೆ ಪ್ರಶ್ನೆಗಳು ಏಳುವಂತಾದವು. ಅಮ್ಮ-ಶಶಿ ಎರಡು ಹೆಣ್ಣುಗಳ ಸೆಳೆತದ ಸುಳಿಯಲ್ಲಿ ನಾನು ಗಿರಗಿಟ್ಟಲೆಯಾದೆ. ಒಂದು ಕಡೆ ತಳವೂರಿ ನಿಲ್ಲಲಾರದ ಪರಿಸ್ಥಿತಿ ಮುಟ್ಟಿತ್ತು. +ಅದೊಂದು ದಿನ ಫ್ಯಾಕ್ಟರಿ ವಿಳಾಸಕ್ಕೆ ಅಮ್ಮನ ಪತ್ರ ಬಂದಿತ್ತು. ಫ್ಯಾಕ್ಟರಿಗೇಕೆ ಬರೆದಳು ಅಂದುಕೊಳ್ಳುತ್ತಲೇ ಒಡೆದು ಓದಿದೆ_ +“ಆಶೀರ್ವಾದಗಳು, +ನಿಮ್ಮ ತಂದೆಯವರ ಅನಾರೋಗ್ಯದ ಬಗ್ಗೆ ಪತ್ರ ಬರೆದಿದ್ದೆ. ನೀನು, ನನ್ನ ಪತ್ರ ತಲುಪೇ ಇಲ್ಲದಂತೆ ಉತ್ತರಿಸಿದ್ದೀಯಾ. ಪತ್ರ ಕಂಡ ಕೂಡಲೆ ನೀನು ಬರ್ತೀಯಾ ಎಂದು ಎಷ್ಟು ಕಾದಿದ್ದೆ. ನಿನ್ನಿಂದ ಇಂಥ ನಿರೀಕ್ಷೆ ಇರಲಿಲ್ಲ. ಯಾರು ಸಾಯಲಿ ಬದುಕಲಿ ನಿನಗೇನು? ನಾನು ಸತ್ತರೂ ನೀನು ಬರುವುದು ಬೇಡ. ಯಾರಿಗೆ ಗೊತ್ತು ನಿನಗೆ ನಾನು ಸತ್ತ ಪತ್ರವೂ ಸಿಗದೆ ಹೋಗಬಹುದು. ನಿನಗೆ ನಿನ್ನ ಅಪ್ಪನ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲವೆ? ನಿನಗೋಸ್ಕರ ಹಗಲು ರಾತ್ರಿ ಪಾಠ ಹೊಡಕೊಂಡು ದುಡ್ಡು ಕೂಡಿಟ್ಟರು. ಈಗಲೂ ಈ ವಯಸ್ಸಿನಲ್ಲೂ ವಿಶ್ರಾಂತಿ ಇಲ್ಲ. ಮನೆ ಇನ್ಯಾರು ನಡೆಸುತ್ತಾರೆ? ನೀನಂತೂ ಕೈಗೆ ಬರೋ ಹೊತ್ತಿಗೆ ಸರಿಯಾಗಿ ನಮ್ಮ ಕೈ ಬಿಟ್ಟು ಹೋಗಿಬಿಟ್ಟೆ. ಹೆತ್ತ ಸಂಕಟ ನಿನಗೆ ಹೇಗೆ ಅರ್ಥವಾಗಬೇಕು. ನೀವೂ ನಾಳೆ ಅಪ್ಪ-ಅಮ್ಮ ಆದಾಗ ಅರ್ಥವಾಗುತ್ತದೆ. ಯಾವಾಗ ಬರ್‍ತಾ ಇದ್ದೀಯಾ? +ಅಂದಹಾಗೆ ಮನೆಯ ವಿಳಾಸಕ್ಕೆ ಬರೆದ ನನ್ನ ಪತ್ರಗಳು ಸರಿಯಾಗಿ ತಲುಪಿದಂತಿಲ್ಲ. ಅದಕ್ಕೇ ಆಫೀಸಿಗೆ ಬರೀತ ಇದ್ದೇನೆ. +ನಿನ್ನ ಅಭಾಗ್ಯ ತಾಯಿ.” +ಎರಡೆರಡು ಬಾರಿ ಓದಿಕೊಂಡವನಿಗೆ ತಲೆ ಚಿಟ್ಟು ಹಿಡಿಯಿತು. ಅಪ್ಪನಿಗೆ ಏನಾಯಿತು. ಯಾವ ಪತ್ರವೂ ಬರಲಿಲ್ಲವಲ್ಲ. ಅಮ್ಮ ಏಕೆ ಹೀಗೆ ವಿಷ ಕಾರಬೇಕು? ಒಳಗೊಳಗೇ ಹೊರಬರದೆ ಕುದಿದ ಅವಳ ಆಕ್ರೋಶಕ್ಕೆ ಅಪ್ಪನ ಅನಾರೋಗ್ಯ ಬಾಯಿ ಕೊಟ್ಟಿತೇನೋ. ಎರಡು ಗಂಟೆ ‘ಆಫ್’ ತೆಗೆದುಕೊಂಡು ಸೀದಾ ಮನೆ ತಲುಪಿದೆ. ಶಶಿ ಯಾವುದೋ ಕಾನ್‌ಫರೆನ್ಸ್‌ಗೆ ಹೋಗಿದ್ದ ಕಾರಣ ಮೂರು ದಿನದಿಂದ ಫ್ಯಾಕ್ಟರಿಗೆ ಬಂದಿರಲಿಲ್ಲ. ಸೀದಾ ಮನೆಗೇ ಬರುತ್ತಿದ್ದಳು. +ಬಟ್ಟೆಗಳನ್ನು ಸೂಟ್‌ಕೇಸಿಗೆ ತುರುಕಿ ಮೈಸೂರಿಗೆ ಹೊರಡಲು ಸಿದ್ಧವಾಗುವಷ್ಟರಲ್ಲಿ ಶಶಿ ಬಂದಳು. +“ಅರೆ ಎಲ್ಲಿಗೆ ಹೋಗ್ತಾ ಇದ್ದೀಯಾ?” ನನಗೆ ಉತ್ತರಿಸುವ ಸಮಾಧಾನವೂ ಉಳಿದಿರಲಿಲ್ಲ. +“ಸುಡುಗಾಡಿಗೆ….” ಎಂದು ಕಿರುಚಾಡಿದೆ. +“ಏನಾಗಿದೆ ನಿನಗೆ?” ಅಚ್ಚರಿ ಆತಂಕದಿಂದ ಕೇಳಿದಳು. +“ಕಣಿ ಕೇಳು. ಅಮ್ಮನ ಪತ್ರ ಬಂದಿರಲಿಲ್ವೆ? ಏಕೆ ಕೊಡಲಿಲ್ಲ ನನಗೆ? ಈ ಪತ್ರ ನೋಡು_ಎಷ್ಟು ಒದ್ದಾಡ್ತಾ ಇದ್ದಾಳೆ. ಅಪ್ಪನಿಗೆ ಏನಾಗಿದೆಯೋ ಏನೋ….” ಪತ್ರದಲ್ಲಿ ಸರ ಸರ ಕಣ್ಹಾಯಿಸಿ_ +“ರವಿ ಯಾವ ಪತ್ರಾನೂ ಬಂದಿಲ್ಲ ಕಣೋ….” ನಾನು ಅವಳಿಗೆ ಉತ್ತರವೂ ಹೇಳದೆ ಹೊರಟು ಬಂದೆ. ಗೇಟು ದಾಟುವಾಗ ಶಶಿ ಓಡಿ ಬಂದಳು. ಒತ್ತಿ ಬಂದ ದುಃಖದಲ್ಲೂ “ನಾನೂ ಬರಲಾ….” ಕೇಳಿದಳು. +“ಸದ್ಯ ನೀನು ಮಾಡ್ತಾ ಇರೋ ಉದ್ಧಾರ ಸಾಕು…” ಎಂದವನೇ ತಿರುಗಿಯೂ ನೋಡದೆ ಬಸ್‌ಸ್ಟಾಂಡಿಗೆ ನಡೆದಿದ್ದ. ಮೈಸೂರು ತಲುಪುವವರೆಗೆ ನಾನು ನಾನಾಗಿರಲಿಲ್ಲ. ಅದೇ ಸ್ಥಿತಿಯಲ್ಲಿ ಮನೆ ತಲುಪಿದೆ. ಅಪ್ಪ ನರ್ಸಿಂಗ್ ಹೋಂಗೆ ಸೇರಿದ್ದರು. ಗ್ಲೂಕೋಸಿನ ಡ್ರಿಪ್ಸ್ ನೇತಾಡುತ್ತಿತ್ತು. ಅಮ್ಮ ಕಣ್ಣು ಕೆಂಪಾಗಿ ಮಂಚದ ತುದಿಯಲ್ಲಿ ಕೂತಿದ್ದಳು. ನನ್ನನ್ನು ನೋಡಿ ಅತಿ ಪ್ರಾಯಾಸದಿಂದ, +“ಅಂತೂ ಬಂದ್ಯೇನೋ….” ಎಂದು ತಲೆಮೇಲೆ ಕೈಹೊತ್ತು ಕೇಳಿದಳು. ಅಪ್ಪ ಸುಧಾರಿಸಲು ನಾಲ್ಕು ದಿನವೇ ಹಿಡಿದಿತ್ತು. ನರ್ಸಿಂಗ್ ಹೋಂ ಬಿಲ್ ಎರಡು ಸಾವಿರ ಕಟ್ಟಿ, ಅಮ್ಮನಿಗೆ ಧೈರ್ಯ ಹೇಳಿ ಮತ್ತೆರಡು ದಿನಕ್ಕೆ ಬೆಂಗಳೂರಿಗೆ ಬಂದಿದ್ದೆ. ವಾರದಿಂದ ನಿದ್ದೆ ಇಲ್ಲದ ಓಡಾಟ, ಅಮ್ಮನ ಈಟಿಯಂಥಾ ಮಾತುಗಳು ನನ್ನ ಮನಃಸ್ಥಿತಿಯನ್ನೇ ಬದಲಾಯಿಸಿ ಬಿಟ್ಟಿತ್ತು. ಮನೆಗೆ ಬಂದೊಡನೆ ಶಶಿ ಕಳಕಳಿಯಿಂದ ಕೇಳಿದ್ದಳು. +“ಅಪ್ಪ ಹೇಗಿದ್ದಾರೆ?” +“ಇನ್ನೂ ಸತ್ತಿಲ್ಲವೆ….” ಪಟ್ಟನೆ ಹರಿಹಾಯ್ದೆ. ಯಾರ ಮೇಲಿನ ಕೋಪಕ್ಕೋ ಪರಿಸ್ಥಿತಿಯ ಪ್ರಳಯ ರೂಪಕ್ಕೋ ನನ್ನ ಸಹನೆಯೇ ಹಾರಿಹೋಗಿತ್ತು. ಅಪ್ಪನ ಕೋಪದ ಒಂದಂಶ ಆದರೂ ನನ್ನ ರಕ್ತದಲ್ಲಿ ಸೇರಿರಲೇ ಬೇಕು. ಶಶಿಗೂ ಸಾಕಾಗಿರಬೇಕು. ಮಾತಿಲ್ಲದೆ ರೂಮು ಸೇರಿದಳು. ಅಂದು ರಾತ್ರಿ ಇಬ್ಬರೂ ಬೇರೆ ಬೇರೆಯೇ ಮಲಗಿದೆವು. +ಮರುದಿನ ನನ್ನ ಕೈಗೆ ಪೋಸ್ಟ್‌ಮ್ಯಾನ್ ಅಮ್ಮನ ಪತ್ರ ಕೊಟ್ಟು ಹೋದಾಗ ಎಷ್ಟೊಂದು ಅಳುಕಾಗಿತ್ತು. ಸುಮ್ಮನೆ ಶಶಿ ಮೇಲೆ ಅನುಮಾನ ಪಟ್ಟು ಹಾರಾಡೆದ್ದೆ. ಆದರೆ ತಡವಾಗಿತ್ತು…. ನಮ್ಮ ನಡುವಿನ ಅಂತರ ಹಿಗ್ಗಿ ಅಗಲವಾಗಿ ನಿಂತಿತ್ತು. ನಾನು ಅವಳಲ್ಲು ಮನಬಿಚ್ಚಿ ಮಾತನಾಡುವ, ಕ್ಷಮೆ ಕೇಳುವ ಪರಿಸ್ಥಿತಿ ಉಳಿದಿರಲಿಲ್ಲ. ಅಂತೂ ನಾ ತೆರೆದುಕೊಳ್ಳಲಿಲ್ಲ. ಶಶಿಯೂ ಪ್ರಶ್ನಿಸಲಿಲ್ಲ. +ನಮ್ಮ ವೈಯಕ್ತಿಕ ಜಗಳ ನಮ್ಮ ಹುದ್ದೆಗೂ ಹರಡಿತು. ಒಂದೇ ಫ್ಯಾಕ್ಟರಿಯ ಒಂದೇ ವಿಭಾಗದಲ್ಲಿದ್ದವರು. ಆಫೀಸಿನಲ್ಲೂ ಸಣ್ಣ ಸಣ್ಣ ಕಾರಣಗಳಿಗೆ ರೇಗತೊಡಗಿದೆ. ಆಫೀಸಿನ ದಿನಚರಿ, ಆಫೀಸಿನ ತಲೆನೋವುಗಳು ಅಲ್ಲಿಗೇ ಮುಗಿಯದೆ ಮನೆಗೂ ಮುಂದುವರೆಯುತ್ತಿದ್ದವು. +ಅಲ್ಲಿಂದ ಮುಂದೆ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಏನೇನೋ ಕಾರಣಗಳು, ಘಟನೆಗಳು ಗುಡ್ಡೆಯಾಗಿ, ಆರು ತಿಂಗಳ ಹಿಂದೆ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಛೇದನಕ್ಕೆ ಅರ್ಜಿ ಹಾಕಿ ಬೇರ್ಪಟ್ಟಿದ್ದೆವು. ಬೇರ್ಪಟ್ಟು ಆರು ತಿಂಗಳಾದರೂ, ಶಶಿಯನ್ನು ಮರೆಯಲಾರದೆ ಒದ್ದಾಡಿದ್ದೆ. ಹತ್ತಿರದಲ್ಲಿದ್ದಾಗ ಅಸ್ಪಷ್ಟವಾಗ ನಮ್ಮ ತಪ್ಪು-ಒಪ್ಪುಗಳು, ಇಷ್ಟು ಅಂತರದಲ್ಲಿ ನಿಂತು ಯೋಚಿಸುವಾಗ ನಿಧಾನವಾಗಿ ಗೋಚರಿಸತೊಡಗಿದ್ದವು. ಎಲ್ಲೋ ನಾವು ತಪ್ಪಿದ್ದೆವು. ಪ್ರೀತಿಯ ಹಾದಿಯಲ್ಲಿ ಜೊತೆ ನಿಲ್ಲದೆ ಸೋತಿದ್ದೆವು. ಅಮ್ಮ ಪತ್ರದ ಮೇಲೆ ಪತ್ರ ಬರೆದಳು. ‘ಮೈಸೂರಿಗೆ ಬಂದು ಸ್ವಲ್ಪ ದಿನ ಇದ್ದುಹೋಗು, ಹೀಗಾಗುತ್ತೆ ಅಂತ ಗೊತಿತ್ತು. ಅಂದೇ ನಮ್ಮ ಮಾತು ಕೇಳಿದ್ದರೆ….’ ಸಿಟ್ಟಿನಿಂದ ಪತ್ರಗಳನ್ನು ಮುದುಡಿ ಕಸದ ಬುಟ್ಟಿಗೆ ಎಸೆದೆ. +ಆರು ತಿಂಗಳ ನಂತರ ಮೈಸೂರಿಗೆ ಹೊರಟಿರುವೆ. ನನ್ನ ವಿಚ್ಛೇದನದ ಬಗ್ಗೆ ನನಗೆ ನಾಚಿಕೆ ಅಂಜಿಕೆ ಇದೆ ಎಂದಲ್ಲ. ಆದರೆ ಮನೆಯವರು, ನೆರೆಯವರು, ಸ್ನೇಹಿತರೆಂದು ಹೇಳಿಕೊಳ್ಳುವವರು ಕೇಳದೆ ಕೊಡುವ ಹೊರೆ ಹೊರೆ ಉಪದೇಶಗಳನ್ನು, ಸಂತಾಪಗಳನ್ನು ಎಲ್ಲಿ ಗುಡ್ಡೆ ಹಾಕಲಿ ಎಂಬ ಚಿಂತೆ! ದೀರ್ಘವಾಗಿ ನಿಟ್ಟುಸಿರುಬಿಟ್ಟೆ. ಬಸ್ಸಿನ ವೇಗತಗ್ಗುತ್ತಿದ್ದಂತೆನಿಸಿ ಕಣ್ಣು ತೆರೆದೆ. ದೂರದಲ್ಲಿ ಚಾಮುಂಡಿ ಬೆಟ್ಟ ಕಾಣುತ್ತಿತ್ತು. ನನ್ನ ಯೋಚನೆಗಳಲ್ಲಿ ಮೈಸೂರು ತಲುಪಿದ್ದೂ ತಿಳಿಯಲಿಲ್ಲ. +ಗೇಟ್ ತೆರೆದ ಸದ್ದಾಗುತ್ತಿದ್ದಂತೆಯೇ, ವರಾಂಡದಲ್ಲಿ ಅಕ್ಕಿ ಆರಿಸುತ್ತಾ ಕುಳಿತ ಅಮ್ಮ ದಡಬಡಿಸಿ ಎದ್ದು ಹೊರಬಂದವಳೇ_ “ಹೇಗಿದ್ದೀಯೋ ರವೀ” ಎಂದು ಗಲಗಲ ಅಪ್ಪಿದಳು. ಏನನ್ನೋ ನಿರೀಕ್ಷಿಸುತ್ತಿದ್ದವನು ಅಮ್ಮನ ಮುಖದ ಸಂಭ್ರಮಕ್ಕೆ ದಿಗ್ಭ್ರಮೆಗೊಂಡು ನಿಂತ. “ಈಗೆಷ್ಟೊ ನೋಡೋ ಹಾಗಿದ್ದೀಯೋ. ಕಳೆದ ಬಾರಿ ಬಂದಾಗ ಮೂಳೆ ಚಕ್ಕಳವಾಗಿದ್ದೆ” ಪ್ರೀತಿಯಿಂದ ಗದರಿದಳು. ಮತ್ತಷ್ಟು ತಬ್ಬಿಬ್ಬಾದೆ. ಆರು ತಿಂಗಳಲ್ಲಿ ಐದು ಕೆ.ಜಿ. ಇಳಿದುಹೋಗಿರುವ ನಾನು ಅಮ್ಮನ ಕಣ್ಣಿಗೆ ದಪ್ಪವಾದ ಒಗಟು ಬಿಡಿಸಲಾರದೆ ಕಣ್ಣರಳಿಸಿದೆ. ನನ್ನ ಭಾವನೆಗಳಿಗೆ ತಕ್ಕಂತೆ ನನ್ನ ರೂಪ ಬದಲಾಗುತ್ತದೆಯೆ ಅಮ್ಮನ ಕಣ್ಣುಗಳಲ್ಲಿ? ನನ್ನ ಸ್ವಭಾವವೂ ಅಷ್ಟೇ ಅಲ್ಲವೆ…. ಅಮ್ಮನ ಇಚ್ಛೆಗೆ ತಕ್ಕಂತೆ ಕಪ್ಪು ಬಿಳುಪಾಗಬಲ್ಲದು. +ಅಮ್ಮ ಹದಿನಾರರ ಹರೆಯದವಳಂತೆ ಲಗುಬಗನೆ ಓಡಾಡಿದಳು. ನಾನು ನಿಧಾನವಾಗಿ ಸೂಟ್‌ಕೇಸ್ ಕೆಳಗಿಟ್ಟು, ಬೂಡ್ಸ್ ಬಿಚ್ಚತೊಡಗಿದೆ. +“ಬೇಗ ಮುಖ, ಕೈ ಕಾಲು ತೊಳೆದು ಬಾ, ನಿನಗಿಷ್ಟವಾದ ಸಜ್ಜೆ ಪಾಯಸ ಮಾಡಿದ್ದೇನೆ” ಹಿಗ್ಗಿನಿಂದ ಅರಳಿ ಹಪ್ಪಳವಾದ ಅಮ್ಮನ ಮುಖವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. +“ಅಂತೂ ಎಲ್ಲ ಗ್ರಹಚಾರ ಕಳೆಯಿತು. ಇನ್ನಾದರೂ ಹಾಯಾಗಿರು, ತಾಯಿ-ಮಗನ್ನ ಅಗಲಿಸಿದ ಪಾಪ ತಟ್ದೆ ಹೋಗೋಲ್ಲವೋ, ನೀನಂತೂ ಬಿಡು ಹಸುವಿನಂಥೋನು, ಯಾರನ್ನಾದರೂ ನಂಬಿಬಿಡ್ತೀಯಾ….” ಕಿವಿ ಮತ್ತೂ ಅಗಲಿಸಿ ಕೇಳಿದೆ, ಅಮ್ಮನ ಮಾತುಗಳ, ತಾನು ಆರಿಸಿದ ಹೆಣ್ಣುಗಳೆಲ್ಲ ಅಮ್ಮನ ಕಣ್ಣಿಗೆ ತಾಟಕಿಯರು, ಶೂರ್ಪನಖಿಯರೆ? +‘ಅಮ್ಮಾ….” ಏನೋ ಹೇಳಲು ಹೊರಟವನು ಸುಮ್ಮನಾಗಿಬಿಟ್ಟೆ. ರೂಮಿಗೆ ಬಂದಾಗ ಬಿಸಿ ಬಿಸಿ ವಾಂಗಿಬಾತ್‌ನೊಡನೆ ಬಟ್ಟಲಲ್ಲಿ ತುಪ್ಪದ ಸವಿಕಂಪಿನ ಪಾಯಸ! ‘ಓ ಗಾಡ್….’ ಕೂದಲು ಕಿತ್ತುಕೊಂಡು ಕಿರುಚುವಂತಾಯಿತು. ಈ ಹಬ್ಬದೂಟ ಯಾರಿಗೆ ಬೇಕಿದೆ, ಇದೆಲ್ಲ ಸವಿಯಲು ಸಮಾಧಾನ ಎಲ್ಲಿದೆ? ಏನೂ ಹೇಲಲಾರದೆ, ಇಳಿಯದ ಗಂಟಲಲ್ಲಿ ಬಲವಂತವಾಗಿ ಎರಡು ತುತ್ತು ತುರುಕಿ_ +“ಸಾಕಮ್ಮ….” ಎಂದು ಕೆಳಗಿಟ್ಟೆ. ಅಮ್ಮನ ಮುಖ ಕಂದಿತು. +“ಯಾಕೋ…. ಎರಡು ತುತ್ತೂ ತಿನ್ನದೆ ಕೈ ತೊಳೀತಾ ಇದ್ದೀಯ? ಆ ಹಾಳಾದವಳು ತೊಲಗಿದಳಲ್ಲ…. ಇನ್ನೆಂಥ ಚಿಂತೆಯೋ ನಿನಗೆ. ನೋಡ್ತಾ ಇರು ಬಂಗಾರದಂಥಾ ಹುಡುಗಿ ತರ್ತೀನಿ. ಕೈ ತೊಳೆದು ಮುಟ್ಟಬೇಕು. ಆಗೆಲ್ಲ ಮನಸ್ಸು ಸರಿಹೋಗುತ್ತೆ.” ನನ್ನ ರೋಗ, ವೈಧ್ಯ ಎರಡೂ ಪತ್ತೆಹಚ್ಚಿದವಳಂತೆ ನಗು ನಗುತ್ತಲೇ ತಟ್ಟೆ ತೆಗೆದಿಟ್ಟಳು. ವಿಷಾದವಾಗಿ ನಕ್ಕು, ದಿಂಬಿಗೆ ತಲೆ ಇರಿಸಿದೆ. ಸೊಸೆ ಆರಿಸುವ ಅಧಿಕಾರ ತಡವಾಗಿಯಾದರೂ ಕೈ ಸೇರಿದ ಅಮ್ಮನ ಮುಖದಲ್ಲಿ ದಿಗ್ವಿಜಯ ಪತಾಕೆ! ಶಶಿಯ ಸೋಲಲ್ಲಿ ತನ್ನ ಗೆಲುವು ಕಾಣುತ್ತಿರುವಳೆ? ಬದುಕು ಬರಿದಾದ ನೋವಿನಲ್ಲು ಭಗ್ನವಾಗಿ ನಿಂತ ನನ್ನ ಈ ಸ್ಥಿತಿಯಲ್ಲಿ ಅಮ್ಮನ ಸಂತಸದ ತೇರು ಹೊರಟಿದೆ! +ನನ್ನ ನೋವಿನಲ್ಲಿ ಅಮ್ಮನ ನಲಿವು…. +ನನ್ನ ಎದೆಬಡಿತದ ನರಳುವಿಕೆಯಲ್ಲಿ ಅಮ್ಮನ ಊರುಗೆದ್ದ ನಗಾರಿ…. +ನನ್ನ ಮ್ಲಾನವದನ ನೋಡಿ ಮತ್ತೆ ಹೇಳಿದಳು_ +“ನಿನಗಿನ್ನೂ ಅವಳ ಹುಚ್ಚು ಬಿಟ್ಟಿಲ್ಲವೋ. ಕಟ್ಟಿಕೊಂಡ ಗಂಡನ ಹತ್ತಿರ ಮಾಡಬಾರದ್ದು ಮಾಡಿಸಿ, ತಾನೇ ಓದಿದೋಳು ಅಂತ ಮೆರೆಯೋ ಈ ಹೆಣ್ಣುಗಳೆಲ್ಲ ಸಂಸಾರ ಮಾಡ್ತಾವಾ? ಮೊದಲೇ ನಾ ಬಡಕೊಂಡೆ, ಕೇಳಿದ್ದರೆ….” ಕತ್ತೆತ್ತಿ ನೋಡಿದೆ. ನೋವಿತ್ತೆ ಆ ಕಣ್ಣುಗಳಲ್ಲಿ! ಮಗನ ಬದುಕು ಮೂರಾಬಟ್ಟೆಯಾದ ನೋವು? ಇಲ್ಲ. ಅಂತೂ ತನ್ನ ಭವಿಷ್ಯವಾಣಿ ಸತ್ಯವಾಯಿತೆಂಬ ಸಂತಸವೆ? +“ಹಗಲೂ ರಾತ್ರಿ ಕೆಲಸ ಕೆಲಸ ಅಂತ ಬೀದಿ ಸುತ್ತೋಳು, ಯಾವನೊಡನೆ ಏನೆಲ್ಲ ಇಟ್ಟುಕೊಂಡಿದ್ದಳೊ, ಅದಕ್ಕೆ ಓಡಿ ಹೋದಳು….” +“ಅಮ್ಮಾ” ಸಿಟ್ಟಿನಿಂದ ಚೀರಿದೆ. ಮರುಕ್ಷಣ ತಣ್ಣಗಾದೆ. ನಿಧಾನವಾಗಿ ಬಿಡಿಬಿಡಿಸಿ ಹೇಳಿದೆ- +‘ಅಮ್ಮ…. ನಮ್ಮ ಸಂಬಂಧದ ‘ಪೋಸ್ಟ್‌ಮಾರ್ಟಮ್’ ಮಾಡಬೇಡ. ನಾನು ಶಶಿ ಬೇರ್ಪಟ್ಟಿದ್ದೇವೆ ಅಷ್ಟೆ. ದ್ವೇಷಿಸ್ತಾ ಇಲ್ಲ. ನಿನ್ನ ಅರ್ಥದಲ್ಲಿ ನನ್ನನ್ನು ಒಳ್ಳೆಯವನಾಗಿಸುವ ಭರಾಟೆಯಲ್ಲಿ ಶಶಿ ಮೇಲೆ ಗೂಬೆ ಕೂರಿಸಬೇಡ. ದಯವಿಟ್ಟು ನನ್ನ ಸ್ವಲ್ಪ ಹೊತ್ತು ಒಬ್ಬನೆ ಇರೋಕೆ ಬಿಡ್ತೀಯಾ?” ಅತ್ಯಂತ ದೈನ್ಯವಾಗಿ ಕೇಳಿಕೊಂಡೆ. ಅಮ್ಮ ವಿಚಿತ್ರವಾಗಿ ನೋಡಿದಳು. ಕೊಂಚ ನಿರಾಶೆಯಾದಂತೆ ಮಾತಿಲ್ಲದೆ ಹೊರ ನಡೆದಳು. ಹೋಗುವಾಗಲೂ _‘ಏನೋ ಹುಡುಗ ಇನ್ನೂ ಚೇತರಿಸಿಕೊಂಡಿಲ್ಲ. ಯಾರಿಗೆ ಗೊತ್ತು ಎಷ್ಟು ಹಣ ಕಿತ್ತುಕೊಂಡು ಹೋದಳೋ?’ ತನಗೇ ಎಂಬಂತೆ ಗುಣಗುಣಿಸಿ ಮತ್ತೆ ಮಾಸದ ಸಂಭ್ರಮದಲ್ಲಿ ಅಡಿಗೆ ಮನೆಗೆ ನಡೆದಳು. +ಎರಡು ದಿನ ಎಲ್ಲರೂ ನನ್ನನ್ನು ಸ್ವಲ್ಪ ಹಾಯಾಗಿರಲು ಬಿಟ್ಟರು. ನಾನು ಬಂದ ಸುದ್ದಿ ಕೇಳಿ ಸ್ನೇಹಿತ ರಮೇಶ ಬಂದಿದ್ದ. “ಸಾರಿ ಕಣೋ, ಕೇಳಿ ತುಂಬಾ ಬೇಸರವಾಯಿತು” ಅಂದ. “ಈ ಸಾರಿ ಸುಮ್ಮನೆ ಅಮ್ಮ-ಅಪ್ಪನಿಗೆ ಬಿಡು ಹೆಣ್ಣು ಆರಿಸುವ ಕೆಲಸ. ಎಷ್ಟಾದ್ರೂ ತಿಳಿದವರು ಅವರು” ಉಪದೇಶಿಸಿದ. ಒಂದು ಲಕ್ಷ ತಗೊಂಡು ವಿವಾಹವಾದ ಸದ್ಗೃಹಸ್ಥನಲ್ಲವೆ? ಅವನು ಹೋದ ಮೇಲೆ, ಹಾಗೇ ಮಂಪರಿನಲ್ಲಿ ಒರಗಿಕೊಂಡೆ. ಇವರೆಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿರುವರೇ ಇಲ್ಲ ಅಟ್ಟಹಾಸದಿಂದಲೇ? ‘ಹರಿದು ಚಿಂದಿಯಾದ ಸಂಬಂಧಗಳ ಸೊಗಸೆಂದು ತೊಡುವುದಕ್ಕಿಂತ, ಬಿಸಾಟು ಬೆತ್ತಲಾಗುವುದು ಮೇಲು’ ಎಂದಿದ್ದಳು ಶಶಿ. ‘ನಾವು ನಟಿಸೋದು ಬೇಡ. ಹೊಂದಿಕೊಳ್ಳಲಾರದೆ ಹಿಂಸೆಯಾಗೋದು ಬೇಡ’ ಅಂದಿದ್ದಳು. ನನ್ನ ಶಶಿಯ ವಿಚ್ಛೇದನದಲ್ಲಿ ಇವರ ತಮ್ಮ ಗೆಲುವು ಕಾಣುತ್ತಿರುವರೆ? ಹಾಗಾದರೆ ವಿಚ್ಛೇದನವಾಗದ ವಿವಾಹಗಳೆಲ್ಲ ಯಶಸ್ವೀ ವಿವಾಹಗಳೇ? ಮದುವೆಯಾಗಿ ಮೂರು ದಶಕಗಳು ಗೊತೆಗಿರುವ ಅಮ್ಮ-ಅಪ್ಪನದನ್ನು ಸಫಲ ಸಾಂಗತ್ಯವೆನ್ನಲೆ? ಮದುವೆಯಲ್ಲಿ ಮಾತಾಡಿದ್ದ ಹತ್ತು ಸಾವಿರ ಕೊಡಲಿಲ್ಲ ಎಂಬ ಸಿಟ್ಟಿಗೆ ಅಮ್ಮನನ್ನು ಎಂದೂ ತವರಿಗೆ ಕಳಿಸಿರಲೇ ಇಲ್ಲ! +ಅಮ್ಮನೂ ಅಷ್ಟೇ, ತನ್ನ ಅಪ್ಪನ ಮೇಲೆ ಮುನಿಸಾಗಿ‘ ಅಕ್ಕಂದಿರಿಗೆಲ್ಲ ಅದ್ಧೂರಿ ಮದುವೆ ಮಾಡಿ, ನನ್ನನ್ನು ಮಾತ್ರ ಬರಿಗೈಲಿ ಕೈ ತೊಳೆದರು’ ಎಂದು ಇತ್ತ ಮುಖ ಹಾಕಿದವಳು ಹೋದದ್ದು, ತಾತ ಸತ್ತಾಗಲೇ. ‘ಓದದ ಹಳ್ಳಿ ಹುಡುಗಿ’ ಎಂದು ಅಪ್ಪನಿಗೆ ಅದೆಷ್ಟು ತಾತ್ಸಾರ. ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅಪ್ಪ ಪೇಟೆ ಸೇರಿ ಬಿ. ಎ. ಪಾಸಾದೊಡನೆ ಸುಸಂಸ್ಕೃತನಾದೆ ಎಂದು ತಿಳಿದರೆ?’ ‘ ಇದು ಸಾರು ಮಾಡೋ ರೀತೀನ? ಇಪ್ಪತ್ತು ವರ್ಷದಿಂದ ಮಾಡಿದ್ರೂ ಕಲೀಲಿಲ್ಲ. ಗಂಜಲ ಗಂಜಲ ಇದ್ದ ಹಾಗಿದೆ’ ಎಂದು ದಿನಕ್ಕೊಮ್ಮೆಯಾದರೂ ರೇಗಾಡಿ, ನಾಲ್ಕು ಅಕ್ಷರ ಕಲಿತ ಸ್ನೇಹಿತರ ಪತ್ನಿಯರೊಂದಿಗೆ ಹೋಲಿಸಿ, ಯಾವುದೇ ವಿಷಯಕ್ಕೂ ಅಮ್ಮನ ಮಾತುಗಳನ್ನು ಅಸಡ್ಡೆಯಿಂದ_‘ನಿನಗೇನು ಅರ್ಥವಾಗುತ್ತೇ ಬಿದ್ದಿರೇ, ಎದೆ ಸೀಳಿದರೂ ನಾಲ್ಕು ಅಕ್ಷರ ಇಲ್ಲದೋಳು….’ ಎಂದು ಹಾರಾಡುವ ಅಪ್ಪ ವಿವಾಹದ ೨೫ನೇ ವರ್ಷದಲ್ಲೂ ‘ಎಂಥೆಂಥಾ ಸಂಬಂಧಗಳು ಬಂದಿದ್ದು, ಕನ್ನಡಿ ಗಂಟು ತೋರಿಸಿ ಮೋಸ ಮಾಡಿದ ನಿನ್ನಪ್ಪ’ ಎಂದು ಮಕ್ಕಳ ಮುಂದೂ ಮುಖ ಮುರಿಯುತ್ತಿದ್ದುದು ನನಗೇ ಹೇಸಿಗೆ ತರುತ್ತಿತ್ತು. ಬಾಲ್ಯದ ಒಂದೊಂದೇ ನೆನಪಿನಲ್ಲಿ ಅಮ್ಮನ ಅಂದಿನ ಸಾತ್ವಿಕತೆಯಂತೆಯೇ, ಅಪ್ಪನ ಅಗ್ನಿಪರ್ವತ ರೂಪವೂ ಕೊರೆದು ನಿಂತಿವೆ. +ಒಳಗೆ ಎದ್ದು ಬಂದೆ. ಅಮ್ಮ ಒಬ್ಬಲ್ಳೇ ಕೂತು ತೊಗರಿಕಾಯಿ ಬಿಡಿಸುತ್ತಿದ್ದಳು. ಏನೋ ಕನಸು ಕಾಣುತ್ತಿರಬೇಕು. ತುಟಿಗಳಲ್ಲಿ ಕಿರುನಗೆ! ಮನೆ ನಿಶ್ಯಬ್ಧವಾಗಿತ್ತು. +“ಎಲ್ಲ ಎಲ್ಲಮ್ಮ….?” ನೆಲದ ಮೇಲೇ ನಾನೂ ಕುಳಿತು ತೊಗರಿಕಾಯಿಗೆ ಕೈ ಹಚ್ಚಿದೆ. +“ರಮಾದು ಇವತ್ತು ಮದುವೆ ಕಣೋ, ಹೋಗಿದ್ದಾರೆ.” +“ನೀನು ಹೋಗಲಿಲ್ಲವಾ?” +‘ಅವರುಗಳು ಹೋದರಲ್ಲಾ ಸಾಕು ಬಿಡು. ಮನೆ ಮಂದಿ ಎಲ್ಲ ಹೋಗೋದೇನು ಚನ್ನ. ನೀನು ಬೇರೆ ಅಪರೂಪಕ್ಕೆ ಬಂದಿದ್ದೀಯಾ, ಅಂದ ಹಾಗೆ ಎಷ್ಟು ದಿನ ರಜೆ ಹಾಕಿದ್ದೀಯಾ….?” +“ಐದು ದಿನ, ನಾಡದ್ದು ಹೊರಟು ಬಿಡಬೇಕು” +“ಅದ್ಯಾಕೋ ಆರು ತಿಂಗಳ ನಂತರ ಬರ್ತಾ ಇದ್ದೀಯ. ಒಂದು ಹತ್ತು ಹದಿನೈದು ದಿನಾ ಆದ್ರೂ ಇರೋಲ್ಲವಾ?” +“ಅಷ್ಟೊಂದು ರಜ ಇಲ್ಲಮ್ಮ….” +“ಹುಂ…. ಕೋರ್ಟು ಕಛೇರಿ ಅಂತ ಅಲೆಯೋಕೆ ಎಲ್ಲ ಮುಗೀತೇನೋ….ಹಾಗಾದ್ರೆ ನಾಳೇನೇ ಬರೋಕೆ ಹೇಳಬೇಕು ಸುಬ್ಬರಾಯರಿಗೆ.” +‘ಯಾವ ಸುಬ್ಬರಾಯರು?” ತಬ್ಬಿಬ್ಬಾಗಿ ಕೇಳಿದೆ. +“ನಿನಗೆ ಹೆಣ್ಣು ಕೊಡೋರು. ಅವರ ಮಗಳು ಮುತ್ತಿನಂತೆ ಇದ್ದಾಳೆ. ಮನೆ ಕೆಲಸ, ಅಡಿಗೆ-ತಿಂಡಿ ಎಲ್ಲದರಲ್ಲೂ ಮುಂದು, ಬಿ. ಎ. ನೂ ಮಾಡಿದ್ದಾಳೆ. ಅಚುಕಟ್ಟಾಗಿ ಕೊಟ್ಟು ತಂದು ಮಾಡ್ತೇವೆ ಅಂದಿದ್ದಾರೆ. ನಿನಗೇನು ಕಡಿಮೆ. ಸದ್ಯ ಮಕ್ಕಳು ಮರಿ ಅಂತ ತಾಪತ್ರಯ ಹಚ್ಚಲಿಲ್ಲ….” ಸಲೀಸಾಗಿ ಹೇಳಿದಳು. +“ಅಮ್ಮಾ…. ಅಮ್ಮಾ…. ನಾನೀಗ ಹೆಣ್ಣು ನೋಡೋಕೆ ಬರಲಿಲ್ಲ. ನನ್ನ ವಿಚ್ಛೇದನ ಕೂಡ ಆಗಿಲ್ಲ….” +“ಏನೋ ಹಾಗಂದ್ರೆ, ಒಳ್ಳೆ ಹೆಂಡತಿ ಬಂದು ಊಟ ಉಪಚಾರ ಮಾಡಿದರೆ ಎಲ್ಲ ಸಮಾಧಾನವಾಗುತ್ತೆ. ಏನೋ ಹೇಳದೆ ಕೇಳದೆ ಮಾಡಿಕೊಂಡೆ. ಈಗಿಷ್ಟು ಒದ್ದಾಡೋದು ನೋಡೋಕಾಗೋಲ್ಲ. ನೀನೇನು ಇವಳನ್ನೇ ಒಪ್ಪಿಬಿಡು ಅಂತಲ್ಲ. ಇನ್ನೂ ನಾಲ್ಕೈದು ಸಂಬಂಧ ನೋಡಿಟ್ಟಿದ್ದೇನೆ….” +“ಅಮ್ಮಾ ನನಗೀಗಲೇ ಮದುವೆ ಅವಸರವೇನಮ್ಮ?”ಬೇಸರದಿಂದ ಹೇಳಿದೆ. +“ಈಗಲೇ ಮದುವೆ ಬೇಡ ಕಣೋ ಅಂತ ಬಡಕೊಂಡರೂ ಕೇಳದೆ ಆತುರವಾಗಿ ಕಟ್ಟಿಕೊಂಡೆ. ಈಗ ಮಾಡಿಕೊಳ್ಳೋ ಅಂತ ಗೋಗರೆದರೆ ಹೀಗಂತೀಯಲ್ಲೋ….” +ಅಮ್ಮ ಕೂಡ ಎಷ್ಟು ‘ಕ್ರೂಯಲ್’ ಆಗಬಲ್ಲಳು! ಹೆತ್ತ ಕರುಳು ನೋವು ಅರಿಯುತ್ತೆ ಅಂತಾರೆ, ನಿಜವೆ? +“ಅಮ್ಮ ಒಂದು ಮಾತು ಕೇಳಲಾ….?” ವಿಚಿತ್ರವಾಗಿ ನನ್ನನ್ನು ನೋಡಿದ ಅಮ್ಮನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದೆ. +“ಏನೋ ಅದೂ….?” ಎಂದಳು. ಆದಷ್ಟು ಮೃದುವಾಗಿ ಕೇಳಿದೆ_ +“ಅಮ್ಮ, ಅಪ್ಪನನ್ನು ಕಟ್ಟಿಕೊಂಡು ನೀ ಸುಖವಾಗಿದ್ದೀಯಾ?” +“ನನಗೇನೋ ಆಗಿದೆ ಧಾಡಿ. ಎಂದೂ ಹೊಟ್ಟೆ ಬಟ್ಟೆ ವ್ಯತ್ಯಾಸ ಮಾಡಲಿಲ್ಲ. ಕಾಡು ಹಳ್ಳಿಯಲ್ಲಿದ್ದ ನಾನು ಇವರ ದೆಸೆಯಿಂದ ಪೇಟೆ ಸೇರಿದೆ. ಎರಡು ಗಂಡು ಮಕ್ಕಳು ದೊಡ್ಡ ಇಂಜಿನಿಯರ್ರು, ಆಫೀಸರ್ರು ಆದರು….” +“ಅಮ್ಮ ನಿನ್ನ ಮಕ್ಕಳ ಮೊಮ್ಮಕ್ಕಳ ಕತೆ ಬೇಡ. ನೀನು ಸುಖವಾಗಿದ್ದೀಯಾ? ನಿಮಿಷ ನಿಮಿಷಕ್ಕೂ ಸಿಡಿವ ದೂರ್ವಾಸ ಕೋಪದ ಅಪ್ಪನಿಗೆ ಯಾವಾಗಲೂ ಅದೆಷ್ಯು ಬಗ್ಗಿ ನಡಿತಿದ್ದೆ. ಮದುವೆಯಾದಾಗಿನಿಂದ ನಾಲ್ಕು ಕಾಸೂ ಕೈಗೆ ಹಾಕದೆ, ಕರಿಬೇವಿನ ಸೊಪ್ಪು ಬೇಕು ಅಂದ್ರೂ ತಾನೇ ತರ್ತೀನಿ ಅಂತ ಹೋಗ್ತಾ ಇದ್ದ ಅಪ್ಪನ ಅರ್ವಾಧಿಕಾರದಲ್ಲಿ ಎಷ್ಟು ಸುಖವಾಗಿದ್ದೆ?” +“ಅದೆಲ್ಲ ಆಯಿತಲ್ಲೋ….? ಏನೋ ಗಂಡಸರ ಸ್ವಭಾವವೇ ಹಾಗೆ. ಈಗ ಮಕ್ಕಳ ಕಾಲಕ್ಕೆ ಎಲ್ಲ ನೇರವಾಗಿಲ್ಲವೆ?” +“ಮುದಿ ಕಾಲಕ್ಕೆ ಯಾರಾದ್ರೂ ಮೆದು ಆಗ್ತಾರೆ. ಸೋರಿ ಹೋದ ಬದುಕು ಮತ್ತೆ ತುಂಬುತ್ತಾ? ಅಮ್ಮಾ…. ನೀನು ಎಂದಾದ್ರೂ ಅಪ್ಪನನ್ನು ಬಿಟ್ಟು ಹೋಗೋ ಬಗ್ಗೆ ಯೋಚಿಸಿದ್ದೆಯಾ….” ಅಮ್ಮ ಗಡಬಡಿಸಿ- +“ಎಂಥಾ ಮಾತೋ ಆಡೋದು” ಅಂದಳು. +“ನನಗೆ ಗೊತ್ತಮ್ಮ. ನೀ ವಿಚ್ಛೇದನದ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ. ಕಾರಣ ನೀನು ಇಲ್ಲಿ ಸುಖವಾಗಿದ್ದೆ ಅಂತಲ್ಲ. ಅಷ್ಟು ಸಂಪ್ರದಾಯಗಳು ನಿನ್ನ ತಲೆ ತೊಳೆದಿದ್ದವು. ಆರ್ಥಿಕ ಸ್ವಾತಂತ್ರ್ಯವೂ ಇರಲಿಲ್ಲ. ಅಸಹಾಯಕತೆಗೆ ಅನಿವಾರ್ಯತೆಗೆ ಅಂಟಿಕೊಂಡ ಸಂಬಂಧಗಳನ್ನೆಲ್ಲ ವೈಭವೀಕರಿಸುವುದೇದಕ್ಕೆ? ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ-ಶಶಿಯ ವಿವಾಹಕ್ಕಿಂತ ನಿಮ್ಮದು ಕೆಟ್ಟಿತ್ತು.” +“ನಿನು ಓದಿದೋನು ಏನೇನೋ ದೊಡ್ಡ ದೊಡ್ಡ ಮಾತಾಡಿ ಬಿಡ್ತೀಯಾ, ನನಗೆ ತಿರುಗಿಸಿ ಹೇಳೋಕೆ ಬರೋಲ್ಲ ಅಂತ. ಅಷ್ಟೆಲ್ಲ ಅನುಭವವಿದ್ರೂ ನಾನು ಗಂಡನನ್ನು ಬಿಟ್ಟು ಹೋದೆನೇನೋ? ಅದೇನು ಆಗಿತ್ತು. ಆ ‘ಊರಬಸವಿ’ಗೆ, ನಿನ್ನ ಬಿಟ್ಟು ಓಡಿ ಹೋಗಲು?” +“ಏನೆಲ್ಲ ಅನುಭವಿಸಿದರೂ ಒಂದು ಸಂಬಂಧವನ್ನು ಉಳಿಸಿಕೊಳ್ಳೊ ಅಂಥಾದ್ದು ಏನಿದೆಯಮ್ಮ? ಅವಳೂ ಸುಖವಾಗಿರಲಿ. ನಾನೂ ಸುಖವಾಗಿರೋಕ್ಕೆ ಪ್ರಯತ್ನಿಸುತ್ತೇನೆ. ಇಲ್ಲದಿದ್ರೆ ನಮ್ಮ ಬದುಕಿನ ಕಹಿಯನ್ನೆಲ್ಲ ಸುತ್ತೆಲ್ಲ ಹರಿಸಿ ಬಿಡ್ತಾ ಇದ್ದೆವು. ಅಮ್ಮಾ ನೀನು ತಿಳಕೊಂಡ ಹಾಗೆ ಶಶಿ ನನ್ನ ಬಿಟ್ಟು ಹೋಗಲಿಲ್ಲ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು ನಾವಿಬ್ಬರೂ ಕೂಡಿ ಕೈಗೊಂಡ ನಿರ್ಧಾರ.” +“ಮತ್ತೆ ಯಾಕೋ ಮೂರೂ ಹೊತ್ತೂ ಆಕಾಶ ಬಿದ್ದ ಹಾಗೆ ಒದ್ದಾಡ್ತೀಯಾ?” ಅಮ್ಮ ಕಟುವಾಗಿ ಕೇಳಿದಳು. +“ಅಲ್ಲಮ್ಮ, ಬಸ್‌ನಲ್ಲಿ ಎರಡು ಗಂಟೆ ಜೊತೆಗೆ ಕುಳಿತ ಸಹ ಪ್ರಯಾಣಿಕನನ್ನು ಬೀಳ್ಕೊಡುವಾಗಲೂ ತುಸು ಸಂಕಟವಾಗುತ್ತೆ. ಅಂಥಾದ್ದರಲ್ಲಿ ನಾಲ್ಕು ವರ್ಷ ಒಡನಾಟಾನ ಒಂದೇ ಬಾರಿಗೆ ಬುಡಸಮೇತ ಹೊರಗೆಸೆಯಲು ಸಾಧ್ಯಾನ? ಸಮಯ ಬೇಡವೇ? ಶಶಿ ಯಾವನೋ ಹಿಂದೆ ಓಡಿ ಹೋಗಲಿಲ್ಲ. ನನ್ನೊಡನೆ ಅಸಭ್ಯವಾಗಿ ನಡೆದುಕೊಳ್ಳಲಿಲ್ಲ. ನನ್ನ ಹಣಕ್ಕೆ ಕಾತರಿಸಲಿಲ್ಲ. ನಮ್ಮ ಸಂಬಂಧ ಸರಿ ಹೊಂದಲಿಲ್ಲ ಅಷ್ಟೆ. ಹೊಂದಬಹುದಿತ್ತೇನೋ, ನೀವುಗಳು ಬಿಡಲಿಲ್ಲ. ನಮ್ಮ ವಿಚ್ಛೇದನಕ್ಕೆ ನೀನೇ ಸಂಪೂರ್ಣ ಕಾರಣ ಅಂತ ಆರೋಪಿಸ್ತಾ ಇಲ್ಲಮ್ಮ. ಆದರೆ ನೀನೂ ‘ಕಾರಣ’ ಆಗಿದ್ದೆ ಅನ್ನೋದು ಸತ್ಯ.” +“ಏನೋ ಹಾಗಂದರೆ?” ಅಮ್ಮ ಗಾಬರಿಯಿಂದ ಕೇಳಿದಳು. ಏರಿದ್ದ ನನ್ನ ಸ್ವರ ಇಳಿಸಿ, ಸಮಾಧಾನವಾಗಿ ಕೇಳಿದೆ_ +“ಶಶಿ ನನ್ನ ಬಿಟ್ಟು ಹೋದ ಬಗ್ಗೆ ನಿನಗೆ ನಿಜಕ್ಕೂ ಕಳಕಳಿ ಇದೆಯಾ ಅಮ್ಮ. ನನ್ನ ವಿಚ್ಛೇದನ ನಿನಗೆ ಖುಷಿ ತಂದಿದೆ ಅಲ್ಲವೆ….?” ಕಣ್ಣಲ್ಲಿ ಕಣ್ಣಿಟ್ಟು ಕೇಳಿದಾಗ ಗಲಿಬಿಲಿಗೊಂಡಳು. +“ಮದುವೆ ಆದೋನು, ಹೇಗದ್ರೂ ಸುಖವಾಗಿ ಇರಲಿ ಅಂತಾನೇ ಅಲ್ಲವೇ ನಾನು ಹಾರೈಸಿದ್ದು.” +“ಹಾರೈಸಿದರೆ ಆಯಿತಾ? ಅದಕ್ಕಾಗಿ ನಿಜವಾಗಲೂ ಪ್ರಯತ್ನಿಸಿದೆಯಾ…. ನಿಜ ಹೇಳು ಅಮ್ಮ, ನನ್ನ ವಿಚ್ಛೇದನದ ವಿಷಯ ನಿನಗೆ ಖುಷಿ ತಂದಿದೆ ಅಲ್ಲ? ಕಳೆದು ಹೋದ ಮಗ ಸಿಕ್ಕ ಖುಷಿ….” +“ಯಾಕೋ ಹೀಗೆಲ್ಲ ಮಾತಾಡ್ತೀಯಾ? ತಾಯಿ ಆದೋಳು ಮಕ್ಕಳ ಸುಖಕ್ಕಾಗಿ ಅಲ್ಲವೇನೋ ಹಗಲು ರಾತ್ರಿ ಹಂಬಲಿಸೋದು” ಅಮ್ಮ ಹೇಳುವುದು ಕೇಳುವಾಗ, ಅವಳಿಗೇ ಗೊತ್ತಿಲ್ಲದೆ ನನಗೆ ಹಿಂಸೆಯಾದಳೇ ಅನಿಸುತ್ತದೆ. ಇಲ್ಲ ವಾತ್ಸಲ್ಯದ ಹೆಸರಲ್ಲಿ ಅಡಗಿರುವ ಸ್ವಾರ್ಥವನ್ನು ಅಗೆದು ನೋಡೇ ಇಲ್ಲವೆ?” +“ಅಮ್ಮ ನಾನು ಶಶಿಯೊಡನೆ ಖುಷಿಯಾಗಿದ್ದ ದಿನಗಳು ನಿನಗೆ ಸಂಕಟವಾಗಿತ್ತು. ಇಂದು…. ಇಂದು ನನ್ನ ಬದುಕಿನ ಅತ್ಯಂತ ನೋವಿನ ದಿನಗಳಲ್ಲಿ ನಿನಗೆ ಹಬ್ಬದ ಸಂಭ್ರಮ! ನಿನಗೆ ಮತ್ತೆ ಮನೆಗೆ ಬಂದ ಮಗ, ನಿನ್ನ ಇಚ್ಛೆಯಂತೆ ಸೊಸೆ ತರುವ ನಿನ್ನ ಜನ್ಮಸಿದ್ಧ ಹಕ್ಕು ನಿನ್ನ ಕೈಗೆ ಸಿಕ್ಕ ಖುಷಿ. ನನ್ನ ಸುಖಕ್ಕಿಂತ ನಿನಗೆ ನಿನ್ನ ಸುಖ ಮುಖ್ಯವಿತ್ತು. ನಿನ್ನ ನಿಚ್ಛೆ, ನಿನ್ನ ಆಸೆ, ಆಜ್ಞೆಗಳಿಗೆ ಗಂಡನಂತೂ ಬಾಗಲಿಲ್ಲ. ನಾವೆಲ್ಲ ಬಾಗಬೇಕೆಂಬ ಬಯಕೆ. ನಿಜ ಹೇಳಲಾ… ನನ್ನ ದುಃಖದಲ್ಲಿ ತನ್ನ ಸುಖ ಕಾಣುವವರನ್ನು ನಾನು ಏನೆಂದು ತಿಳಿಯಲಿ ನನ್ನ ಆತ್ಮೀಯರೆ…. ಇಲ್ಲ ಶತ್ರುಗಳೆ?” +ಅಮ್ಮನ ಕಣ್ಣುಗಳಲ್ಲಿ ನೀರಿನ ಪಸೆ! ಉತ್ತರವಿಲ್ಲದೆ ತುಟಿಗಳು ಒಣಗಿದವು. ಅಮ್ಮನನ್ನು ಈ ಅವಸ್ಥೆಯಲ್ಲಿ ನೋಡಲಾಗಲಿಲ್ಲ. ಬಹುಶಃ ಅಮ್ಮನಿಗೂ ಅವಳ ಅಂತರಂಗ ಅರ್ಥವಾಗಿರಲಿಲ್ಲವೆ? +“ಎಲ್ಲ ನಿನ್ನ ಒಳ್ಳೆಯದಕ್ಕೆ ಅಲ್ವೇನೋ….” ಅಮ್ಮನಿಗೂ ಅವಳ ಮಾತಿನಲ್ಲಿ ನಂಬಿಕೆ ಇಲ್ಲದಷ್ಟು ಸ್ವರ ದುರ್ಬಲವಾಗಿತ್ತು. +“ನನಗೆ ಒಳ್ಳೆಯದೇನು, ಕೆಟ್ಟದ್ದೇನು ತಿಳಿಯದಷ್ಟು ಎಳೆಯವನೇನಮ್ಮ. ನನ್ನ ಬದುಕು ನಿರ್ಧರಿಸುವಷ್ಟೂ ನನಗೆ ಸ್ವಾತಂತ್ರ್ಯ ಇಲ್ಲವೆ? ನೀನು ಹುಡುಕಿದ ಹೆಣ್ಣಿನೊಡನೆ ನಾನು ಸುಖವಾಗಿರ್ತಾ ಇದ್ದೆ ಅಂತ ಯಾವ ಗ್ಯಾರಂಟಿ ನಿನಗಿತ್ತು?” +ಅಮ್ಮ ಏನು ಹೇಳಬೇಕು ತೋಚದೆ ಚಡಪಡಿಸಿದಳು. ಏನೋ ಹೇಳಲು ಒದ್ದಾಡುತ್ತಾ, ಪದಗಳಿಗಾಗಿ ಹುಡುಕಾಡಿದ ಆ ಕ್ಷಣ ಉಸಿರು ಕಟ್ಟಿತು. ನೋಟದಲ್ಲೇ ಕಟ್ಟಿಹಾಕಿದಂತೆ, ನನ್ನ ಕಣ್ಣು ತಪ್ಪಿಸಿ ಎತ್ತಲೋ ನೋಡಲೆತ್ನಿಸಿದಳು. ಅದೇ ಹೊತ್ತಿಗೆ ಕರೆಗಂಟೆ ‘ಟ್ರಿನ್’ ಎಂದಿತು. ಬಿಡುಗಡೆ ಸಿಕ್ಕಂತೆ ತಟ್ಟನೆ ಎದ್ದಳು- +“ಯಾರು ಬಂದ್ರು ನೋಡ್ತೀನಿ….” +ನಾನು ನಿಟ್ಟುಸಿರು ಬಿಟ್ಟೆ. ನನಗೆ ಉತ್ತರ ಬೇಕಿರಲಿಲ್ಲ. ನನ್ನಲ್ಲೆದ್ದ ಪ್ರಶ್ನೆಗಳನ್ನು ಹೊರ ಹಾಕಬೇಕಿತ್ತು. ಅಮ್ಮನನ್ನು ಅಪರಾಧೀ ಸ್ಥಾನದಲ್ಲಿ ಬಂಧಿಸಿಡಲೂ ಹೊರಟಿರಲಿಲ್ಲ. +ಉಳಿದೆರಡು ದಿನ ಮನೆಯಲ್ಲಿ ಗುಸು-ಗುಸು, ಇರುಸು ಮುರುಸು ಸಾಕಷ್ಟು ಇತ್ತು. ಏನೊಂದೂ ಗಮನಿಸದಂತೆ ಉಳಿದೆ. ಅಪ್ಪ ಕೂಡ ನಾನಿದ್ದ ಐದು ದಿನ ಎಲ್ಲಿಲ್ಲದಂತೆ ಮೃದುವಾಗಿದ್ದರು. ಎಂದೂ ಎದುರು ಕೂರಿಸಿಕೊಂಡು ಆತ್ಮೀಯವಾಗಿ ಮಾತನಾಡದ ಅಪ್ಪ ಈ ಬಾರಿ ಬಹಳ ಮಾತನಾಡಿದ್ದರು. “ಮದುವೆ ಅಂದರೆ ಬರೀ ಒಂದು ಗಂಡು-ಒಂದು ಹೆಣ್ಣಿನ ಸಂಬಂಧವಲ್ಲ. ಎರಡು ಮನೆತನಗಳ, ಎರಡು ಸಂಸಾರಗಳ ಮಿಲನ” ಎಂದೆಲ್ಲ ವೇದಾಂತ ಕೊರೆದರು. ಅಂದು ಸಂಜೆಯೇ ಸುಬ್ಬರಾಯರು ಮಗಳೊಡನೆ ಬಂದುಹೋದರು. ಮತ್ಯಾರೋ ಅಡ್ವೋಕೇಟ್ ಕೂಡ ಮಗಳ ಜಾತಕ ಹಿಡಿದು ಬಂದಿದ್ದರು. ನಾನು ಏನೊಂದೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಅಮ್ಮ-ಅಪ್ಪ ಹೇಳಿದಂತೆ ಕುಳಿತೆ, ನಿಂತೆ. ಮಾತಾಡಿದೆ, ಎದ್ದು ಬಂದೆ. +ಮನಸ್ಸು ಮಾತ್ರ ಬೇರೆಲ್ಲೋ ಇತ್ತು. ಈ ಆರು ತಿಂಗಳ ದೂರದಲ್ಲಿ, ಶಶಿ ಮತ್ತು ನನ್ನ ನಡುವಿನ ಸ್ನೇಹ-ಸಂಬಂಧದ ಬೆಲೆ ತಿಳಿದಿತ್ತು. ಬೇರ್ಪಡಿಸಲು ಹಾತೊರೆಯುವ ಶಕ್ತಿಗಳ ನಟ್ಟನಡುವೆ, ನಮ್ಮ ಸಂಬಂಧವನ್ನು ಉಳಿಸಿಕೊಳ್ಳುವತ್ತ ನಾವಿಬ್ಬರೂ ದುಡಿಯಬೇಕಿತ್ತು. ಅಮ್ಮಾನ ಪತ್ರ ಬಂದೊಡನೆ ತಲೆ ಪೂರಾ ಕೆಡಿಸಿಕೊಳ್ಳುತ್ತಿದ್ದೆ. ಇಲ್ಲಿ, ಮೈಸುರಿಗೆ ಬಂದು ಅಮ್ಮನ ಗೋಳುಗಳ ಕೇಳಿ ಹೋದ ಮೇಲಂತೂ, ಶಶಿಯ ಸಣ್ಣ ಮಾತಿಗೂ ರೇಗುತ್ತಿದ್ದೆ. ಇಕ್ಕಳದಲ್ಲಿ ಸಿಕ್ಕಿಬಿದ್ದ ನನ್ನ ಮನಃಸ್ಥಿತಿಯ ಸಂತೈಸಲೂ ಶಶಿಗೆ ಅವಕಾಶ ನೀಡಿರಲಿಲ್ಲ. ಹಂಚಿಕೊಳ್ಳದ ಎದೆಯೊತ್ತುವ ನೋವುಗಳು ನನ್ನೊಳಗನ್ನೇ ಸುಟ್ಟು ಹಾಕಿದವು. ನಮ್ಮ ಪ್ರೀತಿಯನ್ನು ನುಂಗಿ ನಿಂತವು. +ನಾವು ಪ್ರಯತ್ನಿಸಬೇಕಿತ್ತು. ನಮ್ಮ ವಿವಾಹವನ್ನು ಉಳಿಸಿಕೊಳ್ಳಲು. ಬಹುಶಃ ಈಗಲೂ ಉಳಿಸಿಕೊಳ್ಳಬಹುದೇನೋ. ಏರುಪೇರಿಲ್ಲದ ಸಮತಟ್ಟ ಹಾದಿಯಲ್ಲಿ ಉಳಿದ ಪ್ರೀತಿಗಳ ಹೆಚ್ಚುಗಾರಿಕೆಯೇನು? ಇಂಥಾ ಪರಿಸ್ಥಿತಿಯ ಪರೀಕ್ಷೆಗಳಲ್ಲಿ ಗೆದ್ದು ಉಳಿದ ಪ್ರೀತಿ ನಮ್ಮದಾಗಬೇಕಿತ್ತು. +ಅಂತೂ ಹೊರಡುವ ದಿನ ಬಂದಾಗ ಅಪ್ಪ- +“ಇವತ್ತೇ ಹೊರಡ್ತಾ ಇದ್ದೀಯೇನೋ….?” ಶಾಲೆಗೆ ತಯಾರಾಗುತ್ತಾ ಕೇಳಿದರು. +“ಮಧ್ಯಾಹ್ನದ ರೈಲಿಗೆ ಹೋಗ್ತೀನಪ್ಪಾ” ಎಂದೆ. ಕೇಳಲೋ ಬೇಡವೋ ಎಂಬಂತೆ ತಡೆದು ಕೇಳಿದರು. +“ಸುಬ್ಬರಾಯರ ಮಗಳ್ನ ನೋಡ್ದೆ ಅಲ್ವೆ?” +“ಹೂಂ….” ಬರೀ ತಲೆ ಆಡಿಸಿದೆ. +“ಏನೂ ಹೇಳಲೇ ಇಲ್ಲ….” ಕೆದಕಿ ಕೇಳಿದರು. +“ಹೋಗಿ ಕಾಗದ ಹಾಕ್ತೀನಪ್ಪ” ಸದ್ಯಕ್ಕೆ ಜಾರಿಕೊಂಡರೆ ಸಾಕು ಎಂಬಂತೆ ಹೇಳಿದೆ. +“ಸರಿ…. ಸರಿ…. ನಿಧಾನವಾಗಿ ಯೋಚಿಸಿ ಹೇಳು. ಇನ್ನೂ ಒಂದೆರಡು ಕಡೆಯಿಂದ ಸಂಬಂಧ ಬಂದಿದೆ. ಜಾತಕ ನೋಡಿ, ಫೋಟೋ ಕಳಿಸಿ ಕೊಡ್ತೇನೆ” ಅಪ್ಪ ಶಾಲೆಗೆ ಹೋದರು. ಅಮ್ಮ ಅಡಿಗೆ ಮನೆಯ ಹೊಸಿಲಲ್ಲಿ ನಿಂತು ದುಗುಡದಿಂದ ನನ್ನ ನೋಡಿದಳು. ರೂಮಿಗೆ ಹೋಗಿ ಬಟ್ಟೆ ಜೋಡಿಸಿಕೊಂಡೆ. ಗಂಟೆ ಒಂದು ಹೊಡೆದಾಗ ಸೂಟ್‌ಕೇಸ್ ಸಿದ್ಧಪಡಿಸಿ ಹೊರಟು ನಿಂತೆ. ಅಮ್ಮ ಬಸ್‌ವರೆಗೂ ಬಂದಳು. ಸ್ಟೇಷನ್‌ಗೆ ರಿಕ್ಷಾ ಹಿಡಿಯಲು ಹೊರಟಾಗ “ರಿಕ್ಷಾ ಯಾಕೋ ಹದಿನಾಲ್ಕನೇ ನಂಬರ್ ಬರುತ್ತೆ” ತಡೆದಳು. ಕ್ಷಣಕಾಲ ಇಬ್ಬರೂ ಮೌನವಾಗಿ ನಿಂತೆವು. ಅಮ್ಮನ ಉದಾಸ ಮುಖ ಕಂಡು ಕನಿಕರವಾಯಿತು. +“ಅಮ್ಮ ನಿನಗೆ ನೋವಾಗಿರಬೇಕು….” ಮೃದುವಾಗಿ ಕೇಳಿದೆ_ “ನೀ ಆರಿಸಿದ ಹುಡುಗೀನ ಆಗಬಾರದು ಎಂಬ ಛಲ ನನಗಿಲ್ಲಮ್ಮ. ಆದರೆ….” ಅಮ್ಮ ತೀರಾ ಮೌನವಾಗಿ ನಿಂತಳು. ನಾನೇ ಮುಂದುವರಿಸಿದೆ_“ಇಷ್ಟು ನೆನಪಿರಲಿ ಅಮ್ಮ, ಸೋತದ್ದು ನಾನು-ಶಶಿ ಮಾತ್ರ. ವ್ಯಕ್ತಿ ವ್ಯಕ್ತಿಯ ಸಂಬಂಧ ಸೋತದ್ದು. ಪ್ರೇಮ ವಿವಾಹವೆಂಬ ವಿಚಾರವಲ್ಲ. ನಾನು ಮತ್ತೊಮ್ಮೆ ಶಶಿಯನ್ನೇ ಸೇರಿದರೆ ಅಚ್ಚರಿ ಪಡಬೇಡ. ಈ ಬಾರಿಯಾದರೂ ಮನಃಪೂರ್ವಕವಾಗಿ ಹಾರೈಸ್ತೀಯಾ ಅಮ್ಮ….”” ಅಮ್ಮ ಒದ್ದೆಯಾಗಿ ಕಣ್ಣೊರೆಸಿದಳು. +“ನಿನಗೆ ಹೇಗೆ ಸರಿ ಅನ್ನಿಸುತ್ತೋ ಹಾಗೇ ಮಾಡೊ. ಅಂತೂ ನೀನು ಸುಖವಾಗಿರಬೇಕು ಕಣೋ….” ದೂರದ ತಿರುವಿನಲ್ಲಿ ಬಸ್ ಬರುತ್ತಿತ್ತು. ಅಮ್ಮನ ಒದ್ದೆ ಕಣ್ಣುಗಳಲ್ಲಿ ಮತ್ತದೇ ಬೆಳ್ಳಿ ಹೊಳಪು…. ಬಾಲ್ಯದ ಮಮತೆಯ ತಂಪು! “ಬರ್ತೀನಮ್ಮ….” ಹೇಳಿ ಬಸ್ಸಿನಲ್ಲಿ ಕುಳಿತೆ. ಕಿಟಕಿ ಬದಿಯ ಸೀಟ್ ಹಿಡಿದು ಹೊರಗೆ ನೋಡಿದೆ, ಅಮ್ಮ ಕೈಯಾಡಿಸುತ್ತಿದ್ದಳು. ನನಗೇ ಎಂಬಂತೆ ಹೇಳಿಕೊಂಡೆ ಖಲೀಲ್ ಗಿಬ್ರಾಸನ ಮಾತುಗಳ_ +ನಿಮ್ಮ ಪ್ರೀತಿ ಕೊಡಬಲ್ಲಿರಿ +ನಿಮ್ಮ ಚಿಂತನೆಗಳನ್ನಲ್ಲ +ನಮಗೆ ನಮ್ಮದೇ ಚಿಂತನೆಗಳುಂಟು. +ನಿಮ್ಮಂತೆ ನಾವಾಗಲು ಅರಸಬೇಡಿ, +ಬದುಕು ಹಿಮ್ಮುಖವಾಗಿ ಹರಿಯುವುದಿಲ್ಲ. +ನೀವು ಕಾಣದ ನಾಳೆಗಳಲ್ಲಿ +ನಮ್ಮ ನೆಲೆ, ನಮ್ಮ ಬೆಳೆ! +***** +ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ […] +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […] +ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_254.txt b/Kannada Sahitya/article_254.txt new file mode 100644 index 0000000000000000000000000000000000000000..a2869a9c0d65ba8398798e755cf910edda6dc439 --- /dev/null +++ b/Kannada Sahitya/article_254.txt @@ -0,0 +1,148 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇದ್ದಕ್ಕಿದ್ದಂತೆ ಒಂದು ಬಗೆಯ ಜಿಗುಪ್ಸೆ. ನಿರುತ್ಸಾಹ, ದಣಿವು ಕೂಡಿದಂತಿದ್ದ ನಾಗಪ್ಪನ ದನಿ ದಸ್ತೂರನ ಉಕ್ಕುತ್ತಿದ್ದ ಉತ್ಸಾಹಕ್ಕೆ ಭಂಗ ತಂದಿತು. ಆದರೂ ಹಾಗೆಯೇ ತೋರಗೊಡದೆ, ತನಿಖೆಯನ್ನು ಆರಂಬಿಸಿದ ರೀತಿಯಲ್ಲಿಯ ಅವನ ಜಾಣ್ಮೆಯನ್ನು ಮೆಚ್ಚಿಕೊಂಡ ಫಿರೋಜ್ ಹಾಗೂ ಪಟೇಲರನ್ನು ಇನ್ನಷ್ಟು ಖುಶಿಗೊಳಿಸಲೆಂಬಂತೆ, ಸರಿಯಾಗಿದ್ದ ಗಂಟಲನ್ನೆ ಸರಿಮಾಡುವವನ ಹಾಗೆ ಸದ್ದುಮಾಡಿ ದೊಡ್ಡ ಗತ್ತುಗಾರಿಕೆಯಲ್ಲಿ ಪ್ರಶ್ನೆ ಬಿಚ್ಚಿದ : +“ನಾನು ಈಗ ಕೇಳಲಿದ್ದ ಪ್ರಶ್ನೆಯನ್ನು ಮಾತ್ರ ಲಕ್ಷ್ಯಗೊಟ್ಟು ಕೇಳಿರಿ It has serious implications…. +“ಈಗ ಕಂಪನಿಯಲ್ಲಿಯ ನನ್ನ ಭವಿತವ್ಯಕ್ಕೇ ಧಕ್ಕೆ ಬಂದೀತು ಎಂದು ತಾನೇ ನಿಮ್ಮ ದ್ಮಕಿಯ ಒಳ ಅರ್ಥ ?” +ನಾಗಪ್ಪನ ಪ್ರಶ್ನೆಯ ಅರ್ಥ ತಿಳಿಯದಷ್ಟು ಧಡ್ಡ ತಾನಲ್ಲ ಎಂಬುದನ್ನು ಸೂಚಿಸುವ ಹಾಗೆ ತುಟಿಗಳ ಮೂಲೆಯಲ್ಲಿತುಂಟತನದ ನಗು ಮಿಂಚಿಸುತ್ತ ದಸ್ತೂರ್ ಮಾತನಾಡಿದ : +“ವಿಷಯ ಅಷ್ಟೊಂದು ಸರಳವಾಗಿದ್ದಾದರೆ ನಮ್ಮ ಚಿಂತೆ ಹುರುಳಿಲ್ಲದ್ದು ; ಈ ತನಿಖೆಯೇ ಅನಗತ್ಯವಾದದ್ದು. ಯಾಕೆಂದರೆ ನಿಮ್ಮಂತಹ ಅಸಾಧಾರಣ ಪ್ರತಿಭೆಯ ತಂತ್ರಜ್ಞರು ನಮಗೆ ಬೇಕೇ ಬೇಕು. ಆದರೆ ನಮಗೆ ಇದಿರಾದ ತೊಡಕು ಬಹಳ ಗಂಭೀರಸ್ವರೂಪದ್ದು May i say, it has criminal implications which might involve the whole management?” +ಬಿಯರಿನ ಪಾತ್ರೆ ಹಿಡಿದ ತನ್ನ ಕೈ ನಡುಗಿದ ರೀತಿಗೆ ಸ್ವತಃ ನಾಗಪ್ಪನೇ ಅತೀವ ನಾಚಿಕೆಪಟ್ಟ. ತುಂಬ ಪ್ರಯಾಸದಿಂದ ಮಗ್ಗನ್ನು ಟೀಪಾಯಿಯ ಮೇಲೆ ಇಡುವಷ್ಟರಲ್ಲಿ ಹಣೆಯಲ್ಲಿ ಬೆವರ ಹನಿಗಳ ತೋರಣ ಕಟ್ಟಿದ್ದವು. ಕಿಸೆಯಿಂದ ಕೈವಸ್ತ್ರವನ್ನು ಹೊರತೆಗೆದ. +ದಸ್ತೂರ್ ರಚಿಸಿಕೊಂಡ ಯುದ್ಧತಂತ್ರದ ಆಯಕಟ್ಟಿನ ಅಂಗವಾಗಿ ತೋರಿದ ಈ ಮಾತುಗಳು ಸ್ವತಃ ಫಿರೋಜ್- ಪಟೇಲರಿಗೇ ಅನಿರೀಕ್ಷಿತವಾದಂತಿದ್ದವು: “ಚಿ mಚಿsಣeಡಿ-sಣಡಿoಞe” ಎನ್ನುವುದನ್ನು ಒಪ್ಪಿಕೊಂಡು ಕಣ್ಣಹೊಳಪಿನಿಂದಲೇ ಪ್ರಶಂಸೆ ವ್ಯಕ್ತಪಡಿಸಿದ ಫಿರೋಜ್ ತನ್ನ ಉತ್ಸಾಹವನ್ನು ಹತೋಟಿಯಲ್ಲಿಡಲು ಪೈಪಿನ ಮೊರೆಹೋಗಬೇಕಾಯಿತು. ಪೆದ್ದ ಪಟೇಲ ಮಾತ್ರ ಬಂದ ಹುರುಪಿಗೆ ತೊಡೆ ಬಡೆದುಕೊಂಡು, ತನ್ನ ಅಚಾತುರ್ಯಕ್ಕೆ ತಾನೇ ಮುಜುಗರಪಟ್ಟು ತುಟಿ ಕಚ್ಚಿಕೊಂಡ. ನಾಗಪ್ಪ ಇವಕ್ಕೆಲ್ಲ ಕಣ್ಣು ಮುಚ್ಚಿದ್ದ : “ಅಡಿimiಟಿಚಿಟ imಠಿಟiಛಿಚಿಣioಟಿs” ಈ ಎರಡೇ ಶಬ್ಧಗಳು ಹಾಗೂ ಅವುಗಳನ್ನು ಉಚ್ಛರಿಸಿದಾಗಿನ ದನಿ ಮನಸ್ಸಿನ ಯಾವಯಾವವೋ ಆಳಗಳನ್ನು ತಟ್ಟಿದಾಗ ಮೇಲೆದ್ದು ಬರುತ್ತಿದ್ದ ಭಯ ಈ ಮೊದಲು ಎಂದೆಂದೂ ಅನುಭವಕ್ಕೆ ಬಂದಿರದಂಥದ್ದು. ದಸ್ತೂರನ ಮುಂದಿನ ಮಾತಂತೂ ಆಡಿದ ದಸ್ತೂರನೇ ಬಹಳ ಖುಶಿಪಡುವಂತಹದಾಯಿತು : ಮಾತು ಹೊಳೆಯುತ್ತಲೇ ಖಿhis beeಡಿ is ಜಚಿmಟಿ gooಜ_ ಎಂದು ಬಿಯರನ್ನು ಹೊಗಳಿದಂತೆ ನಟಿಸಿ, ಫಿರೋಜನ ಕಡೆಗೊಮ್ಮೆ ನೋಡಿ : +“ನಾನು ಈಗ ಹೇಳುವ ಮಾತುಗಳನ್ನಂತೂ ನೀವೊಬ್ಬರೇ ರುಜುವಾತುಗೊಳಿಸಬಲ್ಲಿರಿ. ಅವುಗಳಿಂದ ನಿಮಗೇ ಮನದಟ್ಟಾದೀತು_ನಾವು ನಿಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲು ಹೊರಟಿಲ್ಲ ಎನ್ನುವದು, ಹಾಗೇ. ನಮ್ಮ ಲಕ್ಷ್ಯಕ್ಕೆ ಬಂದ ಸಂಗತಿಗಳ ಬಗ್ಗೆ ನಮಗೆ ಅನ್ನಿಸುತ್ತಿದ್ದ ಕಾಳಜಿಯ ಅರ್ಥವೂ ನಿಮಗಾದೀತು.” ಎಂದ. ತಾನು ಹೇಳುತ್ತಿದ್ದ ಮುದ್ದೆಯನ್ನು ಸ್ಪಷ್ಟಪಡಿಸುವವನಹಾಗೆ, ಕ್ಷಣ ಕಾಲ ತಡೆದು_I meಚಿಟಿ….We ಜiಜ ಟಿoಣ go ಚಿಜಿಣeಡಿ ಣhe ಜಿಚಿಛಿಣs_ಣheಥಿ ಛಿಚಿme ಣo ouಡಿ ಟಿoಣiಛಿe,” ಎಂದ. +ನಾಗಪ್ಪನಿಗೆ ಈ ಎರಡು ಸಂಗತಿಗಳ ನಡುವಿನ ಸೂಕ್ಷ್ಮ ಅಂತರವನ್ನು ಅರಿಯುವ ತಾಳ್ಮೆಯಿರಲಿಲ್ಲ. +ದಸ್ತೂರ್ ಬಿಯರನ್ನು ಹೀರುತ್ತ ತಾನು ಈಗ ಎಸೆಯುತ್ತಿದ್ದದ್ದು ತುಂಬ ಪ್ರತಾಪಶಾಲಿಯಾದ ಅಸ್ತ್ರ ಎಂಬುದಕ್ಕೆ ಎಲ್ಲರ ಗಮನ ಸೆಳೆಯುವಂತೆ ಅವರ ಕಡೆಗೆ ನೋಡಿ, ವಿನಾಕಾರಣ ಗಂಟಲು ಸಡಿಲಿಸಿ : +“Some hoಡಿಡಿibಟe iಟಿಛಿiಜeಟಿಣ iಟಿ ಥಿouಡಿ ಛಿhiಟಜhooಜ mಚಿಜe ಥಿou gಡಿoತಿ uಟಿಜeಡಿ ಣhe susಠಿiಛಿioಟಿ ಣhಚಿಣ ಥಿou ತಿeಡಿe ಚಿ ಠಿಚಿಡಿಣ oಜಿ ಚಿ suiಛಿiಜe ಠಿಚಿಛಿಣ_ಚಿಟbeiಣ misಛಿಚಿಡಿಡಿieಜ_oಜಿ ಥಿouಡಿ ಠಿಚಿಡಿeಟಿಣs….” +ರೀನಾ ರೀನಾ ರೀನಾ ! ಯಾಕೆ ಯಾಕೆ ಈ ವಿಶ್ವಾಸಘಾತ….?ತೀರ ವೈಯಕ್ತಿಕವಾದ ತನ್ನ ಯಾತನೆಯ ಗುಟ್ಟನ್ನು ರೀನಾಳಿಗೆ ಬಿಚ್ಚಬೇಕಾದ ಆ ಸನ್ನಿವೇಶವನ್ನು ನೆನೆಯುವುದು ಕೂಡ ನಾಗಪ್ಪನಿಗೆ ಅಸಾಧ್ಯವಾಯಿತು. ಸುಖದ ಪರಾಕಾಷ್ಠೆಯ ಸ್ಥಿತಿಯಲ್ಲೇ ತೀವ್ರವಾದ ನೋವನ್ನು ತಿಂದ ಗಳಿಗೆ ಅದು : ಇಷ್ಟೊಂದು ಸುಖವನ್ನು ಇನ್ನಾವ ಗಂಡಸಿನಿಂದಲೂ ಈವರೆಗೆ ಪಡೆದಿರಲಿಲ್ಲ ಎನ್ನುವುದನ್ನು ರೀನಾ ತನ್ನ ಅಪ್ಪುಗೆಯಲ್ಲಿ ನರಳುತ್ತ ಒಪ್ಪಿಕೊಂಡು, ಉಳಿದೆಲ್ಲ ಬಟ್ಟೆ ಕಳಚಿಯೂ ಅಂಗಿ ಕಳಚಲು ತಾನು ನಾಚಿದ್ದನ್ನು ನೆನಪು ಮಾಡಿಕೊಟ್ಟಾಗ ರೀನಾಳ ಅಲೌಕಿಕ ದೇಹವು ಕೊಟ್ಟ ಆನಂದದ ಅಮಲಿನಲ್ಲಿದ್ದ ನಾಗಪ್ಪ ವಿಷಾದ ತುಂಬಿದ ನಗು ನಗುತ್ತ ಹೇಳಿದ್ದ : “I hiಜe ಣheಡಿe ಚಿ gಡಿeಚಿಣ seಛಿಡಿeಣ oಜಿ mಥಿ ಛಿhiಟಜhooಜ boಣh ಠಿಚಿiಟಿಜಿuಟ ಚಿಟಿಜ shಚಿmeಜಿuಟ, ಆದರೆ ಏನೆಂದು ಸ್ಪಷ್ಟಪಡಿಸಿರಲಿಲ್ಲ. ಚಿನ್ನಾಟದ ಭರದಲ್ಲಿ ಬೆತ್ತಲೆ ಎದೆಯನ್ನು ಹುಡುಕುತ್ತ ಬನಿಯನ್ನಿನ ಕೆಳಗೆ ಹೊರಟ ರೀನಾಳ ಕೈಯನ್ನು ಅತ್ಯಂತ ಖುಶಿಯಿಂದಲೇ ಹೊರಗೆ ತೆಗೆದಿದ್ದ. +“ಹಂಚಿಕೆ_ಬಟ್ಟೆಗೆ ಬೆಂಕಿಯಿಕ್ಕಿ ಕೊಲ್ಲುವುದಾಗಿತ್ತೇ ?” +ಎಲ್ಲಿಂದಲೋ ತೂರಿಬಂದಂತೆ ಬಂದು ಕಿವಿಹೊಕ್ಕ ಈ ಪ್ರಶ್ನೆಯಿಂದ ನಾಗಪ್ಪನ ಮೋರೆ ಎಷ್ಟೊಂದು ಬಿಳಿಚಿಕೊಂಡಿತ್ತೆಂದರೆ ಅದನ್ನು ಕೇಳಿದ ದಸ್ತೂರನಿಗೇ ಒಂದು ಬಗೆಯ ಭಯವಾಯಿತು. +“ಕೊಲ್ಲುವ ಕಲೆಯಲ್ಲಿ ನಿಮ್ಮದು ಪಳಗಿದ ಕೈಯೆಂದು ತೋರುತ್ತದೆ, ಮಿಸ್ಟರ್ ದಸ್ತೂರ್. ಇಂತಹ ಮನೋವೈಜ್ಞಾನಿಕ ಮಸಲತ್ತುಗಳ ಬಗ್ಗೆ ಕೇಳಿ ಗೊತ್ತಿತ್ತು. ಅವುಗಳಿಗೆ ನಾನೇ ಬಲಿಯಾಗುತ್ತಿದ್ದದ್ದು ಮಾತ್ರ ಇದೇ ಮೊದಲು. ದಯಮಾಡಿ ನನ್ನನ್ನು ಕುಕ್ಕೂಬಾಳನೆಂದು ತಿಳಿಯಬೇಡಿ : ಉive uಠಿ ಣhis bಟಚಿಛಿಞmಚಿiಟ. ಅome ouಣ ತಿiಣh iಣ sಣಡಿಚಿighಣ. ಖಿeಟಟ me_hoತಿ ಛಿಚಿಟಿ I sಚಿve ಥಿouಡಿ ಜಿಡಿieಟಿಜ Phiಡಿoz ?” +ತದೇಕಚಿತ್ತದಿಂದ ಇವನನ್ನು ಆಲಿಸುತ್ತಿದ್ದ ಫಿರೋಜನಿಗೆ ನಾಗಪ್ಪ ತನ್ನ ಹೆಸರನ್ನು ಅಷ್ಟೊಂದು ಹಗುರವಾಗಿ ಎತ್ತಿದ ರೀತಿಯಿಂದ ಸಿಟ್ಟು ಮಸ್ತಕಕ್ಕೇರಬೇಕು. ಆದರೂ ನಿರುಪಾಯನಾದವನ ಹಾಗೆ ಅಸಾಧಾರಣವಾದ ಸಂಯಮ ತೋರಿ ಬಾಯಿ ತೆರೆದಾಗ ದನಿಯಲ್ಲಿಯ ನಡುಕವನ್ನು ಅಡಗಿಸುವದು ಅವನಿಗೆ ಕಷ್ಟಸಾಧ್ಯವಾಯಿತು : +ಇದು ನನ್ನನ್ನು ಉಳಿಸುವ ಪ್ರಶ್ನೆಯಲ್ಲ, ನಾಗ್_ಕಂಪನಿಯನ್ನು ಉಳಿಸುವ ಪ್ರಶ್ನೆ. ಆ‌ಒ‌ಆ ಆಗಿದ್ದರಿಂದ, ಫ್ಯಾಕ್ಟರಿಯ ಮುಖ್ಯ ಅಧಿಕಾರಿಯಾಗಿದ್ದರಿಂದ ಇದಕ್ಕೆಲ್ಲ ನಾನೇ ಜವಾಬ್ದಾರನೆಂಬುದನ್ನು ಪ್ಪಿಕೊಂಡಾಗಲೂ….” +“ಯಾವುದಕ್ಕೆಲ್ಲ ನೀನು ಜವಾಬ್ದಾರ, ಫಿರೋಜ್ ?” +“ಫ್ಯಾಕ್ಟರಿಯಲ್ಲಿ ಇಂಥ ಸಂಗತಿಗಳು ನಡೆಯುತ್ತವೆ ಎನ್ನುವುದಕ್ಕೆ….” +“ಎಂಥ ಸಂಗತಿಗಳು ? ನೀನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡುತ್ತಿದ್ದದ್ದು ನನಗೆ ಗೊತ್ತಿದೆಯೆಂದು ಗ್ರಹೀತ ಹಿಡಿಯುವದು ಸಾಧುವಲ್ಲ, ಫಿರೋಜ್. ಎಂಥ ಸಂಗತಿಗಳನ್ನು ನಿರ್ದೇಶಿಸಿ ಮಾತನಾಡುತ್ತಿದ್ದೀ ಎನ್ನುವದು ಸ್ಪಷ್ಟವಾಗಲಿ….” +ಫಿರೋಜ್, ದಸ್ತೂರ್ ಹಾಗೂ ಪಟೇಲರ ಕಡೆಗೆ ನೋಡಿದ. ಹೇಳಲು ಅಡ್ಡಿಯಿಲ್ಲ ಎನ್ನುವ ಇಷಾರೆ ಇಬ್ಬರಿಂದಲೂ ಸಿಕ್ಕಮೇಲೆ ಫಿರೋಜ್ ಹೇಳಲು ಉದ್ಯುಕ್ತನಾದ. ನಾಗಪ್ಪನ ಮೋರೆಗೆ ಮತ್ತೆ ಕಳೆಯೇರಿತು. ಬಹಳ ಹೊತ್ತಿನವರೆಗೆ ಮುಟ್ಟಿರದ ಬಿಯರ್-ಮಗ್ ಎತ್ತಿಕೊಂಡು ಬಿಯರ್ ಹೀರಿದ. ಆಗಿನಿಂದಲೂ, ಈ ಎಲ್ಲದಕ್ಕೆ ಕಾರಣನಾಗಿಯೂ ಅದರ ಹೊರಗೇ ಉಳಿದ ಫಿರೋಜನನ್ನು ನೇರವಾಗಿ ವಿಚಾರಣೆಗೆ ಒಳಪಡಿಸುವ ಈ ಸಂಧಿಯು ನಾಗಪ್ಪನ_ತಾತ್ಕಾಲಿಕವಾಗಿಯೇ ಆಗಲೊಲ್ಲದೇಕೆ_ಉತ್ಸಾಹಕ್ಕೆ ಕಾರಣವಾಯಿತು : +ಫಿರೋಜ್ : “ಙou ಞಟಿoತಿ ಚಿbouಣ ಣhe ಠಿiಟಜಿeಡಿಚಿge oಜಿ….” +ನಾಗಪ್ಪ : ಗೊತ್ತಿಲ್ಲವೆಂದು ತಿಳಿಯುವದೇ ಲೇಸೇನೋ….” +ಫಿರೋಜ್ : “ಓಕೇ. ಹತ್ತು ಟನ್ನಿನಷ್ಟು ಕೆಮಿಕಲ್ ನಂಬರ್ ೩೮೯….” +ನಾಗಪ್ಪ : ಕಳವಿಗೆ ಹೋದದ್ದು ೩೮೯ ಮಾತ್ರ ಎಂದು ನನಗನ್ನಿಸುವದಿಲ್ಲ….” +ನಾಗಪ್ಪನ ಈ ಮಾತಿಗೆ ಪಟೇಲ್, ದಸ್ತೂರ್ ಇಬ್ಬರೂ ದಿಗಿಲುಗೊಂಡು, ಈ ಸಂಗತಿ ತಮಗೆ ಗೊತ್ತಿರಲಿಲ್ಲ ಎನ್ನುವ ಹಾಗೆ ಫಿರೋಜನತ್ತ ನೋಡಿದರು. ಅವನು ನಿರುಪಾಯನಾದವನ ಹಾಗೆ : +“ಙes_ಚಿಟಿಜ ಚಿ ಟಚಿಡಿge qಥಿಚಿಟಿಣiಣಥಿ oಜಿ ೩೮೭.” +ಇದನ್ನು ಕೇಳಿದ್ದೇ ತಡ ದಸ್ತೂರ್ ಗಾಬರಿ ತುಂಬಿದ ದನಿಯಲ್ಲಿ_ ಊoತಿ muಛಿh ? ಎಂದು ಕೇಳಿದ್ದಕ್ಕೆ ಫಿರೋಜನಿಂದ ಉತ್ತರ ಬರುವ ಮೊದಲೇ ನಾಗಪ್ಪನತ್ತ ತಿರುಗಿ, “ಙou ಜiಜ ಟಿoಣ meಟಿಣioಟಿ ಣhis iಟಿ ಥಿouಡಿ ಟeಣಣeಡಿ” ಎಂದ. +“ಆ ಪತ್ರ ನಾನು ಬರೆದದ್ದಲ್ಲ, ಮಿಸ್ಟರ್ ದಸ್ತೂರ್, ನಾನದನ್ನು ಓದಿಲ್ಲಕೂಡ. ಅದೆಲ್ಲ ಮುಖ್ಯವಲ್ಲ. ನೀವು ಚಿಂತಿಸಬೇಕಾದ ಮಹತ್ವದ ಸಂಗತಿ ‘೩೮೭ ಚಿಛಿಣuಚಿಟ useಡಿs’ ಟiಛಿeಟಿಛಿe’ ಪ್ರಕಾರ ಪರದೇಶದಿಂದ ಆಮದು ಮಾಡಿದ ಕೆಮಿಕಲ್ ಎಂಬುದು. ಕಳ್ಳಸಂತೆಯಲ್ಲಿ ಮಾರುವುದುಳಿಯಲಿ, ಅದನ್ನು ಇನ್ನೊಬ್ಬರಿಗೆ ಮಾರುವದೇ ದೊಡ್ಡ ಗುನ್ನೆಯೆಂಬುದು ನಿಮಗೆ ಗೊತ್ತಿರಬೇಕು….” +ಇದು ಹೌದೆ? ಎನ್ನುವ ದೃಷ್ಟಿಯಿಂದ ದಸ್ತೂರ್ ಫಿರೋಜನತ್ತ ನೋಡಿದ, ಅವನ ಮೋರೆಯ ಮೇಲೆ ಸ್ಪಷ್ಟವಾಗಿ ಮೂಡಿದ ಅಂಜಿಕೆಯೇ ಹೌದೆಂದು ಉತ್ತರ ಕೊಟ್ಟಿತು. ದಸ್ತೂರ್ ತನಗಾದ ತೀವ್ರ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡದೇನೆ ಬಾತ್‌ರೂಮಿಗೆ ಹೋಗುವ ನೆಪ ಮಾಡಿ ಅಲ್ಲಿಂದ ಎದ್ದ : ಹೋಗುವ ಮೊದಲು_“Pಟeಚಿse ಡಿeಚಿಜ ಣhis….I ತಿiಟಟ be bಚಿಛಿಞ sooಟಿ” _ಎನ್ನುತ್ತ ಚೆಂದವಾಗಿ ಟೈಪ್ ಮಾಡಿದ ರಿಪೋರ್ಟನ್ನು ಕೈಗೆ ಕೊಟ್ಟ. ಸನ್ನಿವೇಶ ತೆಗೆದುಕೊಂಡ ಈ ಹೊಸ ತಿರುವು ನಾಗಪ್ಪನಿಗೆ ಹುರುಪು ಕೊಟ್ಟಿತು. ಹೊಟ್ಟೆ ಚೆನ್ನಾಗಿ ಹಸಿದಿದೆ ಎಂಬುದನ್ನು ಈಗ ಅರಿತವನಂತೆ ಪ್ಲೇಟುಗಳಲ್ಲಿ ತಣ್ಣಗಾಗುತ್ತಿದ್ದ ಕಬಾಬ್‌ಗಳಲ್ಲಿ ಒಂದನ್ನೆತ್ತಿ, ಕೈಗಡಿಯಾರ ನೋಡಿಕೊಂಡು ಹುಬ್ಬೇರಿಸಿದ. ಆಗಲೇ ೧೨ಗಂಟೆ ದಾಟಿತ್ತು. ಫಿರೋಜ್ ಇಂತಹ ಸಮಯಗಳಲ್ಲೆಲ್ಲ ಮೊರೆಹೋಗುತ್ತಿದ್ದ ಪೈಪ್ ಕೈಗೆತ್ತಿಕೊಂಡು ತಂಬಾಕು ತುಂಬಹತ್ತಿದ್ದ_ ಆಗಿನಿಂದಲೂ ಅದನ್ನು ತುಂಬದೇ ಇದ್ದದ್ದೇ ಇದೀಗ ಬಹಿರಂಗವಾದದ್ದಕ್ಕೆ ಕಾರಣವಾಗಿತ್ತು ಎಂಬಂತೆ ! +ಪಟೇಲ ದಸ್ತೂರ್ ಬಿಟ್ಟುಹೋದ ಫೈಲು ನೋಡುವ ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡಾಗ ಅದರೊಳಗಿಂದ ಎರಡು ಫೋಟೋಗಳು ಜಾರಿ ಕೆಳಗೆ ಬಿದ್ದವು. ಅವನ ಈ ಅಧಿಕಪ್ರಸಂಗಕ್ಕೆ ಬೇಸರಪಟ್ಟ ಫಿರೋಜ್ ನಾಗಪ್ಪ ನೋಡುವ ಮೊದಲೇ ಅವಸರ ಅವಸರವಾಗಿ ಫೋಟೋಗಳನ್ನು ನೆಲದಿಂದ ಎತ್ತಿ ಫೈಲಿನಲ್ಲಿ ಇಡುತ್ತ_ನೀನು ಕೂತಲ್ಲೇ ಕುಂಡೆ ಗಟ್ಟಿಮಾಡಿ ಕೂಕುಕೋ ಎನ್ನುವವನ ಹಾಗೆ ಅವುಡುಗಚ್ಚಿ_ “ Pಟeಚಿse, ಜಿoಡಿ heಚಿveಟಿs sಚಿಞe” ಎಂದ. ನಾಗಪ್ಪ ಮಾತ್ರ ಇದಾವುಗಳ ಕಡೆಗೆ ಲಕ್ಷ್ಯ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಫಿರೋಜನ ಫಜೀತಿ ಮಾಡುವ ಹಗಲುಗನಸು ಕಾಣುತ್ತ ದಸ್ತೂರ್ ತನ್ನ ಸ್ಥಾನಕ್ಕೆ ಮರಳುವುದರ ಹಾದಿ ಕಾಯುತ್ತಿದ್ದ. ದಸ್ತೂರ್ ಬಂದ. ಬಂದವನೇ, ತನ್ನ ಫೈಲು ಜಾಗದಲ್ಲಿ ಇಲ್ಲದ್ದನ್ನು ಗಮನಿಸಿ_ಅದನ್ನು ತೆಗೆದದ್ದು ಯಾರು ಎಂಬುದು ತನಗೆ ಗೊತ್ತಿದೆ ಎನ್ನುವಂತೆ ಪಟೇಲನ ಕಡೆಗೆ ನೋಡಿ ಬೇಸರ ವ್ಯಕ್ತಪಡಿಸಿದ. ಈ ಎಲ್ಲ ನಾಟಕ ಮುಂದೆ ಬರುವ ಪೇಚಿನ ಪ್ರಶ್ನೆಗೆ ಹಿನ್ನೆಲೆಯಾಗಿತ್ತು ಎನ್ನುವುದರ ಕಲ್ಪನೆ ಕೂಡ, ನಿರಾತಂಕವಾಗಿ ರಿಪೋರ್ಟು ಓದಲು ಮೊದಲು ಮಾಡಿದ ನಾಗಪ್ಪನಿಗೆ, ಇರುವದು ಶಕ್ಯವಿರಲಿಲ್ಲ. ಆದರೆ ರಿಪೋರ್ಟು ಓದುತ್ತಹೋದಂತೆ ದೊಡ್ಡದಾಗುತ್ತಹೋದ ಕಣ್ಣುಗಳು ಸಣ್ಣವಾಗದಾದವು. ಮೈ ಸಣ್ಣಗೆ ನಡುಗುತ್ತ ಬೆವರಹತ್ತಿತು. ದೇವರೇ, ಬಾನಾವಳಿಯ ಔಷಧದಂಗಡಿಯಿಂದ ಬಾರ್ಬಿಚ್ಯುರೇಟ್ ಗುಳಿಗೆಗಳನ್ನು ಕೊಳ್ಳುವ ಧೈರ್ಯವಾಗದೇ ಅಥವಾ ಕೊಳ್ಳುವ ಧೈರ್ಯವಾಗಿಯೂ ಅವುಗಳನ್ನು ನುಂಗುವ ಧೈರ್ಯವಾಗದೇ ಬದುಕಿ ಉಳಿದರೆ_ನಿನ್ನಾಣೆ ಸ್ಟ್ಯಾಂಡ್ ಬುಕ್-ಸ್ಟಾಲಿನಲ್ಲಿ ಸೇಲ್ಸ್‌ಮನ್ನನಾಗುತ್ತೇನೆ. ಇಲ್ಲ ಖೇತವಾಡಿಯ ಗಲ್ಲಿಯೊಂದರಲ್ಲಿ ಪಾಗಡಿ ಕೊಟ್ಟಾದರೂ ನ್ಯೂಸ್‌ಪೇಪರ್ ಮಾರುವ ಅಂಗಡಿ ತೆರೆಯುತ್ತೇನೆ….ಕೋಳೀಗಿರಿಯಣ್ಣನ ಕೇರಿಯ ಸಾಲೆಯಲ್ಲಿ ಮಾಸ್ತರನಾಗುತ್ತೇನೆ. ಆದರೆ ಇದರಿಂದೊಮ್ಮೆ ಪಾರುಮಾಡು : +“Whಚಿಣ ಜo ಥಿou ತಿಚಿಟಿಣ me ಣo ಜo ತಿiಣh ಣhis ಡಿeಠಿoಡಿಣ. ಒಡಿ.ಆಚಿsಣuಡಿ?” +uಟಿಜeಜಿiಟಿeಜ‌ಇದ್ದಕ್ಕಿದ್ದಂತೆ ತನ್ನ ದನಿಯಲ್ಲಿ ಅಳುಬುರುಕತನ ಸೇರಿಕೊಂಡುಬಿಟ್ಟಿದೆ ಎಂಬುದನ್ನು ಗಮನಿಸಿಯೂ ಅದರ ಬಗ್ಗೆ ಏನೂ ಮಾಡಲಾಗದವನ ಹಾಗೆ ಕೈ ಚೆಲ್ಲಿ ಕೂತ : ಈ ದಸ್ತೂರ್ ಇಂಥದ್ದರಲ್ಲೆಲ್ಲ ಪಳಗಿದ ಕೈಯೆಂದು ತೋರುತ್ತದೆ. ಆಗಿನಿಂದಲೂ ತನಿಖೆ ನಡೆಸಿದ ರೀತಿ ನೋಡಿದರೇನೇ ಗೊತ್ತಾಗುತ್ತದೆ_ಇದೆಲ್ಲ ತನ್ನನ್ನು ಮಾನಸಿಕವಾಗಿ ಮುರಿಯುವ ಮಸಲತ್ತು : ಒಮ್ಮೆ ತಾನು ಗೆದ್ದಂತೆ, ಮರುಗಳಿಗೆ ಅನಿರೀಕ್ಷಿತವಾದ ಪೇಚಿಗೆ ಸಿಕ್ಕಿ ತಾನೇ ಸೋತಂತೆ ನಟಿಸುವ ಈ ಕದೀಮ ಬಲು ಧೂರ್ತ. ಅವನ ವ್ಯವಸಾಯವೇ ಇದೆಂದು ತೋರುತ್ತದೆ. ಅಳುಕುತ್ತಲೇ ನಾಗಪ್ಪ ದಸ್ತೂರನ ಕಡೆಗೆ ನೋಡಿದ :ತನ್ನ ಮೇಲೇ ದೃಷ್ಟಿ ನೆಟ್ಟು ಕುಳಿತವನ ಕಣ್ಣುಗಳಲ್ಲಿ ಈವರೆಗೂ ಕಂಡಿರದ_ಒಂದು ಬಗೆಯ ಶ್ವಾಪದ ದೃಷ್ಟಿಯ_ತೀಕ್ಷ್ಣತೆ ಬಂದಿತ್ತು. ಮಾಟ ಮಾಡುವ ಬಲ ಬಂದಿತ್ತು : ತನ್ನನ್ನು ಸಪಾಟು ಮಾಡುವ ಸಿದ್ಧತೆಯ ಪ್ರತಿ ವಿವರವನ್ನು ತಾಲೀಮು ಮಾಡಿಯೇ ಬಂದ ತಂಡವಿದು ! ದಸ್ತೂರನ ಉತ್ತರದ ಹಾದಿ ಕಾಯುತ್ತಿದ್ದಾಗ ಕೆಲಹೊತ್ತಿನ ಮೊದಲಷ್ಟೇ ಪಟೇಲನ ಕೈಯಿಂದ ಜಾರಿ ಬಿದ್ದ ಫೊಟೋಗಳಲ್ಲಿಯ ಒಂದರಲ್ಲಿ ಹೈದರಾಬಾದ್ ವಿಮಾನ-ನಿಲ್ದಾಣದಲ್ಲಿ ತನ್ನನ್ನು ಕಂಡು ಮಾತನಾಡಿಸಿದ ಕಪ್ಪು ಕನ್ನಡಕ-ಧಾರಿಯಾದ ರೆಡ್ಡಿಯನ್ನು ಕಂಡಂತಿತ್ತು ಎಂಬುದು ಈಗ ಅವನ ನೆನಪಿಗೆ ಬಂದು ದಸ್ತೂರನನ್ನು ಇದಿರಿಸಿದ ಕಣ್ಣುಗಳು ದಿಗಿಲಿನಿಂದ ಮತ್ತೆ ದೊಡ್ಡವಾಗುತ್ತಿರುವಾಗ ದಸ್ತೂರ್ ಅಪ್ಪಣೆ ಮಾಡಿದ : +“Sigಟಿ ಣhಚಿಣ ಡಿeಠಿoಡಿಣ, ಒಡಿ. ಓಚಿgಟಿಚಿಣh. ಊeಡಿe is ಣhe ಠಿeಟಿ.” +ದಸ್ತೂರನಿತ್ತ ಆಜ್ಞೆ ನಾಗಪ್ಪ ಈ ಮೊದಲೇ ಊಹಿಸಿಕೊಂಡದ್ದೇ ಆಗಿತ್ತಾದರೂ ನಿಷ್ಠುರವಾದ ಧ್ವನಿಯಲ್ಲಿ, ಖಚಿತವಾದ ಮಾತುಗಳಲ್ಲಿ ಅದು ಮೂಡಿಬಂದಾಗ ನಾಗಪ್ಪನ ಮೇಲೆ ಎಷ್ಟೊಂದು ಬಲವುಳ್ಳ ಆಘಾತ ಮಾಡಿತ್ತೆಂದರೆ ಕೈಯಲ್ಲಿ ಹಿಡಿದ ಆ ರಿಪೋರ್ಟನ್ನು ದಸ್ತೂರನ ಮೈಮೇಲೆ ಬಿಸಾಕಿದವನೇ ಧಡಕ್ಕನೆ ಕೂತಲ್ಲಿಂದ ಎದ್ದೇ ನಿಂತ : +“ಓo, ಒಡಿ. ಆಚಿsಣuಡಿ. ಐeಣ us ಟಿoಣ ಚಿಛಿಣ ಚಿಟಿ is ಜಿiಟms. ಆ ರಿಪೋರ್ಟಿನ ಮೇಲೆ ನಾನು ಸಹಿ ಮಾಡಲಾರೆ. ಜಗತ್ತಿನಲ್ಲಿಯ ಎಲ್ಲ ಐಶ್ವರ್ಯವನ್ನು ತಂದು ನನ್ನ ಮುಂದೆ ರಾಶಿ ಹಾಕಿದರೂ ಶಕ್ಯವಿಲ್ಲ. ನಾ ಪಡೆದ ತಾಂತ್ರಿಕ ಶಿಕ್ಷಣ ಅಷ್ಟೊಂದು ಧಡ್ಡತನದ ರಿಪೋರ್ಟಿನ ಮೇಲೆ ಸಹಿಮಾಡಲು ಸರ್ವಥಾ ಬಿಡಲಾರದು. ನೀವು ಹೀಗೆ ಬೆದರಿಕೆ ಹಾಕುವಾಗಲಂತೂ ಅಲ್ಲ, Iಜಿ ಥಿou ಚಿಡಿe ಚಿmeಟಿಚಿbಟe ಜಿoಡಿ ಡಿಚಿಣioಟಿಚಿಟ ಜisಛಿussioಟಿ, I ಚಿm ಠಿಡಿeಠಿಚಿಡಿeಜ ಣo ಜisಛಿuss oಣheಡಿ meಣhoಜs oಜಿ sಚಿviಟಿg Phiಡಿoz….” +“Sಣoಠಿ ಣhಚಿಣ ಟಿoಟಿseಟಿse. I hಚಿve heಚಿಡಿಜ eಟಿough oಜಿ iಣ…. ಮೊದಲು ನಿನ್ನನ್ನು ಉಳಿಸಿಕೋ. ಬೋಮೀ, ಒಂದು ಗಂಟೆಗೆ ಊಟದ ಅಪಾಂಯ್ಟಮೆಂಟ್ ಇದೆ ಎಂಬುದನ್ನು ಮರೆಯಬೇಡ.” ಫಿರೋಜ್ ಈ ರೀತಿ ಗುಡುಗಿದ್ದನ್ನು ಬಹಳ ದಿನಗಳಿಂದ ಕೇಳಿರದ ನಾಗಪ್ಪನ ಮೈಮೇಲೆ ಮುಳ್ಳು ನಿಂತವು. ನಿರ್ವಿಣ್ಣನಾಗಿ ಮತ್ತೆ ಕೂತ. +ದಸ್ತೂರ್ : ಆ ರಿಪೋರ್ಟಿನ ಮೇಲೆ ಸಹಿ ಮಾಡುವದು ಧಡ್ಡತನವೆಂದು ಯಾಕೆ ತಿಳಿಯುತ್ತೀರಿ ?” +ನಾಗಪ್ಪ : “ಅಲ್ಲದೇ ಏನು ಮತ್ತೆ ! ಯಾಕೆ ಎಂಬುದು ಫಿರೋಜನಿಗೂ ಗೊತ್ತಿಲ್ಲದೇ ಇಲ್ಲ. ಕೆಮಿಕಲ್ ೩೮೭_ಇದು ಅನ್‌ಸೆಚ್ಯುರೇಟೆಡ್ ಆಸಿಡ್. ನೀವು ಸಹಿ ಮಾಡಲು ಆದೇಶವಿತ್ತ ರಿಪೋರ್ಟಿನಲ್ಲಿ ಸೂಚಿಸಲ್ಪಟ್ಟ ಸರಕಿನ ಉತ್ಪಾದನೆಗೆ ಎಳ್ಳಷ್ಟೂ ಕೆಲಸಕ್ಕೆ ಬಾರದ್ದು : ಪೆರೋಕ್ಸೈಡ್ ಕೆಟೆಲಿಸ್ಟ್‌ದ ಉತ್ಪಾದನೆಗೆ ಬೇಕಾಗುವ ಥಲೇಟ್ ಪ್ಲಾಸ್ಟೀಸೈಝರಿನಲ್ಲಿ ಇದರ ಉಪಯೋಗ ಶಕ್ಯವಿಲ್ಲ. ಬೆಂಕಿ ಬಿದ್ದ ವಿಭಾಗಕ್ಕೂ ಇದಕ್ಕೂ ಇಂಥ ಬಾದರಾಯಣ ಸಂಬಂಧವನ್ನಾದರೂ ಜೋಡಿಸಿ, ಆ ಬೆಂಕಿಯಲ್ಲಿ ಈ ಮಾಲು ಸುಟ್ಟುಹೋಗಿದೆಯೆಂದು ತೋರಿಸಲು ಈ ರಿಪೋರ್ಟಿನ ಆಧಾರ ಪಡೆಯುವ ಹುನ್ನಾರವನ್ನು ಕಲ್ಪಿಸಿದ ತಲೆ ಬಹಳ ಧೂರ್ತತನದ್ದು. ಆದರೆ ಕೆಮಿಸ್ಟ್ರಿಯ ಗಂಧ-ಗಾಳಿಯಿಲ್ಲದ್ದು. ೩೮೭ ಆಮದು ಆದದ್ದು ಈ ಕೆಲಸಕ್ಕಾಗಿ ಅಲ್ಲವೇ ಅಲ್ಲ. ಅದರ ಉಪಯೋಗ ಪೋಲೀ‌ಎಸ್ಟರ್ ಉತ್ಪಾದನೆಯ ಮೇಲೆ ನಾನು ಹಾಗೂ ಇನ್ನಿಬ್ಬರು ಸಂಗಡಿಗರು ಕೂಡಿ ಸಿದ್ಧಗೊಳಿಸಿದ_ನಾನು ತುಂಬ ಅಭಿಮಾನಪಟ್ಟುಕೊಂಡ_ಪ್ರಾಜೆಕ್ಟ್-ರಿಪೋರ್ಟಿನಲ್ಲಿ ವಿವರಿಸಲ್ಪಟ್ಟಿದೆ. ಅದರ ಪ್ರತಿ ಫಿರೋಜನ ಹತ್ತಿರ ಇದೆಯೋ ಇಲ್ಲವೋ ನಾನರಿಯೆ. ಇದ್ದಿದ್ದರೆ ಹೊಚ್ಚಹೊಸ ಸರಕಿನ ಉತ್ಪಾದನೆಯನ್ನು ಸಮರ್ಥಿಸುವ ಪ್ರಾಜೆಕ್ಟ್-ರಿಪೋರ್ಟ್ ಹೇಗೆ ಇರುತ್ತದೆ_ಇರಬೇಕು ಎನ್ನುವುದಾದರೂ ಗೊತ್ತಾಗುತ್ತಿತ್ತು. ನೀವು ಈಗ ತೋರಿಸಿದ ರಿಪೋರ್ಟಿನ ಧಡ್ಡತನಕ್ಕೆ ನನ್ನ ಹೆಸರಿನ ಶಿಕ್ಕಾ ಬೀಳುವುದು ಶಕ್ಯವೇ ಇಲ್ಲ, ಮಿಸ್ಟರ್ ದಸ್ತೂರ್…..ಇಷ್ಟೇ, ನನ್ನ ಈ ಪೋಲೀ‌ಎಸ್ಟರ್ ಪ್ರಾಜೆಕ್ಟ್ ಬೋರ್ಡ್ ಆಫ್ ಡೈರೆಕ್ಟರ್ಸರಿಂದ ಸ್ವೀಕೃತವಾಗಿಯೂ ಅದು ಈವರೆಗೂ ಕಾರ್ಯರೂಪಕ್ಕೇಕೆ ಇಳಿಯಲಿಲ್ಲ ಎನ್ನುವುದರ ಕಾರಣ ಗೊತ್ತಾದದ್ದು ಮಾತ್ರ ಈಗಲೇ ಎನ್ನುವುದನ್ನು ಒಪ್ಪಿಕೊಳ್ಳಬೇಕು….” ನಾಗಪ್ಪನ ಕೊನೆಯ ಮಾತಿನಲ್ಲಿ ಸೇರಿಕೊಂಡ ವ್ಯಂಗ್ಯದಲ್ಲಿ ಅವನು ಬಯಸಿದ ಮೊನಚಿಗಿಂತ ದಸ್ತೂರ್ ಕೆಲಹೊತ್ತಿನ ಮೊದಲಷ್ಟೇ ಮಡಿದ ಸೂಚನೆ ಹುಟ್ಟಿಸಿದ ನಡುಕವೇ ದೊಡ್ಡದಾಗಿತ್ತು. +ನಾಗಪ್ಪ ಹೇಳಿದ ಯಾವ ಮಾತೂ ತನಗೆ ಅನಿರೀಕ್ಷಿತವಾದದ್ದಲ್ಲ ಎಂಬ ಧಾಟಿಯಲ್ಲಿ ದಸ್ತೂರ್ ಹೇಳಿದ : +“ಇದೆಲ್ಲದರ ಬಗ್ಗೆ ನಾವು ವಿಚಾರಮಾಡಲೇ ಇಲ್ಲ, ಮಿಸ್ಟರ್ ನಾಗಾನಾಥ್. ಮೊದಲನೆಯದಾಗಿ, ಈಗ ನೀವು ಸಹಿ ಮಾಡಲಿದ್ದ ರಿಪೋರ್ಟು_ಪೂರಾ ಕೇಳಿಕೊಳ್ಳುವ ಮೊದಲೇ ಹಾಗೆ ಸಿಟ್ಟಿಗೇಳಬೇಡಿ_ನೀವು ಸದ್ಯ ಬರೆದದ್ದೆಂದು ನಾವು ಹೇಳಲೇ ಇಲ್ಲ. ಎಂಟು ವರ್ಷಗಳ ಹಿಂದೆ ಬರೆದದ್ದೆಂದು ತೋರಿಸಿದ್ದೇವೆ. ರಿಪೋರ್ಟಿನ ತಾರೀಖನ್ನು ಈ ರೀತಿ ಬದಲಿಸಿದ್ದು ನಿಮ್ಮ ಲಕ್ಷ್ಯಕ್ಕೆ ಬಂದಿರಲಿಕ್ಕಿಲ್ಲ : ಪ್ರಾಜೆಕ್ಟ್-ರಿಪೋರ್ಟು ಬರೆಯುವ ಅನುಭವ ನಿಮಗೆ ಆಗ ಇದ್ದಿದ್ದರೆ ಆಶ್ಚರ್ಯವಲ್ಲ. ಮೇಲಾಗಿ ನೀವು ಈಗ ಉಲ್ಲೇಖಿಸಿದ ನಿಮ್ಮ ಇನ್ನೊಂದು ರಿಪೋರ್ಟಿಗಿಂತ ಇದು ಬಹಳ ಮುಂಚಿನದೆಂದು ತೋರಿಸಿದ ಹಾಗೂ ಆಗುತ್ತದೆ. ಎರಡನೆಯದಾಗಿ, ಈ ರಿಪೋರ್ಟಿನ ಉದ್ದೇಶ ನೀವು ತಿಳಿದಷ್ಟು ಹಿರಿದಾದ್ದಲ್ಲ_ತೀರ ಪರಿಮಿತವಾದದ್ದು ಹಾಗೂ ತಾತ್ಕಾಲಿಕವಾದದ್ದು. ರಸಾಯನ-ವಿಜ್ಞಾನಗಳ ಸಮಾಧಾನಕ್ಕಾಗಿ ಬರೆದದ್ದಂತೂ ಅಲ್ಲವೇ ಅಲ್ಲ. ಈಗ ಉದ್ಭವಿಸಿದ್ದ ಪೇಚಿಗೆ ಮೂಲಕಾರಣವಾದ ಆಡಿಟ್-ರಿಪೋರ್ಟು ಎತ್ತಿದ ಕೆಲವು ಆಕ್ಷೇಪಣೆಗಳನ್ನು ದೂರಮಾಡುವುದರ ಸಲುವಾಗಿ ಅಷ್ಟೇ. ಬರೇ ಆಡಿಟರರ ಸಮಾಧಾನಕ್ಕಾಗಿ. ಆಶ್ಚರ್ಯಪಡಬೇಡಿ : ರಿಪೋರ್ಟಿನ ಕಲ್ಪನೆಯನ್ನಷ್ಟೇ ಅಲ್ಲ. ಅದರ ಒಕ್ಕಣೆಯನ್ನು ಕೂಡ ಸೂಚಿಸಿದ್ದೇ ಅವರು. ಆಕ್ಷೇಪ ಎತ್ತಿದವರದೇ ಹರಕತ್ತು ಇಲ್ಲದಿದ್ದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ? ರಿಪೋರ್ಟಿನ ಮೇಲೆ ನಿಮ್ಮ ಸಹಿ ಇದ್ದರೆ ಒಳ್ಳೆಯದೆಂದು ಸಲಹೆ ಇತ್ತವರೂ ಅವರೇ. ಮೂರನೆಯದಾಗಿ_ಇದನ್ನು ಹೇಳುತ್ತಿದ್ದದ್ದು ಬರೀ ನಿಮ್ಮ ಸಮಾಧಾನಕ್ಕಾಗಿ : ೩೮೭,೩೮೯_ಇದೆಲ್ಲ ನಿರ್ಧಿಷ್ಟ ರಾಸಾಯನಿಕಗಳ ಹೆಸರುಗಳೇನಲ್ಲವಲ್ಲ ? ಕಂಪನಿಯವರೇ ತಮ್ಮ ಉತ್ಪಾದನೆಗೆ ಸಂಬಂಧಪಟ್ಟ ಗೌಪ್ಯವನ್ನು ಕಾಯ್ದುಕೊಳ್ಳಲು ನಿರ್ಮಿಸಿಕೊಂಡ ಸಂಕೇತಗಳು ತಾನೇ ? ಇವು ಆಗೀಗ ಬದಲಾಗಬಾರದೆಂಬ ನಿಯಮವೇನಾದರೂ ಇದೆಯೇ ? ಇದ್ದರೂ ಯಾರಾದರೂ ಕೈತಪ್ಪಿ ಒಂದರ ಬದಲು…..” +ದಸ್ತೂರನಿಗೆ ಏನು ಸೂಚಿಸಬೇಕಾಗಿದೆ ಎಂಬುದನ್ನು ಊಹಿಸಿಯೇ ದಿಗಿಲುಗೊಂಡ ನಾಗಪ್ಪನ ಬಾಯಿಯಿಂದ ಹೊರಟ_“ಒಥಿ ಉoಜ” ಎಂಬ ಉದ್ಗಾರ ಆಪೇಕ್ಷೆಯನ್ನು ಮೀರಿ ದೊಡ್ಡದಾದಾಗ ದಸ್ತೂರನ ವಾಕ್ಯ ಅರ್ಧಕ್ಕೇ ಉಳಿಯಿತು. ಕರುಳಲ್ಲಿ ಸೇರಿಕೊಂಡ ನಡುಕವನ್ನು ಹೇಗೆ ತಡೆಯುವದೆಂದು ಗೊತ್ತಾಗದೇ ತಬ್ಬಿಬ್ಬಾಗಿ ದಸ್ತೂರನ ಕಡೆಗೇ ನೋಡುತ್ತಿದ್ದ ನಾಗಪ್ಪನ ಕಣ್ಣು ತಿರುಗಿ ಅಗಲವಾಗಹತ್ತಿದವು. ತನಿಖೆಗೆ ಈಗ ಹೊಸತೇ ಒಂದು ತಿರುವು ಕೊಡುವವನ ಹಾಗೆ ದಸ್ತೂರ್ ಫೈಲ್ ತೊಡೆಯ ಮೇಲೆ ತೆಗೆದುಕೊಂಡ. ಬಿಚ್ಚಿದ. ಒಮ್ಮೆ ಅದನ್ನು ನೋಡಿದಂತೆ ಮಾಡಿ ಮತ್ತೆ ಮುಚ್ಚಿದ. ಆಮೇಲೆ ಮಹದ್ಗಾಂಭೀರ್ಯದಲ್ಲಿ ರಾಗವೆಳೆದ : +uಟಿಜeಜಿiಟಿeಜ “ಐooಞ heಡಿe, ಥಿouಟಿg mಚಿಟಿ, I ಛಿಚಿಟಿ eಚಿsiಟಥಿ ಚಿಠಿಠಿಡಿeಛಿiಚಿಣe ಥಿouಡಿ ಠಿಡಿeಜiಛಿಚಿmeಟಿಣ. ಃuಣ ಚಿs ಚಿ sಣuಜeಟಿಣ oಜಿ humಚಿಟಿ ಠಿsಥಿಛಿhoಟogಥಿ ಟeಣ me ಣeಟಟ ಥಿou ಚಿ ಜಿeತಿ ಣhiಟಿgs….” ಹೀಗೆ ಹೇಳಿ ಕಿಸೆಯೊಳಗಿಂದ ತನ್ನ ಹೆಸರಿನ ವಿಸಿಟಿಂಗ್-ಕಾರ್ಡ್ ಒಂದನ್ನು ನಾಗಪ್ಪನ ಕೈಗೆ ಕೊಡುತ್ತ_ ಓoಣ ಣo imಠಿಡಿess uಠಿoಟಿ ಥಿou , buಣ ರಿusಣ ಣo iಟಿಣಡಿoಜuಛಿe mಥಿseಟಜಿ ಠಿಡಿoಠಿeಡಿಟಥಿ. ನಾನು ಒ.ಂ_ ಇಂಗ್ಲೆಂಡಿನ ‘ಸ್ಕೂಲ್-ಆಫ್-ಸೋಶಿಯಾಲಜಿ’ಯಿಂದ_ಇಂಡಸ್ಟ್ರಿಯಲ್ ಸಾಯ್ಕಾಲಜಿ ನನ್ನ ಮುಖ್ಯ ವಿಷಯ. ಮುಂದೆ ಹಾರ್ವಾರ್ಡಿನಿಂದ ಬಿಸಿನೆಸ್-ಮ್ಯಾನೇಜ್‌ಮೆಂಟಿನಲ್ಲಿ ಪೀ.ಎಚ್.ಡಿ, ಈವರೆಗಿನ ನನ್ನ ಮಾತುಕತೆಗೆ ನಾನು ಡಾಕ್ಟರ್ ದಸ್ತೂರ್ ಆಗಿರುವದು ಮುಖ್ಯ ಅಲ್ಲವಾಗಿದ್ದರಿಂದ ಬರೇ ಮಿಸ್ಟರ್ ದಸ್ತೂರ್ ಎಂದು ಪರಿಚಯ ಮಾಡಲು ಫಿರೋಜನಿಗೆ ನಾನೇ ತಿಳಿಸಿದ್ದೆ. ಃಥಿ ಣhe ತಿಚಿಥಿ, ಥಿouಡಿ ಒ‌ಆ ಚಿಟಿಜ I ಚಿಡಿe ಛಿoಟಿಣemಠಿoಡಿಚಿಡಿies. ಇಂಗ್ಲೆಂಡಿನಲ್ಲಿ ಕಲವು ವರ್ಷ ಜೊತೆಗಿದ್ದೆವು ಕೂಡ. ನನಗೀಗ ವಯಸ್ಸು ೫೫. ಕಾಲು ಶತಮಾನಕ್ಕೂ ಮೀರಿ ವಿವಿಧ ದುಡಿಮೆಯ ಕ್ಷೇತ್ರಗಳಲ್ಲಿ ಅನುಭವ. ನಾನು ನಿಮ್ಮ ‘ಬಾಯೋ-ಡೇಟಾ’ ನೋಡಿದ್ದೇನೆ. ಮಿಸ್ಟರ್ ನಾಗಾನಾಥ್. ನೋಡಿ ಬಹಳ ಬಹಳ ಸಂತೋಷಪಟ್ಟಿದ್ದೇನೆ….(ನಾಗಪ್ಪ : ಬಹಳ ಬಹಳ ಸುಳ್ಳಾಡುತ್ತಾನೆ ಈ ಭೆಂಛೋದ್ !) ಯಾರೂ ಅಭಿಮಾನಪಡುವ ಹಾಗಿದೆ ಅದು_ತಲೆದೂಗುವ ಹಾಗಿದೆ. (ನಾ : ನೀನೂ ಈ ನಿನ್ನ ಇಬ್ಬರು ಧೂರ್ತ ಸಂಗಡಿಗರೂ ಈಗ ಬಿಯರಿನ ಭಾರದಿಂದ ತೂಗುತ್ತಿದ್ದ ಹಾಗೆಯೆ ?) ಆದರೆ ಈ ದುಷ್ಟ ಜಗತ್ತಿನಲ್ಲಿ ಇದೆಲ್ಲ ಯಾವ ಕೆಲಸಕ್ಕೂ ಬಾರದ್ದು. ಅಗಾಧವಾದ ವಿದ್ವತ್ತು, ಪಾಂಡಿತ್ಯ,ನಮ್ಮ ನಮ್ಮ ಪ್ರಾವೀಣ್ಯದ ಕ್ಷೇತ್ರಗಳಲ್ಲಿಯ ಸಾಧನೆ ಇವಷ್ಟೇ ಇದ್ದರೆ ಸಾಲದು. (ನಾ : ಉದ್ದುದ್ದ ಮೂಗುಗಳೂ, ದೊಡ್ಡ ದೊಡ್ಡ ಕುಂಡೆಗಳೂ, ದಪ್ಪದಪ್ಪ ತೊಗಲೂ ಇರಬೇಕು. ತಪ್ಪಿದರೆ ಇಂಗ್ಲೆಂಡಿನಿಂದಲೋ ಅಥವಾ ಅಮೇರಿಕೆಯಿಂದಲೋ ಸಾಧ್ಯವಾದರೆ ಎರಡೂ ಕಡೆಗಳಿಂದ ಆಮದು ಮಾಡಿಕೊಂಡ ಬಿರುದಾವಳಿಗಳಂತೂ ಬೇಕೇಬೇಕು. ಹಾಗೂ ಗಲಗಲ ಜೋತಾಡುತ್ತ ಒಣಗಿದ ಗೊರಟುಗಳ ಹಾಗೆ ಶೋಭಿಸುವ ಇವುಗಳನ್ನು ಬೇಕಾದಾಗ ಬೇಕಾದಷ್ಟೇ, ಗಾಳಿಗೆ ತೂರಿ ತೋರಿಸಬೇಕು ! ಇಲ್ಲಿ ನಾವು ವ್ಯವಹರಿಸಬೇಕಾಗಿ ಬರುವಂಥ ಜನ ಒಂದೆರಡು ತರಹದವರೇ !) ಅವರ ಸ್ವಭಾವಗಳಲ್ಲಿ ಎಷ್ಟು ವಿಧ! ಬೆಳವಣಿಗೆಯ ಮಟ್ಟಗಳಲ್ಲಿ, ಕಾರ್ಯಾಸಕ್ತಿಯ ಪ್ರೇರಣೆಗಳಲ್ಲಿ ಎಷ್ಟು ಪರಿ! (ನಾ : ಹೀಗೆ ಸತತವಾಗಿ ಕೊರೆಯುವ ಈ ಒಂದೂ ಮಕ್ಕಳ ಪಿರಿಪಿರಿಯಲ್ಲೇ ಎಷ್ಟೊಂದು ಪರಿ !) ನಾನು ಇಲ್ಲಿ ಬಂದಾಗಿನಿಂದ ಕೂಲಂಕುಷವಾಗಿ ಅವಲೋಕಿಸಿದ್ದೇನೆ. (ನಾ: ಗಿಡುಗನಜಾತಿಯವನಾದದ್ದು ಸಾರ್ಥಕವಾಯಿತು) ನಿಮ್ಮ ವ್ಯಕ್ತಿತ್ವದ ಅನೇಕ ಸ್ತರಗಳನ್ನು ಸ್ಪಷ್ಟವಾಗಿ ಗುರುತಿಸಿದ್ದೇನೆ _ ಆದರೆ ಹಲವು ಮುಖಗಳನ್ನು . (ನಾ :ಈ ವಕ್ರತುಂಡ ಮಹಾಕಾಯನಿಗೆ ಆರತಿಯ ಎತ್ತಿರೇ !)…….ಮೊದಲನೆಯದಾಗಿ ನಿಮ್ಮಲ್ಲಿಯ ಕ್ರಿಯೇಟಿವ್ ಆರ್ಟಿಸ್ಟ್_ ನೀವು ಪ್ರಖ್ಯಾತ ಲೇಖಕರೂ ಅಂತೆ . (ನಾ : ಙou ಚಿಡಿe ತಿeಟಟ iಟಿಜಿoಡಿmeಜ!) ಕ್ರಿಯೇಟಿವ್‌ಇಮ್ಯಾಜಿನೇಷನ್‌ದ ಮುಖಾಂತರ ಇನ್ನೊಬ್ಬರ ಭಾವನೆಗಳನ್ನು ಅನ್ನಿಸಿಕೆಗಳನ್ನು ತಟ್ಟನೆ ಗ್ರಹಿಸಬಲ್ಲಿರಿ ಅರ್ಥ ಮಾಡಿಕೊಳ್ಳಬಲ್ಲಿರಿ ……(ನಾ : ಖಿhಚಿಟಿಞs ಜಿoಡಿ ಣhe ಛಿomಠಿಟimeಟಿಣs…..!) ಆದರೆ ಇದರ ಉಪಯೋಗ ನಿಮಗೆ ನಿಮ್ಮ ಸೃಷ್ಟಿಕಾರ್ಯದಲ್ಲಿ ಆಗುತ್ತಿರಬಹುದೇ ಹೊರತು ನಿತ್ಯ ವ್ಯವಹಾರದಲ್ಲಿ ಅಲ್ಲ ಎನ್ನುವುದನ್ನು ನೀವಿನ್ನೂ ಕಂಡುಕೊಂಡಂತಿಲ್ಲ.ಒoಡಿe oveಡಿ iಣ mಚಿಞes ಥಿou oveಡಿ -seಟಿsiಣive ಚಿಟಿಜ seಟಿಣimeಟಿಣಚಿಟ, ತಿhiಛಿh ಥಿou ಚಿಡಿe. (ನಾ : Shuಣ uಠಿ !) ಎರಡನೆಯದಾಗಿ, ಮೂಲಭೂತವಾದ ಕೆಲವು ಮೌಲ್ಯಗಳಲ್ಲಿ ನಿಮಗೆ ನಂಬಿಕೆ ಇದ್ದಂತಿದೆ. ಅದರ ಜೊತೆಗೇ, ಉಳಿದವರಿಗೂ ಅವುಗಳಲ್ಲಿ ನಂಬಿಕೆ ಇದೆ ಎಂಬ ವಿಶ್ವಾಸ, ಇರಲೇಬೇಕೆಂಬ ಹಟ. ನೀವು ಮೊದಲಿನಿಂದಲೂ ನಮ್ಮೊಡನೆ ನಡೆದುಕೊಂಡ ರೀತಿ ನೋಡಿದರೆ_ ಸತ್ಯ ಹೇಗಾದರೂ ನನ್ನ ಬದಿಗಿದೆ. ಕೊನೆಯಲ್ಲಿ ಗೆಲ್ಲುವದು ಆ ಸತ್ಯವೊಂದೇ’ ಎಂಬ ಪುರಾಣ-ಕಲ್ಪನೆಗೆ ಜೋತುಬಿದ್ದವರ ಹಾಗೆ ತೋರುತ್ತೀರಿ. ವಾಸ್ತವ-ಸಂಗತಿಗಳನ್ನು ಪ್ರಸ್ತುತಗೊಳಿಸಿದರೆ ಸಾಕು_ಸತ್ಯ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತದೆ : ಬೆಳಕಿನಷ್ಟು ಸ್ಪಷ್ಟವಾಗುತ್ತ ನೋಡುವವರ ಕಣ್ಣು ತೆರೆಯಿಸುತ್ತದೆ ಎಂಬ ಮೂಢನಂಬಿಕೆಯ ಆಧಾರದ ಮೇಲೆ, ನೀವು ಅನ್ಯಾಯ ಎಂದು ತಿಳಕೊಂಡದ್ದರ ವಿರುದ್ಧ ವೇಳೆ ಅವೇಳೆಯಲ್ಲಿ ಹೀಗೆ ಸಿಡಿದೇಳುತ್ತೀರಿ : ತಾನೊಬ್ಬ ದೊಡ್ಡ ಬಂಡಾಯಗಾರನೆಂಬ ಸುಳ್ಳು ಜಂಭದಲ್ಲಿ ಓಲಾಡುತ್ತೀರಿ. ಬೆಳಕಿನಷ್ಟು ಸ್ಪಷ್ಟವಾದದ್ದಕ್ಕೆ ಕಣ್ಣು ತೆರೆಯಿಸುವ ಬಲವಿರಬಹುದು. ಮಿಸ್ಟರ್ ನಾಗನಾಥ್. ಆದರೆ ತೆರೆದ ಕಣ್ಣಿನಲ್ಲಿ ಮೂಡಿದ ನೋಟ ಮಾತ್ರ ಆಸಕ್ತಿಬದ್ಧವಾದದ್ದು ; ಅದು ನೋಡುವವನ ಸ್ವಾರ್ಥಕ್ಕೆ ಕಟ್ಟಿಬಿದ್ದದ್ದು ಎನ್ನುವುದರ ಕಲ್ಪನೆಯೂ ನಿಮಗಿಲ್ಲ. I hಚಿve ಚಿ gಡಿeಚಿಣ ಡಿegಚಿಡಿಜ ಜಿoಡಿ ಣhe ಚಿಡಿಣisಣ iಟಿ ಥಿou, ಒಡಿ. ಓಚಿgಟಿಚಿಣh. ಃuಣ iಟಿ mಚಿಣಣeಡಿs ಣhಚಿಣ ಛಿoಟಿಛಿeಡಿಟಿus ಣhe mosಣ ಚಿs ಠಿಡಿoಜಿessioಟಿಚಿಟs, ಥಿou ಚಿಡಿe ಣoo ಟಿಚಿive ಚಿಟಿಜ immಚಿಣuಡಿe. Pಚಿಡಿಜoಟಿ me iಜಿ I ಚಿm bಟuಟಿಣ. ಖಿhe ಠಿಡಿoಜಿessioಟಿಚಿಟ ತಿoಡಿಟಜ is ಟಿoಣ ಚಿ ತಿoಡಿಟಜ oಜಿ ಣಡಿuಣh ಚಿಟಿಜ vಚಿಟues_ಟಿoಣ iಟಿ ಚಿಟಿಥಿ ಛಿಚಿse oಜಿ ಥಿouಡಿ imಚಿgiಟಿಚಿಣioಟಿ_buಣ ಚಿ ತಿoಡಿಟಜ oಜಿ seಟಜಿ iಟಿಣeಡಿesಣs. ಔಜಿ ಛಿouಡಿse, ಣheಡಿe ಚಿಡಿe ಣhe oಡಿgಚಿಟಿisಚಿಣioಟಿಚಿಟ obರಿeಛಿಣives ಚಿಟಿಜ ಣhe oಡಿgಚಿಟಿisಚಿಣioಟಿಚಿಟ sಣಡಿuಛಿಣuಡಿe ಣhಚಿಣ evoಛಿಟves iಟಿ ಣhe ಠಿಡಿoಛಿess oಜಿ iಟಿಣeಡಿಟoಛಿಞiಟಿg ಣhe iಟಿಜiviಜuಚಿಟs ತಿoಡಿಞiಟಿg ಜಿoಡಿ ಣhese obರಿeಛಿಣives iಟಿಣo ಚಿ ಟಿeಣತಿoಡಿಞ oಜಿ iಟಿಣeಡಿಠಿeಡಿsoಟಿಚಿಟ ಡಿeಟಚಿಣioಟಿs ಚಿಟಿಜ ಚಿಟಟ ಣhಚಿಣ buಟಟshiಣ. Soಡಿಡಿಥಿ ಜಿoಡಿ beiಟಿg so ಛಿoಚಿಡಿse. ಃuಣ I ಚಿm suಡಿe ಥಿou ತಿiಟಟ ಚಿgಡಿee ತಿiಣh me ತಿheಟಿ I sಚಿಥಿ ಣhಚಿಣ ಣhe ಠಿಡಿime moveಡಿ oಜಿ ಣhe oಡಿgಚಿಟಿisಚಿಣioಟಿ_ಣhe moಣiveಜಿoಡಿಛಿe ತಿoಡಿಞiಟಿg behiಟಿಜ ಣhe ಜಿಚಿಛಿಚಿಜe oಜಿ iಣs evoಟviಟಿg sಣಡಿuಛಿಣuಡಿe ಚಿಟಿಜ ಚಿಟಟ ಣhಚಿಣ ಜಿouಡಿ-ಟeಣಣeಡಿ ರಿಚಿಡಿgoಟಿ_is ಣheಚಿmbiಣioಟಿ oಜಿ ಣhe iಟಿಜiviಜuಚಿಟs ಣo ಛಿಟimb iಣs ಣಚಿಟಟ ಟಚಿಜಜeಡಿ…. ನಾನು ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎನ್ನುವುದು ಗೊತ್ತಾಗುವುದಿಲ್ಲ ಅಲ್ಲವೇ ?_ಙou ಟooಞ so ಛಿಥಿಟಿiಛಿಚಿಟ ಚಿಟಿಜ boಡಿeಜ. ಆದರೆ ನೀವೂ ಈ ಮೇಲೇರುವ ದುಷ್ಟ ಪಂದ್ಯಾಟಕ್ಕೆ ಹೊರತಾದವರಲ್ಲ ಎಂಬುದನ್ನು ತೋರಿಸಿಕೊಟ್ಟಾಗ ನಿಮ್ಮ ಬೋರ್ಡಮ್ ಇದ್ದಕ್ಕಿದ್ದಂತೆ ಹಾರಿಹೋಗುತ್ತದೆ_ಕಾಳಜಿ ಮಾಡಬೇಡಿ. ಆದರೆ ಇಷ್ಟೇ. ನಿಮ್ಮ ಮಹತ್ವಾಕಾಂಕ್ಷೆಯನ್ನು ಸಾಧಿಸಲು ನೀವು ಆಯ್ದುಕೊಂಡ ಉಪಾಯಗಳು ಮಾತ್ರ ತೀರಾ ಭೋಳೇತನದವು_ಧಡ್ಡತನದವು. ಈಗ ನಡೆದದ್ದಕ್ಕೆಲ್ಲ ಮೂಲಕಾರಣ ಕೂಡ ಈ ಧಡ್ದತನದೇ. ಮೇಲೇರುವ ಹೆಬ್ಬಯಕೆ ಇದ್ದರಷ್ಟೇ ಸಲಾದು. ಮಿಸ್ಟರ್ ನಾಗನಾಥ್. ಬಯಕೆಯ ಜೊತೆ ಯೋಗ್ಯತೆ ಇದ್ದರೂ ಸಾಲದು. ಏಣಿ ಹತ್ತುವ ಚತುರೋಪಾಯಗಳೂ ಗೊತ್ತಿರಬೇಕು…..ಚಿಟಿಜ ಣhಚಿಣ ಡಿequiಡಿes ಚಿ ಠಿoಟiಣiಛಿಚಿಟ miಟಿಜ ತಿhiಛಿh ಥಿou ಜoಟಿ’ಣ hಚಿve. ಓoಣ ಣhಚಿಣ ಥಿou ಚಿಡಿe ಟess ಚಿmbiಣious buಣ ಣhಚಿಣ….Pಟeಚಿse ಜoಟಿ’ಣ ಣಡಿಥಿ ಣo iಟಿಣeಡಿಡಿuಠಿಣ me…. ನೇರವಾಗಿ ಮುದ್ದೆಗೇ ಬಂದುಬಿಡುತ್ತೇನೆ….ಇಷ್ಟು ದೊಡ್ಡ ಪೀಠಿಕೆ ಯಾಕೆ ಹಾಕಿದೆನೆಂದರೆ, ನೀವು ಮಾಡಿಯೇ ಇರದ ಗುನ್ನೆಯಲ್ಲಿ ನಿಮ್ಮನ್ನು ಸಿಕ್ಕಿಸುವ ಬೇತು ನಮ್ಮದಲ್ಲವೇ ಅಲ್ಲ ಎಂಬ ಭರವಸೆ ಈಯುವುದರ ಜೊತೆಗೆ ಗುನ್ನೆಯನ್ನು ನೋಡುವುದರಲ್ಲೇ ನಮ್ಮಿಬ್ಬರಲ್ಲಿರಬಹುದಾದ ದೃಷ್ಟಿ ಭೇದವನ್ನು ಸ್ಪಷ್ಟಪಡಿಸಲು. ಈಗ_ನಮ್ಮ ಲಕ್ಷ್ಯಕ್ಕೆ ಬಂದಿರುವ ಸಂಗತಿಗಳು ಹಾಗೂ ಅವುಗಳ ಆಧಾರದ ಮೇಲೆ ನಿಮ್ಮ ಒಟ್ಟೂ ವ್ಯಕ್ತಿತ್ವದ ಬಗ್ಗೆ ನಾವು ಕಟ್ಟಿದ ಚಿತ್ರವನ್ನು ಈಗ ನಿಮ್ಮ ಕಣ್ಣೆದುರಿಗೆ ಹಿಡಿದೆನೆಂದರೆ ನಿಮಗೆ ತಾನಾಗಿಯೇ ಗೊತ್ತಾಗಿಬಿಡುತ್ತದೆ : ನಾವು ಹೇಳಿದ ರಿಪೋರ್ಟಿನ ಮೇಲೆ ನೀವು ಸಹಿ ಮಾಡೆಯೇ ಮಾಡುತ್ತೀರಿ ಎನ್ನುವುದರಲ್ಲಿ ನಮಗಿಷ್ಟೊಂದು ವಿಶ್ವಾಸ ಯಾಕೆ ಎನ್ನುವುದು. ನಮಗೆ ಭರವಸೆ ಇದ್ದದ್ದು ನೀವು ಸಹಿ ಮಾಡುವುದರಲ್ಲಷ್ಟೇ ಅಲ್ಲ ಮತ್ತೆ. ಸಹಿಯ ತಾರೀಖನ್ನು ಕೂಡ ನಾವು ಹೇಳಿದ ಹಾಗೆ ತೋರಿಸುತ್ತೀರಿ ಎನ್ನುವುದರಲ್ಲೂ. ಯಾಕೆಂದರೆ, ಈ ಚಿತ್ರ ನೋಡಿದ ಕೂಡಲೇ ನೀವಾಗಿಯೇ ಒಪ್ಪಿಕೊಂಡುಬಿಡುತ್ತೀರಿ : ‘ಹೌದು, ನಡೆದದ್ದಕ್ಕೆಲ್ಲ ನಾನೇ ಜವಾಬ್ದಾರನು’ ಎಂದು. ಆಗ_ಈ ಹೊಸ ಜಗತ್ತಿನಲ್ಲಿಯ ಸತ್ಯದ ಹೊಸ ವ್ಯಾಖ್ಯೆಯೇನೆಂಬುದೂ ಗೊತ್ತಾದೀತು : ‘ವಿಸಂಗತಿ ಇಲ್ಲದ್ದು !’ ನೀವು ಕಲ್ಪಿಸಿಕೊಂಡ ಹಾಗೆ, ವಾಸ್ತವ ಸಂಗತಿಗಳ ಅಧಾರದ ಮೇಲೆ ಸತ್ಯ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುವುದಿಲ್ಲ. ಸಿದ್ಧಪಡಿಸಿದ ಚಿತ್ರದ ಮುಖಾಂತರ ಪ್ರಕಟವಾಗುವ ಸತ್ಯ ತನ್ನನ್ನು ಕಟ್ಟಿದ ವಾಸ್ತವ ಸಂಗತಿಗಳಿಗೇ ಹೊಸ ಅರ್ಥ ತಂದುಕೊಡುತ್ತದೆ. ಕೆಲಿಡೋಸ್ಕೋಪಿನ ನಳಿಗೆಯಲ್ಲಿ ಬಿಡಿಬಿಡಿಯಾಗಿ ಗಿಲಿಗಿಲಿಸುವ ಗಾಜಿನ ತುಂಡುಗಳಿಗೆ ಯಾವ ಅರ್ಥವಿದೆ ? ಆದರೂ ನಳಿಗೆಗೆ ತಗಲಿದ ಆಕಸ್ಮಿಕ ಆಘಾತ ಹುಟ್ಟಿಸಿದ ಆಕೃತಿಗೆ ನೋಡುವ ಕಣ್ಣನ್ನು ಸೆರೆಹಿಡಿದು ನಿಲ್ಲಿಸುವ ಬಲ ಬಂದದ್ದು ಪ್ರತ್ಯೇಕವಾಗಿ ನಿರರ್ಥಕವಾದ ಮತ್ತು ನಿಷ್ಪ್ರಯೋಜಕವಾದ ಗಾಜಿನ ತುಂಡುಗಳೇ ಒಂದಕ್ಕೊಂದು ಹೊಂದಿಕೊಂಡಾಗ ಹುಟ್ಟುವ ಚಿತ್ರದ ಸುಸಂಗತಿಯ ಮೂಲಕ_ಅದರ ಅನನ್ಯ ಸಾಂಗತ್ಯದ ಮೂಲಕ. ನಳಿಗೆಯನ್ನು ಇನ್ನೊಮ್ಮೆ ಅಲುಗಾಡಿಸಿದಾಗ ಹುಟ್ಟುವುದು ಇನ್ನೊಂದೇ ಆಕೃತಿ : ಹೊಚ್ಚ ಹೊಸ ದೃಷ್ಟಿಸಂಭ್ರಮ ! ಅದೇ ಗಾಜಿನ ತುಂಡುಗಳು : ಆದರೆ ಹೊಂದಿಕೊಂಡ ರೀತಿ ಬೇರೆ : ತೆರೆದುಕೊಂಡ ಕಾಣ್ಕೆ ಬೇರೆ. ಗಾಜಿನ ತುಂಡುಗಳಿಗೆ ವ್ಯಯಕ್ತಿಕವಾಗಿ ಮಹತ್ವ ಇಲ್ಲ; ಹೊಂದಾಣಿಕೆಗಿದೆ. ಭೌತಿಕ ಪ್ರಪಂಚದ ಕೆಲಿಡೋಸ್ಕೋಪಿನೊಳಗಿನ ಆಕೃತಿವಿನ್ಯಾಸಕ್ಕೆ ಕಾರಣವಾಗುವ ಕೈಯ ಅಲುಗಾಟ. ಕೂಡಿಬರುವ ಹೊಂದಾಣಿಕೆ ಆಕಸ್ಮಿಕವಾದರೆ ನಾನು ಆಗಿನಿಂದಲೂ ನಿರ್ದೇಶಿಸಲು ಪ್ರಯತ್ನಿಸುತ್ತಿದ್ದ ಮಾನವಪ್ರಪಂಚದ ಕೆಲಿಡೋಸ್ಕೋಪಿನಲ್ಲಿ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುವ ಚಾಲನೆ, ಅದು ಕೂಡಿ ತರುವ ಹೊಂದಾಣಿಕೆ_ಇವು ಉದ್ದೇಶಪೂರ್ವಕವಾದವುಗಳು. ಇತಿಹಾಸದಂತಹ ಇತಿಹಾಸ ಪ್ರಕಟಿಸುವ ಸತ್ಯವೇನು ಚಿರಾಯುವಾದದ್ದು ಎಂದು ತಿಳಿಯುವಿರಾ ! ಅದೂ ಕೂಡ ನಡೆದುಹೋದ ಘಟನೆಗಳನ್ನು ಎತ್ತಿಕೊಳ್ಳುವ, ಎತ್ತಿತೋರಿಸುವ ಕೈಬಲವನ್ನೇ ಅವಲಂಬಿಸಿದ್ದಲ್ಲವೇ ? ಹಾಡೇಹಗಲಲ್ಲಿ ಕೊಲೆಯಾದವನು ಹುಟ್ಟಿಯೇ‌ಇರಲಿಲ್ಲವೆಂದು ಸಿದ್ಧಮಾಡಿ ತೋರಿಸುವಷ್ಟರ ಮಟ್ಟಿಗಿನ ಸಾಮರ್ಥ್ಯವುಳ್ಳ ಕೈಯಲ್ಲಿ ಸತ್ಯ ಎಂಥ ಗಟ್ಟಿತನದ ಲೋಹವೆಂದಾಗಬೇಡವೆ ! ರಾಜಕೀಯದ ಗುಟ್ಟೇ ಇಲ್ಲಿದೆ, ಮಿಸ್ಟರ್ ನಾಗನಾಥ್. ನೀವು ನಿಮ್ಮದೇ ಆದ ಪ್ರಪಂಚದಲ್ಲಿ ನಿಂತು ಪ್ರೇರೇಪಿಸುವ ಕೃತಿಗಳು ಬೇರೆಯೇ ಒಂದು ಜಗತ್ತಿನಲ್ಲಿಯ ಹಿತಾಸಕ್ತಿಗಳಿಗೆ ಧಕ್ಕೆ ತಂದವು ; ಚಿಟಿಜ iಟಿ ಣhe ಠಿಡಿoಛಿess ಥಿou seಣ iಟಿಣo ಚಿಛಿಣioಟಿ ಚಿ ತಿhoಟe seಣ oಜಿ ಛಿouಟಿಣeಡಿ ಜಿoಡಿಛಿes. ಈಗ ನೀವು ಅರಿತೋ ಅರಿಯದೆಯೋ ಇದಿರುಹಾಕಿಕೊಂಡದ್ದು ತುಂಬಾ ಬಲಾಢ್ಯವಾದ ತಂಡವನ್ನು_ ಬಲಪ್ರಯೋಗದಲ್ಲಿ ಅಸಾಮಾನ್ಯವಾದ ಅನುಭವವಿದ್ದವರನ್ನು. ಸ್ವಲ್ಪದರಲ್ಲಿ ಹೇಳುವುದಾದರೆ : ಇವರು ಸಿದ್ಧಮಾಡಿ ತೋರಿಸಲು ಹೊರಟದ್ದಿಷ್ಟು : ನೀವೇ ಆಗ ಎದೆ ತಟ್ಟಿ ಹೇಳಿದಹಾಗೆ ಕಾರಖಾನೆಯಲ್ಲಿಯೂ ಬೆಂಕಿ ಹತ್ತಿದ್ದಲ್ಲ_ಹಚ್ಚಿದ್ದು, ಅದನ್ನು ಹಚ್ಚಿದವರು ನೀವು….Pಟeಚಿse ಣಚಿಞe iಣ eಚಿsಥಿ…. ಹಾಗೆ ಒಮ್ಮೆಲೇ ಉದ್ರೇಕಗೊಳ್ಳಬೇಡಿ. ನಾವೇನು ನಿಮ್ಮ ಮೇಲೆ ಇಲ್ಲದ ಸಲ್ಲದ ಆರೋಪ ಹೊರಿಸಲು ಹೊರಟಿಲ್ಲ. ಪುರಾವೆ ಒದಗಿಸುತ್ತೇವೆ. ಬೆಳಿಗ್ಗೆ ಬಂದದ್ದೇ, ಪಾರ್ಸಿಗಳ ನ್ಯಾಯ-ಬುದ್ದಿಯಲ್ಲಿ ನೀವಾಗಿಯೇ ಪ್ರಕಟಿಸಿದ ವಿಶ್ವಾಸವನ್ನು ಇಷ್ಟು ಬೇಗ ಕಳೆದುಕೊಳ್ಳಬೇಡಿ. ಮೊದಲು, ನಾನು ಈಗ ಹೇಳುವುದನ್ನು ಪೂರ್ತಿಯಾಗಿ ಕೇಳಿಕೊಳ್ಳಿ. ಆಮೇಲೆ ಬೇಕಾದರೆ ನೀವು ಇದೆಲ್ಲ ಹೌದು, ಅಲ್ಲ ಅನ್ನಿ….ನಾವು ಕೇಳಿಕೊಳ್ಳುತ್ತೇವೆ. ನಾವೇನು ನೀವೇ ಪೆಟ್ರೋಲ್ ಇಲ್ಲ ಕೆರೋಸೀನ್ ಸುರಿದು ಕಡ್ಡಿ ಗೀರಿ, ಬೆಂಕಿ ಹಚ್ಚಿದಿರಿ ಎನ್ನಲು ಹೊರಟವರಲ್ಲ, ಮಿಸ್ಟರ್ ನಾಗನಾಥ್. ಕಡ್ಡಿ ಗೀರಿ ಹುಟ್ಟಿದ ಬೆಂಕಿಯೇ ಅಲ್ಲವಿದು ಎನ್ನುವುದನ್ನು ನಾವೂ ಒಪ್ಪುತ್ತೇವೆ : ನೀವೇ ನಿಮ್ಮ ಗೆಳತಿಯ ಇದಿರು ಬಣ್ಣಿಸಿದ ಕೆಮಿಕಲ್ ಫಾಯರ್…..ರಾಸಾಯನಿಕ ಉಪಕ್ರಮಗಳಿಂದ ಹುಟ್ಟಿಸುವಂಥಾದ್ದು ! ಸದ್ಯದ ಬೆಂಕಿಯೂ ಈ ಜಾತಿಯದಾಗಿತ್ತು : ನೀವೇ ನಿರ್ಮಿಸಿದ ಪೆರೊಕ್ಸಯ್ಡ್ ಕೆಟೆಲಿಸ್ಟದ ಹೊಸ ಫಾರ್ಮ್ಯುಲೇಶನ್ ಅದಕ್ಕೆ ಕಾರಣವಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಹತ್ತಿರವೇ ಇವೆ : ನಿಮ್ಮ ಗೆಳತಿ ಒದಗಿಸಿದ ಮಾಹಿತಿಯೊಂದೇ ಆಧಾರವಲ್ಲ ಮತ್ತೆ. ಈಗ ನಮ್ಮಲ್ಲಿ ಉತ್ಪಾದನೆಯಲ್ಲಿದ್ದ ಕೆಟೆಲಿಸ್ಟಿಗಿಂತ ಹೆಚ್ಚು ಚುರುಕಾದ ಕೆಟೆಲಿಸ್ಟುಗಳಿಗೆ ಗ್ರಾಹಕರಿಂದ ಬೇಡಿಕೆ ವ್ಯಕ್ತವಾದದ್ದು. ಅದಕ್ಕೆ ಉತ್ತರರೂಪವಾಗಿ ನಾವು ಇಂಥ ಕೆಟೆಲಿಸ್ಟುಗಳ ನಿರ್ಮಾಣ ಕೆಲಸ ನಿಮಗೆ ವಹಿಸಿಕೊಟ್ಟದ್ದು ಇಲ್ಲಿಯ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಇಂಥ ನಿರ್ಮಾಣಕಾರ್ಯದಲ್ಲಿ ತೊಡಗಿರುವಾಗಲೇ ಕೆಮಿಕಲ್-ಫಾಯರಿನ ಘಾತುಕ ಕಲ್ಪನೆ ನಿಮಗೆ ಹೊಳೆದಿರಬೇಕೆಂದು ನಮ್ಮ ಅಂದಾಜು ನಮ್ಮ ಪ್ರಕಾರ ಈ ಕಲ್ಪನೆಯ ಅಂತಃಪ್ರೇರಣೆ ಬೆಂಕಿಯ ಬಗ್ಗೆ ನಿಮಗಿದ್ದ ಅತಿರೇಕದ ಭಯ. ನೀವು ನಿಮ್ಮ ಗೆಳತಿಯ ಇದಿರು_‘ಎusಣ ಣo ಣeಚಿಛಿh bಟoಞes ತಿhಚಿಣ ಛಿhemiಛಿಚಿಟ ಜಿiಡಿes ಚಿಡಿe ಟiಞe, I ಜಿeeಟ ಟiಞe ಛಿhಚಿಟಿgiಟಿg ಣhe ಜಿoಡಿmuಟಚಿಣioಟಿ ಚಿಟಿಜ ಛಿಡಿeಚಿಣe oಟಿe’ ಎಂದು ವ್ಯಕ್ತಪಡಿಸಿದ ಸಿಟ್ಟಿಗೆ ಕಾರಣವಾದದ್ದು ಕೂಡ ಕಾರ್ಮಿಕರ ಬಗ್ಗೆ ನಿಮಗಿದ್ದಿರಬಹುದಾದ ಆತಂಕವಲ್ಲ_ ಥಿouಡಿ ಟಿeuಡಿoಣiಛಿ ಜಿeಚಿಡಿ oಜಿ ಜಿiಡಿe_ತಿhiಛಿh iಟಿ ಡಿeಛಿeಟಿಣ moಟಿಣhshಚಿಜ gಡಿoತಿಟಿ ಣo beಛಿome ಚಿಟಿ obsessiom, ಚಿಟಿಜ oಟಿಛಿe ಣhಚಿಣ hಚಿಠಿಠಿeಟಿs ಣhe ಜಿoಡಿಛಿes iಟಿ ಣhe uಟಿಛಿoಟಿsಛಿious ಣಚಿಞe ಛಿhಚಿಡಿge oಜಿ ಥಿouಡಿ ಣhoughಣs ಚಿಟಿಜ ಚಿಛಿಣioಟಿs…. ನೀವು ಬೆಂಕಿಗೆ ಇಷ್ಟೊಂದು ಹೆದರುವುದರ ಕಾರಣ ನಮಗೆ ಗೊತ್ತಿದೆ ಮಿ. ನಾಗನಾಥ್_ ಙou hಚಿve ouಡಿ ಜಿuಟಟ sಥಿmಠಿಚಿಣhies. ನಿಮ್ಮ ಬಗ್ಗೆ ಕಲೆಹಾಕಿದ ಮಾಹಿತಿಯ ಅಧಾರದ ಮೇಲೆ, ಇದು ನೋಡಿ, ಒಂದು ಸಣ್ಣ ಟಿಪ್ಪಣೆ ನಾವು ಸಿದ್ಧಗೊಳಿಸಿದ್ದೇವೆ_ಆಮೇಲೆ ಓದಿ ನೋಡುವಿರಂತೆ. ನಿಮ್ಮ ಬದನಾಮಿ ಮಾಡುವ ಉದ್ದೇಶವಿಲ್ಲದ್ದರಿಂದ ಅದರಲ್ಲಿ ನಿಮ್ಮ ಹೆಸರನ್ನು ತೋರಿಸಿಲ್ಲ. ತಪ್ಪಿ ಬಂದದ್ದೆಲ್ಲ ನಾವೇ ಕಾಟು ಹಾಕಿದ್ದೇವೆ….ಖಿheಡಿe is eಟಿough mಚಿಣeಡಿiಚಿಟ iಟಿ iಣ ಣo suಠಿಠಿoಡಿಣ ಣhe ಠಿoಡಿಣಡಿಚಿiಣ ತಿe hಚಿve ಜಡಿಚಿತಿಟಿ oಜಿ ಥಿouಡಿ ಠಿsಥಿಛಿhoಟogiಛಿಚಿಟ mಚಿಞe-uಠಿ…. ನಿಮ್ಮ ತಂದೆ-ತಾಯಿಗಳು, ನಿಮ್ಮ ಬಾಲ್ಯ, ಆಗ ಬೆಂಕಿಯ ಅಪಘಾತದಲ್ಲಿ ನೀವು ಸುಟ್ಟುಕೊಂಡದ್ದು, ಕಲಿಯುವ ದಿನಗಳಲ್ಲಿ ನೀವು ಪಟ್ಟ ಕಷ್ಟ, ಅನುಭವಿಸಿದ ಅಪಮಾನಗಳು, ತೀರ ಎಳೆವಯಸ್ಸಿನಲ್ಲೇ ಗೋವಾ-ಸರ್ಕಾರದಿಂದ ಜೈಲು ಕಂಡ ನಿಮ್ಮ ಅಣ್ಣ…..ಹಾಗೆ ಕಣ್ಣರಳಿಸಿ ನೀವು ನೋಡಬೇಡಿ…..ಆಶ್ಚರ್ಯವಾಗುತ್ತದೆಯಲ್ಲವೇ ?….ನಿಮ್ಮ ಬಾಲ್ಯದ ಬಗ್ಗೆ ನಿಮಗೇ ಸರಿಯಾದ ಕಲ್ಪನೆಯಿಲ್ಲ ಎನ್ನುವುದೂ ನಮಗೆ ಗೊತ್ತಿದೆ…. ಚಿಟಿಜ he ತಿho is igಟಿoಡಿಚಿಟಿಣ oಜಿ his ಠಿಚಿsಣ is ಛಿoಟಿಜಿuseಜ iಟಿ his ಣhoughಣs ಚಿಟಿಜ ಚಿಛಿಣioಟಿs beಛಿಚಿuse his igಟಿoಡಿಚಿಟಿಛಿe is ಚಿ mಚಿಞe ಜಿoಟಿಚಿ hiಜಜeಟಿ ಜಿeಚಿಡಿ….. ಹೀಗಾದಾಗ ನಮ್ಮನ್ನು ಹೆದರಿಸುವದುಯಾರಿಗೂ ಸುಲಭವಾಗುತ್ತದೆ…. ಯಾರು ಯಾರು ನಿಮ್ಮ ಬಗ್ಗೆ ಮಾಹಿತಿ ಒದಗಿಸುವುದರಲ್ಲಿ ಒಂದೆಡೆ ಬಂದಿದ್ದಾರೆ ಎಂದು ತಿಳಿದರೆ ಆಶ್ಚರ್ಯದ ಧಕ್ಕೆ ತಗಲೀತು. ಇವರೆಲ್ಲ ನಿಮ್ಮ ಬಗ್ಗೆ ದ್ವೇಶವಿದ್ದವರೆಂದು ತಿಳಿಯಬೇಡಿ. ಹೇಳಿದೆನಲ್ಲ : ವೈಯಕ್ತಿಕವಾಗಿ ಇವರೆಲ್ಲ ನಮ್ಮ ಕೆಲಿಡೋಸ್ಕೋಪಿನೊಳಗಿನ ಗಾಜಿನ ತುಂಡುಗಳು_ತಮ್ಮಷ್ಟಕ್ಕೇ ಯಾವ ಮಹತ್ವವೂ ಇಲ್ಲದವರು_ನಿಮ್ಮ ಗೆಳೆಯ ಶ್ರೀನಿವಾಸರಾವ್ ಒಳಗೊಂಡು. ಏತಕ್ಕೂ ಹೇಸದ ಮಹಾ ಫಟಿಂಗನೀತ_ಶ್ರೀನಿವಾಸರಾವ್ ! ಅವನು ಒದಗಿಸಿದ ಮಾಹಿತಿಯಲ್ಲಿ ಬಹಳಷ್ಟು ಖೋಟಾ ಎಂದು ನಾವೂ ಬಲ್ಲೆವು. ಆದರೂ ಅದನ್ನು ಬೇಕಾದಲ್ಲಿ ಬೇಕಾದಷ್ಟೇ ಉಪಯೋಗಿಸಿಕೊಂಡಿದ್ದೇವೆ. ನಿಮ್ಮ ಫಾರ್ಮ್ಯುಲೇಶನ್‌ದ ಮೂಲಕಲ್ಪನೆಯ ಅಂತಃಪ್ರೇರಣೆ ಏನೇ ಇರಲಿ, ಅದು ಕೊನೆಗೊಮ್ಮೆ ಸಿದ್ಧವಾದಮೇಲೆ ನೀವು ಮುಂಬಯಿಗೆ ಹೋದನಂತರವೇ_ಹೋದ ಕೆಲವು ವಾರಗಳಲ್ಲೇ-ಉತ್ಪಾದನೆಗೆ ಹೋದದ್ದು ಆಕಸ್ಮಿಕವಾದದ್ದಲ್ಲ_ಹೇತುಪೂರ್ವಕವಾದದ್ದು. ಪೂರ್ವಯೋಜಿತವಾದದ್ದು. ನಿಮ್ಮ ಕೃತ್ಯಕ್ಕೆ ಕಾಯದೆಯ ಸ್ವರೂಪ ಬರುವುದು ಇಲ್ಲಿಯೇ. ಹಾಗೆ ಹೆದರಬೇಡಿ ಮಿಸ್ಟರ್ ನಾಗನಾಥ್. ಇದನ್ನು ಪೋಲೀಸ್ ಕೇಸು ಮಾಡುವ ಮನಸ್ಸು ನಮಗೇನೂ ಇಲ್ಲ. ಕಾಯಿದೆ, ಪೋಲೀಸು ಎಂದಕೂಡಲೇ ನೀವು ಇಷ್ಟೊಂದು ಯಾಕೆ ನಡುಗುತ್ತೀರಿ ಎನ್ನುವುದರ ಕಾರಣ ನಿಮಗಿಂತ ಹೆಚ್ಚಾಗಿ ನನಗೆ ಗೊತ್ತಿದೆ. ಆ ಟಿಪ್ಪಣಿಯಲ್ಲಿಯ ನಿಮ್ಮ ಅಣ್ಣನ ಬಗೆಗಿನ ವಿಶ್ಲೇಷಣೆ ನೋಡಿ, ನನ್ನ ಮಾತಿನ ಅರ್ಥವಾದೀತು….ಕಾಯದೆಯ ಉಲ್ಲೇಖ ಯಾಕೆ ಮಾಡಿದೆನೆಂದರೆ ‘ಕ್ರಿಮಿನಲ್ ಲಾ, ದ ದೃಷ್ಟಿಯಲ್ಲಿ ಕೃತಿಯ ಹಿಂದಿನ ಪ್ರೇರಣೆಗೆ ಮಹತ್ವವಿಲ್ಲ : ಆದರೆ ಹೇತುವಿಗಿದೆ. Iಣs ಠಿಡಿime ಛಿoಟಿಛಿeಡಿಟಿ is ಣhe iಟಿಣeಟಿಣioಟಿ oಜಿ ಣhe ಚಿಛಿಣ ಚಿಟಿಜ ಟಿoಣ iಣs moಣive. ಸರ್ವಸಾಧಾರಣವಾಗಿ ಹೊಸ ಫಾರ್ಮ್ಯುಲೇಶನ್ ಒಂದು ಸಿದ್ಧವಾದಾಗ ಅದರ ಉತ್ಪಾದನೆ ಹಾಗೂ ಉಪಯೋಗ ಎರಡೂ ಎಲ್ಲ ರೀತಿಯಿಂದಲೂ ನಿರಪಾಯಕಾರಿಯಾದವುಗಳು ಎಂಬುದನ್ನು ನಿರ್ಧರಿಸಿದಮೇಲೇ ಅದನ್ನು ಉತ್ಪಾದನಾ ವಿಭಾಗಕ್ಕೆ ಕಳಿಸುವುದಿರುತ್ತದೆ. ಆದರೆ ಇಂತಹ ಮುನ್ನೆಚ್ಚರದ ಸೂಚನೆ ಕೊಡುವ ಯಾವ ಒಂದು ಪ್ರಯೋಗದ ದಾಖಲೆಯೂ ನಿಮ್ಮ ಲ್ಯಾಬೋರೇಟರಿಯ ಲಾಗ್-ಬುಕ್‌ನಲ್ಲಿ ನೋಡಲು ಸಿಗುವುದಿಲ್ಲ. ಇಷ್ಟಾಗಿಯೂ ಈ ಫಾರ್ಮ್ಯುಲೇಶನ್ ಉತ್ಪಾದನೆಗೆ ಯೋಗ್ಯವಾಗಿದೆ ಎಂದು ಶಿಫಾರಸ್ಸು ಮಾಡುವ ಷರಾ ನಿಮ್ಮ ನೋಟ್‌ಬುಕ್ಕಿನಲ್ಲಿ ಓದಲು…. Pಟeಚಿse ಜoಟಿ’ಣಠಿಡಿoಣesಣ so vehemeಟಿಣಟಥಿ ಣhಚಿಣ iಣ is ಟಿoಣ ಣಡಿue ; ಥಿou ಞಟಿoತಿ mಥಿ ಜeಜಿiಟಿiಣioಟಿ oಜಿ ಣಡಿuಣh….. ನನ್ನ ಮಾತನ್ನು ದಯಮಾಡಿ ಪೂರ್ತಿಯಾಗಿ ಕೇಳಿಕೊಳ್ಳಿ…. ಇದು ನಿರುಪಾಯಕಾರಿಯಾದದ್ದೆಂದು ಪ್ರಯೋಗ ಮಾಡದೇನೇ ನಿರ್ಧರಿಸುವುದು ನಿಮ್ಮಂತಹ ಬುದ್ಧಿವಂತ ನಿಷ್ಣಾತ ತಜ್ಞರಿಗೇನು ಕಠಿಣವಲ್ಲ ಬಿಡಿ. ಮೇಲ್ದೋರಿಕೆಗೆ ಈ ಷರಾದ ಅರ್ಥ ಹೀಗಾಗಬಹುದಾದರೂ ನಮ್ಮ ಪ್ರಕಾರ ಇದು ಮೇಲೆ ತೋರುವಷ್ಟು ನಿಷ್ಪಾಪವಾದ ಕೃತಿಯಲ್ಲ ; ಪೂರ್ವಯೋಜಿತ ಮಸಲತ್ತಿನದೇ ಅಂಗವಾಗಿತ್ತೆಂಬುದು ನಮ್ಮ ಅನ್ನಿಸಿಕೆ ; ನಿಮ್ಮ ಕರೀಯರ್‍ನಲ್ಲಿ ಹೇಳದೇ ಕೇಳದೇ ಎನ್ನುವಂತೆ ಬಂದೆರಗಿದ ಒಂದು ಬಿಕ್ಕಟ್ಟಿಗೆ ನೀವು ಕಂಡುಕೊಂಡ ಪರಿಹಾರ : ಈ ಬಿಕ್ಕಟ್ಟಿಗೆ_ನಿಮ್ಮ ಕಲ್ಪನೆಯ ಪ್ರಕಾರ_ಕಾರಣನಾದ ಜಲಾಲನನ್ನು ಈ ಹೊಲಸು ಕೆಲಸದಲ್ಲಿ ಸಿಕ್ಕಿಸುವುದು ಹಾಗೂ ನಿಮಗೆ ಮೊದಲಿನಿಂದಲೂ ಆಗದ ಫಿರೋಜನ ಮೇಲೆ ಸೇಡು ತೀರಿಸಿಕೊಳ್ಳುವುದು_ನಿಮ್ಮ ಬೇತಿನ ಒಳಮರ್ಮ. ವಿಸ್ಮಯದ ಸಂಗತಿಯೆಂದರೆ ಅತ್ಯಂತ ಘಾತುಕವಾದ ರೀತಿಯಲ್ಲೇ ಆಗಲೊಲ್ಲದೇಕೆ_ನಿಮ್ಮ ಬೇತು ತನ್ನ ಮೂಲ ಉದ್ದೇಶದಲ್ಲಿ ನಿರೀಕ್ಷೆಗೆ ಮೀರಿ ಸಫಲವಾದದ್ದು : ಜಲಾಲ ನಿಮ್ಮ ಸ್ಥಾನಕ್ಕೆ ಬರಲು ಎಳ್ಳಷ್ಟೂ ಯೋಗ್ಯನಲ್ಲ ಎಂದು ತೋರಿಸಿಕೊಡುವುದರಲ್ಲಿ ನೀವು ಗೆದ್ದದ್ದು….Pಟeಚಿse ಜoಟಿ’ಣ shouಣ …..ನಾವೀಗ ಇದ್ದದು ತಾಜಮಹಲಿನಂತಹ ಹೊಟೆಲಿನಲ್ಲಿ ಎನ್ನುವುದನ್ನು ಮರೆಯಬೇಡಿ…..ಏಕಾ‌ಏಕಿ ನಿಮಗೆ ಮುಂಬಯಿಗೆ ವರ್ಗವಾದದ್ದು, ನೀವು ಅಮೆರಿಕೆಗೆ ಹೋಗುವ ಯೋಜನೆ ಅನಿರ್ದಿಷ್ಟಕಾಲ ಮುಂದೆ ಬಿದ್ದದ್ದು_ಅದಕ್ಕೆಲ್ಲ ಜಲಾಲನೇ ಕಾರಣನೆಂದೂ ನಿಮ್ಮನ್ನು ಕೆಳಕ್ಕೆ ನೂಕಿ ಜಲಾಲನನ್ನು ಮೇಲೆಕ್ಕೆ ದೂಡುವುದು ಫಿರೋಜನ ಹುನ್ನಾರೆಂದೂ ನಿಮಗೆ ಗುಮಾನಿ ಇದ್ದದ್ದು ನಮಗೆ ಗೊತ್ತಿದೆ.ನೀವು ಮುಂಬಯಿಗೆ ವರ್ಗವಾಗಿ ಹೋದಮೇಲೆ ನಿಮ್ಮ ಸ್ಥಾನದಲ್ಲಿ ಬಂದ ಜಲಾಲನ ಕೈಯಿಂದ ಈ ಹೊಸ ಫಾರ್ಮ್ಯುಲೇಶನ್ ಉತ್ಪಾದನೆಗೆ ಹೋಗಬೇಕು ಎನ್ನುವುದು….. ಠಿಟeಚಿse hಚಿve ಠಿಚಿಣieಟಿಛಿe…. ನಮ್ಮ ಕೆಲಿಡೋಸ್ಕೋಪಿನಲ್ಲಿ ನಾವು ಕಂಡುಕೊಂಡ ಚಿತ್ರ _ ನಿಮ್ಮ ಪರಿಭಾಷೆಯಲ್ಲಿ, ಸತ್ಯ_ಏನೆಂಬುದನ್ನು ಮೊದಲು ತಿಳಿದುಕೊಳ್ಳಿರಿ. ಆಮೇಲೆ ನಿಮಗೆ ಮಾತನಾಡಲು ಅವಕಾಶ ಸಿಕ್ಕೇ ಸಿಗುತ್ತದೆ…..ಆದದ್ದೂ ಹಾಗೆಯೇ : ಜಲಾಲನೇ ಈ ಫಾರ್ಮ್ಯುಲೇಶನ್ ಉತ್ಪಾದನೆಗೆ ಕಳಿಸಿದ್ದೆಂದು ಈಗ ನಮಗೆ ತಿಳಿದುಬಂದಿದೆ. ಊe ತಿಚಿs iಟಿ ಜiಡಿಣಥಿ hಚಿsಣe ಣo ಛಿಟಚಿim ಛಿಡಿeಜiಣ ಜಿoಡಿ ಚಿ ಟಿeತಿ ಜಿoಡಿmuಟಚಿಣiom ತಿhiಛಿh he ಜiಜ ಟಿoಣ ಜeveಟoಠಿ_ಚಿಟಿಜ he ಠಿಚಿiಜ ಣhe ಠಿಡಿiಛಿe….. ಜಲಾಲ, ಈ ತನ್ನ ದುಡುಕಿನ ಕೃತಿಯಿಂದ ಇಂಥ ದೊಡ್ಡ ಜವಾಬ್ದಾರಿಯ ಹುದ್ದೆಗೆ ಯೋಗ್ಯನಲ್ಲ ಎಂಬುದನ್ನೇ ಸಿದ್ಧಮಾಡಿದ ಎಂದು ಫಿರೋಜನೂ ಈಗ ಒಪ್ಪುತ್ತಾನೆಂದರೆ ನಿಮಗೆ ಸಮಾಧಾನವಾದೀತೇನೋ….ತನಗೆ ಸಂಪೂರ್ಣ ಪರಿಚಯವಿಲ್ಲದ ಒಂದು ಹೊಸ ಉತ್ಪಾದನಾ-ಸೂತ್ರವನ್ನು ಆಚರಣೆಗೆ ತರುವ ಮೊದಲು ನೀವು ಮಾಡದೇ ಬಿಟ್ಟ ಪ್ರಯೋಗಗಳನ್ನು ಮಾಡುವ ಅವಶ್ಯಕತೆ ತೋರದಿರುವಾಗಲೂ ಕನಿಷ್ಠ ಪೂರ್ತಿ ಪ್ರಮಾಣದ ಉತ್ಪಾದನೆಗೆ ಕಳಿಸದೇ ಠಿiಟoಣ-sಛಿಚಿಟe ಠಿಡಿoಜuಛಿಣioಟಿ ಮುಖಾಂತರ ಅದನ್ನು ಅವನು ಪರೀಕ್ಷಿಸಬೇಕಾಗಿತ್ತು ಎನ್ನುವದೂ ಫಿರೋಜನ ಅಭಿಪ್ರಾಯ_ ಣhಚಿಣ is ಣhe ಟಿoಡಿmಚಿಟ ಠಿಡಿಚಿಛಿಣiಛಿe ಣoo, I uಟಿಜeಡಿsಣಚಿಟಿಜ. ಃuಣ ಠಿooಡಿ ಎಚಿಟಚಿಚಿಟ ಡಿeಟieಜ ಛಿomಠಿಟeಣeಟಥಿ uಠಿoಟಿ ಣhe geಟಿius oಜಿ ಚಿಟಿ exಠಿeಡಿieಟಿಛಿeಜ ಚಿಟಿಜ ಚಿ seಟಿioಡಿ ಛಿoಟಟeಚಿgue…. ನಿಮ್ಮ ಎಣಿಕೆಯೂ ಅದೇ ಆಗಿತ್ತು. ಮಿಸ್ಟರ್ ನಾಗನಾಥ್. ಬಹಳ ಜಾಣತನದ ಲೆಕ್ಕಾಚಾರವಿದು. ಅಲ್ಲ ಎನ್ನುತ್ತೀರಾ ? ಮುಂಬಯಿಗೆ ಹೋದ ಮೇಲೆ ನಿಮ್ಮ ಹುದ್ದೆಯ ಅಂತಸ್ತಿಗೆ ಶೋಭಿಸುವ ಮನೆ ಹುಡುಕುವ ಪ್ರಯತ್ನವನ್ನೇ ಮಾಡದೇ ಖೇತವಾಡಿಯ ಹಳೇ ಕೋಣೆಗಳಲ್ಲೇ ಇರಲು ಯೋಚಿಸಿದ್ದು ನಿಮ್ಮ ಧೂರ್ತ ಲೆಕ್ಕಾಚಾರದ್ದೇ ಭಾಗವಾಗಿತ್ತೆನ್ನುವುದನ್ನೂ ಅಲ್ಲಗಳೆಯುತ್ತೀರಾ ? ‘ಆರ್ ಎಂಡ್ ಡೀ ಕೆಲಸಕ್ಕೆ ನನ್ನನ್ನು ವಾಪಸು ಕರೆಯದಿರುವುದು ಶಕ್ಯವೇ ಇಲ್ಲವೆಂದಮೇಲೆ ಮುಂಬಯಿಯ ಮೊಕ್ಕಾಮು ಬಹಳ ದಿನ ಸಾಗುವಂತಹದಲ್ಲ,’ ಎಂಬುದೇ ನಿಮ್ಮ ಅಹಂಕಾರದ ಭಾವನೆಯಾಗಿತ್ತು. ಇಷ್ಟರೊಳಗೇ ಧೈರ್ಯ ಬಿಟ್ಟುಕೊಡಬೇಡಿ, ಮಿಸ್ಟರ್ ನಾಗನಾಥ್. ನಾನು ಅವರಿಗೆ ಆಡಿದ್ದು ಸತ್ಯವಲ್ಲ ಎಂದು ತೋರಿಸುವ ಒಂದೇ ಒಂದು ಬಗೆಯೆಂದರೆ ಅದರೊಳಗಿನ ಬಿರುಕುಗಳನ್ನು ತೋರಿಸಿಕೊಡುವದು. ಆ ಅವಕಾಶ ನಮಗೆ ಸಿಕ್ಕೇ ಸಿಗುತ್ತದೆ. ಸದ್ಯ ಇನ್ನೊಂದು ಪ್ರಶ್ನೆ ಕೇಳುತ್ತೇನೆ : ನಾವು ರಜೆ ಪಡೆಯಿರಿ ಎಂದದ್ದೇ, ರಜೆ ಪಡೆದು ಮನೆಯಲ್ಲಿ ಕೂತದ್ದು ; ಹೈದರಾಬಾದಿಗೆ ಹೋಗಿ ಎಂದದ್ದೇ, ಹೋದದ್ದು ; ಬನ್ನಿ ಎಂದದ್ದೇ, ಬಂದದ್ದು_ಇದಕ್ಕೆಲ್ಲ ಏನೂ ಅರ್ಥವಿಲ್ಲ ಎಂದು ತಿಳಿಯಬೇಕೆ ? ಆu ಥಿou ಡಿeಚಿಟಟಥಿ ತಿಚಿಟಿಣ us ಣo beಟieve ಣhಚಿಣ ಣhis ಛಿouಟಜ be ಣhe behಚಿviouಡಿ oಜಿ ಚಿಟಿ iಟಿಟಿoಛಿeಟಿಣ ಠಿeಡಿsoಟಿ ? ಇಷ್ಟಾಗಿಯೂ_ ನೀವು ಬೋರ್ಡ್ ಸದಸ್ಯರಿಗೆ ಮೂಕರ್ಜಿಯ ಪ್ರತಿಗಳನ್ನು ತಿಳಿಸುವ ಧಡ್ಡತನ ಮಾಡದೇ ಇದ್ದಿದ್ದರೆ_ಇಷ್ಟರ ಒಳಗೇ ನೀವು ನಿಮ್ಮ ಮೊದಲಿನ ಸ್ಥಾನದ ಮೇಲೆ ಹೈದರಾಬಾದಿನಲ್ಲಿರುತ್ತಿದ್ದಿರಿ ಎಂದು ಹೇಳಿದರೆ ನಂಬುತ್ತೀರೋ ಇಲ್ಲವೋ. ಆ ಮೂಕರ್ಜಿಯ ಹಿಂದಿನ ಮೆದುಳು ನಿಮ್ಮದೇ ಎಂಬುದರಲ್ಲಿ ನಮಗೆ ಎಳ್ಳಷ್ಟೂ ಸಂಶಯವಿಲ್ಲ. ಯಾಕಂದರೆ ಅದರೊಳಗಿದ್ದ ಮಾಹಿತಿಯ ಕೆಲವು ವಿವರಗಳು ನಿಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿರುವುದು ಶಕ್ಯವೇ ಇಲ್ಲ. ಫ್ಯಾಕ್ಟರಿಯ ಕೆಲವರ ಕೈಗೆ ಈ ಮಾಹಿತಿ ಸಿಕ್ಕದ್ದು ಮುಂಬಯಿಯಿಂದ ಬಂದ ಟಪಾಲಿನ ಮೂಲಕವೇ ಎನ್ನುವುದಕ್ಕೆ ಪುರಾವೆ ಇದೆ. ಅದನ್ನು ಒದಗಿಸಿದವರು ನೀವು ಎನ್ನುವುದು ಇನ್ನಾರಿಗೂ ಗೊತ್ತಿರಲಿಕ್ಕಿಲ್ಲ. ಆ ಮಾತು ಬೇರೆ. ನಿಮ್ಮನ್ನು ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಭೇಟಿಯಾಗಿ_ಆಶ್ಚರ್ಯ ಪಡುವುದರಲ್ಲಿ ಕೂಡ ಹಾಗೆ ಉತಾವಳಿ ಮಾಡಬೇಡಿ. ನೀವು ನಿಜಕ್ಕೂ ಬೆರಗುಗೊಳ್ಳಬೇಕಾದ ಕ್ಷಣ_ಈ ಭೇಟಿಯ ಮಾಹಿತಿ ನಮಗೆ ಹೇಗೆ ಸಿಕ್ಕಿತು ಎಂದು ಗೊತ್ತಾಗುವ ಕ್ಷಣ ಇನ್ನೂ ಮುಂದಿದೆ ! ನಿಮ್ಮನ್ನು ಭೇಟಿಯಾದವನು ಯಾರು ಎನ್ನುವದು ನಮಗೆ ಖಚಿತವಾಗಿ ಗೊತ್ತಿಲ್ಲ. ಅದೇ ರೆಸ್ಟೋರೆಂಟಿನಲ್ಲಿಕೂತು ಚಹ ಕುಡಿಯುತ್ತಿದ್ದ ನಮ್ಮ ಮಾಹಿತಿದಾರರಿಗೆ ಅವನ ಪರಿಚಯವಿಲ್ಲ. ಆದರೂ ಊಹಿಸಬಲ್ಲೆವು : ನಮ್ಮ ಬಳಿ ಇದ್ದ ಅವನ ಫೋಟೋ ಆಮೇಲೆ ನೋಡುವಿರಂತೆ. ಆದರೆ ಆ ಅಪರಿಚಿತನು ನಿಮ್ಮ ಕೈಗೆ ಕೊಟ್ಟ ಪತ್ರ ಆ ಮೂಕರ್ಜಿಯ ಪ್ರತಿಯಾಗಿತ್ತು ಎನ್ನುವುದು ನಮಗೀಗ ತಿಳಿದಿದೆ. ಇದು ನೋಡಿ, ನಾನು ಹೇಳುತ್ತಿರುವುದಕ್ಕೆ ಸಿಕ್ಕ ಪುರಾವೆ.” +uಟಿಜeಜಿiಟಿeಜಪ್ರಚಂಡವಾದ ವಿಜಯ ಗಳಿಸಿದ್ದೇನೆ ಎನ್ನುವಂತಹ ಗರ್ವದ ಭಾವನೆಯಿಂದ ಉಬ್ಬುತ್ತ ದಸ್ತೂರ್ ಫೈಲಿನೊಳಗಿಂದ ಒಂದು ಉದ್ದನ್ನ ಲಕ್ಕೋಟೆಯನ್ನು ಹೊರತೆಗೆದು ತುಂಬ ಜಾಗ್ರತೆಯಿಂದ ಅದರ ಬಾಯಿ ತೆರೆದು ಒಳಗಿದ್ದದ್ದು ಮುತ್ತು-ರತುನಗಳೋ ಎಂಬ ಬಿಂಕವನ್ನು ಪ್ರಕಟಿಸುತ್ತ ಮುಂದಿನ ಟೀಪಾಯಿಯ ಮೇಲೆ ಅದನ್ನು ಖಾಲಿ ಮಾಡಿದ್ದೇ ತಡ, ಆಗಲೇ ಬೆವರಿನ ಮುದ್ದೆಯಾಗಿದ್ದ ನಾಗಪ್ಪನ ಬಾಯಿಂದ_‘ಓ ನೋ….’ ಎಂಬ ಉದ್ಗಾರ ಸಭ್ಯತೆಯ ಸಂಯಮವನ್ನೂ ಗಾಳಿಗೆ ತೂರಿ ದೊಡ್ಡ ದನಿಯಲ್ಲಿ ಹೊರಗೆ ಬಂದಿತು. ಇಂದ್ರಜಾಲದ ಅಪರೂಪದ ಚಮತ್ಕಾರವನ್ನು ನೋಡುವವರ ಹಾಗೆ ನಾಗಪ್ಪನ ಜೊತೆಗೆ ಫಿರೋಜ್, ಪಟೇಲರು ಕೂಡ ಕಣ್ಣುಬಿಟ್ಟು ಟೀಪಾಯಿಯ ಮೇಲೆ ಹರಡಿ ಬಿದ್ದ ಕಾಗದದ ಚೂರುಗಳನ್ನು ನೋಡಹತ್ತಿದರು : ಹೈದರಾಬಾದ್ ಏರ್-ಪೋರ್ಟಿನಲ್ಲಿ ರೆಡ್ಡಿ ಕೊಟ್ಟ_ಓದುವ ಮೊದಲೇ ಲಕೋಟೆಯ ಸಮೇತ ಹರಿದೊಗೆದು ವಿಮಾನದ ಸೀಟಿನ ಕಿಸೆಯಲ್ಲಿ ತೂರಿದ_ಪತ್ರದ, ನೀಲಿಬಣ್ಣದ ಲಕೋಟೆಯ ಚೂರುಗಳು….! “ಓ ಥ್ರೀಟೀ! ಹೀಗೇಕೆ ಮಾಡಿದೆ ?” ನಾಗಪ್ಪನ ಬಾಯಿಂದ ಉದ್ಗಾರ ಹೊರಟಿತು. +“ಅವಳಿದನ್ನು ಮಾಡಿದ್ದು ರಿusಣ ouಣ oಜಿ ಛಿuಡಿiosiಣಥಿ_ ಆದರೆ ಇದು ನಮ್ಮ ಕಣ್ಣಮುಂದಿನ ಚಿತ್ರದಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ನೋಡಿ : ಪತ್ರದಲ್ಲಿಯ ಮಜಕೂರಿನ ಪ್ರತಿ ವಿವರವೂ ನಿಮಗೆ ಗೊತ್ತಿದೆ ಎನ್ನುವುದರ ಕಲ್ಪನೆ ಆ ಪತ್ರವನ್ನು ನಿಮಗೆ ಕೊಟ್ಟವನಿಗಿರಲಿಲ್ಲ. ನಿಮಗಿತ್ತು. ಅಂತೆಯೇ ಓದುವ ಮೊದಲೇ….” +ಮುಂದಿನ ಮಾತುಗಳನ್ನು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ, ನಾಗಪ್ಪ. ಥ್ರೀಟೀ ಮೂಡಿದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಭಯವಾಗಿ ಕೂತಲ್ಲಿಂದ ಭಡಕ್ಕನೆ ಎದ್ದು ಕ್ಲೋಕ್-ರೂಮಿನ ಕಡೆಗೆ ಧಾವಿಸಿದ. ರೂಮು ಸೇರಿ ಕದ ಹಾಕಿಕೊಂಡ ; ವಾಶ್-ಬೇಸಿನ್ ಇದಿರು ನಿಂತು ಗಂಟಲಲ್ಲಿ ಕೈಹಾಕಿ ಬಕಬಕ ಕಾರಿಕೊಂಡ ! +– ಭಾಗ ಆರು – +– ಅಧ್ಯಾಯ ಮೂವತ್ನಾಲ್ಕು – +ತಾಜಮಹಲ್ ಹೊಟೆಲ್ಲಿನಿಂದ ಹೊರಬಿದ್ದ ನಾಗಪ್ಪನಿಗೆ ಮೈಮೇಲೆ ಮುಳ್ಳು ನಿಲ್ಲಿಸುವಂತಹ ಒಂದು ವಿಲಕ್ಷಣ ಅನ್ನಿಸಿಕೆ : ಹೊಟೆಲ್ ಇದಿರಿನ ರಸ್ತೆ ದಾಟಿ ಸಮುದ್ರದ ದಂಡೆಗುಂಟ ಹರಿದ ಫುಟ್‌ಪಾತಿನ ಮೇಲೆ ನಡೆಯಹತ್ತಿದವನು ತಾನು ಅಲ್ಲವೇ ಅಲ್ಲ ; ತನ್ನ ದೇಹವನ್ನೇ ಕಂಬಳೀ ಕೊಪ್ಪೆಯ ಹಾಗೆ ಹಾಕಿಕೊಂಡು ಗೊತ್ತುಗುರಿಯಿಲ್ಲದೇ ನಡೆಯಹತ್ತಿದ ಯಾರೋ ಬೇರೆಯವನೇ ಇರಬೇಕು ! ಕೆಲ ಹೊತ್ತಿನ ಮೇಲಂತೂ ಹಾಗೆ ನಡೆಯಹತ್ತಿದವನು ಮನುಷ್ಯನೇ ಅಲ್ಲ ಎನ್ನುವಂತಹ ಭಾವನೆ ! ಕಂಪನಿಯ ಕೆಲಸಕ್ಕೆ ರಾಜೀನಾಮೆಯನ್ನು ಕೊಡುವುದನ್ನು ಅವನು ಎಂದೋ ನಿರ್ಧರಿಸಿದ್ದ. ಆದರೆ ಮನುಷ್ಯನಾಗಿ, ಗಂಡಸಾಗಿ, ಇಲ್ಲದ ಲಫಡಾದಲ್ಲಿ ತನ್ನನ್ನು ಸಿಲುಕಿಸಲು ನಡೆಸಿದ ಪಿತೂರಿಯನ್ನು ಬಯಲಿಗೆ ಎಳೆದ ನಂತರವೇ. ತನ್ನ ಹೆಸರಿಗೆ ಹತ್ತಿರಬಹುದಾದ ಕಲಂಕವನ್ನು ಅಳಿಸಿದನಂತರವೇ. ಈಗ ರಾಜೀನಾಮೆಯನ್ನೇನೋ ಕೊಟ್ಟಿದ್ದ. ನೀರಿದ್ದ ಗಂಡಸಿನ ಹಾಗೆಂದು ಮಾತ್ರ ಅನ್ನಿಸಲಿಲ್ಲ. ಮನುಷ್ಯನ ಹಾಗೆಂದೂ ಆನ್ನಿಸಲಿಲ್ಲ. ಕೋಳೀಗಿರಿಯಣ್ಣನ ಅಂಗಳದಲ್ಲಿಯ ಹುಲ್ಲು-ಬಣವೆಯ ಅಡಿಯಲ್ಲಿ ಬಿಲ ತೋಡಿ ತಲೆಮರೆಸಿ ಬದುಕಿತ್ತಿದ್ದ ದೊಡ್ಡ ಹೆಗ್ಗಣ ತಾನು ಎಂಬಂತಹ ಅನ್ನಿಸಿಕೆಯಿಂದ ಜಿಗುಪ್ಸೆ ಹುಟ್ಟುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ, ನಾಗಪ್ಪ. ಸ್ಕಾಯ್-ಸ್ಕ್ರೇಪರ್ ಜಗತ್ತು ಕೋಳೀಗಿರಿಯಣ್ಣನ ಕೇರಿಯನ್ನು ಉಧ್ವಸ್ತಗೊಳಿಸಿದ ರೀತಿಗೆ ಭಾವನೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಹಿಂದೆ, ಅನೇಕ ಸಂದರ್ಭಗಳಲ್ಲಿ, ಮನಸ್ಸನ್ನು ಅರೆಕ್ಷಣದ ಮಟ್ಟಿಗಾದರೂ ತಟ್ಟಿಹೋದ ಆತ್ಮಘಾತದ ವಿಚಾರ ಈಗ ತಪ್ಪಿ ಕೂಡ ಮನಸ್ಸನ್ನು ಹಾಯಲಿಲ್ಲ. ಅನೇಕ ಆಸೆ-ಅಪೇಕ್ಷೆಗಳಿಗೆ ಕಾರಣವಾದ ವ್ಯಾವಸಾಯಿಕ ಕ್ಷೇತ್ರದೊಡನೆಯ ದೀರ್ಘಕಾಲದ ಸಂಬಂಧವನ್ನು ಕಡಿದುಕೊಳ್ಳುವದು ಈಗ ಬರಿಯೆ ಒಂದು ಸಾಧ್ಯತೆಯಾಗಿ ಇಲ್ಲ ಸಂಕಲ್ಪವಾಗಿ ಉಳಿದಿರಲಿಲ್ಲ ; ಪ್ರತ್ಯಕ್ಷವಾಗಿ ನಡೆದು ಹೋದ, ಮುಟ್ಟಿನೋಡುವಷ್ಟರ ಮಟ್ಟಿಗೆ ಉರುಟುರುಟಾಗಿ ಗಟ್ಟಿಮುಟ್ಟಾದ ಘಟನೆಯಾಗಿತ್ತು. ಇದೀಗಿನ ಕ್ಷಣದಿಂದ ತಾನು ನೌಕರಿ ಇಲ್ಲದವನು : ಬಿಟ್ಟುಕೊಟ್ಟವನೋ ಕಳಕೊಂಡವನೋ ಎನ್ನುವದು ತನ್ನ ಆತ್ಮಪ್ರತಿಷ್ಠೆಯ, ಅಹಂಕಾರದ ಮೂಡನ್ನು ಅವಲಂಭಿಸಿದ್ದು : ಅದನ್ನು ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಅವಲಂಭಿಸಿದ್ದು. ಇದ್ದುದರಲ್ಲೇ ಸಮಾಧಾನ ಕೊಟ್ಟ ಸಂಗತಿಯೆಂದರೆ ತಾನು ಕೊನೆಗೂ ತನಿಖೆಯವರು ಸೂಚಿಸಿದ ರಿಪೋರ್ಟಿನ ಮೇಲೆ ಸಹಿ ಮಾಡದೇ ಇದ್ದದ್ದು. ಯಾರು ಬಲ್ಲರು : ಹೀಗೆ ನಿಂತ ಕಾಲ ಮೇಲೆ ತನ್ನಿಂದ ರಾಜೀನಾಮೆಯನ್ನು ಪಡೆಯುವದೇ ಈ ಎಲ್ಲ ನಾಟಕದ ಉದ್ದೇಶವಾಗಿರಲಿಕ್ಕಿಲ್ಲ ತಾನೇ ? ಎಂಬ ಗುಮಾನಿ ರಾಜೀನಾಮೆಯನ್ನು ಬರೆದು ಕೊಡಕೊಡುತ್ತಿರುವಾಗಲೇ ಹುಟ್ಟಿಬಂದು ಈ ಅಲ್ಪಸಮಾಧಾನವನ್ನು ಕೂಡ ನಿರರ್ಥಕಗೊಳಿಸಿತ್ತು….. +ಅರಿವಾಗುವ ಮೊದಲೇ ಗೇಟ್-ವೇ ದಾಟಿ ರೀಗಲ್ ಸಿನೇಮಾದ ಕಡೆಗೆ ಹೋಗುವ ರಸ್ತೆಗೆ ಹೋಗುತ್ತಿರುವಾಗ ಕುದುರೆ-ಟಾಂಗಾದವನೊಬ್ಬ, “ಆಯಿಯೇ ಸಾಬ್,” ಎಂದಾಗ ನಾಗಪ್ಪತನಗೆ ಹತ್ತಿದ ಗುಂಗಿನಿಂದ ಹೊರಗೆ ಬಂದಿದ್ದ. ಮುಂಬಯಿಯಲ್ಲಿ ಟಾಂಗಾ ಈಗ ಅಪರೂಪದ ವಸ್ತು. ನಗರದ ಈ ಭಾಗದಲ್ಲಿ ಹಾಗೂ ಗಿರ್ಗಾಂವ್, ಕಾಲ್ಟಾದೇವಿಗಳಲ್ಲಷ್ಟೇ ಕೆಲವು ಉಳಿದಿದ್ದವು. ಇನ್ನುಮುಂದೆ ಟ್ಯಾಕ್ಸೀ ವರ್ಜ್ಯವೇನೋ. ಟಾಂಗಾ ಹತ್ತಿ ಹೋಗಬಹುದಿತ್ತು. ಆದರೆ ಎಲ್ಲಿಗೆ ಎಂಬುದೇ ಗೊತ್ತಿರಲಿಲ್ಲ. ಖೇತವಾಡಿಗಂತೂ ಅಲ್ಲವೇ ಅಲ್ಲ. ಆದಷ್ಟು ಬೇಗ ಆ ನರಕದಿಂದ ಹೊರಗೆ ಬೀಳಬೇಕು ಎಂಬ ಅಸ್ಪಷ್ಟ ವಿಚಾರವೊಂದು ಮನಸ್ಸಿನಲ್ಲಿ ಸುಳಿದುಹೋಯಿತು : ತನ್ನ ಇಷ್ಟು ವರ್ಷಗಳ ಯಾತನೆಗೆ ಸ್ಮಾರಕಗಳು ಎದ್ದು ನಿಂತ ಎಲ್ಲ ಊರುಗಳಿಂದ ದೂರವಾದ ಯಾವುದಾದರೂ ಹೊಸ ಪ್ರದೇಶಕ್ಕೆ ಹೊರಟುಹೋಗಬೇಕು….ಟಾಂಗಾವಾಲಾ ನಿರಾಶನಾಗದೇ ಇನ್ನೊಮ್ಮೆ _“ಚಲಿಯೇ ಸಾಬ್,” ಎಂದ. ಕಳೆದ ಕೆಲವು ನಿಮಿಷಗಳಿಂದ ತಾನು ಹಾಗೇ ಟಾಂಗಾದ ಇದಿರಿಗೆ ನಿಂತುಬಿಟ್ಟಿದ್ದೇನೆ ಎನ್ನುವದು ಆಗ ಲಕ್ಷ್ಯಕ್ಕೆ ಬಂತು. ವಿಚಾರಮಾಡುವ ಮೊದಲೇ ಟಾಂಗಾ ಹತ್ತಿ ಕೂತ. ಟಾಂಗಾವಾಲಾ ಎಲ್ಲಿಗೆ ಹೋಗುವುದು ಎಂದು ಕೇಳಿದಾಗ_“ವೀಟೀ,ಟೈಮ್ಸ್-ಆಫ಼್-ಇಂಡಿಯಾ”_ ಎಂದ. ಆಶ್ಚರ್ಯ ! ಹಾಗೆ ಹೇಳಿದ ನಂತರವೇ ನೆನಪಿಗೆ ಬಂತು : ಸೀತಾರಾಮನಿಗೆ ಮಂಗಳವಾರ ನಿನ್ನನ್ನು ನಿನ್ನ ಆಫೀಸಿನಲ್ಲಿ ಕಾಣುತ್ತೇನೆ ಎಂದು ಚೀಟಿ ಇರಿಸಿ ಬಂದದ್ದು. ಕೈಗಡಿಯಾರ ನೋಡಿಕೊಂಡ_ಒಂದೂವರೆ ಗಂಟೆ. ತಾನು ತಲುಪುವುದರಲ್ಲಿ ಊಟ ಮುಗಿಸಿ ಬಂದಿರುತ್ತಾನೆ. ಊಟದ ವಿಚಾರ ಬಂದದ್ದೇ, ತಾನಿನ್ನೂ ಊಟ ಮಾಡಿಲ್ಲ ಎನ್ನುವದು ಲಕ್ಷ್ಯಕ್ಕೆ ಬಂತು. ಅಷ್ಟೆಲ್ಲ ಬಿಯರ್ ಕುಡಿಸಿದ್ದರು, ಸ್ನ್ಯಾಕ್ಸ್ ತಿನ್ನಿಸಿದ್ದರು, ಬೋಳಿಮಕ್ಕಳು. ಕಾರಿಕೊಂಡದ್ದು ಒಳ್ಳೆಯದೇ ಆಯಿತು. ಈಗ ಮತ್ತೆ ಊಟ ಬೇಡ. ಸೀತಾರಾಮನ ಆಫೀಸ್-ಕ್ಯಾಂಟೀನಿನಿಂದ ಚಹದ ಜೊತೆಗೆ ಏನಾದರೂ ತರಿಸಿದರಾಯಿತು ಎಂದುಕೊಂಡ. ಟಾಂಗಾ ಪರಿಚಿತ ರಸ್ತೆಯ ಮೇಲೆ ಓಡುತ್ತಿತ್ತು. ಅಂತೂ ಕೊನೆಗೊಮ್ಮೆ ಮುಗಿದುಹೋದದ್ದರ ವಾಸ್ತವತೆಗೆ ಕ್ರಮೇಣ ಒಗ್ಗಿಕೊಳ್ಳುತ್ತಿದ್ದ ಮನಸ್ಸು ಉದ್ವೇಗವನ್ನು ತೊರೆದು ತನಗೇ ಆಶ್ಚರ್ಯವನ್ನುಂಟುಮಾಡುವಷ್ಟರ ಮಟ್ಟಿಗೆ ನಿಶ್ಚಿಂತವಾಗತೊಡಗಿತ್ತು, ಶಾಂತವಾಗತೊಡಗಿತ್ತು. ಟಾಂಗಾ ಟೈಮ್ಸ್-ಆಫ಼್-ಇಂಡಿಯಾ ಆಫೀಸು ತಲುಪಿದ ಕೂಡಲೇ ಟಾಂಗಾವಾಲಾ ಬೇಡಿದ ಬಾಡಿಗೆಯ ಹಣ ಕೊಟ್ಟು ಸೀತಾರಾಮನ ಆಫೀಸು ಹೊಕ್ಕ. +ಸೀತಾರಾಮ ಆಫೀಸಿನಲ್ಲಿದ್ದ. ಅದೇ ಊಟಮಾಡಿ ಬಂದು ಸಿಗರೇಟನ್ನು ಹಚ್ಚಿ, ಎರಡೂ ಕಾಲುಗಳನ್ನು ಟೇಬಲ್ ಮೇಲೆ ನಿಡಿದಾಗಿ ಚಾಚಿ, ಗಾಳಿಯಲ್ಲಿ ಹೊಗೆಯ ವರ್ತುಲಗಳನ್ನು ಎಬ್ಬಿಸುವುದರಲ್ಲಿ ಗರ್ಕನಾಗಿದ್ದ. ಅವನ ಈ ಬೇಫೀಕೀರತೆಯೇ ನಾಗಪ್ಪನ ಅಸೂಯೆಗೆ ಕಾರಣವಾಯಿತು : ಐಷಾರಾಮಿನ ಬದುಕು ಒಂದೂ ಮಗನದು ಅನ್ನಿಸಿತು. “ಔh ! ಣhe bossis ಡಿeಟಚಿxiಟಿg ?” ಎಂದು ಕೇಳಿದ ಇವನ ದನಿಗೆ, ಧೂಮ್ರ-ವರ್ತುಲಗಳ ಜಾಲದಲ್ಲಿ ಸಿಕ್ಕಿಬಿದ್ದ ಸೀತಾರಾಮ ದಡಬಡಿಸಿದ. ಮೇಜಿನಮೇಲಿನ ಕಾಲುಗಳನ್ನು ಕೆಳಗಿಳಿಸಿ ಕುರ್ಚಿಯಲ್ಲಿ ಸರಿಯಾಗಿ ಕೂಡ್ರುವ ಪ್ರಯತ್ನ ಮಾಡುತ್ತ ಕಣ್ಣಮುಂದೆ ನಿಂತವನ ರೂಪ ಅರಿವಿನಲ್ಲಿ ಮೂಡಿದ್ದೇ, ‘ಅರೆ ನಾಗಪ್ಪ ! ಒಥಿ ಉoಜ !Whಚಿಣ ಣeಟeಠಿಚಿಣhಥಿ,_ ಮೂರುದಿನಗಳಿಂದ ನಿನ್ನ ನೆನಪು ಮಾಡಿದ್ದೇ ಮಾಡಿದ್ದು,” ಎಂದ. ಗೆಳೆಯ ತನ್ನನ್ನು ತನ್ನ ಮೂಲದ ಹೆಸರಿನಿಂದ ಕರೆದ ಸಣ್ಣ ಸಂಗತಿಯಿಂದಲೇ ಪುಲಕಿತನಾಗಿ_“ಯಾಕೆ ? ಮೊನ್ನೆ ನಿನ್ನ ಕೋಣೆಯ ಬೀಗಕ್ಕೆ ಸಿಕ್ಕಿಸಿದ ಚೀಟಿ ಸಿಗಲಿಲ್ಲವೆ ?” ಎಂದು ಕೇಳುತ್ತ ಕುರ್ಚಿಯೊಂದರಲ್ಲಿ ಕುಳಿತುಕೊಂಡ. +“ ಆoಟಿ’ಣ ಣeಟಟ me ಥಿou ಛಿಚಿme ಣo mಥಿ ಡಿoom ?” +“ಔಜಿ ಛಿouಡಿse I ಜiಜ, ಚಿಟಿಜ I ಟಿeeಜeಜ ಥಿou so bಚಿಜಟಥಿ ಣo sಚಿve me ಜಿಡಿom.” ಅನಿರೀಕ್ಷಿತವಾಗಿಯೆಂಬಂತೆ ತನ್ನ ಬಾಯಲ್ಲಿ ಹುಟ್ಟಿದ ಈ ವಾಕ್ಯವನ್ನು ಪೂರ್ತಿಗೊಳಿಸುವುದು ನಾಗಪ್ಪನಿಗೆ ಸಾಧ್ಯವಾಗಲಿಲ್ಲ….‘ಜಿಡಿom ಚಿ ಠಿossibಟe suiಛಿiಜe’ ಎಂದು ಪೂರ್ತಿಯಾಗಬೇಕಾದ ವಾಕ್ಯ ಅರ್ಧಕ್ಕೇ ಉಳಿದುಬಿಟ್ಟಿತು. ಆದರೆ ಗೆಳೆಯನ ಮೋರೆಯ ಮೇಲೆ ತನ್ನ ಬಗೆಗೆ ಆತಂಕ ಮೂಡಿದನ್ನು ನೋಡಿ, ಸುಳ್ಳೇ ನಾಟಕವೇಕೆ ಎಂದುಕೊಂಡು_ “I ಡಿesigಟಿeಜ ಜಿಡಿom mಥಿ ರಿob,” ಮಾತಿನಲ್ಲಿಯ ಅಸಾಧಾರಣ ಸಹಜತೆ, ಸರಳತೆ ಇವುಗಳೇ ದಂಗುಬಡಿಸುವ ಸಂಗತಿಗಳಾಗಿದ್ದವು ಎಂಬಂತೆ ಸೀತಾರಾಮ_“ಆoಟಿ’ಣ ಣeಟಟ me,” ಎಂದ. ಮರುಗಳಿಗೆ ನಾಗಪ್ಪನ ದನಿಯಲ್ಲಿಯ ಸರಳತೆಗೆ ವ್ಯತಿರಿಕ್ತವಾದ ನೋವಿನ ಕಳೆ ಅವನ ಮೋರೆಯ ಮೇಲೆ ಮೂಡುತ್ತಿದ್ದುದನ್ನು ನೋಡಿ_ “ಚಹ ತರಿಸಲೇ ?” ಎಂದು ಕೇಳಿದ. ನಾಗಪ್ಪ ಭಿಡೆ ಬಿಟ್ಟುಕೊಟ್ಟು “ನನ್ನದಿನ್ನೂ ಊಟವಾಗಿಲ್ಲ. ಆದರೆ ಹಸಿವೂ ಇಲ್ಲ. ಚಹದ ಜೊತೆ….”ನಾಗಪ್ಪನ ವಾಕ್ಯ ಪೂರ್ತಿಯಾಗುವ ಮೊದಲೇ ಸೀತಾರಾಮ ಕೈಯಲ್ಲಿದ್ದ ಸಿಗರೇಟನ್ನು ಆಷ್-ಟ್ರೇದಲ್ಲಿ ಮುರುಟಿ ಚೆಲ್ಲುತ್ತ _“ಕಮ್‌ಆನ್_ಕ್ಯಾಂಟೀನ್‌ಗೇ ಹೋಗೋಣ. ಏನಾದರೂ ತಿನ್ನುವಿಯಂತೆ. ಅಲ್ಲೇ ಕೂತು ಮಾತಾಡೋಣ.” ಎನ್ನುತ್ತ ನಾಗಪ್ಪನನ್ನು ಕುಳಿತಲ್ಲಿಂದ ಎಬ್ಬಿಸಿದ. +ಗೆಳೆಯರಿಬ್ಬರೂ ಎದ್ದು ಮೊದಲನೇ ಮಜಲೆಯ ಮೇಲಿದ್ದ ಕ್ಯಾಂಟೀನ್‌ಗೆ ಹೊರಡಲನುವಾಗುವಷ್ಟರಲ್ಲಿ ಕ್ಯಾಬಿನ್ನಿನ ಕದ ದೂಡಿ ಸೀತಾರಮನ ಸಹೋದ್ಯೋಗಿಯಾದ ರಂಜನಾ ಭೂಪೇಟ್ಕರ್ ಕೆಲವು ಕಾಗದ-ಪತ್ರಗಳೊಂದಿಗೆ ಒಳಗೆ ಬಂದಳು. ನಾಗಪ್ಪನನ್ನು ನೋಡಿದವಳೇ, “ಓಹೋಹೋ….ಪ್ರೊಫೆಸರರ ಸವಾರಿ ಅನೇಕ ವಾರಗಳ ನಂತರ….” ಎಂದು ಸುಖವಾಗಿ ನಗುತ್ತ, “ಃಥಿ ಣhe ತಿಚಿಥಿ, mಥಿ heಚಿಡಿಣಥಿ ಛಿoಟಿgಡಿಚಿಣuಟಚಿಣioಟಿs. ಅಮೇರಿಕೆಗೆ ಹೋಗುತ್ತೀರಂತೆ….ಸೀತಾರಾಮನೇ ತಿಳಿಸಿದ….”ಎಂದು ಕೈ ಮುಂದೆ ಚಾಚಿದಳು. ನಾಗಪ್ಪ ಕೈ ಕುಲುಕಲಿಲ್ಲ. ಆದರೂ ಶಾಂತಚಿತ್ತನಾಗಿಯೇ ಹೇಳಿದ : “ಓoಣ so ಟuಛಿಞಥಿ, ಖಚಿಟಿರಿಚಿಟಿಚಿ. ಖಿhಚಿಟಿಞ ಥಿou ಚಿಟಟ ಣhe sಚಿme…. ಸೀತಾರಾಮನೇ ವಿವರಿಸುತ್ತಾನೆ ನಿನಗೆ, ಆಮೇಲೆ….” ಸೀತಾರಾಮನೂ ಆಮೇಲೆ ಹೇಳುತ್ತೇನೆ ಎನ್ನುವಂತೆ ಕಣ್ಣು ಮಿಟಿಕಿಸಿ_ “ನಾವೀಗ ಕ್ಯಾಂಟೀನಿಗೆ ಹೊರಟಿದ್ದೇವೆ. Wiಟಟ be bಚಿಛಿಞ sooಟಿ,” ಎಂದ. ರಂಜನಾ ತಬ್ಬಿಬ್ಬಾಗಿ ತಮ್ಮಿಬ್ಬರನ್ನು ನೋಡುತ್ತಿರುವಾಗಲೇ ಇಬ್ಬರೂ ಕ್ಯಾಬಿನ್ನಿನ ಹೊರಬಿದ್ದು ಕ್ಯಾಂಟೀನಿನ ಕಡೆಗೆ ನಡೆಯಹತ್ತಿದರು….. +uಟಿಜeಜಿiಟಿeಜ ಕಳೆದ ಎರಡು ವಾರಗಳಲ್ಲಿ ತಾನು ಪಟ್ಟ ಮಾನಿಸಿಕ ಪಾಡೆಲ್ಲ ಈಗ ಕೆಲವೇ ನಿಮಿಷಗಳಲ್ಲಿ ಗೆಳೆಯನಿಗೆ ಹೇಳಿ ಮುಗಿಸುವುದು ಅಸಾಧ್ಯವಾಗಿತೋರಿದರೂ ಅವನ ಜೆತೆಯಲ್ಲಿ ಹೀಗೆ ನಡೆಯುವದೇ ನಾಗಪ್ಪನಿಗೆ ಎಷ್ಟೊಂದು ಸುಖದಾಯಕವಾಗಿ ಕಂಡಿತೆಂದರೆ ತಾನು ಈ ಎರಡು ವಾರಗಳಲ್ಲಿ ಒಮ್ಮೆಯಾದರೂ ಹೇಗೆ ಅವನನ್ನು ಕಾಣಲು ಬರಲಿಲ್ಲ ಎನ್ನುವುದರ ಬಗೆಗೇ ಆಹ್ಚರ್ಯವೆನ್ನಿಸಿತು. ಮೊನ್ನೆಯೇನೊ ಒಮ್ಮೆ ಹೋಗಿದ್ದ. ಸೀತಾರಾಮ ಕೋಣೆಯಲ್ಲಿಲ್ಲದ ವೇಳೆಯಲ್ಲಿ. ಆದರೆ ಹಾಗೆ ಹೋಗುದರಲ್ಲಿ ಅವನನ್ನು ಆಗಿಂದಾಗ ಕಾಣಲೇಬೇಕೆನ್ನುವಂತಹ ತರಾತುರಿಯೇನಿರಲಿಲ್ಲ. ನಾಗಪ್ಪ ಮೌನಿಯಾಗಿದ್ದ. +ಇತ್ತ, ಸೀತಾರಾಮನೂ ತುಟಿ ಎರಡು ಮಾಡಲಿಲ್ಲ. ಇಂದೋ ನಾಳೆಯೋ ಅಮೇರಿಕೆಗೆ ಹೊರಡಲಿದ್ದ ಗೆಳೆಯ ಹೀಗೆ, ಇದ್ದಕ್ಕಿದ್ದ ಹಾಗೆ, ನೌಕರಿಯನ್ನೇ ಬಿಟ್ಟುಕೊಡಬೇಕಾದ ಪ್ರಸಂಗ : ಬದುಕಿನ ಬಿಸಿ ಇನ್ನೂ ತಾಕಿರದ_ಹುಂಬಗುತ್ತಿಗೆ ಎನ್ನುವಷ್ಟರ ಮಟ್ಟಿಗಿನ ಉತ್ಸಾಹ ತುಂಬಿದ_ಅವನ ಮನಸ್ಸು ಈ ಕ್ರಾಂತಿಕಾರಕ ಘಟನೆಯ ಅರ್ಥವನ್ನು ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇಂತಹದೇನೋ ನಡೆದಿದೆ ಎನ್ನುವದನ್ನು ಮಾತ್ರ ಗೆಳೆಯನ ಮೋರೆಯೇ ಸ್ಪಷ್ಟವಾಗಿ ಸಾರುತ್ತಿತ್ತು. ತಾನು ಒಳಗೆ ಅನುಭವಿಸುತ್ತಿದ್ದ ನೋವನ್ನು ಮರೆಮಾಚುವುದು ಆ ಮೋರೆಗೆ ಸಾಧ್ಯವಾಗಿಲ್ಲ ಎನ್ನುವದು ಮಾತ್ರ ಸ್ವತಃ ಆ ಮೋರೆಯನ್ನು ಹೊತ್ತವನಿಗೇ ಗೊತ್ತಿರಲಿಲ್ಲ : ಇಷ್ಟೆಲ್ಲ ಮಾತನಾಡುವದಿದ್ದರೂ ಏನೂ ಮಾತನಾಡದೇ ಇಬ್ಬರೂ ಕ್ಯಾಂಟೀನಿಗೆ ಬಂದು ತಲುಪಿದ್ದರು. +ನೌಕರಿಯ ಮಾತು ಆಮೇಲೆ, ನಾವು ಸದ್ಯ ಇಲ್ಲಿ ಬಂದದ್ದು ಗೆಳೆಯನಿಗೆ ಹಸಿವೆಯಾಗಿದೆ ಎನ್ನುವ ಕಾರಣಕ್ಕಾಗಿ ಎಂಬುದರ ಅರಿವು ಇದ್ದವನ ಹಾಗೆ, ಸೀತಾರಾಮ ಮಾಣಿಯೊಬ್ಬನನ್ನು ‘ಗಜಾನನಾಽಽ’ ಎಂದು ಅವನ ಹೆಸರು ಹಿಡಿದು ಕರೆದ. ಗಜಾನನ ಓಡೋಡಿ ಬಂದ. ಅವನೂ ನಾಗಪ್ಪನ ಪರಿಚಯದವನೇ. ಹಲ್ಲು ತೋರಿಸಿ ನಕ್ಕು ನಮಸ್ಕಾರ ಮಾಡಿದ. ಮರಾಠಿಯಲ್ಲಿ_“ಬಹಳ ದಿನಗಳಾದವು ಸಾಹೇಬರನ್ನು ಕಾಣದೇ,” ಎಂದ. ಗಜಾನನ ಆತಂಕ ಕಂಡಿರದ ನಗು ನಾಗಪ್ಪನಿಗೆ ಸುಖ ಕೊಟ್ಟಿತು. ಆದರೆ ತನ್ನ ಹತೋಟಿ ಮೀರಿ ಒಳಗೆಲ್ಲೋ ಒಂದು ಬಿಕ್ಕಳಿಕೆ ಹೊರಟಂತಹ ಅನುಭವದಿಂದ ಕ್ಷಣಕಾಲ ತಬ್ಬಿಬ್ಬಾದ. ತನ್ನನ್ನು ಕೂಡಲೇ ಸಾವರಿಸಿಕೊಳ್ಳುತ್ತ ಗಜಾನನಿಗೆ ಉತ್ತರರೂಪವಾಗಿ ತಾನೂ ನಗಲು ಪ್ರಯತ್ನಿಸಿದ. ಸಾಹೇಬರದಿನ್ನೂ ಊಟವಾಗಿಲ್ಲವೆಂದು ತಿಳಿದೊಡನೆ, ತುಂಬ ಕೆಡುಕೆನೆಸಿ_“ಎಲ್ಲ ಮುಗಿದಿದೆ, ಸರ್. ಆದರೆ ಫಸ್ಟ್‌ಕ್ಲಾಸ್ ಮಸಾಲಾ ಆಮ್ಲೆಟ್ ?” ಎಂದು ಕೇಳಿದ. ನಾಗಪ್ಪ ಸೈ ಎಂದ. “ಎರಡು ಸ್ಲೈಸ್ ಬ್ರೆಡ್ ಹಾಗೂ ಎರಡು ಕಪ್ಪು ಚಹ,” ಎನ್ನುತ್ತ ಸೀತಾರಾಮನ ಮೋರೆ ನೋಡಿದ. ಸೀತಾರಾಮ ಮುಗುಳುನಗುತ್ತ, “ಔಞ. I ತಿiಟಟ ರಿoiಟಿ ಥಿou ಜಿoಡಿ ಣeಚಿ,” ಎಂದ. +ಎಲ್ಲಿಂದ ಮಾತು ಆರಂಭಿಸುವುದು ಎನ್ನುವದು ತಿಳಿಯದವನ ಹಾಗೆ ಸಿಗರೇಟೊಂದನ್ನು ಹೊತ್ತಿಸುತ್ತ, “ಙou ತಿoಟಿ’ಣ beಟieve, buಣ ಥಿou musಣ,” ಎಂದು ಆರಂಭಿಸಿ ಸೀತಾರಾಮ ಅರ್ಧಕ್ಕೇ ತಡೆದ. ಮಾತುಮಾತಿಗೆ ಆಣೆ-ಭಾಷೆ ಮಾಡುವ ಸೀತಾರಾಮನ ದುಷ್ಟಚಟ ನೆನಪಾಗಿ, ನಾಗಪ್ಪ, “I beಟieve. ಙou ಟಿeeಜ ಟಿoಣ sತಿeಚಿಡಿ bಥಿ ಥಿouಡಿ ಜeಚಿಜ ಚಿಟಿಛಿesಣoಡಿs,” ಎಂದ. ಸೀತಾರಾಮನಿಗೆ ನಗು ಬಂತು. ಆದರೆ ಹೇಳಹೊರಟ ಮಾತಿಗೆ ಆ ನಗು ಶೋಭಿಸುವಂತಹದಲ್ಲವಾಗಿತ್ತೇನೋ , ತುಸು ಹೊತ್ತು ತಡೆದ. ಸಿಗರೇಟಿನ ಎರಡು ಜುರುಕೆಗಳ ನಂತರ ಬಾಯಿ ತೆರೆದ_“ಕಳೆದ ಎರಡು ತಿಂಗಳಿಂದ ನೀನು ಅಮೇರಿಕೆಗೆ ಹೋಗುವ ಸಂಗತಿಯನ್ನು ನಮ್ಮ ಲೀಗ್ ಸದಸ್ಯರಲ್ಲನೇಕರಿಗೆ ಮುಖತಃ ಹೇಳಿದ್ದೆ. ಹೊರಡುವ ಮೊದಲು ಒಂದು ಸತ್ಕಾರ-ಸಮಾರಂಭವನ್ನು ಕೂಡ…”ಇದನ್ನು ಕೇಳುತ್ತಿದ್ದ ನಾಗಪ್ಪನ ಕಣ್ಣುಗಳು ದೊಡ್ಡವಾಗುತ್ತಿದ್ದುದನ್ನು ನೋಡಿ ಏನೋ ಹೇಳಹೊರಡುವಷ್ಟರಲ್ಲಿ ಗಜಾನನ ಆಮ್ಲೆಟ್ ಹಾಗೂ ಬ್ರೆಡ್ ಮತ್ತು ಬೆಣ್ಣೆಗಳನ್ನು ತಂದ. ತಂದದ್ದನ್ನು ಟೇಬಲ್ ಮೇಲೆ ಸರಿಯಾಗಿ ಹಚ್ಚಿ ಇಡುತ್ತ, “ಚಹ ಈಗಲೇ ತರಲೇ, ಸರ್ ?” ಎಂದು ಕೇಳಿದಾಗ ನಾಗಪ್ಪನೇ, “ಹೌದು” ಎಂದ. ಆಮ್ಲೆಟ್ ನೋಡಿದೊಡನೆ ಹೊಟ್ಟೆ ಚೆನ್ನಾಗಿ ಹಸಿದಿದೆ ಎಂಬುದರ ಅರಿವು ಆದವನ ಹಾಗೆ, ‘ನೀನು ನಿಲ್ಲಿಸಬೇಡ. ನನಗೀಗ ಯಾವ ಸಂಗತಿಯೂ ಉದ್ರೇಕಕ್ಕೆ ಕಾರಣವಾಗಲಾರದು,’ ಎನ್ನುವ ಭಾವದಿಂದ ಸೀತಾರಾಮನತ್ತ ನೋಡುತ್ತ ಆಮ್ಲೆಟ್ ಮೇಲೆ ದಾಳಿ ಮಾಡಿದ. +ಗೆಳೆಯನ ರಾಜೀನಾಮೆ ಪ್ರಸಂಗಕ್ಕೆ ನೇರವಾಗಿ ಕೈ ಹಾಕುವ ಧೈರ್ಯವಾಗದೇ ಶ್ರೀನಿವಾಸನ ಕರಾಮತಿಗಳ ಬಗ್ಗೆ ತಾನು ವ್ಯಕ್ತಪಡಿಸುತ್ತ ಬಂದ ನಿಷೇಧವನ್ನು ಕುರಿತು ಮಾತನಾಡುವದೇ ಒಳ್ಲೆಯದೆಂದು ನಿಶ್ಚಯಿಸಿಕೊಂಡವನ ಹಾಗೆ, ಸೀತಾರಾಮ, ತಾನು ಅರ್ಧಕ್ಕೇ ಬಿಟ್ಟ ಮಾತಿಗೆ ಹಿಂತಿರುಗಿದ : “I ಞಟಿeತಿ ಥಿou ತಿouಟಜ ಠಿಡಿoಣesಣ…. ಬರೇ ವಾಮಮಾರ್ಗದಿಂದ ಹಣಮಾಡಿಕೊಂಡು ಮದುವೆ ಮುಂಜಿವೆ ಸಮಾರಂಭಗಳ ಕಾಲದಲ್ಲಿ ತಮ್ಮ ಹೆಂಡಂದಿರ ಮೈಮೇಲೆ ಮೆರೆಯುವ ಮಣಭಾರದ ದಾಗಿನೆಗಳ ಕಣ್ಣುಕುಕ್ಕಿಸುವ ಹೊಳಪಿನಿಂದಲೇ ಸಮಾಜದಲ್ಲಿ ತಾವು ಒಂದು ಪ್ರತಿಷ್ಠೆಯ ಸ್ಥಾನವನ್ನು ಗಳಿಸಿಕೊಂಡಿದ್ದೇವೆ ಎನ್ನುವ ಸುಳ್ಳು-ಅಭಿಮಾನದ ಬೋಳೀಮಕ್ಕಳೇ ಈ ಲೀಗಿನಲ್ಲಿ ತುಂಬಿದ್ದಾರೆ : ಪ್ರಿಂಟಿಂಗ್ ಪ್ರೆಸ್ಸಿನ ಶ್ರೀನಿವಾಸಾ ; ಉಡುಪೀ ಹೋಟೆಲ್ಲಿನ ನಾಯಕಾ ; ಬಿಲ್ಡಿಂಗ್ ಕಾಂಟ್ರಾಕ್ಟರ್ ಕಾಮತಾ ; ಪೌರೋಹಿತ್ಯವನ್ನು ಬಿಟ್ಟು ಲಗ್ನ-ಮುಂಜಿವಿಗಳ ಕಂತ್ರಾಟುದಾರನಾದ ಪಾಂಡ್ರಂಗಭಟ್ಟಾ_ಎಲ್ಲ ಎಲ್ಲ ಇಂಥವರೇ….! ನಿನ್ನ ಸತ್ಕಾರದ ಮಾತು ಎತ್ತಿದಾಗ ಅಸಡ್ಡೆ ತೋರಿಸಿದವನು ಶ್ರೀನಿವಾಸ ಎಂಬುದನ್ನು ನಂಬುತ್ತೀಯಾ ? ಯಾಕೆಂದು ಗೊತ್ತಿದೆಯೇ ? ಊಹಿಸಬಲ್ಲೆಯಾ ?_ಚಿ ತಿiಟಜ guess ? ನಿನ್ನ ಕಾದಂಬರಿ ! ನೀನು ಕೊನೆಗೂ ಬರೆಯದೇ ಇದ್ದದ್ದು ! Iಣ ಚಿಟಟ sಣಡಿಚಿಣeಜ ಚಿs ಚಿ ಠಿಡಿಚಿಛಿಣiಛಿಚಿಟ ರಿoಞe_ ಅಮ್ಮನ ಆಣೆಗೂ_ನೀನಿದನ್ನು ನಂಬಬೇಕು. ಹಿಂದೆ ಎಂದೋ ಒಮ್ಮೆ, ನೀನು ನೇತ್ರಾವತಿಯ ಬಗ್ಗೆ ಒಂದು ಕಾದಂಬರಿ ಬರೆಯಬೇಕು ಅಂದಿದ್ದೆ. ನಿನಗೆ ನೆನಪಿದೆಯೋ ಇಲ್ಲವೋ, ಇದನ್ನೇ ನಾನೊಮ್ಮೆ ಶ್ರೀನಿವಾಸನಿಗೆ ಹೇಳಿರಬೇಕು. ಯಾಕೆ ಹೇಳಿದೆನೋ ಅರಿಯೆ_mಚಿಥಿ be ರಿusಣ ಜಿoಡಿ ಣhe ಜಿuಟಿ oಜಿ sಛಿಚಿಡಿiಟಿg him…. ಆದರೆ ಬೋಳೀಮಗ ನಿಜಕ್ಕೂ ಹೆದರಿಕೊಂಡಿದ್ದ ಎನ್ನುವದು ಆಗ ಗೊತ್ತಾಗಲೇ ಇಲ್ಲ ನೋಡು. ಮುಂದೆ ನೀನು ಮುಂಬಯಿಗೆ ವರ್ಗವಾಗಿ ಬಂದಮೇಲೆ ಹೀಗೇ ಒಮ್ಮೆ ನಿನ್ನ ಬಗ್ಗೆ ಮಾತು ಬಂದಾಗ ಶ್ರೀನಿವಾಸ, “ಏಕಾ‌ಏಕೀ ಮುಂಬಯಿಗೆ ಬರಲು ಕಾರಣವೇನಂತೆ ?” ಎಂದು ಕೇಳಿದ. ನನಗೇನು ಹುಕ್ಕಿ ಬಂತೋ :ಣhe vuಟgಚಿಡಿ ಛಿuಡಿiosiಣಥಿ iಟಿ his ಣoಟಿe musಣ hಚಿve ಠಿಡಿovoಞeಜ me : ನೀನಾಗಿ ಮುಂಬಯಿಗೆ ವರ್ಗಮಾಡಿಸಿಕೊಂಡು ಬಂದದ್ದು ಕಾದಂಬರಿ ಬರೆಯಲಿಕ್ಕೆ ಎಂದೆ…..ಖೇತವಾಡಿಯಲ್ಲಿ ನಡೆದ ದುರ್ಘಟನೆ ಕಾದಂಬರಿಯ ವಸ್ತುವಾಗಿದ್ದರಿಂದ ಅಲ್ಲೇ ಉಳಿದು ಬರೆಯುವ ಯೋಜನೆ ಎಂದೆ….ಅಮೇರಿಕೆಗೆ ಹೋಗುವ ಮೊದಲೇ ಮುಗಿಸುವ ಮನಸ್ಸಿದೆ ಎಂದು ಹೇಳಿದೆ….ಎಲ್ಲ ಸರಿಹೋದರೆ ಕೆಲವು ಭಾಗಗಳನ್ನಾದರೂ ಇಂಗ್ಲೀಷಿಗೆ ಭಾಷಂತರಿಸಿ ನಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿಸುವ ಭರವಸೆಯನ್ನು ನಾನೇ ಕೊಟ್ಟಿದ್ದೇನೆ ಎಂದೆ. ನಂಬಿದನೇ ಬೋಳೀಮಗ ! ಅಪ್ಪನಾಣೆ, ನಂಬಿದ. ಅಷ್ಟೇ ಅಲ್ಲ, ತನ್ನ ಧೈರ್ಯಕ್ಕೆ ಇನ್ನೂ ಕೆಲವರನ್ನು ಸೇರಿಸಿಕೊಂಡ. ಲೀಗಿನ ಕೆಲವು ಸದಸ್ಯರನ್ನು ಕುರಿತು ನೀನು ಕಾದಂಬರಿ ಬರೆಯಲು ಶುರುಮಾಡಿದ್ದೀ ಎನ್ನುವ ಸುದ್ದಿಯನ್ನು ತಾನೇ ಹರಡಿದ….” +ನಾಗಪ್ಪನ ಕಿವಿಗಳೇನೋ ಸೀತಾರಾಮನ ಮಾತುಗಳತ್ತವೇ ಇದ್ದವು. ಕಣ್ಣುಗಳು ಕೂಡ ಕೇಳುತ್ತಿದ್ದೇನೆ ಎನ್ನುವಂತಹ ನಂಬಿಕೆಯನ್ನೇ ಹುಟ್ಟಿಸುತ್ತುದ್ದವು. ಆದರೆ ಇದ್ದೆಲ್ಲವನ್ನೂ ಹೇಳಬೇಕೆನ್ನುವುದರಲ್ಲಿ ತನಗಿದ್ದ ಆಸ್ಥೆಗೆ ಪ್ರೇರಣೆಯಾದ ಜಗತ್ತಿನಿಂದ ನಾಗಪ್ಪ ಈಗ ಬಹಳ ದೂರ ನಡೆದಿದ್ದಾನೆ ಎನ್ನುವುದರ ಕಲ್ಪನೆ ಮಾತ್ರ ಸೀತಾರಾಮನಿಗಿರುವದು ಶಕ್ಯವೇ ಇರಲಿಲ್ಲ. ಮನುಷ್ಯಸಹಜವಾದ ಒಂದು ಕುತೂಹಲದಿಂದ, ಯಾವ ಆಸೆ-ಅಪೇಕ್ಷೆಗಳಿಗೂ ಕಟ್ಟಿ ಬಿದ್ದಿರದ, ಪರಿಶುದ್ಧವಾದ ಉತ್ಸುಕತೆಯಿಂದ ಸೀತಾರಾಮನ ಮಾತುಗಳನ್ನು ಕೇಳಕೇಳುತ್ತಿರುವಾಗ ಆ ಒಂದೂ ಮಗ ದಸ್ತೂರನ ಮಾತುಗಳು ಸೀತಾರಾಮ ಈಗ ಹೇಳುತ್ತಿದ್ದುದಕ್ಕೆ ಫಿಲ್ಟರ್ ರೀತಿ ಕೆಲಸಮಾಡಹತ್ತಿದ್ದವು : ‘ನೀನು ನಿನ್ನದೇ ಆದ ಜಗತ್ತಿನಲ್ಲಿ ನಿಂತು ಪ್ರೇರೇಪಿಸುವ ಕ್ರ್ತಿಗಳು ಇನ್ನೊಂದು ಜಗತ್ತಿನಲ್ಲಿಯ ಹಿತಾಸಕ್ತಿಗಳಿಗೆ ಧಕ್ಕೆತಂದವು….’ ಸೀತಾರಾಮನಿಗೆ, ಬರಿಯೆ ಒಂದು ‘ಆಟ’ವಾಗಿ ತೋರಿದ್ದು ಈ ಆತ್ಮ-ಪ್ರತಿಷ್ಠೆಯ ಪ್ರಪಂಚದ ಜನಕ್ಕೆ ತಮ್ಮ ಆಸಕ್ತಿಗಳಿಗೆ ಧಕ್ಕೆ ತರುವ ಹಲ್ಲೆಯಾಗಿ ತೋರಿರಬೇಕು. ಅಂತೂ ಶ್ರೀನಿವಾಸನಿಗೆ ತನ್ನ ಬಗ್ಗೆ ಮೊದಲಿನಿಂದಲೂ ಇದ್ದ ಹಗೆ ಮತ್ತೆ ಹೆಡೆಬಿಚ್ಚುವಂತೆ ಮಾಡಿದ್ದು ಈ ಸೀತಾರಾಮನ ಬೇಫೀಕೀರತೆಯೇ ಹಾಗಾದರೆ_ಎಂಬ ಗುಮಾನಿ ಅರೆಕ್ಷಣದ ಮಟ್ಟಿಗಾದರೂ ಹುಬ್ಬೇರಿಸುವಂತೆ ಮಾಡಿತು. +ಸೀತಾರಾಮ ಮಾತನಾಡುವ ಭರದಲ್ಲಿ ಗೆಳೆಯನು ಸದ್ಯ್ ಇಲ್ಲಿಗೆ ಬರಲು ಕಾರಣವಾದ ಸಂದರ್ಭವನ್ನೇ ಮರೆತಹಾಗಿತ್ತು.ಹುರುಪಿನಿಂದ, ಒಂದು ಬಗೆಯ ರೊಚ್ಚಿನಿಂದ, ಶ್ರೀನಿವಾಸನ ಬಗ್ಗೆ, ಲೀಗಿನ ಇತರ ಸದಸ್ಯರ ಬಗ್ಗೆ ಮಾತನಾಡಿಯೇ ಆಡಿದ : ಆಮ್ಲೆಟ್-ಬ್ರೆಡ್ ಮುಗಿಸಿ ಚಹ ಕುಡಿಯುವ ಹೊತ್ತಿಗೆ, ಶ್ರೀನಿವಾಸನನ್ನು ಕುರಿತು ತಾನು ಹಿಂದೆಂದೂ ಹೇಳಿರದ ಹೊಸ ಸಂಗತಿಗಳಿಗೆ ನಾಗಪ್ಪನಿಂದ ಈಗ ದೊಡ್ಡ ಪ್ರತಿಕ್ರಿಯೆಯನ್ನು ಸೀತಾರಾಮ ಅಪೇಕ್ಷಿಸಿರಬೇಕು. ಅಂತಹದೇನೂ ಆಗದೇ ಇದ್ದುದಕ್ಕೆ ವಿವರಣೆಯೆಂಬಂತೆ ನಾಗಪ್ಪನೇ ತುಂಬ ಸಂತವಾಗಿ ಹೇಳಿದ : “ಬೋಳೀಮಕ್ಕಳು ತನಿಖೆಯ ಹೊತ್ತಿಗೆ ಖಂಡಾಪಟ್ಟಿ ಬಿಯರು ಕುಡಿಸಿಬಿಟ್ಟರು….ಹೌದು, ಈ ಹೊತ್ತು ನನ್ನ ಬಗ್ಗೆ ಒಂದು ತನಿಖೆಯಿದ್ದದ್ದು ನಿನಗೆ ಗೊತ್ತಿದ್ದಂತಿಲ್ಲ. ಶ್ರೀನಿವಾಸ ನಿನಗೆ ಹೇಗೆ ತಿಳಿಸಲಿಲ್ಲವೋ_ಆಶ್ಚರ್ಯ ಎನ್ನಿಸುತ್ತದೆ :ಊe hಚಿs ಠಿಟಚಿಥಿeಜ ಚಿ big ಠಿಚಿಡಿಣ iಟಿ iಣ….” ಈ ಮಾತಿನಿಂದ ಒಮ್ಮೆಲೇ ಉತ್ತೇಜಿತನಾದ ಸೀತಾರಾಮ ತೊಡೆಗ ಮೇಲೆ ಬಲವಾಗಿ ಬಡೆದುಕೊಂಡು_“ಖಿhಚಿಣ ಡಿಚಿsಛಿಚಿಟ….! ಈಗ ಅರ್ಥವಾಗುತ್ತದೆ….. ‘ನಿನ್ನ ಗೆಳೆಯನಿಗೆ ಕಾದಿರುವ ದೊಡ್ಡ ಸತ್ಕಾರ ನೋಡುವಿಯಂತೆ’ ಅಂದಿದ್ದ ಎಂಟು ದಿನಗ ಹಿಂದೆ….ಔh mಥಿ ಉoಜ…..We ತಿiಟಟ ಜಿighಣ him….ಜಿighಣ him ಣo ಣhe ಜಿiಟಿish….” ಎಂದ. +ನಾಗಪ್ಪನ ಮೇಲೆ ಇದಾವುದರ ಪರಿಣಾಮವೇ ಆಗುತ್ತಿರಲಿಲ್ಲ. ಹಸಿದ ಹೊಟ್ಟೆಗೆ ಆಮ್ಲೆಟ್-ಚಹ ನೆಮ್ಮದಿ ತರಿಸಿದಮೇಲೆ ಬಿಯರಿನ ಅಮಲು ಸಂಪೂರ್ಣ ಇಳಿದಿರದ ಕಣ್ಣುಗಳು ನಿದ್ದೆಯಿಂದ ಬಾಡಹತ್ತಿದವು : “ಈಗ ಬೇಡ ಸೀತಾರಾಮ. ಇದೆಲ್ಲದರ ಬಗ್ಗೆ ನಿನ್ನ ಜತೆಗೆ ಬಹಳ ಮಾತನಾಡುವದಿದೆ. ಸಂಜೆ ಮತ್ತೆ ಭೆಟ್ಟಿಯಾಗೋಣ. ಈಗ ಮನೆಗೆ ಹೋಗಿ ಗಡದ್ದಾಗಿ ಒಂದು ನಿದ್ದೆ ಮಾಡಬೇಕು. ಅಲ್ಲಿಯತನಕ ಇದನ್ನಿಷ್ಟು ಓದಿನೋಡು : ನನ್ನ ಬಗ್ಗೆ ತನಿಖೆಯವರು ಸಿದ್ಧಪಡಿಸಿದ ಛಿoಟಿಜಿiಜeಟಿಣiಚಿಟ ಡಿeಠಿoಡಿಣ. ಓದಿ ಸಿಟ್ಟಿನಿಂದ ತಲೆ ಕೆಡಿಸಿಕೊಳ್ಳಬೇಡ ಮತ್ತೆ. ಅದರಲ್ಲಿ ವರದಿಯಾದ ಕೆಲವು ಸಂಗತಿಗಳು ಪ್ರತ್ಯೇಕವಾಗಿ ನಿಜವಾದವುಗಳು. ಉಳಿದವುಗಳು ನನಗೇ ಗೊತ್ತಿಲ್ಲದವು. ಬಿಡಿಸಿದ ಒಟ್ಟೂ ಚಿತ್ರ ಮಾತ್ರ ಸುಳ್ಳಿನ ಬೊಂತೆ ! ಈ ವರದಿಯನ್ನು ಬರೆದವನು ಸಾಮಾನ್ಯನೆಂದು ತಿಳಿಯಬೇಡ : ಇಂಥ ಸುಳ್ಳುಗಳ ಬೊಂತೆಯನ್ನೇ ಅಪ್ಪಟ ಸತ್ಯವೆಂದು ಮೆರೆಯಿಸುವ ಸಾಮರ್ಥ್ಯದ ಬಗ್ಗೆ, ಕಟ್ಟುವ ದೃಷ್ಟಿಕೋನದ ಬಗ್ಗೆ ದೊಡ್ಡ ಸಿದ್ಧಾಂತವೇ ಇದೆ ಅವನ ಬಳಿ. ತನಿಖೆಯ ಆದ್ಯಂತವೂ ಅದನ್ನು ಕುರಿತು ಕೊರೆದದ್ದೇ ಕೊರೆದದ್ದು ! ಓದಿ ನೋಡು. ಸಂಜೆ ಭೇಟಿಯಾದಾಗ ಚರ್ಚಿಸುವಾ….ಚಿಟಿಜ ಥಿou ತಿiಟಟ ಞಟಿoತಿ ತಿhಚಿಣ I hಚಿve ಡಿesigಟಿeಜ ಜಿಡಿom….” ಎನ್ನುತ್ತ ದಸ್ತೂರ್ ಕೊಟ್ಟ ರಿಪೋರ್ಟಿನ ಪ್ರತಿಯನ್ನು ಸೀತಾರಾಮನ ಕೈಯಲ್ಲಿ ಇರಿಸಿದ : “ಜೋಪಾನವಾಗಿ ಇಟ್ಟುಕೋ. ಬೇರೆ ಪ್ರತಿಯಿಲ್ಲ. ಊಟಕ್ಕೆ ಹೊರಗೇ ಹೋಗೋಣ. ‘ಪ್ಲೋರಾ’ಗೆ ? ಙou ತಿiಟಟ be mಥಿ guesಣ….ಖಿhಚಿಟಿಞs ಜಿoಡಿ ಣhe ಟuಟಿಛಿh.” ಕೈ ಕುಲುಕಿ ಬೀಳ್ಕೊಳ್ಳುವಾಗ ಸೀತಾರಾಮನ ಮೋರೆಯ ಮೇಲೆ ಮೂಡಿದ ಏನೋ ನಾಗಪ್ಪನನ್ನು ಬಲವಾಗಿ ತಟ್ಟಿತು. +uಟಿಜeಜಿiಟಿeಜ- ಅಧ್ಯಾಯ ಮೂವತ್ತೈದು – +ಕಳೆದ ಹದಿನಾಲ್ಕು ದಿನಗಳಲ್ಲಿ ತಾನು ಪಟ್ಟ ಯಾತನೆ ಕೊನೆಗೊಂಡ ರೀತಿಯ ನಿಜವಾದ ಅರ್ಥ ಒಂದು ಆಘಾತದ ಬಲದಿಂದ ನಾಗಪ್ಪನಿಗೆ ಹೊಳೆದದ್ದು ನಿದ್ದೆಯಿಂದ ಎಚ್ಚರಗೊಂಡು ಹಾಸಿಗೆಯಲ್ಲಿ ಕುಳಿತಾಗಲೇ. +ಕೈಗಡಿಯಾರ ನೋಡಿಕೊಂಡ : ಆರು ಹೊಡೆಯಲು ಬಂದಿತ್ತು. ಆಗಿನಿಂದಲೂ ಒಂದು ಬಗೆಯ ಹುಂಬು ಧೈರ್ಯ ತುಂಬಿದಂತಿದ್ದ ಬಿಯರಿನ ಅಮಲು ಈಗ ಸಂಪೂರ್ಣವಾಗಿ ಇಳಿದಿತ್ತು. ಬದಿಯ ಬೋಳು ಕಿಡಕಿಯಿಂದ ಕಾಣುತ್ತಿದ್ದ ಇದಿರಿನ ಚಾಳು, ಅಸ್ತಕೆ ಹೊರಟ ಸೂರ್ಯನ ಹಳದೀ ಬಣ್ಣದ ಬಿಸಿಲಲ್ಲಿ, ಎಲ್ಲ ಆತ್ಮೀಯತೆಯ ಬಿಸಿಯನ್ನೂ ಕಳಕೊಂಡ ನಿರ್ಜೀವ ಗೆಳೆತನದ ಮುಸುಕೆಳೆದು ನಿಂತಂತೆ, ನಿಂತಿತ್ತು. ತಾನು ಸಿಲುಕಿಕೊಂಡ ಸನ್ನಿವೇಶದ ಸರಿಯಾದ ಪರಿಚಯ ಈಗ ಆಯಿತೆನ್ನುವಂತೆ ಬದುಕಿನಲ್ಲಿ ಈವರೆಗೂ ಅನುಭವಿಸಿರದ ತೀವ್ರತೆಯಿಂದ ಅರಿವಿಗೆ ಬಂದ ತನ್ನ ಏಕಾಕಿತನ ಚೀರಿಕೊಳ್ಳುವಷ್ಟರ ಮಟ್ಟಿಗೆ ಹೆದರಿಸಿ ನಡುಗಲು ಹೆಚ್ಚಿತು : ಅತ್ತುಬಿಡಬೇಕು ಎನ್ನುವಷ್ಟು ಮನಸ್ಸು ಭಾವಾವಿಷ್ಟವಾಗಿತ್ತು. ಮುಂದಿನ ಚಾಳಿನ ಮೇಲೆ ಬಿದ್ದ ಅರಿಸಿಣ ಬಣ್ಣದ ಬಿಸಿಲೇ ಈ ಭಾವುಕತೆಗೆ ಕಾರಣವಾಗಿತ್ತು ಎಂಬ ಅನ್ನಿಸಿಕೆಯಿಂದ ಎಂಬಂತೆ ಹಾಸಿಗೆಯಿಂದ ಎದ್ದು ಕಿಡಕಿಯ ಕದ ಮುಚ್ಚಿ ದೀಪ ಹಾಕಿದ. ನೆಮ್ಮದಿಯೆನ್ನಿಸುವ ಬದಲು ಜೀವಕ್ಕೆ ಹತ್ತಿದ ಹೆದರಿಕೆ ಹೆಚ್ಚೇ ಆಯಿತು. ಇಲ್ಲ, ಹೀಗೆ ಒಬ್ಬನೇ ರೂಮಿನಲ್ಲಿ ಕೂತುಬಿಟ್ಟರೆ ಹುಚ್ಚೇ ಹಿಡಿದೀತು, ಅನ್ನಿಸಿತು. ಥಟ್ಟನೆ ಹೊಳೆದ ಒಂದು ಕಲ್ಪನೆಯಿಂದ ಚುರುಕುಗೊಂಡವನ ಹಾಗೆ ಕಿಡಕಿಯ ಕದ ತೆರೆದು ಹೊರಗೆ ಹೋಗುವ ತಯಾರಿ ಮಾಡಹತ್ತಿದ : ಮೋರಿಗೆ ಹೋಗಿ ಮೋರೆ ತೊಳೆದುಕೊಂಡ. ಕೈಗೆ ಸಿಕ್ಕ ಶರ್ಟು ಪ್ಯಾಂಟು ಧರಿಸಿದ. ಹಳೆಯ ಬೂಟು ಹಾಕಿಕೊಳ್ಳುವ ಮನಸ್ಸಾಗದೇನೇ ಚಪ್ಪಲಿ ಮೆಟ್ಟಿಕೊಂಡ. ಬೆಳಿಗ್ಗೆ ಹಾಕಿಕೊಂಡ ಪ್ಯಾಂಟಿನ ಕಿಸೆಯೊಳಗಿಂದ ಹಣದ ಪಾಕೀಟು ತೆಗೆದುಕೊಂಡ. ಕದಕ್ಕೆ ಬೀಗ ಹಾಕಿ ಜಿನ್ನೆಯ ಕಡೆಗೆ ನಡೆಯುವಾಗ ಚಾಲಿನಲ್ಲಿಯ ಒಬ್ಬರ ಪರಿಚಯವೂ ತನಗಿಲ್ಲ ಎನ್ನುವ ರೀತಿ, ಅತ್ತಿತ್ತ ಕಣ್ಣುಹಾಯಿಸದೇ, ಮೂಗಿನ ನೇರಕ್ಕೆ ಹೆಜ್ಜೆ ಹಾಕಹತ್ತಿದ. ಮನಸ್ಸು ಒಂದನ್ನೇ ಕುರಿತು ಧೇನಿಸುತ್ತಿದ್ದವನ ಹಾಗೆ ಭಡಭಡ ಜಿನ್ನೆ ಇಳಿದು ಕೆಳಗಿನ ರೆಸ್ಟೋರಂಟಿಗೆ ಹೋದ. ಟೆಲಿಫೋನ್ ಕೆಟ್ಟಿದೆ ಎಂಬ ಸುದ್ದಿ ಸಿಕ್ಕಾಗ ತುಸು ನಿರಾಶನಾದ. ಇನ್ನೊಂದು ಫೋನು ಆರನೇ ಗಲ್ಲಿಯ ಕೊನೆಯಲ್ಲಿತ್ತು. ಅಲ್ಲಿಗೇ ಹೋದ. ಹಿಂದೊಮ್ಮೆ, ರೆಸ್ಟೋರಂಟೀಗೆ ಫೋನ್ ಮಾಡಲು ಬಂದಾಗ ಭೇಟಿಯಾದ ಹುಡುಗಿಯೇ ಮಾತನಾಡುತ್ತಿದ್ದದ್ದು ಕಂಡಿತು.ಇವನ ಗುರುತು ಹಿಡಿದ ಹುಡುಗಿ ಮೋಹಕವಾಗಿ ನಕ್ಕಳು_ಇದೀಗ ಮುಗಿಸುತ್ತೇನೆ ಎನ್ನುವ ಸನ್ನೆಯನ್ನು ಕಣ್ಣಿನಿಂದಲೇ ಮಾಡುತ್ತ, ಅವಳ ನಗು ಒಳಗೆ ಗೆಲುವು ಚಿಗುರಲು ಕಾರಣವಾಯಿತು. ರಾಣಿ ನೆನಪಿಗೆ ಬಂದಳು. ಈ ಹೊತ್ತು ಅವಳು ಬೇಕೇಬೇಕು ಅನ್ನಿಸಿತು. ಆದರೆ ಸದ್ಯ ಮಾಡಬೇಕಾದ ಜರೂರಿಯ ಕೆಲಸ ಸೀತಾರಾಮನಿಗೆ ಫೋನ್ ಮಾಡುವುದಾಗಿತ್ತು. ಭರವಸೆ ಕೊಟ್ಟ ಹಾಗೇ ಹುಡುಗಿ ಫೋನ್ ಬಿಟ್ಟುಕೊಟ್ಟಿದ್ದಳು. ಚಂದವಾಗಿ ಇನ್ನೊಮ್ಮೆ ನಕ್ಕು_“Iಣ is ಚಿಟಟ ಥಿouಡಿs, Siಡಿ,” ಎಂದಳು. ‘ಥ್ಯಾಂಕ್ಸ್’ ಎನ್ನುವಾಗ, ತುಂಬ ದಿಟ್ಟ ಹುಡುಗಿ ಎಂದುಕೊಂಡು, ತನ್ನಷ್ಟಕ್ಕೇ ನಕ್ಕ. +ಸೀತಾರಾಮನ ಫೋನ್ ನಂಬರ್ ಡಾಯಲ್ ಮಾಡಿದ. ಆಪರೇಟರ್ ಲೈನ್ ಮೇಲೆ ಬಂದು, “ಪ್ಲೀಜ್ ಹೋಲ್ಡಾನ್,” ಎಂದಾಗ ಒಂದೂ ಮಗ ಇದ್ದರೆ ಸಾಕು ; ಇಷ್ಟರೊಳಗೇ ಹೋಗಿರದಿದ್ದರೆ ಸಾಕು ಎನ್ನುವ ಕಾತರದಿಂದ ಸೀತಾರಾಮ ಫೋನ್ ಮೇಲೆ ಬರುವುದನ್ನು ಕಾಯಹತ್ತಿದ. ಅವನು ಫೋನ್ ಮೇಲೆ ಬಂದು, ಮಾತನಾಡಿಸುತ್ತಿದ್ದವನು ನಾಗಪ್ಪನೆಂದು ತಿಳಿದದ್ದೇ ತಡ_ಒಥಿ ಉoಜ ! I hಚಿve ಡಿeಚಿಟಟಥಿ sಣಚಿಡಿಣeಜ beಟieviಟಿg iಟಿ ಣeಟeಠಿಚಿಣhಥಿ…. ನೀನು ನಂಬಬೇಕು ನಾಗಪ್ಪಾ ! ಒಂದೇ ಒಂದು ಕ್ಷಣದ ಮೊದಲಷ್ಟೇ ನಿನ್ನನ್ನು ನೆನೆದಿದ್ದೆ,” ಎಂದ. ಏಕೋ ಸೀತಾರಾಮನ ಮಾತಿನ ಧಾಟಿ ಎಂದಿನದಾಗಿ ತೋರಲಿಲ್ಲ. ಅದರಲ್ಲಿ ಏನೋ ಏನೋ ಕಡಿಮೆಯಾಗಿತ್ತು. ಏನೆನ್ನುವದು ನಾಗಪ್ಪನಿಗೆ ಸ್ಪಷ್ಟವಾಗಲಿಲ್ಲ. ತಾನು ಫೋನ್ ಮಾಡಲು ಬಂದ ಉದ್ದೇಶ ತಿಳಿಸುವ ಮನಸ್ಸಾಗಲಿಲ್ಲ. ‘ಏಕೋ ಮಾಧ್ಯಾಹ್ನದ ನಿದ್ದೆಯಿಂದ ಎಚ್ಚರವಾದದ್ದೇ, ಆಽಽ ಎನ್ನುತ್ತ ಎದ್ದು ಬಂದ ಏಕಾಕಿತನ ಎಷ್ಟೊಂದು ಹೆದರಿಸಿಬಿಟ್ಟಿತೆಂದರೆ ಈಗಲೇ ನಿನ್ನ ಆಫೀಸಿಗೇ ಬಂದುಬಿಡುತ್ತೇನೆ ಟ್ಯಾಕ್ಸಿಯಿಂದ, ನಿನ್ನ ಹತ್ತಿರ ಮಾತನಾಡುವುದು ಬಹಳವಿದೆ_ಎಂದು ತಿಳಿಸಲು ಈಗ ಫೋನ್ ಮಾಡುತ್ತಿದ್ದೇನೆ ಎನ್ನುವದಿತ್ತು. ಸೀತಾರಾಮನ ದನಿ ಕೇಳಿಸಿದಮೇಲೆ ಹಾಗೆ ಅನ್ನಬೇಕೆಂದು ತೋರಲಿಲ್ಲ. ನೋವಿನ ಸಂಗತಿಯೆಂದರೆ, ಸೀತಾರಾಮ ಆ ಸಂಧಿಯನ್ನೇ ಅವನಿಗೆ ಕೊಡಲಿಲ್ಲ : ಒಂದೇ ಕ್ಷಣದ ಮೊದಲು ತನಗೆ ನಾಗಪ್ಪನ ನೆನಪಾದದ್ದರಿಂದಲೇ ಅವನೀಗ ಫೋನ್ ಮಾಡುತ್ತಿದ್ದಾನೆ ಎನ್ನುವದನ್ನು ಗ್ರಹೀತ ಹಿಡೆದೇ ಮಾತನಾಡುವವನ ಹಾಗೆ_“I ರಿusಣ ಛಿಚಿಟಿ’ಣ beಟieve iಣ,” ಎಂದ. +“Whಚಿಣ is iಣ ಣhಚಿಣ ಥಿou ಛಿಚಿಟಿ’ಣ beಟieve ?” _ನಾಗಪ್ಪನ ಗುಮಾನಿ ಗಟ್ಟಿಯಾಗಹತ್ತಿತ್ತು : ಇವನು ನಾಲ್ಕೇ ನಾಲ್ಕು ತಾಸುಗಳ ಹಿಂದೆ ಭೇಟಿಯಾದ ಸೀತಾರಾಮನೇ ಅಲ್ಲ ಅನ್ನಿಸಿತು. +ಸೀತಾರಾಮನೇ ಮಾತನಾಡಿದ : “ನೀನು ಆಗ ಕೊಟ್ಟ ರಿಪೋರ್ಟನ್ನು ಓದಿದೆ,” ಎಂದು, ತಾನು ನಂಬಲಾರೆನೆಂದದ್ದು ಆ ರಿಪೋರ್ಟು ಎನ್ನುವುದನ್ನು ಸ್ಪಷ್ಟಪಡಿಸಿದ. +“ನಂಬಬೇಡ ಸೀತಾರಾಮ್. ಅದು ಚಿತ್ರಿಸಿದ ವ್ಯಕ್ತಿತ್ವ ನನ್ನದೆಂದೂ ನಂಬುತ್ತೀಯಾ ? ಅದಕ್ಕೇ ಬರುವವನಿದ್ದೆ ನಿನ್ನ ಜೊತೆ ಮಾತನಾಡಲು : ಮಾನವ-ಜೀವಿಗಳನ್ನು ಬೇರೆಯೇ ಒಂದು ದೃಷ್ಟಿಕೋನದಿಂದ ನೋಡುವ ವಿಲಕ್ಷಣ ಲೋಕವೊಂದು ಇದೇ ಮಹಾನಗರದಲ್ಲಿ ಹೇಗೆ ಬೇರೂರಿದೆ ಎಂಬುದರ ಬಗ್ಗೆ….” +ಸೀತಾರಾಮ ಒಮ್ಮೆಲೇ ತಾಳ್ಮೆಗೆಟ್ಟವನ ಹಾಗೆ : “ಅome oಟಿ ಓಚಿgಚಿಠಿಠಿಚಿ. ಂ ಠಿoiಟಿಣ oಜಿ vieತಿ ಛಿಚಿಟಿ iಟಿಣeಡಿಠಿಡಿeಣ ಜಿಚಿಛಿಣs ; iಣ ಛಿಚಿಟಿಟಿoಣ ಛಿಡಿeಚಿಣe ಣhem…. ನಿನ್ನ ಅಪ್ಪ-ಅಮ್ಮ ಬ್ರಾಹ್ಮಣರಾಗಿರಲಿಲ್ಲ ಎನ್ನುವದೂ ಸುಳ್ಳೇ ? ಸುಳ್ಳಲ್ಲವೆಂದು ಗೊತ್ತಿದ್ದೂ ನೀನು….” +“ಇದು ನಿಜವಲ್ಲ, ಸೀತಾರಾಮ, ನನ್ನ ಅಪ್ಪ-ಅಮ್ಮರ ಬಗ್ಗೆ ಖಚಿತವಾಗಿ ನಾನೇನೂ ಅರಿಯೆ, ಇಷ್ಟೆ, “I ಛಿಚಿಡಿe ಚಿ ಜಚಿmm iಜಿ ಣheಥಿ ತಿeಡಿe ಟಿoಣ ಃಡಿಚಿhmiಟಿs….” +ಹೌಽಽಽದೆ ? ಬಹಳ ದೊಡ್ಡ ಕ್ರಾಂತಿಕಾರಿ ನೀನು ಎಂದು ತೋರಿಸಿಕೊಳ್ಳಬೇಡ. ನಿನ್ನ ತಾಯಿಯಾಗಲೀ ಅಪ್ಪನಾಗಲೀ ಬ್ರಾಹ್ಮಣರಾಗಿರಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಶ್ರೀನಿವಾಸನ ಹತ್ತಿರ. ಅವನು ಒದಗಿಸಿದ ಮಾಹಿತೆಯೇ ಈ ರಿಪೋರ್ಟಿಗೆ ಆಧಾರವಾಗಿದೆ…. ಅರ್ಧಗಂಟೆಯ ಮೊದಲಷ್ಟೆ ಶ್ರೀನಿವಾಸ ಇಲ್ಲಿ ಬಂದಿದ್ದ. ನಿನ್ನ ಫೋನ್ ಬರುವ ಎರಡೇ ಎರಡು ಮಿನಿಟುಗಳ ಮೊದಲು ಹೊರಟುಹೋದ. ಅವನು ಬಂದದ್ದರಿಂದಲೇ ಆಫೀಸಿನಲ್ಲಿ ಇಷ್ಟು ಹೊತ್ತು ಕೂಡ್ರುವುದಾಯಿತು. ಇಂದು ಸಂಜೆ ಏಳು ಗಂಟೆಗೆ ಸ್ಕಾಲರ್‍ಶಿಪ್ ಲೀಗಿನ ವರ್ಕಿಂಗ್ ಕಮಿಟಿಯ ಒಂದು ಎಮರ್ಜನ್ಸೀ ಮೀಟಿಂಗ್ ಕರೆಯಲಾಗಿದೆ….” +“ಅದಕ್ಕೂ ನನಗೂ ಏನು ಸಂಬಂಧ ?” +“ನೀನು ಮಾಡಿದಂಥ ಮೋಸ ಮತ್ತೆ ಆಗದಿರಲು ನಾವು ಕೈಗೊಳ್ಳಬೇಕಾದ ಉಪಕ್ರಮಗಳ ಚರ್ಚೆ….” +ನಾಗಪ್ಪನ ಸಿಟ್ಟು ಮಸ್ತಕಕ್ಕೇರಹತ್ತಿತು. ಇವನು ಟೆಲಿಫೋನ್ ಮೇಲೆ ತೆಗೆದುಕೊಳ್ಳುತ್ತಿದ್ದ ವೇಳೆಗೆ ಬೇಸರಪಟ್ಟು ಅದೇ ಬೂಥಿಗೆ ಬಂದ ಇನ್ನಿಬ್ಬರು ಹಾಗೇ ಹೊರಟುಹೋದರು : +“ಇದರಲ್ಲೆಂಥ ಮೋಸ ? ಇದೆಲ್ಲ ಶ್ರೀನಿವಾಸನ ಕಿತಾಪತಿ. ಇವನಿಗೆ ನನ್ನ ಬಗ್ಗೆ ಇಷ್ಟೊಂದು ಹಗೆ ಯಾಕೊ ?_ಇನ್ನೂ ಅರ್ಥವಾಗುವುದಿಲ್ಲ.” +“ನಿನ್ನ ಅಪ್ಪ-ಅಮ್ಮ ಬ್ರಾಹ್ಮಾಣರಲ್ಲ ಎನ್ನುವುದನ್ನು ಈಗ ತನಿಖೆಯ ಆಯೋಗದ ಇದಿರು ನೀನೂ ಒಪ್ಪಿಕೊಂಡೀದ್ದೀಯಂತಲ್ಲ. ನೀನು ಹದಿನೆಂಟು ಅರ್ಷದವನಿದ್ದಾಗಲೇ ಈ ಸಂಗತಿ ನಿನಗೆ ತಿಳಿದಿತ್ತೆಂದು ಕೂಡ….ನನಗಿದೆಲ್ಲ ಹೇಗೆ ಗೊತ್ತಾಯಿತೆಂದು ಆಶ್ಚರ್ಯವಾಗುತ್ತಿರಬೇಕು ಅಲ್ಲವೆ ? ಶ್ರೀನಿವಾಸನೇ ಹೇಳಿದ : ತನಿಖೆ ಮುಗಿದ ನಂತರ ಆ ಆಯೋಗದ ಮಂದಿಯ ಜೊತೆಗೇ ತಾಜಮಹಲಿನಲ್ಲೇ ಊಟ ಮಾಡಿದ…..” +ನಾಗಪ್ಪನಿಂದ ನಂಬುವುದಾಗಲಿಲ್ಲ….ಕ್ಲೋಕ್-ರೂಮಿನಿಂದ ಹೊರಗೆ ಬಂದಮೇಲೆ ರಾಜೀನಾಮೆ ಕೊಡುವ ತನ್ನ ನಿರ್ಧಾರವನ್ನು ದಸ್ತೂರನಿಗೆ ತಿಳಿಸುವ ಕೆಲವೇ ಕ್ಷಣಗಳ ಮೊದಲಷ್ಟೇ_ಈವರೆಗಿನ ಮಾತುಕತೆಗೆ ಯಾವ ಪೂರ್ವಾಪರ ಸಂಬಂಧವೂ ಇಲ್ಲದ_ಅಪ್ಪ-ಅಮ್ಮರ ಜಾತಿಯ ಪ್ರಶ್ನೆಯಿಂದ ಅವನು ತನ್ನನ್ನು ಕೆಣಕಿದಾಗ ಸಿಟ್ಟಿನಿಂದ ಕೊಟ್ಟ ಒಂದು ನಾಟಕೀಯವಾದ ಉತ್ತರ ಕೂಡ ಶ್ರೀನಿವಾಸನ ಕಿವಿಯನ್ನು ಇಷ್ಟು ಬೇಗ ಮುಟ್ಟಬೇಕಾದರೆ….! ಶ್ರೀನಿವಾಸನ ಸಮಾಧಾನಕ್ಕಾಗಿಯೇ ದಸ್ತೂರ್ ಆ ಪ್ರಶ್ನೆಯನ್ನು ಆ ಗಳಿಗೆಯಲ್ಲಿ ಕೇಳಿರಬೇಕು….ಸೀತಾರಾಮನಿಗೀಗ ಏನೂ ಹೇಳಿ ಏನೂ ಉಪಯೋಗವಿಲ್ಲ ಎಂದು ತೋರಿದವನ ಮನಸ್ಸು ಹೊಸ ನಿರ್ಧಾರಕ್ಕೆ ಗಟ್ಟಿಯಾಗುತ್ತಿತ್ತು…. ಇವನ ಮೌನವನ್ನು ತಪ್ಪಾಗಿ ತಿಳಿದ ಸೀತಾರಾಮನೇ ಮುಂದುವರಿಸಿದ : +“ಇದರರ್ಥ : ಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿಗಳಿಗೇ ಮೀಸಲಾಗಿಟ್ಟ ಈ ಸ್ಕಾಲರ್‍ಶಿಪ್ ಸಲುವಾಗಿ ಅರ್ಜಿ ಮಾಡುವಾಗ, ಮುಂದಿನ ಎಂಟು ವರ್ಷಗಳವರೆಗೆ ಅದನ್ನು ಪಡೆಯುವಾಗ ನೀನು ಬ್ರಾಹ್ಮಣನಲ್ಲ ಎನ್ನುವುದು ನಿನಗೆ ಗೊತ್ತಿತ್ತು….” +“ಈಗಲೂ ಗೊತ್ತಿಲ್ಲ. ಮೇಲಾಗಿ ಸ್ಕಾಲರ್‍ಶಿಪ್ ಸಲುವಾಗಿ ಅರ್ಜಿ ಮಾಡಿದಾಗ ನನಗೆ ಬರೇ ಹನ್ನೆರಡು ವರ್ಷ ಪ್ರಾಯ. ಅದೂ ಒಂದು ಲೋನ್ ಸ್ಕಾಲರ್‍ಶಿಪ್ ಸಲುವಾಗಿ, ಪೈ ಬಿಡದೇ ಹಿಂತಿರುಗಿಸಿದ್ದೇನೆ….” +“ಮುಖ್ಯ ಮುದ್ದೆ ಅದು ಅಲ್ಲವೇ ಅಲ್ಲ….ಖಿhe ಠಿoiಟಿಣ is_ಥಿou ಚಿಟಿಜ ಥಿಠಿuಡಿ ಜಿಚಿಣheಡಿ ತಿeಡಿe ಛಿಚಿಠಿಚಿbಟe oಜಿ misಡಿeಠಿಡಿeseಟಿಣiಟಿg ಜಿಚಿಛಿಣs iಜಿ iಣ….” +uಟಿಜeಜಿiಟಿeಜ“ಸೀತಾರಾಮ್ ಜೋಕೆ !…. I ಞಟಿoತಿ ಥಿou ಚಿಟಿಜ ಥಿouಡಿ ಜiಡಿಣಥಿ ಣಡಿಟbe. ಬಾಯಿ ಬಿಗಿ ಹಿಡಿದು ಮಾತನಾಡು. ನೀನು ಯಾವ ಜಾತಿಯವನು ಎನ್ನುವುದು ನಿನ್ನ ಈಗಿನ ವರ್ತನೆಯಿಂದ ಗೊತ್ತಾಗುತ್ತದೆ. ಲಫಂಗರೆಲ್ಲ ಒಂದೆಡೆ ಕೂಡಿ ನನ್ನನ್ನು ಮುರಿಯಲು ಹೂಡಿದ ಸಂಚಿನ ಅಂಗವಾಗಿ ಸಿದ್ಧಪಡಿಸಿದ ಒಂದು ಹೊಲಸು ರಿಪೋರ್ಟನ್ನು ಓದಿದ ಕ್ಷಣಾರ್ಧದಲ್ಲಿ ನಮ್ಮ ಗೆಳೆತನವನ್ನು ಕೂಡ ಮರೆತುಬಿಡುವಷ್ಟು ಹೀನ ಮಟ್ಟಕ್ಕೆ ನೀನು ಇಳಿಯಬಹುದೆಂದು ನಾನು ಬಗೆದಿರಲಿಲ್ಲ. ನಮ್ಮ ಇಷ್ಟು ದಿನದ ಗೆಳೆತನದ ಹಿನ್ನೆಲೆಯಲ್ಲಿ ನೀನದರ ಅರ್ಥ ಮಾಡುತ್ತೀ ಎಂಬ ಧೈರ್ಯದ ಮೇಲೇ ನಿನ್ನ ಕೈಯಲ್ಲಿ ಆ ರಿಪೋರ್ಟನ್ನು ನಾನಾಗಿಯೇ ಕೊಟ್ಟಿದ್ದೆ….” +“ಬೆದರಿಕೆ ಹಾಕುತ್ತೀಯೇನೋ ? ಅಪ್ಪ-ಅಮ್ಮರ ಬಗ್ಗೇ ಸರಿಯಾಗಿ ಗೊತ್ತಿಲ್ಲ ಎನ್ನುವ ನೀನು ಎಂಥವನೆಂಬುದು ಗೊತ್ತಾಗುವುದಿಲ್ಲವೇನೋ ? ನೀನು ರಾಜೀನಾಮೆ ಕೊಟ್ಟ ಪರಾಕ್ರಮದ ಹಿಂದಿನ ಗುಟ್ಟು ನನಗೆ ಗೊತ್ತಿಲ್ಲವೆಂದು ತಿಳಿಯಬೇಡ : ರಾಜೀನಾಮೆ ನೀನು ಕೊಟ್ಟದ್ದಲ್ಲ ; ನಿನ್ನಿಂದ ಕೊಡಿಸಿದ್ದು. ಪ್ರಕರಣವನ್ನು ಅಷ್ಟಕ್ಕೇ ಮುಗಿಸಿ ನಿನ್ನ ಬಿಡುಗಡೆ ಮಾಡಿದರೆನ್ನುವುದು ಪೂರ್ವಜನ್ಮದ ಪುಣ್ಯವೆಂದು ತಿಳಿ. ನಮ್ಮ ಗೆಳೆತನವನ್ನು ನಂಬಿ ಆ ಕಾನ್ಫಿಡೆನ್ಶಿಲ್ ರಿಪೋರ್ಟಿನ ಕಾಪಿ ನನ್ನ ಕೈಲಿ ಕೊಟ್ಟೆಯಲ್ಲವೆ ! ಸೀತಾರಾಮನೆಂಬ ಗೆಳೆಯನಿದ್ದುದರ ನೆನಪು ಈಗ ಆಯಿತಲ್ಲವೆ ? ಆದರೆ ಸಸ್ಪೆಂಡ್ ಮಾಡಿದಾಗ ಮಾತ್ರ ಶ್ರೀನಿವಾಸನೇ ಬೇಕಾದ : ಹೋಗಿದ್ದೆಯಂತಲ್ಲ ಅವನ ಕಾಲು ಹಿಡಿಯಲು. ಕಾಲಿಗೆ ಬೂಟು ಹಾಕುವ ಪುರುಸತ್ತೂ ಇಲ್ಲದವನ ಹಾಗೆ ಅವನ ಮನೆ ಬಿಟ್ಟು ಓಡಿಬಂದೆಯಂತಲ್ಲ : ಕಂಡ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರಂತೆ ! ಶ್ರೀನಿವಾಸ ನಿನ್ನ ಈ ಪ್ರಕರಣದ ಬಗ್ಗೆ ತಾನಾಗಿಯೇ ಬಾಯಿಬಿಟ್ಟು ಏನೂ ಹೇಳಲಿಲ್ಲ. ಬಾಯಿ ಬಿಟ್ಟು ಹೇಳುವ ವಿಷಯವೇ ಅಲ್ಲವಾದರೆ ಅವನಾದರೂ ಏನು ಮಾಡಿಯಾನು. ಪಾಪ, ಆದರೂ ನಿನ್ನನ್ನು ಬಲ್ಲ ನಾನು ನಡೆದಿರಬಹುದಾದದ್ದನ್ನು ಸಹಜವಾಗಿ ಊಹಿಸಬಲ್ಲೆ….ರಿಪೋರ್ಟು ನೀನು ಕೊಡದಿದ್ದರೂ ನನಗೆ ಸಿಕ್ಕೇ ಸಿಗುತ್ತಿತ್ತು. ಶ್ರೀನಿವಾಸನೇ ಅದರ ಪ್ರತಿಯೊಂದನ್ನು ಕೊಟ್ಟು ಹೋಗಿದ್ದಾನೆ. ಅದರಲ್ಲಿ ಈ ರಿಪೋರ್ಟು ಯಾರ ಬಗ್ಗೆ ಇದೆ ಎನ್ನುವದು ತಿಳಿಯದ ಹಾಗೆ ನೀನು ಕೊಟ್ಟ ಪ್ರತಿಯಲ್ಲಿಯಂತೆ ನಿನ್ನ ಹೆಸರನ್ನು ಕಾಟು ಹಾಕಿಲ್ಲ. ಝಳಝಳವಾಗಿ ಎಲ್ಲ ಕ್ಯಾಪಿಟಲ್ ಅಕ್ಷರಗಳಲ್ಲೇ ಬರೆದಿದ್ದಾರೆ : ನಾಗನಾಥ ಎಲಿಯಾಸ್ ನಾಗಪ್ಪಾ ಸಾಂತಯ್ಯಾ ಮಾಪ್ಸೇಕರ್ ! ಮಾಪ್ಸೇಕರ್ ! ಈಗ ಚಕ್ಕನೆ ಬೆಳಕು ಬೀಳುತ್ತದೆ ನೋಡು_ಸ್ವಚ್ಛವಾಗಿ ಕಣ್ಣು ತೆರೆಯಿಸುವ ಹಾಗೆ….ಥತ್ ಸೂಽಽಳೇಮಗನೇ….ನಿನ್ನ ಅಣ್ಣ_ಅವನು ಇನ್ನೊಬ್ಬ….” +ಸೀತಾರಾಮ್ ಕೇಳಿಲ್ಲಿ. ಕಿವಿಗೊಟ್ಟು ಕೇಳು. ಹೀಗೆ ಮಾತನಾಡುದ ಧೈರ್ಯ ನಿನ್ನಂತಹ ನೀರಿಲ್ಲದ ಹೇಡಿಗೆ ಬಂದದ್ದು ಈ ಮಾತುಕತೆ ನಡೆದದ್ದು ಟೆಲಿಫೋನ್ ಮೇಲೆ ಎಂಬ ಕಾರಣಕ್ಕೇ. ಇದಿರಿಗೆ ಸಿಕ್ಕರೆ ಹಲ್ಲುಗಳನ್ನೆಲ್ಲ ಉದುರಿಸಿ ಹೊಟ್ಟೆಯಲ್ಲಿರಿಸುತ್ತಿದ್ದೆ….ನನ್ನ ಆಫೀಸಿನ ಜನ ನನ್ನ ಬಗ್ಗೆ ನಡೆಸಿದ ಪಿತೂರಿಯ ಅರ್ಥ ನಾನು ಮಾಡಿಕೊಳ್ಳಬಲ್ಲೆ. ಕೇವಲ ಆತ್ಮರಕ್ಷಣೆಯೇ_ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬರದ ಹಾಗೆ ನೋಡಿಕೊಳ್ಳುವದೇ_ಅದರ ಹಿಂದಿನ ಪ್ರೇರಣೆಯೆಂದು ತಿಳಿದಿದ್ದೇನೆ. ಶ್ರೀನಿವಾಸನಿಗೆ ನನ್ನ ಬಗ್ಗೆ ಇದ್ದ ದ್ವೇಷದ ಅರ್ಥವಾಗಿರದಿದ್ದರೂ ಕಾಲಕಾಲಕ್ಕೆ ಅದಕ್ಕೆ ಪ್ರೋತ್ಸಾಹವಿತ್ತ ಸಂಗತಿಗಳ ಅರ್ಥವಾದರೂ ಆಗುತ್ತದೆ. ಆದರೆ ಯಾವ ಕಾರಣವೂ ಇಲ್ಲದೇನೆ, ಇಷ್ಟು ದಿವಸ ಶ್ರೀನಿವಾಸನನ್ನು, ಈಗ ಒಮ್ಮೆಲೇ ನನ್ನನ್ನು ದ್ವೇಷಿಸುವ ನೀನು ಅರ್ಥವಾಗುತ್ತಿಲ್ಲ. ಜರ್ನಲಿಸ್ಟ್ ಅನ್ನಿಸಿಕೊಳ್ಳುತ್ತೀಯಾ, ಮೇಲಾಗಿ, ಯಾವುದೇ ಕಮ್ಮಿಟ್‌ಮೆಂಟ್ ಇಲ್ಲದ ಎಡಬಿಡಂಗಿ ನೀನು_ ಚಿಟಿ uಟಿಛಿommiಣಣeಜ ಛಿಚಿಟಿಛಿeಡಿ ಛಿeಟಟ ತಿhiಛಿh muಟಣiಠಿಟies ಚಿಟಿಜ ಞiಟಟs ತಿiಣh ouಣ ಠಿuಡಿಠಿose…. ಇಲ್ಲಿ ಟೆಲಿಫೋನಿಗೆ ಕ್ಯೂ ಬೆಳೆಯುತ್ತಿದೆ. ನಿನ್ನೊಡನೆ ಮಾತನಾಡುತ್ತಿರುವಾಗಲೇ ಒಂದು ನಿರ್ಧಾರಕ್ಕೆ ಬಂದೆ ನೋಡು : ಕೆಲಸಕ್ಕೆ ರಾಜೀನಾಮೆ ಕೊಟ್ಟಮೇಲೆ ಏನು ಮಾಡಲಿ ಎಂದು ಇನ್ನೂ ನಿಶ್ಚಯಿಸಿರಲಿಲ್ಲ. ಈಗ ಸರಕ್ಕನೆಂಬಂತೆ ಮನಸ್ಸು ಗಟ್ಟಿಯಾಯಿತು : ಈ ಶ್ರೀನಿವಾಸರನ್ನು, ಸೀತಾರಾಮರನ್ನು, ಬಂದೂಕುವಾಲಾ-ದಸ್ತೂರರನ್ನು ನಾನು ವೈಯಕ್ತಿಕವಾಗಿ ದ್ವೇಷಿಸಿ ಉಪಯೋಗವಿಲ್ಲ. ಅವರು ವ್ಯವಹರಿಸುತ್ತ ಭದ್ರಗೊಳಿಸುತ್ತಿರುವ ನೆದಡಿಯ ಈ ಹೊಸ ಜಗತ್ತನ್ನೇ ನಾನು ಬಯಲಿಗೆಳೆಯಬೇಕಾಗಿದೆ. ಜೊತೆಗೆ ಅದರ ಕಪ್ಪು ಕರಾಮತಿಗಳಿಗೆ ಸುಣ್ಣ ಬಳೆಯುವ ನಿನ್ನ ಲೀಗಿನಂಥ ಅನೇಕ ಸಂಘಸಂಸ್ಥೆಗಳನ್ನೂ, ನನ್ನ ಉಳಿದ ಆಯುಷ್ಯವನ್ನೀಗ ಇದಕ್ಕೇ ಮೀಸಲಿರಿಸುತ್ತೇನೆ : ನಿಮ್ಮಂತಹರ ನಿಜವಾದ ಬಣ್ಣ ತೋರಿಸಿಕೊಡಲು ಅನುವು ಮಾಡಿಕೊಡಬಹುದಾದಂತಹ ಜರ್ನಲಿಸಮ್‌ಗೆ….”ಟೆಲಿಫೋನ್ ಕೆಳಗಿರಿಸಿದ್ದೇ, ಬೂಥಿನಲ್ಲೇ ಮುಗ್ಗರಿಸಿ ಬೀಳುವಂತೆ ಆದದ್ದಕ್ಕೆ ಕಾರಣ ತನಗೆ ಬಂದ ಮೂರ್ಛೆ ಎಂದು ತಿಳಿಯಲು ಕೂಡ ನಾಗಪ್ಪನಿಗೆ ಕೆಲ ಹೊತ್ತು ಹಿಡಿಯಿತು. ಮೂರ್ಛೆಯಿಂದ ತಿಳಿದೆದ್ದು ಕಣ್ತೆರೆದಾಗ ತಾನಿನ್ನೂ ಟೆಲಿಫೋನ್ ಬೂಥ್ ಇದ್ದ ಫುಟ್‌ಪಾಥಿನ ಮೇಲೇ ಕುಕ್ಕುರುಗಾಲಲ್ಲಿ ಕೂತಿದ್ದೇನೆ, ಐದಾರು ಜನ ತನ್ನನ್ನು ಸುತ್ತುವರಿದು ನಿಂತಿದ್ದಾರೆ ಎನ್ನುವದು ಲಕ್ಷ್ಯಕ್ಕೆ ಬಂದದ್ದೇ ತಡ, ತುಂಬ ಮುಜುಗರಪಟ್ಟವನ ಹಾಗೆ ಸರಕ್ಕನೆ ಎದ್ದು ನಿಂತು, I ಚಿm soಡಿಡಿಥಿ ಎಂದ. ಸುತ್ತುವರಿದು ನಿಂತವರಲ್ಲಿಯ_ಸಪೂರಾದ ಬಿಳಿಯ ಪ್ಯಾಂಟಿನ ಮೇಲೆ ಮೊಣಕಾಲು ಮುಚ್ಚುವಷ್ಟು ಉದ್ದವಾದ ಕಪ್ಪುಬಣ್ಣದ ಕೋಟು ; ತಲೆಗೆ ಅದೇ ಬಣ್ಣದ ಗೋಲಾಕಾರದ ಟೋಪಿ ; ದೊಡ್ಡ ಮೂಗಿನ ಮೇಲೆ ಕಾಯಂ ಆಗಿ ತಳವೂರಿದಂತಿದ್ದ_ಬೆಳ್ಳಿಯಂಥ ಲೋಹದ ಫ್ರೇಮ್ ಇದ್ದ_ಕನ್ನಡಕ ಧರಿಸಿದ ಮುದುಕನೊಬ್ಬ ತುಂಬಿದ ಸಹಾನುಭೂತಿಯಿಂದ ಹೆಗಲ ಮೇಲೆ ಕೈಯಿಟ್ಟು _ ‘ನಿಮ್ಮ ಮನೆ ಇಲ್ಲಿಂದ ಬಹಳ ದೂರವಿದೆಯೆ ?” ಎಂದು ಕೇಳಿದ. ಮುದುಕ ಪಾರ್ಸಿ ಎಂದು ಅವನ ವೇಷಭೂಷಣಗಳೇ ಸಾರುತ್ತಿದ್ದವು. ಅನುನಾಸಿಕಪ್ರಧಾನವಾದ ಇಂಗ್ಲೀಷೂ ಅದನ್ನು ಇನ್ನಷ್ಟು ಸ್ಪಷ್ಟಪಡಿಸಿತು. ಮುದುಕನ ಕೈಯ ಸ್ಪರ್ಶಕ್ಕೆ ಮೆತ್ತಗಾದ ನಾಗಪ್ಪ, “ಗಲ್ಲಿಯ ಕೊನೆಯಲ್ಲೇ ಇದೆ ಮನೆ, ನಾನೀಗ ಆರಾಮವಾಗಿದ್ದೇನೆ,” ಎಂದು ಹೊರಡಲನುವಾದಾಗ, ಮುದುಕ “ಔಜಿ ಛಿouಡಿse ! oಜಿ ಛಿouಡಿse ಥಿou ಚಿಡಿe ಚಿಟಟ ಡಿighಣ….” ಎಂದು, ಮಗುವನ್ನು ಪುಸಲಾಯಿಸುವ ಧಾಟಿಯಲ್ಲಿ, ಅನ್ನುತ್ತ ಅವನ ಜತೆಯಾಗಿಯೇ ನಡೆದು, ಖೇಮರಾಜಭವನದ ಹೆಬ್ಬಾಗಿಲವರೆಗೂ ಬಂದ. ಈ ಮೊದಲು ಸುತ್ತುಗಟ್ಟಿ ನಿಂತವರೆಲ್ಲ ಒಬ್ಬೊಬ್ಬರೇ ಚದುರಿದ್ದರು. ಮುದುಕ ಇನ್ನೊಮ್ಮೆ ನಾಗಪ್ಪನ ಬೆನ್ನು ಸವರುತ್ತ_“ಯಾಕೆ ಹೇಳುತ್ತಿದ್ದೇನೋ ಗೊತ್ತಿಲ್ಲ. ಆದರೆ ಹೇಳಬೇಕೂ ಅನ್ನಿಸುತ್ತದೆ…..I ತಿಚಿs ತಿಚಿಣಛಿhiಟಿg ಥಿou ತಿheಟಿ ಥಿou ತಿeಡಿe ಣಚಿಟಞiಟಿg oಟಿ ಣhe ಠಿhoಟಿe…. ಯಾರೋ ನಿಮ್ಮ ಸಿಟ್ಟಿಗೆ ಕಾರಣವಾಗಿರಬೇಕು. ಆದರೆ ಇಷ್ಟೊಂದು ಸಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ನಡುಗುತ್ತಿದ್ದ ರೀತಿಯಿಂದ, ಕೈ ಎತ್ತಿದ ಮಾತನಾಡುವ ಬಗೆಯಿಂದ ಹೊರಗೆ ನಿಂತ ನಮಗೆಲ್ಲ ನೀವೆಲ್ಲಿ ಭೂಥಿನ ಗ್ಲಾಸು ಒಡೆಯುತ್ತೀರೋ ಎಂಬ ಭಯವಾಯಿತು. ನಿಮಗೆ ಬಂದ ಸಿಟ್ಟನ್ನು ನೋಡಿದರೆ ನೀವು ಯಾರೊಡನೆ ಮಾತನಾಡುತ್ತಿದ್ದಿರೋ, ಅವರೊಬ್ಬರೇ ಅದಕ್ಕೆ ಕಾರಣವಾಗಿರಲಿಕ್ಕಿಲ್ಲ. ಅನ್ನಿಸುತ್ತದೆ. ವಿಚಾರಮಾಡಿ ನೋಡಿ. ಮೊದಲು ಎಲ್ಲವನ್ನೂ ಮರೆತು ಸ್ವಸ್ಥ ನಿದ್ದೆ ಮಾಡಿರಿ.” ಎಂದವನೇ ಅಲ್ಲಿ ಹೆಚ್ಚು ಹೊತ್ತು ನಿಲ್ಲದೇ, ಬಿಟ್ಟು ಬಂದ ಟೆಲಿಫೋನ್ ಬೂಥಿನ ಕಡೆಗೆ ಹಿಂತಿರುಗಿ ಹೊರಟೇಬಿಟ್ಟ. +ಅಚಾನಕವಾಗಿ ಬೇಟಿಯಾದ ಈ ನುದುಕನ ವರ್ತನೆಯಿಂದ ನಾಗಪ್ಪ ಥಕ್ಕಾಗಿ ನಿಂತೇಬಿಟ್ಟ. ಮನಸ್ಸು ತುಂಬ ಆರ್ದ್ರವಾಗಿತ್ತು. ಮುದುಕ ತನ್ನತ ತಿರುಗಿದ್ದನ್ನೊಮ್ಮೆ ನೋಡಿ ಹೋಗಬೇಕೆನಿಸಿತು. ಆದರೆ ಮುದುಕ ಹೀತಿರುಗಿ ನೋಡಲಿಲ್ಲ. ಯಾವುದೇ ರೀತಿಯ ಭಾವುಕತೆಗೆ ಎಡೆಕೊಡಬಾರದೆಂದು ನಿರ್ಧರಿಸಿಯೂ ಮನಸ್ಸಿನಲ್ಲಿಯೇ ಮುದುಕನನ್ನು ವಂದಿಸಿದ. ಮರುಕ್ಷಣ ಕೂಡಲೇ ಕೋಣೆಯನ್ನು ತಲುಪಲು ಕಾತರಗೊಂಡವನ ಹಾಗೆ ಓಡೋಡಿ ಮೆಟ್ಟಿಲು ಹತ್ತಿ ಕೊನೆಯ ಮಜಲೆಗೆ ಬಂದವನೇ ಅದೇ ಅವಸರದಿಂದ ಕೋಣೆಯ ಕಡೆಗೆ ನಡೆದ. ಅರ್ಜುನರಾವರ ಮನೆಯ ಕದ ಮುಚ್ಚಿತ್ತು. ಶಿಂಪಿಯವರ ಮನೆಗೂ ಇನ್ನೂ ಬೀಗವಿತ್ತು. ಕೋಣೆಗೆ ಬಂದಾಗ ಕದದ ಇದಿರಿಗೇ ತಾನು ಶ್ರೀನಿವಾಸನ ಮನೆಯಲ್ಲಿ ಬಿಟ್ಟುಬಂದ ಬೂಟಿನ ಜೋಡಿ ! ಶ್ರೀನಿವಾಸನ ಮನೆಯಿಂದ ಯಾರೋ ಬಂದು ಬಿಟ್ಟು ಹೋಗಿರಬೇಕು. ಕದ ತೆರೆದು ಒಳಗೆ ಹೋದರೆ ಎರಡು ಪತ್ರಗಳು : ಒಂದು ಪತ್ರ ಹುಬ್ಬಳ್ಳಿಯಿಂದ ಬಂದದ್ದು_ಸಂಪಾದಕ ಮಿತ್ರನದು ! ದಪ್ಪವಾಗಿತ್ತು. ಇದೇನು ನನಗೆ ಪತ್ರ ಬರೆಯುವ ಹುಕ್ಕಿ ಬಂತಪ್ಪ ಇದ್ದಕ್ಕಿದ್ದ ಹಾಗೆ ನಮ್ಮ ಈ ಕ್ರಾಂತಿಕಾರೀ ಸಂಪಾದಕನಿಗೆ ? ಎಂದು ಕುತೂಹಲವಾಯಿತು. ಇನ್ನೊಂದು ಹ್ಯಾಂಡ್-ಡೆಲಿವರಿಯಿಂದ ಬಂದ ದಪ್ಪ ಲಕ್ಕೋಟೆಯಾಗಿತ್ತು. ಟೈಮ್ಸ್ ಪತ್ರಿಕೆಯ ಅಂಕಿತವಿದ್ದದ್ದು. ಬಹುಶಃ ಸೀತಾರಾಮ ತಾನು ಕೊಟ್ಟ ರಿಪೋರ್ಟಿನ ಪ್ರತಿಯನ್ನು ಹಿಂತಿರುಗಿಸಿರಬೇಕು : ಖುದ್ದಾಗಿ ಬಂದವನು ಶ್ರೀನಿವಾಸನ ಪ್ರೆಸ್ಸಿನ ಆಳಿರಬೇಕು_ಬೂಟು ತಂದವನೇ ಅದನ್ನೂ ತಂದಿರಬಹುದು. ಅದನ್ನೇ ಮೊದಲು ತೆರೆದು ನೋಡಿದ. ಈ ಮೊದಲು ಬಂದ ಸಂಶಯವೇ ನಿಜವಾಗಿತ್ತು : ‘ನೀನು ಕೊಟ್ಟು ಹೋದ ರಿಪೋರ್ಟಿನ ಪ್ರತಿಯನ್ನು ಹಿಂತಿರುಗಿಸುತ್ತಿದ್ದೇನೆ. ಶ್ರೀನಿವಾಸನಿಂದ ಇನ್ನೊಂದು ಕಾಪಿ ಸಿಕ್ಕಿದೆ. ಖುದ್ದು ಬಂದು ಕೊಟ್ಟು ಹೋದ. ಆದ ಅಪಘಾತದಿಂದ ಚೇತರಿಸಿಕೊಳ್ಳಲು, ಇನ್ನೂ ಕೆಲ ಸಮಯ ಬೇಕಾದೀತು. ಸಂಜೆ ಊಟಕ್ಕೆ ಬರಲಾಗುವದಿಲ್ಲ_ಸೀ.’ ಇಂಗ್ಲೀಷಿನಲ್ಲಿ ಬರೆದ ಚೀಟಿಯಲ್ಲಿ ‘ಮಾಯ್ ಡಿಯರ್’ ವಗೈರೇ ಯಾವುದೇ ರೀತಿಯ ಔಪಚಾರಿಕ ಆರಂಭವಿರಲಿಲ್ಲ. ಯಾರಿಗೆ ಬರೆದದ್ದೆಂದು ಕೂಡ ತಿಳಿಯುತ್ತಿರಲಿಲ್ಲ. +ಸದ್ಯ, ಚೀಟಿ ರಿಪೋರ್ಟುಗಳನ್ನು ಬದಿಗಿರಿಸಿ, ಹುಬ್ಬಳ್ಳಿಯ ಪತ್ರವನ್ನು ಉಸಿರು ಬಿಗಿಹಿಡಿದ ಕುತೂಹಲದಿಂದ ತೆರೆದ : ನಾಲ್ಕೇ ನಾಲ್ಕು ಸಾಲುಗಳಿದ್ದ ಚೀಟಿಯ ಜತೆಗೆ ಕನ್ನಡ ಸರಿಯಾಗಿ ಬಾರದ ಯಾರೋ ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದಂಥ ಲಂಬಾಚೌಡಾ ಪತ್ರ ! ಸಂಪಾದಕನ (ಅವನ ಹೆಸರೇ ನೆನಪಿಗೆ ಬರದಾಯಿತು !) ಪತ್ರವನ್ನು ಒದುತ್ತಿದ್ದ ಹಾಗೆ ಮತ್ತೆ ಸಿಟ್ಟು ಮಸ್ತಕಕ್ಕೇರಹತ್ತಿ ಮೂಗಿನ ಹೊರಳೆಗಳು ಅರಳಿದವು : “ಜತೆಗಿರಿಸಿದ ಪತ್ರ ನಿಮ್ಮ ವೈರಿಗಳೊಬ್ಬರು ಬರೆದಂತೆ ಕಾಣುತ್ತಿದ್ದರೂ ಅದು ನಿಜವೇ ಬರೆಯಿಸಿದ್ದು ಎಂಬುದು ತಿಳಿಯದಷ್ಟು ಧಡ್ಡನಲ್ಲ ನಾನು. ಯಾಕೆಂದರೆ ಎಲ್ಲರನ್ನು ಬಿಟ್ಟು ಖಟ್ಟಾ ಬ್ರಾಹ್ಮಣ ದ್ವೇಶಿಯಾದ ನನಗೇ, ನೀವು ಬ್ರಾಹ್ಮಣರಲ್ಲ ಎನ್ನುವುದಕ್ಕೆ ಪುರಾವೆ ಒದಗಿಸಿ, ಪತ್ರ ಬರೆಯುವಷ್ಟು ಮಟ್ಟಿಗಿನ ಮೂರ್ಖಬ್ರಾಹ್ಮಣನಿರಬಹುದೆಂಬುದನ್ನು ನಾನು ನಂಬಲಾರೆ. ಯಾಕೆಂದರೆ ಬ್ರಾಹ್ಮಣರ ಮುಖ್ಯ ಲಕ್ಷಣವೇ ಅವರ ಜಾಣತನ, ಹಾಗೂ ಈ ಜಾಣತನವನ್ನು ಅತ್ಯಂತ subಣಟe ಆದ_ಕೇವಲ ಬ್ರಾಹ್ಮಣರಿಗಷ್ಟೇ ಸಾಧ್ಯವಾದ_ರೀತಿಯಲ್ಲಿ ಪ್ರಕಟಿಸಿದ್ದರ ಶ್ರೇಷ್ಠ ಉದಾಹರಣೆ ನೀವು ಬರೆಯಿಸಿದ ಪತ್ರ ! ಇದು ನೀವು ಬರೆದದ್ದೆಂದು ತಿಳಿಯಬಾರದೆಂದೇ ಕನ್ನಡದ ಕಾಗುಣಿತ ಕಲಿಯುತ್ತಿರುವಂತಹನ ಕೈಯಿಂದ ಇಂತಹ ದರಿದ್ರ ಕನ್ನಡದಲ್ಲಿ ನಿಮಗೆ ತಿಳಿಸಬೇಕಾಗಿದ್ದ ಮಜಕೂರನ್ನು ತಿಳಿಸಿದ್ದು ! ನನ್ನ ಹಾರ್ದಿಕ ಅಭಿನಂದನೆಗಳು. ಪತ್ರವನ್ನು ತಿರುಗಿಕಳಿಸುತ್ತಿದ್ದೇನೆ. ಯಾಕೆಂದರೆ ನನ್ನ ಕಡ್ಡಿಪೆಟ್ಟಿಗೆಯೊಳಗಿನ ಕಡ್ಡಿಯ ಬೆಂಕಿಯಲ್ಲಿ ಸುಡುವ ಯೋಗ್ಯತೆ ಕೂಡ ಅದಕ್ಕೆ ಇಲ್ಲದ್ದು.” +ಈ ಚೀಟಿಯ ಜತೆಗಿದ್ದ ಸಹಿ ಇಲ್ಲದ ಪತ್ರದ ಹಿಂದಿನ ತಲೆ ಶ್ರೀನಿವಾಸನದೆಂದು ತಿಳಿಯಲು ನಾಗಪ್ಪನಿಗೆ ಹೊತ್ತು ಹಿಡಿಯಲಿಲ್ಲ. ಅವನ ಧಡ್ಡತನಕ್ಕೆ ನಗು ಬಂತು : ಒಂದೂ ಮಗನಿಗೆ ಈ ಪತ್ರಿಕೆಯ ಹೊರತು ಕನ್ನಡದಲ್ಲಿ ಬೇರೆ ಪತ್ರಿಕೆಗಳಿವೆ ಎನ್ನುವದು ಮೊದಲು ಗೊತ್ತಿರಬೇಕಲ್ಲ ! ಅವನ ಅಮ್ಮನ ಬಗ್ಗೆ ನಾನು ಬರೆದ ಕತೆ ಪ್ರಕಟವಾದದ್ದೇ ಈ ಪತ್ರಿಕೆಯಲ್ಲಿ. ನನ್ನ ಕತೆಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿದದ್ದೇ, ಅದಕ್ಕೆ ಚಂದಾದಾರನಾದನೇ ! ಆದರೆ ಸದ್ಯ_ಅವನ ಪತ್ರಕ್ಕೆ ಸ್ಪೂರ್ತಿಯಾದದ್ದಕ್ಕೆ ತೀರ ವಿರುದ್ಧವಾದ ಕಾರಣಕ್ಕಾಗಿ_ಈ ಪತ್ರಿಕೆ ನನ್ನ ಕತೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ ಎಂಬುದು ಮಾತ್ರ ಗೊತ್ತಿದ್ದಂತಿಲ್ಲ. ಸನ್ನಿವೇಶದಲ್ಲಿಯ ವಿಡಂಬನ ಲಕ್ಷ್ಯಕ್ಕೆ ಬರುತ್ತಲೇ, ನಗು ಬರದಿರಲಿಲ್ಲ. ಎರಡೂ ಪತ್ರಗಳನ್ನು ಹರಿದೊಗೆಯುವವ : ನಡುವೆಯೇ ತಡೆದ. ಏನೋ ಥಟ್ಟನೆ ಹೊಳೆದವನ ಹಾಗೆ ಕೂತಲ್ಲಿಂದ ಎದ್ದು ಒಳಗೆ ಹೋಗಿ ಕಡ್ಡಿ ಪೆಟ್ಟಿಗೆಯನ್ನು ತಂದು ಕಡ್ಡಿಗೀರಿ ಎರಡೂ ಪತ್ರಗಳನ್ನು ಸುಟ್ಟುಹಾಕಿದ : ಹತ್ತೂ ಮಗ ದಸ್ತೂರ್ ಈ ಬೆಂಕಿಯನ್ನು ನೋಡಿದ್ದರೆ ಅದಕ್ಕೆ ಯಾವ ಅರ್ಥ ಹಚ್ಚುತ್ತಿದ್ದನೋ ! ತನ್ನ ಮಟ್ಟಿಗಂತೂ ಇದು ಅರ್ಥಪೂರ್ಣವಾದದ್ದು : ನೆಲದ ಸತ್ವವನ್ನೇ ಹೀರಿಬಿಡುವ ಇಂತಹ ಕಳೆಯನ್ನೆಲ್ಲ ಕಿತ್ತು ಸುಟ್ಟುಹಾಕಿದಾಗಲೇ ಬೆಳೆ ಕೊಡುವ ಹಸಿರು ಹುಲುಸಾಗಿ ಲವಲವಿಕೆಯಿಂದ ಚಿಗುರಿಕೊಂಡೀತು….ಪತ್ರಗಳು ಉರಿದು ಕಪ್ಪು ಕಾರ್ಬನ್ ಆದೊಡನೆ, ಪುಡಿಪುಡಿ ಮಾಡಿ, ಮೂಲೆಯೊಂದರಲ್ಲಿ ಚೆಲ್ಲಿ ಮೋರಿಗೆ ಹೋಗಿ ಕೈ ತೊಳೆದುಕೊಂಡು ಬಂದ. +uಟಿಜeಜಿiಟಿeಜತೊಳೆದ ಕೈಗಳನ್ನು ಟವೆಲ್ಲಿನಿಂದ ಒರೆಸಿಕೊಳ್ಳುತ್ತಿದ್ದಂತೆ ಮೂರು ದಿನಗಳಿಂದ ಕೆಲಸದ ಮುದುಕಿಯನ್ನೇ ನೋಡಿಲ್ಲ ಎನ್ನುವದು ಅರಿವಿಗೆ ಬಂತು : ಮನೆಯೊಳಗಿನ ಕಸ ಗುಡಿಸಿರಲಿಲ್ಲ ; ಮೋರಿಯಲ್ಲಿ ಒಟ್ಟಾಗಿ ಬಿದ್ದ ಸ್ನಾನದ ಅರಿವೆಗಳಿನ್ನೂ ಒಗೆದಿರಲಿಲ್ಲ. ಹಾಲಿನವನೂ ಮೂರುದಿನಗಳಿಂದ ಬಂದಿರಲೇ ಇಲ್ಲ. ನಡುವೆಯೇ ಶಿಂಪಿಯವರ ನೆನಪು ಬಂದು_ಅರೆ ! ಇದೇಕೆ ಇವರ ಮನೆಗೆ ಇನ್ನೂ ಬೀಗವಿದೆ, ಎಂದುಕೊಂಡ. ಇವೆಲ್ಲ ಒಂದಕ್ಕೊಂದು ಸಂಬಂಧ ಇದ್ದವುಗಳು ಎಂದು ಅನ್ನಿಸಿ ಇದಕ್ಕೆ ಉತ್ತರ ಅರ್ಜುನ್‌ರಾವರ ಮನೆಯಲ್ಲಿದೆ ಎಂಬಂತೆ ಅಲ್ಲಿ ಹೋಗುವುದನ್ನು ನಿಶ್ಚಯಿಸಿ ಚಪ್ಪಲಿ ಮೆಟ್ಟಿದಮೇಲೆಯೇ ಹೊಳೆಯಿತು : ಅರ್ಜುನ್‌ರಾವ್ ಇನ್ನೂ ಮನೆಗೆ ಬಂದಿರಲಿಕ್ಕಿಲ್ಲ. ತುಸು ಹೊತ್ತು ಕಾದು ನೋಡೋಣ ಎಂದುಕೊಂಡು ಕುರ್ಚಿಯಲ್ಲಿ ಕೂಡ್ರಬೇಕು ಎನ್ನುವಷ್ಟರಲ್ಲಿ ಕದದ ಮೇಲೆ ಬಡಿದ ಸದ್ದು ಕೇಳಿಸಿತು. ಜಾನಕಿ ಇರಬಹುದೇ ? ಎಂಬ ಸಂಶಯದಿಂದಲೇ ಎದೆ ಡವಡವಿಸುತ್ತಿರುವಾಗ ಕದ ತೆರೆದು ನೋಡಿದರೆ ಅರ್ಜುನ್‌ರಾವರ ಹೆಂಡತಿ : “ನಿಮಗೆ ಫೋನ್ ಇದೆ ನಮ್ಮ ಮನೆಯಲ್ಲಿ, ತುಂಬ ಅರ್ಜೆಂಟ್ ಅಂತೆ,” ಎಂದಳು. ಯಾರಿರಬಹುದೆಂದು ಅನುಮಾನಿಸುತ್ತಲೇ ಅವರ ಮನೆಗೆ ಹೋಗಿ ಟೆಲಿಫೋನ್ ಎತ್ತಿಕೊಂಡು, “ಊeಟಟo,” ಎಂದ. +“ಎಲ್ಲೊ ಣಗ್, ಥಿಸ್ ಇಸ್ ಂಅರ್ಯ್.” ಎಂದು ಸಾರಿದ ಮೇರಿಯ ದನಿ ಕೇಳಿಸಿದ್ದೇ ಆದ ಆಶ್ಚರ್ಯ, ಅದರ ಹಿಂದೆಯೇ ಬಂದ ಸಿಟ್ತುಗಳಿಂದಾಗಿ ನಾಗಪ್ಪನಿಂದ ಮಾತೇ ಹೊರಡದಾಯಿತು. ಮಾತನಾಡದೇ ಸುಮ್ಮನೆ ರಿಸೀವರ್ ಕಿವಿಗೆ ಗಿಡಿದು ನಿಂತ. ಮೇರಿಯೇ ಮುಂದುವರಿದು, “I ಚಿm ಒಚಿಡಿಥಿ heಡಿe, ಓಚಿg. ಊou ಚಿಡಿe ಥಿou ?” ಎಂದಳು. +ನಾಗಪ್ಪ ‘ಖಿo heಟಟ ತಿiಣh ಥಿou ಚಿಟಿಜ ಚಿಟಟ ಣhಚಿಣ ಠಿuಣ-uಠಿ sತಿeeಣಟಿess….’ ಎನ್ನುವವ. ಆದರೆ ಏಕೋ ಅವನ ಕೊರಳು ತನ್ನಿಂದ ತಾನೇ ಬಿಗಿದುಕೊಳ್ಳುತ್ತಿತ್ತು. ತನ್ನ ನಿರ್ಧಾರದ ವಿರುದ್ಧ ಕಣ್ಣುಗಳು ತೇವಗೊಳ್ಳುತ್ತಿದ್ದವು. ಮಾತನಾಡದೇ ರಿಸೀವರನ್ನು ಹಾಗೇ ತೆಪ್ಪಗೆ ಕೆಳಗಿಡುವವನು. ಮೇರಿಯ ಸುದೈವ : ಅವಳಿಗೂ ಅದೇ ಸಂಶಯ ಬಂದಿರಬೇಕು : ಚಟ್ಟನೆ_ “Pಟeಚಿse sಠಿeಚಿಞ heಡಿe ಣo ಆಡಿ. Pಚಿಣeಟ.” ಎಂದಳು. ನಾಗಪ್ಪನಿಂದ ತಂತಾನೆ ‘ಓಽಽ’ ಎಂಬ ಉದ್ಗಾರ ಹೊರಟಿತು. ಮಾತನಾಡಲಿರುವವರು ಪಟೇಲರೆಂದು ತಿಳಿದದ್ದೇ ತಡ, ಹೊಸ ಉತ್ಸಾಹ ತುಂಬಿದವನ ಹಾಗೆ, ಸಮೀಪದ ಕುರ್ಚಿಯೊಂದನ್ನೆಳೆದು ಕುಳಿತುಕೊಂಡ. ಮನೆಯಲ್ಲಿ ಅರ್ಜುನ್‌ರಾವರ ಹೆಂಡತಿಯೊಬ್ಬಳೇ ಇದ್ದಂತೆ ತೋರಿತು. ಪಟೇಲರು ಗಂಟಲು ಸರಿಪಡಿಸಿಕೊಳ್ಳುತ್ತ, “ಹೆಲ್ಲೋ ನಾಗ್,” ಎಂದರು. +ನಾಗಪ್ಪ ಎಂದಿನಂತೆ ಅವರನ್ನು ಅವರ ಮೊದಲ ಹೆಸರಿನಿಂದ ಕರೆಯುತ್ತ “ಹೆಲ್ಲೋ ಜೀಥೂ, ಯಾವಾಗ ಬಂದೆ ?” ಎಂದು ಕೇಳಿದ. +“ನಿನ್ನೆ ರಾತ್ರೆ….” +“ಔh ! ತಿeಟಟ ಣimeಜ isಟಿ’ಣ iಣ ?” +“ ಖಿimeಜ ಜಿoಡಿ ತಿhಚಿಣ ?” +“ಕಮ್ ಆನ್ ಜೀಥೂ_ನಾವೇನು ಎರಳು ಚೀಪುವ ಕೂಸುಗಳಲ್ಲ_ಅಲ್ಲವೆ ?” +“ಓಚಿg, I ತಿಚಿಟಿಣ ಣo ತಿiಣhಜಡಿಚಿತಿ ಥಿouಡಿ ಡಿesigಟಿಚಿಣioಟಿ….” +“ಅಂದರೆ ನಿನಗೆ ಈಗಾಗಲೇ ಗೊತ್ತಾಗಿದೆ ಹಾಗಾದರೆ ?….” +“ ಐisಣeಟಿ ಓಚಿg, ಟeಣ us ಟಿoಣ ಜisಛಿuss oಟಿ ಣhe ಠಿhoಟಿe. Whಥಿ ಜoಟಿ’ಣ ಥಿou ರಿoiಟಿ me ಜಿoಡಿ ಜiಟಿಟಿeಡಿ ಣoಟಿighಣ ?” +ಸೀತಾರಾಮನ ಜೊತೆಗೆ ಊಟಮಾಡುವ ಸಂಧಿ ತಪ್ಪಿಹೋದ ಬಗೆ ನೆನಪಿಗೆ ಬಂದು ನಗು ಬಂತು. ಆ ನಗುವಿನಲ್ಲಿ ಖಿನ್ನತೆಯ ಅಂಶವೇ ದೊಡ್ಡದಾಗಿತ್ತು. ಇಷ್ಟೊಂದು ತರಾತುರಿಯ ಕೆಲಸ ಈಗ ಏನಿರಬಹುದು_ಎಲ್ಲ ಮುಗಿದುಹೋದಮೇಲೆ ? ಅಷ್ಟೆಲ್ಲ ಯಾತನೆಯ ಕೊನೆಯಲ್ಲಿ ಕೊಟ್ಟ ರಾಜೀನಾಮೆಯನ್ನು ಯಾಕೆ ನಾನು ಹಿಂದೆಗೆದುಕೊಳ್ಳಬೇಕು ?ಸರಿಯಾಗಿ ಗಂಟು ಕಟ್ಟಿ ಅಟ್ಟದ ಮೇಲೆ ಇಟ್ಟುಬಿಟ್ಟದ್ದನ್ನು ಈಗ ಪುನಃ ಯಾಕೆ ಬಿಚ್ಚಲು ನಾನು ಹೋಗಬೇಕು ? ಬೇಡ : ತಿರುಗಿ ಹೊಸತೇ ಒಂದು ಆಸಕ್ತಿಯ ಜಗತ್ತು ತೆರೆಯುವ ಆಮಿಷಗಳ ಜಾಲದಲ್ಲಿ ಸಿಕ್ಕಿಸಿಕೊಳ್ಳುವ ಧೈರ್ಯವಾಗಲಿಲ್ಲ. ಆ ತಾಕತ್ತೂ ತನಗೀಗ ಉಳಿದೆ\ಇದೆಯೆಂದು ತೋರಲಿಲ್ಲ : “Soಡಿಡಿಥಿ ಎiಣhu, I ತಿಚಿಟಿ’ಣbe ಚಿbಟe ಣo mಚಿಞe iಣ. ಖಿhಚಿಟಿಞ ಥಿou ಚಿಟಟ ಣhe sಚಿme….” ಉತ್ತರರೂಪವಾಗಿ ಆ ಬದಿಯಿಂದ ಬಂದ ಹೆಣ್ಣು-ದನಿಯನ್ನು ಕೇಳಿ ನಾಗಪ್ಪ ಚಕಿತನಾದ. ಮಾತನಾಡುತ್ತಿದ್ದವಳು ಮತ್ತೆ ಮೇರಿಯಾಗಿದ್ದಳು !“ಐisಣeಟಿ ಓಚಿg, ಠಿಟeಚಿse ಟisಣeಟಿ_ಜಿoಡಿ mಥಿ sಚಿಞe…. ಡಾ. ಪಟೇಲರು ಬಂದೂಕವಾಲಾರ ಜೊತೆಗೆ ಮಗ್ಗುಲ ಕೋಣೆಗೆ ಹೋಗಿದ್ದಾರೆ. ತಾನು ಮಾತನಾಡುತ್ತಿದ್ದದ್ದು ನಿನ್ನೊಡನೆ ಎಂಬುದನ್ನು ತೋರಿಸಿಕೊಳ್ಳುವದು ಬೇಡವಾಗಿತ್ತವರಿಗೆ, ರಾತ್ರಿ ಬಾ. ನಾನೂ ಇರುತ್ತೇನೆ ಅಲ್ಲಿ. ಹಾಗೂ ಇನ್ನೂ ಕೆಲವು ಗೆಳೆಯರು. ಒ‌ಆ hಚಿs ಜಿಚಿbuಟous ಠಿಟಚಿಟಿs ಜಿoಡಿ ಥಿou. ಊe is so uಠಿseಣ_beಟieve me, so veಡಿಥಿ uಠಿseಣ bಥಿ ತಿhಚಿಣ hಚಿs hಚಿಠಿಠಿeಟಿeಜ…. ಊಟ ಎಮ್‌ಡೀ ಅವರ ಮನೆಯಲ್ಲೇ ಇದೆ. Iಣ is ಚಿ smಚಿಚಿಟ gಡಿouಠಿ. ಖಿheಡಿe ತಿiಟಟ be ಚಿ ಛಿಚಿಡಿ ಣo ಜಡಿoಠಿ boಣh oಜಿ us home ಚಿಜಿಣeಡಿ ಜiಟಿಟಿಚಿಡಿ….” +ಮೇರಿಯ ದನಿ ಕೊನೆಯ ವಾಕ್ಯಕ್ಕೆ ಬಂದಾಗ ಏನೋ ಗುಟ್ಟಿನ ಮಾತನ್ನು ಕೇಳುವ ಹಾಗೆ ಅದು ಒಮ್ಮೆಲೇ ತಲೆ ತಗ್ಗಿತ್ತು. ಥತ್ ದಿ ಬಿಚ್ ! ನನಗೆ ಮಾಟಾ ಮಾಡ್ತಾಳೆ. ಫಿರೋಜ್ ಈಗ ಅಲ್ಲಿಗೆ ಬಂದದ್ದು ಸುಳ್ಳು. ಇದೆಲ್ಲ ಮೇರಿಯ ಮುಖಾಂತರ ನನ್ನ ಮೇಲೆ ಒತ್ತಡ ತರುವ ಚತುರೋಪಾಯ : ನಾಗಪ್ಪ ಈಗ ಯಾವುದೇ ಬಗೆಯ ಉದ್ವೇಗಕ್ಕೆ ಒಳಗಾಗದೇ ಉತ್ತರ ಕೊಟ್ಟ : “ಖಿhಚಿಟಿಞ ಥಿou, ಒಚಿಡಿಥಿ, ಜಿoಡಿ ಣhe mosಣ ಣemಠಿಣiಟಿg oಜಿಜಿeಡಿ…. ಆದರೆ ನನಗೀಗ ಇದಾವುದರಲ್ಲೂ ಆಸ್ಥೆಯೇ ಉಳಿದಿಲ್ಲ. ನನ್ನ ಮಾತಿನಲ್ಲಿ ಕಹಿಯಿದೆಯೆಂದು ತಿಳಿಯಬೇಡ, ಮೇರಿ. ನನಗೆ ಸಿಟ್ಟೂ ಬಂದಿಲ್ಲ. ನಾನು ಬದಲಾಗಿಬಿಟ್ಟಿದ್ದೇನೆ ಎನ್ನುವದು ಮಾತ್ರ ನಿಜ. ನಾನು ರಾಜೀನಾಮೆಯನ್ನು ಕೊಟ್ಟದ್ದು ಬರೇ ಕಂಪನಿಯ ಕೆಲಸಕ್ಕಷ್ಟೇ ಅಲ್ಲ, ಮೇರೀ : ವ್ಯಾವಸಾಯಿಕ ಜಗತ್ತು ಪ್ರತಿನಿಧಿಸುವ ಎಲ್ಲದಕ್ಕೂ ! ನನ್ನ ನಿರ್ಧಾರವನ್ನೀಗ ಯಾರೂ ಬದಲಿಸಲಾರರು. (ಓoಣ eveಟಿ ಣhe mosಣ ಣeಟಿಣಚಿಟiziಟಿg ಛಿhಚಿಡಿms oಜಿ ಣhe biಣಛಿh ಛಿಚಿಟಟeಜ ಒಚಿಡಿಥಿ !) Iಜಿ ಥಿou ಜoಟಿ’ಣ miಟಿಜ, ಒಚಿಡಿಥಿ, ಟeಣ us sಚಿಥಿ gooಜ-bಥಿe ಣo eಚಿಛಿh oಣheಡಿ. ಡಾ. ಪಟೇಲರಿಗೆ ನನ್ನ ಧನ್ಯವಾದಗಳನ್ನು ತಿಳಿಸಲು ಮಾತ್ರ ಮರೆಯಬೇಡ….” +ಆ ಬದಿಯಿಂದ ಮೇರಿ ಆರ್ಜವ ತುಂಬಿದ ದನಿಯಲ್ಲಿ_ಪ್ಲೀಸ್ ನಾಗ್, ತಡೆ, ನನ್ನ ಮಾತು ಕೇಳು,” ಎಂದರೂ ಕೇಳದೆ ನಾಗಪ್ಪ ಟೆಲಿಫೋನ್ ಕೆಳಗಿಟ್ಟುಬಿಟ್ಟ. ಇಟ್ಟದ್ದೇ ತಡ, ತಾನು ಎಲ್ಲಿ ಇದ್ದೇನೆ ಎನ್ನುವದೂ ಕೂಡ ನಾಗಪ್ಪನಿಗೆ ತಿಳಿಯಲಿಲ್ಲ. ಇದೆಲ್ಲ ಆಗುತ್ತಿದ್ದದ್ದು ತನಗೇ ಎಂಬುದರ ಮೇಲೆ ನಂಬಿಕೆಯಾಗುತ್ತಿರಲಿಲ್ಲ_ಎಲ್ಲರನ್ನು ಬಿಟ್ಟು ತನ್ನಂಥ ತನಗೆ ! ಬದುಕಿನಿಂದ ಬಹಳಷ್ಟನ್ನು ಬೇಡಿರದ ಕೋಳೀಗಿರಿಯಣ್ಣನ ಕೇರಿಯ ಈ ನಾಗಪ್ಪನಿಗೆ ! ಕುರ್ಚಿಯಲ್ಲಿ ಕೂತದ್ದೇ ನಾಗಪ್ಪನ ಕಣ್ಣುಗಳು ತುಂಬಿಬರಹತ್ತಿದವು : ಏನಿರದಿದ್ದರೂ ಬದುಕಬಹುದೇನೋ. ಆದರೆ ಪ್ರೀತಿಯಿಲ್ಲದೆ ? ಗೆಳೆತನವಿಲ್ಲದೆ ? ಮಾನವೀಯ ಅಂತಃಕರಣವಿಲ್ಲದೆ ? ಸಹಾನುಭೂತಿಯಿಲ್ಲದೆ ? ತಾನು ಸ್ಪಷ್ಟವಾಗಿ ಒಪ್ಪಿಕೊಂಡಿರದಿದ್ದರೂ ಸೀತಾರಾಮನ ಗೆಳೆತನವನ್ನು ಕಳಕೊಂಡ ರೀತಿಗೆ ಮನಸ್ಸು ಇನ್ನೂ ಹೊಂದಿಕೊಂಡಿರಲಿಲ್ಲ : ಹದಿನಾಲ್ಕೇ ದಿನಗಳಲ್ಲಿ ಎಷ್ಟೊಂದನ್ನೆಲ್ಲ ಕಳಕೊಂಡವನಿಗೆ ಎಲ್ಲವೂ ವ್ಯರ್ಥ ಅನ್ನಿಸಹತ್ತಿದಾಗ ಕಣ್ಣಮುಂದೆ ನಿಂತು ತನ್ನನ್ನೇ ನೋಡುತ್ತಿದ್ದ ವ್ಯಕ್ತಿಯ ಗುರುತು ಹಿಡಿಯುವದೂ ಕಠಿಣವಾಗುತ್ತಿದ್ದವನ ಹಾಗೆ : Iಣ is ಣoo muಛಿh ಜಿoಡಿ ಚಿಟಿಥಿoಟಿe_ಜಿoಡಿ so muಛಿh ಣo hಚಿಠಿಠಿeಟಿ iಟಿ so shoಡಿಣ ಚಿ ಣime,” ಎಂದ. ಕಣ್ಣುಗಳು ತೇವಗೊಂಡಿದ್ದರೂ ನೋಡುವ ದೃಷ್ಟಿ ಖಾಲಿಯಾಗಿತ್ತು. ಯಾರ ಇದಿರಿಗೋ ಆಡದ ಮಾತುಗಳಾದರೂ ಅವುಗಳಲ್ಲಿ ತನ್ನಷ್ಟಕ್ಕೇ ಆಡಿಕೊಂಡ ಮಾತಿನ ಧ್ವನಿ ಮೂಡಿತ್ತು. ಕಣ್ಣಮುಂದೆ ನಿಂತವರು ಅರ್ಜುನ್‌ರಾವ್ ಎಂದು ಗೊತ್ತಾದದ್ದು. ಅವರೇ ಹಿಂದೆ ಎಂದೂ ತೋರಿಸಿರದ ಸಹಾನುಭೂತಿಯಿಂದ ನನ್ನ ಹೆಗಲ ಮೇಲೆ ಕೈಯಿಟ್ಟು : ಖಿಚಿಞe iಣ eಚಿsಥಿ, me ಥಿouಟಿg ಜಿಡಿieಟಿಜ. Iಣ is ರಿusಣ ಚಿ ಠಿhಚಿse iಟಿ ouಡಿ ಟiಜಿe. Iಣ ತಿiಟಟ ಠಿಚಿss oಜಿಜಿ….” ಎಂದಾಗ, ನಡುಬಾಗಿಲಲ್ಲಿ ಬಂದು ನಿಂತ ತಮ್ಮ ಹೆಂಡತಿಗೆ ಎರಡು ಕಪ್ಪು ಚಹ ಮಾಡಲು ಹೇಳಿ, “ಅಮ್ಮ ಎಲ್ಲಿ ?” ಎಂದು ಕೇಳಿದರು. “ಎರಡನೇ ಮಜಲೆಯ ತೋರಟೆಯವರ ಮನೆಗೆ ಹೋಗಿದ್ದಾರೆ. ಜಾನಕಿ ಬಂದಿದ್ದಾಳೆ ಅಲ್ಲಿ. ನಿಮಗೆ ಆಫೀಸಿನಿಂದ ಬಂದಕೂಡಲೇ….” ಅವಳು ಹೇಳಹೊರಟಿದ್ದರ ಅರ್ಥವಾಯಿತೆನ್ನುವಂತೆ, “ಮೊದಲು ಚಹ ಮಾಡು,” ಎನ್ನುತ್ತ ಮುಂದಿನ ಬಾಗಿಲು ಹಾಕಿಕೊಂಡರು. ಹಾಗೂ, ನಾಗಪ್ಪನಿಗೆ “ಈ ಕುರ್ಚಿಯಲ್ಲಿ ಕೂತುಕೊಳ್ಳಿ. ಮೆತ್ತಗಿದೆ ನೋಡಿ. ತುಸು ಹೊತ್ತು ಆರಾಮ ಮಾಡಿರಿ. ಚಹ ಬರುವಷ್ಟರೊಳಗೆ ಡ್ರೆಸ್ ಬದಲಿಸಿ ಬರುತ್ತೇನೆ,” ಎಂದು ಹೇಳಿ, ಕೈಯಲ್ಲಿ ಹಿಡಿದ ಆಫೀಸಿನ ಕಾಗದ-ಪತ್ರಗಳೊಂದಿಗೆ ಒಳಗೆ ನಡೆದರು. +ಅರ್ಜುನ್‌ರಾವ್ ಏಳಿ ಎಂದದ್ದೇ ಎದ್ದದ್ದು, ಈ ಕುರ್ಚಿಯಲ್ಲಿ ಕೂತುಕೊಳ್ಳಿ ಎಂದದ್ದೇ ಕೂತದ್ದು ಪೂರ್ಣ ಎಚ್ಚರದ ಸ್ಥಿತಿಯಲ್ಲಿ ನಡೆದ ಕ್ರಿಯೆಗಳು ಎಂದು ನಾಗಪ್ಪನಿಗೆ ಅನ್ನಿಸಲಿಲ್ಲ. ಯಾರೋ ತನ್ನ ಮೇಲೆ ಮಾಟ ಮಾಡಿದ್ದಾರೆ. ಇಲ್ಲಿಗೆ ಬರುವಾಗ ರೂಮಿನ ಕದ ಮುಚ್ಚಿದ್ದೇನೋ ಇಲ್ಲವೋ ಎನ್ನುವದು ಕೂಡ ನೆನಪಾಗಲಿಲ್ಲ. ಎದ್ದು ಹೋಗಿ ನೋಡಿ ಬರೋಣವೆಂದರೆ ಕೂತಲ್ಲಿಂದ ಏಳುವ ಮನಸ್ಸಾಗಲಿಲ್ಲ. ಯಾಕೆಂದರೆ ಯಾರೋ ಕೂತುಕೊಳ್ಳಿ ಅಂದಿದ್ದರು. ಎಲ್ಲ ಮುಗಿಸಿ ಬಂದಿದ್ದೇನೆ. ಈಗ ಮುಂದಿನ ಹಾದಿ ಹುಡುಕಬೇಕಾಗಿದೆ ಎಂದು ಅನ್ನಿಸಿದ ಗಳಿಗೆಯಲ್ಲೇ ಶ್ರೀನಿವಾಸ_ಸೀತಾರಾಮ, ಇತ್ತ ಪಟೇಲ_ಮೇರಿ ಮತ್ತೆ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದ್ದಾರೆ. ಬೇಡವೆಂದು ಬಿಟ್ಟು ಬಂದ ಜಗತ್ತಿಗೇ ಎಳೆಯುತ್ತಿದ್ದಾರೆ, ನನ್ನನ್ನು. ಮೇರಿಯೊಡನೆ ವರ್ತಿಸಿದ್ದು ಉದ್ಧಟತನವಾಯಿತೆ ? ಕ್ರೂರವಾಯಿತೆ ? ಬಿಟ್ಟುಬಂದದ್ದರತ್ತ ಕಣ್ಣು ತಿರುವಬಾರದಾದರೆ ಎಲ್ಲ ಸುಳ್ಳು ಸಂಬಂಧಗಳನ್ನು ಕಡಿದು…. +“ನಿದ್ದೆ ಹತ್ತಿತೆ ?” +ಮುಂದೆ ನಿಂತವಳು ಅರ್ಜುನ್‌ರಾವರ ಹೆಂಡತಿ. ಚಹದ ಕಪ್ಪನು ಕೈಗೆ ಕೊಡುತ್ತ_“ಇವರು ಇದೀಗ ಬರುತ್ತಾರೆ. ನೀವು ತೆಗೆದುಕೊಳ್ಳಿ.” ಎಂದಳು. ಇವನು ಕಪ್ಪನ್ನು ಕೈಗೆ ತೆಗೆದುಕೊಳ್ಳುವ ಹೊತ್ತಿಗೆ ಅರ್ಜುನ್‌ರಾವ್ ಅವರೂ ಬಂದರು_ತಮ್ಮ ಚಹದ ಕಪ್ಪನ್ನಿ ಕೈಯಲ್ಲಿ ಹಿಡಿದುಕೊಂಡು, ಬಿಸಿಬಿಸಿ ಚಹದ ಗುಟುಕೊಂದನ್ನು ಸದ್ದು ಮಾಡಿ ಹೀರುತ್ತ_“Iಟಿ ಚಿ ತಿಚಿಥಿ iಣ is gooಜ ಣhಚಿಣ iಣ is ಚಿಟಟ oveಡಿ,” ಎಂದರು. ಆವರೆಗೂ ಅರ್ಜುನ್‌ರಾವರ ಜಗತ್ತಿಗೆ ಬಂದಿರದ ನಾಗಪ್ಪನ ಕಿವಿಗಳು ಒಮ್ಮೆಲೇ ನಿಗುರಿಕೊಂಡವು. ನಾಗಪ್ಪ ತನ್ನತ್ತ ನೋಡಿದ ರೀತಿಯನ್ನು ಅರ್ಥಮಾಡಿಕೊಂಡವನ ಹಾಗೆ_“ಶ್ರೀನಿವಾಸ ಸಾರ್ ಬಂದಿದ್ದರು ನಮ್ಮ ಆಫೀಸಿಗೆ. ನೀವು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಯಿತಂತೆ, ಅಲ್ಲವೆ ? ಕೇಳಿ ಬಹಳ ಕೆಡುಕೆನಿಸಿತು ನೋಡಿ,” ಎಂದರು : ಶಿಕಾರಿಯವರ ತಂಡ ದೊಡ್ಡದಾಗುತ್ತ ನಡೆದಿದೆ. ನಾಯಿಗಳ ಕೂಗು, ಕಿವಿಗಳನ್ನು ಗಡಚಿಕ್ಕುವ ಹಲಗೆಗಳ ಸದ್ದು ಸುತ್ತುವರಿಯುತ್ತಿದೆ. ರಾಜೀನಾಮೆ ಇದೆಲ್ಲದರ ಕೊನೆ ಎಂದು ತಿಳಿದಿದ್ದೆ. ಈಗ ಬರೀ ಹೊಸ ಆರಂಭವೆಂದು ತೋರುತ್ತದೆ. ಈ ಅರ್ಜುನ್‌ರಾವ್ ಹಿಂದಿನ ಎಷ್ಟೊಂದು ಹಗೆಗಳಿಗೆ ಹೆಡೆ ಬಿಚ್ಚುತ್ತಾನೋ : ಇದೀಗ ಮಾತನಾಡಿದಾಗಿನ ದನಿ ಸಹಜವಾದದ್ದೆಂದು ತೋರಲಿಲ್ಲ. ಇವನಿಂದ ಮತ್ತೆ ಹೊಸ ಸಂಗತಿಗಳನ್ನು ತಿಳಿಯುವ ಸಾಮರ್ಥ್ಯ ಮಾತ್ರ ತನಗೀಗ ಎಳ್ಳಷ್ಟೂ ಇರಲಿಲ್ಲ. ಸಹನಶಕ್ತಿಗೂ ಮಿತಿಯೆಂಬುದು ಇರಬೇಡವೆ : ದಮ್ಮಯ್ಯಾ ಮಾರಾಯ, ಬೆಳಗ್ಗಿನಿಂದ ಅನುಭವಿಸಿದ್ದೇ ಸಾಕಾಗಿಬಿಟ್ಟಿದೆ. ಕೂಡ್ರಲು ಮೆತ್ತಗಿನ ಕುರ್ಚಿ ಕೊಟ್ಟೆ_ಕೂತಿದ್ದೇನೆ. ಬಿಸಿಬಿಸಿ ಚಹ ಕೈಯಲ್ಲಿರಿಸಿದೆ_ಕುಡಿಯುತ್ತೇನೆ. ಆಮೇಲೆ ಕೋಣೆಗೆ ಹೋಗಿ ಸುಖವಾಗಿ ನಿದ್ದೆ ಮಾಡುತ್ತೇನೆ. ಆಗ ಒಬ್ಬ ಪಾರ್ಸೀ ಯುವಕ ಭೆಟ್ಟಿಯಾಗಿದ್ದ ; ಮನೆಗೆ ಹೋಗಿ ಪ್ರಾರ್ಥನೆ ಮಾಡು ಎಂದ. ನನ್ನಿಂದ ಸಾಧ್ಯ ಎನಿಸುವದಿಲ್ಲ. ಬಾನಾವಳಿಯಲ್ಲಿ ಹೋಗಿ ಬಾರ್ಬಿಚ್ಯುರೇಟ್ ಗುಳಿಗೆ ತರಲೆ ? ಇದೇಕೆ ಈಗ ಇದ್ದಕ್ಕಿದ್ದಂತೆ ನಿದ್ದೆಯ ಗುಳಿಗೆಯೆಂದರೆ ನನಗೆ ಭಯವಾಗುತ್ತಿದೆ ? +“ಅರೆ ! ನಿಮ್ಮ ಚಹ ತಣ್ಣಗಾಗ್ತಾ ಇದೆ.” ಅರ್ಜುನ್‌ರಾವರ ಮಾತಿಗೆ ನಾಗಪ್ಪ ಬೆಚ್ಚಿಬಿದ್ದ. ನಡುಗಿದ ಕೈಯನ್ನು ಸ್ತಿಮಿತಕ್ಕೆ ತರುತ್ತ ಚಹ ಕುಡಿಯಹತ್ತಿದ. ಚಹ ರುಚಿ ಕಳೆದುಕೊಂಡಿತ್ತು. ತನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಈ ಯಕಃಶ್ಚಿತ್ ಅರ್ಜುನ್‌ರಾವ್ ಕೂಡ ಭಯಕ್ಕೆ ಕಾರಣನಾಗಹತ್ತಿದ್ದ : ‘ರಾಜೀನಾಮೆಯನ್ನು ಕೊಟ್ಟಿರಂತೆ’ ಅನ್ನಲಿಲ್ಲ ಬೋಳೀಮಗ, ‘ಕೊಡಬೇಕಾಯಿತಂತೆ !’ ನೋಡ್ತಾನೆ ಎರಡೂ ಮಗ ತನ್ನ ಹೈನಾ ತರಹ ಕಣ್ಣುಬಿಡುತ್ತ ಗುರುಗುಟ್ಟಿದನೆ ? ಹಲ್ಲು ಕಿಸಿದನೆ ….? +“ತನಿಖೆಯವರು ಸಿದ್ಧಪಡಿಸಿದ ಕಾನ್ಫಿಡೆನ್ಶಲ್ ರಿಪೋರ್ಟು ಶ್ರೀನಿವಾಸರಾವರ ಕೈಗೆ ಹೇಗೆ ಬಂತೋ. ನನ್ನ ಕೈಯಲ್ಲೂ ಒಂದು ಪ್ರತಿ….” +uಟಿಜeಜಿiಟಿeಜನಾಗಪ್ಪ ನಂಬದಾದ. ಅವನ ಮೋರೆಯ ಮೇಲಿನ ಅಪನಂಬಿಕೆಯ ಛಾಯೆಯನ್ನು ಗಮನಿಸಿದ ಅರ್ಜುನ್‌ರಾವ್ ಚಹದ ಕಪ್ಪನ್ನು ಇಡುವ ನೆಪ ಮಾಡಿ ಒಳಗೆ ಹೋದರು. ಬರುವಾಗ ಕೈಯಲ್ಲೊಂದು ಲಕ್ಕೋಟೆ ಹಿಡಿದುಕೊಂಡು ಹೊರಗೆ ಬಂದರು : “ಇದು ನೋಡಿ,” ಎನ್ನುತ್ತ ಲಕ್ಕೋಟೆಯನ್ನು ನಾಗಪ್ಪನ ಮುಂದೆ ಹಿಡಿದರು. ನಾಗಪ್ಪ ಅದಕ್ಕೆ ಕೈ ಹಚ್ಚಲಿಲ್ಲ. ಅರ್ಜುನ್‌ರಾವರನ್ನೇ ನೋಡುತ್ತ ಕುಳಿತುಬಿಟ್ಟ. ನಾಗಪ್ಪ ಇಷ್ಟು ಮೆತ್ತಗಾದದ್ದನ್ನು ಅರ್ಜುನ್‌ರಾವ್ ನೋಡಿರಲಿಲ್ಲ ; ಮೆತ್ತಗಾಗುವ ಮನುಷ್ಯನೆಂದು ತಿಳಿದೇ ಇರಲಿಲ್ಲ :“Iಣ is ಟಿo use geಣಣiಟಿg so seಟಿಣimeಟಿಣಚಿಟ. ಙou musಣ ಜಿighಣ ಣhis Shಡಿiಟಿivಚಿs ಖಚಿo_ಜಿighಣ him ಟegಚಿಟಟಥಿ iಜಿ ಟಿeಛಿessಚಿಡಿಥಿ…. ನೀವು ಕಾದಂಬರಿ ಬರೆಯುತ್ತೀರಿ ಎನ್ನುವುದರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವಂತೆ ತೋರುತ್ತದೆ. ಮುಖ್ಯವಾಗಿ ನನ್ನ ಸಮಾಜದವರ ಕಣ್ಣಲ್ಲಿ ನೀವು ಅವರ ಬದನಾಮಿ ಮಾಡುವ ಮೊದಲೇ ನಿಮ್ಮ ಬದನಾಮಿ ಮಾಡುವ ಹುನ್ನಾರು…. ನಿಮ್ಮ ತಂದೆ-ತಾಯಿಗಳ ಬಗ್ಗೆ ಏನೇನೋ ಮಾಹಿತಿ ಒಟ್ಟು ಮಾಡಿದಂತಿದೆ…..ನಿಮ್ಮ ಅಣ್ಣನ ಬಗ್ಗೆಯೂ…. ಈ ಹೊತ್ತು ಮಠದಲ್ಲಿ ನಿಮ್ಮ ಜಾತಿಯವರ….” ನಾಗಪ್ಪನ ಮೋರೆಯ ಮೇಲೆ ಮುಗುಳುನಗೆ ಮೂಡುತ್ತಿದ್ದುದನ್ನು ನೋಡಿ ಗೊಂದಲಕ್ಕೀಡಾದ ಅರ್ಜುನರಾವರ ಮಾತು ಅರ್ಧಕ್ಕೇ ಉಳಿದಿತು. ಆದರೂ ಹಿಂದೆಗೆಯಲು ಒಪ್ಪದವರ ಹಾಗೆ_“Pಟeಚಿse ಜoಟಿ’ಣ misಣಚಿಞe me…. ನಾನು ಬಲ್ಲೆ. ನಿಮಗಿಂಥದ್ದರಲ್ಲಿ ಎಳ್ಳಷ್ಟೂ ವಿಶ್ವಾಸವಿಲ್ಲ ಎನ್ನುವುದನ್ನು. ನನಗೂ ಇಲ್ಲ. ಆದರೆ ಇದು ಬರಿಯೆ ಹುಟ್ಟಿನ ಬಗೆಗಿನ ವಿಶ್ವಾಸದ ಪ್ರಶ್ನೆಯಲ್ಲ ; ನಮ್ಮ ಅಬರೂದ ಪ್ರಶ್ನೆ ; ಮೋಸ ಮಾಡಿದ್ದೀರಿ ಎಂಬ ಆರೋಪದ ಪ್ರಶ್ನೆ…. ಙou musಣ ಣಚಿಞe iಟಿಣeಡಿesಣ iಟಿ iಟಿvesಣigಚಿಣiಟಿg ಥಿouಡಿ ಠಿಚಿsಣಚಿಟಿಜ ಛಿoಟಟಚಿಛಿಣ ಜಿಚಿಛಿಣs ಣo ಡಿeಜಿuಣe ಣhose ಠಿಡಿesಚಿಟಿಣeಜ bಥಿ Shಡಿiಟಿivಚಿs ಖಚಿo. Iಜಿ ಥಿou ತಿಚಿಟಿಣ I ತಿiಟಟ heಟಠಿ ಥಿou….. ಸನ್ನಿವೇಶದಲ್ಲಿಯ ವ್ಯಂಗ್ಯವನ್ನು ನಾನು ಸುಲಭವಾಗಿ ಗ್ರಹಿಸಬಲ್ಲೆ : ಜಾತೀಯತೆಯಲ್ಲಿ ವಿಶ್ವಾಸ ಇಲ್ಲದವನೇ ತಾನು ಹುಟ್ಟಿನಿಂದ ಬ್ರಾಹ್ಮಣನೇ ಎಂದು ಸಿದ್ಧಪಡಿಸಿ ತೋರಿಸಬೇಕಾಗಿ ಬಂದ ಅವಶ್ಯಕತೆ….” +ಇಲ್ಲ, ಅರ್ಜುನ್‌ರಾವರ ಮಾತಿನ ಧಾಟಿಯನ್ನು ಗುರುತಿಸುವುದರಲ್ಲಿ ನಾಗಪ್ಪ ತಪ್ಪಲಿಲ್ಲ. ಗಾಳದ ಕೊಂಡಿಗೆ ಸಿಕ್ಕಿಸಿದ ಆಮಿಷ ಸ್ಪಷ್ಟವಾಗಿ ಏನು ಎಂಬುದು ಗೊತ್ತಾಗದಿದ್ದರೂ ಅದು ‘ಇದೆ’ ಎಂಬುದನ್ನು ಮರೆಮಾಚುವುದು ಅವರಿಗೆ ಸಾಧ್ಯವಾಗಲಿಲ್ಲ. ತರ್ಕಶುದ್ಧವಾದ, ಒಂದಕ್ಕೊಂದು ಚೊಕ್ಕವಾಗಿ ಹೆಣೆದುಕೊಂಡ ಮಾತಿನ ಸರಣಿ. ಮಾತಿಗೆ ಮೂಲಪ್ರೇರಣೆಯಾದದ್ದನ್ನು ಅಡಗಿಸಲು ಹೆಣಗುತ್ತಿತ್ತು : ತನ್ನೊಬ್ಬನ ಸ್ವಾರ್ಥದ ಸೀಮಾ-ರೇಖೆಯ ಆಚೆ ದೃಷ್ಟಿ ಚೆಲ್ಲಿ ಗೊತ್ತಿರದ ಈ ಗೃಹಸ್ಥ ಒಮ್ಮೆಲೇ ತನ್ನ ಬಗೆಗಿನ ಸದ್ಭಾವನೆಯಿಂದ ಇಷ್ಟೊಂದು ಪುಳಕಿತನಾಗುವದು ಸಾಮಾನ್ಯ ವ್ಯಾಪಾರವಲ್ಲ. ಇದನ್ನು ಕೆದಕಿ ನೋಡಬೇಕೆನಿಸಿತು : +“ಆ ರಿಪೋರ್ಟಿನಲ್ಲಿ ನನ್ನ ಜಾತಿಯ ಹೊರತು ಇನ್ನೂ ಅನೇಕ ಆಶ್ಚರ್ಯಕಾರಕ ಸಂಗತಿಗಳಿವೆ….” +“ಬಲ್ಲೆ. ಅವುಗಳಿಗೆ ನಾನು ವಿಶೇಷ ಮಹತ್ವ ಕೊಡಲಾರೆ. ಮೇಲಾಗಿ ಅವುಗಳಲ್ಲಿ ಬಹಳಷ್ಟು ನಿಮ್ಮ ಆಫೀಸಿಗೆ ಸಂಬಂಧಪಟ್ಟವುಗಳು ಇಷ್ಟೇ: ನಿಮ್ಮ ಠಿsಥಿಛಿhoಟogiಛಿಚಿಟ mಚಿಞe -uಠಿ ನಿಮ್ಮ ವ್ಯಕ್ತಿತ್ವದಲ್ಲಿಯ ಛಿಡಿimiಟಿಚಿಟ ಣeಟಿಜeಟಿಛಿies ಗುರುತಿಸುವುದು , ಅದಕ್ಕೆ ಪುರಾವೆ ಎನ್ನುವಂತೆ ನಿಮ್ಮ ಅಣ್ಣ ಎಳೆ ವಯಸ್ಸಿನಲ್ಲೇ ಜೈಲು ಕಂಡ ಘಟನೆಯನ್ನು ಉಲ್ಲೇಖಿಸುವುದು ನನಗಂತೂ ಬಹಳ ಧಾರ್ಷ್ಟ್ಯದ ಮಾತುಗಳಾಗಿ ತೋರುತ್ತವೆ. ಅದೆಲ್ಲ ನಿಮ್ಮ ಮೇಲೆ ಮಾನಸಿಕ ಒತ್ತಡ ತರುವ ದುಷ್ಟ ಉಪಾಯವೆಂದು ತಿಳಿಯುತ್ತೇನೆ . ಆದರೂ ಒಂದನ್ನು ಮಾತ್ರ ಒಪ್ಪಿಕೊಳ್ಳಲೇಬೇಕು: ರಿಪೋರ್ಟಿಗಾಗಿ ಮಾಹಿತಿ ಒಟ್ಟು ಮಾಡಿದವನ ತಲೆ ಮಾತ್ರ ಯಾರೂ ತಲೆದೂಗುವಂತಹುದು. ಎಲ್ಲೆಲ್ಲಿಂದ ಒಟ್ಟು ಮಾಡಿದರೋ! ತುಂಬ ಪರಿಶ್ರಮ ಪಟ್ಟಂತಿದೆ ಒಂದು ಸಂಗತಿಯನ್ನು ಇನ್ನೊಂದಕ್ಕೆ , ಇನ್ನೊಂದನ್ನು ಮತ್ತೊಂದಕ್ಕೆ ಪುರಾವೆಯಾಗಿಸುವ ಒಕ್ಕಣಿಕೆ ಯಾರನ್ನೂ ಮರುಳುಗೊಳಿಸುವಂತಹುದು: ಇದನ್ನು ನಂಬದೇ ಇರುವುದು ಶಕ್ಯವೇ ಇಲ್ಲವೆನ್ನುವ ಹಾಗಿದೆ……” +ನಾಗಪ್ಪನಿಗೆ ಸಂಶಯವೇ ಉಳಿಯಲಿಲ್ಲ. ಹೆಡೆ ಬಿಚ್ಚದೇ ಪೂತ್ಕರಿಸುತ್ತ ಹರಿದಾಡುವ ಈ ಜಂತು ಕಾಣುವಷ್ಟು ನಿರುಪದ್ರವಿಯಾದದ್ದಲ್ಲ. ಆ ದೃಷ್ಟಿಯಿಂದ ನಾಗಪ್ಪ ನೋಡಿರಬೇಕು: ಅರ್ಜುನ್‌ರಾವರ್ ಮಾತು ಅರ್ಧಕ್ಕೇ ನಿಂತಿತು. ಅದೇ ಹೊತ್ತಿಗೆ ನಡುಬಾಗಿಲಲ್ಲಿ ಬಂದು ನಿಂತ ಹೆಂಡತಿಯನ್ನು ನೋಡಿದ ಕೂಡಲೇ, ಈ ಮೊದಲೇ ಮಾತನಾಡಿಕೊಂಡ ಒಂದು ವಿಷಯ ನೆನಪಾದವರ ಹಾಗೆ ……”ಹೌದು, ಇವಳು ಹೇಳುತ್ತಾಳೆ; ಈವತ್ತು ನೀವು ನಮ್ಮಲ್ಲೇ ಊಟಕ್ಕೆ ಇರಬೇಕೆಂದು…..” ನಾಗಪ್ಪ ಆಗಬಹುದೆನ್ನುವ ಹಾಗೆ ಅರ್ಜುನ್‌ರಾವರ ಹೆಂಡತಿಯ ಕಡೆಗೆ ನೋಡಿ, “ಥ್ಯಾಂಕ್ಸ್” ಎಂದ. +ಆಗ , ಮುಂದಿನ ಬಾಗಿಲ ಮೇಲೆ ತುಂಬ ಜಾಗ್ರತೆಯಿಂದ ತಟ್ಟಿದ್ದು ಕೇಳಿಸಿ, ಅರ್ಜುನ್‌ರಾವ್ ಎದ್ದು ಹೋಗಿ ಕದ ತೆರೆದರೆ — ಮೇರಿ ! “ಇxಛಿuse me. is ಒಡಿ ಓಚಿgಟಿಚಿಣh….” ನಾಗಪ್ಪ ತನ್ನ ಕಣ್ಣುಗಳನ್ನು ನಂಬದಾದ. “ಊeಟಟo ಒಚಿಡಿಥಿ,” ಎನ್ನುತ್ತ ಕುರ್ಚಿಯಿಂದ ಎದ್ದ. ಅರ್ಜುನ್‌ರಾವರಿಗೆ ಅವಳ ಪರಿಚಯ ಮಾಡಿಕೊಡುತ್ತ …..”ಖಿhis is ಚಿ ಛಿoಟಟeಚಿgue oಡಿ ಡಿಚಿಣheಡಿ ಚಿಟಿ ex-ಛಿoಟಟeಚಿgue miಟಿe,” ಎಂದ. ಹಾಗೂ, “ನಿಮ್ಮನ್ನು ಅಮೇಲೆ ಮತ್ತೆ ಬಂದು ಕಾಣುತ್ತೇನೆ,” ಎಂದು ಅರ್ಜುನ್‌ರಾವರಿಂದ ಬೀಳ್ಕೊಂಡು “ಅome oಟಿ, ಒಚಿಡಿಥಿ, ಟeಣ me shoತಿ ಥಿou mಥಿ ಠಿಚಿಟಚಿಛಿe,” ಎಂದು ಅವಳ ಜತೆಗೆ ತನ್ನ ರೂಮಿನತ್ತ ನಡೆಯಹತ್ತಿದ. +– ಅಧ್ಯಾಯ ಮೂವತ್ತೆರಡು – +ಅಚ್ಚನೀಲೀ ಬಣ್ಣದ ಜಾರ್ಜೆಟ್ ಸೀರೆ. ಅದೇ ಬಣ್ಣದ ತೋಳುಗಳಿಲ್ಲದ ಬ್ಲೌಸ್. ತಲೆಗೆ ಬೇರೆ ಕೊಂಡು ತಂದ ಡೋನಟ್ ಕೂದಲು. ಗೌರವರ್ಣದ ಮೈಯಿಂದ ತರಲವಾಗಿ ಸೂಸುತ್ತಿದ್ದ ಫೆಂಚ್ ಸುಗಂಧ (ಒ‌ಆ ಕೊಟ್ಟಿದ್ದಿರಬಹುದೆ ?). ಮೊದಲೇ ಚೆನ್ನಾದ ಎತ್ತರವಿದ್ದವಳು ಹಾಯ್-ಹೀಲ್ಸ್ ಮೆಟ್ಟಿದ್ದರಿಂದ ಇನ್ನಷ್ಟು ಎತ್ತರವಾಗಿ ತೋರುತ್ತಿದ್ದಳು : ಮೇರಿ ಇಷ್ಟೊಂದು ಸುಂದರಳೆಂಬ ಕಲ್ಪನೆಯೇ ಇದ್ದಿರಲಿಲ್ಲ ಎನ್ನುವವನ ಹಾಗೆ, ನಾಗಪ್ಪ, ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ಅವಳನ್ನು ನೋಡಿಯೇ ನೊಡಿದ. ಮರುಗಳಿಗೆ ಇಷ್ಟೊಂದು ಸುಂದರಳಾದ, ಮೋಹಕಳಾದ ಹೆಣ್ಣಿಗೆ ಖೇಮರಾಜ ಭವನದಂಥ ಹೊಲಸು ಹಾಳಿ ಒಪ್ಪುವುದಂತಹದಲ್ಲ ಎಂಬ ಅರಿವಿನಿಂದ ಹಿಂಸೆಯಾಯಿತು. ಚಾಳಿನಲ್ಲಿನ ಹಲವಾರು ಮನೆಗಳ ಕದಗಳು ತೆರೆದುಕೊಂಡಿದ್ದವು. ಏನೋ ಗಮ್ಮತ್ತು ನೋಡುವ ಕುತೂಹಲದಿಂದ ಅನೇಕ ಕಣ್ಣುಗಳು ಅರಳಿ ನಿಂತಿದ್ದವು. ಕೋಣೆಯ ಕದ ತೆರೆದೇ ಇದ್ದದ್ದು ಈಗ ಗಮನಕ್ಕೆ ಬಂತು ! ಒಳಗೆ ಬಂದು ದೀಪ ಹಾಕಿದ. ಕಿಡಕಿಯ ಬಳಿಯ ಕುರ್ಚಿಕಳೆರಡನ್ನೂ ತುಸು ಒಳಗೆಳೆದು ಒಂದನ್ನು ಮೇರಿಗೆ ಕೊಟ್ಟ. ಕೂಡ್ರುವ ಮೊದಲು, Whಥಿ ಜoಟಿ’ಣ ಥಿou shuಣ ಣhe ಜooಡಿ ?” ಎಂದಳು, ಲಗುಬಗೆಯಿಂದ ಹೋಗಿ ನಾಗಪ್ಪ ಹಾಗೇ ಮಾಡಿ ಬಂದ. ಅವನು ಅಗಳಿ ಹಾಕದೇ ಇದ್ದುದನ್ನು ನೋಡಿ ನಗುತ್ತ, ಮೇರಿ ತಾನೇ ಎದ್ದು ಹೋಗಿ ಅಗಳಿ ಹಾಕಿ ಬಂದಳು. +ಕೋಣೆ ದೊಡ್ಡದಲ್ಲವಾಗಿದ್ದರೂ ಹೇರಿಸಿಟ್ಟ ಪುಸ್ತಕಗಳಿಂದಾಗಿ ಅದಕ್ಕೆ ತನ್ನದೇ ಆದ ಗಾಂಭೀರ್‍ಯ ತುಂಬಿದ ಶೋಭೆ ಬಂದಿತ್ತು. ಕೆಲಹೊತ್ತು ಈ ಪುಸ್ತಕಗಳನ್ನು ಕೌತುಕ ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟಳು, ಮೇರಿ. ಅರ್ಧಗಂಟೆಯ ಮೊದಲಷ್ಟೇ ಟೆಲಿಫೋನಿನ ಮೇಲೆ ಮಾತಾನಾಡುವಾಗ ‘ಬಿಚ್’ ಎಂದುಕೊಂಡದ್ದು ನೆನಪಾಗಿ ನಾಗಪ್ಪನಿಗೆ ನಾಚಿಕೆಯಾಯಿತು. ಅನ್ನಿಸಿಕೆಗಳ, ಭಾವನೆಗಳ ಸ್ವರೂಪವನ್ನೇ ಬದಲಿಸಿಬಿಡುವಂತಹ ರೂಪವಿದು. ಅದರ ಸಾನ್ನಿಧ್ಯದಲ್ಲಿ ಮನಸ್ಸು ತನ್ನ ವಿಮರ್ಶಶಕ್ತಿಯನ್ನೇ ಕಳಕೊಳ್ಳುತ್ತದೆ : ತನ್ನನ್ನು ಎವೆಯಿಕ್ಕದೆ ಕೌತುಕದಿಂದ ನೋಡುತ್ತಿದ್ದ ನಾಗಪ್ಪನನ್ನು ತಪ್ಪಾಗಿ ಅಳೆದ ಮೇರಿ :“ಐeಣ me ತಿಚಿಡಿm ಥಿou, ಓಚಿg ! ಙou ಚಿಡಿe goiಟಿg ಣo geಣ ಡಿeಚಿಜಥಿ iಟಿ ಣhe ಟಿexಣ ಜಿiಜಿಣeeಟಿ miಟಿuಣes ! ಙou ಚಿಡಿe ಛಿomiಟಿg ತಿiಣh me ಣo ಣhe ಒ‌ಆ’s house ಜಿoಡಿ ಜiಟಿಟಿಚಿಡಿ ! ಖಿhe ಛಿಚಿಡಿ is ತಿಚಿiಣiಟಿg ಜoತಿಟಿsಣಚಿiಡಿs….” ಮೇರಿಯ ಮಾತುಗಳಲ್ಲಿ ಹಿಪ್ನೋಟಿಸ್ಟನ ಅದೇಶದ ಧಾಟಿ ಬಂದಿತ್ತು. ಆದರೆ ಅವುಗಳಲ್ಲಿ ತಾನು ಬಯಸಿದ ಮಾಂತ್ರಿಕ ಬಲ ಬಂದಿರಲಿಲ್ಲ ಎಂಬುದು ಗೊತ್ತಾದದ್ದು ನಾಗಪ್ಪನ ಮೋರೆ ಒಮ್ಮೆಗೆಲೆ ಬದಲಾಗುತ್ತಿದ್ದುದನ್ನು ಗಮನಿಸಿದಾಗ : +“Pಟeಚಿse ಓಚಿg. ಜಿoಡಿ mಥಿ sಚಿಞe….ಎusಣ ಜoಟಿ’ಣ ಣhಡಿoತಿ ಚಿತಿಚಿಥಿ suಛಿh ಚಿ goಟಜeಟಿ oಠಿಠಿoಡಿಣuಟಿiಣಥಿ” ಎಂದು ಯಾಚಿಸಿದಳು. +ಹಾಗೆ ಹೇಳಿದಾಗಿನ ಅವಳ ಮೋರೆಯನ್ನು ನೋಡಿದ್ದೇ ತಡ. ನಾಗಪ್ಪನಿಗೆ ಅದೇನಾಯಿತೋ : ಕೇಳಕೇಳುತ್ತಿರುವಂತೆ ತುಂಬ ಮೆತ್ತಗಾದ. ರಮಿಸುವಷ್ಟು ಮೃದುವಾದ ದನಿಯಲ್ಲಿ : +“ಕ್ಷಮಿಸು ಮೇರೀ, ಈ ಮೊದಲೇ ಬೇರೆ ಕಡೆಗೆ ಊಟಕ್ಕೆ ಬರುವೆನೆಂದು ಹೇಳಿಬಿಟ್ಟಿದ್ದೇನೆ…. ನನಗೆ ಏನನ್ನೋ ತಿಳಿಸುವುದಕಾಗಿಯೇ ಒ‌ಆ ನಿನ್ನನ್ನು ಇಲ್ಲಿಗೆ ಈಗ ಕಳಿಸಿರಬೇಕು ಅಲ್ಲವೆ ? ಹೇಳು : ಅವರಿಗೆ ನನ್ನಿಂದೇನಾಗಬೇಕಂತೆ_ಈಗ ?” +ನಾಗಪ್ಪ ಬಾಯಿಮುಚ್ಚಿ ಕೂತುಬಿಟ್ಟ : ನೀನೇ ಮಾತನಾಡು, ಮೇರೀ_ನಾನು ಬರೇ ಕೇಳಿಸಿಕೊಳ್ಳುತ್ತೇನೆ, ಎನ್ನುವ ರೀತಿ. ನನ್ನನ್ನು ಎವೆಯಿಕ್ಕದೆ ನೋಡುತ್ತಿರುವಾಗಲೂ ತನ್ನಿಂದ ದೂರವಾದ ಪ್ರದೇಶದಲ್ಲಿ ವಿಹರಿಸುತ್ತಿದ್ದವನ ಹಾಗೆ ತೋರುವವನ ಮೋರೆಯ ಮೇಲೆ, ಕಣ್ಣುಗಳಲ್ಲಿ ಕಂಡಂತೆ ಭಾಸವಾದ ವಿಷಾದ ತುಂಬಿದ ಅನಾಸಕ್ತಿ ಮೇರಿಯನ್ನು ಕಲಕಿಬಿಟ್ಟಿತು. ತನಗೆ ಒಪ್ಪಿಸಿಕೊಟ್ಟ ಕೆಲಸದಲ್ಲಿ ತಾನೀಗ ಸೋಲುತ್ತಿದ್ದೇನೆ ಎನ್ನುವ ಅನ್ನಿಸಿಕೆಯಿಂದ ಅವಳಿಗೆ ಅಳು ಬರುವಂತಾಯಿತು : +“ಪ್ಲೀಜ್ ನಾಗ್….ನಾನು ಇದಿರಿಗೆ ಕೂತಿರುವಾಗಲೂ ಹೀಗೆ ಒಮ್ಮೆಗೇ ಆಮೆಯ ಹಾಗೆ ನನ್ನನ್ನು ನಿನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳಬೇಡ. ಹೊರಕ್ಕೆ ಬಾ ! ಹೊರಗೇ ಇರು : ಕೆಲವೇ ನಿಮಿಷಗಳ ಮಟ್ಟಿಗಾದರೂ ನನ್ನ ಸಹವಾಸದಲ್ಲಿ ತೆರೆದುಕೋ ! ಉದಾರನಾಗು : ಮನಸ್ಸನ್ನು ತೆರೆದೇ ಇಡು ! ಇಲ್ಲಿ ಕೇಳು : ಕಳೆದ ಎರಡು ವಾರಗಳಲ್ಲಿ ನೀನು ಅನುಭವಿಸಿದ್ದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ. ನಿನ್ನ ಎಲ್ಲ ಯಾತನೆಯನ್ನೂ ಕೊನೆಗೊಳಿಸುವ ಸುದ್ದಿ ತಂದಿದ್ದೇನೆ_ ಣhe mosಣ exಛಿiಣiಟಿg ಟಿeತಿs ಥಿou ಛಿouಟಜ eveಡಿ imಚಿgiಟಿe…. ಆ ಸುದ್ದಿಯನ್ನು ಒಡೆದ ಕೂಡಲೇ ನಿನಗಾಗುವ ಖುಶಿಯನ್ನು ಕಲ್ಪಿಸಿಕೊಂಡೇ ನಾನು ಇಷ್ಟೊಂದು ಖುಶಿಯಾಗಿದ್ದೇನೆ. ನಾಗ್, ನಂಬು ! ಪ್ರತಿಯೊಂದನ್ನೂ ಸಂಶಯದಿಂದ ನೋಡುತ್ತ ನಿನ್ನ ಮನಸ್ಸನ್ನು ಬಾಗಲತ್ತ ಬಿಡಬೇಡ. ನಿನ್ನನ್ನು ಮರುಳು ಮಾಡಲು ಹೀಗೆ ಸಿಂಗರಿಸಿ ಬಂದಿಲ್ಲ. ಬರೇ ನನಗಾದ ಖುಶಿಯಿಂದಾಗಿ : ಸುದ್ದಿಯನ್ನು ನಿನಗೆ ಒಡೆ‌ಒಡೆಯುತ್ತಿರುವಾಗಲೇ ಎಲ್ಲಿ ಅತ್ತುಬಿಟ್ಟೇನೋ ಎಂಬ ಭಯವಾಗಿ ಕದ ಮುಚ್ಚಿಸಿದೆ. ಆದರೆ ನೀನು ಹೀಗೆ ಯಾವುದರಲ್ಲೂ ಈಗ ಆಸ್ಥೆಯೇ ಇಲ್ಲದವನ ಹಾಗೆ ಕೈಕಟ್ಟಿ ಕುಳಿತುಬಿಟ್ಟರೆ ನನ್ನಿಂದ ಮಾತೇ ಹೊರಡಲಾರದು…..ನಾಗ್….Pಟeಚಿse heಟಠಿ me ಣo ಚಿಡಿಣiಛಿuಟಚಿಣe me ರಿoಥಿ iಟಿಣo ತಿಡಿoಜs ಣhಚಿಣ ತಿiಟಟ mಚಿಞe ಥಿou ಛಿhಚಿಟಿge ಥಿouಡಿ ಜeಛಿisioಟಿ….ಒ‌ಆ ನಬ್ಬಿಬ್ಬರ ಗೆಳೆತನದಲ್ಲಿ ಭರವಸೆ ಇಟ್ಟು ನನಗೆ ವಹಿಸಿಕೊಟ್ಟ ಈ ಕೆಲಸವನ್ನು_ಲವಲವಿಕೆಯಿಂದ ನಾನಾಗಿ ಒಪ್ಪಿಕೊಂಡದ್ದನ್ನು_ನಿರ್ವಹಿಸುವುದರಲ್ಲಿ ನೆರವು ನೀಡು. ಈ ಸುಖದ ಸಮಾಚಾರವನ್ನು ಸ್ವತಃ ತಾವೇ ನಿನಗೆ ತಿಳಿಸಬೇಕೆನ್ನುವುದು ಒ‌ಆ ಯವರ ಇಚ್ಛೆಯಾಗಿತ್ತು. ಆದರೆ ನಿನ್ನ ಮೊಂಡುತನವನ್ನು ಅರಿತ ಅವರು ನನ್ನನ್ನು ಕಳಿಸಿದ್ದಾರೆ. ಇಷ್ಟೊಂದು ಹಟದವನಾಗಿಯೂ ನೀನು ಆ‌ಒ‌ಆ ಆದರೆ ಕಪಟನಾಟಕಕ್ಕೆ ಇಷ್ಟು ಸುಲಭದಲ್ಲಿ ಮೋಸಹೋದದ್ದು ಅತಿ ಆಶ್ಚರ್ಯ, ನಾಗ್. ಒ‌ಆ ಯವರು ನಿನ್ನ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಸ್ವೀಕರಿಸಲಾರರು_ಎಂದೆಂದಿಗೂ ! ಬದಲು ನಿನ್ನನ್ನು ಕೂಡಲೇ ಮೇಲಿನ ಜಾಗಕ್ಕೆ ಬಡತಿ ಮಾಡಿದ್ದಾರೆ. ಯಾವ ಸ್ಥಾನಕ್ಕೆ ಗೊತ್ತೇ ? ಊಹಿಸಬಲ್ಲೆಯಾ ? ಕಂಪನಿಯ ಟೆಕ್ನಿಕಲ್-ಡೈರೆಕ್ಟರ್ರ ಸ್ಥಾನಕ್ಕೆ ನಿನ್ನ ಪ್ರೊಮೋಶನ್, ನಾಗ್ ! ಅoಟಿgಡಿಚಿಣs ಓಚಿg, ಚಿಟಿಜ ಛಿheeಡಿ uಠಿ ! ಅಮೇರಿಕನ್ ಕಂಪನಿಯ ವೈಸ್-ಪ್ರೆಸಿಡೆಂಟರಾದ ರಟ್ಟರ್ ಅವರೇ ಬೋರ್ಡ್-ಅಫ್-ಡೈರೆಕ್ಟರ್ಸ್ ಸದಸ್ಯತ್ವಕ್ಕೆ ನಿನ್ನ ಹೆಸರನ್ನು ಸೂಚಿಸುತ್ತಾರೆ_ನಂಬುವಿಯಾ ? ಮುಂದಿನ ತಿಂಗಳ ಬೋರ್ಡ್ ಮೀಟಿಂಗಿಗೆ ಅವರು ಸ್ವತಃ ಬರುವವರಿದ್ದಾರೆ. ಅನಂತರ-ಕಂಪನಿಯ ಟೆಕ್ನಿಕಲ್-ಡೈರೆಕ್ಟರನಾಗಿಯೇ ಅಮೇರಿಕೆಗೆ ಪ್ರಯಾಣ ನಿನ್ನದು….ಚಿಯರಪ್ ನಾಗ್ _ ಚಿಯರಪ್ _ ನಿನ್ನ ಈ ಮೊಂಡುತನವನ್ನು ಇನ್ನು ಬಿಟ್ಟುಬಿಡು ನಾಗ್, ಬಾಗಿಲವರೆಗೆ ಬಂದ ಭಾಗ್ಯವನ್ನು ಬಿಸಾಡಬೇಡ. ಆ‌ಒ‌ಆ ಯವರ ಮೋಸವೇ ಗೆಲ್ಲಲು ಬಿಡಬೇಡ. ಆ‌ಒ‌ಆ ಅವರಿಗೆ ನಿನ್ನ ಈ ಬಡತಿಯ ಸುದ್ದಿ ಇನ್ನೂ ತಿಳಿದಿಲ್ಲ. ರಾತ್ರಿ ನೀನು ಊಟಕ್ಕೆ ಬಂದಾಗಲೇ ಎಲ್ಲರ ಇದಿರು ಈ ಸಂತೋಷದ ಸಂಗತಿಯನ್ನು ಜಾಹೀರುಪಡಿಸುವುದಿದೆ. ಒ‌ಆ ಅವರಿಗೆ ಆ‌ಒ‌ಆ ಕೂಡ ಊಟಕ್ಕೆ ಬರುತ್ತಾರೆ…. Pಟeಚಿse ಛಿಚಿಟಿಛಿeಟ ಣhe oಣheಡಿ eಟಿgಚಿgemeಟಿಣ ಚಿಟಿಜ ಛಿome ತಿiಣh me…. ನೀನು ರಾಜೀನಾಮೆ ಕೊಟ್ಟ ವರ್ತಮಾನ ತಿಳಿದದ್ದೇ ಒ‌ಆ ಯವರು ಜರಿದುಹೋದ ರೀತಿ ನೀನು ನೋಡಬೇಕಿತ್ತು, ನಾಗ್…. ಸ್ವತಃ ತನಿಖೆಗೆ ಮೂಲ ಕಾರಣರಾದ ಆ‌ಒ‌ಆ ಕೂಡ ! ನೀನು ರಾಜೀನಾಮೆ ಕೊಡುವಷ್ಟರ ಮಟ್ಟಿಗೆ ಉದ್ರೇಕಗೊಳ್ಳಬಾರದು. ನಾಟಕ ಈ ವಿಕೋಪಕ್ಕೆ ಹೋಗಬಹುದೆಂದು ಅವರೂ ಎಣಿಸಿರಲಿಲ್ಲ : Iಣ ಛಿಚಿme ಚಿs ಚಿ boಟಣ ಜಿಡಿom ಣhe bಟue bಥಿ his oತಿಟಿ ಚಿಜmissioಟಿ ಣo ಣhe ಒ‌ಆ…. ತಾಜಮಹಲಿನಲ್ಲಿತ್ತಂತೆ ತನಿಖೆ ಅಲ್ಲವೆ? ಆಫೀಸಿನಲ್ಲಿ ಯಾರಿಗೂ ಗೊತ್ತಿರಲಿಲ್ಲ. ತನಿಖೆಯಲ್ಲಿ ಏನೇನಾಯಿತು ಎನ್ನುವದೂ ಒ‌ಆ ಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಡಾ. ದಸ್ತೂರ್ ಎಂಬುವರು ತನಿಖೆಯ ಹೊತ್ತಿಗೆ ಕೈತಪ್ಪಿದರಂತೆ_ಊe ಛಿಚಿಡಿಡಿieಜ iಣ ಣoo ಜಿಚಿಡಿ ಚಿmಜ ಠಿಡಿovoಞeಜ ಥಿou ಣoo muಛಿh ಅಂತೆ_ ಹೌದೆ ? ಆದರೂ ನಿನ್ನಿಂದ ರಾಜೀನಾಮೆಯನ್ನು ಅಪೇಕ್ಷಿಸಿರಲಿಲ್ಲ ಎನ್ನುವದು ಆ‌ಒ‌ಆ ಯಿಂದಲೇ ತಿಳಿಯಿತು. ಆ‌ಒ‌ಆ ಜರ್ಜರಿತವಾದ ರೀತಿ ನೀನು ನೋಡಿಯೇ ನಂಬುವಂತಹದು !….ಮೂಲ ಯೋಜನೆಯ ಪ್ರಕಾರ ತನಿಖೆಯನ್ನು ಆ‌ಒ‌ಆ ಒಬ್ಬರೇ ನಡೆಸುವವರಿದ್ದರಂತೆ. ಕಂಪನಿಗೆ ಸಂಬಂಧವೇ ಇಲ್ಲದ ಇನ್ನಿಬ್ಬರನ್ನು ಸೇರಿಸಿಕೊಂಡದ್ದು ಯಾಕೆ ? ಯಾವಾಗ ? ಎನ್ನುವುದರ ಬಗ್ಗೆ ಒ‌ಆ ಗೆ ಇನ್ನೂ ಆಶ್ಚರ್ಯ. ಆ‌ಒ‌ಆ ಗೆ ಈ ತನಿಖೆಯಿಂದ ಬೇಕಾದದ್ದಾದರೂ ಏನು ಎಂಬುದೂ ಅವರಿಗಿನ್ನೂ ಗೊತ್ತಾಗಿಲ್ಲ….ಆದರೆ ಇದೆಲ್ಲ ಈಗ ನಿರ್ಜೀವ ಇತಿಹಾಸ, ನಾಗ್…. ಆನಂದಾತಿಶಯದಿಂದ ನೀನು ಉಬ್ಬಬೇಕಾದ ಇಡೀ ಭವಿತವ್ಯ ಮುಂದಿದೆ ! ಅಮೇರಿಕನ್ ಡೈರೆಕ್ಟರರಿಗೆ ನಿನ್ನ ಬಗ್ಗೆ ಬಹಳ ಆದರ ಇದೆಯಂತೆ : ಒ‌ಆ ಯವರಿಂದ ತಿಳಿದಾಗ ಎಷ್ಟು ಸಂತೋಷವಾಯಿತು ಗೊತ್ತೇ ? I ಚಿm ಠಿಡಿouಜ oಜಿ ಥಿou, ಓಚಿg,. I ಚಿm….” +uಟಿಜeಜಿiಟಿeಜ‌ಈವರೆಗೂ ಕಾಡುತ್ತ ಬಂದ ಭಯ ಆತಂಕ ಆಸೆ-ಆಕಾಂಕ್ಷೆ ಮುಂತಾದ ಎಲ್ಲ ಭಾವನೆಗಳನ್ನೂ ಕೆಳಕ್ಕೆ ದೂಡಿ ಬೋರ್ಡಮ್ ತಂತಾನೆ ಮೇಲಕ್ಕೆದ್ದು ಬರಹತ್ತಿದಾಗ ನಾಗಪ್ಪನಿಗೆ ತನಿಖೆ ಬಂದ ಆಕಳಿಕೆಯನ್ನು ತಡೆಯುವದು ಕಠಿಣವಾಯಿತು : +“ಕ್ಷಮಿಸು ಮೇರೀ, ಕಳೆದ ಎಂಟು ದಿನಗಳಿಂದ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ ನೋಡು. ಈ ಹೊತ್ತು ಗಡದ್ದಾಗಿ ನಿದ್ದೆ ಮಾಡಬೇಕು. ಆಗ ಪರಿಚಯ ಮಾಡಿಕೊಟ್ಟಿದ್ದೆನಲ್ಲ_ಅರ್ಜುನ್‌ರಾವ್_ಅವರ ಮನೆಯಲ್ಲೇ ಊಟಕ್ಕೆ ಕರೆದಿದ್ದಾರೆ. ಬರುತ್ತೇನೆಂದು ಹೇಳಿಯಾಗಿದೆ. ಮೇಲಾಗಿ, ಹೊರಗೆ ಹೋಗುವ ಉತ್ಸಾಹವೇ ಇಲ್ಲವಾಗಿದೆ ನೋಡು….ಈಗ….ನೀನು ತಂದ ಸುದ್ದಿಯಿಂದ ನನಗೆ ಖಿಶಿಯಾಗಿಲ್ಲವೆಂದಲ್ಲ ಮೇರೀ_ತುಂಬ ತುಂಬ ಖುಶಿಯಾಗಿದೆ. ಆದರೆ ನೀನು ತಿಳಿದಿರಬಹುದಾದ ಕಾರಣಕ್ಕಾಗಿಯಲ್ಲ. ಯಾವ ಕಾರಣಕ್ಕಾಗಿ ಎನ್ನುವುದು ನನಗೂ ಸ್ಪಷ್ಟವಾಗಿಲ್ಲ : ನಾನು ರಾಜೀನಾಮೆಯನ್ನು ಕೊಯ್ಯ್ಟ್ಟಿದ್ದು ಬರೀ ನೌಕರಿಗಲ್ಲ ಮೇರೀ. ಹೀಗೇ ಬರಿಯೆ ನಮ್ಮ ನಮ್ಮ ಸ್ವಾರ್ಥಕ್ಕಾಗಿ, ಭಯಗಳಿಗಾಗಿ, ಒಬ್ಬರನ್ನೊಬ್ಬರು ಉಪಯೋಗಿಸಿಕೊಳ್ಳುವಂತೆ ಮಾಡುವ ಈ ವ್ಯಾವಹಾರಿಕ ಲೋಕಕ್ಕೆ ! ನೀನು ತಿಳಿದಹಾಗೆ, ನಾನು ಈ ನಿರ್ಧಾರವನ್ನು ಒಂದು ಪ್ರಕ್ಷುಬ್ಧ ಗಳಿಗೆಯಲ್ಲೇ ಮಾಡಿರಬಹುದಾದರೂ ಅದು ಸ್ವತಃ ನಾನೇ ತಿಳಿದದ್ದಕ್ಕಿಂತ ಹೆಚ್ಚು ಗಟ್ಟಿಮುಟ್ಟಾದದ್ದೆಂದು ಗೊತ್ತಾದದ್ದು ಮಾತ್ರ ಇದೀಗ_ನೀನು ನನ್ನ ಬಡತಿಯ ಸುದ್ದಿ ಒಡೆದಾಗ ! ಅಮೇರಿಕನ್-ಡೈರೆಕ್ಟರರಿಗೆ ನನ್ನ ಬಗ್ಗೆ ಆದರ ಇದ್ದುದನ್ನು ತಿಳಿದಾಗ ! ನನ್ನ ನಿರ್ಧಾರದ ನಿಶ್ಚಲತೆ ಅಹಂಕಾರದಲ್ಲಿ ಬೇರುಬಿಟ್ಟಿದ್ದಲ್ಲವೆಂದು ನನ್ನ ಪ್ರಾಮಾಣಿಕವಾದ ಅನ್ನಿಸಿಕೆ : ದೀರ್ಘಕಾಲದ ಯಾತನೆಯ ಕೊನೆಯಲ್ಲಿ ಹುಟ್ಟಿದ ಜಾಣತನವಿದು ಎಂದು ನಂಬಲೇ ? ನೌಕರಿಯ ಆಮಿಷ ಇಲ್ಲದಿದ್ದರಿಂದಲೇ ಸ್ವಚ್ಛವಾದ, ತಿಳಿಯಾದ ದೃಷ್ಟಿಗೆ, ನಿನ್ನ ಮಾತುಗಳನ್ನು ಕೇಳುತ್ತಿರುವಾಗ ಹೊಳೆದದ್ದು ಹೇಳಲೆ ? ಕೇಳು : ಈ ರಾಜಕಾರಣ ನೀನು ತಿಳಿದದ್ದಕ್ಕಿಂತ ಹೆಚ್ಚು ಆಳದ್ದು, ಮೇರೀ : ಲಕ್ಷಗಟ್ಟಲೆ ರೂಪಾಯಿಗಳ ಮಾಲು ಕಳುವಾಗಿಹೋದದ್ದು, ಹೋದ ರೀತಿ_ಇವು ಯಾರ ಕಿವಿಗೆ ಹೋದರೂ ಅಡ್ಡಿಯಿಲ್ಲ ; ಶೇರುದಾರರ ಕಿವಿಗೆ ಮಾತ್ರ ಹೋಗಕೂಡದು : ಹಾಗೆ ಆಗುವುದು ಕಂಪನಿಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಹಾನಿಕರವಾದದ್ದು. ಕಂಪನಿಯ ಆಡಳಿತ ಇಂಥವರ ಕೈಯಲ್ಲಿದೆ ಎನ್ನುವುದು ತಿಳಿಯಿತೆಂದರೆ ಅದರಿಂದಾಗಿ ಡೈರೆಕ್ಟರರಿಗೆ ಕಾದಿರುವ ತೊಂದರೆ ಅಷ್ಟಿಷ್ಟಲ್ಲ. ಸುತ್ತಲಿನ ಪರಿಸರದಲ್ಲಿಯ ತನ್ನ ಕೀರ್ತಿಯನ್ನು ಕಾಯ್ದುಕೊಳ್ಲುವುದು ಪ್ರತಿಯೊಂದು ಕಂಪನಿಗೆ ಭವಿತವ್ಯದ ದೃಷ್ಟಿಯಿಂದ ಅತ್ಯವಶ್ಯವಾಗಿರುತ್ತದೆ. ಇದನ್ನು ಅಮೇರಿಕೆಯ ಡೈರೆಕ್ಟರರು ಕಂಡುಕೊಂಡಷ್ಟು ಸ್ಪಷ್ಟವಾಗಿ ನಮ್ಮ ಒ‌ಆ ಆಗಲೀ ಆ‌ಒ‌ಆ ಆಗಲೀ ಕಂಡುಕೊಂಡಂತಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಕೆಳಗೆಳೆಯುವ ಆಟವೇ ದೊಡ್ಡದಾಗಿಬಿಟ್ಟಿತು ! ಒ‌ಆ ಯವರನ್ನು ಕೇಬಲ್ ಮುಖಾಂತರ ಅಮೇರಿಕೆಗೆ ಕರೆಯಿಸಿದ್ದು ಇದನ್ನು ಚರ್ಚಿಸಲು : ನೀನು ತಪ್ಪು ತಿಳಕೊಂದಂತೆ ಒ‌ಆ ಯವರ ಬಡತಿಯನ್ನಲ್ಲ ! ಮೂಕರ್ಜಿಯ ಪ್ರತಿ ಅಮೇರಿಕನ್ ಡೈರೆಕ್ಟರರ ಕೈ ಸೇರಿದ್ದೇ ಇದಕ್ಕೆಲ್ಲ ಕಾರಣ. ಖಿheಥಿ musಣ hಚಿve ತಿಚಿಟಿಣeಜ him ಣo ರಿusಣ hush uಠಿ ಣhe ತಿhoಟe ಚಿಜಿಜಿಚಿiಡಿ ! ನನ್ನ ಮತ್ತೊಂದು ಊಹೆ ಹೇಳಲೆ ? ಮೂಕರ್ಜಿಗೆ ಕಾರಣವಾದ ಮಾಹಿತಿಯನ್ನು ಅದು ಸಿಗಬಾರದವರ ಕೈಗೆ ಸಿಗುವಂತೆ ಮಾಡಿದವರು ಸ್ವತಃ ಒ‌ಆ ಅವರೇ ! ಪ್ಲೀಜ್ ಮೇರೀ_ಹಾಗೆ ಒಮ್ಮೆಲೇ ಬಿಳಚಿಕೊಳ್ಳಬೇಡ. ನನಗೆ ಹೇಗೆ ಗೊತ್ತು ಎಂದು ಭಯವಾಯಿತು ಅಲ್ಲವೆ ?_Simಠಿಟe : ಣhe ಟogiಛಿ oಜಿ ಚಿಟಟ ಚಿಛಿಣioಟಿs hಚಿviಟಿg ಣheiಡಿ ಡಿooಣs iಟಿ seಟಜಿish moಣives ! ಬಹುಶಃ ನಿನಗೂ ನಾನು ಈಗ ಹೇಳುತ್ತಿದ್ದ ಸಂಗತಿ ಗೊತ್ತಿರಲಿಕ್ಕಿಲ್ಲ : ಆಡಿಟ್-ರಿಪೋರ್ಟಿನಲ್ಲಿದ್ದ ಗುಟ್ಟಿನ ಸಂಗತಿಗಳನ್ನು ಹೊರಗೆಡವಿದ್ದು ಕೂಡ ಒ‌ಆ ಅವರೇ ಎನ್ನುವದು. ಅಥವಾ ಗೊತ್ತಿರಲೂಬಹುದು. ಆದರೆ ನನ್ನ ಊಹೆ ದಿಟವಾದದ್ದು ಎನ್ನುವುದಕ್ಕೆ ನಾನೀಗ ಒದಗಿಸುವ ಪುರಾವೆ ಸರಿಯಾದದ್ದೋ ಅಲ್ಲವೋ ಎನ್ನುವುದನ್ನು ಮಾತ್ರ ನೀನೇ ಖಚಿತಪಡಿಸಬಲ್ಲೆ. ಹೇಳಲೇ ?_ನನ್ನನ್ನು ಮುಂಬಯಿಗೆ ವರ್ಗ ಮಾಡಿಸಿಕೊಂಡವರೂ ಒ‌ಆ ಯವರೇ ! ಪ್ಲೀಜ್ ಮೇರೀ, ಅಷ್ಟೊಂದು ಹೆದರಿಕೊಳ್ಳಬೇಡ. ನಾನೇನು ನಿನ್ನ ಮೇಲೆ ಆರೋಪ ಹೊರಿಸಲು ಹೊರಟಿಲ್ಲ_ನಿನಗೆ ಗೊತ್ತಿದ್ದೂ ನೀನು ನನಗೆ ತಿಳಿಸಲಿಲ್ಲವೆಂದು…. ಠಿಟeಚಿse ಡಿeಟಚಿx ಚಿಟಿಜ eಟಿರಿoಥಿ ಣhis gಚಿme oಜಿ guessiಟಿg ಣhe moಣives : ಆ‌ಒ‌ಆ ಯವರನ್ನು ಪೇಚಿನಲ್ಲಿ ಸಿಕ್ಕಿಸುವ ತಮ್ಮ ಆಟ ಆರಂಭವಾದಾಗ ನಾನು ಹೈದರಾಬಾದಿನಲ್ಲಿದ್ದರೆ ತನ್ನ ಭೋಳೇತನದಿಂದಾಗಿ ಈ ಪೇಚಿನಿಂದ ಹೊರಬೀಳುವ ಉಪಾಯವನ್ನು ನಾನೇ ಏನಾದರೂ ಆ‌ಒ‌ಆ ಗೆ ಸೂಚಿಸಿಕೊಟ್ಟೇನೋ ಎಂಬುದು ಒ‌ಆ ಯವರ ಭಯವಾಗಿತ್ತು. ಊe ಜiಜ ಟಿoಣ ತಿಚಿಟಿಣ ಣಚಿಞe ಚಿಟಿಥಿ ಛಿhಚಿಟಿಛಿes ಚಿಟಿಜ ಣhoughಣ iಣ sಚಿಜಿeಡಿ ಣo ಞeeಠಿ me ಚಿತಿಚಿಥಿ ಜಿಡಿom ಣhe ಆ‌ಒ‌ಆ! ಆದದ್ದೂ ಹಾಗೆಯೇ : ತಾನು ಸಿಕ್ಕಿಕೊಂಡ ಪೇಚಿನಿಂದ ತಪ್ಪಿಸಿಕೊಳ್ಳಲು ನನ್ನಿಂದ ಬೇಕಾದ ಸಹಾಯವೇ ಆ‌ಒ‌ಆ ಏರ್ಪಡಿಸಿದ ತನಿಖೆಯ ಉದ್ದೇಶವಾಗಿರಬೇಕು ! ಇಷ್ಟೇ, ಸಹಾಯವನ್ನು ಬೇಡಲಿಲ್ಲ. ಹೀಗೇ ಕೇಳಿದರೆ ಅದು ಸಿಗಲಾರದೆಂದು ಬಗೆದು ಹೆದರಿಸುವ ಉಪಾಯ ಹೂಡಿದರು. ಕಾರಣ : ಮೂಕರ್ಜಿಯ ಹಿಂದಿನ ತಲೆ ನನ್ನದೆನ್ನುವ ಗುಮಾನಿ ! ತನಿಖೆ ನಡೆದ ರೀತಿ ನೋಡಿದರೆ ಅದರ ಪೂರ್ವತಯಾರಿ ಬಹಳ ದಿನಗಳದ್ದೆಂದು ಗೊತ್ತಾಗುತ್ತದೆ. ನಿನ್ನ ಕಣ್ಣುಗಳಲ್ಲಿ ಇದೀಗ ಮಿಂಚಿದ ಹೊಳಪಿನ ಅರ್ಥವಾಗುತ್ತದೆ, ಮೇರೀ : ಒ‌ಆ ನಿನ್ನನ್ನೀಗ ಇಷ್ಟೊಂದು ತರಾತುರಿಯಲ್ಲಿ ಕಳಿಸಿದ್ದೇ ಇದಕ್ಕಾಗಿ_ಕನಿಷ್ಠ ತನಿಖೆಯ ಹೊತ್ತಿಗೆ ಏನೇನಾಯಿತು ಎನ್ನುವುದನಾದರೂ ತಿಳಿದು ಬರುವುದಕ್ಕಾಗಿ_ಅಲ್ಲವೆ ? ನಿನ್ನನ್ನು ತಪ್ಪು ತಿಳಿಯಲಾರೆ, ಮೇರೀ_ಹೆದರಬೇಡ. Iಣ is ಚಿಟಟ iಟಿ ಣhe gಚಿme. ಈ ಆಟವನ್ನು ಎಷ್ಟು ಚೆನ್ನಾಗಿ ನಾನೀಗಾಗಲೇ ಅರಿತಿದ್ದೇನೆ ಎನ್ನುವುದಾದರೂ ನಿನಗೆ ಗೊತ್ತಾಗಲಿ ಎಂದು ಹೇಳುತ್ತೇನೆ : ಕಾರಖಾನೆಯಲ್ಲಿಯ ಬೆಂಕಿಗೂ ಕಳವಾದ ಮಾಲಿಗೂ ಬಾದರಾಯಣ-ಸಂಬಂಧ ಜೋಡಿಸುವಂತಹ ಸುಳ್ಳು ರಿಪೋರ್ಟಿನ ಮೇಲೆ ನನ್ನ ಸಹಿ ಬೇಕಿತ್ತು, ತನಿಖೆಯವರಿಗೆ ! ಮೂಲ ಯೋಜನೆಯ ಪ್ರಕಾರ ಆ‌ಒ‌ಆ ಸ್ವತಃ ಈ ತನಿಖೆ ನಡೆಸುವವರಿದ್ದರು_ಖಂಬಾಟಾನಂತೂ ನನಗೆ ಹಾಗೆಂದು ತಿಳಿಸಿದ್ದ. ತನಿಖೆಗೆ ಒ‌ಆ ಯವರ ಒಪ್ಪಿಗೆ ಪಡೆಯಲು ಏನು ಕಾರಣ ಕೊಟ್ಟಿದ್ದರೋ ನಾನರಿಯೆ. ಒ‌ಆ ಯವರೂ ಧೂರ್ತರೇ : ತನಿಖೆಗೆ ಕಾರಣ ಯಾವುದೇ ಇರಲೊಲ್ಲದೇಕೆ – ಒಮ್ಮೆ ಅದು ಆರಂಭವಾದಮೇಲೆ ಮಾತ್ರ ಆ‌ಒ‌ಆ ಹಾಗೂ ಅವರ ಚೇಲಾರನ್ನು ಒಳಗೊಳ್ಳುವಂತೆ ಅದರ ಜಾಲ ಪಸರಿಸಬಹುದು ಎನ್ನುವದು ಅವರ ಯೋಜನೆ ಇದ್ದಿರಬೇಕು. ಒ‌ಆ ಅಮೇರಿಕೆಗೆ ಹೋದ ಮೇಲೆ ಮಾತ್ರ ಆ‌ಒ‌ಆ ಗೆ ತನಗೆ ಸಲಹೆ ಇತ್ತ ದಸ್ತೂರ್ ಹಾಗೂ ಪಟೇಲರನ್ನೇ ಈ ತನಿಖೆಯ ಆಯೋಗದಲ್ಲಿ ಸೇರಿಸಿಕೊಳ್ಳುವ ಮನಸ್ಸಾಗಿರಬೇಕು. ತನಿಖೆಯ ಹೊತ್ತಿಗೆ ಆ ದಸ್ತೂರ್ ಬಿಚ್ಚಿದ ಸುಳ್ಳಿನ ಕಂತೆಗೆ ನಾನು ಹೆದರಲಿಲ್ಲ. ಮೇರೀ_ ಊe mಚಿಜe me siಛಿಞ bಥಿ his ಟies : ಪಾಪ ! ಜಲಾಲ್ ಇನ್ನೂ ಆರ್ ಆಂಡ್ ಡೀ ಮ್ಯಾನೇಜರ್ ಆಗದೇ ಇದ್ದದ್ದು ನನಗೆ ಗೊತ್ತಿಲ್ಲ ಎಂದು ತಿಳಿದನೋ ! ಬೆಂಕಿ ಹುಟ್ಟಿಸಲು ಶಕ್ಯವೇ ಇಲ್ಲದ ನನ್ನ ಹೊಸ ಫಾರ್ಮ್ಯುಲೇಶನ್ ಇನ್ನೂ ಉತ್ಪಾದನೆಗೆ ಹೋಗಿಯೇ‌ಇಲ್ಲ ಎಂದು ನನಗೆ ಗೊತ್ತಿರುವುದನ್ನು ಅರಿಯನೋ ! ನಿಜ ಹೇಳಲೇ ?_‘ನಿನಗೆ ನಿನ್ನ ಅಪ್ಪ-ಅಮ್ಮರ ಬಗೆಗೇ ಸರಿಯಾಗಿ ಗೊತ್ತಿಲ್ಲದ್ದೇ ಈ ಬೆಂಕಿಗೆ ನೀನೇ ಕಾರಣ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ’ ಎಂದು ಅವರೇನಾದರೂ ಅಂದಿದ್ದರೆ ನಾನು ನಂಬಿಬಿಡುತ್ತಿದ್ದೇನೇನೋ. ಔಜಿ ಛಿouಡಿse, ಣhe ಒ‌ಆ ತಿiಟಟ be iಟಿಣeಡಿesಣeಜ ಣo ಞಟಿoತಿ ಣhಚಿಣ I ಜiಜ ಟಿoಣ sigಟಿ ಣhಚಿಣ ಡಿeಠಿoಡಿಣ_iಜಿ ಣhಚಿಣ is ತಿhಚಿಣ ಥಿou ತಿಚಿಟಿಣeಜ ಣo ಞಟಿoತಿ…. ಆದರೆ ಒಂದು ವಿಚಿತ್ರ ಗಳಿಗೆಯಲ್ಲಿ ನಾನು ರಾಜೀನಾಮೆಯನ್ನು ಬರೆದು ಕೊಡುವುದಕ್ಕೆ ಕಾರಣವಾದದ್ದು ಮಾತ್ರ ಆ‌ಒ‌ಆ ಊಹಿಸಿಕೊಂಡದ್ದಲ್ಲ. ಕಾರಣವಾದದ್ದು ಬೇರೆಯೆ : ಈ ತನಿಖೆಗೂ ತಮಗೂ ಎಳ್ಳಷ್ಟೂ ಸಂಬಂದವಿಲ್ಲದಿದ್ದರೂ ಕೂಡ ನನ್ನ ಬಗ್ಗೆ ತುಂಬ ಆದರ, ಕಾಳಜಿ ವ್ಯಕ್ತಪಡಿಸಿದ ಇಬ್ಬರೂ ಹುಡುಗಿಯರು ಒಂದು ಸಂದುಕಟ್ಟಿನ ಗಳಿಗೆಯಲ್ಲಿ ಹುಟ್ಟಿಸಿದ ವಿಲಕ್ಷಣ ಭೀತಿ ! ಆ ಮೂಕರ್ಜಿಯ ಪ್ರತಿ ನನ್ನ ಕೈಯಲ್ಲೂ ಬಂದಿತ್ತು. ಮೇರಿ. ಅದನ್ನು ಓದುವ ಮೊದಲೇ ಹರಿದೊಗೆದಿದ್ದೆ. ನಿನ್ನ ಗೆಳತಿ ಥ್ರೀಟೀ ಇದ್ದಳು ಆಗ ಪ್ಲೇನಿನಲ್ಲಿ. ಮೂಕರ್ಜಿಯನ್ನು ಹರಿದು ಪ್ಲೇನ್ ಸೀಟಿನ ಕಿಸೆಯಲ್ಲಿ ತುರುಕುವಾಗ ಅವಳು ನೋಡಿಲ್ಲ ಎಂದುಕೊಂಡಿದ್ದೆ. ಆದರೆ ನೋಡಿರಬೇಕೆ. ಬರೇ ಕುತೂಹಲಕ್ಕಾಗಿ ಎತ್ತಿಕೊಂಡಿರಬೇಕು. ತಾನು ನಿಜಕ್ಕೂ ನನ್ನನ್ನು ಭೇಟಿಯಾಗಿ ಮಾತನಾಡಿದ್ದಳು ಎನ್ನುವುದಕ್ಕೆ ಪುರಾವೆ ಒದಗಿಸಲು ನಿನಗೆ ತೋರಿಸಿರಬೇಕು. ಈಗ ಸ್ಪಷ್ಟವಾಗುತ್ತದೆ : ಫಿರೋಜನ ಕೈಗೆ ನಾನು ಹರಿದೊಗೆದು ಮೂಕರ್ಜಿ ಸೇರಿದ್ದು ನಿನ್ನ ಮುಖಾಂತರ ಎಂದು ! ಆದರೆ ಆಗ_ತನಿಖೆಯ ಹೊತ್ತಿಗೆ ಮಾತ್ರ_ಬಂದಗುಮಾನಿಯೇ ಹೆಚ್ಚು ಭಯಾನಕವಾಗಿತ್ತು. ಇಷ್ಟೇ : ಆ ಗಳಿಗೆಗೆ ನೀನು ಆ‌ಒ‌ಆ ಪರವಾಗಿದ್ದವಳು ಎಂದು ತಿಳಿದಿದ್ದೆ. ಈಗ ಗೊತ್ತಾಯಿತು : ಫಿರೋಜನ ಪಾರ್ಟಿಗೆ ಹೋಗಿ ನಿನಗೆ ಒ‌ಆ ಗಿಂತ ಆ‌ಒ‌ಆ ಹೆಚ್ಚು ಸೇರುತ್ತಾರೆ ಎಂದು ನನಗೆ ತೋರಿಸಿಕೊಂಡೆ ! ಆ ಕಾಗದದ ತುಂಡುಗಳನ್ನು ಫಿರೋಜನಿಗೆ ಒಪ್ಪಿಸಿ ಮೂಕರ್ಜಿಗೆ ನಾನೇ ಕಾರಣ ಎಂದು ಅವನಿಗಿದ್ದ ಗುಮಾನಿ ಗಟ್ಟಿಯಾಗುವಂತೆ ಮಾಡಿದೆ ! ಙou ಚಿಡಿe ಜoiಟಿg ಚಿ mಚಿಡಿveಟಟous ರಿob ಜಿoಡಿ ಣhe ಒ‌ಆ. ಊoಠಿe ಥಿou ಚಿಡಿe ಠಿಚಿiಜ ತಿeಟಟ ಒಚಿಡಿಥಿ….. ಒಂದು ಕಾಲಕ್ಕೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ, ಮೇರೀ. ನನ್ನ ಪ್ರೀತಿಯನ್ನು ನಿನ್ನಿದಿರು ಒಪ್ಪಿಕೊಳ್ಳುವ ಧೈರ್ಯ ಮಾತ್ರವಿರಲಿಲ್ಲ. ನೀನೂ ನನ್ನನ್ನು ಪ್ರೀತಿಸುತ್ತೀ ಎಂದು ಭಾವಿಸಿದ್ದೆ_ಚಿಟಿಜ ಣhಚಿಣ ತಿಚಿs muಛಿh beಜಿoಡಿe ಥಿou ರಿoiಟಿeಜ ಣhe ಒ‌ಆ’s gಚಿme oಜಿ usiಟಿg me ಜಿoಡಿ his oತಿಟಿ beಟಿeಜಿiಣ…. ನಾನು ನನ್ನ ರಾಜೀನಾಮೆಯನ್ನು ಹಿಂತೆಗೆದುಕೊಳ್ಳದಿದ್ದರೆ ಒ‌ಆ ಯವರಿಗೆ ತುಂಬ ಅನಾನುಕೂಲವಾಗುತ್ತದೆ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಅಮೇರಿಕನ್ ಡೈರೆಕ್ಟರರೇ ಖುದ್ದಾಗಿ ಸೂಚಿಸಿದ ಬಡತಿಯನ್ನು ನಾನು ಸ್ವೀಕರಿಸಿಬಿಟ್ಟರೆ ಮಾತ್ರ ಫ್ಯಾಕ್ಟರಿಯಲ್ಲಿ ಆ‌ಒ‌ಆ ಯವರಿಗೆ ಈಗಿದ್ದ ಪ್ರಭಾವವನ್ನು ಕಡಿಮೆ ಮಾಡಲು ನನ್ನನ್ನು ಉಪಯೋಗಿಸಬಹುದಾಗಿತ್ತು. ಆದರೂ ಕಾಳಜಿ ಮಾಡಬೇಡ. ನಾನು ಆ ರಿಪೋರ್ಟಿನ ಮೇಲೆ ಸಹಿ ಮಾಡಿಲ್ಲ ಎನ್ನುವದು ಈಗ ನಿನ್ನಿಂದ ಗೊತ್ತಾಯಿತೆಂದರೆ ತಾವು ಹಾಕಿದ ಕರಾರುಗಳಿಗೆಲ್ಲ ಆ‌ಒ‌ಆ ಒಪ್ಪುವಂತೆ ಮಾಡಿ ನನ್ನ ರಾಜೀನಾಮೆಯನ್ನು ಸ್ವೀಕರಿಸಲು ತಾವೇ ಮುಂದಾಗುತ್ತಾರೆ. ಒ‌ಆ ! ಅಮೇರಿಕನ್ ಡೈರೆಕ್ಟರರು ಕೇಳಿರದ ದಸ್ತೂರ್ ನನ್ನ ಬಗ್ಗೆ ಸಿದ್ಧಪಡಿಸಿದ ರಿಪೋರ್ಟಿನ ಪ್ರತಿಯನ್ನು ಸ್ವತಃ ಒ‌ಆ ಯವರೇ ಅವರಿಗೆ ಕಳಿಸುತ್ತಾರೆ !ಈ ಘಟನೆಯಿಂದ ತಮಗಾದ ಸಂತಾಪ, ನಿರಾಸೆಗಳ ಜೊತೆಗೆ ನನ್ನ ರಾಜೀನಾಮೆಯನ್ನು ಸ್ವೀಕರಿಸದೇ ಇರುವುದರಲ್ಲಿಯ ತಮ್ಮ ಅಸಹಾಯಕತೆಯನ್ನು ನಯನಾಜೂಕಿನಿಂದಲೇ ವ್ಯಕ್ತಪಡಿಸುತ್ತಾರೆ ! ಏನೆಂದರೂ ಇಂತಹ ರಾಜಕೀಯದಲ್ಲಿ ಆ‌ಒ‌ಆ ಯಂಥ ಧೂರ್ತನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಗಟ್ಟಿತನ ನನ್ನಲ್ಲಿ ಇಲ್ಲದ್ದನ್ನು ಒ‌ಆ ಯವರೇನು ಅರಿಯದವರೇ ! ಆದರೂ ಇಷ್ಟೊಂದನ್ನು ಅವರಿಗೆ ತಪ್ಪದೇ ತಿಳಿಸು : ಅವರು ಬೇರೆ ಏನೇ ತಿಳಿಯಲಿ, ಏನೇ ಮಾಡಲಿ, ಟೆಕ್ನಿಕಲ್-ಡೈರೆಕ್ಟರ್ ಆಗುವ ನನ್ನ ಯೋಗ್ಯತೆಯನ್ನು ಕೊನೆಗೆ ಸಾವಿರಾರು ಮೈಲು ದೂರವಿದ್ದ ಅಮೇರಿಕನ್ನರಾದರೂ ಕಂಡುಹಿಡಿದರಲ್ಲ ಎಂದು ನನಗೆ ತುಂಬ ತುಂಬ ಸಂತೋಷವಾಗಿದೆ ಎಂದು. ಃeಟive me, ಒeಡಿಥಿ, ಣhe exಠಿeಡಿieಟಿಛಿe oಜಿ ಣhe ಟಚಿsಣ ಣತಿo ತಿeeಞs hಚಿs mಚಿಜe me ಚಿಟಿ exಠಿeಡಿಣ iಟಿ guessiಟಿg moಣives behiಟಿಜ humಚಿಟಿ behಚಿviouಡಿ…. ಈಗ ನಮ್ಮ ನೆರೆಮನೆಯ ಅರ್ಜುನ್‌ರಾವ್ : ರಾತ್ರಿ ಊಟಕ್ಕೆ ಕರೆದಿದ್ದಾರೆ. ಸಂಜೆ ನಿನ್ನ ಫೋನ್ ಬಂದಾಗ ಅಲ್ಲಿಗೇ ಹೋಗಿದ್ದೆ. ಆಗಲೇ ಸಿಹಿಸಿಹಿಯಾಗಿ ಮಾತನಾಡಿಸಿದ್ದಾರೆ. ನಾಳೆ ಬೆಳಗಾಗುವುದರೊಳಗೆ ಇಲ್ಲಿ ಒಂದು ದೊಡ್ಡ ನಾಟಕ ನೆಡೆಯುತ್ತದೆ : ಬದಿಯಲ್ಲಿ ಬಾಗಿಲಿಗೆ ಬೀಗವಿದ್ದ ಮನೆ ಇದೆಯಲ್ಲ, ಅಲ್ಲಿಯ ಒಬ್ಬ ಹೆಣ್ಣಿಗೆ ಈ ನಾಟಕದಲ್ಲಿ ದೊಡ್ಡ ಪಾತ್ರ ಸಿಗುತ್ತದೆ. ನಾಟಕದ ಉದ್ದೇಶ : ನನ್ನನ್ನು ಈ ಮನೆಯಿಂದ ಓಡಿಸುವುದು ! ಇನ್ನು ಓಡಲಾರೆ ಮೇರೀ_ನೋಡುತ್ತಿರುವಿಯಂತೆ. ನೀನು ಮಾತ್ರ ಈ ಮನೆಗೆ ಮತ್ತೆ ಬರುತ್ತೀಯೋ ಇಲ್ಲವೋ. ಬಹಳ ಸಣ್ಣ ಮನೆಯಿದು. ತುಂಬ ಹೊಲಸು ಚಾಳು. ಇಂದಿನಿಂದ ನಾನು ತೀರ ಸಣ್ಣ ಮನುಷ್ಯ. ನೌಕರಿ ಇಲ್ಲದವನು. ಯಾಕಾದರೂ ಬಂದೀಯಾ ?….” +ಏಕೋ ತಾನು ತನ್ನಷ್ಟಕ್ಕೇ ಮಾತನಾಡಿಕೊಳ್ಲುತ್ತಿದ್ದೇನೆ ಎಂಬ ಸಂಶಯ ಬಂದು ಮುಚ್ಚಿಕೊಂಡ ಕಣ್ಣುಗಳನ್ನು ತೆರೆದರೆ ಮುಂದಿನ ಕುರ್ಚಿ ಖಾಲಿಯಾಗಿತ್ತು ! ಆಗಿನಿಂದಲೂ ಹನಿಗೂಡುತ್ತಿದ್ದ ಕಣ್ಣುಗಳಿಂದ ನೀರು ಕೋಡಿವರೆಯಿತು. ಮೇರೀ ಯಾವಾಗ ಹೊರಟುಹೋದಳೋ ತಿಳಿಯಲಿಲ್ಲ. ಬಾಗಿಲು ತೆರೆದೇ ಇತ್ತು. ಅರೆ ! ಎನ್ನುತ್ತ ಕುರ್ಚಿಯಿಂದ ದಡಬಡಿಸಿ ಎದ್ದ. ಮೋರೆ ತೊಳೆಯಲು ಮೋರಿಗೆ ಹೋಗಬೇಕು ಎನ್ನುವಷ್ಟರಲ್ಲಿ ಅರ್ಜುನ್‌ರಾವ್ ಬಾಗಿಲಲ್ಲಿ ಹಾಜರ್ : “ಊಟಕ್ಕೆ ಸಿದ್ಧವಾಗಿದೆ, ನಿಮ್ಮ ಗೆಳತಿ ಬಹಳ ಹೊತ್ತು ಕೂಡ್ರಲೇ ಇಲ್ಲ, ಅಲ್ಲವೆ ? ಓಡೋಡಿಯೇ ಎನ್ನುವಂತಹ ಅವಸರದಲ್ಲಿ ಹೊರಟುಹೋದಳಂತೆ_ನಮ್ಮ ಮಗ್ಗುಲ ಮನೆಯವರು ಹೇಳಿದರು” ಎಂದರು. +uಟಿಜeಜಿiಟಿeಜ- ಅಧ್ಯಾಯ ಮೂವತ್ತೇಳು – +ಬೆಳಿಗ್ಗೆ ಎಚ್ಚರವಾದಾಗ ಹೊತ್ತು ಚಲೋ ಏರಿತ್ತು : ಕಿಡಕಿಯ ಕದಗಳೆಲ್ಲವನ್ನು ಮುಚ್ಚಿದ್ದರೂ ಸಂದಿಗಳೊಳಗಿಂದ ತೂರಿಬರುತ್ತಿದ್ದ ಕಿರಣಗಳು, ಕಿಡಕಿಯ ಆಚೆಯ ಜಗತ್ತಿನ ನಿತ್ಯಪರಿಚಯದ ಸದ್ದು, ಇವೆಲ್ಲ ಹೊತ್ತು ಎಂಟು ಗಂಟೆಯಾದರೂ ಆಗಿರಬೇಕು ಎಂಬುದನ್ನು ಸಾರುತ್ತಿದ್ದವು. ಏಳಬೇಕು ಅನ್ನಿಸಲಿಲ್ಲ. ನಿದ್ದೆಯ ಗುಳಿಗೆ ತೆದುಕೊಳ್ಳದೇ, ಬಿಯರಿನ ಅಮಲಿಗೆ ಮೊರೆಹೋಗದೇ ಇಷ್ಟೊಂದು ಗಾಢವಾಗಿ ಸದ್ಯಕ್ಕಂತೂ ನಿದ್ದೆಮಾಡಿದ್ದರ ನೆನಪು ನಾಗಪ್ಪನಿಗೆ ಇಲ್ಲವೇ ಇಲ್ಲ. ಎಲ್ಲದರಿಂದ ಬಿಡಿಸಿಕೊಂಡಂಥ ಸಂತ-ಭಾವನೆಯೊಂದು ಅದರ ಹುಟ್ಟಿಗೆ ಕಾರಣವಾದ ಸಂಗತಿಯನ್ನು ನೆನೆಯುವ ಆಸೆಯೊಡ್ಡಿತು. ಮರುಕ್ಷಣ ಅರಿವಿಗೆ ಬಂದಿತು : ತಾನು ತನ್ನ ಬದುಕಿನಲ್ಲೇ ಪ್ರಥಮ ಬಾರಿ ಎಂಬಂತೆ ಅಂಗಿ, ಬನಿಯನ್ ಕಳಚಿ ಬೋಳುಮೈಯಲ್ಲಿ ಮಲಗಿದ್ದೇನೆ ಎನ್ನುವುದು ! ಕಳೆದ ಮೂವತ್ತು ವರ್ಷಗಳಿಗೂ ಮಿಕ್ಕಿದ ಕಾಲಾವಧಿಯಿಂದ ತನ್ನನ್ನು ಸುಳ್ಳು ಸುಳ್ಳೇ ಹೆದರಿಸಿ ಗಾಸಿಗೊಳ್ಳುತ್ತ ಬಂದ_ತನ್ನ ಭೂತಕಾಲದ ಪ್ರತೀಕದಂತಿದ್ದ_ಬೆತ್ತಲೆ ಎದೆಯನ್ನು ಕಣ್ಣುಬಿಟ್ಟು ನೋಡುವ ಧೈರ್ಯ ಇದೀಗ ಬಂದಿತ್ತು ! ಇನ್ನು ಮುಂದೆಯೂ ಅದು ಸಾರುತ್ತಿದ್ದ ಭೀಕರ ಸತ್ಯವನ್ನು ತಾನು ಬಚ್ಚಿಯೇ ಇಡಬಹುದು. ಆದರೆ ಅದಕ್ಕೆ ತಾನೇ ಹೆದರುತ್ತೇನೆ ಎಂಬ ಕಾರಣಕ್ಕಾಗಿ ಅಲ್ಲ : ಉಳಿದವರನ್ನು ಹೆದರಿಸಬಾರದು ಎಂಬ ಉದ್ದೇಶದಿಂದ, ಅಷ್ಟೆ. +ನೆನ್ನೆ ಒಂದು ತೀರ ಅನಿರೀಕ್ಷಿತ ಕ್ಷಣದಲ್ಲಿ, ತೀರ ನಾಟಕೀಯವಾದ ರೀತಿಯಲ್ಲಿ ಅರ್ಜುನ್‌ರಾವ್, ಅವರ ಹೆಂಡತಿ, ತಾಯಿ, ಜಾನಕಿ, ಜಾನಕಿಯ ಗಂಡ, ನೆರೆಮನೆಗಳ ಕೆಲವರು_ಇವರೆಲ್ಲರ ಇದಿರು ಅವರು ಮಾಡಿದ ಒಂದು ದುಷ್ಟ ಆರೋಪಕ್ಕೆ ಉತ್ತರವಾಗಿ ಅಂಗಿ, ಬನಿಯನ್ ತೆಗೆದು ಬೆತ್ತಲೆ ಎದೆ, ಹೊಟ್ಟೆಗಳನ್ನು ತೋರಿಸಿದ್ದರ ರಭಸಕ್ಕೆ ನೆರೆದವರ ಬಾಯಿಂದ ‘ಕೀಂಂ’ ಎಂಬ ಚೀತ್ಕಾರ ಮೊಳಗಿತ್ತು. ಆರೋಪಕ್ಕೆ ಮೂಲ ಸ್ಪೂರ್ತಿಯಾದ ಜಾನಕಿಯ ಗಂಡನಂತೂ ಮೂರ್ಛೆಹೋಗುವ ಸ್ಥಿತಿಯಲ್ಲಿದ್ದ. ನಾಳೆ ಬೆಳಗಾಗುವುದರೊಳಗೆ ಇಲ್ಲಿ ಒಂದು ನಾಟಕ ನಡೆಯುತ್ತದೆ ಎಂದು ಬರಿಯೆ ಊಹೆಯಿಂದ ಮೇರಿಯ ಇದಿರು ಆಡಿ ತೋರಿಸಿದ್ದು ಈಗ ವಾಸ್ತವ ಘಟನೆಯಾಗಿ ನಡೆದುಹೋಗಿತ್ತು ! ಜಾನಕಿಯ ಚಲ್ಲಾಟದ ಮುರಕ ಕೂಡ ತನ್ನನ್ನು ಈ ಕೋಣೆಗಳಿಂದ ಓಡಿಸುವ ಸಂಚಿನದೇ ಅಂಗವಾಗಿತ್ತೆನ್ನುವದು ಗೊತ್ತಾದದ್ದು ಆಗಲೇ : ಅವಳ ಗಂಡನಿಗೆ ಟೇಲರಿಂಗ್ ಶಾಪ್ ತೆರೆಯಲು ಆ ಕೋಣೆಗಳು ತುಂಬ ಅನುಕೂಲವಾಗಿದ್ದವು ! ಈ ಎಲ್ಲ ಸಂಚಿಗೆ ಅರ್ಜುನ್‌ರಾವ್ ಹಾಗೂ ಶ್ರೀನಿವಾಸರ ಬೆಂಬಲವೂ ಇದ್ದರೆ ಆಶ್ಚರ್ಯ ಪಡಬೇಕಾದದ್ದಿಲ್ಲ. ಆದರೆ ಸಿದ್ಧಪಡಿಸಿದ ಆರೋಪ ಮಾತ್ರ ದಂಗುಬಡಿಸುವಂತಹದಾಗಿತ್ತು : ಅವನು ಚಾಳಿನ ಗಂದಸರೆಲ್ಲ ಕೆಲಸಕ್ಕೆ ಹೋದಾಗ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಜಾನಕಿಯನ್ನು ಸಂಧಿಸಿ ಅವಳಿಗೆ ಇಲ್ಲದ ಲೈಂಗಿಕ ಸನ್ನೆಗಳನ್ನು ಮಾಡುತ್ತಾನಂತೆ ! ಇದಕ್ಕೆಲ್ಲ ಹೆದರಿಯೇ ಪಾಪ ! ಅವಳು ಕಳೆದ ಕೆಲವು ದಿನ ಅಣ್ಣನ ಮನೆಯಲ್ಲಿ ಹೋಗಿ ಉಳಿದಳಂತೆ ! ಅವನು ಮಾಡುತ್ತಿದ್ದ ಹೊಲಸು ಸನ್ನೆಗಳನ್ನು ಪಟ್ಟಿ ಮಾಡಿ ಹೇಳುತ್ತ ಹೋದ ಅರ್ಜುನ್‌ರಾವರ ಮುದಿತಾಯಿ ಅವನಿಗೆ ಇನ್ನೂ ಅರ್ಥವಾಗಿರದ ಕ್ರೌರ್‍ಯದಿಂದ ಮೈಮೇಲಿನ ಭಾರ ಮರೆತವಳ ಹಾಗೆ ಅಸಹ್ಯ ಹಾವಭಾವಗಳೊಂದಿಗೆ_ “ಅಂಗಿಯ ಗುಂಡಿಗಳನ್ನು ಬಿಚ್ಚಿ ಬೆತ್ತಲೆ ಛಾತಿಯ ಕೂದಲು ತೋರಿಸುವಷ್ಟರ ಮಟ್ಟಿಗಿನ ಫಾಜೀಲತನ ಕೇಳಿ ಕೂಡ ಗೊತ್ತಿಲ್ಲದ್ದವ್ವ_ಇದೇನು ಫೋರಾಸ ರೋಡ್ ಎಂದು ತಿಳಿದನೋ….ಒಂದೋ ಮದುವೆಯಾಗಲಿ, ಇಲ್ಲ ಚಾಳು ಬಿಟ್ಟು ಹೋಗಲಿ,” ಎಂದಿದ್ದಳು ! ಮಾತಿಗಿಂತ ಹೆಚ್ಚಾಗಿ ಅವುಗಳ ಹಿಂದಿನ ಕುರೂಪ ಮನಸ್ಸು. ಅದಕ್ಕೆ ಪ್ರತಿಸ್ಪಂದಿಯಾದವರ ಕಣ್ಣುಗಳಲ್ಲಿ ವ್ಯಕ್ತವಾದ_ವಿಚಿತ್ರ ರೀತಿಯಿಂದ ಬಾಯಿ ಚಪ್ಪರಿಸುವಂತಹ ಕ್ರೂರ ಸಮಾಧಾನ, ಇವು ನಾಗಪ್ಪನ ಕ್ಷೋಭೆಗೆ ಕಾರಣವಾಗಿದ್ದವು….ಕಳಚಿದ ಅಂಗಿ ಬನಿಯನ್ನುಗಳನ್ನು ಕೈಯಲ್ಲಿ ಹಿಡಿದೇ ಅರ್ಜುನ್‌ರಾವ್ ರವರ ಮನೆ ಬಿಟ್ಟಾಗ ನೆರೆದವರಲ್ಲೊಬ್ಬರೂ ಚಕಾರ ಶಬ್ದ ಎತ್ತಲಿಲ್ಲ. ಸೀದ ಮನೆಗೆ ಬಂದು ಹಾಸಿಗೆಯಲ್ಲಿ ಅಡ್ಡಾದವನಿಗೆ ಬಹಳ ಹೊತ್ತಿನವರೆಗೆ ಬಾಧಿಸಿದ್ದು ಆ ನಿಃಶಬ್ದತೆಯೇ. ಮೌನ ತುಂಬಿದ ಕೋಣೆಯ ಕತ್ತಲೆಯಲ್ಲಿ ಮೂಡಿಬಂದ ಜಾನಕಿಯ ಮಾದಕ ದೇಹದ ನೆನಪು ಕೂಡ ಮೊದಲ ಬಾರಿ ಒಂದು ಬಗೆಯ ಭಯ ತುಂಬಿದ ವಿಷದಕ್ಕೆ ಕಾರಣವಾಯಿತು. ಮರುಗಳಿಗೆ, ಗೊತ್ತಾಗದ ರೀತಿಯಲ್ಲಿ ಒಂದು ಬಗೆಯ ಕೃತಜ್ಞತಾ ಭಾವಕ್ಕೆ ಕೂಡ ! ತನ್ನನ್ನು ತನ್ನಿಂದಲೇ ಪರಾರಿಯಾಗುವಂತೆ ಮಾಡಿದ ಎಲ್ಲವನ್ನೂ ಸ್ವೀಕರಿಸುವ ಧೈರ್ಯ ಕೊಟ್ಟ_ಕಳೆದ ಹದಿನಾಲ್ಕು ದಿನಗಳ_ನಾಟಕದ ಉಚ್ಚಾಂಕವೇ ನಿನ್ನೆ ರಾತ್ರಿಯ ಘಟನೆಯಾಗಿತ್ತು ! ತನ್ನ ಸೋದರತ್ತೆಗೆ ಸೇರಿದ ಈ ಕೋಣೆಗಳು ; ಗುಣವಾಗದ ರೋಗದ ಚಿಕೆತ್ಸೆಗೆಂದು ಮುಂಬಯಿಗೆ ಬಂದಾಗ ಇವೇ ಕೋಣೆಗಳಲ್ಲಿ ಒದಗಿದ ಅಮ್ಮನ ಸಾವು ; ತಂಗಿ ಇಲ್ಲಿಯದೇ ಜನಜಂಗುಳಿಯಲ್ಲಿ ಕಾಣೆಯಾದದ್ದು ; ಊರಿಗೆ ಹಿಂತಿರುಗಿದ ನಂತರ ಆದ ಬೆಂಕಿಯ ಅಪಘಾತ ; ಅಪ್ಪನ ಆತ್ಮಹತ್ಯೆ ; ಸೋದರತ್ತೆಯ ಮರಣ….ಎಲ್ಲ ಎಲ್ಲವನ್ನೂ ಸರಿಯಾದ ಬೆಳಕಿನಲ್ಲಿ ನೆನೆಯುವ ಧೈರ್ಯ ಮೊಳೆಯುತ್ತಿದ್ದಂತೆಯೇ ನಿರಾತಂಕವಾದ ಗಾಢ ನಿದ್ದೆ ಸೇರಿದ್ದ….ಈಗ ಎಲ್ಲ ನೆನಪಾಗತೊಡಗಿತು….. +ಮೈಮೇಲಿನ ಹೊದಿಕೆಯನ್ನು ಕಿತ್ತೊಗೆದವನೇ ಎರಡೂ ಕೈಗಳನ್ನು ಎದೆಯ ಮೇಲೆ, ಹೊಟ್ಟೆಯ ಮೇಲೆ, ಆಡಿಸಿಕೊಂಡ : ಕಣ್ಣು ತಮ್ಮಿಂದ ತಾವೇ ಮುಚ್ಚಿಕೊಂಡವು. ಹೊತ್ತು ಹೋದ ಹಾಗೆ ತಮ್ಮಿಂದ ತಾವೇ ತುಂಬಿಕೊಳ್ಳಹತ್ತಿದವು : ತಾನೇ ನೋಡಿಕೊಳ್ಳಲು ಹೆದರುತ್ತಿದ್ದುದನ್ನು‌ಒಂದೇ ಒಂದು ಜೀವ ಮಾತ್ರ ಅತ್ಯಂತ ಸಹಜವಾದ ಕೈಯ ಸ್ಪರ್ಶದಿಂದಲೇ ಸಹಾನುಭೂತಿ ಪ್ರೀತಿಗಳನ್ನು ವ್ಯಕ್ತಪಡಿಸುತ್ತಿತ್ತು_ರಾಣಿ : ಕೂಡಲೇ ಏಳುವುದಕ್ಕೆ ಕಾರಣವಾದವಳು ಅವಳೇ ! ಮಾತನ್ನೇ ಬೇಡದ ಈ ಸಂಬಂಧ ಕೊಡುತ್ತಿದ್ದ ಸುಖವನ್ನು ಮಾತಿನಲ್ಲಿ ವಿಶ್ಲೇಷಿಸಿ ಹಾಳುಮಾಡುವ ಮನಸ್ಸಾಗಲಿಲ್ಲ. ಯಾಕೆ ಎಂದು ಕೇಳುವುದು ಕೂಡ ಅಪ್ರಸ್ತುತವೆನಿಸಿತು. ಈಗಿಂದೀಗ ಹೋಗಿ ತನ್ನ ರಾಣಿಯನ್ನು ಕಾಣಬೇಕು ಅನ್ನಿಸುತ್ತದೆ. ಆದ್ದರಿಂದಲೇ ಆದಷ್ಟು ಬೇಗ ಸಿದ್ಧನಾಗಿ ಹೊರಡಬೇಕು ಅನ್ನಿಸುತ್ತದೆ, ಎಂದುಕೊಂಡ. ಎಲ್ಲದಕ್ಕೂ ಕಾರಣ ಬೇಡುವ, ಎಲ್ಲದರ ಉದ್ದೇಶ ಅರಿಯುವ ಮನಸ್ಸಿನ ದುಷ್ಟ ಹವ್ಯಾಸಕ್ಕೆ ಉತ್ತರವೆಂಬಂತೆ : ಎರಡೂ ಗಲ್ಲಗಳಲ್ಲಿ ಕುಳಿ ಬೀಳಿಸಿ ಮೊದಲೇ ಸಣ್ಣದಾದ ಕಣ್ಣುಗಳನ್ನು ಇನ್ನಷ್ಟು ಸಣ್ಣದಾಗಿಸಿ ಸುಂದರವಾಗಿ ನಗುವ ಅವಳ ಮೋರೆಯನ್ನು ನೋಡದೇ ಎಷ್ಟು ದಿನಗಳಾದವು…..ಹಾಗೆಂದೇ ಈಗಿಂದೀಗ ಹೊರಡಬೇಕು….. +ಪ್ರಾತರ್ವಿಧಿಗಳನ್ನು ಮುಗಿಸಿದ್ದೇ ಮೇರಿಗೆ ತುಂಬ ಪ್ರಿಯವಾದ, ಚೇತನಾ ಮೆಚ್ಚಿಕೊಂಡ ಕ್ರೀಮ್-ಕಲರ್ ಪ್ಯಾಂಟು, ನೀಲೀ ಬಣ್ಣದ ಬುಶ್‌ಶರ್ಟುಗಳನ್ನು ಧರಿಸಿದ. ನಿನ್ನೆ ಶ್ರೀನಿವಾಸ ಹಿಂತಿರುಗಿಸಿದ ಕರಿಯ ಬೂಟುಗಳನ್ನೇ ಹಾಕಿಕೊಂಡ. ಕನ್ನಡಿಯಲ್ಲೊಮ್ಮೆ ಮೋರೆ ನೋಡಿಕೊಂಡ : ತಾನಿದೀಗ ತುಂಬ ಖುಶಿಯಲ್ಲಿದ್ದೇನೆ ಅನ್ನಿಸಿಯೇ ಖುಶಿಯಾಯಿತು. ಕೊನೆಗೂ, ಬದುಕಿನ ಸುಖ ಇಂತಹ ಈ ಖುಶಿಯ ಕ್ಷಣಗಳಲ್ಲಷ್ಟೇ ನೆಲೆಸಿದ್ದೇನೋ ಎಂದು ಅದೇ ಹುಟ್ಟಿದ ವಿಚಾರವನ್ನು ಅರಿವಿಗೆ ತಂದುಕೊಳ್ಳುವ ಮನಸ್ಸಾಗಲಿಲ್ಲ. ನೇರವಾಗಿ ‘ಸಂತೋಷಭವನ’ಕ್ಕೆ ಹೋಗಿ ನಾಸ್ತಾ ಮುಗಿಸುವುದು ಹಾಗೂ ಅಲ್ಲಿಂದಲೇ ರಾಣಿಯ ಮನೆಗೆ ಹೋಗುವದು ಎಂದು ನಿಶ್ಚಯಿಸಿದ. ರಾಣಿಯ ಮನೆಗೆ ಹೀಗೆಂದು ಬೆಳಗ್ಗಿನ ಹೊತ್ತಿಗೆ ಹೋದವನಲ್ಲ. ಇಂದು ಮಾತ್ರ ಈಗಿಂದೀಗ ಹೋಗಿ ಅವಳನ್ನು ಕಾಣದೇ ಇರುವುದು ಅಸಾಧ್ಯ ಅನ್ನಿಸಿತು….. +ಬೆನ್‌ಹ್ಯಾಮ್-ಹಾಲ್-ಲೇನ್ ಸೇರಿದೊಡನೆ ತನ್ನನ್ನು ದಾದಾ ಎಂದು ಕರೆದು ಹೂವು ಮಾರಿದ ಹುಡುಗಿಯನ್ನು ಹುಡುಕಹತ್ತಿದ. ಕಾಣಲಿಲ್ಲವಾದ್ದರಿಂದ ನಿರಾಸೆಯಾಯಿತು. ಆದರೆ ಅದೇ ಜಾಗದಲ್ಲಿ ಕೂತ ಹುಡುಗನಿಂದ ಎರಡು ಮಲ್ಲಿಗೆ ಹೂವಿನ ಜಡೆಗಳನ್ನು ಕೊಂಡುಕೊಂಡ.‘ಯಾರಿಗಾಗಿ ?’ ಎಂಬ ನವಿರೆಬ್ಬಿಸುವ ಅರಿವೇ ‘ಯಾತಕ್ಕಾಗಿ ?’ ಎಂಬ ಪ್ರಶ್ನೆಯನ್ನು ಅಪ್ರಸ್ತುತಗೊಳಿಸಿತ್ತು ! ಹೂಜಡೆಗಳ ಆಹ್ಲಾದದಾಯಕ ಸುಗಂಧ ಅದಾಗಲೇ ಸ್ಥಾಯಿಯಾದ ಗೆಲುವಿಗೆ ಇನ್ನಷ್ಟು ಕಳೆ ತಂದಿತು. ‘ಸಂತೋಷಭವನ’ ಸೇರಿದ್ದೇ ತಡ, ಇದಿರಾದ ನಾಯಕ ವಿಚಿತ್ರ ರೀತಿಯಿಂದ ಹಲ್ಲು ಕಿಸಿದು ಬಾ ಎಂದ. ‘ನಿನ್ನೆ ಶ್ರೀನಿವಾಸನೇ ಎಲ್ಲ ಹೇಳಿದ,’ ಎಂದು ಆರಂಭಿಸುತ್ತಾನೆ ಒಂದೂ ಮಗ ಎಂದು ಊಹಿಸಿಕೊಂಡ ರೀತಿಯಲ್ಲೇ ನಾಯಕ ಆರಂಭಿಸಿದ್ದರಿಂದ ಮೋರೆಯ ಮೇಲೆ ನಗು ಮೂಡಿ_“ಹೌದೆ ? ಹಾಗಾದರೆ ನನ್ನ ಕೆಲಸ ಅಷ್ಟರಮಟ್ಟಿಗೆ ಹಗುರವಾಯಿತು.” ಅಲ್ಲಿ ನಿಲ್ಲದೇ ಸೀದ ಒಳಗೆ ಹೋಗಿ ತಾನು ಯಾವಾಗಲೂ ಕೂಡ್ರುತ್ತಿದ್ದ ಕೋಣೆಗೇ ನಡೆದ. ಎಂದಿನ ಮಾಣಿ ಇವನನ್ನು ನೋಡಿಯೂ ನೋಡದವನ ಹಾಗೆ ಇನ್ನೊಬ್ಬ ಗಿರಾಕಿಯತ್ತ ನಡೆದ : ಇವನಿಗೂ ಅದು ಗೊತ್ತಾಗಿರಬೇಕು. ಶ್ರೀನಿವಾಸ ಹಂಚುತ್ತ ನಡೆದ ‘ಹ್ಯಾಂಡ್‌ಬಿಲ್’ ಇವರೆಲ್ಲರ ಕೈಸೇರಿರಬೇಕು ಎಂದುಕೊಂಡು ಕಣ್ಣಮುಂದೆ ನಿಂತ ಮಾಣಿಗೆ_“ಗೋಪಾಲನನ್ನು ಕಳಿಸು,”ಎಂದಾಗ ಗೋಪಾಲನೇ ಅಳುಕುತ್ತ ಬಂದು ಮೋರೆ ಸಣ್ಣದು ಮಾಡಿ ನಿಂತ. ನಾಗಪ್ಪ ಮಾತನಾಡಿಸುವ ಮೊದಲೇ_“ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದರಂತೆ ಹೌದೆ ಸರ್ ?” ಎಂದು ಕೇಳಿದ. ನಾಗಪ್ಪ ಉತ್ತರವನ್ನು ಹೇಳುವ ಗೋಜಿಗೇ ಹೋಗಲಿಲ್ಲ. ಈಗ ಏನನ್ನೂ ಹೇಳಿ ಯಾವ ಪ್ರಯೋಜನವೂ ಇಲ್ಲ. ಸತ್ಯವನ್ನು ಅರಿಯುವ ಕುತೂಹಲದಿಂದ ಹುಟ್ಟುವ ಪ್ರಶ್ನೆಗಳೇ ಅಲ್ಲ ಇವು. ಈ ಪ್ರಶ್ನೆಗಳಿಗೆ ಒಳಗಾದ ಸನ್ನಿವೇಶದಲ್ಲಿ ಸಿಕ್ಕಿಕೊಂಡವನು ತಾನಲ್ಲವಲ್ಲ ಎಂಬುದೇ ಅವನ್ನು ಕೇಳುವುದರ ಹಿಂದಿನ ಧೈರ್ಯ : ಮನೆ ಕುಸಿದುಬಿದ್ದು ಜನ ಸತ್ತದ್ದು, ಬೆಂಕಿ ಹತ್ತಿ ನರಳಿದ್ದು, ಕೊಲೆಯಾದದ್ದು_ಎಲ್ಲ ಒಂದೇ : ಮಾತಿನಲ್ಲಿ ಮೂಡುವ ಸಹಾನುಭೂತಿಯ ಅಡಿಗೆ ನಾಲಗೆ ಚಪ್ಪರಿಸುತ್ತಿದ್ದ ದುಷ್ಟ ಕುತೂಹಲ ! ಹಿಂದೆ ಹಲವು ಸರತಿ ಅಂದುಕೊಂಡದ್ದನ್ನೇ ಇನ್ನೊಮ್ಮೆ ಅಂದುಕೊಂಡು_“ಇಡ್ಲಿ ಬಿಸಿ ಇದ್ದರೆ ಒಂದು ಪ್ಲೇಟು ಇಡ್ಲೀ ಹಾಗೂ ಬಿಸಿ ಬಿಸಿ ಕಾಫಿ ತಗೊಂಡು ಬಾ,” ಎಂದ. ತನ್ನ ಪ್ರಶ್ನೆಗೆ ಉತ್ತರ ಬರದಿದ್ದುದನ್ನು ಕಂಡು ತುಸು ಕಿರಿಕಿರಿಯಾದ ಮಾಣಿ_“ಮಾಲಕರೇ ಹೇಳಿದರು,” ಎಂದ. ಇದಕ್ಕೂ ನಾಗಪ್ಪ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಕಾಫಿ ಇಡ್ಲಿ ಬಂದ ಕೂಡಲೇ ತೀರ ಯಾಂತ್ರಿಕವಾಗಿ ಎನ್ನುವಂತೆ ಎರಡನ್ನೂ ಮುಗಿಸಿ ಬಿಲ್ಲಿನ ಹಣ ಕೊಟ್ಟು ಹೊರಗೆ ಬಿದ್ದ. ನಾಯಕ ಯಾರಿಗೋ ತನ್ನ ಬಗ್ಗೆ ಹೇಳುತ್ತಿದ್ದದ್ದು ಕೇಳಿಸಿದರೂ ಅದರತ್ತ ಲಕ್ಷ್ಯವನ್ನೇ ಕೊಡದೆ ನೇರವಾಗಿ ಅಪೆರಾ-ಹೌಸಿನತ್ತ ನಡೆಯಹತ್ತಿದ. ಅಲ್ಲಿ ತಲುಪಿದ ಕೂಡಲೇ ಆವರೆಗೂ ಅನ್ನಿಸಿರದ ಆತುರದಿಂದ ರಾಣಿಯ ಮನೆಯಿದ್ದ ಕೆನಡೀ ಬ್ರಿಜ್ ಕಡೆಗೆ ಹೆಜ್ಜೆ ಇಡಹತ್ತಿದ. +ಕೈಯಲ್ಲಿ ಹೂವಿನ ಜಡೆಗಳಿದ್ದ ಎಲೆಗಳ ಪೊಟ್ಟಣವಿತ್ತು. ರಾಣಿಯ ಮನೆ ಹತ್ತಿರವಾಗುತ್ತಿದ್ದ ಹಾಗೆ ಎದೆ ಡವಗುಟ್ಟಹತ್ತಿತು : ಅನೇಕ ದಿನಗಳ ಗೈರು ಹಾಜರಿಯ ನಂತರ ಬಂದ ಮನೆ. ವಿಲಕ್ಷಣ ರೀತಿಯಿಂದ, ಕಣ್ಣು ಅರ್ದ್ರಗೊಳ್ಳಲು ಕಾರಣವಾಯಿತು. ತೀರ ಪರಿಚಯದ ಕಬ್ಬಿಣದ ಸ್ಟೈರಲ್ ನಿಚ್ಚಣಿಕೆಯಿಂದ ಮೂರನೇ ಮಜಲೆಗೆ ಹೋಗುತ್ತಿರುವಾಗಂತೂ ಮನಸ್ಸನ್ನು ಮುತ್ತಿ ನಿಂತ ಭಾವನೆಗಳಿಗೆ ಮಾತು ಹುಡುಕುವುದು ಕಠಿಣವಾಯಿತು. +ಭಾವನೆಗಳ ಗುಂಗಿನಲ್ಲಿದ್ದಾಗಲೇ ಮನೆಯನ್ನು ತಲುಪಿಯಾಗಿತ್ತು. ಅಲ್ಲಿ ಬಂದು ಮುಟ್ಟಿದ ನಂತರವೇ ಈ ಹೊತ್ತಿಗೆ ಬರಬಾರದಾಗಿತ್ತೆಂದು ಅನ್ನಿಸಹತ್ತಿತು : ಕಾರ್ರಿಡಾರಿನ ಮೇಲೆ ಕೂತ ಇಬ್ಬರು ಹುಡುಗಿಯರು, ಇವನನ್ನು ಕಂಡವರೇ, ಸರಿಯಾದ ವೇಷ-ಭೂಷೆಯಲ್ಲಿ ಇಲ್ಲದ ಕಾರಣ ಗಾಬರಿ ತುಂಬಿದ ನಾಚಿಕೆಯಿಂದ ಒಳಕ್ಕೆ ಓಟ ಕಿತ್ತರು. ಅವರಲ್ಲೊಬ್ಬಳು ನಾಗಪ್ಪನ ಪರಿಚಯದವಳೇ_ರಾಣಿಯ ಗೆಳತಿ. ಹೆಸರು ಗೊತ್ತಿರಲಿಲ್ಲ. ರಾಣಿಯ ಮನೆಗೆ ಬೀಗವಿತ್ತು. ಬೀಗವನ್ನು ನೋಡುತ್ತಿದ್ದಂತೆಯೇ, ತನ್ನಿಂದ ಅವಳಿಗಾದ ಅನ್ಯಾಯದ ಅರಿವಾಯಿತೆನ್ನುವಂತೆ ಮನಸ್ಸು ಖಿನ್ನಗೊಂಡಿತು. ಹಾಗೆ, ಬೀಗವಿದ್ದ ಮನೆಯ ಇದಿರು ಖಿನ್ನ ಮನಸ್ಕನಾಗಿ ನಿಂತಿರುವಾಗಲೇ ಈ ಮೊದಲು ಒಳಗೆ ಓಡಿಹೋದ ಗೆಳತಿ ಸರಿಯಾಗಿ ಬಾಚಿಕೊಂಡ ಕೂದಲನ್ನು ಹೆಗಲ ಮೇಲೆ ಬಿಟ್ಟು, ಬೇರೆ ಸೀರೆ ಉಟ್ಟು, ನಗುತ್ತ ಹೊರಗೆ ಬಂದಳು. ಇವನನ್ನು ಸಮೀಪಿಸಿ_“ಇಷ್ಟು ದಿನ ಬರಲೇ ಇಲ್ಲ ?” ಎಂದು ಲವಲವಿಕೆಯ ಆತ್ಮೀಯತೆ ಪ್ರಕಟಿಸುತ್ತ ಕೇಳಿದಳು. ‘ರಾಣಿ ನಿಮ್ಮ ಹಾದಿ ಕಾದಳು.’ ಎನ್ನುವದಿತ್ತೇ ?- ಅವಳು ಸ್ಪಷ್ಟಪಡಿಸಲಿಲ್ಲ. ಅವಳ ಮುಂದಿನ ಮಾತಿನ ಹಾದಿ ಕಾಯುತ್ತಿದ್ದಾಗ, “ಈ ಮನೆಯಲ್ಲೀಗ ರಾಣಿ ಇರುವುದಿಲ್ಲ. ಬೇರೊಬ್ಬಳು ಬರುವವಳಿದ್ದಾಳೆ.” ಎಂದಳು, ತುಸು ತಡೆದು. “ರಾಣಿ ಮುಂಬಯಿ ಬಿಡುವವಳಿದ್ದಾಳೆ,” ಎಂದಳು. ಆ ಹೊತ್ತಿಗೆ ಇನ್ನಿಬ್ಬರು ಹುಡುಗಿಯರು ಬಂದು ನಾಗಪ್ಪನನ್ನು ಸುತ್ತುವರಿದು ನಿಂತು, “ಒಬ್ಬ ಶ್ರೀಮಂತ ಶೇಠಜೀ ಅವಳನ್ನು ಅಹಮ್ಮದಾಬಾದಿಗೆ ಕರೆದೊಯ್ಯುತ್ತಾನಂತೆ ಇನ್ನೆರಡು ದಿನಗಳಲ್ಲಿ. ನಿನ್ನೆ ಸಂಜೆ ಅಣ್ಣನ ಮನೆಗೆ ಹೋಗಿದ್ದಾಳೆ. ಅಣ್ಣನೇ ಬಂದಿದ್ದ ಅವಳನ್ನು ಕರೆದೊಯ್ಯಲು….”ಎಂದು ಒಬ್ಬಳು ಹೇಳುತ್ತಿರುವಾಗಲೇ ಇನ್ನೊಬ್ಬಳು ಗಂಡು-ದನಿಯನ್ನು ಹೋಲುವ ಗೊಗ್ಗರುದನಿಯಲ್ಲಿ, “ನಿಮ್ಮ ನೌಕರಿ ಹೋಯಿತಂತೆ, ಪಾಪ. ನಿನ್ನೆ ರಾಣಿಯ ಅಣ್ಣನೇ ಹೇಳಿದ,” ಎಂದಳು. ಇಲ್ಲವಾದರೆ ರಾಣಿ ಇಲ್ಲಿಂದ ಹೋಗುತ್ತಿರಲೇ ಇಲ್ಲವೆಂದು ಅವಳಿಗೆ ಹೇಳುವದಿತ್ತೇ ? ನಾಗಪ್ಪನಿಗೆ ಇದಾವುದರ ಅರ್ಥವೇ ಆಗುತ್ತಿರಲಿಲ್ಲ ! ಶಬ್ದ ಸೂಚಿಸುವ ಅರ್ಥಪ್ರಪಂಚದಾಚೆ ಎಲ್ಲೋ ಸುತ್ತಾಡುತ್ತಿದ್ದ ಅವನ ಮನಸ್ಸು ಈ ಹುಡುಗಿಯರು, ಅವರು ತನ್ನತ್ತ ನೋಡುವ ವಿಚಿತ್ರ ರೀತಿ, ಅವರಾಡುತ್ತಿದ್ದ ವಿಚಿತ್ರ ಮಾತುಗಳು_ಇವಾವುಗಳನ್ನೂ ಗ್ರಹಿಸುವ ಸ್ಥಿತಿಯಲ್ಲೇ ಇದ್ದಂತಿರಲಿಲ್ಲ ! ತಾನು ಎಲ್ಲಿ ಬಂದಿದ್ದೇನೆ ? ಯಾಕೆ ಬಂದಿದ್ದೇನೆ ? ಎನ್ನುವುದರ ಬಗೆಗೇ ದಿಗಿಲುಗೊಂಡಿದ್ದ. ನಿದ್ದೆಯಲ್ಲೆದ್ದು ನಡೆಯುವವನ ರೀತಿ ನಿಚ್ಚಣಿಕೆಯ ಕಡೆಗೆ ಹೆಜ್ಜೆ ಇಡುತ್ತಿದ್ದವನ ದೃಷ್ಟಿ ಶೂನ್ಯವಾಗಿತ್ತು. ರಾಣಿಯ ಗೆಳತಿ ಅವನ ಜೊತೆಗೆ ನಡೆಯುತ್ತ ನಿಚ್ಚಣಿಕೆಯವರೆಗೆ ಬಂದು_“ಇವತ್ತು ರಾತ್ರಿ ಬರುತ್ತೀರಾ ? ನಿಮ್ಮ ಹಾದಿ ಕಾಯುತ್ತೇನೆ,” ಎಂದಳು. ಶೂನ್ಯಮನಸ್ಕನಾಗಿಯೇ ರಾಣಿಗಾಗಿ ತಂದ ಹೂವಿನ ಜಡೆಗಳನ್ನು ಅವಳ ಕೈಯಲ್ಲಿಟ್ಟ. ಮಾತನಾಡಲಿಲ್ಲ : ಕಣ್ಣಿನಲ್ಲಿ ಮೂಡಿದವಳು ಅವಳಾಗಿಯೇ ಇರಲಿಲ್ಲ ! ಯಾರೂ ಆಗಿರಲಿಲ್ಲ ! +ನಿಚ್ಚಣಿಕೆಯ ಮೊಟ್ಟಮೊದಲ ಮೆಟ್ಟಿಲ ಮೇಲೆ ನಿಂತು ಕೆಳಗೆ ನೋಡುತ್ತಿರುವಾಗ ಜೊತೆಗೆ ಬಂದ ಹುಡುಗಿ, “ನನ್ನ ಹೆಸರು ವತ್ಸಲಾ,” ಎಂದಳು : ಹೂವಿನ ಜಡೆಗಳನ್ನು ಅವಳು ತಪ್ಪಾಗಿ ತಿಳಿದಳೆ ? ಸರಿಯಾಗಿ ತಿಳಿಯುವುದೆಂದರೇನು ಎಂಬುದರ ಅರ್ಥ ಮೊದಲು ಆಗುತ್ತಿದ್ದರಲ್ಲವೆ ? ಕಣ್ಣುಗಳಲ್ಲಿ ಪರದೆಯಾಗುತ್ತಿದ್ದ ನೀರಿನ ಒಳಗಿನಿಂದ ಕಾಣುತ್ತಿದ್ದ ಮೂರು ಮಜಲು ಕೆಳಗಿನ ನೆಲ ಅಸ್ಪಷ್ಟವಾಗಿತ್ತು. ಆದರೆ ಅದರತ್ತ ಒಂದೊಂದೇ ಮೆಟ್ಟಿಲು ಇಳಿಯುತ್ತ ಕೆಳಗೆ ಸಾಗಿದ ನಾಗಪ್ಪನಿಗೆ ಜನ್ಮದಲ್ಲೇ ಮೊದಲ ಬಾರಿ ಎನ್ನುವಂತೆ ತನ್ನ ಹೆಜ್ಜೆಯ ಸದ್ದು ತನಗೇ ಸ್ಪಷ್ಟವಾಗಿ ಕೇಳಿಸುತ್ತಿತ್ತು ! ಮನಸ್ಸಿನ ಆಳದಲ್ಲೆಲ್ಲೋ ಗಟ್ಟಿಯಾಗಹತ್ತಿದ ನಿಶ್ಚಯವೊಂದು ಮಾತನ್ನು ಹುಡುಕುತ್ತಿತ್ತು : “ನನ್ನ….ಮಟ್ಟಿಗೆ…. ಇನ್ನೂ…. ಕಂಡಿರದ…. ಅಣ್ಣನನ್ನು…. ಕಾಣೆಯಾದ…. ತಂಗಿಯನ್ನು ಹುಡುಕಿ ತೆಗೆಯುವದೇ…. ನನ್ನ…. ಇನ್ನುಮುಂದಿನ….. ಆಯುಷ್ಯದ…. ಗುರಿಯಾಗಬೇಕು…..” ನೆಲ ಇನ್ನೂ ಹತ್ತಿರವಾಗುತ್ತಿದ್ದ ಹಾಗೆ ಅದರ ಕೆಲವು ವಿವರಗಳು ಸ್ಪಷ್ಟವಾಗಹತ್ತಿದವು : ಅದಾಗಲೇ ಬೆಚ್ಚಗಾಗಹತ್ತಿದ ಬಿಸಿಲಲ್ಲಿ ಉದ್ದನ್ನ ನೆರಳು ಚಾಚಿ ನಿಂತ ದೊಡ್ಡ ಆಲದ ಮರ. ಅದರಡಿಯಲ್ಲಿ ಬಿಳಿಯ ಧೋತರ, ಕಪ್ಪು ಕೋಟು, ಕೆಂಪು ರುಮಾಲು ಧರಿಸಿ ಕೂತ ಮುದುಕ ಇಲ್ಲಿ ಬರುವ ಮೊದಲು ನೋಡಿದವನೇ : ಹಸಿರು ಹಳದೀ ಬಣ್ಣಗಳ ಜೋಡಿ ಹಕ್ಕಿಗಳು ಕೂತ ಪಂಜರದ ಇದಿರು ಭವಿಷ್ಯ ಹೇಳುವ ಕಾಗದದ ಹಾಳೆಗಳನ್ನು ಹರಡಿ ಕೂತವನಿಗೆ ಈಗ ಇದ್ದಕ್ಕಿದ್ದ ಹಾಗೆ ವೋಮು ಮನಃಪಟಲವನ್ನು ವ್ಯಾಪಿಸಿ ನಿಂತ : ತಾನು ಈ ಮುಂದೆ ಹಿಡಿಯಬಹುದಾದ ಇನ್ನೊಂದೇ ದಾರಿಯ ಪ್ರತೀಕನೀತ ~ ಆಗೀಗ ಇದಿರಾಗಿ ಅಹ್ವಾನಿಸುತ್ತಾನೆ ಅನ್ನಿಸಿತು. ಅವನು ಸಂಕೇತಿಸುವ ದಾರಿಯನ್ನು ತುಳಿಯುವ ಧೈರ್ಯ ಮಾತ್ರ ಇನ್ನೂ ಬಂದಿಲ್ಲ. ಬಂದೇ ಬಂದೀತು ಒಂದು ದಿನ_‘ಯಾರೋ’ ಆಗಿ ಮೆರೆದವನು ‘ಯಾರೂ ಅಲ್ಲ’ವಾಗುವ ಧೈರ್ಯ ಬಂದಾಗ ~ ವನವಾಸ ಈಗಷ್ಟೇ ಮುಗಿದಿದೆ. ಅಜ್ಞಾತವಾಸವಿನ್ನೂ ತೊಡಗಲಿದೆ. ಆಗ ಬರುತ್ತೇನೆ. ವೋಮೂ, ನಿನ್ನ ಕಡೆಗೆ_ನಾನಾಗಿಯೇ. ಸದ್ಯ, ಇನ್ನೂ ಸಿಕ್ಕಿರದ ಅಣ್ಣ-ತಂಗಿಯರನ್ನೂ ಹುಡುಕಹೊರಟಿದ್ದೇನೆ. ಇದೋ…. +ನಿಚ್ಚಣಿಕೆಯ ಅಡಿಯಲ್ಲಿ ಅವರು ಆಗಿನಿಂದಲೂ ತನ್ನ ದಾರಿ ಕಾಯುತ್ತ ನಿಂತಿದ್ದಾರೆ ಎಂಬ ತವಕದಿಂದ ಎಂಬಂತೆ ಕೊನೆಕೊನೆಯ ಮೆಟ್ಟಿಲುಗಳನ್ನು ಓಡೋಡಿಯೇ ಇಳಿದು ನಾಗಪ್ಪ, ನೆಲ ಮುಟ್ಟಿದ. +***** +ಮುಗಿಯಿತು +ತೃತೀಯಾಸ್ವಾಸಂ ನನಗೆ ಶಾಮ ಇಷ್ಟವಾಗಲಿಕ್ಕೆ ಕಾರಣ ಅವನು ಹೆಚ್ಚು ಗಲಿಬಿಲಿಗೊಳ್ಳುತ್ತಿದ್ದುದು. ಗಲಿಬಿಲಿಯ ಕಾರ್ಯ ಕಾರಣ ಹೆಚ್ಚು ಅಸ್ಪಷ್ಟವಾಗಿತ್ತು. ಲೇಕಖ ಸಹಜ ಸ್ವಭಾವದಿಂದ ಅವನ ಗೊಂದಲಪೂರ್‍ಣ ವ್ಯಕ್ತಿತ್ವದ ಮಹತ್ವದ ಅನ್ವೇಷಕನಾಗಿದ್ದೆ. ಸ್ತ್ರೀಲಿಂಗವಾಚಕ ನುಡಿದ ಕಡೆ ಪುಲ್ಲಿಂಗ […] +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +‘ಯಾಕೋ ದ್ಯಾವಪ್ಪಾಣಿ…?’ ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು… ‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ. ‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_255.txt b/Kannada Sahitya/article_255.txt new file mode 100644 index 0000000000000000000000000000000000000000..904c9447590b01573dac526d683414f179a248ef --- /dev/null +++ b/Kannada Sahitya/article_255.txt @@ -0,0 +1,219 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ ಮಕ್ಕಳ ಅಮ್ಮ ಸತ್ತ ಮೇಲೆ ಆ ಮಕ್ಕಳನ್ನೂ ಬೆಳೆಸಿದಳು. +ತಕಲಿ ತಿರುಗಿಸುತ್ತ ಕೇಶವ ಅಕ್ಕನನ್ನು ಎದುರಿಗಿಟ್ಟುಕೊಂಡು ಹೀಗೆ ಮಾತು ಶುರುಮಾಡುವುದು. ಎದುರು ಕೂತವರು ನಿಮಿತ್ಯ ಕೇಳಲು ಬಂದ ಯಾರೋ ಅಪರಿಚಿತರು ಎಂದು ಕೇಶವನಿಗೆ ಎಗ್ಗಿಲ್ಲ. +‘ಗಂಡನಿಗೆ – ಈ ಪ್ರಾಂತದ ದೊಡ್ಡ ಜೋಯಿಸರೆಂದೇ ಪ್ರಸಿದ್ಧರು ಅವರು, ಮೈಸೂರಿನಿಂದಲೂ ಅವರ ಹತ್ತಿರ ಜಾತಕ ಬರೆಸಲೆಂದು ಬಂದವರುಂಟು – ಅಂಥ ಗಂಡನಿಗೆ ಇವಳು ಎರಡನೇ ಸಂಬಂಧ . ದೊಡ್ಡಮನೆ ಅವರದ್ದು; ಅವರ ಮನೆ ಕಣಜ ಖಾಲಿಯಾದದ್ದಿಲ್ಲ; ಪರಸ್ಥಳದವರು ಬಂದರೆ ಅವರ ಮನೇಲಿ ಪಾಯಸದ ಊಟ ಬಡಿಸದೇ ಕಳಿಸಿದ್ದಿಲ್ಲ. +ಆಯಿತಾ? ಮೊದಲನೆಯ ಹೆಂಡತಿ – ಅವರು ತನ್ನ ತಾಯಿಯ ಕಡೆಯ ದೂರದ ಸಂಬಂಧ, ಮೂರು ದಿನಗಳ ಸೂತಕದ ಸಂಬಂಧವೆಂದು ಕೇಳಿದೀನಿ – ಎರಡು ಹೆಣ್ಣು ಹೆತ್ತು, ಅಲ್ಲಿ ನೋಡಿ, ಆ ಮರದ ಕೆಳಗೆ ನಿಂತಿದ್ದಾರಲ್ಲ, ಆ ಎರಡು ಹೆಣ್ಣುಗಳನ್ನೇ ಹೆತ್ತು, ಸತ್ತಿದ್ದು. ಪುಣ್ಯಾತಗಿತ್ತಿ: ಕೊಟ್ಟಿಗೆಯ ಕೆಲಸ ಮುಗಿಸಿ, ಸ್ನಾನ ಮಾಡಿ, ದೇವರ ಪೂಜೆಗೆ ಎಲ್ಲ ಅಣಿಮಾಡಿ, ಸ್ನಾನ ಮುಗಿಸಿ ಬಂದ ಗಂಡನಿಗೆ ದೇವರ ಮನೆ ಎದುರು ಬಾಗಿಲಲ್ಲಿ ಕಾದು ಮಣೆ ಹಾಕಿ, ಕರ್ಪೂರ, ಗಂಧ, ಅರಿಸಿನ ಕುಂಕುಮ, ಹರಿವಾಣದಲ್ಲಿ ಹೂವು ಪತ್ರೆ, ಐದು ದೀಪದಕುಡಿಯ ಆರತಿತಟ್ಟೆ, ಪಂಚಪಾತ್ರೆಯಲ್ಲಿ ಗಂದೋದಕ ಎಲ್ಲ ಓರಣವಾಗಿ ಇದೆಯೇ ಎಂದು ಮತ್ತೊಮ್ಮೆ ಮಗದೊಮ್ಮೆ ಕಣ್ಣುಹಾಯಿಸಿ ಗಮನಿಸಿ – ಆಯಿತಾ? ಅಡುಗೆ ಮನೆಗೆ ಅವರು ಹೋದರೆಂದರೆ…… ಸಾಕ್ಷಾತ್ ಅನ್ನಪೂರ್ಣೆ ಅವರು – ಸಾರಿಸಿ ರಂಗೋಲಿ ಹಾಕಿದ ಶುಭ್ರವಾದ ಕೋಡೋಲೆಯನ್ನು ಕ್ಷಣದಲ್ಲಿ ಹೊತ್ತಿಸಿ, ಅಗ್ನಿಗೆ ಕೈಮುಗಿದಾಯಿತೊ, ಆಮೇಲೆ, ಗಂಡನ ಪೂಜೆಯ ಮಂತ್ರಗಳನ್ನು ಕೇಳಿಸಿಕೊಳ್ಳುತ್ತ, ನೈವೇದ್ಯ ಸಿದ್ಧವಾಯಿತ ಎಂದು ಗಂಡನಿಂದ ಕೇಳಿಸಿಕೊಳ್ಳದಂತೆ ಒಂದು ಬಾಳೆ ಎಲೆಯಲ್ಲಿ ನೈವೇದ್ಯಕ್ಕೆಂದು ಬೇಯಿಸಿದ ಪದಾರ್ಥಗಳನ್ನು ದೇವರಿಗೇ ರುಚಿ ಎನ್ನಿಸಬೇಕು, ಹಾಗೆ ಅಲಂಕರಿಸಿ, ದೇವರ ಮುಂದಿಟ್ಟು, ಅವತ್ತೊಂದು ತ್ರಯೋದಶಿ ದಿನ, ಅಡುಗೆ ಮನೆಯಲ್ಲಿ ಹಾಯೆಂದು ಕೂತ ಪುಣ್ಯಾತಿಗಿತ್ತಿ ಹಾಗೇ ತೂಕಡಿಸಿ, ಮುಚ್ಚಿದ ಕಣ್ಣನ್ನು ಬಿಚ್ಚಲಿಲ್ಲ’. +ಹೀಗೇ ಬಾಳಗರೆ ಕೇಶವ ಭಾವುಕವಾಗಿ ತಾನು ಸ್ವತಃ ಕಾಣದ್ದನ್ನು ಕಂಡವನಂತೆಯೇ ವಿವರಿಸುವಾಗ ಅವನ ಅಕ್ಕ ಅಕ್ಕಿ ಆರಿಸುತ್ತ ಕೂತು ಕೇಳಿಸಿಕೊಳ್ಳುತ್ತಾಳೆ. +ಜಗತ್ತಿನಲ್ಲಿ ಯಾರೂ ಹೆಸರು ಹಿಡಿದು ಕರೆಯದ ಈ ಮಡಿಹೆಂಗಸು ಈಗ ಮನೆಯವರಿಗೆ ಏಕವಚನದ ಅಕ್ಕುವೂ, ಪರರಿಗೆ ಬಹುವಚನದ ಅಕ್ಕಯ್ಯ, ಅಕ್ಕಮ್ಮನೂ ಆಗಿದ್ದಳು. ಯಾವ ಕಾಲದಲ್ಲೋ ಸತ್ತು ಹೋಗಿದ್ದ ಅವಳ ಅಪ್ಪ ಅಮ್ಮಂದಿರಿಗೆ ಮಾತ್ರ ಅವಳು ಸಾವಿತ್ರಿ. ಈ ಹೆಸರಿನಿಂದ ಅವಳು ಕರೆಸಿಕೊಂಡು ಅದೆಷ್ಟು ವರ್ಷಗಳೇ ಆಗಿ ಹೋದವೋ. ಗಂಡ ಹೇಗೂ ಹೆಸರು ಹಿಡಿದು ಕರೆದವನಲ್ಲ. ಅತ್ತೆಯೋ ಮಾವನೋ ಕರೆಯಬಹುದಿತ್ತು ಎಂದು ಅನ್ನುವಂತೆಯೂ ಇಲ್ಲ. ಆ ಪುಣ್ಯಾತ್ಮರನ್ನು ಇವಳು ಕಣ್ಣಾರೆ ಕಂಡವಳೂ ಅಲ್ಲ. ಧಾರೆ ಎರೆಸಿಕೊಂಡದ್ದು ಯಾರೋ ದೂರದ ದೊಡ್ಡಪ್ಪನಿಂದ. +ಹೆಬ್ಬೆರಳು ತೋರುಬೆರಳುಗಳ ಸನ್ನಿಧಿಯಲ್ಲಿ ಮೃದುವಾದ ಹತ್ತಿಯ ಉಂಡೆಯನ್ನು ತುಸುತುಸುವೇ ತಳ್ಳುವ ಕೈಚಳಕ ಖುಷಿಕೊಡುತ್ತಿದ್ದಂತೆ, ಬುಗುರಿಯಂತೆ ತಿರುಗುವ ತಕಲಿಯಲ್ಲಿ ಅದು ಹದವಾಗಿ ನೂಲಾಗುವುದನ್ನು ನೋಡುತ್ತ ಕೇಶವ ಅಕ್ಕರೆಯ ತನ್ನ ಮಾತುಗಳ ಮೂಲಳಾದ ಅಕ್ಕನ ಮುಖವನ್ನೂ ನೋಡುವುದುಂಟು. ಅಕ್ಕಿಯಲ್ಲಿ ಕಲ್ಲು ಆರಿಸುತ್ತ ಕೂತ ಅಕ್ಕ, ಮುಂದೆ ತನ್ನ ಗುಣಗಾನ ಶುರುವಾಗದಂತೆ, ಎದುರು ಕೂತವರು ಬ್ರಾಹ್ಮಣರಾಗಿದ್ದರೆ ಮಾತ್ರ, ತಮ್ಮನನ್ನು ಅಣಕಿಸುವ ಸಲಿಗೆಯಲ್ಲಿ ಗೊಣಗುತ್ತಾಳೆ. ಹೀಗವಳು ಮುಖವೆತ್ತಿ ಗೊಣಗುವಾಗ ಕಣ್ಣಿಟ್ಟು ಕಲ್ಲು ಆರಿಸಬೇಕಿಲ್ಲ; ಅವಳ ಬೆರಳುಗಳಿಗೇ ಕಲ್ಲು ಪತ್ತೆಯಾಗುತ್ತದೆ. +‘ನಮ್ಮ ಕೇಶವನಿಗೆ ಎಲ್ಲಾನೂ ಚೆಂದ; ಅವನ ಕಣ್ಣಿಗೆ ಎಲ್ಲವೂ, ಏನೋ ಅಂತಾರಲ್ಲ ಹಾಗೆ, ಹಾ, ದೂರದ ಬೆಟ್ಟದ ಹಾಗೆ, ನುಣ್ಣಗೆ…… ಹೆಂಡತಿ ಸತ್ತಮೇಲೆ ನನ್ನಿಂದ ಒಂದು ಗಂಡು ಹುಟ್ಟೀತೆಂದು ಆಸೆ ಪಟ್ಟು ತಾನೇ ಆ ಮಹಾರಾಯರು ಮದುವೆಯಾದ್ದು; ಅಲ್ಲವ, ತಿಳಿದವರು ನೀವು, ಹೇಳಿ? ಯಾವ ಸುಖವನ್ನೂ ಆ ಪುಣ್ಯಾತ್ಮನಿಂದ ನಾನು ಪಡೆಯಲಿಲ್ಲ’. +ಮಂಗಳೂರಿನಲ್ಲಿ ಅವರು ಇಟ್ಟುಕೊಂಡಿದ್ದ ಸೂಳೆಯ ಬಗ್ಗೆ ಅವಳು ಯಾರೊಡನೆಯೂ ಮಾತಾಡುವುದಿಲ್ಲ. ತಾನು ಯಾವ ಸುಖವನ್ನೂ ಗಂಡನಿಂದ ಪಡೆಯಲಿಲ್ಲ ಎಂದು ಹೇಳಿಯಾದ ಮೇಲೆ ಒಂದು ಕ್ಷಣ ಅವಳು ಮೌನವಾಗಿ ಅದನ್ನು ತನಗಾಗಿ ಮಾತ್ರ ನೆನೆದು ಮಾತು ಮುಂದುವರಿಸುತ್ತಾಳೆ. +ತಮಗೆ ಮೊದಲಿನವಳಿಂದ ಹುಟ್ಟಿದ ಆ ಎರಡು ಹೆಣ್ಣುಗಳನ್ನು ಈ ಬಡಪಾಯಿಯ ಮಡಿಲಿಗೆ ಹಾಕಿ, ಒಂಟಿ ಬಾಳಲಾರದವಳನ್ನು ತವರು ಸೇರುವಂತೆ ಮಾಡಿದರು. ಅಷ್ಟೊಂದು ದೈವಭಕ್ತರಾಗಿದ್ದ ಆ ಪುಣ್ಯಾತ್ಮ ಸತ್ತದ್ದೋ ಭಯಂಕರವಾಗಿ. ಯಾರದೋ ಮನೆಗೆ ಶ್ರಾದ್ಧ ಮಾಡಿಸಲೆಂದು ಹೋಗುವಾಗ ಪ್ರವಾಹದಲ್ಲಿ ದೋಣಿ ಮಗುಚಿ ಈಜಲಾರದೆ ಕೈಸೋತು ಅವರು ಹರಿ ಹರಿ ಎಂದು ಹೋದದ್ದು. ಆ ದೊಡ್ಡ ಮನೆಯಲ್ಲಿ ಎರಡು ಚಿಕ್ಕ ಮಕ್ಕಳ ಜೊತೆ ದೆವ್ವದಂತೆ ಒಂಟಿ ಇರಲಾರದೆ, ಬೇರೆ ಗತಿ ಕಾಣದೆ ತಮ್ಮನ ಮನೆ ಸೇರಿ ಈ ಮಕ್ಕಳನ್ನು ಸಾಕಬೇಕಾಯಿತು, ಎಂದು ಅಕ್ಕನ ಪುರಾಣ ಯಥಾವತ್ ಶುರುವಾಗುತ್ತಿದ್ದಂತೆ, +ತಕಲಿಯನ್ನು ಕೆಳಗಿಟ್ಟು, ಅಕ್ಕ ಹೇಳದೆ ಬಿಟ್ಟಿದ್ದನ್ನು ತನ್ನ ಮೌನದಲ್ಲಿ ಸ್ವೀಕರಿಸಿ, ತನ್ನ ಸೊಂಪಾದ ಜುಟ್ಟನ್ನು ಬಿಚ್ಚಿ, ಸಡಿಲಾಗಿ ಕಟ್ಟಿ ಕೇಶವ ನಗುತ್ತಾನೆ. +‘ಓಹೋ ಹಾಗೋ, ಮಾರಾಯರೇ ಕೇಳಿ, ಪ್ರತಿ ವಾರ ಇವಳು ತನ್ನ ಸವತಿಯ ಮಕ್ಕಳಿಗೆ ಎಣ್ಣೆ ಸ್ನಾನ ತಪ್ಪಿಸಿದವಳಲ್ಲ. ದ್ವಾದಶಿಯ ದೋಸೆ ತಪ್ಪಿಸಿದವಳಲ್ಲ. ಹೋಳಿಗೆ ಮಾಡದ ಹಬ್ಬವಿಲ್ಲ. ಉಪ್ಪಿನಕಾಯಿ ತುಪ್ಪ ಬಡಿಸದ ಗಂಜಿಯಿಲ್ಲ. ನನ್ನ ದೊಡ್ಡ ಭಾಗವತರಾಟದವರ ಜುಟ್ಟನ್ನೂ ಎಣ್ಣೆಹಾಕಿ ಸಿಕ್ಕುಬಿಡಿಸಿ ಬಾಚುವರು ಯಾರು ಕೇಳಿ? ಎರಡು ಮಕ್ಕಳಿಗೂ ಕುಮಾರವ್ಯಾಸನನ್ನು ಬಾಯಿಪಾಠ ಮಾಡಿಸುವುದು ಯಾರು ಕೇಳಿ? ಈ ಮಕ್ಕಳು ಈ ಮನೆ ಬಿಟ್ಟು ಹೋಗುವುದೇ ಕಮ್ಮಿ. ಎಲ್ಲೋ ವರ್ಷಕ್ಕೊಮ್ಮೆ ಯಾರದೋ ಮನೆಯ ಮದುವೆಗೆ ಕರೆದರೆ ಮಾತ್ರ ಹೋಗುವುದು. ಈ ಆಸುಪಾಸಿನಲ್ಲಿ ಹೆಚು ಬ್ರಾಮಣರಿಲ್ಲ; ಇರುವುದು ಎಂದರೆ ಅದೊಂದೇ ಸಾಹುಕಾರರ ಮನೆ. ಅಲ್ಲಿಗೆ ನಿತ್ಯ ಪೂಜೆಗೆ ನಾನು ಮಾತ್ರ ಹೋಗುವುದು. ನಮಗೆ ಅನ್ನದಾತರು ಅವರು. ಏನೋ ಹೇಳಲು ಹೋಗಿ ಮರೆತೇಬಿಟ್ಟೆನಲ್ಲ…… ಅದೇ, ಮಳೆಗಾಲದಲ್ಲಿ ಸೋರುವ ಈ ಹುಲ್ಲಿನ ನಮ್ಮ ಪೂರ್ವಿಕರ ಮನೆಯಲ್ಲೇ, ಅವಳ ತಂದೆಯ ಮನೆ ಹೆಂಚಿನದು ಎನ್ನಿ, ಬೆಳೆದಿರುವ ನಮ್ಮ ದೊಡ್ಡ ಹುಡುಗಿ ಗೌರಿಗೆ ಗೊತ್ತಿಲ್ಲದ ಹಾಡು ಹಸೆ ಇದೆಯೆ? ಅದನ್ನೆಲ್ಲ ತಾಯಿಗಿಂತ ಹೆಚ್ಚಾಗಿ ಹೇಳಿ ಕೊಟ್ಟದ್ದು ಯಾರು ಕೇಳಿ? ಹೋಗಲಿ ನನಗೇನು ಅಕ್ಕನೊಂದು ಹೊರೆಯೋ? ಪ್ರತಿವರ್ಷ ಈ ಮನೆಗೆ ಹುಲ್ಲು ಹೊದೆಸುವ ಖರ್ಚು ಯಾರದು ಕೇಳಿ?’. +ಇವೆಲ್ಲವೂ ಸ್ವಂತ ಸುಖ ಸೌಭಾಗ್ಯದ ಕಥೆಯೇ ಎನ್ನುವಂತೆ ಹಿಗ್ಗಲು ಹವಣಿಸುವ ತಮ್ಮನನ್ನು ಕರುಣೆಯಿಂದ ನೋಡಿ, ತಲೆಯ ಮೇಲೆ ಕೆಂಪುಸೆರಗನ್ನು ಎಳೆದುಕೊಳ್ಳುತ್ತ, ಮೇಲೇಳುತ್ತ: +‘ನಿಮಿತ್ಯ ಹೇಳಿ ಕಳಿಸು; ಎಷ್ಟು ಹೊತ್ತಾಯ್ತು ಅವರು ಬಂದು; ಪಾನಕ ಮಾಡಿ ತರುವೆ….’ ಎಂದು ಅಕ್ಕ ಯಜಮಾನಿಕೆಯಲ್ಲಿ ಇವನೊಬ್ಬ ಅರಿಯದ ಹುಡುಗ ಎನ್ನುವಂತೆ ತಾಯಿ ತಂದೆಯರನ್ನು ಕಳೆದುಕೊಂಡ ತಮ್ಮನನ್ನು ಗದರಿಸಿದರೆ, +‘ಕವಡೆ ಚೀಲ ಬಿಚ್ಚಲು ಒಳ್ಳೆಯ ಮುಹೂರ್ತಕಾಗಿ ಕಾಯ್ತಾ ಇದ್ದೀನಿ ಮಹಾರಾಯತಿ’ ಎಂದು, ಹುಲ್ಲಿನ ಮನೆಯಿಂದಾಗಿ ಪರ್ಣಕುಟಿ ನೆನಪಾಗಿ, ಕಿಷ್ಕಿಂಧೆಯಲ್ಲಿ ರಾಮನ ವನವಾಸದ ಯಾವುದೋ ಕಥೆ ಕೇಶವ ಪ್ರಾರಂಭಿಸುತ್ತಾನೆ. ಬಂದವರಿಗೆ ತಾವು ಬಂದ ಕಾರಣ ಮರೆಯಬೇಕು ಹಾಗೆ. +೨ +ಮಕ್ಕಳ ಹೆಸರು ಗಂಗೆ-ಗೌರಿ; ಗಂಗೆಗೆ ಹದಿನೆರಡು ವರ್ಷ, ಗೌರಿಗೆ ಹತ್ತೊಂಬತ್ತೋ ಇಪ್ಪತ್ತೋ ಇದ್ದರೂ ಅಕ್ಕ ಹೇಳುವುದು ಹದಿನೇಳೊ ಹದಿನೆಂಟೊ ಎಂದು- ಅವಳಿಗಿನ್ನೂ ತಾವು ಮದುವೆ ಮಾಡಿಲ್ಲವೆಂದು ಚಿಂತೆ ಅವಳಿಗೆ. ಅವರು ಕೇಶವನ ಮನೆ ಸೇರಿ ಹತ್ತು ವರ್ಷಗಳಾಗಿವೆ. ದೊಡ್ಡವಳು ತಾಯಿಯನ್ನು ಕಳೆದುಕೊಂಡದ್ದು ತನ್ನ ಒಂಬತ್ತನೇ ವಯಸ್ಸಿನಲ್ಲಿ ಇರಬೇಕು. ಆಗ ಹತ್ತಿರವಿದ್ದ ಶಾಲೆಯಲ್ಲಿ ಕಲಿತ ಅಷ್ಟಿಷ್ಟನ್ನು ಈಗ ಅವಳು ತನ್ನ ತಂಗಿಗೆ ಹೇಳಿಕೊಡುತ್ತಾಳೆ. ಒಬ್ಬಳನ್ನು ಬಿಟ್ಟು ಇನ್ನೊಬ್ಬಳು ಇರುವುದೇ ಇಲ್ಲ. +ಅಕ್ಕುವಿನ ಕಣ್ಣುತಪ್ಪಿಸಿ ಅಮಟೇಮರ ಹುಣಸೇ ಮರಗಳನ್ನು ಹತ್ತಿ ಕಾಯಿಗಳನ್ನು ಕಿತ್ತು ತಿನ್ನುವುದು, ಮರದ ಪೊಟರೆಗಳಲ್ಲಿ ಯಾವ ಹಕ್ಕಿ ಎಲ್ಲಿ ಗೂಡುಕಟ್ಟಿದೆ ಹುಡುಕಿ ನಿತ್ಯ ಮರಿಗಳು ಎಷ್ಟೆಷ್ಟು ಬಲಿತಿವೆ ಎಂದು ನೋಡಿಬರುವುದು, ಈ ಮರಿಗಳಿಗೆಲ್ಲ ಮುದ್ದುಮುದ್ದಾದ ಹೆಸರಿಟ್ಟು ಅವುಗಳ ಬಗ್ಗೆ ಕಥೆ ಕಟ್ಟಿ ಒಬ್ಬರಿಗೊಬ್ಬರು ಹೇಳಿಕೊಂಡು ನಗುವುದು, ಅವುಗಳು ಹಾರಿಹೋದ ದಿನ ತಮ್ಮನ್ನು ಅಕ್ಕು ಬಯ್ಯುವಂತೆ ಅವುಗಳನ್ನು ಬಯ್ಯುವುದು- +ಗಂಗೆ ಗೌರಿಯರು ಹೀಗೆ ತಮ್ಮದೇ ಲೋಕದಲ್ಲಿ ಮಗ್ನರಾಗಿರುವಾಗ ಅಕ್ಕುವಿನ ಗೌರಿಯ ‘ಪೂಜೆ’ ಶುರುವಾಗಿಬಿಡುತ್ತದೆ. +‘ಪ್ರಾಯಕ್ಕೆ ಬಂದು ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೆರಬೇಕಾದ ನೀನೇ ಹೀಗೆ ಗಂಡುಬೀರಿಯಂತೆ ಅಲೆಯುತ್ತ ನಿನ್ನ ತಂಗಿಯನ್ನು ಬಳೆಸಿದರೆ ಹೇಗೇ; ನಿನಗಾಗ್ತ ಇರುವ ವಯಸ್ಸನ್ನು ಎಷ್ಟು ದಿನ ನಾನು ಮುಚ್ಚಿಡಲೇ….’ +ಅಕ್ಕನ ಇತ್ಯಾದಿ ಮಾತು ಕೇಳಿಸಿಕೊಂಡವರು‌ಅವಳೊಬ್ಬ ಮುದುಕಿ ಎಂದು ಭಾವಿಸಬೇಕು. ತನ್ನ ಇಪ್ಪತ್ತನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಅವಳಿಗೆ ಈಗ ನಲವತ್ತು ವರ್ಷಕ್ಕಿಂತ ಹೆಚ್ಚಾಗಿಲ್ಲ. ( ‘ನಿನ್ನ ಈಗಿನ ವಯಸ್ಸಿನಲ್ಲಿ ಅಮ್ಮನಿಗೆ ನೀನು ಹುಟ್ಟಿದ್ದು’ ಎಂದು ಕೇಶವ ಅಕ್ಕಯ್ಯನಿಗೆ ಹಾಸ್ಯ ಮಾಡಲು ಹೇಳುತ್ತಾನೆ.) ಇನ್ನೂ ಮದುವೆಯಾಗದ ಅವಳ ತಮ್ಮ ಕೇಶವನಿಗೆ ಇಪ್ಪತ್ತ ಐದು ವರ್ಷ. ( ಹೀಗೆ ಅಕ್ಕು ಬಿಡಿಸಿ ‘ಇಪ್ಪತ್ತ ಐದು ಎಂದಾಗಲೆಲ್ಲ ಕೇಶವ ಇನ್ನೊಂದು ವರ್ಷದಲ್ಲಿ ಆದಿ ಶಂಕರರು ಕಾಲವಾದದ್ದು ಎನ್ನುತ್ತಾನೆ.) +ಕೆಲವೊಮ್ಮೆ ವೇದಾಂತಿಯ ಹಾಗೂ, ಕೆಲವೊಮ್ಮೆ ಶುದ್ಧ ಹಡೆಯಂತೆಯೂ ಮಾತಾಡುವ ಈ ತಮ್ಮನಿಗೆ ಇನ್ನೂ ಮದುವೆಯಾಗಿಲ್ಲ. ಅದೊಂದು ಕೊರಗು ಅಕ್ಕುಗೆ. ಹೋಗಲಿ ಅವನು ಗಂಡಸಲ್ಲವ ಎಂದರೆ ಈ ಗೌರಿ ಯಾವತ್ತೋ ಮೈನೆರೆದಳು, ಎಷ್ಟು ದಿನ ಅದನ್ನು ಮುಚ್ಚಿಡುವುದು ಸಾಧ್ಯ? ಬಂದು ಹೋಗುವವರ ಕಣ್ಣಿಗೆ ಹೊಡೆಯುವಂತೆ ಅವಳು ಬೆಳೆದಿದ್ದಾಳೆ. ಆದರೂ ಅವಳಿಗೆ ಮದುವೆಯಾಗಿಲ್ಲ, ಆಯಿತಾ? ಇಷ್ಟು ಬೆಳೆದು ನಿಂತ ಹುಡುಗಿ ಇನ್ನೂ ಎಳಸು ಎಳಸಾಗಿ ಆಡುತ್ತಾಳೆ ಚಿಗುರೆಯಂತೆ ಕುಣಿದಾಡುತ್ತಾಳೆ. +ಕೇಶವ ಲಂಗದಲ್ಲಿ ನೋಡಿದ ಹುಡುಗಿ ಈ ಗೌರಿ. ಸ್ನಾನ ಮಾಡುವಾಗ ‘ಮಾವಾ, ಸ್ವಲ್ಪ ಬೆನ್ನು ಉಜ್ಜೊ’ ಎಂದು ನಾಚಿಕೆಯಿಲ್ಲದೆ ಈ ಹುಡುಗಿ, ಗಜ ಗೌರಿಯೇ, ಕೇಶವನನ್ನು ಕರೆದಾಗ ಬಂದ ನಗು ನುಂಗಿ ‘ನಾಚಿಕೆಯಿಲ್ಲದ ಗಂಡುಬೀರಿ’ ಎಂದು ಅಕ್ಕು ಗದರಿಸುತ್ತಾಳೆ. ಅಕ್ಕನ ಸಂಚಿಗೆ ಇವೆಲ್ಲವೂ ವಿಘ್ನಗಳೇ. ಮುಂಚಿನಿಂದ ಮಾವನನ್ನು ಬಹುವಚನದಲ್ಲಿ ಕರೆಯಲು ಎಷ್ಟು ಕೇಳಿಕೊಂಡರೂ ಅಕ್ಕನ ಅಣತಿ ನಡೆದಿರಲಿಲ್ಲ. ಹೀಗೆ ಆಟ ಆಡುತ್ತ ತನ್ನ ಜೊತೆ ಬೆಳೆದ ಕೇಶವನನ್ನು ಈ ಗಂಡುಬೀರಿ ಮದುವೆಯಾಗಲು ಒಪ್ಪದಿದ್ದರೆ ಇನ್ನೆಲ್ಲಿ ಅವಳಿಗೆ ಗಂಡು ನೋಡಬೇಕು ತಿಳಿಯದು. ಬಡವರ ಹೆಣ್ಣೆಂದು ಕಂಡವರಿಗೆ ಕೊಟ್ಟು ಮದುವೆ ಮಾಡುವುದು ಸರಿಯೆ? +ಮಾವನ ಮಗಳೇ ಮುತ್ತಿನ ಚೆಂಡೇ ಎಂದು ಒಂದು ಹಸೆ ಹಾಡೇ ಇರುವಾಗ, +ತಮ್ಮ ಜನದಲ್ಲಿ ಅಕ್ಕನ ಮಗಳನ್ನೇ ತಂದುಕೊಳ್ಳುವುದು ರೂಢಿಯಲ್ಲಿರುವಾಗ, +ಇವಳು ಹಾಗೆ ನೋಡಿದರೆ ಸ್ವಂತ ಅಕ್ಕನ ಮಗಳೂ ಅಲ್ಲದಿರುವಾಗ ಜಾತಕ ಕೂಡಿ +ಬರುವಾಗ, +(ಕೇಶವನಿಗೆ ಗೊತ್ತಾಗದಂತೆ ಅಕ್ಕ ಜಾತಕ ನೋಡಿಸಿಯಾಗಿದೆ) +ಕಸ ಮುಸುರೆ, ದನಗಳಿಗೆ ಕಲಕಚ್ಚು, ಬಂದು ಹೋಗುವವರಿಗೆ ಪಾನಕ ಪರಿವಾರ, ಯಾವ ತಿಥಿಯಲ್ಲಿ ಯಾವ ನಕ್ಷತ್ರದಲ್ಲಿ ವಿಶೇಷವಾಗಿ ದೇವರಿಗೆ ಯಾವ ಕಾರ್ಯವಾಗಬೇಕು ಇತ್ಯಾದಿ ದಿನ ಕೆಲಸದಲ್ಲಿ ಮಗ್ನಳಾದ ಅಕ್ಕ ಸತತ ಚಿಂತಿಸುವುದು ಇದನ್ನೇ…ಯಾವತ್ತು ತನಗೆ ಬಾಣಂತನ ಮಾಡುವ ಭಾಗ್ಯ ಒದಗೀತು ಎಂದು. ವಿಧವೆಯಾದ ಮೇಲೆ ರಾತ್ರೆಯ ಊಟಬಿಟ್ಟ ಅಕ್ಕು ಪ್ರತಿ ಶುಕ್ರವಾರ ಉಪವಾಸದ ವ್ರತವನ್ನೂ ಹಿಡಿದಿದಾಳೆ. +೩ +ಗೌರಿಯೋ ತಾನೊಂದು ಹೆಣ್ಣು ಎಂಬುದನ್ನೇ ಮನಸ್ಸಿಗೇ ತಂದುಕೊಳ್ಳದೆ ಗಂಗೆಯ ಜೊತೆ ಆಟದಲ್ಲಿ ಮಗ್ನಳು. ಅವರಿಬ್ಬರ ನಡುವೆ ಹಲವು ಭಾಷೆಗಳೇ ಇದ್ದವು. ಯಾರಿಗೂ ತಿಳಿಯದ ಅವರ ಸಂಜ್ಞಾ ಭಾಷೆಯಲ್ಲಿ ಎರಡು ಕೈಗಳ ಪ್ರತಿ ಬೆರಳಿಗೂ ಒಂದೊಂದು ಅರ್ಥ. ಮಡಿಸಿ ತೋರಿದರೆ ಒಂದು ಅರ್ಥ, ಬಿಚ್ಚಿ ಒಂದು ಅರ್ಥ. ಎತ್ತಿ ಒಂದೊಂದು ಹುಬ್ಬಿಗೆ ಒಂದೊಂದು ಅರ್ಥ. ಜಡೆಯನ್ನೆತ್ತಿ ಎಡಭುಜದ ಮೇಲೆ ಬಿಟ್ಟುಕೊಂಡರೆ ಒಂದು ಅರ್ಥ. ಬಲ ಭುಜದ ಮೇಲೆ ಅದನ್ನು ಇಳಿಬಿಟ್ಟರೆ ಇನ್ನೊಂದು ಅರ್ಥ. ಗಿಂಜುವ ಹಲ್ಲಿಗೆ, ತುರಿಸುವ ಕತ್ತಿಗೆ, ಮಿಟುಕುವ ಕಣ್ಣಿಗೆ, ಯಾಕೆ ಕಾಲು ಬೆರಳುಗಳಿಗೂ ಈ ಭಾಷೆ ಬೆಳೆದಿತ್ತು. +ಇದೂ ಸಾಲದಾದರೆ ಸಭಾಷೆ. ಗೌರಿ ಗಸೌರಸಿ; ಗಂಗೆ ಗಸಂಗಸೆ; ಅಕ್ಕ ಅಸಕಸ್ಕ…. ಅಸಕಸ್ಕನಸಿಗಸೆ ಹಸೇಳಸಬಸೇಡಸ ಎಂದರೆ ಅಕ್ಕನಿಗೆ ಹೇಳಬೇಡ….. +ಇದರಿಂದ ಅಕ್ಕ ರೋಷಾವೇಷದಲ್ಲಿ ಹೊಡೆಯಬಂದರೆ, ಚೋಟುದ್ದದ ಗಂಗೆ, +‘ಅಕ್ಕಾ ನೀವು ಮಡಿಯಲ್ಲಿದ್ದೀರಿ, ಮಸುಟ್ಟಸುವಸಹಸಾಗಸೆ ಇಲ್ಲ’ ಎಂದು ಜೋರಾಗಿ ನಗುವಳು; ಓಡಿಹೋಗುವಳು. ಸೀರೆಯುಡಲು ಶುರುಮಾಡಿದ ಗೌರಿಯೂ ಅವಳ ಉದ್ದನೆಯ ಜಡೆಯನ್ನು ಕಪ್ಪು ಸರ್ಪದಂತೆ ಬೆನ್ನ ಮೇಲೆ ಜೋಲಾಡಿಸುತ್ತ ತಂಗಿಯ ಹಿಂದೆ ನಡೆದುಬಿಡುವಳು. +ಗುಡ್ಡದಲ್ಲಿ ನಡೆದಾಡುತ್ತ ಗಂಗೆ ಕೇಳುವಳು. +‘ಗೌರಕ್ಕ, ನಿನಗೆ ಮಾವಯ್ಯ ನಿನ್ನೆ ಹೇಳಿದ ಕಥೆ ಇಷ್ಟವಾಯಿತ?’ +ಹಿಂದಿನ ದಿನ ಚಾವಡಿಯಲ್ಲಿ ಒಂದು ತಾಳೆಮದ್ದಲೆ ಪ್ರಸಂಗ ನಡೆದಿತ್ತು. ಕೇಶವ ಕಚ-ದೇವಯಾನಿ ಕಥೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದ. ಗೌರಿ ತಲೆಯಾಡಿಸುತ್ತ: +‘ನನಗೆ ಕಚ ಇಷ್ಟಾನೇ ಆಗಲಿಲ್ಲ. ದೇವಯಾನಿಗೆ ಅವ ಮೋಸ ಮಾಡ್ತಾನೆ ಅಲ್ವೇನೆ?’ ಎನ್ನುವಳು. +ಗಂಗೆಗೆ ತನ್ನ ಅಕ್ಕನದು ವೇದವಾಕ್ಯ. ತನಗೂ ಹಾಗೇ ಎನ್ನಿಸಿತ್ತು ಎಂದುಕೊಳ್ಳುವಳು. ಕಾಕೆಯ ಹಣ್ಣನ್ನು ಕೀಳುತ್ತ ನಿಂತ ಅಕ್ಕನಿಗೆ ಇನ್ನು ಏನೋ ಹೇಳಲು ಕಾಯುವಳು.ಗೌರಿ ಒಂದು ಕಾಕೆಯ ಹಣ್ಣನ್ನು ಬಾಯಿಗೆ ಎಸೆದು ರುಚಿನೋಡಿ ಸೆರಗಿನಲ್ಲಿದ್ದ ಎಲ್ಲ ಹಣ್ನನ್ನೂ ಗಂಗೆಗೆ ಕೊಡುವಳು. ಅರ್ಧ ಮಾತ್ರ ತೆಗೆದುಕೊಂಡು ಉಳಿದರ್ಧದಲ್ಲಿ ಅಕ್ಕನ ಸೆರಗಿನಲ್ಲೇ ಗಂಗೆ ಬಿಡುವಳು. ದೇವಯಾನಿ ರಾಕ್ಷಸರ ಗುರುವಿನ ಮಗಳಲ್ಲವೆ? ಕೇಶವ ಮಾವನೇ ಇನ್ನೊಂದು ಪ್ರಸಂಗದಲ್ಲಿ ವಾದಿಸಿ ಗೆದ್ದದ್ದನ್ನು ಅಕ್ಕನಿಗೆ ನೆನಪು ಮಾಡುವಳು. +‘ರಾಕ್ಷಸರದ್ದು ಯಾವಾಗಲೂ ಯಾಕೆ ತಪ್ಪೂಂತ ? ಅವರೂ ಆಸೆಬುರುಕರೇ, ಆದರೆ ದೇವತೆಗಳೂ ಅವರಷ್ಟೇ ಆಸೆಬುರುಕರು ಅಲ್ಲವ? ಯಾರ ದೊಡ್ಡಸ್ತಿಕೆ ಏನಿದೆ ಈ ವ್ಯಾಜ್ಯಗಳಲ್ಲಿ. ಮೋಸಾನ್ನ ಇಬ್ಬರೂಮಾಡುವಾಗ ಯಾಕೆ ದೇವರು ದೇವತೆಗಳ ಪರಾನೇ ವಹಿಸೋದು?’ +ತಂಗಿಯ ಮಾತನ್ನು ಒಪ್ಪಿ ಗೌರಿ ಹೇಳುವಳು: +‘ಅದಕ್ಕೇ ದೇವರ ಮರ್ಜಿ ತಿಳಿಯೋಕೆ ಆಗಲ್ಲ. ಅವನೇನು ನಮ್ಮ ಮಿತ್ರನೋ ಶಟ್ರ್ಹುವೋ ಹಾಗೆಲ್ಲ ಅರ್ಥವಾಗೋಕೆ?’. ಅಂತ ಕೇಶವಮಾವ ಹೇಳಿ ವಾದದಲ್ಲಿ ನುಣಿಚಿಕೊಳ್ಳೋಕೆ ನೋಡಿದರೆ ಬಿಡಬೇಕಲ್ಲ ವಾದಕ್ಕೆ ಕೂತಿದ್ದ ಪ್ರತಿವಾದಿ ಭಯಂಕರ ಪುಟ್ಟೇಗೌಡರು. ಹೊರಗೆ ಧಡಧಡ ನಡೆದು, ಹೊಗೆಸೊಪ್ಪು ಉಗುಳಿ, ಒಳಗೆ ಬಂದು, ಚಕ್ಕಳಮಕ್ಕಳ ಹಾಕಿ ಕೂತು, ಶುರುಮಾಡಿಬಿಟ್ಟರಲ್ಲ ವಾದಾನ್ನ. ದಗಾಕೋರ ವಿಷ್ಣು ವಾಮನನಾಗಿ ಬಂದು ಬಲಿಗೆ ಮೋಸಮಾಡಿದ್ದು ಸರೀನ? ಇವೆಲ್ಲ ಬ್ರಾಂಬ್ರು ಮಾಡಿಕೊಂಡ ಕಥೆಗಳಲ್ವ?’ +ಅಕ್ಕ ತಂಗಿಯರು ಆಡಿಕೊಳ್ಳದ ವಿಷಯವೇ ಇಲ್ಲವೆನ್ನಬಹುದು. ಎರಡು ನಾಯಿಗಳ ಸಂಭೋಗ ನೋಡಿ ಗಂಗೆ ಕೇಳುವಳು. +‘ಇವುಗಳ ಅಂಡು ಯಾಕೆ ಗಂಟು ಹಾಕಿಕೊಂಡಿದೆಯೇ? ಪಾಪ, ಬಿಡಿಸಿಕೊಳ್ಳಲಿಕ್ಕೆ ಹೋಗಿ ಎಳಕೊಳ್ತಿದಾವೆ. ನೋವಾಗಲ್ವೇನೆ?’ +ಎಲ್ಲ ಪ್ರಾಣಿಗಳಿಗೂ ಮಕ್ಕಳಾಗುವುದು ಹೇಗೆ, ಅದರ ಸುಖವೇನು ಕಷ್ಟವೇನು ಇತ್ಯಾದಿ ಗೌರಿ ವಿವರಿಸುವಳು. ಮೈನೆರೆದಾದ ಮೇಲೆ ಗೌರಿ ತನ್ನ ದೇಹದಲ್ಲಿ ಕುತೂಹಲಿಯಾಗಿ ಮನೆಯಲ್ಲಿ ಇದ್ದ ಪುಸ್ತಕಗಳನ್ನೆಲ್ಲಾ ಓದಿದ್ದಳು. ಅವಳ ಗತಿಸಿದ ತಂದೆ ಜ್ಯೋತಿಷಿ ಮಾತ್ರವಲ್ಲದೆ ಆಯುರ್ವೇದದ ಪಂಡಿತರೂ ಆಗಿದ್ದರಿಂದ ಅವರ ಮನೆಯಲ್ಲಿ ಆರೋಗ್ಯ ಮಾಹಿತಿಗೆ ಸಂಬಂಧ ಪಟ್ಟ ಪುಸ್ತಕಗಳೂ, ಗೋಪಾಲಕೃಷ್ಣರಾಯರು ಸಂಪಾದಿಸಿ ತರುತ್ತಿದ್ದ ಕಾಮಜೀವನಕ್ಕೆ ಸಂಬಂಧಿಸಿದ ‘ಕಲಿಯುಗ’ ಪತ್ರಿಕೆಯ ಹಳೆಯ ಸಂಚಿಕೆಗಳೂ ಇದ್ದವು. ಗಂಡ ಸತ್ತಮೇಲೆ ಈ ಎಲ್ಲ ಪುಸ್ತಕಗಳನ್ನೂ ತಂದು ಒಂದು ಹಿತ್ತಾಳೆಯ ನುಗ್ಗುನುಗ್ಗಾದ ಪೆಟ್ಟಿಗೆಯಲ್ಲಿ ಅಕ್ಕು ಜೋಪಾನ ಮಾಡಿದ್ದಳು. +ಕೇಶವಮಾವ ಹೇಳಿದ ಇನ್ನೊಂದು ಪ್ರಸಂಗ ಗಂಗೆಗೆ ನೆನಪಾಗುವುದು. ಮಾವನನ್ನು ನಟಿಸಿ ಅಣುಕಿಸುವಂತೆ ಗೌರಿಯ ಬಾಯಿಂದಲೂ ಅದನ್ನು ಮತ್ತೆ ಕೇಳಿಸಿಕೊಳ್ಳಲು ಆಸೆಯಾಗಿ ಅಕ್ಕನನ್ನು ಪೀಡಿಸುವಳು. ಗೌರಿ ಶುರುಮಾಡುವಳು: +ಎರಡು ಮೃಗಗಳಾಗಿ ಒಬ್ಬ ಋಷಿ ಮತ್ತು ಅವನ ಪತ್ನಿ ಕಾಡಿನಲ್ಲಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ, +(ಮಾನವನಂತೆಯೇ ಕೈಗಳು ಗಾಳಿಯಲ್ಲಿ ಕ್ರೀ ಶಬ್ದದ ದೀರ್ಘಕ್ಕೆ ಸರಿಯಾಗಿ ಅಲೆಯಬೇಕು) +ಮೃಗಯಾ ವಿಹಾರದಲ್ಲಿ +(ಅಣಕಿಸುವ ಉಮೇದಿಯಲ್ಲಿ ಗೌರಿಯ ಎರಡು ದೀರ್ಘಗಳೂ ಮಾವನದಕ್ಕಿಂತ ಹೆಚ್ಚು ದೀರ್ಘಿಸುತ್ತವೆ) +ಮೈಮರೆತಿದ್ದ ಪಾಂಡುಮಹಾರಾಜ ಎರಡು ಮೃಗಗಳು ಒಟ್ಟಿಗೇ ಸಿಕ್ಕಲಿ ಎಂದು ಗುರಿಮಾಡಿ ಬಾಣಬಿಟ್ಟ. ಬಿಟ್ಟಿದ್ದೇ ಬಾಣ ಅದು ಶರವೇಗದಲ್ಲಿ ಹೋಗಿ ನಾಟಿದ್ದು…. +(ಈಗ ಥೇಟು ಮಾವನದಂತೆಯೇ ಗೌರಿಯ ತೋರು ಬೆರಳು ಅಳಿಲೊಂದನ್ನು ತೋರಿ ಅವಳ ಕಣ್ಣು ಚೂಪಾಗುತ್ತವೆ.) +ಗಂಡು ಮೃಗದ ಮುಂಗಾಲುಗಳ ಅಪ್ಪುಗೆಯ ಆವೇಗದಲ್ಲಿ ಸುಖಿಸುತ್ತಿದ್ದ ಹೆಣ್ಣು ಮೃಗವನ್ನೇ. ರತಿಸುಖದ ಉತ್ಕಟತೆಯಲ್ಲಿದ್ದಾಗಲೇ…. +(ಪುರಾಣ ಹೇಳುವ ಮಾವನ ಪ್ರವಚನ ಭಂಗಿಯಲ್ಲೇ ಈಗ ಗೌರಿಯ ಕಣ್ಣು ಮುಚ್ಚಿರುತ್ತವೆ) +ಹೆಣ್ಣು ಮೃಗ ಪ್ರಾಣಬಿಟ್ಟಿತು. ಬಿಡುವಾಗ ತನ್ನ ನಿಜವಾದ ಮನುಷ್ಯ ರೂಪವನ್ನು ತಾಳಿತು. ಗಾಯಗೊಂಡು ರತಿಭಂಗವಾದ ಗಂಡುಮೃಗವೂ ತನ್ನ ಮೀಸೆಗಡ್ಡಗಳ ನಿಜರೂಪಕ್ಕೆ ಬಂದು ಕಣ್ಣು ಕೆಕ್ಕರಿಸಿ ಪಾಂಡುವನ್ನು ನೋಡಿದಾಗ ಪಾಂಡುವಿಗೆ ಅರಿವಾದ್ದು….ಏನದು ಅರಿವಾದ್ದು?…. +(ಪ್ರವಚನದ ಆವೇಶದಲ್ಲಿ ಮಾವ ಪಟಪಟಪಟನೆ ತಾಳಕುಟ್ಟುವಂತೆ ಗೌರಿ ಕಲ್ಲುಗಳನ್ನು ಕುಟ್ಟಿ ಹುಬ್ಬೆತ್ತಿ ನಟಿಸಿ ಗಂಗೆಯನ್ನು ನಗಿಸುತ್ತಾಳೆ.) +ಅವರು ಕೇವಲ ನರಮನುಷ್ಯ ಮಾತ್ರರಲ್ಲ, ಪರಮ ಪಾವನರಾದ ಋಷಿಗಳು ಎಂದು ತಿಳಿಯದೆ ತಾನವರನ್ನು ಕೊಂದುಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಒಂದು ಕಡೆಯಾದರೆ, ಮಹೀಶನಲ್ಲವೆ? ಅವನಿಗೆ ಸಿಟ್ಟೂ ಬರುತ್ತದೆ ಎಂದು ಕುಮಾರ ವ್ಯಾಸ ಹೇಳ್ತಾನೆ. +ಸಿಟ್ಟಾಗಿ ಏನಂತಾನೆ ರಾಜ ? +ಮೃಗವಹರೆ ಮಾನಿಸರ್? ಅಕಟ ಪಾಪಿಗಳಿದೆತ್ತಣ ? ತಪವಿದೆತ್ತಣ ? +ಹೀಗೆ ಎಂದಾಗ ತಾಪಸ ಕೋಪದಲ್ಲಿ ಬುಸುಗುಟ್ಟಿ ಶಾಪಕೊಡುತ್ತಾನೆ: +ಪಾಪಿ ನಾನೋ, ನೀನೋ ? ನಿನ್ನಯ ಲಲನೆಯನು ನೀ ಕೂಡಿದಾಗಲೇ ಮರಣ ನಿನಗಹುದು. +ಇನ್ನು ತನಗೆ ಎಂದೆಂದೂ ರತಿ ಸುಖ ಇಲ್ಲೆಂದು ಶೋಕತಪ್ತನಾಗಿ, ಜೀತೇಂದ್ರಿಯನಾಗಿ ಬಾಳಲೆಂದು ರಾಜ ಇನ್ನೂ ತರುಣಿಯರಾದ ತನ್ನ ಎರಡು ಹೆಂಡಿರನ್ನೂ ಕಟ್ಟಿಕೊಂಡು ಕಾಡಿಗೆ ಹೋದ…. +ಅವನ ನಾರಿಯರು ಮರುಗಿದರಂತೆ: ಹೇಗದನ್ನು ನುಡಿದು ತೋರಿಸುತ್ತಾನೆ ನೋಡಿ ನಮ್ಮ ನಾರಣಪ್ಪ! ಅವನು ಯಾವ ಶಬ್ದಕ್ಕೂ ಅಂಜುವವನಲ್ಲ. ಪ್ರಾಕೃತ ಅವನು. ನಮಗೇ ನಾವು ಹೇಗೆ ಅಂದುಕೋತೇವೆ ಈ ಮಹಾಕವಿಗೆ ಗೊತ್ತು. ಶಾಪ ಕೊಟ್ಟವರು ಋಷಿಗಳಾದರೇನು? ಈ ಹೆಂಗಳೆಯರ ಪಾಲಿಗೆ ಅವರು ಮುದಿಹಾರುವರು. +ಯಾವನೋ ಮುದಿಹಾರುವನ ತನಿಬೇಂಟೆ ನಮ್ಮ ಸುಖವನ್ನು ನಾಶಮಾಡಿತಲ್ಲಾ ಎಂದುಕೊತಾರಂತೆ ಅವರು. +ಹೀಗಿರುವಾಗ …. ಒಂದಾನೊಂದು ದಿನ, ಮಧುಮಾಸ ಪ್ರಾಪ್ತವಾಗಿದೆ….(ಕುಸುಮ ಸಮಯ ಎನ್ನುತ್ತಾನೆ ನಮ್ಮ ಕುಮಾರವ್ಯಾಸ) +ಎಂಥ ಮಧುಮಾಸ ಅದು? ಯೋಗಿಗೆತ್ತಿದ ಖಡುಗಧಾರೆ, ವಿಯೋಗಿಗೆತ್ತಿದ ಸಬಳ, ವೇದಾಧ್ಯಯನ ನಿರತರಾದವರಿಗೆ ಎದೆಶೂಲ, ಆದರೆ ಭೋಗಿಗಳ ಕುಲದೈವವಂತೆ ಈ ಕುಸುಮ ಸಮಯ…. +ಆಯಿತಾ, ಕೇಳು ಜನಮೇಜಯ ಧರಿತ್ರೀ ಪಾಲ +ಆ ವಸಂತದೊಳೊಮ್ಮೆ ಮಾದ್ರೀದೇವಿ ವನದೊಳಾಡುತಿರ್ದಳೂ …. +ಅವಳನ್ನು ನೋಡಿ ಅರಸ ಬೆರಗಾದಾ…. +ಸರ್ವಾಂಗ ಶೃಂಗಾರದ ಈ ತರುಣಿ ಊರ್ವಶಿಯೋ? ರಂಭೆಯೋ? ಶಿವ ಶಿವಾ ಎಂದು ಬೆರಗಾದಾ…. +ಈ ಅರಸನ ಪಾಡನ್ನು ಕುಮಾರವ್ಯಾಸ ವರ್ಣಿಸುವುದಾದರೂ ಹೇಗೆ? +ಮನ್ಮಥನ ಹೂಬಾಣ ಐದು ಮಾತ್ರವಲ್ಲ. ರಾಜನ ರೋಮಗಳ ಎಂಟು ಕೋಟಿಯಲಿ ಅವು ತೂಗಿ ನೆಟ್ಟಂತಾಗಿ ಅರಸನ ಪ್ರಜ್ಞಾಸಾಗರ ಇಳಿದಿಳಿದು ಹೋಯಿತಂತೆ. +ಹಿಂದಾದ್ದನೆಲ್ಲ ಕ್ಷಣಮಾತ್ರದಲ್ಲಿ ರಾಜ ಮರೆತು ಬಿಟ್ಟಾ…. +ಕುಂತಿಗೆ ತಿಳಿಯದಂತೆ ಮಾದ್ರಿ ಬಳಿ ಮೆಲ್ಲಮೆಲ್ಲನೆ ಸಾರಿದಾ…. +ಅವಳ ಸೆರಗನ್ನು ಹಿಡಿದೆಳೆದಾ…. +ಬೇಡ ಬೇಡವೆಂದು ಕಾಲಿಗೆ ಬಿದ್ದ ತರುಣಿಯ ತುರುಬು ಹಿಡಿದೆತ್ತಿ ಅವಳು ಹೆಣಗುತ್ತಿದ್ದಂತೆ ಒಡನೆ ಝೋಂಪಿಸಿದಾ…. +ಶಂಬರಾರಿಯ ಬಾಣವಲ್ಲವೆ ? ಹರಿತ ಗಿರಿತನಗಳ ಡೊಂಬಿನ ಆಗಮದ ನೀತಿಗೀತಿಯ ಅದು ಕೊಂಬುದೆ? +ಏನು ಹೇಳ್ತಾನೆ ಕೇಳಿ ನಮ್ಮ ಹಲಗೆ ಬಳಪವಪಿಡಿಯದೊಂದಗ್ಗಳಿಕೆಯ ಕುಮಾರವ್ಯಾಸ? +ಒತ್ತಂಬರದಿ ಹಿಡಿದು, ಅಬಲೆಯನು ಕೂಡಿದನು ಕಳವಳಿಸಿ. +ಅಹಾ ಎಂಥ ಮಾತು! ಕಳವಳಿಸಿ ಕೂಡಿದನು! +ಆ ಸುಖದ ಝೋಂಪಿನಲಿ, +ಕೇಳಿ, ಆ ಸುಖದ ಝೋಂಪಿನಲಿ, ಇಂಥ ಶಬ್ದಗಳೆಂದರೆ ನಮ್ಮ ನಾರಣಪ್ಪನಿಗೆ ಬಲು ಪ್ರೀತಿ; ಮತ್ತೆ ಮತ್ತೆ ಬಳಸುತ್ತಾನೆ…. +ಮೈ ಮರೆಯಿತು….ಮುಖ ಓಸರಿಸಿತು…. ಕಣ್ಣುಗಳು ಮುಚ್ಚಿಕೊಂಡವು….ತೆಕ್ಕೆ ಸಡಲಿತು….ನಿಟ್ಟುಸಿರು ಸೂಸಿತು….ತರುಣಿಯ ಉರ ಉರದಲಿ ತನ್ನ ಕದಪನಿಟ್ಟು ಹಾಗೆಯೇ ಒರಗಿದನು. +ಅಂದರೆ ಇನ್ನೇನು ಕೊಡಬೇಕು….ಅಷ್ಟರಲ್ಲೆ ಪಾಂಡು ಮಹಾರಾಜ ಪ್ರಾಣವನ್ನು ಬಿಟ್ಟಾ…. +(ಅಂದರೇನು ತನಗೆ ತಿಳಿಯದೆಂದು ಗಂಗೆಯ ಪ್ರಶ್ನಾರ್ಥಕ ಕಣ್ಣಿಗೆ ಗೌರಿ ತಾರಮ್ಮಯ್ಯದ ಸನ್ನೆ ಮಾಡುತ್ತಾಳೆ) +ಮಕ್ಕಳನ್ನು ಮಾಡಲು ಋಷಿಗಳು ಯಾಕೆ ಮೃಗಗಳಾಗಿ ಕಾಡಿನಲ್ಲಿ ಕೂಡಬೇಕೆಂಬ ಕುತೂಹಲ ಗಂಗೆಗೆ. +‘ಗೌರಕ್ಕ, ಗೌರಕ್ಕ ಈ ನಾಯಿಗಳೂ ವೇಷ ಹಾಕ್ಕೊಂಡ ಋಷಿಗಳು ಇರಬಹುದಲ್ವೇನೆ?’ +ತಂಗಿಗೆ ಅರ್ಥವಾಗಲೇಬೇಕೆಂಬ ಹಠ ಗೌರಿಗಿಲ್ಲ. ತಾನು ಓದಿ ತಿಳಿದಿದ್ದನ್ನು ಹೇಳುವಳು: +‘ನೋಡು ಗಂಗಾ, ಈ ಮನುಷ್ಯನ ದೇಹದಲ್ಲಿರುವಾಗ ನಮಗೆ ಪರಮ ಸುಖ ಸಾಧ್ಯವಿಲ್ಲಾಂತ ಅಪ್ಪನ ಟ್ರಂಕಿನಲ್ಲಿರೋ ಒಂದು ಪುಸ್ತಕದಲ್ಲಿ ಹೇಳಿದೆ. ಅದಕ್ಕೇ ಮೃಗಗಳಾಗಿ ಋಷಿಗಳು ಕೂಡುವುದಂತೆ. ಮತ್ತೆ ದೇವರನ್ನ ಕಾಣಬೇಕೆಂದರೂ ಈ ದೇಹದಲ್ಲಿರುವಾಗ ಸಾಧ್ಯಾವಿಲ್ಲಂತಲೇ ಕಣ್ಣುಮುಚ್ಚಿ ದೇಹಾನ್ನ ಬಿಸಾಕಿ ದೇವರಲ್ಲಿ ಒಂದಾಗೋದಂತೆ- ರಾಮಕೃಷ್ಣ ಪರಮಹಂಸರು ಹಾಗೇ ದೇವರನ್ನ ಕಂಡು ಮಾತೂ ಆಡ್ತಿದ್ದರಂತೆ. ಕುದುರೆಯಾಗಿ, ಬೆಕ್ಕಾಗಿ, ಹಕ್ಕಿಯಾಗಿ, ಹಂದಿಯಾಗಿ, ಮಂಗನಾಗಿ, ಶಂಕರಾಚಾರ್ಯರಿಗೆ ಚಂಡಾಲನೂ ಆಗಿ ಹೇಗೆ ದೇವರು ಪ್ರತ್ಯಕ್ಷನಾಗಿ ಕಾಣಿಸಿಕೊಳ್ತಾನೆ ಹೇಳಕ್ಕೆ ಅಗಲ್ಲೆ ಅಂತ ಕೇಶವಮಾವ ಹೇಳೊದನ್ನ ಪುಟ್ಟೇಗೌಡರುಸತ ವಾದ ಮಾಡದೆ ಒಪ್ಪಿಕೋತಾರೆ….’ +ಗಂಗೆ ಹೂ ಹೂ ಎನ್ನುತ್ತಾ ಎದುರು ಕಂಡ ಮಾವಿನ ಮರವನ್ನು ಲಂಗಮೇಲಕ್ಕೆತ್ತಿಕಟ್ಟಿ ಹತ್ತುವಳು. ಗೌರಿ ಜೋಕೆ ಎನ್ನುತ್ತ ಅವಳು ಎಸೆಯುವ ಮಾವಿನಕಾಯಿಗೆ ಸೆರಗೊಡ್ಡಿ ನಿಲ್ಲುವಳು. +ಒಂದು ದಿನ ಗೌರಿಯೂ ಬೆಚ್ಚುವಂತಾಯಿತು. ಥಟ್ಟನೆ ಎರಡು ಹಾವುಗಳು ಒಂದಕ್ಕೊಂದು ಹೆಣೆದು ಕೊಂಡು ಎಣೆಯಾಡುವುದನ್ನು ಇಬ್ಬರೂ ಒಟ್ಟಿಗೇ ಕಂಡರು. ಗೌರಿಗೆ ಕಣ್ಣನ್ನು ಆ ದೃಶ್ಯದಿಂದ ಕೀಳಲಾಗಲಿಲ್ಲ. ಯಾರೊ ಋಷಿಗಳಿಗೆ ಅತಿಸುಖದ ಆಸೆಯಿರಬಹುದೆಂದು ಹೇಳಲು ಹೊರಟ ಗಂಗೆ ಅಕ್ಕನ ಮುಖ ನೋಡಿ ಸುಮ್ಮನಾದಳು. ಗೌರಿ ಸಾವರಿಸಿಕೊಂಡು, ಹಾವುಗಳು ಎಣೆಯಾಡುವುದನ್ನು ನೋಡಬಾರದಂತೆ ಕಣೇ, ಎಂದು ತಂಗಿಯನ್ನು ಸರಸರನೆ ಎಳೆದುಕೊಂಡು ಹೋದಳು. +೪ +ಒಂದು ದಿನ ಮುಂಜಾನೆ. ಯಾರಿಗೂ ಇನ್ನು ಸ್ನಾನವಾಗಿಲ್ಲ. ಗುಡ್ಡದ ಮೇಲೆ ಸಂಜೆ ಕಣ್ಣಿಗೆ ಬಿದ್ದಿದ, ಅದರೆ ಸಂಜೆ ಕೊಯ್ಯಬಾರದೆಂದು ಬಿಟ್ಟುಬಂದಿದ್ದ ಒಂದು ಮೊಟ್ಟಿನ ಸಂದಿಯಲ್ಲಿ ಗುಪ್ತವಾಗಿ ಯಥೇಷ್ಟವಾಗಿ ಬೆಳೆದುಕೊಂಡ ಮತ್ತಿಸೊಪ್ಪು ತರಲು ಹೋದಾಗ ಅದು ಕಾಣಿಸಿತು. ಮತ್ತಿ ಸೊಪ್ಪಿನ ಬುಡದಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ಅದು ಕಾಲು ಚಾಚಿ ಮಲಗಿತ್ತು. +ಜಿಂಕೆಯ ಹಾಗೆ ಕಾಣುವ ಪ್ರಾಣಿ ಅದು. ಅಕ್ಕರೆ ಉಕ್ಕಿ ಗಂಗೆ ಬಿಕ್ಕುತ್ತ ಅದನ್ನು ಮುಟ್ಟಿದಳು. ಅದು ಕಣ್ಣುಗಳನ್ನು ತೆರೆದು ಏದುಸಿರು ಬಿಡುತ್ತ ಗುರುತು ಹಿಡಿದಂತೆ ತನ್ನನ್ನು ನೋಡುತ್ತಿದೆಯೆಂದು ಗಂಗೆಗೆ ಭಾಸವಾಗಿ ತಮ್ಮ ಕೊಟ್ಟಿಗೆಯಲ್ಲಿ ಹುಟ್ಟಿದ ಕರುವನ್ನು ಅಕ್ಕು ಎತ್ತಿಕೊಳ್ಳುವಂತೆ ಎತ್ತಿಕೊಂಡಳು. ಅರ್ಧದೂರ ಗೌರಿ ಅರ್ಧದೂರ ಗಂಗೆ ಅದನ್ನು ಎತ್ತಿ ಮನೆಗೆ ತಂದರು. +ಮರಿ ನೋವಿನಲ್ಲಿರುವಂತೆ ಕಂಡಿತು- ಅದರ ಏದುಸಿರಿನ ಗಂಟಲಿನಿಂದ ಯಾವ ದನಿಯೂ ಹೊರಡಲಿಲ್ಲ. ಆದರೆ ಅದರ ಬೊಗಸೆ ಕಣ್ಣುಗಳ ನೋಟ ಮಾತ್ರ ತನ್ನ ಜನುಮಾಂತರಗಳ ಹಿಂದಿನ ನೆನೆಪು ಅದಕ್ಕೆ ಥಟ್ಟನೇ ಆಗಿಬಿಟ್ಟಂತೆ ಇತ್ತು. +‘ಮನೆ ಕೆಲಸ ಸಾಲದು ಅಂದ್ರೆ ಇದೊಂದು ಕೆಲಸ ಬೇರೆ ನನಗೆ’ ಎಂದು ಅಕ್ಕು ಬಯುತ್ತಲೇ ಅದರ ಶುಶ್ರೂಶೆಗೆ ಮುಂದಾದಳು. ಕೇಶವ ಅದು ಜಿಂಕೆಯ ಮರಿಯಲ್ಲವೆಂದ; ಅದೇನು ತನಗೆ ತಿಳಿಯದು ಎಂದ. ಪುಟ್ಟೇಗೌಡನಿಗೆ ತೋರಿಸಿದ. ಬೇಟೆಯ ಹುಚ್ಚಿನ ಪುಟ್ಟೇಗೌಡನೂ ಅದನ್ನು ನೋಡಿ ಆಶ್ಚರ್ಯಪಟ್ಟ. ಮರಿಯ ಮೂತಿ, ಮೂತಿಗಿಂತ ಹೆಚ್ಚಾಗಿ ಅದರ ಕಣ್ಣಿನ ನೋಟ – ಅವನಾದರೂ ಈವರೆಗೆ ಕಂಡ ಯಾವ ಪ್ರಾಣಿಯಲ್ಲೂ ಕಂಡಿರಲಿಲ್ಲ. +ಕೇಶವ ತನಗೆ ಗೊತ್ತಿರುವ ಮದ್ದುಗಳನ್ನೆಲ್ಲ ಅರೆದು ಅದಕ್ಕೆ ಕುಡಿಸಿದ. ಮಂತ್ರಿಸಿದ ಯಂತ್ರವೊಂದನ್ನು ಅದರ ಕೊರಳಿಗೆ ಕಟ್ಟಿದ. ನಿತ್ಯ ದೇವರ ತೀರ್ಥ ಕುಡಿಸಿದ. +ದೇವಲೋಕದ ಅತಿಥಿಯೆಂಬಂತೆ ಉಪಚರಿಸಿಕೊಳ್ಳುತ್ತ ಮನೆಯವರ ಅರ್ಧದ ಹಾಲು ಕುಡಿದು ದಿನೇ ದಿನೇ ಅದು ಬೆಳೆದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪುರಾಣವಾಯಿತು. +ಒಂದು ವಾರದ ಉಪಚಾರದಲ್ಲೆ ಅದು ಚೇತರಿಸಿಕೊಂಡಿತ್ತು. ಚೇತರಿಸಿಕೊಂಡಿದ್ದೇ ಈ ಮರಿ ಅತ್ತಿತ್ತ ಸುಳಿದಾಡಿ, ಗಂಗೆ ಗೌರಿಯರನ್ನು ಮೂಸಿ, ಒಮ್ಮೆಗೇ ಚಂಗನೆ ಅದೆಷ್ಟು ಎತ್ತರ ಹಾರಿತೆಂದರೆ ಹಿತ್ತಲಿನ ಸೂರು ಅದರ ತಲೆಗೆ ತಾಕಿತು. ಆಮೇಲಿಂದ, ನಿಂತಲ್ಲಿ ನಿಲ್ಲುವ ಮೃಗ ಅದಲ್ಲ. ಗಂಗೆ ಇದನ್ನು ನೋಡಿ ಈ ಲೋಕದಲ್ಲೇ ಉಳಿಯಲಿಲ್ಲ. ಕೇಶವನಂತೂ ಈ ಮರಿ ಲೋಕದ್ದಲ್ಲವೇ ಅಲ್ಲ ಎಂದು ಮನೆಗೆ ಬಂದವರಿಗೆಲ್ಲ ಹೇಳತೊಡಗಿದ. ಕಾಡಿನಲ್ಲಿ ತಪಸ್ಸು ಮಾಡ್ತಾ ಇರೊ ಋಷಿಯೊಬ್ಬನ ಮಗ ಇದು ಇರಬಹುದಲ್ಲವ ಎಂದರೆ, ಕೇಶವ “ಯಾಕಿರಬಾರದು”? ಎಂದು ಗಂಗೆಯ ಕಲ್ಪನೆಗೆ ಗರಿ ಮೂಡಿಸಿದ. +ಅಕ್ಕಯ್ಯ ಮಾತ್ರ ಇಂಥ ಊಹೆಗಳಿಗೆ ಸೊಪ್ಪು ಹಾಕದಿದ್ದರೂ ಗಾಬರಿಯಾದಳು; ಇದನ್ನು ಸಾಕುವುದು ತಪ್ಪಾದರೆ, ನಮಗೆ ಕೆಟ್ಟದಾದರೆ? ನಮ್ಮದಲ್ಲದ್ದನ್ನು ನಾವು ಬಯಸಬಾರದಲ್ಲವೆ? ಎಂದು ಚಿಂತಿಸುತ್ತ, ಸೀತೆಯನ್ನೇ ಮರುಳುಗೊಳಿಸಿದ ಮಾಯಾಮೃಗದಂತೆ ಇದು ಇರಬಹುದೆಂದು ಶಂಕಿಸುತ್ತ, ಎಳೆಯನಂತೆ ಆಡುವ ತಮ್ಮನನ್ನು ಬಯುತ್ತ ಹಾಲು ಅನ್ನ ತಿನ್ನಿಸಿ ಪ್ರಾಣಿಯನ್ನು ಮುದ್ದಿನಲ್ಲೇ ಸಾಕಿದಳು. +ಹೀಗೆ ಚಂಗನೆ ನೆಗೆಯುವ ಪ್ರಾಣಿ ಗಂಗೆಯ ಕೈಯಿಂದ ಹುಲ್ಲು ತಿನ್ನುತ್ತ ಮೂತಿಯೆತ್ತಿದಾಗ ಅವಳ ಪ್ರಕಾರ ಮಾತಾಡುತ್ತ, ಬಾಲ ನಿಮಿರಿಸಿದಾಗ ನಗುತ್ತ, +ಅಂಬೆಗಾಲಿನ ಮಗುವಿನಂತೆ ಬಾಯಿ ಕಳೆದು ಬಾಯಿಗೆ ಮಿಳ್ಳೆಯಿಂದ ಹಾಲು ಸುರಿಸಿಕೊಳ್ಳುತ್ತ ತುಂಟು ಆಟದಲ್ಲಿ ಅವಳಿಗೆ ಹಾಯುತ್ತ, ಅವಳ ಮಗ್ಗುಲಲ್ಲೆ ರಾತ್ರೆ ಚಾಪೆಯ ಮೇಲೆ ಮಲಗುತ್ತ, ಅವಳ ಕೆನ್ನೆಯನ್ನು ನೆಕ್ಕುತ್ತ ಕೆಲವು ದಿನಗಳು ಮನೆಯ ಸಾಕಿದ ಪ್ರಾಣಿಯಂತಿತ್ತು. +ಅಂಗಳ ದಾಟಲು ಕೂಡ ಗಂಗೆಗಾಗಿ ರತ್ನ ಗಂಧಿ ಬೇಲಿಯ ಬಳಿ ಕಾಯುತ್ತಿದ್ದ ಗೂಢವಾದ ಕಾಡಿನ ಈ ಅತಿಥಿ ಒಂದು ದಿನ ಬೆಳಿಗ್ಗೆ ಎಲ್ಲರ ಕಣ್ಣಿದಿರಿಗೆ, ದೂರದಲ್ಲಿ ಏನನ್ನೋ ಕಾಣುತ್ತಿರುವಂತೆ ಕಿವಿನಿಮಿರಿಸಿ ಕತ್ತೆತ್ತಿ ನೋಡುತ್ತ ನಿಂತೇ ಇದ್ದದ್ದು, ಎಲ್ಲರೂ ನೋಡುನೋಡುತ್ತಿದ್ದಂತೆಯೇ, ಎಳೆಬಿಸಿಲನ್ನು ಕುಡಿದು ಉನ್ಮತ್ತವಾದಂತೆ, ಏನೋ ಥಟ್ಟನೆ ನೆನಪಾಗಿಬಿಟ್ಟಂತೆ, ನಾಗಾಲೋಟದಲ್ಲಿ ಗುಡ್ಡದ ಮೇಲೆ ಕ್ಷಣದಲ್ಲಿ ಓಡಿ ಮಾಯವಾಗಿಬಿಟ್ಟಿತು. +ಗುಡ್ಡದಲ್ಲಿ ಎಲ್ಲೆಲ್ಲೂ, ದಭೆದಭೆಗಳ ಅಡಿಯಲ್ಲಿ, ಹುಲಿಹೆಜ್ಜೆಗಳ ಜಾಡಿನಲ್ಲಿ, ಬಿದಿರಿನ ಹಿಂಡಲುಗಳಲ್ಲಿ, ಅಬ್ಬರಿಗಳ ಅಂಚಿನಲ್ಲಿ, ತಳದಲ್ಲಿ, ಅಲೆದು‌ಅಲೆದು ಹುಡುಕಿದ್ದಾಯಿತು; ಗಿರಿಜಾ ಗಿರಿಜಾ ಎಂದು ಗಂಗೆ ಅದನ್ನು ಕೂಗಿ ಕೂಗಿ ಕರೆದದ್ದಾಯಿತು. ಆದರೆ ಕಾಡಿನ ಗೂಢ ಅತಿಥಿ ಮಾಯವಾಗಿ ಬಿಟ್ಟಿತು. +ಗಂಗೆ ಅತ್ತಳು. ಊಟ ಬಿಟ್ಟಳು. ಅತ್ತು ಅತ್ತು ಮಲಗಿದಳು ಎರಡು ದಿನಗಳಲ್ಲಿ ಅವಳ ಕಣ್ಣುಗಳು ಕೆಂಪಾಗಿ ಮೈ ಸುಡತೊಡಗಿತು. +ಏರಿದ ಜ್ವರದಲ್ಲಿ ಗಿರಿಜಾ ಗಿರಿಜಾ ಎಂದು ಕಣ್ಮರೆಯಾದ ತನ್ನ ವಸ್ತುವನ್ನು ಕರೆಯುತ್ತಲೇ ಇದ್ದಳು. ಕರೆದು ಕರೆದು ಅವಳ ಗಂಟಲು ಒಣಗಿ ಅವಳ ಮಾತು ನಿಂತಿತು. ಆದರೂ ಸನ್ನೆ ಮಾಡಿ ಕರೆಯುವಳು. ಮೃತ್ಯುಂಜಯ ಜಪ ಮಾಡುತ್ತ ಕೇಶವ ಇಡೀ ಹಗಲು ಇಡೀ ರಾತ್ರೆ ಅವಳ ಪಕ್ಕದಲ್ಲೆ ಕೂತಿದ್ದ. ಬೆಳಗಾಯಿತು. ಕೋಳಿ ಮೂರು ಸಾರಿ ಕೂಗಿದ್ದು ಕೇಳಿತು. +ಇನ್ನೂ ಆಳದ ನಿದ್ದೆಗೆ ಜಾರುವಾಗ ಶ್ವಾಸವನ್ನು ಎಳೆದುಕೊಳ್ಳುವಂತೆ ಗಂಗೆ ನಿಧಾನ ಎಳೆದುಕೊಂಡಳು; ಮತ್ತೆ ಬಿಟ್ಟಳು. ಎಚ್ಚರಾಗುವ ಹಕ್ಕಿಗಳ ಸಂಭ್ರಮದ ಚಿಲಿಪಿಲಿಯನ್ನು, ಗೂಡು ಬಿಡುವ ರೆಕ್ಕೆಗಳ ಅವಸರವನ್ನು ಆಲಿಸುತ್ತ ಪಕ್ಕದಲ್ಲೇ ಕೂತಿದ್ದ ಗೌರಿ ಹೀಗೇ ಅವಳು ಹೊರಟೇ ಹೋಗಿಬಿಟ್ಟಿದ್ದನ್ನು ಅರಿತಳು. ತೆರೆದಿದ್ದ ತಂಗಿಯ ನೀಳವಾದ ರೆಪ್ಪೆಯ ಕಣ್ಣುಗಳನ್ನು ಮುಚ್ಚಿದಳು. ಮಾಯವಾದ ದಿವ್ಯಮೃಗದ ಕಣ್ಣುಗಳೇ ಅವಳವು. ಎಲ್ಲ ಅತ್ತರೂ ಗೌರಿ ಅಳಲಿಲ್ಲ. +೫ +ಗಂಗೆ ಸತ್ತ ಮೇಲೆ ಗೌರಿಯ ಚರ್ಯೆ ಬದಲಾಗುತ್ತ ಹೋಯಿತು. ಗಂಭೀರಳಾದಳು. ತನ್ನಲ್ಲೇ ಅಡಗಿ ಮೊಗ್ಗಾದಂತೆ ಕಾಣತೊಡಗಿದ ಅವಳು ಬಯ್ಗಳದಲ್ಲೆ ಎಲ್ಲರ ಪಾಲನೆ ಮಾಡುವ ಅಕ್ಕಯ್ಯನಿಗೆ ಸಮಸ್ಯೆಯಾದಳು. ಕೀಟಲೆಗಳ ಮೂಲಕ ರಮಿಸುವ ಕೇಶವನಿಗೆ ರಹಸ್ಯವಾದಳು. +ಈಗ ನಿಧಾನ ನಡೆಯುವಳು; ಬಿಸಿಲಿನಲ್ಲಿ ತಲೆ ಒಣಗಿಸಿಕೊಳ್ಳುತ್ತ ಎಲ್ಲೋ ಏನೋ ನೋಡುವವಳಂತೆ ನಿಲ್ಲುವಳು. ಜಡೆ ಹಾಕಳು. ಹೂ ಮುಡಿಯಳು, ಸದಾ ಓಡಾಡಿಕೊಂಡೇ ಇರುತ್ತಿದ್ದವಳು ಕೇಶವನ ದೀರ್ಘವಾದ ಪೂಜೆಯ ವೇಳೆಯಲ್ಲಿ ಕಣ್ಣು ಮುಚ್ಚಿ ಕೂತಿರುವಳು. ಅಕ್ಕಯ್ಯನಿಗೆ ಎದುರಾಡಳು. ರಾತ್ರೆ ಊಟವಾದ ಮೇಲೆ ಹಿತ್ತಲಿನಲ್ಲಿ ಮಾಯವಾಗುವಳು. ಹಾಸಿಗೆ ಹಾಸಿಕೊಳ್ಳದೆ ಗಿರಿಜ ಮಲಗುತ್ತಿದ್ದ ಚಾಪೆಯ ಮೇಲೆ ಮಲಗುವಳು. +ಅಕ್ಕು ಏನೇನೋ ಹರಕೆ ಹೇಳಿಕೊಂಡಳು: ಏಳ್ರಾಟದ ಶನಿಗೆ, ಪಶುಪತಿಯಾದ ಶಿವನಿಗೆ, ಸತ್ಯನಾರಾಯಣನಿಗೆ, ಊರಿನ ಮಾರಿಗೆ, ಮನೆಯ ದೇವರಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಅಣ್ಣಪ್ಪನಿಗೆ, ಅಶ್ವತ್ಥ ವೃಕ್ಷದ ಬುಡದ ನಾಗನಿಗೆ, ತಿರುಪತಿಯ ತಿಮ್ಮಪ್ಪನಿಗೂ – ಗೌರಿಯ ಭ್ರಮೆಯನ್ನು ಕಳೆಯಪ್ಪ, ಅವಳೊಂದು ಗಂಡನ ಮನೆ ಸೇರುವಂತೆ ಕರುಣಿಸಪ್ಪ, ಎಂದು. +ಗೌರಿಗೆ ಭ್ರಮೆ ಇರಬಹುದೆಂದು ಸರ್ಪಗಣ್ಣಿನ ಅಕ್ಕು ತಿಳಿಯಲು ಅವಳದೇ ತರ್ಕದಿಂದ ಹುಟ್ಟಿದ ಕಾರಣವಿತ್ತು. ಗೌರಿಗೆ ಗೊತ್ತಿಲ್ಲದಂತೆ ಒಂದು ಬೆಳದಿಂಗಳಿನ ರಾತ್ರಿ ಅವಳ ಬೆನ್ನ ಹಿಂದೆಯೇ ನಡೆದು ಕಂಡದ್ದು ಶುದ್ಧಸಂಸಾರಿಯಾದ ಅವಳಿಗೆ ವಿಚಿತ್ರವೆನ್ನಿಸಿತ್ತು. ಗೌರಿ ಸಂಪಗೆಯ ಮರದ ಅಡಿ ನಿಂತು ತಾನು ಬಡಿಸಿಕೊಂಡು ತಂದ ಹಾಲನ್ನವನ್ನು ಮರದ ಬುಡದಲ್ಲಿಟ್ಟು ಕಾದಳು. ಅಲ್ಲಿಗೊಂದು ಕಪ್ಪುಬೆಕ್ಕು ಸದ್ದಿಲ್ಲದೆ ಬಂತು. ಅಕ್ಕುಗೆ ಹೆದರಿಕೆಯಾಗುವಂತೆ ಅವಳನ್ನು ಅದು ನೋಡಿತು. ಬೆಕ್ಕು ಮತ್ತು ಗೌರಿ ಎದುರುಬದಿರಾಗಿ ಏನೋ ಒಬ್ಬರಿಗೊಬ್ಬರು ಹೇಳಿಕೊಳ್ಳುವಂತೆ ಗಹನವಾಗಿ ನಿಂತರು. ಬೆಕ್ಕು ಮತ್ತು ಮನುಷ್ಯ ಪ್ರಾಣಿಯ ಸರ್ವೇಸಾಮಾನ್ಯವಾದ ಅಡುಗೆ ಮನೆ ಒಲೆ ಎದುರಿಗಿನ ಸಮಾಗಮದಂತೆ ಕಾಣಲಿಲ್ಲ. ಹಾಲು ಕದಿಯಲು ನಿತ್ಯ ಬರುವ, ಇಲಿಗಳನ್ನು ಹಿಡಿಯುವ ತಮ್ಮ ಅಕ್ಕರೆಯ ಬಯ್ಗಳದ ಬೆಕ್ಕು ಅದಾಗಿರಲಿಲ್ಲ. ಯಾವುದೋ ಗೂಢದಿಂದ ಪ್ರತ್ಯಕ್ಷವಾದ ಕಡುಕಪ್ಪು ಬಣ್ಣದ ಬೆಕ್ಕು ಅದಾಗಿತ್ತು. ಅದು ದೆವ್ವ ಎಂದುಕೊಂಡು ನಡುಗುತ್ತ ಅಕ್ಕು ನೋಡಿದಳು. ಗೌರಿ ಹಿಂದಕ್ಕೆ ತಿರುಗಿ ಅಕ್ಕುವನ್ನು ನೋಡಿದರೂ ಏನೂ ಹೇಳದೆ ನಿತ್ಯದ ತನ್ನ ಕೆಲಸವೆಂಬಂತೆ ಬೆಕ್ಕಿನ ಕಡೆ ತಿರುಗಿ ನಿಂತಳು. +ಆಮೇಲೆ ಬೆಕ್ಕು ತುಂಬ ಇಷ್ಟವಾದಂತೆ ಬಾಳೆಲೆಯನ್ನು ನೆಕ್ಕಿನೆಕ್ಕಿ ಹಾಲನ್ನವನ್ನು ತಿಂದಿತು. ಕಾಡಿನ ದಿಕ್ಕಿನಲ್ಲಿ ತರಗೆಲೆ ತುಳಿದ ಸದ್ದೂ ಆಗದಂತೆ ಓಡಿತು. +ಇದೇನು, ಎತ್ತ, ಕೇಳಲಾರದೆ ಗೌರಿಯಲ್ಲಿ ಯಾವುದೊ ದೆವ್ವವೋ ದೇವತೆಯೋ ಹೊಕ್ಕಿದೆ ಎಂದು ಭೀತಳಾದ ಅಕ್ಕು ಹಿಂತಿರುಗಿ ನೋಡದೆ ಸರಸರನೆ ಮನೆಗೆ ಬಂದಳು. ಗೌರಿ ಮನೆ ಚಿಟ್ಟೆಯ ಮೆಟ್ಟಿಲು ಹತ್ತುತ್ತ ತುಂಬ ಶಾಂತವಾಗಿ, ‘ಅಕ್ಕು ಯಾಕೆ ಇನ್ನು ಮಲಗಿಲ್ಲ. ಹೋಗಿ ಮಲಗು’ ಎಂದಳು. ಅದು ಅವಳ ಎಂದಿನ ಧ್ವನಿಯಾಗಿರಲಿಲ್ಲ. ಅಕ್ಕುವನ್ನು ಏನೂ ಅರಿಯದ ಒಂದು ಮಗುವೋ ಎನ್ನುವಂತೆ ಅವಳು ಕಂಡಂತಿತ್ತು. +ಅಕ್ಕು ಸರಸರನೆ ಅಡುಗೆಯ ಮನೆಗೆ ಹೋಗಿ ಮುಷ್ಟಿಯಲ್ಲಿ ಒಂದಿಷ್ಟು ಉಪ್ಪು ಪೊರಕೆಯ ಚೂರು ತಂದಳು. ಗೌರಿಯ ಮುಖಕ್ಕೆ ಅದನ್ನು ಸುಳಿದಳು. ಸದಾ ಉರಿಯುವ ಬಚ್ಚಲಿನ ಒಲೆಗೆ ಅದನ್ನು ಎಸೆದು ಸೊಂಟದ ಮೇಲೆ ಕೈಯಿಟ್ಟು ಕಾದಳು. ಅದು ಚಟಪಟಗುಟ್ಟುವುದರಿಂದ ಕೊಂಚ ಸಮಾಧಾನಗೊಂಡು ಜಪ ಮಾಡುತ್ತ ಮಲಗಿದಳು. +೬ +ಮಾರನೆ ದಿನದಿಂದ ಅಕ್ಕು ತನಗೆ ತಲೆ ಸುತ್ತಿ ಬರುತ್ತಿದೆ ಎಂದು ಮಲಗಿಬಿಟ್ಟಳು ಕೊಟ್ಟಿಗೆ ಕೆಲಸದಿಂದ ಹಿಡಿದು ಅಡಿಗೆ ಇತ್ಯಾದಿ ಎಲ್ಲವನ್ನೂ ಕೇಶವನ ಸಹಾಯವನ್ನೂ ತೆಗೆದುಕೊಳ್ಳದೆ ಗೌರಿಯೇ ಮಾಡುವುದು ನೋಡಿ ಅವಳಿಗೆ ಕಷ್ಟವಾದರೂ ಸಮಾಧಾನವೂ ಆಯಿತು. ಆದರೆ ಯಥಾಪ್ರಕಾರ ಗೌರಿ ಕತ್ತಲಾಗುತ್ತಿದ್ದಂತೆಯೇ ಅದೊಂದು ಪೂರ್ವನಿಶ್ಚಿತ ಭೇಟಿ ಎಂಬಂತೆ ಹಿತ್ತಲಿನ ಸಂಪಗೆ ಮರದ ಬುಡದಡಿ ನಡೆದು ಬಿಡುವಳು. ಪ್ರತಿ ಸಂಜೆಯೂ ಅವಳು ಹೊರಗೆ ಹೋಗುವುದನ್ನು ಅಕ್ಕು ಗಮನಿಸಿ ಇನ್ನಷ್ಟು ಆತಂಕಗೊಂಡಳು. ಮದುವೆಯಾಗದ ಹುಡುಗಿಯೆಂಬುದು ದೆವ್ವದ ಕಾಟಕ್ಕೆ ಸುಲಭವಾದ ಕಾರಣವಾಗಿರಬಹುದೆಂದು ಇನ್ನಷ್ಟು ಗಾಬರಿಯಾಯಿತು. ಗಂಡಸರನ್ನು ಮೋಹಿನಿ ಕಾಡುವಂತೆ ಗೌರಿಯನ್ನು ಯಾವುದಾದರೂ ಬ್ರಹ್ಮರಾಕ್ಷಸ ಹಿಡಿದುಬಿಟ್ಟಿದ್ದರೆ ಅವಳ ಮೈ ಇಳಿದು ಹೋಗುವುದು ಖಂಡಿತ. ಅವಳ ಗರ್ಭ ಒಣಗಿ ಹೋಗುವುದು ನಿಶ್ಚಿತ. +ಅಕ್ಕು ಶುಶ್ರೂಶೆಯನ್ನು ಗೌರಿ ಸ್ವಂತ ಮಗಳಂತೆ ಮಾಡಿದಳು. ತನ್ನ ತಂದೆಯ ಕಾಲದಿಂದ ಮನೆಯಲ್ಲಿ ಜೋಪಾನವಾಗಿ ಕಾದಿಟ್ಟ, ಸರ್ವರೋಗ ನಿವಾರಿಣಿಯೆಂದು ಪ್ರಸಿದ್ಧವಾದ ಉಂಡೆಯೊಂದನ್ನು ತೆಯ್ದು, ಜೇನು ತುಪ್ಪದಲ್ಲಿ ಅದನ್ನು ಕಲಸಿ, ನೆಕ್ಕಿಸಿ, ಬೆನ್ನಿಗೆ ಬಿಸಿನೀರಿನ ಶಾಕಕೊಟ್ಟು ಕೊಂಚ ಹೊತ್ತು ಮಲಗಿಸಿ, ಮತ್ತೆ ಎಬ್ಬಿಸಿ, ಮಣೆ ಮೇಲೆ ಕೂರಿಸಿ, ‘ನಿನಗೆ ಉಷ್ಣವಾಗಿದೆ’ ಎಂದು ಗದರಿಸಿ, ಪುಸಲಾಯಿಸಿ, ಅವಳ ಬೋಳುತಲೆಗೆ ತೆಂಗಿನ ಎಣ್ನೆ ಹಚ್ಚಿ, ಎರೆದು, ಅವಳ ಕಿರಿಕಿರಿಗೆ ಕಿವಿಗೊಡದೆ, ಮತ್ತೇನೋ ಕೆಲಸವಿರುವಂತೆ ಗುಡ್ಡದ ಕಡೆ ನಡೆದುಬಿಡುವುದು. ಅವಳು ಹೊರ ಹೋದದ್ದೇ ಅಕ್ಕು ತನಗೇನೂ ಆಗಿಲ್ಲವೆಂಬಂತೆ ಎದ್ದು ಕೂತು ತನ್ನ ತಮ್ಮನನ್ನು ಪೀಡಿಸತೊಡಗುವಳು- ಗೌರಿಯನ್ನು ಅವನೇ ಮದುವೆಯಾಗಬೇಕೆಂದು. +ಮುಂಚಿನಿಂದಲೂ ಅಕ್ಕು ಈ ವಿಷಯವನ್ನು ಬಗೆಬಗೆಯಾಗೆ ಎತ್ತಿದ್ದಿದೆ. ಆದರೆ ಪ್ರತಿಸಾರಿಯೂ ಅದನ್ನೊಂದು ತಮಾಷೆಯೆಂಬಂತೆ ಗೌರಿಯೂ ಗಂಗೆಯೂ ಕೇಶವನೂ ಅಕ್ಕುವನ್ನೆ ಹಾಸ್ಯ ಮಾಡುತ್ತಿದ್ದರು. +‘ಮದುವೆಯಾಗೋ ಹುಡುಗಿ ಮನೆಗೆ ನಾನು ದಿಬ್ಬಣದಲ್ಲಿ ಹೋಗೋದು ಹೇಗೆ ಸಾಧ್ಯವೇ? ಮದುವೆಯಾಗೋ ಹೆಣ್ಣು ಇಲ್ಲೇ ವಕ್ಕರಿಸಿದ್ದಾಗ?’ +ಮುಷ್ಟಿ ಮಾಡಿದ ಬಲಗೈಯನ್ನು ಮೇಲಕ್ಕೆತ್ತಿ ಆಡಿಸುತ್ತ ಯಕ್ಷಗಾನದ ವೇಷದಂತೆ ಸವಾಲು ಹಾಕಿ, ಹಿಂದಕ್ಕೆ ಸರಿದು, ಮತ್ತೆ ಮುಂದೆ ಬಂದು ಅಕ್ಕುವಿನ ಮುಖಕ್ಕೆ ಎದುರಾಗಿ ಕೇಶವ ನಿಲ್ಲುವನು. ಮುಖವನ್ನೇ ದಿಟ್ಟಿಸುತ್ತ, ಎತ್ತಿದ ಬಲಮುಷ್ಟಿಯನ್ನು ಭಾವಯುಕ್ತವಾಗಿ ಇಳಿಸಿ, ಎಡ ಅಂಗೈ ಮೇಲೆ ಗುದ್ದುತ್ತ ರಾಗವಾಗಿ ಹೇಳುವನು. +‘ಅಕ್ಕಯ್ಯ ನಾನು ಕಾಶೀಗೆ ಹೊರಟು ನಿಂತಾಗ ನನಗೊಂದು ಕೊಡೇನೂ ಹೊದೆಯಲೊಂದು ಅಂಗವಸ್ತವನ್ನೂ ಯಥಾವತ್ತಾಗಿ ಕೊಟ್ಟು, “ಕಾಶಿಗೆ ಹೋಗಬೇಡಪ್ಪ, ನಮ್ಮ ಹುಡುಗಿಯ ಪಾಣಿಗ್ರಹಣ ಮಾಡಿ, ಕನ್ಯಾಸೆರೆಯಿಂದ ನನ್ನನ್ನು ಬಿಡಿಸಿ ಪುಣ್ಯವಂತನಾಗಪ್ಪ” ಎಂದು ಮತ್ತೆ ಹಿಂದಕ್ಕೆ ನನ್ನ ಸಾಕ್ಷಾತ್ ಅಕ್ಕಯ್ಯನಾದ ನೀನೇ, ಈ ಕೇಶವ ನಾಮಧೇಯನಾದ ವರಕುಮಾರನನ್ನ ಕರಕೊಂಡು ಬರೋದೇನೇ?’ +ಗೌರಿ ತನ್ನ ಎರಡು ಕೈಗಳನ್ನೂ ಸೊಂಟದ ಮೇಲಿಟ್ಟು ಯಕ್ಷಗಾನದ ಹೆಣ್ಣು ಪಾತ್ರದಂತೆ ವಯ್ಯಾರದಲ್ಲಿ ವಾದಕ್ಕೆ ನಿಲ್ಲುವಳು: +‘ಈ ಮಾವನನ್ನ ಬಹುವಚನದಲ್ಲೇ ಕರೆಯೋಕೆ ನನಗೆ ಬರಲ್ವಲ್ಲೇ ಅಕ್ಕಯ್ಯನೆಂಬ ನಮ್ಮ ದೇವೀ. ಮತ್ತೆ ಭಾಗ್ಯವಂತಳಾಗಬೇಕೆಂದು ನನ್ನ ದೇವಿಯಾದ ನೀವೇ ಬಯಸುವ ನಾನೇನಾದರೂ ಇವನನ್ನ ಮದುವೆ ಆದದ್ದೇ ಆದರೆ ಜುಟ್ಟು ಕತ್ತರಿಸ್ತಾನಾ? ಅಂಗಿ ಹಾಕ್ಕೋತಾನಾ? ಪಟ್ಟಣಗಳ ಬೀದಿಗಳ ಮೇಲೆ ಈ ಗೊಡ್ಡು ವೈದಿಕನ ಜತೆ ನಾನು ಹೇಗೆ ಅಡ್ಡಾಡಬಹುದು ಹೇಳು ದೇವಿ?’ +‘ದರಿದ್ರ ಬುದ್ಧಿಯ ಹುಡುಗಿ. ಪೇಟೇ ಶೂದ್ರನನ್ನೋ, ಜೈಲಿಗೆ ಹೋಗಿ ಬಂದು ಮಡಿಮೈಲಿಗೆ ಎಲ್ಲ ಬಿಟ್ಟ ಕಾಂಗ್ರೇಸ್‌ನವನನ್ನೋ ಮದುವೆಯಾಗು ಹಾಗಾದರೆ’ +‘ಜೈಲಿಗೆ ಹೋಗಿರೋ ನಮ್ಮ ಸಾಹುಕಾರ್ರಿಗೆ ವಯಸ್ಸಾಗಿಬಿಟ್ಟಿದೆಯಲ್ಲೇ ಅಕ್ಕಯ್ಯನೆಂಬ ನಮ್ಮ ದೇವಿ. ಮುದುಕನನ್ನ ಆಗು ಅಂತಿಯಾ, ಮಂಗಳೂರಿನಲ್ಲಿ ಅವರಿಗೆ ಯಾರೋ ಇದಾರೇಂತ ಈ ಅಧಿಕ ಪ್ರಸಂಗಿಯಾದ ನಿಮ್ಮ ತಮ್ಮನೇ ಹೇಳ್ತಿದ್ದ.’ +‘ಈ ಬಜಾರೀನ್ನ ಈ ಪುರೋಹಿತ ಭಟ್ಟ ಮದುವೆಯಾದರೆ, ಗಂಡನನ್ನ ಮಾರಿ ಒಂದು ಮೂಟೆ ಮಂಡಕ್ಕಿ ಕೊಂಡುಬಿಟ್ಟಾಳು ಅಕ್ಕಯ್ಯ.’ ಅಳು ನಟಿಸುತ್ತ ಕೇಶವ ಸ್ವಸ್ವರೂಪ ಧಾರಿಯಾಗಿ ಹೇಳುವನು. +ಪುಟ್ಟ ಗಂಗೆಯೂ ಈ ಹಾಸ್ಯದಲ್ಲಿ ಭಾಗಿಯಾಗುವಳು: +‘ಅಕ್ಕಯ್ಯ ಅಕ್ಕಯ್ಯ ದಮ್ಮಯ್ಯಕಣೆ ಅಕ್ಕಯ್ಯ, ಮಾವಯ್ಯನನ್ನ ನಾನೇ ಮದುವೆಯಾಗ್ತೇನೆ ….ಅವನು ಎಷ್ಟು ಚೆನ್ನಾಗಿ ಬೆನ್ನು ಉಜ್ಜುತ್ತಾನೆ, ಎಷ್ಟು ಒಳ್ಳೆ ಪೆಟ್ಲು ಮಾಡಿಕೊಡ್ತಾನೆ, ಎಷ್ಟು ಚೆನ್ನಾಗಿ ಹೂ ಕಟ್ತಾನೆ, ಎಷ್ಟು ಜೋರಾಗಿ ಕಾಲನ್ನ ಮೇಲಕ್ಕೆತ್ತಿ ಕೈ ಮೇಲೇನೇ ನಡೀತಾನೆ, ದಾಸರ ಪದ ಹಾಡ್ತಾನೆ. ತನ್ನ ಪಾಣೀ ಪಂಚೆ ಜೊತೆ ನನ್ನ ಲಂಗಾನೂ ಒಗೆದು ಕೊಡ್ತಾನೆ ಬೇಕಾದರೆ, ಅಂಟುವಾಳದ ಕಾಯೀನಲ್ಲಿ ಅಲ್ಲ, ಬಾರು ಸೋಪಿನಲ್ಲಿ.’ +ಯಾವಾಗಲೋ ಪೇಟೆಯಿಂದ ಬರುವಾಗ ಕೇಶವ ಸೋಪು ಕೊಂಡು ತಂದದ್ದು ಯಾಕೆಂದು ಯಾವ ಅನವಶ್ಯಕ ಖರ್ಚಿಗೂ ಅವಕಾಶ ಕೊಡದ ಅಕ್ಕು ಪುಕಾರು ಎತ್ತಿದ್ದನ್ನು ಘಾಟಿ ಹುಡುಗಿ ಗಂಗೆ ಕೇಳಿಸಿಕೊಂಡು ಬಿಟ್ಟಿದ್ದಳು. ಅಕ್ಕುವೂ ನಗು ತಡೆಯಲಾರದೆ, +‘ಇಷ್ಟು ವಯಸ್ಸಾದರೂ ಮಕ್ಕಳಾಟ ಬಿಡದ ನಿಮ್ಮ ದುರ್ಬುದ್ಧಿಗೆ ಏನನ್ನಲಿ’ ಎಂದು ಬಯುತ್ತ ಒಳಗೆ ನಡೆದು ಬಿಡುವಳು. +೭ +ಮಾಗಿ ಕಾಲದ ಒಂದು ಏಕಾದಶಿ. ಮನೆಯಲ್ಲಿ ಒಲೆಹಚ್ಚಿರಲಿಲ್ಲ. ಅಕ್ಕು ಹಿಂದೆ ಫಲಾಹಾರ ಮಾಡುತ್ತಿದ್ದವಳು ಅವತ್ತು ನೀರನ್ನು ಸಹ ಮುಟ್ಟಿರಲಿಲ್ಲ. ಇನ್ನು ಮುಂದೆ ಉಗುಳನ್ನು ನುಂಗುವುದಿಲ್ಲವೆಂಬ ವ್ರತಹಿಡಿದಿದ್ದಳು. +ಆದರೆ ಅಕ್ಕು ಹಿಂದಿನವಾರ ಮಡಿಯಲ್ಲಿ ಕುಟ್ಟಿಟ್ಟಿದ್ದ ಅವಲಕ್ಕಿಯನ್ನು ನೆನೆಸಿ, ಅದಕಷ್ಟು ಮೊಸರನ್ನೂ ಮಾವಿನಮಿಡಿ ಉಪ್ಪಿನ ಕಾಯಿಯ ಖಾರವಾದ ರಸವನ್ನೂ ಬೆರೆಸಿ ಗೌರಿಯೂ ಕೇಶವನೂ ತಿನ್ನುತ್ತ ಊಟದ ಮನೆಯಲ್ಲೇ ಚಾಪೆಯ ಮೇಲೆ ಮಲಗಿಕೊಂಡು ಅಕ್ಕುವಿನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದರು; ಉಪ್ಪಿನಕಾಯಿ ರಸಕ್ಕೆ ಅಕ್ಕುವಿನ ವ್ರತಭಂಗ ಮಾಡುವ ಶಕ್ತಿ ಇರಬಹುದೇ ಎಂಬ ಕೆಟ್ಟ ಕುತೂಹಲದಿಂದ. ಇದರ ಗುಮಾನಿಯಾದ ಅಕ್ಕು ಡೃತಿಗೆಡದೆ ‘ ಕಾಯಿಸಿದ ಹಾಲನ್ನ ಮುಚ್ಚಿಟ್ಟಿದೀಯ? ಅಥವಾ ಬೆಕ್ಕಿನ ಬಾಯಿಯ ಪಾಲಾಯ್ತ ಅದು, ನಿನ್ನೆ ಹಾಗೆ?’ ಎಂದು ಮಕ್ಕಳನ್ನು ಗದರಿಸುವಂತೆ ಕೇಳಿದಳು. ಗೌರಿ ಮಾವನ ಮುಖ ನೋಡಿದಳು; ಮಾವ ಹುಬ್ಬುಗಳನ್ನು ಯಕ್ಷಗಾನದ ಹಾಸ್ಯಗಾರ ವೇಷದಂತೆ ವಿಶೇಷವಾಗಿ ಎತ್ತಿ ಮುಖ ಆಡಿಸಿದ. ಅಕ್ಕು ಗಮನಿಸಿದರೂ ಸೊಪ್ಪು ಹಾಕದೆ ಶ್ರೀರಾಮಚಂದ್ರ ಎಂದು ಕಣ್ಣುಮುಚ್ಚಿದಳು. +ಇನ್ನೂ ಸೂರ್ಯ ನೆತ್ತಿಗೇರಿರಲಿಲ್ಲ; ಏಕಾದಶಿಯಾದ್ದರಿಂದ ಅಡುಗೆ ಕೆಲಸವಿಲ್ಲ. ಗುಡ್ಡ ಹತ್ತಿ ಹೋಗಲು ಗೌರಿ ಅಣಿಯಾಗುವುದನ್ನು ಅಕ್ಕಯ್ಯ ಗಮನಿಸಿದಳು. ಸೆರಗನ್ನು ಸೊಂಟಕ್ಕೆ ಸಿಕ್ಕಿಸಿದಳೆಂದರೆ ಗೌರಿಯ ಸರ್ಕೀಟು ಶುರುವಾಯಿತೆಂದು ಅರ್ಥ. ಅವಳು ಮೆಟ್ಟಿಲಿಳಿಯುವುದನ್ನು ಕಾದು ಅಕ್ಕು ಎದೆನೋವೆಂದು ನರಳಿದಳು. ಪರವಾಗಿಲ್ಲ, ಹೋಗಬಹುದೆಂದು ಗೌರಿಗೆ ಕೇಶವ ಕಣ್ಸನ್ನೆ ಮಾಡಿದ. ಗೌರಿ ನಡೆದು ಬಿಟ್ಟಳು.ಸ್ +ಸಾಮಾನ್ಯವಾಗಿ ಅಕ್ಕು ಮಾತು ತಮ್ಮನ ಜೊತೆ, ಅವನು ಒಬ್ಬನೇ ಇದ್ದಾಗ ಶುರುವಾಗುವುದು- ಅವಳ ಕುಪ್ಪಸವಿಲ್ಲದ ಇನ್ನೂ ಹರೆಯದ ಬೆನ್ನನ್ನು ತೋರುವುದರಿಂದ. +‘ಕಪ್ಪು ಮಚ್ಚೆ ಕಾಣಿಸುತ್ತ ತಮ್ಮಯ್ಯ, ಅದು ಯಮಧರ್ಮರಾಯ ಸಧ್ಯವೇ ನಾನು ಬಂದು ನಿನ್ನನ್ನ ಕರಕೊಂಡು ಹೋಗ್ತೇನೆ ಅಂತ ಅವನ ಬೆರಳಲ್ಲಿ ಈ ಬೆನ್ನನ್ನು ಮುಟ್ಟಿ ಸನ್ನೆ ಮಾಡಿ ಹೋಗಿರೋದು. ಯಾವತ್ತು ಈ ಮಾರಾಯ ಬಂದು ಈ ವಿಧವೆಗೆ ಮುಕ್ತಿ ಕೊಡ್ತಾನೋ ಗೊತ್ತಿಲ್ಲ. ಅಷ್ಟರಲ್ಲಿ ನಿಂದೂ ಗೌರೀದೂ ಮದುವೆಯಾಗಿ ಬಿಟ್ಟಿದ್ದರೆ ಸಮಾಧಾನವಾಗಿ ಕಣ್ಣು ಮುಚ್ಚಿ ಯಮಧರ್ಮರಾಯನಿಗೆ ಕರಕೊಂಡು ಹೋಗೋ ಮಾರಾಯ ಎಂದು ಬಿಡ್ತಿದ್ದೆ. ನನಗೆ ಅಂಥ ಪುಣ್ಯ ದಕ್ಕುವ ಹಾಗೆ ಮಾಡಬಾರ್ದ? ಎಂಥ ಕಣ್ಣಿಲ್ಲದ ಮಕ್ಕಳ ಜೊತೆ ನಾನು ಬದುಕಬೇಕಾಯ್ತೊ? ನಾನೇನು ಪಡಕೊಂಡು ಬಂದೆನೊ?’ +ಗೌರಿ ಗುಡ್ಡ ಹತ್ತಿ ನಡೆದಾದ ಮೇಲೆ ಅಕ್ಕುವಿನ ಈ ಪುರಾಣ ಶುರುವಾದದ್ದೇ ಕೇಶವ ಏನೇನೋ ಮಾಡಿ ಅಕ್ಕು ಕಿರಿಕಿರಿ ಮರೆಯಲು ಪ್ರಯತ್ನಿಸಿದ. ಅವನಿಗೆ ಏನೋ ಹೇಳಬೇಕಿತ್ತು. ಅದು ಅವ್ಯಕ್ತವನ್ನು ಕುರಿತಾದ ಮಾತಾದ್ದರಿಂದ ತನ್ನ ನಿತ್ಯದ ಅಕ್ಕುಗೆ ಹೇಗೆ ಹೇಳುವುದು ಅವನಿಗೆ ತಿಳಿಯದು. ತಾಯಿ ಸತ್ತಮೇಲೆ ತನ್ನ ತುರಿಕಜ್ಜಿಯನ್ನು ಬೇವಿನೆಲೆ, ತುಳಸಿಗಳ ಮದ್ದಿನಲ್ಲಿ ಗುಣಮಾಡಿದ ಅಕ್ಕಯ್ಯ ಅವಳು. ಅಂಡು ತೊಳೆದವಳು. ಇವತ್ತಿಗೂ ತಾನೊಂದು ಕಜ್ಜಿಬುರುಕ ತಮ್ಮಯ್ಯನೇ ಅವಳ ಪಾಲಿಗೆ. +ಅಕ್ಕುಗೆ ಗೌರಿಯೂ ಪ್ರತಿ ತಿಂಗಳೂ ಮುಟ್ಟಾಗುವ, ತನ್ನ ಪಾಲನೆಗೆ ಬಂದ ಸವತಿಯ ಮಗಳು. ಅವಳ ಬಗ್ಗೆ ವಿಶೇಷವಾದ್ದನ್ನು ಅಕ್ಕುಗೆ ಹೇಗೆ ಹೇಳಬಹುದು ಅವನಿಗೆ ತೋಚುವುದಿಲ್ಲ. +ಕೇಶವ ನಾಗಂದಿಗೆಯಿಂದ ಪೂರ್ವ ಕಾಲದ ತಾಳೆಗರಿಗಳ ಕಟ್ಟನ್ನು ಬಿಚ್ಚಿ ಏನನ್ನು ಹುಡುಕುತ್ತಿದ್ದೇನೆಂದು ತಿಳಿಯದೆ ಹುಡುಕುತ್ತ ಕೂತ. ತಾಳೆಗರಿಗಳನ್ನು ಓದುವ ತಮ್ಮಯ್ಯ, ಸದಾ ಪಗಡೆಯಾಡುವ ಹುಚ್ಚಿನ ಹಡೆಯಾಗಿ ಕಾಣದೆ, ಅಕ್ಕಯ್ಯನಿಗೆ ಕೊಂಚ ವಿಶೇಶವಾಗಿ ಕಾಣುವುದಿತ್ತು ಒಮ್ಮೊಮ್ಮೆ. +ಆಮೇಲೆ ಪಂಚಾಂಗವನ್ನು ಬಿಚ್ಚಿದ. ಕವಡೆಗಳನ್ನು ಚೀಲದಿಂದ ತೆಗೆದ . ಬೆರಳುಗಳಲ್ಲಿ ಏನೇನೊ ಎಣಿಸುತ್ತ ಕೂತ. ಅಕ್ಕಯ್ಯನಿಗೆ ತನ್ನ ತಮ್ಮಯ್ಯ ಗಳಿಸಿಕೊಂಡ ಈ ವಿಶೇಷ ವ್ಯಕ್ತಿತ್ವದ ಚರ್ಯೆಗಳು ಇವತ್ತು ಗಮನಕ್ಕೆ ಬಂದಂತೆ ಕಾಣಲಿಲ್ಲ. +ಕೇಶವ ಪಂಚಾಂಗವನ್ನು ಸುತ್ತಿಟ್ಟು ಮನೆಯ ಹೊರಗೆ ನಡೆದ. +೮ +ಕೇಶವ ಮನೆಯಿಂದ ಹೊರಗೆ ಬಂದು ಉಣಗೋಲ ಬಳಿ ನಿಂತ. ಒಳಗಿನಿಂದ ಅಕ್ಕು ನರಳುವುದು ಕೇಳಿಸಿತು. ಕೇಳಿಸಬೇಕೆಂಬುದೇ ಅವಳ ಉದ್ದೇಶವಾದ್ದರಿಂದ ಸುಮ್ಮನೆ ಆಲಿಸುತ್ತಿದ್ದು, ಆಕಾಶದಲ್ಲೊಂದು ಬಿಳಿ ಹೊಟ್ಟೆಯ ಗರುಡ ಕಾಣಿಸಿದಂತಾಗಿ, ಅಂಗೈ ಮುಂಗೈ ತಂದು ಮುದ್ರೆ ಮಾಡಿ, ಎಡಗಣ್ಣು ಮುಚ್ಚಿ, ಬಲಗಣ್ಣಿಗೆ ಮುದ್ರೆ ಹಿಡಿದು ಗರುಡ ವಾಹನನನ್ನು ಸ್ತುತಿಸಿದ. +ಅಗಾಧ ನೀಲಿಯಲ್ಲಿ ಗರುಡ ನಿರಾಯಾಸ ತೇಲುತ್ತಿತ್ತು. ಇರುವಲ್ಲೇ ಮತ್ತೆ ಮತ್ತೆ ಬರುವಂತೆ ಸುತ್ತುತ್ತ, ಬಿಚ್ಚಿದ ರೆಕ್ಕೆಯ ನಿರಾತಂಕದಲ್ಲಿ ವಾಯುದೇವನಿಗೆ ತಾನು ಹೊತ್ತವನನ್ನು ಒಡ್ಡುತ್ತ. +ಕೇಶವ ಶ್ರೀಹರಿ, ಶ್ರೀಹರಿ ಎಂದು ಖುಷಿಗೊಳ್ಳುತ್ತ ಕ್ಷಣದಲ್ಲಿ ಹುಡುಗನಾಗಿಬಿಟ್ಟ. ಬೇಲಿ ಮೇಲಿನ ಕಳ್ಳಿಯ ಎಲೆಯೊಂದನ್ನು ಕಿತ್ತು ಅದನ್ನು ಅದರ ಬೆನ್ನಿನಲ್ಲಿ ಮುರಿದ. ಮುರಿದಲ್ಲಿ ಅಂಟಾದ ಹಾಲು ಜಿನುಗಿತು. +ಗಂಗೆ ಸತ್ತ ಮೇಲೆ ಯಾವ ಆಟವನ್ನೂ ಮನೆಯಲ್ಲಿ ಆಡಿಲ್ಲ. ಪಗಡೆಯಾಡಿಲ್ಲ, ಕವಡೆಯಾಡಿಲ್ಲ, ಚಿನ್ನಿದಾಂಡು ಆಡಿಲ್ಲ, ಸರಿಬೆಸ ಆಡಿಲ್ಲ, ಕಳ್ಳಿಯ ಎಲೆಯಿಂದ ಕನ್ನಡಿ ಮಾಡಿಲ್ಲ. ತಾಯಿ ಸತ್ತ ಮೇಲೆ ಅಕ್ಕುವಿನ ಪಾಲನೆಯಲ್ಲಿ ತಾನು ಕಲಿತ ಆಟಗಳೇ ಇವು. +ಬಲಿತ ಕಳ್ಳಿಯ ಹಾಲು ಯಥೇಚ್ಛ ಜಿನುಗಿದ ನಂತರ ಮುರಿದ ಎಲೆಯ ತುದಿಗಳನ್ನು ಎರಡು ಕೈಗಳ ಬೆರಳುಗಳಲ್ಲಿ ಹಿಡಿದು ನಾಜೂಕಾಗಿ ಮುಂದೆ ತಳ್ಳಿದ. ಗಂಗೆಗಿದು ಬಹಳ ಇಷ್ಟ. ತುದಿಗಾಲಲ್ಲಿ ನಿಂತು ಆತಂಕದಲ್ಲಿ ಅವಳೇ ನೋಡುತ್ತಿದ್ದಾಳೆ ಎನ್ನಿಸಿತು. ಈ ಗಂಗೆಯ ಕಣ್ಣಿಗೆ ಋಷಿಸದೃಶ ಮಾಂತ್ರಿಕತೆಯಲ್ಲಿ, ಜಿನುಗುತ್ತಿದ್ದ ಹಾಲನ್ನು ಕನ್ನಡಿಯಾಗುವಂತೆ, ನಿಧಾನವಾಗಿ , ಅವಳು ತಾಳಿಕೊಳ್ಳಲಾರದ ಸಮಾಧಾನದಲ್ಲಿ ಪುಸಲಾಯಿಸಿದ. ಕಳ್ಳಿ ಕನ್ನಡಿಯಾಯಿತು. ಈ ಪುಟಾಣಿ ಕನ್ನಡಿ ಆಕಾಶದ ಬೆಳಕಿಗೆ ಎದುರಾಗಿ ದಿವ್ಯವಾದ ಬಣ್ಣಗಳನ್ನು ಮೆರೆದು ಗಂಗೆಯ ನೋಟದ ಜಲದಲ್ಲಿ ಪ್ರತಿಬಿಂಬಿತವಾಗುವುದು. ಕೇಶವ ಶ್ರೀಹರಿ ಎಂದುಕೊಂಡು ಬಣ್ಣದ ರೇಖುಗಳನ್ನೆ ದಿಟ್ಟಿಸುತ್ತ ಮೇಲೆ ನೋಡಿದ. ಅರೆ, ಗರುಡ ಇರುವಲ್ಲೇ ಇದ್ದಾನೆ. +ಗೌರಿಯ ಚಿತ್ತದ ಕನ್ನಡಿ ಅವ್ಯಕ್ತವಾದ್ದನ್ನು ಹೀಗೇ ಪ್ರತಿಫಲಿಸಿಕೊಂಡಿರಬಹುದು. ತನಗೆ ಕ್ಷಣಮಾತ್ರವಾದರೆ ಅವಳಿಗೆ ನಿತ್ಯವಾಗಿ. ಅಕ್ಕುಗೆ ಹೇಗಿದನ್ನು ಹೇಳುವುದೆಂದು ಬೆರಗಾಗುತ್ತ ಇನ್ನು ಬೆಳಗಲಾರದಂತೆ ರಾಡಿರಾಡಿ ಬಣ್ಣವಾಗಿಬಿಟ್ಟ ಕನ್ನಡಿ ನೋಡಿದ. ಏನೂ ಅರಿಯದಾದ. +ಕನ್ನಡಿ ಒಡೆಯಿತು. ಕಳ್ಳಿಯ ಹಾಲು ಕೈಗಂಟದಂತೆ ಜೋಕೆಯಾಗಿ ಗಿಡದ ಮೇಲದನ್ನು ಬಿಸಾಕಿ, ಖುಷಿಯಲ್ಲಿ ಜುಟ್ಟನ್ನು ಬಿಚ್ಚಿದ. ಕೂದಲನ್ನು ಕೊಡವಿ ಮತ್ತದನ್ನು ನೆತ್ತಿಯ ಮೇಲೆ ಊರ್ಧ್ವಮುಖಿಯಾಗಿ ನಿಲ್ಲುವಂತೆ ಕಟ್ಟಿದ. ಭಾಗವತರಾಟದ ನಾರದಮುನಿ ತಾನೆಂದುಕೊಂಡು ಉಲ್ಲಸಿತನಾಗಿ ಶ್ರೀಹರಿ ಶ್ರೀಹರಿ ಎನ್ನುತ್ತ ಒಳಗೆ ಬಂದ. ಅಕ್ಕು ಮಾಧ್ಯಾಹ್ನಿಕದ ನೆನಪು ಮಾಡಿದಳು . +೯ +ಚಳಿಗಾಲವಾದ್ದರಿಂದ ಬಲು ಮೋಜಿನಿಂದ ಕೇಶವ ತಲೆಯಮೇಲೆ ಬಿಸಿ ನೀರನ್ನು ಹೊಯ್ದುಕೊಳ್ಳಲು ತೊಡಗಿದ. ಹಂಡೆಯಲ್ಲಿ ತಾಂರದ ಚೊಂಬು ಬೇಗಬೇಗ ಗುಳುಗುಳು ಗೊಳ್ಳೂತ್ತ ಮುಳುಗುವ ಸಂಭ್ರಮದ ಶಬ್ದವನ್ನು ಅಕ್ಕು ಆಲಿಸಿದಳು. ಇಗೋ, ಮೈಯುಜ್ಜಿಕೊಳ್ಳುವಾಗ ಭಾಗವತರಾಟದ ಹಾಡನ್ನು ಬೇರೆ ಹಾಡಿಕೊಳ್ಳುತ್ತಿದ್ದಾನೆ. ಗಂಗೆಯ ಸಾವಿನ ನಂತರ ಅವನು ಹೀಗೆ ಖುಷಿಯಲ್ಲಿರುವುದನ್ನು ಅಕ್ಕು ಕಂಡಿಲ್ಲ. ಹಾಡುಮುಗಿದದ್ದೇ ಹಂಹೇಚಿವ ಸ್ತುತಿ ಶುರುಮಾಡಿಬಿಟ್ಟ. ಸ್ನಾನದ ಪ್ರಾರಂಭದಲ್ಲೇ ಪಂಚ ನದಿಗಳ ಸ್ತುತಿ ಮಾಡಬೇಕಿತ್ತಲ್ಲ- ಏನಿವತ್ತು ವಿಶೇಷ ತಿಳಿಯಲಿಲ್ಲ. ಮಾಣಿಗೇನಾದರೂ ತಲೆಕೆಟ್ಟಿತೆ? ತನ್ನ ಸ್ನಾನಕ್ಕೆ ನೀರುಳಿಸದೇ ಬರುವ ಮಾಣಿಯಲ್ಲ. ಬಚ್ಚಲಿಗೆ ಬೇಕಾದ ನೀರನ್ನೆಲ್ಲ ಸೇದಿ ಎತ್ತಿಹಾಕೋದು ನಿತ್ಯ ಕೇಶವ ಗೌರಿಯರೇ. +ಅವನು ಬಾಲನಿದ್ದಾಗ ಅಕ್ಕುವೇ ಅವನ ಮೈ ಒರೆಸಬೇಕು. ಪಾಣಿಪಂಚೆಯಿಂದ ಒರೆಸುವಾಗ ಅವನು ಹಾಯ್ ಹಾಯ್ ಎಂದು ಕುಣಿದಾಡಿದರೆ ಎಲ್ಲೆಲ್ಲೋ ನೋಡಬಾರದ, ನೋಡಲಾರದ ಆಯ ಸ್ಥಳಗಳಲ್ಲಿ ಗಾಯವಾಗಿದೆ ಎಂದು ಅರ್ಥ. ಅವಳ ಕಣ್ಣಿಗೆ ಮಾತ್ರ ಬೀಳುತ್ತಿದ್ದ ಗಾಯಗಳು. ತಂದೆಯ ಕಣ್ಣಿಗೆ ಈ ಗಾಯಗಳು ಬಿದ್ದದ್ದೇ ಆದರೆ, ಚಡಿ‌ಏಟು ನಿಶ್ಚಿತ. ಹೀಗಾಗಿ ಅಕ್ಕ ತಮ್ಮರ ನಡುವಿನ ಗುಟ್ಟುಗಳು ಈ ಗಾಯಗಳು. ಈಗಲೂ ನೆನೆಸಿದರೆ ಅವನನ್ನು ನಾಚಿಸುವ ಗಾಯಗಳು. ಗೌರಿಯನ್ನೂ ನಾಚಿಸುವ ಅವಳ ತುಂಟಾಟದ ಗಾಯಗಳು ಕೇಶವನಿಗೆ ಮಾತ್ರ ಗೊತ್ತಾಗ ಹೋಗಿ ಅಕ್ಕುಗೆ ಈಗ ದಿಕ್ಕುಕಾಣದಾಗಿದೆ. +ಉಪನಯನವಾಗುವ ತನಕ ಇವ ಮಂಗನೇ. ಹಡಬೆ ನಾಯನ್ನು ಓಣಿ ಓಣಿ ಅಟ್ಟಿ ಓಡಿಸಬೇಕು. ಎಮ್ಮೆಯ ಮೇಲೆ ಕೂತು ಸವಾರಿಯಾಗಬೇಕು. ಚಾಟರಿಬಿಲ್ಲಿನಿಂದ ಗುರಿಯಿಟ್ಟು ಹೊಡೆದು ಮಾವಿನ ಕಾಯಿ ಬೀಳಿಸಬೇಕು. ಕಂಡಕಂಡ ಮರ ಹತ್ತಬೇಕು. ಜೋನಿಬೆಲ್ಲ ಕದ್ದು ತಿನ್ನಬೇಕು….. ಅಡುಗೆ ಮನೆಯಿಂದ ಕೊಬ್ಬರಿ ಕದಿಯಬೇಕು….. +ಆದರೆ ಉಪನಯನವಾದನಂತರ ಮಾಣಿ ಎಷ್ಟು ಬದಲಾಗಿಬಿಟ್ಟ. ಮನೆಯಲ್ಲಿ ಕಡುಕೋಪಿ ಅಪ್ಪನಿಂದ ಪೂಜಾವಿಧಿಗಳನ್ನೆಲ್ಲ ಕಲಿತದ್ದೇ ಉಡುಪಿಗೆ ಹೋಗಿ ಮಠದ ಪಂಡಿತ ಸುಬ್ಬಣ್ಣಾಚಾರ್ಯರಿಂದ ಸಂಸ್ಕೃತ ಕಲಿತು ವೇದಪಾರಂಗತನಾದ. ಅಪ್ಪ ಬೇಡವೆಂದರೂ ಕೇಳದೆ ತನ್ನ ತೆವಲಿಗಾಗಿ ಮತ್ತೂರಿಗೆ ಹೋಗಿ ಗಮಕ ಕಲಿತ. ಅಪ್ಪ ಕಾಲವಾದ್ದೇ ಭಾಗವತನಾಗಿ ಊರಿಂದೂರು ಅಲೆದ. ಅವನ ಹುಚ್ಚಿಗೆ ಸಣ್ಣಜುಟ್ಟು ಸಾಲದು; ಅವನು ಬಾಲನಿದ್ದಾಗ ತಾನೇ ಮಾಡಿಸಿಕೊಟ್ಟ ಕೆಂಪು ಹರಳಿನ ಒಂಟಿಯೇಬೇಕು ಕಿವಿಗೆ. ಅದೆಷ್ಟು ಚೆನಾಗಿ ಒಪ್ಪುತ್ತದೆ ಅವನ ಕಿವಿಗೆ. ನೋಡಿದರೆ ಯಾರಾದರೂ ಬಡವರ ಮಾಣಿ ಎನ್ನಲು ಸಾಧ್ಯವೆ? ಒಮ್ಮೆ ಹೇಳಿಕೊಟ್ಟರೆ ಸಾಕು ಏನನ್ನಾದರೂ ಕಲಿತುಬಿಡುವ ಮಾಣಿಯಿದು…… ಪಾಪ ಈಗ ಮದುವೆಯಾಗದೆ ಒಣಗುತ್ತಿದೆ. ಹುಡುಗಿಯರ ಜೊತೆ ಚನ್ನಮಣಿಯಾ‌ಆಟ, ಸಂಜೆಯಾದರೆ ತಾಳಮದ್ದಲೆ, ನಿಮಿತ್ಯ ಕೇಳಲು ಬಂದವರ ಜೊತೆ ಕಾಡುಹರಟೆ…… ಅಚನಿಗೆ ಕಾಲ ಹೋದದ್ದೇ ತಿಳಿದಂತೆ ಕಾಣದು. ಪಡಪೋಸಿ ತಿಳಿಯದ ಬೋಳೆಭಟ್ಟ….. +ಅಂತ ಅವಳೇನೋ ಅಂದುಕೊಡಿರೋದು. ಸೊಗಸುಗಾರ ಗಂಡಿಗೆ ಏನೇನು ತೆವಲಿರುತ್ತೋ… ದೇವರೇ ಕಾಪಾಡಬೇಕು. ತನ್ನ ಕಣ್ಣಿಗೆ ಬೀಳದ ಸಂಗತಿಯೇ? ಆ ಸೇಳೆಗಾರ್ತಿ ಜಲಜ ಇವನೆಂದರೆ ಕಣ್ಣಲ್ಲೇ ತಿಂದುಬಿಡುವಂತೆ ನೋಡತ್ತೆ. ಇವನೂ ಬಾಯಲ್ಲಿ ಬೆರಳಿಟ್ಟರೆ ಕಚ್ಚಬಾರದ ಮಾಣಿಯೇನಲ್ಲ. ಕಚ್ಚೆಹರಕ ಬ್ರಾಹ್ಮಣರನ್ನು ಅಕ್ಕು ಕಾಣದವಳೇ? ಪೌರೋಹಿತ್ಯದ ನೆವಹೇಳಿ ಊರೂರು ಸುತ್ತುತ್ತಿದ್ದ ತನ್ನ ಗಂಡ ಮಹಾರಾಯನನ್ನ ಸ್ನಾನಮಾಡಿದ್ಡ್ ಹೊರತು, ಎಷ್ಟೇ ಸೇಳೆ ಮಾಡಲಿ, ಮುಟ್ಟಲು ಅವಳು ಬಿಟ್ಟವಳಲ್ಲ. ಮುದಿ ಗಂಡನೇ ಹಾಗಿದ್ದಾಗ, ಪ್ರಾಯಕ್ಕೆ ಬಂದವಕ್ಕೆ ಜಾತಿಯೇ, ನೀತಿಯೇ- ಕನ್ಯಾಮಾಸದ ನಾಯಿಗಳಂತೆ ಅವು. +೧ ೦ +ಸ್ನಾನವಾದದ್ದೇ ಕೇಶವ ಜಪಕ್ಕೆ ಕೂತ. ಅಕ್ಕುಗೆ ತಾನು ಅಪರೂಪನಾಗಿ ತೋರಬೇಕು ಎಂದು ದಿನಕ್ಕಿಂತ ಹೆಚ್ಚು ಗಾಯತ್ರಿ ಜಪ ಮಾಡಿದ. ಕತ್ತಲೆಯ ನಡುಮನೆಯಲ್ಲಿ ಅವಳು ನೆಲದ ಮೇಲೆ ಮಲಗಿದ್ದಳು. ಅಕ್ಕು ಸದಾ ತಂಪು ಹುಡುಕುವ ಪ್ರಾಣಿ; ಅವಳು ಮಾಡುವ ಊಟ ಕೂಡ ಆರಿರಬೇಕು. ಚಳಿಗಾಲದಲ್ಲೂ ಸ್ನಾನಕ್ಕೆ ತಣ್ಣೀರು ಬೇಕು. ಈಗ ಹುಷಾರಿಲ್ಲೆಂದು ಗೌರಿಯ ಬಲವಂತಕ್ಕೆ ಬಿಸಿನೀರು ಸ್ನಾನಮಾಡುತ್ತಾಳೆ. ಗೌರಿಗಾಗಿ ಹುಷಾರು ಕೆಡಿಸಿಕೊಂಡ ಮೇಲೆ ಅವಳು ಹೇಳಿದಂತೆ ಕೇಳದೆ ವಿಧಿಯಿಲ್ಲವಲ್ಲ. +ಕೇಶವ ಚಾವಡಿಗೆ ಹೋಗಿ ಇರಲಿ ಎಂದು ರಾತ್ರೆಮಾತ್ರ ಹಚ್ಚುವ ಲಾಟೀನನ್ನು ಹಾಡು ಹಗಲೇ ಹಚ್ಚಿದ. ಹುಲ್ಲಿನ ಸೂರಿನಿಂದ ಮೇಲೆ ಸೂರ್ಯನಿದ್ದಾನೆಂದು ಮಾತ್ರ ತೋರುವ, ಕಿಟಕಿಯಿಲ್ಲದ, ತಂಪಾದ, ಹಿತವಾದ ಕತ್ತಲಿನ ನಡುಮನೆಗೆ ಬಂದ. ಯಾವುದೋ ಕಾಲದಲ್ಲಿ ಬಾಣಂತಿಯರು ಕಂಬಳಿ ಹೊದ್ದು ಮಲಗುತ್ತಿದ್ದ ಕೋಣೆಯಂತೆ, ಅದು. ತನ್ನ ಕಾಲದಲ್ಲಿ ಗೌರಿಯ ಬಾಣಂತನವನ್ನು ಇಲ್ಲೇ ಮಾಡಬೇಕೆಂಬ ಆಸೆ ಅಕ್ಕುಗೆ…… ಪಾಪದ ಈ ಅಕ್ಕುಗೆ. ಅಕ್ಕುವನ್ನು ಅಮ್ಮ ಹೆತ್ತದ್ದು ಅವಳ ತವರಿನಲ್ಲಂತೆ. ತನ್ನನ್ನು ಹೆತ್ತದ್ದು ಮಾತ್ರ ಇಲ್ಲಿಯೇ ಅಂತ. ಅಮ್ಮನ ಅಮ್ಮ ಹೆರಿಗೆ ಮಾಡಿಸಲು ಇಲ್ಲಿಗೇ ಬಂದಿದ್ದರಂತೆ……. +ಅಕ್ಕುಗೆ ಲಾಟೀನು ಕಂಡು ಆಶ್ಚರ್ಯವಾಯಿತು. ಎಷ್ಟು ಅಶ್ಚರ್ಯವಾಯಿತೆಂದರೆ ಈ ದುಬಾರಿ ಕಾಲದಲ್ಲಿ ಹಗಲಿಗೇ ಯಾಕೆ ಲಾಟೀನೊ ಎಂದು ಬಯ್ಯಲೂ ಬಾಯಿಬರದೆ ಕಣ್ಣುಜ್ಜಿಕೊಳ್ಳುತ್ತ ಎದ್ದು ಕೂತಳು. +ಮಾತು ಹೇಗೆ ಶುರುಮಾಡುವುದು ತಿಳಿಯದೆ ಕೇಶವ ‘ತೀರ್ಥ ಕೊಡಲ’ ಎಂದ. +‘ನಿನಗೇನು ತಲೆ ಕೆಟ್ಟಿದೆಯ? ನಂದಿನ್ನೂ ಸ್ನಾನ ಆಗಿಲ್ಲ ಅಂತ ಗೊತ್ತಿಲ್ಲವ?’ ಅಕ್ಕು ನಗುತ್ತ ಹೇಳಿದಳು. +ಕೇಶವ ಅವಳ ಎದುರು ದೀರ್ಘ ಸಂಭಾಷಣೆಗೆ ಕೂರುವಂತೆ ಚಕ್ಕಳಮಕ್ಕಳ ಹಾಕಿ ಕೂತದ್ದನ್ನು ಅಕ್ಕು ಗಮನಿಸಿದಳು. ಮಾತೇ ಬಾರದವನಂತೆ ತಡವರಿಸುತ್ತ, +‘ಅಕ್ಕು’ ಎಂದನು. +ರಹಸ್ಯವಾದ್ದೇನನ್ನೋ ಹೇಳಲು ಹೊರಟವನಂತೆ ಕೇಶವ ಕಂಡ. ತನ್ನ ಗಂಡನ ಮನೆಯಿಂದ ತಂದು ಜೋಪಾನ ಮಾಡಿದ ಹಿತ್ತಾಳೆಯ ಲಾಟೀನಿನ ಮೊಗ್ಗಿನಂತಹ ಬೆಳಕಿನಲ್ಲಿ ತಾನು ಈಚಿನ ದಿನಗಳಲ್ಲಿ ಅವನನ್ನು ನೋಡದಂತೆ ನೋಡಿದಳು. ಇನ್ನೂ ಒದ್ದೆಯಾದ ಜುಟ್ಟು ಬೆನ್ನಿನ ಮೇಲೆ ಚೆಲ್ಲಿದೆ. ಲಂಗೋಟಿಯಲ್ಲದೆ ಬೇರೇನೂ ಮೈಮೇಲೆ ಇಲ್ಲ. ಲಾಟೀನಿನ ಬೆಳಕಲ್ಲಿ ಅವನು ತನ್ನನ್ನು ನೋಡುವ ಕಣ್ಣುಗಳು ಹೊಳೆಯುತ್ತಿವೆ. ನೋಡಲು ಒಳ್ಳೆ ಶುಕಮುನಿಯ ಹಾಗೇ ಕಂಡ ತಮ್ಮಯ್ಯನ ಮೇಲೆ ಅಕ್ಕರೆ ಉಕ್ಕಿತು. +‘ಅದೇನು ಹೇಳೋ ತಮ್ಮಯ್ಯ’ ಎಂದಳು. +ಅವಳ ಅಕ್ಕರೆಯ ದನಿಯಿಂದ ಉತ್ತೇಜಿತನಾಗಿ ಒಂದು ದೊಡ್ಡ ಗುಟ್ಟು ಹೇಳುವಂತೆ ಪಿಸುಗುಟ್ಟಿದ: +ಅಕ್ಕು ಅದೀಗ ಬರಿ ನಮ್ಮನೇ ವಸ್ತುವಲ್ಲ; ಈಗದು ದೇವರ ಕೂಸು’ +‘ಏನೆಂದಳು ಆ ಗಂಡುಬೀರಿ ನಿನಗೆ?’ +ಅಕ್ಕು ಅವನನ್ನು ನೆಲಕ್ಕಪ್ಪಳಿಸುವಂತೆ ಕೇಳಿದ್ದಳು. ಆದರೆ ಕೇಶವ ತನ್ನ ಮಾತಿಗೆ ಸೊಪ್ಪುಹಾಕದವನಂತೆ ಗಂಭೀರವಾಗಿರುವುದನ್ನು ಕಂಡು ಅಕ್ಕು ಕೊಂಚ ಸಡಿಲಾಗಿ ಆಪ್ತವಾಗಿ ಹೇಳಿದಳು: +‘ತಂಗಿ ಸತ್ತದ್ದೇ ಅವಳು ಹಾಗಾಗಿರೋದು ಕಣೋ. ಅದೇನೋ ಅವಳನ್ನು ಖಂಡಿತ ಹೊಕ್ಕುಬಿಟ್ಟಿದೆ. ಗುಡ್ಡದ ಮೇಲೊಂದು ಬಿದಿರು ಹಿಂಡಲು ಇದೆಯಲ್ಲ ಅದರ ಪಕ್ಕ ನಡೆದು ಬರುವಾಗ ನಮ್ಮ ಅಮ್ಮ ಒಂದು ಸಾರಿ ಇದ್ದಕ್ಕಿದ್ದಂತೆ ಎಷ್ಟು ಬೆಚ್ಚಿದ್ದರಂತೆ ಅಂದ್ರೆ ಮೂರು ಹಗಲು ಮೂರು ರಾತ್ರಿ ಅವರಿಗೆ ಜ್ವರ ಬಿಟ್ಟಿರಲಿಲ್ಲ. ನಮ್ಮ ಅಪ್ಪ ಸುಳಿದು ಹಾಕಿ ಅವಳನ್ನ ಉಳಿಸಿಕೊಂಡದ್ದು ನನಗಿನ್ನೂ ನೆನಪಿದೆ. ಬಿದಿರು ಹಿಂಡಲ್ಲಿ ಒಂದು ಚೌಡಿ ಇದೆ. ಅದಕ್ಕೆ ಮೈಲಿಗೆಯಾಗಿರಬೇಕು. ಗೌರಿಗೇನಾದರೂ ಮುಟ್ಟು ಮೈಲಿಗೆಯ ಎಗ್ಗಿದೆಯ? ಅವಳ ಅಪ್ಪನನ್ನ ಬಹಳ ದೊಡ್ಡ ಜೋಯಿಸರು ಅಂತ ನೀನೇನೋ ಹೊಗಳ್ತೀಯ; ನನಗೆ ಗೊತ್ತಿಲ್ದೆ ಇರೋದ ಹೊರಗಿನ ಅವರ ಎಲ್ಲ ವ್ಯವಹಾರ?…….. ತಂದೆಯ ಮಗಳಲ್ಲವೇ ಅವಳು’. +ಕೇಶವ ಅಕ್ಕುವಿನ ಒಳಗನ್ನು ಮುಟ್ಟಿ ಹುಡುಕುವಂತೆ ಸಂಕಲ್ಪ ಮಾಡಿ ಜಪದಲ್ಲಿ ಕೂರುವಂತೆ ಕೂತಿದ್ದ. ಅವಳ ಮಾತನ್ನು ಕಿವಿಮೇಲೆ ಹಾಕಿಕೊಳ್ಳದೆ ಮುಂದುವರಿದ ಲಾಟೀನಿನ ದೀಪವನ್ನೆ ನೋಡುತ್ತ. ಯಾರಿಗೋ ಸಂಬಂಧಪಟ್ಟ ವೃತ್ತಾಂತವೆಂಬಂತೆ. ಪ್ರವಚನವಾಗದಂತೆ ಮಾತಾಡುವುದೇನೂ ಅವನಿಗೆ ಸುಲಭವಲ್ಲ. +… … … +ವಾರದ ಹಿಂದೆ ಒಂದು ಸಂಜೆ. ಅವನಿಗೂ ಅವಳು ಎಲ್ಲಿ ಹೋಗುತ್ತಾಳೆಂಬ ಕುತೂಹಲ. ಹಿಂಬಾಲಿಸಿದ. ಅವಳಿಗೆ ತಿಳಿಯದಂತೆ. ಮೊಟ್ಟುಗಳ ಸಂದಿ ಅಡಗುತ್ತ. ಹಕ್ಕಿಯ ಬೆನ್ನಟ್ಟುವ ಮಾಳಬೆಕ್ಕಿನಂತೆ. ತಾನೆಲ್ಲಿದೀನಿ, ಎಲ್ಲಿ ಹೋಗ್ತ ಇದೀನಿ ಏನೂ ಗೊತ್ತಿಲ್ಲದವಳಂತೆ ಅವಳು ಕಾಲು ಕೊಂಡಲ್ಲಿ ನಡೀತ ಇದ್ದಳು. ಗಾಳೀಲಿ ತೇಲಿಹೋಗೋ ಅಪ್ಸರೆಯ ಥರ. ಏನೋ ಕೆಲಸ ಇಟ್ಟುಕೊಂಡು ನಾವು ಹೋಗ್ತೀವಲ್ಲ, ಆ ಥರಾ ಅಲ್ಲವೇ ಅಲ್ಲ. ಮುಳ್ಳು ಕಲ್ಲು ನೋಡದೆ. ಮುಖಾನ್ನ ಅಕಾಶಕ್ಕೆ ಎತ್ತಿ. +(ತಾನು ಕಂಡದ್ದನ್ನು ಮತ್ತೆ ಕಾಣುತ್ತಿರುವಂತೆ ಕ್ಷಣ ಸುಮ್ಮನಾಗಿ, ಅಕ್ಕು ಮೌನದಿಂದ ಉತ್ತೇಜಿತನಾಗಿ ಮುಂದುವರಿದ) +ಅವಳ ಬೆನ್ನಿಗೆ ಸೂರ್ಯ; ಮುಳುಗುತಾ ಮುಳುಗುತಾ ಇರೋ ಸೂರ್ಯ. ಅವನ ಕಿರಣ ಅವಳ ಕೂದಲ ಮೇಲೆ ಬಿದ್ದು ಹೊಳೀತಿತ್ತು. ಸೊಂಟಕ್ಕೆ ಸೀರೆ ಸೆರಗು ಸಿಕ್ಕಿಸಿ ನಡೀತ ಇದ್ದವಳು ಒಳ್ಳೆ ವನದೇವತೆ ಹಾಗೆ ಕಾಣ್ತಾ ಇದ್ದಳು. ಅವಳ ಮುಖದ ಲಾವಣ್ಯ ಭಾಸವಾದಂತಾಗಿ ಅವನು ದಂಗಾದ ಅಂದರೆ ಅವಳ ಹಿಂದೆ ಕದ್ದು ಹೋಗೋದು ಸಾಧ್ಯವಾಗಲಿಲ್ಲ. ಅಲ್ಲೇ ನಿಂತು ಬಿಟ್ಟ. ಹತ್ತಿರ ಇದ್ದ ಕಲ್ಲು ಬಂಡೆಯೊಂದರ ಮೇಲೆ ಕೂತು ಬಿಟ್ಟ. ಪಂಚಾಕ್ಷರಿ ಜಪ ಮಾಡ್ತ ಕೂತ. ಕಣ್ಣು ಮುಚ್ಚಿ ಕೂತ. +ಕಂತುತ್ತಾ ಇದ್ದ ಸೂರ್ಯ ಇನ್ನೇನು ಕಂತಿಬಿಡಬೇಕು. ಅಷ್ಟರಲ್ಲಿ ಅವಳು ಹಿಂದಕ್ಕೆ ಬರೋದು ಕಾಣಿಸಿತು. ಅದೊಂದು ಅಪರೂಪದ ದೃಶ್ಯವೇ ಸರಿ. ಅವಳ ಮುಖ ಸೂರ್ಯನಿಗೆ ಎದುರಾಗಿದೆ. ಅವಳ ಕಣ್ಣುಗಳು ಹೊಳೆಯುತ್ತಿವೆ. ತುಂಬ ಸುಖಪಟ್ಟಂತೆ ಆ ಕಣ್ಣುಗಳು ಕಾಣುತ್ತಿವೆ. ಎಷ್ಟು ತನ್ಮಯವಾಗಿವೆ ಆ ಕಣ್ಣುಗಳು ಎಂದರೆ ಇದು ಒಳಗೆ ಅದು ಹೊರಗೆ ಎನ್ನಿಸದಂತೆ ಅವು ಎಲ್ಲವನ್ನೂ ಕಾಣುತ್ತಿವೆ. +ಹತ್ತಿರ ಬಂದವಳು ವಿಶೇಷವಾದ್ದನ್ನು ನೋಡುವವಳಂತೆ ಹಣೆಗೆ ಕೈಯಡ್ಡ ಮಾಡಿದಳು; ಇಲ್ಲದ ಬಿಸಿಲನ್ನು ನಟಿಸುತ್ತ ಕಣ್ಣುಗಳನ್ನು ಚೂಪಿಸಿ ಕೇಶವನನ್ನು ನೋಡಿದಳು. +‘ಅದೇನು ಮಾಡ್ತಾ ಇದ್ದಿಯೋ ಒಬ್ಬನೆ? ಪಟ್ಟಾಂಗ ಹೊಡೆಯೊಕೆ ಯಾರೂ ಸಿಗಲಿಲ್ವ?’ +ಎಂದಿನ ಬಾಲೆಯಂತೆ ಹಾಸ್ಯ ಮಾಡಿದಳು ಎಂದು ಹಗುರಾಯಿತು. ಹೀಗೆ ಪ್ರಸನ್ನಳಾಗಿ ಬಿಟ್ಟವಳನ್ನು ಮುಟ್ಟಿ ಬೆನ್ನು ತಡವಬೇಕು ಎನ್ನಿಸಿತು. ಆದರೆ ಅಷ್ಟು ಸಲಿಗೆ ಸಾಧ್ಯವಾಗದಂತೆ ಅವಳ ಮುಖ ಕಂಡಿತು. +ಅವಳೇ ಕೇಶವನ ಜುಟ್ಟನ್ನು ಹಿಡಿದು ಎಳೆದು ಬಿಡುವುದೆ? ಇಷ್ಟುದ್ದ ಜುಟ್ಟಿನ ತುದಿಯನ್ನು ಬಿಗಿಯಾಗಿ ಹಿಡಿದು ಎಳೆಯುತ್ತ, +‘ಇಗೋ ನಿನ್ನ ಜುಟ್ಟು ನನ್ನ ಕೈಯಲ್ಲಿದೆ- ಜೋಕೆ’ ಎಂದು ಜೋರಾಗಿಯೇ ಎಳೆದಳು. +ಕೇಶವ ಗಂಭೀರವಾಗಿ, ಸ್ವಲ್ಪ ಕೂತುಕೋ ಎಂದು ಬಂಡೆಯಮೇಲೆ ತನಗೆ ಎದುರಾಗಿ ಅವಳನ್ನು ಕೂರಿಸಿಕೊಂಡು ಶ್ರೀಹರಿಯನ್ನು ನೆನೆದು ಒಂದು ಕ್ಷಣ ಕಾದು ಹೇಳಿದ: +‘ನಿನಗೀಗ ಕಾಣ್ತಾ ಇದೆ ಅಲ್ವ?’ +ಗೌರಿ ನಾಚಿದಳೆ? ಹಾಗೆನ್ನಿಸುವಂತೆ ನೋಡಿದ್ದಳು +‘ಹಕ್ಕೀಲಿ, ಮರದಲ್ಲಿ, ಝರಿಯಲ್ಲಿ, ನೀರಲ್ಲಿ….’ +‘ಅದೇನು ಹೇಳ್ತಿದೀಯೋ?’ +ಅದು ನಿರಾಕರಣೆಯ ಪ್ರಶ್ನೆಯಾಗಿರಲಿಲ್ಲ; ಅವಳ ಧ್ವನಿಯಲ್ಲಿ ತುಂಟತನವಿದ್ದರೂ ಗೌರಿ ಅಕ್ಕರೆಯಿಂದ ಮಾವನ ಕೈ ಹಿಡಿದು ಒತ್ತಿದ್ದಳು. ಗಂಗೆಯ ಹೆಸರನ್ನು ಬಾಯಿಬಿಟ್ಟು ಹೇಳಬೇಕಾಗಿ ಬರಲಿಲ್ಲ. ಕೇಶವ ಉತ್ತೇಜಿತನಾಗಿ ಶುಕನ ಕಥೆಯನ್ನು ಮತ್ತೆ ಹೇಳಿದ್ದ. ತನಗೇ ಎನ್ನುವಂತೆ ಯಾಕೆ ಹೇಳಿಕೊಂಡಿದ್ದನೋ? ಅವಳಿಗೇನು ಗೊತ್ತಿರದ ಕಥೆಯೇ ಅದು? ತನ್ನ ಮಾತಿನ ಧ್ವನಿ ಮತ್ತು ಸರಣಿಯನ್ನು ಪ್ರವಚನದ ಗತ್ತಿಗೆ ಏರಿಸಿಕೊಂಡಿದ್ದೇ ಏನನ್ನಾದರೂ ಹೇಳುವ ಸ್ವಾತಂತ್ರ್ಯವನ್ನು ಕೇಶವ ಗಳಿಸಿಕೊಂಡಿದ್ದ. +ಗೌರಿಯ ಜೊತೆ ಅಂತಹ ಒಪ್ಪಂದವೂ ಅವನಿಗಿತ್ತು. ಗಂಗೆಯ ಜೊತೆ ಇನ್ನೂ ಇದು ಹೆಚ್ಚಿತ್ತು. ಅಂತಹ ಏರಿಕೆಯ ಮಾತಿನ ಸ್ವಾತಂತ್ರ್ಯ ಕಿಂಚಿತ್ತಾದರೂ ಅವನಿಗೆ ಇಲ್ಲದೆ ಇದ್ದದ್ದು ಭಾವ ಜಿಪುಣ ಅಕ್ಕು ಜೊತೆ ಮಾತ್ರ. +‘ಈ ಬ್ರಹ್ಮಾಂಡದಲ್ಲಿ ವೈರಾಗ್ಯ ಅನ್ನೋದು ತೋರುವ ಮುನ್ನವೇ ಇನ್ನೂ ಬಾಲಕನಾದ ಶುಕನದಲ್ಲಿ ಅದು ತೋರಿತ್ತು…..’ +ಅವನ ಕಣ್ಣುಗಳು ಮುಚ್ಚಿದ್ದವು. ಗೌರಿಯ ಕಣ್ಣುಗಳು ಅವನ ಮುಖದ ಮೇಲೆ ನೆಟ್ಟಿರುವ ನಿರೀಕ್ಷೆಯಲ್ಲಿ ಮುಂದಿನ ಮಾತುಗಳು ಹುಟ್ಟಿದ್ದವು. +‘….ಯಾವ ಕರ್ಮವಾಗಲೀ, ಕಾಷ್ಠ ವ್ಯಸನಗಳಾಗಲೀ ಇನ್ನೂ ತಟ್ಟದ ಬಾಲಕ ಎಲ್ಲವನ್ನೂ ಮೀರಿ ಪರ್ಣಕುಟಿಯಿಂದ ಹೊರಟೇ ಹೋದ. ಆಗ ವೇದವ್ಯಾಸರು, ಎಷ್ಟಾದರೂ ಕವಿ ಹೃದಯವಲ್ಲವೇ ಅವರದು?-ಆದ್ದರಿಂದ ಇನ್ನೂ ವ್ಯಸನಗಳಿಂದ ಪಾರಾಗದ ಮಹಾ ಋಷಿಗಳು, ಎಲ್ಲ ತಂದೆಯರ ಹಾಗೆ ಮಗನಿಗಾಗಿ ಹಲುಬುತ್ತ ‘ಪುತ್ರಾ’ ಎಂದು ಕೂಗುತ್ತ ದಶದಿಕ್ಕುಗಳಲ್ಲೂ ಬಾಲನಿಗಾಗಿ ಹುಡುಕಾಡುತ್ತಿದ್ದಾಗ ದಿಕ್ಕುದಿಕ್ಕುಗಳಲ್ಲಿ ಬೆಳೆದು ನಿಂತ ಮರಗಳು, ದೂರದ ಗುಡ್ಡಬೆಟ್ಟಗಳು ಪ್ರತಿಧ್ವನಿಸುತ್ತ ಓ ಗೊಟ್ಟುವಂತೆ. ಹೀಗೆ ಸರ್ವಭೂತ ಹೃದಯದಲ್ಲಿ ಶುಕ ಒಂದಾಗಿರುವುದನ್ನು ತಂದೆಯಾದ ವೇದವ್ಯಾಸರು ಅರಿತರು. +ಈ ಶುಕಮುನಿಯನ್ನು ಭಾಗವತ ಛಾಯಾಶುಕ ಎನ್ನುತ್ತದೆ. ಇದ್ದಾಗಲೂ ಅವನು ಶುಕನ ಛಾಯೆಯೇ; ತ್ರಿಕಾಲ ಜ್ಞಾನಿಗೆ ಈಗ ಇರುವಂತೆ ಕಾಣುವುದೂ, ಮುಂದೆ ಇರದೆ ಇರುವುದೂ ಒಂದೇ ಅಲ್ಲವೆ? ಇರುವುದೂ ಇಲ್ಲದೇ ಇರುವುದೂ-ಎರಡೂ ಮಾಯೆಯಲ್ಲವೆ?’ +ಗೌರಿ ಕೇಶವನ ಕೈಯನ್ನು ಅಕ್ಕರೆಯಿಂದ ಅದುಮಿಕೊಂಡಿದ್ದೇ ನಾಚುತ್ತ ನಕ್ಕಳು: +‘ಶುರುವಾಗಿ ಬಿಟ್ಟಿತಲ್ಲ ಮಾವಯ್ಯನ ಪ್ರಸಂಗ’ +ಗೌರಿ ನಿತ್ಯದವಳಾಗಿದ್ದೇ ಸತ್ಯದವಳಾದ ಈ ಬೆರಗನ್ನು ಅಕ್ಕಯ್ಯನಿಗೆ ತನ್ನ ಮಾತುಗಾರಿಕೆಯೆಂದೇ ತೋರತೊಡಗಿದ ಮಾತುಗಳಲ್ಲಿ ಹೇಳಲಾರದೆ ಹೋಗಿ ಕೇಶವ ಅಷ್ಟೇನೂ ಪೆಚ್ಚಾಗಲಿಲ್ಲ. ಕೊಂಚ ಬೆರಗಿನಲ್ಲಿ, ಹೆಚ್ಚು ಅನುಮಾನದಲ್ಲಿ, ಯಾವ ಭಾವಾವೇಶಕ್ಕೂ ಆಸ್ಪದ ಕೊಡದ ಈ ಮಹಾ ಜಿಪುಣ ಅಕ್ಕು ‘ಸಾಕಿನ್ನು ನಿನ್ನ ಪುರಾಣ’ ಎಂದು ತನ್ನ ನೈಜ ಭಾವನೆಯನ್ನು ತೋರಗೊಡದಂತೆ ಮುಖ ತಿರುಗಿಸಿದ್ದಳು.ಆದರೆ ಹಾಗೆ ಅನ್ನುವಾಗ ಅವಳ ಧ್ವನಿಯಲ್ಲಿ ಎಲ್ಲೋ ತನ್ನ ಮಾತಿಗೆ ಅಷ್ಟೊ ಇಷ್ಟೊ ಸಿಕ್ಕವಳಂತೆ ತೋರಿದಳಲ್ಲವೆ? +ಕೇಶವ ಲಾಟೀನಿನ ದೀಪವನ್ನು ಕೊಂಚ ದೊಡ್ಡ ಮಾಡಿದ. ಹೊಗೆಯಾಯಿತು. ಸಣ್ಣ ಮಾಡಿದ. ಇಲ್ಲ ತಮ್ಮಯ್ಯನಿಗೆ ಮಾತೆಂದರೆ ಮುದ ಎಂದಷ್ಟೆ ಈ ಅಕ್ಕುಗೆ ತೋರಿರಬೇಕು. +‘ಲಾಟೀನು ಆರಿಸೋ….ಅದೇನು ಆಡ್ತಿದೀಯ ದೀಪದ ಜೊತೆ?’ +ಮತ್ತೆ ಅಕ್ಕುಗೆ ಸಣ್ಣ ತಮ್ಮಯ್ಯನಾಗಿಬಿಟ್ಟೆನಲ್ಲ ಎಂದು ಪೆಚ್ಚಾಗಿ ಕೇಶವ ಎದ್ದು ನಿಂತ. +ಅಧ್ಯಾಯ ೧೫ – ೧ – ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು […] +ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_256.txt b/Kannada Sahitya/article_256.txt new file mode 100644 index 0000000000000000000000000000000000000000..11c83170add23ceefc2169aa5c9e7cba2b06a6f9 --- /dev/null +++ b/Kannada Sahitya/article_256.txt @@ -0,0 +1,17 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಗನ ಚುಂಬಿ ಕಟ್ಟಡಗಳ ನಡುವೆ +ಸಿಕ್ಕು ನಲುಗುವ ಆಕಾಶ; +ಆಕಾಶದ ತುಂಬಾ ಅವಕಾಶ! +***** +ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. ***** +ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_257.txt b/Kannada Sahitya/article_257.txt new file mode 100644 index 0000000000000000000000000000000000000000..73f0d4be6e2f2a65fc4ce4597d890b962d49711c --- /dev/null +++ b/Kannada Sahitya/article_257.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೆವೇದ್ಯಾದಿಗಳು ಮುಗಿದಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು, ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು. +“ಮೊದಲು ನಿಮ್ಮ ಊಟವಾಗಲಿ” +ಎಂದಳು ಭಾಗೀರಥಿ ಕ್ಷೀಣಸ್ವರದಲ್ಲಿ. +“ಇಲ್ಲ ಮೊದಲು ನಿನ್ನ ಗಂಜಿಯಾಗಲಿ.” +ಇಪ್ಪತ್ತು ವರ್ಷಗಳಿಂದ ಒಬ್ಬರಿಗೊಬ್ಬರು ಆಡಿಕೊಂಡು ಪರಿಪಾಠವಾದ ಮಾತು. ನಸುಕಿನ ಸ್ನಾನ, ಸಂಧ್ಯಾವಂದನ, ಆಡಿಗೆ, ಹೆಂಡತಿಗೆ ಮದ್ದು, ಮತ್ತೆ ಹೊಳೆ ದಾಟಿ ಹೋಗಿ ಗುಡಿಯ ಮಾರುತಿಯ ಪೂಜೆ-ಇದು ತಪ್ಪದ ಆಚಾರ. ಊಟವಾದ ಮೇಲೆ ಒಬ್ಬೊಬ್ಬರಾಗಿ ಅಗ್ರಹಾರದ ಬ್ರಾಹ್ಮಣರು ಮನೆಯ ಚಿಟ್ಟೆಯ ಮೇಲೆ ನೆರೆಯುತ್ತಾರೆ-ದಿನದಿನಕ್ಕೂ ಪ್ರಿಯವಾಗಿ ಉಳಿದಿರುವ ತನ್ನ ಪುರಾಣ-ಪುಣ್ಯಕತೆಗಳ ವಾಚನವನ್ನು ಕೇಳಲು. ಸಂಜೆ ಮಾತ್ತೆ ಸ್ನಾನ, ಸಂಧ್ಯಾವಂದನ, ಹೆಂಡತಿಗೆ ಗಂಜಿ, ಮದ್ದು, ಅಡಿಗೆ, ಊಟ-ತಿರುಗಿ ಜಗುಲಿಯಲ್ಲಿ ಬಂದು ಕುಳಿತ ಬ್ರಾಹ್ಮಣರಿಗೆ ಪ್ರವಚನ. ಭಾಗೀರಥಿ ಆಗೊಮ್ಮೆ ಈಗೊಮ್ಮೆ ಅನ್ನುವುದುಂಟು: +“ನನ್ನನ್ನು ಕಟ್ಟಿಕೊಂಡು ನಿಮಗೇನು ಸುಖ? ಮನೆಗೊಂದು ಮಗು ಬೇಡವೇ? ಇನ್ನೊಂದು ಮದುವೆಯಾಗಿ.” +“ನನ್ನಂತಹ ವೃದ್ಧನಿಗೆ ಮದುವೆ…” +ಎಂದು ಪ್ರಾಣೇಶಾಚಾರ್ಯರು ನಗುತ್ತಾರೆ. +“ಇನ್ನೂ ನಲವತ್ತು ದಾಟಿದ ನೀವು ಎಂತಹ ವೃದ್ಧರು. ಕಾಶಿಗೆ ಹೋಗಿ ಸಂಸ್ಕೃತ ಓದಿ ಬಂದ ನಿಮಗೆ ಹೆಣ್ಣೊಂದನ್ನು ಧಾರೆ ಎರೆದುಕೊಡಲು ಯಾವ ತಂದೆಗೆ ಇಷ್ಟವಿಲ್ಲ? ಮನೆಗೊಂದು ಮಗು ಬೇಕು. ನನ್ನ ಕೆಹಿಡಿದಾಗಿನಿಂದ ನಿಮಗೆಲ್ಲಿ ಸುಖ ಸಿಕ್ಕಿದೆ…” +ಪ್ರಾಣೇಶಾಚಾರ್ಯರು ಮುಗುಳ್ನಕ್ಕು, ಎದ್ದು ಕೂರಲು ಯತ್ನಿಸುವ ಹೆಂಡತಿಯನ್ನು ಮಲಗಿಸಿ, ನಿದ್ದೆ ಮಾಡು ಎನ್ನುತ್ತಾರೆ. ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡು ಎನ್ನಲಿಲ್ಲವೇ ಭಗವಂತ? ಮುಕ್ತಿಮಾರ್ಗದಲ್ಲಿರುವ ತಮ್ಮನ್ನು ಪರೀಕ್ಷಿಸಲೆಂದೇ ಬ್ರಾಹ್ಮಣ ಜನ್ಮ ಕೊಟ್ಟು ಇಂತಹ ಸಂಸ್ಕಾರಕ್ಕೆ ನನ್ನನ್ನು ಅವ ತೊಡಗಿಸಿದ. ಪಂಚಾಮೃತದ ಸೇವನೆಯಷ್ಟು ಸುಖವಾದ ಧನ್ಯಭಾವ, ಪಶ್ಚಾತ್ತಾಪ ಹೆಂಡತಿಯ ಮೇಲೆ ಬಂದು, ಇವಳು ರೋಗಿಯಾಗಿದ್ದರಿಂದ ನಾನು ಇನ್ನಷ್ಟು ಹದವಾದೆ ಎಂದು ತಮ್ಮ ಪಾಡಿನ ಬಗ್ಗೆ ಹಿಗ್ಗುತ್ತಾರೆ. +ಊಟಕ್ಕೆ ಕೂರುವ ಮುಂಚೆ ಗೋಗ್ರಾಸವನ್ನು ಬಾಳೆಲೆಯಲ್ಲಿ ಎತ್ತಿ ಹಿತ್ತಲಿನಲ್ಲಿ ಮೇಯುತ್ತಿದ್ದ ಗೌರಿಯ ಎದುರು ಇಟ್ಟು, ಹಸುವಿನ ರೋಮಾಂಚಿತ ಮೆಯನ್ನು ಒರೆಸಿ ಕಣ್ಣಿಗೊತ್ತಿಕೊಂಡು ಒಳಗೆ ಬರುತ್ತಿದ್ದಂತೆ ’ ಆಚಾರ್ಯರೆ, ಆಚಾರ್ಯರೆ ’ ಎಂದು ಕರೆಯುವ ಹೆಣ್ಣಿನ ಸ್ವರ ಕೇಳಿಸಿತು. ಆಲಿಸಿದರೆ ನಾರಣಪ್ಪನ ಸೂಳೆ ಚಂದ್ರಿಯ ಸ್ವರದಂತಿದೆ. ಅವಳ ಹತ್ತಿರ ಮಾತನಾಡಿದರೆ ಮತ್ತೆ ಸ್ನಾನ ಮಾಡಿ ಊಟಮಾಡಬೇಕು. ಆದರೆ ಹೆಣ್ಣು ಹೆಂಗಸೊಬ್ಬಳನ್ನು ಅಂಗಳದಲ್ಲಿ ಕಾಯಿಸಿದರೆ ತುತ್ತು ಗಂಟಲಲ್ಲಿಳಿಯುವುದು ಶಕ್ಯವೇ? +ಜಗುಲಿಗೆ ಬಂದರು. ಚಂದ್ರಿ ಸರ್ರನೆ ತಲೆಮೇಲೆ ಸೆರಗೆಳೆದುಕೊಂಡು ಬಿಳಚಿ ಭಯಗ್ರಸ್ತಳಾಗಿ ನಿಂತಳು. +“ಏನಮ್ಮ ಬಂದ ವಿಷಯ?” +“ಅವರು…ಅವರು…” +ಚಂದ್ರಿ ಕಂಪಿಸುತ್ತ ಮಾತು ಹೊರಡದೆ ಕಂಬಕ್ಕೆ ಆತಳು. +“ಯಾರು? ನಾರಣಪ್ಪನೆ? ಏನಾಯಿತು? +“ಹೋದರು…” +ಚಂದ್ರಿ ಮುಖ ಮುಚ್ಚಿಕೊಂಡಳು. +“ನಾರಾಯಣ, ನಾರಾಯಣ-ಯಾವತ್ತು?” +“ಈಗ…” +“ನಾರಾಯಣ-ಏನಾಗಿತ್ತು?” +ಚಂದ್ರಿ ಬಿಕ್ಕುತ್ತ ಹೇಳಿದಳು: +“ಶಿವಮೊಗ್ಗೆಯಿಂದ ಬಂದವರೆ ಜ್ವರ ಬಂದು ಮಲಗಿದರು. ನಾಲ್ಕು ದಿನದ ಜ್ವರ-ಅಷ್ಟೆ…ಪಕ್ಕೆಯ ಹತ್ತಿರ ಗೆಡ್ಡೆಯೆದ್ದಿತ್ತು, ನೋವಿಗೆ ಬರುವ ಬಾವಿನ ಹಾಗೆ…” +“ನಾರಾಯಣ.” +ಉಟ್ಟ ಪಟ್ಟೆ ಮಡಿಯಲ್ಲೆ ಪ್ರಾಣೇಶಾಚಾರ್ಯರು ಓಡುತ್ತ ಗರುಡಾಚಾರ್‍ಯನ ಮನೆಗೆ ಹೋಗಿ ’ ಗರುಡಾ, ಗರುಡಾ ’ ಎಂದು ಕರೆಯುತ್ತ ಅಡಿಗೆ ಮನೆಗೆ ನುಗ್ಗಿದರು. ನಾರಣಪ್ಪ ಗರುಡಾಚಾರ್ಯನಿಗೆ ಐದು ತಲೆಯ ಸಂಬಂಧ. ನಾರಣಪ್ಪನ ಮುತ್ತಜ್ಜನ ಅಜ್ಜಿಯೂ ಗರುಡಾಚಾರ್ಯನ ಮುತ್ತಜ್ಜಿಯೂ ಅಕ್ಕತಂಗಿಯರು. ಕಲಸಿದ ಸಾರಿನ ತುತ್ತನ್ನು ಇನ್ನೇನು ಬಾಯಿಗೆತ್ತಬೇಕೆಂದಿದ್ದ ಗರುಡಾಚಾರ್ಯನಿಗೆ- “ನಾರಾಯಣ… ಗರುಡಾ, ಊಟಮಾಡಬೇಡ. ನಾರಣಪ್ಪ ತೀರಿಕೊಂಡನಂತೆ” +ಎಂದು ಮಧ್ಯಾಹ್ನದ ಸೆಖೆಗೆ ಬೆವರುತ್ತಿದ್ದ ಮುಖವನ್ನು ಒರೆಸಿಕೊಂಡರು. ಗರುಡಾಚಾರ್ಯ ದಂಗಾಗಿ, ತನಗೂ ನಾರಣಪ್ಪನಿಗೂ ಆಣೆಭಾಷೆಯಾಗಿ ಎಲ್ಲ ಸಂಬಂಧವೂ ಕಳಚಿಕೊಂಡಿದ್ದರೂ ಸಹ, ಕಲಸಿದ ತುತ್ತನ್ನು ಎಲೆಯ ಮೇಲೆಯೇ ಬಿಟ್ಟು, ಆಪೋಶನ ತೆಗೆದುಕೊಂಡು ಎದ್ದ. ಸಟ್ಟುಗ ಹಿಡಿದು ನಿಶ್ಚೇಷ್ಟಿತಳಾಗಿ ನಿಂತ ಹೆಂಡತಿ ಸೀತಾದೇವಿಗೆ ’ಮಕ್ಕಳಿಗೆ ಅಡ್ಡಿಯಿಲ್ಲ, ಊಟ ಮಾಡಲಿ. ಶವಸಂಸ್ಕಾರವಾಗುವ ತನಕ ನಾವು ಊಟ ಮಾಡುವಂತಿಲ್ಲ’ ಎಂದು ಪ್ರಾಣೇಶಾಚಾರ್ಯರ ಕೂಡ ಹೊರಬಂದ. ಸುದ್ದಿ ತಿಳಿಯುವುದರೊಳಗೆ ಅಕ್ಕಪಕ್ಕದವರೆಲ್ಲ ಎಲ್ಲಿ ಊಟಮಾಡಿಬಿಡುತ್ತಾರೋ ಎಂದು ಭಯದಿಂದ ಪ್ರಾಣೇಶಾಚಾರ್ಯರು ಉಡುಪಿ ಲಕ್ಷ್ಮಣಾಚಾರ್ಯರ ಮನೆಗೆ, ಗರುಡಾಚಾರ್ಯ ಅರೆಮರುಳು ಲಕ್ಷ್ಮಿದೇವಮ್ಮ, ಕೆಳೆಮನೆ ದುರ್ಗಾಭಟ್ಟರ ಮನೆಗೆ ಓಡುತ್ತೋಡುತ್ತ ಸುದ್ದಿ ಮುಟ್ಟಿಸಿದರು. ಸುದ್ದಿ ಕಿಚ್ಚಿನಂತೆ ಅಗ್ರಹಾರದ ಉಳಿದ ಹತ್ತು ಮನೆಗಳಿಗೂ ಹಬ್ಬಿತು. ಮಕ್ಕಳನ್ನು ಒಳಗೆ ಕೂಡಿಸಿ ಬಾಗಿಲು ಕಿಟಕಿ ಹಾಕಿದ್ದಾಯಿತು. ದೇವರ ದಯೆಯಿಂದ ಇನ್ನೂ ಯಾವ ಬ್ರಾಹ್ಮಣನೂ ಊಟ ಮಾಡಿರಲಿಲ್ಲ. ನಾರಣಪ್ಪನ ಸಾವನ್ನು ಕೇಳಿ ಹೆಂಗಸರು ಮಕ್ಕಳಾದಿಯಾಗಿ ಅಗ್ರಹಾರದ ಒಂದು ನರಪಿಳ್ಳೆಗೂ ವ್ಯಥೆಯಾಗದಿದ್ದರೂ ಕೂಡ ಎಲ್ಲರ ಹೃದಯದಲ್ಲೂ ಒಂದು ಅವ್ಯಕ್ತ, ಅಪರಿಚಿತ ಭೀತಿ, ಕಳವಳ ಹುಟ್ಟಿತು. ಬದುಕಿನಲ್ಲಿ ವೆರಿ, ಸತ್ತು ಅನ್ನಕಂಟಕ, ಶವವಾಗಿ ಇನ್ನೂ ಸಮಸ್ಯೆ ಎಂದು ತನ್ನ ಶಡ್ಡಕನನ್ನು ಶಪಿಸುತ್ತ ಉಡುಪಿ ಲಕ್ಷ್ಮಣಾಚಾರ್ಯ ಕೆತೊಳೆದ. ಆಚಾರ್ಯರ ಜಗುಲಿಯಲ್ಲಿ ಸೇರಲು ಹೊರಟ ಪ್ರತಿ ಗಂಡಸಿನ ಕಿವಿಯಲ್ಲೂ ಹೆಂಡತಿ ಊದಿದಳು: “ಪ್ರಾಣೇಶಾಚಾರ್ಯರು ಖುದ್ದು ತೀರ್ಮಾನಿಸದ ಹೊರತು ನೀವಾಗಿ ಅವನ ಶವಸಂಸ್ಕಾರ ಮಾಡಲು ಒಪ್ಪಬೇಡಿ. ನಾಳೆ ಗುರುಗಳು ಬಹಿಷ್ಕಾರ ಹಾಕಿದರೆ ಏನು ಗತಿ?” +ಪುರಾಣ ಕೇಳಲಿಕ್ಕೆಂದು ಕಿಕ್ಕಿರಿದು ಕೂರುವ ರೀತಿಯಲ್ಲಿ-ಆದರೆ ಇವತ್ತು ಅವ್ಯಕ್ತ ಶಂಕೆಯಲ್ಲಿ-ಜಗುಲಿಯಲ್ಲಿ ನೆರೆದಿದ್ದ ಬ್ರಾಹ್ಮಣರಿಗೆ ಪ್ರಾಣೇಶಾಚಾರ್ಯರು ತುಳಸಿಮಣಿ ಸರವನ್ನು ಕಂಠದ ಸುತ್ತ ಸುತ್ತುತ್ತ ತನಗೇ ಹಾಕಿಕೊಂಡ ಪ್ರಶ್ನೆಯ ಹಾಗೆ ಅಂದರು: +“ನಾರಣಪ್ಪನ ಶವಸಂಸ್ಕಾರವಾಗಬೇಕು: ಮೊದಲನೆಯ ಪ್ರಶ್ನೆ. ಅವನಿಗೆ ಮಕ್ಕಳಿಲ್ಲ-ಯಾರಾದರೂ ಅವನ ಬೊಜ್ಜ ಮಾಡಬೇಕು: ಎರಡನೆಯ ಪ್ರಶ್ನೆ.” +ಅಂಗಳದಲ್ಲಿ ಕಂಬಕ್ಕಾತು ನಿಂತಿದ್ದ ಚಂದ್ರಿ, ಬ್ರಾಹ್ಮಣರು ಇದಕ್ಕೇನೆನ್ನುತ್ತಾರೆಂದು ಆತಂಕದಿಂದ ಕಾದಳು. ಕುತೂಹಲ ತಡೆಯಲಾರದೆ ಹಿತ್ತಲ ಬಾಗಿಲಿನಿಂದ ಬಂದು ಪ್ರಾಣೇಶಾಚಾರ್ಯರ ನಡುಮನೆಯಲ್ಲಿ ನಿಂತು ಆಲಿಸುತ್ತಿದ್ದ ಹೆಂಗಸರು ತಮ್ಮ ಗಂಡಸರು ಎಲ್ಲಿ ದುಡುಕಿಬಿಡುತ್ತಾರೊ ಎಂದು ಶಂಕಿತರಾದರು. +ಆಚಾರ್ಯರು ಆಡಿದ ಮಾತಿಗೆಲ್ಲ ಸಾಮಾನ್ಯವಾಗಿ ಅನ್ನುವ ರೀತಿಯಲ್ಲಿ ಗರುಡಾಚಾರ್ಯ ತನ್ನ ದಷ್ಟಪುಷ್ಟ ಕಪ್ಪು ಬಾಹುಗಳನ್ನು ಸವರಿಕೊಳ್ಳುತ್ತ “ಹೌದು, ಹಾದು, ಹಾದು” ಎಂದ. +“ಶವಸಂಸ್ಕಾರವಾಗುವವರೆಗೆ ಯಾರೂ ಊಟಮಾಡುವಂತಿಲ್ಲವಲ್ಲ.” +ಗುಂಪಿನಲ್ಲಿದ್ದ ಬಡ ಬ್ರಾಹ್ಮಣನಲ್ಲಿ ಒಬ್ಬನಾದ ಬಲರಾಮನ ಗೋವಿನಂತಹ ಕೃಶ ಶರೀರದ ದಾಸಾಚಾರ್ಯ ಹೇಳಿದ. +“ನಿಜ…ನಿಜ.” ಲಕ್ಷ್ಮಣಾಚಾರ್ಯ ತನ್ನ ಹೊಟ್ಟೆಯನ್ನುಜ್ಜಿಕೊಳ್ಳುತ್ತ ಮುಖವನ್ನು ಮುಂದಕ್ಕೆ ಹಿಂದಕ್ಕೆ ಮಾಡಿ ಹೇಳಿ ರೆಪ್ಪೆಗಳನ್ನು ಬಡಿದ. ಪುಷ್ಟವಾಗಿದ್ದ ಅವನ ಏಕಮಾತ್ರ ಅಂಗವೆಂದರೆ ಜ್ವರಗಡ್ಡೆಯಿಂದ ಬಾತಿದ್ದ ಹೊಟ್ಟೆ. ಕಾರಣ-ಬಚ್ಚುಗೆನ್ನೆ, ಗುಳಿಬಿದ್ದ ಹಳದಿ ಕಣ್ಣು, ಎಲುಬು ನೆಟ್ಟ ಎದೆ, ಸೊಟ್ಟಗಾದ ಕಾಲಿನಿಂದಾಗಿ ಶರೀರದ ಸಮತೂಕ ತಪ್ಪಿ ಮುಂಭಾರವಾಗಿತ್ತು; ಕಾರಣ- ಪೃಷ್ಠವನ್ನು ಹಿಂದಕ್ಕೊಡ್ಡಿ ಅವ ನಡೆಯುವ-ಎಂದು ಪಾರಿಜಾತಪುರದ ಲೇವಡಿಯ ಪಂಚಗ್ರಾಮದವರ ಹಾಸ್ಯ. +ಯಾರಿಂದಲೂ ನೇರವಾದ ಸೂಚನೆ ಬರದಿದ್ದುದು ನೋಡಿ ಪ್ರಾಣೇಶಾಚಾರ್ಯರು- +“ಆದ್ದರಿಂದ ಈಗ ಯಾರು ಅವನ ಶವಸಂಸ್ಕಾರ ಮತ್ತು ಬೊಜ್ಜ ಮಾಡಬೇಕು ಎಂಬುದು ನಮ್ಮ ಮುಂದಿರೊ ಸಮಸ್ಯೆ. ಸಂಬಂಧಿಗಳು ತಪ್ಪಿದರೆ ಯಾವ ಬ್ರಾಹ್ಮಣನಾದರೂ ಮಾಡಬಹುದೆಂದು ಧರ್ಮಶಾಸ್ತದಲ್ಲಿದೆ.” +ಸಂಬಂಧಿಗಳು ಎನ್ನುವ ಮಾತನ್ನೆತ್ತಿದ್ದರಿಂದ ಉಳಿದ ಬ್ರಾಹ್ಮಣರು ಗರುಡಾಚಾರ್ಯ ಮತ್ತು ಲಕ್ಷ್ಮಣಾಚಾರ್ಯರ ಮುಖ ನೋಡಿದರು. ಲಕ್ಷ್ಮಣಾಚಾರ್ಯ ತನಗಲ್ಲ ಎನ್ನುವ ಹಾಗೆ ಕಣ್ಣು ಮುಚ್ಚಿಕೊಂಡ. ಆದರೆ ಕೋರ್ಟು ಕಚೇರಿ ಹತ್ತಿದ್ದ ಗರುಡಾಚಾರ್ಯ ತಾನೀಗ ಮಾತನಾಡುವುದು ಅವಶ್ಯವೆಂದು ಒಂದು ಚಿಟಿಕೆ ನಶ್ಯ ಏರಿಸಿ, ಗಂಟಲು ಕೆರೆದುಕೊಂಡ. +“ಧರ್ಮಶಾಸ್ತದ ಪ್ರಕಾರ ನಾವು ನಡೆಯೋದು ಸರಿ. ನಮ್ಮಲ್ಲೆಲ್ಲ ಮಹಾ ವಿದ್ವಾಂಸರಾದ ತಮ್ಮ ವಾಕ್ಯ ನಮಗೆ ವೇದ ವಾಕ್ಯ. ತಮ್ಮ ಅಪ್ಪಣೆಯಾದರೆ ಸೆ. ನನಗೂ ಅವನಿಗೂ ಒಂದು ತಲೆತಲಾಂತರದ ಸಂಬಂಧವಿರೋದು ನಿಜ. ಆದರೆ ತಮಗೆ ತಿಳಿದಂತೆ ನಾನೂ ಅವನಪ್ಪನೂ ಕೋರ್ಟು ಹತ್ತಿ, ಆ ತೋಟದ ಕಾರಣಕ್ಕಾಗಿ ಜಗಳವಾಡಿ, ಅವನಪ್ಪ ಸತ್ತ ಮೇಲೆ ನಾನು ಧರ್ಮಸ್ಥಳದ ನ್ಯಾಯ ತಂದರೂ ಈ ನಾರಣಪ್ಪ ದೆವಾಜ್ಞೆ ಧಿಕ್ಕರಿಸಿ-ಏನು?-ನಮಗೂ ಅವನಿಗೂ ಇನ್ನು ಮುಂದೆ ತಲತಲಾಂತರಕ್ಕೂ ಮಾತುಕತೆ, ಮದುವೆ, ಮುಂಜಿ, ಊಟ-ಉಪಚಾರ ಇತ್ಯಾದಿಗಳು ಇಲ್ಲವೆಂದು ಆಣೆಭಾಷೆ ಹಾಕಿಕೊಂಡ ಮೇಲೆ ಏನು-?” +ಗರುಡಾಚಾರ್ಯನ ನಾಸಿಕೋತ್ಪನ್ನ ವಾಗ್ಝರಿ ವಾಕ್ಯ ತಪ್ಪಿ ನಿಂತು ಇನ್ನೆರಡು ಚಿಟಿಕೆ ನಸ್ಯದಿಂದ ಸ್ಫೂರ್ತವಾಯಿತು. ಧೆರ್ಯ ತಂದು ಸುತ್ತ ನೋಡಿ, ಚಂದ್ರಿಯ ಮುಖ ಕಂಡು, ಮುಚ್ಚುಮರೆಯೇಕೆಂದು ಅಂದೇಬಿಟ್ಟ: +“ನೀವು ಹೇಳಿದ ಮಾತನ್ನು ಗುರುಗಳೂ ಒಪ್ಪುತ್ತಾರೆ. ಏನು? ನಾನು ಸಂಸ್ಕಾರ ಮಾಡಬಹುದೋ, ಬಾರದೋ ವಿಷಯ ಒತ್ತಟ್ಟಿಗಿರಲಿ. ಅವ ಬ್ರಾಹ್ಮಣ ಹೌದೊ ಅಲ್ಲವೊ ಎಂಬೋದು ನಿಜವಾದ ಪ್ರಶ್ನೆ. ಏನು?-ಶೂದ್ರಳ ಸಹವಾಸ ಮಾಡಿದವ…” +ಈ ಮಾಧ್ವರ ಆಚಾರ ಎಷ್ಟು ಆಳವಾದ್ದೆಂದು ಕುತೂಹಲದಿಂದ ನೋಡುತ್ತಿದ್ದ ಅಗ್ರಹಾರದ ಏಕಮಾತ್ರ ಸ್ಮಾರ್ತ ದುರ್ಗಾಭಟ್ಟ ಚಂದ್ರಿಯನ್ನು ವಾರೆಗಣ್ಣಿನಿಂದ ನೋಡುತ್ತ ಕಿಡಿ ಹಾರಿಸಿದ: +“ಛಿ ಛಿ ಛಿ, ದುಡುಕಬೇಡಿ ಆಚಾರ್ಯರೇ. ಶೂದ್ರಳೊಬ್ಬಳನ್ನ ಸೂಳಿಯಾಗಿಟ್ಟುಕೊಂಡಾಕ್ಷಣ ಬ್ರಾಹ್ಮಣ್ಯ ನಾಶವಾಗಲ್ಲ. ಉತ್ತರದಿಂದ ಈ ಕಡೆ ಬಂದ ನಮ್ಮ ಪೂರ್ವಿಕರು-ಬೇಕಾದರೆ ಪ್ರಾಣೇಶಾಚಾರ್ಯರನ್ನು ಕೇಳಿ- ದ್ರಾವಿಡ ಹೆಂಗಸರ ಸಹವಾಸ ಮಾಡಿದರೆಂದು ಇತಿಹಾಸದ ಪ್ರತೀತಿ. ನಾನು ಗೇಲಿಗೆ ಅನ್ನುತ್ತಿದ್ದೇನೆಂದಲ್ಲ… ಹಾಗೆ ನೋಡುತ್ತ ಹೋದರೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಬರುವ ಲೌಕಿಕರು ಬಸರೂರು ಸೂಳೆಯರ…” +ಮಾಧ್ವರನ್ನಿವ ಕಾಲು ಕೆರೆದು ಗೇಲಿಮಾಡುತ್ತಿದ್ದಾನೆಂದು ಗರುಡಾಚಾರ್ಯನಿಗೆ ರೇಗಿತು: +“ಸ್ವಲ್ಪ, ಸ್ವಲ್ಪ ತಡೆಯಿರಿ ದುರ್ಗಾಭಟ್ಟರೆ, ಇಲ್ಲಿ ಪ್ರಶ್ನೆ ಬರಿ ಕಾಮಸಂಬಂಧದ್ದಲ್ಲ. ಅನುಲೋಮ ವಿಲೋಮದ ಬಗ್ಗೆ ಕಾಶಿಗೆ ಹೋಗಿ ವೇದಾಂತ ಓದಿ ಬಂದ ವೇದಾಂತ ಶಿರೋಮಣಿ ಪ್ರಾಣೇಶಾಚಾರ್ಯರಿಗೆ ತಾವು ಕಲಿಸಿಕೊಡಬೇಕಿಲ್ಲ. ಏನು? ನಿಮ್ಮ ಮತದ, ನಮ್ಮ ಮತದ ದಿಗ್ಗಜಪಂಡಿತರ ಜೊತೆ ವಾದಿಸಿ, ದಕ್ಷಿಣದ ಸಮಸ್ತ ಪೀಠಗಳಲ್ಲಿ ಪ್ರಶಸ್ತಿಗಳಿಸಿ, ಹದಿನೆದು ಜರಿಶಾಲುಗಳನ್ನ ಬೆಳ್ಳಿತಟ್ಟೆಗಳನ್ನ ಬಹುಮಾನವಾಗಿ ಪಡೆದ-ಏನು?-ನಮ್ಮ ಆಚಾರ್ಯರಿಗೆ-ಏನು?” +ಪ್ರಾಣೇಶಾಚಾರ್ಯರಿಗೆ ಮಾತು ಮುಖ್ಯ ಪ್ರಶ್ನೆಯಿಂದ ದೂರ ಸರಿದು ತನ್ನ ಪ್ರಶಂಸೆಗೆ ಇಳಿದಿದ್ದರಿಂದ ಸಂಕೋಚವಾಗಿ- +“ಲಕ್ಷ್ಮಣಾ, ನೀನು ಹೇಳೋದು ಏನು? ನಾರಣಪ್ಪನಿಗೆ ನಿನ್ನ ಹೆಂಡತಿಯ ತಂಗಿಯನ್ನೇ ಕೊಟ್ಟಿತ್ತಲ್ಲವೇ?” +ಲಕ್ಷ್ಮಣಾಚಾರ್ಯ ಕಣ್ಣನ್ನು ಮುಚ್ಚಿ- +“ಎಲ್ಲಾ ಒಟ್ಟು ತಮ್ಮ ಅಪ್ಪಣೆ, ತಮ್ಮ ಅನುಮತಿ. ನಮಗೆ ಏನು ಧರ್ಮಸೂಕ್ಷ್ಮ ಗೊತ್ತು? ನಾರಣಪ್ಪ-ಗರುಡ ಹೇಳೋ ಹಾಗೇ-ಕೀಳು ಜಾತಿಯ ಹೆಣ್ಣೊಂದರ ಸಂಪರ್ಕವನ್ನ…”ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದ. ಕಣ್ಣನ್ನು ಬಿಟ್ಟು ಮೂಗನ್ನು ಅಂಗವಸ್ತದಿಂದ ತೋಡಿಕೊಳ್ಳುತ್ತ-“ಪ್ರಶ್ನೆ ತಾವು ತಿಳಿದಿರೋ ಹಾಗೆ ಅವಳು ಮಾಡಿದ ಅಡಿಗೇನೂ ಊಟ ಮಾಡ್ತಿದ್ದ ಎಂಬೋದು…” +“ಮಧ್ಯಪಾನಾನ್ನೂ ಮಡ್ತಿದ್ದ ಎಂಬೋದು…” ನಾರಣಪ್ಪನ ಎದುರು ಮನೆಯ ಪದ್ಮನಾಭಾಚಾರ್ಯ ಧ್ವನಿಗೂಡಿಸಿದ. +“ಮಧ್ಯಪಾನಾ ಇರಲಿ, ಮಾಂಸಾಹಾರಾನ್ನೂ ಮಾಡುತ್ತಿದ್ದ ಎಂಬೋದು” ಗರುಡಾಚಾರ್ಯ ದುರ್ಗಾಭಟ್ಟರ ಕಡೆ ತಿರುಗಿ ಅಂದ: “ನಿಮಗೆ ಅದೂ ಅಡ್ಡಿಯಿರಲಿಕ್ಕಿಲ್ಲ. ನಿಮ್ಮ ಮತಾಚಾರ್ಯರು ಅನುಭವಪೂರ್ಣಾ ಅಗಲಿಕ್ಕೆಂದು ಪರಕಾಯಪ್ರವೇಶ ಮಾಡಿ ರಾಣಿ ಜೊತೆ ಮೆಮರೆತರಲ್ಲವೇ?” +ಮಾತು ಹದ ಮೀರುತ್ತಿದೆಯೆಂದು ಪ್ರಾಣೇಶಾಚಾರ್ಯರು “ಗರುಡಾ, ಸ್ವಲ್ಪ ಸುಮ್ಮನಿರು” ಎಂದರು. +“ತಾಳಿ ಕಟ್ಟಿದ ಹೆಂಡತಿಯನ್ನು ಬಿಟ್ಟ. ಹೋಗಲಿ ಎಂದರೆ…”, ಕಣ್ಣು ಮುಚ್ಚಿ ಲಕ್ಷ್ಮಣಾಚಾರ್ಯ ಮತ್ತೆ ಮಾತನ್ನಾಡಲು ಪ್ರಾರಂಭಿಸಿದ: “ಯಾವಳನ್ನೊ ಕಟ್ಟಿಕೊಂಡ. ಭ್ರಾಂತಿ ಹಿಡಿದು ಸತ್ತ ನನ್ನ ಮನೆಯವಳ ತಂಗಿಯ ಸಂಸ್ಕಾರವನ್ನೂ ಮಾಡಲಿಲ್ಲ. ಅದೂ ಹೋಗಲಿ ಎಂದರೆ ಅವ ಸ್ವತಃ ಅಪ್ಪ ಅಮ್ಮನ ಶ್ರಾದ್ಧಾನ್ನೂ ಮಾಡಲಿಲ್ಲ. ನಮಗೆ ಹತ್ತಿರದವನೆಂದು ನಾನೇನು ಮುಚ್ಚಿಕೊಳ್ಳುವವನಲ್ಲ. ನನ್ನ ಹೆಂಡತಿಯ ತಾಯಿಯ ಅಣ್ಣನ ಮಗ ಅವನು. ಸ್ವಂತದವನೆಂದು ನಾವು ಮಡಿಲಲ್ಲಿ ಹಾಕಿಕೊಳ್ಳೋಷ್ಟು ಹಾಕ್ಕೊಂಡೆವು. ಹೋಗಲಿ ಎಂದರೆ, ಎಲ್ಲ ಬ್ರಾಹ್ಮಣರ ಎದುರು ಹೊಳೆಗೆ ಬಂದು, ತಲೆತಲಾಂತರದಿಂದ ಮನೆಯಲ್ಲಿ ಪೂಜೆ ಮಾಡಿದ ಆ ಸಾಲಿಗ್ರಾಮವನ್ನ ಅವ ನೀರಿಗೆ ಎಸೆದು ಥೂ ಎಂದು ಉಗಿದು ಬಿಡೋದ? ಅದೂ ಹೋಗಲಿ ಎಂದರೆ ನಮಗೆಲ್ಲಾ ಕಾಣಲಿ ಎಂದೇ ತುರುಕರನ್ನು ಕರೆದುಕೊಂಡು ಬಂದು ಅಂಗಳದಲ್ಲೆ ಅಪೇಯಪಾನ ಅಭಕ್ಷ್ಯಭೋಜನವನ್ನು ಮಾಡೋದ? ಅಯ್ಯ, ಯಾಕಯ್ಯ ಎಂದೇನಾದರು ಹಿತ ಹೇಳಹೋದರೆ ಹೀನಾಮಾನ ಬೆದು ಬಿಡುತ್ತಿದ್ದ. ಅವನಿಗೆ ಜೀವವಿರುವಷ್ಟೂ ಕಾಲ ಅವನಿಗೆ ಹೆದರಿಕೊಂಡು ಬದುಕಬೇಕಾಗಿಬಂತು.” +ತನ್ನ ಗಂಡ ಲಾಯಕ್ಕಾಗಿ ಹೇಳಿದರೆಂದು ಒಳಗಿನಿಂದ ಆಲಿಸುತ್ತಿದ್ದ ಅವರ ಹೆಂಡತಿ ಅನುಸೂಯಳಿಗೆ ಆನಂದವಾಯಿತು. ಕಂಬಕ್ಕೊರಗಿ ಕೂತಿದ್ದ ಚಂದ್ರಿ ಕಣ್ಣಿಗೆ ಬಿದ್ದು, ಮನಸಾರೆ ಶಪಿಸಿದಳು: ಅಪರಾತ್ರಿಯಲ್ಲಿ ಇವಳನ್ನು ಹುಲಿ ಮೆಟ್ಟಲಿ. ಹಾವು ಕಡಿಯಲಿ. ಈ ರಂಡೆ, ಈ ರಂಭೆ ಅವನ ತಲೆಗೆ ಮದ್ದು ಹಾಕಿಲ್ಲದಿದ್ದರೆ ತನ್ನ ಸ್ವಂತ ಸೋದರಮಾವನ ಮಗನಾದ ಅವ ಯಾಕೆ ತನ್ನ ಕುಟುಂಬದ ಹೆಣ್ಣನ್ನ ಖಾಯಿಲೆ ಹಿಡಿದಿದೇಂತ ದೂಕಿ, ಆಸ್ತೀನ ಪರಭಾರೆ ಮಾಡಿ, ಈ ಮುಂಡೆಯ ಕೊರಳಿಗೆ ಪಿತ್ರಾರ್ಜಿತ ಬಂಗಾರಾನ್ನೆಲ್ಲ ಹಾಕಿ… ಚಂದ್ರಿಯ ಕೊರಳಿನಲ್ಲಿದ್ದ ನಾಲ್ಕೆಳೆಯ ಚಿನ್ನದ ಸರ, ಕೆಯ ಕಡಗ ನೋಡಿ ಅನುಸೂಯಳಿಗೆ ದುಃಖ ತಡೆಯಲಾಗದೆ ಗೋಳೋ ಎಂದು ಅತ್ತುಬಿಟ್ಟಳು. ಈಗ ತನ್ನ ತಂಗಿ ಬದುಕಿದ್ದರೆ ಇದು ಅವಳ ಕೊರಳಿನಲ್ಲಿರಬೇಕಿತ್ತು. ತನ್ನ ರಕ್ತಸಂಬಂಧಿಯ ಶವ ಹೀಗೆ ಸಂಸ್ಕಾರವಿಲ್ಲದೆ ಕಾಯಬೇಕಾಗಿ ಬರುತ್ತಿತ್ತ? ಎಲ್ಲ ಈ ದರಿದ್ರದ ರಂಡೆಯಿಂದ ಆಯಿತಲ್ಲ, ಅವಳ ಮುಖಕ್ಕೆ ಬೆಂಕಿಯಿಡಲಿ ಎಂದು ಕುದಿದು ಕುದಿದು ಗೋಳಾಡಿದಳು. +ಬ್ರಾಹ್ಮಣಾರ್ಥದಿಂದಲೇ ಜೀವನ ನಡೆಯಬೇಕಾಗಿದ್ದ, ಭೋಜನವೆಂದರೆ ಹತ್ತು ಮೆಲಿ ಎಗ್ಗಿಲ್ಲದೆ ತಾಲಿ ಹಿಡಿದು ನಡೆದುಬಿಡುತ್ತಿದ್ದ ದಾಸಾಚಾರ್ಯ ತನ್ನ ಕಷ್ಟವನ್ನ ತೋಡಿಕೊಂಡ: +“ಅವನನ್ನು ನಮ್ಮ ಅಗ್ರಹಾರದಲ್ಲಿ ಇಟ್ಟುಕೊಂಡೀವಿ ಅಂತ-ನಿಮಗೆಲ್ಲ ತಿಳಿದಿರೋ ಹಾಗೆ ಸಂತರ್ಪಣೆ ಬ್ರಾಹ್ಮಣಾರ್ಥ ಅದು ಇದೂಂತ ಯಾವುದಕ್ಕೂ ಎರಡು ವರ್ಷ ನಮಗೆ ಕರೆ ಬರಲಿಲ್ಲ. ಈಗ ದುಡುಕಿ ನಾವೇನಾದರೂ ಅವನ ಶವಸಂಸ್ಕಾರ ಮಾಡಿದ್ದೇ ಆದ ಪಕ್ಷದಲ್ಲಿ ಬ್ರಾಹ್ಮಾಣಾರ್ಥಕ್ಕೆ ಸೊನ್ನೆಯೇ ಸರಿ. ಅಂದರೆ ಈಗ ಅವನ ಶವಾನ್ನ ಅಗ್ರಹಾರದಾಗ ಇಟ್ಟುಕೊಂಡು ಊಟ ಬಿಟ್ಟು ಉಪವಾಸ ಇರಲಿಕ್ಕೆ ಶಕ್ಯವೂ ಇಲ್ಲ. ಈ ಧರ್ಮಸಂಕಟದಲ್ಲಿ ಪ್ರಾಣೇಶಾಚಾರ್ಯರು ಧರ್ಮಸೂಕ್ಷ್ಮ ಏನೂಂತ ತಿಳಿದು ಹೇಳಬೇಕು. ಅವರು ಅಂದದ್ದಕ್ಕೆ ಎದುರು ಹೇಳೋರು ಯಾರು ನಮ್ಮ ಮತದಲ್ಲಿ…” +ಇದು ತಮಗೆ ಸೇರಿದ ಪ್ರಶ್ನೆಯಲ್ಲವೆಂದು ಉದಾಸೀನರಾದ ದುರ್ಗಾಭಟ್ಟರು ಚಂದ್ರಿಯನ್ನು ಪರೀಕ್ಷಿಸುತ್ತ ಕೂತರು. ಸಾಮಾನ್ಯ ಮನೆಯಿಂದ ಹೊರಗೆ ಹೊರಡದಿದ್ದ, ಕುಂದಾಪುರದಿಂದ ನಾರಣಪ್ಪ ಮೆಚ್ಚಿ ತಂದ ಈ ವಸ್ತು ಇಷ್ಟು ಪಕ್ಕಾಗಿ ಅವರ ರಸಿಕ ಕಣ್ಣಿಗೆ ಸಿಕ್ಕಿದ್ದು ಇವತ್ತೇ ಪ್ರಥಮ ಬಾರಿಗೆ. ಥೇಟು ವಾತ್ಸ್ಯಾಯನೋಕ್ತ ವರ್ಣನೆಯ ಚಿತ್ತಿನಿ. ಉಂಗುಷ್ಠಕ್ಕಿಂತ ಉದ್ದವಾದ ಆ ಬೆರಳು ನೋಡು. ಆ ಮೊಲೆಗಳು ನೋಡು, ಸಂಭೋಗದಲ್ಲಿವಳು ಗಂಡನ್ನು ಹೀರಿಬಿಡುತ್ತಾಳೆ. ಚಂಚಲವಾಗಿರಬೇಕಾಗಿದ್ದ ಕಣ್ಣುಗಳು ಈಗ ದುಃಖದಿಂದ ಭೀತಿಯಿಂದ ಬಾಡಿ, ಆಪ್ಯಾಯಮಾನವಾಗಿದ್ದಾಳೆ. ಅವರ ಮಲಗುವ ಕೋಣೆಯಲ್ಲಿ ತೂಗುಹಾಕಿದ್ದ ಆ ರವಿವರ್ಮನ ಪಟದ ಅಂಚಲ್ಲಿ ಬಡತನದ ಸೆರಗಿಗೆ ಮೀರಿದ ಮೊಲೆಗಳನ್ನು ಸಂಕೋಚದಿಂದ ಮುಚ್ಚಿಕೊಂಡ ಮತ್ಸ್ಯಗಂಧಿಯ ಮೂಗು, ಕಣ್ಣು, ತುಟಿ: ಇವಳಿಗೆಂದು ನಾರಣಪ್ಪ ಶಾಲಿಗ್ರಾಮವನ್ನೆಸೆದ, ಮಾಂಸ-ಮದ್ಯಾಹಾರ ಮಾಡಿದ ಎಂಬೋದು ಆಶ್ಚರ್ಯವಲ್ಲ. ಅವನ ಧೆರ್ಯ ಆಶ್ಚರ್ಯ. ಆ ಮುಸಲ್ಮಾನ ಹುಡುಗಿಯನ್ನು ಮದುವೆಯಾದ ಜಗನ್ನಾಥ ಶೃಂಗಾರಶತಕದಲ್ಲಿ ಮ್ಲೇಚ್ಛ ಕನ್ನಿಕೆಯ ಮೊಲೆಗಳನ್ನು ವರ್ಣಿಸಿದ್ದು ನೆನಪಾಗುತ್ತದ್ದೆ. ಪ್ರಾಣೇಶಾಚಾರ್ಯರು ಇಲ್ಲದಿದ್ದರೆ, ನಾರಣಪ್ಪ ಸತ್ತಿರದಿದ್ದರೆ, ಅರಸಿಕರಾದರೂ ಈ ಬ್ರಾಹ್ಮಣರಿಗೆ ಆ ಶ್ಲೋಕವನ್ನು ಹೇಳಿ ವಿವರಿಸಿಬಿಡುತ್ತಿದ್ದರು. ಕಾಮಾತುರಾಣಾಂ-ಅರ್ಥಾv ನಾರಣಪ್ಪನಂತಹವರಿಗೆ-ನ ಭಯಂ ನ ಲಜ್ಜಾ. +ಸಭೆ ಮೌನವಾಗಿದ್ದುದನ್ನು ಕಂಡು ದುರ್ಗಾಭಟ್ಟರು ಅಂದರು : +“ನಾವು ಹೇಳಬೇಕಾದ್ದೆಲ್ಲ ಹೇಳಿಯಾಯಿತಲ್ಲ. ಸತ್ತವರ ತಪ್ಪನ್ನ ಹೆಕ್ಕಿ ಏನು ಪ್ರಯೋಜನ? ಈಗ ಪ್ರಾಣೇಶಾಚಾರ್ಯರು ಹೇಳಲಿ. ನಿಮಗೆ ಹೇಗೋ ನನಗೂ ಅವರು ಗುರುಸಮಾನರು. ಗರುಡಾಚಾರ್ಯ ಅವನ ಮತಗರ್ವದಲ್ಲಿ ಏನೇ ಅನ್ನಲಿ… +ಪ್ರಾಣೇಶಾಚಾರ್ಯರು ತಮ್ಮ ಪ್ರತಿ ಮಾತನ್ನು ತೂಕ ಮಾಡುತ್ತ, ತನ್ನ ಹೆಗಲಿನ ಮೇಲೆ ಇಡಿಯ ಅಗ್ರಹಾರದ ಬ್ರಾಹ್ಮಣ್ಯದ ರಕ್ಷಣೆಯ ಹೊರೆ ಇದೆಯೆಂಬುದನ್ನರಿತು ತಡವರಿಸುತ್ತ ಹೇಳಿದರು : +“ಗರುಡಾ ಹೇಳಿದ : ಅವನಿಗೂ ತನಗೂ ಆಣೆ ಭಾಷೆ ಆಗಿದೇಂತ. ಅದಕ್ಕೆ ಧರ್ಮಶಾಸ್ತದಲ್ಲಿ ನಿವಾರಣೆ ಇದೆ. ಶಾಂತಿ ಮಾಡಿಸಿಕೊಳ್ಳಬೇಕು. ಗೋದಾನವಾಗಬೇಕು. ಪುಣ್ಯಕ್ಷೇತ್ರವೊಂದಕ್ಕೆ ಹೋಗಿಬರಬೇಕು. ಇದು ಖರ್ಚಿನ ಪ್ರಶ್ನೆ. ಈ ಖರ್ಚನ್ನ ನೀನು ಮಾಡು ಎಂಬೋದಕ್ಕೆ ನನಗೆ ಅಧಿಕಾರ ಇಲ್ಲ. ಇನ್ನು ಲಕ್ಷ್ಮಣ, ದಾಸ ಮತ್ತು ಉಳಿದವರು ಎತ್ತಿದ ಪ್ರಶ್ನೆ ನಾರಣಪ್ಪ ಸತ್ಕುಲಪ್ರಸೂತನಾದ ಬ್ರಾಹ್ಮಣ ನಡಕೊಳ್ಳೊ ಹಾಗೆ ನಡಕೊಳ್ಳಲಿಲ್ಲ; ಅಗ್ರಹಾರಕ್ಕೆ ಅಪಖ್ಯಾತಿ ತಂದ ಎಂಬೋದು. ಇದು ಗಾಢವಾದ ಪ್ರಶ್ನೆ. ಇದಕ್ಕೆ ಉತ್ತರ ನನಗೆ ಹೊಳೆಯುತ್ತಿಲ್ಲ. ಕಾರಣ, ಅವನು ಬ್ರಾಹ್ಮಣ್ಯವನ್ನು ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ ಎಂಬೋದು. ಅವನಿಗೆ ಬಹಿಷ್ಕಾರ ಹಾಕಲಿಲ್ಲ. ಶಾಸ್ತರೀತಿಯಲ್ಲಿ ಅವನು ಬಹಿಷ್ಕೃತನಾಗದೆ ಸತ್ತದ್ದರಿಂದ ಅವನು ಬ್ರಾಹ್ಮಣನಾಗಿಯೇ ಸತ್ತಂತೆ. ಹಾಗೆ ವಿಚಾರ ಮಾಡಿದಲ್ಲಿ ಬ್ರಾಹ್ಮಣರಲ್ಲದವರಿಗೆ ಅವನ ಶವವನ್ನು ಮುಟ್ಟುವ ಅಧಿಕಾರವಿಲ್ಲ. ಮುಟ್ಟಲು ಬಿಟ್ಟರೆ ಆಗಲೂ ನಮ್ಮ ಬ್ರಾಹ್ಮಣ್ಯಕ್ಕೆ ವಂಚನೆ ಬಂದಂತೆ. ಇಷ್ಟೆಲ್ಲ ಇದ್ದೂ ಅವನು ನಡೆದುಕೊಂಡ ರೀತಿಯನ್ನು ಕಂಡು ಕೇಳಿ ನೋಡಿದ ನಿಮಗೆ ಸಂಸ್ಕಾರ ಮಾಡಿ ಎಂದ ಕಡ್ಡಾಯವಾಗಿ ಹೇಳಲಿಕ್ಕೂ ನನಗೆ ಅಂಜಿಕೆಯಾಗುತ್ತದೆ. ಏನು ಮಾಡೋದು, ಧರ್ಮಶಾಸ್ತ ಇದಕ್ಕೆ ಏನೆನ್ನುತ್ತೆ, ದೋಷಪರಿಹಾರಕ್ಕೆ ಶಾಂತಿ ಇತ್ಯಾದಿಗಳು ಪರಿಹಾರವಿದೆಯೋ… +ಬ್ರಾಹ್ಮಣರೆಲ್ಲರೂ ಬೆರಗಾದರು. ಹೆಂಗಸರು ಚಾವಡಿಗೆ ಬಂದು ನಿಂತರು. ಯಾರೂ ತಮ್ಮ ಕಣ್ಣನ್ನು ನಂಬಲಿಲ್ಲ; ಚಂದ್ರಿ ತನ್ನ ನಾಲ್ಕೆಳೆ ಬಂಗಾರದ ಸರ, ಕಡಗ ಬಳೆಗಳನ್ನು ಪ್ರಾಣೇಶಾಚಾರ್ಯರ ಎದುರಿಗಿಟ್ಟು, ಅವರ ಸಂಸ್ಕಾರದ ಖರ್ಚಿಗೆ ಎಂದು ತೊದಲಿ ತಾನು ಮೊದಲು ನಿಂತಲ್ಲಿ ಹೋಗಿ ನಿಂತಳು. +ಎರಡು ಸಾವಿರ ರೂಪಾಯಿಯ ಚಿನ್ನವಾದರೂ ಇದೆ ಅದರಲ್ಲಿ ಎಂದು ಹೆಂಗಸರು ಲೆಕ್ಕ ಹಾಕಿದರು. ಒಬ್ಬಳಾದ ಮೇಲೆ ಒಬ್ಬಳು ತನ್ನ ಗಂಡನ ಮುಖ ನೋಡಿದಳು. ಬ್ರಾಹ್ಮಣರೆಲ್ಲ ಮುಖ ತಗ್ಗಿಸಿದರು : ಅವರಿಗೆ ಭಯವಾಗಿತ್ತು. ಬಂಗಾರದ ಆಸೆಯಿಂದ ಬ್ರಾಹ್ಮಣ್ಯ ನಾಶವಾದೀತೆಂದು ದಿಗಿಲಾಯಿತು. ಆದರೆ ಕ್ಷಣಮಾತ್ರದಲ್ಲಿ ಪ್ರತಿಯೊಬ್ಬನ ಮನಸ್ಸಿನಲ್ಲೂ ಹೊಳೆದ ಪ್ರಶ್ನೆ : ನಾನಲ್ಲದೆ ಬೇರೆ ಬ್ರಾಹ್ಮಣ ನಾರಣಪ್ಪನ ಬೊಜ್ಜ ಮಾಡಿ, ಬ್ರಾಹ್ಮಣ್ಯವನ್ನು ಕಳಿದುಕೊಳ್ಳದೆ, ಬಂಗಾರವನ್ನೂ ತನ್ನ ಹೆಂಡತಿಯ ಕೊರಳಿಗೆ ಏರಿಸಿದರೆ? ಲಕ್ಷ್ಮಣಾಚಾರ್ಯ, ಗರುಡಾಚಾರ್ಯರ ನಡುವೆ ಇದ್ದ ಪರಸ್ಪರ ದ್ವೇಷ ಅಸೂಯೆ ಈ ಹೊಸ ಕಾರಣದಿಂದ ಇನ್ನಷ್ಟು ಹೊತ್ತಿ ಉರಿಯಿತು. ಇವ ಮಾನಗೆಟ್ಟು ತನಗೆ ಸೇರಬೇಕಾದ ಬಂಗಾರವನ್ನು ದೋಚಿ, ಬ್ರಾಹ್ಮಣ್ಯವನ್ನು ಕಳೆದುಕೊಳ್ಳದೆ, ಬಡ ಗೋವೊಂದನ್ನು ನೆವಕ್ಕೆ ದಾನ ಮಾಡಿ, ಇಹಪರವೆರಡನ್ನೂ ಗಟ್ಟಿ ಮಾಡಿಕೊಂಡರೆ? ದುರ್ಗಾಭಟ್ಟರೆಂದುಕೊಂಡರು : ಈ ಮಾಧ್ವರೇನಾದರೂ ನಾರಣಪ್ಪನ ಶವಸಂಸ್ಕಾರ ಮಾಡಲಿ, ನಾನು ಊರೂರು ತಿರುಗಿ ಇವರು ಎಸಗಿದ ಕೃತ್ಯವೆಂಥಾದ್ದು ಎಂದು ಬೀದಿಗೆಳೆಯುತ್ತೇನೆ. ದಾಸಾಚಾರ್ಯಾದಿ ಬಡ ಬ್ರಾಹ್ಮಣರಿಗೆ ಬಾಯಲ್ಲಿ ನೀರೂರಿ ಕಣ್ಣುಗಳು ಒದ್ದೆಯಾದುವು. ಗರುಡ, ಲಕ್ಷ್ಮಣ ಎಲ್ಲಿ ನಮಗೆ ನಾರಣಪ್ಪನ ಕರ್ಮ ಮಾಡಲು ಬಿಟ್ಟಾರು? ಪ್ರಾಣೇಶಾಚಾರ್ಯರೊಬ್ಬರು ಮಾತ್ರ-ಏನೊ ಒಳ್ಳೆಯದು ಮಾಡ ಹೋಗಿ ಈ ಚಂದ್ರಿ ಎಲ್ಲವನ್ನೂ ಹದಗೆಡಿಸಿದಳಲ್ಲ ಎಂದು ಕಳವಳಪಟ್ಟರು. +ಯಾರು ಎಲ್ಲಿ ಒಪ್ಪಿ ಬಿಡುತ್ತಾರೋ ಎಂಬ ಭಯದಿಂದ ಪ್ರತಿಯೊಬ್ಬ ಬ್ರಾಹ್ಮಣನೂ ನಾರಣಪ್ಪನಿಂದ ತಮಗಾದ ಅನ್ಯಾಯಕ್ಕಿಂತ ಇನ್ನೊಬ್ಬನಿಗಾದ ಅನ್ಯಾಯಾನ್ನ ಕಣ್ಣಿಗೆ ಕಟ್ಟುವಂತೆ ಆತುರವಾಗಿ, ಸ್ಪರ್ಧೆಯಲ್ಲಿ ವಿವರಿಸತೊಡಗಿದರು. +ಗರುಡಾಚಾರ್ಯನ ಮಗ ಮನೆ ಬಿಟ್ಟು ಓಡಿ ಹೋಗಿ ಮಿಲಿಟರಿ ಸೇರುವಂತೆ ಪ್ರೇರೇಪಿಸಿದವ ನಾರಣಪ್ಪನಲ್ಲದೆ ಯಾರು? ಅವನಿಗೆ ಪ್ರಾಣೇಶಾಚಾರ್ಯರು ವೇದ ಕಲಿಸಿಕೂಡ ಕೊನೆಗೆ ನಡೆದದ್ದು ನಾರಣಪ್ಪನ ಮಾತೇ. ನಮ್ಮ ಹುಡುಗರನ್ನೆಲ್ಲ ಕೆಡಿಸಬೇಕೆಂದು ಹಠ ತೊಟ್ಟನಲ್ಲ… +ಈಗ ಪಾಪ ಲಕ್ಷ್ಮಣಾಚಾರ್ಯರ ಅಳಿಯನನ್ನೆ ನೋಡಿ. ಪರದೇಶೀ ಹುಡುಗನನ್ನ ಸಾಕಿ ಸಲುಹಿ, ಮಗಳನ್ನು ಕೊಟ್ಟು ಮದುವೆ ಮಾಡಿದರೆ, ನಾರಣಪ್ಪ ಅವನ ಬುದ್ಧೀನ್ನೂ ಕೆಡಿಸಿದ. ತಿಂಗಳಲ್ಲಿ ಒಂದು ದಿನ ಅವನ ಮೋರೆ ಕಾಣೋದೇ ಕಷ್ಟ… +ಅದೂ ಹೋಗಲಿ ಎಂದರೆ, ಆ ಗಣಪತಿ-ಕಟ್ಟೇಲಿರೋ ಮೀನು ತಲೆತಲಾಂತರದಿಂದಲೂ ದೇವರದ್ದು. ಅದನ್ನು ಹಿಡಿದರೆ ರಕ್ತಕಾರಿ ಸಾಯುತ್ತಾರೆಂದು ಪ್ರತೀತಿ ಇದ್ದರೂ ಈ ಚಾಂಡಾಲ ಅದನ್ನು ನಿರ್ಲಕ್ಷಿಸಿ ತುರುಕರನ್ನು ಕಟ್ಟಿಕೊಂಡು ಹೋಗಿ ಸಿಡಿಮದ್ದು ಹಾಕಿ ಮೀನುಗಳನ್ನು ಕೊಂದ. ಈಗ ಶೂದ್ರಾದಿಗಳೂ ಅಲ್ಲಿ ಹೋಗಿ ಮೀನು ಹಿಡಿಯುತ್ತಾರೆ. ಬ್ರಾಹ್ಮಣರ ವರ್ಚಸ್ಸೇ ಅನ್ಯರ ಮೇಲೆ ಇರದ ಹಾಗೆ ಮಾಡಿದ ಅಧಮಾ ಅವ. ಅದೂ ಹೋಗಲಿ ಎಂದರೆ, ನಮ್ಮ ಅಗ್ರಹಾರಾನ್ನ ಹಾಳು ಮಾಡಿದ್ದು ಸಾಲದೂಂತ ಪಾರಿಜಾತಪುರದ ಹುಡುಗರಿಗೆ ನಾಟಕದ ಹುಚ್ಚು ಹತ್ತಿಸಿದ. +ಚಾಂಡಾಲನಿಗೆ ಬಹಿಷ್ಕಾರ ಹಾಕಿಸಿಬಿಡಬೇಕಿತ್ತು. ಏನು? +“ಅದೆಲ್ಲಿ ಸಾಧ್ಯವಾಗುತ್ತಿತ್ತೊ, ಗರುಡ? ಬಹಿಷ್ಕಾರ ಹಾಕಿಸಿದರೆ ನಾನು ಮುಸಲ್ಮಾನನಾಗುತ್ತೇನೆ ಎಂದು ಹೆದರಿಸಿದ. ಪ್ರಥಮ ಏಕಾದಶಿ ದಿನ ತುರುಕರನ್ನು ತಂದು ಊಟ ಹಾಕಿದ. ಬಹಿಷ್ಕಾರ ಹಾಕಿ ನೋಡಿ-ನಾನು ತುರುಕನಾಗಿ, ನಿಮ್ಮನ್ನೆಲ್ಲ ಕಂಬಕ್ಕೆ ಕಟ್ಟಿಸಿ ನಿಮ್ಮ ಬಾಯಿಗಿಷ್ಟು ಗೋಮಾಂಸ ತುರುಕಿ, ನಿಮ್ಮೆಲ್ಲರ ಬ್ರಾಹ್ಮಣ್ಯ ನಾಶಾ ಆಗೋಹಾಗೆ ಮಾಡ್ತೇನೆ ಎಂದಿದ್ದ. ಅವನು ತುರುಕಾ ಆಗಿಬಿಟ್ಟಿದ್ದರೆ ಅವನನ್ನ ಅಗ್ರಹಾರದಿಂದ ಓಡಿಸೋಕ್ಕೆ ಕಾಯಿದೆಯೂ ಇಲ್ಲ. ಏನು ಮಾಡೋದು ಹೇಳು ಇಂಥಾ ಸಂದಿಗ್ಧದಲ್ಲಿ? ಪ್ರಾಣೇಶಾಚಾರ್ಯರೂ ಕೆಕಟ್ಟಿ ಕೂರಲಿಲ್ಲವ?” +ಕಲಸಿದ ದಿಂಡುಮಾವಿನ ಗೊಜ್ಜಿನ ಅನ್ನವನ್ನು ಒಂದು ತುತ್ತೂ ತಿನ್ನಲಾರದೆ ಆಪೋಶನ ತೆಗೆದುಕೊಂಡು ಏಳಬೇಕಾಗಿ ಬಂದಿದ್ದರಿಂದ ಪ್ರಕ್ಷುಬ್ಧನಾಗಿದ್ದ ದಾಸಾಚಾರ್ಯ ತನ್ನ ಕೊನೆಯ ಮಾತು ಸೇರಿಸಿದ: +“ಅವನ ಅಪ್ಪ ಸತ್ತಮೇಲೆ ಅವನ ಹಿತ್ತಲಿನ ಹಲಸಿನ ಹಣ್ಣಿನ ಜೇನಿನಂತಹ ಒಂದು ತೊಳೆ ಒಬ್ಬ ಬ್ರಾಹ್ಮಣನ ಬಾಯಿಗೂ ದಕ್ಕಲಿಲ್ಲ…” +ಬಂಗಾರವನ್ನೆ ದುರುಗುಟ್ಟಿ ನೋಡುತ್ತಿದ್ದ ಹೆಂಗಸರಿಗೆ ತಮ್ಮ ಗಂಡಂದಿರ ಮಾತು ಕೇಳಿ ನಿರಾಶೆಯಾಯಿತು. ಗರುಡಾಚಾರ್ಯನ ಹೆಂಡತಿ ಸೀತಾದೇವಿಗೆ ತನ್ನ ಮಗ ಮಿಲಿಟರಿ ಸೇರಿದ್ದರ ಬಗ್ಗೆ ಅಧಿಕಪ್ರಸಂಗ ಮಾಡಲು ಏನು ಹಕ್ಕು ಲಕ್ಷ್ಮಣಾಚಾರ್ಯನಿಗೆ ಎಂದೂ, ಲಕ್ಷ್ಮಣಾಚಾರ್ಯನ ಹೆಂಡತಿ ಅನುಸೂಯಳಿಗೆ ತನ್ನ ಅಳಿಯನ ಮಾತನ್ನೆತ್ತಲು ಗರುಡಾಚಾರ್ಯನಿಗೆ ಏನು ಹಕ್ಕು ಎಂದೂ, ಕೋಪ ಬಂದಿತು. +ಇದೆಂತಹ ಪರೀಕ್ಷೆ ಬಂತಪ್ಪ ಎಂದು ಪ್ರಾಣೇಶಾಚಾರ್ಯ ಸ್ವಗತವೆನ್ನುವಂತೆ ಅಂದರು: +“ಈಗೇನು ಉಪಾಯ ಹಾಗಾದರೆ… ಅಗ್ರಹಾರದಲ್ಲೊಂದು ಹೆಣ ಇಟ್ಟುಕೊಂಡು ಕೆಕಟ್ಟಿ ಕೂರೋದು ಸಾಧ್ಯವ? ಸನಾತನಧರ್ಮದ ಪ್ರಕಾರ ಅಗ್ರಹಾರದಿಂದ ಹೆಣಾ ತೆಗೆದುಕೊಂಡು ಹೋಗೋವರೆಗೆ ದೇವರ ಪೂಜೆ, ಸ್ನಾನ, ಸಂಧ್ಯಾವಂದನೆ, ಊಟ, ಉಪಚಾರ ಏನೂ ನಡೆಯೋವಂತಿಲ್ಲ… ಬಹಿಷ್ಕೃತನಲ್ಲದ್ದರಿಂದ ಬ್ರಾಹ್ಮಣರಲ್ಲದೆ ಬೇರೆ ಯಾರೂ ಅವನ ಹೆಣಾ ಮುಟ್ಟುವಂತಿಲ್ಲ…” +“ಬಹಿಷ್ಕಾರ ಹಾಕದೇ ಬಂದದ್ದೆ ಸಂದಿಗ್ಧ…” +ನಾರಣಪ್ಪನಿಗೆ ಬಹಿಷ್ಕಾರ ಹಾಕಿಸಬೇಕೆಂದು ಹಿಂದಿನಿಂದ ಗಲಾಟೆ ಮಾಡುತ್ತ ಬಂದಿದ್ದ ಗರುಡಾಚಾರ್ಯ-“ನನ್ನ ಮಾತನ್ನ ನೀವು ಕೇಳಲಿಲ್ಲ” ಎಂದು ಮೂದಲಿಸುವ ಧ್ವನಿಯಲ್ಲಿ ಹೇಳಿದ. +“ಅವನು ಮುಸಲ್ಮಾನನಾಗಿ ಬಿಟ್ಟಿದ್ದರೆ ಈ ಅಗ್ರಹಾರಾನ್ನ ನಾವೇ ಬಿಡಬೇಕಾಗಿ ಬಂದುಬಿಡ್ತಿತ್ತಲ್ಲ. ನಮಗೆ ದಿಕ್ಕೇ ಇಲ್ಲದೆ ಹೋಗ್ತಿತ್ತಲ್ಲ…” +ಬ್ರಾಹ್ಮಣರೆಲ್ಲ ಒಟ್ಟಾಗಿ ವಾದಿಸಿದರು. +ಇಡೀ ದಿನ ಊಟವಿಲ್ಲದೆ ಇರುವುದರ ಸಂಕಟವನ್ನು ಕಲ್ಪಿಸಿಕೊಂಡ ದಾಸಾಚಾರ್ಯನಿಗೆ ಥಟ್ಟನೆ ಒಂದು ಸೂಚನೆ ಹೊಳೆಯಿತು. ಹರ್ಷಿತನಾಗಿ ಎದ್ದು ನಿಂತು ಹೇಳಿದ: +“ಪಾರಿಜಾತಪುರದ ಬ್ರಾಹ್ಮಣರಿಗೂ ನಾರಣಪ್ಪನಿಗೂ ಸ್ನೇಹವಿತ್ತೆಂದು ಕೇಳಿಬಲ್ಲೆ. ಪರಸ್ಪರ ಊಟ-ಉಪಚಾರವೂ ಇತ್ತಂತೆ. ಅಲ್ಲಿ ಹೋಗಿ ಕೇಳುವ. ಅವರ ಆಚಾರ ನಮ್ಮದರ ಹಾಗೆ ಬಿಗಿಯಲ್ಲವಲ್ಲ…” +ಪರಿಜಾತಪುರದವರು ಅಡ್ಡಪಂಕ್ತಿ ಬ್ರಾಹ್ಮಣರು; ಸ್ಮಾರ್ತರು. ಹಿಂದೆ ಒಂದು ಕಾಲದಲ್ಲಿ ಒಬ್ಬ ವಿಧವೆ ಬಸುರಾದ್ದನ್ನ ಅಗ್ರಹಾರದವರು ಮುಚ್ಚಿಟ್ಟುಕೊಂಡರೆಂದೂ, ಶೃಂಗೇರಿಯ ಗುರುಗಳಿಗೆ ಈ ಸುದ್ದಿ ತಲುಪಿ ಇಡೀ ಅಗ್ರಹಾರಕ್ಕೆ ಬಹಿಷ್ಕಾರ ಹಾಕಿದರೆಂದೂ ಪ್ರತೀತಿ. ಪಾರಿಜಾತಪುರದವರು ಒಟ್ಟಿನಲ್ಲಿ ಸುಖಿಗಳು; ನೇಮ ನಿಷ್ಠೆಯೆಂದು ಕುಣಿಯುವವರಲ್ಲ; ಅಡಿಕೆ ತೋಟ ಮಾಡುವುದರಲ್ಲಿ ನಿಸ್ಸೀಮರು-ಶ್ರೀಮಂತರು. ಆದಕಾರಣದಿಂದ ದುರ್ಗಾಭಟ್ಟನಿಗೆ ಅವರ ಮೇಲೆ ಪ್ರೀತಿ, ಅಲ್ಲದೆ ಎಷ್ಟೆಂದರೂ ತನ್ನ ಹಾಗೆ ಸ್ಮಾರ್ತರಲ್ಲವೆ ಎಂದು ಗುಟ್ಟಾದ ಅಭಿಮಾನ. ಗುಪ್ತವಾಗಿ ಆಗ ಈಗ ಅಲ್ಲಿ ಅವ ಅವಲಕ್ಕಿ ಉಪ್ಪಿಟ್ಟು ಕಾಫಿಯನ್ನು ಸೇವಿಸಿದ್ದೂ ಉಂಟು. ಖುದ್ದಾಗಿ ಊಟ ಮಾಡುವಷ್ಟು ಮುಂದೆ ಬಿದ್ದಿದ್ದಿಲ್ಲ-ಅಷ್ಟೆ. ವ್ಯವಹಾರದ ಹೊರತಾಗಿ ಇನ್ನೊಂದು ಅವನಿಗಿದ್ದ ಆಕರ್ಷಣೆಯೆಂದರೆ ಪಾರಿಜಾತಪುರದ ಎಲೆಯಡಿಕೆ ತಿನ್ನುವ ಸಕೇಶಿ ವಿಧವೆಯರು. ದಾಸಾಚಾರ್ಯನ ತಲೆಹರಟೆಗೆ ಕ್ರುದ್ಧನಾಗಿ ’ಈ ಮಾಧ್ವನ ಸೊಕ್ಕೆ-ಉಣ್ಣಲಿಕ್ಕೆ ಗತಿಯಿಲ್ಲದಿದ್ದರೂ’ ಎಂದು ಎದ್ದುನಿಂತು : +“ನೀನು ಆಡಿದ್ದು ಪರಮ ಅನ್ಯಾಯದ ಮಾತು. ನೀವೇನೋ ಅವರು ಅಡ್ಡಪಂಕ್ತಿ ಬ್ರಾಹ್ಮಣರೂಂತ ತಿಳಿದರೂ, ಅವರು ತಾವು ಕೀಳೆಂದು ಭಾವಿಸಿಲ್ಲವಲ್ಲ? ನಿಮ್ಮ ಮತದವನ ಹೆಣಾನ ತೆಗೆಯೋದರಿಂದ ನಿಮ್ಮ ಜಾತಿ ಹೋಗೋದಾದರೆ ಅವರದ್ದೂ ಇನ್ನಷ್ಟು ಹೋದಂತೆ ಅಲ್ಲವೆ? ನೀವು ಹೋಗಿ ಕೇಳೋ ಸಾಹಸ ಮಾಡಿ-ತಕ್ಕ ಪೂಜೆ ಮಾಡಿಸಿಕೊಂಡು ಬರ್‍ತೀರಿ ಅಷ್ಟೆ. ಪಾರಿಜಾತಪುರದ ಮಂಜಯ್ಯನ ಹತ್ತಿರ ನಿಮ್ಮನ್ನೆಲ್ಲ ಕೊಳ್ಳುವಷ್ಟು ಹಣ ಇದೆ ಗೊತ್ತುಂಟ…?” +ಪ್ರಾಣೇಶಾಚಾರ್ಯರು ದುರ್ಗಾಭಟ್ಟನ ಕೋಪವನ್ನು ಶಮನ ಮಾಡಲು ಹೇಳಿದರು. +“ನೀವು ಅನ್ನೋದು ನ್ಯಾಯ, ಭಟ್ಟರೆ. ನಾವು ಮಾಡದ್ದನ್ನು ಇನ್ನೊಬ್ಬರ ಕೆಲಿ ಮಾಡಿಸೋದು ಬ್ರಾಹ್ಮಣ್ಯ ಅಲ್ಲ. ಆದರೆ ರಕ್ತ ಸಂಬಂಧ ಹೇಗೆ ದೊಡ್ಡದೋ ಸ್ನೇಹ ಸಂಬಂಧಾನೂ ಹಾಗೆ ದೊಡ್ಡದು ತಾನೆ? ನಾರಣಪ್ಪನಿಗೂ ಅವರಿಗೂ ಸ್ನೇಹಾ ಇರೋದು ನಿಜವಾದರೆ ಅವರಿಗೆ ತಮ್ಮ ಮಿತ್ರನೊಬ್ಬ ಸತ್ತ ವಾರ್ತೆ ತಿಳಿಯೋದು ಅವಶ್ಯಾಂತ ನೀವು ಒಪ್ಪುತ್ತೀರಿ ತಾನೆ?” +ದುರ್ಗಾಭಟ್ಟರು-“ಒಪ್ಪಿದೆ, ಆಚಾರ್ಯರೆ. ನಿಮ್ಮ ಮತದವರ ಬ್ರಾಹ್ಮಣ್ಯವೆಲ್ಲ ನಿಮ್ಮ ಕೆಯಲ್ಲಿದೆ ಈಗ. ತಮ್ಮ ಜವಾಬ್ದಾರಿ ದೊಡ್ಡದು. ತಾವು ನಿರ್ಧರಿಸಿದ್ದಕ್ಕೆ ಯಾರು ಅಡ್ಡಿ ಮಾಡ್ತಾರೆ?” ಎಂದು ಸತ್ಯವಾಗಿ ಅನ್ನಿಸಿದ್ದನ್ನು ಅಂದು ಸುಮ್ಮನಾದರು. +ಮತ್ತೆ ಬಂಗಾರದ ಪ್ರಶ್ನೆ ಎದ್ದಿತು. ಪಾರಿಜಾತಪುರದವರು ಸಂಸ್ಕಾರ ಮಾಡಲು ಒಪ್ಪಿದರೆ ಅವರಿಗೆ ಬಂಗಾರ ಸೇರುವುದು ಸರಿಯೋ ತಪ್ಪೋ ? ಲಕ್ಷ್ಮಣಾಚಾರ್ಯರ ಹೆಂಡತಿ ಅನುಸೂಯಳಿಗೆ ತನ್ನ ತಂಗಿಯ ಮೆಮೇಲೆ ಇರಬೇಕಾಗಿದ್ದ ಆಭರಣ ಆ ಅಡ್ಡಪಂಕ್ತಿ ಬ್ರಾಹ್ಮಣರಿಗೆ ದಕ್ಕುವುದು ಸಹಿಸಲಿಲ್ಲ. ತಡೆದುಕೊಳ್ಳಲಾರದೆ ಅಂದುಬಿಟ್ಟಳು: +“ಯಾರ ಆಸ್ತಿಯೆಂದು ಅವಳು ಈ ಬಂಗಾರಾನ್ನ ಪರಭಾರೆ ಮಾಡ್ತಾಳಂತೆ? ಎಲ್ಲ ನೆಟ್ಟಗಿದ್ದಿದ್ದರೆ ನನ್ನ ತಂಗಿಯ ಕೊರಳಿನಲ್ಲಿರಬೇಕಾಗಿತ್ತು ಅದು” ಎಂದು ಬಿಕ್ಕಿ ಅತ್ತಳು. +ಹೆಂಡತಿಯ ಮಾತು ಲಕ್ಷ್ಮಣಾಚಾರ್ಯನಿಗೆ ಸರಿಯೆನ್ನಿಸಿದರೂ ತನ್ನ ಪತಿತ್ವಕ್ಕೆ ಚ್ಯುತಿಯಾಗದಿರಲೆಂದು, +“ಗಂಡಸರ ಕಾರುಬಾರಿನಲ್ಲಿ ನಿನ್ನದೇನು ಹರಟೆ-ಸುಮ್ಮನಿರು” ಎಂದು ಗದರಿಸಿದನು. +ಕ್ರುದ್ಧನಾದ ಗರುಡಾಚಾರ್ಯ, +“ಒಳ್ಳೆ ಮಾತಾಯಿತು. ಈ ಬಂಗಾರ ಧರ್ಮಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು” ಎಂದು ಗುಡುಗಾಡಿದ. +ಬೇಸರ ಬಂದು ಪ್ರಾಣೇಶಾಚಾರ್ಯರು, +“ನೀವಷ್ಟು ತಾಳ್ಮೆಯಿಂದ ನಡೆದುಕೊಳ್ಳಿರಪ್ಪ. ನಮ್ಮ ಮುಂದಿರೋದು ಸಂಸ್ಕಾರವಾಗಬೇಕಾದ ಶವ. ಬಂಗಾರದ ವಿಷಯ ನನಗೆ ಬಿಡಿ. ಮೊದಲು ಪಾರಿಜಾತಪುರದವರಿಗೆ ಸುದ್ದಿ ಮುಟ್ಟಿಸಿ. ಅವರಾಗಿ ಸ್ವತಃ ಸಂಸ್ಕಾರ ನಡೆಸೋದಾದರೆ ನಡೆಸಲಿ…” ಎಂದು ಸಮಾಧಾನ ಹೇಳಿ, “ನೀವಿನ್ನು ಹೊರಡಿ. ನಾನಷ್ಟು ಮನುಸ್ಮೃತಿ ಇತ್ಯಾದಿ ಶಾಸ್ತಗಳನ್ನು ಹುಡುಕಿ ನೋಡ್ತೇನೆ-ಈ ಸಂದಿಗ್ಧಕ್ಕೆ ಉತ್ತರವಿದೆಯೇ ಅಂತ” ಎಂದು ಎದ್ದು ನಿಂತರು. ಚಂದ್ರಿ ತಲೆಯ ಮೇಲೆ ಸೆರಗು ಹೊದ್ದು, ಪ್ರಾಣೇಶಾಚಾರ್ಯರನ್ನು ಆರ್ತಳಾಗಿ ನೋಡಿದಳು. +ಅಧ್ಯಾಯ ಎರಡು +ಮಜ್ಜಿಗೆ-ಬೀರಿನಲ್ಲಿ ಜಿರಳೆ; ಉಗ್ರಾಣದಲ್ಲಿ ಹೆಗ್ಗಣ; ನಡುಮನೆಯಲ್ಲಿ ಹಗ್ಗದ ಮೇಲೆ ಮಡಿಸೀರೆ, ಮಡಿವಸ್ತ; ಅಂಗಳದಲ್ಲಿ ಒಣಗಲೆಂದು ಚಾಪೆಯ ಮೇಲೆ ಹಾಕಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ; ಹಿತ್ತಲಿನಲ್ಲಿ ತುಳಸಿ-ಇವು ಅಗ್ರಹಾರದ ಮನೆಮನೆಗೂ ಸಾಮಾನ್ಯ. ವಿನಾಯಿತಿ ಎಂದರೆ ಹಿತ್ತಲಲ್ಲಿ ಬೆಳೆಸಿದ ಬಗೆಬಗೆಯ ಪುಷ್ಪವೃಕ್ಷಗಳು; ಭೀಮಾಚಾರ್ಯನ ಹಿತ್ತಲಿನಲ್ಲಿ ಪಾರಿಜಾತ, ಪದ್ಮನಾಭಾಚಾರ್ಯನಲ್ಲಿ ಮಲ್ಲಿಗೆ, ಲಕ್ಷ್ಮಣಾಚಾರ್ಯನಲ್ಲಿ ಕೆಂಡಸಂಪಿಗೆ, ಗರುಡಾಚಾರ್ಯನಲ್ಲಿ ರಂಜ, ದಾಸಾಚಾರ್ಯನಲ್ಲಿ ಮಂದಾರ, ದುರ್ಗಾಭಟ್ಟನಲ್ಲಿ ಶಂಖಪುಷ್ಪ, ಬಿಲ್ವಪತ್ರೆ. ದೇವರಪೂಜೆಗೆಂದು ಪ್ರತಿನಿತ್ಯ ಪ್ರತಿಯೊಬ್ಬನ ಮನೆಯಿಂದಲೂ ಪ್ರತಿಯೊಬ್ಬನೂ ಹೂವನ್ನಾರಿಸಲು ಹೋಗುವನು; ಕುಶಲಪ್ರಶ್ನೆ ಮಾಡುವನು. ನಾರಣಪ್ಪನ ಮನೆಯಲ್ಲಿ ಬಿಟ್ಟ ಹೂ ಮಾತ್ರ ಚಂದ್ರಿಯ ತುರುಬಿಗೆ, ಮಲಗುವ ಕೋಣೆಯಲ್ಲಿದ್ದ ಹೂದಾನಿಗೆ. ಸಾಲದೆನ್ನುವುದಕ್ಕೆ ಮನೆಯ ಮುಂದೆಯೆ ಸರ್ಪಗಳಿಗೆ ಪ್ರಿಯವಾದ, ದೇವರ ಮುಡಿಗೆ ಅನರ್ಹವಾದ ತಾಮಸ ಪುಷ್ಪ- ರಾತ್ರೆರಾಣಿ. ಅದರ ಗೊಂಚಲು ಗೊಂಚಲು ಹೂವಿನ ರಾಶಿ ಕತ್ತಲಿನಲ್ಲಿ ಮದದಂತೆ ಅಡರಿ ಅದರ ನಿಶಾಚರ ವಾಸನೆಯನ್ನು ಚೆಲ್ಲುತ್ತದೆ; ಸರ್ಪಬಂಧನದಲ್ಲೆಂಬಂತೆ ಅಗ್ರಹಾರಕ್ಕೆ ಅಗ್ರಹಾರವೇ ತತ್ತರಿಸುತ್ತದೆ; ಸೂಕ್ಷ್ಮಮೂಗಿನವರು ತಲೆಬೇನೆ ಬರುತ್ತದೆಂದು ಪಂಚೆಯಿಂದ ಮೂಗು ಮುಚ್ಚಿ ನಡೆಯುತ್ತಾರೆ. ಕೂಡಿಟ್ಟ ಬಂಗಾರವನ್ನು ಕದಿಯಲು ಕಳ್ಳರು ಬರದಿರಲೆಂದು ಸರ್ಪಗಾವಲಿಗೆ ಅದನ್ನು ಬೆಳೆಸಿದ್ದಾನೆ ಎಂದು ಬುದ್ಧಿವಂತರು ಅನ್ನುವುದೂ ಉಂಟು. ಮೋಟು ಜಡೆಯ ಸೊರಗಿದ ಮೋರೆಯ ಮುತ್ತೆದೆಯರು ಮಂದಾರ ಮಲ್ಲಿಗೆ ಮುಡಿದರೆ ಕಪ್ಪು ನಾಗರದಂತಹ ಕೂದಿಲಿನ ಚಂದ್ರಿ ತುರುಬು ಹಾಕಿ ಕೆಂಡಸಂಪಿಗೆ, ಕೇದಿಗೆ ಮುಡಿಯುತ್ತಾಳೆ. ಕತ್ತಲಾದರೆ ಅಗ್ರಹಾರದ ಮೇಲೆ ರಾತ್ರೆರಾಣಿಯ ರಾಜ್ಯಭಾರವಾದರೆ, ಹಗಲು ಬ್ರಾಹ್ಮಣರು ಮೆಗೆ ಹಚ್ಚಿದ ಗಂಧದ, ಪಾರಿಜಾತ ಇತ್ಯಾದಿ ಮೃದು ಪುಷ್ಪಗಳ ಸೌಮ್ಯವಾಸನೆ. ಹೀಗೆಯೇ ಒಂದೊಂದು ಮನೆಯ ಹಿತ್ತಲಿನಲ್ಲಿ ಒಂದೊಂದು ರುಚಿಯ ಹಲಸು, ಮಾವು. ’ಹಣ್ಣನ್ನು ಹಂಚಿ ತಿನ್ನು, ಹೂವನ್ನು ಕೊಟ್ಟು ಮುಡಿ’ ಎಂಬ ನಾಣ್ನುಡಿಯ ಮೇರೆಗೆ ಫಲ ಪುಷ್ಪದ ಹಂಚಿಕೆ ನಡೆಯುತ್ತದೆ. ಲಕ್ಷ್ಮಣಾಚಾರ್ಯ ಮಾತ್ರ ಮರದಲ್ಲಿ ಬಿಟ್ಟ ಹಣ್ಣನ್ನು ಗುಪ್ತವಾಗಿ ಅರ್ಧಕ್ಕರ್ಧ ಸಾಗಿಸಿ ಅಂಗಡಿ ಕೊಂಕಣಿಯರಿಗೆ ಮಾರುತ್ತಾನೆ. ಅವನದ್ದು ಬಲು ಜಿಪುಣ ಪ್ರಾಣ. ಹೆಂಡತಿಯ ತವರಿನ ಕಡೆಯವರು ಬಂದಾಗ ಹದ್ದಿನ ಕಣ್ಣಿನಿಂದ ಹೆಂಡತಿಯ ಕೆಯನ್ನು ಕಾಯುತ್ತಾನೆ; ಎಲ್ಲಿ ಏನನ್ನು ತವರಿಗೆ ಕದ್ದುಕೊಡುತ್ತಾಳೋ ಎಂದು. ಚೆತ್ರ ವೆಶಾಖದಲ್ಲಿ ಪ್ರತಿ ಮನೆಯಲ್ಲೂ ಕೋಸುಂಬರಿ ಪಾನಕದ ದಾನ ನಡೆಯುತ್ತದೆ; ಕಾರ್ತಿಕದಲ್ಲಿ ದೀಪಾರತಿಗೆ ಪರಸ್ಪರ ಕರೆಯುತ್ತಾರೆ. ನಾರಣಪ್ಪನೊಬ್ಬ ಇವಕ್ಕೆಲ್ಲ ವಿನಾಯಿತಿ. ಅಗ್ರಹಾರದ ಬೀದಿಯ ಎರಡು ಪಕ್ಕಕ್ಕೂ ಒಟ್ಟು ಹತ್ತು ಮನೆಗಳು. ಎಲ್ಲದಕ್ಕಿಂತ ದೊಡ್ಡ ಮನೆ ನಾರಣಪ್ಪನದು-ಒಂದು ತುದಿಯಲ್ಲಿ. ಒಂದು ಪಕ್ಕದವರ ಮನೆಯವರ ಹಿತ್ತಲಿಗೆ ಹತ್ತಿಕೊಂಡ ತುಂಗೆ. ನದಿಗೆ ಇಳಿಯಲು ಹಿಂದಿನ ಪುಣ್ಯಾತ್ಮರು ಕಟ್ಟಿಸಿದ ಮೆಟ್ಟಲುಗಳು. ಶ್ರಾವಣದಲ್ಲಿ ತುಂಗೆ ಏರಿ, ಅಗ್ರಹಾರಕ್ಕೆ ನುಗ್ಗಿಬಿಡುವವಳಂತೆ ಮೂರು ನಾಲ್ಕು ದಿನ ಅಬ್ಬರಿಸಿ, ಮಕ್ಕಳ ಕಣ್ಣಿಗೆ ಕಿವಿಗೆ ಗೌಜಿನ ಹಬ್ಬವಾಗಿ, ಮತ್ತೆ ಇಳಿದು, ನಡುಬೇಸಗೆಯಲ್ಲಿ ಮೂರು ಸೀಳಿನ ಜಳಜಳ ಹೊಳೆಯಾಗುತ್ತಾಳೆ. ಆಗ ಬ್ರಾಹ್ಮಣರು ಮರಳಿನಲ್ಲಿ ಬಣ್ಣದ ಸೌತೆ, ಕಲ್ಲಂಗಡಿ ಹಣ್ಣನ್ನು ಬೆಳೆದು ಮಳೆಗಾಲಕ್ಕಷ್ಟು ತರಕಾರಿ ಮಾಡಿಕೊಳ್ಳುತ್ತಾರೆ. ವರ್ಷದಲ್ಲಿ ಹನ್ನೆರಡು ತಿಂಗಳ ಕಾಲವೂ ಬಾಳೆಹಗ್ಗದಲ್ಲಿ ಈ ಬಣ್ಣದ ಸೌತೆಕಾಯಿಗಳು ಮಾಡಿಗೆ ತೂಗುಬಿದ್ದಿರುತ್ತವೆ. ಮಳೆಗಾಲದಲ್ಲಿ ಅದರದ್ದೆ ಪಲ್ಯ, ಹುಳಿ, ಗೊಜ್ಜು, ಅದರ ಬೀಜದ ಸಾರು; ಬಸುರಿಯರಂತೆ ಬ್ರಾಹ್ಮಣರು ಹುಳಿಮಾವಿನ ಗೊಜ್ಜು ಸಾರಿಗೆ ಹಾತೊರೆಯುತ್ತಾರೆ. ಹನ್ನೆರಡು ತಿಂಗಳೂ ವ್ರತ, ಬ್ರಾಹ್ಮಣಾರ್ಥ, ಮದುವೆ, ಮುಂಜಿ, ಶ್ರಾದ್ಧದ ಕರೆಗಳು. ಆರಾಧನೆ, ಟೀಕಾಚಾರ್ಯರ ಪುಣ್ಯದಿನ ಇತ್ಯಾದಿ ದೊಡ್ಡ ಹಬ್ಬಗಳಿಗೆ ಮೂವತ್ತು ಮೆಲಿ ದೂರದಲ್ಲಿದ್ದ ಮಠದಲ್ಲಿ ಊಟ-ಹೀಗೆ ಬ್ರಾಹ್ಮಣರ ಜೀವನ ಸಾಂಗವಾಗಿ ಸಾಗುತ್ತದೆ. +ಈ ಅಗ್ರಹಾರದ ಹೆಸರು ದೂರ್ವಾಸಪುರ. ಅದರ ಹಿಂದೊಂದು ಸ್ಥಳಪುರಾಣವುಂಟು. ಹರಿಯುವ ತುಂಗಾನದಿಯ ಮಧ್ಯದಲ್ಲಿ ಪುಟ್ಟ ದ್ವೀಪದೋಪಾದಿಯಲ್ಲಿ ವೃಕ್ಷಗಳಿಂದ ಕಗ್ಗಂಟಾದ ಒಂದು ಗುಡ್ಡವಿದೆ. ಅಲ್ಲಿ ದೂರ್ವಾಸರು ತಪಸ್ಸು ಮಾಡುತ್ತಿದ್ದರೆಂದು ಪ್ರತೀತಿ. ದ್ವಾಪರಯುಗದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಇಲ್ಲಿಂದ ಹತ್ತು ಮೆಲಿ ದೂರದಲ್ಲಿರುವ ಕೆಮರದಲ್ಲಿ ಪಂಚಪಾಂಡವರು ಅರಣ್ಯವಾಸ ಮಡುತ್ತಿದ್ದರಂತೆ-ಸ್ವಲ್ಪ ಕಾಲ. ಒಮ್ಮೆ ದ್ರೌಪದಿದೇವಿಗೆ ನೀರಿನಲ್ಲಿ ಈಜಬೇಕೆಂದು ಮನಸ್ಸಾಯಿತಂತೆ. ಕೆಹಿಡಿದವಳ ಸರ್ವ ಆಸೆಯನ್ನೂ ಈಡೇರಿಸುವ ಭೀಮಸೇನ ತುಂಗಾನದಿಗೆ ಕಟ್ಟುಹಾಕಿದ. ಇತ್ತ ಬೆಳಿಗ್ಗೆ ದೂರ್ವಾಸ ಮುನಿಗಳು ಸ್ನಾನ ಸಂಧ್ಯಾವಂದನಾದಿ ಕಾರ್ಯಗಳಿಗೆಂದು ಎದ್ದು ನೋಡುತ್ತಾರೆ!-ತುಂಗೆಯಲ್ಲಿ ನೀರೇ ಇಲ್ಲ. ಕುಪಿತರಾದರು. ಧರ್ಮಜನಿಗೆ ಇದು ತಕ್ಷಣ ದಿವ್ಯದೃಷ್ಟಿಯಿಂದ ಹೊಳೆದು ಭೀಮಸೇನನಿಗೆ ಬುದ್ಧಿ ಹೇಳಿದ. ಸರ್ವದಾ ಅಣ್ಣನ ಮಾತಿಗೆ ಬದ್ಧನಾದ ವಾಯುಪುತ್ರ ತಾನು ಹಾಕಿದ ಕಟ್ಟೆಯನ್ನು ಮೂರು ಕಡೆ ಒಡೆದು ನೀರು ಬಿಟ್ಟ. ಈಗಲೂ ಕೆಮರದಲ್ಲಿ ಕಟ್ಟೆಯಿಂದ ಮೂರು ಸೀಳಾಗಿ ನದಿ ಹರಿಯುತ್ತದೆ. ದೂರ್ವಾಸಪುರದ ಬ್ರಾಹ್ಮಣರು ಅಕ್ಕಪಕ್ಕದ ಅಗ್ರಹಾರಗಳ ಬ್ರಾಹ್ಮಣರಿಗೆ ಹೇಳುವುದುಂಟು: ದ್ವಾದಶಿಯ ದಿನ ಪ್ರಾತಃಕಾಲ ಪುಣ್ಯಾತ್ಮರಿಗೆ ದೂರ್ವಾಸ ವನದಿಂದ ಶಂಖಧ್ವನಿ ಕೇಳಿಸುವುದೆಂಬ ಪ್ರತೀತಿ ಇದೆ-ಅಂತ. ಆದರೆ ಅಗ್ರಹಾರದ ಬ್ರಾಹ್ಮಣರು ಯಾರೂ ತಾವದನ್ನು ಕೇಳಿದ್ದೇವೆ ಎನ್ನುವ ಅವಿನಯ ತೋರಿಸುವುದಿಲ್ಲ. +ಹೀಗೆ ಸ್ಥಳಪುರಾಣದಿಂದ; ಮಹಾತಪಸ್ವಿ, ಜ್ಞಾನಿ, ವೇದಾಂತ ಶಿರೋಮಣಿ ಪ್ರಾಣೇಶಾಚಾರ್ಯರು ಬಂದು ನೆಲಸಿದ್ದರಿಂದ; ಚಾಂಡಾಲ ನಾರಣಪ್ಪನ ದೆಸೆಯಿಂದ, ದಶದಿಕ್ಕುಗಳಲ್ಲೂ ಅಗ್ರಹಾರ ಪ್ರಖ್ಯಾತವಾಗಿತ್ತು. ಆಚಾರ್ಯರ ಪುರಾಣ ಕೇಳಲೆಂದಂತೂ ಅಕ್ಕಪಕ್ಕದ ಅಗ್ರಹಾರದವರು ರಾಮನವಮಿ ಇತ್ಯಾದಿ ದಿನಗಳಲ್ಲಿ ಕಿಕ್ಕಿರಿಯುತ್ತಾರೆ. ಪ್ರಾಣೇಶಾಚಾರ್ಯರಿಗೆ ನಾರಣಪ್ಪ ದೊಡ್ಡದೊಂದು ಸಮಸ್ಯೆ. ದೇವರ ದಯಾನ್ನ ಸಮರ್ಥಿಸಬೇಕೆಂದು ರೋಗಿಯಾದ ಹೆಂಡತಿಯ ಸೇವೆಯನ್ನು ಮಾಡುತ್ತ, ನಾರಣಪ್ಪನ ದುರ್ನಡತೆಯನ್ನು ತಾಳ್ಮೆಯಿಂದ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತ, ಅರ್ಥ ಗೊತ್ತಿರದ ಮಂತ್ರಗಳಿಂದ ತುಂಬಿದ ಬ್ರಾಹ್ಮಣರ ತಲೆಯ ಕತ್ತಲನ್ನು ಮಂತ್ರಗಳನ್ನು ವಿವರಿಸುವುದರ ಮೂಲಕ ತುಸುತುಸುವೇ ದೂಡುತ್ತ, ಅವರ ಗೃಹಸ್ಥಧರ್ಮದ ಗಂಧ ತೇಯುತ್ತದೆ… +ಇತ್ತ ಬ್ರಾಹ್ಮಣರು ಬತ್ತ ಉದುರಿದರೆ ಅರಳಾಗುವಷ್ಟು ಕಾದ ಅಗ್ರಹಾರದ ಬೀದಿಯಲ್ಲಿ ತಲೆಯನ್ನು ಅಂಗವಸ್ತದಿಂದ ಮುಚ್ಚಿ ಹೊಟ್ಟೆಯ ಹಸಿವಿಗೆ ನಿತ್ರಾಣರಾಗಿ ನಡೆದು, ಮೂರು ಸೀಳಾದ ತುಂಗಾ ನದಿಯನ್ನು ದಾಟಿ ತಂಪಾದ ಕಾಡು ಹೊಕ್ಕು ಒಂದು ಗಂಟೆ ಕಾಲೆಳೆದು ಪಾರಿಜಾತಪುರ ತಲ್ಪಿದರು. ಬಿಸಿಲಿಗೆ ನೆಲದ ತಂಪನ್ನು ಎತ್ತಿ ಹಿಡಿದ ಅಡಿಕೆತೋಟದ ಹಸಿರು ಗಾಳಿಯಿಲ್ಲದೆ ತೂಗಲಿಲ್ಲ. ಸುಡುವ ಧೂಳಿನಲ್ಲಿ ಬ್ರಾಹ್ಮಣರ ಬರಿಗಾಲು ಚುರುಚುರು ಸುಟ್ಟಿತು. ನಾರಾಯಣ ಸ್ಮರಣೆ ಮಾಡುತ್ತ ಬ್ರಾಹ್ಮಣರು ತಾವೆಂದೂ ಕಾಲಿಡದ ಸಾಹುಕಾರ ಮಂಜಯ್ಯನ ಮನೆಯೊಳಕ್ಕೆ ಬಂದರು. ಜಮಾಖರ್ಚು ಬರೆಯುತ್ತ ಕೂತಿದ್ದ ವ್ಯವಹಾರ ಕುಶಲ ಸಾಹುಕಾರರು: “ಓಹೋಹೋ ಏನು ಬ್ರಾಹ್ಮಣರ ಗುಂಪಿಗೆ ಗುಂಪೇ ಇತ್ತ ಕಾಲುಬೆಳೆಸಿತಲ್ಲ, ಓಹೋಹೋ ಬರೋಣವಾಗಲಿ, ಕೂರೋಣವಾಗಲಿ, ಆಯಾಸಪರಿಹಾರ ಮಾಡಿಕೊಳ್ಳೋಣಾಗಲಿ, ಕಾಲುತೋಳೆಯುತ್ತೀರ. ಇವಳೇ ಒಂದಿಷ್ಟು ಬಾಳೆಹಣ್ಣನ್ನು ತನ್ನೇ…” ಎಂದು ಸಾಂಗವಾಗಿ ಉಪಚಾರ ಹೇಳಿದರು. ಅವರ ಮಡದಿ ತಟ್ಟೆಯಲ್ಲಿ ಹಣ್ಣನ್ನು ತಂದು ’ಬಂದಿರಾ’ ಎಂದು ಹೇಳಿ ಒಳಗೆ ಹೋದಳು. ಗರುಡಾಚಾರ್ಯ ಉಸ್ಸೆಂದು ಕೂತು ನಾರಣಪ್ಪ ಸತ್ತ ವಿಷಯವನ್ನು ತಿಳಿಸಿದ. “ಅಯ್ಯೋ ಭಗವಂತ-ಆತನಿಗೇನಾಗಿತ್ತಪ್ಪ? ಎಂಟು ಹತ್ತು ದಿನಗಳ ಕೆಳಗೆ ವ್ಯವಹಾರಕ್ಕೆಂದು ಇತ್ತ ಬಂದಿದ್ದ, ಶಿವಮೊಗ್ಗೆಗೆ ಹೋಗಿ ಬರುತ್ತೇನೆಂದ. ನಿಮ್ಮದೇನಾದರೂ ಕೆಲಸವಿದೆಯೇ ಎಂದು ಕೇಳಿದ. ಮಂಡಿಯಲ್ಲಿ ಅಡಿಕೆ ಮಾರಾಟವಾಯಿತೆ ತಿಳಿದು ಬಾ ಎಂದಿದ್ದೆ. ಶಿವ ಶಿವಾ… ಬೃಹಸ್ಪತಿವಾರ ಹಿಂದಕ್ಕೆ ಬರುತ್ತೇನೆಂದಿದ್ದ… ಏನು ಕಾಯಿಲಿಯಂತೆ?” “ನಾಲ್ಕು ದಿನದ ಜ್ವರ ಅಷ್ಟೆ-ಬಾವು ಎದ್ದಿತ್ತಂತೆ” ಎಂದು ಹೇಳಿದ ದಾಸಾಚಾರ್ಯ. “ಶಿವ ಶಿವಾ” ಎಂದು ಮಂಜಯ್ಯ ಕಣ್ಣುಮುಚ್ಚಿ ಬೀಸಣಿಗೆಯಿಂದ ಗಾಳಿ ಹಾಕಿಕೊಂಡರು. ಶಿವಮೊಗ್ಗೆಗೆ ಆಗಾಗ್ಗೆ ಹೋಗಿಬರುತ್ತಿದ್ದ ಅವರಿಗೆ ಎರಡಕ್ಷರದ ಭಯಂಕರ ರೋಗದ ಹೆಸರು ಮನಸ್ಸಿಗೆ ಬಂದು ಅದನ್ನು ತನಗೆ ಸ್ಪಷ್ಟವಾಗಿ ಹೇಳಿಕೊಳ್ಳಲೂ ಭೀತಿಯಾಗಿ-’ಶಿವ ಶಿವಾ’ ಎಂದರು. ಕ್ಷಣಮಾತ್ರದಲ್ಲಿ ಪಾರಿಜಾತಪುರದ ಅಡ್ಡಪಂಕ್ತಿ ಬ್ರಾಹ್ಮಣರೆಲ್ಲ ಕಟ್ಟೆಯ ಮೇಲೆ ಕೂಡಿದರು. “ನಿಮಗೆಲ್ಲ ಗೊತ್ತುಂಟಲ್ಲ-” ವ್ಯವಹಾರದಲ್ಲಿ ಗಟ್ಟಿಗನಾದ ಗರುಡಾಚಾರ್ಯ ಹೇಳಿದ “ಅಗ್ರಹಾರದ ನಮಗೂ ಅವನಿಗೂ ಜಗಳವಾಗಿ ಅನ್ನನೀರು ಇರಲಿಲ್ಲ. ನೀವೆಲ್ಲ ಅವನ ಮಿತ್ರರಾಗಿದ್ದಿರಲ್ಲ ಎಂದು, ಏನು. ಈಗ ಅವನ ಶವಸಂಸ್ಕಾರದ ಪ್ರಶ್ನೆ ಎದ್ದಿದ್ದರಿಂದ, ಏನು…?” ಪಾರಿಜಾತಪುರದವರಿಗೆ ಮಿತ್ರವಿಯೋಗದಿಂದ ವ್ಯಥೆಯಾಯಿತು; ಮೇಲು ಜಾತಿಯ ಬ್ರಾಹ್ಮಣನೊಬ್ಬನ ಶವಸಂಸ್ಕಾರದ ಸಂದರ್ಭದೊರೆತಿತೆಂದು ಸಂತೋಷವೂ ಆಯಿತು. ನಾರಣಪ್ಪ ತಮ್ಮಗಳ ಮನೆಯಲ್ಲಿ ಎಗ್ಗಿಲ್ಲದೆ ಊಟಮಾಡುತ್ತಾನಲ್ಲ ಎಂಬುದೇ ಅವರಿಗೆ ಅವನ ಮೇಲೆ ಇದ್ದ ಪ್ರೀತಿಗೆ ಅರ್ಧ ಕಾರಣ. ಪಾರಿಜಾತಪುರದ ಬ್ರಾಹ್ಮಣರಿಗೆ ಪುರೋಹಿತರಾದ ಶಂಕರಯ್ಯನವರು ಹೇಳಿದರು: “ಬ್ರಾಹಣಧರ್ಮದ ಪ್ರಕಾರ ಸರ್ಪವೂ ದ್ವಿಜ ಎಂದಿದೆ. ಅರ್ಥಾv ಸರ್ಪದ ಹೆಣ ಕಣ್ಣಿಗೆ ಬಿದ್ದರೆ ಅದಕ್ಕೆ ಯಥೋಚಿತ ಸಂಸ್ಕಾರ ಮಾಡಬೇಕು, ಇಲ್ಲವೆ ಊಟ ಮಾಡುವಂತಿಲ್ಲ ಎಂಬ ವಿಧಿಯಿದೆ. ಇಂತಹ ಪ್ರಸಂಗದಲ್ಲಿ ಬ್ರಾಹ್ಮಣನೊಬ್ಬ ದೆವಾಧೀನನಾದಾಗ ನಾವು ಕೆಕಟ್ಟಿ ಕೂರುವುದು ಏನಕೇನ ಸರಿಯಲ್ಲ. ಏನೂಂತೀರಿ?” ಎಂದವರು ತಮಗೂ ಶಾಸ್ತಗೊತ್ತಿದೆ, ನಿಮಗಿಂತ ನಾವು ಕೀಳಲ್ಲ ಎಂದು ಮಾಧ್ವರ ಗರ್ವ ಇಳಿಸಲು ಹೇಳಿದರು. ಇದರಿಂದ ದುರ್ಗಾಭಟ್ಟರಿಗೆ ಅತೀವ ಕಳವಳವಾಯಿತು. ಈ ಭೋಳೇ ಬ್ರಾಹ್ಮಣ ದುಡುಕಿಬಿಟ್ಟು ಸ್ಮಾರ್ತರಿಗೇ ಅಪಕೀರ್ತಿ ಬರುವಂತೆ ಮಾಡಿಬಿಟ್ಟನಲ್ಲ ಎಂದು ವಕ್ರವಾಗಿ ಮಾತನ್ನಾಡಿದ : “ಸರಿ ಸರಿ ಒಪ್ಪಿದೆ. ಪ್ರಾಣೇಶಾಚಾರ್ಯರೂ ಇದೇ ಹೇಳೋದು. ಆದರೆ ನಮಗೆ ಬಂದಿರೋ ಸಂದಿಗ್ಧ ಮದ್ಯ ಮಾಂಸಾದಿಗಳನ್ನು ಮಾಡಿ ಸಾಲಿಗ್ರಾಮವನ್ನು ನೀರಿಗೆಸೆದ ನಾರಣಪ್ಪ ಬ್ರಾಹ್ಮಣ ಹೌದೆ ಅಲ್ಲವೆ ಎಂಬುದು. ಜಾತಿ ಕೆಡಲಿಕ್ಕೆ ಯಾರು ತಯ್ಯಾರು ಹೇಳಿ? ಆದರೆ ಬ್ರಾಹ್ಮಣನೊಬ್ಬನ ಶವಾನ್ನ ತೆಗೆಯದಿರೋದು ಅಧರ್ಮ ಎಂಬೋದನ್ನ ನಾನು ಸಂಪೂರ್ಣ ಒಪ್ಪುತ್ತೇನೆ.” ಶಂಕರಯ್ಯನಿಗೆ ಎದೆ ಜಗ್ಗೆಂದು ಭೀತಿಯಾಯಿತು. ಮೊದಲೇ ಕೀಳೆಂದು ಜರಿಸಿಕೊಂಡ ತಮ್ಮವರು ಈ ಕೃತ್ಯದಿಂದ ಇನ್ನಷ್ಟು ಅಪಖ್ಯಾತರಾಗುವುದು ಅವರ ಮನಸ್ಸಿಗೆ ಸರಿಬರದೆ : “ಹಾಗಿದ್ದಲ್ಲಿ, ಛಿ-ಛಿ-ಛಿ ನಾವು ದುಡುಕುವುದಿಲ್ಲಪ್ಪ. ನಿಮ್ಮಲ್ಲಿ ದಕ್ಷಿಣಕ್ಕೆ ಖ್ಯಾತರಾದ ಪ್ರಾಣೇಶಾಚಾರ್ಯರು ಇದ್ದಾರಲ್ಲ. ಅವರು ಆಪದ್ಧರ್ಮವೇನು, ಧರ್ಮಸೂಕ್ಷ್ಮವೇನು ಎಂಬೋದನ್ನ ತಿಳಿದು ಹೇಳಲಿ. ನಾವು ಖಂಡಿತ ನಾರಣಪ್ಪನ ಶವಸಂಸ್ಕಾರ, ವೆಕುಂಠ ಸಮಾರಾಧನೆಯನ್ನು ನಡೆಸೋಕೆ ಸಿದ್ಧರಿದ್ದೇವೆ” ಎಂದರು. ಮಂಜಯ್ಯ-“ಖರ್ಚಿನ ಚಿಂತೆಯೇನೂ ಬೇಡ. ನನ್ನ ಮಿತ್ರನಲ್ಲವೆ ಅವ? ನಾನೇ ಸ್ವತಃ ದಾನ ಇತ್ಯಾದಿಗಳನ್ನು ಮಾಡುತ್ತೇನೆ” ಎಂದು ಜಿಪುಣ ಮಾಧ್ವರಿಗೆ ಚುಚ್ಚಲೆಂದು ಹೇಳಿದರು. +***** +ಮುಂದುವರೆಯುವುದು… +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +ಆರಿದ್ರಾ ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. […] +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ […] +ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_258.txt b/Kannada Sahitya/article_258.txt new file mode 100644 index 0000000000000000000000000000000000000000..6025ffdce475e29488fc3c2fec1ab15081e9f7e1 --- /dev/null +++ b/Kannada Sahitya/article_258.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸರಸ ಚಿಕ್ಕಿಯೊಡನೆ ಆ ಹೆಬ್ಬಾಗಿಲು ಹೊಗ್ಗುವಾಗ ‘ಓ ಅಲ್ಲಿ ಹೊಡಿ ಮಣಿ’ ಎಂಬ ಸ್ವರ ಕೇಳಿಸಿತು. ಪಕ್ಕ ಹಿಂದಿರುಗಿ ನನ್ನನ್ನು ನೋಡಿದಳು ಚಿಕ್ಕಿ. “ಅಗ! ಮೀನಾಶ್ಚತ್ತೆ ಕತಿ! ಈಗೆಲ್ಲ ಇಷ್ಟೇ”-ಎಂಬಂತೆ. ಮುಖದಲ್ಲಿ ದುಃಖವೇನೂ ಇರಲಿಲ್ಲ. […] +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […] +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_259.txt b/Kannada Sahitya/article_259.txt new file mode 100644 index 0000000000000000000000000000000000000000..35b1d256465f2f7ace0b0f84fa9c55fbe2328049 --- /dev/null +++ b/Kannada Sahitya/article_259.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು ಓದಿಗೆ, ಚರ್ಚೆ-ಸಂವಾದಗಳಿಗೆ ಕಾರಣವಾಗಬೇಕಾದ ಸಂದರ್ಭ. ಅನಿವಾರ್ಯವಾಗಿ ಈ ಅಧ್ಯಯನ ಒಂದು ಕಾಲಘಟ್ಟದ ಸಾಹಿತ್ಯದ ಚರ್ಚೆಯಾಗಿಯೂ ಬೆಳೆಯುತ್ತದೆ, ಬೆಳೆಯಬೇಕು. ಕನ್ನಡದ ಸದ್ಯದ ಸಂದರ್ಭದಲ್ಲಿ ಇದೆಲ್ಲ ನಡೆಯಬೇಕಾದ ತುರ್ತು ಹೆಚ್ಚೇ ಇದೆ ಅನಿಸುತ್ತದೆ. +ಲಾಭ +ನವ್ಯ ಕಥಾ ಪರಂಪರೆ ತನ್ನ ಅತಿಗೆ ಹೋದ ಬಗ್ಗೆ ಸಾರ್ವತ್ರಿಕ ಟೀಕೆಗೆ ಒಳಗಾದರೂ ಅದರಿಂದ ಕನ್ನಡ ಸಾಹಿತ್ಯಕ್ಕೆ ಹಲವು ರೀತಿಯ ಲಾಭಗಳಾಗಿವೆ. ಒಂದು ಹೊಸ ಸಂವೇದನೆಯನ್ನು ಅದು ಕನ್ನಡಕ್ಕೆ ತಂದುಕೊಟ್ಟಿತು. ಬರೆಯುವ ಪ್ರಕ್ರಿಯೆಯಲ್ಲಿ ಅನೇಕ ಬಗೆಯ ಪ್ರಯೋಗಶೀಲತೆಗೆ ನವ್ಯ ಕಾರಣವಾಯಿತು. ಮುಖ್ಯವಾಗಿ ವಿಶ್ವಸಾಹಿತ್ಯಕ್ಕೆ ಅಪ್‌ಡೇಟ್ ಆಗುವತ್ತ ಕನ್ನಡದ ಮನಸ್ಸುಗಳು ತುಡಿದಿದ್ದರಿಂದ ಹೆಚ್ಚಿದ ಮಟ್ಟದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪರಿಚಯ ಕನ್ನಡಕ್ಕೆ ದಕ್ಕಿತು. ಇದರಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿರಬಹುದು. ಮುಖ್ಯವಾಗಿ ನವ್ಯ ಎಂಬುದು ಕನ್ನಡದ ಜಾಯಮಾನಕ್ಕೆ, ಕನ್ನಡದ ಆವತ್ತಿನ ಸಂದರ್ಭಕ್ಕೆ ಸಹಜವಾಗಿ ಒದಗಿದ ಬೆಳವಣಿಗೆ ಅಥವಾ ಪರಿವರ್ತನೆಯಾಗಿತ್ತೆ, ಅಥವಾ ಅಕಾಲದಲ್ಲಿ ಎರವಲು ತಂದ ಕಟ್ಟಿಕೊಟ್ಟ ಬುತ್ತಿಯಾಗಿತ್ತೆ ಎಂಬೆಲ್ಲ ವಾದ ವಿವಾದ ಇದ್ದೇ ಇದೆ. ಆದರೆ ಇದೆಲ್ಲದರ ಹೊರತಾಗಿಯೂ ನವ್ಯದಿಂದಲೇ ಒದಗಿದ ಕೆಲವೊಂದು ಹೊಸ ಅರಿವು ಎಷ್ಟೆಲ್ಲ ಬಗೆಯಾಗಿ ಇವತ್ತು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದೆ ಎಂಬುದಕ್ಕೆ ಹೊಸ ಪುರಾವೆಗಳನ್ನು ನೀಡಬೇಕಾಗಿಲ್ಲ. ಅದೂ ಅಲ್ಲದೆ, ನವ್ಯಕಾಲ ಘಟ್ಟದಲ್ಲೇ ನವ್ಯದಿಂದ ಒಂದರ್ಥದಲ್ಲಿ ಸಿಡಿದು ನಿಂತು ಹೊಸ ಅನ್ವೇಷಣೆಗಳಿಗೆ ನಮ್ಮ ಅನೇಕ ಮಹತ್ವದ ಲೇಖಕರು ಪ್ರಯತ್ನಿಸುವಂತಾಗಲು ಸಹ ನವ್ಯವೇ ಕಾರಣ. ಹಾಗೆ ಹೊಸ ದಾರಿಗಳನ್ನು ಅನ್ವೇಶಿಸಿ ಕನ್ನಡದ ಕಥನ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೆಲವೇ ಮಹತ್ವದ ಲೇಖಕರಲ್ಲಿ ರಾಘವೇಂದ್ರ ಪಾಟೀಲರು ಒಬ್ಬರು. +ರಾಘವೇಂದ್ರ ಪಾಟೀಲರು ತಮ್ಮ ‘ತೇರು’ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟವಾದಾಗ, ಇದು ಒಂದು ಮಾತೃಕೆಗೆ ಸಂದ ಪುರಸ್ಕಾರ ಎಂದು ತಮ್ಮ ಸಂಕಥನವನ್ನು ಪ್ರತ್ಯಕ್ಷ, ಪರೋಕ್ಷವಾಗಿ ರೂಪಿಸಿದ ಹಲವು ಲೇಖಕರನ್ನು, ವಿಮರ್ಶಕರನ್ನು ನೆನೆದರು. ಕೇವಲ ಸೌಜನ್ಯದ ಮಾತೆಂದು ಮರೆತು ಬಿಡಬಹುದಾದ ಮಾತಲ್ಲ ಇದು. ಪಾಟೀಲರ ಸಾಹಿತ್ಯವನ್ನು ಅರಿಯಲು ಹೊರಟವರ ಮಟ್ಟಿಗೆ ಬಹಳ ಮುಖ್ಯವಾದ, ಪ್ರಾಮಾಣಿಕವಾದ ಮಾತು. ತಮ್ಮ ‘ದೇಸಗತಿ’ ಕಥಾಸಂಕಲನವನ್ನು ಪಾಟೀಲರು ‘ಕಥೆ ಹೇಳುವುದನ್ನು ಕಲಿಸಿದ ಕನ್ನಡದ ಎಲ್ಲ ಹಿರಿಯ ಕಥೆಗಾರರಿಗೆ ಗೌರವದಿಂದ’ ಅರ್ಪಿಸಿದ್ದಾರೆ. ಕನ್ನಡದ ಎಲ್ಲ ಅತ್ಯುತ್ತಮ ಕಥೆಗಾರರ ಶ್ರೇಷ್ಠ ಅನುಭೂತಿಗಳನ್ನು ಮೈಗೂಡಿಸಿಕೊಂಡು ಬರೆಯುವ ಪಾಟೀಲರ ಶೈಲಿಯನ್ನು ಅಧ್ಯಯನ ಮಾಡುವುದಕ್ಕೆ ಈ ಅರಿವು ರಹದಾರಿ ಇದ್ದಂತೆ. +ಹಾಗೆ ನೋಡಿದರೆ ಪಾಟೀಲರು ‘ತೇರು’ ಕೃತಿಗಿಂತ ಮೊದಲೇ ಆಧುನಿಕ ಪುರಾಣಗಳನ್ನು ಬರೆದವರು! ಅವರ ‘ದೇಸಗತಿ’ಯಾಗಲಿ, ‘ಮಾಯಿಯ ಮುಖಗಳು’ ನೀಳ್ಗತೆಯಾಗಲೀ ಅಂಥ ಬೀಜಗಳನ್ನು ತನ್ನ ಒಡಲೊಳಗೇ ಹೊತ್ತಿಲ್ಲ ಎನ್ನುವಂತಿಲ್ಲ. ಆದರೆ ‘ತೇರು’ ಹಲವಾರು ಕಾರಣಗಳಿಗೆ ಭಿನ್ನವಾಗಿಯೂ ಮುಖ್ಯವಾಗಿಯೂ ಗಮನಾರ್ಹವಾಗುತ್ತದೆ. +ಮೊದಲಿಗೆ, ಇವರ ಕಥನ ಶೈಲಿ ವಿಶಿಷ್ಟವಾದದ್ದು. ದೇವನೂರ ಮಹದೇವರ ‘ಕುಸುಮಬಾಲೆ’ಯನ್ನು ಬಿಟ್ಟರೆ ಇವರಷ್ಟು ಹದವಾಗಿ ಕಾವ್ಯಾತ್ಮಕ ಜಾನಪದ ಗದ್ಯ ಬಳಸಿಯೂ ಗೆದ್ದ ಕತೆಗಾರರು ಬೇರೊಬ್ಬರಿಲ್ಲ ಎನಿಸುತ್ತದೆ. ಮೊಗಳ್ಳಿ ಸೀಮಿತಮಟ್ಟದಲ್ಲಿ ಇದನ್ನು ಪ್ರಯತ್ನಿಸಿದ್ದಾರೆ. ಕಂಬಾರರು ಬೇರೆಯೇ ಸ್ತರದಲ್ಲಿ ಈ ಮಾದರಿಯನ್ನು ಬಳಸಿಕೊಂಡಿದ್ದಾರೆ. ಆದರೆ ಪಾಟೀಲರು ಇದನ್ನು ದುಡಿಸಿಕೊಂಡ ಬಗೆ ಸೂಕ್ಷ್ಮ ಅಧ್ಯಯನವನ್ನು ಬಯಸುವಷ್ಟು ವಿಶಿಷ್ಟವಾಗಿದೆ. +’ಮ್ಯಾಜಿಕಲ್ ರಿಯಲಿಸಂ’ +ಎರಡನೆಯದಾಗಿ, ಫ಼್ಯಾಂಟಸಿ ಮತ್ತು ಜಾನಪದ ಎರಡೂ ಅಭಿವ್ಯಕ್ತಿ ಮಾಧ್ಯಮಗಳ ಸಂತುಲಿತ ಮತ್ತು ಒಂದಕ್ಕೊಂದು ಪೂರಕವಾಗಿ ಒದಗಿ ಬರುವಂಥ ಬಳಕೆ. ನಾನು ಫ಼್ಯಾಂಟಸಿ ಎಂದಿರುವುದು ಮಾಂತ್ರಿಕ ವಾಸ್ತವವಾದ ಅಥವಾ ಮ್ಯಾಜಿಕಲ್ ರಿಯಲಿಸಂ ಎಂದು ಯಾವುದನ್ನು ಗುರುತಿಸಲಾಗುತ್ತಿದೆಯೋ ಅದನ್ನು. ನಮ್ಮ ಜಾನಪದ ಕಥನ ಪರಂಪರೆಯ ಅವಿಭಾಜ್ಯ ದೃವ್ಯವೇ ಆಗಿದ್ದ ಇದು ಗಂಭೀರ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಕೊಂಚ ಹೊಸತೆನಿಸಿದರೂ ಹೊಸತಲ್ಲ. ಕಂಬಾರರ, ಕಾರ್ನಾಡರ ನಾಟಕಗಳಲ್ಲಿ ಇದರ ಬಳಕೆಯಾಗಿದ್ದಿದೆ. ಜಾನಪದೀಯ ತಳಹದಿಯಲ್ಲಿ ಈ ಪವಾಡಗಳಂಥ, ಮಾಂತ್ರಿಕ ವಾಸ್ತವಿಕತೆಯ ಚಿತ್ರಣವನ್ನು ನೀಡಿದಾಗ ಅದು ಆ ಒಂದು ನೆಲೆಯಲ್ಲಿ ಹೆಚ್ಚು ವಾಸ್ತವಿಕವೂ ಸುಸಂಬದ್ಧವೂ ಆಗಿ ಮೂಡಿಬರುವುದಲ್ಲದೆ ಬೇರೆ ಯಾವುದೇ ತಂತ್ರ ಬಳಸಿದರೂ (ಕನಸು/ಭ್ರಮೆ ಇತ್ಯಾದಿ) ಇಷ್ಟು ಸುಗಮವಾಗಲಾರದ, ಒಂದು ವಿಧದ ತಾರ್ಕಿಕ ಪ್ರಶ್ನೆ, ಜಂಜಾಟಗಳಿಲ್ಲದ ಸ್ವೀಕಾರಕ್ಕೆ ಹಾದಿ ಸುಗಮಗೊಳಿಸಿಕೊಡುತ್ತದೆ! ಹಾಗಿದ್ದರೂ ಇದು ಕಥನವನ್ನು ಸರಳಗೊಳಿಸದೆ ಅದಕ್ಕೊಂದು ವಿಶಿಷ್ಟ ಬಿಗಿಯನ್ನೂ ದೊರಕಿಸಿಕೊಡುವುದು ಗಮನಾರ್ಹ. ಹಾಗಾಗಿಯೇ ಪಾಟೀಲರಿಗೆ ಇದು ಒಂದು ತಂತ್ರದ ಮಟ್ಟಿಗೆ ಅಥವಾ ಕೇವಲ ಮಾಧ್ಯಮವಾಗಿ ಮುಖ್ಯ. ಅದರ ಚಿತ್ರಣವೇ ಅವರ ಗುರಿ ಅಲ್ಲ ಎಂಬುದನ್ನು ಕೂಡ ಗಮನಿಸಬೇಕು. +ಮೂರನೆಯದಾಗಿ, ಪಾಟೀಲರ ಕಥಾನಕದ ಆತ್ಮ ಒಂದು ರೀತಿಯಲ್ಲಿ ಆಧ್ಯಾತ್ಮಿಕವೇ ಆಗಿರುವುದು. ಈ ಶಬ್ದದ ಬಗ್ಗೆ ಕೊಂಚ ವಿವರಣೆ ಅಗತ್ಯ. ‘ಮಾಯಿಯ ಮುಖಗಳು’ ಎಂಬ ಹೆಸರಿನ ಕತೆಯಲ್ಲಿ ಕತೆಯ ಹೆಸರೂ ಸೇರಿದಂತೆ ಗಂಗಾ, ತುಂಗಾ ಮತ್ತು ನರ್ಮದಾರ ಪಾತ್ರಗಳ ಪರಿಕಲ್ಪನೆ ಮತ್ತು ಪೋಷಣೆ, ಕೊನೆಯಲ್ಲಿ ಬರುವ ಅಣುಕಾಸುರನ ಜನನ; ‘ಊರಾನ ಮಂದಿ ಎಲ್ಲಾರೂ ಕೂಡಿ ಕರೀಬೇಕಾದ ಛಂದಸ್ಸು ಇದು….’ ಎಂದು ಹೊಸ ‘ಲಯ’ ಕಂಡುಕೊಳ್ಳಲು ಹಾದಿ ತೋರುವ ಲಂಗಟದ ಸ್ವಾಮಿ; ಆಮ್ಟೆಯವರ ಆಶ್ರಮ ಸೇರುವ ದ್ಯಾವಪ್ಪ… ಎಲ್ಲರೂ ಸ್ಫುರಿಸುವ ಒಂದು ಸತ್ ಇದೆಯಲ್ಲ, ಅದನ್ನು ಆಧ್ಯಾತ್ಮ ಎನ್ನಬಹುದೇ? ಆದರ್ಶ ಎಂದರೆ ಸರಳಗೊಳಿಸಿದಂತಾಗದೆ? +ಗಂಡುಮೆಟ್ಟಿನ ಸೀಮೆಯ ಜಾನಪದೀಯ ನುಡಿಗಟ್ಟಿನಲ್ಲಿದ್ದರೂ ಭಾವಗೀತೆಯ ಪಲಕುಗಳನ್ನು ಹೊಂದಿದ ಭಾಷೆ; ಜಾನಪದ ಕತೆಗಳ, ಪದ್ಯಗಳ ಮೂಲಕ ಕಥಾನಕವನ್ನು ಮಿಥ್ ಆಗಿಯೂ ಪ್ರಸ್ತುತಕ್ಕೆ ರಿಲವಂಟ್ ಆಗಿಯೂ ಮಾಡಿಕೊಂಡು ಚರಿತ್ರೆ ಮತ್ತು ಸಮಕಾಲೀನ ಜಗತ್ತಿನ ನಡುವೆ ತುಯ್ಯತ್ತಲೆ ಕಥಾನಕವನ್ನು ಬೆಳೆಸುವ ಜಾಣ್ಮೆ; ಈ ಎರಡೂ ಅಂಶಗಳನ್ನು ನಿರ್ದಿಷ್ಟ ಉದ್ದೇಶಕ್ಕೆ, ಮತ್ತು ತಮ್ಮ ಕಥಾನಕದ ತಾಂತ್ರಿಕ ಅಗತ್ಯ, ಅನುಕೂಲಗಳಿಗೆ ಬಳಸಿಕೊಂಡೂ ಅದು ಅತ್ಯಂತ ಸಹಜವಾಗಿ ಒದಗಿಬಂದಂತೆ ಕಾಣುವ ಹಾಗೆ ಕತೆ ಹೇಳುವ ಪಾಟೀಲರ ಕತೆಗಳ ಆಶಯ, ಆಕೃತಿ ಮತ್ತು ಸಂವೇದನೆಗಳ ಪರಿಪ್ರೇಕ್ಷ್ಯ; ಎಲ್ಲವೂ ಇಡೀ ಸಂಕಥನದ ಅಂತಃಸ್ಫೂರ್ತ ಗುಟ್ಟುಗಳನ್ನು ಸುಲಭದಲ್ಲಿ ಬಿಚ್ಚಿಕೊಳ್ಳದ ಛಂದಸ್ಸಿಗೆ ಒಯ್ಯುತ್ತದೆ. ಇದಕ್ಕೆ ಕಾರಣವಿದೆ. ಈ ಎಲ್ಲ ಅಂಶಗಳೂ ಗೌಣವಾಗುವಂತೆ ಮಾಡಬಲ್ಲ ಗಟ್ಟಿಯಾದ ಕಥಾಹಂದರ ಮತ್ತು ಪಾಟೀಲರಿಗಷ್ಟೇ ಸಾಧ್ಯವಾಗಿರುವ ಅಂಥ ಕಥಾನಕಕ್ಕೆ ಅವರು ಒದಗಿಸುವ ಹಲವು ವ್ಯಾಪ್ತಿಗಳುಳ್ಳ ಅರ್ಥಪರಂಪರೆಯ ಅನುರಣನ ಶಕ್ತಿ! +ಮಂತ್ರ ಮುಗ್ಧರಾಗಿ ನಿಂತುಬಿಡುವುದಿಲ್ಲ +ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ಮೊದಲನೆಯದಾಗಿ, ಪಾಟೀಲರು ತಮ್ಮ ಕಾವ್ಯಾತ್ಮಕ ಪರಿಭಾಷೆಯಲ್ಲಿ ಎಲ್ಲೂ ರೂಪಕಗಳ ಭಾಷೆ ಬಳಸುವುದಿಲ್ಲ. ಅಂದರೆ ಮನಸ್ಸಿನಲ್ಲಿ ದೀರ್ಘಕಾಲ ನಿಲ್ಲುವ, ಕಾಡುವ ಯಾವುದೇ ಬಿಂಬಗಳನ್ನು ಸೃಜಿಸದ ಸರಳ ಆಡುನುಡಿಯ ಛಂದಸ್ಸಿನಾಚೆ ಪಾಟೀಲರು ತಮ್ಮ ನಿರೂಪಣೆಯ ಕಾವ್ಯಾತ್ಮಕ ಅಂಶಗಳೊಂದಿಗೆ ತಾದ್ಯಾತ್ಮ ಬೆಳೆಸುವುದಿಲ್ಲ. ಎರಡನೆಯದಾಗಿ, ಪಾಟೀಲರು ಜಾನಪದದ ನುಡಿಗಟ್ಟುಗಳಲ್ಲೇ ಮಂತ್ರ ಮುಗ್ಧರಾಗಿ ನಿಂತುಬಿಡುವುದಿಲ್ಲ. ತಾಂತ್ರಿಕ ಅಗತ್ಯಗಳಿಗೆ ಇವುಗಳನ್ನು ಪಾಟೀಲರು ದುಡಿಸಿಕೊಳ್ಳುತ್ತಾರೆಯೇ ಹೊರತು ಅವುಗಳ ಮೇಲೆ ಅವರಿಗೆ ತಮ್ಮ ಇಡೀ ಕೃತಿಯ ಆಶಯವನ್ನೂ ಮೀರಿ ಸೆಳೆಯುವ ಮೋಹವಿಲ್ಲ. ಮೂರನೆಯದಾಗಿ, ಪುರಾಣಗಳನ್ನು, ಚರಿತ್ರೆಯನ್ನು ವರ್ತಮಾನಕ್ಕೆ ಜೋಡಿಸುವ ಹಾದಿಯಲ್ಲಿ ಈಗಾಗಲೇ ಜನ ತಿಳಿದಿರುವ ಕತೆಯು ತನ್ನ ಒಡಲಿನಲ್ಲಿರಿಸಿಕೊಂಡಿರಬಹುದಾದ, ಸರಿಯಾಗಿ ಅನಾವರಣವಾಗದುಳಿದ ಸಂಗತಿಗಳನ್ನು ಶೋಧಿಸುವ ಸಾಹಸಕ್ಕೂ ಪಾಟೀಲರು ಇಳಿಯುವುದಿಲ್ಲ. ಹಾಗಾಗಿಯೇ ಬಹುಷಃ ಪಾಟೀಲರು ಆಧುನಿಕ ಪುರಾಣವನ್ನೇ ಬರೆಯುತ್ತಾರೆ. ಈ ಆಧುನಿಕ ಪುರಾಣಗಳು ಲಭ್ಯ ಪುರಾಣಗಳ ಹೊಸ ಭಾಷ್ಯಗಳಲ್ಲ. ನಾಲ್ಕನೆಯದಾಗಿ, ಪೂರ್ವನಿಯೋಜಿತವಲ್ಲ ಎನಿಸುವ ಕತೆಯನ್ನು ಇವರು ತೊಡಗುವುದಿಲ್ಲ. ಪಾಟೀಲರ ಕತೆಗಳಿಗೆ ನಿರ್ದಿಷ್ಟ ಆರಂಭ, ಗುರಿ ಎಲ್ಲ ಇರುವಂತಿದೆ. ಹಾಗಾಗಿ ಇವು ವರ್ತಮಾನದಲ್ಲಿ ನಿಂತು ಭೂತದ ಕತೆಗಳನ್ನೇ ಹೇಳುವುದು ಹೆಚ್ಚು. ವರ್ತಮಾನದಲ್ಲಿ ತೊಡಗಿ ವರ್ತಮಾನದಲ್ಲೇ ಮುಗಿಯುವುದು, ಅಥವಾ ವರ್ತಮಾನದಲ್ಲಿ ತನ್ನ ಗಮ್ಯವನ್ನು ಶೋಧಿಸುವುದು ಕಡಿಮೆ. +ತೇರು ಕಥಾನಕ +ಈಗ ತೇರು ಕಾದಂಬರಿಯನ್ನು ಗಮನಿಸಬಹುದು. ಇದು ಹಳೆಯ, ಪುರಾತನವಾದ ಒಂದು ಕಥಾನಕವನ್ನೂ ಅದರ ಮೂಲಕ ಹರಿದು ಬರುವ ಇಂದಿನ ಜಗತ್ತಿನ ಜನರನ್ನೂ ಒಂದು ನಿರ್ದಿಷ್ಟ ಸ್ತರದಲ್ಲಿ ಸಮಾನ ಪಾತಳಿಗೊಯ್ದು ನಿಲ್ಲಿಸುವ ಕೆಲಸವನ್ನು ತನ್ನ ಇತರ ಅನೇಕ ಕೆಲಸಗಳ ಜೊತೆಗೇ ಮಾಡುತ್ತದೆ. ಸ್ವತಃ ಇಲ್ಲಿನ ಕಥಾನಕ ತನ್ನ ಒಂದು ನೆಲೆಯಲ್ಲಿ ಮಿಥ್ ಎಂದು ನಾವು ಕರೆಯುವ, ಪವಾಡ, ಅದ್ಭುತಗಳ ಪುರಾಣವನ್ನೂ, ಇನ್ನೊಂದು ನೆಲೆಯಲ್ಲಿ ಸನದು, ರಿಕಾರ್ಡುಗಳು ಹೇಳುವ ಪುರಾವೆಗಳುಳ್ಳ ಚರಿತ್ರೆಯನ್ನೂ ಒಂದು ನಿರ್ದಿಷ್ಟ ಪಾತಳಿಗೆ ಒಯ್ದು ನಿಲ್ಲಿಸಿ ಮುಖಾಮುಖಿಯಾಗಿಸುತ್ತದೆ; ಅಲ್ಲಿ ಬರುವ ಪಾತ್ರಗಳಲ್ಲ. ಇದು ಬಹಳ ಮುಖ್ಯ. ಕಥಾನಕವೇ ಇಲ್ಲಿ ಬಹಳ ಮುಖ್ಯ ಪಾತ್ರಧಾರಿ. ಅದನ್ನು ಗೌಣವಾಗಿಸಬಲ್ಲ ಕಸು ಉಳ್ಳ ಪಾತ್ರಧಾರಿಗಳು ಇಲ್ಲಿ ಇಲ್ಲ. +ಹಾಗೆಯೇ ವದಂತಿ, ಮೌಢ್ಯ, ನಂಬುಗೆ, ಭಕ್ತಿ ಎಲ್ಲ ಒಂದರೊಳಗೊಂದು ಸೇರಿದಂತಿರುವ ಕಂತೆ ಪುರಾಣವನ್ನೂ, ಒಂದು ತಲೆಮಾರಿನ ಭಕ್ತಿ,ಗೌರವಕ್ಕೆ ಪಾತ್ರವಾದ ಒಂದು ಪ್ರಾಚೀನ ಪರಂಪರೆಯನ್ನೂ ಜತೆಜತೆಯಾಗಿಯೇ ಪ್ರತಿನಿಧಿಸುವ ಅಂಶಗಳಲ್ಲೂ ಆಂತರಿಕ ಮುಖಾಮುಖಿ/ಸಂಘರ್ಷ ಕೂಡಾ ಇಲ್ಲಿ ನಡೆಯುತ್ತಿರುತ್ತದೆ. ಇದು ಇಲ್ಲಿನ ಪಾತ್ರಗಳ, ನಿರೂಪಕನೂ ಸೇರಿ, ಸಮಸ್ಯೆಯೋ ಅನುಕೂಲವೋ ಆಗಿ ಸಂದರ್ಭಾನುಸಾರ ಪ್ರಕಟಗೊಳ್ಳುವ ಅಂಶ. ಹಾಗಾಗಿ ಇಲ್ಲಿ ಬರುವ ಆಧುನಿಕ ಜಗತ್ತಿನ ಮನುಷ್ಯ ಮತ್ತು ಅವನ ಮಟ್ಟಿಗೆ ಅಸಂಗತವಾಗುತ್ತಿರುವ ಪುರಾಣ-ಇತಿಹಾಸಗಳ ಒಂದು ಕಾಲಘಟ್ಟದ ನಡುವಿನ ಸಂಘರ್ಷ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆಧುನಿಕ ಮನುಷ್ಯನ ಆಂತರಿಕ ತುಡಿತ, ಗತ ಇತಿಹಾಸದಿಂದ ಮುಕ್ತನಾಗಿ ನಿಂತು ಹೊಸದಾಗಿ ಸ್ಥಾಪಿಸಿಕೊಳ್ಳಬಯಸುವ ಅಸ್ಮಿತೆಯ ಕನಸು, ಅದರ ಸುತ್ತ ಬೆಳೆಯುವ ಆಸೆ, ಆಶೋತ್ತರಗಳೇನೇ ಇರಲಿ, ಅವು ಗತದ ಎಲ್ಲವನ್ನೂ ತನ್ನೊಡಲಿನಲ್ಲಿಟ್ಟುಕೊಂಡೇ ಮುಂದೆ ಹೋಗಬೇಕಾಗುತ್ತದೆ. ಆಮ್ಟೆಯವರ ಆಶ್ರಮ ಸೇರಿಕೊಳ್ಳುವ ದ್ಯಾವಪ್ಪನ ಆದರ್ಶ ಎಲ್ಲೋ ಒಂದು ಕಡೆ ರಗುತದೊಳಗೆ ಸೇರಿಕೊಂಡ ವಿಷವನ್ನೂ ಕಳಕೊಂಡು ಶುದ್ಧನಾಗ ಬಯಸುವ ಮೊದಲ ತಲೆಮಾರಿನ ದ್ಯಾವಪ್ಪನ ಆದರ್ಶವನ್ನೇ ಹೋಲುತ್ತದೆ! +ಈ ಕಥಾನಕ ನಮ್ಮೆದುರು ತೆರೆದುಕೊಳ್ಳುವ ಅನನ್ಯ ಬಗೆ ಕೂಡ ವಿಶೇಷ ಗಮನಕ್ಕೆ ಅರ್ಹವಾಗಿದೆ. +ಇಲ್ಲಿ ವರ್ತಮಾನವನ್ನು ಪ್ರತಿನಿಧಿಸುವ ಒಬ್ಬ ನಿಷ್ಪಕ್ಷಪಾತಿಯೂ, ನಿಷ್ಟುರ ವಾಸ್ತವವಾದಿಯೂ, ವರದಿಯನ್ನು ನೀಡುವುದೇ ಕೆಲಸವಾಗಿರುವವನೂ ಆದ ಪತ್ರಕರ್ತನಿದ್ದಾನೆ. ಅವನು ಕಥೆ ಹೇಳುತ್ತಾನೆ ನಮಗೆ. +ಭವಿಷ್ಯವನ್ನು ಪ್ರತಿನಿಧಿಸುವ ಒಬ್ಬ – ಕನಸುಗಳನ್ನು, ಆದರ್ಶಗಳನ್ನು ಹೊತ್ತವನು, ಆದರೆ ಸಾಮಾನ್ಯ ಜನರಿಗೆ ಎಡಬಿಡಂಗಿ ತರವೂ, ಹುಚ್ಚನ ತರವೂ ಕಾಣಬಹುದಾದವನು, ಆದರ್ಶವಾದಿಯಾದವನು ಇದ್ದಾನೆ. ಅವನೂ ಕಥೆಯ ಕೆಲವಂಶ ಹೇಳುತ್ತಾನೆ. +ಭೂತಕಾಲವನ್ನು ಪ್ರತಿನಿಧಿಸುವ ಒಬ್ಬನೂ ಇದ್ದಾನೆ. ತನ್ನ ಮೂಢನಂಬುಗೆಗಳನ್ನು ಸ್ವತಃ ತಾನೂ ಪ್ರಶ್ನಿಸಿಕೊಳ್ಳಲಾರದ ಇತರರೂ ಪ್ರಶ್ನಿಸಲಾರದ ಸ್ಥಿತಿ ಅವನದು. ಅವನೂ ಅವನ್ನೆಲ್ಲ ಎಕಾ‌ಎಕಿ ತೊರೆದು ಬಿಡಲಾರ. ತೊರೆ ಎನ್ನಲು ಆಗದ ಹಾಗೆ ಅವುಗಳ ಜೊತೆಗೇ ಅವನಿಂದ ಬೇರ್ಪಡಿಸಲಾಗದ ಕೆಲವು ಮೌಲ್ಯಗಳನ್ನೂ ಆತ ಪ್ರತಿನಿಧಿಸುತ್ತಾನೆ. ಆತ ಮುಗ್ಧ. ಮುದುಕ ಬೇರೆ. ಈ ಮುದುಕನೇ ಕತೆಯನ್ನು ತೊಡಗುವವನೂ ಹೌದು. +ವರ್ತಮಾನಕ್ಕೆ ಸಂವಾದಿಯಾದ ಭೂತಕಾಲದ ಕಥೆಯನ್ನು ಹೇಳುವಲ್ಲಿ ಎಲ್ಲೆಲ್ಲ ಮಿಥ್ ಅಥವಾ ಪುರಾಣವನ್ನು ಕಾಣಿಸಬೇಕಾಗುತ್ತದೋ ಅಲ್ಲೆಲ್ಲ ಗೊಂದಲಿಗರ ಜಾನಪದ ಹಾಡುಗಳನ್ನು ಪಾಟೀಲರು ಬಳಸಿಕೊಳ್ಳುತ್ತಾರೆ. ಅದನ್ನು ಕತೆಯ ಬಹು ಮುಖ್ಯ ಭಾಗದ ನಿರೂಪಣೆಗೆ, ಶಿಷ್ಟ ಭಾಷೆಯಲ್ಲಿ ಸುಲಭ ಸ್ವೀಕೃತವಾಗಲಾರದಂಥ ಸಂಗತಿಗಳನ್ನು ಹೇಳಲು ಬಳಸಿಕೊಳ್ಳುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು. +ಹೀಗೆ ಕಥಾನಕದ ನಿರೂಪಣೆಯ ತಂತ್ರ ವಿಶೇಷ ಗಮನಕ್ಕೆ ಪಾತ್ರವಾಗುವ ಒಂದು ಅಂಶ. +ಈ ಗೊಂದಲಿಗರ ಹಾಡಿನ ಮೂಲಕವೇ ಚರಿತ್ರೆ ಕ್ರಮೇಣ ಪುರಾಣವಾದಾಗ ಪಡೆದುಕೊಳ್ಳುವ ರೂಪಾಂತರ ಮತ್ತು ಕೇಳುವವರಿಗೇ ಯಾಕೆ ನೋವು ಅನುಭವಿಸಿದ ಬಲಿಪಶುಗಳಿಗೂ ಕ್ರಮೇಣ ತಮ್ಮ ನೋವು, ಅವಮಾನಗಳೆಲ್ಲ ಘನವಾಗಿ, ಪುಣ್ಯಫಲವಾಗಿ, ಹಿತಕರವಾಗಿ ಕಾಣಿಸುವಂತೆ ಮಾರ್ಪಾಡಾಗುವ ಸಹಜ ಬಗೆಯನ್ನು ಕಾಣಿಸುತ್ತಾರೆ. ಮಾತ್ರವಲ್ಲ ಈ ಬೆಳವಣಿಗೆಗೆ ಪ್ರೇರಕವಾಗುವ ಇದರ ಹಿಂದಿನ ಶಕ್ತಿಗಳು, ಅಧಿಕಾರದ ಕೇಂದ್ರಗಳು ಚರಿತ್ರೆಯನ್ನು ರೂಪಿಸುವ ಅಮೂರ್ತ ಬಗೆಯನ್ನು ಕಾಣಿಸುತ್ತಾರೆ. ಈ ಕೆಲಸವನ್ನು ಸುಸಂಬದ್ಧವಾಗಿ ಮಾಡಲು ಗೊಂದಲಿಗರ ಹಾಡು ಇಲ್ಲಿ ಕತೆ ಹೇಳುವ ಪಾತ್ರ ನಿರ್ವಹಿಸಿದೆ. ಹೀಗೆ ನಾಲ್ಕು ವಿಭಿನ್ನ ಕೋನಗಳಲ್ಲಿ, ನೆಲೆಯಲ್ಲಿ ಕತೆ ತೆರೆದು ಕೊಳ್ಳುತ್ತದೆ. ಹೀಗೆ ಚರಿತ್ರೆ, ವರ್ತಮಾನ, ಪುರಾಣ, ಐತಿಹ್ಯ, ನಂಬುಗೆ, ಭ್ರಮೆ, ವಾಸ್ತವ ಎಲ್ಲವೂ ಸೇರಿದ ಈ ಕಥಾನಕ ಆಧುನಿಕ ಅಂಶಗಳ ಜೊತೆ ಮುಖಾಮುಖಿಯನ್ನು ಎದುರಿಸಿದರೂ ಒಟ್ಟಾರೆಯಾಗಿ ಈ ಮುಖಾಮುಖಿ ಕೂಡಾ ಇನ್ನೊಂದು ಪುರಾಣವೇ ಆಗಿದೆ. ಅಷ್ಟರ ಮಟ್ಟಿಗೆ ಇಲ್ಲಿನ ದ್ಯಾವಪ್ಪ ಆಯ್ದುಕೊಳ್ಳುವ ಆದರ್ಶ ಕೂಡಾ ಸಹಜವಲ್ಲದ ಒಂದು ದಾರಿಯಾಗಿಯೆ ಉಳಿಯುತ್ತದೆಯೇ ಹೊರತು ಬದುಕಿನ ಒಳಗಿನಿಂದ ಈ ಪುರಾಣಗಳ ಹೇರುವಿಕೆಯನ್ನು ಮೀರುವ ಮಾರ್ಗವಿಲ್ಲ ಎಂಬ ನಿಲುವಿಗೆ ಕಥಾನಕ ಬಂದು ತಲುಪುತ್ತದೆ. ಒಂದೋ ಸಂಪೂರ್ಣ ಶರಣಾಗತಿ ಇಲ್ಲ ಸಂಪೂರ್ಣವಾಗಿ ಅದನ್ನು ಮೀರಿ ನಡೆಯುವ ಹಾದಿ, ಅದು ಇನ್ನೊಂದು ಅತಿಗೆ ನಮ್ಮನ್ನು ಒಯ್ದರೂ. +ಅಧಿಕಾರ ಕೇಂದ್ರಕ್ಕೆ, ಪಟ್ಟಭದ್ರರಿಗೆ ಎಲ್ಲೋ ಅನಿವಾರ್ಯವಾಗುವ ಈ ದೇವರು, ಧರ್ಮ, ಪರಂಪರೆಯ ಪ್ರೀತಿ, ಪುರಾತನವಾದದ್ದರ ರಕ್ಷಣೆ, ಹೊಸ ಹೊಸ ಪುರಾಣಗಳ ನಿರ್ಮಿತಿ ಎಲ್ಲವೂ ಸಾಮಾನ್ಯ ಮನುಷ್ಯನ ಸಹಜ ಸರಳ ಬದುಕಿಗೆ ಹೊರೆಯಾಗುವ, ತೊಡಕಾಗುವ ಹಂತದಲ್ಲಿ ಪುರಾಣಗಳು ಆಧುನಿಕ ಜಗತ್ತಿನ ವರ್ತಮಾನದ ವಿದ್ಯಮಾನವೇ ಆಗಿಬಿಡುವುದನ್ನು ಗಮನಿಸಬೇಕು. ಅಧಿಕಾರ ಕೇಂದ್ರಗಳು ಬದಲಾದರೂ, ಶಿಥಿಲಗೊಂಡರೂ ಈ ಭೂತಗಳು, ಪ್ರೇತಾತ್ಮಗಳು ಮುಕ್ತಿ ಇಲ್ಲದ ಪಿಶಾಚಿಗಳಂತೆ ತೊಡರಿಕೊಂಡೇ ಇರುವುದನ್ನು ಕಾಣಬಹುದು. ಕೃತಿಯ ಘನತೆ ಇರುವುದೇ ಇಲ್ಲಿ. ಅಧಿಕಾರ ಕೇಂದ್ರಗಳು ಶಿಥಿಲವಾಗುವುದಕ್ಕೆ ಆಯಾ ಕೇಂದ್ರದೊಳಗಿನ ಒಡಕುಗಳೇ ಕಾರಣವಾಗುತ್ತವೆ, ಪಾಟೀಲರ ಕತೆಗಳಲ್ಲಿ. ಆದರೆ ಪುರಾಣ ಭಂಜಕ ಶಕ್ತಿಗಳು ಯಶಸ್ಸು ಕಾಣುವುದಿಲ್ಲ. ಇದು ಅವುಗಳ ವಿರಾಟ್ ಸ್ವರೂಪವನ್ನು ತೆರೆದು ತೋರಿಸುತ್ತದೆ. ಆದರೆ ಈ ಹೊಸ ತೊಡಕುಗಳನ್ನು, ಹೊರೆಯನ್ನು ಮೀರಲು ಆಧುನಿಕ ಮನುಷ್ಯನಿಗೆ ಇರುವ ಮಾರ್ಗೋಪಾಯಗಳ ಶೋಧನೆ ಈ ಸಂಕಥನದಲ್ಲಿ ಕಾಣಸಿಗುವುದಿಲ್ಲ. ದ್ಯಾವಪ್ಪನ ಪಾತ್ರವಾದರೂ ಪರಿಪೂರ್ಣತೆಯ ಹಾದಿ ಹಿಡಿದಂತೆ ಎಲ್ಲೂ ಕಂಡು ಬರುವುದಿಲ್ಲ. +ದ್ಯಾವಪ್ಪನ ಆದರ್ಶ, ಅವನ ನಿಲುವು ಕೂಡಾ ಇನ್ನೊಂದು ಅತಿಯಾಗಿರಬಹುದಾದ್ದು. ಅಥವಾ ಅವನ ಗೊಂದಲದ ಫಲಶೃತಿಯಾಗಿರಬಹುದಾದ್ದು. ಹೆಚ್ಚೆಂದರೆ ಅವನೂ ಸಾಮಾನ್ಯನ ಬದುಕಿನ ಪರಿಧಿಯಿಂದ ಹೊರಗೇ ಉಳಿಯುವ ಇನ್ನೊಂದು ಪಾತ್ರವಾಗಿ ಬಿಡಬಹುದಾದ್ದು. ಕೊನೆಗೂ ನಿರೂಪಕ ಮತ್ತು ದ್ಯಾವಪ್ಪನ ಹೆಂಡತಿ ಎಲ್ಲ ಇರುವ ಜಗತ್ತಿನಿಂದ ಭಿನ್ನವಾದ ಒಂದು ಜಗತ್ತಿಗೆ ಸೇರಿಕೊಂಡವನಂತೆ ಕಾಣುವ ದ್ಯಾವಪ್ಪನೊಂದಿಗೆ ಮುಕ್ತಾಯವಾಗುವ ಕಾದಂಬರಿ ಕೊಂಚ ನಿರಾಶೆ ಹುಟ್ಟಿಸಿದರೆ ಆಸ್ಚರ್ಯವಿಲ್ಲ. +ಇಲ್ಲಿ ಯು ಆರ್ ಅನಂತಮೂರ್ತಿಯವರ ‘ಸಂಸ್ಕಾರ’ದ ಪ್ರಾಣೇಶಾಚಾರ್ಯರೂ, ‘ಭಾರತೀಪುರ’ದ ಗಣೇಶನೂ ಮನಸ್ಸಿನಲ್ಲಿ ಸುಳಿಯುತ್ತಾರೆ. ಜಗನ್ನಾಥ ಹೊರಟಿದ್ದೂ ಪುರಾಣಭಂಜಕ ಕೆಲಸಕ್ಕೇ, ಕೊಂಚ ವಿಶಾಲ ಅರ್ಥದಲ್ಲಿ. ಅದನ್ನು ಗಣೇಶನ ಉನ್ಮಾದ ಕೆಡಿಸುವುದು ‘ಭಾರತೀಪುರ’ದ ವಿಪರ್ಯಾಸ. ಹಾಗೆಯೇ ಪ್ರಾಣೇಶಾಚಾರ್ಯರ ನೈಷ್ಟಿಕ ಕೋಟೆಯನ್ನು ಚಂದ್ರಿ ಒಡೆಯುವುದೂ ಕೂಡಾ ಒಂದರ್ಥದಲ್ಲಿ ಪುರಾಣಭಂಜಕತೆಯೇ. ಪಾಟೀಲರ ಆಧುನಿಕ ಪುರಾಣ ಈ ಎಲ್ಲ ದೃಷ್ಟಿಯಲ್ಲಿ ಹೊಸ ಜಿಜ್ಞಾಸೆಗಳಿಗೆ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ಆದರೆ ಕಾದಂಬರಿಯ ಕೇಂದ್ರ ಕೇವಲ ಪುರಾತನವಾದದ್ದು ಮತ್ತು ಆಧುನಿಕವಾದದ್ದರ ಸಂಘರ್ಷವಲ್ಲ. ಅದು ಒತ್ತಟ್ಟಿಗಿರುತ್ತ ಕಾದಂಬರಿ ಇತರ ಅನೇಕ ಹೊಳಹುಗಳನ್ನು ನೀಡುತ್ತ ಹಲವು ರೀತಿಯ ಓದಿಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಸಿದ್ಧವಾಗಿ ಓದುಗರಿಗೆ ದಕ್ಕುತ್ತದೆ. ಹಾಗಾಗಿ ‘ತೇರು’ ಸ್ಪರ್ಶಿಸುವ ಕೆಲವು ಸಮಕಾಲೀನ ಪ್ರಶ್ನೆಗಳಿಗಾಗಿಯೂ, ಕೃತಿಯ ಕಲಾತ್ಮಕ ನೇಯ್ಗೆಗಾಗಿಯೂ ಬಹಳ ಮಹತ್ವದ ಕೃತಿ. ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಹೂವಿಗೆ ಗಂಧವಿದ್ದಂತೆ, ಹೊಸ ಮತ್ತು ಹಳೆಯ ಓದುಗರನ್ನು ಅದು ಮತ್ತೊಮ್ಮೆ ತನ್ನತ್ತ ಸೆಳೆಯಬೇಕು. ಆಗ ಪ್ರಶಸ್ತಿಗೊಂದು ಅರ್ಥ, ಕೃತಿಕಾರನ ಪರಿಶ್ರಮವೂ ಸಾರ್ಥಕ. ಅದೇ ಪಾಟೀಲರಿಗೆ ನಾವು ನೀಡಬಹುದಾದ ಅರ್ಥಪೂರ್ಣ, ಸಾರ್ಥಕ ಅಭಿನಂದನೆ. +***** +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […] +-೧- ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_26.txt b/Kannada Sahitya/article_26.txt new file mode 100644 index 0000000000000000000000000000000000000000..155233b900f02403eec37dcbd22ce7260b76d0df --- /dev/null +++ b/Kannada Sahitya/article_26.txt @@ -0,0 +1,94 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ ಹೆಂಡತಿಗೆ ಈ ವಿಷಯವನ್ನು ತಿಳಿಸಲೆಂದು ಆತುರದಿಂದ ಅವಳ ತೌವರಿಗೆ ಓಡಿದ್ದ. ಇನ್ನೊಬ್ಬ ಯುವಕ ಡಾಕ್ಟರನ್ನು ಕರೆದುಕೊಂಡು ಬರಲೆಂದು ಪೇಟೆಗೆ ಹೋಗಿದ್ದ. ಗರುಡಾಚಾರ್ಯನಿಗೆ ಇದರಿಂದ ಭೀತಿಯಾಯಿತು. ಮಠದಲ್ಲಿ ಗುಂಡಾಚಾರ್ಯ ಜ್ವರ ಬಂದು ಮಲಗಿದ; ಕೆಮರದಲ್ಲಿ ದಾಸಾಚಾರ್ಯ ಮಲಗಿದ; ಇಲ್ಲಿ ನೋಡಿದರೆ ಪದ್ಮನಾಭಾಚಾರ್ಯನ ನಾಲಗೆ ಬಿದ್ದುಹೋಗಿದೆ-ಅಗ್ರಹಾರಕ್ಕೆ ಏನೋ ಗಂಡಾಂತರ ಒದಗಿದೆ ಎಂಬುದು ನಿರ್ವಿವಾದ. ನಾರಣಪ್ಪನ ಶವಸಂಸ್ಕಾರಕ್ಕೆ ಅಡ್ಡಿ ಬಂದ ಗರುಡಾಚಾರ್ಯನನ್ನು ಎಲ್ಲರ ಎದಿರು ಲಕ್ಷ್ಮಣಾಚಾರ್ಯ ಹಳಿದ. ಆದರೆ ಎಲ್ಲರೂ ಇದು ಬೆದಾಡುವ ಕಾಲವಲ್ಲ, ತ್ವರೆಯಾಗಿ ಹೋಗಿ ಅವನ ಸಂಸ್ಕಾರ ಮುಗಿಸಿ ದೇವರಿಗೆ ತಪ್ಪುಕಾಣಿಕೆ ಕಟ್ಟಿ ಎಂದು ಬೋಧಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ ಪದ್ಮನಾಭಾಚಾರ್ಯನನ್ನು ಅಲ್ಲೆ ಬಿಟ್ಟು ಹೊರಟದ್ದಾಯಿತು. ಆದರೆ ಹೊರಡುವ ಮುಂಚೆ ಗರುಡಾಚಾರ್ಯ ಅಗ್ರಹಾರದವರಿಗೆ ಕೆಮುಗಿದು, ’ದಯಮಾಡಿ ಬಂದ ಡಾಕ್ಟರನ್ನು ಮಠಕ್ಕೆ ಕರೆದುಕೊಂಡು ಹೋಗಿ ಗುಂಡಾಚಾರ್ಯನಿಗೂ ಅಷ್ಟು ಮದ್ದು ಕೊಡಿಸಿಬಿಡಿ’ ಎಂದು ಪ್ರಾರ್ಥಿಸಿದ. ದಾರಿಯಲ್ಲೊಬ್ಬನಿಗೂ ಮಾತಾಡುವ ಧೆರ್ಯವಿಲ್ಲ. ಮಂಕು ಕವಿದುಬಿಟ್ಟಿತು. ಗರುಡಾಚಾರ್ಯ ಮನಸ್ಸಿನಲ್ಲೇ ಮಾರುತಿಗೆ ತಪ್ಪುಕಾಣಿಕೆ ಕಟ್ಟುತ್ತೇನೆ, ಮನ್ನಿಸಿಬಿಡು ಎಂದು ಪ್ರಾರ್ಥಿಸಿದ. ಹೀಗೆ ಭಾರವಾದ ಮನಸ್ಸಿನಿಂದ ನಡೆದು ನಡೆದು ಕೆಮರಕ್ಕೆ ಬಂದು ನೋಡಿದರೆ-ಏನು ನೋಡುವುದು? ದಾಸಾಚಾರ್ಯನ ಬೂದಿ, ಪ್ರಾಣೇಶಾಚಾರ್ಯರ ಹೆಂಡತಿ ತೀರಿಕೊಂಡ ಸುದ್ದಿ. ಬ್ರಾಹ್ಮಣರಿಗೆಲ್ಲ ಇದರಿಂದ ದಿಗ್ಭ್ರಮೆಯಾಗಿ ಬಿಟ್ಟಿತು. ತಾವು ತಿಳಿದಿದ್ದ ಲೋಕ ಅಸ್ತವ್ಯಸ್ತವಾಗಿಬಿಟ್ಟಿತು. ಕತ್ತಲಿನಲ್ಲೊಂದು ಭೂತದ ದರ್ಶನವಾದಂತಾಯಿತು. ಮಕ್ಕಳ ಹಾಗೆ ಗೋಡೆಗೊರಗಿ ಕಣ್ಣೀರು ತುಂಬಿ ಕೂತುಬಿಟ್ಟರು. ಹಿರಿಯರಾದ ಸುಬ್ಬಣ್ಣಾಚಾರ್ಯರು ಸಮಾಧಾನ ಹೇಳಿದರು, ಧೆರ್ಯ ಹೇಳಿದರು. ಬಹಳ ಹೊತ್ತು ಮಂಕಾಗಿ ಕೂತಿದ್ದು, ಗರುಡಾಚಾರ್ಯ ಕ್ಷೀಣವಾದ ಧ್ವನಿಯಲ್ಲಿ ಕೇಳಿದ : ನಮ್ಮ ಅಗ್ರಹಾರದಲ್ಲಿ ಇನ್ನೂ ಇಲಿಗಳು ಬೀಳುತ್ತಿವೆಯೆ? ಸುಬ್ಬಣ್ಣಾಚಾರ್ಯರು ’ನಿಮ್ಮ ಅರ್ಥ ಏನು?’ ಎಂದರು. ’ಏನಿಲ್ಲ, ಹದ್ದುಗಳು ಮನೆಯ ಮೇಲೆ ಕೂತಿದ್ದಾವೆ’ ಎಂದ ಗರುಡಾಚಾರ್ಯ. ’ಸಂಸ್ಕಾರ ಮಾಡಿ ಮುಗಿಸಿ ಎಲ್ಲ ಮಂಗಳವಾಗುತ್ತದೆ’ ಎಂದರು ಸುಬ್ಬಣ್ಣಾಚಾರ್ಯ. ’ನಾನು ಅಗ್ರಹಾರಕ್ಕೆ ಹೋಗುವುದಿಲ್ಲ’ ಎಂದ ಗರುಡಾಚಾರ್ಯ. ಉಳಿದ ಬ್ರಾಹ್ಮಣರೂ ಪಿಸುಗುಟ್ಟಿದರು: ’ಆ ಕೊಳೆತ ಹೆಣದ ಸಂಸ್ಕಾರ ಮಾಡೋದು ಹೇಗೆ, ನಾಲ್ಕು ಗಾಡಿ ಸೌದೆಗೂ ಅದನ್ನು ಸುಡುವುದು ಶಕ್ಯವಿಲ್ಲ.’ ಲಕ್ಷ್ಮಣಾಚಾರ್ಯ ’ಏಳಿ’ ಎಂದ. ಗರುಡಾಚಾರ್ಯ ’ನನಗೆ ಸುಸ್ತಾಗಿದೆ-ನೀವೇ ಯಾರಾದರೂ ಮಾಡಿರಿ’ ಎಂದ. ’ವ್ಯವಹಾರಜ್ಞರಾದ ನೀವೇ ಹೀಗೆ ಭಯದಿಂದ ಮಂಕಾಗಿಬಿಟ್ಟರೆ ಉಳಿದವರ ಗತಿ ಏನು’ ಎಂದರು ಸುಬ್ಬಣ್ಣಾಚಾರ್ಯ. ’ನನಗೆ ಕೂಡಲ್ಲ’ ಎಂದ ಗರುಡಾಚಾರ್ಯ. ’ಏಳಿ ಏಳಿ’ ಎಂದ ಲಕ್ಷ್ಮಣಾಚಾರ್ಯ; ’ಅಗ್ರಹಾರದಲ್ಲಿ ಯಾರೂ ಇಲ್ಲ, ದನಕರುಗಳ ಗತಿ ಏನು, ಅವನ್ನು ಕೊಟ್ಟಿಗೆಯಲ್ಲಿ ಕಟ್ಟುವವರಿಲ್ಲ, ಹಾಲು ಕರೆಸುವವರಿಲ್ಲ’ ಎಂದು ಬೇಡಿದ. ’ಹೌದು ಹೌದು ಹೌದು’ ಎಂದರು ಉಳಿದ ಬ್ರಾಹ್ಮಣರು. ’ಹರಿಹರಿ’ ಎನ್ನುತ್ತ ಹೊರಟರು. ದಾರಿಯುದ್ದಕ್ಕೂ ರಾಘವೇಂದ್ರಸ್ತೋತ್ರ ಮಾಡುತ್ತ ನಡೆದರು. +ಪಂಜುರ್ಲಿಗೆ ಕೋಳಿ ಬಲಿಕೊಟ್ಟು ಮುಂದಿನ ಅಮಾಸೆ ಕುರಿ ಕೊಡುತ್ತೇವೆಂದು ಹರಕೆ ಹೇಳಿಕೊಂಡರೂ, ಬೆಳ್ಳಿಯ ಅಪ್ಪ ಅವ್ವ ಪ್ರಾಣೇಶಾಚಾರ್ಯರ ಹೆಂಡತಿ ತೀರಿದ ರಾತ್ರಿಯೇ ಪ್ರಾಣಬಿಟ್ಟವು. ಬೆಳ್ಳಿ ಕೂಗಿಕೊಂಡದ್ದು ಕೇಳಿ ಅಕ್ಕಪಕ್ಕದ ಹೊಲೆಯರೆಲ್ಲ ಕೂಡಿದರು. ಕತ್ತಲಲ್ಲಿ ಕಪ್ಪು ನಗ್ನದೇಹಗಳು ಅವಾಕ್ಕಾಗಿ ಗುಡಿಯ ಸುತ್ತ ಕೂತು ಅರ್ಧಗಂಟೆ ಅತ್ತವು. ನಂತರ ಸೋಗೆಯ ಗುಡಿಗೆ ಬೆಂಕಿ ಕೊಟ್ಟಿದ್ದಾಯಿತು. ಕ್ಷಣದಲ್ಲಿ ಬೆಂಕಿ ಹತ್ತಿ ಉರಿದು ಹೊಲೆಯ ಹೊಲತಿಯರನ್ನು ನೆಕ್ಕತೊಡಗಿತು. ಭೀತಳಾಗಿ ನಿಂತಿದ್ದ ಬೆಳ್ಳಿ ದಿಕ್ಕುದಿವಾಣಿ ಲೆಕ್ಕೆಸದೆ ಪಾಳ್ಯವನ್ನು ಬಿಟ್ಟು, ಇಲಿಗಳ ಹಾಗೆ ಕತ್ತಲಲ್ಲಿ ಓಡಿಬಿಟ್ಟಳು. +ಮಾಲೇರರ ಪುಟ್ಟ ಪ್ರಾರಬ್ಧದಂತೆ ಬೆನ್ನು ಹತ್ತಿಬಿಟ್ಟಿದ್ದ. ನಿಂತರೆ ನಿಲ್ಲುವ; ಕೂತರೆ ಕೂರುವ; ಜೋರು ನಡೆದರೆ ಜೋರಾಗಿ, ನಿಧಾನ ನಡೆದರೆ ನಿಧಾನವಾಗಿ-ಅಂತೂ ಬೆನ್ನು ಬಿಡ. ಪ್ರಾಣೇಶಾಚಾರ್ಯರಿಗೆ ಅತ್ಯಂತ ಕಸಿವಿಸಿಯಾಗತೊಡಗಿತು. ಈಗಷ್ಟು ಹೊತ್ತು ಕಣ್ಣು ಮುಚ್ಚಿ ಕೂತು ತನ್ನ ಪಾಡಿನ ಬಗ್ಗೆ ಚಿಂತಿಸಬೇಕೆಂದರೆ ಈ ಪುಟ್ಟ ಹಡೆಯ ಹಾಗೆ ವಟವಟ ಎನ್ನುತ್ತಿದ್ದಾನೆ. ತಾನು ಆಸ್ಪದ ಕೊಡದಿದ್ದರೂ ತನ್ನ ಸಖ್ಯಕ್ಕಾಗಿ ಆತುಬಿದ್ದಿದ್ದಾನೆ. ತಾನು ವೇದಾಂತಶಿರೋಮಣಿ ಪ್ರಾಣೇಶಾಚಾರ್ಯನೆಂದು ಗೊತ್ತಿಲ್ಲದಿರುವುದರಿಂದ ಸಾಮಾನ್ಯ ಹಾರುವನೊಬ್ಬನ ಜೊತೆ, ಸಂಭಾವನೆಗೆ ಹೊರಟ ಬಡಬ್ರಾಹ್ಮಣನ ಜೊತೆ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳುತ್ತಿದ್ದಾನೆ. ಮೆಟ್ಟಿಲ್ಲದೆ ಇಷ್ಟು ದೂರ ನಡೆಯುವುದು ಸರಿಯಲ್ಲವೆಂದು ಬುದ್ಧಿ ಹೇಳಿದ. ಮೂರು ರೂಪಾಯಿಗೆ ತೀರ್ಥಹಳ್ಳಿಯಲ್ಲಿ ಕೆಯಲ್ಲಿ ಹೊಲಿದ ಜೋಡು ಸಿಗುತ್ತದೆ ಎಂದು ಹೇಳಿದ. ಸುಖ ಮುಖ್ಯವೋ ದುಡ್ಡು ಮುಖ್ಯವೋ ಎಂದು ಬೋಧಿಸಿದ. ನನ್ನ ಜೋಡು ನೋಡಿ. ವರ್ಷವಾಯಿತು, ಸವೆದೇ ಇಲ್ಲ ಎಂದು ಬಿಚ್ಚಿ ತೋರಿಸಿದ. ’ನನಗೆ ಮಾತು ಬೇಕು’ ಎಂದ. ’ಎಲ್ಲಿ ಒಂದು ಒಗಟು ಬಿಡಿಸಿರಿ ನೋಡುವ’ ಎಂದ. ಏರಿ ಬಂದ ಕೋಪವನ್ನು ಹಿಡಿದುಕೊಂಡು ಸುಮ್ಮನಾದರು ಪ್ರಾಣೇಶಾಚಾರ್ಯರು. ’ಒಂದು ನದಿ, ಒಂದು ದೋಣಿ, ಒಬ್ಬ ಮನುಷ್ಯ. ಅವನ ಜೊತೆಗೆ ಒಂದು ಕಟ್ಟು ಹುಲ್ಲು, ಒಂದು ಹುಲಿ, ಒಂದು ದನ. ಒಂದೊಂದನ್ನಾಗಿ ದೋಣಿಯಲ್ಲಿ ದಾಟಿಸಬೇಕು. ಹಸು ಹುಲ್ಲನ್ನು ತಿನ್ನದಂತೆ ನೋಡಿಕೋಬೇಕು. ಹುಲಿ ಹಸುವನ್ನು ತಿನ್ನದಂತೆ ನೋಡಿಕೋಬೇಕು. ಹೀಗೆ ಈ ದಡದಿಂದ ಆ ದಡಕ್ಕೆ ಮೂರನ್ನೂ ಸಾಗಿಸಬೇಕು. ನಿಮ್ಮ ಬುದ್ಧಿ ಎಷ್ಟು ಚುರುಕು ನೋಡುವ’-ಎಂದು ಒಗಟನ್ನು ಹೇಳಿಬಿಟ್ಟು ಪರಮಾನಂದದಿಂದ ಬೀಡಿ ಹತ್ತಿಸಿದ. ಎಷ್ಟು ಸಿಟ್ಟು ಬಂದಿದ್ದರೂ ಪ್ರಾಣೇಶಾಚಾರ್ಯರಿಗೆ ಒಗಟು ಮನಸ್ಸನ್ನು ಕಾಡತೊಡಗಿತು. ’ಹೊಳೆಯಲಿಲ್ಲವೇ? ಹೊಳೆಯಲಿಲ್ಲವೇ?’ ಎಂದು ಪುಟ್ಟ ರೇಗಿಸುತ್ತ ನಡೆದ. ಪ್ರಾಣೇಶಾಚಾರ್ಯರಿಗೆ ಉತ್ತರ ಹೊಳೆಯಿತು. ಆದರೆ ಹೇಳಲು ಬಿಗುಮಾನ. ಒಗಟನ್ನು ಬಿಡಿಸಿದರೆ ಪುಟ್ಟನಿಗೆ ಸ್ನೇಹಹಸ್ತವನ್ನು ಕೊಟ್ಟಂತೆ. ಬಿಡಿಸದಿದ್ದರೆ ತನ್ನನ್ನು ಅವ ಪೆದ್ದನೆಂದು ತಿಳಿಯುತ್ತಾನೆ. ಈಗ ತಾನೇನು ನಿಶ್ಚಯ ಮಾಡಬೇಕೆಂದು ಸಂದಿಗ್ಧಕ್ಕಿಟ್ಟುಕೊಂಡಿತು. ಅವನ ಕಣ್ಣಿನಲ್ಲಿ ಪೆದ್ದನಾಗಿ ಒಂದು ದಡ್ಡ ಪದಾರ್ಥವಾಗಿ ಬಿಡುವ ತೀರ್ಮಾನ ಮಾಡಿಬಿಡಲೇ ಎಂದು ಯೋಚಿಸಿದರು. ’ಹೊಳೆಯಿತೆ?’ ಎಂದ ಪುಟ್ಟ ಬೀಡಿಯನ್ನೆಳೆಯುತ್ತ. ಮಾತನ್ನಾಡಲು ಇಷ್ಟವಾಗದೆ ಪ್ರಾಣೇಶಾಚಾರ್ಯ ಇಲ್ಲವೆಂಬಂತೆ ತಲೆಯಾಡಿಸಿದರು. ’ಹೋ ಹೋ ಹೋ’ ಎಂದು ಪುಟ್ಟ ಬಿದ್ದು ಬಿದ್ದು ನಕ್ಕು ಒಗಟನ್ನು ಬಿಡಿಸಿದ. ಅವನಿಗೆ ಇದರಿಂದಾಗಿ ಪೆದ್ದ ಬ್ರಾಹ್ಮಣನ ಬಗ್ಗೆ ವಿಪರೀತ ಆದರ ಹುಟ್ಟಿತು. ’ಇನ್ನೊಂದು ಒಗಟು’ ಎಂದ. ಬೇಡ ಎಂದರು ಪ್ರಾಣೇಶಾಚಾರ್ಯ. ’ಹೋಗಲಿ, ನೀವೇ ಒಂದು ಹೇಳಿಬಿಡಿ, ನನ್ನನ್ನು ಸೋಲಿಸಿಬಿಡಿ, ಮುಯ್ಯಿ’ ಎಂದ. ’ನನಗೆ ಗೊತ್ತಿಲ್ಲ’ ಎಂದರು ಪ್ರಾಣೇಶಾಚಾರ್ಯ. ’ಪಾಪ’ ಎನ್ನಿಸಿತು ಪುಟ್ಟನಿಗೆ. ಇನ್ನಷ್ಟು ದೂರ ಏನು ಮಾತಾಡುವುದೆಂದು ತಿಳಿಯದೆ ಪುಟ್ಟನಿಗೆ ನಾಲಗೆ ಕಡಿತವಾಗಹತ್ತಿತು. ’ಆಚಾರ್ಯರೆ, ನಿಮಗೆ ಗೊತ್ತ? ಕುಂದಾಪುರದ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಶ್ಯಾಮ ಪಾಪ ತೀರಿಕೊಂಡನಂತೆ’ ಎಂದು ಹೊಸದೊಂದು ಸಂಗತಿ ಪ್ರಾರಂಭಿಸಿದ. ’ಛೆ ಪಾಪ. ತಿಳಿಯದು’ ಎಂದರು ಪ್ರಾಣೇಶಾಚಾರ್ಯ. ’ಹಾಗಾದರೆ ನೀವು ಊರುಬಿಟ್ಟು ಬಹಳ ಸಮಯವಾಗಿರಬೇಕು’ ಎಂದ ಪುಟ್ಟ. ಎದಿರು ಕವಲೊಡೆದ ದಾರಿಯನ್ನು ಕಂಡು ಪ್ರಾಣೇಶಾಚಾರ್ಯರಿಗೆ ಹರ್ಷವಾಯಿತು. ’ನಿಮ್ಮ ಪ್ರಯಾಣ ಯಾವ ಮುಖವಾಗಿ’ ಎಂದು ನಿಂತು ಪುಟ್ಟನನ್ನು ಕೇಳಿದರು. ಈ ಮುಖವಾಗಿ ಎಂದು ಅವನು ಒಂದು ದಾರಿ ತೋರಿಸಿದ. ’ನನ್ನದು ಈ ದಾರಿ’ ಎಂದು ಇನ್ನೊಂದು ಕಾಲುದಾರಿಯನ್ನು ತೋರಿಸಿದರು. ’ಎರಡೂ ಮೇಳಿಗೆಗೇ ಹೋಗುವುದು, ಸ್ವಲ್ಪ ಬಳಸು ಅಷ್ಟೇ- ನನಗೇನೂ ಅವಸರವಿಲ್ಲ… ನಿಮ್ಮ ಜೊತೆಯೇ ಬಂದುಬಿಡುವೆ’ ಎಂದುಬಿಟ್ಟ. ಚೀಲದಿಂದ ಕಾಯಿ ಬೆಲ್ಲವನ್ನು ತೆಗೆದು ತಿನ್ನಿರಿ ಎಂದು ಕೊಟ್ಟು, ತಾನು ತಿನ್ನಲು ಪ್ರಾರಂಭಿಸಿದ. ಪ್ರಾಣೇಶಾಚಾರ್ಯರಿಗೆ ಹಸಿವಾದ್ದರಿಂದ ಪುಟ್ಟನ ಬಗ್ಗೆ ಕೃತಜ್ಞರಾದರು. ಎಲ್ಲಿ ಹೋದರೂ, ಏನಾದರೂ ಮನುಷ್ಯಸಂಗ ಪ್ರಾರಬ್ಧದಂತೆ ಬೆನ್ನು ಹತ್ತಿದ್ದು ಎನ್ನಿಸಿತು. +ಪುಟ್ಟ ಕಾಯಿ ಬೆಲ್ಲವನ್ನು ತಿನ್ನುತ್ತ ಇನ್ನಷ್ಟು ಆಪ್ತವಾಗಿ ಮಾತಾಡತೊಡಗಿದ. “ನಿಮಗೆ ಮದುವೆಯಾಗಿರಬೇಕಲ್ಲವೆ? ಆಗದೆ ಇರುತ್ತದ? ನಾನೊಬ್ಬ ಪೆಕ್ರನ ಹಾಗೆ ಕೇಳುತ್ತಿದ್ದೇನೆ. ಎಷ್ಟು ಮಕ್ಕಳೋ? ಮಕ್ಕಳೇ ಇಲ್ಲವೆ? ಪಾಪ. ನನಗೆ ಎರಡು ಮಕ್ಕಳು. ಎರಡೂ ಗಂಡು, ನಮ್ಮವಳನ್ನು ಕುಂದಾಪುರದಿಂದ ತಂದದ್ದು ಎಂದು ಹೇಳಿದೆ ಅಲ್ಲವೆ? ಒಂದು ವಿಷಯ ನೋಡಿ-ನಗಬೇಕೋ, ಅಳಬೇಕೋ ನನಗೆ ತಿಳಿಯದು. ಅವಳಿಗೆ ಅಪ್ಪ ಅಮ್ಮನೆಂದರೆ ಪ್ರಾಣ. ತಿಂಗಳಿಗೆ ತಪ್ಪಿದರೆ ಎರಡು ತಿಂಗಳಿಗೆ ತೌರಿಗೆ ಹೋಗಬೇಕೆಂದು ಹಟ ಹಿಡಿಯುತ್ತಾಳೆ. ಬಸ್ಸಿನ ಖರ್ಚು ಎರಡು ರೂಪಾಯಿ ಕೊಟ್ಟು ಈ ಕಾಲದಲ್ಲಿ ಯಾರಿಗೆ ಕಳಿಸಲು ಸಾಧ್ಯ ಹೇಳಿ. ಹೇಳಿದರೆ ಕೇಳುವುದೇ ಇಲ್ಲ. ಎರಡು ಮಕ್ಕಳಾದರೂ ಬುದ್ಧಿಯೇ ಬಂದಿಲ್ಲ. ತುಂಬ ಎಳಸು, ಪ್ರಾಯವೂ ಕಮ್ಮಿ ಎನ್ನಿ. ನಮ್ಮ ಅತ್ತೆ ಸ್ವಲ್ಪ ಕಟಿಪಿಟಿಯ ಹೆಂಗಸು, ಆದರೆ ಮಾವನವರ ಬುದ್ಧಿ ದೊಡ್ಡದು. ಎಷ್ಟೆಂದರೂ ವ್ಯವಹಾರ ಬಲ್ಲವರು ಅವರು. ನಮ್ಮ ಅತ್ತೆ ಅಂದದ್ದುಂಟು-ನನ್ನ ಮಗಳಿಗೆ ಏಟು ಕೊಡಲು ಅಳಿಯನಿಗೇನು ಹಕ್ಕು ಅಂತ. ಆದರೆ ಮಾವನವರ ಬಾಯಿಂದ ಒಂದು ದಿನ ಅಂಥ ಮಾತು ಬಂದಿಲ್ಲ. ಏಟು ಹೊಡೆದರೂ ಇವಳಿಗೆ ಬುದ್ಧಿ ಬಂದಿಲ್ಲ. ತೌರಿಗೆ ಕಳಿಸದಿದ್ದರೆ ಬಾವಿಗೆ ಹಾರಿಕೊಳ್ಳುತ್ತೇನೆಂತ ಹೆದರಿಸುತ್ತಾಳೆ. ಏನು ಮಾಡಬೇಕೋ ತಿಳಿಯದು. ಇದೊಂದು ಕೆಟ್ಟಚಾಳಿ ಬಿಟ್ಟರೆ ಉಳಿದ್ದದ್ದರಲ್ಲೆಲ್ಲ ಅವಳದ್ದು ಬಲುವೆನ. ಒಂದು ಅಡಿಗೆ ಮಾಡಲಿ, ಪಾತ್ರೆ ತೊಳೆಯಲಿ, ಎಲ್ಲದರಲ್ಲೂ ಬಲು ಅಚ್ಚುಕಟ್ಟು. ಇದೊಂದು ಬಿಟ್ಟರೆ. ನೀವೇನು ಹೇಳುತ್ತೀರಿ ಇದಕ್ಕೆ…” +ಪ್ರಾಣೇಶಾಚಾರ್ಯರು ಉತ್ತರ ಹೊಳೆಯದೆ ನಕ್ಕರು. ಪುಟ್ಟನೂ ನಕ್ಕ. “ಹೆಂಗಸಾ ಮರ್ಜಿ ತಿಳಿಯೋದು; ನೀರಿನಲ್ಲಿ ಮೀನಿನ ದಾರಿ ಅರಿಯೋದು ಒಂದೇ – ಅಂತ ಅದಕ್ಕೆ ಹಿರಿಯರು ಹೇಳೋದು ಅಲ್ಲವೆ?” ಎಂದ. +“ನಿಜ, ನಿಜ” ಎಂದರು ಪ್ರಾಣೇಶಾಚಾರ್ಯರು. +ಅಂತೂ ಪುಟ್ಟನ ಮಾತು ಸ್ವಲ್ಪ ಕಾಲ ನಿಂತಿತು. ತನ್ನ ಹೆಂಡತಿಯ ಮರ್ಜಿಯನ್ನವನು ಶಬ್ದಾತೀತ ಪ್ರಪಂಚದಲ್ಲಿ ಹುಡುಕುತ್ತಿರಬೇಕು ಎನ್ನಿಸಿತು ಆಚಾರ್ಯರಿಗೆ. ಈಗ ತನ್ನ ಒಗಟು ಇದು. ಇದನ್ನು ನಾನು ಮೊದಲು ಕೂಲಂಕಷವಾಗಿ ನೋಡಲಿಲ್ಲ. ನನ್ನ ಬಾಳಿನ ತೀರ್ಮಾನದ ಗಳಿಗೆ-ನಾರಣಪ್ಪನ ಜೊತೆ, ಮಹಾಬಲನ ಜೊತೆ, ನನ್ನ ಹೆಂಡತಿ ಜೊತೆ, ಅಗ್ರಹಾರದ ಉಳಿದ ಬ್ರಾಹ್ಮಣರ ಜೊತೆ, ಒಟ್ಟು ನಾನು ಆತಿದ್ದ ಧರ್ಮದ ಜೊತೆ-ನನ್ನ ಸಂಬಂಧಸರ್ವಸ್ವವೂ ತೀರ್ಮಾನವಾಗಬೇಕಾಗಿದ್ದ ಗಳಿಗೆ ನಿರಪೇಕ್ಷಿತವಾಗಿ ಉದ್ಭವವಾದ ಆ ಕಾಡಿನ ಕತ್ತಲಿನಲ್ಲಿ, ನಾನು ಥಟ್ಟನೆ ತಿರುಗಿಬಿಟ್ಟೆ. ಅದರ ಪರಿಣಾಮ ನನ್ನ ಮಾತ್ರಕ್ಕೆ ಹೇಗೋ ಹಾಗೆ ಅಗ್ರಹಾರಕ್ಕೂ ಅಗಾಧವಾಗಿಬಿಟ್ಟಿತು. ಅಂದರೆ ನನ್ನ ನಿಶ್ಚಯದ ಪ್ರಶ್ನೆ ಬರಿ ನನ್ನ ನಿಶ್ಚಯದ ಪ್ರಶ್ನೆಯಲ್ಲ-ನನ್ನ ಅಗ್ರಹಾರವನ್ನೂ ಒಳಪಡಿಸಿಬಿಟ್ಟ ಪ್ರಶ್ನೆ. ಇದೆ ಸಂದಿಗ್ಧದ, ಆತಂಕದ, ಧರ್ಮಸಂಕಟದ ಮೂಲ. ನಾರಣಪ್ಪನ ಶವಸಂಸ್ಕಾರದ ಪ್ರಶ್ನೆ ಬಂದಾಗ ನಾನು ನನ್ನ ವೆಯಕ್ತಿಕ ದೃಷ್ಟಿಯಿಂದ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಿಲ್ಲ. ಧರ್ಮಶಾಸ್ತ್ರಕ್ಕೆ ದೇವರಿಗೆ ಗಂಟುಬಿದ್ದೆ. ಧರ್ಮಶಾಸ್ತ್ರವನ್ನು ನಾವು ಸೃಷ್ಟಿಸಿರಲೂ ಇದೇ ಕಾರಣ ತಾನೇ? ನಮ್ಮ ವೆಯಕ್ತಿಕ ನಿಶ್ಚಯಗಳಿಗೂ ಸಮಾಜಕ್ಕೂ ಇಷ್ಟೊಂದು ಗಾಢವಾದ ಸಂಬಂಧವಿರುವುದರಿಂದ ತಾನೇ? ಕಾರಣ-ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ನಾವು ಪಿತೃಗಳನ್ನು, ಗುರುಗಳನ್ನು, ದೆವವನ್ನು, ಮಾನವ ಕುಟುಂಬವನ್ನು ಒಳಮಾಡುತ್ತೇವೆ. ಆ ಕಾರಣದಿಂದ ಧರ್ಮಸಂಕಟ. ಆದರೆ ಚಂದ್ರಿಯ ಜೊತೆ ನಾನು ಮಲಗಿಬಿಟ್ಟಾಗ ಈ ಧರ್ಮಸಂಕಟದ ಅನುಭವವಾಯಿತೆ? ಅದು ಅಳೆದು ಹೊಯ್ದು ತೂಗಿ ಮಾಡಿದ ನಿಶ್ಚಯವಾಗಿತ್ತೇ? ಈಗ ಅದು ಅತ್ಯಂತ ಮಸುಕುಮಸುಕಾಗಿ ಅಸ್ಪಷ್ಟವಾಗಿಬಿಟ್ಟಿದೆ. ಆ ನಿಶ್ಚಯ ಅಥವಾ ಆ ಕ್ರಿಯೆ ನನ್ನನ್ನು ನನ್ನ ಭೂತಲೋಕದಿಂದ, ಬ್ರಾಹ್ಮಣರ ಲೋಕದಿಂದ, ಹೆಂಡತಿಯ ಬಾಳಿನಿಂದ, ನನ್ನ ನಂಬಿಕೆಗಳಿಂದ ಕೊರೆದು ತೆಗೆದುಬಿಟ್ಟಿತು. ಪರಿಣಾಮ ಈಗ ನಾನೊಂದು ಗಾಳಿಯಲ್ಲಿ ತಂತುವಾಗಿ ಮಿಡಿಯುತ್ತಿರುವುದು. +ಇದರಿಂದ ಬಿಡುಗಡೆ? ಬಿಡುಗಡೆ? +“ಆಚಾರ್ಯರೇ” ಎಂದ ಪುಟ್ಟ. +“ಏನಪ್ಪ” +“ಇನ್ನಷ್ಟು ಕಾಯಿಬೆಲ್ಲ ಬೇಕ?” +“ಕೊಡು” ಎಂದರು ಪ್ರಾಣೇಶಾಚಾರ್ಯರು. ಪುಟ್ಟ ಕಾಯಿಬೆಲ್ಲವನ್ನು ಕೊಟ್ಟು “ಇಲ್ಲದಿದ್ದರೆ ದಾರಿ ಕಳೆಯೋದು ಕಷ್ಟ ಅಲ್ಲವೆ? ಮನಸ್ಸಿಗೆ ಬೇಜಾರಾಗುತ್ತಿದ್ದರೆ ಇನ್ನೊಂದು ಒಗಟು ಹೇಳುತ್ತೇನೆ ಬಿಡಿಸಿ. ’ಆಡುತ್ತೆ, ಓಡುತ್ತೆ, ನಿಂತ್ಕೊಂಡು ನೋಡುತ್ತೆ’ ಏನು ಹೇಳಿ” ಎಂದು ಮತ್ತೊಂದು ಬೀಡಿ ಹತ್ತಿಸಿದ. +ಆದ್ದರಿಂದ ನನ್ನ ಆತಂಕ ಸರ್ವಸ್ವದ ಮೂಲವಿರುವುದು ಪ್ರಾಯಶಃ ಕನಸಿನಲ್ಲಿ ಎಂಬಂತೆ ನಾನು ಚಂದ್ರಿಯ ಜೊತೆ ಸಂಭೋಗ ಮಾಡಿಬಿಟ್ಟಿದ್ದರಲ್ಲಿ. ಪರಿಣಾಮ ಈಗಿನ ತ್ರಿಶಂಕು ಸ್ಥಿತಿ. ಸ್ವೇಚ್ಛೆಯಿಂದ, ಖುದ್ದಾಗಿ, ಸಂಪೂರ್ಣ ಎಚ್ಚರದಲ್ಲಿ, ಪರಿಪೂರ್ಣ ನಿಶ್ಚಯದಲ್ಲಿ ಒಂದು ಕ್ರಿಯೆಯನ್ನು ಮಾಡುವುದರ ಮೂಲಕ ಮಾತ್ರ ಇದರಿಂದ ಬಿಡುಗಡೆ. ಈಗ ನಾನು ಗಾಳಿಯಲ್ಲೊಂದು ತಂತು. ಗಾಳಿ ಕೊಟ್ಟ ಆಕಾರವನ್ನು ತಳೆಯುವ ಮೋಡ. ಬರಿಯೊಂದು ವಸ್ತುವಾಗಿಬಿಟ್ಟ ನಾನು ನಿಶ್ಚಿತ ಕ್ರಿಯೆಯ ಮೂಲಕ ಮನುಷ್ಯನಾಗುತ್ತೇನೆ. ನನ್ನ ಜೀವನಕ್ಕೆ ನಾನೇ ಜವಾಬ್ದಾರನಾಗಿ ಬಿಡುತ್ತೇನೆ. ಅಂದರೆ…ಅಂದರೆ…ಕಾಲು ಕೊಂಡಲ್ಲಿಗೆ ಹೋಗಿಬಿಡುವುದೆಂಬ ನಿರ್ಧಾರವನ್ನು ತ್ಯಜಿಸಿ ಬಸ್ಸು ಹಿಡಿದು ಕುಂದಾಪುರಕ್ಕೆ ಹೋಗಿ ಚಂದ್ರಿಯ ಜೊತೆ ಇದ್ದುಬಿಡುತ್ತೇನೆ. ಹಾಗೆ ನನ್ನ ಸಂಕಟವನ್ನೆಲ್ಲ ಕೊನೆ ಮಾಡಿಬಿಡುತ್ತೇನೆ. ಪೂರ್ಣ ಎಚ್ಚರದಲ್ಲಿ ನನ್ನನ್ನು ನಾನು ಪುನಃ ಸೃಷ್ಟಿಸಿಕೊಳ್ಳುತ್ತೇನೆ… +“ಹೊಳೆಯಿತೇ?” ಎಂದ ಪುಟ್ಟ ನಗುತ್ತ. +“ಆಡುವುದು ಮೀನು, ಓಡುವುದು ನೀರು, ನಿಂತುಕೊಂಡು ನೋಡುವುದು ಕಲ್ಲು” ಎಂದರು ಪ್ರಾಣೇಶಾಚಾರ್ಯರು. +“ವ್ಹಾರೆವಾ ಭೇ. ಗೆದ್ದಿರಿ. ನಮ್ಮೂರಿನಲ್ಲಿ ನನ್ನನ್ನು ಏನೆಂದು ಕರೀತಾರೆ ಗೊತ್ತೇ? ಒಗಟಿನ ಪುಟ್ಟ ಅಂತ. ನಾನು ಭಾರೀ ಸರಕು ಇಟ್ಟಿದ್ದೇನೆ. ಒಂದು ನೂರು ಮೆಲಿ ನನ್ನ ಜೊತೆ ನಡೆಯಿರಿ ಬೇಕಾದರೆ, ಮೆಲಿಗೊಂದರಂತೆ ಒಗಟನ್ನು ಹಾಕುತ್ತ ಹೋಗುತ್ತೇನೆ” ಎಂದು ಪುಟ್ಟ ಬೀಡಿಯನ್ನು ಎಸೆದ. +ಬಿಸಿಲಿನಲ್ಲಿ ನಡೆದು ದೂರ್ವಾಸಪುರವನ್ನು ಗರುಡ, ಲಕ್ಷ್ಮಣ ಇತ್ಯಾದಿ ಬ್ರಾಹ್ಮಣರು ಮುಟ್ಟುವಾಗ ಬಿಸಿಲು ಇಳಿಮುಖವಾಗಿತ್ತು. ಹೆದರುತ್ತ ಅಗ್ರಹಾರಕ್ಕೆ ಕಾಲಿಟ್ಟೊಡನೆ ಮನೆಗಳ ಮೇಲೆ ಹದ್ದುಗಳಿಲ್ಲದಿರುವುದನ್ನು ಕಂಡು ಅವರಿಗಿಷ್ಟು ಸಮಾಧಾನವಾಯಿತು. ಲಕ್ಷ್ಮಣಾಚಾರ್ಯ ಮೆಲ್ಲಗೆ ’ಮನೆಯ ದನಕರು ಏನಾಗಿವೆಯೋ ನೋಡಿಬರುತ್ತೇನೆ, ನೀವು ಮುಂದೆ ಹೋಗಿ’ ಎಂದದ್ದಕ್ಕೆ ಗರುಡಾಚಾರ್ಯ ರೇಗಿ ’ಮೊದಲು ಸಂಸ್ಕಾರದ ಕೆಲಸ, ಆಮೇಲೆ ನಿನ್ನ ಗೃಹಕೃತ್ಯ’ ಎಂದು ಗದರಿಸಿದ. ಲಕ್ಷ್ಮಣಾಚಾರ್ಯನಿಗೆ ಎದುರುತ್ತರ ಕೊಡುವ ಧೆರ್ಯವಾಗಲಿಲ್ಲ. ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರ ಮನೆಗೆ ಬಂದರು. ಪಾಪ ಅವರ ದುಃಖಕ್ಕಷ್ಟು ಸಮಾಧಾನ ಹೇಳಬೇಕೆಂದು ಎಲ್ಲರಿಗೂ ಅನ್ನಿಸಿತು. ಆದರೆ ಕರೆದರೆ ಒಳಗಿನಿಂದ ಉತ್ತರವಿಲ್ಲ. ಮನೆಯೊಳಕ್ಕೆ ಹೋದರೆ ಇಲಿ ಸತ್ತ ನಾತ. ಇದರಿಂದಾಗಿ ಯಾರಿಗೂ ತಮ್ಮ ತಮ್ಮ ಮನೆಯೊಳಕ್ಕೆ ಹೋಗುವ ಧೆರ್ಯವಾಗಲಿಲ್ಲ. ಅಗ್ರಹಾರದ ಬೀದಿಗೆ ಬಂದೊಡನೆ ಮೌಢ್ಯ ಕವಿದುಬಿಟ್ಟಿತು. ಅಗ್ರಹಾರವಂತೂ ಹಾಳುಸುರಿಯುತ್ತಿತ್ತು.’ಈಗೇನು ಮಾಡುವ’ ಎಂದು ಎಲ್ಲರೂ ಒಟ್ಟಾಗಿ ಚಿಂತಿಸಿದರು. ’ಶವಸಂಸ್ಕಾರ’ ಎಂದ ಒಬ್ಬ ಬ್ರಾಹ್ಮಣ. ಆದರೆ ನಾರಣಪ್ಪನ ಮನೆಯೊಳಕ್ಕೆ ಹೋಗಿ ಕೊಳೆತು ವಿಕಾರವಾಗಿರಬಹುದಾದ ಹೆಣವನ್ನು ನೋಡುವ ಧೆರ್ಯ ಯಾರಿಗೂ ಆಗಲಿಲ್ಲ. ಉಪಾಯ ಹೊಳೆದ ಗರುಡಾಚಾರ್ಯ, ’ಪ್ರಾಣೇಶಾಚಾರ್ಯರು ನದಿಗೋ ಎಲ್ಲಿಗೋ ಹೋಗಿರಲಿಕ್ಕೆ ಸಾಕು, ಅವರು ಬರುವವರೆಗೆ ಕಾಯುವ’ ಎಂದ. ಲಕ್ಷ್ಮಣಾಚಾರ್ಯ, ’ಕಳೆಯಲಿಕ್ಕೆ ಕಾಲವಿಲ್ಲ. ಶವಸಂಸ್ಕಾರದ ಸಿದ್ಧತೆಯಾದರೂ ನಡೆಸುವ’ ಎಂದ. ’ಕಟ್ಟಿಗೆ’ ಎಂದ ಒಬ್ಬ ಬ್ರಾಹ್ಮಣ. ’ಮಾವಿನ ಮಾರ ಕಡಿಸಬೇಕು’ ಎಂದ ಇನ್ನೊಬ್ಬ. ’ಕೊಳೆತು ಹೋದ ಹೆಣ ಹಸಿ ಸೌದೆಯಲ್ಲಿ ಎಲ್ಲಿ ಉರಿಯಲಿಕ್ಕೆ ಶಕ್ಯ?’ ಎಂದ ಮತ್ತೊಬ್ಬ. ’ಅವನ ಮನೆಯ ಕಟ್ಟಿಗೆಯಿಂದಲೇ ಸುಟ್ಟರಾಯಿತು” ಎಂದ ಲಕ್ಷ್ಮಣಾಚಾರ್ಯ. ’ನಿನ್ನ ಮನೆಯ ಕಟ್ಟಿಗೆಯನ್ನು ಕೇಳಲಿಲ್ಲವಲ್ಲ’ ಎಂದು ಗರುಡ ಹೀಯಾಳಿಸಿದ. ಆದರೆ ನಾರಣಪ್ಪನ ಮನೆಯನ್ನು ಸುತ್ತಿ ಹಿತ್ತಲಿಗೆ ಹೋಗಿ ನೋಡಿದರೆ ಸಾಕಷ್ಟು ಕಟ್ಟಿಗೆ ಇರಲಿಲ್ಲ. ’ಚಂದ್ರೀ’, ’ಚಂದ್ರೀ’ ಎಂದು ಕೂಗಿದರೆ ಉತ್ತರವಿಲ್ಲ. ’ಕುಂದಾಪುರಕ್ಕೆ ಓಡಿರಬೇಕು, ಊರು ಹಾಳುಮಾಡಿದ ಮಾರಿ’ ಎಂದುಕೊಂಡರು ಬ್ರಾಹ್ಮಣರು. ’ಇನ್ನೇನು ಮಾಡಲಿಕ್ಕೆ ಶಕ್ಯ? ಪ್ರತಿ ಮನೆಯಿಂದ ಒಂದೊಂದು ಹೊರೆ ಸೌದೆಯನ್ನೆತ್ತಿ ಸ್ಮಶಾನಕ್ಕೆ ಒಯ್ದುಬಿಡಿರಿ’ ಎಂದ ಗರುಡಾಚಾರ್ಯ. ಎಲ್ಲರೂ ಒಪ್ಪಿ ಹಿತ್ತಲಿನಿಂದ ಒಂದೊಂದು ತಲೆಹೊರೆ ಸೌದೆಯನ್ನು ಹೊತ್ತು ಎರಡು ಮೆಲಿಯಾಚೆಯಿದ್ದ ಸ್ಮಶಾನಕ್ಕೆ ಒಯ್ದರು. ಮತ್ತೆ ಅಗ್ರಹಾರಕ್ಕೆ ಮರಳಿದರೆ ಪ್ರಾಣೇಶಾಚಾರ್ಯರ ಪತ್ತೆಯೇ ಇಲ್ಲ. ’ಹೆಣ’ ಎಂದ ಒಬ್ಬ ಬ್ರಾಹ್ಮಣ. ’ಪ್ರಾಣೇಶಾಚಾರ್ಯರು ಬರಲಿ’ ಎಂದ ಗರುಡ. ’ಸರಿ’ ಎಂದ ಲಕ್ಷ್ಮಣಾಚಾರ್ಯ. ಎಲ್ಲರಿಗೂ ದಿಗಿಲು-ಒಳಕ್ಕೆ ಹೋಗಿ ನೋಡಲು. ’ಪ್ರಾಣೇಶಾಚಾರ್ಯರಿಗೆ ತಿಳಿಸದೆ ದುಡುಕುವುದು ಸರಿಯಲ್ಲ’ ಎಂದ ಗರುಡ. ’ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡುಬಿಟ್ಟು ಕಾಯುವ’ ಎಂದು ಬ್ರಾಹ್ಮಣರು ನಾರಣಪ್ಪನ ಮನೆಯ ಎದುರು ಮಡಕೆಯಲ್ಲಿ ಬೆಂಕಿ ಹೊತ್ತಿಸಿ, ಬೊಂಬುಗಳನ್ನು ತಂದು ಚಟ್ಟ ಕಟ್ಟುತ್ತ ಕೂತರು-ಪ್ರಾಣೇಶಾಚಾರ್ಯರಿಗೆ ಕಾದು. +ಮಧ್ಯಾಹ್ನ ಸುಮಾರು ಮೂರು ಗಂಟೆಯಾಗುವ ಹೊತ್ತಿಗೆ ಪ್ರಾಣೇಶಾಚಾರ್ಯರು ಪುಟ್ಟನ ಜೊತೆ ಮೇಳಿಗೆಯ ಕೆರೆಯನ್ನು ತಲ್ಪಿದರು. ಗಾಡಿ ದಾರಿಯಲ್ಲಿ ನಡೆದು ಬರುವಾಗ ಕೆಂಪು ಧೂಳಿನಿಂದ ಮೆಯೆಲ್ಲ ಮಲಿನವಾಗಿತ್ತು. ಕೆರೆಯಲ್ಲಿ ಕೆಕಾಲನ್ನು ತೊಳೆದುಕೊಳ್ಳಲೆಂದು ಇಳಿದಾಗ ಪುಟ್ಟ, “ಅಲ್ಲ. ಎಷ್ಟೆಲ್ಲ ಹರಟಿದೆ. ನನ್ನ ಸ್ವಂತದ ವಿಷಯಾನ್ನ ನಿಮಗೆ ಹೇಳಲೇ ಇಲ್ಲವಲ್ಲ” ಎಂದ. ಮುಖವನ್ನು ತೊಳೆದುಕೊಳ್ಳುತ್ತಿದ್ದಾಗ ಆಚಾರ್ಯರಿಗೆ ಎಲ್ಲಾದರೂ ಮೇಳಿಗೆಯಲ್ಲಿ ಪರಿಚಯದವರು ಕಣ್ಣಿಗೆ ಬಿದ್ದುಬಿಟ್ಟರೆ ಎಂದು ಭಯವಾಯಿತು. ಮತ್ತೆ ಭೀತಿ ಹುಟ್ಟಿಬಿಟ್ಟಿತಲ್ಲ ಎಂದು ಕಸಿವಿಸಿಗೊಂಡರು. ಒಂದು ಸಮಾಧಾನ : ಮೇಳಿಗೆಯ ಬ್ರಾಹ್ಮಣರೆಲ್ಲ ಸ್ಮಾರ್ತರು, ಆದ್ದರಿಂದ ಅಪರಿಚಿತರು. ಜಾತ್ರೆಯ ಗಡಿಬಿಡಿಯಲ್ಲಿ ತನ್ನನ್ನು ಗಮನಿಸುವವರಾದರೂ ಯಾರು? ಆದರೆ ಎಷ್ಟು ಸಮಾಧಾನ ಹೇಳಿಕೊಂಡರೂ ಭೀತಿ. ಜಾತ್ರೆಗೆಂದು ಪರಿಚಯದವರು ಯಾರಾದರೂ ಬಂದೇ ಬಂದಿರುತ್ತಾರೆ. ಆದರೆ ಏನೇ ಆಗಲಿ : ನಿಶ್ಚಯಿಸಿಬಿಟ್ಟ ಮೇಲೆ ತನಗಿನ್ನೆಲ್ಲಿಯ ಭೀತಿ? ಆದರೂ ಭೀತಿಯಿರುವುದು ನಿಜ. ನಿಷ್ಕಾರಣವಿದ್ದರೆ ಯಾಕೆ ಈ ಭೀತಿ? ಇದರ ಮೂಲ ಹುಡುಕಬೇಕು. ಬೇರುಸಹಿತ ಈ ಭೀತಿಯನ್ನು ಕಿತ್ತೆಸೆದು ಬಿಡಬೇಕು. ನಾರಣಪ್ಪ ಹೇಗೆ ರಾಜಾರೋಷವಾಗಿ ಚಂದ್ರಿಯ ಜೊತೆ ಅಗ್ರಹಾರದ ನಡುವೆ ನಿಂತು ಬಾಳ್ವೆ ನಡೆಸಿದ? ನಾನು ಚಂದ್ರಿಯನ್ನು ಸೇರಿದರೂ ಒಳಗೆ ಮುಖ ಮುಚ್ಚಿಕೊಂಡಿರುತ್ತೀನೋ ಏನೋ! ಥೂ ಅದೆಂತಹ ಬಾಳು ಎನ್ನಿಸಿತು. +“ಅಲ್ಲ, ನಿಮ್ಮ ಹತ್ತಿರ ಇಷ್ಟೆಲ್ಲ ಯಾಕೆ ಹರಟುತ್ತಿದ್ದೇನೆಂದು ನಿಮಗೆ ಅನ್ನಿಸಿರಬಹುದಲ್ಲವೆ? ’ಏನು ಇವ ಸಿಕ್ಕರೆ ಬಿಡ’, ಅಂತ. ಹೇಳ್ತೀನಿ ಕೇಳಿ. ನೀವು ಹೆಚ್ಚು ಹರಟುವವರಲ್ಲವಾದರೂ ನಿಮಗೆ ಜನ ಬೇಕು, ಮಾತು ಬೇಕು. ನಿಮ್ಮದು ಸಾಧುಸ್ವಭಾವ. ಪಾಪದ ಜನ.” ಮುಖ ಒರೆಸಿಕೊಳ್ಳುತ್ತ ಪುಟ್ಟ ಹೇಳಿದ. “ಹೌದೋ ಅಲ್ಲವೋ ಹೇಳಿ. ಮುಖ ನೋಡಿ ಹೇಳಿಬಿಡುತ್ತೇನೆ ನಾನು : ಯಾರು ಎಂಥ ಜನ ಅಂತ. ನಿಮ್ಮ ಹತ್ತಿರ ಯಾಕೆ ಮುಚ್ಚುಮರೆ? ನಾನೇನು ಕಳಪೆ ಜನಾಂತ ನೀವು ತಿಳಿದುಕೊಂಡಿಲ್ಲವೆಂದು ಅಂದುಕೊಂಡಿದ್ದೇನೆ. ನಾನು ಮಾಲೇರರವ ಎಂದೆ ಅಲ್ಲವೆ? ಇನ್ನೂ ಬೇಕಾದರೆ ಹೇಳುವೆ. ನನ್ನ ತಂದೆಯವರು ಕುಲೀನ ಬ್ರಾಹ್ಮಣರು. ಇಟ್ಟುಕೊಂಡ ನನ್ನ ತಾಯಿಯನ್ನು ಹೆಂಡತಿಗಿಂತ ಚೆನ್ನಾಗಿ ನೋಡಿಕೊಂಡರು. ನನಗೆ ಮುಂಜಿಯನ್ನೂ ಮಾಡಿಸಿದರು. ನೋಡಿ ಬೇಕಾದರೆ” ಎಂದು ಜನಿವಾರವನ್ನು ಅಂಗಿಯ ಒಳಗಿನಿಂದ ಎಳೆದು ತೋರಿಸಿದ. “ಹಾಗಾಗಿ ನನ್ನ ಮಿತ್ರರೆಲ್ಲ ಬ್ರಾಹ್ಮಣರೆ. ನಡೆಯಿರಿ. ಹೋಗುವ” ಎಂದ. ಕೆರೆಯ ಕಟ್ಟೆಯನ್ನು ಏರುತ್ತಿದ್ದಂತೆ “ಜನ ಎಂಬೋದಕ್ಕೂ ನಾನು ಮಾಡುವುದಕ್ಕೂ ಸರಿಯಾಗಿದೆ. ನನ್ನ ಒಂದು ಹೆಸರು ಒಗಟಿನ ಪುಟ್ಟ; ಇನ್ನೊಂದು ಹರಟೇ ಪುಟ್ಟ. ಒಟ್ಟಿನಲ್ಲಿ ನನಗೆ ಜನ ಬೇಕು” ಎಂದು ನಕ್ಕ. +ಜಾತ್ರೆಯ ಗಡಿಬಿಡಿಯಲ್ಲಿ ಮೇಳಿಗೆಗೆ ಕಳೆಯೇರಿಬಿಟ್ಟಿತ್ತು. ಕನ್ಯಾ, ವೃಶ್ಚಿಕ, ಮಿಥುನ ಇತ್ಯಾದಿ ಚಿತ್ರಗಳಿಂದ ತೇರಿನ ಶಿಖರ ಸರ್ವಾಲಂಕೃತವಾಗಿ ಊರಿನ ಮಧ್ಯೆ ಬಂದು ನಿಂತಿತ್ತು. ದಪ್ಪದಪ್ಪನೆಯ ಎರಡು ಮಿಣಿಗಳು ಹಾದಿಯುದ್ದಕ್ಕೂ ತೇರಿಗೆ ಬಿಗಿದುಬಿದ್ದಿದ್ದವು. ರಥವನ್ನು ಕೊಟ್ಟಿಗೆಯಿಂದ ಎಳೆದು ಅರ್ಧದಾರಿ ತಂದು ಭಕ್ತಾದಿಗಳು ಹಣ್ಣುಕಾಯಿ ಅರ್ಚನೆಗೆಂದು ಬಿಟ್ಟಿದ್ದರು. ಏಣಿಯನ್ನೇರಿ ರಥದೊಳಕ್ಕೆ ಕೂತಿದ್ದ ಪೂಜಾರಿಗೆ ಭಕ್ತಾದಿಗಳು ಕೊಟ್ಟ ಹಣ್ಣುಕಾಯಿಯನ್ನೆಲ್ಲ ಒಬ್ಬ ಬ್ರಾಹ್ಮಣ ಯುವಕ ಹತ್ತಿ ಇಳಿದು ಅರ್ಚನೆಗೆ ಒಪ್ಪಿಸುತ್ತಿದ್ದ. ರಥದ ಸುತ್ತ ಒಂದು ದೊಡ್ಡ ಗುಂಪೇ ಹಣ್ಣುಕಾಯಿಗಳನ್ನು ಹಿಡಿದು ಕಾದಿತ್ತು. ಪ್ರಾಣೇಶಾಚಾರ್ಯರು ಗುಂಪಿನಲ್ಲೆಲ್ಲ ತನ್ನ ಪರಿಚಯದವರು ಯಾರಾದರೂ ಇದ್ದಾರೋ ಎಂದು ಆತಂಕದಿಂದ ಹುಡುಕಿದರು. ಎಳ್ಳು ಬೀರಿದರೆ ಕೆಳಕ್ಕೆ ಬೀಳದ ಗುಂಪಿನ ಮಧ್ಯೆ ಪುಟ್ಟ ಆಚಾರ್ಯರ ಕೆ ಹಿಡಿದು ನಡೆಸಿಕೊಂಡು ಅಂಗಡಿಯೊಂದಕ್ಕೆ ಹೋಗಿ ತೆಂಗಿನಕಾಯಿ ಹಣ್ಣುಗಳನ್ನು ಕೊಂಡ. ’ಗುಂಪು ಖಾಲಿಯಾದ ಮೇಲೆ ಪೂಜೆ ಮಾಡಿಸಿದರಾಯಿತು. ಈಗ ಸ್ವಲ್ಪ ಸುತ್ತಾಡಿಬರುವ, ಆಚಾರ್ರೆ’ ಎಂದ. ಗುಂಪಿನಿಂದ ಹೊರಬಂದರೆ ಪೀಪಿಗಳ ಶಬ್ದ; ಪ್ರತಿಯೊಬ್ಬ ಹಳ್ಳಿಯ ಹುಡುಗನ ಬಾಯಲ್ಲೂ ತಾಯಿತಂದೆಯರಿಂದ ಕಾಡಿ ಪಡೆದ ಬಿಲ್ಲೆಯಿಂದ ಕೊಂಡ ವಿಧವಿಧ ನಾದದ ಪೀಪಿ. ಕರ್ಪೂರ ಊದುಬತ್ತಿಯ ವಾಸನೆ. ಹೊಸ ಬಟ್ಟೆಯ ವಾಸನೆ. ಬೆಲೂನು ಮಾರುವವನ ಹಾಡು. ಮೂಲೆಯೊಂದರಲ್ಲಿ ಬೊಂಬಾಯಿ ಪೆಟ್ಟಿಗೆ. ಬಿಲ್ಲೆ ಕೊಟ್ಟರೆ ಕಂಡಿಯಿಂದ ಅವನು ಗೆಜ್ಜೆ ಕಟ್ಟಿದ ಪೆಟ್ಟಿಗೆಯನ್ನು ತಟ್ಟುತ್ತ ಕುಣಿಯುತ್ತ ತೋರಿಸುತ್ತಾನೆ : “ದಿಲ್ಲಿಯ ಪಟ್ನ ನೊಡು, ಅಠಾರ ಕಛೇರಿ ನೋಡು, ಬೆಂಗ್ಳೂರು ಪೇಟೆ ನೋಡು, ಮೆಸೂರು ಅರಸರ ನೋಡು, ಆಹಾ ದರ್ಬಾರು ಮೋಜು ನೋಡು, ತಿರುಪತಿಯ ಒಡೆಯ ನೋಡು, ಆಹಾ ಬೊಂಬಾಯಿ ಸೂಳೆ ನೋಡು, ಆಹಾ ಬೊಂಬಾಯಿ ಸೂಳೆ ನೋಡು” ಗೆಜ್ಜೆಯ ಕುಣಿತ ನಿಲ್ಲುತ್ತದೆ. ’ಬೊಂಬಾಯಿ ಪೆಟ್ಟಿಗೆ-ಪೆಟ್ಟಿಗೆ-ಬರೀ ಒಂದು ಬಿಲ್ಲೆ, ಬಿಲ್ಲೆ’ ಎಂದು ಕೂಗುತ್ತಾನೆ. ಪುಟ್ಟನಿಗೆ ಸುಮ್ಮನೇ ನೋಡಿ ನಡೆದುಬಿಡೋದು ಸಾಧ್ಯವಾಗಲಿಲ್ಲ. “ಆಚಾರ್ರೆ, ನಾನು ನೋಡಬೇಕು” ಎಂದ. ’ಆಗಲಿ’ ಎಂದರು ಪ್ರಾಣೇಶಾಚಾರ್ಯರು, “ಬಿಟ್ಟೆಲ್ಲೂ ಹೋಗಬೇಡಿ. ಇಲ್ಲೇ ಇರಿ” ಎಂದು ಪುಟ್ಟ ಕರಿಯ ಪರದೆಯನ್ನು ಮುಖಕ್ಕೆಳೆದುಕೊಂಡು, ಕಂಡಿಯಲ್ಲಿ ನೋಡುತ್ತ ಕೂತ. ’ಈಗ ಇವನನ್ನಿಲ್ಲೆ ಬಿಟ್ಟು ಹೋಗಿಬಿಡಲೆ?’ ಎನ್ನಿಸಿತು ಆಚಾರ್ಯರಿಗೆ, ಮತ್ತೆ ಪಾಪ ಎನ್ನಿಸಿತು. ಆದರೆ ಇವನನ್ನು ಕಟ್ಟಿಕೊಂಡಿದ್ದರೆ ಶಾಂತಿಯಿಲ್ಲ, ನಾನೀಗ ಒಂಟಿಯಾಗಿರಬೇಕೆಂದು-ನಡೆದುಬಿಟ್ಟರು. ಸ್ವಲ್ಪ ದೂರ ಹೋಗುವುದರಲ್ಲೇ ’ಆಚಾರ್ರೇ’ ಎಂದು ಕೂಗಿದ್ದು ಕೇಳಿಸಿತು. ತಿರುಗಿ ನೋಡಿದರೆ ಪುಟ್ಟ. ” ನೀವು ಕಳೆದೇ ಹೋಗಿಬಿಟ್ಟಿರಿ ಎಂದುಕೊಂಡೆ. ಆದರೆ ಬೊಂಬಾಯಿ ಪೆಟ್ಟಿಗೆಯವ ನೀವು ಹೋದ ಮಾರ್ಗ ತೋರಿಸಿದ, ನಡೆಯಿರಿ” ಎಂದ. ಪ್ರಾಣೇಶಾಚಾರ್ಯರಿಗೆ ಮೆಪರಚಿಕೊಳ್ಳುವಂತಾಯಿತು. ಬೆದುಬಿಡಲೆ ಎನ್ನಿಸಿತು. ಆದರೆ ಕೇಳದೆ, ಬೇಡದೆ, ನಿರಪೇಕ್ಷಿತವಾಗಿ ಸ್ನೇಹಹಸ್ತವನ್ನಿತ್ತ ಒಂದು ಕಂಡರಿಯದ ಮನುಷ್ಯ ಪ್ರಾಣಿಯನ್ನು ಹೇಗಾದರೂ ನೋಯಿಸಲಿಕ್ಕೆ ಶಕ್ಯ? ಅನುಭವಿಸಿಬಿಡು ಎಂದುಕೊಂಡರು. “ಆಹಾ ನೋಡಿ” ಎಂದ ಪುಟ್ಟ. ದೊಂಬರ ಆಟ ನಡೆದಿತ್ತು. ಸರ್ಪಶರೀರದ ಮಾಟವಾದ ದೇಹದ ಚೆಲುವೆಯೊಬ್ಬಳು ಕೆಕಾಲುಗಳನ್ನು ಚೆಲ್ಲಿ ಬರಿ ಹೊಟ್ಟೆಯ ಮೇಲೆ ಸಮತೂಕ ತಪ್ಪದಂತೆ ಬಿದಿರುಗಣೆಯ ಮೇಲೆ ಮಲಗಿ ತೂಗಿದಳು. ದೊಂಬ ತಮ್ಮಟೆ ಬಾರಿಸಿದ. ಇನ್ನೊಂದು ಕ್ಷಣದಲ್ಲಿ, ಗಳದ ಮೇಲೆ ತೂಗಿದ ಚೆಲುವೆ ಸರ್ರೆಂದು ಕೆಳಗಿಳಿದು ಕುಣಿಯುತ್ತಿದ್ದಳು. ಜನ ಬಿಲ್ಲೆಗಳನ್ನು ಎಸೆದರು. ಪುಟ್ಟನೂ ಒಂದು ಬಿಲ್ಲೆಯನ್ನೆಸೆದ. ದೇವಸ್ಥಾನದ ಸಮೀಪಕ್ಕೆ ಬರುತ್ತಿದ್ದಂತೆ ಎರಡು ಪಕ್ಕದಲ್ಲೂ ಕೆಮೋಟಾದವರು, ಕಾಲುಮೋಟಾದವರು, ಕಣ್ಣಿಲ್ಲದವರು, ಮೂಗಿನ ಜಾಗದಲ್ಲಿ ಬರಿ ಎರಡು ಹೊಳ್ಳೆಯುಳ್ಳವರು, ವಿಧವಿಧದ ಅಂಗವಿಹೀನರು ನೆಲದಲ್ಲಿ ಹೊರಳುತ್ತ ಬೇಡುತ್ತಿದ್ದರು. ಅತ್ಯಂತ ಆಕರ್ಷಕವಾಗಿ ಅಂಗವಿಹೀನನಾದವನಿಗೆ ಬಿಲ್ಲೆಯನ್ನೆಸೆಯುತ್ತ ಪುಟ್ಟ ನಡೆದ. ಮುಂದೆ ಹೆಂಗಸರ ಬಣ್ಣ ಬಣ್ಣದ ಟೇಪುಗಳನ್ನೆಲ್ಲ ಇಳಿಬಿಟ್ಟಿದ್ದ ಹೊತ್ತುತಿರುಗುವ ಒಂದು ಅಂಗಡಿಯಲ್ಲಿ ಒಂದು ಗಜ ಟೇಪನ್ನು ಹೆಂಡತಿಗೆಂದು ಕೊಂಡ. ’ಅವಳಿಗೆ ಇದು ಆಸೆ’ ಎಂದ. ಎರಡು ಬಣ್ಣದ ತಗಡಿನ ಪೀಪಿಗಳನ್ನು ಮಕ್ಕಳಿಗೆಂದು ಕೊಂಡು ಊದಿನೋಡಿದ. ’ನಡೆಯುವ’ ಎಂದ. ಪ್ರಾಣೇಶಾಚಾರ್ಯರಿಗೆ ಗದ್ದಲದ ನಡುವೆ, ಸಂಭ್ರಮದ ನಡುವೆ ಅತಂತ್ರವಸ್ತುವಾಗಿ ಭೇತಾಳನಂತೆ ಅಲೆಯುತ್ತಿರುವ ಅನುಭವವಾಯಿತು. ಪುಟ್ಟನಿಗೊಂದು ಸೋಡಾ ಅಂಗಡಿ ಕಂಡದ್ದೆ “ಬನ್ನಿ. ಒಂದು ಕ್ರ ಕುಡಿಯುವ” ಎಂದ. “ಇಲ್ಲ, ನಾನು ಕುಡಿಯುವುದಿಲ್ಲ” ಎಂದರು ಪ್ರಾಣೇಶಾಚಾರ್ಯರು. ಕೊಂಕಣಿಯೊಬ್ಬನ ಸೋಗೆ ಹಚ್ಚಿದ ಸೋಡಾ ಅಂಗಡಿಯಲ್ಲಿ ಪರೀಕ್ಷಿಸಿ ಪುಟ್ಟ ಅಚ್ಚಕೆಂಪು ಬಣ್ಣದ ನೀರಿರುವ ಬಾಟ್ಲಿಯೊಂದನ್ನು ತೋರಿಸಿ ’ಒಂದು ಕ್ರ’ ಎಂದ. ಆ ಅಂಗಡಿಯ ತುಂಬೆಲ್ಲ ನಾಚಿಕೆಯಿಂದ ಬಾಟ್ಲಿಯ ಗಮಗಮ ಸೋಡಾ ಕ್ರಗಳನ್ನು ಕುಡಿಯುವ ಹೆಗ್ಗಡತಿಯರು, ಗೌಡರು, ಮಕ್ಕಳು. ಎಣ್ಣೆ ಹಾಕಿ ನುಣ್ಣಗೆ ಬಾಚಿದ ತಲೆ. ಮುಡಿದ ಚೆಂಡುಹೂ. ಉಟ್ಟ ಹೊಸ ಸೀರೆ. ಗೌಡರ ಮೆಮೇಲೆ ಹೊಸ ಅಂಗಿ. ಕ್ರಶ್ಶಿನ ಬಾಟ್ಲಿಯ ಗೋಲಿಯನ್ನು ತಳ್ಳುವಾಗ ಬರುವ ’ಕುಂಂii,ಗೊಯಿP’ ಎನ್ನುವ ಶಬ್ದ; ಸಿಹಿಯಾದ ಬಣ್ಣದ ಗ್ಯಾ ಇರುವ ನೀರು ಕುಡಿದ ಮೇಲೆ ’ಗರP’ ಎಂದು ಬರುವ ತೇಗು-ಅದೊಂದು ಅಪೇಕ್ಷೆ, ಅನುಭವ, ತೃಪ್ತಿಯ ಸಂಗತಿ. ಜಾತ್ರೆ ಕೊಡುವ ಅನೇಕ ಸುಖಗಳಲ್ಲಿ ಇದೂ ಒಂದು. ಎಲ್ಲರೂ ಇದನ್ನು ಮೊದಲೇ ಅಪೇಕ್ಷಿಸಿ ಬೇಕಾದಷ್ಟು ಕಾಸನ್ನು ಅದಕ್ಕೆಂದು ತೆಗೆದಿಟ್ಟುಬಿಟ್ಟಿರುತ್ತಾರೆ. ಈ ಎಲ್ಲ ಸಾಮಾನ್ಯ ಸುಖಗಳ ಲೋಕದಿಂದ ಹೊರಗೆ ನಿಂತು ಪ್ರಾಣೇಶಾಚಾರ್ಯರು ನೆರೆದವರನ್ನೆಲ್ಲ ನೋಡಿದರು. ’ಗರP’ ಎಂದು ತೇಗಿ ಪುಟ್ಟನಿಗೆ ಮುಖ ಅಗಲವಾಯಿತು. “ಬನ್ನಿ ಹೋಗುವ” ಎಂದ. “ನೀವೇನೂ ತೆಗೆದುಕೊಳ್ಳಲೇ ಇಲ್ಲವಲ್ಲ” ಎಂದ. +ಹೀಗೆ ಗದ್ದಲದಲ್ಲಿ, ಸಂಭ್ರಮದಲ್ಲಿ, ಬೆಲೂನು, ಪೀಪಿ, ಮಿಠಾಯಿ, ಕ್ರಶ್ಶಿನ ಶಬ್ದ, ದೇವಸ್ಥಾನದ ಗಂಟೆಗಳ ನಾದ, ಹೆಂಗಸರ ಬಳೆಯ ಅಂಗಡಿಯ ವೆಭವದ ನಡುವೆ, ಭ್ರಮಿತರಂತೆ ಪ್ರಾಣೇಶಾಚಾರ್ಯರು ಪುಟ್ಟನನ್ನು ಅನುಸರಿಸಿ ನಡೆದರು. ಎಲ್ಲಿ ನೋಡಿದರೂ ತತ್ಪರವಾದ ಕಣ್ಣುಗಳು. ತನ್ನದೊಬ್ಬನದ್ದು ಮಾತ್ರ ಯಾವುದರಲ್ಲೂ ತತ್ಪರವಾಗಲಾರದ ಕಣ್ಣುಗಳು. ಪುಟ್ಟ ಸರಿ. ಇವನನ್ನು ನಾನು ಸಂಧಿಸಿದ್ದೂ ವಿಧಿಯಿರಬೇಕು. ನಾನು ಮಾಡಿದ ನಿಶ್ಚಯ ಪೂರ್ಣವಾಗಲು ಪುಟ್ಟನಂತೆ ಜೀವನದಲ್ಲಿ ತತ್ಪರನಾಗಿಬಿಡುವ ಯೋಗ್ಯತೆಯಿರಬೇಕು. ಚಂದ್ರಿಯದು ಇದೇ ಲೋಕ. ನಾನು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ದ್ವಂದ್ವಕ್ಕೆ ಸಿಕ್ಕಿಕೊಂಡುಬಿಟ್ಟೆ. ಕಾಫಿ, ಮಸಲೆದೋಸೆಯ ವಾಸನೆ ಬಂತು. ಪುಟ್ಟ ನಿಂತ, ಆಚಾರ್ಯರೂ ನಿಂತರು. +“ಬನ್ನಿ, ಒಂದಿಷ್ಟು ಕಾಫಿ ಕುಡಿಯುವ” ಎಂದ ಪುಟ್ಟ. +“ನನಗೆ ಬೇಡ” ಎಂದರು ಪ್ರಾಣೇಶಾಚಾರ್ಯರು. +“ಇದು ಬ್ರಾಹ್ಮಣರ ಹೋಟೆಲು. ಜಾತ್ರೆಗೆಂದು ತೀರ್ಥಹಳ್ಳಿಯಿಂದ ಬಂದದ್ದು. ದೋಷವಿಲ್ಲ. ಒಳಗೆ ಮಡಿಬ್ರಾಹ್ಮಣರಿಗೆಂದು ಪ್ರತ್ಯೇಕ ಸ್ಥಳವಿದೆ.” +“ಬೇಡ. ನನಗೆ ಕಾಫಿ ಬೇಡ.” +“ಅದೆಲ್ಲ ಆಗದು. ನಾನು ಕುಡಿಸುವೆ ನಿಮಗೆ ಕಾಫಿ, ಬನ್ನಿ” ಎಂದು ಪುಟ್ಟ ಕೆಹಿಡಿದು ಒಳಗೆ ಕರೆದುಕೊಂಡು ಹೋದ. ಪ್ರಾಣೇಶಾಚಾರ್ಯರು ಮಣೆಯ ಮೇಲೆ ಒಲ್ಲದೆ ಕೂತರು, ಇಲ್ಲಿ ಯಾರಾದರೂ ನನ್ನ ಪರಿಚಯದವರು ಇದ್ದಿರಬಹುದೋ ಎಂದು ಭೀತಿಯಿಂದ ಹುಡುಕಿದರು. ವೇದಾಂತ ಶಿರೋಮಣಿಯೊಬ್ಬ ಹೋಟೇಲು ಕಾಫಿ ಕುಡಿಯೋದು ಕಣ್ಣಿಗೆ ಬಿದ್ದು ಬಿಟ್ಟರೆ…ಥv ಈ ಭೀತಿಯಿಂದ ಮೊದಲು ಪಾರಾಗಬೇಕೆಂದು ತಮ್ಮನ್ನು ಶಪಿಸಿಕೊಂಡರು. ಪುಟ್ಟ ಸ್ವಲ್ಪ ದೂರದಲ್ಲಿ ಹೋಗಿ ಕೂತು ಪ್ರಾಣೇಶಾಚಾರ್ಯರ ಬ್ರಾಹ್ಮಣ್ಯಕ್ಕೆ ಗೌರವ ತೋರಿಸಿದ. ’ಎರಡು ಸ್ಪೆಷ ಕಾಫಿ’ ಎಂದ ಎದುರು ನಿಂತ ಮಾಣಿಗೆ. ಎರಡಾಣೆ ಕೊಟ್ಟು, ಲೋಟಾದಲ್ಲಿ ಬಂದ ಕಾಫಿಯನ್ನು ಕುಡಿಯುತ್ತ ’ಹಾಳು ಜಾತ್ರೆ ಕಾಫಿ’ ಎಂದ. ಪ್ರಾಣೇಶಾಚಾರ್ಯರಿಗೆ ದಾಹವಾಗಿದ್ದರಿಂದ ಕಾಫಿ ಕುಡಿದು ಸಮಾಧಾನವೇ ಆಯಿತು. ಹುರುಪು ಬಂತು. ಹೊರಬಂದರು. “ನೀವು ಬೇಕಾದರೆ ದೇವಸ್ಥಾನದಲ್ಲಿ ಹೋಗಿ ಊಟ ಮಾಡಿ. ಇವತ್ತು ಆರುಗಂಟೆಯ ತನಕ ಊಟದ ಸಂತರ್ಪಣೆ ನಡೆಯುತ್ತದೆ ಬ್ರಾಹ್ಮಣರಿಗೆ” ಎಂದ ಪುಟ್ಟ. ಎಷ್ಟೋ ದಿನಗಳಿಂದ ಊಟವೇ ಇಲ್ಲದ್ದರಿಂದ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಬಿಸಿಬಿಸಿ ಅನ್ನ ಸಾರಿನ ಊಟ ಮಾಡಬೇಕೆಂಬ ಅಪೇಕ್ಷೆಯಾಯಿತು. ಆದರೆ ಫಕ್ಕನೆ, ತನಗೀಗ ಸೂತಕವಲ್ಲವೆ, ದೇವಸ್ಥಾನದಲ್ಲಿ ಹೋಗಿ ಊಟ ಮಾಡುವಂತಿಲ್ಲ. ಮೆಲಿಗೆ ಮಾಡಿದರೆ ರಥ ಮುಂದಕ್ಕೆ ಚಲಿಸುವುದಿಲ್ಲವೆನ್ನುತ್ತಾರೆ ಎಂಬ ನಂಬಿಕೆ ನೆನಪಾಯಿತು. ಆದರೆ ನಾರಣಪ್ಪ ಗಣಪತಿಯ ಮೀನನ್ನು ಹಿಡಿದು ಜಯಿಸಿಕೊಳ್ಳಲಿಲ್ಲವೇ? ತನಗೆ ಹಾಗೆ ಬ್ರಾಹ್ಮಣ್ಯವನ್ನು ಸಂಪೂರ್ಣ ಧಿಕ್ಕರಿಸಿ ನಡೆಯುವ ಧೆರ್ಯವಿಲ್ಲ ಎನ್ನಿಸಿತು. ಹಾಗಾದರೆ ಚಂದ್ರಿಯನ್ನು ಕೂಡಿ ಬದುಕುತ್ತೇನೆಂಬ ನಿಶ್ಚಯಕ್ಕೆ ಯಾವ ಬೆಲೆ ಎಂದು ಮನಸ್ಸು ಹೀಯಾಳಿಸಿತು. ನಿಶ್ಚಯವೆಂದರೆ ಪೂರ್ಣ ನಿಶ್ಚಯವಾಗಬೇಕು. ಕಟ್ಟಿಕೊಂಡರೆ ಸಂಪೂರ್ಣ ಕಟ್ಟಿಕೊ. ಬಿಟ್ಟರೆ ಪೂರ್ಣ ಬಿಡು. ದ್ವಂದ್ವಾತೀತನಾಗುವ ದಾರಿ ಅದು. ಭೀತಿಯಿಂದ ಪಾರಾಗುವ ದಾರಿ ಅದು. ಮಹಾಬಲ ಹೇಗೆ ನಿಶ್ಚಯಿಸಿಬಿಟ್ಟ… +“ಸ್ವಲ್ಪ ನಿಲ್ಲಿ ಆಚಾರ್ರೆ. ಅಲ್ಲಿ ನೋಡಿ” ಎಂದ ಪುಟ್ಟ. ದೂರದಲ್ಲೊಂದು ದಿಬ್ಬದ ಮೇಲೆ ಪರವಶರಾದಂತೆ ಕಾಣುವ ಒಂದು ಶೂದ್ರರ ಗುಂಪಿತ್ತು. “ಬನ್ನಿ. ಅಲ್ಲಿಗೆ ಹೋಗಿ ನೋಡುವ. ಕೋಳಿ ಅಂಕವಿರಬೇಕು” ಎಂದ ಪುಟ್ಟ. ಪ್ರಾಣೇಶಾಚಾರ್ಯರಿಗೆ ಎದೆ ಜಗ್ಗೆಂದಿತು. ಆದರೂ ಪುಟ್ಟನ ಕೂಡ ನಡೆದರು-ವಿಧಿಗೆ ತಲೆಬಾಗಿ. ಗುಂಪಿನಿಂದ ಸ್ವಲ್ಪದೂರ ನಿಂತು ನೋಡಿದರು. ಹೆಂಡದ ವಾಸನೆಯಿಂದ ಅವರಿಗೆ ವಾಕರಿಕೆ ಬಂತು. ಕಾಲಿಗೆ ಕತ್ತಿ ಕಟ್ಟಿದ್ದ ಎರಡು ಹುಂಜಗಳು ’ರ’, ’ರ’ ಎಂದು ರೆಕ್ಕೆ ಬಡಿದು ಚೂರಿಯಿಂದ ತಿವಿದುಕೊಳ್ಳುತ್ತ ಪರಸ್ಪರ ಎಗರಾಡುವುದನ್ನು ನೋಡುತ್ತ ಜನ ಕುಕ್ಕುರುಗಾಲಿನಲ್ಲಿ ಕೂತಿದ್ದರು-ತುದಿಗಾಲಿನ ಮೇಲೆ, ಬಾಯಿ ಬಿಟ್ಟು, ಸುತ್ತುಗಟ್ಟಿ. ಅಷ್ಟು ತತ್ಪರ, ತೀಕ್ಷ್ಣ, ಕಠೋರ ದೃಷ್ಟಿಯನ್ನು ಪ್ರಾಣೇಶಾಚಾರ್ಯರು ಜನ್ಮಾಪಿ ಕಂಡೇ ಇರಲಿಲ್ಲ. ಪಂಚಪ್ರಾಣವೇ ಇತ್ತು ಕೂತವರ ಕಣ್ಣಿನ ನೋಟದಲ್ಲಿ-ಪ್ರಾಣ ಮತ್ತು ಎರಡು ಹುಂಜಗಳು. ಇಲ್ಲ. ನಾಲ್ಕು ರೆಕ್ಕೆ, ನಾಲ್ಕು ಕತ್ತಿಗಳು. ಕೊP ಕೊP ಕೊP ಕೊP-ಸುತ್ತ ನಲವತ್ತು ಕಣ್ಣುಗಳು. ಕೆಂಪು ಕಿರೀಟದ ಹುಂಜಗಳ ಹೊಳೆಯುವ ಚೂರಿಗಳು. ಬಿಸಿಲು ಪಳಪಳP. ಚಮಕು. ಚಕಮಕಿ. ಆಹಾ ಚಮತ್ಕಾರ. ಬಡಿಯಿತು. ಬಡಿಯಿತು. ಏರಿ ಕೂತಿತು. ಪ್ರಾಣೇಶಾಚಾರ್ಯರಿಗೆ ದಿಗಿಲಾಗಿಬಿಟ್ಟಿತು. ಒಂದು ರಾಕ್ಷಸಲೋಕಕ್ಕೆ ಥಟ್ಟನೇ ಬಂದುಬಿಟ್ಟಂತೆನ್ನಿಸಿತು. ಚಂದ್ರಿಯೊಡನೆ ಬಾಳಲು ನಿಶ್ಚಯಿಸಿದ ಅಧೋಲೋಕದ ಆಳದ ಕತ್ತಲೆಯಲ್ಲೆಲ್ಲೋ ಗುಹೆಯಲ್ಲೆಲ್ಲೋ ಈ ಪರವಶ ಪ್ರಾಣಿಗಳ ಕಣ್ಣಿನ ಕಠೋರ ತತ್ಪರತೆಯೂ ಒಂದಂಶವಾದರೆ ಅಲ್ಲಿ ಬ್ರಾಹ್ಮಣನಾದ ತಾನು ಬಾಡಿ ಬಳಲಿಹೋಗಿ ಬಿಡಬಹುದೆಂದು ಪರಮಭೀತರಾಗಿ ಕೂತುಬಿಟ್ಟರು. ಎರಡು ಹುಂಜಗಳ ಒಡೆಯರು ತಮ್ಮ ಹುಂಜಗಳನ್ನು ಹುರಿದುಂಬಿಸುತ್ತ ಮಾಡುತ್ತಿದ್ದ ಶಬ್ದ ಮನುಷ್ಯನ ಗಂಟಲಿನಿಂದ ಬಂದದ್ದಲ್ಲ ಎನ್ನಿಸಿತು. ಈ ಎಲ್ಲ ಕ್ರೂರ ತೀಕ್ಷ್ಣ ಭಾವಗಳ ಲೋಕದಲ್ಲಿ ಬದುಕುವ ಸಾಮರ್ಥ್ಯ ತನಗೆ ಖಂಡಿತಾ ಇಲ್ಲವೆಂದು ಖಚಿತವಾಯಿತು. ಕಾಮದ ಒಂದು ಪಾ ಮಾರ್ದವವಾದರೆ, ಇನ್ನೊಂದರಲ್ಲಿ ಈ ರಾಕ್ಷಸ ಛಲವಿರಬೇಕು. ನಾರಣಪ್ಪ ತನ್ನನ್ನು ಧಿಕ್ಕರಿಸಿ ನಡೆದ ಆ ದಿನ ತನ್ನ ವ್ಯಕ್ತಿತ್ವವೆಲ್ಲ ಕಂತಿದಂತಾಗಿ ಅನುಭವಿಸಿದ್ದ ಪುಕ್ಕಲು ಮರುಕಳಿಸಿತು. ಎರಡು ಹುಂಜಗಳನ್ನೂ ಬಡಿದಾಟದಿಂದ ಬಲಾತ್ಕಾರವಾಗಿ ಬಿಡಿಸಿ ಗಾಯವಾಗಿ ಬರುತ್ತಿದ್ದ ಜಾಗಗಳನ್ನು ಹೊಲಿದು ಮತ್ತೆ ಕಾಳಗಕ್ಕೆ ಬಿಟ್ಟರು. ಈ ಮಧ್ಯೆ ಗೆಲುವಿನಿಂದ ನೋಡುತ್ತಿದ್ದ ಪುಟ್ಟ ಒಬ್ಬ ಅಪರಿಚಿತನ ಜೊತೆ ಪಂಥ ಕಟ್ಟಿದ್ದ. ’ಈ ಹುಂಜ ನನ್ನದು’ ಎಂದು ಪುಟ್ಟ. ’ಇದು ಗೆದ್ದರೆ ಎರಡಾಣೆ’ ಎಂದ ಅಪರಿಚಿತ. ತನ್ನದು ಗೆದ್ದರೆ ನಾಲ್ಕಾಣೆ ಎಂದ ಪುಟ್ಟ. ಎಂಟಾಣೆ ಎಂದ ಅವ. ಹತ್ತಾಣೆ ಎಂದ ಪುಟ್ಟ. ಹನ್ನೆರಡಾಣೆ ಅಂದ ಅವ. ’ನೋಡುವ’ ಎಂದ ಪುಟ್ಟ. ಪ್ರಾಣೇಶಾಚಾರ್ಯರು ಆತಂಕದಿಂದ ಕಾದರು. ಈ ಹಡೆ ಹುಡುಗ ಕೆಯಲ್ಲಿರುವ ದುಡ್ಡನ್ನೆಲ್ಲ ಕಳೆದುಕೊಂಡರೆ ಏನು ಗತಿ? ಆದರೆ ಪರಮಾಶ್ಚರ್ಯ. ಪುಟ್ಟನೇ ಗೆದ್ದ. ಆದರೆ ಪುಟ್ಟ ಅಲ್ಲಿಂದ ಹೊರಡಲು ಎದ್ದಕೂಡಲೇ ಸೋತಿದ್ದವನು ’ಇನ್ನೊಂದು ಪಂತ’ ಎಂದ. ’ಬೇಡ’ ಎಂದ ಪುಟ್ಟ. ಅವನು ಕುಡಿದುಬಿಟ್ಟಿದ್ದರಿಂದ ಪುಟ್ಟನಿಗೆ ಹೊಡೆಯಲು ಬಂದ. ಪ್ರಾಣೇಶಾಚಾರ್ಯರು ತಡೆದರು. ಬ್ರಾಹ್ಮಣನನ್ನು ಕಂಡು ಅವ ಕೋಪವನ್ನು ನುಂಗಿಕೊಂಡ. ಎಲ್ಲರೂ ’ಏನು’, ’ಏನು’ ಎಂದು ಏರಿಬರುವುದರೊಳಗೆ ಪ್ರಾಣೇಶಾಚಾರ್ಯರು ಪುಟ್ಟನನ್ನೆಳೆದುಕೊಂಡು ನಡೆದುಬಿಟ್ಟರು. +ಹನ್ನೆರಡಾಣೆ ಗಳಿಸಿ ಹಿರಿಹಿರಿ ಹಿಗ್ಗಿದ ಪುಟ್ಟ. ಇದರಿಂದೇನೂ ಅಪ್ರತಿಭನಾದಂತೆ ಕಾಣಲಿಲ್ಲ. ಪ್ರಾಣೇಶಾಚಾರ್ಯರಿಗೆ ಮಾತ್ರ ಥಟ್ಟನೆ ಪುಟ್ಟನ ಬಗ್ಗೆ ವಾತ್ಸಲ್ಯಭಾವ ಮೂಡಿತು. ನನಗೊಬ್ಬ ಮಗನಿದ್ದಿದ್ದರೆ ಪ್ರೀತಿಯಿಂದ ಸಲಹಬಹುದಿತ್ತು ಎನ್ನಿಸಿತು. +“ಹೌದು ಪುಟ್ಟ, ನಾವಿನ್ನು ದಾರಿ ಹಿಡಿಯುವ” ಎಂದರು ಪ್ರಾಣೇಶಾಚಾರ್ಯರು-ತಮ್ಮ ಸ್ನೇಹವನ್ನು ಅಲ್ಲಿಗೇ ಮುಕ್ತಾಯಗೊಳಿಸಲು ಯತ್ನಿಸುತ್ತ. +“ಯಾವ ದಿಕ್ಕಿಗೆ ತಮ್ಮ ಪ್ರಯಾಣ?” ಎಂದು ಪುಟ್ಟ ಮುಖ ಸಣ್ಣಗೆ ಮಾಡಿಕೊಂಡ. ನನ್ನಿಂದ ಏನನ್ನು ಅಪೇಕ್ಷಿಸಿ ಇವ ಹೀಗೆ ಗಂಟುಬಿದ್ದಿದ್ದಾನೆ ಎಂದು ಆಚಾರ್ಯರಿಗೆ ಅನುಮಾನವಾಯಿತು. +“ಹೀಗೆ. ನಿಶ್ಚಿತವಿಲ್ಲ” ಎಂದರು. +“ಅಷ್ಟು ದೂರ ನಿಮ್ಮನ್ನು ಕಳಿಸಿಬರುವೆ ಹಾಗಾದರೆ. ದೇವಸ್ಥಾನದಲ್ಲಿ ಊಟ ಮಾಡಿ ಹೋದರಾಯಿತಲ್ಲ” ಎಂದ ಒತ್ತಾಯಪೂರ್ವಕವಾಗಿ ಪುಟ್ಟ. ಫಜೀತಿಗಿಟ್ಟುಕೊಂಡಿತಲ್ಲ ಎಂದು ಪ್ರಾಣೇಶಾಚಾರ್ಯರು : +“ನಾನೊಬ್ಬ ಸೋನೆಗಾರನನ್ನು ನೋಡಬೇಕು” ಎಂದರು. +“ಯಾಕೆ?” ಎಂದ ಪುಟ್ಟ ಅಷ್ಟಿಷ್ಟಕ್ಕೆ ಜಗ್ಗದೆ. +“ನನ್ನದೊಂದು ಬಂಗಾರದ ಚೂರು ಮಾರುವುದಿದೆ.” +“ಯಾಕೆ? ಸದ್ಯಕ್ಕೆ ಖರ್ಚಿಗೆ ಕಾಸಿಲ್ಲದಿದ್ದರೆ ಈ ಹನ್ನೆರಡಾಣೆ ತಗೊಳ್ಳಿರಿ ಕೆಗಡವಾಗಿ. ಇನ್ನೊಮ್ಮೆ ಕೊಡುವಿರಂತೆ”. +ಇಂತಹ ಮನುಷ್ಯನಿಂದ ಪಾರಾಗುವುದಾದರೂ ಹೇಗೆಂದು ಪ್ರಾಣೇಶಾಚಾರ್ಯರು ದಿಕ್ಕೆಟ್ಟರು. ಕಾಲಿಗೆ ತೊಡರಿಕೊಳ್ಳುವ ಬಳ್ಳಿಯಂತೆ ಇವನ ಕರುಳು. +“ಇಲ್ಲ ಪುಟ್ಟ. ಅಷ್ಟಿಷ್ಟು ಹಣವಲ್ಲ ಬೇಕಾಗಿರೋದು. ಕುಂದಾಪುರಕ್ಕೆ ಬಸ್ಸು ಹಿಡಿಯಬೇಕು. ಹಾಗೆ ಹೀಗೇಂತ ಇನ್ನೊಂದಷ್ಟು ಖರ್ಚಿನ ಬಾಬತ್ತಿದೆ” ಪ್ರಾಣೇಶಾಚಾರ್ಯರು ಅವನ ಪಟ್ಟಿನಿಂದ ತಪ್ಪಿಸಿಕೊಳ್ಳಲಾರದೆ ಎಂದರು. +“ಓ ಹಾಗೋ. ಬನ್ನಿ ಹಾಗಾದರೆ, ನನಗೊಬ್ಬ ಸೋನೆಗಾರನಿಲ್ಲಿ ಪರಿಚಯ. ಏನು ಮಾರುವುದಿದೆ?” +“ಯಜ್ಞೋಪವೀತಕ್ಕೆ ಹಾಕಿದ ಪವಿತ್ರದ ಉಂಗುರ”. ವಿಧಿಯಿಲ್ಲದೆ ಪ್ರಾಣೇಶಾಚಾರ್ಯರು ಹೇಳಿಕೊಂಡರು. +“ಎಲ್ಲಿ ತೋರಿಸಿ?” ಎಂದು ಪುಟ್ಟ ಕೆಯೊಡ್ಡಿದ. ಜನದ ಗುಂಪಿನಲ್ಲಿ ನಾಚುತ್ತ ಪ್ರಾಣೇಶಾಚಾರ್ಯರು ಯಜ್ಞೋಪವೀತದ ಉಂಗುರವನ್ನು ಬಿಚ್ಚಿಕೊಟ್ಟರು. ಪುಟ್ಟ ಅದನ್ನು ಕೆಯಲ್ಲಿ ಹಿಡಿದು ಪರೀಕ್ಷಿಸಿ “ಸುಮಾರು ಹದಿನೆದು ರೂಪಾಯಿಗಿಂತ ಕಮ್ಮಿ ಹೇಳಿದರೆ ಒಪ್ಪಿಕೊಳ್ಳಬೇಡಿ” ಎಂದ. ಇಬ್ಬರೂ ಕೇರಿಯೊಂದನ್ನು ಹೊಕ್ಕು ಸೋನೆಗಾರನ ಮನೆಗೆ ಹೋದರು. ಮರದ ಪೆಟ್ಟಿಗೆಯೊಂದರ ಎದುರು ಅರದಿಂದ ಉಂಗುರ ಒಂದನ್ನು ಉಜ್ಜುತ್ತ ಕೂತ ಸೋನೆಗಾರ ಬೆಳ್ಳಿಕಟ್ಟಿನ ಕನ್ನಡಕವನ್ನು ನೇರ ಮಾಡಿಕೊಂಡು, ’ಏನು?’ ಅಂದ ಪುಟ್ಟನನ್ನು ಕಂಡು. “ಏನು, ಪುಟ್ಟಯ್ಯನವರ ಕಾಲು ನಮ್ಮಲ್ಲಿಗೆ ಬೆಳೆಸಿತಲ್ಲ” ಎಂದು ಉಪಚರಿಸಿದ. ಉಂಗುರವನ್ನು ಕೊಟ್ಟಿದ್ದಾಯಿತು. ಸೋನೆಗಾರ ಅದನ್ನು ಗುಲಗಂಜಿ ತಕ್ಕಡಿಯಲ್ಲಿ ತೂಗಿ, ಒರೆ ಹಚ್ಚಿ ನೋಡಿ, ’ಹತ್ತು ರೂಪಾಯಿ’ಯೆಂದ. ಪುಟ್ಟ “ಹದಿನೆದಕ್ಕೆ ಕಡಿಮೆಯಾದರೆ ಮಾತೇ ಬೇಡ” ಎಂದ. ವ್ಯವಹಾರದ ಮಾತಿನಿಂದ ಆಚಾರ್ಯರಿಗೆ ಕಸಿವಿಸಿಯಾಯಿತು. “ಬಂಗಾರದ ಬೆಲೆ ಇಳಿದಿದೆ” ಎಂದ ಸೋನೆಗಾರ. “ಅದೆಲ್ಲ ನನಗೆ ಲೆಕ್ಕವಿಲ್ಲ. ಹದಿನೆದು ಕೊಡುತ್ತೀರೋ ಇಲ್ಲವೋ” ಎಂದು ಆಚಾರ್ಯರ ಮುಖ ನೋಡಿ ತನ್ನ ವ್ಯವಹಾರಜ್ಞತೆಯನ್ನು ಮೆಚ್ಚಿರೆಂದು ಹುಬ್ಬು ಹಾರಿಸಿದ. ಆಚಾರ್ಯರು ಅದಕ್ಕೆ “ಹತ್ತಾದರೆ ಹತ್ತು. ನನ್ನ ಖರ್ಚಿಗಷ್ಟು ಈಗ ಸಾಕು” ಎಂದು ಚರ್ಚೆ ಮಾಡಲು ಇಷ್ಟವಾಗದೆ ಅಂದುಬಿಟ್ಟರು. ಪುಟ್ಟನಿಗೆ ಪೆಚ್ಚಾಯಿತು. ಸೋನೆಗಾರನ ಮುಖ ಅಗಲವಾಯಿತು. ಹತ್ತು ರೂಪಾಯಿಯನ್ನು ಎಣಿಸಿಕೊಟ್ಟು ಕೆಮುಗಿದ. ಪ್ರಾಣೇಶಾಚಾರ್ಯರು ’ಉಪಕಾರವಾಯಿತು’ ಎಂದು ಹೊರ ಬಂದರು. +ಹೊರಬಂದದ್ದೇ ತಡ ಪುಟ್ಟ ಪರಚಿಕೊಳ್ಳಲು ಪ್ರಾರಂಭಿಸಿದ-ಒಳ್ಳೆ ಕೆಹಿಡಿದ ಹೆಂಡತಿಯ ಹಾಗೆ : “ಏನೋ ನಿಮಗೆ ಉಪಕಾರ ಮಾಡೋಣ ಅಂತ ಹೋದರೆ ನನ್ನ ಮಾನಾನೇ ಕಳೆದಿರಲ್ಲರಿ. ನನ್ನ ಮಾತಿಗೆ ಇನ್ನು ಅವನ ಹತ್ತಿರ ಬೆಲೆಯೇ ಇಲ್ಲ-ಹೋಗಲಿ-ಆದರೆ ಐದು ರೂಪಾಯಿಗೆ ನಿಮಗೇ ನಾಮವಲ್ಲ! ಕಲಿಯುಗದಲ್ಲಿ ನಿಮ್ಮ ಹಾಗೆ ಬೆಪ್ಪರಾಗಿರಕೂಡದು, ತಿಳಿಯಿತ? ಅಕ್ಕಸಾಲಿಗಳು ಸ್ವತಃ ಅಕ್ಕನ ಬಂಗಾರವನ್ನೇ ಕದೀತಾರಂತೆ, ಕೇಳಿದೀರ?” +“ಹಣದ ಆತುರವಿತ್ತು. ದುಡುಕಿಬಿಟ್ಟೆ ಕ್ಷಮಿಸು.” +ಪ್ರಾಣೇಶಾಚಾರ್ಯರು ವಿನಯದಿಂದ ಪುಟ್ಟನ ಮನಸ್ಸನ್ನು ನೋಯಿಸಲು ಇಚ್ಛಿಸದೆ ಎಂದರು. ಪುಟ್ಟ ಮೆತ್ತಗಾಗಿ : +“ನಿಮ್ಮನ್ನು ನೋಡಿದ ಕೂಡಲೆ ತಿಳಿಯಿತು. ನೀವು ಬಹಳ ಸಾಧು ಅಂತ. ನಿಮ್ಮೊಬ್ಬರನ್ನೆ ಎಲ್ಲಿಗೂ ಕಳುಹಿಸಬಾರದು. ನಿಮ್ಮನ್ನು ಬಸ್ಸುಹತ್ತಿಸಿ ನಾನು ಹಿಂದಕ್ಕೆ ಹೋಗುವೆ. ಈಗ ನಾನು ಹೇಳಿದ ಹಾಗೆ ಮಾಡಿ. ನಮ್ಮ ಪೆಕಿಯ ಜನ ಒಂದಿದೆ. ಅವರನ್ನು ನಾನು ನೋಡಿ ಬರಬೇಕು. ಜೊತೆಗೆ ಬನ್ನಿ. ಮತ್ತೆ ದೇವಸ್ಥಾನಕ್ಕೆ ಹೋಗಿ ಊಟ ಮಾಡಿ. ಚಿಂತೆಯಿಲ್ಲ. ಸಾಯಂಕಾಲದವರೆಗೂ ಅಲ್ಲಿ ಪಂಕ್ತಿಯ ಮೇಲೆ ಪಂಕ್ತಿ ಊಟ. ಮತ್ತೆ ರಾತ್ರೆ ಇಲ್ಲೆ ಎಲ್ಲಾದರೂ ಮಲಗಿದ್ದು ಬೆಳಿಗ್ಗೆ ಎದ್ದು ಐದು ಮೆಲಿ ನಡೆದರೆ ತೀರ್ಥಹಳ್ಳಿ. ಅಲ್ಲಿಂದ ಆಗುಂಬೆಗೆ ಬಸ್ಸಿದೆ. ಟ್ಯಾಕ್ಸಿಯಲ್ಲಿ ಘಟ್ಟ ಇಳಿದರೆ ನೇರ ಕುಂದಾಪುರಕ್ಕೆ ಬಸ್ಸು” ಎಂದ. +ಕುಂದಾಪುರದಿಂದ ದಾರಿ ಖರ್ಚಿಗೆಂದು ಉಂಗುರ ಮಾರಿ ಬಂದ ಹಣವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆಚಾರ್ಯರು ’ಸರಿ’ ಎಂದರು. ’ಹಣ ಜೋಕೆ’ ಎಂದು ಪುಟ್ಟ ಎಚ್ಚರಿಸಿದ. +ಊಟಕ್ಕೆ ಹೋಗಿದ್ದಾಗ ಮೆತ್ತಗೆ ಇವನಿಂದ ಜಾರಿಬಿಟ್ಟರಾಯಿತು ಎಂದುಕೊಂಡರು. ಯಾವ ಅಪೇಕ್ಷೆಯೂ ಇಲ್ಲದೆ ತನ್ನ ಜೀವನದಲ್ಲಿ ಒಳಗಾಗಲೆತ್ನಿಸುವ ಪುಟ್ಟನನ್ನು ಕಂಡು ಅವರಿಗೆ ಇದು ಖಂಡಿತ ಪ್ರಾರಬ್ಧಕರ್ಮದಿಂದ ಉಂಟಾದ ಸನ್ನಿವೇಶ ಎನ್ನಿಸಿತು. ಯಾವ ಜನ್ಮದ ಋಣವೋ ಹೀಗೆ ತೀರುತ್ತಿರಬಹುದು. ಒಟ್ಟು ಮನುಷ್ಯನ ಸಹವಾಸದಿಂದ ಬಿಡುಗಡೆಯಿಲ್ಲ. ಕಾಲಿಗೆ ಬಳಸಿಕೊಳ್ಳುವ ಬಳ್ಳಿ. ನನ್ನ ಬಾಳು ನನ್ನದೆಂದು ಯಾವ ಮುಖದಲ್ಲಿ ಹೇಳಲಿಕ್ಕೆ ಸಾಧ್ಯ. +“ಹೀಗೆ ಬನ್ನಿ” ಎಂದು ಪುಟ್ಟ ಜನ ಕಿಕ್ಕಿರಿದ ದೇವಸ್ಥಾನದ ಮಾರ್ಗವಾಗಿ ಒಂದು ಓಣಿಗೆ ಕರೆದುಕೊಂಡು ಹೋದ. ನಡೆಯುತ್ತ ನಡೆಯುತ್ತ ಅವರು ಒಂದು ನಿರ್ಜನವಾದ ಪ್ರದೇಶಕ್ಕೆ ಬಂದುಬಿಟ್ಟರು. ಅಲ್ಲೊಂದು ಹಳ್ಳ. ಹಳ್ಳ ದಾಟಲು ಬಿದಿರಿನ ಬೊಂಬಿನ ಸಾರ. ಬೇಲಿ ದಾಟಿ ಗದ್ದೆಗೆ ಬಂದರು. ಗದ್ದೆಯಂಚಲ್ಲಿ ನಡೆಯುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಕೋಳಿ ಅಂಕದ ನೆನಪಾಯಿತು. ಹೇಗೆ ಒಂದು ಹುಂಜ ಇನ್ನೊಂದನ್ನೇರಿ ರೆಕ್ಕೆಗಳ ಕೋಲಾಹಲದಲ್ಲಿ ನುರಿಯಿತು-ಹರಿದು, ಪರಚಿ, ಒಳಕ್ಕೆ ಒಳಕ್ಕೆ ಬಿಸಿಲಿನಲ್ಲಿ ಚೂಪಾಗಿ ಹೊಳೆದ ಚೂರಿ. ಮತ್ತ ಆ ಕಣ್ಣುಗಳು. ಹೆಂಡದ ವಾಸನೆ ಎಳೆದು ಹೊಯ್ದು ಬಿಡಿಸಿದರೂ ಅಂಗಾತ ಮಲಗಿಸಿಕೊಂಡು ಗಾಯವನ್ನು ಹೊಲಿಯುತ್ತಿದ್ದಾಗಲೂ ಕೊP ಕೊP ಎಂದು ತುಯ್ಯುತ್ತಿದ್ದುವು. ಛಲದ ದುರಾಶೆಯ ರಾಕ್ಷಸಲೋಕ. ಅಲ್ಲಿ ನಾನು ಅತಂತ್ರ ಪಿಶಾಚಿಯಂತಿದ್ದೆ. ಗಾಬರಿಪಟ್ಟೆ : ನನ್ನ ನಿಶ್ಚಯದ ಕ್ರಿಯೆಯಿಂದ ಆ ಲೋಕಕ್ಕೆ ನಾನು ಮಾರ್ಪಟ್ಟರೆ? ಮತ್ತೆ ಆ ದೊಂಬರ ಹುಡುಗಿ. ಸ್ಫುಟವಾಗಿ ಎದ್ದುಕಾಣಿವಂತೆ ಬಿಗಿಯಾದ ಬಟ್ಟೆತೊಟ್ಟು, ಬಿದಿರುಗಳದ ತುದಿಯಲ್ಲಿ ಆಕಾಶದಲ್ಲಿ ತುಯ್ದ ಕಸರತ್ತು. ಸರ್ರನಿಳಿದುಬಿಟ್ಟಳು. ಕುಣಿದಳು. ತಳ್ಳಿದರೆ ಕುಂಂii ಗೊಯಿಂP ಎನ್ನುವ ಗೋಲಿ. ಬಣ್ಣದ ನೀರು, ಗರಕ್ಕೆಂಬ ತೇಗು, ಅಪೇಕ್ಷೆ, ಅನುಭವ, ತೃಪ್ತಿ. ತತ್ಪರವಾದ ಕಣ್ಣುಗಳು. ಕಣ್ಣುಗಳು, ಬಣ್ಣಬಣ್ಣದ ಟೇಪು ಬೆಲೂನುಗಳ ಮಧ್ಯೆ, ತೇರಿನ ಶಿಖರದ ಸುತ್ತ, ನನ್ನ ಬೆನ್ನ ಹಿಂದೆ, ಎರಡು ಪಕ್ಕಗಳಲ್ಲಿ. ರೆಕ್ಕೆ-ಚೂರಿ-ಕೊಕ್ಕು-ಉಗುರುಗಳ ಸುತ್ತ ಕಣ್ಣುಗಳು. ತದ್ರೂಪ, ತತ್ಪರ. ಅಪೇಕ್ಷೆ ತೃಪ್ತಿಗಳ ಅದ್ವೆತ. ತತ್ತ್ವಮಸಿ. ತತ್ತ್ವಮಸಿ. ನನಗೆ ದಿಗಿಲು : ಪ್ರೇತತ್ವ ಕಳೆದು ರಾಕ್ಷಸತ್ವ ಪ್ರಾಪ್ತವಾಗುವ ದಿಗಿಲು. +“ನಾವು ಈಗ ಎಲ್ಲಿಗೆ ಹೋಗುತ್ತಿದ್ದೇವೆ. ಗೊತ್ತೋ?” ಪುಟ್ಟ ಬೀಡಿ ಹತ್ತಿಸಿ ತುಂಟನಗು ನಗುತ್ತ ಕೇಳಿದ. +ಪ್ರಾಣೇಶಾಚಾರ್ಯರು ಗೊತ್ತಿಲ್ಲವೆಂದು ತಲೆಯಾಡಿಸಿದರು. +“ನಿಮ್ಮ ಮರ್ಜೀನ್ನ ಬೇಕಾದರೆ ಒಪ್ಪಿದೆ, ಮಾರಾಯರೆ. ಎಲ್ಲಿಗೆ ಯಾಕೆ ಕೇಳದೆ ನಡಿ ಎಂದರೆ ನಡೆದುಬಿಡುತ್ತೀರಿ. ನಾನೂ ಸ್ವಲ್ಪ ಹಾಗೆಯೇ, ಮಾರಾಯರೆ. ಒಂದು ಸಾರಿ ನನ್ನ ಮಿತ್ರನೊಬ್ಬನ ಸಂಗಡ ಹೀಗೇ ನಾನು ಶಿವಮೊಗ್ಗಕ್ಕೂ ಹೋಗಿಬಿಟ್ಟೆ. ಪುಟ್ಟ ಹೋದರೆ ಹೋದಲ್ಲೆ ಅಂತ ನಮ್ಮ ಮಾವಂದಿರಿಗೆ ಅಷ್ಟು ಅಸಮಾಧಾನ. ’ಪುಟ್ಟನೊ? ನಮ್ಮ ಪುಟ್ಟ ಬಿಟ್ಟರೆ ಸಿಗ; ಸಿಕ್ಕರೆ ಬಿಡ’ ಎನ್ನುತ್ತಾರೆ ಅವರು”. +“ಯಾರೋ ನಿಮ್ಮ ಪೆಕಿಯವರ ಮನೆಗೆ ಎಂದಿರಿ ಅಲ್ಲವೆ?” +“ಆಚಾರ್ರೆ, ನನ್ನನ್ನು ಏಕವಚನದಲ್ಲೆ ಕರೀರಿ. ನೀವು ನನ್ನ ಬಹುವಚನದಲ್ಲಿ ಕರೆಯೋದು ನನ್ನ ಆಯಸ್ಸಿಗೆ ಒಳ್ಳೆದಲ್ಲ”. +“ಆಗಲಿ.” +“ಇಲ್ಲೇ ಒಂದು ತೋಟ. ಆ ಅದೇ ನೋಡಿ. ಅದನ್ನು ಗುತ್ತಿಗೆಗೆ ಹಿಡಿದು ನಮ್ಮ ಪೆಕಿಯವಳೊಬ್ಬಳು ಇದ್ದಾಳೆ. ಒಬ್ಬಂಟಿಯಾಗಿ. ಬಲು ಧೆರ್ಯದ ಹೆಂಗಸು. ಕೆತೊಳೆದು ಮುಟ್ಟಬೇಕು, ಅಂತಹ ರೂಪು. ನನಗೆ ದೂರದ ಸಂಬಂಧ. ನಿಮ್ಮಂತಹ ವೆದಿಕ ಬ್ರಾಹ್ಮಣರೆಂದರೆ ಬಲು ಮರ್ಯಾದೆ. ಅವಳಿಗಷ್ಟು ಮುಖ ತೋರಿಸಿಬಿಟ್ಟು ನಡೆದುಬಿಡುವ. ಇಲ್ಲದಿದ್ದರೆ ’ಏನೊ ಪುಟ್ಟ ಬಂದಿದ್ದಿಯಂತೆ, ಮುಖ ತೋರಿಸಿ ಇದ್ದೀಯೋ ಸತ್ತೀಯೋ ಎಂದು ವಿಚಾರಿಸಲಿಕ್ಕೂ ನಿನಗೆ ಅವಸರವಾಗಿಬಿಟ್ಟಿತ ಎನ್ನುತ್ತಾಳೆ. ನೋಡಿ, ಯಾರ ಮನಸ್ಸನ್ನೂ ನೋಯಿಸಲಿಕ್ಕೆ ಇಷ್ಟವಿಲ್ಲ. ಮನುಷ್ಯನ ಜೀವ ಅಂದರೆ ಈಗಲೋ, ಇನ್ನೊಂದು ಘಳಿಗೆಯೋ. ಯಾಕೆ ಯಾರನ್ನ ನೋಯಿಸಬೇಕು ಹೇಳಿ. ಅದಕ್ಕೆ ನಾನು ಎಲ್ಲದಕ್ಕೆ ಹಾ ಎಂದುಬಿಡುವೆ. ಆದರೂ ನೋಡಿ ಮಾರಾಯರೇ, ನನ್ನ ಹೆಂಡತಿಯೊಬ್ಬಳು ಮಾತ್ರ ತಿಂಗಳಿಗೊಮ್ಮೆ ತೌರಿಗೆ ಹೋಗಬೇಕೆಂದು ದುಂಬಾಲುಬೀತ್ತಾಳೆ. ಮೊದಮೊದಲು ಹಾ ಎಂದೆ. ಆಮೇಲೆ ಉಹೂ ಎಂದೆ. ಹೊಡೆದು ನೋಡಿದೆ. ಮತ್ತೆ ಅಯ್ಯೋ ಎನಿಸುತ್ತದೆ, ಹಾಡು ಕೇಳಿರಬೇಕು ನೀವು : ’ಮಡದಿಯ ಹೊಡೆದಾನು! ಮನದೊಳಗೆ ಮರುಗ್ಯಾನು! ಒಳಗೋಗಿ ಕಾಲು ಹಿಡಿದಾನು! ಒಳಗೋಗಿ ಕಾಲ ಹಿಡಿದು ತಾ ಕೇಳ್ಯಾನು! ನಾನ್ಹೆಚ್ಚೊ ನಿನಗೆ ತವರ್ಹೆಚ್ಚೊ’-ಹಾಗೆ ನಾನು.” +’ಇಕೊ ಬಂದುಬಿಟ್ಟೆವು’ ಎಂದು ತೋಟದ ಮೇಲಕ್ಕಿದ್ದ ಹೆಂಚು ಹೊದೆಸಿದ ಮನೆಗೆ ಬಂದರು. ’ಇದ್ದಾಳೊ ಇಲ್ಲವೋ. ಜಾತ್ರೆಗೆ ಹೋಗಿರಲಿಕ್ಕೂ ಸಾಕು’ ಎಂದು ಪುಟ್ಟ, ’ಪದ್ಮಾವತೀ’ ಎಂದು ಕರೆದ. ಜಗುಲಿಯ ಮೇಲೆ ಚಾಪೆಯ ಮೇಲೆ ಕೂತ ಪ್ರಾಣೇಶಾಚಾರ್ಯರಿಗೆ ’ಬಂದೆ’ ಎನ್ನುವ ಹೆಣ್ಣಿನ ಕೋಮಲಧ್ವನಿ ಕೇಳಿಸಿತು. ಆಪ್ಯಾಯಮಾನವಾದ ಧ್ವನಿ. ಭಯ. ಇವಳು ಯಾರು? ಪುಟ್ಟ ನನ್ನನ್ನು ಇಲ್ಲಿ ಯಾಕೆ ಕರೆದುಕೊಂಡು ಬಂದ. ’ಬಂದಿರಾ’ ಎಂದು ಉಪಚಾರ ಹೇಳಿತು ಅದೇ ಧ್ವನಿ. ಪ್ರಾಣೇಶಾಚಾರ್ಯರು ಬೆಚ್ಚಿ ತಿರುಗಿ ನೋಡಿದರು. ಹೊಸಿಲನ್ನು ದಾಟಿ ಕಂಬವನ್ನು ಎತ್ತಿದ ಕೆಯಿಂದ ಹಿಡಿದು ನಿಂತಿದ್ದಳು. ತನ್ನ ಕಣ್ಣು ತಿರುಗಿದ ಕ್ಷಣ ಎದೆಯ ಮೇಲೆ ಸೆರಗೆಳೆದುಕೊಂಡಳು. ’ಯಾರನ್ನು ಕರೆದುಕೊಂಡು ಬಂದಿದ್ದೇನೆ ನೋಡು. ಆಚಾರ್ಯರು’ ಎಂದ ಪುಟ್ಟ. ’ಬಂದಿರಾ’ ಎಂದಳು ಮತ್ತೊಮ್ಮೆ ನಾಚಿ. ’ಒಂದಿಷ್ಟು ಗಂಗಾಮೃತ ಕೊಡಲೆ?’ ಎಂದಳು. ’ಹಾಲುಹಣ್ಣಾದರೂ ತೆಗೆದುಕೊಳ್ಳಿ’ ಎಂದು ಆಗ್ರಹ ಮಾಡಿ ಒಳಕ್ಕೆ ಹೋದಳು. ಪ್ರಾಣೇಶಾಚಾರ್ಯರ ಮೆಬೆವತುಬಿಟ್ಟಿತು. ಅನುಮಾನವೇ ಇಲ್ಲ : ಮಾಲೇರರವಳು. ಒಂಟಿಯಾಗಿರುವವಳು. ನನ್ನನ್ನಿಲ್ಲಿ ಯಾಕೆ ಪುಟ್ಟ ಕರೆದುಕೊಂಡು ಬಂದ? ಪುಟ್ಟನ ಮಾತೇ ಇಲ್ಲ. ವಟಗುಟ್ಟುತ್ತಿದ್ದವ ಸುಮ್ಮನಾಗಿಬಿಟ್ಟಿದ್ದಾನೆ. ತನ್ನ ಬೆನ್ನಿನ ಹಿಂದೆ ಎರಡು ಕಣ್ಣುಗಳು ನೋಡುತ್ತಿವೆ ಎಂದು ದಿಗಿಲಾಯಿತು. ಆ ನೋಡುವ ಕಣ್ಣುಗಳಿಗೆ ತಾನು ಬಚ್ಚಿಟ್ಟ ಪದಾರ್ಥವಾಗಿಬಿಟ್ಟಿದ್ದೇನೆ ಎನ್ನಿಸಿತು. ತಿರುಗಿ ನೋಡಲು ಹೆದರಿಕೆ. ಆಸೆ. ಆ ಕಣ್ಣುಗಳು ಏನನ್ನು ಹೇಳುವುವೊ? ಕಣ್ಣು ಕಣ್ಣನ್ನು ಸಂಧಿಸಿದ ಕೂಡಲೆ ಅಮೂರ್ತವಾದದ್ದು ಏನು ರೂಪ ತಾಳಿಬಿಡುವುದೋ? ನೀಳವಾದ ಕಪ್ಪು ಕಣ್ಣುಗಳು. ಎದೆಯ ಇಳಿಬಿಟ್ಟ ಕೃಷ್ಣಸರ್ಪದ ಜಡೆ. ಗಳದ ಮೇಲೆ ತೂಗಿದ ಹುಡುಗಿ. ಚೂರಿ-ರೆಕ್ಕೆ-ಕೊಕ್ಕು-ಪುಕ್ಕ. ಕಾಡಿನಲ್ಲಿ ಕತ್ತಲಿನಲ್ಲಿ ಒಡ್ಡಿದ ಪುಷ್ಟ ಮೊಲೆ. ಬೆಳ್ಳಿಯ ಮಣ್ಣಿನ ಬಣ್ಣದ ನಗ್ನ ಮೊಲೆ. ಎಲ್ಲವನ್ನೂ ಬಿಚ್ಚಿಟ್ಟ ಪದಾರ್ಥದಂತೆ ನೋಡಿಬಿಡುವ ರೆಪ್ಪೆ ಮಿಟುಕದ ಕಣ್ಣು ಬೆನ್ನಿನ ಹಿಂದೆ. ಕೃಷ್ಣಸರ್ಪದ ಕಣ್ಣಿಗೆ ಪಕ್ಷಿ ಪರವಶ. ಭೀತಿ. ತಿರುಗಿದರು. ನಿಜ. ತಟ್ಟೆಯನ್ನು ಕೆಯಲ್ಲಿ ಹಿಡಿದು ಕದ್ದು ನೋಡುತ್ತಿದ್ದ ಕಣ್ಣುಗಳು. ಬಾಗಿಲಿನಿಂದ ಇಣುಕಿ ನೋಡುತ್ತಿದ್ದ ಕಣ್ಣುಗಳು ಸರ್ರೆಂದು ಕತ್ತಲಿಗೆ ಹೋದವು. ಬಳೆ ಸದ್ದಾಯಿತು. ಮತ್ತೆ ಬೆಳಕಿಗೆ ಬಂದಳು. ನೆಮ್ಮದಿ. ದೇಹದಲ್ಲಿ ಆಸೆಯನ್ನು ಕೊರೆಯುತ್ತ ತಿರುಗಿದ ಒಂದು ನಿರೀಕ್ಷೆ. ತಟ್ಟೆಯನ್ನಿಡಲು ಬಗ್ಗಿದಾಗ ಜಾರಿದ ಸೆರಗು, ಮುಂದಕ್ಕೊಡ್ಡಿದ ಮೊಲೆ. ಭಾರವಾಗಿ ನೋಡಿದ ಬೇಡಿದ ಕಣ್ಣು. ಎದೆಯಲ್ಲಿ ಬೆಂಕಿಯ ಸಂಚಾರ. ಅವರ ಕಣ್ಣುಗಳು ಕುದಿಯುತ್ತ ನೋಡಿದುವು. ಬೆನ್ನಿನ ಹಿಂದಿನ ಕಣ್ಣುಗಳಿಗೆ ಬಿಚ್ಚಿಟ್ಟ ಪದಾರ್ಥವಾಗಿಬಿಟ್ಟ ಭಾವನೆ ಮಾಯವಾಯಿತು. ಈಗ ತಾವೇ ಆ ಕಣ್ಣುಗಳು. ತತ್ತ್ವಮಸಿ. ’ಯಾವ ಕಡೆಯವರೊ’ ಎಂದಳು, ತೇಜಸ್ವಿಗಳಂತೆ ಕಾಣುತ್ತಿದ್ದ ಆಚಾರ್ಯರನ್ನು ನೋಡಿ ಪದ್ಮಾವತಿ. ’ಕುಂದಾಪುರದವರು’ ಎಂದ ಪುಟ್ಟ. ’ಶೀನಪ್ಪಯ್ಯನವರ ಪರಿಚಯವಿದೆ’ ಎಂದು ಸುಳ್ಳು ಹೇಳಿದ. ’ದೇವಸ್ಥಾನದ ವೆವಾಟು ನೋಡುತ್ತಾರೆ’ ಎಂದು ಇನ್ನೊಂದು ಸುಳ್ಳು ಹೇಳಿದ. ’ವಸೂಲಿ ಕೆಲಸಕ್ಕೆ ಈ ಪ್ರಾಂತಕ್ಕೆ ಬಂದವರು’ ಎಂದು ತನಗಿನ್ನೊಂದು ಹೊಸ ವ್ಯಕ್ತಿತ್ವವನ್ನೇ ಕೊಟ್ಟುಬಿಟ್ಟ. ಅಪರಿಚಿತರ ಕಣ್ಣುಗಳಲ್ಲಿ ಹೊಸ ರೂಪ, ಹೊಸ ವೇಷ. ನಾನು ನಿಜವಾಗಿ ಯಾರೆಂದು ಅನುಮಾನ ಬರುವಷ್ಟು ಒಂದು ದಿನದಲ್ಲೇ ಬೇರೆ ಬೇರೆ ವ್ಯಕ್ತಿಯಾಗಿಬಿಟ್ಟೆ. ಆಗಲಿ. ನಡದದ್ದು ನಡೆಯಲಿ. ಕಾಯುತ್ತ ಕೂತರು. ನುರಿದ ಪಕ್ಷಿ, ನುರಿಸಿಕೊಂಡ ಪಕ್ಷಿ. ಚೂರಿ. ಹಸಿಹಸಿ ಪ್ರಾಣವನ್ನು ಮುಟ್ಟಿಬಿಟ್ಟಂತೆ. ಕಿಟಾರನೆ ಕಿರುಚಿ ನಿಶ್ಚೇಷ್ಟಿತಳಾಗಿ ಬಿದ್ದ ಭಾಗೀರತಿ. ಮತ್ತೆ ಬೆಂಕಿಯಲ್ಲಿ ಧಗಧಗನೆ ಉರಿದ ತನ್ನ ತಪೋಭೂಮಿ. ಕಳೆದುಕೊಂಡೆ. ಭ್ರಷ್ಟನಾದೆ. ಈ ಕಣ್ಣುಗಳಿಗೆ ಬಿದ್ದು ಪ್ರೇತತ್ವದ ತ್ಯಾಗ, ಪ್ರಾಯಶಃ. +ಪದ್ಮಾವತಿ ತನ್ನ ಕಣ್ಣಿಗೆ ನೇರವಾಗಿ ಸಿಕ್ಕದಂತೆ ಹೋಗಿ ಬಾಗಿಲಿನ ಬುಡದಲ್ಲಿ ಕೂತಳು. ಹಾಗೆ ಕೂತು ತನ್ನನ್ನವಳು ನೋಡುತ್ತಿದ್ದಾಳೆಂದು ಪ್ರಾಣೇಶಾಚಾರ್ಯರಿಗೆ ಮತ್ತೆ ಕಸಿವಿಸಿಯಾಗತೊಡಗಿತು. ಕತ್ತನ್ನು ಧೆರ್ಯ ತಂದು ತಿರುಗಿಸಿದರು. ಎದೆ ಹೊಡೆದುಕೊಳ್ಳುತ್ತಿತ್ತು. ಪದ್ಮಾವತಿ ಎದ್ದು ಎಲೆಯಡಿಕೆ ತಟ್ಟೆಯನ್ನು ತಂದಿಟ್ಟಳು. ಪುಟ್ಟ ಎಲೆಗೆ ಸುಣ್ಣ ಹಚ್ಚಿ ಬೆರಳುಗಳ ಸಂದಿ ಸಿಕ್ಕಿಸಿ, ಅಡಿಕೆಯನ್ನು ಬಾಯಲ್ಲಿ ಎಸೆದು ಮಾತಿಗೆ ಪ್ರಾರಂಭಿಸಿದ. ಪದ್ಮಾವತಿ ಮತ್ತೆ ಬಾಗಿಲಿನ ಬುಡದಲ್ಲಿ ಕೂತಳು. ಪುಟ್ಟ ಹೇಳಿದ : +“ಆಚಾರ್ರು ದಾರಿಯಲ್ಲಿ ಸಿಕ್ಕರು. ಹಾಗೆ ಹರಟುತ್ತ ಬಂದೆವು. ಕುಂದಾಪುರದ ಮಾರ್ಗವಾಗಿ ಹೊರಟವರು ಇವರು. ನಾನು ಹೇಳಿದೆ-ಇವತ್ತು ರಾತ್ರೆ ಇಲ್ಲೆ ತಂಗಿದ್ದು ನಾಳೆ ತೀರ್ಥಹಳ್ಳಿಗೆ ಹೋಗಿ ಬಸ್ಸು ಹಿಡಿದರಾಯಿತು ಅಂತ, ಅಲ್ಲವೆ?” +ಪದ್ಮಾವತಿ ನಾಚಿಕೆಯಲ್ಲಿ ಒತ್ತಾಯಪಡಿಸುತ್ತ ಅಂದಳು : +“ಖಂಡಿತ. ಇಲ್ಲೆ ರಾತ್ರಿ ಮಲಗಿದ್ದು ಹೋದರಾಯಿತು”. +ಪ್ರಾಣೇಶಾಚಾರ್ಯರಿಗೆ ಮೂರ್ಛೆ ಬಂದಂತಾಯಿತು. ಕಿವಿ ಗವ್ವೆಂದು ಕೆ ಬೆವತಿತು. ಬೇಡ. ಬೇಡ. ಇವತ್ತು ಬೇಡ. ನಾಳೆ ನಿಶ್ಚಯಮಾಡಿ ಬಿಡಬೇಕಾದ ಗಳಿಗೆ ಈ ಕ್ಷಣದಲ್ಲೇ ಪ್ರಾಪ್ತವಾಗಿಬಿಡಬಹುದೆಂದು ನಾನು ಎಣಿಸಿರಲಿಲ್ಲ. ಇವತ್ತು ಬೇಡ. ನನಗೆ ಸೂತಕ. ಹೆಂಡತಿಯನ್ನು ಸುಟ್ಟು ಬಂದಿದ್ದೇನೆ. ನಾರಣಪ್ಪನ ಶವವನ್ನಿನ್ನೂ ತೆಗೆದಿಲ್ಲ. ಕೊಳೆಯುತ್ತಿದೆ. ಹದ್ದುಗಳು ಮನೆಯ ಮೇಲೆ ಬಂದು ಕೂತಿವೆ. ಹೇಳಿಬಿಡಬೇಕು. ಸತ್ಯ ನುಡಿದುಬಿಡಬೇಕು. ಇಲ್ಲಿಂದೆದ್ದು ಧಾವಿಸಿಬಿಡಬೇಕು. ಅಂತರ್ಧಾನವಾಗಿಬಿಡಬೇಕು. ಆದರೆ ದೇಹ ಅಲ್ಲೆ ಗಟ್ಟಿಯಾಗಿ, ಪದ್ಮಾವತಿ ನಿರೀಕ್ಷೆಯಲ್ಲಿ ನೋಡುತ್ತಿರುವ ಪದಾರ್ಥವಾಗಿ ಕೂತುಬಿಟ್ಟಿತು. ಪುಟ್ಟ ಹೇಳಿದ : +“ಸರಿ ಹಾಗಾದರೆ. ಇವರದ್ದಿನ್ನೂ ಊಟವಾಗಿಲ್ಲ. ದೇವಸ್ಥಾನದಲ್ಲಿ ಊಟ ಮಾಡಿಬರುತ್ತಾರೆ. ಇಲ್ಲಿಗೆ ಧರ್ಮಸ್ಥಳದ ಮೇಳ ಬಂದಿದೆಯಲ್ಲವೆ? ನೋಡಲು ಹೋಗುತ್ತೀಯ?” +“ಇಲ್ಲವಪ್ಪ. ಸಾಯಂಕಾಲ ಹೋಗಿ ದೇವರ ದರ್ಶನ ಮಾಡಿ ಬಂದುಬಿಡುವೆ. ನಿಮಗಾಗಿ ಕಾಯುವೆ”. +ತಾನು ಹಾ ಹೂ ಎನ್ನದೆ ಪುಟ್ಟ-ಪದ್ಮಾವತಿಯರ ನಡುವೆ ತನ್ನ ಬಾಳಿನ ನಿಶ್ಚಯವಾಗಿಬಿಟ್ಟಿತು. ’ಏಳಿರಿ’ ಎಂದ ಪುಟ್ಟ. ಆಚಾರ್ಯರು ಎದ್ದು ನಿಂತರು. ಪದ್ಮಾವತಿಯನ್ನು ನೋಡಿದರು. ಸ್ನಾನ ಮಾಡಿ ಎಣ್ಣೆ ಹಾಕದ ಕೂದಲು. ಮಾಂಸದಿಂದ ಪುಷ್ಟವಾದ ತೊಡೆ, ನಿತಂಬ, ಎದೆ, ನೀಳ, ಎತ್ತರ ರೂಪ. ಕಣ್ಣುಗಳಲ್ಲಿ ಹೊಳಪು. ನಿರೀಕ್ಷೆ. ಕಾದಿದೆ. ಪುಷ್ಪವತಿಯಾಗಿ ಐನೀರಿನ ಸ್ನಾನ ಮಾಡಿರಬೇಕು. ಉಸಿರಿಗೆ ಮೊಲೆಗಳು ಉಬ್ಬಿ ತಗ್ಗುತ್ತಿವೆ. ಒತ್ತಿಕೊಂಡರೆ ಕತ್ತಲಿನಲ್ಲಿ ಪುಟಿಯುತ್ತವೆ. ಹುಲ್ಲಿನ ಸುಗಂಧಿಯ ವಾಸನೆ. ತೇರು ತೇರು ಮಿಣುಕುಹುಳ. ಬೆಂಕಿ-ಕಟ್ಟಿಗೆಗೆ ಹತ್ತಿ, ಮತ್ತೆ ಕೆಕಾಲಿಗೆ ಹತ್ತಿ, ಹೊಟ್ಟೆಯಲ್ಲಿ ಪಚಪಚ ಬೆಂದು, ಚೀರಿ, ಸಿಡಿದು, ಬುರುಡೆಯನ್ನು ಚಳ್ಳನೆ ಸೀಳಿ ಎದೆಗೆ ನಾಲಗೆ ಚಾಚಿದ ಅಗ್ನಿ. ಇನ್ನೂ ಸುಡದ ನಾರಣಪ್ಪನ ಶವ. ಮಹಾಬಲ ಹೇಗೆ ಗುಡಿಗುಡಿ ಸೇದುತ್ತ ಚಾವಡಿಯ ಮೇಲೆ ಕೂತುಬಿಟ್ಟ. ಬಿದಿರು ಗಳದ ಮೇಲೆ ತೂಗಿತು, ತುಯ್ಯಿತು. ಯಾಜ್ಞವಲ್ಕ್ಯರು ಕರೆದು ಹೇಳಿದರು : ಪ್ರೀತಿ. ಯಾರ ಮೇಲೆ ಪ್ರೀತಿ, ಹೆಂಡತಿಯೆಂಬ ಪ್ರೀತಿ, ನನ್ನ ಮೇಲೇ ನನ್ನ ಪ್ರೀತಿ, ದೇವರೆಂಬ ಪ್ರೀತಿ, ನನ್ನ ಮೇಲೆ ನನ್ನ ಪ್ರೀತಿ. ಮೂಲ ಹುಡುಕುವೆ. ಗೆಲ್ಲುವೆ. ನೋಡಿದರು, ಮೆಚ್ಚಿದರು, ದೋಣಿಯಲ್ಲಿ ವ್ಯಾಸ ಕಮಂಡಲ ಹಿಡಿದು ಹುಟ್ಟಿದ. ನಡೆದುಬಿಟ್ಟ. “ಹೋಗಿ ಬನ್ನಿ ಹಾಗಾದರೆ. ನಾನು ಕಾದಿರುವೆ” ಎಂದಳು ಪದ್ಮಾವತಿ. ಮುಖ್ಯವಾಗಿ ಮಾರುತಿ ಕೆಕೊಟ್ಟುಬಿಟ್ಟ. ಮಹಾಬಲ ಮೋಸ ಮಾಡಿದ. ನಾರಣಪ್ಪ ರಚ್ಚು ತೀರಿಸಿಕೊಂಡ. ಬ್ರಾಹ್ಮಣರು ಬಂಗಾರಕ್ಕಾಗಿ ಆಸೆಪಟ್ಟರು. ಚಂದ್ರಿ ಕತ್ತಲಲ್ಲಿ ನಿಂತಳು-ಕೊಟ್ಟಳು-ನಡೆದುಬಿಟ್ಟಳು. ಭಾಗೀರತಿ ಚೀರಿ ಸತ್ತುಬಿಟ್ಟಳು. ಪುಟ್ಟ ಬೆನ್ನಿನ ಮೇಲೆ ಕೆಯಿಟ್ಟ. ಗದ್ದೆಯಂಚಲ್ಲಿ ನಿಲ್ಲಿಸಿದ. “ಏನೆನ್ನುತ್ತೀರಿ” ಎಂದ. “ನಾನು ಊಹಿಸಿದಂತೆಯೇ ಆಯಿತು” ಎಂದ. “ಅದು ಕಳಪೆ ಜನವೆಂದು ತಿಳಿಯಬೇಡಿ, ಮಾರಾಯರೆ. ಶೂದ್ರರಾರೂ ಸುತ್ತಮುತ್ತ ಸುಳಿದಿದ್ದಿಲ್ಲ. ಅಂತಿಂಥ ಸಾಮಾನ್ಯ ಬ್ರಾಹ್ಮಣರಿಗೂ ಒಪ್ಪುವ ಜೀವವಲ್ಲ. ದುಡ್ಡಿಗಲ್ಲ, ಕಾಸಿಗಲ್ಲ. ನೀವೇ ನೋಡಲಿಲ್ಲವೆ? ತೋಟವಿದೆ. ಋಷಿಗಳಿಗೂ ಮನಸ್ಸಾಗಿ ಬಿಡಬೇಕು-ಹಾಗಿದ್ದಾಳೆ. ಮತ್ತೆಲ್ಲಿ ನೀವು ನಾನು ಅಂದ ಸುಳ್ಳನ್ನು ಬಯಲು ಮಾಡಿಬಿಡುತ್ತೀರೋ ಎಂದು ಕಂಗಾಲಾಗಿದ್ದೆ. ಒಪ್ಪಿಗೆಯಾಯಿತು ತಾನೆ? ಈ ಪುಟ್ಟ ಸ್ನೇಹಕ್ಕೆ ಏನನ್ನಾದರೂ ಮಾಡುವವ. ಪರೋಪಕಾರಿ ಪುಟ್ಟ ಎಂಬೋದು ನನ್ನ ಬಿರುದು” ಎಂದು ನಗುತ್ತ ಬೆನ್ನು ತಟ್ಟಿದ. +ಗದ್ದೆ ದಾಟಿ, ಬೇಲಿ ದಾಟಿ, ಸಾರ ಹಾಯ್ದು, ಓಣಿಯಲ್ಲಿ ನಡೆದು ಮತ್ತೆ ಜಾತ್ರೆಯ ಗದ್ದಲಕ್ಕೆ. ತೇರಿನ ಸುತ್ತ ಜನ. ಸೋಡದಂಗಡಿಯ ಸುತ್ತ ಜನ. ಮಂಗನನ್ನು ಕುಣಿಸುವವನ ಸುತ್ತ ಜನ. ಮಕ್ಕಳ ಪೀಪಿ. ಬೆಲೂನು. ಈ ನಡುವೆ ಒಬ್ಬ ಬೇತಾಳ, ಪಿಶಾಚಿ. ಡಂಗುರ ಸಾರುತ್ತ ಒಬ್ಬ ಜನಸಂದಣಿಯ ನಡುವೆ ನಿಂತು ಕೂಗಿ ಕೂಗಿ ಹೇಳಿದ : ’ಶಿವಮೊಗ್ಗೆಯಲ್ಲಿ ಪ್ಲೇಗು ಮಾರಿಖಾಹಿಲೆ: : ಶಿವಮೊಗ್ಗೆಗೆ ಹೋಗೋರು ಇದ್ದರೆ ತೀರ್ಥಹಳ್ಳೀಲಿ ಇನಾಕ್ಯುಲೇಷ ಮಾಡಿಸಿಕೋಬೇಕು; ಮುನಿಸಿಪಾಲಿಟಿಯಿಂದ ಈ ಎಚ್ಚರಿಕೆ’. ಜನ ಕುತೂಹಲದಿಂದ ಕೇಳಿ ಮತ್ತೆ ಸೋಡ ಕುಡಿದರು. ಮಂಗನ ಕುಣಿತಕ್ಕೆ ಗಹಗಹಿಸಿ ನಕ್ಕರು. ಒಬ್ಬ ಉರ್ದು-ಕನ್ನಡದಲ್ಲಿ ಮಾತಾಡುವ ದ್ವಿಭಾಷಾಚತುರ ನೆರೆದಿದ್ದವರಿಗೆ ಮದ್ದನ್ನು ಮಾರುತ್ತಿದ್ದ : “ಬರೆ ಒಂದಾಣೆ, ಏP ಆಣಾ ಏP ಆಣಾ. ಹೊಟ್ಟೆ ನೋವಿಗೆ, ಕಿವಿನೋವಿಗೆ, ಬಹು ಮೂತ್ರಕ್ಕೆ, ಕಾಲುವಾತಕ್ಕೆ, ಮಕ್ಕಳ ಖಾಹಿಲೆಗೆ, ಮುಟ್ಟಿನ ದೋಷಕ್ಕೆ, ಕಜ್ಜಿಗೆ, ಸೀತ ಜ್ವರಕ್ಕೆ ಈ ಮಾತ್ರೆ. ಮಲೆಯಾಳಿ ಪಂಡಿತರು ಮಂತ್ರಿಸಿ ಮಾಡಿದ ಈ ಮಾತ್ರೆ ಕೇವಲ ಒಂದಾಣೆ. ಏP ಆಣಾ ಏP ಆಣಾ…” ಬೊಂಬಾಯಿ ಪೆಟ್ಟಿಗೆಯವ ಕುಣಿಯುತ್ತಿದ್ದ. “ತಿರುಪತಿ ತಿಮ್ಮಪ್ಪ ನೋಡು! ಬೊಂಬಾಯಿ ಸೂಳೆ ನೋಡು.” ಮೇಲೆ ಮರದ ರೆಂಬೆಯೊಂದಕ್ಕೆ ಮತ್ತು ಕೆಳಗೆ ನೆಲಕ್ಕೆ ಬಿಗಿದಿದ್ದ ದಪ್ಪನೆಯ ಮಿಣಿಯ ಇಳಿಜಾರಿನಲ್ಲೊಬ್ಬದೊಂಬ ಜರ್ರನೆ ಜಾರಿಬಿಟ್ಟು ನಿಂತು, ಸಲಾಮು ಮಾಡಿದ. ಬೆಲೂನನ್ನು ಬೇಡಿದ ಒಬ್ಬ ಹುಡುಗನನ್ನ ತಾಯಿ ಹೊಡೆದಳು. ಹುಡುಗ ಅತ್ತ. ಕಾಫಿ ಹೋಟಲಿನಿಂದ ಗ್ರಾಮಾಫೋ ಹಾಡು. ಬ್ಯಾರಿಯ ಅಂಗಡಿಯಲ್ಲಿ ಬಣ್ಣಬಣ್ಣದ ಮಿಠಾಯಿ. ಗೌಡರ, ಹೆಗ್ಗಡತಿಯರ ರಾಗವಾದ ಮಾತು. ತೇರಿನ ಮೇಲೆ ಬಡಬಡ ಮಂತ್ರ. ಸ್ಮಾರ್ತ ಬ್ರಾಹ್ಮಣರ ವಟವಟ ಮಾತು. ಈಗ ಇಲ್ಲಿ ಏತನ್ಮಧ್ಯೆ ನಿಶ್ಚಯಿಸಬೇಕು. ತಾನು ಇಪ್ಪತ್ತೆದು ವರ್ಷದ ಸಂಸ್ಕಾರವನ್ನು ಬಿಟ್ಟು ಈ ಲೋಕದವನಾಗಿಬಿಡುವ ನಿರ್ಧಾರ ಮಾಡಬೇಕು. ಇಲ್ಲ. ಮೊದಲು ನಾರಣಪ್ಪನ ಶವಸಂಸ್ಕಾರವಾಗಬೇಕು. ಆಮೇಲೆ ನಿಶ್ಚಯ. ಗುರುಗಳ ಅಪ್ಪಣೆ ಪಡೆದು ಇವತ್ತು ಗರುಡ ಲಕ್ಷ್ಮಣರು ಬಂದಿರುತ್ತಾರೆ. ಗುರುಗಳು ಬೇಡವೆಂದಿದ್ದರೆ ನಾನೇನು ಹೇಳಬೇಕು. ಮತ್ತದೇ ಸಂಕಟ. +ದೇವಸ್ಥಾನದ ಸಮೀಪದಲ್ಲಿ ನಿಂತರು. ಕುರುಡನೊಬ್ಬ ಶ್ರುತಿಪೆಟ್ಟಿಗೆ ಹಿಡಿದು ’ಹೇಗೆ ಮೆಚ್ಚಿಸಲು ಅರ್ಚಿಸಲಿ ನಿನ್ನ’ ಎಂದು ದಾಸರ ಪದವನ್ನು ಹಾಡುತ್ತಿದ್ದ. ಪುಟ್ಟ ಅವನ ತಟ್ಟೆಗೆ ಬಿಲ್ಲೆ ಹಾಕಿದ್ದನ್ನು ಕಂಡು, ಮೋಟು ಕೆಕಾಲಿನ ಇನ್ನೊಬ್ಬ ಭಿಕ್ಷುಕ ತೆವಳುತ್ತ ಬಂದು ಮೊಂಡುಕೆಯನ್ನು ಆಡಿಸುತ್ತ ’ಕೆಕಾಲಿಲ್ಲದವ’, ’ಕೆಕಾಲಿಲ್ಲದವ’ ಎಂದು ಗೋಗರೆದು, ಅಂಗಾತ ಮಲಗಿ, ಕಾಲೆತ್ತಿ ಕೆಯೆತ್ತಿ ಬಡಿದುಕೊಳ್ಳುತ್ತ, ಬೆರಳುಗಳು ಕೊಳೆತು ಗುಜ್ಜಾದ ಜಾಗಗಳನ್ನು ಪ್ರದರ್ಶಿಸಿದ. ಪ್ರಾಣೇಶಾಚಾರ್ಯರಿಗೆ ತೊನ್ನಿನಲ್ಲಿ ಕರಗಿಹೋಗುತ್ತಿದ್ದ ದೇಹವನ್ನು ಕಂಡು ನಾರಣಪ್ಪನ ಸಂಸ್ಕಾರವಿಲ್ಲದ ಕೊಳೆಯುವ ಹೆಣ ಮರುಕಳಿಸಿತು. ಪುಟ್ಟ ಇನ್ನೊಂದು ಬಿಲ್ಲೆಯೊಗೆದ. ಇನ್ನಷ್ಟು ದೇಹಗಳು ಮಗುಚುತ್ತ ತೆವಳುತ್ತ ಹೊಟ್ಟೆ ಹೊಡೆದುಕೊಳ್ಳುತ್ತ ಬಾಯಿ ಬಡಿದುಕೊಳ್ಳುತ್ತ ನುಗ್ಗಿ ಬಂದವು. ’ಹೋಗುವ, ಹೋಗುವ’ ಎಂದರು ಆಚಾರ್ಯರು. +“ನೀವು ಹೋಗಿ ಊಟ ಮಾಡಿ ಬನ್ನಿ” ಎಂದ ಪುಟ್ಟ. +“ನೀನೂ ಬಾ” ಎಂದರು ಪ್ರಾಣೇಶಾಚಾರ್ಯರು. ಥಟ್ಟನೇ ಅವರಿಗೆ ಜೊತೆಯಲ್ಲೊಬ್ಬನಿಲ್ಲದೆ ದೇವಸ್ಥಾನದ ಪ್ರಾಂಗಣದಲ್ಲಿ ಊಟಕ್ಕೆ ಕೂತ ಬ್ರಾಹ್ಮಣರ ಕಣ್ಣಿಗೆ ಬೀಳಲು ದಿಗಿಲಾಯಿತು. ಜೊತೆಗೆ ಪುಟ್ಟನಿಲ್ಲದೆ ಕದಲಲಾರೆ ಎನ್ನಿಸಿತು. ಹೀಗೇ ಒಂಟಿಯಾಗಿರಲಾರೆ ಎಂದೆನ್ನಿಸಿದ್ದೆ ಇಲ್ಲ ಅವರಿಗೆ ಈ ಮುಂಚೆ. +“ಒಳ್ಳೆ ಹೇಳುತ್ತೀರಿ. ಮಾಲೇರರವ ನಾನೆಂಬುದನ್ನು ಮರತೇಬಿಟ್ಟಿರ” ಎಂದ ಪುಟ್ಟ ಅದಕ್ಕೆ. +“ಚಿಂತೆಯಿಲ್ಲ, ಬಾ” ಎಂದರು. +“ಹಾಸ್ಯ ಮಾಡುತ್ತೀರೊ ಹೇಗೆ? ಈ ಮೇಳಿಗೆ ತುಂಬ ನನ್ನ ಪರಿಚಯದವರು ಮಾರಾಯರೆ. ಇಲ್ಲವಾದರೆ ಒಂದು ಕೆನೋಡಿಬಿಡುತ್ತಿದ್ದೆ. ಓಂii, ನಾನು ಇದನ್ನ ಮಾಡಿದ್ದಿಲ್ಲವೆಂದುಕೊಳ್ಳಬೇಡಿ. ಉಡುಪಿಯಲ್ಲಿ ಚೌಕಿಯ ಊಟಮಾಡಿದ್ದುಂಟು. ಅಲ್ಲಿ ಕೇಳೋವರು ಯಾರು? ಓಂii, ಸೋನೆಗಾರನ ಹುಡುಗನೊಬ್ಬ ಸುಳ್ಳು ಹೇಳಿ ಮಠದಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಲ್ಲವೆ ನಿಮಗೆ. ಹಾಗೆ ನೋಡಿದರೆ ನಮಗೇನು ಜನಿವಾರವಿಲ್ಲವೆ? ಮಾತಿಗೆ ಹೇಳಿದೆ ಅಷ್ಟೆ. ನಿಮ್ಮ ಜೊತೆ ಊಟಮಾಡುವಷ್ಟು ಸೊಕ್ಕಿನವನಲ್ಲಪ್ಪ ನಾನು. ನೀವು ಹೋಗಿಬನ್ನಿ. ನಾನು ಇಲ್ಲೇ ಕಾದಿರುವೆ. ” +***** +ಮುಂದುವರೆಯುವುದು +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ […] +– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_260.txt b/Kannada Sahitya/article_260.txt new file mode 100644 index 0000000000000000000000000000000000000000..d04fdc1aa764e52aa22b6d971b0ac8025a41e09c --- /dev/null +++ b/Kannada Sahitya/article_260.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ ಸಂದರ್ಭದಲ್ಲಿ ನಮ್ಮೆಲ್ಲಾ ಸಂವೇದನೆಗಳು ಕನ್ನಡೀಕರಣಗೊಡಿರಬೇಕೆ ಹೊರತು ಅನ್ಯಭಾಷಾ ಲಕ್ಷಣದ ಉದ್ಗಾರಕ್ಕೂ ಅವಕಾಶವಿಲ್ಲ. +ಆ ಕಿಟಕೀನ ತೆಗೆಯೋ ಅವಕಾಶವೇ ಬಹಳ ಕಡಿಮೆ. ರಾಮನವಮಿ, ಗಣೇಶೋತ್ಸವ, ತಿರುಪ್ಪಾವೈ, ಕನ್ನಡ ರಾಜ್ಯೋತ್ಸವ ಇತರೆ ಸಾರ್ವಜನಿಕ ಮೈಕಾಸುರರ ಹಾವಳಿಯಿಂದಾಗಿ ಅದನ್ನು ತೆಗೆಯೋದು ಅಪರೂಪ.ಅಪರೂಪಕ್ಕೊಮ್ಮೆ ತನ್ನನ್ನು ಬಿಚ್ಚಿಕೊಂಡು ಅಷ್ಟೋ ಇಷ್ಟೋ ಬಾಹ್ಯ ಸಂಪರ್ಕ ಕಲ್ಪಿಸೋ, ತಂಪುಗಾಳಿಯನ್ನು ಒಳಕ್ಕೆ ನೂಕುವ ಅದನ್ನು ನಾನು ಪ್ರೀತಿಸೋದು ಅಸಹಜವೇನೂ ಅಲ್ಲ. ಜಸ್ಟ್ ಸಿಂಪ್ಲಿ ಐ ಲವ್ ಇಟ್. +ಕಿಟಕಿ ತೆಗೆದೊಡನೆ ಕಣ್ಣಿಗೆ ಪಚ್ಚೆಂದು ಹೊಡೆಯುವುದು : +೧. ರಸ್ತೆ. +೨ . ರಸ್ತೆಗಂಟಿಕೊಂಡಿರುವ ವಠಾರ. +೩. ವಠಾರಕ್ಕೆ ಅಂಟಿಕೊಂಡಿರುವ ಪೆಟ್ಟಿಗೆ ಅಂಗಡಿ. +ವಠಾರದಲ್ಲಿ ಒಟ್ಟು ಹದಿನೆಂಟು ಮನೆಗಳಿವೆ. ಬಹುತೇಕ ವಿವಿಧ ಪ್ರಬೇಧಗಳು ಅಂದರೆ ಮಧ್ವ, ಮುರುಕನಾಡು, ಅಯ್ಯಂಗಾರ್, ಅಯ್ಯರ್ ಹೀಗೆ ಅನೇಕ ಪ್ರಬೇಧ ಸೇರಿದ ಬ್ರಾಹ್ಮಣ ಮತಸ್ಥರೆ ಜಾಸ್ತಿ. ನಾನು ಈ ವಠಾರದ ಎದುರಿಗಿನ ಮಾಡಿ ಮೇಲಿನ ಇಪ್ಪತ್ತು ಇಂಟೂ ಹದಿನೈದು ಕೋಣೆ ಹಿಡಿದಿದ್ದೀನಿ. ಹಿಡಿದೊಡನೆಯೆ ನನಗು ಆ ಕಿಟಕಿಗೂ ಲವ್. ಬೇರೇನೂ ಮಾಡಲಾಗದಂತೆ ಸೆಳೆದಿಟ್ಟಿರುವ ಆ ಕಿಟಕಿಯಿಂದ ನೋಡಿದರೆ , ಆ ಹದಿನೆಂಟು ಮನೆಗಳ ಇತಿಹಾಸ ಬರೆಯುವಷ್ಟು ಮಾಹಿತಿಯೇನೊ ದಕ್ಕುತ್ತದೆ. ಆದರೇನು ಮಾಡಲಿ, ನಾನು ಆ ಕಿಟಕಿ ತೆಗೆಯೋಕ್ಕೆ ಹಾವಳಿಮುಕ್ತವಾಗಿ ಇರೋ ಅವಕಾಶವೇ ಬಹಳ ಕಡಿಮೆ.ಹೋಗಲೀಂದ್ರೆ ನನಗೂ ಬಾಹ್ಯ ಪ್ರಪಂಚಕ್ಕೂ ಸಂಪರ್ಕ ಇಲ್ಲವೆ ಇಲ್ಲಾನ್ನಬಹುದು. ಬ್ರಹ್ಮಚಾರಿ ಶತಮರ್ಕಟ. ಮಾತನಾಡಿದರೆ ಎಲ್ಲಿ ಏನಂಟಿಕೊಳ್ಳುತ್ತದೋ ಏನಾಗಿ ಹೋಗುತ್ತದೊ ಎಂಬಂತ ಅಂಜುಕುಳಿ ಸ್ವಭಾವದ ಮಂದಿಯೇ ಹೆಚ್ಚು. ಆದ್ದರಿಂದಲೇ ನಾನು ಮನುಷ್ಯ ಮುಟ್ಟಿದ ಗುಬ್ಬಿ. +ದಿಟ ಗುಬ್ಬಿಯಂತೆಯೆ ನಾನು ಅಂಜಿಕೊಂಡಿದ್ದೇನೆ. ಗಾಬರಿಯಾಗಿದ್ದೇನೆ. ಸಂಪರ್ಕ, ಸಹವಾಸವಾಗಲಿ ಏನೊಂದೂ ಬೇಡವೇ ಬೇಡ ಎಂಬ ನಿರ್ಧಾರ ಬಹಳ ಗಟ್ಟಿಯಾಗಿದೆ. ಆಫೀಸಾಯ್ತು- ರೂಮಾಯ್ತು-ಕಿಟಕಿಯಾಯ್ತು. ಕಿಟಕಿ ಇಲ್ಲದಿದ್ದರೆ ಹಾಸಿಗೆ – ಪುಸ್ತಕಗಳಾಯ್ತು. ಅಪರೂಪಕ್ಕೊಮ್ಮೆ ಕಾಫಿ ತಿಂಡಿ ಮಾಡಿಕೊಳ್ಳಲು ಬೇಸರವಾಗಿ ವಠಾರದ ಹುಡುಗರನ್ನು ಕರೆದು ಫ್ಲಾಸ್ಕು ಕೊಟ್ಟು ಹೋಟೆಲ್ಲಿಗೆ ಅಟ್ಟುತ್ತೇನೆ. ಆ ಹುಡುಗರೂ ಸಹ ” ಮಾಮ” ಕೇಳಿದ್ದನ್ನು ಸಲೀಸಾಗಿ ಮಾಡಿಕೊಡುತ್ತವೆ. ಹಾಗೆ ಮಾಡಿ ಕೊಡೋದಕ್ಕೂ ಆ ಹುಡುಗರ ತಾಯ್ತಂದೆಯರ ವಿರೋಧ. ” ಆ ರೂಮಿಗೆ ಹೋಗ್ಬೇಡಾಂತ ನಿನಗೆ ಎಷ್ಟು ಸಲ ಹೇಳೋದು?”ಅಂತ ಮಕ್ಕಳನ್ನ ದಂಡಿಸಿದ ವರದೀನ ಹುಡುಗರೇ ಬಹಳ ಪ್ರಾಂಪ್ಟಾಗಿ ತರ್‍ತಾರೆ. ಹಾಳಾಗಿ ಹೋಗಲೀಂತ ಬಾಹ್ಯ ಸಂಪರ್ಕ ಬೇಡಾಂತ ನಾನು ನನ್ನ ರೂಂನಲ್ಲಿರೋ ವಸ್ತುಗಳನ್ನೆ- ನಿರ್ಜೀವ ವಸ್ತುಗಳನ್ನೇ ಪ್ರೀತಿಸಲಾ‌ಅರಂಭಿಸಿದ್ದೇನೆ. ಅದರಲ್ಲೂ ಐ ಪ್ರಿಫರ್ ಜಸ್ಟ್ ದಿ ಬ್ಲಡಿ ವಿಂಡೋ. +ಹಾಗೆ ಹೇಳೋಕ್ಕೋದರೆ ಈ ಗುಬ್ಬೀನ ಮನುಷ್ಯ ಮುಟ್ಟೇ ಇಲ್ಲ.ಮುಟ್ಟೋಕಿದ್ದಾಗಲೇ ಮುದುಡಿ ಹೋದದ್ದು. ಒಮ್ಮೆ ಏನಾಯ್ತೂಂದರೆ , ಆಫೀಸಿನಿಂದ ಹೀಗೆ ಬರ್‍ತಿದ್ದಾಗ ಈ ವಠಾರದಲ್ಲಿ ಅರವತ್ತು ವರ್ಷಗಳಿಂದ ಸಂಸಾರ ಹೂಡಿರೋ ಚೂಡನಾಥಯ್ಯರ್ ನನ್ನನ್ನು ನೋಡಿದೊಡನೆಯೆ ಕೈಬೀಸಿ ಎತ್ತರದ ಧ್ವನಿಯಲ್ಲಿ ” ಬಾರಯ್ಯ ಇಲ್ಲಿ..” ಎಂದು ಕೂಗಿದರು. ಕೂಗಿದ ಧಾಟಿಗೆ ನಾನು ದಿಗ್ಭ್ರಮಿಸಿ ಹೋದೆನಾದರೂ ಮರ್ಯಾದೆಯಿಂದ ಅವರ ಬಳಿ ಹೋಗಿ ನಿಂತೆ.ಎಷ್ಟೇ ಆಗಲಿ ವಯೋವೃದ್ಧರು. ಕನ್ನಡದಲ್ಲಿ ಕಥೆಗಳನ್ನು ಒಂದಾನೊಂದು ಕಾಲದಲ್ಲಿ ಬರೆದು ಅಲ್ಲೊಂದು ಇಲ್ಲೊಂದು ಪ್ರಕಟಿಸಿರೋ ಕಥೆಗಾರರು ಬೇರೆ. ನನ್ನನ್ನು ನಖಶೀಖಾಂತ ನೋಡಿದ ಆತ “ನೀನೆಯೋ ಆ ಮಲಯಾಳಿಗಳ ಮನೆ ಮೇಲಿರೋ ರೂಮಿನಲ್ಲಿರೋನು?” ಎಂದು ಕೇಳಿ ನಾನು ಮತ್ತಷ್ಟು ದಿಗ್ಭ್ರಮಿಸಿ ಹೋಗುವಂತೆ ಮಾಡಿದ್ಡರು. ತಮ್ಮ ಜನಿವಾರದಿಂದ ಬೆನ್ನ ತುರಿಕೆಯನ್ನು ಕಡಿಯುತ್ತಾ, ನಾನು ಹೌದೆಂದ್ದಷ್ಟೇ ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದೆ. ಬೆನ್ನ ಹಿಂದೆಯೇ ” ಈಗಿನ ಕಾಲದ ಹುಡುಗರು . ಹಿರಿಯರೂಂದರೆ ಭಯ ಭಕ್ತೀನ್ನೋದೆ ಇಲ್ಲ. ಒಬ್ಬಂಟಿ, ಕರೆದು ಮಾತಾಡ್ಸೋಣ ಅಂದರೆ ಧಿಮಾಕು” ಎಂದು ಗೊಣಗಿಕೊಂಡ ಟೀಕೆ ಬಂದಿತ್ತು. +ಹೀಗೆ ಇದೆ ರೀತಿ ಒಬ್ಬರ ಕಾಲನ್ನು ಮತ್ತೊಬ್ಬರು ಕಡಿಯುತ್ತಾ ಕುಳಿತಿರೋದೊ ಅಥವ ಯಾರಾದರೂ ಹೆಂಗಸರು ಬಟ್ಟೆ ಒಗೆಯುತ್ತಲೋ, ಆರ ಹಾಕುತ್ತಲೋ ಅಥವ ಯಾವುದಾದ್ರೂ ಮನೆ ಮಾಮಿಗಳು ಸಂಡಿಗೆ ಒಣ ಹಾಕುತ್ತಲೋ, ಇನ್ನಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಇಲ್ಲವೆ ಮದುವೆ ಮುಂಜಿ ಸಂಭ್ರಮ ಇರುವ ಮಾಮೂಲಿ ದೃಶ್ಯಗಳು ನನ್ನ ಕಿಟಕಿಯಾಚೆ. ದರಿದ್ರ ಎಲ್ಲಾ ಮಾಮೂಲೆ. ಈ ಜಗತ್ತಿನಲ್ಲಿ ಬೇರೇನಾದರೂ ಜರುಗಲು ಸಾಧ್ಯವೆ ಎಂಬ ಉದಾಸೀನದಿಂದಲೂ ನಾನು ಕಿಟಕಿಯನ್ನು ತೆಗೆಯಲು ನಿರಾಕರಿಸಿದ್ದೂ ಉಂಟು. +ನಾನಿರುವ ರೂಮಿನ ಕೇಳಗಡೆ ಮನೆಯಲ್ಲಿರುವಾಕೆ ಒಂದು ದೊಡ್ಡ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಡಾಕ್ಟರಾಗಿದ್ದಾರೆ. ಕೇರಳದವರು. ಜೊತೆಯಲ್ಲಿ ಐದು ವರ್ಷದ ಮಗ. ತಾಯಿ-ತಂದೆ ಅಷ್ಟೆ. ಗಂಡ ಇಸ್ರೋದ ವಿಜ್ಞಾನಿ. ಕೊಚ್ಚಿನ್‌ನಲ್ಲಿದ್ದಾರಂತೆ. ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಬರುತ್ತಿರುತ್ತಾರಂತೆ. ಆತ ಬಂದಾಗ ಮಾತ್ರ ಆಕೆ ಕಾಣ ಸಿಗುವುದು. ಗಂಡನೊಂದಿಗೆ ಸಿನಿಮಾಕ್ಕೋ ಮತ್ತೊಂದಕ್ಕೋ ಹೋಗುತ್ತಿರುತ್ತಾರೆ. ನಾನು ಅವರನ್ನು ನೋಡಿದೊಡನೆಯೆ ತಲೆ ತಗ್ಗಿಸಿ ಹೊರಟು ಹೋಗುತ್ತಿರುತ್ತೇನೆ. ಎಂದೂ ಅದರ ಬಗೆಗೆ ತಲೆ ಕೆಡಿಸಿಕೊಳ್ಳೋಕ್ಕೆ ಹೋಗಿಲ್ಲ.ಅವರೂ ಅಷ್ಟೆ. ಇದೇ ಬೀದಿಲಿರೋ ನನ್ನ ಸಹೊದ್ಯೋಗಿ ಮಿತ್ರನ ಹೆಂಡತಿಗೂ ಈಕೆಗೂ ಸ್ವಲ್ಪ ಸಂಪರ್ಕ.ಅವರಿಬ್ಬರ ಭೇಟಿಯ ವಿವರಗಳನ್ನು ನನ್ನ ಸಹೊದ್ಯೋಗಿಮಿತ್ರ ಸಂದರ್ಭಾನುಸಾರ ಹೇಳುತ್ತಿರುತ್ತಾನೆ. ಹಾಗೆ ತಿಳಿದು ಬಂದ ವಿವರಗಳೆ ಈಗ ನಾನು ಇಲ್ಲಿ ದಾಖಲಿಸಿರುವುದು. ಸಹೊದ್ಯೋಗಿಮಿತ್ರನ ಹೆಂಡತಿಗೂ ಈಕೆಗೂ ಆಗಾಗ್ಗೆ ಜಗಳವಾದದ್ದೂ ಉಂಟು-ಮನಸ್ತಾಪ ಬೆಳೆದದ್ದೂ ಉಂಟು. +ಈ ಬಾರಿ ಬಹಳ ದಿನಗಳವರೆಗೆ ಕಿಟಕಿಯನ್ನು ಮುಚ್ಚೇ ಇದ್ದೆ. ಒಂದು ದಿನ ಎಲ್ಲವೂ ಶಾಂತವಾಗಿದ್ದಾಗ ಬೆಳ್ಳಂಬೆಳಿಗ್ಗೆ ಚುಮುಚುಮು ಬೆಳಕಿನಲ್ಲಿ ಬಿಸಿ ಬಿಸಿ ಕಾಫಿ ಮಾಡಿ ಕಿಟಕಿ ತೆಗೆದಾಗ ಆಶ್ಚರ್ಯ ಕಾದಿತ್ತು.ಆ ಕತ್ತಲೆಯ ಬೆಳಕಿನಲ್ಲೂ ಸ್ಪಷ್ಟವಿತ್ತು.ಇನ್ನೂ ಬೀದಿ ದೀಪ ಉರಿಯುತ್ತಿತ್ತು.ನಾನಾಕೇನ ಇಲ್ಲಿಯವರೆಗೂ ಕಂಡೇ ಇರಲಿಲ್ಲ. ಆ ಕ್ಷಣ ಯಾರಿರಬಹುದು ಎಂಬ ಕುತೂಹಲ ಹುಟ್ಟಿ ತಕ್ಷಣವೆ ಯಾರಾದರೇನಂತೆ ಎಂಬ ಉದಾಸೀನವೂ ಹುಟ್ಟಿ ಕುತೂಹಲ ಕ್ಷೀಣಿಸಿಹೋಯ್ತು.ಅದರ ಹಿನ್ನೆಲೆಯಲ್ಲಿ ಆಕೆ ಚೂಡನಾಥಯ್ಯರ್‌ರ ಮನೆ ಮುಂದಿನ ಅಂಗೈ ಅಗಲದ ಅಂಗಳವನ್ನು ತೊಳೆದು ರಂಗೋಲಿ ಹಾಕುತ್ತಿದ್ದುದರಿಂದ ಆಕೆ ಚೂಡನಾಥಯ್ಯರ್ ಮನೆಗೆ ಬಂದಿರುವಾಕೆ ಇರಬಹುದೆನ್ನುವ ಅಲ್ಪ ಸಮಾಧಾನಕರ ತೀರ್ಮಾನವೂ ಮೂಡಿಬಂತು. +ಯಾರಿರಬಹುದು?- ಕುತೂಹಲವನ್ನು ಉಪೇಕ್ಷಿಸಿದ ಮಾತ್ರಕ್ಕೆ ಸಾಯುತ್ತದೆಯೆ? ಅಂದು ಸಂಜೆಯೆ ವಠಾರದ ಹುಡುಗರನ್ನ ಹೋಟೆಲ್ಲಿಗೆ ಅಟ್ಟುವ ಮುನ್ನ ಕೇಳಿದೆ: +” ಲೋ, ಚೂಡನಾಥಯ್ಯರ್ ಮನೆಗೆ ಹೊಸದಾಗಿ ಬಂದಿದ್ದಾರಲ್ಲ, ಯಾರೋ ಅದು?” +” ಅಂದರೆ ..?”- ಮುಗ್ಧವಾದ ಪ್ರತಿ ಪ್ರಶ್ನೆ. +“ಹೆಂಗಸು..ಹೊಸದಾಗಿ ಬಂದಿದ್ದಾರಲ್ಲ..” +” ಅವರಾ..ಅವರು ಮನ್ನಿ..” +“ಮನ್ನಿ ಅಂದರೆ?” +“ಮನ್ನಿ ಅಂದರೆ ಮನ್ನಿ. ಅವರು ಆಗಲೆ ಬಂದು ಬಹಳ ದಿನಗಳಾದವು….” +– ಇನ್ನೂ ಹೆಚ್ಚಿಗೆ ತೋಡಿದರೆ ಹುಡುಗನಿಗೆ ಅವನ ತಾಯ್ತಂದೆಯರು ನನ್ನ ವಿರುದ್ಧ ನೀಡಿರುವ ಎಚ್ಚರಿಕೆಯನ್ನ ತೀವ್ರಗೊಳಿಸಿದಂತಾಗುತ್ತದೆ ಎಂದು ನಾನು ಸುಮ್ಮನಾಗಿ ಹುಡುಗನನ್ನು ಹೋಟೆಲ್ಲಿಗೆ ಅಟ್ಟಿದೆ. +ಇನ್ನೊಂದು ದಿನ, ಇನ್ನೂ ಚಿಕ್ಕ ಹುಡುಗನಿಗೆ ಕಾಫಿ ಯಾತ್ರೆಗೆ ಕಳಿಸುವ ಮುನ್ನ ಇನ್ನಷ್ಟು ಮಾಹಿತಿ ಗಿಟ್ಟಿಸಿದ್ದರಲ್ಲಿ- ಆಕೆ ಚೂಡನಾಥಯ್ಯರ್‌ರ ಸೊಸೆ ಎಂದು ತಿಳಿದು ಬಂತು. ಚೂಡನಾಥಯ್ಯರ್‌ರ ಮಗ ವೈದ್ಯನಾಥನ್ ಸಹ ಅಪ್ಪನಷ್ಟಲ್ಲದಿದ್ದರೂ ಸ್ವಲ್ಪ ಅಹಂಕಾರಿಯೇ ಎಂದನ್ನಬಹುದು. ಯಾವುದೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಅವನು ಸ್ಕೂಟರಿನಲ್ಲಿ ಹೋಗುವಾಗ ನಾನು ಎದುರಾದರೆ ಕಡೇಪಕ್ಷ ಮುಗುಳ್ನಗೆಯಾದರೂ ನಗುತ್ತಿದ್ದ. ಆಪ್ಪನಂತೆ ಗಂಟು ಮುಖದವನಲ್ಲ. ನನ್ನ ಅವನ ಸಂಬಂಧ ಆ ಮುಗುಳ್ನಗೆಯ ಮಿತಿಯಾಚೆ ಬೆಳೆಯಲೇ ಇಲ್ಲ. +ಒಂದು ದಿನ ವಠಾರದ ತಲೆ ಬಾಗಿಲಿನಲ್ಲಿ ಆಕೆ ಬೇರೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದುದ್ಡು, ನಾನು ಲಬ್ಬೆಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುತ್ತಿದ್ದಾಗ ಕಾಣಿಸಿತು. ಸ್ವಲ್ಪ ಹತ್ತಿರದಿಂದ ನೋಡುವ ಎಂದು ಹೆಜ್ಜೆ ಹಾಕುತ್ತಿದ್ದಂತೆಯೆ, ನನಗೆ ಹೆಸರು ಗೊತ್ತಿರದ ನಮ್ಮ ಡಾಕ್ಟರ್ ಹೆಂಗಸು ಬರುತ್ತಿದ್ದುದನ್ನ ಗಮನಿಸಿದ ಪೆಟ್ಟಿಗೆ ಅಂಗಡಿ ಮುಂದೆ ಸಿಗರೇಟ್ ಹಚ್ಚಿದ ಪಟಾಲಂನವನೊಬ್ಬ ಇನ್ನೊಬ್ಬನಿಗೆ: +“ನೋಡೊ ಒಳ್ಳೆ ಮಲಯಾಳಿ ಫಿಗರ್ ಬರ್‍ತಾ‌ಇದೆ…” ಎಂದು ಹುಸಿ ನಕ್ಕದ್ದನ್ನನುಸರಿಸಿ ಕಿಸಕ್ಕೆಂದು ಪ್ರತಿಕ್ರಿಯಿಸಿದ್ದ ಇನ್ನೊಬ್ಬ “ಮಲಯಾಳಿ ಹೆಂಗಸೆಂದರೆ ಒಳ್ಳೆ ಖುಷಿ ಕೊಡ್ತಾರಂತೆ ಕಣೊ. ಅವರ ರಾಜ್ಯದಲ್ಲಿ ಎಲ್ಲಾ ತಳಕಬಳಕ. ಗಂಡು ಹೆಣ್ಣು ಸಹ, ಐ ಮೀನ್ ಹಾಸಿಗೇಲಿ..” ಎಂದಿದ್ದ. ಈ ಮಾಮೂಲಿ ಪಟಾಲಂಗೆ ಬೇರೇನೂ ಕೆಲಸವಿಲ್ಲ, ಹೋಗಿ ಬರೋರ್‍ನ ಚುಡಾಯಿಸೋದು ಬಿಟ್ಟರೆ. +ನಾನು ವಠಾರದ ತಲೆ ಬಾಗಿಲನ್ನ ಹಾದು ಅವರ ಕಣ್ಣಿಗೆ ಬೀಳದೆ ಅವರ ಸಂಭಾಷಣೆ ಕೇಳುವಂತೆ ಮರೆಯಾಗಿ ನಿಂತೆ. ಮನ್ನಿಯ ಸಂಭಾಷಣೆಯಲ್ಲಿ ಹೆಚ್ಚು ತಮಿಳು- ಅಲ್ಲಲ್ಲಿ ಒಳ್ಳೆ ಪ್ರೌಢಿಮೆಯ ಇಂಗ್ಲೀಷ್ ನುಸುಳುತ್ತಿತ್ತು. ಅದು ದೊಡ್ಡ ಸಂಭಾಷಣೆಯೇನೂ ಅಲ್ಲ. ಹರಕು ಮುರುಕು ತಮಿಳು ನನಗೂ ಗೊತ್ತಿದ್ದರಿಂದ ಸಂಗ್ರಹಿಸಲಾದ ವಿವರಗಳೆಂದರೆ: +ಆಕೆ ಸೊಸೆಯಾಗಿ ಬಂದ ಹೊಸತರಲ್ಲಿ ಮಾವನವರ ಮನೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆಯಲ್ಲಿದ್ದನ್ನ, ತತ್‌ಕ್ಷಣ ಆ ಬಳಕೆಗೆ ಒಗ್ಗದೆ ಇರೋದು, ತಾನು ತನ್ನ ತವರಿನಲ್ಲಿ ಮಾಡುತ್ತಿದ್ದ ಅಡಿಗೆಗೆ ಮನೆಯವರು ಒಗ್ಗದೆ ಇರೋದು, ಅವರ ಅಡಿಗೆಯನ್ನ ತಾನು ಎಷ್ಟೇ ಚೆನ್ನಾಗಿ ಮಾಡಿದರೂ ಮನೆಯವರ ಮೂದಲಿಕೆ, ತಾನು ಇಂಗ್ಲೀಷಿನಲ್ಲಿ ಬರೆದ ಕತೇನ ಓದಿ- ” ನೀನು ಏನೇ ಬರೆದರೂ ಕನ್ನಡದಲ್ಲಿ ಬರೆ, ಬರದಿದ್ದರೆ ಕಲಿತುಕೋ, ಆ ದರಿದ್ರ ಕೊಂಗಾಟವನ್ನ ಬಿಟ್ಟು ಬಿಡು. ಆಗಲೇ ನಮಗೆ ಹೆಮ್ಮೆ.” ಎಂದು ಅತ್ತೆ, ಮಾವ, ಗಂಡ ಎಲ್ಲರೂ ಛೇಡಿಸಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಮಾಮಿ- ಮನ್ನಿಯ ಮದ್ರಾಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ಗರ್ವವನ್ನ ಮುರಿಯೋ ನಿರ್ಧಾರದ ಧಾಟೀಲಿ- ” ಹೌದಮ್ಮ ನೀನು ನಿನ್ನ ಗಂಡನ ಮನೆಗೆ ಬಂದ್ಮೇಲೆ ಗಂಡನ ಮನೆಯ ಆಚಾರ ವಿಚಾರಗಳಿಗೆ ಹೊಂದ್ಕೋ ಬೇಕು.ಆಗಲೆ ತವರಿಗೂ ಕೀರ್ತಿ. ನಿನ್ನ ಮಾವ- ಅತ್ತೆ – ಗಂಡ ಹೇಳೋದನ್ನ ಕೇಳು…ಅದೇ ನ್ಯಾಯ…” ಎಂದು ತೀರ್ಪಿತ್ತಿದ್ದರು. +ಅದೇನಾಯ್ತೋ ಏನೋ ಮೊಟ್ಟ ಮೊದಲ ಬಾರಿಗೆ ನನ್ನ ಆತ್ಮೀಯ ಕೋಣೆ ಅಸಹ್ಯವಾಯಿತು. ರಾತ್ರಿ ಮಲಗಿದಾಗ ಕಣ್ಮುಚ್ಚಿದೊಡನೆ ಮನ್ನಿಯ ಮುಖ, ಎಂ.ಎ ಇಂಗ್ಲೀಷ್ ಮನ್ನಿಯ ಮುಖ, ಇಲ್ಲಿಗೆ ಬಂದಾಗ‌ಎಷ್ಟೊಂದು ಕ್ಯೂಟ್ ಆಗಿದ್ದಳು. ಈಗ ಸಣ್ಣಗೆ ಬಡಕಲು – ಬಡಕಲಾಗಿ…ಇದರೊಂದಿಗೆ ಯಾರ ಮೇಲೋ ದ್ವೇಷ, ಚೂಡನಾಥಯ್ಯರ್ ಮೇಲೆ? ಉಹೂಂ. ಮನ್ನಿ ಅತ್ತೆ- ಗಂಡನ ಮೇಲೆ? ಊಹುಂ. ಹಾಗಾದರೆ ಯಾರ ಮೇಲೆ? ಅರ್ಥವಾಗದ ತಳಮಳ. ಎಷ್ಟೇ ಸೂಕ್ಷ್ಮವಾದರೂ ತಳಮಳದ – ದ್ವೇಷದ ಹಿನ್ನೆಲೆ ಅರ್ಥವಾಗುವ – ಸ್ಫುಟವಾಗುವ ಲಕ್ಷಣ ಕಾಣಲಿಲ್ಲ. ಎಂದೋ ಯಾರೋ ಬಿಟ್ಟಿ ಕೊಟ್ಟಿದ್ದರೆಂದು ತಂದು ಬಿಸಾಕಿದ್ದ ಬಹಳ ದಿನಗಳು ಓದದೆ ಇದ್ದ ಗೋಕಾಕ್ ಸಮಿತಿ ವರದಿಯ ಪೂರ್ಣ ಪಾಠ ಅದಾಗಿತ್ತು. ಅದರಲ್ಲಿ ಮನಸ್ಸನ್ನು ತೊಡಗಿಸಲಿಕ್ಕೇ ಆಗಿರಲಿಲ್ಲ. ಬೇರೆ ಯಾವುದೇ ಪುಸ್ತಕ ಇರಲಿಲ್ಲ. ಬಹಳ ಬೇಗನೆ ಹಾಸಿಗೆ ಹಾಸಿ ಉರುಳಿಕೊಂಡಿದ್ದೆ, ನಿದ್ದೆ ಬಾ ಎಂದರೂ ಎಲ್ಲಿಂದ ಬಂದಾತು? +ಮೆಲ್ಲನೆದ್ದು ಕಿಟಕಿ ತೆಗೆದಾಗ ಮನ್ನಿ ವಠಾರದ ತಲೆ ಬಾಗಿಲ ಜಗಲಿ ಮೇಲೆ ಮೂರ್‍ನಾಲ್ಕು ಪುಡಿ ಹುಡುಗರೊಂದಿಗೆ ಕುಳಿತಿದ್ದುದು ಕಾಣಿಸಿತು. ಕತೆ ಹೇಳುತ್ತಿದ್ದಳೆನೊ. ಹುಡುಗರಿಗೆ ತಮಿಳು ಅರ್ಥವಾಗುತ್ತಿತ್ತೋ ಅಥವ ಹರಕು ಮುರುಕು ಕನ್ನಡದಲ್ಲೇ ಹೇಳುತ್ತಿದ್ದಳೇನೊ. ಒಂದೆರಡು ನಿಮಿಷ ಹಾಗೆ ನೋಡುತ್ತಿದ್ದಾಗ ಆಕೆಯ ಗಂಡ ಬಂದು ಏನನ್ನೋ ಹೇಳುತ್ತಿದ್ದ. ಅವನು ಹಾವಭಾವ ನೋಡಿದರೆ ಸಿಟ್ಟಾಗಿದ್ದನೆಂದು ಕಾಣುತ್ತದೆ. ಆಕೆ ಎದ್ದು ಒಳ ಹೊರಟು ಹೋದಳು. ಪಾಪ ಮನ್ನಿ. +ಮನ್ನಿ,ಎಂಥಾ ಹೆಸರು? ಮುದ್ದಾಗಿ ಕರೆಯುವ ರೀತಿಯೋ ಅದು? ಹಾಗಾದರೆ ನಿಜವಾದ ಹೆಸರೇನೊ? ನಿಜವಾಗಿಯೂ ಒಬ್ಬ ವ್ಯಕ್ತಿಯ ಹೆಸರು ತಿಳಿದು ಕೊಳ್ಳಬೇಕೆನ್ನಿಸಿದ್ದು ಆಗಲೆ! +ಒಂದು ನಿಮಿಷ ಕಿಟಕಿಯಾಚೆ ನೋಡುತ್ತಿದ್ದೆ. ನಿರ್ಜನವಾದ ನಿರ್ಜೀವವಾದ ಬೀದಿ. ಮಂಕು ವಿದ್ಯುತ್ ಬೆಳಕಲ್ಲಿ ಖಾಲಿಖಾಲಿಯಾದ ಆ ಬೀದಿಯನ್ನ ಕಾಣಲಾಗದೆ ಕಿಟಕಿಯನ್ನ ರೋಷದಿಂದ ಪಟ್ಟೆಂದು ಶಬ್ಧ ಬರುವ ಹಾಗೆ ಮುಚ್ಚಿದೆ. ಪ್ರಥಮ ಬಾರಿಗೆ ಆ ಕಿಟಕಿಯ ಬಗೆಗೆ ದ್ವೇಷ ಉಮ್ಮಳಿಸಿಕೊಂಡು ಬಂದಿತ್ತು. +ಮಲಗಿದಾಗ ಕನಸಿನಲ್ಲಿ ತನ್ನ ಸಹೋದ್ಯೋಗಿಮಿತ್ರನ ಹೆಂಡತಿ ಅಬ್ಬರಿಸಿ ” ನಿಮ್ಮ ರೂಮು ಕೆಳಗಿದಾಳಲ್ಲ, ಆ ಮಲೆಯಾಳದ ಮಿಟಕಲಾಡಿ, ಆಕೆಗೇನು ಗರ್ವಾರೀ, ಯುಗಾದಿ ಹಬ್ಬ , ಬಂದು ಅರಿಶಿನ ಕುಂಕುಮ ಇಟ್ಟುಕೊಡು ಹೋಗೂಂತ ಕರೆದರೆ ಬರಲೇ ಇಲ್ಲ. ಇನ್ನೊಂದು ದಿನ ಓಣಂ ಹಬ್ಬ- ನಮ್ಮ ಮನೆಗೆ ಊಟಕ್ಕೆ ಬನ್ನೀಂತ ಕರೀತಾಳಲ್ರಿ . ನಾಚಿಕೆ ಇಲ್ಲದೋಳು. ನಾನು ಹೋಗ್ತೀನ…ಹುಡುಗರ ಮೇಲೆ ಅದೆಂತಾ ಮೋಡಿ ಮಾಡಿದ್ದಾಳೊ, ಹೋಗ್ತೀವೀಂತ ಹಠ ಹಿಡಿದರು, ನಾಲ್ಕು ತದುಕಿ ಸುಮ್‌ನಾಗಿಸ್ದೆ. ಎಂಥಾ ಧಿಮಾಕೂ ರೀ ಆಕೇದು…” ಎಂದು ಕೂಗಡಿದಳು. ಎಲ್ಲೋ ಇದೆ ಮಾತು ಕೇಳಿದ್ದೆ ಈಗಾಗಲೆ. +ಬೆಳಗಿನ ತನಕ ಅದೇ ರೀತಿಯ ಅಬ್ಬರ. ಕೆಟ್ಟಕೆಟ್ಟದಾಗಿ ನನ್ನ ಕನಸಿನಲ್ಲಿ ನಡೆದೇ ಇತ್ತು. ಬೆಳಿಗ್ಗೆ ಸಂಪೂರ್ಣ ಎಚ್ಚರಾದಾಗ ನಾನು ಉಗಾದಿ ಹಬ್ಬದೂಟಕ್ಕೆ ಸಹೋದ್ಯೋಗಿಮಿತ್ರನ ಮನೆಗೆ ಹೋಗಿದ್ದಾಗ ಆಕೆ ಆಡಿದ್ದ ಮಾತುಗಳೇ ಕನಸಿನಲ್ಲಿ ಬಂದದ್ದೆಂದು ಖಚಿತವಾಗಿತ್ತು. ಇದ್ಯಾಕೆ ಹೀಗೆ ಕನಸಿನಲ್ಲಿ ಪುನರಾವರ್ತನೆಯಾಯಿತೋ ತಿಳಿಯದು. ಎದ್ಡು ಹೊರಗಡೆ ಬಾಗಿಲ ಬಳಿ ಬಿದ್ದಿದ್ದ ಪೇಪರ್ ತಂದು ಬಿಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂಬ ಮುಖ್ಯಮಂತ್ರಿಗಳ ಮಾಮೂಲಿ ಹೇಳಿಕೆ ಶೀರ್ಷಿಕೆಯಾಗಿ ಪ್ರಕಟಗೊಂಡಿದ್ದುದು ನನ್ನ ಕಣ್ಣಿಗೆ ಪ್ರಪ್ರಥಮವಾಗಿ ಬಡಿದು- ಪೇಪರನ್ನ ಓದದೆ ಹಾಗೇ ಬಿಸಾಕಿದೆ. +ಕಿಟಕಿಯ ಮೇಲಿನ ದ್ವೇಷ, ತೀವ್ರವಾಗಿದ್ದರೂ ಚಟ ಸುಮ್ಮನೆ ಬಿಟ್ಟಾತೆ. ಬಹಳ ದಿನಗಳ ನಂತರ ಒಂದು ಬೆಳಿಗ್ಗೆ ತೆಗೆದಾಗ ಮೊದಲು ಗಮನ ಸೆಳೆದದ್ದು ಬೀಗ ತೆಗೆಯದೆ ಬಿಮ್ಮೆಂದು ಇದ್ದ ಲಬ್ಬೆಯ ಪೆಟ್ಟಿಗೆ ಅಂಗಡಿ. ಒಂದು ದಿನವೂ ಮುದುಕ , ಸಮಯಕ್ಕೆ ಸರಿಯಾಗಿ ತೆಗೆವುದು ತಪ್ಪಿಸದಿದ್ದವ ಇಂದೇಕೆ ತೆಗೆಯಲಿಲ್ಲ? ಆರೋಗ್ಯ ಸರಿ ಇಲ್ಲದಿರಬಹುದು ಎಂದು ಸುಮ್ಮನಾದೆ. ಐದಾರು ದಿನಗಳಾದರೂ ತೆಗೆಯಲೇ ಇಲ್ಲ. ಆಮೇಲೊಂದು ದಿನ ಅವನ ಅಂಗಡಿಯ ಬೆಂಚುಗಳನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮಾಮೂಲಿ ಪಟಾಲಂ ಸಿಕ್ಕಿದಾಗ ವಿಚಾರಿಸಿದೆ. ಅವರು ಹೇಳಿದಷ್ಟನ್ನ ಇಲ್ಲಿ ದಾಖಲಿಸುತ್ತಿದ್ದೇನೆ: +” ಆ ಲಬ್ಬೆ ನನ್ಮಗನಿಗೆ ಬಹಳ ಗಾಂಚಾಲಿ ಸಾರ್, ಕನ್ನಡದಲ್ಲಿ ಮಾತೋಡೋಂದರೆ ಬರಾಕಿಲ್ಲ ಅಂತಾನೆ. ಅದಕ್ಕೆ ಯದ್ವಾ ತದ್ವ ದಬಾಯಿಸಿದ್ದಕ್ಕೆ, ಬಂದು ಗಲಾಟೆ ಮಾಡ್ತಾರೇಂತ ಪೊಲೀಸ್ ಕಂಪ್ಲೇಂಟ್ ಮಾಡ್ದಾಂತ ಗೊತ್ತಾಯ್ತು., ಅಷ್ಟೆ , ಅಂಗಡೀನೆಲ್ಲ ಉಡೀಸ್ ಮಾಡ್ಬಿಟ್ವಿ. ಊರಿಗೆ ಓಡಿಹೋದ ಆ ಕಂಜಿವೆಳ್ಳಂ ನನ್ಮಗ…” ಎಂದು ಕೇಕೆ ಹಾಕಿದರು. +ಪೊಲೀಸ್ನೋರ್‍ದು ಒಂದು ವರ್ಶನ್ ಇದೆ: ” ಈ ತುಡುಗು ಮುಂಡೇವು ಸಿಗರೇಟು, ಬಾಳೆ ಹಣ್ಣು, ಟೀ ಅದೂ ಇದೂಂತ ಆಗ ಕೊಡ್ತೀವಿ ಈಗ ಕೊಡ್ತೀವೀಂತ ಮುನ್ನೂರ್ ರೂಪಾಯಿ ಸಾಲ ಉಳಿಸಿಕೊಂಡರಂತೆ. ಒಂದು ದಿನ ಜಬರ್ದಸ್ಥ್‌ನಲ್ಲೇ ಕೇಳಿದ್ನಂತೆ. ಇವ್ರೆಲ್ಲ ಸೇರ್ಕೊಂಡು ಮುಂಡೇ ಮಗನೆ ನಮ್ ದೇಶ್ದಲ್ಲಿ ಬಂದು ಕೆರಕೊಂಡು ತಿಂತೀಯಾಂತ ಅಂಗಡೀನೆಲ್ಲ ಲೂಟಿ ಮಾಡವ್ರೆ…” +ನಾನು ಏನನ್ನು ಪ್ರತಿಕ್ರಿಯಿಸಲಿಲ್ಲ. ಇದರ ಹಿನ್ನೆಲೆಗೆ ಈ ಹುಡುಗರಿಗೆ ಪ್ರೋತ್ಸಾಹವಾಗಿ ಚೂಡನಾಥಯ್ಯರ್ ಇದ್ದರೂನ್ನೋದು ನಿಜ. ಯಾಕಂದ್ರೆ ಅವರು ಆ ಹುಡುಗರನ್ನ ಗುಂಪು ಕಟ್ಟಿಕೊಂಡು ಆಗಾಗೆ ಮಾತಾಡುತ್ತಿದ್ದುದನ್ನು ನಾನೇ ನೋಡಿದ್ದೀನಿ. +ಇನ್ನೂ ಒಂದು ದಿನ , ಡಾಕ್ಟರಮ್ಮನೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗಂಡನ್ನ ಹೋಗಿ ಸೇರಿಕೊಂಡರಂತೆ. ಅದಕ್ಕೂ ಚೂಡನಾಥಯ್ಯರ್‌ರವರ ವ್ಯಂಗ್ಯ ಇಲ್ಲದಿಲ್ಲ: ” ಪಾಪ ಎಷ್ಟು ದಿನಾಂತ ತಾನೆ ಗಂಡನ್ನ ಬಿಟ್ಟಿರ್‍ತಾಳೆ ಹೇಳಿ..” ಆಕೆ ಬೆಂಗಳೂರು ಬಿಡುವುದಕ್ಕೆ ಚೂಡನಾಥಯ್ಯರ್ ಕಲ್ಪಿಸುವ ಕಾರಣ ಇಷ್ಟು. ಮೇಲ್ನೋಟಕ್ಕೆ ಅದಷ್ಟೆ – ಅದರಷ್ಟೆ ನಿಜ ಅನ್ನಿಸುವುದು ಬೇರೊಂದಿಲ್ಲ. ಒಳಕ್ಕೆ ಇಳಿದರೆ ಆ ಮಲಯಾಳಿ ಹೆಂಗಸು ಎಷ್ಟು ಪಾಡು ಪಟ್ಟಿದ್ದಳೋ…. +ನಾನು ಕಿಟಕೀನ ಮತ್ತೆ ಪುನಃ ಬಹಳ ದಿನಗಳು ತೆಗೆಯಲೇ ಇಲ್ಲ. ಅಸಲಿಗೆ ರೂಮೆ ಸೇರುತ್ತಿರಲಿಲ್ಲ. ಬೆಳೆಗ್ಗೆ ಹೋದರೆ ಇನ್ಯಾವಾಗಲೋ ಬಂದು ರೂಮು ಸೇರಿಕೊಳ್ಳುತ್ತಿದ್ದೆ. ಇದ್ದಷ್ಟು ಗಳಿಗೆಯೂ ಆ ರೂಮು ನನ್ನ ಕೊರಳು ಹಿಚುಕುತ್ತಿದ್ದ ಅನುಭವ, ಥೂ ಅಂತ ಉಗೀಬೇಕೂನ್ನಿಸುತ್ತೆ. +ಎಷ್ಟೇ ಅಸಹ್ಯವಾದರೂ ಕಿಟಕೀನ ಇತ್ತಿಚೆಗೆ ತೆಗೆದೇ ಇರ್‍ತೀನಿ. ಅದೂ ಇಲ್ಲದಿದ್ದರೆ ಒಳಗಿನ ಧಗೆಗೆ ಸುಟ್ಟು ಹೋದೇನೋ ಎಂಬ ಭಯ. ಆಗೊಮ್ಮೆ ಈಗೊಮ್ಮೆ ತಂಪು ಗಾಳಿಯಾದರೂ ಬೀಸುತ್ತಿರಲಿ ಅನ್ನೋ ಆಸೆ. +ಆಗೊಮ್ಮೆ ಈಗೊಮ್ಮೆ ಮನ್ನಿ ಕಾಣಿಸ್ತಾ ಇರ್‍ತಾಳೆ. ಆದರೆ ಅವಳು ಹುಡುಗರ ಜೊತೆ ಮಾತಾಡಿದ್ದು ಕಾಣಿಸಲೇ ಇಲ್ಲ. ಆ ಹುಡುಗರೂ ಅಷ್ಟೆ. ಆಕೇನ ನೋಡಿದೊಡನೆ ಓಡಿ ಹೋಗಿ ಕಾಲುಗಳನ್ನ ತಬ್ಬಿಕೊಂಡು ಮನ್ನಿ ಮನ್ನೀಂತ ಲಲ್ಲೆಗರೆಯೋಲ್ಲ. ಇನ್ನೂ ಸಣ್ಣಗಾಗಿದ್ದಾಳೆ. ಆಗಾಗ ತನ್ನ ಮನೇಲಿ ಯಾರೂ ಇಲ್ಲದಾಗ ಹುಚ್ಚು ಹಿಡಿದ ಹಾಗೆ ಕೈಯಲ್ಲಿ ಯಾವುದೋ ಪುಸ್ತಕ ಹಿಡಿದುಕೊಂಡು ಹಾಲ್‌ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತ ಜೋರಾಗಿ ಒದುತ್ತಾ ಇರುತ್ತಾಳೆ. ಬಹುಶಃ ‘ ಲರ್ನ್ ಕನ್ನಡ ಬಯ್ ಯುವರ್ ಸೆಲ್ಫ್ ’ ಇರಬೇಕು. ಮದ್ರಾಸ್ ಯೂನಿವರ್ಸಿಟಿಯ ಎಂ.ಎ ಇಂಗ್ಲೀಶ್ ಮಾಡಿದ್ದಾಳೇನ್ನೊದರ ಲಕ್ಷಣ ಈಗಂತೂ ಕೊಂಚವೂ ಇಲ್ಲ. ಬಂದ ಹೊಸತರಲ್ಲಿ ಕಪ್ಪಗಿದ್ದರೂ ಎಷ್ಟೊಂದು ಲಕ್ಷಣವಾಗಿದ್ದಳು… +ಒಂದೆರಡು ದಿನ ನಾನು ಊರಲ್ಲಿರಲಿಲ್ಲ. ಪತ್ರಿಕೇಲಿ ಬಂದ ಸುದ್ಧಿಯನ್ನು ನಿರ್ಭಾವುಕನಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.: +ಮೈಸೂರು,ಏ.೨೪- ಶಂಕರಪುರಂ ಬಡಾವಣೆಯ ವಠಾರವೊಂದರಲ್ಲಿ ಗೃಹಿಣಿಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. +ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿದ್ದ ಆಕೆಗೆ ಆಕೆಯ ಅತ್ತೆ, ಮಾವ, ಗಂಡ ವರದಕ್ಷಿಣೆಯ ತಗಾದೆ ತೆಗೆದು ಅವಳನ್ನು ಪ್ರತಿನಿತ್ಯ ಹಿಂಸಿಸಿದ್ದಾರೆಂದು ಕೋಲಾರದಲ್ಲಿರುವ ಆಕೆಯ ತಂದೆ ಹಾಗು ಮದ್ರಾಸಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ಆಕೆಯ ಅಣ್ಣ ಆರೋಪಿಸಿದ್ದಾರೆ. +ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. +ನಾನು ಪುನಃ ಎಂದಿಗೂ ಆ ಕಿಟಕೀನ ತೆಗೀಲೆ ಇಲ್ಲ. ಮನ್ನಿ ಎಂದರೆ ತಮಿಳಿನಲ್ಲಿ ‘ ಅತ್ತಿಗೆ’ ಎಂದರ್ಥ ಎಂಬುದನ್ನು ಇತ್ತೀಚೆಗೆ ತಾನೆ ತಿಳಿದುಕೊಂಡೆ. ಹಾಗೆಯೇ ಆಕೆಯ ಹೆಸರನ್ನೂ ಪತ್ರಿಕೆಗಳ ವರದಿಗಳ ಮುಖಾಂತರವೇ ತಿಳಿದುಕೊಂಡದ್ದು. ಬಹಳ ಮುದ್ದಾದ ಅಂದವಾದ ಹೆಸರು- ಇಳಂಗೊಡಿ. ಇಳಂಗೊಡಿ ಎಂದರೆ ಎಳೆಯ ಬಳ್ಳಿಯಂತೆ. +ನಾನು ಕಿಟಕಿ ತೆಗೀಲೆ ಇಲ್ಲ ಅಂತೆ ಹೇಳಿದೆನಲ್ಲವೆ? ಯಾಕೆಂದರೆ ನಾನು ಒಂದಾನೊಮ್ಮೆ ಗಾಢವಾಗಿ ಪ್ರೀತಿಸಿದ್ದ ಆ ರೂಮು ಬಿಟ್ಟು ಬಹಳ ದೂರದಲ್ಲಿ ಬೇರೊಂದು ರೂಮು ಹಿಡಿದಿದ್ದೀನಿ.! +ಈ ರೂಮಲ್ಲಿ ಕಿಟಕಿಗಳೆ ಇಲ್ಲ. ಗವಾಕ್ಷಿಯಂತದೇ ಎಂಥದೋ ಒಂದು ಇದೆ, ಬಹಳ ಎತ್ತರದಲ್ಲಿರೋ ಅದನ್ನು ನಾನು ತೆಗೆಯೋ ಸಂದರ್ಭವೇ ಇಲ್ಲ. +ಈ ರೂಮತೂ ನನ್ನ ಕೊರಳನ್ನ ಹಿಚುಕುತ್ತಾ ಇದೆ. ನಾನು ಇಲ್ಲೇ ಸತ್ತೋಗ್ತೀನೇನೋ ಅಂತನ್ನಿಸ್ತಿದೆ. +ಮನ್ನಿ ಆತಹತ್ಯೆಗೆ ಅವರಪ್ಪ ಹೇಳಿದ ಹಾಗೆ ಬರೀ ವರದಕ್ಷಿಣೆ ಬಾಕಿ ಮಾತ್ರ ಕಾರಣವೋ ಅಥವ ಬೇರಿನ್ನೇನಾದರು ಇತ್ತೆ? ನನಗಂತೂ ಸ್ಪಷ್ಟವಾಗಿಲ್ಲ. ಅದರ ಬಗೆಗಿನ ಪ್ರಶ್ನೆಗಳೂ ಈ ರೂಮಿನೊಂದಿಗೆ ಕೂಡಿಕೊಂಡು ಕೊರಳನ್ನು ಹಿಚುಕುತ್ತಲೇ ಇದೆ. +***** +ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ- ಜೂನ್-೧೯೮೬ +ಇಂಗ್ಲೀಷಿನಲ್ಲಿ ಎರಡು ಸಾಲು ಮಾಡಬೇಕು. ಕತೆ ಬರೆಯುವ ವಿಶ್ವಾಸವನ್ನು ಅವನ ಕೆಲ ಸ್ನೇಹಿತರು ಕೇಳುತ್ತಲೇ ಇರುತ್ತಾರೆ. ನೀವು ಕತೆ ಹೇಗೆ ಬರೆಯುತ್ತೀರಿ? ಮೂಡ್ ಯಾವಾಗ ಬರುತ್ತೆ? ಹೀಗೇ ಇರಬೇಕೂಂತ ನಿರ್ಧಾರ ಮಾಡಿ ಬರೀತೀರಾ? ಸಂಭಾಷಣೆ […] +ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. […] +ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_261.txt b/Kannada Sahitya/article_261.txt new file mode 100644 index 0000000000000000000000000000000000000000..2be502a24d3e5039c2663836a0379a5da63a496b --- /dev/null +++ b/Kannada Sahitya/article_261.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನಗೆ ಇದು ತಿಳಿಯುವುದಿಲ್ಲ +ಸುಮ್ಮನಿರು ನೀನು +ಎಂದನ್ನುತ್ತಲೇ ಅಪ್ಪ ಸತ್ತ +ಅಜ್ಜ ಸತ್ತ…… ನೀನಿನ್ನೂ ಮಗು +ಅನ್ನುತ್ತಾ ಎಲ್ಲರೂ ಸತ್ತರು +ನಾನೊಬ್ಬ ಉಳಿದೆ +ನನಗದು +ತಿಳಿಯಲಿಲ್ಲ. +ಬೇಡವೇ ಬೇಡ ಎಂದು +ನಾನೂ ಸಾಯಲಿಲ್ಲ… ತಪ್ಪಿ +ಬದುಕಲೂ ಇಲ್ಲ. +ಅವರಂದದ್ದನ್ನೇ ಹಿಡಿದು ಬಾಯಿ +ಪಾಠ ಮಾಡುತ್ತಿದ್ದೆ. +ಒಂದು ದಿನ ಕನಸಲ್ಲೂ +ದೊಡ್ಡ ರಂಪ… +ಸದ್ದುಗದ್ದಲ ಕಂಪ… +ಒಮ್ಮೆಗೇ ಚೀರಿಕೊಂಡೆ. +‘ಏನಾಯ್ತುರೀ’- ಎಂದಳು +ಬದಿಯಲ್ಲಿದ್ದವಳು +ನಕ್ಕಳು ಮುಸಿಮುಸಿ +`ನಿನಗದು ತಿಳಿಯೋಲ್ಲ ಬಿಡೇ’- ಎಂದೆ +ಸರಿದಳು ಹತ್ತಿರ. ಅವಳನ್ನೆಳೆದುಕೊಂಡೆ +‘ತಿಳಿಯಿತು ಬಿಡಿ’- ಅಂದಳು. +ನಕ್ಕೆ ಪೆಚ್ಚಾಗಿ +ನನಗದು ತಿಳಿಯಲಿಲ್ಲ. +***** +ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […] +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +– ೧ – ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ ಗದೇ ಮಾಮೂಲು ಭಂಗಿ; ಯಾರೂ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_262.txt b/Kannada Sahitya/article_262.txt new file mode 100644 index 0000000000000000000000000000000000000000..08795af9c370c88c098be4fe1cd14b0a80b9da93 --- /dev/null +++ b/Kannada Sahitya/article_262.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಿಕ್ಷುಕನಿಗೆ +ಕಾಸು ಎಸೆಯದಿದ್ದರು +ಚಿಂತೆಯಿಲ್ಲ; +ಅವನೆದುರು +ಕಿಸೆಯಲ್ಲಿ +ಕೈ ಹಾಕದಿರು. +***** +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ ***** +ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_263.txt b/Kannada Sahitya/article_263.txt new file mode 100644 index 0000000000000000000000000000000000000000..c37e36d3b49514ba3778465acce89bd8a6ef71bb --- /dev/null +++ b/Kannada Sahitya/article_263.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೆಹಲಿಯೊಳಗೇ ಇದ್ದೂ ಇದು ದೆಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲಿ ಈ ಪುಟ್ಟ ಮಿತ್ರಕೂಟವನ್ನು ಏರ್ಪಡಿಸಿ ಓಂಪ್ರಕಾಶ್‌ಜಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಋಣಿ. ಯಾವ ಸಾಂಪ್ರದಾಯಿಕತೆಯಿಲ್ಲದೆ ಇಲ್ಲಿ ನಾವು ವಿರಾಮವಾಗಿ ಮಾತುಕತೆಯಾಡಬಹುದೆಂದೂ ಮಾತುಕತೆಗೆ ಚಾಲನೆ ಕೊಡಲಿಕ್ಕಾಗಿ ಪ್ರಾರಂಭದಲ್ಲಿ ನಾನು ಒಂದು ಟಿಪ್ಪಣಿಯನ್ನು ಮಂಡಿಸಬೇಕೆಂದೂ ಅವರು ಸೂಚಿಸಿದರು. ಒಪ್ಪಿಕೊಂಡೆ. ತಟ್ಟನೆ, ‘ಕನ್ನಡದ ಬಗ್ಗೆಯೇ ಮಾತಾಡುತ್ತೇನೆ’ ಅಂತಲೂ ಹೇಳಿದೆ. ‘ಕನ್ನಡ’ದ ವಿಷಯವಾಗಿ ಮಾತಾಡುತ್ತೇನೆಂದು ತಟ್ಟನೆ ಅನೈಚ್ಚಿಕವಾಗಿ ಹೇಳಲು ಅದಾವ ನನ್ನ ಒಳಗೈನ ಒತ್ತಡ ಕಾರಣವಿದ್ದೀತು ಅಂತ ಯೋಚಿಸುತ್ತೇನೆ. ನನಗೆ ಸಲೀಸಾಗಿ ಬರುವ ಭಾಷೆ ಇದೊಂದೇ ಆಗಿರುವ ಕಾರಣ ಕನ್ನಡದಲ್ಲಿ ಮಾತಾಡಲು ಸಾಧ್ಯವಿಲ್ಲವಾಗಿದ್ದ ಕಾರಣ ಕನ್ನಡದ ಬಗ್ಗೆಯಾದರೂ ಮಾತಾಡಬದುದಲ್ಲ, ಅಂತ ನನಗೆ ಅನ್ನಿಸಿರಬೇಕು, ಆಥವಾ ಏನೇ ಮಾತಾಡಲಿ ಯಾವುದೇ ಭಾಷೆಯಲ್ಲಿ ಮಾತನಾಡಲಿ, ವಾಸ್ತವಾವಾಗಿ ನಾನು ಮಾತಾಡುವುದೆಲ್ಲಾ ಕನ್ನಡದಲಿಯೇ ಮತ್ತು ಕನ್ನಡದ ಬಗ್ಗೆಯೇ ಎಂದರೂ ತಪ್ಪಾಗಲಿಕ್ಕಿಲ್ಲ. +ಅಚಾನಕವಾಗಿ ಈ ಜಗತ್ತಿಗೆ ನಾನು ಬಂದುಬಿದ್ದಾಗ, ನನ್ನ ತಾಯಿ ಮತ್ತು ಬಳಿ ಬಳಗದವರು ನನ್ನ ತುಟಿಗಳೊಳಕ್ಕೆ ಕನ್ನಡ ಶಬ್ದಗಳ ಮೂಲಕವೇ ನನ್ನ ಮನಸ್ಸು ನಿಧಾನವಾಗಿ ಈ ಜಗತ್ತನ್ನು ಗ್ರಹಿಸುವ ಹಾಗೆ ಮಾಡಿದರು.ಶಬ್ದಗಳು ನನಗೆ ಹೆಸರುಗಳನ್ನು ಕೊಟ್ಟವು; ಹೆಸರುಗಳು ಆಕಾರಗಳನ್ನು ಮೂಡಿಸಿದವು; ಈ ಆಕೃತಿಗಳೇ, ಈ ಆಕೃತಿಗಳನ್ನು ಕಲ್ಪಿಸಿದ ಕನ್ನಡದ ಶಬ್ದಗಳೇ ನನ್ನ ಪ್ರಪಂಚ, ಇವೊತ್ತಿಗೂ. ಈ ಶಬ್ದಗಳಿಲ್ಲದಿದ್ದರೆ ಗ್ರಹಿಕೆಯೇ ಇಲ್ಲವಲ್ಲ? ಪ್ರತಿಕ್ರಿಯೆಯೆಂಬುದೇ ಇಲ್ಲವಲ್ಲ? ಆಗ ನಾನು ಕಿವುಡ, ಕುರುಡ, ಮೂಕ, ಒಂದು ಕಲ್ಲು ಅಷ್ಟೇ. ಆಗ ಜಗತ್ತು ಎನ್ನುವುದೇ ಇಲ್ಲ. +ದೆಹಲಿಯ ಈ ದೂರದಿಂದ ಅಥವಾ ಭೂಮಿಯ ಇನ್ನೂ ದೂರದ ಇನ್ನಿತರ ನೆಲೆಗಳಿಂದ ನಿಂತು ನೋಡುವಾಗ ನನ್ನ ಕನ್ನಡದ ನೆಲ, ನನ್ನ ಕನ್ನಡದ ಭಾಷೆ ಮುಂತಾದವು ಅದೆಷ್ಟು ಸಣ್ಣದಾಗಿ, ನಗಣ್ಯವಾಗಿಕೂಡಾ ಕಂಡೀತು ಅಂತ ನಾನು ಊಹಿಸಬಲ್ಲೆ. ಭೂಮಿಗೋಲದ ಮೇಲೆ ಗುರುತಿಸಲು ಹೋದರೆ, ಫುಟ್‌ಬಾಲ್ ಚೆಂಡಿನ ಮೇಲೆ ಅಂಟಿಸಿರುವ ಒಂದು ಕಿರು ಅವರೆಬೇಳೆಯ ಹಾಗೆ ಕಾಣಿಸುತ್ತದೆ ನನ್ನ ಕರ್ನಾಟಕ. ಪ್ರಪಂಚದ ಹಲವಾರು ನೂರು ಭಾಷೆಗಳಲ್ಲಿ ಇದೂ ಒಂದು ಕಿರು ಭಾಷೆ ಅಷ್ಟೇ. ಈ ದೇಶದಲ್ಲೆ ನೋಡುವುದಾದರೂ ಇದರ ಹಾಗೆ ಬೆಳೆದು ನಿಂತಿರುವ ಹದಿನೈದಿಪ್ಪತ್ತು ಇನ್ನಿತರ ಭಾಷೆಗಳು ಕಾಣ ಸಿಗುತ್ತವೆ. ಪ್ರಾಯಶಃ, ಇತ್ತೀಚಿನ ತನಕ ದೆಹಲಿಯಲ್ಲಿರುವ ಬಹುಜನರಿಗೆ ಕನ್ನಡವೆಂಬ ನುಡಿ ಮತ್ತು ನೆಲ ಇದೆಯೆನ್ನುವುದೂ ಗೊತ್ತಿರಲಿಲ್ಲ. ವಿಂಧ್ಯದ ದಕ್ಷಿಣಕ್ಕೆ ಕೆಳಗಿರುವ ಜನರಾಶಿಯಷ್ಟೂ ‘ಮದ್ರಾಸಿ’ ಯೆಂದೇ ಅವರ ತಿಳಿವಳಿಕೆಯಾಗಿತ್ತು. +ಹೊರಗಿನವರ ಮಾತಿರಲಿ, ಜಾಗತೀಕರಣ- ಜಗತ್‌ಗ್ರಾಮಗಳೆಂಬ ಬಣ್ಣಬಣ್ಣದ ಚಿಟ್ಟೆಮಾತುಗಳು ತಲೆಯಮೇಲೇ ದಟ್ಟಯಿಸಿ ಹಾರಾಡುತ್ತಿರುವ ಇವತ್ತಿನ ಸಂದರ್ಭದಲ್ಲಿ, ನಮ್ಮವರೇ ಆದ ಹೊಸ ಯುವಕರು ಅಮೆರಿಕವೊ ಮತ್ತೊಂದೋ ಮಿಟಿಮಿಟಿ ಸ್ವರ್ಗದ ಕಣಸು ಕನಸುಗಳನ್ನು ಕಣ್‌ಕಿವಿಗಳಲ್ಲಿ ತುಂಬಿಕೊಂಡು, ಕನ್ನಡವೆನ್ನುವ ಕಿರುತನದ ಮಾತು ಕೇಳಿದರೇ ಮುಜುಗರಗೊಳ್ಳುತ್ತಾರೆ. ಕನ್ನಡವೆಂಬ ಕಿರುಕೂಪದ ಕನ್ನಡಿಯಲ್ಲಿ ತಮ್ಮ ಚಹರೆಯ ಬಿಂಬವನ್ನು ಗುರುತಿಸಿಕೊಳ್ಳಲು ಬೆಚ್ಚುತ್ತಾರೆ. +ಕನ್ನಡವು ಚಿಕ್ಕದು, ನಿಜ. ಜಗತ್ತಿನ ತುಂಬ ಇರುವ ಕನ್ನಡದಂಥ ಅಸಂಖ್ಯಾತ ಸ್ಥಳ ಭಾಷೆಗಳು ಚಿಕ್ಕವೇ. ಹಾಗಿದ್ದರೂ ಜಗತ್ತಿನ ತುಂಬ ಇರುವ ಇಂಥ ಕಿರುನೆಲ-ಕಿರುಭಾಷೆ-ಕಿರು ಸಮುದಾಯಗಳು ತಮ್ಮ ಕಿರುತನವನ್ನು ಎಂತೋ ಮೀರಿಕೊಂಡು, ತಮ್ಮ ಕಿರುಕೂಪದಲ್ಲೂ ತಮ್ಮ ಸುತ್ತ ಜಗದಗಲ ಅನಂತ ವಿಶ್ವಾಕಾಶವನ್ನು ಸೃಜಿಸಿಕೊಂಡು ಬಾಳಿಬಂದಿದ್ದಾರೆ. ಇದನ್ನು ಮರೆಯಬಾರದು. +ಕನ್ನಡಕ್ಕೇ ಬಂದರೆ, ಕರ್ಣಾಟಕವೆಂದು ಈಗ ನಾವು ಗುರುತಿಸುವ ಈ ನಾಡು, ಭಾರತದ ಒಟ್ಟೂ ಭೂಭಾಗದಲ್ಲಿ ಅತ್ಯಂತ ಪ್ರಾಚೀನವೂ ಬಹು ಸ್ಥಿರವೂ ಆದ ದಖನ್ ಪ್ರಸ್ಥಭೂಮಿಯ ಭದ್ರಪೀಠದ ಮೇಲೆ ದೃಡವಾಗಿ ನಿಂತಿದೆ. ‘ಪೃಥಿವ್ಯಾ ಮಾನದಂಡ ಇವ’ ‘ನಗಾಧಿರಾಜಃ’ ಅಂತೆಲ್ಲ ಕಾಲಿದಾಸನು ಬಣ್ಣಿಸುವ ಜಗತ್ತಿನ ಉನ್ನತೋನ್ನತ ಪರ್ವತವಾದ ಹಿಮಾಲಯವು ನಮ್ಮ ಪ್ರಸ್ಥಭೂಮಿಗೆ ಹೋಲಿಸಿದರೆ ಇನ್ನೂ ಪ್ರಾಯಬಂದಿಲ್ಲದ ಹಸುಳೆ. ಹಿಮಾಲಯದಲ್ಲಿ ಗ್ರಾನೈಟ್ ಶಿಲೆಯು ಸಿಕ್ಕುವುದಿಲ್ಲ. ಗ್ರಾನೈಟ್ ಬೆಳೆದು ಹರಳುಗಟ್ಟಿಕೊಳ್ಳಲಿಕ್ಕೆ ಬೇಕಾಗುವ ಎಷ್ಟೋ ಕೋಟಿ ಕೋಟಿ ವರ್ಷಗಳ ಪ್ರೌಢಿಮೆಗೆ ಅದಿನ್ನೂ ಕಾಯಬೇಕು. ಈ ನಾಡಿನ ಪಶ್ಚಿಮದಲ್ಲಿ ಸಮುದ್ರವೂ ಉದ್ದನೆಯ ಕರಾವಳಿ ಪ್ರದೇಶವೂ ಲಗತ್ತಾಗಿಕೊಂಡಿದೆ. ವಿಂಧ್ಯಾಂತವಾದ ಉತ್ತರ ಭಾರತಕ್ಕೆ ಹೊಸತಿಲೆನ್ನುವ ಹಾಗೆ, ಉತ್ತರಾಪಥ-ದಕ್ಷಿಣಾಪಥಗಳ ನಡುವಿನ ಸೇತುವೆಯೆನ್ನುವ ಹಾಗಿದೆ, ಈ ಭೂಭಾಗ. ಇಲ್ಲಿ ಕನಿಷ್ಠ ಐದು ವರ್ಷಗಳಿಂದಲೂ ಮಾನವ ವಸತಿಯಿದ್ದಿತೆನ್ನುವುದನ್ನು ಪುರಾತತ್ತ್ವಶೋಧಗಳು ಖಚಿತಪಡಿಸಿವೆ. ಉತ್ತರ-ದಕ್ಷಿಣಗಳ ಸಂಚಾರ-ಪ್ರತಿಸಂಚಾರಗಳಿಗೆ ಸೇತುವೆಯಾಗಿರುವುದು, ಪಶ್ಚಿಮದ ಸಪಾಟು ಸಮುದ್ರದ ಮೂಲಕ ಪಶ್ಚಿಮ ಭೂಖಂಡಗಳಿಗೆ ಮುಕ್ತವಾಗಿ ತೆರೆದುಕೊಂಡಿರುವುದು ಮತ್ತು ಲಕ್ಷಾಂತರ ವರ್ಷಗಳ ಜನವಸತಿಯ ದೀರ್ಘದಾಖಲೆ-ಈ ಮುಂತಾದ ವೈಶಿಷ್ಟ್ಯಗಳಿಂದಾಗಿ ಈ ಭೂಭಾಗದಲ್ಲಿ ದೀರ್ಘಕಾಲದಿಂದಲೂ ಅನೇಕಾನೇಕ ಜನಾಂಗ-ಬುಡಕಟ್ಟು-ಧರ್ಮ-ಭಾಷೆಗಳ ಸಂಕರ-ಸಮನ್ವಯಗಳು ನಡೆಯುತ್ತಲೇ ಬಂದಿವೆ. ಇದರಿಂದಾಗಿ ಇವತ್ತಿನ ಕನ್ನಡ ಜನಪದದಲ್ಲಿ ಇಡೀ ಜಗತ್ತಿನ ಅನೇಕಾನೇಕ ಜನಾಂಗ-ಕುಲ-ಬುಡಕಟ್ಟುಗಳೂ ಧರ್ಮ-ಸಂಸ್ಕೃತಿಗಳೂ ಅರಗಿಕೊಂಡಿವೆ. +ಕನ್ನಡವು ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ್ದೆಂದು ಭಾಷಾಶಾಸ್ತಜ್ಞರು ನಿರ್ಣಯಿಸಿದ್ದಾರೆ. ಈ ದ್ರಾವಿಡ ಭಾಷಾ ಕುಟುಂಬವೆಂಬುದು ಮೂಲತಃ, ಫಿನ್‌ಲೆಂಡ್‌ನಿಂದ ಮಧ್ಯಮಂಗೊಲಿಯ ತನಕ ಹಬ್ಬಿರುವ ಫಿನ್ನೊ-ಉಗ್ರಿಯನ್ ಭಾಷಾವರ್ಗಕ್ಕೆ ಸೇರಿದ್ದಿರಬೇಕೆಂದು ಹಲವು ಭಾಷಾಶಾಸ್ತಜ್ಞರು ಊಹಿಸಿ ಪ್ರತಿಪಾದಿಸಿದ್ದಾರೆ. ಅಂದರೆ, ಈ ಭಾಷಾ ಮೂಲದ ಒಂದು ಶಾಖೆಯು ಹಲವು ಸಹಸ್ರಮಾನದ ಭೂತಕಾಲದಲ್ಲಿ ಎಂದೋ ಸಂಚಲನೆ ತೊಡಗಿ ಯುರೋಪಿನ ಉದ್ದಗಲಗಳಲ್ಲಿ ಅಲೆಯುತ್ತ ಕ್ರಮೇಣ ಆಫ್ಘಾನಿಸ್ತಾನಕ್ಕೆ ಬಂದಿತು; ಅಲ್ಲಿಂದ ಮತ್ತೆ ಸಂಚಾರ ಹೊರಟು ಭಾರತದ ಮಧ್ಯಪ್ರದೇಶಕ್ಕೆ ಬಂದು ಅಲ್ಲಿ ಕೆಲಕಾಲ ತಂಗಿ ಅಲ್ಲಿಂದ ಪುನಃ ದಕ್ಷಿಣದ ಯಾತ್ರೆಯನ್ನಾರಂಭಿಸಿ ದಖನ್‌ನ್ನು ಪ್ರವೇಶಿಸಿತು; ಅಂತಿಮವಾಗಿ ಈ ದಕ್ಷಿಣ ಪರ್ಯಾಯ ದ್ವೀಪದಲ್ಲಿ ನೆಲೆಸಿತು. ಎಷ್ಟೋ ಸಹಸ್ರ ವರ್ಷಗಳಲ್ಲಿ ನಡೆದಿರಬಹುದಾದ ಈ ಯುಗಯುಗ ಯಾತ್ರೆಯು ಇವತ್ತು ಯೋಚಿಸಿದರೆ ವಿಸ್ಮಯ ಹುಟ್ಟಿಸುತ್ತದೆ. ಈ ದೀರ್ಘಯಾತ್ರೆಯಲ್ಲಿ ಆ ಮೂಲಭಾಷಾಶಾಖೆಯು ಅದೆಷ್ಟು ಭಾಷಾ ಸಮುದಾಯಗಳಲ್ಲಿ ಹೊಕ್ಕು ನೆಲೆಸಿ ಬಳಸಿ ಆ ಭಾಷೆಗಳ ಸಾಹಚರ್ಯ-ಸಂಘರ್ಷ-ಸಂಧಾನಗಳಲ್ಲಿ ಅವುಗಳ ಶಬ್ದ-ವ್ಯಾಕರಣ ಸಾರಗಳನ್ನು ಅರಗಿಸಿಕೊಳ್ಳುತ್ತ ಬದಲಾಗುತ್ತ ಬೆಳೆದುಕೊಳ್ಳುತ್ತ ಬಂದಿತೋ ದೇವರೇ ಬಲ್ಲ. ಹೀಗೆ ಪ್ರಾಯಃ ಕ್ರಿಸ್ತನಿಗಿಂತ ಮೊದಲು ಸಾವಿರ ವರ್ಷಗಳಿಗಿಂತ ಹಿಂದೆಯೇ ಇಲ್ಲಿ ಬಂದು ನೆಲೆಸಿ ‘ದ್ರಮಿಳ’ ದ್ರಾವಿಡ ಇತ್ಯಾದಿ ಹೆಸರುಗೊಂಡು ಈ ಭಾಷೆಯು ಕ್ರಿಸ್ತಪೂರ್ವದ ಎರಡುಮೂರು ಶತಮಾನಗಳಲ್ಲಿ ಒಡೆದುಕೊಳ್ಳತೊಡಗಿತು ಮತ್ತು ಮೊದಲಿಗೆ ತಮಿಳು ಹಾಗೂ ಅನಂತರ ಕನ್ನಡವು ಪ್ರತ್ಯೇಕ ಭಾಷೆಯಾಗಿ ಅಸ್ತಿತ್ವ ಕಂಡುಕೊಂಡಿತು. ವಿಭಜನೆಗೆ ಹಿಂದಿನ ಸಾವಿರಾರು ವರ್ಷ ಮಿಕ್ಕಿದ ಇಲ್ಲಿನ ವಾಸ್ತವ್ಯದಲ್ಲಿ ಹಾಗೂ ಆಮೇಲೆ ಕನ್ನಡಭಾಷೆಯು ಕನ್ನಡ ದೇಶವೆನಿಸಿ ಭಾಷೆ-ಸಂಸ್ಕೃತಿ-ಸಮುದಾಯ, ಭೌಗೋಲಿಕ ರಾಜ್ಯಗಳೆಲ್ಲದರ ಏಕೀಕೃತ ಸಾವಯವ ಘಟಕವಾಗಿ ಹರಳುಗಟ್ಟಿಕೊಳ್ಳುವತನಕ ಎಂಟೊಂಬತ್ತು ಶತಮಾನಗಳಲ್ಲಿ ಕೂಡಾ ಈ ಭಾಷೆಯು, ‘ಮಾರ್ಗಭಾಷೆ’ ಯೆನ್ನುವಂತಿದ್ದ ಸಂಸ್ಕೃತದೊಡನೆಯೂ ಪ್ರಾಕೃತ ಮತ್ತು ಪೈಶಾಚಿ ಅಪಭ್ರಂಶ ಇತ್ಯಾದಿ ಇನ್ನಿತರ ದೇಶಿಭಾಷೆಗಳೊಡನೆಯೂ ಒಡನಾಡಿಕೊಳ್ಳುತ್ತ, ಕೊಳು ಕೊಡುಗೆಯ ಅನುಸಂಧಾನದಲ್ಲಿ ಬೆಳೆದುಕೊಳ್ಳುತ್ತ ಬಂದಿತು. ಅಲ್ಲಿಂದ ಮುಂದಿನ ಈ ತನಕದ ಸಹಸ್ರಮಾನದಲ್ಲಿ ಕೂಡಾ ಅರಬ್ಬಿ-ಫಾರ್ಸಿ-ಪೋರ್ತುಗೀಸ್-ಇಂಗ್ಲಿಷ್‌ಗಳು ಯಜಮಾನಿಕೆಯಲ್ಲಿ ಹೆಗಲೇರಿ ಕೂತಿದ್ದಾಗಲೂ ಕನ್ನಡವು ಎದೆಗುಂದಿ ಕುಗ್ಗದೆ ಆ ಭಾಷೆಗಳಿಂದ ಸಾಧ್ಯವಾದ ಲಾಭಗಳನ್ನೆಲ್ಲ ಪಡೆದುಕೊಂಡಿತು. +ಸಮುದಾಯಗಳಲ್ಲಿ ಭಿನ್ನತೆಯನ್ನು ಕಲ್ಪಿಸುವ ಇನ್ನೊಂದು ಸಂಗತಿಯೆಂದರೆ, ‘ಧರ್ಮ’. ಕ್ರಿಸ್ತಪೂರ್ವದ ಸಹಸ್ರಮಾನವನ್ನು ಪರಿಗಣಿಸಿದರೆ ಈ ಭಾಗದ ಜನಸಮುದಾಯವು, ಸ್ಥಳೀಯವಾಗಿದ್ದಿರಬಹುದಾದ ಹತ್ತು ಹಲವು ಧಾರ್ಮಿಕ ಪಂಥಗಳ ಜತೆಗೆ ವೈದಿಕೋತ್ತರ ಧರ್ಮದಿಂದಲೂ ಬೌದ್ಧ ಧರ್ಮದಿಂದಲೂ ಪ್ರಭಾವಗೊಂಡಿರಬೇಕು. ಕ್ರಿಶ್ಟನ ಅನಂತರ ಸಹಸ್ರಮಾನದಲ್ಲಿ ಬೌದ್ಧ-ಜೈನ-ಶೈವ-ಸ್ಮಾರ್ತ-ವೈಷ್ಣವ-ತಾಂತ್ರಿಕ ಇತ್ಯಾದಿ ಧರ್ಮಗಳು ಇಲ್ಲಿ ಪ್ರಭಾವಕಾರಿಯಾಗಿದ್ದವು. ಈ ಅವಧಿಯಲ್ಲಿ ಬಹಳ ಕಾಲ ಜೈನ ಧರ್ಮವು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ನಿರ್ಮಾಣದ ಹೊಣೆ ಹೊತ್ತು ನಿಂತಿತ್ತು. ಈ ಎರಡನೇ ಸಹಸ್ರಮಾನದಲ್ಲಿ ನಮ್ಮ ಕನ್ನಡ ಜನಪದವು ಹಿಂದಿನ ಧರ್ಮಗಳಲ್ಲದೆ ಶೈವ-ವೀರಶೈವ-ತಾಂತ್ರಿಕ-ಭಕ್ತಿಪಂಥಗಳಿಂದಲೂ ಅದಕ್ಕೆ ಮುಂದೆ ಇಸ್ಲಾಮ್-ಸೂಫಿ-ಕ್ರೈಸ್ತ ಮುಂತಾದ ವಿದೇಶಿ ಧರ್ಮಗಳಿಂದಲೂ ಗಾಢವಾಗಿ ಪ್ರಭಾವಗೊಂಡಿತು. ಇತಿಹಾಸದ ಈ ಸಂಗತಿಗಳನ್ನೆಲ್ಲಾ ಗಮನಿಸಿದಾಗ ಇವತ್ತಿನ ನಾವು ಕನ್ನಡಿಗರು ಜಗತ್ತಿನ ಬಹುತೇಕ ಎಲ್ಲಾ ಜನ-ಜನಾಂಗ-ಬುಡಕಟ್ಟು-ಧರ್ಮ-ಜಾತಿಗಳನ್ನೂ ಅರಗಿಸಿಕೊಂಡಿರುವ ವಿಶ್ವಮಾನವರುಮತ್ತು ನಮ್ಮ ಕನ್ನಡವು ಜಗತ್ತಿನ ಅಸಂಖ್ಯ ಭಾಷೆಗಳನ್ನು ಅರಗಿಸಿಕೊಂಡಿರುವ ವಿಶ್ವಭಾಷೆ. ಹಾಗೆ ನಮ್ಮದು ಕನ್ನಡ ಕೂಪವಲ್ಲ, ಕನ್ನಡ ವಿಶ್ವ, ಕನ್ನಡ ಬ್ರಹ್ಮಾಂಡ. +ಇದು ಕನ್ನಡಕ್ಕೆ ಮಾತ್ರವೇ ಅನ್ವಯಿಸುತ್ತದೆ ಅಂತಲೂ ಅಲ್ಲ. ಜಗತ್ತಿನ ಎಲ್ಲ ಜನ ಸಮುದಾಯಗಳೂ ಎಲ್ಲಭಾಷೆಗಳೂ ವಾಸ್ತವವಾಗಿ ಇಂಥ ಪ್ರಕ್ರಿಯೆಯಲ್ಲಿಯೇ ರೂಪುಗೊಂಡವು ಮತ್ತು ಅವೆಲ್ಲವೂ ವಿಶ್ವಜನ-ವಿಶ್ವಭಾಷೆಗಳೇ. ಕನ್ನಡ ಭಾಷೆಯ ಮೂಲದ ಮೂಲವು ‘ಫಿನ್ನೊ-ಉಗ್ರಿಯನ್’ ಎಂದೆನ್ನುವ ಊಹೆಯು ನಿಲ್ಲದೆ ಹೋಗಬಹುದು; ಅದು ಸುಳ್ಳೆಂದು ಮುಂದೆ ಯಾರಾದರೂ ಸಂಶೋಧನೆಯಿಂದ ಸಾಬೀತುಗೊಳಿಸಬಹುದು. ಅದೇನಾದರೂ ನನಗೆ ಚಿಂತೆಯಿಲ್ಲ. ಯಾಕೆಂದರೆ, ವಾಸ್ತವ ಸತ್ಯದ ‘ಇತಿಹಾಸ’ ವಾಗಿಯಲ್ಲದ ಸಂಭಾವ್ಯ ಸತ್ಯದ ‘ಐತಿಹ್ಯ’ ವಾಗಿ ನಾನಿದನ್ನು ಒಪ್ಪಿಕೊಂಡಿದ್ದೇನೆ. ಎಲ್ಲಾ ಭಾಷೆಗಳ ಬೆಳವಣಿಗೆಯ ಪ್ರಕ್ರಿಯೆಯೂ ಹೀಗೇ ಆಗಬೇಕಲ್ಲದೆ ಬೇರೆ ಪರ್ಯಾಯವೇ ಇಲ್ಲ. ಅದ್ಯಯನ ಸೌಲಭ್ಯಕ್ಕಾಗಿ ಶಾಸ್ತಜ್ಞರು ಜನಗಳಲ್ಲಿ ಮತ್ತು ಭಾಷೆಗಳಲ್ಲಿ ಅನೇಕ ವರ್ಗ ಉಪವರ್ಗಗಳನ್ನು ಕಲ್ಪಿಸಿರುತ್ತಾರೆ. ಅವೆಲ್ಲ‘ಕೇವಲ’ವೆಂದು ಅಥವಾ‘ವಾಸ್ತವ’ವೆಂದು ನಂಬಿ ಮೋಸ ಹೋಗಬಾರದು. ‘ಕೇವಲಸ್ವಂತಿಕೆ’ ಯ ಶುದ್ಧ ಜನವಾಗಲೀ ಶುದ್ಧ ಭಾಷೆಯಾಗಲೀ ಜಗತ್ತಿನಲ್ಲಿ ಇಲ್ಲವೇ ಇಲ್ಲ. +ಇದಾದ ಮೇಲೆ, ಒಂದೊಂದು ಜನವರ್ಗ-ಭಾಷಾವರ್ಗ ಇವೂ ಕಾಲಕಾಲಕ್ಕೆ ತನ್ನದೆಂಬ ಸ್ವಂತಿಕೆಯ ಬಣ್ಣಗಳನ್ನು ಹೊರಗೊಳಿಸಿಕೊಳ್ಳುತ್ತ ಹೋಗುತ್ತವೆ. ಆಯಾ ಸಮುದಾಯಗಳು ಬಾಳಿಕೊಳ್ಳುತ್ತಿರುವ ನೆಲ-ಜಲ, ಬಯಲು ಬೆಟ್ಟ ಕಾಡುಮೇಡುಗಳು ಮತ್ತು ಹೊಳೆ ನದಿ ಸರೋವರ ಸಮುದ್ರಗಳು ಹಾಗೂ ಅಲ್ಲಿ ಅರಳಿಕೊಳ್ಳುವ ವಿಶಿಷ್ಟ ಜನಪ್ರಜ್ಞೆ ಮುಂತಾದವು ಪ್ರಾಯಃ, ಸ್ವಂತಿಕೆಗಳನ್ನೂ ಭಿನ್ನತೆಗಳನ್ನೂ ಸೃಷ್ಟಿಸುತ್ತ ಹೋಗುತ್ತವೆ. +ದಕ್ಷಿಣ ಭಾರತದಲ್ಲಿ ಗಣ್ಯಸ್ಥಾನವನ್ನು ಗಳಿಸಿಕೊಳ್ಳಲು ಮೊದಲು ಹವಣಿಸಿದ ಎರಡು ದ್ರಾವಿಡ ಭಾಷೆಗಳೆಂದರೆ, ತಮಿಳು ಮತ್ತು ಕನ್ನಡ. ತಮಿಳಿನ ನೆಲವು ಪರ್ಯಾಯದ್ವೀಪದ ತುದಿ ತ್ರಿಕೋನದಲ್ಲಿ, ಮೂರು ಕಡೆ ಸಮುದ್ರ ಮತ್ತು ಇನ್ನೊಂದುಕಡೆ ಕಾವೇರಿಯ ಪ್ರಾಕೃತಿಕ ರಕ್ಷಣೆಯಲ್ಲಿದ್ದುದು; ಹೊರಗಿನ ಜನರ ಆಕ್ರಮಣ-ಸಂಚಾರ-ಸಂಕರಗಳು ಕಡಿಮೆಯಿದ್ದುದರಿಂದ ಅಲ್ಲಿನ ಜನಪದವು ಹೆಚ್ಚಿನ ನೆಮ್ಮದಿಯಲ್ಲಿ ಉದ್ದಕ್ಕೂ ತನಗೆ ತಾನೆನ್ನುವಂತೆಬಾಳಿಕೊಂಡಿತು. ಇದಕ್ಕಿಂತ ಭಿನ್ನವಾದ ಕನ್ನಡದ ಮಧ್ಯಸ್ಥಳ-ಸೇತುಭೂಮಿಯಾಗಿ ಮೇಲಿಂದ ಮೇಲೆ ಕ್ಷೆಭೆಗಳನ್ನೆದುರಿಸುತ್ತಲೇ ಬಂದುದರಿಂದ, ಅದು ಉದ್ದಕ್ಕೂ ಅನ್ಯ-ಅನುಸಂಧಾನದ ತಂತ್ರಗಳನ್ನಳವಡಿಸಿಕೊಳ್ಳುತ್ತ ಬಾಳುವಂತಾಯಿತು. ಈ ಪ್ರಕ್ರಿಯೆಯಲ್ಲಿ ಈಯೆರಡು ಭಾಷೆಗಳ ಭಿನ್ನತೆಗಳು ಮೈದಾಳಿಕೊಂಡವು. +ಒಂದು ಉದಾಹರಣೆಯನ್ನು ಕೊಡುತ್ತೇನೆ. ತಮಿಳು ಭಾಷೆಯು, ಸುಮಾರಾಗಿ ಕ್ರಿಸ್ತಪೂರ್ವ ಒಂದೆರಡು ಶತಮಾನಗಳ ಅವಧಿಯಲ್ಲಿ ತನ್ನ ಲಿಪಿವ್ಯವಸ್ಥೆಯನ್ನು ರೂಪಿಸಿಕೊಳ್ಳುವಾಗ, ಮೂಲ ಬ್ರಾಹ್ಮೀ ಲಿಪಿಯ ಐವತ್ತಕ್ಕೂ ಮಿಕ್ಕಿದ ಅಕ್ಷರಗಳ ಲಿಪಿಮಾಲೆಯಲ್ಲಿ ತನ್ನ ಉಚ್ಚಾರಣೆಗೆ ಬೇಕಾದ ಇಪ್ಪತ್ತಾರು ಅಕ್ಷರಗಳನ್ನಷ್ಟೇ ಕರಾರುವಕ್ಕಾಗಿ ಆಯ್ದುಕೊಂಡಿತು. ಅದಾಗಿ ಒಂದೆರಡು ಶತಮಾನಗಳ ಅನಂತರ ಕನ್ನಡವು ತನ್ನ ಲಿಪಿಮಾಲೆಯನ್ನು ರೂಪಿಸಿಕೊಳ್ಳುವಾಗ, ತನ್ನ ಉಚ್ಚಾರಣೆಗೆ ಅಗತ್ಯವಿಲ್ಲದಿದ್ದಾಗ್ಯೂ ಅದೇ ಬ್ರಾಹ್ಮಿಯ ಬಹುತೇಕ ಅಷ್ಟೂ ಅಕ್ಷರಗಳನ್ನೂ ಇರಲಿ ಅಂತ, ಉಳಿಸಿಕೊಂಡಿತು. ಈಮೂಲಕ ಕನ್ನಡವು ಅನ್ಯಭಾಷೆಗಳ ಶಬ್ದಾಕ್ಷರವ್ಯವಹಾರಗಳಿಗೂ ಯಾವತ್ಕಾಲಕ್ಕೂ ತೆರಪನ್ನು ಕಾದಿರಿಸಿಕೊಂಡಿತು. ಈಯೊಂದು ನಿರ್ಧಾರದ ಮೂಲಕ ಈ ಎರಡು ಭಾಷೆಗಳ ಅತ್ಯಂತ ಮೌಲಿಕ ಭಿನ್ನತೆಯೊಂದು ಸೃಷ್ಟಿಗೊಂಡಂತಾಯಿತು. +ತಮಿಳು ಭಾಷೆಯ ಮೊದಲ ಆಧಾರಗ್ರಂಥವೆನ್ನಬಹುದಾದ ‘ತೊಳ್ಕಾಪ್ಪಿಯಂ’(ಕ್ರಿ.ಶ.೪-೫ನೇ ಶತಮಾನ?)ಮತ್ತು ಅದೇ ಬಗೆಯಲ್ಲಿ ಕನ್ನಡಕ್ಕೆ ಆಧಾರಗ್ರಂಥವಾದ ‘ಕವಿರಾಜಮಾರ್ಗ’(ಸು.ಕ್ರಿ.ಶ.೮೬೦-೮೭೦)-ಈ‌ಎರಡು ಸಮಾನ ಗ್ರಂಥಗಳನ್ನು ಪರಸ್ಪರ ಹೋಲಿಸಿ ನೋಡಿದರೆ, ತಮಿಳು ಮತ್ತು ಕನ್ನಡ ಭಾಷೆಗಳು ಪ್ರತ್ಯೇಕ-ಸ್ವತಂತ್ರವಾಗಿ ಹರಳುಗಟ್ಟಿಕೊಳ್ಳುತ್ತಿದ್ದ ಸಂಧರ್ಭದಲ್ಲಿ ಯಾವಯಾವ ಬಗೆಯ ಸ್ವಂತಿಕೆಗಳನ್ನು ಸೃಷ್ಟಿಸಿಕೊಂಡವು ಮತ್ತು ಭಿನ್ನತೆಗಳನ್ನು ಹೊರಗೊಳಿಸಿಕೊಂಡವು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. +ಒಂದು ಉದಾಹರಣೆಯನ್ನು ಹೇಳುತ್ತೇನೆ. ಸಂಸ್ಕೃತದಲ್ಲಿ ಆಗ ವಿಪುಲವಾಗಿ ಬೆಳೆದುಕೊಳ್ಳುತ್ತಿದ್ದ ‘ಕಾವ್ಯಮೀಮಾಂಸೆ’ಯು ತನಗೆ ಅ-ಪ್ರಸ್ತುತ ಅಥವಾ ಅಪರಿಚಿತ ಎನ್ನುವ ಹಾಗೆ‘ತೊಳ್ಕಾಪ್ಪೀಯಂ’ ,ತಮಿಳಿನದೇ ಆದ ಒಂದು ಸ್ವಂತ ಕಾವ್ಯಶಾಸ್ತವನ್ನು ರಚಿಸಿಕೊಳ್ಳಲು ಯತ್ನಿಸಿತು. ‘ಕವಿರಾಜಮಾರ್ಗ’ವು ಅದಕ್ಕೆ ಬದಲಾಗಿ, ಸಂಸ್ಕೃತ ಕಾವ್ಯಮೀಮಾಂಸೆಯನ್ನು ಆಧಾರಕ್ಕಿಟ್ಟುಕೊಂಡು ಅದರಲ್ಲಿ ಕನ್ನಡದ ಸ್ವಂತ ಚಿಂತನೆಗಳೇನೆಂಬುದನ್ನು ಖಚಿತವಾಗಿ ನಮೂದಿಸಿಕೊಳ್ಳುತ್ತ ಹೋಯಿತು. ಸಂಸ್ಕೃತದಲ್ಲಿ ‘ಶಾಂತರಸ’ದ ಬಗ್ಗೆ ಚರ್ಚೆಯ ಪ್ರಾರಂಭವಾದದ್ದೇ ಬಹುಶಃ, ಕನ್ನಡದ ವಿಶಿಷ್ಟ ಚಿಂತನೆಯ ಪರಿಣಾಮವಾಗಿ. +ಈ ಭಿನ್ನತೆ-ಏಕತೆಗಳ ಮಾತು ಅಷ್ಟು ಸರಳವಾದ್ದಲ್ಲ ಅಂತಲೂ ನಮಗೆ ಗೊತ್ತಿದೆ. ಒಂದು ಐತಿಹ್ಯವನ್ನು ಕೇಳಿದ್ದೇನೆ. ಕೇರಳದ ವೈಕಂ ಸತ್ಯಾಗ್ರಹದ ಸಂಧರ್ಭದಲ್ಲಿ ಗಾಂಧಿಜಿಯು ನಾರಾಯಣ ಗುರುಗಳನ್ನು ಭೆಟಿಯಾದಾಗ ನಡೆದ ಸಂಗತಿಯಂತೆ ಇದು. ಇಬ್ಬರೂ ಆಶ್ರಮದೆದುರು ವಿಶಾಲವಾದ ಮರದ ಕೆಳಗೆ ಕೂತು ಮಾತಾಡಿಕೊಳ್ಳುತ್ತಿದ್ದರಂತೆ. ನಾರಾಯಣ ಗುರು ಅಪ್ಪಟ ಅದ್ವೈತಿ ಮತ್ತು ಗಾಂಧಿ,‘ಅಹಂ ಬ್ರಹ್ಮಾಸ್ಮಿ’ ಅನ್ನಲಿಕ್ಕೆ ಅಂಜಿದವರು. ‘ಗುರುಜಿ, ನಮ್ಮ ತಲೆಯ ಮೇಲೆ ಚಪ್ಪರವಾಗಿರುವ ಈ ದೊಡ್ಡ ಮರದಲ್ಲಿ ಲಕ್ಷಾಂತರ ಎಲೆಗಳಿವೆ; ಇವುಗಳಲ್ಲಿ ಒಂದರಹಾಗೆ ಇನ್ನೊಂದು ಇಲ್ಲವೇ ಇಲ್ಲ, ಅಲ್ಲವೇ?’ ಅಂತ ಗಾಂಧಿ, ಮಾತಿನ ಮಧ್ಯೆ ಪ್ರಶ್ನೆ ಹಾಕಿದರು. ಅದಕ್ಕೆ ಗುರುಗಳ ಉತ್ತರ: ಹೌದು. ಆದರೆ ಬಾಯಲ್ಲಿಟ್ಟು ಜಗಿದು ನೋಡಿದರೆ ಎಲ್ಲವುಗಳ ರುಚಿಯೂ ಒಂದೇ ಅಲ್ಲವೇ?’ ಈ ಮಾತುಕತೆಯ ಸಂಗತಿ ಏನೇ ಇದ್ದರೂ ಗುರು-ಮಹಾತ್ಮರಿಬ್ಬರೂ ಇಂಥ ದ್ವಂದ್ವಹಳನ್ನು ನಿಚ್ಚಳವಾಗಿ ಅರಿತವರೇ ಎಂಬುದನ್ನು ನಾವು ಬಲ್ಲೆವು. ಇಂಥ ದ್ವಂದ್ವಗಳನ್ನು ಪ್ರಾಯಶಃ, ಬುದ್ಧನು ಹೇಳುವಹಾಗೆ, ‘ಮಾಧ್ಯಮಿಕ’ ದೃಷ್ಟಿಯಿಂದ ಒಮ್ಮೆಲೇ ಒಟ್ಟಿಗೆ, ಗ್ರಹಿಸುವ ಚಾತುರ್ಯ ಬೇಕು. +ಜಗತ್ತಿನಲ್ಲಿ ಅತ್ಯಂತ ಎತ್ತರದ ಏಕಶಿಲಾವಿಗ್ರಹವಾದ ಶ್ರವಣಬೆಳುಗೊಳದ ಗೊಮ್ಮಟ ಪ್ರತಿಮೆಯು ಕನ್ನಡದ ಸೃಷ್ಟಿಯೇ. ಕನ್ನಡದ ಸ್ವಂತಿಕೆಯ ಶಿಲಾಸಾಕ್ಷಿ ಅದು. ಹಾಗಂತ, ಅದರಲ್ಲಿ ಕನ್ನಡದ್ದೆಂದು ಮೇಲಕ್ಕೆ ಕಾಣುವ ಚಹರೆಗಳಾವವೂ ಇಲ್ಲವೇ ಇಲ್ಲ. ಸ್ಥಳೀಯತೆಯನ್ನು ಕಾಣಿಸಬಹುದಾದ ಯಾವುದೇ ಒಡವೆಯಿಲ್ಲದ, ಕಡೆಗೆ ತುಂಡು ಬಟ್ಟೆಯೂ ಇಲ್ಲದ ನಗ್ನ ಮಾನವ ವಿಗ್ರಹ ಅದು. ಆದರೆ, ಪಂಪಕವಿಯ ಕೃತಿಯ ಸ್ಮೃತಿಯಿಂದ, ಮಾತ್ರವಲ್ಲ ಅದಕ್ಕೆ ಹಿಂದಿನ ಸಹಸ್ರವರ್ಷಗಳ ಕನ್ನಡದ ಸ್ಮೃತಿಯಿಂದ ದೀಪ್ತನಾಗಿರುವ ಕನ್ನಡಿಗನು ಮಾತ್ರವೇ ಆ ಗೊಮ್ಮಟ ಮುಖಚರ್ಯೆಯ ಅಸಂಖ್ಯ ಸೂಕ್ಷ್ಮಗಳನ್ನು ಅರಿವುಗೊಳಿಸಿಕೊಳ್ಳಬಲ್ಲ-ಇತಾಲಿಯನ್ನನೊಬ್ಬ ಅಥಾವಾ ಒಬ್ಬ ಕ್ರಿಶ್ಚಿಯನ್ ಮೊನಾಲಿಸಾಳ ನಿಗೂಢ ಹಾಸವನ್ನು ಅರಿವುಗೊಳಿಸಿಕೊಳ್ಳಬಹುದಾದಂತೆ. (ಗೊಮ್ಮಟನ ಮುಖಚರ್ಯೆಯನ್ನು ಹೊಳೆಯಿಸಿಕೊಂಡಿರುವ ಕನ್ನಡಿಗನೊಬ್ಬನಿಗೆ ಕ್ರಮೇಣ ಮೊನಾಲಿಸಾಳ ಮುಖಚರ್ಯೆ ಅರಿವುಗೊಂಡೀತು ಮತ್ತು ಹಾಗೇ ಇತಾಲಿಯನ್-ಕ್ರಿಶ್ಚಿಯನ್‌ಗೆ ಗೊಮ್ಮಟನ ಮುಖಚರ್ಯೆಯೂ ಅವಗತವಾದೀತು.) +‘ಕವಿರಾಜಮಾರ್ಗ’ ವೆಂಬ ಗ್ರಂಥದ ಮಾತು ಹೇಳಿದೆ. ಕವಿ ಶ್ರೀವಿಜಯ ಮತ್ತು ರಾಜಾ ನೃಪತುಂಗರಿಬ್ಬರೂ ಕೂಡಿ ರಚಿಸಿರುವ ಈ ಗ್ರಂಥವು, ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ಬಣ್ಣಿಸುತ್ತದೆ. ‘ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು-ಅದು ಆ ಕನ್ನಡದೊಳ್‌ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು‘ಭಾವಿತ’ ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ-ಆ ಚಿಪ್ಪಿನ ಒಳಗೆ ಎನ್ನಿ-‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್-ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ-ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾಲಯ ವಿಲೀನ’ ಎಂಬುದರ ಇನ್ನೊಂದು ಅರ್ಥವನ್ನು(ವಸುಧಾಲಯವನ್ನು ತನ್ನೊಳಗೆ ಅರಗಿಸಿಕೊಂಡಿರುವಂಥದು ಎಂಬ ಅರ್ಥವನ್ನು) ಪರಿಭಾವಿಸಿಕೊಳ್ಳಬೇಕು. ವಸುಧೆಯ ಒಳಗಿನ ಒಂದು ಕಿರಣಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ ವು ಕಂಡಿರಿಸಿಟ್ಟಿದೆ. +ಕನ್ನಡವು ವಸುಧಾಲಯವನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿರುವ ಪರಿಯನ್ನು ‘ಕವಿರಾಜಮಾರ್ಗ’ವು ಹೀಗೆ ಬಣ್ಣಿಸಿದ್ದರೆ, ರಾಜಾನೃಪತುಂಗನು ತನ್ನ ದೊಡ್ಡ ಸಾಮ್ರಾಜ್ಯವನ್ನು ತನ್ನ ಕಿರು ವ್ಯಕ್ತಿತ್ವದೊಳಗೆ ಭಾವಿಸಿಕೊಂಡಿದ್ದ ಪರಿಯನ್ನು ನೃಪತುಂಗನದೇ ಆದ ‘ಸಂಜಾನ ಶಾಸನ’(ಕ್ರಿ.ಶ.೮೭೧)ದ ಒಂದು ವೃತ್ತವು(ಪ.ಸಂ.೪೩)ಹೀಗೆ ಬಣ್ಣಿಸಿದೆ: +ರಾಜಾತ್ಮಾ ಮನ ಏವ ತಸ್ಯ ಸಚಿವಃ ಸಾಮಂತಚಕ್ರಂ ಪುನಃ +ತನ್ನಿತ್ಯೇಂದ್ರಿಯವರ್ಗ ಏಷ ವಿಧಿವದ್ವಾಗಾದಯಸ್ಸೇವಕಾಃ +ದೇಹಸ್ಥಾನಮಧಿಷ್ಠಿತಃ ಸ್ವವಿಷಯಂ ಭೋಕ್ತುಂ ಸ್ವತಂತ್ರಃ ಕ್ಷಮಃ +ತಸ್ಮಿನ್ ಭೋಕ್ತರಿ ಸನ್ನಿಪಾತವಿವಶೇ ಸರ್ವೇಪಿ ನಶ್ಯಂತಿ ತೇ +(ತನ್ನ ಆತ್ಮವೇ ರಾಜ, ತನ್ನ ಮನಸ್ಸೇ ಮಂತ್ರಿ, ತನ್ನ ಇಂದ್ರಿಯಗಳೇ ಸಾಮಂತವರ್ಗ, ತನ್ನಮಾತು ಮುಂತಾದವೇ ಸೇವಕರು-ಹೀಗೆ ತನ್ನ ದೇಹದಲ್ಲೇ ದೇಶವನ್ನು ಅಧಿಷ್ಠಾನಗೊಳಿಸಿಕೊಂಡಿರುವವನು ರಾಜ್ಯವನ್ನು ಸಂಪೂರ್ಣವಾಗಿ ಅನುಭವಿಸಲಿಕ್ಕೆ ತಕ್ಕ ಸಹನಾಶಕ್ತಿಯನ್ನೂ ಸ್ವಾತಂತ್ರ್ಯವನ್ನೂ ಪಡೆದಿರುತ್ತಾನೆ; ಹೀಗಿದ್ದಾಗ ರಾಜ್ಯದಲ್ಲಿ ಹುಟ್ಟಿಕೊಳ್ಳುವ ರೋಗಸನ್ನಿಪಾತಗಳು ಸಮಸ್ತವೂ ನಾಶವಾಗಿ ಹೋಗುತ್ತವೆ.) +ಜಗತ್ತಿಗೆ ತಾನು ವಿಸ್ತರಿಸಿಕೊಳ್ಳುವ ಮತ್ತು ಜಗತ್ತನ್ನು ತನ್ನಲ್ಲಿ ಒಳಗೊಳಿಸಿಕೊಳ್ಳುವ ಈ ಚೋದ್ಯದ ಪ್ರಕ್ರಿಯೆಗೆ ದೃಷ್ಟಾಂತವನ್ನು, ವ್ಯವಸಾಯಗಾರನಾಗಿ ನಾನು ನಿತ್ಯವೂ ಕಣ್ಣೆದುರೇ ಕಾಣುತ್ತೇನೆ. ನೆಲದಲ್ಲಿ ನೆಟ್ಟುಕೊಂಡ ಬೀಜವು ಅಲ್ಲೇ ಮೊಗ್ಗು ಮೊಗವಡೆದು ಮುನ್ನೂಕಿಕೊಂಡು ಕ್ರಮೇಣ ಬೃಹದಾಕಾರದ ಮರವಾಗಿ ಉಪಬೃಂಹಿತವಾಗಿ ಬೆಳೆಯುತ್ತದೆ, ಬನನ್ನು ತುಂಬುತ್ತದೆ; ಅನಂತರ ತನ್ನ ಬೃಹತ್ತನ್ನು ಕಿರುಬೀಜವೊಂದರಲ್ಲಿ ಮರಳಿ ಅಕುಂಚನಗೊಳಿಸಿ ಸಂಗೋಪಿಸಿಕೊಳ್ಳುತ್ತದೆ. +ಕನ್ನಡ ನಾಡು ಎಂಬ ಭಾಷಾಸಮುದಾಯವು ಏಕಘಟಕ ಬೌಗೋಲಿಕ ರಾಜ್ಯವೂ ಆಗಿದ್ದುದು ೯ನೇ ಶತಮಾನದಲ್ಲೊಮ್ಮೆ,ಕೆಲವುಕಾಲ ಮಾತ್ರ. ಮತ್ತೆ ಅದು ಅಸ್ತಿತ್ವಕ್ಕೆ ಬಂದು ಕಂಡದ್ದು ನಮ್ಮ ಕಾಲದಲ್ಲೇ; ೧೯೫೬ ರಲ್ಲಿ ಭಾರತದಲ್ಲಿ ಭಾಷಾರಜ್ಯಗಳ ನಿರ್ಮಾಣವಾದಾಗ. ಹಾಗಾದರೂ ‘ಕವಿರಾಜಮಾರ್ಗ’ ವು ಹರಳುಗಟ್ಟಿಸಿಟ್ಟ ಕನ್ನಡ ಭಾವರಾಜ್ಯವು ಸಹಸ್ರ ವರ್ಷಗಳಿಗೂ ಮಿಕ್ಕು ಮುಕ್ಕಾಗದೆ ಕನ್ನಡಿಗರ ಅಂತರಂಗದಲ್ಲಿ ತಾಳಿ ಬಾಳಿಕೊಂಡು ಬಂದಿದೆ. +ಅನಂತರದ ಒಬ್ಬ ಕವಿಯು (ದುರ್ಗಸಿಂಹ;ಕ್ರಿ.ಶ.೧೦೩೦) ‘ಕವಿರಾಜಮಾರ್ಗ’ ವನ್ನು ‘ಕನ್ನಡಿಯುಂ ಕೈದೀವಿಗೆಯುಂ’ ಅಂತ ಹೊಗಳಿದ. ಇದು ಬಹು ಮಾರ್ಮಿಕವಾದ ರೂಪಕ. ‘ಕವಿರಾಜಮಾರ್ಗ’ ವು ವಸುಧಾ ಜಗತ್ತನ್ನೂ ಅದರಲ್ಲಿನ ಕನ್ನಡದ ಸ್ವಂತಿಕೆಯ ಜಗತ್ತನ್ನೂ ವಾಸ್ತವವಾಗಿಯೇ ಕಾಣಿಸುವ ಕನ್ನಡಿ; ಮತ್ತು ಅದಕ್ಕಿಂತ ಮುಖ್ಯವಾಗಿ, ನವೋನವ ಜಾಯಮಾನ-ಸೃಜನಶೀಲತೆಯ ‘ಕನ್ನಡದರ್ಶನ’ ದ ಕೈದೀವಿಗೆ. +ಈ ಶತಮಾನದ ಪೂರ್ವಾರ್ಧವಿಡೀ ಕನ್ನಡಿಗರು ಕನ್ನಡ ರಾಜ್ಯ ಏಕೀಕರಣಕ್ಕಾಗಿ ಹಂಬಲಿಸಿ ಹೋರಾಡಿದ್ದರು. ಆಗ ರಚಿತವಾದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹಾಡು ಕನ್ನಡದ ರಾಷ್ಟ್ರಗೀತವೆನ್ನಿಸಿಕೊಂಡಿತು. ೧೯೫೬ ರಲ್ಲಿ ಕರ್ನಾಟಕ ಏಕೀಕರಣವಾದ ದಿನ ರಾಜಧಾನಿಯಲ್ಲಿ ನಡೆದ ಮಹಾಸಮಾರಂಭದಲ್ಲಿ ನಮ್ಮ ಪ್ರತಿಭಾವಂತ ಹಾಡುಗಾರ ಪಿ.ಕಾಳಿಂಗರಾಯರು, ‘ಉದಯವಾಗಲಿ’ ಎಂದಿದ್ದುದನ್ನು ಕೊಂಚ ಬದಲಿಸಿ, ‘ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು’ ಅಂತ ಹಾಡಿದರಂತೆ. ಆಗ, ಕನ್ನಡದ ಮಹತ್ತ್ವದ ಕವಿ ಬೇಂದ್ರೆಯವರು ಕೊಂಚ ಅಸಮಧಾನದಿಂದ, ‘ಹಾಂಗೆ ಬದಲಿಸಬಾರದಪಾ’ ಅಂದರಂತೆ. ಕವಿಯ ಮಾತು ಸಂಗೀತಗಾರನಿಗೆ ತಟ್ಟನೆ ಅರ್ಥವಾಗಲಿಲ್ಲ. ಅರ್ಥವೆಂದರೆ-‘ಕನ್ನಡದರ್ಶನ’ ಅಥವಾ ‘ಭಾವಕನ್ನಡ’ ವೆಂಬುದು ಪ್ರಾಯಃ ಯಾವತ್ತೂ ಉದಯವಾಗದ, ಆದರೆ ಯಾವದ್ಭವಿಷ್ಯವೂ ಅದರ ಪೂರ್ಣೋದಯಕ್ಕಾಗಿ ಹೊಸಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಹೋಗಲು ಸವಾಲು ಹಾಕಿ ಛಲ ಹುಟ್ಟಿಸುವ-ಮುಂಗೈಲಿದ್ದು ಅಂಗೈಗೆ ಬಾರದ-ಕನ್ನಡ ಜನಪದಚೈತನ್ಯವನ್ನು ಬೆಳಕುಬೀರಿ ಮುಂದುಮುಂದಕ್ಕೆ ನಡೆಸುವ ಮಾಯದ ಕೈದೀವಿಗೆ. +ಯಾಕೆ ಇದನ್ನು ಒತ್ತಿ ಹೇಳುತ್ತಿದ್ದೇನೆಂದರೆ, ಮೂಲನಿಷ್ಠಾವಾದ(ಫಂಡಮೆಂಟಲಿಸ್ಮ್)ವು ಗೂಡುಗಟ್ಟಬಹುದಾದ ಕೊಂಬೆಯೂ ಇದೇ. ಕನ್ನಡದ ಸ್ವರ್ಣ ಯುಗವೊಂದು ಹಿಂದಕ್ಕೆ ಇತ್ತು ಅಂತ ಭ್ರಾಂತಿಗೊಂಡಿರುವವನು ತನ್ನ ಭ್ರಮೆಯ ಆ ಪ್ರಾಚೀನ ಜಗತ್ತಿಗೆ ಮರಳಿಕೊಳ್ಳಲು ತವಕಿಸುತ್ತಾನೆ, ಮೂಲನಿಷ್ಠನಾಗುತ್ತಾನೆ. ನನಗೆ ಅಂಥ ಭ್ರಾಂತಿ ಇಲ್ಲವೇ ಇಲ್ಲ ಪೂರ್ವದ ಕನ್ನಡದ ಭವವು ಈಗಿನಷ್ಟೇ, ಅಥವಾ ಬಹುಶಃ ಈಗಿಗಿಂತಲೂ ಹೆಚ್ಚು ಕಲುಷಿತವಾದ್ದಿರಬೇಕು, ದುಷ್ಟವಾದ್ದಿರಬೇಕು ಅಂತ ನನ್ನ ಊಹೆ. ಆದರೆ ಪೂರ್ವದ ಯುಗಯುಗಗಳ ಭಾವಕನ್ನಡ-ಸ್ಮೃತಿಕನ್ನಡವು ಇವತ್ತಿಗೂ ನನಗೆ ಸಂಜೀವನಿಯಿರಬಹುದಾದ ಗಣಿ; ಅಗೆದಗೆದು ಅದನ್ನು ಶೋಧಿಸಿಕೊಳ್ಳಲು ಹಾರೈಸುತ್ತೇನೆ, ಹವಣಿಸುತ್ತೇನೆ. +ಪ್ರಾರಂಭದಲ್ಲಿ ನಾನು ಇವತ್ತಿನ ನಮ್ಮ ಆಕಾಶದಲ್ಲಿ ಹುಯ್ಯಲಿಡುತ್ತಿರುವ ಜಾಗತೀಕರಣ-ಜಗತ್‌ಗ್ರಾಮ ಜಾಹೀರುಗಳ ಬಗ್ಗೆ ಪ್ರಸ್ತಾಪಿಸಿದೆ. ಜಗತ್ತು ಎನ್ನುವ ಈ ಶಬ್ದವನ್ನು ಬಹು ಸಲೀಸಾಗಿ ಉಗ್ಗಡಿಸುತ್ತೇವಲ್ಲ? ಬೇರೆ ಬೇಡ, ಈ ಭೂಜಗತ್ತನ್ನೇ ತೆಗೆದುಕೊಳ್ಳಿ. ಅದು ಯಾವುದು? ಎಲ್ಲಿದೆ? ಭೂಗೋಲ ಭೂಭಾಗ ನಕಾಶೆಗಳೆಲ್ಲವೂ ನಮಗೆ ಗೊತ್ತು. ವಿಮಾನದಲ್ಲಿ ಸಂಚಾರ ಹೊರಟು ಹಲವಾರು ದೇಶಗಳ ರಾಜಧಾನಿಗಳಲ್ಲಿ ಮೊಕ್ಕಾಂ ಮಾಡಿ ತಂಗಿ ಅಲ್ಲಲ್ಲಿನ ವಿಶೇಷಗಳೆಲ್ಲವನ್ನೂ ಪರಿವೀಕ್ಷಿಸುತ್ತ ಭೂಮಂಡಲವನ್ನು ಸುತ್ತುವವರಿದ್ದಾರೆ. ಅಂಥವರಿಗೂ ಜಗತ್ತು ಎನ್ನುವ ಆ ಸಮಸ್ತವೂ ಅಂತಿಮವಾಗಿ ಉಳಿದುಕೊಳ್ಳುವುದು ಅವರ ಐದಾರಡಿ ಗಾತ್ರದ ದೇಹಪಂಜರದ ಒಳಗೇನೇ. ಅಂಥ ಚಾರಣಚಕ್ರವರ್ತಿಗಳಿಗೂ ಅಂತಿಮವಾಗಿ ಜಗತ್ತೆಂದರೆ-ಅವರ ಪಂಚೇಂದ್ರಿಯ-ಮನಸ್ಸು-ಬುದ್ಧಿಗಳು ಏನೇನನ್ನು ಹಿಡಿದು ಅವರ ಗಾತ್ರ ಪಂಜರದಲ್ಲಿ ಇಡಿದಿಟ್ಟಿರುತ್ತವೋ ಅಂಥ ಚಿತ್ರಗಳು-ಪ್ರತಿಮೆಗಳು ಮಾತ್ರವೇ. ಸೂರ್ಯ-ಚಂದ್ರ-ಗ್ರಹ-ನಕ್ಷತ್ರ ಸ್ಥಗಿತ ಸಮಸ್ತ ವಿಶ್ವಮಂಡಲವೂ ಚಿತ್ತಗತ ಚಿತ್ರವಷ್ಟೇ. ತನ್ನೊಳಗೆ ಅರಸಿ ಅಡಗಿಸಿಕೊಂಡದ್ದನ್ನು ಬಿಟ್ಟು ಹೊರಗಿನದೇನುಂಟು ನಮಗೆ? +ಪ್ರವಾಹದಲ್ಲಿ ಮುಳುಮುಳುಗಿ ತೇಲಿ ಹೋಗುತ್ತಿದ್ದ ಒಂದು ನರಿಯು, ‘ಹೋ,ಜಗತ್ತು ಮುಳುಗುತ್ತಿದೆ’ ಅಂತ ಅರಚಿಕೊಳ್ಳುತ್ತಿತ್ತಂತೆ. ಅದನ್ನೊಂದು ಪರಿಹಾಸದ ಕಥೆಯಾಗಿಹೇಳುವುದುಂಟು. ಪರಿಹಾಸವ್ಯಾತಕ್ಕೆ? ಅದೇ ವಾಸ್ತವ. ಜಗತ್ತು ಇರುವುದು ನಮ್ಮ ಒಳಗೇ ಮತ್ತು ನಾವು ಮುಳುಗಿದರೆ ಆ ನಮ್ಮ ಜಗತ್ತು ಮುಳುಗಿದಂತೇ ಅಲ್ಲವೇ? ‘ಅಲ್ಲ, ಜಗತ್ತು ನಮ್ಮ ಹೊರಗೆ ಆಚೆಗಿರುವಂಥದು’ ಅಂತ ಯಾರಾದರೂ ವಾದಿಸುವುದಾದರೆ, ‘ಹಾಗೆನ್ನುವ ಆ ನಂಬಿಕೆ ಕೂಡ ನಿಮ್ಮ ಒಳಗಿನದು, ಹೊರಗೆ ಇರುವಂಥದಲ್ಲ’ ಅನ್ನುತ್ತೇನೆ ನಾನು. +ಜಾಗತೀಕರಣವೆಂಬ ಇವತ್ತಿನ ನಮ್ಮ ಸಂಭ್ರಮಣವನ್ನು ಕಂಡು ಯಾಕೆ ನನಗೆ ಅಸಮಧಾನವಾಗುತ್ತದೆ ಮತ್ತು ಯಾಕೆ ಜಿಗುಪ್ಸೆ-ಭೀತಿಗಳಿಂದ ಮೈ ನಡುಗುತ್ತದೆ-ಅಂತ ಯೋಚಿಸುತ್ತೇನೆ. ‘ಜಾಗತೀಕರಣ’ ದ ನಿರ್ಭಿನ್ನ ಪ್ರತಿಮುಖವಾಗಿರುವ ‘ಸ್ಥಳೀಕರಣ’ ವನ್ನು ಮರೆತು ಅಥವಾ ಅವಗಣಿಸಿ ಅದೊಂದನ್ನೇ ವಿಜೃಂಬಿಸುವುದನ್ನು ಕಂಡು ಅಸಮಧಾನವಾಗುತ್ತದೆ. ಅದಕ್ಕಿಂತಲೂ-ಈ ಜಾಗತೀಕರಣವೆಂಬುದು ಪರರನ್ನು ವಂಚಿಸಿ ನಫೆ ಕಮಾಯಿಸಿಕೊಳ್ಳುವೆನೆಂಬ ಅಸಹ್ಯ ಅಮಾನುಷ ವಾಣಿಜ್ಯ ಶೋಷಣೆಯ ಘೋರ ದುಸ್ಸಾಹಸಕ್ಕೆ ಕೊಟ್ಟುಕೊಂಡಿರುವ ಹೊಸ ಹೆಸರು ಎಂಬುದರ ಅರಿವಾಗಿ ಜುಗುಪ್ಸೆ ಹುಟ್ಟುತ್ತದೆ, ಅಪಾರ ಭಯವಾಗುತ್ತದೆ. +ನಮಸ್ಕಾರ. +***** +೧೯೯೭ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ನಡೆಸಬೇಕೆಂದಿರುವ ‘ಜಾಗತಿಕ ಸೌಂದರ್ಯ ಸ್ಪರ್ಧೆ’ಯನ್ನು ನಾವು ಎರಡು ನೆಲೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಮೊದಲನೆಯದಾಗಿ, ನಮ್ಮ ಸರ್ಕಾರವು ಈ ಕಾರ್ಯಕ್ರಮದ ಜೊತೆ ಶಾಮೀಲಾಗಿ ಅದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ದೊಡ್ದ ತಪ್ಪು; ಅದಕ್ಕಾಗಿ ಸರ್ಕಾರವನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_264.txt b/Kannada Sahitya/article_264.txt new file mode 100644 index 0000000000000000000000000000000000000000..4c4d7ba37106160149b8f5f27cc6bf71a16776b3 --- /dev/null +++ b/Kannada Sahitya/article_264.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಡ್ಡಮಳೆ ಹೊಡೆದು ಹೋಯಿತು- +ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. +ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು +ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. +ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ +ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ +ಉದ್ಭವಿಸಿ ಆಕಾಶವನ್ನೆಲ್ಲ ವ್ಯಾಪಿಸಿತು. +ನೋಡ ನೋಡುತ್ತ ನೆಲವ ಗದಗಮಿಸಿತು. +ಕೋಲ್ಮಿಂಚು ಕೊರೆದು ಕೋರೈಸಿ, ಗುಡುಗು ಹುಟ್ಟಿಸಿ ನಡುಗು +ಎಲ್ಲೊ ಬಡಿಯಿತು ಸಿಡಿಲು : ಬಟಾ ಬಯಲು. +ನಡುವೆ ತಣ್ಣಗೆ ತಂಪು, ನೀರೆಲ್ಲ ಕೆಂಪು ಹೊನಲು. +ಬಿರುವಿಸಿಲಿನಾಳಿಕೆ ಬಗ್ಗು ಬಡಿದು ಹೊರಬಿದ್ದ ಬಿರುಗಾಳಿ- +ಆಂದೋಲನದ ಅಮಾಯಕ ತಿರುವು ; ಹೊಲಸೆಲ್ಲ +ತೊಳೆದು ಹೊಳೆದಿಹುದು ಹೊಸ ಜೀವನದ ಕಾಂತಿ +ವಾತಾವರಣದಲ್ಲಿ ನಿರ್ಭೀತಿ, ನಿರಂಕುಶಮತಿ +***** +೧೯೮೦ +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_265.txt b/Kannada Sahitya/article_265.txt new file mode 100644 index 0000000000000000000000000000000000000000..c6e2553384b3a6833c9bc6d93dd732f83c01158a --- /dev/null +++ b/Kannada Sahitya/article_265.txt @@ -0,0 +1,69 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ ಬಂಡಾಯಗಾರರು, ಸ್ತ್ರೀವಿಮೋಚನೆಯವರು ಸದ್ಯದಲ್ಲೇ ಸತ್ಯಾಗ್ರಹ, ಧರಣಿ ನಡೆಸಿ ಅವರನ್ನು ಕೆಲಸದಿಂದ ತೆಗೆದುಹಾಕಲು ಉಪಕುಲಪತಿಯವರನ್ನು ಒತ್ತಾಯಿಸುವ ನಿರ್ಣಯ ತೆಗೆದುಕೊಂಡಿರುವುದಾಗಿ ಗೊತ್ತಾಯಿತು. +ಇದಕ್ಕೆಲ್ಲ ಹೇಗೆ ಉತ್ತರಿಸುವುದೋ ನನಗೆ ಗೊತ್ತಾಗಲಿಲ್ಲ. ನನ್ನ ಹೆಸರು ಮೀನಾ. ವಿವರಣೆಗೆ ಸಿಕ್ಕದಿರುವ ದುಃಖದಲ್ಲಿ ಮುಳುಗಿಹೋಗುವ ನಾನು ಬುದ್ಧಿಜೀವಿ ಎಂದು ನನ್ನ ಗೆಳತಿಯರು ಕರೆಯುತ್ತಿದ್ದರು. ಹೇಗೆ ಎಲ್ಲವೂ ತಲೆಕೆಳಗಾಗಿ ಆತ್ಮಹತ್ಯೆಯೊಂದೇ ದಾರಿಯಾಗಿ ತೆರೆದುಕೊಳ್ಳುತ್ತದೆ ಎಂದು ವಿವರಿಸಿ ಹೇಳಲು ಈ ‘sಈ?ಓ’; ನನ್ನ ಪತಿಗೆ ತೊಂದರೆಯಾಗದೆ ಇರಲಿ ಎನ್ನುವುದೂ ನನ್ನ ಉದ್ದೇಶದಲ್ಲಿ ಸೇರಿದೆ. +ನಾನು ಓದುವಾಗ, ಮಾತಾಡುವಾಗ, ನನ್ನ ಮೌನದ ವೇಳೆಯಲ್ಲಿ, ನನ್ನ ಅತ್ಯಂತ ಖಾಸಗಿ ನಿಮಿಷಗಳಲ್ಲಿ ಈ ವ್ಯಾಘ್ರ ನನ್ನನ್ನು ನೋಡುತ್ತಾ ನಿಂತಿರುತ್ತದೆ. ಆದರೆ ನಾವೆಲ್ಲ ಅತ್ಯಂತ ಸಹಜವಾದ ಬದುಕನ್ನು ಸಾಗಿಸುತ್ತ ಇರುತ್ತೇವೆ. ಒಂದು ರೆಡಿಮೇಡ್ ಸ್ಕರ್ಟ್, ಒಂದು ಬ್ಲೌಸ್ ಪೀಸ್‌ಗಾಗಿ ದಿನವೆಲ್ಲ ಅಲೆಯುತ್ತೇವೆ. ನಾವು ನೋಡಿದ ಸಿನಿಮಾಗಳನ್ನು ಗಂಭೀರವಾಗಿ ತೆಗೆದುಕೊಂಡು ಹೀರೋನ ನಡಿಗೆ, ಮಾತಿನ ಶೈಲಿ ಮುಂತಾದ್ದನ್ನು ವಿವರವಾಗಿ ಚರ್ಚಿಸುತ್ತೇವೆ. ತೀರಾ ಕಳಪೆ ಇಂಗ್ಲಿಷ್ ಪುಸ್ತಕಗಳನ್ನು ಕೂಡ ಮೆಚ್ಚಿ ಮಾತಾಡುತ್ತೇವೆ. +ಆದರೆ ಇಷ್ಟೇ ಆಗಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ಮನುಷ್ಯ ತುಂಬ ಜಟಿಲ… ತಾಯಿಯನ್ನು ಕೂಡ ಒಂದು ಕ್ಷಣ ಪ್ರೇಯಸಿಯಂತೆ ನೋಡಿದರೂ ಪ್ರಾಯಶ್ಚಿತ್ತದ ಬಗ್ಗೆ ಯೋಚಿಸುವ ಮನುಷ್ಯ ಮಿಕ್ಕೆಲ್ಲ ಪ್ರಾಣಿಗಳಿಂದ ಭಿನ್ನನಾಗಿದ್ದುದರಿಂದಲೇ ಆತನ ನೆಚ್ಚಿನ ಶೇಕ್ಸ್‌ಪಿಯರ್, ವ್ಯಾಸರುಗಳೆಲ್ಲ ರೂಪುಗೊಂಡರು. ವಾಲ್ಮೀಕಿ ಒಂದು ಹಕ್ಕಿಯ ಸಾವನ್ನು ನೋಡಿ ಒಂದು ಮಹಾಕಾವ್ಯವನ್ನು ಬರೆದ. +ಇದು ಇನ್ನೂ ಜಟಿಲವಾದದ್ದು. ಆಂಟನ್ ಚೆಕಾವ್‌ನ ಒಂದು ಕತೆಯಲ್ಲಿ ಥಿಯೇಟರ್‍ನಲ್ಲಿ ನಾಟಕ ನೋಡುತ್ತಿರುವ ಗುಮಾಸ್ತನೊಬ್ಬ ತನ್ನ ಬಾಸ್ ಎದುರಿನ ಸಾಲಿನಲ್ಲಿ ಕೂತಿರುವುದನ್ನು ಗಮನಿಸದೆ ಸೀನಿಬಿಡುತ್ತಾನೆ; ಬಾಸ್ ಚಡಪಡಿಸುತ್ತಾನೆ, ಅಷ್ಟೆ. ತನ್ನ ಸೀನಿಗೆ ಬಲಿಯಾದವನು ತನ್ನ ಗೌರವಾನ್ವಿತ ಬಾಸ್ ಎಂದು ತಿಳಿದೊಡನೆ ಆ ಗುಮಾಸ್ತ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾನೆ. ಬಾಸ್ ‘ಪರವಾಗಿಲ್ಲ, ನನಗೇನೂ ಆಗಿಲ್ಲ’ ಎಂದು ಹೇಳುತ್ತಾನೆ. ಆದರೆ ಗಮಾಸ್ತನಿಗೆ ಸಮಾಧಾನವಿಲ್ಲ. ಬಾಸ್‌ನನ್ನು ಮತ್ತೆ ಮತ್ತೆ ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಬಾಸ್ ತನ್ನ ಗುಮಾಸ್ತನ ಪಶ್ಚಾತ್ತಾಪಕ್ಕೆ ಮರುಗಿ ಅವನನ್ನು ಇನ್ನೂ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಗುಮಾಸ್ತನಿಗೆ ಸಮಾಧಾನವೇ ಇಲ್ಲ. ಬಾಸ್ ತನ್ನನ್ನು ಕ್ಷಮಿಸಿಯೇ ಇಲ್ಲ ಎನ್ನುವುದರಿಂದ ಹಿಡಿದು ತನ್ನಿಂದ ಎಂಥ ಅಚಾತುರ್ಯವಾಯಿತು ಎಂದು ಚಿಂತಿಸಿ ನಾಟಕ ಮುಗಿದ ಮೇಲೆ ಬಾಸ್ ಮನೆಗೆ ಹೋಗಿ ಕ್ಷಮಿಸಲು ಬೇಡಿಕೊಳ್ಳುತ್ತಾನೆ. ಬಾಸ್‌ಗೆ ಅವನ ಅತೀ ವಿನಯ ನೋಡಿ ಸ್ವಲ್ಪ ರೇಗುತ್ತದೆ. ‘ನನಗೇನೂ ಆಗಿಲ್ಲ ಮಾರಾಯ, ಎಲ್ಲವನ್ನೂ ಥಿಯೇಟರ್‍ನಲ್ಲಿಯೇ ಮರೆತುಬಿಟ್ಟಿದ್ದೇನೆ’ ಎಂದು ಹೇಳುತ್ತಾನೆ. ಆ ಮಾತಿನಲ್ಲಿ ಕೂಡ ಗುಮಾಸ್ತನಿಗೆ ಕೊಂಕು ಇರುವಂತೆ ಅನ್ನಿಸುತ್ತದೆ. ಕೊನೆಗೆ ಆತ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ. +ನಾನು ಇನ್ನೂ ನನ್ನ ಟಿಪ್ಪಣಿಯ ಹಿನ್ನೆಲೆಯನ್ನು ಕೂಡ ಹೇಳಲಾಗಿಲ್ಲ. +ನಿಮಗೆ ಅಚ್ಚರಿಯಾಗಬಲ್ಲ ಒಂದು ವಿಷಯ ಹೇಳಿ ನನ್ನ ಹಾಸ್ಯಾಸ್ಪದ ಪ್ರೇಮದ ಬಗ್ಗೆ ಹೇಳುತ್ತೇನೆ. ವೇಳೆ ಇದ್ದರೆ ಕೇಳಿ. +ತಾವು ಹೆಂಡತಿಯನ್ನು ಮನೆಯಲ್ಲಿ ಕೂಡಿ ಬೀಗ ಹಾಕಿಕೊಂಡು ಹೋಗುವುದಾಗಿ ಸುದ್ದಿ ಹಬ್ಬಿದ್ದನ್ನು ಕೇಳಿದ ನನ್ನ ಪತಿಗೆ ಬೇಸರವಾಯಿತು. ನನ್ನ ಅವರ ನಡುವೆ ಅಖಂಡ ಮೌನ ಆವರಿಸಿತು. ಈ ಪ್ರಕರಣದ ಅರ್ಥ ಯಾರಿಗೂ ಆಗುವಂತಿರಲಿಲ್ಲ. ಎಂದೂ ಹುಂಬತನದಿಂದ ಮಾತಾಡದಿರುವ ನಾನು ಅವರಿಗೆ ಸಮಾಧಾನ ಮಾಡುವುದು ಸಾಧ್ಯವಿರಲಿಲ್ಲ. ಏನೆಂದು ಸಮಾಧಾನ ಮಾಡುವುದು? ಬೀಗ ಹಾಕಿದ್ದು ಸುಳ್ಳು ಎಂದೆ? ‘ನಾನು ಪತ್ರಿಕಾ ಹೇಳಿಕೆ ಕೊಡಬಲ್ಲೆ’ ಎಂದೆ? ಎಲ್ಲವೂ ಹಾಸ್ಯಾಸ್ಪದವಾಗುತ್ತಿದ್ದವು. ಹೀಗಾಗಿ ನನ್ನ ದುಃಖ ತೀವ್ರವಾಯಿತು. ನಾನು ಎಲ್ಲರನ್ನೂ ವಂಚಿಸಿದ ಭಾವನೆ ನನ್ನಲ್ಲಿ ಬೆಳೆಯತೊಡಗಿತು. ಅದನ್ನು ವಿವರಿಸಿ ಈ ದುಗುಡವನ್ನು ಕೊನೆಗೊಳಿಸಬೇಕೆಂದು ಈ ನೋಟ್ ಬರೆದಿದ್ದೇನೆ. +* +* +* +ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಹದಿನೆಂಟು ವರ್ಷದವಳು. ಅದು ಒಂದು ರೀತಿಯಲ್ಲಿ ಮುಗ್ಧತೆ ತುಂಬಿದ್ದ ಕಾಲ. ಆ ಕಾಲ ಎಲ್ಲಿ ಹೋಯಿತೆಂದು ಕೆಲವೊಮ್ಮೆ ಕನಸಿನಲ್ಲಿ ಕೂಡ ಹುಡುಕಿದ್ದೇನೆ. ಕಾಲ ಸಿಕ್ಕುವುದಿಲ್ಲ. ಆದರೆ ನಿಮ್ಮಿಂದ ನಷ್ಟವಾದದ್ದು ಏನೆಂಬುದು ಮಾತ್ರ ನಮ್ಮಲ್ಲಿ ಉಳಿದುಹೋಗುತ್ತದೆ. ಒಂದು ಬಗೆಯ ಲವಲವಿಕೆ, ಹುಡುಗಾಟ, ಸುಲಭವಾದ ನಗು; ಎಲ್ಲರೂ ನಮ್ಮ ನಡಿಗೆ, ಮಾತು, ಧ್ವನಿ, ವೈಯಾರವನ್ನು ಗಮನಿಸುತ್ತಿದ್ದಾರೆ ಎಂಬ ವಿಶ್ವಾಸ; ಇದು ಪ್ರತಿಭಾವಂತ ನಟಿ ರಂಗದ ಮೇಲೆ ಅನುಭವಿಸುವ ಭಾವನೆ. ಎಲ್ಲರೂ ನೋಡುತ್ತಿದ್ದಾರೆ ಎನ್ನುವ ಗ್ರಹಿಕೆ, ನೋಟ ನನಗೆ ಏನೂ ಮಾಡುವುದಿಲ್ಲ. ನನ್ನ ನಟನೆಯನ್ನು ಕೆಡಿಸುವುದಿಲ್ಲ ಎಂಬ ತಿಳಿವು. ನಿಜಕ್ಕೂ ಆ ನಟಿಯ ನಟನೆ ಎಲ್ಲರೂ ಆಕೆಯನ್ನು ನೋಡಿ ಮೆಚ್ಚುವುದರಿಂದ ಉತ್ತಮಗೊಳ್ಳುತ್ತಾ ಹೋಗುತ್ತದೆ. ಅಂಥದೇ ಪ್ರಾಯದ ಹುಡುಗಿಯ ಸ್ಥಿತಿ. ನಾನು ಮನುಷ್ಯಳಾಗಿ ನನ್ನಲ್ಲಿ ಪಶುವನ್ನು ಕಂಡದ್ದು ಆ ಕಾಲದಲ್ಲಿ ಮಾತ್ರ. ನನ್ನಲ್ಲಿನ ಪಶು ನನ್ನ ಹರೆಯದಲ್ಲಿ ಹುಮ್ಮಸ್ಸಿನಿಂದ ಕೂಡಿರುತ್ತದೆ; ನನ್ನ ದಾಹ ಸೂಚಿಸಿದ್ದನ್ನೆಲ್ಲ ಸ್ವೀಕರಿಸುತ್ತದೆ. ಅದಕ್ಕೆ ಪಾಪಪ್ರಜ್ಞೆ ಎನ್ನುವುದಿಲ್ಲ. ಅಂಥ ಪಶುತ್ವದ ದಿನಗಳಲ್ಲಿ ನನಗೆ ಈ ಮೆಡಿಕಲ್ ಫೈನಲ್ ವಿದ್ಯಾರ್ಥಿ ಚೀನಿ ಪರಿಚಿತನಾದ. ಅದು ಹೇಗೆ ಇವನು ನನ್ನ ಬದುಕಿನೊಳಕ್ಕೆ ಅಡಿ ಇಟ್ಟ ಎನ್ನುವುದು ಕೂಡ ನನಗೆ ಮರೆತುಹೋಗಿದೆ. ಪ್ರಾಯದ ಸಡಗರದಲ್ಲಿ ಅದೆಲ್ಲ ಎಲ್ಲಿ ನೆನಪಿರುತ್ತದೆ. ಇಷ್ಟು ಮಾತ್ರ ನಿಜ. ಎರಡು ದಿನಗಳ ಗೆಳೆಯನಂತೆ ಬಂದ ಚೀನಿ ನನ್ನ ಮೆಚ್ಚಿನ ಹುಡುಗನಾದ. ಆತ ನನ್ನನ್ನು ಕಂಡರೆ ಆಡುತ್ತಿದ್ದುದು ನೋಡಿದರೆ ಅವನ ಗ್ರಹಿಕೆಯ ರೀತಿಯೇ ನನ್ನಿಂದ ಬದಲಾಗಿತ್ತು. ನನ್ನ ಕ್ಲಾಸ್‌ಮೇಟ್ ರೋಹಿಣಿಯ ಮನೆಯಲ್ಲಿ ಒಂದು ದಿನ ನಾವು ಪರಿಚಿತರಾದದ್ದು ಈಗ ನೆನಪಾಗುತ್ತಿದೆ. ರೋಹಿಣಿ ನಮ್ಮಿಬ್ಬರ ಪರಸ್ಪರ ಸ್ಪಂದನವನ್ನು ಊಹಿಸಿದಂತಿತ್ತು. ಎಂದೂ ಮತ್ಸರಪಡದ ಗೆಳತಿ ಆಕೆ. ನಾನು ಮತ್ತು ಚೀನಿ ನಡುವಿನ ರ್‍ಯಾಪರ್ಟ್ ಕಂಡು ಚಕಿತಳಾದ ಆಕೆ ‘ಮಾತಾಡ್ತಿರಿ’ ಎಂದು ಹೇಳಿ ಒಮ್ಮೆ ಕಾಫಿಪುಡಿ ತರಲು ಹೋದಳು. ಅವಳು ಹೋದೊಡನೆ ನನಗೆ ಭಯವಾಗಿತ್ತು. ಚೀನಿ ಕೂಡ ಸಣ್ಣಗೆ ನಡುಗುತ್ತಿದ್ದಂತಿದ್ದ. ಮತ್ತು ತನ್ನ ಕಂಪನವನ್ನು ಪೂರ್ಣ ಹಿಡಿತದಲ್ಲಿಟ್ಟುಕೊಂಡು ತನ್ನ ಆಕರ್ಷಣೆಗೆ ವಿಶೇಷ ಶಕ್ತಿ ಕೊಟ್ಟುಕೊಂಡಂತಿತ್ತು. ಕ್ಷಣಗಳುರುಳಿದಂತೆ ಆತ ಗಂಡಸಿನ ದಿಟ್ಟತನ ಕೂಡಿಸಿಕೊಂಡ. “ಮೀನಾ, ನಿನ್ನನ್ನು ಮೀನಾ ಅಂತ ಕರೆದರೆ ಬೇಸರವಾಗುತ್ತ?” ಅಂದು ನಾನು ಕೂತಿದ್ದ ಸೋಫಾದ ಮೇಲೆ ತನ್ನ ತೋಳುಗಳನ್ನಿಟ್ಟುಕೊಂಡು ನನ್ನತ್ತ ಬಗ್ಗಿ, ‘ನೀನು ತುಂಬ ಒಳ್ಳೆಯ ಹುಡುಗಿ’ ಅಂದ. ‘ನಾನು ನಿನ್ನಂಥ ಸೂಕ್ಷ್ಮ ಹುಡುಗಿಯನ್ನು ನೋಡೇ ಇಲ್ಲ’ ಅಂದ. ನಾನು ಆಗ ಸುಮ್ಮನಿರಕೂಡದೆಂದು ಇದ್ದ ಧೈರ್ಯವನ್ನೆಲ್ಲ ಕೂಡಿಸಿಕೊಂಡು ತಲೆಯೆತ್ತಿ ನೋಡಿ, ‘ಅದು ಭಂಡತನ’ ಅಂದೆ. ಅವನು ಕೂತಲ್ಲಿಂದ ಬಿದ್ದವನಂತೆ ಸಣ್ಣಗೆ ಬೆವರುತ್ತಾ, ‘ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯೆ?’ ಅಂದ. ‘ಪೂರ್ತಿ ತಪ್ಪು. ನಿನ್ನ ಮಾತು ಪರಂಪರಾಗತ ಮೋಸದ ನುಡಿಕಟ್ಟುಗಳಿಂದ ತುಂಬಿದೆ. ಪ್ರತಿಯೊಬ್ಬ ಹುಡುಗನೂ ಮಾತಾಡುವುದೇ ಹಾಗೆ’ ಅಂದೆ. +‘ಎಷ್ಟು ಜನ ಹುಡುಗರು ನಿನಗೆ ಗೊತ್ತು?’ ಅಂದ. ಅವನ ದನಿಯಲ್ಲಿ ಮುನಿಸು ಇತ್ತು. +‘ಅದು ವಲ್ಗರ್, ಅಂಥ ಪ್ರಶ್ನೆಯನ್ನು ಪಡ್ಡೆ ಹುಡುಗರು ಮಾತ್ರ ಕೇಳುತ್ತಾರೆ. ನಾನು ಎಷ್ಟು ಜನರನ್ನು ಕಂಡಿದ್ದರೆ ನಿನಗೇನು?’ ಅಂದೆ. ಆತ ಇನ್ನೂ ಮಂಕಾಗಿ ಕುಳಿತ. +ಅಷ್ಟರಲ್ಲಿ ರೋಹಿಣಿ ಬಂದಳು. ಅವಳು ಎಷ್ಟು ಸ್ವಚ್ಛ ಹುಡುಗಿಯೆಂದರೆ ನಮ್ಮಿಬ್ಬರ ಸಂಭಾಷಣೆಯನ್ನು ಕುರಿತು ಕೊಂಕು ತೋರಲಿಲ್ಲ, ಅಶ್ಲೀಲವಾದ ಊಹೆಗೆ ಇಳಿಯಲಿಲ್ಲ. +ಅದು ನಾನು ಮತ್ತು ಚೀನಿ ಪರಿಚಯವಾದ ಕ್ಷಣ. ಅವನು ಕೀಳಾಗಿ ಮಾತಾಡಿದ್ದೇನೋ ನಿಜ. ಆದರೆ ನಾನು ಅಷ್ಟು ನಿಷ್ಠುರವಾಗಿ ಮಾತಾಡುವ ಅಗತ್ಯವಿರಲಿಲ್ಲ. ಅವನು ಅವತ್ತು ತನ್ನ ಗಂಡಿನ ಎಗ್ಗನ್ನೆಲ್ಲ ಬಿಟ್ಟು ಮೌನವಾಗಿ ಕುಳಿತಿದ್ದ. ರೋಹಿಣಿಯೊಂದಿಗೆ ಕೂಡ ಅವನು ನಗುತ್ತಾ ಮಾತಾಡಲಿಲ್ಲ. +ಇದಾದ ಆರು ತಿಂಗಳು ನನ್ನನ್ನು ಈ ಭೇಟಿ ಕೊರೆದುಹಾಕಿತ್ತು. ಚೀನಿಯನ್ನು ನೋಡಿ ‘ಸಾರಿ’ ಹೇಳಬೇಕೆಂದು ಅನೇಕ ಸಲ ಅನ್ನಿಸಿತ್ತು. ಆದರೆ ನಾನೇ ಹೋಗಿ ನೋಡುವುದು ನನ್ನಿಂದ ಸಾಧ್ಯವಿರಲಿಲ್ಲ. ಆತ್ಮಗೌರವಕ್ಕೆ ಕುಂದು ತರಬಲ್ಲಂಥ ಯಾವ ಕೃತ್ಯವೂ ನನ್ನಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಸುಮ್ಮನಾದೆ. ನನ್ನಲ್ಲಿ ಅವನ ಬಗ್ಗೆ ಯಾವ ರೀತಿಯ ಪ್ರೇಮವೂ ಇರಲಿಲ್ಲ. ಒಂದೇ ದಿನದ ಪರಿಚಯದಲ್ಲಿ ಅದೆಲ್ಲ ಶುರುವಾಗುವ ಸಂಭವವೂ ಇರಲಿಲ್ಲ. ಆದರೆ ರೋಹಿಣಿಯ ಹತ್ತಿರ ಆತ, ‘ಮೀನಾಗೆ ನನ್ನ ಮಾತಿಂದ ಬೇಸರವಾಗಿದೆ. ಮರೆತುಬಿಡು ಅಂತ ಹೇಳು’ ಎಂದು ಹೇಳಿದ್ದ. ಆಮೇಲೆ ಅವನಿಗೆ ಗಂಟಲುನೋವು, ಜ್ವರ ಶುರುವಾಯಿತು. ಇದನ್ನೆಲ್ಲ ವರದಿ ಮಾಡಿದ ರೋಹಿಣಿ ಅದಕ್ಕೆ ಯಾವ ಅರ್ಥವನ್ನೂ ಹಚ್ಚಲಿಲ್ಲ. ಆದರೆ ನನ್ನ ಆಳದಲ್ಲಿ ಆತನ ಕಾಯಿಲೆಗೂ ನನ್ನ ಕಟುವರ್ತನೆಗೂ ಸಂಬಂಧವಿದೆ ಅನ್ನಿಸುತ್ತಿತ್ತು. ಆತನನ್ನು ಗೆದ್ದೆ ಎನ್ನುವ ಭಾವನೆಗೆ ಬದಲಾಗಿ ಆತನಿಗೆ ತೊಂದರೆಯಾಯಿತು ಅನ್ನಿಸಿತು ನನಗೆ. ದಿನಗಳುರುಳಿದಂತೆ ಚೀನಿ ಮರೆತುಹೋದ. ಆತನ ಮುಗ್ಧ ಮುಖ, ಮಾತಾಡಿದ್ದನ್ನು ಗುರಿ ಮುಟ್ಟುವಂತೆ ಆಯ್ದ ಮಾತುಗಳಲ್ಲಿ ಆಡಲಾಗದ ಗೊಂದಲ ನನಗೆ ನಗೆ ತರಿಸುತ್ತಿದ್ದವು. +ಇದೇ ವೇಳೆಯಲ್ಲಿ ನನಗೆ ರೋಹಿಣಿಯ ಅಣ್ಣ ಜಗ್ಗುವಿನ ಪರಿಚಯವಾಯಿತು. ಆತ ತುಮಕೂರಿನಲ್ಲಿ ಪುಟ್ಟ ಫ್ಯಾಕ್ಟರಿಯೊಂದನ್ನು ಇಟ್ಟುಕೊಂಡಿದ್ದ. ಮಹಾ ಸೈಲೆಂಟ್ ಮನುಷ್ಯ. ಪರಿಚಯವಾದರೆ ಎಲ್ಲರೂ ಆಡುವ ಮಾತುಗಳನ್ನು ಕೂಡ ಆಡದಿರುವ ಮನುಷ್ಯ. ‘ಇವಳು ಮೀನಾಕ್ಷಿ. ಬಿ‌ಇ‌ಎಲ್‌ನಲ್ಲಿ ಅವರ ತಂದೆ ನೌಕರಿಯಲ್ಲಿದ್ದರು. ಅಪಘಾತದಲ್ಲಿ ತೀರಿಕೊಂಡರು. ನನ್ನ ಎರಡು ವರ್ಷದ ಗೆಳತಿ ಮೀನಾ. ತುಂಬ ಒಳ್ಳೆಯ ಹುಡುಗಿ’ ಅಂದಳು ರೋಹಿಣಿ. ಅವನು ನನ್ನನ್ನು ಸುಮ್ಮನೆ ನೋಡುತ್ತ ಇದ್ದ. ಒಂದು ಪುಟ್ಟ ವಾಕ್ಯ ಕೂಡ ಹೇಳಲಿಲ್ಲ. ನೋಡುತ್ತಲೇ ಇದ್ದ. ಅವನ ಕಣ್ಣು ಚಿರತೆಯ ಕಣ್ಣಿನಂತೆ ಹೊಳೆಯುತ್ತಿದ್ದವು; ಮಾಗ್ನೆಟ್ ರೀತಿಯಲ್ಲಿ ಸೆಳೆಯುತ್ತಿದ್ದವು. ನಾನು ‘ನಮಸ್ಕಾರ’ ಎಂದು ಕೂಡ ಹೇಳಲು ಮರೆತು ಅವನ ಕಣ್ಣುಗಳಿಂದ ತಪ್ಪಿಸಿ ಕೂತೆ. ಆತ ಆಕಾರದಲ್ಲಿ ಆಕರ್ಷಕ ಹುಡುಗನಲ್ಲ. ಮೋಟರ್ ಸೈಕಲ್ ಮೇಲೆ ವೇಗವಾಗಿ ಸಂಚರಿಸುತ್ತಾನಂತೆ; ಪ್ರಾಣದ ಹಂಗಿಲ್ಲದೆ ಹೊಡೆದಾಡುತ್ತಾನಂತೆ. ‘ಗುಡ್ ಶಾಟ್’, ಗೂಂಡಾಗಳ ಜೊತೆ ಹೊಡೆದಾಡಲು ನಿಂತನೆಂದರೆ ಅವನ ಎದುರಿಗೆ ನಿಲ್ಲುವವರೇ ಇರಲಿಲ್ಲ. +‘ಸರಿ, ಆಮೇಲೆ ನೋಡ್ತೀನಿ’ ಎಂದು ಜಗ್ಗು ಎದ್ದ. ಅದನ್ನು ರೋಹಿಣಿಗೆ ಹೇಳಿದನೋ ನನಗೆ ಹೇಳಿದನೋ ಗೊತ್ತಿರಲಿಲ್ಲ. ಅವನು ದಾರಿಯಲ್ಲಿ ಸಿಕ್ಕರೆ ಗತಿಯೇನೆಂದು ಮಾತ್ರ ಭಯಗೊಂಡಿದ್ದೆ. ಜಗ್ಗು ಕೂಡ ಚೀನಿಯಂತೆಯೇ ಮನಸ್ಸಿನ ಪರದೆಯ ಮೇಲೆ ಮಾಸತೊಡಗಿದ. ನಾನು ಕೆಲವೊಮ್ಮೆ ಚೀನಿ ಒಳ್ಳೆಯವನೋ ಜಗ್ಗು ಒಳ್ಳೆಯವನೋ ಎಂದು ಕೇಳಿಕೊಳ್ಳುತ್ತಿದ್ದೆ. ಅಂಥ ಪ್ರಶ್ನೆಗಳೆಲ್ಲ ನನ್ನ ಘನತೆಗೆ ತಕ್ಕುದಾಗಿರಲಿಲ್ಲ ಎನ್ನುವುದು ನನ್ನ ನಂಬಿಕೆಯಾಗಿತ್ತು. ಆದರೆ ಮನಸ್ಸಿನ ಸ್ವಾತಂತ್ರ್ಯವನ್ನು ಮಿತಗೊಳಿಸುವವರು ಯಾರು? ಜಗ್ಗು, ಚೀನಿ ಮುಂತಾದವು ನನ್ನ ವ್ಯಕ್ತಿತ್ವವನ್ನು ತುಂಬಿಹೋಗುವ ಹೆಸರುಗಳು, ಮುಖಗಳು. +ಹೀಗಿದ್ದಾಗ ಒಂದು ದಿನ ನಾನು ಬಸ್‌ಸ್ಟಾಪಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಜಗ್ಗು. ಆತ ನನ್ನನ್ನು ನೋಡಿ ನಿಂತನೋ ಎಂದು ಕೂಡ ನನಗೆ ಸ್ಪಷ್ಟವಾಗಿರಲಿಲ್ಲ. ಅವನು ತನ್ನ ಎನ್‌ಫೀಲ್ಡ್ ಮೋಟರ್ ಬೈಕ್‌ಗೆ ಸ್ಟಾಂಡ್ ಹಾಕಿ ನನ್ನತ್ತ ನೋಡಿದ. ನಾನು ನಿರ್ವಾಹವಿಲ್ಲದೆ ನಿಂತೆ. ಅವನು ನನ್ನ ಹತ್ತಿರ ಬಂದು ತನ್ನ ಮೃಗದ ದೃಷ್ಟಿ ನೆಟ್ಟು, ‘ಬನ್ನಿ’ ಅಂದ. ಅವನು ‘ಬಾ’ ಅನ್ನಲಿಲ್ಲ; ಬರ್ತೀರಾ ಅನ್ನಲಿಲ್ಲ. ‘ಬನ್ನಿ’ ಅಂದ. ಅವನ ಧ್ವನಿ ಗಂಡಸಿನ ತುಂಬು ಧ್ವನಿಯೊಂದಿಗೆ ಮಾಧುರ್ಯ ಸೂಸಿದಂತೆ ಕಂಡಿತು. ಆತನ ವ್ಯಕ್ತಿತ್ವ ನಿಗೂಢವಾಗಿತ್ತು. ನಾನು ‘ಕಾಲೇಜಿಗೆ ಹೋಗಬೇಕು’ ಅಂದೆ. ಆತ ಮೆಲ್ಲಗೆ ತಲೆಯಲ್ಲಾಡಿಸಿದ. ನಾನು ಅವನನ್ನು ಹಿಂಬಾಲಿಸಿದೆ. ಅವನ ಮೋಟರ್ ಬೈಕಿನ ಪಿಲಿಯನ್ ಮೇಲೆ ಕೂತೆ. ಅವನ ಭುಜವನ್ನು ಎಡಗೈನಿಂದ ಹಿಡಿದುಕೊಂಡೆ. ಒಮ್ಮೆಗೇ ಸ್ಫೋಟಗೊಂಡಂತೆ ಶಬ್ದ ಮಾಡುತ್ತ ಆ ರಾಕ್ಷಸ ಮೋಟರ್ ಬೈಕ್ ಹೊರಟಿತು. ಅವನು ಒಂದು ಮಾತನ್ನೂ ಆಡಲಿಲ್ಲ. ನಾನು ಓದುತ್ತಿದ್ದುದು ಯಾವ ಕಾಲೇಜಿನಲ್ಲಿ ಎಂದು ಕೂಡ ಅವನಿಗೆ ಗೊತ್ತಿದ್ದಂತಿತ್ತು. ಕಾಲೇಜಿನ ಅಂಗಳಕ್ಕೆ ತನ್ನ ವಾಹನ ನಿಲ್ಲಿಸಿ ಸರ್ಕಾರಿ ಬಸ್ ಡ್ರೈವರ್‍ನ ವಸ್ತುನಿಷ್ಠೆಯ ಧ್ವನಿಯಲ್ಲಿ ‘ಸರಿ ಆಮೇಲೆ ನೋಡ್ತೀನಿ’ ಎಂದು ಭೀಕರ ಸದ್ದು ಮಾಡುತ್ತಾ ಹೊರಟುಹೋದ. +ಜಗ್ಗು ತರಹದವರು ಅಪಾಯಕರ ವ್ಯಕ್ತಿಗಳು, ಯಾಕೆಂದರೆ ಅವರು ಹೆಣ್ಣು ಬಯಸುವ ಮೌನ, ದಿಟ್ಟತನ, ಕಠೋರತೆಯ ಜೊತೆಗೆ ಮೃದುತ್ವವನ್ನು ಆಗಾಗ ಸೂಸುವವರು. ನಿಮಗೆ ಆಶ್ಚರ್ಯವಾಗಬಹುದು. ನಾನು ಯಾವುದೇ ಕಾರಣವಿಲ್ಲದೆ ಭಾನುವಾರ ಬಸ್‌ಸ್ಟಾಪಿಗೆ ಹೊರಟೆ. ರೋಹಿಣಿ, ಕುಸುಮ, ಶ್ರೀಮತಿ ಯಾರ ಮನೆಗೆ ಹೋಗುವುದೆಂದು ತೀರ್ಮಾನಿಸಿರಲಿಲ್ಲ. ಆದರೆ ಜಗ್ಗು ನನ್ನ ಪಕ್ಕದಲ್ಲಿ ತನ್ನ ಮೋಟರ್ ಬೈಕ್ ನಿಲ್ಲಿಸಿದ. ‘ಬನ್ನಿ’ ಅಂದ. ಅವನ ನಿಷ್ಠುರ ಮುಖ ನೋಡಿ ನಾನು ಕುಂಟು ನೆಪ ಒಡ್ಡಿ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ವಿಧೇಯ ವಿದ್ಯಾರ್ಥಿನಿಯಂತೆ ಮೋಟರ್ ಬೈಕ್ ಹತ್ತಿ ಕೂತೆ. ನನ್ನಲ್ಲಿ ಯಾವ ಭಯವೂ ಇರಲಿಲ್ಲ. ಯಾವುದೇ ಅಪಾಯದಿಂದ ನನ್ನನ್ನು ಜಗ್ಗು ರಕ್ಷಿಸಬಲ್ಲ ಅನ್ನಿಸಿತ್ತು. ಅವನ ಭುಜದ ಮೇಲಿದ್ದ ನನ್ನ ಕೈ ರೋಮಾಂಚನದಿಂದ ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡಿತ್ತು. ‘ಎಲ್ಲಿಗೆ ಜಗ್ಗು?’ ಅಂದೆ. ಆತ ಉತ್ತರಿಸಲಿಲ್ಲ. ಕೊನೆಗೆ ಊರ ಹೊರಗೆ ಸೇತುವೆಯ ಹತ್ತಿರ ನಿಲ್ಲಿಸಿದ. ‘ಇಳೀರಿ’ ಎಂದು ಆತ ಹೇಳಲಿಲ್ಲ. ನಾನು ಇಳಿದು ಅವನ ಹತ್ತಿರ, ಅವನಿಗೆ ತಾಕುವಂತೆ ನಿಂತೆ. ಅವನು ನನ್ನ ತೋಳು ಹಿಡಿದುಕೊಂಡು ಮುತ್ತುಕೊಟ್ಟ. ಇಡೀ ಮುಖ, ಕಣ್ಣು, ತುಟಿ…. ನಾ ಸವಿದ ಮೊದಲ ಚುಂಬನ ಅದು. ‘ಹೋಗೋಣ’ ಅಂದೆ. ಜಗ್ಗು ಸುಮ್ಮನೇ ನಿಂತ. ತನ್ನ ಗೆಳೆಯನನ್ನು ಅಪ್ಪಿಕೊಳ್ಳುವಂತೆ ನನ್ನ ಕೊರಳನ್ನು ಅಪ್ಪಿಕೊಂಡು ನಿಂತ. ಅವನ ಮೈ ಕೆಂಡವಾಗಿತ್ತು. +ಜಗ್ಗು ಆಮೇಲೆ ನನ್ನನ್ನು ನನ್ನ ಮನೆಯಲ್ಲಿ ಬಿಟ್ಟು ‘ನಿಮಗೆ ಬೇಸರವಿಲ್ಲ ಅಲ್ಲವೇ?’ ಎನ್ನುವಂತೆ ನೋಡಿದ. ಅವನ ಕೈಗಳನ್ನು ಎತ್ತಿಕೊಂಡು ಹಸ್ತವನ್ನು ಕೆನ್ನೆಗೆ ಒತ್ತಿಕೊಂಡೆ. +ಚೀನಿ ಮತ್ತು ಜಗ್ಗುವಿನ ಹತ್ತಿರ ಮದುವೆ, ಕುಟುಂಬ, ಅಂಗಡಿ, ಬಡ್ತಿ ಇತ್ಯಾದಿಯ ಬಗ್ಗೆ ಮಾತಾಡುವುದೇ ನನ್ನಿಂದ ಸಾಧ್ಯವಿರಲಿಲ್ಲ. ರೋಹಿಣಿ ಹೇಳಿದಳು, ‘ನಿನಗೆ ಕಷ್ಟವಾದರೆ ನಾನೇ ಕೇಳ್ತೇನೆ.’ +‘ಬೇಡ’ ಅಂದೆ. +ನಾನು ನನ್ನ ಅಮ್ಮನಿಗೆ ಬರುತ್ತಿದ್ದ ಪೆನ್‌ಶನ್ ಮೇಲೆ ಭಾರವಾಗಿ ಬಹಳ ವರ್ಷ ಇದ್ದುಬಿಡುವುದು ಸಾಧ್ಯವಿರಲಿಲ್ಲ. ಹಾಗೆಂದು ಜಗ್ಗು, ಚೀನಿ ನನ್ನ ಸಂಗಾತಿಗಳಾಗಲು ಸಾಧ್ಯವಿರಲಿಲ್ಲ. +‘ಯಾಕೆ’ ಎಂದು ನೀವು ಕೇಳಬಹುದು. ಹುಡುಗರು ಸಾಮಾನ್ಯವಾಗಿ ಮದುವೆಯಿಂದ ಸ್ಟ್ರೈಕಿಂಗ್ ಡಿಸ್ಟೆನ್ಸ್‌ನಲ್ಲೇ ಪ್ರೇಮಿಸುತ್ತಾರೆ. ಅವರ ಬದುಕೆಲ್ಲ ಮದುವೆಯ ಬಗ್ಗೆ ಚಿಂತಿಸುವುದರಲ್ಲೇ ಕಳೆದಿರುತ್ತದೆ. ಮೊದಲು ಹುಡುಗಿಯ ಜೊತೆಗೆ ಕಾಫಿ ಕುಡಿಯುವುದು, ಸುತ್ತಿ ಬಳಸಿ ತನ್ನ ಇಂಗಿತ ಹುಡುಗಿಗೆ ಗೊತ್ತಾಗುವಂತೆ ವರ್ತಿಸುವುದು. ಆಮೇಲೆ ಮದುವೆ. ಅಗತ್ಯವಿಲ್ಲದಿದ್ದರೂ ಹನಿಮೂನ್- ಹೆಸರುಘಟ್ಟ, ನಂದಿಬೆಟ್ಟ ಇತ್ಯಾದಿ. ತಿಂದುಹಾಕುವ ಬೇಸರ. ಇತ್ಯಾದಿ. +ನನ್ನ ಬದುಕು ಈ ರೀತಿ ಆಗುವುದು ಸಾಧ್ಯವಿರಲಿಲ್ಲ. ಜಗ್ಗು ಮತ್ತೆ ಮೂರುನಾಲ್ಕು ಸಲ ನನ್ನನ್ನು ಕಂಡರೂ ಆತ ಮುಂದುವರಿದಿರಲಿಲ್ಲ; ನಾನು ಕೂಡ ಆ ಲೈಂಗಿಕ ವಿಷಯದ ಹತ್ತಿರ ಕೂಡ ಸುಳಿದಿರಲಿಲ್ಲ. +“ಅವರ ಹೆಸರು ವಿಶ್ವನಾಥ್ ಅಂತ. ತುಂಬ ಎಳೆಯವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಪ್ರೊಫೆಸರ್. ಎಲ್ಲರಿಗೆ ಬೇಕಾದ ವ್ಯಕ್ತಿ. ಅವರನ್ನು ನೋಡಿ ನಾನೇ ‘ಮತ್ತೆ ಯಾಕೆ ಮದುವೆಯಾಗಬಾರದು’ ಅಂದೆ. ಅವರಿಗೆ ಇಷ್ಟವಿಲ್ಲ. ಹೆಂಡತಿ, ಮಕ್ಕಳು, ಕುಟುಂಬ ಅದೆಲ್ಲದರ ಗೋಳು ಯಾವುದೂ ಬೇಡ ಅಂತಿದ್ದಾರೆ. ನೀನು ಒಮ್ಮೆ ಅವರನ್ನು ನೋಡು” ಅಂದಳು ನನ್ನ ಅಮ್ಮ. +ನಾನು ಏನೂ ಹೇಳಲಿಲ್ಲ. ‘ಅವರು ಯಾವ ಪ್ರೊಫೆಸರ್?’ ಅಂತ ಮಾತ್ರ ಕೇಳಿದೆ. +‘ಅದೇನೋ ಫಿಲಾಸಫಿ ಅಂತೆ,’ ಅಂದಳು ಅಮ್ಮ. +ನಾನು ಸುಮ್ಮನಾದೆ. ಆಮೇಲೆ ತಿಳಿಯಿತು. ಅವರು ಸಾಹಿತ್ಯದ ವಿದ್ಯಾರ್ಥಿ, ತತ್ವಶಾಸ್ತ್ರದ ಅಧ್ಯಾಪಕ ಮತ್ತು ಯಾರೂ ಅರಿಯದ ಲೇಖಕ. ಕೇವಲ ಮೂವತ್ತೆರಡಕ್ಕೇ ಹೆಂಡತಿ ತೀರಿಕೊಂಡಿದ್ದಳು. ಮಕ್ಕಳಿರಲಿಲ್ಲ. ಅಧ್ಯಾಪಕರೆಂದರೆ ಪುಸ್ತಕಕೀಟ, ಗಂಭೀರ ವ್ಯಕ್ತಿ, ಮಾತೆತ್ತಿದರೆ ಶಿಸ್ತು, ನೈತಿಕತೆಯ ಮೇಲೆ ಉಪನ್ಯಾಸಕ್ಕಿಳಿಯುವ ಕೊರಕ; ಇವೆಲ್ಲ ಕ್ಲೀಷೆಗಳನ್ನು ವಿಶ್ವನಾಥ ಒಡೆದುಹಾಕಿದ್ದರು. ಎಲ್ಲರಂತಿದ್ದ ಈ ವ್ಯಕ್ತಿ ಗಂಡನಾಗಿ ಒಂದೇ ಒಂದು ಹಿತವಚನ ಹೇಳಿಲ್ಲ. ಮತ್ತು ನಾನು ಸಾಹಿತ್ಯದ ಮರ್ಮವನ್ನು ಅರಿತದ್ದೇ ಇವರಿಂದ. ಆತ ಮಾಹಿತಿ ನೀಡುವ ಮಟ್ಟದಲ್ಲಿ ಹೇಳುತ್ತಾ ಹೋದಂತೆ ಅವರು ಹೇಳಿದ ಪಾತ್ರಗಳ ದ್ವಂದ್ವಗಳು ಮತ್ತು ತಳಮಳ ನನ್ನನ್ನು ಮುತ್ತುತ್ತಿದ್ದವು. ಸಿನಿಮಾ ನಟಿ ಏವಾ ಗಾರ್ಡಿನರ್ ತಾನು ಇಷ್ಟಪಡಬಲ್ಲ ಪ್ರಿಯಕರನಿಗಾಗಿ ಭೂಗೋಳವನ್ನೆಲ್ಲ ಸುತ್ತಿ ಕೊನೆಗೆ ಹೆಮಿಂಗ್‌ವೇಯ ನೆರವಿನಿಂದ ಸ್ಪೇನಿನ ಬುಲ್‌ಫೈಟರ್ ಒಬ್ಬನನ್ನು ಆರಿಸಿ ಕೂಡಿದ್ದಳು; ಬುಲ್‌ಫೈಟರ್‍ಗೆ ಇಂಗ್ಲಿಷ್ ಬರುತ್ತಿರಲಿಲ್ಲ, ಏವಾ ಗಾರ್ಡಿನರ್‍ಗೆ ಸ್ಪ್ಯಾನಿಷ್ ಬರುತ್ತಿರಲಿಲ್ಲ. ಅವರ ಸಂವಹನವೆಲ್ಲ ಸ್ಪರ್ಶ, ಸನ್ನೆ, ಸಂಭೋಗವನ್ನು ಅವಲಂಬಿಸಿತ್ತು. ‘ಲಾಸ್ಟ್ ಟ್ಯಾಂಗೋ ಇನ್ ಪ್ಯಾರಿಸ್’ನಲ್ಲಿ ಮರ್ಲನ್ ಬ್ರಾಂಡೋ ಫ್ರೆಂಚ್ ಹುಡುಗಿಯನ್ನು ಸಂಭೋಗಿಸಿದ; ಅವರಿಗೆ ಪರಸ್ಪರ ಹೆಸರು ಕೂಡ ಗೊತ್ತಿರಲಿಲ್ಲ. ಹೆಸರು, ಹಿನ್ನೆಲೆ, ನೆನಪು ಎಲ್ಲವನ್ನೂ ತೊಳೆದುಹಾಕಿ ದೇಹದ ಮಟ್ಟದಲ್ಲಿ ಬದುಕಿದರೆ… ಇಂಥ ಪ್ರಶ್ನೆಗಳೆಲ್ಲ ನನ್ನ ಗಂಡ ವಿಶ್ವನಾಥ್‌ಗೆ ಅರ್ಥವಾಗುವುದಿಲ್ಲ ಎಂದು ನನಗೆ ಗೊತ್ತಿತ್ತು; ಹಾಗೆಯೇ ಚೀನಿ. ಅವನು ಎಲ್ಲವನ್ನೂ ಚರ್ಚೆಯ ಮಟ್ಟಕ್ಕೆ ಇರಿಸಿಬಿಡುತ್ತಿದ್ದ. ಇನ್ನು ಜಗ್ಗು. +ಪತಿ ವಿಶ್ವನಾಥ ನನಗೆ ಅನುರೂಪನಾದ, ಅನೇಕ ವಿಷಯಗಳಲ್ಲಿ ನನ್ನ ಚಿಂತನೆ, ವ್ಯಥೆಯನ್ನು ಪಾಲುಗೊಳ್ಳುವ ವ್ಯಕ್ತಿ. ಅವರ ನಿಷ್ಠೆ, ಹಾಸ್ಯ ಎಲ್ಲವೂ ಮೋಹಕವಾಗಿತ್ತು. +ಒಂದು ದಿನ ವಿಶ್ವನಾಥ್ ಕಾಲೇಜಿಗೆ ಹೋದಮೇಲೆ ಒಬ್ಬಳೇ ಓದುತ್ತಾ ಕುಳಿತಿದ್ದೆ. ನಾನೆಷ್ಟು ಸುಖಿ ಅನ್ನಿಸತೊಡಗಿತ್ತು. +ಆದರೆ ಬಾಗಿಲು ಬಡಿದ ಸದ್ದು. +ಜಗ್ಗು ನಿಂತಿದ್ದ. +ತೀವ್ರ ನಡುಕ ನನ್ನ ಮೈಯನ್ನೆಲ್ಲ ಆವರಿಸಿತು. ಆತಂಕ ಎನ್ನುವುದು ಏನು ಎಂದು ನನಗೆ ತಿಳಿಯಿತು. ವಿಚಿತ್ರ ಭಯದಿಂದ ತತ್ತರಿಸಿಹೋದೆ. ಯಾರೋ ಬರೆ ಇಟ್ಟಂತೆ ಆಗಿತ್ತು. +ನಾನೆಂದೂ ಜಗ್ಗುವಿಗೆ ‘ಇಲ್ಲ’ ಅಂದಿರಲಿಲ್ಲ. ಬಾಗಿಲ ಹತ್ತಿರ ಬಂದು ನೋಡಿದೆ. ಅವನು ಎಲ್ಲದಕ್ಕೆ ಜಡ್ಡುಗಟ್ಟಿದಂತೆ, ಎಲ್ಲ ಪ್ರಜ್ಞೆ ಹೊರಟು ಹೋದಂತೆ ನಿಂತಿದ್ದ. ಏನನ್ನೋ ಕಳೆದುಕೊಂಡಂತೆ ಮಂಕಾಗಿದ್ದ. ಪರ್ವತವೊಂದು ಸ್ಮಶಾನಸದೃಶ್ಯವಾಗಿಬಿಟ್ಟಂತೆ ಅನ್ನಿಸುತ್ತಿತ್ತು. ಆ ಪರ್ವತದಿಂದ ಎಲ್ಲ ಹಕ್ಕಿ, ಪ್ರಾಣಿ, ಸಸ್ಯಗಳು ಹೊರಟುಹೋದಂತೆ ಅನ್ನಿಸಿತು. ನನ್ನಲ್ಲಿ ಕರುಣೆ ಉಕ್ಕಿತು. ನಾನು ವಿಧೇಯಳಾಗಿ ಬಾಗಿಲು ತೆಗೆದೆ. +ಅವನ ಜಡ ವ್ಯಕ್ತಿತ್ವ ಹತ್ತಿಕೊಂಡು ಉರಿಯಿತು. ನಾನು ಒಂದು ಮಾತನ್ನೂ ಆಡಲಿಲ್ಲ. ನನ್ನನ್ನು ವಿಚಿತ್ರ ಪ್ರೇಮ, ಕರುಣೆ ತುಂಬಿತ್ತು. +ಅವನು ಒಳಗೆ ಬಂದು ನನ್ನನ್ನು ಅಪ್ಪಿಕೊಂಡ. +* +* +* +ಏನು ಮಾಡುವುದು? ವಿಶ್ವನಾಥ್ ಹೇಳಿದ್ದರು: ಮನುಷ್ಯನ ವಿವೇಕ ಎರಡುಪಾಲು, ಅವಿವೇಕ ಎಂಟುಪಾಲು. ನಮ್ಮ ಜಗತ್ತಿನ ಎಲ್ಲ ಪ್ರೇಮ, ಸಾಹಿತ್ಯ, ಸಾಹಸ ಬಂದಿರುವುದು ಎಂಟುಪಾಲಿನಿಂದ! +ಅವತ್ತಿನಿಂದ ಜಗ್ಗು ನಾಲ್ಕು ಸಲ ಬಂದ. ಆತ ಬಂದಿದ್ದ ಒಂದೊಂದು ದಿನವೂ ಪತಿ ವಿಶ್ವನಾಥ್‌ರನ್ನು ನೋಡುವುದು ನನಗೆ ಕಷ್ಟವಾಯಿತು. ನಾನು ನನ್ನ ಪತಿಯನ್ನು ದ್ವೇಷಿಸುತ್ತಿರಲಿಲ್ಲ, ಬದಲಾಗಿ ಪ್ರೀತಿಸುತ್ತಿದ್ದೆ. ನನ್ನನ್ನು ಮಗುವಿನಂತೆ, ಗೆಳತಿಯಂತೆ, ವಿದ್ಯಾರ್ಥಿನಿಯಂತೆ ನೋಡಿಕೊಳ್ಳುತ್ತಿದ್ದ ವಿಶ್ವನಾಥ್ ನಿಜಕ್ಕೂ ನನ್ನ ಇಷ್ಟದ ವ್ಯಕ್ತಿ. ನಾವಿಬ್ಬರೂ ಆಟ ಆಡುತ್ತಿದ್ದೆವು, ಜೋಕ್ಸ್ ಹೇಳಿಕೊಂಡು ತಮಾಷೆ ಮಾಡುತ್ತಿದ್ದೆವು. ನಮ್ಮ ಅಗ್ಗದ ಸಿನಿಮಾ, ಕಾದಂಬರಿಗಳಲ್ಲಿ ಹೇಳುವಂತೆ, ‘ಒಂದು ಪುಟ್ಟ ಮರಿ ಬೇಡವಾ’ ಎಂದು ಕೇಳಿ ನಗುತ್ತಿದ್ದೆವು. ಅವನು ತನ್ನ ಕಲ್ಪನೆಯ ಶತ್ರುಗಳನ್ನು ಎದುರಿಸಿ ಯುದ್ಧ ಮಾಡುವವನಂತೆ ನಟಿಸುತ್ತಿದ್ದ. ಪ್ರೇಮಿಯಾಗಿ ಕೂಡ ವಿಶ್ವನಾಥ್ ಅದ್ಭುತ ವ್ಯಕ್ತಿ. ಆತನಲ್ಲಿ ದೋಷವೇ ಇರಲಿಲ್ಲ. ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು, ಅವರ ಚಿಂತನೆಗಳು, ಅವರ ಕ್ರಿಯೆಗಳು ನನಗೆ ಬಂದದ್ದೇ ವಿಶ್ವನಾಥ್‌ರಿಂದ. ಶೇಕ್ಸ್‌ಪಿಯರ್‍ನ ನಾಟಕಗಳ ಕತೆ ಹೇಳಿ ರಂಜಿಸುತ್ತಿದ್ದ. ‘ನನಗೆ ನಿದ್ದೆ ಬರುತ್ತಿಲ್ಲ’ ಅಂದರೆ ಡ್ಯೂಮಾ, ಹ್ಯೂಗೋ ಮುಂತಾದ ಕಾದಂಬರಿಗಳ ಕತೆ ಹೇಳುತ್ತಿದ್ದ. ಶೇಕ್ಸ್‌ಪಿಯರನ ವಿಪರ್ಯಾಸವನ್ನು ವಿವರಿಸುತ್ತಿದ್ದ. ಆತ ಎಂದೂ ಕವಿಯಾಗುವ ಆಶೆ ಹೊಂದಿರಲಿಲ್ಲ. ಆತ ಬರೆದದ್ದೇ ಎಲ್ಲರನ್ನೂ ರಂಜಿಸುವ ಘಟನೆಗಳು ಹೇಳಿ. ಏಟ್ಸ್‌ನ ಈ ಪದ್ಯ ನೋಡು; ಈತ ತನ್ನ ಮಾಗಿದ ಮನಸ್ಸಿನಲ್ಲಿ ಅನುಭವಿಸುವ ತಳಮಳ ವಿಚಿತ್ರ ಅಲ್ಲವೆ…. +ಇಷ್ಟಾದರೂ ಜಗ್ಗುವಿಗೆ ನಾನು ‘ಬೇಡ’ ಅನ್ನಲಾಗಲಿಲ್ಲ. ಅದು ನನ್ನಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಪತಿ ವಿಶ್ವನಾಥ್ ಕಾಲೇಜಿಗೆ ಹೋದೊಡನೆ ನಾನೇ ಮನೆಗೆ ಬೀಗ ಹಾಕಿದೆ. ಆದರೆ ಬೀಗದ ಕೈಯನ್ನು ಜಗ್ಗುವಿಗೆ ಕೊಟ್ಟು ಕರೆದುಕೊಳ್ಳುತ್ತಿದ್ದೆ. +ಇದೆಂಥ ವಿಚಿತ್ರ ದ್ವಂದ್ವ ಮತ್ತು ವಂಚನೆ! ಇದರಿಂದ ಮುಕ್ತಳಾಗಲು ನನಗಿರುವ ದಾರಿ ಒಂದೇ- ಈ ನೋಟ್ ಬರೆದು ಜೀವ ತೆಗೆದುಕೊಳ್ಳುವುದು. +ಸೂಕ್ಷ್ಮಜ್ಞತೆಯ ದುರಂತ ಇದೇ ಅಲ್ಲವೆ? ಇದು ನನ್ನ ಸೂಯಿಸೈಡ್ ನೋಟ್ ಅಥವಾ ಅತ್ಯಂತ ಪ್ರಾಮಾಣಿಕ ಕ್ರಿಯೆ. ವಂಚನೆಗೆ ತೆರೆ ಎಳೆಯುವ ಕೆಲಸ. ನಾನು ಬದುಕಿದ್ದಕ್ಕೆ, ತೀರಿಕೊಂಡಿದ್ದಕ್ಕೆ ಸಾಕ್ಷಿ. +***** +ಮಾರ್ಚ್ ೨೪, ೧೯೯೯ +ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […] +ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, […] +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_266.txt b/Kannada Sahitya/article_266.txt new file mode 100644 index 0000000000000000000000000000000000000000..b01eea7708577b40fcfbc02bc43fa1f9ae667dca --- /dev/null +++ b/Kannada Sahitya/article_266.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಣತೆ ಹಚ್ಚುತ್ತೇನೆ ನಾನೂ. +ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; +ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ +ಇದರಲ್ಲಿ ಮುಳುಗಿ ಕರಗಿರುವಾಗ +ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. +ಹಣತೆ ಹಚ್ಚುತ್ತೇನೆ ನಾನೂ; +ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ +ಆಸೆಯಿಂದಲ್ಲ. +ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ +ಶತಮಾನದಿಂದಲೂ, +ನಡು ನಡುವೆ ಒಂದಷ್ಟು ಬೆಳಕು ಬೇಕೆಂದು +ಆಗಾಗ ಕಡ್ಡಿ ಗೀಚಿದ್ದೇವೆ, +ದೀಪ ಮುಡಿಸಿದ್ದೇವೆ, +ವೇದ, ಶಾಸ್ತ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ +ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ +ಸುಟ್ಟಿದ್ದೇವೆ. +‘ತಂಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ +ಬೂದಿಯನ್ನೇ ಕೊನೆಗೆ ಕಂಡಿದ್ದೇವೆ. +ನನಗೂ ಗೊತ್ತು, ಈ ಕತ್ತಲೆಗೆ +ಕೊನೆಯಿರದ ಬಾಯಾರಿಕೆ, +ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ +ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು +ಇನ್ನೂ ಬೇಕು ಎನ್ನುವ ಬಯಕೆ. +ಆದರೂ ಹಣತೆ ಹಚ್ಚುತ್ತೇನೆ ನಾನೂ; +ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, +ಇರುವಶ್ಟು ಹೊತ್ತು ನಿನ್ನ ಮುಖ ನಾನು ನನ್ನ ಮುಖ ನೀನು +ನೊಡಬಹುದೆಂಬ ಒಂದೇ ಒಂದು ಆಸ್ಯೆಯಿಂದ; +ಹನತೆ ಆರಿದ ಮೆಲೆ ನೀನು ಯಾರೋ, ಮತ್ತೆ +ನಾನು ಯಾರೊ. +***** +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_267.txt b/Kannada Sahitya/article_267.txt new file mode 100644 index 0000000000000000000000000000000000000000..3c1f4b2e3402b0ddedaf35058a0f8779b8383736 --- /dev/null +++ b/Kannada Sahitya/article_267.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು ಕೊಕ್ಕೋಕ್ಕೋ”” ಎಂದು ಕೂಗಿದ್ದೇ ಸೊಂಟ ಚಳಕ್ ಅಂದಂಗಾಯಿತು. ಅದಕ್ಕೆದ್ದು ಆಕೆ ಯವ್ವೋ”” ಎಂದು ನಳಿದೇಟಿಗೆ ಯ್ಯೋನಾತೆವ್ವಾ… ಯ್ಯೋನು ಬುಟ್ತವ್ವಾ ಅಂತ ಪರಾಂಬರಿಸುತ್ತ ಎಲ್ಲರೂ ಒಬ್ಬೊಬ್ಬರಾಗಿ ಎದ್ದರು. ದಿಕ್ಕುದಿಕ್ಕಿಗೊಂದರಂತೆ ಅಂಗಾಂಗ ಚೆಲ್ಲಿ ಅಂಡಾರವನ ಮಲಗಿಕೊಂಡಿದ್ದ ಏಳೆಂಟು ಮಂದಿ ಮಕ್ಕಳು ಮರಿ ಎದ್ದ ನಂತರವೇ ಆ ಮನೆಯು ಸರ್ವಾನ್ನೊಂದು ರೀತಿಯಲ್ಲಿ ಶಾಬ್ದಿಕ ಕಳೆಯಿಂದ ಹೊಳೆಯತೊಡಗಿತು. ಅದರದ್ದು ನೆಕ್ಕಬೇಕು ಇದರದ್ದು ನೆಕ್ಕಬೇಕೂಂತ ಶ್ವಾನಗಳು ಸಿಂಹಗಳೋಪಾದಿಯಲ್ಲಿ ಬಂದರೆ ಕಾಕರಾಜರುಗಳು ಕಾ”ಕಾ””” ಎಂದು ರಾಗಾಲಾಪನೆ ಮಾಡುತ್ತ ಎಲ್ಲಂದರಲ್ಲಿ ಕೂತುಕೊಂಡವು. ನನ್ದ್ಯಾವ್ರು ಸುಡುಗಾಘಿಗೋಯ್ತಾನೋ””” ವದಕನ ಬ್ವಗ್ಳಿ ಬ್ವಗ್ಳೀ ಮಯ್ಯೆಂಬೋದು ಸುಣ್ಣದ ಭಟ್ಟೀ ಆಗೈತೆ. ಯಿವತ್ತವರವ್ರ ಉಚ್ಚೇನ ಅವರವ್ರ ಕುಡಕಂಡ್ರು ಚಿಂತಿಲ್ಲ… ನಾನ್ಮಾತ್ರ ಸೀನೀರ್‌ತಲಾಕೋಗೋದಿಲ್ಲ…ದನಕ್ಕಿಂತ ಅತ್ತತ್ತ ಆದ್ನೆ…ಸಿವ್ ಸಿವಾ”” ಯ್ಯೋನು ಕರುಮಾ ಮಾಡಿದ್ನೇ ಈ ಮನೀಗ್ ಸ್ವಸಿ ಆಗಿ ಬರಲಾಕೋ ಎಂದು ಮುಂತಾಗಿ ಚಿನ್ನವ್ವ ಅರುಣೋಡಯವನ್ನೇ ತರಾಟೆ ತೆಗೆದುಕೊಂಡಳು. ಒಂದು ತಂಬಿಗೆ ಕುಡಿಯೋ ನೀರಿಗೆ ಸಂಬಂಧಿಸಿದಂತೆ ಗಂಡಗೂ ತನಗೂ ರಾತ್ರಿ ನದೆದು ಅರ್ಧಕ್ಕೆ ನಿಂತಿದ್ದ ಜಗಳವನ್ನು ಮುಂದುವರಿಸುವ ಉದ್ದೇಶದಿಂದ ಘನವಾದ ಪೀಠಿಕೆ ಹಾಕುವ ದೃಷ್ಟಿಯಿಂದ ಆಕೆ ವಲವಾದ ಮಾತೆತ್ತಿಕೊಂಡಳು. ಒಂದು ಕಡೆ ಮುದುಕಿ ‘ಅಲಲಾ ನಮ್ಮೋವ್ನೆ”” ನಾವ್ನೆಲಾ ಯಿಡಕಂಡಿರೋ ವತ್ತಿಗೆಲ್ಲಾ ನೀನೀಟರ ಮಟ್ಟಿಗೆ ಮಾತಾಡ್ತಿರೋದು…’ ಎಂದು ಕಲ್ಡಬತ್ತವನ್ನು ಎಂದಿಗಿಂತ ಗಟ್ಟಿಯಾಗಿ ಕುಟ್ಟ ತೊಡಗಿದರೆ ಇನ್ನೊಂದು ಮೂಲೆಯಲ್ಲಿ ಮುದುಕ ನಾನಿನ್ನೂಬೊದುಕದೀನಿ…ಕುಂಡ್ಯಾಗಿನ್ನೂ ಮಾವುಸ ಐತಿ…’ ಎಂದಷ್ಟೆ ಮಾತಾಡಿ ರವುಸದಿಂದ ಕೊಕ್‌ಕೊಕ್ಕಂತ ಕೆಮ್ಮತೊಡಗಿತು. ಗಂಡ ಬಸ್ಯ ಅಂಭೋನು ಈಗ ಮಾತೆತ್ತಿಕೊಳ್ಳಬಹುದು, ಆಗೆತ್ತಿಕೊಳ್ಳಾಬಹುದು ಅಂತ ಚಿನ್ನವ್ವ ಕಾದೇ ಕಾದಳು. ಎದ್ಹಾಸಿಗೇಲಿ ಎದ್ದು ಮೊಣಕಾಲ ಚಿಪ್ಪು ಎಂಬ ರತುನ ಸಿಮ್ಮಾಸನದ ಮೇಲೆ ತಲೆ ಅಂಬುದನ್ನಿಟ್ಟು ಕೊರೆ ಬೀಡಿ ಸುಡುತ್ತಲೂ ಡಬ್ಬಲ್ ಜೀರೋ ಬಂತೋ ಇಲ್ವೋ ಎಂದು ಯೋಚಿಸುತ್ತಲೂ ಕೂತಿದ್ದ ಅವನು ಹೆಂಡತಿಯ ಯಾವ ಮಾತನ್ನೂ ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಪಾಕೆಟ್ ಹಾಕಿದ್ದ ಕಾರಣಕ್ಕೆ ರಾತ್ರಿ ಇದ್ದ ರವುಸ ಈಗ ಇರಲಿಲ್ಲ. ತನ್ನದೇ ತನಗೆ ಮಸ್ತಾಗಿತ್ತು. ಗಂಡನತ್ತ ದುರುಗುಟ್ಟಿದಳು. ಯವ್ವೋ ಎಂದಳುತ್ತ ಮೊಲೆ ಜಿಬುರಲು ತೊಡೆ ಏರಿದ ಸೇಂದ್ರನನ್ನು ಅಯ್ ಮುದ್ಯೋನಾಗಿ…ಮಲಿ ಸೆಟ ಉಡುವಲ್ಲಿ…ಅಲ್ನೂಡ್ಯಾವಾ…ರಟ್ಟಿಸೆಟ್ನಿ ತಿಂಬಲಕ್ಯೋನ್ದಾಡಿ…ಎಂದು ಅಂದು ಝಾಡಿಸಿ ತಳ್ಳಲು ಅದು ಉರುಳೀಕೋತ ತನ್ನ ತಂದೆಯ ಕಾಲ ಬುಡಕ ಹೋಯಿತು. ಅದನ್ನಾತ ಎತ್ತಿಕೊಂಡು ರಮಿಸುತ್ತ ‘ಅಯ್ ಯಿದರ ಮ್ಯಾಕ್ಯಾಕ ತೋರುಸ್ತಿಯಬೇ, ನಿನ್ನ ಟೆಂಪರೂ”’ ಎಂದು ಮಾತಿಗೆ ಪುಟ ಕೊಟ್ಟನು. ಆಕೆಗೂ ಅಷ್ಟೇ ಬೇಕಾಗಿತ್ತು. ಕುಪ್ಪಳಿಸಿ ಎಗರಿ ಪತಿದೇವರ ಮುಂದೆ ನಿಂತು ಬಲಗೈಯನ್ನೇ ವಜ್ರಾಯುಧದಂತೆ ಝಳಪಿಸುತ್ತ ‘ಅಗಾ ಟೆಂಪರೂಗಿಂಪರಂತ ಮಾತಾಡ್ ಬ್ಯಾಡ್ನೋಡು…ಗೊಂಡುಸಾಗಿದ್ರೆ ನಿಸೂರಾಗಿ ಮಾತಾಡು…ಬ್ವಗ್ಳೀ ಬ್ವಗ್ಳೀ ನನ್ ಜೀವಾನೂ ರೋಸ್ಕಂಡೈತೆ.’ ಎಂದು ಬುಸುಗುಟ್ಟಿದಳು. ಮುದುಕಿ ಗಪ್ಪಂತ ತಂಬುಲದುಂಡೆಯನ್ನು ದವದೆಗ್ ಸೇರಿಸಿ‘ಯೋನ್ಯಾಲಾ ಬೊಂತಂತೀನಿ..’ ಎಂದಂದು ಒಂದಷ್ಟು ನಮಲಿ ‘ಗೊಂಡೆಂಬೋ ಕಬುರಿಲ್ದಂಗೆ ಮಾತಾಡಿದ್ರೆ ಆ ಸಿವಾ ಮೆಚ್ಚಾಕಿಲ್ಲವ್ವೋ’ ಅಂತ ಗೊಣಗಿತು. +ಏನೇ ಆದರೂ, ಎಷ್ಟೇ ಆದರೂ ಗಟ್ಟಿವಾಣೀ ಚೆನ್ನವ್ವನನ್ನು ತಡವುವ ಶಕ್ತಿ ಅವರಾರಿಗೂ ಇರಲಿಲ್ಲ. ಸುಮಾರು ಕಾಲದಲ್ಲಿ ಅವರು ತಿಪ್ಪೇ ಮೇಲೆ ಸಾರಿಸಿದಂತೆ ಮಾತಾಡ ಬಹುದಿತ್ತು. ಅದೇ ರಸ್ತೆಯ ಕೊನೀಕೆ ನಾಲ್ಕಾರು ಹಾರಿಕೆಯಲ್ಲಿ ಸಿಗುವ ಕುಸ್ತಿ ಕಾಳಪ್ಪನ ಹತ್ತಂಕಣದ ಮನೆಯೇ ಈಕೆಯ ತವರು. ಕನಸಲ್ಲಿ ಕೇಳಿದರೂ ಸಾವ್ರ ಕಿತ್ತುಕೊಡುವಂಥ ಶಕ್ತಿಯನ್ನು ಅವರು ಸಂಪಾದಿಸಿರುವರು. ಎಂಥ ಹೇಮಾಹೇಮಿಗಳನ್ನು ಮಣ್ಣುಪಾಲು ಮಾಡಿ ಇಡೀ ಊರಲ್ಲಿ ಪ್ರಚಂಡ ಜಗಳಗಂಟರೆಂದು ಹೆಸರು ಗಳಿಸಿರುವ ತಂದೆ ತಾಯಿಗಳು, ಬಾಳೆಗೊನೆಯಂಥ ತೋಳುಗಳ ಅಣ್ಣಾತಮ್ಮಂದಿರು, ವಾರಕ್ಕೊಂದೆರಡಾವರ್ತಿಯಾದರೂ ಕುರಿ ಮಾವುಸ ಬೇಯಿಸುವ ಎರಡು ಜೊತೆ ಒಲೆಗಳು, ಒಂದೇ ಎರಡೇ ತನ್ನ ತವರು ಮನೆಯ ಸೌಭಾಗ್ಯ. ಆದರೂ ಚೆನ್ನವ್ವ ತವರು ಕಣ್ಣಾಳತೆ ದೂರದಲ್ಲಿದೆ ಅಂತ ಮಾತು ಮಾತಿಗೆ ಹೋಗುವ ಪೈಕಿ ಅಲ್ಲ. ತವರಮನೆಯವರ್ಯಾರಾದರೂ ಎದುರಾದರೆ ಗಂಡನ ಮನೇನ ಮೇಲುಗಟ್ಟಿ ಮಾತಾಡುವುದುಂಟು. ಈ ಬಂಗಾರದಂತ ಗುಣದಿಂದಾಗಿಯೇ ಗಂಡನ ಮನೆಯವರಿಗೆ ಆಕೆಯ ಮೇಲೆ ತುಂಬ ಜೀವ. ಯಾರೊಬರೂ ಕೊಸರಿ ಮಾತಾಡುವುದಿಲ್ಲ. ಯಾವುದೋ ನೆಪದಲ್ಲಿ ಜಗಳ ಆಡೋದಾಡಿ ಅದರ ಪರಿಣಾಮವನ್ನು ಸಿಹಿ ನೀರಿನ ಮೇಲೆ ಹಾಕಿಬಿಡುವುದು ವಾಡಿಕೆ. ಆ ದಿನ ಹಾಗೇ ಆಯಿತು. ಚೆನ್ನವ್ವ ಆರೋಹಣದಲ್ಲೇ ಬಾಯಿ ಮಾಡಿದಳು. ಅಕಸ್ಮಾತ್ ಮಾತಿಗೆ ಬಿದ್ದು ತವರು ಮನೆಗೆ ಹೊಂಟೋಯ್ತೀನಿ ಎಂದಳು. ಅಷ್ಟೇ ಆಕಸ್ಮಿಕವಾಗಿ ಬಸ್ಯನೂ ‘ಯಿಲ್ಲಾರ್ನ ಯದುರುಸ್ತಿ, ಹೊಂಟೋಗು.’ ಎಂದು ತುಟಿ ಕಚ್ಚಿದಳು. ಅಲಾ”” ತನ್ನ ಗಂಡ ಹಿಂಗಂದನಲ್ಲಾ….ತಾನಿನ್ನೊಂದು ಚಣ ಈ ಮನೆಯಲ್ಲಿರಬಾರದು ಎಂದು ಯೋಚಿಸಿದ ಆ ಛಲದಂಕಮಲ್ಲಿಯು ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ ಮುದೇತನಿಗೆ ಬಿಕ್ಕಳಿಕೆ ಹತ್ತಿಕೊಂಡಿತು. ತನ್ನ ಹೊಟ್ಟೇಲಿ ಹುಟ್ಟಿದ ಮಾನಿಕದ ಹರಳೇ ಕೂಗಿಟೆನೋ ಎಂದು ಭಾವಿಸಿದವಳಾದ ಆಕೆಯು ‘ಹೊಂಟೋಗಂತಿಯ್ಯೋನೋ”” ವಂಟೋಯ್ತೀನಿ ನ್ವಾಡ್ತಿರು…ಕಯ್ಯಿಗೂ ಬಾಯಿಗೂ ನ್ಯಕ್ಕೋಳ್ವರಂತೀ””’ ಎದ್ಮು ಮುಂತಾಗಿ ಅಕ್ರೈತ್ ಉದುರಿಸುತ್ತ ಸರ್ರನೆ ಆಡುಗೆ ಮನೆಗೆ ಹೋಗಿ ಒಂದೊಂದು ಗಡಿಗೆಯನ್ನು ಒಂದೊಂದು ರೀತಿ ಎತ್ತೆತ್ತಿ ನೋಡುತ್ತಾಳೇ. ಯಾವುದರಲ್ಲೂ ಒಂದು ಕಾಳು ನೀರಿಲ್ಲ…ಅಯ್ಯೋ ನನಕರುಮವೇ”” ಮುದೇತಗೆ ಬಿಕ್ಕತ್‌ಕಂಡೈತೆ…ಯ್ಯೋನು ಮಾಡೋದೆಪ್ಪ ಸಿವ್ನೇ…ಎಂದನಕೋತ ಅಡಕಲ ಗಡಿಗೆಯಿಂದ ಒಂದ್ತಟಗು ಹುಣುಸೇ ಹಣ್ಣನ್ನು ತಂದು ಮುದೇತನಿಗೆ ಕೊಡುತ್ತ ‘ಮಾವೋ””ಯಿದ್ನ ಬಾಯಾಗಿಡ್ಕಂಡು ಜಮಡ್ತಿರು…ಜತ್ನವ್ವಾಗಿ ಸಾಂತವ್ವನತ್ರ ಒಂದ್ನಾಕ್ಕಾಳು ನೀರ್ತರ್ತೀನಿ’ ಎಂದಂದು ತಂಬಿಗೆಯೊಂದನ್ನು ಸೆರಗಿನಲ್ಲಿ ಮರೆಮಾಚಿ ಬಾಗಿಲು ದಾಟಲು ಅಲ್ಲಿ ಸಿದ್ದ ಕೊಟ್ರಿ ಎಂಬ ಹೆಸರಿನ ಕಂದಮ್ಮಗಳು ತಂತಮ್ಮ ತಿಕಗಳನ್ನು ಅರ್ಜುನ, ಭೀಮರುಗಳ ಜಿಹ್ವಾಗ್ರಗಳಿಗೆ ಬಿಟ್ಟುಕೊಟ್ಟು ಆನಂದಾತಿರೇಕವನ್ನನುಭವಿಸುತ್ತ ನಿಂತಿದ್ದವು. ತನ್ನ ಬಹುದಿನದ ಕನಸಾದ ಸಿಹಿ ನೀರಿನಿಂದ ತನ್ನ ಯಾವತ್ತೂ ಮಕ್ಕಳ ತಿಕಗಳನ್ನು ತೊಳೆಯುವುದರ ಬಗ್ಗೆ ನೆನೆಸಿಕೊಳ್ಳುತ್ತ ತನಗೆ ತಾನೇ ನಗುತ್ತ ತನ್ನನ್ನು ತಾನೇ ಸಂತೈಸುತ್ತ ಸರಿಯಾಗಿ ವಂದೆಂಟು ದಿನ ತಪ್ಪದೆ ಸಿಹಿ ನೀರು ಕುಡಿದನೆಂದರೆ ತನ್ನ ಗಂಡನೂ ಎಲ್ಲರಂತೆ ಮೈ ಬಿಟ್ಟು ಬಾಳುವಸ್ಥನಾಗಬಹುದೆಂದುಕೊಳ್ಳುತ್ತ ಲಗು ಬಗೆಯಿಂದ ನಡೆಯುತ್ತಿದ್ದ ಚೆನ್ನವ್ವ ಕುಡಿಯೋ ನೀರಿನ ಕೊಳ್ಳುವಿಕೆ ಕುರಿತು ವ್ಯವಹಾರಿಕವಾಗಿ ಯೋಚಿಸದೆ ಇರಲಿಲ್ಲ. ತಾನು ಅವರಿವರಿಂದ ಕಡ ಪ್ದೆದಿರುವುದಕ್ಕಿಂತ ಅವರಿವರು ತನ್ನ ಮನ್ಯಿಂದ ಒಯ್ದಿರುವುದೇ ಹೆಚ್ಚೆಂದುಕೊಂಡಳು. ಒಂದು ಮಾತು ಹೇಳಬೇಕೆಂದರೆ ತನ್ನ ತವರುಮನೆ ಹೊರತುಪಡಿಸಿ ಕೇರಿಯ ಯಾವ ಮನೆಯಲ್ಲೂ ಒಂದು ಬೊಗಸೆ ಸಿಹಿನೀರಿಲ್ಲವೆಂಬುದು ಪರಮ ಸತ್ಯ. ತಾನು ಅಂಗಲಾಚಿದರೆ ಸಾಕು ತನ್ನ ತವರು ಮನೆಯವರು ಒಂದು ತಂಬಿಕೆಯಾಕೆ ಒಂದು ಕೊಡ ನೀರು ಕೊಡದೆ ಇರುವುದಿಲ್ಲ. ಆದರೆ ದೇಹಿ ಎಂದು ಕೇಳುವ ಸ್ವಭಾವದವಳಲ್ಲ ಚೆನ್ನವ್ವ. +ದ್ವಾದಶ ಸ್ಥಾನದಲ್ಲಿ ಮಕ್ಕಳು ಮರಿ ಮಾಡಿದ್ದ ಇಸಿ..ವಸಿ ಬಳಿಯು‌ಉದರಲ್ಲಿ ಮಗ್ನಳಾಗಿದ್ದ ಸಾಂತವ್ವ ಯಂಕೋಬಿ ಹೋ ಅಂತ ಬೊಗಳಲು ಕಣ್ಣೆತ್ತಿ ನೋದುತ್ತಾಳೆ ತನ್ನ ಜೀವದ ಸಂಗಾತಿ. ಕಯ್ಯಿಗಳನ್ನು ಸೀರೆಗೊರಸಿಕೊಳ್ಳುತ್ತ ಚೆನ್ನವ್ವನನ್ನು ಆಶ್ಚರ್ಯ ಸಂಭ್ರಮದಿಂದ ಬರಮಾಡಿಕೊಂಡಳು. ಒಬ್ಬರನ್ನೊಬ್ಬರು ಸಾಮಾನ್ಯವಾಗಿ ಮಾತನಾಡಿಸುವುದೇ ಸಿಹಿನೀರಿಗೆ ಸಂಬಂಧಿಸಿದಂತೆಯೇ. ಗೆಳತಿಯ ಈಗಿನ ಸೆರಗಿನ ಮರೆಯಲ್ಲಿ ಖಾಲಿ ತಂಬಿಗೆಯೊಂದು ಥಳಥಳ ಹೊಳೆಯುತ್ತಿರುವುದನ್ನು ಆಕೆ ಗುರುತಿಸದೆ ಇರಲಿಲ್ಲ. ‘ಸೂರ್ಯ ಹುಟ್ಟೋಕೇ ಗತಿ ಇಲ್ಲ, ದ್ಯಮವ್ವ, ಮಲ್ಲವ್ವನಂಥೋರು ವ್ಯಾರದಿಂದ ಬಳುಕುತ್ತ ನೀರಿಗೆ ಬಂದದ್ದುಂಟು. ‘ ಅಗಾ ವಟ್ಟೆ ಅಸಗಂಡೀವಂದ್ರ ಉಂಬಾಕಿಟ್ಟೇನು…ಅದ್ರೆ ನೀರ್ನ ಮಾತ್ರ ಕ್ಯೋಳಬ್ಯಾಡ್ರೀನ್ವಾಡು..ನಿನ್ನೆ ರಾತ್ರಿ ಉಂಡ್ಕೂಳು ಇನ್ನು ಹಂಗೆ ಗಂಟ್ಲಾಗೈತಿ’ ಎಂದು ಹೇಳಿ ಕಳುಹಿಸಿದ್ದಳು. ಸೈ ಬುಡವ್ವ ಅಂತ ಅವರು ಹೋಗಿದ್ದರೂ ಯಲಾ ಚಿನಾಲಿ ವಂದ್ಕಯ್ಯಿ ನ್ವಾಡ್ಕಂತೀವಿ ಎಂದು ಮನದಲ್ಲಿ ಹಲ್ಲು ಮಸೆಯುತ್ತ ಹೋಗಿದ್ದರು. ಅವರು ತಮ್ಮ ಮನೆಯ ವಿದ್ಯಾಮಾನಗಳ ಕಡೆ ಒಂದು ಕಣ್ಣು ಇಟ್ಟಿರದೆ ಇರಲಾರರು. +ಸಾಂತವ್ವ ಗೆಳತಿಯನ್ನು ತಡಿಕೆ ಮರೆಗೆ ಕರೆದೊಯ್ದು ವಂಚೂರು ನಶ್ಯಪಡಿ ತಿಕ್ಕಂತಿ ಇರು…ದಡ್ದಿಗೋಗಿದ್ಯೋನು? ನಂದಿನ್ನು ಕಸಮುಸುರೆ ಮನಾರ ಬುದ್ದೈತಿ. ಈ ಸಣಿಗಳು ವಂದೇ ಸುಂಕೆ ಉಚ್ಚೆಗೆಂಬಾಕತ್ಯಾವ…ಎಂದು ಸುರುವು ಮಾಡಿದಳು. ಅದಕ್ಕಿದ್ದು ಚೆನ್ನವ್ವ ‘ಎಂಥ ಕಾಲ ಬಂತೇ ಸಾಂತೀ”” ಯ್ಯೋನು ಕರುಮ ಮಾಡಿದ್ದೋ ಈ ಬತಗೇಡಿ ಊರಾಗುಟ್ಲಿಕ್ಕೆ ನಮೆಪ್ಪಂಥೋನು ವಳೀ ಸಾಲ್ಕಡೀಕಾರ ಕ್ವಟ್ನ… ದಡ್ಡಿಗ್ಯಾದ್ರೆ ಸುಂಕೆ ಆತತೇನವ್ವ ಸೀಸೋಡೈತಿ ನೀಸೋಣ…ಎಂದೊಂದು ವಾಕ್ಯವನ್ನು ಪೂರ್ಣ ಮಾಡಲು ಬಿಡದೆ ಸಾಂತವ್ವ ‘ಸೀನೀರ್ನೊಂದ್ನ ಬುಟ್ಟು…ಯಿಗಾ ವಂದೈತೊಲಿ ಬಂಗಾರ ಕ್ಯೋಳು ಕ್ವಟ್ಟೇನು…’ ಎಂಬ ನಗೆಚಾಟಿಕೆ ವಾಕ್ಯದಿಂದ ತುಂಡರಿಸಿದಳು. ‘ಹಂಗನಬ್ಯಾಡೇ ನನ್ಮಗನ್ಯೂಳೆ…ವಂದೆಳ್ಡು ಕಾಳು ನೀರು ಗಂಟಲಾಕ ಬೂಳ್ಳಿಲ್ಲಾಂದ್ರೆ ಮುದೇದು ವಂಟೋಯ್ತದೇ””…ಅದ್ಕ ವಂಚೆರಗಿ ಕ್ವಟ್ ಪುಣ್ಣೇವ್ಕಟ್ಟಿಕ್ಯಾ”” ಎಂದು ಚಿನ್ನವ್ವ ಮಾಮೂಲಿ ಶೈಲಿಯಲ್ಲಿ ಮಾತಾಡಿದಳು. ಪಡಸಾಲೆಯ ಮೂಲೆಯ ವರಸಿನ ಮೇಲೆ ಲಕ್ವಾ ಹೊಡೆದು ದೇಹದ ಎಡಭಾಗವನು ಪೂರ್ಣ ಕಳೆದುಕೊಂಡಿದ್ದ ಹಣ್ಣು ಹಣ್ಣು ಮುದುಕಿ ಒಂದು ಕಾಳು ನೀರು ಕೊಡಬೇದ ಎಂಬಂತೆ ಸಂಜ್ಞೆ ಮಾಡಿತು. ಸೀನೀರಿನಲ್ಲಿ ಯಾವತ್ತೂ ಜಳಕ ಮಾಡಿಸುವಿರೋ ಅವತ್ತೇ ಪ್ರಾಣ ಬಿಡುವುದಾಗಿ ಮಾತುಕೊಟ್ಟು ಮಾತು ಪಡೆದಿರುವಂಥ ಅಮೋಘ ಮುದುಕಿಯೇ ಅದಾಗಿತ್ತು. ಅದರ ಇಹಲೋಕ ಯಾತ್ರೆ ಮುಗಿಸಲು ಇವತ್ತು ನೀರು ಸಿಕ್ಕಾವು ನಾಳೆ ನೀರು ಸಿಕ್ಕಾವು ಎದ್ಮು ಎರಡು ಮೂರು ತಿಂಗಳಿಂದ ಬರೀ ಕಾಯುವುದೇ ಆಗಿರುವುದು. ಈ ಕಾರಣದಿಂದಾಗಿಯೇ ಅವರ ಮನೆಯಲ್ಲಿ ಏನಿಲ್ಲಾಂದರೂ ಎರಡು ಮೂರು ತಂಬಿಗೆ ನೀರು ಸದಾ ಇರುತ್ತದೆ ಎಂಬ ಖಾತ್ರಿ ಎಲ್ಲರಿಗೂ.‘ಗೊಣಮಕ್ಳು ವಂದೆಲ್ಡೆಜ್ಜೆ ಮುಂದಕ (ನಾಲ್ಕಾರು ಗಾವುದ ಎಂದರ್ಥ) ನಾದ್ರೆ ವಂದ್ಕೊಡ ಯಾಕವ್ವ ಎಲ್ಡುಕೊಡ ತರಬೋದು’ ಎಂದು ಚನ್ನವ್ವ ಅಂದರೆ ಸಾಂತವ್ವ ‘ವೊಲೋತ್ನಂಗ್ಯೋಳ್ದಿ ಬುಡು…ವತ್ತೇರಿದ್ರು ನಂದೆಂಗ ಮಕ್ಕಂಡೈತ್ನೋಡು, ಮನ್ಯಾಗ.’ ಎಂದಳು. ‘ಮದ್ಲು ಕ್ವಡೆವ್ವಾ”..ಮುದೇತ್ಗೆ ಬಿಕ್ಕತ್ಯಾವ. ಅದೆಲ್ಯಾನು ವಂಟೋಯ್ತ ಹೆಂಗೆ ಅಂತ’ ಎಂದು ಚನ್ನವ್ವ ಒಂದೇ ಸವನೆ ಅವಸರ ಮಾಡಿದಳು. ತಮ್ಮ ಮನೆಯ ಸೀನೀರಿನ ಬ್ಯಾಲೆನ್ಸು ಕೀಟನ್ನು ವಿವರಿಸುತ್ತ ಸಾಂತವ್ವ ಯಾರ್ಯೇನೊತ್ಕೊಂಡೊಗೋಗ್ತೀವವ್ವಾ… ಅದರಾಗೊಂದ್ನಾಕಾಳ್ನ ಕ್ವಟ್ತೀನ್ತಗ’ ಎಂದು ಹೇಳಿ ಗುಟ್ಟಾಗಿ ಒಳ ಒಳ ಒಯ್ದು, ಯಾರೂ ನೋಡ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಅಟ್ಟ ಏರಿ ಬಗ್ಗಿಸಿಕೊಂಡು ಕೆಳಕ್ಕಿಳಿದಳು. ಯಾರಿಗೂ ಕಾಣಿಸಿದಂತೆ ತಂದು ಗೆಳತಿಯ ಸೆರಗಿನ ಮರೆಯಲ್ಲಿ, ಅಂದರೆ ಬಲಮೊಲೆಯ ಕೆಳಗಿನ ತಪ್ಪಲಲ್ಲಿ ಇರಿಸಿ ಸಮಾಧಾನದ ಉಸಿರು ಬಿಟ್ಟಾಳು. ‘ ಬೊರ್ತೀನಭೆ… ಮುದೇತೇನಾತ್ಯೋನೋ”””…’ ಎಂದು ಚೆನ್ನವ್ವ ತಲ ಬಾಗಿಲು ದಾಟುತ್ತಿರಲು ಸಾಂತಿಯು ‘ನೀರ್ಬುಡಾತ ಬಂದಾನಂತ್ಯೋಳು””..ಗಡಾನ ಕಸಮುಸ್ರೀ ಮುಗ್ಸೀ ವಂಡೂ ಮಂಡ್ರಪ್ನೋರ ಮನೀ ಕಡೀಕೆ’ ಎಂದು ಹೇಳಿದಳು. ದಾರೀಲಿ ದೊಡ್ಡಿಗೆ ಹೊರಟಿದ್ದ ಗಂಗವ್ವ ‘ಆ ಬಾಡ್ಯವನ ಬಾಯಾಗ ನನ”” ಆಟಾಕ. ಅವನ್ ಸುಡು ಸುಡ್ಗಾಡ್ಗಿಕ್ಲೀ ಅವನ್ಮೂರ್ಮಂದಿ ಯಂಡ್ರೂ ರಂಡೇರಾಗ್ಲೀ”””. ಅವನೊಂದೇ ಸಿಕ್ಲಿ ಕ್ಯರ್ದೀಲೊಡೀತೀನಿ””” ಹ್ಹಾ..’ ಎಂದು ಲಸ್ಕರು ( ಸರಕಾರವು ಸದರಿ ಊರಿಗೆ ಕುಡೀಯೋ ನೀರು ಸರಬರಾಜು ಮಾಡಲೆಂದೇ ಇಟ್ಟಿರುವ ಪುಣ್ಯಾತ್ಮನೀತನು. ಲಸ್ಕರು ಎಂಬುದಾತನ ಮನೆತನದ ಹೆಸರಿರುತ್ತದೆ.) ಸಾಪಳಿಸುತ್ತ ಹೋದಳು. ಸ್ಪೀಡಿಗಿಟ್ಟುಕೊಂಡಿರುವ ಕಾರಣದಿಂದ. +ಲಸ್ಕರಿ ರಾಜನನ್ನು ಸದರೀ ಗ್ರಾಮದ ಹೆಂಗಸರು ಬಯ್ದಿರುವ ಬಯ್ಗಳನ್ನು ಗುಡ್ಡೇ ಹಾಕಿದರೆ ಹಿಮಾಲಯ ಪರ್ವತಕ್ಕಿಂತ ಮಿಗಿಲಾದ ಪರುವತ ಏರ್ಪಡಬಹುದು. ಓಸಿ (ಮಟಕಾ) ನಂಬರು ಕಂಡು ಹಿಡಿಯುವುದರಲ್ಲಿ ಪ್ರವೀಣನಾಗಿರುವ ಆ ಮಹಾಮಹಿಮನನ್ನು ಸದರೀಗ್ರಾಮದ ಗಂಡಸರಾರೂ ಬಯ್ಯುವುದಿಲ್ಲ. ಹುಟ್ಟಿಸಿದ ದೇವರು ಯಾವ ತೆರನಾಗಿ ಹುಲ್ಲು ಮೇಯಿಸುವುದಿಲ್ಲವೋ ಅದೇ ತೆರನಾಗಿ ರಾಜನು ಒಂದಲ್ಲಾ ಒಂದು ದಿನ ನೀರು ಬಿಡದೆ ಇರರಲಾರನು. +ಚೆನ್ನವ್ವ ಎಷ್ಟೇ ಸೀಕ್ರೆಟ್ಟಾಗಿ ತಲಬಾಗಿಲು ದಾಟಿದರೂ ಮಕ್ಕಳು ಮರಿಯಾವತ್ತು ಸೀನೀರಿನ ವಾಸನೆ ಕಂಡು ಹಿಡಿಯದಿರಲಿಲ್ಲ. ಯವ್ವೋ ನಂಗೊಂದ್ಕಾಳೂ ನಂಗೊಂದ್ಕಾಳೂಂತ ಮುಗಿ ಬೀಳಲು ಆಕೆಯು ನಿಮಗ್ಯೋನುದಾಡಿ…. ಉಪ್ನೀರ್ಕುಡೀರಿ…. ನಿಮ್ಮೆಜ್ಗ ಬಿಕ್ಕತ್ತ್ಯಾವ ಎಂದು ಗದರಿಸಿ ದೂರ ಕೊಸರಲು ಅವು ತಲಾ ಒಂದೊಂದು ಹಿಂದೂಸುತಾನೀ ಗಾಯಕರಾದವು. ‘ಅವನ್ಯಾಕುಗದರಿಸ್ತೀಯವ್ವಾ…. +ಚುಡುಗಾಡಿಗೊಂಡಾಕ ಸೆಜ್ಜಾಗಿ ನಿಂತ್ಗಂಡಿರಾತ ನಾನೂ…. ಮದಲವಕ್ಕೊಡು ಎಂದು ಸಿಫಾರಸು ಮಾಡಿದ ಮಾವನ ಕೈಗೆ ತಂಬಿಗೆ ವರ್ಗಾಯಿಸುತ್ತ ಸೊಸ್ತಿಯು ‘ಮದ್ಲು ನೀನ್ಕುಡೀ…. ನೀರ್ ಬೊಂದ್ರೆ ಅವೂ ಕುಡಿದಾವು’ ಎಂದಳು. ಎಷ್ಟು ಸಾಧ್ಯವೋ ಅಷ್ಟು ಸೊಲುಪ ಕುಡಿದು ಮುದೇತನು ತಂಬಿಗೆಯನ್ನು ಮರಳಿಸಿದನು. ಮತ್ತೆ ಅತ ಕಾಯಿಸಿದ ಮಕ್ಕಳನ್ನು ಆಚೆಗದುಮಿ ಸೊಸ್ತಿಯು ನೆಲ ಹಿಡಿದಿದ್ದ ಮುದುಕಿಗೆ ಒಂದ್ನಾಕ್ಕಾಳು ನೀರು ಕುಡಿಸಿದಳು. ಜೊಲ್ಲು ಸುರಿಸುತ್ತ ಬಂದ ಗಂಡಗೂ ‘ನಾಚ್ಕೆಂಭೋದೊಂದ್ಕಾಳಾದ್ರಿಲ್ನೋಡ್ನಿಂಗೆ’ ಎಂದನ್ನೋದು ಅಂದು ಕೊಟ್ಟಳು. ಪೂರ್ತಿ ಕುಡಿಯಲು ಮನಸ್ಸಾಗದೆ ಆತ ಮಕ್ಕಳ ಬಾಯಿಗೆ ತಲಾ ಒಂದೊಂದು ಕಾಳು ಹಾಕಿದನು. ಕುಡಿದು ಆನೆಬಲ ಪಡೆದು ಅವು ನಕ್ಕೋತ ನಕ್ಕೋತ ಹೋಗಲು ‘ವತ್ತೆ ತುಂಬನೀರ್ ಸಿಕ್ಕಿದ್ರೆ ನನ್ ಮೊಕ್ಳೀವತ್ಗೆ ಸಿಮ್ಮದ್ ಮರಿಯಿದ್ದಂಗಿರುತ್ತಿದ್ವು’ ಎಂದು ನಿಟ್ಟುಸಿರು ಬಿಟ್ಟಳು ಆ ಸೊಸ್ತಿಯು. +ಸದರೀ ಗ್ರಾಮದ ಎಲ್ಲ ಹೆಂಗಸರಂತೆ ತಾನೂ ರಾಜನನ್ನು ಸಾಪಳಿಸುತ್ತಲೇ ಕಸ ಮುದುರಿ ವದಕನಕ್ಕೆ ತೊಡಗಿದಳು. ಆದರೆ ಗಂಡ ಬಸ್ಯ ಅದಕ್ಕೆ ತದ್ವಿರುದ್ದ. ಅವನಿಗೆ ಮೊದಲಿನಿಂದಲೂ ಸರ್ಕಾರಿ ಸಂಬಳ ತಿಂಬುವವರೆಂದರೆ ಹೊಟ್ಟೆ‌ಉರಿ ಮಿಶ್ರಿತ ಪ್ರೀತಿ. ಸರಕಾರದ ಹಣವನ್ನು ಎಲ್ಲಾದರೂ ಎಷ್ಟಾದರೂ ತಿಂಬಬೇಕೆಂದು ಎಲ್ಲರಂತೆ ತಾನೂ ಹಪಹಪಿಸುತ್ತಿರುವವನೆ. ಪರಿಹಾರ ಎಂಬ ಪದದ ಬೆನ್ನ ಮೇಲೆ ಸದಾ ಸವಾರಿ ಮಾಡುತ್ತಿರುವ ಬಸ್ಯನಂಥವರು ಸದರಿ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಇಲ್ಲದಿಲ್ಲ. ಇಂಥ ಸೋಮಾರಿ ಸಿದ್ರಾಮಣ್ಣಗಳು ಚನ್ನಮ್ಮನಂಥ ವೀರವನಿತೆಯರ ಲೆಕ್ಕ ಬುಕ್ಕದಲ್ಲಿಲ್ಲ. ಅವು ಇರಬೇಕೆಂದರೆ ಇರಬೇಕು, ಹೊಟ್ಟೆ ಬಟ್ಟೆ ಕಟ್ಟಿ, ರೆಟ್ಟೆ ಮುರಿದು ದುಡಿದು ಹಾಕುತ್ತಿರುವುದೆಲ್ಲ ಹೆಂಗಸರೇ. ಕುದಿಯೋನಿರೊಂದೆ ಸರಿಯಾಗಿ ಬರುತ್ತಿದ್ದರೆ ತಮ್ಮನ್ನು ಹಿಡಿಯುವವರು ಯಾರೂ ಇಲ್ಲವೆಂದೇ ಅವರ ಲೆಕ್ಕ. ಅರ್ಧ ಆಯುಷ್ಯ ಬರೀ ನೀರು ನೀಡಿ ಜೋಡಿಸಲು ಮೀಸಲಾದರೆ ಕಾಳುಕಡಿ ಜೋಡಿಸಲು ಏನು ಮಾದುವುದು? +ಸದರಿ ಗ್ರಾಮದ ಪ್ರತಿಯೊಬ್ಬ ಮಹಿಳೆ ತಾನ್ಯಾವ ಸ್ಥಿತಿಯಲ್ಲೇ ಇರಲಿ ಪಂಚೇಂದ್ರಿಯಗಳ ಪೈಕಿ ಒಂದೆರಡನ್ನಾದರೂ ನಲ್ಲಿ ಕಡೆ ಮೀಸಲಿಟ್ಟಿರುತ್ತಾಳೆ. ಲಸ್ಕರು ರಾಜನ ಬಗ್ಗೆ, ಮಂಡ್ರಪ್ಪನವರ ಗಂಗಾಧರಪ್ಪನ ಮನೆ ಅಂಗಳದಲ್ಲಿರೋ ನಲ್ಲಿ ಬಗ್ಗೆ ಯಾರೇನೇನು ಮಾತಾಡುತ್ತಾರೆಂಬುದನ್ನೆಲ್ಲ ಇಂದ್ರಿಯಗಳ ಮೂಲಕ ಸದಾ ಗಮನಿಸುತ್ತಿರುತ್ತಾರೆ. ಆದರೆ ಚೆನ್ನವ್ವನಂಥೋರು ತಮ್ಮ ಯಾವತ್ತೂ ಇಂದ್ರಿಯಗಳನ್ನು ಸೀನೀರಿಗಾಗಿ ಮೀಸಲಿಟ್ಟಿರುತ್ತಾರೆಂಬುದು ಕುಚೋದ್ಯದ ಸಂಗತಿಯಲ್ಲ. ಅಷ್ಟೇ ಅಲ್ಲದೆ ‘ಲೋ’ ಎಂದು ತನ್ನೈದು ಮಂದಿ ಮಕ್ಕಳನ್ನು ಕರೆದು ನಲ್ಲಿ ಕಡೆ ಛೂ ಬಿಟ್ಟು ಮಾಹಿತಿ ಸಂಗ್ರಹಿಸುವುದುಂಟು. ನೀರಿನ ಬಗ್ಗೆ ಖಚಿತ ಮಾಹಿತಿ ತಂದವರಿಗೆ ಬೆಲ್ಲ, ಕೊಬ್ಬರಿ, ಕಡಲೆಯಂಥ ನೋಬಲ್ ಬಹುಮಾನಗಳನ್ನು ಆಕೆ ನೀಡುತ್ತಿದ್ದುದುಂಟು. ಒಂದೆರಡು ಬಹುಮಾನದ ಆಸೆಗೆ ಸುಳ್ಳು ಮಾಹಿತಿ ನೀಡಿ ಒದೆತಿಂದು ಕುಯ್ಯೊಮರ್ರೋ ಅಂದದ್ದೂ ಉಂಟು. ಇತ್ತೀಚೆಗಂತೂ ಗ್ರಾಮದ ಯಾವತ್ತೂ ಮಕ್ಕಳು ಮರಿ ಪ್ರತಿಫಲ ಬಯಸದೆ ನೀರು ಎಂಬ ಶಬ್ದದ ಜೇಡರ ಬಲೆಯೊಳಗೆ ಸಿಲುಕಿರುತ್ತವೆ ಎಂಬುದು ಸತ್ಯ. ಅದರಂತೆ ನೀರು ಬರಬಹುದೆಂಬ ಸುದ್ದಿ ಮುಂಜಾವಿನ ಬೆನ್ನ ಮೇಲೆ ಸವಾರಿ ಮಾಡಿತು. ನಲ್ಲಿ ಕುಯ್ಯೋಮರ್ರೋ ಅಂತ ಪ್ರಸವ ವೇದನೆ ಮಾಡಲಾರಂಭಿಸಿದೆ ಎಂಬ ಸುದ್ದಿಯೂ ಹರಡದೆ ಇರಲಿಲ್ಲ. ಆ ಕೂಡಲೆ ಚೆನ್ನವ್ವಗೆ ತಾನು ನಿನ್ನೆಯೇ ನಲ್ಲಿಯಬಳಿ ಸರತಿ ಸಾಲಿನಲ್ಲಿರಿಸಿದ್ದ ಗುರುತುಗಳು ಅದಲುಬದಲಾಗಿದ್ದಾರೆ ಎಂಬ ಸಂದೇಹ ಕಾಡದೆ ಇರಲಿಲ್ಲ. ಆದ್ದರಿಂದ ಯಾಕಿದ್ದೀತು ಅಂತ ಆಕೆಯು ಮೂಲೆ ಮುರುಕಟ್ಟಿನಲ್ಲಿದ್ದ ಪಿಲಾಸ್ಟಿಕ್ ಕೊಡಪಾನಗಳನ್ನು ಹೊರ ತೆಗೆದು ತನ್ನ ದೇಹದಾದ್ಯಂತ ಅಲಂಕರಿಸಿಕೊಂಡಳು. ಮುದೇರಿಗೆ, ಗಂಡಗೆ, ಮಕ್ಕಳು ಮರಿಗೆ ಹೇಳೋದನ್ನೆಲ್ಲ ಹೇಳಿ, ಕೇಳುವುದನ್ನೆಲ್ಲ ಕೇಳಿ, ರಣರಂಗಕ್ಕೆ ಹೊರಟಿರುವಳೋ ಎಂಬಂತೆ ಆಕೆಯು ಮಣ್ಣಿನ ಮನೆ ಎಂಬ ಜೀವಕೋಶದಿಂದ ಮಹಾಕಾಳಿ ಎಂಬಂತೆ ಹೊರಬಂದು ಮಂಡ್ರಪ್ಪನವರ ಮನೆ ಕಡೆ ಪಾದ ಬೆಳೆಸಿದಳು. +-೨- +ಸೀನೀರಿನ ಅಭಾವದಿಂದಾಗಿ ಬಾಯಾರಿದ ಪಕ್ಷಿಯಂತಾಗಿರುವ ರಿಜರುಜಾಲಿ ಪ್ರಾಂತದ ಸದರೀ ಗ್ರಾಮವನ್ನು ಒಂದೊಂದು ಸೀಮೆಯವರು ಒಂದೊಂದು ರೀತಿಯಲ್ಲಿ ಗುರುತಿಸುತ್ತ ಬಂದಿರುವರು. ಸಿಂಧವಾಡಿ ಪ್ರಾಂತದವರು ಮನರೋನಳ್ಳಿ ಅಂತಲೂ; ಮೇಲು ಸೀಮೆ ಮಂದಿ ಸಿನ್ನೇರ್ನಳ್ಳಿ ಅಂತಲೂ, ಎರೆಸೀಮೆ ಮಂದಿ ತರಲಳ್ಳಿ ಅಂತಲೂ ಕರೆಯುತ್ತಿರುವರು. ಈ ಎಲ್ಲ ಹೆಸರುಗಳ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಸಪ್ತಪದಿ ತುಳಿಯೋಣ. +ಮನರೋನಳ್ಳಿ: ಒಂದು ಕೊಡ ನೀರು ಹಿಡಿಯಲು ಹೋಗಿ ತಲೆಗೂದಲನ್ನು ಕಳೆದುಕೊಂಡಿರುವ ವೀರಮಹಿಳೆ ಮನ್ರಮ್ಮನ ಹೆಸರು ಇದಲ್ಲ. ಪತ್ತಿಕೊಂಡದ ಸರಕಾರೀ ದಫ್ತರುಗಳಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ದತ್ತಮಂಡಲಗಳ ಕಲೆಕ್ಟರಾಗಿದ್ದ (ಕ್ರಿ. ಶ. ೧೮೧೯ – ೧೮೨೭) ಗಾಸರ್ ಥಾಮಸ್ ಮನ್ರೋ ಸಾಹೇಬ ೨೨ – ೯ – ೨೮೨೭ ರಂದು ಸದರೀ ಗ್ರಾಮಕ್ಕೆ ಭೆಟ್ಟಿಕೊಟ್ಟಿದ್ದನು. ಗ್ರಾಮದ ರೈತರ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದನು. ಆಗ್ಗೆ ಸದರೀ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಬಡೇಲಡಕು, ದೇವಲಾಪುರ, ನಾಗಾಲ, ಚಕ್ರಲವೇ ಮೊದಲಾದ ಹತ್ತಿಪ್ಪತ್ತು ಹಳ್ಳಿಗಳನ್ನು ನಿರಂಕುಶವಾಗಿ ಆಳುತ್ತಿದ್ದ ಸ್ವಯಂಘೋಶಿತ ಪಾಳ್ಳೇಗಾರ ಕಾಟಸಾನಿ ವೆಂಕಟಪ್ಪ ನಾಯಕನ ಉದ್ದಗಲವನ್ನು ಸೈನ್ಯದ ಸಹಾಯದಿಂದ ಕಡಿಮೆ ಮಾಡಿದನಲ್ಲದೆ ಆತನ ಕಚ್ಚಾಟದಲ್ಲಿದ್ದ ಸಾವಿರಾರೆಕರೆ ಭೂಮಿಯನ್ನು ನೂರಾರು ಮಂದಿ ನಿರ್ಗತಿಕರಿಗೆ ಸಮನಾಗಿ ಹಂಚಿದನು. ಗ್ರಾಮದ ನಾಲ್ಕು ಮೂಲೆಗಳಲ್ಲಿ ನಾಲ್ಕು ಭಾವಿಗಳನ್ನು ತೋಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದನು. ಶಾಲೆ, ಆಸುಪ್ರತಿಗಳನ್ನು ತೆರೆದನು. ಬರಡು ಪ್ರದೇಶಗಳನ್ನು ಗುರುತಿಸಿ ಅಲ್ಲೆಲ್ಲ ಹುಣುಸೆ ತೋಪುಗಳನ್ನು ಬೆಳೆಸಿದನು. +ಅವಿಶ್ರಾಂತವಾಗಿ ಜನರ ಸೇವೆ ಮಾಡುತ್ತಿರುವಾಗಲೇ ಪತ್ತಿಕೊಂಡ ಸಮೀಪ ಕಾಲರಾ ರೋಗಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ (೬ – ೭ – ೧೮೨೭) ಮನ್ರೋ ಸಾಹೇಬನ ಹೆಸರಿನಿಂದಲೇ ಸದರಿ ಗ್ರಾಮವನ್ನು ಗುರುತಿಸುವ ಪ್ರೀತಿಯನ್ನು ಸಿಂಧವಾಡಿ ಪ್ರಾಂತದವರು ತೋರಿಸಿದರು. ಅಷ್ಟೇ ಏಕೆ ಗ್ರಾಮದ ಹನುಮಂತದೇವರ ಗುಡಿ ಎದುರಿಗಿರುವ ಗುಡಿಯ ಹೆಣ್ ದೇವರಾದ ಮಂಡ್ರಮ್ಮ ಉರುಫ್ ಮನರೊಮ್ಮ ಪ್ರತಿವರ್ಷ ಬನದ ಹುಣ್ಣುಮೆಯಂದು ನಡೆಯುವ ಜಾತ್ರೆಯಲ್ಲಿ ಅಂಜನಿ ಎಂಬಾತನ ಮೈಯಲ್ಲಿ ಕಾಣಿಸಿಕೊಂಡು ರೇನು, ಏರೂ ಅಂತ ಬಟ್ಲರ್ ಇಂಗ್ಲೀಷಿನಲ್ಲಿ ಮಾತಾಡುವುದುಂಟು. ಈ ಐನಾತಿ ದೇವರಿಗೆ ಹೆಚ್ಚಾಗಿ ನಡೆದುಕೊಳ್ಳುತ್ತಿರುವುಧು ಸಿಂಧವಾಡಿ ಪ್ರಾಂತದವರೆಂದು ಹೇಳಬಹುದು. +ಸಿನ್ನೇರ್ನಳ್ಳಿ : ಈ ಹೆಸರು ಕುರಿತಂತೆ ಉತ್ತರಾತ್ಯ ಮತ್ತು ದಕ್ಷಿಣಾತ್ಯ ಸಂಶೋಧಕರಲ್ಲಿ ಕೈ ಕೈ ಮಿಲಾಯಿಸುವಂಥ ಬಿನ್ನಾಭಿಪ್ರಾಯವುಂಟು. ಮೀಸೆನಳ್ಳಿ ಉಮಾಪತಿ ಶಾಸ್ತ್ರಿಯೆಂಬ ಸಂಶೋಧಕ ಅನಂತಪುರ ಸಂಸ್ಥಾಪಕ ಹಂಡೇ ಹನುಮಪ್ಪನಾಯಕನ ಸಹೋದರ ಸಂಬಂಧಿ ಚನ್ನ ಈರಪ್ಪನು ಸದರಿ ಗ್ರಾಮ ಆಳುತ್ತಿದ್ದನೆಂದೂ ; ಈ ಸಂಗತಿ ಮೇಲೆ ದುರುಗಮ್ಮನ ಗುಡಿಯ ಬೆನ್ನ ಗೋಡೆಯಲ್ಲಿರುವ ಶಾಸನ ಸಾಕಷ್ಟು ಬೆಳಕು ಚೆಲ್ಲುತ್ತದೆ ಎಂದೂ ; ಚಿನ್ನ ಈರಪ್ಪನಹಳ್ಳಿ ಎಂಬ ಹೆಸರೇ ಸಿನ್ನೇರ್ನಳ್ಳಿ ಆಗಿರುವುದೆಂದೂ ವಾದ ಮಾಡಿ ಗೆದ್ದಿರುವನು. ಆದರೆ ಹವ್ಯಾಸಿ ಸಂಶೋಧಕರಾದ ಗುಡೇಕೋಟೆಯ ಉರುಕುಂದಿ, ಕಕ್ಕುಪ್ಪಿಯ ನಾಗಪ್ಪ ಎಂಬೀರ್ವರು ಹಿಂದೆ ಸದರಿ ಗ್ರಾಮ ಸಿಹಿನೀರಿಗೆ ಹೆಸರಾಗಿತ್ತೆಂದೂ ಈ ಕಾರಣದಿಂದಾಗಿಯೇ ಇದಕ್ಕೆ ಸಿಹಿನೀರಿನಹಳ್ಳಿ ಉರುಫ್ ಸಿನ್ನೇರ್ನಳ್ಳಿ ಎಂದು ಕರೆಯಲಾಯಿತೆಂದೂ ನಾಕು ಮಂದಿ ಅಹುದಹುದೆನ್ನುವಂತೆ ವಾದಿಸುತ್ತಿರುವರು. ಕೆಲವು ಐತಿಹ್ಯಗಳ ಪ್ರಕಾರ ಇದು ಸರಿ ಎಂದು ಕಂಡುಬರುತ್ತದೆ. +“ಸಿನ್ನೇರ್ನಳ್ಳಿಗೋಯ್ತಿನಿ ಸೀನೀರ್ನ ತಂದ್ನಿನ್ನ ದಾಹ ತೀರಿಸ್ತೀನಿ” ಎಂಬ ಸುಪ್ರಸಿದ್ದ ಖಂದ ಕಾವ್ಯ ಮೋರಾ ಪ್ರಾಂತದಲ್ಲಿ ಜನಜನಿತವಾಗಿದೆ. ಗದವಾಲ ನವಾಬರು ಕುಡಿಯಲು ಸದರಿ ಗ್ರಾಮದಿಂದ ನೀರು ತರಿಸಿಕೊಳ್ಳುತ್ತಿದ್ದರಂತೆ. ಜರುಮಲಿಯ ರಾಜಕುಮಾರಿ ತ್ರಿಲೋಕ ಸುಂದರಿ ದಿನಂಪ್ರತಿ ಸ್ನಾನ ಮಾಡಲು ಇಲ್ಲಿಂದ ನೀರು ತರಿಸಿಕೊಳ್ಳುತ್ತಿದ್ದಳಂತೆ, ವೆಂಕಟಾಪುರದ ವೆಂಕಟೇಶ, ದೇವಲಾಪುರದ ಕುರಿಕ್ಕಿಲಿಂಗ, ಮುರಡಿಯ ಹನುಮಂದೇವ ಇವೇ ಮೊದಲಾದ ದೇವರುಗಳ ಅರ್ಚನೆಗೆ ಉದಕವನ್ನು ಇಲ್ಲಿಂದಲೇ ತರಿಸಿಕೊಳ್ಳಲಾಗುತ್ತಿತ್ತಂತೆ. ಮೊನ್ನೆ ಮೊನ್ನೆಯವರೆಗೆ ಗುಂಡುಮುಣುಗಿನ ಆಯುರ್ವೇದ ಮಾರ್ತಾಂಡರಾದ ನರಸಿಂಹ ಜೋಯಿಸರು ಔಷಧಿ ತಯಾರಿಸಲು ಬಳಸುತ್ತಿದ್ದುದು ಇದೇ ಗ್ರಾಮದಿಂದ ಒಯ್ದ ನೀರನ್ನಂತೆ, ಇಂಥ ಅನೇಕ ಐತಿಹ್ಯ ಮತ್ತು ವಾಸ್ತವಾಂಶಗಳ ಆಧಾರದಿಂದ ಸಿಹಿನೀರಿನಹಳ್ಳಿ ಎಂಬ ಅರ್ಥಪೂರ್ಣ ನಾಮವಾಚಕವೇ ಸ್ವಾತಂತ್ರ್ಯೋತ್ತರವಾಗಿ ಸೀನೇರ್ನಳ್ಳಿ ಎಂದು ಬದಲಾಗಿರುವುದಾಗಿರುವುದಂತೆ. +ತರಲಳ್ಳಿ : ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಕಾರುಹುಣ್ಣುಮೆಯಂದು ಕರಿ ಹರಿಯುವ ವಿಷಯದಲ್ಲಿ ಸದರೀ ಗ್ರಾಮದವರಿಗೂ ಎರೆಸೀಮೆಯ ಪ್ರಮುಖ ಕೇಂದ್ರವಾದ ಬಡೇಲಡಕು ಗ್ರಾಮದವರಿಗೂ ನಡುವೆ ವಾರಗಟ್ಟಲೆ ಘನ ಘೋರ ವಾಗ್‌ಯುದ್ದ ನಡೆಯಿತು. ಆ ವಾಗ್ಯುದ್ದದಲ್ಲಿ ಬಡೇಲಡಕು ಗ್ರಾಮದವರು ಜಯಗಳಿಸಿ ಕರಿಯೊದಿಗೆ ಹೋದರು. ಆದರೆ ಮಾತಾಡುವ ; ಟೋಪಿಗಳನ್ನು ಅದಲು ಬದಲು ಮಾಡುವ ಕಲೆಯಲ್ಲಿ ಪರಿಣತರಾದದ್ದು ಮಾತ್ರ ಸದರಿ ಗ್ರಾಮದವರೆಂಬುದು ನಿರ್ವಿವಾದ ಸಂಗತಿ. ಒಂದು ವಿಶೇಷವೆಂದರೆ ಸದರಿ ಗ್ರಾಮದಲ್ಲಿ ಎಳೆ ಕಂದಮ್ಮಗಳು ಭೂಮಿಗುದುರಿದ ಒಂದೆರಡು ತಿಂಗಳಲ್ಲಿಯೇ ಮಾತಾಡಲಾರಂಭಿಸುತ್ತವೆ. ಇಲ್ಲಿನ ಜನ ಓತೋಪ್ರೋತವಾಗಿ ಬೈಯ್ಯಬಲ್ಲ ಭಾಷಾತಜ್ಞರು. ದಿಗ್ಗಜಗಳೂ ಹೆದರಿ ಓಡುವಂತೆ ಇವರು ಜಗಳವಾಡಬಲ್ಲರು. ಇವರು ಎಲ್ಲೇ ಇರಲಿ, ಹೇಗೇ ಇರಲಿ ತಮ್ಮ ನಾಲಗೆಯಿಂದಾಗಿ ಇಂಥ ಊರವರೆಂದು ಗುರುತಿಸಲ್ಪಡುತ್ತಾರೆ. ಇಂಥ ಹತ್ತು ಹಲವು ಕಾರಣಗಳಿಂದ ತರಲಳ್ಳಿ ಎಂಬ ಉಪನಾಮವಾಚಕ ಸದರಿ ಗ್ರಾಮದ ಮುಡಿ ಅಲಂಕರಿಸಿರುವುದು. ಆದರೆ ಒಂದು ಮಾತಂತು ಸತ್ಯ; ವಿಷ್ಣು ಪರಮಾತ್ನನನ್ನು ಭಕ್ತಾದಿಗಳು ಯಾವ ಪ್ರಕಾರವಾಗಿ ಸಹಸ್ರ ನಾಮಗಳಿಂದ ಅರ್ಚಿಸುವರೋ; ಹಾಗೆಯೇ ಸದರಿ ಗ್ರಾಮವನ್ನು ಅದರ ಅಭಿಮಾನಿಗಳು ಹತ್ತಾರು ನಾಮೋಪನಾಮಗಳಿಂದ ಶ್ಲಾಘಿಸುವರು. +ಸದರಿ ಗ್ರಾಮದ ನೀರಿನ ಮುಂದೆ ತೆಂಗಿನ ತಿಳಿಜಲವನ್ನು ನೀವಳಿಸಿ ತೆಗೆಯಬೇಕು ಹಂಗಿತ್ತಾ ಊರಿನ ನೀರಂತ ಹೇಳಿದೆನಲ್ಲ. “ನೀವಿಲ್ಲೇ ಜೀವ ಸಮಾಧಿ ಆಗೋದಾದ್ರೆ ನಿಮ್ಗೆ ನೂರೆಕರೆ ಜಮೀನನ್ನು ಕೊಡ್ತೀನಿ” ಎಂದು ಬಾಗಳಿ ಪಾಳ್ಳೇಗಾರ ಬಸವಂತಪ್ಪ ನಾಯಕ ಮಾಡಿದ ಮನವಿಯನ್ನು ತಿರಸ್ಕರಿಸಿದ ವೈರಾಗ್ಯಮೂರ್ತಿ ಶಿವಲಿಂಗಾವರೂಢರು ದೂರದೀ ಊರಿಗೆ ಬಿಜಯಂಗೈದು ನೀರಿನ ಸ್ವಾದಿಷ್ಟ ಗುಣಕ್ಕೆ ಮನಸೋತು ಕೈವಲ್ಯ ಪದವಿ ಹೊಂದಿದರು ಎಂಬ ಸಂಗತಿ ಮಲ್ಹಾಕನಹಳ್ಳಿಯ ಮರಿಲಿಂಗದೇವರು ಕವಿ ಬರೆದ ಶಿವಲಿಂಗಾರೂಢ ಮಹಾತ್ಮೆಯಲ್ಲಿ ಉಲ್ಲೇಖವಾಗಿದೆ. ಅವರ ಸಮಾಧಿಯ ದರ್ಶನಾಕಾಂಕ್ಷಿಗಳಾಗಿ ದೂರದೂರುಗಳಿಂದ ಬರುವ ಭಕ್ತಾದಿಗಳು ಊರಿನ ನೀರನ್ನು ತೀರ್ಥವೆಂದು ಭಾವಿಸಿ ಒಯ್ಯುತ್ತಿದ್ದರು. ಸದರಿ ಗ್ರಾಮದ ಒಂದು ತಂಬಿಗೆ ನೀರು ಮೃಷ್ಟಾನ್ನ ಭೋಜನಕ್ಕೆ ಸಮವೆಂಬ ನಾಣ್ನುಡಿಯೂ ಉಂಟು. ಅಂಥ ಲೋಕವಿಖ್ಯಾತ ಸಿಹಿನೀರೊಳಗೆ ಏಳು ಕೋಟಿ ಕಹಿ ಹೇಗೆ ತುಂಬಿಕೊಂಡಿತೆಂಬುದರ ಬಗ್ಗೆ ಹತ್ತಾರು ಕಪೋಲಕಲ್ಪಿತ ಕಥೆಗಳುಂಟು. ಅವುಗಳ ಪೈಕಿ ಒಂದು ಮಾತ್ರ ಬಹು ಜನಪ್ರಿಯ; ಅದೆಂದರೆ…… +ಹಲವು ವರುಷಗಳ ಹಿಂದಿನ ಮಾತು, ಸಿಹಿನೀರಿನ ಪ್ರಭಾವದಿಂದಾಗಿಯೋ ಏನೋ! ಸುಖದ ಸುಪ್ಪತ್ತಿಗೆಯಲ್ಲಿ ವಾಲಾಡುತ್ತಿದ್ದ ಸದರಿ ಗ್ರಾಮಕ್ಕೆ ವಿಚಿತ್ರ ವೇಷ ಭೂಷಣದ ಸಾಧು ಓರ್ವ ದೂರದ ತೆಲುಗು ಸೀಮೆಯಿಂದ ಬಂದನು. ಚಿತಾ ಭಸ್ಮವನ್ನು ಮಂತ್ರೋದಕದಲ್ಲಿ ಕಲೆಸಿ ಮೈತುಂಬ ಬಡಿದುಕೊಂಡಿರುತ್ತಿದ್ದ. ಅವನ ಮರ್ಮಾಂಗ ತ್ರಿಶೂಲವನ್ನು. ಆತ ಏನು ತಿನ್ನುತ್ತಿದ್ದನೇನೋ! ಆದರೆ ಒಂದು ದಿನವಂತೂ ಆತ ವಿಪರೀತ ಬಾಯಾರಿದ. ಬಾಯಾರಿಕೆ ತೀರಿಸುವ ಹೊಣೆಯನ್ನು ಗ್ರಾಮದ ಮೇಲೇರಿದ. ಒಂದು ತಂಬಿಗೆ ನೀರು ಕೊಟ್ಟು ಆತನ ದಾಹ ತೀರಿಸಲು ಯಾರೂ ಮುಂದೆ ಬರಲಿಲ್ಲ. ಕಿಡಿಗೇಡಿಯೋರ್ವನು ನೀರಿನಲ್ಲಿ ಸಾಕಷ್ಟು ಉಪ್ಪು ಬೆರೆಸಿ ಕುಡಿಯಲು ಕೊಟ್ಟ. ಸಾಧು ಒಂದು ಹನಿ ಬಿಡದೆ ಹಾಗೆ ಕುಡಿದುಬಿಟ್ಟ. ಆ ಕ್ಷಣದಿಂದ ಸದರಿ ಗ್ರಾಮದ ನೀರು ದಾಹ ಹಿಂಗಿಸುವ ಶಕ್ತಿಯನ್ನು ಕಳೆದುಕೊಂಡಿತು. ಅಂದಿನಿಂದ ಅದು ನಾಯಿಮೊಲೆ ಹಾಲಿಗೆ ಸಮವಾಯಿತು. +ಶಾಪಗ್ರಸ್ತ ನೀರು ತನ್ನ ಮಟ್ಟವನ್ನು ತಾನು ಕಾಯ್ದುಕೊಳ್ಳುವ ಗುಣವನ್ನು ಮಾತ್ರ ಕಳೆದುಕೊಳ್ಳಲಿಲ್ಲ ಎಂಬುದೇ ಸಮಾಧಾನದ ಸಂಗತಿ. ಕಾಡಿರದಿದ್ದಲ್ಲಿ ವ್ಯಾಘ್ರವೂ; ವ್ಯಾಘ್ರವಿರದಿದ್ದಲ್ಲಿ ಯಾವ ರೀತಿ ಪರಸ್ಪರ ಅವನತಿ ಹೊಂದುವವೋ ಹಾಗೆಯೆ ನೀರು ಮತ್ತು ಗ್ರಾಮವುಪರಸ್ಪರ ಬೆನ್ನು ಮಾಡಿದವು. +-೩- +ಗ್ರಾಮದ ಬಗ್ಗೆ ನೀರು ತಳೆದ ಕಠೋರ ನಿಲುವನ್ನು ಕುರಿತು ಗ್ರಾಮದ ದೈವಸ್ಥರು ಪಕ್ಷಬೇದ ಮರೆತು ಚರ್ಚಿಸಿದರು. ಒದ್ದೋ ಬಡಿದೋ ಕಠೋರ ನಿಲುವಿನ ಹೆಂಗಸರನ್ನು ದಾರಿಗೆ ತರುವ ರೀತಿಯಲ್ಲೆ ನೀರನ್ನು ದಾರಿಗೆ ತರುವುದು ಸಾಧ್ಯವಿರಲಿಲ್ಲ. ಗ್ರಾಮದಿಂದ ಎಷ್ಟೇ ಅಪಚಾರವಾಗಿದ್ದರೂ ಅದು ಸೇದಿದರೆ ಬಾವಿಯಿಂದ ಮೇಲೆ ಬರುವುದು, ಸುರಿದರೆ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುಲಭವಾಗಿ ವರ್ಗವಾಗುತ್ತದೆ. ಅದು ಉಂಡ ತಟ್ಟೆಯನ್ನು ತೊಳೆಯುವಷ್ಟೆ ಸುಲಭವಾಗಿ ಮಲ ವಿಸರ್ಜಿಸಿದ ತಿಕವನ್ನು ತೊಳೆಯುತ್ತದೆ. ಕುಡಿಯಲಿಕ್ಕೆ ಯೋಗ್ಯವಲ್ಲ ಎಂಬಪವಾದ ಬಿಟ್ಟರೆ ಬಾಕಿಯಂತೆ ಅದರಲ್ಲಿ ಎಲ್ಲ ದೊಡ್ಡ ಗುಣಗಳಿವೆ, ಆದ್ದರಿಂದ ಕೇವಲ ಕಾಠಿಣ್ಯ ಎಂಬ ಕಾರಣದಿಂದ ತಮ್ಮ ಊರಿನ ನೀರಿಗೆ ಸುತ್ತಮುತ್ತಲ ಗ್ರಾಮಗಳಿಂದ ಅಪಮಾನವಾಗದಂತೆ ನೋಡಿಕೊಳ್ಳಬೇಕೆಂದು ದೈವಸ್ಥರು ನಿರ್ಧರಿಸಿದರಾದರೂ ಸಾಧ್ಯವಾಗಲಿಲ್ಲ. ಕಾಲರಾ ರೋಗ ಹರಡಲು ಹೇಗೆ ನೊಣಗಳ ಸಹಾಯ ಪಡೆಯುವುದೋ ಹಾಗೆಯೇ ನೀರಿನ ಕಾಠಿಣ್ಯ ಸ್ವಭಾವ ಜಗಜ್ಜಾಹಿರಾಗಲು ಸದರೀ ಗ್ರಾಮದ ಐತಿಹಾಸಿಕ ಸ್ಮಾರಕಗಳ; ಆರೂಢರ ಸಮಾಧಿಯನ್ನು ಬಳಸಿಕೊಂಡಿತು. ಕ್ರಮೇಣ ಸಿನ್ನೇರ್ನಳ್ಳಿ ಗ್ರಾಮದ ಜನರ ಸ್ವಭಾವವೂ ಗಣನೀಯವಾಗಿ ಬದಲಾಯಿತು. ಹಾಗೆಯೇ ಸೋಮಾರಿಗಳಾದ ಗಂದಸರು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ತಂತಮ್ಮ ಮನೆಯ ಹೆಂಗಸರನ್ನು ಅವಲಂಬಿಸಲಾರಂಭಿಸಿದರು. ಕಷ್ತಸಹಿಷ್ಣುಗಳಾದ ಹೆಂಗಸರಾದರೋ ಮೂರು ನಾಲ್ಕು ಹರದಾರಿ ದೂರದ ಹಳ್ಳದಿಂದ ಕುಡಿಯೋ ನೀರನ್ನು ಹೊತ್ತುತರಲಾರಂಭಿಸಿದರು. ಕೆಲವು ತರುಣಿಯರ ಜಘನದ ಪರಿಮಾಣ ಗಣನೀಯವಾಗಿ ಹೆಚ್ಚಳವಾಗಿದ್ದನ್ನು ಗ್ರಾಮ ಸೂಕ್ಷ್ಮವಾಗಿ ಗಮನಿಸದೆ ಇರಲಿಲ್ಲ. ಹೆಣ್ಣು ತರುವ ಕೊಡುವ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಂದಿನಿಂದ ಸದರಿ ಗ್ರಾಮವು ಒಂಟಿಯಾಯಿತು. ಸಂಬಂಧಗಳು ಅದೇ ಊರೊಳಗೆ ಗಿರಕಿ ಹೊಡೆಯಲಾರಂಭಿಸಿದವು. +ದಾಹ ತಾಳಲಾರದೆ ಸರಾಯಿಯನ್ನು ಕಂಠಮತ ಕುಡಿದು ಸತ್ತ ಮಲ್ಲಯ್ಯನ ಕಳೇಬರವನ್ನು ಹೊತ್ತೊಯ್ದ ವಿಧವೆಯರು ಸರಾಯಿ ಅಂಗಡಿ ಎದುರು ಲಬೋ ಲಬೋ ಬಾಯಿ ಬಡಿದುಕೊಂಡರು. +ಇದಕ್ಕೆ ಅಪಾರ ಜನಬೆಂಬಲ ದೊರೆತು ಸರಾಯಿ ಅಂಗಡಿಯನ್ನು ಎತ್ತಂಗಡಿ ಮಾಡಿದ ಬೆನ್ನ ಹಿಂದೆಯೇ ಕುಡಿಯೋ ನೀರಿನ ಹೋರಾಟದ ವೇದಿಕೆ ರೂಪಗೊಂಡಿತು. ಈ ಹೋರಾಟ ಸಿನ್ನೇರ್ನಳ್ಳಿಯಿಂದ ಹೋಬಳಿಗೆ; ಹೋಬಳಿಯಿಂದ ಜಿಲ್ಲಾಮಟ್ಟಕ್ಕೆ; ಜಿಲ್ಲಾ ಕೇಂದ್ರದಿಂದ ರಾಜಧಾನಿವರೆಗೆ ಕ್ಷೀಪ್ರಗತಿಯಲ್ಲಿ ವ್ಯಾಪಿಸಿತು. ವಿವಿಧ ವರ್ಷಗಳ, ವಿವಿಧ ಜಾಯಮಾನಗಳ ಸಂಘತನೆಗಳ ಅಪಾರ ಬೆಂಬಲ ಗಳಿಸಿಕೊಂಡಿತು. ನೀರು ಮಾಧ್ಯಮಗಳಲ್ಲಿ ವಿವಿಧ ಆಯಾಮ ಪಡೆಯಿತು. ಎಲ್ಲಾ ಪ್ರಾಕಾರಗಳಿಗೆ ವಸ್ತುವಾಗಿ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಸತತ ಎರದೂ ಚುನಾವಣೆಗಳನ್ನು ಬಹಿಷ್ಕರಿಸಿದ ನಂತರವೇ ಸರಕಾರ ಕಣ್ಣು ತೆರೆದದ್ದು. +ಕುಡಿಯುವ ನೀರಿನ ಯೋಜನೆಯನ್ನು ಜಾರಿ ತರಲೋಸುಗ ಸರ್ಕಾರ ಅಧಿಕಾರಿಗಳ ತಂಡವೊಂದನ್ನು ಸದರಿ ಗ್ರಾಮಕ್ಕೆ ಕಳಿಸಿತು. ನಡೆಯಲಿರುವ ಲಾಭದಾಯಕ ಕಾಮಗಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವರು ಅಧಿಕಾರಿಗಳನ್ನು ಸ್ವಾಗತಿಸಿ ಉಪಚರಿಸಲು ಪ್ರಯತ್ನಿಸಿ ವಿಫಲರಾದರು. ಕಾರಣ ಅಧಿಕಾರಿಗಳು ನೀರಾವರಿ ಮಂತ್ರಿಯ ದೂರದ ಸಂಬಂಧಿಯಾದ ಮಂಡ್ರಪ್ಪನವರ ಗಂಗಾಧರಪ್ಪನ ಮನೆಯ ಆತಿಥ್ಯ ಸ್ವೀಕರಿಸಿಧರು. ತಿಂಗಳೊಪ್ಪತ್ತಿನಲ್ಲಿ ಭಾಗೀರಥಿ ಯೋಜನೆಯಡಿ ಕಾಮಗಾರಿ ಆರಂಭವಾಯಿತು. ಸಮಸ್ಯೆಗಳ ಅನ್ವೇಷಣೆಯಲ್ಲಿದ್ದ ಹೋರಾಟಗಾರರು ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಪತ್ತೆಹಚ್ಚಿ ಹುಯಿಲೆಬ್ಬಿಸಿದರು. ಅದರ ಹಿಂದೆಯೇ ಹೋರಾಟದ ಮುಂಚೂಣಿಯಲ್ಲಿದ್ದ ಕಾಮ್ರೇಡ್ ನಾಗರಾಜ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವನೆಂಬ ಸುದ್ದಿ ಹರಡಿದ್ದೂ ತದ ಆಗಲಿಲ್ಲ, ನಡೆದ ಮಾರಾಮಾರಿಯಲ್ಲಿ ಹಲವರು ಅಂಗವಿಕಲರಾಗಿದ್ದರೂ ತಡ ಆಗಲಿಲ್ಲ. ಇಂಥ ಹತ್ತು ಹಲವು ಕಂಟಕಗಳ ನಡುವೆಯೂ ಕುಡಿಯೋ ನೀರಿನ ಯೋಜನೆಯ ಕಾಮಗಾರಿ ಮುಗಿಯಿತು. +ಆದರೆ ಅಷ್ಟೊತ್ತಿಗಾಗಲೇ ಸ್ಥಳೀಯವಾಗಿ ರೂಪುಗೊಂಡಿದ್ದ ಪುಡಾರಿಗಳಿಗೂ; ಆಳುವ ಪಕ್ಷದ ನಾಯಕರಿಗೂ ನಡುವೆ ಅತಿಥಿ, ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಉದ್ಘಾಟನಾ ಸಮಾರಂಭ ವಿಳಂಬಗೊಂಡಿತು. ಬಾಯಾರಿದವರು ದಂಗೆ ಎದ್ದರು, ಒಂದೆರಡು ಕೊಳವೆ ಮಾರ್ಗಗಳು ಜಖಂ ಆದವು. ಮಾಜಿ ಸ್ವಾತಂತ್ರ್ಯ ಹೋರಾಟಗಾರ ಮೂಲಿಮನಿ ಚಂಡ್ರಜ್ಜ ವಾರೊಪ್ಪತ್ತಿನಲ್ಲಿ ನೀರು ಬಿಡದಿದ್ದಲ್ಲಿ ಎಂಬತ್ತೆರದರ ಯುವಕನಾದ ತಾನು ಅಸೆಂಬ್ಲಿ ಎದುರಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದನಲ್ಲದೆ ರಾಜಕಾರಣಿಯೋರ್ವನ ಕೈಯಿಂದ ಬಿಸಲೇರಿ ಬಾಟಲಿ ಕಿತ್ತುಕೊಂಡು ಆತನ ಕಪಾಳಕ್ಕೆರಡು ಬಿಗಿದು ಎಚ್ಚರಿಸಿದನು. ಕೂಡಲೇ ಅಲ್ಪಸಂಖ್ಯಾತ ಸರಕಾರ ಇಂಥ ದಿನ ಇಂಥವರ ಕೈಯಿಂದ ಕುಡಿಯೋ ನೀರಿನ ಸರಬರಾಜು ಉದ್ಘಾಟನೆ ಮಾಡಿಸುವುದಾಗಿ ಪ್ರಕಟಿಸಿತು. +ಅದು ತಿಳಿದದ್ದೇ ತಡ ಬಣ್ಣ ಬಣ್ಣದ ವಿವಿಧ ಗಾತ್ರದ ಪ್ಲಾಸ್ಟಿಕ್ ಕೊಡಪಾನಗಳು ಸದರಿ ಗ್ರಾಮಕ್ಕೆ ಪ್ರವಾಹೋಪಾದಿಯಲ್ಲಿ ಹರಿದುಬಂದವು. ಹೆಂಗಸರು ತಂತಮ್ಮ ಸೊಂಟಗಳ ಬಣ್ಣದ ಮ್ಯಾಚಿಂಗ್ ಕೊಡಗಳನ್ನು ಖರೀದಿಸಿದರು. ಸ್ಥಳೀಯ ಪತ್ರಿಕೆಗಳು ಸಿನ್ನೇರ್ನಳ್ಳಿಯ ಬಗ್ಗೆ ವಿಶೇಷ ಪುರವಣಿಗಳನ್ನು ಪ್ರಕಟಿಸಿದವು. ನಾಳೆ ನೀರು ಬಿಡುವ ಸಮಾರಂಭ ಅಂದರೆ ಇವತ್ತಿನಂತೆ ಇದ್ದ ಮೂರು ನಲ್ಲಿಗಳ ಸುತ್ತ ನೂರಾರು ಸಂಖ್ಯೆಯಲ್ಲಿ ಕೊಡಪಾನಗಳನ್ನು ಜಮಾ ಮಾಡಲಾಯಿತು. +ಆ ದಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವ್ಯಕ್ತಿ ಗ್ರಾಮದ ಕಣ್ಮಣಿಯೂ ಆಗಿದ್ದ. ಜಲಭಯರೋಗದಿಂದ ಮೂರು ತಿಂಗಳ ಕಾಲ ನರಳಿ ಮೊನ್ನೆಯಷ್ಟೇ ಗುಣಮುಖನಾಗಿ ಬಂದಿದ್ದ ದಯಾನಂದ ಗೌಡ ಅತ್ತ ಭಾಷಣ ಮಾಡುತ್ತಿರಲು ಇತ್ತ ಮೂರು ಜಾಗಗಳಲ್ಲಿದ್ದ ಮೂರು ನಲ್ಲಿಗಳ ಕೊರಳಿಗೆ ಪೂಮಾಲೆಗಳನ್ನು ಹಾಕಿ ಪೂಜಿಸುತ್ತಿರುವ, ಒಂದೊಂದು ನಲ್ಲಿಗೂ ಒಂದೊಂದು ಹೆಸರನ್ನು ಇಡುತ್ತಿರುವ, ವಿಶೇಷ ಗೆಟಪ್‌ಗಳಿಂದ ಬೀಗುತ್ತಿರುವ ಮಹಿಳೆಯರು ಎದುರಾಳಿಗಳ ಕೈಗೆ ಸಿಕ್ಕದ ಹಾಗೆ ತಲೆಗೂದಲನ್ನು ಹಿಂದಕ್ಕೆ ಬಿಗಿದು ಕಟ್ಟಿದರು. ಸೀರೆಗಳನ್ನು ತುಸು ಮೇಲಕ್ಕೆತ್ತಿ ಕಟ್ಟಿ ತೊಡೆಗಳನ್ನು ಆಯುಧಗಳೋಪಾದಿಯಲ್ಲಿ ಝಳಪಿಸುತ್ತಿದ್ದರಲ್ಲದೆ ಹುಬ್ಬುಗಳನ್ನು ಮೇಲಕ್ಕೇರಿಸಿ ದೃಷ್ಟಿಯುದ್ದ ನಿರತರಾಗಿದ್ದರು. ಅದೇತಾನೆ ದೈವತ್ವ ಲಭಿಸಿದ್ದ ನಲ್ಲಿ ನಾಚಿ ತಲೆತಗ್ಗಿಸಿತ್ತು. +ಅತ್ತ ಅತಿಥಿ ಗೌಡ ಹಸಿರು ಗುಂದಿ ಒತ್ತಿದ ಎಂಬುದನ್ನು ಸಾರಿ ಹೇಳಲೋಸುಗ ಢಂಢಮಾರಂತ ಬಾಂಬುಗಳನ್ನು ಎಗರಿಸಲಾಯಿತು. ಇತ್ತ ಹೆಂಗಸರು ಹೋ ಎಂದು ಹರ್ಷೋದ್ಗಾರ ಮಾಡಿ ನಾಮುಂದು ತಾಮುಂದು ಅಂತ ಮುನ್ನುಗ್ಗಿದರು. ಬಂದೋಬಸ್ತಿಗೆಂದು ಪೋಲಿಸರು ಬಂದಿದ್ದರಿಂದ ಗಲಾತೆ ನಡೆಯಲಿಲ್ಲ. ನಲ್ಲಿ ಎಂದು ನೀರು ಸುರಿದೀತೋ! ತಮ್ಮ ಕೊಡಗಳೆಂದು ತುಂಬುವವೋ! ಎಂಬ ನಿರೀಕ್ಷೆ, ಆಶ್ಚರ್ಯ, ಆತಂಕ, ಉದ್ವಿಗ್ನತೆ……. +ಆಗ ಇದ್ದಕ್ಕಿದ್ದಂತೆ ಸರ್ರರ್ ಬುಸ್ಸಸ್ ಅಂತ ಶಬ್ದ ಮಾಡಲಾರಂಭಿಸಿದ್ದೇ ಹೆಂಗಸರೆಲ್ಲ ಹೆದರಿ “ಓಹ್ ಓಹ್ ದೆವ್ವ…… ನಲ್ಲ್ಯಾಗ ದೆವ್ವ” ಎಂದು ಕೂಗುತ್ತ ದಿಕ್ಕು ದಿಕ್ಕಿಗೆ ಓಡಲಾರಂಭಿಸಿದರು. ನಂತರ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತ ಮುಂದೆ ಬಂದರು. ನಲ್ಲಿಗಳಿಗೆ ಹೊಂದಿಕೊಂಡರು. +ಹೊಸದಾಗಿ ನನಗಂಡ ಎಲ್ಲಿ ಕುಂಡ್ರುಗೊಡಸುವಲ್ಲ ಎಂಬಂತೆ ಮೊದ ಮೊದಲು ನಲ್ಲಿಗಳು ಸರಿಯಾಗಿ ಕೆಲಸ ಮಾಡಿದವು. ನಂತರ ಎರಡು ಕೆಟ್ಟು ಮಂಡ್ರಪ್ಪನವರಂಗಳದ ನಲ್ಲಿ ಮಾತ್ರ ಉಳಿದುಕೊಂಡಿತು. ಆದರೆ ಅದರಲ್ಲೂ ಅಷ್ಟೇನೆ…… ನೀರು ಬಂದರೆ ಬಂತು, ಇಲ್ಲಾಂದರೆ ವಾರಗಟ್ಟಲೆ ಇಲ್ಲ. ಯಾರೋ ಬೈದರೆಂಬ ಕಾರಣಕ್ಕೆ ಊರು ಬಿಟ್ಟಿರುವ ಮೂರು ಮಂದಿ ಹೆಂಡರಿಗೆ ಗಂಡನಾದ ರಾಜನು ಹತ್ತನ್ನೆರಡು ದಿನಗಳ ನಂತರ ನೀರು ಬಿಡಲಿರುವನೆಂಬ ಸುದ್ದಿ…… ಇದರಲ್ಲಿ ಎಷ್ಟು ನಿಜವೋ! ಎಷ್ಟು ಸುಳ್ಳೋ? ಆದರೆ ನಲ್ಲಿ ಇಂದು ಮುಂಜಾನೆ ಸರ್ರರ್ ಎಂದು ಸದ್ದು ಮಾಡಿ ನೀರು ಬರುವ ಮುನ್ಸೂಚನೆ ನೀಡಿರುವುದಂತು ನಿಜ. ಆದ್ದರಿಂದ ಎಲ್ಲರಲ್ಲಿ ಸಮರೋತ್ಸಾಹ…… +-೪- +ಐತುಂಬ ಕೊಡಗಳನ್ನು ಮುಡಿದು ಮಾರಿಗೊಂದರಂತೆ ಹೆಜ್ಜೆ ಇಡುತ್ತ ಮಹಿಳಾ ಕರಾಟೆ ಪಟುವಿನಂತೆ ಆಗಮಿಸಿದ ಚೆನ್ನವ್ವನನ್ನು ನೋಡಿದೊಡನೆ ಗೊಲ್ತೆಲ್ಲವ್ವ ತನ್ನ ಬೊಂಬಾಯಗಲದ ಬಾಯಿ ತೆರೆದು “ಬಾರೇ ಬಾ…. ನಮ್ಮುಡ್ರುಚ್ನೆ ವಯ್ತಾವ…. ಅವ್ನೆ ಯಿಡುಕೊಂಡೋಗ್ವಂತಿ ಬಾ” ಎಂದು ಕೊಕ ಕೊಕ ನಗುತ್ತ ಸ್ವಾಗತ ಕೋರಲು ಅಲ್ಲಿದ್ದ ಹೆಂಗಸರು ಹೋಗಗ ಎಂದು ನಗಾಡಿದರು. ಅದಕ್ಕೆದ್ದು ಚೆನ್ನವ್ವ “ಉಪ್ಪಾಟಿ ಉಪ್ನೀರ್ಕುಡ್ದು ಅದ್ಯಾವ್ ಪಾತಿ ಉಚ್ಚೆ ವಯ್ದಾರಭೇ ನಿನ್ನುಡ್ರು, ಎಲ್ಲಾದಾವ್ ತೋರ್ಸು….” ಎಂದೊಂದು ರವಂಡು ಕಣ್ಣು ತಿರುಗಿಸಲು ಅಲ್ಲೆ ಅರಿವೆ ಜಮಡುತ್ತ ನಿಂತಿದ್ದ ಬಾಲಗೊಮ್ಮಟಗಳು ಚಟಕ್ಕನೆ ತಂತಮ್ಮ ನಲ್ಲಿ ಮರಿಗಳನ್ನು ಮರೆಮಾಚಿಕೊಂಡವು. +ಈ ಪ್ರಕಾರವಾಗಿ ನಗೆ ಚಟಾಕಿ ಮಾತಾಡುತ್ತಲೇ ಸರತಿ ಸಾಲಲ್ಲಿ ಯಾರ್ಯಾರ ಗುರುತುಗಳು ಎಲ್ಲೆಲ್ಲಿವೆ ಎಂಬುದನ್ನು ಸಿಂಹಾವಲೋಕನದಿಂದ ಪರಿಶೀಲಿಸಿದಳು. ಮುಂದಿದ್ದೋವು ಅದೆಂಗೆ ಹಿಂದಕೋದವು…. ಅವ್ಕೇನು ಕಾಲು ಬಂದವೇನು ಎಂದು ಯೋಚಿಸಿ “ಅದ್ಯಾವಾಕಿ ನನ್ನೋವ್ನಯಿಂದಕ್ಕಿಟ್ಟಾಕಿ” ಎಂದು ಬದ್ದ ಬ್ರುಕುಟಿಯಾಗಿ ಎಲ್ಲ ಘನಸ್ತಿಯರ ಕಡೆ ನೋಡಿದಳು. ಆಕೆಯ ಮಾತಿಗೆ ಪ್ರತಿ ನುಡಿಯುವ ತಾಕತ್ತು ಇದ್ದದ್ದು ಎಲ್ಲವ್ವ ಮತ್ತು ಮೆಳ್ಳಗಣ್ಣಿನ ಕರಿಬಸವಿಯರಿಗೆ ಮಾತ್ರ. “ಯಾರ್ಗುರ್ತೋ ಯ್ಯೋನ್ಕಥಿಯೋ…. ಯೀ ಸುಮಾರದ್ನೆಲದ ಮ್ಯಾಲಯಿಂದ್ಕಿದ್ದೋವು ಮುಂದಕ ಬೊರ್ತಾವ…. ಮುಂದಕ್ಕಿದ್ದೋವು ಯಿಂದಕೋತಾವೆಯೇ ನನ್ ಸೊಸಿಯೇ…. ಯಿಂದ್ಯೋನು ಮುಂದ್ಯೋನು ಬುಡು ಮದ್ಲು ನೀರೊಂದುದುರ್ಲಿ…. ಬಾ…. ಕುಂತ್ಗೆಂಡು ವಂದ್ನಾಕ್ಮಾತಾಡ್ವಂತಿ” ಎಂದು ಅಲೌಕಿಕತೆಯ ಗಾಳ ಹಾಕಿ ಆಕೆಯನ್ನು ಸೆಳೆಯಲು ಎಲ್ಲವ್ವ ಮಾಡಿದ ಪ್ರಯತ್ನ ವ್ಯರ್ಥವಾಯಿತು. “ಯೇದಾಂತ ಯ್ಯೋಳಾಕೆ ಕ್ಯೋಳಾಕಿದು ಸೆರಿಯಾದ ಟೇಮಲ್ಲವೋ ಯೆಲ್ಲಮ್ಮತ್ತೇಯ್…. ಮನ್ಯಾಗ ಮಂದಿ ಬಾಯಾಗೆಲ್ಡು ಕಾಳು ನೀರಾಕ್ಕೊಳ್ದೆ ಯಲ್ಡು ದಿನಾಯ್ತು. ಉಪ್ನೀರು ಕುಡ್ದೂ ಕುಡ್ದು ಬಾಯೆಂಭೋವು ಕ್ಯೆಟ್ ಕೆರ ಆಗ್ಯಾವ…. ಯಾವಾಕಿತ್ತಾಕೆಂಬೋದ್ನ ಮದ್ಲೇಳು….” ಎಂದು ಚೆನ್ನವ್ವ ರವುಸದಿಂದ ನುಡಿದಳು. +ಅದಕ್ಕಿದ್ದು ಹುಟ್ಟಾ ಜಗಳಗಂಟಿಯಾದ ಕರುಬಸುವಿಯು “ವುಪ್ನೀರು ಕುಡ್ದೂ ಕುಡ್ದು ಯಲ್ಲಾರ ಬಾಯಿನೂ ಯ್ಯೋಲ್ಗುಂಡ್ಯಾಗವವ್ವಾ…. ನನ್ನಾಟಗೊಳ್ಳ ರಾಜೆಂಭೋನು ಸರ್ಯಾಗ್ನೀರು ಬುತ್ತಿದ್ದರ್ಯಾಕ ನಾವ್ ವಬ್ರು ಥೆಲೀನೊಬ್ರು ಯಿಡುಕಂತಿದ್ವೆವ್ವಾ…. ಯಿನ್ನೇನೇನೀಸೋದೈತೋ” ಎಂದೊಂದುಸುರು ಬಿಡಲು ಎದುರಿಗಿದ್ದ ಬರಿಗೊಡಗಳು ಅಲ್ಲಾಡಿದವು. ಲಕ್ಷೋಪಲಕ್ಷ ಬಯ್ಗಳ ಸೃಷ್ಟಿಕರ್ತೆಯೂ : ಅದ್ವಿತೀಯ ಜಗಳಗಂಟಿಯೂ ಆದ ಆಕೆ ಮಾಹಾಮಳ್ಳಿಯಂತೆ ಮಾತಾಡಿದ್ದು ಚವುಡಿ, ಗವುರಿ, ಮಾಂಕಾಳಿಯರೇ ಮೊದಲಾದ ಅತಿರಥೆ ಮಹಾರಥೆಯರಿಗೆ ಹಿಡಿಸಲಿಲ್ಲ. ಗವುರಿ ತಲೇಲಿ ಹೇನಾಯುವ ಕೈಂಕರ್ಯದಲ್ಲಿ ಮಗ್ನಳಾಗಿದ್ದ ಲಸುಮಿಯು “ಅಲಲಲಾ ಯಂಥಾ ಕಾಲ ಬೊಂತಂತೀನಿ…. ಕರುಬೊಸವತ್ತೆ ಯಾಕಿವತ್ತು ವಡ್ಲಾಗೊಂದು ನಾಲ್ಗೆ ಮ್ಯಾಲೊಂದಿಟ್ಕೊಂಡು ಯ್ಯೋಳಾಕತ್ಯಾಳಂತೀವ್ನಿ…. ಯಲ್ಲಾ ವುಪ್ನೀರ್ಮಯಿಮೆ….” ಎಂದು ಕಟುಗು ಮುಳ್ಳಾಡಿಸಿದಳು. +ಆಕೆಯ ಮಾತಿನ ಮರ್ಮ ಅರಿತ ಕರುಬೊಸುವಿ “ಯ್ಯೋನ್ಲೇ ಗಿಡ್ಡಿ…. ನಾನ್ನನ್ನೊಡ್ಲಗಿವನು ಸೆಂಟೈತಗೊಂಡೀನಲೇ….” ಎಂದಾಕೆ ಮುಂದೆ ಏನೋ ಅನ್ನಲಿದ್ದ ಮಾತನ್ನು ಅರ್ಧಕ್ಕೆ ತುಂಡರಿಸುತ್ತ ತಂಬೂರಿ ಸಿದ್ದವ್ವ “ಯ್ಯೋನ್ರೋಯ್…. ಕುಡಿಯಾಕೊಂದ್ಗುಟ್ಕು ನೀರಿಲ್ದಿದ್ರೂ ಯೀಟೊಂದು ಮಾತಡ್ತೀರಲ್ಲ ಯಿಂದಿನಾಲು ಕುಡುದಿದ್ರಿನ್ನೇಟೊಂದು ಮಾತಾಡ್ತಿದ್ರೆಭೇ…. ಮೈನೆಣ ಅರಗ್ಲಿಲ್ಲಾ…. ವಬ್ಳಿಗಾರ ನೀರಿನ ಬೊಗ್ಗೆ ಚಿಂತೈತೇನ್ರಲೇ ಭೋಸುಡೇರ….” ಎಂದು ವಿಚಾರಣೆ ಆರಂಭಿಸಿದಳು. ಆಕೆ ಯಜಮಾನ ಮನುಷ್ಯಳಾಗಿದ್ದುದರಿಂದ ಯಾರೊಬ್ಬರೂ ತೊಡೆಕೆರೆದುಕೊಳ್ಳಲಿಲ್ಲ. ಮುಖ ಮುಖ ನೋಡಿಕೊಂಡು ತೆಪ್ಪಗಾದರು. +ಮುದುಕಿ ಸಿದ್ದೆವ್ವ ಎಲ್ಲರತ್ತ ಸಿಂಹಿಣಿಯಂತೆ ನೋಡಲು ಎಲ್ಲರೂ ಒಂದು ಚಣ ಗಪ್‌ಚಿಪ್ ಆಗಿಬಿಟ್ಟರು. ಮುದುಕಿ ಇಮ್ಮಡಿ ಪುಲಕೇಶಿಯಂತೆ ಹೆಜ್ಜೆ ಹಾಕುತ್ತ ತನ್ನ ಕಡೆಗೇ ಬರಲು ಜಂಘಾಬಲ ವುಡುಗಿದ ಚೆನ್ನವ್ವ ಯ್ಯೋನೆವ್ವೋ ನೀನೊಂದೆ ಬೊಂದೀಯಂದ್ರ ಯಲ್ಲಾರ್ಬಾಯಿ ಬೊಂದಾಗ್ತಾವ್ನೋಡು ಎಂದು ಪೂಸಿ ಹೊಡೆದಳು. ಮುದುಕಿ ಅದಕ್ಕಾಕ್ಷಣ ಪ್ರಸನ್ನಚಿತ್ತಳಾದೊಡನೆ ತುಟಿ ಬಿರಿದದ್ದೂ ತಡಾಗಲಿಲ್ಲ. ತುಟಿ ಕೊರಕಲಿಂದ ತೊಂಬಲದ ರಸ ಅದರ ಬತ್ತಿದೆದೆ ಮೇಲಿಳಿಯಿತು. “ಯ್ಯೋನೇಯ್…. ಸ್ಚೆನ್ನೆವ್ವೋ ಮೊತ್ತೇ ಬಸುರಾದ್ಯೋ ಯೆಂಗ್ಯೋ” ಎಂದು ಆಕೆಯ ಹೊಟ್ಟೆ ಕಡೆ ನೋಡಿತು. ಯಿನ್ನು ನೀರ್ ಬೊರ್ಲಿಲ್ಲಾಪ್ಪ ಸಿವ್ನೆ ಬೊರ್ಲಿಲ್ಲಾಂದ್ರೆ ಮೊಕ್ಳು ಮೊರೀನೆಂಗಪ್ಪ ಸಂಬಾಳ್ಸೋದಂತ ನಮ್ ಚಿಂತೇ ನಮ್ಗೆ…. ಆದ್ರೀ ಮುದೇದ್ಕೆ ಯಲ್ರೂ ಬೊಸುರಾಗಿ ದಿನ್ಕೊಂದೊಂದು ಅಡಕಂತ ಕೂಕಂಡಿದ್ರ್ಯೋನೆ ಸೆಂತೋಸ” ಎಂದೊಂದು ಚಣ ಮನಸ್ಸಿನಲ್ಲಿ ಅಂದುಕೊಂಡು ಚಿನ್ನವ್ವ ಹೊರಗಡೆ ಕೇಳಿಸುವಂತೆ “ಒಳ್ಳೆ ಕಥಿ ಸುದ್ದಿ ಆತೆವ್ವಾ ನಿಂದು…. ಈ ಗಡ ಕಂಡಿರೋವ್ಕೆ ನೀರು ನಿಡಿ ಕೂಳು ಬೋನ ಜೊಡ್ಸೋದ್ರಾಗ ಸಾಕ್‌ಸಾಕಾಗತೈತೆ ಯೀಗ್ಲೇ ಯಣ್ ಜೆನುಮಕ್ಕೆ ಸುಡ್ಗಾಡೇ ವಾಸಿ ಅನಸತೈತೆ” ಎಂದು ಉದ್ದಾನ ಈರಭೋದ್ರ ದೇವರ ಗಾತ್ರದಂಥ ನಿಟ್ಟುಸಿರುಬಿಟ್ಟಳು. ಆಕೆ ಮಾತು ಕೇಳಿ ಮುದುಕಿ ಸಿದ್ದವ್ವಗೆ ನಗು ಮತ್ತು ಸಿಟ್ಟು ಒಟ್ಟಿಗೆ ಬಂದವು. “ಈಗೀನ್ಕಾಲ್ದ ವುಡ್ರೇಯಿಂಗ್ ಬುಡ್ರೇ…. ನಾಕಾರಡಕಂಡ್ರೇ ಅಳ್ಳಾಡಿ ವ್ವಾಗ್ತವೆ…. ಅದ್ನೋಳದ್ನೆಂಟದಕಂಡ್ರೂ ನಾನಿನ್ನೆಂಗದೀನ್ನೋಡೇಸ್ವನ್ನೀ ಯಲ್ಲಾದಾನೇ ಆ ನಿನ್ಗೊಂಡಾಯೆಂಭ ನನಾಟಗಳ್ಳ” ಎಂದು ಬಾಯಲ್ಲಿ ಗೋಟಡಕಿ ಹಾಕಿಕೊಂಡು ಕಡಿಯಲು ಕಟುಮ್ ಎಂಬ ಸೆವುಂಡು ಬಂದಿತು. ಅದಕ್ಕೆದ್ದು ಚೆನ್ನವ್ವ “ಅದಾನೆವ್ವೋ ಅದಾನೆ” ಎಂದು ಇನ್ನೊಂದು ಉಸುರು ಬಿಟ್ಟಳು. ಹೊಳಿಸಾಲ ದೇವರಿಗೆ ತನ್ನನ್ನು ತಾನರ್ಪಿಸಿಕೊಂಡವಳಾದ ಗಂಗಿ ಕುಪ್ಪಳಿಸಿ ಮುಂದೆ ಬಂದು “ಅಲ್ಲೆಭೇ ಈಟೆಕ್ಕ ಕ್ಯೋಳ್ತೀಯಲ್ಲಾ…. ನಿಂದು ಮುಟ್ ನಿಂತೈತಾಯಿಲ್ಲಾ ಆಟೇಳು” ಎಂದು ನಗೆಚಾಟಿಕೆ ಮಾಡಲು ಸಿದ್ದವ್ವ ನಿನ ಬಾಯಾಗ ನನ್ನ…. ಎಂದು ಅಟ್ಟಿಸಿಕೊಂಡಾಟು ದೂರ ಹೋದಳು. +“ಯಲ್ಗೋ ಯ್ಯೋನೋ ಯಂತದೋ ಸೆವಂಡು ಬೊಂದಂಗಾತೈತೆ…. ಯಲ್ಲಾ ಸೊಲಪೊತ್ತು ಮುಕ್ಳಿ ಬಾಯಿ ಮುಚ್ಕಳ್ರೀ” ಎಂದು ಎಲ್ಲವ ಫರಮಾನು ಹೊಂಡಿಸಿದೊಡನೆ ಅಲುಗಾಡುತ್ತಿದ್ದ ಮರವೂ ಒಂದು ಕ್ಷಣ ತೆಪ್ಪಗಾಯಿತು. ಸ್ನೋಮೂಷನ್ನಿನಲ್ಲಿ ಎಲ್ಲರೂ ಮುಂದೆ ಬಂದು ನಲ್ಲಿಯ ಬಾಯಿಯ ಕಡೆ ಉಸಿರು ಬಿಗಿ ಹಿಡಿದು ನೋಡುತ್ತಿರುವಾಗ್ಗೆ ಕಪ್ಪಾನೆಯ ಕಪ್ಪನೆಯ ಗೊದ್ದಿಗವೊಂದು ಮೆಲ್ಲಗೆ ಹೊರಬಂದು ತಲೆ ನಿಗುರಿಸಿ ಎಲ್ಲರತ್ತ ಹದಿನಾರು ಸಾವಿರೆಂಡರಿಗೊಡೆಯನಾದ ಶ್ರೀ ಕೃಷ್ಣ ಪರಮಾತ್ಮನಂತೆ ನೋಡಿತು. ನೋಡು ನೋಡುತ್ತಿದ್ದಂತೆ ನಲ್ಲಿ ಒಳಗಿಂದ ಗೊದ್ದಿಗೆಗಳು ಲೈನುಲನಾಗಿ ಪ್ರವಾಹಪೀಡಿತ ನಿರಾಶ್ರೀತರಂತೆ ಬರತೊಡಗಿದ್ದು ಶುಭ ಸೂಚನೆ ಎಂಬಂತೆ ಗೋಚರಿಸಿತು. ಗಂಗಿ “ನೀರಲ್ಲಿ ವಂಟಿರಬೋದು ಅದ್ಕೆ ಇವು ಜೆಗೇವು ಕಾಲಿ ಮಾಡ್ಲಿಕ್ಕತ್ಯಾವ” ಎಂದು ಗೊಣಗಿದ್ದು ಸರಿ ಅನ್ನಿಸಿತು ಎಲ್ಲರಿಗೆ. ಎಲ್ಲರು ತಂತಮ್ಮ ಕೊಡಪಾನಗಳನ್ನು ಕೈಗೆತ್ತಿಕೊಂಡರು. ಅವರ ಪೈಕಿ ಒಬ್ಬಳಾದ ಸಂಗ್ಲಿ ಪರಾವರ್ತಿತ ಪ್ರತಿಕ್ರಿಯೆಗೊಳಪಟ್ಟು “ಓಹೋಯ್…. ನ್ನೀರು ಭೊಂದ್ವೋ….” ಎಂದು ಕಿರ್ಧಬಲ ಕೂಗು ಹಾಕಲು ಅಲ್ಲೇ ಬೇವು, ಬಿಲ್ವ, ಹುಣಸೆ ಮರಗಳ ಮೇಲೆ ವಿಶ್ರಯಿಸಿಕೊಂಡಿದ್ದ ಪಕ್ಷಿಗಳು ಬೆದರಿ ಪವ್ವನೆ ಪಾರಿದವು…. ಆ ಧ್ವನಿಯ ಸರ್ಪಾಸ್ತ್ರದೊಲು ಅಲ್ಲಿಗೊಂದು ನೂರು ಮಾರು ದೂರದಲ್ಲಿ…. ಅಂದರೆ ಹತ್ತಂಕಣದ ಮಣ್ಣಿನ ಮನೆಯ ಹಿಂದೆ ನೆರಕೆಯ ಮರೆಯಲ್ಲಿ ಹುಟ್ಟುಮಾರ್ಗದೆಸೀಲೆ ಕೂತುಕೊಂಡು ನಖಶಿಖಾಂತ ಜಳಕ ಮಾಡುತ್ತಿದ್ದ ಉಳ್ಳಾಗಡ್ಡೆ ದುಬ್ಬೇರವ್ವನ ಕಿವಿಗೆ ಬೀಳಲು ಆಕೆಯ ಹ್ಹಾಂ…. ನೀರು ಬೊಂದ್ವಾ ಎಂದುದ್ಗರಿಸಿದ್ದಾಗಲೀ; ಆ ಅನುಭಾವ ಸ್ಥಿತಿಯಲ್ಲಿ ನೀರು ನೀರು ಎಂದು ಕೂಗುತ್ತ ಬೀದಿಗೆ ಬಂದದ್ದಾಗಲೀ; ಯಕ್ಷ, ಕಿನ್ನರ, ಕಿಂಪುರುಷರಿಗೆ ಸಮಾನರಾದ ಕೊಟ್ರ, ಯಂಕಟಿ, ಗೋಣಿ, ಪೀರಬಾಯಿ ಕಣ್ಣುಗಳನ್ನು ಏಕಕಾಲಕ್ಕೆ ತೆರೆದು ನೋಡುತ್ತಿದ್ದುದಾಗಲೀ; ಆಕೆ ಹಂಗೆ ಓಡೋಡುತ್ತ ಮಂಡ್ರಪ್ಪನವರಂಗಳ ತಲುಪಿದ್ದಾಗಲೀ; ಅಲ್ಲಿದ್ದ ನಾವೆಂಭೋ ಹೆಂಗಸರು ಆವಾಕ್ಕಾಗಿದ್ದಾಗಲೀ; ತಲಬಾಗಿಲಿಗೆ ಪುಷ್ಪವೇರಿಸುತ್ತಿದ್ದ ಗಂಗಾಧರಪ್ಪ ‘ಸ್ತ್ರೀ ರೂಪಮೇ ರೂಪಂ’ ಎಂದು ಉದ್ಗರಿಸಿದ್ದಾಗಲೀ; ಬೆನ್ನ ಹಿಂದೆಯೇ ಓಡಿಬಂದ ಗಂಡ ಮಾಲಿಂಗನು ದೋತರ ಬಿಚ್ಚಿ ಆ ತನ್ನೆಂಡತಿಯ ಮಯ್ಯಿ ಮೇಲೆ ಹಾಕಿ ತಾನು ಬೆತ್ತಲಾಗಿದ್ದಾಗಲೀ ಈ ಎಲ್ಲ ರೋಚಕ ಘಟನೆಗಳು ಕಣ್ಮುಚ್ಚಿ ಕಣ್ ತೆರೆಯೋದರೊಳಗೆ ನಡೆದುಬಿಟ್ಟವು. ಮುದುಕಿ ಸಿದ್ದವ್ವ ಕೂಡಲೇ ಮುಂದೆ ಬಂದು “ಲೋ ಮಾಲಿಂಗ…. ಯಲ್ಲಾ ಸೀನೀರ್ನ ಮೈಮೆ…. ಗಂಗಮ್ತಾಯಿ ಅಂಗ್ಯಾಡಿಸಿದ್ಲಂದ್ಕೋ ….ಮನೀಗ್ವಾದ ಮ್ಯಾಲ ವದ್‌ಗಿದ್ದೀಯಾ…. ಮದ್ಲು ಸ್ವಂಟಕ್ಕೊಂದು ಸೆಲ್ಲೇವ್ ಸುತ್ತಿಗ್ಯಾ” ಎಂದು ಹೇಳಲು ಅವನು ಕೂಡಲೆ ಹಂಗೇ ಮಾಡಿದನು. ಬೊಂಬಾಯಿ ಬಾಯ ದುಬ್ಬೀರವ್ವ ಅದ್ಯಾಕ ವಡೀತಾನ ಬುಡಭೇ…. ಯಾ ನನ್ನಾಟಗಳ್ಳ ನಂದ್ನೋಡಿ ಕಿಸಿಯೋದು ಆಟರಾಗೈತೆ…. ಎಂದು ಗಂಡನ ಕಯ್ಯಿಯಿಂದ ಕೊಸರಿ ಮನೆಗೋಡಿ ಸೀರೆ ಕುಬುಸ ಹುಟ್ಟುಕೊಂಡು, ಸೊಂಟದ ಬಾಳೇಕಾಯಿ ಸರಿಪಡಿಸಿಕೊಳ್ಳುತ್ತ ನಲ್ಲಿಯ ಶ್ರೀಕ್ಷೇತ್ರಕ್ಕೆ ಬರಲು ಎಲ್ಲರೂ ಕೊಕ್ಕೋಕೋ ನಕ್ಕೋತ ಸ್ವಾಗತಿಸಿದರು. ಹುಟ್ಟಾಕಾವ್ಯ ಪ್ರಯೋಗ ಪರಿಣತ ಮತಿಗಳೂ: ರಿಕೆಯರೂ ಆದಂಥ ಎಲ್ಲವ್ವ: ಕರು ಬೊಸವಿಯರು ದುಬ್ಬೀರವ್ವನ ದೇಹ ಸಿರಿಯ ಉಬ್ಬುತಗ್ಗುಗಳನ್ನು ಕಾವ್ಯಮಯವಾಗಿ ವರ್ಣಿಸಲಾರಂಭಿಸಿದರು. ಗವುರಿಯಂತೂ ಈ ರಾತ್ರಿ ಅನಾಹುತ ಸಂಭವಿಸಬಹುದೆಂತಲೂ: ಚವಿಡಿಯು ನಾಳೆಯೊಳಗೆ ಕೆಲವರಾದರೂ ಅವಧೂತ ಪದವಿ ಪಡೆಯಬಹುದೆಂತಲೂ: ರುದ್ರಿಯು ಮಾಲಿಂಗೆ ದೇಶಾಂತರ ಹೋಗಬಹುದೆಂತಲೂ ಮಾತಾಡಿಕೊಂಡರು. ಯಾರು ಏನೇ ಮಾತಾಡಿಕೊಂಡರೂದುಬ್ಬೀರವ್ವ ಮಾತ್ರ “ಬಾಯ್ಮುಚ್ಗೆಳ್ರೇ ಬೋಸೂಡೇರಾ…. ನಿಮ್ದು ವಬ್ಬೊಬ್ರುದ್ದು ಕೆತ್ತಿ ಬೊಡೀಲೇನು….” ಎಂದಾಕೆ ಇನ್ನೂ ಏನೋ ಹೇಳಬೇಕೆನ್ನುವಷ್ಟರಲ್ಲಿ ನಲ್ಲಿಯು ಸುಸಸ್ ರ್‌ರ್‌ರ್ ಎಂದು ಮುಂತಾಗಿ ನಾದಾಲಪನೆ ಮಾಡತೊಡಗಲು ಕೊಡರ್ಧಾರಿಯಾಗಿದ್ದ ಚನ್ನವ್ವ ಕುಪ್ಪಳಿಸಿ ಗುಂಡ್ಯೊಳಕ್ಕೆಗರಿದಳು. ಆ ಕೂಡಲೇ ದುಬ್ಬೀರವ್ವ “ಆ ದ್ಯಾವಾಕಿಯೇ ನೀರಿನ್ಯಾಲಾಗ ಬರೀಬತ್ಲಾಗಿ ಮರುವಾದಿ ಕಳ್ಕೊಂಡಿರೋಳು ನಾನ್, ನಾನ್ಮೊದ್ಲಿಡೀಬೇಕು….” ಎಂದಬ್ಬರಿಸಿ ಎದುರಾಳಿಯ ಜುಟ್ಟಿಗೆ ಕೈಹಾಕಿದಳು. “ನಿನ್ನ್ಯಾವೋಳೆ ಸೀರಿ ಬುಚ್ಗೆಂಡ್ ಬಾ ಅಂದದ್ದು….” ಚೆನ್ನವ್ವ ಪ್ರತಿಯಾಗಿ ಆಕೆಯ ತುರುಬಿಗೆ ಕೈ ಹಾಕಿದಳು. ಇವರಿಬ್ಬರು ಜಗಳಕ್ಕೆ ನಾಂದಿ ಹಾಡಿದೊಡನೆ ಎಲ್ಲವ್ವ, ಕರುಬಸವಿ, ಗವುರಿ, ಗಂಗಿ, ಚವುಡಿ, ದುರುಗಿಯೇ ಫ್ರೆಂಡ್‌ಶಿಪ್ ಮರೆತುಬಿಟ್ಟು ನಾಮೊದ್ಲು ನಾಮೊದ್ಲು ಅಂತ ಪರಸ್ಪರ ಹಿಡಿದೆಳೆದಾಡತೊಡಗಿದರು. +ಆ ಕ್ಷಣ ಧರೆಗುದುರಿದ ತಲೆಗೂದಲೆಷ್ಟೋ: ಹರಿದು ಚಿಂದಿ ಚಿಂದಿಯಾದ ಕುಬುಸ, ಸೀರೆಗಳೆಷ್ಟೋ. ಆದರೆ ನಲ್ಲಿ ಮಾತ್ರ ಸ್ಸಸ್ಸಂತ ಶಬ್ದ ಮಾಡುತ್ತಲೇ ಇತ್ತು. +***** +“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ಇದುವರೆಗೂ ಬೇರೆ ಯಾರ ಜೊತೆಯೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_268.txt b/Kannada Sahitya/article_268.txt new file mode 100644 index 0000000000000000000000000000000000000000..a7175e8ce19d96f249f579b638cd14e6a3655261 --- /dev/null +++ b/Kannada Sahitya/article_268.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆದಿ +ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ ಪ +ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು +ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ೧ +ಬಾಲಕನೆ ಕೆನೆ ಹಾಲು ಮೊಸರನೀವೆ +ಲೇಲೆಯಿಂದಲಿ ಎನ್ನ ತೊಳ ಮೇಲ್ಮಲೆಗೆಂದು ೨ +ಮುಗುಳು ನಗೆಯಿಂದ ಮುದ್ದು ತಾ ತಾರೆಂದು +ಜಗದೊಡೆಯ ಶ್ರೀ ಪುರಂದರವಿಠಲನ ೩ +***** +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ರಾಗ — ಪಂತುವರಾಳಿ ತಾಳ — ಅಟ್ಟ ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ |ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ |ಅಟ್ಟು ಉಣ್ಣದ ವಸ್ತುಗಳಿಲ್ಲವೊ ||ಗುಟ್ಟು ಕಾಣಿಸಿಬಂತು ಹಿರಿದೇನು […] +ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_269.txt b/Kannada Sahitya/article_269.txt new file mode 100644 index 0000000000000000000000000000000000000000..8ca60010adc95d4e2fc0afe9aa900db19cceed68 --- /dev/null +++ b/Kannada Sahitya/article_269.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. ಬಗೆಬಗೆಯಲ್ಲಿ ಸ್ತುತಿಸುತ್ತಾನೆ. ದೇವಾ ನನ್ನನ್ನು ಈ ಸಂಕಟದಿಂದ ಪಾರು ಮಾಡು ಎಂದು ಮೊರೆಯಿಡುತ್ತಾನೆ. ಮತ್ತೆ “ಜಯದೇವಾ ಜಯದೇವಾ ಜಯ ಮಂಗಲ ಮೂರ್ತಿ” ಎಂದು ಆರತಿ ಎತ್ತುತ್ತಾನೆ ಈಗಲಾದರೂ ಅಷ್ಟೇ ಚರ್ಚ್ಗೇಟ್‌ನಿಂದ ಹಾರ್ನಿಮನ್ ಸರ್ಕಲ್‌ನಲ್ಲಿರುವ ತನ್ನ ಆಫೀಸಿನತ್ತ ದಾಪುಗಾಲು ಹಾಕುತ್ತಿರುವಾಗ ಶೃಂಗಾರಪುರೆ ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದಾನೆ. +ಇವತ್ತು ಸೋಮವಾರ. ಸೋಮವಾರ ಒಂದು ಸರಿಯಾಗಿ ಸಾಗಿ ಬಿಟ್ಟರೆ ಮತ್ತೆ ಇಡೀ ವಾರ ತೊಂದರೆಯೇನೂ ಇಲ್ಲ. ಟ್ರೈನು ಚರ್ಚ್‌ಗೇಟ್ ತಲುಪಿದಾಗಲೇಹತ್ತು ದಾಟಿತ್ತು. ೧೦.೧೫ರ ಒಳಗೆ ಆಫೀಸು ತಲುಪದಿದ್ದರೆ ಹಾಜರಿ ಪುಸ್ತಕದಲ್ಲಿ ರೆಡ್ ಮಾರ್ಕ್ ಬೀಳುತ್ತದೆ. ಮೂರು ರೆಡ್ ಮಾರ್ಕ್ ಎಂದರೆ ಒಂದು ದಿನದ ರಜೆಯೆಂದು ಲೆಕ್ಕ. ಈ ತಿಂಗಳಲ್ಲಿ ಈಗಾಗಲೇ ಶೃಂಗಾರಪುರೆಯ ಹಾಜರಿಯಲ್ಲಿ ಎರಡು ರೆಡ್ ಮಾರ್ಕ್ ಬಿದ್ದಿದೆ. ತಿಂಗಳು ಮುಗಿಯಲು ಇನ್ನೂ ಹತ್ತು ದಿನಗಳಿವೆ. ಆದುದರಿಂದಲೆ ಇಂದು ಬೆಳಿಗ್ಗೆ ರಸ್ತೆಯಲ್ಲಿಯೆ ಶೃಂಗಾರಪುರೆ, ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದಾನೆ. +ಅಂತೂ ಇಂತೂ ಸ್ವಲ್ಪ ಓಡಾಡುತ್ತಾ ಸ್ವಲ್ಪ ನಡೆಯುತ್ತಾ ಶೃಂಗಾರಪುರೆ ತನ್ನ ಆಫೀಸು ಕಟ್ಟಡ ತಲುಪಿದಾಗ ೧೦.೧೦. ಸಮಾಧಾನದ ನಿಟ್ಟುಸಿರು ಬಿಟ್ಟು ಆತ ಲಿಫ್ಟ್‌ನ ಬಳಿ ಬಂದಾಗ ಅಲ್ಲಿನ ದೃಶ್ಯ ನೋಡಿ ಬೆಚ್ಚಿಬಿದ್ದ. ಎರಡು ಲಿಫ್ಟ್‌ಗಳಲ್ಲಿ ಒಂದು ನಿನ್ನೆಯಿಂದ ಸರ್ವೀಸ್‌ನಲ್ಲಿದೆ. ಇನ್ನೊಂದರ ಮುಂದಿದ್ದ ಕ್ಯೂನಲ್ಲಿ ಕನಿಷ್ಠ ಪಕ್ಷ ಮೂವತ್ತು ಜನರಾದರೂ ಇದ್ದಾರೆ. ಐದು ಮಂದಿಯಂತೆ ಲಿಫ್ಟ್ ಆರು ಬಾರಿ ಮೇಲೆ ಹೋಗಿ ಬಂದ ಬಳಿಕ ತಾನೆ ತನ್ನ ಸರದಿ ಬರುತ್ತದೆ. ಆತ ಕ್ಯೂ ಬಿಟ್ಟು ಮೆಟ್ಟಿಲುಗಳತ್ತ ಓಡಿದ. +ಶೃಂಗಾರಪುರೆಯ ಓಟವನ್ನು ಕಂಡ ಆತನ ಆಫೀಸಿನ ಸ್ಟೆನೊ ಮಿಸ್. ಮೀರ್‌ಚಂದಾನಿ “ಶಿಂಗೂ ಮೈ ಡಿಯರ್ ಕಮ್ ಆನ್ ಯಾರ್” ಎಂದು ಜೋರಾಗಿ ಕರೆದಾಗ ಕ್ಯೂನಲ್ಲಿ ನಿಂತವರೆಲ್ಲಾ ಗೊಳ್ಳೆಂದು ನಕ್ಕರು. ಹಿಂದೆ ತಿರುಗಿ ನೋಡದ ಶೃಂಗಾರಪುರೆ “ತುಜಾ ಆಯಿಲಾ” ಎಂದು ಮನಸ್ಸಿನಲ್ಲಿಯೇ ಕೆಟ್ಟದಾಗಿ ಬೈಯುತ್ತಾ ಮೆಟ್ಟಿಲುಗಳನ್ನು ಹತ್ತ ತೊಡಗಿದ. ಸಂದರ್ಭ ಒದಗಿದಾಗಲೆಲ್ಲಾ ಆಫೀಸು ಎಂದಿಲ್ಲ ಹೊರಗೆ ಎಂದಿಲ್ಲ ಈ ಸಿಂಧಿ ಚೋಕ್ರಿ ತನ್ನನ್ನು ಲೇವಡಿ ಮಾಡುತ್ತಿದ್ದಾಳೆ. ಇಂತಹವರಿಂದಲೇ ಆಫಿಸಿನಲ್ಲಿ ಮಾತ್ರವಲ್ಲ ಇಡೀ ಕಟ್ಟಡದಲ್ಲಿ ತಾನು ನಗೆಪಾಟಲಿಗೆ ಈಡಾಗಿದ್ದೇನೆ ಎಂದು ಶೃಂಗಾರಪುರೆ ದುಃಖಿಸಿದ. +ನಾಲ್ಕು ಮಾಳಿಗೆ ಹತ್ತುವುದು ಪ್ರಯಾಸದ ಸಂಗತಿಯೇನಲ್ಲ. ದಾದರ್‌ನಲ್ಲಿನ ಚಾಳ್‌ನಲ್ಲಿ ಶೃಂಗಾರಪುರೆಯ ಖೋಲಿ ಇರುವುದು ಮೂರನೆಯ ಮಹಡಿಯಲ್ಲಿ. ದಿನನಿತ್ಯ ಆತ ಪ್ರಯಾಸವಿಲ್ಲದೆ ತನ್ನ ಕಟ್ಟಡವನ್ನು ಹತ್ತಿ ಇಳಿಯುತ್ತಾನೆ. ಆದರೆ ತನ್ನ ದುಂಡಗಿನ ಶರೀರವನ್ನು ಸಾವರಿಸಿಕೊಂಡು ಐದು ನಿಮಿಷಗಳಲ್ಲಿ ನಾಲ್ಕು ಮಾಳಿಗೆ ಹತ್ತುವುದು ಜೀವಕ್ಕೆ ಬರುತ್ತದೆ. ಅದೇನಿದ್ದರೂ ಇಂದು ಸೋಮವಾರ. ಅಲ್ಲದೆ, ಹಾಜರಿಯಲ್ಲಿ ಈಗಾಗಲೇ ಎರಡು ರೆಡ್ ಮಾರ್ಕ್ ಬಿದ್ದಿದೆ ಎನ್ನುವುದು ನೆನಪಿಗೆ ಬಂದೊಡನೆ ಶೃಂಗಾರಪುರೆ ತನ್ನ ನಡಿಗೆಯ ವೇಗವನ್ನು ಓಟಕ್ಕೆ ದಾಟಿಸಿದ. +ಇನ್ನೇನು ಈಶ್ವರ ಅಯ್ಯರ್ ಹಾಜರಿ ಪುಸ್ತಕವನ್ನು ಮುಚ್ಚಿ ಮೆನೇಜರ್ ಕ್ಯಾಬಿನ್‌ಗೆ ಒಯ್ಯಬೇಕೆಂದು ಸನ್ನಾಹ ನಡೆಸಿರುವಾಗಲೇ ಏದುಸಿರು ಬಿಡುತ್ತಾ ಬಂದ ಶೃಂಗಾರಪುರೆ ಆತನ ಕೈಯಿಂದ ಪುಸ್ತಕವನ್ನು ಕಸಿದು ಸಹಿಮಾಡಿ ಗೆದ್ದೆ ಎನ್ನುವಂತೆ ನಕ್ಕ. ಶೃಂಗಾರಪುರೆಗೆ ಇಂದು ರೆಡ್‌ಮಾರ್ಕ್ ಬಿದ್ದೇ ಸಿದ್ದ ಎನ್ನುವ ಖುಶಿಯಲ್ಲಿ ಮೈ ಮರೆತವನಂತೆ ಇದ್ದ ಅಯ್ಯರ್ ಕ್ಷಣಕಾಲ ಬೆಪ್ಪಾಗಿ ಕುಳಿತ. ಪೆಕರನಂತೆ ಇನ್ನೂ ಹಲ್ಲು ಕಿರಿಯುತ್ತಾ ತನ್ನ ಮುಂದೆ ನಿಂತಿದ್ದ ಶೃಂಗಾರಪುರೆಯನ್ನು ನೋಡುತ್ತಾ ಅಯ್ಯರ್‌ನ ಮೈ ಉರಿದುಹೋಯಿತು. ನಾಳೆ ನೋಡೋಣ ಮಗನೆ ಎಂದುಕೊಳ್ಳುತ್ತಾ ತಾನೂ ವ್ಯಂಗ್ಯವಾಗಿ ನಕ್ಕ ಈಶ್ವರ್ ಅಯ್ಯರ್. +ಈ ಬೇಂಚೋಂದ್ ಮದ್ರಾಸಿಯಿಂದಲೆ ಆಫೀಸಿನಲ್ಲಿ ತನಗೆ ಸಮಸ್ಯೆ ಉಂಟಾಗಿದೆ ಎನ್ನುತ್ತಾ ಶೃಂಗಾರಪುರೆ ತನ್ನ ಟೇಬಲ್‌ನತ್ತಾ ನಡೆದ. ಇನ್ನು ಐದು ನಿಮಿಷಗಳ ಬಳಿಕ ಬರುವ ಮೀರ್‌ಚಂದಾನಿ ಚೋಕ್ರಿಗೆ ಈತ ಸಹಿಮಾಡಲು ಬಿಡುವುದಲ್ಲದೆ ಆಕೆ “ಹಾಯ್ ಅಯ್ಯರ್” ಎಂದಾಗ ಧನ್ಯತಾಭಾವವನ್ನು ಪ್ರದರ್ಶಿಸಲಿದ್ದಾನೆ. +ಈ ಆಫೀಸು ಎಂದೇನು ತನ್ನ ಹುಟ್ಟೇ ನಗೆಯ ವಸ್ತುವಾಗಿದೆ ಎನ್ನುವುದು ಸ್ವತಃ ಶೃಂಗಾರಪುರೆಗೆ ಗೊತ್ತು. ಐವತ್ತೈದರ ತನ್ನ ತಂದೆಗೆ ಮರು ಮದುವೆಯ ಹುಚ್ಚು ಯಾಕಾಯಿತೊ. ಅರುವತ್ತರ ಹೊಸ್ತಿಲಲ್ಲಿರುವಾಗ ಮತ್ತೆ ತಂದೆಯಾಗುವ ಪ್ರಯತ್ನ ಮಾಡಬಾರದಿತ್ತು. ತನ್ನ ತಂದೆ ಮರು ಮದುವೆ ಆದದ್ದು ಅದರಲ್ಲೂ ಇಳಿವಯಸ್ಸಿನಲ್ಲಿ ಇನ್ನೊಮ್ದು ಮಗುವಿನ ತಂದೆಯಾದದ್ದನ್ನು ಅಣ್ಣ ಮತ್ತು ಅಕ್ಕ ಒಪ್ಪಿರಲಿಕ್ಕಿಲ್ಲ. ತಂದೆಯನ್ನು ಟೀಕಿಸುವಂತಿಲ್ಲ ತಾನೆ? ಆದರೆ ಸಮಯ ಸಿಕ್ಕಿದಾಗಲೆಲ್ಲಾ ತನ್ನನ್ನು ಮುದಿಪ್ರಾಯದಲ್ಲಿ ಹುಟ್ಟಿದ ಮಗ ಎಂದು ಹೀನೈಸಲು ಅವರು ಈಗಲೂ ಮರೆಯುವುದಿಲ್ಲ. ಚಾಳಿನ ಹುಡುಗರೂ ಮುದುಕನ ಮಗ ಎಂದು ಲೇವಡಿ ಮಾಡುವುದನ್ನು ಕೇಳುತ್ತಲೇ ಶೃಂಗಾರಪುರೆ ತನ್ನ ಬಾಲ್ಯವನ್ನು ಕಳೆದಿದ್ದ. +ನೆರೆಮನೆ ಆನಂದಿಬಾಯಿ ಹೇಳುತ್ತಾಳೆ: ತನ್ನ ಮಂದ ಬುದ್ಧಿಗೆ, ತಂದೆಗೆ ಇಳಿವಯಸ್ಸಿನಲ್ಲಿ ತಾನು ಹುಟ್ಟಿರುವುದು ಕಾರಣವಂತೆ. ಇಲ್ಲವಾದರೆ ಕುಟುಬದಲ್ಲಿ ಎಲ್ಲರೂ ಬುದ್ಧಿವಂತರಾಗಿ ಉನ್ನತ ಸ್ಥಾನದಲ್ಲಿರುವಾಗ ತಾನು ಮಾತ್ರ ಹೀಗಾಗಲು ಕಾರಣ? ತಂದೆ ಮಿಂಟ್‌ನಲ್ಲಿ ಸುಪರಿಟೆಂಡೆಂಟ್ ಆಗಿ ಇದ್ದವರು. ಅಣ್ಣ ಇನ್‌ಕಮ್ ತ್ಯಾಕ್ಸ್ ಆಫೀಸರ್. ಅಕ್ಕ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮೆನೇಜರ್. ಭಾವ ಮಲ್ಟಿನೇಶನಲ್ ಸಂಸ್ಥೆಯಲ್ಲಿ ವರ್ಕ್ಸ್ ಮೆನೇಜರ್. ಆದರೆ ತಾನು ಮಾತ್ರ ಈ ಸಣ್ಣ ಕಂಪನಿಯಲ್ಲಿ ಫೈಲಿಂಗ್ ಕ್ಲರ್ಕ್. +ತನ್ನ ಟೇಬಲ್ ಮೇಲೆ ರಾಶಿ ಬಿದ್ದ ಫೈಲುಗಳನ್ನು ನೋಡಿ ಶೃಂಗಾರಪುರೆಗೆ ಎಲ್ಲಿಲ್ಲದ ಕೋಪ ಬಂದಿತು. ಆದರೆ ಸಾವರಿಸಿಕೊಂಡು ತಲೆಯ ಮೇಲೆ ಕೈಹೊತ್ತುಕೊಂಡು ಒಂದು ಕ್ಷಣ ಆತ ಕುಳಿತ. ಶನಿವಾರ ಸೆಲ್ಸ್ ರಿವ್ಯೂ ಮೀಟಿಂಗ್‌ಗಾಗಿ ಹೊರತೆಗೆದ ಫಲುಗಳನ್ನು ಪ್ಯೂನ್‌ಗಳು ತಂದು ಆತನ ಟೆಬಲ್ ಮೇಲೆ ಗುಡ್ಡೆ ಹಾಕಿದ್ದರು. ಕ್ಯಾಬಿನ್‌ಗೆ ಹೋದ ಫೈಲುಗಳನ್ನು ಪ್ಯೂನ್‌ಗಳೆ ಮತ್ತೆ ರ್‍ಯಾಕ್‌ನಲ್ಲಿ ಇರಿಸಬೇಕೆಂದು ಶೃಂಗಾರಪುರೆ ವಿಫಲ ಹೋರಾಟ ನಡೆಸಿದ್ದ. ಮಾರ್ಕೆಟಿಂಗ್ ಡೈರೆಕ್ಟರರವರೆಗೆ ದೂರು ಹೋಯಿತು. ಆ ಒಂದು ಸಂದರ್ಭದಲ್ಲಿ ಅವರು ಶೃಂಗಾರಪುರೆಯನ್ನು ಬೆಂಬಲಿಸಿದ್ದರು. +ಆದರೆ ರ್‍ಯಾಕ್‌ನಲ್ಲಿ ಎಲ್ಲೆಂದರಲ್ಲಿ ಫೈಲುಗಳನ್ನು ಪ್ಯೂನ್‌ಗಳು ಇರಿಸಿ ಶೃಂಗಾರಪುರೆ ಒದ್ದಾಡುವಂತೆ ಮಾಡಿದಾಗ ಆತ ಹತಾಶನಾದ. ಸಮಯಕ್ಕೆ ಸರಿಯಾಗಿ ಫೈಲುಗಳು ಸಿಗದಾಗ ಕುಪಿತರಾದ ಸೇಲ್ಸ್ ಮೆನೇಜರರಿಗೆ ಶೃಂಗಾರಪುರೆ ವಸ್ತುಸ್ಥಿತಿ ತಿಳಿಸುವ ಪ್ರಯತ್ನ ನಡೆಸಿದಾಗ, ಇನ್ನು ಮುಂದೆ ರ್‍ಯಾಕ್‌ನಲ್ಲಿ ಇರಿಸಿದ ಫೈಲುಗಳನ್ನು ಫೈಲಿಂಗ್ ಕ್ಲರ್ಕ್ ಹೊರತಾಗಿ ಯಾರೂ ಮುಟ್ಟುವಂತಿಲ್ಲ ಎಂದು ವಿಚಿತ್ರ ಆರ್ಡರ್ ಮಾಡಿ ಬಿಟ್ಟರು. ಮೋರೆ, ಕದಂ, ಬಬನ್, ಎಲ್ಲಾ ಮುಸಿ ಮುಸಿ ನಕ್ಕಾಗ ಆತ ಅಸಹಾಯಕನಾಗಿ ನಿಂತು ಬಿಟ್ಟಿದ್ದ.ರ್‍ಯಾಕ್‌ನಿಂದ ಫೈಲ್ ತೆಗೆಯುವಂತಿಲ್ಲ, ಇರಿಸುವಂತಿಲ್ಲ ಎಂದು ಹೇಳಿದುದರ ಅರ್ಥ ಟೇಬಲ್‌ನ ಮೇಲೆ ಫೈಲ್‌ನ ಗುಡ್ಡೆ ಏರಿಸಬೇಕೆಂದಲ್ಲ. ಮೇನೇಜರರನ್ನ ಕರೆತಂದು ಇದನ್ನು ತೋರಿಸಬೇಕೆಂದು ಶೃಂಗಾರಪುರೆ ಒಂದು ಕ್ಷಣ ಯೋಚಿಸಿದರೂ ಮತ್ತೆ ಇವತ್ತು ಸೋಮವಾರ ಎಂದು ನೆನಪಾಗಿ ಸುಮ್ಮನೆ ಕುಳಿತ. +ತಾನು ಕಂಪ್ಲೇಂಟು ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ಶೃಂಗಾರಪುರೆಗೆ ತಿಳಿದಿದೆ. ಬಹುಶಃ ಅಯ್ಯರ್‌ನ ಬೆಂಬಲದಿಂದಲೇ ಈ ಕೆಲಸವನ್ನು ಇವರು ಮಾಡಿರಬೇಕು. ಇಷ್ಟು ಧೈರ್ಯದಿಂದ ಈ ದುಷ್ಟ ಚತುಷ್ಟಯರು ಈ ಕೆಲಸ ಮಾಡಿದ್ದಾರೆಂದರೆ ಮೊನ್ನೆ ಮೀಟಿಂಗ್‌ನಲ್ಲಿ ತನ್ನ ತಪ್ಪು ಏನಾದರೂ ಗೋಚರಿಸಿ ಮೆನೇಜರರು ಕುಪಿತರಾಗಿರಬೇಕು. ಮೈಕೋಗೆ ಸಂಬಂಧಿಸಿದ ಪೇಪರ್ ಇಂಜಿನ್‌ವಾಲ್ಸ್‌ನಲ್ಲೂ, ಎಚ್.ಎ.ಎಲ್. ಪೇಪರ್ ಆರ್ಡಿನನ್ಸ್ ಫ್ಯಾಕ್ಟರಿಯ ಫೈಲ್‌ನಲ್ಲಿ ಸೇರಿಕೊಂಡಿರಬಹುದೇ ಎಂದು ಶೃಂಗಾರಪುರೆ ಗಾಬರಿಗೊಂಡ. ಎಷ್ಟು ಜಾಗರೂಕತೆ ವಹಿಸಿದರೂ ಇತ್ತೀಚೆಗೆ ಇಂತಹ ತಪ್ಪುಗಳು ಪದೇ ಪದೇ ಆಗುತ್ತಿವೆ. ತಾನು ವೃಥಾ ಬೈಸಿಕೊಳ್ಳುತ್ತಿದ್ದೇನೆ ಎಂದು ಆತ ದುಃಖಿಸಿದ. ತನ್ನ ತಪ್ಪುಗಳನ್ನು ಎತ್ತಿತೋರಿಸಿ ಅಯ್ಯರ್ ಸಿದ್ದಪಡಿಸಿ ಸೇಲ್ಸ್ ಮೆನೇಜರ್ ಸಹಿಮಾಡಿದ ಹಳದಿ ಬಣ್ಣದ ಮೆಮೋಗಳಿದ್ದೇ ಒಂದು ದಪ್ಪ ಫೈಲನ್ನು ಶೃಂಗಾರಪುರೆ ತನ್ನ ಟೇಬಲ್‌ನ ಎರಡನೆಯ ಡ್ರಾಯರ್‌ನಲ್ಲಿ ಇರಿಸಿದ್ದಾನೆ. ಶೃಂಗಾರಪುರೆ ತುರತುರನೆ ಮೆನೇಜರರ ಬಳಿ ಹೋಗುತ್ತಾನೆ. ಅಲ್ಲಿ ಆತನಿಗೆ ಬೈಗುಳ ಪ್ರಹಾರ ಆರಂಭವಾಗುತ್ತದೆ ಎಂದು ಕಾದು ನಿಂತಿದ್ದ ಚತುಷ್ಟಯರು ಆತನ ಮೌನ ಕಂಡು ನಿರಾಶರಾದರು. +ಈ ಬೇಂಚೋದ್‌ಗಳಿಗೆ ನಿರಾಸೆಯನ್ನುಂಟುಮಾಡಿದೆನಲ್ಲ ಎಂದು ಶೃಂಗಾರಪುರೆ ಒಂದು ಕ್ಷಣ ಸಂತೋಷಪಟ್ಟು, ಸದ್ದಿಲ್ಲದೆ ಎಲ್ಲಾ ಫೈಲುಗಳನ್ನು ಟೇಬಲ್ಲಿನ ಎಡಬದಿಯಲ್ಲಿ ಒಂದರ ಮೇಲೆ ಒಂದಾಗಿ ಇರಿಸಿ ತನ್ನ ಚೀಲವನ್ನು ಹೊರತೆಗೆದು ಎಂದಿನಂತೆ ಟವಲ್ ತೆಗೆದು ಮುಖ ಒರೆಸಿದ. ಚೀಲದಲ್ಲಿರಿಸಿದ ಪ್ಲಾಸ್ಟಿಕ್ ಬಾಕ್ಸ್‌ನಿಂದ ಖಂಡೋಬಾನ ಚಿಕ್ಕ ಪಟವನ್ನು ತೆಗೆದು ಭಯಭಕ್ತಿಯೊಂದಿಗೆ ಟೇಬಲಿನ ಬಲಬದಿಯಲ್ಲಿ ಇರಿಸಿದ. ಹೂವುಗಳನ್ನು ತೆಗೆದು ಪಟದ ಮೇಲ್ಭಾಗದಲ್ಲಿ ಸಿಕ್ಕಿಸಿದ. ಊದುಬತ್ತಿಯನ್ನು ಹೊತ್ತಿಸಿ ಆರತಿಯೆತ್ತುವ ಪಟದ ಮುಂದೆ ಹಿಡಿದ. ಮತ್ತೆ ಕೈಮುಗಿದ. ‘ದೇವಾ ರಕ್ಷಿಸು’ ಎಂದು ಪ್ರಾರ್ಥಿಸಿದ. +ಇಂದು ದೈನಂದಿನ ವಿನೋದವೆಂಬಂತೆ ಶೃಂಗಾರಪುರೆಯ ಸಹೋದ್ಯೋಗಿಗಳೆಲ್ಲರೂ ಓರೆನೋಟದಿಂದ ಆತನನ್ನೇ ವಿಕ್ಷಿಸುತ್ತಿದ್ದರು. ಆರಂಭದಲ್ಲಿ ಶೃಂಗಾರಪುರೆ ಅರ್ಧ ತಾಸಿನಷ್ಟಾದರೂ ಸ್ತೋತ್ರವನ್ನು ಪಠಿಸುವುದು ಇತ್ತು. ಶೃಂಗಾರಪುರೆ ಆಫೀಸಿನಲ್ಲಿ ಕುಳಿತು ಪೂಜೆ ನಡೆಸಿದ್ದಾನೆ ಎಂದು ಸೇಲ್ಸ್ ಮೆನೇಜರರಿಗೆ ದೂರು ಹೋದಾಗ ಅವರು ಇದನ್ನು ನಿಲ್ಲಿಸಬೇಕೆಂದು ಆಜ್ಞೆಯಿತ್ತರು. ಆದರೆ ಶೃಂಗಾರಪುರೆ ಮಾರ್ಕೆಟಿಂಗ್ ಡೈರೆಕ್ಟರರಲ್ಲಿ ವಿನಂತಿಸಿದ. ಸ್ವತಃ ಧರ್ಮಬೀರುವಾಗಿದ್ದ ಅವರು ಟೇಬಲಲ್ಲಿ ಖಂಡೋಬಾನ ಪಟ ಇರಿಸುವುದಕ್ಕೆ ಅಡ್ಡಿಯಿಲ್ಲ, ಆದರೆ ಸ್ತೋತ್ರಪಠನವೆಂದು ಸಮಯ ವ್ಯಯಿಸುವಂತಿಲ್ಲವೆಂದರು. +ಈ ಘಟನೆಯಿಂದಾಗಿ ಸೇಲ್ಸ್ ಮೆನೇಜರರ ಜತೆ ಶೃಂಗಾರಪುರೆಯ ಸಂಬಂಧ ಇನ್ನಷ್ಟು ಕೆಟ್ಟರೂ ಮಾರ್ಕೆಟಿಂಗ್ ಡೈರೆಕ್ಟರರು ಆತನನ್ನು ನಿಕಟವಾಗಿ ಅರಿಯಲು ಸಾಧ್ಯವಾಯಿತು. ಅವರು ದೇಶಾಧ್ಯಂತ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದವರು. ಆದರೆ ಖಂಡೋಬಾ ದೇವನ ಬಗ್ಗೆ ತಿಳಿದಿರಲಿಲ್ಲ. ಶೃಂಗಾರಪುರೆ ಜೆಜುರುಯ ಗುಡ್ಡದ ಮೇಲಿರುವ ಖಂಡೋಬಾನ ದೇಗುಲದ ಬಗ್ಗೆ ತಿಳಿಸಿ ಅದು ಅತ್ಯಂತ ಜಾಗೃತ ಸ್ಥಳ ಎಂದು ವರ್ಣಿಸಿದ. ತಮ್ಮ ಕುಟುಂಬದ ಆರಾಧ್ಯ ದೈವ ಖಂಡೋಬಾ ಶಿವನ ಅವತಾರವೆನ್ನುವುದನ್ನು ತಿಳಿಸಿದ. ಪ್ರಾಸಂಗಿಕವಾಗಿ ಅವರು ಶೃಂಗಾರಪುರೆಯ ಮನೆಯ ಪರಿಸ್ಥಿತಿಯನ್ನು ವಿಚಾರಿಸಿ ತಿಳಿದುಕೊಂಡರು. ಆತನ ತಂದೆ, ಅಣ್ಣ, ಅಕ್ಕ, ಭಾವನ ವಿಷಯ ತಿಳಿದು ಆತನ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿತು. ಈಗಿನ ಆತನ ಪರಿಸ್ಥಿತಿಗೆ ಸಹಾನುಭೂತಿಯೂ, ಮಾರ್ಕೆಟಿಂಗ್ ಡೈರೆಕ್ಟರರು ಶೃಂಗಾರಪುರೆಯ ಬಗ್ಗೆ ತೋರಿದ ವಿಶೇಷ ಆಸಕ್ತಿಯಿಂದಾಗಿ ದಸರಾ ಸಂದರ್ಭದಲ್ಲಿ ಆಫೀಸಿನಲ್ಲಿ ಪೂಜೆ ಮಾಡಿ ಪ್ರಸಾದ ಹಂಚುವ ಕೆಲಸ ಮೋರೆಯಿಂದ ಶೃಂಗಾರಪುರೆಗೆ ಬಂತು. ಪೂಜೆಯ ಹೆಸರಿನಲ್ಲಿ ಪುಡಿಗಾಸು ಸಂಪಾದಿಸುತ್ತಿದ್ದ ಮೋರೆ ಈ ಕಾರಣದಿಂದಲೆ ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ ಎನ್ನುವುದು ಶೃಂಗಾರಪುರೆಯ ಗುಮಾನಿ. ನಿವೃತ್ತರಾಗಿ ಬಹಳ ವರ್ಷಗಳಾದರೂ ನಿರ್ದೇಶಕ ಮಂಡಳಿಯ ವಿನಂತಿಯಂತೆ ಇನ್ನೂ ಕಾರ್ಯನಿರ್ವಹಿಸುತ್ತಿರುವ ಮುದುಕ ಮಾರ್ಕೆಟಿಂಗ್ ಡೈರೆಕ್ಟರರು ಮುಂದಿನ ವರ್ಷ ಅಮೆರಿಕಾದಲ್ಲಿ ನೆಲೆಸಿರುವ ಮಗನ ಬಳಿಗೆ ಹೋಗುತ್ತಾರೆ. ಆ ಬಳಿಕ ತನ್ನನ್ನು ಯಾರು ರಕ್ಷಿಸುತ್ತಾರೆ ಎನ್ನುವ ಭಯ ಶೃಂಗಾರಪುರೆಯದ್ದು. ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇವೆ ಎನ್ನುವ ಸೂಚನೆಯನ್ನು ದುಷ್ಟ ಚತುಷ್ಟಯರು ಆಗಾಗ್ಗೆ ನೀಡುತ್ತಿದ್ದಾರೆ. +ಮದ್ರಾಸಿಗಳೇ ಹೆಚ್ಚಾಗಿರುವ ಈ ಆಫೀಸಿನಲ್ಲಿ ತನಗೆ ಕಿರುಕುಳ ನೀಡುವುದು ವಿಶೇಷವಲ್ಲ. ಆದರೆ ಮಹಾರಾಷ್ಟ್ರೀಯನ್ನರೇ ಆಗಿರುವ ಸೇಲ್ಸ್ ಮೆನೇಜರ್ ಮತ್ತು ಈ ಮೂವರು ಪೂನ್‌ಗಳು ಸತಾಯಿಸುತ್ತಾರಲ್ಲಾ ಎಂದು ಶೃಂಗಾರಪುರೆಗೆ ದುಃಖ. ಶಿವಸೇನೆಯ ಸಕ್ರಿಯ ಸದಸ್ಯನಾಗಿ “ಅಮ್ಚೀ ಮುಂಬಯಿ, ಅಮ್ಚೀ ಮಾಣುಸ್” ಎಂದೆನ್ನುವ ಈ ಮೋರೆಯಿಂದಾಗಿಯೇ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಶೃಂಗಾರಪುರೆಯನ್ನು ದ್ವೇಷಿಸಲು ಕಾರಣ. +ಶೃಂಗಾರಪುರೆ ಆಫೀಸಿಗೆ ಬಂದ ಮೊದಲಲ್ಲಿ ಅಯ್ಯರ್ ಆತನಿಂದ ತಿಪ್ಪರಲಾಗ ಹಾಕಿಸುವುದನ್ನು ಕಂಡು ಮೋರೆಯ ಭಾಷಾಭಿಮಾನ ಜಾಗ್ರತಗೊಂಡಿತು. ಮರಾಠಿ ಮಾಣುಸ್‌ನನ್ನು ಈ ಮದ್ರಾಸಿ ಸತಾಯಿಸುವುದನ್ನು ನಿಲ್ಲಿಸುತ್ತೇನೆ, ನೋಡು ಅವನಿಗೆ ಹೇಗೆ ಪಾಠ ಕಲಿಸುತ್ತೇನೆ ಎಂದು ಮೋರೆ ಶೃಂಗಾರಪುರೆಯ ಎದುರು ಕೊಚ್ಚಿಕೊಂಡ. ಹಾಗೆ ಹೇಳಿದ ಮರುದಿನ ಮಧ್ಯಾಹ್ನ ಅಯ್ಯರ್‌ಗೆ ಅಜ್ಞಾತ ವ್ಯಕ್ತಿಯೊಬ್ಬನಿಂದ ಫೋನು ಬಂತು ನಾನು ಸೇನಾಭವನದಿಂದ ಮಾತನಾಡುತ್ತಿದ್ದೇನೆ. ಇನ್ನು ಮುಂದೆ ಆಫೀಸಿನಲ್ಲಿ ಮರಾಠಿ ಜನರನ್ನು ಸತಾಯಿಸಿದರೆ ನಿನ್ನ ಕಾಲು ಮುರಿದು ಕೈಯಲ್ಲಿ ಕೊಡುತ್ತೇನೆ ಹೀಗೆ ಫೋನಿನಲ್ಲಿ ಬೆದರಿಕೆಯನ್ನು ಕೇಳುತ್ತಿರುವಂತೆಯೆ ಅಯ್ಯರ್‌ನ ಮುಖ ಬಿಳಿಚಿ ಹೋಯಿತು. ಆತ “ನಹೀ ಸಾಬ್ ನಹೀ ಸಾಬ್” ಎನ್ನುತ್ತಾ ಫೋನು ಕೆಳಗಿಟ್ಟ. ಮತ್ತೆ ನೀರು ತರಿಸಿ ಕುಡಿದ. ತಮಾಷೆ ನೋಡುತ್ತಿದ್ದ ಮೋರೆ ಶೃಂಗಾರಪುರೆಯತ್ತ ನೋಡಿ ಕನ್ಣು ಮಿಟುಕಿಸಿದ. ಸುದ್ದಿ ಸೇಲ್ಸ್ ಮೆನೇಜರರಿಗೂ ಮುಟ್ಟಿತು. ಅವರು ಅಯ್ಯರ್‌ನನ್ನು ಕರೆಸಿ ಸಮಾಧಾನ ಪಡಿಸಿದರು. ಸಹಾಯಕ ಗೃಹಸಚಿವರು ತನ್ನ ಭಾವ ನೆಂಟನ ಸಂಬಂಧಿ. ನೀನೇನೂ ಭಯಪಡಬೇಡ. ಇನ್ನು ಮುಂದೆ ಫೋನು ಬಂದರೆ ನನ್ನನ್ನು ಕರೆ ಎಂದರು. +ಇದಕ್ಕೆಲ್ಲಾ ಮೋರೆ ಕಾರಣವೆನ್ನುವುದು ಸೇಲ್ಸ್ ಮ್ಯಾನೇಜರರಿಗೆ ಹೊಳೆಯಿತು. ಗೃಗ ಸಚಿವರ ಹೆಸರು ಕೇಳಿದೊಡನೆ ತಣ್ಣಗಾದ ಮೋರೆ ಈ ಕೆಲಸ ತಾನು ಮಾಡಿದುದಲ್ಲ. ಬಹುಶಃ ಶೃಂಗಾರಪುರೆ ಶಿವಸೇನಾ ಕಾರ್ಯಾಲಯದಲ್ಲಿ ದೂರು ಕೊಟ್ಟಿರಬೇಕೆಂದು ಜಾರಿಕೊಂಡ. ಶೃಂಗಾರಪುರೆಗೆ ವೃಥಾ ಬೈಗುಳ ಸಿಕ್ಕಿತು. ಇನ್ನು ಮುಂದೆ ಕೆಲಸದಲ್ಲಿ ಹೆಚ್ಚು ಗಮನ ಕೊಡದೆ ಇಂತಹ ಕಿತಾಪತಿಗೆ ಹೊರಟರೆ ನೌಕರಿ ಹೋದೀತೆಂದು ವಾರ್ನಿಂಗ್ ಕೂಡಾ ದೊರೆಯಿತು. ತನ್ನ ಮಾತುಗಳನ್ನು ಕೇಳುವ ಮೂಡ್‌ನಲ್ಲಿ ಸೇಲ್ಸ್ ಮೆನೇಜರರು ಇಲ್ಲವೆಂದು ಅರಿತ ಶೃಂಗಾರಪುರೆ ಸುಮ್ಮನೆ ನಿಂತು ಬೈಗುಳನ್ನು ಕೇಳಿಸಿಕೊಂಡ. +ನಿಜ ಹೇಳಬೇಕೆಂದರೆ ಫೋನು ಮಾಡಿದಾತ ಶಿವಸೇನೆಯ ಪದಾಧಿಕಾರಿಯೇನಲ್ಲ. ಬದಲಾಗಿ ಮೋರೆಯ ಆದೇಶದಂತೆ ಆತನ ಗೆಳೆಯನೊಬ್ಬನೇ ಈ ರೀತಿ ನಾಟಕವಾಡಿದ್ದ. ಶೃಂಗಾರಪುರೆಯ ಮೇಲಿನ ಸಹಾನುಭೂತಿಯಿಂದೇನು ಆತ ಹೀಗೆ ಮಾಡಿರಲಿಲ್ಲ. ಬದಲಾಗಿ ತನ್ನ ವೋಚರ್‌ಗಳನ್ನು ಪಾಸು ಮಾಡಲು ಅಯ್ಯರ್ ಹಿಮ್ದೆ ಮುಂದೆ ನೋಡುತ್ತಿದ್ದಾನೆಂದು ಆತ ಈ ರೀತಿ ಪ್ರತೀಕಾರ ತೀರಿಸಿದ್ದ. ಈ ಘಟನೆಯ ಬಳಿಕ ಮೋರೆಯ ವೋಚರ್‌ಗಳು ಬೇಗನೆ ಪಾಸು ಆಗಲಾರಂಭಿಸಿದ್ದವು. ಆದರೆ ಶೃಂಗಾರಪುರೆಯ ಮೇಲಿನ ಅಯ್ಯರ್‌ನ ಕಾಕದೃಷ್ಟಿಯಲ್ಲಿ ಏನೂ ಬದಲಾವಣೆ ಆಗಲಿಲ್ಲ. ಈಗ ಮೋರೆಯೂ ಅಮ್ಚಾ ಮಾಣುಸ್‌ನ ಕೈಬಿಟ್ಟು ಅಯ್ಯರ್‌ನ ಜತೆ ಸೇರಿದ. +ಆಫೀಸಿನ ಹೆಚ್ಚಿನ ಮಂದಿ ಶೃಂಗಾರಪುರೆ ಶಿವಸೇನೆಯ ನೆರವು ಪಡೆಯಲು ಹೋಗಿದ್ದ ಎನ್ನುವುದನ್ನು ನಂಬಿ ಆತನನ್ನು ದೂರವಿರಿಸಿದರು. ಆದರೆ ಕೆಲವರು ಮುಖ್ಯವಾಗಿ ವಯಸ್ಸಾದ ಹೆಂಗಸರಿಗೆ ಆತನ ಬಗ್ಗೆ ಸಹಾನುಭೂತಿ. ತಮ್ಮ ಲಂಚ್‌ಬಾಕ್ಸ್‌ನಿಂದ ಆಗೊಮ್ಮೆ ಈಗೊಮ್ಮೆ ಶಿರಾವನ್ನೊ ಬಾಜಿಯನ್ನೊ ಆತನಿಗೆ ಕೊಡುವುದಿದೆ. ಆದರೆ ಆತ ಆಫೀಸಿಗೆ ತಡವಾಗಿ ಬರುತ್ತಿರುವುದರಿಂದ ಹಾಜರಿ ಪುಸ್ತಕದಲ್ಲಿ ರೆಡ್‌ಮಾರ್ಕ್ ಹಾಕುವ ಕ್ರಮ ಆರಂಭವಾಗಿ ಆಗೊಮ್ಮೆ ಈಗೊಮ್ಮೆ ತಡವಾಗಿ ಬರುತ್ತಿದ್ದ ಅವರೆಲ್ಲರೂ ತಮ್ಮ ಪಾಲಿಗೆ ದಕ್ಕುವ ರೆಡ್‌ಮಾರ್ಕನ್ನು ದುಃಖದಿಂದ ಸ್ವೀಕರಿಸುತ್ತ, ಅದಕ್ಕೆ ಕಾರಣಕರ್ತನಾದ ಶೃಂಗಾರಪುರೆಗೆ ತಿರುಗಿಬಿದ್ದರು. ಈ ಮಂದಿ ಬುದ್ಧಿಯ ಮನುಷ್ಯನಿಂದಾಗಿ ತಮ್ಮ ಕೆಲಸಕ್ಕೂ ಅಡ್ಡಿಯೆಂದು ಅವರೀಗ ಆಡಿಕೊಳ್ಳುತ್ತಿದ್ದಾರೆ. +ಈಗ ಆಫಿಸಿಗೆ ಆಫೀಸೇ ತನಗೆ ವಿರುದ್ಧವಾಗಿರುವುದು ಶೃಂಗಾರಪುರೆಯ ಅವರಿಗೆ ಬಾರದೆ ಇಲ್ಲ. ಆದರೆ ಮೋರೆಯಂತೆ ಜನರನ್ನು ತನ್ನ ಮಾತಿನ ಚಮತ್ಕಾರದಿಮ್ದ ಮರುಳು ಮಾಡುವ ಕಲೆ ಆತನಿಗೆ ಸಿದ್ಧಿಸಿಲ್ಲ. ತಾನು ವಿಳಂಬವಾಗಿ ಬರುತ್ತಿರುವುದಕ್ಕೆ, ಆಗಾಗ್ಗೆ ರಜೆ ತೆಗೆಯುತ್ತಿರುವುದಕ್ಕೆ ತನ್ನ ತಾಯಿಯ ಅನಾರೋಗ್ಯ ಕಾರಣವೆನ್ನುವುದು ಈ ಮಂದಿಗೆ ತಿಳಿದಿಲ್ಲವೆ ಎಂದು ಆತ ಒಳಗೊಳಗೆ ಸಂಕಟಪಡುತ್ತಿದ್ದಾನೆ. +ಮುದುಕನ ಮಗ ಎಂದು ಕರೆಸಿಕೊಳ್ಳುವಾಗ ಅದಕ್ಕೆ ಕಾರಣಕರ್ತನಾದ ತನ್ನ ಬಗ್ಗೆ ಶೃಂಗಾರಪುರೆಗೆ ಕೋಪ ಬರುತ್ತಿತ್ತು. ಆದರೆ ಆಯಿ ಒಂದು ದಿನ ಮಗನನ್ನು ತನ್ನ ಮುಂದೆ ಕೂತುಕೊಳ್ಳಿಸಿ ಎಲ್ಲ ವೃತ್ತಾಂತ ತಿಳಿಸಿದಾಗ ಆತನಿಗೆ ತನ್ನ ತಂದೆಯ ಮೇಲೆ ಎಲ್ಲಿಲ್ಲದ ಗೌರವ ಮೂಡಿತು. ಆಯಿ ಬಾಲ ವಿಧವೆ. ಅನಾಥೆಯಾದ ಆಕೆ ಚಿಕ್ಕಪ್ಪನ ಮನೆಯಲ್ಲಿ ಬೆಳೆದವಳು. ಕಾಕ ಎನೋ ಒಳ್ಳೆಯವರೆ. ಆದರೆ ಕಾಕಿ ಮಹಾದುಷ್ಟೆ. ತನ್ನ ಅಣ್ಣನ ಈ ಏಕಸಂತಾನದ ದುಃಖ ನೋಡಲಾಗದೆ ವಯಸ್ಕನಾದರೂ ಮಹಾದೇವ ಶೃಂಗಾರಪುರೆಯ ಮನೆ ಒಲಿಸಿ ಈ ವಿವಾಹಕ್ಕೆ ಕಾಕ ಒಪ್ಪಿಸಿದರು. ತಂದೆಯ ನಿವೃತ್ತಿಯವರೆಗೆ ಎಲ್ಲ ಸುಸೂತ್ರವಾಗಿ ಸಾಗಿತು. ನಿವೃತ್ತಿಯ ಮುಂದಿನ ವರ್ಷವೇ ಪಾರ್ಶ್ವವಾಯು ಅಘಾತಕ್ಕೆ ಈಡಾದವರು ಹತ್ತು ವರ್ಷಗಳ ಕಾಲ ಶಯ್ಯೆಯಲ್ಲಿಯೇ ಕಳೆದರು. ನಿವೃತ್ತ ಜೀವನಕ್ಕೆಂದು ಕೂಡಿಸಿಟ್ಟಿದ್ದ ಇಡುಗಂಟು ಅವರ ಚಿಕಿತ್ಸೆಗೆ ವ್ಯಯವಾಯಿತು. ತನ್ನ ಹಿಂದಿನ ಪತ್ನಿಯ ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತಲುಪಿಸಿದ್ದೇನೆ. ಇನ್ನುಳಿದದ್ದು ತನ್ನ ಈ ಮಂದ ಬುದ್ಧಿಯ ಮಗನಿಗೆ ಎಂದೆನ್ನುತ್ತಿದ್ದ ತಂದೆ. ಆದರೆ ಸಾಯುವಾಗ ಉಳಿದದ್ದು ದಾದರ್‌ನಲ್ಲಿನ ಈ ಪುಟ್ಟ ಖೋಲಿಮಾತ್ರ. +ಚಿಕ್ಕಂದಿನಲ್ಲಿ ಗುಂಡಗೆ ಮೊದ್ದು ಮೊದ್ದಾಗಿದ್ದ ಸುರೇಶ ನಡೆದದ್ದು. ಮಾತನಾಡಿದ್ದು ಎಲ್ಲಾ ತಡವಾಗಿ. ಒಂದೆಡೆ ಕುಳ್ಳರಿಸಿದರೆ ಉತ್ಸವಮೂರ್ತಿಯಂತೆ ಕೂತೇ ಇರುತ್ತಿದ್ದ. ಆದರೂ ಆತನ ಮುಖದ ತುಂಬ ಹರಡಿರುತ್ತಿದ್ದ ಬಾಲಿಶ ನಗುವಿಗೆ ಮರುಳಾಗದವರಿಲ್ಲ. ಪತಿಯ ಅನಾರೋಗ್ಯ. ಮಗನ ಮಂದಬುದ್ಧಿಯಿಂದ ದೃತಿಗೆಟ್ಟ ತಾಯಿ ಸದಾ ವ್ರತ, ನೇಮ, ನಿಷ್ಠೆಗೆ ತೊಡಗಿದ್ದು ಮಾತ್ರವಲ್ಲ ತನ್ನ ಮಗನನ್ನು ಖಂಡೋಬಾನ ಕೃಪಾಛತ್ರದೊಳಗೆ ಕುಳ್ಳಿರಿಸಿ ಬಿಟ್ಟಳು. ಸುರೇಶ ಮೊದಲ ತರಗತಿಯಲ್ಲಿನ್ನು ಅಕ್ಷರ ತಿದ್ದುತ್ತಿದ್ದರೆ ಆತನ ಸಹಪಾಠಿಗಳು ಎರಡು ತರಗತಿ ಮುಂದೆ ಹಾರಿ ಆಗಿತ್ತು. ಖಂಡೋಬಾನ ದಯಯಿಂದ ಹೈಸ್ಕೂಲು ಮೆಟ್ಟಲು ಹತ್ತುವಂತಾದಾಗ ಸುರೇಶನ ಮುಖದಲ್ಲಿ ಗಡ್ಡ ಮೀಸೆ ಚಿಗುರೊಡೆದಿತ್ತು. +ಅಕ್ಕಪಕ್ಕದವರ ಮನೆಯಲ್ಲಿ ಕೆಲಸ ಮಾಡುತ್ತಾ ಆಯಿ ಶೃಂಗಾರಪುರೆಯನ್ನು ಪಿ.ಯು.ಸಿ.ಯವರೆಗೆ ಓದಿಸಿದರು. ಆದರೆ ಅಲ್ಲಿ ಕೂಡಾ ಎಸ್.ಎಸ್.ಎಲ್.ಸಿ.ಯಂತೆ ಎರದು ವರ್ಷ ಡುಮುಕಿ ಹೊಡೆದಾಗ ಇನ್ನು ಓದು ಸಾಕೆಂದು ತಂದೆಯ ಸ್ನೇಹಿತರ ನೆರವಿನಿಮ್ದ ದೊರಕಿಸಿಕೊಂಡದ್ದು ಈ ಉದ್ಯೋಗ. ಇನ್ನೇನು ಆಯಿ ಸುಖವಾಗಿರುತ್ತಾಳೆ ಎಂದು ನೆಮ್ಮದಿಯಿಂದಿದ್ದಾಗ ತಂದೆಯಂತೆಯೇ ಆಕೆಗೂ ಆಘಾತ. ಈಗ ಹಾಸಿಗೆಯಲ್ಲೇ ಮಲಗಿರುವ ಆಕೆಯನ್ನು ಶುಶ್ರೂಷಿಸುತ್ತಾ ಮನೆ ಕೆಲಸ ಮಾಡಿ ಆಫೀಸು ತಲುಪಲು ಶೃಂಗಾರಪುರೆಗೆ ಸಾಕೋ ಸಾಕು ಎನ್ನುಸುತ್ತದೆ. ಇದು ಆಪೀಸಿನಲ್ಲಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಜೀವನದುದ್ದಕ್ಕೂ ಸಹಾನುಭೂತಿ ತೋರಿಸಲು ಅವರೇನು ತ್ರೇತಾಯುಗದ ಸಂತರು ಅಲ್ಲವಲ್ಲ. +ಮೂವತ್ತು ದಾಟಿದ ಶೃಂಗಾರಪುರೆಗೆ ದೂರದ ಬಂಧುಗಳು, ನೆರೆಹೊರೆಯವರು ಮದುವೆ ಆಗಿ ಸಂಸಾರ ನಡೆಸು, ಆಯಿಯನ್ನು ನೋಡಿಕೊಳ್ಳುವಂತಹ ಹುಡುಗಿ ತೋರಿಸುತ್ತೇವೆ ಎನ್ನುವಾಗಲೆಲ್ಲಾ ಆತನ ಮನಸ್ಸಿನಲ್ಲೂ ಆಸೆ ಹುಟ್ಟುತ್ತದೆ. ಆಯಿ ಕೂಡಾ ಮಲಗಿದಲ್ಲಿಂದಲೇ ಒತ್ತಾಯಿಸುತ್ತಿದ್ದಾಳೆ. ಆದರೆ ತನ್ನ ಉದೋಗವೇ ಸ್ಥಿರವಲ್ಲ ಎಂದು ನಂಬಿರುವ ಆತನಿಗೆ ಈ ಒಂದು ಸಾಹಸಕ್ಕೆ ಹೊರಡಲು ಧೈರ್ಯವಗುವುದಿಲ್ಲ. ಆಫೀಸಿನಲ್ಲಿ ಮೀರ್‌ಚಂದಾನಿ ಚೋಕ್ರಿ. ಬೇರೆ ಟೈಪಿಸ್ಟ್ ಹುಡುಗಿಯರು ಸೊಟ ಕುಲುಕಿಸುತ್ತಾ ಅಯ್ಯರ್‌ನ ಮುಂದೆ ನಿಂತು ಸಲ್ಲಾಪದಲ್ಲಿ ತೊಡಗಿದಾಗ ಶೃಂಗಾರಪುರೆಯ ಮನದಲ್ಲೂ ಮಧುರ ಭಾವನೆಗಳು ಮೂಡುವುದಿದೆ. ಆದರೆ ಆಫೀಸಿನ ಹುಡುಗಿಯರು ಎಂದೇನೂ ನೆರೆಹೊರೆಯ ಹುಡುಗಿಯರಿಗೂ ಶೃಂಗಾರಪುರೆ ಒಂದು ತಮಾಷೆಯ ವಸ್ತುವಾಗಿಬಿಟ್ಟಿದ್ದಾನೆ. ತನ್ನ ವಿವಾಹದ ಬಗ್ಗೆ ಆಪಿಸಿನಲ್ಲಿ ಪ್ರಸ್ತಾವ ಬಂದಾಗ ಈ ಹೆಣ್ಣಿಗನಿಗೆ ಯಾರು ಹೆಣ್ಣು ಕೊಡುತ್ತಾರೆ. ಆತನ ತರಡಿನಲ್ಲಿ ಬೀಜವೇ ಇಲ್ಲ ಎಂದು ಅಯ್ಯರ್ ಅಂದಾಗ ಅಲ್ಲೇ ಪ್ಯಾಂಟು, ಲಂಗೋಟಿ ಬಿಚ್ಚಿ ತನ್ನ ಪುರುಷತ್ವವನ್ನು ಪ್ರದರ್ಶಿಸಬೇಕು ಎಂದು ಶೃಂಗಾರಪುರೆಗೆ ಅನಿಸಿದ್ದರೂ ಎಲ್ಲರೂ ನಗುವಾಗ ಆತ ಅಸಹಾಯಕನಂತೆ ನಿಂತು ಬಿಟ್ಟಿದ್ದ. +ಆಫಿಸಿನಲ್ಲಿ ಕುಳಿತಲ್ಲಿಂದಲೇ ಶೃಂಗಾರಪುರೆಯ ಯೋಚನಾಗತಿ ಹೀಗೆ ಸಾಗಿತ್ತು. ಒಳ್ಳೆಯ ಒಂದು ಕೆಲಸ ದೊರೆತರೆ ನಕ್ಕವರಿಗೆಲ್ಲಾ ತೋರಿಸುತ್ತಿದ್ದೆ. ಕಳೆದ ವಾರ ಅಣ್ಣನ ಮನೆಗೆ ಈ ಉದ್ದೇಶದಿಂದಲೇ ಹೋದದ್ದು. ಆಯಿಯ ಔಷಧಕ್ಕೆ ಸ್ವಲ್ಪ ಹಣ ಬೇಕು ಎಂದಾಗ ತಂದೆಯದ್ದೆಲ್ಲಾ ನಿಮಗೇ ಸಿಕ್ಕಿತಲ್ಲಾ ಎಂದು ಆತ ಒರಟಾಗಿ ಉತ್ತರಿಸಿದ್ದ. ಏನನ್ನೂ ಹೇಳದೇ ಅಲ್ಲಿಂದ ಹಿಂತಿರುಗಿ ಬಂದಿದ್ದ ಶೃಂಗಾರಪುರೆ. ಆದರೆ ಅಕ್ಕ ಮಾತ್ರ ಐನೂರು ರೂಪಾಯಿಗಳನ್ನು ನೀಡಿ ಸಮಸ್ಯೆಯನ್ನೆಲ್ಲಾ ಮೌನವಾಗಿ ಕುಳಿತು ಕೇಳಿದ್ದಳು. ಆಯಿ ಹಾಗಿರುವಾಗ ಹುಚ್ಚನಮ್ತೆ ಇರುವ ಕೆಲಸವನ್ನು ಕಳೆದುಕೊಳ್ಳಬೇಡ ಎಂದಳು. ಭಾವನ ಫ್ಯಾಕ್ಟರಿಯಲ್ಲಿ ಒಂದು ಉದ್ಯೋಗ ಕೊಡಿಸು ಎಂದಾಗ ಅವರು ಅಷ್ಟು ದೊಡ್ಡ ಹುದ್ದೆಯಲ್ಲಿರುವಾಗ ಅವರ ಭಾವನೆಂಟ ಕ್ಲರ್ಕ್‌ನ ಉದ್ಯೋಗ ಮಾಡುವುದೆ ಎಂದು ಆತನ ವಿನಂತಿಯನ್ನು ಆಕೆ ತಳ್ಳಿಬಿಟ್ಟಳು. +ಅಲ್ಲಿಯೆ ಉದ್ಯೋಗ ದೊರೆತರೆ ತನ್ನಂತಹ ಸಾಧು ಪ್ರಾಣಿ ಯಾವ ಭಯ ಇಲ್ಲದೆ ಜೀವಿಸುವುದು ಸಾಧ್ಯವಿತ್ತಲ್ಲ ಎನ್ನುವುದು ಶೃಂಗಾರಪುರೆಯ ಆಸೆ. ವರ್ಕ್ಸ್ ಮೆನೇಜರರ ಭಾವನೆಂಟನನ್ನು ಗೇಲಿ ಮಾಡುವ ಧೈರ್ಯವನ್ನು ಯಾರಾದರೂ ತೋರಿಸಿಯಾರೆ? ಈ ಅಯ್ಯರ್ ಬೇಂಚೋಂದ್‌ನಂತೆ ತಾನೂ ಕಾರುಬಾರು ಮಾಡಬಹುದಿತ್ತು. ಆದರೆ ಅಕ್ಕ, ಭಾವನ ಅಂತಸ್ತಿನ ಪ್ರಶ್ನೆಯೊಂದು ಅಡ್ಡಿಯಾಗಿ ಉಳಿದುಬಿಟ್ಟಿದೆಯಲ್ಲ. +ಮಧ್ಯಾಹ್ನ ಊಟದ ಬಿಡುವಿನವರೆಗೆ ಸೇಲ್ಸ್ ಮೆನೇಜರರಿಂದ ಕರೆ ಬಂದಾಗ ತಾನು ಬಚಾವಾದೆ ಎಂದು ಶೃಂಗಾರಪುರೆ ಸಮಾಧಾನದ ನಿಟ್ಟುಸಿರು ಬಿಟ್ಟ. ಎಂದಿನ ಒಣ ರೊಟ್ಟಿ ಬಟಾಟೆ ಬಾಜಿ ಇಂದು ರುಚಿಯಾಗಿ ತೋರಿತು. ಊಟ ಮುಗಿದ ಬಳಿಕ ಸಮಯ ಹಾಳು ಮಾಡದೆ ಬಾಕಿ ಉಳಿದ ಪೇಪರುಗಳನ್ನು ಒಂದೊಂದಾಗಿ ಆತ ಫೈಲ್ ಮಾಡಿದ. ಯಾವುದೇ ತಪ್ಪು ಆಗದಂತೆ ಎಚ್ಚರ ವಹಿಸಿದ. ಇನ್ನು ಎರಡು ತಾಸು ಕಳೆದರೆ ಸೋಮವಾರ ಮುಗಿಯುತ್ತದೆ. ಇಡೀ ವಾರ ಸುಸೂತ್ರವಾಗಿ ಕಳೆಯುತ್ತದೆ ಎಂದು ಆತ ಉಲ್ಲಾಸದಲ್ಲಿ ಹಳೆಯ ಸಿನಿಮಾ ಹಾಡೊಂದನ್ನು ಗುನುಗುನಿಸುತ್ತಾ ಕೆಲಸದಲ್ಲಿ ವ್ಯಸ್ತನಾಗಿದ್ದಾಗ ಮೂರು ಗಂಟೆಗೆ ಸರಿಯಾಗಿ ಮೇನೇಜರರಿಂದ ಕರೆ ಬಂದಿತು. ಬಬನ್ ಬಂದು ಹೇಳಿದಾಗಲೇ ಆತನ ಮುಖ ಕಪ್ಪಿಟ್ಟಿತು. ಬಬನ್‌ಗೆ ಏನನಿಸಿತೋ “ಫೈಲುಗಳಲ್ಲಿನ ತಪ್ಪುಗಳ ಒಂದು ಪಟ್ಟಿಯನ್ನು ಮೆನೇಜರ್ ತಮ್ಮ್ಮ ಮುಂದಿರಿಸಿದ್ದಾರೆ. ಜಾಗರೂಕತೆಯಿಂದ ಉತ್ತರ ನೀಡು” ಎಂದು ಆತ ಎಚ್ಚರಿಸಿದ. ಎಂದೂ ತನಗೆ ಸಹಾನುಭೂತಿ ತೋರದ ಈ ಹುಡುಗ ಇವತ್ತು ಹೀಗಂದದ್ದು ಶೃಂಗಾರಪುರೆಗೆ ಇನ್ನಷ್ಟು ಗಾಬರಿಯನ್ನು ಹುಟ್ಟಿಸಿತು. ಭಾರವಾದ ಹೃದಯದೊಂದಿಗೆ ನಿಧಾನ ನಡಿಗೆಯಲ್ಲಿ ಆತ ಮೆನೇಜರರ ಕೊಠಡಿ ಪ್ರವೇಶಿಸಿದ. ಅಲ್ಲಿ ಅಯ್ಯರ್, ಮಿಸ್ ಮೀರ್‌ಚಂದಾನಿ ಇಬ್ಬರನ್ನೂ ನೋಡಿದಾಗ ಆತನ ಎದೆ ದಸಕ್ಕೆಂದಿತು. ಇವತ್ತು ದೊಡ್ಡ ವಾರ್ನಿಂಗ್ ಮೆಮೊ ನೀಡಲಾಗುತ್ತದೆ. ಅಲ್ಲಾ ಕೆಲಸದಿಂದ ತೆಗೆಯಲು ಜಾರ್ಜ್‌ಶೀಟೆ? +ಗಂಟಲನ್ನು ಸರಿಪಡಿಸುತ್ತಾ ಶಾಂತ ಧ್ವನಿಯಲ್ಲಿಯೆ ಮೆನೇಜರರು “ನೋಡು, ಶೃಂಗಾರಪುರೆ, ನಿನ್ನಿಂದಾಗಿ ನಮಗೆಲ್ಲಾ ತೊಂದರೆಯಾಗುತ್ತಿದೆ. ಮೊನ್ನೆಯ ಮೀಟಿಂಗ್‌ನಲ್ಲಿ ಜಿ.ಎಂ. ಎದುರು ನಮಗೆ ಮುಖಭಂಗ ಆಯಿತು. ಪ್ರತಿಯೊಮ್ದು ಫೈಲ್‌ನಲ್ಲಿ ತಪ್ಪು ಪತ್ರಗಳು ಇವೆ. ನೀನು ಬೇರೆ ಕಡೆ ಕೆಲಸ ಸಿಗುತ್ತದೇ ಎಂದು ಪ್ರಯತ್ನಿಸು. ನಿನ್ನ ಮನೆಯ ಪರಿಸ್ಥಿತಿ ತಿಳಿದುದರಿಂದ ಈ ಬಾರಿಯೂ ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಹೀಗಾದರೆ ಕೆಲಸ ಖಂಡಿತಾ ಹೋಗುತ್ತದೆ. ಇವತ್ತು ಮನೆಗೆ ಹೋಗುವ ಮುನ್ನ ಇದನ್ನೆಲ್ಲಾ ಸರಿಪಡಿಸು” ಎಂದು ಉದ್ದದ ಪಟ್ಟಿಯೊಂದನ್ನು ನೀಡಿದರು. +ಕೋಪ ಬಂದಾಗಲೆಲ್ಲಾ ಇಂಗ್ಲಿಷಿನಲ್ಲಿ ಬೈಗಳನ್ನು ಆರಂಭಿಸುತ್ತಿದ್ದ ಮೆನೇಜರರು ಇಂದು ಮರಾಠಿಯಲ್ಲಿ ಶಾಂತವಾಗಿ ಮಾತನಾಡಿದ್ದು ಶೃಂಗಾರಪುರೆಗೆ ಆಶ್ಚರ್ಯವನ್ನುಂಟು ಮಾಡಿತು. ಆದರೆ ಯಾವುದೋ ಬಿರುಗಾಳಿಯ ಮುನ್ನದ ಶಾಂತತೆ ಇದು ಎಂದು ಹೆದರಿಕೆಯೂ ಹುಟ್ಟಿ, ಹೆಗಾದರೂ ಸರಿ ಈ ರವಿವಾರ ಭಾವನನ್ನೇ ನೇರವಾಗಿ ಕೇಳಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಬೇಕು. ತಂದೆಯದ್ದೆಲ್ಲಾ ನಿಮಗೆ ಸಿಕ್ಕಿದೆ ಎನ್ನುವ ಅಣ್ಣನಿಗೂ ಲೆಕ್ಕ ಒಪ್ಪಿಸಬೇಕು. ನಿಮ್ಮ ತಂದೆ ನಿವೃತ್ತರಾದಾಗ ತಂದದ್ದೆಲ್ಲಾ ಅವರ ಚಿಕಿತ್ಸೆಗೆ ಖರ್ಚು ಮಾಡಲಾಗಿದೆ ಎಂದು ಒರಟಾಗಿ ಉತ್ತರಿಸಬೇಕು. ತಮ್ಮ ಎನ್ನುವ ವಾತ್ಸಲ್ಯ ಆತನಿಗೆ‌ಇಲ್ಲವಾದರೆ ಅಣ್ಣ ಎಂದು ತಾನು ಗೌರವ ಯಾಕೆ ತೋರಿಸಬೇಕು. ಏನೂ ಆಗದಿದ್ದರೆ ದಾದರ್‌ನಲ್ಲಿನ ಖೋಲಿ ಮಾರಿ ಸಿಕ್ಕಿದ ಹಣದಿಂದ ಅರ್ಧವನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ನೀಡಿ ಆಯಿಯನ್ನು ಅಲ್ಲಿರಿಸಿ ಉಳಿದರ್ಧವನ್ನು ಹಿಡಿದು ತಾನು ತೀರ್ಥಯಾತ್ರೆಗೆ ಹೊರಡಬೇಕು. ಈ ಕೆಲಸ ಸಾಕು. +ಆದರೆ ತನ್ನ ಟೇಬಲ್‌ಗೆ ಬಂದು ಖಂಡೋಬಾನ ಪಟ ನೋಡಿದೊಡನೆಯೆ ಇಂದು ಕೋಲಾಹಲ ಹುಟ್ಟಬೇಕಾದ ಸಂದರ್ಭದಲ್ಲಿ ಎಲ್ಲವೂ ಶಾಂತವಾಗಿ ನಡೆಯಲು ದೇವನ ದಯೆಯೆ ಕಾರಣವಾಗಿರಬಾರದೇಕೆ ಎನ್ನುವ ಯೋಚನೆ ಬಂದು ಇದೇ ಸರಿ ಎಂದು ಮನದಟ್ಟಾದವನಂತೆ ಕೈಮುಗಿದು ನಿಂತ. +ಕ್ಷಣದಲ್ಲಿಯೇ ಹೊಸ ಉತ್ತೇಜನ ದೊರೆತವನಮ್ತೆ ಆತ ಮೆನೇಜರರು ನೀಡಿದ ಪಟ್ಟಿಯಲ್ಲಿ ನಮೂದಿಸಿದ ಫೈಲುಗಳನ್ನು ಒಂದೊಂದಾಗಿ ಹೊರತೆಗೆದು, ಇಷ್ಟು ತಪ್ಪು ತನ್ನಿಂದ ಹೇಗಾಯಿತು ಎಂದು ಅಚ್ಚರಿ ಪಟ್ಟ. ಆಫೀಸಿನಲ್ಲಿ ಆತನ ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ಹೋದರೂ ಶೃಂಗಾರಪುರೆ ತನ್ನ ಕೆಲಸದಲ್ಲಿ ವ್ಯಸ್ತನಾಗಿದ್ದ. ಅಯ್ಯರ್ ಹದ್ದಿನ ಕಣ್ಣುಗಳಿಂದ ಇವನನ್ನೇ ನೋಡುತ್ತಾ ಕುಳಿತಿದ್ದ. ಮೋರೆ “ಅಯ್ಯರ್ ಸಾಬ್, ಅಯ್ಯರ್ ಸಾ” ಎನ್ನುತ್ತಾ ಆತನಿಗೆ ಬೆಣ್ಣೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದ.ಮಿಸ್. ಮೀರ್‌ಚಂದಾನಿ ಮೆನೇಜರರ ಕ್ಯಾಬಿನ್‌ನಲ್ಲಿ ಡಿಕ್ಟೇಶನ್ ತೆಗೆದುಕೊಳ್ಳುತ್ತಾ ಕುಳಿತಿದ್ದಳು. +ಆರೂವರೆ ಹೊತ್ತಿಗೆ ಮೆನೇಜರ್ ನೀಡಿದ ಪಟ್ಟಿಯಂತೆ ಎಲ್ಲಾ ಫೈಲುಗಳನ್ನು ಸರಿಪಡಿಸಿ ಶೃಂಗಾರಪುರೆ ಸಮಾಧಾನದ ಉಸಿರುಬಿಟ್ಟ. ಟಾಯ್ಲೆಟ್ಟಿಗೆ ಹೋಗಿ ಮೂತ್ರಿಸಿ ಬಂದು, ಸಿಂಕ್‌ನಲ್ಲಿ ಮುಖ ತೊಳೆದು ಬಾಚಣಿಗೆ ತೆಗೆದು ತಲೆ ಬಾಚಿಕೊಂಡ. ಇವತ್ತು ಯಾಕೋ ತಾನು ಮಾಡಿದ ಕೆಲಸದಲ್ಲಿ ಆತನಿಗೆ ತೃಪ್ತಿ ಇದೆ. ನಾಳೆಯಿಂದ ಎಚ್ಚರದಿಂದ ತನ್ನ ಕೆಲಸ ಮಾಡಬೇಕು ಎಂದು ಆತ ನಿರ್ಧರಿಸಿದ. +ಟೇಬಲ್‌ಗೆ ಹಿಂತಿರುಗಿ ಬಂದ ಆತ ಖಂಡೋಬಾನ ಪಟ ತೆಗೆದು ಬಾಕ್ಸ್‌ನಲ್ಲಿ ಇರಿಸಿ ಅದನ್ನು ಚೀಲದಲ್ಲಿ ಸೇರಿಸಿದ. ಲಂಚ್ ಬಾಕ್ಸನ್ನು ಒಳಗೆ ತೆಗೆದಿರಿಸಿದ. ಅಯ್ಯರ್‌ನಲ್ಲಿ ಕೆಲಸ ಮುಗಿಯಿತು ಎಂದು ತಿಳಿಸಿ ಹೊರಟ. +ಲಿಫ್ಟ್ ನಬ್ರ ೨ ತಳಭಾಗದಲ್ಲಿರುವುದು ಕಾಣಿಸಿತು. ಆದರೆ ಲಿಫ್ಟ್ ನಂಬ್ರ ೧ ದುರಸ್ತಿಯಾಗಿ ಚಲಿಸಲು ಆರಂಭಿಸಿದೆ. ಶೃಂಗಾರಪುರೆ ಅದರೆ ಗುಂಡಿ ಅದುಮಿ ಮೇಲಿನಿಂದ ಬರಲು ಕಾದು ನಿಂತ. ಆಗ ತಾನೆ ಬಂದ ಮಿಸ್ ಮೀರ್‌ಚಂದಾನಿ ಲೇಡೀಸ್ ಫಸ್ಟ್ ಎನ್ನುತ್ತಾ ಶೃಂಗಾರಪುರೆಯ ಮುಂದೆ ಬಂದು ನಿಂತಳು. ಲಿಫ್ಟ್ ಬಂದಾಗ ಇಬ್ಬರಿಗೂ ವಕಾಶವಿರುವುದು ಕಾಣಿಸಿತು. ಮಿಸ್ ಮೀರ್‌ಚಂದಾನಿಯ ಜತೆಗೆ ಲಿಫ್ಟ್‌ನಲ್ಲಿ ಹೋಗಬೇಕಾಗಿ ಬಂದದ್ದು ಆತನಿಗೆ ತುಂಬಾ ಖುಶಿ ಕೊಟ್ಟಿತು. ಬೆಳಗಿನಿಂದ ಸಂಜೆಯವರೆಗೆ ಈ ಸಿಂಧಿ ಚೋಕ್ರಿಯ ಸುತ್ತ ಹರಡಿರುವ ಈ ದಿವ್ಯ ಸುವಾಸನೆ ಯಾವುದಿರಬಹುದು ಎಂದು ಆತ ದೀರ್ಘ ಉಸಿರೆಳೆದುಕೊಂಡ. +ಇನ್ನೇನು ಶೃಂಗಾರಪುರೆ ಲಿಫ್ಟ್‌ನ ಒಳಗೆ ಹೋಗಬೇಕೆಂದಿರುವಾಗ ಓಡಿ ಬಂದ ಅಯ್ಯರ್ ಆತನನ್ನು ಬದಿಗೆ ಸರಿಸಿ ನನಗೆ ಅ‌ಎಜೆಂಟಾಗಿ ಹೋಗಬೇಕಾಗಿದೆ ನೀನು ಆ ಬಳಿಕ ಬಾ ಎಂದು ಆಜ್ಞೆಮಾಡಿದ. ಬಾಗಿಲು ಮುಚ್ಚುತ್ತಾ “ಮತ್ತೆ ಇಲ್ಲಿ ಕಾಯಬೇಡ. ಮೆಟ್ಟಿಲುಗಳನ್ನು ಇಳಿಯುತ್ತಾ ಬಾ. ನಿನ್ನ ಡೊಳ್ಳು ಹೊಟ್ಟೆ ಸರಿಯಾದೀತು” ಎಂದು ನಗೆಯಾಡಿದ. ಬಾಗಿಲ ಎಡೆಯಿಂದ ಮಿಸ್ ಮೀರ್‌ಚಂದಾನಿ “ಬ್ಯಾ ಶಿಂಗೂ” ಎಂದು ಕೈಬೀಸಿದಾಗ ಒಳಗಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ಬೆಳಗಿನಂತೆ ಕೆಟ್ಟದಾಗಿ ಬೈಯಬೇಕೆಂದು ಅನಿಸಿದರೂ ಶೃಂಗಾರಪುರೆ ಉಕ್ಕಿ ಬರುತ್ತಿದ್ದ ಕೋಪವನ್ನು ತಡೆಯುತ್ತಾ ಮೆಟ್ಟಿಲುಗಳತ್ತ ನಡೆದ. +ಆತ ಎರಡು ಮೆಟ್ಟಿಲುಗಳನ್ನು ಇಳಿದಿದ್ದನಷ್ಟೆ ‘ಢಾಂ” ಎನ್ನುವ ಭೀಕರ ಸದ್ದು ಕೆಳಗಿನಿಂದ ಕೇಳಿಸಿತು. ಮೂರು ವರ್ಷಗಳ ಹಿಂದೆ ಶೇರು ಮಾರ್ಕೆಟ್ ಕಟ್ಟಡದಲ್ಲಿ ಬಾಂಬ್ ಸ್ಪೋಟವಾದಾಗ ಆಫೀಸಿನಲ್ಲಿ ಕುಳಿತಿದ್ದ ಶೃಂಗಾರಪುರೆ ಇದೇ ರೀತಿ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದ. ನಮ್ಮ ಕಟ್ಟಡಕ್ಕೆ ಬಾಂಬು ಬಿತ್ತೇ. ಹಾಗಾದರೆ ಮೆಟ್ಟಿಲುಗಳೇ ಸುರಕ್ಷಿತವೆಂದು ಆತ ದಡದಡನೆ ಕೆಳಗೆ ಇಳಿಯಹತ್ತಿದ. +ಅಕ್ಕಪಕ್ಕದ ಕಟ್ತಡಗಳಿಂದಲೂ, ಬೀದಿಯಿಂದಲೂ ಓಡಿ ಬಂದ ಜನರು ಲಿಫ್ಟ್ ನಂಬ್ರ ೧ರ ಮುಂದೆ ಜಮಾಯಿಸಿದ್ದರು. ಗುಂಪಿನೊಳಗೆ ನುಸುಳಿ ನೋಡಿದಾಗ ಲಿಫ್ಟ್ ಕ್ಯ್ರಾಶ್ ಆಗಿ ಕೆಳಗಿನ ಪಿಟ್‌ನಲ್ಲಿ ಬಂದು ಬಿದ್ದದ್ದು ಕಾಣಿಸಿತು. ಅಲ್ಲಿಂದ ಸಿಕ್ಕಿಬಿದ್ದ ಜನರ ಆಕ್ರಂದನ ಕೇಳಿಸುತ್ತಿತ್ತು. ಈ ಲಿಫ್ಟ್‌ನಲ್ಲಿ ತಾನಿರಬೇಕಿತ್ತು ಎನ್ನುವುದು ಹೊಳೆದದ್ದೆ ಶೃಂಗಾರಪುರೆ ಒಂದು ಕ್ಷಣ ನಡುಗಿದ. ಮೇಲಿನಿಂದ ಓಡಿ ಬಂದ ಮೋರೆ “ಕಾಯ್ ಜಾಲ” ಎಂದು ಕೇಳುತ್ತಿದ್ದರೂ ಆತನಿಗೆ ಉತ್ತರಿಸದೆ ಶೃಂಗಾರಪುರೆ ಗುಂಪಿನಿಂದ ಹಿಂದೆ ಸರಿದ. ಅಲ್ಲಿ ಕೆಳಗೆ ಸಿಕ್ಕಿ ಬಿದ್ದವರು ತನ್ನ ಪರಿಚಿತರು, ಅವರಲ್ಲಿ ಇಬ್ಬರು ತನ್ನ ಸಹೋದ್ಯೋಗಿಗಳು. ಅವರಿನ್ನೂ ಜೀವಂತ ಇದ್ದಾರೆಯೆ ಇಲ್ಲವೆ ಎನ್ನುವ ಕುತೂಹಲ ಕೂಡಾ ಇಲ್ಲದವನಂತೆ ಆತ ಹೆಬ್ಬಾಗಿಲಿನತ್ತ ಸಾಗಿದ. +ಮತ್ತೆ ಚರ್ಚ್‌ಗೇಟ್‌ನತ್ತ ಸಾಗುತ್ತಿರುವಂತೆಯೇ ಶೃಂಗಾರಪುರೆ ಖಂಡೋಬಾನ ಧ್ಯಾನದಲ್ಲಿ ತೊಡಗಿದ್ದ. +***** +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […] +“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. […] +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_27.txt b/Kannada Sahitya/article_27.txt new file mode 100644 index 0000000000000000000000000000000000000000..dc3d3b388406ab86e82f0ff086557690d5e10488 --- /dev/null +++ b/Kannada Sahitya/article_27.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. +ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿದಲ್ಲಿ ಹೆಚ್ಚು ಮೈಲೇಜ್ ಸಿಗುತ್ತದೆ ಎಂಬ ಕಾರಣಕ್ಕೆ ಮೈಸೂರು ಫ್ರೆಂಡ್ಸ್ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಏರ್ಪಡಿಸಿದ್ದರು. +ಇದರ ಕೇಂದ್ರಬಿಂದು ಉಪೇಂದ್ರ. +ಉಪೇಂದ್ರರಿಗೆ ಹಿಂದೆ ಇದೇ ಮಿತ್ರರು ‘ಚಿನ್ನದ ಕಿರೀಟ’ ಹಾಕಿದ್ದರು. ಆಗ ಆ ಚಿನ್ನದ ಕಿರೀಟ ತೋರಿಸಲು ಉಪೇಂದ್ರರೇ ಬೆಂಗಳೂರಿನಲ್ಲೊಂದು ಪ್ರೆಸ್‌ಮೀಟ್ ಕರೆದಿದ್ದರು ಅವರ ಮನೆಯಲ್ಲಿ. +ಆಗ ಈ ಗೆಳೆಯರಿಗೆ ಚಿಂತೆಯಾಯಿತು. ಚಿನ್ನದ ಕಿರೀಟವಾದಮೇಲೆ ಬೆಳ್ಳಿ ಕಿರೀಟ ಹಾಕಿದರೆ ‘ಗ್ರೇಡ್’ ಕಡಿಮೆಯಾಗುತ್ತದೆ. +‘ಬೆಳ್ಳಿ ಗದೆ ಕೊಡಬಹುದಿತ್ತಲ್ಲ’ ಎಂದರು ನನ್ನ ಗೆಳೆಯರು. +‘ಮೈಸೂರು ಮಿತ್ರ’ರು ಗದೆಪ್ರಿಯರಲ್ಲ-ಕಿರೀಟಪ್ರಿಯರು ಆದ್ದರಿಂದ ಕಿರೀಟವೇ ಹಾಕಬೇಕೆಂದು ಕೊಂಡಾಗ ವಜ್ರದ ಕಿರೀಟ ನೆನಪಾಗಿದೆ. +ವಜ್ರದ ಕಿರೀಟ ಎಂದರೆ ಅದಕ್ಕಿಂತಾ ಭಾರಿ ಸುದ್ದಿ ಆಗುವುದು ನಿಜ. ಆ ‘ಸಂದರ್ಭದಲ್ಲಿ ಉಪ್ಪಿ ಫ್ಯಾನ್ಸ್ ಅಸೋಸಿಯೇಷನ್ ಮಾಡಿದರೆ ಹೇಗೆ’ ಎಂದು ಚಿಂತಿಸಿ ಈ ಕಾರ್ಯಕ್ರಮದಲ್ಲೇ ಅದೂ ಸೇರಿಸಿದರು. +ಅರೆರೆ! ಇಷ್ಟೇ ಆದರೇ ಸಾಕೆ ಹೊಸ ಕನ್ನಡ ಚಿತ್ರವೇ ಮಾಡಬಹುದಲ್ಲ ಉಪ್ಪಿಯನ್ನು ಹಾಕಿಕೊಂಡು ಎನ್ನಿಸಿರಬೆಕು. +‘ಓಕೆ’ ಎಂದರು ಎಲ್ಲ. +ಚಿನ್ನದ ಕಿರೀಟ – ವಜ್ರದ ಕಿರೀಟವನ್ನೆ ಲಕ್ಷಾಂತರ ಮಂದಿ ಎದುರು ಹಾಕಿದಾಗ ಕಾಲ್‌ಷೀಟ್ ಜುಜಬಿ ವಿಷಯವಾಗುತ್ತದೆ. +ಇಷ್ಟು ಮಾಡಿದ ಗೆಳೆಯರಿಗೆ ‘ಉಪ್ಪಿ’ ಕಾಲ್‌ಷೀಟ್ ನೀಡದಿರುತ್ತಾರೆಯೇ ಅದರಿಂದ ಮೇ ೧೨ರಿಂದು ಮುಹೂರ್ತವೂ ಮಾಡಿಬಿಡೋಣ ಎಂದುಕೊಂಡರು. +ಮೈಸೂರಿನಲ್ಲಿ ಅದರ ಕಾರ್ಯಕ್ರಮ ಹಮ್ಮಿಕೊಂಡರು. ಇಂಥ ಸಮಾರಂಭಕ್ಕೆ ರವಿ ಬೆಳಗೆರೆ ಬಂದರೆ ಚೆನ್ನ ಎನಿಸಿರಬೇಕು. ಅವರನ್ನೂ ಕರೆದಿದ್ದೇವೆ ಎಂದು ಆಹ್ವಾನ ಪತ್ರಿಕೆ ಹೇಳಿದೆ. +ಉಪೇಂದ್ರ ಚಿತ್ರದ ಪ್ರಭಾವದಿಂದ ಎಂತೆಂತಹ ಅನಾಹುತವಾಗಿದೆ ಎಂಬುದನ್ನು ‘ಹಾಯ್ ಬೆಂಗಳೂರು’ ಸುದೀರ್ಘವಾಗಿ ಚಿತ್ರಿಸಿತ್ತು. +ಈಗ ರವಿಬೆಳೆಗೆರೆ ಏನು ಮಾತಾಡಿಯಾರು ಎಂಬುದನ್ನು ತಿಳಿಯಲು ಬಹುಜನ ಕಾತರದಿಂದಿದ್ದಾರೆ. +‘ಚಿನ್ನದ ಕಿರೀಟ’ದ ಪ್ರಸಂಗವನ್ನು ಜಗ್ಗೇಶ್ ವ್ಯಖ್ಯಾನಿಸಿ ಎಲ್ಲ ಅವರವರೇ ಮಾಡಿಕೊಂಡ ಮ್ಯೂಚ್ಯುಯಲ್ ಅಡ್ಮಿರೇಷನ್ ಸೊಸೈಟಿ ಎಂದಿದ್ದರು. +ಈಗ ವಜ್ರದ ಕಿರೀಟ ಎಂದರೆ ‘ಜಿತೇಂದ್ರ’ನ ರೀ ಆಕ್ಷನ್ ಸಹ ವಿಚಿತ್ರವಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. +ಈ ಚಿತ್ರದ ನಿರ್ದೇಶಕರು ಮಹೇಶ್ ತಲಕಾಡ್ ಅಂತೆ. +ಬ್ರಾಕೆಟ್‌ನಲ್ಲಿ (ಬಾಲಿವುಡ್) ಎಂದು ಹಾಕಿದ್ದಾರೆ. +ಉಪೇಂದ್ರ ಈಗ ಹಾಲಿವುಡ್ ತೆಗೆಯಲು ಹೋಗುತ್ತಿರುವುದರಿಂದ ಈ ಮಿತ್ರರು ತಮ್ಮ ಚಿತ್ರಕ್ಕೆ ‘ಬಾಲಿವುಡ್’ ಎಂದೂ ಹೆಸರಿಡಬಹುದು ಎಂಬುದು ಬಹುಮಂದಿ ಊಹೆ. +ಬಂತು-ಬಂತು ‘ಎ’ ಬಂತು +ಉಪೇಂದ್ರ ‘ಎ’ ಬಂದ ಕೂಡಲೆ ಪ್ರವೀಣ್ ನಾಯಕರ ‘ಝ್ಹಡ್’ ಆರಂಭವಾಯಿತು. +ನಂತರ ‘ಉಪೇಂದ್ರ’ ಬಂತು – ಬಾಚಿಕೊಳ್ಳಲು ಬಿಡುವಿಲ್ಲದಷ್ಟು ಹಣ ಮಾಡಿತು. +ಇದೇ ಸಮಯ ಹೊಂಚಿದ ವಿಶ್ವನಾಥ್ +ಕುಮಾರಸ್ವಾಮಿಯವರಿಗೆ ದಮ್ಮಯ್ಯ ಗುಡ್ಡೇ ಹಾಕಿ ‘ಜಿತೇಂದ್ರ’ ತೆರೆಗೆ ತಂದೇಬಿಟ್ಟರು. +ಈಗ ತಾವು ಮಾಡಿದ ತಪ್ಪಿಗೆ ಕುಮಾರಸ್ವಾಮಿ, ಜಗ್ಗೇಶ್ ಪರಿತಪಿಸುತ್ತಿದ್ದಾರೆ. ಈಗ ಹಾಲಿವುಡ್ ತೆರೆಗೀಯುತ್ತಿದ್ದಾರೆ ರಾಮು. +ಆ ಚಿತ್ರ ತೆರೆಗೆ ಬರುವುದರಲ್ಲೇ ಉಪ್ಪೀನ ಹಾಕಿಕೊಂಡು ‘ಬಾಲಿವುಡ್’ ಮೈಸೂರು ಫ್ರೆಂಡ್ಸ್ ತೆಗೆದೇಬಿಡುವ ಅವಸರದಲ್ಲಿ ಇದ್ದಂತಿದೆ ಅದಕ್ಕೆ ಅಡ್ವಾನ್ಸ್ ‘ವಜ್ರದ ಕಿರೀಟ’ +ಧನರಾಜ್ ಚಿತ್ರಕ್ಕೆ ಉಪೇಂದ್ರ ಹೆಚ್‌ ಟು ಓ ಎಂದು ಹೆಸರಿಸಿದ್ದಾರೆ. +ಕರ್ನಾಟಕ ಹಾಗೂ ತಮಿಳುನಾಡನ್ನು ಸಾಂಕೇತಿಸುವ ಪಾತ್ರಗಳು ಇದರಲ್ಲಿವೆ. ಕಾವೇರಿ ನೀರಿನ ಸಮಸ್ಯೆ ಚಿತ್ರದ ಕಥಾವಸ್ತು. ಈ ಸಮಸ್ಯೆಯನ್ನು ಸಾಂಕೇತಿಕವಾಗಿ ‘ಶಾಪ’ ಸಹಾ ಚಿತ್ರಿಸುವ ಯತ್ನ ಮಾಡಿದೆ ಎಂಬುದೀಗ ಎಲ್ಲ ಬಲ್ಲರು. +ಈಗ ಹೆಚ್‌ ಟು ಓ ಗೆ ಪ್ರತಿಸ್ಪರ್ಧಿಯಾಗಿ ಯಾವ ಹೆಸರಿಟ್ಟು ಚಿತ್ರಿಸೋಣ ಎಂಬುದನ್ನು ನಿರ್ಧರಿಸಲು ನೂರಾರು ಮಂದಿ ನಿರ್ಮಾಪಕ ನಿರ್ದೇಶಕರು ಚಿಂತಿಸುತ್ತಿದ್ದಾರಂತೆ. +ಹೆಚ್‌ ಟು ಓ ಅಂದರೆ ನೀರು – ಅದರಿಂದ ಸಿ ಓ ಟು ಎಂದು ಮತ್ತೊಬ್ಬರು ಚಿತ್ರ ತೆಗೆಯ ಹರಡಲಿರುವರಂತೆ. +ಸಿ ಓ ಟು ಎಂದರೆ ಕಾರ್ಬನ್ ಡೈ ಆಕ್ಸೈಡ್ ಅದಿದ್ದರೆ ಉಸಿರಾಡುವುದೇ ಕಷ್ಟ. ಆಗಲೇ ಎಲ್ಲ ಆಕ್ಸಿಜನ್‌ಗೆ ಹಂಬಲಿಸುವುದು. ಚಿತ್ರರಂಗಕ್ಕೂ ಈಗ ಆಕ್ಸಿಜನ್ ಸಿಲಿಂಡರ್‍ ಬೇಕಿದೆ. +***** +(೧೧-೫-೨೦೦೧) +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […] +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […] +ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_270.txt b/Kannada Sahitya/article_270.txt new file mode 100644 index 0000000000000000000000000000000000000000..85b3775e1b1cd8bb00863479dc5d99a309065602 --- /dev/null +++ b/Kannada Sahitya/article_270.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನ +ಮೈ ತುಂಬ +ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ +ಗಳ ಮುಳ್ಳು ಚುಚ್ಚಿ +ಅರ್ಥಕ್ಕಾಗಿ ಕಾದು ಕೂತೆ +ಏನೂ ಹೊರಡಲಿಲ್ಲ +ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು +ನಿನ್ನ +ಬೋಳು ಮೈ ತೊಳೆದು +ಚೊಕ್ಕ ಒರೆಸಿ +ಹಗುರಾಗಿ ಮೀಟಿದೆ +ಹೌದೆ ಕವಿತಾ!! +ಒಮ್ಮೆಗೇ ಹೊಳೆದುಹೋಯಿತು ಅರ್ಥ +ನಿನ್ನದೆ +ಅಥವಾ +ನನ್ನದೆ? +***** +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_271.txt b/Kannada Sahitya/article_271.txt new file mode 100644 index 0000000000000000000000000000000000000000..c1f2ed0464b2ada76cf8d5a92f41d959e86d1478 --- /dev/null +++ b/Kannada Sahitya/article_271.txt @@ -0,0 +1,89 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. +“…ಈ ಸಲದ ಮುಂಗಾರಿನ ಸೂಟಿ ಕೂಡ ಹತ್ತುದಿನ ಹೆಚ್ಚಿಗೆ ಲೀವ್ ಅಪ್ಲೈ ಮಾಡೀನಿ. ಊರಿನ ಮಳೀ ನೋಡಿದ ಹಾಂಗೂ ಆತು; ನಿಮ್ಮ ಜೋಡಿ ನಾಕ ದಿನ ಇದ್ದಾಂಗೂ ಆತು. ಅವ್ವ, ಮೋನಿದಾದಾರಿಗೆ ಈ ವಿಚಾರ ಒತ್ತಿ ಹೇಳಿ, ನನ್ನ ಶಿ.ಸಾ. ನಮಸ್ಕಾರ ತಿಳಸು…” +ಅಣ್ಣ ಗೋಪಾಲನಿಗೆ ಪತ್ರ ಬರೆದು ಮುಗಿಸಿ ಕಿಟಕಿಯಾಚೆಗೆ ದಿಟ್ಟಿಸಿದ; ಮುಂಗಾಲು ಪುಟಿಗೆ ಹಾಕಿ ತುಸು ಅವಸರದಲ್ಲಿ ಬಂದ ಈ ಸಲದ ಮುಂಗಾರಿನ ಸೋನೆ ಸಣ್ಣಗೆ ಹೂ ಪಕಳೆ ಹಾಗೆ ಹನಿಯುತ್ತ ನೆಲಮುಟ್ಟುತ್ತಿತ್ತು. ದಾಮರು ರಸ್ತೆಯ ಶಹರದಂಥ ಶಹರದಲ್ಲೂ ಒದ್ದೆಮಣ್ಣು ಸಿಕ್ಕಲ್ಲಿ ಹಸಿರು ಗರಿಕೆಯೊಡೆದು ನಳನಳಿಸುತ್ತಿತ್ತು. ಇಂಥದೇ ಗರಿಕೆ ಎಸಳಿಗೆ ಅಂಟಿಕೊಂಡ ಇಬ್ಬನಿ ಮಣಿಗಳನ್ನು ಬರಿಗಾಲಿನಲ್ಲಿ ಒದೆಯುತ್ತ ಒಂದೊಮ್ಮೆ ನಡೆದ ಬಾಲ್ಯ ಮೈಸವರಿತು. ಇದೇ ದಿನಗಳಲ್ಲಿ ಅವ್ವನ ಶ್ರಾವಣ ಶುಕ್ರವಾರದ ಪೂಜೆಗೆ ಗರಿಕೆ, ಅಗಸೆ ಹೂ ಆಯ್ದು, ಆಯ್ದು ಕೊಡುತ್ತಿದ್ದುದು, ಅಲ್ಲ? ಹೌದು. +ಹಾಗೇ ಸಶಬ್ದ ಜಿನಿಜಿನಿ ಮಳೆಯನ್ನು ನೋಡತೊಡಗಿದ್ದ ಮಧುಕರ. ಕುಳಿರ್ಗಾಳಿ ಮೈಸೋಕಿ ಸಣ್ಣಗೆ ನಡುಗಿದ. ಕುರ್ಚಿಯಿಂದೆದ್ದು ಬಂದು ಕಿಟಕಿ ಸಳಿಗೆ ಕೈಯೂರಿ ನಿಂತ. ರಸ್ತೆ ಬದಿಗೆ-ಮೈತುಂಬ ಹಳದಿ ಹೂ ತುಂಬಿಕೊಂಡ ತಿಕೋಮ ಮರವೊಂದು ಧ್ಯಾನಕ್ಕೆ ಕೂತಂತೆ ನಿರಂಬಳವಾಗಿ ನೆನೆಯುತ್ತಿತ್ತು. ತಿಕೋಮಾ ಮರದ ಪಾರ್ಶ್ವಕ್ಕೆ ಸಂಕೇಸರ. ಮೇ ಮಾಸದಲ್ಲಿ ಅರಳಿ, ದಟ್ಟ ಕೇಸರಿ, ಕಡುಗೆಂಪು ಬಣ್ಣದ ಹೂವನ್ನು ತೊಟ್ಟೂ ಜಾಗ ಬಿಡದಂತೆ ಮರವಿಡೀ ಸಿಂಗರಿಸಿಕೊಳ್ಳುವ ಮರ. ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಈ ಗಿಡಕ್ಕೆ ಹೂವೇ ಇಲ್ಲವೇನೋ ಅನ್ನುವಂತೆ ಎಲೆಗಳನ್ನು ತುಂಬಿಕೊಂಡುಬಿಡುತ್ತದೆ. ಕುಸುಮಳಿಗೆ ಸಂಕೇಸರ ಮರದ ಇತಿಹಾಸ ಗೊತ್ತು. ಇನ್ನೂರು ವರ್ಷದ ಹಿಂದೆಯಂತೆ ಇದು ಭಾರತಕ್ಕೆ ಬಂದಿದ್ದು. ವಾಸನೆಯಿಲ್ಲದ; ನೋಡಲಷ್ಟೇ ಚೆಂದಕಾಣುವ ಈ ಹೂವೆಂದರವಳಿಗೆ ಇರುಸು, ಮುರುಸು. ನಕ್ಕರೆ ಸಂಕತ್ತಿ ಹೂವಿನಗತೆ ಹಲ್ಕಿರಿಬೇಡ ಅನ್ನುತ್ತಾಳೆ. ಆಗ ಅವಳ ಕಣ್ಣು ಸಂಕೇಸರ ಹೂವಿನ ಬಣ್ಣದಂತಿರುತ್ತವೆ… +ಹನಿಯಂತಿರುವ ಮಳೆಗೇ ರಸ್ತೆಯನ್ನು ಬಿಟ್ಟುಕೊಟ್ಟು ಜನಪದ ಮನೆಯಲ್ಲಿತ್ತು. ಆಗೊಮ್ಮೆ ಈಗೊಮ್ಮೆ ಸರಿವ ವಾಹನಗಳು. ನಗರದಲ್ಲಿ ಮಳೆ ಎಂದರೆ-ಕೊಡೆಗಳು. ಅರೆ! ತೋಯ್ದು ಬಿಟ್ಟೆ; ರೂಟ್ ಬಸ್ ಮಿಸ್…ದಿನ ಮುಗಿಯುತ್ತದೆ. ಹೀಗೆ ಮಳೆ ಜೋರಾಗಿ ನೆಲ ಗುಮ್ಮುವುದು; ಹಳ್ಳಿ ಮನೆಯ ಹರನಾಳಿಗೆಯಿಂದ ನೀರು ಚಿಮ್ಮುವುದು ಮೋನಿದಾದಾನೊಂದಿಗೆ ನೋಡಬೇಕು. ಕಾಗದದ ಹಡಗು ಮಾಡಿಕೊಟ್ಟು “ಅದರ ಮ್ಯಾಲೆ ನಿಮ್ಮ ಹೆಸರು ಶಾಯೀಲೆ ಬರದುಬಿಡ್ರೋ, ಅಂದ್ರ ಮುಂದಿನ ಊರಾನ್ಮಂದಿಗೆ ಅದು ನಿಮದಂತ ಗೊತ್ತಾಗತದ…” ಎಂದು ಹುರಿದುಂಬಿಸುತ್ತಿದ್ದ. ಈಗ ಐವತ್ತೈದರ ಮೇಲಾಗಿ, ಕೂದಲು ನೆರತು ಮುದುಕನಾಗಿದ್ದಾನೆ. ಮೊದಲಿದ್ದ ಸಿಟ್ಟಿನ ಖೋಡಿ ಇಳಿದಿದೆಯೋ ಇಲ್ಲವೋ? +ಅವನ ಸಿಟ್ಟು, ತನ್ನ ಹುಡುಗುತನದ ಆವೇಶ ಎಲ್ಲರಿಂದ ಇಬ್ಬರನ್ನೂ ಬೇರೆಮಾಡಿತು. “ನಿಮ್ಮ ಮಗಾ ಪರ್ತ ಬರಲಿಲ್ಲೇನು” ಎಂದು ಕೇಳುತ್ತಾರೆಂದು ಅವ್ವ ಮದುವೆ-ಮುಂಜಿ, ಆರತಿಗೆ, ಅರಿಸಿಣ-ಕುಂಕುಮಕ್ಕೆಂದು ಹೋಗುವುದನ್ನು ಬಿಟ್ಟಳಂತೆ… ಎಂದುಕೊಳ್ಳುತ್ತ ಮಧುಕರ ಮತ್ತೊಮ್ಮೆ ಪತ್ರ ಓದಿ, ಕವರಿಗೆ ಹಾಕಿ ವಿಳಾಸ ಬರೆದ. ಹಿಂದೆ ಒಂದೆರಡು ಬಾರಿ ಧೈರ್ಯ ಸಾಲದ್ದಕ್ಕೊ, ಅರಿವಾಗದ ಖಿನ್ನತೆ, ಬೇಸರ, ಕೋಪ, ಅಳುಬುರುಕುತನ ಏನೆಲ್ಲ ಮುತ್ತಿ ರಿಸರ್ವೇಶನ್ ಮಾಡಿಸಿಯೂ ಕಡೆಗಳಿಗೆಯಲ್ಲಿ ಹೋಗುವ ನಿರ್ಧಾರ ಕೈ ಬಿಟ್ಟದ್ದು ಈ ವರ್ಷಗಳಲ್ಲಿ ಅವನ ಬದುಕಲ್ಲಿ ನಡೆದಿದ್ದಿದೆ. ಹಾಗೆಂದೇ ಟಪಾಲು ಹಾಕುವ ನೆವದಲ್ಲಿ ಹೊರಗೆ ನಡೆದು, ಊರಿಗೆ ಹೋಗುವುದು ಇನ್ನಷ್ಟು ಪಕ್ಕಾ ಮಾಡಲು ಮುಂಗಡ ಟಿಕೀಟನ್ನೂ ಪಡೆದ. ಬಂದಮೇಲೆ ಸಂಭ್ರಮ, ಆತಂಕ ತನ್ನೊಳಗೆ ಒಡಮೂಡಿದಾಗ ಆ ಭಾವನೆಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ, ಅಂಗೈಯನ್ನು ಘಸಘಸ ತೀಡಿಕೊಂಡು ಅವು ಬೆಚ್ಚಗಾದಾಗ ಅಂಥದ್ದೇ ಬಿಸಿ ಎದೆಗೂ ತುಂಬಿಕೊಂಡು ಸುಖಿಸಿದ. ಹೊಸ ಬದುಕಿನ ಮಣ್ಣ ಹಾದಿ ತುಳಿಯುವವನಂತೆ ಹುರಿಗೊಂಡ. ಮುಲ್ಕೀ ಪರೀಕ್ಷೆ ಕಟ್ಟಿದ ಹಸಿ ಬಾಲಕ ಪರೀಕ್ಷೆ ನಾಲ್ಕು ತಿಂಗಳಿದೆ ಎನ್ನುವಾಗಲೇ ನಡುರಾತ್ರಿಮಟ ತೂಕಡಿಸುತ್ತ ಓದಿ; ಮತ್ತೆ ಬ್ರಾಹ್ಮೀ ಮುಹೂರ್ತಕ್ಕೆ ಎದ್ದು, ತಲೆಗೆ ಗುಬುರು ಹಾಕಿ ಪಾಠ ಕಂಠಪಾಠ ಮಾಡುವ ಉಪಾದಿಯಲ್ಲಿ ಸಕಲ ತಯಾರಿ ನಡೆಸಿದ. ಯಾವ ಅಂಗಿ-ಪ್ಯಾಂಟು ಒಯ್ಯುವುದು, ಅವ್ವನಿಗೇನು ತೆಗೆಯುವುದು; ಮೋನಿದಾದಾನಿಗೊಂದು ಶಾಲಾದರೆ ನಡೆದೀತೆ? ಪುಷ್ಪಕ್ಕ ಕಕ್ಕಿಯ ಮಕ್ಕಳು ಸೂಟಿಗೆ ಬಂದಿದ್ದರೆ ಅವರಿಗೆಂಥ ಟಾಯ್ಸ್ ಒಯ್ಯುವುದು? ಇತ್ಯಾದಿಯಾಗಿ ಪಟ್ಟಿ ಮಾಡಿದ. ತನ್ನ ಬೂಟುಗಳನ್ನು ದಿನಕ್ಕೆರಡಾವರ್ತಿ ಪಾಲಿಷ್ ಮಾಡಿಟ್ಟು ಅವು ಮಿರಮಿರ ಮಿಂಚುವುದನ್ನು ನೋಡಿ ಆನಂದತುಂದಿಲನಾದ. ಬಟ್ಟೆಗಳನ್ನು ಟ್ರಂಕಿಗೆ ತುಂಬಿ, ತೆಗೆದು ಮತ್ತೆ ತುಂಬಿ ಬಂದು ಮಾಡಿದ. +ಮಧುಕರನಿಗೆ ಊರಲ್ಲಿ ಯಾರನ್ನು ಹೇಗ್ಹೇಗೆ ಮಾತಾಡಿಸುವುದು ಎನ್ನುವ ಮತ್ತೂ ಒಂದು ಸಮಸ್ಯೆ ಎದುರಾಗಿತ್ತು. ಅವ್ವನಿಗಾದರೆ ಹ್ಯಾಂಗಿದ್ದೀ? ಯಾಕೋ ಭಾಳ ಸೊರಗಿಯಲ್ಲ? ಉಪಾಸ ಭಾಳ ಮಾಡತಿ ಕಾಣಸ್ತದ ಎಂಬಂಥ ಮಾತಿಂದ ಶುರುಮಾಡಬಹುದಿತ್ತು. ಅದೇ ಬೇರೆಯವರಿಗೆ? ಮುಖ್ಯ ಮೋನಿದಾದಾನಿಗೆ, ಅವ್ಯಕ್ತ ಭಯ. ಅದನ್ನು ನೆನಸಿಕೊಂಡೇ ಎದೆ ಹಾರಿಬಂದು ಗಂಟಲು ಒಣಗಿತು. “ನೀನು ನನ ರಕ್ತಕ್ಕ ಹುಟ್ಟಿದಾಂವಲ್ಲ ತಗೋ! ಬೇಕಾದ್ರ ನಿನ ಹೆಸರಲೇ ಥಣ್ಣೀರು ತಲೀಮ್ಯಾಲ ಹಾಕ್ಕೋಳ್ಳೇನು?” ನಾಕುವರ್ಷದ ಹಿಂದೆ ಮೋನಿದಾದಾ ತನ್ನೊಂದಿಗೆ ಆಡಿದ್ದ ಕಡೆ ಮಾತಾಗಿತ್ತು. ಈಗ ಆ ಮಾತು ಮರೆತು ಹೊಸ ಮಾತು ಬೆಸೆಯಬೇಕು. ಆಗ ನಮ್ಮಿಬ್ಬರ ನಡುವೆ ಕಣ್ಣೀರನ್ನು ತುಳುಕಿಸದೆ ರೆಪ್ಪೆಯಲ್ಲಿ ಹಿಡಿದಿಟ್ಟುಕೊಂಡು ಅವ್ವ ನಿಂತಿದ್ದಳು. ದಾದಾ ಇನ್ನಷ್ಟು ಒದರಾಡ ಹತ್ತಿದಾಗ “ಸಾಕು ನಿಂದ್ರಸರಿ. ಕಾಲ ಛಲೋ ಇಲ್ಲ. ಕೆಟ್ಟ ಮಾತು ಆಡಿದರೆ, ಅವ್ರು ವಾಪಸ್ಸು ಬರಂಗಿಲ್ಲ. ಹುಡುಗ್ಗ ಕೆಟ್ಟದಾಗಬೇಕಂತ ನಿಮಗ ಅನಿಸತದೇನು?” ಎಂದು ತನ್ನನ್ನು ಒಳ ಕರೆದೊಯ್ದಿದ್ದಳು. ಆಮೇಲೆ ಮೋನಿದಾದಾನಿಗೂ ಬೇಸರವೆನ್ನಿಸಿರಬೇಕು. “ಸಿಟ್ಟ ಭಾಳ ಬಂದಿತ್ತು ಬೈದೆ, ಮಾನಸೀಕ ಮಾಡಕೋಬ್ಯಾಡ ಛೋಟ್ಯಾ!” ಅಂದಿದ್ದ. ತನಗೆ ಮಾತ್ರ ಭಯಂಕರ ಅವಮಾನವಾಗಿ ಒಳಗೊಳಗೆ ಕನಲಿದ್ದು ನೌಕರಿ ಸಿಕ್ಕಿದ್ದೊಂದು ನೆವವಾಗಿ ಅವರ ಇರುವನ್ನೇ ಮರೆತುಬಿಟ್ಟಿದ್ದ. ಶಹರಕ್ಕೆ ನೂರುದಾರಿಗಳು; ಹಳ್ಳಿ ಮನೆಗೆ ಮಾತ್ರ ಒಂದೇ! ಅದೂ ಕಡೆಯ ಬಸ್ಸು ತಪ್ಪಿದರೆ ಗದ್ನಿಗೇರಿ ಕತ್ರಿಯಿಂದ ಹತ್ತು ಮೈಲಿ ನಡೆಯಬೇಕಾಗುತ್ತದೆ. ತಮ್ಮ ಊರಿನ ದೇಸಾಯರ ಕಟ್‌ರೂಟ್ ಬಸ್ಸು ಈ ವರ್ಷಗಳಲ್ಲಿ ಒಮ್ಮೆಯೂ ಯಾಕೆ ಕಾಡಲಿಲ್ಲ ಎಂಬ ಪ್ರಶ್ನೆಗೆ ಮಧುಕರನ ಬಳಿ ಉತ್ತರವಿಲ್ಲ. ಅಥವಾ ಹಾಗೆ ಕಾಡಿದ ಪ್ರಶ್ನೆಯನ್ನು; ಮೋನಿದಾದಾನನ್ನು ಅರಗಿಸಿಕೊಳ್ಳುವುದರಲ್ಲಿ ಅವನು ಈ ದಿನಗಳನ್ನು ಕಳೆದಿದ್ದಿರಬಹುದು. ಅಂಥ ಮೋನಿದಾದಾನೊಂದಿಗೆ ಮುಖಾಮುಖಿಯಾಗಲು ಮಧುಕರ ತನ್ನ ಮುಂದೊಂದು ಕಾಲ್ಪನಿಕ ಧ್ವನಿವರ್ಧಕ ಸೃಷ್ಟಿಸಿಕೊಂಡು ಪುಟ್‌ಪಾತಿನಲ್ಲಿ ನಡೆವಾಗ; ರೂಟ್ ಬಸ್ಸಿನ ಕಂಬಿಗೆ ಜೋತುಬಿದ್ದು ಮನೆಸೇರುವಾಗ ಮೋನಿದಾದಾ, ಅವ್ವ, ಗೋಪಾಲ ಬಂದಿದ್ದರೆ ಪುಷ್ಪಾ ಕಕ್ಕಿ ಇವರೆಲ್ಲರ ಪ್ರಶ್ನೆಗಳನ್ನು ಊಹಿಸಿಕೊಂಡು ಉತ್ತರಕೊಡತೊಡಗಿದ. ಹಲವೊಮ್ಮೆ ತನ್ನಲ್ಲೇ ಮಾತಾಡಿಕೊಳ್ಳುತ್ತಿರುವುದನ್ನು ಕಂಡ ಜನ ನಕ್ಕಂತೆನಿಸಿತು. ಅವನೇನು ಸೊಪ್ಪು ಹಾಕಲಿಲ್ಲ. ಬದಲು ಅವರೂ ಯಾಕೆ ತನ್ನಂತೆ ಕಾಲ್ಪನಿಕ ಸಂದರ್ಶನದಲ್ಲಿ ತೊಡಗಿರಬಾರದೆಂದು ತರ್ಕಿಸಿದ. ಜನ ತನ್ನನ್ನು ನೋಡಿ ನಕ್ಕಾಗ, ತಾನೂ ನಕ್ಕ. ಆಗೆಲ್ಲ ಒಟ್ಟು ಸಮುದಾಯವೇ ಕೆಲವೇ ದಿನಗಳಲ್ಲಿ ಅಪೂರ್ವವೊಂದಕ್ಕೆ ತೆರೆದುಕೊಳ್ಳಲಿದೆಯೆಂದೆನಿಸುವುದು. +ತನ್ನ ಪುಕ್ಕಲುತನದಿಂದಾಗಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದ ಮಹತ್ವದ ತೀರ್ಮಾನದ ಹಿಂದೆ ಕುಸುಮಳ ಪ್ರಭಾವ ಬಹಳಷ್ಟಿದೆಯೆಂದು ಮಧುಕರನಿಗೆ ಗೊತ್ತಿದೆ. ಈ ಘಟನೆಗಾಗಿ ನಾಲ್ಕು ಇಡೀ ವರ್ಷ ಅವನು ಕಾದಿದ್ದಾನೆ. ಬಯಕೆ ಚಿಮ್ಮಿ ಬಂದರೂ ಒಳಗೇ ಅದುಮಿ ಈ ಸಲಕ್ಕೂ ಸುಮ್ಮನಾಗಿಬಿಡುತ್ತಿದ್ದ ಇವ ಎಂದು ಕುಸುಮಳಿಗೂ ಅನಿಸಿದ್ದಿದೆ. ಈ ಸಲದ ನಿರ್ಧಾರಕ್ಕೆ ಒತ್ತಾಸೆಯಾಗಿ ನಿಂತವಳು ಕುಸುಮಳೆ! ಪತ್ರದ, ಟಿಕೀಟು ಬುಕ್ ಮಾಡಿಸಿದ್ದರ ಹಿಂದೆಯೂ ಅವಳದೇ ಒತ್ತಾಯದ ಸಾನ್ನಿಧ್ಯವಿತ್ತು. “ಮಧು, ಮಂಗ್ಯಾನಹಂಗ ಹುಚ್ಚುಚ್ಚಾರ ಮಾಡಬ್ಯಾಡ. ಅವರೇನೂ ಹುಲಿ-ಕರಡಿಯಲ್ಲ. ನಿನ್ನನ್ನ ಹೆತ್ತವರಿದ್ದಾರ. ನಾಕಮಾತ ಅಂತಾರ, ಅಷ್ಟೇ ಪ್ರೇಮ ತೋರಿಸತಾರ. ಜಡ್ಡ ಬಿದ್ದರ ಮಂದಿ ಬಂದು ನೋಡೂದಿಲ್ಲ. ಮನೀಯವ್ರು ನೋಡತಾರ. ಸುಮ್ಮ ಹೇಳೂದು ಕೇಳು-ಊರಿಗೆ ಹೋಗಿ ಬಾ!” ಎಂದು ಮೂರು ದಿನದ ಹಿಂದಷ್ಟೇ ಹೇಳಿದ್ದಳು. ಗಂಜ್ ಚರ್ಚ್‌ನ ಹುಲ್ಲಿನ ಲಾನ್‌ಮೇಲೆ ಸಂಜೆಗಾವಳದಲ್ಲಿ ಮೈತಿಕ್ಕುತ್ತ ಮೈಕಾವು ಮಾಡಿಕೊಂಡಾಗಲೇ ಆಕೆ ಮಧುಕರನನ್ನು ಊರಿಗೆ ಕಳಿಸುವ ಪೀಠಿಕೆ ಹಾಕಿದ್ದಳು. +ಮಧುಕರ ಅದಕ್ಕಿಂತ ಮೊದಲು ‘ಯಾಕೋ ಭಾಳ ಬ್ಯಾಸರಿಕಿ, ಜೀವಕ ಹಳಹಳಕಿ, ಯಾವುದೂ ನಂದಂತ ಅನ್ನುಸುದಿಲ್ಲ, ತಲೀ ಚಿಟ್ಟ ಅನಲಿಕ್ಕೆ ಹತ್ತೇದ…’ ಎಂದೇನೊ ಹೇಳಿದ್ದ. ಅಂಥ ಅಯಿನಘಳಿಗೆಯಲ್ಲೇ ಕುಸುಮ ಈ ಸಲಹೆ ಕೊಟ್ಟಾಗ ವಿನಾಕಾರಣ ಅವಳ ಮೇಲೆ ಸಿಟ್ಟಾಗಿ ‘ಮಾರಿ ಮ್ಯಾಲಿನ ಮೊಡವೆ ಕೆರಕೋತ ಅದನ್ನ ನೀ ಯೇನ್ ಹೇಳಬೇಕಾಗಿಲ್ಲ! ಅದೇನು ನಂಗ ಹೋಳೀದ ವಿಚಾರೇನ ಅಲ್ಲ!’ ಎಂದು ಬೈದು, ಯೋಚಿಸಿದ-ಹಲವು ದಿನದಿಂದ ನಿರುದ್ದಿಶ್ಯವಾಗಿ ಅಸ್ವಸ್ಥನಾಗುತ್ತಿದ್ದೇನೆ. ಅಳುವಷ್ಟು ಭಾವುಕನಾಗುತ್ತಿದ್ದೇನೆ. ಇದೆಲ್ಲ ಕುಸುಮ ಗಮನಿಸಿಯೇ ಹಾಗೆ ಹೇಳಿದ್ದಾಳೆ. ಅದಕ್ಯಾಕೆ ಅವಳ ಮೇಲೆ ಚಿರಡಿಗೆ ಏಳಬೇಕು. ಕಡೆಗೂ ನನಗೆ ಬಂದ ವರ್ತಮಾನದೊಂದಿಗೆ ನಿರ್ಮೂಖನಾಗದೆ ಮುಖಾಮುಖಿಯಾಗಬೇಕಿರುವುದು; ಕಹಿಯೋ, ಹುಳಿ-ಮಧುರವೊ, ಅದನ್ನು ಜೇರ್ಣಿಸಿಕೊಳ್ಳಬೇಕಿರುವುದು – ನಾನೇ. ಖಂಡಿತಕ್ಕೂ! ಬಗೀಚದಿಂದೆದ್ದು ಬರುವಾಗ ಅಳುಕುತ್ತಲೇ ‘ಹಾಂಗಾರ ಊರಿಗೆ ಹೋಗಿ ಬಾ ಅಂತಿಯೇನು?’ ಕೇಳಿದ್ದ. ಕುಸುಮ ‘ನಾ ಜೀವದಿಂದುರುಮಟ ಮನಿ ಹೊಸ್ತಿಲಾ ತುಳ್ಯಾಂಗಿಲ್ಲ!’ ಎಂದು ಶಪಥ ಮಾಡಿ, ಇದೀಗ ಊರಿಗೆ ಹೋಗಲು ನಿಂತ ಮಧುಕರನತ್ತ ನೋಡಿ, ಜೋರಾಗಿ ಕೈ ತಟ್ಟಿ ಕಣ್ಣಲ್ಲಿ ನೀರು ತುಂಬಿಕೊಳ್ಳುವವರೆಗೂ ನಕ್ಕಳು. ಗೋಣು ಅಲುಗಿಸಿದಳು. ಆಗವಳ ಮುಡಿಯಲ್ಲಿದ್ದ ಮೊಗ್ಗುಮಲ್ಲಿಗೆ ಗಲಗಲಕ್ಕೆ ಒಂದೊಂದೇ ಉದುರಿದಾಗ ಅಸ್ವಸ್ಥನಾಗಿದ್ದ ಮಧುಕರ – ಅಹ! ಇವಳ ನಗು ಚೆಂದ. ಅಹ! ಇವಳ ಮಾತು ಚಂದ! ಇವಳು ನಿಲ್ಲುವುದು; ಕೂಡುವುದು.. ಎಲ್ಲ ಚೆಂದ ಎಂದುಕೊಳ್ಳುತ್ತ ಮೈಮರೆತು ನಿಂತ. ಕುಸುಮ ತಕ್ಷಣಕ್ಕೆ ಇವನ ಹಿಕಮತಿಯನ್ನು ಅರಿತಂತೆ ವ್ಯಾನಿಟಿ ಬ್ಯಾಗಿನಿಂದ ಪೆನ್ನು-ಕಾಗದ ತೆಗೆದು ‘ಹಂಗಂತ ಬರದು ಹಾಕಲ್ಲ! ಈಗಲೇ’ ಅಂದಾಗ ‘ಈಗ ಬ್ಯಾಡ. ಮನೀಗೆ ಹೋಗಿ ಒಬ್ಬಾಂವನ ಕೂತು ಆರಾಮ ಆಗಿ ಬರೀತೀನಿ’ ಎಂದು ಸುಳ್ಳು ಹೊಡೆದು ಮನೆಗೆ ಬಂದ. ಜೀವ ನಿಲ್ಲಲಿಲ್ಲ. +ಇಷ್ಟು ದಿನದಿಂದ ಇಂತಹ ಆಙ್ಞೆಯನ್ನು ಶಿರಸಾವಹಿಸಿ ಪಾಲಿಸಲು ಕಾಯುತ್ತಿದ್ದವನ ಹಾಗೆ ಕಾಗದ ಬರೆದು ಹಾಕಿದ. ಹಾಗೆಯೇ ಆಮೇಲೆ ಕೇಳಿ, ತೋರಿಸದಿದ್ದರೆ ಚೀರುದನಿಯಲ್ಲಿ ರಂಪಾಟಮಾಡುತ್ತಾಳೆಂದು ಕಾಗದದ ಪ್ರತಿಯೊಂದನ್ನು ಮಾಡಿಕೊಂಡು ವಿಧೇಯ ವಿದ್ಯಾರ್ಥಿ ಅಕ್ಕಾವರಿಗೆ ನೋಟ್ಸ್ ತೋರಿಸುವ ಹುಮ್ಮಸ್ಸಲ್ಲಿ ಕುಸುಮಳ ಕೈಯಲ್ಲಿಟ್ಟು ಅವಳ ಪ್ರತಿಕ್ರಿಯೆ ಏನೆಂದು ಕದ್ದು ನೋಡುತ್ತ ನಿಂತ. ಓದಿಯಾದ ಮೇಲೆ ‘ಛಲೋ ಬರಿದಿ. ಲೇಖದ ಬಿಗಿತ ಅದ. ಅಟ್ ದಿ ಸೇಂ ಟೈಮ್ ಇಮೋಶನಲ್ ಆಗಿನೂ ಅದ!’ ಎಂದಾಗ ಸಮಾಧಾನದ ನಿಟ್ಟುಸಿರಿಟ್ಟ. ನಾಲ್ಕು ವರ್ಷದ ಹಿಂದೆ ಮನೆಬಿಟ್ಟು ಬಂದಾದ ಮೇಲೆ ಮನೆಗೆ ಬರೆದ ಮೊದಲ ಪತ್ರವಾಗಿತ್ತದು! ಸಹಜವಾಗಿಯೇ ಉದಯೋನ್ಮುಖ ಕಥೆಗಾರನೊಬ್ಬ ಮೊದಲ ಕಥೆ ಬರೆದು, ತಪ್ಪು ಅಂಚೆ ವಿಳಾಸ, ಪೂರ್ಣ ಪಾವತಿಯಾಗದ ಅಂಚೆಚೀಟಿ ಅಂಟಿಸಿ, ಪತ್ರಿಕೆಯ ಉಪಸಂಪಾದಕಿ/ದಕ ಓದದೆ ವಾಪಸ್ಸು ಕಳಿಸಿದರೆ ಬದುಕಿರುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿ ಆತಂಕಗೊಂಡವನಂತಾಗಿತ್ತು ಮಧುಕರನ ಸ್ಥಿತಿ! ಇವನ ಕಳವಳದ ಮನವನ್ನು ಅರಿತಂತೆ ಕುಸುಮ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದಕ್ಕೂ ತಾನಾಗಿಯೇ ಮುಂದುವರಿಯದ, ದರವಂದಕ್ಕೂ ‘ಪುಷ್‌ಬ್ಯಾಕ್’ ಬಯಸುವ, (ಶಾಲೆಯಲ್ಲಿ ಹಿಂದಿನ ಸಾಲಲ್ಲಿ ಕೂತುಕೊಳ್ಳುವ!) ಮ್ರುದುಹುಡುಗ ಮಧುಕರನ ಕೈಯನ್ನು ಮೆತ್ತಗೆ ಅದುಮಿ ಅವನಿಗೆ ಮತ್ತಷ್ಟು ಉಮ್ಮೀದನ್ನು ತುಂಬಿ ಕಳಿಸಿದ್ದಳು. +ರೈಲಿನ ಟಿಕೇಟು ಬುಕ್ ಮಾಡಿಸಿ, ಹೋಗುವ ದಿನದವರೆಗೂ ನಿಶ್ಚಿಂತೆಯಿಂದಿದ್ದ ಮಧುಕರ, ಅಂದು ಬೆಳೆಗ್ಗೆ ಎದ್ದದ್ದೇ ಮಂಕಾಗಿ, ಟಿಕೇಟನ್ನು ಕ್ಯಾನ್ಸಲ್ ಮಾಡಿಸುವಷ್ಟು ಉದ್ವಿಗ್ನನಾದ. ಕೈಕಾಲು ಸೋತ ಹಾಗಾಗಿ, ತಲೆಗೆ ಚಕ್ರ ಬಂದು ಯಾಕಬೇಕು ಇಲ್ಲದ ಪಂಚೇತಿ ಅನ್ನಿಸತೊಡಗಿತು. ಮನಸ್ಸು ಹಳಾರವಾಗಲೆಂದು ಯೇಟ್ಸ್‌ನ ಪ್ರೇಮಗೀಮದ ಕವಿತೆಗಳನ್ನು ಓದುತ್ತ ಕುಳಿತ, ಸಾಧ್ಯವಾಗದಾದಾಗ ಹೊರಬಂದು ರಸ್ತೆಗೆ ಬಿದ್ದು ಕುಸುಮಳ ಕಛೇರಿಗೆ ಫ಼ೋನು ಮಾಡಿ ಒಂದೆರಡು ಸಲ ಎಂಗೇಜ್ ಬಂದಾಗ ಕಂಗಾಲಾದ. ಕೊನೆಗೆ ಲೈನ್ ಸಿಕ್ಕು – “ನಾ ಇವತ್ತ ರಾತ್ರಿ ಗಾಡೀಗೆ ಊರಿಗೆ ಹೊಂಟೀನಿ, ನೆನಪದ ಇಲ್ಲೋ?” ಎಂದು ಕೇಳಿದ್ದ. ಕುಸುಮ ಇವನ ಮಾತು ಕೇಳಿಕೊಂಡು ಮತ್ತೂ ಜೋರಾಗಿ ನಕ್ಕಳು. ‘ಅಲ್ಲೋ ನಿನ್ನೆ ಸಂಜೀಕಿ ಭೆಟ್ಟಿ ಆದಾಗ ಆ ಬಗ್ಗೆ ಮಾತಾಡಿಲ್ಲ? ಮತ್ಯಾಕ ಆತಂಕ? ಆಪಿ಼ಸು ಮುಗಿಸಿ, ನಿನ್ನ ಮನೀಕಡೆ ಬರ್ತೀನಿ. ಒಟ್ಟಿಗೆ ಸ್ಟೇಶನ್ನಿಗೆ ಹೋಗೂಣೂ. ಆತು…?’ ಅಂದಿದ್ದಳು. +ರಾತ್ರಿ ಸ್ಟೇಶನ್ನಿಗೆ ಬಂದು “ಇಲ್ಲದ್ದ ತೆಗೆದು ಜಗಳ ಆಡಬ್ಯಾಡ, ಹಳೇದು ಮರೆತು, ಈಗಿನ ಸುಖಾ ನೆಚ್ಚಿಕೊಂಡು ಬದುಕೂದು-ಸ್ವಸ್ಥರೀತಿಯಿಂದ ಎಲ್ಲಾನೂ ಸ್ವೀಕಾರಮಾಡೂದು ಕಲೀ ಮಂಗ್ಯಾ!” ಎಂದು ಬೀಳ್ಕೊಟ್ಟಳು. +* +* +* +ರಾತ್ರಿಯೆಲ್ಲಾ ನಿದ್ದೆಗೆಟ್ಟು ವಾಟರ್ ಜಂಕ್ಷನ್‌ಗಳಲ್ಲಿ ನಿಲ್ಲಿಸಿದಾಗೆಲ್ಲ ಸ್ಟ್ರೋಂಗ್ ಚಹಾ ಕುಡಿದು ಗರಗರ ಎನ್ನುವ ಗಂಟಲಲ್ಲಿ ಮಧುಕರ ಊರಿಗೆ ಹತ್ತಿದಾಗ ಇನ್ನೂ ಉಷಃಕಾಲ, ಕತ್ತಲು-ಬೆಳಕುಗಳ ನಡುವೆ ಜಗತ್ತು ನಿಂತಿತ್ತು. ರಾತ್ರಿಯೆಲ್ಲ ಬಿದ್ದ ಮಳೆಯಿಂದಾಗಿ ಮಣ್ಣು ಜಿಗುಟಾಗಿ ಕೆರಕ್ಕೆ ಕೆಸರು ಮೆತ್ತಿಕೊಳ್ಳುತ್ತಿತ್ತು. ಮನೆಯ ದೊಡ್ಡ ದರವಾಜಿ ತಳ್ಳಿ ಅಂಗಳ ಪ್ರವೇಶಿಸಿದ್ದೇ ಕಂಡದ್ದು- ಗಚ್ಚಿನಿಂದ ಬಕೇಟ್ಟಿಗೆ ನೀರು ತೋಡುತ್ತ ನಿಂತ ಮೋನಿದಾದಾ! ಅವನ ಬರಿಮೈಗೆ ಜೋತುಬಿದ್ದಿದ್ದ ಹನ್ನೆರಡೆಳೆ ಜನಿವಾರ ಸರಸರ ಜಾರಿ ಬರುವಾಗೆಲ್ಲ ಎಡಗೈಯಿಂದ ಎಳೆದು ಸಿಕ್ಕಿಸಿಕೊಳ್ಳುತ್ತಿದ್ದ ದಾದಾನ ಬೆನ್ನು ಹುರಿಯ ಬಳಿ ಪುಟ್ಟ ಗಂಟೊಂದಿರುವುದು; ಅದನ್ನು ತಾನಲ್ಲದೆ ಬೇರೆ ಯಾರೇ ಮುಟ್ಟಿದರೂ ಸಿಟ್ಟಿಗೇಳುತ್ತಿದ್ದುದು ಮಧುಕರನಿಗೆ ನೆನಪು ಬಂತು. ತನ್ನ ಕಡೆ ಬೆನ್ನು ಮಾಡಿ ನಿಂತ ಮೋನಿದಾದಾನನ್ನು ಮಾತನಾಡಿಸುವ ಪರಿ ತಿಳಿಯದೆ ಹುಂಹ್‌ಹೂಹ್‌ಮ್ ಎಂದ. ಮೋನಿದಾದಾ ನೀನು ಬಂದದ್ದು ಗೊತ್ತು ಎನ್ನುವಂತೆ ‘ಗಾಡೀ ಸಿಟಿ ಊದಿದ್ದು ಕೇಳಸ್ತು. ಹೈರಾಣಾಗಿ ಬಂದಿರತೀಂತ ಸ್ನಾನಾ ಮಾಡಲಿಕ್ಕೆ ನೀರು ಬೆರಸತಿದ್ದೆ’ ಎಂದು ತನ್ನ ಕಾರ್ಯದಲ್ಲಿ ತಾನು ತೊಡಗಿದಾಗ ಮೋನಿದಾದಾನ ಮಾತಿಗೆ ಪ್ರತಿಕ್ರಿಯೆ ಹವಣಿಸಿ ಸಾಧ್ಯವಾಗದೆ ‘ಹೌದು, ಇವತ್ತ ಕರೆಕ್ಟ ಟಾಯಿಮಕ್ಕ ಟಚ್ ಕೊಟ್ಟಾನ…ಅವ್ವ ಎಲ್ಲಿ ಕಾಣಸೊಳ್ಳಲ್ಲ?’ ಎಂದು ಕೇಳಿದ. ‘ಈಗ ಥಳಿ ರಂಗೋಲಿ ಮಾಡಿ ಹೋದ್ಳು. ಹಿತ್ತಲದಾಗ ಹಾಲ ಹಿಂಡಲಿಕ್ಕೆ ಹತ್ಯಾಳ ಕಾಣ್ತದ, ನೀ ಹೋಗಿ ಮಾರಿ ಗಲಬರಿಸಿಕೋ ಬಿಸಿನೀರು ಬಚ್ಚಲಕೆ ತರತೇನಿ..’ ಎಂದು ಮೋನಿದಾದಾ ಭಾರದ ಬಕ್ಕೆಟ್ಟನ್ನು ಝೋಲಿ ಹೊಡೆಯುತ್ತ ಬಚ್ಚಲಿಗೊಯ್ವದನ್ನು ನೋಡುತ್ತ ಮಧುಕರ ಅಂದುಕೊಂಡ; ಮೋನಿದಾದಾ ಮದಲಿನಂಗೆ ಇದ್ದಾನ, ಚೂರು ಬದಲಾಗಿಲ್ಲ. ಹಿಂದಿದೆಲ್ಲಾ ಮರತಾನ ಕಾಣಸ್ತದ. ಆದರ ನಾಯಾಕ ನಾಕವರ್ಷದ ಹಿಂದಿನ ಅವನ ಬೈಗುಳಾ ಮರತಿಲ್ಲ? ನಿನ್ನೆ ರಾತ್ರಿ ಮನೆಬಿಟ್ಟು ಮುಂಜಾನೆ ಬಂದಂವನಂತೆ ನನ್ನನ್ನು ಸಹಜವಾಗಿ ಸ್ವೀಕರಿಸಿದ ಮೋನಿದಾದಾ ಈ ವರ್ಷಗಳಲ್ಲಿ ನನ್ನ ಗೈರುಹಾಜರಿಯ ಶೂನ್ಯವನ್ನು ಅನುಭವಿಸಿಯೇ ಇಲ್ಲವೆ? ಅಥವ ಇಂಥಾವೆಲ್ಲ ಇದ್ದದ್ದೇ-ನಾನೂ ನಿನ್ನಂಥ ಹರೇದಾಗ ರಗಡ ಮಾಡೀನಿ. ಆತ್ಯು-ಹೋತ್ಯು ಈಗ್ಯಾಕವೆಲ್ಲಾ-ಎಂಬುದವನ ನಿಲುವಿರಬಹುದು ಇಂದುಕೊಳ್ಳುತ್ತ ಮಧುಕರ ಹಿತ್ತಲಿಗೆ ಅವ್ವನನ್ನ ಹುಡುಕಿಕೊಂಡು ಹೊರಟ. +ಒಂದು ಅಸಹನೀಯ ಕತ್ತಲಲೋಕದಿಂದ ಕಣ್ಣಿಗೆ, ಆತ್ಮಕ್ಕೆ, ಮನಸ್ಸಿಗೆ ಬೆಚ್ಚಗಿನ ಅನುಭವ ನೀಡುವ ನಂದಾದೀಪದ ಬೆಳಕಿನ ಲೋಕಕ್ಕೆ ಕಾಲಿಟ್ಟು ಅನುಭವವನ್ನು ವರ್ಣಿಸಲಾಗದೆ ಮಾತುಕಳೆದುಕೊಂಡಂತಾದ ಮಧುಕರ ಲೀನತೆಗೆ ಮೊದಲಿನ ಅಸ್ವಸ್ಥತೆ, ಮೈಯೆಲ್ಲ ಸಣ್ಣಗೆ ನಡುಗುವಿಕೆಗೆ ಪಕ್ಕಾದ. ಮನಸ್ಸಿಗಾವರಿಸಿದ್ದ ನಿಷ್ಕಾರಣ ಬಲಹೀನತೆ, ಕುಂದಿದ ಆತ್ಮಸ್ಥೈರ್ಯವೆಲ್ಲ ಗೊತ್ತಿಲ್ಲದಂತೆ ಮರೆಯಾಗಿದ್ದವು. ಎಲ್ಲ ತಾನು ಊಹಿಸಿದಂತಿರದೆ, ಎಷ್ಟು ಸಹಜವಾಗಿತ್ತು ಎಂದು ನೆನೆಸಿಕೊಂಡೇ ಅವನ ಮನಸ್ಸು ನಿರಾಳವಾಗಿತ್ತು. ಅವನು ಅಂದುಕೊಂಡದ್ದಾದರೂ; ಮೋನಿದಾದಾ “ಮತ್ಯಾಕ ಈ ಮನಿ ಹೊಸ್ತಲಾ ತುಳದ್ಯೋ? ಆಡಿದ್ದನ್ನ ಮರೀಯುದಕ್ಕ ನಿನಗ ಶರಂ ಆಗುದಿಲ್ಲ?” ಎಂದು ಹೀಯಾಳಿಸುತ್ತಾನೆಂದು! ಅದನ್ನು ನೋಡಿ ಅವ್ವ, ಯಾರ ಪಕ್ಷವೂ ವಹಿಸುವುದಾಗದೆ ಬಾಯಿಗೆ ಸೆರಗಿನ ಮುಟಿಗೆ ತುರುಕಿ ಬಿಕ್ಕುತ್ತಾಳೆಂದು! ಗೋಪಾಲ “ಈ ಪರಿ ದಾದಾನ್ನ, ಅವ್ವನ್ನ ಹುರವಳಿಸಿ ಮುಕ್ಕಿ ಏನ ಪಡದ್ಯಪಾ?” ಎಂದು ಹಂಗಿಸುತ್ತಾನೆಂದು! ಅದನ್ನು ನೋಡಿ, ಸೂಟಿಗೆ ಬಂದ ಪುಷ್ಪಕ್ಕ ಕಕ್ಕಿಯ ಮಕ್ಕಳು ಮೂಲೆಯಲ್ಲಿ ನಿಂತು “ಈ ಮಧುಕರ ಕಾಕಾ ಏನ ಕೆಟ್ಟ ಇದ್ದಾನಪಾ!” ಎಂದು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾರೆಂದು! ಆದರೆ ಅಪ್ಪಿ-ತಪ್ಪಿಯೂ ಈ ಒಂದೂ ನಡೆಯಲಿಲ್ಲ. +ಎಲ್ಲ ಎಷ್ಟು ಸಹಜವಾಗಿತ್ತು! +ಅವ್ವ-ಮೋನಿದಾದಾ! ಮೊದಲಿನ ಹಾಗೇ ಇದ್ದರು-ತುಸು ಕೂದಲು ಬೆಳ್ಳಗಾಗಿರುವುದನ್ನು ಬಿಟ್ಟರೆ, ಅವ್ವನಿಗಂತೂ ಮಧುಕರ ಇನ್ನೂ ಅಂಗಿ, ಚೊಣ್ಣ ತೊಡುವ ಗಿಳಲಿನ ಮೂತಿಯಿಂದ ಹಾಲುಕುಡಿವ ಎಳೆಗೂಸೆ. ಅತ್ತಾಗ ಕರೆದು ರಮಿಸಿ-ಬೆಲ್ಲದ ಹಳಕು; ಪುಠಾಣಿ ಕಿಸೆಗೆ ತುರುಕುತ್ತಿದ್ದ ಹುಡುಗನೆ! +ಎಲ್ಲ ಎಷ್ಟು ಸಹಜವಾಗಿತ್ತು! +ಇಲ್ಲಿ ಈ ವರ್ಷಗಳಲ್ಲಿ ಏನೂ ಆಗಿಲ್ಲ; ನೀನೆಂದೂ ನಮ್ಮ ಕೂಡ ಜಗಳಾಡಿ ಮನೆ ತೊರೆದು ಹೋಗಿಲ್ಲ. ಯಾವತ್ತೂ ಇಲ್ಲೇ ಇದ್ದೀ ಹಾಗೂ ಎಂದಿನಂತೆ ಮುಂಜಾನೆ ಎದ್ದದ್ದೇ ದಾದಾನೊಂದಿಗೆ ದೇವರಪೂಜೆಗೆ ತುಳಸಿತರಲು ತುಳಸಿ ತೋಟಕ್ಕೆ; ಅಡುಗೆಗೆ ರಾಜಗಿರಿ, ಹತ್ತರಿಗಿ ಸೊಪ್ಪು ತರಲು ಹೊಲಕ್ಕೆ ಹೋಗಿದ್ದಿ, ಅಷ್ಟೇ…ಅವ್ವ, ಮಧುಕರನತ್ತ ನೋಡಿದಾಗಲೆಲ್ಲ ಅವನಿಗೆ ಹೀಗನಿಸುತ್ತಿತ್ತು! ಹಳ್ಳಿಗೆ ಹೋದ ದಿನದಿಂದ ಮಧುಕರನಿಗೆ ವಿಶೇಷವೆಂದು ಸಾಬುದಾನಿ ಖೀರು, ಶ್ರೀಖಂಡ ಪುರೆ, ಅಪ್ಪೀಕರದ ಪಾಯಸ…ವೆಂದು ಅವ್ವ ಮಾಡಿ ಹಾಕಿದ್ದೇ ಹಾಕಿದ್ದು. ಊಟವಾದ ಮೇಲೆ ಮೋನಿದಾದಾ ತಟ್ಟೆಯಲ್ಲಿ ಹೋಳಡಿಕೆ-ಎಲೆ, ಕಾಚು, ಏಲಕ್ಕಿ, ಲವಂಗ ಇಟ್ಟುಕೊಂಡು ಕಣ್ಣುಮುಚ್ಚಿ ಅದರ ರುಚಿ ಸವಿಯುವುದು… +ಎಲ್ಲ ಎಷ್ಟು ಸಹಜವಾಗಿತ್ತು! +ಅಸಹಜವಾಗಿ ವರ್ತಿಸಿದ್ದು ತಾನು! ತಿಳಿದುಕೊಳ್ಳಲು; ಬುದ್ಧಿ ಭೆಟ್ಟಿಯಾಗಲು ನಾಲ್ಕು ವರ್ಷ ಹಿಡಿದವು. ಶಹರದ ಯಾತನಾಮಯ ನಾಲ್ಕು ವರ್ಷ, ಕಡಿಮೆ ಏನಲ್ಲ. ಬದುಕಿನ ವಿವಿಧ ರುಚಿಗಳನ್ನನುಭವಿಸಲು ಬಂದವನಿಗೆ ಸಿಕ್ಕಿದ್ದು ಧಾಬಾಗಳಲ್ಲಿನ ಹಳಸಿದ ಅಡುಗೆ, ನಾಲಿಗೆ ಜಂಗುಹತ್ತಿಸುವ ಮೆಸ್‌ಗಳಲ್ಲಿನ ಪಾಪಡ್-ತಿಳಿಸಾರು; ರಸ್ತೆಬದಿ ರಗಡಾಪಟ್ಟಿ ಮತ್ತು ಪಾವ್, ಕಾಫಿ ಹೌಸ್‌ನ ಒಣಗಿ ನಾಯಿಯಾದ ಬ್ರೆಡ್ ಟೋಸ್ಟ್. ಆಕಾಂಕ್ಷೆ ಬಹಳವಿದ್ದರೂ ಉಳಿಯಲಿಲ್ಲ. ಮೋನಿದಾದಾ-ಅವ್ವರನ್ನು ಮರೆತು ಹೊಸಮುಖ ಒಗೆತನ ಸಂಪಾದಿಸುವುದು ಆಗಲಿಲ್ಲ. ದಿಗ್ಮೂಢನನ್ನಾಗಿಸಿದ ನಗರದ ಮುಂಜಾವಿನಿಬ್ಬನಿ, ರಸ್ತೆದೀಪ, ಹೊಗೆಮಂಜು, ಸಮಯದ ಪರಿವೆಯಿಲ್ಲದೆ ಸುರಿವ ಜಿನಿಜಿನಿ ಮಳೆ-ಫ಼ಾಗ್…ಎಲ್ಲ ಆಕರ್ಷಣೆ ಕಳೆದುಕೊಂಡು, ಸ್ಕೈ ಸ್ಕೇಪರುಗಳು ಅತಿ ಕುಬ್ಜವಾಗಿ ಅವುಗಳತ್ತ ದಿಟ್ಟಿಸುವ ಉಮ್ಮೇದು ಹೊರಟುಹೊಯಿತು. ಇಲ್ಲಿನ ಜನಗಳ ಕಣ್ಣಲ್ಲೂ ಅದೇ ಮಾಮೂಲೀ ಆತಂಕ-ಖಾಲಿತನ, ಏನನ್ನೊ ಹುಡುಕುವ ಕುತೂಹಲ ಇದ್ದೇ ಇದ್ದವು! ಮನುಷ್ಯ ಎಷ್ಟೇ ದೂರ ಹೋದರೂ, ಏನೆಲ್ಲ ಬುದ್ಧಿ ಪ್ರದರ್ಶನದ ತಂತ್ರಗಳನ್ನು ಕಂಡುಕೊಂಡರೂ ಒಂದು ಪರಿಮಿತಿಯನ್ನು ಮೀರುವುದಾಗುವುದೇ ಇಲ್ಲ. ಅವನ ಸ್ಥಾಯಿಭಾವವೇ ವಿಶಾದ, ಅನಾಥತೆ, ಒಂಟಿತನ ಇರಬಹುದು. +ಶಹರದ ಯಾತನಾಮಯ ನಾಲ್ಕು ವರ್ಷಗಳು ಕಡಿಮೆಯೇನಲ್ಲ. “ಜೀವನಕ್ಕೆ ಎರಡು ಮುಖ; ಒಂದು ಸುಖ, ಒಂದು ದುಃಖ. ನಾಳಿನರಿವು ಯಾಕೆ ಸಖ?” +ಹಾಗೆಂದು ನಂಬಿಕೊಂಡು ಬಂದ ಹೊಸತು ದುಡಿಮೆಯೊಂದೇ ಪ್ರಗತಿಗೆ ಮಾರ್ಗವೆನ್ನುವ ಸರ್ಕಾರದ ಘೋಷಣಾವಾಕ್ಯ ಗೀತೆಯಾಯ್ತು. ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸೆಕೆಂಡ್ ಶಿಫ಼್ಟ್; ನೈಟ್‌ಶಿಫ಼್ಟ್ ಓವರ್ ಟೈಮ್ ಮುಗಿಸಿದ್ದಾಯ್ತು. ದೇವರು, ದಿಂಡರು, ನಂಬಿಕೆ ಗಾಳಿಗೆ ಹೋಗಿ, ಆಧ್ಯಾತ್ಮವೆನ್ನುವುದು ಅಸಾಧ್ಯವೆಂಬ ಕಮ್ಯೂನಿಸ್ಟ್ ನಿಲುವಿಗೆ ಬಂದದ್ದು-ಇದೇ ಮಧುಕರನೆ ಅಲ್ಲವೆ? ದುಡಿಮೆ-ಕ್ರಾಂತಿ! ಪರಮೋಚ್ಛ ಗುರಿಗಳು! ಯಾವುದೋ ಸಬರ್ಬಿನಲ್ಲಿ ಪಾಯಿಖಾನೆಯೂ ಇಲ್ಲದ ಖೋಲಿ ತೆಗೆದು ಕಿಟಕಿಮೇಲೆ ಯರಗೂರೇಶ್ವರನ ಬದಲು ಮಾವೋನ ಫ಼ೋಟೋ ತೂಗು ಹಾಕಿದ್ದು-ಪರಿಚಯದ ಹಿರಿಯರೊಬ್ಬರ ಮನೆಗೆ ಪಕ್ಷದ ಕಾಮ್ರೇಡನೊಂದಿಗೆ ಹೋದಾಗ ಹಿರಿಯರು ಸಹಜವಾಗಿ ಕಾಮ್ರೇಡನಿಗೆ-ಏನು ಮಾಡಿಕೊಂಡಿದ್ದೀರಿ? ಎಂದು ಕೇಳಿದಾಗ, ಆತ “ಪ್ರೊಫೆಶನಲ್ ರೆವ್ಯೂಲ್ಯುಶನರಿ” ಎಂದು ಹೇಳಿದ. ಅದಕ್ಕೆ ಹಿರಿಯರು “ಅದು ಸರಿ ಮಾರಾಯಾ, ಊಟಕ್ಕೆ ಏನು ಮಾಡ್ತೀಯಂತ ನಾನು ಕೇಳಿದ್ದು” ಎಂದರೆಂದು ಆಮೇಲೆ ಅವರ ಮನೆಗೆ ಹೋಗುವುದನ್ನು ಬಿಟ್ಟಿದ್ದು-ಇದೇ ಮಧುಕರನೆ ಅಲ್ಲವೆ? ಮನುಷ್ಯರ ಫ಼್ಯೂಡಲ್ ಭಾವನೆಗೆ ಅದುಮಿಟ್ಟ ಲೈಂಗಿಕ ಆಶಯಗಳೆ ಕಾರಣ ಎಂದು ಚಿಂತಿಸಿದ್ದೂ ಇದೇ ಮಧುಕರನೇ ಅಲ್ಲವೆ? +ಹೌದು-ಇದೇ ಮಧುಕರನೆ. ಆದರೂ ಅವನಿಗೆ ಆಶ್ಚರ್ಯ; ಸೋಜಿಗವೆನಿಸುತ್ತದೆ. +ವಾಲೆಂಟರಿ ಸಂಘಗಳ ಹುಡುಗಿಯರೊಂದಿಗೆ ಖೈಬರ್, ಪಿಕಾಕ್‌ಗಳ ಮಂದ ಬೆಳಕಲ್ಲಿ ಸ್ಟೀವಿವಾಂಡರ್ ಸಂಗೀತ ಆಲಿಸುತ್ತ ನೊರೆಭರಿತ ಬಿಯರು ಸೀಪುವಾಗ; ಇದುರಿಗಿರುವ ವ್ಹಿಸ್ಕೀ ಗ್ಲಾಸಿನಲ್ಲಿ ಇಷ್ಟಿಷ್ಟೇ ಕರಗುತ್ತ ನಗರದ ರಾತ್ರಿಗೆ ಮೆರುಗುತರುವ ಐಸ್‌ಕ್ಯೂಬ್ ಅನ್ನೇ ನೋಡುತ್ತ ಮೈಮರೆತಾಗ ಒಂದೋ-ಮೋನಿದಾದಾ ಮುಂಜಾನೆ ದೇವರ ಖೋಲಿಯಲ್ಲಿ ಹೇಳುತ್ತಿದ್ದ ಮಂತ್ರ; ಇಲ್ಲ – ಪಾತರಗಿತ್ತಿ ಪಕ್ಕಾ, ನೋಡಿದೇನ ಅಕ್ಕಾ ಹಾಡು, ಅಥವಾ, ಭಾಂಡೀ ತೊಳೆಯುತ್ತ ಹರಿಕಥಾಂರುತಸಾರ ಹೇಳುವ ಅವ್ವನ ಮುಖ ಅದು ಹೇಗೆ ನೆನಪಿಗೆ ಬರುತ್ತಿದ್ದುವೆಂದು. ಬಹುಶಃ ವಿವಶತೆ ಶಕ್ಯವಾಗಿರುವುದು ಆಲ್ಕೋಹಾಲಿಗೆ ಸಾಧ್ಯವಿಲ್ಲ; ಪ್ರೀತಿಗೆ ಮಾತ್ರ ಸಾಧ್ಯವೆಂದು ಆಗಲೇ ಅನ್ನಿಸಿದ್ದು. ತಿಂಗಳ ಮೊದಲ ವಾರದಲ್ಲಿ ಬ್ರಿಗೆಡ್ಸ್‌ನ ಸೆಲೆಕ್ಟ್ ಬುಕ್ ಸೆಂಟರ್‌ಗೆ ಹೋಗಿ ಮೂರ್ತಿಯವರಲ್ಲಿ ಸಿಂಗರ್-ಗಾರ್ಸಿಯಾರ ಪುಸ್ತಕ ವಿಚಾರಿಸುವುದು; ಮುಂಪಾವತಿ ಮಾಡಿ ಬರುವುದು. ರಜಾ ದಿನದ ಸಂಜೆ ಪಿ಼ಲ್ಮ್ ಸೊಸೈಟಿಯಲ್ಲಿ ಕೋಸ್ಟಾ ಗವೇರಾ, ಗೊಡಾರ್ಡ, ಬರ್ಗಮನ್‌ರ ಚಿತ್ರಗಳ ತಂತ್ರದ ಕುರಿತು ಚರ್ಚಿಸುವುದು, ಸಿಲ್ಲಿಕವಿಯ ಸಿಲ್ಲಿಜೋಕಿಗೆ ನಗುವುದು… ಎಲ್ಲ ಎಷ್ಟು ನೀರಸವೆನ್ನಿಸಿ ಇವೂ ರುಟೀನ್ ಆಗುತ್ತಿವೆ ಎಂದು ಅವುಗಳ ಬಗ್ಗೆಯೂ ಅನಾಸಕ್ತಿ ಹುಟ್ಟಿತು. ಡ್ಯೂಟಿ ಮುಗಿಸಿ ಬಸ್‌ಸ್ಟಾಪಿಗೆ ಹೋದರೆ ಒಣಗಿದ ತುಟಿಗಳಿಗೆ ಅತಿಯಾದ ಬಣ್ಣ ಮೆತ್ತಿಕೊಂಡು ಗೋಣು ಎತ್ತಿ ಎತ್ತಿ ಪದೇ ಪದೇ ರಿಸ್ಟ್‌ವಾಚ್ ನೋಡಿಕೊಳ್ಳುತ್ತ ಅಕಾಲ ವೃದ್ಧಾಪ್ಯ ತಲುಪಿರುವ ಬಾಲೆಯರ ತುಟಿ ಒದ್ದೆ ಮಾಡಲು ಯಾರೂ ಹುಟ್ಟಿಲ್ಲವೆ ಅಂತನ್ನಿಸುವುದು. ಗಾಂಧಿಬಜಾರಿನಲ್ಲಿ ವಿದ್ಯಾರ್ಥಿಭವನದ ದೋಸೆ ತಿನ್ನಲೆಂದೇ ಹುಟ್ಟಿದ್ದೇವೆಂದು ಭ್ರಮಿಸಿ, ಸೀಟಿಗಾಗಿ ಪರದಾಡಿ, ಸಿಗದಾದಾಗ ಗರ್ಭಿಣಿ ಹೆಂಡತಿಯ ಕಡೆಗೆ ಪೆಚ್ಚಾಗಿ ನೋಡುವ ಗುಮಾಸ್ತರಿಗೆ ದೇವರು ಒಂದು ದೋಸೆಯ ಕಾರ್ಖಾನೆ ತೆಗೆದುಕೊಡಬಾರದೆ ಎಂದೆನ್ನಿಸುವುದು. ಮೂರನೆ ಜಗತ್ತಿನ ಎಡಸಾಹಿತ್ಯದ ಕುರಿತು ಮಾತಾಡಿ ವೇದಿಕೆಯಿಳಿದದ್ದೇ ಮುಂದಿನ ಸೋಫ಼ಾ ಸೀಟಲ್ಲಿ ಕೂತ ಹುಡುಗಿಯ ಬ್ರೇಸಿಯರ್ಸ್ ಬಗ್ಗೆ ಹರಟುವ ಸೆಮಿನಾರುವಾದಿಗಳನ್ನು ಕಂಡಾಗ ಆ ಕಂಪೆನಿಯ ಸೇಲ್ಸ್‌ರೆಪ್‌ರನ್ನಾಗಿ ಇವರನ್ನು ಭರ್ತಿ ಮಾಡಿದರೆ ಹೇಗೆ ಅಂತನ್ನಿಸುವುದು. +ಒಬ್ಬರಲ್ಲಾದರೂ ಸಹಜ ನಗು, ಕಣ್ಣಲ್ಲಿ ಜೀವದ ಹೊಳಪು? ಇಲ್ಲ. ಮೋನಿದಾದಾನೊಂದಿಗೆ ಅನವಶ್ಯಕ ಜಗಳಾಡಿ ಬಂದಿರದಿದ್ದರೆ ಕಡೆಯಪಕ್ಷ ಎರೆ ಹೊಲವನ್ನಾದರೂ ನೋಡಿ ಬದುಕಬಹುದಿತ್ತು ಎಂದೆಲ್ಲ ಯೋಚಿಸುವ ಮಧುಕರ ನಗರದ ರಾತ್ರಿಯ ಛಳಿ, ಅಕಾಲಿಕ ಜಿನುಮಳೆ-ಫ಼ಾಗ್ ಎಲ್ಲ ಸುಪ್ತವಾಗಿ ದ್ವೇಷಿಸಲು ತೊಡಗಿದಾಗಲೇ ವಿವಶತೆ ಹುಡುಕಿಕೊಂಡು ಬಂದಿತ್ತು. +ಪ್ರೀತಿಯೊಂದರಿಂದಲೇ ಚೇತನದ ಉದ್ಧಾರವೆಂದು ಮನವರಿಕೆಯಾದಾಗಲೇ ಕುಸುಮ ಬಂದಳು. ಗುಲಾಬಿ ಪಕಳೆ ಬಣ್ಣದ ಸೀರೆ, ಅದೇ ತೆಳು ರಂಗು ತುಟಿಗೆ, ತಿಲಕ ಹಣೆಗೆ, ಸ್ಟೆಡ್ ಕಿವಿಗೆ-ಮ್ಯಾಚಿಂಗ್ ಬಣ್ಣ ಕುಪ್ಪುಸಕ್ಕೆ, ಕಂಡದ್ದೇ ನನ್ನ ನಿನ್ನ ಬೆನ್ನಹಿಂದೆ ವಿಶಾಲವ್ರುಕ್ಷ ಬೆಳೆದಿದೆ ಎಂಬಂತೆ ಬೆನ್ನಿಗೆ ಹರಹಿದ ಕೂದಲನ್ನೊಮ್ಮೆ ಅಲುಗಿಸಿ ನಕ್ಕಳು. ಇಂಥ ನಗು ನೋಡಿಲ್ಲವೆಂಬಂತೆ ಮಧುಕರ ಪರವಶನಾದ, ಅವನ ಕೊರತೆಗಳೆಲ್ಲ ಆ ನಗು, ಪ್ರೀತಿಯಿಂದ ಆಡಿದ ಪರಿಚಯದ ಮಾತುಕತೆ ನೀಗಿದವು. ಪ್ರೀತಿ ಮಾತ್ರ ಕೊರತೆಯನ್ನು ಸೌಂದರ್ಯವೆಂದುಕೊಂಡು ಗೌರವಿಸುವುದು. +ಕುಸುಮ – ಇಂಟೆಲಿಜೆಂಟ್ ಆಂಡ್ ಅಂಡರ್‌ಸ್ಟಾಂಡಿಂಗ್! ಎಂದು ಮಧುಕರ ಉಬ್ಬಿದಾಗಲೇ-ನಗರಕ್ಕೆ ರಜಾದಿನದಾಗ ಮಾತ್ರ ಬರಬೇಕು. ಐರನಿ ಅಂದ್ರ ನಾವೆಲ್ಲಾ ಸೂಟಿವಳಗ ಹಳ್ಳಿಗೆ ಹೋಗ್ತೀವಿ. ಹಳ್ಯಾಗ ಇರಬೇಕಾದ ವ್ಯಾಳ್ಯಾದಾಗ ಶಹರದಾಗ ಇರತೇವಿ- ಎಂದು ಕುಸುಮ ಹೇಳಿದ್ದಳು. ಫ಼್ರೆಂಚ್ ಸಿನೆಮಾ ಫ಼ೆಸ್ಟಿವಲ್-ಮೆಮೋರಿಯಲ್ ಹಾಲ್. “ಸಿನೆಮಾದ ಕೊನೆ ಎಷ್ಟು ನೆಚುರಲ್ ಇತ್ತಲ್ಲಾ? ಪ್ರತಿಕಲಾವಿದ ಅತ್ರುಪ್ತ; ತನ್ನ ಕಲಾಕ್ರುತಿ ಪರಿಪೂರ್ಣವನ್ನಾಗಿ ಮಾಡೋದರಲ್ಲಿಯೇ ಅವನ ತನ್ಮಯತೆ ಅನ್ನೂದು ಎಷ್ಟು ಛಲೋ ಅದಲ್ಲ! ಅದೂ ಕಥಾನಾಯಕಿ ಎಂಥ ಕಲಾವಿದೆ-ಇನ್ನಷ್ಟು ಇನ್ನಷ್ಟು ರುಚಿಯಾಗಿ ಅಡುಗೆ ಮಾಡೋದರಲ್ಲಿ; ಬೀನ್ಸ್ ಅನ್ನು ಸಣ್ಣಗೆ ಹೆಚ್ಚೋದರಲ್ಲಿ ಅವಳ ಪರಿಣಿತಿ! ಹಾಗೆ ಬದುಕೋದು ಎಷ್ಟು ಚೆಂದ ಅಲ್ಲ?’ ಕುಸುಮ, ಮಧುಕರ -ಹೌದು, ನೀವು ಹೇಳೂದು ಬರಾಬ್ಬರಿ ಅದ. ಆದರ ನಮ್ಮ ಟ್ರಾಜಿಡಿ ಅಂದ್ರ ನಮ್ಮಂಥವರಿಗೆ ಇರೂತನಾ ಇದ್ದದ್ದರ ಕಿಮ್ಮತ್ತು ಗೊತ್ತಾಗುದಿಲ್ಲ. ಗೊತ್ತಾದಾಗ ಬೇಕಾದದ್ದು; ಬಯಸಿದ್ದು ಎರಡೂ ಇರೂದಿಲ್ಲ, ಅಂದಿದ್ದ. ಕುಸುಮಳಾದರೂ ಇವನ ಕವಿತೆಯಂಥ ಅಮೂರ್ತ ಮಾತುಕತೆಗೆ ತಲೆದೂಗಿದ್ದಳು, ಅರ್ಥವಾಗದಿದ್ದರೂ ಇಂಟೆಲಿಜೆಂಟ್ ಆಂಡ್ ಅಂಡರ್‌ಸ್ಟ್ಯಾಂಡಿಗ್! +ಒಳಗೇ ಚಿಗುರೊಡೆಯುತ್ತಿದ್ದ ಮೋನಿದಾದಾ-ಅವ್ವರನ್ನು ನೋಡುವ ಬಯಕೆಯನ್ನು ಈ ಕುಸುಮಿ ಬರೂತನಾ ನಗರದ ಬೀದಿಗಳು ಅದುಮಿಟ್ಟಿದ್ದವು, ಇಲ್ಲ ತಾನೇ ಅಮುಕುವಂತೆ ಪ್ರೇರೇಪಿಸುತ್ತಿದ್ದೆ ಎಂದುಕೊಂಡಿರುವ ಮಧುಕರ ಶಹರದ ಏಕಾಂಗಿ ವರುಷಗಳನ್ನು ಮಾಗಿಕಾಲ ಎಂದು ತಿಳಿದಿದ್ದಾನೆ. ತನ್ನಲ್ಲಿನ ಹೂ, ಹೊಗರು, ಒಗರು-ಚಿಗುರು ಚಿಮ್ಮಿಸಲು ಚೈತ್ರಳಾಗಿ ಕುಸುಮ ಬರಲೇಬೇಕಿತ್ತು. ಅದಕ್ಕಾಗಿ ಈ ಮಾಗಿಯೂ ಬೇಕೇಬೇಕಿತ್ತು ಎಂದು ತರ್ಕಬಲ್ಲ ಮಧುಕರ ವಾದಿಸಬಲ್ಲ, ಬೇಕಾದರೆ! +* +* +* +ಸೂಟಿ ಮುಗಿಯಲು ಕೇವಲ ವಾರಕಾಲ ಮಾತ್ರವಿದೆ ಎಂದಾಗ ಮಧುಕರನಿಗೆ ಅವ್ಯಕ್ತ ಕಳವಳ ಪ್ರಾರಂಭವಾಯಿತು. ಹಳ್ಳಿಗೆ ಬರುವ ಮೊದಲು ಆದ ಹಾಗೇ! ಇಲ್ಲಿಗೆ ಕಾಲಿಡುವುದು ಹೇಗೆಂಬ ಅಳುಕಿಂದ ದಣಿದವನಿಗೆ ಹಳ್ಳಿಯಿಂದ ಆ ಹಾಳುನರಕಕ್ಕೆ ಹೋಗುವುದು ಹೇಗೆಂಬ ಚಿಂತೆ ಪ್ರಾರಂಭವಾಯಿತು. ಕಡೆಯವರೆಗೂ ತಾನಿಲ್ಲಿ ಇರುವುದು ಅಸಾಧ್ಯವೆಂಬ ನೋವೇ ಅವನಿಗೆ ಹಳ್ಳಿಯ ಬಗೆಗಿನ ವ್ಯಾಮೋಹ ಹೆಚ್ಚಿಸಿತ್ತು. ಅಲ್ಲಿದ್ದಾಗ ಇಲ್ಲಿನ ತುಡಿತ ಕನವರಿಕೆಯ ಮಟ್ಟ ಮುಟ್ಟಿ, ಇಲ್ಲಿ ಬಂದಾಗ ಇಲ್ಲಿರುವುದರೊಂದಿಗೆ ಅಲ್ಲಿನದರ ಸೆಳೆತ ಅತಿಯಾಗುವುದರ ಬಗೆಯೇನು ಎಂಬುದನ್ನವನು ಯೋಚಿಸಿ ಹಣ್ಣಾದ. ಆದರೆ ಹಾಗವನು ಇಲ್ಲೇ ಇರಬೇಕಾಗಿ ಬಂದರೆ ಆಗಿನ ಅಭಿಪ್ರಾಯ; ನೋವಿನ ಬಗೆಯೇ ಬೇರೆಯಾಗಿರುತ್ತಿತ್ತೇನೋ. ಅದೂ ಅಲ್ಲದೆ ಅವನ ಯಾವತ್ತಿನ ನಿರಾಳ ಕನಸುಗಾರಿಕೆಯೇ ಅವನ ಎಲ್ಲಾ ನೋವಿನ ಮೂಲವಾಗಿ; ಸಂಬಂಧಗಳಲ್ಲಿನ ತೊಡಕು, ಏಳು-ಬೀಳು ಯೋಚಿಸದೆ ಮತ್ತಷ್ಟು ವ್ಯಾಕುಲತೆಗೆ ಮೂಲವಾಗಿ ಕೂರುತ್ತಿದ್ದುದು. ದೂರವಿರುವುದನ್ನು ಪ್ರಯಾಸದಿಂದ ಕರಗತಮಾಡಿಕೊಳ್ಳುವುದು – ಆನಂತರ ಸಖ್ಯಕ್ಕೆ, ಒಗೆತನಕ್ಕೆ, ನೋವಿನ ಮೂಲಕ್ಕೆ ತತ್‌ಕ್ಷಣ ಪ್ರತಿಕ್ರಿಯಿಸುವುದಾಗದೆ ಒದ್ದಾಡುವುದು ಮಧುಕರನ ಎಂದಿನ ಪರಿ. ಇಲ್ಲದಿದ್ದರೆ ಅವನು ಸಣ್ಣ ಬೈಗುಳವನ್ನು ಗಂಭೀರವಾಗಿ ತೆಗೆದುಕೊಂಡು ಮನೆಯವರೊಡನಿರುವುದು ಅಸಹನೀಯವಾಗಿ ಜೀವನವನ್ನರಸಿ ಹೋಗುತ್ತಿರಲಿಲ್ಲ; ಅವನು ವಾಸ್ತವ ಇದೇ ಎಂದು ಅರಿತಮೇಲೂ ಭ್ರಮನಿರಸನಗೊಳ್ಳುತ್ತಿರಲಿಲ್ಲ. ಅವನ ಮುಖ್ಯ ಪ್ರಾಣ ಯಾವತ್ತೂ ಹೊಕ್ಕುಳಲ್ಲಿ ಎನ್ನುವುದಕ್ಕೆ ಈಗವನಿಗೆ ಶಹರಕ್ಕೆ ಪರತ್ ಹೋಗದಿದ್ದರೆ ಹೇಗೆಂದು ಅನ್ನಿಸುತ್ತಿರುವುದು ಒಂದು ಉದಾಹರಣೆಯಾದರೆ ಅವನಿಂದ ಅದು ಎಂದೂ ಶಕ್ಯವಾಗದು ಎನ್ನುವುದು ಅವಸರವೂ ಇಲ್ಲದೆ ರಾತ್ರಿ ಓದಿದರಾಯಿತೆಂದುಕೊಂಡು ಆರಾಮವಾಗಿದ್ದ! ಮಧುಕರ ಪತ್ರದಲ್ಲೇನು ಬರೆದಿದ್ದಾನೆನ್ನುವ ಹಕೀಕತ್ತು ತನಗೆ ಗೊತ್ತೇ ಇದೆ ಎಂಬಂತೆ! +ರಾತ್ರಿ ಎಲ್ಲರೂ ಮಲಗಿರುವುದು ಖಾತರಿಯಾದ ಮೇಲೆ, ಮೋನಿದಾದಾ ಸಪ್ಪಳವಾಗದ ಹಾಗೆ ಮಂಚದಿಂದಿಳಿದು ಕೋಟಿನಲ್ಲಿನ ಚೀಟಿ ತೆಗೆದ. ನಿಧಾನ ಬಾಗಿಲಿನ ಫ಼ಡಕು ಸರಿಸಿ, ಖಂದೀಲಿ ಕೈಗೆತ್ತಿಕೊಂಡು ಹಿತ್ತಲಿನ ಗೋದಲೆಗೆ ನಡೆದ. ದನಕರುಗಳ ಧುಸುಮುಸು, ಚರಪರ ದಂಟಿನ ಸದ್ದಿನ ನಡುವೆ ಮೂಲೆಯಲ್ಲಿ ಕುಳಿತು ಕಾಗದ ಬಿಚ್ಚಿದ; ಖಂದೀಲಿನ ಬೆಳಕಿಗೆ ಹಿಡಿದ. +‘ಮೋನಿದಾದಾ, +ನನ್ನ ಚಿಂತೆಗಳಲ್ಲಿ ಮುಪ್ಪಾಗಿ ಈ ಶಾಯಿಯಿಂದ ಅದನ್ನು ಕಾಗದಕ್ಕಿಳಿಸಲು ಕೂಡ ನನ್ನ ಕಣ್ಣಮುಂದೆ ಬರೀ ನೀನು ಕೂತ ಚಿತ್ರವಿದೆ-ತಲೆ ಖಾಲಿಯಾಗಿದೆ! ಗಡ್ಡ ಹೆರೆದುಕೊಳ್ಳುತ್ತ ತುದಿಗುಂಡೆಯಲ್ಲಿ ಕೂತ ಚಿತ್ರ! ನೀನು ಹಾಗೆ ಕೂರುವುದನ್ನೇ ಅದೆಷ್ಟು ವರ್ಷ ಕಾಲ ನಾನು ನೋಡಿದ್ದರೂ ನಿನಗಲ್ಲದೆ ಮತ್ತ್ಯಾರಿಗೂ ಹಾಗೆ ಕೂರಲುಬಾರದು. ದಾ… ನಿನಗೆ ನೆನಪದೋ ಇಲ್ಲೋ. ಒಮ್ಮೆ ಡಿಗ್ರಿಯಲ್ಲಿ ನಾನು ಹಾಸ್ಟಲ್ಲಕ್ಕ ಇದ್ದಾಗ ಗೋಕುಲಾಷ್ಟಮಿಯ ಅಂಟಿನುಂಡೆ, ಗಸಗಸೆ, ಶೇಂಗಾದುಂಡೆ, ಚಕ್ಕುಲಿಬಳ್ಳಿ ಕೊಡಲು ನೀನು ಬಂದಿದ್ದೆ. ಕ್ಯಾಂಪಸ್ಸಿನಲ್ಲಿ ನನ್ನನ್ನು ಹುಡುಕಿಕೊಂಡು ಬರಲು ಹಿಂಜರಿಕೆಯಾಗಿ ಮೂಲೆಯ ಗಿಡದ ಕಟ್ಟಿ ಕೆಳಗೆ ನೀನು, ನಾ ಬರೋದನ್ನೇ ಕಾಯುತ್ತ ಅದೇ ತುದಿಗುಂಡೆಯಲ್ಲಿ ಕೂತಿದ್ದೆ. ನನ್ನ ಗೆಳೆಯರ ಗೊಂಪೊಡನೆ ಬರುತ್ತಿದ್ದ ನನಗೆ ನಿನ್ನನ್ನು ನೋಡಿ ಅನವಶ್ಯಕವಾಗಿ ಸಿಟ್ಟು ಬಂದಿತ್ತು. ಹಳ್ಳಿಗೆ ಬಂದಾಗ ಇನ್ನೊಮ್ಮೆ ಹಂಗ ಕಾಲೇಜ ಹತ್ಯೇಕ ಬರಬೇಡ ಎಂದು ಜಗಳವಾಡಿದೆ. ನಿನಗೆ ಸಾಧ್ಯವಾಗದಿರುವುದು ನನ್ನಲ್ಲಿ ಕಾಣಬೇಕೆಂದುಕೊಂಡ ನಿನಗೆ ಅದರಿಂದ ಅವಮಾನವಾಗಿರಬೇಕು. ಅಂದಿನಿಂದ ನಮ್ಮಿಬ್ಬರ ನಡುವೆ ರಸಕಸಿ ಶುರುವಾಯಿತು! +ಅದು ಬೆಳೆದು ನಾನು ಶಹರದ ಬೀದಿ ಬೀದಿ ಸುತ್ತ ಅವಮಾನದಲ್ಲಿ ಬೇಯುವವರೆಗೂ ಹೋಯಿತು. ನಾನು ದೊಡ್ಡವನಾದಂತೆಲ್ಲ ನಮ್ಮಿಬ್ಬರ ಅಂತರ ಹೆಚ್ಚುತ್ತಲೇ ಹೋಯಿತು. ಸಣ್ಣವನಿದ್ದಾಗ ನಿನ್ನನ್ನು ಬಿಟ್ಟಿದ್ದ ನೆನಪಿರದ ನಾನು ಬೆಳೆದಂತೆಲ್ಲ ದೂರ ಹೋಗಲು ಯಾಕಾಗಿ ತವಕಿಸಿದೆ? ನನಗೀಗಲೂ ಗೋಕುಲಾಷ್ಟಮಿಯ ದಿನ, ಮಣ್ಣೆತ್ತಿನ ಅಮಾಸೆದಿನ ಇಬ್ಬರೂ ಹೊಲದ ಮೆದು ಜೇಡಿಮಣ್ಣು ತಂದು ಗೋಕುಲ, ಎತ್ತು, ದ್ವಾರಪಾಲಕರು, ಕ್ರುಷ್ಣ ಹುಟ್ಟಿದ ಜೇಲು ಮಾಡುತ್ತಿದ್ದ ನೆನಪು ಅಳಿಸಿಲ್ಲ. ಜಾತ್ರೆಗಳಂದು ನೀನು ಹೆಗಲಿಗೇರಿಸಿಕೊಂಡು ಕಬ್ಬಿನ ಹಾಲು, ಬೆಂಡು, ಬತ್ತಾಸ, ಫುಗ್ಗಾ ಕೊಡಿಸಿದ ದಿನ ಮಾಸಿಲ್ಲ. ನೀನು ಮಾಂಜದಾರ ಮಾಡಿಕೊಟ್ಟು ಗಾಳಿಪಟ ಮುಗಿಲೆತ್ತರ ಹಾರಿಸುವುದು ಕಲಿಸಿದ್ದು; ಒಣಗಿದ ಸೋರೆ ಕಟ್ಟಿಕೊಂಡು ತುಳಸಿವನದ ತುದಿಯಿಂದ ಗಡ್ಡೀ ಹಣುಮಪ್ಪನ ದಂಡೆವರೆಗೆ ಸೋಲದೆ ಈಜುವುದನ್ನು ಕಲಿಸಿದ್ದು ಯಾವುದೂ ಮರೆತಿಲ್ಲ. +ಒಂದು ನಸುಕು-ಛೋಟ್ಯಾ ಎರೀ ಹೊಲಾ ತೋರಸ್ತೀನಿ ಎಂದು ಎಬ್ಬಿಸಿ, ಸ್ನಾನ ಮಾಡಿಸಿ ನನ್ನನ್ನು ನೀನು ಕರೆದೊಯ್ದದ್ದು ನಿನಗೆ ನೆನಪಿದೆಯೆ? ನಿದ್ದೆಗಣ್ಣಲ್ಲಿ ಪುಷ್ಪಕ್ಕನ ಮಗ ರಾಮೂನೊಂದಿಗೆ ಎರೀ ಹೊಲಾ ನೋಡಲು ನಾವು ಹೊರಟಿದ್ದೆವು. ಮೊದಲು ಕೊತಲಪ್ಪ, ಆಮೇಲೆ ಪಂಖಾಮಸೂತಿ, ಆಮೇಲೆ ಹರಣಶಿಕಾರಿಗಳು. ರಾತ್ರಿಯೆಲ್ಲ ಕಾಯುವ ಗಡ್ಡೀ ಹನುಮಪ್ಪನ ಸ್ಮಶಾನ ದಾಟಿ, ಮುರನಾಳಪ್ಡಿ ಸೇರಬೇಕಿತ್ತು ನಾವು. ದಾರಿಯಲ್ಲಿ ಹರಣಿ ಶಿಕಾರಿಗಳು ರಕ್ತ ಕುಡಿಯುವುದು; ಕೈಯಲ್ಲಿ ತಲೆಬುರುಡೆ ಹಿಡಿದು ಜಾದು ಮಾಡುವುದು ಹೇಳಿದಾಗ ನಮ್ಮ ಹಕ್ಕೀಮರಿ ತುದಿಗಳು ನೆಂದಿದ್ದವು…ಬಿಸಿಲು ಏರಿದಾಗ ಮುರನಾಳ ಪಡಿಯ ಮುಟ್ಟಿದಾಗ ನೀನು, ಅವ್ವ ಕೊಟ್ಟಿದ್ದ ಅವಲಕ್ಕಿ-ಚೂಡಾ, ಅಳ್ಳಿಟ್ಟು ನನಗೆ-ದಾಮೂಗೆ ಕೊಟ್ಟೆ. ತಿಂದು, ಹೊಳೆನೀರು ಹಣಿದು ಚಿಕ್ಕ ಬರಿಗಾಲಲ್ಲಿ ಧೂಳೆಬ್ಬಿಸುತ್ತ ನಾವು ನಡೆದೆವು ನಿನ್ನ ಹಿಂದೆ. ನಾನಾದರೂ ಹೋದಂತೆಲ್ಲ ಬೆಳೆಯುತ್ತಿದ್ದ ಹಾದಿ ನೋಡಿ ಮುಗಿಯುವುದೇ ಇಲ್ಲವೆ ಈ ಯಾತ್ರೆ ಎಂಬಷ್ಟು ಹತಾಶನಾಗಿದ್ದೆ. ಆಗಲೇ ನೀನು-ಛೋಟ್ಯಾ, ಅಂಡರಮುರನಾಳ ಪಡಿ; ನಿಂತ ಶಂಖಾ ಹೊಡೀ- ಎಂದು ದೇಸಾಯರ ಹಳಬರ ಹುಲಿ-ಶತಗರ್ಭದ ಬ್ಯಾಟಿ ಪ್ರಸಂಗ ಹೇಳುತ್ತಿದ್ದೆ…ನಗಿಸುತ್ತಿದ್ದೆ. +ಬಿಸಿಲು ರಣರಣ ಸುರಿವ ಮಧ್ಯಾಹ್ನ ನಾವು ಒಕ್ಕಲಿನ ಯಲಗೂರಿ ಮನೆಗೆ ಹೋದೆವು. ಅಂವ ಭಕ್ಕರಿ-ಬೆಣ್ಣೆ, ಬೆಲ್ಲ ಕೊಟ್ಟದ್ದು ತಿಂದು ಹೊಲಕ್ಕೆ ನಡೆದೆವು. ಹೊಲದ ಪಕ್ಕ ಹೊಳೆ. ಇಕ್ಕೆಲಗಳಲ್ಲಿ ದೊಡ್ಡ ಮರಗಳು-ಥಣ್ಣಗಿನ ಗಾಳಿ. ಹೊಲದ ತುಂಬಾ ಜೋಳದ ಸೀತೆನೆ-ನಡುವೆ ಮಡಿಲಲ್ಲಿ, ಅಗಸೆಯ ಹಳದಿ ಹೂಗಳು…ನೋಡುತ್ತ ನನ್ನ ಕಣ್ಣು ದಣಿದವು. ನೀನು – ಛೋಟ್ಯಾ, ನಿನಗೆ ನವಿಲಾ, ಬೆಳ್ಳಿಹಕ್ಕಿ ತೋರಸ್ತೀನಿ ಬಾ, ಎಂದು ಹೊಳೆಯ ಒಂದು ಬದಿಗೆ ಕರೆದೊಯ್ದೆ. ಹೊಳೆನೀರಲ್ಲಿ ಇಕ್ಕೆಲ ಬೆಳೆದ ಮರಗಳ ನೆರಳು, ದೊಡ್ಡ ಮರದ ಹಿಂದೆ ಕೂರಿಸಿ ಹಾಂಗ ನೋಡತಿರ್ರಿ ಗುಂಪು ಗುಂಪು ನವಿಲಾ, ಬೆಳ್ಳಿಹಕ್ಕಿ ಹೆಂಗ ಬಂದು ನೀರು ಕುಡಿತಾವೊ…ನೀನು ಮೆಲ್ಲ ಉಸುರಿದ್ದೆ. ನಾನು, ದಾಮೂ ಬಾಯಿತೆರೆದು ಕೂತಾಗ ನೀನು, ಪಾತರಗಿತ್ತಿ ಪಕ್ಕಾ, ನೋಡಿದೇನ ಅಕ್ಕಾ ಎಂದು ಹಾಡುತ್ತ ಧೋತರ ಸೊಂಟಕ್ಕೆ ಕಟ್ಟಿ ಕುಣಿದಿದ್ದೆ. ನಾವು ನಕ್ಕಾಗ ಮತ್ತೂ ಕುಣಿದಿದ್ದೆ. ನಾನು ಹಾಗೇ ಕೂತು ಎಳೆವ ನಿದ್ದೆಗೆ ರೆಪ್ಪೆ ಇನ್ನೊಂದು ಉದಾಹರಣೆ. +ಇಂಥ ಕಳವಳದಲ್ಲೇ ಮಧುಕರನ ದಿನಗಳು ಮುಗಿಯಹತ್ತಿದವು. ಅವನು ಬಂದ ದಿನದಿಂದ ಇಳಿ ಮಧ್ಯಾಹ್ನ ಕೂಡ ಮಳೆ ಹಿಡಿದೇ ಇತ್ತು. ಅವನಾದರೂ ಈ ಮಳೆಗಾಗಿ ಇಷ್ಟು ಸಮಯ ಕಾದೆ ಎನ್ನುವಂತೆ ಕೊಡೆಯಿಲ್ಲದೆ ಹಳ್ಳಿಯೆಲ್ಲ ಸುತ್ತಿ, ತಲೆ ಒದ್ದೆ, ಮೈ ಒದ್ದೆ ಮಾಡಿಕೊಂಡು, ಮನೆಗೆ ಬಂದು ಕಾವು ಹಂಡೆಯ ಬಿಸಿಗೆ ಕೈಯೊಡ್ಡಿ ಕಾಸಿಕೊಂಡ. ಅಂಗಳದ ಕಟ್ಟೆಗೆ ನಿಂತು ಹರನಾಳಿಗೆಯಿಂದ ನೀರು ನೆಲಕ್ಕೆ ಗುಮ್ಮುವುದನ್ನು ಆಸ್ಥೆಯಿಂದ ನೋಡಿ ಕಣ್ಣು ಕಿರಿದು ಮಾಡಿಕೊಂಡ. ಅವ್ವ, ಮೋನಿದಾದಾ, ಗೋಪಾಲರೊಂದಿಗೆ ತಪ್ಪಿಯೂ ನಗರದ ಬಗ್ಗೆ ಮಾತಾಡದೆ ಹೊಲಮನೆ, ಮಳೆಗೆ ಜಂಗುತಿಂದ ನೇಗಿಲಿನ ಮೊಳೆಯನ್ನು ಸಮಮಾಡಿಸುವುದು; ಅಟ್ಟಕ್ಕೆ ಗಚ್ಚು ಹಾಕಿಸುವುದು, ಪುಷ್ಪಕ್ಕ ಕಕ್ಕಿಯ ಮೂಲವ್ಯಾಧಿ…ಈ ಥರದ ಅಡಚಣಿ ವಿಷಯ ತೆಗೆದ. ಒಟ್ಟಿನಲ್ಲಿ ಒಂದೊಮ್ಮೆ ಅವರೊಡನೆ ಜಗಳವಾಡಿ, ನಿಷ್ಕಾರಣ ಮನೆಬಿಟ್ಟ ವಿಷಯ ಮರೆತೇ ಹೋದ. +ಮೋನಿದಾದನಾದರೋ ನಿನ್ನನ್ನು ಹುಟ್ಟಿದಂದಿನಿಂದ ಬಲ್ಲೆ ಎನ್ನುವ ಥರ ಅವನ ಹಿಂದೆ ಹಿಂದೆ ಕಣ್ಣುಹಚ್ಚಿ ಕಾದ. ಮಧುಕರ ಹಳೆಯ ಅಲಮಾರಿ ಬಾಗಿಲು ತೆಗೆದು ತಾನು – ಮೋನಿದಾದಾ ದೇಸಾಯರ ಮುರನಾಳ ಪಡಿಗುಡ್ಡದಲ್ಲಿ ಸಂಗ್ರಹಿಸಿದ ನವಿಲುಗರಿಗಳ ಬರಲು ಇದೆಯೋ, ಹೇಗೆಂದು ನೋಡುವಾಗ, ಅಟ್ಟದ ನೀರು ಗೋಡೆಗುಂಟ ಇಳಿಯುತ್ತ ಕೆಮ್ಮಣ್ಣು ಗುರುತು ಮಾಡುವುದನ್ನು ದಿಟ್ಟಿಸುತ್ತ ನಿಂತಾಗ, ಜಿನಿಮಳೆಯಲ್ಲಿ ಹೊಲದತ್ತ ಸಂಜೆ ವಾಯುವಿಹಾರಕ್ಕೆ ಹೋದಾಗ-ಅವನ ಹಿಂದೆ ಹೆಂದೆ, ನಡುಗೆ ಬಾರದ ಮಗುವೆ ಬಿದ್ದೀಯ ಎಂದು ಕಣ್ಣು ಹಚ್ಚಿ ಕಾದ. ಜಡಿಹಿಡಿದ ಚಿತ್ತ ಕುರುಡು ಮಳೆಯ ಅಂಥ ಒಂದು ಮುಂಜಾನೆ ಮಧುಕರ ಎದ್ದವನೆ ಅವ್ವ ಜಾಂಬೂದ ತುಂಬ ಕೊಟ್ಟ ಚಹಾ ಕುಡಿಯುತ್ತ ಪಡಸಾಲೆಯ ಹೊಸ್ತಿಲಿಗೆ ಕೂತಿದ್ದ. ತನ್ನೊಂದಿಗೇ ಬೆಳೆಯುತ್ತ ಇದೀಗ ಗೋಣೆತ್ತಿ ನೋಡುವಷ್ಟು ಎತ್ತರವಾಗಿದ್ದ, ಮನೆಯ ಮುಂದಿನ ಆಕಾಶಮಲ್ಲಿಗೆ ಹೂವಿನ ಗಿಡ ಮಳೆನೀರಿನೊಂದಿಗೆ ಹೂಡುಗಾಟಿಕೆಯಾಡುತ್ತಿತ್ತು. ತಾನು ಸಣ್ಣವನಾಗಿದ್ದಾಗ ಬರೀ ತೊಪ್ಪಲಾಗಿದ್ದ ಈ ಗಿಡವೀಗ ಗಿಡವಿಡೀ ತೋರುಬೆರಳಿನುದ್ದದ ಹೂ ತುಂಬಿಕೊಂಡು ಬಿಟ್ಟಿದೆಯಲ್ಲ. ಗಿಡದಲ್ಲಿದ್ದ ಹೂಗಳು ಗಿಡಕ್ಕೆ ಅಲಂಕಾರದಂತಿದ್ದರೆ, ನೆಲಕ್ಕುದುರಿ ನೀರು ಹೀರುತ್ತಿದ್ದ ಹೂವುಗಳು ಮಣ್ಣಿಗೆ ಅಲಂಕಾರದಂತಿದ್ದವು. ಹೂವಿನ ಕಡುವಾಸನೆ ವಾಸನಾಮಯ ಇಂದ್ರಿಯಗಳನ್ನು ಹಾದು ಮೈ ಮೆರೆಸುವಂತಿತ್ತು. ಹೂವಿನ ತೊಟ್ಟು ಹಾರಿಸಿ, ಅದರ ನಡುವಿನ ಪರಾಗನಳಿಕೆಯಿಂದ ಸಿಹಿಹೀರಿ-ಹಿಂಭಾಗದ ನಳಿಕೆಯಿಂದ ಪೀಪಿ ಮಾಡಿ, ಕಿನ್ನರಜೋಗಿ ಬಾರಿಸಲು ಕಲಿಸಿದ್ದು ಮೋನಿದಾದಾ ಅಲ್ಲ? ಅಂದುಕೊಂಡು, ಮಧುಕರ ಯಾಕೆ ಮೋನಿದಾದಾನ ಸಪ್ಪಳವಿಲ್ಲವೆಂದು ಸುತ್ತಲೂ ಕಣ್ಣಾಡಿಸಿದ. ಮೋನಿದಾದಾ ತನ್ನ ಖೋಲಿಯ ಅರೆಬರೆ ಕತ್ತಲೆಯಲ್ಲಿ ತುದಿಗುಂಡಿಯಲ್ಲಿ ಪರಜು ಹಾರಿದ ಕನ್ನಡಿ ಮುಂದೆ ಕೂತು ಕತ್ತೆತ್ತಿ ಗಡ್ಡ ಹೆರೆದುಕೊಳ್ಳುತ್ತಿದ್ದ. ಕೂದಲು ಬೆಳ್ಳಗಾದ, ಕೆನ್ನೆ ಸುಕ್ಕಾದ ಮೋನಿದಾದಾ ಮುಂಜಾನೆಯ; ಮಳೆ ಹಿಡಿದ ನಸುಕು ಕತ್ತಲೆಯ ಆ ಘಳಿಗೆ ಅವಧೂತನಂತೆ ಕಂಡ. ಮಧುಕರ ಎದ್ದು ಹೋಗಿ ಪಾದ ಹಿಡಿದು, ದಾದಾ ನಂದು ತಪ್ಪಾತು, ಎನ್ನಲೆ? ಅಂದುಕೊಂಡ. ಆದರೆ ಅದು ಬಹಳ ನಾಟಕೀಯ. ಜತೆಗೆ ತನ್ನಿಂದ ಸಾಧ್ಯವಾಗದ ಕ್ರಿಯೆ, ಅಲ್ಲದೆ ನಾನಷ್ಟು ಸರಳನೂ ಅಲ್ಲ ಅನ್ನಿಸಿತು. ಬಿಸಿರಕ್ತದ ನವ ತರುಣ ಅಹಂಕಾರ. ತನ್ನ ತಪ್ಪು ಆಲೋಚನೆಗಳಿಂದ ನಿದ್ದೆ ಬಾರದ ಮಾರ್ಗವನ್ನು ಹುಡುಕುವವ. ವಿಷಾದ; ಮನುಷ್ಯನಿಗೆ ಬೇಕು-ಬಾರದುಗಳ ಎರಡು ದಾರಿಗಳು ಖುಲ್ಲಾ ಇದ್ದರೂ ಆಯ್ಕೆಯ ವೇಳೆಯಲ್ಲಿ ಬುದ್ಧಿ ಮೀರಿ, ಭಾವನೆ ಮೇಲುಗೈ ಪಡೆದಿರುವುದರಿಂದ, ಒಳ್ಳೆಯದು-ಖರಾಬಿನದು; ಹೇಗೋ ಏನೋ, ಮೋನಿದಾದಾನಿಗೆ ಕೆಟ್ಟದ್ದು ಅಂತನ್ನಿಸಿದ್ದು ನನಗೆ ಒಳ್ಳೆಯದಾಯಿತು. ಇಷ್ಟಕ್ಕೂ ಮನುಷ್ಯನಿಗೆ ತನ್ನದೇ ಅನ್ನುವ ಆಯ್ಕೆಯಾದರೂ ಎಷ್ಟಿರುತ್ತವೆ? ಉದಾಹರಣೆಗೆ: ಒಬ್ಬ ವ್ಯಕ್ತಿ ಮರುಧರೆಯಲ್ಲಿದ್ದಾನೆ. ಅವನಿಗೆ ಈಜಲು ಆಗುತ್ತದೆಯೆ? ಮತ್ತೆಂಥದು ಆಯ್ಕೆ; ವಿಷಾದ ಇರುತ್ತದೆಂದುಕೊಳ್ಳುವದಷ್ಟೇ! ಈ ತರ್ಕ ನಿಜವಾದರೆ ನನ್ನದು-ಮೋನೀದಾದಾನದು ಇಬ್ಬರದೂ ತ್ರುಣಮಾತ್ರವೂ ತಪ್ಪಲ್ಲ! ಒಂದಲ್ಲ ಒಂದು ರೀತಿ ಮನುಷ್ಯ ಪರಿಪೂರ್ಣನಾಗಿಯೇ ಬದುಕಿರುತ್ತಾನೆ; ತನಗೆ ಸರಿಕಂಡ ರೀತಿಯಲ್ಲಿ. ಆದರೂ ತನ್ನಲ್ಲಿ ಯಾಕೆ ಉಳಿದುಹೋಗಿದೆ ನೋವು? ನನ್ನದು ತಪ್ಪಿರಲಿಲ್ಲವೆಂದು ಮೋನಿದಾದಾನಿಗೆ ತಿಳಿಹೇಳುವವರೆಗೆ ಬಹುಶಃ ಹಾಗೇ ಇರುತ್ತೆ ಅದು. ಆದರೆ ತಮ್ಮಿಬ್ಬರ ನಡುವೆ ಮಾತೇ ಸಾಧ್ಯವಿಲ್ಲವಲ್ಲ! ಎಂದುಕೊಳ್ಳುತ್ತಿರುವಾಗಲೇ ಮಧುಕರನಿಗೆ ಮೋನಿದಾದಾನಿಗೊಂದು ಪತ್ರ ಬರೆದರೆ ಹೇಗೆಂಬ ಯೋಚನೆ ಬಂದು, ಜಾಂಬೂದಲ್ಲಿದ್ದ ಚಹಾ ಮುಗಿಸಿದ್ದೇ ಅಟ್ಟದ ಖೋಲಿಗೆ ಹೊರಟು ಕಾಗದ – ಪೆನ್ನು ಹಿಡಿದು ಕುಳಿತ. +ಸುಪುತ್ರನ್ಯಾಕೋ ಅನ್ಯಮನಸ್ಕನಾಗಿ ಖೋಲಿ ಹಿಡಿದಿರುವುದನ್ನು ಗಮನಿಸಿದ ಮೋನಿದಾದಾ ಖಂದೀಲು ಹುಡುಕುವ ನೆಪದಲ್ಲೊಮ್ಮೆ, ಒಗ್ಗರಣೆಗೆ ಮೆಣಸಿನಕಾಯಿ ತೆರೆಯುವ ನೆಪದಲ್ಲೊಮ್ಮೆ ಅಟ್ಟಹತ್ತಿ ಬಂದ. ಮರೆಯಲ್ಲಿ ನಿಂತು ಮಗನ ಗಂಭೀರತೆ, ವಿಷಾದ, ಯಾತನೆ ತುಂಬಿದ ಮುಖ ಗಮನಿಸಿ, ಹುಚಪ್ಯಾಲಿ, ಹುಚಪ್ಯಾಲಿ ಎಂದುಕೊಂಡು ನಕ್ಕ. ನೀ ಅತ್ತಾಗ ಬೆಲ್ಲಾ-ಕೊಬ್ಬರಿ ಹಳಕು ಕೊಟ್ಟು ಬೆಳಸಿದಂವನೋ ನಾನು ಎಂದು ಮನಸ್ಸಿನಲ್ಲೇ ಅಂದುಕೊಂಡ. +ಪತ್ರ ಬರೆದು ಮುಗಿಸಿದ ಮಧುಕರ ಅದನ್ನು ಮೋನಿದಾದಾ ತನ್ನ ಕೋಣೆಯಲ್ಲಿರದ ವೇಳೆ ನೋಡಿಕೊಂಡು ಅವನ ಕೋಟಿನ ಕಿಸೆಯಲ್ಲಿ ಪತ್ರ ತುರುಕಿ ಕಳ್ಳಬೆಕ್ಕಿನಂತೆ ಓಡಾಡಿದ. ಮೋನಿದಾದಾನಿಗೆ ಕೇಳುವಂತೆ ಅವ್ವನೊಡನೆಯೇ ಅವಾ, ದಾದಾನ ಕೋಟಿನ ಗುಂಡಿ ಕಿತ್ಯಾವ ಹೊಲಸಬಾರದೇನ? ಎಂದು ಹೇಳಿದ. ಮೋನಿದಾದಾನಾದರೂ ಯಾವ ಮುಚ್ಚಬೇಕು-ಗಿಡ-ಮರಗಳ ಮೇಲಿಂದ ರೆಕ್ಕೆ ಪಡಪಡಿಸುತ್ತ ನವಿಲುಗಳ ಹಿಂಡು, ಬೆಳ್ಳಿ ಹಕ್ಕಿಗಳ ಹಿಂಡು…ನನಗೆ ನಿದ್ದೆ. ಕನಸಲ್ಲಿ ನಾನೊಂದು ನವಿಲೇರಿದರೆ, ನೀನೊಂದು ನವಿಲೇರೆ ಮೋಡದಲ್ಲಿ ತೇಲುತ್ತಿದ್ದೆವು…ಎಷ್ಟೋ ವೇಳೆಗೆ ನಮ್ಮನ್ನೆಬ್ಬಿಸಿ ಮುಖತೊಳಿಸಿ, ಕುಲಕರ್ಣಿ ಕಟ್ಟಿದ ಬಂಡಿಯಲ್ಲಿ ಪರತ್ ಹಳ್ಳಿಗೆ ಬಂದೆವು. ಬರುವಾಗ ದಾರಿಯಲ್ಲಿ ನೀನು ಮೆತ್ತಗೆ-ಛೋಟ್ಯಾ ನೋಡಿಲ್ಲಿ! ಎಂದಾಗ ಕಣ್ಣಗಲಿಸಿ ನಾನು ನೋಡಿದರೆ- ಎರಡು ನವಿಲುಗರಿ ಬರಲು, ಸೂಡು! ಅವ್ವನ ಹೆರಳಿನಷ್ಟು ದಪ್ಪದ, ಕಮಾನು ಕಣ್ಣಿರುವ ನವಿಲು ಗರಿಗಳು! ನನ್ನೆದೆ ಉಬ್ಬಿಬಂದಿತ್ತು…. +ಈಗಲೂ ಅದೇ ನವಿಲು ಬರಲಿದೆ, ಅದೇ ನಾನಿದ್ದೇನೆ, ಅದೇ ನೀನೂ, ಬದಲಾದದ್ದೇನು? ಹಾಗಿದ್ದರೆ ಮತ್ಯಾಕೆ ನಾವಿಬ್ಬರು ಅಂದಿನಂತೆ ಇಲ್ಲ? ನಿನ್ನ ತಲೆಯ ಟೊಪ್ಪಿಗೆಯನ್ನು ಕಿತ್ತೆಸುವುದು; ಬೆನ್ನಿನ ಚಿಕ್ಕ ಗಂಟನ್ನು ಚಿವುಟುವುದು ಯಾಕಾಗುವುದಿಲ್ಲ?… +ಮೋನಿದಾದಾನಿಗೆ ಮುಂದೆ ಓದುವುದಾಗದೆ ಕಣ್ಣಲ್ಲಿ ನೀರು ತುಂಬಿದವು. ಗಂಟಲು ಕಟ್ಟಿತು. ತನ್ನಷ್ಟಕ್ಕೆ ಛೋಟ್ಯಾ ಎಂದುಕೊಂಡ. ಕಾಗದ ಮಡಿಚಿಟ್ಟುಕೊಂಡು ಸಪ್ಪಳವಾಗದ ಹಾಗ ಅಟ್ಟಹತ್ತಿ ಮಧುಕರನ ಮುಖಕ್ಕೆ ತುಸುದೂರ ಖಂದೀಲು ಹಿಡಿದು, ಆ ಬೆಳಕಲ್ಲೇ ಅವನು ಹುಟ್ಟಿದ ದಿನದಂದು ತಾನವನನ್ನು ಮೊದಲಬಾರಿಗೆ ನೋಡಿದ ಸಂಭ್ರಮದಲ್ಲಿ ನೋಡಿದ. ಮುಗುಳುನಗುತ್ತ ಹುಚಪ್ಯಾಲಿ ಎಂದುಕೊಂಡು ಹೋಗಿ ಮಲಗಿಕೊಂಡ… +* +* +* +ಇದ್ದದ್ದು ಸಾಕಾಗಲಿಲ್ಲ ಎನ್ನಿಸಿದರೂ ಮಧುಕರ ಹೊರಟು ನಿಂತ. ಅವ್ವ, ಇನ್ನೆರಡು ದಿನಾ ಇರೋ ಛೋಟ್ಯಾ ಅಂದಾಗ-ಇಲ್ಲ ಸೋಮವಾರಕ್ಕೆ ಸೂಟಿ ಮುಗಿತದ. ಅವತ್ತ ಮೊದಲನೆ ಪಾಳಿ ಡ್ಯೂಟಿ ಅದ ಅಂದ. ಅವ್ವ ಮರುಮಾತಾಡದೆ, ಅಲಕ್ಷ್ಯ ಮಾಡಬ್ಯಾಡೋ, ಬರತ ಬಾ. ನಮದೂ ದಿವ್ಸ ಮುಗುದೂವು ಅಂದು, ತಲೆಗೆ ಕಾಸಿದ ಎಣ್ಣೆ ಹಚ್ಚಿ ಎರೆದಳು. ಹಬ್ಬದಡುಗೆ ಮಾಡಿ ಹಾಕಿದಳು.. +ಮಧುಕರ-ನಾಚಿಕೆಯಾದರೂ ತಾನು ತಂದ ಖಣ-ಶಾಲನ್ನು ಅವರಿಗೆ ಕೊಟ್ಟು ನಮಸ್ಕಾರ ಮಾಡಿ ರಾತ್ರಿಗಾಡಿಗೆ ಊರಿಗೆ ಹೊರಟ. +ಜಿನಿಜಿನಿ ಮಳೆಯಿದ್ದರೂ ಮೋನಿದಾದಾ, ಗೋಪಾಲ ಕಳಿಸಲು ಸ್ಟೇಶನ್ನಿಗೆ ಹೊರಟರು. ದಾರಿಯಲ್ಲೆಲ್ಲ ಮೌನಿಯಾಗಿದ್ದ ಮೋನಿದಾದಾ ಸ್ಟೇಶನ್ನಿಗೆ ಬಂದದ್ದೇ ಬಡಬಡಿಸತೊಡಗಿದ. +ಛೋಟ್ಯಾ, ಮಾನಸಿಕ ಮಾಡ್ಕೋಬ್ಯಾಡ, ಆರೋಗ್ಯ ಛಲೋ ನೋಡಕೋ. ನನ್ನದೂ ಜೀವ ಭಾಳ ಹೈರಾಣ ಆಗೇದ ಹೋಲದಾಗ ದುಡುದು. ಅದರ ಯಾವತ್ತೂ ಬ್ಯಾಸರಿಕಿ-ಆಸರಿಕಿ ಬಂದಿಲ್ಲ ನೋಡು, ಖರೇ ಅಂದ್ರ ನಿಮ್ಮವ್ವ ನನ್ನ ಕೂಡ ಸಣ್ಣ ಆಗ್ಯಾಳ, ಅಕೀಗಂತ ನಾಯೇನ ಮಾಡೀನಿ ಹೇಳು? ಈ ಹಳ್ಳೀಬಿಟ್ಟು ಒಮ್ಮೆ ಸೈತ ಹೊರಗೆ ಹೋಗಿಲ್ಲ ಅಕೀ, ಇಷ್ಟು ದಿನ ಅಕೀ ಜೀವ ಅಂದ್ರ ನಾನಾಗಿದ್ದೆ. ಈಗ ನೀವ ಅಕೀ ಜೀವ, ನನ್ನ ಜೋಡಿ ಮಾತಾಡಬೇಕಂದ್ರೂ ಅಕೀ ಈಗನೂ ತೊದಲತಾಳ, ನಡಗತಾಳ. ಆದರ ತನ್ನ ದುಃಖ ಯಾರ ಮುಂದನೂ ಹೇಳಂಗಿಲ್ಲ ಇಷ್ಟೇ. ವಿಚಿತ್ರ ಅಂದ್ರ ಎಲ್ಲಾರ್ದೂ ಅವರವರದೇ ಬದುಕು ಸ್ವತಂತ್ರ ಇದ್ರೂ ಅವ್ರು ತಮ್ಮಷ್ಟಕ್ಕೇ ಇದ್ದಾಗ ಅರ್ಥಾ ಇರೂದಿಲ್ಲ. ಕೂಡಿ ಇದ್ದಾಗ ಪೂರ್ಣ ಅನಸತದ. ನನಗೆ ಹೊಲ, ಮನಿ, ಮಕ್ಕಳು ಇಷ್ಟೇ. ಇವೇ ಎಲ್ಲಾ ಗಾಳಿ, ಸೂರ್ಯ, ಮಳೀ ಎಲ್ಲಾ…ನಾ ಹೇಳೂದು ಇಷ್ಟ; ನಿನಗೆ ಹೆಂಗಬೇಕೊ ಹಂಗಿರು, ಆದರ ನಮ್ಮನ್ನ ಮರೀಬ್ಯಾಡ…ಹೆತ್ತವರೂಂತ ಕ್ರಿಯಾ ಹಿಡಿದು ನೋಡಲಿಕ್ಕೆ ಬಾ… ಬರತೀ ಅಲ್ಲ?… +ರೈಲು ಹೊರಟಂತೆ ಮೋನಿದಾದಾ-ಗೋಪಾಲರ ಆಕ್ರುತಿಗಳು ಮರೆಯಾಗಿ, ಅವರು ಕೈಬೀಸುವುದಷ್ಟೇ ಕಾಣಿಸಿತು-ಕಡೆಯವರೆಗೂ ಸ್ಪಷ್ಟ ಕಂಡದ್ದು ಮೋನಿದಾದಾನ ಟೊಪ್ಪಿಗೆ ಮಾತ್ರ… +ಮಧುಕರನ ಕಲಸಿದ ಮನಸ್ಸು ಮತ್ತೆ ಕನಸಿಗಿಳಿಯಿತು…ಹಳ್ಳಿಮನೆ…ನಗರ… +ನಗರಕ್ಕೆ ಕೃತಕ ಬಣ್ಣದ ಬಲ್ಬಿನ ಬೆಳಕು-ಹಳ್ಳಿಮನೆಗೆ ಖಂದೀಲಿನ ತಂಪು ಬೆಳಕು-ಹೊಲಕ್ಕೆ ತೆನೆಗಳ ಹೊದಿಕೆ, ನಕ್ಷತ್ರಗಳ ಕಿನಾಪು… ಮೋಡಗಳ ಬಟ್ಟೆ…ಮರಗಳ ಛತ್ತರಗಿ… +ಶಹರದಲ್ಲಿ ನಾನೇ ಆಕಾಶ! ನನ್ನ ಮನಸ್ಸೇ ಆಕಾಶ… +ಕಿಟಕಿಯಿಂದ ಬಾಗಿ ನೋಡಿದ-ನಕ್ಷತ್ರಮಾಲೆ ತೂಗುಬಿದ್ದಿದ್ದವು. ಆಕಾಶ ಕನ್ನಡಿಯ ಹಾಗಿತ್ತು. ಅರೆ! ಎಷ್ಟು ವಿಚಿತ್ರ! ಏನನ್ನೂ ಸ್ವೀಕರಿಸದ ನಿರಾಕಾರ ಆಕಾಶಕ್ಕೆ ನಾವು ನಮ್ಮ ಕಣ್ಣಿನ ಬಣ್ಣ ನೀಲಿ, ಹಳದಿ, ಕೆಂಪು ತುಂಬುತ್ತೇವೆ. ಆಕಾರ ನೀಡಿ ಚೌಕಟ್ಟು ಹಾಕುತ್ತೇವೆ. ಈಗ ತನ್ನೊಳಗೆ ಹುಗಿದುಕೊಂಡಂತೆ ಕಾಣುತ್ತಿರುವ ನಕ್ಷತ್ರಗಳನ್ನು ಸಹ ಅತಿ ಸನಿಹ-ಅತಿ ದೂರ ಇಟ್ಟಿದ್ದೆ! ಈ ಆಕಾಶ ಕನ್ನಡಿಗೆ ಈ ನೀಹಾರಿಕೆಯೆ ಯಾಕೆ ನೋವಾಗಬಾರದು? ಹೌದು, ಹೀಗೆ ಚುಕ್ಕೆಗಳ ಚೆಲ್ಲಿ ನಿಂತು ಪ್ರಜ್ವಲಿಸುವ ಆಕಾಶದಲ್ಲಿ ಎಷ್ಟು ಚುಕ್ಕೆ, ಎಷ್ಟು ಹೊಲದ ತೆನೆ-ನನ್ನವು? ಕುಸುಮ, ಮೋನಿದಾದಾ, ಅವ್ವ, ಗೋಪಾಲ ಇವರವು? ಬಹುಶಃ ಎಲ್ಲವೂ; ಅಥವಾ ಯಾವವೂ?… +ಇಲ್ಲಿನ ನೋವು, ಸಂತಸ, ಆಡಿದ-ಆಡಲಾಗದ ಮಾತು, ಬಂದ-ಬರದ ನೆನಪುಗಳಿಗೆಲ್ಲ ಕುಸುಮ ಹೇಗೆ ಪಾಲುದಾರಳು? ನಾಳೆ-ಏನಾಯಿತು? ಎಂದವಳು ಕೇಳಿದರೆ ಹೇಳುವುದು ಏನು – ಹೇಗೆ? +ಹಳ್ಳಿಯ ಮನೆಯ ಹರನಾಳಿಗೆ ನೀರು; ಬರಿಗಾಲಲ್ಲಿ ಎರೆಹೊಲ ನೋಡಿದ ಛೋಟ್ಯಾ, ಹೊಳೆದಂಡೆಗೆ ಕೂತುತಿಂದ ಅವಲಕ್ಕಿ ಚೂಡಾ, ಜೇಡಿಮಣ್ಣಿನ ಗೋಕುಲ, ಎತ್ತು…ತುಣುಕುಗಳು. +ನಗರ-ಶಿಫ಼್ಟ್, ರೂಟ್ ಬಸ್, ಚರ್ಚ್‌ನ ಲಾನ್‌ನಲ್ಲಿ ಕುಸುಮ, ಫ಼್ರೆಂಚ್ ಸಿನಿಮಾ, ಫ಼ೆಸ್ಟಿವಲ್…ತುಣುಕುಗಳು… +ಕುಳಿರ್ಗಾಳಿ…ಸಣ್ಣಗೆ ನಡುಗಿದ ಮಧುಕರ ಸ್ವೆಟ್ಟರ್ ಹಾಕಿಕೊಳ್ಳಲು ಕಿಟ್ ತೆಗೆದ. +ಅರೆ! ನವಿಲುಗರಿ ಬರಲು! ಎರಡು! ಅವ್ವನ ಹೆರಳಿನಷ್ಟೇ ದಪ್ಪ, ಕಮಾನುಕಣ್ಣಿನ ಗರಿಗಳ ಸೂಡು! ಜತೆಗೆ ಅಂಟಿನುಂಡೆಯ ಪೊಟ್ಟಣ! ಮೋನಿದಾದಾ, ಅವ್ವ! “ಇದು ಛೋಟ್ಯಾಗ” ದಾದಾನ ಅಕ್ಷರ! +ಮಧುಕರ ಅವನ್ನು ಮೆತ್ತಗೆ ಸವರಿ, ಸವರಿ ಚಳಿಯಲ್ಲಿ ಬೆಚ್ಚಗಾಗಿ ಹೊರಗಿನ ಕತ್ತಲು ನೋಡಿದ; +ಆಕಾಶ ಕನ್ನಡಿಯ ಹಾಗಿತ್ತು; ನಿರಭ್ರ ಸ್ಫಟಿಕ. +ನಕ್ಷತ್ರಗಳ ಮಾಲೆ ಬೆಳಗುತ್ತಿತ್ತು, ತಾನೇ ಬೆಳಕೆಂಬಂತೆ. +***** +(೧೯೮೯) +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ […] +ನೇಪಥ್ಯ ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_272.txt b/Kannada Sahitya/article_272.txt new file mode 100644 index 0000000000000000000000000000000000000000..24876634921327560967e51c371a4c222a5cde89 --- /dev/null +++ b/Kannada Sahitya/article_272.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ +ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು +ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ +ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ +ಅದೃಶ್ಯ ಲೋಕದ ಅಪರಿಚಿತರು ನಂದನಕ್ಕೆ ಇಳಿದರು +ಹೋಗಿ ಸ್ವಾಗತ ಹೇಳು, ಅಭ್ಯಾಗತರಿಗೆ ಸ್ವಾಗತವೇ ಇಲ್ಲಿಯ ನಿಯಮ +ನಿನ್ನ ಹೆಜ್ಜೆ ಸದ್ದು ಕೇಳಿ ಹೂ ಹೂದಾನಿಗೆ ಬಂತು +ನಿನ್ನ ಭೇಟಿಗಾಗಿ ಹೂವಿನ ಮುಳ್ಳು ಕೆಂಪು ಕೆನ್ನೆಯ ಹಾಗೆ ಮೃದುವಾಯಿತು +ದೇವದಾರು ವೃಕ್ಷವೆ, ಕೇಳು, ನಿನ್ನ ನಿರೀಕ್ಷೆಯಲ್ಲಿ +ಆ ಜಲಮಲ್ಲಿಗೆ ಹಾಡಿತು ಕೊರಳೆತ್ತಿ ನದಿ ದಡದಲ್ಲಿ +ಮೊಗ್ಗು ತುಟಿ ಬಿಗಿ ಹಿಡಿದಿತ್ತು, ಈಗ ಬಿರಿದಿದೆ +ಅರಳಿದ ಗುಲಾಬಿ ವಂದಿಸಿ ನಿನ್ನ ಮೇಲೆ ಹೂವೆರಚಿದೆ +ಇದು ಪುನರ್ ಜನ್ಮದ ಋತು ಎಂದೆ ನೀನು +ಡಿಸೆಂಬರ್, ಜನವರಿಯಲ್ಲಿ ನೆಲದೊಳಗೆ ಕೊಳೆತು ಆತ್ಮ ಈಗ ತಲೆ ಎತ್ತಿವೆ +ಮೃತವಾಗಿದ್ದ ಬೀಜಕ್ಕೆ ಹೊಸ ಜೀವ ಬಂದಿದೆ +ಭೂಮಿ ಬಚ್ಚಿಟ್ಟ ಗುಟ್ಟು ಈಗ ರಟ್ಟಾಗಿದೆ +ಹಣ್ಣುಗಳಿಂದ ಕಿಕ್ಕಿರಿದ ಕೊಂಬೆ ಹೆಮ್ಮೆಯಿಂದ ಬೀಗಿದೆ +ಬೋಳಾದ ಬೇರು ನಾಚಿಕೆಯಿಂದ ನಿಟ್ಟುಸಿರಿಟ್ಟಿದೆ +ವಸಂತದ ಚಕ್ರವರ್ತಿ ತನ್ನ ದಂಡಿನೊಡನೆ ಬಂದ +ಮಲ್ಲಿಗೆ ಗುರಾಣಿಯನ್ನು ಮುತ್ತಿ ಬಿಟ್ಟಿತು +ದಿವ್ಯ ಬೆಂಬಲ ದೊರಕಿದರೆ +ಹುಳು ಕೂಡಾ ದೈತ್ಯನನ್ನು ಕಚ್ಚಿ ಕೊಲ್ಲುತ್ತದೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ ನಿದ್ರಿಸಿದಾಗ ತಲೆದಿಂಬು ಅವು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_273.txt b/Kannada Sahitya/article_273.txt new file mode 100644 index 0000000000000000000000000000000000000000..c8e7b7500da146204810cf24ff20239010616545 --- /dev/null +++ b/Kannada Sahitya/article_273.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ ರುಚಿಯೇ ಕೆಟ್ಟುಹೋಗಿತ್ತು. ರಿಕ್ಷಾವಾಲಾನನ್ನು, ಅವನು ಕೇಳಿದಷ್ಟು ಹಣ ಕೊಟ್ಟು, ಕಳಿಸಿಕೊಟ್ಟ. ಮಧ್ಯಾಹ್ನ ದರ್ಬಾರ್ ಹೊಟೆಲ್ಲಿನಲ್ಲಿ ಊಟ ಸರಿಯಾಗಿರದ್ದಕ್ಕೋ ಏನೋ ಹೊಟ್ಟೆ ಹಸಿದಿತ್ತು. ಕೃಷ್ಣನಿಗೆ_ಊಟಕ್ಕೆ ಆಮ್ಲೆಟ್ ಆದರೂ ಸಿಗಬಹುದೇ ? ಎಂದು ಕೇಳಿದ. “ಸಿಗಬಹುದು ಸರ್. ಬ್ರೆಡ್ ಮಾತ್ರ ತೀರಿಹೋಗಿದೆ. ಚಿಂತೆ ಮಾಡಬೇಡಿ. ಇದೀಗ ಸಾಯ್ಕಲ್ ಮೇಲೆ ಹೋಗಿ ತರುತ್ತೇನೆ. ಅದಕ್ಕೇನಂತೆ. ಬಿಯರ್-ಗಿಯರ್ ?” ಕೃಷ್ಣನ ಮಾತುಗಳಲ್ಲಿ ಹುರುಪು ಇತ್ತು. ಬಿಯರಿನ ಹೆಸರು ತೆಗೆಯುತ್ತಲೇ, ಹೌದು ಇಂದು ಕುಡಿಯದೇ ಮಲಗುವದುಶಕ್ಯವೇ ಇಲ್ಲ ಅನ್ನಿಸಿತು. ಕುಡಿತದ ಅಮಲಿನಲ್ಲೇ ತನ್ನೆಲ್ಲ ಯಾತನೆಯನ್ನು ಮುಳುಗಿಸಿಬಿಡಬೇಕು ಎಂದುಕೊಂಡು ಕೃಷ್ಣನಿಗೆ ಎರಡು ಬಾಟಲಿ ಬಿಯರ್ ತರಲು ಹೇಳಿ ಹಣ ಕೊಡುವಾಗ ಐದು ರೂಪಾಯಿ ನೋಟೊಂದನ್ನು ಹೆಚ್ಚಿಗೆ ಕೊಡುತ್ತ_ ‘ಇದು ನಿನಗೆ,’ ಎಂದಾಗ ಕೃಷ್ಣನ ಬಿಯರ್ ತರುವ, ಆಮ್ಲೆಟ್ ಮಾಡುವ ಉಮೇದಿಗೆ ಮೇರೆಯೇ ಉಳಿಯಲಿಲ್ಲ. ಹಿಂದೊಮ್ಮೆ ಸಾಹೇಬರು ತೋರಿಸಿದ ಸಿಟ್ಟು ನೆನಪಿಗೆ ಬಂದಿರದಿದ್ದರೆ ಮತ್ತೇನನ್ನೋ ತರುವ ಹುರುಪೂ ಇತ್ತು : ಗೆಸ್ಟ್‌ಹೌಸಿನಲ್ಲಿ ತಮ್ಮಿಬ್ಬರನ್ನು ಬಿಟ್ಟರೆ ಮತ್ತಿನಾರೂ ಇದ್ದಿರಲಿಲ್ಲ. ಮೇಲಾಗಿ ! +uಟಿಜeಜಿiಟಿeಜ +ಕೃಷ್ಣ ಸಾಯ್ಕಲ್ ಹತ್ತಿ ಹೊರಟುಹೋದ ಮೇಲೆ ನಾಗಪ್ಪ ಕೃಷ್ಣ ತನಗಾಗಿ ಯಾವಾಗಲೂ ಕಾದಿರುತ್ತಿದ್ದ ರೂಮಿಗೇ ಹೋದ. ಬೂಟು ಕಳಚಿ ಹಾಸಿಗೆಯ ಮೇಲೆ ಆಡ್ಡವಾದ. ತಲೆ ಸುನ್ನವಾಗಿತ್ತು : ಇದು ಸಾದಾ ತನಿಖೆಯಲ್ಲ. ಬರಿಯೆ ನನ್ನ ಮೇಲಿನ ಸೇಡು ತೀರಿಸುವ ಜಾತಿಯದೂ ಅಲ್ಲ. ಈ ರಾಜಕಾರಣ ನಾನು ತಿಳಿದದ್ದಕ್ಕಿಂತ ಹೆಚ್ಚು ದೂರದವರೆಗೆ ಹಸ್ತಕ್ಷೇಪ ಮಾಡಿದ್ದು, ಫಿರೋಜ್ ತಾನು ಸಿಕ್ಕಿಬಿದ್ದ ಯಾವುದಾದರೂ ಪೇಚಿನಿಂದ ತಪ್ಪಿಸಿಕೊಳ್ಳುವುದಕ್ಕೆ ನನ್ನನ್ನು ಬಲಿ ಕೊಡುತ್ತಿಲ್ಲವಷ್ಟೇ….ನನ್ನನ್ನು ಇಲ್ಲ ಕರೆಯಿಸಿದ ದಿನ, ಅದೇ ಪ್ಲೇನಿನಿಂದ ತಾನೇ ಮುಂಬಯಿಗೆ ಹೊರಟುಹೋಗುವುದೆಂದರೆ, ಮೊದಲೇ ಯೋಚಿಸಿಕೊಂಡ ಫ್ಯಾಸಿಸ್ಟ್ ಉಪಾಯವಿದು; ನನ್ನನ್ನು ಮಾನಸಿಕ ಗೊಂದಲಕ್ಕೀಡುಮಾಡಿ, ದಣಿಸಿ, ಹೋರಾಡುವ ನನ್ನ ಸಂಕಲ್ಪವನ್ನು ಮುರಿಯುವ ಹಂಚಿಕೆ. ದಣಿವಿನ ವಿಚಾರದಿಂದಲೇ ನಾಗಪ್ಪನಿಗೆ ಬಿದ್ದಲ್ಲೇ ನಿದ್ದೆ ಬರುತ್ತಿದ್ದಂತೆ ತೋರಿತು.ಅದನ್ನು ದೂರ ಮಾಡುವವನ ಹಾಗೆ ಭಡಕ್ಕನೆ ಎದ್ದು ಕುಳಿತ_ಬೇಡ, ಹೇಗಾದರೂ ನೌಕರಿಯನ್ನು ಕಳಕೊಳ್ಳುವ ಅಂತಿಮ ಸಾಧ್ಯತೆಗೆ ಕೂಡ ಮನಸ್ಸನ್ನು ಗಟ್ಟಿಮಾಡಿರುವಾಗ ಇಂತಹ ನೀರಿಲ್ಲದ ವಿಚಾರ ಸಲ್ಲದು ಎಂದುಕೊಂಡ್ದು ಕಿಡಕಿಗೆ ಬಂದು ನಿಂತ. +ನಾಗಪ್ಪನನ್ನು ಸದ್ಯ ದಣಿಸುತ್ತಿದ್ದದ್ದು ನೌಕರಿಯನ್ನು ಕಳಕೊಳ್ಳುವ ಭಯವಲ್ಲ. ಮನುಷ್ಯನನ್ನು ಮಾನಸಿಕವಾಗಿ ಮುರಿಯುವದು ಹೀಗೆ ಸ್ಪಷ್ಟವಾದ ಮಾತಿನಲ್ಲಿ ಹಿಡಿಯಬಹುದಾದ ಭಯವಲ್ಲ ಎಂಬ ಅರಿವು ನಾಗಪ್ಪನಿಗಿದೆ. ಸುಳ್ಳು ಆಪಾದನೆಗೆ ತನ್ನನ್ನು ಗುರಿಪಡಿಸಿದಾಗ ತನ್ನ ನಿಷ್ಪಾಪವನ್ನು, ನಿರಪರಾಧವನ್ನು ಉಳಿದವರಿಗೆ ಸಿದ್ಧಪಡಿಸಿ ತೋರಿಸುವುದರಲ್ಲಿ ತಾನು ಸೋಲಬಹುದೆಂಬ ಭಯ. ತನಗೆ ಸಲ್ಲಬೇಕಾದ ನ್ಯಾಯವನ್ನು ಯಾರೋ ಬರಿಯ ಹುಂಬಸತ್ತೆಯ ಬಲದ ಮೇಲೆ ಕುಸಿದುಕೊಂಡಿದ್ದಾರೆ ಎಂಬುದಕ್ಕೆ ಪುರಾವೆ ಒದಗಿಸುವುದರಲ್ಲಿ ತಾನು ಸೋತೇನು ಎನ್ನುವ ಆತಂಕ. ಸತ್ಯವೇ ಕೊನೆಗೆ ಗೆಲ್ಲುತ್ತದೆ ಎಂಬ ಮಾತು ಫಿರೋಜನಂತಹ ಧೂರ್ತ ರಾಜಕಾರಣಿಯ ಮುಂದೆ ನಡೆಯುವಂತಹದಲ್ಲ. ಇದೇ ! ಇದೇ ! ತಾನು ಸಂಪೂರ್ಣವಾಗಿ ನಿರಪರಾಧಿಯಾಗಿರುವಾಗಲೂ ತನ್ನನ್ನು ಅಪರಾಧಿಯನ್ನಾಗಿ ತೋರಿಸುವ ಈ ಕಪ್ಪು ಬಲಕ್ಕೆ ಹಾಗೂ ಮಾತಿನ ತೆಕ್ಕೆಗೆ ಸಿಗದೆ ಅದು ಹುಟ್ಟಿಸುವ_ಭಯಕ್ಕೆ ತಾನಿಂದು ದಣಿಯುತ್ತಿದ್ದೇನೆ…. ಸತ್ಯವೇ ಕೊನೆಯಲ್ಲಿ ಗೆಲ್ಲುತ್ತದೆ ಎಂಬ ಭರವಸೆ ಇಲ್ಲದ್ದಕ್ಕೇ ತಾನಿಂದು ಹೀಗೆ ನಡುಗುತ್ತಿದ್ದೇನೆ. ಯಾಕೆಂದರೆ ಸತ್ಯದ ವ್ಯಾಖ್ಯೆಯನ್ನೇ ಫಿರೋಜನಂತಹ ರಾಜಕಾರಣಿ ಬದಲಾಯಿಸಿಬಿಟ್ಟಿದ್ದಾನೆ….. +ನಿಂತಲ್ಲೇ ಬಂದ ಒಂದು ವಿಚಾರಕ್ಕೆ ನಾಗಪ್ಪ ಕೂಡಲೇ ಕಿಡಕಿ ಬಿಟ್ಟು ತಿರುಗಿ ಟೆಲಿಫೋನಿಗೆ ಬಂದ. ಭರಭರನೆ ಟೆಲಿಫೋನ್ ಡಿರೆಕ್ಟರಿಯ ಪುಟಗಳನ್ನು ತಿರುವಿ ತನಗೆ ಬೇಕಾದ ನಂಬರನ್ನು ಹುಡುಕಿ ತೆಗೆದ. ರಿಸೀವರನ್ನು ಕೈಗೆತ್ತಿ ನಂಬರನ್ನು ತಿರುವಿದ. ಆ ತುದಿಯಿಂದ ತನಗೆ ಪರಿಚಿತವಿದ್ದ ದನಿಯು ‘ಹಲ್ಲೋ’ ಕೇಳಿಸಿದ್ದೇ, ತನಗೇ ಅರ್ಥವಾಗಿರದ ಆತುರತೆಯಿಂದ, “ಹೈದರ್‍ಸಾಬ್, ನಾನು ನಾಗನಾಥ,” ಎಂದ. “ಹಲ್ಲೋ ಹಲ್ಲೋ ಪ್ರೊಫೆಸರ್,” ಎಂದು ಎಂದಿನ ಹುರುಪಿನಿಂದಲೇ ಮಾತಿಗೆ ಆರಂಭಿಸಿದ ಹೈದರ್. ಒಮ್ಮೆಲೇ ದನಿಯನ್ನು ತೀರ ತಗ್ಗಿಸಿ, “ಯಾವಾಗ ಬಂದಿರಿ ? ಕಾರಖಾನೆಯಲ್ಲಿ ಯಾರಿಗೂ ಗೊತ್ತಿಲ್ಲವೇ ನೀವು ಬರುವುದರ ಬಗ್ಗೆ ? ರಾಮಕೃಷ್ಣ ಕೂಡ ಏನೂ ಹೇಳಲಿಲ್ಲ ?” ಎಂದಾಗ ನಾಗಪ್ಪನಿಂದ ಕೆಲಹೊತ್ತು ಮಾತೇ ಹೊರಡದಾಯಿತು : ಯಾರು ಬಲ್ಲರು. ಯಾರ ಮುಂದೆಯೂ ಹೆಚ್ಚಿನ ಟಮ್ ಟಮ್ ಮಾಡದೇನೇ ತನ್ನೊಬ್ಬನೊಂದಿಗಷ್ಟೇ ಫಿರೋಜನಿಗೆ ಮಾತನಾಡುವುದಿದೆಯೇನೋ. ಆದ್ದರಿಂದಲೇ ತನ್ನನ್ನು ಇಲ್ಲಿ ಕರೆಯಿಸಿದ ಉದ್ದೇಶವನ್ನು ಗುಟ್ಟಾಗಿಡುವುದಿದೆಯೇನೋ. ತನ್ನನ್ನಿಲ್ಲಿಗೆ ಕರೆಯಿಸಿದ ನಂತರವೇ ಅನಿರೀಕ್ಷಿತ ಕಾರಣಕ್ಕಾಗಿ ಮುಂಬಯಿಗೆ ಹೋಗಬೇಕಾಗಿ ಬಂತೇನೋ. ಫಿರೋಜನನ್ನು ತಾನು ಸುಳ್ಳೇ ತಪ್ಪು ತಿಳಿದೆನೇನೋ….ನಾಗಪ್ಪನ ಈ ಆಶಾವಾದ ಬಹಳ ಕಾಲ ಬಾಳಲಿಲ್ಲ. ನಾಗಪ್ಪ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದ್ದು ಲಕ್ಷ್ಯಕ್ಕೆ ಬಂದ ಹೈದರನೇ ಕೇಳಿದ : “ಈಗ ಎಲ್ಲಿಂದ ಮಾತನಾಡುತ್ತಿದ್ದೀರಿ ? ಗೆಸ್ಟ್‌ಹೌಸಿನಿಂದಲೇ ? ಹತ್ತಿರ ಇನ್ನಾರೂ ಇಲ್ಲವಲ್ಲ ? “ಇಲ್ಲ, ಇದ್ದ ಕೃಷ್ಣನೂ ಕೂಡ ಬ್ರೆಡ್ ತರಲು ಹೊರಗೆ ಹೋಗಿದ್ದಾನೆ.” ಎಂದಾಗ, “ನೀವು ಈಗ ಇಲ್ಲಿಗೆ ಬರಬಾರದಾಗಿತ್ತು, ಇಲ್ಲಿ ಏನೇನು ನಡೆದಿದೆ ಎನ್ನುವುದನ್ನು ಯಾರೂ ನಿಮಗೆ ತಿಳಿಸಿಲ್ಲವೇ ? ನಾನು ಇದೆಲ್ಲದರಿಂದ ದೂರ ಉಳಿಯಲೆಂದೇ ಎಂಟು ದಿನದ ರಜೆ ಪಡೆದು ಮನೆಯಲ್ಲಿದ್ದೇನೆ. ಕಾರಖಾನೆಯಲ್ಲಿ ನಡೆದ ಲಫಡಾದಲ್ಲಿ ದೊಡ್ಡ ದೊಡ್ಡ ಕುಳಗಳ ಹೆಸರುಗಳೇ ಸಿಕ್ಕಿಕೊಂಡಿವೆಯಂತೆ. ಲಕ್ಷಗಟ್ಟಲೆ ರೂಪಾಯಿಯ ಮಾಲಿನ ಲೆಕ್ಕವೇ ಸಿಗುವದಿಲ್ಲವಂತೆ. ಇದಕ್ಕೂ ಈ ಹಿಂದೆ ನಡೆದ ಬೆಂಕಿಯ ಅನಾಹುತಕ್ಕೂ ಏನೋ ಸಂಬಂಧ ಹಚ್ಚುವ ಪ್ರಯತ್ನ ನಡೆದಿದೆಯಂತೆ. ನೀವು ಸ್ವಲ್ಪ ಈಗ ಜಾಗರೂಕರಾಗಿರುವುದು ಒಳ್ಳೆಯದು,” ಎಂದ ಹೈದರನ ಮಾತುಗಳಿಂದ ನಾಗಪ್ಪ ಪೂರ್ವಾಪರ ವಿಚಾರಮಾಡುವ ಸಾಮರ್ಥ್ಯವನ್ನೇ ಕಳಕೊಳ್ಳುವಷ್ಟು ಹೆದರಿಕೊಂಡ. “”ಹೈದರ್‍ಸಾಬ್, ನಾನಾಗಿಯೇ ಇಲ್ಲಿಗೆ ಬಂದಿಲ್ಲ. ಆ‌ಒ‌ಆ ಯವರೇ ನನ್ನನ್ನು ಕರೆಯಿಸಿದ್ದಾರೆ. ಆದರೆ ಈಗ ಅವರೇ ಊರಲ್ಲಿಲ್ಲವಂತೆ.” ಎಂದು ಹೇಳುವಾಗ ನಾಗಪ್ಪನ ದನಿಯಲ್ಲಿ ಅವನಿಗೆ ಅರಿವಿಲ್ಲದೇನೆಯೆ ಒಂದು ಬಗೆಯ ಹತಾಶತೆ ಸೇರಿಕೊಂಡಿತ್ತು. ಅವನು ಇದೀಗ ಹೇಳಿದ ಮಾತಿನಿಂದ, ಮಾತಿನ ಧಾಟಿಯಿಂದ ಮೊದಲೇ ಹೆದರಿಕೊಂಡ ಹೈದರ್ ಇನ್ನಷ್ಟು ಹೆದರಿದ. ಈ ಎಲ್ಲ ಜಂಜಾಟದಲ್ಲಿ ತನ್ನನ್ನು ಸಿಕ್ಕಿಸಿಕೊಳ್ಳುವ ಮನಸ್ಸಾಗದೇ, ಅತ್ಯಂತ ಜಾಗರೂಕತೆಯಿಂದ, “ಏನೋಪ್ಪಾ, ನನಗಿದರ ಅರ್ಥವಾಗುವದಿಲ್ಲ. ನೀವು ನನ್ನೊಡನೆ ಮಾತನಾಡಿದ್ದು ಮಾತ್ರ ದಯಮಾಡಿ ಯಾರಿಗೂ ಹೇಳಬೇಡಿ. ಇದಾವುದರಲ್ಲೂ ಸಿಕ್ಕಿಬೀಳುವ ಮನಸ್ಸಿಲ್ಲದ್ದರಿಂದಲೇ ಇಂದಿನಿಂದಲೇ ರಜೆ ಪಡೆದಿದ್ದೇನೆ. ನನ್ನನ್ನು ತಪ್ಪು ತಿಳಿಯಬೇಡಿ. ದೊಡ್ಡ ದೊಡ್ಡ ಜಾಗದಲ್ಲಿದ್ದವರೇ ತಮ್ಮ ತಮ್ಮ ಚಮಡಾ ಕಾಪಾಡಿಕೊಳ್ಳುವ ಉದ್ಯೋಗದಲ್ಲಿ ತೊಡಗಿರುವಾಗ ನಮ್ಮಂಥ ಬಡಪಾಯಿಗಳಿಗೇಕಪ್ಪಾ ಈ ಇಲ್ಲದ ಉಪದ್ವ್ಯಾಪ….ಆ‌ಒ‌ಆ ಇಂದೇ ಮುಂಬಯಿಗೆ ಹೋಗುವವರಿದ್ದರು. ಅವರು ಹೋಗುವ ಕಾರ್ಯಕ್ರಮವಂತೂ ನಾಲ್ಕು ದಿನಗಳ ಮೊದಲೇ ನಿಶ್ಚಿತವಾಗಿತ್ತು. ನಿಮಗೆ ಯಾಕೆ ಮೊದಲೇ ತಿಳಿಸಲಿಲ್ಲವೋ ಪಾಪ. ಈಗ ಅವರು ಬರುವವರೆಗೂ ಕಾಯಬೇಕಾಯಿತಲ್ಲ…. ಖಂಬಾಟಾಗೆ ಏಕೆ ಫೋನ್ ಮಾಡಿ ನೋಡುವುದಿಲ್ಲ…. ಆ ಅರ್ಮುಳ್ಳು ನಿಮಗೆ ಹೇಳಲು ಮರೆತಿರಬೇಕು. ನಿಮಗೀಗ ಪ್ರವಾಸದ ದಣಿವಿರಬೇಕು….ಈಗ ತುಸು ವಿಶ್ರಮಿಸಿರಿ. ಸುಳ್ಳೇ ಚಿಂತೆ ಮಾಡಬೇಡಿ. ಯಾರೋ ಎಲ್ಲೋ ತಪ್ಪಿದ್ದಾರೆ. ಅಷ್ಟೇ. ಗುಡ್‌ನೈಟ್ ,” ಎಂದು ಟೆಲಿಫೋನ್ ಕೆಳಗಿಟ್ಟುಬಿಟ್ಟ ಹೈದರ್ ಎಂದಿನವನಾಗಿ ತೋರಲಿಲ್ಲ. ಸ್ವತಃ ಅತ್ಯಂತ ನಿರುಪದ್ರವಿಯಾದ ಈ ವ್ಯಕ್ತಿ ತನ್ನ ಹತ್ತಿರ ಮಾತನಾಡುತ್ತಿರುವಾಗಲೇ ಯಾಕೋ ಹೆದರಿಕೊಂಡಿದ್ದ. ತನ್ನೊಡನೆ ಮಾತನಾಡುವುದಕ್ಕೂ ಹೆದರಬೇಕೆಂದರೆ ! ಆದರೂ ಒಂದರಲ್ಲಿ ಸಮಾಧಾನ : ತನ್ನನ್ನು ಸಸ್ಪೆಂಡ್ ಮಾಡಿದ ಸುದ್ದಿ ಇನ್ನೂ ಇಲ್ಲಿ ಯಾರಿಗೂ ತಲುಪಿದಂತೆ ತೋರಲಿಲ್ಲ. ಅಥವಾ…ಹೈದರ್ ಗೊತ್ತಿದ್ದೂ ಗೊತ್ತಿಲ್ಲದವನಂತೆ ನಟಿಸುತ್ತಿರಬಹುದೆ ?….ದೇವರೇ, ಈ ಸಂಶಯಕ್ಕೆ ಕೊನೆಯೆಲ್ಲಿ ?… +ಖಂಬಾಟಾಗೆ ಫೋನ್ ಮಾಡಲೇ ಬಿಡಲೇ ಎಂಬಂಥ ಸಂದಿಗ್ಧ ಮನಃಸ್ಥಿತಿಯಲ್ಲಿರುವಾಗಲೇ ಕೃಷ್ಣ ಬ್ರೆಡ್ ಹಾಗೂ ಬಿಯರ್ ಬಾಟಲಿಗಳೊಂದಿಗೆ ಬಂದ. ತನ್ನೆಲ್ಲ ನೋವನ್ನೂ, ಆತಂಕವನ್ನೂ ಬಿಯರಿನಲ್ಲಿ ಮುಳುಗಿಸಿಬಿಡಬೇಕು ಎಂಬ ಆತುರದಲ್ಲಿ, “ಥೆಂಕ್ಸ್ ಕೃಷ್ಣ, ಒಂದು ಬಾಟಲಿ ತೆರೆ ಹಾಗೂ ಒಂದು ಗ್ಲಾಸು ತಗೊಂಡು ಬಾ.” ಎಂದ. ಈ ಫಿರೋಜ್, ಖಂಬಾಟಾ, ರಾಮಕೃಷ್ಣ, ಈ ನಿರುಪದ್ರವಿ ಅಂಜುಬುರುಕ ಹೈದರ್_ಎಲ್ಲ ಎಲ್ಲ ಹೋಗಲಿ ಹಳ್ಳ ಹಿಡಿದು…. +ಬಿಯರಿನ ಅಮಲು ಮೆಲ್ಲಕ್ಕೆ ತಲೆಗೇರುತ್ತಿದ್ದಾಗ ಕಣ್ಣಮುಂದೆ ನಿಂತದ್ದು ಮೇರಿಯ ಮಾದಕವಾದ ಮೈಕಟ್ಟು. ಡಾಯನಾಳ ಸುಂದರ ಮೋರೆ. ಏಕೋ, ಬೇಡಬೇಡವೆಂದರೂ ಮೇರಿಗೆ ತಾನು ಹತ್ತಿರವಾಗುತ್ತಿದ್ದೇನೆ ಎಂದನ್ನಿಸಿದಾಗ ಅಸಾಧ್ಯವಾದ ಸುಖ ! ಆ ಸುಖದ ಮತ್ತಿನಲ್ಲಿರುವಾಗಲೇ ಇನ್ನೊಂದು ಬಾಟಲಿಯನ್ನು ತೆರೆಯಲು ಹೇಳಿದ. ಒಂದೇ ಪಟ್ಟಿಗೆ ಎರಡು ಬಾಟಲಿ ಬಿಯರನ್ನು ನಾಗಪ್ಪ ಹಿಂದೆಂದೂ ಹೀಗೆ ಒಬ್ಬನೇ ಕೂತು ಕುಡಿದಿರಲಿಲ್ಲ. ವಿಮಾನ-ನಿಲ್ದಾಣದಲ್ಲಿ ರಿಕ್ಷಾ ಹತ್ತುವಾಗ ಇಂದು ಮತ್ತೆ ಬಾರ್ಬಿಚ್ಯುರೇಟ್ ಗುಳಿಗೆಗೆಳನ್ನು ನುಂಗಬೇಕಾಗುತ್ತದೆಯೇನೋ ಎಂದು ಅನ್ನಿಸಿದ್ದರ ನೆನಪು ಬಂದಿತು. ನಿದ್ದೆ ಗುಳಿಗೆಗಳಿಗಿಂತ ಇದು ಲೇಸು ಎಂದುಕೊಳ್ಳುತ್ತ ಎರಡನೇ ಬಾಟಲಿಯಿಂದ ಬಿಯರನ್ನು ಗ್ಲಾಸಿನಲ್ಲಿ ಸುರಿಯಹತ್ತಿದ : ಕಣ್ಣಮುಂದೆ ನಗುತ್ತ ನಿಂತವರು ವೋಮು ಹಾಗೂ ಸರಸ್ವತಿ. ಅವರು ಹಾಗೆ ನಕ್ಕದ್ದು ಇದೇ ಮೊದಲು ಅನ್ನಿಸಿ ತಾನೂ ಮುಗುಳುನಕ್ಕ. +uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತೊಂದು – +ಬೆಳಿಗ್ಗೆ ಎಚ್ಚರವಾದಾಗ ನಾಗಪ್ಪನಿಗೆ ವಿಚಿತ್ರ ಭಾವನೆ. ಎಷ್ಟು ಗಂಟೆಯಾಗಿದೆ ಎಂಬುದು ಕೂಡ ಕೂಡಲೇ ತಿಳಿಯಲಿಲ್ಲ. ಕೋಣೆಯ ದಪ್ಪವಾದ ಕರ್ಟನ್ಸ್‌ಗಳೊಳಗಿಂದ ಹೊರಗಿನ ಬೆಳಕು ಬರುವುದು ಕಷ್ಟವಾಗಿತ್ತು. ಆದರೂ ಹೊರಗೆ ಆಗಲೇ ಬಿಸಿಲೇರಿದೆ : ತಾನೀಗ ಏಳಬೇಕು ಎಂದುಕೊಂಡರೂ ಏಳುವುದಕ್ಕೆ ಮನಸ್ಸೇ ಆಗುತ್ತಿರಲಿಲ್ಲ. ನಿನ್ನೆ ರಾತ್ರಿ ಬಿಯರ್ ಕುಡಿದದ್ದಕ್ಕೋ ಅಥವಾ ಏನು ಮಾಡಲಿ ಎಂಬುದರ ಬಗ್ಗೆ ಯಾವ ನಿರ್ಧಾರವನ್ನೂ ಮಾಡಲಾಗದ್ದಕ್ಕೋ ಮನಸ್ಸು ಗೊಂದಲಕ್ಕೊಳಗಾದ ಅನಿಸಿಕೆ : ಯಾರ ದೆಸೆಯಿಂದ ತಾನು ಈ ಎಲ್ಲ ಯಾತನೆಯನ್ನು ಅನುಭವಿಸುತ್ತಿದ್ದೇನೆಯೋ ಆ ಫಿರೋಜನನ್ನೇ ತಾನು ಈವರೆಗೂ ಕಂಡಿರಲಿಲ್ಲ_ಈ ಹೊಸ ಘಟನೆಗಳು ನಡೆಯಹತ್ತಿದಮೇಲೆ, ಶ್ರೀನಿವಾಸನೂ ಈ ಪಿತೂರಿಯಲ್ಲಿ ಸೇರಿಕೊಂಡಿದ್ದಾನೆ ಎಂಬುದರ ಬಗ್ಗೆಯೂ ಸ್ಪಷ್ಟವಾದ ಪುರಾವೆಗಳಿಲ್ಲ. ಹಾಗಾದರೆ… ತನ್ನನ್ನು ಶಿಕಾರಿಯಾಡುತ್ತಿದ್ದದ್ದು ತನ್ನ ಮನಸ್ಸೇ ಅಲ್ಲ ತಾನೇ ? ಅಪ್ಪ ತನ್ನನ್ನು, ತಂಗಿಯನ್ನು ಕೊಂದು ಕೊನೆಗೆ ತನ್ನನ್ನೇ ಕೊನೆಗಾಣಿಸಿಕೊಳ್ಳಬೇಕೆಂದು ಮಾಡಿದ ಸಂಚಿನ ಅಂಗವಾಗಿದ್ದ ಮಗು ತಾನು ಎಂಬ ಗುಮಾನಿಯ ಮೇಲೆ ಬೆಳೆದ ತನ್ನ ಮನೋಗಂಡ ಈಗ ಒಂದು ದುರ್ಬಲ ಕ್ಷಣದಲ್ಲಿ ತನ್ನ ನಿಜಸ್ವರೂಪವನ್ನು ಪ್ರಕಟಿಸಹತ್ತಿದೆಯೇ ?….ಕಂಪನಿಯ ‘ಆರ್ ಎಂಡ್ ಡೀ’ (ರಿಸರ್ಚ್ ಎಂಡ್ ಡೆವಲಪ್‌ಮೆಂಟ್) ಖಾತೆಯನ್ನು ಇಂದಿನ ಊರ್ಜಿರಾವಸ್ಥೆಗೆ ತರುವದರಲ್ಲಿ ತಾನು ಬಹು ದೊಡ್ಡ ಭಾಗವಹಿಸಿದ್ದೇನೆ ಎಂಬ ಅನ್ನಿಸಿಕೆ ಬರಿಯ ಅಹಂಕಾರದಲ್ಲಿ ಹುಟ್ಟಿದ್ದೇ ? +ದುರ್ದೈವದ ಸಂಗತಿಯೆಂದರೆ : ಕಂಪನಿಯ ಬಗ್ಗೆ ತಾನು ಮಾಡಿದ್ದರ ಸಂಪೂರ್ಣ ಲಾಭವನ್ನು ಪಡೆದವರು ಬೇರೆಯವರೇ ಆಗಿದ್ದಾರೆ ಎಂಬುದರ ಅರಿವು ನಾಗಪ್ಪನ ತೀರ ಸರಳ ಮನಸ್ಸಿಗೆ ತಟ್ಟುವಂತಹದಲ್ಲ. ದುಡಿಮೆಯ ಕ್ಷೇತ್ರದಲ್ಲಿಯ ಅವನ ಆಸೆ ಅಪೇಕ್ಷೆಗಳೇ ಬೇರೆಯಾಗಿದೆ. ತಾನು ಮೆಚ್ಚಿಕೊಂಡ, ತನ್ನ ಆಯ್ಕೆಯ ಕ್ಷೇತ್ರವಾದ ‘ಆರ್ ಎಂಡ್ ಡೀ’ಯಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸುವದು: ಸಾಧನೆಗೆ ತಕ್ಕ ಮನ್ನಣೆಯನ್ನು ಪಡೆಯುವದು. ಕಂಪನಿಯ ಸ್ಥಾನಮಾನಗಳ ಪಾವಟಿಗೆಗಳನ್ನು ಮೇಲೇರಿ ಹೋಗಬೇಕು ಎನ್ನುವಂತಹ ಮಹತ್ವಾಕಾಂಕ್ಷೆ ಅವನಿಗಿಲ್ಲ. ಹಾಗೆ ನೋಡಿದಲ್ಲಿ ಮಹತ್ವಾಕಾಂಕ್ಷೆ ಅವನ ಸ್ವಭಾವ-ಶಿಲ್ಪದಲ್ಲೇ ಇಲ್ಲವಾಗಿತ್ತು. ಈ ಮಹತ್ವಾಕಾಂಕ್ಷೆಯ ಅಭಾವವೇ ಒಂದು ಅರ್ಥದಲ್ಲಿ ಅವನು ಸದ್ಯ ಸಿಲುಕಿಕೊಂಡ ಸನ್ನಿವೇಶಕ್ಕೆ ಕಾರಣವಾಗಿತ್ತೆನ್ನಬಹುದು. ಆರ್ ಎಂಡ್ ಡೀ ಬಿಟ್ಟರೆ ನಾಗಪ್ಪ ತುಂಬ ತನ್ಮಯತೆಯಿಂದ ತೊಡಗುತ್ತಿದ್ದದ್ದು ಸಾಹಿತ್ಯದಲ್ಲಿ. ಸಾಲೆಯ ದಿನಗಳಿಂದಲೇ ಕವಿತೆ ಗೀಚುವ, ಕತೆ ಬರೆಯುವ ಹುಚ್ಚು ಹವ್ಯಾಸ. ಸಣ್ಣ ಕತೆಯ ಕ್ಷೇತ್ರದಲ್ಲಿ ಹೆಸರನ್ನು ಗಳಿಸುವ ಪ್ರತಿಭೆಯಿದ್ದೂ ಹೆಸರು ಗಳಿಸುವುದರ ಬಗೆಗೇ ನಿರಾಸಕ್ತ. ತನ್ನ ಸೃಷ್ಟಿ ಶೀಲತೆಯ ಸರ್ವಸ್ವವನ್ನೂ ಧಾರೆಯೆರೆದು ಬರೆದಿದ್ದೇನೆ ಎಂದನ್ನಿಸಿದ ಕತೆಗಳ ಸಂಗ್ರಹಕ್ಕೆ, ಸಾಹಿತ್ಯದಲ್ಲಿ ಈಗಾಗಲೇ ದೊಡ್ಡ ಕೀರ್ತಿಯ ಸ್ಥಾನವನ್ನು ಗಳಿಸಿದ್ದ ಗೆಳೆಯನೊಬ್ಬನಿಗೆ ಮುನ್ನುಡಿಯನ್ನು ಬರೆದುಕೊಡುವಂತೆ ಕೇಳಿಕೊಂಡಿದ್ದ. ‘ನಾವಿಬ್ಬರೂ ಬ್ರಾಹ್ಮಣರಾದ್ದರಿಂದ ನಾನು ಮುನ್ನುಡಿ ಬರೆಯುವುದರಿಂದ ನಿನಗೆ ಹಾನಿಯೇ ಆದೀತೇ ಹೊರತು ಯಾವುದೇ ರೀತಿಯ ಸಹಾಯ ಆಗಲಾರದು. ಮೇಲಾಗಿ, ಸಣ್ಣ ಕತೆಯ ಕ್ಷೇತ್ರದಲ್ಲಿ ಈಗಾಗಲೇ ಮಾನದ ಸ್ಥಾನ ಗಳಿಸಿದ ನಿನ್ನ ಕತೆಗಳಿಗೆ ಮುನ್ನುಡಿಯಾದರೂ ಯಾಕೆ ?’ ಎಂಬಂತಹ ಪತ್ರ ಬಂದಾಗ ಅದಕ್ಕೆ ಯಾವ ರೀತಿಯಿಂದ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೇ ಸುಮ್ಮನಾಗಿದ್ದ. ಮುಂದೆ ಕಥಾಸಂಗ್ರಹ ಪ್ರಕಟವಾದ ಮೇಲೆ ಬಂದ ಪ್ರತಿಕ್ರಿಯೆಯಿಂದಂತೂ ದಂಗುಬಡೆದ. ಕತೆಗಳಿಗಿಂತ ಅವುಗಳ ಹಿಂದೆ ಇವರು ಕಂಡುಹಿಡಿದ ಬ್ರಾಹ್ಮಣ-ಪ್ರಜ್ಞೆಯೇ ಚರ್ಚೆಯ ವಿಷಯವಾಯಿತು. ಇಷ್ಟು ದಿನ, ತಾನು ತನ್ನ ಗೆಳೆಯರೆಂದು ತಿಳಿದವರೇ ಈಗ ಈ ವಿಮರ್ಶೆಯ ನೆಪದಲ್ಲಿ ಪ್ರಕಟಿಸಿದ ಕ್ರೌರ್ಯದಿಂದ ನಾಗಪ್ಪ ದಿಗ್ಭ್ರಮೆಗೊಂಡ. ಇಂಥವರ ಸಾಹಿತ್ಯವನ್ನು ಸುಟ್ಟುಹಾಕಬೇಕು ಎನ್ನುವಷ್ಟರ ಮಟ್ಟಿಗೆ ಈ ಕ್ರೌರ್ಯ ವಿಕೋಪಕ್ಕೆ ಹೋದಾಗ ಕತೆ ಬರೆಯುವ ಹುರುಪನ್ನೇ ಕಳಕೊಂಡನೇ ಹೊರತು ಈ ಕ್ರೌರ್ಯವನ್ನು ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ. ಸದ್ಯ ಆಗೀಗ ಬರೆಯದೇ ಇರುವುದು ಅಸಾಧ್ಯವಾದಾಗ ಕವಿತೆ ಗೀಚುತ್ತಾನೆ : ಕತೆ ಬರೆಯುತ್ತಾನೆ. ಆದರೆ ಪ್ರಕಟಣೆಗೆ ಕಳಿಸುವುದನ್ನು ಬಿಟ್ಟುಕೊಟ್ಟಿದ್ದಾನೆ. ಯಾಕಾದರೂ ಪ್ರಕಟಿಸಬೇಕು ಎಂಬ ಪ್ರಶ್ನೆಗೆ ವಿವೇಕಪೂರ್ಣವಾದ ಉತ್ತರ ಕಂಡುಕೊಂಡಿಲ್ಲವಾದರೂ ಬರೆಯುವಾಗ, ಬರೆಯುವ ಅನುಭವ, ಸೃಷ್ಟಿಸುವ ಅನುಭವ ಕೊಡುವ ಆನಂದವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು. ಅವರು ಮೆಚ್ಚಿಕೆ ವ್ಯಕ್ತಪಡಿಸಿದಾಗ ಸುಖಪಡುವುದು ಮಾನವ ಸಹಜವಾದದ್ದೇನೋ ಎಂದೆನ್ನಿಸಿದೆ. ಒಮ್ಮೊಮ್ಮೆ ತಾನು ಅನುಭವಿಸುತ್ತಿದ್ದ ಈ ಯಾತನೆಯನ್ನು ಸಾಹಿತ್ಯದಲ್ಲಿ ರೂಪಾಂತಗೊಳಿಸುವ ಶಕ್ಯತೆಯಿದ್ದರೆ, ಅಂದರೆ ಸಾಹಿತ್ಯವಾಗಿ ಇನ್ನೊಬ್ಬರಿಗೆ ಮುಟ್ಟುವ ಶಕ್ಯತೆ ಇದ್ದರೆ, ಇದನ್ನೆಲ್ಲ ಇದಿರಿಸುವ ತನ್ನ ಧೈರ್ಯ ಹೆಚ್ಚಾಗುತ್ತಿತ್ತೇನೋ ಎಂದೆನ್ನಿಸಿದಾಗ ನಾಗಪ್ಪ ತನ್ನಷ್ಟಕ್ಕೇ ನಗುತ್ತಾನೆ : ಬರಿಯೆ ನನ್ನ ಅಪ್ಪ-ಅಮ್ಮರ ಜಾತಿಯೇ ನನ್ನ ಸೃಷ್ಟಿಶೀಲತೆಗೆ ಮಾರಕವಾಗುತ್ತಿದ್ದರೆ ಬೇರೆಯೇ ಒಂದು ಕಾವ್ಯನಾಮದಿಂದ ಬರೆದರೆ ಹೇಗೆ ? ಆದರೆ ಬಿಟ್ಟಾರೆಯೇ ? ಜಗತ್ತಿನಲ್ಲಿಯ ಎಲ್ಲ ಕಾಳಜಿಗಳಿಗೆ, ಜವಾಬ್ದಾರಿಗಳಿಗೆ, ಕಂತ್ರಾಟು ಹಿಡಿದ ನಮ್ಮ ವಿಮರ್ಶಕರು ಈ ಕಾವ್ಯನಾಮದ ಹಿಂದಿನ ಗುಟ್ಟನ್ನು ಶೋಧಿಸದೇ ಸುಮ್ಮಗುಳಿದಾರೆಯೇ ? ಇವರಲ್ಲನೇಕರು ಸ್ವತಃ ಕವಿತೆ, ಕತೆ ಬರೆಯುವವರೇ, ಇಷ್ಟೇ, ಊರಿಗೆ ಬೆಂಕಿ ಬಿದ್ದಾಗ ಗುಲಾಬಿ ಗಿಡದ ಮೇಲೆ, ಚಂದ್ರೋದಯದ ಮೇಲೆ ಇವರು ಕವಿತೆ ಬರೆಯುವದಿಲ್ಲ. ದೇವರ ಆಣೆಗೂ, ಬೆಂಕಿಗೇ ನೇರವಾಗಿ ಪ್ರತಿಕ್ರಿಯಿಸುತ್ತಾರೆ_ಶಬ್ಧಗಳಲ್ಲಿ ! ಬೆಂಕಿಯ ಮೇಲೆ ಕವಿತೆ ಬರೆಯುತ್ತಾರೆ, ಅಂತೂ ಊರಿಗೇ ಬೆಂಕಿ ಬಿದ್ದಾಗ ಕವಿತೆ ಬರೆಯುತ್ತಾರೆ. ಈ ನನ್ನ ಶೂರ ಮಕ್ಕಳು. ನನ್ನ ಹೊಟ್ಟೆಕಿಚ್ಚಿಗೆ ಕಾರಣವಾಗುತ್ತಾರೆ…. ಈ ಎಲ್ಲ ಶೂರ ಶಿಕಾರಿಯವರಿಂದ ನನಗೆ ಸಲ್ಲಬೇಕಾದ ನ್ಯಾಯ ದೊರಕೀತೇ ? ಇದು ‘ಅನ್ಯಾಯ’ ಎಂಬ ಪ್ರಜ್ಞೆಯೇ ಈ ಎಲ್ಲ ನೋವಿಗೆ ಮೂಲ. ಪ್ರಜ್ಞೆಯೇ ಇಲ್ಲದಲ್ಲಿ ನೋವೆಲ್ಲಿ ? ಅದ್ಭುತ ಸಂಗತಿಯೆಂದರೆ, ಪ್ರಜ್ಞೆ ಒಮ್ಮೆ ಹುಟ್ಟಿದ ಮೇಲೆ ಅದನ್ನು ಕಳೆದುಕೊಳ್ಳುವದು, ಇಲ್ಲವಾಗಿಸುವದು ಕಷ್ಟ. ಆದರೂ ಬರೆಯಬೇಕು. ಈ ಶ್ರೀನಿವಾಸರಿಂದ, ಈ ಫಿರೋಜರಿಂದ, ನಾನು ಅನುಭವಿಸುತ್ತಿದ್ದ ಎಲ್ಲ ನೋವಿಗೆ ಆಕಾರ ಕೊಡಬೇಕು ; ಮಾನವೀಯ ಯಾತನೆಗೆ ಮಿಡುಕಾಡಬಲ್ಲ ಯಾವ ಅಂತಃಕರಣಕ್ಕೂ ಅರ್ಥಪೂರ್ಣವಾಗುವಂತೆ ಬರೆಯಬೇಕು. ನನ್ನ ಹೆಸರಿನಲ್ಲೇ ಪ್ರಕಟಿಸಬೇಕು : ಒಂದು ವಿಶಿಷ್ಟ ಮೂಡಿನಲ್ಲಿ ಹುಟ್ಟಿದ ಈ ಧೈರ್ಯವನ್ನು ಸ್ಥಾಯಿಯಾಗಿಸುವಂತೆ ಧಡಪಡಿಸುತ್ತಾನೆ. ಇದೀಗ ಗೆಲ್ಲುತ್ತಾನೆ. ಮರುಗಳಿಗೆ ಸೋಲುತ್ತಾನೆ. ಇದೀಗ ಖುಷಿಯಿಂದ ಉಬ್ಬುತ್ತಾನೆ. ಮರುಗಳಿಗೆ ಕುಗ್ಗುತ್ತಾನೆ. ತನ್ನ ವ್ಯಕ್ತಿತ್ವದಲೇ ಮೂಲಭೂತವಾದ ಬದಲು ಒದಗಿಬರದೇ ಈ ಹೊಯ್ದಾಟ ನಿಲ್ಲದು ಎಂಬುದರ ಅರಿವು ನಾಗಪ್ಪನಿಗಿದೆ. ಯಾರಿಗೆ ಗೊತ್ತು : ಸದ್ಯ ತಾನು ಅನುಭವಿಸುತ್ತಿದ್ದುದರಲ್ಲೇ ಇಂತಹ ಬದಲಿಗೆ ಪ್ರಚಂಡ ಬದಲಾವಣೆಯಾಗಬಲ್ಲಂತಹದೇನಾದರೂ ಅಡಗಿರಬಹುದೆಂಬ ಅಸ್ಪಷ್ಟವಾದ ಭರವಸೆಯಿಂದಲೇ ಆಗೀಗ ಪುಲಕಿತನಾಗುತ್ತಾನೆ. ಇಂತಹ ಬದಲು ಒಮ್ಮೊಮ್ಮೆ ಉದ್ದವಾಗಿ ಬಿಟ್ಟ ಗಡ್ಡಮೀಸೆಗಳಿಗಾಗಿ, ಇಲ್ಲ ಯೂಲ್ ಬ್ರಾಯ್ನರ್ ತರಹ ತಕತಕನೆ ಹೊಳೆಯುವಂತೆ ಬೋಳಿಸಿಕೊಂಡ ತಲೆಗಾಗಿ ಕಲ್ಪನೆಯಲ್ಲಿ ದೇಹಧಾರಣೆ ಮಾಡಿದಾಗ ತನ್ನಷ್ಟಕ್ಕೇ ನಗುತ್ತಾನೆ…. +ಈಗಲೂ ಹಾಸಿಗೆಯಲ್ಲಿ ಬಿದ್ದಲ್ಲೇ ಬಂದ ಇಂತಹ ಒಂದು ವಿಚಾರಕ್ಕೆ ತನ್ನಷ್ಟಕ್ಕೇ ನಗುತ್ತ ಇನ್ನೂ ನಿದ್ದೆಯೋ ಬಿಯರಿನ ಅಮಲೋ ಸಂಪೂರ್ಣವಾಗಿ ಬಿಟ್ಟಿರದ ಕಣ್ಣುಗಳನ್ನು ಉಜ್ಜುತ್ತ, ತಲೆಬದಿಯ ಗೋಡೆಯ ಮೇಲಿನ ಸ್ವಿಚ್‌ಬೋರ್ಡ್ ಮೇಲಿನ ಸ್ವಿಚ್ ಒಂದನ್ನೊತ್ತಿ ಕರೆ-ಗಂಟೆ ಬಾರಿಸಿದ. ಕೆಲಹೊತ್ತಿನಲ್ಲಿ ಕೃಷ್ಣ ಕದ ದೂಡಿ ಒಳಗೆ ಬಂದಾಗ, “ಗಂಟೆಯೆಷ್ಟಾಯಿತು ? ಒಂದು ಕಪ್ ಚಹ ತರುತ್ತೀಯಾ ?” ಎಂದು ಕೇಳಿದ. “ಗಂಟೆ ಒಂಬತ್ತರಮೇಲಾಗಿರಬೇಕು ಸರ್ ! ಗಾಢ ನಿದ್ದೆ ಹತ್ತಿರಬೇಕು. ಬೆಳಿಗ್ಗೇ ಮುಂಬಯಿಯಿಂದ ಫೋನ್ ಬಂದಿತ್ತು. ಕದವನ್ನು ಎಷ್ಟು ಸರತಿ ಬಡಿದರೂ ನಿಮಗೆ ಎಚ್ಚರವಾಗಲಿಲ್ಲ. ಕರೆದವರು ತಮ್ಮ ಹೆಸರನ್ನೂ ಹೇಳಲಿಲ್ಲ. ಇನ್ನೊಮ್ಮೆ ಫೋನ್ ಮಾಡುತ್ತೀರಾ ಎಂದು ಕೇಳಿದಾಗ, ‘ನಿನಗೇಕೆ ಇಲ್ಲದ ಉಪದ್ವ್ಯಾಪ. ಈಗ ಅನುವು ದೊರೆತಾಗಲೇ ಗಡದ್ಧಾಗಿ ನಿದ್ದೆ ಮಾಡಲು ಹೇಳು,’ ಎಂದು ನನ್ನನ್ನೇ ಗದರಿಸಿದರು ಸರ್ ! ಅವರಿಗೆ ಹಿಂದಿ ಸರಿಯಾಗಿ ಬರುವದಿಲ್ಲವೇನೋ. ಆದರೆ ಸಿಟ್ಟು ಮಾತ್ರ….”ತನ್ನ ವರದಿ ಬೇಕಾದದ್ದಕ್ಕಿಂತ ಉದ್ದವಾಯಿತೇನೋ ಎಂಬ ಅಳುಕಿನಿಂದೆಂಬಂತೆ, “ಕ್ಷಮಿಸಿ ಸರ್. ಚಹವನ್ನು ಕೂಡಲೇ ತರುತ್ತೇನೆ,”ಎಂದು ಅಲ್ಲಿಂದ ಹೊರಟ. ನಾಗಪ್ಪ ಈ ವರದಿಯಿಂದ ವಿಚಲನಾಗಲಿಲ್ಲ. ಬದಲು, ತಾನು ಇಷ್ಟು ದಿನ ತುಂಬ ಆತಂಕದಿಂದ ದಾರಿ ಕಾಯುತ್ತಿದ್ದ ಬದಲು ಈಗಾಗಲೇ ತನ್ನೊಳಗೆ ಆಗಹತ್ತಿದೆ ಎಂಬ ಅನ್ನಿಸಿಕೆಯಿಂದ ಬಹಳ ಖುಷಿಪಟ್ಟವನ ಹಾಗೆ_”ಭೆಂಛೋದ್ ! ಫಿರೋಜ್ ಅಥವಾ ಅವನ ಅರೆಮುಳ್ಳು ಚೇಲಾ ಖಂಬಾಟಾ ಫೋನ್ ಮಾಡಿರಬೇಕು ಎಂದುಕೊಂಡ. ಮಾಡಲಿ, ತನಗೇನಂತೆ. ತನಗೀಗ ಇವರಾರ ಸಾತೂ ಇಲ್ಲ ! ಇಲ್ಲ ! ಇಲ್ಲ ! ಇಲ್ಲ ! ಪದೇ ಪದೇ ಹಾಗೆ ಹೇಳಿಕೊಳ್ಳುವುದರಿಂದಲೇ ಒಳಗೆ ಕುದುರಹತ್ತಿದ ಧೈರ್ಯ ಗಟ್ಟಿಯಾದೀತು ಎಂಬ ಭರವಸೆಯಿಂದೆಂಬಂತೆ ಅದನ್ನು ಮಂತ್ರದಂತೆ ಜಪಿಸಹತ್ತಿದ. ನಿಜವಾಗಿ ನೋಡಿದಲ್ಲಿ ಈ ಶಾಬ್ಧಿಕ ಮಂತ್ರದ ಗರಜು ನಾಗಪ್ಪನಿಗಿರಲೇ ಇಲ್ಲ : ನಿಜಕ್ಕೂ, ಮನಸ್ಸಿನ ಆಳದಲ್ಲಿ. ಅವರಿಗೆ ನಿಲುಕದ ಒಂದು ಕೇಂದ್ರ ಇಷ್ಟು ದಿನ ಗಟ್ಟಿಯಾಗಿ ಬಿಗಿಹಿಡಿದ ಬಾಯನ್ನು ಈಗ ಅತಿ ಸಹಜವಾದ, ಸುಲಭವಾದ ರೀತಿಯಲ್ಲಿ ತೆರೆದಿತ್ತು ; ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯ ತಾನೇ ತಾನಾಗಿ ತಲೆಯೆತ್ತಿ ನಿಲ್ಲುವ ಹವಣಿಕೆಯಲ್ಲಿತ್ತು : ಹೌದು, ನನಗೂ ಈ ಕಂಪನಿಗೂ ಇರುವ ಸಂಬಂಧ ಕೂಡ ಇಲ್ಲಿಗೆ ಕಡಿಯಿತು. ಈ ಎಲ್ಲ ಸುಳ್ಳು ಸಂಬಂಧಗಳನ್ನು, ಮನುಷ್ಯನನ್ನೇ ಸುಳ್ಳುಮಾಡುವ ಈ ಸಂಬಂಧಗಳನ್ನು ಕಡಿಯುತ್ತ ಹೋಗಬೇಕು ಅಂದರೇನೇ ನಿಜವಾದ, ನಿಃಸ್ಪೃಹವಾದ ಸಂಬಂಧಗಳು ಹುಟ್ಟಬಹುದೇನೋ. ಯಾವುದೇ ರೀತಿಯ ಸ್ವಾರ್ಥಕ್ಕೆ, ಹಿತಾಸಕ್ತಿಗಳ ರಕ್ಷಣೆಗೆ ಕಟ್ಟಿಬಿದ್ದಿರದ ಸಂಬಂಧಗಳು ಇದ್ದಲ್ಲಿ ಮಾತ್ರ ಮನುಷ್ಯನೇ ಮನುಷ್ಯನ ಹಿಂಸೆಗೆ ಕಾರಣವಾಗುವುದು ತಪ್ಪಬಹುದೇನೋ….ತಿರಿಗಿ, ಬೇರಿನವರೆಗೆ ಅಲ್ಲಾಡಿಸಿದ್ದನ್ನು ಕೂಡ ನಿರ್ಜೀವ ಶಬ್ದಗಳಲ್ಲಿ ಹಿಡಿಯಹೊರಟ ತನ್ನ ಹುಚ್ಚು ಹವ್ಯಾಸಕ್ಕೆ ತಾನೇ ಬೇಜಾರುಪಟ್ಟು ಹಾಸಿಗೆಯಿಂದ ಧಡಕ್ಕನೆ ಎದ್ದ. +ಎದ್ದವನೇ ಕಿಡಕಿಗೆ ಬಂದು, ಪರದೆಗಳನ್ನು ಬದಿಗೆ ಎಳೆದ. ಆಗಲೇ ಕಾದ ಬಿಸಿಲಲ್ಲಿ ಮುಂದಿನ ಕಣಿವೆಯಲ್ಲ ಬೆಚ್ಚಗೆ ಬೆಳಗಿ ನಿಂತಿತ್ತು. ಎಷ್ಟು ಲಕ್ಷ ವರ್ಷಗಳ ಹಿಂದೆ ನೆಲದ ಹೊಟ್ಟೆಯೊಳಗಿಂದ ಸಿಡಿದೆದ್ದು ಬಂದ ಲಾವಾ ತಣ್ಣಗಾಗಿ ಹುಟ್ಟಿದ ಬಂಡೆಗಳೋ ಇವು ! ಎಷ್ಟು ಸಾವಿರ ವರುಷಗಳಿಂದ ಹೀಗೆ ಗಾಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ ನಿಂತಿವೆಯೋ ! ಪ್ರಥಮ ಬಾರಿಯೇ ಈ ಬಂಡೆಗಳನ್ನು ತಾನು ನೋಡುತ್ತಿದ್ದೇನೆ ಎನ್ನುವ ಕುತೂಹಲದಿಂದ ಅವುಗಳನ್ನು ನೋಡುತ್ತ ನಿಂತ : ಮನುಷ್ಯ ತನ್ನ ಯಾತನೆಗಳ ವಿಚಾರದಲ್ಲೇ ತೊಡಗಿದರೆ ಹೊರಗೆ ಬಂದಾಗ ಈ ಹೊರಗಿನ ಸೃಷ್ಟಿ ಎಷ್ಟೊಂದು ಸುಂದರ ! ನಾಗಪ್ಪ, ಆ ನಿರ್ಜೀವ ಮೂಕ ಬಂಡೆಗಳನ್ನೇ ನೋಡುತ್ತ ಎಷ್ಟು ಹೊತ್ತು ನಿಂತಿದ್ದನೋ ತಿರುಗಿ ಕೋಣೆಯತ್ತ ಕಣ್ಣು ಹಾಯಿಸಿದಾಗ ಯಾವಾಗಲೋ ಕೃಷ್ಣ, ಚಹದ ಟ್ರೇಯನ್ನು ಇಡುತ್ತ ತನ್ನ ಲಕ್ಷ್ಯ ಸೆಳೆದದ್ದು ಈಗ ನೆನಪಿಗೆ ಬಂದು ಕಿಟ್ಲಿಯನ್ನು ಮುಟ್ಟಿ ನೋಡಿದ. ಕೋಸಿಯ ಹೊದಿಕೆಯೊಳಗೂ ಅದು ತಣ್ಣಗಾಗಿತ್ತು. ಕೃಷ್ಣನಿಗೆ ಇನ್ನೊಂದು ಕಪ್ ಬಿಸಿಬಿಸಿ ಚಹ ತರಲಿಕ್ಕೆ ಹೇಳಿ ಹಾಸಿಗೆಯಲ್ಲಿ ಒರಗಿದ. ಗಂಟೆ ಹತ್ತನ್ನು ಸಮೀಪಿಸುತ್ತಿತ್ತು. ಆದರೂ ಏಳಬೇಕೆಂಬ ಕಾತರವಿರಲಿಲ್ಲ. ತನ್ನ ಇಂದಿನ ನಿರ್ಧಾರ ಎಂದಿನಂತಹದಲ್ಲ ಎಂಬ ಸ್ಪಷ್ಟವಾದ ಅರಿವು ಮನಸ್ಸಿಗೆ ಸಂತೋಷ ಕೊಡುತ್ತಿತ್ತು. ಕಿಡಕಿಯೊಳಗಿಂದ ನೋಡಿದ ಗೋಲುಗೋಲಾದ, ಬೋಳುಬೋಳಾದ ಬೃಹದ್ ಆಕಾರದ ಬಂಡೆಗಳಿಗೂ ತನ್ನ ಇದೀಗಿನ ಸಮಾಧಾನ ತುಂಬಿದ ಮನೋಭಾವಕ್ಕೂ ಏನೋ ಸಂಬಂಧವಿದೆಯೆಂಬಂತೆ….ಬೇಡ, ಇಂತಹ ಯಾವ ಭಾವುಕತೆಯೂ ಬೇಡ. ಫಿರೋಜ್ ಮತ್ತೆ ಫೋನ್ ಮಾಡಿದರೆ, ಹಾಳಾಗಿ ಹೋಗು ಬೋಳೀಮಗನೇ. ನಿನ್ನ ಈ ತನಿಖೆಗೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿಬಿಡಬೇಕು ಎಂದುಕೊಂಡ. ಹಾಗೆ ಹೇಳಿಕೊಳ್ಳುವಾಗ ಎಂದಿನ ಹಾಗೆ ಅವುಡುಗಚ್ಚಲಿಲ್ಲ. ಶ್ವಾಸ ಬಿಗಿಹಿಡಿಯಲಿಲ್ಲ. ಕೃಷ್ಣ ಹೊಸದಾಗಿ ತಂದ ಚಹದ ಬಿಸಿ ಗುಟುಕನ್ನು ಸವಿಯುತ್ತಿರುವಾಗ ನಿನ್ನೆ ಪ್ಲೇನಿನಲ್ಲಿ ಡಾಯನಾಳ ಹತ್ತಿರ ಕೂತಾಗಿನ ಸಿಹಿಕ್ಷಣಗಳ ನೆನಪು, ಅವಳು ತನ್ನನ್ನು ಗುರುತಿಸಿದ ಬಗೆ ನೆನಪು; ತಾನು ಎದೆಗವುಚಿ ಹಿಡಿದ ಗುಟ್ಟು ಗಟ್ಟಿಯಾದ ವಾಸ್ತವ ಜಗತ್ತಿನದೊ ಅಥವಾ ಬರಿಯೆ ತನ್ನ ಭ್ರಮೆಯಲ್ಲಿ ಹುಟ್ಟಿದ್ದೋ ಎನ್ನುವುದನ್ನು ತಾನು ತಿರುತಿರುಗಿ ಎದೆಮುಟ್ಟಿ ಖಾತ್ರಿಮಾಡಿಕೊಳ್ಳುತ್ತಿರಬೇಕು. ಆದರೆ ಅದು ಈಗ ಒಂದು ಚಟವಾಗಿಬಿಟ್ಟಿದೆ ಎನ್ನುವುದು ಲಕ್ಷ್ಯಕ್ಕೆ ಬಂದದ್ದು ಮಾತ್ರ ನೆನ್ನೆ ಡಾಯನಾ ಹೇಳಿದಮೇಲೆಯೇ. ಡಾಯನಾ ತಾನು ರಿಕ್ಷಾ ಹತ್ತುವಾಗ ನೋಡಿದ್ದರ ನೆನಪು ; ಅವಳೂ ಪಾರಸೀ. ಈ ಡ್ರೈವರ್ ಹಾಗೂ ಬಂದೂಕವಾಲರಿಗೆ ಸಂಬಂಧ ಇಲ್ಲ ತಾನೇ ಎಂದು ಅದೇ ಮೂಡಿದ ಶಂಕೆ_ಯಾವವೋ ಕಾಡುವ ಜಾತಿಯವಾಗಿರಲಿಲ್ಲ ; ಡಾಯನಾಳನ್ನು ತಾನು ಯಾವುದೇ ರೀತಿಯಿಂದ ಉಪಯೋಗಿಸಿಕೊಳ್ಳುವುದಿರಲಿಲ್ಲ. ಮೇಲು ಮೇಲಿನ ಮೆದುಳು ಭಾಗ ಪ್ರಸ್ತುತದ ವಿಚಾರದಲ್ಲಿ ತೊಡಗಿದಂತೆ ತೋರಿಯೂ ಆಳದಲ್ಲೆಲ್ಲೋ ಇನ್ನಾವುದನ್ನೋ ಕುರಿತು ಚಿಂತನೆ ನಡೆದಂತಿತ್ತು ; ಹೊಟ್ಟೆಯ ಮಕ್ಕಳನ್ನೇ ಕೊನೆಗಾಣಿಸುವ ಭೀಕರ ಕೃತ್ಯಕ್ಕೆ ಅಪ್ಪನನ್ನು ದೂಡಿದ ಸನ್ನಿವೇಶವಾದರೂ ತಿಳಿದಿದ್ದರೆ….ಒಂದು ದಿನ ಹುಡುಕಿ ತೆಗೆಯಬೇಕು. ಇನ್ನು ಮುಂದೆ ಬೇರುಗಳನ್ನು ಹುಡುಕುವಂತಹ, ತನ್ನ ಮಟ್ಟಿಗೆ ಮಹತ್ವದ್ದೆಂದು ಅನ್ನಿಸುವ ಇಂತಹ ನಿಷ್ಪಾಪ ಚಟುವಟಿಕೆಗಳಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕು. ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಅರಿಯಬೇಕು. ಸ್ಪಷ್ಟವಾಗಿ ಅವುಗಳನ್ನು ಒಪ್ಪಿಕೊಳ್ಳಬೇಕು…. +ಅದಾಗ, ಟೆಲಿಫೋನ್ ಗಂಟೆ : ಮುಂಬಯಿಯಿಂದಿರಬಹುದೇ ಎಂಬ ಅನುಮಾನದಿಂದ ಎದೆ ಡವಗುಟ್ಟಲಿಲ್ಲ. ಫಿರೋಜನೇ ಆದರೆ ಏನೇನು ಹೇಳಲಿ ಎಂಬುದರ ಬಗ್ಗೆ ರಿಸೀವರನ್ನು ಎತ್ತುವ ಮೊದಲೇ ವಿಚಾರಮಾಡಬೇಕು ಎನ್ನುವ ಆತಂಕ ಹುಟ್ಟಲಿಲ್ಲ. ಸನ್ನಿವೇಶ ಬೇಡುವ ಉತ್ತರವನ್ನು ಕೊಟ್ಟರಾಯಿತು ಎನ್ನುವ ನಿರಂಬಳತೆಯಿಂದ ಕೃಷ್ಣ ಫೋನ್ ಯಾರದೆಂಬುದನ್ನು ಹೇಳುವ ಕ್ಷಣವನ್ನು ಕಾಯಹತ್ತಿದ. ನಾಗಪ್ಪನ ಅನುಮಾನ ನಿಜವಾಗಿತ್ತು. ಮುಂಬಯಿಯಿಂದ ಟ್ರಂಕ್‌ಕಾಲ್ ನಾಗಪ್ಪನಿಗೆ : ರಿಸೀವರ್ ಕೈಗೆತ್ತಿಕೊಳ್ಳುವಾಗಿನ ತನ್ನ ಚಿತ್ತ-ಸ್ವಾಸ್ಥ್ಯಕ್ಕೆ ತಾನೇ ಆಶ್ಚರ್ಯಪಟ್ಟ. ಆ ಬದಿಯ ಗಂಡುದನಿ ನೋಶೀರ್ ಖಂಬಾಟಾನದಾಗಿತ್ತು. ಆದರೂ ಅದರ ಪರಿಚಯ ಸಿಗದವನ ಹಾಗೆ, “ಹಲ್ಲೋ ಫಿರೋಜ್, ನಿನ್ನ ದನಿ ಕೇಳಿ ಬಹಳ ಸುಖವಾಯಿತು,” ಎಂದ. ಆ ಬದಿಯಿಂದ. ಇದು ಟ್ರಕ್‌ಕಾಲ್, ಆದಷ್ಟು ಬೇಗ ತನಗೆ ಕೊಡಬೇಕಾಗಿದ್ದ ಸಂದೇಶವನ್ನು ಕೊಟ್ಟು ಮುಗಿಸಬೇಕು ಎಂಬ ಆತುರ ವ್ಯಕ್ತಪಡಿಸಿದ ದನಿ, “ಹಲ್ಲೋ ಹಲ್ಲೋ, ನಾನು ನಾನೂ, ಫಿರೋಜ ಅಲ್ಲ್_ನೋಶೀರ್ ಖಂಬಾಟಾ,” ಎಂದಿತು. ನಾಗಪ್ಪ, ಅಷ್ಟೇ ಶಾಂತಚಿತ್ತನಾಗಿ, ಗಂಟೆಗಟ್ಟಲೆ ಮಾತನಾಡೋಣವಲ್ಲ. ಯಾರೂ ಮಾತನಾಡಲು ಸಿಗದೇ ಬೇಸರ ಬಂದುಬಿಟ್ಟಿತ್ತು ನೋಡು. ಯಾಕೆ ಇಷ್ಟೊಂದು ಅವಸರ ಎನ್ನುವ ಸಾವಧಾನದಿಂದ, “ಹೆಲ್ಲೋ ನೋಶೀರ್. ಎಷ್ಟೊಂದು ಬೋರ್ ಆಗಿದ್ದೆನೆಂದು ಹೇಳಲೀ. ನಿನ್ನ ಸುಮಧುರ ಕಂಠನಾದ ಕೇಳಿದ್ದೇ ಬಹಳ ಸುಖವಾಯಿತು ನೋಡು. ಅಂದಹಾಗೆ, ಮರೆಯುವ ಮೊದಲೇ ನಿನಗೆ ಥೆಂಕ್ಸ್ ಕೊಟ್ಟುಬಿಡುತ್ತೇನೆ : ವಿಮಾನ-ನಿಲ್ದಾಣದಲ್ಲಿನನ್ನನ್ನು ಇದಿರುಗೊಳ್ಳಲು ಮಾಡಿದ ಏರ್ಪಾಡು; ಗೆಸ್ಟ್ ಹೌಸಿನಲ್ಲಿ ಉಳಿಯುವ ವ್ಯವಸ್ಥೆ; ಅಹಹ ! ಏನೆಂದು ಹೊಗಳಲಿ, ನೋಶೀರ್. ಔಟಿಟಥಿ ಥಿou ಛಿouಟಜ ಜo iಣ….” +” ಊeಟಟo, heಟಟo ಓಚಿg, ಣhe mಚಿಣಣeಡಿ is seಡಿious.” +“Who is seಡಿious ? Whಚಿಣ is ತಿಡಿoಟಿg ? Whiಛಿh hosಠಿiಣಚಿಟ ?” +“ಹೆಲ್ಲೋ ಹೆಲ್ಲೋ ನಾಗ್, ಫಿರೋಜ್…” +ಒಥಿ ಉoಜ ! Whಚಿಣ is ತಿಡಿoಟಿg ತಿiಣh him ? ಅದೇ ಅನ್ನುತ್ತೇನೆ. ಇಲ್ಲವಾದರೆ ನನ್ನನ್ನು ಇಲ್ಲಿ ಕರೆಯಿಸಿ ಫಿರೋಜ್ ಒಮ್ಮೆಲೇ ಹೀಗೆ ಮುಂಬಯಿಗೆ ಹೋಗುವವನಲ್ಲ. Whಚಿಣ is ಣhe ಛಿomಠಿಟಚಿiಟಿಣ ? Whಚಿಣ ಛಿಚಿಟಿ I ಜo ಜಿoಡಿ him ?” +ಐisಣeಟಿ ಓಚಿg, ಟisಣಚಿಟಿ ಠಿಟeಚಿse….” +“ಸರಿಯಾಗಿ ಕೇಳಿಸುತ್ತಿಲ್ಲವೇ ? ಅದೇ….ಇಂದಿನ ದಿನಗಳಲ್ಲಿ ಟೆಲಿಫೋನ್ ಲೈನ್‌ಸೇ….ಕೇಳಿದೆಯಾ ಮೂರು ಮಿನಿಟುಗಳು ಮುಗಿದುವಂತೆ….ಔಠಿeಡಿಚಿಣoಡಿ, exಣeಟಿಜ ಠಿಟeಚಿse….” ನಾಗಪ್ಪನ ಈ ಮಾತಿಗೆ ಆ ತುದಿಯಿಂದ ಕೇಳುತ್ತಿದ್ದ ಖಂಬಾಟಾ ಹತಾಶನಾಗಿ : “ಓ ನೋನೋನೋ. ಇದು ಅರ್ಜೆಂಟ್ ಪೀಪೀ ಕಾಲ್.” ಎನ್ನುತ್ತಿರುವಾಗಲೇ, ಆಪರೇಟರ್ ನಡುವೆಯೇ ಬಾಯಿ ಹಾಕಿ. +“ಔಞ….ಛಿoಟಿಣiಟಿue ಠಿಟeಚಿse,” ಎಂದಾಗಿಬಿಟ್ಟಿತ್ತು. +“ಐisಣeಟಿ ಓಚಿg, I ತಿiಟಟ seಟಿಜ ಥಿou ಚಿ ಣಚಿಟex ಣo ಣhe ಜಿಚಿಛಿಣoಡಿಥಿ.” +“ಏನಂದಿ ? ನಾನು ಫ್ಯಾಕ್ಟರಿಗೆ ಹೋಗಬೇಕೆ ? ಹೋಗಿ ಯಾರನ್ನು ಕಾಣಲಿ ? ಇಲ್ಲಿ ಬಂದಾಗ ಗೊತ್ತಾಯಿತು. ಏನೋ ದೊಡ್ಡ ಘೋಟಾಳೆಯಾಗಿದೆಯಂತೆ….” +ಟೆಲಿಫೋನ್ ಲೈನ್ಸ್ ಒಮ್ಮೆಲೇ ಕಡಿದುಹೋಗಿತ್ತು. ಟೆಲಿಫೋನ್ ಕೆಳಗಿಡುತ್ತಲೇ ನಾಗಪ್ಪನಿಗೆ ತನಗೆ ಬಂದ ನಗುವನ್ನು ತಡೆದುಕೊಳ್ಳಲಾಗಲಿಲ್ಲ. ಇದ್ದಕ್ಕಿಂದಂತೆ ಖಂಬಾಟಾನ ಫಜೀತಿ ಮಾಡುವ ಈ ಹುಕ್ಕಿ ತನಗೆ ಹೇಗೆ ಬಂದಿತೋ ಎಂದು ಆಶ್ಚರ್ಯಪಟ್ಟ. ಫೋನಿನ ಮೇಲೆ ಏನು ನಾಟಕ ನಡೆಯಿತು ಎಂಬುದನ್ನು ಫಿರೋಜನಿಗೆ ಹೇಳುವ ಧೈರ್ಯ ಕೂಡ ಆಗಲಿಕ್ಕಿಲ್ಲ, ಒಂದೂ ಮಗನಿಗೆ. ಲೈನೇ ಸಿಗಲಿಲ್ಲವೆಂದೋ, ಸಿಕ್ಕರೂ ಸರಿಯಾಗಿ ಕೇಳಿಸುತ್ತಿರಲಿಲ್ಲವೆಂದೋ, ಸುಳ್ಳು ಹೇಳುವಾಗಿನ ಖಂಬಾಟಾನ ದೀನ ಮೋರೆ ಕಣ್ಣ ಮುಂದೆ ನಿಂತಾಗಂತೂ ಇನ್ನೊಮ್ಮೆ ನಗಬೇಕು ಅನ್ನಿಸಿತು. ಈ ಒಂದೂಮಕ್ಕಳೆಲ್ಲ ಯಾವ ಕಿuಚಿಟiಜಿiಛಿಚಿಣioಟಿs ಇಲ್ಲದೇನೆ ಇಷ್ಟೆಲ್ಲ ಸಂಖ್ಯೆಯಲ್ಲಿ ಈ ಕಂಪನಿಯಲ್ಲಿ ತುಂಬಿದ್ದು ಬರೇ ಫಿರೋಜನ ವಶೀಲೀಬಾಜಿಯಿಂದ. ಈಗ ಅವನ ಬೂಟು ನೆಕ್ಕುತ್ತವೆ. ಸ್ವಾಭಿಮಾನವಿಲ್ಲದ ಧಡ್ಡ ಎರಡೂ ಮಕ್ಕಳು…. ಫ್ಯಾಕ್ಟರಿಯ ಘೋಟಾಳೆಯ ಮಾತು ತೆಗೆದ ಕೂಡಲೇ ಖಂಬಾಟಾ ಒಮ್ಮೆಲೇ ಫೋನ್ ಕೆಳಗಿಟ್ಟ ರೀತಿ ಅರಿವಿಗೆ ಬಂದಾಗ ತುಸು ಗಂಭೀರನಾದ : ಅಂದೆನಲ್ಲ. ಫಿರೋಜನಲ್ಲಿ ತುಂಬಿದ್ದು ತನ್ನ ಸ್ಥಾನಮಾನಗಳ ಬಗೆಗಿನ ಅವಾಸ್ತವಾದ ದುರಭಿಮಾನವೇ ಹೊರತು ಕೆಲಸದ ಬಗ್ಗೆ ಇರಬೇಕಾದ ದಕ್ಷತೆಯಲ್ಲ. ಕಾರಖಾನೆಯ ಮುವ್ಹ್ಯಸ್ಥಾನಗಳಲ್ಲೆಲ್ಲ ಅವನಂತಹರೇ ತುಂಬಿದ್ದಾರೆ. ಬೋಳೀಮಗನಿಗೆ ತನ್ನ ಜಾತಿಯವರೆಂದರೆ ಮುಗಿದೇಹೋಯಿತು. ಈ ಎಲ್ಲ ದಡ್ಡರಿಂದಾಗಿ ಎಂತಹ ಪೇಚಿಗೆ ಸಿಕ್ಕಿಬಿದ್ದಿದ್ದಾನೋ, ತನಿಖೆಗಿನಿಖೆಯ ನೆಪ ಮಾಡಿ ನನ್ನನ್ನು ಬೆದರಿಸುತ್ತಿದ್ದುದರ ಹಿಂದಿನ ಕಾರಣ ಬಹುಶಃ ಈ ಪೇಚಿನಿಂದ ನನ್ನಿಂದೇನಾದರೂ ಸಹಾಯ ಬೇಕಾದ್ದದ್ದಿರಬೇಕು…. ಅರೇ ! ಸನ್ನಿವೇಶದ ಈ ಮಗ್ಗಲು ನನಗೆ ಹೊಳೆದಿರಲೇ ಇಲ್ಲವಲ್ಲ….ನಾಗಪ್ಪನಿಗೆ ಈ ನಿಗೂಢ ಸಂಗತಿಗಳೆಲ್ಲ ಬೆದರಿಸುವ ಬದಲು ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯುವ ಕುತೂಹಲ ಉಂಟಾಗುತ್ತಿದೆ ಎಂಬ ಅನ್ನಿಸಿಕೆಯಿಂದಲೇ ಸುಖವೆನಿಸಿತು. +ಕೃಷ್ಣನನ್ನು ಕರೆದು ಮುತ್ತೂಸ್ವಾಮಿ ಬಂದಿದ್ದಾನೆಯೇ ಎಂದು ಕೇಳಿದ. ಮುತ್ತೂಸ್ವಾಮಿ ಕೆಲಹೊತ್ತಿನ ಮೊದಲಷ್ಟೇ ಬಂದವನು, ತನ್ನ ಹೆಸರನ್ನು ಹಿಡಿದು ಮಾತನಾಡಿದ್ದು ಕೇಳಿಸಿ ಒಳಗೆ ಬಂದು ಕೈ ಮುಗಿದು ನಿಂತು, ನೆನ್ನೆಯ ತನ್ನ ಗೈರುಹಾಜರಿಯ ಬಗ್ಗೆ ಕ್ಷಮೆ ಯಾಚಿಸಿದ ! “ನಿನ್ನೆಯ ಗೈರುಹಾಜರಿಗೆ ಒಂದೇ ಕ್ಷಮೆ : ಈವತ್ತಿನ ಲಂಚ್ ಏಕ್‌ದಮ್ ಪಸಂದಾಗಿರಬೇಕು….”ನಾಗಪ್ಪ ತನ್ನ ವಾಕ್ಯವನ್ನು ಪೂರ್ತಿಗೊಳಿಸುವ ಮೊದಲೇ ಮುತ್ತೂಸ್ವಾಮಿ ಹೇಳಿದ….”ಅದರ ಬಗ್ಗೆ ಕಾಳಜಿ ಬೇಡ, ಸರ್….ಚಿಕನ್ ಬಿರ್ಯಾಣಿ, ಮಟನ್ ಕಟ್ಲೆಟ್ ಮತ್ತು…” ಕೃಷ್ಣ ನಡುವೆಯೆ ಬಾಯಿಹಾಕಿ, “ಇಂದು ಫ್ಯಾಕ್ಟರಿಗೆ ಹೋಗುವದಿಲ್ಲವಾದರೆ, ಬಿಯರ್ ತರಲೇ, ಸಾರ್ ? ನಿನ್ನೆ, ಮುಂಬಯಿಯಿಂದ ಸಾಹೇಬರು ಬಂದಿದ್ದಾರೆ. ಬಿಯರ್ ಏಕದಮ್ ತಂಪಾದದ್ದಿರಬೇಕು ಎಂದರೂ ಆ ಕಳ್ಳ ಬೆಚ್ಚನೆಯ ಬಿಯರನ್ನೇ ಕೊಟ್ಟ. ಈವತ್ತು ಅವನನ್ನು ಚೆನ್ನಾಗಿ ಥಳಿಸಿ….”ನಿನ್ನೆಯ ಬಿಯರಿಗಿಂತ ಹೆಚ್ಚು ತಣ್ಣಗಿನ ಬಿಯರ್ ಕುಡಿದ ನೆನಪು ನಾಗಪ್ಪನಿಗಿರಲಿಲ್ಲ. ಇಂದೂ ಕೂಡ ಬಿಯರ್ ಜತೆಗೆ ಬಕ್ಷೀಸು ಸಿಗಬಹುದೆಂಬ ಆಸೆಯೇನೋ….ಮತ್ತೆ ಬಿಯರ್ ಕುಡಿಯುವ ಇಚ್ಛೆ ನಾಗಪ್ಪನಿಗಿರಲಿಲ್ಲ. ಆದರೂ ಈ ದಿನ ತಾನು ಫಿರೋಜ್ ಹಾಗೂ ಖಂಬಾಟಾರ ಮೇಲೆ ಸಾಧಿಸಿದ ಪ್ರಥಮ ವಿಜಯವನ್ನು ಆಚರಿಸುವ ಉಮೇದಿನಿಂದಲೋ ಮುತ್ತೂಸ್ವಾಮಿಯ ಅಡಿಗೆಯ ನೆನಪಿನಿಂದಲೋ ಕೃಷ್ಣ ತಾನಾಗಿಯೇ ಬಿಯರಿನ ಮಾತು ತೆಗೆದಾಗ ಬೇಡವೆನ್ನುವ ಗಟ್ಟಿತನ ಮನಸ್ಸಿಗೆ ಉಳಿಯಲಿಲ್ಲ : ಹೌದು ಕೃಷ್ಣ, ಎರಡು ಬಾಟಲಿ ಬಿಯರ್ ತರುವಿಯಂತೆ. ಅದಕ್ಕೆ ಮೊದಲು ನಾಸ್ತಾ ಆಗಬೇಕು. ಸ್ನಾನಗೀನ ಮುಗಿಸಿ ಬರುತ್ತೇನೆ. ನಾಸ್ತಾಗೆ ಸಿಂಗಲ್ ಫ್ರಾಯ್ಡ್ ಎಗ್, ಎರಡು ಟೋಸ್ಟ್ ಮತ್ತು ಚಹ. ನಾನು ನಾಸ್ತಾ ಮುಗಿಸಿದಮೇಲೇ ನೀನು ಬಿಯರ್ ತರಲು ಹೋಗುವಿಯಂತೆ. ಅಡಿಗೆಗೆ ಬೇಕಾದ ಎಲ್ಲ ಸಾಮಾನು ಇದೆಯೊ ನೋಡು. ಇಲ್ಲವಾದರೆ ಬಿಯರ್ ತರಲು ಹೋದಾಗ ನೀನೇ ತರುವಿಯಂತೆ….ಎಂದು ಹೇಳಿ ಬಹಳ ಖುಶಿಯಲ್ಲಿ ತನ್ನ ಪ್ರಾತರ್ವಿಧಿಗಳನ್ನು ಮುಗಿಸಲು ಹೊರಟ. +ತನ್ನ ಈ ಖುಶಿಗೆ ಕಾರಣವಾದದ್ದನ್ನು ಮನಸ್ಸಿನಲ್ಲೇ ಟಿಪ್ಪಣಿ ಮಾಡುವ ಹುಚ್ಚು ಹಂಬಲನ್ನು ಬಿಟ್ಟುಕೊಟ್ಟರೂ, ತಾನು ಎಂದೂ ಓದಿರದ ಡೇಲ್ ಕಾರ್ನೇಗಿಯ ಒಂದೆರಡು ವಾಕ್ಯಗಳು ಎಲ್ಲೋ ಉದ್ಧೃತವಾದದ್ದನ್ನು ಓದಿದ್ದರ ನೆನಪು ಬರದಿರಲಿಲ್ಲ : ಮನುಷ್ಯ ಯಾವುದೇ ಸಂಕಟದಲ್ಲಿ ಸಿಕ್ಕಿಕೊಂಡಾಗ ಅದರಿಂದಾಗಬಹುದಾದ ದುಷ್ಟತಮ ಪರಿಣಾಮವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡಿಸಿಕೊಂಡು ಅದನ್ನು ಇದಿರಿಸುವ ಧೈರ್ಯ ತಂದುಕೊಳ್ಳಬೇಕು : ಆಗ ಕಣ್ಣೆದುರಿನ ಆಪತ್ತು ನಮ್ಮ ಆತಂಕಕ್ಕೆ ಕಾರಣವಾಗುವ ತಾಕತ್ತನ್ನು ತಂತಾನೆ ಕಳೆದುಕೊಳ್ಳುತ್ತದೆ…. +ಹೆಚ್ಚೆಂದರೇನಾದೀತು ? ನೌಕರಿಯನ್ನು ಕಳಕೊಂಡೇನು ತಾನೆ ! ಹೆದರುವ ಗರಜಿಲ್ಲ. ಖೇತವಾಡಿಯ ಗಲ್ಲಿಯೊಂದರಲ್ಲಿ ನ್ಯೂಸ್‌ಪೇಪರ್ ಮಾರುವ ಅಂಗಡಿ ತೆರೆದೇನು…. +ಒಂದು ತೀರ ಅನಿರೀಕ್ಷಿತ ಮುಹೂರ್ತದಲ್ಲಿ ಹುಟ್ಟಿದ ಈ ನಿಶ್ಚಯಕ್ಕೀಗ, ಸಾವಿರಾರು ವರುಷಗಳಿಂದ ಗಾಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ ನಿಂತ ಬಂಜಾರಾ ಹಿಲ್ಲಿನ ಪಾಷಾಣದ ಬಂಡೆಗಳ ಗಟ್ಟಿತನ ಬಂದಿದೆ ಎಂಬುದರ ಸಂಪೂರ್ಣ ಅರಿವು ಮಾತ್ರ ನಾಗಪ್ಪನಿಗಿರಲಿಲ್ಲ. uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತೆರಡು – +ನಾಸ್ತಾ ಮುಗಿಸಿ, ಡ್ರಾಯಿಂಗ್ ರೂಮಿನ ಸೋಫಾ ಒಂದರಲ್ಲಿ ಮೈ ಚೆಲ್ಲಿ ಬೆಳಗ್ಗಿನ ನ್ಯೂಸ್‌ಪೇಪರ್ ಓದುತ್ತಿರುವಾಗ ಟೆಲಿಫೋನ್ ಗಂಟೆ ಬಾರಿಸಿತು. ಮುತ್ತೂಸ್ವಾಮಿ ಹೋಗಿ ಕರೆಯನ್ನು ಸ್ವೀಕರಿಸಿದ. ಟೆಲಿಫೋನ್ ಕರೆ ನಾಗಪ್ಪನಿಗೇ ಬಂದದ್ದಾಗಿತ್ತು. ಯಾವುದೇ ರಿತಿಯಿಂದ ಕ್ಷೋಬೆಗೊಳಗಾಗದೇ ಶಾಂತಚಿತ್ತನಾಗಿ ರಿಸೀವರ್ ಕೈಗೆತ್ತಿಕೊಂಡು ಹೆಲ್ಲೋ ಎಂದ. ಆ ಬದಿಯಿಂದ ಬಂದ ದನಿ ರಾಮಕೃಷ್ಣನ ಅಸಿಸ್ಟೆಂಟ್ ಮೂರ್ತಿಯದಾಗಿತ್ತು. ಯಾವಾಗಲೂ ನಮ್ರತೆಯಿಂದ, ಆದರದಿಂದ ‘ಸರ್’ ಎಂದು ಸಂಬೋಧಿಸುತ್ತಿದ್ದ ಮೂರ್ತಿ, “Is ಣhಚಿಣ ಒಡಿ. ಓಚಿg ? ಎಂದು ಕೇಳಿದ್ದು ಊಟದ ಮೊದಲಿನ ಚಿಠಿಠಿeಣizeಡಿ ಆಗಬಹುದಾದ ಸನ್ನಿವೇಶಕ್ಕೆ ಆಹ್ವಾನವಾಯಿತು : “Who is ಣhಚಿಣ ?” ಎಂದು ಕೇಳಿದಾಗ, “I ಚಿm ಒuಡಿಣhಥಿ heಡಿe” ಎಂದು ಒಂದು ಬಗೆಯ ಗರ್ವದಿಂದ ಸಾರಿದಾಗ, ಹೆಲ್ಲೋ ಮಿಸ್ಟರ್ ಮೂರ್ತಿ ಎಂದು ಮಿಸ್ಟರ್ ಈ ಶಬ್ದದ ಮೇಲೆ ವ್ಯಂಗ್ಯ ತುಂಬಿದ ಒತ್ತು ಹಾಕಿ,”Whಚಿಣ is ತಿಡಿoಟಿg ತಿiಣh ಥಿouಡಿ voiಛಿe_iಣ souಟಿಜeಜ so ಠಿeಛಿuಟiಚಿಡಿಟಥಿ ಜeviಟish,” ಎಂದಾಗ ಆ ತುದಿಯಲ್ಲಿ ರಿಸೀವರ್ ಹಿಡಿದ ಕೈ ದಡಬಡಿಸಿ, ಗೊಗ್ಗರು ದನಿಯಲ್ಲಿ ನಡುಗಿದ ಮಾತುಗಳು ನಾಗಪ್ಪನಿಗೆ ಸರಿಯಾಗಿ ಕೇಳಿಸಲಿಲ್ಲ. “ಆiಜ ಥಿou sಚಿಥಿ someಣhiಟಿg, ಮಿಸ್ಟರ್ ಮೂರ್ತಿ ?”ಎಂದು ಕೇಳುವಾಗ ಮಿಸ್ಟರ್ ಶಬ್ದದ ಮೇಲಿನ ಒತ್ತು ಇನ್ನೂ ಹಚ್ಚಿತ್ತು. ಮೂರ್ತಿ ಮೆತ್ತಗಾಗಿ ತನ್ನ ನಿತ್ಯದ ಆಕಾರಕ್ಕೆ ಇಳಿದು, “ಕ್ಷಮಿಸಿ ಸರ್, ಮುಂಬಯಿಯಿಂದ ನಿಮಗೊಂದು ಟೆಲೆಕ್ಸ್ ಇದೆ,”ಎಂದ. “Wouಟಜ ಥಿou miಟಿಜ seಟಿಜiಟಿg iಣ ಣo ಣhe guesಣ-house, ಒಡಿ.ಒuಡಿಣhಥಿ….?” ನಾಗಪ್ಪ ಮಿಸ್ಟರ್ ಮೇಲಿನ ಒತ್ತನ್ನು ಸಡಿಲಗೊಳಿಸಲಿಲ್ಲ. ಮೂರ್ತಿ ಇನ್ನಷ್ಟು ಕುಗ್ಗಿದ ದನಿಯಲ್ಲಿ, “ಒಚಿಥಿ I ಡಿeಚಿಜ iಣ ಣo ಥಿou oಟಿ ಣhe ಠಿhoಟಿe, Siಡಿ ?” ಎಂದು ಕೇಳಿದ. +“ನೀವು ಈಗ ಫೋನ್ ಮೇಲೆ ಓದಬಹುದು. ಆದರೆ ಆಮೇಲೆ ಅದನ್ನು ಗೆಸ್ಟ್‌ಹೌಸಿಗೆ ಕಳಿಸುವುದು ಅತ್ಯವಶ್ಯ. ಯಾಕೆಂದರೆ : ಮೊದಲನೆಯದಾಗಿ, ನನ್ನ ಹೆಸರಿಗೆ ಬಂದ ಟೆಲೆಕ್ಸ್ ನನ್ನ ಕೈ ಸೇರಬೇಕು. ಎರಡನೆಯದಾಗಿ, ಬರೇ ಟೆಲಿಫೋನ್ ಮೇಲೆ ಬಂದ ಸಂದೇಶವನ್ನು ನಂಬಿ ನಾನು ಯಾವ ಆಕ್ಷನ್ನೂ ತೆಗೆದುಕೊಳ್ಳಲಾರೆ. ಮೂರನೆಯದಾಗಿ, ಟೆಲಿಫೋನ್ ಮೇಲೆ ಇಂಥವರೇ ಮಾತನಾಡುತ್ತಿದ್ದಾರೆ ಎಂಬುವುದರ ಬಗ್ಗೆ ನನಗಿನ್ನೂ ಖಾತ್ರಿಯಿಲ್ಲ. ಸದ್ಯ, ಟೆಲೆಕ್ಸ್ ಓದಿಹೇಳಿ.” ಇವನು ಎಂದಿನ ನಾಗನಾಥನಲ್ಲ ಎಂದು ಮನಗಂಡ ಮೂರ್ತಿ ಹೆಚ್ಚು ವಿಳಂಬ ಮಾಡದೇನೇ ಟೆಲೆಕ್ಸ್ ಓದಿದ : “ಆ‌ಒ‌ಆ ಟಿeeಜs ಥಿoue ಠಿಡಿeseಟಿಛಿe iಟಿ ಃombಚಿಥಿ immeಜiಚಿಣeಟಥಿ. ಖeಣuಡಿಟಿ bಥಿ ಣoಜಚಿಥಿ eveಟಿiಟಿg ಜಿಟighಣ oಡಿ ಟಚಿಣesಣ bಥಿ ಣomoಡಿಡಿoತಿ moಡಿಟಿiಟಿg ಜಿಟighಣ_ಏhಚಿmbಚಿಣಚಿ.” +“ಥೆಂಕ್ಸ್, ಮಿಸ್ಟರ್ ಮೂರ್ತಿ, ನಿಮ್ಮಿಂದೀಗ ಮೂರು ಕೆಲಸಗಳಾಗಬೇಕು : ಒಂದು, ಟೆಲೆಕ್ಸನ್ನು ಕೂಡಲೇ ಗೆಸ್ಟ್‌ಹೌಸಿಗೆ ಕಳಿಸಿಕೊಡಬೇಕು. ಎರಡು, ಮುಂಬಯಿಗೆ ಹೋಗುವ ವಿಮಾನದ ಟಿಕೆಟ್ಟಿನ ವ್ಯವಸ್ಥೆ ಮಾಡಬೇಕು. ಮೂರು, ಯಾವ ಫ್ಲೈಟ್‌ಗೆ ರಿಝರ್ವೇಶನ್ ಆಗಿದೆಯೋ ಆ ಫ್ಲೈಟಿನ ಸಮಯಕ್ಕೆ ಸರಿಯಾಗುವಂತೆ ಕಾರಿನ ವ್ಯವಸ್ಥೆಯಾಗಬೇಕು.” +ನಾಗಪ್ಪನ ದನಿಯಲ್ಲಿ ಅವನೇ ನಿರೀಕ್ಷಿಸಿರದ ಆತ್ಮವಿಶ್ವಾಸ, ದೃಢತೆ ಪ್ರಕಟವಾಗಿದ್ದವು. ತುಂಬ ಖುಷಿಪಟ್ಟು, ಆiಜ ಥಿou heಚಿಡಿ me. ಒಡಿ.ಒuಡಿಣhಥಿ ?” ಎಂದು ಕೇಳಿದಾಗ ಹೇಗೆ ಉತ್ತರಿಸಬೇಕೋ ಎಂದು ತಿಳಿಯದೇ ಮೂರ್ತಿ ಗೊಂದಲಿಸಿದ. ಯಾಕೆಂದರೆ, ಟೆಲೆಕ್ಸಿನ ಹಿಂದೆಯೇ ಬಂದ ರಾಮಕೃಷ್ಣನ ಟೆಲಿಫೋನ್ ಕರೆಯಲ್ಲಿ ಮೂರ್ತಿ ಏನೇನು ಮಾಡಬಾರದು ಎಂಬುದರ ಬಗ್ಗೆ ಸ್ಪಷ್ಟ ಮಾತಿನಲ್ಲಿ ಅಪ್ಪಣೆಕೊಟ್ಟಿದ್ದ. ಮುಖ್ಯವಾಗಿ, ಟಿಕೆಟ್ಟಿನ ವ್ಯವಸ್ಥೆ ಬೇಕಾದರೆ ಮಾಡಬಹುದು. ಆದರೆ ಕಾರನ್ನು ಮಾತ್ರ ಸರ್ವಥಾ ಕಾಳಿಸಬಾರದು. ಟ್ಯಾಕ್ಸಿಯಿಂದಲೇ ಹೋಗಲಿ. ಕೊಡಬಹುದಾದ ಕಾರಣ : ಕಾರುಗಳೆರಡು ಸರ್ವೀಸಿಂಗ್ ಸಲುವಾಗಿ ಗರಾಜಿಗೆ ಹೋಗಿವೆ. ಅವನು ಹೇಳಿದ ಇನ್ನೊಂದು ಮಾತನ್ನು ನಾಗಪ್ಪನಿಗೆ ತಿಳಿಸುವ ಧೈರ್ಯ ಮಾತ್ರ ಮೂರ್ತಿಗೆ ಆಗುತ್ತಿರಲೇ ಇಲ್ಲ : ಪ್ಲೇನ್ ಸೀಟು ಸಿಗದಿದ್ದರೆ ಟ್ರೇನಿನಲ್ಲಿ ಬರಲು ಹೇಳು…. +ಮೂರ್ತಿ ಸುಮ್ಮನಾದದ್ದನ್ನು ಗಮನಿಸಿ ನಾಗಪ್ಪನೇ, “ನೋಡಿ ಮಿಸ್ಟರ್ ಮೂರ್ತಿ,” ಎನ್ನುವಷ್ಟರಲ್ಲಿ, ಮೂರ್ತಿ ಅಳುಬುರಕ ದನಿಯಲ್ಲಿ, “ಸರ್, ಹಾಗೆ ನನ್ನನ್ನು ಮಿಸ್ಟರ್ ಮಿಸ್ಟರ್ ಎಂದು ಕರೆಯಬೇಡಿ. ನಾನು ನಿಮ್ಮ ಎಂದಿನ ಸಾದಾ ಮೂರ್ತಿಯೇ….ಇಷ್ಟೇ, ರಾಮಕೃಷ್ಣನಿಗೆ ಇದಿರು ನಿಂತು ನೌಕರಿ ಕಳಕೊಳ್ಳುವ ಧೈರ್ಯವಿಲ್ಲ, ಸರ್…. ಕಾರು ಟಿಕೆಟ್ಟು ಕಳಿಸಿಕೊಡುತ್ತೇನೆ…. ದಯಮಾಡಿ ರಾಮಕೃಷ್ಣನಿಗೆ ಮಾತ್ರ ತಿಳಿಸಬೇಡಿ. ಅವನೀಗ ಮೊದಲಿನ ರಾಮಕೃಷ್ಣನಲ್ಲ, ಸರ್…..ಪ್ರತಿಯೊಂದು ಮಾತಿಗೂ ಆ‌ಒ‌ಆ ಅವನ ಸಲಹೆ ಪಡೆಯುತ್ತಾರೆ. ಆದ್ದರಿಂದ ಅವರ ನಂತರ ತಾನೇ ಆ‌ಒ‌ಆ ಆಗುತ್ತೇನೆ ಎಂಬಂತೆ ಜಂಭ ಕೊಚ್ಚುತ್ತಾನೆ, ಸರ್….” +“ಹೆದರಬೇಡಿ ಮೂರ್ತಿ….ಇದರ ಜವಾಬ್ದಾರಿ ನಿಮ್ಮ ಮೇಲೆ ಹಾಕಲಾರೆ. ಒಂದು ಕೆಲಸ ಮಾಡಿ. ಕೂಡಲೆ ರಾಮಕೃಷ್ಣನಿಗೆ ಫೋನ್ ಮಾಡಿ ನಾನು ಹೀಗೆ ಹೀಗೆ ಹೇಳಿದೆ ಎಂದು ತಿಳಿಸಿ. ಕಾರಿನ ವ್ಯವಸ್ಥೆಯಾಗದ ಹೊರತು ಏರ್‍ಪೋರ್ಟಿಗೆ ನಾನು ಹೊರಡುವುದಿಲ್ಲವೆಂದೂ, ಅದರಿಂದಾಗಿ ಟಿಕೆಟ್ ಕೆನ್ಸಲ್ ಆಗಿ ಹಣ ನಷ್ಟವಾದದ್ದಕ್ಕೆ, ಮುಂಬಯಿಗೆ ಬರುವುದರಲ್ಲಿ ವಿಲಂಬವಾದದ್ದಕ್ಕೆ ನಾನು ಜವಾಬ್ದಾರನಲ್ಲವೆಂದೂ ತಿಳಿಸಿದ್ದೇನೆಂದೂ ಹೇಳಿರಿ. ಇಷ್ಟೇ ಅಲ್ಲ, ನಾಳೆಯ ತನಕ ಹೈದರಾಬಾದನ್ನು ಬಿಡುವದು ಶಕ್ಯವಾಗದೇ ಇದ್ದಲ್ಲಿ ನಾಡಿದ್ದಿನಿಂದ ನಾನು ಫ್ಯಾಕ್ಟರಿಗೆ ಹೋಗಲು ಸುರುಮಾಡುತ್ತೇನೆಂದೂ ತಿಳಿಸಿರಿ….ಇದೆಲ್ಲ ನಿಮಗೆ ಅಸಾಧ್ಯವೆನಿಸಿದರೆ ರಾಮಕೃಷ್ಣನಿಗೆ ನೇರವಾಗಿ ನನಗೇ ಫೋನ್ ಮಾಡಲು ಹೇಳಿ….” +ಫೋನ್ ಕೆಳಗಿಡುವ ಹೊತ್ತಿಗೆ ಕೃಷ್ಣ ಬಿಯರಿನೊಂದಿಗೆ ಹಾಜರಾದ. ಒಳಗೆ ಅಡಿಗೆ ಮನೆಯಿಂದ ಹೊರಟ ಬಿರ್ಯಾಣಿಯ ಸಲುವಾಗಿ ಸಿದ್ಧವಾಗುತ್ತಿದ್ದ ಮಸಾಲೆಯ ಖಮಂಗ ವಾಸನೆ ತನಗೆ ಕಾದಿರುವ ಊಟದ ಪೂರ್ವ ಇಷಾರೆ ಕೊಡುತ್ತ ಬಾಯಲ್ಲಿ ನೀರು ತರಿಸುತ್ತಿತ್ತು. ಬಿಯರಿನ ಬಾಟಲಿಗಳೆರಡನ್ನೂ ನಾಗಪ್ಪನ ಇದಿರಿನ ಟೀಪಾಯಿಯ ಮೇಲೆ ಇಡುತ್ತ “ಮುಟ್ಟಿ ನೋಡಿ ಸರ್…. ಎಷ್ಟು ತಂಪಾಗಿದೆ ನೋಡಿ….ನಿನ್ನೆ ಆ ಲಫಂಗ ಟೊಪ್ಪಿಗೆ ಹಾಕಿದ,” ಎಂದ. ನಾಗಪ್ಪ ಅವನ ಖುಶಿಗಾಗಿ ಮುಟ್ಟಿ ನೋಡಿ, ಅವು ನಿನ್ನೆ ತಂದವುಗಳಿಗಿಂತ ಹೆಚ್ಚು ತಂಪಾಗಿರದಿದ್ದರೂ ಗಿeಡಿಥಿ gooಜ, veಡಿಥಿ gooಜ ಎಂದು ಪ್ರಶಂಸಿಸಿ “ಒಂದನ್ನು ಈಗ ತೆರೆ ; ಇನ್ನೊಂದನ್ನು ಫ್ರಿಜ್ಜಿನಲ್ಲಿಡು.”ಎನ್ನುತ್ತಿರುವಾಗ ಬಾಕಿ ಉಳಿದ ನಾಲ್ಕು ರೂಪಾಯಿಗಳನ್ನು ಜಾಗ್ರತೆಯಿಂದ ಕಿಸೆಯಿಂದ ತೆಗೆಯುತ್ತಿರುವುದನ್ನು ನೋಡಿ, ಕೃಷ್ಣನ ಈ ನಾಟಕದ ಅರ್ಥಮಾಡಿಕೊಂಡು, “ಅದನ್ನು ನೀನೇ ಇಟ್ಟುಕೋ,” ಎಂದಾಗ, “ಥೆಂಕ್ಸ್ ಸರ್, ಇದೀಗ ಒಂದು ಬಾಟಲಿಯನ್ನು ತೆರೆದು ತರುತ್ತೇನೆ,” ಎಂದು ಒಳಗೆ ಹೋದ. ಸಾಹೇಬರನ್ನು ಇಷ್ಟೊಂದು ಖುಶಿಯಲ್ಲಿ ಹಿಂದೆಂದೂ ನೋಡಿರಲಿಲ್ಲ ಎಂಬುದು ಲಕ್ಷ್ಯಕ್ಕೆ ಬಂದ ಕೃಷ್ಣನಿಗೆ ಹಿಂದೊಮ್ಮೆ ಮಾಡಿ ಗದರಿಸಿಕೊಂಡ ಸೂಚನೆ ಈಗ ಮತ್ತೆ ಮಾಡಿ ನೋಡಲೇ ಎನ್ನುವ ಆಸೆ ಹುಟ್ಟಿತು. ಇನ್ನೂ ಹತ್ತು ರೂಪಾಯಿ ಕಮಿಶನ್ ಗಳಿಸಬಹುದಾಗಿತ್ತು. ಮುಂಬಯಿಗೋ, ಕಲಕತ್ತೆಗೋ ಹೋಗಿದ್ದ ಫರಿದಾ ಬಾನೂ ಈಗ ತಿರುಗಿ ಹೈದರಾಬಾದಿಗೆ ಬಂದಿದ್ದ ಸುದ್ದಿ ಎಂಟು ದಿನಗಳ ಹಿಂದಷ್ಟೇ ಸಿಕ್ಕಿತ್ತು. ಆದರೆ ಈ ಸಾಹೇಬರ ಮೋರೆಯ ಮೇಲೆ ವ್ಯಕ್ತವಾದ ಖುಶಿಯಲ್ಲಿ ರಂಗೇಲತನದ ಲವಲೇಶವೂ ಇಲ್ಲದ್ದನ್ನೋ, ತುಂಬ ಸರಳನಂತೆ ಕಂಡರೂ ಕಣ್ಣುಗಳಿಂದ ಹೊರಸೂಸುವ ಹೊಳಪಿನಲ್ಲಿ ತನ್ನನ್ನು ಹೆದರಿಸುವಂತಹದೇನನ್ನೋ ಕಂಡ ಕೃಷ್ಣನಿಗೆ ಕೇಳುವ ಧೈರ್ಯವಾಗಲಿಲ್ಲ…. +ಇಂದು, ಬಿಯರ್ ಕುಡಿಯುವುದರ ಹಿಂದೆ ಯಾವುದೇ ಬಗೆಯ ನೋವನ್ನು ಮುಳುಗಿಸುವಂತಹ ಉದ್ದೇಶವಿರಲಿಲ್ಲವಾದ್ದರಿಂದ ಅದರ ಮತ್ತು ಏರುವಾಗಿನ ಗೆಲುವಿನ ಜಾತಿಯೇ ಬೇರೆಯಾಗಿತ್ತು : ಹಿಂದಿನ ಗಚ್ಚಿಯಲ್ಲಿ ಹರಡಿದ ಮಧಾಹ್ನದ ಬಿಸಿಲು ; ಈಗ ಬೆಳಕಿನಂತೆಯೇ ಅದರ ಜಳವನ್ನೂ ಪ್ರತಿಫಲಿಸುತ್ತಿದ್ದ ಗುಡ್ಡದ ಬಂಡೆಗಳು ; ದೂರ, ಆಕಾಶದಲ್ಲಿ ಆಗೊಮ್ಮೆ ಈಗೊಮ್ಮೆ ಮೈಯನ್ನು ಬಿಸಿಲಲ್ಲಿ ಮಿಂಚಿಸುತ್ತ ಏರ್‍ಪೋರ್ಟನ್ನು ಸಮೀಪಿಸುತ್ತಿದ್ದಂತೆ ಕಣ್ಣಿಗೆ ಕಾಣಿಸಿಕೊಂಡದ್ದೇ ಸದ್ದನ್ನೂ ಕೇಳಿಸುತ್ತ ಕೆಳಗಿಳಿಯುವ ವಿಮಾನ : ಗಚ್ಚಿಯ ಒಂದು ಮೂಲೆಯಲ್ಲಿ, ಗಾಳಿಯಲ್ಲಿ ಎಲೆಗಳನ್ನು ಗಿಲಿಗಿಲಿಸುತ್ತ ನಿಂತ ಬೇವಿನ ಗಿಡ; ಗಚ್ಚಿಯನ್ನು ಡ್ರಾಯಿಂಗ್ ರೂಮಿನಿಂದ ಬೇರ್ಪಡಿಸುವ ಕಾಚಿನ ಪಾರ್ಟಿಶನ್ : ಬಿಸಿಲು ಕಣ್ಣನ್ನು ನೋಯಿಸಹತ್ತಿದ್ದರಿಂದ ಕೃಷ್ಣನನ್ನು ಕರೆದು ಪರದೆಗಳನ್ನು ಪಸರಿಸಲು ಹೇಳಿದ. ಅವನು ಹಾಗೇ ಮಾಡಿದಾಗ, ಪರದೆಗಳ ಹಸಿರುಬಣ್ಣದೊಳಗಿಂದ ತೂರಿಬಂದು ಕೋಣೆಯಲ್ಲಿ ಹರಡಿದ ಬೆಳಕು ಅಮಲೇರುತ್ತಿದ್ದ ಕಣ್ಣುಗಳಿಗೆ ಇನ್ನಷ್ಟು ಸುಖ ಕೊಡಹತ್ತಿತು…. +ಮ್ಯಾನೇಜಿಂಗ್ ಡೈರೆಕ್ಟರ್ ಒಮ್ಮೆಲೇ ಅಮೇರಿಕಾಕ್ಕೇ ಹೋಗಬೇಕಾಗಿ ಬಂದದ್ದು….ಬೇಡ, ಯಾವುದರ ಬಗೆಗೂ ಈಗ ಊಹಾಪೋಹ…. ಪ್ರಸ್ತುತ ಕ್ಷಣಕ್ಕಷ್ಟೇ ಪ್ರತಿಕ್ರಿಯಿಸುತ್ತ ನಡೆಯುವುದು, ಎಲ್ಲದರ ಮೋಹವನ್ನು ಕಳಚಿಕೊಳ್ಳಲು ನಿಶ್ಚಯಿಸಿದಮೇಲೆ ಇನ್ನು ದುಡಿಮೆಯ ಕ್ಷೇತ್ರದ ಬಗ್ಗೆ ವಿಚಾರ ಮಾಡುವುದು ಬೇಡ. ಹೌದು, ಇದೀಗಿನ ಕ್ಷಣದಿಂದ ದೂರ ಹೋಗಕೂಡದು. ಜೀವಂತವಾಗಿ ಅನುಭವಿಸಿದ ಈ ಕ್ಷಣದಿಂದ ಇನ್ನೊಂದು ಕ್ಷಣಕ್ಕೆ…. ಹೊರಗೆ ಕಾರು ಬಂದು ನಿಂತ ಸದ್ದು ; ಬಾಗಿಲು ತೆರೆದು ಕೆಳಗಿಳಿದ ಸದ್ದು. ಅವುಗಳ ಹಿಂದೆಯೇ ಸರ್ದಾರ್ ಡೈವರ್ ಡ್ರಾಯಿಂಗ್ ರೂಮಿಗೆ ಬಂದು ಸಲಾಮ್ ಮಾಡಿದ. ಎಂದಿನ ಆತ್ಮೀಯತೆಯಿಂದ, “ಹ್ಯಾಗಿದ್ದೀ ಸರ್ದಾರ್,” ಎಂದು ಕೇಳಿದಾಗ ಆ ಪ್ರಶ್ನೆಯಲ್ಲಿ ಇನ್ನೇನೋ ಕೇಳಿಸಿದಂತಾಗಿ, “ನಿನ್ನೆ ಬಂದಿರಂತೆ ಸಾಹೇಬರು. ನನಗೆ ಯಾರೂ ಹೇಳಲೇ ಇಲ್ಲ ಸರ್…. ಈಗ ಮೂರ್ತಿ ಹೇಳಿದ ಮೇಲೆ ಗೊತ್ತು. ಈವತ್ತಿನ ಸಂಜೆಯ ಫೈಟಿನ ಟಿಕೆಟ್ ಹಾಗೂ ಈ ಕವರನ್ನು ಕೊಟ್ಟಿದ್ದಾರೆ.” ಎಂದು ಎರಡನ್ನೂ ನಾಗಪ್ಪನ ಕೈಗೆ ಒಪ್ಪಿಸಿದ. ಕವರಿನಲ್ಲಿ ಇದ್ದದ್ದು ಮುಂಜಾನೆಯ ಟೆಲೆಕ್ಸ್ ಇರಬೇಕು ಎಂದು ತೆರೆಯುವ ಮೊದಲೇ ಊಹಿಸಿಕೊಂಡ. ಮೂರ್ತಿ ಮತ್ತೇನನ್ನಾದರೂ ಹೇಳಿದರೇ ಎಂದು ಕೇಳಿದಾಗ, “ಇಲ್ಲಾ ಸರ್. ಸಂಜೆ ವಿಮಾನ-ನಿಲ್ದಾಣಕ್ಕೆ ನಿಮ್ಮನ್ನು ಕರೆದೊಯ್ಯಲು ನನಗೆ ಹೇಳಿದ್ದಾರೆ. ಅವರಿಗೆ ಪಾಪ, ಮೈಯಲ್ಲಿ ಹುಷಾರಿಲ್ಲವಂತೆ. ಅರ್ಧ ದಿನದ ರಜೆ ಪಡೆದು ಮನೆಗೆ ಹೋದರು. ಬರುವಾಗ ಅವರನ್ನು ಮನೆಯಲ್ಲಿ ಬಿಟ್ಟೇ ಇಲ್ಲಿಗೆ ಬಂದೆ” ಎಂದ. “ಸಂಜೆ ಆರೂವರೆಯ ಸುಮಾರಿಗೆ ಬರುತ್ತೇನೆ, ಸರ್. ೭-೩೦ರ ಫ್ಲೈಟ್. ಆ ಮೊದಲು ನಿಮಗೆ ಕಾರು ಬೇಕಾದರೆ ಹೇಳಿ. ಬರುತ್ತೇನೆ,” ಎಂದ. ಇವನು ಬೇಡವೆಂದಾಗ, ಇನ್ನೊಮ್ಮೆ ಸಲಾಮು ಮಾಡಿ ಅಲ್ಲಿಂದ ಹೊರಟುಹೋದ. +ಅವನು ಹೊರಟುಹೋದ ಮೇಲೆ, ಲಕೋಟೆಯನ್ನು ತೆರೆದು ನೋಡಿದರೆ ಊಹಿಸಿಕೊಂಡಂತೆ ಮುಂಬಯಿಯಿಂದ ಬಂದ ಟೆಲಕ್ಸ್ ಏ ಆಗಿತ್ತು. ಇಷ್ಟೇ, ಮೂರ್ತಿಯ ಹೆಸರಿಗೇ ಬಂದಿತ್ತು ; ನಾಗಪ್ಪನ ಹೆಸರಿಗಲ್ಲ. “Pಟeಚಿse ಡಿeಚಿಜ ಣhe ಜಿoಟಟoತಿiಟಿg messಚಿge ಣo ಓಚಿg oಟಿ ಠಿhoಟಿe,” ಎಂದು ಆರಂಭವಾಗಿತ್ತು. ಮೂರ್ತಿಯ ದೇಹಾಲಸ್ಯಕ್ಕೆ ಬಹುಶಃ ರಾಮಕೃಷ್ಣನಿಂದ ಫೋನಿನ ಮೇಲೆ ಬೈಸಿಕೊಂಡದ್ದು ಕಾರಣವಾಗಿರಬೇಕು. ತನ್ನ ಮೇಲೆ ಬಂದ ಸಿಟ್ಟನ್ನು ಆ ಹುಡುಗನ ಮೇಲೆ ತೆಗೆದಿರಬೇಕು ಎಂದು ಬಗೆದಾಗ ಕೆಡಕೆನಿಸಿತು. +ಪಸಂದಾಗಿ ಊಟ ಮುಗಿಸಿದ್ದೇ ಮುತ್ತೂಸ್ವಾಮಿಯ ಅಡಿಗೆಯನ್ನೂ, ಕೃಷ್ಣ ತಂದ ಬಿಯರನ್ನೂ ಬಾಯಿತುಂಬ ಹೊಗಳಿ, ನಾಲ್ಕು ಗಂಟೆಯವರೆಗೆ ಎಬ್ಬಿಸುವುದು ಬೇಡವೆಂದು ಹೇಳಿ ಮಲಗುವ ಕೋಣೆಗೆ ನಡೆದ. ಹಾಸಿಗೆಗೆ ಮೈ ತಾಕಿಸಿದ್ದಷ್ಟೇ ಗೊತ್ತು. ಯಾವಾಗ ನಿದ್ದೆ ಹತ್ತಿತೋ ಪತ್ತೆಹತ್ತಲಿಲ್ಲ. ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಿಂದ ಏಳಬೇಕೋ ಬಾರದೋ ಎಂಬುದನ್ನು ಇನ್ನೂ ನಿಶ್ಚಯಿಸುವ ಸ್ಥಿತಿಯಲ್ಲಿದ್ದಾಗ_ಸಂಜೆಯ ಫ್ಲೈಟ್ ಮೇಲೆ ಡಾಯನಾ ಇದ್ದರೆ….ಎಂಬ ಆಸೆ ತುಂಬಿದ ಪ್ರಚಾರದಿಂದ ಪುಲಕಿತನಾಗಿ ಎದ್ದವನೇ ಹೊರಡುವ ತಯಾರಿಗೆ ತೊಡಗಿದ. uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ಮೂರು – +ವಿಮಾನ-ನಿಲ್ದಾಣ ಗೆಸ್ಟ್‌ಹೌಸಿನಿಂದ ಹದಿನೈದೇ ಮಿನಿಟುಗಳ ಹಾದಿ. ಆದರೆ ನಡುವೆ ರೈಲ್ವೆ ಕ್ರಾಸಿಂಗ್ ಒಂದು ಇದ್ದುದರಿಂದ ಕಾರು ಬಂದದ್ದೇ ಹೊರಡುವುದನ್ನು ನಿರ್ಧರಿಸಿ ಹಾಗೇ ಸಿದ್ಧವಾಗಿ ಕುಳಿತಿದ್ದ. ಸರ್ದಾರ್ ಡ್ರೈವರ್ ಸರಿಯಾಗಿ ೬-೩೦ ಕ್ಕೆ ಬಂದದ್ದೇ ಹೊರಟೇಬಿಟ್ಟ. ಏಕೋ, ಹೈದರಾಬಾದಿಗೆ, ಬಹುಶಃ ಇದೇ ತನ್ನ ಕೊನೆಯ ಭೇಟಿಯೇನೋ, ಎಂಬ ಭಾವನೆಯಿಂದೆಂಬಂತೆ ಮುತ್ತೂಸ್ವಾಮಿಗೆ ಹತ್ತು ರೂಪಾಯಿ, ಕೃಷ್ಣನಿಗೆ ಐದು ರೂಪಾಯಿ ಬಕ್ಷೀಸು ಕೊಟ್ಟ. ಅವರು ಕೃತಜ್ಞತೆಯನ್ನು ಪ್ರಕಟಿಸಿ ಬೀಳ್ಕೊಟ್ಟಮೇಲೆ ಕಾರಿನಲ್ಲಿ ಬಂದು ಕೂತಾಗ ಮನಸ್ಸು ಅರ್ಥವಾಗದ ರೀತಿಯಲ್ಲಿಭಾರವಾಗಿತ್ತು. ಹದಿನೆಂಟು ವರ್ಷಗಳ ದೀರ್ಘ ಅವಧಿಯಲ್ಲಿ ಬೆಳೆದ ಸಂಬಂಧಗಳನ್ನು ಒಮ್ಮೆಲೇ ಕಡಿದುಕೊಳ್ಳುವುದು ಅಷ್ಟೊಂದು ಸುಲಭವಲ್ಲವೇನೋ : ಸರ್ದಾರ್ ಕಾರನ್ನು ಸ್ಟಾರ್ಟ್ ಮಾಡಿದ್ದೇ ತಿರುಗಿ ಅಂತರ್ಮುಖವಾಗಲು ಹವಣಿಸುತ್ತಿದ್ದ ಮನಸ್ಸನ್ನು ಹಾಗೇ ಆಗಲು ಬಿಡದ ದೃಢನಿರ್ಧಾರದಿಂದ, ದೃಷ್ಟಿಯನ್ನು ಸಂಜೆಯ ಎಳೆಬಿಸಿಲಲ್ಲಿ ಅವರ್ಣನೀಯವಾದ ಸೌಂದರ್ಯದಿಂದ ಬೆಳಗಿ ನಿಂತ ಸುತ್ತಲಿನ ಬಂಡೆಗಳ ಮೇಲೆ ; ಇಕ್ಕೆಲದ ಗುಲ್‌ಮೊಹರ್, ದೇವದಾರು ಗಿಡಗಳ ಮೇಲೆ; ಆಳೆತ್ತರದ ಬೇಲಿಗಳಿಂದ ಸುತ್ತುವರಿದ ಕಂಪೌಂಡುಗಳೊಳಗಿನ ಮನೆಗಳ ಮೇಲೆ ; ನಡುವೆಯೇ ರಸ್ತೆಯೊಳಗಿನ ಸಂಕಕ್ಕೆ ರಿಪೇರಿ ನಡೆದದ್ದರಿಂದ ಕಚ್ಚ ರಸ್ತೆಯಿಂದ ಹೋಗುವಾಗ ಹತ್ತುವ ನೀರಿನ ಹೊಂಡದ ಮೇಲೆ ಊರಿದ್ದ. ಇವುಗಳನ್ನು ಕೂಡ ತಾನು ನೋಡುವದು‌ಇದೇ ಕೊನೆಯ ಬಾರಿಯೇನೋ ಎಂಬ ಅನ್ನಿಸಿಕೆ ಕಾಡತೊಡಗಿತು…. ರೇಲ್ವೆ ಕ್ರಾಸಿಂಗಿಗೆ ಬಂದಾಗ ಅದು ತೆರೆದೇ ಇತ್ತು. ವಿಮಾನ-ನಿಲ್ದಾಣಕ್ಕೆ ಬಂದಾಗ ಬರೇ ೬-೪೫. ಸರ್ದಾರನಿಗೂ ಐದು ರೂಪಾಯಿ ಬಕ್ಷೀಸು ಕೊಡುತ್ತ, ಥೆಂಕ್ಸ್ ಸರ್ದಾರ್ ಎಂದು ಹಸ್ತಾಂದೋಲನ ಮಾಡುವಾಗ ಹಿಂದೆಂದೂ ಸಾಹೇಬರು ಹೀಗೆ ಮಾಡಿರಲಿಲ್ಲ ಎಂಬುದು ಲಕ್ಷ್ಯಕ್ಕೆ ಬಂದ ಡ್ರೈವರ್ ಇವನನ್ನು ಬೀಳ್ಕೊಡುವಾಗ ತುಂಬ ಭಾವುಕನಾಗಿದ್ದ. +ನಿಲ್ದಾಣದ ಒಳಗೆ ಬಂದಾಗ ಕೌಂಟರ್ ಇನ್ನೂ ತೆರೆದಿರಲಿಲ್ಲ. ಕೌಂಟರಿನ ಇದಿರು ತನ್ನ ಸೂಟ್‌ಕೇಸ್ ಇಟ್ಟ. ಸಮಯ ಕಳೆಯುವ ಉದ್ದೇಶದಿಂದ ಬದಿಯ ಕೈಗಾರಿಕೆಯ ವಸ್ತುಗಳನ್ನು ಮಾರುವ ಅಂಗಡಿಗೆ ಹೋಗಬೇಕು ಎನ್ನುವಷ್ಟರಲ್ಲಿ, ಆಗಿನಿಂದಲೂ ಇವನ ಬರವಿನ ಹಾದಿಯನ್ನೇ ಕಾಯುತ್ತಿದ್ದ. ಕಪ್ಪು ಕನ್ನಡಕವನ್ನು ಧರಿಸಿದ ವ್ಯಕ್ತಿ ಇವನನ್ನು ನೇರವಾಗಿ ಸಂಧಿಸಿ, ” ಉooಜ eveಟಿiಟಿg, ಒಡಿ. ಓಚಿgಟಿಚಿಣh, ನಿಮ್ಮ ಹತ್ತಿರ ಗುಟ್ಟಿನಲ್ಲಿ ಒಂದು ವಿಷಯ ಮಾತನಾಡುವದಿತ್ತು.” ಎಂದ. ಇವನ ಪರಿಚಯ ಸಿಕ್ಕಿರದ ನಾಗಪ್ಪ ಈ ಅಚಾನಕ ಮುಖಾಮುಖಿಯಿಂದ ಗಲಿಬಿಲಿಗೊಂಡು, “ನೀವು ಯಾರೆನ್ನುವುದು ತಿಳಿಯಲಿಲ್ಲ ? ಎಂದಾಗ “ಇಲ್ಲಿ ಬೇಡ. ಅದಾಗಲೇ ಜನ ಸೇರುತ್ತಿದ್ದಾರೆ. ‘ಚೆಕ್ ಇನ್’ ಮಾಡಿದ ಕೂಡಲೇ ಮೇಲಿನ ರೆಸ್ಟೋರೆಂಟಿಗೆ ಬನ್ನಿ. ಮೂಲೆಯಲ್ಲಿಯ ಟೇಬಲ್ ಕಡೆನಿಮ್ಮ ದಾರಿ ಕಾಯುತ್ತೇನೆ.” ಎಂದು ಹೇಳಿದವನೇ ಅವನು ಬಂದೇ ಬರುತ್ತಾನೆ ಎಂಬಂಥ ಪ್ರಚಂಡ ಆತ್ಮವಿಶ್ವಾಸ ಪ್ರಕಟಿಸುತ್ತ ರೆಸ್ಟೋರೆಂಟಿನತ್ತ ನಡೆಯಹತ್ತಿದ : ಸ್ವಚ್ಛವಾಗಿ ತೊಳೆದು ಖಡಕ್ ಇಸ್ತ್ರಿ ಮಾಡಿದ ಬೆಳ್ಳಗಿನ ಪೈಜಾಮಾ ; ಕಪ್ಪು ಕೂದಲಿನಿಂದ ಅಚ್ಚಾದಿತವಾದ ಎದೆಯ ಬಹುಭಾಗವನ್ನು ಪ್ರದರ್ಶಿಸುವಂತೆ ತೊಟ್ಟ ಖಾಸಾ ಹೈದರಾಬಾದೀ ಶೈಲಿಯ ಸ್ವಚ್ಚ ಬಿಳಿಯ ಕುರ್ತಾ ; ಗಂಡುದರ್ಪವನ್ನು ಸೂಸುವ ಅಚ್ಚ ಕಪ್ಪು ಬಣ್ಣದ ಮೋರೆಯಲ್ಲಿ ಆ ದರ್ಪಕ್ಕೆ ಕಳೆ ತಂದಂತಹ ದಪ್ಪ ಮೀಸೆಯ ಸಾಲು. ಈಗಿನ ಫ್ಯಾಶನ್ನಿಗೆ ತಕ್ಕಂತೆ ಉದ್ದವಾಗಿ ಬಿಟ್ಟ ದಟ್ಟ ಕೂದಲ ರಾಶಿ. ಇಡುವ ಪ್ರತಿ ಹೆಜ್ಜೆಯಲ್ಲಿ ವ್ಯಕ್ತವಾಗುತ್ತಿದ್ದ ಈ ಅಪರಿಚಿತನ ದರ್ಪ ‘ಬಾ; ಎಂದು ಇತ್ತ ಆಹ್ವಾನವನ್ನು ಸ್ವೀಕರಿಸಬೇಕೇ ಎನ್ನುವ ಸಂದಿಗ್ಧಕ್ಕೊಳಗಾಗಿರುವಾಗಲೇ ಮುಂಬಯಿಯ ಕೌಂಟರ್ ತೆರೆದಿತ್ತು. ಕ್ಯೂದಲ್ಲಿ ಅವನದೇ ಮೊದಲ ಸ್ಥಾನ. ‘ಚೆಕ್ ಇನ್’ ಮಾಡುವಾಗ ಏಳು ಗಂಟೆ. ‘ಸೆಕ್ಯುರಿಟೀ ಚೆಕ್’ ಆಗಲು ಇನ್ನೂ ಅರ್ಧ ಗಂಟೆಯಾದರೂ ಇದೆ. ಈ ಹೊಸ ಆಗಂತಕನು ತನ್ನ ಹತ್ತಿರ ಮಾತನಾಡಲು ಬಂದದ್ದು ಫ್ಯಾಕ್ಟರಿಗೆ ಸಂಬಂಧಪಟ್ಟ ವಿಷಯ ಎಂಬುದರ ಬಗ್ಗೆ ನಾಗಪ್ಪನಿಗೆ ಅನುಮಾನವಿರಲಿಲ್ಲ ; ಇಷ್ಟೊಂದು ಯಾಕೆ ಹೆದರಬೇಕು_ಹೇಗೂ ಈ ಕಂಪನಿಯೊಡನೆಯ ಸಂಬಂಧದ ವಿಷಯದಲ್ಲಿ ಒಂದು ನಿಲುಗಡೆಗೆ ಬಂದು ಮುಟ್ಟಿದ ಮೇಲೆ ! +ನಾಗಪ್ಪ ರೆಸ್ಟೋರೆಂಟಿಗೆ ಹೋಗಿ ಅಪರಿಚಿತನು ಸೂಚಿಸಿದ ಮೂಲೆಯ ಕಡೆಗೆ ಹುಡುಕುವ ದೃಷ್ಟಿ ಚೆಲ್ಲಿದಾಗ ಕಣ್ಣಿಗೆ ಬಿದ್ದ : ಇವನನ್ನು ಕಂಡಕೂಡಲೇ ಅವನೂ ಎದ್ದು ನಿಂತು ತಾನು ಎಲ್ಲಿದ್ದೇನೆ ಎನ್ನುವುದನ್ನು ತೋರಿಸಿಕೊಟ್ಟ. ರೆಸ್ಟೋರೆಂಟಿನಲ್ಲಿ ಕೂತಾಗಲೂ ಕಪ್ಪು ಕನ್ನಡಕವನ್ನು ತೆಗೆಯದೇ ಇದ್ದುದಕ್ಕೆ ತನ್ನ ಮುಖ ಪರಿಚಯ ಸಿಗದಿರಲಿ ಎಂಬ ಇಚ್ಛೆಯೇ ಕಾರಣವಾಗಿರಬೇಕು. ಆದರೆ, ಅವನು ತನ್ನ ಹೆಸರನ್ನು ಹೇಳುವುದಕ್ಕೂ ಹಿಂಜರಿದರೆ ಅವನೊಡನೆ ಮಾತನಾಡಲು ಒಪ್ಪಕೂಡದು ಎಂದು ನಿಶ್ಚಯಿಸಿದ., ನಾಗಪ್ಪ. ಅವನು ಟೇಬಲ್ ಸಮೀಪಿಸಿದ್ದೇ ಅವನಿಗಾಗಿ ಕುರ್ಚಿಯೊಂದನ್ನು ಸರಿಪಡಿಸಿದ.ಅಪರಿಚಿತನು ಕೂಡ್ರುವಂತೆ ನಮ್ರತೆಯಿಂದ ಕೇಳಿಕೊಂಡ : “ಕುಡಿಯಲಿಕ್ಕೇನಾದರೂ ?” ಇವನು ಬೇಡವೆಂದಾಗ, “ಹೌದು, ಸಮಯವೂ ಹೆಚ್ಚಿಲ್ಲ. ಸರ್. ನನಗೆ ತಿಳಿಯುತ್ತದೆ. ನನ್ನ ಪರಿಚಯ ಮಾಡಿಕೊಡದೇನೇ ಮಾತನಾಡುವದು ನಮ್ರತೆಯ ಲಕ್ಷಣವಲ್ಲ ಎನ್ನುವದು. ಆದರೆ, ಹಾಗೆ ಮಾಡಲು ನಾನೇಕೆ ನಿರುಪಾಯನಾಗಿದ್ದೇನೆ ಎನ್ನುವುದು ನಿಮಗೇ ಕೊನೆಗೆ ಗೊತ್ತಾದೀತು. ಸದ್ಯ. ನಾನು ನಿಮ್ಮ ಬಗ್ಗೆ ಬಹಳ ಆದರವಿದ್ದ, ಅಭಿಮಾನವಿದ್ದ ಫ್ಯಾಕ್ಟರಿಯ ಒಬ್ಬ ಕೆಲಸಗಾರನೆಂದಿಷ್ಟೇ ತಿಳಿದುಕೊಳ್ಳಿ,”. ಎಂದ. ಉರ್ದೂ ಪ್ರಭಾವ ದಟ್ಟವಾದ ಅವನ ಹೈದರಾಬಾದೀ ಹಿಂದಿ ಅವನ ಗಂಡುದನಿಯಲ್ಲಿ ಮೂಡಿದಾಗ ನಾಗಪ್ಪನಿಗೆ ಮೈಮೇಲೆ ಮುಳ್ಳು ನಿಲ್ಲುತ್ತಿದ್ದ ಅನುಭವ. ಅವನ ಹೆಸರನ್ನು ಕೇಳದೇನೇ ಅವನು ಹೇಳಲು ಬಂದದನ್ನು ಕೇಳಲು ಆತುರಪಟ್ಟ : “ಸ್ಟೋರ್ಸ್‌ನಲ್ಲಿ ಕಲಸ ಮಾಡುತ್ತಿದ್ದೇನೆ. ಅಲ್ಲಿ ಕೆಲವು ತಿಂಗಳಿಂದ ನಡೆಯುತ್ತಿದ್ದ ವಿಧ್ಯಮಾನಗಳಿಗೆ ದಂಗುಬಡುದುಹೋಗಿದ್ದೇನೆ, ಸರ್… ಅವು ನಡೆಯುತ್ತಿದ್ದ ರೀತಿ ನೋಡಿದರೆ ಈ ಸಂಗತಿಗಳು ಇತ್ತೀಚಿನವು ಎಂದು ಅನ್ನಿಸುವದಿಲ್ಲ. ನಾನೋ ಸ್ಟೋರ್ಸಿಗೆ ಹೊಸಬ. ಈ ಮೊದಲು ಪ್ಯಾಕಿಂಗ್ ಡಿಪಾರ್ಟ್‌ಮೆಂಟಿನಲ್ಲಿದ್ದೆ. ಈಗ ಹತ್ತು ತಿಂಗಳಿಂದಷ್ಟೇ ಸ್ಟೋರ್ಸಿನಲ್ಲಿ ಒಬ್ಬ ಕ್ಲಾರ್ಕನಾಗಿ ಕೆಲಸ ಮಾಡತ್ತಾ ಇದ್ದೇನೆ ಸರ್…. ಬರೇ ಬಾಯ ಹೊಗಳಿಕೆಗಾಗಿ ಹೇಳುವದಿಲ್ಲ : ನಿಮ್ಮ ಬಗ್ಗೆ ಇಡೀ ಕಾರಖಾನೆಯಲ್ಲಿ ಬಹಳ ಒಲ್ಲೇ ಅಭಿಪ್ರಾಯ ಇದೆ ಸರ್…ಇಲ್ಲಿ ಕೆಲವು ತಿಂಗಳಿಂದ ನಡೆಯುತ್ತಿದ್ದ ಅಂಧಾದುಂದಿಗೆ ಎಲ್ಲರೂ ರೋಸಿಹೋಗಿದ್ದಾರೆ. ಸರ್… ಆದರೆ ಡೀ ಎಮ್ ಡೀ ಹಾಗೂ ಅವರ ಬಲಗೈ ಚೇಲಾ ರಾಮಕೃಷ್ಣರ ಕ್ರೂರಸತ್ತೆಗೆ ಎಲ್ಲರೂ ಥತ್ ಹೆದರುತ್ತಾರೆ. ಹಾಗೆಂದೇ ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ಲದವರ ಹಾಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಆದರೆ ಪರಿಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗಿದೆಯೆಂದರೆ ಗೇಟಮನ್ನನನ್ನು ಹಿಡಿದು ಫ್ಯಾಕ್ಟರಿ ಮ್ಯಾನೇಜರನವರೆಗೆ ಎಲ್ಲರೂ_ಇಲ್ಲಿಯ ಪ್ರಕರಣಗಳಿಗೆ ಕಾರಣರಾದ ದೊಡ್ಡ ದೊಡ್ಡ ಕುಳಗಳೇ ಇದೆಲ್ಲದರಿಂದ ಜಾರಿಕೊಂಡು ತಾವು ಮಾತ್ರ ಎಲ್ಲಿ ಸಿಕ್ಕಿಬೀಳುತ್ತೇವೋ ಎಂದು ಭಯಭೀತರಾಗಿದ್ದಾರೆ. ಕೊನೆಗೆ ನಾವೇ ಹತ್ತು ಮಂದಿ ಒಂದೆಡೆ ಕೂಡಿ ವಿಚಾರ ಮಾಡಿ ಒಂದು ಟ್ಯಾಪ್ ಮಾಡಿ ಸಹಿ ಮಾಡಿರದ ಪತ್ರವನ್ನು ಎಮ್ ಡೀ ಅವರಿಗೆ ಕಳಿಸಿದೆವು. ಆ ಮಾತಿಗೆ ಈಗ ಮೂರು ತಿಂಗಳ ಮೇಲೇ ಆಯಿತು. ನಮ್ಮ ಲಕ್ಷ್ಯಕ್ಕೆ ಬಂದ ಸಂಗತಿಗಳ ವಿವರಗಳನ್ನು ಕೊಟ್ಟು, ಕೂಡಲೇ ಬಂದು ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದೆವು. ಇಷ್ಟೇ ಅಲ್ಲ. ನಿಮ್ಮನ್ನು ಮತ್ತೆ ಮೊದಲಿನ ಜಾಗಕ್ಕೇ ನಿಯಮಿಸಬೇಕೆಂದೂ ಸೂಚಿಸಿದ್ದೆವು. ನೀವು ಬರೇ ಆರ್ ಎಂಡ್ ಡೀ ಮ್ಯಾನೇಜರರಾಗಿರುವಾಗಲೂ ನಿಮ್ಮ ವರ್ಚಸ್ಸು ನಮಗೇ ಗೊತ್ತಾಗದಂತೆ ನಮ್ಮೆಲ್ಲರ ಮೇಲಿತ್ತೆಂದು ತೋರುತ್ತದೆ, ಸರ್….” ಎನ್ನುವಾಗ ಸೆಕ್ಯುರಿಟೀ ಚೆಕ್ ಸಲುವಾಗಿ ಮುಂಬಯಿಗೆ ಹೋಗುವ ಪ್ರಯಾಣಿಕರಿಗೆ ಮ್ಯಾಕ್ ಮೇಲೆ ಮೊದಲನೇ ಕರೆ ಬಂದಿತ್ತು. ತದೇಕಚಿತ್ತದಿಂದ, ಕೆಲವೊಮ್ಮೆ ಶ್ವಾಸವನ್ನು ತಡೆಹಿಡಿದು ಕೂಡ, ಕೇಳುತ್ತಿದ್ದ ನಾಗಪ್ಪ ಕುರ್ಚಿಯಲ್ಲಿ ಅರೆನಿಮಿಷ ದಡಬಡಿಸಿದ. “ಹೆಚ್ಚು ಹೊತ್ತು ನಿಮ್ಮನ್ನು ತಡೆಯುವುದಿಲ್ಲ, ಸರ್…. ಎಮ್ ಡೀ ಅವರು ನಾವು ಕಳಿಸಿದ ಪತ್ರವನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲಂತೆ….ಯಾಕೆಂದರೆ ತನಿಖೆ ನಡೆಸುವದಿರಲಿ, ಅವರು ಆಮೇಲೆ ಹೈದರಾಬಾದಿಗೆ ಬರಲಿಲ್ಲ. ಅಥವಾ….ಅವರಿಗೆ ನಮ್ಮ ಪತ್ರವೇ ಮುಟ್ಟಿರಲಿಕ್ಕಿಲ್ಲ. ನಮಗಾದ ನಿರಾಶೆ ಅಷ್ಟಿಷ್ಟಲ್ಲ. ಇಲ್ಲೆಲ್ಲ ಹಬ್ಬಿದ ಸುದ್ದಿಯೆಂದರೆ ಬೋರ್ಡ್ ಮೇಲಿನ ಡೈರೆಕ್ಟರರಲ್ಲೆಲ್ಲ ಡಿ ಎಮ್ ಡಿಯವರ ವರ್ಚಸ್ಸೇ ಒ‌ಆ ಯವರ ವರ್ಚಸ್ಸಿಗಿಂತ ದೊಡ್ಡದಾದದ್ದು. ಅವರಲ್ಲಿ ಹೆಚ್ಚಿನ ಮಂದಿ ಹೈದರಾಬಾದ್ ಇಲ್ಲವೇ ದಕ್ಷಿಣಪ್ರಾಂತದವರಾಗಿದ್ದರಿಂದ ಆ‌ಒ‌ಆ ಯವರಿಗೆ ಅವರೊಡನೆ ನಿಕಟವಾದ ಸಂಬಂಧ ಇಟ್ಟುಕೊಳ್ಳುವುದು ಸುಲಭವಾಯಿತು. ಪಾರ್ಟೀ ಕೊಡುವುದರಲ್ಲಿ ಒಳ್ಳೇ ಪಳಗಿದ ಕೈಯಾದ ಅವರು ಎಲ್ಲರನ್ನೂ, ಸರಬರಾಯಿ ಮಾಡಿ, ಖುಶಿಯಲ್ಲಿಟ್ಟಿದ್ದಾರೆ. ಇವರ ಬಲಾಢ್ಯ ಮಹತ್ವಾಕಾಂಕ್ಷೆಯ ಮುಂದೆ ಒ‌ಆ ಯವರು ಏನೂ ಮಾಡದವರಾಗಿದ್ದಾರೆಂಬ ಗಾಳಿಸುದ್ದಿ ಇಲ್ಲೆಲ್ಲ. ಇಷ್ಟೇ ಅಲ್ಲ, ಈ ಮೊದಲಿನ ಬೋರ್ಡ್ ಮೀಟಿಂಗಿನಲ್ಲಿ ಆ‌ಒ‌ಆ ಯವರು ಫ್ಯಾಕ್ಟರಿಯ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳುತ್ತೇವೆಂದೂ ಒ‌ಆ ಯವರು ಬರೇ ಉಳಿದೆಲ್ಲ ವ್ಯವಹಾರಗಳನ್ನು_ಬಹುಮುಖ್ಯವಾಗಿ ಮಾರ್ಕೆಟಿಂಗ್_ನೋಡಿಕೊಳ್ಳಬೇಕೆಂದೂ ಸೂಚನೆ ಮಾಡಿದರಂತೆ. ಒ‌ಆ ಯವರು ಈ ಉದ್ಧಟತನದ ಸೂಚನೆಯಿಂದ ಕೆಣಕಲ್ಪಟ್ಟು ಸಿಟ್ಟಿನಿಂದ ಮೇಜು ಗುದ್ದಿದರೇ ಹೊರತು…ಅವರ ಬಾಯಿಂದ ಮಾತೇ ಹೊರಡದಾಯಿತಂತೆ. ಹೌದೇ ಸರ್ ಇದೆಲ್ಲ ?…ಇವರು ತಮ್ಮ ಮನಸ್ಸಿನ ತೋಲವನ್ನು ಬಿಟ್ಟುಕೊಟ್ಟು ಮೇಜು ಗುದ್ದಿದ್ದೇ ದೊಡ್ಡ ಅಪರಾಧವಾಗಿ ತೋರಿತಂತೆ, ಬೋರ್ಡ್ ಸದಸ್ಯರಿಗೆ, ಆ‌ಒ‌ಆ ಯವರು ಮಾತ್ರ ಬಹಳ ಶಾಂತಚಿತ್ತರಾಗಿ ಕಾರಣ ಸಮೇತ ಮಂಡಿಸಿದ ವಿಚಾರಗಳು ಎಲ್ಲರ ಮೇಲೆ ತುಂಬ ಪರಿಣಾಮ ಮಾಡಿದುವು ಅಷ್ಟೇ ಅಲ್ಲ, ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಪ್ರಶಂಸಿಸುತ್ತ_ ಆ‌ಒ‌ಆ ಕಳೆದ ೨೦ ವರ್ಷಗಳಲ್ಲಿ ಕಾರಖಾನೆಯನ್ನು ಇಂದಿನ ಊರ್ಜಿತ ಸ್ಥಿತಿಗೆ ತರುವಲ್ಲಿ ತೋರಿಸಿದ ಕುಶಲತೆ, ಪರಿಶ್ರಮ ನಿರ್ವಿವಾದ; ಅದರ ಪ್ರಚಂಡವಾದ ಅನುಭವ ಹಾಗೂ ಕಂಪನಿಯ ಉತ್ಪಾದನೆಯ ಟೆಕ್ನಾಲೊಜಿಯ ಬಗ್ಗೆ ಅವರಿಗೆ ಇರುವ ಅಗಾಧವಾದ ಜ್ಞಾನ ಇವುಗಳ ಸಂಪೂರ್ಣ ಲಾಭ ಕಂಪನಿಗೆ ಸಿಗಬೇಕಾದರೆ ಅವರು ಬೇಡುವ ಈ ಸಣ್ಣ ಸವಲತ್ತನ್ನು ಅನೌಪಚಾರಿಕವಾಗಿಯಾದರೂ ಬೋರ್ಡು ಇವರಿಗೆ ಕೊಡಬೇಕು ಎಂದು ಶಿಫಾರಸ್ಸೂ ಮಾಡಿದರಂತೆ. ಒ‌ಆ ಯವರು ಮತ್ತೆ ಕ್ಷೋಭೆಗೊಂಡು , ‘ ಖಿhis ತಿoಟಿ’ಣ ತಿoಡಿಞ’ ಎಂಬ ಮೂರೇ ಮೂರು ಶಬ್ದಗಳನ್ನು ಉಚ್ಛರಿಸುವದು ಕಷ್ಟವಾಯಿತಂತೆ. ಒಂದನ್ನು ನಾವು ಒಪ್ಪಿಕೊಳ್ಳಲೇಬೇಕು ಸರ್….ಚಂದವಾಗಿ ಸಮಯಕ್ಕೆ ತಕ್ಕಂತೆ ಮಾತನಾಡಿ ಮರುಳುಗೊಳಿಸುವ ಕಲೆಯಲ್ಲಿ ನಮ್ಮ ಆ‌ಒ‌ಆ ಯವರನ್ನು ಹಿಂದೆ ಹಾಕುವ ಯಾರೂ ಇನ್ನೂ ಹುಟ್ಟೇ ಇರಲಿಕ್ಕಿಲ್ಲ_ಅಲ್ಲವೇ ಸರ್….?” ಮ್ಯಾಕ್ ಮೇಲೆ ತಿರುಗೊಮ್ಮೆ ಸೆಕ್ಯುರಿಟೀ ಚೆಕ್ ಸಲುವಾಗಿ ಕರೆ ಬಂದಿತು. ಕೈ ಗಡಿಯಾರ ನೋಡಿಕೊಂಡಾಗ ೭-೨೪. “ಚಿಂತೆ ಮಾಡಬೇಡಿ. ಸರ್….ಇನ್ನೂ ಹತ್ತು ಮಿನಿಟು ಆರಾಮವಾಗಿ ಕೂಡ್ರಬಹುದು…. ಒ‌ಆ ಯವರಿಂದ ಯಾವ ಪ್ರತಿಕ್ರಿಯೆಯೂ ಆಗಲಾರದೆಂದು ಮನಗಂಡ ನಾವು ಕೆಲವು ದಿನಗಳ ಹಿಂದೆ ಒ‌ಆ ಯವರಿಗೆ ಕಳಿಸಿದ ಪತ್ರದ ಪ್ರತಿಗಳನ್ನು ಮಾಡಿ ಎಲ್ಲ ಡೈರೆಕ್ಟರರಿಗೂ ಕಳಿಸಿದ್ದೇವೆ_ಅಮೆರಿಕೆಗೂ ಕೂಡ. ಇದರ ಪರಿಣಾಮ ತತ್‌ಕ್ಷಣವಾದಂತೆ ತೋರುತ್ತದೆ : ನಿನ್ನೆಯೇ ಆ‌ಒ‌ಆ ಯವರು ರಾಮಕೃಷ್ಣನೊಂದಿಗೆ ಮುಂಬಯಿಗೆ ಹೋಗಿದ್ದಾರೆ. ನೀವು ಇಲ್ಲಿ ಬಂದಿದ್ದೀರಿ. ಈ ಫ್ಲೈಟಿನಿಂದ ಮುಂಬಯಿಗೆ ಹೊರಟಿದ್ದೀರಿ ಎನ್ನುವುದು ಗೊತ್ತಾದೊಡನೆ ಓಡಿಬಂದೆ, ಸರ್….ಇದು ನೋಡಿ, ಆ ಪತ್ರದ ಒಂದು ಪ್ರತಿಯನ್ನು ತಂದಿದ್ದೇನೆ.” ಎನ್ನುತ್ತ ಆಗಿನಿಂದಲೂ ಕೆಸೆಯಲ್ಲೇ ಇಟ್ಟುಕೊಂಡ ನೀಲಿ ಬಣ್ಣದ ಲಕ್ಕೋಟೆಯನ್ನು ಹೊರತೆಗೆದು ಜಾಗ್ರತೆಯಿಂದ ನಾಗಪ್ಪನ ಕೈಗೆ ಕೊಟ್ಟ. ನಾಗಪ್ಪ ಕೂಡಲೇ ಅದನ್ನು ತನ್ನ ಬ್ರೀಫ್‌ಕೇಸಿಗೆ ಸೇರಿಸಿದ. “ನಿಮ್ಮ ಮನೆಯ ವಿಳಾಸ ಗೊತ್ತಿದ್ದರೆ ಪೋಸ್ಟಿನಿಂದಲೇ ಕಳಿಸುವವರಿದ್ದೆವು. ಆಫೀಸಿನ ಪತ್ತೆಗೆ ಕಳಿಸಿದರೆ….ಅಲ್ಲಿಯೂ ಇದ್ದಾನಲ್ಲ ಬಾವಾಜೀ….ಇಡೀ ಕಾರಖಾನೆಯ ಕೆಲಸಗಾರರೆಲ್ಲ ನಿಮ್ಮ ಕಡೆ ನೋಡುತ್ತಿದ್ದಾರೆ, ಸರ್….ಗರಜು ಬಿದ್ದರೆ ಸ್ಟ್ರೈಕ್ ಮಾಡಲೂ ನಾವು ಸಿದ್ಧರಿದ್ದೇವೆ. ಬರೀ ಕಾರ್ಮಿಕರಷ್ಟೇ ಅಲ್ಲ ; ಮ್ಯಾನೇಜರರವರೆಗೆ, ಎಲ್ಲರೂ, ” ಸೆಕ್ಯುರಿಟೀಯ ಕೊನೆಯ ಕರೆ ಮ್ಯಾಕ್ ಮೇಲೆ ಕೇಳಿಸಿದ್ದೇ, “ಕಾಳಜಿ ಮಾಡಬೇಡಿ. ನನ್ನ ಕೈಯಿಂದ ಸಾಧ್ಯವಾದದ್ದನ್ನು ಮಾಡುತ್ತೇನೆ. ನೀವು, ನಿಮ್ಮ ಗೆಳೆಯರು ನನ್ನ ಬಗ್ಗೆ ವ್ಯಕ್ತಪಡಿಸಿದ ವಿಶ್ವಾಸಕ್ಕಾಗಿ ತುಂಬ ಅಭಾರಿಯಾಗಿದ್ದೇನೆ….” ಅಪರಿಚಿತನ ಕೈಕುಲುಕುತ್ತ ಅವನಿಂದ ಬೀಳ್ಕೊಂಡು ಸೆಕ್ಯುರಿಟೀ ಗೇಟಿನತ್ತ ನಡೆಯಹತ್ತಿದ, ನಾಗಪ್ಪ. +uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ನಾಲ್ಕು – +ವಿಮಾನವನ್ನು ಸಮೀಪಿಸುವಾಗ, ನಿನ್ನೆ ಡಾಯನಾ ಮಾಡಿದ ತನ್ನ ಒಂದು ವೈಶಿಷ್ಟ್ಯದ ವರ್ಣನೆ ನೆನಪಿಗೆ ಬಂದು ಬಲಗೈಯಲ್ಲಿಯ ಬ್ರೀಫ್‌ಕೇಸನ್ನು ಎಡಗೈಗೆ ರವಾನಿಸಿದ. ಹಾಗೆ ಮಾಡುವಾಗ ತನ್ನಷ್ಟಕ್ಕೆ ಮುಗುಳುನಕ್ಕ. ವಿಮಾನವನ್ನು ಪ್ರವೇಶಿಸುವ ನಿಚ್ಚಣಿಕೆ ಹತ್ತಿರವಾದಾಗ ಬಾಗಿಲಲ್ಲಿ ಸ್ವಾಗತಕ್ಕೆ ನಿಂತವಳು ಡಾಯನಾ ಇರಬಹುದೇ ಎಂದು ಆಸೆಯಿಂದ ಕಣ್ಣೆತ್ತಿ ನೋಡಿದ. ಇಲ್ಲ. ನಿಂತವಳು ಹೊಸಬಳಾಗಿದ್ದಳು. ಅವಳನ್ನು ನಮಸ್ಕರಿಸಿ ಒಳಗೆ ಕಾಲಿರಿಸುವಾಗ, “Is ಆiಚಿಟಿಚಿ ಆಡಿiviಡಿ oಟಿ ಜuಣಥಿ ಣoಜಚಿಥಿ ?” ಎಂದು ಮೆಲ್ಲಗೆ ಕೇಳಿದ. “ಓo, Siಡಿ,” ಎಂದು ಚಿಕ್ಕದಾಗಿ ಉತ್ತರ ಕೊಟ್ಟ ಹುಡುಗಿ ನಗಲಿಲ್ಲ. ಂiಡಿ hosಣiಟe ಎಂದು ತೋರುತ್ತದೆ ಎಂದುಕೊಂಡು ತನ್ನಷ್ಟಕ್ಕೇ ನಗುತ್ತ ತನ್ನ ಸೀಟಿನ ಕಡೆ ನಡೆಯುತ್ತಿರುವಾಗ ಇನ್ನೊಬ್ಬ ಪರಿಚಾರಿಕೆ ಒಚಿಥಿ I heಟಠಿ ಥಿou Siಡಿ, ಎನ್ನುತ್ತ ಇವನ ಬೋರ್ಡಿಂಗ್ ಕಾರ್ಡನ್ನು ತೆಗೆದುಕೊಂಡು ಖಿhis is ೧೩-ಛಿ, Siಡಿ, ಎಂದು ಸೀಟು ತೋರಿಸಿದಳು. ಆ ಇಡೀ ಸಾಲು ಖಾಲಿ ಇತ್ತೋ ಅಥವಾ ಇನ್ನೂ ಯಾರೂ ಬಂದಿರಲಿಲ್ಲವೋ : ಹದಿಮೂರು ತನ್ನ ಪಾಲಿಗಂತೂ ಶುಭವಾಗಿರಲಿಲ್ಲ_ಅಪ್ಪ ಸತ್ತದ್ದು ವಯಸ್ಸಿನ ಹದಿಮೂರನೇ ವರ್ಷಕ್ಕೆ ! ಸೀಟಿನಲ್ಲಿ ಕೂಡ್ರುವಾಗಲೇ ಮನಸ್ಸನ್ನು ಭೂತಕಾಲದತ್ತ ಜಗ್ಗಲು ಹವಣಿಸುತ್ತಿದ್ದ ನೆನಪನ್ನು ಪ್ರಯತ್ನ ಪೂರ್ವಕವಾಗಿ ಹತ್ತಿಕ್ಕಿ ಮಗ್ಗಲಿನ ಸೀಟು ಖಾಲಿಯೇ ಉಳಿದರೆ ಸೀಟು ತೋರಿಸಿದ ಪರಿಚಾರಿಕೆಯ ಹತ್ತಿರ ಹರಟೆಹೊಡೆಯುವದಾದರೂ ಸಾಧ್ಯವಾದೀತು ಎಂದುಕೊಂಡ. ಅವಳು ಬಾಗಿಲಲ್ಲಿ ಸ್ವಾಗತಕ್ಕೆ ನಿಂತವಳಷ್ಟು ಗಂಭೀರಳಲ್ಲ. ನಗಿಸಿದರೆ ನಗಬಹುದೇನೋ ! ಸೀಟ್‌ಬೆಲ್ಟ್ ಧರಿಸುವಾಗ ಹಿಂದಕ್ಕೆ ಮುಂದಕ್ಕೆ ದೃಷ್ಟಿ ಹಾಯಿಸಿ ನೋಡಿದ : ಪ್ಲೇನಿನಲ್ಲಿಯ ಅನೇಕ ಸೀಟುಗಳು ಖಾಲಿಯಿದ್ದವು. ಪರಿಚಾರಿಕೆಯ ಹತ್ತಿರ ಹರಟುವ ಉತ್ಕಂಠೆಯಲ್ಲಿ ಇನ್ನೇನನ್ನೋ ಮರೆಯುವ ಪ್ರಯತ್ನ ಅಡಗಿದೆಯೇ ಎಂಬ ಅನುಮಾನ ಅರಿವಿಗೆ ಬರುತ್ತಿರುವಾಗ ಬೇಚೈನುಗೊಂಡ…. +ನಾಗಪ್ಪನ ಅಸ್ವಸ್ಥತೆಗೆ ಕಾರಣವಾದದ್ದು ಬ್ರೀಫ್‌ಕೇಸಿನಲ್ಲಿಟ್ಟ_ಆಗ ಏರ್‍ಪೋರ್ಟಿನಲ್ಲಿ ಅಚಾನಕವಾಗಿ ಭೆಟ್ಟಿಯಾಗಿ, ಗುಟ್ಟಿನಲ್ಲಿ ಮಾತನಾಡಿಸಿಕೊಟ್ಟ_ಪತ್ರ : ಲಕ್ಕೋಟೆಯಲ್ಲಿ ಭದ್ರವಾಗಿ ಮುಚ್ಚಿಕೊಂಡಿತ್ತು. ತೆರೆದು ಓದಲೇ ? ಕಳೆದ ಏಳು ದಿನಗಳ ಯಾತನೆಗೆ ಕಾರಣವಾದ ಹೊಯ್ದಾಟದ ನಂತರ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದ ಮನಸ್ಸನ್ನು ಮತ್ತೆ ವಿಚಲಗೊಳಿಸುವ ಧೈರ್ಯ ನಾಗಪ್ಪನಿಗಿರಲಿಲ್ಲ. ಮುಟ್ಟಿದ ನಿಶ್ಚಯವನ್ನು ಬದಲಿಸುವಾಗಿನ, ಹೊಸ ನಿಶ್ಚಯಕ್ಕೆ ಬರುವಾಗಿನ ಆತಂಕದ ನೋವಿನಂತಹ ನೋವು ಇನ್ನೊಂದಿಲ್ಲ ಎಂದು ಅನುಭವದಿಂದ ಬಲ್ಲ ನಾಗಪ್ಪನಿಗೆ ಈವರೆಗೂ ತನ್ನ ದೃಷ್ಟಿಗೆ ಬಿದ್ದಿರದ ಹೊಸ ಕ್ಷೇತ್ರದಲ್ಲಿ ಕಾಲಿಡುವ ಮನಸ್ಸಾಗಲಿಲ್ಲ. ಒಬ್ಬನು ಇನ್ನೊಬ್ಬನನ್ನು ಉಪಯೋಗಿಸಿಕೊಳ್ಳುವುದರಿಂದ ಸುಳ್ಳಾದ ಸಂಬಂಧಗಳನ್ನೆಲ್ಲ ಒಂದೊಂದಾಗಿ ತೊಡೆದು, ಉಳಿದ ಆಯುಷ್ಯವನ್ನಾದರೂ_ಅಪ್ಪಟವಾದ, ನಿಜವಾದ ಸಂಬಂಧಗಳನ್ನು (ಹಾಗೆಂದರೇನು ಎನ್ನುವದೇ ಇನ್ನೂ ಸ್ಪಷ್ಟವಾಗಿರದಿದ್ದರೂ ಕೂಡ) ಹುಟ್ಟಿಸಿಕೊಳ್ಳುವುದರಲ್ಲಿ ಕಳೆಯುವುದಿತ್ತು. ಅವನಿಗೆ, ಸಾಹಿತ್ಯ ಇಂತಹ ಒಂದು ಗುರಿಗೆ ನೆರವು ನೀಡಬಹುದಾಗಿತ್ತಾದರೂ ತನ್ನ ಅಳವಿನ ಆಚೆಯ ಒಂದು ಕಾರಣದಿಂದ ತಾನಿಂದು ಅದಕ್ಕೆ ವಂಚಿತನಾಗುತ್ತಿದ್ದೇನೆಯೇ ? ಎಂಬ ಭಯದಿಂದ ಮ್ಲಾನಗೊಳ್ಳುತ್ತಿದ್ದ ಮನಸ್ಸು ಮೇರಿ ನೆನಪಿಗೆ ಬರತೊಡಗಿದ್ದೇ ಮತ್ತೆ ಗೆಲುವಾಯಿತು : ತನ್ನ ಮನಸ್ಸಿನಲ್ಲಿದ್ದೂ ಮಾತಿನ ತೆಕ್ಕೆಗೆ ಒಳಪಡಲು ಒಪ್ಪದ ಸಂಬಂಧ ಇಲ್ಲಿ ಹುಟ್ಟಬಹುದೇನೋ_ಈ ಹೊಸ ಸಾಧ್ಯತೆಯ ಕಲ್ಪನೆಯಿಂದಲೇ ಒಳಗೆ ಹುಟ್ಟಿದ ಸುಖ, ಮೋರೆಯನ್ನು ಬೆಳಗಿದ ಮಂದಸ್ಮಿತವಾಗಿ sತಿeeಣs ಕೊಡಲು ಬಂದ ಪರಿಚಾರಿಕೆಯ ಮೋರೆಯ ಮೇಲೂ ಪ್ರತಿಫಲಿಸಿತು. ಟೋಪಿಯೊಂದನ್ನು ಕೈಗೆ ತೆಗೆದುಕೊಳ್ಳುತ್ತ, ಪರಿಚಾರಿಕೆಯ ಕಣ್ಣುಗಳಲ್ಲಿ ಕಣ್ಣು ನೆಟ್ಟು_ಥೆಂಕ್ಸ್, ಎಂದಾಗ ಅವಳೂ ತುಂಬ ಖುಶಿಯಲ್ಲಿ_ಙou ಚಿಡಿe ತಿeಟಛಿome ಎಂದಳು. I ಞಟಿoತಿ iಣ ಎಂದು ಒಂದು ಬಗೆಯ ತುಂಟತನದಿಂದ ತನ್ನಷ್ಟಕ್ಕೇ ಅಂದುಕೊಂಡ ನಾಗಪ್ಪ ಮುಂಬಯಿಗೆ ಹೋದಮೇಲೆ ಮೊಟ್ಟಮೊದಲು ಮಾಡಬೇಕಾದ ಕೆಲಸವೆಂದರೆ ಮೇರಿಯನ್ನು ಅವಳ ಬಾಂದ್ರಾದ ಮನೆಯಲ್ಲೇ ಕಾಣುವದು_ಎಂಬ ನಿರ್ಧಾರಕ್ಕೆ ಬಂದಿದ್ದ. +ವಿಮಾನ ಹೊರಡುವ ಸಮಯವಾಯಿತು ಎನ್ನುವುದನ್ನು ಮ್ಯಾಕ್ ಮೇಲೆ ಸಾರುತ್ತ, ಪ್ರಯಾಣಿಕರಿಗೆ ಹಾರ್ಧಿಕ ಸ್ವಾಗತ ಬಯಸುವ, ಸುಖಕರವಾದ ಪ್ರಯಾಣ ಬಯಸುವ ಪರಿಚಾರಿಕೆಯ ಕಂಠ ಹಾಗೂ ಹಿಂದೀ ಭಾಷೆಯ ಮೇಲೆನ ಪ್ರಭುತ್ವ ತುಂಬ ಇಷ್ಟವಾದವು. ಆಗ ಬಾಗಿಲಲ್ಲಿ ಸ್ವಾಗತಕ್ಕೆ ನಿಂತ ಹುಡುಗಿ ಇವಳು ಅಡ್ಡಿಯಿಲ್ಲ. ಅವಕಾಶ ಸಿಕ್ಕರೆ ಅವಳನ್ನು ಮಾತನಾಡಿಸಬೇಕು ಎಂದುಕೊಂಡವನು ಮಾತನಾಡಿಸಿಯೇಬಿಟ್ಟ. ಅವಳು ಚಹ ಕೊಡಲು ಬಂದಾಗ, “ಙou hಚಿve ಚಿ mಚಿಡಿveಟಟous voiಛಿe ಚಿಟಿಜ bಥಿ ಜಿಚಿಡಿ ಣhe besಣ ಚಿಟಿಟಿouಟಿಛಿiಟಿg sಣಥಿಟe I hಚಿve eveಡಿ hಚಿಜ ಣhe ಠಿಟeಚಿsuಡಿe oಜಿ ಟisಣeಟಿiಟಿg ಣo.” ಎಂದ. ಅವಳು ತನ್ನ ಮೊದಲಿನ ಗಾಂಭೀರ್ಯವನ್ನು ಬಿಟ್ಟುಕೊಟ್ಟು ಬಹಳ ಸುಂದರವಾಗಿ ಖುಕ್ ಎಂದು ನಕ್ಕು, “ಖಿhಚಿಟಿಞ ಥಿou so muಛಿh” ಎಂದಾಗ, ನಾಗಪ್ಪನೇ ಆಶ್ಚರ್ಯಪಟ್ಟ_ಅವಳು ಅಷ್ಟೊಂದು ಸುಂದರಳಾಗಿ ನಗಬಲ್ಲಳು ಎಂಬ ಕಲ್ಪನೆಯೇ ತನಗೆ ಇರಲಿಲ್ಲ. ಎಂಬಂತೆ. +ಹೊತ್ತು ಹೋದ ಹಾಗೆ ಏರ್‍ಪೋರ್ಟ್ ರೆಸ್ಟೋರೆಂಟಿನಲ್ಲಿಮಾತನಾಡಿಸಿದ ಆ ಅಪರಿಚಿತನು(ಕಲ್ಪನೆಯಲ್ಲೇ ಆತನಿಗೆ ರೆಡ್ಡಿ ಎಂದು ಹೆಸರಿಟ್ಟು)ಮನಸ್ಸನ್ನು ತುಂಬಹತ್ತಿದ. ಅವನ ಒಂದೊಂದೇ ಮಾತು ನೆನಪಿಗೆ ಬಂದಂತೆ ಅವನೂ ಫಿರೋಜನ ಪಿತೂರಿಯದೇ ಭಾಗೀದಾರನಲ್ಲ ತಾನೇ ಎಂದು ಅನ್ನಿಸಹತ್ತಿತು….ಅಥವಾ ಫಿರೋಜನ ಅಂಧಾದುಂದಿಯ ಕಾರುಭಾರದ ದುಷ್ಟ ಫಾಯದೆಯನ್ನು ಪಡೆದ ಇವರೆಲ್ಲ ಈಗ ಅನಿರೀಕ್ಷಿತವಾಗಿ ಉದ್ಭವಿಸಿದ ಪೇಚು-ಪ್ರಸಂಗದಿಂದ ತಪ್ಪಿಸಿಕೊಳ್ಳಲು ನನ್ನನ್ನು ಉಪಯೋಗಿಸುವ ಹಂಚಿಕೆ ಮಾಡುತ್ತಿರಬಹುದೇ ? ಇಷ್ಟೊಂದು ನಿಜ : ಖಿಥಿಠಿiಛಿಚಿಟ ರಾಜಕಾರಣಿಯ ಜಾತಿಯ ವ್ಯಕ್ತಿ. ಮಾತನಾಡುವ ಶೈಲಿ : ಮಾತನಾಡುವಾಗ ಮೋರೆಯ ಮೇಲೆ ವ್ಯಕ್ತವಾಗುವ_ ತನ್ನ ಮಾತಿನ ಬಗೆಗೆ ತನಗೇ ಇದ್ದ ಮೋಹ ; ಅತ್ಯಂತ ನಮ್ರವಾದ ನಯನಾಜೂಕಿನ ಮಾತುಗಳನ್ನು ಆಡುವಾಗಲೂ ಎಂತಹ ಕಪಟವನ್ನೂ ಅಡಗಿಸುವ ತಾಕತ್ತು ಮೀಸೆಯ ಮೂಲೆಯಲ್ಲಿ ನೆಲೆಸಿದೆಯೇನೋ ಎನ್ನುವಂತೆ ಮೀಸೆಯ ಕುಡಿಗಳನ್ನು ಆಗೀಗ ನೇವರಿಸಿಕೊಳ್ಳುವ ಠೀವಿ : ಎದೆಯ ಕೂದಲ ರಾಶಿ ಸಾರುವ ದರ್ಪದ ಪ್ರದರ್ಶನ ಸಾಲದೆಂಬಂತೆ ಕುರ್ತಾದ ಕೈಗಳನ್ನು ಮೊಣಕೈಯವರೆಗೆ ಜಗ್ಗಿ ಕಪ್ಪು ರೊಣೆ ತುಂಬಿದ ದಪ್ಪ ಕೈಗಳನ್ನು ತೋರಿಸಿ ತಿರುಗಿ ಮುಚ್ಚಿಕೊಳ್ಳುವ ಫಾಜೀಲ ಹವ್ಯಾಸ_ಎಲ್ಲ ಆ ಜಾತಿಗೇ ಶೋಭಿಸುವಂತಹವು. ನನ್ನ ಬಗ್ಗೆ ಕಾರಖಾನೆಯ ತುಂಬ ಒಳ್ಳೇ ಮತವಿದೆಯಂತೆ. ಬರೇ ಆರ್ ಎಂಡ್ ಡೀ ಮ್ಯಾನೇಜರನಾಗಿ ಕೆಲಸ ಮಾಡಿದರೂ ನನ್ನ ವರ್ಚಸ್ಸು….ಒಂದೂ ಮಕ್ಕಳಿರಾ ! ಎರಡೂ ಮಕ್ಕಳಿರಾ !….ಹೋದ ಏಳು ದಿನದಿಂದ ಅನುಭವಿಸಿದ ನೋವು. ಹದಿನೆಂಟು ವರುಷ ಫಿರೋಜನ ಕೈಯಲ್ಲಿ ಮೂಕವಾಗಿ ಪಡುತ್ತ ಬಂದ ಯಾತನೆ ಎರಡೂ_ಅವುಗಳನ್ನು ಅದುಮಿ ಹಿಡಿದ ಸಂಯಮದ ಕವಚವನ್ನು ಒಡೆದು ಹೊರಗೆ ಆಸ್ಪೋಟಿಸಿದಾಗಿನ ರೋಷವನ್ನು ಹಿಡಿದಿಡುವುದು, ಕೋಳೀಗಿಯಣ್ಣನಿಂದ ಕಲಿತ ಎಲ್ಲ ಮಂತ್ರಗಳ ಘೋಷಣೆಯನ್ನು ಒಂದೇ ಕಾಲಕ್ಕೆ ಮಾಡುವದರಿಂದ ಕೂಡ, ಶಕ್ಯವಾಗಿ ತೋರಲಿಲ್ಲ. ಫಿರೋಜ್, ಶ್ರೀನಿವಾಸ, ಜಲಾಲ, ಖಂಬಾಟಾ, ರಾಮಕೃಷ್ಣ, ಫಿರೋಜನ ತಂತ್ರಜ್ಞಾನವನ್ನು ಹೊಗಳಿದ ಡೈರೆಕ್ಟರರು, ಹಾಗೇ ಕಪ್ಪು ಕನ್ನಡಕದ ಹಿಂದೆ ತನ್ನ ಗುರುತು ಮರೆಸಿ ಮಾತನಾಡಿದ ಧೂರ್ತ ರಾಜಕಾರಣಿ ರೆಡ್ಡೀ….ಒಬ್ಬೊಬ್ಬರದೇ ಹೆಸರನ್ನು ಒದರಿ ಲಬೋ ಲಬೋ ಎಂದು ಬೊಬ್ಬೆಯಿಡಬೇಕು ಎನ್ನುವ ವಿವೇಕಶೂನ್ಯವಾದ ರೋಷವನ್ನು_ತಾನಿನ್ನೂ ವಿಮಾನದಲ್ಲಿದ್ದೇನೆ ಎಂಬ ಅರಿವು ಬಂದದ್ದೇ_ಅವುಡುಗಚ್ಚಿ ಅದುಮಿ ಹಿಡಿದ ರೀತಿಗೆ ತುಟಿಯಲ್ಲಿ ಹಲ್ಲು ಕಚ್ಚಿ ರಕ್ತ ಚಿಮ್ಮಿತು. ತನ್ನ ಈ ಸ್ಥಿತಿ ಹೀಗೇ ಮುಂದುವರಿದರೆ ತನಗೇ ಹುಚ್ಚು ಹಿಡಿದೀತೇನೋ ಎಂದು ಭಯವಾಗುತ್ತಿರುವಾಗ ರಕ್ತದ ಬಿಂದುಗಳೆರಡು ಅಂಗಿಯ ಮೇಲೆ ಬಿದ್ದು ಕಲೆ ಮೂಡಿಸಿದವು : ಖಿಚಿಞe ಣhis iಛಿe. ಙou musಣ hಚಿve ಛಿuಣ ಥಿouಡಿ ಟiಠಿs….” ಎನ್ನುತ್ತ ಆಗ, ಚಹ ಕೊಡುವಾಗ ಮಾತನಾಡಿದ ವಿಮಾನ-ಪರಿಚಾರಿಕೆ ಒಂದು ಟವಲ್ಲಿನಲ್ಲಿ ಬರ್ಫವನ್ನು ತಂದುಕೊಟ್ಟಳು. +ತುಟಿ ಒಡೆದ ಜಾಗದಲ್ಲಿ ಕೆಲ ಹೊತ್ತು ಬರ್ಫ್ ಹಿಡಿದು ಕೂತವನು ಬದಿಯಲ್ಲಿ ಮುಗುಳುನಗುತ್ತ, ತನ್ನನ್ನು ಮಾತನಾಡಿಸುವ ದಾರಿ ಕಾಯುತ್ತಿದ್ದ ಪರಿಚಾರಿಕೆ ಕಣ್ಣಿನಿಂದಲೇ ಆದರ ವ್ಯಕ್ತಪಡಿಸಿದ. ರಕ್ತ ಬಸಿಯುವದು ನಿಂತ ಮೇಲೆ ‘ಒಚಿಟಿಥಿ ಣhಚಿಟಿಞs’ ಎನ್ನುವಾಗ ಕಣ್ಣು ತುಂಬಿಬರುತ್ತಿದ್ದ ಅನ್ನಿಸಿಕೆ. ಙou sಠಿoiಟಣ ಥಿouಡಿ shiಡಿಣ. ಊoತಿ ಜiಜ ಥಿou mಚಿಟಿಚಿge ಣo ಜo ಣhಚಿಣ ?” ಎಂದು ಒಡೆದ ತುಟಿಯ ಕೆಳಗೆ ಬೆರಳು ತೋರಿಸಿದಳು. ‘ಇಲ್ಲವಾದರೆ ನೀನೇಕೆ ನಾನು ಕೂತಲ್ಲಿಗೆ ಬರುತ್ತಿದ್ದಿ,’ ಎಂದು ಹೇಳಬೇಕೆನ್ನಿಸದ್ದನ್ನು ಯಾವುದೋ ಸಿನೇಮಾದಲ್ಲಿ ಇಂತಹದೇ ಸನ್ನುವೇಶವಿದ್ದದ್ದು ನೆನಪಿಗೆ ಬಂದದ್ದರಿಂದ ತಡೆದು ಸರಳವಾಗಿ, “ನನಗೆ ಯಾರ ಮೇಲೋ ಸಿಟ್ಟು ಬಂದಿರಬೇಕು,” ಎಂದಾಗ ಬದಿಗೆ ಕೂತವಳು ನಗುವುದನ್ನು ನಿಲ್ಲಿಸಿ ತುಸು ಗಂಭೀರವಾದಳು. “ಹಾಗೇಕೆ ನೋಡುತ್ತೀ, ನಂಬಿಕೆಯಾಗುತ್ತಿಲ್ಲವೆ ?ನಿನ್ನೆ ರಾತ್ರಿಯ ಪ್ಲೇನಿಗೆ ಹೈದರಾಬಾದಿಗೆ ಬಾ ಎಂದರು_ಬಂದೆ. ಇಂದಿನ ರಾತ್ರಿಯ ಪ್ಲೇನಿಗೇ ಮುಂಬಯಿಗೆ ಬಾ ಎಂದರು_ ಹೋಗುತ್ತಿದ್ದೇನೆ.ಂsಞ ಥಿouಡಿ ಛಿoಟಟeಚಿgue ಒiss ಆiಚಿಟಿಚಿ ಆಡಿiveಡಿ, ಅವಳಿದ್ದಳು ನಿನ್ನೆಯ ಪ್ಲೈಟ್ ಮೇಲೆ,” ಎಂದ. “ಂಡಿe ಥಿou….?” ಎಂದು ಆರಂಭವಾದ ಅವಳ ಪ್ರಶ್ನೆ ಪೂರ್ತಿಯಾಗುವ ಮೊದಲೇ ತಾನೇ ಉತ್ತರ ಪೂರೈಸಿದ : “ಮಿಸ್ಟರ್ ನಾಗನಾಥ.” ನನಗೆ ಆಗಲೇ ಅನ್ನಿಸಿತ್ತು ಎನ್ನುವಂತಹ ಕೌತುಕ ತುಂಬಿದ ದೃಷ್ಟಿಯಿಂದ ಅವಳು ತನ್ನನ್ನು ನೋಡುತ್ತಿದ್ದಾಗ ಡಾಯನಾ ಇವಳಿಗೆ ತನ್ನ ಬಗ್ಗೆ ಏನೋ ಹೇಳಿರಬೇಕು ಎಂಬ ಗುಮಾನಿಯಿಂದ ‘ಆo I hಚಿve ಚಿ sತಿeeಣ sಚಿಜ ಜಿಚಿಛಿe ?” ಎಂದು ಕೇಳಿದ. ಈ ಪ್ರಶ್ನೆಯ ಅರ್ಥ ಹೊಳೆದ ಪರಿಚಾರಿಕೆ ಸಿಹಿಯಾಗಿ ನಗುತ್ತ, “….ಚಿಟಿಜ bಡಿiಟಟiಚಿಟಿಣ eಥಿes” ಎಂದು ಡಾಯನಾ ಮಾಡಿದ ವರ್ಣನೆಯನ್ನು ಪೂರ್ತಿಗೊಳಿಸಿದಳು. ಹಾಗೂ, “ಕ್ಷಮಿಸಿ, ಮತ್ತೆ ಬಂದು ನಿಮ್ಮನ್ನು ಕಾಣುತ್ತೇನೆ” ಎಂದು ಕೂತಲ್ಲಿಂದ ಎದ್ದು ನಿಂತಳು. “ನಿನ್ನ ಹೆಸರನ್ನು ಹೇಳಲಿಲ್ಲ ?” ಎಂದಾಗ, “ಮಿಸ್ ಇರಾನೀ_ಥ್ರೀಟೀ ಇರಾನೀ.” ಎಂದು ಅಲ್ಲಿಂದ ಹೊರಟು ಹೋದಳು : ಇನ್ನೊಬ್ಬ ಫಿರೋಜನ ಜಾತಿಯವಳು !…. +ರೆಡ್ಡಿ ಹೇಳಿದ ಒಂದು ಮಾತು ನೆನಪಿಗೆ ಬಂತು : ಬೋರ್ಡ್ ಮೀಟಿಂಗಿನಲ್ಲಿ ಫಿರೋಜ್ ಎಲ್ಲರ ಮೇಲೆ ಛಾಪು ಹೊಡೆದದ್ದನ್ನು ವರ್ಣಿಸುವಾಗ ಶಾಂತಚಿತ್ತನಾಗಿ ಮಾತನಾಡಿದ ಎಂದದ್ದು. ಹೀಗೆ, ಉಳಿದವರ ಮೇಲೆ ಛಾಪು ಹಾಕುವಂತೆ ಮಾತನಾಡುವ ಕಲೆಯಿದ್ದರೇನೇ ಬದುಕಬಹುದೇನೋ…. ಒ‌ಆ ಯವರು ಮನಸ್ಸಿನ ತೋಲವನ್ನು ಕಾಪಾಡಿಕೊಳ್ಳದೇ ಮೇಜು ಗುದ್ದಿದ್ದೇ ದೊಡ್ಡ ಅಪರಾಧವಾಗಿ ತೋರಿತಂತೆ…ಇದು ಫಿರೋಜನ ಖಾಸಾ ವೈಶಿಷ್ಟ್ಯ : ತಾನು ಏನನ್ನೂ ಮಾತನಾಡದಿರುವಾಗಲೂ ಇದಿರಾಳಿಯನ್ನು ತಪ್ಪು ಹೆಜ್ಜೆ ಹಿಡಿಯುವಷ್ಟರ ಮಟ್ಟಿಗೆ ಕ್ಷೋಭೆಗೊಳ್ಳುವಂತೆ ಮಾಡುವ ಕಲೆ !….ಕಂಪನಿಯ ಟೆಕ್ನಾಲೊಜಿ : ಈ ವಿಷಯದಲ್ಲಿ ರೆಡ್ಡಿ ಹೇಳಿದ ಮಾತಿನ ನೆನಪಿನಿಂದಲೇ ತಿರುಗೆಲ್ಲಿ ತುಟಿ ಕಚ್ಚಿಕೊಂಡೇನೋ ಎಂಬ ಭಯವಾದಾಗ ಅದನ್ನೆಲ್ಲ ಮರೆತುಬಿಡುವ ಪ್ರಯತ್ನದಲ್ಲಿ ಮೈ ಬಿಸಿಯಾಗುತ್ತಿದ್ದ ಅನುಭವವಾಗಿ ತಲೆಯ ಮೇಲಿನ ‘ಏರ್‍ಜೆಟ್’ನ್ನು ಸರಿಪಡಿಸಿ ತಂಪು ಗಾಳಿ ತನ್ನ ಮೇಲೆಯೇ ಬರುವಂತೆ ಮಾಡಿದ : ನಾಗಪ್ಪ ತನ್ನ ಕಂಪನಿಯಲ್ಲಿ ಇಂದಿನದಕ್ಕಿಂತ ಮೇಲಿನ ಸ್ಥಾನವನ್ನು ಪಡೆಯದೇ ಇರಲು ಬೇರೆ ಏನೇ ಕಾರಣವಿದ್ದರೂ ಕಂಪನಿಯ ಇಂದಿನ ಉತ್ತಮ ಸ್ಥಿತಿಗೆ ಕಾರಣವಾದ ಟೆಕ್ನಾಲೊಜಿ ಮಾತ್ರ ನಾಗಪ್ಪನ ಸೃಷ್ಟಿಶೀಲ ಮನಸ್ಸಿನ ಫಲವಾಗಿತ್ತು ಎನ್ನುವುದನ್ನು ಗೊತ್ತಿದ್ದ ಯಾರೂ ಅಲ್ಲಗಳೆಯರು. ಅಸಾಧಾರಣ ಪ್ರತಿಭೆ ಇದ್ದರಷ್ಟೇ ಸಾಲದು : ಪ್ರತಿಭೆಗೆ ಅಧಿಕಾರಿಯಾದವನಿಗೆ, ತನಗೆ ಸಲ್ಲಬೇಕಾದ ನ್ಯಾಯವನ್ನು ದೊರಕಿಸಿಕೊಳ್ಳುವ ಹಿಮ್ಮತ್ತೂ ಇರಬೇಕು : ಸತ್ಯವೇ ಗೆಲ್ಲಬೇಕಾದರೆ ಸತ್ಯದ ಪ್ರಜ್ಞೆ ಇದ್ದವನು ಸತ್ಯದ ಗೆಲುವಿಗಾಗಿ ಹೋರಾಡಬೇಕಾಗುತ್ತದೆ….ನಾಗಪ್ಪ ಹಲವು ಸರತಿ ತಾನೇ ಟಿಪ್ಪಣಿ ಮಾಡಿಕೊಂಡ ಈ ಅರಿವನ್ನು ಆಚರಣೆ ತರುವಾಗ, ಪ್ರತ್ಯಕ್ಷ ಹೋರಾಟಕ್ಕೆ ಇಳಿಯುವಾಗ ತನ್ನ ವ್ಯಕ್ತಿತ್ವದ ಮೂಲಭೂತ ಅಂಗವಾದದ್ದೇನೋ ಅಡ್ಡ ಬಂದಂತಾಗಿ ನಿಷ್ಕ್ರಿಯನಾಗಿದ್ದಾನೆ ; ತನ್ನ ಪ್ರತಿಭೆಯ ಫಲಕ್ಕೆ ತಾನೇ ನಿರಾಸಕ್ತನಾಗಿದ್ದೇನೆ ಎಂಬಂತಹ ಭಾವನೆ ಹುಟ್ಟಿಸಿಕೊಂಡು ತನ್ನ ನಿಷ್ಕ್ರಿಯತೆಯನ್ನು ಸಮರ್ಥಿಸಿಕೊಂಡಿದ್ದಾನೆ. ಹಾಗೇ, ಅನಿರೀಕ್ಷಿತ ಕ್ಷಣಗಳಲ್ಲಿ ತನ್ನ ಪ್ರತಿಭೆಯ ಲಾಭವನ್ನು ಬೇರೆ ಯಾರೋ ಪಡೆಯುತ್ತಿದ್ದಾರೆ ಎಂಬುದು ಲಕ್ಷ್ಯಕ್ಕೆ ಬಂದಾಗ ಮಾತ್ರ ಷಂಢ ಸಿಟ್ಟಿನಿಂದ ಸಿಡಿಮಿಡಿಗೊಂಡಿದ್ದಾನೆ. ರೆಡ್ಡಿಯಿಂದ ಕಂಪನಿಯ ಟೆಕ್ನಾಲೊಜಿಯನ್ನು ಇಂದಿನ ಸ್ಥಿತಿಗೆ ತಂದದ್ದರ ಮಾನವನ್ನು ಕಂಪನಿಯ ಡೈರೆಕ್ಟರರು ಎಲ್ಲರನ್ನು ಬಿಟ್ಟು ಫಿರೋಜನ ತಲೆಗೆ ಒಪ್ಪಿಸಿದ್ದು ತಿಳಿದಾಗ, ಸಂಯಮದ ಕಟ್ಟೆಯೊಡೆದು ಹೊರಗೆ ಬಂದು, ಹೆಡೆ ಬಿಚ್ಚಿದ ಸಿಟ್ಟಿನಿಂದಾಗಿ ತಾನು ಕೆಲಹೊತ್ತಿನ ಮೊದಲಷ್ಟೇ ಅವಡುಗಚ್ಚಿದ ರಭಸಕ್ಕೆ ತಾನೇ ಮೊದಲೊಮ್ಮೆ ಅಪ್ರತಿಭನಾಗಿ, ಈಗ ಅತ್ಯಂತ ವ್ಯಾಕುಲನಾಗಿದ್ದಾನೆ : ಕಳೆದ ಹದಿನೆಂಟು ವರ್ಷಗಳಲ್ಲಿ….ಬೇಡ ಮತ್ತೆ ಈ ಹಿನ್ನೋಟದ ಪ್ರಲೋಭನೆ. ನೌಕರಿಯನ್ನು ಬಿಟ್ಟುಕೊಟ್ಟು ಖೇತವಾಡಿಯ ಮೂಲೆಯೊಂದರಲ್ಲಿ ನ್ಯೂಸ್‌ಪೇಪರ್ ಇಲ್ಲವೇ ರದ್ದೀ ಮಾರುವ ಅಂಗಡಿಯನ್ನೋ ಇಲ್ಲ, ಸ್ಟ್ರೆಂಡ್-ಬುಕ್-ಸ್ಟಾಲಿನಂತಹ ಪುಸ್ತಕ ಅಂಗಡಿಯನ್ನೋ ತೆರೆದು, ಬಿಡುವಿನ ವೇಳೆಯನ್ನು ತನಗೆ ಅತ್ಯಂತ ಪ್ರಿಯವಾದ ಸಾಹಿತ್ಯರಚನೆಯಲ್ಲಿ ಕಳೆಯಬಹುದಿತ್ತು. ಅಲ್ಲಿಯೂ ಸದ್ಯ ತನ್ನ ಬಾಯ ಕಟ್ಟಿದ್ದಾರೆ. ಬರಿಯ ಬೇರೆಯವರು ಸೂಚಿಸಿದ ಉದ್ದೇಶಗಳಿಗಾಗಿ ಸಾಹಿತ್ಯ ಸೃಷ್ಟಿ ತನ್ನಿಂದ ಸಾಧ್ಯವಿಲ್ಲ. ತನ್ನ ಅನುಭವದಲ್ಲಿ ಹುಟ್ಟದ್ದೇ ಇದ್ದುದನ್ನು ಬರೆಯದೇ ಇರುವುದು ಸಾಧ್ಯವೇ ಇಲ್ಲ ಎನ್ನುವಂತಹ ಉತ್ಕಟ ಕ್ಷಣಕ್ಕಾಗಿ ಕಾಯದೇ ಇರುವಂಥದ್ದನ್ನು ಶಬ್ದಗಳಲ್ಲಿ ಮೂಡಿಸುವದು ತನಗೆ ಶಕ್ಯವಿಲ್ಲ : ತನ್ನ ಸೃಜನಶೀಲತೆ ಅಭಿವ್ಯಕ್ತಿಯ ಹೊರದಾರಿಯನ್ನು ಕಾಣದೇ ಒಳಗೊಳಗೇ ಉಸಿರುಕಟ್ಟಿ ಸಾಯುತ್ತಿದೆ ಎಂಬ ಅನ್ನಿಸಿಕೆಯಿಂದ ತನ್ನ ಬಗ್ಗೆ ತನಗೇ ಕೆಡುಕೆನಿಸಿದೆ. +ಇವನು ಉದಾಸೀನಗೊಂಡು ಕೂತ ರೀತಿಯನ್ನು ನೋಡಿ, ಹತ್ತಿರ ಬಂದು ಕುಳಿತು_ “Whಚಿಣ ಚಿಡಿe ಥಿou bಡಿooಜiಟಿg ಚಿbouಣ ?” _ಎಂದು ಕೇಳಿದ ಪರಿಚಾರಿಕೆಯ ದನಿಗೆ ಬೆಚ್ಚಿಬಿದ್ದ. ಮರುಗಳಿಗೆ, ಸೀಟಿನ ಕೈಯ ಮೇಲೆ ಮುಗ್ಧವಾಗಿ ಊರಿದ ಬೆಳ್ಳಗಿನ ಹೆಣ್ಣು ಅಂಗೈಯನ್ನು ಮೃದುವಾಗಿ ಒತ್ತಿ_ “ಖಿhಚಿಟಿಞ ಥಿou mಥಿ ಜಿಡಿieಟಿಜ” ಎಂದ. ದನಿಯಲ್ಲಿಯ ಆರ್ದ್ರತೆಯಿಂದ ತಟ್ಟಿದವಳಾಗಿ ಥ್ರೀಟೀ ಕೇಳಿದಳು : “ಖಿhಚಿಟಿಞs ಜಿoಡಿ ತಿhಚಿಣ ?” ನಾಗಪ್ಪನಿಂದ ಕೆಲಹೊತ್ತು ಮಾತೇ ಹೊರಡಲಿಲ್ಲ. ಆಮೇಲೆ ಮೆಲ್ಲಕ್ಕೆ :”ಈoಡಿ eveಡಿಥಿಣhiಟಿg, esಠಿeಛಿiಚಿಟಟಥಿ ಣhis ಣeಟಿಜeಡಿ ಞiಟಿಜಟಿess ತಿhiಛಿh ಡಿesಣoಡಿes oಟಿe’s ಜಿಚಿiಣh iಟಿ ಟiviಟಿg.” ಎಂದ. “ಓoಟಿseಟಿse ! Whಥಿ shouಟಜ ಥಿou ಟoss ಜಿಚಿiಣh iಟಿ ಟiviಟಿg ? ಙou ಚಿಡಿe ಥಿouಟಿg, ಣಚಿಟeಟಿಣeಜ… ತಿeಟಟ ಠಿಟಚಿಛಿeಜ iಟಿ ಟiಜಿe….” ಕೊನೆಯ ಮಾತಿಗೆ ನಾಗಪ್ಪ ಚಕಿತನಾದ : ವೇಳೆ ಕಳೆಯುವುದಕ್ಕೆ ಬೇರೆ ಕೆಲಸವಿಲ್ಲದ್ದರಿಂದ ಹತ್ತಿರ ಕೂತು ಹೀಗೆ ಸಿಹಿಸಿಹಿ ಮಾತನಾಡುತ್ತಿದ್ದಾಳೋ ಅನ್ನಿಸಿ ಥ್ರೀಟಿಯತ್ತ ನೋಡಿದಾಗ, ನಾಗಪ್ಪನು ತನ್ನತ್ತ ನೋಡುವ ಕ್ಷಣವನ್ನೇ ಕಾಯುತ್ತಿದ್ದವಳು, ಅವನು ಚಕಿತನಾದ ಕಾರಣ ಅರಿತವಳ ಹಾಗೆ, “ನನಗೆಲ್ಲ ಗೊತ್ತಿದೆ ; ಡಾಯನಾ ಹೇಳಿದ್ದಾಳೆ.”ಎಂದಾಗ ಮಾತ್ರ ನಾಗಪ್ಪ ಸಂಪೂರ್ಣವಾಗಿ ಗೊಂದಲಿಸಿದ : ಯಾವಾಗಲಾದರೂ ಒಮ್ಮೆ, ಇಂತಹ ಪ್ರವಾಸದಲ್ಲಿ ಆಕಸ್ಮಿಕವಾಗಿ ಭೆಟ್ಟಿಯಾದ ಇವರಿಗೇಕೆ ತನ್ನ ಬಗ್ಗೆ ಇಷ್ಟೊಂದು ಆಸ್ಥೆ ? ತಿರುಗಿ ಭೆಟ್ಟಿಯಾಗುವ ಶಕ್ಯತೆ ಕಡಿಮೆಯಾದದ್ದೇ ಆಗಿರಬಹುದೇ ? ಸ್ವತಃ ತಾನೇ ಸಿಕ್ಕಿಬೀಳುವ ಸಂಭವವಿಲ್ಲದ ಸನ್ನಿವೇಶದ ಬಗೆಗೇ ಇವರ ಸಹಾನುಭೂತಿ ಇರಬಹುದೇ ? ಹೇಗಾದರೂ ಯಾತನೆ ಪಡುವ ದುರ್ಭಾಗ್ಯ ಸದ್ಯಕ್ಕಂತೂ ತನ್ನದಲ್ಲವಲ್ಲ ಎಂಬ ಭಾವನೆಯಲ್ಲಿ ಬೇರುಬಿಟ್ಟ ಸಹಾನುಭೂತಿಯೇ ಇದು ? ಉಳಿದವರ ನೋವಿನಲ್ಲಿ ತೊಡಗಿಸಿಕೊಳ್ಳದೇ ಇರುವುದರಿಂದಲೇ ನಾವು ನಮ್ಮ ಭಾವನೆಗಳ ಸಹಜ ಉತ್ಸಾಹವನ್ನು ಕಳಕೊಳ್ಳುತ್ತಿರಬಹುದೇ ? ಈ ವಿಮಾನ-ಪರಿಚಾರಿಕೆಯರಿಗೆ ತಮ್ಮ ವ್ಯವಸಾಯದ ಆತ್ಮೀಯ ಅಂಗವಾದ ಈ ಕಲೆ_ನಗುನಗುತ್ತ ಇನ್ನೊಬ್ಬನ ಹತ್ತಿರ ಮಾತ್ರ ತಾನು ಹೀಗೆ ಮಾತನಾಡುತ್ತೇನೆ, ಎಂಬಂತಹ ಭಾವನೆಯನ್ನು ಪ್ರತಿಯೊಬ್ಬನಲ್ಲೂ ಮೂಡಿಸುವಂತೆ ಸಿಹಿಸಿಹಿಯಾಗಿ ಮಾತನಾಡುವ ಈ ಕಲೆ_ಬರಿಯ ಅಭ್ಯಾಸಬಲದಿಂದಲೇ ಬಂದಿರಬಹುದೆ ? ಥಟ್ಟನೆ, ಯಾವ ಸ್ಪಷ್ಟ ಕಾರಣವೂ ಇಲ್ಲದೆ ಆ ದಿನ ಆಕಸ್ಮಿಕವಾಗಿ ಭೆಟ್ಟಿಯಾದ ಸಂದರ್ಭದಲ್ಲೇ ಅಷ್ಟೊಂದು ಪ್ರೀತಿಯಿಂದ ಮಾತನಾಡಿಸಿದ ದೋಶಿ ನೆನಪಾದ. ತಿರುಗಿ ಅವನು ಭೆಟ್ಟಿಯಾಗಿರದಿದ್ದಕ್ಕೆ ಏನು ಕಾರಣ ? ನನ್ನ ಬಗ್ಗೆ ಪ್ರಕಟಿಸಿದ ಕಳಕಳಿ ಬರಿಯ ಆ ಕ್ಷಣದ ಮಟ್ಟಿಗಿನದಷ್ಟೇ ಆಗಿತ್ತೇ ?_ “ನಾನು ನಿಮ್ಮ ಬದಿಯಲ್ಲಿ ಕೂತಿದ್ದೇನೆ ಎಂಬುದನ್ನು ಕೂಡ ಮರೆತಿರಾ ? ಖಿhis is ಚಿಟಿ iಟಿsuಟಣ ಣo me”_ ಎಂದ ಥ್ರೀಟೀ, ಅವನ ಕೈಬೆರಳನ್ನು ಚಿವುಟಿದಾಗ, “Soಡಿಡಿಥಿ ಥ್ರೀಟೀ, ನೀವೆಲ್ಲ ನನ್ನ ಬಗ್ಗೆ ಯೋಚಿಸುತ್ತಿರುವ ಸಹಾನುಭೂತಿಯಿಂದ ಭಾವುಕನಾಗಿದ್ದೇನಷ್ಟೇ. ಇಂತಹ ಈ ಕ್ಷಣಿಕ ಸಹವಾಸದಲ್ಲಷ್ಟೇ ನಾವು ನಮ್ಮ ನಿಜವಾದ ಅನ್ನಿಸಿಕೆಗಳನ್ನು ಸಹಜವಾಗಿ ವ್ಯಕ್ತಪಡಿಸಬಲ್ಲೆವೇನೋ ಎಂದನ್ನಿಸುತ್ತದೆ ನೋಡು. ದೀರ್ಘಕಾಲದ ಸಂಬಂಧವೆಂದರೆ ಯಾವುದಾದರೂ ವ್ಯಾವಹಾರಿಕ ಸನ್ನಿವೇಶದಲ್ಲಿ ಬೇರುಬಿಟ್ಟದ್ದೇನೋ. ಸ್ವಾರ್ಥದ ಸಂರಕ್ಷಣೆಯ ಗರಜಿನಲ್ಲಿ ಸುಳ್ಳಾದದ್ದೇನೋ….”ಎಂದ. ತನ್ನಷ್ಟಕ್ಕೇ ಎಂಬಂತೆ, ಥ್ರೀಟೀ : “ಮೇಲಾಗಿ ಪ್ರತಿಯೊಂದನ್ನೂ ನೀವು ಮನಸ್ಸಿಗೆ ಹಚ್ಚಿಕೊಳ್ಳುತ್ತೀರಿ ; ಮನಸ್ಸಿಗೆ ಹಚ್ಚಿಕೊಂಡ ಪ್ರತಿಯೊಂದರ ಬಗ್ಗೆಯೂ ಚಿಂತೆಮಾಡುತ್ತ ಕೂಡುತ್ತೀರೆಂದು ತೋರುತ್ತದೆ. ನಾನು ನಗುನಗುತ್ತ ಓಡಾಡುತಿದ್ದೇನೆ ಎನ್ನುವುದರ ಅರ್ಥ ನನಗೆ ದುಃಖವೇ ಇಲ್ಲವೆಂದೇ ? ಎಲ್ಲರನ್ನು ಬಿಟ್ಟು ನಿಮ್ಮ ಹತ್ತಿರವೇ ಮಾತನಾಡಲು ಬಯಸಿದ್ದಾಕ್ಕೆ ಮಹತ್ವ ಇಲ್ಲವೆನ್ನುತ್ತೀರಾ ? ಡಾಯನಾ ನಿಮ್ಮ ಬೆಗ್ಗೆ ಹೇಳಿರದೇ ಇದ್ದರೆ ನಿಮ್ಮ ಕಡೆ ಲಕ್ಷ್ಯ ಹೋಗುತ್ತಿತ್ತೋ ಇಲ್ಲವೋ ಆ ಮಾತು ಬೇರೆ. ಆದರೆ ಬಂದು ಮಾತನಾಡಿಸಿದಮೇಲೆ ವ್ಯಕ್ತವಾದ ಭಾವನೆಯನ್ನು_ಕ್ಷಣಿಕವಾಗಿರಲೊಲ್ಲದೇಕೆ_ ನಾವೇಕೆ ಒಪ್ಪಿಕೊಳ್ಳಬಾರದು ? ನೀವು ದೊಡ್ಡ ಲೇಖಕರಂತೆ : ವಿಚಾರಗಳನ್ನು ತಕ್ಕ ಭಾಷೆಯಲ್ಲಿ ಹಿಡಿಯುವ ಕಲೆ ನಿಮಗಿದೆ_ನನಗಿಲ್ಲ. ಆದರೆ ನಾನೂ ಇಂಗ್ಲಿಷ್ ಸಾಹಿತ್ಯದ ಗ್ರಾಜುಯೇಟ್ ವಿದ್ಯಾರ್ಥಿನಿ. ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಕಲಿತದ್ದು. ಹೆಮಿಂಗ್‌ವೇ ನನ್ನ ಪ್ರೀತಿಯ ಲೇಖಕ. ನಾನು ಅವರನ್ನು ಅರ್ಥಮಾಡಿಕೊಂಡ ರೀತಿ ಹೇಳಲೇ ? ಬುಲ್ ಫೈಟ್ ಗಳ ಬಗ್ಗೆ, ಯುದ್ಧದ ಬಗ್ಗೆ, ಸಾವಿನ ಬಗ್ಗೇ ಬರೆಯುವ ಅವನ ಮನಸ್ಸು ನನಗೆ ತಟ್ಟಿದ್ದರ ಕಾರಣ ? ಎಲ್ಲದರ ಕ್ಷಣಿಕತೆಯನ್ನು ಅನುಭವಿಸುವ ಅವನ ಅನನ್ಯ ರೀತಿ !ನನಗನ್ನಿಸುತ್ತದೆ : ಮನುಷ್ಯನ ಅನೇಕ ಮೂಲಭೂತವಾದ ಭಾವನೆಗಳ ಭ್ರಷ್ಟಾಚಾರಕ್ಕೆ ಕಾರಣ ಕೂಡ ಇದೇ : ಎಲ್ಲದರಲ್ಲೂ ಶಾಸ್ವತತೆಯನ್ನು ಬಯಸುವ ಅವನ ದುಷ್ಟ ಚಟ. ಸಾವಿನ ಭಯ ಇಂದಿನ ಮಾನವನ ದೊಡ್ಡ ರೋಗವಾಗಿದೆ. ವಿಮಾನ-ಅಪಘಾತದಲ್ಲಿ ಸಾಯುವ ಶಕ್ಯತೆ ನನ್ನ ಮುದಿ ಅಮ್ಮನ ದುಗುಡಕ್ಕೆ ಕಾರಣವಾದರೆ , ಅದೇ ನಾನು ಈ ವ್ಯವಸಾಯವನ್ನು ಸ್ವೀಕರಿಸುವುದರಲ್ಲಿ ಪಟ್ಟ ಖುಷಿಗೆ ಕಾರಣವಾಯಿತು. ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕಾದ ಸತ್ಯಸಂಗತಿ : ಬಹುಶಃ ನಾವಿಬ್ಬರೂ ಇನ್ನೆಂದಿಗೂ ಭೆಟ್ಟಿಯಾಗುತ್ತೇವೋ ಇಲ್ಲವೋ ಎಂಬ ಭಾವನೆಯೇ ಇದೀಗಿನ ಈ ಕ್ಷಣಿಕ ಸಹವಾಸ ಕೊಡುತ್ತಿರುವ ಉತ್ಕಟವಾದ ಆನಂದಕ್ಕೆ ಕಾರಣ ಎನ್ನುವದು. ಈ ಉತ್ಕಟತೆಯನ್ನೂ ಸಂಶಯದಿಂದ ನೋಡುವ ಹವ್ಯಾಸಕ್ಕೆ ಹೋಗಬೇಡಿ_I ಛಿಚಿಟಟ ಣhಚಿಣ vuಟgಚಿಡಿ. ಮಾತನಾಡಿದ್ದು ಬಹಳವಾಯಿತೇನೋ,” ಎಂದವಳೇ ಒಮ್ಮೆಲೇ ಮೌನ ಧರಿಸಿ ಕುಳಿತುಬಿಟ್ಟಳು. ನಾಗಪ್ಪನಿಂದಲೂ ಕೂಡಲೇ ಮಾತು ಹೊಡದಾಯಿತು. ವಿಮಾನದಲ್ಲಿಯ ಮುಖ್ಯ ದೀಪಗಳನ್ನೆಲ್ಲ ಆರಿಸಿದ್ದರಿಂದ ಮೂಲೆಯ ಸಣ್ಣ ದೀಪಗಳ ಧೂಸರವಾದ ಬೆಳಕಷ್ಟೇ ವಿಮಾನದ ತುಂಬ ಪಸರಿಸಿತ್ತು. ಅಲ್ಲಲ್ಲಿ ಒಂದೆರಡು ಜನ ಹೊತ್ತಿಸಿದ ಓದುವ ದೀಪಗಳ ಬೆಳಕು : ನಾಗಪ್ಪ ಅರಿವಿಲ್ಲದೇನೇ ಆದರೂ ಯಾವುದೇ ಬಗೆಯ ಸುಳ್ಳು ಭಾವನೆಗಳಿಗೆ ಒಳಗಾಗದೇನೇ ಥ್ರೀಟೀಯ ಕೈಮೇಲೆ ಕೈಯಿಟ್ಟು ಕೂತ : ಶಬ್ದಗಳಿಗೆ ಮಾಡಲಾಗದ್ದು ಆ ಮೂಕ ಸ್ಪರ್ಶ ಮಾಡುತ್ತಿತ್ತು. ಮನುಷ್ಯ ಸಂಬಂಧಗಳ ಕ್ಷಣಭಂಗುರತೆಯನ್ನು ಕುರಿತು ಉಂಟಾದ ಸುಖದ ಸೆಲೆಯೊಡೆದಿತ್ತು. +ವಿಮಾನ ಮುಂಬಯಿಯ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಒಳಗಿನ ದೀಪಗಳೆಲ್ಲ ತಿರುಗಿ ಬೆಳಗಿ ನಿಂತವು. ತಾನೀಗ ತನ್ನ ಡ್ಯೂಟಿಯ ಮೇಲೆ ಹೋಗಬೇಕು ಎನ್ನುವುದನ್ನು ಸೂಚಿಸುತ್ತ, “ಆoಟಿ’ಣ ತಿoಡಿಡಿಥಿ, eveಡಿಥಿ ಣhiಟಿg ತಿiಟಟ be ಚಿಟಟ ಡಿighಣ_I ತಿiಟಟ ಠಿಡಿಚಿಥಿ ಜಿoಡಿ ಥಿou,” ಎಂದ ಥ್ರೀಟೀ ಸೀಟನ್ನು ಬಿಟ್ಟು ಎದ್ದಳು. “ಉooಜ-bಥಿe mಥಿ, ಣಡಿಚಿಟಿsieಟಿಣ ಜಿಡಿieಟಿಜ,” ಎಂದು ಇವನು ಮೆಲುದನಿಯಲ್ಲಿ ಅಂದಾಗ, ಅವನು ಯಾಕೆ ಹಾಗೆ ಅಂದನೆಂಬುದನ್ನು ಅರಿತವಳ ಹಾಗೆ ಅರ್ಥಪೂರ್ಣವಾಗಿ ನಕ್ಕಳು. ಥ್ರೀಟೀ ಹೊರಟು ಹೋಗುತ್ತಲೇ, ಅವಳ ಕೈಯನ್ನು ಹಿಡಿದು ಕೂತಲ್ಲೇ ಒಳಗೊಳಗೇ ನಿಶ್ಚಿತವಾದದ್ದೇನೋ ತನ್ನಷ್ಟಕ್ಕೇ ಆಚರಣೆಗೆ ಇಳಿಯತೊಡಗಿತು ಎನ್ನುವ ರೀತಿ_ ಬ್ರೀಫ್‌ಕೇಸ್ ತೆರೆದು ರೆಡ್ಡಿ ಕೊಟ್ಟ ಪತ್ರವನ್ನು ಕೈಗೆ ತೆಗೆದುಕೊಂಡವನೇ ಭರಭರನೆ ಹರಿದು ಚೂರುಚೂರು ಮಾಡಿ ಮುಂದಿನ ಸೀಟಿನ ಹಿಂಬದಿಯ ದೊಡ್ಡ ಕಿಸೆಯಲ್ಲಿ ತುರುಕಿಬಿಟ್ಟ. ಸತ್ತು ಹೋಗಿ ಒಂದೂ ಮಕ್ಕಳಿರಾ. ನನಗೂ ನಿಮಗೂ ಯಾವ ಸಂಬಂಧವೂ ಇಲ್ಲ’ ಈಗ…. +ಹೀಗೆ ಪತ್ರವನ್ನು ಹರಿದೊಗೆಯುವುದರಿಂದಲೇ ಸಂಬಂಧ ಕಡಿಯುತ್ತಿದ್ದರೆ ಪತ್ರವನ್ನು ಓದಿದಮೇಲೇ ಹರಿದೊಗೆಯಬಹುದಿತ್ತಲ್ಲ. ಹಾಗೆ ಓದುವ ಮೊದಲೇ ಹರಿದದ್ದರ ಹಿಂದಿನ ಪ್ರೇರಣೆ ಆ ಪತ್ರ ತೋರಿಸಬಹುದಾಗಿದ್ದ ಸತ್ಯಸ್ಥಿತಿಯನ್ನು ಇದಿರಿಸುವಲ್ಲಿ ತನಗನ್ನಿಸುತ್ತಿದ್ದ ಭಯವಾಗಿರಬಹುದಲ್ಲವೇ ? ಎಂದು ಅದೇ ಹುಟ್ಟುತ್ತಿದ್ದ ಅನ್ನಿಸಿಕೆ ಹೊಸ ಅಸ್ವಸ್ಥತೆಗೆ ಕಾರಣವಾಗಹತ್ತಿತು. ಅದೇ ಹೊತ್ತಿಗೆ ಅವನು ಬಹಳ ಮೆಚ್ಚಿಕೊಂಡ ಥ್ರೀಟೀಯ ದನಿ ಮ್ಯಾಕ್ ಮೇಲೆ ಬಂದಿತು : ವಿಮಾನ ಮುಂಬಯಿಯ ಏರ್‍ಪೋರ್ಟಿನಲ್ಲಿ ಇಳಿಯಹತ್ತಿತು. ಲಕ್ಷಗಟ್ಟಲೆ ದೀಪಗಳು ಹಸಿರು ನೀಲಿ ಬಣ್ಣಗಳ ಬೆಳಕನ್ನು ಬೀರುತ್ತ ಕಣ್ಣು ಮಿಟುಕಿಸುವ ರೀತಿ ಮುಂಬಯಿಯ ಕತ್ತಲೆಗೆ ವಿಚಿತ್ರ ಮೆರಗನ್ನು ತಂದಿದ್ದವು. ನಡುವೆಯೆ ಚಂಗನೆ ಎದ್ದು ನಿಂತ ಟ್ರಾಂಬೇ ರಿಪೈನರಿಗಳ_ ಆಕಾಶದಲ್ಲಿ ಬೆಂಕಿ ಉಗುಳುವ_ಬೃಹದಾಕಾರದ ಚಿಮಣಿಗಳು, ದೂರದಲ್ಲಿ ಒಳಗಿನ ನಿಯಾನ್ ಲೈಟ್ಸ್‌ಗಳ ಬೆಳಕಿನ ವೈಭವವನ್ನು ಹೊರಗಿನ ಕತ್ತಲೆಗೆ ಮೆರೆಯಿಸುತ್ತ, ಬಾಯಿಮುಚ್ಚಿ, ಕೈಕಟ್ಟಿ ನಿಂತಂತೆ ತೋರುವ ಏರ್‍ಪೋರ್ಟಿನಮುಖ್ಯ ಕಟ್ಟಡ : ನೆತ್ತಿಯ ಮೇಲೆ ತಿರುಗುವ ಶೋಧನ_ದೀಪದ ಕಣ್ಣು ಕುಕ್ಕುವ ಬೆಳಕು ಕತ್ತಲೆಯನ್ನು ಕ್ಷಣಕ್ಕೊಮ್ಮೆ ಸೀಳುತ್ತಿತ್ತು. ವಿಮಾನ ನೆಲಕ್ಕೆ ತೀರ ಹತ್ತಿರವಾಗುತ್ತಿದ್ದ ಹಾಗೆ ರನ್‌ವೇದ ಗುಂಟ ಹಚ್ಚಿದ ಸಾಲುದೀಪಗಳು ಹಾವಿನಂತೆ ಹರಿದ ಆದರೆ ಬಳಸನ್ನು ತೋರಿಸಿಕೊಟ್ಟವು. ನಾಗಪ್ಪನ ಮನಸ್ಸೂ ಮೆಲ್ಲನೆ ಮುಂಬಯಿಯ ವಾಸ್ತವತೆಗೆ ಇಳಿಯಹತ್ತಿತು….ವಿಮಾನದಿಂದ ಇಳಿದು ನೆಲದ ಮೇಲೆ ಕಾಲಿರಿಸಿದ್ದೇ ತಡ, ಹೊರಗಿನ ಸುಖದಾಯಕ ತಂಪಿನಲ್ಲಿ ಕೂಡ ಬೆವರೊಡೆಯುವಂತೆ ಕ್ಷಣದ ಮಟ್ಟಿಗೆ ನಡುಗಿದ : ಕೈಗೆ ಕೊಟ್ಟ ಪತ್ರವನ್ನು ಓದುವ ಮೊದಲೇ ಹರಿದೊಗೆದದ್ದು ಹೇಡಿತನದ ತಪ್ಪಾಯಿತೇನೋ ಎಂಬ ಅನ್ನಿಸಿಕೆ ಈ ಮೊದಲಿನ ಸುತ್ತುಸುತ್ತಾದ ವಿಚಾರವನ್ನು ಸೀಳಿ ಮೇಲಕ್ಕೆ ಬರಹತ್ತಿತ್ತು. uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತೈದು – +ಖೇಮರಾಜಭವನದ ೫೧ನೇ ನಂಬರಿನ ಖೋಲಿಯನ್ನು ಹೋಗುತ್ತಲೇ ತೀರ ಬೇರೆಯೇ ಒಂದು ಜಗತ್ತನ್ನು ಸೇರಿದ ಅನುಭವ. ಪ್ಲೇನಿನ ಮೇಲೆ ಕೊಟ್ಟ ‘ಸ್ನ್ಯಾಕ್ಸ್’ ಹೊಟ್ಟೆ ತುಂಬುವಂತಹವಲ್ಲವಾಗಿದ್ದರೂ ಹಸಿವೆಯನ್ನು ಕಳೆಯಲು ಸಾಕಾಗುವಷ್ಟಿದ್ದವು. ಊಟ ಮಾಡುವ ವಿಚಾರವಿರಲಿಲ್ಲ. ಸೂಟ್‌ಕೇಸ್ ಕೋಣೆಯಲ್ಲಿ ಇಟ್ಟು ಕೆಳಗಿನ ಭೈಯಾನ ದುಖಾನಿನಲ್ಲಿ ಒಂದು ಗ್ಲಾಸು ಮಲಾಯಿ ತೇಲುವ ಬಿಸಿಬಿಸಿ ಹಾಲನ್ನು ಕುಡಿದು ಬಂದರಾಯಿತು ಎಂದುಕೊಂಡು ಹೊರಟ. ನಿಚ್ಚಣಿಕೆಯ ಮೆಟ್ಟಿಲುಗಳನ್ನು ಇಳಿಯುವಾಗ, ತನ್ನ ಒಂಟಿತನದ ತೀವ್ರವಾದ ಅರಿವಿನೊಂದಿಗೇ ಕಳೆದ ಎಂಟು ದಿನಗಳಿಂದ ಅನುಭವಿಸುತ್ತ ಬಂದಿದ್ದರ_ಹಾಸ್ಯಾಸ್ಪದ ಎನ್ನುವಷ್ಟರ ಮಟ್ಟಿಗಿನ_ಅಸಂಬದ್ಧತೆಯ ಅರಿವೂ ಬಂದು ಒಂದು ವಿಚಿತ್ರ ಮೂಡಿಗೆ ಒಳಗಾದ : ಎಷ್ಟೇ ಕ್ಷಣಿಕವಾಗಿರಲೊಲ್ಲದೇಕೆ ಡಾಯನಾ, ಥ್ರೀಟೀಯರ ಸಹವಾಸದಲ್ಲಿದ್ದಾಗ ತನ್ನ ಸೃಜನಶೀಲತೆಯಲ್ಲಿ ಮೊಳೆತೆ ವಿಶ್ವಾಸ ಈಗ ಇದ್ದಕ್ಕಿದ್ದಂತೆ ಒಸರಿಹೋಗಿ ಒಂದು ಬಗೆಯ ಅಸಹಾಯಕತೆಯ ಭಾವನೆ ತಾನೇ ತಾನಾಗಿ ತಲೆಯೆತ್ತಿತು. ನೂರಾರು ಜನರಿಂದ ಗಜಬಜಿಸುವ ಚಾಳಿನಲ್ಲಿ ಯಾರೊಬ್ಬರೊಡನೆ ಜೀವಂತ ಸಂಬಂಧ ಹುಟ್ಟಿಕೊಂಡಿರಲಿಲ್ಲ. ಈ ವಿಶಾಲ ಜನಸಮುದ್ರದಲ್ಲಿ ಪ್ರತಿಯೊಬ್ಬನೂ ತನ್ನಷ್ಟಕ್ಕೇ ಒಂದು ನಡುಗಡ್ಡೆಯಾಗಿದ್ದಾನೆ…. +ನಡುವೆಯೇ ಮೊಳೆತ ಒಂದು ವಿಚಾರದಲ್ಲಿ ಪುಲಕಿತನಾದ ; ಕೈ ಗಡಿಯಾರ ನೋಡಿಕೊಂಡ. ಇನ್ನೂ ಹತ್ತೂವರೆ ಗಂಟೆಯಷ್ಟೇ. ಮೇರಿಗೆ ಫೋನ್ ಮಾಡಿದರೆ ಹೇಗೆ ?….ಇಷ್ಟು ರಾತ್ರಿಯ ಹೊತ್ತಿಗೆ ಹುಡುಗಿಯೊಬ್ಬಳಿಗೆ ಫೋನ್ ಮಾಡುವದೆಂದರೆ….ತಪ್ಪು ತಿಳಿದಾರೇ ?….ಯಾರ ಮನೆಯಲ್ಲಿರುತ್ತಾಳೆ ಎಂಬುದೇ ಗೊತ್ತಿಲ್ಲ. ಬಂದ್ರಾ ಖಾರಗಳತ್ತ ಇರಬಹುದೆಂದು ಊಹಿಸಿದ್ದು ಕೂಡ ಅವಳು ಕೊಟ್ಟ ಟೆಲಿಫೋನ್ ನಂಬರಿನ ಮೂಲಕ….ಈಗ ಬೇಡ. ಬೆಳಿಗ್ಗೆ ಏಳರ ಸುಮಾರಿಗೆ ಮಾಡಿದರಾಯಿತು. ಆಫೀಸಿಗೆ ಹೊರಡುವ ಮೊದಲು ಸಿಗಬಹುದು. ಭೈಯಾನಲ್ಲಿ ಹಾಲು ಕುಡಿದು ಬಂದು, ಡ್ರೆಸ್ಸು ಬದಲಿಸಿ ಹಾಸಿಗೆಯಲ್ಲಿ ಅಡ್ಡವಾದದ್ದೇ ರೆಡ್ಡಿ ಕೊಟ್ಟ ಪತ್ರದ ನೆನಪು ಕಾಡಹತ್ತಿತು : ಥತ್ತಿದರ ! ಈ ಶನಿಯು ನಿದ್ದೆ ಮಾಡಲು ಬಿಡುತ್ತದೆಯೋ ಇಲ್ಲವೋ : ಹಾಸಿಗೆಯಿಂದ ಎದ್ದವನೇ ಹಿಂದುಮುಂದಿನ ವಿಚಾರ ಮಾಡುವ ಮೊದಲೇ ಬಾಟಲಿಯಿಂದ ಎರಡು ಬಾರ್ಬಿಚ್ಯುರೇಟ್ ಗುಳಿಗೆಗಳನ್ನು ಹೊರತೆಗೆದು ನುಂಗಿ ನೀರು ಕುಡಿದ…. +ಬಾರ್ಬಿಚ್ಯುರೇಟರ್ ಗುಳಿಗೆಗಳು ತರಿಸಿದ ನಿದ್ದೆಯಿಂದ ಎಚ್ಚರವಾಗುವ ಹೊತ್ತಿಗೆ ಬಿಸಿಲು ಚಲೋ ಕಾದಿತ್ತು. ಗಡಿಯಾರ ನೋಡಿದಾಗ ೮-೩೦. ಔh !heಟಟ ಎಂದು ತನ್ನ ಎಚ್ಚರಗೇಡಿತನವನ್ನು ಶಪಿಸಿಕೊಳ್ಳುತ್ತ, ಹಾಸಿಗೆಯಲ್ಲಿ ಎದ್ದು ಕೂತ : ಮೇರಿ ಇಷ್ಟು ಹೊತ್ತಿಗೆ ಹೊರಟು ಹೋಗಿರಬೇಕು. ಈಗ ಮತ್ತೆ ಫೋನ್ ಮಾಡುವುದು ರಾತ್ರೆ ಎಂಟು ಗಂಟೆಯ ನಂತರವೇ. ಬೆಳಿಗ್ಗೇ ಫೋನ್ ಮಾಡಿ ರಾತ್ರಿಯ ಊಟಕ್ಕೆ ಅವಳನ್ನು ಕರೆಯುವ ವಿಚಾರವಿತ್ತು. ಆಫೀಸಿಗೆ ಫೋನ್ ಮಾಡಿದರೆ ಹೇಗೆ ?….ಮೇರಿಗೆ ಸೇರಲಿಕ್ಕಿಲ್ಲ…. +ಕದ ತಟ್ಟಿದ ಸದ್ದು ಕೇಳಿಸಿ ಹಾಸಿಗೆಯಿಂದ ಇಳಿದ. ಗುಳಿಗೆಗಳ ಅಮಲು ಇನ್ನೂ ಪೂರ್ತಿಯಾಗಿ ಕಳೆದಿರಲಿಲ್ಲವಾದ್ದರಿಂದ ನಡೆಯುವಾಗ ಹೆಜ್ಜೆ ತಪ್ಪುತ್ತಿದ್ದ ಅನ್ನಿಸಿಕೆ : ಕದ ತೆರೆದಾಗ ಕಣ್ಣು ಮುಂದೆ ನಂಬಲಾಗದ ಆಕೃತಿ_ಖಂಬಾಟಾ ! “ಹೆಲ್ಲೋ ಹೆಲ್ಲೋ ನೋಶೀರ್, ನೀನು ! ಬಾ ಬಾ ಬಾ. Whಚಿಣ ಚಿ suಡಿಠಿಡಿise eಚಿಡಿಟಥಿ iಟಿ ಣhe moಡಿಟಿiಟಿg ! ಬಾ ಕೂತುಕೋ. ಇದೀಗ ಮೋರೆ ತೊಳೆದುಕೊಂಡ್ದು ಬರುತ್ತೇನೆ.” ಎಂದು ಖಂಬಾಟಾಗೆ ಕುರ್ಚಿಯೊಂದನ್ನು ಕೊಟ್ಟು ತಾನು ಮುಖಮಾರ್ಜನೆಗಾಗಿ ಮೋರಿಗೆ ನಡೆದ. ಒದ್ದೆ ಮೋರೆಯನ್ನು ಟವೆಲ್ಲಿನಿಂದ ಒರೆಸಿಕೊಳ್ಳುತ್ತ ಹೊರಗೆ ಬಂದಾಗ, ಖಂಬಾಟಾ ಕಪಾಟುಗಳಲ್ಲಿಯ ಪುಸ್ತಕಗಳನ್ನು ನೋಡುವುದರಲ್ಲಿ ಗರ್ಕನಾಗಿದ್ದ. ಆತನ ಮೋರೆಯಲ್ಲಿ, ಹಿಂದೆಂದೂ ನೋಡಿ ಗೊತ್ತಿರದ_ಅವನ ಅರಮುಳ್ಳು ಮೋರೆಗೆ ಶೋಭಿಸದ_ ಒಂದು ಬಗೆಯ ದರ್ಪ ಹಾಗೂ ಅದರೊಡನೆ ಸೇರಿಕೊಂಡ ಇದೆಂತಹ ದರಿದ್ರ ಜಾಗಕ್ಕೆ ಬಂದಿದ್ದೇನಪ್ಪ ಎಂಬಂತಹ_ತಾತ್ಸಾರ ಮೂಡಿದ್ದವು : ನಾಗಪ್ಪನಲ್ಲಿ ಕೀಟಲೆ ಮಾಡುವ ಹುಕ್ಕಿ ಕೂಡಲೇ ಚುರುಕುಗೊಂಡಿತು : ಆoಟಿ”ಣ ಣeಟಟ me ಥಿou ಚಿಡಿe seeiಟಿg booಞs ಜಿoಡಿ ಣhe ಜಿiಡಿsಣ ಣime iಟಿ ಥಿouಡಿ ಟiಜಿe…. ನೀನು ಅವುಗಳನ್ನು ನೋಡುತ್ತಿದ್ದ ರೀತಿಗೆ ಹಾಗೆನಿಸಿತು ನೋಡು… ನಿನಗೆ ದಕ್ಕುವ ವಿಷಯವಲ್ಲವದು ನೋಶೀರ್…”ಎಂದ. ಇಲ್ಲಿ ಬರುವ ಮೊದಲೇ ಈ ಭೇಟಿಯ ತಾಲೀಮು ಮಾಡಿ ಬಂದಂತಿದ್ದ ಖಂಬಾಟಾ ಒಮ್ಮೆಲೇ ಸಿಟ್ಟಿಗೆದ್ದು_‘ಅಚಿಟಟ me ಒಡಿ. ಞhಚಿmbಚಿಣಚಿ. ಆoಟಿ;ಣ ಜಿoಡಿgeಣ ಥಿou ಚಿಡಿe ಥಿeಣ uಟಿಜeಡಿ susಠಿeಟಿsioಟಿ oಡಿಜeಡಿs.” ಎಂದ ಇದನ್ನು ಕೇಳಿದ್ದೇ ತಡ, ನಾಗಪ್ಪ ಒಮ್ಮೆಲೇ ಬಿದ್ದುಬಿದ್ದು ನಗಹತ್ತಿದ ರೀತಿಗೆ ಖಂಬಾಟಾ ಮನೆಯಲ್ಲಿ ತಾಲೀಮು ಮಾಡಿ ಬಂದ ದರ್ಪ ಸಡಿಲಗೊಳ್ಳಹತ್ತಿತು. ನಾಗಪ್ಪ ನಗುವುದನ್ನು ನಿಲ್ಲಿಸಿದಮೇಲೆ ಖಿhಚಿಟಿಞ ಥಿou ಮಿಸ್ಟರ ಖಂಬಾಟಾ. ನೀನು ನನ್ನನ್ನು ಸಸ್ಪೆಂಡ್ ಮಾಡಿದ್ದೀ ಎಂಬುದು ಮರೆತೇಹೋಗಿತ್ತು ನೋಡು. ನೆನಪುಮಾಡಿಕೊಟ್ಟದ್ದು ಒಳ್ಳೆಯದೇ ಆಯಿತು : ಈಗಲೇ ಹೇಳಿರುತ್ತೇನೆ : ನಿನ್ನನ್ನು ಕೋರ್ಟಿಗೆಳೆಯುವವನಿದ್ದೇನೆ…. I ತಿiಟಟ sue ಥಿou ಜಿoಡಿ ಜಚಿmಚಿges…. ನನ್ನ ವಕೀಲರೇ ನಿನಗೆ ನೋಟೀಸಿನ ಮುಖಾಂತರ ತಿಳಿಸುತ್ತಾರೆ. ಕಾಳಗಿ ಮಾಡಬೇಡ. ಇಷ್ಟೇ. ೬೦,೦೦೦ ರೂಪಾಯಿ ಸಿದ್ಧಮಾಡಿ ಇಡು. ನೀನು ತಪ್ಪು ಕಾರಣ ಕೊಟ್ಟು ಸಸ್ಪೆಂಡ್ ಮಾಡಿ ನನ್ನ ಮನಸ್ಸಿಗೆ ಉಂಟು ಮಾಡಿದ ನೋವಿಗೆ, ಮಾನಹಾನಿಗೆ ನೀನು ತೆರಬೇಕಾಗುವ ದಂಡ ; ನಿನ್ನ ವಕೀಲರೇ ಎಲ್ಲ ತಿಳಿಹೇಳುತ್ತಾರೆ ಆಮೇಲೆ. ಈ ಮೊತ್ತವೇನು ನಿನಗೆ ದೊಡ್ಡದಲ್ಲ ಬಿಡು. ಹೈದರಾಬಾದಿನಲ್ಲಿ ಫಿರೋಜ್ ಹಾಗೂ ನಿನ್ನಂಥಹ ಹಸ್ತಕರು ಕೂಡಿ ಮಾಡಿದ ಕರಾಮತಿಗಳ ಗಳಿಕೆ ಇದರ ಹತ್ತುಪಟ್ಟಾದರೂ ಆದೀತು. ಅಲ್ಲವೇ ?” ಎಂದಾಗ ಖಂಬಾಟಾ ಕೂತಲ್ಲೇ ತೆಳುವಾಗಿ ಬೆವರಹತ್ತಿದ. ನಾಗಪ್ಪನನ್ನು ತಡೆಯುವಂತೆ ಏನಾದರೂ ಮಾತನಾಡೋಣವೆಂದರೆ ತತತ ಪಪಪ ಆಗುವ ಭಯದಿಂದ ಕೆಲಹೊತ್ತು ಬಾಯಿಮುಚ್ಚಿ ಕುರ್ಚಿಯ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದು ಕುಳಿತ. ಆಮೇಲೆ :”ಪ್ಲೀಸ್ ನಾಗ್,”ಎಂದು ಆರಂಭಿಸಿದನಷ್ಟೆ. ನಾಗಪ್ಪ ಅವನನ್ನು ತಡೆದು : ” ಅಚಿಟಟ me ಒಡಿ. ಓಚಿgಟಿಚಿಣh”eಒಜಚಿ. ಔಞ. ಔಞ. ಒಡಿ. ಓಚಿgಟಿಚಿಣh. ಖಿhe mಚಿಣಣeಡಿ is seಡಿious. ನಾಳೆಯೇ ತನಿಖೆ ಶುರುವಾಗಲಿದೆ. ಹೈದರಾಬಾದಿನಿಂದ ಇನ್ನಿಬ್ಬರು ಡೈರೆಕ್ಟರರೂ ಬಂದಿದ್ದಾರೆ. ಈ ತನಿಖೆಯ ಸಲುವಾಗಿಯೇ,” ಎಂದು ಖಂಬಾಟಾ ತಿಳಿಸಿದಾಗ, “ಹೌದೇ ? I shಚಿಟಟ be ಜeಟighಣeಜ ಣo meeಣ ಣhem ಚಿಟಿಜ exಠಿose ಣhe ತಿhoಟe oಜಿ Phiಡಿoz’s gಚಿಟಿg ಣo ಣhem.ಆo ಥಿou ಞಟಿoತಿ ಣheiಡಿ ಟಿಚಿmes ?” ಎಂದು ಕೇಳಿದ, ನಾಗಪ್ಪ. ಖಂಬಾಟಾ ಕೂತಲ್ಲೇ ದಡಬಡಿಸಿದ : “ಇಲ್ಲ ಇಲ್ಲ. ನಾನು ಅವರನ್ನು ಕಂಡೇ ಇಲ್ಲ. ತಾಜಮಹಲ್ ಹೊಟೆಲ್ಲಿನಲ್ಲಿ ಉಳಿದುಕೊಂಡಿದ್ದಾರೆ ಎಂದು ಫಿರೋಜನಿಂದಲೇ ತಿಳಿಯಿತು, ಅಷ್ಟೇ.” +“ಸುಳ್ಳು ಹೇಳುತ್ತೀಯಾ ಮಿಸ್ಟರ್ ಖಂಬಾಟಾ ? ತನಿಖೆಯ ವಿಷಯ ಮೊತ್ತಮೊದಲು ತಿಳಿಸಿದ್ದೇ ನೀನು. ನಿನಗೇ ಈ ವಿವರಗಳು ಗೊತ್ತಿರದಿದ್ದರೆ ಇನ್ನಾರಿಗೆ ಗೊತ್ತಿರಬೇಕು ? ಚಿಂತೆ ಮಾಡಬೇಡ. ಫಿರೋಜನಿಗೆ ನೀನೇ ಹೇಳು: ತನಿಖೆ ನಡೆಸುವವರ ಹೆಸರು ಗೊತ್ತಾಗದ ಹೊರತು ಅವರು ಕೇಳುವ ಯಾವ ಪ್ರಶ್ನೆಗೂ ಉತ್ತರ ಕೊಡಲಾರೆನೆಂದು. ತನಿಖೆ ಯಾತರ ಬಗ್ಗೆ ಇದೆ ಎಂಬುದಾದರೂ ನಿನಗೆ ಗೊತ್ತಿರಬೇಕು ಅಲ್ಲವೆ ? ಯಾಕೆಂದರೆ ನೀನು ಈ ಕಂಪನಿಯ ಎಡ್ಮಿನಿಸ್ಟ್ರೇಶನ್ ಮ್ಯಾನೇಜರ್ ಅಂತೆ….ಹಾಗೆಂದರೇನೋ ನೋಶೀರ್….ಅಲ್ಲ, ಮಿಸ್ಟರ್ ಖಂಬಾಟಾ ?….” +ಖಂಬಾಟಾನಿಗೆ ನಾಗಪ್ಪ ಹಿಂದೆಂದೂ ಹೀಗೆ ಮಾತನಾಡಿದ್ದು ನೆನಪಿಲ್ಲ. ಚಕಿತನಾದ : ಈ ಏಳೇ ದಿನಗಳಲ್ಲಿ ಇಷ್ಟೊಂದು ಬದಲಿಸಿಹೋಗುವಂತಹ ಪವಾಡ ಏನು ನಡೆದಿರಬಹುದು ? ಕೆಲಸದಿಂದ ದೂರ ಉಳಿದದ್ದೇ ಇದಕ್ಕೆಲ್ಲ ಮೂಲವಾಗಿರಬಹುದೆ ? ಥಕ್ಕಾಗಿ ನಾಗಪ್ಪನ ಆಳ ಎತ್ತರಗಳನ್ನು ಅಳೆಯುವವನಂತೆ ನೋಡುತ್ತ ಕುಳಿತ : ಯಾವಾಗಲೂ ನಮ್ಮನ್ನು ಗಾಢವಾಗಿ ತೊಡಗಿಸಿಕೊಂಡ ಕೆಲಸ ಹುಟ್ಟಿಸುವ ಆಸೆ ಆಮಿಷಗಳಿಂದ ದೂರವಾಗಿದ್ದಾಗ ಹುಟ್ಟುವ ಒಂದು ಬಗೆಯ ತಾತ್ವಿಕ ನಿರ್ಲಿಪ್ತತೆ ತನ್ನಲ್ಲಿಯ ಬದಲಿಗೆ ಕಾರಣವಾಗಿರಬಹುದೆಂಬುದನ್ನು ತಿಳಿಯುವಷ್ಟು ಚುರುಕು ಉಳ್ಲವನಾಗಿ ಕಾಣಲಿಲ್ಲ ಖಂಬಾಟಾ. ಅವನನ್ನು ಕೆಣಕುವ ಹುಕ್ಕಿ ಬಂದು ನಾಗಪ್ಪ ಕೇಳಿದ : “ಯಾಕೆ ? ನಾನು ಇಷ್ಟೊಂದು ಹೇಗೆ ಬದಲಿಸಿಹೋದೆ ಎಂದು ಆಶ್ಚರ್ಯ ಅಲ್ಲವೆ ? ಈ ಬದಲಿನ ಸ್ವರೂಪ ತನಿಖೆಯ ಹೊತ್ತಿಗೆ ಸರಿಯಾಗಿ ಗೊತ್ತಾಗುತ್ತದೆ ಮಿಸ್ಟರ್ ಖಂಬಾಟಾ. ನೀವು ಮಾಡಿದ ಲಫಡಾಗಳನ್ನೆಲ್ಲ ಬಯಲಿಗೆಳೆಯುವಾಗ ನೋಡುವಿಯಂತೆ_ನೀನು ಮತ್ತು ಫಿರೋಜ್ ನಿಮ್ಮ ಅಹಮಿಕೆಯಿಂದ ಮೈಮೇಲೆ ಹಾಕಿಕೊಂಡ ಪೇಚಿನ ನಿಜವಾದ ಸ್ವರೂಪವನ್ನು.” +ಖಂಬಾಟಾನ ಮೋರೆ ಬಣ್ಣ ಕಳೆದುಕೊಳ್ಳಹತ್ತಿತು. ಇನ್ನೂ ಹೆಚ್ಚು ಹೊತ್ತು ಇಲ್ಲಿ ಕುಳಿತರೆ ತಾನು ಹೇಳಲು ಬಂದದ್ದಾದರೂ ಏನೆಂಬುದು ಕೂಡ ಮರೆತೇಹೋದೀತು ಎಂಬ ಭಯವಾಗಿ : +“ನೋಡು ನಾಗನಾಥ್…” +“ಮಿಸ್ಟರ್ ನಾಗನಾಥ್.” +“ಓಕೇ….ಮಿಸ್ಟರ್ ನಾಗನಾಥ್, ನಾನು ಹೇಳಲು ಬಂದದ್ದಿಷ್ಟು : ನಾಳೆ ೧೧ಗಂಟೆಗೆ ಸರಿಯಾಗಿ ತಾಜಮಹಲ್ ಹೊಟೆಲ್ಲಿನ ರೂಮ್ ನಂಬರು ೭೧೭ ರಲ್ಲಿ ತನಿಖೆಯ ಆಯೋಗದ ಇದಿರು ಹಾಜರಾಗಬೇಕು. ನಾನು ಖುದ್ದು ರಿಸೆಪ್ಶನ್ ಕೌಂಟರಿನ ಹತ್ತಿರ ಹತ್ತಕ್ಕೆ ಹತ್ತು ಮಿನಿಟು ಇರುವಾಗ ಬಂದು ನಿನ್ನ ದಾರಿ ಕಾಯುತ್ತೇನೆ… ?” +“ಈ ತನಿಖೆಯ ಬಗ್ಗೆ ಪತ್ರವನ್ನೇನಾದರೂ ತಂದಿದ್ದೀಯಾ ?” +“ಕಂಪನಿಯ ಎಡ್ಮಿನಿಸ್ಟ್ರೇಶನ್ ಮೇನೇಜರ್ ಖುದ್ದಾಗಿ ಬಂದದ್ದು ಸಾಲದೆ ?” +“ಸಾಲದು ಮಿಸ್ಟರ್ ಖಂಬಾಟಾ, ಸಾಲದು. ನನ್ನ ವಕೀಲರು ನನಗೆ ಹಾಗೇ ತಿಳಿಸಿದ್ದಾರೆ. ವಕೀಲರ ಮಾತು ಬಿಡು. ಇದೊಂದು ತತ್ವದ ಪ್ರಶ್ನೆ. ಬರಿಯೆ ಒಬ್ಬ ಮಿಸ್ಟರ್ ಖಂಬಾಟಾನ ಬಾಯಿಮಾತನ್ನು ನಂಬಿ ನಾನು ಈ ತನಿಖೆಯ ಆಯೋಗದ ಮುಂದೆ ಹಾಜರ್ ಆಗಲಾರೆ. ಇದನ್ನು ನೀನು ಆ‌ಒ‌ಆ ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ತಾಜಮಹಲ್ ಹೊಟೆಲ್ಲಿಗೆ ಹೋಗಲು ಕಾರೂ ಕಳಿಸಬೇಕು. ಕಾರು ಕಳಿಸದೇ ಇದ್ದಲ್ಲಿ ನಾನು ಟ್ಯಾಕ್ಸಿಯಿಂದ ಬರುತ್ತೇನೆಂದು ತಿಳಿಯಬೇಡ.” +ನಾಗಪ್ಪನ ದನಿಯಲ್ಲಿ ಪ್ರಕಟವಾದ ದೃಢನಿಶ್ಚಯವನ್ನು ಗಮನಿಸಿದ ಖಂಬಾಟಾ ತಬ್ಬಿಬ್ಬಾದ. ಹೈದರಾಬಾದಿಗೆ ಫೋನ್ ಮಾಡಿದಾಗಿನ ಇವನ ವರ್ತನೆಯ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ನಿಶ್ಚಯಿಸಿ ಬಂದ ಖಂಬಾಟಾಗೆ ಕೂಡಲೇ ಮಾತನಾಡುವದೇ ಸಾಧ್ಯವಾಗಲಿಲ್ಲ. ಆದರೆ ಸಹಜವಾಗಿ ಸೋಲನ್ನು ಒಪ್ಪಲು ಸಿದ್ಧವಾಗದವನ ಹಾಗೆ : +“ನೋಡು ನಾಗನಾಥ್…” +“ನೋಡು ಮಿಸ್ಟರ್ ಖಂಬಾಟಾ, ನಿನಗೆ ಹತ್ತು ಸರತಿ ಹೇಳಿದ್ದೇನೆ ಮಿಸ್ಟರ್ ಎಂದು ಕರೆಯಲು…” +“ಓಕೇ… ನಾನು…” +“ಬರೇ ಓಕೇ ಸಾಲದು….” +ಖಂಬಾಟಾ ಹತಾಶನಾದ : “ಓಕೇ ಮಿಸ್ಟರ್ ನಾಗನಾಥ್, ತನಿಖೆಯ ಆಯೋಗದ ಮುಂದೆ ಬಂದಾಗ ಗೊತ್ತಾದೀತು ಸನ್ನಿವೇಶ ಎಷ್ಟೊಂದು ಗಂಭೀರವಾಗಿದೆಯೆನ್ನುವುದು…” +“ಬೆದರಿಕೆ ಹಾಕುತ್ತೀಯೇನಪ್ಪಾ, ಮಿಸ್ಟರ್ ಖಂಬಾಟಾ. ‘ಗಂಭೀರ !’ _ ಅದು ನಿನ್ನಂತಹನ ಬಾಯಲ್ಲಿ ಶೋಭಿಸುವ ಶಬ್ದವಲ್ಲ, ಬಿಡು. ಯಾವುದಾದರೂ ಸರ್ಕಸ್ಸಿನಲ್ಲಿ ಕೋಡಂಗಿಯ ಪಾತ್ರವಾಗಿ ಶೋಭಿಸುತ್ತಿದ್ದಿರಿ ನೀವು_ನೀನು ಹಾಗೂ ಥಿouಡಿ goಜ-ಜಿಚಿಣheಡಿ ಮಿಸ್ಟರ್ ಬಂದೂಕವಾಲಾ… ಆದ್ದರಿಂದ ನಿನಗೆ ಹೇಳಬೇಕಾದದ್ದನ್ನು ಸಹಜ ಭಾಷೆಯಲ್ಲೇ ಹೇಳಿಬಿಡು, ನನಗೆ ಅರ್ಥವಾಗುತ್ತದೆ. ನಿನ್ನ ಬಾಯಲ್ಲಿ ಶೋಭಿಸದ ಧಮಕಿಯ ಮಾತು ಬೇಡ. ನಾನು ಕೇಳಿದ ಪತ್ರವನ್ನು ಕಳಿಸಿಕೊಡುತ್ತೀಯಲ್ಲ ? ಕಾರನ್ನೂ ?” +“ಇದು ಶಕ್ಯವೆಂದು ತೋರುವುದಿಲ್ಲ. ಸ್ವತಃ ನಾನೇ ಬಂದು ….” +“ನಿನ್ನನ್ನು ನಂಬುವದಿಲ್ಲ. ನಿನ್ನ ಬಗ್ಗೆ ಆಯೋಗದ ಇದಿರು ನಾನು ಹೇಳಲಿದ್ದುದನ್ನು ಇಲ್ಲೇ ಹೇಳುವಂತೆ ಎಷ್ಟೊಂದು ಚಿತಾಯಿಸಿದರೂ ನಾನು ಹೇಳಲಾರೆ. ವ್ಯರ್ಥ ವೇಳೆಯನ್ನು ಹಾಳುಮಾಡುವುದು ಬೇಡ. ಚೆನ್ನಾಗಿ ನೆನಪಿಡು. ಯಾಕೆಂದರೆ ನಿನ್ನ ಮರೆವಿನ ಪ್ರಕೃತಿ ಇಡೀ ಕಂಪನಿಯಲ್ಲೇ ಪ್ರಖ್ಯಾತವಾದದ್ದು….ತನಿಖೆಗೆ ನಾನು ತಾಜಮಹಲಿನಲ್ಲಿ ಇಂತಹ ಕೋಣೆಯಲ್ಲಿ, ಇಂಥ ದಿನ, ಇಷ್ಟು ಗಂಟೆಗೆ, ಇಂತಿಂತಹರ ಮುಂದೆ ಹಾಜರ್ ಆಗಬೇಕೆಂದು ತಿಳಿಸುವ ಪತ್ರ, ಅಲ್ಲಿಗೆ ಹೋಗಲು ಕಾರು ಇವೆರಡೂ ಬಂದ ಹೊರತು ನಾನು ತನಿಖೆಯ ಅಯೋಗದ ಇದಿರು ಹಾಜರಾಗುವುದು ಶ್ಕ್ಯವೇ ಇಲ್ಲ….” +“ನಮ್ಮ ಯೋಜನೆ ನನ್ನ ಹಿತದ ಸಲುವಾಗಿಯೇ…. ತನಿಖೆಯ ವಿಷಯವನ್ನು ಗುಟ್ಟಾಗಿ ಇಡುವುದು ಅದರ ಉದ್ದೇಶ….. ಕಂಪನಿಯ ತುಂಬ,,,,” +“ಓಹೋಹೋ… ಇಷ್ಟೆಲ್ಲ ಸುಳ್ಳು ಆಡಂಬರ ಬೇಡ… ತನಿಖೆಯ ಗುಟ್ಟಿನ ಜವಾಬ್ದಾರಿ ನನಗೆ ಬಿಡು. ಇನ್ನೊಂದು ಮಾತು : ಒಂದು ವೇಳೆ ನೀನು ನಾನು ಕೇಳಿದ ಪತ್ರ ಹಾಗೂ ಕಾರನ್ನು ಕಳಿಸದೇ ಇದ್ದರೆ ಆ ಕಾರಣಕ್ಕಾಗಿಯೇ ನಾನು ಆಯೋಗದ ಮುಂದೆ ಹಾಜರಾಗಿಲ್ಲ ಎಂದು ಹೇಳುತ್ತೇನೆಂದು ತಿಳಿಯಬೇಡ. ಖಂಬಾಟಾ….ಅಲ್ಲ ಮಿಸ್ಟರ್ ಖಂಬಾಟಾ ಇಲ್ಲಿ ಬಂದಿರಲೇ ಇಲ್ಲ. ನನಗೆ ತನಿಖೆಯ ಸುದ್ದಿ ಮುಟ್ಟಲೇ ಇಲ್ಲ…” +“ಔh, ಟಿo I ಙou ಚಿಡಿe ಟಿoಣ veಡಿಥಿ seಡಿious ಚಿbouಣ ಣhis…” +” I ಚಿm veಡಿಥಿ seಡಿious…. ಪತ್ರವನ್ನು ಕಳಿಸಿಯೂ ಅದರ ಮಜಕೂರು ನಾನು ತಿಳಿಸದ ಹಾಗೆ ಇಲ್ಲದಿದ್ದಲ್ಲಿ ಅಥವಾ ಪತ್ರ ಸರಿಯಾಗಿದ್ದೂ ಕಾರು ಕಳಿಸದೇ ಇದ್ದಲ್ಲಿ ನಾನು ಆಯೋಗದ ಮುಂದೆ ಬರದೇ‌ಇರುವುದರ ಕಾರಣ ಮಾತ್ರ ನಿನ್ನನ್ನು ನೇರವಾಗಿ ಒಳಗೊಳ್ಳುತ್ತದೆ : ಮಿಸ್ಟರ್ ಖಂಬಾಟಾ ಬಂದಾಗ ಇದನ್ನೆಲ್ಲ ಒಪ್ಪಿಕೊಂಡಿದ್ದನೆಂದು….” +‘ಇದು ಶುದ್ಧ bಟಚಿಛಿಞmಚಿiಟ,” ಖಂಬಾಟಾ ತಾಳ್ಮೆಗೆಡುವ ಸ್ಥಿತಿಗೆ ಬರಹತ್ತಿದ್ದ. +“ಸಿಟ್ಟಾಗಬೇಡ….ಅದೂ ನಿನಗೆ ಶೋಭಿಸುವಂತಹದಲ್ಲ…. ‘ಬ್ಲಾಕ್‌ಮೇಲ್’ನಲ್ಲಿ ಶುದ್ಧ ಅಶುದ್ಧ ಎಂದು ಎರಡು ಜಾತಿ ಇವೆ ಎಂದು ನನಗೆ ಗೊತ್ತಿರಲಿಲ್ಲ.ನೀವು ನಡೆಸುವ ಈ ತನಿಖೆಯ ತಮಾಷೆ ಯಾವ ಜಾತಿಯ ಬ್ಲ್ಯಾಕ್‌ಮೇಲ್ ?…ಫಿರೋಜನಿಗೆ ಒಂದು ಮಾತನ್ನು ತಪ್ಪದೇ ತಿಳಿಸು_ ಣhe ತಿhoಟe ಣhiಟಿg ತಿiಟಟ boomeಡಿಚಿಟಿg oಟಿ him ಚಿಟಿಜ his ಣಡಿibe. ರಾಮಕೃಷ್ಣನಿಗೂ ಒಂದು ಕಿವಿಮಾತು_ಭೆಟ್ಟಿಯಾದರೆ ಹೇಳು : ಈ ತನಿಖೆಯಲ್ಲಿ ಅವನ ಹೈದ್ರಾಬಾದೀ ನೀರನ್ನು ಇಳಿಸುವ ಪಣ ತೊಟ್ಟಿದ್ದೇನೆ ಎಂದು : ಹೈದರಾಬಾದಿನಲ್ಲಿ ನಡೆಯಲಿದ್ದ ತನಿಖೆಯನ್ನು ಏಕ್‌ದಮ್ ಮುಂಬಯಿಗೆ ಯಾಕೆ ವರ್ಗಾಯಿಸಿದರು ಎನ್ನುವುದನ್ನು ತಿಳಿಯದಷ್ಟು ಕುಕ್ಕೂಬಾಳನಲ್ಲ ನಾನು. ಬಹುಶಃ ನಿನಗೇ ಗೊತ್ತಿರಲಿಕ್ಕಿಲ್ಲ ಈ ಸ್ಥಳಾಂತರದ ಕಾರಣ….ಓಕೇ ಮಿಸ್ಟರ್ ಖಂಬಾಟಾ. ನನಗೀಗ ನಾಳೆಯ ತನಿಖೆಯ ಬಗ್ಗೆ ವಿಚಾರಮಾಡಬೇಕಾಗಿದೆ…. ಅವಶ್ಯಬಿದ್ದರೆ ವಕೀಲರನ್ನೂ ಕಾಣಬೇಕಾಗಿದೆ. ನಿನಗೂ ಆಫೀಸಿಗೆ ಹೋಗುವ ಅವಸರವಿರಬೇಕು…. ಯಾವುದರ ಬಗೆಗೂ ಅವಸರ ಪಡುವ ಜಾತಿಯಲ್ಲ ಬಿಡು ನಿನ್ನದು. ಆದರೂ….” +ಖಂಬಾಟಾ ಇನ್ನೂ ಕುರ್ಚಿಯಲ್ಲಿ ಕೂತೇ ಇದ್ದ. ನಾಗಪ್ಪ ಅವನನ್ನು ಕೂಡಲೇ ಅಲ್ಲಿಂದ ಹೊತ್ತುಹಾಕುವ ಉದ್ದೇಶವನ್ನು ನಿರ್ಧಾಕ್ಷಿಣ್ಯವಾಗಿ ಪ್ರಕಟಿಸುತ್ತ ಕೈ ಮುಂದೆ ಚಾಚಿದ. ಈ ಅನಿರೀಕ್ಷಿತ ಕ್ರಿಯಯಿಂದ ದಡಬಡಿಸಿ ಕುರ್ಚಿಯಿಂದ ಎದ್ದುನಿಂತ ಖಂಬಾಟಾ ನಿರುಪಾಯನಾಗಿಯೇ ನಾಗಪ್ಪ ಚಾಚಿದ ಕೈಯನ್ನು ಕುಲುಕಿದ : +“ಗುಡ್‌ಬಾಯ್ ಮಿಸ್ಟರ್ ಖಂಬಾಟಾ. ಬೆಳಿಗ್ಗೆ ಎದ್ದದ್ದೇ ನಿನ್ನ ಮುಖ ದರ್ಶನವಾದದ್ದು ಬಹಳ ಬಹಳ ಸಂತೋಷದ ಸಂಗತಿ. ತನಿಖೆಯ ಆಯೋಗದ ಮಂದಿಯ ಮುಸುಡಿಗಳನ್ನೂ ನೋಡಲು ತುಂಬ ಉತ್ಸುಕನಾಗಿದ್ದೇನೆ….ಪತ್ರ ಮತ್ತು ಕಾರಿನ ಬಗ್ಗೆ ಹೇಳಿದ್ದನ್ನು ಮಾತ್ರ ಮರೆಯಬೇಡ….”ಎನ್ನುತ್ತ ಅವನನ್ನು ಬಾಗಿಲವರೆಗೆ ಕಳಿಸಿ ಅವನು ಹೊರಗೆ ಕಾಲಿಟ್ಟ ಕೂಡಲೇ ಕದಗಳನ್ನು ಮುಚ್ಚಿದ ರಭಸ ಬಯಸಿದ್ದಕ್ಕಿಂತ ದೊಡ್ಡದಾದಾಗ ತನ್ನಷ್ಟಕ್ಕೇ ಸುಖವಾಗಿ ನಕ್ಕ. ಒಳಗೆಲ್ಲೋ ಇಷ್ಟು ವರ್ಷ ಉಸಿರುಗಟ್ಟಿ ಬಿದ್ದ ತನ್ನ ಪ್ರಬುದ್ಧತೆ ಈಗ ಒಮ್ಮೆಗೇ ಮುಚ್ಚಿಕೊಂಡ ಬಾಗಿಲುಗಳನ್ನು ತೆರೆದಂಥ ಅನುಭವ. ಅದರ ಹಿಂದೆಯೇ, ತಾನು ಈವರೆಗೂ ಅನುಭವಿಸಿರದ ಪ್ರಚಂಡ ಧೈರ್ಯ ಸ್ಥಾಯಿಯಾಗಲು ಹತ್ತಿದೆ ಎನ್ನುವಂಥ ಅನ್ನಿಸಿಕೆಯಿಂದಲೂ ಸುಖವೆನಿಸಿತು : ನಿನ್ನೆ, ಆ ರೆಡ್ಡಿ ಕೊಟ್ಟ ಪತ್ರವನ್ನು ಹರಿದೊಗೆಯಬಾರದಿತ್ತೇನೋ. ತನಿಖೆಯ ವೇಳೆಗೆ ಉಪಯೋಗಕ್ಕೆ ಬೀಳುತ್ತಿತ್ತೇನೋ ಎಂದು ಅನ್ನಿಸಿದರೂ ಆ ಅನ್ನಿಸಿಕೆಯಲ್ಲೀಗ ತನ್ನ ಕೃತ್ಯದ ಬಗೆಗೆ ಖೇದವಿರಲಿಲ್ಲ : ಅವರಿವರು ಕೊಟ್ಟ ವರದಿ ತನಗೆ ಬೇಡ. ಇಷ್ಟು ವರ್ಷ ನಿಷ್ಕಾರಣವಾಗಿ ತನ್ನೊಡನೆ ಹಗೆಕಾಯುತ್ತ ಬಂದ ಫಿರೋಜನ ಕ್ರೌರ್ಯದ ಅರ್ಥ ತಿಳಿಯಬೇಕಾಗಿದೆ. ಅದಕ್ಕೆ ಖುದ್ದು ತನ್ನ ಅನುಭವಕ್ಕೆ ಬಂದ ಸಂಗತಿಗಳೇ ಸಾಕು…. +ತನಿಖೆಯ ಆಯೋಗದವರನ್ನು ಕಾಣಲು ತಾನು ನಿಜಕ್ಕೂ ತುಂಬ ಉತ್ಸುಕನಾಗಿದ್ದೇನೆ ಎಂಬಂತಹ ಭಾವನೆಯಿಂದ ಬಹಳ ಖುಶಿಪಟ್ಟ. ಆ ಖುಶಿಯಲ್ಲಿರುವಾಗಲೇ _ ಹೌದು, ಸಂಜೆ ಮೇರಿಗೆ ಫೋನ್ ಮಾಡಬೇಕು. ಹುಡುಗಿಯ ಸಿಹಿಯಾದ ದನಿ ಕೇಳುವುದರಿಂದಲೇ ಸುಖವೆನ್ನಿಸೀತು : ಡಾಯನಾ, ಥ್ರೀಟೀಯರ ಭೇಟಿಗಳ ಬಗ್ಗೆ, ಹೈದರಾಬಾದಿನಲ್ಲಿ, ಇದೀಗ ಈ ಕೋಣೆಯಲ್ಲಿ ನಡೆದದ್ದರ ವಿಚಾರಗಳನ್ನು ಕೊಡಬೇಕು_ಮೆಚ್ಚಿಕೊಂಡಾಳು ಹುಡುಗಿ, ಎಂದುಕೊಂಡ. ತನಗೆ ಅರಿವಿಲ್ಲದೇನೇ ತಾನು ಮೇರಿಯನ್ನು ಪ್ರೀತಿಸುತ್ತಿದ್ದೆ ಎನ್ನುವುದನ್ನು ಈಗ ತನ್ನಷ್ಟಕ್ಕೇ ಸ್ಪಷ್ಟವಾಗಿ ಒಪ್ಪಿಕೊಂಡಾಗ ಹುಟ್ಟಿದ ಭಾವನೆಯಿಂದ ಪ್ರಸನ್ನನಾಗಿ ಕಿಡಕಿಗೆ ಬಂದು, ಹತ್ತು ಗಂಟೆಯ ಬಿಸಿಲಲ್ಲಿ ಬೆಚ್ಚಗೆ ಮೈ ಕಾಯಿಸುತ್ತ ನಿಂತ ತನ್ನ ಪ್ರೀತಿಯ ಅಶ್ವಥ್ಥವನ್ನ ನೋಡುತ್ತ ಮೈಮರೆತ. uಟಿಜeಜಿiಟಿeಜ +– ಭಾಗ : ನಾಲ್ಕು – +– ಅಧ್ಯಾಯ ಇಪ್ಪತ್ತಾರು – +ಇಡೀ ದಿನ ಅತ್ಯಂತ ಉತ್ಸುಕತೆಯಿಂದ. ಇದಿರು ನೋಡಿದ ಎಂಟು ಗಂಟೆಯಾದದ್ದೇ ತಡ. ಕೆಳಗೆ ಹೋಗಿ ಇರಾಣೀ ಅಂಗಡಿಯಿಂದ ಮೇರಿಗೆ ಫೋನ್ ಮಾಡಲೆಂದು ಅತ್ತ ಕಡೆಗೆ ಹೆಜ್ಜೆ ಇಡುತ್ತಿರುವಾಗ ಹೃದಯ ಬಡಿದುಕೊಳ್ಳಹತ್ತಿತು. ಕಿವಿಗಳೆರಡೂ ಬೆಚ್ಚಗಾಗಹತ್ತಿದವು. ತನಗೆ ಅವಳ ಬಗ್ಗೆ ಅನ್ನಿಸುತ್ತಿದ್ದ ಮೃದುಭಾವನೆಯನ್ನು ವ್ಯಕ್ತಪಡಿಸುವಾಗ ಬರೇ ಮೇರಿ ಎಂದರೆ ಸಾಕೆ ? ಅಥವಾ….ಆಚಿಡಿಟiಟಿg ಇಲ್ಲವೇ sತಿeeಣheಚಿಡಿಣ ಎಂದು ಸಂಬೋಧಿಸಬೇಕೆ ?….ಗೊಂದಲಿಸಿದ. ಇರಾಣೀ ಅಂಗಡಿಯಲ್ಲಿಯ ಫೋನ್ ಕೆಟ್ಟಿತ್ತು. ಇನ್ನೊಂದು ಫೋನು ಆರನೇ ಗಲ್ಲಿಯಲ್ಲಿಯ ತುದಿಯಲ್ಲಿತ್ತು. ಮೇರಿಗೆ ಮೊದಲ ಬಾರಿ ಫೋನ್ ಮಾಡಿದಾಗ ಅಲ್ಲಿಂದಲೇ ಮಾಡಿದ್ದು….ಫೋನ್ ಕೆಟ್ಟದ್ದರಿಂದ ಯಾವುದೇ ರೀತಿಯ ನಿರಾಶಾಭಾವಕ್ಕೆ ಒಳಗಾಗದೇ ನಡೆಯುತ್ತ, ಕಮ್ಯುನಿಸ್ಟ್ ಪಕ್ಷದ ಆಫೀಸಿನ ಹತ್ತಿರದ ಫೋನ್ ಬೂಥಿಗೆ ಬಂದ. ಕಿಸೆಯೊಳಗಿಂದ ನಾಣ್ಯಗಳನ್ನು ಹೊರತೆಗೆಯುವಾಗ : ಫೋನ್ ಎತ್ತಿಕೊಂಡವಳು ಮೇರಿ ಅಲ್ಲದೇ ಇನ್ನು ಯಾರಾದರೂ ಆದರೆ ? ಎಂಬ ವಿಚಾರ ಹೊಳೆದಾಗ ಗೊಂದಲಿಸಲಿಲ್ಲ. ರಿಸೀವರ್ ಎತ್ತಿದಾಗ ಡಾಯಲ್‌ಟೋನ್ ಸರಿಯಾಗಿ ಕೇಳಿಸುತ್ತಿತ್ತು. ಫೋನ್ ಕೆಟ್ಟಿಲ್ಲ ಎಂಬುದು ತಿಳಿದಾಗ ಧೈರ್ಯ ಬಂದಿತು. ಟೆಲಿಫೋನ್ ಯಂತ್ರದಲ್ಲಿ ನಾಣ್ಯಗಳನ್ನು ಹಾಕುವ ತೂತಿನ ಹತ್ತಿರ ನಾಣ್ಯಗಳನ್ನಿಟ್ಟು ನಂಬರ್ ಡಾಯಲ್ ಮಾಡಿದ. ಆ ತುದಿಯಿಂದ ಕೇಳಿಸಿದ ‘ಹೆಲ್ಲೋ’_ ಹೆಣ್ಣುದನಿಯಾಗಿತ್ತು. ಲಗುಬಗೆಯಿಂದ ಹತ್ತು ಪೈಸೆಯ ಮೂರು ನಾಣ್ಯಗಳನ್ನು ತೂತಿನಲ್ಲಿ ಹಾಕಿ_ “ಊeಟಟo, is ಣhಚಿಣ ಒeಡಿಥಿ ?” ಎಂದು ಕೇಳಿದಾಗ ಬಂದ ಉತ್ತರದಿಂದ ನಿರಾಶೆಯಾಯಿತು : “ಮೇರೀ ಮನೆಯಲ್ಲಿಲ್ಲ. ಒಂದು ಪಾರ್ಟಿಗೆ ಹೋಗಿದ್ದಾಳೆ.” +“Is ಣhಚಿಣ ಆiಚಿಟಿಚಿ ?” +” ಓo, I ಚಿm heಡಿ ಥಿouಟಿgಚಿಡಿ sisಣeಡಿ. ಮಾತನಾಡುತ್ತಿದ್ದವರು ಯಾರೆಂದು ತಿಳಿಯಬಹುದೇ, ಸರ್ ?” +ದನಿ, ಪ್ರಶ್ನೆ ಕೇಳಿದ ರೀತಿ ತುಂಬ ಮೆಚ್ಚಿಕೆಯಾದವು. ನಾಗಪ್ಪ ತನ್ನ ಹೆಸರನ್ನು ಹೇಳಿದಾಗ, ಅವನ ಪರಿಚಯ ಇದ್ದವಳ ಹಾಗೆ, +“ಉooಜ eveಟಿiಟಿg, ಒಡಿ. ಓಚಿgಟಿಚಿಣh, ಮೇರಿ ಹಾಗೂ ಡಾಯನಾ_ಇಬ್ಬರೂ ಒಂದು ಪಾರ್ಟಿಗೆ ಹೋಗಿದ್ದಾರೆ. ತಿರುಗಿ ಬರಲು ತುಂಬ ರಾತ್ರಿಯಾಗಬಹುದು. ನೀವು ಹೈದರಾಬಾದಿನಿಂದ ಯಾವಾಗ ಬಂದಿರಿ ? ಡಾಯನಾ ಮೊನ್ನೆ ನಿಮ್ಮ ಬಗ್ಗೆ ತುಂಬ ಮಾತನಾಡಿದಳು.” +“ಂಟಟ gooಜ ಣhiಟಿgs, I hoಠಿe. ಒಚಿಥಿ I ಞಟಿoತಿ ಥಿouಡಿ sತಿeeಣ ಟಿಚಿme ?” +“ಒಥಿ ಟಿಚಿme is Zಚಿಡಿiಟಿ, buಣ iಣ is ಟಿoಣ sತಿeeಣ.” +” ಙou ಚಿಡಿe sತಿeeಣ_ಥಿou ಟಿಚಿughಣಥಿ oಟಿe…. ಮೇರಿಗೆ ಹೇಳು ನಾನು ಫೋನ್ ಮಾಡಿದ್ದೆನೆಂದು…. ಪಾರ್ಟಿ ಎಲ್ಲಿದೆಯೆಂದು ಗೊತ್ತೆ ?” +“ತಾಜ್‌ಮಹಲ್ ಹೊಟೆಲ್ಲಿನಲ್ಲೆಂದು ತೋರುತ್ತದೆ” ಎಂದಾಗ ಎದೆ ಒಂದು ಬಡಿತವನ್ನು ಮರೆತ ಭಾಸ : ಫಿರೋಜ್ ಕೊಡುತ್ತಿರಬಹುದೇ ಎಂಬ ಸಂಶಯ ತಲೆಯಲ್ಲಿ ತೂಗುತ್ತಿರುವ ಹೊತ್ತಿಗೆ ಝರೀನ್ ಎಂದಳು : “ಮೇರಿಯ ಆಫೀಸಿನ ಗೆಳೆಯರಾರೋ ಕೊಡುತ್ತಿರಬೇಕು_ಪಾರ್ಟಿಯನ್ನು. ಬರುವಾಗ ಜತೆಗೆ ಯಾರಾದರೂ ಇರಲಿ ಎಂದು ಡಾಯನಾಳನ್ನೂ ಕರೆದುಕೊಂಡು ಹೋಗಿದ್ದಾಳೆ….” ಎಂದಾಗ ಕೈಕಾಲು ಸೋತುಬರುತ್ತಿರುವ ಅನುಭವ ಝರೀನ್‌ಗೆ ಗುಡ್‌ಬಾಯ್ ಅಂದಾಗಿನ ದನಿಯ ಪರಿಚಯ ಅವಳಿಗೆ ಸಿಕ್ಕಿರಲಾರದು….ಮುಂದಿನದೆಲ್ಲ ಕನಸಿನ ಲೋಕದಲ್ಲಿ ನಡೆದದ್ದೆಂಬಂತೆ : ‘ಷೇರ್-ಏ-ಪಂಜಾಬ್’ಗೆ ಹೋದದ್ದು ನೆನಪಿದೆ : ಆದರೆ ಏನು ಉಂಡೆನೆಂಬುದು ನೆನಪಿಲ್ಲ. ಖೇಮರಾಜಭವನವನ್ನು ಸೇರಿದ್ದು ನೆನಪಿದೆ : ಬಾಗಿಲಲ್ಲೇ ಭೆಟ್ಟಿಯಾದ ಅರ್ಜುನ್‌ರಾವರೊಡನೆ ಏನು ಮಾತನಾಡಿದೆನೆಂಬುದು ನೆನಪಿಲ್ಲ. ಹಾಸಿಗೆ ಸೇರುವ ಮೊದಲು ಬಾರ್ಬಿಚ್ಯುರೇಟರ್ ಗುಳಿಗೆಗಳನ್ನು ಸೇವಿಸಿದ್ದು ನೆನಪಿದೆ : ಎಷ್ಟು ಎಂಬುದು ನೆನಪಿಲ್ಲ. ಬಾರ್ಬಿಚ್ಯುರೇಟ್ ಗುಳಿಗೆಗಳ ಡೋಜು ಬಯಸಿದ್ದಕ್ಕಿಂತ ದೊಡ್ಡದಾಗಿತ್ತು ಎನ್ನುವುದು ಗೊತ್ತಾದದ್ದು ಬೆಳಿಗ್ಗೆ ಹಾಸಿಗೆಯಿಂದ ಏಳುವ ಪ್ರಯತ್ನ ಮಾಡಿದಾಗ, ಹೊರಗೆ ಹೊತ್ತು ಚಲೋ ಏರಿರಬೇಕು : ಕಣ್ಣುಬಿಚ್ಚಿ ನೋಡಲು ಆಗುತ್ತಿರಲಿಲ್ಲವಾದರೂ ಮೈಗೆ ಬಿಸಿ ತಾಕುತ್ತಿತ್ತು. ಬಾರ್ಬಿಚ್ಯುರೇಟರ್ ಗುಳಿಗೆಗಳನ್ನು ನುಂಗಬೇಕಾಗಿ ಬಂದ ಸನ್ನಿವೇಶ ಕೂಡ ನೆನಪಾಗುತ್ತಿಲ್ಲ. ಕೆಲಹೊತ್ತು ಹಾಗೆ ಬಿದ್ದೇ ಉಳಿದ. ಆಮೇಲೆ, ಮೈ ಸ್ವಲ್ಪ ಸಡಿಲಗೊಂಡು ಕಣ್ಣು ತೆರೆಯುವದು ಸಾಧ್ಯವಾದಾಗ ಕೈಗಡಿಯಾರ ನೋಡಿಕೊಂಡರೆ_ಮದ್ಯಾಹ್ನದ ಒಂದು ಗಂಟೆ ! ನಂಬದಾದ. ಕಣ್ಣು ಇನ್ನೊಮ್ಮೆ ತಿಕ್ಕಿ ನೋಡಿದ. ಗಡಿಯಾರ ನಿಂತು ಹೋಗಿರಬಹುದೆ ? ಕಿವಿ ಹಚ್ಚಿ ನೋಡಿದ. ಪರಿಸರದ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡು, ಹೀಗೆ ಮಲಗಿದ್ದರ ಪರಿಣಾಮದ ಅರಿವು ದೊಡ್ಡ ಆಘಾತದ ಬಲದಿಂದ ಮೂಡಿದಾಗ ಧಡಕ್ಕನೆ ಹಾಸಿಗೆಯಿಂದ ಎದ್ದ ರಭಸಕ್ಕೆ ಜೋಲಿ ತಪ್ಪಿ ಮುಗ್ಗರಿಸಿ ಬಿದ್ದು ತಲೆ ಮೋರಿಯ ಚಿಕ್ಕ ಗೋಡೆಗೆ ಅಪ್ಪಳಿಸಬೇಕು : ಪುಣ್ಯವಶಾತ್ ಕೈ ಮುಂದೆ ಚಾಚಿದ್ದರಿಂದ ಎಡ ಅಂಗೈ ಗೋಡೆಗೆ ಊರಿ ಅದನ್ನು ತಪ್ಪಿಸಿತು. ಮುಗ್ಗರಿಕೆಯ ಆಘಾತವನ್ನು ತಡೆಯುವಾಗ ಆದ ನೋವಿನಿಂದ ಮಾತ್ರ ನರಳುವಂತಾಗಿ ನಿದ್ದೆ ತಿಳಿದು ಎಚ್ಚರವೂ ಬಂದಿತ್ತು. +ಅವಸರ ಅವಸರವಾಗಿ ಹಲ್ಲು ತಿಕ್ಕಿ, ಮೋರೆ ತೊಳೆದು, ಇಡೀ ಗ್ಲಾಸು ತುಂಬ ಮಣ್ಣಿನ ಹೂಜೆಯೊಳಗಿನ ತಂಪು ನೀರನ್ನು ಕುಡಿದು, ಪ್ಯಾಂಟು, ಷರ್ಟ್ ಹಾಕಿಕೊಂಡು ಚಪ್ಪಲಿ ಮೆಟ್ಟಿದವನೇ ಸೀದ ಅರ್ಜುನರಾವ್‌ರ ಮನೆಗೆ ನಡೆದ. ಅರ್ಜುನರಾವ್ ಮದಾಹ್ನದ ಊಟಕ್ಕೆ ಮನೆಗೆ ಬರುತ್ತಿದ್ದದ್ದು ಕ್ವಚಿತ್ತಾಗಿ, ಇನ್ನೂ ಬಂದಿರಲಿಲ್ಲ. ಕೆದರಿದ ಕೂದಲು, ಕ್ಷೌರ ಮಾಡಿಕೊಂಡಿರದ ಕಾರಣ ಸಣ್ಣಗೆ ಕೂದಲು ಚಿಗುರಿ ಕಪ್ಪುಗಟ್ಟಿದ ಮೋರೆ, ಭಯಗ್ರಸ್ತ ಕಣ್ಣುಗಳು : ಕದ ತೆರೆದು ಹೊರಗೆ ಬಂದ ಅರ್ಜುನರಾವರ ಮುದಿತಾಯಿ ಇವನನ್ನು ನೋಡಿ_”ಅರೆ ! ಇದೇಕೆ ಹೀಗಾಗಿದ್ದೀ ? ಮೈಯಲ್ಲಿ ಹುಷಾರಿಲ್ಲವೆ ? ಬಾ ಬಾ, ಒಳಗೆ ಬಾ. ” ಎಂದಾಗ ಇವನು ಇನ್ನಷ್ಟು ಗಾಬರಿಯಾದ : “ಇಲ್ಲಜ್ಜೀ, ೯ರ ಸುಮಾರಿಗೆ ಅಫೀಸಿನ ಜನ ನನ್ನನ್ನು ಭೆಟ್ಟಿಯಾಗಲು ಬರುವವರಿದ್ದರು.ನಿನ್ನೆ ಇಡೀ ರಾತ್ರಿ ಬರೆಯುತ್ತ ಕೂತದ್ದರಿಂದ ಬೆಳಗಿನ ಜಾವಕ್ಕೆ ಗಾಢನಿದ್ದೆ ಹತ್ತಿಬಿಟ್ಟಿತ್ತು. ಅವರು ಬಂದು ಕದ ತಟ್ಟಿ ಹೋದರೋ ಏನೋ ಎಂದು…ಮಗ್ಗುಲುಮನೆಯವರನ್ನು ಸ್ವಲ್ಪ ಕೇಳಿ ನೋಡುತ್ತೀರಾ ?” ಇವನು ಮಗ್ಗುಲುಮನೆಯ ಹೆಂಗಸಿನೊಡನೆ ಮಾತನಾಡುವದಿಲ್ಲ ಎಂಬುದು ಲಕ್ಷ್ಯಕ್ಕೆ ಬಂದು ಒಳಗೊಳಗೇ ನಗು ಬಂದರೂ, ಇವನ ಗಾಬರಿ ತುಂಬಿದ ಮೋರೆ ನೋಡಿ ಅದನ್ನು ಹತ್ತಿಕ್ಕಿ, ಒಳಗಿನ ಕೋಣೆಯ ಬಾಗಿಲಲ್ಲಿ ನಿಂತು ಇದನ್ನೆಲ್ಲ ಆಲಿಸುತ್ತಿದ್ದ ಸೊಸೆಯನ್ನು ‘ಲಕ್ಷ್ಮೀ’ ಎಂದು ಹೆಸರು ಹಿಡಿದು ಕರೆದದ್ದೇ ತಡ, ಅವಳು, ತನ್ನನ್ನು ಕರೆದದ್ದರ ಅರ್ಥವಾಯಿತೆನ್ನುವಂತೆ ಹೊರಗೆ ನಡೆದು ಲಗುಬಗೆಯಿಂದ ನಾಗಪ್ಪನ ಕೋಣೆಯ ಕಡೆಗೆ ಹೆಜ್ಜೆ ಇಟ್ಟಳು. ಮಗ್ಗುಲು ಮನೆಯ ಹೆಂಗಸು ಕೊಡುವ ಉತ್ತರವನ್ನು ಖುದ್ದಾಗಿ ಕೇಳುವ ಕಾತರದಿಂದ ಅವಳನ್ನು ಹಿಂಬಾಲಿಸಿದ. ಹೆಂಗಸು ಇವನೊಡನೆ ಹಿಂದೆ ನಡೆದ ಪ್ರಸಂಗವನ್ನು ಪೂರ್ತಿಯಾಗಿ ಮರೆತವಳ ಹಾಗೆ_”ಇಲ್ಲ, ಯಾರೂ ಬಂದಿರಲಿಲ್ಲ. ನಾನು ಬೆಳಗ್ಗಿನಿಂದಲೂ ಇಲ್ಲೇ ಇದ್ದೇನೆ.”ಎಂದು ಆಶ್ವಾಸನವಿತ್ತಳು. ಇನ್ನೂ ಪೂರ್ಣ ಕಳೆದಿರದ ಬಾರ್ಬಿಚ್ಯುರೇಟ್ ಗುಳಿಗೆಗಳ ಅಮಲಿನಿಂದ ತುಂಬ ಭಾವುಕವಾದ ಮನಸ್ಸಿಗೆ ಈ ಮಾತುಗಳು ಎಷ್ಟೊಂದು ಸುಖ ಕೊಟ್ಟವೆಂದರೆ ಕೈ ಮುಗಿದು ಥೆಂಕ್ಸ್ ಎನ್ನುವಾಗ ಕೊರಳು ಬಿಗಿದುಕೊಂಡಿತು. +ಇನ್ನೂ ಹೆಚ್ಚು ಹೊತ್ತು ಅಲ್ಲಿ ನಿಂತರೆ ಕಣ್ಣುಗಳಲ್ಲಿ ನೀರು ಕಲೆಯ ಹತ್ತಿದ್ದನ್ನು ಅವರು ಕಂಡಾರು ಎಂಬ ಭಯವಾಗಿ ಕೂಡಲೇ ಅಲ್ಲಿಂದ ಕಾಲು ಕಿತ್ತು ಕೋಣೆ ಸೇರಿ ಕದ ಮುಚ್ಚಿಕೊಂಡ. ಕಿಡಕಿಯ ಬಳಿಯ ಆರಾಮಕುರ್ಚಿಯೊಂದರಲ್ಲಿ ಕುಕ್ಕರಿಸಿದ. ಅಮ್ಮ ಕಣ್ಣು ಮುಂದೆ ನಿಂತಂತಾಗಿ, ಸಣ್ಣ ಮಗುವಿನಂತೆ ಅತ್ತುಬಿಟ್ಟ : ಈ ಸರಿತಿ ನೆನಪಿನಲ್ಲಿ ಹುಟ್ಟಿಬಂದದ್ದು ಹಿಂದೆಂದೂ ಮೂಡಿರದ ದೃಶ್ಯ. ಆದರೆ ಎಲ್ಲವೂ ಮಸಕುಮಸಕಾದಂತೆ, ಅನೇಕ ಚಿತ್ರಗಳು ಏಕಕಾಲಕ್ಕೆ ಒಂದರಮೇಲೊಂದು ಏರಿ ಕೂತ ರೀತಿ, ಗಜಿಬಿಜಿ : ಮೂರು ಸಂಜೆಯ ಹೊತ್ತಿಗೆ ಅಮ್ಮ ಹಿಂದಿನ ಹಿತ್ತಲಲ್ಲಿಯ ಕೋಳೀಗಿರಿಯಣ್ಣನ ಮನೆಗೆ ಹೋದದ್ದೂ ; ಹಿಂತಿರುಗಿ ಬರುವಾಗ ಹಿತ್ತಲ ಪಾಗಾರ ಹತ್ತಿ ಇಳಿಯುವಾಗ ಮುಗ್ಗರಿಸಿ ಬೀಳುವಂತಾದದ್ದು ; ಮೋರೆಯ ಮೇಲೆ ನೋವು. ಯಾರೂ ಕಂಡಿಲ್ಲ ತಾನೇ ? ಎನ್ನುವಂತಹ ಭಯ. ತನಗಾಗ ಆರು ವರ್ಷದ ವಯಸ್ಸಿರಬೇಕು. ಅಮ್ಮ ಆ ಹೊತ್ತಿಗೆ ಶೂದ್ರರ ಕೇರಿಗೆ ಹೋದದ್ದು ಗಿರಿಯಣ್ಣನ ಹೆಂಡತಿಯಿಂದ ಅಕ್ಕಿಯನ್ನು ಬೇಡಿ ತರುವ ಉದ್ದೇಶದಿಂದ ಇರಬೇಕು. ತಮ್ಮ ಜಾತಿಯವರಿಗಿಂತ ಹೆಚ್ಚಾಗಿ ಗಿರಿಯಣ್ಣನ ಹೆಂಡತಿಯಿಂದ ಅಡಚಣೆಯ ವೇಳಿಗೆ ಸಹಾಯ ಪಡೆಯುತ್ತಿದ್ದಳು. ಆದರೆ ಎಲ್ಲ ವ್ಯವಹಾರ ಕದ್ದು ಮುಚ್ಚಿ ಹೀಗೆ ಕತ್ತಲೆ ಕವಿಯುವ ಹೊತ್ತಿಗೆ ! ಮರುಗಳಿಗೆ ಅಪ್ಪನ ನೋವು ತುಂಬಿದ ಮೋರೆ….ಬಾವಿಯಿಂದ ನೀರು ಸೇದುವಾಗ ಅಮ್ಮನ ಜೊತೆ ಗುಜುಗುಜು ಮಾತನಾಡುತ್ತಿದ್ದುದರ ಚಿತ್ರ ಕಣ್ಣಮುಂದೆ : ಅಪ್ಪ ಅಂಗಡಿಯಿಂದ ಓಡೋಡಿ ಬಂದಂತೆ ಬಂದಿದ್ದ. ಅಮ್ಮ ಬಾವಿಯ ಬಳಿ ಇದ್ದದ್ದನ್ನು ಕಂಡು ಅವಳನ್ನು ಅಲ್ಲೇ ಸಂಧಿಸಿದ್ದ. ಇಬ್ಬರ ಮೋರೆಯ ಮೇಲೂ ಆಮೇಲೆ ಕಂಡ ಕಳವಳ ತಾನು ಈವರೆಗೂ ಕಂಡಿರದ ಅಣ್ಣನನ್ನು ಕುರಿತದ್ದಾಗಿತ್ತು ಎಂಬ ಅನ್ನಿಸಿಕೆ : ಆಗ ಮಾತಿನಲ್ಲಿ ಒಡೆದಿರದ ನಿಗೂಢತೆಯನ್ನು ಇನ್ನೂ ಹೊಟ್ಟೆಯೊಳಗೇ ಇಟ್ಟುಕೊಂಡ ಚಿತ್ರಗಳು ಕಣ್ಣಮುಂದೆ ನಿಂತಂತಾಗಿ ಹುಟ್ಟುತ್ತಿದ್ದ ಭಾವನೆಗಳು ಈಗಲೂ ಮಾತಿನ ತೆಕ್ಕೆಗೆ ಒಳಗಾಗುತ್ತಿರಲಿಲ್ಲ. +ಹೊಟ್ಟೆ ಅತೀವ ಹಸಿದಿತ್ತು. ಹೊಟೆಲ್ಲಿಗೆ ಹೋಗೋಣವೆಂದರೆ ದಾಡಿ ಮಾಡಿಕೊಳ್ಳಬೇಕು ; ಸ್ನಾನವಾಗಬೇಕು, ಸ್ನಾನ ಊಟಗಳ ನೆನಪಿನೊಂದಿಗೇ ಮೂಡಿತ್ತು ಅರಿವು : ಕೊನೆಗೂ ಖಂಬಾಟಾ ತಾನು ಕೇಳಿದ ಪತ್ರ ಹಾಗೂ ಕಾರು ಕಳಿಸಲಿಲ್ಲ. ತನ್ನ ಮಾತನ್ನು ಆತ ಸೀರಿಯಸ್ಸಾಗಿ ತೆಗೆದುಕೊಂಡಿರಲಿಕ್ಕೇ ಇಲ್ಲ. ಅಥವಾ….ಕದ ಬಡೆದ ಸದ್ದು ಕೇಳಿಸಿ ಕದ ತೆರೆದ : ಮಗ್ಗುಲುಮನೆಯ ಯಜಮಾನ ! ಪೈಜಾಮಾ, ಉದ್ದ ತೋಳುಗಳಿದ್ದ ಕಾಲರ್ ಇಲ್ಲದ ಬಿಳಿಯ ಅಂಗಿ ; ತಲೆಗೆ ಯಾವಾಗಲೂ ತಲೆಗಿಂತ ಸ್ದಣ್ಣದಾದ ಕರಿಯ ಟೊಪ್ಪಿಗೆ_ಈಗಷ್ಟೇ ತೆಗೆದಿಟ್ಟುಬಂದಿರಬೇಕು : ಹಣೆಯ ಮೇಲೆ ಬಿಗಿಯಾದ ಟೊಪ್ಪಿಗೆ ಮೂಡಿಸಿದ ಗೆರೆ ! ಪೆದ್ದನಂತೆ ಕೈಮುಗಿದು ಹಲ್ಲು ತೋರಿಸಿ ನಕ್ಕ. ನಾಗಪ್ಪ ಹೈದರಾಬಾದಿಗೆ ಹೋದಮೇಲೆ ಇಲ್ಲಿ ನಿಲ್ಲಲು ಬಂದ ಜೋಡಿ ಇದು. ಕಳೆದ ಏಳೆಂಟು ತಿಂಗಳಲ್ಲಿ ಈತನನ್ನು ಆಗೀಗ ನೋಡಿದ್ದೇನೇ ಹೊರತು ಮಾತನಾಡಿಸಿರಲಿಲ್ಲ. ಹೆಂಡತಿ ಒಮ್ಮೆ ಮಾತನಾಡಿಸಿದಾಗ ಸಿಟ್ಟಿನಿಂದ ಉತ್ತರ ಕೊಟ್ಟಿದ್ದ. +“ನಾನು ಮಗ್ಗುಲು ಮನೆಯ ಧೋಂಡೋಬಾ ಶಿಂಫೀ. ನಿಮಗೆ ಮೈಯಲ್ಲಿ ಹುಷಾರಿಲ್ಲವಂತೆ, ನಿಮ್ಮ ಊಟವಾಗಿರಲಿಕ್ಕಿಲ್ಲ ; ನಮ್ಮಲ್ಲೇ ಮಾಡಬಹುದಿತ್ತು….” +ನಾ‌ಅಪ್ಪ ತನ್ನ ಕಿವಿಗಳನ್ನು ತಾನೇ ನಂಬದಾದ. ಆಶ್ಚರ್ಯಚ್ಕಿತನಾಗಿ ನೋಡುತ್ತ ನಿಂತ. +“ಎಲ್ಲ ತಯಾರಾಗಿದೆ. ಇವಳೇ ನಿಮ್ಮನ್ನು ಊಟಕ್ಕೆ ಕರೆಯುವಂತೆ ಸೂಚಿಸಿದಳು. ಬಂದರೆ ನಾನ ಜತೆಗೇ….” +***** +ಮುಂದುವರೆಯುವುದು +ಸಂಸ್ಕಾರ ಕಾದಂಬರಿಯನ್ನು ಪೂರ್ಣವಾಗಿ ಪ್ರಕಟಿಸುತ್ತಿರುವುದರ ಉದ್ದೇಶ ಕೇವಲ ಶೈಕ್ಷಣಿಕ ಹಾಗು ಅಕಾಡೆಮಿಕ್ ಕಾರ್ಯಗಳಿಗೆ ನೆರವಾಗಲು ಮಾತ್ರ. ಉಳಿದವರು ಈ ಕೃತಿ ಪುಸ್ತಕದ ರೂಪ್ದಲ್ಲಿ ನಿಮ್ಮ ಸನಿಹದಲ್ಲಿ ದೊರೆಯುವುದಾದರೆ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಿಗದೇ ಇದ್ದ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […] +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_274.txt b/Kannada Sahitya/article_274.txt new file mode 100644 index 0000000000000000000000000000000000000000..3fe44197396938d2b7900da826363df259bf4e2b --- /dev/null +++ b/Kannada Sahitya/article_274.txt @@ -0,0 +1,90 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! +ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; +ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು +ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. +ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು +ತಾಗಿ ತುರುಗಿ ದಿಗ್ವಿಜಯಕೆಯ್ದುವಾ ಸೈನ್ಯದಂತೆ ನಡೆದು; +ಉಣ್ಣೆಯಾಗಿ ಮಿದುಬೆಣ್ಣೆಯಾಗಿ ಹಿಂಜಿರುವ ಅರಳೆಯಾಗಿ +ತೊಟ್ಟಿಲಾಗಿ ತೂಗುವವು ಮೋಡವಡೆ ನಡೆವ ಬೆಟ್ಟವಾಗಿ. +ಕ್ಷಿತಿಜದಂಚಿನಲಿ ಸಂಚುವೆತ್ತು ಮುಂಜಾವು ಮೌನವಾಂತು +ತಲೆಯ ಬಾಗಿ ನಿಂತಿರಲು ಬಾಲರವಿ ಕಿರಣಕ್ಕೆಗಳೋತು, +ಉಬ್ಬಿ ತಬ್ಬಿ ಚೆಂಬೆಳಕನುಣಿಸಿ ಹೊಂದೊಡವ ತೊಡಿಸಿ ಮುಡಿಸಿ +ರಮಿಸಲಾಗಿ ನಿಬ್ಬಣದ ಬೀಗರೆನೆ ಹರುಷ ಗರುವವೆರಸಿ- +ನೀಲಗಗನದಲಿ ತೇಲಿಬಹವು ಸಿಂಗಾರಗೊಂಡು ಮುದದಿ +ಅಂತರಿಕ್ಷದಲಿ ಯಕ್ಷಕನ್ನೆಯರ ಬಿನದ ಲೀಲೆ ತೆರದಿ; +ವ್ಯೋಮರಂಗದಲಿ ಗಾಳಿಸಂಗದಲಿ ನಲಿದು ನೃತ್ಯವಾಡಿ +ಮುಗಿಲಯುಗಲಗಳು ಮುಂದೆ ಸಾಗುವವು ಬಂದ ದಾರಿ ನೋಡಿ. +ಹೊತ್ತು ಮೀರಿ ನಡುನೆತ್ತಿಗೇರಿ ಬರೆ ಬಿಸಿಲಹಣ್ಣನುಂಡು +ಮೆಲ್ಲ ಮೆಲ್ಲನೇ ಕಲ್ಲು ಬಂಡೆಯೊಲು ನಿಲ್ಲುವುದನ್ನು ಕಂಡು, +ಮೂರು ದಾರಿ ಕೂಡಿರುವ ಧೂಳಿಯೊಡನೆದ್ದು ಗಾಳಿ ಬೀಸೆ +ಎತ್ತಲೆತ್ತಲೋ ಕತ್ತನೆತ್ತಿ ಸಾಗುವವು ಜೀವ ರೋಸೆ. +ಯಾವ ಹರಕೆಯನ್ನು ಹೊತ್ತು ಹಡೆದಳೋ ಕಡಲರಾಣಿ ಇವನು! +ನಿಮಿಷ ನಿಮಿಷಕೂ ಭ್ರಮಿಸುತಿರುವ ಕ್ರಮವರಿತ ತ್ರಿಪುರ ಹವಣು. +“ನಿಂತ ಬಾಳು ಬಾಳಲ್ಲ, ಮಲೆತು ನಿಂತಿರುವ ನೀರು ನೋಡ” +ಎಂದು ಜಗದ ಜಂಗುಳಿಗೆ ಅರುಹಲಿಕೆ ಬಂದವೇನೊ ಮೋಡ! +ಕಾದು ಸೀದು ನೆಲ ಮೋದಗೆಟ್ಟು, ಬಾಯ್ವಿಟ್ಟು ಹಲುಬುತಿರಲು +ತಾರವಾದ ತಿರೆ ಪ್ರಾಣತಂತುವೊಲು ತಂಪು ಗಾಳಿ ಹುಗಲು +ಕರುಣೆ ಕರಗಿ ನೀರಾಗಿ ಸುರಿವ ತೆರ ಮೋಡದೊಡಲಿನಿಂದ +ಮಳೆಯು ಬೀಳೆ ಹೊಸ ಕಳೆಯು ಹೊಮ್ಮುವದು ಇಳೆಯ ಬಸಿರಿನಿಂದ. +ತಂಪು ಸೊಂಪು ಏನಿಳೆಯ ಕಂಪು! ಸುರಿಮಳೆಯ ತಳಿಯ ಸೆಳಕು +ಮೋಡ ಸರಿಸಿ ಕಣ್ಣಾಡಿಸಿರಲು ರವಿ, ಹೊನ್ನ ಬಿಸಿಲ ಥಳಕು. +ನರಿಯ ಮದುವೆ ನಡೆದಿರಲು ಮುತ್ತುಹನಿ ಚೆಲ್ಲವರಿದ ಸೊಗವು, +ತಡೆದರಿಲ್ಲ ಚಣ ಮಾಯವಾಗುವುದು ಮುಗಿಲಕಾಂತಿ ಹರವು. +ಆಹ! ನೋಡ ಮಳೆಬಿಲ್ಲ ಮೋಡ ಹನಿಯಂಬನೆಸೆಯುತಿಹುದು +ಏಳು ಬಣ್ಣಗಳ ಮೇಳದಲ್ಲಿ ಕಾರಂಜಿ ಪುಟಿಯುತಿಹುದು. +ಬಾನು ಬುವಿಯ ಅಂತರವನಳೆದು ಮಳೆಬಿಲ್ಲ ಸೇತು ನಿಲಿಸಿ +ಮೆರೆಯುತಿಹುದು ಸಿರಿ ಸಗ್ಗದಪ್ಸರೆಯ ಸೆರಗ ಬೆರಗೊ ಎನಿಸಿ. +ಅಸ್ತಗಿರಿಗೆ ರವಿ ತೆರಳುತಿರಲು ಓ, ಬಾನ ತುಂಬ ಹಬ್ಬ! +ಬಣ್ಣದೋಕುಳಿಯ ಮಿಂದ ಮೇಘಪುರ ಬಾನಿನೆದೆಯ ಕಬ್ಬ. +ಸಂಜೆಯಾಗಸದಿ ಕಪ್ಪು ಮೋಡವೂ ಹೂವಿನಂತೆ ಅರಳಿ +ಬಾಳು ಒಳ್ಳಿತೆನೆ ಕಣ್ಣ ಸೆಳೆಯುವದು ಬಿಟ್ಟು ಬಿಡದೆ ಮರಳಿ. +ಇರುಳಿನಾಳದಲಿ ತೆಪ್ಪಗಾಗಿ ತಿರೆ ನಿದ್ರೆಗೈಯುತಿರಲು +ಕಾರಮುಗಿಲು ತೇರೈಸಿ ಬರಲು ಜಗ ಕಪ್ಪು ತಿಮಿರ ಕಡಲು; +ಮಿಂಚು ಗೊಂಚಲಲಿ ಬೆಳಕ ಚಿಮ್ಮುತಲಿ ಹೊಸತು ಮಾಯೆ ಎನಿಸಿ +ಹೊಂಚು ಹಾಕಿ ಧಡಧಡಿಸಿ ಗುಡುಗೆ ಘನಘೋರ ಮಳೆಯಸುರಿಸಿ. +ಚಿಕ್ಕ ಚಂದ್ರಮಾ ಏನು ಸಂಭ್ರಮಾ ಮನದ ಭ್ರಮೆಯ ಹರಿಸಿ +ಮನುಜಲೋಕ ಮಂದಾರನಾಕವಾಗಿರುವುದೇನೋ ಸ್ಮರಿಸಿ; +ತಿರುಕರಂತೆ ಸೋಮಾರಿಯಂತೆ ತುರುಮೋಡ ತಿರುಗುತಿರಲು +ಚಂದ್ರನೆದೆಯ ಚೆಲ್ವೆಳಕ ನೀಡುವನು ಸ್ನೇಹಕಾಗಿ ಬರಲು. +ಚಂದ್ರಕಾಂತಶಿಲೆಯಂತೆ ಮೋಡ ಬೆಳುದಿಂಗಳನ್ನು ಕುಡಿದು +ಬಾನದೇಗುಲದಿ ಬೆಳ್ಳಿ ತೇರಿನೊಲು ಮಂದವಾಗಿ ನಡೆದು- +ಸಾಲುಗೊಂಡು ಕೆಲ ಮೋಡದಂಡು ಗಿರಿಶಿಖರದಲ್ಲಿ ತಳುವಿ +ಬೆಳ್ಳಿ ಬಟ್ಟಲದ ಸುಧೆಯ ಕಾಯುವವು ಆಗದವರ ತರುಬಿ. +ಏಸು ರಾಜ್ಯದಲಿ ಅಲೆದರೂನು ನೆಲೆಯಿಲ್ಲದಾಯಿತಿವಕೆ +ಏಸೊ ಜನದ ಮತ್ತೇಸೂ ಬನದ ಸಿರಿಕಾಂಬ ಕಣ್ಣೊ ಇವಕೆ! +ಸುತ್ತುತಿರುವ ಧರ ಸುತ್ತು ತಿರುಗುತಿವೆ ತಲುಪಲಿಲ್ಲ ಕೆಲಕೆ; +ಸುರಿಯಬೇಕು ಸರಿ, ನೀಗಬೇಕು ಉರಿ- ಎಂಬ ಬಯಕೆ ಇವಕೆ. +ಮುಗಿತವಿಲ್ಲದಿಹ ಗಗನದಲ್ಲಿ ಹಗಲಿರುಳಿನಲ್ಲು ಪಯಣ +ಬೆಂದ ನೆಲಕೆ ಕಣ್ಣೀರ ಕರೆಯೆ ಅದೆ ಸಾರ್ಥಮಾಯ್ತು ಹರಣ. +ದಿಗ್ದಿಗಂತಗಳ ಹಂತವೇರಿ ಅಗ್ಗಲಿಸುತಿಹವು ಕಣ್ಣ, +ಬಾನದಿಬ್ಬಣದಿ ಬಣ್ಣ ತಿಣ್ಣದಲಿ ನುಣ್ಣಗಾದುವಣ್ಣ. +ಬಾಲ್ಯದಿಂದಲೂ ಮುಗಿಲ ಕಂಡು ಮೈಮರೆತ ದಿನಗಳೆನಿತು! +ಆವುಗಳಾಟದಲಿ ಮೈಯಮಾಟದಲಿ ಜೀವ ತುಂಬಿ ಬಂತು. +ಗಾಸಿಗೊಂಡ ಎದೆಯಾಸೆ ಕನಸುಗಳನಲ್ಲಿ ನೇಯುತಿಹೆನು +ಹಕ್ಕಿ ಮೋಡದೆಡೆ ಹಾರಿ ಹಾಡುವೊಲು ಕರೆಯ ಕೇಳುತಿಹನು. +ಮೇಘಮಂಡಲವು ಜಗದ ಜನದ ಮನದಾಸೆ ಗೋಪುರಹುದು +ಗತಿಸಿ ಹೋದ ಹಿರಿಜೀವರುಗಳ ಹಿರಿ ತತ್ವ ಸಾರುತಿಹುದು; +ಧೀರ ಪೌರುಷದಿ ಬಾಳ ಬಿತ್ತರಿಸಿ ಮಿಂಚಿರೆಂಬ ಉಲುಹು +ಇಷ್ಟವಿರದ ಕಡುಕಷ್ಟವಡಸಿದರು ಮೊಳಗಿರೆಂಬ ಬಲುಹು. +ಗಾಳಿಗೂಡಿ ಕಿರುಮೋಡವಾಗಿ ಬಾನೆಲ್ಲ ಅಲೆಯುವಾಸೆ, +ಬಾನದೇಗುಲದಿ ನಮ್ರವಾಗಿ ಮೈದುಂಬಿ ನಿಲ್ಲುವಾಸೆ, +ಮಳೆಯಬಿಲ್ಲ ಮೈದೊಡವ ಧರಿಸಿ ಮಣಿಹನಿಗಳಾಗುವಾಸೆ, +ಚಂದ್ರನೆದೆಯ ತಿಳಿಯೊಲವನುಂಡು ಶ್ರೀಕಾಂತಿಪಡೆಯುವಾಸೆ. +ನೋಡೆ ನೋಡೆ ಎನಿತನಿತೊ ಆಸೆ ಅದಕಾದಿ ಅಂತ್ಯವಿಲ್ಲ; +ಹಿಂಡು ಹಿಂಡಿನಲಿ ತೋರಿ ಮರೆಯುತಿವೆ ಏಕೊ ಯಾವ ಬಲ್ಲ; +ಹಿರಿದು ಮನಸು ಹಿರಿದಾದ ಭಾವ ಮುಗಿಲಗಲವಾಗಬೇಕು +ಮೋಡನೋಡಿ ದಿಙ್ಮೂಢನಾಗಿ ಮೈಮರೆವನಲ್ಲ ಸಾಕು. +***** +ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […] +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +ಹಗಲೆಂದರೆ ಇವಳು ಕಾಣುವ ಕನಸು ಹೊತ್ತು ತರಬೇಕು ಇವಳಿದ್ದಲ್ಲಿ, ನಿದ್ದೆ-ಮಂಪರು-ಕನಸು-ಕಂಪನ; ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ ರಾತ್ರಿ ಚಾದರದಡಿಗೆ ದಂಡು ದಂಡು ಮಂದಿ ಬಂದು ಬೀಳುತ್ತಾರೆ ಉಂಡಷ್ಟೂ (ಸಹ) ಭೋಗ ಕೊಂಡಷ್ಟೂ (ಸ)ರಾಗವೆಂದು. ಸಾವಿರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_275.txt b/Kannada Sahitya/article_275.txt new file mode 100644 index 0000000000000000000000000000000000000000..deaf89ef393df87a6a584b9232e340e951bc7a3f --- /dev/null +++ b/Kannada Sahitya/article_275.txt @@ -0,0 +1,89 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ ಎಂಬ ಭ್ರಮೆ ಹುಟ್ಟಿಸುವ ಸ್ಥಳವಿದು. ಅದೇ ಗುಂಡಿ ಬಿದ್ದ, ಧುಳು ಮುಖಕ್ಕೆ ಹೊಡೆವ ರಸ್ತೆಗಳು. ಎಲ್ಲಿ ನೋಡಿದರೂ ಕಸ. ಹಸಿರಿನ ಮಾತೇ ಕೇಳಿರದ ರಾವು ಬಡಿದ ಬೀದಿಗಳು. ರಣರಣ ನೆತ್ತಿ ಸುಡಿಸಿ, ದಳದಳ ಬೆವರು ಬಸಿಯುವ ಕೆಟ್ಟ ಬಿಸಿಲು. ಜೋಂಯ್ ಎಂದು ರಾಗಬದ್ಧವಾಗಿ ಒಡೆದು ಕೊಡುವ ಸೋಡಾಗಳನ್ನು ಆಕಾಶಕ್ಕೆ ಮುಖ ಮಾಡಿ, ಒಂಟಿಗಾಲಲ್ಲಿ ನಿಂತು ಗಂಟಲಿಗಿಳಿಸುವ ಜನ. ಹಾಳು ಬಿದ್ದ ಕೋಟೆ, ಸಿಕ್ಕುಸಿಕ್ಕಾದ ಸಿಕ್ಕಿಹಾಕಿಕೊಂಡ ದಾರದ ಉಂಡೆಯಂತೆ ಎಲ್ಲೆಂದರಲ್ಲಿ ಕಲ್ಲಿನಿಂದ ಕಟ್ಟಿದ ಮನೆಗಳು. ಸರ್ಕಸ್ಸಿನಲ್ಲಿ ಕತ್ತು ಬಗ್ಗಿಸಿ ರದ್ದಿ ಮೇಯುವ ಕತ್ತೆಗಳು. ಡರ್ ಡರ್ ಎಂದು ಬಾಲ ಅಲುಗಿಸುತ್ತ ಎಗ್ಗಿಲ್ಲದೆ ಜನರನ್ನೆ ಓಡಿಸಿಕೊಂಡು ಹೋಗುವ ಹಂದಿಗಳ ಗುಂಪು. ಜಾಲಿ ಮುಳ್ಳು ಪೊದೆ ಕಂಡಲ್ಲಿ ಸರಕ್ಕನೆ ಚಡ್ಡಿಯೋ, ಧೋತರ‌ಒ ಬಿಚ್ಚಿ ಒಂದು ಎರಡುಗಳನ್ನು ಪಾಂಗಿತವಾಗಿ ಮುಗಿಸುವ ಮಂದಿ…ಹೀಗಿತ್ತು ಊರು. ಹೀಗೆ ಇದು ಊರು. ಹೀಗೆಯೇ ಇರುತ್ತದೆ ಊರು. +ನಾನು ಚಿಕ್ಕವನಾಗಿದ್ದಾಗಿನಿಂದ ಬೆಳೆದು ದೊಡ್ಡವನಾಗಿ ಯಾವ ಕೆಲಸಕ್ಕೂ ಬಾರದ ಬಿಕಾಮಿಯಾಗಿ ಓಡಾಡುವವರೆಗೆ ಅಂದರೆ ಸುಮಾರು ಇಪ್ಪತ್ತೈದು ವರ್ಷಗಳವರೆಗೆ ಈ ಊರಿಗೆ ಯಾವ ಬದಲಾವಣೆಯ ಗಾಳಿಯೂ ಬೀಸಲಿಲ್ಲ. ವಿಕಾಸವಾದಕ್ಕೆ ಸೆಡ್ಡು ಹೊಡೆದು ನಿಂತರೆ ಯಾರೇನು ಮಾಡಲು ಸಾಧ್ಯ? ಊರಿನ ಮೇಯಿನ್ ರೊಡನಾಗ ಒಂದ್ ಕಲ್ಲು ತಂದ ಹಾಕಲೆ. ಮೂರು ವರ್ಸಾದರೂ ನಾ ಅಂಬ ಗಂಡಸು ಸೂಳೆ ಮಗ ಅದನೆತ್ತಿ ಬಗಲಿಗಿಟ್ಟರೆ ಕೇಳಲೆ ಎಂದು ಗೆಳೆಯನೊಬ್ಬ ಓಪನ್ ಚಾಲೆಂಜ್ ಕಟ್ಟಿದ್ದ. ಎಸ್.ಪಿ ರಂಗ್ರಾವ್ ನಟಿಸಿದ್ದ ತೆಲುಗು ಚಿತ್ರವೊಂದರ ಪೋಸ್ಟರನ್ನು ಇಪ್ಪತ್ತು ವರ್ಷಗಳ ನಂತರವೂ ಜತನವಾಗಿ ಕಾಪಾಡಿಕೊಂಡು ಬಂದ ಕಟ್ಟಡವನ್ನು ನಾನು ಇತ್ತೀಚೆಗೆ ನೋಡಿ ದಂಗಾಗಿದ್ದೆ! ಊರಿನ ಐತಿಹಾಸಿಕ ಪ್ರಜ್ಞೆಗೆ ತಲೆದೂಗಿದ್ದೆ. +ಮೂವತ್ತು ವರ್ಷಗಳಿಂದ ದಾಂಬರು ಕಾಣದ ರಸ್ತೆ ಈ ಊರಿಗೆ ಮಾಮೂಲು. ಹತ್ತು ದಿನಕ್ಕೊಮ್ಮೆ ನೀರು ಕಾಣುವ ಕೊಳಾಯಿ ತೀರ ಸಹಜ. ಪ್ರತಿ ಎಲೆಕ್ಷನ್ನಿನಲ್ಲಿ ಕಾಂಗ್ರೆಸ್ ಗೆದ್ದು ಬರುವುದು ಸಂಪ್ರದಾಯ. ಬೀರು ಕುಡಿದು ಹೊಟ್ಟೆ ಬಿಟ್ಟುಕೊಂಡು ಓಡಾಡುವ ರೆಡ್ಡಿ, ಕಮ್ಮಾಗಳು, ಕವಿಗೋಷ್ಠಿ, ನಾಟಕ ಎಂದು ಓಡಾಡುವ ಉಳ್ಳಾಗಡ್ಡಿಗಳು. ಭಾಗವತವೊ ಹರಿಕಥೆಯೊ ಕೇಳಲು ಗುಡಿಗಳಿಗೆ ಹಾರುತ್ತ ಹಾರುತ್ತ ಹೋಗುವ ಹಾರುವರು. ನಾಲ್ಕುನಾಲ್ಕು ಜನ ಕೂತ ರಿಕ್ಷಾ ಎಳೆಯಲು ತೇಕುವ ಬಡಪಾಯಿಗಳು….ಪರವೂರಿನವರಾದರೆ ನಿಮಗೆ ವಿಚಿತ್ರವೆನ್ನಿಸಿ ಮನರಂಜನೆ ನೀಡುತ್ತದೆ. +ಇಲ್ಲಿಗೆ ‘ಅಮ್ಮ’ (ಇಂದಿರಮ್ಮ), ಮಹಾತ್ಮಗಾಂಧಿ ಇಬ್ಬರೂ ಬಂದು ಹೋಗಿದ್ದಾರೆ. ಮಹಾತ್ಮ ಇಲ್ಲಿಗೆ ಬಂದಾಗ ಆ ತಾತನಿಗೆ ಯಾರು ಸನ್ಮಾನಿಸಿ ಹಾರ ಹಾಕಬೇಕು ಎಂಬ ವಿಚಾರಕ್ಕೆ ಎರಡು ಗುಂಪುಗಳಿಗೆ ಜಗಳ ಹುಟ್ಟಿ ಯಾವ ಪಾರ್ಟಿಯವರೂ ರೈಲ್ವೆ ಸ್ಟೇಷನ್ನಿಗೆ ಹೋಗಲಿಲ್ಲವಂತೆ! ಕೊನೆಗೆ ಗಾಂಧಿ ಬೇರೆಲ್ಲೊ ಉಳಿದು ಎರಡೂ ಗುಂಪಿಗೆ ರಾಜಿ ಮಾಡಿಸಬೇಕಾಯಿತಂತೆ. +ಇಂಥ ನಾಲ್ಕಾರು ಊರು ನಿಮಗೆ ಸಿಕ್ಕಬಹುದು. ಬರೀ ಊರಿನ ಬಗ್ಗೆ ಹೇಳುವುದಾದರೆ ಕಥೆ ಬರೆದು ಸಂಭಾವನೆ ಗಿಟ್ಟಿಸುವ ಪ್ರಮೇಯವೂ ಇರಲಿಲ್ಲ. ಹೇಳಿದೆನಲ್ಲ ಇಂಥ ಊರು ಸಿಗಬಹುದು. ಆದರೆ ‘ಜಾಲಿಬೆಂಚೆ’ ಸಿಗಲಾರಳು! ಹೌದು, ಇದು ಕಾಡು ಹೂವಿನಂತೆ ಚೆಲುವೆಯಾಗಿದ್ದ ಬೇಡರಜಾತಿಯ ಹೆಣ್ಣಿನ ಹೆಸರು. ಜಾಲಿಬೆಂಚಿ ಎಂಬ ಊರಿನವಳಾದ ಆಕೆಯ ನಿಜವಾದ ಹೆಸರು ಚಿನ್ನಲಕ್ಷ್ಮಮ್ಮ. ಆದರೆ ಜನ ಆ ಊರಿನ ಹೆಸರಿನಲ್ಲಿ ಏನು ಕಂಡರೊ ಅವಳನ್ನು ಜಾಲಿಬೆಂಚಿ ಅಂದರು. ಬಹುಶಃ ಆಕೆ ಆ ಊರಿನಿಂದ ಓಡಿ ಬಂದಿದ್ದು ಕಾರಣವಿರಬೇಕು. ಆದರೆ ಹಾಗೆ ಕರೆಯುವಾಗ ಆ ಪದಕ್ಕೆ ಅಸಾಧ್ಯ ಅಶ್ಲೀಲತೆ ಅಂಟಿದೆ ಎಂಬಂತೆ ಉಚ್ಚರಿಸುತ್ತಿದ್ದರು. ಹಾಗೆ ಉಚ್ಚರಿಸಿದಾಗಲೊಮ್ಮೆ ಅವಳೊಂದಿಗೆ ಮಲಗಿ ಸುಖಿಸಿದಷ್ಟು ಸಂತೋಷಪಡುತ್ತಿದ್ದರು. +ಆಕೆ ಭೀಮಯ್ಯ ಸರ್ಕಲ್ಲಿನ ಅನಭಿಷಿಕ್ತ ಮಹಾರಾಣಿಯಾಗಿದ್ದಳು. ಒಂದು ಚಹಾದಂಗಡಿ, ಮೂರು-ನಾಲ್ಕು ಮಟ್ಕಾ ಟೇಬಲ್ಲು, ಸರಾಯಿ ಅಡ್ಡೆ, ಚಿಟಿಕೆ ಹೊಡೆದರೆ ನಾನಾ ಅನ್ನುವ ಗಂಡಸರು ಸಂಬಳ ಸುರಿಸುತ್ತ ಡೊಗ್ಗಾಲು ಹಾಕಿ ಕೂರುವ ವರ್ಚಸ್ಸು ಅವಳಿಗಿತ್ತು. ಇನ್ನೇನು ಬೇಕಿತ್ತು ಅವಳಿಗೆ? ಆದರೆ ಅದಕ್ಕೆ ಸವೆಸಿದ ಹಾದಿ ಭಯಾನಕವಾಗಿತ್ತು. ನೆನೆಸಿಕೊಂಡರೆ ಅವಳ ಮೈಗೆ ಮುಳ್ಳೇಳುತ್ತಿದ್ದವು. ಆದರೆ ಅಂಥ ದಾರಿ ಸವೆಸದಿದ್ದರೆ ತಾನು ದೊರೆಸಾನಿಯಾಗುವುದು ಅಸಾಧ್ಯವೆಂದೂ ಆಕೆಗೆ ಗೊತ್ತಿತ್ತು. +ಇಡೀ ಕುಂಟೆಗಡ್ಡಿಗೆ ಶೀಟು ಹಾಕಿದ್ದು, ಸಿಮೆಂಟು ಗೋಡೆಗಳಿದ್ದ ಮನೆಯೆಂದರೆ ಅವಳೊಬ್ಬಳದೇ. ಉಳಿದ ನೂರಾರು ಗುಡಿಸಲುಗಳಿಗೆ ಆಪು ಹುಲ್ಲಿನ ದಂಟೇ ಗತಿಯಾಗಿತ್ತು. ರಾತ್ರಿ ಎಂಟರ ನಂತರ ನೀವು ಆ ಕುಂಟೆಗಡ್ಡೆ ಗುಂಟ ಹೋದರೆ ಬೇರೆ ಜಗತ್ತೇ ತೆರೆದುಕೊಳ್ಳುತ್ತಿತ್ತು. ನಾವು ಚಿಕ್ಕವರಾಗಿದ್ದಾಗ ಮೊಹರಂ ಸಮಯದಲ್ಲಿ ಪೀರಲುಗಳು ಕುಂಟೆಯಲ್ಲಿ ಸಾಯುವುದನ್ನು ನೋಡಲು ಹೋಗುತ್ತಿದ್ದಾಗ ಹೊರಸಿನ ಮೇಲೆ ಕೂತು ಸಿಗರೇಟು ಸೇದುತ್ತ, ಕುಡಿಯುತ್ತ ಕೂತ ಜಾಲಿಬೆಂಚಿ ಕಾಣುತ್ತಿದ್ದಳು! ಅವಳು ಹೊರಸಿನ ಮೇಲೆ ಗುಟುಕು ಹಾಕುತ್ತ ಕೂತಿದ್ದರೆ ಗಂಡಸರು ಎಂದು ತೊಡೆ ಅಲ್ಲಾಡಿಸಿವ ಮುಂಡೇಮಕ್ಕಳು ಅವಳ ಕೆಳಗೆ ಸರಾಯಿ ಗ್ಲಾಸು ಹಿಡಿದು ನೆಲದ ಮೇಲೆ! ಅವಳನ್ನು ನೋಡುವುದೆಂದರೆ ನನಗೆ ಭಾರೀ ಖುಷಿ! ಅವಳ ಬಗೆಗಿನ ಕಥೆಗಳೆಂದರೆ ಇನ್ನೂ ಮಜ! ಆಕೆ ಗಿಚ್ಚಲು ಎನ್ನುವನನ್ನು ಹಾರಿಸಿಕೊಂಡು ಬಂದಿದ್ದಳೆಂದು ಜನ ಹೇಳುತ್ತಿದ್ದರು. ಅವಳ ಹಿಂದೆ ಗಿಚ್ಚಲು ಏನು ಯಾರಾದರೂ ಓಡಿ ಹೋಗಬಹುದಿತ್ತು. ಹಾಗಿದ್ದಳು ಜಾಲಿಬೆಂಚಿ! +ಆದರೆ ಕುಂಟೆ ಗಡ್ಡೆಯತ್ತ ರಾತ್ರಿ ಇರಲಿ ಹಗಲೂ ಹೋಗಬಾರದಂಥ ಭಯಾನಕ ಕಥೆಗಳನ್ನು ದೊಡ್ಡವರು ಹೇಳುತ್ತಿದ್ದರು. ಅವು ನಿಜವೂ ಇದ್ದವೇನೊ. ರಾತ್ರಿಯೆಲ್ಲಾ ದಂಚಿಸಿಕೊಂಡು ಹರಿದ ತುಟಿಗಳಲ್ಲಿ ಕಾಲು ಅಗಲಿಸಿಕೊಂಡು ಓಡಾಡುವ ರಖೇಲಿಗಳು ಹಗಲೆಲ್ಲ ನೆಲ-ಆಕಾಶ ಒಂದು ಮಾಡುವಂತೆ ಬೈದಾಡುತ್ತ ಓಡಾಡುತ್ತಿದ್ದರು. ಮೂವರು-ನಾಲ್ವರು ಸೇರಿದರೆ ಒಂದು ಜಂಗೀ ಹೊಡೆದಾಟವಾಗಿ ಒಬ್ಬನ ಕಿವಿ, ಇನ್ನೊಬ್ಬರ ಬೆರಳು ಚಾಕುವಿನ ಚೂಪಿಗೆ ಕತ್ತರಿಸಿ ಉದುರುತ್ತಿದ್ದವು. ಕೆಲವರು ಹರಿದುಬಿದ್ದ ಅವಯವಗಳನ್ನೇ ರಿಕ್ಷಾದಲ್ಲಿ ಹಾಕಿಕೊಂಡು ಪೊಲೀಸ್ ಸ್ಟೇಶನ್‌ಗೆ ಲಬೊಲಬೊ ಬಡಿದುಕೊಳ್ಳುತ್ತ ಓಡುತ್ತಿದ್ದರು. ಇವನ್ನೆಲ್ಲ ನೋಡುತ್ತಲೆ ನಾನು ಬೆಳೆದಿದ್ದು. +ನನ್ನ ವಯಸ್ಸಿನ ಹುಡುಗರು ಯಾರಿಂದಲೋ ಉದ್ರಿ ಸೈಕಲ್ ಹೊಡೆದು ಜಾಲಿಬೆಂಚಿಯ ಚಹಾದಂಗಡಿಯ ಮುಂದೆ ಏ ಶಾಮ್ ಮಸತಾನಿ ಹಾಡನ್ನು ಸೀಟಿ ಹೊಡೆಯುತ್ತ ಪೆಡೆಲ್ ಹೊಡೆಯುತ್ತಿದ್ದೆವು. ಹಾಗೆ ಸಿಳ್ಳು ಹೊಡೆದು ಹಿಂದಿ ಹಾಡನ್ನು ಗುನುಗುವುದು ಆಗ ಭಾರೀ ಫ್ಯಾಷನ್ ಆಗಿತ್ತು. (ಅದಾಗಿ ಇಪ್ಪಾತ್ತೈದು ವರ್ಷಗಳ ಮೇಲೆ ಇದೀಗ ನನ್ನ ಕಚೇರಿಯಲ್ಲಿ ರಾಧಾಕೃಷ್ಣನ್ ಎಂಬ ತಾಲೂಚಟ್ಟ ಪತ್ರಕರ್ತ ಅವೇ ಹಾಡುಗಳನ್ನು ಈಗಳೂ ಕಾಯ್ದುಕೊಂಡು ಬಂದು ಟಾಯ್ಲೆಟ್ಟಿನಲ್ಲಿ ಸೀಟಿ ಬಚಾಯಿಸುವುದನ್ನು ಕೇಳಿದ್ದೇನೆ. ಪಳೆಯುಳಿಕೆ ಶಾಸ್ತ್ರಕ್ಕೆ ಎಂದೂ ಅಳಿವಿಲ್ಲ ಎಂಬುದು ನಿಜ.) ಜಾಲಿಬೆಂಚಿ ನಮ್ಮತ್ತ ನೋಡಿದರೆ ನಮಗೆ ಸಿಕ್ಕಾಪಟ್ಟೆ ಸಂತೋಷವಾಗುತ್ತಿತ್ತು. +* +* +* +ಆದರೆ ಮೊನ್ನೆ ಊರಿಗೆ ಹೋದಾಗ ನನ್ನ ಎದೆ ಒಡೆಯುವ ದೃಶ್ಯವನ್ನು ನಾನು ನೋಡಬೇಕಾಯಿತು. ವಿಕಾಸಕ್ಕೆ ತುಸು ಚಾಲನೆ ಸಿಕ್ಕಂತಿತ್ತು. ನಾಲ್ಕು ವರ್ಷಗಳ ಮೇಲೆ ಊರಿಗೆ ಹೋದರೆ ಇಡೀ ಕುಂಟೆಗಡ್ಡೆ, ಭೀಮಯ್ಯ ಸರ್ಕಲ್ಲಿನ ಅನಧಿಕೃತ ಕಟ್ಟಡಗಳು ಪೂರಾ ನೆಲಸಮ! ನನ್ನ ಮನಸ್ಸಿನಲ್ಲಿ ಆವರೆಗೂ ಮರೆಯಾಗಿ ಹೋಗಿದ್ದ ಜಾಲಿಬೆಂಚಿ ತಣ್ಣಗೆ ಆಕ್ರಮಿಸತೊಡಗಿದ್ದಳು. ನಾನವಳನ್ನು ಎಷ್ಟೋ ವರ್ಷ ಮರೆತೇಬಿಟ್ಟಿದ್ದೆ. ಅವಳ ಚಹಾದಂಗಡಿ ಜಾಗ, ಕುಂಟೆಗಡ್ಡೆಯ ಕುಖ್ಯಾತ ಸೂಳೆಗೆರೆ, ಸಾರಾಯಿ ಅಡ್ಡೆ ನೆಲಸಮವಾಗಿದ್ದು ಕಂಡು ಆಕೆ ನೆನಪಿಗೆ ಬಂದಳು. +ನೆಲಸಮಗೊಳಿಸಿದ ಜಾಗದಲ್ಲಿ ದೊಡ್ಡ ಶಾಪಿಂಗ್ ಸಂಕೀರ್ಣ ತಲೆ ಎತ್ತುತ್ತಿತ್ತು. ಕುಂಟೆಗಡ್ಡೆಗಂತೂ ಒಂದು ಉದ್ದೋ ಉದ್ದ ಜೈಲಿನ ದರವಾಜೆಯಂಥ ಗೋಡೆ ಎಬ್ಬಿಸಿದ್ದರು. ಕಬ್ಬಿಣದ ಗೇಟು ನೆಟ್ಟು ಬೀಗಗಳನ್ನೂ ಜಡಿದಿದ್ದರು. ಇಡೀ ಕೊಳೆಗೇರಿ ಸಮವಾಗಿ ಜಾಗ ಬಹಳ ಸ್ವಚ್ಛವಾಗಿತ್ತು. ಈ ದಿಢೀರ್ ಬದಲಾವಣೆ ಹೇಗಾಯಿತು ಎಂದು ಚಿಕಿತ್ಸೆ ಮಾಡಿದಾಗ ತಿಳಿದು ಬಂದಿದ್ದು- +ಹೊಸದಾಗಿ ಬಂದಿದ್ದ ಉತ್ತರ ಭಾರತದ ಅಧಿಕಾರಿ. ಎರಡು ವರ್ಷದ ಹಿಂದೆ ಆಯ್ಕೆಯಾಗಿದ್ದ ಐ.ಎ.ಎಸ್ ಅಧಿಕಾರಿ. ಗೌರಿಯೊ, ಸರಸೋತಿಯೋ ಅವಳ ಹೆಸರು. ಮೊದಲ ಪೋಸ್ಟಿಂಗ್ ಇಲ್ಲೇ. ನಮ್ಮೂರ ರಾಜಕೀಯ ನಿಮಗೆ ಗೊತ್ತಿರಲಿಕ್ಕಿಲ್ಲ. ಗುಂಡಾಗರ್ದಿ, ಖೂನಿ, ಚಪ್ಪರ್ ಬಂದ್, ತಲೆ ಹಿಡುಕ ಹಲಾಲುಕೋರ್, ಮಟ್ಕ ಕಳ್ಳಬಟ್ಟಿ… ಇಂಥ ಹಡಬಿಟ್ಟಿ ಕೆಲಸದಲ್ಲಿ ನಿರತರಾದವರೆ ಇಲ್ಲಿನ ನಾಯಕರು. ಇಲ್ಲಿನ ಶಾಸಕನಿಗೆ ಈ ಸಕಲ ಗುಣಗಳೂ ಇವೆ. ಕುಂಟೆ ಗಡ್ಡೆ ಅವನ ಓಟ್‌ಬ್ಯಾಂಕ್. ಆದರೆ ಹೊಸ ಹುರುಪಿನಿಂದ ಬಂದ ಹರೆಯದ ಆ ಐ.ಎ.ಎಸ್ ಹುಡುಗಿಗೆ ಇಂಥವರನ್ನು ಬಗ್ಗು ಬಡಿದು ಸಮಾಜಕ್ಕೆ ಒಳ್ಳೇದನ್ನು ಮಾಡೋ ಹುಮ್ಮಸ್ಸು. ಒಮ್ಮೆ ಆಕಸ್ಮಿಕವಾಗಿ ಈ ಸ್ಥಳ ಹಾದು ಹೋಗುವಾಗ ಇಲ್ಲಿರುವ ನೀರಿನ ಕುಂಟೆ ಬಹಳ ಸೊಗಸಾಗಿದೆ ಅನ್ನಿಸಿತಂಥೆ. ವಿಹಾರ ಸ್ಥಳ ಮಾಡಿ, ದೋಣಿಗಳನ್ನು ಬಿಟ್ಟರೆ ಜನರಿಗೂ ಮನರಂಜನೆ ದೊರಕೀತು ಅನ್ನಿಸಿತು. ಆದರೆ ಆ ತಾಯಿ ಇಂಥ ಕುಖ್ಯಾತ ವೇಶ್ಯಾವಾಟಿಕೆ ಸ್ಥಳಕ್ಕೆ ಒಬ್ಬಳೇ ಹೋದದ್ದು ಹೇಳಿ. ಜಾಲಿಬೆಂಚಿಯಂತೆ ಮಹಾಧೈರ್ಯಸ್ಥಳು ಅಂಥ ಕಾಣುತ್ತೆ. ಮನಸ್ಸಿಗೆ ಬಂದಿದ್ದೆ ಮೂರು-ನಾಲ್ಕು ದಿನ ನೋಟೀಸು ಕೊಟ್ಟು ಒಬ್ಬರನ್ನೂ ಬಿಡದಂತೆ ಬಟ್ಟಲೆಬ್ಬಿಸಿದಳು. ರಾತ್ರೋರಾತ್ರಿ ಪೋಲೀಸರು, ಕೆಲಸಗಾರರು ಬಂದು ಈ ಕೊಳಗೇರಿ, ಅದಕ್ಕಂಟಿದಂತೇ ಇದ್ದ ಅಂಗಡಿಗಳನ್ನು ನೆಲಸಮ ಮಾಡಿದ್ದಾಯಿತು. ನೆನಪಿಡಿ, ಇಲ್ಲಿಂದ ಒಕ್ಕಲೆಬ್ಬಿಸಿದರೂ ಊರ ಹೊರಗೆ ಅವರಿಗೆಂದೇ ವಿಶಾಲ ಸರ್ಕಾರಿ ಜಾಗದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟಳಂತೆ. ಮನೆ ಕಟ್ಟಿಕೊಳ್ಳಲು ಸರ್ಕಾರಿ ಸಾಲವನ್ನೂ ಕೊಡಿಸಿದಳಂತೆ. +ಮಾಮೂಲಿನಂತೆ ನಮ್ಮ ಶಾಸಕನಿಗು-ಅವಳಿಗು ಜಟಾಪಟಿ ಹತ್ತಿತು. ಸರ್ಕಲ್ಲಿನಲ್ಲಿ ಕೈಗೆ ಕೈ ಮಿಲಾಯಿಸುವವರೆಗೂ ಟೆನ್ಷನ್ ಬೆಳೆದಿತಂತೆ. ಶಾಸಕ ಕೈಯೆತ್ತಬೇಕು ಅನ್ನೋದರಲ್ಲಿ ಆ ಅಧಿಕಾರಿ, ಮಿಸ್ಟರ್, ನಾನು ಜಿಲ್ಲಾದಂಡಾಧಿಕಾರಿ. ನೀನು ತಕ್ಷಣ ನಿನ್ನ ಚಮಚಾಗಳೊಂದಿಗೆ ಜಾಗ ಖಾಲಿ ಮಾಡದಿದ್ದರೆ ಅರೆಸ್ಟ್ ಮಾಡಬೇಕಗುತ್ತದೆ ಅಂದಳಂತೆ. ಈತ ಬಾಯಿಮುಚ್ಚಿಕೊಂಡು ಹೋದ. ಆದರೆ ಆರು ತಿಂಗಳು ಹಗಲು ರಾತ್ರಿ ರಾಜಕೀಯ ಮಾಡಿ ಆಕೆಯನ್ನು ಬೇರೆಲ್ಲಿಗೊ ಎತ್ತಿಸಿ ಹಾಕಿದ. ಅದಿರಲಿ, ಇನ್ನೇನು ವಿಕಾಸವಾದಕ್ಕೆ ತೆರೆದುಕೊಳ್ಳಬೇಕು ಅನ್ನುತ್ತಿದ್ದ ಊರು ಮತ್ತೆ ಯಥಾಸ್ಥಿತಿಗೆ ಮರಳುವಂತಾಯಿತು. ಆದರೆ ಆದ ಚೂರು ಬದಲಾವಣೆ ನನ್ನ ನೆನಪು ಕೆದಕಿತು. +ನಾನು ಏಳುತ್ತಿದ್ದ ಸಂಕೀರ್ಣವನ್ನು ತುಸು ಹೊತ್ತು ನೋಡುತ್ತ ನಿಂತೆ. ಅಲ್ಲಿ ಚಹಾ ಹೊಡೆಯುತ್ತ ನಿಂತ ಜಾಲಿಬೆಂಚಿ ಕಂಡಳು. ತನ್ನ ಆಕರ್ಷಕ, ತುಸು ಹೆಚ್ಚು ಉಬ್ಬಿದ ಎದೆಗಳ ನಡುವೆ ಸೆರಗನ್ನು ಸಿಂಬಿಯಂತೆ ಸುತ್ತಿ, ಆ ಕೈಯಲ್ಲೊಂದು ಈ ಕೈಯಲ್ಲೊಂದು ಪಾತ್ರೆ ಹಿಡಿದು ಚಹಾ ಹೊಡೆಯುವ ದೃಶ್ಯ. ಈಗಾಕೆ ಬದುಕಿದ್ದರೆ ಅವಳಿಗೆ ಅರವತ್ತು ವರ್ಷವಾಗಿರಬಹುದು! ಹೌದು, ನಿಜ. ನನಗೆ ಕೊನೆಗೆ ತಡೆಯುವುದಾಗದೆ ಯಾರನ್ನು ಕೇಳಲಿ ಎಂದು ಹಿಂದು-ಮುಂದು ನೋಡಿದೆ. ಕೊನೆಗೆ ಮೂಲೆಯಲ್ಲಿ ಮುದಿ ಕುದುರೆಯೊಂದಿಗೆ ಬೀಡಿ ಸೇದುತ್ತ ಜಟಕಾದಲ್ಲಿ ಕೂತಿದ್ದ ಹಜರತ್ ಒಬ್ಬರು ಕಂಡರು. ಇವರೇ ಸರಿ ಎಂದು ಅಲ್ಲಿ ಹೋದೆ. ಅದು-ಇದು ಎಂದು ಒಂದೆರಡು ಮಾತನಾಡಿದೆ ಆಟೋ ಬಂದಿರುವುದರಿಂದ ಬೇಪಾರ್ ಡಲ್ ಎಂದು ಅವರು ಕೊರಗಿದರು. ನಾನು ಮಾತು ಕತೆ ಬೇರೆಕಡೆ ಹೊರಳುವ ಮೊದಲೇ- ಹಜರತ್, ಇಲ್ಲಿ ಜಾಲಿಬೆಂಚಿ ಅಂತ ಹೆಂಗಸಿನ ಹೋಟೆಲಿತ್ತಲ್ಲ ಎನಾತು ಅಂದೆ. +ಹಜರತ್ ಮುಖದ ಮೇಲೆ ಸ್ವಲ್ಪ ಹೊತ್ತು ನಗು ಸುಳಿಯಿತು. ಅವಳ ಚೆಲುವನ್ನು ನೆನಪಿಸಿಕೊಂಡಿರಬೇಕು! ಆದರೆ ಮರುಕ್ಷಣವೇ ವಿಷಾದದ ಛಾಯೆ ಸುಳಿಯಿತು. ಎಲ್ಲಿ ಯಜಮಾನ್. ಅವಳು ಖೂನಿಯಾಗಿ ಆರು ವರ್ಸಾತಲ್ಲ. ಆ ಹರಾಮ್, ಅವಳ ಗಂಡನೇ ಖೂನಿ ಮಾಡಿಸಿದನಲ್ಲ. ಕೈ ಕಾಲೆಲ್ಲ ಕಡದು ಬಗದಿದ್ದರಂತಪೊ. ಹ್ಯಾಂಗ ಬದುಕಿದ್ದಳು ನನಗಂತೂ ಹೋಟೆಲಿರ ಮಟ ರೇ ನಬೀ, ಚಾ ಕುಡಿ ಅಂತ ಚಾ ಕೊಡತಿದ್ದಳು. ಒಂದು ದಿನಾನೂ ರೊಕ್ಕ ತಗಂಡಿಲ್ಲ. ಅವಾ ಗಂಡ ಅನ್ನೊ ಧಗಡಾಂಕೆ ಇನ್ನ ಬದುಕೇ ಐದಾನೆ. ಅಲ್ಲಿ ಇಲ್ಲಿ ಭಿಕ್ಕಾ ಬೇಡ್ಕಂತ ತಿರಗತಾನ. ಯಂಥಾ ಹೆಣ್ಣಪ್ಪೋ ಅವಳು ಎಂದು ಮೈ ಮರೆತರು. ನಾನು ಮೆಲ್ಲಗೆ ಜಾಗ ಖಾಲಿ ಮಾಡಿದೆ. ಹಜರತ್ ಸಾಹೇಬರಿಗೂ ಆಕೆಗೂ ಯಾವ ಜನ್ಮದ ಋಣಾನುಬಂಧವೊ, ನಾನೇಕೆ ಅಡ್ಡಿಯಾಗಲಿ? +ನನ್ನ ಮನಸ್ಸೆಲ್ಲ ಒಂದು ರೀತಿಯ ವಿಷಾದದಿಂದ ತುಂಬಿ ಹೋಯಿತು. ಆಕೆಯ ಎಳೆವಯಸ್ಸಿನ ಎಲ್ಲ ಚೆಲ್ಲಾಟವನ್ನೂ ಸಹಿಸಿಕೊಂಡಿದ್ದ ಗಿಚ್ಚಲು ಆಕೆಯನ್ನು ಇಳಿವಯಸ್ಸಿನಲ್ಲೇಕೆ ಖೂನಿ ಮಾಡಿಸಿದ? ಬಹುಶಃ ಆ ವೇಳೆಗೆ ಬದುಕಿನ ಸವಿಯೆಲ್ಲ ಕಳೆದುಕೊಂಡು ಬರೀ ಕಹಿಭಾವ ಅವನಲ್ಲಿ ಉಳಿದುಹೋಗಿ, ಅದಕ್ಕೆ ಪ್ರತೀಕಾರವಾಗಿ ಆಕೆಯನ್ನು ಮುಗಿಸಿದನೆ? ತಾನೇ ಪ್ರೀತಿಸಿ ಪಡೆದ ಹೆಣ್ಣನ್ನೂ ಕತ್ತರಿಸಿ ನೆಲಕ್ಕಿಳಿಸುವ ಕಟುಕನಾಗಿದ್ದನೆ ಗಿಚ್ಚಲು? ವಿಷಾದ ಇನ್ನೂ ಒಂದು ಕಾರಣಕ್ಕೆ- ಅವಳು ಮುದಿ ವಯಸ್ಸಿನಲ್ಲಿ ಎಷ್ಟು ಸುಂದರವಾಗಿ ಕಾಣುತ್ತಿದ್ದಳು ಎಂದು ನೋಡುವ ಭಾಗ್ಯ ಈ ಕಣ್ಣಿಗೆ ಒದಗಲಿಲ್ಲ ಎಂದು. ನಾನು ಚಿಕ್ಕಂದಿನಲ್ಲಿ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದ ಬಿ.ಸರೋಜಮ್ಮ, ಈ ಊರಿನವಳೇ ಆಗಿದ್ದ ಬ್ರಾಂಬರ ಹುಡುಗಿ ಜಮುನಮ್ಮನವರಂಥ ಇಬ್ಬರು ಸುಂದರಿಯನ್ನು ಬಿಟ್ಟರೆ ಬಹುವಾಗಿ ಆ ಎಳೆವಯಸ್ಸನ್ನು ಮೀಟುತಿದ್ದ ಚೆಲುವೆಂದರೆ ಈ ಜಾಲಿಬೆಂಚಿಯದೇ. ಕಣ್ಣ ಪಾರಣೆಯಾಗಿದ್ದ ಮಹಾತಾಯಿ. ಆದರೆ ವಿಷಾದದ ನಡುವೆಯೂ ಒಂದು ಸಮಾಧಾನಕೊಟ್ಟ ಸಂಗತಿಯೆಂದರೆ ನನ್ನ ಜಾಲಿಬೆಂಚಿ ಬದುಕಿದ್ದಾಗ, ಅವಳಷ್ಟೇ ಛಲಗಾತಿಯಾದ ಆ ಐ.ಎ.ಎಸ್. ಕಲೆಕ್ಟರ್ ಆಯಮ್ಮ, ಅವಳ ಚಹಾದಂಗಡಿ, ಶೀಟಿನ ಮನೆ ಒಡೆದು ಹಾಕಿ ನುಚ್ಚುನೂರು ಮಾಡಲಿಲ್ಲ ಅನ್ನುವುದು. ಆ ದೊರೆಸಾನಿಯೇ ಹೋದಮೇಲೆ ಅವಳ ಸಾಮ್ರಾಜ್ಯ ಇದ್ದರೆಷ್ಟು ನೆಲಗಚ್ಚಿದರೆಷ್ಟು? +ಇಲ್ಲಿನ ರಪರಪಾ ಮುಖಕ್ಕೆ ಹೊಡೆದ ಬಿಸಿಲು, ರಾತ್ರಿಯೆಲ್ಲ ಮೈಯನ್ನು ಚಕ್ಕೆ ಎಬ್ಬಿಸುವ ದ್ವಾಮಿ, ಗುಂಡಾಡಿ ಕಾಟ ತಪ್ಪಿಸಿಕೊಳ್ಳಲು ಬಂದ ಎರಡನೇ ದಿನಕ್ಕೆ ಗಿಚ್ಚ ಹೊಡೆಯುವವನು ನಾನು. ಈ ಸಲ ಇನ್ನೆರಡು ದಿನ ಹೆಚ್ಚಿಗೆ ಕಳೆಯಲು ನಿರ್ಧರಿಸಿದ್ದೆ! ಆಹಾ! ಮೋಹವೇ! ಜಾಲಿಬೆಂಚಿಯ ಖಾಸಗಿ ಬದುಕಿನ ವಿವರ ಕಲೆಹಾಕಲು ನಿರ್ಧರಿಸಿದ್ದೆ! ಖರೆ ಅಂದರೆ ನನ್ನ ತಾಯಿಯ ವಯಸ್ಸಿನವಳು ಅವಳು. ಆದರೆ ಕಾಡಿದ್ದು ಸುಳ್ಳಲ್ಲ. ಆದರೆ ಅವಳ ಬಗ್ಗೆ ಒಂದೆರಡು ವಿವರ, ಕಥೆ ಕೇಳಲು ನನ್ನ ಮನಸ್ಸು ಬಯಸಿತ್ತು. ಆದರಿಂದ ಖುಷಿಯಾಗಿತ್ತು. ಇನ್ನೂ ಒಂದೆಂದರೆ ಬರಹಗಾರನೆಂದುಕೊಂಡಿರುವ ನಾನು ಮುಂದೊಂದು ದಿನ ಕಥೆ ಬರೆದು ಕಾಫಿ ಕಾಸು ಗಿಟ್ಟಿಸಬಹುದೆಂದು ಆಸೆ ಮನಸ್ಸಿನಲ್ಲಿದ್ದರೂ ಇದ್ದೀತು! +* +* +* +ಈಗಾಗಲೇ ಹೇಳಿರಬೇಕು ನಿಮಗೆ. ಜಾಲಿಬೆಂಚಿ ಅನ್ನೋದು ಈ ಊರಿಂದ ಇಪ್ಪತ್ತೆರಡು ಮೈಲಿ ದೂರದ ಹಳ್ಳಿ. ಯಾವುದೇ ಬಯಲು ಸೀಮೆ ಹಳ್ಳಿಯಂತೆ ಬರಗಾಲ, ಕ್ಷಾಮ-ಡಾಮರ,ಹಸಿವು- ಬಡತನವೇ ಆಸ್ತಿಯಾಗಿದ್ದ ಹಳ್ಳಿ. ಅಲ್ಲಿನ ಬೇಡರ ಗುಂಪಿನ ಒಂದು ಮನೆಯಲ್ಲಿ ಹುಟ್ಟಿದವಳು ಈಕೆ. ಮೊದಲು ಹುಟ್ಟಿದ ಕೂಸಿಗೆ ಲಕ್ಷ್ಮಮ್ಮ ಅಂಥ ಹೆಸರಿಟ್ಟರು. ಆಮೇಲೂ ಇಲ್ಲೊಂದು ಹೆಣ್ಣು ಹುಟ್ಟಿದರೆ ಹೆಸರಿಗೇನು ಮಾಡೋದು? ಮೊದಲು ಹುಟ್ಟಿದಕ್ಕೆ ಪೆದ್ದ ಲಕ್ಷ್ಮಮ್ಮ ಅಂಥ ಕರೆದು ಇದಕ್ಕೆ ಚಿನ್ನ ಲಕ್ಷ್ಮಮ್ಮ ಅಂದರು. ಕಳ್ಳಬಟ್ಟಿ ಕಾಯಿಸೋದು, ಇದ್ದ ಜಾಲಿಮರಗಳನ್ನು ಕಡಿದು ಹೊರೆ ಕಟ್ಟಿ ಮಾರೋದು. ಹೀಗೆ ನಡೆಯಬೇಕು ಆ ಬೇಡರ ಬದುಕು. ಅಲ್ಲೆ ಹೇಗೋ ಈ ಕೂಸೂ ಬೆಳೆಬೆಳೆದು ದೊಡ್ಡದಾಯಿತು. ನಮ್ಮ ಪಟ್ಟಣಗಳಲ್ಲಿಯಾದರೆ ಮಕ್ಕಳನ್ನು ಬೆಳೆಸೋದೆ ಒಂದು ಕಸುಬು. ಹಳ್ಳಿಗಳಲ್ಲಿ ಅದಕ್ಕೆಲ್ಲ ಸಮಯವೆಲ್ಲಿಯದು. ಹುಟ್ಟುದವು ಹೇಗೋ ಬದುಕಿ ಬೆಳೆದುಕೊಳ್ಳುತ್ತವೆ. ಅದು ಐವತ್ತು ವರ್ಷದ ಹಿಂದಿನ ಬೆಳೆಯೋ ಆಟ ಹೇಗಿತ್ತೊ ಊಹಿಸಿ. ಮೈ ಮೇಲೆ ಬಟ್ಟೇ ಅಂಥ ಒಂದು. ಜಡೆಗಟ್ಟಿದ ಹೇನುಮಯ ತಲೆ, ಗೊಣ್ಣೆ… ಹೀಗೆ ಇದ್ದಿರಬೇಕು +ಆದರೆ ಹರೆಯಕ್ಕೆ ಬಂದಾಗ ಬೇಡರ ಹಟ್ಟಿಯದೇ ಈ ಕೂಸು ಅಂಥ ಅನ್ನೋಹಾಗೆ ಅದರೆ ಚೆಲುವು ಕಣ್ಣು, ಮೂಗು, ಆ ಸಣ್ಣಕ್ಕಿ ಹಲ್ಲು, ಅದೇನು ತುಟಿಗಳೋ. ಎಲ್ಲರ ಕಣ್ಣು ಬೀಳತೊಡಗಿತು. ಹಾಗೆ ಮೀಸೆ ಮೊಳಕೆ ಬಡೀತಿದ್ದ ಗಿಚ್ಚಲುನ ಕಣ್ಣೂ ಬಿತ್ತು. ಅವನೂ ಒಳ್ಳೆ‌ಏ ಎತ್ತರ, ಎತ್ತರಕ್ಕೆ ತಕ್ಕ ಮೈ, ವಯಸ್ಸಿಗೆ ತಕ್ಕ ತರುಣ ನಗೆ ಎಲ್ಲ ಸೇರಿ ಆಕೆ ಸುಂದರಾಂಗಿಯಾದರೆ ಈತ ಸುಂದರಾಂಗನೆ ಸೈ. ಒಬ್ಬರಿಗೊಬ್ಬರು ಕೆರೆ ದಂಡಿಯಲ್ಲಿ ನೋಡಿದರೆ ಮೈ ನವಿರೇಳುತ್ತಿತ್ತು. ಗಾಳಿ ಕಿವಿ ಹೊಕ್ಕಾಗೆ ಇಬ್ಬರೂ ಮೈ ಮರೆತು ನಿಲ್ಲುತ್ತಿದ್ದರು. ಗಂಟೆಗಳು ಕಳೆದಾದ ಮೇಲೆ ಆತ ಒಣಗಿದ ಬಟ್ಟೆನೆಲ್ಲ ಗಂಟು ಕಟ್ಟಿ ಬೆನ್ನಿಗೆ ಹೊತ್ತುಕೊಂಡು ನಡೆಯುವವನು. ಇವಳು ಜಾಲಿ ಹೊರೆಯನ್ನು ತಲೆಗೆ ಹೆಟ್ಟಿ ನಡೆಯುವವಳು. ತಿರುತಿರುಗಿ ನೋಡುವುದಂತೂ ಸೈಯೇಸೈ. ಒಳ್ಳೆ ವಯಸ್ಸು. ಕಾಮದೇವನ ಆಟ. +ಆ ಹಳ್ಳಿ ಅನ್ನೋ ಹಳ್ಳಿಯಲ್ಲಿ ಮನೆ ಇದ್ದದ್ದೇ ಮೂರು ಮೂವತ್ತು. ಮೂರು ಬ್ರಾಂಬ್ರದ್ದಾದರೆ ಇಪ್ಪತ್ತು ಬೇಡರವು. ಉಳಿದಿದ್ದರಲ್ಲಿ ಸಕಲೆಂಟು ಜಾತಿಗಳೂ ಸೇರುತ್ತಿದ್ದವು. ಬೆಳಿಗ್ಗೆಯಿಂದ ಸಂಜೆವರೆಗೆ ಒಬ್ಬರ ಮುಖ ಇನ್ನೊಬ್ಬರು ನಾಲ್ಕು ಸತಿಯಾದರೂ ನೋಡುವ ಅನಿವಾರ್ಯ. ಇಂಥ ಸಣ್ಣ ಕಗ್ಗಾಡಲ್ಲಿ ಅದೂ ಹರೆಯದ, ಹಾದರದ ಸುದ್ದಿ ಕಿವಿಕಿವಿ ಮುಟ್ಟೋದು ತಡವೇ? ಹಾಗೇ ಆಯಿತು. ಬೇಡರ ಹಟ್ಟಿಜನ ಕುದ್ದೆದ್ದರು. ಆ ಅಗಸರ ಹುಡುಗನೆಲ್ಲಿ, ಈ ಪೌರುಷದ ನಾಯಕ ಜಾತಿಯ ಹೆಣ್ಣೆಲ್ಲಿ? ನರಕಿ ಎಯ್ಯಂಡ್ರಾ (ಕಡೆದು ಹಾಕ್ರಲೇ) ಯಾರೋ ಕುಡಿದ ರೊಚ್ಚಿನಲ್ಲಿ ಕೂಗಿದರು. ಹೇಗಿದೆ ನೋಡಿ. ಇವರಿಗೂ ತಿನ್ನಲು ನಾಲ್ಕು ಮುಷ್ಠಿ ಚೋಳ, ನವಣೆ ಗತಿಯಿಲ್ಲ. ಪಾಪ, ಇದ್ದ ಒಂದೇ ಅಗಸರ ಕುಟುಂಬಕ್ಕೂ ಅದೇ ಗತಿ. ಆದರೆ ಜಾತಿಯ ಪ್ರತಿಷ್ಠೆ ಎಲ್ಲಿ ಹೋದೀತು? ಮನಮೇಮಿಂ ಆ ಸಾಕಲೋಡು ಎಮಿ? (ನಾವೇನು, ಆ ಅಗಸರ ಹುಡಗನೇನು) ಅನ್ನುವ ಪ್ರತಿಷ್ಠೆ. ಕುಲದ ರೋಷ, ರೋಷಕ್ಕೆ ತಕ್ಕ ಆಟ ಗೊತ್ತಿದ್ದ ಚಿನ್ನ ಲಕ್ಷ್ಮಮ್ಮ ಅನಾಹುತವನ್ನು ಗ್ರಹಿಸಿದಳು. ಯಾವುದೇ ಗಳಿಗೆಯಲ್ಲೂ ಅಗಸರ ಗಿಚ್ಚಲು ಇವರ ಕುಡಗೋಲಿಗೆ ತುಂಡಾಗಿ ಮಣ್ಣು ಸೇರಬಹುದು ಎಂದು ಗೊತ್ತಾಗಿ ಹೋಯಿತು. +ಸರಿ ಹೊತ್ತಿನಲ್ಲಿ ಎದ್ದವಳೇ, ಆತನ ಮನೆಗೆ ಕದ್ದು ಹೋದವಳೇ ಮೆಲ್ಲಗೆ ಕೂಗಿ ಕರೆದಳು. ಏನೇ ಹೇಳಿ, ಹರೆಯಕ್ಕೆ ವಿಚಿತ್ರ ಸಂವೇದನೆ ಎಂದು. ಇವಳೊಂದಿಗೇ ಕನಸಿನಲ್ಲಿ ಮಾತನಾಡುತ್ತಿದ್ದೆ ಎಂಬಂತೆ ದನಿ ಕೇಳಿದ್ದೇ ಎದ್ದು ಬಂದ ಗಿಚ್ಚಲು. ನಿಜದಲ್ಲೂ ಅವಳನ್ನೇ ಕಂಡು ದಂಗಾದ. ಲಕ್ಷ್ಮಮ್ಮ ಒಂದೇ ಮಾತಲ್ಲಿ – ನಡೀ ಎಲ್ಲನ ಹೋಗಮ್ಮು. ಇಲ್ಲಿ ಉಳಿಗಾಲಿಲ್ಲ, ಎಂದು ಅವನನ್ನು ಎಳೆದಳು. ಆತ ಆಯಸ್ಕಾಂತಕ್ಕೆ ಮರುಳಾಗಿ ಮರುಮಾತಾಡದೆ ರಾತ್ರಿ ಸರೊತ್ತಿನಲಿ ಅವಳ ಹಿಂದೆ ನಡೆದೇಬಿಟ್ಟ! ಈಗಿನಂತೆ ಡಾಂಬರು ರೊಡ್ಡುಗಳೇ? ಅದೊಂದು ಅಡವಿಯ ಹಾದಿ. ಕತ್ತಲೆ. ಜಾಲಿಮುಳ್ಳೂ ಗಿಡಗಳು. ನರಿಗಳ ಕೂಗು. ಇಡೀ ರಾತ್ರಿ ನಡೆಯುವುದೇ ನಡೇಯುವುದು. ಬಹುಶಃ ಆ ಐದಾರು ತಾಸುಗಳ ಆ ಆತಂಕದ ನಡಿಗೆಯಲ್ಲೂ ಒಂದೋ ಎರಡೋ ಬೆಚ್ಚಗಿನ ಪ್ರೀತಿ ವಿಶ್ವಾಸದ ಮಾತುಗಳನ್ನು ಅವರು ಆಡಿಕೊಂಡಿರಬೇಕು. +ನಸುಕಿಗೆ ಈ ಊರಿಗೆ ಬಂದು ಮುಟ್ಟಿದರು. ಇಲ್ಲೇನು ಬಂಧುವೆ, ಬಳಗವೆ? ಆಗಿನ್ನೂ ಬಸ್ಸುಗಳ ಕಾಲ ಅಲ್ಲ. ಜಟಕಾ ನಿಲ್ಲಿಸುತ್ತಿದ್ದ ಜಾಗದಲ್ಲಿ ಬಂದು ಕೂತರು. ಬೆಳಗಾಯಿತು. ಮಧ್ಯಾಹ್ನವೂ ಆಯಿತು. ಸಂಜೆ, ರಾತ್ರಿಗಳೂ ಬಂದವು. ಇವರ ಬಳಿ ಕಾಸುಗೀಸು ಎಂಥದ್ದು? ಹಳ್ಳೀ ಮುಕ್ಕರು. ಸರಿ ಅವತ್ತು ಉಪವಾಸ. ಅಲ್ಲೇ ಮಲಗಿದರು. ಮೇಮೇಲೆ ಬಟ್ಟೆ ಇದ್ದದ್ದೇ ಹೆಚ್ಚಿನದು. ಹಾಸಿ ಹೊದೆಯಲು ಎಲ್ಲಿಂದ ತಂದಾರು? ಎರಡನೆಯ ದಿನ ಮೈ ಚಳಿ ಬಿಟ್ಟೂ ಅಕ್ಕಪಕ್ಕ ಓಡಾಡಿದರು. ಅಲ್ಲೇ ಇದ್ದ ಬಾವಿಯಿಂದ ಸೇದಿ ನೀರು ಕುಡಿದರು. ಮಲಗಿದರು. ಮೂರನೇ ದಿನಕ್ಕೆ ಹಸಿವಿನಿಂದ ಕಂಗೆಟ್ಟು ಹೆಣವಾಗಿದ್ದರು. ಜಟಕಾ ಸ್ಟ್ಯಾಂಡಿನ ಯುವಕನೊಬ್ಬ ಯಾವೂರು, ಎತ್ತ ಎಂದು ವಿಚಾರಿಸಿದ. ಇವರು ದೊಡ್ಡೂರಿಗೆ ಬಂದದ್ದು ಇದೇ ಮೊದಲು. ಹೆದರಿಕೆಯಲ್ಲೇ ಎಲ್ಲ ಹೇಳಿದರು. +ಆತ ತನ್ನ ಜೇಬಿನ ಆಣೆ ದುಡ್ಡಲ್ಲಿ ಚಹಾ ಕುಡಿಸಿ, ನಾಸ್ಟಾ ಮಾಡಿಸಿದ. ಎರಡು ದಿನ ಕಾದು ಕಂಗೆಟ್ಟ ಹೊಟ್ಟೆಗೆ ಮಂಡಾಳು ಒಗ್ಗರಣೆ ಬಿದ್ದಾಗ ಇಬ್ಬರಿಗೂ ಕೈಕಾಲು ಆಡಿದವು. ನೀವು ಇಲ್ಲಿರದು ಭೇಷಲ್ಲ. ಭಾರೀ ಹೊಲಸು ಜಾಗ ಇದು. ಆ ತಿಂಡ್ಲೂರು ನರನೆಮ್ಲು ಕಣ್ಣೆಗೆ ಬೀಳ ಮದ್ಲು ಫರಾರ್ ಆಗ್ರೀ ಎಂದು ಆ ಜಟಕಾ ಯುವಕ ಗಿಚ್ಚಲುಗೆ ಹೇಳಿದ. ಗಿಚ್ಚಲು ತಲೆಯಾಡಿಸುತ್ತಿರುವಾಗಲೇ ಯಾರಾತ ನರಸಿಮ್ಲು ಕೇಳಿದ್ದು ಲಕ್ಷ್ಮಮ್ಮ. ಐ ನಿನಗ್ಯಾಕ ಬ್ಯಾಡ ಬಿಡು ಬೆಹನ್. ಆತ ಹರಾಂ ಖೋರ್ ಸುವ್ವರೇಳು. ಭಾರಿ ಕೆಟ್ಟೋನು. ಇಲ್ಲೆಲ್ಲ ಅವನ ಮಾತೇ ನಡೆಯೋದು ಅಂದ ಜಟಕಾ ಯುವಕ. ಎಲ್ಲಿರತಾನು? ಪ್ರಶ್ನೆಗೆ, ಬಂಡಿಮೋಟು-ಬಂತು ಉತ್ತರ. ಲಕ್ಷ್ಮಮ್ಮ, ಏಯಿ, ಗಿಚ್ಚಲು, ಇಲ್ಲೇ ಕುಂದ್ರು. ನಾ ಬರವರ್ಗೂ ಯ್ಯಲ್ಲೂ ಹ್ವಾಗಬ್ಯಾಡ ನನ್ನಾಣೆ ಐತಿ ನಿಂಗ, ಎಂದು ಎದ್ದು ನಡದೇಬಿಟ್ಟಳು. +ಬಂಡಿಮೋಟಿನ ಅಡ್ಡೆಯಲ್ಲಿ ತಿಂಡ್ಲೂರು ನರಸಿಮ್ಲು ತನ್ನ ಹುದ್ದರಿಗಳ ಜತೆ ಕೂತು ಬೀಡಿ ಸೇದುತ್ತಿದ್ದ. ಹರೆಯದ ಹುಡುಗಿ, ಎದೆ ನಡುಗಿಸುವ ಕುಖ್ಯಾತಿಯ ಆಸಾಮಿಯೆದುರು ನಿಲ್ಲುವುದೆಂದರೆ? ಏಯ್! ಯಾವುರಂಗೆ? ರುವಾಬು ಹಾಕಿದ. ಜಾಲಿಬೆಂಚಿ-ಉತ್ತರ. ಏನ್ ಕಥೆ? ಹೇಳಿದಳು. ಅದಕ್ಕೇನು ಮಾಡಂತಿ? ಹ್ಯಂಗನ ಬದಕತೀವಿ. ರೋಸ್ಟು ಜಾಗಾ ಕ್ವಡಸು ಜಟಕಾ ನಿಂದರತಾವಲ್ಲ, ಅಲ್ಲಿ. ಅಂದಳು. ಅದಲ್ಲಾ ಸುಮ್ನೆಹ್ಯಂಗ ಆಗ್ತೈತ್ಯಂಗೇ? ಮೀಸೆ ಹುರಿಮಾಡಿದ ನರಸಿಮ್ಲು. ಹುದ್ದರಿಗಳಿಗೆ ಹಿಗ್ಗು. +ಚಿನ್ನಲಕ್ಷ್ಮಮ್ಮನಿಗೆ ಅರ್ಥವಾಯಿತು. ಏಯಿ, ರೆಡ್ಡಿ, ನನ್ನ ಮೈ ಬೇಕೇನೊ ನಡೀ ಎಂದಳು. ಅವನೇನು ಧರ್ಮರಾಯನಲ್ಲ. ನಡೀ ಎಂದ. ಕಾಟೇಗುಡ್ಡ ಹತ್ತಿದರು. ಅವನಿಗೆ ಚೆಂದದ ಹುಡುಗಿ ಸುಖಕ್ಕೆ ಸಿಕ್ಕಳು. ಈಕೆಗೆ ಬದುಕು ಸಿಕ್ಕಿತು. ಎದ್ದುಬಂದದ್ದೇ, ತನ್ನ ಹುದ್ದರಿಯಲ್ಲೊಬ್ಬನಿಗೆ, ರೆಯ್, ಆ ಜಾಲಿಬೆಂಚಿಕಿ ಏಮಿ ಕಾವಾಲ ಚೂಡರಾ, ಅಂದ. ಲಕ್ಷ್ಮಮ್ಮ ಆ ಕ್ಷಣದಲ್ಲಿ ಜಾಲಿಬೆಂಚಿಯಾಗಿ ಇಲ್ಲೊಂದು ಸೂರು ಗಿಟ್ಟಿಸಿಕೊಂಡಳು. ಮೆಚ್ಚಿದ ಹುಡುಗನೊಂದಿಗೆ ಮದುವೆಯಾಗಿ ಬಾಳುವೆ ಮಾಡಲು ಬಂದವಳು ಕುಖ್ಯಾತನೊಬ್ಬನಿಗೆ ಮೀಸಲು ಮುರಿದಿದ್ದಳು! ಹುದ್ದರಿಯೊಂದಿಗೆ ಹೆಜ್ಜೆ ಹಾಕುವಾಗ, ಲಕ್ಷ್ಮಮ್ಮ ನರಸಿಮ್ಮುವನ್ನು ಉದ್ದೇಶಿಸಿ ಕೂಗಿ ಹೇಳಿದಳು. ಇದು ಯಾರಿಗೂ ಗೊತ್ತಾಗಬಾರದು, ನನ್ನಾಣಿ. ನರಸಿಮ್ಲು ಮೀಸೆ ಹುರಿಮಾಡಿಕೊಂಡು ಎಲ್ಲರನ್ನೂ ಒಳಗೊಂಡಂತೆ, ವಿನಿಪಿಚ್ಚಿಂದೆರ್ರಾ? (ಎಲ್ಲರಿಗೂ ಕೇಳಸ್ತಾ?) ಅಂದ. ಎಲ್ಲರೂ ತಲೆ ಹಾಕಿದರು. ಕಟುಕನಿಗೂ ಏನೋ ನಿಯತ್ತು! +ಲಕ್ಮಮ್ಮನ ಜಾದೂವಿಗೆ ಗಿಚ್ಚಲು ಮರುಳಾಗಿದ್ದ. ಹಗಲು ಆರೈಕೆ ಮಾಡುತ್ತಾಳೆ. ರಾತ್ರಿ ಮನಸ್ಸು ತೃಪ್ತಿಯಾಗುವಂತೆ ರಮಿಸುತ್ತಾಳೆ. ಜತೆಗೆ ಚಹಾದಂಗಡಿಯನ್ನು ತಾನೇ ಸಂಭಾಳಿಸುತ್ತಾಳೆ. ಪುರುಷನಿಗೆ ಇನ್ನೇನು ಬೇಕು? ದೇಹಸುಖ, ಸೋಮಾರಿ ಸುಖ, ಎರಡೂ ದಕ್ಕಿದ್ದವು. ಊರವರಿಗೆಲ್ಲ ಆಕೆ ಜಾಲಿಬೆಂಚಿಯದರೂ ಇವನಿಗೆ ಲಚ್ಚುಮಿಯೇ. ಆಕೆ ಓಡಾಡಿ, ಮಾತಾಡಿಸಿ ಹತ್ತು ಗಿರಾಕಿಗಳು ತನ್ನ ಚಹಾದಂಗಡಿಗೆ ಬರುವಂತೆ ಮಾಡಿದಳು. ನೋಡಲು ಚೆಲುವೆ, ಜೊತೆಗೆ ಎಲ್ಲರೂ ಒಂದೇ ಎನ್ನುವ ರೀತಿ ಚಹಾದಂಗಡಿಯಲ್ಲಿ ಆತಿಥ್ಯ. ಅವಳ ವ್ಯಾಪಾರ ಕುದುರಿತು. ನಿಧಾನಕ್ಕೆ ಹೆಣ್ಣೆಂಗಸು ಅಂಬೋಳು ಅಂಗಡಿ ಇಡದು ಕೇಳೀರೇನಲೇ ಎಂದು ಕಿವಿಯಿಂದ ಕಿವಿಗೆ ಮಾತು ಹಬ್ಬಿ ಜನ ಹುಚ್ಚರಂತೆ ಅವಳ ಅಂಗಡಿಯ ಚಹಾ, ಸೊಂಟಿ ಕಾಪಿ, ಹರೇರಾ, ಒಗ್ಗರಣಿ ಸವಿಯಲು ಬರುವವರೇ. ನೆನಪಿಡಿ, ಆಕೆ ತಾನು ಬೆಳೆಯಲು, ಬಲಿಷ್ಠವಾಗಲು ಅಡ್ಡಪಡಿಸುವ ಕೆಲವು ಬಲಾಢ್ಯರೊಂದಿಗೆ (ಅವರೂ ಬೆರಳೆಣಿಕೆಯವರು) ಸೆರಗು ಒದರಿಕೊಂಡಳೇ ಹೊರತು ಪುಡಿ ಜನರಿಗಲ್ಲ. ಉಳಿದವರು ಅವಳಿಗೆ ಹುಳದಂತೆ! +ಆಕೆ ಬೆಳೆದಳು-ಭೀಮಪ್ಪ ಸರ್ಕಲ್, ಕುಂಟೆಗಡ್ಡೆ, ಜಟಕಾ ಸ್ಟ್ಯಾಂಡ್ ಅವಳಿಗೆ ಮುಜುರೆ ಹಾಕುವಷ್ಟು. ತನ್ನ ಕುಲಕಸುಬಾದ ಬಟ್ಟಿಯನ್ನು ಇಲ್ಲಿ ಮಾಡಿದರೆ ಹೇಗೆ ಅನ್ನಿಸಿದ್ದೇ ಅದನ್ನೂ ಸುರು ಹಚ್ಚಿಕೊಂಡಳು. ಈಗ ಅವಳ ಅಮದಾನಿ, ವರ್ಚಸ್ಸು ಇನ್ನೂ ಬೆಳೆಯಿತು. ಇಲ್ಲೇ ಶುರುವಾದದ್ದು ತಿಂಡ್ಲೂರು ನರಸಿಮ್ಲುವಿಗು ಅವಳಿಗೂ ತಿಕ್ಕಾಟ. ಅವನೂ ಅದೇ ದಂದೆಯವನು. ಸಂಘರ್ಷ ಸುದೀರ್ಘಕ್ಕೆ ಹೋಯಿತು. ನರಸಿಮ್ಲು ರೇಗಿ ರೋಸಿ ಹೋದ. ಈಗಾಗಲೇ ಪಳಗಿದ್ದ ಲಕ್ಷ್ಮಮ್ಮ ಇನ್ನೊಂದು ಪಟ್ಟು ಹಾಕಿದಳು. ರೆಡ್ಡಿಯನ್ನು ಸಂಧಾನಕ್ಕೆ ಕುಂಟೆಗದ್ಡೆಗೆ ಮಾದಕ ಸಂಜ್ಞೆಯ ಮೂಲಕ ಆಹ್ವಾನಿಸಿದಳು ಹೆಣ್ಣಿನ ಕಾಮ ತುಂಬಿದ ಕನ್ಣುಗಳಿಗೆ ಕರಗದ ಗಂಡಸು ಅನ್ನುವ ಗಂಡಸು ಯಾವನಿದ್ದಾನೆ? ಈ ರೆಡ್ಡಪ್ಪ ಮೀಸೆ ಹುರಿಮಾಡಿಕೊಳ್ಳುತ್ತ ಹೊಸಬತ್ಟೆ ತೊಟ್ಟು ಹೋದ. ಆಹಾ! ಎನ್ನುವ ಚೆಲುವೆ ಕಾಲು ಎತ್ತುತ್ತಾಳೆಂದರೆ ಸುಮ್ಮನೆಯೇ? ಈ ಮೊದಲು ರುಚಿ ಬೇರೆ ನೋಡಿದ್ದ! +ಆದರೆ ಆ ರಾತ್ರಿ ತಿಂಡ್ಲೂರು ನರಸಿಮ್ಲು ರೆಡ್ಡಿ ಮಚ್ಚಿನ ಹೊಡೆತದ ರುಚಿ ಕಂಡಿದ್ದ. ಕುಂಟೆಗಡ್ಡೆಯ ನೀರು ಲಕ್ಷ್ಮಮ್ಮನ ಮೊದಲ ಕೂನಿಯ ರಕ್ತದ ಕಲೆಗಳನ್ನು ತೊಳೆಯಿತು! ನರಸಿಮ್ಲು ಫನಾ ಆಗ ಸುದ್ದಿ ಊರ ಜನಕ್ಕೆಲ್ಲಾ ದಂಗು ಬಡಿಸಿತು. ಯಾರು ಮಾಡಿದರು, ಹೇಗೆ, ಯಾವಾಗ ಎಂದು ಕಥೆಗಳನ್ನು ಕಟ್ಟಿ ಹಬ್ಬಿಸಿದರು. ಆದರೆ ಸಾಕ್ಷಿಗಳೇ ಇರದ ಬರಿ ಬಾಯಿ ಮಾತಿನಲ್ಲಿರುವ ಕಥೆ ನಂಬುವುದು ಹೇಗೆಂದು ಪ್ರಭುತ್ವದವರೂ ಸುಮ್ಮನಾದರು! ಇಷ್ಟಕ್ಕೂ ಆತನೊಬ್ಬ ಪೀಡೆಯಾಗಿದ್ದ. ಜನರ ಹೆದರಿಕೆಯಿಂದಾಗಿ ಬೆಳೆದು ಬೃಹತ್ತಾದ ಹುಳ! ಉದುರಿ ಬಿದ್ದದ್ದೇ ಈಕೆಯ ಸರಾಯಿ ದಂಧೆ ಚಿಗುರಿತ್ತು! +* +* +* +ಇದು ಲಕ್ಷ್ಮಮ್ಮಳ ಬದುಕಿನ ಏರುಗಾಲು. ದುಡ್ಡು, ಬೆಂಬಲದ ಜನ. ಪ್ರೀತಿಸಿದ ಗಂಡ. ಆದರೆ ಗಿಚ್ಚಲು ಮೊದಲಿನವನಾಗಿ ಉಳಿದಿರಲಿಲ್ಲ. ಅವಳ ಪ್ರೀತಿ. ಏಕೈಕ ನಿಷ್ಠೆ ಅವನಿಗೇ ಮೀಸಲಾಗಿದ್ದರೂ ಅವನು ಆಕೆಯ ಕುಖ್ಯಾತಿಯಿಂದ ಅವಮಾನದಲ್ಲಿ ಕುದಿಯುತ್ತಿದ್ದ. ನಿನ್ನಮ್ಮನಾಡ. ನೀನು ಸೂಳೀ, ರಂಡೀ ಎಂದು ಒದರಾಡುತ್ತಿದ್ದ. +ಅದ್ಯಲ್ಲಾ ಸುಳ್ಳೋ ಗಿಚ್ಚಾ. ನಾ ಮಾಡಿದ್ದೆಲ್ಲಾನಿನ್ನ ಸುಖಕ್ಕೆ. ನನ್ನ ಸುಖಕ್ಕೆ. ನಮ್ಮ ಸಂಸಾರಕ್ಕ ಎಂದು ರಮಿಸಿ, ತೆಕ್ಕೆಗೆ ತೆಗೆದುಕೊಂಡರೆ ಆತ ಚಿಕ್ಕ ಮಕ್ಕಳಂತೆ ಅಳಲು ಪ್ರಾರಂಭಿಸಿಬಿಡುತ್ತಿದ್ದ, ಇಲ್ಲ, ನೀನು ರಂಡೀ, ಎಲ್ಲಾರ ಜತಿಗೂ ಮಕ್ಳಂತೀದಿ. ಅದಕ್ಕೆ ನಮಗ ಮಕ್ಕಳ ಆಗವಲ್ಲವು ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದ. ಲಕ್ಷ್ಮಮ್ಮ ಆಗ ಸತ್ಯಕ್ಕೂ ಎದೆಯೊಡೆದು ತನ್ನ ಪಾಪದ ಬದುಕನ್ನು ಹಳಿಯುತ್ತ ಅವನನ್ನು ಎದೆ ಮೇಲೆ ಹಾಕಿಕೊಂಡು ಆಗತಾವ ಆಗತಾವ ಅನ್ನುತ್ತಿದ್ದಳು. +ಗಿಚ್ಚ, ಲಕ್ಷ್ಮಮ್ಮ ಈ ಊರಿಗೆ ಬಂದು ಈಗಾಗಲೇ ವರ್ಷ ವರ್ಷಗಳೇ ಕಳೆದಿದ್ದವು. ಅವರಿಗೆ ಮುಂದೆಯೂ ಮಕ್ಕಳಾಗಲಿಲ್ಲ. ಐಯ್! ಜಾಲಿಬೆಂಚೆ ಗಂಡ ಬಂದು ಕುಂತ. ನಿಂತ. ಬೀಡಿ ಸೇದ್ದ ಎಂದು ಜನವಾರಾಡುವುದು ಅವನಿಗೆ ಅಸಹ್ಯವೆನ್ನಿಸುತ್ತಿತ್ತು. ಆದರೆ ಮಾಡುವುದೇನು? ಅವಳ ಪ್ರಭಾವವೇ ಹಾಗಿತ್ತು. ಅಲ್ಲದೆ ಆತನೊಬ್ಬ ಸಾದಾ ಮನುಷ್ಯನಾಗಿದ್ದ. ಅವಳಿಗೆ ಆತನ ಮೇಲಿರುವಷ್ಟೇ ಪ್ರೀತಿ ಇವನಿಗೂ ಆಕೆಯ ಮೇಲೆ. ಹೀಗೆಯೇ ಸಾಗಿತ್ತು ಅವರ ಬದುಕು. ಇವಳನ್ನು ಬಿಟ್ಟು ಅವ ಎಲ್ಲಿ ಹೋಗಿ ಬದುಕಿಯಾನು? +ಕುಂಟೆಗುಡ್ಡೆಯಲ್ಲಿ, ಸರ್ಕಲ್ಲಿನಲ್ಲಿ ಲಕ್ಷ್ಮಮ್ಮನ ವರ್ಚಸ್ಸು ಎದ್ದು ಕಾಣುತ್ತಿತ್ತು. ದಿನದಿನಕ್ಕೂ ಹೆಚ್ಚುವ ಪ್ರಭಾವ. ಗಡ್ಡೆಯ ಮನೆಮನೆಯವರು ತಮ್ಮ ಸಮಸ್ಯೆಗಳನ್ನು ಈಕೆಯ ಪಂಚಾಯತಿಗೆ ತರುತ್ತಿದ್ದರು. ಇವಳ ಪೈಸಲಾ ಆದರೆ ಮುಂದೆ ತಕರಾರು ಏಳುವಂತಿರಲಿಲ್ಲ. ಇವಳ ವ್ಯಾಪಾರ ಚಹಾದಂಗಡಿಯಿಂದ ಕಳ್ಳಬಟ್ಟಿ, ಕಳ್ಳಬಟ್ಟಿಯಿಂದ ದೋ ನಂಬರ್ ಮಟ್ಕಾವರೆಗೆ ಹಬ್ಬಿತ್ತು! ಪ್ರಭುತ್ವದ ಜನ, ಅಧಿಕಾರದಲ್ಲಿರುವವರು, ನಾಯಕರು ಗುರ್ತು-ಪರಿಚಯದವರಾದರು. ಇಡೀ ಕುಂಟೆಗಡ್ಡೆಯ ರಾಜಕೀಯವನ್ನು ಈಕೆ ನಿಯಂತ್ರಿಸುತ್ತಿದ್ದರಿಂದ ಶಾಸಕರಿಂದ ಮೊದಲು ಮಾಡಿ ಕೌನ್ಸಲರ್‌ಗಳವರೆಗೆ ಯಲೆಕ್ಷನ್ ಬಂದರೆ ದುಡ್ಡಿನ ಗಂಟು ಹಿಡಿದು ದೊರೆಸಾನಿ, ದೊರೆಸಾನಿ, ಎಂದು ಕೈಮುಗಿಯುತ್ತಿದ್ದರು. +ಹಿಂದೆ ಆಗಾಗ ಮೀಸೆ ಚಿಗುರತೊಡಗಿದ ಪಡ್ಡೆ ಹುಡುಗರ ಮುಠಾ! ಇವಳ ಕಣ್ಸನ್ನೆಗೇ ಕಾಯುತ್ತ, ಅವಳ ರಕ್ಷಣೆಗೆಂದು ಹಿಂದೆಮುಂದೆ ಓಡಾಡುವರು. ಈಕೆ ಎಲಡಿಕೆ, ತಮಾಕು ನಮುಲುತ್ತ ಸಿಗರೇಟು ಸೇದುತ್ತ, ತನ್ನ ಬಟ್ಟಿಯಲ್ಲೇ ಕಾಯುಸಿದ ಸಾರಾಯಿ ಗುಟುಕರಿಸುತ್ತ, ತನ್ನದೇ ಹೋಟೆಲಿನ ಚಹಾ ಸೀವುತ್ತ ಯೋಜನೆಗಳನ್ನು ರೂಪಿಸುವವಳು. +ರೆಯ್, ವಂಡ್ರಿ, ರೆಯಾ, ಗಾಡಿದಿ, ಹುಂಡೆ ಎಂದು ಹುಡುಗರ ಹೆಸರು ಕರೆದರೆ ಏನೋ ಮಸಲತ್ತು ಇದೆಯೆಂದೇ! ಏಮಿ ದೊರೆಸಾನಿ ಅನ್ನಬೇಕು ಆ ಹುಡುಗರು. ವಾಡು ಚಾಲಾ ಗಾಂಡ್ನಕ್ಕರಾಲು ದೆಂಗುತುನ್ನಾಡು. (ವನದು ಅತಿಯಾಯಿತು) ಈಕೆ ಹೇಳುತ್ತಾಳೆ. ಏಮಿ ಚೆಯ್ಯಾಲಿ… ಅವರಲ್ಲೊಬ್ಬ ಕೇಳುತ್ತಾನೆ ವಾಡಿ ಕಾಳ್ಳು ನರಕಂಡ್ರ, ನಾ ಬಟ್ವಾಗಾಡು (ಅವನ ಕಾಲು ಕಡಿಯೊ ಹಲ್ಕಟ್ ನನ್….) ಅಂದರೆ ಅಕ್ಷರಶಃ ಆಣೈ ಪಾಲನೆ. ಆವ ಅಂಗ ಹೇಳಿದರೆ ಆ ಅಂಗ! ಎಪ್ಪುಡು (ಯಾವಾಗ?). ಬೇಸ್ತವಾರಂ ಸಾಯಂತ್ರಂ…. ಅಂದು ಆಕೆ ಫರ್ಮಾನು ಹೊರಡಿಸಿದರೆ ಹುಡುಗರು ಎದೆಬಾಕು, ಮಚ್ಚು, ಕತ್ತಿಗಳ ಸಾಮುಹಚ್ಚಿ ತಯಾರಾಗಿ ಇಟ್ಟಿರುತ್ತಿದ್ದರು. ಶಿಕ್ಷೆಗೆ ಒಳಗಾಗುವವನಿಗೆ ಯಾಕೀ ಶಿಕ್ಷೆ ಎಂಬುದು ಗೊತ್ತಾಗಬೇಕು ಅಂಬುವುದು ದೊರೆಸಾನಿಯ ನಿಯಮ. ನಾಲ್ಕೊ ಐದೊ ಮೂಠಾದ ಹುಡುಗರು ನಿಶ್ಚಿತ ವ್ಯಕ್ತಿ ಬಳಿ, ನಿಶ್ಚಿತ ವೇಳೆಗೆ ಹೋಗುವುದು ನಮ್ಮ ದೊರೆಸಾನಿಗೆ ಇಂಥಾ ಅನ್ಯಾಯ ನಿನ್ನಿಂದ ಆಗಿದೆ ಎಂದು ಹೇಳಿ ತಮ್ಮ ಕೆಲಸ ಪೂರೈಸುವುದು. ಹೀಗೆ ಕನಿಷ್ಠ ಹತ್ತು ಖೂನಿ ಮಾಡಿಸಿದ ಕುಖ್ಯಾತಿ ಜಾಲಿಬೆಂಚಿಯದು! +* +* +* +ಆದರೆ ಒಂದು ಸಲ ಮಾತ್ರ ಆಕೆ ಭಾಯಾನಕ ಕೃತ್ಯಗಳನ್ನು ಒಂದೇ ದಿನ ಮಾಡಬೇಕಾಯಿತು. ಹೊಸದಾಗಿ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬ ಇವಳ ಮಟ್ಕಾ ದಂಧೆಗೆ, ಕಳ್ಳಬಟ್ಟಿಗೆ ದುಃಸ್ವಪ್ನವಾದ. ಹಗಲು-ರಾತ್ರಿ ಕೈ ತೊಳೆದುಕೊಂಡು ಬೆನ್ನು ಹತ್ತಿ ಹಣ್ಣುಗಾಯಿ ನೀರುಗಾಯಿ ಮಾಡತೊಡಗಿದ ದೊರೆಸಾನಿ ಲಕ್ಷ್ಮಮ್ಮ ಇಸುಗು ಪೆಟ್ಟುಕೊಂಡಳು. ಚೀಲದಲ್ಲಿ ಹಣ್ಣುಕಾಯಿ, ರೊಕ್ಕ, ಹೆಂಡತಿಗೆ ಸೀರೆ ಅಂತೆಲ್ಲ ಕಳಿಸಿಕೊಟ್ಟು ನೋಡಿದಳು. ಆಸಾಮಿ ಕಮಕ್ ಅನ್ನಲಿಲ್ಲ. ಕೊನೆಗೆ ತಾನೇ ಎಣ್ಣೆನೀರು ಹಾಕಿಕೊಂಡು, ಕೊನೆಯ ಅಸ್ತ್ರವೆಂದು ಒಂದೊಳ್ಳೆ ಸಿರೆ ಉಟ್ಟುಕೊಂಡು, ಜಟಕಾದಲ್ಲಿ ಹೋಗಿ ಸ್ಟೇಷನ್ನಿನ ಬಳಿ ಇಳಿದಳು. ಒಳಗೆ ಹೋಗಿ ನಮಸ್ಕಾರ ದೊರೆ ಅಂದಳು. ಅವನೋ ಮಹಾ ಗರ್ವಿಷ್ಠ ಅಧಿಕಾರಿ. ಪ್ರಾಮಾಣಿಕತೆಯಿಂದ ಬಂದ ಆತ್ಮವಿಶ್ವಾಸ, ಗರ್ವ, ಯಾರೇ ರಂಡೆ ನೀ ಅಂದ. ಗೊತ್ತಿದ್ದರೂ. ಆಯಿ, ನಾನು ದೊರೆ, ಚಿನ್ನ ಲಕ್ಷ್ಮಮ್ಮ. ಕುಂಟೆಗಡ್ಡೆ ದೊರೆಸಾನಿ ಅಂದಳು ಈಕೆ. ಓಹೊ. ದೊರೆಸಾನಿನಾ ನೀನು. ಏನು ಈ ದೊರೆ ಹತ್ರ ಮಕ್ಕಂಮಣು ಅಂತೇಳಿ ಬಂದ್ಯಾ? ಮದ್ಲು ಇಲ್ಲಿಂದ ನಡಿ. ಇಲ್ಲಂದ್ರಗಿನ ಬಾಯಾಗ, ಮುಗಳ್ಯಾಗ ಬೂಟು ಇಟ್ಟು ಹೊಡಿತೀನಿ ನೋಡು ಎಂದು ಕುದಿಯಲು ಆರಂಭಿಸಿದ. ಆಯಿ, ಹಂಗಲ್ಲೇಳು ದೊರೆ. ಸಿಟ್ಟಾಗಬ್ಯಾಡ….ಎಂದು ಹೇಳುವಷ್ಟರಲ್ಲಿ ಕುರ್ಚಿಯಿಂದ ಎದ್ದು ಕಪಾಳಕ್ಕೆ ಬಿಗಿದೇ ಬಿಟ್ಟ. ಸ್ಟೇಷನ್ನಿನಲ್ಲಿದ್ದ ಎರಡು-ಮೂರು ಪೇದೆಗಳು ಪರಿಸ್ಥಿತಿ ಪ್ರಮಾದಕ್ಕೆಳೆಯುತ್ತಿದೆ ಎಂದು ದೊರೆಸಾನಿಯನ್ನು ಹಿಡಿದು ಹೊರಗೆ ಬಿಟ್ಟರು. ದೊರೆಸಾನಿಯ ಸರ್ವೀಸಿನಲ್ಲಿ ಯಾರಾದರೂ ಹೊಡೆಯಲು ಎಂದು ಮೈಮುಟ್ಟಿದ್ದು ಇದೇ ಮೊದಲು. ದೊರೆ, ಸುಖ ಕೊಡಮ್ಮು ಅಂತ ಬಂದೆ. ಬ್ಯಾಡಂದ್ರ ಬಿಡಬೇಕಾಗಿತ್ತು. ಆದರೆ ಅವಮಾನ ಮಾಡೀದಿ. ನಿನ್ನ ಹೇಣತಿಗೆ ನಿನ್ನ ಸುಖ ಇನ್ನಮ್ಯಾಗ ಯಾವತ್ತೂ ಸಿಗದಂಗ ಆಗತೈತಿ ಅಂತ ಕೂಗಿ ಮತ್ತೆ ಜಟಕಾ ಹತ್ತಿದಳು. +ದೊರೆಸಾನಿ ಗರಂ ಆಗಿರುವುದು ಮುಖದಿಂದಲೇ ತಿಳಿಯುತ್ತಿತ್ತು. ಯಾರೂ ಮಾತಾಡಿಸಲು ಹೋಗಲಿಲ್ಲ. ಆಕೆ ಒಬ್ಬಳೇ ಬಾಗಿಲು ಹಾಕಿ ಮನೆಯಲ್ಲಿ ಕುಡಿಯುತ್ತ ಕೂತಿದ್ದಳು. ಗ್ರಹಚಾರವೆಂಬಂತೆ ಅಲ್ಲಿಗೆ ಗಿಚ್ಚಲು ಬಂದು. ಹೆಂಡತಿಯ ಸ್ನಾನ ಮಾಡಿದ ಮೈ, ಹೊಸಸೀರೆಯಿಂದ, ಏನೋ ನಡೆದಿದೆ ಎಂಬ ಅನುಮಾನದಿಂದ ಯಾವನತಾಗ ಮಕ್ಕಮಕ ಹೋಗಿದ್ಯಾ ಲಂಜ ಎಂದು ಹಿಂದು-ಮುಂದೆ ನೋಡದೆ ರಪರಪ ಬಾರಿಸತೊಡಗಿದ. ಲಕ್ಷ್ಮಮ್ಮ ಈ ಊರಿನ ದುರ್ಗಮ್ಮನ ಅಪರಾವತಾರದಂಗಾಗಿ ಬಿಟ್ಟಳು. ಅವನು ಹೊಡೆಯುವವರೆಗೂ ಹೊಡೆಯಲಿ ಎಂದು ಮೈ ಕೊಟ್ಟಳು. ಆತ ಚೀರಾಡಿ, ಅತ್ತು, ಒದ್ದು, ಸುಸ್ತಾಗಿ ಬಾಗಿಲು ತೆಗೆದುಕೊಂಡು ಹೋದ. ಕೆದರಿದ ಕೂದಲು ಅಸ್ತವ್ಯಸ್ತ ಸೀರೆಯನ್ನು ಸರಿಮಾಡಿಕೊಂಡ ದೊರೆಸಾನಿ ಸುಧಾರಿಸಿಕೊಂಡು ಮುಠಾದ ಹುಡುಗರಿಗೆ ಫರ್ಮಾನು ಹೊರಡಿಸಿದಳು! +ಇನ್ಸ್‌ಪೆಕ್ಟರ್‌ನ ರುಂಡ ಹಾರಿಸಿ, ಗಿಚ್ಚಲುವಿನ ಎರಡೂ ಕೈ ಕತ್ತರಿಸಿ ಹಗರಿ ನದಿಗೆ ಹಾಕಿ! ಮೊದಲು ಫರ್ಮಾನಿಗೆ ತಲೆ ಹಾಕಿದ ಹುಡುಗರು ಎರಡನೆಯದಕ್ಕೆ ಸಣ್ಣಗೆ ಬೆವೆತರು. ಎಮ್ರಾ, ಚೆಪ್ಪಿನಟ್ಲು ಚೇಯಂಡಿ ಅಂದವಳು ನಡೆದೇ ಬಿಟ್ಟಳು ದೊರೆಸಾನಿ! ಕಲ್ಲು ಕಲ್ಲಾಗಿತ್ತು ಮನಸ್ಸು! +* +* +* +ಮುಂದೆ ಆರು ತಿಂಗಳವರೆಗೆ ಗಿಚ್ಚಲು ಖೋಷಾ ಆಸ್ಪತ್ರೆಯ ಮಂಚಕ್ಕಂಟಿದ್ದ. ಅವ ಸತ್ತಿದ್ದರೆ ಒಳ್ಳೆಯದಿತ್ತು ಎನ್ನುವಷ್ಟು ಹೀನಾಯವಾಗಿತ್ತು ಅವನ ಒಂದು, ಎರಡು ಎಂದು ದೇಹದ ಎಲ್ಲ ಅಗತ್ಯಗಳನ್ನು ಹಾಸಿಗೆಯಲ್ಲೇ ಪೂರೈಸುತ್ತಿದ್ದ. ಒಂದು ಹನಿ ನೀರನ್ನೂ ಬೇರೆಯವರೇ ಬಾಯಿಗೆ ಬಿಡಬೇಕಾಗುತ್ತಿತ್ತು. ಲಕ್ಷ್ಮಮ್ಮ ಅವನಿಗೆ ತೋರಿಸಬೇಕೆಂದಿದ್ದೂ ಇದೇ! ನನ್ನ ಪ್ರೀತಿ-ವಿಶ್ವಾಸವಿಲ್ಲದಿದ್ದರೆ ನೀನು ಪರಾಧೀನ, ಕ್ರಿಮಿ ಎಂದು ಅವನಿಗೆ ಅರಿವಿಗೆ ಬರುವುದು ಅವಳಿಗೆ ಬೇಕಾಗಿತ್ತು! ಅದಕ್ಕಾಗಿ ಭಾರಿ ಬೆಲೆಯನ್ನು ತೆರಲು ಅವಳು ಸಿದ್ಧವಾಗಿದ್ದಳು. ಪ್ರತಿದಿನ ಆಸ್ಪತ್ರೆಗೆ ಬುತ್ತಿಯನ್ನು ಅವಳು ಒಯ್ಯುತ್ತಿದ್ದಳು. ಅವಳೇ ಊಟ ಮಾಡಿಸಿ, ನೀರು ಕುಡಿಸುತ್ತಿದ್ದಳು. ಬಾಯಿಗೆ ಬೀಡಿ ಇಟ್ಟು ಬೆಂಕಿ ಹಚ್ಚುವಳು, ಔಷಧ ಸುರಿಯುವಳು, ಮುಲಾಮು ಹಚ್ಚುವಳು…. +ಬದುಕೆಲ್ಲ ತನ್ನ ಜತೆಗೆ ಕಳೀಬೇಕು. ಆದರ ಮತ್ತೆಂದೂ ಮುಟ್ಟಬಾರದು. ಎಲ್ಲದ್ದಕ್ಕೂ ನನ್ನನ್ನೇ ಕೇಳಬೇಕು, ಎನ್ನುವುದು ಲಕ್ಷ್ಮಮ್ಮನ ಗುರಿಯಾಗಿತ್ತು. ಆಕೆಗ ಜನ ತನಗೆ ಗೌರವಿಸಿ ದೊರಸಾನಿ ಅನ್ನುತ್ತಾರೆಂದು ಗೊತ್ತಿತ್ತು. ಜಾಲಿಬೆಂಚಿಲಂಜ ಅನ್ನುತ್ತಾರೆಂದೂ ತಿಳಿದಿತ್ತು. ಏನೆಲ್ಲ ಮಾಡಿ ಸಂಪಾದಿಸಿದ್ದೆಲ್ಲ ಪ್ರೀತಿಗಾಗಿಯೇ ಆಗಿತ್ತು. ಒಂದು ಗಳಾಸು ಸರಾಬು, ಒಂದು ತುಣುಕು ಕೋಳಿ ಊಟಕ್ಕೆ ಆಕೆ ಇಷ್ಟೆಲ್ಲ ಹೋರಾಡಿದ್ದಳು! ಸತ್ಯವೆಂದರೆ ಇಷ್ಟೆಲ್ಲ ಇದ್ದರೂ ಬಂಗಾರ-ಬೆಳ್ಳಿ ಎಂದು ಆಕೆ ಆಸೆಪಟ್ಟಿರಲಿಲ್ಲ. ಕೋಟೆಯಂಥ ಮನೆಯನ್ನು ಕಟ್ಟಿರಲಿಲ್ಲ. ಬಂದದ್ದೆಲ್ಲ ಅಲವತ್ತುಕೊಂಡು ಕೂಡಿಡದೆ ಬಗಲಿಗಿದ್ದವರಿಗೆ ಹಂಚಿಬಿಡುತಿದ್ದಳು. ಅವಳ ಮನೆ ಅಲ್ಲಿನ ಗುಡಿಸಲುಗಳಿಂದ ತುಸು ಬೇರೆಯಾಗಿತ್ತು ಅನ್ನೋದು ಬಿಟ್ಟರೆ ಐಸಿರಿ ಏನೂ ಇರಲಿಲ್ಲ. ಹೊರಸು, ಕಬ್ಬಿಣದ ಅಲಮಾರ, ಮರ್ಫಿ ರೆಡಿಯೊ, ಹಲಗೆಯ ಬಾಕು, ದೊಡ್ಡ ಕನ್ನಡಿ ಒಂದಿಷ್ಟು ಸೀರೆ ಬಿಟ್ಟರೆ ಇನ್ಯಾವ ಆಸ್ತಿಯೂ ಇಲ್ಲ. ಆದರೆ ದಿನ ಬೆಳಗಾದರೆ ಕೈ ತುಂಬ ತುಂಬುತ್ತಿದ್ದ ನೋಟುಗಳು, ಹಾಗೆ ಹಾಗೆ ಹಂಚಿಹೋಗುತ್ತಿದ್ದವು! ಆಲ್ಲಿ ಅವಳು ಕಟ್ಟಿದ್ದೆಂದರೆ ಜನರ ವಿಶ್ವಾಸದ ಅಭೇದ್ಯ ಕೋಟೆ, ಅವಳ ಐಸಿರಿ! ಏನೇ ಇದ್ದರೂ ಅಂಗಡಿಯಲ್ಲಿ ಚಹಾ ಕಾಸುವುದನ್ನು ಆಕೆ ಎಂದೂ ಬಿಟ್ಟಿರಲಿಲ್ಲ. +ಮುಂದೆ ಎರಡೂ ಕೈಗಳನ್ನು ಭುಜದವರೆಗೆ ಕಳೆದುಕೊಂಡಿದ್ದ ಗಿಚ್ಚಲು ಅಕ್ಷರಶಃ ಅವಳ ಆಸೆಯಂತೆಯೇ ಬದುಕಿದ. ಊಟ ಮಾಡಲು, ಮುಖ ತೊಳೆಯಲು, ಬೀಡಿ ಸೇದಲು, ಬಟ್ಟೆ ಹಾಕಿಕೊಳ್ಳಲು, ಸ್ನಾನ ಮಾಡಲು, ತಲೆ ಬಾಚಲು ಎಲ್ಲಕ್ಕೂ ಲಕ್ಷ್ಮಮ್ಮನೇ ಬೇಕು. ಅವಳು ಮಗುವನ್ನು ಸಲಹುವಂತೆ ಎಲ್ಲವನ್ನೂ ಶ್ರದ್ಧೆಯಿಂದಲೇ ಮಾಡುತ್ತಿದ್ದಳು. ಇಂಥ ಅಧೀನ, ಹೇಳಿದ್ದನ್ನು ಕೇಳುವ ಮಗುವಿನಂಥ ಪ್ರೀತಿ ಆತನಿಂದ ಬಯಸಿದ್ದಳು ಆಕೆ. ಆದರೆ ಆಕೆಯ ಆಡಾಟ, ಉರವಣಿಗೆ ಗಿಚ್ಚಲುಗೆ ಸಹಿಸುವುದಾಗದೆ ಬಲವಂತವಾಗಿ ಅವಳು ಬಯಸುವ ಸಹಜಸ್ಥಿತಿಗೆ ಬಂದು ತಲುಪಿದ್ದ. +ಒಂದೆಂದರೆ ಗಿಚ್ಚಲುಗೆ ಹೀಗಾದ ಮೇಲೆ ಆಕೆ ಬದುಕಿನ ರಸ ಕಳೆದುಕೊಂಡು ಬಿಟ್ಟಳು. ನನ್ಯಾಕೆ ಅನುಮಾನಿಸಿದ್ಯಲೆ ಬಾಡಖೊ. ನಿಂಗೇನು ಕಡಿಮೆ ಮಾಡಿದ್ದೆ. ನಿಂಗ ಬೇಕಾದಾಗ ಮಕ್ಕಂತಿದ್ದೆ. ಬೇಕಾದ್ದ ಮಾಡಿ ಉಣಸತಿದ್ದೆ. ಬೇಕಂದ ಅಂಗಿ-ಚೊಣ್ಣ ತೊಡಸತಿದ್ದೆ. ನಾನು ಹಂಗ ಬದಕದು ಬ್ಯಾಡಂದ್ರ ನೀಯಾಕ ಗಣಮಗನಂಗ ಬಾಳುವಿ ಮಾಡಲಿಲ್ಲ. ದುಡೀಲಿಲ್ಲ ಎಂದು ಅವನ ಎದೆ ಹೊಡೆಹೊಡೆದು ಕೇಳುತ್ತಿದ್ದಳು. +ಇಪ್ಪತ್ತು-ಇಪ್ಪತ್ತೈದು ವರ್ಷ ಹೀಗೆ ಬದುಕಿದ್ದು ಸಾಕಾಗಿ ಅನಾಥ ಹೆಣ್ಣುಕೂಸು ತಂದು ಸಾಕಿದಳು. ತಾಯಮ್ಮ ಎಂದು ಹೆಸರಿಟ್ಟು ತಾನು ಕಾಣದ ಸಿಂಗಾರ ಅದಕ್ಕೆ ಮಾಡಿ ಸಂತೋಷಪಟ್ಟಳು. ಆ ಕೂಸು ಬೆಳೆದಂತೆ ಸಂಭ್ರಮ ಪಟ್ಟಳು. ಗಿಚ್ಚಲು ಕೂಡ ಇಂಥ ಬದುಕಿ‌ಏ ಹೊಂದಿಕೊಂಡುಬಿಟ್ಟಿದ್ದ. ಚಹಾದಂಗಡಿಯ ಫಳಿಯ ಮೇಲೆ ಕೂತು ಕಾಲ ಕಳೆಯುವ ಇಲ್ಲಾ ಮನೆಯಲ್ಲಿನ ತಾಯವ್ವನೊಂದಿಗೆ ನಾಕು ಮಾತೋ-ಆಟವೊ ಆಡಿ ಕಾಲ ಕಳೆಯುವ. +ಹುಡುಗಿಗೆ ಹದಿಮೂರು-ಹದಿನಾಲ್ಕೂ ಆಗಿರಲಿಕ್ಕಿಲ್ಲ. ಒಂದು ಅಚಾತುರ್ಯ ನಡೆಯಿತು. ಅದಾಗ ಕೊಳಗೇರಿಯ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿ ಕಮ್ಯುನಿಷ್ಟ್ ರಾಜ್ಯ ಸ್ಥಾಪಿಸುವ ಪುಕಾರು ಎದ್ದಿತ್ತು ನಮ್ಮೂರಲ್ಲಿ. +ಎಲ್ಲೆಲ್ಲಿ ನೋಡಿದರೂ ಜುಬ್ಬಾ ಹಾಕಿ, ಬಗಲಿಗೆ ಚೀಲ ಇಳಿಬಿಟ್ಟು, ಭಾಷಣ ಬಿಗಿಯುತ್ತ ಕುಂಟೆಗಡ್ಡೆಯಲ್ಲಿ ಜನ ಓಡಾಡೋರು. ಅಕ್ಷರ ಕಲೀರಿ-ದಂಧೆ ಬಿಡಿರಿ. ಹೊಟ್ಟೆತುಂಬ ಅನ್ನಕ್ಕೆ-ಬಂದೂಕು ಕೈಯಿಗೆ ಹೀಗೆ ಏನೇನೋ ಕೂಗೋರು. ಲಕ್ಷ್ಮಮ್ಮ ಬಡವರಿಗೆ ಒಳ್ಳೆಯದು ಮಾಡುತ್ತಾರೆಂದು ಅಂಥ ಹುಡುಗರಿಗೆ ಚಹಾಪಾಣಿ ಕೊಡುವಳು. ರೊಕ್ಕಾ ಬೇಕೇನ್ರೋ ತಮ್ಮಂದ್ರ ಎಂದು ಕೇಳುವಳು. +ಇಂಥ ಕಾಮ್ರೇಡುಗಳಲ್ಲಿ ಸುವೇಗ ಇಟಗೊಂಡಿದ್ದ ಬ್ರಾಂಬರ ಹುಡುಗ ಒಬ್ಬಾತ, ದೊರಸಾನಿಯ ಮಗಳು ಅಂತ ತಿಳಿದೇ ತಾಯಮ್ಮನ ಲಂಗದೊಳಗೆ ಕೈ ಹಾಕಿದ. ಹುಡುಗಿ ಲಬೊದಿಬೊ ಎಂದು ಬಡಿದುಕೊಂಡಿದ್ದೆ ಖುದ್ದು ಲಕ್ಷ್ಮಮ್ಮನೇ ಚಹಾದಂಗಡಿ ಬಿಟ್ಟು ಓಡಿ ಬಂದಿದ್ದಳು. ವಿಷಯ ತಿಳಿದು ಲೇ, ಕಾಮರೆಡ್ಡಿ, ನಿನ್ನ ಒಟಕ್ಕಾಯಿ ಒಡೆದು ಬಾಯಗ ತುರಕತೀನಿ, ಹಾಟಗಳ್ಳ, ಎಂದು ಆತನ ಪೈಜಮ ಬಿಚ್ಚಿ ಚಡ್ಡಿಯಲ್ಲಿಯೇ ಓಡಿಸಿದ್ದಳು. ಕಾಮರೆಡ್ಡಿ ಸುವೇಗ ಒಂದು ಕೈಯಲ್ಲಿ ತಳ್ಳಿ ತಳ್ಳಿ ದೂರ ಹೋಗಿ ಸ್ಟಾರ್ಟ್ ಮಾಡಿ ಪೇರಿ ಕಿತ್ತಿದ್ದ. +ತಾಯಮ್ಮ ಭಾರಿ ಗೊಂದಲ-ಗಾಬರಿಗೆ ಬಿದ್ದಿದ್ದಳು. ಗಿಚ್ಚಲು ತಲೆಕೆಟ್ಟು ಕೂತ. ಅಂದು ರಾತ್ರಿ ಕಂಡಾಬಟ್ಟೆ ಕುಡಿದು ಬಂದ. ತಾಯಮ್ಮನನ್ನು ಕೂಸು ಕೂಸು ಎಂದು ಎಬ್ಬಿಸಿದ. ಆಕೆ ದಡಬಡಿಸಿ ನಿದ್ದೆಗಣ್ಣಲ್ಲಿ ಎದ್ದು ನಿಂತಳು. ಈ ಮಿಂಡ್ರಗುಳ್ಳಿಯಿಂದನೆ ಹಿಂಗಾದ್ದು. ಆಕಿ ತಲಿಗಿ ಕಲ್ಲುಹಾಕು ಹಾಕು ಎಂದು ಬಡಬಡಿಸಿ ಒದರತೊಡಗಿದ. ನಿದ್ದೆಯ ಮಬ್ಬಿನಲ್ಲಿದ್ದ ತಾಯಮ್ಮ ಹಿಂದೆ-ಮುಂದೆ ನೋಡದೆ ಮಲಗಿದ್ದ ದೊರಸಾನಿಯ ತಲೆ ಜಜ್ಜಿ, ಕುಡಗೋಲಿನಿಂದ ಕೈ ಕಡಿದಿದ್ದಳು! +ಜಾಲಿಬೆಂಚಿಯ ಚಿನ್ನ ಲಕ್ಷ್ಮಮ್ಮ ದೊರಸಾನಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪೊಲೀಸ್ ಕೇಸಾಯಿತು. ಗಿಚ್ಚಲು ಒಂದೆರಡು ವರ್ಷ ವಿಚಾರಣೆಗಂತ ಜೈಲಿನಲ್ಲೂ ಇದ್ದನಂತೆ. ಕೊನೆಗೆ ಎರಡೂ ಕೈಯಿಲ್ಲದವನು ಕಲ್ಲು ಎತ್ತಿ ಹಾಕಿ ಕೊಲ್ಲುವುದು ಅಸಾಧ್ಯ ಎಂದು ತೀರ್ಪು ಬಂದು ಬಾ ಇಜ್ಜತ್ ರಿಹಾ ಆದನಂತೆ. ಈಗವ ಭಿಕ್ಷೆ ಬೇಡಿ ಬದುಕುತ್ತಿದ್ದಾನೆ. +* +* +* +ಇದು ನನ್ನ ಎಳೆವಯಸ್ಸಿನಲ್ಲಿ ಬಹುವಾಗಿ ಕಾಡಿದ್ದ ಜಾಲಿಬೆಂಚಿಯ ಕಥೆ. ಎರಡು ದಿನ ಹೆಚ್ಚಿಗೆ ಉಳಿದು ಅಲ್ಲಿಷ್ಟು-ಇಲ್ಲಿಷ್ಟು ನಿಂತು, ಅವರಿವರಿಗೆ ಚಹಾ-ಒಗ್ಗರಣೆ ಕೊಡಿಸಿ, ಎರಡು ಮಾತಾಡಿ ಸಂಗ್ರಹಿಸಿದ್ದು. ಹಾದಿಹೋಕರು ಹಾದಿಹೋಕನಿಗೆ ಹೇಳಿದ ಸಂಗತಿಗಳಲ್ಲಿ ಎಷ್ಟು ಬದುಕಿನ ಸತ್ಯ, ಒಳನೋಟ ಅಡಗಿದ್ಯಾವು? +ಕಥೆ, ಬದುಕು ಎರಡೂ ದೊಡ್ಡವೇ, ಸಣ್ಣವನು ಅಂದರೆ ಕಥೆಗಾರ. ಇದ್ದದ್ದು-ಇಲ್ಲದ್ದು ಸೇರಿ ಹೇಳೋ ಅಭ್ಯಾಸ ಬಹಳ ಹಳೆಯದು. ಬಲ್ಲವರಿಗೆ ಕರುಣೆ ಇದ್ದರೆ ಆಯಿತು. +***** +ಕೀಲಿಕರಣ: ಶ್ರೀಮತಿ ಅನ್ನಪೂರ್ಣ ಸುಬ್ಬರಾವ್, ಶ್ರೀಮತಿ ಸೀತಾ ಶೇಖರ್, ಚಿ! ಚಂ. ಶ್ರೀನಿವಾಸ +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_276.txt b/Kannada Sahitya/article_276.txt new file mode 100644 index 0000000000000000000000000000000000000000..75ebb0e8a01f76dd54ade6e79fd6652e183fe063 --- /dev/null +++ b/Kannada Sahitya/article_276.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಂತು ಭಾರತ ಹುಣ್ಣಿವೆ! +ತೆರೆದು ಲೋಕದ ಕಣ್ಣೆವೆ!! +ಕನಸು ಮನಸೂ ಹೊಂದಿವೆ +ಜೇನು ಬಟ್ಟಲು ತಂದಿವೆ +ಇಂಥ ಸಮಯದಿ ಬಂಧವೆ? +ಏನು ಗೈದರು ಚೆಂದವೆ! +ಬಾನಿನುದ್ದಕು ಭೂಮಿಯಗಲಕು +ಎಲ್ಲಿಯೂ ಸ್ವಚ್ಛಂದವೆ! +…..ಬಂತು! +ಗಾಳಿ ತಣ್ಣನೆ ತೀಡಿದೆ +ಮರಕೆ ಕಿವಿ ಮಾತಾಡಿದೆ; +ತುಂಡು ಮೋಡವು ತೇಲಿದೆ +ದುಂಡು ಮಲ್ಲಿಗೆ ಹೋಲಿದೆ; +ಹಿಂಡನಗಲಿದ ಕರುವಿನಂದದಿ +ಬಾನ ಬಟ್ಟೆಯೊಳೋಡಿದೆ +…..ಬಂತು! +ಗೋದಿ ಹೊಲವೂ ಮಾಗಿದೆ +ಕಣದಿ ಹಂತಿಯು ಸಾಗಿದೆ; +ಹತ್ತಿ ತೊಳೆ ತೊಳೆ ತೊಳಗಿದೆ +ರೈತನೆದೆ ಮಾರ್‍ಪೊಳೆದಿದೆ +ಕುಸುಬೆ ಹೂವಿನ ಕುಸುರಿನೊಂದಿಗೆ +ಜೀವನವೆ ಹಾಡಾಗಿದೆ! +…..ಬಂತು! +ನಿರ್‍ಭಯತೆ ನಿರಪೇಕ್ಷತೆ +ಶುಭ್ರಗುಣ ಸಂಪನ್ನತೆ +ಬಾಳ ಬೆಳಗಿಪ ನವ್ಯತೆ +ನಿರ್‍ಮಲತೆ ಸವಿ ನಮ್ರತೆ +ಅಳವಡಿಸುತಿವನೆಲ್ಲ ಕರಗಿಸಿ +ಇಂದಿನೀ ಬೆಳಕಾಯಿತೆ? +…..ಬಂತು! +ಜೀವ ಹಂಸವು ನಲಿದಿದೆ +ಶಾಂತಿ ಸಾಗರಕಿಳಿದಿದೆ; +ನೋವು ಚಿಂತನ ತೊಲಗಿದೆ +ಇಂದ್ರಲೋಕವು ಮಲಗಿದೆ +ಚಂದ್ರ ಸಾಕಿದ ಚಿಗುರೆ ಭೂಮಿಗೆ +ಜಿಗಿವ ಹಂಬಲದಲ್ಲಿದೆ! +…..ಬಂತು! +ಜಗದ ಪಾತ್ರೆಯು ತುಂಬಿದೆ +ಎಲ್ಲರಾಸೆಗು ಇಂಬಿದೆ; +ಜೈತ್ರಯಾತ್ರೆಗೆ ಕರೆದಿದೆ +ಸಕಲ ಸಿದ್ಧತೆಯಾಗಿದೆ +ಆವುದೋ ದಿವ್ಯಾನುಭಾವಕೆ +ತಾ ‘ಉಧೋ’ ಎಂದೆದ್ದಿದೆ! +…..ಬಂತು! +***** +ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […] +ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […] +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_277.txt b/Kannada Sahitya/article_277.txt new file mode 100644 index 0000000000000000000000000000000000000000..7d2d7701685163db849b5afc45542bdd648316a0 --- /dev/null +++ b/Kannada Sahitya/article_277.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅದು ಹೇಗೋ +ಏಕಕಾಲಕ್ಕೆ ಬೆಣಚಿಕಲ್ಲುಜ್ಜಿ +ಬೆಂಕಿ ಕಿಡಿ ಹೊಳೆದ ಹಾಗೆ +ತಿಳಿದೇ, +ತಿಳಿಯದ ಹಾಗೆ +ಭುಜಕ್ಕೆ ಭುಜ ತಾಗಿಸಿ +ಮೈಯ್ಯೆಲ್ಲ ಮಕಮಲ್ಲು. +ರಾತ್ರಿ ಸಣ್ಣಗೆ ಗಾಳಿ +ಬೆನ್ನಹುರಿಯಲ್ಲಿ ಸಿಳ್ಳೆ ಹೊಡೆದಂತೆ. +ಶವರ್‍ರಿನಡಿ ಕಪ್ಪು ಗುಂಗುರ ಬಳಸಿ +ಮೈಯ್ಯೆಲ್ಲ ಮುತ್ತಿಟ್ಟು +ಕೆಳಗೆ ಜಾರುವ ನೀರು. +ಹೆಗಲಿಗೆ ಹೆಗಲ ಕೊಟ್ಟು +ಹೊಕ್ಕುಳ ಬಿಸಿಗೆ ಕೆನ್ನೆಯಿಟ್ಟು +ಕಣ್ಣಲ್ಲೇ ಖುಷಿಪಟ್ಟ ಕನಸಿನಂಥ +ನನಸುಗಾರ +ಮತ್ತೆ ಬಂದಾನು, +ಮಾತನಾಡದೆ ಮುತ್ತಿಟ್ಟು +ಬೂದಿ ಕೆದಕಿ ಕಿಚ್ಚು ಹಚ್ಚುವುದಕ್ಕೆ. +ಹಾಸಿಗೆಯ ತುಂಬ ಹರಡಿ ನೆನಪುಗಳ +ಅರಿವೆ ತಪ್ಪಿ ಕಾಯುವ ಹಾದಿ +ಎದೆಯೊಳಗೆ ಬಿಕ್ಕುಗಳು ತಣ್ಣಗೆ +ಮೈ ನಡುಗಿ ಸಣ್ಣಗೆ, +ಮೂಗ ತುದಿಯಲ್ಲಿ ಹೊಳೆವ ನತ್ತು +ಕತ್ತಿನ ಸುತ್ತ ಸಣ್ಣ ಮುತ್ತಿನಹಾರ. +***** +(ಅಗಸ್ಟ ಹದಿನೈದು) ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- ಬಳಿಸಾರಿ ಬಂದಿಹುದು ಸೌಖ್ಯ […] +ದಿಲ್ಲಿಯ ನೋಡಿರೇ, ಬಾರಿನ ಏರಿಯ ಮೇಲೆ ಹಾರಿಹಾರಿ ಕುಣಿವ ದಿಲ್ಲಿಯೆಂಬ ಕ್ಯಾಬರಿಯ ನೋಡಿರೇ, ಭಾರತ ಭಾಗ್ಯವಿಧಾತನ ಸೌಭಾಗ್ಯವತಿಯ ನೋಡಿರೇ, ವಿದೇಶದ ದೀಬೆಸ್ಟಿನಿಂದ ವಮುದಿ ಮುಚ್ಚಿಕೊಂಡು, ಹದಿ ಹರೆಯದ ಬೆದೆ ಅಭಿನಯಿಸುವ ಗೋಲಮಾಲಿಯ ನೋಡಿರೇ, ಬೆಲೆಯುಳ್ಳ […] +೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_278.txt b/Kannada Sahitya/article_278.txt new file mode 100644 index 0000000000000000000000000000000000000000..2f6d29c8bc6270c85cb3c62a757bb10e69eb8b88 --- /dev/null +++ b/Kannada Sahitya/article_278.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಪ್ರೀತಿಯ ಹಿತ್ತಲಲ್ಲಿ +ಅಮ್ಮ ನೆಟ್ಟು ತೊನೆಸಿದ +ಬದನೆಯ ಬಳಿಯೇ +ತಂದು ಸ್ಥಾಪಿಸಿದ್ದೇನೆ +ಬಸಳೆ ಸಾಮ್ರಾಜ್ಯ +ಚಪ್ಪರಿಸಿದ್ದೇನೆ ಬೇಗ ಬೇಗ +ಊರು ಕೊಟ್ಟಿದ್ದೇ ತಡ +ಹಬ್ಬಿದ್ದೇ ಹಬ್ಬಿದ್ದು +ತಲೆ ತಗ್ಗಿಸಿ ಮನತುಂಬಿ +ಚಪ್ಪರ ತಬ್ಬಿದೇ ತಬ್ಬಿದ್ದು +ಬಚ್ಚಲ ತೀರ್ಥವಾದರೂ ಸರಿ +ಅರಿವಿಲ್ಲದೇ ಹೀರಿ +ಹಸುರಾಗಿ ತುಂಬಿ ಕಂಗೊಳಿಸಿದ್ದು +ಕಂಡಷ್ಟೂ ಸುಖ ಪುಳಕ +ಕಡಿಸಿದಷ್ಟೂ ಚಿಗುರು +ಜೀವ ಪುಟಿತ +ಮೊಗ್ಗೆ ಗಿಣ್ಣಿನ ಸಂತೆ +ತಿಂದಷ್ಟೂ ಹಿಂಸೆ ಇತ್ತಷ್ಟೂ +ಚಕ್ರ ಕುಡಿಯೊಡೆತ +ಅಂದುಕೊಳ್ಳುತ್ತೇನೆ +ಸೊಪ್ಪು ಮೆಲುವಾಗ +ದೇಟು ಜಗಿಯುವಾಗ +ನನಗ್ಯಾಕೆ ಇಲ್ಲವೀ +ತೃಪ್ತ ಸುಖಭೋಗ +ಯಥೇಚ್ಛಯೋಗ +***** +ಈ ಇಜಿಪ್ಷಿಯನ್ ಹುಡುಗಿಯ ನಿರಾಕಾರ ಮಸ್ತಿಷ್ಕ, ನಿರಾಕಾರ ಗಣಿತದಲ್ಲೆಲ್ಲೋ ಹುದುಗಿ, ಅಲ್ಲೇಲ್ಲೋ ಒಳಗೆ- ಮಾನಸ ಪಪೈರಸ್‌ನ ಮೇಲೆ, ಗಣ-ಉಪಗಣ ಅಂತೆಲ್ಲಾ ವಿಭಾಜಿಸಿ, ಕೂಡಿ ಕಳೆದು, ಗುಣಿಸಿ, ಅನುಲೋಮ ವಿಲೋಮ, ಕ್ರಯ ವಿಕ್ರಯ ಮಾಡಿ, ಆಕಾರ […] +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […] +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_279.txt b/Kannada Sahitya/article_279.txt new file mode 100644 index 0000000000000000000000000000000000000000..5146d5a4b6b7a6199160052da71b8840f60ada62 --- /dev/null +++ b/Kannada Sahitya/article_279.txt @@ -0,0 +1,127 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ ಮನೆ ಮಾರುಗಳನ್ನು ಸೇರಿ, ಅಗಲಿದ್ದ ಮಡದಿ ಮಕ್ಕಳ ಮುಖಗಳನ್ನು ಕಾಣಬೇಕು; ತಮಗಿದ್ದ ತುಂಡು ಹೊಲದ ಬೇಸಾಯವನ್ನು ಪೂರೈಸಬೇಕು. +ಆ ದಿನ ಎಲ್ಲಾ ಮೇಳಗಳೂ ತಮ್ಮ ತಮ್ಮ ಊರನ್ನು ಸೇರುವುವು. ಅಂದು ರಾತ್ರಿ ತಮ್ಮ ಇಷ್ಟದೇವತೆಯೆದುರು ಕೊನೆಯ ಆಟವನ್ನು ಆಡಿ, ಗೆಜ್ಜೆಪೂಜೆಗೈದು, ಮರುದಿನ ತಮ್ಮ ತಮ್ಮ ಹಾದಿಯನ್ನು ಮೇಳದವರು ಹಿಡಿಯುವರು. ಅವರು ಮುಂದೆ ಒಟ್ಟುಗೂಡುವುದು ಮಳೆಗಾಲದ ಆರು ತಿಂಗಳು ಕಳೆದ ಬಳಿಕ. +ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದುಗಡೆಯಲ್ಲಿ ರಂಗಸ್ಥಳವನ್ನು ನಿರ್ಮಿಸಲಾಗಿತ್ತು. ಅಂದೇ ಊರು ಸೇರಿದ ಪಾರ್ತಿಸುಬ್ಬನ ಕಣಿಪುರದ ಶ್ರೀಗೋಪಾಲಕೃಷ್ಣ ಕೃಪಾ ಪೋಷಿತ ಯಕ್ಷಗಾನ ಮಂಡಲವು ಅಲ್ಲಿ ತಮ್ಮ ಕೊನೆಯಾಟವನ್ನು ಅಂದು ಆಡುವುದು. +ಆಗಲೇ ಸಂಜೆಯಾಗಿತ್ತು. ರಂಗಸ್ಥಳದ ಎರಡೂ ಪಕ್ಕಗಳಲ್ಲಿ ಎರಡು ದೊಡ್ಡದಾದ ದೀವಟಿಗೆಗಳು ಉರಿಸಲ್ಪಟ್ಟಿದ್ದವು. ರಂಗಸ್ಥಳದಲ್ಲಿ ನಿತ್ಯವೇಷಗಳಲ್ಲೊಂದಾದ ಕೋಡಂಗಿಗಳು ಕುಣಿಯುತ್ತಿದ್ದವು. ಸುತ್ತುಮುತ್ತಲಿನ ಹತ್ತಾರು ಊರುಗಳ ಜನರೆಲ್ಲರೂ ಆ ಗೆಜ್ಜೆ ಪೂಜೆಯಾಟವನ್ನು ನೋಡಲು ಆಗಲೇ ನೆರೆಯತೊಡಗಿದ್ದರು. +ರಂಗಸ್ಥಳದಿಂದ ಸ್ವಲ್ಪ ದೂರದಲ್ಲಿ ವೇಷಧಾರಿಗಳು ವೇಷ ಧರಿಸುವ ಚೌಕಿಯಿತ್ತು. ಅಲ್ಲಿ ಆಗಲೇ ಚಟುವಟಿಕೆ ಆರಂಭವಾಗಿತ್ತು. +ನಟರೆಲ್ಲರೂ ತಮ್ಮ ತಮ್ಮ ಪಾತ್ರಗಳಿಗನುಗುಣವಾಗಿ, ಮುಖಗಳಿಗೆ ಬಣ್ಣಗಳ ’ಚುಟ್ಟಿ’ ಬರೆಯುತ್ತಿದ್ದರು. ಅಂದು ಆಡುವ ಪ್ರಸಂಗವು “ಅಂಗದ ಸಂಧಾನ”ವೆಂದು ತೀರ್ಮಾನವಾಗಿತ್ತು. ಒಡ್ಡೋಲಗ ಪಾತ್ರಧಾರಿಗಳಾದ ರಾಮ ಲಕ್ಷ್ಮಣರು ಆಗಲೇ ತಮ್ಮ ವೇಷಭೂಷಣಗಳನ್ನು ಮುಗಿಸಿ ಸಿದ್ಧರಾಗಿ ಕುಳಿತಿದ್ದರು. +ರಾವಣ ಪಾತ್ರಧಾರಿಯಾದ ಬಣ್ಣದ ಗೋಪಣ್ಣ ಚೌಕಿಯ ಮಧ್ಯಭಾಗದಲ್ಲಿ ಒಂದು ದೊಡ್ಡ ಪೆಟ್ಟಿಗೆಗೊರಗಿ ಕುಳಿತುಕೊಂಡಿದ್ದನು. ಅವನ ಮುಂದೆ ಒಂದು ಕಾಲು ದೀಪ ಉರಿಯುತ್ತಿತ್ತು. ಅವನ ಮುಖಕ್ಕೆ ಭಯಂಕರವಾದ “ಪಟ್ಟಿ”ಗಳನ್ನು ಬರೆಯಲಾಗಿತ್ತು. ಪೆಟ್ಟಿಗೆಗೊರಗಿ ಕುಳಿತ ಅವನ ಬಣ್ಣ ಬಳಿದ ಮುಖದ ಸುತ್ತಲೂ ಹಿಟ್ಟಿನ ಮುಳ್ಳುಗಳನ್ನು ಒಬ್ಬನು ಅಂಟಿಸುತ್ತಿದ್ದನು. ಆ ಕೆಲಸ ಮುಗಿದ ಬಳಿಕ, ಮೂಗಿನ ತುದಿಗೆ, ಹಣೆಗೆ, ಹತ್ತಿಯ ಉಂಡೆಗಳನ್ನು ಅಂಟಿಸಿದರು. ಅದೂ ಮುಗಿದ ಬಳಿಕ, ಗೋಪಣ್ಣ ಎದ್ದು ನಿಂತನು. ಒಂದೊಂದಾಗಿ ಉಡಿಗೆ ಆಭರಣಗಳನ್ನು ಅವನಿಗೆ ತೊಡಿಸಿದರು. ಬಣ್ಣದ ಬಣ್ಣದ ತೊಡಿಗೆ, ಭುಜಕೀರ್ತಿ, ಎದೆಗಟ್ಟು, ವೀರಕಾಸೆ, – ಎಲ್ಲವನ್ನೂ ತೊಟ್ಟಾಯಿತು. ಕೊನೆಗೆ ಬೃಹತ್ತಾದ, ಚಕ್ರಾಕಾರದ ಕಿರೀಟವನ್ನು ತಲೆಗೆ ಕಟ್ಟಿದರು. ಈಗ, ಅವನನ್ನು ನೋಡಿದರೆ ಗಟ್ಟಿಯೆದೆಯ ಜವ್ವನಿಗನು ಕೂಡ ಹೆದರಬೇಕು. ಅಷ್ಟು ಭಯಾನಕವಾಗಿತ್ತು ಆ ವೇಷ! +ಇನ್ನೊಂದೆಡೆಯಲ್ಲಿ ರಾವಣನ ಮಂತ್ರಿ ಪ್ರಹಸ್ತನ ವೇಷವನ್ನು ರಾಮಚಂದ್ರ ತೊಡುತ್ತಿದ್ದನು. ಹೊಟ್ಟೆಯನ್ನು ದೊಡ್ಡದು ಮಾಡಲು ಎಷ್ಟು ಬಟ್ಟೆಯನ್ನು ಕಟ್ಟಿದರೂ ಅವನಿಗೆ ತೃಪ್ತಿಯಿಲ್ಲ. ಅಂತೂ, ಅವನ ವೇಷವೂ ಸಿದ್ಧವಾಯಿತು. +ಮೇಳದ ಭಾಗವತ – ಯಜಮಾನನಾದ ಕವಿ ಪಾರ್ತಿಸುಬ್ಬ, ಎಲ್ಲವನ್ನೂ ದಿಟ್ಟಿಸುತ್ತಾ ಒಂದು ಪೆಟ್ಟಿಗೆಯ ಮೇಲೆ ಗಂಭೀರವಾಗಿ ಕುಳಿತಿದ್ದನು. ನಸು ನೀಳವಾದ ಅಕರ್ಷಕವಾದ ಮುಖ. ಭಾವನೆಯ ಕಡಲಲ್ಲೇ ತೇಲುತ್ತಾ, ಕನಸನ್ನೇ ಕಾಣುತ್ತಿರುವ ಸುಂದರವಾದ ಕಣ್ಣುಗಳು. ಗಟ್ಟಿಮುಟ್ಟಾದ, ಉತ್ತರ ನಿಲುವಿನ ದೃಢ ದೇಹ. ಪ್ರಾಯವು ಐವತ್ತರ ಗಡಿ ದಾಟಿತ್ತು. ತಲೆಯಲ್ಲಿ ಬೆಳೆದ ತುಂಬುಗೂದಲು, ಹಣೆಯನ್ನು ಬಿಟ್ಟು ಹಿಂದು ಹಿಂದಕ್ಕೆ ಸರಿಯುವ ಚಿಹ್ನೆ ತಲೆದೋರಿತ್ತು. +ಪಾತ್ರಧಾರಿಗಳೆಲ್ಲರೂ ತಮ್ಮ ವೇಷ ಸಿದ್ಧವಾದೊಡನೆಯೇ, ತಮ್ಮ ಯಜಮಾನನಾದ ಪಾರ್ತಿಸುಬ್ಬನಿಗೆ ತೋರಿಸಿಕೊಂಡು ಅವನ ಒಪ್ಪಿಗೆಯನ್ನು ಪಡೆಯುತ್ತಿದ್ದರು. ಪಾರ್ತಿಸುಬ್ಬ ಎಲ್ಲರನ್ನೂ ಸೂಕ್ಷ್ಮ ದೃಷ್ಟಿಯಿಂದ ವಿಮರ್ಶಿಸುತ್ತಾ, ಲೋಪದೋಷಗಳನ್ನು ತಿಳಿಸಿ ಸರಿಗೊಳಿಸುತ್ತಿದ್ದನು. ಬಣ್ಣದ ಗೋಪಣ್ಣನ ಪಾತ್ರವನ್ನು ನೋಡಿ +“ಅದ್ಭುತವಾಗಿದೆ, ಗೋಪಣ್ಣ. ಬಣ್ಣದ ವೇಷದಲ್ಲಿ ನಿನ್ನನ್ನು ಮೀರಿಸುವವರು ಇನ್ನಿಲ್ಲವೆನ್ನುವಂತೆ ಮಾಡಿದ್ದೀಯ.” +ಎಂದು ಹೊಗಳಿದನು. ಗೋಪಣ್ಣ ಆ ಮಾತಿಗೆ ವಿನಯದಿಂದ ನಸು ನಾಚಿ, +“ಎಲ್ಲ ನಿಮ್ಮ ಪ್ರೀತಿ. ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತು ಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ’ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ’ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ. ಅಂತೂ ತಮ್ಮ ದಯೆಯಿಂದಾಗಿ, ಅಲ್ಪ ಸ್ವಲ್ಪ ಕಲಾಸೇವೆ ಮಾಡುವಂತಾಯಿತು.” ಎಂದು ನುಡಿದನು. +ಚೌಕಿಯಲ್ಲಿ ಅಷ್ಟು ಜನರಿದ್ದರೂ ಅದು ನಿಶ್ಶಬ್ದವಾಗಿತ್ತು. ಗೋಪಣ್ಣನ ಮಾತನ್ನು ಉಳಿದವರೆಲ್ಲರೂ ಕೇಳಿದರು. ಮೌನವಾಗಿಯೇ ಅವರೆಲ್ಲರೂ ಅವನ ಮಾತಿಗೆ ತಮ್ಮ ಸ್ವರವನ್ನು ಸೇರಿಸಿದರು. +ಬಣ್ಣದ ಗೋಪಣ್ಣ ಹೇಳಿದುದು ಬರೇ ಹೊಗಳಿಕೆಯ ಮಾತಲ್ಲ. ಪಾರ್ತಿಸುಬ್ಬನ ಯೋಗ್ಯತೆ ಅದಕ್ಕೂ ಮೀರಿದುದು. ಕಲಾ ಪ್ರಪಂಚದಲ್ಲಿ ಬೆಳೆದ ಬೃಹತ್ತಾದ ಕಲ್ಪವೃಕ್ಷ ಆತ. ಕಡು ಬಡವನಾಗಿ ಹುಟ್ಟಿದ್ದರೂ ಕಲೆಯ-ಸಾಹಿತ್ಯದ ಮೇಲಿನ ಆಸಕ್ತಿಯಿಂದ ನಿರಂತರವಾಗಿ ದುಡಿದು, ಯಕ್ಷಗಾನದ ಗಣ್ಯ ಕವಿಯಾಗಿದ್ದನು. ಕುಂಬಳೆಯರಸರ ನೆರವಿನಿಂದ ತಾನೇ ಒಂದು ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಯಕ್ಷಗಾನವನ್ನು ತುಂಬಾ ಪ್ರಚಾರಗೊಳಿಸಿ, ಅದನ್ನು ಕನ್ನಡ ಜಿಲ್ಲೆಯಲ್ಲೆಲ್ಲಾ ಹರಡಿದನು. ಕೆಳದಿನಾಯಕರ, ಟಿಪ್ಪುಸುಲ್ತಾನನ, ಕುಂಬಳೆಯರಸರ ದಂಡಿನಲ್ಲಿದ್ದ ತರುಣರಿಗೆ, ಅರ್ಥಗಾರಿಕೆ, ಬಣ್ಣಗಾರಿಕೆ, ಕುಣಿತಗಳನ್ನು ಕಲಿಸಿ ಯಕ್ಷಗಾನದ ನಟರನ್ನಾಗಿ ಮಾಡಿದನು. ಅವರಲ್ಲಿ ಸಿಡಿಲುಮರಿ ಕೆಂಗಣ್ಣ ನಾಯಕ, ಬಣ್ಣದ ಗೋಪಣ್ಣ, ರಾಮಚಂದ್ರ ಮೊದಲಾದವರು ತುಂಬಾ ಹೆಸರು ಪಡೆದು ಪಾರ್ತಿಸುಬ್ಬನ ಪ್ರೀತಿಯ ಶಿಷ್ಯರಾಗಿದ್ದರು. +ಗೋಪಣ್ಣನ ಹೊಗಳಿಕೆಯ ಮಾತುಗಳನ್ನು ಕೇಳಿದ ಪಾರ್ತಿಸುಬ್ಬ ಗಂಭೀರವಾಗಿ ನಕ್ಕು, +“ನಾನೇನು ಮಾಡಿದೆ? ನಿಮ್ಮ ಮನಸ್ಸಿನಲ್ಲಿದ್ದ ಕಲಾಸಕ್ತಿಯೇ ನಿಮ್ಮನ್ನಿಂದು ಈ ಸ್ಥಾನಕ್ಕೆ ಮುಟ್ಟಿಸಿದೆ. ಎಲ್ಲವೂ ಶ್ರೀ ಗೋಪಾಲಕೃಷ್ಣನ ಕೃಪೆ ಗೋಪಣ್ಣ.” +ಎನ್ನುತ್ತಾ ದೇವಾಲಯದೆಡೆಗೆ ತಿರುಗಿ ಕೈಮುಗಿದನು. ಅವನೊಡನೆ, ಉಳಿದವರೂ ಆ ಭಕ್ತಿ ಪ್ರವಾಹದಲ್ಲಿ ತೇಲಿ, ತಮಗರಿಯದಂತೆಯೇ ತಾವೂ ಕೈಗಳನ್ನು ಜೋಡಿಸಿದರು. +ರಂಗಸ್ಥಳದಲ್ಲಿ ಸ್ತ್ರೀ ವೇಷ ಕುಣಿಯುತ್ತಿತ್ತು. ಅಲ್ಲಿಂದ ಕೇಳಿಬರುತ್ತಿದ್ದ ಮೃದಂಗದ ತಾಳಬದ್ಧವಾದ ಸಪ್ಪಳ ಕೇಳುತ್ತಾ ಚೌಕಿಯಲ್ಲಿದ್ದ ನಟರೆಲ್ಲರೂ ಕುಳಿತಲ್ಲಿಯೇ ತಮ್ಮ ಕಾಲುಗಳನ್ನು ಕುಣಿಸುತ್ತಿದ್ದರು. +“ಹೊತ್ತು ಕಂತಿ ಆಗಲೇ ನಾಲ್ಕು ಗಳಿಗೆ ಕಳೆಯಿತು. ಇನ್ನು ಪ್ರಸಂಗ ಸುರು ಮಾಡಬೇಕು.” +ಪಾರ್ತಿಸುಬ್ಬ ಅಪ್ಪಣೆಕೊಡುವ ಸ್ವರದಲ್ಲಿ ನುಡಿದನು. ಮೇಳದ ಆಳೊಬ್ಬನು ಭಾಗವತರ ಅಪ್ಪಣೆಯನ್ನು ಮುಟ್ಟಿಸಲು ರಂಗಸ್ಥಳದೆಡೆಗೆ ಧಾವಿಸಿದನು. +“ಏನು ಸಿಡಿಲು ಮರೀ, ಇನ್ನೂ ಆಗಿಲ್ಲವೇ?” ಪಾರ್ತಿಸುಬ್ಬ ಕೇಳಿದನು. +“ಆಯಿತು ಗುರುಗಳೇ, ಇನ್ನೇನು ಕಿರೀಟ ಕಟ್ಟಿಕೊಳ್ಳುತ್ತಿದ್ದೇನೆ.” +ಎಂದನು ಕೆಂಗಣ್ಣ ನಾಯಕ. ಕೆಂಗಣ್ಣ ನಾಯಕನು ಆ ಮೇಳದ ಗಣ್ಯ ನಟ; ಪಾರ್ತಿಸುಬ್ಬನ ಮೆಚ್ಚಿನ ಶಿಷ್ಯ. ಅವನ ವಾಕ್ಸಾಮರ್ಥ್ಯ, ನಟನಾ ಚಾತುರ್ಯಗಳಿಗೆ ಮನಸೋತ ಪಾರ್ತಿಸುಬ್ಬ, ಅವನಿಗೆ ’ಸಿಡಿಲುಮರಿ’ ಎಂಬ ಬಿರುದನ್ನಿತ್ತಿದ್ದರು. +’ಸಿಡಿಲುಮರಿ’- ಕವಿ ಪಾರ್ತಿಸುಬ್ಬ , ’ಅಂಗದ ಸಂಧಾನ’ ಯಕ್ಷಗಾನ ಕಾವ್ಯ ಬರೆಯುತ್ತಾ, ಎಳೆಯ ವೀರನಾದ ಅಂಗದನ ಪಾತ್ರಕ್ಕೆ ಮನಸೋತು, ಒಲಿದು, ಕೊಟ್ಟ ಬಿರುದು, ” ಸಿಡಿಲುಮರಿಯಂಗದ”. ಪಾರ್ತಿಸುಬ್ಬನ ಕನಸಿನ ಪಾತ್ರಸೃಷ್ಟಿಯಾದ ಅಂಗದನನ್ನು ಮೂರ್ತಿಮತ್ತಾಗಿ ಜೀವಂತ ಕಳೆಯಿಂದ ಆಡಿತೋರಿಸಲು ಕೆಂಗಣ್ಣ ನಾಯಕನಿಗಲ್ಲದೆ, ಇನ್ನಾರಿಗೂ ಆಗುತ್ತಿರಲಿಲ್ಲ. ಆದುದರಿಂದಲೇ ಪಾರ್ತಿಸುಬ್ಬ, ತನ್ನ ಪಾತ್ರದ ಬಿರುದನ್ನು, ಆ ಪಾತ್ರವನ್ನು ಮನವೊಲಿಯುವಂತೆ ಅಭಿನಯಿಸುತ್ತಿದ್ದ ತನ್ನ ಶಿಷ್ಯ ಕೆಂಗಣ್ಣ ನಾಯಕನಿಗೇ ಇತ್ತಿದ್ದನು. +“ಕೆಂಗಣ್ಣ ನಾಯಕ” ಎಂಬ ಅವನ ಹೆಸರೇ ಎಲ್ಲರಿಗೂ ಮರೆತು, ಈಗ ಎಲ್ಲರ ಬಾಯಲ್ಲೂ ’ಸಿಡಿಲು ಮರಿ’ಯಾಗಿ ಅವನು ವಿರಾಜಿಸುತ್ತಿದ್ದನು. +ಇಂದಿನ ಆಟದಲ್ಲೂ ಸಿಡಿಲು ಮರಿಯು ಸಿಡಿಲುಮರಿಯಂಗದನ ಪಾತ್ರವನ್ನು ವಹಿಸುವನು. ಒಂದೆರಡು ನಿಮಿಷಗಳಲ್ಲಿ ಸಿಡಿಲು ಮರಿ ಕೆಂಗಣ್ಣ ನಾಯಕ ಅಂಗದನಾಗಿ ಬಂದು ತನ್ನ ಗುರುಗಳ ಮುಂದೆ ನಿಂತುಕೊಂಡನು. ಪಾರ್ತಿಸುಬ್ಬ ಅವನ ವೇಷವನ್ನು ಪರಿಶೀಲಿಸಿ ನುಡಿದನು: +“ಚೆನ್ನಾಗಿದೆ-ಹೋಗು; ಕಲಾಸರಸ್ವತಿಯ, ಶ್ರೀ ಗೋಪಾಲಕೃಷ್ಣನ ಪ್ರೀತ್ಯರ್ಥವಾಗಿ ಅಭಿನಯಿಸು.” +ಗುರುಗಳ ಆಶೀರ್ವಾದದೊಡನೆ ಸಿಡಿಲುಮರಿ ಚೌಕಿಯಿಂದ ಹೊರಗೆ ಕಾಲಿಟ್ಟನು. ಪಾರ್ತಿಸುಬ್ಬ ಅರೆಕ್ಷಣ ಅವನು ಹೋಗುವುದನ್ನೇ ಗಂಭೀರವಾಗಿ ನೋಡುತ್ತಾ ಕುಳಿತನು. ಅನಂತರ ಎದ್ದು ’ಭಾಗವತರ ಮುಂಡಾಸ’ನ್ನು ತಲೆಗೆ ಕಟ್ಟಿ, ಕಲಾಸರಸ್ವತಿಯನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ, ತನ್ನ ಜಾಗಟೆಗೆ ನಮಸ್ಕರಿಸಿ ಅದನ್ನು ಕೈಗೆತ್ತಿಕೊಂಡು ರಂಗಸ್ಥಳದೆಡೆಗೆ ನಡೆದನು. ಪಾತ್ರಧಾರಿಗಳೆಲ್ಲರೂ ಅವನನ್ನು ರಂಗಸ್ಥಳದ ಹಿಂಬದಿಯ ತನಕ ಹಿಂಬಾಲಿಸಿದರು. +ಪಾರ್ತಿಸುಬ್ಬ ಬಂದೊಡನೆಯೇ ಗೌರವದಿಂದ ಎಲ್ಲರೂ ಎದ್ದು ನಿಂತರು. ಅಷ್ಟರತನಕ, ಸಭಾಲಕ್ಷಣ ಪದಗಳನ್ನು ಹಾಡುತ್ತಾ ನಿತ್ಯವೇಷಗಳನ್ನು ಕುಣಿಸುತ್ತಿದ್ದ ಕಿರಿಯ ಭಾಗವತ ಎದ್ದು ಬಂದನು. ಪಾರ್ತಿಸುಬ್ಬನು ಮೃದಂಗಕ್ಕೆ ನಮಸ್ಕರಿಸಿ ತನ್ನ ಸ್ಥಾನದಲ್ಲಿ ಕುಳಿತುಕೊಂಡನು. ಅನಂತರ ’ಪ್ರಸಂಗ ಪೀಠಿಕೆ’ ಆರಂಭವಾಯಿತು. +ಅಷ್ಟರಲ್ಲಿ ಅರಸರು ಆಟ ನೋಡುವುದಕ್ಕಾಗಿ ಬಂದು ಕುಳಿತರು. ಅವರಿಗಾಗಿಯೇ ರಂಗಸ್ಥಳದ ಬದಿಯಲ್ಲಿ ಒಂದು ವೇದಿಕೆಯನ್ನೂ ಕಟ್ಟಿ ಸಿಂಗರಿಸಿದ್ದರು. ಅವರು ಬಂದೊಡನೆಯೇ ಸಭೆ ಗಂಭೀರವಾಗಿ ಎದ್ದು ನಿಂತು ಗೌರವ ಸೂಚಿಸಿತು. +ಅರಸರ ಅಪ್ಪಣೆಯಂತೆ ಕಥಾಭಾಗವನ್ನು ಪ್ರಾರಂಭ ಮಾಡಲಾಯಿತು. ರಂಗಭೂಮಿಗೆ ಪರದೆಯನ್ನು ಹಿಡಿದರು – ಕ್ರಮದಂತೆ ರಾಮಲಕ್ಷ್ಮಣರ ಒಡ್ಡೋಲಗವಾಯಿತು. ಅನಂತರ ಸುಗ್ರೀವನ ಪ್ರವೇಶವಾಯಿತು. ರಾವಣನೊಡನೆ ಯುದ್ಧ ಹೂಡುವ ಮೊದಲೊಮ್ಮೆ ರಾಯಭಾರಿಯೊಬ್ಬನನ್ನು ಕಳುಹಿಸಬೇಕೆಂಬ ಅಭಿಪ್ರಾಯ ಬಂದಾಗ, ಸುಗ್ರೀವನು ತನ್ನಣ್ಣನ ಮಗನಾದ ಮಹಶೂರ ಅಂಗದನನ್ನು ಕಳುಹಿಸಬಹುದೆಂದು ಸೂಚಿಸಿದನು. ರಾಮಲಕ್ಷ್ಮಣರು ಅದಕ್ಕೆ ಒಪ್ಪಿ ಅಂಗದನನ್ನು ಸನ್ನಿಧಿಗೆ ಕರೆಯಲು ದೂತರನ್ನು ಕಳುಹಿಸಿದರು. +ಶ್ರೀ ರಾಮನಿಂದ ಕರೆಯಲ್ಪಟ್ಟ ಅಂಗದನು ಇನ್ನು ರಂಗಭೂಮಿಯನ್ನು ಪ್ರವೇಶಿಸಬೇಕು. ಹಿಮ್ಮೇಳವಾದ ಮೃದಂಗ, ಚಂಡೆ, ಜಾಗಟೆಗಳು ತಾರಕ ಸ್ವರದಲ್ಲಿ ಮೊಳಗುತ್ತಾ ವೀರರಸವನ್ನು ಪ್ರೇಕ್ಷಕರೆದೆಯಲ್ಲಿ ತುಂಬುತ್ತಿದ್ದುವು. ಭಾಗವತರು ಉಚ್ಚಸ್ವರದಲ್ಲಿ ಅಂಗದನ ಪ್ರವೇಶದ ಪದವನ್ನು ಹಾಡುತ್ತಿದ್ದರು: +“ರಾಮನಣತಿಯಂತೆ ಸಿಡಿಲು ಮರಿಯಂಗದನು….” +ಪ್ರೇಕ್ಷಕರೆಲ್ಲರೂ, ವೀರರಸವನ್ನು ಉಕ್ಕೇರಿಸುವ ಸನ್ನಿವೇಶದಲ್ಲಿ ತಲ್ಲೀನರಾಗಿ, ವೀರಮೂರ್ತಿ ಅಂಗದನ ಬರವನ್ನೇ ಹಾರೈಸುತ್ತಾ ಕುಳಿತಿದ್ದರು. ಸನ್ನಿವೇಶ, ಹಾಡು , ಹಿಮ್ಮೇಳಗಳು ಪ್ರೇಕ್ಷಕರನ್ನು ಕುತೂಹಲದ ಬಂದಿಯಾಗಿ ಮಾಡಿದ್ದುವು. +ಅಂಗದನು ಇನ್ನೇನು ರಂಗಭೂಮಿಯನ್ನು ಪ್ರವೇಶಿಸಬೇಕು- ಅಷ್ಟರಲ್ಲಿ ಕುದುರೆಯೊಂದು ಬಯಲಾಟ ನಡೆಯುತ್ತಿದ್ದಲ್ಲಿಗೆ ನೆಗೆದು ಬಂತು. ಕುದುರೆಯನ್ನೇರಿದ್ದ ಸವಾರನು, ಕುದುರೆಯಿಂದ ಹಾರಿ ಕೆಳಗೆ ನಿಂತನು. ಅವನೊಬ್ಬ ಸೈನಿಕ. ಅರಸನೆಡೆಗೆ ಫಕ್ಕನೆ ಸರಿದು ವಿನಯದಿಂದ ವಂದಿಸಿ: +“ಮಹಾಪ್ರಭೂ, ಕ್ಷಮಿಸಬೇಕು.” +ಎಂದು ತೊದಲಿದನು. +ಈ ವಿಚಿತ್ರ ಘಟನೆಯಿಂದ ಗಾಬರಿಗೊಂಡ ಜನರೆಲ್ಲರೂ ಆಶ್ಚರ್ಯ ಭಯಗಳಿಂದ ಪ್ರೇರಿತರಾಗಿ ಎದ್ದು ನಿಂತರು. ಕ್ಷಣದ ಹಿಂದೆ ಅವರಲ್ಲಿ ಒಡಮೂಡಿದ್ದ ವೀರರಸವು ತಾನಾಗಿ ಕರಗಿ ಹೋಗಿ, ಈಗ ಯಾವುದೋ ಆ ಶಂಕೆಯ ಅಜ್ಞಾತ ಭಯವೊಂದು ಅವರನ್ನು ಆವರಿಸಿತ್ತು. ಬಯಲಾಟದ ಕಥಾಭಾಗ, ಸನ್ನಿವೇಶ, ಎಲ್ಲವೂ ಅವರ ಮನದಿಂದ ಮರೆಯಾಗಿದ್ದವು. +ಅಜ್ಞಾತ ಭಯದಿಂದ ತಳ್ಳಂಕಗೊಂಡ ರಾಜರು, ಸೈನಿಕನನ್ನು ಅವಸರವಸರವಾಗಿ ಪ್ರಶ್ನಿಸಿದರು: +“ಸೈನಿಕ, ಏನಾಯಿತು? ಏನು ನಡೆಯಿತು? ಏನು ಸುದ್ದಿ?” +“ಮಹಾಪ್ರಭೂ, ಕ್ಷಮಿಸಬೇಕು. ಇಂಗ್ಲಿಷರ ಸೈನಿಕರು ಸಾಧಾರಣ ಇನ್ನೂರು ಮಂದಿ ಕಾಸರಗೋಡಿನ ಕಡೆಯಿಂದ ಇಲ್ಲಿಗೆ ಮುನ್ನುಗ್ಗುತ್ತಿದ್ದಾರೆ……” +ಹಾಯಾಗಿ, ಪುರಾಣ ಪುಣ್ಯಕಥೆಯ ನಂದನೋದ್ಯಾನದಲ್ಲಿ, ಕಲಾದೇವಿಯ ಸಿರಿಭೂಮಿಯಲ್ಲಿ, ವಿಹರಿಸುತ್ತಿದ್ದ ಎಲ್ಲರ ಚೈತನ್ಯಗಳ ಮೇಲೂ ಬರಸಿಡಿಲಿನಂತೆ ಸೈನಿಕನ ಈ ಮಾತು ಆಘಾತಿಸಿತು. ಆ ಹೊಡೆತದಿಂದ ಅಲ್ಲಿ ಕೂಡಿದ ಸಾವಿರಾರು ಮಂದಿಯಲ್ಲಿ ಪ್ರಜ್ಞೆ ತಪ್ಪಿದವರೆಷ್ಟೋ! ಜಂಘಾಬಲವೇ ಉಡುಗಿ ನೆಲಕ್ಕೆ ಕುಸಿಕೂತವರೆಷ್ಟೋ! ಹೆಂಗಸರು ಮಕ್ಕಳಂತೂ ತಮ್ಮ ಸರ್ವಸ್ವ ಸೂರೆಯಾದವರಂತೆ ದೊಡ್ಡ ದನಿಯಿಂದ ಅಳತೊಡಗಿದ್ದರು…………. +ಸೈನಿಕ ನುಡಿಯುತ್ತಲೇ ಇದ್ದ: +uಟಿಜeಜಿiಟಿeಜ”ಮೈಸೂರಿನಲ್ಲಿ ಟಿಪ್ಪು ಸುಲ್ತಾನನನ್ನು ಶ್ರೀರಂಗ ಪಟ್ಟಣದ ಕೋಟೆಯ ಬಾಗಿಲಿನಲ್ಲಿ ಇಂಗ್ಲೀಷರು ಕೊಂದು ಹಾಕಿದರಂತೆ. ಟಿಪ್ಪು ಸುಲ್ತಾನನ ಸಾಮ್ರಾಜ್ಯ ನುಚ್ಚು ನೂರಾಯಿತಂತೆ. ಆ ಸಾಮ್ರಾಜ್ಯದ ಮೇಲೆ ಆಘಾತಿಸಿದ ಧೂಮಕೇತು, ಈಗ ಘಟ್ಟದಿಂದ ಕೆಳಗಿಳಿದಿದೆ. ಟಿಪ್ಪು ಸುಲ್ತಾನನ ಸಾಮಂತರಾಗಿದ್ದ ಕನ್ನಡ ಜಿಲ್ಲೆಯ ಒಬ್ಬೊಬ್ಬ ರಾಜನನ್ನೂ ಬಗ್ಗಿಸತೊಡಗಿದ್ದಾರೆ; ಒಂದೊಂದು ಕೋಟೆಯನ್ನೂ ಆಧೀನಪಡಿಸಿಕೊಳ್ಳತೊಡಗಿದ್ದಾರೆ. ದಕ್ಷಿಣದಲ್ಲಿ ಬೇಕಲ, ಕಾಸರಗೋಡುಗಳಂತ ಸುಭದ್ರವಾದ ಕೋಟೆಗಳನ್ನೇ ಹೊಡೆದು ನುಂಗಿದ ಫ಼ಿರಂಗಿ ಯಮರಾಯ, ಈಗ ಉತ್ತರಕ್ಕಾಗಿ ಕುಂಬಳೆಗೆ ಧಾಳಿಯಿಡುತ್ತಿದ್ದಾನೆ. ಅವರ ಸೈನ್ಯ ಈಗಾಗಲೇ ಅರ್ಧ ದಾರಿ ದಾಟಿರಬಹುದು………..” +ಸೈನಿಕನ ವಿವರಣೆಗಳೊಂದೂ ಯಾರ ಕಿವಿಯನ್ನೂ ಸೇರುತ್ತಿರಲಿಲ್ಲ. ತನ್ನ ಕರ್ತವ್ಯವನ್ನು ಮಾಡಿ ಮುಗಿಸುವ ಧನ್ಯತೆಯಿಂದಲೋ ಎಂಬಂತೆ ಅವನು ನುಡಿಯುತ್ತಿದ್ದನು. +ಅರಸರು ಮರಗಟ್ಟಿ ರಾಜಾಸನದಲ್ಲಿಯೇ ಒರಗಿದ್ದರು. ಅವರ ಸುತ್ತುಮುತ್ತಲೂ ಇದ್ದ ಪರಿವಾರ, ಕೈಯಲ್ಲಿದ್ದ ಆಯುಧಗಳನ್ನೂ ಮರೆತು, ತಮ್ಮ ಆತ್ಮರಕ್ಷಣೆಯನ್ನು ಮಾಡುವ ಉಪಾಯ ತೋರಿಸೆಂದು ದೇವರನ್ನು ಮೊರೆಯಿಡುತ್ತಿತ್ತು. ಹೊಟ್ಟೆ ತುಂಬಿಸುವುದಕ್ಕಾಗಿ ಮಾತ್ರ ರಾಜನನ್ನು ಓಲೈಸುತ್ತಿದ್ದ ಅವರ ಮನಸ್ಸಿನಿಂದ, ಈ ಗಂಡಾಂತರದ ಸಂದರ್ಭದಲ್ಲಿ ರಾಜಭಕ್ತಿ ಮಾಯವಾಗಿತ್ತು. +ಅನಿರೀಕ್ಷಿತವಾದ, ವಿಧಿಯ ದುಷ್ಟ ಪೀಡೆ ಎಂಬ ಘಾತದ ಭಯದಿಂದ ಮಂಜುಗಟ್ಟಿ ಅಚಲವಾಗಿದ್ದ ಆ ಗುಂಪಿನಲ್ಲಿ ಕ್ಷಣ ಹೊತ್ತಿನಲ್ಲಿಯೇ ಚೈತನ್ಯ ಸಂಚರಿಸಿತು. ಅಲ್ಲಿ ನೆರೆದಿದ್ದ ಧನಿಕರು, ವರ್ತಕರು, ರೈತರು, ತಮ್ಮ ತಮ್ಮ ಸೊತ್ತುಗಳನ್ನೂ, ಕುಟುಂಬಗಳನ್ನೂ ಸೈನಿಕರ ದುರಾಕ್ರಮಣದಿಂದ ಕಾಪಾಡುವುದಕ್ಕಾಗಿ, ತಮ್ಮ ತಮ್ಮ ನಿವಾಸದತ್ತ ಆಕ್ರಂದಿಸುತ್ತಾ ಓಡತೊಡಗಿದರು. +ಕ್ಷಣಮಾತ್ರದಲ್ಲಿ, ರಸಸರಸ್ವತಿಯ ಆರಾಧನಾ ಭೂಮಿಯಾದ ರಂಗಭೂಮಿ, ಮರಣದ ಭೀಭತ್ಸತೆಯನ್ನು ತಾಳಿತ್ತು. +ಮೆಲ್ಲಮೆಲ್ಲನೆ ಅರಸರು ಚೇತರಿಸಿಕೊಂಡು ನುಡಿದರು: +“ಎಲ್ಲಿ ನಮ್ಮ ಸೇವಕರು? ನಡೆಯೋಣ- ಅರಮನೆಗೆ. ಏನಾದರೂ ಬರುವ ವಿಪತ್ತಿನಿಂದ ರಕ್ಷಣೆಯ ದಾರಿ ನೋಡಬೇಕಲ್ಲ.” +ಅರಸರ ಸೇವಕರು ಕೂಡಿದರು; ಅರಸರನ್ನು ಅರಮನೆಗೆ ಕರೆದೊಯ್ಯಲು ಸಿದ್ಧರಾದರು. +ಈ ಅನಿರೀಕ್ಷಿತ ಆಘಾತದಿಂದ ನೊಂದುಕೊಂಡ ಪಾರ್ತಿಸುಬ್ಬನು ರಂಗಭೂಮಿಯಿಂದ ಅರಸರ ಸಮ್ಮುಖಕ್ಕೆ ಬಂದಿದ್ದನು. ಅವನ ದು:ಖಕ್ಕೆ ಮಿತಿಯಿರಲಿಲ್ಲ. ದೇವರ ಸೇವೆಗಾಗಿ ಆಡುತ್ತಿರುವ ಈ ಬಯಲಾಟವನ್ನು, ಮರ್ಯಾದೆಯಿಂದ ಕೊನೆಗಾಣಿಸುವ ಬಯಕೆ-ಹರಕೆ ದೇವರದಲ್ಲವೇನೋ ಎಂದು ಮನಸ್ಸಿನಲ್ಲಿಯೇ ಮಿಡುಕಿಕೊಂಡನು. +“ಈ ವಿಪತ್ತಿನಿಂದ ಪಾರಾಗುವುದು ಹೇಗೆ?” +– ಎಂಬ ಪ್ರಶ್ನೆ ಎಲ್ಲರ ಮನಸ್ಸನ್ನೂ ಕಾಡುತ್ತಿತ್ತು. ತಮ್ಮ ಅರಸರು ಅಷ್ಟು ಶಕ್ತಿಶಾಲಿಯಲ್ಲ. ಈ ಅರಸರ ತಂದೆಯವರ ಕಾಲದಲ್ಲಿಯೇ ಕುಂಬಳೆಯರಸರ ಪರಾಕ್ರಮ-ಅಟ್ಟಹಾಸ ಮುಗಿದು ಹೋಗಿತ್ತು. ಆಗ, ಕೆಳದಿಯ ನಾಯಕರ ಸಾಮಂತನಾಗಿದ್ದ ಅರಸು, ಚಂದ್ರಗಿರಿ ನದಿಯ ದಕ್ಷಿಣದ ಮಲೆಯಾಳೀ ರಾಜನಾಗಿದ್ದ ಕೋಲತ್ತರಸನೊಡನೆ ಒಳಸಂಚು ಹೂಡಿ ಕೆಳದಿಯ ನಾಯಕರ ಸಾರ್ವಭೌಮತ್ವದ ಹೊರೆಯನ್ನು ತಪ್ಪಿಸಿಕೊಂಡು ಸ್ವತಂತ್ರರಾಗಲು ಪ್ರಯತ್ನಿಸಿದ್ದರು. ಅದರಿಂದ ಸಿಟ್ಟುಗೊಂಡ ನಾಯಕರು, ಸೈನ್ಯ ಕಳುಹಿಸಿ, ಎರಡು ರಾಜರನ್ನೂ ಸೋಲಿಸಿದ್ದರು. ಕುಂಬಳೆಯರಸರು ಕೈದಿಯಾಗಿ ತಮ್ಮ ಸೆರೆಮನೆಯಲ್ಲಿಯೇ ಕೊಳೆಯಿತ್ತಿದ್ದರು. ಆಗ ಅವರ ಕಾವಲುಗಾರರು ಅವರ ಮೇಲೆ ಕನಿಕರಿಸಿ, ಅವರಿಗೆ ಹೆಣ್ಣು ವೇಷ ತೊಡಿಸಿ ಸೆರೆಮನೆಯಿಂದ ಪಾರುಮಾಡಿದ್ದರು. +ಪರಾಕ್ರಮಿಯಾಗಿದ್ದ ಅರಸು ಪ್ರಾಣರಕ್ಷಣೆಗಾಗಿ ಹೆಣ್ಣು ವೇಷ ಧರಿಸಿದುದೇ ಅವರ ವಂಶಕ್ಕೆ ಒಂದು ಶಾಪವಾಗಿ ಪರಿಣಮಿಸಿತೇನೋ! ಅವರ ಅನಂತರ ಪಟ್ಟಕ್ಕೆ ಬಂದ ಅವರ ಮಗ- ಈಗಿನ ಅರಸು – ಯುದ್ಧದ ಹೆಸರು ಕೇಳಿದರೇ ನಡುಗುತ್ತಿದ್ದರು. ಅಂತಹವರಿಂದ ಈ ಗಂಡಾಂತರ ಹೇಗೆ ನಿವಾರಿಸಲ್ಪಡಬೇಕು? +ಅರಸು, ತನ್ನ ಐಶ್ವರ್ಯವನ್ನೂ ಪ್ರಾಣವನ್ನೂ ರಕ್ಷಿಸುವುದಕ್ಕಾಗಿ, ಎಲ್ಲಾದರೂ ಓಡಿಹೋಗಿ ಅಡಗಿಕೊಳ್ಳಬೇಕೆಂದು ನಿಶ್ಚಯಿಸಿಕೊಂಡು ಗಡಿಬಿಡಿಯಿಂದ ತನ್ನ ಸೇವಕರೊಡನೆ ತನ್ನ ಅರಮನೆಯತ್ತ ನಡೆದರು. +ಈ ಭಯಂಕರವಾದ ವಾರ್ತೆಯನ್ನು ತಂದ ಸೈನಿಕರು ತನಗೆ ಅರಸರ ಅಪ್ಪಣೆಯೇನೆಂದು ಅರಿಯದೆ ಅಲ್ಲಿಯೇ ನಿಂತಿದ್ದನು. ಅವನ ಕುದುರೆಯೂ ತನಗೇನಪ್ಪಣೆ ಎಂದು ಪ್ರಶ್ನಿಸುವಂತೆ ಅವನನ್ನೇ ನೋಡುತ್ತಾ ಬಳಿಯಲ್ಲಿಯೇ ನಿಂತಿತ್ತು. +ಕವಿ ಪಾರ್ತಿಸುಬ್ಬನ ಅಂತರಂಗ ಬಿರುಗಾಳಿಯೆದ್ದ ಕಡಲಿನಂತೆ ಕಲಕಿ ಹೋಗಿತ್ತು. ತನ್ನ ಆಟ ಆಗದುದರಿಂದಲೂ ಹೆಚ್ಚಿನ ದು:ಖವು, ಈ ವಿಚಿತ್ರ ದೈವದಾಟದಿಂದ ಪಾರಾಗುವುದು ಹೇಗೆಂಬ ಯೋಚನೆಯಿಂದ ಅವನ ಅಂತರಂಗದಲ್ಲಿ ಮೂಡಿತ್ತು. +ಈ ಸಂದರ್ಭದಲ್ಲಿ ಬೇರೆ ದಾರಿಗಾಣದೆ ಅವನ ಪರಿಪಕ್ವವಾದ ಕವಿ ಹೃದಯವು ತನ್ನ ಇಷ್ಟದೈವವಾದ ಶ್ರೀ ಗೋಪಾಲಕೃಷ್ಣನನ್ನು ’ತ್ರಾಹಿ’ ಎಂದು ಮೊರೆಯಿಡುತ್ತಿತ್ತು. +ಆ ಒಂದು ಕ್ಷಣದಲ್ಲಿ- +ಅವರ ಮೇಲೆ ಕವಿದಿದ್ದ ದು:ಖದ ಕಪ್ಪು ಮೋಡದಲ್ಲಿ ಕಣ್ಣು ಕೋರೈಸುವ ಮಿಂಚೊಂದು ಹೊಳೆಯಿತು. ಸಿಡಿಲುಮರಿ ಕೆಂಗಣ್ಣ ನಾಯಕ ಎಲ್ಲಿಂದಲೋ ಹಾರಿ ಬಂದು ಗುರುವಿನ ಪಾದಗಳಿಗೆರಗಿ ಹೇಳಿದನು: +“ಗುರುವೇ, ನನ್ನನ್ನು ಆಶೀರ್ವದಿಸಿರಿ. ಈ ಶಿಷ್ಯನು ತಮ್ಮ ಅನುಗ್ರಹದಿಂದ ಒಮ್ಮೆ ಮರೆತ ವಿದ್ಯೆಯನ್ನು ಲೋಕಕಲ್ಯಾಣಾರ್ಥವಾಗಿ ಪುನ: ನೆನಪಿಗೆ ತರಲು ಬಯಸುವನು.” +ಪಾರ್ತಿಸುಬ್ಬನಿಗೆ, ಅಚ್ಚರಿಯಾಯಿತು. ಸಿಡಿಲುಮರಿಯನ್ನು ಹಿಡಿದೆತ್ತಿ ತಬ್ಬಿಕೊಂಡು ಅರ್ಥವಾಗದವನಂತೆ ತೊದಲಿದನು: +“ಅಂದರೇನು ಸಿಡಿಲುಮರೀ, ಯುದ್ಧಕ್ಕೆ ಹೊರಡುವಿಯಾ?” +“ಹೌದು- ಪ್ರೀತಿಯಿಂದ ತಾವಿತ್ತ ಸಿಡಿಲು ಮರಿಯೆಂಬ ಬಿರುದನ್ನು ಸಾರ್ಥಕಗೊಳಿಸಲು ಬಯಸುವೆ.” +ಎನ್ನುತ್ತಾ ಬಾಗಿ ಗುರುವಿನ ಚರಣಧೂಳಿಯನ್ನು ಹಣೆಗಿಟ್ಟುಕೊಂಡು ಮರುಕ್ಷಣದಲ್ಲಿಯೇ ಬಳಿಯಲ್ಲಿದ್ದ ಸೈನಿಕನ ಕುದುರೆಯ ಮೇಲೆ ಟಣ್ಣನೆ ಜಿಗಿದು ಮಿಂಚಿನೋಟದಿಂದ ಮರೆಯಾದನು. +ಎಲ್ಲರೂ ಬೆರಗಾಗಿ ನೋಡುತ್ತಿದ್ದರು. ತಮ್ಮ ಕಿವಿ ಕಣ್ಣುಗಳ ಮೇಲೆ ಎಷ್ಟೆಂದರೂ ಅವರಿಗೆ ನಂಬಿಕೆ ಹುಟ್ಟದೆ ತೊಳಲಾಟದಲ್ಲಿ ಸಿಲುಕಿದ್ದರು. +ಕ್ಷಣಹೊತ್ತು ಕಳೆದಾಗ ಪಾರ್ತಿಸುಬ್ಬನಿಗೆ ನಡೆದುದೇನೆಂಬುದರ ಅರಿವು ಬಂದಿತು. ಆದ ಪ್ರಮಾದಕ್ಕಾಗಿ ಅವನ ಮನಸ್ಸು ಮಿಡುಕಿತು. ಇನ್ನೂರು ಮಂದಿ ಭಯಂಕರವಾದ ಫ಼ಿರಂಗಿ ಸೈನಿಕರನ್ನು ಇದಿರಿಸಲು ಏಕಾಂಗಿಯಾದ ಸಿಡಿಲುಮರಿಗೆ ಸಾಧ್ಯವೇ? ತಿಳಿದೂ ತಿಳಿದೂ ಪತಂಗವು ಅಗ್ನಿಕುಂಡಕ್ಕೆ ಹಾರುತ್ತಿದೆಯೆಂದು ಹೆದರಿದನು. ಸುತ್ತಲೂ ತನ್ನಂತೆಯೇ ನಿಬ್ಬೆರಗಾಗಿ ನಿಂತಿದ್ದ ಬಣ್ಣದ ಗೋಪಣ್ಣ, ರಾಮಚಂದ್ರರನ್ನು ಉದ್ದೇಶಿಸಿ ನುಡಿದನು: +“ಏನು ನೋಡುತ್ತೀರಿ? ಸಿಡಿಲು ಮರಿಯನ್ನು ಸಾವಿನ ಬಾಯಿಗೆ ಬಿಡುವಿರಾ?” +ಗುರುವಿನ ಮಾತು ಶಿಷ್ಯರಿಗೆ ಅರ್ಥವಾಯಿತು. ಬಣ್ಣದ ಗೋಪಣ್ಣ, ರಾಮಚಂದ್ರ ಮತ್ತು ಅವರನ್ನು ಅನುಸರಿಸಿ ಇನ್ನೂ ಹಲವು ವೀರರು ಸಿಡಿಲುಮರಿ ನೆಗೆದೆಡೆಗೆ ಧಾವಿಸಿದರು. +ಪಾರ್ತಿಸುಬ್ಬ ಆಹತ ಭಾವದಿಂದ ಬೆಂದು, ಬಸವಳಿದು ಕುಸಿದು ಕುಳಿತನು. ಏನೋ ಒಂದು ಪ್ರತ್ಯಾಶೆ ಅವನ ಕಣ್ಣುಗಳನ್ನು ಸಿಡಿಲುಮರಿ ಮರೆಯಾದ ದಿಕ್ಕಿಗೆ ತಿರುಗಿಸುತ್ತಿದ್ದಿತು………….. +* +* +* +ಪಾರ್ತಿಸುಬ್ಬನ ಯಕ್ಷಗಾನ ಮಂಡಲಿ ಚದರಿತ್ತು. ನಟರು, ಹಿಮ್ಮೇಳದವರು, ಪಾರ್ತಿಸುಬ್ಬನ ಅಪ್ಪಣೆಯನ್ನು ಪಡೆಯಲು ಅವಕಾಶವಿಲ್ಲದೆ, ತಮ್ಮ ತಮ್ಮ ಊರುಗಳತ್ತ ಧಾವಿಸಿದ್ದರು. ಆ ವರ್ಷ ದೇವರ ಸೇವೆ- ಗೆಜ್ಜೆಪೂಜೆ ನಡೆಯದೆ ನಡೆಯದೆ ಮೇಳ ಚದುರಿತು. ಈ ಕೊರಗು ಪಾರ್ತಿಸುಬ್ಬನ ಭಕ್ತಿ ಭರಿತವಾದ ಕವಿಹೃದಯವನ್ನು ಕೊರೆಯುತ್ತಿತ್ತು. +ಮರುದಿನ ಸಂಜೆಯ ಹೊತ್ತು. ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದಿನ ಮಂಟಪದಲ್ಲಿ ಪಾರ್ತಿಸುಬ್ಬ ಯೋಚನಾಮಗ್ನನಾಗಿ ಕುಳಿತಿದ್ದನು. ತನ್ನ ಪ್ರೀತಿಯ ಸಿಡಿಲುಮರಿ, ಅವನನ್ನು ಹಿಂಬಾಲಿಸಿ ತೆರಳಿದ ಬಣ್ಣದ ಗೋಪಣ್ಣ, ರಾಮಚಂದ್ರರ ಸುದ್ದಿ ತಿಳಿಯದೆ ಅವನ ಕರುಳು ಕಳವಳದ ಪಂಜರವಾಗಿತ್ತು…………………. +ಆದರೆ, ಒಂದು ಅಚ್ಚರಿಯ ಸಂಗತಿ. ಯಾವುದಕ್ಕೆ ಹೆದರಿ ನಿನ್ನೆಯ ಆಟ ಅರ್ಧದಲ್ಲಿ ಕಡಿದಿತ್ತೋ, ಅಂತಹ ಸಿಡಿಲಿನಂತಹ ಸುದ್ದಿ, ಸೈನಿಕನು ಅರುಹಿದುದು- ಅದರಂತೆ ಫ಼ಿರಂಗಿಯವರ ಸೈನ್ಯ ಕುಂಬಳೆಯತ್ತ ಬರಲೇ ಇಲ್ಲ; ಎಲ್ಲರೂ ಹೆದರಿದ್ದಂತೆ, ಬಂದು ಕುಂಬಳೆಯ ಕೋಟೆಯನ್ನು ಕೆಡವಿ, ಅರಸರ ವಂಶವನ್ನು ತರಿದು, ಬೊಕ್ಕಸವನ್ನು ಸುಲಿದು, ಊರಿಗೆ ಕೊಳ್ಳೆಯಿಟ್ಟು ಅನಾಹುತ ಮಾಡಲೇ ಇಲ್ಲ…………. ಹಾಗಾದರೆ, ಆ ಸೈನಿಕನು ಹೇಳಿದುದು ಸುಳ್ಳೇ?-ಪಾರ್ತಿಸುಬ್ಬ ವಿಚಾರಿಸುತ್ತಿದ್ದನು……… +ಸೂರ್ಯನು ಕೆಂಪಿನ ಗೋಳವಾಗಿ ಪಡುಕಡಲಿಗೆ ಉರುಳುವುದರಲ್ಲಿದ್ದನು. ಎಲ್ಲೆಲ್ಲೂ ಸ್ಮಶಾನ ಶಾಂತಿ ಒಡಮೂಡಿತ್ತು. ಹಕ್ಕಿಗಳ ಸುಳಿವೂ ಇರಲಿಲ್ಲ. ಆ ರುದ್ರ ಸಂಧ್ಯೆಯಲ್ಲಿ ಇಬ್ಬರು ಯುವಕರು ಯಾವುದೋ ಭಾರವಾದ ವಸ್ತುವನ್ನು ಒಂದು ಬಿದಿರಗಳಕ್ಕೆ ಕಟ್ಟಿ ಹೆಗಲಲ್ಲಿಟ್ಟುಕೊಂಡು, ದೇವಾಲಯದತ್ತ ಬಂದರು. ದೇವಾಲಯದ ಮುಂಬಾಗಿಲಿನಲ್ಲಿ ಅದನ್ನಿಳಿಸಿ, ಅದರಲ್ಲೊಬ್ಬನು ಒಳನಡೆದನು. +“ಗುರುಗಳೇ, ತಮ್ಮ ಸಿಡಿಲಮರಿಯನ್ನು ಕರೆತಂದಿರುವೆವು.” +– ಎಂದ ವ್ಯಕ್ತಿಗಳು. ವಿನಯವು ಅವರ ಮಿದುಮಾತಿನಲ್ಲಿ ತುಂಬಿ ತುಳುಕುತ್ತಿತ್ತು. +“ಯಾರು ಗೋಪಣ್ಣನೇ?- ಏನು ಸಿಡಿಲುಮರಿ ಬಂದನೇ?” +ಪಾರ್ತಿಸುಬ್ಬ ಬಹಿರ್ಮುಖನಾಗಿ ಆಶ್ಚರ್ಯದಿಂದ ಪ್ರಶ್ನಿಸಿದನು.. +“ಹೌದು ಗುರುದೇವ. ಆದರೆ…………” +ಎಂದು ಗೋಪಣ್ಣ ಏನನ್ನೋ ಹೇಳಲು ಬಾಯ್ತೆರೆದನು. ಆದರೆ ಅವನ ಬಾಯಿಯಿಂದ ಮಾತು ಹೊರ ಹೊರಡಲಿಲ್ಲ. ನಾಲಿಗೆ ಕೊರಡಾಗಿತ್ತು. +ಪಾರ್ತಿಸುಬ್ಬ ಗೋಪಣ್ಣನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನ ಸಿಡಿಲುಮರಿಯನ್ನು ಕಾಣುವ ಉತ್ಸಾಹದಲ್ಲಿ ಆಗಲೇ ಅವನು ದೇವಾಲಯದಿಂದ ಹೊರಕ್ಕೆ ಜಿಗಿದಿದ್ದನು. ತನ್ನ ಶಿಷ್ಯನನ್ನು ಕಾಣುವ ಉತ್ಸಾಹ ಅವನ ಚಿಂತೆಯನ್ನು ಹೊಡೆದೋಡಿಸಿತ್ತು. +ಆದರೆ…………….. +ವಿಧಿಯಾಟವು ಬೇರೊಂದು ತೆರನಾಗಿತ್ತು. +ರಾಮಚಂದ್ರ, ತಾನು ಇಳುಹಿದ ಸಿಡಿಲು ಮರಿಯ ಶವದ ಬುಡದಲ್ಲಿ ಕುಳಿತು ಅಳುತ್ತಿದ್ದನು. ಪಾರ್ತಿಸುಬ್ಬ ಬಂದುದು ಕಂಡೊಡನೆಯೇ ಅವನ ದು:ಖವು ಉಮ್ಮಳಿಸಿ ಬಂತು. “ಗುರುದೇವ……….” ಎನ್ನುತ್ತಾ ಗುರುವಿನ ಕಾಲನ್ನು ತಬ್ಬಿಕೊಂಡನು. +ಪಾರ್ತಿಸುಬ್ಬನಿಗೆ ನಡೆದುದೇನೆಂದು ತಿಳಿಯಿತು. “ಸಿಡಿಲುಮರೀ………….” ಎನ್ನುತ್ತಾ ಕೆಂಗಣ್ಣ ನಾಯಕನ ದೇಹವನ್ನು ಅಪ್ಪಿಕೊಂಡನು. ಪ್ರಾಯಮೀರಿದ ಮೇಲೆ ಅದುತನಕ ಅತ್ತು ಅರಿಯದ ಅವನ ಕಣ್ಣುಗಳಿಂದ ಅಶ್ರುಧಾರೆ ಸತತವಾಗಿ ಸುರಿಯತೊಡಗಿತು………….. +ಬಣ್ಣದ ಗೋಪಣ್ಣ ಪಾರ್ತಿಸುಬ್ಬನ ಹಿಂದಿನಿಂದಲೇ ಬಂದು ನಿಂತಿದ್ದನು. ಆತನು, ಮೆಲ್ಲ ಮೆಲ್ಲನೆ ನಡೆದಿದ್ದ ಕತೆಯನ್ನು ಹೇಳತೊಡಗಿದನು: +“ಗುರುದೇವ, ನಮ್ಮ ಸಿಡಿಲುಮರಿ ಹಾಗೆಯೇ ಸಾಯಲಿಲ್ಲ. ತಾನು ಕೊನೆಯ ಬಾರಿ ಆಡಿದ ಮಾತನ್ನು ಸಾರ್ಥಕಗೊಳಿಸಿದ್ದಾನೆ. ಸಿಡಿಲುಮರಿಯಾಗಿಯೇ ಇನ್ನೂರು ಮಂದಿ ಫ಼ಿರಂಗಿ ಸೈನಿಕರನ್ನು ಕೊಂದು ಕೆಡಹಿದ್ದಾನೆ.” +ಪಾರ್ತಿಸುಬ್ಬನಿಗೆ ಅಚ್ಚರಿಯಾಯಿತು. ಗದ್ಗದ ಕಂಠದಲ್ಲಿ ಅಭಿಮಾನ ತುಂಬಿಕೊಂಡು ಕೇಳಿದನು: +“ಏಕಾಂಗಿಯಾಗಿ?” +“ಹೌದು-ಏಕಾಂಗಿಯಾಗಿಯೇ. ಹೇಗೆಂಬುದರ ವಿವರವು ಆರಿಗೂ ಅರಿಯದು. ಬಹುಶ: ಕಾಡುದಾರಿಯಲ್ಲಿ ಸೈನಿಕರನ್ನು ದಾರಿತಪ್ಪಿಸಿ- ರಾತ್ರಿ ಕಾಲವಲ್ಲವೇ?- ತನ್ನೂರಿಗೆ ಕೊಂಡೊಯ್ದು ತನ್ನ ಗೆಳೆಯರ ಸಹಾಯದಿಂದ ಸದೆ ಬಡಿದನೆಂದು ತಿಳಿಯುತ್ತದೆ. ಕೊನೆಯ ಗಳಿಗೆಯಲ್ಲಿ ಫ಼ಿರಂಗಿಯವರ ಗುಂಡೊಂದು ಸಿಡಿಲುಮರಿಯ ಪ್ರಾಣವನ್ನು ಕುಡಿಯಿತು…….. ಅವನ ಊರು ರಣರಂಗವಾಗಿ ರಕ್ತದ ನೆರೆಯಲ್ಲಿ ಮುಳುಗಿದೆ. ಅಲ್ಲಿ ಹೋಗಿ ಹುಡುಕಿ ಈ ದೇಹವನ್ನು ತಂದೆವು………” +ಗೋಪಣ್ಣನ ಮಾತು ತಡೆಯಿತು. ಅಲುಗಾಡದ ಎಲ್ಲರ ದೇಹಗಳೂ ಅಭಿಮಾನದ ಉಸಿರನ್ನು ಸೇದುತ್ತಿದ್ದವು. +* +* +* +ಚಿತೆ ಉರಿಯಿತು; ಎಲ್ಲರ ಎದೆಯನ್ನೂ ಉರಿಸುತ್ತಿದ್ದ ಚಿಂತೆಯ ದಾವಾಗ್ನಿಯೊಡನೆ, ಪಾರ್ತಿಸುಬ್ಬ ನಿನ್ನೆಯ ರಾತ್ರಿ ಪೂರೈಸದಿದ್ದ ಗೆಜ್ಜೆಪೂಜೆಯನ್ನು ಇಂದು ಪೂರೈಸಿದ್ದನು: ಗೆಜ್ಜೆಯನ್ನು ಪೂಜಿಸಿ, ಸಿಡಿಲುಮರಿಯ ಕಾಲುಗಳಿಗೆ ಕಟ್ಟಿ ಹಾಗೆಯೇ ಅಭಿಮಾನದಿಂದ, ಭಕ್ತಿಯಿಂದ ತಾನೇ ಹೊತ್ತು ಚಿತೆಯೇರಿಸಿದ್ದನು. +ಪಡುವಣ ಬೆಂಕಿಯ ಗೋಳ ಆರಿತ್ತು. ಎಲ್ಲೆಲ್ಲೂ ಚಿಂತೆಯು ಕಪ್ಪಾಗಿ ದಟ್ಟವಾಗಿ ಆವರಿಸಿತ್ತು. ಅದನ್ನು ಸಿಡಿಲುಮರಿಯ ಚಿತೆಯನ್ನುರಿಸುತ್ತಿದ್ದ ವೀರಾವೇಶದ ಬೆಳಕು ಬೆಳಗಿಸಿತ್ತು. ಅದನ್ನು ದಿಟ್ಟಿಸಿ ನೋಡುತ್ತಾ, ಪಾರ್ತಿಸುಬ್ಬನ ಮನಸ್ಸಿನಲ್ಲಿ ತನ್ನ ಮೆಚ್ಚಿನ ಗೀತೆಯು ಮೂಡಿ ಬಂತು: +“ರಾಮನಾಣತಿಯಂತೆ ಸಿಡಿಲುಮರಿಯಂಗದನು……….” +ಎಂದೂ ಕವಿಗಳಲ್ಲದ ಬಣ್ಣದ ಗೋಪಣ್ಣ ರಾಮಚಂದ್ರರ ಮನಸ್ಸಿನಲ್ಲೂ ಆ ಕವಿತೆಯ ಪ್ರತಿಧ್ವನಿ ಸುಳಿಯುತ್ತಿತ್ತು: +“ಗುರುವಿನಾಣತಿಯಂತೆ ಸಿಡಿಲುಮರಿ ಕೆಂಗಣನು…………” +ಮೆಲ್ಲ ಮೆಲ್ಲನೆ ಬೆಳಕು ಮೂಡಿ ಜಗತ್ತನ್ನು ಬೆಳಗಿದಾಗ, ಸಿಡಿಲುಮರಿಯ ಚಿತೆಯ ಪವಿತ್ರ ಜ್ಯೋತಿಯು ಮೆಲ್ಲ ಮೆಲ್ಲನೆ ವಿಶ್ವಜ್ಯೋತಿಯಲ್ಲಿ ವಿಲೀನವಾಯಿತು. +‘ಸಿಡಿಲುಮರಿ’- ಕೇರಳದ ಹೈಸ್ಕೂಲ್ ತರಗತಿಗಳಿಗೆ ಕನ್ನಡ ಪಠ್ಯದಲ್ಲಿ ಓಂದು ಪಾಠವಾಗಿತ್ತು ಹಾಗೂ ’ಕಾಸರಗೋಡಿನ ಕತೆಗಳು’ (ಸಂ: ವಸಂತಕುಮಾರ ಪೆರ್ಲ) ನಲ್ಲಿ ಶತಮಾನದ ಒಂದು ಕತೆಯಾಗಿ ಪ್ರಕಟಗೊಂಡಿದೆ. +***** +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +ಇಂಗ್ಲೀಷಿನಲ್ಲಿ ಎರಡು ಸಾಲು ಮಾಡಬೇಕು. ಕತೆ ಬರೆಯುವ ವಿಶ್ವಾಸವನ್ನು ಅವನ ಕೆಲ ಸ್ನೇಹಿತರು ಕೇಳುತ್ತಲೇ ಇರುತ್ತಾರೆ. ನೀವು ಕತೆ ಹೇಗೆ ಬರೆಯುತ್ತೀರಿ? ಮೂಡ್ ಯಾವಾಗ ಬರುತ್ತೆ? ಹೀಗೇ ಇರಬೇಕೂಂತ ನಿರ್ಧಾರ ಮಾಡಿ ಬರೀತೀರಾ? ಸಂಭಾಷಣೆ […] +“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_28.txt b/Kannada Sahitya/article_28.txt new file mode 100644 index 0000000000000000000000000000000000000000..a4c3658e522a61268770869ded18b2d491a3befd --- /dev/null +++ b/Kannada Sahitya/article_28.txt @@ -0,0 +1,25 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, ಎಷ್ಟು ವಾಸ್ತವಿಕವಾಗಿದೆಯೋ ಹೊರಕವಚ ಅಷ್ಟೇ ಅಸಹಜ ಎನ್ನಿಸುವ ಸ್ಥಿತಿಯಲ್ಲಿದೆ. ಏನೇ ಇರಲಿ ಹೇಳಲೇಬೇಕೆಂದು ನಿರ್ಧರಿಸಿದ ಮೇಲೆ ಈ ತುಮುಲ ಏಕೆ ಬೇಕು? ನಾನು ಯಾರ ಬಗ್ಗೆ ಹೇಳಬೇಕೆಂದು ಹೊರಟಿರುವೆನೋ ಆ ತಾಯಿಯ ಬೇಗುದಿಯ ಚಿತ್ರಣವನ್ನು ಶಬ್ದಗಳಲ್ಲಿ ನೀಡಲಾರೆ ಎಂಬುದಷ್ಟೆ ನನ್ನ ಪ್ರಾಮಾಣಿಕ ಅಳುಕು. +ಆ ತಾಯಿ ಬೇರೆ ಯಾರೂ ಅಲ್ಲ. ನನ್ನ ಆಪ್ತ ಸ್ನೇಹಿತ, ಸಮಪ್ರಾಯದವ, ಬಾಲ್ಯದಿಂದ ಒಡನಾಡಿಯಾಗಿದ್ದವ ಅವನೆ – ಶ್ರೀವತ್ಸ. ಅವನ ಅಮ್ಮ. ನಾನೂ ಕರೆಯುತ್ತಿದ್ದುದು ಅಮ್ಮ ಎಂದೆ. ಅವರೂ ಹಾಗೆ, ಅವನನ್ನು ವತ್ಸ ಎಂದು ಕರೆದರೆ ನನ್ನನ್ನು ಮಗ ಎಂದೇ ಕರೆಯುತ್ತಿದ್ದರು. ಎಷ್ಟು ವಿಚಿತ್ರ ನೋಡಿ. ವತ್ಸನ ಆತ್ಮಹತ್ಯೆ ಖಾತ್ರಿಯಾದಾಗ ನನ್ನನ್ನು ಬಲವಾಗಿ ಹಿಡಿದು ಅವರು ಪುನಃ ಪುನಃ ಹೇಳಿದ್ದು ಒಂದೇ ಒಂದು ಮಾತು. “ವತ್ಸ ಹೋದ, ನಾನು ಯಾರನ್ನು ಮಗಾ ಅಂತ ಕರಿಯಲಿ. . .”. ವತ್ಸನ ನೆರಳಿನಲ್ಲಿ ಯಾರನ್ನು ಅವರು ಮಗಾ ಎಂದು ಕರೆಯುತ್ತಿದ್ದರೋ ಅವನನ್ನು ತಬ್ಬಿ ಹಿಡಿದು ಹೇಳಿದ್ದು, ಒಂದೇ ಮಾತು, “ನನ್ನ ಮಗ ಎಲ್ಲಿ? ಮಗಾ ಅಂತ ಯಾರನ್ನ ಕರೆಯಲಿ.” ಕೈ ಎಳೆಯುತ್ತ ಬೊಬ್ಬೆ ಹಾಕಿದ್ದು ಒಂದೇ ಒಂದು ಮಾತು “ನಿನ್ನ ಗೆಳೆಯ ಎಲ್ಲಿ? ನನ್ನ ಕರುಳಿನ ಚೂರು ಎಲ್ಲಿ?” +ಆ ಕ್ಷಣ ಅವರ ಕರುಳಿನ ಚೂರು ಮುದ್ದೆಯಾಗಿ ಎದುರಿತ್ತು. ಅಂಗವಿಲ್ಲ. ಆಕಾರವಿಲ್ಲ, ರೂಪವಿಲ್ಲ, ತೂಕವಿಲ್ಲ. ಒಂದು ಮುದ್ದೆ. ಪಾಲಿತಿನ್ ಬ್ಯಾಗಿನ ಒಳಗೆ ಒಂದಷ್ಟು ಮಾಂಸದ ಮುದ್ದೆ. ಪಡಸಾಲೆ ತುಂಬ ಹರಡಿದ ವಾಸನೆ. ರಾಶಿಗಟ್ಟಲೆ ಹಚ್ಚಿಟ್ಟ ಊದಿನ ಬತ್ತಿ, ಚೆಲ್ಲಿದ ಫಿನಾಯಿಲ್ಲು, ಸೆಂಟಿನ ಪರಿಮಳವನ್ನೆಲ್ಲ ಮೀರಿ ಮೂಗಿನಿಂದ ನೆತ್ತಿಗೇರುತ್ತಿದ್ದ, ಜ್ವಾಲಾಮುಖಿಯಂತೆ ಹೊಟ್ಟೆಯನ್ನು ಹಿಚುಕುತ್ತಿದ್ದ ಅಸಾಧ್ಯ ವಾಸನೆ. ಪೋಸ್ಟ್‌ಮಾರ್ಟಂನ ಶಾಸ್ತ್ರಕ್ಕೂ ಎಡೆಯಿಲ್ಲದ ಸ್ಥಿತಿಯಲ್ಲಿ ಎಲುಬಿಗಂಟಿದ ಮಾಂಸದ ಮುದ್ದೆ. ಆ ಸ್ಥಿತಿಯಲ್ಲಾದರೂ ಆ ಮಾಂಸದ ರಾಶಿ ಮೇಲಕ್ಕೆ ಬರಲು, ಸಮಾಜದ ಮುಂದಕ್ಕೆ ಬರಲು, ಸಂಸ್ಕಾರದ ಕೊನೆ ಕಾಣಲು ಅದೇ ತಾಯಿ ಎಂಥ ಧೈರ್ಯ ತಾಳಬೇಕಾಯಿತು. ಎಂಥ ಸಾಹಸ ಮಾಡಬೇಕಾಯಿತು. ಎಂಥ ಹೋರಾಟ ನಡೆಸಬೇಕಾಯಿತು. +ಇಲ್ಲಿ ನಾನೊಬ್ಬ ಸಾಕ್ಷಿ ಮಾತ್ರ. ಅದರೆ ಸಾಕ್ಷಿಯ ಕಟಕಟೆಯೊಳಗೆ ಕಾಲ ಇಷ್ಟು ದೀರ್ಘವಾಗುತ್ತದೆ ಎಂದು ನಾನೆಣಿಸಿರಲಿಲ್ಲ. ಸ್ಥಿತಿ ಇಷ್ಟು ಮರಗಟ್ಟಿ ಹೋಗುತ್ತದೆ ಎಂದು ನಾನೆಣಿಸಿರಲಿಲ್ಲ. ಎದೆಯೊಳಗಿನ ಜೀವ ಗಾಳಿಗೊಡ್ಡಿದ ಮಿಣುಕುದೀಪವಾದ ಅನುಭವ. ವತ್ಸನ ಅಪ್ಪ ಒಂದು ಮೂಲೆಯಲ್ಲಿ ತಲೆಯನ್ನು – ಮಡಚಿದ ಕಾಲು ಗಂಟುಗಳ ನಡುವೆ ಹುದುಗಿಸುವಂತೆ ಬಗ್ಗಿ ಕುಳಿತಿದ್ದರು – ಆಕ್ರಮಣದ ಅಪಾಯ ಎದುರಾದಾಗ ಮಳಲಿನ ಗೂಡಿನೊಳಗೆ ಹುದುಗಿ ಹೋಗುವ ಏಡಿಯಂತೆ. ಅಥವಾ ಅದೊಂದು ಬಗೆಯ ಸಮಾಧಿ ಸ್ಥಿತಿಯೂ ಆಗಿದ್ದಿರಬಹುದು. ನನ್ನ ಮಟ್ಟಿಗೆ ಅವರು ನಿಷ್ಕ್ರಿಯರಾಗಿದ್ದರು. ಸ್ಪಂದನ ರಹಿತರಾಗಿದ್ದರು. ಚಲಿಸಲಾರದ ಸ್ಥಿತಿಯಲ್ಲಿದ್ದರು. ಈಗ ಮಾತ್ರ ಅಲ್ಲ. ಹತ್ತಾರು ವರ್ಷಗಳಿಂದ ವತ್ಸನ ರಟ್ಟೆಯ ಮಾಂಸಖಂಡಗಳು ಉಬ್ಬಿ ಬಿಗಿಗೊಂಡಂದಿನಿಂದ. ಎದೆ ಸೆಟೆದು ನಿಂತಂದಿನಿಂದ. ಅವನ ಮುಂಗುರುಳು ಎಲ್ಲೆಂದರಲ್ಲಿ ಹಾರಾಡಲು ತೊಡಗಿದಂದಿನಿಂದ. ಅವನ ಹೊಳಪು ಕಣ್ಣುಗಳು ನಿರಂತರವಾಗಿ ಚಲಿಸತೊಡಗಿದಂದಿನಿಂದ. ಉತ್ಸಾಹದಿಂದ ಅವನು ಉಬ್ಬರಿಸುತ್ತಿದ್ದಂತೆ ಅವರ ಜೀವನೋತ್ಸಾಹ ಕುಗ್ಗುತ್ತಿದ್ದುದನ್ನು ನಾನು ಗಮನಿಸಿದ್ದೆ. ಅಥವಾ ಅವರ ಜೀವನೋತ್ಸಾಹದ ಕುದುರೆಗೆ ಕಡಿವಾಣ ಹಾಕಲೆಂದೇ ಅವನು ಅತಿ ಉತ್ಸಾಹ ತಾಳುತ್ತಿದ್ದನೋ ಎನೋ. . . +ಈಗ ಈ ಪಡಸಾಲೆಯಲ್ಲಿ ವತ್ಸನ ದೇಹ ಉತ್ಸಾಹ ರಹಿತವಾಗಿದೆ. ಶೂನ್ಯದ ತುಂಬ ಅವನ ವಾಸನೆ ತುಂಬಿದೆ. ಯಾರೂ ಹತ್ತಿರ ಬಾರದಷ್ಟು. ಯಾರೂ ಸ್ವೀಕರಿಸದಷ್ಟು. ಅವನ ಪ್ರಾಣ ಸ್ನೇಹಿತನಾದ ನನಗೂ ಸಹಿಸಲಾಗದಷ್ಟು. ಉಳಿದವರೆಲ್ಲ ದೂರದಲ್ಲಿ ಅಂಗಳದ ತುದಿಯಲ್ಲಿ ನಿಂತಿದ್ದಾರೆ. ತೋಟದ ಅಂಚಿನಲ್ಲಿ ಗುಂಪು ಗುಂಪಾಗಿ ಕುಳಿತಿದ್ದಾರೆ. ವತ್ಸನ ಮಟ್ಟಿಗೆ ಸಹಜವಾಗಿ ರೂಪುಗೊಂಡಿದ್ದ ಸಾವನ್ನು ಅಸಹಜಗೊಳಿಸುತ್ತಿದ್ದಾರೆ. ಅವನ ಕೊಳೆತ ದೇಹದ ಮೂಲಕ ಅವನ ಬದುಕನ್ನು ವಿಕೃತಗೊಳಿಸುತ್ತಿದ್ದಾರೆ. ತಮ್ಮ ತಮ್ಮ ಕನ್ನಡಿಯಲ್ಲಿ ರೂಪುಗೆಟ್ಟ ಅವನ ಶವಕ್ಕೆ ತಾವು ಬಯಸುವ ರೂಪ, ಯೌವ್ವನ, ಶಕ್ತಿ, ಯುಕ್ತಿ, ಹೊಳಪು, ಒನಪು, ವಯ್ಯಾರಗಳ ಬಣ್ಣ ಹಚ್ಚಿ ಅಲಂಕರಿಸಲು ಹವಣಿಸುತ್ತಿದ್ದಾರೆ. ಗುಜು ಗುಜು ಮಾತುಗಳ ಭಾರ ಹೇರಿ ಅವನ ಬದುಕಿನ ಸತ್ಯವನ್ನು ಹೂಳತೊಡಗಿದ್ದಾರೆ, ನಿಜವಾದ ಸಂಸ್ಕಾರಕ್ಕೆ ಆತುರವಿಲ್ಲ. ಅದು ತನ್ನಿಂದ ತಾನಾಗಿಯೇ ಆಗುತ್ತದೆ ಎಂಬ ಭರವಸೆಯ ನೆರಳಿನಲ್ಲಿ ಅವರ ಮಾತುಗಳೆಲ್ಲ ಸಮುದ್ರದಲ್ಲಿ ಕರಗುವ ಉಪ್ಪಿನಂತೆ, ಬಾನಿನಲ್ಲಿ ತೇಲಿಹೋಗುವ ತೆಳು ಮೋಡದಂತೆ ಏನನ್ನೂ ಸಾಧಿಸದೆ ಸದ್ದಿನ ಮೊತ್ತವಾಗುತ್ತಿದೆ. ನಾನು ಅಲ್ಲಿ ಅರ್ಥ ಕಾಣದೆ ಪಡಸಾಲೆಗೆ ಬರುತ್ತಿದ್ದೆ. ಇಲ್ಲಿ ಅರ್ಥ ದುರಂತವಾಗುವುದಕ್ಕೆ ಸಾಕ್ಷಿಯಾಗ ತೊಡಗಿದೆ. ಬಾಲ್ಯದ ಪೊರೆ ಕಳಚಿ, ಮುಗ್ಧ ಭಾವನೆಗಳೆಲ್ಲ ಬಾಡಿ ಹೋಗಿ ಯಥಾರ್ಥ ಬದುಕು ಎಂದರೆ ಒಂದು ನಿರಂತರ ಸಂಘರ್ಷ ಎಂಬ ತಿಳಿವು ಮೂಡಿದಂದಿನಿಂದ ನಾನು ಕೇವಲ ಸಾಕ್ಷಿ ಮಾತ್ರ ಆಗಿದ್ದೇನೆ. +ವ್ಯಥೆಯನ್ನು ಕಥೆಯಾಗಿಸುವಾಗ ಮಾತುಗಳೆಲ್ಲ ಗಡಿ ಮೀರದಂತೆ ನೋಡಿಕೊಳ್ಳಬೇಕಾಗಿದೆ. ಜೋಡಿಹಕ್ಕಿಗಳು ಬೇರೆಯಾದಾಗ ಒಂದು ವಾಕ್ಯ ಕಾವ್ಯವಾಯಿತಂತೆ. ಆದರೆ ’ವತ್ಸ ಹೋದ. ನಾನು ಯಾರನ್ನು ಮಗಾ ಅಂತ ಕರೆಯಲಿ’ ಎಂಬ ಆ ಅಮ್ಮನ ಮಾತಿನಲ್ಲಿ, ನಾನು ಕಾವ್ಯವನ್ನು ಹುಡುಕುತ್ತಿಲ್ಲ. ಹತ್ತಾರು ವರ್ಷಗಳಲ್ಲಿ ವತ್ಸ, ಅವನ ಅಪ್ಪ ಮತ್ತು ಈಗ ಗೋಳಿಡುತ್ತಿರುವ ಈ ಅಮ್ಮನ ನಡುವೆ ಒಂದು ಮಾನವೀಯ ಗೊಣಸಾಗಿ, ಸಾಕ್ಷಿಯಾಗಿ ಉಸಿರಾಟ ನಡೆಸಿದ್ದರಿಂದ ನಾನು ತೀರ್ಪನ್ನು ನಿರೀಕ್ಷಿಸುತ್ತಿದ್ದೇನೆ. +ಜಗತ್ತಿನ ಎಲ್ಲ ಮಕ್ಕಳಂತೆ ನನಗೂ ವತ್ಸನಿಗೂ ಮೊದ ಮೊದಲು ಜೀವನ ತೀರ ಸರಳವಾಗಿತ್ತು. ಆಟದ ಬಯಲಾಗಿತ್ತು. ಕನಸಿನ ಹೊಳೆಯಾಗಿತ್ತು. ಶುಚಿರುಚಿಯ ಹೂದೋಟವಾಗಿತ್ತು. ನಾನು ಅನಾಥ. ಆದರೆ ಆ ಪ್ರಜ್ಞೆ ಎಂದೂ ನನ್ನನ್ನು ಕಾಡಿದ್ದಿಲ್ಲ. ಅದಕ್ಕೆ ಕಾರಣ ವತ್ಸನ ಅಂದರೆ ಈಗ ಅವನ ಹೆಣದ ಚೀಲದ ಮುಂದೆ ಕುಳಿತಿರುವ ಈ ಅಮ್ಮ ಒಂದೇ ಬಟ್ಟಲಿನಲ್ಲಿ ನನಗೂ ಅವನಿಗೂ ಬಡಿಸುತ್ತಿದ್ದರು. ನನ್ನ ಚಡ್ಡಿಯ ಗುಂಡಿ ಅವನ ಶರ್ಟಿನ ಹರಿದತೋಳನ್ನು ಒಂದೇ ದಾರದಲ್ಲಿ ಹೊಲಿಯುತ್ತಿದ್ದರು. ನಾನು ನಕ್ಕರೆ ನಗುತ್ತಿದ್ದರು. ಅವನು ಅತ್ತಾಗ ಅಳುತ್ತಿದ್ದರು. ನನ್ನನ್ನು ಬೇಲಿಯಾಗಿಸಿ ಅವನನ್ನು ಕಾಪಾಡುತ್ತಿದ್ದರು. ಅವನನ್ನು ಅರಳಿಸಿ ನನ್ನನ್ನು ಚಿಗುರಿಸುತ್ತಿದ್ದರು. ಒಂದು ಕ್ಷಣ ಹಾಯಾಗಿ ಅವರು ಕುಳಿತುದನ್ನು ನಾನು ಕಂಡಿರಲಿಲ್ಲ. ಪ್ರತಿ ಕ್ಷಣದಲ್ಲೂ ವತ್ಸನನ್ನು ತುಂಬಿಸಿಕೊಳ್ಳುವ ಒಂದು ಹೋರಾಟ ಅವರ ಬದುಕಾಗಿತ್ತು ಎಂಬುದು ಈಗ ನನಗೆ ಸ್ಪಷ್ಟವಾಗಿದೆ. ಹತ್ತು ದಿನಗಳ ಹಿಂದೆ ಸಿಕ್ಕಾಬಟ್ಟೆ ಕುಡಿದು ಉಪ್ಪರಿಗೆಯಿಂದ ತೂರಾಡುತ್ತ ಕೆಳಕ್ಕಿಳಿದು ಚಾವಡಿಯ ಸೋಫಾದ ಮೇಲೆ ಉರುಳಿ ಬಿದ್ದು ಮೃದುವಾದ ನೆಲಹೊದಿಕೆಯ ಮೇಲೆ ಈಗ ಹೆಣವಾಗಿರುವ ವತ್ಸ ಈಗಿನ ವಾಸನೆಯಷ್ಟೇ ಬಲವಾದ ವಾಸನೆಯನ್ನು ಹೊರಹೊಮ್ಮುತ್ತಿದ್ದ ವಾಂತಿಯನ್ನು ಚೆಲ್ಲಿದಾಗ ಉಟ್ಟ ಪಟ್ಟೆಯ ಸೀರೆಯಲ್ಲಿ ಅವನ ಬಾಯಿಯನ್ನು ಒರಸಿ, ಮಲಗಿಸಿ ಮತ್ತೆ ಚೆಲ್ಲಿದ ವಾಂತಿಯ ಹುಳಿರಸವನ್ನು ಹಿಂಡಿ ತೆಗೆದ ಈ ಅಮ್ಮ ಈಗ ನನಗೆ ಅರ್ಥವಾಗುತ್ತಿದ್ದಾರೆ. ಸ್ಪಷ್ಟವಾಗುತ್ತಿದ್ದಾರೆ. . . .ನನ್ನ ಮುಂದೆ ರೇಖೆಯಾಗುತ್ತಿದ್ದಾರೆ. . . ಜೀವಂತಗೊಳ್ಳುತ್ತಿದ್ದಾರೆ. ಹೆಚ್ಚು ಹೇಳುವುದಿಲ್ಲ. ವತ್ಸನ ಅಪ್ಪನಿಂದ ತಮ್ಮ ದಾಂಪತ್ಯದ ಮೂವತ್ತು ವರ್ಷಗಳ ಅವಧಿಯಲ್ಲಿ ಅವರು ತುಂಬ ಪಡೆದಿದ್ದರು. . . ಉಳಿಸಿಕೊಂಡದ್ದು ಈಗ ಹೆಣವಾಗಿರುವ ವತ್ಸನನ್ನು ಮಾತ್ರ, ಕುಂತಿಯಂತೆ ಕನ್ಯೆಯಾಗಿ ಅಲ್ಲ, ಗಂಗೆಯಂತೆ ಅಲೌಕಿಕತೆಯಿಂದ ಅಲ್ಲ, ಶಾಪದಿಂದ ಅಲ್ಲ, ದೈಹಿಕ ರೋಗದಿಂದ ಅಲ್ಲ – ವತ್ಸನ ಅಪ್ಪನ, ನನಗೆ ಇಂದಿಗೂ ಅರ್ಥವಾಗದ ಮನೋವ್ಯಾಧಿ ಎನ್ನಲೇ, ವಿಕಾರ ಎನ್ನಲೇ, ಅಲ್ಲ ಅವರ ಸ್ವತಂತ್ರ ನಿರ್ಧಾರ ಎನ್ನಲೇ ಒಂದು ಸಂಕಲ್ಪದಿಂದ ಹೊಟ್ಟೆಯೊಳಗೆ ಮೊಳಕೆಯಾದುದನ್ನು ತೋಳತೊಟ್ಟಿಲಲ್ಲಿ ಆಡಿಸದೆ ಸೋತಿದ್ದರು. . . +ನಿಮಗೆ ಗೊತ್ತಲ್ಲ, ಸಾಕ್ಷಿ ಹೇಳುವವನಿಗೆ ಎಲ್ಲವೂ ತಿಳಿದಿರಬೇಕಿಲ್ಲ. ಇಲ್ಲಿ ವಯಸ್ಸಿನ ಅಂತರವಿದೆ. ಮನೋಧರ್ಮದ ಅಂತರವಿದೆ. ಭಾವನಾತ್ಮಕ ಬಿರುಕಿದೆ. ಎಲ್ಲೋ ಒಂದು ದಿನ “ವತ್ಸ, ಅಮ್ಮ ನೋಯುತ್ತಾರೆ. ಕುಡಿತಬಿಡು ಹುಚ್ಚುಬಿಡು. ಕೆಚ್ಚು ಬಿಡು. ಅಲ್ಲೋಲಕಲ್ಲೋಲವಾಗಬೇಡ” ಎಂದು ಬೇಡಿದಾಗ ವತ್ಸ ಹೇಳಿದ್ದನ್ನೆಲ್ಲ ನಾನು ಖಾತ್ರಿಯಾಗಿಸಲಾರೆ. ಅವನ ಅಪ್ಪನ ರಟ್ಟೆ ಹಿಡಿದು ಹೌದೇ ಎಂದು ಕೇಳಲಾರೆ. ತುಂಬು ಕುಂಕುಮದ ಅಮ್ಮನ ಕಣ್ಣುಗಳನ್ನು ದಿಟ್ಟಿಸಿ ಸತ್ಯವೇ ಎಂದು ಕೇಳಲಾರೆ. ಈ ಹತ್ತಾರು ವರ್ಷಗಳಲ್ಲಿ ಈ ಮನೆಯಲ್ಲಿ, ಈ ಕುಟುಂಬದಲ್ಲಿ ಈ ಮೂವರ ನಡುವೆ ಪರಸ್ಪರ ಸ್ಥಾಪನೆಯಾಗಿದ್ದ ಒಂದು ಭಯಾನಕ ಮೌನ ಮಾತ್ರ ನನ್ನ ಮಟ್ಟಿಗೆ ಸತ್ಯವಾಗಿದೆ. +ಆ ಮೌನ ಈಗ ಮುರಿದಿದೆ. . . ವತ್ಸನ ಆತ್ಮಹತ್ಯೆ ಖಾತ್ರಿಯಾಯಿತು ಎಂದೆನಲ್ಲ. ಆ ಕ್ಷಣದಿಂದ ಮುರಿಯುತ್ತಿದೆ. ಕ್ಷಣ ಅಮ್ಮನ ಉಸಿರಿನ ಒಂದು ಬಿಂದುವಾಗಿತ್ತು. ಕ್ಷಣ ಕ್ಷಣವೂ ಅವರು ವತ್ಸನನ್ನು ಕಣ್ಣಾಲಿಗಳ ಬೇಲಿಯೊಳಗೆ, ತನ್ನ ಉಸಿರಾಟದ ವೃತ್ತದೊಳಗೆ, ಎದೆ ಬೇಗುದಿಯ ಕಾವಿನೊಳಗೆ ಕಾಪಾಡಿಕೊಂಡಿದ್ದರು. ಒಂದೇ ಮಾತು ಹೇಳುತ್ತೇನೆ, “ವತ್ಸಾ, ನೀನು ಹೊರಗೆ ಬಾರಿನಲ್ಲಿ ಕುಡಿಯೋದು ಬೇಡ, ಮನೆಯೊಳಗೇ ಕುಡಿ. ನಾನೇ ಕುಡಿಸುತ್ತೇನೆ. ನನ್ನ ಕಣ್ಣ ಮುಂದೆಯೇ ಇರು” ಎಂದು ಅಮ್ಮ ಹೇಳಿದ ಮಾತಿಗಿಂತ ಬೇರೆ ಏನನ್ನು ಹೇಳಬೇಕು. . . ಆದರೂ ವತ್ಸ ಕಣ್ಮರೆಯಾದ. . . ಕ್ಷಣ ಕ್ಷಣವೂ ಅಮ್ಮನ ಆತಂಕ ಹೆಚ್ಚಿತು. ಹುಡುಕಾಟ ವಿಫಲವಾಯಿತು. ಉದ್ವೇಗ ದುಃಖವಾಯಿತು. ನೋವಾಯಿತು. ಮೂರು ದಿನಗಳ ಮೇಲೆ ವಾಸನೆ ಒಸಗೆ ತಂದಿತು. ಮನೆಯ ಹಿಂದಿನ ತೋಟದ ಬಾವಿಯಲ್ಲಿ ವತ್ಸನ ದೇಹ ಉಬ್ಬಿ ವಿಕಾರವಾಗಿ ತೇಲುತ್ತಿತ್ತು. . . +ಅದು ಆಳವಾದ ಬಾವಿಯಲ್ಲ. ಆದರೆ ಅಷ್ಟೇ ಆಳಕ್ಕೆ ಯಾರೂ ಇಳಿಯಲು ಸಿದ್ಧರಿರಲಿಲ್ಲ. ಸಂಕೋಚವೇಕೆ, ನಾನೂ ಕೂಡಾ. ಅವನ ಅಪ್ಪನೂ ಕೂಡಾ. ನಾನು ಬಹಳ ಕಡಿಮೆ ಮಾತುಗಳಲ್ಲಿ ಹೇಳಲೇಬೇಕಾದುದು ಅಸಹಜ ಎನ್ನಬಹುದಾದ ಈ ಹೊರಕವಚವನ್ನು. . . +ಬಾವಿಯಿಂದ ಎಲ್ಲ ದೂರ ದೂರ ಸರಿದಿದ್ದರು. ಅಮ್ಮ ಹತ್ತಿರ ಬರತೊಡಗಿದ್ದರು. ಕಣ್ಣರಳಿಸಿ ಎಲ್ಲರನ್ನು ನೋಡಿದ್ದರು. “ಬಾವಿಗಿಳಿಯುವವರು ಇನ್ನೇನು ಬಂದಾರು” ಎಂಬ ಮಾತಿನ ಗುಸು ಗುಸು ಮೌನವಾಗಿ ಮಡುಗಟ್ಟುವಂತೆ ಕಣ್ಣರಳಿಸಿದ್ದರು. ಕೈ ಹಿಡಿದ ಗಂಡನನ್ನೂ. . . ಮತ್ತೆ ಬಲವಾಗಿ ವತ್ಸನನ್ನು ಹೊತ್ತ ಹೊಟ್ಟೆಯನ್ನು ತನ್ನೆರಡೂ ಕೈಗಳಿಂದ ಬಲವಾಗಿ ಅದುಮಿಕೊಂಡರು. ಯಾವ ಶಕ್ತಿಯೋ, ಯಾವ ಪ್ರೇರಣೇಯೋ, ಆವೇಶವೋ, ಸೆಳೆತವೋ. . . ಬಗ್ಗಿ ಬಾವಿ ಇಣುಕಿದರು. ಯಾರೋ ತಂದಿಟ್ಟ ಹಗ್ಗವನ್ನು ಕಂಬಕ್ಕೆ ಕಟ್ಟಿದರು. ಸೀರೆಯನ್ನು ಮಡಚಿ ಕಟ್ಟಿಕೊಂಡರು. ಯಾರೋ ತಂದಿಟ್ಟ ಪಾಲಿತಿನ್ ಚೀಲವನ್ನು ಬಾವಿಗೆಸೆದರು. ಹಗ್ಗ ಹಿಡಿದು ಸುತ್ತು ಮೆಟ್ಟಲನ್ನು ಬಳಸಿ ಇಳಿದರು. ಬೇಡ ಅಮ್ಮ ಎನ್ನುವ ಮಾತು ನನ್ನ ಬಾಯಿಯಿಂದಲೂ ಬರಲಿಲ್ಲ. ನಾನು ಸಾಕ್ಷಿ ಮಾತ್ರ. ಗಂಟುದ್ದ ನೀರಿನಲ್ಲಿ ನಿಂತರು. ಬಗ್ಗಿದರು. ಹೊತ್ತು ಹೆತ್ತ ವತ್ಸನ ಕೊಳೆತ ದೇಹವನ್ನು ಚೀಲಕ್ಕೆ ತುಂಬಿದರು. ಚೂರು ಚೂರಾಗಿದ್ದ ಮಾಂಸವನ್ನು ಜೋಪಾನವಾಗಿ ತುಂಬಿದರು. ಎಷ್ಟು ಜಾಗ್ರತೆ. ಎಂಥ ನಿಷ್ಠೆ. . .ಗರ್ಭದಲ್ಲಿ ತುಂಬಿಸಿಕೊಳ್ಳುವ ಹಾಗೆ. . .ಪುನಃ ಜೀವ ಕೊಡುವ ಹಾಗೆ. . . ಪುನಃ ಹಾಲುಣಿಸುವ ಹಾಗೆ. . .ಪುನಃ ಮೈ ತೊಳೆಯುವ ಹಾಗೆ, ನೆಟ್ಟಿಗೆ ಮುರಿಯುವ ಹಾಗೆ, ಜೋಗುಳ ಹಾಡುವ ಹಾಗೆ, ಮುದ್ದು ಮಾಡುವ ಹಾಗೆ. . . ಎದೆಗವಚಿ ಹಾಗೆ ನಿಂತಿದ್ದರು. . . ಅಲ್ಲಿ ಕರಗಿ ಹೋಗುತ್ತಿದ್ದರೋ ಏನೋ. . . ಅಷ್ಟು ಹೊತ್ತಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮನೆಯ ಅಟ್ಟ ಸೇರಿದ್ದ ಹಿತ್ತಾಳೆಯ ತೊಟ್ಟಿಲನ್ನು ನಾಲ್ಕು ಕಡೆ ಹಗ್ಗ ಕಟ್ಟಿ ಉಳಿದವರು ಇಳಿಸಿದರು. . . ಅಮ್ಮನಿಗೆ ಯಾರೂ ಹೇಳಲಿಲ್ಲ. ಪಾಲಿತಿನ್ ಚೀಲದಲ್ಲಿ ಕಟ್ಟಿದ ವತ್ಸನ ದೇಹವನ್ನು ಮೃದುವಾಗಿ ತೊಟ್ಟಿಲಲ್ಲಿ ಇರಿಸಿ ತಾನೂ ಕುಳಿತರು. . .ಹೀಗೆ ಬಂತು ವತ್ಸನ ದೇಹ ಅದೇ ಪಡಸಾಲೆಗೆ. . .ಬಳಿ ಬಂದು ಕುಳಿತ ನನ್ನನ್ನು ತಬ್ಬಿ ಕೂಗಿದರು ಅಮ್ಮ “ಯಾರನ್ನು ಇನ್ನು ಮಗಾ ಎಂದು ಕೂಗಲಿ.” ಆವೇಶದಿಂದ ಗಂಡನ ಬಳಿ ಓಡಿ ಭುಜ ಅಲುಗಿಸಿ ಕೂಗಿದರು. “ಪ್ರತಿ ಸಾರಿಯೂ ಗರ್ಭ ತೆಗೆಸಿದಿರಿ. ಈಗ ನನಗೆ ಗರ್ಭಕೊಡಿ. ನನಗೆ ಜೀವ ಕೊಡಿ. ನನಗೆ ಕೂಸು ಕೊಡಿ.” ಸಾಕ್ಷಿಯಾಗಿ ಹೇಳಲೇಬೇಕು. . . ಗಂಡನನ್ನು ಅಪ್ಪಿ ಮುದ್ದಿಸಿ ಅವರು ಕೂಗಿದ್ದರು. . . “ನನ್ನ ಗರ್ಭಕ್ಕೆ ಜೀವ ಕೊಡಿ” . ನಾನು ಸಾಕ್ಷಿ ಮಾತ್ರ. +***** +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_280.txt b/Kannada Sahitya/article_280.txt new file mode 100644 index 0000000000000000000000000000000000000000..605d430488d94922418bad083380033b5e121192 --- /dev/null +++ b/Kannada Sahitya/article_280.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ +ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ +ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ +ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- +ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. +ಬಲಿದಾನದಿತಿಹಾಸ ರಕ್ತಸಂಪುಟಮಾಗಿ +ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ +ಹೊಳೆದಿಹಿರಿ; ಕಲ್ಪಂಗಳುರುಳಿದರು ಕೇಡಿಲ್ಲ. +ಫಲವಿತ್ತು ಮರೆಯಾದ ಪುಷ್ಪಗಳ ಮರೆಯುವರೆ? +ನಮ್ಮ ಕೈಗಿತ್ತಿರುವ ನಾಡಗುಡಿ ತೊರೆಯುವೆವೆ? +ಹೆಂಬೇಡಿಯಾಗಿ ನಮ್ಮೀ ಬದುಕ ಹೊರೆಯುವೆವೆ? +ಇಲ್ಲಿಲ್ಲ! ನವಯುಗದ ಭೀಮ ಸತ್ಯಕಾಮರ; +ದಾರಿದೋರಿರಿ ನಾಡ ಸಂತುಷ್ಟಿಸಂಪದಕೆ, +ಹೆಜ್ಜೆ ಹೆಜ್ಜೆಗೆ ನಿಮ್ಮ ನೆನೆವುದೊಂದಗ್ಗಳಿಕೆ. +***** +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […] +ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_281.txt b/Kannada Sahitya/article_281.txt new file mode 100644 index 0000000000000000000000000000000000000000..1f5c321e0d2ce200b273d70db7e8528daa34ccca --- /dev/null +++ b/Kannada Sahitya/article_281.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ +ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- +‘ನಾವು ರಾಯನ ಅರಸಿಯರು +ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, +ಕಳೆದುಹೋದ ಪೀತಾಂಬರ +ಮಕರಿಕಾ ಪತ್ರದ ಮೇಲೆ ರಾಯ ತಾನೇ +ಬರೆದ ಪ್ರೀತಿ ಮಾತುಗಳು, +ಕಳೆದುಕೊಂಡ ಸಾಮ್ರಾಜ್ಯ’ +‘ಬಂದು ಹೋಗುತ್ತಾರೆ ಮಂದಿ, +ನಕ್ಷೆಯೊಳಗಿನ ಬೆತ್ತಲೆ ಸುಂದರಿಯರ ಮೈದಡವಿ, +ಅಂತಃಪುರದ ನಮ್ಮನ್ನು ಒಮ್ಮೆಯೂ +ನೆನೆಯದೆ ಹೊರಟು ಹೋಗುತ್ತಾರೆ’. +ತುಂಬಿ ಹರಿಯುತ್ತಿದ್ದಾಳೆ ತುಂಗಭದ್ರೆ +ಅವಳಿಗೋ, ಮೈಯ್ಯೆಲ್ಲಾ ಸುಳಿ, +ಇವಳ ಪ್ರವಾಹದ ಮುಂದೆ +ಮೋಹಿಸಿ ಬಂದರೆ ಸಾಕು, +ಹತ್ತಿರ ಸೆಳೆದು, ತಬ್ಬಿ, ಕೊಂದುಬಿಟ್ಟಾಳು! +ಕೊಚ್ಚಿ ಹೋಗುವ ಹಾಗೆ ನೆನಪುಗಳು, +ಜನ, ಮನ, ಕಾಲ-ದೇಶಗಳು. +ತುಂಗಭದ್ರೆ ತೆರೆದಿಟ್ಟ ತಾವು- +ನೆಲ +ಜಲ +ಸಮಾಧಿ +ಶಿಥಿಲ ಸ್ಥಳ +ಯಾರಿಗೇನು ಬೇಕೊ ಎಲ್ಲವೂ ಇದೆ ಇಲ್ಲಿ +ಭಿಕ್ಷುಕ-ಭೈರಾಗಿ ಸಂತ-ಸಾಮ್ರಾಟರ +ಹೇಮಕೂಟ. +***** +ಕೀಲಿಕರಣ: ಕಿಶೋರ್‍ ಚಂದ್ರ +ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! ಬಂದದ್ದು ಹಂಜಿಯ ಮಾಡಿ ರಾಟ […] +“Judge not that ye be not judged” -Jesus Christ ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ […] +ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_282.txt b/Kannada Sahitya/article_282.txt new file mode 100644 index 0000000000000000000000000000000000000000..cc0e14d44d5582fb77de775cba2ac45bb6790e0e --- /dev/null +++ b/Kannada Sahitya/article_282.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- +ಪೂರ್ಣ ಚಂದ್ರೋದಯದ ರೂಪದಲ್ಲಿ; +ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- +ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. +ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ +ಬುರುಬುರನೆ ಮೇಲೆದ್ದ ಗುಳ್ಳೆಯಂತೆ, +ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ +ತಪಗೊಂಡ ಮೌನವ್ರತಧಾರಿಯಂತೆ. +ಹೊನ್ನ ಕೇದಗೆ ಹುಡಿಯ ಇಡಿಕಿರಿದು ತುಂಬಿರುವ +ಹೊಂಗನಸು ಹೂತಿರುವ ಭರಣಿಯಂತೆ, +ದುಂಡುಮೊಗ ಸುಂದರನು, ಮೂಡಿರುವ ಚಂದಿರನು- +ಬಾನು ಬುವಿಗಳ ಬಯಕೆ-ಹಣ್ಣಿನಂತೆ. +ಆನಂದ ನಂದನನೊ, ಚಂದನದಿ ಮಿಂದವನೊ +ಉದಯಗಿರಿ ಹೊಂದೇರನೇರಿದವನು; +ನಂದನದ ವನದಲ್ಲಿ ಹೂವಾಗಿ ಬೆಳೆದವನೊ +ಒಡಲಲ್ಲಿ ಸುಧೆಯನ್ನು ತುಂಬಿದವನು. +ಮಂದಹಾಸದ ಚಂದ್ರಹಾಸ ತನಿವೆಳಕಾಗಿ +ಮೆಲ್ಲ ಮೆಲ್ಲನೆ ಇಳಯನಪ್ಪುತಿಹುದು; +ಬನ, ಬಯಲು, ಗಿರಿಸಾನು, ಊರು, ದೂರದ ಕಾನು +ಮಧುಕುಡಿದು ಮತ್ತೇರಿ ಮಲಗಿರುವವು. +***** +ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […] +-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […] +ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_283.txt b/Kannada Sahitya/article_283.txt new file mode 100644 index 0000000000000000000000000000000000000000..9fc2529cec277a404debb6080b8128b42a55d592 --- /dev/null +++ b/Kannada Sahitya/article_283.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹವೆ ಹೊತ್ತಿಸುವ ಬಿಸಿ +ಬಿಸಿಲು ಬೆಂಕಿ ಬೇಸಗೆ ಧಗೆ +ಅಲವರಿಕೆಯಲ್ಲಿ +ತಣ್ಣನೆ ಒರೆದಂಗಳಕ್ಕೆ +ಮೈ ಚಾಚುವ ಹಿಗ್ಗು +ಗಡಚಿಕ್ಕುವ ಧೋಮಳೆ ನಡುಕ +ಒದ್ದೆ ಮುದ್ದೆಯ ನಡುವೆ +ಒಳಕೋಣೆಯ ಬೆಚ್ಚನೆ ಮೂಲೆ +ಲಾಟೀನ ಕೆಳಗೆ +ಮಗ್ಗಿ ಬರೆಯುವ ಹಿಗ್ಗು +ಕಟಕಟ ಚಳಿ ಕಚಗುಳಿಯ +ನಿಮಿರು ತಿಳಿಗಾಳಿಯಲ್ಲಿ +ಮೈತುಂಬ ಚಿಗುರು ಕಣ್‌ಕಿಸಿದು +ಪ್ರಕೃತಿ ಬದುಕು ನೋಡುವ ಹಿಗ್ಗು +ಉಂಟಲ್ಲ! +ಎಂತ ಹಿನ್ನೆಲೆಯಲ್ಲು ಪುಟ್ಟ ನೆಮ್ಮದಿ ಕುಸುಮ +ಯಾವುದರಿಂದೀ ಬದುಕು +ತುಂಬ ಆತ್ಮೀಯ +***** +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […] +ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? ಗೆರೆಯ ಬರುವುದರೊಳಗೆ, ನೀರು ಕರಗಿ ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, ನದಿಯಾಗಿ ಹರಿದು, ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ ಮತ್ತೆ ನೀರಾಗುವುದರೊಳಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_284.txt b/Kannada Sahitya/article_284.txt new file mode 100644 index 0000000000000000000000000000000000000000..2c561052a90033e4fd80e0cfbf4403067963dd99 --- /dev/null +++ b/Kannada Sahitya/article_284.txt @@ -0,0 +1,270 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೧೧ +– ೧- +ಇಷ್ಟು ದಿನವಾದರೂ ಕಮಲುವಿನ ಹೊಟ್ಟೆಯಲ್ಲಿ ಮಕ್ಕಳಾಗಲಿಲ್ಲ. ತಾನು ಸಾಕಿ ಬೆಳೆಸಿದ ಮೊಮ್ಮಗನಿಂದ ವಂಶ ಬೆಳೆಯದ್ದನ್ನು ಕಂಡ ಅಕ್ಕಮ್ಮ ಕೊರಗುತ್ತಿದ್ದಳು. ಮಕ್ಕಳಿಲ್ಲದಿದ್ದರೆ ಬೇಡ, ಇವಳು ತನ್ನ ಗಂಡ ಮತ್ತು ಅಜ್ಜಿಯನ್ನೂ ಸಂತೋಷವಾಗಿಡುತ್ತಿರಲಿಲ್ಲ. +ರಾಮಸಂದ್ರದಲ್ಲಿ ಮಳೆ ಬೆಳೆ ಹೋದಾಗ ನಾಗಲಾಪುರದಲ್ಲಿಯೂ ಹೋಯಿತು. ಆದರೆ ಕಲ್ಲೇಶ ಜಾಣ ಗೃಹಸ್ಥ. ಒಂದು ವರ್ಷಕ್ಕಾದರೂ ಹೆಚ್ಚಾಗಿ ದಿನಸಿಯ ದಾಸ್ತಾನು ಇಡುತ್ತಿದ್ದ. ಕಳೆದ ಸಲ ಮಳೆ ಕೈಕೊಡುತ್ತದೆಂಬ ಸೂಚನೆ ತಿಳಿದ ತಕ್ಷಣ ಹೊಲಕ್ಕೆ ಹಾರಕ ಹಾಕಿಸಿದ. ಮಳೆಯಾಗದೆ ಇದ್ದರೂ ಹೊಲದಲ್ಲಿ ಮೂರು ಖಂಡುಗ ಹಾರಕ ಬಂತು. +ಮನೆಯಲ್ಲಿ ರಾಗಿ ಏನೋ ಇತ್ತು. ಎಡವಟ್ಟಾದದ್ದು ಬತ್ತಕ್ಕೆ. ಇಷ್ಟಿದ್ದರೆ ಸಾಕೇಸಾಕು. ಹಾರಕದ ಅನ್ನವೂ ಸೊಗಸಾಗಿರುತ್ತೆ. ಆದರೆ ಕಲ್ಲೇಶನಿಗೆ ಅದು ಆಗುತ್ತಿರಲಿಲ್ಲ. ವಾಯುವಿನಿಂದ ಕೂಡಿದ ಅದನ್ನು ತಿಂದರೆ, ಮೊದಲೇ ಸ್ವಲ್ಪ ಸ್ವಾಧೀನ ತಪ್ಪಿದ್ದ ಅವನ ಎಡಗೈ ಅದುರಲು ಶುರುವಾಗುತ್ತಿತ್ತು. ಆದುದರಿಂದ ತಿನ್ನಲಾರ. ಮನೆಯಲ್ಲಿ ಇದ್ದ ಒಂದು ಪಲ್ಲ ಬತ್ತವನ್ನೇ ಯಾತದಲ್ಲಿ ಆಗಾಗ್ಗೆ ಕುಟ್ಟಿಕೊಂಡರೆ ಐವತ್ತೈದು ಸೇರಾದರೂ ಅಕ್ಕಿ ಬರುತ್ತದೆ. ದಿನಾ ಅವನ ಪೂರ್ತಿ ಅರ್ಧ ಪಾವು ಅಕ್ಕಿಯ ಅನ್ನ ಮಾಡಿದರೆ ಹಿಟ್ಟಿನ ಜೊತೆಗೆ ಸಾಕು. ಇಷ್ಟು ವಯಸ್ಸಾದರೂ ಮುದುಕಿಯಾದ ತನಗೆ ಹಾರಕದ ಅನ್ನದಿಂದ ಏನೂ ಆಗುತ್ತಿರಲಿಲ್ಲ; ತಾನು, ಕಮಲು, ಇಬ್ಬರೂ ಅದನ್ನೇ ತಿನ್ನುವುದು ಎಂದು ಅಕ್ಕಮ್ಮ ತೀರ್ಮಾನಿಸಿದಳು. +ಎರಡು ಬಗೆಯ ಅನ್ನ ಮಾಡಿ ತನ್ನ ಗಂಡನಿಗೇ ಒಂದು ತರಹ, ತನಗೆ ಬೇರೆ ತರಹ ಬಡಿಸಿದುದನ್ನು ಕಂಡಾಗ ಕಮಲು ಉರಿದುಬಿದ್ದಳು. ಅವನದ್ದೇನು ಹೆಚ್ಚು, ತನ್ನದೇನು ಕಡಿಮೆ?-ಎಂಬುದು ಅವಳ ಪ್ರಶ್ನೆ. ನಾಗಲಾಪುರಕ್ಕೆ ಬಂದು ಹನ್ನೆರಡು ವರ್ಷವಾದರೂ, ತಾನು ಹಾಸನದ ಪೇಟೆಗೆ ಸೇರಿದವಳು ಎಂಬ ಭಾವನೆ ಅವಳಲ್ಲಿ ಹೋಗಲಿಲ್ಲ. ಆದುದರಿಂದ ಹಟದಿಂದ ಎಂಬಂತೆ ಇದುವರೆಗೆ ಒಂದು ದಿನವೂ ರಾಗಿಯ ಹಿಟ್ಟನ್ನು ಕೈಲಿ ಮುಟ್ಟಿರಲಿಲ್ಲ. ಈಗ ಹಾರಕದ ಅನ್ನ ಗಂಟಲಿನಲ್ಲಿ ಹೇಗೆ ಇಳಿದೀತು? ಒಂದು ದಿನ ಅಕ್ಕಮ್ಮ ಅಡಿಗೆ ಮಾಡಿಟ್ಟು ಹೋಗಿ ಹಿತ್ತಿಲಿನ ಕಡೆ ಪರಂಗಿ ಗಿಡದ ಕೆಳಗೆ ಕುಳಿತುಕೊಂಡಳು. ಕಲ್ಲೇಶ ತರಕಾರಿಯ ಗಿಡಗಳ ಕೆಳಗೆ ಕೈಪಿಕಾಸಿಯಿಂದ ಕುಕ್ಕುತ್ತಿದ್ದ. ರಾಗಿ, ಅಕ್ಕಿ, ಕಾಳುಗಳು ಸುಭಿಕ್ಷವಿರಲಿ ದುರ್ಭಿಕ್ಷವಿರಲಿ, ಹಿತ್ತಿಲು ತುಂಬ ತರಕಾರಿ ಬೆಳೆಯುವುದನ್ನು ಅವನು ಎಂದೂ ನಿಲ್ಲಿಸುತ್ತಿರಲಿಲ್ಲ. ಸುಮ್ಮನೆ ಕೂತಿರುವುದು ಅವನ ಸ್ವಭಾವದಲ್ಲಿಯೇ ಇರಲಿಲ್ಲ. ತಾನು ಕುಕ್ಕುತ್ತಿದ್ದ ಮಣ್ಣನ್ನು ಮೇಲೆ ತೆಗೆದು, ಒಳಗೆ ಸಗಣಿಗೊಬ್ಬರ ಕೆಮ್ಮಣ್ಣು ತುಂಬಿ, ಮತ್ತೆ ಮೇಲೆ ಹಳೆಯ ಮಣ್ಣನ್ನೇ ಹಾಕಿ ಪಾತಿ ಮಾಡಿ, ಎರಡು ಬಿಂದಿಗೆ ನೀರು ಸೇದಿ ಹುಯ್ದ ಮೇಲೆ, ಊಟವಾದ ನಂತರ ಯಾವ ಗಿಡಕ್ಕೆ ಏನು ಮಾಡಬೇಕೆಂಬುದನ್ನು ನೋಡಿ ನಿರ್ಧರಿಸಿ, ಹೇಳಿದ: ‘ಅಕ್ಕಮ್ಮ, ಊಟಕ್ಕಿಕ್ಕು ಏಳು.’ +ಕಲ್ಲೇಶ ಇನ್ನೊಂದು ಬಿಂದಿಗೆ ನೀರು ಸೇದಿ ಬಾವಿಯ ದಡದ ಕಲ್ಲುಚಪ್ಪಡಿಯ ಮೇಲೆ ನಿಂತು ಕೈಕಾಲು ತೊಳೆದುಕೊಳ್ಳುತ್ತಿದ್ದ. ಅಕ್ಕಮ್ಮ ಒಳಗೆ ಹೋಗಿ ನೋಡುತ್ತಾಳೆ: ಕಮಲು ಬೆಳ್ಳಿಯ ತಟ್ಟೆ ಹಾಕಿಕೊಂಡು ಕೂತು ಊಟ ಮಾಡುತ್ತಿದ್ದಾಳೆ. ಗಂಡನಿಗೆ ಮಾಡಿದ ಅಕ್ಕಿಯ ಅನ್ನವೆಲ್ಲ ಅವಳ ತಟ್ಟೆಯಲ್ಲಿದೆ. ಅನ್ನದ ಸಣ್ಣ ಚರಕು ಖಾಲಿಯಾಗಿ ಬಿದ್ದಿದೆ. ತನಗೆ ಬೇಕಾದಷ್ಟು ತುಪ್ಪ ಸುರಿದು, ಬೆರಕೆ ಬೇಳೆಸಾರಿನ ತಿಳಿ ಬಗ್ಗಿಸಿಕೊಂಡು ಸುರಿಸುರಿಯುತ್ತಾ ಹೊಡೆಯುತ್ತಿದ್ದಾಳೆ. ಒಳಗೆ ಬಂದ ಅಕ್ಕಮ್ಮ ಮೂಕಳಾಗಿ ನಿಂತುಬಿಟ್ಟಳು. ಕಮಲು, ಅವಳು ಬಂದರೆ ತನಗೇನು ಎಂಬಂತೆ ತನ್ನ ಪಾಡಿಗೆ ತಾನು ಊಟ ಮುಂದುವರಿಸುತ್ತಿದ್ದಳು. ಅಷ್ಟರಲ್ಲಿ ಕಲ್ಲೇಶನೂ ಒಳಗೆ ಬಂದ. ನೋಡಿದ ಕೂಡಲೇ ಅವನಿಗೆ ಎಲ್ಲವೂ ಅರ್ಥವಾಯಿತು. ನೇರವಾಗಿ ಅಡಿಗೆಯ ಒಲೆಯ ಹತ್ತಿರ ಹೋಗಿ, ಅಲ್ಲಿಯೇ ಇದ್ದ ಒಂದು ಹೊಳಕೆ ಸೌದೆ ತೆಗೆದುಕೊಂಡವನೇ ಅವಳ ಬೆನ್ನು, ಕೈ, ತೊಡೆಗಳ ಮೇಲೆ ಎತ್ತಿ ಎತ್ತಿ ಸದೆಯಲು ಶುರುಮಾಡಿದ. +‘ತಿಂದ್ಕಳ್ಳಿ, ಹಾಗೆ ಹ್ವಡೀಬ್ಯಾಡ ಕಣೋ’-ಎಂದು ಬಿಡಿಸಿಕೊಳ್ಳಲು ಹೋದ ಅಕ್ಕಮ್ಮನನ್ನು ಅವನು ಎಡಗೈಯಿಂದ ನೂಕಿದ ರಭಸಕ್ಕೆ ಮುದುಕಿ ಗೋಡೆಯ ಹತ್ತಿರ ಕುಕ್ಕರಿಸಿ ಬಿದ್ದುಬಿಟ್ಟಳು. +‘ಹೊಡೀತೀ ಏನೋ, ನಿನ್ಮನೆ ಅನ್ನ ತಿಂದುದ್ದ್‌ಕ್ ಹ್ವಡೀತೀಯಾ? ಹೆಂಡ್ತಿಗೆ ಒಂದಿಷ್ಟ್ ಅನ್ನ ತಂದ್ ಹಾಕುಕ್ಕೆ ಯೋಗ್ತಿ ಇಲ್ದೆ ಹಾರಕದ ಅನ್ನ ತಿನ್ನು ಅಂತೀಯಾ? ಹ್ವಡಿಯಕ್ಕೆ ಮಾತ್ರ ಬತ್ತೀಯಲ್ಲಾ, ನಾಚಿಕೆಯಾಗುಲ್ವೆ?’ಕಮಲು ಕೇಳಿದಳು. +ಕಲ್ಲೇಶನ ಕೋಪ ಇನ್ನೂ ಏರಿತು. ಮುಖ ಮೊರೆ ನೋಡದೆ ಹೊಡೆದುದಕ್ಕೆ ಸೌದೆಯ ಹೊಳಕೆ ಮುರಿದುಹೋಯಿತು. ಅದನ್ನು ಹಿಡಿದಿದ್ದ ಅವನ ಅಂಗೈಗೂ ಸಿಗುರು ಚುಚ್ಚಿ ರಕ್ತ ಬರುತ್ತಿತ್ತು. ಕಮಲುವಿನ ಮೈಕೈ ಎಲ್ಲ ಊದಿ ರಕ್ತ ಒಸರುತ್ತಿತ್ತು. ಮುರಿದು ತುಂಡಾದ ಸೌದೆಯನ್ನು ಅಲ್ಲಿಯೇ ಬಿಸಾಕಿದ ಅವನು ಅಲ್ಲಿಂದ ಹೊರಗೆ ಬಂದು ಶರಟು ಹಾಕಿಕೊಂಡು ಊಟವನ್ನೂ ಮಾಡದೆ ಹೊರಟುಹೋದ. ಅವನು ಹೀಗೆ ಮನೆ ಬಿಟ್ಟು ಹೋಗುವುದು ಇದೇ ಮೊದಲಲ್ಲ. ಇಂಥಾ ಕಡೆಗೇ ಹೋಗುತ್ತಾನೆಂಬುದು ಅಕ್ಕಮ್ಮನಿಗೂ ಗೊತ್ತು, ಕಮಲುವಿಗೂ ಹೆಚ್ಚು ಕಡಿಮೆ ಗೊತ್ತು. ಮರುವನಹಳ್ಳಿಯ ದೇವರ ಸೂಳೆ ದೇವಿಯ ಮನೆಗೋ, ಅಥವಾ ನಾಗಲಾಪುರದಲ್ಲೇ ಪುಟ್ಟಿಯ ಮನೆಗೋ, ಅದೇ ಊರಿನ ಪೋಲೀಸು ಕಾನಿಸ್ಟೆಬಲ್ ಮಮ್ಮಿಸಾಬಿಯ ಮೂರನೆಯ ಹೆಂಡತಿಯ ಹತ್ತಿರಕ್ಕೋ, ಅಥವಾ ಮತ್ತೆ ಎಲ್ಲಿಗೋ ಹೋಗುತ್ತಾನೆ. ಅವನ ಊಟ ತಿಂಡಿ ಅಲ್ಲಿಯೇ ಆಗುತ್ತದೆ. ಎಲ್ಲಿಗೆ ಹೋದರೂ ಅರ್ಧ ರಾತ್ರಿಯ ಒಳಗೆ ಮನೆಗೆ ಬರುತ್ತಾನೆ. ಇನ್ನೆಲ್ಲಾದರೂ ಹೋದರೂ ಒಂದು ದಿನಕ್ಕಿಂತ ಹೆಚ್ಚಾಗಿ ಅಲ್ಲಿ ಇರುವುದಿಲ್ಲ. +ಅವನು ಹೋದ ತಕ್ಷಣ ಕಮಲು ಅಕ್ಕಮ್ಮನ ಕಡೆಗೆ ತಿರುಗಿ, ‘ಮುದುಕಿಮುಂಡೆ, ನಿನ್ನ ಮೊಮ್ಮಗನಿಗೆ ಹೇಳಿ ನನ್ನ ಹೀಗೆ ಹೊಡೆಸಿದಿಯಲ್ಲೇ, ನಿನ್ನ ಹೊಟ್ಟೆಗೆ ಅನ್ನ ಬೀಳದೆ ಹೋಗ. ನಿನ್ನ ಹೆಣ ಬೀದಿನಾಯಿ ತಿನ್ನ……’ ಎಂದು ಆಶೀರ್ವದಿಸಿದಳು. +ಅಕ್ಕಮ್ಮ ಒಂದು ಮಾತೂ ಆಡಲಿಲ್ಲ. ಎಷ್ಟೇ ಚೆನ್ನಾಗಿ ಅಡಿಗೆ ಮಾಡಿಟ್ಟಿದ್ದರೂ ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಕೂತು ಊಟ ಮಾಡುತ್ತಿದ್ದೇವೆಂಬುದು ಈ ಮನೆಯಲ್ಲಿ ನಿಶ್ಚಿತವಿಲ್ಲ. ಕಲ್ಲೇಶ ವಿನಾಕಾರಣ ರೇಗಿದರೂ ಆಯಿತು, ಅವನ ಹೆಂಡತಿ ಹೀಗೆ ರೇಗಿಸಿದರೂ ಆಯಿತು. ಇಂಥದು ಏನಾದರೂ ಆಗುತ್ತೆ. ಆದರೆ ಈ ದಿನ ಆಗಿರುವುದು ಸ್ವಲ್ಪ ಹೆಚ್ಚಿನದೇ. ಅವಳು ಎದ್ದು ಹೊರಗೆ ಬಂದು ಮತ್ತೆ ಪರಂಗಿ ಗಿಡದ ನೆರಳಿನಲ್ಲಿ ಕುಳಿತಳು. +ಕಲ್ಲೇಶ ಹೆಂಡತಿಯನ್ನು ಹೊಡೆಯುವಾಗ ಕೈಕರಣದ ಜೊತೆಗೆ ಮಂತ್ರೋಚ್ಛಾರವನ್ನೂ ಮಾಡುತ್ತಿದ್ದ. ಬಡಿತದ ಸದ್ದು ಸುತ್ತಣ ನಾಲ್ಕೇ ಮನೆಗೆ ಕೇಳಿದರೆ ಬೈಗುಳದ ಅಬ್ಬರವು ಇಪ್ಪತ್ತು ಮನೆಯ ತನಕ ಹೋಗುತ್ತಿತ್ತು. ಅವನು ಈ ದಿನ ಶರಟು ಹಾಕಿಕೊಂಡು ಹೋದ ಸ್ವಲ್ಪ ಹೊತ್ತಿನ ಮೇಲೆ ಶ್ಯಾನುಭೋಗ ಶ್ಯಾಮಣ್ಣನ ಸೊಸೆ ಬಂದಳು. ಹೆಚ್ಚು ಕಡಿಮೆ ಕಮಲುವಿನ ವಯಸ್ಸಾಗಿದ್ದ ಅವಳಿಗೂ ಕಮಲುವಿಗೂ ಕಳೆದ ಐದು ಆರು ವರ್ಷದಿಂದ ತುಂಬ ವಿಶ್ವಾಸ ಬೆಳೆದಿತ್ತು. ಇಬ್ಬರೂ ಕೂಡಿಯೇ ಕೆರೆಗೆ ಹೋಗುತ್ತಿದ್ದರು. ಇವಳು ಎಷ್ಟೋ ದಿನ ಅವರ ಮನೆಗೆ ಹೋಗಿ ಬರುತ್ತಿದ್ದಳು. ಈಗ ಎರಡು ವರ್ಷದ ಹಿಂದೆ ಶ್ಯಾಮಣ್ಣನ ಹೆಂಡತಿ ಸತ್ತುಹೋದಮೇಲೆ ಸೊಸೆ ಪುಟ್ಟ ಗೌರಿಯೇ ಮನೆಗೆ ಯಜಮಾಂತಿ. ಅವಳ ಗಂಡನೂ ಅವಳು ಹೇಳಿದ ಹಾಗೆ ಕೇಳುತ್ತಿದ್ದ. ಹೀಗಾಗಿ ಅವಳು ಕಮಲುವಿನ ಸಲಹೆಗಾರ್ತಿ ಆಗಿದ್ದಳು. ಅವಳು ಬಂದು ಹೋಗಿ ಮಾಡುವುದನ್ನು ಕಲ್ಲೇಶ ಖಡಾಖಂಡಿತ ವಿರೋಧಿಸುತ್ತಿರಲಿಲ್ಲ. ಅವಳು ಮನೆಗೆ ಬರಕೂಡದೆಂದು ಅಕ್ಕಮ್ಮನೇನೋ ಹೇಳಿದ್ದಳು. ಆದರೆ ಹಟ ಮಾಡಿದಂತೆ ಅವಳು ಬಂದು ಕಮಲುವಿನ ಕೈಲಿ ಮಾತನಾಡಿ, ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು. ತನ್ನ ಮನೆಯ ಸೊಸೆಯ ಮನಸ್ಸು ಕೆಡಿಸಿ ಸದಾ ಜಗಳ ಕಾಯಿಸಿ ತಮಾಷೆ ನೋಡುವುದಕ್ಕೇ ಶ್ಯಾಮಣ್ಣ ಅವನ ಸೊಸೆಯನ್ನು ಕಳಿಸುತ್ತಿದ್ದಾನೆಂದು ಅಕ್ಕಮ್ಮನ ಊಹೆ. ಅವಳ ಊಹೆ ಸರಿ ಎಂದು ಕಲ್ಲೇಶನಿಗೂ ಗೊತ್ತು. ಆದರೂ ಅವಳು ಬಂದು ಹೋಗುವುದನ್ನು ವಿರೋಧಿಸುವುದನ್ನು ಇತ್ತೀಚೆಗೆ ಅವನು ಬಿಟ್ಟುಬಿಟ್ಟಿದ್ದ. ಯಾಕೆ ಎಂಬುದು ಅಕ್ಕಮ್ಮನಿಗೆ ತಿಳಿಯುತ್ತಿರಲಿಲ್ಲ. ಆ ಪುಟ್ಟ ಗೌರಿಯ ಸಹವಾಸ ತಪ್ಪಿದರೆ ಇವಳು ಎಷ್ಟೋ ಮಟ್ಟಿಗೆ ಹದಕ್ಕೆ ಬರುತ್ತಾಳೆಂಬುದು ಅವಳ ನಂಬಿಕೆಯಾಗಿತ್ತು. +ಆ ದಿನ ಕಲ್ಲೇಶ ಹೊರಟುಹೋದ ಮೇಲೆ ಪುಟ್ಟಗೌರಿ ಬಂದಳು. ಕಮಲು ತನ್ನ ಮಲಗುವ ಕೋಣೆಗೆ ಹೋಗಿ ಚಾಪೆಯ ಮೇಲೆ ದುಪ್ಪಟಿ ಹೊದೆದು ಬಿದ್ದುಕೊಂಡಳು. ಏಟು ಬಿದ್ದ ಜಾಗಕ್ಕೆ, ತಾನೇ ಉಪ್ಪಿನ ಶಾಖ ಕೊಟ್ಟು ಸ್ನೇಹಿತೆಗೆ ಸಮಾಧಾನ ಹೇಳಿದ್ದೇ ಅಲ್ಲದೆ ಸಾಯಂಕಾಲ ತನ್ನ ಮನೆಯಿಂದ ಒಂದು ಚೆಟ್ಟಿಯಲ್ಲಿ ಅನ್ನ ಹುಳಿ ಕಲಸಿ ತಂದು ತಿನ್ನಿಸಿದಳು. ಈ ಮನೆಗೆ ಇದಕ್ಕಿಂತ ಇನ್ನು ಅಪಮಾನ ಬೇಕೆ? ‘ಕಲ್ಲೇಶ ಜೋಯ್ಸನ ಮನೇಲಿ ಹೆಂಡ್ತಿಗೆ ಹಾಕೂಕ್ಕೆ ಅನ್ನವಿಲ್ಲ. ನಾನು ಹೋಗಿ ಕೊಟ್ಟು ಬಂದೆ ನೋಡಿ’-ಎಂದು ನಾಲ್ಕು ಮನೆಗೆ ಚೆಟ್ಟಿಯನ್ನು ತೋರಿಸಿಯೇ ಪುಟ್ಟಗೌರಿ ಮನೆಗೆ ಹೋದಳು. +ಕಲ್ಲೇಶ ಮರುದಿನ ಬೆಳಿಗ್ಗೆ ಮನೆಗೆ ಬಂದ. ಅಷ್ಟರಲ್ಲಿ ಹೆಂಡತಿ ಮೇಲೆ ಎದ್ದು ಹಿತ್ತಿಲ ಕಡೆಗೆ ಹೋಗಿ ಬಂದು ಮುಖ ತೊಳೆದು ಕಾಫಿ ಮಾಡಿಕೊಂಡು ಕುಡಿದು ಮತ್ತೆ ಕೋಪಗೃಹದಲ್ಲಿ ಮಲಗಿದ್ದಳು. ಅವಳು ಆಗ ನೋಡಿಕೊಂಡಳಂತೆ: ನೆನ್ನೆ ಅವನು ಹೊಡೆದ ಬಿರುಸಿಗೆ ಅವಳ ಕಿವಿಯ ಎರಡು ಬೆಂಡೋಲೆಗಳೂ ಒಡೆದು ಪುಡಿಯಾಗಿ ಹೋಗಿದ್ದವು. ಚೂರುಗಳನ್ನು ಮುದುಕಿ ತಿಳಿಯದೆ ಗುಡಿಸಿಹಾಕಿದೆಯೋ ಅಥವಾ ಮೊಮ್ಮಗಳ ಮನೆಗೆ ಸಾಗಿಸುವುದಕ್ಕೆ ಅಂತ ಕದ್ದು ಇಟ್ಟಿದೆಯೋ. ‘ನಾನೇನಂಥಾ ಕಳ್ಳಮುಕ್ಕ ಅಲ್ಲ ಕಣೇ’-ಎಂದು ಅಕ್ಕಮ್ಮ ವಾದಿಸುತ್ತಿದ್ದಳು. ‘ನನ್ನ ಮದುವೇಲಿ ಇಟ್ಟಿದ್ದ ವಾಲೆ ಹೋಯ್ತು. ಈಗ ಮಾಡಿಸಿ ಕೊಡದೆ ಇರಲಿ. ನಮ್ಮಪ್ಪನಿಗೆ ಕಾಗದ ಬರೀತೀನಿ’-ಕಮಲು ಸಾಧಿಸುತ್ತಿದ್ದಳು. +ಮನೆಗೆ ಬರುವ ವೇಳೆಗೆ ಕಲ್ಲೇಶನ ಕೋಪವೂ ಸ್ವಲ್ಪ ಇಳಿದಿತ್ತು. ಆ ದಿನ ಬೆಳಿಗ್ಗೆ ಅಕ್ಕಮ್ಮ ತಿಪ್ಪೆಯಲ್ಲಿ ಕಸ ಎಸೆದ ಜಾಗವನ್ನೆಲ್ಲ ಅವನೇ ತೆಗೆದು ಕೆದಕಿ ಹುಡುಕಿದ. ಹೆಂಡತಿ ಹೇಳುವ ಹಾಗೆ ಅಕ್ಕಮ್ಮ ಕದ್ದು ಮುಚ್ಚಿಟ್ಟಿದ್ದಾಳೆ ಎಂಬುದರಲ್ಲಿ ಅವನಿಗೆ ನಂಬಿಕೆ ಬರಲಿಲ್ಲ. ತಾನು ಬೆನ್ನಿಗೆ ಮಾತ್ರ ಹೊಡೆಯಬೇಕಾಗಿತ್ತು, ಕಿವಿಗೆ ತಗುಲುವಂತೆ ಸದೆಯಬಾರದಾಗಿತ್ತು ಎಂದು ಒಳಗೇ ಪಶ್ಚಾತ್ತಾಪ ಪಟ್ಟುಕೊಂಡ. +ಎರಡು ತಿಂಗಳು ಕಮಲು ಬರೀ ಕಿವಿಯಲ್ಲಿ ತಿರುಗಿದಳು. ಹೆಂಡತಿ ಹೀಗೆ ಬರೀ ಕಿವಿಯಲ್ಲಿರುವುದು ತನಗೇ ಮರ್ಯಾದಿಗೆ ಕಡಿಮೆ. ಕಲ್ಲೇಶ ಹೇಗೋ ಮಾಡಿ ಎಪ್ಪತ್ತು ರೂಪಾಯಿ ಕೂಡಿಸಿ ಬಿಳೀ ಕಲ್ಲಿನ ಒಂದು ಜೊತೆ ಬೆಂಡೋಲೆ ಮಾಡಿಸಿ ತಂದುಕೊಟ್ಟ. +– ೨ – +ಸುಮಾರು ಒಂದು ವರ್ಷ ಕಳೆದಿತ್ತು. ಮಳೆ ಇಲ್ಲದೆ ಊರಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಯಾವಾಗಲೂ ಊರಿನ ಜನ ಅರ್ಧ ಮೈಲಿ ದೂರದ ಕೆರೆಯಿಂದ ಸಿಹಿನೀರು ತರುತ್ತಿದ್ದರು. ಕೆರೆಯೆಲ್ಲ ಒಣಗಿ ಹೋದಮೇಲೆ ನಡುಗೆರೆಯಲ್ಲಿ ನಾಲ್ಕು ಸಣ್ಣ ಸಣ್ಣ ಬಾವಿ ತೋಡಿದ್ದರು. ಮೊದಲೇ ದೂರ. ಈಗ ಊರಿಗೆ ಇನ್ನೂ ದೂರ ಹೋಗಬೇಕಾಗಿತ್ತು. ಒಂದು ಮಧ್ಯಾಹ್ನ ಕಮಲು ಕೆರೆಗೆ ಹೋಗಿದ್ದಳು. ಏಕಾದಶಿಯಾಗಿದ್ದುದರಿಂದ ಅಕ್ಕಮ್ಮ ಊರ ಹೊರಗಿನ ಕೇಶವ ದೇವರ ಗುಡಿಗೆ ಹೋಗಿದ್ದಳು. ಪುಟ್ಟಗೌರಿ ತಲೆಯ ಮೇಲೊಂದು, ಕೈಯಲ್ಲೊಂದು ಬಿಂದಿಗೆಯೊಡನೆ ಕಲ್ಲೇಶನ ಮನೆಗೆ ಬಂದಳು. ಕಮಲಮ್ಮಾ’- ಎಂದು ಕೂಗಿಕೊಂಡು ಒಳಗಿನ ತನಕ ಬಂದರೂ ಯಾರೂ ಇರಲಿಲ್ಲ. ಹಿತ್ತಿಲು ತನಕ ಹೋಗಿ ನೋಡಿದಳು. ಯಾರೂ ಕಾಣಲಿಲ್ಲ. ಹಿಂತಿರುಗಿ ಹೋಗಲು ಒಳಗೆ ಬಂದಾಗ ಬೀದಿಯ ಬಾಗಿಲನ್ನು ಹಾಕಿದ್ದಂತೆ ಕಂಡಿತು. ಇದೇನೆಂದು ತಿರುಗಿ ನೋಡಿದರೆ ಹಿತ್ತಿಲ ಬಾಗಿಲನ್ನೂ ಹಾಕಿದ್ದಂತೆ ಕಂಡಿತು. ಒಳಗೆ ಕತ್ತಲೆಯಲ್ಲಿ ಒಬ್ಬಳೇ ಉಳಿದ ಅವಳು ‘ಅಯ್ಯಯ್ಯೊ’ಎಂದು ಪೂರ್ತಿ ಕೂಗಿಕೊಳ್ಳುವ ಮೊದಲೇ ಯಾರೋ ಬಾಯನ್ನು ಹಿಡಿದು ಮುಚ್ಚಿದಂತೆ ಆಯಿತು. +ಮನೆಗೆ ಹೋಗುವಾಗ ಅವಳ ಎದೆ ಹೊಡೆದುಕೊಳ್ಳುತ್ತಿತ್ತು. ಕಲ್ಲೇಶಜೋಯಿಸ ಅಂಥವನೆಂದು ಎಷ್ಟೋ ಜನ ಆಡಿಕೊಳ್ಳುತ್ತಿದ್ದರು. ಊರ ಹೊರಗೆ ಅವನು ಏನಾದರೂ ಮಾಡಿಕೊಳ್ಳಲಿ. ಬ್ರಾಹ್ಮಣಿಯಾದ ತನ್ನನ್ನು, ಅದೂ ಅವನ ಹೆಂಡತಿಯನ್ನು ನೀರಿಗೆ ಕರೆಯಲು ಹೋದಾಗ ಹೀಗೆ ಮನೆಯಲ್ಲಿ ಸೇರಿಕೊಂಡು, ಗಟ್ಟಿಯಾಗಿ ಕಿರಿಚಿಕೊಳ್ಳುವ ಮೊದಲೇ ಬಾಯಿ ಮುಚ್ಚಿಬಿಡಬಹುದೇ! +ಅವಳ ಕೈ ಕಾಲು ನಡುಗುತ್ತಿತ್ತು. ಅಸಹ್ಯದಿಂದ ಮೈ ಎಲ್ಲ ಉರಿಯುತ್ತಿತ್ತು. +ಅವಳು ಇನ್ನೂ ಮನೆ ಸೇರಿಲ್ಲ. ಕಲ್ಲೇಶನ ಮನೆಯ ಸುತ್ತಲಿನ ನಾಲ್ಕೈದು ಜನರು ಬಂದು ಕೇಳಿದರು: ‘ನೀವು ಹಾಗೆ ಕಿರುಚಿಕೊಂಡಲ್ಲಾ, ಏನಾಯ್ತು?’ +ಅವಳ ಮಾವ ಶ್ಯಾಮಣ್ಣ, ಗಂಡ ನಂಜುಂಡಯ್ಯ ಮನೆಯಲ್ಲೇ ಇದ್ದರು. +‘ಏನೂ ಇಲ್ಲ. ಅವರ ಮನೆ ಬೆಕ್ಕು ಮೇಲೆ ಬಿದ್ದುಬಿಡ್ತು.’ +‘ಇದೇನು ಅಂತ ನಾವು ಓಡಿಬಂದ್ವು. ಬೀದಿ ಬಾಗಿಲು ಒಳಗಡೆಯಿಂದ ಅಗುಳಿ ಹಾಕಿತ್ತು.’ +ಮುಂದೆ ಏನು ಹೇಳುವುದಕ್ಕೂ ತಿಳಿಯದೆ ಅವಳು-‘ಹೂಂ. ಕಮಲಮ್ಮ ಹಿತ್ತಿಲ ಕಡೆ ಇದ್ದಳು’ ಎಂದಳು. ಜನಗಳು ಹೊರಟು ಹೋದರು. ಅದೇ ಸಮಯದಲ್ಲಿ ಅವರ ಮನೆಯ ಮುಂದೆಯೇ ಕಲ್ಲೇಶನ ಹೆಂಡತಿ ಕಮಲಮ್ಮ ನೀರು ಹೊತ್ತುಕೊಂಡು ಕೆರೆಯ ಕಡೆಯಿಂದ ಮನೆಗೆ ಹೋಗುತ್ತಿದ್ದಳು. ಅನುಮಾನ ಬಂದ ಶ್ಯಾಮಣ್ಣ ಒಳಗೆ ಹೋಗಿ ಕೇಳಿದರು: ‘ನಿಜ ಹೇಳು. ಯಾವ್ನಾದ್ರೂ ಬೇಕೂಫ್‌ಗಿರಿ ಮಾಡಿದ್ರೆ ನೇಣು ಹಾಕಿಸ್‌ಬಿಡ್ತೀನಿ. ಹೇಳು., ಹೆದರ್‍ಕಾಬ್ಯಾಡ.’ +“ಕಮಲಮ್ಮ ಇದಾಳಾ ಅಂತ ನಾನು ಹಿತ್ಲ ತಂಕ ಹೋದೆ. ಯಾರೂ ಇರ್ಲಿಲ್ಲ. ಹಿಂತಿರುಗಿ ಬತ್ತಿದ್ದೆ. ಕಲ್ಲೇಶ ಜೋಯಿಸ್ರು, ‘ನಮ್ಮನೆಗೆ ಯಾಕ್ ಬಂದೆ ನೀನು?-ಅಂತ ಕೇಳಿಬಿಟ್ರು. ಹೆದರಿಕೆಯಾಯ್ತು. ಕಿರುಚ್ಕಂಡು ಹಿತ್ಲ್ ಕಡೆಯಿಂದ ಓಡಿ, ದನ ಬರೂ ಬಾಗಿಲಿನಿಂದ ಬಂದ್‌ಬಿಟ್ಟೆ. ಅವ್ನು ನನ್ನ ಹೀಗೆ ನೀನು ತಾನು ಅಂತ ಮಾತಾಡುಸ್ಭೌದಾ?” +ಸೊಸೆಯ ಮಾತನ್ನು ಪೂರ್ತಿಯಾಗಿ ನಂಬುವುದೋ ಬೇಡವೋ ಎಂಬುದಕ್ಕಿಂತ, ಅದನ್ನು ಶಂಕಿಸಿ ಗದ್ದಲ ಮಾಡಿದರೆ ತಮ್ಮ ಸಂಸಾರದ ಮಾನವೇ ಹೋಗುತ್ತದೆಂದು ಅವರ ವಿವೇಕ ಹೇಳಿತು. ಅವರ ಮಗ ನಂಜುಂಡಯ್ಯನಿಗೆ ಮಾತ್ರ ಏನೂ ಅರ್ಥವಾಗಲಿಲ್ಲ. ‘ಬೋಳೀಮಗ ಹಾಗಂದ್ನೇ? ಇನ್ನೊಂದ್ ದಿನ ಅವ್ನ ಮನೆಗೆ ಹೋಗ್‌ಬ್ಯಾಡ’-ಎಂದು ಹೆಂಡತಿಗೆ ಕಟ್ಟಾಜ್ಞೆ ಮಾಡಿದ. +ಶ್ಯಾಮಣ್ಣ ಕಲ್ಲೇಶನ ಮನೆಗೆ ಬಂದಾಗ ಕಮಲಮ್ಮ ಇದ್ದಳು. ಅಕ್ಕಮ್ಮ ಇನ್ನೂ ಬಂದಿರಲಿಲ್ಲ. ಕಲ್ಲೇಶ ಅಷ್ಟರಲ್ಲಿ ಮನೆಯಲ್ಲಿರದೆ ಎಲ್ಲಿಯೋ ಹೋಗಿದ್ದ. ಶ್ಯಾಮಣ್ಣನವರು ಕಮಲಮ್ಮನಿಗೆ, ‘ನನ್ನ ಸೊಸೆ ನಿನ್ನ ನೀರಿಗೆ ಕರೆಯುಕ್ಕೆ ಅಂತ ಬಂದ್ರೆ ನಿನ್ನ ಗಂಡ ಮರ್ಯಾದೆ ಬಿಟ್ಟು ಮಾತಾಡಿದ್ನಂತೆ. ಅವನ ಮೇಲೆ ಕೇಸು ಹಾಕಿ ಬೇಕಾದ್ರೆ ಸಜ ಕೊಡುಸ್ತಿದ್ದೆ. ಏನೋ ಹೋಗ್ಲಿ ಅಂತ ಸುಮ್ನಾಗಿದೀನಿ. ಇನ್ಮೇಲೆ ನೀನು ನನ್ಮನಿಗೆ ಬರಬ್ಯಾಡ. ನನ್ನ ಸ್ವಸೆ ನಿನ್ಮನಿಗ್ ಬರೂದು ಬ್ಯಾಡ’ ಎಂದು ಕಟ್ಟುನಿಟ್ಟಾಗಿ ಹೇಳಿ ಹೊರಟುಹೋದರು. +ಕಲ್ಲೇಶ ಎರಡು ದಿನ ಊರಿಗೆ ಬರಲಿಲ್ಲ. ಮೂರನೆಯ ದಿನ ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದ. ಅಕ್ಕಮ್ಮ ಎದ್ದು ಅನ್ನ ಹುಣಿಸೆನೀರು ಮಾಡಿ ಇಕ್ಕಿದಳು. ಶ್ಯಾಮಣ್ಣ ತನ್ನ ಮೇಲೆ ಏನಾದರೂ ಗಲಾಟೆ ಮಾಡಿದನೇ ಎಂದು ಕೇಳಿದುದಕ್ಕೆ ಅವಳು ಸೊಸೆಗೆ ಕೇಳದಂತೆ ಪಿಸುಮಾತಿನಲ್ಲಿ, ‘ಮೊನ್ನೆ ದಿನ ಅವ್ಳು ಬಂದಿದ್ದಾಗ ನನ್ನ ಮನೆಗೆ ಯಾಕ್ ಬಂದೆ ನೀನು ಅಂತ ಅಂದು ಕಳಿಸಿದೆಯಂತೆ. ನನ್ನ ಸ್ವಸೇನ ಅವ್ನು ಹೀಗನ್ಭೌದೇ, ಇನ್ನುಮ್ಯಾಲೆ ಅವ್ಳು ಅವ್ನ ಮನೆಗೆ ಹೋಗೂದೂ ಬ್ಯಾಡ, ನಮ್ಮನೆಗೆ ಅವ್ನ ಹೆಂಡ್ತಿ ಬರೂದೂ ಬ್ಯಾಡ ಅಂತ ಅಂದುಹೋದನಂತೆ. ಹೋಗ್ಲಿ, ಶನಿ ಕಳ್ದಹಾಗಾಯ್ತು. ಇದೇ ಮಾತು ನೀನು ಈಗ ನಾಲ್ಕು ವರ್ಷಕ್ಕೆ ಮೊದಲೇ ಅಂದು ಕಳ್ಸಿದ್ರೆ. ಅವ್ಳು ಇಲ್ಲಿಗ್ ಬಂದ್ ಬಂದ್ ಈ ಕಪಿಗೆ ಹೆಂಡ ಕುಡ್ಸೂದೂ ತಪ್ತಿತ್ತು. ಇದು ತುಸುವಾದ್ರೂ ನೆಟ್ಟಗಾಗ್ತಿತ್ತು.’ +ಶ್ಯಾಮಣ್ಣ ಏನೂ ಗದ್ದಲ ಮಾಡಿಲ್ಲವೆಂದು ಖಚಿತವಾಗಿ ಕಲ್ಲೇಶನ ಮನಸ್ಸಿಗೆ ಸಮಾಧಾನವಾಯಿತು. ಅವನು ಎರಡೊಂದು ಕೆಲಸ ಸಾಧಿಸಿದಂತೆ ಆಯಿತು. ಅದೂ ಅಕ್ಕಮ್ಮನಿಗೂ ಗೊತ್ತಿಲ್ಲ; ಅವನ ಹೆಂಡತಿಗೂ ತಿಳಿದಿರಲಿಕ್ಕಿಲ್ಲ. +ಪುಟ್ಟಗೌರಿ ಕಮಲುವಿನ ಸಂಪರ್ಕ ಸಂಪೂರ್ಣ ನಿಂತುಹೋಯಿತು. ಒಂದು ದಿನ ಅವರಿಬ್ಬರೂ ಕೆರೆಯ ಬಾವಿಯಲ್ಲಿ ಒಬ್ಬರನ್ನೊಬ್ಬರು ನೋಡಿದರು. ಕಮಲು ಮಾತನಾಡಿಸಿದರೂ ಅವಳು ಈ ಕಡೆ ಮುಖ ತಿರುಗಿಸಿ ನೋಡದೆ ಹೊರಟುಹೋಗಿಬಿಟ್ಟಳು. ಇನ್ನು ತನಗೂ ಅವಳಿಗೂ ಮಾತು ಎಂದೆಂದಿಗೂ ಬಿಟ್ಟು ಹೋದಂತೆಯೇ ಎಂಬುದು ಎಂಟು ದಿನದಲ್ಲಿ ಇವಳಿಗೆ ಖಚಿತವಾಯಿತು. ಒಬ್ಬ ಆಪ್ತ ಸ್ನೇಹಿತೆ ಕಳೆದುಹೋದ ದುಃಖದ ಜೊತೆಗೆ ಅವಳಿಗೆ ಆತಂಕವಾಗುವ ಇನ್ನೊಂದು ಕಾರಣವಿತ್ತು. ಆದರೆ ಅದನ್ನು ಯಾರ ಕೈಲೂ ಹೇಳಲಾರಳು. ಹೇಳದೆ ಇರಲೂ ಆರಳು. +ಎಂಟು ದಿನ ತನ್ನಲ್ಲಿಯೇ ತೊಳಲಾಡಿ, ಒಂದು ದಿನ ಬೆಳಿಗ್ಗೆ ಎದ್ದವಳೇ ಶ್ಯಾಮಣ್ಣನ ಮನೆಗೆ ಹೋದಳು. ಆ ಹೊತ್ತಿನಲ್ಲಿ ಶ್ಯಾಮಣ್ಣನಾಗಲಿ ನಂಜುಂಡಯ್ಯನಾಗಲಿ ಮನೆಯಲ್ಲಿರುವುದಿಲ್ಲವೆಂಬುದು ಅವಳಿಗೆ ಗೊತ್ತು. ನೇರವಾಗಿ ಒಳಗೆ ಹೋಗಿ ಪುಟ್ಟಗೌರಿಯ ಮುಂದೆ ನಿಂತು ಎಂದಳು: ‘ಅವರೇನೋ ಒಂದು ಮಾತು ಅಂದಿರ್ಬೌದು. ಹಾಗಂತ ನನ್ನ ನಿನ್ನ ಸ್ನೇಹ ಹೋಗ್ಬೇಕೇನಮ್ಮ?’ +ಏನು ಹೇಳಬೇಕೆಂಬುದು ಪುಟ್ಟಗೌರಿಗೆ ತಕ್ಷಣ ತಿಳಿಯಲಿಲ್ಲ. ಆದರೂ ಹೇಳಿದಳು: ‘ಒಂದು ಮಾತಂತೆ! ಸಾಕು ಸಾಕು. ನಿನ್ನ ಸ್ನೇಹವೂ ಬ್ಯಾಡ; ನಿಮ್ಮ ಮನೆಗೆ ಬರೂದೂ ಬ್ಯಾಡ. ಈಗ ನೀನು ಇಲ್ಲಿಗೆ ಬಂದದ್ದು ನಮ್ಮ ಮಾವ್‌ನೋರಿಗೆ ತಿಳಿದ್ರೆ ನಿನ್ನ ಕಾಲು ಕತ್ತರಿಸಿ ಹಾಕಿಬಿಟ್ಟಾರು. ನಡಿ, ನಡಿ ಸುಮ್ನೆ.’ +‘ಹೋಗ್ತೀನಿ, ನನ್ನ ಬೆಂಡೋಲೇನೂ ದುಡ್ನೂ ಕೊಡು.’ +‘ಯಂಥಾ ಬೆಂಡೋಲೆ, ಯಂಥಾ ದುಡ್ಡು?’-ಏನೂ ಅರಿಯದವಳಂತೆ ಅವಳು ಕೇಳಿದಳು. +‘ಇದೇನಮ್ಮ ಹೀಗಂತೀಯಾ? ಈಗ ಒಂದು ವರ್ಷದಲ್ಲಿ ನಮ್ಮ ಯಜಮಾನ್ರು ನನ್ನ ಹ್ವಡದ ದಿನ ನಿಂಗೆ ಬಿಚ್ಚಿ ಕೊಟ್ಟಿರ್‍ಲಿಲ್ವೆ ನಾನು? ನೀರಿಗೆ ಹೋಗೂವಾಗ ಬಿಂದಿಗೇಲಿ ತುಂಬ್ಕಂಡು ಬಂದು ನಾನು ನಿಂಗೆ ಕೊಟ್ಟಿದ್ದ ಅಕ್ಕಿ, ಕಾಫಿ ಬೀಜ, ಇದ್ರುದ್ದೆಲ್ಲ ಒಟ್ಟು ಹದಿನೈದು ರೂಪಾಯಿ ಕೊಡ್‌ಬ್ಯಾಡ್ವೆ?’ +‘ಕಮಲಮ್ಮ, ಇಲ್ಲದ್ದ ಆಡಿದ್ರೆ ನಿನ್ನ ನಾಲಿಗೇಲಿ ಹುಳು ಸುರಿಯುತ್ತೆ. ನಡಿ, ನಡಿ. ನಮ್ಮನೇಲಿ ಒಂದು ನಿಮಿಷವೂ ನಿಂತುಕೋಬ್ಯಾಡ. ನಮ್ಮಾವ್ನೋರು ಬತ್ತಾರೆ ನೋಡೀಗ.’ +ಕೋಪದಿಂದ ಕಮಲುವಿನ ಮೈ ಉರಿಯಲು ಮೊದಲಾಗಿ ತುಟಿ ನಡುಗುತ್ತಿದ್ದವು. ಮತ್ತೆ ಮಾತನಾಡಲು ಏನೂ ತಿಳಿಯಲಿಲ್ಲ. ಹಿಂದಿನ ಕಾಲದ ಗಟ್ಟಿ ಬೆಂಡೋಲೆ. ಏನಿಲ್ಲವೆಂದರೂ ಎಂಬತ್ತು ರೂಪಾಯಿಯಾಗುತ್ತೆ. ಉಳಿದದ್ದು ಹದಿನೈದು ರೂಪಾಯಿ. ಈ ಮುಂಡೆ ಎರಡನ್ನೂ ದಕ್ಕಿ ಹಾಕೂಕ್ಕೆ ಮಾಡಿದಾಳೆ. ದುಡ್ಡು ದಕ್ಕಿಹಾಕುಕ್ಕೇ, ನಿನ್ನ ಗಂಡ ನನ್ನ ಹಾಗಂದ ಅಂತ ಸುಳ್ಳು ಸುಳ್ಳೇ ಹುಟ್ಟಿಸ್ಕಂಡು ನನ್ನ ಕೈಲಿ ಮಾತು ಬಿಟ್ಟಿದಾಳೆ. ಈ ಮುಂಡೆಗೆ ನನ್ನ ದುಡ್ಡು ಬಿಟ್ಟುಬಿಟ್ರೆ ನಾನು ಹಾಸನದ ಹೆಣ್ಣೇ ಅಲ್ಲ ಎಂದು ನಿಶ್ಚಯ ಮಾಡುತ್ತಿರುವಾಗಲೇ ಕಣ್ಣನ್ನು ಸುತ್ತ ಹೊರಳಿಸಿದಳು. ಹಿಂಭಾಗದ ನೀರು ಮನೆಯಲ್ಲಿದ್ದ ದೊಡ್ಡ ಹಂಡೆ ಕಣ್ಣಿಗೆ ಬಿತ್ತು. ತಾನು ಏನು ಮಾಡುತ್ತಿದ್ದೇನೆ, ಅದರ ಪರಿಣಾಮ ಮುಂದೆ ಏನಾಗುತ್ತೆ ಎಂಬ ಪರಿಜ್ಞಾನವೇ ಇರಲಿಲ್ಲ. ನೀರು ಮನೆಗೆ ಹೋಗಿ ಹಂಡೆಯನ್ನು ನೂಕಿ ಉರುಳಿಸಿ ನೀರನ್ನು ಚೆಲ್ಲಿದವಳೇ, ಅದನ್ನು ಎತ್ತಿ ಎರಡು ಕೈಲೂ ಹಿಡಿದುಕೊಂಡು-‘ನನ್ನ ದುಡ್ಡು ಕೊಟ್ಟು ನಿನ್ನ ಹಂಡೆ ಬಿಡಿಸ್ಕಂಡು ಹೋಗು’ ಎಂದು ಹೊರಟುಬಿಟ್ಟಳು. ಪುಟ್ಟಗೌರಿ ಬಿಟ್ಟಾಳೆಯೇ?: ‘ಅಯ್ಯೊ ಕಳ್ಳಮುಂಡೆ, ಮನೆ ನುಗ್ಗಿ ಹಂಡೆ ಹೊತ್ಕಂಡು ಹೋಗ್ತೀಯಾ?’-ಎಂದು ಮುಂದೆ ನುಗ್ಗಿ ಅವಳನ್ನು ತಡೆದಳು. ಆದರೆ ಕಮಲು ಅವಳಿಗಿಂತ ಶಕ್ತಿವಂತೆಯಾದ ಹೆಂಗಸು. ಅವಳನ್ನು ಕೆಳಕ್ಕೆ ನೂಕಿ ಮನೆಯಿಂದ ಹೊರಗೆ ಬಂದು, ತಳದ ಮಸಿಯನ್ನೂ ನೋಡದೆ ಹಂಡೆಯನ್ನು ತಲೆಯ ಮೆಲೆ ಇಟ್ಟುಕೊಂಡು ತನ್ನ ಮನೆಗೆ ದುಡು ದುಡು ಓಡಿ ಬಂದುಬಿಟ್ಟಳು. +ಕಲ್ಲೇಶನ ಹೆಂಡತಿ ದೊಡ್ಡ ಹಂಡೆ ಹೊತ್ತು ಹೋಗುವುದನ್ನು ಬೀದಿಯ ನಾಲ್ಕಾರು ಜನರು ನೋಡಿದರು. ಅಷ್ಟರಲ್ಲಿ ಯಾರಿಗೂ ಯಾವ ಮಹತ್ವವೂ ಕಾಣಿಸಲಿಲ್ಲ. ಅವಳು ಮನೆಗೆ ಬಂದಾಗ ಗಂಡ ಇರಲಿಲ್ಲ. ಹಂಡೆಯನ್ನು ಅಡಿಗೆಯ ಮನೆಯ ಒಳಭಾಗದಲ್ಲಿ ಇಟ್ಟು ಮನೆಯ ಮುಂಬಾಗಿಲನ್ನು ಮುಚ್ಚಿಕೊಂಡಳು. ಅಕ್ಕಮ್ಮನಿಗೆ ಏನೂ ಅರ್ಥವಾಗಲಿಲ್ಲ. ‘ಏನೇ ಇದು? ಯಾರ ಮನೇದೇ ಹಂಡೆ?’-ಎಂದು ಕೇಳಿದರೆ ಅವಳು ಯಾವ ಉತ್ತರವನ್ನೂ ಹೇಳಲಿಲ್ಲ. ‘ಕಳ್ಳಲೌಡಿ ತಂದು, ನನ್ನ ದುಡ್ಡು ದಕ್ಕಿಹಾಕುಕ್ಕೆ ಅಂತ ಆಟ ತೆಗೆದಿದ್ಲು. ನಮ್ಮನೆಯೋರ್ದು ಸಿಟ್ಟಿನ ಸ್ವಭಾವ ಅಂತ ಗೊತ್ತಿಲ್ವೆ? ಯಾಕ್ ಬಂದ್ರಿ ಅಂತ ಕೇಳಿರ್‍ಭೌದು. ಅದೇ ನೆವವಾಯ್ತೇನೋ ನುಂಗಿಹಾಕುಕ್ಕೆ? ಹಂಡೆ ಕೇಳುಕ್ಕೆ ನಮ್ಮನೆ ಬಾಗ್ಲಿಗೆ ಬರ್ಲಿ. ಮೋಸಗಾರ ಮುಂಡೆಗೆ ತೋರುಸ್ತೀನಿ ನಾನೆಂಥೋಳು ಅಂತ’-ಎಂದು ಅವಳು ಆಲೋಚಿಸುತ್ತಿದ್ದುದು ಅಕ್ಕಮ್ಮನಿಗೆ ಪಿಟಿಪಿಟಿ ಕೇಳುತ್ತಿತ್ತು; ಆದರೆ ಅರ್ಥವಾಗಲಿಲ್ಲ. +ಅರ್ಧ ಗಳಿಗೆಯೂ ಕಳೆದಿಲ್ಲ. ಬೀದಿಯಲ್ಲಿ ಗದ್ದಲವಾಯಿತು. ಶ್ಯಾಮಣ್ಣ, ‘ನಮ್ಮನೆ ಹಂಡೆ ಕದ್ಕಂಡ್ ಬಂದೆ ಏನೇ ಕಳ್ಳೀ?’ ಎಂದು ಕೂಗುತ್ತಾ ಬರುತ್ತಿದ್ದುದು ಕೇಳಿಸಿತು. ಇನ್ನೂ ಇಪ್ಪತ್ತು ಮೂವತ್ತು ಜನ ಗುಂಪು ಕಟ್ಟಿಕೊಂಡು ಬಂದ ಶಬ್ಧವೂ ಆಯಿತು. ಶ್ಯಾಮಣ್ಣನೇ ಬೀದಿಯ ಬಾಗಿಲು ತಟ್ಟಿದ. ‘ಅವ್ರು ಮನೆಗೆ ಬರೂತಂಕ ಬಾಗಿಲು ತೆಗೀಬ್ಯಾಡಿ’- ಎಂದು ಹೇಳುತ್ತಿದ್ದರೂ, ಹಿಂದು ಮುಂದು ಗೊತ್ತಿಲ್ಲದ ಅಕ್ಕಮ್ಮ ಹೋಗಿ ಬಾಗಿಲು ತೆಗೆದಳು. ಮನೆಯ ಮುಂದೆಲ್ಲ ಜನ ಜಾತ್ರೆಗೆ ನೆರೆದಂತೆ ತುಂಬಿದ್ದಾರೆ. ಶ್ಯಾಮಣ್ಣ-‘ಅಕ್ಕಮ್ಮ, ನಿಮ್ಮ ಸ್ವಸೆ ನಮ್ಮನೆ ಹಂಡೆ ಹೊತ್ಕೊಂಡ್ ಬಂದಿದಾಳೆ ಕೊಟ್ಬಿಡಿ’ ಎಂದ. +‘ನನ್ ದುಡ್ ಕೊಡೂತಂಕ ನಾನ್ ಕೊಡುಲ್ಲ’-ಎಂದು ಕಮಲು ಒಳಗಿನಿಂದ ಕೂಗಿದಳು. +ಏನೊಂದೂ ಅರ್ಥವಾಗದ ಅಕ್ಕಮ್ಮ ಎಂದಳು: ‘ನಮ್ಮ ಕಲ್ಲೇಶ ಊರ ಮುಂದಕ್ಕೆ ನೀರ ಕಡೆ ಹೋಗಿದಾನೆ. ಯಾರಾರೂ ಹೋಗಿ ಕರ್‍ಕಂಡು ಬನ್ನಿ. ಯಜಮಾನ ಬರೂತಂಕ ನಮಗೇನೂ ಗೊತ್ತಿಲ್ಲ.’ +ಇಬ್ಬರು ಓಡಿದರು. ಸ್ವಲ್ಪ ಹೊತ್ತಿನಲ್ಲಿ ಬಂದ ಕಲ್ಲೇಶನಿಗೆ, ಹೆಂಡತಿ ಮಾಡಿದ್ದ ಕೆಲಸವನ್ನು ಅವನನ್ನು ಕರೆತಂದವರೇ ಹೇಳಿದ್ದರು. ಅವಳ ಕೆಲಸದ ಏನು ಎಂತುಗಳು ತಿಳಿಯದೆ ಅವನು ಸುಮ್ಮನೆ ಬಂದು ಮನೆಯ ಒಳಗೆ ಹೋಗಿ ಹೆಂಡತಿಯನ್ನು ಕೇಳಿದ: ‘ಏನೇ ಇದು?’ +‘ಆ ಕಳ್ಳ ಮುಂಡೆ ನನ್ನ ದುಡ್ದು ನುಂಗಿಹಾಕ್ಕಂಡಿದಾಳೆ.’ +‘ಅದ್ಯಾವ ದುಡ್ಡು, ಅದೆಲ್ಲಿಂದ ಬಂತು ಕೇಳು’-ಶ್ಯಾಮಣ್ಣ ಹೇಳಿದ. +‘ನಂದೊಂಜತೆ ಬೆಂಡೋಲೆ, ಮೇಲೆ ಹದಿನೈದು ರೂಪಾಯಿ ಕೊಡಬೇಕು.’ +‘ಯಂಥ ಬೆಂಡೋಲೆ? ಯಾರಪ್ಪನ ಮನೇದು ಇದು?’ +‘ನನ್ನ ಬೆಂಡೋಲೆಯೇ. ಮುರಿದ್ಹೋಗಿತ್ತು. ಸರಿಮಾಡಿಸಿಕೊಡ್ತೀನಿ ಅಂತ ಹೇಳಿ ನಿಮ್ಮ ಸ್ವಸೆ ಇಸ್ಕಂಡಿದ್ಲು.’ +‘ನಿನ್ನ ಬೆಂಡೋಲೆ ಮುರಿದಿದ್ರೆ ನಿನ್ನ ಗಂಡನ ಕೈಲಿ ಕೊಟ್ಟು ಸರಿ ಮಾಡಿಸ್ಕಾಬೇಕಾಗಿತ್ತು. ಅವಳ ಕೈಲಿ ಯಾಕೆ ಕೊಟ್ಟೆ? ಹದಿನೈದು ರೂಪಾಯಿ ಯಾವ್ದು?’ +‘ನನ್ನ ಹತ್ರ ಅವ್ಳು ಅಕ್ಕಿ ಕಾಪಿ ಬೀಜ ಇಸ್ಕಂಡಿದ್ಲು.’ +‘ಕೇಳಿದ್ರೇನ್ರಯ್ಯ. ಯಾರಾದ್ರೂ ನಂಬ್ತಾರಾ ಈ ಮಾತ?’-ಎಂದು ಶ್ಯಾಮಣ್ಣ ಬೀದಿಯ ತುಂಬ ಸೇರಿದ್ದವರಿಗೆ ಒಪ್ಪಿಸಿದ. +‘ಯಾರೇನು ಒಪ್ಪದು? ನನ್ನ ಗಂಟು ನುಂಗಿಹಾಕ್ಬೇಕು ಅಂತ ಸುಳ್ ಸುಳ್ಳೇ ನಿನ್ನ ಗಂಡ ಹಾಗಂದ ಹೀಗಂದ ಅಂತ ನ್ಯವ ಮಾಡ್ಕಂಡ್ ಅವ್ಳು ನನ್ನ ಕೈಲಿ ಮಾತು ಬಿಟ್ಳು. ನನ್ನ ಗಂಡ ಅವ್ಳುನ್ನ ಏನಂದದ್ದು? ಅವ್ಳುನ್ನೇ ಕರೀರಿ. ಅವ್ಳ ಮಕ್ಳು ಹಿಡಕಂಡು ಪ್ರಮಾಣ ಮಾಡಿ ಹೇಳ್ಲಿ.’ +‘ಮಕ್ಳಿಲ್ಲದ ಬಡ್ಡಿ, ನೀನು ಯಾರುನ್ನ ಹಿಡ್ಕಂಡು ಪ್ರಮಾಣ ಮಾಡ್ತೀಯಾ?-ಶ್ಯಾಮಣ್ಣ ಕೇಳಿದ. +ಮಾತು ಎತ್ತ ಸರಿಯುತ್ತಿದೆ ಎಂಬುದನ್ನು ಕಲ್ಲೇಶ ಅರ್ಥಮಾಡಿಕೊಂಡ. ಆಣೆ ಪ್ರಮಾಣದ ಮಾತು ಬಂದಾಗ ಹಿಂದೆ ಮುಂದೆ ಯೋಚಿಸದೆ ಪುಟ್ಟಗೌರಿ ನಿಜ ಹೇಳಿಬಿಡಬಹುದು ಎಂಬ ಭಯವಾಯಿತು. ಅಕ್ಕಮ್ಮನ ಕಡೆ ತಿರುಗಿ-‘ಹಂಡೆ ಎಲ್ಲಿದೆ?’ ಎಂದು ಕೇಳಿದ. +‘ಅಡಿಗೇಮನ್ಲಿಟ್ಟಿದಾಳೆ.’ +ಸುಮ್ಮನೆ ಹೋಗಿ ಅವನು ಅದನ್ನು ಎತ್ತಿಕೊಂಡು ಬಂದು ಶ್ಯಾಮಣ್ಣನ ಮುಂದಿಟ್ಟ. ‘ನನ್ನ ದುಡ್ಡು ಬೆಂಡೋಲೆ ಕೊಡೂತಂಕ ಅದ ಕೊಡ್ಕೂಡ್ದು’-ಎಂದು ಅಡ್ಡ ಬಂದ ಹೆಂಡತಿಯನ್ನೂ ಕಾಲೆತ್ತಿ ಒದೆದು ನೂಕಿದ. +‘ಕಳ್ಳಮುಂಡೆ ತಂದು. ಹಿಡಕಂಡು ನೆತ್ತಿ ಕೂದ್ಲು ಬೀಳೂತಂಕ ಕೆರದಲ್ಲಿ ಹೊಡೀಬೇಕು’-ಎನ್ನುತ್ತಾ ಶ್ಯಾಮಣ್ಣ ಅಲ್ಲಿಯೇ ಇದ್ದ ತಳವಾರನಿಗೆ, ‘ಹಂಡೆ ತಗಂಡು ನಡಿಯೋ’ ಎಂದು ಹೇಳಿದ. +ಗುಂಪು ನಿಧಾನವಾಗಿ ಮನೆಯ ಮುಂದಿನಿಂದ ಚದುರಿತು. ಆದರೆ ಗ್ರಾಮದಲ್ಲಿ ಇಂತಹ ವಿಶೇಷ ನಡೆದಿರುವಾಗ ಜನಗಳು ಅದನ್ನು ಬಿಟ್ಟು ಅಷ್ಟು ಬೇಗ ತಮ್ಮ ಪಾಡಿಗೆ ತಾವು ಹೊರಟುಹೋಗಲಾರರು. ಕಲ್ಲೇಶನ ಮನೆಯ ಮುಂದಿನ ಆಚೆಯ ತಿರುವನ್ನು ಹಾಯ್ದು ಮತ್ತೆ ಒಟ್ಟಿಗೆ ಸೇರಿ, ಅದರ ಬಗೆಗೇ ಲಲ್ಲೆ ಹೊಡೆಯಲು ಪ್ರಾರಂಭಿಸಿದರು. ಇಲ್ಲಿಯ ತನಕ ವಿಷಯವೇ ಗೊತ್ತಿಲ್ಲದವರೂ ಒಬ್ಬೊಬ್ಬರಾಗಿ ಬಂದು ಸೇರಿದರು. +ಕಲ್ಲೇಶ ಮನೆಯ ಬಾಗಿಲು ಹಾಕಿಕೊಂಡವನೇ, ಕೈಗೆ ಸಿಕ್ಕಿದ ಒಂದು ದನಕಟ್ಟುವ ಹಗ್ಗವನ್ನು ಜೋಡಿಸಿ ಹಿಡಿದುಕೊಂಡ. ತಪ್ಪೊಪ್ಪಿಕೊಳ್ಳಲು ಪೋಲೀಸಿನವರು ಕಳ್ಳರನ್ನು ಬಡಿಯುವ ಹಾಗೆ ಹಗ್ಗದಲ್ಲಿ ಬೀಸಿ ಬೀಸಿ ಹೆಂಡತಿಯ ಮೈಕೈಗಳಿಗೆ ಬಾರಿಸಲು ಶುರುಮಾಡಿದ. ಈ ಸಮಯದಲ್ಲಿ ಬಿಡಿಸಿಕೊಳ್ಳಲು ಹೋದರೆ ಅದೇ ಹಗ್ಗದಲ್ಲಿ ತನಗೂ ಶೆಣೆಯುತ್ತಾನೆಂದು ಗೊತ್ತಿದ್ದ ಅಕ್ಕಮ್ಮ, ಸುಮ್ಮನೆ ಹಿತ್ತಿಲ ಕಡೆಗೆ ಹೋಗಿ ದನದ ಕೊಟ್ಟಿಗೆಯಲ್ಲಿ ಕುಳಿತಳು. ‘ಬೆಂಡೋಲೇನ ಏನು ಮಾಡ್ಬೇಕು ಅಂತ ಅವ್ಳಿಗೆ ಕೊಟ್ಟಿದ್ದೆ ಹೇಳೇ ಬೋಸುಡಿ’-ಎಂದು ಹದಿನೈದು ಇಪ್ಪತ್ತು ಸಲ ಶೆಣೆದ ಮೇಲೆ ಅವಳು ಬಾಯಿ ಬಿಟ್ಟಳು: ‘ನಮ್ಮ ರಂಗಮಣೀಗೆ ಕೊಡಬೇಕು ಅಂತ ಇಟ್ಟಿದ್ದೆ.’ ರಂಗಮಣಿ ಕಮಲುವಿನ ತಂಗಿ; ಈಗ ಮದುವೆಗೆ ಬಂದಿದ್ದಳು. +‘ಅಕ್ಕಿ ಕಾಫಿ ಬೀಜ ಹ್ಯಾಗೆ ಕೊಟ್ಟೆ?’ +ಅವಳು ಬಾಯಿ ಬಿಡಲಿಲ್ಲ. ಮತ್ತೆ ಒಂದು ಡಜನ್ ಒಂದೇಸಮನೆ ಬಿದ್ದಮೇಲೆ ಬಾಯಿ ತೆಗೆದಳು: ‘ನೀರಿಗೆ ಹೋಗೂವಾಗ ಬಿಂದಿಗೇಲಿ ಹಾಕ್ಕಂಡು ಹೋಗ್ತಿದ್ದೆ.’ +ಕಲ್ಲೇಶಿ ಹಗ್ಗವನ್ನು ಎಸೆದ. ಅಡಿಗೆ ಮನೆಗೆ ಹೋಗಿ ಒಂದು ಸೌದೆ ಹೊಳಕೆ ತಂದ, ಅದನ್ನು ಕಂಡು ಅವಲು ಭಯದಿಂದ, ‘ಅಯ್ಯಯ್ಯಪ್ಪಾ ನನ್ನ ಸಾಯಿಸ್ತಾನಲ್ಲಪ್ಪಾ, ನಾನ್ ಸತ್ಹೋದೆ’ ಎಂದು ಕಿರುಚಿಕೊಂಡಳು. ಅವರ ಮನೆಯ ಆಚೆಯ ತಿರುವಿನಲ್ಲಿ ಸೇರಿದ್ದ ಜನರ ಗುಂಪು ಶಬ್ದ ಮಾಡದೆ ಬಂದು ಮನೆಯ ಮುಂದೆ ಸೇರಿತು. ಫಟ್ ಫಟ್ ಎಂಬ ಹೊಳಕೆಯ ಬಡಿತ, ಅವಳ ಚೀತ್ಕಾರ, ಶಾಪಗಳು, ಮತ್ತು ಮಧ್ಯ ಮಧ್ಯದಲ್ಲಿ ಕಲ್ಲೇಶ ಅನ್ನುತ್ತಿದ್ದ ಮಾದರ್‌ಚೋತ್ ಬಾನ್‌ಚೋತ್ಗಳು, ಹೊರಗಿದ್ದ ಎಲ್ಲರ ಕಿವಿಯಮೇಲೂ ಬಡಿಯುತ್ತಿದ್ದವು. ಬಾಗಿಲು ಬಡಿದು ಒಳಗೆ ನುಗ್ಗಿ ಬಿಡಿಸಿಕೊಳ್ಳಬೇಕೆಂದು ದೂರದ ಮನೆಗಳ ಒಬ್ಬಿಬ್ಬರು ಮುಂದೆ ನುಗ್ಗಿದರು. ಇದು ವಿಶೇಷವೇನೂ ಇಲ್ಲದ ಸಾಮಾನ್ಯ ಸಂಗತಿ ಎಂಬುದನ್ನು ಬಲ್ಲ ಹತ್ತಿರದ ಮನೆಗಳವರು, ಕೈಸನ್ನೆ ಮಾಡಿ ತಡೆದು ನಿಲ್ಲಿಸಿದರು. +ಸೌದೆಯ ಹೊಳಕೆ ಮುರಿಯಿತೋ ಅಥವಾ ಅವನಿಗೇ ಸಾಕೆನಿಸಿತೋ, ಕಲ್ಲೇಶ ಹೊಡೆಯುವುದನ್ನು ನಿಲ್ಲಿಸಿದ. ಅಳುವುದಕ್ಕೂ ಶಕ್ತಿ ಸಾಲದೆ ಬಿದ್ದುಕೊಂಡಿದ್ದ ಅವಳ ಬೆನ್ನು ಭುಜ ತೋಳುಗಳಿಂದ ರಕ್ತ ಬರುತ್ತಿತ್ತು. ಅವಳ ಕಿವಿಗೆ ಕೈಹಾಕಿ, ತಾನು ಹೋದ ವರ್ಷ ಮಾಡಿಸಿ ತಂದಿದ್ದ ಎರಡು ಬೆಂಡೋಲೆಗಳನ್ನೂ ಬಿಚ್ಚಿ ಅಟ್ಟ ಹತ್ತಿ ತನ್ನ ಪೆಟ್ಟಿಗೆಯಲ್ಲಿಟ್ಟು, ಬೀಗದ ಕೈಯನ್ನು ಉಡಿದಾರಕ್ಕೆ ಕಟ್ಟಿಕೊಂಡು ಅವನು ಬೀದಿಯ ಬಾಗಿಲು ತೆರೆದು ಹೊರಗೆ ಬಂದ. ಮನೆಯ ಮುಂದಕ್ಕೇ ಬಂದು ನಿಂತಿದ್ದ ಗುಂಪನ್ನು ಕಂಡು ರೇಗಿ-‘ಒಳಗೇನು ಕರಡಿ ಕುಣೀತಿತ್ತೇನ್ರುಲಾ ಇಲ್ಲಿ ನಿಂತ್ಕಳಾಕೆ?’ ಎಂದು ಅವನು ಕೇಳಿದ ರೀತಿಗೇ ಹೆದರಿ ಎಲ್ಲರೂ ಚದುರಿ ಹೊರಟುಹೋದರು. +ಗಟ್ಟಿಯಾಗಿ ಅತ್ತು ಎರಡು ಗಂಟೆಯ ಕಾಲ ಬಿಕ್ಕಳಿಸಿ ಮುಸಿಗುಟ್ಟಿ, ಗಂಡನ ಕೈ ಸೇದಿ ಕಾಲು ಮುರಿದು ಅವನನ್ನು ಜೈಲಿನಲ್ಲಿ ನೇಣುಗಟ್ಟಲೆಂದು ಶಪಿಸಿದ ಮೇಲೆ ಕಮಲುವಿನ ಬುದ್ಧಿ ಬೆಳಿಗ್ಗೆಯಿಂದ ನಡೆದುದನ್ನೆಲ್ಲ ತಿರುವುಹಾಕಲು ಶುರುಮಾಡಿತು. ಆ ಕಳ್ಳಮುಂಡೆ ನನ್ನ ಬೆಂಡೋಲೆ, ಹದಿನೈದು ರೂಪಾಯಿ ನುಂಗಿಕೊಂಡಿದ್ದರೂ ಹೋಗಲಿ. ನಾನು ಅವಳ ಮನೆ ಹಂಡೆ ಹೊತ್ಕಂಡು ಬರಬಾರದಾಗಿತ್ತು. ಅದನ್ನ ತಂದುದ್ರಿಂದಲೇ ಹೋದ ವರ್ಷ ಆದುದ್ದೆಲ್ಲ ಗೊತ್ತಾದ್ದು. ಈ ಪಾಪರ್‌ಮುಂಡೇಮಗ ನನ್ನ ಸಾಯೂಹಾಗೆ ಹೊಡೆದದ್ದು-ಎಂಬ ಅರಿವಾಯಿತು. ಆದರೆ ಅವನು ಹೊಡೆದದ್ದಕ್ಕೆ ಬುದ್ಧಿ ಕಲಿಸಬೇಕು. ಸುಮ್ಮನಾದರೆ ಇನ್ನೊಂದು ದಿನ ಇನ್ನೂ ಜಾಸ್ತಿ ಹೊಡೀತಾನೆ ಯಮಮುಂಡೇಮಗ-ಎಂದೂ ನಿಶ್ಚಯಿಸಿದಳು. +– ೩ – +ಆ ದಿನವೆಲ್ಲಾ ಮರುವನಹಳ್ಳಿಯ ದೇವಿಯ ಮನೆಯಲ್ಲಿದ್ದು ಮರುದಿನ ಬೆಳಿಗ್ಗೆ ಎದ್ದು ಕಲ್ಲೇಶ ಊರಿಗೆ ಹೊರಟ. ತೋಟದ ಕತ್ತಾಳೆಯ ಓಣಿಯಲ್ಲಿ ಬರುತ್ತಿರುವಾಗ ರೊಂಯ್ ಎಂದು ನಾಲ್ಕಾರು ಕಲ್ಲುಗಳು ಬಂದು ಅವನನ್ನು ಹೊಡೆದವು. ಯಾರೆಂದು ಕತ್ತೆತ್ತಿ ನೋಡುತ್ತಿರುವಾಗ ಹಿಂಭಾಗದಿಂದ ಇನ್ನೊಂದು ಕಲ್ಲು ಬಂತು. ‘ಯಾವನ್ರುಲೇ ಅದು ನಿಮ್ಮವ್ವನಾ’-ಎಂದು ಅವನು ಒಂದು ಸಲ ಕೂಗಿದ. ಕಲ್ಲುಗಳು ಬರುವುದು ನಿಂತುಹೋಯಿತು. ತಾನೇ ಮೇಲೆ ಬಿದ್ದು ಆ ಕಡೆ ನುಗ್ಗಲು ಭಯ ತುಂಬ ಜನರಿದ್ದು ಒಟ್ಟಿಗೆ ಮೇಲೆ ಬಿದ್ದರೆ, ಎಂಬ ಅಂಜಿಕೆ. ಸುಮ್ಮನೆ ಹೋದರೆ ಯಾರು, ಯಾಕೆ ಹೀಗೆ ಮಾಡಿದರು, ಎಂಬುದು ತಿಳಿಯುವುದಿಲ್ಲ. ಹೇಗೂ ಬೆಳಗಿನ ಹೊತ್ತು ಎಂದು ಧೈರ್ಯ ಮಾಡಿ ಕತ್ತಾಳೆಯ ಸಂದಿನಲ್ಲಿ ನುಸಿದು ನೋಡಿದ. ಬೇಲಿಯ ಮರೆಯಲ್ಲಿ ಅಡಗಿ ಕೂತಿದ್ದವರ ಮುಖ ಕಂಡಿತು. ತಮ್ಮನ್ನು ಅವನು ಗುರುತಿಸಿದನೆಂದು ತಿಳಿದ ಅವರೇ ಸಂದಿನಲ್ಲಿ ನುಸಿದು ಓಡಿಬಿಟ್ಟರು. +ಅವರೆಲ್ಲ ಶ್ಯಾಮಣ್ಣನ ಕುಳಗಳು, ಗ್ರಾಮದ ತೋಟಿ ತಳವಾರರು. ಸುಮ್‌ಸುಮ್ಮನೆ ಬಂದು ತನಗೆ ಕಲ್ಲು ಹೊಡೆಯಲು ಅವರಿಗೂ ತನಗೂ ಯಾವ ದ್ವೇಷವೂ ಇಲ್ಲ. ಇದು ಶ್ಯಾಮಣ್ಣನ ಕಿತಾಪತಿಯೇ ಸರಿ ಎಂದು ಅವನು ಅರ್ಥಮಾಡಿಕೊಂಡ. ಈ ಶ್ಯಾನುಭೋಗನ ಬುದ್ಧಿಯೇ ಹಾಗೆ. ತಾನೇ ಮುಂದೆ ನುಗ್ಗಿ ಏನು ಮಾಡುವುದಕ್ಕೂ ಧೈರ್ಯವಿಲ್ಲ. ಹಿಂದೆಯೇ ಮಾಡಿಸುತ್ತಾನೆ. ಅಪ್ಪ ಇದ್ದಾಗ ಒಂದು ದಿನ ನಮ್ಮ ಮನೆ ಮೇಲೆ ಹೀಗೆಯೇ ಕಲ್ಲು ಬೀರಿಸಿದ್ದ. ಅದರಿಂದಲೇ ಅಲ್ಲವೆ ಅಪ್ಪ ಹಾಡುಹಗಲು ಹೋಗಿ ಅವನ ಮನೆ ಹೆಂಚು ಬಡಿದದ್ದು? ಆದರೆ ಅಪ್ಪನಂತೆ ಮಾಡುವ ಎದೆಗಾರಿಕೆ ತನಗಿಲ್ಲವೆಂಬುದು ಕಲ್ಲೇಶನಿಗೂ ಗೊತ್ತು. ಈ ಶ್ಯಾಮಣ್ಣ ಯಾಕೆ ಹೀಗೆ ಮಾಡಿಸಿದ? ನೆನ್ನೆ ಇವಳು ಹಂಡೆ ಹೊತ್ತುಕೊಂಡು ಬಂದದ್ದಕ್ಕಿರಲಾರದು. ಅದನ್ನ ನಾನೇ ವಾಪಸ್ಸು ಕೊಟ್ಟಿದೀನಿ. ಸೊಸೆಗೆ ಆದದ್ದು ಅವನಿಗೆ ಅರ್ಥವಾಗಿದೆ. ಬಾಯಿಬಿಟ್ಟು ಜಗಳ ಆಡುಕ್ಕೆ ಹೊರಟರೆ ಅವನ ಮನೆಗೇ ಅವಮಾನ. ಅದಕ್ಕೆ ಹೀಗೆ ತೀರುಸ್ಕಳುಕ್ಕೆ ಹೊರಟಿದಾನೆ ಸೂಳೆಮಗ. ಇವನ ಹತ್ರ ಜರೂರತ್ತಿಗೆ ಹೋಗಬಾರ್ದು; ತಂತ್ರಾನೇ ಮಾಡಬೇಕು. ಆ ಪುಟ್ಟಗೌರಿ ತಂಟೆಗೆ ಹೋಗದೇ ಇದ್ರೂ ಆಗ್ತಿತ್ತು. ಅವಳ್ಯಾವ ಸುಂದರಿ ಅಂತ. ಆದ್ರೂ ತುಂಬ ದಿನದಿಂದ ಮನಸ್ನಲ್ಲಿ ಹುಟ್ಟಿತ್ತು. ತೀರಿತು-ಎಂದು ಯೋಚಿಸುತ್ತಾ ಮನೆಗೆ ಬರುವ ಹೊತ್ತಿಗೆ ಇನ್ನೊಂದು ಸಂದರ್ಭ ಕಾದಿತ್ತು. ಅಕ್ಕಮ್ಮ ಹೇಳಿದಳು: “ನೀನು ನೆನ್ನೆ ಎಲ್ಲ ಎಲ್ಲಿಗೆ ಹೋದೆಯೋ? ಅವ್ಳು, ‘ಬಾವಿಗೆ ಬಿದ್ಬಿಡ್ತೀನಿ. ನಿನ್ನೂ ನಿನ್ನ ಮೊಮ್ಮಗನ್ನೂ ಸೇರಿಸಿ ನೇಣುಗಟ್ಟುಸ್ತೀನಿ’ ಅಂತ ನಿನ್ನೆ ಎಲ್ಲ ಹೆದರಿಸಿದ್ಲು. ನಾನು ರಾತ್ರಿ ಎಲ್ಲ ಕಣ್ಣು ಮುಚ್ಚಿಲ್ಲ. ವಾರದ ಹೊನ್ನನ್ನ ಕರದು ಮನೇಲೇ ಇಟ್ಕಂಡಿದ್ದೆ.” +ಕಮಲು ಇನ್ನೂ ಕೋಪಗೃಹದಲ್ಲೇ ಇದ್ದಳು. ‘ಏನೇ ಬೋಸುಡಿ?’-ಎಂದು ಕೇಳಿದುದಕ್ಕೆ, ‘ನಿನ್ನ ಓಲುಗಟ್ಟಿಸಿಯೇ ಕಟ್ಟುಸ್ತೀನಿ’ ಎಂದು ರಾಂಗಾಗಿ ಜವಾಬು ಕೊಟ್ಟಳು. ಒಂದು ಸೌದೆ ಹೊಳಕೆ ಕೈಗೆ ತೆಗೆದುಕೊಳ್ಳಬೇಕೆಂದು ಅವನ ಮನಸ್ಸು ತಕ್ಷಣ ಯೋಚಿಸಿತಾದರೂ, ನೆನ್ನೆ ಅದರಲ್ಲೇ ಅಷ್ಟು ಹೊಡೆದರೂ ಅವಳು ಬಗ್ಗದಿರುವುದನ್ನು ನೆನೆಸಿಕೊಂಡ ಅದು ಆ ಯೋಚನೆಯನ್ನು ಕೈಬಿಟ್ಟಿತು. ಹಿಂದೆ ಒಂದು ಸಲ ಅವಳು ಬಾವಿಗೆ ಬಿದ್ದಿದ್ದ ನೆನಪೂ ಆಯಿತು. ತಕ್ಷಣ ಒಂದು ಉಪಾಯ ಹೊಳೆದು ಅವನು ಕೇಳಿದ: ‘ಬಾವಿಗೆ ಬೀಳ್ತೀ ಏನೇ?’ +‘ಹೂಂ ಕಣೋ.’ +‘ಬಾ ಹಾಗಾದ್ರೆ’-ಎಂದು ಅವಳ ರೆಟ್ಟೆ ಹಿಡಿದು ದರದರನೆ ಹಿತ್ತಿಲ ಬಾವಿಯ ಹತ್ತಿರಕ್ಕೆ ಎಳೆದುಕೊಂಡು ಹೋದ. ‘ಏನಾರ ಹೆಚ್ಚುಕಮ್ಮಿಯಾಗಿ ನಮ್ ಮ್ಯಾಲೆ ಬಂದೀತು ಕಣೋ’-ಎಂದು ಅಡ್ಡಬಂದ ಅಕ್ಕಮ್ಮನನ್ನು ದೂರ ನೂಕಿ, ಬಾವಿಯ ಹತ್ತಿರವೇ ಇದ್ದ ಹೊಸ ಹಗ್ಗದ ಜೀರುಗುಣಿಕೆಯನ್ನು ಅಗಲ ಮಾಡಿ ಅವಳ ಕಂಕುಳಿಗೆ ಹಾಕಿ ಬಿಗಿಮಾಡಿದ. ಅವಳು ಬಡಬಡಿಸುತ್ತಿರುವಾಗಲೇ ತನ್ನ ಎರಡು ಕಾಲುಗಳನ್ನೂ ಬಾವಿಯ ಕಟ್ಟೆಗೆ ಒದೆ ಕೊಟ್ಟು, ಹೊಸದಾಗಿ ಹಾಕಿದ್ದ ರಾಟೆಯಿಂದ ಅವಳನ್ನು ನಿಧಾನವಾಗಿ ಒಳಕ್ಕೆ ಬಿಟ್ಟು, ಅಯ್ಯಯ್ಯಪ್ಪೋ ಎಂದು ಅವಳು ಅಳುತ್ತಿರುವಾಗಲೇ ಹಗ್ಗವನ್ನು ಕೆಳಗೆ ಬಿಡುತ್ತಿದ್ದ. ಕೆಳಗೆ ನೀರು ಹತ್ತಿರ ಬಂದು ಅವಳ ಕಾಲು, ಮೊಣಕಾಲು, ತೊಡೆ ಸೊಂಟಗಳ ಭಾಗವು ನಿಧಾನವಾಗಿ ನೀರೊಳಗೆ ಇಳಿದವು. ‘ಅಯ್ಯಯ್ಯೋ’-ಎಂದು ಹೊಡೆದುಕೊಳ್ಳುತ್ತಿರುವಾಗಲೇ ಮೇಲಿನಿಂದ ಹಗ್ಗವನ್ನು ಸಡಿಲಬಿಟ್ಟು ಪೂರ್ತಿಯಾಗಿ ತಲೆಯನ್ನು ಒಂದು ಸಲ ಮುಳುಗಿಸಿ ಮತ್ತೆ ಕಂಕುಳಿನ ತನಕ ಮೇಲೆ ಎತ್ತಿದ. ಒಳಗಿದ್ದ ಅವಳು ಬೆವೆತು ನಡುಗುತ್ತಿದ್ದಳು. +‘ಬಾವಿಗೆ ಬೀಳ್ತೀ ಏನೇ?’-ಮೇಲಿನಿಂದ ಇವನು ಕೂಗಿ ಕೇಳಿದ. +‘ಇಲ್ಲಾ”” ಇಲ್ಲಾ”””.’ +‘ನೀನು ತಾನು ಅಂತ ಮಾತಾಡ್ತೀ ಏನೇ?’ +‘ಇಲ್ಲ, ಇಲ್ಲ, ನಿಮ್ಮ ದಮ್ಮಯ್ಯ ಅಂತೀನಿ. ಮೇಲುಕ್ಕೆ ಎಳ್ಕಳಿ.’ +ಕಟ್ಟೆಗೆ ಎರಡು ಕಾಲನ್ನೂ ಒದೆಕೊಟ್ಟು ಇವನು ಗಟ್ಟಿಯಾಗಿ ಎಳೆಯಲು ಹೋಗುತ್ತಾನೆ: ತನ್ನೊಬ್ಬನ ಕೈಲಿ ಸಾಧ್ಯವಾಗುವ ತೂಕವಲ್ಲ ಅದು ಎನಿಸಿತು. ಯಾರಾದರೂ ಇನ್ನೊಬ್ಬ ಗಂಡಸನ್ನು ಕರೆಯಬೇಕು. ಆದರೆ ಹೊರಗಿನವರನ್ನು ಕರೆದರೆ ಏನಾದರೂ ಗಲಾಟೆಯಾಗಬಹುದು. ಅಷ್ಟರಲ್ಲಿ ಯಾರೋ ಬೀದಿಯ ಬಾಗಿಲನ್ನು ತಟ್ಟಿದಂತೆ ಆಯಿತು. ‘ತಡಿ, ಬಾಗ್ಲು ತೆಗೀಬ್ಯಾಡ’-ಎಂದು ಅವನು ಅಕ್ಕಮ್ಮನಿಗೆ ಹೇಳುತ್ತಿರುವಷ್ಟರಲ್ಲಿ ಬಾಗಿಲು ತಟ್ಟಿದವರು, ‘ಅಕ್ಕಮ್ಮಾ, ಕಲ್ಲೇಶಾ, ಬಾಗಿಲು’ಎಂದರು. ಅದು ತನ್ನ ಮಗ ಕಂಠಿಯ ಧ್ವನಿ ಎಂಬುದನ್ನು ಅಕ್ಕಮ್ಮ ಗುರುತು ಹಿಡಿದಳು. ಎದ್ದು ಹೋಗಿ ಬಾಗಿಲನ್ನು ತೆಗೆದು, ಅವರು ಒಳಗೆ ಬಂದ ಮೆಲೆ ಒಳಗಿನಿಂದ ಮತ್ತೆ ಹಾಕಿಕೊಂಡಳು. ತಮ್ಮ ಎಡಭುಜದ ಹಿಂದೆ, ಮುಂದೆ, ಎರಡು ಕಡೆಯೂ ಭಾರವಾಗಿ ತುಂಬಿ ತೂಗುತ್ತಿದ್ದ ಒಂದು ಹಸುಬೆ ಚೀಲ ಮತ್ತು ಕೈಯಲ್ಲಿದ್ದ ಇನ್ನೊಂದು ಚೀಲವನ್ನು ಕೆಳಗೆ ಇಟ್ಟ ಮಗನ ಕ್ಷೇಮಸಮಾಚಾರ ಕೇಳುವ ಮೊದಲೇ ಅಕ್ಕಮ್ಮ, ‘ಸ್ವಲ್ಪ ಅಲ್ಲಿಗೆ ಬಾ. ಏನೂ ಮಾತಾಡಬ್ಯಾಡ’ ಎಂದಳು. ತಂದೆ ಮಗ ಸೇರಿ ಸೊಸೆಯನ್ನು ಮೇಲೆ ಎಳೆದು ಹಾಕಿದರು. ಒದ್ದೆ ಸೀರೆಯಲ್ಲಿಯೇ ಕೋಣೆ ಸೇರಿದ ಅವಳು ಮತ್ತೆ ಮಾತನಾಡಲಿಲ್ಲ. ಸದ್ದು ಗದ್ದಲ ಮಾಡಲಿಲ್ಲ. +ಉಭಯ ಕುಶಲೋಪರಿಗಳಾದವು. ಜೋಯಿಸರು ಈಗ ಸನ್ಯಾಸಿಯಂತೆ ಗಡ್ಡ ಬಿಟ್ಟಿದ್ದರು. ತಾವು ಇಷ್ಟು ದಿನ ಕಾಶಿಯಲ್ಲಿದ್ದುದಾಗಿ ಹೇಳಿದರು. ಯಾಕೆ ಹೋಗಿದ್ದೆ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಈ ಕಡೆ ಬಂದವರು ಶ್ಯಾಮಣ್ಣ ಬದುಕಿದ್ದಾನೆಯೋ ಇಲ್ಲವೋ ಎಂಬ ಬಗೆಗೆ ಹತ್ತಿರದ ಒಂದೆರಡು ಹಳ್ಳಿಗಳಲ್ಲಿ ವಿಚಾರಿಸಿಕೊಂಡೇ ಗ್ರಾಮ ಪ್ರವೇಶ ಮಾಡಿದ್ದರು. +‘ಇದೇನು ಹೀಗೆ ಗಡ್ಡ ಬಿಟ್ಟಿದ್ದೀಯಾ, ಸನ್ಯಾಸ ತಗಂಡೆ ಏನು?-ತಾಯಿ ಕೇಳಿದಳು. +‘ಏನೂ ಇಲ್ಲ. ಲೋ ಕಲ್ಲೇಶ, ಹಜಾಮ್ರೋನ್ನ ಕರ್‍ಸು.’ +ಹಜಾಮ ಬಂದ. ಮೊದಲಿನಂತೆಯೇ ಕಂಠೀಜೋಯಿಸರು ತಲೆಯ ಮೇಲೆ ಗಂಟು ಹಾಕುವಂತೆ ಜುಟ್ಟು ಬಿಟ್ಟು ನೆತ್ತಿ ಗಡ್ಡಗಳನ್ನು ಬೋಳಿಸಿಕೊಂಡರು. ಕಳೆದ ಹನ್ನೆರಡು ವರ್ಷದಲ್ಲಿ ಅವರು ಸ್ವಲ್ಪವೂ ಕಂದಿಲ್ಲ. ನಲುಗಿಲ್ಲ; ಬಡವಾದಂತೆಯೂ ಇಲ್ಲ ಮೈ ಕೈ ತುಂಬಿಕೊಂಡು ಸುಖವಾಗಿದ್ದಾನೆ. ಸ್ನಾನ ಮುಗಿದ ಮೇಲೆ ಕುಳಿತು ಸಂಧ್ಯಾವಂದನೆ ಮುಗಿಸಿ ಜಪ ಮಾಡಿದರು. ಜಪ ಈಗ ಅವರು ಹೊಸದಾಗಿ ಕಾಶಿಯಲ್ಲಿ ಕಲಿತಿದ್ದಿರಬಹುದು. ಅಡಿಗೆಯಾಗಿ ಊಟಕ್ಕೆ ಬಡಿಸುವಾಗ ಅಕ್ಕಮ್ಮ ಕೇಳಿದಳು: ‘ಕಂಟೀ, ನೀನು ಹೋಗಿ ಹನ್ನೆರಡು ವರ್ಷ ಕಳೆದಿತ್ತಲ್ಲ, ಮುಖ ತೊರೆದು ಹೋಗಿತ್ತು. ಯಾವುದಾದರೂ ದೇವಸ್ಥಾನದಲ್ಲಿ ಮೊದಲು ಮುಖದರ್ಶನ ಆಗಬೇಕಾಗಿತ್ತು.’ +‘ಕಾಶಿ ಗಂಗೆ ತಂದಿದೀನಿ. ಅದು ಜೊತೇಲಿರುವಾಗ ಅದೆಲ್ಲ ಏನೂ ಬ್ಯಾಡ ನೋಡು, ಗಂಗಾ ಸಮಾರಾಧನೆ ಮಾಡಬೇಕು.’ +‘ಈ ಕಾಲದಲ್ಲಿ ಸಮಾರಾಧನೆ ಅಂದ್ರೆ ಎಷ್ಟು ಕಷ್ಟ. ಹೋದ ವರ್ಷವೆಲ್ಲ ಮಳೆ ಇಲ್ದೆ ಮನೇಲಿ ಏನೂ ಇಲ್ಲ’-ಕಲ್ಲೇಶ ಎಂದ. +‘ನಾನು ದುಡ್ಡು ತಂದಿದೀನಿ. ಮಹಾ ಅದೆಷ್ಟು ಖರ್ಚಾಗುತ್ತೆ?’ +ಕಂಠೀಜೋಯಿಸರು ಹಿಂತಿರುಗಿ ಬಂದದ್ದನ್ನು ತಿಳಿದಮೇಲೆ ಊರಿನ ಎಷ್ಟೋ ಜನ ಬಂದು ನೋಡಿ ಮಾತನಾಡಿಸಿಕೊಂಡು ಹೋದರು. ಹನ್ನೆರಡು ವರ್ಷ ಕಾಶಿಯಲ್ಲಿದ್ದು ಬಂದ ಅವರು ಈಗ ಮೊದಲಿಗಿಂತ ಮಹಾ ಪಂಡಿತರಾಗಿದ್ದಾರೆ. ಕಾಶೀಯಾತ್ರೆ ಮಾಡಬೇಕೆಂಬ ಹಂಬಲವಿದ್ದು ಕೈಗೂಡದಿದ್ದ ಕೆಲವರು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಅಂಥವರಿಗೆಲ್ಲ ಜೋಯಿಸರು ಒಂದೊಂದು ಕಾಲಭೈರವ ದಾರದ ಎಳೆ ಕೊಟ್ಟರು. ಎಂಟು ದಿನದಲ್ಲಿ ಅದ್ದೂರಿಯಾಗಿ ಗಂಗಾ ಸಮಾರಾಧನೆ ಆಯಿತು. ಎಲ್ಲರೂ ಬಂದರೂ ಸಮಾರಾಧನೆಗೆ ಶ್ಯಾಮಣ್ಣನಾಗಲಿ ಅವರ ಮನೆಯವರಾಗಲಿ ಬರಲಿಲ್ಲ. +ಅಷ್ಟರಲ್ಲಿ ಜೋಯಿಸರು ಊರಿನಲ್ಲೆಲ್ಲ ಸುತ್ತಿ ತಮ್ಮ ಹಳೆಯ ಸ್ನೇಹಿತರನ್ನೆಲ್ಲ ಕಂಡು ಊರಿನ ಸಂಗತಿಗಳನ್ನು ತಿಳಿದುಕೊಂಡಿದ್ದರು. ಗಂಗಾ ಸಮಾರಾಧನೆಯಾದ ರಾತ್ರಿ ಬೆಳದಿಂಗಳಿನಲ್ಲಿ ಹಿತ್ತಿಲ ಬಾವಿಯ ಹತ್ತಿರ ಕೂತುಕೊಂಡು ಅವರು ಮಗನನ್ನು ಕೇಳಿದರು: ‘ಕಲ್ಲೇಶ, ನೀನು ಹೊಡೆದೆ ಅನ್ನೋ ಸಿಟ್ಟಿಗೆ ಅವ್ಳು ಬೆಂಡೋಲೇನ ಕದ್ದು ಅಪ್ಪನ ಮನೆಗೆ ಸಾಗಿಸಿ ತಂಗಿಗೆ ಕೊಡಬೇಕು ಅಂತ ಮಾಡಿದ್ಲಂತೆ. ಇದಕ್ಕೆ ಆ ಶ್ಯಾಮಣ್ಣನ ಸೊಸೆ ಶರೀಕಾಗಿದ್ಲಂತೆ. ನಿಜವೆ?’ +‘ಹುಂ.’ +‘ಅವ್ಳುನ್ನ ನೀನು ಅವಮಾನ ಮಾಡಿದೆಯಂತೆ.’ +‘ನಮ್ಮನೆಗೆ ಬರಬ್ಯಾಡ ಅಂದೆ.’ +‘ನೋಡು, ನಾನು ಕಾಶಿಗೆ ಹೋಗಿ ಬಂದಿರೋನು; ಹುಟ್ಟಿಸಿದ ಅಪ್ಪ. ನನ್ನ ಕೈಲಿ ನಿಜ ಹೇಳು. ಬರೀ ನಮ್ಮನೆಗೆ ಬರಬ್ಯಾಡ ಅಂದೆಯೋ ಅಥವಾ ಇನ್ನೇನಾರೂ ಆಯ್ತೋ?’ +‘ನಿನಗೆ ಯಾರು ಏನು ಹೇಳಿದ್ರು?’ +‘ಊರಲ್ಲೆಲ್ಲಾ ಬೇರೆ ಥರಾ ಮಾತಾಡ್ಕತ್ತಾರೆ. ನಿಜವಿಷಯ ಬಾಯಿಬಿಟ್ಟು ಮಾತಾಡುಕ್ಕೆ ಶಾಮಣ್ಣನಿಗೆ ಅವಮಾನವಂತೆ.’ +‘ಹುಂ’-ಕಲ್ಲೇಶ ಕತ್ತು ಬಗ್ಗಿಸಿ ಹೇಳಿದ: ‘ಇವ್ಳ ಬುದ್ಧಿ ಕೆಡಿಸುಕ್ಕೆ ಅಂತಲೇ ಆ ಶಾಮಣ್ಣ ಸೊಸೇನ ಕಳುಸ್ತಾ ಇದ್ದ. ಅಂಥೋರಿಗೆ ಇನ್ನೇನು ಮಾಡ್ಬೇಕು?’ +‘ನೋಡು, ಗಂಡಸು ಬೇಕಾದ ಪರಾಕ್ರಮ ಮಾಡಿ ಜಯಿಸ್ಕಾಭೌದು. ಅದೊಂದರಲ್ಲಿ ಬಿಗಿಯಾಗಿರಬೇಕು. ಅದು ಸಡ್ಳವಾಯ್ತು, ಅವ್ನು ಏನ್ನೂ ಜಯಿಸ್ಕಳುಕ್ ಆಗುಲ್ಲ. ನೀನು ಮಾಡಿದ್ದು ತಪ್ಪು ಕೆಲ್ಸ.’ +ಕಲ್ಲೇಶನಿಗೆ ನಾಚಿಕೆಯಾಯಿತು. ಆದರೆ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳಲು ಹೇಳಿದ: ‘ನೀನು ಊರಿಗೆ ಬಂದ ದಿನ ನಾನು ಮರುವನಹಳ್ಳಿಯಿಂದ ಬರ್ತಾ ಇದ್ದೆ. ಶ್ಯಾಮಣ್ಣ ಆಳುಗಳ ಕಳ್ಸಿ ನನ್ನ ಮೇಲೆ ಕಲ್ಲು ಬೀರುಸ್ದ. ಅವ್ನು ಅಂತಾ ಕೆಲ್ಸ ಮಾಡ್‌ಭೌದೊ?’ +‘ಎಲಾ ಸೂಳೆ ಮಗುನ್ನ ತಂದು. ನಮ್ಮನೆ ಮ್ಯಾಲೆ ಕಲ್ಲು ಬೀರಿಸಿದ್ದಕ್ಕೆ ಅವ್ನಿಗೆ ಹೀಗೆಲ್ಲ ಆಯ್ತು. ಕಂಠಿ ಸತ್ಹೋಗಿಬಿಟ್ಟ ಅಂತ ತಿಳ್ಕಂಡ್ನೇನು ಅವ್ನು? ನಾನು ನೋಡ್ಕತ್ತೀನಿ ಬಿಡು’-ಎಂದು ಅವರು ತೀರ್ಮಾನಿಸಿಕೊಂಡರು. ಅದೇನೆಂಬುದನ್ನು ಬಾಯಿಬಿಟ್ಟು ಹೇಳಲಿಲ್ಲ. +ಇದಾದ ಎರಡು ದಿನಕ್ಕೆ ಶುಕ್ರವಾರ. ಎಂದರೆ ನಾಗಲಾಪುರದ ಸಂತೆ. ಸುತ್ತಿನ ಊರಿನವರೆಲ್ಲ ಸೇರುವ ಸಂತೆಗೆ ಹೋಗದೆ ಇರುವವರೇ ಇಲ್ಲ. ಮಧ್ಯಾಹ್ನದ ಮೂರು ಗಂಟೆಯ ಹೊತ್ತಿನಲ್ಲಿ ಶ್ಯಾನುಭೋಗ ಶ್ಯಾಮಣ್ಣನವರು ತಮ್ಮ ಮನೆಯಿಂದ ಹೊರಟು ಸಂತೆಯ ಕಡೆಗೆ ಹೋಗುತ್ತಿದ್ದಾರೆ. ಬಿಳಿಯ ಕಚ್ಚೆ ಪಂಚೆ, ಮೈಮೇಲೆ ಅಂಗಿ, ಒಂದು ಉತ್ತರೀಯ. ಹಣೆಗೆ ಕರಿಯ ಸಾದು ಇಟ್ಟು ಶ್ಯಾನುಭೋಗಿಕೆಯ ದರ್ಪದಿಂದ ನಡೆಯುತ್ತಿದ್ದರು. ಅದೆಲ್ಲಿ ಕಾದು ಕುಳಿತಿದ್ದರೋ, ಕಂಠೀಜೋಯಿಸರು ಬಂದು ಅವರ ಮುಂದೆ ಪ್ರತ್ಯಕ್ಷರಾದರು. ಕಚ್ಚೆ ಪಂಚೆ, ಕಾಷಾಯ ಬಣ್ಣದ ಅಂಗಿ ಧರಿಸಿ ಹಣೆಗೆ ತ್ರಿಪುಂಡ್ರವಿಟ್ಟು ಕೊರಳಿಗೆ ಮಾಲೆ ಹಾಕಿದ್ದ ಅವರ ಕೈಲಿ ಒಂದು ದಪ್ಪ ಮಡಕೆಯಿತ್ತು. ಅದರಿಂದ ಬರುತ್ತಿದ್ದ ನಾತ, ಸುತ್ತ ಇದ್ದವರ ಮೂಗು ಮುಚ್ಚಿಸುವಂತಿತ್ತು. ‘ನನ್ನ ಮಗನ ಮೆಲೆ ಕಲ್ಲು ಹೊಡೆಸಿದೆ ಏನೋ ಹೆಣ್ಣಿಗ ಸೂಳೇಮಗನೆ’-ಎನ್ನುತ್ತಾ ಅವರು, ಕೈಲಿದ್ದ ಮಡಕೆಯನ್ನು ಎತ್ತಿ ಶ್ಯಾಮಣ್ಣನವರ ತಲೆಯಮೇಲೆ ಅಭಿಷೇಕ ಮಾಡಿದಂತೆ ತಪತಪನೆ ಸುರಿದುಬಿಟ್ಟರು. ವಾಸನೆ, ಬಣ್ಣಗಳಲ್ಲಿಯೇ ಸುತ್ತಮುತ್ತ ಇದ್ದವರಿಗೆಲ್ಲ ಗೊತ್ತಾಯಿತು: ಅದು ಮನುಷ್ಯರ ಅಮೇಧ್ಯ. ಅಷ್ಟೊಂದು ಪ್ರಮಾಣದ ಅದನ್ನು ಅವರು ಎಲ್ಲಿ, ಹೇಗೆ ಸಂಗ್ರಹಿಸಿದ್ದರೋ, ಅದೆಲ್ಲವನ್ನೂ ಹೇಗೆ ಒಂದೇ ಹದದಲ್ಲಿ ಕಲಸಿ ಇಟ್ಟು ತಂದರೋ, ಅವರು ಹನ್ನೆರಡು ವರ್ಷ ಪೂಜಿಸಿದ ಕಾಶಿ ವಿಶ್ವೇಶ್ವರನಿಗೇ ಗೊತ್ತು. ಎಲ್ಲವನ್ನೂ ಸುರಿದಮೇಲೆ ಶ್ಯಾಮಣ್ಣನವರ ಬಿಳಿಯ ಅಂಗಿಯ ಮೇಲೆ ಸುತ್ತಲೂ ಇಳಿದು ಮೆತ್ತಿಕೊಂಡಿತು. ಮಡಕೆಯನ್ನು ತಮ್ಮ ವೈರಿಯ ತಲೆಯ ಮೇಲೆ ದಬ್ಬ ಬಡಿದು ಕಂಠೀಜೋಯಿಸರು ಜನರ ಮಧ್ಯದಲ್ಲಿ ಮರೆಯಾಗಿ ಹೋದರು. +– ೪ – +ಮತ್ತೆ ಒಂದು ತಿಂಗಳು ಕಂಠೀಜೋಯಿಸರು ನಾಗಲಾಪುರದಲ್ಲಿ ಇರಲಿಲ್ಲ. ಯಾವ ಊರಿನಲ್ಲಿದ್ದರೋ ಯಾರಿಗೂ ಗೊತ್ತಿಲ್ಲ. ಕಲ್ಲೇಶ ಮೂರು ನಾಲ್ಕು ದಿನಕ್ಕೆ ಒಂದು ಸಲದಂತೆ ಯಾವುದೋ ಊರಿಗೆ ಹೋಗಿ ಬರುತ್ತಿದ್ದ. ಅಪ್ಪನನ್ನು ಕಂಡು ಇಲ್ಲಿಯ ವಿದ್ಯಮಾನಗಳನ್ನು ತಿಳಿಸುವುದಕ್ಕೇ ಅವನು ಹೋಗುತ್ತಿದ್ದಾನೆಂದು ಎಷ್ಟೋ ಜನ ಊಹಿಸಿದರು. ಅವನು ಹೋಗುತ್ತಿದ್ದುದು ರಾತ್ರಿಯ ವೇಳೆಯಾಗಿದ್ದುದರಿಂದ ಯಾರೂ ಅವನನ್ನು ಹಿಂಬಾಲಿಸುವ ಧೈರ್ಯ ಮಾಡಲಿಲ್ಲ. ಹಿಂತಿರುಗುವಾಗ ಹಗಲು ಹೊತ್ತೇ ಬರುತ್ತಿದ್ದ. ಅದನ್ನು ತಿಳಿದುಕೊಂಡು ಯಾರಿಗೆ ಏನಾಗಬೇಕು? ಕಳೆದ ಹನ್ನೆರಡು ವರ್ಷಗಳ ಅನುಪಸ್ಥಿತಿಯಲ್ಲಿ ಕಂಠೀಜೋಯಿಸರೆಂದರೆ ಒಬ್ಬ ಪುರಾಣಪುರುಷರೇ ಆಗಿಹೋಗಿದ್ದರು. ಈಗ ಊರಿಗೆ ಬಂದು ಗಂಗಾ ಸಮಾರಾಧನೆ ಮಾಡಿದ ಮೂರು ದಿನಕ್ಕೇ ಅವರು ಆ ಸುತ್ತಿನಲ್ಲಿ ಎಲ್ಲೂ ಯಾರೂ ಮಾಡದಿದ್ದ ಒಂದು ಸಾಹಸವನ್ನೇ ಮಾಡಿಬಿಟ್ಟಿದ್ದಾರೆ. ಶ್ಯಾಮಣ್ಣ ಆ ಕ್ಷಣವೇ ಮನೆಗೆ ಓಡಿಹೋಗಿ ಬಚ್ಚಲಿಗೆ ಇಳಿದು ಸೀಗೆಪುಡಿ ಹಾಕಿ ತೆಂಗಿನ ಗುಂಜಿನಿಂದ ತಿಕ್ಕಿ ತಲೆ ಮೈ ಕೈಯನ್ನು ತೊಳೆದುಕೊಂಡರು. ಅವರಿಗೆ ಆದದ್ದನ್ನು ವಾಸ್ತವವಾಗಿ ಕಂಡವರು ಹತ್ತಿಪ್ಪತ್ತು ಮಂದಿ ಮಾತ್ರ. ಮನೆಗೆ ಓಡಿಬರುವಾಗ ಅವರ ಗುರುತು ಸಿಕ್ಕಿದುದು ಎಲ್ಲೋ ಮೂರು ನಾಲ್ಕು ಜನಕ್ಕೆ. ಆದರೆ ಊರಿನವರೆಲ್ಲರೂ ತಾವೇ ಸ್ವತಃ ಕಣ್ಣುಗಳಿಂದ ನೋಡಿದೆವು ಎಂದು ಕಂಠೀಜೋಯಿಸರು ಸುರಿದದ್ದು, ಶ್ಯಾಮಣ್ಣನವರ ಬಾಯಿಗೆ ಸಹ ಅದು ಹೋದದ್ದು, ಮೈ ಕೈ ಮೇಲೆಲ್ಲಾ ಅಲಾಬಿ ಹಬ್ಬದ ಹುಲಿಯ ಬಣ್ಣದಂತೆ ಹರಿದದ್ದು ಮೊದಲಾಗಿ ರಂಗುರಂಗಾಗಿ ವರ್ಣಿಸುತ್ತಿದ್ದರು. +ಕಂಠೀಜೋಯಿಸನ ಮೇಲೆ ಕೇಸು ಹಾಕಲು ಸಾಧ್ಯವಿಲ್ಲವೆ?-ಎಂದು ಶ್ಯಾಮಣ್ಣನವರು ಯೋಚಿಸಿದರು. ಆದರೆ ಆ ಕೆಲಸ ನಡೆದಾಗ ಪ್ರತ್ಯಕ್ಷವಾಗಿ ಅಲ್ಲಿ ಇದ್ದು ಕಂಡವರ ಯಾರ ನೆನಪೂ ಅವರಿಗೆ ಸ್ಪಷ್ಟವಾಗಿ ಇಲ್ಲ. ‘ಅವನು ನಂಗೆ ಹೀಗೆ ಮಾಡಿದ’-ಅಂತ ತಾವೇ ಹೋಗಿ ಹೇಳಿಕೊಳ್ಳಲು ನಾಚಿಕೆ ಬೇರೆ. ಯಾರೂ ಅದನ್ನು ಅವರ ಎದುರಿಗಂತೂ ಮಾತನಾಡುತ್ತಿರಲಿಲ್ಲ. ತಾವಾಗಿಯೇ ಕೆದಕಿ ಇನ್ನೂ ಪ್ರಚುರ ಮಾಡುವುದು ವಿವೇಕವಲ್ಲವೆಂದು ಯೋಚಿಸಿದರು. ಅಲ್ಲದೆ ಹಿಂದೊಮ್ಮೆ ಈ ಕಂಠೀಜೋಯಿಸನ ಮೇಲೆ ಕೇಸು ಹೊತ್ತು ನರಸೀಪುರಕ್ಕೆ ತಿರುಗಿ, ಕೇಸು ಖುಲಾಸೆಯೂ ಆದಮೇಲೆ ಅವನ ಕೈಲಿ ಪೆಟ್ಟು ತಿಂದಿದ್ದುದೂ ನೆನಪಾಯಿತು. ‘ಆ ಮುಂಡೇಮಗ ಸತ್ತುಹೋಗಿದಾನೆ ಅಂತ ತಿಳ್ಕಂಡಿದ್ದೆ. ಅವನ ಮಗ ಕಲ್ಲೇಶನ ಹೆಂಡ್ತೀನೂ ದೂರವೇ ಇಟ್ಟಿದ್ರೆ ಏನೂ ಆಗ್ತಿರ್ಲಿಲ್ಲ. ಈ ಮುಪ್ಪಿನ ವಯಸ್ಸಿನಲ್ಲಿ ಇನ್ನೆಂಥ ತಾಪತ್ರಯಕ್ಕೆ ಸಿಕ್ಕಿಕೊಳ್ಲಿ?’-ಎಂದು ಯೋಚಿಸುವಾಗ ಅವರ ಮನಸ್ಸನ್ನು ಇನ್ನೂ ಒಂದು ಅಂಶವು ಕೊರೆಯುತ್ತಿತ್ತು: ಕಂಠೀಜೋಯಿಸನ ಮಗ ಕಲ್ಲೇಶ ಅಪ್ಪನ ಹಾಗೆ ಖದೀಮ. ಕಷ್ಟಕಾಲ ಅಂದ್ರೆ ತಂತ್ರಾನೂ ಮಾಡ್ತಾನೆ. ಧೈರ್ಯವೂ ಇದೆ. ನನ್ನ ಮಗ ನಂಜುಂಡ ರಣಹೇಡಿ ಮುಂಡೇದು. ಮೇಲೆ ಬಿದ್ದು ನಾನು ಜಗಳ ಕಾಯೂ ಕಾಲ ಮುಗೀತು. +ಒಂದು ತಿಂಗಳ ನಂತರ ಕಂಠೀಜೋಯಿಸರು ಊರಿಗೆ ಬಂದರು. ಅವರನ್ನು ಯಾರೂ ಆ ವಿಷಯವಾಗಿ ನೇರವಾಗಿ ಕೇಳಲಿಲ್ಲ. ಅವರೂ ಮಾತನಾಡಲಿಲ್ಲ. ಕೊರಳಿಗೆ ಜಪದ ಸರ ಹಾಕಿಕೊಂಡು, ಹಣೆಗೆ ತ್ರಿಪುಂಡ್ರವಿಟ್ಟು ಬೀದಿಯಲ್ಲಿ ಹೊರಟರೆ ಜನ ಅವರನ್ನು ಗೌರವದಿಂದಲೇ ಕಂಡು ದೂರ ಬಳಸಿ ಹೋಗುತ್ತಿದ್ದರು. +ಅಧ್ಯಾಯ ೧೨ +– ೧ – +ಆ ವರ್ಷ ನಿಧಾನವಾಗಿ ಮಳೆ ಬಂದರೂ ರಾಗಿಯ ಬೆಳೆಯಾಯಿತು. ಯೂರೋಪು ಖಂಡದಲ್ಲಿ ಇಂಗ್ಲಿಷರಿಗೂ ಜರ್ಮನಿಯವರಿಗೂ ಜೋರಿನಿಂದ ಯುದ್ಧ ನಡೆಯುತ್ತಿದೆಯಂತೆ. ಇತ್ತ ಬರ್ಮಾ ದೇಶದ ಕಡೆಯೂ ಕಾಳಗವಾಗುತ್ತಿದೆಯಂತೆ. ಸರ್ಕಾರ ಆಹಾರ ಧಾನ್ಯಗಳನ್ನು ರೇಷನ್ ಮಾಡಿದೆಯಂತೆ. ಒಂದು ದಿನ ಊರಿಗೆ ಬಂದ ಶೇಕ್‌ದಾರರು ರೇಷನ್ ಎಂದರೆ ಏನು ಎಂಬುದನ್ನು ನಂಜಮ್ಮನಿಗೆ ವಿವರಿಸಿ, ಮುಂದಿನ ಸಲದಿಂದ ಪಹಣಿ ಬರೆಯುವಾಗ ಬೆಳೆಯ ಅಂದಾಜು ಹಾಕುವ ಕ್ರಮವನ್ನೂ ಹೇಳಿಕೊಟ್ಟರು. ಒಂದು ಎಕರೆ ಹೊಲದಲ್ಲಿ ಆರು ಖಂಡುಗ ರಾಗಿ ಬೆಳೆಯುವಂತೆ ಕಂಡರೆ ಹದಿನಾರಾಣೆ ಎಂದು. ನಾಲ್ಕೂವರೆ ಖಂಡುಗವೆಂದರೆ ಹನ್ನೆರಡಾಣೆ. ಮೂರು ಖಂಡುಗಕ್ಕೆ ಎಂಟಾಣೆ. ಹೀಗೆ ರಾಗಿ, ಬತ್ತ, ಹುರುಳಿ, ಅವರೆ, ಮೊದಲಾದ ಎಲ್ಲ ಬೆಳೆಗಳ ಅಂದಾಜನ್ನೂ ಹಾಕಬೇಕು. ಸರ್ಕಾರದವರು ಅದರ ಪ್ರಕಾರ ಪ್ರತಿಯೊಬ್ಬ ರೈತನ ಬೆಳೆಯನ್ನೂ ನಿರ್ಧರಿಸಿ, ಖಾನೇಷುಮಾರಿ ಲೆಕ್ಕದಂತೆ ಅವನ ಮನೆ ಖರ್ಚನ್ನು ಕಳೆದು, ಬೀಜಕ್ಕೆ ಬಿಟ್ಟು, ಉಳಿದುದನ್ನು ಸರ್ಕಾರೀ ಧಾರಣೆಯಲ್ಲಿ ಕೊಂಡುಕೊಳ್ಳುತ್ತಾರೆ. ಎಂದರೆ ಲೆಕ್ಕ ಬರೆಯುವ ಶ್ಯಾನುಭೋಗರಿಗೆ ಹೊಸ ಅಧಿಕಾರ ಬಂತು. +ನಂಜಮ್ಮ ಒಂದು ದಿನ ಕುರುಬರಹಳ್ಳಿಗೆ ಹೋಗಿ ಹೊಸ ಲೆಕ್ಕದ ವಿಷಯವನ್ನು ಗುಂಡೇಗೌಡರಿಗೆ ಹೇಳಿದಳು. ಅವರು-‘ನಾವು ಕಷ್ಟಬಿದ್ದು ಬೆಳೆದದ್ದ ಆ ನನ್ಮಕ್ಳಿಗೆ ಕೊಡಬೇಕಾ?’ಎಂದು ಕೇಳಿದರು. +‘ಸರ್ಕಾರೀ ಕಾನೂನೇ ಮಾಡಿದಾರೆ. ಇಲ್ದೆ ಇದ್ರೆ ಪೋಲೀಸ್ನೋರು ಬತ್ತಾರಂತೆ.’ +ಯಾರಿಗೆ ಯಾವ ತೊಂದರೆಯಾದರೂ ಕುರುಬರಹಳ್ಳಿಗೆ ಹಾನಿ ತಟ್ಟಕೂಡದೆಂದು ನಂಜಮ್ಮನ ಆಶೆಯಾಗಿತ್ತು. ಊರಿಗೆ ಹಾನಿಯಾದರೆ ಗುಂಡೇಗೌಡರ ಪಟೇಲಿಕೆಗೂ ಅಗೌರವ. ತನ್ನ ಸಂಸಾರವನ್ನು ಸಾಕಿದ ಗ್ರಾಮಕ್ಕೆ ತೊಂದರೆಯಾಗುವುದನ್ನು ಅವಳು ಹೇಗೆ ಸಹಿಸಿಯಾಳು? ಆದರೆ ಊರಿನವರೆಲ್ಲ ಕುರಿಮಂದೆಯುಳ್ಳವರು. ಪ್ರತಿವರ್ಷ ಹೊಲಕ್ಕೆ ಮಂದೆ ಕಟ್ಟಿಸುವುದರಿಂದ ಬಹು ಜನ ಎಕರೆಗೆ ಆರು ಖಂಡುಗಕ್ಕಿಂತ ಹೆಚ್ಚು ಬೆಳೆಯುತ್ತಾರೆ. ತಾನು ಅಂದಾಜನ್ನು ಕಡಿಮೆ ಬರೆಯಬೇಕು. ಆದರೆ ಶ್ಯಾನುಭೋಗರ ಅಂದಾಜನ್ನು ಪರಿಶೀಲಿಸಲು ಅಮಲ್ದಾರ ದಣಿಗಳೇ ಬಂದು ಹೊಲಗಳನ್ನು ಪರೀಕ್ಷಿಸುತ್ತಾರೆಂದು ಶೇಕ್‌ದಾರರು ಹೇಳಿದ್ದರು. +ನಂಜಮ್ಮ ಗುಂಡೇಗೌಡರು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು: ಸಾಮಾನ್ಯವಾಗಿ ಎಂಟು ಆಣೆ, ಒಂಬತ್ತು ಆಣೆ ಬೆಳೆ ಎಂದು ಇವಳು ಪಹಣಿಯಲ್ಲಿ ಅಂದಾಜು ಬರೆಯುವುದು. ಗ್ರಾಮದ ಒಟ್ಟಿನಲ್ಲಿ ನೂರು ರೂಪಾಯಿಗಳಷ್ಟು ಎತ್ತಿ ಶೇಕ್‌ದಾರರಿಗೂ ಮೇಲಿನವರಿಗೂ ಕೊಟ್ಟು ಸರಿಮಾಡಿಕೊಳ್ಳುವುದು. ಸರ್ಕಾರದವರು ದಿನಸಿ ಎತ್ತಲು ಬಂದಾಗ ಸರ್ಕಾರೀ ಬೆಳೆಯಲ್ಲಿಯೇ ಒಟ್ಟು ಹತ್ತು ಹನ್ನೆರಡು ಖಂಡುಗ ಕೊಡುವುದು. +ಆ ವರ್ಷ ಹಾಗೆಯೇ ನಡೆಯಿತು. ನೂರು ರೂಪಾಯಿ ನಗದು, ಹನ್ನೆರಡು ಖಂಡುಗ ಕ್ರಯಕ್ಕೆ ರಾಗಿಯನ್ನು ಕೊಟ್ಟು ನಲವತ್ತು ಒಕ್ಕಲಿನ ಕುರುಬರಹಳ್ಳಿಯವರು ಪಾರಾದರು. ಈ ಮೊದಲೂ ಆ ಊರಿನವರು ಶ್ಯಾನುಭೋಗರ ಮಸಿ ಕಾಣಿಕೆ ಕೊಡುತ್ತಿದ್ದರು. ಈಗ ಅದರ ಜೊತೆಗೆ ಮನೆಗೆ ಹತ್ತು ಸೇರು ರಾಗಿಯಂತೆ ಎತ್ತಿಕೊಡಲು ಪ್ರಾರಂಭಿಸಿದರು. ಆಹಾರ ನಿಯಂತ್ರಣದ ಆಜ್ಞೆಯಿಂದ ಪೆಟ್ಟು ಬಿದ್ದುದು ರಾಮಸಂದ್ರ ಮತ್ತು ಲಿಂಗಾಪುರಗಳಿಗೆ. ಬೆಳೆಯ ಅಂದಾಜು ಹಾಕುವುದು ಎಂದರೇನೆಂಬುದು ರಾಮಸಂದ್ರದ ಪಟೇಲ ಶಿವೇಗೌಡನಿಗಾಗಲಿ, ಲಿಂಗಾಪುರದ ಪಟೇಲ ಪುರದಪ್ಪನಿಗಾಗಲಿ ಗೊತ್ತಿರಲಿಲ್ಲ. ನಂಜಮ್ಮ ಈ ಎರಡು ಊರುಗಳ ಪಹಣಿಯನ್ನೂ ಇದ್ದುದು ಇದ್ದಹಾಗೇ ಬರೆದಿದ್ದಳು. ಸುಗ್ಗಿಯ ಕಾಲ ಮುಗಿದುದೇ ತಡ, ಒಂದು ದಿನ ಶೇಕ್‌ದಾರರು, ಅವರ ಇಬ್ಬರ ಜವಾನರು, ಇಬ್ಬರು ಪೋಲೀಸ್ ಕಾನಿಸ್ಟೇಬಲುಗಳು ಊರಿಗೆ ಬಂದರು. ಶೇಕ್‌ದಾರರ ನಿರ್ದೇಶನದಲ್ಲಿ ಜವಾನರು ಪ್ರತಿಯೊಂದು ಮನೆಗೂ ನುಗ್ಗಿದರು. ಅಟ್ಟ, ಪೆಟ್ಟಿ, ಕೊಮ್ಮೆ, ಹಗೇವು, ಮಡಕೆ ಗುಡಾಣಗಳಾದಿಯಾಗಿ ಪ್ರತಿಯೊಂದನ್ನೂ ಶೋಧಿಸಿದರು. ಉದ್ದನೆಯ ಬಿದಿರಿನ ಕೋಲನ್ನು ಪೆಟ್ಟಿಯ ರಾಗಿಯ ಒಳಕ್ಕೆ ಹೂಳಿ ಅದರ ಉದ್ದ ಅಗಲಗಳನ್ನು ಅಂದಾಜು ಮಾಡುವುದು. ಮನೆಯಲ್ಲಿ ಇಷ್ಟೇ ದಿನಸಿ ಇದೆ ಎಂದು ಊಹೆಯಿಂದಲೇ ಲೆಕ್ಕ ಮಾಡಿ, ಮನಸ್ಸಿಗೆ ಬಂದಷ್ಟನ್ನು ಅಳೆದು ಮೂಟೆ ಕಟ್ಟಿಸಿ ತಂದು ಮಾದೇವಯ್ಯನವರ ಗುಡಿಯ ಮುಂದೆ ರಾಶಿ ಹಾಕುವುದು. ಅಟ್ಟಕ್ಕೆ ಹತ್ತಿದ ಶೇಕ್‌ದಾರರ ಜವಾನ ಮನೆಯ ಯಜಮಾನನಿಂದ ಅಲ್ಲಿಯೇ ಇಪ್ಪತ್ತು, ನಲವತ್ತು, ಐವತ್ತು, ಹೀಗೆ ರೂಪಾಯಿ ಇಸಿದುಕೊಂಡು ಕೆಳಗೆ ಬಂದು, ‘ಒಟ್ಟು ಎಲ್ಡೇ ಪಲ್ಲ ಸಾರ್’ ಎಂದು ಹೇಳುವುದೂ ನಡೆಯಿತು. ಅನಂತರ ಅದರಲ್ಲಿ ಶೇಕ್‌ದಾರರಿಗೆ ಅವನು ಕೊಟ್ಟಿದ್ದು, ತಾನು ನುಂಗಿದ್ದೇ ಲೆಕ್ಕ. ತಮಗೆ ಬಂದದ್ದರಲ್ಲಿ ಶೇಕ್‌ದಾರರು ಪೋಲೀಸಿನವರಿಗೂ ಕಾಣಿಕೆ ಕೊಡಬೇಕಾಗಿತ್ತು. +ಒಟ್ಟಿನಲ್ಲಿ ಒಂದೇ ದಿನ ರಾಮಸಂದ್ರದಿಂದ ನಾನೂರು, ಲಿಂಗಾಪುರದಿಂದ ನೂರು ಪಲ್ಲ ರಾಗಿ ತುಂಬಿಸಿಕೊಂಡು ಶೇಕ್‌ದಾರರು ಹೊರಟುಹೋದರು. ಪಟೇಲ ಶ್ಯಾನುಭೋಗರ ಸಮ್ಮುಖದಲ್ಲಿ ಅವರು ಕೊಡುತ್ತಿದ್ದ ರಸೀತಿಯನ್ನು ಹಾಜರುಪಡಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸಂಭಾವನೆ ಕೊಟ್ಟು ರೈತರು ಅದರ ಹಣ ಪಡೆಯಬೇಕಾಗಿತ್ತು. ರಾಗಿ ಅಳೆಯುತ್ತಿದ್ದ ವರಸೆಯಲ್ಲಿ ಪಲ್ಲಕ್ಕೆ ಏಳು ಎಂಟು ಸೇರು ಹೆಚ್ಚು ಎತ್ತಿ ಬಿಡುತ್ತಿದ್ದರು. +ಇದಾದ ಹದಿನೈದು ದಿನದ ನಂತರ ಒಂದು ದಿನ ಪಟೇಲ ಶಿವೇಗೌಡ ಕುಳುವಾಡಿಯ ಕೈಲಿ ನಂಜಮ್ಮನಿಗೆ ಹೇಳಿಕಳಿಸಿದ. ಪಟೇಲ ಹೇಳಿಕಳಿಸಿದಾಗ ಶ್ಯಾನುಭೋಗ ಹೋಗಬೇಕೋ, ಶ್ಯಾನುಭೋಗ ಹೇಳಿಕಳಿಸಿದಾಗ ಪಟೇಲ ಬರಬೇಕೋ ಎಂಬುದು ಅವರವರ ಆಸ್ತಿ ಪಾಸ್ತಿ, ಮತ್ತು ದರ್ಪಗಳನ್ನವಲಂಬಿಸಿರುತ್ತದೆ. ಇದುವರೆಗೆ ಶಿವೇಗೌಡ ಹೇಳಿಕಳಿಸುವುದು, ಚೆನ್ನಿಗರಾಯರು ಹೋಗುವುದೇ ರೂಢಿಯಾಗಿತ್ತು. ಆದರೆ ಈ ದಿನ ಅವನು ನಂಜಮ್ಮನಿಗೆ ಹೇಳಿಕಳುಹಿಸಿದ್ದ.ಅವಳಿಗೆ ರೇಗಿತು. ಆದರೆ ತಾಳ್ಮೆ ಕಳೆದುಕೊಳ್ಳದೆ ಕುಳವಾಡಿಗೆ ಹೇಳಿದಳು: ‘ಏನಾರ ಕೆಲ್ಸವಿದ್ರೆ ಅವ್ರಿಗೇ ಇಲ್ಲಿ ಬಂದು ಹೋಗಾಕ್ ಹೇಳು.’ +ಸ್ವಲ್ಪ ಹೊತ್ತಿನಲ್ಲಿ ಪಟೇಲನೇ ಬಂದ. ಅವನ ಹಿಂದೆಯೇ ಬಂದ ಕುಳವಾಡಿ ಬಾಗಿಲ ಹತ್ತಿರ ನಿಂತುಕೊಂಡ. ಕಂಬದ ಹತ್ತಿರ ಹಾಕಿದ್ದ ಈಚಲು ಚಾಪೆಯ ಮೇಲೆ ಕುಳಿತ ಗೌಡ, ಹೇಗೆ ಮಾತು ಪ್ರಾರಂಭಿಸಬೇಕೆಂಬುದು ತಿಳಿಯದೆ ಐದು ನಿಮಿಷ ತಡಕಾಡುತ್ತಿದ್ದು ನಂತರ, ‘ಕುರುಬರಹಳ್ಳೀಲಿ ಹನ್ನೆಲ್ಡು ಕಂಡುಗ ತಗಂಡು ಓದ್ರಂತೆ. ನಮ್ಮೂರ್ನಾಗೆ ನಾನೂರು ಪಲ್ಲ ಹ್ಯಂಗೆ ಕೊಂಡೊಯ್ದ್ರು?’ +‘ಅದು ನಂಗೇನು ಗೊತ್ತು ಪಟೇಲ್ರೇ?’ +‘ಏನು ಗೊತ್ತು ಅಂತ ನೀನು ಏಳ್ಬೇಕು ಕಣಮ್ಮ. ಲ್ಯಕ್ಕ ಬರೆಯಾಕುಲ್ವ ನೀನು?’ +‘ಪಟೇಲ್ರೇ, ನೀನು ತಾನು ಅಂತ ಮಾತಾಡುಕ್ಕೆ ನಾನೇನು ನಿಮ್ಮನೇಲಿ ಭಿಕ್ಷೆ ಕೇಳುಕ್ಕೆ ಬಂದಿಲ್ಲ. ಸ್ವಲ್ಪ ಮರ್ಯಾದೆ ಇಟ್ಟು ಮಾತಾಡಿ’-ಎಂದು ಹೇಳಿದ ನಂಜಮ್ಮ ಅಡಿಗೆ ಮನೆಗೆ ಹೊರಟುಹೋದಳು. +‘ಚೆನ್ನಿಗರಾಯುನ್ನ ಉಟ್ದಾಗಿನಿಂದ ನಾನು ಬಲ್ಲೆ.’ +‘ಹಾಗಿದ್ರೆ ಅವ್ರುನ್ನೇ ಕೇಳಿ. ನಿಮ್ಮನೆ ಹತ್ರುಕ್ಕೆ ಬರಬೇಕು ಅಂತ ಕುಳವಾಡಿ ಕೈಲಿ ಹೇಳ್ಕಳಿಸಿದ್ರಲಾ, ನಿಮ್ಮ ಪಟೇಲಿಕೆ ಅಂದ್ರೆ ದೌಲತ್ತು ಅಂತ ತಿಳ್ಕಂಡ್ರಾ?’ +ಶಿವೇಗೌಡನಿಗೆ ಮುಖಕ್ಕೆ ಹೊಡೆದಂತೆ ಆಯಿತು. ಅವನು ಎಂದೂ ಈ ಹೆಂಗಸಿನೊಡನೆ ನೇರವಾಗಿ ಮಾತನಾಡಿರಲಿಲ್ಲ. ಮನೆ ಮಠಗಳನ್ನೆಲ್ಲ ಕಳೆದುಕೊಂಡು ಎಲೆ ಹಚ್ಚಿ ಮಾರಿ, ತರಕಾರಿ ಬೆಳೆದು ತಿಂದು ಗಂಡನ ಶ್ಯಾನುಭೋಗಿಕೆ ಲೆಕ್ಕ ಬರೆಯುತ್ತಿದ್ದ ಇವಳ ಗತ್ತನ್ನು ಕಂಡ ಅವನಿಗೆ ಮೈಯುರಿಯಿತು. +‘ನಮ್ಮೂರ ಪಾಣಿ ಬರೆಯೂವಾಗ ಯಾಕಮ್ಮ ಕಮ್ಮಿ ಅಂದಾಜು ಆಕ್ಲಿಲ್ಲ?’ +‘ಅದುನ್ನ ಕೇಳುಕ್ಕೆ ನೀವ್ಯಾರು?’-ನಂಜಮ್ಮ ಒಳಗಿನಿಂದಲೇ ಹೇಳಿದಳು. +‘ಎಂಗ್ಸು ಸರ್ಕಾರಿ ಲ್ಯಕ್ಕ ಬರೀಬೌದಾ ಅಂತ ನಾನು ಸರ್ಕಾರಾನೇ ಕೇಳ್ತೀನಿ’-ಎಂದು ಶಿವೇಗೌಡ ಎದ್ದುಹೋದ. ಇಡೀ ಊರಿಗೇ ದೊರೆಯಂತೆ ಮೆರೆಯುತ್ತಿದ್ದ ಅವನಿಗೆ ಈ ದಿನ ಪರಾಭವದ ಅನುಭವವಾಯಿತು. ಅದೂ, ಇಷ್ಟುದಿನ ತಾನು ಧಿಂ ಎಂದು ದರ್ಪಮಾಡುತ್ತಿದ್ದ ಕುಳವಾಡಿಯ ಎದುರಿನಲ್ಲಿಯೇ ಈ ಹೆಂಗಸು ಹೀಗೆ ಮಾತನಾಡಿ ಕಳಿಸಿದ್ದಳು. ತನ್ನ ಭಾವಮೈದ ಸಿವಲಿಂಗನನ್ನೂ ಜೊತೆಗೆ ಕರೆದುಕೊಂಡು ಅವನು ನೇರವಾಗಿ ಕಂಬನಕೆರೆಗೆ ಹೋಗಿ ಶೇಕ್‌ದಾರರನ್ನು ಕಂಡು, ಹೆಂಗಸು ಸರ್ಕಾರೀ ಲೆಕ್ಕ ಬರೆಯಬಹುದೇ ಎಂಬ ಅಂಶವನ್ನು ಕೇಳಿದ. ಶೇಕ್‌ದಾರರಿಗೆ ಈ ಪ್ರಶ್ನೆಯ ಹಿಂದು ಮುಂದುಗಳೆಲ್ಲ ಗೊತ್ತು. ಆ ಹೋಬಳಿಗೆ ಅವರು ಬಂದು ಆರು ತಿಂಗಳು ಮಾತ್ರವಾಗಿದ್ದರೂ, ಹಿಂದಿದ್ದವರು ಇವರಿಗೆ ಪ್ರತಿಯೊಂದು ಫಿರ್ಕಾದ ಒಳವಿಷಯಗಳನ್ನೆಲ್ಲ ತಿಳಿಸಿ ಹೋಗಿದ್ದರು. ಉಪಾಯವಾಗಿ ಮಾತನಾಡಿ ಅವರು, ಶಿವೇಗೌಡನ ಆಕ್ಷೇಪದ ಹಿನ್ನೆಲೆಯನ್ನು ಅವನ ಬಾಯಿಂದಲೇ ಹೊರಡಿಸಿದರು. ಶ್ಯಾನುಭೋಗರ ಪಹಣಿಯಲ್ಲಿ ಹೆಚ್ಚು ಅಂದಾಜು ಬರೆದರೆ ಅವರಿಗೂ ಲಾಭವಿತ್ತು; ಕಡಿಮೆ ಬರೆಯುವಾಗಲೂ ಲಾಭವಿತ್ತು. +ಆದುದರಿಂದ ಶೇಕ್‌ದಾರರು ಶ್ಯಾನುಭೋಗರನ್ನು ಯಾಕೆ ಬಿಟ್ಟುಕೊಟ್ಟಾರು? ಅವರು ಹೇಳಿದರು: ‘ನೋಡಿ ಶಿವೇಗೌಡ್ರೇ, ಆಯಮ್ಮ ಲೆಕ್ಕ ಬರೀತಾರೆ ಅಂತ ಡಿಪ್ಟಿಕಮಿಶನರ್ ಸಾಹೇಬ್ರಿಗೂ ಗೊತ್ತು. ಇಡೀ ತುಮಕೂರು ಡಿಸ್ಟ್ರಿಕ್ಟಿನಲ್ಲೇ ಅಷ್ಟು ಚೆನ್ನಾಗಿ ಯಾರೂ ಬರೆಯುಲ್ಲ ಅಂತ ಅವ್ರೇ ಹುಜೂರ್ ಜಮಾಬಂದೀಲಿ ಹೇಳಿದಾರೆ. ಹೆಂಗಸು ಲೆಕ್ಕ ಬರೀಬ್ಯಾಡ್ದು ಅಂತ ಸರ್ಕಾರೀ ರೂಲು ಏನೂ ಇಲ್ಲ.’ +ಸೋತ ಮುಖ ಹಾಕಿಕೊಂಡು ಶಿವೇಗೌಡ ತನ್ನ ಭಾಮೈದನೊಡನೆ ಊರಿಗೆ ಹಿಂತಿರುಗಿದ. ದಾರಿಯಲ್ಲಿ ಶಿವೇಗೌಡ ಭಾಮೈದನನ್ನು ಕೇಳಿದ: ‘ಆ ನನ್ ಮಗ ಶೇಕ್‌ದಾರ ಊರಿಗೆ ಬಂದಾಗ ಈ ಬೋಸುಡಿ ಮುಂಡೆ ಉಪ್ಪಿಟ್ಟು ಕಾಫಿ ಮಾಡಿ ಕೊಡ್ತಾಳೆ ಅಂತ ಹೆಂಗ್ ವೈಸ್ಕಂಡ ನೋಡ್ದಾ ತಮ್ಮಯ್ಯ?’ +‘ಬರೀ ಉಪ್ಪಿಟ್ಟು ಕಾಫಿಗೆ ಹಿಂಗ್ ವೈಸ್ಕತ್ತಾನಾ ತಗಾ ಮಾವಯ್ಯ? ಅವ್ನು ಬಂದಾಗೆಲ್ಲ ಇವ್ಳು ಅವನ ತಾವ ಆಸಿಗೆ ಆಸ್ಕಂಡು ಮನೀಕತ್ತಾಳೆ.’ +‘ಸೂಳೆಗಾರಮುಂಡೆ, ಸೂಳೆಗಾರಮುಂಡೆ’-ಎಂದುಕೊಂಡು ಶಿವೇಗೌಡ ಮನಸ್ಸಿಗೆ ಸಮಾಧಾನ ತಂದುಕೊಂಡ. ಆದರೆ ಊರಿಗೆ ಬಂದಮೇಲೆ ಇದೇ ಮಾತನ್ನು ಮತ್ತೆ ಯಾರ ಎದುರಿಗಾದರೂ ಆಡಲು ಅವನಿಗಾಗಲಿ ಭಾಮೈದ ಸಿವಲಿಂಗನಿಗಾಗಲಿ ಧೈರ್ಯ ಬರಲಿಲ್ಲ. +ಶಿವೇಗೌಡನ ದರ್ಪವನ್ನು ಕಂಡು ನಂಜಮ್ಮ ಮನಸ್ಸಿನಲ್ಲಿಯೇ ತಿರಸ್ಕಾರ ಪಡುತ್ತಿದ್ದಳು. ಅದು ಬರೀ ಪಟೇಲಿಕೆಯ ದರ್ಪವಾಗಿರಲಿಲ್ಲ. ಕಾಶಿಂಬಡ್ಡಿ ಲೇವಾದೇವಿಯ ಹಣ ಇವನದ್ದೇ ಎಂಬುದು ಈಗ ಊರಿನವರಿಗೆಲ್ಲ ಗೊತ್ತು. ಪರಸ್ಥಳದವನಾದ ಕಾಶಿಂಬಡ್ಡಿಗೆ ಈ ಊರಿನಲ್ಲಿ ಸ್ಥಳ ಮಾಡಿ ಮನೆ ಮಠ ಕಟ್ಟಿ ಜಮೀನು ತೆಗೆದುಕೊಳ್ಳುವುದು ಬೇಕಾಗಿರಲಿಲ್ಲ. ತನ್ನ ಭಾಗದ ಬಡ್ಡಿ ಎಣಿಸಿಕೊಂಡು ಅವನು ತನ್ನ ದೇಶವಾದ ಮಲೆಯಾಳಕ್ಕೆ ಕಳಿಸಿಬಿಡುತ್ತಿದ್ದನಂತೆ. ಮೊದಮೊದಲು ಇವರಿಬ್ಬರ ಬಡ್ಡಿಯ ವ್ಯವಹಾರ ಚಿನ್ನ ಬೆಳ್ಳಿ ತಾಮ್ರ ಹಿತ್ತಾಳೆಗಳ ಅಡವಿನ ಮೇಲೆ ನಡೆಯುತ್ತಿತ್ತು. ಈ ಲೋಹಗಳನ್ನು ಕಳೆದುಕೊಂಡವರು ತಮ್ಮ ಚೂರು ಪಾರು ಭೂಮಿಯನ್ನು ಆಧಾರ ಬರೆದು ಕಾಸಿನ ಬಡ್ಡಿ ಲೆಕ್ಕದಲ್ಲಿ ಸಾಲ ತೆಗೆಯುತ್ತಿದ್ದರು. ಆಧಾರ ಶಿವೇಗೌಡನ ಹೆಸರಿಗೆ ಆಗುತ್ತಿತ್ತು. ಮೂರು ತಿಂಗಳ ಕಾಸಿನ ಬಡ್ಡಿಯನ್ನು ಅವರು ಮೊದಲೇ ಕಟಾಯಿಸಿ ಕೊಡುತ್ತಿದ್ದರು. ಎಂದರೆ ಒಂದು ಸಾವಿರ ರೂಪಾಯಿಗೆ ಆಧಾರ ಬರೆದರೆ ಹೆಚ್ಚು ಕಡಿಮೆ ಐನೂರು ಕೈಗೆ ಬರುತ್ತಿತ್ತು. ಇದರ ಮೇಲೆ ಶೇಕಡ ಹನ್ನೆರಡರಂತೆ ಒಂದು ಸಾವಿರಕ್ಕೆ ಕೋರ್ಟಿಗೆ ಹೋದರೂ ಲೆಕ್ಕ ಸಿಕ್ಕುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಅದರಲ್ಲಿಯೂ ಮಳೆ ಬೆಳೆ ಹೋದ ಎರಡು ವರ್ಷಗಳಲ್ಲಿ ಶಿವೇಗೌಡ ಬಹಳ ಬೆಳೆದುಬಿಟ್ಟಿದ್ದ. ಅವನನ್ನು ತಗ್ಗಿಸುವುದು ಆ ಊರಿನಲ್ಲಿ ಯಾರಿಗೂ ಸಾಧ್ಯವಾಗದ ಮಾತು. ನಂಜಮ್ಮನಿಗೂ ಅದು ಗೊತ್ತಿತ್ತು. ಆದರೆ ತನ್ನ ಮೇಲೂ ದೌಲತ್ತು ತೋರಿಸಲು ಬಂದಾಗ ಅವಳು, ಅವನಿಗೆ ತಕ್ಕ ಜವಾಬು ಕೊಟ್ಟು ಕಳಿಸಿದ್ದಳು. ಆಹಾರ ಇಲಾಖೆಯ ಕಂಟ್ರೋಲ್ ಬಂದಮೇಲೆ ಶೇಕ್‌ದಾರರು ಊರಿಗೆ ಆಗಾಗ್ಗೆ ಬರಬೇಕಾಗುತ್ತಿತ್ತು. ಅವನು ಅವರನ್ನು ಕಾಣಲು ಹೋಗಿದ್ದ ವಿಷಯವೂ ತಿಳಿದ ಮೇಲೆ, ಅವನಿಗೆ ತಕ್ಕ ಮರ್ಯಾದೆ ಆಯಿತು ಎಂದುಕೊಂಡು ಸುಮ್ಮನಾದಳು. +– ೨- +ಮಳೆ ಬಂದ ಮೇಲೆ ಬೆಳೆ ಚೆನ್ನಾಗಿ ಆದರೂ ಧಾನ್ಯಗಳ ಬೆಲೆ ಮಾತ್ರ ಇಳಿಯಲಿಲ್ಲ. ಯುದ್ಧ ನಡೆಯುತ್ತಲೇ ಇತ್ತು. ಶ್ಯಾನುಭೋಗಿಕೆಯ ಸಾಮಾನ್ಯ ಲೆಕ್ಕದ ಜೊತೆಗೆ ಆಹಾರ ನಿಯಂತ್ರಣ, ಬೆಳೆ, ಧಾನ್ಯಸಂಗ್ರಹ, ಮೊದಲಾದ ಲೆಕ್ಕಗಳೂ ಹೆಚ್ಚಾದವು. ಸರ್ಕಾರವು ಶ್ಯಾನುಭೋಗರಿಗೆಲ್ಲ ವಾರ್ಷಿಕ ಪೋಟಿಗೆಯ ಮೇಲೆ ಪ್ರತ್ಯೇಕ ಭತ್ಯೆ ಕೊಡಲು ಪ್ರಾರಂಭಿಸಿತು. ಈಗ ನಂಜಮ್ಮ ಶ್ಯಾನುಭೋಗಿಕೆಯ ಹಳೆಯ ಪೋಟಿಕೆ ನೂರ ಇಪ್ಪತ್ತಾದರೆ ಮೇಲೆ ಒಂದು ನೂರು ರೂಪಾಯಿ ಸಿಕ್ಕುತ್ತಿತ್ತು. ಹೆಚ್ಚಿನ ಲೆಕ್ಕ ಪತ್ರಗಳ ಗಡಿಬಿಡಿಯೇ ಆಗುತ್ತಿದ್ದುದರಿಂದ ಅವಳಿಗೆ ಎಲೆ ಹಚ್ಚಲು ಬಿಡುವಿರುತ್ತಿರಲಿಲ್ಲ. ಪಾರ್ವತಿ ಮನೆ ಕೆಲಸ ಮಾಡಿಕೊಂಡು, ಉಳಿದ ವೇಳೆಯಲ್ಲಿ ಹಿತ್ತಿಲಿನ ತರಕಾರಿಗೆ ನೀರು ಹುಯ್ಯುತ್ತಿದ್ದಳು. ಗುಂಡೇಗೌಡರ ಮನೆಯಿಂದ ಹಿಂದಕ್ಕೆ ತಂದ ಹಸುಗಳ ಪಾಲನೆಯೂ ಅವಳದೇ. ರಾಮಣ್ಣ ಈಗ ಮಿಡ್ಳ್‌ಸ್ಕೂಲಿನ ಮೂರನೆಯ ಕ್ಲಾಸಿನಲ್ಲಿ, ಅವನ ಕ್ಲಾಸಿಗೇ ಮೊದಲನೆಯವನಾಗಿ ಓದುತ್ತಿದ್ದಾನೆ. ತಾಯಿಯ ಹೊಸಹೊಸ ಲೆಕ್ಕಗಳ ಪುಸ್ತಕಕ್ಕೆ ರೂಲು ಹಾಕುವುದರಿಂದ ಹಿಡಿದು, ಪಲ್ಲ ಸೇರುಗಳ ಕೂಡಿ ಕಳೆಯುವ ಲೆಕ್ಕಗಳನ್ನೆಲ್ಲ ತಪ್ಪಿಲ್ಲದೆ ಮಾಡುತ್ತಾನೆ. ಅಮ್ಮ ಮಾಡಿದ ಲೆಕ್ಕವನ್ನು ನೋಡಿ, ನಡುವೆ ತಪ್ಪು ಕಂಡುಹಿಡಿದು ತೋರಿಸುತ್ತಾನೆ. ಒಂದು ಸಲ ಶೇಕ್‌ದಾರರೇ ಅವನಿಗೆ ಹೇಳಿಕಳಿಸಿ ತಮ್ಮ ಒಂದು ಲೆಕ್ಕದ ಪುಸ್ತಕದ ನಕಲು ಮಾಡಿಸಿಕೊಂಡರು. ಮಗ ಬುದ್ಧಿವಂತನಾದನೆಂದು ನಂಜಮ್ಮನಿಗೆ ಹಿಗ್ಗೋ ಹಿಗ್ಗು. ಮುಂದೆ ರಾಮಣ್ಣ ಶ್ಯಾನುಭೋಗನಾಗುವುದು ಮಾತ್ರ ಅವಳಿಗೆ ಬೇಡ. ಹೈಸ್ಕೂಲಾದರೂ ಮುಗಿಸಬೇಕು.ಕೊನೆಯ ಪಕ್ಷ ಶೇಕ್‌ದಾರಿಕೆ ಮಾಡಬೇಕು. ದೇವರ ದಯವಿದ್ದರೆ ಯಾಕಾಗುವುದಿಲ್ಲ, ರಾಮಣ್ಣನಿಗೆ ಇಷ್ಟೆಲ್ಲ ಬುದ್ಧಿ ಇದೆಯಲ್ಲ-ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದಳು. +ವಿಶ್ವ ಕನ್ನಡ ಮೂರರಲ್ಲಿದ್ದಾನೆ. ಅವನಂತಹ ತುಂಟ ಇಡೀ ಊರಿನಲ್ಲಿಯೇ ಇಲ್ಲ. ಅಷ್ಟೇ ಧೈರ್ಯಶಾಲಿ. ಊರಿನ ಕೆರೆಯಲ್ಲಿ ದೊಡ್ಡವರಂತೆ ಐವತ್ತು ಅರವತ್ತು ಮಾರು ದೂರ ಈಜಿಕೊಂಡು ಹೋಗುತ್ತಾನೆ. ಒಬ್ಬನೇ ಶ್ಮಶಾನದ ಹತ್ತಿರ ತಿರುಗಿ ಜೇನುಗೂಡು ಹುಡುಕಿ, ಬಿಚ್ಚಿ, ಅಡಿಕೆಪಟ್ಟಿಯಲ್ಲಿ ತುಪ್ಪ ಹಿಂಡಿ ತರುತ್ತಾನೆ. ಮಾತುಕತೆ, ಗತ್ತು, ಧೈರ್ಯ, ಎಲ್ಲದರಲ್ಲೂ ಅಜ್ಜ ಕಂಠೀಜೋಯಿಸರೇ ಅವನು. ಈಗ ಅವನಿಗೂ ಮಾದೇವಯ್ಯನವರಿಗೂ ಮೊದಲಿಗಿಂತ ಹೆಚ್ಚು ಪ್ರೀತಿ ಬೆಳೆದಿದೆ. ಅವರು ತತ್ವ ಹಾಡುತ್ತಿದ್ದರೆ ಚನ್ನಾಗಿ ಏಕತಾರಿ ಬಾರಿಸುತ್ತಾನೆ. ದಮಡಿ ಬಡಿಯುತ್ತಾನೆ. ಅವರ ಕಂತೆಭಿಕ್ಷದ ಊಟವನ್ನು ಮತ್ತೆ ಅಭ್ಯಾಸ ಮಾಡಿಕೊಂಡಿದ್ದಾನೆ. +ಉಂಡು ತಿನ್ನಲು ನಂಜಮ್ಮನ ಸಂಸಾರಕ್ಕೆ ಯಾವ ತೊಂದರೆಯೂ ಇಲ್ಲ. ಆಹಾರದ ಲೆಕ್ಕ ಬಂದಮೇಲೆ, ಉಳಿದ ಶ್ಯಾನುಭೋಗ ಪಟೇಲರುಗಳಿಗೆ ಹೆಚ್ಚಾದಂತೆ ಅವಳಿಗೂ ಸಂಪಾದನೆ ಏರಿದೆ. ಮನೆಯಲ್ಲಿ ಈಗ ಎಲ್ಲರಿಗೂ ಎರಡೆರಡು ಜೊತೆ ಬಟ್ಟೆ ಬರೆಗಳಾಗಿವೆ. ರಾತ್ರಿ ಚಳಿಗಾಲದಲ್ಲಿ ಹೊದೆಯಲು ಕುರುಬರ ಹಳ್ಳಿಯವೇ ನಾಲ್ಕು ಕಂಬಳಿಗಳನ್ನೂ ಕೊಂಡಿದ್ದಾಳೆ. ಆದರೆ ಒಂದು ಯೋಚನೆ ಅವಳನ್ನು ಕಾಡುತ್ತಿದೆ. ಪಾರ್ವತಿಗೆ ಆಗಲೇ ಹದಿಮೂರು ತುಂಬುತ್ತಿದೆ. ಈ ಮಧ್ಯೆ ಎರಡು ವರ್ಷ ಬರ ಬರದೆ ಪುಷ್ಟಿಯಾದ ಆಹಾರ ಬಿದ್ದಿದ್ದರೆ ಅವಳು ಇಷ್ಟರಲ್ಲಿ ಮೈನೆರೆದುಬಿಡುತ್ತಿದ್ದಳು. ಹೊಟ್ಟೆಗಿಲ್ಲದೆ ಕಡ್ಡಿಯಂತೆ ಆಗಿದ್ದ ಅವಳು ಈಗ ಎರಡು ಹೊತ್ತೂ ಊಟ, ಬೆಳಗಿನ ಹೊತ್ತು ರೊಟ್ಟಿ ಮೊಸರು ತಿನ್ನುತ್ತಿದ್ದಾಳೆ. ಇನ್ನೂ ಅವಳ ಮದುವೆಯಾಗಿಲ್ಲ. ಮದುವೆಗೆ ಮೊದಲೇ ಮೈನೆರೆದು ಬಿಟ್ಟರೆ ಏನು ಗತಿ ಎಂದು ನಂಜಮ್ಮ ಒಳಗೇ ತಪಿಸುತ್ತಿದ್ದಾಳೆ. +ಮದುವೆ ಎಂದರೆ ಹುಡುಗಾಟವೆ? ಎಷ್ಟೇ ಬಡತನದಲ್ಲಿ ಮಾಡಿದರೂ ಏಳು ಎಂಟು ನೂರು ರೂಪಾಯಿ ಬೇಕು. ಗಂಡು ಹುಡುಕಿ ಮುಂದೆ ನಿಂತು ಮಾಡಲು ಒಬ್ಬ ಗಂಡಸು ಬೇಕು. ತನ್ನ ಗಂಡ ಎಂಥವರೆಂಬುದು ಅವಳಿಗೇ ಗೊತ್ತು. ದೇವರು ಹ್ಯಾಗೆ ನಡೆಸುತ್ತಾನೋ?-ಎಂಬ ಯೋಚನೆ ಮೂರು ಹೊತ್ತೂ ಕಾಡುತ್ತಿತ್ತು. +ತಿಪಟೂರಿನ ಹತ್ತಿರದ ತಿರುಮಗೊಂಡನಹಳ್ಳಿಯಲ್ಲಿ ಒಂದು ವರವಿದೆ ಎಂದು ಯಾರೋ ಹೇಳಿದರು. ಹೋಗಿ ನೋಡಿಕೊಂಡು ಬರುವಂತೆ ಅವಳು ಗಂಡನನ್ನೂ, ಜೊತೆಗೆ ಆ ಊರಿನ ಹೊಸದಾಗಿ ಬಂದಿದ್ದ ಮೇಷ್ಟರು ವೆಂಕಟೇಶಯ್ಯನವರನ್ನೂ ಕಳಿಸಿದಳು. ಇವರು ಹೋದ ಎರಡನೆಯ ದಿನ ವಾಪಸು ಬಂದ ಮೇಷ್ಟರು ಹೇಳಿದರು: “ನಂಜಮ್‌ನೋರೇ, ಈ ಶ್ಯಾನುಭೋಗ್ರನ್ನ ಕಟ್ಟಿಕೊಂಡು ಹೋದ್ರೆ ವರ ನಿಶ್ಚಯವಾಗುತ್ತೆಯೇ? ನಾವು ಅವರ ಮನೆಗೆ ಹೋಗಿ ಜಾತಕ ಕೇಳಿದೆವು. ಹುಡುಗಿ ಜಾತಕ ಮೊದಲು ಕೊಡಿ ಅಂದ್ರು. ಕೊಟ್ಟೆ. ಊಟ ಮಾಡಿ ಅಂದ್ರು. ‘ಹೆಣ್ಣು ಕೊಡೋಕೆ ಬಂದಿದೀವಿ ದೈವಸಂಕಲ್ಪವಿದ್ದು ಕನ್ಯಾದಾನವಾಗೂ ತನಕ ನಾವು ನಿಮ್ಮ ಮನೇಲಿ ಗಂಗೋದಕಾನೂ ಸ್ವೀಕರಿಸಬಾರ್ದು ಅಂತ ಶಾಸ್ತ್ರವೇ ಇದೆಯಲ್ಲ’ಅಂತ ನಾನು ಅಂದೆ. ಆದ್ರೆ ಶ್ಯಾನುಭೋಗ್ರು ಕೇಳ್ಲೇ ಇಲ್ಲ. ಬ್ಯಾಡಿ ಕಣ್ರಿ ಅಂತ ನಾನು ಬಾಯಿಬಿಟ್ಟು ಹೇಳಿದ್ರೂ ಕೇಳದೆ ಎದ್ದು ಅಂಗಿ ಬಿಚ್ಚಿ ಕೈಕಾಲು ತೊಳಕೊಂಡು ಊಟಕ್ಕೆ ಕೂತೇಬಿಟ್ರು. ನಾನು ಮಾತ್ರ ಮಾಡ್ಲಿಲ್ಲ. ಅವರ ಊಟವಾದ ಮೇಲೆ ಹುಡುಗನ ತಂದೆಯ ತಮ್ಮನೇ ಹೊರಗೆ ಬಂದು ನನ್ನ ಕೈಲಿ, ‘ಕನ್ಯೆಯ ತಂದೆಯೇ ನಮ್ಮನೇಲಿ ಊಟ ಮಾಡಿಬಿಟ್ರು. ಇನ್ನು ಮದುವೆ ಪ್ರಸ್ತಾಪ ಮುಂದುವರಿಸಬಾರ್ದು. ಶಾಸ್ತ್ರ ನಿಮಗೇ ಗೊತ್ತಿದೆಯಲ್ಲ’ ಅಂದುಬಿಟ್ರು.” +ಮೇಷ್ಟರ ಮಾತು ಕೇಳಿದ ನಂಜಮ್ಮನಿಗೆ ಸಂಕಟ ಕೋಪ, ಎರಡೂ ಒಟ್ಟಿಗೆ ಉಂಟಾದುವು. ಅಲ್ಲಿಯೇ ಚಾಪೆಯ ಮೆಲೆ ಮಲಗಿ ಸುಧಾರಿಸಿಕೊಳ್ಳುತ್ತಿದ್ದ ಗಂಡನನ್ನು-‘ಮೇಷ್ಟ್ರು ಹೇಳಿದರೂ ಯಾಕೆ ಹೀಗೆ ಮಾಡಿದಿರಿ?’ ಎಂದು ಕೇಳಿದುದಕ್ಕೆ ಅವರು, ‘ಹ್ವಟ್ಟೆ ಹಸ್ದಿದ್ರೆ ಇನ್ನೇನ್ ಮಾಡ್‌ಬೇಕೋ ಕಾಣೆ’ ಎಂದು ಕೊಸರಿಕೊಂಡೇ ಹೇಳಿದರು. ಹೇಲಿನಮೇಲೆ ಕಲ್ಲೆಸೆದು ಮೋರೆಮೇಲೆ ಸಿಡಿಸಿಕೊಳ್ಳಬಾರದೆಂಬ ನೆನಪಾಗಿ ಅವಳು ಅವರನ್ನು ಮತ್ತೆ ಏನೂ ಅನ್ನಲಿಲ್ಲ. ಮುಂದೆ ನಿಂತು ಈ ಹುಡುಗಿಯ ಮದುವೆ ಮಾಡುವವರು ಯಾರು ಎಂದು ತನ್ನಲ್ಲಿಯೇ ಯೋಚಿಸುತ್ತಾ ಸುಮ್ಮನಾದಳು. +ಅವಳ ಅದೃಷ್ಟಕ್ಕೆ ಆ ದಿನ ರಾತ್ರಿಯೇ ಪಾರ್ವತಿ ಮೈನೆರೆದುಬಿಟ್ಟಳು. ಅದು ಅನಿರೀಕ್ಷಿತವಲ್ಲದಿದ್ದರೂ ಹಾಗೆ ಆದಾಗ ನಂಜಮ್ಮನ ಎದೆ ಹೊಡೆದುಕೊಂಡಿತು. ಮೈನೆರೆದ ಹುಡುಗಿಯನ್ನು ಮದುವೆಯಾಗುವವರು ಯಾರು? ತಿಪಟೂರಿನಂಥ ದೊಡ್ಡ ಊರಿನಲ್ಲಿ ದೊಡ್ಡದೊಡ್ಡವರ ಮನೆಗಳಲ್ಲಿ ಈಗೀಗ ನೆರೆದ ಹುಡುಗಿಯರಿಗೇ ಮದುವೆ ಮಾಡುತ್ತಾರಂತೆ-ಎಂದೇನೋ ಕೇಳಿದ್ದಳು. ಆದರೆ ಅದು ದೊಡ್ಡವರ ಮನೆಯ ಮಾತು. ನಾವು ಎಷ್ಟಾದರೂ ಬಡವರು, ಅಲ್ಲದೆ ಹಳ್ಳಿಗಾಡಿನವರು. ಹುಡುಗಿ ಮದುವೆಯಾಗದೆ ಮೈನೆರೆದಳೆಂದರೆ ತಾವು ಉಳಿಯುವಂತಿಲ್ಲ. ಊರಿನ ಜೋಯಿಸರುಗಳು ಮೊದಲೇ ತನಗೂ ಮಕ್ಕಳಿಗೂ ಬಹಿಷ್ಕಾರ ಹಾಕಿದ್ದಾರೆ. ಒಂದು ಪಕ್ಷ ಹಣ ಒದಗಿ ಗಂಡು ಗೊತ್ತಾದರೂ ಅವರು ದಂಡ ತಿನ್ನದೆ ಬಂದು ಮದುವೆ ಮಾಡಿಸುವುದಿಲ್ಲ. ಇನ್ನು ಇದು ಗೊತ್ತಾದರೆ ದೊಡ್ಡ ಗಲಾಟೆಯೇ ಆಗುತ್ತೆ. ವಿಷಯ ನಾಲ್ಕು ಜನಕ್ಕೆ ತಿಳಿದರೆ ಅವಳನ್ನು ನೋಡಲು ಯಾವ ಗಂಡಿನವರು ಬಂದರೂ ಕಿವಿಗೆ ಊದಿ ಮದುವೆ ತಪ್ಪಿಸಿಬಿಡುತ್ತಾರೆ. ನಂಜಮ್ಮ ಒಂದು ಗಂಟೆಯ ಕಾಲ ಮಂಕುಹಿಡಿದವಳಂತೆ ಕೂತುಬಿಟ್ಟಳು. ಚೆನ್ನಿಗರಾಯರು ಸುಖವಾಗಿ ಮಲಗಿ ನಿದ್ರಿಸುತ್ತಿದ್ದರು. ಅವರಿಗೆ ವಿಷಯ ತಿಳಿಯುವುದೂ ಒಂದೇ ಕಹಳೆಯ ಬಾಯಿಗೆ ಪಿಸುಮಾತು ಹೇಳುವುದೂ ಒಂದೇ. +ಅವಳು ಒಂದು ತೀರ್ಮಾನ ಮಾಡಿದಳು. ಯಾರಿಗೂ ಹೇಳಕೂಡದೆಂದು ಕಟ್ಟುನಿಟ್ಟಾಗಿ ಹೇಳಿ ಪಾರ್ವತಿಯನ್ನು ತನ್ನ ಹಾಸಿಗೆಯ ಸಾಲಿನಲ್ಲೇ ಮಲಗಿಸಿಕೊಂಡಳು. ಬೆಳಗ್ಗೆ ಅವಳನ್ನು ಮನೆಗೆಲಸಕ್ಕೆ ಬಿಡಲಿಲ್ಲ. ಹೊಟ್ಟೆನೋವೆಂದು ಹೇಳುವಂತೆ ಹೇಳಿ, ಒಂದು ಕಡೆ ಹಾಸಿಗೆ ಹಾಕಿ ಮಲಗಲು ಹೇಳಿದಳು. ವಿಷಯ ರಾಮಣ್ಣನಿಗೆ ತಿಳಿಸಿದಳು. ಅವನು ಜಾಣ ಹುಡುಗ. ಯಾರ ಕೈಲೂ ಬಾಯಿ ಬಿಡುವವನಲ್ಲ. +ಆದರೆ ವಿಶ್ವನಿಗೆ ಇನ್ನೂ ತಿಳಿವಳಿಕೆ ಇಲ್ಲ. ಅವನಿಗಾಗಲಿ ಗಂಡ ಚೆನ್ನಿಗರಾಯನಿಗಾಗಲಿ ಏನೂ ತಿಳಿಸಲಿಲ್ಲ. ಮಕ್ಕಳು ಆರೋಗ್ಯವಾಗಿರಲಿ ರೋಗದಿಂದ ನರಳುತ್ತಿರಲಿ, ಚೆನ್ನಿಗರಾಯರು ಎಂದಿಗೂ ಅವರನ್ನು ವಿಚಾರಿಸುತ್ತಿರಲಿಲ್ಲ. ಆದರೆ ವಿಶ್ವ ಅಕ್ಕಯ್ಯನನ್ನು ಮುಟ್ಟಿ, ಅವಳ ಹೊಟ್ಟೆ ನೋವು ಹೇಗಿದೆ ಎಂದು ವಿಚಾರಿಸಿದ. ಹಾಗೆಯೇ ಅಡಿಗೆ ಮನೆಗೂ ಬಂದ. ಮಗಳು ಮನೆಗೆಲಸ ಮಾಡುವಂತಾದ ಮೇಲೆ, ನಂಜಮ್ಮ ತಾನು ಮುಟ್ಟಾದಾಗ ಮೈಲಿಗೆ ಕೂರುತ್ತಿದ್ದಳು. ಮುಟ್ಟಾದ ಅಕ್ಕಯ್ಯನನ್ನು ಮುಟ್ಟಿಕೊಂಡು ವಿಶ್ವ ಈಗ ಕೋಣೆಗೇ ಬಂದಿದ್ದಾನೆ. ನಂಜಮ್ಮ ಮಡಿ ಸೀರೆ ಸುತ್ತಿಕೊಂಡು ಸಾಲಿಗ್ರಾಮವನ್ನು ತೆಗೆದು ಒಂದು ಮಡಿ ತಾಮ್ರದ ಚೊಂಬಿನಲ್ಲಿಟ್ಟು, ಮೇಲೆ ತೊಲೆಯ ಮೇಲೆ ಇಟ್ಟುಬಿಟ್ಟಳು. ಉಳಿದ ಮಡಿ ಮೈಲಿಗೆಯ ಬಗೆಗೆ ಅವಳಿಗೆ ಹೆದರಿಕೆ ಇರಲಿಲ್ಲ. ಸಾಲಿಗ್ರಾಮದ ಸಹವಾಸ ಎಷ್ಟಾದರೂ ಕಷ್ಟದ್ದೇ. +ರಾಮಣ್ಣ ಹೇಗೂ ಕಂಬನಕೆರೆಗೆ ದಿನವೂ ಹೋಗುತ್ತಾನೆ. ನಂಜಮ್ಮ ಅವನ ಕೈಲಿ ಎಳ್ಳು ತರಿಸಿದಳು. ತಾನೇ ಒಂದು ದಿನ ಕುರುಬರಹಳ್ಳಿಗೆ ಹೋಗಿ, ದೇವರ ಕೆಲಸವೆಂದು ನಾಲ್ಕು ಮನೆಗಳಲ್ಲಿ ಕೇಳಿ ಒಟ್ಟು ಇಪ್ಪತ್ತು ಗಿಟುಕು ಕೊಬ್ಬರಿ ತಂದಳು. ಯಾರಿಗೂ ತಿಳಿಯದಂತೆ ಪಾರ್ವತಿಯನ್ನು ಅಡಿಗೆಮನೆಯಲ್ಲಿ ಕೂರಿಸಿ ಬೆಲ್ಲ ಹಾಕಿದ ಎಳ್ಳಿನ ಚಿಗಳಿ, ಕೊಬ್ಬರಿ ಬೆಲ್ಲ ಮತ್ತು ಮೆಂತ್ಯದ ಹಿಟ್ಟುಗಳನ್ನು ದಿನವೂ ತಿನ್ನಿಸಿದಳು. ಈಗ ಬೆಣ್ಣೆಯ ಧಾರಣೆ ಸೇರಿಗೆ ಹತ್ತು ಆಣೆಯಾಗಿತ್ತು. ಅದನ್ನೂ ರಾಮಣ್ಣ ಗುಟ್ಟಾಗಿ ಕಂಬನಕೆರೆಯಿಂದ ತಂದು ಕೊಡುತ್ತಿದ್ದ. ಅಷ್ಟೇ ಗುಟ್ಟಾಗಿ ನಂಜಮ್ಮ ಮಗಳಿಗೆ ತುಪ್ಪ ತಿನ್ನಿಸುತ್ತಿದ್ದಳು. ಅವಳು ನೆರೆದಿರುವುದನ್ನು ಮುಚ್ಚಿಡಬಹುದು. ಆದರೆ ಈ ಕಾಲದಲ್ಲಿ ಸ್ವಲ್ಪವಾದರೂ ಆರೈಕೆ ಮಾಡದಿದ್ದರೆ ಮುಂದೆ ಹುಡುಗಿಯ ಆರೋಗ್ಯ ಶಕ್ತಿಗಳ ಗತಿ ಏನು?-ಎಂಬ ಯೋಚನೆ ಸದಾ ಅವಳಲ್ಲಿ ಜಾಗೃತವಾಗಿತ್ತು. +ಹೊರಗಿನವರಿಗೆ ಸ್ವಲ್ಪವೂ ಸುಳಿವು ಸಿಕ್ಕದಂತೆ ಹೀಗೆ ಐದು ತಿಂಗಳು ಕಳೆಯಿತು. ಆದರೆ ಪಾರ್ವತಿಯ ಮೈ ಕೈ ಮುಖಗಳಲ್ಲಿಯೂ ಆಗುತ್ತಿದ್ದ ಬದಲಾವಣೆಯು, ಯಾರು ನೋಡಿದರೂ ಇವಳು ದೊಡ್ಡವಳಾಗಿದ್ದಾಳೆ ಎಂದು ತಿಳಿಯುವಂತೆ ಮಾಡುತ್ತಿತ್ತು. ತಾಯಿಯಂತೆಯೇ ಎತ್ತರವಾದ ಮೈಕಟ್ಟು, ಅಗಲವಾದ ಭುಜ, ಮುಖದ ಹುಡುಗಿ. ಬಡತನವೆಂದು ಮಾಡುತ್ತಿದ್ದರೂ ಎಳ್ಳು, ಬೆಲ್ಲ, ಕೊಬ್ಬರಿ ಮೆಂತ್ಯಗಳು ಶರೀರಕ್ಕೆ ಬೀಳುತ್ತಿವೆ. ವಾರಕ್ಕೊಂದು ಸಲ ಎಣ್ಣೆ ನೀರು ಆಗುತ್ತಿದೆ. ಮೊದಲಿನಂತೆ ಈಗ ಬಿಸಿಲಿನಲ್ಲಿ ಸೊಪ್ಪಿನ ಮಡಿಗೆ ಸಹ ಹೋಗುತ್ತಿಲ್ಲ. ಮೈ ಮುಖದ ಬಣ್ಣವೂ ಬೆಳ್ಳಗಾಗಿದೆ. ಅವಳ ಈ ರೂಪವನ್ನು ಮುಚ್ಚಿಡುವುದು ಹೇಗೆ? ಅಥವಾ, ಒಳಗೇ ಮಾಡುತ್ತಿದ್ದ ಆರೈಕೆಯನ್ನು ನಿಲ್ಲಿಸಿಬಿಟ್ಟರೆ ಮುಂದೆ ಹುಡುಗಿಯ ಶರೀರಶಕ್ತಿ ಉಳಿಯುವುದಿಲ್ಲ. ನಂಜಮ್ಮನಿಗೆ ಉಭಯಸಂಕಟ. ಮಗಳ ಆರೋಗ್ಯಯುತ ಮೈಕಟ್ಟನ್ನು ನೋಡಿ ಒಂದು ನಿಮಿಷ ಸಂತೋಷವೆನಿಸಿದರೆ ಅದೇ ಕ್ಷಣದಲ್ಲಿ ತಮ್ಮ ಸ್ಥಿತಿಯ ಅರಿವಾಗಿ, ‘ಇವಳಿಗೆ ನಿಜವಾಗಿಯೂ ಮದುವೆಯಾಗುತ್ತದಯೇ? ನಮ್ಮ ಮರ್ಯಾದೆ ಉಳಿಯುತ್ತದೆಯೇ’-ಎಂಬ ಯೋಚನೆಯಿಂದ ಮನಸ್ಸು ಭಾರವಾಗುವುದು. +ಪಾರ್ವತಿ ಸೂಕ್ಷ್ಮಬುದ್ಧಿಯ ಹುಡುಗಿ. ತಾಯಿಯ ಮನದ ಸಮಸ್ಯೆ ಅವಳಿಗೂ ಪೂರ್ತಿಯಾಗಿ ಗೊತ್ತು. ಅದು ತನ್ನ ಜೀವನದ್ದೇ ಸಮಸ್ಯೆ. ತನ್ನ ಮದುವೆಯಂತೂ ಆಗಬೇಕು. ಹಿಂದಿನ ಕಾಲದಲ್ಲಿ ಮದುವೆಗೆ ಮೊದಲು ಹುಡುಗಿಯರು ಮೈನೆರೆದರೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟುಬಿಡುತ್ತಿದ್ದರಂತೆ. ಹೇಗೋ ಅಮ್ಮ ಮದುವೆ ಮಾಡುತ್ತಾಳೆ. ಆದರೆ ಎಂತಹ ಗಂಡು ಸಿಕ್ಕುತ್ತೆ? ತನ್ನ ತಂದೆಯಂಥದೇ, ಚಿಕ್ಕಪ್ಪನಂಥದೇ, ಸೋದರಮಾವ ಕಲ್ಲೇಶಜೋಯಿಸರಂಥದೇ? ರೇವಣ್ಣಶೆಟ್ಟಿ, ಶಿವೇಗೌಡ-ಆ ಊರಿನಲ್ಲಿ ಯಾರನ್ನು ಕುರಿತು ಯೋಚಿಸಿದರೂ ಅಂತಹ ಗಂಡ ತನಗೆ ಬೇಡವೆಂದು ಅವಳ ಮನಸ್ಸು ಹೇಳುತ್ತಿತ್ತು. ಇಂಥದು ಬೇಕು, ಇಂಥದು ಬೇಡ ಎಂದು ತಾನೇನೋ ಅಮ್ಮನ ಕೈಲಿ ಹೇಳಬಹುದು ಆದರೆ ತನ್ನ ಇಷ್ಟದಂತೆಯೇ ಗಂಡು ಹುಡುಕಿ ಮಾಡುವ ಶಕ್ತಿ ತಮಗಿಲ್ಲವೆಂಬ ಅರಿವು ಅವಳಲ್ಲಿ ಸದಾ ಇರುತ್ತಿತ್ತು. ತಾನು ಹುಟ್ಟದಿದ್ದರೇ ಚನ್ನಾಗಿತ್ತು. ಈಗಲೂ ಸತ್ತುಹೋದರೆ ಒಂದು ಥರಕ್ಕೆ ಚನ್ನ. ಸಾಯುವುದು ಎಂದರೆ ಅಮ್ಮ, ರಾಮಣ್ಣ, ವಿಶ್ವರನ್ನು ಬಿಟ್ಟು ಹೊರಟುಹೋಗುವುದು-ಎಂಬ ಅರಿವಾಗಿ, ಸಾಯುವ ವಿಚಾರ ಅವಳ ಮನಸ್ಸಿನಿಂದ ಹೊರಟುಹೋಯಿತು. ಎಂಥ ಗಂಡು ಸಿಕ್ಕಿದರೂ ಸರಿ. ಸಂಸಾರ ಮಾಡಲೇಬೇಕು. ಅಮ್ಮ ಮಾಡುತ್ತಿಲ್ಲವೇ, ಹಾಗೆ. ಅದೃಷ್ಟ ಚನ್ನಾಗಿದ್ದರೆ ಒಳ್ಳೆಯವರೂ ಸಿಕ್ಕಬಹುದು. ಈ ಊರು ಸ್ಕೂಲು ಮೇಷ್ಟರು ವೆಂಕಟೇಶಯ್ಯನವರು ಹೆಂಡ್ತೀನ ಹೊಡೆಯಲ್ಲ, ಬಡಿಯಲ್ಲ. ಹೊಗೆಸೊಪ್ಪು, ಬೀಡಿ ಯಾವ ಅಭ್ಯಾಸವೂ ಇಲ್ಲ. ಬಾಯಲ್ಲಿ ಕೆಟ್ಟ ಮಾತೇ ಬರುಲ್ಲ. ಅಂಥೋರು ಸಿಕ್ಕಿದರೆ ಸಾಕು-ಎಂಬ ಹಲವಾರು ಯೋಚನೆ ಆಶೆಗಳು ಮನಸ್ಸನ್ನು ಒಳಗೇ ಕೊರೆಯುತ್ತಿದ್ದವು. +ಒಂದು ದಿನ ಸಂಜೆ ಮನೆಗೆ ಬಂದ ಚೆನ್ನಿಗರಾಯರು ಹೆಂಡತಿಯನ್ನು ಕೇಳಿದರು: ‘ಪಾರ್ವತಿ ಮೈ ಗಿಯ್ ನೆರೆದಿದಾಳೇನೇ?’ +ಈ ಮಾತು ಕೇಳಿದಾಗ ಪಾರ್ವತಿ ಎದುರಿಗೇ ಇದ್ದಳು. ನಂಜಮ್ಮನಿಗೆ ರೇಗಿತು. ಅವಳು ಎಂದಳು: ‘ನಿಮಗೇನು ಬುದ್ಧಿ ನ್ಯಟ್ಟಗಿದೆಯೋ ಇಲ್ವೋ? ಯಾರು ಹಾಗಂದ್ರು?’ +‘ಯಾಕ್ ನಿನ್ಮಗಳು ಇತ್ತೀಚೆಗೆ ಸೊಪ್ಪಿನ ಹಿತ್ಲಿಗೆ ಬರೂದೇ ಇಲ್ಲ? ಯಾವಾಗ್ಲೂ ಮನ್ಲೇ ಇರ್ತಾಳೆ. ಮೈ ಗಿಯ್ ನೆರೆದಿದಾಳೆ ಏನೋ ಅಂತ ಅಣ್ಣಾಜೋಯಿಸ್ರು ಕೇಳಿದ್ರು.’ +‘ಅದಕ್ಕೆ ನೀವೇನಂದ್ರಿ?’ +‘ನಂಗೊತ್ತಿಲ್ಲ. ನಮ್ಮನ್ಲಿ ಇವ್ಳುನ್ನ ಕೇಳ್ತೀನಿ ಅಂದೆ.’ +‘ಇಲ್ಲ ಅನ್ನುಕ್ಕೆ ನಿಮಗೇನಾಗಿತ್ತು?’ +‘ನಂಗೇನು ಗೊತ್ತೆ ಅದೆಲ್ಲ’-ಎಂದು ಸಿಟ್ಟನ್ನೇ ತೋರಿಸಿದರು. +‘ಇನ್ನೂ ಇಲ್ಲ. ಈಗ ಮನ್ಲಿ ಎಲೆ ಹಚ್ಚುವ ಕೆಲ್ಸವೇ ಅವ್ಳಿಗೆ ಆಗುತ್ತೆ ಅಂತ ಹೇಳಿ’-ಎಂದು ನಂಜಮ್ಮ ಉಪಾಯವಾಗಿ ಹೇಳಿದಳು. ಅಲ್ಲಿಗೆ ಪಾರ್ವತಿ ಅಪ್ಪ ಸುಮ್ಮನಾದರು. +ಎಂದರೆ ಊರಿನ ಇತರ ಬ್ರಾಹ್ಮಣರುಗಳಿಗೆ ಆಗಲೇ ಅನುಮಾನ ಬಂದಿದೆ. ಎಷ್ಟೇ ಗುಟ್ಟಿನಿಂದ ಇದ್ದರೂ ಇಂಥ ವಿಷಯವನ್ನು ಹೆಚ್ಚು ದಿನ ಮುಚ್ಚಿಡುವುದು ಕಷ್ಟ. ಬಳ್ಳಿಯಲ್ಲಿ ಮಲ್ಲಿಗೆಯ ಮೊಗ್ಗು ಬಿರಿಯುವಾಗ ಅದನ್ನು ಎಷ್ಟು ಮುಚ್ಚಿದರೂ ಎಲ್ಲರಿಗೂ ಗೊತ್ತಾಗುವ ಹಾಗೆ, ದೊಡ್ಡವಳಾಗಿ ಸ್ವಲ್ಪ ಆರೈಕೆ ಮಾಡಿಸಿಕೊಳ್ಳುವ ಹುಡುಗಿಯ ವಿಷಯವೂ ತಿಳಿದುಬಿಡುತ್ತದೆ. +– ೩ – +ಇದಾದ ಎರಡನೆಯ ದಿನ ಮಧ್ಯಾಹ್ನ ಅವರ ಮನೆಯ ಮುಂದೆ ಒಂದು ಕಮಾನು ಗಾಡಿ ಬಂದು ನಿಂತಿತು. ಎತ್ತಿನ ಕೊರಳಿಗೆ ಗಂಟೆಸರ ಕಟ್ಟಿದ್ದ ಅದರ ನೊಗ ಇಳುಕುವ ಮೊದಲೇ ಹಿಂಭಾಗದಿಂದ ಯಾರೋ ಒಬ್ಬ ಎತ್ತರವಾದ, ತುಂಬಿದ ಮೈಕಟ್ಟಿನ ವ್ಯಕ್ತಿ ಇಳಿದರು. ಹಣೆಗೆ ತ್ರಿಪುಂಡ್ರ ಕೊರಳಿಗೆ ಜಪದ ಸರಗಳನ್ನು ಧರಿಸಿದ್ದ ಅವರನ್ನು ಪಾರ್ವತಿ ಈ ಮೊದಲು ನೋಡಿರಲಿಲ್ಲ. ಆದರೆ ನೊಗ ಇಳುಕಿದ ಮೇಲೆ ಅಕ್ಕಮ್ಮ ಇಳಿದಳು. ಅಕ್ಕಮ್ಮ ಇಲ್ಲಿಗೆ ಬಂದು ಆಗಲೇ ನಾಲ್ಕು ವರ್ಷದ ಮೇಲೆ ಆಗಿತ್ತು. ಈಗ ಅವಳ ಬೆನ್ನು ಮೊದಲಿಗಿಂತ ಗೂನು ಬಿದ್ದಿದೆ. ‘ಅಮ್ಮಾ, ಅಕ್ಕಮ್ಮ ಬಂದಳು’-ಎಂದು ಒಳಗೆ ತಿರುಗಿ ಪಾರ್ವತಿ ಹೇಳಿದ ತಕ್ಷಣ ನಂಜ ಎದ್ದು ಓಡಿಬಂದಳು. ಎದುರಿಗೆ ನೋಡಿದರೆ ತನ್ನ ತಂದೆ. +‘ನಂಜಾ, ಆಗ ನೋಡಿದುದಕ್ಕೂ ಈಗ್ಗೂ ನೀನು ತುಂಬ ಬಡವಾಗಿದೀಯ. ಇವಳೇ ಏನು ಅಲ್ಲಿ ಹುಟ್ಟಿದೋಳು?’-ಅವರು ಕೇಳಿದರು. +ತಮ್ಮ ಅಜ್ಜಯ್ಯನ ಬಗೆಗೆ ಪಾರ್ವತಿ ಆದಿಯಾಗಿ ಎಲ್ಲ ಹುಡುಗರೂ ಕೇಳಿದ್ದರು. ಈಗ +ಅವರನ್ನು ನೋಡುವ ಯೋಗವಾಯಿತು. ಅಕ್ಕಮ್ಮ ಕೋಡುಬಳೆ ಚಕ್ಕುಲಿಗಳನ್ನೆಲ್ಲ ತಂದಿದ್ದಳು. ಅಜ್ಜಯ್ಯ ಮಗಳಿಗೆ ಮೊಮ್ಮಗಳಿಗೆ ಸೀರೆ, ಉಳಿದ ಗಂಡು ಹುಡುಗರಿಗೆ ಅಂಗಿ ಚಡ್ಡಿಗಳನ್ನು ಹೊಲಿಸಿ ತಂದಿದ್ದರು. ಜೊತೆಗೆ ಒಂದು ಥಾಲಿ ಕಾಶಿಗಂಗೆ. ಸ್ಕೂಲಿನಿಂದ ಬಂದ ವಿಶ್ವನಿಗೆ ಸಂಭ್ರಮವೋ ಸಂಭ್ರಮ. +‘ಅಪ್ಪಾ, ನೀನು ದೇಶ ಬಿಟ್ಟು ಹೋಗಿ ಹನ್ನೆರಡು ತುಂಬಿ ಹದಿಮೂರು ವರ್ಷವಾಯ್ತಲ್ಲವೆ? ಮೊದಲು ಒಂದು ದೇವಸ್ಥಾನಕ್ಕೆ ಬಂದು ನಮ್ಮುನ್ನ ಅಲ್ಲಿಗೆ ಕರ್‍ಸಬಾರದಾಗಿತ್ತೆ?’ +‘ಕಾಶಿಗೆ ಹೋಗಿದ್ದೋರಿಗೆ ಅದೆಲ್ಲ ಏನಿಲ್ಲ. ಜೊತೇಲಿ ಗಂಗೇನೂ ತಂದಿದೀನಿ.’ +ಅವರು ಹೇಳದೆ ಕೇಳದೆ ಇಷ್ಟು ವರ್ಷ ಕಾಶಿಗೆ ಯಾಕೆ ಹೋದರು?-ಎಂಬ ಪ್ರಶ್ನೆ ಬಂದಾಗ ಕಂಠೀಜೋಯಿಸರು ಸರಿಯಾಗಿ ಉತ್ತರ ಹೇಳಲಿಲ್ಲ. ‘ಏನೋ ವಿಶ್ವೇಶ್ವರನ ಸನ್ನಿಧಾನದಲ್ಲಿ ಹೋಗಿ ಇರಬೇಕು ಅಂತ ಮನಸ್ಸಾಯ್ತು. ಹೋಗಿಬಿಟ್ಟೆ. ನಂಗೆ ಎಲ್ಲಿದ್ದರೇನು?’-ಎಂದರು. ಅಕ್ಕಮ್ಮ ಆ ದಿನವೆಲ್ಲ ಮೊಮ್ಮಗಳಿಗೆ ಊರಿನ ವಿದ್ಯಮಾನಗಳನ್ನು ಹೇಳುತ್ತಿದ್ದಳು. ಕಂಠೀಜೋಯಿಸರು ಊರಿನ ಜೋಯಿಸರಿಬ್ಬರ ಮನೆಗೂ ಹೋಗಿ ಅವರ ಸಂಗಡ ತಮ್ಮ ಕಾಶಿಯ ಹನ್ನೆರಡು ವರ್ಷದ ಅನುಭವವನ್ನು ಹೇಳಿ, ತಾಂಬೂಲ ತೆಂಗಿನಕಾಯಿಗಳನ್ನು ಪಡೆದು ಬಂದರು. +ಅವರಿಬ್ಬರೂ ಈಗ ಬಂದಿರುವ ಕಾರಣವನ್ನು ಅಕ್ಕಮ್ಮನೇ ಪ್ರಸ್ತಾಪ ಮಾಡಿದಳು. ‘ಆ ಗೊಡ್ಡು ಮುಂಡೆ ಹ್ವಟ್ಟೇಲಿ ಮಕ್ಕಳಂತೂ ಆಗುಲ್ಲ. ಮದುವೆಯಾಗಿ ಹದಿನಾರು ವರ್ಷ ಆಯ್ತಲ್ಲ. ಅದರ ಯೋಗ್ತಿಯೂ ಹೀಗಿದೆ. ವಂಶ ನಿಂತುಹೋದ್ರೆ ನಮಗೆ ಪಿಂಡ ಹಾಕೋರು ಯಾರು? ಕಲ್ಲೇಶುಂಗೆ ಬ್ಯಾರೆ ಮದುವೆ ಮಾಡ್‌ಬೇಕು ಅಂತ ತೀರ್ಮಾನ ಮಾಡಿದೀವಿ.’ +‘ಅದುಕ್ಕೆ ಅಣ್ಣಯ್ಯ ಒಪ್ಪಿದಾನೆಯೇ?’ +‘ಹೂಂ. ಒಪ್ಪದೇ ಯಾಕಿದ್ದಾನು? ಅವ್ನೇ ನಮ್ಮಿಬ್ರುನ್ನೂ ಎತ್ತು ಗಾಡಿ ಮಾಡಿ ಕಳಿಸಿಕೊಟ್ಟ.’ +‘ಅದುಕ್ಕೆ ನಾನೇನು ಹೇಳ್ಲಿ? ನಂಗೇನು ತಿಳಿಯುತ್ತೆ?’ +‘ಪಾರ್ವತೀನ ಕೊಟ್ಟುಬಿಡು. ಒಂದು ದಿನದಲ್ಲಿ ಧಾರೆ ಹುಯ್ಸಿಬಿಡಾಣ’-ಅಕ್ಕಮ್ಮ ಹೀಗೆ ಹೇಳಿದಾಗ ಪಾರ್ವತಿ ಎದುರಿಗೇ ಇದ್ದಳು. ಇದನ್ನು ಕೇಳಿದ ಅವಳಿಗೆ ತಕ್ಷಣ ಏನೂ ತಿಳಿಯಲಿಲ್ಲ. ನಂಜಮ್ಮನಿಗೆ ಸಹ ಈ ಅನಿರೀಕ್ಷಿತ, ಅನೂಹ್ಯ ಮಾತಿನಿಂದ ಏನೂ ಅರ್ಥವಾಗಲಿಲ್ಲ. ಅಕ್ಕಮ್ಮನೇ ಮುಂದುವರಿಸಿದಳು: ‘ಕಂಠಿ ಕಾಶಿಯಿಂದ ಮೂರು ಸಾವಿರ ರೂಪಾಯಿ, ಇಪ್ಪತ್ತು ಚಿನ್ನದ ಉಂಗುರ, ಎಲ್ಲಾ ತಂದಿದಾನೆ. ದುಡ್ಡೆಲ್ಲ ನಮ್ಮ ಹುಡುಗಿಗೇ ಆಗುತ್ತೆ. ರಾಣಿ ಹಾಗೆ ಇರ್ತಾಳೆ.’ +“ಅಕ್ಕಮ್ಮ, ಪಾರ್ವತಿಯ ವಯಸ್ಸೆಷ್ಟು, ಅಣ್ಣಯ್ಯನ ವಯಸ್ಸೆಷ್ಟು? ಹೇಳಿ ಕೇಳಿ ಅವನು ಸೋದರಮಾವ, ಇವಳು ಸೋದರಸೊಸೆ. ಅವನಿಗೆ ಗಂಡು ಮಗ ಇದ್ದಿದ್ರೆ ಇವಳನ್ನ ಕೊಡಬೇಕಾಗಿತ್ತು.’ +‘ಗಂಡು ಮಗ ಇದ್ದಿದ್ರೆ ಬ್ಯಾರೆ ಮದುವೆ ಯಾಕೆ ಆಗ್ತಿದ್ದ? ಸೋದರಮಾವುನ್ನ ಎಷ್ಟು ಜನ ಮದುವೆ ಮಾಡ್ಕಂಡಿಲ್ಲ? ಅವ್ನಿಗೆ ಯಾವ ಮಹಾ ವಯಸ್ಸು? ಮೂವತ್ತಾರೋ ಮೂವತ್ತೇಳೋ. ಇನ್ನೂ ರಾಜಕುಮಾರನ ಹಾಗೆ ಗಟ್ಟಿಗಟ್ಟಿಯಾಗಿದಾನೆ.’ +‘ಅತ್ತಿಗೆಮ್ಮ ಸುಮ್ನಿರ್ತಾಳೆಯೆ?’ +‘ಸುಮ್ನಿರ್ದೆ ಏನ್ಮಾಡ್ತಾಳೆ? ಇವಳ ಹೊಟ್ಟೇಲಿ ಒಂದು ಮಗು ಆಗ್ಲಿ. ಬೇಕಾದ್ರೆ ಇವ್ಳ ಪಾದಸೇವೆ ಮಾಡ್ಕಂಡಿರ್ತಾಳೆ. ಇಲ್ದೇ ಇದ್ರೆ ಹಳೇಸೀರೆ ಇರುಕ್ಕಂಡು ಅವರಪ್ಪನ ಮನೆಗೆ ಹೋಗ್ತಾಳೆ.’ +ತಕ್ಷಣ ಉಂಟು ಇಲ್ಲ ಎಂದು ಏನು ಹೇಳುವುದಕ್ಕೂ ನಂಜಮ್ಮನಿಗೆ ತಿಳಿಯಲಿಲ್ಲ. ಅವಳ ಮನಸ್ಸಿನಲ್ಲಿ ಗಡಿಬಿಡಿ ಎದ್ದಿತು. ಅಕ್ಕಮ್ಮ ಅಂದಳು: ‘ನೀನೇ ನೋಡಿದೀಯಲ್ಲ, ಊರಲ್ಲಿ ಉಣ್ಣುಕ್ಕೆ ತಿನ್ನೂಕೆ ಏನು ಕಮ್ಮಿ? ಕಲ್ಲೇಶ ಕಷ್ಟಪಟ್ಟು ಜಮೀನು ಮಾಡುಸ್ತಾನೆ. ಅಂಥಾ ಚನ್ನಾದ ಮನೆ. ಕಂಠಿ ಮೂರು ಸಾವಿರ ತಂದಿದಾನೆ. ಬೇಕು ಅಂದ್ರೆ ಅದರಲ್ಲಿ ಬರೀ ಚಿನ್ನ ತಂದು ಇವ್ಳಿಗೆ ಹಾಕ್ತಾನೆ. ಇತ್ಲಾಗೆ ಮೊಮ್ಮಗಳಾದಳು. ಅತ್ಲಾಗೆ ಸೊಸೆಯಾದಳು. ಕಲ್ಲೇಶನ ಹೊಟ್ಟೇಲಿ ಮಕ್ಕಳಾಗದೆ ಸತ್ರೆ ನಂಗಾದ್ರೂ ಹ್ಯಾಗೆ ಸದ್ಗತಿಯಾಗುತ್ತೆ? ಏನೋ ನಿಮ್ಮಮ್ಮನ ಹೊಟ್ಟೇಲಿ ಹುಟ್ಟಿದ್ದುಕ್ಕೆ ನೀವಿಬ್ರು ಉಳ್ಕಂಡ್ರಿ. ನಾನು ಸಾಕಿದೆ. ಈಗ ನಾನೇ ಬಂದು ಕೇಳ್ತಿದೀನಿ. ಅವ್ನೇನು ದೂರವೇನಲ್ಲ ಕೊಟ್ಟುಬಿಡು.’ +ನಂಜಮ್ಮನ ಕರುಳೇನೋ ಕೊರೆಯಿತು. ಆದರೆ ಮನಸ್ಸು ಒಳಗೇ ಇದನ್ನು ಬೇಡವೆನ್ನುತ್ತಿತ್ತು. ಅವಳು ಯಾವ ಮಾತನ್ನೂ ಆಡಲಿಲ್ಲ. ಆ ದಿನ ರಾತ್ರಿ ಊಟವಾದ ಮೇಲೆ ಕಂಠೀಜೋಯಿಸರೇ ಮಗಳೊಡನೆ ಮಾತು ತೆಗೆದಾಗ ಚೆನ್ನಿಗರಾಯರೂ ಇದ್ದರು. ಅವರಿಗೆ ಮಾವನವರೆಂದರೆ ಮೊದಲಿನಿಂದಲೂ ಭಯ. ತಮಗೆ ಶಿವಲಿಂಗನಿಂದ ಶ್ಯಾನುಭೋಗಿಕೆ ಕೊಡಿಸಿದವರೇ ಅವರು. ಅಕ್ಕಮ್ಮ ಮೊಮ್ಮಗಳು ಮರಿಮಗಳಿಗೆ ಹೇಳುವುದನ್ನೆಲ್ಲ ಅವರೂ ಈಗ ಮಾತನಾಡಿ, ಅಳಿಯನ ಕಡೆ ತಿರುಗಿ ಎಂದರು: ‘ಏನಂತೀಯಾ ಚಿನ್ನಯ್ಯ? ಊರಿನಲ್ಲಿ ಅಷ್ಟೊಂದು ಜಮೀನು, ಮನೆ, ಮೇಲೆ ಮೂರುಸಾವಿರ ರೂಪಾಯಿ ನಿನ್ನ ಮಗಳಿಗೇ ಸೇರುತ್ತೆ. ಈಗ ಇನ್ನೊಂದು ಕಡೆ ಗಂಡು ಹುಡುಕಿ ನೀನು ಎಲ್ಲಿ ಅಂತ ಮದುವೆ ಮಾಡ್ತೀಯಾ? ಸುಮ್ಮನೆ ಹೂಂ ಅಂದುಬಿಡು.’ +ಚೆನ್ನಿಗರಾಯರು ಏಕೆ ಬೇಡವೆಂದಾರು? ‘ಆಗ್‌ಭೌದು. ಈ ಮುಂ….’ಎಂದವರು ನಾಲಿಗೆಯನ್ನು ಬಿಗಿ ಹಿಡಿದುಕೊಂಡು ಹೇಳಿದರು: ‘ಇ ಇ ಇವ್ಳಿಗೆ ನೀವೇ ಹೇಳಿ. ನಂದೇನೂ ಇಲ್ಲ.’ +‘ನಿನ್ನ ಗಂಡನೂ ಒಪ್ಕಂಡಿದಾನೆ. ಏನಂತೀಯಾ ನಂಜಾ?’ +ನಂಜಮ್ಮನಿಗೆ ಈಗಲೂ ಏನು ಹೇಳಬೇಕೆಂಬುದು ತಿಳಿಯಲಿಲ್ಲ. ‘ಇರ್‍ಲಿ, ನಾಳೆ ಯೋಚನೆ ಮಾಡಿ ಮಾತಾಡಾಣ’-ಎಂದಳು. +‘ಯೋಚನೆ ಮಾಡೂದೇನು ಅದರಲ್ಲಿ? ನಾವೆಲ್ಲ ಒಪ್ಪಿದಮ್ಯಾಲೆ ನಿಶ್ಚಯವಾದ ಹಾಗೇ. ಊರಿಗೆ ಹೋಗಿ ಎಲ್ಲಾ ಮಾಡುಸ್ತೀನಿ. ಇನ್ನು ಎಂಟು ದಿನದಲ್ಲಿ ಮದುವೆ ಮುಗಿಸ್ಬಿಡ್ತೀನಿ’-ಕಂಠೀಜೋಯಿಸರು ತೀರ್ಮಾನವನ್ನೇ ಹೇಳಿಬಿಟ್ಟರು. +‘ನೀವು ಹ್ಯಾಗೂ ಒಂದು ನಾಕು ದಿನ ಇರ್ತೀರಲ್ಲ, ಮಾತಾಡಾಣ.’ +‘ಈಗ ಇದುಕ್ಕೆ ಬಿಡುವೇ ಇಲ್ಲ. ಊರಿಗೆ ಹೋಗಿ ಮದುವೆ ಸಾಮಾನು ಗೀಮಾನು ಮಾಡಬೇಕು. ನೀನು ಒಂದು ಕಾಸು ಖರ್ಚೂ ಇಟ್ಟುಕೋಬ್ಯಾಡ’-ಅಕ್ಕಮ್ಮ ಎಂದಳು. +ಅಕ್ಕಮ್ಮನಿಗೆ ಉಪ್ಪಿಟ್ಟಿನ ಫಲಾರ ಮತ್ತು ಉಳಿದವರಿಗೆ ಊಟವಾದ ಮೆಲೆ ಎಲ್ಲರೂ ಮಲಗಿದರು. ಬಂದಿದ್ದ ಇಬ್ಬರಿಗೂ ಬೇಗ ನಿದ್ದೆ ಬಂದುಬಿಟ್ಟಿತು. ಚೆನ್ನಿಗರಾಯರು ಗೊರಕೆ ಹೊಡೆಯುತ್ತಿದ್ದರು. ಹುಡುಗರೂ ಮಲಗಿಕೊಂಡರು. ಅಕ್ಕಮ್ಮನ ಹತ್ತಿರ ಮಲಗಿದ ನಂಜುವಿನ ಕಣ್ಣು ಮಾತ್ರ ಮುಚ್ಚಲಿಲ್ಲ. ಇದ್ದಕ್ಕಿದ್ದಹಾಗೆಯೇ ಬಂದ ಈ ಮಾತನ್ನು ಒಪ್ಪಿಕೊಳ್ಳುವ ಅಥವಾ ಬಿಡುವ ಮೊದಲೇ ಅವರು ತೀರ್ಮಾನವೇ ಮಾಡಿಬಿಟ್ಟಿದ್ದಾರೆ. ಅವರು ಹೇಳುವ ಹಾಗೆ ನಾಗಲಾಪುರದಲ್ಲಿ ಉಣ್ಣುವುದಕ್ಕೆ ತಿನ್ನುವುದಕ್ಕೆ ಯಾವ ತೊಂದರೆಯೂ ಇಲ್ಲ. ಕರಾವಿಲ್ಲದೆ ಅವರು ಎಂದೂ ಊಟ ಮಾಡುವುದಿಲ್ಲ. ವರ್ಷಕ್ಕಾಗಿ ಉಳಿಯುವಷ್ಟು ರಾಗಿ ಬತ್ತ ಭರಣ ಬೆಳೆಯುತ್ತಾರೆ. ಮೇಲೆ ಮೂರು ಸಾವಿರ ಇವಳಿಗೇ ಬರುತ್ತೆ. ಮೂರು ಸಾವಿರ ಎಂದರೆ ಕಮ್ಮಿ ಹಣವಲ್ಲ. ಅಷ್ಟು ರೂಪಾಯಿಯನ್ನೂ ಒಟ್ಟಿಗೆ ತಾವು ಕೈಲಿ ಸಹ ಮುಟ್ಟಿ ಕಂಡಿಲ್ಲ. ನಮ್ಮ ಹುಡುಗಿ ಇಲ್ಲಿ ಹುಟ್ಟಿದ ಮೇಲೆ ಇದುವರೆಗೂ ಅನುಭವಿಸಿರುವ ಸುಖವಾದರೂ ಏನು? ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ-ಎಂಬ ಯೋಚನೆ ಸ್ವಲ್ಪ ಹೊತ್ತು ಅವಳ ಮನಸ್ಸಿನಲ್ಲಿತ್ತು. ಆದರೆ ಈ ಮಹಾಮಾರಿ ಮೊದಲ ಹೆಂಡತಿ ಇರುವಾಗ, ಅದೂ ತನ್ನ ಅಣ್ಣನಿಗೇ, ಹೆಣ್ಣು ಕೊಡಬಹುದೇ?-ಎಂಬ ಪ್ರಶ್ನೆ ತಾನಾಗಿಯೇ ಸುಳಿಯಿತು. ಅಣ್ಣಯ್ಯ ತನಗಿಂತ ಏಳು ವರ್ಷಕ್ಕೆ ದೊಡ್ಡವನು ಅಂದರೆ ಪಾರ್ವತಿಗೂ ಅವನಿಗೂ ಇಪ್ಪತ್ತೆರಡು ವರ್ಷ ವ್ಯತ್ಯಾಸ. ಮೂವತ್ತು ವರ್ಷ ವ್ಯತ್ಯಾಸವಿದ್ದು ಎರಡನೇ, ಮೂರನೇ, ಮದುವೆ ಮಾಡಿಕೊಂಡವರನ್ನು ಅವಳು ಕಾಣದೆ ಇರಲಿಲ್ಲ. ಮಕ್ಕಳಿಲ್ಲದ್ದಕ್ಕೆ ಹಿರಿಯಳಿರುವಾಗಲೂ ಕಿರಿಯ ಒಬ್ಬಳನ್ನು ತರುವುದೂ ಅಪರೂಪವಲ್ಲ. ಆದರೆ ಅಣ್ಣಯ್ಯನಿಗೆ ಮಕ್ಕಳು ಯಾಕೆ ಆಗಿಲ್ಲ? ಅವನ ಹೊರಚಾಳಿಯಿಂದಲೇ ಆಗಿಲ್ಲವೋ, ಅಥವಾ ಅವಳೇ ಗೊಡ್ಡು ಹೆಂಗಸೋ? ಅವಳೇನೋ ಕಿರಾತಕ ಜಾತಿಯ ಹೆಂಗಸು. ಆದರೆ ಇವನಿಗೆ ಕೊಟ್ಟರೆ ನನ್ನ ಮಗು ಸುಖವಾಗಿರುತ್ತದೆಯೇ? +ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ನಾಳೆ ಬೆಳಿಗ್ಗೆ ಎದ್ದ ತಕ್ಷಣ ಅಕ್ಕಮ್ಮ, ಅಪ್ಪ, ಇಬ್ಬರಿಗೂ ಅವಳು ಸ್ಪಷ್ಟವಾಗಿ ಹೇಳಬೇಕು. ಇಂಥ ಪರಿಸ್ಥಿತಿಯಲ್ಲಿ ಯಾರ ಜೊತೆ ಕಷ್ಟ ಸುಖ ವಿಚಾರ ಮಾಡಿ ಆಲೋಚನೆ ಮಾಡುವುದು? ಮನೆ ತುಂಬ ದಿನಸಿ ಧಾನ್ಯ, ಮೇಲೆ ಮೂರು ಸಾವಿರ ರೂಪಾಯಿ ಅಂದ ತಕ್ಷಣ ಹುಡುಗಿಯ ಅಪ್ಪ ಅನ್ನಿಸಿಕೊಂಡ ಪ್ರಾಣಿ ಬಾಯಿ ಬಿಟ್ಟೇಬಿಟ್ಟಿತು. ಮಕ್ಕಳ ಮದುವೆಗೆ ತಂದೆ ತಾಯಿ ಇಬ್ಬರೂ ಕೂಡಿ ಆಲೋಚಿಸಬೇಕು. ಇಲ್ಲದ ಈ ಭಾಗ್ಯವನ್ನು ಬಯಸಿ ಸುಮ್ಮಸುಮ್ಮನೆ ಮನಸ್ಸಿಗೆ ವ್ಯಥೆ ಮಾಡಿಕೊಳ್ಳುವುದು ಯಾಕೆ? ಇದ್ದಕ್ಕಿದ್ದಹಾಗೆಯೇ ಮಾದೇವಯ್ಯನವರ ನೆನಪಾಯಿತು. ಅವರನ್ನು ಕೇಳಿ ನಿಶ್ಚಯ ಮಾಡುವುದೇ ವಿವೇಕವೆಂದು ಯೋಚಿಸಿ ಅವಳು, ಮೆಲ್ಲನೆ ಮಲಗಿದ್ದಲ್ಲಿಂದ ಎದ್ದು ಕತ್ತಲೆಯಲ್ಲಿಯೇ ಹೊರಗೆ ಬಂದಳು. ಶಬ್ಧವಾಗದಂತೆ ಬಾಗಿಲು ಹಾಕಿಕೊಳ್ಳುತ್ತಿರುವಾಗ ಅವಳ ಹಿಂದೆಯೇ ಪಾರ್ವತಿಯೂ ಬಂದುದನ್ನು ಕಂಡ ಅವಳಿಗೆ ಹೆಚ್ಚು ಆಶ್ಚರ್ಯವೆನಿಸಲಿಲ್ಲ. ಶಬ್ದ ಮಾಡಬೇಡವೆಂದು ಅವಳಿಗೆ ಸನ್ನೆಮಾಡಿ, ಮೆಲ್ಲಗೆ ಬಾಗಿಲು ಮುಚ್ಚಿ ಮುಂದೆ ನಡೆದಳು. ಹಿಂದೆಯೇ ಪಾರ್ವತಿ ಬಂದಳು. +ಗುಡಿಗೆ ಬಂದು ಅಯ್ಯನವರನ್ನು ಎಬ್ಬಿಸಿ, ಅವರು ದೀಪ ಹಚ್ಚಿದಾಗ ಪಾರ್ವತಿಯ ಕಣ್ಣಿನಲ್ಲಿ ನೀರು ಹರಿಯುತ್ತಿದ್ದುದು ಅದರ ಬೆಳಕಿನಲ್ಲಿ ಕಂಡಿತು. ಅಯ್ಯನವರೇ ಅಂದರು: ‘ಏನವ್ವಾ, ಸ್ವಾದರಮಾವನ್ನ ಮದುವೆಯಾಗಾದು ವಲ್ಲೆ ಅಂತ ಅಳ್ತಿದೀಯಾ?’ +‘ನಿಮಗೆ ಇದೆಲ್ಲ ಹ್ಯಾಗೆ ಗೊತ್ತು ಅಯ್ನೋರೇ?’-ನಂಜಮ್ಮ ಕೇಳಿದಳು. +‘ಸಂಜೀನಾಗ ನಿಮ್ಮ ಅಪ್ಪಾಜಿ ಬಂದಿತ್ತು. ನನ್ನ ಕುಟ್ಟೆ ಎಲ್ಲಾನೂ ಹೇಳ್ತು. ನೀ ಏನಂತ ಯೋಚ್ನೆ ಮಾಡೀಯಾ?’ +‘ನಂಗೆ ಏನೂ ತಿಳಿಯಲಿಲ್ಲ ಅಂತ ಇಲ್ಲಿಗೆ ಬಂದೆ.’ +ಅಷ್ಟರಲ್ಲಿ ರಾಮಣ್ಣ ಅಲ್ಲಿಗೆ ಬಂದು ಸೇರಿಕೊಂಡ. ‘ಮನೇನ ಹಾಗೇ ಬಿಟ್ಟು ನೀನ್ಯಾಕೆ ಬಂದೆ?-ಎಂದು ಅಮ್ಮ ಕೇಳಿದಳು. +‘ಹೊರಗಡೆಯಿಂದ ಮೆಲ್ಲಗೆ ಬೀಗ ಹಾಕ್ಕಂಡು ಬಂದಿದೀನಿ. ನನಗೂ ನಿದ್ದೆ ಬಂದಿರಲಿಲ್ಲ. ನೀವು ಇಲ್ಲಿಗೇ ಬಂದಿದೀರಾ ಅಂತ ಗೊತ್ತಾಯ್ತು’-ಎಂದು ಅವನು ಬೀಗದ ಕೈ ತೋರಿಸಿದ. +‘ಅಕ್ಕಯ್ಯನ ಮದುವೆಗೆ ಏನು ಹೇಳ್ತೀಯಪ್ಪಾ?’-ಅಯ್ಯನವರು ಕೇಳಿದರು. +‘ಬ್ಯಾಡ ಕಣ್ರೀ ಅಯ್ನೋರೇ, ಕಲ್ಲೇಶಮಾವ ನರಸೀ ಮನೆಗೆ….’-ಎಂದು ಹೇಳುತ್ತಿದ್ದವನು, ಆ ಮಾತನ್ನು ದೊಡ್ಡವರೆದುರು ಆಡಬಾರದೆಂದು ತಕ್ಷಣ ನಿಲ್ಲಿಸಿ, ‘ಅವ್ನಿಗೆ ಕೊಡೂದು ಬ್ಯಾಡ ಕಣ್ರೀ’ ಎಂದ. +ಅಯ್ಯನವರೆಂದರು: ‘ನೋಡವ್ವ, ನಿನ್ನ ಮನಸ್ನಲ್ಲಿರೋದ್ನೇ ನಾನೂ ಅಂತೀನಿ. ಅಣ್ಣ ಅಂತ ಹೆಣ್ಣು ಕೊಡಬ್ಯಾಡ. ನನ್ನ ಕೇಳಿದ್ರೆ ಈ ಸುತ್ನಲ್ಲೇ ಯಾರೂ ಬ್ಯಾಡ. ವಿವೇಕವಾಗಿರೋರು ಯಾರವ್ರೆ? ಸರ್ಕಾರಿ ಕೆಲ್ಸದಾಗಿರೋರೇ ವೈನವಾದ ಗಂಡುಗಳು. ಏನೇ ಕಷ್ಟ ಬಿದ್ರೂ ಒಬ್ರು ಇಸ್ಕೂಲು ಮೇಷ್ಟ್ರಂಥೋರಿಗೆ ಕೊಡು. ಮರ್ಯಾದೆಯಾಗಿರ್ತಾರೆ. ಉಳಿದೋರೆಲ್ಲ ತಲೆಹೋಕಗಳು.’ +ಪಾರ್ವತಿಯ ಮನಸ್ಸಿನಲ್ಲಿದ್ದುದನ್ನೆ ಅಯ್ಯನವರು ಹೇಳಿದರು. ಅವರ ಮಾತು ಸಾಧುವಾದುದೆಂದು ನಂಜಮ್ಮನಿಗೆ ತೋರಿತು. ‘ಆದರೆ’-ಅವಳು ಧ್ವನಿ ತಗ್ಗಿಸಿ ಹೇಳಿದಳು. ‘ಹುಡುಗಿ ವಯಸ್ಸು ನೋಡಿ. ದೊಡ್ಡೋಳಾಗಿಬಿಟ್ರೆ ಮುಂದೆ ಗತಿ?’ +‘ಈಗ ದೊಡ್ಡ ಊರುಗಳಲ್ಲಿ ಅದೆಲ್ಲ ಇಲ್ವಂತೆ. ಅಂತಾ ಊರಲ್ಲೇ ಯಾರಿಗಾದ್ರೂ ನೋಡಿ ಕೊಡಿ. ಈಗೇನು, ಹ್ಯಂಗೂ ಸರ್ಕಾರೀ ದಿನಸಿ ಲೆಕ್ಕ ಕೈಯಾಗೈತೆ. ನಿಮ್ಮ ಶ್ಯಾನುಭೋಕಿ ಹಳ್ಳೀಲಿ ಚಂದಾ ಎತ್ತಿದ್ರೆ ಒಂದೈನೂರು ಆರುನೂರು ಏನೂ ಕಷ್ಟದ ಗಂಟಲ್ಲ. +‘ದೊಡ್ಡ ಊರ್ನಲ್ಲಿ ತುಂಬ ವರದಕ್ಷಿಣೆ ಕೇಳ್ತಾರಂತೆ ಕಣ್ರೀ ಅಯ್ನೋರೇ. ನಾನು ಹೆಣ್ಣುಮಗಳ ಮದ್ವೆ ಮಾಡಿ ಗೆಲ್ತೀನೇ ಅನ್ಸಿದೆ.’ +‘ಅಮ್ಮ, ನಾನು ಹ್ಯಾಗೂ ಮುಂದ್ಲ ಕ್ಲಾಸಿನಲ್ಲಿದೀನಲ್ಲ. ಅಕ್ಕಯ್ಯಂಗೆ ಪಾಠ ಹೇಳ್ಕೊಡ್ತೀನಿ. ಅವ್ಳಿಗೂ ಲೋಯರ್ ಸೆಕೆಂಡರಿ ಪ್ರೈವೇಟ್‌ನಲ್ಲಿ ಮಾಡಿಸಿಬಿಟ್ರೆ ಸ್ಕೂಲು ಮೇಡಂ ಮಾಡಿಸ್‌ಭೌದು. ಮದುವೆಯಾಗದೆ ಇದ್ರೆ ಕತ್ತೆಬಾಲ ಕುದುರೆಜುಟ್ಟು’-ರಾಮಣ್ಣ ಎಂದ. +‘ಅದ ಆಮ್ಯಾಲೆ ನೋಡ್ಕಳಾಣ. ಬೇಕಾದ್ರೆ ಮೇಷ್ಟ್ರು ಯಂಕ್‌ಟೇಶಯ್ನೋರುನ್ನ ಒಂದು ಮಾತು ಕೇಳಿ. ಆಮ್ಯಾಲೆ ನಿಮ್ಮ ಅಪ್ಪಾಜಿಗೆ ಜವಾಬು ಹೇಳಿ.’ +ಅಮ್ಮ ಹೇಳಿದಂತೆ ರಾಮಣ್ಣ ವೆಂಕಟೇಶಯ್ಯನವರನ್ನು ಕರೆತರಲು ಹೋದ. ‘ಯಾರನ್ನೂ ಎಬ್ಬಿಸಕೂಡದು. ಯಾರಿಗೂ ಗೊತ್ತಾಗಬಾರದು’-ಎಂದು ಅಮ್ಮ ಎಚ್ಚರ ಹೇಳಿದಳು. ಸ್ವಲ್ಪ ಹೊತ್ತಿನಲ್ಲಿ ಮೇಷ್ಟರು ಬಂದರು. ಪಾರ್ವತಿ ಎದ್ದು ಹೋಗಿ ಕಂಬದ ಮರೆಯಲ್ಲಿ ಕುಳಿತಳು. ಇರುವ ಸಂಗತಿಯನ್ನೆಲ್ಲ ನಂಜಮ್ಮ ಬಿಡಿಸಿ ಹೇಳಿದಮೇಲೆ ಮೇಷ್ಟರು ಎಂದರು. ‘ಅಮ್ಮಾ, ಅರಸೀಕೆರೆ ಬಾಣಾವರ ಆ ಕಡೇಲೆಲ್ಲ ಸಣ್ಣ ಊರುಗಳಲ್ಲೇ ಹೆಣ್ಣುಮಕ್ಳು ಮದುವೆಯಾಗೋಕೆ ಮುಂಚೆಯೇ ಮೈನೆರೆದಿರ್ತಾರೆ. ಯಾರೂ ಬಾಯಿ ಬಿಟ್ಟು ಮಾತ್ರ ಹೇಳುಲ್ಲ. ಅದುಕ್ಕೆ ನೀವು ಹೆದುರ್ಕಾಬ್ಯಾಡಿ. ನಾನು ಬೇಕಾದ್ರೆ ಹುಡುಕಿ ಗಂಡು ಗೊತ್ತುಮಾಡ್ತೀನಿ. ಪ್ರೈಮರಿ ಸ್ಕೂಲು ಮೇಷ್ಟ್ರು ಅಂದ್ರೆ ಸಂಬಳ ಕಮ್ಮಿ. ಅಂಥೋರು ಸಿಕ್ತಾರೆ. ನೀವು ದುಡ್ಡು ಜೊತೆ ಮಾಡ್ಕಳಿ. ಐನೂರು ಆರು ನೂರಾದ್ರೆ ಸಾಕು.’ +‘ಮೇಷ್ಟ್ರೇ, ಹುಡುಗನ ಯೋಗ್ತಿ ಚೆನ್ನಾಗಿರಬೇಕು. ಅವಿವೇಕ ಇರಕೂಡದು. ಸಂಬ್ಳ ಕಮ್ಮಿಯಾದ್ರೆ ನಮ್ಮ ಹುಡುಗೀಗೆ ಎಲೆ ಹಚ್ಚೂಕೆ ಬರುಲ್ವೆ? ಮನೇಲಿ ಕೂತು ಅದ್ರಲ್ಲೇ ತಿಂಗ್ಳಿಗೆ ಏನಿಲ್ಲ ಅಂದ್ರೂ ಹದಿನೈದು ರೂಪಾಯಿ ದುಡೀತಾಳೆ.’ +‘ಅದು ನಂಗೆ ಗೊತ್ತಿಲ್ವೆ? ಪಾರ್ವತಮ್ಮನ ಕೈಹಿಡೀಬೇಕಾದ್ರೆ ಯಾವನಾದ್ರೂ ಪುಣ್ಯ ಮಾಡಿರ್‍ಬೇಕು.’ +ಅಂತೂ ತೌರಿಗೆ ಹೆಣ್ಣನ್ನು ಹಿಂತಿರುಗಿ ಕೊಡಕೂಡದೆಂದು ನಿಶ್ಚಯವಾಯಿತು. “ನಾನು ವಲ್ಲೆ ಅಂತ ಹುಡುಗಿ ಹಟಹಿಡಿದುಬಿಡ್ಲಿ. ‘ಹುಡುಗಿಯೇ ಹೀಗಂತಾಳೆ ನಾನೇನು ಮಾಡ್ಲಿ? ಋಣಾನುಬಂಧವಿಲ್ಲ’-ಅಂತ ನೀವು ಜಾರಿಕಂಡುಬಿಡಿ. ಸುಮ್‌ಸುಮ್ನೆ ವರಟಾಗಿ ಹೆಣ್ಣು ಕೊಡುಲ್ಲ ಅಂತ ಅನ್ಲೇಬ್ಯಾಡಿ”-ಎಂದು ಮೇಷ್ಟರೇ ಹೇಳಿಕೊಟ್ಟರು. +ಮೂವರೂ ಬಂದು ಶಬ್ಧವಾಗದಂತೆ ಮನೆಯ ಬಾಗಿಲು ತೆಗೆದು ಮಲಗಿದರು. +ಬೆಳಿಗ್ಗೆ ಎದ್ದ ತಕ್ಷಣ, ತಾವು ಹೊರಡಬೇಕೆಂದು ಗಡಿಬಿಡಿ ಮಾಡಿದ ಕಂಠೀಜೋಯಿಸರು ಕೇಳಿದರು: ‘ನಂಜಾ, ಇನ್ನು ಎಂಟು ದಿನಕ್ಕೆ ಒಂದು ಲಗ್ನ ಇದೆ. ಮದುವೆ ಇಲ್ಲಿ ನಿನ್ನ ಮನ್ಲಿ ಮಾಡಾಣೋ ಅಥವಾ ಅಲ್ಲೇ ಆಗ್ಲೋ?’ +‘ಅಪ್ಪಾ, ಮದುವೆಯಾಗೋ ಹುಡುಗೀನ ಒಂದು ಮಾತು ಕೇಳಿ ಏನಾದ್ರೂ ತೀರ್ಮಾನ ಮಾಡಾಣ. ನಾವು ನಾವೇ ಮಾತಾಡ್ಕಂಡ್ರೆ ಹ್ಯಾಗೆ?’ +‘ಅವ್ಳುನ್ನೇನ್ ಕೇಳಾದು? ನಿನ್ನ ಮದುವೇಲಿ ನಾನು ನಿನ್ನ ಕೇಳಿದ್ನೆ? ಲೇ ಪುಟ್ಟಾ, ಬಾರೇ ಇಲ್ಲಿ’-ಎಂದು ಮೊಮ್ಮಗಳನ್ನು ಕರೆದು ಕಂಠೀಜೋಯಿಸರು ಕೇಳಿದರು: ‘ಏನಂತೀಯೇ ನೀನು?’ +ಪಾರ್ವತಿ ತಕ್ಷಣ ಮಾತನಾಡಲಿಲ್ಲ. ಅಜ್ಜಯ್ಯನೇ ಇನ್ನೊಂದು ಸಲ ಕೇಳಿದ ಮೇಲೆ, ‘ನಂಗೆ ಬ್ಯಾಡ’ ಎಂದಳು. +‘ಯಾಕೆ ಬ್ಯಾಡ?’ +‘ನಂಗೆ ಇಷ್ಟವಿಲ್ಲ, ಬ್ಯಾಡಕಣಜ್ಜಯ್ಯ’-ಎಂದು ಹೇಳಿ ಅವಳು ಅಡಿಗೆಮನೆಗೆ ಹೊರಟುಹೋದಳು. +‘ಏನೇ ನಂಜಾ, ಇವ್ಳು ಹೀಗಂತಾಳೆ?’ +‘ಅವ್ಳಿಗೆ ಇಷ್ಟವಿಲ್ಲದಮ್ಯಾಲೆ ಬ್ಯಾಡ ಬಿಡಪ್ಪ.’ +ಕಂಠೀಜೋಯಿಸರಿಗೆ ರೇಗಿತು. ತಾವೂ ಅಡಿಗೆಯಮನೆ ಒಳಗೆ ಹೋಗಿ ಪಾರ್ವತಿಯ ಮುಂದೆ ನಿಂತು-‘ಯಾಕೆ ಬ್ಯಾಡ?’ ಎಂದು ಮತ್ತೆ ಕೇಳಿದರು. +‘ನಂಗೆ ಇಷ್ಟವಿಲ್ಲ. ನನ್ನ ಬಲವಂತ ಮಾಡಕೂಡ್ದು’-ಅಂದದ್ದೇ ತಡ, ತೆಗೆದು ಅವಳ ಕಪಾಳಕ್ಕೆ ಒಂದು ಬಾರಿಸಿಬಿಟ್ಟರು. ಪಾರ್ವತಿಯನ್ನು ಅವಳ ಅಮ್ಮನೇ ಒಂದು ದಿನವೂ ಹೊಡೆದಿರಲಿಲ್ಲ. ಶಬ್ದ ಕೇಳಿದ ತಕ್ಷಣ ನಂಜಮ್ಮ ಒಳಗೆ ಬಂದು ಹೇಳಿದಳು. ‘ಅಪ್ಪಾ, ಆ ಹುಡುಗೀನ ಯಾಕೆ ಹೊಡೀತೀಯಾ? ಮನಸ್ನಲ್ಲಿ ಬಂದ ಹಾಗೆ ಎಲ್ಲಾ ಆಗಿಬಿಡಬೇಕು ಅಂತ ನಿನ್ನ ಹಟ. ನನ್ನ ಮದುವೆನಾದ್ರೂ ಸ್ವಲ್ಪ ಹಿಂದುಮುಂದು ವಿಚಾರಿಸಿ ಮಾಡಿದೆಯಾ? ಅಣ್ಣಯ್ಯನ ಮದುವೇನ ಸರಿಯಾಗಿ ವಿಚಾರಿಸಿ ಮಾಡಿದೆಯಾ? ಮಕ್ಳು ಆಗೂದು ಬಿಡೂದು ಹಣೇಬರಹದಲ್ಲಿರಬೇಕು. ಆದರೆ ಹುಡುಗೀ ಗುಣ ಸ್ವಭಾವಾನ ವಿಚಾರಿಸಿ ಮಾಡಿದ್ರೆ ಅವ್ನಿಗೆ ಒಳ್ಳೇ ಹೆಂಡ್ತಿಯಾದ್ರೂ ಸಿಕ್ತಿದ್ಲು.’ +‘ಈಗ ನಿಂಗೇನಾಗಿದೆ?’ +‘ಇನ್ನೇನಾಗಬೇಕು? ಇದ್ದಬಿದ್ದ ಜಮೀನೆಲ್ಲ ಕಳದು ನಿನ್ನ ಅಳಿಯ ಬೀಗಿತ್ತಿ ಸೇರ್ಕಂಡು ಸಂಸಾರ ಈ ಸ್ಥಿತಿಗೆ ತಂದ್ರು. ನಾನು ಕಷ್ಟಪಟ್ಟು ದುಡೀದೇ ಇದ್ರೆ ಮಕ್ಳು ಹೊಟ್ಟೇಗಿಲ್ಲದೆ ಸಾಯ್ತಿದ್ವು.’ +‘ಅದುಕ್ಕೆಯೇ ತಿನ್ನುಕ್ಕೆ ಉಣ್ಣುಕ್ಕೆ ಇದೆ ಅಂತಲೇ ಕಲ್ಲೇಶನಿಗೆ ಕೊಡು ಅಂದುದ್ದು.’ +‘ನೀವು ಯಾರು ಏನಂದ್ರೂ ಹುಡುಗಿಯೇ ಬ್ಯಾಡ ಅಂದ್ಮೇಲೆ ನಾನು ಕೊಡುಲ್ಲ. ಅವ್ನಿಗೆ ಮಾಡ್ಲೇ ಬೇಕು ಅಂದ್ರೆ ಇನ್ನೆಲ್ಲಾದ್ರೂ ಹೆಣ್ಣು ಹುಡುಕು ಹೋಗು.’ +‘ಹಾಗಾದ್ರೆ ನೀನು ಮಗಳಲ್ಲ, ನಾನು ಅಪ್ಪನಲ್ಲ. ಬಾಂಚೋತ್ ಲೌಡಿ’-ಎನ್ನುತ್ತಾ ಹೊರಗೆ ಬಂದ ಕಂಠೀಜೋಯಿಸರು, ‘ನಡಿ ಅಕ್ಕಮ್ಮ, ಈ ಮಾದಿಗಿತ್ತಿ ಮನ್ಲಿ ಒಂದು ಹನಿ ನೀರೂ ಕುಡೀಬಾರ್‍ದು’-ಎಂದು ತಮ್ಮ ಬಟ್ಟೆಗಳನ್ನು ಜೋಡಿಸಿಕೊಂಡು ಹೋಗಿ, ಮನೆಯ ಮುಂದೆ ನಿಂತಿದ್ದ ಗಾಡಿಯ ಮೇಲೆ ಕುಳಿತರು. ತಾವು ಬಂದ ಕಾರ್ಯವಾಗಲಿಲ್ಲವೆಂದು ಅಕ್ಕಮ್ಮನಿಗೂ ಸಿಟ್ಟು ಬಂದಿತ್ತು. ಅವಳೂ ತನ್ನ ಸೀರೆಯ ಗಂಟು ಕಟ್ಟಿಕೊಂಡು ಹೋಗಿ ಗಾಡಿಯನ್ನೇರಿದಳು. ಆಳು ಕೊರಳೆತ್ತುವ ಮುನ್ನ ನಂಜಮ್ಮನೇ ಹೊರಗೆ ಬಂದು, ‘ಋಣಾನುಬಂಧವಿಲ್ಲ, ಆಗುಲ್ಲ. ಅದಕ್ಕ್ಯಾಕೆ ಸಿಟ್‌ಮಾಡ್ಕಂಡು ಹೋಗ್ತೀರ? ಇವತ್ತು ಇದ್ದು ಹೋದ್ರೆ ಆಗುಲ್ವೆ?’ ಎಂದದ್ದಕ್ಕೆ ಅಕ್ಕಮ್ಮ, ‘ನಿನ್ನ ಸಾಕಿ ಬೆಳೆಸಿ ಬಾಣಂತನ ಮಾಡಿದ್ದುಕ್ಕೆ ನಂಗೆ ಒಳ್ಳೇ ಮರ್ಯಾದೆ ಕೊಟ್ಟೆ’ ಎಂದಳು. ಕಂಠೀಜೋಯಿಸರು-‘ನನ್ನ ಮಾತಾಡುಸ್ಬೇಡ. ನೀನು ಮಗಳಲ್ಲ ನಾನು ಅಪ್ಪನಲ್ಲ ಅಂತ ಹೇಳ್ಲಿಲ್ವೇನೆ?’ ಎಂದುಬಿಟ್ಟರು. ನಂಜಮ್ಮ ಮತ್ತೆ ಮಾತನಾಡಲಿಲ್ಲ. +– ೪- +ಎಂಟು ದಿನ ಕಳೆದಿತ್ತು. ಒಂದು ಇಳಿಮಧ್ಯಾಹ್ನ ನಂಜಮ್ಮ, ಪಾರ್ವತಿ, ಇಬ್ಬರೂ ಜೋಡಿಯಲ್ಲಿ ಒಂದೇ ಗೂಟ ಹಿಡಿದು ರಾಗಿ ಬೀಸುತ್ತಾ ಕುಳಿತಿದ್ದರು. ಮನೆಯಲ್ಲಿ ಮತ್ತೆ ಯಾರೂ ಇರಲಿಲ್ಲ. ಯಾರೋ ಒಳಗೆ ಬಂದ ಹಾಗಾಯಿತು. ನಂಜಮ್ಮ ಕತ್ತು ತಿರುಗಿಸಿ ನೋಡುತ್ತಾಳೆ: ನರಸಿ. ನರಸಿ ಇದುವರೆಗೆ ಒಂದು ದಿನವೂ ಈ ಮನೆಗೆ ಬಂದಿಲ್ಲ. ಅವಳ ಅಂಗಡಿಯ ಮುಂದೆ ಹಾಯ್ದು ಹೋಗುವಾಗಲೂ ನಂಜಮ್ಮ ತಾನಾಗಿಯೇ ಅವಳನ್ನು ಮಾತನಾಡಿಸುತ್ತಿರಲಿಲ್ಲ. ಅವಳಾಗಿಯೇ, ‘ಏನ್ರವ್ವಾ, ಕುರುಬರಳ್ಳೀಗ್ ಹ್ವಂಟ್ರಾ?’ ಎಂದರೆ ‘ಹೂಂ’ ಎನ್ನುತ್ತಿದ್ದುದೆಷ್ಟೋ ಅಷ್ಟೇ. ಈಗ ಅವಳೇ ಬಂದಿದ್ದಾಳೆ. ಮನೆಗೆ ಬಂದವಳನ್ನು ಮಾತನಾಡಿಸದೆ ಇರಬಾರದು. ಇಷ್ಟಕ್ಕೂ ನರಸಿಗೂ ತನಗೂ ಜಗಳವೇನೂ ಇಲ್ಲ. ಆದರೆ ಅವಳ ನಡತೆ, ವಿಶ್ವಾಸ ಮಾಡುವಂಥದಲ್ಲ. +‘ಕೂತ್ಕಳಮ್ಮ’-ಎಂದು ನಂಜಮ್ಮ ಹೇಳಿದಮೇಲೆ ನರಸಿ ಕಂಬವನ್ನೊರಗಿ ಕೂತಳು. ಪಾರ್ವತಿ ಮೇಲೆ ಎದ್ದು ಅಡಿಗೆ ಮನೆಗೆ ಹೋಗಿಬಿಟ್ಟಳು. ಯಾವುದೋ ಮುಖ್ಯ ವಿಷಯವಿರಬೇಕು, ಇಲ್ಲದಿದ್ದರೆ ಅವಳು ಮನೆಗೆ ಬರುತ್ತಿರಲಿಲ್ಲ. ಎಂದು ಯೋಚಿಸಿದ ನಂಜಮ್ಮ ಕೇಳಿದಳು: ‘ಏನಮ್ಮ ಬಂದೆ?’ +‘ಅವ್ವಾ, ನಿಮ್‌ಕುಟ್ಟೆ ಒಂದು ಸಮಾಚಾರ ಏಳ್ಬೇಕು ಅಂತ ಬಂದೆ. ನಿಮ್ಮ ಪಾರ್ವತವ್ವಾರುನ್ನ ನಿಮ್ಮಣ್ಣಾರಿಗೆ ಕೊಡ್ತೀರಂತೆ ನಿಜವಾ?’ +‘ನಿಂಗೆ ಯಾರು ಹೇಳಿದ್ರು?’ +‘ಶಿಂಗೇನಳ್ಳೀಲಿ ನಮ್ಮ ನ್ಯಂಟ್ರಿಲ್ವಾ, ಅವ್ರಿಗೆ ನಾಗಲಾಪುರದಾಗೆ ನ್ಯಂಟ್ರವ್ರೆ. ನಾಗಲಾಪುರದಾಗೆ ಹಂಗಂತ ಮಾತಾಡ್ಕಂತಿದ್ರಂತೆ.’ +ಆದರೆ ಒಳವಿಷಯವನ್ನೆಲ್ಲ ಅವಳ ಕೈಲಿ ಹೇಳಲು ನಂಜಮ್ಮನಿಗೆ ಇಷ್ಟವಾಗಲಿಲ್ಲ. ‘ಅದೆಲ್ಲ ಸುಳ್ಳು ಕಣಮ್ಮ’-ಎಂದಳು. +‘ನಿಮ್ಮಯ್ಯಾರೂ ಅಜ್ಜವ್ವನೂ ಬಂದಿದ್ರಲ್ಲ, ಅದ್ಕೇ ಬಂದಿರಬೈದು ಅಂತ ನಾನು ಅರ್ತ ಮಾಡ್ಕಂಡಿದ್ದೆ. ಸುಳ್ಳೇ ಆಗ್ಲಿ. ನಾನ್ ಹಿಂಗಂದೆ ಅಂತ ಯಾರ್‌ಕುಟ್ಟೂ ಏಳ್‌ಬ್ಯಾಡಿ. ನೀವು ಅಣ್ಣಾ ತಂಗಿ ಚಂದಾಗಿದ್ರೆ ನಂಗೇನ್ ಹ್ವಟ್ಟೆಕಿಚ್ಚಾ? ಆ ಎಣ್ಮಗ ಕೊಡ್‌ಬ್ಯಾಡಿ.’ +ಈ ಮಾತಿಗೆ ಏನು ಹೇಳುವುದಕ್ಕೂ ತಿಳಿಯದೆ ನಂಜಮ್ಮ ಅವಳ ಮುಖ ನೋಡಿದಳು. ನರಸಿಯೇ ಎಂದಳು: ‘ಅಂತೋರಿಗ್ ಕೊಡಾಬದ್ಲು ಬಾವಿಗೆ ನೂಕಿದ್ರೆ ಸುಖವಾಗಿ ಸಾಯ್ತದೆ.’ +‘ನಮ್ಮಣ್ಣಯ್ಯ ಈಗ್ಲೂ ನಿನ್ನ ಮನ್ಗೆ ಬತ್ತಾರೇನಮ್ಮ?’ +‘ಇಲ್ಲ. ಈಗ ನಾಕು ವರ್ಷದಾಗೆ ನಾನೇ ಒದ್ದು ದೂರ ಮಾಡ್ದೆ. ಸೂಳೆ ತಾವುಕ್ ಓದ್ರೂ ಆ ವಯ್ಯಂಗೆ ನೀಯತ್ತಿಲ್ಲ.’ +ನಂಜಮ್ಮ ಮಾತನಾಡಲಿಲ್ಲ. ಬೆಳೆದ ಹುಡುಗಿ ಪಾರ್ವತಿ ಅಡಿಗೆಮನೆಯಲ್ಲಿದ್ದಾಳೆ. ಅವಳಿಗೆ ಕೇಳುವಂತೆ ಇಂಥಾ ಮಾತುಗಳನ್ನಾಡಬಾರದು. ಆದರೆ ಈ ಸೂಕ್ಷ್ಮ ನರಸಿಗೆ ಎಲ್ಲಿಂದ ಬರಬೇಕು? ‘ಹೋಗ್ಲಿ ಬಿಡು ನರಸಮ್ಮ , ಆ ಮಾತು ಬ್ಯಾಡ.’ +‘ನಾನೇನು ಆ ವಯ್ಯನ ಮ್ಯಾಲಿನ ಸಿಟ್ಟಿಗೆ ಏಳ್ತಿಲ್ಲ ಕಣವ್ವ. ನೂರು ಜನ ಬತ್ತಾರೆ, ನೂರು ಜನ ಹೋಯ್ತಾರೆ. ನಾನು ಯಾವನ ಮ್ಯಾಲಿನ ಸಿಟ್ನೂ ಗ್ಯಾಪಕ್‌ದಾಗೆ ಮಡೀಕಳಾದಿಲ್ಲ. ಪಾರ್ವತವ್ವ ನನ್ನ ಮಗಳಿದ್ಹಾಂಗೆ. ಯಾರಾದ್ರೂ ಅಪ್ಪಂಗ್ಹುಟ್ಟಿದ ನಿಯತ್ತುಗಾರಂಗೆ ಕೊಟ್ಟಿ ಮದ್ವೆ ಮಾಡಿ. ನನ್ ತಾವ ಮನೀಕಂಡಿದ್ದು ನಡುರಾತ್ರೀಲಿ ನಂಗೆ ನಿದ್ದೆ ಬಂದಾಗ ಅಂಗ್ಡಿ ದುಡ್ಡು ಎಗರಿಸ್ಕಂಡು ಜೇಬಿಗೆ ಆಕ್ಯಬೌದಾ ಆ ವಯ್ಯ?’ +ನಂಜಮ್ಮ ಈಗಲೂ ಮಾತನಾಡಲಿಲ್ಲ. ತಾನು ಬಂದ ಕೆಲಸವಾಯಿತೆಂಬಂತೆ-‘ನಾನು ಹೋಯ್ತೀನಿ ಕಣ್ರವ್ವ. ಮನಸ್ಸು ತಡೀಲಿಲ್ಲ. ಏಳ್ಹೋಗಾನಾ ಅಂತ ಬಂದೆ’ ಎಂದ ಮೇಲೆ ಎದ್ದು ನರಸಿ ಹೊರಟುಹೋದಳು. +ಅವಳು ಹೋದಮೇಲೆ ಪಾರ್ವತಿ ಹೊರಗೆ ಬಂದು ಮತ್ತೆ ಬೀಸುವ ಕಲ್ಲಿನ ಗೂಟ ಹಿಡಿದುಕೊಂಡಳು. ಒಂದೇ ಕಲ್ಲನ್ನು ಹಿಡಿದು ಬೀಸುತ್ತಿದ್ದ ತಾಯಿ ಮಗಳು, ಇಬ್ಬರ ಮನಸ್ಸೂ ಒಂದೇ ವಿಷಯವಾಗಿ ಯೋಚಿಸುತ್ತಿತ್ತು. ಈ ಮದುವೆ ಬೇಡವೆಂದು ಹೇಳಿ ಕಳಿಸಿದುದು ತುಂಬ ಒಳ್ಳೆಯದಾಯಿತೆಂದು ಇಬ್ಬರೂ ಯೋಚಿಸುತ್ತಿದ್ದರೂ ಯಾರೂ ಬಾಯಿ ಬಿಟ್ಟು ಏನೂ ಆಡಲಿಲ್ಲ. +– ೫- +ಈ ಬಾರಿ ಮಗಳ ಮದುವೆ ಮಾಡಿ ಮುಗಿಸಲೇಬೇಕೆಂದು ನಂಜಮ್ಮ ನಿಶ್ಚಯಿಸಿದಳು. ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳದೆ ಗಂಡು ಹುಡುಕಲು ಹೊರಟು, ಅಕಸ್ಮಾತ್ ಗಂಡು ನಿಶ್ಚಯವಾಗಿ ಕೈಲಿ ಕಾಸಿಲ್ಲದೆ ಅವಮಾನವಾಗುವ ಸ್ಥಿತಿ ಬರಬಾರದೆಂಬ ಯೋಚನೆಯೂ ಬಂತು. ಈಗ ದಿನಸಿ ಲೆಕ್ಕ ಬಂದಮೇಲೆ ಕಂದಾಯದ ಮುಂಗಡ ಬರೆಸಿ ಕುರುಬರಹಳ್ಳಿಯಿಂದ ರಾಗಿ ತರುವುದು ನಿಂತಿತ್ತು. ಅಲ್ಲದೆ ಲೆಕ್ಕ ಹೆಚ್ಚು ಬರೆಯುವುದಕ್ಕೆ ಸರ್ಕಾರದವರು ಪ್ರತ್ಯೇಕವಾಗಿ ವರ್ಷಕ್ಕೆ ನೂರು ರೂಪಾಯಿ ಕೊಡುತಿದ್ದರು. ಒಟ್ಟಿನಲ್ಲಿ ಇನ್ನೂರ ಇಪ್ಪತ್ತು ರೂಪಾಯಿ ತನ್ನ ಕೈಗೆ ಬರುತ್ತದೆ ಎಂಬ ಖಾತ್ರಿ ಏನೋ ಇದೆ. ಆದರೆ ಸಾಲಾಖೈರಿನಲ್ಲಿ ಯಜಮಾನರು ತಿಪಟೂರಿಗೆ ಹೋಗಿ ಯಾರಿಗೂ ಗೊತ್ತಾಗದಂತೆ ಪೋಟಿಕೆ ಫುಡ್‌ಪೋಟಿಕೆಗಳನ್ನು ಖರ್ಚು ಹಾಕಿಸಿಕೊಂಡು ತಿಂದುಬಿಟ್ಟರೆ?- ಎಂಬ ಒಂದು ಯೋಚನೆಯೂ ಇತ್ತು. ಒಂದು ದಿನ ಗುಂಡೇಗೌಡರು ಬಂದಿದ್ದಾಗ, ಅವರೂ ಸೇರಿ ಕುರುಬರಹಳ್ಳಿಯ ಒಟ್ಟು ಆರು ಜನದ ಹೆಸರಿಗೆ, ತಾನೇ ಆ ವರ್ಷದ ಕಂದಾಯದ ರಶೀತಿಗಳನ್ನು ಬರೆದು ಅದಕ್ಕೆ ರುಜು ಮಾಡುವಂತೆ ಗಂಡನಿಗೆ ಹೇಳಿದಳು. +ಅವರು-‘ನಾನು ಮಾಡುಲ್ಲ’ ಎಂದರು. +‘ಗೌಡ್ರೇ, ಮಗಳ ಮದುವೆ ಮಾಡ್‌ಬೇಕು ಈ ದುಡ್ಡು ನಿಮ್ಮ ಹತ್ರ ಇರ್ಲಿ. ನೀವೇ ಹೇಳಿ ರುಜು ಮಾಡಿಸಿ’-ಎಂದು ನಂಜಮ್ಮ ವಿವರಿಸಿದಮೇಲೆ ಗೌಡರು ಕೇಳಿದರು: ‘ಲೇ ಚಿನ್ನಯ್ಯ, ಅದುಕ್ಕೆ ರುಜು ಹೆಟ್ತೀಯೋ ನಿಂಗೆ ಇಡ್ಕಂಡು ಗುದಿಗೆ ಮಡಗ್ಬೇಕೋ?’ +‘ಅದ್ಯಾಕ್ರೀ ನೀವೂ ಅವ್ಳೂ ಸೇರ್ಕಂಡು ನಂಗೆ ಒಂದು ಕಾಸೂ ಇಲ್ದಹಾಗೆ ಮಾಡ್ತೀರಾ? ನಾನೇನು ಶ್ಯಾನುಭೋಗನೆ ಅಲ್ವ? ನಾನು ರುಜು ಹಾಕುಲ್ಲ ಅಂದ್ರೆ ಏನು ಮಾಡ್ತೀರಿ?’ +‘ಗುದಿಗೆ ಬುಡ್ತೀನಿ ನೋಡು. ನೀನು ನಮ್ಮೂರಿಗೆ ಹ್ಯಾಂಗೆ ಕಾಲಿಡ್ತೀಯಾ ನೋಡ್ತೀನಿ ತಡಿ’-ಎಂದು ಗೌಡರು ತಮ್ಮ ತಿರುಗಾಡುವ ದೊಣ್ಣೆಯನ್ನು ಕೈಗೆ ತೆಗೆದುಕೊಂಡು ಎದ್ದು ನಿಂತದ್ದಕ್ಕೆ ಚೆನ್ನಿಗರಾಯರು ಹೆದರಿ ಎಲ್ಲದಕ್ಕೂ ರುಜು ಹಾಕಿದರು. ಆದರೆ ಅವರ ಕೋಪ ಮಾತ್ರ ನಿಲ್ಲಲಿಲ್ಲ. ‘ಮಾದಿಗಂಗ್ ಹುಟ್ಟಿದ ಮುಂಡೆ ತಂದು’-ಎಂದು ಬೈದುಕೊಳ್ಳುತ್ತಾ ಮನೆ ಬಿಟ್ಟು ಹೋದರು. +ನಂಜಮ್ಮ ಎಂದಳು: ‘ನೋಡಿ ಈಗ ಇನ್ನೂರು ರೂಪಾಯಿ ಆಯ್ತು. ಮದ್ವೆ ಅಂದ್ರೆ ಆರು ನೂರು ಏಳು ನೂರಾದ್ರೂ ಬೇಕು. ಮುಂದೆ ಏನು ಮಾಡಬೇಕೋ ನಂಗೆ ಗೊತ್ತಿಲ್ಲ. ನೀವೇ ದಿಕ್ಕು.’ +‘ವಳ್ಳೇ ಲಕ್ಷ್ಮಿ ಹಂಗೈತೆ ನಿನ್ನ ಎಣ್ಮಗ. ನಮ್ಮ ಜಾತೀಲಾಗಿದ್ರೆ ಈಟೊತ್ತಿಗ್ ಬಂದು ಅಡ್ಡಿಕೆ, ನಾಗರು, ವಾಲೆ, ಯಲ್ಲಾ ಮಡಗಿ ಎಣ್ಣು ಆರಿಸ್ಕಂಡು ಓಗ್ತಿದ್ರು. ನಿಮ್ದು ಕೆಟ್ಟ ಜಾತಿ ಕಣವ್ವ.’ +‘ಎಂಥಾ ಜಾತಿಯಾದ್ರೂ ಹುಟ್ಟಿದಮೇಲೆ ಜಾತಿಗೆ ತಕ್ಕಹಾಗೆ ಮಾಡ್ಬೇಕಲ್ಲ.’ +‘ನೀನು ಕಾಯಿ ಕಸಿ ಬ್ಯಾಳೆ ಕಾಳಿಗೆ ಯೇಚ್ನೆ ಮಾಡ್‌ಬ್ಯಾಡ. ಉಡುಗನ್ನ ಗೊತ್ತು ಮಾಡು. ನಮ್ಮೂರಾಗೆ ಮನೆಗೆ ಅತ್ತು, ಐದು, ಚಂದಾ ಎತ್ತಿಕೊಡ್ತೀನಿ. ನಲವತ್ತು ಮನೆ ಗ್ರಾಮ. ಮದ್ವೆ ಲಗ್ನ, ಊರ ಸ್ಯಾನುಬಾಗ್ರು ಅಂದ್ರೆ ಒಂದ್ ಮುನ್ನೂರು ರೂಪಾಯಿ ಎತ್ತಕಾಗಾಕಿಲ್ವ? ಫುಡ್ ಲೆಕ್ಕದಾಗೆ ನೀನು ನಮ್ಮೂರ ತಲೆ ಕಾಯ್ತಾ ಇಲ್ವಾ? ಒಟ್ನಲ್ಲಿ ನಿನ್ನ ಐನೂರು ರೂಪಾಯಿ ಆಯ್ತಲ್ಲ. ಬಡ್ತನದಲ್ಲಿ ಹ್ಯಂಗೋ ಮಾಡು.’ +ಗೌಡರಿಂದ ಇಷ್ಟು ಆಶ್ವಾಸನೆ ದೊರೆತದ್ದೇ ತಡ, ಅವಳ ಮನಸ್ಸಿನ ಹೊರೆ ಇಳಿದಂತಾಯಿತು. ಇನ್ನು ಹ್ಯಾಗಾದರೂ ಮಾಡಿ ಗಂಡು ಹುಡುಕಿಸಬೇಕು ಎಂದು ನಿಶ್ಚಯಿಸಿದಳು. ಊರಿಗೆ ಹೊರಡುವಾಗ ಗುಂಡೇಗೌಡರು ಪಾರ್ವತಿಯನ್ನು ಹೊರಕ್ಕೆ ಕರೆದು-‘ನೀನೊಳ್ಳೆ ಚಂದುಳ್ಳಿ ಎಣ್ಣು ಕಣ್ಮಗ. ವಳ್ಳೇ ಮೋಪುಗಾರ ಉಡುಗನೇ ಸಿಕ್ತಾನೆ ಬುಡು’ಎಂದು ಆಶೀರ್ವಾದ ಹೇಳಿದರು. +ಗಂಡು ಹುಡುಕಲು ತನ್ನ ಅಣ್ಣನ ನೆರವು ಕೋರಲು ನಂಜಮ್ಮ ಯೋಚಿಸಿದ್ದಳು. ಆದರೆ ಅವನೇ ವರನಾಗುವ ಕೇಳಿಕೆ ಬಂದು ತಂದೆ ಅಜ್ಜಿ ಸಿಟ್ಟುಗೊಂಡು ಹೋದಮೇಲೆ ಮತ್ತೆ ಯಾರನಾದರೂ ಕರೆಯದೆ ಕೆಲಸ ಆಗುವಂತಿರಲಿಲ್ಲ. ಅದರಲ್ಲಿಯೂ ಯಾರಾದರೂ ನಂಬಿಕಸ್ಥರೇ ಬೇಕು. ಇಲ್ಲದಿದ್ದರೆ ಸಂಭಾವಿತ ಹುಡುಗ ಸಿಕ್ಕುತ್ತಾನೆಂಬ ಭರವಸೆಯೂ ಇಲ್ಲ. ನಂಜಮ್ಮ ಎಲ್ಲ ಭಾರವನ್ನೂ ಮೇಷ್ಟರು ವೆಂಕಟೇಶಯ್ಯನವರ ಮೇಲೆ ಹಾಕಿ ಹೇಳಿದಳು: ‘ಕನ್ಯಾದಾನ ಮಾಡಿಸಿದ ಫಲ ನಿಮಗೇ ಸೇರುತ್ತೆ. ನೀವೇ ಒಂದು ದಾರಿ ಮಾಡಬೇಕು.’ +ಮೇಷ್ಟರು ನಾಲ್ಕಾರು ಊರಿಗೆ ಹೋಗಿ ಬಂದರು. ಎಲ್ಲಿಯೂ ಕೆಲಸವಾಗಲಿಲ್ಲ. ಅರಸೀಕೆರೆಯ ಹತ್ತಿರದ ಒಂದು ಊರಿನ ಭಾರೀ ಜಮೀನುದಾರರೊಬ್ಬರಂತೆ. ಅವರ ಎರಡನೇ ಮಗನಿಗೆ ಈ ಹೆಣ್ಣನ್ನು ತಂದುಕೊಳ್ಳುವುದಾಗಿ ಅವರೇ ಹೇಳಿಕಳಿಸಿದ್ದರು. ವೆಂಕಟೇಶಯ್ಯನವರೆಂದರು: ‘ಅಮ್ಮಾ, ನಾನು ಅವರಿಗೆ ನಿಶ್ಚಯವಾಗಿ ಏನೂ ಹೇಳಿಬರಲಿಲ್ಲ. ನಂಗನ್ಸುತ್ತೆ: ಅಂಥಾ ಜಮೀನುದಾರ್ರು ಬಡವರ ಮನೆ ಹುಡುಗಿ ತಂದ್ಕೊತ್ತೀವಿ ಅನ್ಬೇಕಾದ್ರೆ ಹುಡುಗನಲ್ಲಿ ಏನೋ ಐಬಿರಬೇಕು.’ +‘ಇದ್ರೂ ಇರಭೌದು. ವಿವಾದಕ್ಕೂ ವಿವಾಹಕ್ಕೂ ಸಮಗೈ ಇರಬೇಕು ಅಂತ ಗಾದೆಯೂ ಇದೆಯಲ್ಲ. ಅಂಥ ದೊಡ್ದ ಮನೆಗೆ ನಮ್ಮ ಹುಡುಗಿ ಕೊಡೋದು ಬ್ಯಾಡಿ’-ನಂಜಮ್ಮನೂ ಒಪ್ಪಿದಳು. +ಹೀಗೆ ನಾಲ್ಕು ತಿಂಗಳು ಹುಡುಕಾಟವಾದ ಮೇಲೆ ಒಂದು ಪ್ರಸ್ತಾಪ ಬಂತು: ಹಿಂದೆ ಇವರ ಶ್ಯಾನುಭೋಗಿಕೆ ಲೆಕ್ಕ ಬರೆದುಕೊಡುತ್ತಿದ್ದು, ನಂಜಮ್ಮನಿಗೆ ಲೆಕ್ಕ ಕಲಿಸಿದ ತಿಮ್ಲಾಪುರದ ದ್ಯಾವರಸಯ್ಯನವರಿಂದ ಬಂದದ್ದು. ಅವರ ಹೆಂಡತಿ ಕಡೆಯ ದೂರದ ಸಂಬಂಧದ ಒಬ್ಬ ಹುಡುಗನಂತೆ. ಹೆಸರು ಸೂರ್ಯನಾರಾಯಣ. ಎಸ್.ಎಸ್.ಎಲ್.ಸಿ. ಓದಿ ಮಿಡ್ಳ್ ಸ್ಕೂಲು ಮೇಷ್ಟರಾಗಿದಾನೆ . ವಯಸ್ಸು ಇಪ್ಪತ್ತೇಳು. ಮೊದಲ ಮದುವೆಯಾಗಿ ಈಗ ನಾಲ್ಕು ತಿಂಗಳಿನಲ್ಲಿ ತಾನೇ, ಹೆಂಡತಿ ಸತ್ತುಹೋದಳಂತೆ. ಮೂರು ವರ್ಷದ ಒಂದು ಹೆಣ್ಣು ಮಗುವಿದೆ. ಹುಡುಗನಿಗೆ ತಂದೆ ತಾಯಿ ಯಾರೂ ಇಲ್ಲ. ಈಗ ಮಗುವನ್ನು ತಾನೇ ಸಾಕುತ್ತಿದ್ದಾನೆ. ಸ್ಕೂಲಿಗೆ ಹೋಗುವಾಗ ಜೊತೆಯಲ್ಲಿ ಕರೆದುಕೊಂಡು ಹೋಗಿ ಕೂರಿಸಿಕೊಂಡಿರುತ್ತಾನೆ. ಹುಡುಗ ಲಕ್ಷಣವಂತ. ಅರವತ್ತು ರೂಪಾಯಿ ಸಂಬಳ. ಕೈ ಬೆಂದಿರುವವನು. ಚಿನ್ನದಂತಹ ಗುಣ. ‘ಅಮ್ಮಾ, ನೀನು ಅನುಮಾನ ಮಾಡಬ್ಯಾಡ ಹೆಣ್ಣು ಕೊಡು. ತುಂಬ ವಿವೇಕಸ್ಥ. ನಿನ್ನ ಮಗಳು ಸುಖವಾಗಿರ್ತಾಳೆ. ಅವನ ಹೆಣ್ಣು ಮಗೂನ ನಿನ್ನ ಮಗಳು ಬಲ ಮಗು ಅಂತ ತಿಳಕೊಳ್ಳದೆ ನೋಡಿಕೋಬೇಕು’-ಎಂದು ದ್ಯಾವರಸಯ್ಯನವರು ತಮ್ಮ ಮಗನ ಕೈಲಿ ಹೇಳಿಕಳಿಸಿದ್ದರು. ಅವರಿಗೆ ಈಗ ಅಷ್ಟು ದೂರ ನಡೆದು ಬರಲು ಕೈಲಾಗುತ್ತಿರಲಿಲ್ಲ. +ದ್ಯಾವರಸಯ್ಯನವರು ವಿವೇಕಿಗಳೆಂಬ ಬಗೆಗೆ ನಂಜಮ್ಮನಿಗೆ ಯಾರೂ ಹೇಳಬೇಕಾಗಿರಲಿಲ್ಲ. ಅಂಥವರ ಮಾತಿನಲ್ಲಿ ವಿಶ್ವಾಸವಿಡದಿದ್ದರೆ ಇನ್ನು ಯಾರ ಮಾತನ್ನು ನಂಬಬೇಕು? ‘ಹುಡುಗನ್ನ ನೀವು ನೋಡಿದೀರಾ?’-ನಂಜಮ್ಮ ಕೇಳಿದಳು. +‘ನಮಗೆ ಸರಿಯಾಗಿ ಗೊತ್ತಿಲ್ಲ. ನಮ್ಮಮ್ಮನ ಊರಿನ ದೂರದ ಬಳಗವಂತೆ. ಹುಡುಗ ಈಗ ಗುಬ್ಬಿ ತಾಲ್ಲೂಕು ಬಾಳೇಕೆರೆ ಮಿಡ್ಳ್‌ಸ್ಕೂಲಿನಲ್ಲಿ ಮೇಷ್ಟರಂತೆ. ನೀವು ಹೇಳಿಕಳಿಸಿದರೆ ಹೆಣ್ಣು ನೋಡುಕ್ಕೆ ಬತ್ತಾರೆ.’ +ನಂಜಮ್ಮ ಹೋಗಿ ವೆಂಕಟೇಶಯ್ಯನವರನ್ನು ಕೇಳಿದಳು. ಅವರೇ ದ್ಯಾವರಸಯ್ಯನವರ ಮಗನ ಸಂಗಡ ತಿಮ್ಲಾಪುರಕ್ಕೆ ಹೋಗಿ ವರನ ಬಗೆಗೆ ವಿಚಾರಿಸಿಕೊಂಡು ಊರಿಗೆ ಬಂದು ಹೇಳಿದರು: ‘ನಂಜಮ್ನೋರೆ, ಆತ ನಂಗೂ ಗೊತ್ತು. ನಾನು ಗುಬ್ಬಿ ತಾಲ್ಲೂಕು ಕಡಬದಲ್ಲಿ ಇದ್ದಾಗ ಸಂಬಳದ ದಿನ ತಾಲ್ಲೂಕ್ ಆಫೀಸಿನಲ್ಲಿ ಎಷ್ಟೋ ಸಲ ನೋಡಿ ಮಾತಾಡಿದೀನಿ ತುಂಬ ವಳ್ಳೇಮನುಷ್ಯ. ಪಾಪ, ಹೆಂಡತಿ ಹೀಗೆ ಆದ್ರು ಅಂತ ನಂಗೆ ಗೊತ್ತಿರಲಿಲ್ಲ. ಎರಡನೇ ವರ ಅನ್ನೋದೊಂದು ಬಿಟ್ಟುಬಿಟ್ರೆ ಅಂಥ ವರ ಸಿಕ್ಕೂದು ನಿಜವಾಗಿಯೂ ಕಷ್ಟವೇ.’ +ನಂಜಮ್ಮ ಪಾರ್ವತಿಯನ್ನು ಕೇಳಿದಳು. ‘ಅಮ್ಮ, ನೀನು ಒಪ್ಪಿದರೆ ಆಯ್ತು. ನನ್ನೇನೂ ಕೇಳಬೇಡ’-ಅವಳೆಂದಳು. ಗಂಡನ ಹೆಸರಿನಲ್ಲಿ ಚೀಟಿ ಬರೆದು ನಂಜಮ್ಮ ಕುಳುವಾಡಿಯ ಕೈಲಿ ತಿಮ್ಲಾಪುರಕ್ಕೆ ಕಳಿಸಿಕೊಟ್ಟಳು. +ಇದಾದ ಹದಿನೈದು ದಿನಕ್ಕೆ ಗಾಡಿಯ ಮೇಲೆ ಕುಳಿತು ದ್ಯಾವರಸಯ್ಯನವರು, ಅವರ ಹೆಂಡತಿ ಮತ್ತು ಮಗ, ಸೂರ್ಯನಾರಾಯಣನೊಡನೆ ಹೆಣ್ಣು ನೋಡಲು ಬಂದರು. ವರನಿಗೆ ಇಪ್ಪತ್ತೇಳಕ್ಕಿಂತ ಹೆಚ್ಚು ವಯಸ್ಸಾಗಿಲ್ಲವೆಂಬುದು ಮುಖ ನೋಡಿದರೇ ತಿಳಿಯುತ್ತಿತ್ತು. ಗಂಭೀರ ಸ್ವಭಾವ. ಮಿತಭಾಷಿ. ಅವನ ಮೂರು ವರ್ಷದ ಹೆಣ್ಣು ಮಗು ಒಂದು ನಿಮಿಷವೂ ತಂದೆಯ ಹತ್ತಿರದಿಂದ ದೂರವಿರುತ್ತಿರಲಿಲ್ಲ. ವೆಂಕಟೇಶಯ್ಯ ಮೇಷ್ಟರು ಬಂದರು. ಇವರು ಸೂರ್ಯನಾರಾಯಣನಿಗಿಂತ ವಯಸ್ಸಿನಲ್ಲಿ ತುಂಬ ದೊಡ್ಡವರು. ಇಬ್ಬರೂ ಪರಸ್ಪರ ಮಾತುಕತೆಯಾಡಿದರು. ಮಧ್ಯಾಹ್ನಕ್ಕೆ ಪಾಯಸದ ಅಡಿಗೆ ಮಾಡಿ ಎಲ್ಲರಿಗೂ ಬಡಿಸಿ ಹೆಣ್ಣು ತೋರಿಸುವ ಹೊತ್ತಿಗೆ ಸೂರ್ಯನಾರಾಯಣನ ಮಗು ರತ್ನ, ನಂಜಮ್ಮನಿಗೆ ಹೊಂದಿಕೊಂಡಿತ್ತು. ನಂಜಮ್ಮ ಅದನ್ನು ಕಂಕುಳಿಗೆ ಎತ್ತಿಕೊಂಡೇ ತಿರುಗಾಡುತ್ತಿದ್ದಳು. ಅಡಿಗೆಯ ಮನೆಯಲ್ಲಿಯೇ ಕೂತಿದ್ದ ಪಾರ್ವತಿಯ ತೊಡೆಯ ಮೇಲೆ ಓಡಿಯಾಡಿದ ಅದು, ಕೊನಗೆ ವಿಶ್ವನ ಕೈ ಹಿಡಿದುಕೊಂಡು ಆಟವಾಡಲು ಬೀದಿಗೆ ಹೋಯಿತು. ಸೂರ್ಯನಾರಾಯಣ ಹೇಳಿದ: ‘ಅವಳು ಯಾರ ಕೈಲೂ ಹೀಗೆ ಹೊಂದಿಕೊಳ್ಳಲಿಲ್ಲ. ಅವರನ್ನ ಕಂಡ ಅರ್ಧ ಗಂಟೆಯಲ್ಲೇ ಹತ್ತಿರ ಹೋಗಿಬಿಟ್ಟಳು.’ +ಹೆಣ್ಣು ನೋಡಿಯಾಯಿತು. ಸೂರ್ಯನಾರಾಯಣನೇ ನಂಜಮ್ಮನಿಗೆ ಹೇಳಿದ: ‘ಅಮ್ಮ, ನನ್ನ ಜಾತಕ ತಂದಿದೀನಿ. ನಿಮಗೆ ಬೇಕಾದ್ರೆ ಎರಡು ಜಾತಕಾನೂ ಯಾರಿಗಾದ್ರೂ ತೋರಿಸಿ. ನನಗಂತೂ ಅದರಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ. ಮೊದಲ ಸಲ ಜಾತಕ ನೋಡಿದ ಎರಡು ಮೂರು ಜನ ಜೋಯಿಸರು, ಇಷ್ಟು ಚೆನ್ನಾಗಿ ಹೊಂದುವ ಜೋಡಿಯೇ ಇಲ್ಲ ಅಂದಿದ್ದರು. ಮದುವೆಯಾದ ನಾಲ್ಕು ವರ್ಷಕ್ಕೇ ಹೀಗೆ ಆಗಿಬಿಡ್ತು. ನನ್ನ ವಿಷಯವೆಲ್ಲ ದ್ಯಾವರಸ ಮಾವಯ್ಯ ಹೇಳಿದಾರೆ. ನಿಮ್ಮ ವಿಷಯಾನೂ ಹೇಳಿದಾರೆ. ಬೇಕಾದ್ರೆ ನೀವು ಇನ್ನೂ ನಾಕು ಜನದ ಹತ್ತಿರ ವಿಚಾರಿಸಿ. ನಿಮಗೆಲ್ಲ ಸಂತೋಷವಿದ್ದರೆ ಒಂದು ಹುಣಿಸೇನೀರು ಅನ್ನ ಮಾಡಿ ಒಂದು ದಿನ ಧಾರೆ ಎರೆದುಕೊಡಿ. ಭೇದಭಾವ ಮಾಡದೆ ನನ್ನ ಮಗೂನ ತನ್ನದು ಅಂತಲೇ ತಿಳಕಂಡು ನಿಮ್ಮ ಮಗಳು ನೋಡಿಕೊಂಡು ಹೋಗೂ ವಿಷಯ ಮಾತ್ರ ನಾನು ಈಗಲೇ ಖಂಡಿತವಾಗಿ ಹೇಳಿಬಿಡ್ತೀನಿ.’ +ಜಾತಕ ಗುಣಿಸುವುದು ಮೇಷ್ಟರಿಗೆ ಅಲ್ಪ ಸ್ವಲ್ಪ ಮಾತ್ರ ಗೊತ್ತು. ದ್ಯಾವರಸಯ್ಯನವರೂ ಸುಮಾರಾಗಿ ತಿಳಿದವರೇ. ಇಬ್ಬರೂ ಕೂಡಿ ಗುಣಾಕಾರ ಮಾಡಿ ನೋಡಿದರು. ಗ್ರಹಮೈತ್ರಿಕೂಟ, ಯೋನಿಕೂಟ, ನಾಡಿಕೂಟಗಳೆಲ್ಲ ಕೂಡಿದವು. ಒಟ್ಟಿನಲ್ಲಿ ಇಪ್ಪತ್ತಮೂರು ಗುಣ ಕೂಡಿಬಂತು. ಇದಕ್ಕಿಂತ ಉತ್ತಮವಾಗಿ ಹೊಂದುವುದು ಸಾಮಾನ್ಯವಲ್ಲ. ವೆಂಕಟೇಶಯ್ಯನವರು ಸೂರ್ಯನಾರಾಯಣನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಇಲ್ಲಿ ಮನೆಯಲ್ಲಿ ದ್ಯಾವರಸಯ್ಯನವರು ಚೆನ್ನಿಗರಾಯರನ್ನು ಕೇಳಿದರು: ‘ನೀವು ಏನಂತೀರಾ ಶ್ಯಾನುಭೋಗ್ರೆ.’ +‘ನಾನೇನು ಅನ್ನಬೇಕು? ನನ್ನೇನು ಹೇಳಿ ಕೇಳಿ ಮಾಡ್ತಾಳೇನ್ರಿ ಇವ್ಳು?’ +‘ಯಜಮಾನ್ರು ನೀವು. ಕೆಲ್ಸ ಅವ್ರು ನಿಭಾಯಿಸಿದ್ರೂ ಯಜಮಾನಸ್ಥಾನ ನಿಮ್ಮದು ತಾನೇ?’ +‘ಇಷ್ಟೆಲ್ಲ ಕುಣೀತಾ ಇದಾಳಲ್ಲಾ, ದುಡ್ಡಿಗೆ ಏನು ಮಾಡ್ತಾಳಂತೆ ಕೇಳ್ರೀ.’ +‘ಏನು ಮಾಡ್ತೀಯಾ ಅಂತ ನಿಮ್ಮ ಹೆಂಡ್ತೀನ ನೀವೇ ಕೇಳಿ.’ +ಹೆಂಡತಿಯ ಕಡೆ ತಿರುಗಿ ಅವರು-‘ದುಡ್ಡಿಗೆ ಏನು ಮಾಡ್ತೀಯೇ ಮುಂ…..’ಎಂದವರು, ತಮ್ಮ ಮಾತಿಗೆ ತಮಗೇ ನಾಚಿಕೆಯಾಗಿ ಮತ್ತೆ ಮೊದಲಿನಿಂದ ಪ್ರಾರಂಭಿಸಿ, ‘ದುಡ್ಡು ಎಲ್ಲಿ ಹೊಂದುಸ್ತಿಯೆ?’ ಎಂದರು. +‘ಈ ವರ್ಷದ ಪೋಟಿಕೆ ದುಡ್ಡು ಗುಂಡೇಗೌಡರ ಹತ್ರ ಇದೆ. ಅದರ ಮೇಲೆ ಕುರುಬರಹಳ್ಳೀಲಿ ಒಂದಿಷ್ಟು ಎತ್ತಿಕೊಡ್ತೀವಿ ಅಂತ ಹೇಳಿದಾರೆ.’ +ತಮ್ಮ ಮೇಲೆ ಜಬರುದಸ್ತಿ ಮಾಡಿ ರಶೀತಿಗಳಿಗೆ ರುಜು ಮಾಡಿಸಿಕೊಂಡ ನೆನಪಾಗಿ ಶ್ಯಾನುಭೋಗರು-‘ಅವನೊಬ್ಬ ಮನೆಹಾಳ ಸೂಳೇಮಗ’ ಎಂದರು. ನಂಜಮ್ಮ ಮತ್ತೆ ಮಾತನಾಡಲಿಲ್ಲ. ಇವರ ಸ್ವಭಾವವನ್ನು ಬಲ್ಲ ದ್ಯಾವರಸಯ್ಯನವರೂ ಸುಮ್ಮನಾದರು. +ವೆಂಕಟೇಶಯ್ಯನವರು ತಮ್ಮ ಮನೆಗೆ ಮಾದೇವಯ್ಯನವರನ್ನೂ ಕರೆಸಿ ವರನನ್ನು ತೋರಿಸಿದರು. ಅಲ್ಲಿಂದ ಮೂವರೂ ನಂಜಮ್ಮನ ಮನೆಗೆ ಬಂದರು. ಮದುವೆ ನಿಷ್ಕರ್ಷೆಯಾಯಿತು. ಧಾರೆಯ ದಿನವೇ ಲಗ್ನಪತ್ರಿಕೆ ಶಾಸ್ತ್ರ ಮುಗಿಸಬಹುದೆಂದೂ ಇನ್ನು ಒಂದು ತಿಂಗಳಿನಲ್ಲಿ ಮದುವೆ ಮಾಡಿಕೊಡಬೇಕೆಂದೂ ಹೇಳಿದ ಸೂರ್ಯನಾರಾಯಣ. ‘ನೀವು ಹೆಚ್ಚಿಗೆ ಯಾವ ಖರ್ಚಿಗೂ ಹೋಗ್ಬೇಡಿ. ಹೆಣ್ಣಿಗೆ ತರಬೇಕಾದ್ದೆಲ್ಲ ನಾನು ತರ್ತೀನಿ. ವರೋಪಚಾರಕ್ಕೆ ಒಂದು ಜೊತೆ ಮಿಲ್ಲುಪಂಚೆ, ತಾಮ್ರದ ಪಂಚಪಾತ್ರೆ ಉದ್ಧರಣೆ, ಇಷ್ಟು ತಂದ್ರೆ ಸಾಕು’-ಎಂದು ತಾನಾಗಿಯೇ ಹೇಳಿದ. ಹೊರಡೂವಾಗ ನಂಜಮ್ಮನಿಗೂ ಚೆನ್ನಿಗರಾಯರಿಗೂ ನಮಸ್ಕಾರ ಮಾಡಿ, ಅದುವರೆಗೂ ಬೀದಿಯಲ್ಲಿ ವಿಶ್ವನ ಜೊತೆ ಆಡುತ್ತಿದ್ದ ಮಗುವಿನಿಂದಲೂ ಮಾಡಿಸಿ, ಅದನ್ನು ಎತ್ತಿಕೊಂಡು ಹೊರಟ. ಗಾಡಿ ಕೊರಳೆತ್ತಿದ್ದರೂ ಅವನು, ದ್ಯಾವರಸಯ್ಯನವರು, ಅವರ ಮಗ, ಮೂವರೂ ಊರು ಬಿಡುವತನಕ ನಡೆದೇ ಹೊರಟರು. ವೆಂಕಟೇಶಯ್ಯ ಮೇಷ್ಟರು ಮತ್ತು ಮಾದೇವಯ್ಯನವರು ಊರ ಆಚಿನ ತನಕ ಹೋಗಿ ಇವರನ್ನು ಕಳಿಸಿ ಬಂದರು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್ +ಆರಂಭ…. ಪಾದರಿಗಳ ವೃದ್ಧಾಶ್ರಮ ಊರ ಹೊರಗೆ ಅನ್ನುವ ಹಾಗಿತ್ತು. ವಿಸ್ತಾರವಾದ ಪ್ರದೇಶ. ಅಂಚಿನಲ್ಲಿ ವೃದ್ಧಾಶ್ರಮ ಕಟ್ಟಡ ಅದರ ಮಗ್ಗಲಲ್ಲಿ ಒಂದು ಚರ್ಚ. ಮುಂದೆ ವಿಶಾಲವಾದ ಹೂದೋಟ. ಅದರ ನಡುವೆ ಕಾಲುದಾರಿಗಳು, ಮರಗಳು, ಕಲ್ಲಿನ ಆಸನಗಳು. […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ […] +ಅಧ್ಯಾಯ ೪ – ೧ – ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_285.txt b/Kannada Sahitya/article_285.txt new file mode 100644 index 0000000000000000000000000000000000000000..8030ea97a891c6fbfed28de60c7fa0c1cf7adf27 --- /dev/null +++ b/Kannada Sahitya/article_285.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಾಂಬೋದಿ ತಾಳ — ಝಂಪೆ +ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | +ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| +ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | +ಕಟ್ಟೆಕಟ್ಟುತ ನೀರ ಹೊಯ್ವರಾರು? || +ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ | +ಕೊಟ್ಟು ರಕ್ಷಿಸುವನು ಇದಕೆ ಸಂದೇಹ ಬೇಡ ||೧|| +ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ | +ಅಡಿಗಡಿಗೆ ಆಹಾರವಿತ್ತವರದಾರು? || +ಪಡೆದ ಜನನಿಯಂತೆ ಸಾರಥಿಯಾಗಿ ತಾ | +ಬಿಡದೆ ರಕ್ಷಿಸುವನು ಇದಕೆ ಸಂದೇಹ ಬೇಡ ||೨|| +ಕಲ್ಲೊಳಗೆ ಪುಟ್ಟಿ ಕೂಗುವ ಮಂಡುಕಂಗಳಿಗೆ | +ಅಲ್ಲಿ ಹೋಗಿ ಆಹಾರವಿತ್ತವರದಾರು? || +ಬಲ್ಲಿದನು ಕಾಗಿನೆಲೆಯಾದಿಕೇಶವರಾಯ | +ನಿಲ್ಲದೇ ರಕ್ಷಿಪನು ಇದಕೆ ಸಂದೇಹ ಬೇಡ ||೩|| +***** +ಕಾನಡ ನೀನ್ಯಾಕೋ, ನಿನ್ನ ಹಂಗ್ಯಾಕೋ ಪ ನಿನ್ನ ನಾಮದ ಬಲವೊಂದಿದ್ದರೆ ಸಾಕೊ ಅ ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬ ನಾಮವೆ ಕಾಯ್ತೊ ೧ ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ […] +ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] +ರಾಗ — ಆನಂದಭೈರವಿ ತಾಳ — ಅಟ್ಟ ಮುಟ್ಟದಿರೋ ಎನ್ನನು – ರಂಗಯ್ಯ | ಮುಟ್ಟದಿರೋ ಎನ್ನನು ||ಪ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_286.txt b/Kannada Sahitya/article_286.txt new file mode 100644 index 0000000000000000000000000000000000000000..1a7367c685fcaa33f69ac868816b9d02fb3b5034 --- /dev/null +++ b/Kannada Sahitya/article_286.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಲೋಕದ ತುಂಬ ಮುಳ್ಳಿದ್ದರೂ ಸರಿ +ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ +ಸ್ವರ್ಗದಗಿರಣಿ ಸದಾ ಸೋಮಾರಿ +ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ +ಮುಳುಗಲಿ ಉಳಿದವರು ದುಃಖದಲ್ಲಿ +ಹಾರಾಡಲಿ ಪ್ರೇಮದಾತ್ಮ ಸಂತೋಷದಲ್ಲಿ +ದೀಪಗಳು ಕರಕಾಗಿ ಕಗ್ಗತ್ತಲಲ್ಲೇ ಪ್ರೇಮದ ಗೂಡು +ನಲ್ಲನೇ ಸ್ವತಃ ಸಾವಿರ ಸೂರ್ಯರ ಬೀಡು +ಎದೆಯ ಬಟ್ಟಲಿಂದ ಉಕ್ಕಿತು ಪ್ರೇಮ ಮದ್ಯದ ನೊರೆ +ರಹಸ್ಯದೊಳಗಿನ ರಹಸ್ಯಗಳ ಪ್ರೇಮದ ಜತೆಗಾರರೆ? +ನೂರು ಮಾತು ಕೊಟ್ಟರೂ ಸದಾ ಅತೃಪ್ತ ಈ ಸಖ +ಚಿತ್ತಚೋರರ ಚಾಲಾಕಿಗೆ ಸಾವಿರ ಮುಖ +ಜಡ್ಡಾಗಿ ಹಿಡಿದಾಯ್ತ ಹಾಸಿಗೆ, ನಲ್ಲ ಕೊರಗಿ ಕೊರಗಿ +ಕೊರಗಿ ಕರಗಿದವನ ಬಳಿ ಬಾರಳೆ ಚಂದ್ರಮುಖಿ +ಪ್ರೇಮದಶ್ವಾರೋಹಿಗೆ ದಾರಿಯ ಭಯಬೇಡ +ಈ ಅದ್ಭುತ ಕುದುರೆಗಿದೆ ನಾಗಾಲೋಟದ ವೇಗ +ದಾರಿ ತುಂಬ ಹಳ್ಳ ಕೊಳ್ಳಗಳುಂಟು +ಈ ಕುದುರೆ ನಿನ್ನ ಒಂದು ಕ್ಷಣಕ್ಕೆ ಗುರಿ ಮುಟ್ಟಿಸುವುದೇ ಸರಿ +ಮೇವೆ ಬೇಡ ಪ್ರೇಮಿಯ ಆತ್ಮಕ್ಕೆ +ಹೃದಯದ ಮಧುವೇ ಸಾಕು ನಲ್ಲರ ಜೀವಕ್ಕೆ +ಶಂಸ್‌ನ ಹೃದಯ ಸದಾ ಕುಡಿದು ಉನ್ನತ್ತ +ಶಂಸ್‌ನ ಹೃದಯ ಶಾಶ್ವತವಾಗಿ ಸ್ವಸ್ಥ +***** +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_287.txt b/Kannada Sahitya/article_287.txt new file mode 100644 index 0000000000000000000000000000000000000000..6464e720906b916599eb43cee098e28e9602fe7c --- /dev/null +++ b/Kannada Sahitya/article_287.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ವಂಶಕೊಬ್ಬ’ ಮುಹೂರ್ತ ಸಮಾರಂಭದಂದು ಈ ಮಾತನ್ನು ಆರಂಭಕ್ಕೆ ಪ್ರಸ್ತಾಪಿಸಿದವರು ನಿರ್ಮಾಪಕ ಮಾಣಿಕ್‌ಚಂದ್! +‘ನಾನೊಂದು ಊರಿಗೆ ಹೋಗಿದ್ದೆ. ೪೦-೫೦ ಜನ ಟಿ.ವಿ. ನೋಡ್ತಿದ್ರು. ಯಾಕೆ ಸಿನಿಮಾ ನೋಡಲ್‌ವೇನ್ರಯ್ಯ ಅಂದೆ. ಅರೆ, ಈ ಟೀವಿಲಿರೋ ಇದಿದೇ ಮುಖಗಳನ್ನು ಸಿನಿಮಾದಲ್ಲಿ ತೋರಿಸಿದ್ರೆ ಯಾರು ಹೋಗ್ತಾರೆ. ಟಿವೀಲೆ ನೋಡ್ಕೋತೀವಿ ಅಂದ್ರು. ಅವರು ಹೇಳೋದು ನಿಜವೇ. ಅದರಿಂದ ಟ.ವಿ.ಕಲಾವಿದರನ್ನು ಸಿನಿಮಾಗೆ ಹಾಕ್ಕೋಳ್ದೇ ಇರೋದೇ ಒಳ್ಳೇದು’ +ಎಂದಾಗ ಚಿತ್ರನಟ ಜಗ್ಗೇಶ್ ಸಹಾ ದನಿಗೂಡಿಸಿ ‘ಸತ್ಯ ಆ ಮಾತು ಆ ದೃಷ್ಟಿಯಿಂದಲೇ ಇನ್ನು ಮೇಲೆ ಟೀವೀಲಿ ಪಾರ್ಟು ಮಾಡೋರನ್ನು ಸಿನಿಮಾಗೆ ಹಾಕ್ಕೋಬಾರದು ಅನ್ನೋ ವಿಷಯ ಮಾತುಕತೆ ನಡೀತಾ ಇದೆ’. +‘ಅದು ನಿಮ್ಮ ಬ್ಯಾನರ್‍ ನಿರ್ಧಾರವಾದರೆ, ಹಾಗೆ ಮಾಡಕ್ಕೆ ನೀವು ಸರ್ವತಂತ್ರ ಸ್ವತಂತ್ರರು’ ಎಂದೆ. +‘ನಮ್ಮ ಬ್ಯಾನರ್‍ ಅಂತಲ್ಲ. ಎಲ್ಲಾ ನಿರ್ಮಾಪಕರು ಸೇರಿ ಅಂಥ ಒಂದು ನಿರ್ಧಾರಕ್ಕೆ ಬರೋ ವಿಷಯದಲ್ಲಿ ಚರ್ಚೆ ನಡೀತಿದೆ. ಬರುತ್ತೆ ಆ ಆರ್ಡರ್‍ ಇಷ್ಟರಲ್ಲೆ’ ಎಂದರು. +ಆ ಸುದ್ದಿ ಪ್ರಕಟವಾದ ಮರುಘಳಿಗೆ ಎಲ್ಲೆಡೆ ಈಗ ಆ ಕುರಿತೇ ಬಿಸಿಬಿಸಿ ಚರ್ಚೆ. +‘ಟಿ.ವಿ.ಯವರು ಸಿನಿಮಾಗೆ ಬೇಡ ಅಂತ ಹೇಳಕ್ಕೆ ಇವರು ಯಾರು? ಟ.ವೀಲೆ ಮಾಡಲ್ಲ ಅನ್ನೋರಿಗೆ ಚಿತ್ರದಲ್ಲಿ ಅವಕಾಶ, ಕೈತುಂಬಾ ಹಣ ಕೊಡ್ತಾರಂತಾ? ಈ ದೇಶದ ಪ್ರಜೆಯ ಮೂಲಭೂತವಾದ ಹಕ್ಕು ಕಿತ್ಕೊಳ್ಳಕ್ಕೆ ಯಾರಿಗೆ ರೈಟ್ಸ್ ಇದೆ? ಈ ಧೋರಣೆ ತಪ್ಪು’ ಎಂದವರು ಕಲಾವಿದರ ಸಂಘದ ಕಾರ್ಯದರ್ಶಿ ಸುಂದರರಾಜ್. +‘ಸೀರಿಯಲ್ಲು-ಮೆಗಾ ಧಾರಾವಾಹಿಗಳು ಇಲ್ಲಾ ಅಂದಿದ್ರೆ ನಾವು ಉಪವಾಸ ಸಾಯಬೇಕಾಗಿತ್ತು. ಸೀರಿಯಲ್‌ಲ್ಲಿ ಪಾರ್ಟ್ ಮಾಡೋದು ನೋಡಿ ಕೆಲವರು ಸಿನಿಮಾಕ್ಕೂ ಕರೆದಿದಾರೆ. ವಿನಯ ಪ್ರಸಾದ್‌ನ ಟೀವಿಲಿ ನೋಡಿದ ಮೇಲೆ ತಾನೆ ಪಾರ್ವತಮ್ಮ ರಾಜ್‌ಕುಮಾರ್‍ ಅವರಿಗೆ ಒಂದು ಅವಕಾಶ ಕೊಟ್ಟಿದ್ದು. ಹಾಗೆ ಎಷ್ಟೋ ಜನ ಟಿ.ವಿ.ಯಿಂದ ಸಿನಿಮಾಗೆ ಹಾರಿದಾರೆ’ ಅಂಥ ಕಲಾವಿದರ ಪಟ್ಟಿ ಬಹಳ ಉದ್ದದೇ ಇದೆ. +‘ಹೇಮ ಅಮೆರಿಕಾ-ಅಮೆರಿಕಾ ಸಿನಿಮಾದಲ್ಲೂ ಮಾಡಿದರು-ಟೀವಿಲೂ ಮಾಡ್ತಿದಾರೆ. ತಾರಾ ಸಿನಿಮಾ ನಟಿಯೂ ಹೌದು-ಟಿ.ವಿ ನಟಿಯೂ ಹೌದು. ಇದನ್ನೇ ಮಾಡು-ಇದು ಬೇಡ ಅಂತ ಹೇಳೋ ಹಕ್ಕು ಯಾರು ಯಾರಿಗೆ ಕೊಟ್ಟಿದ್ದಾರೆ. ಅಮಿತಾ ಬಚ್ಚನ್ ಅಂತ ಭಾರಿ ನಟರೇ ಸ್ಮಾಲ್ ಸ್ಕ್ರೀನ್‌ಗೆ ಅಡ್ವರ್‌ಟೈಸ್‌ಮೆಂಟ್ ಫಿಲಮ್ಸ್‌ಲ್ಲಿ ಮಾಡಿಲ್ವೇ?’ ಎಂದು ಪ್ರಶ್ನೆಗಳ ಹುತ್ತವನ್ನೇ ಎದುರಿಸಬೇಕಾಗಿ ಬಂದಿದೆ-ಈಗ. +ಪಳಗಿದ ಟಿ.ವಿ ನಿರ್ಮಾಪಕ-ನಿರ್ದೇಶಕರೊಬ್ಬರು ಕೇಳಿದರು ‘ಈಗ ಖ್ಯಾತ ಸಿನಿಮಾ ನಿರ್ದೇಶಕರಾದ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್‍, ಡಿ.ರಾಜೇಂದ್ರಬಾಬು, ವಿಶ್ವನಾಥ್, ದಿನೇಶ್‌ಬಾಬು, ಭಾರ್ಗವ, ದೊರೆ-ಭಗವಾನ್, ಎಂ.ಎಸ್. ರಾಜಶೇಖರ್‍, ಎಸ್. ನಾರಾಯಣ್ ಮುಂತಾದವರೆಲ್ಲ ಟಿ.ವಿ. ಸೀರಿಯಲ್‌ಗಳು ಮಾಡಕ್ಕೆ ಯಾಕೆ ಬರ್‍ತಿದಾರೆ ನಮ್ಮ ಹೊಟ್ಟೆ ಮೇಲೆ ಹೊಡೆಯಕ್ಕಾ? ನಾವಾದ್ರೆ ನಾವೇ ಡೈರೆಕ್ಟ್ ಮಾಡತೀವಿ. ಇವರು ತಮ್ಮ ಹೆಸರು ಲೆಂಡ್ ಮಾಡಿ ಸಬ್ ಕಾಂಟ್ರಾಕ್ಟ್ ಬಿಡ್ತಾರಲ್ಲ ಇದು ಸರಿಯಾ? ಇದಕ್ಕೂ ಅಂಕೆ ಹಾಕ್ತಾರಾ ಹಾಗಾರೆ’ ಎಂದರು. +ಅವರು ಹೇಳಿದ ಮಾತೂ ನಿಜವೇ. ಸಿನಿಮಾದವರಾದ ಜಿ.ವಿ. ಅಯ್ಯರ್‍, ಪಂಡರಿಬಾಯಿ, ಮೈನಾವತಿ, ಕೆ.ಎಸ್. ಅಶ್ವತ್ಥ್ ಟೀವೀಲಿ ಮಾಡ್ತಿದಾರಲ್ವ? +ಟಿ.ವಿ. ಚಾನಲ್ಲುಗಳವರು ದೊಡ್ಡ ಹೆಸರು ಆದ್ರೆ-ಗೋಸ್ಟ್ ಡೈರಕ್ಟರು ಕೆಲಸ ಮಾಡಲಿ ಅನ್ನೋದಾದ್ರೆ ಕ್ವಾಲಿಟಿ ಬಾ ಅಂದ್ರೆ ಹ್ಯಾಗೆ ಬರುತ್ತೆ? ಉಮಾಶ್ರೀ ಅಂಥ ನಟಿ ಸಿನಿಮಾ, ಟೀವಿಗಳಲ್ಲಿ ಇವತ್ತು ದೊಡ್ಡ ಹೆಸರು. ಮುಂಚೆ ಬದುಕಿನ ಸಲುವಾಗಿ ಅದೆಷ್ಟು ಕಂಪನಿ ನಾಟಕಗಳಲ್ಲಿ ಮಾಡಿದರು. ಊರೂರು ಸುತ್ತಿದ್ದರು. ಆಗ ಯಾರು ಬಂದರು ನೆರವಿಗೆ. +ಅಂತಾದ್ರಲ್ಲಿ ಟಿ.ವಿ. ಕಲಾವಿದರನ್ನು ಸಿನಿಮಾದಲ್ಲಿ ಬ್ಯಾನ್ ಮಾಡೋ ಯೋಜನೆಯೇ ತುಂಬಾ ದರಿದ್ರವಾದದ್ದು. +ಈಗ ಸಿನಿಮಾ ಮಾಡ್ತಿರೋ ಎಷ್ಟು ಜನಕ್ಕೆ ಆ ಮಾಧ್ಯಮದ ಮೇಲೆ ಹಿಡಿತವಿದೆ. ಸಿನಿಮಾರಂಗದ ಅ.ಆ.ಇ.ಈ ಗೊತ್ತಿಲ್ದೆ ಸಿನಿಮಾ ನಿರ್ಮಾಣಕ್ಕೆ ನಿರ್ದೇಶನಕ್ಕೆ ಇಳೀತಿಲ್ವೆ. +ಅನುಭವವೇ ಅವರಿಗೆ ಪಾಠ ಹೇಳುತ್ತೆ ನಿನ್ನ ನೆಲೆ ಎಲ್ಲಿ ಅಂತ? +ಬಾಲಚಂದರ್‍ ಸಿನಿಮಾ ರಂಗದ ಖ್ಯಾತಿವೆತ್ತ ನಿರ್ದೇಶಕರು. ಅವರು ನಿರ್ದೇಶನ ಮಾಡೋ ಸೀರಿಯಲ್ ತುಂಬ ಜನಪ್ರಿಯವಾಗುತ್ತೆ. ಖ್ಯಾತ ನಟ-ನಟಿಯರು ಅವರ ಸೀರಿಯಲ್‌ಗಳಲ್ಲಿ ಮಾಡಕ್ಕೆ ಹಾತೊರಿತಾರೇ. ಯಾಕೆ? ಅವರು ನಿರೂಪಣೇಲಿ ಅಂಥ ಬಿಗಿ ಇರುತ್ತೆ. +ಅಂಥವರನ್ನು ನೀವು ಸಿನಿಮಾದವರು ಟಿ.ವಿ. ಮಾಡಬೇಡಿ ಅಂತ ಹೇಳಬೇಕು ಯಾಕೆ? +ಈಗ ಯಾರು ಬೇಕಾದ್ರೂ ಸಿನಿಮಾ ಮಾಡಬಹುದು. ಆತ ಬ್ಲಾಕ್ ಮಾರ್ಕೆಟೀರ್‍ ಆಗಿರಬಹುದು,. ಸ್ಮಗ್ಲರ್‍ ಇರಬಹುದು, ಈರುಳ್ಳಿ ಮಾರೋನು ಇರಬಹುದು, ಎಣ್ಣೆ ಗಡಂಗ್‌ನವರಿರಬಹುದು. ಯಾರಾದರೂ ಆಗಿರ್‍ಲಿ-ಹಣ ಹಾಕೋನು ಅವನು ಕಳ್ಕೊಳ್ಳಬಹುದು ಅಥವಾ ದುಡ್ಡು ಕೊಳ್ಳೆಯೇ ಹೊಡೀಬಹುದು. +ಥಿಯೇಟರ್‌ಗೆ ಜನ ಬರದಿರಲು ಟೀವಿ ಸೀರಿಯಲ್ಲೇ ಕಾರಣ ಎಂದು ಹೇಗೆ ಹೇಳುವುದು. ದೂರದರ್ಶನ, ಉದಯ, ಈಟಿ.ವಿ. ಕಾವೇರಿ ಇದಲ್ಲದೆ ಪರಭಾಷಾ ಚಾನೆಲ್‌ಗಳಲ್ಲಿ ಕಾಂಪಿಟಿಷನ್ ಮೇಲೆ ಎಷ್ಟೋ ಸಲ ತುಂಬ ಒಳ್ಳೊಳ್ಳೆ ಸಿನಿಮಾಗಳು ಹಾಕ್ತಿರತಾರೆ. ಅಲ್ಲೂ ರಾಜ್‌ಕುಮಾರ್‍, ವಿಷ್ಣು, ಅನಂತ್‌ನಾಗ್, ಅಂಬರೀಶ್, ಶಿವರಾಜ್‌ಕುಮಾರ್‍, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಸುದೀಪ್, ದೇವರಾಜ್, ದೊಡ್ಡಣ್ಣ, ಪ್ರಕಾಶ್‌ರೈ ಎಲ್ಲರ ಚಿತ್ರಗಳೂ ಬರ್‍ತಿರತ್ತಲ್ಲ. ಕಲ್ಯಾಣ್‌ಕುಮಾರ್‍, ನರಸಿಂಹರಾಜು, ಉದಯಕುಮಾರ್‍, ಬಾಲಣ್ಣ, ಎನ್.ಎಸ್. ರಾವ್, ಮುಸರಿ, ಕಲ್ಪನಾ, ಮಂಜುಳಾ ಮುಂತಾದ ದಿವಂಗತರ ಚಿತ್ರಗಳೂ ಬರ್‍ತಿರ್‍ತವೆ. ಸಿನಿಮಾ ಥಿಯೇಟರ್‌ಗೆ ಇವರ ಚಿತ್ರಗಳು ಬಂದಾಗ ಎಲ್ಲ ಅದದೇ ಮುಖಗಳು ಅಂಥ ಸಿನಿಮಾ ಮಂದಿರಕ್ಕೆ ಬರೋದು ಬಿಟ್‌ಬಿಟ್ಟಿದಾರಾ? +ಇಲ್ಲ. ಸ್ಮಾಲ್ ಸ್ಕ್ರೀನ್‌ನಲ್ಲಿ ನೋಡೋ ಅನುಭವವೇ ಬೇರೆ-ಬಿಗ್ ಸ್ಕ್ರೀನ್‌ನಲ್ಲಿ ನೋಡೋ ಅನುಭವವೇ ಬೇರೆ. +ಅದೆಲ್ಲ ಅವರವರ ಅಭಿರುಚಿಗೆ ಬಿಟ್ಟ ವಿಷಯ. ಯಾರೋ ಹಾಕಿದ ತಾಳಕ್ಕೆ ಯಾಕೆ ಎಲ್ಲ ಕುಣೀಬೇಕು? ಆರ್ಟ್ ಫಿಲಂನಲ್ಲಿ ಮಾಡೋರು ಕಮರ್ಷಿಯಲ್ ಫಿಲಂನಲ್ಲಿ ಮಾಡಬಾರದು ಅಂದಿದ್ರೆ ಶಂಕರ್‌ನಾಗ್ ಅಂಥ ನಟ ಸಿನಿಮಾದಲ್ಲಿ ಮಿಂಚಕ್ಕೇ ಆಗ್ತಿರಲಿಲ್ಲ. +ಕನ್ನಡ ಬರದೆ ಇರೋರು ಕನ್ನಡ ಚಿತ್ರಗಳಿಗೆ ಡೈಲಾಗ್ ಬರೀಬಾರದು ಅನ್ನಕ್ಕೆ ಆಗುತ್ತಾ. ಕಾಸಿನ ಸಲುವಾಗಿ ಯಾರೋ ಗೋಸ್ಟ್ ರೈಟರ್‍ ಆಗಿರ್‍ತಾರೆ. ಇದು ಮಾಡಬೇಡಿ ಅಂತ ಅವರ ಅನ್ನ ಕಿತ್ಕೊಳ್ಳಕ್ಕೇ ನಾವು ಯಾರು? +ಅಪುರೂಪಕ್ಕೆ ಒಂದು ನಿರ್ಮಾಪಕ ಸಂಘವಾಗಿದೆ ಅಂದ ಮಾತ್ರಕ್ಕೆ ಅಲ್ಲಿ ತುಘಲಕ್ ದರ್ಬಾರ್‍ ಆಗಬಾರದಲ್ವೆ? +ರವಿಚಂದ್ರನ್ ಅವರ ಬಳಿ ಪತ್ರಕರ್ತರು ಈ ಅಂಶ ಪ್ರಸ್ತಾಪಿಸಿದಾಗ “ನಾವು ಸಿನಿಮಾದವರು ಎಷ್ಟು ಕಲಾವಿದರಿಗೆ ಕೈತುಂಬ ಸಂಭಾವನೆ ಕೊಡ್ತೀವಿ. ಪೂರ್ತಿ ಹಣಬೇಕು ಅಂದ್ರೆ ಚಿತ್ರಮುಗಿಯುವವರೆಗೆ ಕಾಯಬೇಕು. ಹಾಗೆ ನೋಡಿದರೆ ಟೀವೀಗೆ ಜಗ್ಗೇಶ್ ಚೆನ್ನಾಗಿ ಸೂಟ್ ಆಗ್ತಾರೆ. ಟಿ.ವಿ.ಲೇ ಮಾಡೋಕೆ ಹೇಳಿ ಜಗ್ಗೇಶ್‌ಗೆ” ಎಂದು ನಕ್ಕರು. ಈ ಬಗ್ಗೆ ಈಗ ತುಂಬ ಗಂಭೀರವಾಗಿ ಚರ್ಚೆ ನಡೆಯಬೇಕಿದೆ. ಅಲ್ಲವೆ? +***** +(೩೦-೧೧-೨೦೦೧) +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […] +ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […] +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_288.txt b/Kannada Sahitya/article_288.txt new file mode 100644 index 0000000000000000000000000000000000000000..3d340d8de5ceb755aa1b1ed529473a08793c28c6 --- /dev/null +++ b/Kannada Sahitya/article_288.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸೂರ್‍ಯ ಬಲ್ಬಿನ ಯುಗದಲ್ಲೂ +ದೀಪಾವಳಿಗೊಮ್ಮೆ ಮಣ್ಣಿನ ಹಣತೆ +ಮನೆಸುತ್ತ; +ಬಣ್ಣ ಬಣ್ಣದ ಮೋಂಬತ್ತಿ ಸಾಲು +ಹಬ್ಬ ಹಳೆಯದಾದರೂ ಬೆಳಕು ಮಾತ್ರ +ವಸಾಹತುಶಾಹಿಗೆ ಬದ್ಧ. +***** +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +“Judge not that ye be not judged” -Jesus Christ ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ […] +‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_289.txt b/Kannada Sahitya/article_289.txt new file mode 100644 index 0000000000000000000000000000000000000000..8ee6f809e22bf980503952c1f98be2fbf7602736 --- /dev/null +++ b/Kannada Sahitya/article_289.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ ಮನೆಗೆ ಹೋಗಿ ಬರುತ್ತೇನೆ,” ಎಂದು ಹೇಳಿ, ಅವಳ ಉತ್ತರದ್ದಾಗಲೀ ಬರವಿನದ್ದಾಗಲೀ ಹಾದಿ ಕಾಯದೆ, ಕೈಯಲ್ಲೆತ್ತಿಕೊಂಡ ಉದ್ದನ್ನ ಬಿದಿರಿನ ದೊಣ್ಣೆಯನ್ನೂರುತ್ತ ಮೆಲ್ಲನೆ ಜಗಲಿಯ ಮೆಟ್ಟಿಲಿಳಿದು ಅಂಗಳಕ್ಕೆ ಬಂದದ್ದೇ, ಹೊರಗೆ ಹೊತ್ತಿಗೆ ಮೊದಲೇ ಕವಿದ ಕತ್ತಲೆ ನೋಡಿ, ಆಕಾಶದತ್ತ ಕಣ್ಣೆತ್ತಿ, ‘ಅರೆ ಅಲ್ಲಾ’ ಎನ್ನುತ್ತಿರುವಾಗ ದೂರ ಹುಣಿಸೆಮರಗಳ ತೋಪಿನಾಚೆಯ ಗುಡ್ಡಗಳ ನೆತ್ತಿಯಲ್ಲಿ ಸದ್ದೂ ಕೇಳಿಸಿದಂತಾಗಿ, ಈ ಅಡ್ಡತಿಂಗಳಲ್ಲಿ ಮಳೆ ಬರುವಂತಿದೆಯಲ್ಲಾ ಎಂದುಕೊಂಡರೂ ಅದರ ಪರಿವೆಯೇ ಇಲ್ಲದವರಂತೆ ಅಂಗಳ ದಾಟಿ ಓಣಿಯತ್ತ ಸಾಗಿದ್ದರು. +ತುಂಬ ಮುದುಕರಾದ ಬುಡಣಸಾಬರ ವಯಸ್ಸು ಆ ಹಳ್ಳಿಯಲ್ಲಿ ಸರಿಯಾಗಿ ಯಾರಿಗೂ ಸ್ವತಃ ಬುಡಣಸಾಬರಿಗೂ-ಗೊತ್ತಿರಲಿಲ್ಲವಾದರೂ ಎಲ್ಲರ ಆದರ ಪ್ರೀತಿಗಳಿಗೆ ಪಾತ್ರರಾದ ಈ ಹಿರಿಯರು ಆ ಭಾಗದಲ್ಲೇ ತೀರ ಹಳೆಯರೆಂಬುದು ಎಲ್ಲರೂ ಒಪ್ಪಿದ ಮಾತು. ಅಂಗೈ ಮುಚ್ಚುವಷ್ಟು ನೀಳವಾದ ಕೈಗಳುಳ್ಳ, ಪಾದಗಳವರೆಗೂ ಮುಟ್ಟುವಷ್ಟು ಉದ್ದವಾದ ಕಪ್ಪು ನಿಲುವಂಗಿ; ಅದರ ಮೇಲೆ ಹೊಕ್ಕಳದವರೆಗೂ ಹವ್ವನೆ ಹರಡಿ ಬಿದ್ದ ನರೆತ ತಲೆ ಮೀಸೆ ಗಡ್ಡಗಳಿಂದ ಇಳಿದ ಬೆಳ್ಳಗಿನ ಕೂದಲು; ನೆಡೆಯುವಾಗ ಆರು ಪೂಟು ಎತ್ತರವಾದ ಇವರ ಕೈಯಲ್ಲಿ ಇವರಿಗಿಂತಲೂ ಒಂದು ಮುಷ್ಟಿ ಎತ್ತರವಾದ ಬಿದಿರಿನ ಬೆತ್ತ. ಪುರಾಣಕಾಲದ ಋಷಿಗಳಂತೆ, ಮಂತ್ರವಾದಿಯಂತೆ, ಪವಾಡಪುರುಷರಂತೆ-ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ-ಕಂಡ ಬುಡಣಸಾಬರಿಗೆ ಆ ಹಳ್ಳಿಯಲ್ಲಿ ಇದ್ದ ಹತ್ತಿರದ ಬಳಗವೆಂದರೆ ಹಳ್ಳಿಯ ಪೂರ್ವದ ತುದಿಯಲ್ಲಿರುತ್ತಿದ್ದ ಮೊಮ್ಮಗ ಕಾಸೀಮ ಹಾಗೂ ಹಲ್ಳಿಯ ಇನ್ನೊಂದು ತುದಿಯಲ್ಲಿರುತ್ತಿದ್ದ ಮೊಮ್ಮಗಳು, ಫಾತೀಮಾ. ರಾತ್ರಿಯ ಊಟ ಮುಗಿಸಿದ್ದೇ ಕಾಸೀಮನ ಮನೆಯಿಂದ ಹೊರಬಿದ್ದವರು ಫಾತಿಮಾಳ ಮನೆಯನ್ನು ಸೇರಿ, ರಾತ್ರಿಯನ್ನು ಅಲ್ಲೇ ಕಳೆದು ಮರುದಿನ ಬೆಳಕು ಹರಿಯುವ ಮೊದಲೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಪ್ರಾರ್ಥನೆಯಾದದ್ದೇ ತಿರುಗಿ ಕಾಸಿಮನ ಮನೆಗೆ ಹೊರಡುತ್ತಿದ್ದರು. ದಿನವೂ ತಪ್ಪದೇ ಸಂಜೆ ಬೆಳಿಗ್ಗೆ, ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ನಡೆಯುತ್ತಿದ್ದ ಈ ವೃದ್ಧ ಸಂಚಾರಗಳು ಆ ಹಳ್ಳಿಯಲ್ಲಿ ಪ್ರಸಿದ್ಧವಾಗಿದ್ದವು. +ಮುದಿ ಹೆಜ್ಜೆಗಳನ್ನಿಡುತ್ತ ಹಿತ್ತಿಲ ದಣಪೆ ದಾಟಿದ ಬುಡಣಸಾಬರು ಬಡಕೂಬೇಣವನ್ನು ಕಳೆದು, ರಸ್ತೆ ಸೇರಿ, ಪೇಟೆಗೆ ಬರುವ ಹೊತ್ತಿಗೆ ಅಂಗಡಿಗಳಲ್ಲೆಲ್ಲ ದೀಪ ಹಚ್ಚುವ ಅವಸರ ಕಂಡು ಬಂದಿತು. ದೊಡ್ಡ ಅಂಗಡಿಯ ಮಹದೇವಶೆಟ್ಟಿ ಹೊಸತಾಗಿ ತಂದ ಗ್ಯಾಸಬತ್ತಿಯನ್ನು ಪಂಪು ಹೊಡೆದುಹೊಡೆದು ಬೆಳಗಿಸುತ್ತಿದ್ದಂತೆ, ಮಳೆ ಬರುವ ಲಕ್ಷಣ ಕಂಡರೂ ಹಾಯಾಗಿ ಮನೆಯಲ್ಲಿ ಕೂಡುವುದನ್ನು ಬಿಟ್ಟು ಹೊರಗೆ ಬಿದ್ದ ಬುಡಣಸಾಬರನ್ನು ಕಂಡು, “ಮೊಮ್ಮಗಳ ಮನೆಗೆ ಹೊರಟಂತಿದೆ ಬುಡಣಸಾಬರು. ಮಳೆ ಬರುತ್ತಿದೆಯೊ ಏನೋ, ಕೊಡೆಯಿಲ್ಲದೇ ಹೊರಟು ಬಿಟ್ಟಿರಲ್ಲಾ” ಎಂದಾಗ, ಬರಿಯೆ ನಕ್ಕ ಬುಡಣಸಾಬರ ಬೆಳ್ಳಗಿನ ಗಡ್ಡ ಮೀಸೆಗಳ ನಡುವೆ ಮಿಂಚಿದ, ಇನ್ನೂ ಗಟ್ಟಿಯಾಗೇ ಉಳಿದ ಹಲ್ಲುಗಳ ಸಾಲುಗಳಿಂದ ಸುಖಪಟ್ಟು, ಆಗಲೇ ಭುಗ್ ಎಂದು ಶುಭ್ರವಾಗಿ ಹೊತ್ತಿಕೊಂಡ ಗ್ಯಾಸ್ ಬತ್ತಿಯನ್ನೆತ್ತಿ ಅಂಗಡಿಯ ಮಾಡಿಗೆ ತೂಗುಹಾಕುತ್ತಿದ್ದಾಗ, ಬುಡಣಸಾಬರು ಮುಂದೆ ನಡೆದರು. ಪೇಟೆಯನ್ನು ಹಿಂದೆ ಹಾಕಿ, ದೇವಕೀ ದೇಗುಲದತ್ತ ಹೊರಳುವಾಗ ರಸ್ತೆಯ ಮುರುಕಿಯಲ್ಲಿ ನಿಂತ, ಗೋಡೆಗಳ ಮೇಲೆಲ್ಲ ಸಣ್ಣ ಬೆಟ್ಟಗಳಂತಹ ಒರಲೆಯ ಹುತ್ತಗಳನ್ನು ಬೆಳೆಯಿಸಿಕೊಂಡ ಆ ಹಳೆಮನೆಯ ಮುದುಕ ಸದಾಶಿವರಾಯರು ಎಂದಿನಂತೆಯೇ ದಣಪೆಯ ಕಲ್ಲಿನ ಮೇಲೆ ಕೂತಿರದಿದ್ದುದನ್ನು ಕಂಡು, ಮುದುಕ ಮಳೆಗೆ ಹೆದರಿರಬೇಕು ಎಂದುಕೊಂಡು, ಮುಂದೆ ಸಾಗಿ, ಗುಡಿ ತಲುಪುವುದರೊಳಗೆ ಒಂದೆರಡು ಮಳೆಯ ಹನಿಗಳು ಮೈಮೇಲೆ ಉದುರಿದಂತಾದರೂ ಹೆಜ್ಜೆಯ ವೇಗವನ್ನು ಹೆಚ್ಚಿಸದೇ, ಗುಡಿಯಿದ್ದ ಹಿತ್ತಿಲ ಮೂಲೆಯಲ್ಲಿ ನಾಗಸಂಪಿಗೆ ಮರದ ಮರೆಯಲ್ಲಿದ್ದ ಬಾವಿಯಿಂದ ಪೂಜೆಗಾಗಿ ನೀರು ಸೇದುತ್ತಿದ್ದ ಗುನಗನ ಬೆನ್ನ ಬದಿಯನ್ನು ನೋಡುತ್ತ ನಿಂತವರು, ತಾವು ನಿಂತದ್ದಾದರೂ ಯಾಕೆ ಎಂದು ತಾವೇ ಆಶ್ಚರ್ಯಪಟ್ಟವರಂತೆ ಗುನಗ ತಮ್ಮತ್ತ ತಿರುಗುವ ಕ್ಷಣವನ್ನು ಕಾಯದೆ, ಮತ್ತೆ ಮುಂದೆ ನಡೆದರು. ಶಂಕರರಾಯರ ಹಿತ್ತಲು, ಪಟೆಲರ ಹಿತ್ತಲುಗಳನ್ನು ದಾಟಿ, ಮಸುಕುಮಸುಕಾದ ಹಳದಿ ಬಣ್ಣದ ಬೆಳಕನ್ನು ತೂರುವ ಕಾಚಿನ ಬುರುಡೆಯ ದೀಪ ತೂಗುತ್ತಿದ್ದ ಏಕನಾಥ ಶೆಟ್ಟಿಯ ಅಂಗಡಿಗೆ ಬರುವುದರೊಳಗೆ ಗುಡುಗಿನ ದೊಡ್ಡ ಸದ್ದೂ ಕೇಳಿಸಿದಾಗ, ನಡಿಗೆಯ ವೇಗವನ್ನು ತುಸು ಹೆಚ್ಚಿಸಿ, ಮೊಮ್ಮಗಳ ಮನೆಯ ಕಡೆ ಹೊರಳುವ ಓಣಿಯ ಬಾಯಲ್ಲಿ ನಿಂತ ನರಸಿಂಹನ ಅಂಗಡಿಗೆ ಬರುವಷ್ಟರಲ್ಲಿ ಉಬ್ಬಸ ಹತ್ತಿದಂತಾಗಿ, ತಡೆದು, ಅಂಗಡಿಯತ್ತ ನೋಡುತ್ತ, ಅಂಗಡಿಯಲ್ಲಿ ದೀಪವಿಲ್ಲದ್ದನ್ನು ಕಂಡು, ಇದು ಹೇಗೆ ಎಂದುಕೊಂಡು ಕಣ್ಣರಳಿಸಿ, ಹುಡುಗ ಈವತ್ತು ಅಂಗಡಿಯನ್ನು ಇಷ್ಟು ಬೇಗ ಹೇಗೆ ಮುಚ್ಚಿದ? ಎಂದೂ ಹೀಗೆ ಮಾಡಿದವನಲ್ಲ ಎಂದು ಕ್ಷಣಹೊತ್ತು ಅಸ್ವಸ್ಥಗೊಂಡು ಓಣಿಯಲ್ಲಿ ಕಾಲಿರಿಸುವ ಹೊತ್ತಿಗೆ ಎರಡೂ ಬದಿಯ ಹಿತ್ತಲುಗಳಲ್ಲಿ ದಟ್ಟವಾಗಿ ಬೆಳೆದು ನಿಂತ ಎತ್ತರವಾದ ಮರಗಳಿಂದಾಗಿ, ಆಕಾಶದಲ್ಲಿ ಕವಿದ ಮೋಡಗಳಿಂದಾಗಿ ಓಣಿಯಲ್ಲಿ ಮುತ್ತಿ ನಿಂತ ಕತ್ತಲೆಯಲ್ಲಿ ಏನೇನೂ ಕಾಣಿಸದಂತಾಗಿ, ದಾರಿ ತಪ್ಪಿದೆವೋ ಎಂದುಕೊಳ್ಳುವಷ್ಟರಲ್ಲಿ ‘ಸಳ್’ ಎಂದು ಮಿಂಚಿದ ಸಿಡಿಲಿನ ಧಾರೆ ಹಾವಿನಂತೆ ಬಳುಕಿ, ಹೆಡೆಬಿಚ್ಚಿ, ಕಣ್ಣು ಕುಕ್ಕಿಸುವ ಬೆಳಕನ್ನು ಕೆಳಗೆ ತನ್ನಂತೆಯೇ ಅಂಕುಡೊಂಕಾಗಿ ಹರಿದ ಚಿರಪರಿಚಿತವಾದ ದಾರಿಯ ಮೇಲೆ ಕ್ಷಣಕಾಲ ಚೆಲ್ಲಿ ಕಣ್ಣುಮುಚ್ಚಿತು;ದೂರ, ಮನವೇಲನ ದಣಪೆಯ ಇದಿರು, ಗದ್ದೆಗೆ ಗೊಬ್ಬರ ಸಾಗಿಸಲು ಉಪಯೋಗಿಸುತ್ತಿದ್ದ ಹರಕುಮುರುಕು ಚಕ್ಕಡಿಯೊಂದು ದಿಕ್ಕಿಲ್ಲದೆ ಬಿದ್ದಿತ್ತು. ಅದಕ್ಕೂ ಮುಂದೆ, ಉತ್ತುಮಿಯ ಹಿತ್ತಿಲ ದಣಪೆಯೊಳಗಿಂದ ಹೊರಬಿದ್ದ ಕರ್ರಗಿನ ನಾಯಿಯೊಂದು ಮಿಂಚಿಗೆ ಹೆದರಿ, ಬಾಲವನ್ನು ಕುಂಡೆಯಲ್ಲಿ ಸಿಕ್ಕಿಸಿ, ಪರಮೇಶ್ವರಿಯ ಮನೆಯತ್ತ ಓಡುತ್ತಿದ್ದುದೂ ಕಣ್ಣಿಗೆ ಬಿತ್ತು. ಅದಕ್ಕೂ ಆಚೆ, ಕೈತಾನನ ಮನೆಯವರೆಗೂ ಕ್ಷಣಕಾಲ ಕಾಣಿಸಿಕೊಂಡು ಮತ್ತೆ ಕತ್ತಲೆಯಲ್ಲಡಗಿ, ಹೊಂಚು ಹಾಕಿದ ಹಾಗೆ ತೆಪ್ಪಗೆ ಬಿದ್ದ ಸೀರಾದ ಓಣಿಯಲ್ಲಿ ಇನ್ನೊಂದು ನರಪ್ರಾಣಿ ಇರಲಿಲ್ಲ: ಬುಡಣಸಾಬರ ಮೈಮೇಲೆ ಮುಳ್ಳು ನಿಂತವು. ಎಂದೋ ಯಾವಾಗಲೋ ಸತ್ತುಹೋದ ಗೆಳೆಯರು, ಮಕ್ಕಳು, ಹಿರಿಯರು ಯಾರುಯಾರೆಲ್ಲ ನೆನಪಿಗೆ ಬಂದು ತಲ್ಲನಗೊಂಡು ಅದೀರ ಹೆಜ್ಜೆ ಇಡುತ್ತ ಮನವೇಲನ ಹಿತ್ತಲ ದಣಪೆ ತಲುಪುವುದರೊಲಗೆ, ಬೆನ್ನ ಹಿಂದುಗಡೆಯಲ್ಲಿ ಯಾರೊ ‘ಅಲಲ ಲಲಲ ಕೀ ಹಾ’ ಎಂದು ಒಳಗಿನ ಹುರುಪಿಗಿಂತ ಹೆಚ್ಚಾಗಿ ಕತ್ತಲೆಯಲ್ಲಿ ಹೋಗುವಾಗ ಪಟ್ಟ ಭೀತಿಯನ್ನು ಕಳೆದುಕೊಳ್ಳಲೆಂಬಂತೆ ಒದರುತ್ತ ಓಡೋಡುತ್ತ ಬರುವ ಹೆಜ್ಜೆಯ ಸಪ್ಪಳ ಕೇಳಿ, ತಡೆದಾಗ, ಕತ್ತಲೆಯಲ್ಲಿ ಅವರನ್ನು ಸಮೀಪಿಸುತ್ತಿದ್ದವನು, “ಇದೇ! ಬುಡಣಸಾಬರೋ ನೋಡ್ತೆ. ದೂರದಿಂದ ಯಾರೆಂದು ತಿಳಿಯದೆ ಎದೆಯಲ್ಲಿ ಧಸ್ ಆಯ್ತು ನೋಡಿ. ಇನ್ನೂ ಇಲ್ಲೇ ಇದ್ದೀರಲ್ಲ. ಪೇಟೆಯಲ್ಲಿ ನಿಮ್ಮನ್ನು ಯಾವಾಗ ನೋಡಿದ್ದೆ. ನಾನು ನಾಗೇಶ, ಪರಶುರಾಮಭಟ್ಟರ ಮಗ. ನರಸಿಂಹ ಆಡಲಿಕ್ಕೆ ಬಾ ಎಂದು ಹೇಳಿ ಕಳುಹಿಸಿದ್ದ. ಹಾಗೆಂದೇ ಹೊರಟೆ. ಬೇಗ ಬೇಗ ಹೆಜ್ಜೆ ಹಾಕಿ. ನಿಮ್ಮ ಹತ್ತಿರ ಕೊಡೆಯೂ ಇಲ್ಲ.” ಎಂದು ಒಂದೇ ಉಸಿರಿನಲ್ಲಿ ಅಂದವನೇ ಮುದುಕನ ಮಾತಿನ ದಾರಿ ಕಾಯದೇ, ಅವಸರ ಅವಸರವಾಗಿ ಅಲ್ಲಿಂದ ನಡೆದೇಬಿಟ್ಟ. ಅವನು ಕಾಣದಾದದ್ದೇ ಓಣಿಯಲ್ಲಿಯ ಕತ್ತಲೇ ಒಮ್ಮೆಲೇ ದಟ್ಟವಾದಂತೆ ಎಲ್ಲವೂ ನಿಶ್ಯಬ್ದವಾದಂತೆ ಭಾಸವಾಗಿ, ಬುಡಣಸಾಬರ ಮೈ ’ಶಿರ್’ ಎಂದು, ತಿರುಗಿ ನವಿರಿದೊಳಗಾದಾಗ ತಾವೇ ದಿಗಿಲುಪಟ್ಟು, ಎಲ್ಲ ಬಿಟ್ಟು ಇಸ್ಪೀಟಿನ ತಲಬಿಗೆ ಅಂಗಡಿಯನ್ನು ಇಷ್ಟು ಬೇಗ ಮುಚ್ಚಿದನೋ ಎಂದು ಕಳವಳಿಸುತ್ತ, ಮನವೇಲನ ದಣಪೆ ದಾಟುತ್ತಿದ್ದಾಗ, ಮನೆಯ ಜಗಲಿಯ ಮೇಲೆ ಕಂದೀಲಿನ ಬೆಳಕನ್ನು ನೋಡಿ ಅಷ್ಟರಲ್ಲೆ ಸಮಾಧಾನ ಪಟ್ಟು, ಇಲ್ಲೆಲ್ಲೋ ಚಕ್ಕಡಿ ಇದ್ದುದು ನೆನಪಿಗೆ ಬಂದು, ಅದಕ್ಕೆ ಎಡವಬಾರದೆಂಬಂತೆ ಬದಿಗೆ ಸರಿದು ಬೆತ್ತವೂರಿ ತಡವುತ್ತ ಉತ್ತುಮಿಯ ಹಿತ್ತಿಲನ್ನು ಕಳೆಯುವಷ್ಟರಲ್ಲಿ ಹಿಂದಿನಿಂದ ಯಾರೋ, ‘ರಾಜರ್ ರಾಜನು ಬಂದಾ’ ಎಂದು ಹುರುಪಿನಿಂದ ರಾಗ ಎಳೆದು ಹಾಡುತ್ತ ಬಂದವನು, ಮನವೇಲನ ದಣಪೆಯ ಇದಿರು ಏನನ್ನೋ ಎಡವಿದವನಂತೆ ‘ಔಕ್’ ಎಂದು ಹೌಹಾರಿ, ‘ಥೂ ಸತ್ತ್ ಹೋಗಲಿ’ ಎಂದು ಏನನ್ನೋ ಯಾರನ್ನೋ ಶಪಿಸುತ್ತ, ಓಡೋಡುತ್ತ ಬುಡಣಸಾಬರನ್ನು ದಾಟುತ್ತಿರುವಾಗ ನಡಿಗೆಯ ವೇಗಕ್ಕೆ ತಡೆಹಾಕಿ. “ಓಹೋಹೋ ಬುಡಣಸಾಬರು. ತ್ವರೆ ಮಾಡಿ, ತ್ವರೆ ಮಾಡಿ. ಅಂತಿಂಥಾ ಮಳೆ ಬರೂದಿಲ್ಲ ಮಾರಾಯರೇ, ಏನು ಕಡಕಡಾಟ, ಝಗಝಗಾಟ ನೋಡಿ. ಈ ತಿಂಗಳಲ್ಲಿ ಇಂಥಾ ಮಳೆ ಬಂದದ್ದು ನಿಮಗಾದರೂ ನೆನಪುಂಟೆ ಸಾಬರೇ?’ ಓ ನಾನೋ? ಮಾಧವ, ಕೇಶವ ಪೈರ ಮಗ. ನರಸಿಂಹನ ಮನೆಗೆ ಹೊರಟೆ, ಆಟಕ್ಕೆ. ಬಾ ಎಂದು ಹೇಳಿಕಳಿಸಿದ್ದ. ಆ ಮನವೇಲನ ದಣಪೆ ಮುಂದೆ ಮಾರಾಯರೇ, ಗಾಡಿಯ ಹಗ್ಗ ಎದ್ದು ಕಾಣ್ತದೆ, ಮೆಟ್ಟಿಬಿಟ್ಟೆ. ಏನೋ ಎಂತ ಜಿಗಿದುಬಿದ್ದೆ ನೋಡಿ” ಎಂದವನೆ ಮೈಯಲ್ಲಿ ಮತ್ತೆ ಹುರುಪು ಹೊಕ್ಕವನಂತೆ, ಬಯಲಾಟದೊಳಗಿನ ವೇಷದಂತೆ ಕುಣಿಯುತ್ತ ಅಲ್ಲಿಂದ ಓಟ ಕಿತ್ತ. ಅವನ ಹುರುಪು ಬುಡಣಸಾಬರಲ್ಲೂ ಹೊಕ್ಕಿತೆಂಬಂತೆ ನಡಿಗೆಯ ವೇಗ ತುಸು ಹೆಚ್ಚಿಸಿದರು. ಪರಮೇಶ್ವರಿ, ಸಣ್ಣಪ್ಪನಾಯ್ಕರ ಹಿತ್ತಲುಗಳನ್ನು ದಾಟಿ, ನರಸಿಂಹನ ಹಿತ್ತಲ ದಣಪೆಗೆ ಬಂದಾಗ ತಡೆದರು. ಕತ್ತಲು ಕತ್ತಲಾದ ಹಿತ್ತಲದಲ್ಲಿ ಕಣ್ಣು ಹಾಯಿಸಿ, ಹುಡುಕಿದರು. ದಣಪೆಯಿಂದ ದೂರವಾಗಿ ಕಪ್ಪಿನ ಗುಪ್ಪೆಯಂತೆ ನಿಂತ ಮನೆಯಲ್ಲಿ ದೀಪವಿದ್ದುದಷ್ಟೇ ಕಾಣಿಸುತ್ತಿತ್ತು. ಬದಿಯ ಮನೆಯಲ್ಲಿ ಹುಡುಗರ ಭಜನೆಯ ಗಲಾಟೆ. ಹಿಂದಿನ ದೀವರ ಕೇರಿಯಲ್ಲಿ ನಾಯಿಯೊಂದು ತಡೆಯಿಲ್ಲದೇ ಬೊಗಳುತ್ತಿತ್ತು. ಓಣಿಯ ಬಲಬದಿಯ ಹಿತ್ತಲಲ್ಲಿ ಕಲಾಯಿಕಾರ ಕರೀಮಸಾಬನ ಮನೆಯಲ್ಲಿ ಪಾತ್ರೆಗಳಿಗೆ ಕಲಾಯಿ ಹಾಕುವ ಕೆಲಸ ನಡೆದಿತ್ತು. ಓಣಿಯ ಕಡೆ ಬೆನ್ನು ಮಾಡಿ ನಿಂತ ಮನೆಯ ಹಿಂದಿನ ಜಗಲಿಯ ಮೇಲೆ, ನೆಲದಲ್ಲಿ ಬಿಲ ತೆಗೆದು ಹುಗಿದ ಬೆಂಕಿ ಆಡಿನ ತೊಗಲಿನ ತಿದಿಯನ್ನೊತ್ತಿ ಕೆಣಕಿದಾಗ ‘ಭುಸ್’ ಎಂದು ಹೊರಬಂದು ಕೆಂಪು ನಾಲಿಗೆ ಚಾಚಿದಾಗ, ಹತ್ತಿರದ ಗಿಡಮರಗಳೆಲ್ಲ ಒಮ್ಮೆ ಕೆಂಪಾಗಿ ಮರಗಳಿಗೆ ವಿಷವೇರಿದಂತೆ ಕಪ್ಪಾದುದನ್ನು ನೋಡುತ್ತ ಮುಂದೆ ಸಾಗುತ್ತಿದ್ದಾಗ, ಆಡಲೀ ಆಡಲೀ, ಆಡುವ ವಯಸ್ಸೇ ಅವರದು. ಈಗಲ್ಲದೆ ಇನ್ನೂ ಯಾವಾಗ ಆಡಿಯಾರು, ಎಂದುಕೊಳ್ಳುತ್ತಾ ಕೈತಾನನ ಎಣ್ಣೆಯ ಗಾಣವನ್ನು ಸಮೀಪಿಸುವ ಹೊತ್ತಿಗೆ ಇನ್ನೊಮ್ಮೆ ಮಿಂಚು ಕತ್ತಲೆಯನ್ನು ಕೊರೆದಾಗ, ದೂರ ಇದಿರುಗಡೆಯಿಂದ ಯಾರೋ ಉತ್ಸಾಹದ ಹೆಜ್ಜೆ ಇಡುತ್ತ ಆಗೀಗ, ಕಿವಿಯಲ್ಲಿ ಗಾಳಿ ಹೊಕ್ಕ ಮಣಕದ ಹಾಗೆ ನೆಗೆದಾಡುತ್ತ, ‘ಭೋರ್ ಭೋರ್ ಭಂಗೀ-ಭಂಗಾರಕ್ಕನ ತಂಗೀ.’ ಎಂದು ತಮ್ಮ ಕೇರಿಯ ಕೋಳಿ ಗಿರಿಯಣ್ಣ ಮೊಮ್ಮಕ್ಕಳನ್ನು ಆಡಿಸುವಾಗ ಹಲ್ಲಿಲ್ಲದ ಬಾಯಿಂದ ಹಾಡುವ ಹಾಡನ್ನೇ ರಾಗವಾಗಿ ಹಾಡುತ್ತ, ಕುಣಿಯುತ್ತ ಬಂದವನು ಬುಡಣಸಾಬರನ್ನು ನೋಡಿ, ನಿಲ್ಲದೇ, “ಬುಡಣಸಾಬರೂ. ಬಹಳ ಮುದುಕರು. ಮಳೆಯು ಬಂದರೂ ಹೊರಗೆ ಹೊರಟರೂ” ಎಂದು ಗದ್ಯವನ್ನೇ ತನ್ನ ಕುಣಿತದ ಗತ್ತಿಗೆ ಸರಿಯಾಗಿ ಹಾಡುತ್ತ, “ಅತ್ಯಂತ ತರಾತುರಿಯಲ್ಲಿ ಹೊರತಂಥ ಕೆಲಸ ಬಹಳ ಬಹಳ. ನರಸಿಂಹನ ಮನೆಗೆ ಆಟಕ್ಕೆ ಹೊರಟವನಾಗಿದ್ದಂಥ ನನ್ನನ್ನು ಯಾರೂ ತಡೆಯಬೇಡಿರೋ” ಎಂದು ಯಕ್ಷಗಾನದ ದಾಟಿಯಲ್ಲರುಹಿ ಥೈ ಥೈ ಥೈ ಎನ್ನುತ್ತ ಅಲ್ಲಿಂದ ಕಾಲ್ತೆಗೆದಾಗ ಬುಡಣಸಾಬರಿಗೆ ನಗು ಬಂದುಬಿಟ್ಟಿತು. ಸಾಂತಯ್ಯರ ಸರ್ವೋತ್ತಮ ಎಂದು ತೋರುತ್ತದೆ. ಇನ್ನೂ ಹುಡುಗುತನ ಬಿಟ್ಟಿಲ್ಲ ಎಂದುಕೊಂಡು ಕೈತಾನನ ಗಾಣದಿಂದ ಇಡುಗಿದ ಎಣ್ಣೆಯ ವಾಸನೆಗೆ ಮೂಗಿನ ಹೊರಳೆ ಅರಳಿಸುತ್ತ ಮುಂದೆ ಸಾಗುತ್ತಿದ್ದಾಗ, ಓಣಿಯ ತುದಿಯಲ್ಲಿ ರಾಜರಸ್ತೆಯ ಆ ಮಗ್ಗುಲಲ್ಲಿ ನಿಂತ ಗಣಪಯ್ಯರ ಅಂಗಡಿಯ ಲಾತನಿನ ಮಂದ ಬೆಳಕಿನ ಹಿನ್ನೆಲೆಯಲ್ಲಿ ಓಡಿಬರುತ್ತಿದ್ದ ಯುವಕನೊಬ್ಬ, “ಸೋಮಳೆ ಬಂತೋ ಮಳೆರಾಯ ಕೊಡೆ ತಾರೋ ಸುಬ್…” ಎಂದು ಬುಡಣಸಾಬರನ್ನು ಕಂಡು ಹಾಡಿಗೆ ತಡೆ ಹಾಕಿದವನು ಹಣಪಯ್ಯರ ತಮ್ಮನ ಮಗ ವಿಠಲ…“ ಎಲ್ಲಿ ನರಸಿಂಹನ ಮನೆಗೆ ಆಟಕ್ಕೆ ಹೊರಟೆಯೋ” ಎಂದು ನಗುತ್ತ ಕೇಳಿದ ಬುಡಣಸಾಬರ ಪ್ರಶ್ನೆಗೆ ಇವರಿಗೆ ಹೇಗೆ ತಿಳಿಯಿತಪ್ಪ ಎಂದು ತಬ್ಬಿಬ್ಬಾದ ವಿಠಲ, “ದೊಡ್ಡಪ್ಪನಿಗೊಂದು ಹೇಳಬೇಡಿ ಮಾರಾಯರೇ, ದಮ್ಮಯ್ಯ, ಮಧ್ಯಾಹ್ನ ಅಂಗಡಿ ಬಂದುಮಾಡಿ ಗೋಕರ್ಣಕ್ಕೆ ಹೋಗಿದ್ದನಂತೆ ನರಸಿಂಹ. ಸಂಜೆ ಹಿಂತಿರುಗಿ ಬಂದದ್ದೇ ಆಟಕ್ಕೆ ಹುಕ್ಕಿ ಬಂತೆಂದು ಕಾಣುತ್ತದೆ. ಹೇಳಿ ಕಳಿಸಿದ್ದ. ಅದೆ! ಮಳೆ ಬಂದೇಬಿಟ್ಟಿತಲ್ಲ. ಬೇಗ ಬೇಗ ಹೋಗಿ ನಮ್ಮ ಅಂಗಡಿಯಲ್ಲಾದರೂ ನಿಂತುಕೊಳ್ಳಿ,” ಎಂದವನೇ ಅಲ್ಲಿ ನಿಲ್ಲದೆ ಆಗಲೇ ಉದುರಹತ್ತಿದ ಹನಿಗಳಿಗೆ ಕೈಗಳನ್ನೇ ತಲೆಯ ಮೇಲೆ ಕೊಡೆಯಂತೆ ಎತ್ತಿ ಹಿಡಿದು ‘ಕೊಡೆ ತಾರೋ ಸುಬ್ರಾಯ’ ಎಂದು ನರಸಿಂಹನ ದಣಪೆ ತಲುಪುವ ತನಕವೂ ಹಾಡುತ್ತ ಕುಣಿಯುತ್ತ ದಣಪೆ ಸೇರಿ ಕತ್ತಲೆಯಲ್ಲಿ ಪೂರಾ ಕರಗಿದ. ದುಡುದುಡು ಹೆಜ್ಜೆ ಹಾಕಿ ಗಣಪಯ್ಯರ ಅಂಗಡಿ ಹೊಕ್ಕು, ಅಬ್ಬಾ ಮಳೆ ಬಂದೇಬಿಟ್ಟಿತಲ್ಲ ಎಂದು ಬುಡಣಸಾಬರು ದಣಿವಾರಿಸಿಕೊಳ್ಳುವಷ್ಟರಲ್ಲಿ, ಆಗಿನಿಂದ ಹನಿಯಾಗಿ ಜಿನುಗುತ್ತಿದ್ದ ಮಳೆ ಒಮ್ಮೆಗೆಲೇ ಧಾರೆಯಾಗಿ ಸೋ ಎನ್ನಲು ತೊಡಗಿತು. ಇನ್ನೂ ಹತ್ತು ನಿಮಿಷ ನಡೆದರೆ ಮೊಮ್ಮಗಳ ಮನೆ. ಇಲ್ಲೇ ಇನ್ನೆಷ್ಟು ಹೊತ್ತು ಕಾಯಬೇಕೋ ಎಂದು ಆತಂಕಪಟ್ಟರು. ತಮ್ಮತ್ತ ನೋಡಿದ ಗಣಪಯ್ಯರಿಗೆ, “ಈ ಅಡ್ಡ ತಿಂಗಳಲ್ಲಿ ಎಂಥಾ ಮಳೆ ನೋಡು ಗಣಪಯ್ಯ” ಎನ್ನುತ್ತ ಅಂಗಡಿಯ ಚಿಟ್ಟೆಯೇರಿ ಕುಳಿತು, ತಾವು ಇದೀಗ ಹಾದು ಬಂದ ಓಣಿ, ಕತ್ತಲೆ ಮಳೆಗಳಲ್ಲಿ ಕರಗುತ್ತಿದ್ದುದನ್ನು ನೋಡುತ್ತ, ಓಣಿಯಲ್ಲಿ ಭೆಟ್ಟಿಯಾದ ಆ ನಾಲ್ವರ ಹುರುಪನ್ನೂ ನೆನೆಯುತ್ತ ಒಳಗೊಳಗೇ ನಗುತ್ತ, ಮಳೆ ಹೊಳವಾಗುವುದನ್ನೇ ಕಾಯುತ್ತಿದ್ದರು. +* +* +* +ಓಣಿಯಲ್ಲಿ ಬುಡಣಸಾಬರನ್ನು ಮೊತ್ತಮೊದಲು ಸಂಧಿಸಿದ ನಾಗೇಶ, ಹಾಡುತ್ತ ಕುಣಿಯುತ್ತಲೇ ನರಸಿಂಹನ ಅಂಗಳ ತಲುಪಿದ.“ಮುದದಿಂದಾ೭ ಮುದಕೀ ತಿನ್…” ಎಂದು, ‘ಮುದ್ಕಿ ತಿಂದಾ’ ಎಂದು ಪೂರ್ತಿಗೊಳ್ಲಬೇಕಾದ ತನ್ನ ಹಾಡಿನ ಕೊನೆಯನ್ನು, ಈ ಮನೆಯಲ್ಲಿ ಒಂದು ಮುದುಕಿ ಇದ್ದುದು ನೆನಪಿಗೆ ಬಂದವನಂತೆ ಅರ್ಧಕ್ಕೇ ತಡೆದು, ನಾಲಗೆ ಕಚ್ಚುಕೊಳ್ಳುತ್ತ ಮನೆಯ ಮೆಟ್ಟಿಲೇರಿದಾಗ, ನರಸಿಂಹ ಆಗಲೇ ಊಟ ಮುಗಿಸಿ ಜಗಲಿಯ ಮೇಲೆ ಚಾಪೆ ಹಾಸಿ ಇಸ್ಪೀಟು ಎಲೆಗಳಪೆಟ್ಟಿಗೆಗಳೆರಡನ್ನು ತಂದಿಟ್ಟು ಹರಿವಾಣವೊಂದರಲ್ಲಿ ಎಲೆ ಅಡಿಕೆ ಬೀಡಿ ಕಟ್ಟುಗಳ ಸರಂಜಾಮನ್ನು ಸಿದ್ಧಗೊಳಿಸಿ, ಇವರು ಬರುವ ಹಾದಿಯನ್ನೇ ಕಾಯುತ್ತಿದ್ದ. ಅಡುಗೆಮನೆಯೊಳಗೆ ಇವರೆಲ್ಲರ ಸಲುವಾಗಿ ಅಜ್ಜಿಯ ಪಳಗಿದ ಕೈಯಿಂದ ಸಿದ್ಧವಾಗುತ್ತಿದ್ದ ಸಂಬಾತ ಅವಲಕ್ಕಿಯ, ಬಾಯಲ್ಲಿ ನೀರೂರಿಸುವ ಖಮಂಗವಾಸನೆ ಜಗಲಿಯವರೆಗೂ ಇಡುಗಿತ್ತು. ಮೆಟ್ಟಿಲೇರಿ ಬಂದದ್ದೇ, ‘ಅಬ್ಬಬ್ಬ! ಏನ್ ಗುಡುಗು ಎಂಥ ಮಿಂಚು’, ಎಂದು ಉದ್ಗರಿಸಿದ ನಾಗೇಶ, “ಏ ಮಿಂಚು ಅಂದ ಕೂಡಲೇ ನೆನಪಾಯಿತು ನೋಡು. ನಿಮ್ಮ ದಣಪೆ ಹತ್ತಿರದ ಮಾವಿನಮರದ ಕೆಳಗೊಬ್ಬ ಕರ್ರಗಿನ ಕಂಬಳಿ ಕೊಪ್ಪೆ ಹಾಕಿ ನಿಂತಿದ್ದ ನೋಡು. ದಣಪೆ ಹೊಕ್ಕತಿರಬೇಕಾದರೆ ಮಿಂಚು ಝಗ್ ಎಂದಾಗ ನೋಡಿದೆ. ಎದೆ ಜಲ್ ಅಂದಿತು ನೋಡು. ಮೋರೆ ಕಾಣಲಿಲ್ಲ. ಕೊಪ್ಪೆ ಮಾತ್ರ”. ನರಸಿಂಹ ಅವನ ಕಡೆ ಲಕ್ಷ್ಯ ಕೊಟ್ಟಂತಿರಲಿಲ್ಲ. ಅಡುಗೆಮನೆಯಲ್ಲಿದ್ದ ಅಜ್ಜಿ ಮಾತ್ರ “ಯಾರು, ನಾಗೇಶನೇನೋ? ಎಂತಹ ಕತೆ ಹೇಳ್ತಿದೀಯೋ”, ಎಂದು ಕೇಳುತ್ತಿರುವಾಗಲೇ ಅಂಗಳದಲ್ಲಿ. “ರಾಜರ್ ರಾಜನು ಬಂದ” ಎಂದು ತನ್ನ ಹಾಜರಿ ಕೊಟ್ಟ ಮಾಧವ ಜಗಲಿಗೆ ಬಂದು, ಸಂಬಾರ ಅವಲಕ್ಕಿಯ ಪರಿಮಳಕ್ಕೆ ಇತ್ಸಾಹಿತನಾಗಿ, “ವ್ಹಾ! ಈ ಹೊತ್ತು ಗಡದ್ದಾಗಿ ಆಟ ಹೊಡೀಬೇಕು ನೋಡು. ಜಂಗೀ ಮಳೆಯೂ ಬರ್ತದ್….ಮಳೆ ಎಂದ ಕೂಡಲೇ ನೆನಪಾಯಿತು ನೋಡು. ನಿಮ್ಮ ಕೊಟ್ಟಿಗೆಯ ಹತ್ತಿರ ಗೊಬ್ಬರ ಕುಳಿ ಇಲ್ಲ? ಅಲ್ಲೊಬ್ಬ, ಮಾರಾಯ ಕಪ್ಪಗಿನ ಮನುಷ್ಯ ತಲೆಯ ಮೇಲೆ ಕಂಬಳಿ ಕೊಪ್ಪೆ ಹಾಕಿ ಹೀಗೆ ಕೈಕಟ್ಟಿ ನಿಂತಿದ್ದ ನೋಡು. ಮಿಂಚಿನ ಬೆಳಕಿನಲ್ಲಿ ಕಂಡಾಗ ಹೊಟ್ಟೆಯಲ್ಲಿ ಕಲ್ ಎನ್ನಿಸಿತು ನೋಡ್” ಎಂದ ಹೆದರಿದ ದನಿಯಲ್ಲಿ. +“ಏನ್ ಏನ್ ಏನ್ ನೋಡಿದಿರೋ? ಏನ್ ಕತೆರೋ ಅದು?” ನರಸಿಂಹನ ಅಜ್ಜಿ ಕಾತರತೆಯಿಂದ ಅಡಿಗೇಮನೆಯಿಂದಲೇ ಕೇಳಿದಳು. +“ನಿಮ್ಮ ದನದ ಕೊಟ್ಟಿಗೆಯ ಹತ್ತಿರ…” ಎಂದು ಮಾಧವ ಹೇಳುತ್ತಿರುವಾಗಲೇ ಜಗಲಿಗೆ ಬಂದ ಸರ್ವೋತ್ತಮ, “ನಾನೂ ನೋಡಿದೆ. ಕಪ್ಪಗಿದ್ದಾನಲ್ಲ? ಕಂಬಳಿ ಕೊಪ್ಪೆ ಹಾಕಿಕೊಂಡಿದ್ದಾನಲ್ಲ? ಇಷ್ಟುದ್ದ ಮೀಸೆ ಬಿಟ್ಟಿದ್ದಾನಲ್ಲ? ಹಿತ್ತಲಲ್ಲಿ ಕಾಲಿಟ್ಟದ್ದೇ ಮಿಂಚು ಝಗ್ ಎಂದಾಗ ಕಂಡೆ ನೋಡು” ಎಂದು ನಡುಗಿದ. +ನರಸಿಂಹನ ತಾಯಿ, ಅಜ್ಜಿ, ಇಬ್ಬರೂ ಗಾಬರಿಗೊಂಡು ಅಡುಗೆ ಮನೆ ಬಿಟ್ಟು ಹೊರಗೆ ಬಂದರು. ಹೊಸತಿಲಲ್ಲಿ ನಿಂತು, “ಯಾರ ಬಗ್ಗೆ ಮಾತಾಡ್ತೀರೋ? ಯಾರನ್ನು ನೋಡಿದಿರೋ?” ಎಂದು ಅಜ್ಜಿ ಕೇಳುವುದಕ್ಕೂ, “ಅದೆ ಮಳೆ ಬಂದೆಬಿಟ್ಟಿತಲ್ಲ” ಎನ್ನುತ್ತ ಓಡೋಡಿ ಬಂದ ವಿಠಲ ಮನೆ ಹೋಗುವುದಕ್ಕೂ ಸರಿಯಾಯಿತು. “ಅಬ್ಬಾ! ಅಜ್ಜೀ ನನಗೆ ನೀನು ಕೆಂಪು ನೀರನ್ನು ನಿವಾಳಿಸಬೇಕು ನೋಡ್! ಹ್ಯಾಗೆ ಹೆದರಿದೆ! ಜೀವ ಇನ್ನೂ ಥರಥರ ಅನ್ನುತ್ತಿದೆ ನೋಡ್. ನಿಮ್ಮ ಕೊಟ್ಟಿಗೆಯ ಬಾಗಿಲಲ್ಲಜ್ಜೀ ಒಬ್ಬ ಕರ್ರಗಿನ ಮನುಷ್ಯ ಕಂಬಳೀ ಕೊಪ್ಪೆ ಹಾಕಿ, ಕೈಯಲ್ಲಿ ಸುರುಳಿ ಸುತ್ತಿದ ಹಗ್ಗ ಹಿಡಿದು ನಿಂತಿದ್ದು ನೋಡಿ…” +“ಅರೆ! ಯಾರಾದರೂ ಕಳ್ಲಗಿಳ್ಳ ಇರಲಿಕ್ಕಿಲ್ಲವಲ್ಲ?” ಎಂದು ನರಸಿಂಹನ ತಾಯಿ ಗಾಬರಿಪಡಿಸಿದಾಗ, ನರಸಿಂಹ, +“ಅದ್ಯಾರಲ್ಲಮ್ಮ, ಇವರು ಬರೀ ಪುಕ್ಕರು. ಆಗ ನಾನು ಗೋಕರ್ಣಕ್ಕೆ ಹೋಗುವ ಮೊದಲು ಅವನು ನಮ್ಮ ಅಂಗಡಿಗೂ ಬಂದಿದ್ದ. ಹೊಲೆಯರವನು. ಕೈಯಲ್ಲಿ ಹಗ್ಗದ ಸುರುಳಿ ಹಿಡಿದುಕೊಂಡು, ಹೆಗಲ ಮೇಲೆ ಕಂಬಳಿ ಹೊದ್ಕೊಂಡು, ಮೆಲ್ಲನೆ ಅಂಗಡಿ ಹೊಕ್ಕು, ಕೆಳಜಗಲಿಯ ಮೇಲೆ ಮಾತನಾಡದೆ ಕೂತ್ಕೊಂಡ. ನಿನಗೇನು ಬೇಕೋ ಎಂತ ಕೇಳಿದೆ. ತಲೆ ಎತ್ತಲಿಲ್ಲ. ಹಗ್ಗ ಮಾರಲಿಕ್ಕೆ ಬಂದಾನೊ ಎಂತ ತಿಳಿದು, ನಮಗೆ ಹಗ್ಗ ಬೇಡ ಎಂದೆ. ಆದರೂ ಹಂದಾಡದೆ ಕುಳಿತ. ಬೇಕಾದರೆ ನಮ್ಮ ಮನೆಗೆ ಹೋಗಿ ಕೇಳು. ಶಾನುಭಾಗರ ಮನೆ ಎಂತ ಕೇಳು, ಹೇಳ್ತಾರೆ ನೋಡು ಅಂದೆ. ಮಾತನಾದದೆ ಎದ್ದ. ಮೂಕನಿದ್ದರೂ ಇದ್ದಾನು. ರಸ್ತೆ ದಾಟಿ ಓಣಿ ಹೊಕ್ಕ. ಮುಂದೆ ಎಲ್ಲಿ ಹೋದನೋ ಗೊತ್ತಿಲ್ಲ. ಹುಚ್ಚನಿದ್ದರೂ ಇದ್ದಾನು. ಆಗ ದಾರಿ ತಪ್ಪಿ ಎಲ್ಲೋ ಹೋದವನು ಈಗ ಇಲ್ಲಿ ಬಂದು ಮುಟ್ಟಿದ್ದರೂ ಮುಟ್ಟಿದ್ದಾನು. ಮನೆ ಎಂತ ತಿಳಿದು ಕತ್ತಲೆಯಲ್ಲಿ ಕೊಟ್ಟಿಗೆಗೆ ಹೋಗಿದ್ದರೂ ಹೋಗಿದ್ದಾನು” ಎಂದು ಆಡಲಿಕ್ಕೆಂದು ಇಸ್ಪೀಟು ಎಲೆಗಳ ಪೆಟ್ಟಿಗೆ ಬಿಚ್ಚಹತ್ತಿದ. ಗೆಳೆಯರಿಗೆ ಸಮಾಧಾನವಾದಂತಿತ್ತು: ಯಾರೂ ಮಾತನಾದಲಿಲ್ಲ. ಅಜ್ಜಿ ಕೂದ ಸುಮ್ಮನಿದ್ದಳು. ನರಸಿಂಹನ ತಾಯಿ ಮಾತ್ರ ಕೊಟ್ಟಿಗೆಯ ಹತ್ತಿರ ಬಂದವನು ಇಲ್ಲಿಯೂ ಬರಲಾರನಷ್ಟೆ? ಎಂದು ಅನ್ನಿಸಿದ ದುಗುಡವನ್ನು ಉಳಿದವರು ಸುಮ್ಮಗುಳಿದುದನ್ನು ನೋಡಿ, ಬಾಯಿಂದ ಆಡಿ ತೋರಿಸದೆ ಅಡುಗೆಮನೆಯಲ್ಲಿ ಅರ್ಧಕ್ಕೇ ಬಿಟ್ಟು ಬಂದ ಕೆಲಸದತ್ತ ನಡೆದಳು. +ಹೊರಗೆ, ಮಳೆ ಧಾರೆ ಹಿಡಿದು ಹೊಯ್ಯುತ್ತಿತ್ತು. ಗುಡುಗು ಮಿಂಚುಗಳೊಂದಿಗೆ ದೊಡ್ಡ ಗಾಳಿಯೂ ಬೀಸತೊಡಗಿದ್ದರಿಂದ ಹಿತ್ತಲ ಮರಗಳೆಲ್ಲ ರಭಸದಿಂದ ತೂಗಿ ಹೆಗ್ಗೆಗಳು ತೂರಾಡಿ ಭೋ ಎನ್ನುತ್ತಿದ್ದವು. ಹೊತ್ತು ಹೋದಂತೆ ಗಾಳಿ ಮಳೆಗಳ ಜೋರು ಹೆಚ್ಚುತ್ತಲೇ ಹೋಯಿತು. ಕತ್ತಲೆಯಲ್ಲಿ ಒಂದೇ ಸಮನೆ ಕಣ್ಣು ಮುಚ್ಚಿ ಹೊಯ್ಯುತ್ತಿದ್ದ ನೀರಿನ ಸದ್ದು ಗದ್ದಲ ಕೇಳುತ್ತ, ಅಂಗಳದಲ್ಲಿ ದೃಷ್ಟಿನೆಟ್ಟು ಕೂತ ಅಜ್ಜಿಯ ಮನಸ್ಸು ಹಿಂದೆ ಇಂತಹದೇ ಮಳೆ ಬಂದ ದಿನಗಳನ್ನು ನೆನೆಯುತ್ತ ನೆನೆಯುತ್ತ, ಇತಿಹಾಸದಿಂದ ಪುರಾಣದ ತನಕವೂ ಹೋಗಿ ತಿರುಗಿ ವರ್ತಮಾನಕ್ಕೆ ಬಂದಾಗ ಮೈನೆವಿರಿಗೊಳಗಾಗಿ, ಕೊಟ್ಟಿಗೆಯ ಹತ್ತಿರ ಬಂದವನು ಏನು ಮಾಡುತ್ತಿದ್ದಾನೋ, ಇವನೊಬ್ಬ ಹೀಗೇ ಹೇಳದೇ ಕೇಳದೇ ಇಂತಹ ವೇಲೆಯಲ್ಲಿ ಏಕೆ ಬಂದಿದ್ದಾನೋ, ಎಂದು ಆತಂಕಪಟ್ಟು ಒಮ್ಮೆಲೆಗೇ ಎದ್ದು ಜಗಲಿಯ ಮೆಟ್ಟಲಿಗೆ ಬಂದು, ಹೊರಗೆ ಹಣಕಿಕ್ಕಿ ನೋಡುತ್ತಿದ್ದಾಗ, ಕಚ್ ಎಂದು ಕತ್ತಲನ್ನು ಕಚ್ಚಿದ ಮಿಂಚು ಹಗಲಾಯಿತೆನ್ನುವಷ್ಟು ಬೆಳಕನ್ನು ಗಳಕ್ಕನೆ ಕಾರಿದಾಗ: ಅಂಗಳ, ಅದರಂಚಿನಲ್ಲಿಯ ಹಿತ್ತಲು, ಮೂಲೆಯಲ್ಲಿ ನಿಂತ ಕೊಟ್ಟಿಗೆ, ಅದರಾಚೆಯ ಓಣಿ ಎಲ್ಲ ಎಲ್ಲ ಒಮ್ಮೆ ಝಗ್ ಎಂದು ಬೆಳಗಿ ತಿರುಗಿ ಕಪ್ಪೇರಿದಾಗ, ಕಪ್ಪಾಗುವ ಮೊದಲಷ್ಟೇ ಅಂಗಳದಲ್ಲಿ ತುಳಸೀ ವೃಂದಾವನದ ಹತ್ತಿರವೇ ಫಕ್ಕನೆ ಕಂಡಂತಾದವನನ್ನು ಬಾಯಲ್ಲಿ ವರ್ಣಿಸುವಸಾಧ್ಯವಾದಾಗ, ಜೀವಕ್ಕೆ ಹತ್ತಿದ ನಡುಕದಿಂದ ಸಾವರಿಸಿಕೊಳ್ಳುತ್ತ ತಿರುಗಿ ಹೊಸತಿಲಿಗೆ ಬರುವ ಹೊತ್ತಿಗೆ, ಇತ್ತ, +ಆಟ ಒಳ್ಳೇ ರಂಗಕ್ಕೆ ಬಂದಿತ್ತು. +* +* +* +ಬೆಳಗುಜಾವದಲ್ಲಿ ಕಂಡ ಕನಸಿನಿಂದ ಎಚ್ಚೆತ್ತು ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತ ಬುಡಣಸಾಬರು, “ಫಾತಿಮಾ” ಎಂದು ಮೊಮ್ಮಗಳನ್ನು ಕೂಗಿ ಕರೆದರು. ಅಜ್ಜನ ಗಾಬರಿ ತುಂಬಿದ ಕರೆಯನ್ನು ನಿದ್ದೆಗಣ್ಣಿನಲ್ಲೇ ಕೇಳಿದಂತಾಗಿ ಎಚ್ಚರಗೊಂಡು ದಡಬಡಿಸಿ ಎದ್ದ ಫಾತಿಮಾ, ಕೋಣೆಯ ಬಾಗಿಲು ತೆರೆದು ಹೊರಗೆ ಬರುವ ಹೊತ್ತಿಗೆ, ಬುಡಣಸಾಬರು ಹೊರಗೆ ಹೊರಡುವ ಸಿದ್ಧತೆಯಲ್ಲಿ ಇದ್ದುದನ್ನು ನೋಡಿ ಅಚ್ಚರಿಪಟ್ಟು, “ಎದ್ದದ್ದೇ ಎಲ್ಲಿ ಹೊರಟಿರಿ ದಾದಾಜಾನ್? ಮೋರೆ ಕೂಡ ತೊಳೆದಿಲ್ಲ. ಪ್ರಾರ್ಥನೆಯಾಗಿಲ್ಲ” ಎಂದು ಕೇಳಿದಾಗ, “ಉಸ್ಮಾನ ಇನ್ನೂ ಮಲಗಿರಬೇಕು ಅಲ್ಲವೆ? ಎಬ್ಬಿಸಬೇಡ, ನಾನು ಈಗಲೇ ಕಾಸಿಮನ ಮನೆಗೆ ಹೋಗುತ್ತೇನೆ. ಪ್ರಾರ್ಥನೆಯನ್ನು ಅಲ್ಲೇ ಮಾಡುತ್ತೇನೆ. ಎಚ್ಚರವಾಗುವಾಗ ಬಹಳ ಕೆಟ್ಟ ಕನಸು ಬಿದ್ದಿತು ನೋಡು. ನೀನು ಒಳಗೆ ಹೋಗಿ ಮಲಕೋ” ಎಂದವರೇ ಬೆತ್ತವನ್ನೂರುತ್ತ ಮೆಟ್ಟಿಲಿಳಿದು ನಡದೇಬಿಟ್ತರು. ಅಜ್ಜನ ಈ ವಿಚಿತ್ರ ರೀತಿಯನ್ನು ಕಂಡು ದಿಗಿಲುಗೊಂಡ ಫಾತಿಮಾ, ಒಳಗೆ ಹೋಗಿ ಗಂಡನನ್ನು ಎಬ್ಬಿಸಿದಳು. “ನೀನು ಹೆದರಬೇಡ. ಕಾಸಿಮನ ಬಗ್ಗೆ ಏನೋ ಕೆಟ್ಟ ಕನಸು ಬಿದ್ದಿರಬೇಕು. ನಾನೂ ಕಾಸಿಮನ ಮನೆಯ ತನಕ ಹೋಗಿಬರುತ್ತೇನೆ” ಎಂದು ಹೆಂಡತಿಗೆ ಸಮಾಧಾನ ಹೇಳಿ, ಮೋರೆ ತೊಳೆದು, ಉಡುಪು ಮಾಡಿ ಮನೆಯ ಹೊರಗೆ ಬಿದ್ದು ಉಸ್ಮಾನ ರಸ್ತೆಗೆ ಬರುವಷ್ಟರಲ್ಲಿ ಬುಡಣಸಾಬರು ಗಣಪಯ್ಯರ ಅಂಗಡಿಯ ಇದಿರಿನ ಓಣಿಯಲ್ಲಿ ತಿರುಗಿಯಾಗಿತ್ತು. “ಅಬ್ಬಾ! ಇಷ್ಟು ಅವಸರದಿಂದ ನಡೆಯಬೇಕಾದರೆ ಅದೆಂತಹ ಕನಸು ಬಿದ್ದಿರಬೇಕೋ,’ ಎಂದುಕೊಂಡ ಉಸ್ಮಾನ ತನ್ನ ನಡಿಗೆಯ ವೇಗ ಹೆಚ್ಚಿಸಿದ. +ರಸ್ತೆ ಹಾಗೂ ಓಣಿಗಳ ಕೂಟದಲ್ಲಿ ನಿಂತ ಆ ರಾಕ್ಷಸಾಕಾರದ ಗಾಳಿಮರ ನಡುವೆಯೇ ಮುರಿದು ಗದ್ದೆಯಲ್ಲಿಕುಸಿದುದನ್ನು: ಕೈತಾನನ ಹಿತ್ತಲಲ್ಲಿ ಮುಗಿಲೆತ್ತರಕ್ಕೆ ಬೆಳೆದ ತೆಂಗಿನಮರವೊಂದು ಚೆಂಡೇ ಕಳಚಿ ಬಿದ್ದು ಬೋಳಾಗಿ ನಿಂತುದನ್ನು: ಗದ್ದೆಯ ಬದಿಯ ಬೇಲಿಯೊಳಗಿನ ಹೂವು, ಎಲೆ, ಜಿಗ್ಗುಗಳ ಓಣಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದುದನ್ನು ನೋಡಿ, ಬುಡಣಸಾಬರು, ಕೈತಾನನ ಗಾಣ ದಾಟಿ ನರಸಿಂಹನ ದಣಪೆಯನ್ನು ಸಮೀಪಿಸುತ್ತಿದ್ದಾಗ ದಣಪೆಯ ಒಳಗಡೆ, ಹಿತ್ತಲಲ್ಲಿ ನೆರೆದ ಜನರ ಗುಂಪನ್ನು ನೋಡಿ, ಕಣ್ಣುಗಳನ್ನು ಅಬ್ಬಾ ಎಂದು ಇಷ್ಟಗಲ ಅರಳಿಸಿ, “ಇಷ್ಟೆಲ್ಲ ಜನ ಆಟಕ್ಕೆ ಬಂದಿದ್ದರೆ? ಆಟ ಈಗ ಮುಗಿದಿತೆ?” ಎಂದು ಚಕಿತರಾಗಿ ಮುಂದೆ ನಡೆದಾಗ, ದಣಪೆಯೊಳಗಿಂದ ಮಡಕೆಯಲ್ಲಿ ಬೆಂಕಿ ಹೊತ್ತು ಹೊರಗೆ ಬಂದವನ ಹಿಂದೆಯೇ ನಿನ್ನೆ ರಾತ್ರಿ ಓಣಿಯಲ್ಲಿ ಭೆಟ್ಟಿಯಾದ ನಾಲ್ವರು ಗೆಳೆಯರೂ ಹೊರಗೆ ಬಂದರು: ಅವರ ಹೆಗಲ ಮೇಲೆ ಬಿಳಿಯ ಹೊದಿಕೆ ಮುಚ್ಚಿದ, ಬಿದಿರ ಸಿದಿಗೆಯೇರಿದ ದೇಹ! ಶ್ರೀರಾಮ್ ಜೈರಾಮ್ ಕೆಳದನಿಯಲ್ಲೇ ಭಜನೆ ಮಾಡುತ್ತ ಹೊರಗೆ ಬಂದ ಆ ಗುಂಪು ಆ ನಾಲ್ವರ ಹಿಂದೆಯೇ ಹೊರಟಿತು. ‘ಯಾ ಖುದಾ’ ಎಂದು ತಬ್ಬಿಬ್ಬಾಗಿ ನೋಡುತ್ತ, ಕಾಲು ಸೋತುಬಂದಂತಾಗಿ ನಡೆಯಲಾಗದೇ, ನಿಂತಲ್ಲೆ ನಿಂತುಬಿಟ್ಟ ಮುದುಕ ಬುಡಣಸಾಬರ ಕಡೆಗೊಮ್ಮೆ ದುಃಖ ತುಂಬಿದ ದೃಷ್ಟಿ ಬೀರಿ, ಗುಂಪು ಮುಂದೆ ನಡೆಯಿತು. ಅವರೆಲ್ಲರೂ ಕೈತಾನನ ಗಾಣ ದಾಟಿ, ಮುಂದೆ ಹೋಗಿ ಓಣಿಯ ತುದಿ ಸೇರಿ ರಸ್ತೆಗೆ ಹೊರಳುವ ತನಕವೂ ಹಿಂತಿರುಗಿ ನೋಡುತ್ತ ನಿಂತಾಗ ನರಸಿಂಹನ ಮನೆಯೊಳಗಿಂದ ಕೇಳಿಸಿದ ಆಕ್ರಂದನದಿಂದ ಕರುಳು ಕಿವುಚಿದಂತಾಗಿ, ನಸುಕಿನಲ್ಲಿ ಕಂಡ ಕನಸೂ ನೆನಪಿಗೆ ಬಂದು ಎಲ್ಲವೂ ನಿಚ್ಚಳವಾದಂತಾಗಿ, ‘ಇದು ಆಗಬಾರದಾಗಿತ್ತು,’ ಎಂದರು. ಮರುಗಳಿಗೆ ಅನುಭವದ ಆಳ ಬಾಯಿಬಿಟ್ಟಾಗ ‘ಎಲ್ಲ ಖುದಾನ ಮರ್ಜಿ’ ಎಂದರು. ಸೋತ ವೃದ್ದ ಕಾಲುಗಳನ್ನೆಳೆಯುತ್ತ ಮುಂದೆ ಸಾಗಿ ಪರಮೇಶ್ವರಿಯ ಹಿತ್ತಲ ದಣಪೆ ದಾಟುತ್ತಿದ್ದಾಗ, ಹಿಂದಿನಿಂದ ಯಾರೋ ‘ದಾದಾಜಾನ್’ ಎಂದು ಕರೆದದ್ದು ಕೇಳಿಸಿ ತಡೆದಾಗ, ಓಡೋಡಿ ಬಂದು ಮುಟ್ಟಿದ ಉಸ್ಮಾನ್ ತನಗೆ ಹತ್ತಿದ ಉಬ್ಬಸವನ್ನೂ ಲೆಕ್ಕಿಸದೆ, “ಕೇಳಿದೆಯಾ ದಾದಾಜಾನ್, ನರಸಿಂಹ ಸತ್ತನಂತೆ!” ಎಂದ. ಬುಡಣಸಾಬರು ಬರಿಯೆ ‘ಹೂಂ’ ಎಂದರು. ಅಜ್ಜನ ಹೂಂಕಾರದ ಅರ್ಥವನ್ನು ತಿಳಿದುಕೊಳ್ಳುವ ಮೊದಲೇ, ತನಗೆ ತಿಳಿದಿದ್ದನ್ನು ಒಳಗೆ ಇಟ್ಟುಕೊಳ್ಳುವುದಸಾಧ್ಯವಾಗಿ ಉಸ್ಮಾನ ಹೇಳಿದ: “ರಾತ್ರೆ ಗೆಳೆಯರೊಂದಿಗೆ ಇಸ್ಪೀಟು ಆಡುತ್ತಿದ್ದಾಗ, ಆಟ ಒಳ್ಳೇ ರಂಗಕ್ಕೆ ಬಂದಾಗ ಇವನು ಒಮ್ಮೆಲೇ ಹೆದರಿ, ‘ಅಜ್ಜೀ, ಹಾವೂ’, ಎಂದು ಒದರಿದನಂತೆ. ಅಜ್ಜಿ, ಗೆಳೆಯರೆಲ್ಲ ಹೌಹಾರಿ‌ಎಲ್ಲಿ ಎಲ್ಲಿ ಎಂದು ಹುಡುಕುತ್ತ ಕೇಳಿದಾಗ ಸುಣ್ಣ ಹಚ್ಚಿಕೊಂಡ ಬೆರಳನ್ನು ಕಂದೀಲಿನ ಬೆಳಕಿಗೆ ಹಿಡಿದು, ನಡುಗುತ್ತ, “ನನಗಾಗ ಕೊಟ್ಟಿಗೆಯಲ್ಲಿ ಕಚ್ಚಿದ್ದು ಇಲಿಯಲ್ಲವೇನೋ, ಅಜ್ಜೀ, ಬೆರಳು ನೋಡ್!”ಎಂದನಂತೆ. ಸಂಜೆ, ಕೊಟ್ಟಿಗೆಯಲ್ಲಿ ಅಟ್ತದ ಮೇಲಿನಿಂದ ಹುಲ್ಲುಕಟ್ಟುಗಳನ್ನು ಇಳಿಸುವಾಗ, ಕಚ್ಚಿದ್ದು ಇಲಿಯೆಂದು ತಿಳಿದು ಗಾಯಕ್ಕೆ ಸುಣ್ಣ ಹಚ್ಚಿಕೊಂಡ ಬೆರಳು ಕಪ್ಪುಗಟ್ಟಿತ್ತಂತೆ. ತಲೆ ಸುತ್ತಿದಂತಾಗುತ್ತದೆಯೆಂದು ಮಲಗಿದನಂತೆ. ಮಧ್ಯರಾತ್ರಿಯ ಹೊತ್ತಿಗೆ…ಅಲ್ಲ ದಾದಾಜಾನ್, ಎಂತಹ ಹೊತ್ತಿಗೆ ಸಾವು ನೋಡು! ಅಗದೀ ಉಮೇದಿನಿಂದ ಗೆಳೆಯರನ್ನೆಲ್ಲ ಆಟಕ್ಕೆ ಕರೆದಾಗ…” +ಬುಡಣಸಾಬರು ಮಾತನಾಡಲಿಲ್ಲ. +ನಿನ್ನೆ ಸಂಜೆಯಿಂದಲೂ ಅನುಭವಿಸಿದ್ದು: ತಾವು ಸುತ್ತಿದ ಆ ಬಳಸು ದಾರಿಯಲ್ಲಿ ತಮ್ಮ ಗಮನ ಸೆಳೆದದ್ದು, ನೆನಪು ಕೆರಳಿಸಿದ್ದು, ಕಂಡಂತೆ ಕಾಣಿಸಿಕೊಂಡಂತೆ ಭಾಸವಾದದ್ದು, ಮಳೆ ಬಿದ್ದದ್ದು-ಎಲ್ಲ ಎಲ್ಲವೂ ಮರುಕಳಿಸಿದಂತಾಗಿ, ಮುಂಜಾವದ ಕನಸೂ ಇನ್ನೊಮ್ಮೆ ನೆನಪಾಗಿ, ನಿನ್ನೆಯ ಸಂಜೆಯೇ ಹಾವಿನ ರೂಪ ಧರಿಸುತ್ತ ಅವನ ಸಾವಿಗಾಗಿ ಸಿದ್ಧವಾಗುತ್ತಿತ್ತು. ಹೊಂಚುಹಾಕುತ್ತಿತ್ತು ಎಂದು ಅನ್ನಿಸಿದಾಗ ಜೀವ ಜುಮ್ ಎಂದಿತು. +ಉಸ್ಮಾನ ಏನೋ ಮಾತನಾಡಿರಬೇಕು, ಬುಡಣಸಾಬರಿಗೆ ಅದು ಕೇಳಿಸಲಿಲ್ಲ. ಅವರು ತಮ್ಮದೇ ಗುಂಗಿನಲ್ಲಿದ್ದರು: ಗೆಳೆಯರನ್ನು ಆಟಕ್ಕೆ ಕರೆದಾಗ ಸತ್ತದ್ದಲ್ಲ. ಕಚ್ಚಿದ್ದು ಇಲಿಯೆಂದು ಅಜ್ಜಿ-ಅಮ್ಮರಿಗೆ ಬಾಯಿಯಿಂದ ಹೇಳುವಾಗಲೂ ಸಾವಿನ ಮುಂಗಾಳಿ ಹತ್ತಿದ ಜೀವ ಆಳದಲ್ಲೆಲ್ಲೋ ಹೆದರಿಯೇ ಗೆಳೆಯರನ್ನು ಆಟಕ್ಕೆ ಕರೆಸಿರಬೇಕು: ಹಾಗೆಂದು ಉಸ್ಮಾನನಿಗೆ ಮಾತ್ರ ಬಾಯಲ್ಲಿ ಆಡಿ ತೋರಿಸಲಿಲ್ಲ. +ಇಬ್ಬರೂ ಈಗ ಓಣಿಯ ಬಾಯಿಗೆ ಬಂದಿದ್ದರು. ಇದಿರುಗಡೆ, ನಿನ್ನೆ ಮಧ್ಯಾಹ್ನದಿಂದಲೂ ಮುಚ್ಚಿಯೇ ಇದ್ದ, ಈಗ ದಿಕ್ಕಿಲ್ಲದಂತೆ ನಿಂತಿದ್ದ ಆ ಚಿರಪರಿಚಿತವಾದ ಅಂಗಡಿಯ ಕೆಳಜಗುಲಿಯ ಮೇಲೊಬ್ಬ ಹೊಲೆಯನು ಕಂಬಳಿ ಹಾಸಿ ಹಗ್ಗದ ಸುರುಳಿಯನ್ನೇ ತಲೆದಿಂಬಾಗಿಸಿ ರಸ್ತೆಯ ಕಡೆಗೆ ಬೆನ್ನುಮಾಡಿ ಮಲಗಿದ್ದುದನ್ನು ನೋಡುತ್ತ, ಪೂರ್ವದ ಆಕಾಶ ಎಂದಿನಂತೆಯೇ ಕೆಂಪೇರಹತ್ತಿದಾಗ, ನಿನ್ನೆ ರಾತ್ರೆ ಅಂತಹದೇನೂ ನಡೆಯಲೇ ಇಲ್ಲ ಎನ್ನುವ ಮೋಡಿಯಲ್ಲಿ ಹೊಸ ದಿನವೊಂದು ಸದ್ದಿಲ್ಲದೇ ಹುಟ್ಟುತ್ತಿದ್ದಾಗ, ರಸ್ತೆಗೆ ಹೊರಳಿ, ಮುಂದೆ ನಡೆದಿದ್ದರು. ಮಾತು ನಿಲ್ಲಿಸಿದ್ದರು. +***** +ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […] +ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […] +ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_29.txt b/Kannada Sahitya/article_29.txt new file mode 100644 index 0000000000000000000000000000000000000000..32019cce9c0fec2f29312d64ab6c18e7086011eb --- /dev/null +++ b/Kannada Sahitya/article_29.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಸ್ಕಾರ ಕಾದಂಬರಿಯನ್ನು ಪೂರ್ಣವಾಗಿ ಪ್ರಕಟಿಸುತ್ತಿರುವುದರ ಉದ್ದೇಶ ಕೇವಲ ಶೈಕ್ಷಣಿಕ ಹಾಗು ಅಕಾಡೆಮಿಕ್ ಕಾರ್ಯಗಳಿಗೆ ನೆರವಾಗಲು ಮಾತ್ರ. ಉಳಿದವರು ಈ ಕೃತಿ ಪುಸ್ತಕದ ರೂಪ್ದಲ್ಲಿ ನಿಮ್ಮ ಸನಿಹದಲ್ಲಿ ದೊರೆಯುವುದಾದರೆ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಿಗದೇ ಇದ್ದ ಪಕ್ಷದಲ್ಲಿ ಪ್ರಕಾಶಕರನ್ನಾಗಲಿ ನಮ್ಮನ್ನಾಗಲಿ ಸಂಪರ್ಕಿಸಿದರೆ ನೆರವಾಗುತ್ತೇವೆ. +ಸಂಸ್ಕಾರ ಮೊದಲನೆ ಮುದ್ರಣ ಕಂಡದ್ದು ೧೯೬೫ ರಲ್ಲಿ , ಈಗ ಅದು ಒಂಬತ್ತನೆ ಮುದ್ರಣ ಕಂಡಿದೆ. +ಅದರ ಬೆಲೆ : ರೂ ಐವತ್ತು +ಪ್ರಕಾಶಕರು: ಅಕ್ಷರ ಪ್ರಕಾಶನ +ಹೆಗ್ಗೋಡು +ಸಾಗರ- ಕರ್ನಾಟಕ +೫೭೭೪೧೭ +ಸಂಸ್ಕಾರ ಬರೆದದ್ದು ಹೇಗೆ ಎಂಬ ಲೇಖನದ ಇಂಗ್ಲಿಷ್ ರೂಪಾಂತರವನ್ನು ಕರ್ನಾಟಕಸಾಹಿತ್ಯ.ಕಾಂನಲ್ಲಿ ಪ್ರಕಟಿಸಿದ್ದೇವೆ. +ಈ ಕಾದಂಬರಿಯನ್ನು ಅಂತರ್ಜಾಲಕ್ಕೆ ತರಲು ‘ ಬರಹ ’ ಕ್ಕಿಳಿಸಿದವರು ಎಂ . ಆರ್ . ರಕ್ಷಿತ್. ಟೈಪಿಂಗ್ ತಪ್ಪುಗಳನ್ನು ತಿದ್ದಲು ಸಹಕರಿಸಿದವರು: ಆದಷ್ಟು ಶ್ರಮ ವಹಿಸಿ ಕಾದಂಬರಿಯನ್ನು ದೋಷಮುಕ್ತವಾಗಿರಸಲು ಯತ್ನಿಸಿದ್ದೇವೆ. ತಪ್ಪುಗಳೇನಾಡಃರೂ ಇದ್ದರೆ ದಯವಿಟ್ಟು ಗಮನಕ್ಕೆ ತರಬೇಕಾಗಿ ಮನವಿ. +ಸೀತಾಶೇಖರ್ +ಶ್ರೀನಿವಾಸ್ +ನಂದಿನಿಶೇಖರ್ +ಗುರುಪ್ರಸಾದ್ +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ […] +“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_290.txt b/Kannada Sahitya/article_290.txt new file mode 100644 index 0000000000000000000000000000000000000000..a0ee7bab5b867c0ca47c02c7e6eb3141a683281b --- /dev/null +++ b/Kannada Sahitya/article_290.txt @@ -0,0 +1,72 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಕ್ಸನ್ನಿನ ಆಡಳಿತದ ಪ್ರತಿಯೊಂದೂ ನಿಮಿಷಕೊಂದು +ವಿಯಟ್ನಾಮಿನಲ್ಲಿ ಬಾಂಬು, +ಯುದ್ಧವನ್ನು ಪ್ರತಿಭಟಿಸುವ ಶಾಂತಿಯ ಮೆರವಣಿಗೆ ಮೇಲೆ +ಪೋಲೀಸರ ಲಾಠಿ ಗುಂಡು +ನಾನು ಕಂಡ ಅಮೆರಿಕ. +ಶಿಕ್ಷಣಕ್ಕೆ ದುಡ್ಡಿಲ್ಲದ, ದೇಣಿಗೆಗಳ ಇಳಿಗಾಲದ, +ಬಾಂಬು ತಯಾರಿಕೆಗೆ ಮಾತ್ರ ಕೋಟ್ಯಾಂತರ ಸುರಿಯುತ್ತಿದ್ದ +ಡೇಲಿಯಂತವರು ಮಾತ್ರ ಪುನಃ ಮೇಯರಾಗುತ್ತಿದ್ದ +ನ್ಯೂಯಾರ್ಕಿನ ಆರ್ಥಿಕಸ್ಥಿತಿ ದಿನದಿನವೂ ಕುಸಿಯುತ್ತಿದ್ದ +ನಾನು ಕಂಡ ಅಮೆರಿಕ. +ಗಂಡುಬೀರಿಯರನು ಕಂಡು ದಿಗಿಲುಕೊಂಡ ಗಂಡಸರು +ಗಂಡು ಗಂಡಿನೊಡನೆ ಮದುವೆ, ಹೆಣ್ಣು ಹೆಣ್ಣಿನೊಡನೆ. +ಗಂಡು ತಾನು ಹೆಣ್ಣಾಗಲು ನಡೆಯುತ್ತಿತ್ತು ಶಸ್ತ್ರಕ್ರಿಯೆ +ಹೆಣ್ಣು ತಾನು ಗಂಡಾಗಲು ಕೃತಕಶಿಶ್ನ ಸಿದ್ಧತೆ +ಮದುವೆಯ ಅಭದ್ರತೆ +ಅಸೀಮ ಸ್ವಾತಂತ್ರಕ್ಕಾಗಿ ಅಮೆರಿಕನರ ಸಿದ್ಧತೆ +ನಾನು ಕಂಡ ಅಮೆರಿಕ. +ಕರಿಬಿಳಿಯರ ಮಿಶ್ರಣಕ್ಕೆ ತಿಣುಕ್ಕುತ್ತಿತ್ತು ಅಮೆರಿಕ. +ಒಡೆಯುತ್ತಿದ್ದ ಕುಟುಂಬದಲ್ಲಿ, ಕಾನೂನಿನ ಶೂಲದಲ್ಲಿ, +ನೋಯುತ್ತಿತ್ತು, ನರಳುತ್ತಿತ್ತು, ನಿದ್ರೆ ಗುಳಿಗೆ ನುಂಗುತ್ತಿತ್ತು, +ಬಿಯರು ವೈನು ವಿಸ್ಕಿಯಲ್ಲಿ ತನ್ನ ತಾನೆ ಮರೆಯುತ್ತಿತ್ತು, +ಎದ್ದೊಡನೆಯೆ ಕಾಯುತ್ತಿತ್ತು ಮನೋವೈದ್ಯ ಕೊಟ್ಟ ಸಮಯ – +ನಾನು ಕಂಡ ಅಮೆರಿಕ. +ಅಜ್ಜ ಅಜ್ಜಿಯರನು ಒಯ್ದು ವೃದ್ದಗೃಹಕೆ ಸೇರಿಸಿತ್ತು +ಮೊಮ್ಮಕ್ಕಳ ದೂರದೂರ ಒಯ್ಯುತ್ತಿತ್ತು ಅಮೆರಿಕ. +ಸ್ವಾತಂತ್ರ್ಯದ ಸಾಣೆಯಲ್ಲಿ ಸ್ವಾರ್ಥವನ್ನು ಹರಿತಮಾಡಿ +ಮಕ್ಕಳ ಸುಖ ಕೊಯ್ಯುತ್ತಿತ್ತು ನಾನು ಕಂಡ ಅಮೆರಿಕ. +ಸೋಲೆಂದರೆ ದುಸ್ವಪ್ನದ ಒತ್ತುಗಕ್ಕೆ ಬೆಚ್ಚುವವರು +’ಟೀವಿ’ ಕೊಡುವ ಆದರ್ಶದ ಬಣ್ಣಗಳೇ ಕಣ್ಣತುಂಬಿ +ಫ್ಯಾಷನ್ನಿನ ಗತ್ತಿನಲ್ಲಿ, ಮತ್ತಿನಲ್ಲಿ ನಡೆಯುವವರು. +ಒಂದು ರೀತಿ ಮುಗ್ಧರು ಅಥವಾ ಅಪ್ರಬುದ್ಧರು, +ಜಾಹಿರಾತು ಸ್ಲೋಗನ್ನಿನ ಬೆಂಕಿಯಲ್ಲಿ ದಗ್ಧರು +ನಾನು ಕಂಡ ಅಮೆರಿಕ. +ಒಂದು ಕಡೆಗೆ ಸರ್ವರಾಷ್ಟ್ರ ಸ್ವಾತಂತ್ರ್ಯದ ಘೋಷಣೆ +ಉದಯೋನ್ಮುಖ ರಾಷ್ಟ್ರಗಳಿಗೆ ಸಾಲದಿಂದ ಪೋಷಣೆ +ಸಾಲದ ಬೆನ್ನಲ್ಲೆ ಉಂಟು ಭಾರಿ ಗೂಢ ಸೂತ್ರ : +ಎಲ್ಲದಕ್ಕೂ ಮೊದಲಿಗರು ಅಮೆರಿಕನರು ಮಾತ್ರ. +ಗೋರಿವರೆಗು ವಯಸ್ಸಂಧಿ ಕಾಲದಲ್ಲೆ ನಡೆಯುವರು +ನಾನು ಕಂಡ ಅಮೆರಿಕ. +ಹಿಮದ ಹಗಲು ಹಿಮದ ರಾತ್ರಿ ಬಿಳಿಯ ಕೊರೆತದಲ್ಲಿ +ಕೇಳಿಸಿತೆ ಅಥವಾ ಭ್ರಮೆಯೆ ಕುಹೂ ಕುಹೂ ಕೋಗಿಲೆ ? +ಕನಸೊ ಅಥವಾ ವಾಸ್ತವವೊ ನಾ ಕೇಳಿದ ಕೋಗಿಲೆ ? +ಖಂಡಿತಾ ತೆರುವುದೆಂದು ಅಸೀಮ ಸುಖದ ಬಾಗಿಲೆ +ಕೂಗುತ್ತಿತ್ತೆ ನನ್ನ ಭ್ರಮೆಯ ಕುಹೂ ಕುಹೂ ಕೋಗಿಲೆ ? +ಕೇಳು ಇಲ್ಲಿ ಅಮೆರಿಕ, ನಾನು ಕಂಡ ಅಮೆರಿಕ +ನಾನು ಬಂದೆ ಹುಡುಕಿಕೊಂಡು ಎಮರ್ಸನನ ನಾಡಿಗೆ. +ಮೆಲ್ವಿಲ್ಲನ ವಿಟ್‌ಮನ್ನನ ಆದರ್ಶದ ಬೀಡಿಗೆ, +ಇತ್ತು ನಿಜ ಚಳಿಯ ದಿವಸ ನಾನು ಬಂದ ಸಮಯ, +ಬೇರಿನಲ್ಲೆ ಇತ್ತೊ ಏನೊ ಎಮರ್ಸನನ ಗಳಿಕೆ, +ನಾಳೆ ಒಡೆಯಬಹುದೊ ಏನೊ ಅಂಥ ನೂರು ಮೊಳಕೆ. +***** +೧೯-ನವೆಂಬರ-೧೯೭೮ +ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […] +ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. ಅರೆ, ಎಂದು […] +ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_291.txt b/Kannada Sahitya/article_291.txt new file mode 100644 index 0000000000000000000000000000000000000000..10dd0c39aed559404e4f04f39a8d24c61870066a --- /dev/null +++ b/Kannada Sahitya/article_291.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ +ಕನ್ನಡಕ್ಕೆ: ಎಸ್. ದಿವಾಕರ್ +ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. ಕಪ್ಪು ಬಟ್ಟೆಗಳನ್ನು ತೊಟ್ಟ ದಾರಿಹೋಕರು ರೂಪ ಆಕಾರಗಳಿಲ್ಲದ ಕೊಡೆಗಳ ಕೆಳಗೆ ಬರುತ್ತಿದ್ದರು, ಹೋಗುತ್ತಿದ್ದರು. +ಹಳದಿ ಸಿಯೆನ್ ನದಿ ತನ್ನ ವ್ಯಾಪಾರಿ ಹಡಗುಗಳನ್ನು ಹೊತ್ತುಕೊಂಡು ಮುಂದೆ ಸಾಗುತ್ತಿತ್ತು. ಸೇತುವೆಗಳ ಮೇಲೆ ಬೀಸುತ್ತಿದ್ದ ಗಾಳಿ ಪಟ್ಟು ಬಿಡದೆ ಜನರ ಹ್ಯಾಟುಗಳನ್ನು ಹಾರಿಸುತ್ತಿತ್ತು. ಜನರು ಹ್ಯಾಟುಗಳನ್ನು ತಲೆಯ ಮೇಲೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅವರ ವಿಲವಿಲ ಒದ್ದಾಟ ಕಲಾವಿದನ ಕಣ್ಣಿಗೆ ನೋವುಂಟುಮಾಡುವ ದೃಶ್ಯ. +ನನ್ನ ವಿಚಾರಗಳು ಮಬ್ಬು ಮಸುಕಾಗಿದ್ದವು. ಹಿಂದಿನ ದಿನ ಗೊತ್ತುಪಡಿಸಿಕೊಂಡಿದ್ದ ಒಂದು ವ್ಯವಹಾರ ಸಂಬಂಧದ ಕೆಲಸ ನನ್ನ ತಲೆ ತಿನ್ನುತ್ತಿತ್ತು. ಸಮಯದ ತುರ್ತು ಬೇರೆ. ಒಂದು ಮನೆಯ ಮುಖ ಮಂಟಪದ ಕೆಳಗೆ ನಿಂತುಕೊಳ್ಳುವುದೆಂದು ತೀರ್ಮಾನಿಸಿದೆ. ಕುದುರೆಗಾಡಿಗೆ ಸನ್ನೆಮಾಡಲು ಅನುಕೂಲವಾಗಿದ್ದ ಜಾಗ ಅದು. +ಅದೇ ಹೊತ್ತಿಗೆ ನನ್ನ ಬದಿಯಲ್ಲೇ ಮಜಬೂತಾದ ಒಂದು ಚಚ್ಚೌಕನೆಯ ಕಟ್ಟಡದ ಪ್ರವೇಶದ್ವಾರ ಕಾಣಿಸಿತು. ಕಲ್ಲಿನಲ್ಲಿ ಅರಳಿರುವಂತೆ ಕಾಣಿಸುತ್ತಿದ್ದ ಆ ಕಟ್ಟಡ ಕವಿದ ಮಂಜಿನಲ್ಲಿ ಮುಳುಗೇಳುವಂತಿತ್ತು. ತೀರ ಒರಟಾದ, ಗಡುಸಾದ ವಾಸ್ತುಶಿಲ್ಪ. ಅದು ಮಂಕುಗೊಳಿಸುವ ಹಾಗು ಭಯ ಹುಟ್ಟಿಸುವ ಹಬೆಯಲ್ಲಿ ಮುಳುಗಿ ಹೋಗಿದ್ದಂತೆ ಕಾಣುತ್ತಿದ್ದರೂ ಒಂದು ರೀತಿಯ ಆದರದ ಆತಿಥ್ಯ ಆಲ್ಲಿರುವಂತೆ ತೋರುತ್ತಿದ್ದುದರಿಂದ ನನಗೊಂದು ಧೈರ್ಯ. +“ಇಲ್ಲಿ ವಾಸ ಮಾಡುತ್ತಿರುವವರು ತುಂಬ ಜಡವಾದ ಜನ ಇರಬೇಕು. ಹೊಸ್ತಿಲು ನೋಡಿದರೆ ಸ್ವಾಗತಿಸುವ ಹಾಗೆಯೇ ಇದೆ. ಬಾಗಿಲು ತೆರೆದಿದೆಯಲ್ಲವೆ?” ಎಂದುಕೊಂಡೆ. +ಸರಿ, ಸಾಧ್ಯವಾದಷ್ಟೂ ವಿನಯಶೀಲನಾಗಿ, ಸಂತೃಪ್ತಿಯ ಮುಖಮಾಡಿಕೊಂಡು, ಕೈಯಲ್ಲಿ ಹ್ಯಾಟು ಹಿಡಿದುಕೊಂಡ ಆ ಮನೆಯೊಡತಿಯನ್ನು ನೋಡಿದೊಡನೆ ಸವಿನಯವಾಗಿ ಏನೇನು ಹೇಳಬೇಕೆಂದು ಕೂಡಾ ಯೋಚಿಸಿಕೊಂಡು ನಗುನಗುತ್ತ ಒಳಗೆ ಹೋದದ್ದೇ ನಾನೊಂದು ಗಾಜಿನ ಚಾವಣಿಯಿದ್ದ ಕೊಠಡಿಯ ಮುಂದೆ ನಿಂತುಬಿಟ್ಟಿದ್ದೆ. ಗಾಜಿನ ಚಾವಣಿಯಿಂದ ಕೆಳಗಿಳಿಯುತ್ತಿದ್ದ ಬೆಳಕು ತುಸು ಭಯಾನಕವಾಗಿತ್ತು. +ಆ ಕೊಠಡಿಯೊಳಗಿದ್ದ ಕಂಬಗಳ ಮೇಲೆ ಬಟ್ಟೆ ಬರೆಗಳನ್ನೂ ಮಫ್ಲರುಗಳನ್ನೂ ಮತ್ತು ಹ್ಯಾಟುಗಳನ್ನೂ ನೇತುಹಾಕಲಾಗಿತ್ತು. ಎಲ್ಲ ಬದಿಗಳಲ್ಲೂ ಮಾರ್ಬಲ್ ಟೇಬಲುಗಳಿದ್ದವು. +ಅಲ್ಲಿ ಕೆಲವರು ಕಾಲುಗಳನ್ನು ಚಾಚಿಕೊಂಡು, ತಲೆ ಮೇಲೆತ್ತಿ, ಕಣ್ಣುಬಿಟ್ಟುಕೊಂಡು ಅಂಥ ವಿಶೇಷ ಭಾವವನ್ನೇನೂ ಹೊಮ್ಮಿಸದೆ ಧ್ಯಾನಿಸುತ್ತಿರುವ ಹಾಗೆ ಕೂತಿದ್ದರು. +ಅವರದು ಯಾವುದೇ ಚಿಂತೆಯಿಲ್ಲದ ದೃಷ್ಟಿ; ಅವರ ಮುಖಕ್ಕೂ ವಾತಾವರಣಕ್ಕಿದ್ದ ಹಾಗೆ ಬೂದು ಬಣ್ಣ. +ಅವರಲ್ಲಿ ಪ್ರತಿಯೊಬ್ಬನ ಪಕ್ಕದಲ್ಲೂ ತೆರೆದ ಫೈಲುಗಳು, ಹರಡಿಕೊಂಡ ಹಾಳೆಗಳು. +ಸ್ವಲ್ಪ ಸಮಯದ ನಂತರ ನಾನು ಯಾರ ಸ್ವಾಗತವನ್ನು ನಿರೀಕ್ಷಿಸುತ್ತಿದ್ದೆನೋ ಆ ಮನೆಯೊಡತಿ ಬೇರೆ ಯಾರೂ ಅಲ್ಲ, ಸ್ವತಃ ಮೃತ್ಯುವೇ ಎಂದು ನನಗೆ ಹೊಳೆದುಬಿಟ್ಟಿತು. +ನನ್ನ ಆತಿಥೇಯರ ಕಡೆ ನೋಡಿದೆ. +ಅವರಲ್ಲಿ ಬಹುಮಂದಿ ತಮ್ಮ ಕಠೋರ ಜೀವನದ ಚಿಂತೆ, ವ್ಯಾಕುಲಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮತಮ್ಮ ದೇಹಗಳನ್ನೇ ಕೊಂದುಕೊಂಡು, ಅದರಿಂದಲಾದರೂ ತುಸು ನೆಮ್ಮದಿ ದೊರೆಯಬಹುದೆಂದು ನಿರೀಕ್ಷಿಸುತ್ತಿದ್ದುದ್ದು ಸ್ಪಷ್ಟವಾಗಿತ್ತು. +ಅವರ ಅಳಿದುಳಿದ ಪ್ರಾಣಗಳಿಗೆ ಪ್ರಾಣಿಗಳಿಗೆ ಅತ್ಯಗತ್ಯವಾಗಿದ್ದ ಆಹಾರ ಪಾನೀಯಗಳನ್ನು ಒದಗಿಸುವುದಕ್ಕೆಂದೇ ಗೋಡೆಗಳಿಗೆ ಹಿತ್ತಾಳೆಯ ನಲ್ಲಿಗಳನ್ನು ಹೊಂದಿಸಲಾಗಿತ್ತು. ಆ ನಲ್ಲಿಗಳು ಮಾಡುತ್ತಿದ್ದ ಸದ್ದನ್ನು ಆಲಿಸುತ್ತಿದ್ದಂತೆ ಕುದುರೆಗಾಡಿಯೊಂದರ ಗುಡು ಗುಡು ಸದ್ದೂ ಕೇಳತೊಡಗಿತು. ಅದು ಹೊರಗಡೆಯೇ ನಿಲ್ಲುವಂತಿತ್ತು. ನನ್ನ ವ್ಯಾಪಾರಿಗಳು ನನಗಾಗಿ ಕಾಯುತ್ತಿರಬೇಕೆನ್ನಿಸಿದ್ದೇ ಅದರ ಲಾಭಪಡೆಯಲೆಂದು ಹಿಂತಿರುಗಿದೆ. +ಕುದುರೆಗಾಡಿ ಅದಾಗ ಆ ಕಟ್ಟಡ ಬಾಗಿಲ ಬಳಿಯೇ ಸಾವನ್ನು ಕಣ್ಣಾರೆ ಕಂಡು ಮಾತ್ರ ನಂಬಲಿದ್ದ ಕೆಲವರು ವಿದ್ಯಾರ್ಥಿಗಳನ್ನು ಕೆಳಗಿಳಿಸಿತ್ತು. +ನಾನು ಖಾಲಿಗಾಡಿಗಳನ್ನು ನೋಡಿದ್ದೇ ಗಾಡಿಯವನಿಗೆ ಹೇಳಿದೆ : “ದ ಲೊಪೇರಾಗೇ!” +ಆಮೇಲೆ ಸಾಲುಮರಗಳ ರಸ್ತೆಯಲ್ಲಿ ಸಾಗುತ್ತಿರುವಾಗ ದಿಗಂತ ಎಲ್ಲಿದೆಯೆಂದೇ ಕಾಣಿಸುತ್ತಿರಲಿಲ್ಲ. ಹವಾಗುಣವೂ ಎಂದಿಗಿಂತ ಹೆಚ್ಚು ಕಳೆಗುಂದಿದಂತೆ ಅನ್ನಿಸಿತು. ಎಲೆಗಳಿಲ್ಲದೆ ಬೋಳು ಬೋಳಾಗಿದ್ದ ಮರಗಳು ನಿದ್ದೆ ಹೋದಂತಿದ್ದ ಪೋಲೀಸರಿಗೆ ದಾರಿಹೋಕರನ್ನು ತೋರಿಸಿಕೊಡುತ್ತಿರುವಂತೆ ತಮ್ಮ ತಮ್ಮ ಕಪ್ಪು ರೆಂಬೆಗಳ ತುದಿಗಳನ್ನು ಚಾಚಿಕೊಂಡಿದ್ದವು. +ಜೋರಾಗಿ ಓಡುತ್ತಿತ್ತು ಕುದುರೆಗಾಡಿ. +ಗಾಡಿಯ ಕಿಟಕಿಯಿಂದ ನೋಡಿದರೆ ರಸ್ತೆಯಲ್ಲಿ ನಡೆಯುತ್ತಿದ್ದವರು ಹರಿಯುತ್ತಿರುವ ನೀರಿನ ಹಾಗೆ ಕಾಣಿಸುತ್ತಿದ್ದರು. +ನಾನು ತಲುಪಬೇಕಾಗಿದ್ದ ಸ್ಥಳವನ್ನು ಮುಟ್ಟಿದ್ದೇ ಕಾಲು ಹಾದಿಯ ಮೇಲೆ ಧುಮುಕಿ ಆರ್ಕೇಡಿನೊಳಕ್ಕೆ ನುಗ್ಗಿಹೋದೆ. ಅಲ್ಲಿ ಏನೇನೋ ಕೆಲಸಕಾರ್ಯಗಳಲ್ಲಿ ಮುಳುಗಿಹೋಗಿದ್ದ ಜನರು ತುಂಬಿ ಹೋಗಿದ್ದರು. +ಕಡೆಗೆ ನನ್ನೆದುರಿಗೇ ಕೆಫೆಯೊಂದರ ಬಾಗಿಲು ಕಾಣಿಸಿತು. ಅದು ಆಮೇಲೆ ಪ್ರಸಿದ್ಧವಾದ ಅಗ್ನಿ ಅನಾಹುತವೊಂದರಲ್ಲಿ ಉರಿದುಹೋಯಿತು. +(ಯಾಕೆಂದರೆ ಬದುಕೆನ್ನುವುದು ಒಂದು ಕನಸೇ ತಾನೆ!) ಕೆಫೆ ಒಂದು ರೀತಿಯ ಷೆಡ್ಡಿನ ಹಿಂಭಾಗದಲ್ಲಿ ಚಚ್ಚೌಕನೆಯ ಕಮಾನಿನ ಕೆಳಗೆ ಮುದುರಿಕೊಂಡು ಕೂತಿತ್ತು. +“ನನ್ನ ವ್ಯಾಪಾರಸ್ಥರು ಕೈಯಲ್ಲಿ ಗ್ಲಾಸುಗಳನ್ನು ಹಿಡಿದುಕೊಂಡು ವಿಧಿಯನ್ನು ನಿರ್ಲಕ್ಷಿಸುವ ಹಾಗೆ ಕಣ್ಣುಗಳನ್ನು ಮಿಂಚಿಸುತ್ತಾ ನನಗಾಗಿ ಇಲ್ಲಿ ಕಾದಿರಬಹುದು” ಎಂದುಕೊಂಡೆ. +ಅದರಂತೆ ನಾನು ಬಾಗಿಲ ಹಿಡಿಯನ್ನು ತಿರುಗಿಸಿದ್ದೇ ತಡ ಕಿಟಕಿಗಳ ಮೂಲಕ ಭಯಾನಕ ಬೆಳಕು ಬರುತ್ತಿದ್ದ ಒಂದು ಕೊಠಡಿಯಲ್ಲಿ ನಿಂತುಬಿಟ್ಟಿದ್ದೆ. +ಆ ಕೊಠಡಿಯಲ್ಲಿದ್ದ ಕಂಬಗಳ ಮೇಲೆ ಬಟ್ಟೆ ಬರೆಗಳನ್ನೂ ಮಫ್ಲರುಗಳನ್ನೂ ಹ್ಯಾಟುಗಳನ್ನೂ ನೇತುಹಾಕಲಾಗಿತ್ತು. ಎಲ್ಲ ಬದಿಗಳಲ್ಲೂ ಮಾರ್ಬಲುಗಳಿದ್ದವು. +ಅಲ್ಲಿ ಕೆಲವರು ಕಾಲುಗಳನ್ನು ಚಾಚಿಕೊಂಡು, ತಲೆ ಮೇಲೆತ್ತಿ, ಕಣ್ಣುಬಿಟ್ಟುಕೊಂಡು ಅಂಥ ವಿಶೇಷ ಭಾವವನ್ನೇನೂ ಹೊಮ್ಮಿಸದೆ ಧ್ಯಾನಿಸುತ್ತಿರುವ ಹಾಗೆ ಕೂತಿದ್ದರು. +ಅವರ ಮುಖಕ್ಕೂ ವಾತಾವರಣಕ್ಕಿದ್ದ ಹಾಗೆಯೇ ಬೂದುಬಣ್ಣ ; ಅವರದು ಯಾವುದೇ ಚಿಂತೆಯಿಲ್ಲದ ದೃಷ್ಟಿ. +ಅವರಲ್ಲಿ ಪ್ರತಿಯೊಬ್ಬನ ಪಕ್ಕದಲ್ಲೂ ತೆರೆದ ಫೈಲುಗಳು, ಹರಡಿಕೊಂಡ ಹಾಳೆಗಳು. +ನಾನು ಅವರ ಕಡೆ ನೋಡಿದೆ. +ಅವರಲ್ಲಿ ಬಹುಮಂದಿ ಸಹಿಸಲಸಾಧ್ಯವಾದ ಆತ್ಮಸಾಕ್ಷಿಯ ಹುಚ್ಚಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ “ಆತ್ಮ”ಗಳನ್ನೇ ಕೊಂದುಕೊಂಡು, ಅದರಿಂದಲಾದರೂ ತುಸು ನೆಮ್ಮದಿ ದೊರೆಯಬಹುದೆಂದು ನಿರೀಕ್ಷಿಸುತ್ತಿದ್ದುದ್ದು ಸ್ಪಷ್ಟವಾಗಿತ್ತು. +ಅವರ ಅಳಿದುಳಿದ ಪ್ರಾಣಗಳಿಗೆ ಅತ್ಯಗತ್ಯವಾಗಿದ್ದ ಆಹಾರ ಪಾನೀಯಗಳನ್ನು ಒದಗಿಸುವುದಕ್ಕೆಂದೇ ಗೋಡೆಗಳಿಗೆ ಹಿತ್ತಾಳೆಯ ನಲ್ಲಿಗಳನ್ನು ಹೊಂದಿಸಲಾಗಿತ್ತು. ಆ ನಲ್ಲಿಗಳು ಮಾಡುತ್ತಿದ್ದ ಸದ್ದನ್ನು ಆಲಿಸುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಕುದುರೆಗಾಡಿಯ ಗುಡುಗುಡು ಸದ್ದಿನ ನೆನಪು ಮರುಕಳಿಸಿತು. +“ಗಾಡಿಯವನು ಎಷ್ಟೋ ಹೊತ್ತಿನವರೆಗೆ ಸುತ್ತಿ ಸುಳಿದು ಹೊರಟ ಜಾಗಕ್ಕೇ ನನ್ನನ್ನು ಮತ್ತೆ ಕರೆದುತಂದಿರಬೇಕಾದರೆ ಅವನಿಗೆ ಸಮಯ ಕಳೆದಂತೆ ಒಂದು ಬಗೆಯ ಮಯಕವಾಗಿರಬೇಕು. ಏನಾದರೂ ಆಗಿರಲಿ, ಎರಡನೆಯ ಬಾರಿ ನೋಡಿದ್ದು ಮಾತ್ರ ಮೊದಲು ನೋಡಿದ್ದುದಕ್ಕಿಂತ ಹೆಚ್ಚು ಅಮಂಗಲಕರ”ಎನ್ನಿಸಿತು. +ಆದ್ದರಿಂದ ನಾನು ಮೌನವಾಗಿಯೇ ಗಾಜಿನ ಬಾಗಿಲನ್ನು ಮುಚ್ಚಿ, ಯಾವುದೇ ವಹಿವಾಟು ನಡೆಸಕೂಡದೆಂದು ಕಟ್ಟುನಿಟ್ಟಾಗಿ ತೀರ್ಮಾನಿಸಿದವನೇ ಮನೆಗೆ ಹೋಗಿಬಿಟ್ಟೆ. +***** +ಕೀಲಿಕರಣ: ಸೀತಾಶೇಖರ್. ಸಹಾಯ ರಮೇಶ್ ಎಚ್ ಎಸ್ +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […] +“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”“ಐದಾಣೆಗೆ ಆಗೋದಾದರೆ ತರ್ತೆನೋಡೀ.”“……”“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_292.txt b/Kannada Sahitya/article_292.txt new file mode 100644 index 0000000000000000000000000000000000000000..2a1c6b4244264ef97414d79cd29ab576619ad910 --- /dev/null +++ b/Kannada Sahitya/article_292.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಮನೆಯ ಕನ್ನಡಿ +ಯಲಿ ಮಾತ್ರ ನನಗೆ ನಾ ಚಂದ +ಉಳಿದಲ್ಲಿ ಪ್ರೇತ ನರಪೇತಲ +ಊದಿಕೊಂಡ ಗಲ್ಲ +ಚಿಂತೆ ತುರಿಸುವ ಮೂಗು +ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ +ನ ರೂಪ ಇವೆಲ್ಲ +ಅತೀ ತಾಕು ಠೀಕಾಗಿ +ಚದುರಿಕೊಂಡು ಕೂಡ್ರುತ್ತವೆ +ನಮ್ಮಿ ಕನ್ನಡಿಯಲ್ಲಿ +ನನಗೆ ನನ್ನನ್ನೇ ಮರೆಸುತ್ತವೆ +ಮೊನ್ನೆ ಕಟ್ಟು ಕಳಚಿತ್ತದರದು +ರಿಪೇರಿಸಿ ತಿರುಗಿ ತಂದಾಗ +ಏನೋ ಬದಲಾವಣೆ ಅಷ್ಟಷ್ಟು ಇಷ್ಟಿಷ್ಟು +ತೂಕ ತಪ್ಪಿದ ಸ್ವಭಾವ +ಇಲ್ಲಾಗದವುಗಳೆಲ್ಲ ಅಲ್ಲಾದಂತೆ +ಕೆಟ್ಟವ ಒಮ್ಮೆಗೇ ಸಾಧುವಾದಂತೆ +ಕೊನೆಗೆ ನಿರಾತಂಕ ನನ್ನ +ಅಕ್ಷರಸ್ಥ ಬದುಕು +ಶಬ್ದಗಳಲ್ಲಿ ಒಣಗಿದಂತೆ +ಕನ್ನಡಿಯ ಅದ್ಭುತ ಡೊಂಬರಾಟ +ಗೊತ್ತಿದ್ದೂ ನಿಲುಕದ ಮಿಥ್ಯ ಪರಿಪಾಠ +ನನಗೂ ಹೆದರಿಕೆಯಿಲ್ಲ ಸೋಗಿನ ವ್ಯಕ್ತಿತ್ವಕ್ಕೆ +ಒಂದೇ ಕಳವಳವೆಂದರೆ ಆಗಾಗ +ನಮ್ಮ ಕೆಲಸದ ನಾಗಿ ಸಂಜೆ ಆರರ ಅಪ್ಪ +ಪ್ರಿನ್ಸಿಪಾಲರು ಮತ್ತು ದೇವಸ್ಥಾನದ ಭಟ್ಟ +ಹೀಗೆ ಇವರೆಲ್ಲ ಒಳಗೆ ಸೇರಿಕೊಂಡು ಗುಂಪಾಗಿ +ನನ್ನನ್ನೇ ಅಳಿಸತೊಡಗುತ್ತಾರೆ +ಆಗ ಆ ನಾನು +ತಡೆಯಲಾರದೆ ಗಬಕ್ಕನೆ ಹೊರಬಂದು +ಈ ನನ್ನನ್ನು ತಬ್ಬಿಕೊಳ್ಳುತ್ತೇನೆ +ತಪ್ಪಾಯಿತು ತಪ್ಪಾಯಿತು ಅನ್ನುತ್ತೇನೆ +ಅತ್ತು ಅತ್ತು ಅಸತ್ಯವಾಗುತ್ತೇನೆ +ಆದರೂ ಈ ಕನ್ನಡಿ ಅಲ್ಲೇ +ಮತ್ತು ನಾನಿಲ್ಲೇ ಇರಬೇಕು ಅದೇ ನನಗೆ ಇಷ್ಟ +ಏಕೆಂದರೆ ಅದರ ಕಣ್ಣು ತಪ್ಪಿಸಿಕೊಂಡು +ನಾನು ಬದುಕುವುದು +ತುಂಬಾ ತುಂಬಾ ಕಷ್ಟ. +***** +-ವೆರ್ಲೆನ್ ಮುಖ್ಯವಾದ್ದು ನಾದ ನಯವಾಗದಂತೆ ವಕ್ರ ಬಳಕುವ ಲಯ ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ ಘನವಾಗದ ಚಂಚಲ ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ ಇಂಗಿತದ ಸೂಕ್ಷ್ಮ, ಮಾತಿಗೆ ದಕ್ಕದಂತೆ ಮಿಗುವ ಮೌನ […] +ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […] +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_293.txt b/Kannada Sahitya/article_293.txt new file mode 100644 index 0000000000000000000000000000000000000000..c0ddcf46b6ee049ead1e273adbb29b91a954a5f9 --- /dev/null +++ b/Kannada Sahitya/article_293.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ +ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು ಕಲೆಯಬೇಕೆಂದು ಬಹಳ ಆಸೆ. ಹಾಗೆ ಕಲಿತ ವಿದ್ಯೆಯಿ೦ದ ಹೆಸರು ಪಡೆದರೆ ನಾನೂ ಏನಾದರೂ ಸಾಧಿಸಿದ೦ತಾಗುತ್ತದೆ. ತನ್ನ ವೃತ್ತಿಗೂ ಒ೦ದು ಕಳೆಬರುತ್ತದೆ ಎ೦ಬ ನ೦ಬಿಕೆ. ಅದೇ ಹುಚ್ಚಲ್ಲಿ ಭತಗುಣಿಯ ಗವಿ ಮಠದ ಪವಾಡ ಸ್ವಾಮಿಗಳ ಬಳಿಗೆ ಹೋದ. ಪವಾಡ ಸ್ವಾಮಿಗಳೆ೦ದರೆ ಆ ಭಾಗದ ಅಪರೋಕ್ಷ ಜ್ಞಾನಿಗಳು; ಮಹಾ ಪವಾಡ ಪುರುಷರು ಎ೦ದು ಹೆಸರುವಾಸಿಯಾದವರು. ಮೃತ್ತಿಕೆಯಿ೦ದ ಫಲ-ಮ೦ತ್ರಾಕ್ಷತೆಯನ್ನೂ; ತೀರ್ಥದಿ೦ದ ಪ್ರಸಾದವನ್ನೂ; ಅ೦ಗೈಯಿ೦ದ ದೇವರ ಮೂರ್ತಿಗಳನ್ನು ಅವರು ಸೃಷ್ಟಿಸಿ ನೂರಾರು ಭಕ್ತರಿಗೆ ನೀಡಿದ್ದನ್ನು ಜನ ಕ೦ಡವರಿದ್ದಾರೆ. +ಇ೦ತಹ ಗುರು ತನಗೂ ಒಲಿದರೆ, ನಾನೂ ಸಮಾಜದಲ್ಲಿ ದೊಡ್ಡ ರಖಮಿನ ಚೀಜು ಆಗಬಹುದು ಎ೦ಬ ಮಹದಾಸೆಯಲ್ಲಿ ಒಂದು ನಸುಕಿನಲ್ಲಿ ಅರ್ಚಕ ಗೋವಿ೦ದ ಗವೀಮಠವನ್ನು ತಲುಪಿದ. ಸ್ವಾಮಿಗಳು ಅಗ ಜಳಕ ಮುಗಿಸಿ ಅಧ್ಯಯನದಲ್ಲಿದ್ದರು. ಅರ್ಚಕ ಗೋವಿಂದ ಅವರ ಮು೦ದೆ ಹೋಗಿ ಶಿರಸಾಷ್ಟಾ೦ಗ ಪ್ರಣಾಮಗೈದ. ಸ್ವಾಮಿಗಳು ನಸು ನಗುತ್ತಲೇ ಆದರದಿಂದ ಬರಮಾಡಿಕೊಂಡರು. ಉಪಹಾರವಾಗುವವರೆಗೂ ಬಂದ ಕಾರಣವನ್ನು ತಿಳಿಸುವುದು ಬೇಡ ಎಂದು ತಿಳಿಸಿದರು. ಮಠದ ಉಪಹಾರವೆ೦ದರೆ ಅಳ್ಳಿಟ್ಟು-ಮಜ್ಜಿಗೆ, ಆಮೇಲೆ ಹೊಟ್ಟೆಗೆ ಶಮನ ನೀಡುವ ಬಿಸಿ ನೀರು. ಉಪಹಾರದ ಅನಂತರ ಗೋವಿಂದ ಬಂದ ಕಾರಣವನ್ನು ತಿಳಿಸಿ “ನನಗೆ ತಂತ್ರಾಚಾರ, ಮ೦ಡಲ ವಿದ್ಯೆ; ಪವಾಡಗಳನ್ನು ಕಲಿಸಿಕೊಡಿ” ಎಂದು ಅಂಗಲಾಚಿದ. +ನೀವು ಬಹಳ ಒಳ್ಳೆಯ ಅರ್ಚಕರು-ವೈದಿಕರು ಎಂದು ಹೆಸರು ಮಾಡಿದ್ದೀರೆಂದು ಕೇಳಿ ಬಲ್ಲೆ. ಆದರೆ, ನಾನು ನನ್ನೆಲ್ಲ ಜ್ಞಾನವನ್ನು ನಿಮಗೆ ನೀಡಿದ ಮೇಲೆ ಎಷ್ಟೋ ಪ೦ಡಿತರು ಮಾಡುವಂತೆ, ವಿನಯ, ಸಮಾಜಕ್ಕೆ ಒಳಿತಾಗುವಂತೆ ಕೆಲಸ ಮಾಡುವ ಸೇವಾ ಮನೋಭಾವವನ್ನು ನೀವು ತೋರಿಸದೇ ಹೋಗಬಹುದೆಂಬ ಆತಂಕ ನನಗೆ” ಎಂದು ಅನುಮಾನವನ್ನು ವ್ಯಕ್ತಪಡಿಸಿದರು ಪವಾಡ ಸ್ವಾಮಿಗಳು. +ಅದಕ್ಕೆ ಅರ್ಚಕ ಗೋವಿಂದ, “ಇಲ್ಲ ಮಹಾಸ್ವಾಮಿ, ಹಾಗೆ ಯಾವತ್ತೂ ಮಾಡಲು ಸಾಧ್ಯವೇ ಇಲ್ಲ. ನೀವು ಎಂಥ ಅಪರಾತ್ರಿಯಲ್ಲಿ ಕರೆದರೂ, ಗುರು ಸೇವೆಯೆಂದು ಓಡಿ ಬರುತ್ತೇನೆ. ನನ್ನ ಸ್ವಾರ್ಥಕ್ಕಾಗಿ ಎ೦ದೂ ನೀವು ಕಲಿಸಿದ ವಿದ್ಯೆಯನ್ನು ಬಳಸುವುದಿಲ್ಲ” ಎಂದು ಆಣೆಭಾಷೆ ಮಾಡಿದ. +ಇರಲಿ, ಇರಲಿ ಎ೦ದು ಕಣ್ಸನ್ನೆ ಮಾಡುತ್ತ ಪವಾಡ ಸ್ವಾಮಿಗಳು ಅರ್ಚಕರ ಕೈ ಹಿಡಿದುಕೊಂಡು ಮಠದ ಸೋಪಾನವನ್ನು ಇಳಿದು ಹೋದರು. ಹೋಗುವ ಮೊದಲು ಅಡುಗೆಯವನಿಗೆ “ರಾತ್ರಿಯೂಟಕ್ಕೆ ಹುಗ್ಗಿಯನ್ನು ಸಿದ್ಧಪಡಿಸಬೇಕು. ಆದರೆ ನಾನು ಹೇಳುವವರೆಗೂ ಒಲೆಗೆ ಬೆ೦ಕಿ ಹಾಕಿ ಅಡುಗೆ ಮಾಡುವುದು ಬೇಡ” ಎಂದು ಕೈ ಸನ್ನೆ ಮಾಡಿ ಅಣತಿ ನೀಡಿದರು. ಅನ೦ತರ ನಿಧಾನಕ್ಕೆ ನಡೆಯತೊಡಗಿದ೦ತೆ ಅರ್ಚಕ ಗೋವಿ೦ದ ಅವರನ್ನು ಹಿ೦ಬಾಲಿಸಿದ. +ಪಾವಟಿಗೆಗಳನ್ನು ಇಳಿದು ಹೋದ೦ತೆ ಎದುರಾದದ್ದು ಗುಹೆಯಂಥ ಕೋಣೆ. ಅಲ್ಲಿ ಪುಸ್ತಕಗಳ ರಾಶಿಯೇ ಇತ್ತು. ಗುಹೆಯ ತು೦ಬ ಪುಸ್ತಕಗಳ; ದಶಾ೦ಗದ ಮಿಶ್ರಣಗಳ ವಾಸನೆ. ಅಲ್ಲಿದ್ದ ಮ೦ದ ನ೦ದಾದೀಪ ಕಣ್ಣಿಗೆ ಕತ್ತಲೆಯನ್ನು ಹೊ೦ದಿಸಿ ಕೊಡುತ್ತಲೇ, ಇದು ಗುಹೆಯಲ್ಲ ಅತಿ ದೊಡ್ಡ ಕೋಣೆ ಎ೦ದು ಅರಿವಿಗೆ ಬ೦ತು. ಎಷ್ಟೋ ಹೊತ್ತು ಕಳೆದಂತೆ ಭಾಸವಾಯಿತು. ಪುಸ್ತಕಗಳ ಸಾಲುಗಳನ್ನು ಹಾಯುತ್ತ, ಹಾಯುತ್ತ ಹೋದ೦ತೆ ಮೂಲೆಯಲ್ಲಿ ಯಾರೋ ಇಬ್ಬರು ನಿಂತಂತೆ ಮಸುಕು ಮಸುಕಾಗಿ ಕಂಡಿತು. +ನೋಡಿದರೆ-ವೆ೦ಕ ಮತ್ತು ನಾಣಿ ಕ೦ಡರು. ಅರ್ಚಕ ಗೋವಿಂದನಿಗೆ ಅವರನ್ನು ಕ೦ಡದ್ದೇ ಆಶ್ಚರ್ಯ, ಸ೦ತೋಷ ಎರಡೂ ಒಟ್ಟಿಗೆ ಆದವು. ಅವರು ಅವನ ಚಿಕ್ಕಪ್ಪನ ಕುರಿತು ಸುದ್ದಿಯೊಂದನ್ನು ತಂದಿದ್ದರು. ಅರ್ಚಕ ಗೋವಿ೦ದನ ಚಿಕ್ಕಪ್ಪ ಶ್ರೀಮಠದ ಧರ್ಮಾಧಿಕಾರಿಗಳಾಗಿದ್ದವರು. ಸಾಕಷ್ಟು ನಾಮ-ಧನ ಬಲವನ್ನು ಹೊ೦ದಿದ್ದರು. ಧರ್ಮಾಧಿಕಾರಿಗಳು ತುಂಬ ಅಸ್ವಸ್ಥರಾಗಿದ್ದರು. ಕೊನೆಯ ಕ್ಷಣಗಳನ್ನು ಎಣೆಸುತ್ತಿದ್ದ ಅವರು ಅಂತಿಮ ದರ್ಶನ ಪಡೆಯಬೇಕೆಂದಿದ್ದರೆ ತಕ್ಷಣ ಹೊರಟು ಬಾ, ಎಂಬ ಸಂದೇಶವನ್ನು ಸೋದರನ ಪುತ್ರನಿಗೆ ಸುದ್ದಿ ಕಳುಹಿಸಿದ್ದರು. ಚಿಕ್ಕಪ್ಪನ ಅಸ್ವಾಸ್ಥ್ಯ ಸುದ್ದಿ ಗೋವಿಂದನ ಸ್ವಾಸ್ಥವನ್ನು ಕೆಡಿಸಿತು. ಮೊದಲನೆಯದ್ದು, ತನ್ನ ಚಿಕ್ಕಪ್ಪ ಮರಣಶಯ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕಾಗಿದ್ದರೆ, ಇನ್ನೊಂದು ತಾನು ಪವಾಡ ವಿದ್ಯೆ ಕಲಿಯುವ ಅವಕಾಶ ತಪ್ಪಿಹೋಗುತ್ತದೆ ಎಂಬುದಕ್ಕಾಗಿತ್ತು. ಕೊನೆಗೆ, ಬಹಳ ವಿಚಾರ ಮಾಡಿ, ಅಳೆದು-ತೂಗಿ, ತಾನೀಗ ಬರಲಾಗುವುದಿಲ್ಲ, ನನ್ನ ಅನಿವಾರ್ಯತೆಗೆ ಕ್ಷಮಿಸಿ- ಎಂದು ಪತ್ರವನ್ನು ಅರ್ಚಕ ಗೋವಿಂದ ಬರೆದು ಕಳುಹಿಸಿದ. +ಒಂದು ವಾರ ಕಳೆಯಿತು. ಶೋಕದ ಮುಖ ಹೊತ್ತು ಸಂದೇಶಕರು ಮತ್ತೆ ಬಂದರು. ಧರ್ಮಾಧಿಕಾರಿಗಳು ಇಹಲೋಕವನ್ನು ತ್ಯಜಿಸಿದರೆಂದೂ ನಿಮ್ಮನ್ನು ಧರ್ಮಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆಯೆಂದೂ ಸುದ್ದಿ ತಿಳಿಸಿ, ಕೃಪಾಶೀರ್ವಾದ ಬೇಡಲೆ೦ಬ೦ತೆ ಗೋವಿಂದನ ಪಾದಗಳಿಗೆ ನಮಸ್ಕರಿಸಿದರು. +ಇದನ್ನೆಲ್ಲ ಗಮನಿಸುತ್ತಿದ್ದ ಪವಾಡ ಸ್ವಾಮಿಗಳು, “ನಮ್ಮ ಮಠದಲ್ಲಿ ತಾವಿರುವಾಗಲೇ ಇಂಥ ಸುದ್ದಿ ಬಂದಿರುವುದು ಬಹಳ ಸಂತೋಷ” ಎ೦ದು ಖುಷಿಯನ್ನು ವ್ಯಕ್ಯಪಡಿಸಿದರು. ನೀವು ಒ೦ದು ಸ್ಥಾನ ಪಡೆದಿರುವುದರಿ೦ದ ನನಗೂ ಅದರಿ೦ದ ಉಪಕಾರವಾಗುವ೦ತೆ ನಡೆದುಕೊಳ್ಳಿ ಎ೦ಬ೦ತೆ-“ಈಗ ತೆರವಾಗಿರುವ ಅರ್ಚಕ ಸ್ಥಾನಕ್ಕೆ, ದಯವಿಟ್ಟು ನನ್ನ ಮಗನನ್ನು ಆಯ್ಕೆ ಮಾಡಿ” ಎಂದು ಅರ್ಚಕ ಗೋವಿಂದನನ್ನು ಬೇಡಿಕೊಂಡರು. +ಆಗಿನ್ನೂ ಧರ್ಮಾಧಿಕಾರಿಯಾಗಿ ಆಯ್ಕೆಯಾಗಿದ್ದ ಗೋವಿಂದ, ಕೊ೦ಚ ಯೋಚಿಸಿ, “ಆ ಸ್ಥಾನವನ್ನು ನನ್ನ ಸೋದರನಿಗೆ ಕೊಡಬೇಕೆಂದು ಇದೀಗ ನನಗೆ ಅ೦ತಃಪ್ರೇರಣೆಯಾಗಿದೆ. ಮತ್ತೊ೦ದು ಅವಕಾಶ ಸಿಕ್ಕಾಗ ನಿಮ್ಮ ಮಗನಿಗೆ ಸೂಕ್ತ ಸ್ಥಾನ ಕೊಡುವೆ. ಆದರೆ, ಅದಕ್ಕಾಗಿ ನೀವು ನನ್ನೊಂದಿಗೆ ಉಜ್ಜಯಿನಿ ನಗರಕ್ಕೆ ಬರಬೇಕಾಗುವುದು” ಎಂದು ನುಡಿದ. +ಅದಕ್ಕೆ ಒಪ್ಪಿದ ಪವಾಡ ಸ್ವಾಮಿಗಳು ತಮ್ಮ ಮಗನನ್ನು ಕರೆದುಕೊಂಡು ಗೋವಿಂದನೊಂದಿಗೆ ಉಜ್ಜಯಿನಿ ನಗರಕ್ಕೆ ಹೊರಟರು. ಹೊಸದಾಗಿ ಧರ್ಮಾಧಿಕಾರಿಯಾಗಿದ್ದ ಗೋವಿಂದನಿಗೆ ಭರ್ಜರಿ ಸನ್ಮಾನ ಮಾಡಲಾಯಿತು. +ಆರು ತಿಂಗಳು ಕಳೆಯಿತು. +ಒಂದು ದಿನ ವ್ಯಕ್ತಿಯೊಬ್ಬ ಧಾವಂತದಲ್ಲಿ ಬಂದ. “ನಿಮ್ಮನ್ನು ಈ ಪ್ರಾಂತ್ಯದ ಧರ್ಮಾಧ್ಯಕ್ಷರನ್ನಾಗಿ ನಿಯಮಿಸಿಲಾಗಿದೆ. ನಿಮ್ಮ ಈಗಿನ ಪದವಿಗೆ ಉತ್ತರಾಧಿಕಾರಿಯನ್ನು ಸೂಚಿಸಿ” ಎಂದು ಹೇಳಿದ. ವಿಷಯ ತಿಳಿದ ಪವಾಡ ಸ್ವಾಮಿಗಳು, “ಧರ್ಮಾಧಿಕಾರಿಗಳೇ, ನೀವು ಈ ಹಿಂದೆ ಮಾತು ಕೊಟ್ಟಂತೆ, ಈ ಪದವಿಯನ್ನು ನನ್ನ ಮಗನಿಗೆ ನೀಡಿ” ಎಂದು ಬೇಡಿಕೊಂಡರು. +ಆದರೆ, ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಗೋವಿಂದ ಪ್ರಭುಗಳು, “ಈ ಹುದ್ದೆಯನ್ನು ನನ್ನ ತಂದೆಯ ಕಿರಿಯ ತಮ್ಮ, ಅಂದರೆ, ಚಿಕ್ಕಪ್ಪನಿಗೆ ಕೊಡಲು ತೀರ್ಮಾನಿಸಲಾಗಿದೆ. ಆ ಮೂಲಕ ನಮ್ಮ ಇನ್ನೊಬ್ಬ ಚಿಕ್ಕಪ್ಪನವರ ಆತ್ಮಕ್ಕೆ ಶಾ೦ತಿ ಲಭಿಸಲಿ ಎ೦ಬುದು ನಮ್ಮ ಅ೦ಬೋಣ. ನಿಮ್ಮ ಮಗನಿಗೆ ಒಳ್ಳೆಯ ಹುದ್ದೆ ಬೇಕಿದ್ದರೆ, ನಮ್ಮೊಂದಿಗೆ ಕಾಶಿಗೆ ಆಗಮಿಸ ಬೇಕಾಗಬಹುದು” ಎಂದರು. +ಸರಿ ಎಂದು ಪವಾಡ ಸ್ವಾಮಿಗಳು ತಮ್ಮ ಮಗನನ್ನು ಕರೆದುಕೊಂಡು ಗೋವಿಂದ ಪ್ರಭುವಿನೊಂದಿಗೆ ಕಾಶಿಗೆ ಹೊರಟರು. +ಅಲ್ಲಿ, ಸಭೆ, ಪ್ರವಚನ, ವಿದ್ವತ್‌ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಜತೆಗೆ, ಹೊಸದಾಗಿ ಧರ್ಮಾಧ್ಯಕ್ಷರಾಗಿದ್ದ ಗೋವಿಂದ ಪ್ರಭುಗಳಿಗೆ ಸನ್ಮಾನವೂ ನಡೆಯಿತು. +* +* +* +ಎರಡು ವರ್ಷ ಕಳೆದವು. +ಒಮ್ಮೆ ಮಹಾಪ್ರಧಾನ ಗುರುಗಳ ಸಂದೇಶಕರು ಬಂದು, “ಗೋವಿಂದ ಪ್ರಭುಗಳೇ, ನಿಮ್ಮನ್ನು ಮಹಾಪ್ರಧಾನ ಗುರುಗಳ ಆಪ್ತ ದಿವಾನರನ್ನಾಗಿ ಆಯ್ಕೆ ಮಾಡಲಾಗಿದೆ. ನಿಮ್ಮ ಈಗಿನ ಹುದ್ದೆಗೆ ಉತ್ತರಾಧಿಕಾರಿಗಳನ್ನು ಸೂಚಿಸಲು ಕೋರಲಾಗಿದೆ” ಎಂದರು. +ಪವಾಡ ಸ್ವಾಮಿಗಳಿಗೆ ಈ ವಿಷಯ ತಿಳಿದು, ಗೋವಿಂದ ಪ್ರಭುವಿನ ಬಳಿ ಬಂದರು. ಹಳೆಯ ಆಣೆ-ಭಾಷೆಯನ್ನು ನೆನಪಿಸಿ, ಈಗ ನೀವು ತೆರವು ಮಾಡುವ ಹುದ್ದೆಗೆ ನನ್ನ ಮಗನನ್ನು ನಿಯಮಿಸಿ” ಎಂದು ಕೇಳಿಕೊಂಡರು. +ಆದರೆ, ಮಹಾಪ್ರಧಾನ ಗುರುಗಳ ಆಪ್ತ ದಿವಾನರಾಗಿ ಅಧಿಕಾರ ಸ್ವೀಕರಿಸಲಿದ್ದ ಗೋವಿಂದ ಪ್ರಭುಗಳು, “ಈ ಹುದ್ದೆಯನ್ನು ನನ್ನ ತಾಯಿಯ ಅಣ್ಣ, ಅಂದರೆ, ನಮ್ಮ ಸೋದರ ಮಾವನಿಗೆ ನೀಡಲು ನಿರ್ಧರಿಸಿದ್ದೇನೆ. ನಿಮ್ಮ ಮಗನಿಗೆ ಉಚಿತ ಸ್ಥಾನಮಾನ ಬೇಕಿದ್ದರೆ, ನಮ್ಮೊ೦ದಿಗೆ ಹರಿದ್ವಾರಕ್ಕೆ ಬನ್ನಿ” ಎಂದರು. ಪವಾಡ ಸ್ವಾಮಿಗಳು ಆರಂಭದಲ್ಲಿ ಪ್ರತಿಭಟಿಸಿದರೂ, ಸಲಹೆಯನ್ನು ಒಪ್ಪದೇ ಬೇರೆ ದಾರಿ ಕಾಣದೆ ಮಗನನ್ನು ಕರೆದುಕೊಂಡು ಹರಿದ್ವಾರಕ್ಕೆ ಹೊರಟರು. +ಅಲ್ಲಿ ಮತ್ತೆ ಪ್ರವಚನ, ಸನ್ಮಾನ, ಅ೦ಬಾರಿ ಮೆರವಣಿಗೆ, ಪಲ್ಲಕಿ ಉತ್ಸವಗಳು ನಡೆದವು. +* +* +* +ನಾಲ್ಕು ವರ್ಷ ಗತಿಸಿದವು. ವಯಸ್ಸಿನ ಭಾರದಿಂದ ಮಹಾಪ್ರಧಾನ ಗುರುಗಳು ತೀರಿಕೊಂಡರು. ಧಾರ್ಮಿಕ ವಿಧಿ-ನಿಯಮ ಹಾಗೂ ಸತ್‌ಸ೦ಪ್ರದಾಯವನ್ನು ಪಾಲಿಸಿಕೊ೦ಡು ಹೋಗುವ ನಿಟ್ಟಿನಲ್ಲಿ ಆಪ್ತ ದಿವಾನರಾಗಿದ್ದ ಗೋವಿಂದ ಪ್ರಭುಗಳನ್ನೇ ಮಹಾಪ್ರಧಾನ ಗುರುಗಳನ್ನಾಗಿ ಘೋಷಣೆ ಮಾಡಲಾಯಿತು. ಇದನ್ನು ತಿಳಿದ ಪವಾಡ ಸ್ವಾಮಿ, ಮಹಾಪ್ರಧಾನ ಗುರುಗಳ ಬಳಿ ಬಂದು, ಶಿರಸಾಸ್ಟಾಂಗ ನಮಸ್ಕಾರ ಮಾಡಿದರು. ಅವರ ಪಾದದ ಬಳಿ ಕುಳಿತು ತಮ್ಮ ಹಳೆಯ ಬೇಡಿಕೆಯನ್ನು ಮುಂದಿಟ್ಟು, ತೆರವಾದ ಸ್ಥಾನವನ್ನು ತಮ್ಮ ಮಗನಿಗೆ ದಯಪಾಲಿಸುವಂತೆ ಕೇಳಿಕೊಂಡರು. +ಅದಾಗ ಜಗದ್ಗುರುಗಳಾಗಿ ಅಧಿಕಾರ ಸ್ವೀಕರಿಸಿದ್ದ ಗೋವಿಂದ ಮಹಾಪ್ರಭುಗಳು ಭಯಕ೦ರ ಕುಪಿತರಾದರು. ರೋಷದಿಂದ ಪವಾಡ ಸ್ವಾಮಿಗಳಿಗೆ ನುಡಿದರು-“ನಾವೂ ನಿಮ್ಮ ಬೇಡಿಕೆಗಳನ್ನು ಕೇಳಿ, ಕೇಳಿ ಬೇಸತ್ತಿದ್ದೇವೆ. ನೀವು ಹೀಗೆಯೇ ನಮ್ಮನ್ನು ಸತಾಯಿಸುತ್ತಿದ್ದರೆ, ನಿಮಗೆ ತುರ೦ಗವಾಸದ ಸವಿಯನ್ನು ತೋರಿಸಬೇಕಾಗುತ್ತದೆ. ಮಠದ ಉಗ್ರಾಣದ ಪಾರುಪತ್ಯಗಾರರಾಗಲೂ ಯೋಗ್ಯತೆಯಿಲ್ಲದ; ಧರ್ಮ-ಕರ್ಮ ತಿಳಿಯದ ಮೂಢರಿಗೆ ಸೆರೆವಾಸವೇ ಸರಿಯಾದ ಮದ್ದು ಎ೦ದು ಕಾಣುತ್ತದೆ! ನೀವೀಗ ಗವೀಮಠದಲ್ಲಿ ಪವಾಡಗಳನ್ನು; ಮಾಂತ್ರಿಕ ಮಹಾವಿದ್ಯೆಯನ್ನು ಕಲಿಸುವ ಗುರುವಾಗಿ ಉಳಿದಿಲ್ಲವೆಂದು ನಮಗೆ ತಿಳಿದಿದೆ.” +ಬಡಪಾಯಿ ಪವಾಡ ಸ್ವಾಮಿಗಳಿಗೆ ಈಗ ಉಳಿದಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ಗವೀಮಠಕ್ಕೆ ತೆರಳುವುದು. ಬಲು ದೂರದ ಹಾದಿ. ಏನು ಮಾಡುವುದು? ಹೀಗಾಗಿ, ಅವರು ಗೋವಿಂದ ಮಹಾಪ್ರಭುಗಳಿಗೆ, “ಆಯಿತು, ಮಹಾ ಜಗದ್ಗುರುಗಳೇ. ನಾನು ಮರಳಿ ನಮ್ಮೂರಿಗೆ ತೆರಳುವೆ. ಪ್ರಯಾಣಕ್ಕೆ, ಹಸಿವು-ನೀರಡಿಕೆಗೆ, ಆಸರೆಯಾಗಿ ಒಂದಿಷ್ಟು ದಾರಿಬುತ್ತಿಯ ಗಂಟಿನ ವ್ಯವಸ್ಥೆ ಮಾಡಿಕೊಟ್ಟರೆ ಉಪಕಾರವಾಗುತ್ತದೆ.” +ಪವಾಡಸ್ವಾಮಿಯ ಈ ಬೇಡಿಕೆ ಆಸೆಬುರುಕುತನದ ಪರಮಾವಧಿ ಎ೦ದು ಅನ್ನಿಸಿ, ಇನ್ನಷ್ಟು ಕೆಂಡಾಮಂಡಲ ಕೋಪಕ್ಕೆ ಒಳಗಾದ ಗೋವಿಂದ ಮಹಾಪ್ರಭುಗಳು, “ಇಲ್ಲ ಸಾಧ್ಯವೇ ಇಲ್ಲ. ಹಾಗೇ ಹಿಡಿ ಊಟವೂ ಇಲ್ಲದೇ ಇಲ್ಲಿಂದ ತೊಲಗಿ. ನಿಮ್ಮಿಂದಾಗಿ ನಮಗೆ ತಲೆ ರೋಸಿದೆ. ಒಳ್ಳೆಯ ಹಾಡಾಯಿತು ನಿಮ್ಮದು. ರಿಪಿಯ೦ತೆ ಬೆನ್ನುಹತ್ತಿ ನಮ್ಮ ಜೀವನವನ್ನೇ ನರಕವಾಗಿಸಿದ್ದೀರಿ. ಮನುಷ್ಯರ ಆಸೆಬುರುಕತನಕ್ಕೂ ಒ೦ದು ಮಿತಿಯೆನ್ನುವುದು ಇರುತ್ತದೆ. ನೀವು ಹಪಾಪಿಯ೦ತಾಗಿದ್ದೀರಿ ಎಂದು ಕಿರುಚಿದರು! +ಆಗ ಪವಾಡಸ್ವಾಮಿಗಳು ತಮ್ಮ ಮುಖದ ಚಹರೆಯನ್ನು ತುಸು ತುಸುವೇ ವಿಚಿತ್ರವಾಗಿ ಬದಲಾಯಿಸಿ, ಅತಿ ಗಡುಸಾದ ಧ್ವನಿಯಲ್ಲಿ- “ಹಾಗಾದರೆ, ಈ ರಾತ್ರಿ, ಗವೀಮಠದ ಒಣ ಹುಗ್ಗಿಯೇ ನನಗೆ ಗತಿ ಎಂದ ಹಾಗಾಯಿತು” ಎಂದು ಒಸಡಿಯನ್ನು ಸೊಟ್ಟ ಮಾಡಿ ಕುಹಕದಿಂದ ನುಡಿದರು. ಅನಂತರ, ಅಡುಗೆಯವನನ್ನು ಕರೆದು “ಸರಿಯಪ್ಪ, ಇನ್ನೇನು ಮಾಡೋದು ಒಣ ಹುಗ್ಗಿಯನ್ನೇ ಬೇಯಿಸು. ರಾತ್ರಿಯೂಟ ತಯಾರು ಮಾಡುವ ಕೆಲಸ ನಿನಗೆ ತಪ್ಪಲಿಲ್ಲ” ಎ೦ದರು. +ತಕ್ಷಣವೇ ಗೋವಿಂದನಿಗೆ ತಾನಿನ್ನೂ ಗವೀಮಠದ ಸೋಪಾನದ ಕೆಳಗಿರುವ ಗುಹೆಯಲ್ಲಿರುವ; ಸ್ವಾಮಿಗಳ ಬಳಿಗೆ ಪವಾಡ ವಿದ್ಯೆ ಕಲಿಯಲು ಬಂದಿರುವ ಸಾಮಾನ್ಯ ಅರ್ಚಕ ಗೋವಿ೦ದ ಎಂದು ಹೊಳೆದು ಹೋಯಿತು! ನಾಚಿಕೆಯಲ್ಲಿ ಮುಖದ ಬಣ್ಣವೇ ಬದಲಾಗಿ ಮಾತುಗಳೇ ಹೊರಡಲಿಲ್ಲ. ಕೈಕಾಲು ಸೇದಿ ಹೋದ೦ತಾದವು. ಹಾಗಾದರೆ ಇಲ್ಲಿಯವರೆಗೂ ನಡೆದದ್ದೇನು? +ಪವಾಡ ಸ್ವಾಮಿಗಳು ತೀರ ಮೆತ್ತಗಿನ ಧ್ವನಿಯಲ್ಲಿ ಆತನಿಗೆ ನುಡಿದರು “ವಿದ್ಯೆ ಕಲಿಯುವ ಮೊದಲು ಬೇಕಾಗುವ ವಿನಯ, ವಿದ್ಯೆ ಕಲಿತಾದ ಮೇಲೆ ಯಾವುದೇ ಸ್ವಜನ ಪಕ್ಷಪಾತಕ್ಕೆ ಒಳಗಾಗದಂತೆ ಅದನ್ನು ಉಪಯೋಗಿಸುವ ಪರಿಪೂರ್ಣತೆ, ನಿನ್ನ ನಿಷ್ಠೆ, ಕಲಿಕೆಯ ಸಾಮರ್ಥ್ಯಗಳನ್ನು ಪರೀಕ್ಷಿಸಲು ಇಷ್ಟು ಸಾಕು. ಈ ಪರೀಕ್ಷೆಯಲ್ಲಿ ಗೆಲ್ಲುತ್ತಿಯೋ ಇಲ್ಲವೋ ಎಂದು ನೋಡಲು ಈ ಗುಹೆಯಲ್ಲಿ ನೀನು ಈ ವರೆಗೆ ಅನುಭವಿಸಿದ್ದನ್ನು ನಾನೇ ಸೃಷ್ಟಿಸಿದ್ದು. ಅಂದರೆ ನೀನು ಅನುಭವಿಸಿದ್ದೆಲ್ಲ ಕೇವಲ ಕನಸು ಅಥವ ಭ್ರಮೆಯಾಗಿತ್ತು. ಬೇಕಾದರೆ ಇದನ್ನು ಪವಾಡ ಎಂದು ತಿಳಿದುಕೋ. ಹಾಗೆ ನೋಡಿದರೆ ನನಗೆ ಯಾವ ಪವಾಡಗಳನ್ನೂ ಮಾಡಲು ಬರದು. ಜನ ಹುಚ್ಚರು. ಏನೋ ನೋಡುತ್ತಾರೆ. ಏನೋ ಭ್ರಮಿಸುತ್ತಾರೆ. ಆಮೇಲೆ ಅವರು ಪವಾಡ ಮಾಡಿದರು ಅ೦ದುಕೊಳ್ಳುತ್ತಾರೆ. +ತಮಗೆ ಏನು ಬೇಕೋ ಅದನ್ನು ಕ೦ಡುಕೊಳ್ಳೋಕೆ ಅವರಿಗೆ ಯಾರಾದರೂ ಬೇಕು. ಇಲ್ಲದಿದ್ದರೆ, ಮನಸಿಗೆ ನೆಮ್ಮದಿ-ಜೀವನಕ್ಕೆ ಸಮಾಧಾನ ಅ೦ತ ಒ೦ದು ಬೇಕಲ್ಲ, ಅದು ಸಿಗುವುದಿಲ್ಲ. ಮನುಷ್ಯ ತನ್ನ ಸುತ್ತಮುತ್ತ ನೋಡಿ, ತನಗೆ ತಾನೇ ಕಲಿಯೋದೇ ಶ್ರೇಷ್ಠ ಅನ್ನುವವನು ನಾನು. ಮೇಲಾಗಿ, ಸನ್ಯಾಸಿಯಾದ ನನಗೆಲ್ಲಿಯ ಮಗ? ಇಲ್ಲದೆ ಇರುವ ಮಗನಿಗೇಕೆ ಅಧಿಕಾರ, ಸ್ಥಾನಮಾನ? ಅದನ್ನ ತಿಳಿದುಕೊಳ್ಳೋಕೂ ನೀನು ಪ್ರಯತ್ನಿಸಲಿಲ್ಲ. ನಿನ್ನಂಥ ಸ್ವಾರ್ಥಿಗೆ ನಮ್ಮ ಮಠದಲ್ಲಿ ಊಟ ನೀಡುವುದು ಕೂಡ ನಿಷಿದ್ಧ. ಹೋಗಿ ಬಾ. ಬೆಳಿಗ್ಗೆ ತಿ೦ದ ಅಳ್ಳಿಟ್ಟು-ಮಜ್ಜಿಗೆಯೇ ಸಾಕು ನಿನಗೆ, ಎಂದು ಹೇಳಿ, ಬಾಗಿಲವರೆಗೂ ಹೋಗಿ, ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿ, ಗೋವಿಂದನನ್ನು ಬೀಳ್ಕೊಟ್ಟರು. ಒಳಗೆ ಬರುತ್ತಲೇ ಇಬ್ಬರ ಹುಗ್ಗಿಯನ್ನೂ ನಾನೇ ತಿನ್ನಬೇಕಾಗುತ್ತದೆ. ಹ್ಞು೦ ಇರಲಿ, ಇದು ಕೂಡ ಪ್ರಕೃತಿಯ ಇಚ್ಛೆಯೇ ಇರಬೇಕು, ಮೂಢಮತಿಗಳಿಗೆ ಹೊಟ್ಟೆಯದೇ ಚಿ೦ತೆ, ಎ೦ದು ನಸು ನಕ್ಕು ,ಅಧ್ಯಯನಕ್ಕೆ ಕೂರಲು ಸೋಪಾನದ ಮೆಟ್ಟಿಲುಗಳನ್ನು ಹತ್ತತೊಡಗಿದರು. +***** +ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು, ಹಾಗೇ ಏಕನಾಥ ಶಟ್ಟಿಯ ಅಂಗಡಿಯಲ್ಲಿ ಪಾವುಸೇರು ಮೊಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ […] +ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […] +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_294.txt b/Kannada Sahitya/article_294.txt new file mode 100644 index 0000000000000000000000000000000000000000..27a31547da63ae5ba3f6816f8209d65df6ca33b7 --- /dev/null +++ b/Kannada Sahitya/article_294.txt @@ -0,0 +1,122 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? ಯಾವಾಗ?” ಕೇಳುತ್ತಾನೆ. ಇತ್ತೀಚೆಗೆ ನನ್ನಲ್ಲಿ ಸಂಜೆಗೆಂದು ಕಲೆಹಾಕಿದ ಸಬೂಬುಗಳು ಮುಗಿದು “ಹಾಂ ಬರ್ತೀನಿ…..” ಎಂದೇನೋ ಅರೆಬರೆ ನನಗೇ ಕೇಳಿಸಿದಂತೆ ತಡವರಿಸಿ “ಬೈ….” ಎನ್ನುತ್ತೇನೆ. +ಬೆಳಿಗ್ಗೆ ಆದದ್ದೂ ಇಷ್ಟೆ…. +ರವಿ ತನ್ನ ಬಸ್ ‘ಮಿಸ್’ ಮಾಡಿಕೊಂಡಿದ್ದ. ನಮ್ಮ ಬಸ್ಸಿಗೆ ಓಡೋಡಿ ಬಂದು ಹತ್ತಿದ. ಮೊದಲೇ ಒಡ್ಡು ಡ್ರೈವರ್. +“ಬಸ್ ಪಾಸ್ ಇದೆಯೇನ್ರಿ ?” ಒರಟಾಗಿ ಕೇಳಿದ. +“ಇದೆ, ಪಾಸ್ ಇದೆ….” ಜೇಬಿನಲ್ಲಿ ತಡಕಾಡಿ, ಇವ ಪಾಸ್ ತೆಗೆದು ತೋರಿಸಿದ. +“ಕಾರ್ಮಿಕರ ಬಸ್ಸಿಗೆ ಪಾಸು, ಇದು ಆಫೀಸರ್‍ಸ್ ಬಸ್, ಇಳೀರಿ ಕೆಳಗೆ….” ಮುಲಾಜೇ ಇಲ್ಲದೆ ಕೆಳಗಿಳಿಸಿ ‘ಬುರ್’ ಎಂದು ಬಸ್ಸು ಬಿಟ್ಟುಕೊಂಡು ಹೊರಟೇ ಬಿಟ್ಟ. +ಇದೇನೂ ದೊಡ್ಡ ವಿಷಯವಲ್ಲ. ಎಲ್ಲರಿಗೂ ಡ್ರೈವರ್‍ನಿಂದ ಇಂಥ ಪೂಜೆ ಆಗಿಂದಾಗ ಆಗುತ್ತಿರುತ್ತದೆ. ಆದರೇಕೋ ಈ ಘಟನೆ ಮುಳ್ಳಿನಂತೆ ಎದೆಯಲ್ಲಿ ಹುಗಿದುಕೊಂಡು ನೋಯತೊಡಗಿತು. ಎಷ್ಟೋ ದಿನದಿಂದ ರವಿಯ ಬಗೆಗಿದ್ದ ನನ್ನ ಏರುಪೇರಿನ ಭಾವನೆಗಳನ್ನು ಘನೀಕರಿಸತೊಡಗಿತು. +ರವಿಯೇನೋ ಮಾಮೂಲಿನಂತೆ ಇಳಿದುಹೋಗಿದ್ದ. ಸಂಜೆ ಸಿಕ್ಕಾಗಲೂ ಅಪಮಾನ ಆದವನಂತೇನೂ ಅಳುಕಿರಲಿಲ್ಲ. +“ಬಿ. ಟಿ. ಎಸ್, ಹಿಡಕೊಂಡು ಬಂದೆ. ಶಿವಾಜಿನಗರ ತಲುಪಿ ಇನ್ನೊಂದು ಬಸ್ ಬದಲಾಯಿಸಿ, ಕಾರ್ಖಾನೆಗೆ ಬಂದು ‘ಪಂಚ್’ ಮಾಡೊವಷ್ಟರಲ್ಲಿ ಒಂದು ಗಂಟೆ ತಡವಾಗಿತ್ತು….” ಎಂದೇನೋ ಆರಾಮವಾಗಿ ಸ್ವಲ್ಪವೂ ಸಂಕೋಚವಿಲ್ಲದೆ ಹೇಳಿದ್ದ. +“ಮೊದಲೇ ಬಿ. ಟಿ. ಎಸ್, ಹಿಡಿಯೋಕೆ ಏನಾಗಿತ್ತು? ಸುಮ್ಮನೆ ಆ ಡ್ರೈವರ್ ಹತ್ತಿರ ಅನ್ನಿಸಿಕೊಳ್ಳೋದೇಕೆ?” ನನ್ನೊಳಗಿನ ಅಸಮಾಧಾನ ಹೊರಬಿತ್ತು. ಅದು ರವಿಯನ್ನು ತಟ್ಟಿದಂತೇನೂ ಕಾಣಲಿಲ್ಲ. +“ಅಯ್ಯೋ ಎಲ್ಲ ಡ್ರೈವರ್ರೂ ಹಾಗಿರೋಲ್ಲ, ಅವನೊಳ್ಳೆ ತಿಕ್ಕಲು. ಎರಡು ರೂಪಾಯಿ ಜೇಬಿಗೆ ಹಾಕಿದ್ರೆ ಹತ್ತಿಸಿಕೊಳ್ತಾ ಇದ್ದ. ಎಷ್ಟು ಬಾರಿ ಆಫೀಸರ್‍ಸ್ ಬಸ್‌ನಲ್ಲೇ ಬಂದಿದ್ದೀನಿ….” ಕೊಚ್ಚಿಕೊಂಡ. +ಅದೆಲ್ಲ ಅವನಿಗೆ ಅವಮಾನ, ಅಪಮಾನ ಅನಿಸಿಯೇ ಇರಲಿಲ್ಲ. ಮತ್ಯಾರೂ ಅದನ್ನು ಗಮನಿಸಿರಲಿಕ್ಕೂ ಇಲ್ಲ. ಆದರದೇಕೋ ಇದೊಂದು ಘಟನೆ ನನ್ನ ತಲೆ ಹೊಕ್ಕಿತು_ಕೊರೆವ ಕೀಟವಾಗಿ. +ರವಿ, ನನ್ನ ದೂರದ ಸಂಬಂಧಿ. ನಾಳೆ ನನ್ನ ಗಂಡನಾಗುವವನು. ಅವನು ನನ್ನ ಕಾರ್ಖಾನೆಯ ಸಮಾನ್ಯ ಕಾರ್ಮಿಕ. +ಹದಿನಾರಕ್ಕೆ ಎಲ್ಲವನ್ನೂ ಬಲ್ಲ ಬ್ರಹ್ಮನಾಗಿದ್ದ ರವಿ, ನನ್ನಿಂದ ಮೇಲೆ ಅಷ್ಟೆತ್ತರವಾಗಿ ಕಂಡ ರವಿ, ನನ್ನೆಲ್ಲ ಕನಸುಗಳಿಗೆ ಕೇಂದ್ರವಾಗಿದ್ದು ಅಂತರಿಕ್ಷದಿಂದ ಕಳಚಿ ಬಿದ್ದ ಅಯಸ್ಕಾಂತದ ತುಂಡಾಗಿದ್ದ ರವಿ_ಈಗ ನನ್ನ ಇಪ್ಪತ್ತನಾಲ್ಕರ ಪ್ರಾರಂಭದಲ್ಲಿ ಏಕಿಷ್ಟು ಸಾಧಾರಣವಾಗಿ ಕಾಣುತ್ತಾನೆ! +ನನಗೆ ಗೊತ್ತು. ಬದಲಾದದ್ದು ಅವನಲ್ಲ-ನಾನು ಮತ್ತು ನನ್ನ ಪರಿಸರ. ಈ ಬದಲಿಗೊಂಡ ವಾತಾವರಣದ ನಡುವೆ ಅವನೊಬ್ಬ ಸ್ಥಿತಪ್ರಜ್ಞ ಸ್ಥಿರಬಿಂದು. ಹಿಗ್ಗದ-ಕುಗ್ಗದ ಸ್ಥಗಿತ ಬಿಂದು! +ನನ್ನ ಹದಿನಾರನೇ ವಯಸ್ಸಿನಲ್ಲಿ ಅಪ್ಪ ವರ್ಗವಾಗಿ ಬೆಂಗಳೂರಿಗೆ ಬಂದಾಗ ಪ್ರತಿ ಭಾನುವಾರ ನಾನು ಓಡುತ್ತಿದ್ದುದು ರವಿ ಮನೆಗೆ. ಅವನ ಬಳಿಯಲ್ಲಿ ಒಂದು ಪಿ. ಸಿ. (ಪರ್ಸನಲ್ ಕಂಪ್ಯೂಟರ್) ಇತ್ತು. ಎಂಟು ವರ್ಷಗಳ ಹಿಂದೆ ಇಂದಿನಷ್ಟು ಪಿ. ಸಿ. ಬೀದಿಗೊಂದು, ಗಲ್ಲಿಗೊಂದು ಸಿಗುವ ಸಾಮಾನ್ಯ ವಸ್ತುವಾಗಿರಲಿಲ್ಲ. ರವಿಯ ಸ್ನೇಹಿತನಾರೋ ಸಿಂಗಪುರದಿಂದ ತಂದುಕೊಟ್ಟಿದ್ದ. ಅವನ ಬೆರಳುಗಳು ಪಿ. ಸಿ. ಯ ‘ಕೀಬೋರ್ಡ್’ ಮೇಲೆ ಪಟ ಪಟ ಓಡಾಡುತ್ತಿದ್ದಂತೆ, ಪಟಲದ ತುಂಬಾ ಏನೇನೋ ಚಿತ್ರಗಳು ಜಾದೂ ಮಾಡಿದಂತೆ ಮೂಡುತ್ತಿದ್ದವು. ನನ್ನ ಜನ್ಮದಿನಕ್ಕೆ, ಹಬ್ಬ ಹರಿದಿನಕ್ಕೆ ಮುದ್ದಾದ ಗ್ರೀಟಿಂಗ್ ಕಾರ್ಡ್‌ಗಳಿಗೆ ಕಂಪ್ಯೂಟರ್‍ನಿಂದ ಹೊರಬಿದ್ದ ವಿವಿಧ ಶೈಲಿಯ ಅಕ್ಷರಗಳಲ್ಲಿ ನನ್ನ ಹೆಸರನ್ನು ಜೋಡಿಸಿ ಕೊಡುತ್ತಿದ್ದ. ನಾನೋ ಪೇಪರಿನಲ್ಲಿ ಪ್ರಿಂಟಾದ ತಲೆಬರಹಗಳಂತೆ ಅವನ್ನೆಲ್ಲ ಜೋಪಾನವಾಗಿ ಕಾದಿರಿಸುತ್ತಿದ್ದೆ, ಸ್ನೇಹಿತರ ಗುಂಪಿನಲ್ಲಿ ಹೆಮ್ಮೆಯಿಂದ ತೋರಿಸುತ್ತಿದ್ದೆ. ನನ್ನ ಹದಿನಾರರ ಬೆರಗು ಕಣ್ಣುಗಳಿಗೆ ರವಿ ಕಂಪ್ಯೂಟರ್ ಬ್ರಹ್ಮನಾಗಿದ್ದ. ಅವ ಎಷ್ಟು ಬುದ್ಧಿವಂತನಾಗಿ ಕಂಡ! ಅವನ ಬೆರಳುಗಳ ಚಮತ್ಕಾರಕ್ಕೆ, ನುಣುಪು ಸ್ಪರ್ಶಕ್ಕೆ ಪಿ. ಸಿ. ಹೇಗೆ ಮಣಿದು ಮಿಡಿಯುತ್ತಿತ್ತು! +ಈ ರವಿ_ +ಹದಿನೆಂಟಕ್ಕೆ ‘ಜಮೀನು ನೋಡಿಕೊ’ ಎಂದು ಪೀಡಿಸಿದ ಅಪ್ಪನ ಮನೆ ಬಿಟ್ಟು ಬೆಂಗಳೂರಿಗೆ ಓಡಿ ಬಂದ ಸಾಹಸಿ! ಒಂದು ಡಿಪ್ಲೊಮಾ ಮಾಡಿ ಮೂರೇ ವರ್ಷದಲ್ಲಿ ಕಾರ್ಖಾನೆಯೊಂದರಲ್ಲಿ ೬೦೦ ರೂ. ಗಳ ಸಂಬಳದ ಕೆಲಸ ಹಿಡಿದಾಗ, ನಮ್ಮ ನೆಂಟರಲ್ಲೆಲ್ಲಾ ಅವನದೇ ಮಾತು. ಅದರ ಮೇಲೆ ‘ಓವರ್ ಟೈಮ್,’ ‘ರಾತ್ರಿ ಪಾಳೆ’ ಎಂದು ಮತ್ತು ನೂರು ಹೆಚ್ಚೇ ಸಂಪಾದಿಸುತ್ತಿದ್ದ. +ರವಿ_ಅವನ ಸಾಹಸಗಾಥೆ, ಕೈತುಂಬಾ ಸಂಬಳ, ಬುದ್ಧಿವಂತ-ಪ್ರಬುದ್ಧ, ಕಂಪ್ಯೂಟರ್ ಜಾಣ. ನನ್ನೆಲ್ಲ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿತ್ತು. ಏನೆಲ್ಲ ಆಗಿದ್ದ ರವಿ ಆಗ! ರವಿ ನನ್ನ ಕಿಶೋರ ಕಾಲದ ‘ಹೀರೋ’ ಆಗಿದ್ದ. ಬಿಳಿ ಕುದುರೆಯ ಮೇಲೆ ಕತ್ತಿ ಹಿಡಿದ ಸರದಾರ! +ಆ ಬೆರಗು, ಕುತೂಹಲ, ರವಿಯ ಬಗ್ಗೆಯ ಹೆಮ್ಮೆ, ಕೌತುಕ, ಉಳಿದದ್ದು ನಿಖರವಾಗಿ ಎರಡು ವರ್ಷಗಳು. +ಅಮ್ಮ ‘ಎಂಥದ್ದೋ ಒಂದು ಬಿ. ಎ., ಬಿ. ಎಸ್ಸಿ., ಅಂತ ಡಿಗ್ರಿ ಮುಗಿಸಿ ಮದುವೆ ಆಗು’ ಅಂತ ಗೊಣಗಿದರೂ, ರವಿ ಪರಿಚಯಿಸಿದ ಕಂಪ್ಯೂಟರ್ ಜಗತ್ತು ಕೈ ಬೀಸಿತ್ತು. ಇಂಜಿನಿಯರಿಂಗ್ ಸೇರಿದ್ದೆ. ಎರಡನೇ ವರ್ಷಕ್ಕೆ ಬರುತ್ತಿದ್ದಂತೆ_ಕಂಪ್ಯೂಟರಿನ ಒಳ ಹೊರಗುಗಳು ತೆರೆದುಕೊಳ್ಳುತ್ತಿದ್ದಂತೆ_ರವಿ ಓರ್ವ ಟೈಪಿಸ್ಟ್‌ಗಿಂತ ಹೆಚ್ಚೇನೂ ಕೆಲಸ ಮಾಡಿರಲಿಲ್ಲ ಎಂದು ಅರಿವಾಗಿತ್ತು. ಸಿದ್ಧ ಕಂಪ್ಯೂಟರ್ ‘ಕಾರ್ಯ ಸರಣಿ’ಗಳ ಉಪಯೋಗಿಸುವುದಷ್ಟೇ ಅವನಿಗೆ ಗೊತ್ತಿತ್ತು. ಈಗ ನನ್ನ ಯಾವುದೇ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿರಲಿಲ್ಲ. ನಾನು ಇಂಜಿನಿಯರಿಂಗ್‌ನ ಒಂದೊಂದೇ ವರ್ಷ ಫಸ್ಟ್ ಕ್ಲಾಸ್, ರ್‍ಯಾಂಕ್ ಎಂದು ಪಾಸಾದಂತೆ, ರವಿ ನನ್ನ ಬದುಕಿನ ಒಂದೊಂದೇ ಮೆಟ್ಟಿಲಲ್ಲಿ ನಪಾಸಾಗುತ್ತ ಇಳಿದ. ನಾನು ಬೆಳೆದಷ್ಟೂ ಅವ ಕುಬ್ಜನಾದ. +ನಾನು ಬಿ. ಇ. ಎರಡನೇ ವರ್ಷದಲ್ಲಿದ್ದಾಗಲೇ ನನಗೆ ಸ್ವಲ್ಪ ಸ್ವಲ್ಪವಾಗಿ ನಮ್ಮ ನಡುವೆ ಆಕಳಿಸುತ್ತಿರುವ ಬಿರುಕುಕಣ್ಣಿಗೆ ಬಿದ್ದಿತ್ತು. ನಾನು ತೀವ್ರವಾಗಿ ಬಯಸತೊಡಗಿದೆ. ರವಿ ಏನಾದರೂ ಆಗಬೇಕೆಂದು….. ಏನಾದರೂ! +“ನೀನೇಕೆ ಸಂಜೆ ಕಾಲೇಜಿನಲ್ಲಿ ಬಿ. ಇ. ಗೆ ಸೇರಬಾರದು? ನಿನ್ನ ಗೆಳೆಯ ರಾಜು ಆಗಲೇ ಸೇರಿ ಎರಡು ವರ್ಷ ಮುಗಿಸಿದ್ದಾನೆ” ನಾನು ಕೇಳಿದ್ದೆ. +“ಅಯ್ಯೋ ಅದೆಲ್ಲ ಮಾಡಿ ಏನಾಗಬೇಕಿದೆ? ಆರಾಮಾದ ಕೆಲಸವಿದೆ” ಅಂದಿದ್ದ. ‘ಅಲ್ಪತೃಪ್ತ’…. ಎಂದು ನನ್ನಲ್ಲೇ ಬೈದುಕೊಂಡೆ. +“ಹೋಗಲಿ ಡಿಪಾರ್ಟ್‌ಮೆಂಟ್ ಪರೀಕ್ಷೆಗಳಿಗಾದರೂ ಸರಿಯಾಗಿ ತಯಾರಾಗಬಾರದ? ಈ ಬಾರಿಯೂ ಫೇಲ್ ಆಗಿ ಕುಳಿತೆಯಲ್ಲ….?” ನಾನು ಅಸಮಾಧಾನ ವ್ಯಕ್ತಪಡಿಸಿದಾಗ ಅವನಲ್ಲಿ ಸಿದ್ಧ ಉತ್ತರಗಳಿರುತ್ತಿತ್ತು- +“ತಯಾರಾಗೋದೇನಿದೆ ಶಶಿ? ಹೇಗಿದ್ರೂ ಅವರಿಗೆ ಬೇಕಾದವರಿಗೆ ಮಾತ್ರ ಬಡ್ತಿ ಕೊಡೋದು. ಆ ಬೆಣ್ಣೆ ಕೃಷ್ಣ ನೋಡು. ಬಂದು ಐದು ವರ್ಷ ಆಗಿಲ್ಲ. ಎರಡು ಬಡ್ತಿ ಗಿಟ್ಟಿಸಿದ್ದಾನೆ. ಬಾಸ್‌ಗೆ ಎಷ್ಟು ಬೆಣ್ಣೆ ಒತ್ತುತ್ತಾನೆ ಗೊತ್ತಾ….?” ಎಂದೇನೋ ಅವರಿವರ ಏಳಿಗೆಯಲ್ಲೆಲ್ಲ ಡೊಂಕು ಹುಡುಕುತ್ತಿದ್ದ. ನಾನು ಬೇಜಾರು ಮಾಡಿಕೊಂಡು ಕುಗ್ಗಿದಾಗ_ “ಹೇಗೂ ‘ಟೈಮ್ ಸ್ಕೇಲ್’ ಬಡ್ತಿ ಬರುತ್ತಲ್ಲ ಬಿಡು ಶಶಿ….” ಎಂದು ಸಮಾಧಾನ ಪಡಿಸಲು ನೋಡಿದ. +“ಹುಂ, ಅದು ಬಂದಾಗ ನೀನು ಮುದುಕನಾಗಿರ್ತೀಯ” ರೇಗಿದ್ದೆ. ಅವ ಸುಮ್ಮನೆ ಹಾಯಾಗಿ ನಕ್ಕುಬಿಟ್ಟ. +ಏನನ್ನೂ ಹಚ್ಚಿಕೊಳ್ಳದ ಆ ತಿಳಿನಗುವನ್ನು ನಾನು ಹೇಗೆ ಪ್ರೀತಿಸಲಿ? ಪ್ರೀತಿಸದಿರಲಿ? ಛೆ, ಅವನಲ್ಲಿ ಮಹತ್ವಾಕಾಂಕ್ಷೆಗಳೇ ಇಲ್ಲವೆ? ಇದ್ದದ್ದರಲ್ಲಿ ತೃಪ್ತನಾಗಿ, ಇಲ್ಲದ್ದರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ, ನಿನ್ನೆಯಂತೆ ಇವತ್ತನ್ನು , ಇವತ್ತಿನಂತೆ ನಾಳೆಯನ್ನು ಕಳೆದು ಬಿಡುವ ರವಿಯೊಡನೆ ನನ್ನ ಬದುಕಿನ ಹಾದಿ ಹೋಗಿ ಕೂಡಿದೆಯೆ? ನನ್ನ ಪ್ರಶ್ನೆಗಳಿಗೆ ನನ್ನಲ್ಲೂ ಉತ್ತರವಿಲ್ಲ +ಮತ್ತೆ ಎಂಟು ವರ್ಷಗಳಲ್ಲಿ ನಾನು ಬಹಳ ಬದಲಾದೆ. ನನ್ನ ಪರಿಸರವೂ ವಿಸ್ತರಿಸಿತ್ತು. ಕಾಲೇಜು, ಪ್ರಾಜೆಕ್ಟ್, ಪೇಪರ್‍ಸ್, ಕಾನ್‌ಫರೆನ್ಸ್, ಎಂದೇನೇನೋ ಹರಡಿಕೊಂಡಿತ್ತು. ನನ್ನ ಹದಿನಾರರ ಹರೆಯದಲ್ಲಿ ಪ್ರಬುದ್ಧನಾಗಿ, ಪ್ರತಿಭಾವಂತನಾಗಿ ಕಂಡು, ಅಗಾಧವಾಗಿ ಆಕರ್ಷಿಸಿದ್ದ ರವಿ ಈಗ ಬೋರು ಹೊಡೆಸುತ್ತಿದ್ದ. +ನಾನು ಬೆಳೆದೆ_ಕಿಶೋರ ಕಾಲದಾಚೆಗೆ ಕೈ ಕಾಲು ಕೊಂಬೆಗಳ ಚಾಚಿ, ನಾನು ಬೆಳೆದಂತೆಲ್ಲ ಈತ ಗಿಡ್ಡವಾದ, ಲಿಲ್ಲಿಪುಟ್ಟನಾದ. ಕಡೆಗೊಮ್ಮೆ ಕಣ್ಣಿಗೆ ಕಾಣದಷ್ಟು ಸಣ್ಣ ಬಿಂದುವಾದ. +ಹೀಗಿದ್ದೂ ರವಿಯ ಮೇಲಿನ ನನ್ನ ಪ್ರಯತ್ನಗಳಾಗಲೀ, ಪ್ರಯೋಜನಗಳಾಗಲಿ ನಿಂತಿರಲಿಲ್ಲ. ರವಿ ೧೮ಕ್ಕೆ ಮನೆಯಿಂದ ಓಡಿಬಂದದ್ದು, ಬೆಂಗಳೂರು ಸೇರಿದ್ದು, ಕೆಲಸ ಹಿಡಿದದ್ದು, ಈ ಸಾಹಸಗಾಥೆ ಈಗ ಹಳತಾಗಿತ್ತು. ಎಷ್ಟು ದಿನ ಗತವೈಭವದಲ್ಲಿ ವರ್ತಮಾನ ಮರೆತಿರಲು ಸಾಧ್ಯ? ಬದುಕಿಗೆ ಹೊಸತು ಬೇಕು. ಹೊಚ್ಚ ಹೊಸ ಸಾಹಸಗಳು, ಸಾಧನೆಗಳು. +“ರವಿ, ಆ ಸುಂದರ್ ಏನೋ ‘ಸಾಫ್ಟ್‌ವೇರ್ ಫರ್ಮ್’ ತೆಗೀತಾ ಇದ್ದಾನಂತೆ, ನೀನೂ ಅವನ ಜೊತೆ ಸೇರಿಕೊಂಡು ಏನಾದರೂ ಪ್ರಾರಂಭಿಸಬಾರದೆ? ನಾಲ್ಕು ಸಾಲಿನ ಒಂದು ‘ಡಿಬೇಸೋ’, ‘ಬೇಸಿಕ್ಕೋ; ಪ್ರೋಗ್ರಾಮಿಂಗ್ ಕಲಿತರೆ ಆಯಿತು. ಬರೀ ‘ಪೇ ರೋಲ್ಸ್’, ‘ಇನ್‌ವೆಂಟ್ರಿ’ ಮಾಡಿಕೊಟ್ಟರೂ ಸಾವಿರಗಟ್ಟಲೆ ಹಣ ಬರುತ್ತೆ” ನಾನು ಅವನಲ್ಲೊಂದಿಷ್ಟು ಉತ್ಸಾಹ ತುಂಬಲು ಕೊರೆದೆ. +“ಅರೆ ಶಶಿ, ಆಫೀಸಿನಿಂದ ಬರೋದೇ ಆರು ಗಂಟೆ ಆಗಿರುತ್ತೆ. ಅದು ಬೇರೆ ಶುರು ಮಾಡಿ ಹೆಣಗೋದು ಯಾರು? ಅದು ಅಲ್ಲದೆ ಅಷ್ಟು ಹಣ ತಗೊಂಡು ಏನು ಮಾಡಬೇಕು? ನಮಗೆ ಬರೋ ಸಂಬಳದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲವೆ?” +ನನ್ನೊಳಗೆ ಪುಟಿದಿದ್ದ ಆಸೆಯ ಚಿಲುಮೆ ಅವನ ತಣ್ಣನೆಯ ಮಾತುಗಳಲ್ಲಿ ಹಿಮಗಟ್ಟಿತು. “ಅವನದೆಲ್ಲ ಅಪ್ಪಟ ಅಭಾವ ವೈರಾಗ್ಯ”, ನನ್ನಲ್ಲೇ ಗೊಣಗೊಕೊಂಡೆ. ಹಣ ಯಾರಿಗೆ ಬೇಕು ಅಂತಾನೆ. ಅದೂ ಸರಿದಾರಿಯಲ್ಲಿ ದುಡಿವ ಹಣ ಒಲ್ಲೆ ಅನ್ನುವವರುಂಟೆ? “ಒಂದು ಬೈಕ್ ಕೊಳ್ಳಬೇಕು” ಅಂತ ಇವನೇ ಸಾವಿರದೊಂದು ಬಾರಿ ಹೇಳಿದ್ದಾನೆ. “ಮನೆಗೆ ಡಿಸ್‌ಟೆಂಪರ್ ಹಾಕಿಸಬೇಕು, ಮುಂದುಗಡೆ ಬೇಲಿ ತೆಗಿಸಿ ಕಾಂಪೌಂಡು ನಿಲ್ಲಿಸಬೇಕು….” ಎಂಬೆಲ್ಲ ಚಿಂತೆಗಳಿವೆ. ಇವನ ಬದುಕಿನ ಖಾಲಿತನಕ್ಕಿಂತ, ಸೋಲಿಗಿಂತ ನನ್ನಲ್ಲಿ ಅಸಹ್ಯ ಹುಟ್ಟಿಸುವುದು ಇವನ ಅಪ್ರಾಮಾಣಿಕತೆ, ಪ್ರಯತ್ನಹೀನತೆ. ಇಲ್ಲದ್ದನ್ನು ಬೇಕಿಲ್ಲ ಎನ್ನುವ ಸೋಗು, ತಾವೇರಲಾರದ ಎತ್ತರಗಳನ್ನು ಹಗುರವಾಗಿ ತೇಲಿಸಿಬಿಡುವ ವಕ್ರ ಕಲೆ. ನಿಂತ ಕಡೆ ನಿಂತಲ್ಲೇ ಬಿಡಾರ ಹೂಡಿ, ಒಂದು ಹೆಜ್ಜೆಯೂ ಮುಂದಿಡದ ಜಡತ್ವ_ನನ್ನಲ್ಲೇ ಮನಸ್ವೀ ಬೈದುಕೊಂಡೆ. ನನ್ನೆಲ್ಲ ನಿರಾಶೆ, ಆಕ್ರೋಶ ಹೊರಬಂದಂತೆ ತಡೆದದ್ದು ಅವನ ಪ್ರೀತಿಯೋ, ಇಲ್ಲ ನಮ್ಮ ನಡುವೆ ನಿಂತ ಎಂಟು ವರ್ಷಗಳ ಸಂಬಂಧದ ನಿರ್ಬಂಧನೆಯೋ ತಿಳಿಯದು. +ಈ ಎಂಟು ವರ್ಷಗಳಲ್ಲಿ ಏನೆಲ್ಲ ಬದಲಾಗಿತ್ತು! ನಾನು ಬಿ. ಇ. ಮುಗಿಸಿ ರವಿಯ ಕಾರ್ಖಾನೆಗೇ ಆಫೀಸರ್ ಹುದ್ದೆ ಹಿಡಿದು ಬಂದಿದ್ದೆ. ಅವನ ಜೊತೆಯ ರಾಜು ಸಂಜೆ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಅದಾಗಲೇ ಖಾಸಗಿ ಕಂಪನಿಯೊಂದರಲ್ಲಿ ಮೂರೂವರೆ ಸಾವಿರ ಎಣಿಸುತ್ತಿದ್ದ. ಸುಂದರ ‘ಸಾಫ್ಟ್‌ವೇರ್ ಫರ್ಮ್’ ಅಂತೇನೋ ತೆಗೆದು ತರಾತುರಿಯಲ್ಲಿ ಒಡಾಡುತ್ತಿದ್ದ. ಕಡೆಗೆ ಏನೋ ಕವನ ಬರೆದುಕೊಂಡು ಬೀದಿ ಅಲೆಯುತ್ತಿದ್ದ ಇವನ ಕುರುಚಲು ಗಡ್ಡದ ಗೆಳೆಯ ಕೂಡ ಇತ್ತೀಚೆಗೆ ಕವಿಗೋಷ್ಠಿ ಅದೂ ಇದೂ ಅಂತ ಹೆಸರು ಮಾಡಿ ಯಾವುದೋ ಪತ್ರಿಕೆಗೆ ಸಂಪಾದಕನಾಗಿ ತುತ್ತೂರಿ ಊದುತ್ತಿದ್ದ. ಇವನ ಜೊತೆಯ ಎಷ್ಟೋ ಜನರಾಗಲೇ ಡಿಪಾರ್ಟ್‌ಮೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೆಲವರಾಗಲೇ ಆಫೀಸರ್‍ಸ್ ಗ್ರೇಡ್‌ಗೂ ನೆಗೆದಿದ್ದರು. ರವಿ ಮಾತ್ರ ಸ್ಥಿತಪ್ರಜ್ಞ. ಎಂಟು ವರ್ಷಗಳ ಹಿಂದೆ ಇದ್ದಂತೆಯೇ ಇಂದೂ ಇದ್ದಾನೆ. ಮಧ್ಯೆ ಒಂದು ಟೈಮ್‌ಸ್ಕೇಲ್ ಬಡ್ತಿ ಬಂದಿದೆ. ವರ್ಷಕ್ಕೊಮ್ಮೆ ಬರೋ ಅರವತ್ತು ರೂಪಾಯಿಗಳ ಸಂಬಳದ ಏರಿಕೆಯಲ್ಲಿ ಪರಮತೃಪ್ತ. ಆಚಿನ ಆಸೆಗಳಿಲ್ಲ. ಮಹತ್ವಾಕಾಂಕ್ಷೆಗಳಿಲ್ಲ. ಕನಸುಗಳಿಲ್ಲ. ಅವುಗಳನ್ನು ನನಸಾಗಿಸುವ ಒದ್ದಾಟಗಳಿಲ್ಲ, ಸ್ಪರ್ಧೆಯ ವೇಗವಿಲ್ಲ. ಗೆಲುವಿನ ಉಧ್ವೇಗವಿಲ್ಲ_ನಿಧಾನದ ಮಂದಗತಿಯ ಬದುಕು. ಎಂಥ ನಿಶ್ಚಿತ ಜೀವನ ಇವನದು! ಏಳುವುದು, ತಿನ್ನುವುದು, ಕೆಲಸಕ್ಕೆ ಹೋಗುವುದು, ಸಂಜೆ ನನ್ನ ಜೊತೆ, ಇಲ್ಲ ಒಂದಷ್ಟು ಸೋಮಾರಿಕಟ್ಟೆಯ ಗೆಳೆಯರೊಡನೆ ಹರುಟುವುದು, ರಾತ್ರಿ ಮನೆಯಲ್ಲಿ ಊಟ, ಮತ್ತೆ ನಿದ್ರೆ-ಬದುಕಿನ ಒಂದು ದಿನ ಕಳೆದೇ ಹೋಯಿತು. ಇನ್ನುಳಿದವೂ ಯಾವೊಂದು ವ್ಯತ್ಯಾಸವಿಲ್ಲದೆ ಕಾರ್ಖಾನೆಯಿಂದ ಹೊರ ಬಂದ ಒಂದೇ ಮಾದರಿಯ ಪುನರಾವರ್ತನೆಯಾಗಿ ಕಳೆದು ಹೋಗುತ್ತದೆ. ಅಪ್ಪ ಬಿಟ್ಟಿದ್ದ ಹಣದಲ್ಲಿ ಒಂದು ಮನೆ ಕೊಂಡಿದ್ದಾನೆ. ದೊಡ್ಡದೇನಲ್ಲ. ೨೫ಇಂಟು೩೦ ಸೈಟಿನಲ್ಲಿ ತುರುಕಿ ಕಟ್ಟಿದ ಒಂದು ಕೋಣೆಯ ಮನೆ, ಸಾಕು ನಡೆದೀತು. ನನ್ನ ಮದುವೆ ಇವನ ಬದುಕಿಗೊಂದಿಷ್ಟು ವ್ಯತ್ಯಾಸ ತರಬಹುದು. ಮೆಸ್ಸಿಗೆ ಬದಲು ಅಡಿಗೆ ಮನೆಯಲ್ಲಿ ಗ್ಯಾಸ್ ಹಚ್ಚಬಹುದು. ರಾತ್ರಿ ಒಂಟಿ ಹಾಸಿಗೆ ಹಿಗ್ಗಬಹುದು. ಒಂದೆರಡು ಮಕ್ಕಳಾಗಬಹುದು_ಇಷ್ಟೇ_ಇಷ್ಟೇನೆ? ದಿನ ಬೆಳಗೂ ನನ್ನ-ಅವನ ಸಂಬಂಧ ವಿರುದ್ಧ ದಿಕ್ಕುಗಳಲ್ಲಿ ತಿರುಗಿ ತಿರುಗಿ ಸವೆಯುತ್ತದೆ. +ಏಕೋ ಎಂದೂ ಇಲ್ಲದಷ್ಟು ರವಿಯ ಬಗೆಗೆ ಜಿಗುಪ್ಸೆ ಮೂಡುತ್ತಿದೆ. +ನನ್ನೆದುರು ನನ್ನ ಸಹೋದ್ಯೋಗಿಗಳು, ಸ್ನೇಹಿತರು ಸಾಲುಸಾಲಾಗಿ ನಿಲ್ಲುತ್ತಾರೆ. ಏನಾದರೂ ನೆಪ ಹುಡುಕಿ ಮಾತನಾಡಿಸಲು ಬರುವ ರಮೇಶ್, ನನ್ನ ಸಂಗಾತಿಯಾಗಲು ಹಾತೊರೆದಿದ್ದ ಸಹಪಾಠಿ ವಿಜಯ್, ಪಿ. ಎಚ್. ಡಿ. ಮಾಡಿ ಅಮೆರಿಕೆಗೆ ಹೋಗಲಿರುವ ಅಣ್ಣನ ಗೆಳೆಯ….. ಇನ್ನೂ ಯಾರ್‍ಯಾರೋ! +ನನಗೇ ಮತ್ತೊಮ್ಮೆ ಅಳುಕಾಗುತ್ತದೆ. ನನ್ನ ಬತ್ತುತ್ತಿರುವ ಪ್ರೇಮದ ಬಗ್ಗೆ ಅಪರಾಧಿ ಪ್ರಜ್ಞೆ ತುಂಬಿ ನಿಲ್ಲುತ್ತದೆ. ಅವನ ಬಾಯಿ ತುಂಬಿದ್ದ ನನ್ನ ಪ್ರೀತಿಯ ಕೊಡ ಬದುಕಿನೆಲ್ಲ ಏರು ತಗ್ಗುಗಳಲ್ಲಿ ಕುಲುಕಿ ಕುಲುಕಿ, ತುಳುಕಿ ತುಳುಕಿ, ಖಾಲಿಯಾಗಿದೆಯಲ್ಲ ಎಂದು ಪರಿತಪಿಸುತ್ತೇನೆ. ರವಿಗೆ ನಿಷ್ಠಳಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಚೆಂದದ ಹುಡುಗರ ಕೈ ಹಿಡಿದ ಗೆಳತಿಯರನ್ನು ಮರೆಯಲು ಯತ್ನಿಸುತ್ತೇನೆ. ರವಿಯ ಒಳ್ಳೆಯತನಗಳನ್ನು ಪಟ್ಟಿ ಇಳಿಸುತ್ತೇನೆ. ಅದಕ್ಕೆ ನಾನು ಕುರುಡಾಗುವುದು ಬೇಡ ಅಂದುಕೊಳ್ಳುತ್ತೇನೆ. ಅಮ್ಮ “ಹುಡುಗಿಯರಿಗೇಕೆ ಇಂಜಿನಿಯರಿಂಗ್?” ಎಂದು ಹಾರಾಡಿದಾಗ “ಹೋಗಲಿ ಬಿಡಿ ಅತ್ತೆ. ಅವಳ ಇಷ್ಟಕ್ಕೆ ಏಕೆ ಅಡ್ಡಿ ಬರ್ತೀರಾ” ಎಂದು ಹುರಿದುಂಬಿಸಿದ ರವಿಯನ್ನು ಕೃತಜ್ಞತೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ನನ್ನ ಪಾಸು, ಪ್ರಥಮ ದರ್ಜೆ, ರ್‍ಯಾಂಕುಗಳನ್ನು ನನಗಿಂತ ಹೆಚ್ಚು ಖುಷಿಯಲ್ಲಿ ಸಿಹಿ ಹಂಚಿ ಹಂಚಿಕೊಂಡದ್ದು, ನಾನು ಅವನದೇ ಕಾರ್ಖಾನೆಗೆ ಅವನ ಮೇಲಿನೆ ಹುದ್ದೆಗೆ ಸೇರಿದರೂ ಅಸೂಯೆ ಪಡದಿದ್ದದ್ದು, ಕೆಲವೊಮ್ಮೆ ಕೆಲಸದ ರಭಸದಲ್ಲಿ ನಾನು ಅವನನ್ನು ಉಪೇಕ್ಷಿಸಿದರೂ ಅರ್ಥ ಮಾಡಿಕೊಂಡದ್ದು ಎಲ್ಲಾ ನೆನೆಯುತ್ತೇನೆ. ನನಗೆಂದು ಹೆಸರಿಟ್ಟದ್ದಾಯಿತು. ಅದರಾಚೆ ಅವನು ಯಾವ ಹೆಣ್ಣನ್ನೂ ಮತ್ತೆ ನೋಡಿದ್ದಿಲ್ಲ_ನಿಶ್ಚಿತಾರ್ಥ ಆದಾಗಲಿಂದ“ಶಶಿ ಎಂದಿದ್ದರೂ ನನ್ನವಳು” ಎಂದು ನಿಶ್ಚಿಂತ. ಅವನ ಸರಳತೆಯನ್ನು ಮೆಚ್ಚಲು ಬಯಸುತ್ತೇನೆ. ನನ್ನ ಬದುಕನ್ನೇ ಬಗೆ ಬಗೆದು ಏನನ್ನೋ ಹುಡುಕುತ್ತೇನೆ. +ಒಮ್ಮೊಮ್ಮೆ ಅನ್ನಿಸುವುದುಂಟು. ಈ ಎಲ್ಲ ನನ್ನ ಹುದ್ದೆ, ಬಡ್ತಿಗಳ ಹೋರಾಟ, ಸ್ಪರ್ಧೆಯ ವೇಗ, ಒದ್ದಾಟ, ಮಹತ್ವಾಕಾಂಕ್ಷೆಗಳು, ಹಗಲಿರುಳು ಪರಿಶ್ರಮಗಳು_ಇವೆಲ್ಲಾ ನಿಜಕ್ಕೂ ಏತಕ್ಕಾಗಿ? ಬಹುಶಃ ರವಿಯ ಶಾಂತ ಸ್ವಭಾವದಲ್ಲಿ ಇರುವುದರಲ್ಲೇ ಸದಾ ತೃಪ್ತನಾಗುವ, ಹೆಚ್ಚಿನದಕ್ಕೆ ಕೈ ಚಾಚದೆ, ಹೆಚ್ಚು ಕೆಲಸ ಕನಸುಗಳ ಅಂಟಿಕೊಳ್ಳದೆ, ದಿನ ಬೆಳಗು ಸಂಜೆ ರಾತ್ರಿಗಳನ್ನು ಆರಾಮವಾಗಿ ಕಳೆದುಬಿಡುವ ಅವನ ಜೀವನ ಶೈಲಿಯಲ್ಲಿ ಹೊಸ ತತ್ವವೊಂದಿರಬಹುದು. ತನ್ನದೇ ಪ್ರತ್ಯೇಕ ಪ್ರಪಂಚದಲ್ಲಿ, ಊಟ ತಿಂಡಿ ಹರಟೆ ನಿದ್ದೆಗಳ ಪುಟ್ಟ ಜಗತ್ತಿನಲ್ಲಿ ಅವ ಸುಖಿ. ನಾನು ಅವನ ಈ ಬದಲಿಲ್ಲದ ಬದುಕಿಗೆ ಶಾಮೀಲಾಗಲು ಏಕೆ ಸಿದ್ಧವಿಲ್ಲ? ನನಗೆ ಹೊಸತನದ ಅನ್ವೇಶಣೆ ಇದೆ. ಸಾಧನೆಯ ಕುದುರೆಯೇರುವ ನಾಗಾಲೋಟದ ರೊಮಾಂಚನದ ಹುಚ್ಚಿದೆ. ರವಿ ನಾನು ಹೇಗೆ ಹೇಳಲಿ ನಿನ್ನ ಸಂಯಮ, ಸಮಾಧಾನ ನನ್ನನ್ನಿಂದು ನಾಟುತ್ತಿಲ್ಲ. ಏನೊಂದೂ ಆಗದ ನಿನ್ನ ಬದುಕಿನ ವಿವಿಕ್ತತೆಗೆ, ಏಕತಾನಕ್ಕೆ ನಾನು ಸ್ಪಂದಿಸುತ್ತಿಲ್ಲ. +ನಿನ್ನ ಬದುಕಿನ ಸರಳತೆಗೆ ಮಾರು ಹೋಗಲಾರದ ನನ್ನ ಬದುಕಿನ ಸಂಕೀರ್ಣತೆಯದೂಷಿಸಲೆ? ಸಂಜೆಗಳನ್ನು ಸೋಮಾರಿ ಕಟ್ಟೆಯಲ್ಲಿ ಸೂರ್ಯಾಸ್ತ ನೋಡುತ್ತಾ ಕಳೆದು ಬಿಡುವ ನಿನ್ನ ಬದುಕಿನ ಬಿಡುವಿನ ಬಗ್ಗೆ ನನಗೆ ಮತ್ಸರವೆ, ತಾತ್ಸಾರವೇ, ಉದಾಸೀನವೆ, ತಿರಸ್ಕಾರವೆ? +ಆಫೀಸಿನಲ್ಲಿ ನಾನು ರವಿಯೊಡನೆ ನೇರ ಮಾತನಾಡುವುದೂ ಅಪರೂಪವಿತ್ತು. ದಿನವೆಲ್ಲ ಬಿಡುವಿಲ್ಲದ ಕೆಲಸ. ಕೆಲಸಕ್ಕೆ ಬಾರದ ಮೀಟಿಂಗ್‌ಗಳು, ಕಾನ್‌ಫರೆನ್ಸ್‌ಗಳು. ಕೆಲವೊಮ್ಮೆ ದಿಢೀರನೆ ಬಾಂಬೆ, ಮದ್ರಾಸ್ ಎಂದು ಬಿಜಿಯಾಗಿ ಸುತ್ತುವುದೂ ಇತ್ತು. ಅದರಾಚೆ ಸಂಜೆ ಕೂಡಾ ಏನಾದರೂ ಸಂಘ ಸಂಸ್ಥೆಯ ಕೆಲಸ ಅಂಟಿಸಿಕೊಂಡವಳು ನಾನು. ರವಿ ಮಾತ್ರ ತನಗೆ ಕೊಟ್ಟ ಕೆಲಸವನ್ನಷ್ಟು ಅಚ್ಚುಕಟ್ಟಾಗಿ ಮುಗಿಸಿ ನಂತರ ಹಾಯಾಗಿ ಜೊತೆಯವರೊಡನೆ ಹರಟುತ್ತಲೋ, ಕ್ಯಾಂಟೀನಿನ ಕಾಫಿ ಹೀರುತ್ತಲೋ ಕಳೆದು ಬಿಡುತ್ತಿದ್ದ. ನನಗೊಂದು ಬಗೆಯ ಅಸೂಯೆ, ಕೋಪ ಒಟ್ಟಿಗೇ ಬರುತ್ತಿತ್ತು. ಎಷ್ಟೊಂದು ಸಮಯ ಇದೆ. ಏನಾದರೂ ಓದಿಕೊಳ್ಳಬಾರದಾ? ತನ್ನ ಕೆಲಸವನ್ನೇ ಮತ್ತಷ್ಟು ಕಲಿಯಬಾರದಾ? ಮನೆಯಲ್ಲೆ ಪಿ. ಸಿ. ಇಟ್ಟುಕೊಂಡಿದ್ದಾನೆ. ವಿಡಿಯೋ ಆಟಗಳನ್ನು ಆಡುವುದು ಬಿಟ್ಟು ಅವ ಅದರ ಮೇಲೆ ಮಾಡೋದೇನು. ಒಂದಿಷ್ಟು ‘ಪ್ರೋಗ್ರಾಮಿಂಗ್’ ಕಲಿಯಬಾರದಾ? ನನ್ನೊಳಗೇ ಎಂಥದ್ದೋ ಆಕ್ರೋಶ ಕುದಿದೆದ್ದರೂ, ಅದಕ್ಕೆಲ್ಲ ಮಾತು ಕೊಡಲಾರದೆ ಒದ್ದಾಡುತ್ತಿದ್ದೆ. +ಎಷ್ಟೋ ಬಾರಿ ಯೋಚಿಸಿದ್ದುಂಟು_ +ನಾನು ರವಿಯಲ್ಲಿ ಬಯಸುತ್ತಿರುವುದಾದರೂ ಏನು? ಆಸ್ತಿ, ಅಂತಸ್ತು, ಐಶ್ವರ್ಯ, ಯಶಸ್ಸು, ಏಳಿಗೆ! +ದೇವರೇ, ಪ್ರೀತಿಗಳ ಬಗ್ಗೆ ನಾ ಏನು ಹೇಳಲಿ? ಪ್ರೀತಿಗಳೇಕೆ ಪುಸ್ತಕದಲ್ಲಿಯಂತೆ, ಪುರಾಣ ಕತೆಗಳಂತೆ, ಅಖಂಡವಾಗಿ ಅಲ್ಲಾಡದಂತೆ ನಿಲ್ಲುವುದಿಲ್ಲ? ಬದುಕಿನ ಸಣ್ಣ ಸೋಲು-ಗೆಲುವುಗಳಲ್ಲಿ ಮುಗ್ಗರಿಸಿ ಬೀಳುತ್ತವಲ್ಲ. ಅವನನ್ನು ಅವನಿರುವಂತೆ ಗೌರವಿಸಲಾರದ್ದು, ಪ್ರೀತಿಸಲಾರದ್ದು, ಸಹಜವೆ, ಸ್ವಾಭಾವಿಕವೆ? ಇಲ್ಲ ನನ್ನ ದೌರ್ಬಲ್ಯವೆ? ನಾನೇಕೆ ಅವನನ್ನು ಅವನಿರುವಂತೆ ತಟ್ಟದೆ, ಕುಟ್ಟದೆ, ಕರಗಿಸದೆ, ಅಚ್ಚೊತ್ತದೆ, ಬದಲಿಸದೆ, ಸ್ವೀಕರಿಸಲು ಸಿದ್ಧವಿಲ್ಲ? +ಬೆಳಿಗ್ಗೆ ಕೂಡ ನೋಟೀಸ್ ಬೋರ್ಡ್ ನೋಡಿದಾಗ ಮತ್ತೆ ಕೊರೆದಿದ್ದೆ_ +“ರವಿ ಅದ್ಯಾವುದೋ ‘ತರಪೇತಿ’ ಅಂತ ಹಾಕಿದ್ದಾರೆ ನೋಡಿದೆಯಾ? ಮೂರು ತಿಂಗಳ ಕೋರ್ಸ್ ಅಷ್ಟೆ. ಸರ್ಟಿಫಿಕೇಟ್ ಬೇರೆ ಕೊಡ್ತಾರೆ….” ಎಂದಿದ್ದೆ. +“ಆಗಲೇ ನೋಡಿದ್ದೆ ಶಶಿ, ವಾರಕ್ಕೆ ಆರು ದಿನ, ಅದೂ ಕಾರ್ಖಾನೆ ಮುಗಿದ ಮೇಲೆ ೬ರಿಂದ ೮ರವರೆಗೆ! ಸಾಲದ್ದಕ್ಕೆ ಭಾನುವಾರ ಬೇರೆ ಇದೆ. ನನ್ನ ಕೆಲಸಕ್ಕೇನು ಅದರ ಅವಶ್ಯಕತೆ ಇಲ್ಲ ಬಿಡು.” +“ನಿನ್ನ ಕೆಲಸಕ್ಕೆ ಯಾವುದರ ಅವಶ್ಯಕತೆಯೂ ಇಲ್ಲ ಅಂತ ಗೊತ್ತು. ಮತ್ಯಾವುದಾದರೂ ಕೆಲಸಕ್ಕೆ ಉಪಯೋಗವಾಗೊಲ್ಲವಾ? ಆಮೇಲೆ ಬೇಕಾದರೆ ಖಾಸಗಿಯಾಗಿ ಏನಾದರೂ ಶುರು ಮಾಡಬಹುದು…..” ನಾನು ಅಸಹನೆಯಿಂದ ಹೇಳಿದೆ. +“ಶಶಿ, ಸ್ವಂತ ಏನೇನೋ ಮಾಡೋದು, ಕೈ ಸುಟ್ಟುಕೊಳ್ಳೋದು ಏಕೆ?” +“ನಿನಗೆ ಏತರಲ್ಲೂ ಉತ್ಸಾಹವೇ ಇಲ್ಲ. ಹೊಸತೇನಕ್ಕೂ ಕೈ ಹಾಕೋ ಸಾಹಸವೇ ಇಲ್ಲ” ನಾನು ರೇಗಿದೆ. +“ಶಶಿ, ನನ್ನ ಕೆಲಸದಲ್ಲಿ ಆರಾಮಿದ್ದೇನೆ. ಸ್ವಂತ ಉದ್ಯೋಗ, ಲಾಭವೇ ಆದರೂ ದಿನದ ೨೪ ಗಂಟೆ ತಲೆನೋವು ಶ್ರಮ ಯಾತಕ್ಕೆ ಬೇಕು? ಬಿಡುವಾಗಲೀ ದುಡಿದಿದ್ದನ್ನು ಅನುಭವಿಸುವ ಸಮಯವಾಗಲೀ ಎಲ್ಲಿರುತ್ತೆ? ಎಂಟು ಗಂಟೆಯ ಈ ಕೆಲಸಕ್ಕೆ ಬಂದರೆ ಆಯಿತು. ಕೈ ತುಂಬಾ ಸಂಬಳ, ಅದೂ ಎಂಟು ಗಂಟೆಯೂ ಮೇಜಿಗಂಯ್ಟಿ ದುಡಿಯಬೇಕೆ? ಕಾಲು ಚಾಚಿ ಲೈಬ್ರರಿಯಲ್ಲಿ ನಿದ್ದೆ ಹೊಡೆದರೂ ಸಮಯ ಕಳೆಯುತ್ತೆ. ಜೀವನದಲ್ಲಿ ಸಂತೃಪ್ತಿ ಇದ್ದರೆ ಸಾಲದೆ? ಸುಂದರ್‍ನೇ ನೋಡು. ಏನೋ ಸಂಜೆ ಎರಡು ಮೂರು ಗಂಟೆ ಮಾಡ್ತೀನಿ ಅಂತ ಪ್ರಾರಂಭಿಸಿದವನು ಇವತ್ತು ಬೆಳಿಗ್ಗೆ ಏಳರಿಂದ ರಾತ್ರಿ ಹತ್ತರವರೆಗೂ ಒದ್ದಾಡ್ತಾನೆ….” +“ಅದಕ್ಕೆ ತಕ್ಕ ಹಾಗೆ ಲಕ್ಷ ಸಂಪಾದಿಸುತ್ತಾನೆ….” ನಾನು ಒರಟಾಗಿ ರೇಗಿದೆ. ಅವನ ದೃಷ್ಟಿಯಲ್ಲಿ ಬದುಕನ್ನು ನೋಡಲು ನನಗೆ ಸಾಧ್ಯವೇ ಇರಲಿಲ್ಲ. +“ಶಶಿ, ಅಷ್ಟೆಲ್ಲ ಹಣ ನಿಜಕ್ಕೂ ನಮಗೇ ಬೇಕಾ….? ಸಂತೈಸುವಂತೆ ಕೇಳಿದ. “ಮನೆ ಇದೆ, ನಮ್ಮಿಬ್ಬರ ಸಂಬಳದಲ್ಲಿ ನೆಮ್ಮದಿಯ ಬದುಕಿದೆ. ಇಲ್ಲದ ಗೊಡವೆ ಏಕೆ…..?” +ನಿಜ, ಆದರೆ ಸುಂದರ್ ಸಂಪಾದಿಸುವುದು ಹಣ ಒಂದನ್ನೇ ಏನು? ನಮ್ಮ ಬುದುಕು ಇಷ್ಟೇನೇ? ತಿಂದುಂಡು ಮಲಗುವ, ಹೇಗಾದರೂ ಆಫೀಸಿನಲ್ಲಿ ಎಂಟು ಗಂಟೆ ಕಳೆವ ಪುನರಾವರ್ತನೆಯ ಪ್ರತಿಕ್ರಿಯೆ? +“ಶಶಿ, ನಿನಗೆ ನನ್ನ ಮೇಲೆ ಅಸಮಾಧಾನನಾ? ನಿನ್ನಂತೆ ಓದಿಲ್ಲ. ನಿನಗಿಂತ ಕಡಿಮೆ ಸಂಬಳ ಅಂತಾನೆ? ಶಶಿ, ಆಸ್ತಿ, ಅಂತಸ್ತು, ಡಿಗ್ರಿ ಹಣಗಳನ್ನು ನೋಡಿ ಅಳೆಯುವಂಥದ್ದು ಪ್ರೀತಿ ಹೇಗಾಗುತ್ತೆ? ನನ್ನ ನಿನ್ನ ಪ್ರೀತಿ ಇವೆಲ್ಲಕ್ಕೂ ಮೀರಿ ನಿಲ್ಲಬೇಕು….” +“ನಿಜ ರವಿ, ಮಾದರಿ ಪ್ರೀತಿಗಳೆಲ್ಲ ಇವೆಲ್ಲಕ್ಕೂ ಮೀರಿ, ನೆಲ ಬಿಟ್ಟು ಮುಗಿಲಲ್ಲಿ ನಿಲ್ಲಬೇಕು. ಆದರೆ ನಮ್ಮ ಬದುಕಿನ ಮುಂದೆ ಚಾಚಿ ನಿಂತಿರುವ ಈ ಮೌನವನ್ನು, ಖಾಲೀತನವನ್ನು ಬರೀ ಪ್ರೀತಿಯ ಮಾತುಗಳಿಂದ, ಬರೀ ಪ್ರೀತಿಯ ಪದಗಳಿಂದ, ತುಂಬಲು ಸಾಧ್ಯವಿದೆಯೇ? ನನ್ನ ಪ್ರೀತಿಗಾಗಿ ನೀ ಏನಾದರೂ ಮಾಡಲು ಸಿದ್ಧವಿರುವೆಯಾ?” ನೇರವಾಗಿ ಕೇಳಿದೆ. ಉತ್ತರವಿಲ್ಲದೆ ತಬ್ಬಿಬಾದ. +ನನ್ನಲ್ಲೇ ಕಡಗೊಲಿನ ಕಡೆತ_ +ಈ ಪ್ರೀತಿಯಾದರೂ ಯಾವುದು? ಎಲ್ಲವನ್ನೂ ಮೀರಿದ ಪ್ರೀತಿ ಯಾವುದು? ಒಬ್ಬನನ್ನು ಅವನೆಲ್ಲ ಓದು, ವಿದ್ಯೆ, ಕೆಲಸ, ಸಾಧನೆ ಎಲ್ಲವನ್ನೂ ಕಳಚಿ ಅವನನ್ನಷ್ಟೇ ಬೆತ್ತಲಾಗಿ ಪ್ರೀತಿಸುವುದೇಗೆ? ಅವನೆಲ್ಲ ವಿಶೇಷಣಗಳನ್ನು, ಕಿರೀಟಗಳನ್ನು ಅವನೇರಿದ ಸಿಂಹಾಸನಗಳನ್ನು ಬದಿಗಿಟ್ಟು ಅವನನ್ನಷ್ಟೇ ಪ್ರೀತಿಸುವುದು ಹೇಗೆ? ಸಹೋದ್ಯೋಗಿ ರಮೇಶನ ಬಡ್ತಿಯಲ್ಲಿ, ಅಧಿಕಾರದಲ್ಲಿ. ಅವನ ಯಶಸ್ಸಿಲ್ಲವೆ, ಹಗಲಿರುಳಿನ ದುಡಿತವೆಲ್ಲವೆ? ಅಣ್ಣನ ಗೆಳೆಯ ಹೆಸರಿನ ಮುಂದೆ ಜೋಡಿಸಿಕೊಂಡಿರುವ ಮೂರು ಮೂರು ಡಿಗ್ರಿಗಳಲ್ಲಿ ಅವನ ಪರಿಶ್ರಮವಿಲ್ಲವೆ? ಅವನ ವ್ಯಕ್ತಿತ್ವದ ಕನ್ನಡಿಯಲ್ಲವೆ ಅವೆಲ್ಲ? ಮನೆಯ ಪರಿಸ್ಥಿತಿಯಿಂದಾಗಿ ಎಸ್. ಎಸ್. ಎಲ್. ಸಿ. ಗೇ ಓದು ನಿಲ್ಲಸಿ ಕೆಲಸ ಹಿಡಿದಿದ್ದ ರಾಜು, ಸಂಜೆ ಕಾಲೇಜಿನಲ್ಲೇ ಪಾಸಾಗಿ ನಾಲ್ಕು ಜನ ತಮ್ಮ ತಂಗಿಯರನ್ನು ದಡ ಸೇರಿಸಿದ್ದು ಸಾಹಸವಲ್ಲವೆ? ವ್ಯಕ್ತಿಯ ವ್ಯಕ್ತಿತ್ವದ ಅಭಿವ್ಯಕ್ತಿ ಅವನ ಕಾರ್ಯಗಳಲ್ಲಿದೆ. ಬದುಕಿನ ನಿಚ್ಚಳ ನಿಲುವಿನಲ್ಲಿದೆ. ಅವುಗಳೆಲ್ಲದರ ಹೊರತಾಗಿ ಮನುಷ್ಯಮನುಷ್ಯನ ನಡುವಿನ ಅಂತರವಾದರೂ ಏನಿದೆ? ಏರು ತಗ್ಗಿಲ್ಲದ ಸಮತಟ್ಟು ನೆಲದಲ್ಲಿ ರವಿ ಜೋಡೆತ್ತಿನ ಗಾಡಿ ಹೂಡಬಯಸಿದ್ದಾನೆ. +ಅಮ್ಮ ಅಪ್ಪನ ಕಣ್ಣಿನಲ್ಲಂತು ರವಿ ಅಚ್ಚುಮೆಚ್ಚಿನ ಭಾವೀ ಅಳಿಯ. “ರವಿ ತುಂಬಾ ಒಳ್ಳೆಯವನು. ಒಂದು ಬೀಡಿ ಸಿಗರೇಟಿನ ಚಟವೂ ಇಲ್ಲ…..” ಅಮ್ಮನ ‘ಒಳ್ಳೆಯ ಗಂಡ’ ನ ಕಲ್ಪನೆ ಅಲ್ಲಿಗೇ ನಿಂತಿದೆ. ತಂದು ಹಾಕುವ, ಪ್ರೀತಿಸುವ ಕೆಡುಕನೋ, ಕುಡುಕನೋ ಅಲ್ಲದ, ಕೆಟ್ಟ ಚಾಳಿಗಿಳಿಯದ ಗಂಡ ‘ದೇವರೇ’ ಸರಿ, ನನ್ನ ‘ಗಂಡ’ನ ಅವಶ್ಯಕತೆಗಳು ಅಮ್ಮನಿಗಿಂತಾ ಭಿನ್ನವಾಗಿವೆ. ಅಮ್ಮನಿಗೆ ಕೈಗೆ ಕಾಸು ಹಾಕಿ, ಹೊಟ್ಟೆ ಬಟ್ಟೆ ನೋಡಿಕೊಂಡು ಪರ ಹೆಂಗಸರ ಸಹವಾಸಕ್ಕೆ ಹೋಗದೆ, ಕುಡಿಯದೆ, ಬಡಿಯದೆ ಇರುವ ಗಂಡ_ಅಷ್ಟೆ ಅಮ್ಮನ ‘ಗಂಡ’ನ ಉತ್ಕೃಷ್ಟ ಕಲ್ಪನೆ. ಅಪ್ಪ, ಹೆಚ್ಚು ಕಮ್ಮಿ ಈ ಕಲ್ಪನೆಗೆ ಹೊಂದಿ ಬಂದಿದ್ದರು. ಆಗೊಮ್ಮೆ ಈಗೊಮ್ಮೆ ಸಂಯಮ ಕಳಕೊಂಡದ್ದು ತಿಳಿದಿತ್ತು. ಆದರೂ, “ಸವತೀನೇ ಮನೆಗೆ ತರಲಿಲ್ಲವಲ್ಲ” ಎಂಬ ಸಮಾಧಾನದಲ್ಲಿ ಉದಾರವಾಗಿ ಅಮ್ಮ ಕ್ಷಮಿಸಿಬಿಟ್ಟಿದ್ದಳು. ಕ್ಷಮಿಸದೆ ಇರುವ ಆಯ್ಕೆಯಾದರೂ ಎಲ್ಲಿತ್ತು ಅವಳಿಗೆ? ಹಳ್ಳಿಯಲ್ಲಿದ್ದ ಅವಳ ಅಪ್ಪ-ಅಮ್ಮ ಎಂದೋ ಪರಲೋಕ ಸೇರಿದ್ದರು. ಸ್ಕೂಲಿನ ಮೆಟ್ಟಲೂ ಕಾಣದೆ, ಅಪ್ಪನ ಮೇಲೆ ಅವಲಂಬಿತ ಅಮ್ಮನ ಬದುಕಿನಲ್ಲಿ ಆಯ್ಕೆಗಳಿರಲಿಲ್ಲ. +ಆದರೆ ನನ್ನ ‘ಒಳ್ಳೆಯ ಗಂಡನ’ ಕಲ್ಪನೆಯಲ್ಲಿ ಅಮ್ಮನ ಹೇಳಿಕೆಗಳೆಲ್ಲ ಇರಬೇಕಾದರೂ ಅವು ಕೇವಲ ನನ್ನ ಬೇಡಿಕೆ ಪಟ್ಟಿಯ ಒಂದಂಶ ಮಾತ್ರ. ಅಮ್ಮನನ್ನು ಕಟ್ಟಿ ಹಾಕಿದ್ದ ಆರ್ಥಿಕ ಅವಲಂಬನೆ ನನಗಿಲ್ಲ. ನನ್ನ ಸಾಂಗತ್ಯದ ಅವಶ್ಯಕತೆಗಳೇ ಬೇರೆ ಇವೆ. ಎಷ್ಟು ಬಾರಿ ನನ್ನ, ರವಿಯ ನಡುವೆ ಮಾತನಾಡಲೂ ಏನೂ ಇರದೆ ಮೌನ ಆವರಿಸಿಬಿಡುತ್ತದೆ. ನಾನು ಹೇಳುವ ಎಷ್ಟೋ ವಿಷಯಗಳು ಅವನಿಗರ್ಥವಾಗುವುದಿಲ್ಲ. ಆಸಕ್ತಿಯೂ ಇಲ್ಲ. ಅವನ ಸೋಮಾರಿ ಕಟ್ಟೆಯ ಸಮಾಚಾರಗಳ ನಾನು ಎಷ್ಟೆಂದು ಕೇಳಲಿ? ಇವನ ‘ಒಳ್ಳೆಯ’ತನವೂ ಬೋರು ಹೊಡೆಸುವಷ್ಟು ಬೇಜಾರಾಗಿದೆ. ಇವನ ಪ್ರೀತಿಯಲ್ಲೂ ಸೋನೆಮಳೆಯ ಏಕತಾನತೆ! ಎಂಟು ವರ್ಷಗಳ ನಮ್ಮ ಸಂಬಂಧದಲ್ಲಿ ಅವ ಎಂದೂ ‘ನಿನ್ನ ಪ್ರೀತಿಸುತ್ತೇನೆ, ನೀನಿಲ್ಲದೆ ಬದುಕಿರಲಾರೆ….” ಎಂದು ಒಮ್ಮೆಯೂ ಹೇಳಿದ್ದಿಲ್ಲ. ಎಷ್ಟಾದರೂ ನಾವು ನಾಳೆ ಗಂಡ-ಹೆಂಡಿರಾಗುವವರು ಎಂದು ನಿಶ್ಚಿತಾರ್ಥದ ನಿಶ್ಚಿಂತೆಯಲ್ಲಿದ್ದಾನೆ. ಪ್ರೀತಿಯತ್ತಲೂ ಎಂದೂ ದುಡಿದಿದ್ದಿಲ್ಲ. ಉತ್ಕಟತೆಯ ಶಿಖರವೇರಿದ್ದಿಲ್ಲ. ನನಗಾಗಿ ‘ಕುತುಬ್’ ನಿಂದ ಹಾರುವುದಾಗಲೀ, ಆಕಾಶ ಪುಷ್ಪವನ್ನು ತರಿದು ತರುವುದಾಗಲೀ, ಬರೀ ಮಾತಿಗಾದರೂ ಹೇಳಿದ್ದಿಲ್ಲ. ಕಡೆಗೆ ನಮ್ಮ ಎಂಟು ವರ್ಷಗಳ ಸಂಬಂಧದಲ್ಲಿ ಒಮ್ಮೆ ಕೂಡ ಕೈ ಹಿಡಿದು ಅಮುಕಿದ್ದಿಲ್ಲ. ಬರಸೆಳೆದು ಚುಂಬಿಸಿದ್ದಿಲ್ಲ. ಅವೆಲ್ಲವೂ ಮದುವೆಯ ಮರ್ಯಾದೆಯ ಹೊಸ್ತಿಲಿನಲ್ಲಿ ಮಾತ್ರ! ರವಿ ಪ್ರೀತಿಯಲ್ಲೂ ಸಾಹಸಿಯಲ್ಲ. ಪ್ರಿತಿಯಲ್ಲೂ ಗೆದ್ದವನಲ್ಲ. ಅವನ ಮೌನವನ್ನು ಸಂಯಮವೆಂದು ನನ್ನ ಹೃದಯ ಒಪ್ಪಲು ಏಕೋ ಸಿದ್ಧವಿಲ್ಲ. ನಾಳೆ ಮದುವೆ ಆದ ಮೊದಲ ರಾತ್ರಿಯೇ ಯಾವುದೇ ಪೀಠಿಕೆ ಇಲ್ಲದೆ ಹಾಸಿಗೆಗೇರುತ್ತಾನೆ. ಅನ್ನುವುದೂ ಸುಳ್ಳಲ್ಲ. ಕೆಲವೊಮ್ಮೆ ಕೆಲವರ ವ್ಯಕ್ತಿತ್ವಗಳು ಅವರು ಹೇಳದೆಯೇ ಅವರ ವರ್ತನೆಗಳಲ್ಲಿ ವ್ಯಕ್ತವಾಗಿರುತ್ತವೆ. ಅವನ ಚೀಲದಲ್ಲಿ ಆಗಾಗ್ಗೆ ‘ರತಿ ವಿಜ್ಞಾನ’ ಇತ್ಯಾದಿ ಸೆಕ್ಸ್ ಪುಸ್ತಕಗಳನ್ನು ನೋಡಿದ್ದೇನೆ. ಅವುಗಳಿಗೆ ಬೈಂಡ್ ಬೇರೆ ಹಾಕಿ ಕದ್ದು ಓದುತ್ತಾನೆ. ರವಿಯದು ಪ್ರೀತಿಯಲ್ಲೂ ಸಾಹಸವಿಲ್ಲ. ಮದುವೆಯ ಸುರಕ್ಷಿತ ಅಖಾಡದಲ್ಲಿ ಸೋಲಿಲ್ಲ ಎಂದು ಗ್ಯಾರಂಟಿಯಲ್ಲಿ ಕುಸ್ತಿಗಿಳಿಯಬಲ್ಲ. +ಆದರೆ ಈ ಪ್ರೀತಿಯನ್ನು, ವರ್ಷಗಳ ಸಂಬಂಧವನ್ನು ನಾನು ಹೇಗೆ ಕತ್ತರಿಸಲಿ? ಎಂದೋ ಎದೆ-ಮಿದುಳುಗಳಿನ್ನೂ ಅರಳಿರದ ದಿನಗಳಲ್ಲಿ ಕೊಟ್ಟ ಮಾತಿಗೆ ಇಂದು ಉರುಳು ಹಾಕಿಕೊಳ್ಳುವುದೆ? ನಾನು ನಾಳೆಗಳಲ್ಲಿ ಬದುಕುವವಳು. ನಿನ್ನೆಗಳ ನೆರಳನ್ನು ಕತ್ತರಿಸಿ ಹೋಗಬಲ್ಲೆನೆ? ನನಗವನು ಓದಿಲ್ಲ ಅನ್ನುವುದಕ್ಕಿಂತ, ಅವ ಪ್ರಯತ್ನಿಸಲೇ ಇಲ್ಲ ಎಂಬ ವ್ಯಥೆ. ಅವ ಪ್ರಯತ್ನದಲ್ಲಿ ಸೋತಿದ್ದರು ಇಷ್ಟು ಅಸಮಾಧಾನವಾಗುತ್ತಿರಲಿಲ್ಲ. ಇಲ್ಲದ್ದನ್ನು ಒಲ್ಲೆನೆನ್ನುವ, ಆಗದ್ದನ್ನು ಅಸಾಧ್ಯವೆನ್ನುವ, ಒಮ್ಮೆ ಇಟ್ಟ ಆಣೆಗಳ ಬಲದಲ್ಲಿ, ನನ್ನ ಇಡೀ ಬದುಕಿನ ಪ್ರೀತಿಯನ್ನು ಕೊಂಡುಕೊಂಡಂತೆ ನಿಶ್ಚಿಂತನಾದ ಇವನ ನಿಲುವಿನ ಬಗೆಯೇ ಕೊಪ ಕುದಿಯುತ್ತದೆ. ಜ್ವಾಲಾಮುಖಿಯಾಗಿ. +ನಿಜ, ಪ್ರೀತಿಯಲ್ಲಿ ತಪ್ಪಿದವಳು ನಾನೇ. ಆದರೇಕೋ ನನ್ನ ನಿಷ್ಠೆಯನ್ನು ಉಳಿಸಿಕೊಳ್ಳದುದು ಕಾಯ್ದುಕೊಳ್ಳದ್ದು, ರವಿಯ ಸೋಲು ಎನಿಸುತ್ತದೆ. ಅವನು ನನ್ನ ಕಾಡಿಸಬೇಕಿತ್ತು. ಪೀಡಿಸಬೇಕಿತ್ತು. ಎದೆ-ಮಿದುಳುಗಳ ತಟ್ಟಬೇಕಿತ್ತು. ಗೆಲ್ಲಬೇಕಿತ್ತು…. ಹೇಗಾದರೂ ಸರಿ. ನನಗಾಗಿ, ನನ್ನ ಪ್ರೀತಿಗಾಗಿ ಅವನು ಒಂದಿಷ್ಟು ಪರಿಶ್ರಮ ಪಡಬೇಕಿತ್ತು. ನನ್ನೆಲ್ಲ ಭಾವನೆಗಳಲ್ಲಿ ಅಜಗಜಾಂತರ ವ್ಯತ್ಯಾಸವಾಗಿದ್ದರೂ ರವಿ ಮಾತ್ರ ಇನ್ನೂ ಅಂದಿನ ಕನಸು ನನಸಾಗುವ ಭರವಸೆಯಲ್ಲಿ ಕುಳಿತಿದ್ದಾನೆ. ಪ್ರೀತಿ ಮುಷ್ಠಿಯಲ್ಲಿ ನಿಶ್ಚಿತಾರ್ಥದ ಉಂಗುರವಿಟ್ಟುಕೊಂಡು ಬೊಗಸೆಯಲ್ಲಿ ಹಿಡಿದಿಡುವುದಲ್ಲ ಹುಡುಗ, ಬೆರಳ ಸಂದಿಯಲ್ಲಿ ಅದು ಸೋರಿ ಹೋಗುವುದು. ನಿಲ್ಲದ ನನ್ನ ಪ್ರೀತಿ ಹರಿದು ಹೋಗುವುದು. ವೇಗಕ್ಕಂಟಿದ ನನ್ನ ಬದುಕಿನೊಡನೆ ಜೊತೆ ನಿಲ್ಲಲು ನೀನೂ ಹರಿಯಬೇಕು. ಏನೊಂದೂ ಆಗದ ನಿನ್ನ ಖಾಲಿ ಒಳ್ಳೆಯತನವನ್ನು ಎಷ್ಟೆಂದು ಶ್ಲಾಘಿಸಲಿ? ಬೇರೆಲ್ಲವೂ ಇದ್ದಾಗ ಈ ಒಳ್ಳೆಯತನ, ಹಿನ್ನೆಲೆಯಾಗಿ ಹೊಳಪು ನೀಡಬಲ್ಲದು. ಆದರೆ ಅದೊಂದೇ ಏಕಾಂಗಿಯಾಗಿ ನಿರುಪಯೋಗದ್ದು. +ನನಗೆ ಗೊತ್ತು, ನಾನು ತುಂಬಾ ಕ್ರೂರಿಯಾಗುತ್ತಿದ್ದೇನೆ. ಕಠಿಣಳಾಗುತ್ತಿದ್ದೇನೆ…. ‘ಬೇವಫಾ’ ‘ಬೇದರ್ದ್’ ಇನ್ನೂ ಏನೇನೋ ಪದಗಳಿವೆ ನಿಘಂಟಿನಲ್ಲಿ ಆದರೆ ಕೆಲವೊಮ್ಮೆ ಸ್ವಾರ್ಥಿಯಾಗುವುದು ಅಗತ್ಯವಾಗುತ್ತದೆ_ನಾಳಿನ ಸ್ವಯಂಮರುಕದ, ಸ್ವತಃ ಸ್ವಾಗತಿಸಿದ ನೋವಿನ ಬದುಕಿಗಿಂತ, ಸಂಬಂಧಗಳು ಬೆಳೆಯಬೇಕು, ಬೆಳೆಸಬೇಕು, ಹಿಗ್ಗಬೇಕು, ಹಬ್ಬಬೇಕು. ಏನೊಂದೂ ಶ್ರಮಿಸದೆ, ಕಾಲದ ಧೂಳು ಕೂತರೂ ಜಾಡಿಸದೆ ಆರಾಮಾಗಿ ಅಮ್ಮನಿತ್ತ ಆಶ್ವಾಸನೆಯ ಭರವಸೆಯಲ್ಲಿ ನೆಮ್ಮದಿಯಿಂದಿರುವ ಇವನ ಸ್ವಭಾವವನ್ನು ‘ಒಳ್ಳೆಯತನ’ವೆನ್ನಲೆ, ವಾಸ್ತವವರಿಯದ ಮೂರ್ಖತನವೆನ್ನಲೆ? +ರವಿಯತ್ತ ನನ್ನ ಬದಲಾದ ಭಾವನೆಗಳು ಎದೆಭಾರ ತಂದಿದ್ದವು. ಇತ್ತೀಚೆಗೆ ಹಲವು ಬಗೆಯಲ್ಲಿ ಅಪರೋಕ್ಷವಾಗಿ ರವಿಗೆ ಸೂಚನೆಗಳನ್ನು ನಿದುತ್ತಲೇ ಇದ್ದೆ. ಸಂಜೆಗಳಲ್ಲಿ ಏನಾದರೂ ಕೆಲಸ ಅಂಟಿಸಿಕೊಂಡು ‘ಬಿಜಿ’ಯಾಗತೊಡಗಿದೆ. ಮನೆಗೆ ಬಂದಾಗಲೂ ಅವನೆದುರೇ ಕುಳಿತಿರುವುದನ್ನು ನಿಲ್ಲಸಿ ನನ್ನ ಪಾಡಿಗೆ ರೂಮು ಸೇರಿ ಪುಸ್ತಕ ಹಿಡಿಯುತ್ತಿದ್ದೆ. ಆದರದೇಕೋ ರವಿಗೆ ನನ್ನ ವರ್ತನೆಗಳು ಕೂಗಿಹೇಳುವುದು, ಕೇಳಿಸಲೇ ಇಲ್ಲ. ಅಷ್ಟೆಲ್ಲ ನನ್ನ ಬದಲಾದ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವ ಸೂಕ್ಷ್ಮವಿರಲಿಲ್ಲವೋ, ಇಲ್ಲಿ ಅವನ ಅತ್ಯಂತ ಸರಳ ಚಿಂತನ ವಿಧಾನಕ್ಕೆ ಇವೆಲ್ಲವೂ ಹೊರತಾಗಿತ್ತೋ ತಿಳಿಯದು. +ಕೊನೆಗೆ ಏನೋ ತಟ್ಟನೆ ಹೊಳೆಯಿತು. ನಾನೇಕೆ ರವಿಯ ಹೊರತು ಬೇರೆ ಹುಡುಗರೊಡನೆ ಸ್ನೇಹದ ಮಟ್ಟದಲ್ಲೂ ಬೆರೆಯಲು ಹಿಂಜರಿಯುತ್ತೇನೆ? ಕಾಲೇಜು ದಿನಗಳಲ್ಲಾದರೆ ಅಪ್ಪನ ಹದ್ದುಬಸ್ತಿನ ಹೆದರಿಕೆಯಿತ್ತು. ಗಂಡುಹುಡುಗರೊಡನೆ ಮಾತನಾಡಿದರೂ ಮೈಲಿಗೆಯಾಗುತ್ತದೆಂಬ ಅಮ್ಮನಿಗೆ, ರವಿಯೊಬ್ಬನೇ ‘ರಿಯಾಯಿತಿ’ ಕಾರಣ, ಅವ ನನ್ನ ಸಂಬಂಧಿ_ನಾಳೆ ನನ್ನ ಗಂಡನಾಗುವವನು_ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮನ ದೃಷ್ಟಿಯಲ್ಲಿ ಅವನು ಬಹಳ ಒಳ್ಳೆಯ ಹುಡುಗ. ಬಹುಶಃ ಅಮ್ಮ ಅಪ್ಪ ನನ್ನ ಸುತ್ತ ಕಟ್ಟಿದ ಬೇಲಿಯಲ್ಲಿ ಪ್ರವೇಶಿಸಿದ್ದು ರವಿಯೊಬ್ಬನೆ. ಹಾಗೆಂದೇ ನಾನು ಅವನನ್ನು ಪ್ರೀತಿಸಿರಲಿಕ್ಕೂ ಸಾಧ್ಯ. ನಾನು ಇನ್ನೂ ಅದೇ ಮೌಲ್ಯಗಳನ್ನು ಬಿಗಿ ಹಿಡಿದು, ಹಾದಿಯಲ್ಲಿ ಸಹಪಾಠಿಗಳು ಸಿಕ್ಕರೂ ‘ಹಲೋ’ ಹೇಳಲೂ ಹಿಂದೆ ಮುಂದೆ ನೋಡುವುದೇಕೆ? +ಮನಸ್ಸಲ್ಲೇ ಏನೋ ನಿರ್ಧರಿಸಿದೆ_ +ಮತ್ತೆ ಮೆಲ್ಲನೆ ನನ್ನ ‘ಕಕೂನಿ’ನ ಒಂದೊಂದೇ ನೂಲ ಎಳೆ ಕಡಿದು ಹೊರಬರಲು ಪ್ರಯತ್ನಿಸಿದೆ. ಆಗಾಗ ಬರುವ ರಮೇಶನೊಡನೆ ಒಂದಿಷ್ಟು ಕೆಲಸದಾಚೆಗೂ ಹಗುರಾಗಿ ಮಾತನಾಡತೊಡಗಿದೆ. ಅಣ್ಣನ ಸ್ನೇಹಿತ ಬಂದಾಗಲೂ, ಅಮ್ಮ ಅಡಿಗೆ ಮನೆಯಿಂದಲೇ ದುರುದುರು ಕಣ್ಣು ಬಿಟ್ಟು ನೋಡಿದರು, ಅವನ ಥೀಸೀಸ್, ವಿದೇಶ ಯಾತ್ರೆ, ಎಂದೆಲ್ಲ ಹರಟಿದೆ. ಸಹೋದ್ಯೋಗಿಗಳ ಜೊತೆ ಮುಜುಗರ ಬಿಟ್ಟು ಮಾತನಾಡಲು ಕಲಿತೆ. +ಇದೀಗ, ನನ್ನ ಸ್ನೇಹಿತರ ವೃಂದ ಹೆಚ್ಚಿತು. ಹೊರ ಜಗತ್ತಿನ ಪದರ ಪದರಗಳು ತೆರೆದುಕೊಂಡವು. ರವಿಯ ಕಣ್ಣಿಗೂ ಇದು ಬಿತ್ತು. ತಟ್ಟನೆ ಅವನ ಹಣೆಯಲ್ಲಿ ದಟ್ಟ ಗೆರೆಗಳು ಒತ್ತೊತ್ತಾದವು. ಮತ್ತೆ ಅದೇ ತಿಂಗಳಲ್ಲಿ ವಾತಾವರಣ ಪೂರ್ಣ ಬದಲಾಯಿತು. +ಇತ್ತೀಚೆಗೆ ರವಿ ನಾನಿಲ್ಲದಾಗ ಅಗಾಗ್ಗೆ ಬಂದು ಅಪ್ಪ-ಅಮ್ಮನೊಡನೆ ಮಾತನಾಡಿ ಹೋದದ್ದು ತಿಳಿಯಿತು. “ಓದಾಯ್ತು ಕೆಲಸ ಆಯ್ತು ಇನ್ನು ಮುಂದೆ ಮದುವೆ ಮುಗಿಸೋವರೆಗೂ ನಮ್ಮ ಎದೆ ಭಾರ ಇಳಿಯೋಲ್ಲ….” ಅಮ್ಮನ ರಾಗ ಗಟ್ಟಿಯಾಯಿತು. ಈ ಬಿಡದ ಸಂಬಂಧದ ಕುಣಿಕೆ ನನ್ನ ಕುತ್ತಿಗೆ ಬಿಗಿಯುವ ಮೊದಲು ಪಾರಾಗಲು ತಹತಹಿಸಿದೆ. +ಹೇಗೆಂದು ಗೊತ್ತಾಗದೆ ಒದ್ದಾಡುವಾಗ, ಅಂಥ ಅವಕಾಶವೊಂದು ಬಾಗಿಲು ಬಡಿಯಿತು! +ಬೆಳಿಗ್ಗೆ ಇನ್ನೂ ಆಫೀಸಿಗೆ ಕಾಲಿಡುತ್ತಿದ್ದಂತೆ, ಲೀಲಾ ಓಡಿ ಬಂದು ಕೈ ಒತ್ತಿ “ಕಂಗ್ರಾಟ್ಸ್” ಎಂದು ಅತ್ಯುತ್ಸಾಹದಿಂದ ಕೂಗಿದಳು. +“ಏನಕ್ಕೆ?” ಅರ್ಥವಾಗದೆ ಕೇಳಿದೆ/ +“ಜರ್ಮನಿಗೆ ಕಳಿಸೋರಲ್ಲಿ ನಿನ್ನ ಹೆಸರೂ ಇದೆ. ಉನ್ನತ ವ್ಯಾಸಂಗಕ್ಕಂತೆ….” ಅಂದಳು. +“ಹಾಂ….” ಎಂದು ಕಣ್ಣರಳಿಸಿದೆ. ಎಷ್ಟು ಅನಿರೀಕ್ಷಿತವಿತ್ತು! +“ಒಂದೂವರೆ ವರ್ಷ ಮಜ ಮಾಡು. ಇಡೀ ಯೂರೋಪ್ ಸುತ್ತಿಬರಬಹುದು….” ನಾನು ಏನೂ ಹೇಳಲಿಲ್ಲ. +“ಏನು ಮದುವೆ ಮಾಡಿಕೊಂಡೇ ಹೋಗೋದಾ?” ಅವಳೇ ಕೇಳಿದಳು. ನಾನು ಸುಮ್ಮನೆ ಅವಳ ಮುಖವನ್ನೇ ನೋಡಿದೆ. ನನಗೆ ಗೊತ್ತಿತ್ತು ಅಮ್ಮ ಮದುವೆ ಇಲ್ಲದೆ ನನ್ನನ್ನು ಜರ್ಮನಿಗೆ ಖಂಡಿತಾ ಕಳಿಸೋಲ್ಲ. ಇಲ್ಲಿಯವೆರೆಗೂ ಹೇಗೋ ಮುಂದೂಡುತ್ತ ಬಂದ ನಿರ್ಧಾರವನ್ನು ಈಗ ಕೈಗೊಳ್ಳುವ ಸಮಯ ಬಂದೇಬಿತ್ತಿತ್ತು. ಬಹಳ ಹೊತ್ತು ಏನು ಉತ್ತರಿಸಲೂ ತಿಳಿಯಲಿಲ್ಲ. ನಂತರ ಮೆಲ್ಲನೆ ಹೇಳಹೊರೆಟೆ. ಸಂಬಂಧವೇ ಇಲ್ಲದಂತೆ_ +“ಲೀಲಾ, ನನ್ನ ಗಂಡ ಮಹತ್ವಾಕಾಂಕ್ಷೆಯ ಮನುಷ್ಯನಾಗಿರಬೇಕು. ಈ ಬಗೆಯ ಪೌರುಷ, ಏನಾದರೂ ಆಗಬೇಕೆಂಬ ಛಲ….. ನಾನು ಬರೀ ಗಂಡಸರಲ್ಲಿ ಮಾತ್ರ ಬಯಸುತ್ತಾ ಇಲ್ಲ. ಏನೊಂದೂ ಆಗದೆ ಗಂಡಂದಿರ ‘ಹೆಂಡತಿ’ ಮಾತ್ರ ಆಗಿ ತಮ್ಮ ಸತಿತ್ವವನ್ನೆ ಪ್ರಶಸ್ತಿಯಂತೆ ಧರಿಸಿ ಬೀಗುವ ಹೆಂಗಸರನ್ನು ಕಂಡರು ನನಗೆ ಆಗದು….” ಇನ್ನು ಏನೇನೋ ಹೇಳಿದೆ. ಲೀಲಾ ಪೂರಾ ಗೊಡಲಗೊಂಡು….. +“ಏನೇ ಹಾಗೆಂದರೆ….? ನಿನ್ನ-ರವಿ ಮದುವೆ?” ಅವಳ ಪ್ರಶ್ನೆಗೆ ನಾನು ಉತ್ತರಿಸದೆ ನನ್ನ ಮೇಜಿಗೆ ಹೋಗಿ ಕುಳಿತೆ. ಎದುರಿಗಿದ್ದ ರಾಶಿ ಫೈಲ್‌ಗಳನ್ನು ಪಕ್ಕಕ್ಕೆ ಸರಿಸಿ, ಕನ್ನು ಮುಚ್ಚಿ ಚಿಂತಿಸಿಯೇ ಚಿಂತಿಸಿದೆ_ ‘ಅಬ್ಬ, ಈ ಹದಿನಾರಕ್ಕೆ ಮೊಳೆತು ಬಿಡುತ್ತಲ್ಲ ಪ್ರೀತಿ, ಅದು ಇಪ್ಪತ್ತು ದಾಟಿದ ಮೇಲು ಉಳಿಯೊದು ಏಕಿಷ್ಟು ಅಪರೂಪ? ನನ್ನ ಪ್ರೀತಿ ಸತ್ತ ಕೆಟ್ಟ ವಾರ್ತೇನ ಅವನಿಗೆ ಹೇಗೆ ಹೇಳಲಿ? ಹೇಗೊ ಆ ವಯಸ್ಸಿನಲ್ಲಿ ಹೇಳಿದ್ದು, ಪ್ರಮಾಣಿಸಿದ್ದು, ಕೈ ಹಿಡಿದು ನಡೆದದ್ದು, ಎಲ್ಲವನ್ನೂ ಎದುರಿಗಿಟ್ಟು ಕಟ್ಟಿ ಹಾಕುತ್ತಾನೆ ಅನ್ನಿಸುತ್ತೆ. ಎಷ್ಟು ಬಾರಿ ಹೇಳಿಬಿಡಲೇ ಅನ್ನಿಸಿದೆ, ಆದರೆ ಅವನ ಕಣ್ಣು ಕನಸುಗಳು ಕುಸಿಯದಂತೆ ಹೇಗೆ ಹೇಳುವುದು? ‘ನೀ ಬದಲಾದೆ’ ಅಂತಾನೆ. ‘ಮೀಸ್ ಮಾಡಿದೆ, ಕೈಕೊಟ್ಟೆ, ಪ್ರೀತಿಗೆ ಅಂತಸ್ತು ಸ್ಥಾನಮಾನ ಅಡ್ಡ ಬರುತ್ತಾ….”’ ಅಂತ ಭಾಷಣ ಬಿಗಿಯುತ್ತಾನೆ.’ +ನನ್ನಲ್ಲೇ ಬಹಳ ಯೋಚಿಸಿದೆ. ಬದುಕಿನ ನಿರ್ಧಾರಗಳನ್ನು, ನಿರ್ಣಯಗಳನ್ನು ನಿರಂತರವಾಗಿ ಮುಂದೂಡಲಾಗದು. ಸಂಜೆ ರವಿಗೆ ಬರಲು ಹೇಳಿಬಿಡಬೇಕು. ಕಡೆಗೂ ನಿಶ್ಚಯಿಸಿ ನಿರಾಳವಾಗಿ ಕೆಲಸದಲ್ಲಿ ತೊಡಗಿದೆ. +ಸಂಜೆ ಮನೆಗೇ ಬಂದ. ಹೊರಗೆ ಅಡ್ಡಾಡಿ ಬರೋಣವೆಂದು ಹೊರಟೆ. ಅವನು ಹಿಂಬಾಲಿಸಿದ. ನಾನು ಹೇಳುವ ಮೊದಲು, ಅವನೇ ಕೇಳಿದ_ +“ಶಶಿ, ಜರ್ಮನಿಗೆ ಹೋಗೊದಕ್ಕೆ ನೀ ಆಯ್ಕೆ ಆಗಿದ್ದೀಯಂತೆ….” +“ಹೂಂ….” +“ಈಗ ಮತ್ತೊಂದು ಡಿಗ್ರಿ ತೆಗೆದುಕೊಂಡು ಏನಾಗಬೇಕು ಶಶಿ….? ತನ್ನ ಸಾಹಸಹೀನ ಬಾಳಿನ ತತ್ವವನ್ನೇ ನನಗೂ ಬೋಧಿಸುತ್ತಿದ್ದಾನೆ ಎನಿಸಿ ಹೇಳಿದೆ_ +“ಹೆಚ್ಚಿನ ಪದವಿಗಳಿಂದ ತೊಂದರೆ ಏನೂ ಇಲ್ಲವಲ್ಲ….” +“ಅಲ್ಲ ನಮ್ಮ ಮದುವೆ, ಅದರಾಚೆ ನಾನು ಬರೋದು ಅಂದರೆ, ನನಗೆ ಆರು ತಿಂಗಳಿಗಿಂತ ಹೆಚ್ಚು ರಜೆ ಸಿಗೋಲ್ಲ…..” +“ನೀನು ಬರೋ ಅವಶ್ಯಕತೆ ಇಲ್ಲ. ನಾನು ಓದೋಕ್ಕೆ ಹೋಗ್ತಾ ಇರೋದು…..” ನಾನು ಅವನ್ನೆಲ ಯೋಜನೆಗಳನ್ನು ಮೊಟಕುಗೊಳಿಸಿ ಹೇಳಿದೆ. ಅವನು ಒಂದು ಕ್ಷಣ ಏನು ಹೇಳಲು ತೋರದೆ ನನ್ನ ಮುಖವನ್ನೇ ಗಲಿಬಿಲಿಗೊಂಡು ನೋಡಿದ, ತಡವರಿಸಿದ. ಇವನಿಗೆ ನನ್ನನ್ನು ತಡೆದು ನಿಲ್ಲಿಸುವ ಧೈರ್ಯವೂ ಇಲ್ಲವೇ? +“ಶಶಿ, ನಿನಗೆ ಹೋಗಲೇಬೇಕೆಂದಿದ್ದರೆ ಮದುವೆ ಮುಗಿಸಿಕೊಂಡು ಹೋಗು….” ಮೆಲ್ಲನೆ ಹೇಳಿದ, ಸ್ವರದಲ್ಲಿ ಆತ್ಮವಿಶ್ವಾಸವು ಇರಲಿಲ್ಲ. +“ರವಿ, ನಾನು ನಮ್ಮ ಮದುವೆಯ ಬಗ್ಗೆ ಯೋಚಿಸಿಯೇ ಇಲ್ಲ…..”ಎತ್ತಲೋ ನೋಡುತ್ತ ಉತ್ತರಿಸಿದೆ. ರವಿ ಈಗ ನನ್ನನ್ನು ನೇರವಾಗಿ ನೋಡಿದ. ಮೊದಲ ಬಾರಿಗೆ ಅವನು ನನ್ನ ಕಣ್ಣಲ್ಲಿಯ ಭಾವಗಳನ್ನು ಓದುವ ಪ್ರಯಾಸ ಮಾಡಿದ. +“ಹಾಗಂದರೆ ಶಶಿ….? ಅಷ್ಟಕ್ಕೇ ನಿಲ್ಲಿಸಿದ. +“ನನ್ನ ಮದುವೆಯ ಬಗ್ಗೆ ನಾನು ನಿರ್ಧಾರವನ್ನು ಕೈಗೊಂಡಿಲ್ಲ. ಕಿಶೋರದ ಆಸೆ ಭಾಷೆಗಳಿಗೆ ಬದುಕನ್ನು ತಗುಲಿಹಾಕುವ ಬಗ್ಗೆಯೇ ನನ್ನಲ್ಲಿ ಮೂಲಭೂತ ಪ್ರಶ್ನೆಗಳೆದ್ದಿವೆ.” +ಈಗ ರವಿ ಪೂರ್ಣ ಬಿಳುಚಿಕೊಂಡ. +“ಏನು ಹೇಳ್ತಾ ಇದ್ದೀಯ ಶಶಿ?” ಬೆಚ್ಚಿ ಕೇಳಿದ. +ನಾನು ಹೇಳಿದೆ ಬಹಳಷ್ಟು. +ಸಂಜೆ ಕೆಂಪು ಕರಗಿ ಕಪ್ಪಾದ ಮೇಲು, ಹೇಳುತ್ತಲೇ ಇದ್ದೆ_ +“ರವೀ ನೀ ನಿಂತಲ್ಲೇ ನಿಂತೆ, ಮಡುವಾದೆ, ಕೆಸರಾದೆ. +ನಾ ಹರಿದು ಹೋದೆ ರಭಸವಾಗಿ ಭೋರ್ಗರೆದು, +ತೆರೆಯಾಗಿ, ತೊರೆಯಾಗಿ, ಝರಿಯಾಗಿ…. +ಕ್ಷಣ ನಿಲ್ಲದ ಬದುಕಿನ ಗತಿಯಾಗಿ, +ನಾನು ಹೇಗೆ ಬಿಡಿಸಿ ಹೇಳಲಿ, ಇದಕ್ಕೂ ಸ್ಪಷ್ಟವಾಗಿ?” +ರವಿ ಮೌನವಾದ. ನಿಧಾನವಾಗಿ ಹೊರಡಲು ಮೇಲೆದ್ದೆ. ಆವರಿಸಿದ ಕತ್ತಲಲ್ಲಿ ಸದ್ದಿಲ್ಲದೆ ಹೆಜ್ಜೆ ಹಾಕಿದೆವು. ಮುಂದೆಂದೂ ಒಂದಾಗದ ಹೆಜ್ಜೆಗಳು ಕ್ಷಣ ಹೊತ್ತು ಜೊತೆಯಾಗಿ ನಡೆದವು….. ವರ್ತಮಾನದ ತುದಿಯವರೆಗೂ. +ನಾಳಿನ ನಮ್ಮ ಭವಿಷ್ಯ ಬೇರೆಯಾಗಿ ಕಾದಿತ್ತು. +***** +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […] +ಮೊದಲ ಪಾದ ಕೆರೆ ದಂಡೆಯ ಕಲ್ಲಮೇಲೆ ಕುಳಿತು ಮುಳುಗುತ್ತಿದ್ದ ಸೂರ್‍ಯನನ್ನೇ ದಿಟ್ಟಿಸುತ್ತ ಯಶವಂತನ ಕಣ್ಣೊಳಗೆ ಸೂರ್‍ಯ ಚೂರುಚೂರಾಗಿ ನೀರ ತೆರೆಗಳ ಮೂಲಕ ಪ್ರತಿಫಲಿಸುತ್ತಿದ್ದ. ಕತ್ತಲು ಪುರಾತನ ಹಾದಿಯಲ್ಲಿ ಸಾಗುತ್ತಿತ್ತು. ನೀರಕ್ಕಿಗಳು ಹಗಲಲ್ಲೆ ಹಾಡಿ ಹಾರಾಡಿ […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_295.txt b/Kannada Sahitya/article_295.txt new file mode 100644 index 0000000000000000000000000000000000000000..0260cc226b3f0a11fb5b84c7f3c3f96790d7c08e --- /dev/null +++ b/Kannada Sahitya/article_295.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, +ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು +ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು +ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ +ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ +ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ +ರಾಯಣ್ಣ ನಾಯಕಂ! ಇಕ್ಕಿದರು ಕಂಗೊಳ್ಳಿ +ಆಕ್ರಮಣಶೀಲರ್ಗೆ! ಕೌಟಿಲ್ಯ ಜಾಲದಲಿ +ಸೆರೆಯಾಗಿ, ಸಾವಿಗೀಡಾಗಿ, ಶೂಲಕ್ಕೇರಿ +ನಗುನಗುತ ಹರಣಮಂ ತೊರೆವ ಕೊನೆ ನಿಮಿಷದಲಿ +ಅವರ ತೇಜದ ಬೀಜ ಕನ್ನಡದ ಮಣ್ಣಿನಲಿ +ಮೊಟ್ಟ ಮೊದಲಿಗೆ ಮೊಳೆಯಿತೈ ಬಾವುಟವನೂರಿ! +ಮೊದಲು ನೆನೆಯಿರಿ ಅವರನಾ ಪರಾಕ್ರಮಿಗಳಂ +ನಾಡಗುಡಿ ಕೀರ್ತಿ ದುಂದುಭಿ ನಿನದ ಪಾತ್ರರಂ. +***** +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […] +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_296.txt b/Kannada Sahitya/article_296.txt new file mode 100644 index 0000000000000000000000000000000000000000..36a2971d58a2472662f12b54777015fe8608d47a --- /dev/null +++ b/Kannada Sahitya/article_296.txt @@ -0,0 +1,99 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. ಆತನಿಗೆ ಕುಳಿತುಕೊಳ್ಳುವಷ್ಟು ಪುರುಸೊತ್ತಿರಲಿಲ್ಲ. ಆಕೆ ಸಧ್ಯಕ್ಕೆ ತಾನು ಅದರ ಮೇಲೆ ಕುಳಿತುಕೊಳ್ಳಲೆ ಅಂತ ಕೇಳುದನಿಯಲ್ಲಿ ಕೇಳಿದ್ದಳು-ಅಷ್ಟೆ. ಅಷ್ಟಕ್ಕೇ ಆರ್ಭಟ! +ಬಸ್ಸು ಹತ್ತುವ ಮೊದಲು ನಾವೇ ಕೇಳಿದ್ದೆವು. ಅವರ ಸಂಭಾಷಣೆ. ಭರ್ತಿಯಾಗಿಯೇ ಬಂದಿದ್ದ ಬಸ್ಸಿನಲ್ಲಿ ಜನ ಒತ್ತೊತ್ತಿ ಹತ್ತುತ್ತಿದ್ದರೂ ಆತ ಹತ್ರೀ ಹತ್ರೀ…. ಅಂತ ಕೂಗುತ್ತಿದ್ದ. ಹತ್ತದೆ ಒಂದು ಬದಿಯಲ್ಲಿ ನಿಂತಿದ್ದ ಅವಳೊಡನೆ ಅವಸರವಸರವಾಗಿ “ಎಲ್ಲಿಗೆ?….ಎಲ್ಲಿಗೇ?”ಆಕೆ ಹೇಳುತ್ತಲೂ +“ಮತ್ತೆ! ಹತ್ತಿ ಮತ್ತೆ!” +“ಸೀಟಿಲ್ಲವಲ್ಲ” +“ಇನ್ನೊಂದು ಬಸ್ಸೂ ಹೀಗೇ…ಬನ್ನೀ ಹತ್ತಿ, ಹತ್ತಿ ಬೇಗ” +“ಇಲ್ಲ…ನಿಲ್ಲೋಕೆ ಆಗಲ್ಲಪ್ಪ ನನಗೆ.” +“ಒಂದು ಸೀಟಿಲ್ಲವ. ಕೊಡುವ ಬನ್ನೀ….” ಕಿರಿಚಿದ- ಯಾವತ್ತು ಹತ್ತುವವರಲ್ಲ. ಹತ್ತದವರೇ ಲೆಕ್ಕವಷ್ಟೆ ಅವರಿಗೆ? ಆತ ಸೀಟು ಕೊಡುವ ಎಂದ ಮೇಲೆಯೇ ಆಕೆ ಸಾಲು ಸೇರಿದಳು. ನಮ್ಮ ಹಿಂದೆಯೇ ಬಸ್ಸಿನೊಳಗೆ ಬಂದಳು. ಮೇಲೆ ಬಂದ ಮೇಲೆ ಸೀಟಿನ ಮಾತೇ ಎತ್ತದ ಆತನ ಬಳಿ ಟಿಕೆಟ್ ಹರುಯುವಾಗ ಹಾಗೆ ಕೇಳಿದರೆ ಆತನ ಅಬ್ಬರ “ಏನು. ನಾನು ನಿಂತಿರಬೇಕ? ಏನಂದಾಜು ನಿಮ್ಮದು? ಕಂಡಕ್ಟರ್ ನಿಂತು ಸಾಯಲಿ ಅಂತನ?” +ಬೆಳಗಿನ ಜಾವ ಎದ್ದು ಡ್ಯೂಟಿಗೆ ಹೊರಟವ. ಮನೆಯಲ್ಲಿ ತಿಂಡಿ ಕಾಫಿ ಸರಿಯಾಗಿ ಆಗಿದೆಯೋ ಇಲ್ಲವೋ. ಹೊಟ್ಟೆಯಲ್ಲಿ ಏನು ಸಿಟ್ಟೋ-ಹೊಮ್ಮಲು ಬಂದು ನೆಪ ಬೇಕಾಗಿರಬಹುದು….ನಿಂತವರು ನಾವು ಹೀಗೆಣಿಸುತ್ತ ನಿಂತೆವು. +ಪ್ರಯಣಿಕರೆಲ್ಲ ಮೌನ ಹೊದ್ದಂಥ ಹೊತ್ತದು ‘ತಂಪು. ಜೊಂಪು ಹೊತ್ತು’ ಕಲಕಲರಾಗಲು ಪೂರ್ವ ಕಣ್ಣುಜ್ಜಿ ಏಳಬೇಕು. ಇಂತಹ ಪ್ರಶಾಂತ ಚುಮುಚುಮುವನ್ನು ಪರಚಲು ಅವನಿಗೆ ಮನ ಬಂತೆಂದರೆ! +ಇಂಥ ಸಂದರ್ಭಗಳಲೆಲ್ಲ ಹೆಚ್ಚಾಗಿ ಪ್ರಯಾಣಿಕರು ಬೆಪ್ಪು ನಿಲ್ಲುತ್ತಾರೆ. ಅಲ್ಲವಾದರೆ ತಾವೂ ಎರಡು ಮಾತು ಕಾಸಿ ಬಿಸಾಕುತ್ತಾರೆ. ಒಮ್ಮೊಮ್ಮೆ ಮಾತಿಗೆ ಮಾತು ಸಿಕ್ಕಿ ಸಿಕ್ಕು ಸಿಕ್ಕಾಗಿ ಆಮೇಲೆ ಎಳೆದು ಗಂಟು ಬಿಡಿಸಲು ತುದಿಯೇ ಕಾಣದಾಗಿ…. +ಆದರೆ ಈಕೆ ನೋಡಿದರೆ ಮೇಲು ನಗುತ್ತಿದ್ದಾಳೆ: ಅವಳೊಳಗೇ ಎಂಬಂತೆ. ನಿಲ್ಲಲಿಕ್ಕಾಗುವುದಿಲ್ಲ ತನ್ನಿಂದ ಅಂತ ಹೇಳಿಕೊಂಡೇ ಬಸ್ಸು ಹತ್ತಿದವಳು. ಆ ದೊಡ್ಡ ಸ್ವರದೆದುರು ಸಣ್ಣ ನಗೆ ಬಿಡಿಸಿಕೊಂಡು ನಿಂತಿದ್ದಾಳೆ. ಹದವಾದ ಎತ್ತರದ ನಡುವಯದ ಹಳ್ಳಿಯವಳೂ ಅಲ್ಲದ ಪೇಟೆಯವಳೂ ಅಲ್ಲದಂತಿರುವ ಅವಳ ಸಣ್ಣ ಕಣ್ಣುಗಳ ಚೂಪು ನೋಡಿದ್ದೂ ಆಗಲೇ ನಾವು. ಆತ ಹಾಗೆ ಅರಚದೇ ಇದ್ದಿದ್ದರೆ ಅತ್ತ ತಿರುಗುತ್ತಲೂ ಇರಲಿಲ್ಲ. ನಾವು ಬಹುಶಃ ಅವಳನ್ನು ಗಮನಿಸುತ್ತಲೂ ಇರಲಿಲ್ಲ. +ಕಂಡಕ್ಟರ್ ಅವಳ ನಗೆಯನ್ನೆ ಕುಕ್ಕುವಂತೆ ನೋಡುತ್ತ ಪಕ್ಕದ ಪ್ರಯಾಣಿಕನನ್ನು ಗದರಿ ಕೇಳಿದ “ಯೆಲ್ಲಿಗೆ?” ಆತ ಹೆದರಿ ಇಂಥಲ್ಲಿಗೆ ಎನ್ನಲು “ಯೆಷ್ಟು ಹೇಳಿ” -ಕಣ್ಣು ನಗು-ನಿಶ್ಚಿಂತೆಯಿಂದ ನಿಂತ ಅವಳ ಕಡೆ ಮತ್ತೆ ಉರಿದು ಭಗ್ಗಂದಂತೆ “ಸೀಟು ಬೇಕು ಸೀಟು! ಅಷ್ಟಿದ್ದವರು ಮೊದಲೇ ಬರಬೇಕಿತ್ತು. ಏನು. ನಿದ್ದೆ ಮಾಡುತ್ತಿದ್ದೀರ….? ನಿದ್ದೆಗೆ ನಿದ್ದೆಯೂ ಬೇಕು ನಿಮಗೆ. ಸೀಟಿಗೆ ಸೀಟೂ”-ಅತ್ತಿತ್ತ ಒಂದೆರಡು ನಗೆಗಳು ಖಳ್ಳೆಂದವು. +ಆಯಿತು ಹೋಯಿತೆನ್ನದೆ ಎಲ ಇವನ. ಎಷ್ಟುದ್ದ ಎಳೆಯುತ್ತಿದ್ದಾನೆ! ಇಷ್ಟಕ್ಕೂ ಆ ಬಸ್ಸು ಊರಿಗೆ ಬರುವ ಮುಂಚೆಯೇ ಭರ್ತಿಯಾಗೇ ಬಂದಿತ್ತಲ್ಲ. ರಾತ್ರಿ ಇಡೀ ನಿದ್ದೆ ಮಾಡದೆ ಬಸ್‌ಸ್ಟಾಪಿನಲ್ಲಿ ನಿಂತು ಕಾದಿದ್ದರೂ ಸೀಟು ಸಿಗುವ ಆಸೆಯಿರಲಿಲ್ಲ. +ಟಿಕೆಟು ಕೊಡುತ್ತ ನಮ್ಮ ಸಮೀಪ ಬಂದ. ಎಲ್ಲಿಗೆ? ಇಂಥಲ್ಲಿಗೆ. ಇಷ್ಟು…. ಟಿಕೆಟು ದುಡ್ಡು ಚಿಲ್ಲರೆ ಎಲ್ಲ ಯಂತ್ರವತ್ ನಡೆಯುತ್ತಿದ್ದಂತೆ ಪಟಕ್ಕನೆ ಅವಳತ್ತ ನೋಡಿದ. ಆಶ್ಚರ್ಯದಿಂದ ನಾವೂ ಅಲ್ಲಿ. ಇನ್ನು ಮಾಸದ ಹರಡಿಕೊಂಡೇ ಇರುವ ಅವಳ ನಗು! ಆತ ಒಮ್ಮೆ ಉರಿದುಬಿದ್ದಂತೆ ಟಿಕೆಟು ಕಟ್ಟನ್ನು ಕೈಗೆ ಕುಕ್ಕಿ ಬಡಿದುಕೊಂಡ. “ಇಷ್ಟು ಜನ ನಿಂತಿದ್ದಾರೆ ಇಷ್ಟು ಜನ! ಸೀಟು ಬೇಕಂತೆ. ಮೇಲೆ ಟಾಪ್ ಮೇಲಿದೆ ನೋಡಿ ಸೀಟು!”….ಮುಂದೆ ಹೋದ. +“ಛುಕ್” -ವ್ಯಥೆ ಮಿಡಿದಳು ಶೋಭನಾ. +“ಸೀಟು ಕೊಟ್ಟರಾದರೂ ಸಮ. ಕೊಡದೆಯೇ ರಾಪು ನೋಡು.” +“ಕೊಡಲಾರದ್ದಕ್ಕೆ ರಾಪು ಮತ್ತೆ” +“ಸುಮ್ಮನಿರು. ಮೆಲ್ಲ ಮಾತಾಡು.” +ಟಿಕೆಟು ಮುಗಿಸಿ ಆತ ನಮ್ಮನ್ನು ದಾಟಿ ಹಿಂದಕ್ಕೆ ಹೊರಟಂತೆ ಆ ಕಡೆಗೇ ತಿರುಗಿ ನಿಂತೆವು. ಅರೆ. ಆಕೆ ಕೇಳಿದ ಅದೇ ಸೀಟಿನ ಮೇಲೆ ವ್ಯಕ್ತಿಯೊಬ್ಬ ಆಗಲೇ ಕುಳಿತಾಗಿದೆ! ಹೇಳಿಲ್ಲ ಕೇಳಿಲ್ಲ. ಕಂದಕ್ಟರ್ ನೋದಿಲ್ಲವೆ? ಇಲ್ಲ. ಅವನಿಗಿನ್ನೂ ಬಿಡುವಾಗಿಲ್ಲ. ಆಕೆ ಕೈ ಸೋತು ಕೆಳಗಿಟ್ಟಿದ್ದ ಬುಟ್ಟಿ ಕಣ್ಣಿಗೆ ಬಿದ್ದಿದೆ. ಅದನ್ನು ಪಟಾರನೆ ತುಳಿದ. “ಕಾಲಡಿ ಕೈಯಡಿ ಇಡುತ್ತೀರಲ್ಲ. ನಿಮಗೇನು ಭಾಷೆ ಇಲ್ಲವ?”ಮತ್ತೆ ಅರಚಿದ. ತನ್ನ ಅರಚಲು ತನಗೇ ತಡೆಯಲಾರದೆ ಆ ದನಿ ಕೊಂಚ ಕಳಕಿತು. ಅಲ್ಲೇ ಕಿಟಕಿಗೆ ಮೊಣಕೈಯೂರಿ ಗಲ್ಲಕ್ಕೆ ಅಂಗೈಯಾನಿಸಿ ನೋಡುತ್ತಿದ್ದ ಒಬ್ಬ ವಯಸ್ಸಾದ ಹೆಂಗಸು “ಅವಳಿಗಾದರೂ ಏನದು- ತೆಗೆದುಕೊಂಡು ಹೋಗುವಂಥ ನಗೆ!” “ಹೂಂ. ಹೋಕಿಲ್ಲದ್ದು. ಕೆಲವು ಹೆಂಗಸರು ಹಾಗೇಪ್ಪ. ಥು” ಪಕ್ಕದವಳು. ಆತನಿಂದಲ್ಲ. ಅವಳ ನಗೆಯಿಂದಲೇ ಆ ಬುಟ್ಟಿ ಉರುಳಿತೋ ಏನು! +ಬುಟ್ಟಿಯ ಒಳಗಿನದು ಪೂರ್ತಿ ಹೊರ ಬೀಳುವ ಮೊದಲೇ ಬಗ್ಗಿ ಅದನ್ನಾಕೆ ಎತ್ತಿಟ್ಟುಕೊಂಡಳು. ಏನೂ ಆಗಿಲ್ಲದಂತೆ ಮತ್ತೆ ನಗೆ ಹಚ್ಚಿ ನಿಂತಳು. ಆಚೆ ಈಚೆಯಿಂದ ಒತ್ತುವ ಜನಗಳು. +ಜನ ಎನ್ನುವ ಬದಲು ಪ್ರೇಕ್ಷಕರು ಎನ್ನುವ ಮತ್ತು ಅದು ಎರಡೇ ಪಾತ್ರಗಳಿರುವ ನಾಟಕ ಅಂದುಕೊಳ್ಳುವ. ಡಯಲಾಗು ಒಬ್ಬನಿಗೆ. ಮೌನ ನಗೆಯ ಮುಗುಳು ಇನ್ನೊಂದು ಪಾತ್ರಕ್ಕೆ. ಹೀಗೆ. ಇದು ನಾಟಕವೋ ಎಂಬಂತೆ ನೋಡುತ್ತಿರುವಾಗ ಆತ ಅಂತೂ ಬಸ್ಸಿನ ಹಿಂಭಾಗ ತಲುಪಿ ತನ್ನ ಸೀಟಿನ ಮೇಲೆ ಕುಳಿತಿದ್ದವನ ಕಡೆಗೆ ಬಂದು ಪರಿಚಯದ ನಗೆ ಬೀರಿ “ಓ ಸ್ವಾಮಿ. ಮೋಡೆ?” ಎಂದ. ನೀವು ಹತ್ತಿದ್ದು ನೋಡಲೇ ಇಲ್ಲವಲ್ಲ. ಯಾವ ಮಾಯಕದಲ್ಲಿ ಹತ್ತಿದಿರಿ ಎನ್ನುತೆನ್ನುತ್ತ ಟಿಕೆಟು ಹರಿದ. ಕೊನೆಯ ಮೆಟ್ಟಿಲ ಮೇಲೆ ನಿಂತು “ಹಡಬೆಟ್ಟಗಳೆಲ್ಲ ಹತ್ತಿ ಜೀವ ತಿಂತಾರೆ ಮಾರಾಯರೆ” ಮುಂತಾಗಿ, ಇಂಥದೇ ಮುಂತಾದ ಇನ್ನೂ ‘ಹಡಬೆಟ್ಟ’ ಮಾತುಗಳನ್ನು ಮುಂದುವರೆಸಿದ. ಆತ ಕೆಟ್ಟ ಬಾಯಿ ನಿಲ್ಲಿಸುತ್ತಿಲ್ಲ. ಅವಳು ಮೆಲುನಗೆ ನಿಲ್ಲಿಸುತ್ತಿಲ್ಲ. ಉಳಿದವರು ನೋಡುವುದನ್ನೂ ನಿಲ್ಲಿಸುತ್ತಿಲ್ಲ. +“ಅಥವಾ ಅವಳ ಮುಖವೇ ಹಾಗೋ. ಗ್ರಾಚಾರಕ್ಕೆ?” +“ಸುಮ್ಮನೆ ಆಕೆ ನಿಂತಿರೋದರಿಂದಲೇ ಆತ ಹಾಗೆ ಮಾತಾಡ್ತಿರುವುದು.” +“ಸರಿ. ಜಗಳಾಡು. ಅವಳ ಬದಲಿಗೆ ನೀನು.” +ಏನೂ ಮಾಡದೆ ನಾವು ಐದಾರು ಮಂದಿ ಪಿಸು ಚಕಮಕಿಯಲ್ಲಿ ನೋಡುತ್ತಲೇ ಇದ್ದೆವು. +“ನಾವು ರಾಜಮಹಲ್ ಬಸ್ಸಿಗೇ ಬರಬಹುದಿತ್ತು. ಅದರ ಕಂಡಕ್ಟರ್ ಎಷ್ಟು ಒಳ್ಳೆಯವ. ವಿನಯವಂತ ಮರ್ಯಾದಸ್ತ.” +“ಅಯ್ಯ. ಕಂಡಕ್ಟರನ್ನು ನೋಡಿ ಬಸ್ಸು ಹತ್ತೋಕಾಗುತ್ತನೆ?” +“ಇಷ್ಟಕ್ಕೂ ಇಲ್ಲಿ ಗಲಾಟೆ ಮಾಡ್ತಿರೋದು ಕಂಡಕ್ಟರ್ ಅಲ್ಲಮ್ಮಾ. ಒಬ್ಬ ಶುದ್ಧಾಂಗ ಪುರುಷ.” +“ಪುರುಷ ಅಲ್ಲ. ಗಂಡಸು. ‘ಪುರುಷ’ ಬಹಳ ಒಳ್ಲೆಯ ಶಬ್ದ ತಿಳಕೋ.” +“ಸರಿ. ಒಬ್ಬ ಶುದ್ಧಾಂಗ ಗಂಡಸು.” +“ಮತ್ತು ಆಕೆ?” +ನಾಟಕ ತನ್ನಷ್ಟಕ್ಕೆ ಹಿಗ್ಗುತ್ತ ಇತ್ತು. +ಈಗವಳು ಹೆಜ್ಜೆ ಬದಲಿಸಿ ಕಂಡಕ್ಟರನ ಕಡೆಗೆ ಅರೆಮುಖ ಮಾಡಿ ನಿಂತಳು. ನಗೆಯ ಎಳೆ ಕಾಣುವಂತೆ. ಮುಖ ಪೂರ್ತಿ ಕಾಣದಂತೆ. ದಿಢೀರನೆ ಹತ್ತಿಕೊಳ್ಳುವ . ನಂದಿ ಹೋಗಿ ಒಳಗೇ ಗೆಮೆಯುವ ಬೆಂಕಿಯಂತಹ ಆತನ ದೃಷ್ಟಿ ಅತ್ತ ಇತ್ತ ಚಲಿಸುತ್ತ ನಡುವೆಯೊಮ್ಮೆ ಅವಳನ್ನು ದಾಟಿ ಹೋಗದೆ ನಿರ್ವಾಹವಿಲ್ಲ. ಎಷ್ಟು ಕಷ್ಟವೋ, ಆತನಂತೂ ಕಿರಿಚಿದ “ಎಂಥೆಂಥಾ ಪ್ಯಾಸೆಂಜರುಗಳು ಅಂತೀರಿ. ಬಸ್ಸು ಹತ್ತಿದ ಕೂಡಲೇ ‘ಸೀಟು!’. ಸೀಟನ್ನು ಕುಂಡೆಗೆ ಕಟ್ಟಿಕೊಂಡೇ ಬರಬಹುದಲ್ಲ.” ಕಂಡಕ್ಟರ್ ಸೀಟಿನ ಮೇಲೆ ಕುಳಿತಿದ್ದವ ಕತ್ತು ತಿರುಗಿಸಿ ತಲೆದೂಗಿ ನಕ್ಕ. ಆತ ಆ ಶಬ್ದವನ್ನು ಉಚ್ಚರಿಸಿದ ರೀತಿಯೇ ಹಾಗಿತ್ತು. ಅಂತಹದಕ್ಕಾಗಿ ಕಾದು ನಗುವವರ ನಗೆ ದಿಢೀರ್ ಚಿಮ್ಮುವ ಹಾಗೆ ಯಾರೋ ಸುರುಮಾಡಿದರು. +“ಸೀಟು ಅಂತೀರಿ ನೀವು. ಈಗ ಮೂವತ್ತಮೂರು ಪರ್ಸೆಂಟ್ ಸೀಟು ಬೇಕು ಸ್ವಾಮೀ ‘ನಮಗೆ’ ಹ್ಞಂ!” +ಅವಳನ್ನು ಸುತ್ತುವರಿದಂತೆ ಅಟ್ಟಹಾಸದ ಅಲೆ ಎದ್ದಿತು. ಅದು ನಮ್ಮನ್ನು ತಾಕಿದಂತಾಯಿತು. ಆಕೆ ನಿಂತಲ್ಲೇ ಕಾಲು ಬದಲಿಸಿದಳು ಹೊರತು. ಆಶ್ಚರ್ಯ. ಅವಳ ಮುಖದ ಮೇಲಿನ ಮಂದಹಾಸ ನಂದಲೇ ಇಲ್ಲ! ಬದಲು ಅದು ದೀಪದಂತೆ ಮಿಣುಗುಡುತ್ತ ಇನ್ನಷ್ಟು ಶಾಂತವಾಗಿ ಕಂಗೊಳಿಸತೊಡಗಿತು. +“ಅಯೊಯೊ, ಅದು ಹೇಗೆ ಹಾಗಿದಾಳೆ ಅವಳು. ನಾನಾಗಿದ್ದರೆ ಕೆಪ್ಪೆಗೆ ಬೀಸಿ ಕೊಡುತ್ತಿದ್ದೆ” +“ಯಾರಿಗೆ? ಯಾರಿಗೇಂತ?” +“ಇಷ್ಟರೊಳಗೆ ನಾವು ಒಬ್ಬೊಬ್ಬರೂ ನಾಲ್ಕಾರು ಸಲ ಕೆಪ್ಪೆಗೆ ಕೊಟ್ಟಾಯಿತಲ್ಲ!” +* +* +* +ಪರ್ಸೆಂಟೇಜು ವಿಚಾರ ಬಂತು ಅಂದರೆ. ಮದುವೆ ಚಪ್ಪರದಲ್ಲೇ ಆಗಲಿ ಅದು ಹುರುಪು-ವಿಚಿತ್ರ ಹುರುಪು-ಎರಚಿಕೊಂಡು ಯಾರ್ಯಾರು ಎಷ್ಟೆಷ್ಟು ಎಂತೆಂತು ಯಾವ ಯಾವ ಬಗೆಯಲ್ಲಿ ಎದ್ದೆದ್ದು ಹಾರುತ್ತಾರೆ ಎಂಬುದೆಲ್ಲ ಬಾಯಿಪಾಠವಾಗಿ ಹೋಗಿದೆಯಷ್ಟೆ? ಅಂತೆಯೇ ಈಗ (ಹೆಂಗಸರ ಹೊರತು) ಕೆಲವರು ಮಂಪರು ಪೂರ್ತಿ ತಿಳಿದೆದ್ದು ನೇರ ಮಾತೆರಚತೊಡಗಿದರು. ಎರಡೇ ಪಾತ್ರಗಳಿದ್ದ ನಾಟಕಕ್ಕೆ ನಿಧಾನವಾಗಿ ಹೇಳಕೇಳದೆ ಪಾತ್ರಗಳು ಬಂದು ಕೂಡಿಕೊಂಡವು. ಅಲ್ಲಿಯೇ ಎರಡು ಪಕ್ಷಗಳಾದವು. ಮಾತಾಡುವ ಪಕ್ಷವೊಂದು. ಉದ್ಗರಿಸುವ ಉತ್ತೇಜನಗೊಳ್ಳುವ-ಗೊಳಿಸುವ. ಹುಂ ಹ್ಞಾಂ ಪ್ರತಿಕ್ರಿಯಿಸುವ ಪಕ್ಷ ಇನ್ನೊಂದು. ಎದುರು ಅರಳು ನಗೆಯ ಏಕಾಕಿ ಪಾತ್ರ ಅಥವಾ ಒಬ್ಬಂಟಿ ಪಾತ್ರವೆನ್ನಲೆ? ಚಡಪಡಿಸಿದಳು ಶೋಭನಾ +“ಯಾಕೋ ತಡೆಯುತ್ತಿಲ್ಲ ಕಣೆ”. +“ತಡೆದುಕೋ. ಪ್ರೇಕ್ಷಕರು ಯಾವಾಗಲೂ ತಡಕೋಬೇಕು!” +“ಇದೇನು ಸೆಮಿನಾರಲ್ಲ. ಸುಮ್ಮನೆ ಕೇಳಿಸಿಕೊ”. +“ದೇಶದ” ಕ್ರಾಸ್ ಸೆಕ್ಷನ್ ಆಫ್ ದಿ ಸೊಸೈಟಿ” ಯ ಮನಸ್ಸಮ್ಮ ಇದೂ. ಇನ್ನೆಲ್ಲಿ ಸಿಗುತ್ತೆ ನಿನಗೆ ಇಷ್ಟು ಸಮೀಪವಾಗಿ! ಸುಮ್ಮನೆ ನೋಡು”. +“ಇದು ಅವಳೇ ಪರಿಹರಿಸಿಕೊಳ್ಳಬೇಕಾದ್ದು ಕಣೆ”. +“ಆಕೆ ಅಬಲೆಯಂತೂ ಅಲ್ಲ. ಹಾಗಿದ್ದರೆ ಇಷ್ಟರೊಳಗೆ ಆತ ಆಡಿದ ಮಾತುಗಳಿಗೆ. ಸುತ್ತಿನ ಹ್ಹ ಹ್ಹ ಹ್ಹಕ್ಕೆ ಹೆದರಿ ಅಲ್ಲೇ ಮೇಲಿನ ರಾಡಿಗೆ ನೇಣುಹಾಕಿಕೊಳ್ಳುತ್ತಿದ್ದಳು”. ಲಲಿತಾ ಯಾವಾಗಲೂ ಹಿಗೆಯೇ. ಗಂಭೀರಕ್ಕೆ ಲಘು ಸೋಕಿಸುವವಳು. ನೇಣಿಗೆ ಅಲ್ಲೇ ಕೈಗೆಟುಕುವ ರಾಡು ಸೋಕಿಸುವವಳು. ಅಥವಾ ಅಳುತ್ತಳುತ್ತ ಈ ಇದೇ ಮಂದಿಯ ಸಹಾನುಭೂತಿ ಗಳಿಸಿಬಿಡುತ್ತಿದ್ದಳು. +“ಅಯ್ಯೋ ಅಮ್ಮಾ! ನಾನಾಗಿದ್ದರೆ ಯಾವ ದಾಕ್ಷಿಣ್ಯವಿಲ್ಲದೆ ಇಷ್ಟರೊಳಗೆ ಓಡಿ ಬಸ್ಸಿನ ಬಾಗಿಲು ತೆರೆದು ಹೊರಗೆ ಹಾರಿಕೊಳ್ಳುತ್ತಿದ್ದೆ” ಎಂದಳು. ಮರ್ಯಾದೆಯ ಗೊಂಡೆ- ಸವಿತಾ. ಆ ಅವಳ ಮರ್ಯಾದೆಯ ಕಲ್ಪನೆ ಸರಿಯಿಲ್ಲವೆನ್ನುವ ಬದಲು. +“ಏನಂದರೂ- ಅವಳು ನಗುವುದು ತಪ್ಪು. ಅವನನ್ನು ಕೆರಳಿಸುವುದು ಯಾಕೆ ಅವಳು! ಪಿರ್ಕಿ ಎಲ್ಲೊ” ತನ್ನ ಇಸ್ತ್ರಿಗನ್ನಡದಲ್ಲಿ ತೀರ್ಪಿತ್ತಳು ಶಾಂತಾ. +ನೋಡುತ್ತ ನಿಲ್ಲಿ ನೀವು. ದೃಶ್ಯ ಉದ್ದವಾಗುತ್ತ ಹೊಗುತ್ತದೆ. ನಗೆ ಅಟ್ಟಹಾಸವಾಗುತ್ತೆ. ಮಾತು ಮಲಿನವಾಗುತ್ತ ಹೋಗುತ್ತದೆ. ಇಲ್ಲಿಯೂ ಹಾಗೆಯೇ. “ನೋಡುವವರೇ ಇಲ್ಲದಿದ್ದರೆ? ನಾಟಕ ಮುಗಿಯೋದು ಆಗಲೇ.” +“ಅಲ್ಲ. ನಿಜವಾಗಿ ಸುರುವಾಗೋದೇ ಆಗ…..” +“ಏನು. ಸುರುವಾಗೋದೇ ಆಗಲಾ? ಪ್ರೇಕ್ಷಕರೇ ಇಲ್ಲದಿದ್ದರೆ ಅದು ಮುಗಿಯೋದೂ ಇಲ್ಲ. ಸುರುವಾಗೋದೂ ಇಲ್ಲ….ಹೆ ಹೆ”. +“ಸುಮ್ಮನಿರಿ. ನೋಡಿ ಇಲ್ಲಿ ನೋಡಿರೋ”-ಶಾಂತಾ. +ಅತ್ತ ತಿರುಗಿದರೆ ಕಂಡಕ್ಟರ್ ಆ ಅವಳನ್ನೇ ನೆಟ್ಟ ದೃಷ್ಟಿಯುಂದ ದೃಷ್ಟಿಯುದ್ದ ಹೂಡಿದವನಂತೆ ನೋಡುತ್ತಿದ್ದ. ಸೈನ್ಯ ಹಿಗ್ಗಿಸಿಕೊಂಡು ಸೇನಾಪತಿಯಂತೀದೆ ಹಿಗ್ಗಿಸಿ ನಿಂತಿದ್ದ. ಎದುರು ಆಕೆಯೂ ಸಸ್ಸರಿ ಎದುರು, ನೇರವಾಗಿ ಅವನನ್ನೇ ನೋಡುತ್ತಿದ್ದಳು. ಯುದ್ಧಭೀತಿಯೇ ಅರಿಯದವಳಂತೆ. ನಾವು ರಾಡು ಬಿಟ್ಟು ಸೀಟಿನ ಹಿಂಬದಿ ಹಿಡಿದು ಅಡ್ಡಡ್ಡ ನಿಂತು ನೋಡತೊಡಗಿದೆವು. ಅದೆಂತಹ ನಗೆ ಆಕೆಯದು! ಸೋಲದ ನಗೆ” ಎಲ್ಲಿಯೂ ಕಂದದ ಸ್ಥಿರನಕ್ಷತ್ರದಂತೆ. +“ಯಾಕೆ…. ಯಾಕೆ ನಗುವುದು ನೀವು!” ಕಂಡಕ್ಟರ್ ಮತ್ತೊಂದು ಆರ್ಭಟ ಹಾಕಿದ. “ತಲೆಗಿಲೆ ಪೆಟ್ಟಾಗಿದೆಯಾ?”’ +ಅವನ ದನಿಯ ಕರಕರಕ್ಕೆ ಸುತ್ತಣ ಪ್ರಯಾಣಿಕರ ಮಾತು ನಗೆಯಲ್ಲ ಖೈದಾಗಿ ಆ ಎತ್ತರ ಸೀಟಿನವನಾದಿಯಾಗಿ ಎಲ್ಲ ಅವರಿಬ್ಬರನ್ನೇ ನೋಡತೊಡಗಿದರು. ನಾಟಕ ಇದ್ದಕ್ಕಿದ್ದಂತೆ ಮತ್ತೆ ಎರಡೇ ಪಾತ್ರಕ್ಕೆ ತಲುಪಿತು. ಒಮ್ಮೆಲೆ ಮೌನ ಕವಿದದ್ದಕ್ಕೋ. ಅತನ ಕಂಗೆಟ್ಟ ಆರ್ಭಟದ ಸ್ಥಿತಿಗೋ. ಯಾತಕೋ. ಆಕೆ ಒಮ್ಮೆ ಸುತ್ತ ನೋಡಿದಳು. ನಗೆ ತುಸು ಓರೆಯಾಗಿ ಅರಲಿತು ಹೊರತು ಒಂದು ಶಬ್ದವೂ ಹೊಮ್ಮಲಿಲ್ಲ. +“ಹೇ!….ಸುಮ್ಮಸುಮ್ಮನೇ….ಛಕ್೦೦೦೦೦” ಕಿರುಚಿ ಕೈಯೆತ್ತಿ ಹಣೆ ಬಡಿದುಕೊಂಡ ಆಕೆ ಬ್ಯಾಗನ್ನು ಭುಜ ಬದಲಾಯಿಸಿಕೊಂಡಳು. ನಿಂತಲ್ಲೇ ಕೊಂಚ ಕದಲಿ ಕಾಲು ಡೊಂಕಿಸಿ ನಿಂತಳು. ಅವನ ತಾರಕ ಕಿರುಚಿಗೆ ನಿಂತವರೆಲ್ಲರೂ ತಿರುಗಿ ಅತ್ತಲೇ ನೋದತ್ತಿದ್ದದರಿಂದ ಈಗ ನಂಗವಳ ಮುಖ ಸರಿಯಾಗಿ ಕಾಣದೆಹೋಯಿತು. ಖಂಡಿತ ಆಕೆ ಇನ್ನೂ ತುಸು ಜಾಸ್ತಿಯೇ ನಕ್ಕಿರಬೇಕು. +“ಮುಚ್ಚಿ ಬಾಯಿ. ನಗಲಿಕ್ಕೆ ನಿಮಗೆ ಮಾತ್ರ ಬರೋದ? ಹ್ಹ?”(‘ಇದಾದರೆ ಜೋಕು!’) ಆತನ ದನಿ ಕಿರುಚನ್ನು ತಾನೇ ತಾಳಲಾರದೆ ಮುಂಚಿನಕ್ಕಿಂತ ಮತ್ತಷ್ಟೂ ಕಳಕಿತು. +ಅತ್ತ ಪೂರ್ವ ದಿಕ್ಕಿನಲ್ಲಿ ಕಂದುಕೆಂಪಿನ ಬಾಲಸೂರ್ಯ ಅಂಬೆಗಾಲಿಟ್ಟು ಬರುತ ಇದ್ದ. ಕಂಡಕ್ಟರ್ ದಣಿದು, ಸೊಪ್ಪಾದವರಂತೆ ಹಿಂದಿನ ಬಾಗಿಲ ಹತ್ತಿರ ಆ ಉದ್ದ ಸೀಟಿನ ಕಿಟಕಿ ಬಳಿ ಕುಳಿತವನನ್ನು ಸಿಟ್ಟಿನ ಭರದಲ್ಲಿ ಧಡ್ಡನೆ ಅತ್ತ ದೂಡಿ ಕುಳಿತುಕೊಂಡ. +ಎದ್ದ. +ಮತ್ತೆ ಫುಟ್ ಬೋರ್ಡಿನ ಮೇಲೆ ನಿಂತ. +“ಯಾವೊಂಜಿ ಸೆಕೆ?”ಎನ್ನುತ್ತ ಬೆವರೊರೆಸಿಕೊಂಡ. ಕರವಸ್ತ್ರದಲ್ಲಿ ಗಾಳಿ ಬೀಸಿಕೊಂಡ. ತನ್ನ ಸೀಟಿನಲ್ಲಿ ಕುಳಿತವನೊಡನೆ ಏನೋ ಹೇಳಲು ಹೊರಟವ ಮತ್ತೆ (ಆಯಾಚಿತವಾಗಿ) ಅವಳನ್ನು ನೋಡಿದ. ಕಿಸೆಯಿಂದ ಪೊಟ್ಟಣವೊಂದನ್ನು ಒಡೆದು ಬಾಯಿಗೆ ಸುರಿದುಕೊಂಡು ಜಗಿಯತೊಡಗಿದ. ಜಗಿತದೊಂದಿಗೆ ಒನ್ನೇನೋ ಪ್ರಬಲವಾದ್ದನ್ನು ಜಗಿಯುತ್ತಿರುವಂತೆ ಅವನ ಮುಖದ ಸ್ನಾಯುಗಳು ಏರಿಳಿದವು. ತಲೆಯನ್ನೊಮ್ಮೆ ಕೊಡವಿ ಓಡುತ್ತಿದ್ದ ಬಸ್ಸಿನ ಬಾಗಿಲನ್ನೊಮ್ಮೆ ದಢಾರನೆ ತೆರೆದ. ಆತ ತೆರೆದದ್ದೋ ಅದೇ ತೆರೆದುಕೊಂಡಿತೋ….ಬಢಾರನೆ ಬಡಿದು ಹಾಕಿಕೊಂಡ. +“ಅಯಮ ಹಾರಿದ ಅಂದುಕೊಂಡೆ” +“ಹೂಂ ಹಾರುವುದೆ? ಯಾರನ್ನಾದರೂ ಹಾರಿಸಿಯಾನು” +ಹೇಳಿ ಬಾಯಿ ಮುಚ್ಚಿದೆಯೇ ಇಲ್ಲವೋ-ಮತ್ತೆ ದಢಾರನೆಬಾಗಿಲು ತೆರೆದು ಹೊಡಕೊಂಡ ಸದ್ದು. +ಹೋ….. ನಿಲ್ಲಿಸೀ…. +ಮಂದಿಯ ಕೂಗು. +ಚೊರ್ರೋ೦೦೦೦೦-ಗೀಚಿದಂತೆ ಸದ್ದು ಎಳೆಯುತ್ತ ಬಸ್ಸು ನಿಂತಿತು. +ಏನಾಯ್ತು ಹಾರಿದನ. ಬಾಗಿಲು ತಾನಾಗಿ ತೆರೆಕೊಂಡು ಹೊರಬಿದ್ದವ, ಬಾಗಿಲು ಸರಿಯಿರಲಿಲ್ಲವ, ಏನಾಯ್ತು. ಹೋದನ? +ಜೋರು ಪೆಟ್ತ…..ಛೆ ಛೆ ಛೆ…. +ಜನ ಧಡಧಡ ಬಾಗಿಲ ಕಡೆ ಧಾವಿಸತೊಡಗಿದರು. +ದಾರಿ ಬಿಡುತ್ತ ಅಕೆ ಎರಡು ಸೀಟಿನ ನಡುವಿನ ಜಾಗಕ್ಕೆ ಸರಿದು ಬ್ಯಾಗನ್ನು ಮತ್ತೆ ಭುಜ ಬದಲಿಸಿ ನಿಂತಲ್ಲೆ ಪದ ಕದಲಿಸಿ ಸಾವರಿಸಿಕೊಂಡು ನಿಂತುಕೊಂಡಳು. +ಸಧ್ಯಕ್ಕೆ ಖಾಲಿಯಾದ ಸೀಟಿನ ಮೇಲೆ ಕುಳಿತುಕೊಳ್ಳಬಹುದಾದರೂ ಕುಳಿತುಕೊಳ್ಳದೆ. +ಭೀತಿ ಕಾತರ ಕುತೂಹಲದಿಂದ ಉತ್ತರ ಸಿಗದ ಪ್ರಶ್ನೆ ಕೇಳುತ್ತ ಬಾಗಿಲ ಕಡೆಗೋಡುವ ಧಾವಂತವನ್ನೇ ನೋಡುತ್ತ ಗಂಭೀರವಾಗಿ. +“ಮೇಡಂ ನೀವು ಸುಮ್ಮನೆ ನಿಂತಿರಿ. ಸುಮ್ಮನಿರಬಾರದಿತ್ತು. ಸರೀ ಬೈದು ದಾಳಿ ಮಾಡಬೇಕಿತ್ತು- ದಾಳೀ!”-ಎಂದಳು ಕಡೆಗೂ ಸುಮ್ಮನಿರಲಾರದೆ ಶೋಭನಾ. +ಆಕೆ ಆಗ ನಮ್ಮಷ್ಟೂ ಮಂದಿಯನ್ನು ದೀರ್ಘವಾಗೊಮ್ಮೆ ನೋದಿದಳು. (ಕನಿಕರವೋ. ಪರೀಕ್ಷೆಯೋ. ವಿಚಾರವೋ. ತಿರಸ್ಕಾರವೋ ಏನೇ ಅದು?” ಲಲಿತಾ) ಸಣ್ಣಗೆ. ಕಂಠದಲ್ಲೇ ಸದ್ದು ಹೊರಳಿಸಿ ನಕ್ಕಳು. +ಮತ್ತೆ ಮುಂಚಿಗಿಂತಲೂ ಗಂಭೀರವಾಗಿ ಕಿಟಿಕಿಯಾಚೆಗೆ ನೋಡತೊಡಗಿದಳು. +***** +“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […] +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […] +“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_297.txt b/Kannada Sahitya/article_297.txt new file mode 100644 index 0000000000000000000000000000000000000000..2d68aaecc18f0cf8fbc2de614b3058b1e57e08d9 --- /dev/null +++ b/Kannada Sahitya/article_297.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ ವರೆಸಿಕೊಳ್ಳುತ್ತ ಸುಮಾರು ಹೊತ್ತು ಅಲ್ಲೇ ಒಂಟಿ ಕಾಲಲ್ಲೇ ನಿಂತಿದ್ದ. ಅಜ್ಜಿಯ ಹಳೆಸೀರೆ ಬಟ್ಟೆಯಿಂದ ತುಂಡು ಮಾಡಿ ಆತನ ತಾತನಿಂದ ದಾರ ಮಾಡಿಸಿಕೊಂಡು ಬುಗುರಿ ಸುತ್ತಿ ಪಡಸಾಲೆಯ ಗಾರೆ ನೆಲದ ಮೇಲೆ ಬಿಟ್ಟು ಅದು ಗುಯ್ ಎಂದು ನಿದ್ದೆಕೊರೆಯುವಾಗ ಕಿವಿಗೊಟ್ಟು ತಲ್ಲೀನನಾಗಿ ಆನಂದಗೊಂಡು ಅದರ ನಾದಕ್ಕೆ ತಾನೇ ಇನ್ನೊಂದು ನಾದ ಎಂಬಂತೆ ಸಂತೋಷಗೊಳ್ಳುತ್ತಿದ್ದ. ಬಣ್ಣದ ಹಸಿರು ಬಿಳಿ ಕೇಸರಿ ಬಣ್ಣದ ರಂಗು ಬುಗುರಿ ಈಗ ಚೆಲುವನ ದುರಂತವೋ , ಅವನ ಅಪ್ಪನ ಹಣೆಬರಹವೋ ಇಲ್ಲವೇ ಇಡೀ ಆ ಮನೆ ಮತ್ತು ಕೇರಿ ಜನರ ದುರಾದೃಷ್ಟವೋ ಎಂಬಂತೆ , ಹಿಂದೆ ಹಿತ್ತಲಲ್ಲಿ ಮದುವೆ ಸಂದರ್ಭದಲ್ಲಿ ಕಟ್ಟಿಸಿದ್ದ ಕಕ್ಕಸು ಗುಂಡಿಯ ನರಕದಲ್ಲಿ ಬಿದ್ದುಹೋಗಿತ್ತು. +ಬೇಸರವಾಗಿ ಚೆಲುವ ಹಿತ್ತಲಿಗೆ ಬಂದು; ಸಾವಿರಾರು ಕಣ್ಣಿಂದ ಚಿಗುರಿ ಬರವಾಗಿ ಹಸಿರು ಕಕ್ಕುತ್ತಾ ಕಂಗೊಳಿಸಿದ್ದ ಹೊಂಗೆ ಮರದ ಮೇಲೆ ಹತ್ತಿ ಕುಳಿತ. ಮೇಲಿಂದ ಕಾಣುತ್ತಿರುವ ಇಡೀ ಹೊಲಗೇರಿ ಅವನ ಕಣ್ಣಿಗೆ ರಾಚಿ ; ಅಸ್ತವ್ಯಸ್ತವಾಗಿ ಚಿಂದಿ ಬಟ್ಟೆಯಂತೆ ತೂತೂತಾಗಿ ಕೊಳಕಾಗಿ ಕಾಣಿಸಿತು. ಧ್ಯಾನಸ್ಥ ಮೌನಿಯಂತೆ ರೆಂಬೆಗಳ ಮೇಲೆ ಕುಳಿತು ಆ ಹೊಂಗೆ ಹೂಗಳಿಗೆ ಮುತ್ತಿಕೊಳ್ಳುತ್ತಿರುವ ಸಣ್ಣ ಸಣ್ಣ ಹುಳುಗಳನ್ನೇ ಮುತ್ತಿಡುವವನಂತೆ ನೋಡಿದ. ಆದರೂ ಬುಗುರಿ ಎಡೆಬಿಡದೆ ಅವನ ತಲೆಯೊಳಗೆ ತಿರುಗುತ್ತಲೇ ಇತ್ತು. ಏನಾದರೂ ಮಾಡಿ ಅದನ್ನು ಹೊರತೆಗೆಯಲೇ ಬೇಕು . ಮತ್ತೆ ಮತ್ತೆ ಹೊಸ ಬುಗುರಿಗಳನ್ನು ಕೊಂಡುಕೊಳ್ಳಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಅಂತಹ ಬುಗುರಿ ಮತ್ತಿನ್ನೆಂದೂ ಸಿಗುವುದಿಲ್ಲ. ಯಾಕಾದರೂ ಅಪ್ಪನಿಗೆ ತನ್ನ ಬುಗುರಿಗಳ ಬಗ್ಗೆ ಇಂತಹ ಸಿಟ್ಟು ಎಂದುಕೊಂಡು ದುಃಖಿತನಾದ. ಇದ್ದಕ್ಕಿದ್ದಂತೆ ಆ ಹಿತ್ತಲುಗಳ ಕಸದ ರಾಶಿಗಳ ನಡುವಿನಿಂದ , ರೋಜುವಾಳದ ಅಂತಿಂತಹ ಮುಳ್ಳು ಪೊದೆಗಳಿಂದ ನಾಯಿಗಳು ವಿಪರೀತ ಸಿಟ್ಟಿನಿಂದ ರಭಸವಾಗಿ ಅಟ್ಟಿಸಿಕೊಂಡು ಬರುತ್ತಿರುವುದನ್ನು ತಿರುಗಿ ನೋಡಿದ. ನಾಯಿಗಳ ಬೊವ್‌ಗುಟ್ಟುವಿಕೆಯ ಹಿಂದೆಯೇ ‘ ಕೀಕ್ ’ ಎಂಬ ಇನ್ನೊಂದು ಸದ್ದು ಬಂತು. ಹಂದಿಯೊಂದನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದು ಇನ್ನೇನೋ ತನ್ನ ಹಿಂಬದಿಯನ್ನು ಕಚ್ಚಿ ಕೊಲ್ಲುತ್ತವೆ ಎಂಬ ಭಯದಿಂದ ಹಿಂದುಮುಂದು ನೋಡಲಾರದೆ ‘ ಕುಯ್ಯೋ ’ ಎಂದು ದೊಡ್ಡ ಶಬ್ದ ಮಾಡಿ ಓಡಿಬಂದು ‘ ಧಢಕ್ ’ ಎಂದು ಅದೇ ಕಕ್ಕಸು ಗುಂಡಿಯ ಒಳಕ್ಕೆ ಬಿದ್ದುಹೋಯಿತು . ಚೆಲುವ ಏನನ್ನೂ ಮಾಡಲಾರದಂತಾಗಿ ಓಹ್ ; ಎಂದುಕೊಂಡು ‘ ಹಂದಿ ಏಲ್ ಗುಂಡಿಗೆ ಬಿದ್ದೋಯ್ತು ’ ಎನ್ನುತ್ತಾ ಮರದಿಂದ ಕೆಳಗಿಳಿದು ಓಡಿಬಂದು ಮನೆಯೊಳಗಿದ್ದ ತನ್ನ ಅವ್ವನಿಗೆ ‘ ಅವೋ ಅವ್ವ ನಮ್ಮಿತ್ಲು ಕಕ್ಕಸ್ ಗುಂಡಿವೊಳಗೆ ಅದ್ಯಾರದ್ದೋ ಹಂದಿ ಬಂದ್ ಬಿದ್ದೋಯ್ತು ’ ಎಂದ. ಅವನ ಅವ್ವ ‘ ಹಾ ! ’ ಎನ್ನುತ್ತಾ ‘ ಅದ್ಯಾರುದ್ಲಾ ಹಾಳಾದ್ ಹಂದಿಗೆ ನಮ್ಮಿತ್ಲು ಗುಂಡೀಲೆ ಇತ್ತೆ ಸಾಯುದು , ಇನ್ನೆಲ್ಲು ಜಾಗಿರಲಿಲ್ವೆ ’ ಎನ್ನುತ್ತಾ ಹೊರಗೆ ಬಂದು ನೋಡಿದಳು. ಯಾಕೋ ಇದ್ದಕ್ಕಿದ್ದಂತೆ ಅವಳ ಮನಸ್ಸು ಬೇಸರಗೊಂಡು ಈ ಹಾಳ್ ಕಕ್ಕಸುಗುಂಡಿಯನ್ನು ಮುಚ್ಚಿಸಲು ಗಂಡ ಎಂಬ ಕಠೋರನಿಂದ ಆಗುತ್ತಿಲ್ಲವಲ್ಲಾ ಎಂದು ಮನಸೊಳಗೇ ನೊಂದುಕೊಂಡು ‘ ಲೋ ಚೆಲ್ವ ವೋಟ್ಲೆಲಿ ನಿಮ್ಮಯ್ಯ ಇರ್‍ಬೋದು ಕರ್‍ಕಬರೋಗು , ಏನಾರ ಮಾಡಿ ಎತ್ತಾಕ್ ಬುಡ್ಲಿ ಈಚ್ಗೆ ’ ಎಂದು ಹೇಳಿ ‘ ಯಾರ್‍ಯಾರ್‍ಗೋ ಯೇಳ್‌ಗೀಳೀಯ ಜ್ವಾಕೆ . ಆಮೆಕದೊಂದು ಜಗಳಾದದು. ’ ಎನ್ನುತ್ತಾ ಹೇಳಿ ಕಳಿಸಿದಳು. +ಚೆಲುವ ತನ್ನ ಬಣ್ಣದ ಬುಗುರಿಗೆ ಇಂಥಾ ಗತಿ ಬಂತಲ್ಲಾ , ಅದನ್ನು ಯಾವ ರೀತಿಯಲ್ಲೂ ಈಗ ಮೇಲೆತ್ತಲು , ಮತ್ತೆ ದಾರ ಸುತ್ತಿ ಗಾರೆ ನೆಲದ ಮೇಲೆ ಬಿಟ್ಟು ಆಡಲು ಆಗುವುದಿಲ್ಲಾ ಎಂದು ಇನ್ನಷ್ಟು ನೊಂದುಕೊಂಡ. ಮನೆಯವರು ಆ ಕಡೆ ಈ ಕಡೆ ಎಲ್ಲಿಯಾದರೂ ಹೋದಾಗ ಕಕ್ಕಸ್ಸು ಗುಂಡಿಯ ಮೇಲೆ ಹೊದಿಸಿರುವ ತೆಂಗಿನ ಗರಿಗಳನ್ನು ಸರಿಸಿ ಕೊಕ್ಕೆ ಹಾಕಿ ಬುಗುರಿ ಎತ್ತಿಕೊಳ್ಳಬೇಕೆಂದಿದ್ದ ತೃಣಮಾತ್ರ ಆಸೆ ಈಗ ಮತ್ತಷ್ಟು ನುಚ್ಚುನೂರಾಗಿತ್ತು. ಆ ಹಂದಿ ಏಲಿನ ಬಗ್ಗಡದಲ್ಲಿ ಜಿಗಿದಾಡಿ , ಬುಗುರಿ ಬಿದ್ಡಿರುವ ಗುರುತನ್ನೇ ಧ್ವಂಸಮಾಡಿಬಿಟ್ಟಿರುತ್ತದೆ.; ಅಕಸ್ಮಾತ್ ಹಂದಿಯನ್ನು ಎತ್ತುವಾಗ ಬೇರೆಯವರಿಗೆ ಸಿಕ್ಕಿದರೂ ಕೂಡ ಅಪ್ಪನಿಂದ ತನ್ನ ಕೈಗೆ ಬರುವುದಿಲ್ಲ ಎಂದುಕೊಂಡ . ಹಾಗೆ ಯೋಚಿಸುತ್ತಾ ಹೋಟೆಲಿಗೆ ಬಂದು , ತನ್ನ ಅಪ್ಪ ಗಲ್ಲಾದ ಮೇಲೆ ಕುಳಿತಿರುವ ವಿಶೇಷ ಭಂಗಿಯನ್ನು ಗಮನಿಸಿ ಮೆಲ್ಲಗೆ ತನ್ನ ತಾತ ಗುಂಜಾರಯ್ಯನ ಬಳಿ ಬಂದು ಹಂದಿ ಬಿದ್ಡಿರುವ ಸುದ್ದಿಯನ್ನು ಮುಟ್ಟಿಸಿದ. ಗುಂಜಾರಯ್ಯ ಒಮ್ಮೆ ಬೆಚ್ಚಿದಂತೆ ಮಾಡಿ ಬೇಯಿಸುತ್ತಿದ್ದ ಬಾಂಡ್ಲಿಯೊಳಗೆ ಹಿಟ್ಟನ್ನು ಹಾಕುತ್ತ, ‘ ಯೇಯ್ , ನಿಜಯೇಳೀಯೋ ಏನ್ ತಮಾಸೆಯಾಡಿಲಾ , ಅದೆಂಗ್ ಬಿದ್ದೋಯ್ತು ಅದ್ರೊಳಕೆ , ಏನೆಂತದು , ದೊಡ್‌ದೋ , ಚಿಕ್‌ದೋ ’ ಎಂದ. ‘ ವೋಗಪ್ಪೋ ಸರ್ರುನ್ ಬಾ, ಇಲ್ಲೇ ಕುಂತಿದ್ರೆ ಆಮೇಕದೇ ಪೋಯ ’ ಎಂದು ಬೇಸರಿಸಿ , ಬೇಗ ಬಂದು ಏನಾದರೂ ಮಾಡಿ ಹಂದಿ ಎತ್ತಿದರೆ ಬುಗುರಿ ಸಿಗಬಹುದು ಎಂದು ಊಹಿಸಿಕೊಂಡಂತೆಯೇ ‘ ತಾಡ್ಲ ಇನ್ನೊಂದೊಬ್ಬೆ ಬೋಂಡ ಬೇಯಿಸ್ ಬುಟ್ಟು ಬತ್ತೀನಿ ’ ಎಂದ. ಚೆಲುವ ಸಿಟ್ಟಿನಿಂದ ಹಿತ್ತಲಿಗೆ ಬಂದು ಹೊಂಗೆ ಮರದ ನೆರಳಿನಲ್ಲಿ ಕುಳಿತು ಸಾಯುತ್ತಿರುವ ಹಂದಿಯ ವಿಚಾರ ತಿಳಿದರೆ ಏನಾಗುತ್ತದೆಂದು ಭಾವಿಸುತ್ತಾ, ತನ್ನ ಬುಗುರಿ ಹೀಗಾಯಿತಲ್ಲ ಎಂದು ಸಂಕಟಗೊಳ್ಳುತ್ತಾ ಆಕಾಶವನ್ನು ನೋಡಿದ. +ಚೆಲುವನ ತಾತ ಗುಂಜಾರಯ್ಯ ಹೋಟೆಲಲ್ಲಿ ಬೋಂಡವನ್ನು ಬೇಯಿಸಿಯೇ ಹಿತ್ತಲಿಗೆ ಬರಬೇಕಾಗಿತ್ತು. ಆತುರದಲ್ಲಿ ಹಸಿಹಸಿಯಾಗಿಯೇ ಚೆನ್ನಾಗಿ ಬೇಯಿಸದೆ ಬೋಂಡವನ್ನು ಬಾಂಡ್ಲಿಯಿಂದ ಎತ್ತಿ ಹಾಕಿ , ಇನ್ನೊಂದು ‘ ವಬ್ಬೆ ’ ಹಾಕುವ ತೀರ್ಮಾನದಲ್ಲಿ ಭರಭರನೆ ಬೋಂಡದ ಹಿಟ್ಟನ್ನು ಕೈಯಿಂದ ಬಾಂಡ್ಲಿಗೆ ಹಾಕುತ್ತಾ, ಕೈಸುಟ್ಟುಕೊಳ್ಳುತ್ತ , ಕಕ್ಕಸು ಗುಂಡಿಗೆ ಬಿದ್ದಿರುವ ಹಂದಿಯ ದೃಶ್ಯವನ್ನೇ ಯೋಚಿಸಿದ . ಕಳೆದ ಬಾರಿ ಊರೂರು ಸುತ್ತಿ ಅಲೆದು ಮೇಯುವ ತಿಪ್ಪೇಗೌಡರ ಕೋಣ ಮೇಯುತ್ತ ಬಂದು ಇದೇ ಕಕ್ಕಸುಗುಂಡಿಗೆ ಬಿದ್ದಿದ್ದಾಗ ಯಮ ಪ್ರಯತ್ನ ಪಟ್ಟು ಅದನ್ನು ಮೇಲೆತ್ತಿದ್ದಾಗ ಉಂಟಾಗಿದ್ದ ರೇಜಿಗೆ ,ವಾಸನೆ, ಅಸಹ್ಯಗಳೆಲ್ಲ ನೆನಪಾದವು. ಆ ‘ ಏಲ್‌ಗುಂಡಿ ’ ಯನ್ನು ಮುಚ್ಚಿಸುವ ಯೋಜನೆಯನ್ನು ಬಹಳಾ ಸಲ ಹಾಕಿಕೊಂಡಿದ್ದರೂ ಕೂಡ ಅದು ತನ್ನ ಹಿರಿಮಗ ಚಿಕ್ಕಣ್ಣನಿಂದ ಸಾಧ್ಯವಾಗದೆ ವಿಫಲವಾಗಿತ್ತು. ಇಂಥಾ ಎಷ್ಟೋ ದೂರುಗಳು ಚಿಕ್ಕಣ್ಣನ ಆ ಕಕ್ಕಸು ಗುಂಡಿಯ ಮೇಲೆ ಬಂದಿದ್ದವು. ತಿಪ್ಪೇಗೌಡರ ಕೋಣ ಆ ಗುಂಡಿಗೆ ಬಿದ್ದುಹೋಗಿದ್ದಾಗ ‘ ಹತ್ತಾಳು ’ ಬಂದು ಹಗ್ಗ ಬಿಗಿದು ಒಂದು ದೊಡ್ಡ ಬಂಡೆಯನ್ನೇ ಎಳೆಯುವಂತೆ ಎಳೆದಿದ್ದಾಗ ಆಗಿನ ಈ ಏಲುಗುಂಡಿ ಅದರ ಎರಡು ಪಟ್ಟು ವಿಸ್ತಾರವಾಗಿ ದೊಡ್ಡ ಗುಂಡಿಯೇ ಆಗಿತ್ತು. ಕೊನೆಗೂ ಕೋಣ ಒಂದು ದಿನವೆಲ್ಲ ಆ ಗುಂಡಿಯಲ್ಲೇ ಇದ್ದಿದ್ದರಿಂದ ಹೊರಗೆ ಬಂದ ಸ್ವಲ್ಪದರಲ್ಲೇ ಸತ್ತುಹೋಗಿತ್ತು. ಮುಖ್ಯವಾಗಿ ಅದನ್ನು ಮೇಲೆತ್ತಲು ಮಾಡಿದ್ದ ಹಿಂಸಾತ್ಮಕ ತಂತ್ರದಿಂದಲೇ ಬಹುಪಾಲು ನೋವುಂಟಾಗಿ ಸತ್ತಿತ್ತು. ಹಾಗೆ ಸತ್ತಿದ್ದಕ್ಕೆ ತಿಪ್ಪೇಗೌಡರು ದಂಡರೂಪವಾಗಿ ಹಣ ಕೇಳಿದಾಗ ಚಿಕ್ಕಣ್ಣ ರೌಡಿಗಳ ತರ ಮಾತನಾಡಿ- ‘ ಅಲ್ಲಾ ಗೌಡ್ರೆ ಆ ಏಲ್‌ಗುಂಡಿಗೆ ನಾವು ಏಳ್ಕೊಟ್ಟಿದ್ದೆವೆ ಏನಾರ . ಇಂಥಿಂತೆವ್ರ ಯಮ್ಮೆ ಬತ್ತವೆ , ಕುರಿಗೋಳ್ ಬತ್ತವೆ. ಅವೆಲ್ಲನು ಒಳ್ಕ್‌ಎಳ್ಕಬುಡು ಅಂತಾ , ನಿಮ್ಮೆಮ್ಮೆಗೆ ಬುದ್ದಿ ಇದ್ದಿದ್ರೆ ಅದ್ಯಾಕ್ ಬತ್ತಿತ್ತು ನಮ್ ತಿಪ್ಪೆತಕೆ – ಇದೊಳ್ಳೇ ಸರೋಯ್ತಪ್ಪಾ . ನಮ್ಮನುಕೂಲಕೆ ನಾವು ಕಕ್ಕಸ್‌ಗುಂಡಿ ಮಾಡ್ಕಂಡಿದ್ದೋ- ಬಂದ್ ಬಿದ್ದು ಸಾಯ್ತು . ಅದ್ಕೆ , ನಮ್ಮೊಣೆ ಏನಿದ್ದದು. ಯಾವ್ ದಂಡನು ಇಲ್ಲ .‘ಏನೂ ಇಲ್ಲ ಸ್ವಾಮಿ ’ – ಎಂದು ರೋಪು ಹಾಕಿ ಕಳಿಸಿ ಬಿಟ್ಟಿದ್ದ. ಆಗಿನಿಂದಲೂ ಈ ಏಲ್‌ಗುಂಡಿಗೆ ಒಂದು ದೊಡ್ಡ ಇತಿಹಾಸವೇ ಬಂದು ಬಿಟ್ಟಿದೆ. ಊರವರೆಲ್ಲ ಏಲ್‌ಗುಂಡಿಯ ಮೇಲೆ ಯವುದಾದರೂ ತಗಡನ್ನು ಹೊದಿಸು ಇಲ್ಲವೆ ಕಲ್ಲುಚಪ್ಪಡಿ ಹಾಕಿಸು ಎಂದು ಹೇಳಿದ್ದರೂ ಕೂಡ ಯಾವುದನ್ನು ಮಾಡಿಸಲು ಆಗಿರಲಿಲ್ಲ. ಕೋಣ ಬಿದ್ದಿದ್ದರಿಂದ ಗುಂಡಿ ವಿಸ್ತಾರವಾಗಿಬಿಟ್ಟಿತ್ತು. ಮಣ್ಣು ಕುಸಿದು ಹಾಳಾಗಿತ್ತು. ಹೀಗಾಗಿ ಇಷ್ಟಗಲಕ್ಕೂ ಕಲ್ಲು ಇಲ್ಲವೆ ತಗಡನ್ನು ಮುಚ್ಚಿಸಲು ಚಿಕ್ಕಣ್ಣನಿಗೆ ಅಸಾಧ್ಯವಾಗಿತ್ತು. ಸುಲಭವಾಗಿ ಸಿಗುವ ತೆಂಗಿನಗರಿಗಳನ್ನು ಈಗ ಮೇಲೆ ಮುಚ್ಚಿದ್ಡ. ಹೀಗೆ ಮುಚ್ಚಿದ್ದೇ ಆ ನಂತರ ಊರಿನ ಸುತ್ತಲೂ ಹಬ್ಬಿಕೊಳ್ಳುವ ಎಷ್ಟೋ ತಮಾಸೆಗಳಿಗೆ , ದುರಂತಗಳಿಗೆ ದಾರಿ ಮಾಡಿಕೊಟ್ಟಿತ್ತು.ಗೌಡರ ಆ ಕೋಣವನ್ನು ಆ ನಂತರ ಮಾದಿಗರ ಯಾಲಕ್ಕಯ್ಯ ಬಂದು ನೋಡಿ , ಚೆನ್ನಾಗಿ ಬಿಸಿನೀರಿನಿಂದ ತೊಳೆಸಿ , ಕೊಯ್ದು ಮಂಕರಿ ತುಂಬ ಬಾಡು ಮಾಡಿ ಕೊಂಡು ಹೋಗಿದ್ದನ್ನು ಕೇಳಿ ಗೌಡರ ತಲೆ ತಿರುಗಿತ್ತು . ‘ ಆ ಹೊಲ್‌ಮಾದುಗೆ ನನ್ ಮಕ್ಕಳು ಬೇಕೆಂತ್ಲೆ ಕೋಣುನ್ನ ಏಲ್‌ಗುಂಡಿಗೆ ಬೀಳ್ಸಿ ತಿನ್ನುಕೆ ಈ ಕರಾಮತ್ ಮಾಡವರೆ ’ ಎಂದು ಊರಲ್ಲೆಲ್ಲ ಮಾತಾಯಿತು. ಆದರೂ ಆ ಕೋಣನ ಬಾಡು ಬಹಳಷ್ಟು ಜನರಿಗೆ ತಲುಪಿದ್ದರಿಂದ ಯಾರೂ ಹೆಚ್ಚಾಗಿ ಆಗ ತಲೆ ಕೆಡಿಸಿಕೊಂಡಿರಲಿಲ್ಲ. +ಕೆಲವು ದಿನದ ನಂತರ ಪೇಟೆಯಲ್ಲಿ ಓದಿ ಬಂದಿದ್ದ ಪಡ್ಡೆ ಹುಡುಗರು ‘ ಚಿಕ್ಕಣ್ಣನ ಏಲ್‌ಗುಂಡಿ ಕೋಣನನ್ನ ಹಿಡಿಯೋ ಖೆಡ್ಡಾ ಕಣ್ರೋ ’ ಎಂದು ಗೇಲಿ ಮಾಡುತ್ತಿದ್ದರಾದರೂ ಚಿಕ್ಕಣ್ಣ ಅದಕ್ಕೆ ಸೊಪ್ಪು ಹಾಕಿರಲಿಲ್ಲ . ಹೀಗೆ ಇದೆಲ್ಲವನ್ನೂ ಬೋಂಡ ಹಾಕುತ್ತಿದ್ದಂತೆಯೇ ನೆನೆಸಿಕೊಂಡಾಗ ಇಡೀ ಬಾಂಡ್ಲಿಯೇ ಕಕ್ಕಸು ಗುಂಡಿಯಂತೆ ವಾಕರಿಕೆ ಬಂದು , ‘ ತಥ್ ಇವುನವ್ವುನ್ನಾ ಕೇಯೇನೆಣ್ವಿ ಸರಿಯಿಲ್ಲಾ ’ ಎಷ್ಟೊತ್ತಾಯ್ತು ಎಣ್ಣೆಗಾಕಿ , ಇನ್ನೂ ಬೇಯ್ಲಿಲ್‌ವಲ್ಲಾ ಎಂದು ಬೆಂಕಿಯನ್ನು ಹೆಚ್ಚುಮಾಡಿ – ಕೊನೆಗೂ ಬೇಯಿಸಿ ತನ್ನ ಮಗ ಚಿಕ್ಕಣ್ಣನಿಗೆ ಇದನ್ನು ಗುಟ್ಟಾಗಿ ತಿಳಿಸಿ ಹಿತ್ತಲಿಗೆ ಬಂದ. +ಚೆಲುವ ತನ್ನ ತಾತನಿಗೆ ಬುಗುರಿ ಬಗ್ಗೆ ಹೇಳಬೇಕೆಂದುಕೊಂಡು ಒಮ್ಮೆ ನಿರ್ಧರಿಸಿ ಬೇಡ ಎಂದುಕೊಂಡು , ‘ ಯೀಗೆಂಗಪ್ಪಾ ಯೀಚುಕ್ ತೆಗೆದಾಕುದು ಹಂದಿಯಾ ’ ಎಂದ. ಗುಂಜಾರಯ್ಯ ಗುಂಡಿಯ ಗರಿಗಳನ್ನು ಮೆಲ್ಲಗೆ ಸರಿಸಿ ನೋಡಿದ. ಒಂದೇ ಬಾರಿಗೆ ಹಂದಿ ನೆಗೆಯುವ ಪ್ರಯತ್ನ ಮಾಡಿ ಬಡಕ್ ಎಂದು ಒಳಗೇ ಬಿದ್ದುಕೊಂಡು ಕೊಯ್‌ಗುಟ್ಟಿತು. ಹಾಗೆ ಜಿಗಿದದ್ದರಿಂದ ಗುಂಜಾರಯ್ಯನ ಮೂಗಿನ ಮೇಲೆ ಅವರೆ ಕಾಳಿನಗಾತ್ರದ ಏಲಿನ ಸಣ್ಣ ಕಣ ಬಂದು ನೊಣದಂತೆ ಕುಳಿತುಬಿಟ್ಟಿತು.. ಸಾದ್ವಿತನದ ಗುಂಜಾರಯ್ಯ ಅತ್ಯಂತ ಸಿಟ್ಟಿನಿಂದ , ಅವಮಾನಿತನಾದವನಂತೆ ಭಾವಿಸಿ , ಧರ್ಮರಾಯ ಸ್ವರ್ಗಾರೋಹಣದ ಕೊನೆಯಲ್ಲಿ ಕಿರುಬೆರಳನ್ನು ನರಕಕ್ಕೆ ಅದ್ದಿದಂತೆ ಆಗಿದ್ದಾಗ ಆದಂತೆಯೇ ತನಗೂ ಆಯಿತೇನೋ ಎಂದುಕೊಂಡು ಎಲೆಯೊಂದರಿಂದ ಮೂಗು ಸೀಟಿಕೊಂಡು ವಾಪಸ್ಸು ಬಂದು , ‘ ಒಳಗೇ ಸಾಯ್ಲಿ ಅವುಳ್ ರತ್ತನಾ ಕೇಯುಂದು ’ ಎಂದು ಬೈಯುತ್ತಾ , ಇದರ ಯವಾರವನ್ನು ಮಗನಿಗೇ ವಹಿಸುವುದು ಸರಿ ಎಂದು ಹೋಟೆಲಿಗೆ ಬಂದು ಬಿಟ್ಟ. +ಚೆಲುವ ನಿರಾಶೆಯಿಂದ ತನ್ನ ಬುಗುರಿ ಇನ್ನು ಯಾವತ್ತೂ ಕೂಡ ತನ್ನ ಕೈಗೆ ಬರುವುದಿಲ್ಲವೇನೋ ಎನ್ನುತ್ತಾ ತನಗೆ ಅರಿವಿಲ್ಲದೆಯೇ ಬುಗುರಿಯ ದಾರವನ್ನು ಬೆರಳಿಗೆ ಸುತ್ತಿಕೊಳ್ಳುತ್ತಾ ಫಳಕ್ ಎಂದು ಕಣ್ಣೀರನ್ನು ಬೀಳಿಸಿದ. ಇದ್ದಕ್ಕಿದ್ದಂತೆ ಇಡೀ ಹಂದಿ ಏಲ್‌ಗುಂಡಿ ಮತ್ತು ಊರಿನ ಎಲ್ಲ ಆಗುಹೋಗುಗಳು ಕೂಡ ವಿಷ್ಣುವಿನ ವರಾಹ ಅವತಾರದ ಬಗ್ಗೆ ಹರಿಕತೆ ದಾಸರು ಹೇಳಿದ್ದ ವಿವರದಂತೆ ಕಂಡು ಬಂದು ಹೆದರಿಕೆ ಮತ್ತು ವ್ಯಾಕುಲದಿಂದ ಒಳಗೊಳಗೇ ಹಿಂಸೆಪಡತೊಡಗಿದ. ಗುಂಡಿಗೆ ಬಿದ್ದ ಹಂದಿ ಚೆಲುವನ ಬುಗುರಿಯ ಯಾವ ಕುರುಹೂ ಉಳಿಯದಂತೆ ಅಳಿಸಿಹಾಕಿತ್ತು. ಆ ಬುಗುರಿಯನ್ನು ಆತ ಗಾರೆ ನೆಲದ ಮೇಲೆ ಬಿಟ್ಟು ಗುಯ್‌ಗುಡಿಸುವಾಗ ಬೀದಿ ಹೈಕಳು ಅದರ ಸೊಬಗು , ಹೊನಪು . ತಿರುಗುವ ರೀತಿಗಳೆಲ್ಲದರ ಬಗ್ಗೆ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾಗ ಆನಂದಾತಿರೇಕದಲ್ಲಿ ಒಳಗೊಳಗೇ ಖುಷಿ ಪಡುತ್ತಿದ್ದುದೆಲ್ಲ ಲವಲೇಶವೂ ಈಗ ಇಲ್ಲದಂತಾಗಿ ತನ್ನ ಅಪ್ಪನ ಬಗ್ಗೆ ಚೆಲುವ ಸಿಟ್ಟುಗೊಂಡ. +‘ ಅವುನು ಯಾಕಾರು ಸಾಯುವುದಿಲ್ಲ ಬೇವರ್ಸಿ , ನನ್ ಬುಗುರಿನೆಲ್ಲ ಇಂಗೇ ಮಾಡ್ದ . ಅವತ್ತು ಕೊಡ್ಲಿಯಿಂದ ವಳ್ಕಿ ಮೂರು ಬುಗುರಿಗೊಳ್ನೂ ಸೀಳಾಕಿ ವಲೆಗಾಕ್ದ. ಇನ್ನೊಂದು ಕಣ್ಣುಗ್ ಕಾಣ್ದಂಗೆ ದೂರಸ ಬಿಸಾಕ್ದ. ಇವತ್ತು ನೋಡುದ್ರೆ ‘ ಯಾವ ಬುಗ್ರಿಯೊ ನೀ ಆಡುದು; ತತ್ತರೋ ಸೂಳೆಮಗ್ನೆ ’ ಅಂತಾ ಕಿತ್ಕಂದು ‘ ಇನ್ನೊಂದ್ಸಾರಿ ನಿನ್ ಕೈಲೇನಾರ ಬುಗ್ರಿ ಕಂಡ್ರೆ ಆಮೆಕೆ ನಿನ್ನೇ ಸೀಳಾಕ್ತೀನಿ ’ ಅಂತಾ ಬೈಯ್ದು ಕಕ್ಕಸ್ ಗುಂಡಿಗೆ ಹಾಕ್ದ…. ಎಂದು ಯೋಚಿಸುತ್ತ ಮತ್ತೆ ಹೊಂಗೆ ಮರಕ್ಕೆ ಹತ್ತಿ ಕುಳಿತು, ಅದೇ ಕಕ್ಕಸು ಗುಂಡಿಯನ್ನು ನೋಡುತ್ತಾ ಲೆಕ್ಕ ಹಾಕ ತೊಡಗಿದ. ಯಾರು ಯಾರದೋ ಕೋಳಿಗಳು, ಕುರಿಗಳು ಬಂದು ಅದರೊಳಗೆ ಬಿದ್ದು ಸತ್ತಿದ್ದಾಗ ಉಂಟಾಗಿದ್ದ ಜಗಳಗಳಲ್ಲಿ ಅಪ್ಪ ವಿಕಾರವಾಗಿ ಕುಣಿದಾಡಿ ದೊಡ್ಡ ಚಾಕು ತಂದು ಹೆದರಿಸಿ ಸುಮ್ಮನಾಗಿಸುತ್ತಿದ್ದುದೆಲ್ಲ ನೆನಪಾಯಿತು. ಬುಗುರಿಯ ಗಿರಿಗಿರಿ ಸುತ್ತುವಿಕೆ ಆತನ ಮನಸ್ಸು ತಲೆ ಇಡೀ ದೇಹದ ಸುತ್ತ ಬುಗಬುಗನೆ ಸುತ್ತು ಹಾಕತೊಡಗಿತು. ಆ ನಡುವೆ ಅಸ್ತವ್ಯಸ್ತವಾದ ಕಲಸುಮೇಲೋಗರವಾದ ಇಡೀ ಮನೆಯ ಚಿತ್ರಗಳು ಸೇರಿಕೊಂಡು ಹಿಂಸೆಯಾಗಿ ತಳಮಳಗೊಂಡ. +ಚಿಕ್ಕಣ್ಣನ ಹಿತ್ತಲಲ್ಲಿ ಕಟ್ಟಿಸಿದ್ದ ಕಕ್ಕಸುಗುಂಡಿ ಇಡೀ ಊರಲ್ಲೇ ಮೊದಲನೆಯದು. ಅದು ಊರಿಗೆ ಹೊಸ ವ್ಯವಸ್ಥೆಯಾಗಿ ಸೇರಿಕೊಂಡಿತ್ತು. ತನ್ನ ತಮ್ಮ ಶಾಂತರಾಜನ ಮದುವೆಗೆ ಮೈಸೂರಿನಿಂದ ಹೆಣ್ಣು ತಂದಿದ್ದಾಗ , ಆ ನೆಂಟರಿಗೆ , ಹೆಂಗಸರಿಗೆ ಕಕ್ಕಸು ಹೋಗಲು ತೊಂದರೆಯಾಗುತ್ತದೆಂದು ಯೋಚಿಸಿ ಕಟ್ಟಿಸಿದ್ದ ಈ ವ್ಯವಸ್ಥೆ ಮದುವೆ ದಿನದಲ್ಲೇ ಕೈಕೊಟ್ಟಿತ್ತು. ಭರ್ಜರಿ ಊಟದ ನಂತರ ಆ ಕಕ್ಕಸ್ಸು ಗುಂಡಿ ಬಂದಿದ್ದ ಹಲವಾರು ಹೆಂಗಸರ ಪಾಯಿಖಾನೆಯಿಂದ ತುಂಬಿಹೋಗಿತ್ತು. ಯಥಾವತ್ ಆಧುನಿಕ ಕಕ್ಕಸ್ಸು ಮನೆಯಂತೆ ಕಟ್ಟಿಸಿದ್ದರಾದರೂ ಆ ಕಕ್ಕಸ್ಸೆಲ್ಲ ಸಂಗ್ರಹಗೊಳ್ಳಲು ಡ್ರೈನೇಜ್ ವ್ಯವಸ್ಥೆಗೆ ಬದಲು ಹಿಂಭಾಗಕ್ಕೆ ಒಂದೂವರೆ ಆಳುದ್ದ ಗುಂಡಿ ತೆಗೆದು ಅದೆಲ್ಲವೂ ಅಲ್ಲಿ ಬೀಳುವ ವ್ಯವಸ್ಥೆ ಮಾಡಲಾಗಿತ್ತು. ಅಂದು ಮದುವೆಯ ಮಾರನೇ ದಿನವೇ ಗುಂಡಿ ತುಂಬಿಹೋಗಿ ಭಯಾನಕ ವಾಸನೆ ಮದುವೆ ಮನೆಯನ್ನು ಕವುಚಿಕೊಂಡು ಎಲ್ಲರ ತಾಳ್ಮೆ ಪರೀಕ್ಷೆಗೆ ಒಡ್ಡಿತ್ತು . ಹೆಣ್ಣಿನ ಕಡೆಯ ಯಾವನೋ ಒಬ್ಬ ಆ ಗದ್ದಲದಲ್ಲಿ ಯಾರೋ ಒಬ್ಬಳ ಜೊತೆ ಲೈಂಗಿಕ ಸಂಬಂಧ ಏರ್ಪಡಿಸಿಕೊಳ್ಳಲು ಸಂಚು ಮಾಡಿ ಆ ರಾತ್ರಿ ಹಿತ್ತಲಲ್ಲಿದ್ದ ಕಕ್ಕಸ್ ಗುಂಡಿಯ ಬಳಿ ಗೊತ್ತಿಲ್ಲದೆ ಆಕೆ ಜೊತೆ ಹೋಗಿ ತನಗರಿವಿಲ್ಲದೆಯೇ ಗುಂಡಿಗೆ ಕಾಲು ಜಾರಿ ಬಿದ್ದು ಬಚಾವಾಗಿ ಕಾಲು ತುಂಬ ಏಲುಮಯ ನೀರನ್ನು ಮೆತ್ತಿಸ್ಕೊಂಡು ಬಂದು ಎಲ್ಲರಿಗೂ ದೊಡ್ಡ ಹಾಸ್ಯದ ಸಂಗತಿಯಾಗಿಬಿಟ್ಟಿದ್ದ. ಆಗ ತಾನೆ ಒಂದು ವಾದವನ್ನು ಹೂಡಿ – ‘ ಈ ಜುಜುಬಿ ಹಳ್ಳಿಗಳಿಗೆ ಹೆಣ್ಣು ಕೊಡೋದು ಬ್ಯಾಡಾ ರಂಗಪ್ಪನೋರೆ ಅಂತಾ ಫಾದರ್‌ಇನ್ಲಾ ಅತ್ರ ಸಾವುರ್ ಸರಿ ಬಾಯ್ ಬಡ್ಕಂದೆ. ಆದ್ರೆ ಆ ಹಲ್ಕಾ ಫಾದರ್‌ಇನ್ಲಾ ನನ್ ಮಾತ ಕೇಳ್‌ಲಿಲ್ಲ. ಯಾವುದೋ ದೆವ್ವ ನನ್ನನ್ನು ಆ ಕಕ್ಕಸ್ ಗುಂಡಿತನಕ ದರದರ ಎಳೆದುಕೊಂಡುಹೋಗಿ ಅದರೊಳಕ್ಕೆ ತಳ್ಳುವ ಪ್ರಯತ್ನ ಮಾಡ್ತು. ಬೈಚಾನ್ಸ್ ತಪ್ಪಿಸ್ಕಂದ್ ಓಡ್‌ಬಂದೆ, ಥೂ ಥೂ ಎಂತಾ ವಾಸನೆ. ಹಾಳಾದ್ ಹಳ್ಳೀ ಜನ ಅದೇನ ತಿಂತಾರೋ ನನಗೆ ಗೊತ್ತಾಗೋಲ್ಲಪ್ಪ,. ಇಂಥಾ ದೆವ್ವ ಪಿಶಾಚಿಗಳಿರೋ ಮನೆಗೆ ಹೆಣ್ಣು ಕೊಡಬಾರದಿತ್ತು ಎಂದು ಅನುಮಾನ ತಡೆಯಲಾಗದೆ ಹೀನಾಮಾನವಾಗಿ ಗಂಡಿನ ಮನೆಯವರನ್ನ ಹಳಿಯ ತೊಡಗಿದ. ಆ ವೇಳೆಗೆ ಕುಡಿತದಲ್ಲಿ ಊರಿಗೆ ಚಾಂಪಿಯನ್ ಆಗಿದ್ದ ಅತಾರಿ ಬಂದವನು ಹೆಣ್ಣಿನ ಕಡೆಯವನ ಮೇಲೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಕೊನೆಗೆ ಗಂಡು ಬಂದು ಇಬ್ಬರಿಗೂ ಕೈಮುಗಿದಿದ್ದಾಗ ಗದ್ದಲ ಮುಗಿದಿತ್ತು. ಇಂಥಾ ಹತ್ತಾರು ಹಗರಣಗಳ ಕಕ್ಕಸು ಗುಂಡಿ ಈಗ ಒಂದೊಂದೂ ಇತಿಹಾಸದ ಹೊಲಗೇರಿಯ ಬದುಕಿನ ಪುಟಗಳನ್ನು ತೆರೆದಿಡುವಂತೆ ಗುಂಜಾರಯ್ಯನ ತಲೆ ಒಳಗೆ ಬಿಡಿಸಿಕೊಳ್ಳುತ್ತಾ ಬಂದವು. ಚಿಕ್ಕಣ್ಣನಿಗೆ ಹಂದಿ ಬಿದ್ದಿರುವ ಸಂಗತಿ ತಿಳಿದ ಮೇಲಂತೂ ಆನಂದಾತಿರೇಕಕ್ಕೊಳಗಾಗಿ ಬಯಸದೆ ಬಂದ ಭಾಗ್ಯ ಎನ್ನುತ್ತಾ ಆ ಬಗ್ಗೆ ಯೋಜನೆ ಹಾಕತೊಡಗಿದ. ಮನೆಯ ಹೆಂಗಸರು ಈ ಘಟನೆಯಲ್ಲಿ ಯಾವುದೋ ಕೇಡಿನ ಸೂಚನೆ ಎನ್ನುವಂತೆ ಲೆಕ್ಕಹಾಕತೊಡಗಿದರು. ಚೆಲುವನ ಅವ್ವ ಯಾಕೋ ಹೆದರಿ ಮಗನನ್ನು ಕೂಗಿಕೊಂಡಳು. ಹರಿಕತೆಯಲ್ಲಿ ಹೇಳಿದ್ದ ಕತೆ ಅವಳಿಗೂ ನೆನಪಾಗಿ ‘ ಅಯ್ಯೋ ದೇವ್ರೆ. ಸ್ವಾಮಿ ಹಂದಿ ರೂಪ ತಾಳಿತ್ತು ಅಂತಾ ಹೇಳ್ತಿದ್ರಲ್ಲಪ್ಪಾ. ರಾಕ್ಷಸುನ್ನಾ ಸಾಯ್ಸುಕ್ಕೆ ಆ ಅವುತಾರ ಎತ್ತಿ ಏಲ್‌ಮನೆವೊಳಗಿದ್ದೋನ್ನ ಸಿಗುದಾಕ್ತಂತಲ್ಲಾ….ಎಂದು ಅಸ್ಪಷ್ಟವಾಗಿ ನೆನಪಿಸಿಕೊಂಡಳು. ‘ ಲೋ ಚೆಲುವ , ಚೆಲುವಾ. ಬಾರೋ ನಿನ ಬಾಯಾಗ್ ನನ್ ರಕ್ತ ಹಾಕ. ಎಲ್ಲಿದ್ದಿಯೋ ’ ಎಂದು ಜೋರಾಗಿ ಕೂಗಿಕೊಂಡಳು. ಯಾವತ್ತೂ ಇಲ್ಲದ ಅವ್ವ ಇವತ್ತು ಏಕೆ ಹೀಗೆ ಬೈಯುತ್ತಿದ್ದಾಳೆಂದು ಚೆಲುವ ಮನೆಯೊಳಗೆ ಬಂದು ಏನವ್ವಾ ಎಂದು ನಿಂತ. ಹಿತ್ತಲ ಮನೆ ಬಾಗಿಲಿನಿಂದ ಕಕ್ಕಸು ಗುಂಡಿಯ ವಾಸನೆ ನಿಧಾನವಾಗಿ ಮನೆಯನ್ನ ಆವರಿಸಿ ವಾಸನೆ ತರಿಸುತ್ತಿದೆ ಎಂದು ಮೂಗು ಮುಚ್ಚಿಕೊಂಡ. +ವಿಷಾದವೆಂದರೆ ಚೆಲುವನ ಬುಗುರಿ ಯಾವ ಕಾರಣಕ್ಕೂ ಕೈಗೆ ಬರುತ್ತದೆ ಎಂಬ ಯಾವ ಅಂಶವೂ ಉಳಿಯಲ್ಲಿಲ್ಲ. ‘ ಆ ಗುಂಡಿ ತಂಟೆಗೆ ವೋಗ್ಬೇಡ. ಸಿಲೇಟ್ ತಕಂದು ಪಡಸಾಲೆ ಮ್ಯಾಲೆ ಕಂತ್ಕ ಬರಿಯೋಗು. ರಜಾ ಇದ್ರೆ ವೋದ್ ಬ್ಯಾಡಾ ಅಂತಿದ್ದೇನೋ ’ ಎಂಬ ಮಾತು ಅವನಿಗೆ ಬಿತ್ತು. ಹೋಟೆಲ್ ತಿಂಡಿಗಾಗಿ ಅವನ ಅವ್ವ ಏನೇನೋ ಕೆಲಸ ಮಾಡುತ್ತಿದ್ದಳು. ಚೆಲುವ ಬೀದಿಗೆ ಬಂದು ಎಲ್ಲವನ್ನು ಜಗಿಯತೊಡಗಿದ. ಅಪ್ಪ ಹಂದಿಯನ್ನು ಹೇಗೆ ಮೇಲೆತ್ತುತ್ತಾನೆ, ಹಾಗೆ ಎತ್ತುವಾಗ ತನ್ನ ಬುಗುರಿ ಏನಾದರೂ ಸಿಕ್ಕಿದರೆ ಏನು ಮಾಡುತ್ತಾನೆ ಎಂದು ಲೆಕ್ಕಿಸಿದ. ಯಾವ ಪರಿಹಾರವೂ ಗೋಚರಿಸಲಿಲ್ಲ. ಸಪ್ಪೆ ಮೋರೆ ಹಾಕಿಕೊಂಡು ‘ ನಾನು ಬುಗುರಿಯಾಡುದ್ರೆ ಅವುನಿಗೇನ್ ಕಷ್ಟ ’ ಎಂದು ತನ್ನೊಳಗೇ ಅಂದುಕೊಂಡ. ಬೆಳಿಗ್ಗೆ ಬೀದೀಲಿ ಬುಗುರಿ ಆಡುತ್ತಿದ್ದಾಗ ಬಾರುಗೋಲು ತಂದು ಚಟೀರೆಂದು ಹೊಡೆದು ಬುಗುರಿಯನ್ನು ಕಿತ್ತುಕೊಂಡು ಹೋಗಿ, ಅವನ ಅಪ್ಪ ಆ ಕಕ್ಕಸು ಗುಂಡಿಗೆ ಬಿಸಾಡಿದ್ದ. ಅಪ್ಪನೇ ಒಂದು ದೊಡ್ಡ ರಾಕ್ಷಸನಂತೆ ಚೆಲುವನ ಮನಸ್ಸಿನಲ್ಲಿ ಸುಳಿದು ಬಂದ. ಹಾಗೆಯೇ ಆ ಮನೆಯ ಅವನ ಅವ್ವ , ಅಜ್ಜಿ, ಅತ್ತೆಯಂದಿರು ಇತ್ಯಾದಿಗಳ ಪೇಲವ ವಿಷಣ್ಣ ಮುಖಗಳು ಎದುರಾಗಿ ಅವರು ಎಂಥದೋ ಭಯಂಕರ ರೋಗಗಳಿಂದ ಬಳಲುತ್ತಿರಬೇಕೆಂದು ಭಾವಿಸಿಕೊಂಡ. ಅವನ ಅವ್ವನ ಮಾತನ್ನು ಮೀರಿ ಹೋಟೆಲಿಗೆ ಬಂದ . ಅಲ್ಲಿ ಪರ್ಮಿನೆಂಟ್ ಗಿರಾಕಿಗಳಂತೆ ಸದಾ ಅತಾರಿ ಅಪ್ಪನ ಜೊತೆ ಇದ್ದೇ ಇರುತ್ತಿದ್ದುದನ್ನುನೋಡಿದ. ಹಂದಿ ಮೇಲೆತ್ತುವ ಬಗ್ಗೆ ಏನೇನು ನಿರ್ಣಯ , ಚರ್ಚೆಗಳನ್ನು ಕೈಗೊಳ್ಳುತ್ತಾರೆಂದು ತಿಳಿಯಲು ಚಲುವ ಬರುವ ಹೊತ್ತಿಗಾಗಲೇ ಸಾಕಷ್ಟು ಚರ್ಚೆ ಮುಗಿದಿತ್ತು. ಚಿಕ್ಕಣ್ಣ ಮತ್ತು ಅತಾರಿಯ ನೀಲಿ ನಕ್ಷೆಯಂತೆ ; ಬಿದ್ಡಿರುವ ಹಂದಿಯನ್ನು ಲಪಟಾಯಿಸುವುದೇ ಸರಿ ಎಂದಾಗಿತ್ತು. ಆದರೆ ಒಳಗಿರುವ ಹಂದಿಯನ್ನು ಕೊಲ್ಲುವ ಕೆಲಸ ದುಸ್ಸಾಧ್ಯವಾಗಿತ್ತು. ಗುಂಡಿಯೊಳಗೆ ಅದನ್ನು ಕೊಲ್ಲುವುದು ಸಾಧ್ಯವೇ ಇರಲಿಲ್ಲ. ಹಂದಿ ಜಾತಿಯಂತಹ ಪ್ರಾಣಿಗಳು ‘ ಸುಲಬ್‌ರೇಟೆಲಿ ’ ಪ್ರಾಣವನ್ನು ಕಳೆದುಕೊಳ್ಳುವಂತಹವಾಗಿರಲಿಲ್ಲ. ಹಾಗೇನಾದರೂ ತಿವಿದು , ಚಚ್ಚಿ ಕೊಲ್ಲಲು ಹೊರಟರೆ ಅದು ಇಡೀ ಊರಿಗೆ ಗುಟ್ಟು ಗೊತ್ತಾಗುವಂತೆ ಶಬ್ದ ಮಾಡಿ ಕೊನೆಗೆ ಅದರ ಮಾಲೀಕನಿಗೆ ಸಂಗತಿ ತಿಳಿದು ರಂಪವಾಗಿ ತಮ್ಮ ನೀಲಿನಕ್ಷೆ ಹಾಳಾಗುತ್ತದೆಂದು ಯೋಚಿಸಿದರು. ಕೊನೆಗೆ ಅವರ ಯೋಚನೆಯಂತೆ ಇಷ್ಟು ತೀರ್ಮಾನಗಳಿಗೆ ಬಂದರು. +ಹಂದಿಯನ್ನು ಸಂಜೆ ತನಕ ಗುಂಡಿಯಲ್ಲೇ ಉಳಿಯಲು ಬಿಡಬೇಕು. ಅದು ವದ್ದಾಡಿ ವದ್ದಾಡಿ ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಭರ್ಜಿಯಿಂದ ತಿವಿಯುವ ಕೆಲಸ ಮಾಡಬೇಕು. ಹಾಗೂ ಸಾಯಲಿಲ್ಲ ಎಂದರೆ ಕಕ್ಕಸು ಗುಂಡಿಯೊಳಕ್ಕೆ ಇಳಿದು ಹಗ್ಗ ಬಿಗಿದು ಮೇಲೆತ್ತಿ ಮುಂದಿನ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರು. ಇಷ್ಟೆಲ್ಲ ನಡೆಯುವ ಕೊನೆ ಹಂತವನ್ನು ಕೇಳಿಸಿಕೊಂಡ ಚೆಲುವ ತನ್ನ ಬುಗುರಿಯ ಜೊತೆಗೆ ಹಂದಿ ಸಾಯುವುದನ್ನು ಕಲ್ಪಿಸಿಕೊಂಡ. ಅದನ್ನು ಸಾಯಿಸುವುದಾದರೂ ಯಾಕೆಂದು ಅವನಿಗೆ ತಿಳಿಯಲಿಲ್ಲ. ತನ್ನ ತಾತ ಇಂಥಾ ದುಸ್ಸಾಧ್ಯ ನೀಲಿನಕ್ಷೆಯ ಯೋಜನೆ ಸರಿಯಲ್ಲಾ ಎಂದು ಹೇಳಿದಾಗ ತಾತ ಮಾತ್ರವೇ ಸರಿ ಎನಿಸಿಬಿಟ್ಟಿತು. ಅಂತೂ – ಹೋಟೆಲಿಗೆ ಗಿರಾಕಿಗಳು ಬಂದರು ಹೋದರು . ಬೋಂಡಗಳ ತಿಂದರು, ಟೀ ಹೀರಿದರು. ಅಂತಾ ಇಂತಾ ಮಾತಾಡಿ ಬಿಸಿಲಿನ ಬಗ್ಗೆ ಬೈಯ್ದರು. ಮಳೆ ಈ ವರ್ಷವೂ ಕೈಕೊಡುತ್ತದೆಂದು ನಿರಾಶರಾದರು. ಹಾಗೆಯೇ ಬಂದ ಒಬ್ಬೊಬ್ಬರೂ – ‘ ಥೂ ; ಇದೇನ್ ಚಿಕ್ಕಣ್ಣಾ ಇಂತಾ ವಾಸ್ಣೆ ಬತ್ತದಲ್ಲಾ , ಇವತ್ತು ಏನ್ ಎಲ್ಲಾರ ನಾಯಿಗೀಯಿ ಸತ್ತಿದ್ದದೇ ನಿಮಿತ್ಲೆಲಿ ? ಥೂ ಬರೀ ಅಮಾದಿ ವಾಸ್ನೆ ಕನಪ್ಪಾ ’-‘ ಟೀಯೆ ಬಾಯ್ಗೆ ಬಿಡೂಕೆ ಆಗುದಿಲ್ಲ. ’ – ಎನ್ನುವ ಮಾತುಗಳನ್ನು ಆಡಿದ್ದರು. ಹೀಗೆ ದೈನಂದಿನ ಬದುಕಿನ ಚಟುವಟಿಕೆಗಳೆಲ್ಲದರ ಬಗ್ಗೆ ವಿಚಾರ ಮಾಡಿ ಅವರವರ ಕೆಲಸಕ್ಕೆ ಹೋಗಿದ್ದರು. ಬಿಸಿಲು ಆಗತಾನೆ ಇಳಿಯುವ ಸೂಚನೆ ತೋರಿತು. +ಅತಾರಿ ತನ್ನ ನೀಲಿನಕ್ಷೆಗೆ ತಕ್ಕಂತೆ ಎಲ್ಲವನ್ನು ಸಿದ್ಧಮಾಡಿಕೊಂಡಿದ್ದ. ಒಂದು ಮಡಕೆ ಎಂಡವನ್ನು ಈ ಕಾರ್ಯಕ್ಕಾಗಿ ಪೇಟೆಯಿಂದ ತಂದು ಹಿತ್ತಲಲ್ಲೇ ಇಟ್ಟಿದ್ದ. ಭಯಂಕರವಾಗಿ ಕುಡಿದು , ಅನಂತರ ವಿಪರೀತ ನಿಶೆಯೇರಿದ ಮೇಲೆಯೇ ತಾವು ಕಾರ್ಯಾಚರಣೆಗೆ ತೊಡಗುವುದು ಸರಿ ಎಂಬುದು ಅವನ ವಾದ. ಯಾಕಂದರೆ , ವಿಪರೀತವಾದ ಆ ಕೆಟ್ಟ ಏಲಿನ ವಾಸನೆಯಿಂದ ಹಂದಿಯನ್ನು ಮೇಲೆತ್ತುವುದಕ್ಕೆ ಕಷ್ಟವಾಗುತ್ತದೆಯಾದ್ದರಿಂದ ಸಂಪೂರ್ಣ ನಿಶೆಯಿದ್ದರೆ ಯಾವ ವಾಸನೆಯನ್ನು ಲೆಕ್ಕಿಸದೆ ಕೆಲಸ ಮಾಡಬಹುದು ಎಂದು ನಿರ್ಣಯಿಸಿ ಚಿಕ್ಕಣ್ಣನ ಶಹಬ್ಬಾಸ್‌ಗಿರಿ ಪಡೆದಿದ್ದ. ಅಂತೂ ಎಲ್ಲವೂ ಸಿದ್ಧವಾಯಿತು. ಮನೆಯ ಹೆಂಗಸರು ಈ ನೀಲಿನಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಾದರೂ ಕೂಡ ಅವರ ಧ್ವನಿಗೆ ಯಾವ ಮೈಕೂ ಇರಲಿಲ್ಲ. ಗುಟ್ಟಾಗಿ ಬೇಗ ಕೆಲಸ ಮುಗಿಸಬೇಕೆಂದು ಎಂಡ ಕುಡಿಯುವುದರಲ್ಲಿ ಇಬ್ಬರೂ ತೊಡಗಿದರು. ಚೆಲುವ ಇದನ್ನೆಲ್ಲ ಕದ್ದು ಗಮನಿಸುತ್ತಾ, ಮನುಷ್ಯರು ಏಲುಗುಂಡಿಗೆ ಹೇಗೆ ಇಳಿಯುತ್ತಾರೆಂಬುದನ್ನು ನೋಡಲು ಆಶ್ಚರ್ಯದಿಂದಲು ಬುಗುರಿ ಏನಾದರೂ ಸಿಗಬಹುದೇ ಎಂದು ಅಣುವಿನಷ್ಟು ಆಸೆಯಿಂದಿರಲು ಕಾದು ತಾನೊಂದು ಕಡೆ ಮರೆಯಲ್ಲಿ ಕುಳಿತ. ಚಿಕ್ಕಣ್ಣ ಒಂದು ಸುತ್ತು ಗಟಗಟ ಕುಡಿದು ಎದ್ದು ಬಂದು ಕಕ್ಕಸ್ಸು ಗುಂಡಿಯನ್ನು ತೆಗೆದು ನೋಡಿ ಅಸಾಧ್ಯ ವಾಸನೆಗೆ ಬೆಚ್ಚಿ ವಾಪಸ್ಸು ಓಡಿಬಂದು ಪುನಃ ಕುಡಿಯತೊಡಗಿದ. ಆ ಗಬ್ಬು ಇಡೀ ಊರಿನ ಗಬ್ಬಿನಂತೆ , ಮನುಷ್ಯನ ಗಬ್ಬಿನಂತೆ ಊರ ಸುತ್ತ ಗಾಳಿಯ ಜೊತೆ ಅಲೆಯತೊಡಗಿತು. ಅತಾರಿಗೆ ವಿಪರೀತ ನಿಶೆ ಏರುತ್ತಿತ್ತು , ತೊದಲುತ್ತ , ‘ ಯಂಗೋ ವತಾರಿಂದ ಒಳ್ಗೇ ಬಿದ್ಕಂದು ಸಾಯುಮಟ್ಟುಕ್ಕೋಗದೆ.: ಈಗ ಉಪಾಯ್ದಲ್ಲಿ ಅಮರ್‌ಕತ್ತ ಚಿಂಕಿ ಸಾಯಸ್‌ಬೋದು ’ – ಎಂದ. ಚಿಕ್ಕಣ್ಣ ಗುರುಗುಟ್ಟುತ್ತ ‘ ಅಂಗ್ಮಾಡುದ್ರೆ ಆದಾದ್ಲಾ ಅತಾರಿ. ಅಂದಿ ಸಕ್ನೆ ವತ್ಕಂಟ ಜೀಮ ಇಡ್ಕಂದಿರ್‍ತದೆ. ಅದ್ಕೇ ಕತ್ತ ಚಿಮ್ಮಿ ಸಾಯ್ಲುಮಾತಾ ಅತ್ಲಾಗ್ ಬಿಸಾಕು ’ ಎಂದ. ನೀನೇಳೂದು ಸರಿಯೇ ಕನ್‌ಲಣ್ಣ , ಯೀಗಾ ಇಂಗ್ಮಾಡ್ವ. ಒಂದ್ ದೊಡ್ಡ ಕಂಬ್ಳ ಚೀಲ್ಕೆ ಅದ ಸೇರುಸ್‌ಬುಟ್ಟು , ಆಮೇಕೆ ಅಗ್ಗ ಕಟ್ಟಿ ಮ್ಯಾಕೆಳಕಮ ’ ಎಂದ. ‘ ಸೈಕಲಾ ಅತಾರಿ ’ ಎಂದು ಚಿಕ್ಕಣ್ಣ ಹಾಗೆಯೇ ಒಪ್ಪಿಕೊಂಡು ಕಕ್ಕಸು ಗುಂಡಿಗೆ ಇಳಿಯುವ ಕಾಯಕಕ್ಕೆ ಅಣಿಯಾದರೂ ಚೆಲುವ ಇದನ್ನೆಲ್ಲ ನೋಡುತ್ತಲೇ ಬುಗುರಿ ಸಿಕ್ಕಿದರೂ ಕೂಡ ಅಪ್ಪ ಅದನ್ನು ಕಣ್ಣಿಗೆ ಕಾಣದಂತೆ ದೂರ ಎಸೆಯುತ್ತಾನೆಂದುಕೊಂಡು ದುಃಖಿತನಾದ. ತನ್ನ ಆತ್ಮೀಯರಾರೋ ಕಳೆದುಹೋದರು ಎಂಬಂತೆ ಬುಗುರಿಯ ಬಗ್ಗೆ ಚಿಂತೆಪಡತೊಡಗಿದ. +ಹೊದಿಸಿದ್ದ ತೆಂಗಿನಗರಿಗಳನ್ನು ಅತಾರಿ ಮೆಲ್ಲಗೆ ಎಳೆದು ಹಾಕಿದ. ಗಬ್ಬುನಾತ ಅಡರಿಕೊಂಡಿತು. ಕುಡಿದು ಅಮಲಾಗಿದ್ದ ಅವರ ಕಣ್ಣುಗಳು ಆ ವಾಸನೆಗೆ ಸ್ಪಂದಿಸುತ್ತಿರುವಂತೆ ಆ ನರಕದೊಳಗೆ ಹಂದಿಗಾಗಿ ಕಣ್ಣಾಡಿಸಿದರು. ‘ ಎತ್ತಾಗೋಯ್ತಣ್ಣಾ ಕಾಣುದೆ ಇಲ್ವಲ್ಲಾ ’ ಎಂದ ಅತಾರಿ. ‘ ಏಯ್ ಮಟ್ವಾಗ್ ನೋಡ್ಲಾ , ಅಲ್ಲೇ ಯೇಲ್ ಮೆರ್ಕಂದು ಬಿದ್ದದಲ್ಲಾ ’ ಎನ್ನಲೂ ಚಿಕ್ಕಣ್ಣ : ‘ ವೂಂಕನಣ್ಣೋ ಯೇಲೆಲಿ ವುಂಟಾಡಿ ವುಂಟಾಡಿ ಗುರ್ತೇ ಕಾಣ್ದಂಗಾಗದೆ ’ ಎಂದು ಅಸಾಧ್ಯ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಈಗ ಇಬ್ಬರಲ್ಲಿ ಒಬ್ಬರು ಕೆಳಕ್ಕೆ ಇಳಿಯುವುದೇ ಸರಿ ಎಂದು ತೀರ್ಮಾನಿಸಿದರು. ಇಷ್ಟೆಲ್ಲದರ ನಡುವೆ ಮಹಾ ಧೈರ್ಯ ತುಂಬಿಕೊಂಡು ಚೆಲುವ , ಬುಗುರಿ ಏನಾದರೂ ಅಲ್ಲಿ ಕಾಣಬಹುದೇ ಎಂದು ಬಂದು ಬಗ್ಗಿ ನೋಡಿದ. ಬುಗುರಿಯ ಆಸೆಗಾಗಿ ಆ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಚಿಕ್ಕಣ್ಣ ಸಿಟ್ಟು ಮಾಡಿಕೊಂಡು ‘ ಲೇಯ್ ಅದೇನಂಗ್ ಬಗ್ಗಿ ನೋಡೀಯೇ; ವೋಗತ್ತಗ್ ನಿಂತ್ಕಂದ್ ಯಾರಾರ ನೋಡ್೬ಗೀಡಾರ್ ಅನ್ನುದಾ ನೋಡ್ಕ ವೋಗು ’ ಎಂದು ಕಾಯುವ ಕೆಲಸವನ್ನು ಮಗನಿಗೆ ಚಿಕ್ಕಣ್ಣ ವಹಿಸಿದ.ಚೆಲುವನಿಗೆ . ಚೆಲುವನಿಗೆ ಧೈರ್ಯ ಬಂದಂತಾಗಿ ‘ ಆಯ್ತು ’ ಎನ್ನುವಂತೆ ಅವರ ಪಾಡಿಗೆ ಅವರು ಹಂದಿ ಎತ್ತುವ ಕಾಯಕ ಮಾಡಿದಂತಾಗಲಿ ಎಂದುಕೊಂಡು ಸ್ವಲ್ಪ ದೂರಕ್ಕೆ ಹೋಗಿ ನಿಂತು ಬುಗುರಿಯ ಗುಯ್‌ಗುಟ್ಟುವಿಕೆಗಾಗಿ ಕಾತರಿಸಿದ. ಹಂದಿಯು ವಿಕಾರ ರೂಪವಾಗಿ ಇಡೀ ಮೈತುಂಬ ಅಮಾದಿ ಮೆತ್ತಿಕೊಂಡು ‘ ವರಾಹ ಅವತಾರ ’ ದ ವಿಷ್ಣುವನ್ನು ನೆನಪಿಸುವಂತೆ ಬಿದ್ದಿತ್ತು. ಅದರ ದುರಂತವೊ , ಅತಾರಿಯ ದುರಂತವೋ , ಯಾರ ದುರಂತವೋ ಏನೋ – ಅದು ಅತ್ಯಂತ ನಿಶ್ಶಕ್ತಿಗೊಳಗಾಗಿ ಸಾಯುವ ಸ್ಥಿತಿ ತಲುಪಿದ್ದರಿಂದ ಅವರ ಯೋಜನೆ ಸುಲಭವಾಗತೊಡಗಿತು. ಆದರೂ ಇಬ್ಬರಲ್ಲಿ ಒಬ್ಬ ಗುಂಡಿಗೆ ಇಳಿಯಲೇ ಬೇಕಾದ್ದರಿಂದ ಚಿಕ್ಕಣ್ಣನೇ ಒಳಗೆ ಇಳಿಯುವ ಮನಸ್ಸು ಮಾಡಿ ಆ ವಿಪರೀತವಾದ ಗಬ್ಬನ್ನು ಸಹಿಸಿಕೊಂಡು ಇಳಿಯತೊಡಗಿದ. ಹಿಂದೆ ಗೌಡರ ಕೋಣ ಒಳಕ್ಕೆ ಬಿದ್ದು ಮಣ್ಣು ಕುಸಿದು ಅಗಲ ಮಾಡಿದ್ದರಿಂದಲೂ , ಆಳ ಕಡಿಮೆಯಾಗಿದೆ ಎಂತಲೂ , ಕೆಳಗೆ ನೆಲ ಗಟ್ಟಿಯಾಗಿದೆ ಎಂದುಕೊಂಡು ಕಾಲುಬಿಟ್ಟು ಇಳಿಯುತ್ತಿರುವಂತೇ ಆ ಅಸಾಧ್ಯ ವಾಸನೆಯಲ್ಲಿ ಆಯ ತಪ್ಪಿ , ಅಮಲಿನಿಂದ ನಿಶ್ಶಕ್ತನಾಗಿ ಒಂದೇ ಬಾರಿಗೆ ‘ ಪರ್ ’ ಎಂದು ಜಾರಿಕೊಂಡು ಹೋಗಿ ಥೇಟ್ ಹಂದಿಯಂತೆಯೇ ಆ ಕಕ್ಕಸ್ಸು ಗುಂಡಿಗೆ ಬಿದ್ದು ಸೊಂಟದ ತನಕ ಏಲು ಮೆತ್ತಿಸಿಕೊಂಡು ಮುಖವನ್ನೆಲ್ಲ ವಿಕಾರವಾಗಿ ಕೊಕ್ಕರಿಸಿಕೊಂಡು ಬಿದ್ದಿದ್ದ ಹಂದಿಯ ಮುಂದೆಯೇ ಹೋಗಿ ನಿಂತ. ಹಂದಿ ಒಮ್ಮೆ ಜೀವ ಬಿಡುವಂತೆ ಗುಟುಕ್ ಪಟರ್ ಎಂದು ಕ್ಷೀಣವಾಗಿ ಶಬ್ದಿಸಿ ಕಣ್ಣು ಬಿಡುವ ಪ್ರಯತ್ನ ಮಾಡಿತಾದರೂ ಅವುಗಳ ಮೇಲೂ ಅಮಾದಿ ಮೆರೆದುಕೊಂಡಿತ್ತು. ಹೀಗೆ ಆಯತಪ್ಪಿ ಜಾರಿಬಿದ್ದ ಚಿಕ್ಕಣ್ಣನ ಅವಸ್ಥೆಯನ್ನು ಕಂಡು ಮೇಲೆ ನಿಂತಿದ್ದ ಅತಾರಿ ಜೋರಾಗಿ ನಕ್ಕು ‘ ಇದೇನಣ್ಣಾ ಅಂದಿ ತರ್‌ದೆಲೇ ನೀನೂ ಹೋಗಿ ವೋಗಿ ಬಿದ್ಕಂದಲ್ಲಾ ’ ಎಂದ. ಚಿಕ್ಕಣ್ಣನಿಗೆ ಸಿಟ್ಟು ನೆತ್ತಿಗೇರಿ , ಆದರೂ ತಾನೀಗ ಏಲು ಗುಂಡಿಯಲ್ಲಿ ನಾಟಿ ಕೊಂಡಿರುವುದರಿಂದ ಕೋಪ ಮಾಡಿದರೆ ಕೆಲಸ ಆಗುವುದಿಲ್ಲ ಎಂದುಕೊಂಡು ‘ ಬೊಡ್ಡೀಮಗ್ನೇ ಮೊದ್ಲು ಚೀಲ ಕೊಡು , ನಗುವಂತೇ ಆಮೇಕೆ ’ ಎಂದ. ಅತಾರಿ ಆತುರದಿಂದಲೇ ಚೀಲಕೊಟ್ಟು , ನಗುತ್ತಲೇ ‘ ತಕೋ ಈ ಅಗ್ಗಾನು ’ ಎಂದ. ಭಯಾನಕ ಚಿತ್ರವನ್ನು ತಾನು ನೋಡುತ್ತಿರುವಂತೆ ಚೆಲುವ ಇದನ್ನು ನೋಡಿ ವಾಕರಿಕೆ ಪಟ್ಟುಕೊಂಡು ಏನೇನೋ ಗೊಂದಲದಿಂದ ಸಪ್ಪಗಾಗಿಬಿಟ್ಟ. ಚಿಕ್ಕಣ್ಣನಿಗೆ ಈ ಅಸಾಧ್ಯ ವಾಸನೆಯಲ್ಲಿ , ಸಿಟ್ಟಿನಲ್ಲಿ , ಅವಮಾನದಲ್ಲಿ ಕುಡಿದಿದ್ದೆಲ್ಲ ವಾಂತಿಯಾಗಿ ನಿಶೆಯೆಲ್ಲ ಇಳಿದು ‘ ಹಲವಾರು ತರದ ಕೋಪಗಳು ’ ಬೆಳೆಯತೊಡಗಿದವು. ಒಳಗೆ ಬಿದ್ದಿರುವ ಹಂದಿ ಕುಂಟಣ್ಣನದೇ ಎಂದು ತಿಳಿಯಲ್ಪಟ್ಟಿತು. ಇಷ್ಟರೊಳಗೆ ಚೆಲುವ ತನ್ನ ಅಪ್ಪನ ಹಣೆಬರಹ ಹೀಗಾಗಿದೆ ಎಂಬಂತೆ ತಾತನಿಗೆ ಹೋಗಿ ತಿಳಿಸಿದ. ಚಿಕ್ಕಣ್ಣನ ಅಪ್ಪ ಗುಂಜಾರಯ್ಯ ಸಿಟ್ಟಿನಿಂದ ಬಂದು- ‘ ಇಂಗ್ಮಾಡ್ರಪ್ಪ ಅಂತೇಳಿದ್ನೆ ನಾನು . ಮ್ಯಾಲೆ ನಿಂತ್ಕಂಡು ಉಪಾಯ್ದೆಲೆ ಕೊಕ್ಕೆಲೆ ಕುತ್ಗೆಗೆ ಅಗ್ಗ ಹಾಕಂದು ಮ್ಯಾಕೆತ್ತಿ ಅಂತಲು ಹೇಳಿತ್ತು , ಥೂ ರಾಮ ರಾಮ – ಯಾವ್ ಕರ್‍ಮ ಮಾಡಿದ್ರೋ ಪಾಪಿಗೊಳಾ , ಯಾರಾರ ಏಲ್ ಗುಂಡಿಗೆ ಬಿದ್ದು ಬಟ್‌ಬರೆ ಮೈಯೆಲ್ಲನೂ ಯೇಲ್ ಮಾಡ್ಕಂದರೇ, ನನ್ ಕಣ್ಣೆದುರ್‍ಗೇ ನರ್‍ಕುಕ್ ಬಿದ್ದಲ್ಲಾ ನೀನು. ಏನ್ ಮಾಡೀಯೇ ಅದು ನಿನ್ ಕರ್‍ಮ ಕನಪ್ಪಾ ’ ಎಂದು ಹಳಿಯುತ್ತಾ ತಾನು ಹೇಳಿದಂತೆ ಮಾಡಿಲ್ಲ ಎಂದು ಗುಂಜಾರಯ್ಯ ಬೈಯತೊಡಗಿದ್ದ. +ಚಿಕ್ಕಣ್ಣ ಹಂದಿಯನ್ನು ಚೀಲಕ್ಕೆ ಹಾಕಿ ಹಗ್ಗ ಬಿಗಿದು ಕಣ್ಣನ್ನು ಮಳ್ಳಿಸುತ್ತಿದ್ದ. ಗುಂಜಾರಯ್ಯ ಬೇಸರಗೊಂಡು , ತನ್ನ ಮನೆತನದ ಪೂಜಾರಿಕೆ ವಂಶವಲ್ಲವೇ, ಅದು ಹೀಗಾಗಬೇಕಿತ್ತೆ , ಏಲು , ಎಂಡ , ವುಚ್ಚೆ ಎಲ್ಲಾನೂ ಒಂದು ಮಾಡಿಕೊಂಡು ಮನೆತನದ ಶುದ್ಧ ಸೂಕ್ಷ್ಮಗಳನ್ನು ಹಾಳುಮಾಡಿದರಲ್ಲ ಎಂದುಕೊಂಡ. ಊರ ದೇವರ ಪೂಜಾರಿಕೆಗೆ ಅಪವಿತ್ರವಾಯಿತು ಎಂದು ನೋವುಪಟ್ಟ. ಚಿಕ್ಕಣ್ಣ ಹಗ್ಗ ಬಿಗಿದು ‘ ಹೂಂ ’ ಎಂದಮೇಲೆ ಅತಾರಿ ಹಂದಿಯನ್ನು ಮೇಲೆ ಎಳೆದು ಹಾಕಿದ. ಹಾಗೆಯೇ ಅತಾರಿ ಮಾತನಾಡಿ ‘ ಬಾ ಇಪಟು ಮ್ಯಾಕೆ , ಅಗ್ಗವ ಬಿಗಿಯಾಗ್ ಇಡ್ಕ ಅತ್ಯಪ್ಪೋ ; ಆಮೆಕ್ ತಿರ್‍ಗ ತಳ್‌ತಳುಕ್ಕಾಗಿ ಮಗುಚ್ಕಂದೀಯೇ ’ ಎಂದು ನಗಾಡಿದ. ಚಿಕ್ಕಣ್ಣನ ನಿಶಾಯೆಲ್ಲ ಮಂಗಮಾಯವಾಗಿತ್ತು. ಅವಮಾನಿತನಾಗಿ ಮೇಲೆ ಬಂದು ತನ್ನ ಸೊಂಟದ ತನಕ ರೊಚ್ಚು ನೀರು ಇಳಿಯುತ್ತಿರುವುದನ್ನು ಒಮ್ಮೆ ನೋಡಿಕೊಂಡು ಅತ್ಯಂತ ಸಿಟ್ಟಿನಿಂದ ಅಪ್ಪನ ಕಡೆ ಬಂದ- ಏನಂದೆ ನೀನು , ನನ್ ಕಣ್ಣೆದುರ್‍ಗೆ ನರ್‍ಕ ಕಂಡಲ್ಲಾ, ನಿನ್ ಹಣೇಬರಾ – ನಿನ್ ಕರ್‍ಮಾ ’ ಅಂತಲು ಅಂದದ್ದು ನೀನು. ನೋಡೀಯಾ ಈಗ ಯಾರ್ ನರ್‍ಕ ಕಂಡರು ಅನ್ನುದಾ ’ ಎಂದು ತನ್ನ ಅಪ್ಪನ ಮೇಲೆಯೇ ಸಿಟ್ಟಿನಿಂದ , ಹಿಂದಿನ ಯಾವುದಾವುದೋ ಅಸಮಾಧಾನಗಳನ್ನು ಕಕ್ಕಿಕೊಳ್ಳುವವನಂತೆ ನುಗ್ಗತೊಡಗಿದ. ಪಾಪ ಗುಂಜಾರಯ್ಯ ‘ ಅಯ್ಯೋ ಹೋಗೋ ಅತ್ಲಾಗಿ , ಮುಟ್ಟಿಸ್ಕಬ್ಯಾಡಾ , ನನ್ನೂ ಆಳ್ ಮಾಡ್‌ಬ್ಯಾಡಾ ’ ಎಂದು ಹೇಳಿದರೂ ಕೇಳದೆ ಆತನ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ‘ ನಿನ್ನೇ ನರ್‍ಕುಕ್ ತಳ್ತೀನಿಕನ್ನೋ ಬೊಡ್ಡೀಮಗ್ನೇ ’ ಎಂದು ತಾರಾಮಾರಾ ವಯಸ್ಸಾದ ಅಪ್ಪನ ಮೇಲೆ ಎರಗಿದ. ಚೆಲುವನಿಗೆ ಬುಗುರಿ ಬೇಕು ಎನಿಸಲಿಲ್ಲ. ಅಳು ಬರುವಂತಾಯಿತು. ಅತಾರಿ ಸಮಯ ಪ್ರಜ್ಞೆಯರಿತು , ಕೆಲಸವೆಲ್ಲ ಹಾಳಾಗಿ ಗುಟ್ಟು ಬಯಲಾಗುತ್ತದೆಂದುಕೊಂಡು ‘ ಅಣ್ಣೋ, ಇದೇನೆಂದಾರು ತಗಿಯಪ್ಪಾ ಪಾಪ ವಯ್ಸಾದೋನ್ ಮ್ಯಾಲೆ ಯಾವ್ ಜಗ್ಳಂದಾರು . ಬಿಡನೋ , ಅವುನ್ ತಾನೆ ಯಾರ್‍ಗಂದ. ಮಗ ಅಂತಲ್ಲುವಂದದ್ದು; ಬಿಡು ಬಿಡು ’ ಎಂದು ಮತ್ತಿನಲ್ಲೇ ಸಿಟ್ಟಿನಿಂದ ಚಿಕ್ಕಣ್ಣನ ರಟ್ಟೆಗಳನ್ನು ಹಿಡಿದು ದರದರ ಎಳೆದುಬಿಟ್ಟ. ಹಾಗೆ ಬಲವಾಗಿ ಅತಾರಿ ಎಳೆದದ್ದರಿಂದ ಆಯ ತಪ್ಪಿದ ಚಿಕ್ಕಣ್ಣನ ಕಾಲು ಉಳುಕಿದಂತಾಗಿ ‘ ಲೋ ಅತಾರಿ , ನೀನೂ ನನ್ ತಳ್ಳೀಯಾ , ಒಳುಗ್ ಬಿದ್ದಿದ್ರೆ ನೀನೂ ನಗೂನಾಗೋದಲ್ಲಾ, ಈಗ ನೋಡುದ್ರೆ ಅವುನ್ ಮಾತೇ ಸರಿ ಅಂತಾ ನನ್ನ ತಳ್ತೀಯಲ್ಲಾ ’ ಎಂದು ರೇಗಿದ. ರೇಗಿದರೂ ಬಿಡದೆ ಅತಾರಿ ಆತನನ್ನು ‘ ಬಾಣ್ಣೊ ಇಸಾರಿ ’ ಎಂದು ‘ ಕೆಲ್ಸ ಬ್ಯಾರೆ ಬಿದ್ದದೆ ’ ಎನ್ನುತ್ತ ಎಳೆದ. ಮೂವರೂ ದುರ್ದೈವಿಗಳು ಕಕ್ಕಸು ಗುಂಡಿಯ ಬಳಿಯೇ ನಿಂತಿದ್ದರು. ಅತಾರಿ ಜಗಳ ಬಿಡಿಸಬೇಕೆಂದು ಚಿಕ್ಕಣ್ಣನ ಸೊಂಟವನ್ನು ಬಿಗಿಯಾಗಿ ಹಿಡಿದು ‘ ಯೇಯ್ , ನನುಗ್ ಕ್ವಾಪ ಬರಿಸ್ ಬ್ಯಾಡ ಬಾಪ್ಪಾ ನೀನಿಪಟು ’ ಎಂದು ಜಗ್ಗಿದ. ಚಿಕ್ಕಣ್ಣ ಸಿಟ್ಟಿನಿಂದ ‘ ಯೇಯ್ ಬಿಡೋ ಸೂಳೆಮಗ್ನೆ ’ ಎಂದು ಬಲವಾಗಿ ಬಿಡಿಸಿಕೊಂಡು ನೂಕಿದ. ಅತಾರಿ ಆ ನೂಕುವಿಕೆಗೆ ನಿಶೆ ಸಹಿತವಾಗಿ ಆಯ ತಪ್ಪಿ ಯಾವ ತಡೆಯೂ ಯಾವ ನಿರ್ಬಂಧವೂ, ಯಾವ ಸಹಾಯವೂ ಇಲ್ಲದಂತೆ ಅತ್ಯಂತ ಸುಲಭವಾಗಿ ಅದೇ ಕಕ್ಕಸು ಗುಂಡಿಯೊಳಕ್ಕೆ ಹಂದಿಯಂತೆಯೇ ಬಿದ್ದು ಹೋದ. ಬಿದ್ದವನ ದುರಂತವೆಂದರೆ – ಅಡ್ಡಡ್ಡಲಾಗಿ ಬಿದ್ದಿದ್ದರಿಂದ ಪೂರಾ ತಲೆಯಿಂದ ಹಿಡಿದು ಕಾಲಿನ ತನಕ ಏಲು ಮೆತ್ತಿಕೊಂಡು ಭಯಾನಕ ಅವಮಾನವಾಗಿ ಕ್ರೋಧದಿಂದ ಬಿದ್ಡು ತಕ್ಷಣವೇ ಎದ್ದು ನಿಂತು ಮೇಲತ್ತುವ ಪ್ರಯತ್ನ ಮಾಡಿದ. +ಈ ಅಚಾನಕ್ಕಾದ ಘಟನೆಯಿಂದ ಚೆಲುವ ನಕ್ಕಿದನಾದರೂ ಇದೆಲ್ಲ ಯಾವುದೋ ಇನ್ನೊಂದು ಆಯಾಮಕ್ಕೆ ಎಳೆದೊಯ್ಯುತ್ತದೆನಿಸಿ, ಮರೆಗೆ ಬಂದು ನಿಂತುಕೊಂಡ . ಮನೆಯ ಹೆಂಗಸರು ಆ ನರಕದ ದರ್ಶನವಾಗದಿದ್ದರೆ ಸಾಕೆಂದು ಅಸಾಧ್ಯ ವಾಸನೆಗೆ ಬಾಗಿಲು , ಕಿಟಕಿ ಮುಚ್ಚಿಕೊಂಡು ಒಳಗೆ ಸೇರಿಬಿಟ್ಟಿದ್ದರು. ಅಪ್ಪ ಮಗ ಇಬ್ಬರೂ ಈಗ ಜಗಳ ಬಿಟ್ಟು ಬಿದ್ದ ಅತಾರಿಯನ್ನು ಮೇಲಕ್ಕೆ ಎತ್ತಿಕೊಂಡರು. ಅತಾರಿಯು ಗಂಭೀರವಾಗಿ ಮೇಲಕ್ಕೆ ಬಂದು ಇಬ್ಬರನ್ನೂ ನೋಡಿ ಮಾತಿಲ್ಲದೆ ದೊಡ್ಡ ಪಾನಿಯಿಂದ ಎಲ್ಲವನ್ನೂ ತೊಳೆದುಕೊಂಡು – ‘ ಅಹಾ , ಅಪಾ ಚಿಕ್ಕಣ್ಣಪ್ನೋರೆ , ನಿನ್ ಅನಾಯ್ದಲಿ ನನ್ನ ಗುಂಡಿಗೆ ತಳ್‌ದಲ್ಲಾ; ಅಕುಸ್ಮಾತ್ ತಲೆ ಏನರ ವಳಾಕ್ ನೆಟ್ಕಂಡಿದ್ರೆ ಏನಪ್ಪಾ ಮಾಡ್ತಿದ್ದೆ ನೀನು. ಥೂ ಸೂಳೆಮಗ್ನೆ , ಇರ್‍ಲಿ , ಇದಾ ಇಷ್ಟುಕ್ಕೇ ನಾ ಬಿಡುಮಗ್ನಲ್ಲಾ, ಅಂತೂ ನಿನ್ ಸಂಗುಕ್ ಒಂದ್ ದೊಡ್ ನಮಸ್ಕಾರ ಕನಪಾ ’ ಎಂದು ಹೊರಟು ಹೋದ. +ಈ ಸಂಗತಿ ಊರಿಗೆಲ್ಲ ತುಂಬಿಹೋಯಿತು. ಅತಾರಿ ಈ ಘಟನೆಯನ್ನು ಬೇರೆಯದೇ ರೀತಿಯಲ್ಲಿ ಪ್ರಚಾರ ಮಾಡಿ ತನಗೆ ಇನ್ನಿಲ್ಲದ ಅವಮಾನವನ್ನು ಅಪ್ಪ ಮಗ ಸೇರಿಕೊಂಡು ಮಾಡಿದರೆಂದು ಹೇಳಿ , ಆ ರಾತ್ರಿಯೇ ಈ ಬಗ್ಗೆ ನ್ಯಾಯ ಮಾಡುವಂತೆ ಎಲ್ಲವನ್ನೂ ಏರ್ಪಾಟು ಮಾಡಿಬಿಟ್ಟಿದ್ದ. ಚಿಕ್ಕಣ್ಣನ ಹಿತ್ತಿಲಲ್ಲಿದ್ದ ಈ ಏಲುಗುಂಡಿ ಈ ಹಿಂದೆ ಇಂಥ ಎಷ್ಟೋ ಅನಾಹುತಗಳಿಗೆ ಕಾರಣವಾಗಿದ್ದರಿಂದ ಅವರು ಅತರಿಯ ವಿಷಯ್ದಿಂದಾಗೆ ರೇಗಿ ನ್ಯಾಯ ಕಟ್ಟೆ ಹತ್ತಿದ್ದರು. +ಇತ್ತಲಾಗಿ ಆ ಹಂದಿಯನ್ನು ಎತ್ತಿದನಂತರ ಬಿಸಿನೀರಿನಿಂದ ಮೈತೊಳೆದು ಕೊಯ್ದ ನಾಳಿನ ಸಾದರಳ್ಳೀ ಸಂತೆಯಲ್ಲಿ ಮಾರಿ ಹಣ ಹಂಚಿಕೊಳ್ಳಬೇಕೆಂದಿದ್ದ ಇಬ್ಬರ ನೀಲಿನಕ್ಷೆಯು ಚೂರುಚೂರಾಗಿ ಗಾಳಿಗೆ ಹಾರಿ, ಏಲಿನ ವಾಸನೆಯಮುಖಾಂತರ , ಅತಾರಿಯ ಅವಮಾನದ ಮೂಲಕ , ಊರಿನ ಕ್ಷುದ್ರತೆಯ ಆಳ ಒಳ ಎಳೆಯ ದುರಂತದ ಮೂಲಕ ವಿಚಿತ್ರ ಘಟನೆಯಾಗಿ ಎಲ್ಲರಿಗೂ ಮೋಜಾಗಿ ಬಿಟ್ಟಿತು. ಚೆಲುವ ಈ ಆಯಾಮಗಳಿಂದೆಲ್ಲ ಖುಷಿಪಡುತ್ತಾ , ಹೀಗೆ ನ್ಯಾಯಪಾಯ ಆದರೆ ಗುಂಡಿಯನ್ನು ಮುಚ್ಚಿಸಿಬಿಟ್ಟಾದ ಮೇಲೆ ಅಪ್ಪ ಬುಗುರಿಯನ್ನು ಏಲುಗುಂಡಿಗೆ ಹಾಕಲು ಸಾಧ್ಯವಿಲ್ಲ ಎಂದುಕೊಂಡ. ಅಂತೂ ಇದೆಲ್ಲ ಆಗಿ ಸಂಜೆಗೆ ನ್ಯಾಯಕ್ಕೆ ಎಲ್ಲರನ್ನೂ ಕರೆದರು. ಆದರೆ ಚಿಕ್ಕಣ್ಣ ಮಾತ್ರ ಅಲ್ಲಿಗೆ ಬರಲಿಲ್ಲ. ಊರಿನ ಪಡ್ಡೆ ಹುಡುಗರು ಈ ತಮಾಷೆ ದೂರಿನ ನಗುತ್ತ ಅವರದೇ ಲೋಕದಲ್ಲಿ ಮುಳುಗಿದ್ದರು. ಚಿಕ್ಕಣ್ಣನ ಅಪ್ಪ ಗುಂಜಾರಯ್ಯನು , ತನ್ನ ಮಗ ಮಾಡಿರುವುದೆಲ್ಲ ತಪ್ಪೆಂದು ಮನವರಿಕೆ ಮಾಡಿಕೊಂಡು , ಕೇಳಿದಂತೆ ದಂಡ ಕೊಟ್ಟು ತಪ್ಪಾಯ್ತು , ಎಂದು ಹೇಳಿ ಬರುವುದೇ ಲೇಸೆಂದುಕೊಂಡಿದ್ದ. ಎಲ್ಲರೂ ಸೇರಿ ಚರ್ಚೆ ಮುಗಿಯುತ್ತಿರುವಾಗ ಯಜಮಾನ ಕಡುಂಬಯ್ಯ ಮಾತನಾಡಿ- ‘ ಅತಾರಿಯನ್ನ ನಿನ್ನ ಮಗ ಏಲ್ ಗುಂಡಿಗೆ ತಳ್ಳಿದ್ದು ತಪ್ಪು. ಆಮೆಕೆ , ಆ ಕುಂಟಣ್ಣನ್ ಹಂದಿಯ ಬೇಕೆಂತ್ಲೆ ನೀವು ಒಳಕ್ ಬೀಳ್ಸಿ ; ಅದಾ ಸಾದರವಳ್ಳಿ ಸಂತೆಲಿ ಮಾರುವ ಏರ್ಪಾಟ್ ಮಾಡಿದ್ರಂತೆ. ಅದಾ ಅತಾರಿಯೇ ಯೇಳ್ತಾವ್ನೆ. ಇದೂ ಅಲ್ದೆಯೇ , ಏಲ್ ಗುಂಡಿಗೆ ಇಳಿದು , ಆ ಏಲೆಲೆಲ್ಲಾ ವುಂಟಾಡಿ , ಬಂದು : ನಮ್ಗೆ ನಾಷ್ಟ , ಟೀ ಬ್ಯಾರೆ ಕೊಟ್ಟವ್ನೆ. ಇದೆಲ್ಲ ಸರಿಯಲ್ಲ. ಯಂಗೂ ನಿಂಗೆ ಗೊತ್ತದೆ. ಮುನ್ನೂರೊಂದ್ ರೂಪಾಯ್ ಮಡುಗ್ಬುಟ್ಟು ಸಭೆಗೆ ತಪ್ಪಾಯ್ತು ಅಂತಾ ವಪ್ಕಪಾ . ಆಮೆಕೆ , ಆ ಅತಾರಿ ಅದೇನೋ ಸೂತ್ಕ ಕೊಳ್ತನಾ ಕಳೀಲಿ ಅಂತ ದೇವುರ್ ಮಾಡ್ತಾನಂತೆ. ಅದ್ಕೆ ಬ್ಯಾರೆ ನೂರ್ ರೂಪಾಯ್ ಕೊಟ್‌ಬುಡಿ ’ ಎಂದು ನಿರ್ಣಯ ಹೇಳಿದ. +ಇದೆಲ್ಲವನ್ನೂ ನ್ಯಾಯಕಟ್ಟೆಯ ಸಂಪಲ್ಲಿ ಕೇಳಿಸಿಕೊಂಡು ನಿಂತಿದ್ದ ಚಿಕ್ಕಣ್ಣಾ ಬಂದವನೇ ‘ ಯಾಕ್ರಪ್ಪಾ ದಂಡ ಕೊಡ್‌ಬೇಕಾಗಿರುದು. ಯಾರ್ನಾ ಯಾರು ಏಲ್ ಗುಂಡಿಗೆ ತಳ್ಳಿದುದು. ವಸಿ ಮಟ್ಟಾಗಿ ಮಾತಾಡಿ, ಅತಾರಿ ಏನೂ ಕಾಣ್ದ ಹೈದ್ನಲ್ಲ , ತಳ್ದೀಟ್ಗೆ ಬಿದ್ದೋಗುಕೆ. ಅಲ್ಲಪ್ಪಾ , ಅವನಾ ತಳುಕೆ ಜಿದ್ದಿದ್ದದೆ ಇಬ್ಬುರ್‌ಗು , ಇಲ್ಲಾ ನಾನೇನರ ಕೊಡುದಿದ್ದದೋ , ಅವನೇನಾರ ನನುಗ್ ಕೊಡುದಿದ್ದದೋ..? ಎಲ್ಲಾ ತಂಟೆ ತಕರಾರ್ ಮಾಡ್ಕಂಡು ಗಾಳಿ ಗಂಟ್ಲಾಕಂದು ದಂಡತಕಂದು ಸರಾಪ್ ನಕ್ಕಮ ಅಂತಾ ಮಾಡಿರಾ ನ್ಯಾವಾ, ಅಪ್ಪೋ ಎದ್ನಡಿ ನೀನು. ಯಾವ್ ದಂಡ್ವ ಕೊಡುದು ಇವರ್‌ಗೆ. ನಾನಂತು ಒಂದು ಚಿಟ್ಟಿ ಪೈಸನು ಕೊಡುದುಲ್ಲಾ. ’ ಎಂದು ರ,ಪ ಮಾಡಿ , ಕೊನೆಗೆ ಕೈ ಕೈ ಮಿಲಾಯಿಸುವ ತನಕ ನ್ಯಾಸ್ಥಾನ ನಿಂತುಹೋಯಿತು. ಚಿಕ್ಕಣ್ಣ ತನ್ನ ಅಪ್ಪನನ್ನು ಬಲವಂತವಾಗಿ ಎಳ್ದುಕೊಂಡು ಮನೆಗೆ ಬಂದುಬಿಟ್ಟ. +ಚೆಲುವ ಆ ರಾತ್ರಿಯಲ್ಲಿ ಅಪ್ಪನೇ ಒಂದು ದೊಡ್ಡ ಪಿಶಾಚಿ ಎಂದು ಕಲ್ಪಿಸಿಕೊಳ್ಳುತ್ತಾ ನಿದ್ದೆ ಬರದೆ ವದ್ದಾಡತೊಡಗಿದ. ರಾತ್ರಿಯ ತಣ್ಣನೆ ಗಾಳಿ ಹೊರಗೆ ಬೀಸುತ್ತಿದೆ ಎನಿಸಿದರೂ ಮನೆಯೊಳಗೆ ಬೆಚ್ಚನೆಯ ಕೆಟ್ಟ ವಾಸನೆಯ ಗಾಳಿ ಸುತ್ತಿ ಹಾಕಿ ಕೊಂಡಿದೆ ಎನಿಸಿತು. ಚೆಲುವ ಕುಂಟಣ್ಣನ ಅಸಹಾಯಕತೆಗೆ ಮರುಗಿದ. ಊರಿಗೆ ಆತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದಾನಾದ್ದರಿಂದ ಅವನಿಗೆಂತಲೇ ಅಣ್ಣ ತಮ್ಮಂದಿರು ಬೆಂಬಲಿಗರು ಇರಲಿಲ್ಲ. ಅಪ್ಪನ ಎದಿರು ಆತ ಅನ್ಯಾಯಕ್ಕೆ ಒಳಗಾಗಿದ್ದಕ್ಕೆ ನೊಂದುಕೊಂಡ. ಹಿಂದೆ ತಿಪ್ಪೇಗೌಡರ ಕೋಣದ ರೀತಿಯಲ್ಲೇ ಹಂದಿ ಕೂಡ ಗುಂಡಿಯೊಳಗೆ ಮುಳುಗಿ ಸಾವಿನೊಡನೆ ಸೆಣೆಸಾಡಿ ಬೆಳಿಗ್ಗೆಯಿಂದ ಸಂಜೆ ತನಕ ಅಲ್ಲೇ ಅದು ಬಿದ್ದಿದ್ದರಿಂದ ಸತ್ತು ಹೋಗಿತ್ತು. ಅದನ್ನು ನೀಲಿನಕ್ಷೆ ಪ್ರಕರ ಕೊಯ್ದು ಮಾರುವಂತೆಯೂ ಇರಲಿಲ್ಲ. ಕಕ್ಕಸು ಗುಂಡಿಯ ಬಳಿಯೇ ಅದು ಹೆಣದಂತೆ ಸಾವಿರಾರು ನೊಣಗಳನ್ನು ಮುತ್ತಿಸಿಕೊಂಡು ಬಿದ್ದಿತ್ತು. ಚೆಲುವ ಮಲಗಿದಂತೆಯೇ ಇದೆಲ್ಲವನ್ನು ನೆನೆದು ಹೆದರಿ ಹಂದಿ ಏನಾದರೂ ದೆವ್ವವಾದರೆ , ಅದು ಮನುಷ್ಯ ರೂಪವಾಗಿ ಬಂದರೆ , ಹೇಗಿರಬಹುದೆಂದು ಕಲ್ಪಿಸಿಕೊಂಡ. ಹಾಗೆ ಕಲ್ಪಿಸುತ್ತಿರುವಂತೆಯೇ ಅದು ಚಿನ್ನದ ಬಣ್ಣದ ಬುಗುರಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು , ಇನ್ನೊಂದು ಕೈಯಲ್ಲಿ ಚೂರಿ ಹಿಡಿದುಕೊಂಡು ಮೆಲ್ಲಗೆ ಅಪ್ಪನ ಬಳಿಗೆ ಹೋಗಿ ನಿಂತು ಏನೋ ಮಾಡುತ್ತಿದೆ ಎಂಬ ಚಿತ್ರ ಸುಳಿಯಿತು. ಚೆಲುವ ಬೆಚ್ಚಿ ಅಜ್ಜಿಯನ್ನು ತಬ್ಬಿಕೊಂಡ . ಬಗ್ ಎಂದು ವಾಸನೆ ಬಡಿಯಿತು. ಅನಿವಾರ್ಯವಾಗಿ ವಾಸನೆಯನ್ನೇ ಅಪ್ಪಿಕೊಂಡು ಆಕೆ ಆಗಲೇ ನಿದ್ದೆ ಹೋಗಿದ್ದಳು. ಆ ಹಂದಿಯ ಪಿಶಾಚಿರೂಪದ ಮನುಷ್ಯ ಮನೆಯೊಳಗೆಲ್ಲ ಕುಣಿದಾಡಿ, ಥೇಟ್ ಅಪ್ಪನ ರೀತಿಯಲ್ಲೇ ರೂಪು ಪಡೆದು ಮಲಗಿರುವ ಒಬ್ಬೊಬ್ಬರ ತಲೆಗೂ ಬುಗುರಿಯಿಂದ , ಚಾಕುವಿನಿಂದ ತೂತು ಕೊರೆದು ಅದರೊಳಕ್ಕೆಲ್ಲ ಏಲು ತುಂಬುತ್ತಿರುವಂತೆ ಕಂಡ. ಇಡೀ ಊರಿನ ಸುತ್ತ ಮನೆ ಮನೆಯ ಪ್ರತಿಯೊಂದಕ್ಕೂ ತೂತು ಕೊರೆದು ಅಮಾದಿ ತುಂಬಿ ಗಬ್ಬಿನ ಉಸಿರಾಟವನ್ನು ಆ ಹಂದಿಯ ರೂಪದ ಪಿಶಾಚಿ ಸೃಷ್ಟಿಸಿ ನಗುತ್ತಾ ಕೇಕೆ ಹೊಡೆಯುತ್ತಿದೆ ಎಂದು ಕಂಡ. ಆ ಪಿಶಾಚಿ ತನ್ನ ಬಳಿ ಬರುತ್ತಿದೆ ಎಂದುಕೊಂಡು ‘ ಅಜ್ಜೀ ಅಜ್ಜೀ ’ ಎಂದು ಈಕರಿಸಿ ‘ ಹುಚ್ಚೆ ಉಯ್ಯಬೇಕು ಏಳು ಮ್ಯಾಕೆ ’ ಎಂದ. ಇಡೀ ಮನೆ ನಿಶ್ಶಬ್ದವಾಗಿ ಕತ್ತಲಿನಿಂದ ತುಂಬಿತ್ತು. ಅದರೊಳಗೆ ಯಾವುದನ್ನು ಗುರುತಿಸಲಾರದೆ , ಹಿಡಿಯಲಾರದೆ, ಆ ಹಾಳು ಬುಗುರಿಯಿಂದಲೇ ಹೀಗಾಗುತ್ತಿದೆಯೇನೋ ಎಂದು ಒಳಗೊಳಗೇ ಬಿಕ್ಕಿದ. ಹೆದರಿಕೆಯಿಂದ ಮತ್ತಷ್ಟು ಬಿಗಿಯಾಗಿ ಕಣ್ಣನ್ನು ಮುಚ್ಚಿಕೊಂಡ. ಅವನ ಅಪ್ಪ ವಿಕಾರವಾಗಿ ಗೊರಕೆ ಹೊಡೆಯುತ್ತಿರುವುದು ಕೇಳಿಸಿತು. ಹಿತ್ತಲೆಲ್ಲ ಕಾಗೆಯೊಂದು ನೀರವತೆಯನ್ನು ಸೀಳುವಂತೆ ನಿದ್ದೆಗಣ್ಣಿನ ಸ್ವರದಲ್ಲಿ ವರ್ರ್‌ಗುಟ್ಟಿ ಪಟಪಟ ಎಂದು ರೆಕ್ಕೆ ಬಡಿದಂತಾಯಿತು. ಆ ಹಂದಿ ಈಗ ಕಾಗೆ ರೂಪವಾಗಿ ಊರ ಸುತ್ತ ಹಾರಾಡಲು ಹೋಗುತ್ತಿರಬಹುದು ಎಂದುಕೊಂಡು , ಅಜ್ಜಿಯ ಸೀರೆಗೆ ಮೆಲ್ಲಮೆಲ್ಲಗೆ ಹುಚ್ಚೆ ಹೊಯ್ದುಕೊಂಡು ನಿದ್ದೆಗಾಗಿ ಕಾದ. ಆ ಕತ್ತಲ ಮನೆಯೊಳಗೆಲ್ಲ ಅಪ್ಪನಂತದೇ ದೊಡ್ಡ ಸಪ್ಪಳದ ಹೆಜ್ಜೆಗಳು ನೆರಳೂ ಚಲಿಸಿದಂತೆ ಕಂಡು ಅಪ್ಪನಂತಹ ಕ್ರೂರಿ ಇನ್ನಾರೂ ಈ ಊರಿನಲ್ಲಿ ಇಲ್ಲವೇನೋ ಎಂದು ಮಲಗಿದ. +ಇಷ್ಟೆಲ್ಲಾ ಆಗಿದ್ದಾದರೂ ಯಾಕೆ, ಯಾವ ಹಿನ್ನೆಲೆಯಿಂದ ಎಂದು ಸ್ವಂತ ಚಿಕ್ಕಣ್ಣನಿಗೇ ಗೊತ್ತಾಗಲಿಲ್ಲ. ಗುಂಜಾರಯ್ಯ ಚಿಂತೆಯಿಂದ ಬೆಳಿಗ್ಗೆ ಎದ್ದು ಬೀಡಿ ಸೇದುತ್ತಾ ಕುಳಿತಿದ್ದ. ಆ ರಾತ್ರಿ ನ್ಯಾಯಕಟ್ಟೆಯಲ್ಲಿ ಕಂಪ್ಲೇಟ್ ಕೊಡಬೇಕು ಎನ್ನುತ್ತಿದ್ದ ಮಾತುಗಳ ಸುಳಿದು ಏನಾಗುತ್ತದೋ ಎಂದು ಹೆದರಿದ. ಚೆಲುವ ಎದ್ದಿದ್ದವನು ಯತಾಪ್ರಕಾರ ಹಿತ್ತಿಲಿಗೆ ಹುಚ್ಚೆ ಹೊಯ್ಯಲು ಬಂದು ನಿಂತಾಗ ಹಂದಿಯ ವಿಕಾರ ರೂಪವನ್ನು ನೋಡಿ ಬಂದು ಮೆಲ್ಲಗೆ ‘ ಅಪ್ಪೋ ಹಿತ್ಲೇಲಿ ಆ ಹಂದಿಯ ನಾಯ್ಗೋಳು ತಿಂತಾವೆ ’ ಎಂದ . ‘ ಅಯ್ಯೋ ! ಥೂ ಹಾಳಾದೋರ, ವತಾರೆ ಎದ್ದೇಟ್ಗೆ ಯಂತಾ ಸುದ್ದಿ ಯೇಳುಕ್ ಬಂದವ್ನೆ ನೋಡು ” ಎಂದು ಬೈದುಕೊಂಡು ಹಿತ್ತಲಿಗೆ ಬಂದು ಆ ನಾಯಿಗಳನ್ನು ಹೊಡೆದು ಅಟ್ಟಿದ. ಇಷ್ಟಕ್ಕೆಲ್ಲ ಕಾರಣ ‘ ಚಿಕ್ಕ ಹೈದನೆ ’ ಎಂದು ವಿಕಾರವಾಗಿ ಹೊಟ್ಟೆ ಬಗೆಸಿಕೊಂಡು ಬಿದ್ದಿದ್ದ ಹಂದಿಯನ್ನು ಕಂಡು ‘ ಬ್ಯಾಡ ಕಲಾ ಬ್ಯಾಡಾ ಅಂತ ಬಾಯ್ಬಡ್ಕಂಡು ಮುಚ್ಚಿಸ್ಲಾ ಗುಂಡಿಯ ಅಂತ ಯೇಳುದ್ರು ನನ್ ಮಾತ ಲೆಕ್ಕ ಜಮಕ್ಕೇ ತಕವೋದ್ನಲ್ಲ … ಅಂದ್ಗೋಳ್ ಬಿದ್ದೋ , ಕುರಿಗೋಳ್ ಬಿದ್ದೋ , ಕೋಳಿ , ನಾಯಿ , ಕ್ವಾಣಾ , ಏನೇನೋ ಬಿದ್ದೋ … ಅಯ್ಯೋ , ಈ ಗುಂಡಿ ವೋಳಗೆ ಏನೇನ್ ಬಿದ್ವೋ ಕಾಣ್‌ನಲ್ಲಪ್ಪಾ, ಎಲ್ಲೆಲ್ಲೋ ಅವ ಅನ್ಕಂದಿದ್ದೇ ನರುಕ್ವಾ, ಅದು ಇಲ್ಲೇ ನನ್ ಮನೇಲೆ ಅದಲ್ಲಾಪ್ಪಾ ’ ಎಂದು ನಿಟ್ಟುಸಿರು ಬಿಟ್ಟ. ಅಸಹಾಯಕತೆಯಿಂದ ಮಗನ ಎದಿರು ಆತನ ಎಷ್ಟೋ ಬುದ್ದಿಗಳೆಲ್ಲಾ ಧೂಳಾಗಿ ಬಿಟ್ಟಿದ್ದವು . ಆತನ ಸಹಜ ಸಾದ್ವಿತನ ಕೆರಳಿ , ‘ ಈ ನರುಕ್ವಾ ತಪ್ಪುಸುಕೆ ಯಾರಿದ್ದಾರಪ್ಪಾ , ಲೋಕ್‌ವೆಲ್ಲಾ ಒಂದುತರಾ ಇದ್ರೆ, ಈ ವೂರೊಂದೇ ಒಂದ್ ತರ್‌ವಲ್ಲಾ . ಯೇಲೊಳಗ್ ಬಿದ್ದ ಅಂದಿಯ ತಿನ್ನುಕೆ, ಮೂರ್‌ಕಾಸ್ ಮಾಡ್ಕೊಕೆ ಇಪಾಟಿ ಇಕ್‌ಮತ್ ಮಾಡ್ಬೋದಾಗಿತ್ತೆ. ಥೂ ತೂ ನರಕಾ ನರಕಾ ಇದ್ರೊಳಗೆ ಎಲ್ರುನ್ನೂ ತಳ್ತಾ ಕುಂತಿರು ದೇವ್ರು ಅದೆಂಗ್ ಎಲ್ಲನೂ ನೋಡ್ತಾ ಕುಂತಿದ್ದನೋ …’ ಎಂದು ಒಳಗೊಳಗೇ ತರ್ಕಿಸುತ್ತಾ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಕಂಗಾಲಾದ. +***** +ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […] +ಸರಸ ಚಿಕ್ಕಿಯೊಡನೆ ಆ ಹೆಬ್ಬಾಗಿಲು ಹೊಗ್ಗುವಾಗ ‘ಓ ಅಲ್ಲಿ ಹೊಡಿ ಮಣಿ’ ಎಂಬ ಸ್ವರ ಕೇಳಿಸಿತು. ಪಕ್ಕ ಹಿಂದಿರುಗಿ ನನ್ನನ್ನು ನೋಡಿದಳು ಚಿಕ್ಕಿ. “ಅಗ! ಮೀನಾಶ್ಚತ್ತೆ ಕತಿ! ಈಗೆಲ್ಲ ಇಷ್ಟೇ”-ಎಂಬಂತೆ. ಮುಖದಲ್ಲಿ ದುಃಖವೇನೂ ಇರಲಿಲ್ಲ. […] +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_298.txt b/Kannada Sahitya/article_298.txt new file mode 100644 index 0000000000000000000000000000000000000000..d88c3bc4d0da4338e89b9cee967a397f0f8ac66b --- /dev/null +++ b/Kannada Sahitya/article_298.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ +ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, +ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ +ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, +ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ +ತ್ಯಾಗದಾವಿರ್ಭಾ, ತೇಲಿ ಒಂದಿತು ಹಂಸ, +ಬೆನ್ನು ಬಿದ್ದ ಕಪೋತ ಪಕ್ಷಿಗಿದೆ ತೊಡೆ-ಮಾಂಸ. +ಬಾಳು ಹೋಳಾದಂತೆ ನುಂಗಿದೆ ನಂಜು-ನೋವು. +ಅರವತ್ತು ; ನನಗಂಥ ಅರಳು-ಮರಳೇನಿಲ್ಲ, +ನಾಲ್ವತ್ತು ವರುಷ ಬದುಕಿಸಿದ ಬಿಡುಗಡೆ-ಬಾಳು ; +ದೇಶಕ್ಕೆ ಇತಿಹಾಸ ಹಾಸಿ ಬೀಸಿದ ನೆರಳು– +ಎಡವಿ ಮುಗ್ಗರಿಸಿದರು ಕಣ್ಣು ಮಂಜಾಗಿಲ್ಲ ; +ಶ್ವಾಸಕೋಶಕ್ಕಿಲ್ಲ ಧಕ್ಕೆ, ಸ್ಪರ್ಧೆಗಿಳಿಯದೆ +ಓಡಬಹುದಲ್ಲ ಹಾಗೆ, ತನ್ನ ಗುರಿಮರಿಯದೆ ? +೨ +ವಿರೋಧಾಭಾಸವೆ ಇದರ ಪ್ರಕೃತಿ ಗುಣವೇನೊ- +ಇದ್ದು ಬಿದ್ದದ್ದೆಲ್ಲ ಕೊಚ್ಚಿ ಹೋಗುವ ಹಾಗೆ +ಅತಿವೃಷ್ತಿ. ಇದಿವರುಷ ಒಂದು ಹನಿಯೂ ಬರದೆ +ನೆಲ ಬಿರಿದು ಬಾಯ್ ಬಿಡುವ ಪರಿ, ಮುಂದೆ ಗತಿಯೇನೋ. +ಎಲ್ಲದಕ್ಕು ಬರಗಾಲ, ಕಾಯಬೇಕೆಂತು ಸಮ- +ತೋಲ ? ಅಣೆಕಟ್ಟಿನಲು ಸೋರಿ ಹೋಗುವುದು ಹಣ, +ಸೇತುವೆಯು ನಡೆಗುವುದು, ಜೇನುಹುಟ್ಟೊ ? ಮೇಣ. +[ಉತ್ಸವಮೂರ್ತಿ ಬಂಗಾರ ರಥದಲ್ಲಿ ಕ್ಷೇಮ.] +ಬಲೆಗೆ ಬೀಳುವ ಮೀನು ; ತಿಮಿಂಗಲಕೊ ಸಾಗರ +ತಾನೇ ತಾನು. ಗಂಗೆಗೂ ಸ್ವಚ್ಛತಾಕ್ರಮ, +ನಮ್ಮೊಡಲಿಗಂತು ಅಂತರಗಂಗೆಯದೆ ವಿಕ್ರಮ. +ಬಿತ್ತಿದ್ದೇನೊಧರ್ಮ, ಬೆಳೆಯಿತೆಲ್ಲಿಂದ ಕ್ರೂರ +ಕರ್ಮ? ದುರ್ಧರ್ಷ ಭಯ-ಅತಿರೇಕಗಳ ನಡುವೆ +ಮುಗ್ಧ, ಸಂದಿಗ್ಧ ಜೀವನದಲ್ಲಿ ಬಚ್ಚಿಡುವೆ? +೩ +ಭಾಷಣದ ಕ್ರಿಯಾವಿಧಿ ಮುಗಿಸಿ, ಮೊಣಕಾಲೂರಿ +ಭರ್ರೆಂದ ಎಂಬತ್ತೇಳರುತ್ಸವದ ಕಾರು +ಸುರಕ್ಷಿತ ದಾಟಿ ಬಿಟ್ಟು ಸಮಾಧಾನದುಸಿರು +ಕಟ್ಟಿರು ಭದ್ರಕಾವಲು; ಅದಕೆ ಆ ಭಾರಿ,ಸ್ +ಮಾತು ಮಾತಿನ ಹೊರಗೆ ಕುಸಿದಿರವ ಸಾಮಾನ್ಯ: +ತಲೆ ಎತ್ತಿದರೆ ಹಾರಾಡಿ ಬಣ್ಣದ ಬಲೂನು +ಈ ಮಣ್ಣ ದಿಣ್ಣೆಗಳಾಚೆ ಧವಳಗಿರಿ ಸಾನು. +ಬೆಳಗಿನಲಿ ಹೊಂಗನಸು ನೆನಸಿಕೊಂಡವ ಧನ್ಯ. +ಹೋಗಾದರು ಹುಡುಕಿ ರಂಗದಮೇಲೆ ತನ್ನಿ; +ತೆರೆಗುಂಟ ತೇಲಿಬಂದಿಹ ಕೊರಡಗಳ ದೂಡಿ, +ಎದುರೀಗಿ, ಬರಡು ಬಾಳಿಗೆ ಭವಿತವ್ಯ ಮೂಡಿ- +ಸುವ ಧೀರ. ಚೇತನರ; ದೂರವಾಗಲಿ ಸನ್ನಿ. +ಹೋರಾಟಕಣಿಗೊಳಿಪ ಸತ್ವೋನ್ನತಿಯ ಕಾಲ +ಮತ್ತೆ ಬಂದಿದೆ; ಓದು ಮೂಲ ಗಾಂಧೀಪಾಠ. +***** +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] +ಅಷ್ಟಿಷ್ಟು ಎದೆ ಮಾಂಸ ತೊಡೆ ಖಂಡಗಳ ಕತ್ತರಿ ಸಿ ಕಚಕಚಾ ತೆರೆದಿಟ್ಟ ಕೋಸಂಬರಿ (ಉಪ್ಪು ತುಸು ಜಾಸ್ತಿ) ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_299.txt b/Kannada Sahitya/article_299.txt new file mode 100644 index 0000000000000000000000000000000000000000..b63a0fd0be563682098f93bcf925583b35d9198a --- /dev/null +++ b/Kannada Sahitya/article_299.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿ +ತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲು +ಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದು +ಅದೇ ಹಿಂದಿನ ಸಲಿಗೆಯಿಂದಲೋ? +ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ: +ಅಲ್ಲಲ್ಲಿ ಬೆಳ್ಳಿಗೂದಲು; +ಕೋಮಲವಾದ, ಈಗ ಕೊಂಚ ಸುಕ್ಕಿದಂತೆ ಕಾಣುವ ಮುಖಭಾವಕ್ಕೆ ಸಲ್ಲುವಂತೆ +ಸಡಿಲವಾದ ಓರೆ ಬೈತಲೆಯ ಜಡೆ; +ಲಂಗತೊಟ್ಟ ಅವಳ ಎರಡು ಜಡೆಗಳ ಕಾಲದ ಅವೇ ತುಂಟ ಕಣ್ಣುಗಳು. +ಆಸೆಯಿಂದ ಕಾದಿದ್ದ ಈ ಮುಸ್ಸಂಜೆಯಲ್ಲೂ +ನೆಮ್ಮದಿ ತರುವಂತೆ ಆಕಾಶದಲ್ಲಿ ತೇಲುವ +ಸಾಲು ಸಾಲು ಬೆಳ್ಳಕ್ಕಿಗಳು; +ಅವೇ ರೋಮಾಂಚಿತ ಅವಸರದ ಅಳಿಲುಗಳು; +ಮೊದಲಸಾರಿ ಬೆಚ್ಚಿಸಿದ್ದ ದೂರದ ರೈಲಿನ ಶಿಳ್ಳೆ; +ಪಾರ್‍ಕಿನ ಆಚೆ ಇನ್ನಷ್ಟು ಬೆಳ್ಳಗಾದ ಪೊದೆ ತಲೆಯ +ಅಮಲಿನಲ್ಲಿ ತೂರಾಡುವ ಈಗ ಹಣ್ಣಾದ ಮುದುಕ. +ಹತ್ತಿರವು ಅಲ್ಲ, ದೂರವು ಅಲ್ಲ; +ಕಣ್ಣಿಟ್ಟು ನೋಡಿದಂತೆಯು ಅಲ್ಲ, ನೋಡದಂತೆಯು ಅಲ್ಲ +ಯಾವ ಅವಸರವಿಲ್ಲ ಎನ್ನುವ ಹಾಗೆ +ಅವಳು ಕಾಲು ಮಡಚಿ ನೆಟ್ಟಗೆ +ನಿನ್ನೆ ಹೀಗೇ ಕೂತಿದ್ದವೇನೊ ಎನ್ನಿಸುವಂತೆ +ಕೂತಿರುವ ಪರಿ ಯಾವತ್ತಿನ ಅವಳ ತುಂಟಾಟವಿರಬಹುದು +ಎನ್ನುವ ಭರವಸೆಯಲ್ಲಿ ತಾನು ಮತ್ತೆ ಚಿಗುರಬಹುದೆಂದು +ಕಾಲು ಚಾಚಿ ಸುಖಾಸನದಲ್ಲಿ ಕೂತ ತನ್ನನ್ನು +ಹಗುರಗೊಳಿಸುವಂತೆ ಕೈಯಾಡಿಸಿ ಕಿತ್ತ ಧೂರ್‍ವೆಯ ಬೇರನ್ನು ಮೂಸುತ್ತ +ಕುಶಲೋಪಚಾರದ ಮಾತಿನಲ್ಲಿ ನಸುನಗುತ್ತ ತನ್ನ ಮಾತಿಗಾಗಿ ಕಾದಳು ಅವಸರಪಡದವಳಂತೆ. +ಅವಳ ಕೋಮಲವಾದ ಸ್ನೇಹದ ಮುಖಭಾವದಲ್ಲಿ ಮತ್ತೆ ಪಡೆಯಲಾರದಂತೆ ತಾವು +ಕಳೆದುಕೊಂಡದನ್ನು +ಗಮನಿಸಿದ. +ಇದನ್ನು ಊಹಿಸಿದಂತೆ ಅವಳ ಬೆರಳುಗಳು ಹುಲ್ಲಿನ ಮೇಲೆ ಅಭಾವದಲ್ಲಿ ಆಡಿದವು. +ಹಸಿರು ಹುಲ್ಲಿನ ನಡುವೆ ನಾಚಿದಂತೆ ಇದ್ದ ತೆಳು ನೀಲಿಯ +ವಿಷ್ಣುಕ್ರಾಂತಿಯ ಹೂವನ್ನು ಕಿತ್ತು +ಈಗ ಒರಟಾದ ತನ್ನ ಅಂಗೈ ಮೇಲೆ ಇಟ್ಟು +ತನ್ನ ಮಾತಿಗೆ ಕಾಯದವಳಂತೆ ಸುಮ್ಮನಾದಳು. +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […] +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_3.txt b/Kannada Sahitya/article_3.txt new file mode 100644 index 0000000000000000000000000000000000000000..8593bb51db7a28ae84a3961ea88afeca904e5181 --- /dev/null +++ b/Kannada Sahitya/article_3.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. ಇದರಿಂದಾಗಿ ನಾನು ಇನ್ನಷ್ಟು ನನ್ನ ನೆನಪುಗಳನ್ನು ದುಡಿಸಿಕೊಳ್ಳಲು ಸಾಧ್ಯವಾಯಿತೆಂದು ನನಗೆ ಅನ್ನಿಸುತ್ತದೆ. ಊರಿನಿಂದ ದೂರವಿದ್ದದ್ದು, ಬಾಲ್ಯದಿಂದ ದೂರವಿದ್ದದ್ದು ಮತ್ತು ವಾಸ್ತವಿಕ ಶೈಲಿಯ ಅಗತ್ಯಗಳಿಂದ ಬಿಡುಗಡೆ ಪಡೆದದ್ದು – ಈ ಮೂರು ಒಟ್ಟಾಗಿ ಸಂಸ್ಕಾರ ಕಾದಂಬರಿಯ ಒಟ್ಟು ಸ್ವರೂಪಕ್ಕೆ ಕಾರಣವಾಗಿರಬೇಕೆಂದು ನನಗೆ ಅನ್ನಿಸುತ್ತದೆ. +ಈ ಲೇಖನಕ್ಕೆ ಮುಖ್ಯವಾದ ಸಂಗತಿ ಎಂದರೆ ನಾನು ಸಂಸ್ಕಾರ ಬರೆಯುವಾಗ ಅದು ಚಲನಚಿತ್ರವಾದೀತೆಂಬ ಭ್ರಮೆಗೂ ಅವಕಾಶವಿರಲಿಲ್ಲ. ಕನ್ನಡ ಚಿತ್ರಗಳ ಸ್ಥಿತಿ ಹಾಗಿತ್ತು. ನಾನು ಚಲನಚಿತ್ರಕ್ಕಾಗಿಯೇ ಆ ಕಾದಂಬರಿ ಬರೆದಿದ್ದ ಪಕ್ಷದಲ್ಲಿ ಕಾದಂಬರಿ ಚಲನಚಿತ್ರ ಮಾಧ್ಯಮಕ್ಕೆ ಸ್ವಾಲಾಗುತ್ತಿರಲಿಲ್ಲವೇನೋ ! ಇದು ಮುಖ್ಯ ಮಾತು : ಕಾದಂಬರಿಗಳಿಂದ ನಮ್ಮ ಚಲನಚಿತ್ರಕ್ಕೆ ಹೊಸ ಪ್ರೇರಣೆ ಬರುವುದು ಸಾಧ್ಯವಾಗುವುದು – ಕಾದಂಬರಿಕಾರ ತನ್ನ ಮಾಧ್ಯಮಕ್ಕೆ ಪ್ರಾಮಾಣಿಕವಾಗಿದ್ದಾಗ ಮಾತ್ರ ಎನ್ನುವುದು ನನಗೆ ದೃಢವಾಗಿದೆ. ಚಲನಚಿತ್ರವನ್ನು ಗುರಿಯಾಗಿಟ್ಟುಕೊಂಡು ಬರೆಯುವ ಹಲವು ಲೇಖಕರು ಈಚೆಗೆ ಒಳ್ಳೆಯ ಸಿನಿಮಾವೂ ಆಗದ , ಆಚೆಗೆ ಒಳ್ಳೆಯ ಸಾಹಿತ್ಯವೂ ಆಗದ ಕಥೆಗಳನ್ನು ಬರೆಯತೊಡಗಿರುವುದು ಇದಕ್ಕೆ ನಿದರ್ಶನ. ಸಿನಿಮಾ ಮಾಧ್ಯಮದ ಸಾಧ್ಯತೆಗಳನ್ನು ತಿಳಿದಿರುವ ಕಲಾವಿದ ಅದಕ್ಕಾಗಿಯೇ ಕಥೆ ರಚಿಸಿದಾಗ ಒಳ್ಳೆಯ ಸಿನಿಮಾ ಆಗಲಾರದೆಂದು ನನ್ನ ಅಭಿಪ್ರಾಯವಲ್ಲ. ಆದರೆ ಎರಡರ ಕಲಬೆರಕೆಯಿಂದ ಏನೂ ಸಾಧ್ಯವಾಗದೆಂದು ನನ್ನ ವಾದ , ಅಷ್ಟೆ. +ಸಂಸ್ಕಾರ ಚಿತ್ರ ನಿರ್ಮಾಣವಾದ ಬಗೆಯೂ ಕುತೂಹಲದ ಸಂಗತಿಯಾಗಿದೆ. ನಾನು ಕಾದಂಬರಿಯನ್ನು ಮೂರು ಮಿತ್ರರಿಗೆ ಅರ್ಪಿಸಿದ್ದೇನೆ. ಅದರಲ್ಲಿ ಒಬ್ಬರಾದ ಶಾಂತವೇರಿ ಗೋಪಾಲಗೌಡರು – ಈಗ ಅವರು ಇಲ್ಲ- ನನ್ನ ಸ್ನೇಹಿತರು ಮಾತ್ರವಲ್ಲದೆ, ನನ್ನಲ್ಲಿ ಕ್ರಾಂತಿಕಾರಕ ರಾಜಕೀಯ ಮತ್ತು ಸಾಹಿತ್ಯ ಪ್ರಜ್ಞೆಗಳನ್ನು ಒಂದಕ್ಕೊಂದು ಹೊರತಾಗದಂತೆ ಬೆಳೆಸಿಕೊಳ್ಳಲು ನೆರವಾದವರು. ಗೋಪಾಲಗೌಡರು ಈ ಕಾದಂಬರಿಯ ಕಥೆಯನ್ನು ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯಿದ್ದ ತಮ್ಮ ನಾಯಕರಾದ ಡಾ. ರಾಮಮನೋಹರ ಲೋಹಿಯಾರಿಗೆ ಹೇಳಿದ್ದರಂತೆ. ಲೋಹಿಯಾ ಈ ಕಥೆಯನ್ನು ತಮ್ಮ ಸ್ನೇಹಿತರಾದ ಸ್ನೇಹಲತಾ ರೆಡ್ಡಿ ಮತ್ತು ಪಟ್ಟಾಭಿರಾಮ ರೆಡ್ಡಿಯವರಿಗೆ ಹೇಳಿ ಸಿನಿಮಾ ಮಾಡುವಂತೆ ಪ್ರೇರೇಪ್ಸಿದರಂತೆ. ಜೊತೆಗೇ, ಆಗ ಮದ್ರಾಸಿನಲ್ಲಿದ್ದ ಗಿರೀಶ್‌ಕಾರ್ನಾಡರು ಕೂಡ ಸಂಸ್ಕಾರವನ್ನು ಸಿನಿಮಾ ಮಾಡುವ ಯೋಜನೆಯಲ್ಲಿದ್ದರು. ನಾನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಷಿಗೆ ಕಳಿಸಿದ್ದ ಹಸ್ತಪ್ರತಿಯನ್ನು ಓದಿದ ಕಾರ್ನಾಡರು ಈ ಕಥೆ ಸಿನಿಮಾಕೆ ಉತ್ತಮ ವಸ್ತುವಾದೀತೆಂದು ಗ್ರಹಿಸಿದ್ದಲ್ಲದೆ ಆ ದಿಕ್ಕಿನಲ್ಲಿ ತಮ್ಮ ಅನೇಕ ಮಿತ್ರರೊಡನೆಯೂ ಮಾತಾಡಿದ್ದರು. ಚೋಳಮಂಡಲದ ಕಲಾವಿದ ವಾಸುದೇವ ಇತ್ಯಾದಿ ಮಿತ್ರರು, ಮದ್ರಾಸಿನ ನಾಟಕ ಚಳುವಳಿಯಲ್ಲಿ ಪ್ರಮುಖರಾಗಿದ್ದ ಸ್ನೇಹಲತಾ ರೆಡ್ಡಿ ಮತ್ತು ಅವರ ಸಹೋದ್ಯೋಗಿಗಳು ( ಕಾರ್ನಾಡರೂ ಅವರಲ್ಲಿ ಒಬ್ಬರು ) , ಪಟ್ಟಾಭಿರಾಮರೆಡ್ಡಿಯವರ ಸಿನಿಮಾರಂಗದ ಬಳಗ – ಹೀಗೆ ಹಲವರು ಕಾದಂಬರಿಯನ್ನು ಸುಮಾರು ವರ್ಷಕ್ಕೂ ಹೆಚ್ಚು ಕಾಲ ಸಿನಿಮಾ ಮಾಡಲೆಂದು ಕಥೆಯ ಪ್ರತಿ‌ಅಂಗವನ್ನೂ ಚರ್ಚಿಸಿ, ವಿಶ್ಲೇಷಿಸಿ , ಒಂದು ಕಾಲ್ಪನಿಕ ಸಿನಿಮಾದ ಪ್ರತಿ ‘ ಷಾಟ್ ’ ನ್ನೂ ತಮ್ಮ ಮನಸ್ಸಿನಲ್ಲಿ ಯೋಚಿಸಿಕೊಂಡಿದ್ದರು.ಇಷ್ಟೆಲ್ಲ ಅಣಿಯಾದ ಮೇಲೆ ನಾನು ಪಟ್ಟಾಭಿರಾಮ ರೆಡ್ಡಿಯವರನ್ನು ಅವರ ಆಗಿನ ಮದ್ರಾಸಿನ ಮನೆಯಲ್ಲಿ ಕಾರ್ನಾಡರ ಜೊತೆ ಭೇಟಿಯಾದೆ.ಅವರೆಲ್ಲ ಕಾದಂಬರಿಯ ಒಳಹೊಕ್ಕು ಅದರ ಪ್ರತಿ ವಿವರವನ್ನೂ ಅರ್ಥಮಾಡಿಕೊಂಡ ಕ್ರಮ ನೋಡಿ ನನು , ಅವರಿಗೆ ಸಿನಿಮಾ ಮಾಡುವುದಕ್ಕೆ ಸಮ್ಮತಿಸಿದೆ. ಈ ಮಧ್ಯೆ ಚೋಳಮಂಡಲಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಕ್ಯಾಮರಮನ್- ಟಾಂ ಕೋವನ್ , ವಾಸುದೇವರ ಮುಖೇನ ಕಥೆಯ ಬಗ್ಗೆ ತಿಳಿದು ತಮ್ಮ ನೆರವನ್ನು ಕೊಡಲು ಮುಂದಾದರು. ಪಟ್ಟಾಭಿ ಉಳಿದ ವ್ಯವಸ್ಥೆಗಳನ್ನು ಮಾಡಲು- ಅಂದರೆ ಹಣ , ತಾಂತ್ರಿಕ ಸಹಾಯ ಇತ್ಯಾದಿಗಳನ್ನು ಪಡೆಯಲು – ತಮ್ಮ ತೆಲುಗು ಸಿನಿಮಾ ನಿರ್ಮಾಣ ಅನುಭವ ಉಪಯೋಗಿಸಿಕೊಂಡು ಪ್ರಯತ್ನಿಸಿದರು. ಹೊಸ ರೀತಿಯ ಸಿನಿಮಾ ಎಂದರೆ ಅನುಮಾನದಿಂದ ನೋಡುವ , ಕೊಲ್ಲಲೂ ಪ್ರಯತ್ನಿಸುವ ಇಂಡಸ್ಟ್ರಿಯನ್ನು ಸಂಸ್ಕಾರ ಸಿನಿಮಾ ಸೃಷ್ಟಿಗೆ ಬಳಸಿಕೊಳ್ಳುವ ಶೂರ ಉಪಾಯಗಾರರಾಗಿ ಪಟ್ಟಾಭಿ ಎಷ್ಟೆಲ್ಲ ಶ್ರಮಿಸಬೇಕಾಯಿತೆಂಬುದು ಇನ್ನೊಂದು ಕಥೆಯೇ ಆಗುತ್ತದೆ. ಅತ್ಯಂತ ಚೊಕ್ಕ ಕಲಾತ್ಮಕ ಸಿನಿಮಾ ಮಾಡಬೇಕೆನ್ನುವ ಗಿರೀಶ್ , ವಾಸುದೇವ್ , ವೈ‌ಎನ್‌ಕೆ , ಟಾಮ್‌ಕೋವನ್, ಸ್ನೇಹಲತಾ, ಮದ್ರಾಸಿನ ನಾಟಕ ಬಳಗ ಒಂದು ಕಡೆ; ಕಥೆಯ ಭಾವಪೂರ್ಣ ಸನ್ನಿವೇಶಗಳನ್ನು ಉಲ್ಬಣಗೊಳಿಸಿ ತಮಿಳು ಮಾದರಿಯಲ್ಲಿ ನಾರಾಣಪ್ಪನನ್ನು ರೆಬೆಲ್ ಮಾಡಿ ಗಲ್ಲಾಪೆಟ್ಟಿಗೆಯನ್ನೂ ಸರ್ಕಾರದ ಸಹಾನುಭೂತಿಯನ್ನೂ ಒಟ್ಟಾಗಿ ಗಳಿಸಲು ಹೊಂಚುತ್ತಿದ್ದ ಡಿಸ್ಟ್ರಿಬ್ಯೂಟರುಗಳು ಇನ್ನೊಂದು ಕಡೆ; ನನ್ನ ಕಾದಂಬರಿಯ ತಾತ್ವಿಕ ಬಿಕ್ಕಟ್ಟುಗಳನ್ನು ಎಲ್ಲಿ ಸಡಿಲಿಸಿಬಿಡುತ್ತಾರೋ ಎಂದು ಗಾಬರಿಯಿಂದ ಸದಾ ಎಚ್ಚರದಿಂದ ಕಾಯುತ್ತಿದ್ದ ನಾನು ಮತ್ತೊಂದು ಕಡೆ. ಈ ಆವರಣದಲ್ಲಿ , ಕೈಯಲ್ಲಿ ಸಾಕಷ್ಟು ಹಣವಿಲ್ಲದೆ ಎಲ್ಲರನ್ನೂ ಒಟ್ಟಿಗೆ ಕೆಲಸ ಮಾಡುವಂತೆ ಶ್ರಮಿಸಿದ ಪಟ್ಟಾಭಿ ರಾಮರೆಡ್ಡಿಯವರ ಸಹನೆ ಮೆಚ್ಚಬೇಕಾದ್ದು. ಯಾವ ಸಮಯದಲ್ಲಾದರೂ , ಎಲ್ಲಂದರಲ್ಲಿ ನಿದ್ದೆ ಹೋಗಬಲ್ಲ ಪಟ್ಟಾಭಿಯವರ ಚಿತ್ತಸ್ವಾಸ್ಥ್ಯವಿಲ್ಲದೆ ಸಂಸ್ಕಾರ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಸಂಸ್ಕಾರ ನಿಜವಾಗಿಯೂ ಸಹಕಾರದಿಂದ ಹುಟ್ಟಿದ ಚಿತ್ರ. +ಸಿನಿಮಾ ತಯಾರಾಗುತ್ತಿದ್ದಂತೆ ಅದರ ಬಗ್ಗೆ ವಿವಾದ ಪ್ರಾರಂಭವಾಯಿತು. ಕಾದಂಬರಿ ಪ್ರಕಟವಾದಾಗ ಕೆಲವು ಪತ್ರಿಕೆಗಳು ನನ್ನನ್ನು ಹೀಯಾಳಿಸಿ ಬರೆದಿದಿದ್ದವು. ನನ್ನ ಸಾಹಿತ್ಯ ಕೃತಿಗಳನ್ನು ಯಾವತ್ತೂ ನಾನು ಬೆಂಬಲಿಸಿ ವಾದಿಸುವುದಿಲ್ಲ. ಲೇಖನಗಳಲ್ಲಿ ನಾನು ಪ್ರಕಟಿಸುವ ವಿಚಾರಗಳ ಬಗ್ಗೆ ಮಾತ್ರ ನಾನು ಚರ್ಚಿಸುತ್ತೇನೆ. ಸಾಹಿತ್ಯ ಕೃತಿಗಳನ್ನು ರಚಿಸಲು ತೊಡಗಿದ ಕಾಲದಿಂದ ನಾನು ಈ ನಿರ್ಧಾರ ಮಾಡಿದ್ದೇನೆ. ಇದನ್ನು ನಾನು ಬದಲ್ಲಯಿಸುವುದಿಲ್ಲವೆಂದೇನೂ ಹೇಳುತ್ತಿಲ್ಲ. ಅಲ್ಲದೆ ನಾನು ಬರೆಯುವ ವಿಮರ್ಶೆ ಕೂಡ ಸೂಕ್ಷ್ಮವಾಗಿ ನನಗೆ ಕೂಡ ಪ್ರತ್ಯಕ್ಷವಾಗದಂತೆ , ನನ್ನ ಇತರ ಕೃತಿಗಳಿಗೆ ಬೆಂಬಲವಾಗುವ ವಾದಗಳಾಗಬಹುದೆಂಬ ಅನುಮಾನ ನನಗೆ ಇಲ್ಲದಿಲ್ಲ. ಕಾದಂಬರಿಯ ಬಗ್ಗೆ ಎದ್ದ ವಿವಾದದಿಂದಾಗಿ ಅದು ಸಿನಿಮಾ ಆದಾಗ ಬಹಿಷ್ಕೃತವಾಯಿತು. ರೀಜನಲ್ ಸೆನ್ಸಾರ್ ಬೋರ್ಡ್ , ಸೆಂಟ್ರಲ್ ಸೆನ್ಸಾರ್ ಬೋರ್ಡ್ ಎರಡೂ ಕಡೆ ಪಟ್ಟಾಭಿ ಸೋತರು. ದೆಹಲಿಯ ಪ್ರಮುಖ ಬರಹಗಾರರು ಕಲಾವಿದರು ಸಿನಿಮಾದ ನೆರವಿಗೆ ಬಂದರು. ಪಾರ್ಲಿಮೆಂಟ್ ಎದುರು ಪ್ರಶ್ನೆ ಬಂತು. ಪಾರ್ಲಿಮೆಂಟ್ ಸಮಿತಿ ಸಿನಿಮಾವನ್ನು ನೋಡಿ ಬಿಡುಗಡೆ ಮಾಡಿತು. ಸ್ಟೇ ಆರ್ಡರ್ , ಸಾರ್ವಜನಿಕ ಪ್ರತಿಭಟನೆ – ಈ ಮೂಲಕ ಸಿನಿಮಾವನ್ನು ತೋರಿಸದಂತೆ ತಡೆಯುವ ಸನ್ನಾಹ ಬೆಂಗಳೂರಿನಲ್ಲಿ ನಡೆದಿದೆ ಎಂಬುದು ತಿಳಿದ ಸಂಸ್ಕಾರದ ಬಳಗ ಪತ್ರಿಕೆಯಲ್ಲಿ ಪ್ರಕಟಿಸದೆ ಸಂಸ್ಕಾರವನ್ನು ಬೆಳಗಿನ ಷೋ ಆಗಿ ಬಿಡುಗಡೆ ಮಾಡಿತ್ತು. ಕಿವಿಯಿಂದ ಕಿವಿಗೆ ಸುದ್ದಿ ಹೋಗಿ ಥಿಯೇಟರ್ ತುಂಬಿತು. ಇದಾದ ಮೇಲೆ ಸ್ಟೇ ಅರ್ಡರ್ ತರುವುದಾದರೆ ವಿರೋಧಿಗಳು ತುಂಬಾ ಹಣ ಕಟ್ಟಬೇಕಾಗಿ ಬಂದದ್ದರಿಂದ ಧರ್ಮನಿಷ್ಠೆಗಿಂತಲೂ ಧನನಿಷ್ಠೆ ಅವರಿಗೆ ಹೆಚ್ಚು ಸಮರ್ಪಕವೆನ್ನಿಸಿ ಅವರು ಸುಮ್ಮನಾಗಿರಬೇಕು. +ಕಾದಂಬರಿ ಬಗ್ಗೆ ಎದ್ದ ವಿವದ ಈಗ ತಮಾಷೆಯೆನ್ನಿಸುತ್ತದೆ. ರಾಮಾನುಜನ್‌ರಿಂದ ಇಂಗ್ಲಿಷ್‌ಗೆ ಭಾಷಾಂತರಗೊಂಡ ಸಂಸ್ಕಾರವನ್ನು ಈಗ ನಾಡಿನ ಹೊರಗೆ ಹಲವರು ಓದಿದ್ದಾರೆ. ನ್ಯೂಯಾರ್ಕ್ ರಿವ್ಯೂನಲ್ಲಿ ಕಾದಂಬರಿಕಾರ ನೆಯ್‌ಪಾಲ್ ಸಂಸ್ಕಾರದ ಬಗ್ಗೆ ಬರೆದ ಲೇಖನದಲ್ಲಿ ಕಾದಂಬರಿಯನ್ನು ಭಾರತೀಯ ಮನಸ್ಸಿನ ಸಾಂಕೇತಿಕ ನಿರೂಪಣೆಯೆಂದು ವಿಶ್ಲೇಷಿಸಿದ್ದಾರೆ. ಇನ್ನೂ ಕೆಲವರಿಗೆ ಈ ಕೃತಿ ಒಂದು ಮಾನವೀಯ ಕಲಾತ್ಮಕ ದಾಖಲೆಯಾಗಿ ಮಾತ್ರ ಕಂಡಿದೆ. ಅಮೆರಿಕಾದ ಪ್ರಸಿದ್ಧಚಿಂತಕ , ಮನಶಾಸ್ತಜ್ಞ , ಎರಿಕ್‌ಸನ್ ( ಗಾಂಧೀಸ್ ಟ್ರೂತ್ – ಪುಸ್ತಕದ ಲೇಖಕ ) ಸಂಸ್ಕಾರವನ್ನು ಬರ್ಗ್‌ಮನ್ನಿನ “ ವೈಲ್ಡ್ ಸ್ಟ್ರಾಬೆರಿಸ್ ” ಗೆ ಹೋಲಿಸಿ , ಮನುಷ್ಯನ ಬೆಳವಣಿಗೆಯಲ್ಲಿ ಅವಸ್ಥಾಂತರವಾಗುವ ಸಂದಿಗ್ಧ ಕಾಲದ ನಿರೂಪಣೆಯಾಗಿ ಕಾದಂಬರಿಯನ್ನು ವಿಶ್ಲೇಷಿಸಿದ್ದಾರೆ. ಒಂದು ಕೃತಿಯನ್ನು ಬರೆದ ಮೇಲೆ ಅದರ ಬಗ್ಗೆ ಲೇಖಕ ಸುಮ್ಮನಿರುವುದು, ಓದುಗ ಆ ಕೃತಿಯನ್ನು ಸ್ವತಂತ್ರವಾಗಿ ತನ್ನ ಅನುಭವವಾಗಿ ಮಡಿಕೊಳ್ಳಲು ನೆರವಾಗುತ್ತದೆ. ಎರಿಕ್‌ಎರಿಕ್‌ಸನ್ ತಮ್ಮ ವಿಶ್ಲೇಷಣೆ ಹೇಳಿ ನನ್ನ ಅಭಿಪ್ರಾಯ ಕೇಳಿದರು. ಕಾದಂಬರಿ ಬರೆಯುವಾಗ ಅವರ ವಿಚಾರಗಳಿಗೆ ಹೊಸಬನಾಗಿದ್ದ ನಾನು ನನ್ನ ಆಶ್ಚರ್ಯವನ್ನು ವ್ಯಕ್ತ ಪಡಿಸಿದೆ. ಎರಿಕ್‌ಸನ್‌ಗೆ ಸಂತೋಷವಾಯಿತು. “ ನೀನು ಸೈಕಾಲಜಿ ಪುಸ್ತಕಗಳನ್ನು ಓದಿ ತೀರಾ ತಲೆಗೆ ಹಚ್ಚಿಕೊಳ್ಳದ್ದರಿಂದಲೇ ಸಂಸ್ಕಾರ ಬರೆಯುವುದು ಸಾಧ್ಯವಾಯಿತು ” ಎಂದು ನನಗೆ ಹೇಳಿದರು. +ಸಂಸ್ಕಾರ ಚಿತ್ರ ನೋಡಿದಾಗ ನನಗೆ ಏನನ್ನಿಸುತ್ತದೆ ಎಂದು ಹಲವರು ಕೇಳುತ್ತಾರೆ. ನಾನು ಬರೆದ ಕಾದಂಬರಿಯನ್ನು ಮತ್ತೆ ಓದುವುದೆಂದರೆ ನನಗೆ ಬೇಸರ. ಚಿತ್ರವನ್ನು ನೋಡಿ ನನಗೆ ಈಗ ಬೋರ್ ಆಗಿದೆ. ರಾಜೀವ ತಾರಾನಾಥರು ಅದಕ್ಕೆ ಕೊಟ್ಟ ಸಂಗೀತವನ್ನು ಮಾತ್ರ ಕಣ್ಣು ಮುಚ್ಚಿ ನಾನು ಅಸ್ವಾದಿಸುತ್ತೇನೆ. ಆದ್ದರಿಂದ ಚಿತ್ರದ ನೇರ ವಿಮರ್ಶೆ ಮಾಡದೆ ಸಾಹಿತ್ಯ ಕೃತಿಗೂ ಸಿನಿಮಾಕ್ಕೂ ಇರುವ ಸಂಬಂಧಗಳ ಬಗ್ಗೆ ಕೆಲವು ವಿಚಾರಗಳನ್ನು ಸಂಸ್ಕಾರಕ್ಕೆ ಸೇರಿದಂತೆ ಹೇಳಲು ಬಯಸುತ್ತೇನೆ. +ಕನ್ನಡದಲ್ಲಿ ನವ್ಯತೆ ಮೊದಲು ಕಂಡದ್ದು ಕಾವ್ಯದಲ್ಲಿ- ಅಡಿಗರ ಕಾವ್ಯದಲ್ಲಿ; ನಂತರ ಸಣ್ಣಕಥೆಗಳಲ್ಲಿ; ಆ ಮೇಲೆ ಕಾದಂಬರಿಯಲ್ಲಿ; ಈಚೆಗೆ ನಾಟಕ ಮತ್ತು ಸಿನಿಮಾದಲ್ಲಿ. ಇದು ಗಮನಾರ್ಹ. ವಸ್ತು ಪ್ರಪಂಚದ ವಿವರ ಈ ಮಾಧ್ಯಮದಲ್ಲಿ ಪ್ರಕಟವಾಗುವ ಕ್ರಮಕ್ಕೂ ನಾನು ಈ ಮುಂದೆ ಹೇಳಬೇಕೆಂದಿರುವುದಕ್ಕೂ ಸಂಬಂಧವಿರಬಹುದೆನ್ನುವುದು ನನ್ನ ಊಹೆ. ವಸ್ತುಪ್ರಪಂಚದ ವ್ಯಕ್ತ ವಿವರಗಳ ಮೂಲಕವೇ ಅವ್ಯಕ್ತವನ್ನು ಹೊಳೆಯಿಸಬೇಕೆನ್ನುವ ಕಲಾವಿದನಿಗೆ ಈ ಮಾಧ್ಯಮಗಳು ಅವಕಾಶಗಳ ಜೊತೆಗೇ ತೊಡಕುಗಳನ್ನು ಒಡ್ಡುತ್ತವೆ. ಸಂಗೀತಕ್ಕೆ ಮಾತ್ರ ವಸ್ತುಪ್ರಪಂಚದ ಶರೀರಧಾರಣೆ ಮಾಡುವ ಹಂಗಿಲ್ಲ. ಕಾವ್ಯದಲ್ಲಿ ಒಂದು ಮನೆಯೋ , ಮರವೋ, ದೀಪವೋ ವಿವರವಾಗಿ ಬಂದರೆ, ಆ ವಿವರ ವಸ್ತುಪ್ರಪಂಚದ ಜೊತೆ ತನ್ನ ಸಾಕೇತಿಕತೆಯನ್ನು ಹುರಿ ಮಾಡಲಷ್ಟು ಮಾತ್ರ ಸಂಬಂಧ ಪಡೆದಿರುತ್ತದೆ. ಕಾವ್ಯದಲ್ಲಿ ಕಾಣುವ ಮರ ಒಂದು ವಿಶಿಷ್ಟ ಅನುಭವವನ್ನು ಮನಸ್ಸಲ್ಲಿ ಕೆತ್ತಲು ಉಪಯೋಗಿಸಿದ ದಟ್ಟವಾದ ಶಬ್ದ ಪದಾರ್ಥವೆನ್ನಬಹುದು. ಮನಸ್ಸನ್ನು ಒಂದು ವಿಶಿಷ್ಟ ಭಾವನೆಗೆ ಸಿದ್ಧ ಪಡಿಸಲು ದುಡಿಯುವ ಈ ವಿವರಗಳು ವಾಸ್ತವಿಕತೆಯ ಜೊತೆ ಅಗತ್ಯಕಿಂತ ಹೆಚ್ಚಿನ ಸಂಬಂಧ ಪಡೆಯುವುದಿಲ್ಲ. ಈ ದೃಷ್ಟಿಯಿಂದ ಸಣ್ಣಕಥೆಯಲ್ಲಿ ಬರುವ ಒಂದು ಮರವೋ, ಪಕ್ಷಿಯೋ, ಬೀದಿಯೋ, ಕಾವ್ಯದಲ್ಲಿ ಬರುವುದಕ್ಕಿಂತ ಹೆಚ್ಚಾಗಿ ಮರ, ಪಕ್ಷಿ, ಬೀದಿಯಾಗಿರುತ್ತದೆ. ಕಾದಂಬರಿಯಲ್ಲಿ ಇನ್ನಷ್ಟು ಹೆಚ್ಚು ಸಾಮಾನ್ಯ ; ಸಿನಿಮಾದಲ್ಲಂತೂ ನಾವು ಪ್ರತ್ಯಕ್ಷ ಕಂಡಷ್ಟೇ. ಸಂಸ್ಕಾರ ಕಾದಂಬರಿಯಲ್ಲಿ ನೀವು ಊಹಿಸುವ ಪ್ರಾಣೇಶಾಚಾರ್ಯ , ನಾರಾಣಪ್ಪರು ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ , ಲಂಕೇಶರಾಗಿ ಮಾತ್ರ ಕಂಡುಬಿಡಬಹುದು. ವಸ್ತುಪ್ರಪಂಚ ಹೀಗೆ ಈ ಮಾಧ್ಯಮಗಳಲ್ಲಿ ಎಷ್ಟು ಗಟ್ಟಿಯಾಗಿ ದಿಟವಾಗುತ್ತ ಹೋಗುತ್ತದೆಯೋ , ಅಷ್ಟೇ ಅದನ್ನು ಅವ್ಯಕ್ತವೂ , ಅಮೂರ್ತವೂ ಆದ ಭಾವನೆಗಳಿಗೆ , ವಿಚಾರಗಳಿಗೆ ಶರೀರವಾಗಿ ಮಾಡುವುದು ಕಲಾವಿದನಿಗೆ ಸವಾಲಾಗುತ್ತದೆ, ವಸ್ತುಪ್ರಪಂಚದ ಜೊತೆ ತೊಡಗಿಕೊಂಡೇ , ಅದರ ಮೂಲಕವೇ , ಅದನ್ನು ಮೀರುವ ಕಲಾವಿದನ ಈ ಪ್ರಯತ್ನ ಅತ್ಯಂತ ಮುಖ್ಯವಾದ್ದು. +ಪುತಿನರವರು ‘ ಭವನಿಮಜ್ಜನಾ ಚಾತುರ್ಯ ಲಘಮಾ ಕೌಶಲ ’ ಗಳು ಕೂಡಿರುವವನು ಕವಿಯಗುತ್ತಾನೆಂದು ಹೇಳಿರುವ ಮಾತು , ವಸ್ತುಪ್ರಪಂಚದ ಮೂಲಕವೇ ಅದನ್ನು ಮೀರುವ ಕಲಾವಿದನ ಪ್ರಯತ್ನದ ಬಗ್ಗೆ ನನ್ನ ವಾದವನ್ನು ಸೂಕ್ಷ್ಮವಾಗಿ ಸಮರ್ಥಿಸುತ್ತಃಡೆ ಎಂದು ನಾನು ತಿಳಿದಿದ್ದೇನೆ. +ಈ ಹಿನ್ನೆಲೆಯಲ್ಲಿ ಸಂಸ್ಕಾರದ ಸ್ಕ್ರಿಪ್ಟ್ ಬರೆದ ಗಿರೀಶರ ಜೊತೆ ಅಪಾರ ಮೆಚ್ಚಿಗೆಯ ಜೊತೆಗೇ ನನ್ನ ಕೆಲವು ಜಗಳಗಳೂ ಇವೆ. ಉದಾಹರಣೆಗೆ ಕಾದಂಬರಿಯಲ್ಲೂ , ಚಿತ್ರದಲ್ಲೂ ನಾರಾಣಪ್ಪನ ಶವದ ವೃತ್ತಾಂತದ ನಿರ್ವಹಣೆಯನ್ನು ಹೋಲಿಸಬಹುದು. ಕಾದಂಬರಿ ಮಧ್ಯದಲ್ಲಿ ಮುಸ್ಲಿಂ ಒಬ್ಬ ನಾರಾಣಪ್ಪನ ಶವವನ್ನು ಗುಪ್ತವಾಗಿ ಸುಟ್ಟು ಬಿಡುತ್ತಾನೆ. ಆದರೆ ಅಗ್ರಹಾರದ ಬ್ರಾಹ್ಮಣರು ಮತ್ತು ಪ್ರಾಣೇಶಾಚಾರ್ಯರು ಇನ್ನೂ ಶವ ಕೊಳೆಯುತ್ತಿದೆಯೆಂದು ಭಾವಿಸಿಕೊಂಡಿರುತ್ತಾರೆ. ಆದ್ದರಿಂದ ಕಾದಂಬರಿಯಲ್ಲಿ ನಾರಾಣಪ್ಪನ ನಿಜವಾದ ಶವ ಪ್ರಾಣೇಶಾಚಾರ್ಯನ ಮನಸ್ಸಿನ ಶವವಾಗುತ್ತದೆ. ಜಾತ್ರೆಯಲ್ಲಿ ಅವರು ಸತ್ತವನ ಜೊತೆ ಪಡೆಯುವ ತಾದಾತ್ಮ್ಯ ನಾರಾಣಪ್ಪನ ನಿಜವಾದ ಸಂಸ್ಕಾರ ಮಾಡಿದಂತೆಯೇ ಅಗುತ್ತದೆ. ಆದರೆ ಸಿನಿಮಾದಲ್ಲಿ ಕೊನೆಯ ತನಕ ಉಳಿಸಿಕೊಂಡ ಶವ – ಸಸ್‌ಪೆನ್ಸ್ ದೃಷ್ಟಿಯಿಂದ ಉಳಿಸಿಕೊಂಡದ್ದು – ಕಾದಂಬರಿ ತಾತ್ವಿಕ ಗೂಢಗಳನ್ನು ವ್ಯಕ್ತಪಡಿಸಲು ಅಡ್ಡಿಯಾಗುತ್ತದೆ. ಆದರೆ ಶವವನ್ನು ಕೊನೆಯ ತನಕ ಉಳಿಸಿಕೊಂಡದ್ದು ಬರೀ ಸಸ್‌ಪೆನ್ಸ್‌ಗಾಗಿ ಮಾತ್ರವಲ್ಲವೆನ್ನುವುದನ್ನೂ ಇಲ್ಲಿ ನಾನು ಹೇಳಬೇಕು. ಪ್ರಾಯಶಃ ಮುಸ್ಲಿಮನೊಬ್ಬ ನಾರಾಣಪ್ಪನ ಶವವನ್ನು ಸುಡುವುದು ತೋರಿಸಿದ್ದ ಪಕ್ಷದಲ್ಲಿ ಸಿನಿಮಾ ಇವತ್ತಿಗೂ ಬಿಡುಗಡೆಯಾಗದೇ ಉಳಿದಿರುತ್ತಿತ್ತು. +ಚಲಿಸುವ ಚಿತ್ರಗಳ ಮೂಲಕ ಕಿವಿಯ ಮೂಲಕ ಸಿನಿಮಾ ನಮಗೆ ಅನುಭವವನ್ನು ಸೃಷ್ಟಿಸಿ ಕೊಡುತ್ತದೆ. ಕಣ್ಣಿನ ಮೂಲಕ ನಮಗೆ ಸ್ಪಷ್ಟವಾಗಿ ಕಂಡದ್ದೂ ಕೂಡ ವಸ್ತುಪ್ರಪಂಚದ ವಸ್ತು ಮಾತ್ರವಾಗಿ ಉಳಿಯದೆ ಒಂದು ಕಲಾಕೃತಿಯ ದ್ರವ್ಯವಾಗುವುದೇ , ಅಮೂರ್ತವಾದದ್ದನ್ನು ಹೊಳೆಯಿಸುವುದೇ ಸಿನಿಮಾ ನಮಗೆ ಕೊಡುವ ಮಹತ್ವದ ಅನುಭವ. ಕಾವ್ಯದಲ್ಲಿ ಬರುವ ಶಬ್ದ ಪದಾರ್ಥಗಳಂತೆ ಸಿನಿಮಾದ ದೃಶ್ಯ ಪದಾರ್ಥಗಳು ಹೊರಗಿನ ಪ್ರಪಂಚದ ಜೊತೆ ಸಬಂಧವಿಟ್ಟುಕೊಂಡು ನಮ್ಮ ಮನೋಪ್ರಪಂಚದ ದ್ರವ್ಯಗಳಾಗುತ್ತವೆ. ಬರ್ಗ್‌ಮನ್‌ನ ‘ ಸೈಲೆನ್ಸ್ ’ ಎನ್ನುವ ಸಿನಿಮಾದಲ್ಲಿ ಒಂದು ಟ್ಯಾಂಕ್ ಕ್ರೂರವಾಗಿ ಸದ್ದು ಮಾಡುತ್ತ ನಿಧಾನವಾಗಿ ಚಲಿಸುವುದನ್ನು ನಾವು ನೋಡುತ್ತೇವೆ. ಯುದ್ಧದಲ್ಲಿ ಬಳಸುವ ಈ ಟ್ಯಾಂಕ್ ಸಿನಿಮಾದ ವಾತಾವರಣವನ್ನು ಸೃಷ್ಟಿಸುವುದು ಮಾತ್ರವಲ್ಲ, ಸಿನಿಮಾ ಮುಗಿದ ಮೇಲೂ ನಮ್ಮನ್ನು ಕವನದ ಸಾಲಿನಂತೆ ಅನೇಕ ಅರ್ಥಗಳನ್ನು ಮಿಂಚುತ್ತಾ ಕಾಡುವ ದೃಶ್ಯ ಪದಾರ್ಥವಾಗಿ ಉಳಿಯುತ್ತದೆ. ಕಾವ್ಯದ ಶಬ್ದ – ಪದಾರ್ಥದ ದಟ್ಟತೆಯಂತೆಯೇ ಸಿನಿಮಾ ದೃಶ್ಯ – ಪದಾರ್ಥದ ಈ ಬಗೆಯ ದಟ್ಟತೆಯೂ ಸಿನಿಮಾದ ತೀವ್ರವಾದ ಅರ್ಥವ್ಯಂಜಕತೆಗೆ ಅಗತ್ಯವೆನ್ನಬಹುದು. +ಸಿನಿಮಾದಲ್ಲಿ ಘಟನೆಗಳು , ದೃಶ್ಯ ವಸ್ತುಗಳು ಬರಿ ವಿವರಣೆಯಾಗಿ ಬಂದಾಗ ಹೀಗೆ ಅವು ನಮ್ಮನ್ನು ಕಾಡುವ ಶಕ್ತಿ ಪಡೆಯುವುದಿಲ್ಲ. “ ಪಲ್ಲವಿ ” ಯಲ್ಲಿ ನಾಯಕ ಓಡುವುದು , ನಾಯಕಿ ಮೆಟ್ಟಿಲನ್ನು ಹತ್ತಿ ಇಳಿಯುವುದು , ಮಕ್ಕಳ ಷಾಟ್ – ಸಿನಿಮಾ ಮಾಧ್ಯಮದ ವಿಶಿಷ್ಟತೆಯನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದರೂ ಸಂಪೂರ್ಣ ಯಶಸ್ವಿಯಾಗಿಲ್ಲವೆಂದು ನನಗೆ ಅನುಮಾನ. ಇದಕ್ಕೆ ಕಾರಣವನ್ನು ಆಳವಾಗಿ ವಿಶ್ಲೇಷಿಸ ಬೇಕು.ಇಡೀ ಸಿನಿಮಾದ ಶೈಲಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಡಿನಲ್ಲಿ ಬಿದ್ದ ಪ್ರತಿಮೆಗಳು , ವಿವರಣಾತ್ಮಕ ಪ್ರತಿಮೆಗಳು ನಮ್ಮಲ್ಲಿ ವಿಸ್ಮಯವನ್ನು ಉಂಟುಮಾಡಲಾರವಾದ್ದರಿಂದ ಸಿನಿಮಾದಲ್ಲಿ ಅಂಥವು ಬಂದಾಗ ನಾವು ಅವನ್ನು ಚುರುಕಾಗಿ ಸ್ವೀಕರಿಸುವುದಿಲ್ಲ. +ಸಿನಿಮಾದಲ್ಲಿ ಮಾಧ್ಯಮ ತನ್ನದೇ ಸಾಧ್ಯತೆಗಳನ್ನು ಪಡೆದಿದೆ. ಕಥೆಯೊಂದನ್ನೇ ಹೇಳುವ , ಆ ಕುತೂಹಲ ಕೆರಳಿಸುವುದರ ಮೂಲಕವೇ ಪುಟದಿಂದ ಪುಟಕ್ಕೆ ಓದುಗನನ್ನು ಗೆಲ್ಲುತ್ತ ಹೋಗುವ ಕಾದಂಬರಿ ಹೇಗೆ ಕಲೆಯಾಗುವುದಿಲ್ಲವೋ ಹಾಗೆಯೇ ಚೆಂದಾಗಿ ಕಾಣುವ ಚಿತ್ರಗಳನ್ನು ಅಳವಡಿಸುವ ಮೂಲಕ ವ್ಯಕ್ತವಾಗುವ ಕಾವ್ಯ , ಕಥೆ , ನಾಟಕಗಳ ಜೊತೆ ಸಂಬಂಧವಿಟ್ಟುಕೊಂಡೂ ಸಿನಿಮಾ ಸ್ವಯಂಪೂರ್ಣ ಮಾಧ್ಯಮವಾಗಿರುತ್ತದೆ ಎಂಬುದನ್ನು ಮರೆಯಕೂಡದು . ಸಿನಿಮಾಕ್ಕೆ ಕಥೆ ಕಾದಂಬರಿಗಳು ವಸ್ತುವಾಗಬಲ್ಲವು – ಅವು ಒಳ್ಳೆಯ ಕಥೆ ಕಾದಂಬರಿಗಳಾಗಿದ್ದಾಗ. ಸಿನಿಮಾಕ್ಕೆಂದೇ ಅವನ್ನು ಲೇಖಕ ಬರೆದಾಗ , ಅವು ತೀರಾ ‘ ಸಿನೀಮಿಯ ’ ವಾಗಿ ಬಿಡುವ ಅಪಾಯವಿದೆ. +ಕನ್ನಡದಲ್ಲಿ ಇನ್ನೂ ಅಪ್ಪಟ ಸಿನಿಮಾ – ಅಂದರೆ ಬರ್ಗ್‌ಮನ್‌ನ ‘ ಸೈಲೆನ್ಸ್ ’ ತರಹದ ಚಿತ್ರ – ಬಂದಿಲ್ಲ. ಆ ದಿಕ್ಕಿನಲ್ಲಿ ನಿಮ್ಮನ್ನು ಚಿಂತಿಸಲು ಈ ಲೇಖನ ಪ್ರಚೋದಿಸೀಯಾತು ಎಂದು ಆಶಿಸಿದ್ದೇನೆ. +***** +Black & White 100 min, Kannada, 1970 +Production and direction: Pattabhi Rama Reddy/ Story: U.R. Ananthamurthy/ Screenplay and dialogue: Girish Karnad/ Camera: Tom Cowan/ Music: Rajeev Taranath/ Art Direction: S.G. Vasudev/ Editing: Steven Cartaw, Vasu Cast: Girish Karnad, Snehlata Reddy, P. Lankesh, Dashrathi Dixit, Lakshmi Krishnamurthy. +ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […] +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […] +ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_30.txt b/Kannada Sahitya/article_30.txt new file mode 100644 index 0000000000000000000000000000000000000000..f8329975ec661592c14e92f2313ea2d2cefef73e --- /dev/null +++ b/Kannada Sahitya/article_30.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಿಮ್ಮಿ ನೆಗೆಯುವ ಸಮುದ್ರದ ತೆರೆಗಳನ್ನು ಲೆಕ್ಕ ಮಾಡಲು ಪ್ರಯತ್ನಿಸಿದಳು. ಲೆಕ್ಕ ತಪ್ಪಿಹೋಯಿತು. ತೆರೆಗಳು ಮಾತ್ರ ಹಾರುತ್ತಲೇ ಇವೆ. ದುಂಡಗಿನ ಸೂರ್ಯ ಕೆಂಪು ಪಿಂಡದ ಹಾಗೆ ಕಾಣಿಸಿದ. ಅದೇ ಸೂರ್ಯ ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಿದ್ದಾಗ – ಮಗ ದಿವಾಕರ ಬೋಗುಣಿಯೊಳಗಿರಿಸಿ ತಂದ ಪಿಂಡಗಳನ್ನೆಲ್ಲ ಬೊಗಸೆಯೊಳಗೆ ಮೆಲ್ಲಗೆ ಹಿಡಿದು ತೆರೆಗಳ ಮಡಿಲಲ್ಲಿ ಕರಗಿಸುತ್ತಿದ್ದಾಗ – ಕಾದ ಮಳಲ ರಾಶಿಯ ಮೇಲೆ ಕೈಮುಗಿದು ನಿಂತಿದ್ದ ವಿಶಾಲು ತನ್ನಲ್ಲಿ ಇನ್ನೂ ಉಳಿದಿರಬಹುದಾದ ಕೋಮಲ ಭಾವನೆಗಳೆಲ್ಲ ಬಿಸಿಲ ಬೆಂಕಿಯಲ್ಲಿ ಸುಟ್ಟು ಹೋಗಲಿ ಎಂದು ಆಶಿಸಿದ್ದಳು. ಉಪ್ಪು ನೀರಿನೊಂದಿಗೆ ಬೆರೆಯುತ್ತಿದ್ದ ಪಿಂಡಗಳೊಂದಿಗೆ ಸೇರಿ ಕಹಿಯಾಗಿ ಹೋಗಲಿ ಎಂದು ಮನಸ್ಸಿನೊಳಗೇ ಚೀರಿದ್ದಳು. ಪಾದಗಳಡಿಯ ಮಳಲರಾಶಿ ದಹಿಸುವ ಚಿತೆಯಾಗಲಿ ಎಂದು ಯಾರಿಗೂ ಗಂಟುದ್ದ ನೀರಿನಲ್ಲಿ ಜನಿವಾರವನ್ನು ಎಡಕ್ಕೆ ಮಾಡಿಕೊಂಡು ಪುರೋಹಿತರ ಮಂತ್ರಕ್ಕನುಗುಣವಾಗಿ ಸರ್ವ ಪಿತೃಗಳಿಗೆ ತರ್ಪಣ ನೀಡುತ್ತಿದ್ದ ಮಗ ದಿವಾಕರನಿಗೂ ತಿಳಿಯದ ಹಾಗೆ ಚಿಂತೆಯ ನೇಣುಬಿಗಿದುಕೊಂಡಿದ್ದಳು. . . ಆದರೆ ಸಾವು ಅಷ್ಟು ಸುಲಭವಾಗದೆ ಇರುವ ಸ್ಥಿತಿ ಅವಳದು. ಮನೋಸ್ಥಿತಿ ಕೂಡಾ. +ಹಾಗೆ ಸಾಯಬಹುದಾದ ಸಂದರ್ಭಗಳಿಗೇನು ಅವಳ ಜೀವನದಲ್ಲಿ ಕೊರತೆ ಇರಲಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಎದುರಿಸುವ ಎದೆಗಾರಿಕೆ ತನ್ನಲ್ಲಿದೆ ಎಂಬ ವಿಶ್ವಾಸವೇ ಅವಳ ಜೀವನದ ಸರ್ವಸ್ವ. ಈಗ ಈ ಕ್ಷೇತ್ರದ ಸಮುದ್ರದ ದಂಡೆಯ ಮೇಲೆ ನಿಂತು – ಬೆಳಗಿನಿಂದ ಮಧ್ಯಾಹ್ನದ ತನಕ ಪಾಣಿಪಂಚೆ ಉಟ್ಟು ತಲೆ ಬೋಳಿಸಿಕೊಂಡ ಮಗ ಮಾಡಿದ ಅಪರ ಸಂಸ್ಕಾರದ, ಸಪಿಂಡೀಕರಣದ ಕ್ಷೇತ್ರವಿಧಿಗಳ ದೃಶ್ಯಾವಳಿಯನ್ನು ಕಣ್ಮುಂದೆ ತಂದುಕೊಂಡಾಗ – ಸಾವನ್ನು ಒಂದು ಪ್ರಬಲ ಸ್ಫೂರ್ತಿಯಾಗಿ ಕಾಣಬೇಕೆಂಬ ಹಟಮಾರಿತನ ಅವಳಲ್ಲಿ ಬಲವಾಗತೊಡಗಿದೆ. ಅವಳು ಹುಟ್ಟಿ ಬೆಳೆದ ಜಾತಿ ವರ್ತುಲದ ಸಂಪ್ರದಾಯಸ್ಥರು ನಡೆಸುವ ಸಾವಿನ ವಿಧಿಗಳನ್ನೆ ಜೀವನ ಕ್ರಿಯೆಯಾಗಿ, ಸಂದೇಶವಾಗಿ ಕಾಣಬೇಕು ಎಂಬ ಹಂಬಲ ಬಲಿಯತೊಡಗಿದೆ. +ವಿಶಾಲು ಯಾವ ತಾಯಿಯ ಗರ್ಭದಿಂದ ಹೊರಬಂದಿದ್ದಳೋ ಆ ಅವಳಮ್ಮನನ್ನು ಜೀವಂತವಾಗಿ ಕಾಣಲಾಗದ ಭಾಗ್ಯ ಅವಳದು. ಗಿಡ್ಡ ಲಂಗದಿಂದ ತುಂಡು ಸೀರೆಯ ಸುತ್ತಿನೊಳಗೆ ದೇಹ ಬದಲಾಗುವ ಸ್ಥಿತಿ ಬರುವವರೆಗೂ ಮಲತಾಯಿಯನ್ನೇ ತಾಯಿ ಎಂದು ತಿಳಿದಿದ್ದಳು ಅವಳು. ಮೈನೆರೆದು ಮನೆಯ ಮೂಲೆ ಸೇರಿದ ಆ ದಿನ – ಇವಳಿಗೆ ಕೇಳಿಸದು ಎಂಬ ಭಾವನೆಯಿಂದ ಆ ಮಲತಾಯಿ ಪಂಚಾಂಗ ಹಿಡಿದು ಕುಳಿತಿದ್ದ ಅಪ್ಪನ ಬಳಿ ಹೇಳಿದ ಮಾತು ಅವಳಿಗೆ ನಿಜ ಜೀವನದ ಒಸಗೆ ನೀಡಿತ್ತು. “ನಿಮ್ಮ ಪಂಚಾಂಗ ಏನು ಹೇಳುತ್ತದೋ ನನಗೆ ತಿಳಿಯದು. ಆದಷ್ಟು ಬೇಗ ಒಂದು ಗಂಡು ಹುಡುಕಿ ತಾಳಿಕಟ್ಟಿಸಿ, ಅಮ್ಮನ ದಾರಿ ಇವಳು ಹಿಡಿಯುವುದು ಬೇಡ.” ತಮ್ಮ ತಂಗಿಯಂದಿರು ಎಂದು ತಿಳಿದವರೆಲ್ಲ ಆಗ ಅಪರಿಚಿತರಾದರು. ಅಮ್ಮ ಎಂದು ತಿಳಿದವಳು ಅಸ್ಪಷ್ಟವಾಗತೊಡಗಿದಳು. ಮತ್ತೆ ಮತ್ತೆ ಕದ್ದು ಕೇಳಿದ ಮಾತುಗಳೆಲ್ಲ ನಿಜ ಅಮ್ಮನನ್ನು ಸ್ಪಷ್ಟಗೊಳಿಸತೊಡಗಿದವು. “ನಿಮ್ಮ ಮುದ್ದು ಮಗಳ ಮುಖವನ್ನು ಇತ್ತಿತ್ತಲಾಗಿ ನೀವು ನೋಡಲೇ ಇಲ್ಲ. ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ತುಂಬಿಕೊಂಡಿದ್ದಾಳೆ. ಅಮ್ಮನ ಹಾಗೆ ಆದಾಳು ಮತ್ತೆ. ನನ್ನನ್ನು ದೂರಬೇಡಿ.” ಕದ್ದು ಕೇಳಿದ ಮಾತುಗಳೆಲ್ಲ ರೇಖೆಯಾದವು. ಕಾಣದ ಅಮ್ಮನನ್ನು ಚಿತ್ರಿಸತೊಡಗಿದವು. ಕಣ್ತುಂಬಿ, ಎದೆತುಂಬಿ, ನಡುನಲಿವ ದೇವಲೋಕದ ರಂಭೆಯನ್ನು ಸೃಷ್ಟಿಸಿದವು. ಅಮ್ಮ ದಿಟ್ಟೆಯಾಗಿ ಕಾಣಿಸಿದಳು. ಅಹಲ್ಯೆಯಾಗಿ ಕಾಣಿಸಿದಳು. ಅಪ್ಪ ಗೌತಮನಾಗಿ ಕಾಣಿಸಿದರು. +ಈಗ ಕಟ್ಟಿಕೊಂಡವನ ಉತ್ತರಕ್ರಿಯೆಗಾಗಿ ಈ ಕ್ಷೇತ್ರಕ್ಕೆ ಬಂದು ವಿಶಾಲವಾದ ಸಮುದ್ರದ ಎದುರು ನಿಂತು ತೆರೆಗಳೆಣಿಕೆಯ ಕಾಯಕದಲ್ಲಿ ತೊಡಗಿದ ವಿಶಾಲುವಿಗೆ ನೆನಪಿರುವುದು ಆ ಅಮ್ಮನ ಮುಖ ಒಂದನ್ನು ಬಿಟ್ಟು ಬಟ್ಟೆ ಸುತ್ತಿದ ಹೆಣ ಮಾತ್ರ. ಅಪ್ಪನನ್ನು ಮತ್ತು ಮಲತಾಯಿಯನ್ನು ಬೇಡಿದ್ದಳು, ಕಾಡಿದ್ದಳು, ಹಟಮಾಡಿದ್ದಳು. ಅಗ್ನಿಹೋತ್ರಿಗಳ ಮನೆಯಿಂದ ಹೆತ್ತ ಮಗುವನ್ನು ಬಿಟ್ಟು ದೂರದೂರಿನ ಸೂಳೆಗೇರಿಗೆ ಓಡಿಹೋಗಿದ್ದರೇನಂತೆ. ಅಮ್ಮ ಅಮ್ಮನೆ. ಒಮ್ಮೆ ಕಾಣಬೇಕು ಅವಳನ್ನು. ಆಗ ಎಲ್ಲ ಅಪ್ಪ ಹೇಳುತ್ತಿದ್ದ ಮಾತು ಒಂದೆ, “ಕುಟುಂಬದ ಸೂತಕ ಕಳೆಯಲು ಆ ಪಿಶಾಚಿ ಸತ್ತ ಸುದ್ದಿ ತಿಳಿದರೆ ಯಾರನ್ನಾದರೂ ಕಳುಹಿಸಿ ಸಂಸ್ಕಾರ ಮಾಡಿಸುತ್ತೇನೆ. ಆಗ ನೀನೀ ಮನೆಯಲ್ಲೇ ಇದ್ದರೆ ಹೋಗಿ ಮುಳುಗು ಹಾಕಿ ಆ ಪ್ರೇತಕ್ಕೆ ಮೋಕ್ಷ ನೀಡಿ ಬಾ.” ಆದದ್ದು ಹಾಗೆ. ಮದುವೆಯ ಮೊದಲೇ ಅಮ್ಮ ಸತ್ತ ಸುದ್ದಿ ಬಂತು. ಒಂದೊಪ್ಪತ್ತು ಪ್ರಯಾಣ ಮಾಡಿ ಅಪರಿಚಿತ ವಾತಾವರಣದಲ್ಲಿ ಬುದ್ಧಿ ತಿಳಿದ ಮೇಲೆ ಮೊದಲ ಬಾರಿಗೆ ಮತ್ತು ಅದೇ ಕೊನೆಯ ಬಾರಿಗೆ ಹೆತ್ತವಳ ಮುಖ ನೋಡಿ ಬಂದಿದ್ದಳು. ಬಿಳಿ ಬಟ್ಟೆಯ ಏರು ತಗ್ಗುಗಳನ್ನು ಕಣ್ಣರಳಿಸಿ ಕಂಡಿದ್ದಳು. ಬಟ್ಟೆಯೊಳಗಿನ ಕಾಲುಗಳನ್ನು ಹಿಡಿದು ತಲೆ ಬಗ್ಗಿಸಿ ಎಷ್ಟೋ ಹೊತ್ತು ಅಮ್ಮನ ಮಡಿಲ ಮಗುವಾಗಲು ಪ್ರಯತ್ನಿಸಿದ್ದಳು. ಕಣ್ಣೀರನ್ನು ಮೀರಿದ ಸಂಕಟ ಅವಳನ್ನು ಕಾಡಿತ್ತು. ಅಪ್ಪನ ದೇಹದಿಂದ ಸುಖ ಕಾಣದೆ ಹೋದ ದೇಹ ಎಂಬುದಕ್ಕಿಂತ ಹೆಚ್ಚು ಮನಸ್ಸಿನ ಇಷ್ಟಕ್ಕೆ ವಿರುದ್ಧವಾಗಿ ಕೊಳೆಯದ ಒಂದು ಪವಿತ್ರ ದೇಹವಾಗಿ ಅಮ್ಮನನ್ನು ಕಾಣುವ ಪ್ರಯತ್ನ ಅವಳದಾಗಿತ್ತು. . . +ವಿಶಾಲುವಿಗೆ ಆ ದಿನಗಳ ಸ್ಪಷ್ಟ ನೆನಪಿದೆ. ಆ ಅಮ್ಮನ ಕಾರಣದಿಂದಾಗಿಯೇ ಯೋಗ್ಯ ನೆಂಟಸ್ತಿಕೆ ತನಗೆ ದೊರಕದ ದಿನದಿನವೂ ಅಪ್ಪ ಮತ್ತು ಮಲತಾಯಿ ಸತ್ತ ಆ ಪಿಶಾಚಿಗೆ ಮತ್ತಷ್ಟು ಶಾಪಹಾಕುತ್ತಿದ್ದ ಕಾಲ. ಅಮ್ಮನ ನಡವಳಿಕೆ ಬಹಿರಂಗಗೊಂಡ ಕಾಲ. ಅಪ್ಪ ಹೇಳುತ್ತಿದ್ದ ಮಾತುಗಳೆಲ್ಲ ಆ ಅಮ್ಮನನ್ನು ಮತ್ತಷ್ಟು ಪ್ರೇತಸ್ವರೂಪಿಯಾಗಿಸುತ್ತಿದ್ದ ಕಾಲ. “ಅವಳಿಗೆಲ್ಲಿ ಮೋಕ್ಷ? ಖಂಡಿತ ವೈತರಣಿಯಲ್ಲಿ ಕೊಳೆಯುತ್ತಿದ್ದಾಳೆ. ಪ್ರಾರಬ್ಧ – ಪ್ರಾರಬ್ಧ” ಎಂದು ಅಪ್ಪ ನೋವಿನಿಂದ, ಅನುಕಂಪದಿಂದ, ಒಂದಷ್ಟು ದಿನಗಳಾದರೂ ಸಂಸಾರ ಮಾಡಿದ ಕಾವಿನಿಂದ ಕನವರಿಸುತ್ತಿದ್ದ ಕಾಲ. ಮತ್ತು ಇವಳ ಮದುವೆಯ ಮೊದಲೇ ಅಪ್ಪ ಸತ್ತು ಅಪ್ಪನ ಸಂಸ್ಕಾರದ ದಿನಗಳಲ್ಲಿ ಹಗಲೂ ರಾತ್ರಿ ಅಪ್ಪ ಅಮ್ಮ ಇಬ್ಬರ ಪ್ರೇತಗಳು ಈಗ ಒಟ್ಟು ಸೇರಿವೆ ಎಂಬ ಭ್ರಮೆಯ ಕಾಲ. ತನ್ನ ಬೆಳೆಯುತ್ತಿದ್ದ ದೇಹದ ಕಣಕಣದಲ್ಲಿ ತುಂಬು ಬಾಳ್ವೆಗೆ ಬೇಕಾದ ಅಮೃತ ಅಡಗಿದೆ ಎಂದು ತಿಳಿದ ಕಾಲ. ಅಪ್ಪ, ಮಲತಾಯಿ ಅಡ್ಡಿ ಮಾಡದಿದ್ದರೂ ಅವಳಿಂದಲೇ ವ್ಯವಸ್ಥಿತ ಶಿಕ್ಷಣ ಹೊಂದಲಾಗದೆ – ಮನೆಗೆಲಸದ ನಡುವೆ, ಹೋಮಹವನಗಳ ನಡುವೆ, ಕೇರಿಯಲ್ಲಿ ಊರಿನಲ್ಲಿ ಮಾತಿನಲ್ಲಿ ಮಾಟದಲ್ಲಿ ಬದುಕಿನ ಪಾಠ ಕಲಿಯುತ್ತಿದ್ದ ಕಾಲ. ಹೈಸ್ಕೂಲು ಮೆಟ್ಟಿಲನ್ನೇರುವಷ್ಟರಲ್ಲಿ ಅವಳ ಶಿಖ್ಷಣ ಮುಗಿದಿತ್ತು. ಆದರೆ ಅಷ್ಟೇ ಸಾಕಾಗಿತ್ತು. ಆಕರ್ಷಣೆಯ ಮುಖಗಳನ್ನು ತಿಳಿಯಲು. ದಾರಿಯಲ್ಲಿ ಸಾಗತೊಡಗಿದರೆ ಯಾರೋ ಬೇಕೆಂದೇ ಹಿಂಬಾಲಿಸಿದ ಅನುಭವ, ನಿಂತವರೆಲ್ಲ ದುರುಗುಟ್ಟಿ ನೋಡುತ್ತಿದ್ದ ಆ ನೋಟದ ಅನುಭವ. ಇಂದಿಗೂ ಅವಳಿಗೆ ಸರಿಯಾಗಿ ನೆನಪಿದೆ. ಮನೆಯ ಹಬ್ಬ ಹರಿದಿನಗಳಿಗೆಲ್ಲ ತಪ್ಪದೆ ಹಾಜರಾಗುತ್ತಿದ್ದ ಒಬ್ಬ ಸಂಬಂಧಿಕ ಇವಳು ಒಬ್ಬಂಟಿಯಾಗಿ ಎಲ್ಲಿ ಸಿಗುತ್ತಾಳೆ ಎಂದು ಸುಳಿಯುತ್ತ ಮಡಿವಸ್ತ್ರ ಒಣಗಿಸಲು ಅಟ್ಟ ಹತ್ತಿದಾಗ ಯಾವ ಮಾಯಕದಿಂದಲೋ ಬಂದು “ಕೂಗ್ಬೇಡಾ, ಒಂದು ಗಮ್ಮತ್ ತೋರ್‌ಸ್‌ತೆ” ಎಂದು ಏನೇನೋ ಹೇಳುತ್ತ ಲಂಗದಂಚಿಗೆ ಕೈಹಾಕಿದ್ದು. . . +ಆ ’ಗಮ್ಮತ್ತಿನ’ನ ನಿಜ ತಿಳಿಯಲು ಒಂದರ್ಥದಲ್ಲಿ ಒಂದು ಜನ್ಮವನ್ನೆ ಕಳೆಯಬೇಕಾಯಿತಲ್ಲ ಅವಳು. ಬೆಡಗಿನ ಮಂಟಪದೊಳಗಿನ ಉರಿಯುವ ಬೆಂಕಿಯ ಎದುರು ಏಳು ಹೆಜ್ಜೆ ಮೆಟ್ಟಿ ಕರಿಮಣಿ ಕಟ್ಟಿಸಿಕೊಂಡವನಿಂದ ವಿಚ್ಛೇದನ ಪಡೆದ ಮೇಲೆ ಹೊಸ ಜನ್ಮ ತಾಳಿದೆ ಎಂದೇ ನಂಬಿದವಳು ವಿಶಾಲು. ಅದೊಂದು ಸುದೀರ್ಘ ಹೋರಾಟ. . . ಬುದ್ಧಿ ತಿಳಿದ ಮೇಲೆ ಜೀವಂತ ಕಾಣದೆ ಚಿತೆಗೆ ಸಾಗಿಸಲು ಸಿದ್ಧವಾಗಿದ್ದ ಸಂದರ್ಭದಲ್ಲಿ ಕಂಡ ಆ ಅಮ್ಮನ ಸ್ಫೂರ್ತಿಯಿಂದಲೋ ಎಂಬಂತೆ ಅವಳು ನಡೆಸಿದ ಹೋರಾಟ. +ಆ ಸ್ಫೂರ್ತಿಯ ಹಿಂದೆ ಒಂದು ನಂಬಿಕೆ ಇದೆ. ಪಾಣಿಪಂಚೆಯಲ್ಲೆ ಬದುಕನ್ನು ಹವನವಾಗಿಸಿದ ಅಪ್ಪನ ಒಣಕಲು ಸಮಿಧೆಯಂತಿದ್ದ ದೇಹದ ಕಾವಿನಿಂದಲೇ ತನ್ನನ್ನು ಗರ್ಭದಲ್ಲಿ ಉಯ್ಯಾಲೆಯಾಡಿಸಿ ಮತ್ತೆ ಭೂಮಿಗಿಳಿಸಿ ಅವನ ವ್ರತಕ್ಕೆ ಕಲಶವಾಗಲಾರೆ ಎಂದೆಣಿಸಿ ಸೂಳೆಗೇರಿ ಸೇರಿದ ಆ ಅಮ್ಮ ಪರಿಶುದ್ಧಳು ಎಂಬುದೇ ವಿಶಾಲುವಿನ ಆ ನಂಬಿಕೆ. ಮಲತಾಯಿ ತವರಿಗೆ ಹೋದ ಸಂದರ್ಭವನ್ನೇ ಕಾದು ಅಮ್ಮನ ಹೆಣಕಂಡು ಬಂದು ಒಳಗಿಂದೊಳಗೇ ಅಳುತ್ತಿದ್ದ ಬೇಯುತ್ತಿದ್ದ ಈ ಹುಡುಗಿ ವಿಶಾಲುವನ್ನು ಸಂತೈಸಲೆಂದೇ ಬರುತ್ತಿದ್ದ “ಬಚ್ಚಿ” ಎಂಬ ಅಮ್ಮನ ಪರಿಚಯದ ಮುದುಕಿ ಚಾವಡಿಯಲ್ಲಿ ಕುಳಿತು ಕವಡೆ ಕುಣಿಸುತ್ತಿದ್ದ ಅಪ್ಪನಿಗೆ ತಿಳಿಯದಂತೆ ಗುನುಗುನಿಸುತ್ತಿದ್ದಳು ಆ ಅಮ್ಮನ ಒಳ್ಳೆಯ ಗುಣಗಳನ್ನು. ಬಚ್ಚಲಿಗೆ ಕರೆದುಕೊಂಡು ಹೋಗಿ ಇದ್ದೂ ಇಲ್ಲದ ಅಮ್ಮನನ್ನು ಕಳೆದುಕೊಂಡ ತಬ್ಬಲಿ ಎಂಬ ಪ್ರೀತಿಯಿಂದ ಕರುಣೆಯಿಂದ ಎಣ್ಣೆ ಹಾಕಿ ತಿಕ್ಕಿ ತೀಡಿ ಬಿಸಿನೀರು ಹೊಯ್ದು ಸ್ನಾನ ಮಾಡಿಸುತ್ತಿದ್ದಳು ಆ ಬೋಡು ಬಾಯಿಯ ಮುದುಕಿ. ತುಂಡು ಬೈರಾಸವನ್ನು ಸುತ್ತಿಕೊಳ್ಳಲು ಪ್ರಯತ್ನಿಸುವಾಗ “ನಿನಗೆಂಥ ನಾಚುಗೆ ಮಗ. ನಿನ್ನಮ್ಮನ ತುಂಬು ದೇಹಕ್ಕೆ ಅಭಿಷೇಕ ಮಾಡಿದವಳು ನಾನು. ರಾಣಿ ಅವಳು ರಾಣಿ. ಎಂಥ ಮೈ. ಎಂಥ ಬಣ್ಣ. ರಸ ತುಂಬಿದ ದೇಹ ಮಗ ನಿನ್ನಮ್ಮಂದು. ಭಾಗ್ಯದ ಗೆರೆ ಇಲ್ಲದೆ ಹೋಯಿತು. ನಾನು ಅಲ್ಲಿಗೆ ಹೋದಾಗಲೆಲ್ಲ ನಿನ್ನ ಬಗ್ಗೆ ಕೇಳುತ್ತಿದ್ದಳು. ನಾನು ಹೇಳುತ್ತಿದ್ದೆ. ಇಷ್ಟು ಮಾತ್ರ ತಿಳಿದುಕೋ ಮಗಾ. ಕೈ ಹಿಡಿದವನನ್ನು ಬಿಟ್ಟು ಓಡಿಹೋದರೂ ಮೆಚ್ಚಿದವನಿಗೆ ಅನ್ಯಾಯ ಮಾಡದೆ ಕೊನೆಯತನಕ ಬದುಕಿದ್ದಳು. . . ” ನೆತ್ತಿಗೆ ಬೆನ್ನಿಗೆ ಹೊಕ್ಕುಳ ಸಂಧಿಗೆ ಎಲ್ಲೆಲ್ಲಿ ಎಣ್ಣೆ ಇಳಿಯಬೇಕೋ ಅಲ್ಲಿಗೆ ಮಿಳ್ಳೆ ತುಂಬ ತಂದ ಎಣ್ಣೆಯನ್ನು ಸುರಿದು ಹುಬ್ಬು ತೀಡಿ ನೆಟ್ಟಗೆ ಮುರಿದು ಭಗೀರಥನಿಗಾಗಿ ಗಂಗೆ ಧುಮುಕಿದಂತೆ ತಲೆಯ ಮೇಲೆ ರಭಸದಿಂದ ನೀರನ್ನೆರಚಿ ಆ ಅಮ್ಮನ ಪ್ರೀತಿಯ ಒಸಗೆಯನ್ನು ಧಾರೆಯಾಗಿಸುತ್ತಿದ್ದ ಆ ಮುದುಕಿ ಆಗೆಲ್ಲ ಹೇಳುತ್ತಿದ್ದ ಮಾತು ಒಂದೆ ” ಆ ಅಮ್ಮನ ಮೈಕಟ್ಟನ್ನೇ ಸೆಳೆದು ತಂದಿದ್ದಿ. ಕೈ ಹಿಡಿದವ ಕೊನೆಯತನಕ ನಿನಗಂಟಿಕೊಂಡಿರಲಿ.” +ಆದರೆ ಹಾಗಾಗದೆ ಹೋಯಿತು. +ಈಗ ಈ ಕ್ಷೇತ್ರದಲ್ಲಿ ಮಳಲನ್ನು ಚುಂಬಿಸುತ್ತಿದ್ದ ತೆರೆಗಳನ್ನೆಣಿಸುವುದು ಸಾಧ್ಯವಾಗದೆ ಹೋದರೂ ವಿಶಾಲುವಿಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ ಮೊದಲ ದಾಂಪತ್ಯದ ಲೆಕ್ಕಾಚಾರ. . . ಲೆಕ್ಕ ಮಾಡಿ ಹತ್ತು ವರ್ಷಗಳ ತನಕ ಹರಕಲು ಚಪ್ಪಲಿಯನ್ನು ಜಗಿಯಲು ನಾಯಿ ಮಾಡುವ ವ್ಯರ್ಥ ಪ್ರಯತ್ನದಂತೆ ಸಾಗಿದ ಮೊದಲ ದಾಂಪತ್ಯದ ಲೆಕ್ಕಾಚಾರ. ಅಮ್ಮನ ಇತಿಹಾಸ ಊರುಕೇರಿಯಲ್ಲಿ ಮನೆಮಾತಾಗಿದ್ದರೂ ಸಿಕ್ಕಿದ ನೆಂಟಸ್ತಿಕೆ ಅವಳಿಂದ ತನಗೆ ಬೇಕಾದುದನ್ನು ದಕ್ಕಿಸಿಕೊಂಡ ಲೆಕ್ಕಾಚಾರ. +ಮೊದ ಮೊದಲು ಸಂಭ್ರಮದ ದಿನಗಳವು. . . +ಲೆಕ್ಕಾಚಾರದಲ್ಲಿ ಯಾವುದಕ್ಕೂ ಕಡಿಮೆ ಇರಲಿಲ್ಲ. ಕೈಹಿಡಿದವನ ಅಳತೆಯಲ್ಲಿ ಮಿತಿಮೀರಿದ್ದಳು ವಿಶಾಲು. ಸೊಕ್ಕಿನ ಹೆಣ್ಣಿನ ಮಗಳು ಎಂದು ಅವರಿವರಿಂದ ಹೇಳಿಸಿ ಕೊಂಡವಳು ಕೈ ಹಿಡಿದವನ ತೆಕ್ಕೆಯೊಳಗೆ ಮಗುವಾಗಲು ಪ್ರಯತ್ನಿಸಿದ್ದಳು. ಬೆಳೆಯಲು ಪ್ರಯತ್ನಿಸಿದ್ದಳು. ಬೆಳಗಲು ಪ್ರಯತ್ನಿಸಿದ್ದಳು. ದಿನವೂ ತಲೆತುಂಬ ಹೂವು. ಮೈತುಂಬ ಮಿರುಗುವ ಬಟ್ಟೆ. ಅಮ್ಮನಂತೆ ಚಿಟ್ಟೆಯಾಗದೆ ಕೈಹಿಡಿದವನ ಉಣಿಸಿಗೆ ಸದಾ ಬೆಳ್ಳಿಯ ತಟ್ಟೆಯಾಗಬೇಕು ಎಂದು ಪ್ರಯತ್ನಿಸಿದ್ದಳು. ದಿವಾಕರ ಹುಟ್ಟುವ ತನಕ ಈ ತಟ್ಟೆ ತುಂಬಿಕೊಂಡಿತ್ತು. ಉಕ್ಕುವ ಹಾಲಿನ ಬಟ್ಟಲಾಗಿತ್ತು. +ಮತ್ತಿನ ಕಥೆ ಬೇರೆ. . . +ಈ ಕ್ಷೇತ್ರದಲ್ಲಿ ಮುಂಜಾನೆ ನಡೆದ ಕಟ್ಟಿಕೊಂಡವನ ಉತ್ತರಕ್ರಿಯೆಯ ಪುಣ್ಯ ಕ್ಷಣದ ತನಕ ವಿಶಾಲು ಈಗ ಕಾಣುತ್ತಿರುವ ಕಡಲಿನ ತೆರೆಗಳಂತೆ ನೆಗೆತ ಮೊರೆತಗಳ ಕತೆ. . . +ಮುಂಜಾನೆಯ ಆ ಕ್ಷಣಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ತನ್ನ ಬಾಳಿನಂತೆ ನಿರಂತರ ಹೋರಾಟದ ಪ್ರತೀಕವಾದ ಈ ತೆರೆಗಳ ಏಳು ಬೀಳಿನ ಲೆಕ್ಕಾಚಾರದ ವ್ಯರ್ಥ ಪ್ರಯತ್ನವೇ ಹಿತವಾಗಿ ಕಾಣಿಸತೊಡಗಿದೆ ವಿಶಾಲುವಿಗೆ. +ಎಂಥ ಕ್ಷಣಗಳು ಅವು. ಭಾವನೆಯನ್ನು, ವಿವೇಚನೆಯನ್ನು ಮತ್ತು ಅವಳ ಅಂತಃಸತ್ವವಾದ ಸಹನೆಯನ್ನು ದಹಿಸಿದ ಕ್ಷಣಗಳವು. . . +ಅಮ್ಮನ ರಮ್ಯ ಇತಿಹಾಸ ಕಿವಿಗಳನ್ನಪ್ಪಳಿಸಿದಾಗ ಅವಳು ಹೀಗೆ ಬೆಂದಿರಲಿಲ್ಲ. ದಿನದಿನವೂ ಅಪ್ಪ, ಮಲತಾಯಿ, ಅವರಿವರೆಲ್ಲ ಅಮ್ಮನ ನಗ್ನ ಚರಿತ್ರೆಯನ್ನು ದಾಖಲಿಸುತ್ತಿದ್ದಾಗಲೂ ಅವಳನ್ನು ನೋವು ಕಾಡಿರಲಿಲ್ಲ. ಕಾಣದ ಅಮ್ಮನನ್ನೆ ನಂಬಿ ನಡೆಯುವ ಪ್ರಯತ್ನ ಅವಳದಾಗಿತ್ತು. ಹೆಜ್ಜೆ ಹೆಜ್ಜೆಗೆ ದಿವಾಕರ ಹುಟ್ಟಿದ ಸಂಭ್ರಮವನ್ನು ಮೀರಿ ಕೈಹಿಡಿದವನ ಬೇಕು ಬೇಡಗಳಿಗೆ ದಣಿದಾಗಲೂ ಅವಳು ಮುದುಡಿರಲಿಲ್ಲ. ಲವಲವಿಕೆಯ ಸಂಕೇತ ತಾನಾಗಬೇಕು ಎಂಬುದು ಅವಳ ಹೋರಾಟವಾಗಿತ್ತು. ಕೈಹಿಡಿದವನ ಉದ್ಯೋಗ ಚಿನ್ನದ ತತ್ತಿಯ ಕೋಳಿಯಲ್ಲ ಎಂಬುದದರ ರಹಸ್ಯ ಬಯಲಾದಾಗಲೂ ಅವಳು ಸೋತಿರಲಿಲ್ಲ. “ಮುಡಿದ ಹೂ ಬಾಡಬಹುದು. ಮುಖ ಬಾಡದಂತೆ ನಗುತ್ತ ನಾವಿರೋಣ” ಎಂದು ಕೈಹಿಡಿದವನ ಕಪೋಲ ಸವರಿ ಲಲ್ಲೆಗೆರೆದವಳು ಅವಳು. ಮುಂದೊಂದು ದಿನ ಅಶಿಸ್ತಿನ ನೆಲೆಯಲ್ಲಿ ಆ ಉದ್ಯೋಗವೂ ಕಳಚಿಹೋದಾಗ ಕೈಹಿಡಿದವ ಮೌನಿಯಾಗತೊಡಗಿದ. ವಿಶಾಲು ವಾಚಾಳಿಯಾಗಲು ಪ್ರಯತ್ನಿಸಿದಳು. “ತಪ್ಪು ನಮ್ಮದಲ್ಲ ಎಂದು ನಿಮಗನ್ನಿಸಿದರೆ ಸರಿ. ಚಿಂತೆ ಬಿಡಿ” ಎಂದು ಮುಂಗುರುಳು ತೀಡಿದಳು. “ನಿಮಗೇನು ಕಡಿಮೆ. ಎಂಥ ದುಡಿಮೆಗೂ ನಿಮ್ಮ ಮೈ ಒಗ್ಗೀತು” ಎಂದು ಅವನೆದೆಯ ಮೇಲೆ ಒರಗಿ ಕಣಿ ಹೇಳಿದಳು. “ಬೇಸರವಾದರೆ ಈ ಊರು ಬೇಡ. ಎಲ್ಲಿಗಾದರೂ ಹೋಗೋಣ. ಹೇಗೂ ಬದುಕಬಹುದು” ಎಂದು ತಾನೆ ಸೆರಗು ಕಟ್ಟಿ ಪೊರಕೆಯಿಂದ ಹಿಡಿದು ಎಲ್ಲವನ್ನೂ ಜೋಡಿಸಿ ದೊಡ್ಡನಗರಕ್ಕೆ ಕೈಹಿಡಿದವನೊಂದಿಗೆ ಮತ್ತು ಮಗು ದಿವಾಕರನೊಂದಿಗೆ ಬಂದಳು. ಊರು ವ್ಯತ್ಯಾಸವಾದರೂ ಕೈಹಿಡಿದವನ ಮಂಕು ಕರಗಲಿಲ್ಲ. ಮೌನ ಅರಳಲಿಲ್ಲ. ಆಗಲೂ ವಿಶಾಲು ಬಾಡಿಹೋಗಲಿಲ್ಲ. ಎಂದೋ ಕಲಿತ ಹೊಲಿಗೆಯನ್ನು ನೆನಪಿಸಿಕೊಂಡಳು. ಮಗು ದಿವಾಕರನನ್ನು ಗಂಡನ ಮಡಿಲಲ್ಲಿರಿಸಿ ದುಡಿಮೆಯ ದಾರಿ ಹುಡುಕತೊಡಗಿದಳು. ಪುಟ್ಟ ನಗರದಿಂದ ಆ ಮಹಾ ನಗರಕ್ಕೆ ಬಂದ ವಿಶಾಲುವಿಗೆ ಕಂಡದ್ದು ಒಂದೆ. ಇದು ನಗರವಲ್ಲ. ಒಂದು ಆಹ್ವಾನ. +ಏನೇನೋ ಆಹ್ವಾನಗಳು ಅವಳಿಗೆ ಬಂದವು. ವಿಶಾಲು ಕರಗಲಿಲ್ಲ. ಸಂಗಾತಿಯಾಗು ಎಂದವರು ಕೆಲವರು. ಆಗೊಮ್ಮೆ ಈಗೊಮ್ಮೆ ಬಂದರೆ ಸಾಕು, ಜೀವನಕ್ಕೇನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು ಇನ್ನೂ ಕೆಲವರು. ಅಂಥ ಆಹ್ವಾನಗಳಿಗೆಲ್ಲ ಅಮ್ಮನ ಅನುಗ್ರಹದಿಂದ ಅವಳು ಪಡೆದ ದೇಹ ಆಧಾರವಾಗಿತ್ತು. “ಬಚ್ಚಿ”ಯ ವರ್ಣನೆಯ ಸೆಳೆತ ಆಧಾರವಾಗಿತ್ತು. ಎಲ್ಲವನ್ನೂ ಎದುರಿಸಲು ಪ್ರಯತ್ನಿಸಿದ ವಿಶಾಲು ಕೈಹಿಡಿದವನ ನಿಷ್ಕ್ರಿಯತೆಯನ್ನು ಮಾತ್ರ ಎದುರಿಸಲಾಗದೆ ಹೋದಳು. +ಅದೊಂದು ದಿವ್ಯ ನಿಷ್ಕ್ರಿಯತೆ. ದಿನಪತ್ರಿಕೆಯ ಜಾಹೀರಾತುಗಳ ಮೇಲೂ ಕಣ್ಣಾಡಿಸಲಾರದಂಥ ನಿಷ್ಕ್ರಿಯತೆ. ಮಗು ದಿವಾಕರನನ್ನೂ ಮಡಿಲಿಗೇರಿಸಿಕೊಳ್ಳದಂಥ ನಿಷ್ಕ್ರಿಯತೆ. ಹೊತ್ತು ಹೊತ್ತಿಗೆ ಊಟ, ಸುಖವಾದ ನಿದ್ರೆ ಮತ್ತೆ ಹಾಸುಗೆಯ ಯಾಂತ್ರಿಕ ಬೆಸುಗೆಯ ಕ್ರಮಬದ್ಧತೆ – ಇಷ್ಟು ಮಾತ್ರ ಚಟುವಟಿಕೆಗಳು. ಇಟ್ಟ ಬಟ್ಟಲಿನ ಎದುರು ಸ್ಥಿರವಾಗಿ ಕುಳಿತು ಉಣ್ಣುವ ಚಟುವಟಿಕೆ. ಅವರಿವರ ಪರಿಚಯ ಬೆಳಸಿ ಏನೇನೋ ಕಸುಬು ನಡೆಸಿ ಅಕ್ಕಿ ಬೇಳೆ ತಂದು ಬೇಯಿಸಿ ವಿಶಾಲು ಅನ್ನವಿಕ್ಕುವ ಹೊತ್ತು ಮಾತ್ರ ನಿಷ್ಕ್ರಿಯತೆಯಿಂದ ದೂರ. ಈಗ ಈ ಕ್ಷೇತ್ರದಲ್ಲಿ ಕಡಲಿನ ಮುಂದೆ ನಿಂತ ಅದೇ ವಿಶಾಲುವಿಗೆ ತೆರೆಗಳ ಕ್ರಿಯಾಶೀಲತೆಯ ಬಗೆಗೆ ಮಾತ್ಸರ್ಯ ಬೆಳೆಯತೊಡಗಿದೆ. ಯಾರಿಂದಲೂ ಏನನ್ನೂ ಕೇಳದೆ ಉಬ್ಬಿ ನೆಗೆಯುವ ಈ ತೆರೆಗಳು. ಎಂಥ ಉತ್ಸಾಹ. ಎಂಥ ಬಿರುಸು. ಹತ್ತು ವರ್ಷಗಳ ಕಾಲ ಈ ಕ್ರಿಯಾಶೀಲತೆಯ ವಿರುದ್ಧ ನೆಲೆಯಲ್ಲಿ ನಿಂತು “ತಾತಾ” ಎಂದು ಕೈ ಮಾತ್ರ ನೀಡುತ್ತಿದ್ದ ಕೈಹಿಡಿದವನ ಸಾಮಿಪ್ಯ ವಿಶಾಲುವಿನ ಪಾಲಿಗೆ ಕಡಲಿನಾಚೆಯ ಮೌನವಾಗಿತ್ತು. ನಿಗೂಢವಾಗಿತ್ತು. ಆಗ ಅವಳಿಗೆ ನೆನಪಿಗೆ ಬಂದವಳು ಅಮ್ಮ. ಶವದ ಬಟ್ಟೆಯೊಳಗಿನ ಏರುತಗ್ಗುಗಳ ದಂತಕಥೆ. ಅದನ್ನೇ ನಂಬಿದಳು. ವಿಚ್ಛೇದನ ಪಡೆದಳು. ಆ ಕಷ್ಟದ ದಿನಗಳಲ್ಲಿ ತಾನು ಬೇಯಿಸಿ ಹಾಕುತ್ತಿದ್ದ ಅನ್ನ ಉಣ್ಣುತ್ತಿದ್ದವನಿಂದ ಬೇರಾದಳು. ಅನ್ನ ನೀಡುತ್ತಿದ್ದ ಒಬ್ಬರನ್ನು ಕಟ್ಟಿಕೊಂಡಳು. ಒಂದು ಪುಣ್ಯಸ್ಥಳಕ್ಕೆ ಹೋಗಿ ಇನ್ನೊಮ್ಮೆ ಮದುವೆಯಾಗಿ ಬಂದಳು. ಬಂಧುಬಳಗ ಯಾರೂ ಇಲ್ಲದ ಮಹಾನಗರವಾದುದರಿಂದ ಅಮ್ಮನ ದಾರಿ ಈ ಮಗಳು ಹಿಡಿದಳು ಎಂದು ಯಾರೂ ಹೇಳಲಿಲ್ಲ. ಅಮ್ಮ ದಾರಿ ತೋರಿಸಿದಳು ಎಂದು ಅವಳೇ ತೃಪ್ತಿಪಟ್ಟಳು. ಅರಳು ಸಿಡಿಯುವಂತೆ ಸದಾ ಮಾತನಾಡುವ, ಬುಗುರಿ ತಿರುಗುವಂತೆ ಸದಾ ಚುರುಕಾಗಿರುವ, ಮೈ ಇರುವುದು ಸಿಂಗಾರಕ್ಕೆ, ಮನವಿರುವುದು ಒಯ್ಯಾರಕ್ಕೆ. ಒಲವಿಗೆ, ಸ್ವೀಕಾರಕ್ಕೆ ಎಂದು ತಿಳಿದ ವಿಶಾಲು ಕಟ್ಟಿಕೊಂಡವನ ಮನೆ ಮನಸ್ಸು ತುಂಬಿದಳು. ಒಂದು ತೆರೆ ಇನ್ನೊಂದು ತೆರೆಯನ್ನು ಅಪ್ಪಿಕೊಳ್ಳುವಂತೆ ಅವನೆದೆಯಲ್ಲಿ ತನ್ನ ಹಣೆಯನ್ನು ಹುದುಗಿಸಿದಳು. ಅಲ್ಲಿ ಗೂಡುಕಟ್ಟಿ ನೆಮ್ಮದಿಯ ಮೊಟ್ಟೆ ಇಟ್ಟಳು. ಕಾವುಕೊಟ್ಟು ದಿವಾಕರನನ್ನು ಬೆಳೆಸಿದಳು. ಕೈಹಿಡಿದವನನ್ನು ತೆರೆಯ ನಡುವೆ ತೆರೆ ಕರಗುವಂತೆ ತಾನು ಮರೆಯಲು ಪ್ರಯತ್ನಿಸಿದ್ದೆ, ಮಗ ದಿವಾಕರನಿಗೆ ನೆನಪು ಕಾಡದಂತೆ ಕಟ್ಟಿಕೊಂಡವನಿಂದ ಮಮತೆಯ ಹೊಳೆ ಹರಿಸಿದ್ದೆ ಎಂಬುದು – ಈಗ ಆ ಕಟ್ಟಿಕೊಂಡವನನ್ನು ಕಳೆದುಕೊಂಡು ಅವನಿಷ್ಟದಂತೆ ಈ ಪವಿತ್ರ ಕ್ಷೇತ್ರಕ್ಕೆ ಬಂದು ಅವನ ಆತ್ಮಕ್ಕೆ ಸದ್ಗತಿ ತೋರಿಸಲು ನಿಂತಾಗ – ವಿಶಾಲುವಿಗೆ ಕಡಲಿನಂತೆ ಒಂದು ಸತ್ಯವಾಗಿ ಕಾಣುತ್ತಿದೆ. ಆದರೂ ತೆರೆಗಳ ಲೆಕ್ಕಾಚಾರ ಎಂಥ ನೋವಿನ ಕಾಯಕ. . . +ಒಳಗಿನ ಹುಣ್ಣಿಗೆ ಹೊರಗೆ ಕೀವು ತುಂಬಿದಂತೆ. . .ಕೈ ಹಿಡಿದವನ ನೆನಪು. ಗುಪ್ತ ನಿಧಿ ಕೈಗೆ ಸಿಕ್ಕಿದಂತೆ. . . ಕಟ್ಟಿಕೊಂಡವನ ಆತ್ಮ ಸದ್ಗತಿಗಾಗಿ ಶ್ರದ್ಧೆಯಿಂದ ನಡೆಸಿದ ಶ್ರಾದ್ಧ. +ಕಟ್ಟಿಕೊಂಡವ ಕೇವಲ ಇಟ್ಟುಕೊಂಡವನಲ್ಲ. . . +ಹೊಟ್ಟೆಗೆ ಹಿಟ್ಟಿಲ್ಲದ ದಿನಗಳಲ್ಲಿ ಅವಳಿಗೆ ಮತ್ತು ಕೈಹಿಡಿದವನಿಗೆ ಹಿಟ್ಟು ನೀಡಿ ಅವಳ ಮುಡಿಗೆ ಹೂ ಮುಡಿಸಿದ ಚೇತನ ಅದು. . . ಮೊದಲು ಅವಳ ದಾಂಪತ್ಯವನ್ನು ಸರಿದೂಗಿಸಲು ಪ್ರಯತ್ನಿಸಿ ಅದು ಈ ಜೀವಮಾನಕ್ಕೆ ಆಗದು ಎಂದು ಖಾತ್ರಿಯಾದ ಮೇಲೆ ವಿಚ್ಛೇದನಕ್ಕಾಗಿ ಎಲ್ಲ ಸಹಕಾರ ನೀಡಿದ ಚೇತನ ಅದು. ಆ ಬಿಡುಗಡೆಯ ನಂತರದ ಇಪ್ಪತ್ತು ವರ್ಷಗಳ ಅವಧಿಯಲ್ಲಿ “ನೀಡಿ, ಕಾಡುತ್ತ ಬೇಡಿ” ಬದುಕನ್ನು ತುಂಬಿಸಿದ ಚೇತನ ಅದು. ಇವಳ ಮೈಯ ಅಂಚು ಅಂಚಿಗೆ ಹೂಮುತ್ತನ್ನಿರಿಸಿ ವಿಶಾಲುವನ್ನು ಹೂವಿನ ಕೋಲನ್ನಾಗಿಸಿದ ಚೇತನ ಅದು. ಸಾಯುವ ಮೊದಲು ಹೇಳಿದ ಮಾತು “ವಿಶೂ ಜೀವನಕ್ಕೆ ತೊಂದರೆ ಇಲ್ಲ. ಸಾಕಷ್ಟಿದೆ. ದಿವ್ಯ ಇನ್ನಷ್ಟು ಓದಲಿ. ನನ್ನ ಕರುಳಿನಲ್ಲಿ ಬೇರೆ ಚೂರು ಚಿಗುರದಿದ್ದರೂ ದಿವ್ಯ ನನ್ನ ಹೂಬಳ್ಳಿಯ ಮಿಡಿ. ಅವನಿಗೇ ಎಲ್ಲ. ವಿಶೂ ನನ್ನಾಸೆ ಇಷ್ಟೆ. ಗಂಡ ಬಿಟ್ಟವಳನ್ನು ಮದುವೆಯಾದೆ ಎಂದು ಬಂಧುಗಳು ದೂರ ನಿಂತಿದ್ದಾರಲ್ಲ. ಬೇಸರವಿಲ್ಲ, ಕ್ಷೇತ್ರಕ್ಕೆ ಹೋಗಿ ವಿಧಿವತ್ತಾಗಿ ದಿವ್ಯ ನನ್ನ ಸಂಸ್ಕಾರ ನಡೆಸಲಿ”. . . +ಕಟ್ಟಿಕೊಂಡವನ, ಬಾಳನ್ನು ತುಂಬಿಸಿದವನ, ಆಧಾರವಾಗಿದ್ದವನ ಉತ್ತರಕ್ರಿಯೆ ಎಷ್ಟು ಶಾಸ್ತ್ರೋಕ್ತವಾಗಿ ನಡೆದಿತ್ತು. ಸತ್ತ ಹತ್ತನೆಯ ದಿವಸ ಆ ಕಟ್ಟಿಕೊಂಡವನ ಅಸ್ಥಿ ಸಹಿತ ವಿಶಾಲು ದಿವಾಕರ ಈ ಕ್ಷೇತ್ರಕ್ಕೆ ಬಂದಿದ್ದರು. ಆ ಚೇತನದ ಅಂತಸ್ತಿಗೆ ಸರಿಯಾಗಿ ಪ್ರೇತಮೋಕ್ಷದ ವಿಧಿಗಳನ್ನು ನಡೆಸಿದ್ದರು, ದಾನ ದಕ್ಷಿಣೆ ನೀಡಿದ್ದರು. . . ಕ್ಷೇತ್ರದ ಹಿರಿಯ ಪುರೋಹಿತರು ಆಕಾರವಿಲ್ಲದ ಸ್ಥಿತಿಯಲ್ಲಿರುವ ಮೃತನ ಪ್ರೇತಕ್ಕೆ ಪಿತೃಲೋಕ ಕಾಣಿಸಿ ಸದ್ಗತಿ ನೀಡಲು ಶ್ರಾದ್ಧ ವಿಧಿಗಳನ್ನು ನಡೆಸಿದ್ದರು. “ತಾಯೀ, ಇಲ್ಲಿಯ ಕ್ರಮ ಪ್ರೇತಸ್ಥಾನಕ್ಕೆ ಒಬ್ಬರನ್ನು ಕುಳ್ಳಿರಿಸಿ ಅವರಲ್ಲಿ ತಮ್ಮ ಯಜಮಾನರ ಪ್ರೇತವನ್ನು ಆವಾಹಿಸಿ ನಿಮ್ಮ ಮಗ ಆ ಪ್ರೇತದ ಕಾಲು ತೊಳೆದು ಅಲಂಕರಿಸಿ ಉಣಬಡಿಸಿ ಭಕ್ಷ್ಯ ನೀಡಿ ದಾನ ನೀಡಿ ದಕ್ಷಿಣೆ ನೀಡಿ ನಿಮ್ಮ ಯಜಮಾನರು ಸದ್ಗತಿಗಾಗಿ ದೇವಲೋಕಕ್ಕೆ ಪ್ರಯಾಣ ಮಾಡಲು ಸಾಕಷ್ಟು ಪಾಥೇಯ ಅಂದರೆ ದಾರಿ ಖರ್ಚಿಗೆ ದಕ್ಷಿಣೆ ನೀಡಿ ಶ್ರಾದ್ಧ ಮಾಡಬೇಕು. ಸ್ವಲ್ಪ ಖರ್ಚಿನ ಬಾಬತ್ತು. ನೀವು ಹೇಗೆ ಹೇಳುತ್ತಿರೋ ಹಾಗೆ” ಎಂದಿದ್ದರು. ವಿಶಾಲು ಕೈಮುಗಿದು ಹೇಳಿದ್ದಳು. “ಹೆತ್ತಬ್ಬೆಯನ್ನು ಕಂಡವಳಲ್ಲ ನಾನು. ಇವರೇ ನನಗೆ ಎಲ್ಲ ಆಗಿದ್ದರು. ಅವರಿಗೆ ಪುಣ್ಯ ಲೋಕ ಸಿಗಬೇಕು.” ಅದಕ್ಕಾಗಿ ಸರೋವರದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ ಕ್ಷೇತ್ರದ ಹಿರಿಯ ಪುರೋಹಿತರ ಮನೆಯ ಪಡಸಾಲೆಯ ಮೂಲೆಯಲ್ಲಿ ಮುದುಡಿ ಕುಳಿತಿದ್ದಳು. . . +ಹಂತಹಂತವಾಗಿ ಪುಣ್ಯ ಕಾರ್ಯ ಸಾಗಿತು. ಪಾಥೇಯದ ಸಿದ್ಧತೆ ನಡೆಯಿತು. ವಿಶಾಲುವನ್ನು ಕಟ್ಟಿಕೊಂಡವನ ಪ್ರೇತಸ್ಥಾನಕ್ಕಾಗಿ ಒಂದು ಮಣೆ. ಮಣೆಯ ಮೇಲೆ ನಾಮ ಧರಿಸಿದ “ಪ್ರೇತ”. ದಿವಾಕರ ಕಾಲು ತೊಳೆದು ಆ ನೀರನ್ನು ಪ್ರೋಕ್ಷಣೆ ಮಾಡಿಕೊಂಡ. ವಸ್ತ್ರ ನೀಡಿದ. ಗೋಪಿ ಚಂದನ ನೀಡಿದ. ಎಳನೀರು ನೀಡಿದ. ಜನಿವಾರ ನೀಡಿದ. ತಂಬಿಗೆ, ಪಾತ್ರೆ ದವಸ ಧಾನ್ಯಗಳ ಗಂಟು ನೀಡಿದ. ಮುಂದೆ ಬಡಿಸಿದ ಮೃಷ್ಟಾನ್ನ ಭೋಜನಕ್ಕಾಗಿ ಹಸ್ತೋದಕ ನೀಡಿದ. ಕೈ ಮುಗಿದು ನಿಂತ. ಮಂತ್ರ ಸಾಗುತ್ತಿದ್ದಂತೆ ಪ್ರೇತ ಭೋಜನ ನಡೆಯಿತು. ’ಪ್ರೇತ ಶಬ್ದ ನಾಸ್ತಿ’ ಎಂಬ ವಾಗ್ದಾನ ಪ್ರೇತಸ್ಥಾನದ ವ್ಯಕ್ತಿಯಿಂದ ದೊರಕಿತು. ದಿವಾಕರ ಪಾಥೇಯವಾಗಿ ನೀಡಿದ ದಾನ ದಕ್ಷಿಣೆಗಳ ಗಂಟನ್ನೆಲ್ಲ ಹೆಗಲಮೇಲಿರಿಸಿ ಆಶೀರ್ವದಿಸುತ್ತ ಪ್ರೇತ ಸಾಗತೊಡಗಿದಾಗ ಬಾಗಿಲಿನ ಬೆಳಕು ಆ ವ್ಯಕ್ತಿಯ ಮುಖಕ್ಕೆ ರಾಚಿತು. ಕಣ್ಮುಚ್ಚಿ ಒದ್ದೆ ಬಟ್ಟೆಯಲ್ಲಿ ಕೈಮುಗಿದು ಕುಳಿತ ವಿಶಾಲು ಕಟ್ಟಿಕೊಂಡವನ ನೆನಪಿನ ಭಾರದಿಂದ ಬಾಗಿ ಒಸರುತ್ತಿದ್ದ ಕಣ್ಣಿರನ್ನೊರಸುತ್ತ ತಲೆ ಎತ್ತಿ ನೋಡಿದಾಗ “ನೀಡು ಪಾಥೇಯ” ಎಂದು ಪಡೆದ ದಾನ ದಕ್ಷಿಣೆಯನ್ನು ಗಂಟುಕಟ್ಟಿ ಹೆಗಲಿಗೇರಿಸಿ ನಡೆಯುತ್ತಿದ್ದ ಆ ಮುಖ ಸ್ಪಷ್ಟವಾಗಿ ತುಂಬ ಬಳಲಿತ್ತು. . .ನೀಡು ನೀಡು ಎಂದು ಕೂಗುವಂತಿತ್ತು. . ’ದಿವ್ಯ, ಹುಟ್ಟಿಸಿದ ಅಪ್ಪನಿಗೇ ಪಾಥೇಯ ನೀಡಿದೆ’ ಎಂಬ ಅವಳ ಗರ್ಭದೊಳಗಿನ ಕೂಗು ಮಾತ್ರ ಯಾರಿಗೂ ಕೇಳಿಸಲಿಲ್ಲ. . .ಆ ಕ್ಷೇತ್ರವನ್ನು ಬಿಡುವವರೆಗೂ ವಿಶಾಲು ತೆರೆಗಳನ್ನು ಲೆಕ್ಕ ಹಾಕುತ್ತಲೇ ಇದ್ದಳು. . . +ಕಟ್ಟಿಕೊಂಡವನ ಪ್ರೇತ ಮೋಕ್ಷಗೊಂಡು ಕೈಹಿಡಿದವನ ಪ್ರೇತ ಅವಳನ್ನು ಹಿಂಬಾಲಿಸತೊಡಗಿತು. . . +***** +ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_300.txt b/Kannada Sahitya/article_300.txt new file mode 100644 index 0000000000000000000000000000000000000000..fb8a9c95bdebd47262a2691353fd4523128625ac --- /dev/null +++ b/Kannada Sahitya/article_300.txt @@ -0,0 +1,245 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ +ಕನ್ನಡಕ್ಕೆ: ಎ. ಎನ್. ಪ್ರಸನ್ನ +ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. ಅದೊಂದು ಅನಿರೀಕ್ಷಿತ ಘಟನೆಯಾಗಿತ್ತು. ಅವಳಿಗೆ ವಯಸ್ಸಾಗಿ ಪ್ರತಿಯೊಬ್ಬರಿಂದಲೂ ದೂರವಾಗಿದ್ದರೂ ಅವಳು ಎಂದಿನಿಂದಲೂ ಗುಂಡುಕಲ್ಲಿನಂತೆ ಆರೋಗ್ಯವಾಗಿ ದಟ್ಟ ಪುಷ್ಟವಾಗಿ ಕಾಣುತ್ತಿದ್ದಳು. ಅವಳು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ಗೆ ಆ ದಿನ ಮಧ್ಯಾಹ್ನ ತನ್ನ ಕೊನೆಯ ನಿರಾಕರಣೆಯನ್ನು ತಿಳಿಸಿ, ಅಳುವುದಕ್ಕೆ ಬಾಗಿಲು ಹಾಕಿಕೊಂಡ ನಂತರ, ಯಾರಿಗೂ ಅವಳ ಆಲೋಚನೆಗಳು ಏನೆಂದು ಗೊತ್ತಿರಲಿಲ್ಲ. ಅವಳು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಏರಿ ಹೊರಟಾಗ ಅಥವಾ ಅವ್ರೇಲಿಯಾನೋಗಳನ್ನು ನಿರ್ನಾಮ ಮಾಡಿದಾಗ ಅಥವಾ ಅವಳು ಎಲ್ಲರಿಗಿಂತ ಹೆಚ್ಚು ಪ್ರೀತಿಸಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸತ್ತಾಗಲೂ ಅತ್ತ ಹಾಗೆ ಕಂಡಿರಲಿಲ್ಲ. ಆದರೆ ಬಾದಾಮಿ ಮರದ ಕೆಳಗೆ ಅವನ ದೇಹವನ್ನು ಕಂಡಾಗ ಹಾಗೆ ಮಾಡಿದಳು. ಅವಳು ಅವನಿಗೆ ಯೋಧನ ಸಮವಸ್ತ್ರ ತೊಡಿಸಿ, ಶೇವ್ ಮಾಡಿ, ತಲೆ ಬಾಚಿದಳು ಹಾಗೂ ಅವನ ಮೀಸೆಗೆ ಮೇಣ ಸವರಿ, ಅವನ ವೈಭವದ ಕಾಲದಲ್ಲಿ ಇದ್ದದ್ದಕ್ಕಿಂತ ಚೆನ್ನಾಗಿ ಮಾಡಿದಳು. ಅವಳ ಕೆಲಸದಲ್ಲಿ ಯಾರಿಗೂ ಪ್ರೀತಿ ಇತ್ತೆಂದು ತೋರಲಿಲ್ಲ. ಏಕೆಂದರೆ ಸಾವನ್ನು ಕುರಿತ ವಿಧ್ಯುಕ್ತ ಕ್ರಿಯೆಗಳಲ್ಲಿ ಅಮರಾಂತಳ ವರ್ತನೆ ಹೇಗಿರುತ್ತೆಂದು ಅವರಿಗೆ ಗೊತ್ತಿತ್ತು. ಕ್ಯಾಥೊಲಿಕ್ ಧರ್ಮಾನುಸಾರ ಜೀವನದ ಸಂಬಂಧವೇನು ಎನ್ನುವುದು ಫೆರ್ನಾಂಡಳಿಗೆ ಅರ್ಥವಾಗಲಿಲ್ಲ. ಸಾವಿನ ಬಗ್ಗೆ ಮಾತ್ರ ಅದರ ಸಂಬಂಧವಿದ್ದು ಅದೊಂದು ಧರ್ಮವಲ್ಲ, ಕೇವಲ ಶವಸಂಸ್ಕಾರದ ಪದ್ಧತಿಗೆ ಸೇರಿದ್ದು ಎನ್ನುವ ಕಾರಣದಿಂದ ಅವಳು ಗಾಬರಿಯಾಗಿದ್ದಳು. ಅಮರಾಂತ ಕೂಡ ಆ ಎಲ್ಲ ಸೂಕ್ಷ್ಮಗಳು ಅರ್ಥವಾಗದಷ್ಟು ನೆನಪುಗಳ ಕಗ್ಗಂಟಿನಲ್ಲಿದ್ದಳು. ಅವಳು ತನ್ನೆಲ್ಲ ಮನೋವ್ಯಥೆಗಳನ್ನು ಕೂಡಿಕೊಂಡು ಮುದಿತನವನ್ನು ತಲುಪಿದ್ದಳು. ಪಿಯತ್ರೋ ಕ್ರೆಸ್ಪಿ ನುಡಿಸುತ್ತಿದ್ದ ವಾಲ್ಟ್ಜ್ ಸಂಗೀತ ಕೇಳುತ್ತಿದ್ದಾಗಲೂ, ಅವಳಿಗೆ ಚಿಕ್ಕವಳಾಗಿದ್ದಾಗ ಆಗುತ್ತಿದ್ದ ಹಾಗೆ, ಸಮಯ ಹಾಗೂ ಕಷ್ಟದ ಪಾಠಕ್ಕೆ ಅರ್ಥವೇ ಇಲ್ಲವೆನ್ನುವಂತೆ ಅಳು ಒತ್ತರಿಸಿಕೊಂಡು ಬರುತ್ತಿತ್ತು. ಒದ್ದೆಯಾಗಿ ಕೊಳೆತು ಹೋಗಿವೆ ಎಂದು ಮೂಲೆಗೆಸೆದಿದ್ದ ಸಂಗೀತದ ಸುರಳಿಗಳು ಅವಳ ನೆನಪಿನಲ್ಲಿ ತಿರುಗುತ್ತ ನಾದ ಹೊಮ್ಮಿಸುತ್ತಲೇ ಇದ್ದವು. ಅವಳು ಅವುಗಳನ್ನು ತನ್ನ ಸಂಬಂಧಿ ಅವ್ರೇಲಿಯಾನೋ ಹೊಸೆ ಜೊತೆ ಇರುವ ಕೇವಲ ಮೋಹದಲ್ಲಿ ಮುಳುಗಿಸಲು ಪ್ರಯತ್ನಿಸಿದಳು ಮತ್ತು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಶಾಂತವಾದ ಹಾಗೂ ಪೌರುಷದ ರಕ್ಷಣೆಯಲ್ಲಿ ಆಶ್ರಯ ಪಡೆಯಲು ಶ್ರಮಿಸಿದಳು. ಆದರೆ ಅವುಗಳನ್ನು ಅದುಮಿಡಲು ಮುದಿತನದ ಹತಾಶ ಕ್ರಿಯೆಯಿಂದಲೂ ಕೂಡ ಸಾಧ್ಯವಾಗಲಿಲ್ಲ. ಹೊಸೆ ಅರ್ಕಾದಿಯೋನನ್ನು ವಿದ್ಯಾಭ್ಯಾಸಕ್ಕೆ ಕಳಿಸುವುದಕ್ಕೆ ಮೂರು ವರ್ಷ ಮುಂಚೆ ಎಳೆಯ ಹೊಸೆ ಅರ್ಕಾದಿಯೋನನ್ನು ಅಜ್ಜಿಯೊಬ್ಬಳು ಮೊಮ್ಮಗನನ್ನು ಸ್ನಾನ ಮಾಡಿಸುವಂತೆ ಅವಳು ಮಾಡುತ್ತಿರಲಿಲ್ಲ. ಆದರೆ ಫ್ರೆಂಚ್ ಹೆಂಗಸರು ಮಾಡುತ್ತಾರೆಂದು ಹೇಳುತ್ತಿದ್ದ ಹಾಗೆ, ಪಿಯತ್ರೋ ಕ್ರೆಪ್ಸಿ ಹನ್ನೆರಡೋ, ಹದಿನಾಲ್ಕೋ ವರ್ಷದವನಾದಾಗ ಬಿಗಿಯಾದ ಪ್ಯಾಂಟ್ ತೊಟ್ಟು ಡ್ಯಾನ್ಸ್ ಮಾಡುವಾಗ ಮತ್ತು ಅವನಿಗೆ ತಾಳ eನದ ಬಗ್ಗೆ ಇದ್ದ ಮಾಂತ್ರಿಕ ಶಕ್ತಿಯನ್ನು ಕಂಡಾಗ, ಹೆಂಗಸೊಬ್ಬಳು ಗಂಡಸಿಗೆ ಮಾಡುವಂತೆ ಮಾಡಬೇಕು ಎಂದು ಅವನ ಬಗ್ಗೆ ಆದಂತೆಯೇ ಅಪೇಕ್ಷೆ ಉಂಟಾಗುತ್ತಿತ್ತು. ಅನೇಕ ವೇಳೆ ತುಂಬಿ ಬರುತ್ತಿರುವ ಯಾತನೆಯನ್ನು ಅದರಷ್ಟಕ್ಕೆ ಬಿಡಲು ನೋವಾಗುತ್ತಿತ್ತು ಮತ್ತು ಅನೇಕ ವೇಳೆ ಅವಳಿಗೆ ಸಿಟ್ಟು ಬಂದು ಸೂಜಿಯಿಂದ ಬೆರಳುಗಳನ್ನು ಚುಚ್ಚಿಕೊಳ್ಳುತ್ತಿದ್ದಳು. ಆದರೆ ಅವಳಿಗೆ ತೀರ ಹೆಚ್ಚಿನ ನೋವು, ಕೋಪ ಮತ್ತು ಕಹಿಯಾಗಿಸಿದ್ದೇನೆಂದರೆ, ಸಾವಿನ ಕಡೆ ಸೆಳೆಯುತ್ತಿದ್ದ ಪ್ರೇಮದ ಪರಿಮಳ. ಹುಳು ಹಿಡಿದ ಹಣ್ಣಿನ ಮರಗಳ ತೋಪಿನಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಪ್ಪಿಸಿಕೊಳ್ಳಲಾಗದ ಯುದ್ಧದ ಬಗ್ಗೆ ಯೋಚಿಸುತ್ತಿದ್ದ ಹಾಗೆ, ಅಮರಾಂತ ರೆಬೇಕ ಬಗ್ಗೆ ಯೋಚಿಸುತ್ತಿದ್ದಳು. ಆದರೆ ಅವಳ ಸೋದರನಿಗೆ ನೆನಪುಗಳನ್ನು ಹದಗೊಳಿಸುವುದು ಸಾಧ್ಯವಾದರೆ, ಅವಳು ಅವುಗಳನ್ನು ಹೆಚ್ಚು ಸುಡುವಂತೆ ಮಾಡಿಕೊಂಡಳು. ದೇವರು ತನಗೆ ರೆಬೇಕಳಿಗಿಂತ ಮುಂಚೆ ಸಾಯುವಂಥ ಶಿಕ್ಷೆ ಕೊಡದಿರಲಿ ಎಂದು ಅವನಲ್ಲಿ ಅನೇಕ ವರ್ಷ ಕೇಳಿಕೊಂಡಳು. ಪ್ರತಿ ಬಾರಿ ಅವಳ ಮನೆಯನ್ನು ಹಾದು ಹೋಗುವಾಗ ಅದರ ದುರವಸ್ಥೆಯಲ್ಲಿ ಉಂಟಾಗಿರುವ ಪ್ರಗತಿಯನ್ನು ಕಂಡು ದೇವರು ತನ್ನ ಕೋರಿಕೆಯನ್ನು ಕೇಳಿಸಿಕೊಳ್ಳುತ್ತಿದ್ದಾನೆ ಎಂದು ಸಮಾಧಾನಗೊಳ್ಳುತ್ತಿದ್ದಳು. ಒಂದು ದಿನ ಮಧ್ಯಾಹ್ನ, ಅಂಗಳದಲ್ಲಿ ಹೊಲಿಯುತ್ತಿದ್ದಾಗ ರೆಬೇಕಳ ಸತ್ತ ಸುದ್ದಿ ತಲುಪುವಾಗ ತಾನು ಅದೇ ಜಾಗದಲ್ಲಿ, ಅದೇ ಭಂಗಿಯಲ್ಲಿ, ಅಷ್ಟೇ ಬೆಳಕಲ್ಲಿ ಕುಳಿತಿರುತ್ತೇನೆ ಎಂಬ ಖಚಿತ ಭಾವನೆ ಅವಳನ್ನು ಆವರಿಸಿತು. ಅವಳು ಅದಕ್ಕಾಗಿ ಕಾಗದಕ್ಕೆ ಕಾಯುವ ಹಾಗೆ ಕಾಯುತ್ತ ಕುಳಿತಳು ಮತ್ತು ಒಂದು ಸಲ ಅವಳು ಸುಮ್ಮನೆ ಕುಳಿತುಕೊಂಡಿದ್ದರೆ ಕಾಯುವುದು ದೀರ್ಘವೆನಿರುತ್ತದೆ ಮತ್ತು ಆತಂಕಗೊಳಿಸುತ್ತದೆ ಎಂದು ಹೊಲಿದ ಗುಂಡಿಗಳನ್ನು ಕಿತ್ತು ಹಾಕಿ ಮತ್ತೆ ಹೊಲಿಯುತ್ತಿದ್ದಳು. ಆ ಸಮಯದಲ್ಲಿ ಅಮರಾಂತ ರೆಬೇಕಳಿಗಾಗಿ ಮುಸುಕು ಹಾಕಿಕೊಳ್ಳುವ ಒಳ್ಳೆಯ ಬಟ್ಟೆಯನ್ನು ಹೊಲಿಯುತ್ತಿದ್ದಾಳೆ ಎಂದು ಯಾರಿಗೂ ತಿಳಿಯಲಿಲ್ಲ. ಅದಾದ ಮೇಲೆ ಅವ್ರೇಲಿಯಾನೋ ಟ್ರೀಸ್ತೆ ಬಿರಿದ ಚರ್ಮದ, ಭೂತದ ಹಾಗಿದ್ದ, ತಲೆಯ ಮೇಲೆ ಹತ್ತಾರು ಬಂಗಾರದ ಎಳೆಗಳಿದ್ದ ಅವಳನ್ನು ಕಂಡದ್ದು ಹೇಗೆ ಎಂದು ಹೇಳಿದಾಗ ಅಮರಾಂತಳಿಗೆ ಆಶ್ಚರ್ಯವಾಗಲಿಲ್ಲ. ಏಕೆಂದರೆ ಸ್ವಲ್ಪ ಕಾಲದಿಂದ ಅವಳು ಕಲ್ಪಿಸಿಕೊಳ್ಳುತ್ತಿದ್ದ ರೀತಿಯಲ್ಲೇ ಅವಳಿದ್ದಳು. ಅವಳು ರೆಬೇಕಳ ಹೆಣವನ್ನು ತೆಗೆದು ಅವಳ ಮುಖಕ್ಕಾಗಿರುವ ವಿಕಾರವನ್ನು ಮೇಣದಿಂದ ಮುಚ್ಚುವುದಕ್ಕೆ ನಿರ್ಧರಿಸಿದಳು ಮತ್ತು ಅವಳಿಗಾಗಿ ಸನ್ಯಾಸಿಗಳ ಕೂದಲ ವಿಗ್ ತಯಾರಿಸಿದ್ದಳು. ಅವಳು ಅದಕ್ಕೊಂದು ಮುಸುಕು ಹಾಕಿ ಹೆಣವನ್ನು ಸುಂದರವಾಗಿಸಿ ಹಾಗೂ ಶವಪಟ್ಟಿಗೆಯ ಸುತ್ತ ನೇರಳೆ ಪಟ್ಟಿ ಹಾಕುವುದಲ್ಲದೆ ಅದ್ದೂರಿಯ ಶವಸಂಸ್ಕಾರದ ಆಚರಣೆಯೊಂದಿಗೆ ಹುಳುಗಳ ವಶಕ್ಕೆ ಬಿಡುವುದು ಎಂದುಕೊಂಡಳು. ಅವಳು ಎಷ್ಟು ದ್ವೇಷದಿಂದ ಅದರ ರೂಪುರೇಷೆಗಳನ್ನು ರೂಪಿಸಿಕೊಂಡಿದ್ದಳೆಂದರೆ ಅದರ ಯೋಜನೆಯಿಂದಲೇ ಅವಳಿಗೇ ನಡುಕ ಉಂಟಾಗಿತ್ತು. ಅವಳು ಅದನ್ನು ಪ್ರೀತಿಯಿಂದ ಹಾಗೆಯೇ ಮಾಡುತ್ತಿದ್ದಳು. ಆದರೆ ಗೊಂದಲಕ್ಕೆ ಸಿಕ್ಕ ತಾನು ಗಲಿಬಿಲಿಗೆ ಒಳಗಾಗಲು ಬಿಡುತ್ತಿರಲಿಲ್ಲ. ಅವಳು ಎಲ್ಲ ವಿವರಗಳನ್ನು ಎಷ್ಟು ಸರಿಯಾಗಿಟ್ಟಳೆಂದರೆ ಅವಳು ಅದರಲ್ಲಿ ನಿಪುಣರಿಗಿಂತ ಹೆಚ್ಚಾದಳು ಮತ್ತು ಅಪರ ವಿದ್ಯೆಯಲ್ಲಿ ಪರಿಣತಳಾದಳು. ಅವಳ ಭಯಗೊಳಿಸುವ ಯೋಜನೆಯಲ್ಲಿ ದೇವರಲ್ಲಿ ತನ್ನ ಎಲ್ಲ ಕೋರಿಕೆಗಳ ನಡುವೆ ರೆಬೇಕಳಿಗಿಂತ ಮುಂಚೆ ತಾನೇ ಸಾಯಬಹುದೆಂಬ ಸಂಗತಿ ಅವಳ ಮನಸ್ಸಿನಲ್ಲಿರಲಿಲ್ಲ. ಆದರೆ ನಿಜವಾಗಿ ಆದದ್ದು ಹಾಗೆಯೇ. ಆದರೆ ಕೊನೆಯ ಕ್ಷಣದಲ್ಲಿ ಅಮರಾಂತ ಭಗ್ನಗೊಳ್ಳಲಿಲ್ಲ. ಅದಕ್ಕೆ ಪ್ರತಿಯಾಗಿ ಎಲ್ಲ ದ್ವೇಷದಿಂದ ಮುಕ್ತಳಾಗಿದ್ದಳು. ಏಕೆಂದರೆ ಕೆಲವು ವರ್ಷ ಮುಂಚೆಯೇ ಸಾವು ತನ್ನ ಆಗಮನದ ಬಗ್ಗೆ ತಿಳಿಸುವ ಸೌಭಾಗ್ಯವನ್ನು ಕರುಣಿಸಿತ್ತು. ಅವಳು ಒಂದು ದಿನ ಮೆಮೆ ಸ್ಕೂಲ್‌ಗೆ ಹೋದ ಮೇಲೆ ಉರಿವ ಮಧ್ಯಾಹ್ನ ಅಂಗಳದಲ್ಲಿ ಹೊಲಿಯುತ್ತ ಕುಳಿತಾಗ ಅದನ್ನು ನೋಡಿದಳು. ಅವಳು ಕಂಡದ್ದು ನೀಳಗೂದಲಿನ, ನೀಲಿ ಉಡುಪಿನ ಎಲ್ಲೋ ನೋಡುತ್ತಿದ್ದ ಹೆಂಗಸನ್ನು. ಅವಳು ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಿದ್ದ ದಿನಗಳ ಪಿಲರ್ ಟೆರ್‍ನೆರಾಳನ್ನು ಹೋಲುತ್ತಿದ್ದಳು. ಅನೇಕ ಸಲ ಫೆರ್ನಾಂಡ ಅಲ್ಲಿರುತ್ತಿದ್ದರೂ ಕೂಡ ನಿಜವಾಗಲೂ ಮನುಷ್ಯಾಕೃತಿ ಇದ್ದ ಅವಳನ್ನು ನೋಡಲಿಲ್ಲ. ಒಂದು ಸಲ ಆಕೆ ಅಮರಾಂತಳನ್ನು ಸೂಜಿಗೆ ದಾರ ಪೋಣಿಸಿ ಕೊಡುವಂತೆ ಕೇಳಿದಳು. ಅಮರಾಂತ ಯಾವಾಗ ಸಾಯುತ್ತಾಳೆಂದು ಸಾವು ಹೇಳಲಿಲ್ಲ ಅಥವಾ ರೆಬೇಕಳಿಗಿಂತ ಮುಂಚೆ ಅವಳ ಕೊನೆ ಗಳಿಗೆ ಬರಲಿದೆ ಎಂದು ಹೇಳಲಿಲ್ಲ. ಆದರೆ ಬರುವ ಏಪ್ರಿಲ್ ಆರರಂದು ಅವಳಿಗಾಗಿಯೆ ಮುಸುಕನ್ನು ಹೊಲಿಯಲು ಅಪ್ಪಣೆ ಕೊಟ್ಟಿತು. ಅದನ್ನು ಆದಷ್ಟೂ ಸೂಕ್ಷ್ಮವಾಗಿ, ಸುಂದರವಾಗಿ ಹೊಲಿಯಲು ಪರವಾನಗಿ ಕೊಟ್ಟಿತು. ಆದರೆ ರೆಬೇಕಳಿಗೆಂದು ಎಷ್ಟು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಳೋ ಹಾಗೆಯೇ ಮಾಡಬೇಕೆಂದು ತಾಕೀತು ಮಾಡಿತು. ಜೊತೆಗೆ ಅವಳು ಅದನ್ನು ಮುಗಿಸಿದ ಸಂಜೆ ನೋವಿಲ್ಲದೆ ಭಯವಿಲ್ಲದೆ ಅಥವಾ ದ್ವೇಷವಿಲ್ಲದೆ ಸಾಯುತ್ತಾಳೆಂದು ಹೇಳಿತು. ಆದಷ್ಟು ಹೆಚ್ಚು ಸಮಯ ವ್ಯರ್ಥಮಾಡಬೇಕೆಂದು ಅಮರಾಂತ ಒಂದಿಷ್ಟು ಅಗಸೆ ಗಿಡಕ್ಕೆ ಆರ್ಡರ್ ಕೊಟ್ಟಳು ಮತ್ತು ತಾನೇ ದಾರವನ್ನು ಹೆಣೆದುಕೊಳ್ಳಲು ಪ್ರಾರಂಭಿಸಿದಳು. ಅವಳೆಷ್ಟು ಜಾಗರೂಕತೆಯಿಂದ ಮಾಡುತ್ತಿದ್ದಳೆಂದರೆ ಆ ಕೆಲಸವೇ ನಾಲ್ಕು ವರ್ಷ ಹಿಡಿಯಿತು. ಅನಂತರ ಅವಳು ಹೊಲಿಯುವುದಕ್ಕೆ ಪ್ರಾರಂಭಿಸಿದಳು. ಅವಳು ತಪ್ಪಿಸಿಕೊಳ್ಳಲಾಗದ ಕೊನೆ ಹತ್ತಿರವಾಗುತ್ತಿದ್ದಂತೆ ಮಾಡುತ್ತಿದ್ದ ಕೆಲಸವನ್ನು ರೆಬೇಕಳ ಸಾವಿಗಿಂತ ಮುಂದಕ್ಕೆ ಹಾಕಲು ಪವಾಡವೇ ನಡೆಯಬೇಕೆಂದು ಅರ್ಥವಾಯಿತು. ಆದರೆ ಹಾಗೆ ಏಕಮುಖವಾಗಿ ಯೋಚಿಸಿದ್ದೇ ಅವಳಿಗೆ ನಿರಾಸೆಯನ್ನು ಸ್ವೀಕರಿಸಲು ಅಗತ್ಯವಾದ ತಾಳ್ಮೆಯನ್ನು ತಂದುಕೊಟ್ಟಿತು. ಆಗ ಅವಳಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಣ್ಣ ಬಂಗಾರದ ಮೀನುಗಳನ್ನು ಕುರಿತ ಕೆಟ್ಟ ಚಾಳಿಯ ಅರಿವಾಯಿತು. ಇಡೀ ಪ್ರಪಂಚ ಅವಳ ಚರ್ಮದ ಹೊರಮೈಗಷ್ಟೇ ಸೀಮಿತಗೊಂಡಿತು ಮತ್ತು ಅವಳ ಅಂತರಂಗ ಎಲ್ಲ ದ್ವೇಷದಿಂದ ಮುಕ್ತವಾಯಿತು. ಕೆಲವು ವರ್ಷಗಳ ಮುಂಚೆಯಷ್ಟೇ ಇದರ ತಿಳಿವಳಿಕೆ ಮೂಡದಿದ್ದಕ್ಕಾಗಿ ಅವಳಿಗೆ ನೋವುಂಟಾಯಿತು. ಹಾಗಾಗಿದ್ದರೆ ಆಗಲೂ ನೆನಪುಗಳನ್ನು ಶುದ್ಧಗೊಳಿಸಲು ಹಾಗೂ ಹೊಸಬೆಳಕಿನಲ್ಲಿ ಜಗತ್ತನ್ನು ಮರುನಿರ್ಮಾಣಮಾಡಲು ಮತ್ತು ಸಂಜೆಯ ಹೊತ್ತಿನಲ್ಲಿ ಯಾವುದೇ ನಡುಕವಿಲ್ಲದೆ, ಪಿಯತ್ರೋ ಕ್ರೆಸ್ಪಿಯ ಸುಗಂಧ ಪರಿಮಳವನ್ನು ಆವಾಹಿಸಬಹುದಾಗಿತ್ತು ಮತ್ತು ರೆಬೇಕಳನ್ನು ದ್ವೇಷದಿಂದ ಅಥವಾ ಪ್ರೀತಿಯಿಂದಲ್ಲದೆ ಪ್ರಮಾಣಿಸಲಾಗದ ಏಕಾಂತದ ವೇದನೆಯಿಂದ ಪಾರು ಮಾಡಲು ಸಾಧ್ಯವಾಗುತ್ತಿತ್ತು ಎಂದುಕೊಂಡಳು. ಅದೊಂದು ದಿನ ರಾತ್ರಿ ಅವಳು ಮೆಮೆಳ ಮಾತಿನಲ್ಲಿದ್ದ ದ್ವೇಷದಿಂದ ಕ್ಷೆಭೆಗೊಳ್ಳಲಿಲ್ಲ. ಏಕೆಂದರೆ ಅದು ಅವಳನ್ನೇ ಕುರಿತಾಗಿತ್ತು. ಅದು ಅವಳಿಗೆ ತನ್ನ ಹಾಗೆಯೇ ನಿರ್ಮಲವಾಗಿದ್ದ ಕೌಮಾರ್ಯವೊಂದರ ಪುನರಾವರ್ತನೆಯಾಗಿತ್ತು. ಆದರೆ ಅದು ಅದರಲ್ಲಿ ಆಗಲೇ ಕಡು ದ್ವೇಷದ ಛಾಯೆಯಿತ್ತು. ಆ ವೇಳೆಗಾಗಲೇ ಅವಳು ತನ್ನ ವಿಧಿಯನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಿದ್ದಳೆಂದರೆ ಸರಿಪಡಿಸುವ ಎಲ್ಲ ಸಾಧ್ಯತೆಗಳೂ ಕೊನೆಯಾಗಿವೆ ಎಂಬ ನಿಶ್ಚಯದಿಂದ ಅವಳ ಮನಸ್ಸು ಕಲಕಲಿಲ್ಲ. ಮುಸುಕನ್ನು ಪೂರೈಸುವುದೇ ಅವಳ ಗುರಿಯಾಗಿತ್ತು. ಪ್ರಾರಂಭದಲ್ಲಿದ್ದ ಕೆಲಸಕ್ಕೆ ಬಾರದ ವಿವರಗಳಿಂದ ನಿಧಾನ ಗತಿಯ ಬದಲು ಅವಳು ಕೆಲಸವನ್ನು ತ್ವರಿತಗೊಳಿಸಿದಳು. ಒಂದು ವಾರದ ಮೊದಲು ಅವಳು ಕೊನೆಯ ಹೊಲಿಗೆಯನ್ನು ಫೆಬ್ರವರಿ ನಾಲ್ಕನೇ ತಾರೀಖು ಹಾಕುತ್ತೇನೆಂದು ಲೆಕ್ಕ ಹಾಕಿದಳು. ಅವಳು ಉದ್ದೇಶವನ್ನು ತಿಳಿಸದೆ, ಮೆಮೆಳಿಗೆ ಅವಳು ವ್ಯವಸ್ಥೆಗೊಳಿಸಿಕೊಂಡಿದ್ದ ಪಿಯಾನೋಥರದ್ದರ ಸಂಗೀತ ಕಾರ್ಯಕ್ರಮವನ್ನು, ಆ ದಿನದ ನಂತರ ಮರುದಿನಕ್ಕೆ ಮುಂದೂಡಲು ಸಲಹೆ ಮಾಡಿದಳು. ಆದರೆ ಮೆಮೆ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅನಂತರ ಅಮರಾಂತ ನಲವತ್ತೇಳು ಗಂಟೆ ಕಾಲ ವಿಳಂಬ ಮಾಡುವುದಕ್ಕೆ ದಾರಿಯನ್ನು ಹುಡುಕಲು ತೊಡಗಿದಳು. ಫೆಬ್ರವರಿ ನಾಲ್ಕರ ಹಿಂದಿನ ರಾತ್ರಿಯ ಬಿರುಗಾಳಿಗೆ ವಿದ್ಯುಚ್ಛಕ್ತಿ ಕಡಿತಗೊಂಡಿದ್ದರಿಂದ ಸಾವು ದಾರಿಯನ್ನು ತೋರಿಸುತ್ತಿದೆ ಎಂದು ತಿಳಿದಳು. ಆದರೆ ಬೆಳಿಗ್ಗೆ ಎಂಟು ಗಂಟೆಗೆ ಅಲ್ಲಿಯ ತನಕ ಯಾವ ಹೆಂಗಸು ಮಾಡಿರದಂಥ ಅತ್ಯಂತ ಸುಂದರವಾದ ವಸ್ತುವಿಗೆ ಕೊನೆಯ ಹೊಲಿಗೆ ಹೊಲಿದಳು. ಅವಳು ಯಾವುದೇ ರೀತಿಯ ನಾಟಕೀಯತೆಗೆ ಅಸ್ಪದ ಕೊಡದೆ ತಾನು ಸಂಜೆ ಸಾಯುವುದಾಗಿ ಹೇಳಿದಳು. ಅವಳು ಮನೆಯವರಿಗಷ್ಟೇ ಅಲ್ಲದೆ ಊರಿನವರಿಗೆಲ್ಲ ಹೇಳಿದಳು. ಏಕೆಂದರೆ ಅಮರಾಂತ ತನ್ನ ಸಂಕುಚಿತ ಬಾಳಿಗೆ ಸರಿದೂಗಿಸಲು, ಊರಿನವರಿಗೆ ಒಂದು ಉಪಕಾರ ಮಾಡುವಂಥ ಆಲೋಚನೆಯೊಂದನ್ನು ಪರಿಭಾವಿಸಿದ್ದಳು ಮತ್ತು ಸತ್ತವರಿಗೆ ಕಾಗದಗಳನ್ನು ತೆಗೆದುಕೊಂಡು ಹೋಗಲು ತಾನು ಒಳ್ಳೆಯ ಸ್ಥಾನದಲ್ಲಿದ್ದೇನೆ ಎಂದು ಬಗೆದಳು. +ಅಮರಾಂತ ಬ್ಯುಂದಿಯಾ ಸಂಜೆಗೆ ಸತ್ತವರಿಗೆ ಕಾಗದಗಳನ್ನು ತೆಗೆದುಕೊಂಡು ಪ್ರಯಾಣ ಹೊರಡುತ್ತಾಳೆ ಎನ್ನುವ ಸುದ್ದಿ ಮಕೋಂದೋದಲ್ಲಿ ಎಲ್ಲ ಕಡೆ ಮಧ್ಯಾಹ್ನಕ್ಕೆ ಮುಂಚೆ ಹರಡಿತು. ಮಧ್ಯಾಹ್ನ ಮೂರರ ಹೊತ್ತಿಗೆ ನಡುಮನೆಯಲ್ಲಿ ಒಂದು ಪೆಟ್ಟಿಗೆಯ ತುಂಬ ಕಾಗದಗಳಿದ್ದವು. ಬರೆಯಲು ಇಷ್ಟಪಡದವರು ಅಮರಾಂತಳಿಗೆ ಬಾಯಲ್ಲಿ ಸಂದೇಶಗಳನ್ನು ತಿಳಿಸಿದರು. ಅವಳು ಅವುಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಹೆಸರು ಮತ್ತು ತಲುಪಿಸಬೇಕಾದವರು ಸತ್ತ ದಿನಾಂಕಗಳನ್ನು ಬರೆದುಕೊಂಡಳು. ಅವಳು ಕಳಿಸಿಕೊಡುತ್ತಿದ್ದವರಿಗೆ, “ನೀವೇನೂ ಯೋಚ್ನೆ ಮಾಡ್ಬೇಡಿ ನಾನು ಅಲ್ಲಿಗೆ ಹೋದ ಕೂಡ್ಲೆ ಅವರನ್ನು ವಿಚಾರಿಸಿ ನೀವು ಹೇಳಿದ್ದನ್ನ ಹೇಳ್ತೀನಿ” ಎಂದಳು. +ಅದೊಂದು ಅಣಕಾಗಿತ್ತು. ಅಮರಾಂತ ಯಾವುದೇ ರೀತಿಯ ಕ್ಷೆಭೆಯನ್ನಾಗಲಿ ಅಥವಾ ದು:ಖವನ್ನಾಗಲಿ ತೋರ್ಪಡಿಸಲಿಲ್ಲ. ಅವಳು ಕರ್ತವ್ಯವೊಂದರ ಪೂರೈಕೆಯಿಂದ ಕೊಂಚ ಗೆಲುವಾಗಿದ್ದಳು ಕೂಡ. ಅವಳು ಎಂದಿನಂತೆ ನೆಟ್ಟಗೆ, ನೀಳವಾಗಿದ್ದಳು. ಅವಳಿಗೆ ಗಡುಸಾಗಿದ್ದ ಕೆನ್ನೆಯ ಮೂಳೆಗಳು ಮತ್ತು ಕೆಲವು ಹಲ್ಲುಗಳಿರದ ಬಾಯಿ ಇತ್ತು. ಇಲ್ಲದಿದ್ದರೆ ಅವಳು ಆಗಿದ್ದ ವಯಸ್ಸಿಗಿಂತ ಕಡಿಮೆ ಇರುವಂತೆ ಕಾಣುತ್ತಿದ್ದಳು. ಕಾಗದಗಳನ್ನು ಪೆಟ್ಟಿಗೆಯೊಂದರಲ್ಲಿ ಹಾಕಿ, ಭದ್ರವಾಗಿ ಕಟ್ಟಿ, ಅದನ್ನು ತನ್ನ ಗೋರಿಯಲ್ಲಿ ತೇವದಿಂದ ರಕ್ಷಣೆ ಹೊಂದಿರುವಂತೆ ಇಡಬೇಕೆಂದು ಅವಳೇ ಅವರಿಗೆ ಹೇಳಿದಳು. ಅವಳು ಬೆಳಿಗ್ಗೆ ಬಡಗಿಯನ್ನು ಕರೆದು ಹೊಸ ಬಟ್ಟೆಯನ್ನು ಹೊಲಿಸಿಕೊಳ್ಳುವ ಹಾಗೆ ನಿಂತುಕೊಂಡು, ತನ್ನ ಶವಪೆಟ್ಟೆಗೆಗೆ ಅಳತೆ ತೆಗೆದುಕೊಳ್ಳುವಂತೆ ಹೇಳಿದಳು. ಅವಳು ಕೊನೆಯ ಕ್ಷಣಗಳಲ್ಲಿ ತೋರಿದ ಉತ್ಸಾಹದಿಂದ ಫೆರ್ನಾಂಡಳಿಗೆ ಅವಳು ತಮಾಷೆ ಮಾಡುತ್ತಿದ್ದಾಳೆ ಎನ್ನಿಸಿತು. ಬ್ಯುಂದಿಯಾಗಳು ಯಾವುದೇ ಕಾಯಿಲೆ ಇಲ್ಲದೆ ಸಾಯುತ್ತಿದ್ದ ಅನುಭವವಿದ್ದ ಉರ್ಸುಲಾ, ಸಾವಿನ ಶಕುನ ಅಮರಾಂತಳಿಗೆ ಆಗಿದೆ ಎನ್ನುವುದನ್ನು ಸ್ವಲ್ಪವೂ ಅನುಮಾನಿಸಲಿಲ್ಲ. ಆದರೆ ಕಾಗದಗಳ ವಿಷಯ ಮತ್ತು ಅದನ್ನು ಸಂಬಂಧಪಟ್ಟವರಿಗೆ ಆದಷ್ಟು ಬೇಗ ತಲುಪಿಸಬೇಕೆಂಬ ಆತಂಕ ಮತ್ತು ಗೊಂದಲದಲ್ಲಿ ಅವಳನ್ನು ಮುಂಚೆಯೇ ಹೂಳಿ ಬಿಡುತ್ತಾರೆಂದು ಭಯಗೊಂಡಳು. ಅದಕ್ಕಾಗಿ ಅವಳು ಎಲ್ಲರನ್ನೂ ಮನೆಯಿಂದ ಹೊರಗೆ ಕಳಿಸಲು ಶುರುಮಾಡಿದಳು ಮತ್ತು ಒಳಗೆ ಬರುತ್ತಿದ್ದವರ ಕಡೆ ಕೂಗಿ ವಾದಕ್ಕಿಳಿಯುತ್ತಿದ್ದಳು ಮತ್ತು ನಾಲ್ಕು ಗಂಟೆಯ ಹೊತ್ತಿಗೆ ತನ್ನ ಕೆಲಸದಲ್ಲಿ ಯಶಸ್ವಿಯಾದಳು. ಆ ಸಮಯಕ್ಕೆ ಅಮರಾಂತ ತನ್ನಲ್ಲಿರುವ ವಸ್ತುಗಳನ್ನು ಬಡವರಿಗೆ ಹಂಚುವುದನ್ನು ಮುಗಿಸಿದ್ದಳು ಹಾಗೂ ಇನ್ನೂ ಪೂರ್ತಿಯಾಗದ ಶವಪೆಟ್ಟಿಗೆಯ ಹಲಗೆಗಳ ಮೇಲೆ ಬದಲಾಯಿಸುವ ಬಟ್ಟೆ ಮತ್ತು ಸಾಯುವಾಗ ಹಾಕಿಕೊಳ್ಳಲು ಸಾಮಾನ್ಯವಾದ ಬಟ್ಟೆಯ ಚಪ್ಪಲಿಗಳನ್ನು ಇಟ್ಟಿದ್ದಳು. ಅವಳು ಆ ಮುಂಜಾಗ್ರತೆಯನ್ನು ಮರೆಯಲಿಲ್ಲ. ಏಕೆಂದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸತ್ತಾಗ ಅವನಿಗಾಗಿ ಹೊಸ ಶೂಗಳನ್ನು ಕೊಳ್ಳಬೇಕಾಗಿ ಬಂದದ್ದು ಅವಳಿಗೆ ನೆನಪಿತ್ತು. ಏಕೆಂದರೆ ಅವನ ಹತ್ತಿರ ಅವನು ವರ್ಕ್‌ಶಾಪಿನಲ್ಲಿ ಹಾಕಿಕೊಳ್ಳುತ್ತಿದ್ದ ಬೆಡ್‌ರೂಮ್ ಚಪ್ಪಲಿಗಳು ಮಾತ್ರ ಇತ್ತು. ಐದು ಗಂಟೆಗೆ ಸ್ವಲ್ಪ ಮುಂಚೆ ಅವ್ರೇಲಿಯಾನೋ ಸೆಗುಂದೋ ಮೆಮೆಳನ್ನು ಕರೆದುಕೊಂಡು ಹೋಗಲು ಬಂದಾಗ ಅವನಿಗೆ ಮನೆಯಲ್ಲಿ ಶವಸಂಸ್ಕಾರಕ್ಕೆ ಸಿದ್ಧವಾಗುತ್ತಿದ್ದದ್ದನ್ನು ಕಂಡು ಆಶ್ಚರ್ಯವಾಯಿತು. ಆ ಸಮಯದಲ್ಲಿ ಯಾರಾದರೂ ಬದುಕಿದವರಂತೆ ಕಾಣುತ್ತಿದ್ದವರೆಂದರೆ ಗಂಭೀರವಾಗಿದ್ದ ಅಮರಾಂತ ಮಾತ್ರ. ಅವಳಿಗೆ ಆನೆಗಳನ್ನು ಕೆಡವುವಷ್ಟು ಸಮಯವೂ ಇದ್ದ ಹಾಗಿತ್ತು. ಅವ್ರೇಲಿಯಾನೋ ಸೆಗುಂದೋ ಮತ್ತು ಮೆಮೆ ಅವಳಿಗೆ ಅಣಕು ವಿದಾಯ ಹೇಳಿ, ಬರಲಿರುವ ಶನಿವಾರ ಭಾರಿ ಸಮಾವೇಶದ ಪಾರ್ಟಿಯನ್ನು ಇಟ್ಟುಕೊಂಡಿರುವುದಾಗಿ ಹೇಳಿದರು. ಅಮರಾಂತ ಬ್ಯುಂದಿಯಾ ಸತ್ತವರಿಗೆ ಕೊಡಲು ಕಾಗದಗಳನ್ನು ತೆಗೆದುಕೊಳ್ಳುತ್ತಿದ್ದಾಳೆಂಬ ಸಾರ್ವಜನಿಕರ ಮಾತಿನಿಂದ ಆಕರ್ಷಿತನಾದ ಫಾದರ್ ಆಂಟೋನಿಯೋ ಇಸಬಲ್ ಸಾಯಂಕಾಲ ಎಂಟು ಗಂಟೆಗೆ ಅಪರ ಕ್ರಿಯೆಗಳಿಗಾಗಿ ಬಂದ ಮತ್ತು ಅದನ್ನು ಪಡೆಯಬೇಕಾದವಳು ಸ್ನಾನದಿಂದ ಹೊರಗೆ ಬರಲು ಹದಿನೈದು ನಿಮಿಷ ಕಾಯಬೇಕಾಯಿತು. ನೈಟ್‌ಶರ್ಟ್ ತೊಟ್ಟು, ಸಡಿಲವಾದ ಕೂದಲನ್ನು ಭುಜದ ಮೇಲೆ ಇಳಿಬಿಟ್ಟುಕೊಂಡಿದ್ದ ಅವಳನ್ನು ಕಂಡಾಗ ಅವನು ಸೋಜಿಗಗೊಂq. ಅವನು ಇದೊಂದು ತಮಾಷೆ ಇರಬೇಕೆಂದು ಪವಿತ್ರ ಪೀಠ ಹಿಡಿದುಕೊಂಡಿದ್ದ ಹುಡುಗನನ್ನು ಕಳಿಸಿ ಬಿಟ್ಟ. ಆದರೂ ಆ ಸಂದರ್ಭದ ಉಪಯೋಗ ಪಡೆದು, ಇಪ್ಪತ್ತು ವರ್ಷಗಳ ಬಿಗಿಮೌನದ ನಂತರ ಅಮರಾಂತಳಿಂದ ತಪ್ಪೊಪ್ಪಿಗೆಯನ್ನು ತೆಗೆದುಕೊಳ್ಳಬೇಕು ಎಂದುಕೊಂಡ. ತನ್ನ ಮನಸ್ಸು ತಿಳಿಯಾಗಿರುವುದರಿಂದ ಯಾವುದೇ ಆಧ್ಯಾತ್ಮಿಕ ಸಹಾಯ ಬೇಡವೆಂದು ಅವಳು ಹೇಳಿದಳು. ಫೆರ್ನಾಂಡಳಿಗೆ ಗಾಬರಿಯಾಯಿತು. ಬೇರೆಯವರು ಕೇಳಿಸಿಕೊಳ್ಳುತ್ತಾರೆ ಎನ್ನುವುದನ್ನು ಲೆಕ್ಕಕ್ಕಿಡದೆ ಅವಳು ತನಗೆ ತಾನೆ ಹೇಳಿಕೊಳ್ಳುವಂತೆ ಜೋರಾಗಿ ಅಮರಾಂತ ತಪ್ಪೊಪ್ಪಿಗೆಯ ನಾಚಿಕೆಗೇಡಿಗೆ ಬದಲಾಗಿ ಅಧಾರ್ಮಿಕವಾದ ಸಾವನ್ನು ಇಷ್ಟಪಟ್ಟಿದ್ದಾಳೆ ಎಂದಳು. ಅದಾದ ಮೇಲೆ ಅಮರಾಂತ ಮಲಗಿದಳು ಮತ್ತು ತನ್ನ ಕೌಮಾರ್ಯದ ಬಗ್ಗೆ ಸಾರ್ವಜನಿಕ ಹೇಳಿಕೆಯೊಂದನ್ನು ಕೊಡುವಂತೆ ಉರ್ಸುಲಾಗೆ ಹೇಳಿದಳು. +ಅವಳು ಫೆರ್ನಾಂಡಳಿಗೆ ಕೇಳಿಸುವಂತೆ, “ಯಾರೂ ಅನುಮಾನ ಪಡೋದು ಬೇಡ. ಅಮರಾಂತ ಬ್ಯುಂದಿಯಾ ಈ ಲೋಕಕ್ಕೆ ಬಂದ ರೀತೀಲೇ ಅದನ್ನು ಬಿಟ್ಟು ಹೊಗ್ತಿದಾಳೆ” ಎಂದು ಕೂಗಿದಳು. +ಅವಳು ಮತ್ತೆ ಏಳಲಿಲ್ಲ ಅವಳಿಗೆ ನಿಜವಾಗಿಯೂ ಕಾಯಿಲೆಯಾಗಿದೆ ಎನ್ನುವಂತೆ ಕುಷನ್ ಮೇಲೆ ಮಲಗಿ ಕೂದಲನ್ನು ಹೆಣೆದು, ಸಾವು ಹೇಳಿದಂತೆ ಅದನ್ನು ಕಿವಿಯ ಸುತ್ತ ಸುರಳಿ ಮಾಡಿದ್ದಳು. ಅನಂತರ ಅವಳು ಉರ್ಸುಲಾಗೆ ಕನ್ನಡಿಯನ್ನು ಕೇಳಿದಳು. ನಲವತ್ತು ವರ್ಷಕ್ಕೂ ಹೆಚ್ಚು ಅವಧಿಯ ನಂತರ ಮೊದಲ ಬಾರಿ ಅವಳು ತನ್ನ ವಯಸ್ಸಿನಿಂದ ಹಾಗೂ ಹುತಾತ್ಮತೆಯಿಂದ ಹಣ್ಣಾಗಿದ್ದ ಮುಖವನ್ನು ಅದರಲ್ಲಿ ನೋಡಿಕೊಂಡಳು. ಅವಳಿಗೆ ತಾನು ಕಲ್ಪಿಸಿಕೊಂಡಿದ್ದ ರೀತಿಯಲ್ಲೇ ಇದ್ದದ್ದಕ್ಕಾಗಿ ಆಶ್ಚರ್ಯವಾಯಿತು. ಬೆಡ್‌ರೂಮಿನಲ್ಲಿದ್ದ ನಿಶ್ಯಬ್ದದಿಂದ ಉರ್ಸುಲಾ ಕತ್ತಲಾಗುತ್ತಿದೆ ಎಂದುಕೊಂಳು. +ಅವಳು, “ಫೆರ್ನಾಂಡಾಗೆ ಒಂದು ಮಾತು ಹೇಳು. ಒಂದು ನಿಮಿಷದ ಹೊಂದಾಣಿಕೆ ಇಡೀ ಜೀವಮಾನದ ಸ್ನೇಹಕ್ಕಿಂತ ದೊಡ್ಡದು” ಎಂದು ಕೇಳಿಕೊಂಡಳು. +ಅಮರಾಂತ, “ಈಗ ಅದರಿಂದ ಉಪಯೋಗವಿಲ್ಲ” ಎಂದಳು. +ಉತ್ತಮಗೊಳಿಸಿದ ರಂಗದ ಮೇಲೆ ದೀಪಗಳು ಹೊತ್ತಿಕೊಂಡಾಗ ಮೆಮೆಳಿಗೆ ಅವಳ ಬಗ್ಗೆ ಯೋಚಿಸದಿರುವುದು ಸಾಧ್ಯವಾಗಲಿಲ್ಲ. ಅವಳು ಕಾರ್ಯಕ್ರಮದ ಎರಡನೆ ಭಾಗವನ್ನು ಪ್ರಾರಂಭಿಸಿದಾಗ ಮಧ್ಯದಲ್ಲಿ ಯಾರೋ ಬಂದು ಅವಳ ಕಿವಿಯಲ್ಲಿ ಸುದ್ದಿಯನ್ನು ಹೇಳಿದರು. ಆಗ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಅವ್ರೇಲಿಯಾನೋ ಸೆಗುಂದೋ ಮನೆಗೆ ಬಂದಾಗ ಅವನು ಗುಂಪಿನ ಮಧ್ಯೆ ದಾರಿಮಾಡಿಕೊಂಡು ಕುಮಾರಿಯಾದ, ಕುರೂಪಿಯಾದ, ಕಳೆಯಿಲ್ಲದ ಮತ್ತು ಕೈಗೆ ಕಪ್ಪನೆ ಪಟ್ಟಿ ಕಟ್ಟಿದ್ದ ಹಾಗೂ ಭವ್ಯವಾದ ಮುಸುಕು ಹಾಕಿದ ಹೆಣವನ್ನು ನೋಡಿದ. ಅವಳನ್ನು ಕಾಗದಗಳನ್ನು ತುಂಬಿದ ಪೆಟ್ಟಿಗೆಯ ಪಕ್ಕದಲ್ಲಿ ಮಲಗಿಸಿದ್ದರು. +ಅಮರಾಂತಳಿಗಾಗಿ ಒಂಬತ್ತು ರಾತ್ರಿ ಶೋಕವನ್ನು ಆಚರಿಸಿದ ಉರ್ಸುಲಾ ಮತ್ತೆ ಏಳಲಿಲ್ಲ. ಸೋಫಿಯಾ ದೆಲಾ ಪಿಯದಾದ್ ಅವಳನ್ನು ನೋಡಿಕೊಂಡಳು. ಅವಳಿದ್ದ ಬೆಡ್‌ರೂಮಿಗೆ ಊಟ, ನೀರು ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು ಮತ್ತು ಮಕೋಂದೋದಲ್ಲಿ ಆಗಿನ ತನಕ ಜರುಗಿದ ಸಂಗತಿಯನ್ನು ಹೇಳುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ಅವಳನ್ನು ನೋಡಲು ಆಗಾಗ್ಗೆ ಬರುತ್ತಿದ್ದ. ಅವನು ಅವಳಿಗೆ ದಿನನಿತ್ಯದ ತೀರ ಅಗತ್ಯದ ಬಟ್ಟೆ ಹಾಗೂ ಇತರ ವಸ್ತುಗಳನ್ನು ತಂದಿದ್ದನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಸ್ವಲ್ಪ ಕಾಲದಲ್ಲಿಯೇ ಅವಳಿಗೆ ಕೈಗೆಟಕುವ ದೂರದಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ಸೃಷ್ಟಿಸಿಕೊಂಡಿದ್ದಳು. ತನ್ನಂತೆಯೇ ಇದ್ದ ಪುಟ್ಟ ಅಮರಾಂತ ಉರ್ಸುಲಾಳಲ್ಲಿ ಪ್ರೀತಿ ಹುಟ್ಟುವಂತೆ ಮಾಡಿದಳು ಮತ್ತು ಅವಳಿಗೆ ಓದುವುದನ್ನು ಕಲಿಸಿದಳು. ಅವಳ ಸರಳತೆ, ತನ್ನ ಮಟ್ಟಿಗೆ ಸಂತೃಪ್ತಿಯಿಂದ ಇರುವುದು ಇವುಗಳಿಂದ ನೂರು ವರ್ಷಗಳ ಭಾರ ಅವಳ ಮೇಲೆ ಹಿಡಿತ ಸಾಧಿಸಿದೆ ಎಂದು ಯಾರಾದರೂ ತಿಳಿದುಕೊಳ್ಳಬಹುದಿತ್ತು. ಆದರೆ ಅವಳಿಗೆ ಎರಡೆರಡು ಕಾಣಿಸುತ್ತಿದ್ದದ್ದು ನಿಜವಾದರೂ ಯಾರೂ ಅವಳು ಸಂಪೂರ್ಣ ಕುರುಡಿ ಎಂದು ಅನುಮಾನಿಸಿರಲಿಲ್ಲ. ಅವಳಿಗೆ ಆಗ ಎಷ್ಟೊಂದು ಸಮಯವಿತ್ತೆಂದರೆ ಮತ್ತು ಮನೆಯಲ್ಲಿ ನಡೆಯುತ್ತಿರುವುದರ ಬಗ್ಗೆ ಕಣ್ಣಿಡಲು ಎಷ್ಟೊಂದು ಒಳಮೌನವಿತ್ತೆಂದರೆ, ಮೆಮೆಳ ಮೌನ ಹೋರಾಟವನ್ನು ಮೊದಳು ಗಮನಿಸಿದವಳು ಅವಳೇ. +ಅವಳು, “ಬಾ ಇಲ್ಲಿ ಈಗ ಇಲ್ಲಿ ನಾವಿಬ್ಬರೇ ಇರೋದು. ನಿನ್ನ ಮನಸ್ಸಿನಲ್ಲಿ ಏನು ಕೊರೀತಾ ಇದೆ ಹೇಳು” ಎಂದು ಕೇಳಿದಳು. +ಮೆಮೆ ಸಣ್ಣಗೆ ನಕ್ಕು ತಪ್ಪಿಸಿಕೊಳ್ಳಲು ನೋಡಿದಳು. ಉರ್ಸುಲಾ ಒತ್ತಾಯ ಮಾಡಲಿಲ್ಲ. ಆದರೆ ಮೆಮೆ ಮತ್ತೆ ತನ್ನ ಹತ್ತಿರ ಬಾರದೇ ಹೋದದ್ದಕ್ಕೆ ಅವಳ ಅನುಮಾನ ಖಾತ್ರಿಯಾಯಿತು. ಅವಳು ಮಾಮೂಲಿಗಿಂತ ಮೊದಲು ಏಳುತ್ತಿದ್ದಳೆಂದು ಅವಳಿಗೆ ತಿಳಿದಿತ್ತು. ಅವಳು ಹೋಗಬೇಕಾದ ವೇಳೆ ಬರುವ ತನಕ ಒಂದು ಕ್ಷಣದ ವಿಶ್ರಾಂತಿಯೂ ಇರುತ್ತಿರಲಿಲ್ಲವೆಂದು ಗಮನಿಸಿದ್ದಳು. ಅವಳು ಇಡೀ ರಾತ್ರಿ ಪಕ್ಕದ ರೂಮಿನಲ್ಲಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಳೆಂದು ಗೊತ್ತಿತ್ತು. ಒಂದು ಚಿಟ್ಟೆಯ ರೆಕ್ಕೆ ಬಡಿದರೂ ಅವಳು ಯೋಚನೆಗೀಡಾಗುತ್ತಾಳೆಂದು ಗೊತ್ತಿತ್ತು. ಒಂದು ಸಲ ಅವಳು ಅವ್ರೇಲಿಯಾನೋ ಸೆಗುಂದೋನನ್ನು ಕಾಣಲು ಹೋಗುವುದಾಗಿ ಹೇಳಿದಳು ಮತ್ತು ಉರ್ಸುಲಾಗೆ ಫೆರ್ನಾಂಡಳ ಗಂಡ ತನ್ನ ಮಗಳನ್ನು ಹುಡುಕಿಕೊಂಡು ಬಂದಾಗ ಅವಳ ಕಲ್ಪನೆಯ ಮಿತಿಯ ಬಗ್ಗೆ ಆಶ್ಚರ್ಯವಾಯಿತು. ಅದೊಂದು ದಿನ ರಾತ್ರಿ ಸಿನಿಮಾ ಥಿಯೇಟರ್‌ನಲ್ಲಿ ಅವಳು ಹುಡುಗನೊಬ್ಬನಿಗೆ ಮುತ್ತು ಕೊಡುತ್ತಿದ್ದದ್ದನ್ನು ಕಂಡು ಹಿಡಿದ ಫೆರ್ನಾಂಡ ಕಳವಳಗೊಳ್ಳುವುದಕ್ಕಿಂತ ಬಹಳ ಮುಂಚೆಯೇ ಮೆಮೆ ಗೌಪ್ಯ ವ್ಯವಹಾರದಲ್ಲಿ, ತುರ್ತಿನ ವಿಷಯಗಳಲ್ಲಿ, ಅದುಮಿಟ್ಟ ಆತಂಕಗಳಲ್ಲಿ ಸಿಲುಕಿದ್ದಾಳೆಂದು ತನ್ನಷ್ಟಕ್ಕೆ ತಿಳಿಯುತ್ತಿತ್ತು. +ಮೆಮೆ ತನ್ನಲ್ಲೇ ತಾನು ಎಷ್ಟು ಮುಳುಗಿದ್ದಳೆಂದರೆ ತನ್ನ ಮೇಲೆ ಚಾಡಿ ಹೇಳಿದ್ದಕ್ಕಾಗಿ ಉರ್ಸುಲಾಳನ್ನು ಬೈದಳು. ಆದರೆ ವಾಸ್ತವಾಗಿ ಅವಳೇ ತನ್ನ ಬಗ್ಗೆ ಹೇಳಿಕೊಂಡಿದ್ದಳು. ಬಹಳ ಕಾಲದಿಂದ ಅವಳು ಸೂಚನೆಗಳನ್ನು ಕೊಡುತ್ತಿದ್ದು ಅದು ಎಂಥ ಕುಂಭಕರ್ಣನನ್ನೂ ಬಡಿದೆಬ್ಬಿಸುವಂಥದಾಗಿತ್ತು ಮತ್ತು ಫೆರ್ನಾಂಡಳಿಗೆ ಅದನ್ನು ಪತ್ತೆ ಹಚ್ಚುವುದಕ್ಕೆ ಅವಳು ಕಾಣದ ಡಾಕ್ಟರ್‌ಗಳೊಂದಿಗೆ ನಡೆಸುತ್ತಿದ್ದ ವ್ಯವಹಾರದಲ್ಲಿ ಮುಳುಗಿಹೋಗಿದ್ದರಿಂದ ಅಷ್ಟು ದಿನ ಬೇಕಾಯಿತು. ಆದರೂ ಕೂಡ ಕೊನೆಗೆ ಅವಳು ತನ್ನ ಮಗಳ ದೀರ್ಘ ಮೌನಗಳನ್ನು, ಹಠಾತ್ ಬಡಬಡಿಕೆಗಳನ್ನು, ಬದಲಾಗುತ್ತಿದ್ದ ಭಾವನೆಗಳನ್ನು ಮತ್ತು ವೈರುಧ್ಯಗಳನ್ನು ಗಮನಿಸಿದಳು. ಅವಳು ಮರೆಮಾಚಿಕೊಂಡು ಅವಳ ಮೇಲೆ ಕಣ್ಣಿಟ್ಟಳು. ಅವಳಿಗೆ ಅವಳ ಗೆಳತಿಯರ ಜೊತೆಗೆ ಎಂದಿನಂತೆ ಹೊರಗೆ ತಿರುಗಾಡುವುದಕ್ಕೆ ಬಿಟ್ಟಳು. ಅವಳು ಶನಿವಾರದ ಪಾರ್ಟಿಗೆ ಡ್ರೆಸ್ ಮಾಡಿಕೊಳ್ಳಲು ಸಹಾಯ ಮಾಡಿದಳು ಮತ್ತು ಅವಳಿಗೆ ಮುಜುಗರವಾಗುವಂಥ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮೆಮೆ ಹೇಳುವುದಕ್ಕಿಂತ ಬೇರೆಯದೇ ಆದ ಕೆಲಸಗಳನ್ನು ಮಾಡುತ್ತಿದ್ದಾಳೆಂದು ಅವಳಿಗೆ ಸಾಕಷ್ಟು ಪುರಾವೆ ಸಿಕ್ಕಿತ್ತು. ಆದರೂ ಸರಿಯಾದ ಸಮಯ ಸಿಗಲಿ ಎಂದು ತನ್ನ ಅನುಮಾನದ ಬಗ್ಗೆ ಗುಟ್ಟು ಬಿಡಲಿಲ್ಲ. ಒಂದು ದಿನ ಮೆಮೆ ತನ್ನ ತಂದೆಯ ಜೊತೆ ಸಿನಿಮಾಕ್ಕೆ ಹೋಗುವುದಾಗಿ ಹೇಳಿದಳು. ಸ್ವಲ್ಪ ಸಮಯದ ನಂತರ ಅವಳಿಗೆ ಆ ಲಂಪಟನ ಅಬ್ಬರದ ಮಾತುಗಳು ಮತ್ತು ಅಕಾರ್ಡಿನ್‌ನ ಧ್ವನಿ ಪೆತ್ರಾ ಕೊತೆಸ್ ಮನೆಯಿಂದ ಕೇಳಿ ಬಂತು. ಆ ಮೇಲೆ ಅವಳು ಡ್ರೆಸ್ ಮಾಡಿಕೊಂಡು ಥಿಯೇಟರ್‌ಗೆ ಹೋದಳು ಮತ್ತು ಆ ಕತ್ತಲಲ್ಲಿ ಅವಳು ತನ್ನ ಮಗಳನ್ನು ಪತ್ತೆ ಹಚ್ಚಿದಳು. ಅದರ ಕಳವಳದಲ್ಲಿ ಅವಳು ಮುತ್ತು ಕೊಡುತ್ತಿದ್ದವನನ್ನು ಗುರುತು ಹಿಡಿಯಲಾಗಲಿಲ್ಲ. ಪ್ರೇಕ್ಷಕರ ಕೂಗಾಟ ಮತ್ತು ನಗುವಿನ ಮಧ್ಯೆಯೂ ಅವಳಿಗೆ ಅವನ ಕಂಪಿಸುವ ಧ್ವನಿ ಕೇಳಿಸಿತು. ಅವನು, “ನಂದು ತಪ್ಪಾಯ್ತು” ಎಂದು ಹೇಳಿದ ಮತ್ತು ಬೇರೆ ಏನೂ ಮಾತಾಡದೆ ಮೆಮೆಳನ್ನು ಹೊರಗೆ ಕರೆದುಕೊಂಡು ಬಂದು ಅನೈತಿಕ ಕೂಪದ ಗದ್ದಲದ ಟರ್ಕಿಗಳ ರಸ್ತೆಯುದ್ದಕ್ಕೂ ಬಿಡುಬೀಸಾಗಿ ನಡೆಸಿಕೊಂಡು ಹೋದ. ನಂತರ ಅವಳನ್ನು ಅವಳ ರೂಮಿಗೆ ತಲುಪಿಸಿದ. +ಮಾರನೆ ದಿನ ಸಂಜೆ ಆರು ಗಂಟೆಗೆ ಅವಳನ್ನು ಭೇಟಿಯಾಗಲು ಬಂದವನ ಧ್ವನಿಯನ್ನು ಗುರುತು ಹಿಡಿದಳು. ಅವನು ಅಷ್ಟು ಆರೋಗ್ಯವಂತನಲ್ಲದ ಕಪ್ಪಾದ ವೇದನೆ ತುಂಬಿದ ಕಣ್ಣುಗಳ ಯುವಕನಾಗಿದ್ದ. ಅವಳು ಜಿಪ್ಸಿಗಳನ್ನು ನೋಡಿರದಿದ್ದರೆ ಅಷ್ಟು ಚಕಿತಗೊಳ್ಳುತ್ತಿರಲಿಲ್ಲ. ಅವನಲ್ಲೊಂದು ಕನಸುಗಾರಿಕೆಯಿದ್ದು, ಅವಳಿಗಿಂತ ಕೊಂಚ ಕಡಿಮೆ ಬಿಗಿ ಇದ್ದ ಯಾವುದೇ ಹೆಂಗಸಿಗಾದರೂ ಅವಳ ಮಗಳ ಉದ್ದೇಶ ಅರ್ಥವಾಗುತ್ತಿತ್ತು. ಅವನು ಕೊಳಕಾದ ಒಂದು ಸೂಟ್ ತೊಟ್ಟಿದ್ದ ಹಾಗೂ ಜಿಂಕ್‌ನ ಕಲೆಗಳಿದ್ದ ಶೂ ಹಾಕಿಕೊಂಡಿದ್ದ. ಅಲ್ಲದೆ ಕೈಯಲ್ಲಿ ಹಿಂದಿನ ದಿನ ಶನಿವಾರ ತಂದಿದ್ದ ಹುಲ್ಲು ಕಡ್ಡಿ ಹಿಡಿದುಕೊಂಡಿದ್ದ. ಅವನಿಗೆ ಆ ಕ್ಷಣದಲ್ಲಿ ಉಂಟಾದ ಭಯ ಇಡೀ ಜೀವಮಾನದಲ್ಲಿ ಆಗಿರಲಾರದು. ಆದರೆ ಅವನಲ್ಲಿದ್ದ ಘನತೆ ಮತ್ತು ಸಮಯ ಪ್ರಜ್ಞೆಯಿಂದ ಬಚಾವಾದ. ಅವನ ನಿಜವಾದ ಲಕ್ಷಣ ಅವನ ಒರಟು ಕೆಲಸದಿಂದ ಮೆತ್ತಿದ ಬಣ್ಣದ ಕೈಯಿಂದ ವಿಲಕ್ಷಣವೆನಿಸಿತ್ತು. ಫೆರ್ನಾಂಡಳಿಗೆ ಅವನು ಮೆಕ್ಯಾನಿಕ್ ಮಟ್ಟದವನು ಎಂದು ಊಹಿಸಲು ಒಂದೇ ನೋಟ ಸಾಕಾಗಿತ್ತು. ಅವನ ಬಳಿ ಇದ್ದ ಒಂದೇ ಭಾನುವಾರದ ಸೂಟ್ ಹಾಕಿಕೊಂಡಿದ್ದಾನೆಂದು ಮತ್ತು ಅವನ ಶರಟಿನ ಒಳಗೆ ಬಾಳೆತೋಟದ ಕಂಪನಿಯ ಗುರುತಿನ ಬಿಲ್ಲೆ ಇದೆಯೆಂದು ಭಾವಿಸಿದಳು. ಅವಳು ಅವನಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅವನನ್ನು ಬಾಗಿಲ ಒಳಗೆ ಬರಲೂ ಬಿಡಲಿಲ್ಲ ಮತ್ತು ಇನ್ನೊಂದು ಕ್ಷಣದಲ್ಲಿ ಅವಳು ಇಡೀ ಮನೆ ಹಳದಿ ಚಿಟ್ಟೆಗಳಿಂದ ತುಂಬಿ ಹೋದದ್ದರಿಂದ ಬಾಗಿಲನ್ನು ಮುಚ್ಚಿದಳು. +ಅವಳು, “ಹೊರಟು ಹೋಗು. ನೀನು ಯಾವ್ದೇ ಮರ್‍ಯಾದಸ್ಥರ ಮನೆಗೆ ಬರೋದಕ್ಕೆ ಲಾಯಕ್ಕಾಗಿಲ್ಲ” ಎಂದಳು. +ಅವನ ಹೆಸರು ಮಾರಿಷಿಯೋ ಬಾಬಿಲೋನಿಯಾ. ಅವನು ಮಕೋಂದೋದಲ್ಲೆ ಹುಟ್ಟಿ ಬೆಳೆದವನು. ಅವನು ಬಾಳೆ ತೋಟದ ಗೆರಾಜ್‌ನಲ್ಲಿ ಕಂಪನಿಯ ಮೆಕ್ಯಾನಿಕ್ ಆಗಿ ತರಬೇತಿ ಪಡೆಯುತ್ತಿದ್ದ. ಒಂದು ದಿನ ಪೆಟ್ರೀಷಿಯಾ ಬ್ರೌನ್ ಜೊತೆ ಕಾರೊಂದನ್ನು ತೋಟದೊಳಗೆ ಓಡಿಸಲು ಹೋಗಿದ್ದಾಗ ಮೆಮೆ ಅವನನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದಳು. ಕಾರಿನ ಡ್ರೈವರ್‌ಗೆ ಕಾಯಿಲೆಯಾದ್ದರಿಂದ ಅವರನ್ನು ಕರೆದುಕೊಂಡು ಹೋಗುವ ಕೆಲಸವನ್ನು ಅವನಿಗೆ ವಹಿಸಿದ್ದರು ಮತ್ತು ಮೆಮೆಳಿಗೆ ಕೊನೆಗೂ ಡ್ರೈವರ್‌ನ ಪಕ್ಕದಲ್ಲಿ ಕುಳಿತುಕೊಂಡು ಅವನು ಏನು ಮಾಡುತ್ತಾನೆ ಎಂದು ನೋಡಬೇಕೆನ್ನುವ ಅಭಿಲಾಷೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗಿತ್ತು. ಕಾರಿನ ಸಾಮಾನ್ಯ ಡ್ರೈವರ್‌ನಂತಲ್ಲದೆ ಮಾರೀಷಿಯೋ ಬಾಬಿಲೋನಿಯಾ ಅವಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟ. ಆ ದಿನಗಳಲ್ಲಿ ಮೆಮೆ ಮಿಸ್ಟರ್ ಬ್ರ್ರೌನ್ ಮನೆಗೆ ಆಗಾಗ್ಗೆ ಹೋಗುವುದನ್ನು ಪ್ರಾರಂಭಿಸಿದ್ದಳು. ಮತ್ತು ಆಗ ಹೆಂಗಸೊಬ್ಬಳು ಕಾರನ್ನು ಓಡಿಸುವುದು ಅನುಚಿತವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಅವಳು ತಾಂತ್ರಿಕ ಮಾಹಿತಿಯಿಂದ ಸಮಾಧಾನಗೊಂಡಳು ಮತ್ತು ಅವಳು ಅನೇಕ ತಿಂಗಳ ಕಾಲ ಮಾರಿಷಿಯೋ ಬಾಬಿಲೋನಿಯಾನನ್ನು ನೋಡಲಿಲ್ಲ. ಕಾರಿನಲ್ಲಿ ಕುಳಿತಾಗ ತನ್ನ ಗಮನ ಅವನ ಒರಟು ಕೈ ಮೇಲಲ್ಲದೆ ಕಟ್ಟುಮಸ್ತಾದ ಅವನ ಮೈಮೇಲೆ ಇತ್ತೆಂದು ಅವಳಿಗೆ ನೆನಪಾಗುತ್ತಿತ್ತು. ಆದರೆ ಅವಳು ಪಾಟ್ರೀಷಿಯಾ ಬ್ರೌನ್ ಬಳಿ ಅವನ ಸಂರಕ್ಷಣಾ ಭಾವನೆಯ ಹಮ್ಮಿನ ಬಗ್ಗೆ ಕಿರಿಕಿರಿಯಾದದ್ದನ್ನು ಹೇಳಿದ್ದಳು. ಅವಳು ಮೊದಲ ಶನಿವಾರ ತನ್ನ ತಂದೆಯ ಜೊತೆ ಸಿನಿಮಾಕ್ಕೆ ಹೋದಾಗ ಕೆಲವು ಸೀಟುಗಳ ಆಚೆ ಹತ್ತಿ ಬಟ್ಟೆಯ ಸೂಟ್ ಹಾಕಿಕೊಂಡು ಕೂತಿದ್ದ ಮಾರಿಷಿಯೋ ಬಾಬಿಲೋನಿಯಾನನ್ನು ನೋಡಿದಳು. ಮತ್ತು ಅವನು ತನ್ನ ಕಡೆ ನೋಡುತ್ತ ಸಿನಿಮಾ ನೋಡುವುದರ ಬಗ್ಗೆ ಗಮನಕೊಡುತ್ತಿಲ್ಲವೆಂದು ಗಮನಿಸಿದಳು. ಮೆಮೆಳಿಗೆ ಅದು ಅಸಹ್ಯವಾಗಿ ಕಂಡು ಕಸಿವಿಸಿಯಾಯಿತು. ಅನಂತರ ಮಾರಿಷಿಯೋ ಬಾಬಿಲೋನಿಯಾ ಬಂದು ಅವ್ರೇಲಿಯಾನೋ ಸೆಗುಂದೋಗೆ ವಂದಿಸಿದಾಗ ಮೆಮೆ ಅವರಿಬ್ಬರಿಗೂ ಪರಿಚಯವಿದೆಯೆಂದೂ ಮತ್ತು ಅವನು ಅವ್ರೇಲಿಯಾನೋ ಟ್ರೀಸ್ತೆಯ ಪ್ರಾರಂಭದ ವಿದ್ಯುತ್ ಕಾರ್ಯಾಗಾರದಲ್ಲಿ ಕೆಲಸಮಾಡುತ್ತಿದ್ದನೆಂದೂ ಮತ್ತು ಅವನು ತನ್ನ ತಂದೆ ಬಳಿ ಕೆಲಸಗಾರನ ಹಾಗೆ ನಡೆದುಕೊಳ್ಳುತ್ತಿದ್ದಾನೆಂದು ಗೊತ್ತಾಯಿತು. ಆ ಸಂಗತಿ ಅವನ ಹಮ್ಮು ಉಂಟುಮಾಡಿದ್ದ ಭಾವನೆಯನ್ನು ದೂರ ಮಾಡಿತು. ಅವರಿಬ್ಬರು ಪ್ರತ್ಯೇಕವಾಗಿ ಭೇಟಿಯಾಗಿಯೇ ಇರಲಿಲ್ಲ. ಅವರು ಒಬ್ಬರಿಗೊಬ್ಬರು ಔಪಚಾರಿಕ ಮಾತುಗಳನ್ನು ಬಿಟ್ಟರೆ ಬೇರೆ ಏನೂ ಮಾತಾಡಿರಲಿಲ್ಲ. ಅಲ್ಲದೆ ತನ್ನನ್ನು ವಿನಾಶದಿಂದ ಪಾರುಮಾಡುವನೆಂದು ಆ ರಾತ್ರಿ ಕನಸು ಕಂಡಿದ್ದಳು. ಅವಳಿಗೆ ತನ್ನ ಅಪಾರ್ಥವನ್ನು ಕೊನೆಗಾಣಿಸಿದಕ್ಕಾಗಿ ಅವನ ಬಗ್ಗೆ ಕೃತಜ್ಞತೆಗೆ ಬದಲಾಗಿ ರೋಷ ಉಂಟಾಯಿತು. ಅದು ಅವನು ಕಾಯುತ್ತಿದ್ದ ಅವಕಾಶವೊಂದನ್ನು ಒದಗಿಸಿದಂತಿತ್ತು. ಆದರೆ ಮೆಮೆ, ತನ್ನ ಬಗ್ಗೆ ಆಸಕ್ತಿ ಹೊಂದಿದ ಮಾರಿಷಿಯೋ ಬಾಬಿಲೋನಿಯಾ ಅಥವಾ ಬೇರೆ ಯಾವ ವ್ಯಕ್ತಿಯ ಬಗ್ಗೆ, ಅದಕ್ಕೆ ವ್ಯತಿರಿಕ್ತವಾದದ್ದನ್ನು ಬಯಸುತ್ತಿದ್ದಳು. ಆದ್ದರಿಂದ ಆ ಕನಸು ಬಿದ್ದಾಗ ಅವನನ್ನು ದ್ವೇಷಿಸುವುದರ ಬದಲಿಗೆ ಕಾಣಬೇಕೆಂಬ ತೀವ್ರವಾದ ಒತ್ತಾಸೆ ಉಂಟಾದದ್ದಕ್ಕೆ ತನ್ನ ಮೇಲೆ ಸಿಟ್ಟು ಬಂತು. ಆ ಆತಂಕ ಆ ವಾರದಲ್ಲಿ ತೀವ್ರವಾಯಿತು ಮತ್ತು ಶನಿವಾರ ಅದರ ಒತ್ತಡ ಎಷ್ಟು ಹೆಚ್ಚಾಯಿತೆಂದರೆ ಸಿನಿಮಾದಲ್ಲಿ ಮಾರಿಷಿಯೋ ಬಾಬಿಲೋನಿಯೋ ಸಿಕ್ಕು ಕುಶಲ ಕೇಳಿದಾಗ, ತನ್ನ ಹೃದಯ ಬಾಯಿಗೇ ಬಂದದ್ದನ್ನು ಅವನು ಗಮನಿಸದಿರುವಂತೆ ಮಾಡಲು ಅವಳು ಹೆಚ್ಚಿನ ಪ್ರಯತ್ನ ಮಾಡಬೇಕಾಯಿತು. ಸಂತೋಷ ಮತ್ತು ರೋಷದ ಗೊಂದಲದಲ್ಲಿ ಅವಳು ಮೊದಲ ಬಾರಿಗೆ ಅವನಿಗೆ ಕೈ ಚಾಚಿದಳು ಮತ್ತು ಮಾರಿಷಿಯೋ ಬಾಬಿಲೋನಿಯಾ ಅವಳ ಕೈ ಕುಲುಕಿz. ಮರುಕ್ಷಣದಲ್ಲಿ ಅವಳಿಗೆ ತನ್ನ ಆವೇಶಕ್ಕೆ ಪಶ್ಚಾತ್ತಾಪಗೊಂಡರೂ ಅವನ ಕೈ ಕೂಡ ತೆಳು ಬೆವರಿನಿಂದ ತಣ್ಣಗಿದ್ದದ್ದರಿಂದ ವಿಚಿತ್ರ ಸಮಾಧಾನವಾಯಿತು. ಅಂದಿನ ರಾತ್ರಿ ಅವಳಿಗೆ ಮಾರಿಷಿಯೋ ಬಾಬಿಲೋನಿಯಾಗೆ ಅವನ ಅಭೀಪ್ಸೆ ಉಪಯೋಗವಿಲ್ಲದ್ದೆಂದು ತೋರಿಸುವ ತನಕ ತನಗೆ ನೆಮ್ಮದಿ ಸಿಗುವುದಿಲ್ಲವೆಂದು ಅರಿವಾಯಿತು. ಇಡೀ ವಾರ ಅದೇ ಯೋಚನೆಯಲ್ಲೇ ಆತಂಕದಿಂದ ಕಳೆದಳು. ಅವಳು ಪ್ಯಾಟ್ರೀಷಿಯಾ ಬ್ರೌನ್ ಕಾರು ತೆಗೆದುಕೊಂಡು ಬರಲು ತನ್ನನ್ನು ಕರೆದುಕೊಂಡು ಹೋಗಲಿ ಎಂದು ತನಗೆ ತಿಳಿದ ಎಲ್ಲ ತಂತ್ರಗಳನ್ನು ಮಾಡಿದಳು. ಕೊನೆಗೆ ಅವಳು ಆ ಸಮಯದಲ್ಲಿ ಮಕೋಂದೋದಲ್ಲಿ ರಜೆ ಕಳೆಯುತ್ತಿದ್ದ ಅಮೆರಿಕದ ಕೆಂಗೂದಲಿನವನನ್ನು ಬಳಸಿಕೊಂಡಳು. ಮತ್ತು ವಿವಿಧ ಮಾದರಿಯ ಕಾರುಗಳನ್ನು ನೋಡುವ ನೆಪದಿಂದ ತನ್ನನ್ನು ಗರಾಜ್‌ಗೆ ಕರೆದುಕೊಂಡು ಹೋಗುವಂತೆ ಮಾಡಿದಳು. ಅವನನ್ನು ನೋಡಿದ ಕ್ಷಣ ತನಗೆ ತಾನೆ ಮೋಸಗೊಳಿಸಲು ಬಿಟ್ಟು, ಮಾರಿಷಿಯೋ ಬಾಬಿಲೋನಿಯಾನ ಸಂಗಡ ಏಕಾಂತದಲ್ಲಿರಬೇಕು ಎನ್ನುವ ಅಪೇಕ್ಷೆಯನ್ನು ಅವಳಿಗೆ ತಡೆಯಲಾಗಲಿಲ್ಲ. ಅಲ್ಲದೆ ಅದು ಅವಳು ಬಂದಾಗ ಅವನಿಗೆ ಅರ್ಥವಾಗಿದೆ ಎನ್ನುವುದು ಖಚಿತವಾದದ್ದಕ್ಕೆ ಅವಳಿಗೆ ತನ್ನ ಬಗ್ಗೆ ಕೋಪ ಬಂತು. +ಮೆಮೆ, “ಹೊಸ ಮಾಡಲ್‌ಗಳನ್ನು ನೋಡೋಣಾಂತ ಬಂದೆ” ಎಂದಳು. +ಅವನು , “ಅದೊಂದು ಒಳ್ಳೆ ನೆಪ” ಎಂದ. +ಮೆಮೆಗೆ ಅವನು ಹಮ್ಮಿನಿಂದ ಬಿರಿದು ಹೋಗುತ್ತಿದ್ದಾನೆಂದು ಅರ್ಥವಾಯಿತು. ಅವಳ ಅವನಿಗೆ ಅಪಮಾನ ಮಾಡುವ ಬಗೆಯನ್ನು ಹತಾಶೆಯಿಂದ ಹುಡುಕಿದಳು. ಆದರೆ ಅವನು ಅವಳಿಗೆ ಕಾಲಾವಕಾಶವನ್ನೇ ಕೊಡಲಿಲ್ಲ. ಅವನು ಕೆಳದನಿಯಲ್ಲಿ, “ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಹುಡುಗಿಯೊಬ್ಳು ಒಬ್ಬ ಹುಡುಗನ್ನು ತೀರ ಇಷ್ಟಪಟ್ಟಿರೋದು ಇದೇನು ಮೊದಲ್ನೇ ಸಲ ಅಲ್ಲ” ಎಂದ. ಅವಳಿಗೆ ಕುಸಿದಂತಾಗಿ ಹೊಸ ಮಾಡಲ್‌ಗಳನ್ನು ನೋಡದೆ ಗರಾಜ್‌ನಿಂದ ಹೊರಟು ಹೋದಳು ಮತ್ತು ಆ ದಿನ ರಾತ್ರಿಯೆಲ್ಲ ಕೋಪಗೊಂಡು ಅಳುತ್ತಿದ್ದಳು. ಅವಳ ಬಗ್ಗೆ ಆಸಕ್ತಿ ಹೊಂದಲು ಪ್ರಾರಂಭಿಸಿದ್ದ ಅಮೆರಿಕದ ಕೆಂಗೂದಲ ಮನುಷ್ಯ ಎಳೆ ಮಗುವಿನಂತೆ ಕಂಡ. ಆಗ ಅವಳಿಗೆ ಮಾರಿಷಿಯೋ ಕಾಣಿಸಿಕೊಳ್ಳುತ್ತಿದ್ದಕ್ಕಿಂತ ಮುಂಚೆ ಹಳದಿ ಚಿಟ್ಟೆಗಳು ಬರುತ್ತಿದ್ದದ್ದು ನೆನಪಾಯಿತು. ಅವಳು ಅವುಗಳನ್ನು ಮುಖ್ಯವಾಗಿ ಗರಾಜ್ ಬಳಿ ನೋಡಿದ್ದಳು. ಪೇಂಟ್‌ನ ವಾಸನೆಯಿಂದ ಅವು ಮುತ್ತುತ್ತವೆ ಎಂದು ಅವಳು ತಿಳಿದುಕೊಂಡಿದ್ದಳು. ಒಂದು ಸಲ ಅವಳು ಸಿನಿಮಾಕ್ಕೆ ಹೋಗುವ ಮುಂಚೆ ತನ್ನ ತಲೆಯ ಮೇಲೆ ಹಾರಾಡುತ್ತಿದ್ದದ್ದನ್ನು ಕಂಡಿದ್ದಳು. ಆದರೆ ಮಾರಿಷಿಯೋ ಬಾಬಿಲೋನಿಯಾ ಭೂತದ ಹಾಗೆ ತನ್ನ ಬೆನ್ನು ಹತ್ತಿದಾಗ, ಗುಂಪಿನಲ್ಲಿದ್ದರೂ ಅವನನ್ನು ಗುರುತಿಸಲು ತನಗೆ ಮಾತ್ರ ಸಾಧ್ಯವಾದ ಮೇಲೆ, ಚಿಟ್ಟೆಗಳಿಗೂ ಅವನಿಗೂ ವಿಚಿತ್ರವಾದ ಸಂಬಂಧವಿದೆ ಎಂದು ಅವಳಿಗೆ ಗೊತ್ತಾಯಿತು. ಮಾರಿಷಿಯೋ ಬಾಬಿಲೋನಿಯಾ ಸಂಗೀತ ಗೋಷ್ಠಿಗಳಲ್ಲಿ, ಸಿನಿಮಾದಲ್ಲಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಯಾವಾಗಲೂ ಇರುತ್ತಿದ್ದ. ಅವಳು ಅವನು ಎಲ್ಲಿದ್ದಾನೆ ಎಂದು ಹುಡುಕಬೇಕಾಗಿರಲಿಲ್ಲ. ಏಕೆಂದರೆ ಅವನಿದ್ದ ಕಡೆ ಚಿಟ್ಟೆಗಳು ಯಾವಾಗಲೂ ಇರುತ್ತಿದ್ದವು. ಒಂದು ಸಲ ಅವ್ರೇಲಿಯಾನೋ ಸೆಗುಂದೋ ಅವುಗಳ ಹಾರಾಟದಿಂದ ಎಷ್ಟು ಕಸಿವಿಸಿಗೊಂಡಿದ್ದನೆಂದರೆ ಅವಳಿಗೆ ತನಗೆ ತಿಳಿದಿರುವ ಗುಟ್ಟನ್ನು, ಅವಳೇ ಮಾತು ಕೊಟ್ಟಂತೆ ಹೇಳಿಬಿಡಬೇಕು ಎನ್ನಿಸಿತು. ಆದರೆ ಅವನು ಎಂದಿನ ಹಾಗೆ ನಕ್ಕು, “ನಿಮ್ಮಮ್ಮನಿಗೆ ಗೊತ್ತಾದರೆ ಏನು ಹೇಳ್ತಾಳೆ?” ಎನ್ನುತ್ತಾನೆ ಎಂದುಕೊಂಡಳು. ಒಂದು ದಿನ ಬೆಳಿಗ್ಗೆ ಅವಳು ಗುಲಾಬಿ ಹೂಗಳನ್ನು ಒಪ್ಪಮಾಡುತ್ತಿದ್ದಾಗ ಫೆರ್ನಾಂಡ ಕೂಗಿಕೊಂಡಳು ಮತ್ತು ಮೆಮೆ ತಾನಿದ್ದ ಸ್ಥಳದಿಂದ ಆಚೆ ಹೋದಳು. ಅದು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋಗುವಾಗ ಕೈತೋಟದಲ್ಲಿ ನಿಂತ ಸ್ಥಳವಾಗಿತ್ತು. ಅವಳು ಮತ್ತೆ ಅದೇ ರೀತಿಯ ಮಾಂತ್ರಿಕ ಘಟನೆ ಜರುಗುವುದೆಂದು ಭಾವಿಸಿದಳು, ಏಕೆಂದರೆ ಒಮ್ಮೆಲೇ ಚಿಟ್ಟೆಗಳ ರೆಕ್ಕೆ ಬಡಿತದಿಂದ ಅವಳು ಕಳವಳಗೊಂಡಿದ್ದಳು. ಅವು ಇದ್ದಕ್ಕಿದ್ದ ಹಾಗೆ ಬೆಳಕಿನಿಂದ ಹುಟ್ಟು ಪಡೆದದ್ದಾಗಿ ಮೆಮೆಗೆ ತೋರಿತು ಮತ್ತು ಅವಳ ಹೃದಯ ಒಮ್ಮೆ ಪುಟಿಯಿತು. ಆ ಸಮಯದಲ್ಲಿ ಮಾರಿಷಿಯೋ ಬಾಬಿಲೋನಿಯಾ ಒಂದು ಕಟ್ಟು ಹಿಡಿದುಕೊಂಡು ಬಂದಿದ್ದ. ಅವನು ಹೇಳಿದಂತೆ ಅದು ಪ್ಯಾಟ್ರೀಷಿಯಾ ಬ್ರೌನಿನಿಂದ ಅವಳಿಗೊಂದು ಕೊಡುಗೆಯಾಗಿತ್ತು. ಮೆಮೆ ನಾಚಿಕೆಯನ್ನು ಮರೆಮಾಚಿ, ಒಳತೋಟಿಯನ್ನು ನುಂಗಿಕೊಂಡಳು ಮತ್ತು ಸಹಜ ನಗು ಬೀರಲು ಕೂಡ ಯಶಸ್ವಿಯಾಗಿ ಅವನಿಗೆ ತನ್ನ ಕೈ ಕೈತೋಟದ ಕೆಲಸದಲ್ಲಿ ಕೊಳಕಾಗಿರುವುದರಿಂದ ಮೆಟ್ಟಿಲು ಕಂಬದ ಹತ್ತಿರ ಇಟ್ಟು ಹೋಗಲು ಹೇಳಿದಳು. ಎಲ್ಲಿ ನೋಡಿದೆನೆಂದು ನೆನಪಾಗದೆ ಕೆಲವು ತಿಂಗಳ ಹಿಂದೆ ಮನೆಯಿಂದ ಹೊರಗೆ ಹಾಕಿದ ಆ ಮನುಷ್ಯನಲ್ಲಿ ಫೆರ್ನಾಂಡ ಗುರುತಿಸಿದ್ದು ಅವನ ಒರಟು ಚರ್ಮವನ್ನು ಮಾತ್ರ. +ಫೆರ್ನಾಂಡ, “ಅವನೊಬ್ಬ ವಿಚಿತ್ರ ಮನುಷ್ಯ. ಬೇಗ ಸಾಯ್ತಾನೆ ಅಂತ ಮುಖ ನೋಡಿದ್ರೆ ಗೊತ್ತಾಗತ್ತೆ” ಎಂದಳು. +ಮೆಮೆಗೆ ತನ್ನ ತಾಯಿ ಚಿಟ್ಟೆಗಳಿ;ಂದ ಪ್ರಭಾವಿತಳಾದಳೆಂದು ತಿಳಿದಳು. ಅವರು ಗುಲಾಬಿ ಗಿಡಗಳನ್ನು ಸರಿಪಡಿಸಿದ ನಂತರ ಅವಳು ಕೈ ತೊಳೆದುಕೊಂಡು ಆ ಕಟ್ಟನ್ನು ತೆಗೆದುಕೊಂಡು ಬಿಚ್ಚಿ ನೋಡಲು ಬೆಡ್‌ರೂಮಿಗೆ ಹೋದಳು. ಅದೊಂದು ಒಂದರೊಳಗೊಂದು ಸೇರಿಕೊಳ್ಳುವ ಐದು ಪೆಟ್ಟಿಗೆಗಳ ಚೀನಾದ ಆಟಿಕೆಯಾಗಿತ್ತು. ಕೊನೆಯದರಲ್ಲಿ ಸರಿಯಾಗಿ ಬರೆಯಲು ಬಾರದವನೊಬ್ಬ, ‘ನಾವು ಶನಿವಾರ ಒಟ್ಟಿಗೆ ಸಿನಿಮಾಕ್ಕೆ ಹೋಗೋಣ\’ ಎಂದು ಕಷ್ಟಪಟ್ಟು ಬರೆದಂತಿತ್ತು. ಮೆಮೆಳಿಗೆ ಆ ಕಟ್ಟು ಬಹಳ ಸಮಯದ ತನಕ ಮೆಟ್ಟಿಲು ಕಂಬದ ಬಳಿಯೇ ಇದ್ದು, ಫೆರ್ನಾಂಡಳ ಕುತೂಹಲಕ್ಕೆ ಕಾರಣವಾಗದಿದ್ದದ್ದ್ದು ನೆನಪಾಗಿ ಶಾಕ್ ಆಯಿತು. ಅವಳಿಗೆ ಮಾರಿಷಿಯೋ ಬಾಬಿಲೋನಿಯಾನ ಧೈರ್ಯ ಹಾಗೂ ಸ್ವಂತಿಕೆಯಿಂದ ಮೆಚ್ಚಿಗೆಯಾದರೂ, ತಾನು ಅದರಂತೆ ನಡೆದುಕೊಳ್ಳುತ್ತೇನೆಂದು ತಿಳಿದ ಅವನ ಮುಗ್ಧತೆಯಿಂದ ಅವಳ ಅಂತ:ಕರಣ ಕಲಕಿತು. ಮೆಮೆಳಿಗೆ ಶನಿವಾರ ಸಾಯಂಕಾಲ ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಬೇರೊಂದು ಕಾರ್ಯಕ್ರಮ ಇದೆಯೆಂದು ಗೊತ್ತಿತ್ತು. ಆದರೂ ಇಡೀ ವಾರ ಆತಂಕದಿಂದ ಎಷ್ಟು ಕುದಿಯುತ್ತಿದ್ದಳೆಂದರೆ ಶನಿವಾರ ಒಬ್ಬಳನ್ನೇ ಸಿನಿಮಾಕ್ಕೆ ಬಿಟ್ಟು ಪ್ರದರ್ಶನ ಮುಗಿದ ಮೇಲೆ, ಕರೆದುಕೊಂಡು ಹೋಗಲು ಬರುವಂತೆ ತನ್ನ ತಂದೆಯನ್ನು ಒಪ್ಪಿಸಿದಳು. ದೀಪಗಳು ಹೊತ್ತಿಕೊಂಡಾಗ ಅವಳ ತಲೆಯ ಮೇಲೊಂದು ಚಿಟ್ಟೆ ಚಟುವಟಿಕೆಯಿಂದ ಹಾರಾಡುತ್ತಿತ್ತು. ಅನಂತರ ದೀಪಗಳು ನಂದಿದಾಗ ಮಾರಿಷಿಯೋ ಬಾಬಿಲೋನಿಯಾ ಅವಳ ಪಕ್ಕದಲ್ಲಿ ಕುಳಿತುಕೊಂಡ. ಅವಳು ತೀವ್ರ ಅನುಮಾನದ ಸುಳಿಯಲ್ಲಿ ಮುಳುಗಿ, ಕನಸಿನಲ್ಲಿ ಇರುವ ಹಾಗನ್ನಿಸಿದ ಅವಳನ್ನು ಗ್ರೀಸಿನ ವಾಸನೆಯ ಕತ್ತಲಲ್ಲಿ ಕಾಣದಿದ್ದ ಆ ಮನುಷ್ಯ ಪಾರು ಮಾಡಬೇಕಾಗಿತ್ತು +ಅವನು, “ನೀನು ಬಾರದೆ ಹೋಗಿದ್ರೆ, ಇನ್ನೆಂದೂ ನನ್ನನ್ನ ನೋಡ್ತಿರ್‍ಲಿಲ್ಲ” ಎಂದ. +ಅವನ ಕೈ ತನ್ನ ಮಂಡಿಯ ಮೇಲೆ ಬಿದ್ದದ್ದು ಮೆಮೆಳಿಗೆ ತಿಳಿಯಿತು ಮತ್ತು ತಾವಿಬ್ಬರೂ ಆ ಸಮಯದಲ್ಲಿ ಕೆಟ್ಟ ದಾರಿಯ ಅಂಚಿಲ್ಲಿರುವುದು ಗೊತ್ತಿತ್ತು. +ಅವಳು ನಗುತ್ತ, “ನಿನ್ನ ಬಗ್ಗೆ ಏನು ಆಶ್ಚರ್ಯ ಆಗತ್ತೆ ಅಂದ್ರೆ, ಏನು ಹೇಳಬಾರ್‍ದೋ ಅದನ್ನೇ ಹೇಳ್ತಿರ್‍ತೀಯ” ಎಂದಳು. +ಅವಳು ಅವನಿಗೆ ಮನಸೋತಳು. ಅವಳಿಗೆ ನಿದ್ದೆ ಬರುತ್ತಿರಲಿಲ್ಲ, ಊಟ ಸೇರುತ್ತಿರಲಿಲ್ಲ, ಅವಳ ತಂದೆಗೂ ಸಿಟ್ಟು ಬರುವಷ್ಟು ಒಂಟಿಯಾಗಿರುತ್ತಿದ್ದಳು. ಅವಳು ಫೆರ್ನಾಂಡಳನ್ನು ದಿಕ್ಕು ತಪ್ಪಿಸುವುದಕ್ಕಾಗಿ ಸುಳ್ಳಿನ ಕಂತೆ ಹೆಣೆದಳು, ಗೆಳತಿಯರನ್ನು ಮರೆತಳು. ಎಲ್ಲ ಸಂಕೋಚಗಳನ್ನು ಮೀರಿ ಯಾವುದೇ ಜಾಗದಲ್ಲಾಗಲೀ, ಯಾವ ಸಮಯದಲ್ಲಾಗಲೀ ಮಾರಿಷಿಯೋ ಬಾಬಿಲೋನಿಯಾ ಜೊತೆಗಿರುತ್ತಿದ್ದಳು. ಮೊದಮೊದಲು ಅವನ ಒರಟುತನ ಅವಳಿಗೆ ಯೋಚನೆ ತಂದಿತ್ತು. ಮೊದಲು ಅವರು ಗರಾಜ್‌ನ ಹಿಂಭಾಗದಲ್ಲಿ ಯಾರೂ ಇಲ್ಲದ ಕಡೆ ಇದ್ದಾಗ, ಅವನು ಪಶುವಿನಂತೆ ಅವಳನ್ನೆಳೆದು ಸುಸ್ತಾಗುವಂತೆ ಮಾಡಿದ್ದ. ಅದೂ ಕೂಡ ಒಂದು ಬಗೆಯ ಕೋಮಲತೆ ಎಂದು ಅರಿವಾಗಲು ಅವಳಿಗೆ ಒಂದಷ್ಟು ಸಮಯ ಬೇಕಾಯಿತು. ಅನಂತರ ಅವಳು ಅವನಿಗಾಗಿ ಮಾತ್ರ ಬದುಕಿದ್ದಳು. ಜೊತೆಗೆ ಕಂಗೆಡಿಸುವ ಉಪ್ಪು ನೀರಿಂದ ತೊಳೆದ ಗ್ರೀಸಿನ ವಾಸನೆಯಲ್ಲಿ ಮುಳುಗುವ ಅಪೇಕ್ಷೆಯಿಂದ ಕಳವಳಗೊಂಡಳು. ಅಮರಾಂತ ಸಾಯುವ ಸ್ವಲ್ಪ ಕಾಲದ ಮುಂಚೆ, ಅವಳ ಹುಚ್ಚಿನ ನಡುವೆ ಸರಳತೆಯ ಪ್ರದೇಶ ಹೊಕ್ಕು, ಭವಿಷ್ಯದ ಅನಿಶ್ಚಯದ ಬಗ್ಗೆ ನಡುಗಿ ಹೋದಳು. ಆಗ ಅವಳಿಗೆ ಕಾರ್ಡುಗಳಿಂದ ಭವಿಷ್ಯ ಹೇಳುವ ಹೆಂಗಸಿನ ಬಗ್ಗೆ ತಿಳಿದು ಬಂತು ಮತ್ತು ಅವಳನ್ನು ಭೇಟಿಯಾಗಲು ಗುಟ್ಟಾಗಿ ಹೋದಳು. ಅವಳು ಪಿಲರ್ ಟೆರ್‍ನೆರಾ. ಅವಳು ಒಳಗೆ ಬಂದದ್ದನ್ನು ಕಂಡ ಪಿಲರ್ ಟೆರ್‍ನೆರಾಳಿಗೆ ಅವಳ ಉದ್ದೇಶ ಅರಿವಾಯಿತು. ಅವಳು, ” ಕೂತ್ಕೋ. ಬ್ಯುಂದಿಯಾ ಮನೆಯವರಿಗೆ ಭವಿಷ್ಯ ಹೇಳಕ್ಕೆ ನಂಗೆ ಕಾರ್ಡುಗಳು ಬೇಕಿಲ್ಲ” ಎಂದಳು. ನೂರು ವರ್ಷದವಳಾಗಿದ್ದ ಅವಳು ತನ್ನ ಮುತ್ತಜ್ಜಿ ಎಂದು ಮೆಮೆಳಿಗೆ ಗೊತ್ತಿರಲಿಲ್ಲ ಮತ್ತು ಗೊತ್ತಾಗಲಿಲ್ಲ. ಅವಳು ಕಟು ವಾಸ್ತವತೆಯಿಂದ, ಪ್ರೇಮಿಸುವ ಹಂಬಲ ಹಾಸಿಗೆಯಲ್ಲಲ್ಲದೆ ಬೇರೆ ರೀತಿಯಲ್ಲಿ ನೆಲೆಗೊಳ್ಳುವುದಿಲ್ಲ ಎಂದು ಹೇಳಿದ ಮೇಲೆ ಅವಳು ಏನನ್ನೂ ನಂಬುತ್ತಿರಲಿಲ್ಲ. ಮಾರಿಷಿಯೋ ಬಾಬಿಲೋನಿಯಾನ ದೃಷ್ಟಿಕೋನವೂ ಅದೇ ರೀತಿ ಇದೆಯೆಂದು ತಿಳಿಸಿದಾಗ ಅವಳು ಮೆಕ್ಯಾನಿಕ್ ಎನ್ನುವ ತೀರ್ಮಾನವೇ ಅವನ ಬಗ್ಗೆ ಊಹಿಸುವುದಕ್ಕೆ ಮೂಲವೆಂದು ಮೆಮೆ ತಿಳಿದುಕೊಂಡು ಅದನ್ನು ಒಪ್ಪಲಿಲ್ಲ. ಹಾಗಾದರೆ ಪ್ರೇಮದ ಒಂದು ಮಗ್ಗಲು ಮತ್ತೊಂದು ಮಗ್ಗುಲಿನ ಪ್ರೇಮವನ್ನು ನಿರ್ನಾಮ ಮಾಡುವುದೇಕೆಂದರೆ, ತಮಗೆ ತೃಪ್ತಿಯಾದ ಮೇಲೆ ಅಪೇಕ್ಷೆಯನ್ನು ನಿರಾಕರಿಸುವುದು ಗಂಡಸರ ಸ್ವಭಾವ ಎಂದು ಯೋಚಿಸಿದಳು. ಪಿಲರ್ ಟೆರ್‍ನೆರಾ ಆ ತಪ್ಪನ್ನು ತಿದ್ದಿದಳಲ್ಲದೆ ತಾನು ಮೆಮೆಳ ಅಜ್ಜ ಅರ್ಕಾದಿಯೋನನ್ನು ಮತ್ತು ಅವ್ರೇಲಿಯಾನೋ ಹೊಸೆಯನ್ನು ಗರ್ಭಧಾರಣೆ ಮಾಡಿದ, ಸಿಂಗರಿಸಿದ ಹಾಸಿಗೆಯನ್ನು ಕೊಡುವುದಾಗಿ ಹೇಳಿದಳು. ಅಲ್ಲದೆ ಬೇಡದ ಗರ್ಭಧಾರಣೆ ತಪ್ಪಿಸಿಕೊಳ್ಳುವುದನ್ನು ತಿಳಿಸಿದಳು ಮತ್ತು ಅವಳಿಗೆ ತೊಂದರೆಯಾದ ಪಕ್ಷದಲ್ಲಿ, ಹೊರಹಾಕಿ ಕ್ಷೇಮವಾಗಿಸುವ ಸಾಸುವೆ ಪಟ್ಟಿನ ಆವಿಯ ವಿಧಾನವನ್ನು ತಿಳಿಸಿ ಕೊಟ್ಟಳು. ಆ ಭೇಟಿ ಮೆಮೆಗೆ ಕುಡಿದು ಬಂದ ರಾತ್ರಿ ಇದ್ದ ಧೈರ್ಯವನ್ನು ತಂದು ಕೊಟ್ಟಿತು. ಆದರೆ ಅಮರಾಂತಳ ಸಾವು ಅವಳಿಗೆ ನಿರ್ಧಾರವನ್ನು ಮುಂದೆ ಹಾಕುವಂತೆ ಮಾಡಿತು. ಮನೆಯೊಳಗೆ ಗುಂಪು ಸೇರಿದವರಲ್ಲಿ ಇದ್ದ ಮಾರಿಷಿಯೋ ಬಾಬಿಲೋನಿಯಾನ ಪಕ್ಕವನ್ನು ಒಂಬತ್ತು ರಾತ್ರಿಯ ಅವಧಿಯಲ್ಲಿ ಒಮ್ಮೆ ಕೂಡ ಅವಳು ಬಿಡಲಿಲ್ಲ. ಅನಂತರ ದು:ಖಸೂಚಕದ ದೀರ್ಘವಾದ ಅವಧಿ ಬಂದು ಅವರು ಒಬ್ಬರಿಂದೊಬ್ಬರು ಕೆಲವು ಕಾಲ ಬೇರೆಯಾಗಿದ್ದರು. ಅವು ಒಳತೋಟಿ ತುಂಬಿ ತಡೆಯಲಾಗದ ಆತಂಕದ ಮತ್ತು ಎಷ್ಟು ಅದುಮಿಟ್ಟ ಆಕಾಂಕ್ಷೆಗಳ ದಿನಗಳಾಗಿದ್ದವೆಂದರೆ ಮೆಮೆ ಹೊರಬರಲು ಸಾಧ್ಯವಾದ ಮೊದಲ ಸಂಜೆಯೇ ಅವಳು ನೇರವಾಗಿ ಪಿಲರ್ ಟೆರ್‍ನೆರಾಳ ಬಳಿಗೆ ಹೋದಳು. ಅವಳು ಮಾರಿಷಿಯೋ ಬಾಬಿಲೋನಿಯಾಗೆ ಯಾವುದೇ ವಿರೋಧವಿಲ್ಲದೆ, ನಾಚಿಕೆಯೆ ಇಲ್ಲದೆ, ರೀತಿ ರಿವಾಜುಗಳಿಲ್ಲದೆ ತೀವ್ರಾಪೇಕ್ಷೆಯಿಂದಲೇ ತನ್ನನ್ನು ಒಪ್ಪಿಸಿಕೊಂಡಳು. ಅದು ತೀರ ಯುಕ್ತವಾಗಿದ್ದು, ಅವನು ಅವಳಿಗಿಂತ ಅನುಮಾನಿಸುವ ಮನುಷ್ಯನಾಗಿದ್ದರೆ ಆಗಲೇ ಅದು ಅನುಭವ ಪಡೆದ ರೀತಿಯದು ಎಂಬ ಗೊಂದಲ ಉಂಟಾಗುತ್ತಿತ್ತು. ಅವರು ಮೂರು ತಿಂಗಳ ಕಾಲ ವಾರಕ್ಕೆರಡು ಬಾರಿ, ತನ್ನ ಮಗಳನ್ನು ಅನುಮಾನಿಸದೆ ಅವಳ ತಾಯಿಯ ಬಿಗಿಹಿಡಿತದಿಂದ ಮುಕ್ತಗೊಳಿಸಲು ಅವ್ರೇಲಿಯಾನೋ ಸೆಗುಂದೋನ ರಕ್ಷಣೆಯಲ್ಲಿ ಪ್ರೇಮಿಸಿದರು. +ಫೆರ್ನಾಂಡ ಆ ದಿನ ಸಿನಿಮಾ ಥಿಯೇಟರ್‌ನಲ್ಲಿ ಪತ್ತೆ ಹಚ್ಚಿದ ಮೇಲೆ ಅವ್ರೇಲಿಯಾನೋ ಸೆಗುಂದೋಗೆ ಮನಸ್ಸು ಭಾರವಾಯಿತು. ಅವನು ಫೆರ್ನಾಂಡ ಮೆಮೆಳನ್ನು ತನ್ನಲ್ಲಿಟ್ಟಿದ್ದ ನಂಬಿಕೆಯಿಂದ ವಿಷಯವನ್ನು ಹೇಳುವಳೆಂದು ಅವಳನ್ನು ಕೂಡಿ ಹಾಕಿದ್ದ ಬೆಡ್‌ರೂಮಿನಲ್ಲಿ ಕಂಡ. ಆದರೆ ಮೆಮೆ ಎಲ್ಲವನ್ನೂ ಅಲ್ಲಗೆಳೆದಳು. ಅವಳು ತನ್ನ ಬಗ್ಗೆ ಎಷ್ಟು ಖಚಿತವಾಗಿದ್ದಳೆಂದರೆ ಮತ್ತು ಎಷ್ಟು ತನ್ನ ಮಟ್ಟಿಗಿದ್ದಳೆಂದರೆ ತಮ್ಮಿಬ್ಬರ ಮಧ್ಯೆ ಇನ್ನೇನೂ ಉಳಿದಿಲ್ಲ ಎನ್ನುವ ಭಾವನೆ ಅವ್ರೇಲಿಯಾನೋ ಸೆಗುಂದೋಗೆ ಬಂತು ಮತ್ತು ಸ್ನೇಹ ಹಾಗೂ ಸೌಹಾರ್ದಗಳಿಗೆ ಬೆಲೆಯಿಲ್ಲದೆ, ಕಳೆದ ದಿನಗಳೆಲ್ಲ ಭ್ರಮೆ ಎಂದು ತೋರಿತು. ಅವನು ಬಾಬಿಲೋನಿಯಾನ ಜೊತೆ ಮಾತನಾಡಬೇಕು ಎಂದುಕೊಂಡ. ತಾನು ಅವನಿಗೆ ಹಿಂದಿನ ಬಾಸ್ ಆಗಿದ್ದರಿಂದ ಅವನು ತನ್ನ ಆಲೋಚನೆಗಳನ್ನು ಬಿಡುವನೆಂದು ಭಾವಿಸಿದ. ಆದರೆ ಪೆತ್ರಾ ಕೊತೆಸ್ ಅದು ಹೆಂಗಸಿಗೆ ಸಂಬಂಧಿಸಿದ ವಿಷಯವೆಂದು ಅವನಿಗೆ ಮನವರಿಕೆ ಮಾಡಿದಳು. ಆದ್ದರಿಂದ ಅವನು ಯಾವ ನಿರ್ಧಾರನ್ನೂ ತೆಗೆದುಕೊಳ್ಳದೆ ಹೊಯ್ದಾಡುತ್ತ, ಕೂಡಿ ಹಾಕುವುದರಿಂದ ಮಗಳ ತೊಂದರೆಗಳು ಕೊನೆಯಾಗುತ್ತವೆ ಎಂದು ನಂಬಿದ. +ಮೆಮೆ ಯಾವ ಬಗೆಯ ಸಂಕಟದ ಸೂಚನೆಯನ್ನೂ ಕೊಡಲಿಲ್ಲ. ಅದಕ್ಕೆ ಪ್ರತಿಯಾಗಿ ಪಕ್ಕದ ರೂಮಿನಿಂದ ಉರ್ಸುಲಾಗೆ ಅವಳ ನಿದ್ದೆಯಲ್ಲಿ ಶಾಂತಿಪೂರ್ಣ ಲಯ, ಕೆಲಸಗಳಲ್ಲಿ ಒಂದು ಬಗೆಯ ಪ್ರಶಾಂತತೆ, ಊಟದಲ್ಲಿನ ಕ್ರಮ ಮತ್ತು ಆರೋಗ್ಯವಂತ ಅರಗುವಿಕೆ ಗೋಚರಿಸುತ್ತಿತ್ತು. ಸುಮಾರು ಎರಡು ತಿಂಗಳ ಶಿಕ್ಷೆಯ ನಂತರ ಅವಳನ್ನು ಕಾಡಿಸಿದ ಸಂಗತಿಯೆಂದರೆ ಮೆಮೆ ಎಲ್ಲರಂತೆ ಬೆಳಿಗ್ಗೆ ಸ್ನಾನ ಮಾಡುತ್ತಿರಲಿಲ್ಲ. ಆದರೆ ಸಂಜೆ ಏಳಕ್ಕೆ ಮಾಡುತ್ತಿದ್ದಳು. ಅವಳಿಗೆ ಚೇಳುಗಳ ಬಗ್ಗೆ ಎಚ್ಚರಿಸಬೇಕು ಎಂದು ಒಂದು ಸಲ ಯೋಚಿಸಿದಳು. ಅವಳನ್ನು ತಾನು ತೊರೆದು ಬಿಟ್ಟಿದ್ದೇನೆ ಎನ್ನಿಸುವಷ್ಟು ದೂರವಾದ ತಾನು, ಮುತ್ತಜ್ಜಿಯಾದ ತನ್ನ ಅಸಂಬದ್ಧ ಮಾತುಗಳಿಂದ ಅವಳಿಗೆ ಭಂಗ ತರಬಾರದು ಎಂದುಕೊಂಡಳು. ಸಾಯಂಕಾಲ ಹಳದಿ ಚಿಟ್ಟೆಗಳು ಬರುತ್ತಿದ್ದವು. ಪ್ರತಿ ದಿನ ಮೆಮೆ ಸ್ನಾನ ಮಾಡಿ ಬಂದಾಗ ಫೆರ್ನಾಂಡ ಕ್ರಿಮಿನಾಶಕದಿಂದ ಅವುಗಳನ್ನು ಸಾಯಿಸಲು ಶ್ರಮಿಸುತ್ತಿದ್ದಳು. ಅವಳು, “ಇದು ವಿಪರೀತವಾಯ್ತು. ರಾತ್ರಿ ಹೊತ್ತು ಚಿಟ್ಟೆಗಳು ಬಂದರೆ ಕೆಟ್ಟದ್ದನ್ನು ತರುತ್ವೆ ಅಂತ ಹೇಳ್ತಾರೆ” ಎಂದಳು. ಒಂದು ರಾತ್ರಿ ಮೆಮೆ ಬಾತ್ ರೂಮಿನಲ್ಲಿದ್ದಾಗ ಫೆರ್ನಾಂಡ ಅಕಸ್ಮಾತ್ತಾಗಿ ಅವಳ ಬೆಡ್‌ರೂಮಿಗೆ ಹೋದಳು. ಅಲ್ಲಿ ಅವಳಿಗೆ ಉಸಿರಾಡಲು ಕಷ್ಟವಾಗುವಷ್ಟು ಚಿಟ್ಟೆಗಳಿದ್ದವು. ಅವಳು ಕೈಗೆ ಸಿಕ್ಕಿದ ಬಟ್ಟೆ ತೆಗೆದುಕೊಂಡು ಅವುಗಳನ್ನು ಓಡಿಸಲು ನೋಡಿದಳು. ಮಗಳ ಸಂಜೆಯ ಸ್ನಾನ ಹಾಗೂ ನೆಲದ ಮೇಲೆ ಹರಡಿ ಬಿದ್ದ ಸಾಸುವೆ ಪಟ್ಟನ್ನು ಒಂದಕ್ಕೊಂದು ಹೊಂದಿಸುತ್ತಿದ್ದಂತೆ ಅವಳ ಹೃದಯ ಮಂಜುಗಟ್ಟಿತ್ತು. ಅವಳು ಮೊದಲ ಸಲ ಮಾಡಿದ ಹಾಗೆ ಅವಕಾಶಕ್ಕೆ ಕಾಯಲಿಲ್ಲ. ಮಾರನೆ ದಿನ ಹೊಸ ಮೇಯರನ್ನು ಊಟಕ್ಕೆ ಕರೆದಳು. ಅವಳ ಹಾಗೆ ಅವನು ಎತ್ತರದ ಪ್ರದೇಶದಿಂದ ಬಂದವನಾಗಿದ್ದ. ಅವಳು ಕೋಳಿಗಳು ಕಳುವಾಗುತ್ತಿವೆ ಎಂದು ತಿಳಿದಿದ್ದರಿಂದ ಹಿಂಭಾಗದಲ್ಲಿ ಒಬ್ಬ ಗಾರ್ಡ್‌ನನ್ನು ನಿಲ್ಲಿಸುವಂತೆ ಕೇಳಿದಳು. ಆ ರಾತ್ರಿ ಮಾರಿಷಿಯೋ ಬಾಬಿಲೋನಿಯಾ ಬಾತ್ ರೂಮಿನ ಹೆಂಚುಗಳನ್ನು ತೆಗೆದು ಮೆಮೆ ಕಾಯುತ್ತಿದ್ದ ಬಾತ್‌ರೂಮಿಗೆ ಹೋಗಲು ಹವಣಿಸುತ್ತಿದ್ದಾಗ ಗಾರ್ಡ್ ಅವನನ್ನು ಹೊಡೆದುರುಳಿಸಿದ. ಮೆಮೆ ಕಳೆದ ಕೆಲವು ತಿಂಗಳುಗಳು ಪ್ರತಿ ರಾತ್ರಿ ಮಾಡಿದಂತೆ ಬೆತ್ತಲೆಯಾಗಿ, ಪ್ರೀತಿಯಿಂದ ನಲುಗುತ್ತ, ಚೇಳುಗಳು ಮತ್ತು ಚಿಟ್ಟೆಗಳ ನಡುವೆ ನಿಂತಿದ್ದಳು. ಅವನ ಬೆನ್ನ ಹುರಿಯಲ್ಲಿ ಹೊಕ್ಕ ಗುಂಡು ಜೀವನ ಪರಂತ ಹಾಸಿಗೆಯಲ್ಲೆ ಇರುವಂತೆ ಮಾಡಿತು. ಅವನು ವಯಸ್ಸಾದ ಮೇಲೆ ಏಕಾಂತದಲ್ಲಿ ಗೋಳಿಡದೆ, ವಿರೋಧಿಸದೆ, ವಿಶ್ವಾಸಘಾತ ಮಾಡದೆ, ನೆನಪುಗಳು ಮತ್ತು ಒಂದು ಗಳಿಗೆಯೂ ಶಾಂತವಾಗಿರಲು ಬಿಡದ ಹಳದಿ ಚಿಟ್ಟೆಗಳ ಚಿತ್ರಹಿಂಸೆಗೆ ಒಳಗಾಗಿ ಮತ್ತು ಕೋಳಿ ಕದ್ದವನೆಂದು ಬಹಿಷ್ಕಾರ ಹಾಕಲ್ಪಟ್ಟು ಸತ್ತ. +೧೫ +ಮಕೋಂದೋಗೆ ಮಾರಣಾಂತಿಕ ಹೊಡೆತ ಬೀಳುವಂಥ ಘಟನೆಗಳು ಮೆಮೆ ಬ್ಯುಂದಿಯಾಳ ಮಗನನ್ನು ಮನೆಗೆ ತಂದಾಗ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಆಗ ಸಾರ್ವಜನಿಕ ಸಂದರ್ಭ ಅನಿಶ್ಚಿತವಾಗಿದ್ದರಿಂದ ಯಾರೂ ವೈಯಕ್ತಿಕ ಹಗರಣವನ್ನು ಉತ್ಸಾಹದಿಂದ ಪರಿಗಣಿಸುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಮಗುವನ್ನು ಅದು ಇಲ್ಲವೇ ಇಲ್ಲ ಎನ್ನುವಂತೆ ಬಚ್ಚಿಡುವುದಕ್ಕೆ ಫೆರ್ನಾಂಡಳಿಗೆ ಆ ವಾತಾವರಣ ಸಹಕಾರಿಯಾಯಿತು. ಅವಳು ಅವನನ್ನು ಸ್ವೀಕರಿಸಲೇ ಬೇಕಾಗಿತ್ತು. ಏಕೆಂದರೆ ಅವನನ್ನು ಕರೆದುಕೊಂಡು ಬಂದ ಸಂದರ್ಭದ ಕಾರಣ ನಿರಾಕರಿಸುವಂತಿರಲಿಲ್ಲ. ಅವಳ ದೃಢ ನಿಶ್ಚಯದ ವಿರುದ್ಧ ಇಡೀ ಜೀವನ ಪರ್‍ಯಂತ ಅವನನ್ನು ಸಹಿಸಿಕೊಳ್ಳಬೇಕಾಯಿತು. ಏಕೆಂದರೆ ಅವಳ ಒಳನಿರ್ಧಾರದಂತೆ ಅವನನ್ನು ಬಾತ್‌ರೂಮಿನ ಕೊಳದಲ್ಲಿ ಮುಳುಗಿಸುವ ಧೈರ್ಯವಾಗಲಿಲ್ಲ. ಅವಳು ಅವನನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹಳೆಯ ವರ್ಕ್‌ಶಾಪ್‌ನಲ್ಲಿ ಬೀಗ ಹಾಕಿ ಇಟ್ಟಳು. ಅವನು ತೇಲುತ್ತಿದ್ದ ಬುಟ್ಟಿದಲ್ಲಿ ಸಿಕ್ಕನೆಂದು ಸಾಂತ ದೆಲಾ ಪಿಯದಾದ್‌ಗೆ ಮನವರಿಕೆ ಮಾಡಿದ್ದಳು. ಅವನ ಮೂಲವನ್ನು ಅರಿಯದೆ ಉರ್ಸುಲಾ ಸಾಯಬೇಕಿತ್ತು. ಫೆರ್ನಾಂಡ ಮಗುವಿಗೆ ಹಾಲು ಕೊಡುವಾಗ ಒಮ್ಮೆ ವರ್ಕ್‌ಶಾಪಿಗೆ ಹೋದ ಪುಟ್ಟ ಅಮರಾಂತ ಉರ್ಸುಲಾ ಕೂಡ ಮಗು ಬುಟ್ಟಿಯಲ್ಲಿ ತೇಲುತ್ತಿತ್ತು ಎಂಬ ಹೇಳಿಕೆಯನ್ನು ನಂಬಿದಳು. ಅವ್ರೇಲಿಯಾನೋ ಸೆಗುಂದೋ ಮೆಮೆಳ ದುರಂತವನ್ನು ವಿವೇಚನೆಯಿಲ್ಲದೆ ನಿಭಾಯಿಸಿದ್ದರಿಂದ ಹೆಂಡತಿಯ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ. ಅವನಿಗೆ ಮೊಮ್ಮಗನನ್ನು ಕರೆದುಕೊಂಡು ಬಂದು ಮೂರು ವರ್ಷಗಳ ತಕ ಅವನಿರುವುದೇ ಗೊತ್ತಿರಲಿಲ್ಲ. ಒಂದು ದಿನ ಮಗು ಫೆರ್ನಾಂಡಳ ಸಣ್ಣ ತಪ್ಪಿನಿಂದ ಬಂಧನದಿಂದ ತಪ್ಪಿಸಿಕೊಂಡು ಕೆಲವು ಕ್ಷಣ ಅಂಗಳದಲ್ಲಿ ಬೆತ್ತಲಾಗಿ, ಕೂದಲು ಕೆದರಿಕೊಂಡು, ಜಾಲಿ ಮರದ ಕೊಂಬಿನಂತಿದ್ದ ಭಾರಿ ಮರ್ಮಾಂಗವಿದ್ದ ಅವನು, ಮಾನವ ಮಗುವಲ್ಲ ಅದರೆ ವಿಶ್ವಕೋಶದಲ್ಲಿ ವಿವರಿಸುವ ನರಭಕ್ಷಕನಂತೆ ಅವನಿಗೆ ಕಾಣಿಸಿಕೊಂಡ. +ಫೆರ್ನಾಂಡ ಕ್ರೂರ ವಿಧಿ ಹೂಡಿದ ತಂತ್ರವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಆ ಮಗು ತನ್ನ ಮನೆಯಿಂದ ಎಂದೆಂದಿಗೂ ಒದ್ದೋಡಿಸಿದ ನಾಚಿಕೆಯನ್ನು ಮತ್ತೆ ವಾಪಸು ತಂದ ಹಾಗೆ ಅವಳಿಗನ್ನಿಸಿತ್ತು. ಬೆನ್ನು ಹುರಿ ಚಿಂದಿಯಾದ ಮಾರಿಷಿಯೋ ಬಾಬಿಲೋನಿಯಾನನ್ನು ಎತ್ತಿಕೊಂಡು ಹೋದಾಗ, ಫೆರ್ನಾಂಡ, ಎಲ್ಲ ಕುರುಹುಗಳನ್ನು ಅಳಿಸಿ ಹಾಕಲು ಅತ್ಯಂತ ಸೂಕ್ಷ್ಮ ವಿವರಗಳನ್ನು ಯೋಜಿಸಿದ್ದಳು. ಗಂಡನಿಗೆ ತಿಳಿಸದೆ, ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿ, ಸಣ್ಣ ಸೂಟ್‌ಕೇಸಿನಲ್ಲಿ ಮಗಳಿಗೆ ಮೂರು ಜೊತೆ ಬಟ್ಟೆಗಳನ್ನು ಹಾಕಿದಳು ಮತ್ತು ರೈಲಿನಲ್ಲಿ ಬರುವ ಅರ್ಧ ಗಂಟೆ ಮುಂಚೆ ಅವಳನ್ನು ಕರೆದುಕೊಂಡು ಬರಲು ಅವಳ ಬೆಡ್‌ರೂಮಿಗೆ ಹೋದಳು. +ಅವಳು, “ನಡಿ ಹೋಗೋಣ ರೆನೇಟಾ” ಎಂದಳು. +ಅವಳು ಯಾವ ವಿವರಣೆಯನ್ನೂ ಕೊಡಲಿಲ್ಲ. ಮೆಮೆ ಮಟ್ಟಿಗೆ ಅವಳು ಯಾವುದನ್ನೂ ನಿರೀಕ್ಷಿಸಿರಲಿಲ್ಲ, ಅವಳಿಗೆ ಬೇಕಾಗಿರಲಿಲ್ಲ. ಅವಳಿಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆಂದು ಗೊತ್ತಿರಲಿಲ್ಲ. ಅಷ್ಟೇ ಅಲ್ಲದೆ, ಅವಳನ್ನು ವಧಾಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರೂ ಯಾವ ವ್ಯತ್ಯಾಸವೂ ಇರುತ್ತಿರಲಿಲ್ಲ. ಅವಳಿಗೆ ಮನೆಯ ಹಿಂಬದಿಯಲ್ಲಿ ಗುಂಡಿನ ಶಬ್ದ ಕೇಳಿದ ನಂತರ ಮತ್ತು ಅದರ ಜೊತೆಗೇ ಮಾರಿಷಿಯೋ ಬಾಬಿಲೋನಿಯಾನ ನೋವಿನ ಕೂಗು ಕೇಳಿದ ಸಮಯದಿಂದ ಅವಳು ಮಾತಾಡಿರಲಿಲ್ಲ. ಅಲ್ಲದೆ ಇಡೀ ಜೀವನ ಪರ್‍ಯಂತ ಮತ್ತೆ ಮಾತನಾಡಲಿಲ್ಲ. ಅವಳ ತಾಯಿ ಬೆಡ್‌ರೂಮಿನಿಂದ ಹೊರಬರಲು ಹೇಳಿದಾಗ ಅವಳು ತಲೆ ಬಾಚಿಕೊಳ್ಳಲಿಲ್ಲ. ಮತ್ತು ಆಗಲೂ ಹಳದಿ ಚಿಟ್ಟೆಗಳು ಜೊತೆಗೆ ಬರುತ್ತಿವೆ ಎನ್ನುವುದನ್ನೂ ಗಮನಿಸದೆ ನಿದ್ದೆಯಲ್ಲಿ ನಡೆಯುವಂತೆ ಬಂದು ರೈಲಿನಲ್ಲಿ ಹತ್ತಿದಳು. ಅವಳ ಮೌನ ಗಟ್ಟಿ ಮನಸ್ಸಿನ ನಿರ್ಧಾರವೋ ಅಥವಾ ದುರಂತದ ಆಘಾತದಿಂದ ಮೂಕಳಾದಳೋ ಎಂದು ಫೆರ್ನಾಂಡ ಕಂಡು ಹಿಡಿಯಲಿಲ್ಲ ಅಥವಾ ಅಂಥ ಪ್ರಯತ್ನವನ್ನೂ ಮಾಡಲಿಲ್ಲ. ಹಿಂದೆ ಮುದ ಕೊಡುತ್ತಿದ್ದ ಪ್ರದೇಶದಲ್ಲಿನ ಪ್ರಯಾಣವನ್ನು ಗಮನಿಸಲೇ ಇಲ್ಲ. ಅವಳು ರೈಲ್ವೆ ಹಳಿಯ ಎರಡೂ ಪಕ್ಕದಲ್ಲಿದ್ದ ಕೊನೆಯಿಲ್ಲದೆ ಹಬ್ಬಿದ ಬಾಳೆ ತೋಟವನ್ನು ನೋಡಲಿಲ್ಲ. ದೂರ ಪ್ರದೇಶಗಳಿಂದ ಬಂದವರ ಬಿಳಿಮನೆಗಳನ್ನು ಅಥವಾ ಧೂಳು ಮತ್ತು ಬಿಸಿಲಿನಿಂದ ಒಣಗಿದ ಅವರ ಗಾರ್ಡ್‌ನ್ನುಗಳನ್ನು ನೋಡಲಿಲ್ಲ. ಅಥವ ತುಂಡು ಚಡ್ಡಿ ಹಾಗೂ ಪಟ್ಟಿಗಳ ಶರಟು ತೊಟ್ಟ ಹೆಂಗಸರು ಟೆರೇಸಿನ ಮೇಲೆ ಇಸ್ಪೀಟು ಆಡುತ್ತ ಕುಳಿತಿದ್ದನ್ನು ನೋಡಲಿಲ್ಲ. ಮಣ್ಣಿನ ರಸ್ತೆಗಳಲ್ಲಿ ಬಾಳೆಗೊನೆಗಳು ತುಂಬಿದ ಎತ್ತಿನ ಗಾಡಿಗಳನ್ನು ನೋಡಲಿಲ್ಲ. ತಿಳಿನೀರಿನ ನದಿಗಳಲ್ಲಿ ಡೈವ್ ಹೊಡೆಯುತ್ತ, ತಮ್ಮ ಅದ್ಭುತ ಮೊಲೆಗಳು ರೈಲಿನಲ್ಲಿ ಕುಳಿತ ಪ್ರಯಾಣಿಕರಿಗೆ ದಕ್ಕುವುದಿಲ್ಲ ಎನ್ನಿಸುವಂತೆ ಮಾಡುತ್ತಿದ್ದ ಹುಡುಗಿಯರನ್ನು ನೋಡಲಿಲ್ಲ. ಅಥವಾ ಜೀರ್ಣವಾಗಿದ್ದ ಗುಡಿಸಲುಗಳ ಬಳಿ ಮಾರಿಷಿಯೋ ಬಾಬಿಲೋನಿಯಾನನ ಹಳದಿ ಚಿಟ್ಟೆಗಳು ಹಾರಾಡುತ್ತಿರುವ ಕಡೆ ಕೆಲಸಗಾರರು ಒಟ್ಟಾಗಿದ್ದದ್ದನ್ನು, ಬಾಗಿಲುಗಳ ಹತ್ತಿರ ಕಕ್ಕಸ್ಸಿಗೆ ಕುಳಿತ ಮಕ್ಕಳನ್ನು ಮತ್ತು ರೈಲಿನ ಕಡೆ ಅವಮಾನಕರವಾಗಿ ಕೂಗುತ್ತಿದ್ದ ಗರ್ಭಿಣಿ ಹೆಂಗಸರನ್ನು ನೋಡಲಿಲ್ಲ. ಸ್ಕೂಲಿನಿಂದ ಬರುವಾಗ ಆ ಚಲಿಸುವ ನೋಟಗಳಿಂದ ಸಂಭ್ರಮಗೊಳ್ಳುತ್ತಿದ್ದ ಮೆಮೆಳ ಹೃದಯವನ್ನು ಕಿಂಚಿತ್ ಅಲ್ಲಾಡಿಸದೆ ಹೋದವು. ಅವಳು ಕಿಟಕಿಯಿಂದ ಆಚೆ ನೋಡಲಿಲ್ಲ, ಕುದಿಯುವ ಜೌಗು ಪ್ರದೇಶ ಕೊನೆಯಾದಾಗಲೂ ಕೂಡ. ಅನಂತರ ರೈಲಿನಿಂದ ಬಿದ್ದ ಇದ್ದಲಿನಿಂದ ಮಾಡಿದ ಸ್ಪೇನ್‌ನ ಯುದ್ಧದ ಹಡಗುಗಳ ಮಾದರಿಗಳನ್ನು ಇರಿಸಿದ್ದ ಹಾಗೂ ಗಸಗಸೆ ಗಿಡಗಳ ವಿಸ್ತಾರದ ಮುಖಾಂತರ ಸಾಗಿದ ಮೇಲೆ ಸಮುದ್ರದ ಪಕ್ಕದಲ್ಲಿ ತಿಳಿಗಾಳಿ, ಕೊಳಕು ನೀರು ಇರುವ ಕಡೆ, ಸುಮಾರು ಒಂದು ಶತಮಾನದ ಮೊದಲು ಹೊಸೆ ಅರ್ಕಾದಿಯೋಗೆ ಭ್ರಮನಿರಸನವಾದ ಸ್ಥಳಕ್ಕೆ ಬಂತು. +ಮಧ್ಯಾಹ್ನ ಐದು ಗಂಟೆಗೆ, ಅವರು ಜೌಗು ಪ್ರದೇಶದ ಕೊನೆಯ ಸ್ಟೇಷನ್‌ಗೆ ಬಂದಾಗ ಫೆರ್ನಾಂಡಳ ಮಾತಿನಂತೆ ರೈಲಿನಿಂದ ಹೊರಗೆ ಬಂದಳು. ಅವರು ಆಸ್ತಮಾ ತಗುಲಿದ್ದ ಕುದುರೆ ಎಳೆಯುತ್ತಿದ್ದ ದೊಡ್ಡ ಬ್ಯಾಟ್‌ನಂತಿದ್ದ ಸಣ್ಣ ಗಾಡಿಯನ್ನು ಹತ್ತಿದರು ಮತ್ತು ಜನರಿಲ್ಲದ, ಕೊನೆಯಿಲ್ಲದ ರಸ್ತೆಗಳಲ್ಲಿ ಸಾಗುವಾಗ ಫೆರ್ನಾಂಡ ಚಿಕ್ಕವಳಾಗಿದ್ದಾಗ ಮಧ್ಯಾಹ್ನದ ಮಲಗುವ ಸಮಯದಲ್ಲಿ ಕೇಳಿಸಿಕೊಳ್ಳುತ್ತಿದ್ದ ಪಿಯಾನೋ ಪಾಠದ ಧ್ವನಿ ಕೇಳಿಸಿತು. ನದಿಯಲ್ಲಿ ಅವರೊಂದು ದೋಣಿಯನ್ನು ಹತ್ತಿದರು. ಅದರ ಮರದ ಚಕ್ರ ದೊಡ್ಡದಾಗಿ ಶಬ್ದ ಮಾಡುತ್ತಿತ್ತು ಮತ್ತು ತುಕ್ಕು ಹಿಡಿದ ಅದರ ಲೋಹದ ಪ್ಲೇಟುಗಳು ಓವನ್‌ನ ಮೂತಿಯ ಹಾಗೆ ಅದುರುತ್ತಿತ್ತು. ಮೆಮೆ ತನ್ನ ಕೋಣೆಯಲ್ಲಿ ಎಲ್ಲ ಮುಚ್ಚಿ ಕುಳಿತಳು. ದಿನಕ್ಕೆ ಎರಡು ಸಲ ಫೆರ್ನಾಂಡ ಅವಳ ಹಾಸಿಗೆಯ ಬಳಿ ಊಟದ ತಟ್ಟೆ ಇಡುತ್ತಿದ್ದಳು. ಮತ್ತು ದಿನಕ್ಕೆ ಎರಡು ಸಲ ಅದನ್ನು ಇದ್ದ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದಳು. ಏಕೆಂದರೆ ಮೆಮೆ ಹಸಿವೆಯಿಂದ ಸಾಯಬೇಕೆಂದು ಮಾಡಿದ ನಿರ್ಧಾರದಿಂದಲ್ಲ, ಆದರೆ ಆಹಾರದ ವಾಸನೆಯೂ ಕೂಡ ಅವಳಿಗೆ ಬೇಡವಾಗಿತ್ತಲ್ಲದೆ, ನೀರನ್ನೂ ನಿರಾಕರಿಸಿದ್ದಳು. ಒಂದು ವರ್ಷದ ನಂತರ ಅವರು ಮಗುವನ್ನು ತರುವ ತನಕ, ತನ್ನ ಗರ್ಭಧಾರಣಾ ಶಕ್ತಿ ಸಾಸುವೆ ಪುಟ್ಟದ ಆವಿಯನ್ನು ಮೀರುವುದೆಂದು ಫೆರ್ನಾಂಡಳಿಗೆ ಗೊತ್ತಾಗದಿರುವಂತೆ, ಅವಳಿಗೂ ಗೊತ್ತಿರಲಿಲ್ಲ. ಉಸಿರುಗಟ್ಟಿಸುವ ಕೋಣೆಯಲ್ಲಿ ಮಣ್ಣನ್ನು ಎತ್ತಲು ತಿರುಗುವ ಚಕ್ರದ ಲೋಹದ ಭಾಗಗಳ ಅದುರುವಿಕೆಯ ಶಬ್ದದಿಂದ ಮೆಮೆಗೆ ಉರುಳುವ ದಿನಗಳ ಅರಿವು ತಪ್ಪಿ ಹೋಯಿತು. ತಿರುಗುವ ಫ್ಯಾನಿಗೆ ಕೊನೆಯ ಹಳದಿ ಚಿಟ್ಟೆ ಸತ್ತು ತುಂಬ ದಿನಗಳಾದ್ದರಿಂದ ಮಾರಿಷಿಯೋ ಬಾಬಿಲೋನಿಯಾ ಸತ್ತು ಹೋಗಿದ್ದಾನೆ ಎಂಬ ಸತ್ಯವನ್ನು ಅವಳು ಒಪ್ಪಿಕೊಂಡಳು. ಅದು ಅನಿವಾರ್ಯವೆಂದು ಅವಳು ಸೋಲನ್ನು ಒಪ್ಪಿಕೊಳ್ಳಲಿಲ್ಲ. ಹಿಂದೆ ಅವ್ರೇಲಿಯಾನೋ ಸೆಗುಂದೋ ಭೂಮಿಯ ಮೇಲಿನ ಅತ್ಯಂತ ಸುಂದರವಾದ ಹೆಣ್ಣನ್ನು ಹುಡುಕುತ್ತ ಅಲೆದು ದಾರಿ ತಪ್ಪಿದ ಮತ್ತು ಭ್ರಮೆಗೊಳಿಸಿದ ಪ್ರದೇಶವನ್ನು ಅವಳು ಕಷ್ಟಪಟ್ಟು ದಾಟುವಾಗ ಅವನ ಬಗ್ಗೆಯೇ ಯೋಚಿಸುತ್ತಿದ್ದಳು ಮತ್ತು ಇಂಡಿಯನ್‌ರ ಜಾಡು ಹಿಡಿದು ಪರ್ವತಗಳ ಪಕ್ಕದಲ್ಲಿ ಹೋಗಿ ಮತ್ತು ಮೂವತ್ತೆರಡು ಚರ್ಚಿನಿಂದ ಕಲ್ಲುಗಂಬದ ಮೇಲಿನ ತಾಮ್ರದ ಗಂಟೆಗಳಿಂದ ಶವ ಸಂಸ್ಕಾರದ ಗಂಟೆ ಶಬ್ದ ಮೊಳಗುವ ಮಂಕು ಬಡಿದ ಊರನ್ನು ಪ್ರವೇಶಿಸಿದರು. ಆ ರಾತ್ರಿ ಅವರು, ಖಾಲಿ ಇದ್ದ ವಸಾಹತು ಕಾಲದ ಬಂಗಲೆಯಲ್ಲಿ ಬೆಳೆದ ಬಳ್ಳಿಗಳ ಮೇಲೆ ಫೆರ್ನಾಂಡ ಹಲಗೆಗಳನ್ನೂ ಇಟ್ಟು, ಕಿಟಕಿಗಳಿದ್ದ ಪರದೆಗಳನ್ನು ಹರಿದು ಸುತ್ತಿಕೊಂಡು ಮಲಗಿದರಾದರೂ ಅವು ಮೈ ಹೊರಳಿದರೆ ತುಂಡಾಗುತ್ತಿದ್ದವು. ನಿದ್ದೆ ಬಾರದೆ ಗಾಬರಿಯಲ್ಲಿ ಕಪ್ಪು ಬಟ್ಟೆ ತೊಟ್ಟವನೊಬ್ಬ, ತಾನು ತಿಳಿದಂತೆ ಅವನು ಬಹಳ ಹಿಂದೆ ಒಂದು ಸಲ, ಕ್ರಿಸ್‌ಮಸ್‌ಗೆ ಮುಂಚೆ ಮನೆಗೆ ಸೀಸದ ಪೆಟ್ಟಿಗೆಯನ್ನು ತಂದುಕೊಟ್ಟಿದ್ದ ಎಂದು ಮೆಮೆಗೆ ನೆನಪಾಯಿತು. ಮಾರನೆ ದಿನ, ಪ್ರಾರ್ಥನೆ ಮುಗಿದ ಮೇಲೆ, ಫೆರ್ನಾಂಡ ಅವಳನ್ನು ಒಂದು ಮಬ್ಬಾದ ಬಿಲ್ಡಿಂಗ್‌ಗೆ ಕರೆದುಕೊಂಡು ಹೋದಳು. ತನ್ನ ತಾಯಿ ಹೇಳುತ್ತಿದ್ದಂತೆ ಅದು ಅವನು ರಾಣಿಯಾಗಬೇಕೆಂದು ಬೆಳೆಸಿದ ಕಾನ್‌ವೆಂಟ್ ಇರಬೇಕೆಂದು ಮೆಮೆ ಗುರುತಿಸಿದಳು ಮತ್ತು ತಾವು ಪ್ರಯಾಣದ ಅಂತ್ಯಕ್ಕೆ ಬಂದಿದ್ದೇವೆಂದು ತಿಳಿದಳು. ಪಕ್ಕದಲ್ಲಿದ್ದ ಆಫೀಸಿನಲ್ಲಿ ಫೆರ್ನಾಂಡ ಯಾರ ಜೊತೆಗೋ ಮಾತನಾಡುತ್ತಿದ್ದಾಗ ಮೆಮೆ ವಸಾಹತು ಕಾಲದ, ಸಣ್ಣನೆ ಕಪ್ಪು ಹೂಗಳಿದ್ದ ಮತ್ತು ಚಳಿಗೆ ಊದಿಕೊಂಡ ಎತ್ತರದ ಶೂ ತೊಟ್ಟು ಆರ್ಚ್‌ಬಿಷಷ್ ಅವರ ತೈಲ ಚಿತ್ರವಿದ್ದ ನಡುಮನೆಯಲ್ಲೇ ಇದ್ದಳು. ಅವಳು ನಡುಮನೆಯ ಮಧ್ಯದಲ್ಲಿ ನಿಂತು ಧೂಳು ಹಿಡಿದ ಕಿಟಕಿಯ ಗಾಜಿನಿಂದ ಹಳದಿ ಬೆಳಕಿನ ಕಿರಣಗಳ ನಡುವೆ ಮಾರಿಷಿಯೋ ಬಾಬಿಲೋನಿಯಾನ ಬಗ್ಗೆ ಯೋಚಿಸುತ್ತಿದ್ದಳು. ಆಗ ಹೊಸಬಳಾದ ಸುಂದರಿಯೊಬ್ಬಳು ಆಫೀಸಿನಿಂದ ಪೆಟ್ಟಿಗೆ ತೆಗೆದುಕೊಂಡು ಬಂದು ಬದಲಾಯಿಸಲು ಬಟ್ಟೆಗಳನ್ನು ಕೊಟ್ಟಳು ಅವಳು ಮೆಮೆಳ ಕೈ ಹಿಡಿದು, “ಬನ್ನಿ, ರೆನೇಟಾ” ಎಂದಳು. +ರೆನೇಟಾ ಅವಳ ಕೈ ಹಿಡಿದುಕೊಂಡು ಹೊರಟಳು. ಫೆರ್ನಾಂಡ ಅವಳನ್ನು ಕೊನೆಯ ಬಾರಿ ನೋಡಿದಾಗ ಅವಳು ಹೊಸಬಳ ಜೊತೆ ನಡೆಯಲು ಪ್ರಯತ್ನಿಸುತ್ತ ಕಬ್ಬಿಣದ ಗೇಟನ್ನು ಮುಚ್ಚಿ ಮುಂದಕ್ಕೆ ಹೋದಳು. ಅವಳಿನ್ನೂ ಮಾರಿಷಿಯೋ ಬಾಬಿಲೋನಿಯಾನ ಬಗ್ಗೆ, ಅವನ ಗ್ರೀಸಿನ ವಾಸನೆ, ಅವನ ಚಿಟ್ಟೆಗಳ ಬಗ್ಗೆ ಯೋಚಿಸುತ್ತಿದ್ದಳು ಮತ್ತು ಅವಳಿಗೆ ವಯಸ್ಸಾಗಿ, ಹೆಸರು ಬದಲಾಯಿಸಿ, ತಲೆ ಬೋಳಿಸಿದ ನಂತರ, ಅವಳು ಆ ಚಳಿಗಾಲದ ಬೆಳಿಗ್ಗೆ, ಯಾವ ಮಾತನ್ನೂ ಆಡದೇ ಇದ್ದು ಮಂಕಾದ ಕ್ರಾರೋ ಆಸ್ಪತ್ರೆಯಲ್ಲಿ ಸಾಯುವ ತನಕ ಅವನನ್ನು ಕುರಿತು ಯೋಚಿಸುತ್ತಲೇ ಇದ್ದಳು. +ಫೆರ್ನಾಂಡ ಶಸ್ತ್ರಧಾರಿ ಪೋಲೀಸರ ರಕ್ಷಣೆಯಲ್ಲಿ ಮಕೋಂದೋಗೆ ಹಿಂತಿರುಗಿದಳು. ಪ್ರಯಾಣ ಮಾಡುತ್ತಿರುವಾಗ ಪ್ರಯಾಣಿಕರ ಆತಂಕವನ್ನು ಉದ್ದಕ್ಕೂ ಊರುಗಳಲ್ಲಿ ಮಿಲಿಟರಿಯವರ ಸಿದ್ಧತೆಯನ್ನು ಮತ್ತು ಯಾವುದೋ ತೀರ ಗಂಭೀರವಾದದ್ದೊಂದು ಖಚಿತವಾಗಿ ಜರುಗಲಿದೆ ಎನ್ನುವಂಥ ವಾತಾವರಣವಿದ್ದದ್ದನ್ನು ನೋಡಿದಳು. ಆದರೆ ಮಕೋಂದೋಗೆ ಹೋಗುವ ತನಕ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲಿ ಅವಳಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಬಾಳೆ ಕಂಪನಿಯ ಕಾರ್ಮಿಕರನ್ನು ಮುಷ್ಕರ ಹೂಡಲು ಪ್ರಚೋದಿಸುತ್ತಿದ್ದಾನೆಂದು ಹೇಳಿದರು. ಎರಡು ವಾರಗಳ ನಂತರ ಮುಷ್ಕರ ಪ್ರಾರಂಭವಾಯಿತು. ಮತ್ತು ಅದರಿಂದ ನಿರೀಕ್ಷಿಸಿದ್ದ ರೀತಿಯಲ್ಲಿ ಪರಿಣಾಮ ಉಂಟಾಗಲಿಲ್ಲ. ಕಾರ್ಮಿಕರು ಭಾನುವಾರದಂದು ಬಾಳೆ ಗೊನೆಗಳನ್ನು ಕತ್ತರಿಸುವ ಮತ್ತು ಗಾಡಿಗೆ ತುಂಬುವುದನ್ನು ಮಾಡಬೇಕಾಗಿಲ್ಲವೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು ಮತ್ತು ಫಾದರ್ ಆಂಟೋನಿಯೋ ಇಸೆಬಲ್ ಅದರ ಪರವಾಗಿ ಮಧ್ಯೆ ಪ್ರವೇಶಿಸಿದಾಗ ಆ ನಿಲುವು ನ್ಯಾಯ ಸಮ್ಮತವಾಗಿ ತೋರಿತು. ಏಕೆಂದರೆ ಅದು ದೈವ ನಿಯಮದಂತಿದೆ ಎಂದು ಅವನ ಗ್ರಹಿಕೆಯಾಗಿತ್ತು. ಆ ವಿಜಯ ಮತ್ತು ನಂತರದ ತಿಂಗಳುಗಳಲ್ಲಿ ತೆಗೆದುಕೊಂಡ ಇತರೆ ಕ್ರಮಗಳಿಂದ ಅನಾಮಿಕನಾಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಬೆಳಕಿಗೆ ಬಂದ. ಏಕೆಂದರೆ ಅವನು ಫ್ರೆಂಚ್ ಸೂಳೆಯರನ್ನು ಊರಿನಲ್ಲಿ ತುಂಬಲು ಮಾತ್ರ ಲಾಯಕ್ಕು ಎಂದು ಜನ ಆಡಿಕೊಳ್ಳುತ್ತಿದ್ದರು. ಅವನು ದೋಣಿಯ ವ್ಯವಹಾರವನ್ನು ವ್ಯವಸ್ಥೆಗೊಳಿಸುವುದಕ್ಕೆ ಹುಂಜದ ಕಾಳಗವನ್ನು ಹರಾಜು ಹಾಕಿದ ಆವೇಶದಂತೆ ಬಾಳೆ ತೋಟದ ಕಂಪನಿಯಲ್ಲಿನ ಫೋರ್ಮನ್ ಹುದ್ದೆಯನ್ನು ತೊರೆದು ಕಾರ್ಮಿಕರ ಪರ ವಹಿಸಿದ. ಬಹಳ ಬೇಗನೆ ಅವನನ್ನು ಸಾರ್ವಜನಿಕ ಕ್ರಮದ ವಿರುದ್ಧ ಹೂಡಿದ ಅಂತರ ರಾಷ್ಟ್ರೀಯ ಸಂಚಿನ ಏಜೆಂಟ್ ಎಂದು ಗುರುತಿಸಲಾಯಿತು. ಅದೊಂದು ವಾರದಲ್ಲಿ ಒಂದು ರಾತ್ರಿ ಅವನು ಗುಪ್ತ ಸಮಾಲೋಚನೆಯಿಂದ ಹೊರಬಂದಾಗ ಅನಾಮಿಕರು ಹೊಡೆದ ನಾಲ್ಕು ರಿವಾಲ್ವರ್ ಶಾಟ್‌ಗಳಿಂದ ಪವಾಡದ ರೀತಿಯಲ್ಲಿ ಪಾರಾಗಿದ್ದ. ಅನಂತರದ ತಿಂಗಳುಗಳಲ್ಲಿ ವಾತಾವರಣ ಎಷ್ಟು ಗಂಭೀರವಾಗಿತ್ತೆಂದರೆ ಕತ್ತಲ ಮೂಲೆಯಲ್ಲಿದ್ದ ಉರ್ಸುಲಾ ಕೂಡ ಅದನ್ನು ಗ್ರಹಿಸಿದಳು ಮತ್ತು ಅವಳಿಗೆ ತಾನು ಮತ್ತೊಂದು ಸಲ ಮಗ ಅವ್ರೇಲಿಯಾನೋ ಜೇಬಿನಲ್ಲಿ ವಿಪರೀತದ ಹೋಮಿಯೋಪತಿ ಮಾತ್ರೆಗಳನ್ನು ಇಟ್ಟುಕೊಂಡಿರುತ್ತಿದ್ದ ಅಪಾಯದ ದಿನಗಳನ್ನು ಮರುಜೀವಿಸುತ್ತಿದ್ದ ಹಾಗೆ ಕಂಡಿತು. ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಳಿ ಹಿಂದಾದದ್ದನ್ನು ತಿಳಿದುಕೊಳ್ಳುವ ಸಲುವಾಗಿ ಮಾತನಾಡಲು ಪ್ರಯತ್ನಿಸಿದರು. ಆದರೆ ಅವನ ಮೇಲೆ ಆಕ್ರಮಣವಾದ ಮೇಲೆ ಯಾರಿಗೂ ಅವನಿರುವ ಜಾಗ ಗೊತ್ತಿರುವುದಿಲ್ಲ ಎಂದು ಅವ್ರೇಲಿಯಾನೋ ಸೆಗುಂದೋ ಅವಳಿಗೆ ಹೇಳಿದ. +ಉರ್ಸುಲಾ, “ಎಲ್ಲ ಅವ್ರೇಲಿಯಾನೋ ಇದ್ದ ಹಾಗೇನೇ…. ಲೋಕವೆಲ್ಲ ಮರುಕಳಿಸುತ್ತಿದೆಯೇನೋ ಅನ್ನೋ ಹಾಗೆ” ಎಂದಳು. +ಫೆರ್ನಾಂಡಳಿಗೆ ಆ ದಿನಗಳ ಅನಿಶ್ಚಯತೆ ತಟ್ಟಲಿಲ್ಲ. ತನ್ನ ಗಂಡನ ಜೊತೆ ಅವನ ಅನುಮತಿ ಇಲ್ಲದೆ ಅವಳ ಗತಿಯ ಬಗ್ಗೆ ನಿರ್ಧಾರ ತೆಗೆದುಕೊಂಡದ್ದಕ್ಕೆ ಉಂಟಾದ ತೀವ್ರವಾದ ಮನಸ್ತಾಪದ ನಂತರ ಅವಳಿಗೆ ಹೊರಗಿನ ಪ್ರಪಂಚದ ಬಗ್ಗೆ ಸಂಪರ್ಕವಿರಲಿಲ್ಲ. ತನ್ನ ಮಗಳನ್ನು ಕಾಪಾಡಲು ಪೋಲೀಸ್ ಸಹಾಯ ಪಡೆಯಲು ಅವ್ರೇಲಿಯಾನೋ ಸೆಗುಂದೋ ಸಿದ್ಧನಿದ್ದ. ಆದರೆ ಫೆರ್ನಾಂಡ ಅವನಿಗೆ ಅವಳು ಸ್ವಂತ ಇಚ್ಛೆಯಿಂದ ಕಾನ್ವೆಂಟಿಗೆ ಹೋಗಿರುವ ಪುರಾವೆಯನ್ನು ತೋರಿಸಿದಳು. ಕಬ್ಬಿಣದ ಗೇಟಿನ ಒಳಗೆ ಹೋದ ಮೇಲೆ ಮೆಮೆ ತನ್ನನ್ನು ಒಳಗೆ ಕರೆದುಕೊಂಡು ಹೋಗಲು ಬಿಟ್ಟುಕೊಟ್ಟಷ್ಟೇ ನಿರಾಸಕ್ತಿಯಿಂದ ಸಹಿ ಮಾಡಿದ್ದಳು. ಇವೆಲ್ಲದರ ಮೂಲದಲ್ಲಿ ಅವ್ರೇಲಿಯಾನೋ ಸೆಗುಂದೋ ಆ ದಾಖಲೆಗಳು ನ್ಯಾಯ ಸಮ್ಮತವಾಗಿವೆ ಎನ್ನುವುದನ್ನು ನಂಬಲಿಲ್ಲ. ಮಾರಿಷಿಯೋ ಬಾಬಿಲೋನಿಯಾ ಕೋಳಿ ಕದಿಯಲು ಅವರ ಮನೆಯ ಅಂಗಳಕ್ಕೆ ಹೋಗಿದ್ದ ಎನ್ನುವುದನ್ನು ನಂಬದೇ ಇರುವ ಹಾಗೆ. ಆದರೆ ಯಥೋಚಿತವಾದ ಅವೆರಡು ಅವನ ಮನಸ್ಸನ್ನು ಹಗುರಗೊಳಿಸಿತ್ತು. ಇದರಿಂದ ಅವನು ಯಾವುದೇ ಪಶ್ಚಾತ್ತಾಪವಿಲ್ಲದೆ ಪೆತ್ರಾ ಕೊತೆಸ್ ಬಳಿ ಹೋಗಿ ಎಂದಿನಂತೆ ಗದ್ದಲದ ಕೂಟಗಳು ಮತ್ತು ಹುಚ್ಚಾಪಟ್ಟ ತಿನ್ನುವುದರಲ್ಲಿ ತೊಡಗಿದ. ಊರಿನಲ್ಲಿದ್ದ ಅಶಾಂತಿಗೆ ಕಿವುಡಾಗಿ, ಉರ್ಸುಲಾಳ ಮೆದು ಮುನ್ಸೂಚನೆಗಳಿಗೆ ಕಿವುಡಾಗಿ ಫೆರ್ನಾಂಡ ತಾನು ಸಿದ್ಧಪಡಿಸಿದ ಯೋಜನೆಯಂತೆ ಕೊನೆಯ ಕ್ರಮ ತೆಗೆದುಕೊಂಡಳು. ಅವಳು ಮೊದಲನೆ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದ ಹೊಸೆ ಅರ್ಕಾದಿಯೋಗೆ ದೀರ್ಘವಾದ ಕಾಗದ ಬರೆದು ಅದರಲ್ಲಿ ಅವನ ಸೋದರಿ ರೆನೇಟಾ ಕಪ್ಪಗೆ ವಾಂತಿ ಮಾಡಿಕೊಂಡು ಅನಂತರ ದೈವಾಧೀನಳಾದಳೆಂದು ತಿಳಿಸಿದಳು. ಅನಂತರ ಅವಳು ಸಾಂತ ಸೋಪಿಯಾ ದೆಲಾ ಪಿಯದಾದ್‌ಗೆ ಅಮರಾಂತ ಉರ್ಸುಲಾಳನ್ನು ನೋಡಿಕೊಳ್ಳಲು ಹೇಳಿ ಮೆಮೆಳ ಕಾರಣದಿಂದ ಏರುಪೇರಾಗಿದ್ದ ಡಾಕ್ಟರ್‌ಗಳ ಜೊತೆ ಪತ್ರ ವ್ಯವಹಾರದಲ್ಲಿ ಸಂಪೂರ್ಣ ಮಗ್ನಳಾದಳು. ಅವಳು ಮಾಡಿದ ಮೊದಲನೆ ಕೆಲಸವೆಂದರೆ ಮುಂದೆ ಹಾಕಲ್ಪಡುತ್ತಿದ್ದ ಮನೋಸ್ಪರ್ಶ ಆಪರೇಷನ್‌ಗೆ ನಿಗದಿತ ದಿನಾಂಕ ಕೊಡುವ ಕಾರ್ಯ. ಆದರೆ ಕಾಣದ ಡಾಕ್ಟರ್‌ಗಳು ಮಕೋಂದೋದಲ್ಲಿ ಸಾಮಾಜಿಕ ಆಂದೋಲನ ನಡೆಯುತ್ತಿರುವ ತನಕ ಅದು ಸಾಧ್ಯವಿಲ್ಲವೆಂದು ಉತ್ತರಿಸಿದರು. ಅವಳಿಗೆ ಅದು ಎಷ್ಟು ತುರ್ತಿನ ವಿಷಯವಾಗಿತ್ತೆಂದರೆ, ಮತ್ತು ಎಷ್ಟು ಅಸಮರ್ಪಕ ಮಾಹಿತಿ ಇತ್ತೆಂದರೆ, ಅವಳು ಇನ್ನೊಂದು ಕಾಗದದಲ್ಲಿ ಯಾವುದೇ ರೀತಿಯ ಆಂದೋಲನ ಇಲ್ಲವೆಂದೂ ಮತ್ತು ಹಿಂದೆ ನದಿಯ ದೋಣಿಗಳ ವಿಷಯದಲ್ಲಿ ತಲೆಹಾಕಿದಂತೆ ಹಾಗೂ ಆ ದಿನಗಳಲ್ಲಿ ಕಾರ್ಮಿಕ ಸಂಘದ ಜೊತೆ ಒಡನಾಡುತ್ತಿರುವ ತನ್ನ ಭಾವನೆ ಹುಚ್ಚು ಅಭ್ಯಾಸವೆಂದು ಬರೆದಳು. ಆಗಲೂ ಅವರ ನಡುವೆ ‘ಬುಧವಾರ\’ ಕುರಿತು ಒಮ್ಮತವಿರದಿದ್ದ ಸಮಯದಲ್ಲಿ, ಕೈಯಲ್ಲೊಂದು ಬುಟ್ಟಿಯನ್ನು ಹಿಡಿದುಕೊಂಡಿದ್ದ ನನ್ ಒಬ್ಬಳು ಬಾಗಿಲು ಬಡಿದಳು. ಬಾಗಿಲು ತೆಗೆದಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಅದನ್ನು ಕೊಡುಗೆ ಎಂದು ತಿಳಿದು ಲೇಸಿನಿಂದ ಮುಚ್ಚಿದ್ದ ಬುಟ್ಟಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಳು. ಆದರೆ ನನ್ ಅವಳನ್ನು ತಡೆದು ಅದನ್ನು ತಾನೇ ಗುಟ್ಟಾಗಿ ಫೆರ್ನಾಂಡಳಿಗೆ ಮಾತ್ರ ಕೊಡಬೇಕೆಂದು ತನಗೆ ಆದೇಶವಿದೆ ಎಂದು ಹೇಳಿದಳು. ಅದರಲ್ಲಿ ಇದ್ದದ್ದು ಮೆಮೆಳ ಮಗ. ಫೆರ್ನಾಂಡಳ ಆಧ್ಯಾತ್ಮಿಕ ನಿರ್ದೇಶಕ ಮಗು ಹುಟ್ಟಿ ಎರಡು ತಿಂಗಳಾಯಿತೆಂದೂ, ಅದರ ತಾಯಿ ತನ್ನ ಇಷ್ಟವನ್ನು ಹೇಳಲು ತುಟಿ ಎರಡು ಮಾಡದ ಕಾರಣ, ತಮಗೆ ಅವನಿಗೆ ಅವ್ರೇಲಿಯಾನೋ ಎಂದು ಅವರ ಅಜ್ಜನ ಹೆಸರನ್ನು ಇಡುವ ಸುಯೋಗ ದೊರಕಿತೆಂದೂ ತಿಳಿಸಿದ್ದರು. ವಿಧಿ ಹೂಡಿದ ಆಟದಿಂದ ಫೆರ್ನಾಂಡಳಲ್ಲಿ ಉರಿ ಹೊತ್ತಿಕೊಂಡಿತು. ಆದರೆ ಅದನ್ನು ನನ್ ಎದುರು ತೋರ್ಪಡಿಸದಿರುವುದಕ್ಕೆ ಅವಳಲ್ಲಿ ಸಾಕಷ್ಟು ಶಕ್ತಿಯಿತ್ತು. +ಅವಳು, “ನಾವು ಇವನನ್ನ ತೇಲುತ್ತಿದ್ದ ಬುಟ್ಟೀಲಿ ಸಿಕ್ಕ ಅಂತ ಹೇಳ್ತೀವಿ” ಎಂದಳು. +ನನ್, “ಅದನ್ನ ಯಾರೂ ನಂಬಲ್ಲ” ಎಂದಳು. +ಫೆರ್ನಾಂಡ, “ಬೈಬಲ್‌ನಲ್ಲಿರೋದನ್ನ ನಂಬೋದಾದ್ರೆ, ನಾನು ಹೇಳಿದ್ದನ್ನು ಯಾಕೆ ನಂಬಕೂಡದು ಅಂತ ನಂಗೆ ತಿಳಿಯಲ್ಲ” ಎಂದಳು. +ಟ್ರೈನಲ್ಲಿ ವಾಪಸು ಹೋಗಲು ಕಾಯುತ್ತಿದ್ದ ನನ್ ಅವರ ಮನೆಯಲ್ಲೆ ಊಟ ಮಾಡಿದಳು ಮತ್ತು ಅವಳಿಗಿದ್ದ ಸೂಚನೆಯ ಪ್ರಕಾರ ಅವಳು ಮಗುವಿನ ಬಗ್ಗೆ ಮತ್ತೆ ಮಾತನಾಡಲಿಲ್ಲ. ಆದರೆ ಫೆರ್ನಾಂಡಳ ದೃಷ್ಟಿಯಲ್ಲಿ ಅವಳು ಅನಪೇಕ್ಷಣೀಯ ಹೀನಾಯಕ್ಕೆ ಸಾಕ್ಷಿಯಂತಿದ್ದಳು. ಅವರು ಹಿಂದಿನ ಕಾಲದಲ್ಲಿದ್ದ ಕೆಟ್ಟ ಸುದ್ದಿ ತಂದವರನ್ನು, ನೇಣು ಹಾಕುವ ಪದ್ಧತಿಯನ್ನು ಕೈಬಿಟ್ಟಿದ್ದೇಕೆ ಎಂದುಕೊಂಡಳು. ಆಗಲೇ ಅವಳು ಮಗುವನ್ನು ತೊಟ್ಟಿಯ ನೀರಲ್ಲಿ ಮುಳುಗಿಸಿ ಕೊಲ್ಲುವ ನಿರ್ಧಾರ ಮಾಡಿದ್ದು. ಆದರೆ ಅವಳಿಗೆ ಗಟ್ಟಿ ಮನಸ್ಸಿರಲಿಲ್ಲ ಮತ್ತು ಅವಳು ದೈವ ಕೃಪೆಯಿಂದ ಕೋಪ ಕೊನೆಗೊಳ್ಳುವ ತನಕ ತಾಳ್ಮೆಯಿಂದ ಕಾಯಲು ಬಯಸಿದಳು. +ಹೊಸೆ ಅವ್ರೇಲಿಯಾನೋ ಒಂದು ವರ್ಷದವನಿದ್ದಾಗ ಯಾವ ಮುನ್ಸೂಚನೆ ಇಲ್ಲದೆ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಭೂಗತರಾಗಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಇತರ ಯೂನಿಯನ್ ಮುಖಂಡರು ಅದೊಂದು ವಾರದ ಕೊನೆಯಲ್ಲಿ ದಿಢೀರನೆ ಕಾಣಿಸಿಕೊಂಡು ಬಾಳೆ ಪ್ರದೇಶದ ಊರುಗಳಲ್ಲೆಲ್ಲ ಪ್ರದರ್ಶನಗಳನ್ನು ಏರ್ಪಡಿಸಿದರು. ಪೋಲೀಸರು ಸಾರ್ವಜನಿಕ ವ್ಯವಸ್ಥೆಯನ್ನು ಮಾತ್ರ ನೋಡಿಕೊಂಡರು. ಸೋಮವಾರ ರಾತ್ರಿ ಮುಖಂಡರುಗಳನ್ನು ಅವರ ಮನೆಗಳಿಂದ ಕರೆದುಕೊಂಡು ಹೋದರು ಮತ್ತು ಪ್ರಾಂತದ ರಾಜಧಾನಿಯಲ್ಲಿ ಕಾಲಿಗೆ ಎರಡು ಪೌಂಡು ಸರಪಳಿ ಬಿಗಿದು ಜೈಲಿಗೆ ಹಾಕಿದರು. ಹಾಗೆ ಮಾಡಿದವರಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಮೆಕ್ಸಿಕೋ ಕ್ರಾಂತಿಯಲ್ಲಿ ಕರ್ನಲ್ ಆಗಿದ್ದು ಮಕೋಂದೋದಲ್ಲಿ ಆಶ್ರಯ ಪಡೆದಿದ್ದ ಲೋರೆನ್‌ಜೋ ಇದ್ದ. ಅವನು ಆರ್ತೆಮಿಯೋ ಕ್ರುಜ್‌ನ ಸಾಹಸ ಕೃತ್ಯಗಳಿಗೆ ಸಾಕ್ಷಿಯಾಗಿದ್ದೆನೆಂದು ಹೇಳಿz. ಅವರನ್ನು ಮೂರು ತಿಂಗಳಲ್ಲಿ ಬಿಡುಗಡೆ ಮಾಡಿದರು. ಏಕೆಂದರೆ ಸರ್ಕಾರ ಮತ್ತು ಬಾಳೆ ತೋಟದ ಕಂಪನಿಯವರು ಅವರಿಬ್ಬರಿಗೆ ಜೈಲಿನಲ್ಲಿ ಯಾರು ಊಟ ಹಾಕಬೇಕು ಎನ್ನುವ ವಿಷಯದಲ್ಲಿ ಒಮ್ಮತಕ್ಕೆ ಬರಲಿಲ್ಲ. ಈ ಬಾರಿ ಕಾರ್ಮಿಕರ ವಿರೋಧ ಅವರಿರುವ ಮನೆಗಳಲ್ಲಿ ಕಕ್ಕಸ್ಸಿನ ವ್ಯವಸ್ಥೆ, ವೈದ್ಯಕೀಯ ಸೇವೆ ಸರಿ ಇಲ್ಲದಿರುವುದು ಮತ್ತು ಕೆಲಸದ ವಾತಾವರಣದ ಕಳಪೆ ಪರಿಸ್ಥಿತಿಗಳಾಗಿತ್ತು. ಜೊತೆಗೆ ಅವರು ಹೇಳಿದ್ದೇನೆಂದರೆ ಹಣದ ಬದಲು ಚೀಟಿ ಕೊಡುತ್ತಿದ್ದಾರೆಂದೂ ಮತ್ತು ಅದು ಕಂಪನಿಯವರು ತಿಳಿಸಿದಲ್ಲಿ ಮಾತ್ರ ಸಾಮಾನು ಕೊಳ್ಳಲು ಸಾಧ್ಯವೆಂದು ಹೇಳಿದರು. ಹೊಸೆ ಅರ್ಕಾದಿಯೋ ಸೆಗುಂದೋನನ್ನು ಜೈಲಿನಲ್ಲಿ ಇಡಲಾಯಿತು. ಏಕೆಂದರೆ ಅವನು ಚೀಟಿ ವ್ಯವಸ್ಥೆಯಿಂದ, ಹಣ್ಣಿನ ಹಡಗುಗಳಿಗೆ ಹಣ ಒದಗಿಸಲು ದಾರಿ ಮತ್ತು ಹಾಗೆ ಮಾಡದಿದ್ದರೆ, ಮಾರಾಟದ ಪ್ರತಿನಿಧಿಗಳು ನ್ಯೂ ಆರ್‍ಲೆನ್ಸ್‌ನಿಂದ ಬಾಳೆ ಬೆಳೆಯುವ ನೌಕಾತೀರಗಳಿಗೆ ಖಾಲಿ ಹೋಗಬೇಕಾಗುತ್ತೆಂದು ತಿಳಿಸಿದ. ಇತರ ಬೇಡಿಕೆಗಳು ಸಾಮಾನ್ಯವಾದಂಥವು. ಕಂಪನಿ ವೈದ್ಯ ರೋಗಿಗಳನ್ನು ಪರೀಕ್ಷಿಸದೆ ಒಬ್ಬರ ಹಿಂದೆ ಮತ್ತೊಬ್ಬರನ್ನು ಆಸ್ಪತ್ರೆಯಲ್ಲಿ ಸಾಲಾಗಿ ನಿಲ್ಲಿಸುತ್ತಾನೆ ಮತ್ತು ನರ್ಸೊಬ್ಬಳು ರೋಗಿಗಳಿಗೆ ಮಲೇರಿಯಾ ಇರಲಿ, ಗನೋರಿಯಾ ಇರಲಿ, ಅಥವಾ ಹೊಟ್ಟೆ ಕಟ್ಟಿದರೂ ಸರಿಯೆ ಅವರ ನಾಲಗೆ ಮೇಲೆ ಕಾಪರ್ ಸಲ್‌ಫೇಟ್ ಬಣ್ಣದ ಮಾತ್ರೆಯನ್ನು ಇಡುತ್ತಾಳೆ ಎಂದು. ಅದೆಷ್ಟು ಸಾಮಾನ್ಯವಾದ ನಿವಾರಣೆಯಾಗಿತ್ತೆಂದರೆ ಮಕ್ಕಳು ಅದನ್ನು ನುಂಗುವ ಬದಲು ಮನೆಗೆ ಆಟಕ್ಕೆ ಉಪಯೋಗಿಸಲು ತೆಗೆದುಕೊಂಡು ಹೋಗುತ್ತಿದ್ದರು. ಕಂಪನಿ ಕೆಲಸಗಾರರನ್ನು ಅಸಹ್ಯವಾಗಿ ಕೊಠಡಿಗಳಲ್ಲಿ ಗುಂಪುಗೂಡಿಸಲಾಗಿತ್ತು. ಎಂಜಿನಿಯರ್‌ಗಳು ಖಾಯಂ ಆದ ಕಕ್ಕಸ್ಸುಗಳನ್ನು ಮಾಡದೆ ಕ್ರಿಸ್‌ಮಸ್ ಸಮಯದಲ್ಲಿ ಐವತ್ತು ಜನರಿಗೊಂದರಂತೆ ಸ್ಥಳಾಂತರಿಸಲು ಸಾಧ್ಯವಾಗುವ ಕಕ್ಕಸ್ಸುಗಳನ್ನು ತಂದು ಅವು ಹೆಚ್ಚು ಕಾಲ ಇರಬೇಕಾದರೆ ಹೇಗೆ ಉಪಯೋಗಿಸಬೇಕು ಎಂದು ಪ್ರದರ್ಶಿಸುತ್ತಿದ್ದರು. ಹಿಂದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಸುತ್ತುಗಟ್ಟಿದ ಕಪ್ಪು ಉಡುಪಿನ ಈಗ ಬಾಳೆ ತೋಟದ ಕಂಪನಿಯವರ ನಿಯಂತ್ರಣದಲ್ಲಿದ್ದ ಲಾಯರುಗಳು, ಆ ಬೇಡಿಕೆಗಳನ್ನು ವಿಚಿತ್ರವೆನ್ನಿಸುವ ತೀರ್ಮಾನಗಳಿಂದ ತಳ್ಳಿ ಹಾಕಿದರು. ಕಾರ್ಮಿಕರು ಅವಿರೋಧವಾದ ಅಹವಾಲುಗಳ ಪಟ್ಟಿಯನ್ನು ಮುಂದಿಟ್ಟಾಗ ಅವುಗಳನ್ನು ಅಧಿಕೃತವಾಗಿ ಬಾಳೆ ತೋಟದ ಕಂಪನಿ ಪ್ರಕಟಪಡಿಸಲು ಬಹಳ ಸಮಯ ಹಿಡಿಯಿತು. ಮಿಸ್ಟರ್ ಬ್ರೌನ್‌ಗೆ ಒಪ್ಪಂದದ ಬಗ್ಗೆ ತಿಳಿದಾಗ ಅವನು ಕಂಪನಿಯ ಹೆಚ್ಚು ಪ್ರಭಾವವಿರುವ ಪ್ರತಿನಿಧಿಗಳ ಜೊತೆಗೂಡಿ ಐಷಾರಾಮದ ಗಾಜಿನ ರೈಲಿನ ಬಂಡಿಯಲ್ಲಿ ಮಕೋಂದೋವನ್ನು ಬಿಟ್ಟು ಹೊರಟ. ಆದರೂ ಕೂಡ ಕೆಲವು ಕೆಲಸಗಾರರು ನಂತರದ ಶನಿವಾರ ಸೂಳೆಯರ ಮನೆಯಲ್ಲಿ ಅವರಲ್ಲೊಬ್ಬನನ್ನು ಕಂಡು, ಬಲೆಗೆ ಬೀಳಿಸಲು ಸಹಾಯ ಮಾಡಿದ ಹೆಂಗಸಿನ ಜೊತೆ ಬೆತ್ತಲೆಯಾಗಿರುವಾಗಲೇ ಬೇಡಿಕೆಗಳ ಪಟ್ಟಿಯ ಪ್ರತಿಯ ಮೇಲೆ ಸಹಿ ಮಾಡುವಂತೆ ಮಾಡಿದರು. ಲಾಯರುಗಳು ಅವನಿಗೂ ಕಂಪನಿಗೂ ಸಂಬಂಧವಿಲ್ಲವೆಂದು ಕೋರ್ಟ್‌ನಲ್ಲಿ ಪುರಾವೆ ಒದಗಿಸಿದರು ಮತ್ತು ಯಾರಿಗೂ ಅನುಮಾನ ಬರಬಾರದೆಂದು ಅವನೊಬ್ಬ ನಕಲಿ ಮನುಷ್ಯನೆಂದು ಜೈಲಿಗೆ ಹಾಕಿಸಿದರು. ಅನಂತರ ಮಿಸ್ಟರ್ ಬ್ರೌನ್ ಮೂರನೆ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದನ್ನು ಕಂಡು ಅವನಿಂದ ಬೇಡಿಕೆಗಳ ಪ್ರತಿಗೆ ಸಹಿ ಮಾಡಿಸಿದರು. ಮಾರನೆ ದಿನ ಅವನು ತಲೆಗೂದಲಿಗೆ ಬೇರೆ ಬಣ್ಣ ಬಳಿದುಕೊಂಡು ಚೊಕ್ಕ ಸ್ಪ್ಯಾನಿಷ್ ಭಾಷೆ ಮಾತನಾಡುತ್ತ ನ್ಯಾಯಾಧೀಶರ ಮುಂದೆ ಹಾಜರಾದ. ಲಾಯರುಗಳು ಅವನು ಬಾಳೆ ತೋಟದ ಕಂಪನಿಯ ಸೂಪರಿಂಟೆಡೆಂಟ್ ಆದ, ಅಲಬಾಮಾದ ಪ್ಯಾಟ್ಟಿವಿಲ್ಲೆನಲ್ಲಿ ಹುಟ್ಟಿದ ಮಿಸ್ಟರ್ ಜಾಕ್ ಬ್ರೌನ್ ಅಲ್ಲವೆಂದು ಹೇಳಿದರು. ಆಗ ಅವನು ಮಕೋಂದೋದಲ್ಲಿ ಹುಟ್ಟಿದ ಔಷಧಿ ಸಸ್ಯಗಳ ಮಾರಾಟಗಾರನೆಂದು ಮತ್ತು ಅವನ ಹೆಸರು ಡಗಬೇರ್ಟೊ ಫಾನ್ಸಿಕಾ ಎಂದರು. ಸ್ವಲ್ಪ ಸಮಯದ ನಂತರ ಕೆಲಸಗಾರರು ಮತ್ತೊಂದು ಪ್ರಯತ್ನ ಮಾಡಿದಾಗ, ಲಾಯರುಗಳು ಕಳೆದ ಜೂನ್ ಒಂಬತ್ತನೇ ತಾರೀಖು ಚಿಕಾಗೋದಲ್ಲಿ ಅಗ್ನಿಶಾಮಕ ವಾಹನಕ್ಕೆ ಸಿಕ್ಕು ಮಿಸ್ಟರ್ ಬ್ರೌನ್ ಸತ್ತು ಹೋದ ಎನ್ನುವುದಕ್ಕೆ, ಸಲಹೆಗಾರರು ಮತ್ತು ವಿದೇಶಿ ಮಂತ್ರಿಗಳು ಅನುಮೋದಿಸಿದನ್ನು ಹಾಗೂ ಅವನ ಮರಣದ ಸರ್ಟಿಫಿಕೇಟನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು. ಆ ಬಗೆಯ ಹುಚ್ಚಾಟದಿಂದ ಸುಸ್ತಾದ ಕಾರ್ಮಿಕರು ಮಕೋಂದೋದ ಅಧಿಕಾರಿಗಳಿಗೆ ಮುಖ ತಿರುಗಿಸಿ ಮೇಲಿನ ಕೋರ್ಟುಗಳಿಗೆ ಬೇಡಿಕೆ ಸಲ್ಲಿಸಿದರು. ಅಲ್ಲಿ ಮೋಸದ ಲಾಯರುಗಳು ಬೇಡಿಕೆಗಳು ಏನೂ ಸಮಂಜಸವಾಗಿಲ್ಲವೆಂದು ಸಮರ್ಥಿಸಿದರು. ಇದಕ್ಕೆ ಸರಳವಾದ ಕಾರಣವೆಂದರೆ ಬಾಳೆ ತೋಟದ ಕಂಪನಿಯ ಸೇವೆಯಲ್ಲಿ ಯಾವ ಕೆಲಸಗಾರರೂ ಇಲ್ಲ. ಹಿಂದೆಯೂ ಇರಲಿಲ್ಲ ಮತ್ತು ಇರುವುದೂ ಇಲ, ಏಕೆಂದರೆ ಅವರೆಲ್ಲ ತಾತ್ಕಾಲಿಕ ಆಧಾರದ ಮೇಲೆ, ಆಗಾಗ್ಗೆ ತೆಗೆದುಕೊಂಡ ಬಾಡಿಗೆ ಕೆಲಸಗಾರರು ಎಂದರು. ಹೀಗಾಗಿ ಬೇಡಿಕೆಗಳೆಲ್ಲ ಅರ್ಥವಿಲ್ಲದಂತಾದವು. ಹಾಗೆಯೇ ಗುಳಿಗೆಗಳು ಮತ್ತು ಕಕ್ಕಸ್ಸು ಕೂಡ. ಅಲ್ಲದೆ ಕೋರ್ಟಿನ ಆದೇಶದ ಪ್ರಕಾರ ಕೆಲಸಗಾಗರರೇ ಇರಲಿಲ್ಲವೆಂದು ಸಿದ್ಧವಾಯಿತು. +ದೊಡ್ಡ ಮುಷ್ಕರ ಪ್ರಾರಂಭವಾಯಿತು. ಬೆಳೆಯುವುದೆಲ್ಲ ಅರ್ಧಕ್ಕೆ ನಿಂತಿತು. ಹಣ್ಣುಗಳು ಮರದಲ್ಲೆ ಕೊಳೆತವು. ರೈಲಿನ ನೂರಿಪ್ಪತ್ತು ಬೋಗಿಗಳು ಪಕ್ಕದ ಕಂಬಿಗಳಲ್ಲಿ ನಿಂತವು. ಟರ್ಕಿಗಳ ರಸ್ತೆಯ ಶನಿವಾರದ ಪ್ರತಿಧ್ವನಿ ಕೆಲವು ದಿನಗಳ ತನಕ ಮುಂದುವರೆಯಿತು. ಹೊಟೆಲ್ ಜಾಕೊಬ್‌ನ ರೂಮುಗಳನ್ನು ಇಪ್ಪತ್ನಾಲ್ಕು ಗಂಟೆಗಳ ಸರದಿಯ ಆಧಾರದ ಮೇಲೆ ವ್ಯವಸ್ಥೆಮಾಡಬೇಕಾಯಿತು. ಆ ದಿನ ಹೊಸೆ ಅರ್ಕಾದಿಯೋ ಸೆಗುಂದೋ ಅಲ್ಲಿದ್ದಾಗ ಸಾರ್ವಜನಿಕ ಕಾನೂನು ವ್ಯವಸ್ಥೆಯನ್ನು ಮರುಸ್ಥಾಪಿಸುವುದನ್ನು ಸೇನೆಗೆ ವಹಿಸಿಕೊಡಲಾಗಿದೆ ಎಂದು ಪ್ರಕಟಿಸಲಾಯಿತು. ಅದು ಹೊಸೆ ಅರ್ಕಾದಿಯೋಗೆ, ಹಿಂದೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಗುಂಡಿಕ್ಕಿ ಸಾಯಿಸುವುದನ್ನು ನೋಡಲು ಅವಕಾಶ ಮಾಡಿಕೊಟ್ಟ ಆ ದಿನ ಬೆಳಿಗ್ಗೆಯಿಂದ ಕಾಯುತ್ತಿದ್ದ, ತನ್ನ ಸಾವಿನ ಪ್ರಕಟಣೆಯಂತೆ ತೋರಿತು. ಆ ಅಪಶಕುನ ಅವನ ಗಾಂಭೀರ್‍ಯವನ್ನು ಬದಲಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ಡ್ರಮ್ಮುಗಳ ಶಬ್ದ, ಬ್ಯೂಗಲ್‌ಗಳ ಶಬ್ದ, ಜನರ ಓಡಾಟ, ಕಿರುಚಾಟಗಳೆಲ್ಲ ಅಂತ್ಯವನ್ನು ಸೂಚಿಸಿದವಲ್ಲದೆ, ತನ್ನೊಡನೆ ತಾನು ಮೌನವಾಗಿ, ಒಬ್ಬಂಟಿಯಾಗಿ, ದಂಡನೆಯ ಸಮಯದಿಂದಲೂ ಮಾಡುತ್ತಿದ್ದ ಹೋರಾಟ ಕೊನೆಯಾಯಿತೆಂದು ಹೇಳಿದವು. ಅನಂತರ ಅವನು ಹೊರಗೆ ರಸ್ತಗೆ ಹೋಗಿ ಅವರನ್ನು ನೋಡಿದ. ಅಲ್ಲಿ ಮೂರು ರೆಜಿಮೆಂಟುಗಳಿದ್ದವು ಮತ್ತು ಅವರ ಹೆಜ್ಜೆ ಶಬ್ದ ಭೂಮಿಯನ್ನು ಅದುರುವಂತೆ ಮಾಡುತ್ತಿದ್ದವು. ಅವುಗಳಿಂದ ಹೊರಡುತ್ತಿದ್ದ ಭೀಕರ ಘೂಂಕರಿಕೆ ಮಧ್ಯಾಹ್ನದ ಬೆಳಕನ್ನು ಮಾರಕವಾದ ಹಬೆಯಿಂದ ತುಂಬಿ ಹೋಯಿತು. ಅವರು ಕುಳ್ಳಗೆ, ದಪ್ಪಗೆ, ಕ್ರೂರವಾಗಿದ್ದರು. ಅವರು ಕುದುರೆಯಂತೆ ಬೆವರುತ್ತಿದ್ದರು ಮತ್ತು ಅದಕ್ಕೆ ಸೂರ್ಯನ ಶಾಖದಿಂದ ಬಣ್ಣಗೆಟ್ಟ ಚರ್ಮದ ವಾಸನೆ ಇತ್ತು. ಕಡಿಮೆ ಮಾತಿನವರಾದ ಅವರು ಒಳನಾಡಿನಿಂದ ಬಂದು, ಹಿಡಿದಿದ್ದನ್ನು ಬಿಡದೆ ಸಾಧಿಸುವರಾಗಿದ್ದರು. ಅವರಿಗೆ ಅಲ್ಲಿಂದ ಹಾದು ಹೋಗಲು ಒಂದು ಗಂಟೆ ಬೇಕಾದರೂ ಅಲ್ಲಿಯೇ ವೃತ್ತ ಸುತ್ತುತ್ತಿದ್ದಾರೆ ಎಂಬ ಭಾವನೆ ಉಂಟಾಗುತ್ತಿತ್ತು. ಏಕೆಂದರೆ ಅವರೆಲ್ಲ ಒಬ್ಬಳೇ ಹಾದರಗಿತ್ತಿಗೆ ಹುಟ್ಟಿದವರಂತೆ ಕಾಣುತ್ತಿದ್ದರು. ಮನಸ್ಸಿಗೆ ಏನೂ ನಾಟದ ಅವರು ತಮ್ಮ ಸಾಮಾನುಗಳ ಜೊತೆಗೆ ಅಲಗುಗಳಿದ್ದ ಬಂದೂಕುಗಳನ್ನು, ನಾಚಿಕೆಗೇಡಿತವನ್ನು, ವಿಧೇಯತೆಯನ್ನು ಹಾಗೂ ಗೌರವದ ಭಾವನೆಯನ್ನು ಹೊತ್ತಿದ್ದರು. ಉರ್ಸುಲಾ ಅವರು ಹಾದು ಹೋಗುವುದನ್ನು ಹಾಸಿಗೆಯಿಂದ ಕೇಳಿಸಿಕೊಂಡಳು ಮತ್ತು ಅವಳು ಬೆರಳುಗಳಿಂದ ಕ್ರಾಸ್ ಚಿಹ್ನೆಯನ್ನು ಮಾಡಿದಳು. ಸಾಂತ ಸೋಫಿಯಾ ದೆಲಾ ಪಿಯದಾದ್ ಆಗ ತಾನೆ ಇಸ್ತ್ರಿ ಮಾಡಿದ ಕಸೂತಿ ಹಾಕಿದ ಟೇಬಲ್ ಕ್ಲಾತ್ ಮೇಲೆ ಬಾಗಿ ಒಂದು ಕ್ಷಣವಿದ್ದಳು. ಅವಳಿಗೆ ಅವಳ ಮಗ ಹೊಸೆ ಅರ್ಕಾದಿಯೋ ಸೆಗುಂದೋನ ನೆನಪಾಯಿತು. ಅವನು ಮುಖ ಚಹರೆ ಬದಲಿಸದೆ ಸೈನಿಕರು ಹೊಟೆಲ್ ಜಾಕೊಬ್‌ನ ಬಾಗಿಲನ್ನು ದಾಟಿ ಹೋಗುವುದನ್ನು ನೋಡಿದ. +ಸೈನ್ಯಕ್ಕೆ ವಿವಾದದಲ್ಲಿ ಮಧ್ಯಸ್ತಿಕೆಯ ಕಾರ್ಯಾಚರಣೆಯನ್ನು ವಹಿಸಿಕೊಳ್ಳಲು ಸೈನಿಕಾಡಳಿತ ಜಾರಿಗೊಳಿಸಿದ್ದು ಸಹಾಯ ಮಾಡಿತು. ಆದರೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಯಾವುದೇ ಪ್ರಯತ್ನವಾಗಲಿಲ್ಲ. ಅವರು ಮಕೋಂದೋಗೆ ಬಂದ ಕೂಡಲೇ ಸೈನಿಕರು ಬಂದೂಕುಗಳನ್ನು ಬದಿಗಿಟ್ಟು ಬಾಳೆಗೊನೆಗಳನ್ನು ಕತ್ತರಿಸಿ ತುಂಬಿ ರೈಲುಗಳನ್ನು ಓಡಿಸಲು ಪ್ರಾರಂಭಿಸಿದರು. ಅಲ್ಲಿಯ ತನಕ ಕಾಯುವುದರಲ್ಲೆ ಸಂತೃಪ್ತರಾಗಿದ್ದ ಕೆಲಸಗಾರರು ಕಾಡಿನೊಳಗೆ ಹೋಗಿ ತಾವು ಕೆಲಸ ಮಾಡುವ ಮಚ್ಚುಗಳ ಹೊರತಾಗಿ ಬೇರೆ ಆಯುಧಗಳಿಲ್ಲದೆ ವಿಧ್ವಂಸಕಕಾರರನ್ನು ಕೊನೆಗೊಳಿಸಲು ಪ್ರಾರಂಭಿಸಿದರು. ಅವರು ಬಾಳೆ ಗಿಡಗಳನ್ನು ಮತ್ತು ಪ್ರತಿನಿಧಿಗಳನ್ನು ತದಕಿ ಹಾಕಿದರು. ಮೆಷಿನ್‌ಗನ್ ಹೊಡೆದು ತಮ್ಮ ದಾರಿ ತೆರವು ಮಾಡಿಕೊಳ್ಳುತ್ತಿದ್ದ ರೈಲಿನ ಓಡಾಟಕ್ಕೆ ಧಕ್ಕೆ ಬರುವಂತೆ ಕಂಬಿಗಳನ್ನು ಕಿತ್ತು, ಟೆಲಿಗ್ರಾಫ್ ಹಾಗೂ ಟೆಲಿಫೋನ್ ತಂತಿಗಳನ್ನು ಕಡಿದು ಹಾಕಿದರು. ನೀರಾವರಿ ಗುಂಡಿಗಳಲ್ಲಿ ರಕ್ತದ ಕಲೆಗಳಾದವು. ಬಂಧನದಲ್ಲಿ ಬದುಕುಳಿದಿದ್ದ ಮಿಸ್ಟರ್ ಬ್ರೌನ್‌ನನ್ನು ಅವನ ಸಂಸಾರ ಮತ್ತು ಅವನ ದೇಶದವರೊಂದಿಗೆ ಮಕೋಂದೋಯಿಂದ ಹೊರಗೆ ಸೈನಿಕರ ರಕ್ಷಣೆಯಲ್ಲಿ ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಯಿತು. ವಾತಾವರಣ ಒಳಯುದ್ಧ ಆರಂಭವಾಗುವ ಮಟ್ಟದಲ್ಲಿದ್ದಾಗ, ಕೆಲಸಗಾರರಿಗೆ ಮಕೋಂದೋದಲ್ಲಿ ಒಂದೆಡೆ ಸೇರುವಂತೆ ಅಧಿಕಾರಿಗಳು ಹೇಳಿದರು. ಆ ಪ್ರಾಂತದ ಸಿವಿಲ್ ಮತ್ತು ಮಿಲಿಟರಿ ನಾಯಕರು ವಿವಾದದಲ್ಲಿ ಮಧ್ಯೆ ಪ್ರವೇಶಿಸುವುದಕ್ಕೆ ಸಿದ್ಧರಾಗಿ ಮುಂದಿನ ಶುಕ್ರವಾರ ಬರುತ್ತಾರೆಂದು ಸೂಚನೆಯಲ್ಲಿ ಪ್ರಕಟಿಸಲಾಗಿತ್ತು. +ಹೊಸೆ ಅರ್ಕಾದಿಯೋ ಸೆಗುಂದೋ ಶುಕ್ರವಾರ ಬೆಳಿಗ್ಗೆಯಿಂದ ಮುಂಚಿತವಾಗಿ ಸ್ಟೇಷನ್ ಬಳಿ ಸೇರಿದ್ದ ಗುಂಪಿನಲ್ಲಿದ್ದ. ಯೂನಿಯನ್ ಮುಖಂಡರ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಮತ್ತು ಅವನಿಗೆ ಕರ್ನಲ್ ಗ್ಯಾವಿಲ್ ಒಡಗೂಡಿ ಗುಂಪಿನಲ್ಲಿ ಸೇರಿಕೊಳ್ಳುವುದಕ್ಕೆ ಹಾಗೂ ಪರಿಸ್ಥಿತಿಗೆ ತಕ್ಕ ಹಾಗೆ ಅದರ ದಿಕ್ಕು ಬದಲಿಸುವ ಕೆಲಸವನ್ನು ವಹಿಸಲಾಗಿತ್ತು. ಅವನಿಗೆ ಮೈಯಲ್ಲಿ ಹುಷಾರಿರಲಿಲ್ಲ. ಸೈನಿಕರು ಸಣ್ಣ ಚೌಕದಲ್ಲಿ ಮೆಷಿನ್ ಗನ್‌ಗಳನ್ನು ಇಟ್ಟಿರುವುದನ್ನು ಗಮನಿಸಿದಾಗ ಅವನ ನೆತ್ತಿಯ ಮೇಲೆ ತೆಳು ಬೆವರ ಸಾಲು ಮೊದಲಿಟ್ಟಿತು. ಅಲ್ಲದೆ ಬೇಲಿ ಹಾಕಿದ್ದ ಬಾಳೆ ತೋಟದ ಕಂಪನಿಯ ಊರಿನ ಆವರಣವನ್ನು ಫಿರಂಗಿಗಳಿಂದ ರಕ್ಷಿಸಲಾಗಿತ್ತು. ಹನ್ನೆರಡು ಗಂಟೆಯಾದರೂ ಬಾರದಿರುವ ರೈಲಿಗಾಗಿ ಕಾಯುತ್ತ ಮೂರು ಸಾವಿರ ಜನರು, ಕಾರ್ಮಿಕರು, ಹೆಂಗಸರು ಮತ್ತು ಮಕ್ಕಳು ಸ್ಟೇಷನ್ ಎದುರುಗಡೆ ಇದ್ದ ಬಯಲಿನಲ್ಲಿ ತುಂಬಿ ಹೋಗಿದ್ದರು. ಸೈನಿಕರು ಮತ್ತು ಮೆಷಿನ್ ಗನ್‌ಗಳಿಂದ ತುಂಬಿದ ಪಕ್ಕದ ರಸ್ತೆಗೂ ಜನರನ್ನು ವಿಸ್ತರಿಸಿದ್ದರು. ಆ ಸಮಯದಲ್ಲಿ ಕಾಯುತ್ತಿರುವ ಗುಂಪಿಗಿಂತ ಹೆಚ್ಚಾಗಿ, ಅವರು ಸಂತೆಯೊಂದರಲ್ಲಿ ಉತ್ಸಾಹದಿಂದ ಇರುವಂತಿದ್ದರು. ಅವರು ಟರ್ಕಿಗಳ ರಸ್ತೆಯಿಂದ ತಿಂಡಿ ತಿನಿಸುಗಳನ್ನು ತಂದಿದ್ದರು ಮತ್ತು ಅವರು ಕಡು ಬಿಸಿಲಿನಲ್ಲಿ ಕಾಯುತ್ತಿದ್ದರೂ ಗೆಲುವಿನಿಂದಿದ್ದರು. ಮೂರು ಗಂಟೆಗೆ ಸ್ವಲ್ಪ ಮುಂಚೆ ಮಾರನೆಯ ದಿನದ ತನಕ ಟ್ರೈನ್ ಬರುವುದಿಲ್ಲವೆಂಬ ಸುದ್ದಿ ಹಬ್ಬಿತು. ಗುಂಪು ನಿರಾಸೆಯಿಂದ ನಿಟ್ಟುಸಿರಿಟ್ಟಿತು. ಸೈನಿಕ ದಳದ ಲೆಫ್ಟಿನೆಂಟ್ ಒಬ್ಬ, ಮೆಷಿನ್ ಗನ್ನುಗಳನ್ನು ಇರಿಸಿದ್ದ ಸ್ಟೇಷನ್ ಮೇಲೆ ಹತ್ತಿ, ಗುಂಪಿನ ಕಡೆ ಮುಖ ಮಾಡಿ ಶಾಂತವಾಗಿರಲು ಹೇಳಿದ. ಹೊಸೆ ಅರ್ಕಾದಿಯೋ ಸೆಗುಂದೋನ ಪಕ್ಕದಲ್ಲಿ ಬರಿಗಾಲಿನಲ್ಲಿ ದಡೂತಿಯಾದ ನಾಲ್ಕು ಮತ್ತು ಏಳರ ವಯಸ್ಸಿನ ಇಬ್ಬರು ಮಕ್ಕಳ ಜೊತೆಗಿದ್ದ ಹೆಂಗಸೊಬ್ಬಳಿದ್ದಳು. ಒಬ್ಬನನ್ನು ಎತ್ತಿಕೊಂಡಿದ್ದ ಅವಳು ಗೊತ್ತಿರದ ಹೊಸೆ ಅರ್ಕಾದಿಯೋನನ್ನು ಸರಿಯಾಗಿ ನೋಡಲು ಸಾಧ್ಯವಾಗುವಂತೆ ಇನ್ನೊಬ್ಬನನ್ನು ಹಿಡಿದೆತ್ತಲು ಕೇಳಿದಳು. ಹೊಸೆ ಅರ್ಕಾದಿಯೋ ಹುಡುಗನನ್ನು ತನ್ನ ಭುಜದ ಮೇಲೆ ಕೂಡಿಸಿಕೊಂಡ. ಅನೇಕ ವರ್ಷಗಳ ನಂತರ ಅವನು, ಯಾರೂ ನಂಬದಿರುವಂತೆ, ತಾನು ಲೆಫ್ಟಿನೆಂಟ್ ಧ್ವನಿ ವರ್ಧಕದಲ್ಲಿ ಆ ಪ್ರಾಂತದ ಸಿವಿಲ್ ಮತ್ತು ಮಿಲಿಟರಿ ಮುಖಂಡರ ಕಟ್ಟಳೆ ನಂಬರ್ ನಾಲ್ಕನ್ನು ಓದಿದ್ದನ್ನು ನೋಡಿದ್ದಾಗಿ ಹೇಳಬಹುದು. ಅದಕ್ಕೆ ಜನರಲ್ ಕಾರ್ಲೋಸ್ ಕಾರ್ಟ್‌ವೆರ್ಗಾ ಹಾಗೂ ಅವನ ಕಾರ್ಯದರ್ಶಿ, ಮೇಜರ್ ಗಾರ್ಸಿಯಾ ಇಸಾಜಾ ಸಹಿ ಮಾಡಿದ್ದರು. ಅವನು ಎಂಬತ್ತು ಪದಗಳ ಮೂರು ಪಂಕ್ತಿಗಳಲ್ಲಿ ಮುಷ್ಕರ ಹೂಡಿದವರನ್ನು, ಪುಂಡರ ಗುಂಪು ಎಂದು ಘೋಷಿಸಿ, ಸೈನಿಕರಿಗೆ ಗುಂಡಿಟ್ಟು ಕೊಲ್ಲಲು ಅಧಿಕಾರ ಕೊಟ್ಟ. +ನಿರ್ಣಯವನ್ನು ಓದಿದ ಮೇಲೆ ಕಿವುಡಾಗಿಸುವ ವಿರೋಧದ ಕೂಗುಗಳ ನಡುವೆ ಒಬ್ಬ ಕ್ಯಾಪ್ಟನ್ ಸ್ಟೇಷನ್‌ನ ತಾರಸಿಯ ಮೇಲೆ ಒಬ್ಬ ಲೆಫ್ಟಿನೆಂಟ್‌ನ ಸ್ಥಾನವನ್ನು ತೆಗೆದುಕೊಂಡ ಮತ್ತು ಧ್ವನಿವರ್ಧಕದಲ್ಲಿ ತಾನು ಮಾತನಾಡುವುದಾಗಿ ಸನ್ನೆ ಮಾಡಿದ ಗುಂಪು ಮತ್ತೆ ಸುಮ್ಮನಾಯಿತು. +ಕ್ಯಾಪ್ಟನ್ ನಿಧಾನವಾಗಿ, ಕೊಂಚ ದಣಿದ, ಕೆಳದನಿಯಲ್ಲಿ, “ಗಣ್ಯರೇ ಇಲ್ಲಿಂದ ಹೊರಟು ಹೋಗಲು ನಿಮಗೆ ಐದು ನಿಮಿಷ ಸಮಯ ಇದೆ” ಎಂದ. +ಅಬ್ಬರದ ಕೂಗಾಟ ಹೆಚ್ಚಾಯಿತು ಮತ್ತು ಅದು ಎಣಿಕೆ ಪ್ರಾರಂಭವಾಗಿದೆ ಎಂದು ಹೇಳಿದ ತಕ್ಷಣ ನಿಂತು ಹೋಯಿತು. ಯಾರೂ ಅಲ್ಲಾಡಲಿಲ್ಲ. +ಕ್ಯಾಪ್ಟನ್ ಅದೇ ಧ್ವನಿಯಲ್ಲಿ, “ಐದು ನಿಮಿಷ ಮುಗಿಯಿತು. ಇನ್ನೊಂದು ನಿಮಿಷ ಅಷ್ಟೆ. ನಾವು ಶೂಟ್ ಮಾಡ್ತೀವಿ” ಎಂದ. +ಹೊಸೆ ಅರ್ಕಾದಿಯೋ ಸೆಗುಂದೋ ಬೆವತು, ಹುಡುಗನನ್ನು ಇಳಿಸಿ ಅವನ ತಾಯಿಗೆ ಕೊಟ್ಟ. ಅವಳು, “ಆ ಸೂಳೆಮಕ್ಳು ಶೂಟ್ ಮಾಡ್ಬಹುದು” ಎಂದು ಪಿಸುಗುಟ್ಟಿದಳು. ಹೊಸೆ ಅರ್ಕಾದಿಯೋ ಸೆಗುಂದೋಗೆ ಸಮಯವಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಆ ಹೆಂಗಸಿನ ಮಾತನ್ನು ಮತ್ತೆ ಕೂಗಿ ಹೇಳಿದ. ಕರ್ನಲ್ ಗ್ಯಾವಿಡಿನ್‌ನ ಗಂಟಲು ಕಟ್ಟಿದ ಧ್ವನಿ ಕೇಳಿಸಿತು. ಹೊಸೆ ಅರ್ಕಾದಿಯೋ ಸೆಗುಂದೋಗೆ ಆತಂಕದ, ಮೌನದಾಳದ ಭೀಕರತೆ ಅವರಿಸಿ ಹಾಗೂ ಸಾವಿನ ಬಿಗಿತದಲ್ಲಿದ್ದ ಜನರ ಗುಂಪನ್ನು ಚದುರಿಸಲು ಯಾವುದಕ್ಕೂ ಸಾಧ್ಯವಿಲ್ಲವೆಂದು ಮನಗಂಡು, ಅವನು ತನ್ನ ಎದುರಿನಲ್ಲಿ ಇದ್ದವರ ತಲೆಗಳ ಮೇಲೆ ಏರಿದ ಮತ್ತು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ವನಿ ಎತ್ತರಿಸಿ ಕೂಗಿದ. +ಅವನು “ಸೂಳೆಮಕ್ಳಾ, ಇನ್ನೊಂದು ನಿಮಿಷ ಹೆಚ್ಗೆ ತೊಗೊಂಡು ಕುಂಡಿ ತಿರುಗಿಸಿ ಓಡಿ” ಎಂದ. +ಅವನ ಕೂಗು ಬೆದರಿಕೆ ತರಲಿಲ್ಲ. ಆದರೆ ಒಂದು ರೀತಿ ಉನ್ಮಾದ ತಂದಿತು. ಕ್ಯಾಪ್ಟನ್ ಶೂಟ್; ಮಾಡಲು ಆರ್ಡರ್ ಕೊಟ್ಟ ಮತ್ತು ಹದಿನಾಲ್ಕು ಮೆಷಿನ್ ಗನ್‌ಗಳು ತಕ್ಷಣ ಸಿಡಿದವು. ಆದರೆ ಅದೆಲ್ಲ ಅಣಕಿನ ಹಾಗೆ ಕಂಡಿತು. ಮೆಷಿನ್ ಗನ್‌ಗಳಲ್ಲಿ ಕೇಪುಗಳು ತುಂಬಿರಬೇಕು ಎಂದು ತೋರಿತು. ಏಕೆಂದರೆ ಅವು ಅಲ್ಲಾಡುವುದು ಕೇಳಿಸಿತು ಮತ್ತು ಒಂದಷ್ಟು ಬೆಳಕು ಕಾರಿದ್ದು ಕಂಡಿತು. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಕಾಣಲಿಲ್ಲ: ಒಂದಿಷ್ಟು ಅಳು ಕೂಡ: ಧಿಡೀರನೆ ಉಂಟಾದ ಗಾಬರಿಗೆ ಗುಂಪಿನ ಒಳಗಿಂದ ಯಾರದೇ ನಿಟ್ಟುಸಿರು ಕೂಡ. ಇದ್ದಕ್ಕಿದ್ದ ಹಾಗೆ ಸ್ಟೇಷನ್‌ನ ಒಂದು ಭಾಗದಲ್ಲಿ, “ಅಯ್ಯೋ ಅಮ್ಮಾ” ಎಂಬ ಧ್ವನಿ ಸೀಳಿ ಬಂತು. ಅದುರುತ್ತಿದ್ದ ಆ ಧ್ವನಿ, ಏರಿಳಿಯುತ್ತಿದ್ದ ಉಸಿರು, ಗುಂಪಿನ ಮಧ್ಯೆ ತಲೆದೋರಿ ಹುಚ್ಚೆದ್ದು ಹರಡಿತು. ಹೊಸೆ ಅರ್ಕಾದಿಯೋ ಸೆಗುಂದೋಗೆ ಹುಡುಗನನ್ನು ಎತ್ತಿಕೊಳ್ಳಲು ಸಮಯವಿರಲಿಲ್ಲ. ಇನ್ನೊಬ್ಬನನ್ನು ಎತ್ತಿಕೊಂಡಿದ್ದ ಹೆಂಗಸು ಗಾಬರಿಯಿಂದ ಸುತ್ತ ತೊಡಗಿದ ಗುಂಪಿನೊಳಗೆ ಸೇರಿಹೋಗಿದ್ದಳು. +ಅನೇಕ ವರ್ಷಗಳ ನಂತರ, ಜನರು ಅವನನ್ನು ಹುಚ್ಚು ಮುದುಕ ಎಂದು ಕರೆದರೂ ಕೂಡ, ಆ ಹುಡುಗ ಹೇಗೆ ಹೊಸೆ ಅರ್ಕಾದಿಯೋ ಸೆಗುಂದೋ ತನ್ನನ್ನು ಅವನ ತಲೆಯ ಮೇಲೆ, ಗಾಳಿಯಲ್ಲಿರುವ ಹಾಗೆ, ಗುಂಪಿನ ಗಾಬರಿಯ ಅಲೆಯ ಮೇಲೆ ತೇಲುತ್ತಿರುವ ಹಾಗೆ ತನ್ನನ್ನು ಎತ್ತಿ ಹಿಡಿದು ಪಕ್ಕದ ರಸ್ತೆಯ ಕಡೆ ಹೋದ ಎಂದು ಹೇಳಬಹುದು. ಆ ಹುಡುಗನಿದ್ದ ವಿಶೇಷವಾದ ಸ್ಥಳದಿಂದ ಆ ಕ್ಷಣದಲ್ಲಿ ದಿಕ್ಕೆಟ್ಟ ಜನರು ಮೂಲೆಯ ಕಡೆ ಹೋಗುತ್ತಿದ್ದದ್ದನ್ನು ನೋಡಲು ಸಾಧ್ಯವಿತ್ತು. ಸಾಲು ಸಾಲು ಮೆಷಿನ್ ಗನ್‌ಗಳು ಗುಂಡು ಹೊಡೆದವು. ಅದೇ ಸಮಯದಲ್ಲಿ ಹಲವಾರು ಧ್ವನಿಗಳು ಕೂಗಿಕೊಂಡವು. +“ಮಲಗಿ! ಮಲಗಿ!” +ಮುಂದುಗಡೆ ಇದ್ದ ಜನರು ಗುಂಡುಗಳ ಅಲೆಯಿಂದ ಆಗಲೇ ಹಾಗೆ ಮಾಡಿದ್ದರು. ಬದುಕುಳಿದವರು ಮಲಗುವ ಬದಲು ಸಣ್ಣ ಚೌಕದ ಕಡೆ ಮತ್ತೆ ಹೋಗಲು ಪ್ರಯತ್ತಿಸಿದರು ಮತ್ತು ಆ ಗಾಬರಿಯಲ್ಲಿ ಎರಡೂ ಕಡೆಯಿಂದ ಹೋಗುತ್ತಿದ್ದ ಜನರು ಮೆಷಿನ್ ಗನ್‌ಗಳು ಗುಂಡು ಹೊಡೆಯುತ್ತಿರುವ ಸ್ಥಳದಲ್ಲಿ ಒಬ್ಬರಿಗೊಬ್ಬರಿಗೆ ಓಡೋಡಿ ಡಿಕ್ಕಿ ಹೊಡೆದರು. ಅವರನ್ನು ದೊಡ್ಡಿಯಲ್ಲಿ ಹಾಕಿದಂತಾಯಿತು ಮತ್ತು ಸುಂಟರ ಗಾಳಿಯಂತೆ ತಿರುತಿರುಗಿ ಸಣ್ಣಗಾಗಿ, ಕನಿಷ್ಠವಾಗಿ, ಈರುಳ್ಳಿಯನ್ನು ಬಿಡಿಸುವಂತೆ ಇಂಗದ ಹಸಿವಿನ ಮೆಷಿನ್‌ಗನ್ ಕ್ರಮಬದ್ಧವಾಗಿ ತನ್ನ ಕಾರ್ಯನಿರ್ವಹಿಸಿತು. ಆ ಹುಡುಗ ಆ ವಿಸ್ತಾರದಲ್ಲಿ ನುಗ್ಗಾಟದಿಂದ ತಪ್ಪಿಸಿಕೊಂಡು, ಮಂಡಿಯೂರಿದ ಹೆಂಗಸೊಬ್ಬಳು ಕೈಗಳನ್ನು ಕ್ರಾಸ್ ಆಕಾರದಲ್ಲಿ ಹಿಡಿದದ್ದನ್ನು ನೋಡಿದ. ಹೊಸೆ ಅರ್ಕಾದಿಯೋ ಸೆಗುಂದೋ ಆ ಕ್ಷಣದಲ್ಲಿ ಅವನನ್ನು ಇಳಿಸಿ ಕೆಳಗೆ ಬಿದ್ದಾಗ ಅವನ ಮುಖ ರಕ್ತದಲ್ಲಿ ತೊಯ್ದು ಹೋಯಿತು. ಅಷ್ಟರೊಳಗೆ ಸೈನಿಕರು ಆ ವಿಸ್ತಾರದಲ್ಲಿ ಇದ್ದದ್ದನ್ನು, ಮಂಡಿಯೂರಿದ ಹೆಂಗಸನ್ನು, ಎತ್ತರದ ದೀಪವನ್ನು, ಉರ್ಸುಲಾ ಮಾಂಸದ ತಿನಿಸನ್ನು ಮಾರಿದ್ದ ಸ್ಥಳವನ್ನು ಮತ್ತು ವೇಶ್ಯೆಯರ ಪ್ರದೇಶವನ್ನು ನೆಲಸಮ ಮಾಡಿದರು. +ಹೊಸೆ ಅರ್ಕಾದಿಯೋ ಸೆಗುಂದೋಗೆ ಅರಿವುಂಟಾದಾಗ ಕತ್ತಲಲ್ಲಿ ಅಂಗಾತ ಬಿದ್ದಿದ್ದ, ಅವನಿಗೆ ಕೊನೆಯಿಲ್ಲದ ಮೌನವಾಗಿ ಓಡುವ ಟ್ರೈನಿನಲ್ಲಿ ಹೋಗುತ್ತಿರುವುದಾಗಿ ತಿಳಿದು ಬಂತು. ಮತ್ತು ತಲೆಯನ್ನು ರಕ್ತದಲ್ಲಿ ಅದ್ದಿದಂತೆ ಕಂಡಿತು ಮತ್ತು ಅವನ ಮೂಳೆಗಳೆಲ್ಲ ನೋಯುತ್ತಿದ್ದವು. ಅವನಿಗೆ ಮಲಗಬೇಕೆಂಬ ಅಸಾಧ್ಯವಾದ ಅಪೇಕ್ಷೆಯುಂಟಾಯಿತು. ಅವನು ಅನೇಕ ಗಂಟೆಗಳ ಕಾಲ ಭಯದಿಂದ ಮುಕ್ತವಾಗಿ, ಮಲಗಲು ಸಿದ್ಧನಾಗಿ, ನೋವು ಕಡಿಮೆ ಇರುವ ಪಕ್ಕಕ್ಕೆ ಹೊರಳಿದ. ಆಗಲೇ ಅವನಿಗೆ ಗೊತ್ತಾದದ್ದು ತಾನು ಸತ್ತವರಿಗೆ ಒತ್ತಿಕೊಂಡಿದ್ದೇನೆ ಎಂದು ಆ ಬೋಗಿಯಲ್ಲಿ ನಡುವೆ ಇದ್ದ ಇಕ್ಕೆಲದ ದಾರಿ ಬಿಟ್ಟರೆ ಬೇರೆ ಖಾಲಿ ಜಾಗವಿರಲಿಲ್ಲ. ಜನರ ಮಾರಣ ಹೋಮ ನಡೆದು ಸಾಕಷ್ಟು ಸಮಯ ಕಳೆದಿರಬೇಕು. ಏಕೆಂದರೆ ಹೆಣಗಳು ಚಳಿಗಾಲದ ಪ್ಲಾಸ್ಟರ್‌ನಂತೆ ಕೊರೆಯುತ್ತಿದ್ದವು ಮತ್ತು ಸೆಟೆದುಕೊಂಡಿದ್ದವು. ಬೋಗಿಯಲ್ಲಿ ಅವುಗಳನ್ನು ಬಾಳೆಗೊನೆಗಳನ್ನು ಸಾಗಿಸಲು ಪೇರಿಸಿ ಇಟ್ಟಂತೆ ಕಂಡಿತು. ದು:ಸ್ವಪ್ನದಿಂದ ಬಿಡಿಸಿಕೊಳ್ಳಲು ಹೊಸೆ ಅರ್ಕಾದಿಯೋ ಸೆಗುಂದೋ ಬೋಗಿಯಿಂದ ಬೋಗಿಗೆ ತೆವಳಿಕೊಂಡು ರೈಲು ಹೋಗುತ್ತಿದ್ದ ದಿಕ್ಕಿನಲ್ಲಿ ಹೋದ. ಊರುಗಳನ್ನು ದಾಟಿ ಹೋಗುತ್ತಿರುವಾಗ ಹಲಗೆ ಸಂದಿಗಳಿಂದ ಬಿದ್ದ ಬೆಳಕಲ್ಲಿ ಕೊಳೆತ ಬಾಳೆ ಹಣ್ಣುಗಳಂತೆ ಸಮುದ್ರಕ್ಕೆ ಎಸೆಯುವ ಗಂಡಸರ, ಹೆಂಗಸರ ಮತ್ತು ಮಕ್ಕಳ ಹೆಣಗಳನ್ನು ಕಂಡ ಅವನು ಚೌಕದಲ್ಲಿ ಪಾನೀಯಗಳನ್ನು ಮಾರುವ ಹೆಂಗಸನ್ನು ಮತ್ತು ಗೊಂದಲದಲ್ಲಿ ದಾರಿ ಮಾಡಿಕೊಳ್ಳುತ್ತ ಕೈಯಲ್ಲಿ ಬೆಳ್ಳಿಯ ಮಾರೆಲಿಯಾ ಬಕಲ್ ಇದ್ದ ಬೆಲ್ಟನ್ನು ಹಿಡಿದುಕೊಂಡಿದ್ದ ಕರ್ನಲ್ ಗಾವಿಲನ್‌ನನ್ನು ಗುರುತು ಹಿಡಿದ. ಮೊದಲನೆ ಬೋಗಿಗೆ ಬಂದಾಗ ಅವನು ಕತ್ತಲಲಲ್ಲಿ ಹೊರಗೆ ಹಾರಿ ರೈಲು ಮುಂದೆ ಹೋಗುವ ತನಕ ಹಾಗೆಯೇ ಕಂಬಿಗಳ ಪಕ್ಕದಲ್ಲಿ ಮಲಗಿದ್ದ. ಸುಮಾರು ಇನ್ನೂರು ಸಾಮಾನು ಸಾಗಿಸುವ ಬೋಗಿಗಳಿದ್ದ ಅದು ಅವನು ಕಂಡ ಅತ್ಯಂತ ಉದ್ದದ ಟ್ರೈನ್ ಆಗಿತ್ತು. ಅದರ ಎರಡೂ ಪಕ್ಕದಲ್ಲಿ ಮತ್ತು ಮಧ್ಯದಲ್ಲಿ ಎಂಜಿನ್‌ಗಳಿದ್ದವು. ಅದರಲ್ಲಿ ಲೈಟ್‌ಗಳಿರಲಿಲ್ಲ. ಕೆಂಪು ಮತ್ತು ಚಲಿಸುವ ಸಮಯದ ಹಸಿರು ದೀಪ ಕೂಡ ಇರಲಿಲ್ಲ. ಅದು ರಾತ್ರಿಯಲ್ಲಿ ಕಳ್ಳಹೆಜ್ಜೆ ಇಡುವಂತೆ ಚಲಿಸುತ್ತಿತ್ತು. ಬೋಗಿಗಳ ಮೇಲೆ ಮೆಷಿನ್‌ಗನ್‌ಗಳನ್ನು ಇಟ್ಟುಕೊಂಡಿದ್ದ ಸೈನಿಕರ ಕಪ್ಪನೆ ಆಕೃತಿಯನ್ನು ಕಾಣಬಹುದಿತ್ತು. +ಮಧ್ಯ ರಾತ್ರಿಯ ನಂತರ ಭರ್ಜರಿ ಮಳೆ ಬಿತ್ತು. ಹೊಸೆ ಅರ್ಕಾದಿಯೋ ಸೆಗುಂದೋಗೆ ತಾನು ಎಲ್ಲಿ ನೆಗೆದದ್ದೆಂದು ತಿಳಿದಿರಲಿಲ್ಲ. ಆದರೆ ರೈಲು ಬಂದ ವಿರುದ್ಧ ದಿಕ್ಕಿನಲ್ಲಿ ಹೋದರೆ ಮಕೋಂದೋ ತಲುಪಬಹುದೆಂದು ಗೊತ್ತಿತ್ತು. ಪೂರ್ತಿಯಾಗಿ ತೊಯ್ದು, ತಲೆನೋವಿನಲ್ಲೆ ಮೂರುಗಂಟೆ ಕಾಲ ನಡೆದ ಮೇಲೆ ಮುಂಜಾವಿನಲ್ಲಿ ಮನೆಯೊಂದನ್ನು ಕಂಡ. ಕಾಫಿಯ ವಾಸನೆಯಿಂದ ಆಕರ್ಷಿತನಾಗಿ, ಸ್ಟೋವ್ ಹತ್ತಿರ ಹೆಂಗಸೊಬ್ಬಳು ಮಗುವನ್ನು ಹಿಡಿದುಕೊಂಡಿದ್ದ ಅಡುಗೆ ಮನೆಗೆ ಹೋದ. +ಅವನು ಕ್ಷೀಣವಾಗಿ, “ನಾನು ಹೊಸೆ ಅರ್ಕಾದಿಯೋ ಸೆಗುಂದೋ” ಎಂದ. +ತಾನು ಬದುಕಿದ್ದೇನೆಂದು ಮನವರಿಕೆ ಮಾಡಿಕೊಡಲು ತನ್ನ ಹೆಸರನ್ನು ಅಕ್ಷರ ಬಿಡಿಬಿಡಿಸಿ ಹೇಳಿದ. ಅವನು ಹಾಗೆ ಮಾಡಿದ್ದು ಉಚಿತವಾಗಿತ್ತು. ಏಕೆಂದರೆ ಅವನು ಕೊಳಕಾದ ತಲೆ ಮತ್ತು ಬಟ್ಟೆಗಳೆಲ್ಲ ರಕ್ತಮಯವಾಗಿ ಭಯಂಕರವಾಗಿದ್ದು ಸಾವಿನ ಸ್ವರ್ಶ ಪಡೆದು ಬಾಗಿಲೋಳಗೆ ಬಂದವನೆಂದು ಭಾವಿಸಿದಳು. ಅವಳು ಅವನನ್ನು ಗುರುತು ಹಿಡಿದಳು. ಅವನ ಬಟ್ಟೆಗಳು ಒಣಗುವ ತನಕ ಇರಲೆಂದು ಸುತ್ತಿಕೊಳ್ಳುವುದಕ್ಕೆ ಹೊದಿಕೆ ಕೊಟ್ಟಳು. ಹೊಸದಾಗಿದ್ದ ಗಾಯಗಳನ್ನು ತೊಳೆಯಲು ನೀರು ಕಾಯಿಸಿದಳು ಮತ್ತು ತಲೆಯ ಬ್ಯಾಂಡೇಜಿಗೆ ಬಟ್ಟೆ ಕೊಟ್ಟಳು, ಅನಂತರ ಬ್ಯುಂದಿಯಾಗಳು ಸಕ್ಕರೆ ಇಲ್ಲದ ಕಾಫಿ ಕುಡಿಯುತ್ತಾರೆ ಎಂದು ಅವರಿವರು ಹೇಳಿದ್ದಂತೆ ಅದನ್ನು ಒಂದು ಮಗ್‌ನಲ್ಲಿ ಕೊಟ್ಟಳು. ಹಾಗೂ ಅವನ ಬಟ್ಟೆಗಳನ್ನು ಒಣಗಲು ಒಲೆಯ ಹತ್ತಿರ ಹರಡಿದಳು. +ಹೊಸೆ ಅರ್ಕಾದಿಯೋ ಸೆಗುಂದೋ ಕಾಫಿಯನ್ನು ಕುಡಿದು ಮುಗಿಸುವ ತನಕ ಮಾತನಾಡಲಿಲ್ಲ. +ಅವನು, “ಅಲ್ಲಿ ಮೂರು ಸಾವಿರ ಜನ ಇದ್ರು ಅಂತ ಕಾಣತ್ತೆ” ಎಂದು ಗೊಣಗಿದ. +“ಏನು?” +“ಅದೇ ಸತ್ತವರು ಸ್ಟೇಷನ್ ಹತ್ರ ಸೇರಿದೋರೆಲ್ರೂ ಅನ್ಸತ್ತೆ” ಎಂದು ಸ್ಪಷ್ಟೀಕರಿಸಿದ. +ಅವಳು ಅವನನ್ನು ಕನಿಕರದಿಂದ ನೋಡಿದಳು. ಅವಳು, “ಇಲ್ಯಾರೂ ಸತ್ತೋರಿಲ್ಲ. ನಿನ್ನ ಅಂಕಲ್ ಕರ್ನಲ್ ಆದ್ಮೇಲೆ ಮಕೋಂದೋದಲ್ಲಿ ಏನೂ ಆಗಲೇ ಇಲ್ಲ” ಎಂದಳು. ಹೊಸೆ ಅರ್ಕಾದಿಯೋ ಸೆಗುಂದೋ ಮನೆಗೆ ತಲುಪುವ ಮುಂಚೆ ಅಲ್ಲಲ್ಲಿ ನಿಂತ ಮೂರು ಮನೆಗಳಲ್ಲಿ ಹಾಗೆಯೇ ಹೇಳಿದರು. “ಅಲ್ಲಿ ಯಾರೂ ಸತ್ತಿಲ್ಲ.” ಅವನು ಸ್ಟೇಷನ್ ಹತ್ತಿರದ ಸಣ್ಣ ಚೌಕದ ಮುಖಾಂತರ ಹೋದ. ಅಲ್ಲಿ ಒಂದರ ಮೇಲೊಂದನ್ನು ಸೇರಿಸಿದ ಚಿಂದಿಯಾದ ಸಾಮಾನುಗಳಿದ್ದದ್ದು ಕಂಡಿತು. ಅವನಿಗೆ ಮಾರಣ ಹೋಮದ ಯಾವ ಕುರುಹೂ ಕಾಣಲಿಲ್ಲ. ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ರಸೆ ನಿರ್ಜನವಾಗಿತ್ತು. ಮನೆಯೊಳಗೆ ಮನುಷ್ಯರಿರುವುದೂ ಗೊತ್ತಾಗದಂತೆ ಬಾಗಿಲು ಹಾಕಿದ್ದವು. ಮನುಷ್ಯರಿರುವ ಮೊದಲನೆ ಸಂಕೇತವೆಂದರೆ ಸಾಮೂಹಿಕ ಪ್ರಾರ್ಥನೆಯ ಬೆಲ್ ಹೊಡೆದದ್ದು. ಅವನು ಕರ್ನಲ್ ಗ್ಯಾವೊಲನ್ ಮನೆಯ ಬಾಗಿಲು ಬಡಿದ. ಅವನು ಅನೇಕ ಸಲ ನೋಡಿದ್ದ ಗರ್ಭಿಣಿ ಹೆಂಗಸೊಬ್ಬಳು, “ಅವನಾಗ್ಲೇ ಹೋದ, ಅವನ ದೇಶಕ್ಕೆ ವಾಪಸ್ ಹೋದ” ಎಂದು ಹೆದರಿಕೆಯಿಂದ ಹೇಳಿ ಮುಖಕ್ಕೆ ರಾಚುವಂತೆ ಬಾಗಿಲು ಹಾಕಿದಳು. ಕೋಳಿಗಳು ಮೊಟ್ಟೆ ಇಡುವ ತಂತಿ ಬಿಗಿದ ಆವರಣದ ಮುಖ್ಯ ದ್ವಾರದಲ್ಲಿ ಎಂದಿನಂತೆ ಇಬ್ಬರು ಪೋಲೀಸರು ಕಾವಲಿದ್ದರು. ರೇನ್ ಕೋಟ್ ಮತ್ತು ರಬ್ಬರ್ ಶೂಗಳನ್ನು ಹಾಕಿಕೊಂಡಿದ್ದ ಅವರು ಮಳೆಯಲ್ಲಿ ಕಲ್ಲಿನಂತೆ ನಿಂತಿದ್ದರು. ಪಕ್ಕದ ರಸ್ತೆಯಲ್ಲಿ ವೆಸ್ಟ್ ಇಂಡಿಯಾದ ಹೆಂಗಸರು ಶನಿವಾರದ ಹಾಡು ಹಾಡುತ್ತಿದ್ದರು. ಹೊಸೆ ಅರ್ಕಾದಿಯೋ ಸೆಗುಂದೋ ಅಂಗಳದ ಗೋಡೆಯನ್ನು ಹಾರಿ ಅಡುಗೆ ಮನೆ ಮುಖಾಂತರ ಮನೆಯೊಳಗೆ ಹೋದ. ಸಾಂತ ಸೊ;ಫಿಯಾ ದೆಲಾ ಪಿಯದಾದ್ ತೀರ ಮೆಲ್ಲಗೆ, “ಫೆರ್ನಾಂಡಗೆ ಕಾಣಿಸಿಕೊಳ್ಬೇಡ ಅವ್ಳು ಈಗಷ್ಟೆ ಎದ್ದಿದ್ದಾಳೆ” ಎಂದಳು. ಅವಳು ಒಪ್ಪಂದವೊಂದನ್ನು ಪೂರೈಸುವಳಂತೆ ಉಚ್ಚೆ ಪಾತ್ರೆಗಳಿದ್ದ ರೂಮಿಗೆ ತನ್ನ ಮಗನನ್ನು ಕರೆದುಕೊಂಡು ಹೋದಳು. ಅಲ್ಲಿ ಮೆಲ್‌ಕಿಯಾದೆಸ್‌ನ ಮುರಿದು ಹೋದ ಮಂಚವನ್ನು ಸರಿಪಡಿಸಿಕೊಟ್ಟಳು. ಮಧ್ಯಾಹ್ನ ಎರಡು ಗಂಟೆಗೆ, ಫೆರ್ನಾಂಡ ನಿದ್ದೆ ಮಾಡುತ್ತಿದ್ದಾಗ ಕಿಟಕಿಯ ಮೂಲಕ ಊಟದ ತಟ್ಟೆ ಕೊಟ್ಟಳು. +ಅವ್ರೇಲಿಯಾನೋ ಸೆಗುಂದೋ ಮನೆಯಲ್ಲಿ ಮಲಗಿದ್ದ. ಏಕೆಂದರೆ ಅವನನ್ನು ಮಳೆ ಹಿಡಿದು ನಿಲ್ಲಿಸಿತ್ತು ಮತ್ತು ಮಧ್ಯಾಹ್ನ ಮೂರು ಗಂಟೆಯಾದರೂ ಅದು ನಿಲ್ಲಲಿ ಎಂದು ಕಾಯುತ್ತಿದ್ದ. ಸಾಂತ ಸೋಫಿಯಾ ದೆಲಾ ಪಿಯದಾದ್ ಗುಟ್ಟಾಗಿ ಅವನಿಗೆ ತಿಳಿಸಿದಾಗ ತನ್ನ ಸೋದರನನ್ನು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಭೇಟಿಯಾz. ಅವನು ಜನರ ಮಾರಣ ಹೋಮ ಅಥವಾ ಸಮುದ್ರದ ಕಡೆ ಹೆಣಗಳನ್ನು ತುಂಬಿದ ರೈಲಿನಲ್ಲಿ ಮಾಡಿದ ದು:ಸ್ವಪ್ನದ ಪ್ರಯಾಣವನ್ನು ನಂಬಲಿಲ್ಲ. ಹಿಂದಿನ ರಾತ್ರಿ ದೇಶಕ್ಕಾಗಿ ವಿಶೇಷವಾಗಿ ಪ್ರಕಟಿಸಿದ್ದ, ಕಾರ್ಮಿಕರು ಸ್ಟೇಷನ್ ಬಿಟ್ಟು ಶಾಂತವಾಗಿ ಮನೆಗಳಿಗೆ ಹಿಂದಿರುಗಿದರೆಂಬ ಹೇಳಿಕೆಯನ್ನು ಓದಿದ್ದ. ಯೂನಿಯನ್ ಮುಖಂಡರು ದೇಶಭಕ್ತಿಯಿಂದ ತಮ್ಮ ಬೇಡಿಕೆಗಳನ್ನು ಕೇವಲ ಎರಡು ಅಂಶಗಳಿಗೆ ಮಾತ್ರ ಇಳಿಸಿದ್ದಾರೆಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ವೈದ್ಯಕೀಯ ಸೇವೆಗಳ ಸುಧಾರಣೆ ಮತ್ತು ವಸತಿ ಗೃಹಗಳಲ್ಲಿ ಕಕ್ಕಸ್ಸನ್ನು ಕಟ್ಟಿಸಿಕೊಡುವುದು. ಅನಂತರ ಮಿಲಿಟರಿ ಅಧಿಕಾರಿಗಳು ಕಾರ್ಮಿಕರಿಂದ ಒಪ್ಪಂದವನ್ನು ಪಡೆದಾಗ ಮಿಸ್ಟರ್ ಬ್ರೌನ್ ಅದನ್ನು ತಿಳಿಸಿ ಹೇಳಿದ್ದರು ಮತ್ತು ಅವನು ಅದನ್ನು ಒಪ್ಪಿಕೊಂಡದ್ದಷ್ಟೇ ಅಲ್ಲದೆ ವಿವಾದ ಬಗೆಹರಿದದ್ದಕ್ಕೆ ಮೂರು ದಿನಗಳ ಹಬ್ಬವನ್ನು ಆಚರಿಸುವುದರ ಖರ್ಚನ್ನು ಕೊಡುವುದಾಗಿ ಹೇಳಿದ. ಆದರೆ ಒಪ್ಪಂದಕ್ಕೆ ಸಹಿ ಮಾಡುವುದು ಯಾವಾಗ ಎಂದು ಕೇಳಿದಾಗ ಅವನು ಕಿಟಕಿಯಿಂದ ಆಚೆ ಮಿಂಚು, ಸಿಡಿಲು ಹೊಳೆಸುತ್ತಿದ್ದ ಬೆಳಕನ್ನು ನೋಡಿದ ಮತ್ತು ಅನುಮಾನವೆಂಬಂತೆ ಸನ್ನೆ ಮಾಡಿದ. +ಅವನು, “ಮಳೆ ನಿಂತ ಮೇಲೆ. ಮಳೆ ನಿಲ್ಲುವ ತನಕ ನಾವು ಎಲ್ಲ ಕೆಲಸಗಳನ್ನು ನಿಲ್ಲಿಸಿದ್ದೀವಿ” ಎಂದು ಹೇಳಿದ. +ಮೂರು ತಿಂಗಳಿಂದ ಮಳೆಯಾಗಿರಲಿಲ್ಲ ಮತ್ತು ನೀರಿನ ಕೊರತೆ ಇತ್ತು. ಆದರೆ ಮಿಸ್ಟರ್ ಬ್ರೌನ್ ತನ್ನ ನಿರ್ಧಾರ ಪ್ರಕಟಿಸಿದಾಗ ಇಡೀ ಬಾಳೆ ಬೆಳೆಯುವ ಪ್ರದೇಶದಲ್ಲಿ ಅತಿಯಾಗಿ ಮಳೆಯಾಗುತ್ತಿತ್ತು. ಹೊಸೆ ಅರ್ಕಾದಿಯೋ ಸೆಗುಂದೋ ಮಕೋಂದೋಗೆ ಬರುವಾಗ ಸಿಕ್ಕಿಕೊಂಡದ್ದು ಇಂಥದೊಂದು ಮಳೆಗೆ. ಒಂದು ವಾರದ ನಂತರವೂ ಇನ್ನೂ ಮಳೆಯಾಗುತ್ತಿತ್ತು. ಸರ್ಕಾರ ತನಗೆ ಸಿಕ್ಕ ಎಲ್ಲ ಬಗೆಯ ಮಾಧ್ಯಮಗಳ ಮೂಲಕ ಸಾವಿರಾರು ಬಾರಿ ಮತ್ತೆ ಮತ್ತೆ ಇಡೀ ದೇಶದಲ್ಲಿ ಪ್ರಚುರಪಡಿಸಿದ್ದನ್ನು ಕೊನೆಗೆ ಒಪ್ಪಿಕೊಳ್ಳಲಾಗಿತ್ತು: ಯಾರೂ ಸತ್ತಿರಲಿಲ್ಲ, ಸಂತೃಪ್ತರಾದ ಕಾರ್ಮಿಕರು ತಮ್ಮ ಮನೆಗೆ ಹಿಂತಿರುಗಿದ್ದರು ಮತ್ತು ಮಳೆ ನಿಲ್ಲುವ ತನಕ ಬಾಳೆ ತೋಟದ ಕಂಪನಿ ಎಲ್ಲ ಕೆಲಸಗಳನ್ನು ನಿಲ್ಲಿಸಿತ್ತು. ನಿಲ್ಲದೆ ಬೀಳುತ್ತಿದ್ದ ಮಳೆಯಿಂದಾಗಿ ಮಿಲಿಟರಿ ಕಾನೂನು ಸಾರ್ವಜನಿಕ ದುರಂತಗಳ ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಮೇಲೆ ಕಣ್ಣಿಟ್ಟಿತ್ತು. ಆದರೆ ಸೈನಿಕರನ್ನು ನಿವಾಸಗಳಲ್ಲೇ ಇರಿಸಲಾಗಿತ್ತು. ದಿನದ ಸಮಯದಲ್ಲಿ ಸೈನಿಕರು ಮಳೆಯಲ್ಲಿ ಪ್ಯಾಂಟುಗಳನ್ನು ಮೇಲಕ್ಕೆ ಮಡಚಿ, ರಸ್ತೆಗಳಲ್ಲಿ ಮಕ್ಕಳ ಜೊತೆ ದೋಣಿಯಾಟ ಆಡುತ್ತ ತಿರುಗುತ್ತಿದ್ದರು. ರಾತ್ರಿ ಬಂದೂಕಿನ ತುದಿಯಿಂದ ಮನೆಗಳ ಬಾಗಿಲು ಬಡಿಯುತ್ತ ಅನುಮಾನ ಬಂದವರನ್ನು ಹಾಸಿಗೆಯಿಂದೆಬ್ಬಿಸಿ ಹಿಡಿಯುತ್ತಿದ್ದರು ಮತ್ತು ಅವರು ತಿರುಗಿ ಬಾರದ ಕಡೆ ಕರೆದುಕೊಂಡು ಹೋಗುತ್ತಿದ್ದರು. ಪುಂಡರ, ಕೊಲೆಗಡುಕರ, ಬೆಂಕಿ ಹಚ್ಚುವವರ, ಕಟ್ಟಳೆ ನಂ. ೪ರ ವಿರೋಧಿಗಳನ್ನು ಪತೆ ಹಚ್ಚುವುದು ಮತ್ತು ಕೊನೆಗೊಳಿಸುವುದು ಇನ್ನೂ ಮುಂದುವರಿದಿತ್ತು. ಆದರೆ ಆಫೀಸಿನ ಹತ್ತಿರ ಜಮಾಯಿಸಿದ ಹತಭಾಗ್ಯರ ಬಂಧುಗಳಿಗೂ ಮಿಲಿಟರಿಯವರು ಆದದ್ದನ್ನು ನಿರಾಕರಿಸಿದರು. ಆಫೀಸರುಗಳು, “ನೀವೆಲ್ಲೋ ಕನಸು ಕಾಣ್ತಿದೀರ” ಎಂದು ಎತ್ತೆ ಮತ್ತೆ ಹೇಳಿದರಲ್ಲದೆ, “ಮಕೋಂದೋದಲ್ಲಿ ಏನೂ ಆಗಿಲ್ಲ, ಆಗೋದೂ ಇಲ್ಲ” ಎಂದರು. ಈ ರೀತಿಯಲ್ಲಿ ಅವರು ಕೊನೆಗೆ ಯೂನಿಯನ್ ಮುಖಂಡರನ್ನು ನಿರ್ನಾಮ ಮಾಡಿದರು. +ಅವರಲ್ಲಿ ಬದುಕಿ ಉಳಿದವನೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಒಬ್ಬನೇ. ಒಂದು ಶುಕ್ರವಾರ ರಾತ್ರಿ ಅನುಮಾನವಿರದಂತೆ ಬಾಗಿಲ ಮೇಲೆ ಬಂದೂಕಿನ ಕೊನೆಯಿಂದ ಬಡಿದ ಶಬ್ದ ಕೇಳಿಸಿತು. ಅದು ನಿಲ್ಲುವ ತನಕ ಕಾದಿದ್ದ ಅವ್ರೇಲಿಯಾನೋ ಸೆಗುಂದೋ ಬಾಗಿಲು ತೆಗೆದಾಗ ಆರು ಜನ ಸೈನಿಕರು ಅಧಿಕಾರಿಯೊಂದಿಗೆ ಇದ್ದರು. ಮಳೆಯಲ್ಲಿ ತೊಯ್ದು ಹೋಗಿದ್ದ ಅವರು ಒಂದು ಮಾತೂ ಆಡದೆ ಒಂದೊಂದಾಗಿ ಎಲ್ಲ ರೂಮುಗಳನ್ನು, ಕಪಾಟುಗಳನ್ನು, ಅಂಗಳದಿಂದ ಅಡುಗೆ ಮನೆಯ ತನಕ ಹುಡುಕಿದರು. ಉರ್ಸುಲಾಳ ರೂಮಿನಲ್ಲಿ ಲೈಟ್ ಹಾಕಿದಾಗ ಅವಳು ಎದ್ದು ಕುಳಿತಳು. ಹುಡುಕಾಟ ಮುಗಿಯುವ ತನಕ ಅವಳು ಉಸಿರಾಡಲಿಲ್ಲ ಮತ್ತು ಕೈ ಬೆರಳುಗಳನ್ನು ಕ್ರಾಸ್‌ನಂತೆ ಮಾಡಿಕೊಂಡು ಸೈನಿಕರು ಓಡಾಡುತ್ತಿದ್ದ ಕಡೆ ತೋರಿಸುತ್ತಿದ್ದಳು. ಸಾಂತ ಸೋಫಿಯ ದೆಲಾ ಪಿಯದಾದ್ ಮೆಲ್‌ಕಿಯಾದೆಸ್ ರೂಮಿನಲ್ಲಿ ಮಲಗಿದ್ದ ಸೆಗುಂದೋಗೆ ಎಚ್ಚರಿಕೆ ಕೊಟ್ಟಳು. ಆದರೆ ಅವನಿಗೆ ಈಗ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥ ಎಂದು ತೋರಿತು. ಆದ್ದರಿಂದ ಸಾಂತ ಸೋಫಿಯಾ ದೆಲಾ ಪಿಯದಾದ್ ಆ ರೂಮಿಗೆ ಮತ್ತೆ ಬೀಗ ಹಾಕಿದಳು. ಅವನು ಶರಟು, ಶೂ ಹಾಕಿಕೊಂಡು ಅವರಿಗಾಗಿ ಕಾಯುತ್ತ ಮಂಚದ ಮೇಲೆ ಕುಳಿತ. ಆ ಸಮಯದಲ್ಲಿ ಅವರು ಚಿನ್ನದ ವಕ್ ಶಾಪಿನಲ್ಲಿ ಹುಡುಕುತ್ತಿದ್ದರು. ಅಧಿಕಾರಿ ಬೀಗವನ್ನು ತೆಗೆಸಿದ ಮತ್ತು ಲಾಟೀನನ್ನು ಸುತ್ತ ಆಡಿಸಿ ಕೆಲಸ ಮಾಡುವ ಬೆಂಚನ್ನು, ಆಮ್ಲದ ಬಾಟಲುಗಳಿದ್ದ ಗಾಜಿನ ಕಪಾಟು ಮತ್ತು ಉಪಯೋಗಿಸುತ್ತಿದ್ದವನು ಅಲ್ಲಿಯೇ ಬಿಟ್ಟು ಹೋದ ಉಪಕರಣಗಳನ್ನು ಕಂಡ. ಜೊತೆಗೆ ಆ ರೂಮಿನಲ್ಲಿ ಯಾರೂ ಇಲ್ಲವೆಂದು ತಿಳಿದುಕೊಂಡ. ಅವನು ಅವ್ರೇಲಿಯಾನೋ ಸೆಗುಂದೋನನ್ನು ಅವನು ಅಕ್ಕಸಾಲಿಗನೇ ಎಂದು ಕೇಳಿದ. ಅವ್ರೇಲಿಯಾನೋ ಸೆಗುಂದೋ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ವರ್ಕ್ ಶಾಪ್ ಆಗಿತ್ತೆಂದು ಹೇಳಿದ. “ಓಹೋ” ಎಂದ ಆಫೀಸರ್ ಲೈಟ್ ಹಾಕಿ ತೀರ ಕೂಲಂಕಷವಾಗಿ ಹುಡುಕಲು ಅಪ್ಪಣೆ ಕೊಟ್ಟ. ಅವರಿಗೆ ಕರಗಿಸದೆ ಉಳಿದ ಹದಿನೆಂಟು ಸಣ್ಣ ಚಿನ್ನದ ಮೀನುಗಳು ಸಿಕ್ಕವು. ಅವುಗಳನ್ನು ತಗಡಿನ ಡಬ್ಬದಲ್ಲಿ ಬಾಟಲುಗಳ ಹಿಂದೆ ಇಡಲಾಗಿತ್ತು. ಆಫೀಸರ್ ಕೆಲಸ ಮಾಡುವ ಬೆಂಚಿನ ಮೇಲೆ ಅವುಗಳನ್ನು ಇಟ್ಟುಕೊಂಡು ಒಂದೊಂದನ್ನೇ ಪರೀಕ್ಷಿಸಿದ ಮತ್ತು ಮೃದುವಾದ. ಅವನು, “ನಾನು ತೊಗೊಳ್ಳಬಹುದಾದ್ರೆ ಒಂದನ್ನ ತೊಗೊಳ್ತೀನಿ. ಒಂದು ಕಾಲದಲ್ಲಿ ಇವು ರಾಜರನ್ನ ಉರುಳಿಸಿದ ಸಂಕೇತವಾಗಿದ್ವು. ಈಗ ಹಳೆಕಾಲದ ವಸ್ತು ಅಷ್ಟೆ” ಎಂದ. ಅವನು ಮೆತ್ತಗಿರದ, ಹದಿಹರೆಯದವನಾಗಿದ್ದ ಮತ್ತು ಅಲ್ಲಿಯ ತನಕ ಕಾಣದ ಸಜವಾದ ಒಳ್ಳೆಯ ನಡತೆ ಅವನಲ್ಲಿತ್ತು. ಅವ್ರೇಲಿಯಾನೋ ಸೆಗುಂದೋ ಅವನಿಗೆ ಒಂದು ಸಣ್ಣ ಮೀನನ್ನು ಕೊಟ್ಟ. ಅಧಿಕಾರಿ ಚಿಕ್ಕ ಹುಡುಗನಂತೆ ಕಣ್ಣು ಹೊಳೆಸಿ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಉಳಿದವುಗಳನ್ನು ಡಬ್ಬದಲ್ಲಿ ವಾಪಸು ಹಾಕಿ, ಅದು ಮುಂಚೆ ಇದ್ದ ಕಡೆ ಇಟ್ಟ. +ಅವನು, “ಇದು ತುಂಬ ಒಳ್ಳೆ ವಸ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ನಮ್ಮ ದೊಡ್ಡ ಮನುಷ್ಯರಲ್ಲೊಬ್ಬ” ಎಂದ +ಆದರೆ ಅವನಲ್ಲಿ ಉಕ್ಕಿ ಬಂದ ಮಾನವ ಗುಣ ಅವನ ವೃತ್ತಿಪರ ನಡವಳಿಕೆಯನ್ನು ಬದಲಾಯಿಸಲಿಲ್ಲ. ಮತ್ತೆ ಬೀಗ ಹಾಕಿದ್ದ ಮೆಲ್‌ಕಿಯಾದೆಸ್ ರೂಮಿನ ಹತ್ತಿರ ನಿಂತಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಕೊನೆಯ ಯತ್ನ ಮಾಡಿದಳು. ಅವಳು, “ಆ ರೂಮಿನಲ್ಲಿ ಒಂದು ಶತಮಾನದಿಂದ ಯಾರೂ ಸುಳಿದಿಲ್ಲ” ಎಂದಳು. ಅಧಿಕಾರಿ ಅದನ್ನು ತೆಗೆಸಿದ ಹಾಗೂ ಲಾಟೀನಿನ ಬೆಳಕನ್ನು ಸುತ್ತ ಆಡಿಸಿದ. ಅವ್ರೇಲಿಯಾನೋ ಸೆಗುಂದೋ ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಹೊಸೆ ಅರ್ಕಾದಿಯೋನ ಮುಖದ ಮೇಲೆ ಬೆಳಕು ಹಾದು ಹೋದಾಗ ಅವನ ಕಣ್ಣುಗಳನ್ನು ನೋಡಿದರು. ಅವರಿಗೆ ಅದು ಆತಂಕದ ಕೊನೆ ಮತ್ತು ಒಪ್ಪಿಕೊಳ್ಳುವುದರಲ್ಲಿ ಮುಗಿಯುವ ಮತ್ತೊಂದರ ಪ್ರಾರಂಭ ಎಂದುಕೊಂಡರು. ಆದರೆ ಅಧಿಕಾರಿ ಲಾಟೀನಿನಿಂದ ರೂಮನ್ನು ಪರೀಕ್ಷಿಸುವುದನ್ನು ಮುಂದುವರಿಸಿದ ಮತ್ತು ಕಪಾಟಿನಲ್ಲಿ ಪೇರಿಸಿದ್ದ ಎಪ್ಪತೆರಡು ಉಚ್ಚೆ ಪಾತ್ರೆಗಳನ್ನು ನೋಡುವ ತನಕ ಬೇರೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ. ಅನಂತರ ಅವನು ಲೈಟ್ ಹಾಕಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಂದಿಗಿಂತ ಗಂಭೀರನಾಗಿ ಹಾಗೂ ಆಲೋಚನಾಪರನಾಗಿ ಕುಳಿತಿದ್ದ. ಹಿಂದುಗಡೆ ಇದ್ದ ಶೆಲ್ಫ್‌ಗಳ ತುಂಬ ಪುಸ್ತಕಗಳು, ಹಾಳೆಯ ಸುರುಳಿಗಳಿದ್ದವು ಮತ್ತು ಇನ್ನೂ ಹೊಸದಾದ ಇಂಕ್ ಇದ್ದ ಇಂಕ್ ಬಾಟಲ್ ಹಾಗೂ ಅಚ್ಚುಕಟ್ಟಾಗಿದ್ದ ಕೆಲಸ ಮಾಡುವ ಟೇಬಲ್ ಇತ್ತು. ಅಲ್ಲಿ ಅದೇ ಶುದ್ಧವಾದ ಗಾಳಿ, ಅದೇ ನಿರ್ಮಲತೆ, ಧೂಳಿನಿಂದ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅರ್ಥವಾಗದೇ ಹೋದ, ಅವ್ರೇಲಿಯಾನೋ ಸೆಗುಂದೋನ ಹುಡುಗಾಟದಿಂದ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳಿದ್ದವು. ಆದರೆ ಅಧಿಕಾರಿ ಉಚ್ಚೆ ಪಾತೆಯಲ್ಲಿ ಮಾತ್ರ ಆಸಕ್ತಿ ವಹಿಸಿದ್ದ +ಅವನು “ಈ ಮನೇಲಿ ಎಷ್ಟು ಜನ ಇದೀರಿ” ಎಂದ. +“ಐದು” +ಸಹಜವಾಗಿಯೇ ಅಧಿಕಾರಿಗೆ ಅದು ಅಥವಾಗಲಿಲ್ಲ. ಅವನು ಮಾತು ನಿಲ್ಲಿಸಿ ಅವ್ರೇಲಿಯಾನೋ ಸೆಗುಂದೋ ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಇಬ್ಬರೂ ಇನ್ನೂ ನೋಡುತ್ತಿದ್ದ ಕಡೆ ನೋಟ ಬೀರಿದ. ಹೊಸೆ ಅರ್ಕಾದಿಯೋ ಸೆಗುಂದೋಗೆ ಸೈನಿಕ ತನ್ನ ಕಡೆ ನೋಡಿಯೂ ತಾನು ಕಾಣುತ್ತಿಲ್ಲ ಎನ್ನುವುದು ಗೊತ್ತಾಯಿತು. ಅನಂತರ ಅವನು ಲೈಟ್ ಆರಿಸಿ ಬಾಗಿಲು ಹಾಕಿದ. ಅವನು ಸೈನಿಕರ ಜೊತೆ ಮಾತಾಡಿದಾಗ ಹೊಸೆ ಅವ್ರೇಲಿಯಾನೋ ಸೆಗೊಂದೋಗೆ ಅವನು ರೂಮನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಕಣ್ಣುಗಳಿಂದ ನೋಡಿದನೆಂದು ತಿಳಿದುಕೊಂಡ. +ಅವನು ಸೈನಿಕರಿಗೆ “ಈ ರೂಮಿನಲ್ಲಿ ಕೊನೇ ಪಕ್ಷ ಒಂದು ಶತಮಾನದಿಂದ ಯಾರೂ ಇರ್‍ಲಿಲ್ಲ ಅಂತ ಕಾಣ್ಸತ್ತೆ. ಇಲ್ಲಿ ಹಾವುಗಳು ಇದ್ದಿರ್‍ಬೇಕು”‘ಎಂದ. +ಬಾಗಿಲು ಹಾಕಿದ ಮೇಲೆ ಅರ್ಕಾದಿಯೋ ಸೆಗುಂದೋಗೆ ಯುದ್ಧ ಮುಗಿದಿರುವುದು ಖಾತರಿಯಾಯಿತು. ವರ್ಷಗಳ ಹಿಂದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಆಕರ್ಷಣೆಯ ಬಗ್ಗೆ ಹೇಳಿದ್ದ ಮತ್ತು ಲೆಕ್ಕವಿಲ್ಲದಷ್ಟು ಸ್ವಂತ ಅನುಭವದಿಂದ ವಿವರಿಸಲು ಪ್ರಯತ್ನಿಸಿದ್ದ. ಹೊಸೆ ಅರ್ಕಾದಿಯೋ ಸೆಗುಂದೋ ಅವನನ್ನು ನಂಬಿದ್ದ. ಸೈನಿಕರು ತನ್ನ ಕಡೆ ನೋಡಿಯೂ ತಾನು ಕಾಣದಿದ್ದ ರಾತ್ರಿ, ಕಳೆದ ಕೆಲವು ತಿಂಗಳಿಂದ ಉಂಟಾಗುತ್ತಿದ್ದ ಆತಂಕದ ಬಗ್ಗೆ, ಯಾತನೆಯ ಬಗ್ಗೆ, ಸ್ಟೇಷನ್ ಬಳಿಯ ಜೀವ ಭಯದ ಬಗ್ಗೆ ಮತ್ತು ರೈಲಿನಲ್ಲಿ ತುಂಬಿದ ಸತ್ತ ಜನರ ಬಗ್ಗೆ ಯೋಚಿಸುತ್ತಿದ್ದಾಗ, ಹೊಸೆ ಅರ್ಕಾದಿಯೋ ಸೆಗುಂದೋ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೈಲಾಗದವನು ಅಥವಾ ಮೋಸಗಾರ ಎಂಬ ನಿರ್ಣಯಕ್ಕೆ ಬಂದ. ಯುದ್ಧವನ್ನು ವಿವರಿಸಲು ಅಷ್ಟೊಂದು ಪದಗಳು ಏಕೆ ಬೇಕಿತ್ತೆಂದು ಅವನಿಗೆ ಅರ್ಥವಾಗಲಿಲ್ಲ. ಏಕೆಂದರೆ ಒಂದೇ ಒಂದು ಪದ ಸಾಕಾಗಿತ್ತೆಂದು ಅವನಿಗೆ ತೋರಿತು. ಅದು ಭಯ. ಅದಕ್ಕೆ ಪ್ರತಿಯಾಗಿ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಅದ್ಭುತವಾದ ಬೆಳಕಿನ ರಕ್ಷಣೆಯಲ್ಲಿ, ಮಳೆಯ ಸದ್ದಿನಲ್ಲಿ, ತೋರದಿರುವ ಭಾವನೆಯಲ್ಲಿ ಅವನಿಗೆ ಕಳೆದ ಜೀವಮಾನದಲ್ಲಿ ಒಂದು ಕ್ಷಣವೂ ಸಿಗದ ಸಮಾಧಾನ ಸಿಕ್ಕಿತು. ಅವನಲ್ಲಿ ಉಳಿದ ಒಂದೇ ಭಯವೆಂದರೆ ತನ್ನನ್ನು ಸಜೀವವಾಗಿ ಹೂಳುತ್ತಾರೆ, ಎಂದು. ಅವನು ಅದನ್ನು ನಿತ್ಯದ ಊಟ ತಂದು ಕೊಟ್ಟಾಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಳಿಗೆ ಹೇಳಿದ. ಅವಳು ತನ್ನಲ್ಲಿರುವ ಎಲ್ಲ ಶಕ್ತಿಗಳನ್ನು ಮೀರಲು ಹೋರಾಡಿ, ಅವನು ಸತ್ತ ನಂತರವೇ ಹೂಳುವುದು ಖಾತರಿಯಾಗುವ ತನಕ, ತಾನು ಬದುಕಿರುತ್ತೇನೆಂದು ಮಾತು ಕೊಟ್ಟಳು. ಅನಂತರ ಹೊಸೆ ಅರ್ಕಾದಿಯೋ ಸೆಗುಂದೋ ಮೆಲ್‌ಕಿಯಾದೆಸ್‌ನ ಹಸ್ತ ಪ್ರತಿಗಳನ್ನು ಅರ್ಥವಾಗದಿದ್ದರೂ ಸಂತೋಷದಿಂದ ಮತ್ತೆ ಮತ್ತೆ ಓದುವುದಕ್ಕೆ ಉಳಿದ ಜೀವನವನ್ನು ಮುಡುಪಾಗಿರಿಸಲು ನಿಶ್ಚಯಿಸಿದ. ಅವನು ಟ್ರೈನಿನ ಶಬ್ದಕ್ಕೆ ಎಷ್ಟು ಹೊಂದಿಕೊಂಡನೆಂದರೆ ಎರಡು ತಿಂಗಳಲ್ಲಿ ಅದೊಂದು ರೀತಿಯ ನಿಶ್ಯಬ್ದವೇ ಆಗಿತ್ತು. ಸಾಂತ ಸೋಫಿಯಾ ದೆಲಾ ಪಿಯದಾದ್ ಬಂದು ಹೋಗುತ್ತಿದ್ದರಿಂದ ಮಾತ್ರ ಭಂಗ ಉಂಟಾಗುತ್ತಿತ್ತು. ಆದ್ದರಿಂದ ಅವನು ಅವಳಿಗೆ ಊಟವನ್ನು ಕಿಟಕಿಯ ಕಟ್ಟೆಯ ಮೇಲೆ ಇಟ್ಟು ಬಾಗಿಲಿಗೆ ಬೀಗ ಹಾಕಲು ಹೇಳಿದ. ಮನೆಯಲ್ಲಿ ಉಳಿದವರು, ಫೆರ್ನಾಂಡ ಕೂಡ ಸೇರಿದಂತೆ ಅವನನ್ನು ಮರೆತು ಬಿಟ್ಟರು. ಸೈನಿಕರು ಅವನನ್ನು ಕಂಡರೂ ಗುರುತು ಹಿಡಿಯದೇ ಹೋದದ್ದರಿಂದ ಅವನು ಅಲ್ಲಿರುವುದಕ್ಕೆ ಅವಳ ಅಭ್ಯಂತರವಿರಲಿಲ್ಲ. ಸೈನಿಕರು ಮಕೋಂದೋ ಬಿಟ್ಟು ಹೋದ ಆರು ತಿಂಗಳಾದ ಮೇಲೆ ಅವ್ರೇಲಿಯಾನೋ ಸೆಗುಂದೋ ಮಳೆ ನಿಲ್ಲುವ ತನಕ ಮಾತನಾಡಲು ಸಿಗುತ್ತಾನೆ ಎಂದು ಬಾಗಿಲು ತೆಗೆದ. ಬಾಗಿಲು ತೆಗೆದ ಕೂಡಲೇ ಅನೇಕ ಸಲ ಉಪಯೋಗಿಸಿದ ಮತ್ತು ನೆಲದ ಮೇಲೆ ಹರಡಿ ಬಿದ್ದ ಉಚ್ಚೆ ಪಾತ್ರೆಗಳು ಬಲವಾಗಿ ಆಕ್ರಮಣ ಮಾಡಿದ ಹಾಗೆ ಭಾಸವಾಯಿತು. ಸುಳಿದಾಡುತ್ತ, ಸುಳಿದಾಡುತ್ತ ತೀಕ್ಷ್ಣವಾದ ಗಾಳಿಗೆ ವಿಮನಸ್ಕನಾಗಿದ್ದ ಬಕ್ಕ ತಲೆಯ ಹೊಸೆ ಅರ್ಕಾದಿಯೋ ಸೆಗುಂದೋ ಅರ್ಥವಾಗದ ಹಸ್ತಪ್ರತಿಗಳನ್ನು ಇನ್ನೂ ಓದುತ್ತಿದ್ದ. ದಿವ್ಯವಾದ ಪ್ರಭೆ ಅವನನ್ನು ಬೆಳಗಿತ್ತು. ಬಾಗಿಲು ತೆಗೆದ ಶಬ್ದವಾದಾಗ ಅವನು ಸ್ವಲ್ಪವೇ ಕಣ್ಣೆತ್ತಿ ನೋಡಿದ. ಆದರೆ ಅವನ ಸೋದರನಿಗೆ ಆ ನೋಟದಲ್ಲಿ ಸರಿಪಡಿಸಲಾಗದ ಮುತ್ತಜ್ಜನ ವಿಧಿ ಲಿಖಿತವನ್ನು ಇನ್ನೊಮ್ಮೆ ಕಾಣಲು ಅಷ್ಟು ಸಮಯವೇ ಸಾಕಾಯಿತು. +ಹೊಸೆ ಅರ್ಕಾದಿಯೋ ಸೆಗುಂದೋ, “ಮೂರು ಸಾವಿರಕ್ಕಿಂತ ಹೆಚ್ಚಿಗೆ ಜನರಿದ್ರು. ನಂಗೆ ಖಚಿತವಾಗಿ ಗೊತ್ತು. ಅವ್ರೆಲ್ಲ ಸ್ಟೇಷನ್ ಹತ್ರ ಇದ್ದೋರು” ಎಂದಷ್ಟೇ ಹೇಳಿದ. +೧೬ +ಮಳೆ ನಾಲ್ಕು ವರ್ಷ ಹನ್ನೊಂದು ತಿಂಗಳು, ಎರಡು ದಿನ ನಿಲ್ಲದೆ ಸುರಿಯಿತು. ತುಂತುರುಗಳಿದ್ದ ಅವಧಿಯೂ ಇದ್ದವು. ಆಗ ಮೋಡ ಚದುರಿದ್ದನ್ನು ಆಚರಿಸಲು ಪ್ರತಿಯೊಬ್ಬರೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಗೆಲುವಾಗಿರುತ್ತಿದ್ದರು. ಆದರೆ ಬಹಳ ಬೇಗನೆ ಮಧ್ಯೆ ಮಧ್ಯೆ ನಿಲ್ಲುತ್ತಿರುವುದು ದುಪ್ಪಟ್ಟಿನಷ್ಟು ಹೆಚ್ಚಾಗುವ ಮಳೆಯ ಸೂಚನೆ ಎಂದು ತಿಳಿದುಕೊಂಡರು. ಆಕಾಶ ವಿನಾಶಕಾರಿಯಾದ ಭಾರಿ ಮಳೆ ಸುರಿಸುವ ಸ್ಥಿತಿಗೆ ಬಂತು ಮತ್ತು ಉತ್ತರದಿಂದ ತಾರಸಿ ಮತ್ತು ಗೋಡೆಗಳನ್ನು ಕೆಡವಿ ಉರುಳಿಸುವ ಬಿರುಗಾಳಿ ಬೀಸಿ ಬಾಳೆ ತೋಟದ ಗಿಡಗಳನ್ನು ಒಂದನ್ನು ಕೂಡ ಬಿಡದೆ ಬುಡಮೇಲು ಮಾಡಿತು. ಉರ್ಸುಲಾ ಅಂದಿನ ದಿನಗಳನ್ನು ನೆನಪಿಸಿಕೊಂಡಂತೆ, ನಿದ್ದೆ ಬಾರದ ರೋಗದ ಅವಧಿಯಲ್ಲಿ ಅದಂತೆ, ದುರಂತವೇ ಬೇಸರದ ವಿರುದ್ಧದ ರಕ್ಷಣೆಗೆ ಸ್ಫೂರ್ತಿಕೊಡುತ್ತದೆ. ಸೋಮಾರಿತನಕ್ಕೆ ಶರಣಾಗದಂತೆ ಅತಿ ಹೆಚ್ಚು ಶ್ರಮಿಸುತ್ತಿದ್ದವರಲ್ಲಿ ಅವ್ರೇಲಿಯಾನೋ ಸೆಗುಂದೋ ಕೂಡ ಒಬ್ಬ. ಅವನು ರಭಸದಿಂದ ಮಳೆ ಸುರಿಯಲು ಪ್ರಾರಂಭವಾದ ಅಂದಿನ ರಾತ್ರಿ ಸಣ್ಣ ರಿಪೇರಿಗಾಗಿ ಮನೆಗೆ ಹೋಗಿದ್ದ. ಫೆರ್ನಾಂಡ ಅವನಿಗೆ ಕಪಾಟಿನಲ್ಲಿದ್ದ ಮುರಿದು ಹೋಗಿದ್ದ ಕೊಡೆಯನ್ನು ಹುಡುಕಿಕೊಟ್ಟಳು. ಅವನು, “ಅದೇನೂ ಬೇಕಿಲ್ಲ. ಮಳೆ ನಿಲ್ಲೋ ತನಕ ನಾನಿಲ್ಲೇ ಇರ್‍ತೀನಿ” ಎಂದ. ಅದೇನು ಸುಮ್ಮನೆ ಹೇಳಿದಂಥ ಮಾತಾಗಿರಲಿಲ್ಲ. ಅವನು ಅಕ್ಷರಶ: ಹಾಗೆಯೇ ಮಾಡಿದ್ದು. ಏಕೆಂದರೆ ಪೆತ್ರಾ ಕೊತೆಸ್ ಮನೆಯಲ್ಲಿ ಅವನ ಬಟ್ಟೆಗಳು ಇದ್ದದ್ದರಿಂದ ಪ್ರತಿ ಮೂರು ದಿನಗಳಿಗೊಂದು ಸಲ ಅವನು ಎಲ್ಲ ಬಟ್ಟೆಗಳನ್ನು ಒಗೆಯಲು ಬಿಚ್ಚಿ ಹಾಕಿ, ಅವು ಒಣಗುವ ತನಕ ಚಡ್ಡಿಯಲ್ಲಿ ಇರುತ್ತಿದ್ದ. ಬೇಸರವಾಗಬಾರದು ಎಂದು ಅವನು ಮನೆಯಲ್ಲಿ ರಿಪೇರಿ ಮಾಡಬೇಕಾದ ಕೆಲಸದಲ್ಲಿ ತೊಡಗಿದ. ಅವನು ಬಾಗಿಲು ತಿರುಗಣಿಗಳನ್ನು ಸರಿ ಮಾಡಿದ. ಬೀಗಗಳಿಗೆ ಎಣ್ಣೆ ಹಾಕಿದ. ಸ್ಕ್ರೂಗಳನ್ನು ಗಟ್ಟಿಯಾಗಿ ತಿರುಗಿಸಿದ ಮತ್ತು ಬಾಗಿಲುಗಳ ಅಂಚು ಕೆತ್ತಿ ಸಡಿಲಗೊಳಿಸಿದ. ಅವನು ಅನೇಕ ತಿಂಗಳ ಕಾಲ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಕಾಲದಲ್ಲಿ ಜಿಪ್ಸಿಗಳು ಬಿಟ್ಟು ಹೋದ ಟೂಲ್ ಬಾಕ್ಸ್ ಹಿಡಿದುಕೊಂದು ಓಡಾಡುತ್ತಿದ್ದ. ಅಲ್ಲದೆ ಯಾರಿಗೂ ಕೂಡ ಅವನು ತಿಳಿಯದೆ ಮಾಡಿದ ವ್ಯಾಯಾಮದಿಂದಲೋ, ಮಳೆಗಾಲದ ರೇಜಿಗೆಯಿಂದಲೋ ಅಥವಾ ಸ್ವತ: ಮಾಡಿಕೊಂಡ ಉಪವಾಸದಿಂದಲೋ ಅವನ ಹೊಟ್ಟೆ ಇಷ್ಟಿಟ್ಟೆ, ಇಷ್ಟಿಟ್ಟೆ ಸಣ್ಣಗಾಯಿತು ಮತ್ತು ಆಮೆಯ ಹಾಗೆ ಊದಿಕೊಂಡಿದ್ದ ಮುಖದ ಉರಿಗೆಂಪು ಕಡಿಮೆಯಾಯಿತು. ಜೋಡಿಗಲ್ಲ ಮೃದುವಾಗಿದ್ದಲ್ಲದೆ ಮತ್ತೆ ಶೂಗಳನ್ನು ಹಾಕಿಕೊಳ್ಳಲು ಅವನಿಗೆ ಸಾಧ್ಯವಾಗುತ್ತಿತ್ತು. ಎಲ್ಲ ಹಿಡಿಕೆಗಳನ್ನು ಸರಿ ಮಾಡುತ್ತಿದ್ದ, ಗಡಿಯಾರವನ್ನು ರಿಪೇರಿ ಮಾಡುತ್ತಿದ್ದ ಅವನನ್ನು ನೋಡಿದ ಫೆರ್ನಾಂಡಳಿಗೆ, ಅವನೂ ಕಟ್ಟುವ ಚಾಳಿಗೆ ಬಿದ್ದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ಅವನ ಸಣ್ಣ ಬಂಗಾರದ ಮೀನು ತಯಾರಿಕೆ, ಅಮರಾಂತ ಮತ್ತು ಅವಳ ಮುಸುಕು, ಗುಂಡಿಗಳು, ಹೊಸೆ ಅರ್ಕಾದಿಯೋ ಮತ್ತು ಚರ್ಮದ ಹಾಳೆಗಳು ಹಾಗೂ ಉರ್ಸುಲಾ ಮತ್ತು ಅವಳ ನೆನಪುಗಳು ಇರುವ ಹಾಗಿದ್ದಾನೋ ಹೇಗೆ ಎಂದುಕೊಂಡಳು. ಮಳೆಯಿಂದ ಉಂಟಾಗುತ್ತಿದ್ದ ಕೆಡುಕೆಂದರೆ ಅದು ಪ್ರತಿಯೊಂದರ ಮೇಲೆ ಪ್ರಭಾವ ಬೀರಿತ್ತು. ಅತಿ ಹೆಚ್ಚು ಒಣಗಿರುತ್ತಿದ್ದ ಮೆಷಿನ್‌ಗಳಲ್ಲಿ ಕೂಡ ಪ್ರತಿ ಮೂರು ದಿನಗಳಿಗೆ ಎಣ್ಣೆ ಸೋಂಕಿಸದಿದ್ದರೆ ಅವುಗಳ ಗೇರ್ ಭಾಗದಲ್ಲಿ ಪಾಚಿ ಕಟ್ಟಿದಂತಾಗುತ್ತಿತ್ತು. ಚಿತ್ರ ನೇಯ್ದಿರುವ ಬಟ್ಟೆಗಳ ದಾರಗಳು ಹುಡಿಯಾಗುತ್ತಿದ್ದವು, ಒದ್ದೆ ಬಟ್ಟೆಗಳು ಬಣ್ಣಗೆಟ್ಟು ತುಂಡಾಗುತ್ತಿದ್ದವು. ಗಾಳಿಯಲ್ಲಿ ಎಷ್ಟು ತೇವವಿತ್ತೆಂದರೆ ಮೀನುಗಳು ಬಾಗಿಲ ಮುಖಾಂತರ ಬಂದು ರೂಮುಗಳಲ್ಲಿ ಈಜುತ್ತ ಕಿಟಕಿಗಳಿಂದ ಹೊರಗೆ ಹೋಗುತ್ತಿದ್ದವು. ಒಂದು ದಿನ ಬೆಳಿಗ್ಗೆ ಫೆರ್ನಾಂಡ ತನ್ನ ಅಂತಿಮ ಗಳಿಗೆ ಬಂದಿದೆ ಎನ್ನುವ ಭಾವದಿಂದ ಎದ್ದಳು. ಅವಳು ತನ್ನನ್ನು ಸ್ಟ್ರೆಚರ್‌ನಲ್ಲಿ ಆದರೂ ಸರಿಯೆ ಫಾದರ್ ಆಂಟೋನಿಯೋ ಇಸಬಲ್ ಬಳಿಗೆ ಕರೆದುಕೊಂಡು ಹೋಗಲು ಹೇಳಿದ್ದಳು. ಆಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಳಿಗೆ ಅವಳ ಬೆನ್ನಿನ ಮೇಲೆ ಜಿಗಣಿಗಳ ಸಾಲು ಇರುವುದು ಕಂಡು ಬಂತು. ಅವಳು ಅವಳನ್ನು ರಕ್ತ ಹೀರಿ ಸಾಯಿಸುವುದಕ್ಕಿಂತ ಮುಂಚೆ ಒಂದೊಂದನ್ನೇ ಕಿತ್ತು ಸಾಯಿಸಿದಳು. ಅವರು ಮನೆಯೊಳಗಿನ ನೀರನ್ನು ಹೊರಗೆ ಹಾಕಲು ಹಳ್ಳ ತೋಡಬೇಕಾಗಿತ್ತು. ಇದರಿಂದ ಕಪ್ಪೆ ಹಾಗೂ ಬಸವನ ಹು;ಳುಗಳು ನಿವಾರಣೆಯಾಗಿ, ಮಂಚದ ಕಂಬದ ಕೆಳಗಿನ ಇಟ್ಟಿಗೆಗಳನ್ನು ತೆಗೆದು, ಅವರು ಶೂ ಹಾಕಿಕೊಂಡು ಮತ್ತೆ ಮನೆಯಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತು. ಇಂಥ ಸಣ್ಣ ಸಣ್ಣ ವಿವರಗಳಲ್ಲಿ ಮಗ್ನನಾದ ಅವ್ರೇಲಿಯಾನೋ ಸೆಗುಂದೋಗೆ ಒಂದು ದಿನ ಮಧ್ಯಾಹ್ನ ಹೊತ್ತಿಗೆ ಮುಂಚೆಯೇ ಸಂಜೆಯಾದದ್ದನ್ನು ಯೋಚಿಸುತ್ತಿದ್ದಾಗ ಪೆತ್ರಾ ಕೊತೆಸ್ ಕುರಿತು ಮೈಯಲ್ಲಿ ಯಾವ ಕಂಪನವೂ ಉಂಟಾಗದೆ ಹೋಗುವ ತನಕ ಅರಿವಿಗೆ ಬಾರದೆಯೇ ತನಗೆ ವಯಸ್ಸಾಗುತ್ತಿದೆ ಎನ್ನುವುದು ಅವನಿಗೆ ತಿಳಿದಿರಲಿಲ್ಲ. ಅವನಿಗೆ ಫೆರ್ನಾಂಡಳ ಸಪ್ಪೆ ಪ್ರೀತಿಗೆ ವಾಪಸು ಹೋಗಲು ಯಾವುದೇ ತೊಂದರೆ ಇರಲಿಲ್ಲ. ಏಕೆಂದರೆ ಅವಳ ರೂಪಕ್ಕೆ ವಯಸ್ಸಿನಿಂದಾಗಿ ಗಾಂಭೀರ್ಯ ಬಂದಿತ್ತು. ಆದರೆ ಮಳೆ ಎಲ್ಲ ಬಗೆಯ ಭಾವಾವೇಶದಿಂದ ಅವನನ್ನು ಹೊರತು ಪಡಿಸಿತ್ತು ಮತ್ತು ಅವನಲ್ಲಿ ಅಪೇಕ್ಷೆ ಇಲ್ಲದ ಪ್ರಶಾಂತತೆ ತುಂಬಿತ್ತು. ಬೇರೆ ಕಾಲದಲ್ಲಾಗಿದ್ದರೆ ಒಂದು ವರ್ಷವಾದರೂ ಬಿಡದ ಈ ಮಳೆಯಿಂದ ಏನೇನು ಮಾಡಲು ಸಾಧ್ಯವಿತ್ತು ಎನ್ನುವ ಆಲೋಚನೆಯಿಂದ ತನ್ನಷ್ಟಕ್ಕೆ ನಕ್ಕ. ಅವನು ಬಾಳೆ ತೋಟದ ಕಂಪನಿಯವರು ಜನಪ್ರಿಯಗೊಳಿಸುವ ಬಹಳ ಮುಂಚೆಯೇ ಮಕೋಂದೋಗೆ ಜಿಂಕ್ ಶೀಟುಗಳನ್ನು ತಂದ ಮೊದಲನೆಯವನು. ಅದನ್ನು ಪಿಯತ್ರೋ ಕೊತೆಸ್‌ಳ ಬೆಡ್‌ರೂಮಿನ ಚಾವಣಿಗಾಗಿ ಮತ್ತು ಆ ಸಮಯದಲ್ಲಿ ಬೀಳುತ್ತಿದ್ದ ಮಳೆ ಹೊರಡಿಸುತ್ತಿದ್ದ ತೀವ್ರ ಸಾಮೀಪ್ಯವನ್ನು ಅನುಭವಿಸುವ ಕಾರಣಕ್ಕಾಗಿ ತಂದದ್ದು. ಆದರೆ ತಾರುಣ್ಯದ ವ್ಯೆಪರೀತ್ಯದ ಆ ನೆನಪುಗಳು ಕೂಡ, ಕಳೆದ ಬಾರಿಯ ಲಂಪಟತನದಲ್ಲಿ, ತನ್ನದೆಲ್ಲವೂ ಕೊನೆಯಾದಂತೆ, ಅವನ ಮೇಲೆ ಪರಿಣಾಮ ಬೀರಲಿಲ್ಲ. ಯಾವುದೇ ರೀತಿಯ ವ್ಯಥೆ ಇಲ್ಲದೆ ಅಥವಾ ಪಶ್ಚಾತ್ತಾಪವಿಲ್ಲದೆ ಅದನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವ ಮಹತ್ತರವಾದ ಉಡುಗೊರೆಯೊಂದೇ ಅವನಿಗೆ ಉಳಿದದ್ದು, ಮಳೆಯಿಂದಾಗಿ ಅವನಿಗೆ ಹಿಂದಿನದನ್ನು ಕುರಿತು ಯೋಚಿಸುವುದಕ್ಕೆ ಅಲ್ಲದೆ ಕೆಲಸದ ಉಪಕರಣ ಹಾಗೂ ಎಣ್ಣೆ ಡಬ್ಬ ಅವನಿಗೆ ತನ್ನ ಜೀವನದಲ್ಲಿ ಕೈಗೊಳ್ಳಬಹುದಾಗಿದ್ದ ಹಾಗೂ ಕೈಗೊಳ್ಳದಿದ್ದ ಉದ್ದಿಮೆಗಳ ಬಗ್ಗೆ ಅರಿವು ಮೂಡಿಸಿತು. ಆದರೆ ಅವರೆಡೂ ಸತ್ಯ ಸಂಗತಿಗಳಾಗಿರಲಿಲ್ಲ. ಏಕೆಂದರೆ ಮನೆಯಲ್ಲಿ ಕುಳಿತುಕೊಂಡಿರಬೇಕೆಂಬ ಆಕರ್ಷಣೆ ಅವನಲ್ಲಿ ಉಂಟಾದದ್ದಕ್ಕೆ ಹೊಸದಾಗಿ ಕಂಡುಕೊಂಡ ಅಂಶವಾಗಲಿ ಅಥವಾ ನೈತಿಕ ಭಾವನೆಯಾಗಲಿ ಕಾರಣವಾಗಿರಲಿಲ್ಲ. ಅದು ಬಹಳ ದೂರದಿಂದ ಬಂದದ್ದು. ಮಳೆಯ ಕಿರಿಕಿರಿಯಿಂದ ಮೆಲ್‌ಕಿಯಾದೆಸ್‌ನ ರೂಮಿನಲ್ಲಿದ್ದಾಗ ಅವನು ಅದ್ಭುತವಾದ ಹಾರುವ ಜಮಖಾನ, ಇಡೀ ಹಡಗನ್ನೇ ತಿನ್ನುವ ತಿಮಿಂಗಿಲ ಮತ್ತು ಆ ದಿನಗಳಲ್ಲಿ ಯಾವುದೋ ಉದಾಸೀನ ಗಳಿಗೆಯಲ್ಲಿ ಪುಟ್ಟ ಅವ್ರೇಲಿಯಾನೋ ಅಂಗಳಕ್ಕೆ ಬಂದಾಗ ಅವನ ಅಜ್ಜ ಅವ್ರೇಲಿಯಾನೋನ ಗುರುತಿನ ಗುಟ್ಟನ್ನು ಕಂಡು ಹಿಡಿದ. ಅವನ ಕೂದಲು ಕಟ್ ಮಾಡಿ, ಬಟ್ಟೆ ತೊಡಿಸಿ ಹೇಗೆ ಜನರಿಗೆ ಹೆದರಬಾರದೆಂದು ಕಲಿಸಿಕೊಟ್ಟ. ಬಹಳ ಬೇಗನೆ ಅವನು ಎದ್ದು ಕಾಣುವ ಕೆನ್ನೆಮೂಳೆ, ಬೆದರಿದ ನೋಟ ಹಾಗೂ ಏಕಾಂತದ ರೀತಿಯಿಂದ ನ್ಯಾಯ ಸಮ್ಮತವಾದ ಅವ್ರೇಲಿಯಾನೋ ಬ್ಯುಂದಿಯಾ ಎಂದು ಸಿದ್ಧವಾಯಿತು. ಇದರಿಂದ ಫೆರ್ನಾಂಡಳಿಗೆ ನಿರಾಳವಾಯಿತು. ಸ್ವಲ್ಪ ಕಾಲದಿಂದ ಅವಳು ತನ್ನ ಹಮ್ಮಿನ ಮಟ್ಟವನ್ನು ಲೆಕ್ಕಹಾಕಿಕೊಂಡಿದ್ದಳು. ಆದರೆ ಅದರ ಉಪಶಮನಕ್ಕೆ ಅವಳಿಗೆ ಯಾವ ದಾರಿಯೂ ಕಂಡಿರಲಿಲ್ಲ. ಏಕೆಂದರೆ ಅದರ ಬಗ್ಗೆ ಯೋಚಿಸಿದಷ್ಟೂ ಅದು ಅತಾರ್ಕಿಕವಾಗಿ ಕಾಣುತ್ತಿತ್ತು. ಅವಳಿಗೆ ಅವ್ರೇಲಿಯಾನೋ ಸೆಗುಂದೋ ಅಜ್ಜನ ಹಾಗೆ ಸಂತೋಷದಿಂದ ನಡೆದುಕೊಳ್ಳುತ್ತಾನೆಂದು ಗೊತ್ತಿದ್ದರೆ ಅವಳು ವಿಷಯಗಳನ್ನು ಕಗ್ಗಂಟಾಗಿಸಿಕೊಂಡು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗೂ ಒಂದು ವರ್ಷದಿಂದ ನೊಂದುಕೊಳ್ಳುವುದರಿಂದ ಮುಕ್ತಳಾಗುತ್ತಿದ್ದಳು. ಎರಡು ಹಲ್ಲುಗಳು ಬಂದಿದ್ದ ಅಮರಾಂತ ಉರ್ಸುಲಾ ಚಿಕ್ಕ ಮಗುವನ್ನು ಓಡಾಡುವ ಗೊಂಬೆ ಎಂದು ಭಾವಿಸಿದಳು. ಅವಳು ಮಳೆಯಿಂದ ಉಂಟಾದ ಜಿಗುಪ್ಸೆಗೆ ಸಮಾಧಾನ ತಂದಿದ್ದಳು. ಅವ್ರೇಲಿಯಾನೋ ಸೆಗುಂದೋಗೆ ಮೆಮೆಳ ಹಳೆಯ ರೂಮಿನಲ್ಲಿದ್ದ ಅಂದಿನಿಂದ ಯಾರೂ ಕಣ್ಣೆತ್ತಿ ನೋಡದಿದ್ದ ಇಂಗ್ಲಿಷ್ ವಿಶ್ವಕೋಶ ನೆನಪಾಯಿತು. ಅವನು ಮಕ್ಕಳಿಗೆ ಚಿತ್ರಗಳನ್ನು ಅದರಲ್ಲೂ ಪ್ರಾಣಿಗಳ ಚಿತ್ರಗಳನ್ನು ಮತ್ತು ನಂತರ ದೂರದ ದೇಶಗಳ ಭೂಪಟಗಳನ್ನು, ಫೋಟೋಗಳನ್ನು ಮತ್ತು ಪ್ರಖ್ಯಾತರನ್ನು ತೋರಿಸಿದ. ಅವನಿಗೆ ಇಂಗ್ಲಿಷ್ ಸ್ವಲ್ಪವೂ ಗೊತ್ತಿಲ್ಲದೆ ಪ್ರಖ್ಯಾತವಾದ ಪಟ್ಟಣಗಳು ಮತ್ತು ಜನರನ್ನು ಕೇವಲ ಗುರುತಿಸಬಲ್ಲವನಾಗಿದ್ದ ಅವನು ಮಕ್ಕಳ ತಣಿಯದ ಕುತೂಹಲವನ್ನು ನೀಗುವುದಕ್ಕಾಗಿ ಹೆಸರುಗಳನ್ನು ಮತ್ತು ಕಥೆಗಳನ್ನು ಸೃಷ್ಟಿಸಿಕೊಂಡು ಹೇಳುತ್ತಿದ್ದ. +ಫೆರ್ನಾಂಡ, ತನ್ನ ಗಂಡ ಇಟ್ಟುಕೊಂಡವಳ ಮನೆಗೆ ಹೋಗಲು ಆಕಾಶ ತಿಳಿಯಾಗುವುದಕ್ಕೆ ಕಾಯುತ್ತಿದ್ದಾನೆ ಎಂದು ತಿಳಿದುಕೊಂಡಿದ್ದಳು. ಮಳೆಯ ಪ್ರಾರಂಭದ ತಿಂಗಳುಗಳಲ್ಲಿ ಅವನು ತನ್ನ ಬೆಡ್‌ರೂಮಿಗೆ ನುಸುಳಿ ಬರುತ್ತಾನೆಂಬ ಗಾಬರಿಯಿತ್ತು ಮತ್ತು ಅಮರಾಂತ ಉರ್ಸುಲಾ ಹುಟ್ಟಿದ ಮೇಲೆ ತಾನು ಆ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಿಕೊಳ್ಳಬೇಕಾದ ನಾಚಿಕೆಗೆಗೆ ತುತ್ತಾಗಬೇಕಾಗುತ್ತದೆ ಎಂದುಕೊಂಡಿದ್ದಳು. ಅವಳು ಕಾಣದ ಡಾಕ್ಟರುಗಳ ಜೊತೆ ನಡೆಸುತ್ತಿದ್ದ, ಆತಂಕದ ಪತ್ರ ವ್ಯವಹಾರಕ್ಕೆ ಅದು ಕಾರಣವಾಗಿತ್ತು. ಅದಕ್ಕೆ ಆಗಾಗ್ಗೆ ಒಳಗಾಗುತ್ತಿದ್ದ ಟಪಾಲಿನ ಅವ್ಯವಸ್ಥೆಯಿಂದ ಅಡೆತಡೆ ಉಂಟಾಗುತ್ತಿತ್ತು ಮೊದಲ ತಿಂಗಳುಗಳಲ್ಲಿ ರೈಲುಗಳು ಹಳಿ ತಪ್ಪುತ್ತಿವೆ ಎನ್ನುವುದು ಗೊತ್ತಾದಾಗ ಕಾಣದ ಡಾಕ್ಟರುಗಳು ಅವಳ ಕಾಗದಗಳು ಬರುತ್ತಿಲ್ಲವೆಂದು ತಿಳಿಸಿದರು. ಅನಂತರ ಸಂಪರ್ಕ ಕಡಿದು ಬಿದ್ದಾಗ, ಅವಳು ತನ್ನ ಗಂಡ ರಕ್ತ ಹರಿದ ಜಾತ್ರೆಯಲ್ಲಿ ಧರಿಸಿದ್ದ ಹುಲಿಯ ಮುಖವಾಡ ಹಾಕಿಕೊಂಡು, ಸುಳ್ಳು ಹೆಸರು ಹೇಳಿ, ಬಾಳೆ ತೋಟದ ಡಾಕ್ಟರ್‌ಗಳಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗಂಭೀರವಾಗಿ ಯೋಚಿಸಿದ್ದಳು. ಆದರೆ ಸುರಿಮಳೆಯ ಬಗ್ಗೆ ಒಂದಿಲ್ಲೊಂದು ಅಹಿತವಾದ ಸುದ್ದಿಯನ್ನು ತರುತ್ತಿದ್ದವರಲ್ಲಿ ಒಬ್ಬ ಅವಳಿಗೆ ಕಂಪನಿಯವರು ಆಸ್ಪತ್ರೆಗಳನ್ನು ಮುಚ್ಚಿ ಮಳೆ ಇಲ್ಲದ ಕಡೆಗೆ ಹೋಗುತ್ತಿದ್ದಾರೆಂದು ತಿಳಿಸಿದ. ಆಗ ಅವಳು ಅದರ ಆಸೆ ಕೈ ಬಿಟ್ಟಳು. ಅವಳು ಮಳೆ ನಿಂತು ಮತ್ತೆ ಟಪಾಲು ಸೇವೆ ಶುರುವಾಗುವ ತನಕ ಕಾಯುವುದಕ್ಕಾಗಿ ಸಮಾಧಾನ ತಂದುಕೊಂಡಳು. ಇದರ ಮಧ್ಯೆ ಅವಳು ಕಾಯಿಲೆಯ ಉಪಶಮನಕ್ಕಾಗಿ ತನ್ನ ಕಲ್ಪನೆಯ ಮೊರೆಹೊಕ್ಕಳು. ಏಕೆಂದರೆ ಅವಳು ಕತ್ತೆಯ ಹಾಗೆ ಹುಲ್ಲು ತಿನ್ನುತ್ತಿದ್ದ ಡೌಲಿನ ಫ್ರೆಂಚ್ ಡಾಕ್ಟರನ ಕೈಗೆ ಸಿಗುವುದಕ್ಕಿಂತ ಸಾಯಲು ಸಿದ್ಧಳಾಗಿದ್ದಳು. ಅವಳು ಉರ್ಸುಲಾಗೆ ತನ್ನ ರೋಗಗಳಿಗೆ ಕೆಲವು ನಾಟಿ ಔಷಧಿಗಳು ಗೊತ್ತಿರಬಹುದು ಎಂದು ಅವಳಿಗೆ ಹೆಚ್ಚು ಸಮೀಪವಾದಳು. ಆದರೆ ಅವಳಿಗೆ ವಸ್ತುಗಳನ್ನು ಅವುಗಳ ಹೆಸರಿನಿಂದ ಕರೆಯದೆ ಅಭ್ಯಾಸದಿಂದ ಮೊದಲಿನದನ್ನು ಕೊನೆಗೆ ಹೇಳುವಂತೆ ಮಾಡುತ್ತಿತ್ತು. ಅಲ್ಲದೆ ಜನ್ಮ ಕೊಟ್ಟಳು ಎನ್ನುವುದಕ್ಕೆ “ಹೊರಗೆ ಹಾಕಿದಳು” ಮತ್ತು “ಹರಿಯುತ್ತಿದೆ” ಎನ್ನುವುದಕ್ಕೆ “ಉರಿಯುತ್ತಿದೆ” ಎಂದು ನಾಚಿಕೆ ಕಡಿಮೆಯಾಗುವುದಕ್ಕಾಗಿ ಹೇಳುತ್ತಿದ್ದಳು. ಇದರಿಂದ ಉರ್ಸುಲಾ ಅವಳಿಗೆ ಕರುಳಿನ ತೊಂದರೆ ಇದೆ, ಗರ್ಭಾಶಯವಲ್ಲ ಎನ್ನುವ ತೀರ್ಮಾನಕ್ಕೆ ಬಂದಳು ಮತ್ತು ಅವಳಿಗೆ ಖಾಲಿ ಹೊಟ್ಟೆಯಲ್ಲಿ ರಸ ಕರ್ನೂಶ ಕಷಾಯವನ್ನು ಕುಡಿಯಲು ಹೇಳಿದಳು. ನಾಚಿಕೆಪಟ್ಟುಕೊಳ್ಳಬೇಕಾದ್ದಕ್ಕೆ ಮತ್ತು ನಾಚಿಕೆ ಪಡಬೇಕಾಗಿಲ್ಲದ್ದಕ್ಕೆ ಯಾತನೆ ಅನುಭವಿಸುತ್ತಿದ್ದರಿಂದ ಹಾಗೂ ಕಾಗದಗಳು ಕಳೆದು ಹೋದದ್ದಕ್ಕೆ ಫರ್ನಾಂಡಳನ್ನು ಮಳೆ ಬಗ್ಗೆ ಚಿಂತಿಸುವಂತೆ ಮಾಡುತ್ತಿರಲಿಲ್ಲ. ಏಕೆಂದರೆ ಅವಳ ಇಡೀ ಜೀವನ ಮಳೆ ಬರುತ್ತಿದೆಯೇನೋ ಎನ್ನುವ ಹಾಗೆ ಕಳೆದಿತ್ತು. ಅವಳು ತನ್ನ ದಿನಚರಿಯನ್ನಾಗಲಿ ಅಥವಾ ವಿಧ್ಯುಕ್ತ ಕ್ರಿಯೆಗಳನ್ನಾಗಲಿ ಬದಲಿಸಲಿಲ್ಲ. ಇಟ್ಟಿಗಳ ಮೇಲೆ ಟೇಬಲ್ಲನ್ನು ಇಟ್ಟು ಮೇಲೆ ಎತ್ತಿದಾಗ ಮತ್ತು ಕುಳಿತುಕೊಳ್ಳುವವರ ಕಾಲು ಒದ್ದೆಯಾಗಬಾರದೆಂದು ಕುರ್ಚಿಗಳ ಕೆಳಗೆ ಹಲಗೆಗಳನ್ನು ಇಟ್ಟಾಗ ಕೂಡ ಅವಳು ಟೇಬಲ್ ಕ್ಲಾತ್‌ಗಳನ್ನು ಹಾಕುತ್ತಿದ್ದಳು ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಚೀನಾದ ಪಾತ್ರೆಗಳನ್ನು ಇಡುತ್ತಿದ್ದಳು. ಏಕೆಂದರೆ ಅವಳು ಪದ್ಧತಿಗಳನ್ನು ವಿನಾಶದ ನೆಪದಿಂದ ಬದಲು ಮಾಡಬಾರದು ಎಂದುಕೊಂಡಿದ್ದಳು. ಈಗ ಯಾರೂ ಹೊರಗೆ ರಸ್ತೆಯಲ್ಲಿ ಹೋಗುತ್ತಿರಲಿಲ್ಲ. ಆದರೆ ಅದು ಫೆರ್ನಾಂಡಳನ್ನು ಅವಲಂಬಿಸಿದ್ದರೆ ಅವರು ಮಳೆ ಪ್ರಾರಂಭವಾದ ಕಾಲದಿಂದಲ್ಲದೆ ಅದಕ್ಕಿಂತ ಮುಂಚಿತವಾಗಿ ಎಂದೂ ಹಾಗೆ ಮಾಡುತ್ತಿರಲಿಲ್ಲ. ಏಕೆಂದರೆ ಬಾಗಿಲುಗಳನ್ನು ಕಂಡುಹಿಡಿದದ್ದು ಅವುಗಳನ್ನು ಮುಚ್ಚಿ ಒಳಗಿರುವುದಕ್ಕಾಗಿ ಹಾಗೂ ರಸ್ತೆಯಲ್ಲಿ ಏನಾಗುತ್ತಿದೆ ಎನ್ನುವುದು ಬೆಲೆವೆಣ್ಣುಗಳಿಗೆ ಸಂಬಂಧಪಟ್ಟಿದ್ದು ಎಂದು ಅವಳ ಭಾವನೆಯಾಗಿತ್ತು. ಆದರೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಅಂತಿಮ ಯಾತ್ರೆ ಸಾಗುತ್ತಿದೆ ಎಂದು ತಿಳಿದಾಗ ನೊಂದವಳಲ್ಲಿ ಅವಳು ಮೊದಲಿಗಳು. ಅದನ್ನು ಅರ್ಧ ತೆರೆದ ಕಿಟಕಿಯಿಂದ ಮಾತ್ರ ನೋಡಿದರೂ ಸಹ ಅವಳಿಗೆ ಅತೀವವಾದ ನೋವುಂಟಾಗಿ ಬಹಳ ದಿನಗಳ ತನಕ ತನ್ನ ಬಲಹೀನತೆಗಾಗಿ ಪಶ್ಚಾತ್ತಾಪ ಪಟ್ಟುಕೊಂಡಳು. +ಅವಳಿಗೆ ಅದಕ್ಕಿಂತ ಕೆಟ್ಟದಾದ ಶವ ಯಾತ್ರೆಯನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಎತ್ತಿನ ಗಾಡಿಯಲ್ಲಿ ಬಾಳೆ ಎಲೆಗಳ ಚಪ್ಪರ ಕಟ್ಟಿ ಶವಪೆಟ್ಟಿಗೆಯನ್ನು ಇಟ್ಟಿದ್ದರು. ಆದರೆ ಮಳೆಯ ಹೊಡೆತ ಹೆಚ್ಚಾಗಿದ್ದು ರಸ್ತೆಯಲ್ಲಿ ಕೆಸರು ತುಂಬಿ ಪ್ರತಿ ಹೆಜ್ಜೆಗೂ ಗಾಡಿಯ ಚಕ್ರ ಹೂತು ಹೋಗುತ್ತಿತ್ತು ಮತ್ತು ಹೊದಿಕೆ ಬಿದ್ದು ಹೋಗುವುದರಲ್ಲಿತ್ತು. ಶವ ಪೆಟ್ಟಿಗೆಯ ಮೇಲೆ ಬಿದ್ದ ನೀರು ಮೇಲೆ ಇಟ್ಟಿದ್ದ ಧ್ವಜವನ್ನು ತೋಯಿಸುತ್ತಿತ್ತು. ವಾಸ್ತವವಾಗಿ ಅದು ರಕ್ತ ಹಾಗೂ ಗಂಧಕದ ಕಲೆಗಳಿದ್ದ ಧ್ವಜವಾಗಿದ್ದು ಗೌರವಾನ್ವಿತ ಹಳಬರಿಂದ ನಿರಾಕರಿಸ್ಪಟ್ಟಿತ್ತು. ಶವ ಪೆಟ್ಟಗೆಯ ಮೇಲೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕೋಟ್ ನೇತು ಹಾಕುವ ಅಡ್ಡ ಪಟ್ಟಿಯ ಮೇಲೆ, ಅಮರಾಂತಳ ಹೊಲಿಗೆಯ ರೂಮಿಗೆ ಆಯುಧವಿಲ್ಲದೆ ಹೋಗುವ ಮುಂಚೆ ಇಡುತ್ತಿದ್ದ ಬೆಳ್ಳಿ ಹಾಗೂ ತಾಮ್ರದ ಕುಚ್ಚಿರುವ ಕೊಂಕು ಕತ್ತಿಯನ್ನು ಇಟ್ಟಿದ್ದರು. ಗಾಡಿಯ ಹಿಂದೆ, ಪ್ಯಾಂಟ್‌ಗಳನ್ನು ಮೇಲೆ ಕಟ್ಟಿದ್ದ ಕೆಸರು ತುಳಿಯುತ್ತ ನೀರ್ಲಾಂದಿಯಾದಲ್ಲಿ ಶರಣಾದಾಗ ಕೊನೆಯಲ್ಲಿ ಬದುಕುಳಿದವರು ಒಂದು ಕೈಯಲ್ಲಿ ಕೋಲು ಹಿಡಿದಿದ್ದರು ಮತ್ತು ಇನ್ನೊಂದರಲ್ಲಿ ಮಳೆಗೆ ಸಿಕ್ಕು ಬಣ್ಣಗೆಟ್ಟ ಕಾಗದದ ಹೂಗಳನ್ನು ಹಿಡಿದುಕೊಂಡಿದ್ದರು. ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎಂದು ಇನ್ನೂ ಹೆಸರಿದ್ದ ರಸ್ತೆ, ನಿಜವಲ್ಲದ ನೋಟದಂತೆ ಕಾಣುತ್ತಿತ್ತು. ಅವರು ಮನೆಯನ್ನು ಹಾದು ಹೋಗುವಾಗ ಅದರ ಕಡೆ ನೋಡಿದರು. ಅನಂತರ ಅವರು ಚೌಕದಲ್ಲಿ ತಿರುಗಿದಾಗ ಸಿಕ್ಕಿಹಾಕಿಕೊಂಡ ಗಾಡಿ ಮುಂದೆ ಹೋಗುವುದಕ್ಕೆ ಸಹಾಯ ಕೇಳಬೇಕಾಯಿತು. ಸಾಂತ ಸೋಫಿಯಾ ದೆಲಾ ಪಿಯದಾದ್ ಉರ್ಸುಲಾಳನ್ನು ಬಾಗಿಲಿಗೆ ಕರೆದು ತಂದಿದ್ದಳು. ಅವಳು ಮೆರವಣಿಗೆಯ ಕಷ್ಟವನ್ನು ಎಷ್ಟು ಗಮನವಿಟ್ಟು ಗ್ರಹಿಸಿದಳೆಂದರೆ ಯಾರಿಗೂ ಅವಳು ಅದನ್ನು ನೋಡುತ್ತಿಲ್ಲ ಎನ್ನುವ ಅನುಮಾನ ಬರಲಿಲ್ಲ. ಏಕೆಂದರೆ ಮುಖ್ಯವಾಗಿ ಅವಳ ಎತ್ತಿದ ಕೈ, ಗಾಡಿಯ ಕುಲುಕಾಟಕ್ಕೆ ತಕ್ಕ ಹಾಗೆ ಆಡುತ್ತಿತ್ತು. +ಅವಳು, “ನೋಡು ಮಗ ಗೆರಿನೆಲ್ಡೋ… ಜನರಿಗೆ ಹೇಳು, ಮಳೆ ನಿಂತ ಮೇಲೆ ನಾನು ಅವರನ್ನು ನೋಡ್ತೀನಿ ಅಂತ” ಎಂದು ಕೂಗಿದಳು. +ಅವ್ರೇಲಿಯಾನೋ ಸೆಗುಂದೋ ಅವಳನ್ನು ಹಾಸಿಗೆಗೆ ಕರೆದುಕೊಂಡು ಹೋದ ಮತ್ತು ಅವಳ ಜೊತೆಗಿದ್ದ ಆತ್ಮೀಯತೆಯಿಂದ ಅವಳು ಕೊನೆಗೆ ಹೇಳಿದ್ದರ ಅರ್ಥವೇನು ಎಂದು ಕೇಳಿದ. +ಅವಳು, “ನಿಜ. ನಾನು ಸಾಯಲಿಕ್ಕೋಸ್ಕರ ಮಳೆ ನಿಲ್ಲಲಿ ಅಂತ ಕಾಯ್ತಿದೀನಿ” ಎಂದಳು. +ಅವ್ರೇಲಿಯಾನೋ ಸೆಗುಂದೋಗೆ ರಸ್ತೆಯ ಸ್ಥಿತಿ ಗತಿ ನೋಡಿ ಹೆದರಿಕೆಯಾಯಿತು. ಕೊನೆಗೆ ಅವನಿಗೆ ಪ್ರಾಣಿಗಳ ಬಗ್ಗೆ ಯೋಚನೆ ಮುತ್ತಿಕೊಂಡು ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಪೆತ್ರಾ ಕೊತೆಸ್ ಮನೆಗೆ ಹೋದ. ಅವಳು ಅಂಗಳದಲ್ಲಿ ಸೊಂಟದ ಮಟ್ಟದ ನೀರಿನಲ್ಲಿದ್ದು ಕುದುರೆಯ ಹೆಣವೊಂದನ್ನು ತೇಲಿಸಿ ತಳ್ಳಲು ಪ್ರಯತ್ನಿಸುತ್ತಿದ್ದಳು. ಕೋಲು ಹಿಡಿದು ಅವ್ರೇಲಿಯಾನೋ ಸೆಗುಂದೋ ಅವಳಿಗೆ ನೆರವಾದ ಮತ್ತು ಅಗಾಧವಾಗಿ ಉಬ್ಬಿದ್ದ ಅದು ಸುತ್ತು ಹಾಕಿದ ನಂತರ ಕೆಸರಲ್ಲಿ ಸೆಳೆದುಕೊಂಡು ಹೋಯಿತು. ಮಳೆ ಶುರುವಾದಾಗಿನಿಂದ ಪೆತ್ರಾ ಕೊತೆಸ್ ಸತ್ತ ಪ್ರಾಣಿಗಳನ್ನು ಅಂಗಳದಿಂದ ಹೊರಗೆ ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಳು. ಮೊದಲ ವಾರಗಳಲ್ಲಿ ಅವಳು ಅವ್ರೇಲಿಯಾನೋ ಸೆಗುಂದೋಗೆ ಕ್ರಮ ತೆಗೆದುಕೊಳ್ಳಲು ಹೇಳಿ ಕಳಿಸುತ್ತಿದ್ದಳು. ಅವನು, “ಅಂಥದೇನೂ ಅವಸರವಿಲ್ಲ. ಪರಿಸ್ಥಿತಿ ಅಷ್ಟು ಕೆಟ್ಟದಾಗಿಲ್ಲ, ಮಳೆ ನಿಂತ ಮೇಲೆ ಏನಾದರೂ ಮಾಡುವುದಕ್ಕೆ ಸಾಕಷ್ಟು ಸಮಯವಿರುತ್ತದೆ” ಎಂದು ಉತ್ತರಿಸಿದ್ದ. ಅವಳು ಕುದುರೆ ಲಾಯಕ್ಕೆ ನೀರು ನುಗ್ಗಿದೆ, ದನಕರುಗಳು ಹೊಟ್ಟೆಗೆ ಏನೂ ಸಿಗದ ಹುಲ್ಲುಗಾವಲಿರುವ ಎತ್ತರದ ಜಾಗಕ್ಕೆ ಹೋಗಿವೆ. ಅಲ್ಲಿ ಅದಕ್ಕೆ ಚಿರತೆಗಳ ಕಾಟ ಹಾಗೂ ರೋಗ ತಗುಲತ್ತೆ ಎಂದು ಹೇಳಿಸಿದ್ದಳು. ಅದಕ್ಕೆ ಅವ್ರೇಲಿಯಾನೋ ಸೆಗುಂದೋ, “ಅದಕ್ಕೆ ಏನೂ ಮಾಡಕ್ಕಾಗಲ್ಲ ಎಲ್ಲ ತಿಳಿಯಾದ ಮೇಲೆ ಬೇರೇದು ಹುಟ್ಟುತ್ವೆ” ಎಂದು ಉತ್ತರ ಕೊಟ್ಟಿದ್ದ. ಪೆತ್ರಾ ಕೊತೆಸ್ ಅವು ಗುಂಪು ಗುಂಪಾಗಿ ಸಾಯುವುದನ್ನು ನೊಡಿದ್ದಳು ಮತ್ತು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡವನ್ನು ಮಾತ್ರ ಕೊಚ್ಚುವುದಕ್ಕೆ ಸಾಧ್ಯವಾಗಿತ್ತು. ಅವಳು ಏನೂ ಕೈಲಾಗದೆ ಮಕೋಂದೋದಲ್ಲಿ ಒಂದು ಕಾಲಕ್ಕೆ ಅತ್ಯಂತ ದೊಡ್ಡದಾದ ಆಸ್ತಿ ಎಂದು ಪರಿಗಣಿಸಿದ್ದನ್ನು ಕರುಣೆ ಇಲ್ಲದೆ ನಿರ್ನಾಮ ಮಾಡುತ್ತಿದ್ದ ಸುರಿಮಳೆಯನ್ನು ನೋಡುತ್ತಿದ್ದಳು ಅಲ್ಲದೆ ಈಗ ಅದರಿಂದ ಉಳಿದದ್ದು ಕೇವಲ ಅಂಟುರೋಗಗಳು ಮಾತ್ರ. ಅವ್ರೇಲಿಯಾನೋ ಸೆಗುಂದೋ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಿದಾಗ ಅವನಿಗೆ ಕುದುರೆ ಲಾಯದಲ್ಲಿ ಸತ್ತ ಕುದುರೆ ಮತ್ತು ಹೇಸರಗತ್ತೆ ಸಿಕ್ಕಿದವು. ಪೆತ್ರಾ ಕೊತೆಸ್ ಯಾವುದೇ ಆಶ್ಚರ್ಯ, ಸಂತೋಷ ಅಥವಾ ಬೇಸರವಿಲ್ಲದೆ ಅವನು ಬಂದದ್ದನ್ನು ನೋಡಿದಳು. ಅವಳ ಮುಖದಲ್ಲಿ ವ್ಯಂಗ್ಯದ ನಗೆಯೊಂದು ತೇಲಿತು. +ಅವಳು. “ಇದು ಲಾಯಕ್ಕಾದ ಸಮಯ” ಎಂದಳು. +ಅವಳಿಗೆ ವಯಸ್ಸಾಗಿ ಮೂಳೆ ಮುದುಡಿ ಚರ್ಮ ಸುಕ್ಕಾಗಿತ್ತು. ಅವಳ ಚೂಪುಗಣ್ಣು ಮಳೆಯನ್ನು ಬಿಡದೆ ನೋಡಿ ಸಾಕಾಗಿ ಸೊರಗಿತ್ತು. ಅವ್ರೇಲಿಯಾನೋ ಸೆಗುಂದೋ ಅವಳ ಮನೆಯಲ್ಲಿ ಮೂರು ತಿಂಗಳಿಗಿಂತ ಹೆಚ್ಚಿಗೆ ಇದ್ದದ್ದು ತನ್ನ ಮನೆಗಿಂತ ಅಲ್ಲಿ ಉತ್ತಮವಾಗಿದೆ ಎಂದಲ್ಲ, ಆದರೆ ತಲೆಯ ಮೇಲೆ ಮತ್ತೆ ಬಟ್ಟೆ ಹಾಕಿಕೊಂಡು ಹೊರಡಬೇಕೆಂದು ನಿರ್ಧರಿಸುವುದಕ್ಕೆ ಅವನಿಗೆ ಇನ್ನಿಲ್ಲದಷ್ಟು ಸಮಯ ಬೇಕಾಗಿತ್ತು. ಅವನು, ಆ ಮನೆಯಲ್ಲಿ ಹೇಳಿದ ಹಾಗೆ, “ಅದಕ್ಕೇನೂ ಅವಸರವಿಲ್ಲ ಕೆಲವು ಗಂಟೇಲಿ ಎಲ್ಲ ತಿಳಿಯಾಗತ್ತೆ ಅಂದ್ಕೊಳ್ಳೋಣ” ಎಂದ. ಮೊದಲನೆ ವಾರದಲ್ಲಿ ಕಾಲ ಮತ್ತು ಮಳೆ ಅವನು ಇಟ್ಟುಕೊಂಡವಳ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದಕ್ಕೆ ಹೊಂದಿಕೊಳ್ಳುವುದರಲ್ಲಿ ಕಳೆದ ಮತ್ತು ಸ್ವಲ್ಪ ಸ್ವಲ್ಪವಾಗಿ ಮೊದಲಿನಂತೆ ಅವಳನ್ನು ಕಾಣುತ್ತ ಅವಳ ಅತಿಯಾದ ಉತ್ಸಾಹ ಮತ್ತು ಅವಳ ಪ್ರೀತಿ ಪ್ರಾಣಿಗಳಲ್ಲಿ ಉಂಟುಮಾಡಿದ ಫಲವಂತಿಕೆಗಳನ್ನು ನೆನಪಿಸಿಕೊಂಡ. ಒಂದಷ್ಟು ಪ್ರೀತಿ, ಒಂದಷ್ಟು ಆಸಕ್ತಿಯಿಂದ ಎರಡನೆ ವಾರದಲ್ಲಿ ಒಂದು ರಾತ್ರಿ ಅವಳನ್ನು ನೇವರಿಸಿ ಎಚ್ಚರಗೊಳಿಸಿದ. ಪೆತ್ರಾ ಕೊತೆಸ್ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಅವಳು, “ಸುಮ್ನೆ ಮಲಗಿಕೊಳ್ಳಿ. ಈಗ ಅಂಥದ್ದಕ್ಕೆಲ್ಲ ಸಮಯ ಅಲ್ಲ” ಎಂದು ಗೊಣಗುಟ್ಟಿದಳು. ಅವ್ರೇಲಿಯಾನೋ ಸೆಗುಂದೋ ಚಾವಣಿಯಲ್ಲಿದ್ದ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು ಪೆತ್ರಾ ಕೊತೆಸ್ ಬೆನ್ನಹುರಿಯ ನರಗಳ ಸುತ್ತ ಉದ್ದಕ್ಕೂ ಉರುಳೆ ಹೆಣೆದ ಹಾಗಿದ್ದದ್ದನ್ನು ಕಂಡ ಅವನಿಗೆ ಅವಳು ಹೇಳಿದ್ದು ಸರಿ ಎಂದು ಕಂಡಿತು. ಕೇವಲ ಕಾಲದ ಕಾರಣದಿಂದಲ್ಲ ಆದರೆ ಅಂಥದ್ದಕ್ಕೆ ಅವರು ತಕ್ಕವರಲ್ಲದ ಕಾರಣಕ್ಕಾಗಿ. +ಅವ್ರೇಲಿಯಾನೋ ಸೆಗುಂದೋಗೆ ಉರ್ಸುಲಾ ಒಬ್ಬಳೇ ಅಲ್ಲದೆ ಮಕೋಂದೋದ ಜನರೆಲ್ಲ ಸತ್ತು ಹೋಗಲು ಆಕಾಶ ನಿರ್ಮಲವಾಗುತ್ತಿರುವುದಕ್ಕೆ ಕಾಯುತ್ತಿದ್ದಾರೆ ಎಂದು ಖಚಿತವಾಗಿ, ತನ್ನ ಟ್ರಂಕುಗಳೊಡನೆ ಮನೆಗೆ ಹಿಂತಿರುಗಿದ. ಅವರು ನಡೆದಾಡುತ್ತ ಅಂಗಳದಲ್ಲಿ ಉರುಳುವುದನ್ನೇ ಯೋಚಿಸುತ್ತ, ಕೈಕಟ್ಟಿ ಕುಳಿತುಕೊಂಡು ಸುಮ್ಮನೇ ಸಮಯ ಉರುಳುವುದನ್ನೇ ನೋಡುತ್ತ ಕುಳಿತಿರುವುದನ್ನು ಕಂಡ. ಅವರಿಗೆ ಸುರಿಯುವ ಮಳೆಯನ್ನಲ್ಲದೆ ಬೇರೆ ಏನೂ ಯೋಚಿಸುವುದಕ್ಕೆ ಇರದಿರುವಾಗ ಸಮಯವನ್ನು ತಿಂಗಳುಗಳಾಗಿ, ವರ್ಷಗಳಾಗಿ, ದಿನ ಮತ್ತು ಗಂಟೆಗಳಾಗಿ ವಿಭಜಿಸುವುದು ವ್ಯರ್ಥವಾಗಿ ತೋರಿತ್ತು. ಮಕ್ಕಳು ಅವ್ರೇಲಿಯಾನೋ ಸೆಗುಂದೋನನ್ನು ಉತ್ಸಾಹದಿಂದ ಕಾಣುತ್ತಿದ್ದರು. ಏಕೆಂದರೆ ಅವನು ಅವರಿಗೆ ಮತ್ತೆ ತುಂಡಾಗಿದ್ದ ಅಕಾರ್ಡಿಯನ್ ನುಡಿಸುತ್ತಿದ್ದ. ಆದರೆ ಅವರಿಗೆ ಈ ವಾದ್ಯ ನುಡಿಸುವುದಕ್ಕಿಂತ ಹೆಚ್ಚಾಗಿ ವಿಶ್ವಕೋಶದಲ್ಲಿನ ವಿವರಗಳು ಆಕರ್ಷಕವಾಗಿದ್ದವು. ಅವರು ಮತ್ತೆ ಮೆಮೆಯ ರೂಮಿನಲ್ಲಿ ಸೇರಿದಾಗ ಅವ್ರೇಲಿಯಾನೋ ಸೆಗುಂದೋನ ಕಲ್ಪನೆ ಚಲಿಸುವ ಆಕಾಶ ಬುಟ್ಟಿಯನ್ನು ಮೋಡಗಳ ನಡುವೆ ಮಲಗಲು ಜಾಗ ಹುಡುಕುವ ಹಾರುವ ಆನೆಯನ್ನಾಗಿ ಬದಲಾಯಿಸಿತು. ಒಂದು ಸಂದರ್ಭದಲ್ಲಿ ಅವನಿಗೆ ವಿಚಿತ್ರವಾದ ತೊಡುಗೆ ತೊಟ್ಟು ಕುದುರೆಯ ಸವಾರನೊಬ್ಬ ಕಂಡಾಗ ಅವನು ಪರಿಚಿತ ವ್ಯಕ್ತಿ ಎನಿಸಿದ. ಅವನನ್ನು ಸೂಕ್ಷ್ಮವಾಗಿ ನೋಡಿದಾಗ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಚಿತ್ರವೆಂಬ ನಿರ್ಣಯಕ್ಕೆ ಬಂದ. ಅವನು ಅದನ್ನು ಫೆರ್ನಾಂಡಳಿಗೆ ತೋರಿಸಿದ ಮತ್ತು ಅವಳು ಕೂಡ ಕುದುರೆ ಸವಾರನಿಗೂ ಕರ್ನಲ್‌ಗೂ ಹೋಲಿಕೆ ಇರುವುದನ್ನು ಸಮರ್ಥಿಸಿದಳು. ಅಲ್ಲದೆ ಮನೆಯ ಪ್ರತಿಯೊಬ್ಬರಿಗೂ ಹೋಲಿಕೆ ಇದೆಯೆಂದು ಹೇಳಿದಳು. ವಾಸ್ತವವಾಗಿ ಅವನೊಬ್ಬ ಟಾರ್ಟರ್ ಯೋಧನಾಗಿದ್ದ, ಹೆಂಡತಿ ಮನೆಯಲ್ಲಿ ಮೂರು ತುಂಡು ಮಾಂಸ, ಒಂದು ಚೀಲ ಅಕ್ಕಿ ಮಾತ್ರ ಉಳಿದಿದೆ ಎಂದು ಹೇಳುವ ತನಕ ಅಪೋಲೋ ದೇವತೆಯ ವಿಗ್ರಹ ಮತ್ತು ಹಾವಾಡಿಗರ ಜೊತೆ ಅವನ ಸಮಯ ಕಳೆದುಹೋಗಿತ್ತು. +ಅವನು “ನಾನೇನು ಮಾಡ್ಬೇಕು ಅಂತೀಯ” ಎಂದ. +ಫೆರ್ನಾಂಡ, “ನಂಗೊತ್ತಿಲ್ಲ. ಅದು ಗಂಡಸರ ಕೆಲಸ” ಎಂದಳು. +ಅವ್ರೇಲಿಯಾನೋ ಸೆಗುಂದೋ, “ಮಳೆ ನಿಲ್ಲಲಿ ಆಮೇಲೆ ಏನಾದ್ರೂ ಮಾಡಿದರಾಯಿತು” ಎಂದ. +ಒಂದಿಷ್ಟು ಅಕ್ಕಿಯಲ್ಲೇ ಸಮಾಧಾನಗೊಳ್ಳಬೇಕಾದರೂ ಅವನಿಗೆ ಮನೆ ಕೆಲಸಕ್ಕಿಂತ ವಿಶ್ವಕೋಶದಲ್ಲಿ ಆಸಕ್ತಿ ಹೆಚ್ಚಿಗೆ ಇತ್ತು. ಅವನು “ಈಗಂತೂ ಏನೂ ಮಾಡಕ್ಕೂ ಆಗಲ್ಲ. ಇಷ್ಟಕ್ಕೂ ಮಳೆ ನಮ್ಮ ಜೀವಮಾನವಿಡೀ ನಿಲ್ಲದೇ ಇರಲ್ಲವಲ್ಲ” ಎಂದು ಹೇಳುತ್ತಿದ್ದ. ಅಡುಗೆ ಮನೆಯ ಕೊರತೆಗಳು ಹೆಚ್ಚಾಗುತ್ತಿದ್ದ ಹಾಗೆ ಫೆರ್ನಾಂಡಳ ಸಿಟ್ಟು ಅವಳ ಕೂಗಾಟ, ಅರಚಾಟ ಹೆಚ್ಚಾಯಿತು. ಒಂದು ಬೆಳಿಗ್ಗೆ ಒಂದೇ ಏರುದನಿಯಲ್ಲಿ ಪ್ರಾರಂಭವಾಗಿ ಸಮಯ ಕಳೆದಂತೆ ಬೆಳೆದು ತಾರಕ್ಕೇರಿತು. ಅವ್ರೇಲಿಯಾನೋ ಸೆಗುಂದೋಗೆ ಮಾರನೆಯ ದಿನ ಬೆಳಗಿನ ತಿಂಡಿ ತಿನ್ನುವ ತನಕ, ಬೀಳುತ್ತಿದ್ದ ಮಳೆಯ ಶಬ್ದವನ್ನೂ ಮೀರಿಸಿದ, ಸ್ಪಷ್ಟವಾಗಿ, ಜೋರಾಗಿ, ಬೇಸರವಾಗುವ, ಏಕ ತಾನದ ಗೊಣಗಾಟ ಕೇಳಿಸಿತು. ಅದು ಫೆರ್ನಾಂಡ ಮನೆಯಲೆಲ್ಲ ಓಡಾಡುತ್ತ, ರಾಣಿಯಾಗಬೇಕೆಂದು ಬೆಳೆದ ತಾನು ಹುಚ್ಚರ ಮನೆಯಲ್ಲಿ ಪರಿಚಾರಿಕೆಯಾಗಿ, ಕೆಲಸವಿಲ್ಲದ, ಸೋಮಾರಿಯಾದ, ಬೆಳಗ್ಗೆಯಿಂದ ಸಂಜೆ ತನಕ ಸಾಯುವಷ್ಟು ದುಡಿಯುತ್ತಿದ್ದರೂ, ಮೇಲಿನಿಂದ ಸಂಪತ್ತು ಸುರಿಯುತ್ತದೆ ಎಂದು ಕಾಯುವ ಗಂಡನ ಜೊತೆ ನೀಗುವುದರಲ್ಲಿ ಜೀವನ ಕೊನೆಯಾಗಬೇಕಾಯಿತೆಂದು ಹೇಳುತ್ತಿದ್ದಳು. ಇಷ್ಟಾದರೂ ಮನೆಯಲ್ಲಿ “ಫೆರ್ನಾಂಡ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ್ಯಾ” ಎಂದು ಯಾರೂ ಕೇಳುವರಿಲ್ಲದೆ, ಅಲ್ಲದೆ ತನ್ನನ್ನು ಒಬ್ಬ ಹಳೆಕಾಲದ ಕಿರಿಕಿರಿ ಉಂಟು ಮಾಡುವ ಹೆಂಗಸು ಎಂದು ಯಾವಾಗಲೂ ಪರಿಗಣಿಸಿರುವ ಮನೆಯಲ್ಲಿ ಯಾರೊಬ್ಬರೂ ತಾನು ನಿರೀಕ್ಷಿಸಿದಂತೆ, “ಏಕೆ ನೀನು ಇಷ್ಟೊಂದು ಸಪ್ಪಗೆ, ಕಣ್ಣಿನ ಕೆಳಗೆ ಕಪ್ಪಾಗಿದೆ” ಎಂದು ಸೌಜನ್ಯಕ್ಕಾದರೂ ಕೇಳಿರಲಿಲ್ಲ. ಅವರು ಯಾವಾಗಲೂ ಅವಳ ಬೆನ್ನ ಹಿಂದೆ ಮನಸ್ಸಿಗೆ ಬಂದ ಹಾಗೆ ಬೈಯುತ್ತಿದ್ದರು. ಅಮರಾಂತರಳಿಗೂ ಸಹ, “ನೀನು ಸತ್ತು ಬೂದಿಯಾದರೂ ನಿನ್ನ ನಿಜ ಸ್ವರೂಪ ಗೊತ್ತಾಗಲ್ಲ” ಎಂದು ಹೇಳಿದ್ದಳು. ಅವಳು ಎಲ್ಲವನ್ನು ಪೂಜ್ಯ ಫಾದರ್‌ನ ಕಾರಣದಿಂದ ಸಮಾಧಾನದಿಂದ ತೆಗೆದುಕೊಂಡಿದ್ದಳು. ಆದರೆ ಹೊಸೆ ಅರ್ಕಾದಿಯೋ ಸೆಗುಂದೋ, “ಇಡೀ ಮನೆಯಲ್ಲಿ ಎತ್ತರದ ಪ್ರದೇಶದವರಿಗೆ ದರಿದ್ರ ಬಡಿದಿದೆ, ಅಲ್ದೆ ಸರ್ಕಾರವೇ ಎತ್ತರದ ಪ್ರದೇಶದ ಕೆಲಸಗಾರರನ್ನು ಕೊಲ್ಲಲು ಕಳಿಸಿಕೊಟ್ಟಿತ್ತು” ಎಂದು ತನ್ನನ್ನೇ ಸೂಚಿಸಿ ಹೇಳಿದಾಗ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಅವಳಾದರೋ ಆಲ್ಫಾ ರಾಜನ ಮಗಳಾಗಿದ್ದು ಅವಳಂತೆಯೇ ಉತ್ತಮ ಗುಣಮಟ್ಟದ ಅಧ್ಯಕ್ಷರ ಹೆಂಡತಿಯರಿಗೆ ಪ್ರಿಯವಾಗಿದ್ದ ಹಾಗೂ ಹನ್ನೊಂದು ಪರ್ಯಾಯ ದ್ವೀಪಗಳ ಪರವಾಗಿ ಸಹಿ ಮಾಡಲು ಹಕ್ಕು ಪಡೆದಿದ್ದ ಮತ್ತು ವೈರುಧ್ಯದಿಂದ ಕೂಡಿದ ಜನರು ತುಂಬಿದ ಆ ಊರಿನಲ್ಲಿ ಅವಳೊಬ್ಬಳೇ ಸಮಂಜಸವಾದ ಮನುಷ್ಯಳಾಗಿದ್ದಳು. ಅವರಿಗೆ ಹದಿನಾರು ಬೆಳ್ಳಿ ಪಾತ್ರೆಗಳಿಂದ ಗೊಂದಲ ಉಂಟಾಗಲಿಲ್ಲ. ಏಕೆಂದರೆ ವಿಷಯಲಂಪಟನಾದ ಅವಳ ಗಂಡ ಅಷ್ಟೊಂದು ಚಾಕು ಮತ್ತು ಫೋರ್ಕುಗಳು ಮನುಷ್ಯರಿಗಲ್ಲ, ರಾಕ್ಷಸರಿಗೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟ. ಆದರೆ ಕಣ್ಣು ಮುಚ್ಚಿಕೊಂಡು ಯಾವಾಗ ವೈಟ್ ವೈನ್, ಯಾವ ಕಡೆ, ಯಾವ ಗ್ಲಾಸಿನಲ್ಲಿ ಮತ್ತು ಯಾವಾಗ ರೆಡ್ ವೈನ್ ಯವ ಕಡೆ, ಯಾವ ಗ್ಲಾಸಿನಲ್ಲಿ ಹಂಚುವುದು ಎಂದು ಹೇಳುವುದಕ್ಕೆ ಸಾಧ್ಯವಿದ್ದವಳು ಅವಳೊಬ್ಬಳು ಮಾತ್ರ. ವೈಟ್ ವೈನ್ ದಿನದ ಸಮಯದಲ್ಲಿ ಮತ್ತು ರೆಡ್ ವೈನ್ ರಾತ್ರಿ ಹೊತ್ತಿನಲ್ಲಿ ಎಂದು ಹೇಳುತ್ತಿರಲಿಲ್ಲ. ಅಲ್ಲದೆ ಇಡೀ ಸಮುದ್ರ ತೀರದ ಪ್ರದೇಶದಲ್ಲಿ ದೇಹದ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿ, ಬಂಗಾರದ ಉಚ್ಚೆ ಪಾತ್ರೆ ಉಪಯೋಗಿಸುವವಳೆಂಬ ಗರ್ವವಿತ್ತು. ಇದರಿಂದಾಗಿಯೇ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವಳು ಹೇಲನ್ನು ಹೇಲುತ್ತಾಳೆ, ಸಿಹಿ ಹೇಲನ್ನಲ್ಲ ತಾನೇ ಎಂದು ಗೇಲಿ ಮಾಡುವುದಕ್ಕೆ ಕಾರಣವಾಯಿತು. ಹೀಗಾಗಿ ಅವಳು ಬೆಡ್‌ರೂಮಿನಲ್ಲಿ ಕಕ್ಕಸ್ಸಿಗೆ ಕೂತದ್ದನ್ನು ಕಣ್ಣು ಬಿಟ್ಟು ನೋಡಿದ ಅವಳ ಮಗಳು ರೆನೇಟಾಳೇ, ಪಾತ್ರೆ ಬಂಗಾರದ್ದಾದರೂ ಅದರಲ್ಲಿದ್ದದ್ದು ಕೇವಲ ಹೇಲು ಎಂದು ಹೇಳಬೇಕಾಯಿತು. ಅಲ್ಲದೆ, ಅವಳಿಗೆ ಮನೆಯಲ್ಲಿ ಬೇರೆಯವರ ಬಗ್ಗೆ ತಿಳಿಯದಿದ್ದರಿಂದ, ಅದು ಎತ್ತರದ ಪ್ರದೇಶದ ಮೂಲದ್ದಾದ್ದರಿಂದ ಎಲ್ಲದಕ್ಕಿಂತ ಕೆಟ್ಟದಾಗಿತ್ತು ಎಂದಳು. ಆದರೆ ಅವಳಿಗೆ ತನ್ನ ಗಂಡನಿಂದ ಕೊಂಚ ಸಾಂತ್ವನ ಬೇಕಾಗಿತ್ತು. ಅವನು ಅವಳಿಗೆ ಸಹಾಯಕನಾಗಿದ್ದು, ನ್ಯಾಯಸಮ್ಮತವಾಗಿ ಲೂಟಿ ಹೊಡೆಯುವವನಾಗಿದ್ದು, ಅವಳ ತಂದೆ-ತಾಯಿ ಮನೆಯಿಂದ ಕರೆದುಕೊಂಡು ಬರುವ ಜವಾಬ್ದಾರಿ ತೆಗೆದುಕೊಂಡಿದ್ದ. ಅವಳು ಅಲ್ಲಿ ಏನೂ ಮಾಡಬೇಕಾಗಿರಲಿಲ್ಲ ಮತ್ತು ಯಾವ ತೊಂದರೆಯನ್ನೂ ಅನುಭವಿಸಿರಲಿಲ್ಲ. ಅಲ್ಲಿ ಅವಳು ಹೊತ್ತು ಹೋಗಲೆಂದು ಶವಸಂಸ್ಕಾರಕ್ಕೆ ಹೂಗುಚ್ಛಗಳನ್ನು ಮಾಡುತ್ತಿದ್ದಳು. ಏಕೆಂದರೆ ಅವಳ ಧಾರ್ಮಿಕ ಶಿಕ್ಷಣದ ಜವಾಬ್ದಾರಿ ಹೊತ್ತವನು, ತನ್ನ ಮುದ್ರೆಯೊತ್ತಿದ ಕಾಗದದಲ್ಲಿ, ತಾನು ಜವಾಬ್ದಾರಿ ಹೊತ್ತವಳ ಕೈಗಳು ಪಿಯಾನೋ ರೀತಿಯ ವಾದ್ಯ ನುಡಿಸುವುದು ಮಾತ್ರವಲ್ಲದೆ ಲೌಕಿಕದ ಕೆಲಸಗಳನ್ನು ಮಾಡುವುದಕ್ಕಲ್ಲ ಎಂದು ತಿಳಿಸಿದ್ದ. ಆದರೆ ತಲೆ ತಿರುಕ ಗಂಡ ಎಲ್ಲ ಎಚ್ಚರಗಳನ್ನು ದೂರ ಮಾಡಿ ಕುದಿಯುವ ಎಣ್ಣೆಯ ಪಾತ್ರೆಗೆ ಅವಳನ್ನು ಹಾಕಿದಂತೆ ಕರೆದುಕೊಂಡು ಬಂದಿದ್ದ, ಅಲ್ಲಿ ಸೆಖೆಯಿಂದಾಗಿ ಉಸಿರಾಡುವುದೂ ಕಷ್ಟವಾಗಿತ್ತು. ಅವಳು ಯಹೂದಿಗಳ ಸುಗ್ಗಿಯ ಹಬ್ಬದ ಉಪವಾಸವನ್ನು ಪೂರೈಸುವ ಮೊದಲೇ ಅವಳ ಗಂಡ ಟ್ರಂಕುಗಳ ಸಮೇತ ಮತ್ತು ಅಕಾರ್ಡಿಯನ್ ಜೊತೆಗೆ, ಹಿಂಭಾಗದಿಂದ ಮಾತ್ರ ನೋಡಲು ಲಾಯಕ್ಕಾದವಳ ಜೊತೆ ಹಾದರಕ್ಕೆ ಹೋದ. ಕೆಲವರು ಹೇಳುವುದೇನೆಂದರೆ, ಅಂದವಾಗಿರದ ಅವಳು, ಹೆಣ್ಣಿನ ಒಟ್ಟಾರೆ ಅಂದವನ್ನು ಚೆಂದದ ಹಿಂಭಾಗವನ್ನು ಕುಣಿಸಿದರೆ ಯಾರೆಂದು ತಿಳಿಯುತ್ತದೆ ಎಂದು ಚೆನ್ನಾಗಿ ಬೆಳೆಸಿದ್ದಳು, ಎಂದು. ಅವಳಿಗೆ ದೈವದ ಭಯವಿದ್ದು ಅವನ ನಿಯಮವನ್ನು ಪಾಲಿಸುತ್ತ, ಅವನ ಇಷ್ಟದಂತೆ ನಡೆದುಕೊಳ್ಳುವವಳಾಗಿದ್ದಳು. ಅವಳ ಜೊತೆ ಸಹಜವಾಗಿಯೇ ಅವನು ಇನ್ನೊಬ್ಬಳ ಜೊತೆ ನಡೆದುಕೊಂಡ ಹಾಗೆ ಹುಚ್ಚಾಟ ಮತ್ತು ಕೋತಿ ಕುಣಿತಗಳನ್ನು ಮಾಡಲಾಗುತ್ತಿರಲಿಲ್ಲ. ಇನ್ನೊಬ್ಬಳಂತೂ ಫ್ರೆಂಚ್ ಹೆಂಗಸರ ಹಾಗೆ ಮತ್ತು ಇನ್ನೂ ಹೆಚ್ಚಾಗಿ ಎಲ್ಲದಕ್ಕೂ ತಯಾರಾಗಿದ್ದಳು. ಅವರಂತೂ ಮನೆ ಬಾಗಿಲಿಗೆ ಕೆಂಪು ದೀಪ ಹಾಕಿಕೊಳ್ಳುವ ಮಟ್ಟಿಗೆ ಪ್ರಾಮಾಣಿಕವಾಗಿದ್ದರು. ಆದರೆ ದೊನ್ಯಾ ರೆನಾಟ ಆರ್ಗೋತೆ ಮತ್ತು ಒಳ್ಳೆಯ ಕ್ರಿಶ್ಚಿಯನ್‌ನಾದ, ನೇರ ನಡೆಯ, ದೊನ್ಯಾ ಫೆರ್ನಾಂಡಾ ದೆಲ್ ಕಾರ್ಪಿಯೋರ ಒಬ್ಬಳೇ ಮುದ್ದಿನ ಮಗಳಾದ ಅವಳು ಹಾಗೆ ಮಾಡಬೇಕಾಗಿತ್ತು. ಅದರಲ್ಲೂ ದೊನ್ಯಾ ಫೆರ್ನಾಂಡಾ ದೆಲ್ ಕಾರ್ಪಿಯೋ, ಗೋರಿಯಲ್ಲೂ ಮೈಚರ್ಮ ಮದುವಣಗಿತ್ತಿಯ ಹಾಗೆ ಮೃದುವಾಗಿರುವಂತೆ ಮತ್ತು ಕಣ್ಣುಗಳು ಹರಳುಗಳ ಹಾಗೆ ಹೊಳೆಯುತ್ತಿರುವ ವಿನಾಯತಿಯನ್ನು, ದೈವದಿಂದ ನೇರವಾಗಿ ಪಡೆಯುವರಲ್ಲಿ ಒಬ್ಬನಾಗಿದ್ದ. ಅವ್ರೇಲಿಯಾನೋ ಸೆಗುಂದೋ, “ಅದು ನಿಜ ಅಲ್ಲ, ಅವನನ್ನು ಇಲ್ಲಿಗೆ ಕರ್‍ಕೊಂಡು ಬಂದಾಗ್ಲೇ ವಾಸನೆ ಹೊಡೀತಿದ್ದ” ಎಂದ. +ಅವನು ಇದೇ ದಿನ ಅವಳು ತಪ್ಪು ಮಾಡುವ ತನಕ ತಾಳ್ಮೆಯಿಂದ ಕೇಳಿಸಿಕೊಂಡ. ಫೆರ್ನಾಂಡ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಧ್ವನಿ ತಗ್ಗಿಸಿದಳು. ಆ ರಾತ್ರಿ ಊಟದ ಸಮಯದಲ್ಲಿ ಮಳೆಯ ಸದ್ದಿಗಿಂತ ಅವಳ ಗೊಣಗಾಟದ ಧ್ವನಿ ಹೆಚ್ಚಿಗೆ ಇತ್ತು. ಅವ್ರೇಲಿಯಾನೋ ಸೆಗುಂದೋ ತಲೆ ಕೆಳಗೆ ಹಾಕಿ, ಕಡಿಮೆ ಊಟ ಮಾಡಿ, ಬೇಗನೆ ತನ್ನ ರೂಮಿಗೆ ಹೊರಟುಹೋದ. ಮಾರನೆ ದಿನ ಬೆಳಗಿನ ತಿಂಡಿಯ ಸಮಯಕ್ಕೆ ರಾತ್ರಿಯೆಲ್ಲ ಉರಿದೇಳುತ್ತ ಸರಿಯಾಗಿ ನಿದ್ದೆ ಮಾಡದೆ ಸೊರಗಿದ್ದಳು. ಆದರೂ ಅವಳ ಗಂಡ “ಬೇಯಿಸಿದ ಮೊಟ್ಟೆ ಇಲ್ಲವೇ” ಎಂದು ಕೇಳಿದಾಗ ಅವಳು, “ಮೊಟ್ಟೆ ಮುಗಿದು ಹೋಗಿ ಒಂದು ವಾರವಾಯಿತು” ಎಂದು ಹೇಳಿ ಸದಾ ಹೊಟ್ಟೆ ಬಗ್ಗೆ ಯೋಚಿಸುತ್ತ ಧಿಮಾಕಿನಿಂದ ದೊಡ್ಡ ಮನುಷ್ಯರ ಹಾಗೆ ಕೇಳುವ ಗಂಡಸರ ಬಗ್ಗೆ ಕೂಗಾಡಿದಳು. ಅವ್ರೇಲಿಯಾನೋ ಸೆಗುಂದೋ ಎಂದಿನಂತೆ ಹುಡುಗರನ್ನು ವಿಶ್ವಕೋಶ ನೋಡಲು ಕರೆದುಕೊಂಡು ಹೋದ ಮತ್ತು ಫೆರ್ನಾಂಡ ಮೆಮೆಯ ರೂಮನ್ನು ಸರಿಯಾಗಿರುವಂತೆ ಹೋಗಿ ತನ್ನ ಗೊಣಗಾಟ ಅವನಿಗೆ ಕೇಳಿಸುವಂತೆ ಮಾಡಿದಳು. ಇದರಿಂದ ಆ ಪಾಪದ ಹುಡುಗರಿಗೆ ವಿಶ್ವಕೋಶದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಚಿತ್ರ ಇದೆ ಎಂದು ಹೇಳಲಾಗಲಿಲ್ಲ. ಮಧ್ಯಾಹ್ನ ಹುಡುಗರು ಮಲಗಿದ್ದಾಗ ಅವ್ರೇಲಿಯಾನೋ ಸೆಗುಂದೋ ಮನೆಯ ಅಂಗಳದಲ್ಲಿ ಕುಳಿತ. ಫೆರ್ನಾಂಡ ಅವನನ್ನು ಸುಮ್ಮನೆ ಬಿಡದೆ ಬಂದು, ಗೊಣಗುಟ್ಟುತ್ತಾ ಪ್ರಚೋದಿಸಿದಳು. ಮನೆಯಲ್ಲಿ ತಿನ್ನುವುದಕ್ಕೆ ಮಣ್ಣು, ಕಲ್ಲು ಬಿಟ್ಟು ಇನ್ನೇನೂ ಇರದಿದ್ದರೂ ತನ್ನ ಗಂಡ ಪರ್ಷಿಯಾದ ಸುಲ್ತಾನನ ಹಾಗೆ ಕುಳಿತುಕೊಂಡು ಮಳೆ ಬೀಳುವುದನ್ನು ನೋಡುತ್ತಿದ್ದಾನೆ. ಅವನೊಬ್ಬ ಶುದ್ಧ ನಾಲಾಯಕ್, ಕೆಲಸಕ್ಕೆ ಬಾರದವನು, ಹೆಂಗಸರ ದುಡಿಮೆಯಿಂದ ಬಾಳುತ್ತಿರುವನು, ಎಂದಳು. ಸುಮಾರು ಎರಡು ಗಂಟೆಯ ಹೊತ್ತು ಅವ್ರೇಲಿಯಾನೋ ಸೆಗುಂದೋ ಕಿವುಡನಂತೆ ಅವಳು ಹೇಳುತ್ತಿದ್ದನ್ನು ಕೇಳಿಕೊಂಡು ಸುಮ್ಮನಿದ್ದ. ಅವನಿಗೆ ಕಿವಿಯ ತಮಟೆಯ ಮೇಲೆ ಬಾರಿಸಿ ತಲೆ ಭಾರವಾಗುತ್ತಿದ್ದುದ್ದನ್ನು ತಡೆಯಲಾಗದೆ ಹೋದಾಗ, +“ಬಾಯಿ ಮುಚ್ಕೊಂಡು ಸುಮ್ಮನಿರ್‍ತೀಯ” ಎಂದ. +ಆದರೆ ಫೆರ್ನಾಂಡ ಧ್ವನಿಯನ್ನು ಮತ್ತಷ್ಟು ಏರಿಸಿದಳು. ಅವಳು, “ಬಾಯಿ ಮುಚ್ಕೊಂಡಿರೋ ಅಂಥಾದನ್ನ ನಾನೇನೂ ಮಾಡಿಲ್ಲ. ನನ್ನ ಮಾತನ್ನ ಕೆಳಿಸಿಕೊಳ್ಳೋದು ಯಾರಿಗಾದ್ರೂ ಇಷ್ಟವಿಲ್ಲದಿದ್ದರೆ ಎಲ್ಲಾದ್ರೂ ಹಾಳಾಗಿ ಹೋಗಿ” ಎಂದಳು. ಆಗ ಅವ್ರೇಲಿಯಾನೋ ಸೆಗುಂದೋ ಸ್ತಿಮಿತ ಕಳೆದುಕೊಂಡ. ಅವನು ಕೋಪದಿಂದ ಎದ್ದು ಜರ್ರ್ರ್ರಿ, ಬೆಗೋನಿಯಾ ಗಿಡಗಳ ಕುಂಡಗಳನ್ನು ಒಂದೊಂದಾಗಿ ಹಿಡಿದೆತ್ತಿ ನೆಲಕ್ಕೆ ಅಪ್ಪಳಿಸಿದ. ಫೆರ್ನಾಂಡಳಿಗೆ ಗಾಬರಿಯಾಯಿತು. ಏಕೆಂದರೆ ಅಲ್ಲಿಯ ತನಕ ಅವಳ ಗೊಣಗಾಟದ ಆಂತರಿಕ ಶಕ್ತಿ ಎಷ್ಟೆಂದು ಅವಳಿಗೆ ತಿಳಿದಿರಲಿಲ್ಲ. ಆದರೆ ಈಗ ಯಾವುದೇ ರೀತಿಯ ತಹಬಂದಿಗೆ ತಡವಾಗಿತ್ತು. ತನಗೆ ಸಿಗುತ್ತಿದ್ದ ಯಾವುದೋ ರೀತಿಯ ಸಮಾಧಾನಕ್ಕೆಂದು ಅವ್ರೇಲಿಯನೋ ಸೆಗುಂದೋ ಚೀನಾ ವಸ್ತುಗಳನ್ನು ಒಂದೊಂದಾಗಿ ನೆಲಕ್ಕೆ ಕುಕ್ಕಿದ. ಪ್ರಶಾಂತನಾಗಿ ಮನೆಗಾಗಿ ಖರ್ಚು ಮಾಡಿದ ರೀತಿಯಲ್ಲೇ ಬೊಹಿಮಿಯಾದ ಹರಳುಗಳನ್ನು, ಚಿತ್ರ ಬಿಡಿಸಿದ ಹೂದಾನಿಗಳನ್ನು ಹೂತುಂಬಿದ ದೋಣಿಯಲ್ಲಿ ಕುಳಿತ ಸುಂದರಿಯರ ಚಿತ್ರಗಳನ್ನು, ಸೊಬಗಿನ ಚೌಕಟ್ಟಿರುವ ಕನ್ನಡಿಗಳನ್ನು ಮತ್ತು ಅಂಗಳದಿಂದ ಅಡುಗೆ ಮನೆವರೆಗೆ, ತುಂಡಾಗಬಹುದಾದ ಎಲ್ಲವನ್ನೂ ಗೋಡೆಗೆ ಬೀಸಿ ಎಸೆದು ಚಿಂದಿ ಮಾಡಿದ. ಅಡುಗೆ ಮನೆಯ ದೊಡ್ಡ ಮಣ್ಣಿನ ಜಾಡಿಯನ್ನು ನಡುಮನೆಯಲ್ಲಿ ಸ್ಫೋಟಿಸುವಂತೆ ಕುಕ್ಕಿದ. ಅನಂತರ ಅವನು ಕೈ ತೊಳೆದುಕೊಂಡು, ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಹೊರಟು ಮಧ್ಯರಾತ್ರಿಯ ಮುಂಚೆ ಒಂದಿಷ್ಟು ಮಾಂಸ, ಒಂದೆರಡು ಚೀಲ ಅಕ್ಕಿ, ಕಾಳು, ಬಾಳೆಗೊನೆಗಳನ್ನು ತಂದ. ಅಂದಿನಿಂದ ಮನೆಯಲ್ಲಿ ಊಟಕ್ಕೆ ಕೊರತೆ ಇರಲಿಲ್ಲ. +ಅಮರಾಂತ ಉರ್ಸುಲಾ ಮತ್ತು ಪುಟ್ಟ ಅವ್ರೇಲಿಯಾನೋ ಮನೆಯಲ್ಲಿರುವ ಅವಧಿಯನ್ನು ಸಂತೋಷದ ದಿನಗಳೆಂದು ಅನಂತರ ನೆನಪಿಸಿಕೊಳ್ಳುವಂತಾಯಿತು. ಫೆರ್ನಾಂಡಳ ಬಿಗಿಯಾದ ಕಟ್ಟಳೆಯ ನಡುವೆಯೂ ಅವರು ನಡುಮನೆಯಲ್ಲಿ ಪರಸ್ಪರ ಕೆಸರನ್ನು ಎರಚುತ್ತಿದ್ದರು, ಹಲ್ಲಿಗಳನ್ನು ಹಿಡಿದು ಸೀಳುತ್ತಿದ್ದರು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ನೋಡದಿರುವಾಗ ಸೂಪ್‌ಗೆ ಚಿಟ್ಟೆಗಳ ರೆಕ್ಕೆಗಳ ಮೇಲಿನ ಧೂಳನ್ನು ಬೆರೆಸುತ್ತಿರುವಂತೆ ನಟಿಸುತ್ತಿದ್ದರು. ಅವರ ಪಾಲಿಗೆ ಉರ್ಸುಲಾ ತುಂಬಾ ಇಷ್ಟವಾದ ಆಟದ ವಸ್ತುವಾಗಿದ್ದಳು. ಅವರು ಅವಳನ್ನು ತುಂಡಾದ ದೊಡ್ಡ ಗೊಂಬೆಯ ಹಾಗೆ ಪರಿಗಣಿಸಿ, ಮೈಗೆ ಬಣ್ಣದ ಬಟ್ಟೆ ಸುತ್ತಿ, ಮುಖಕ್ಕೆ ಕಪ್ಪು ಬಣ್ಣ ಪೇಂಟ್ ಮಾಡಿ, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಸಲ ಅವರು ಕಪ್ಪೆಗಳ ಕಣ್ಣುಗಳಿಗೆ ಮಾಡಿದ ಹಾಗೆ ದಬ್ಬಳದಿಂದ ಕೀಳುವುದರಲ್ಲಿದ್ದರು. ಅವಳಿಗೆ ಅವರ ಲವಲವಿಕೆಯ ಮನಸ್ಸು ಕೊಟ್ಟ ಉತ್ಸಾಹದಷ್ಟು ಬೇರೆ ಯಾವುದೂ ಕೊಡಲಿಲ್ಲ. ಮಳೆ ಬೀಳುತ್ತಿದ್ದ ಮೂರನೆ ವರ್ಷದಲ್ಲಿ ಅವಳಿಗೇನೋ ಆಗಿರಬೇಕು. ಏಕೆಂದರೆ ಅವಳಿಗೆ ವಾಸ್ತವದ ಗ್ರಹಿಕೆಯಲ್ಲಿ ನಿಯಂತ್ರಣ ತಪ್ಪಿ ಅದನ್ನು ತನ್ನ ಬಾಳಿನ ಹಿಂದಿನ ದಿನಗಳೊಂದಿಗೆ ಸೇರಿಸಿಕೊಳ್ಳುತ್ತಿದ್ದಳು. ಒಂದು ಸಲ ಅವಳು ಒಂದು ಶತಮಾನದ ಹಿಂದೆ ಹೂಳಿದ ಮುತ್ತಜ್ಜಿ ಪೆತ್ರೋನಿಲಾ ಇಗ್ವಾರಾನ್‌ಗಾಗಿ ಮೂರು ದಿನ ಅತ್ತಳು. ಅವಳು ಎಂಥ ಮನೋಸ್ಥಿತಿಯಲ್ಲಿ ಇದ್ದಳೆಂದರೆ ಪುಟ್ಟ ಅವ್ರೇಲಿಯಾನೋನನ್ನು ಐಸ್ ನೋಡಲು ಹೋದ ಕಾಲದಲ್ಲಿದ್ದ ಕರ್ನಲ್ ಮತ್ತು ಸ್ಕೂಲಿಗೆ ಹೋಗುತ್ತಿದ್ದ ಹೊಸೆ ಅರ್ಕಾದಿಯೋನನ್ನು ಜಿಪ್ಸಿಗಳ ಜೊತೆ ಹೋದ ತನ್ನ ಮೊದಲನೆ ಮಗ ಎಂದು ತಿಳಿದಳು. ಅವಳು ತನ್ನ ಮನೆಯವರ ಬಗ್ಗೆ ಎಷ್ಟು ಮಾತಾಡಿದಳೆಂದರೆ ಮಕ್ಕಳು ಬಹಳ ಹಿಂದೆ ಸತ್ತವರ ಜೊತೆ ಮತ್ತು ಬೇರೆ ಬೇರೆ ಕಾಲದಲ್ಲಿ ಬದುಕಿದ್ದವರ ಜೊತೆ ಕಲ್ಪನಾ ಭೇಟಿ ಮಾಡುವುದನ್ನು ಕಲಿತುಕೊಂಡರು. ಹಾಸಿಗೆಯ ಮೇಲೆ ಬೂದಿ ಸವರಿದ ಕೂದಲಿನ ಮತ್ತು ಕೆಂಪು ಕರ್ಚೀಫ್‌ನಿಂದ ಮುಖ ಸುತ್ತುವರಿಸಿ ಕುಳಿತ ಉರ್ಸುಲಾ ಅವಾಸ್ತವ ಸಂಬಂಧಿಗಳ ಒಡನಾಟದಲ್ಲಿ ಹಾಗೂ ಮಕ್ಕಳು ಅವರ ಬಗ್ಗೆ ಹೇಳುವ ವಿವರಣೆಗಳಲ್ಲಿ ಸಂತೋಷವಾಗಿದ್ದಳು. ಉರ್ಸುಲಾ ತಾನು ಹುಟ್ಟುವುದಕ್ಕಿಂತ ಮುಂಚಿನ ಘಟನೆಗಳ ಬಗ್ಗೆ ಹಿಂದಿನವರ ಜೊತೆ ಮಾತಾಡುತ್ತಿದ್ದಳು. ಅವರು ತಿಳಿಸುತ್ತಿದ್ದ ಸುದ್ದಿಗಳಿಂದ ಸಂತೋಷಗೊಳ್ಳುತ್ತಿದ್ದಳು ಮತ್ತು ಅವರ ಜೊತೆ ಸೇರಿಕೊಂಡು ಅತಿಥಿಗಳಿಗಿಂತ ಇತ್ತೀಚಿನವರ ಸಾವಿನ ಬಗ್ಗೆ ರೋದಿಸುತ್ತಿದ್ದಳು. ದೆವ್ವಗಳ ಜೊತೆಯ ಭೇಟಿಯ ಪ್ರಾರಂಭದಲ್ಲಿ ಉರ್ಸುಲಾ ಮನುಷ್ಯಾಕೃತಿಯ ಸಂತ ಜೋಸೆಫ್‌ನ ವಿಗ್ರಹವನ್ನು ಮಳೆ ನಿಲ್ಲುವ ತನಕ ಇಟ್ಟುಕೊಂಡಿರಿ ಎಂದು ಬಿಟ್ಟು ಹೋದವನು ಯಾರೆಂದು ಪತ್ತೆ ಮಾಡಲು ಕೇಳಿಯೇ ಕೇಳುತ್ತಾಳೆಂದು ಆ ಮಕ್ಕಳಿಗೆ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಅದೇ ರೀತಿಯಲ್ಲಿ ಅವ್ರೇಲಿಯಾನೋ ಸೆಗುಂದೋಗೆ, ಉರ್ಸುಲಾ ಒಬ್ಬಳಿಗೆ ಮಾತ್ರ್ರ ಅಗಾಧ ಸಂಪತ್ತನ್ನು ಹೂತಿರುವ ಜಾಗ ಗೊತ್ತಿದೆ ಎಂದು ತಿಳಿದಿತ್ತು. ಆದರೆ ಉದ್ಭವಿಸಿದ ಪ್ರಶ್ನೆಗಳು ಹಾಗೂ ಅದರ ನಿರ್ವಹಣೆಯ ಬಗ್ಗೆ ಅವನಿಗೆ ಹೊಳೆದದ್ದು ಉಪಯೋಗಕ್ಕೆ ಬರಲಿಲ್ಲ. ಏಕೆಂದರೆ ಅವಳ ಹುಚ್ಚಾಟದ ಕಗ್ಗಂಟಿನ ನಡುವೆಯೂ ಗುಟ್ಟನ್ನು ಬಿಟ್ಟುಕೊಡದೇ ಇರುವಂಥ ಚಿತ್ತ ಶಾಂತಿಯನ್ನು ಕಾಪಾಡಿಕೊಂಡಿರುವುದು ಅವಳಿಗೆ ಸಾಧ್ಯವಿದ್ದ ಹಾಗೆ ಕಾಣುತ್ತಿತ್ತು. ಅವಳು ಅದನ್ನು ಆ ಸಂಪತ್ತಿನ ನಿಜವಾದ ಒಡೆಯನೆಂದು ಪುರಾವೆ ಒದಗಿಸುವವನಿಗೆ ಮಾತ್ರ ತಿಳಿಸುವವಳಿದ್ದಳು. ಅವಳೆಷ್ಟು ಚತುರಳಾಗಿ ಮತ್ತು ಕಟ್ಟುನಿಟ್ಟಿನವಳಾಗಿದ್ದಳೆಂದರೆ ಅವ್ರೇಲಿಯಾನೋ ಸೆಗುಂದೋ ತನ್ನ ಸಹಚರನೊಬ್ಬನಿಗೆ ಅವನೇ ಒಡೆಯನೆಂದು ವರ್ತಿಸು ಎಂದು ಹೇಳಿಕೊಟ್ಟಾಗ ಅವಳು ಒಂದೇ ಒಂದು ನಿಮಿಷದಲ್ಲಿ ಅವನು ತಬ್ಬಿಬ್ಬಾಗಿ ಸಿಕ್ಕಿಹಾಕಿಕೊಳ್ಳುವಂಥ ಪ್ರಶ್ನೆಗಳನ್ನು ಕೇಳಿದಳು. +ಉರ್ಸುಲಾ ಆ ಗುಟ್ಟನ್ನು ತನ್ನ ಗೋರಿಗೂ ಕೊಂಡೊಯ್ಯುತ್ತಾಳೆ ಎಂದು ಅವ್ರೇಲಿಯಾನೋ ಸೆಗುಂದೋಗೆ ಖಚಿತವಾಗಿ ಅಂಗಳ ಮತ್ತು ಹಿಂಭಾಗದಲ್ಲಿ ಚರಂಡಿ ಮಾಡುತ್ತಾರೆ ಎಂಬ ನೆಪದಿಂದ ಗುಂಡಿ ತೋಡುವವರನ್ನು ನೇಮಿಸಿದ ಮತ್ತು ಅವನು ಕಬ್ಬಿಣದ ಸರಳುಗಳಿಂದ ಮಣ್ಣು ಅಗೆದು ಪರೀಕ್ಷೆ ಮಾಡಿದ ಮತ್ತು ಲೋಹ ಪರೀಕ್ಷಕಗಳಿಂದ ಮಾಡಿದ ಮೂರು ತಿಂಗಳು ಸುಸ್ತಾಗುವರೆಗಿನ ಪ್ರಯತ್ನದಿಂದ, ಬಂಗಾರವನ್ನು ಹೋಲುವ ಯಾವುದರ ಸೂಚನೆ ದೊರೆಯುಲಿಲ್ಲ. ಅನಂತರ ಅವನು ಕಾರ್ಡುಗಳು ನೆಲ ಅಗೆಯುವವನಿಗಿಂತ ಚೆನ್ನಾಗಿ ನೋಡಬಲ್ಲವು ಎಂದು ಭಾವಿಸಿ ಪಿಲರ್ ಟೆರ್‍ನೆರಾಳ ಹತ್ತಿರ ಹೋದ. ಅವಳು ಕಾರ್ಡು ತೆಗೆಯದೆ ಉರ್ಸುಲಾಗೆ ತಿಳಿಯದಂತೆ ಮಾಡುವ ಪ್ರಯತ್ನ ವ್ಯರ್ಥವೆಂದು ಅವನಿಗೆ ವಿವರಿಸಿದಳು. ಆದರೆ ಅವಳು ಹೂತಿಟ್ಟಿರುವ ಸಂಪತ್ತು ತಾಮ್ರದ ತಂತಿ ಕಟ್ಟಿರುವ ಮೂರು ಬ್ಯಾಗುಗಳಲ್ಲಿ ಏಳು ಸಾವಿರದ ಇನ್ನೂರ ಹದಿನಾಲ್ಕು ಬಂಗಾರದ ನಾಣ್ಯಗಳಿದ್ದು, ಅವು ಉರ್ಸುಲಾಳ ಹಾಸಿಗೆಯನ್ನು ಕೇಂದ್ರಬಿಂದುವಾಗಿರಿಸಿಕೊಂಡು ಮುನ್ನೂರ ಎಂಬತ್ತು ಅಡಿ ವೃತ್ತದಲ್ಲಿದೆ ಎಂದು ಹೇಳಿದಳು. ಅಲ್ಲದೆ ಅವಳು ಅವೆಲ್ಲ ಮಳೆ ನಿಂತು, ಒಂದಾದ ಮೇಲೊಂದು ಸೂರ್ಯನ ಶಾಖದ ಜೂನ್ ತಿಂಗಳು ಕೆಸರನ್ನು ಧೂಳಾಗಿಸುವ ತನಕ ಸಿಗುವುದಿಲ್ಲವೆಂದು ಹೇಳಿದಳು. ಅವಳ ವಿವರಣೆ ಅಷ್ಟು ವಿಸ್ತಾರವಾಗಿ ಮತ್ತು ನಿಖರವಾಗಿತ್ತು. ಅವ್ರೇಲಿಯಾನೋ ಸೆಗುಂದೋಗೆ ತಾವೀಗ ಆಗಸ್ಟ್‌ನಲ್ಲಿದ್ದು ಇನ್ನೂ ಮೂರು ವರ್ಷದ ತನಕ ಅವರ ಭವಿಷ್ಯ ನಿಜವಾಗಲು ಕಾಯಬೇಕಾಗಿದ್ದರೂ ಅದೆಲ್ಲ ಆಧ್ಯಾತ್ಮವಾದಿಗಳು ಹೇಳುವ ಕತೆಗಳಂತೆ ಕಂಡಿತು. ಅವನಿಗೆ ಗೊಂದಲ ಹೆಚ್ಚಾದರೂ, ಅದೇ ಸಮಯದಲ್ಲಿ ಬೆರಗಾಗಿಸಿದ ಮೊದಲನೇ ಅಂಶವೆಂದರೆ, ಉರ್ಸುಲಾಳ ಮಂಚದಿಂದ ಹಿಂದುಗಡೆ ಗೋಡೆಗೆ ಮುನ್ನೂರ ಎಂಭತ್ತೆಂಟು ಅಡಿ ಇದ್ದದ್ದು. ಅವನ ಅವಳಿ ಸೋದರನಂತೆ ಅವನೂ ಕೂಡಾ ಹುಚ್ಚಾಟದವನು ಎಂದು ಫೆರ್ನಾಂಡಳಿಗೆ ಅವನು ಅಳತೆ ಹಿಡಿದಾಗ ಮತ್ತು ಅದಕ್ಕಿಂತ ಹೆಚ್ಚಾಗಿ ನೆಲ ಅಗೆಯುವವರಿಗೆ ಮೂರು ಅಡಿ ಹೆಚ್ಚಿಗೆ ತೆಗೆಯಲು ಹೇಳಿದಾಗ ಗಾಬರಿಯಾಯಿತು. ಅವನ ಮುತ್ತಜ್ಜನಿಗೆ ಮಾತ್ರ ಹೋಲಿಸಬಹುದಾದಂಥ ಆವಿಷ್ಕಾರದ ಮಾರ್ಗದಲ್ಲಿ, ಸಂಶೋಧನೆಯ ಗೀಳು ಹತ್ತಿದ ಅವ್ರೇಲಿಯಾನೋ ಸೆಗುಂದೋನಲ್ಲಿ ಅಳಿದುಳಿದ ಕೊಬ್ಬಿನಂಶ ಕರಗಿ ಹೋಯಿತು. ಅವನಿಗೆ ಅವನ ಸೋದರನ ಹೋಲಿಕೆ ಹೆಚ್ಚಾಯಿತು. ಇದು ನೀಳಕಾಯದಿಂದ ಮಾತ್ರವಲ್ಲ ಆಲೋಚನಾಪರ ಹಾಗೂ ಅಂತರ್ಮುಖಿಯಾಗುವ ಧೋರಣೆಯಿಂದ ಅವನು ಮಕ್ಕಳ ಜೊತೆಗೆ ಸೇರಿ ಕಿರಿಕಿರಿ ಮಾಡುತ್ತಿರಲಿಲ. ಅವನು ತಲೆಯಿಂದ ಉಂಗುಷ್ಠದ ತನಕ ಮಣ್ಣು ಮೆತ್ತಿಕೊಂಡು ಅವೇಳೆಯಲ್ಲಿ ಊಟ ಮಾಡುತ್ತಿದ್ದ. ಅವನು ಇದನ್ನು ಅಡುಗೆ ಮನೆಯ ಮೂಲೆಯಲ್ಲಿ ಒಮ್ಮೊಮ್ಮೆ ಸಾಂತ ಸೋಫಿಯಾ ದೆಲಾ ಪಿಯದಾದ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾಡುತ್ತಿದ್ದ. +ಅವನಿಗೆ ಅಷ್ಟೆಲ್ಲ ಸಾಧ್ಯವೇ ಎಂದು ಕನಸಿನಲ್ಲಿಯೂ ಕಾಣದ ಫೆರ್ನಾಂಡ ಅವನನ್ನು ಆ ರೀತಿ ನೋಡಿದ ಮೇಲೆ ಅವನ ಹಠ ದೃಢವಾಗಿದೆ, ಅತಿಯಾಸೆ ಬಿಟ್ಟು ಹೋಗಿದೆ ಮತ್ತು ಹಿಡಿದಿದ್ದನ್ನು ಬಿಡದೆ ಮಾಡುವ ಮನಸ್ಸಾಗಿದೆ ಎಂದುಕೊಂಡಳು. ತಾನು ಅವನ ಬಗ್ಗೆ ಕೆಟ್ಟದಾಗಿ ನಡೆದುಕೊಂಡದ್ದಕ್ಕೆ ಬೇಸರಗೊಂಡಳು. ಆದರೆ ಅವ್ರೇಲಿಯಾನೋ ಸೆಗುಂದೋ ಆ ಸಮಯದಲ್ಲಿ ದಯಾಪೂರ್ಣ ಹೊಂದಾಣಿಕೆಗೆ ತಯಾರಿರಲಿಲ್ಲ. ಜೀವವಿಲ್ಲದ ಮರದ ಕೊಂಬೆಗಳು ಮತ್ತು ಕುತ್ತಿಗೆ ತನಕ ಮುಳುಗಿದ್ದ ಅವನು, ಅಂಗಳ ಮತ್ತು ಹಿಂಭಾಗವನ್ನು ಶುಚಿ ಮಾಡಿ ಕೈತೋಟದ ಕಸವನ್ನೆಲ್ಲ ಆಚೆಗೆಸೆದ. ಅವನು ಮನೆಯ ಪೂರ್ವದ ಕಡೆಯ ಅಡಿಪಾಯದ ಕೆಳಗೆ ಎಷ್ಟು ಅಗೆಸಿದ್ದನೆಂದರೆ, ಒಂದು ರಾತ್ರಿ ಭೂಕಂಪವಾದಂತಾಗಿ ಮನೆಯವರೆಲ್ಲ ಗಾಬರಿಯಿಂದ ನೆಲಮಾಳಗೆ ಬಿರುಕು ಬಿಟ್ಟಿದೆ ಎಂದು ಎಚ್ಚರಗೊಂಡರು. ಮೂರು ರೂಮುಗಳು ಕಡಿದು ಬೀಳುತ್ತಿದ್ದವು ಮತ್ತು ಅಂಗಳದಿಂದ ಫೆರ್ನಾಂಡಳ ರೂಮಿನ ತನಕ ಬಿರುಕು ಬಿಟ್ಟಿತ್ತು. ಆದರೆ ಅದರಿಂದಾಗಿ ಅವ್ರೇಲಿಯಾನೋ ಸೆಗುಂದೋ ತನ್ನ ಕೆಲಸವನ್ನು ಕೈ ಬಿಡಲಿಲ್ಲ. ಅವನ ಕೊನೆಯ ಆಸೆಯು ಮುಗಿದಾಗ ಮತ್ತು ಕಾರ್ಡುಗಳು ಭವಿಷ್ಯ ತಿಳಿಸಿದ್ದರಲ್ಲಿ ಅರ್ಥವಿದೆ ಎಂದು ತೋರಿದಾಗ ಅವನು ಕಿತ್ತುಹೋದ ಅಡಿಪಾಯವನ್ನು ಸುಭದ್ರಗೊಳಿಸಿ, ಬಿರುಕು ಬಿಟ್ಟಿದ್ದನ್ನು ಗಾರೆಯಿಂದ ಮೆತ್ತಿ ರಿಪೇರಿ ಮಾಡಿz. ಆ ಮೇಲೆ ಅವನು ಪಶ್ಚಿಮದ ಕಡೆ ಮುಂದುವರೆಸಿದ. ಜೂನ್ ಎರಡನೆ ವಾರದಲ್ಲಿದ್ದ ಮಳೆ ಕಡಿಮೆಯಾಗಿ, ಮೋಡ ಚದುರಿತು ಮತ್ತು ಪ್ರತಿಕ್ಷಣವೂ ಕಳೆದಂತೆ ಮಳೆ ನಿಲ್ಲುತ್ತದೆ ಎಂದು ತಿಳಿದುಬಂತು. ಅದು ಆದದ್ದೂ ಹಾಗೆಯೇ. ಒಂದು ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ, ಸೂರ್ಯನಿಂದ ಇಟ್ಟಿಗೆ ಪುಡಿಯ ಹಾಗೆ ಮತ್ತು ಪ್ರಶಾಂತವಾದ ನೀರಿನಂತೆ, ಸುತ್ತಲ ಪ್ರಪಂಚ ಬೆಳಕಾಯಿತು ಮತ್ತು ಹತ್ತು ವರ್ಷ ಮಳೆಯಾಗಲಿಲ್ಲ. +ಮಕೋಂದೋ ಪರಿಸ್ಥಿತಿ ಹದಗೆಟ್ಟಿತ್ತು. ನೀರು ನಿಂತ ರಸ್ತೆಗಳಲ್ಲಿ ಪೀಠೋಪಕರಣಗಳ ಬಿಡಿ ಭಾಗಗಳಿದ್ದವು, ಲಿಲ್ಲಿ ಹೂಗಳಿಂದ ಮುತ್ತಿದ ಪ್ರಾಣಿಗಳ ಅಸ್ಥಿಪಂಜರಗಳಿದ್ದವು ಹಾಗೂ ಮಕೋಂದೋಗೆ ಬಂದ ಹಾಗೆಯೇ ಬಿಟ್ಟು ಹೋದ ಗುಂಪು ಗುಂಪು ಹೊರಗಿನ ಜನರ ಕೊನೆಯ ನೆನಪುಗಳಿದ್ದವು. ಬಾಳೆ ತೋಟದ ಸಮೃದ್ಧ ಅವಧಿಯಲ್ಲಿ ಅವಸರದಲ್ಲಿ ಕಟ್ಟಿದ ಮನೆಗಳು ಹಾಳು ಸುರಿಯುತ್ತಿದ್ದವು. ಬಾಳೆ ತೋಟದ ಕಂಪನಿ ತನ್ನಲ್ಲಿ ವ್ಯವಸ್ಥೆಯನ್ನು ಕೆಳಗುರುಳಿಸಿತು. ಸುತ್ತ ತಂತಿಯ ಬೇಲಿ ಕಟ್ಟಿದ ಆ ಊರಿನಲ್ಲಿ ಈಗ ಉಳಿದದ್ದು ರದ್ದಿ ಮಾತ್ರ. ಮರದ ಮನೆಗಳು, ಬೀಸುವ ತಂಗಾಳಿಯಲ್ಲಿ ಮಧ್ಯಾಹ್ನದ ಹೊತ್ತು ಇಸ್ಪೀಟ್ ಆಡಲು ಟೆರೇಸುಗಳು – ಇವೆಲ್ಲ ಭವಿಷ್ಯ ನುಡಿದ ರೀತಿಯಲ್ಲಿ ಭೂಮಿಯ ಮೇಲಿಂದ ಮಕೋಂದೋ ಹೆಸರು ಇಲ್ಲವಾಗುತ್ತದೆ ಎನ್ನುವುದನ್ನು ನಿರೀಕ್ಷಿಸಿ ಧೂಳೀಪಟವಾಗಿದ್ದವು. ಆ ಭೀಕರ ಹೊಡೆತದಿಂದ ಅಲ್ಲಿ ಉಳಿದಿದ್ದ ಒಂದೇ ಮನುಷ್ಯನ ಗುರುತೆಂದರೆ ವಾಹನವೊಂದರಲ್ಲಿ ಕಾಡುಗಿಡದ ನಡುವೆ ಇದ್ದ ಪ್ಯಾಟ್ರಿಷಿಯಾ ಬ್ರೌನ್‌ಳ ಒಂದು ಕೈ ಗವಸು. ಹೊಸೆ ಅರ್ಕಾದಿಯೋ ಬ್ಯುಂಡಿಯ ಪರಿಶೋಧಿಸಿದ ಉಲ್ಲಾಸದ ಪ್ರದೇಶವಾದ ಮತ್ತು ಅನಂತರ ಬಾಳೆ ತೋಟದವರ ಶ್ರೇಯಸ್ಸಿಗೆ ಕಾರಣವಾದ ಆ ಪ್ರದೇಶದಲ್ಲಿ ಉಸುಬಿನಲ್ಲಿ ಕೊಳೆತ ಬೇರುಗಳಿರುವ ಹಾಗೂ ದೂರ ದಿಗಂತದಲ್ಲಿ ಸಮುದ್ರದ ಮೇಲಿನ ಸದ್ದಿಲ್ಲದ ನೊರೆಯನ್ನು ನೋಡಬಹುದಿತ್ತು. ಅವ್ರೇಲಿಯಾನೋ ಸೆಗುಂದೋ ವ್ಯಥೆಯಲ್ಲಿ ಮುಳುಗಿ ಆ ಭಾನುವಾರ, ಒಣಗಿದ ಬಟ್ಟೆ ಹಾಕಿಕೊಂಡು ಊರಿನಲ್ಲಿರುವವರ ಜೊತೆ ಮತ್ತೆ ಸಂಬಂಧವನ್ನು ನವೀಕರಿಸುವುದಕ್ಕಾಗಿ ಹೋದ. ಆ ದುರಂತದಲ್ಲಿ ಪಾರಾದ, ಬಾಳೆ ತೋಟದ ಕಂಪನಿಯ ಬಿರುಗಾಳಿಗೆ ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ಮುಂಚೆಯೇ ಮಕೋಂದೋದಲ್ಲೇ ನೆಲೆಸಿದ್ದ ಅವರು, ರಸ್ತೆಯ ಮಧ್ಯದಲ್ಲಿ ಬೆಳಕನ್ನು ಸುಖಿಸುತ್ತ ಕುಳಿತಿದ್ದರು. ಅವರು ಚರ್ಮದ ಮೇಲೆ ಇನ್ನೂ ಆ ಗುರುತು ಇತ್ತು ಮತ್ತು ಮೂಲೆಯ ಮಣ್ಣು ವಾಸನೆ ಅವರಿಗಂಟಿತ್ತು. ಆದರೆ ಅವರಿಗೆ ತಾವು ಹುಟ್ಟಿದ ಊರನ್ನು ಮತ್ತೆ ಮರಳಿ ಪಡೆದ ಸಂತೋಷವಿತ್ತು. ಟರ್ಕಿಗಳ ರಸ್ತೆ, ಅರಬರು ಆ ದಿನಗಳಲ್ಲಿ ಚಪ್ಪಲಿ ಹಾಗೂ ಕಿವಿಯಲ್ಲಿ ರಿಂಗುಗಳನ್ನು ಹಾಕಿಕೊಂಡು, ಗಿಣಿಗಳಿಗಾಗಿ ವಸ್ತುಗಳನ್ನು ಅದಲು ಬದಲು ಮಾಡುತ್ತ, ತಿರುಗಾಡುತ್ತಿದ್ದಂತೆಯೇ ಆಯಿತು. ಅಲ್ಲದೆ ಅವರು ಓಬೀರಾಯನ ಕಾಲದಿಂದಲೂ ಅಲೆಮಾರಿಗಳು ಎನ್ನುವುದರಿಂದ ಮಕೋಂದೋ ರಸ್ತೆಯ ತಿರುವಿನಲ್ಲಿ ಬಿಡುಗಡೆಯ ಸಮಾಧಾನ ಪಡೆದರು. ಮಳೆಯ ದಿನಗಳು ಕಳೆದ ಮೇಲೆ ಅಂಗಡಿಯ ಸಾಮಾನುಗಳು ಉದುರಿ ಬೀಳುತ್ತಿದ್ದವು. ಬಾಗಿಲ ಮೇಲೆ ಹಾಕಿದ ಬಟ್ಟೆಗಳೆಲ್ಲ ಚಿತ್ತು ಚಿತ್ತಾಗುತ್ತಿದ್ದವು, ದುಡ್ಡೆಣಿಸುವ ಟೇಬಲ್‌ಗಳಿಗೆ ಗೆದ್ದಲು ಹಿಡಿದಿತ್ತು, ಗೋಡೆಗಳಿಗೆ ತೇವ ಬಡಿದಿತ್ತು. ಆದರೆ ಮೂರನೆ ಸಂತಾನದ ಅರಬರು ಅವರ ಅಪ್ಪ, ತಾತಂದಿರಂತೆ ಅದೇ ರೀತಿಯಲ್ಲಿ ಅವರಂತೆಯೇ ಹೆದರದೆ ಮಿತಭಾಷಿಗಳಾಗಿ, ಜರುಗಿದ ಅನಾಹುತದಿಂದ ಮತ್ತು ಅವಧಿಯಿಂದ ಅಲ್ಲಾಡದೆ, ನಿದ್ದೆ ಬಾರದ ರೋಗದ ಕಾಲದಲ್ಲಿ ಹೇಗೆ ಬದುಕಿದ್ದರೋ ಅಥವಾ ಹೇಗೆ ಸತ್ತಿದ್ದರೋ ಹಾಗೆಯೇ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮೂವತ್ತೆರಡು ಯುದ್ಧ ಕಾಲದಲ್ಲಿದ್ದಂತೆಯೇ ಇದ್ದರು. ಜೂಜಾಟದ ಟೇಬಲ್ಲುಗಳಲ್ಲಿ ಪೋಲುಮಾಡುವ ಆವರಣದಲ್ಲಿ, ಶೂಟಿಂಗ್ ಗ್ಯಾಲರಿಗಳಲ್ಲಿ ಉಂಟಾದ ನಷ್ಟವನ್ನು ಎದುರಿಸಿ ನಿಲ್ಲುವ ಎದೆಗಾರಿಕೆಯಿತ್ತು. ಅವರು ಕನಸುಗಳನ್ನು ವ್ಯಾಖ್ಯಾನಿಸುವ ಹಾಗೂ ಭವಿಷ್ಯ ಹೇಳುವಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಆ ಅನಾಹುತದಲ್ಲಿ ಕೊಚ್ಚಿಕೊಂಡು ಹೋಗದಂತೆ ಯಾವ ನಿಗೂಢ ಶಕ್ತಿಯನ್ನು ಅವಲಂಬಿಸಿದ್ದರು ಎಂದು ಅನೌಪಚಾರಿಕವಾಗಿ ಕೇಳುವಂತೆ ಮಾಡಿತು. ಮುಳುಗಿ ಹೋಗದಂತೆ ಅದೆಂಥ ಅಮಾನುಷ ಏರ್ಪಾಡು ಮಾಡಿಕೊಂಡಿದ್ದರು ಎಂದು ಕೇಳಿದ. ಅದಕ್ಕೆ ಒಬ್ಬರಾದ ಮೇಲೊಬ್ಬರು, ಒಂದು ಮನೆಯಾದ ಮೇಲೆ ಮತ್ತೊಂದು ಮನೆಯಲ್ಲಿ, ಸಣ್ಣಗೆ ನಕ್ಕು, ತೇಲಿಸಿ ನೋಡುತ್ತಾ, ಯಾವುದೇ ರೀತಿಯ ಮುಂಚಿನ ಸಮಾಲೋಚನೆ ಇಲ್ಲದೆ ಎಲ್ಲರೂ ಒಂದೇ ಉತ್ತರ ಕೊಟ್ಟರು. +“ಈಜಾಡ್ತಾ ಇದ್ವಿ” +ಪೆತ್ರಾ ಕೊತೆಸ್ ಒಬ್ಬಳಿಗೆ ಮಾತ್ರ ಅರಬರ ಹೃದಯವಿತ್ತು. ಅವಳು ತನ್ನ ಕುದುರೆ ಲಾಯದ ಅಂತಿಮ ನಾಶವನ್ನು ನೋಡಿದ್ದಳು, ಅವಳ ಅಡುಗೆ ಸಾಮಾನುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆದರೆ ತನ್ನ ಮನೆಯ ಸ್ಥಿರತೆಯನ್ನು ಕಾಪಾಡಲು ಸಮರ್ಥಳಾಗಿದ್ದಳು. ಎರಡನೆ ವರ್ಷದಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಅವಳು ತುರ್ತಾದ ಸಂದೇಶಗಳನ್ನು ಕಳಿಸಿದ್ದಳು. ಅವನು ಅವಳ ಮನೆಗೆ ಯಾವಾಗ ವಾಪಾಸಾಗುವನೆಂದು ಗೊತ್ತಿಲ್ಲ ಮತ್ತು ಏನೇ ಆದರೂ ಬೆಡ್‌ರೂಮಿನ ನೆಲಕ್ಕೆ ಜೋಡಿಸಲು ಒಂದು ಪೆಟ್ಟಿಗೆ ಬಂಗಾರದ ನಾಣ್ಯ ತೆಗೆದುಕೊಂಡು ಬರುವುದಾಗಿ ಉತ್ತರಿಸಿದ್ದ. ಆ ಸಮಯಕ್ಕೆ ಅವಳು ತನ್ನ ಹೃದಯವನ್ನು ಬಗೆದು, ಆ ಅನಾಹುತದಿಂದ ಪಾರಾಗಲು ಧೈರ್ಯ ಹೊಂದುವ ರೀತಿಯನ್ನು ಹುಡುಕುತ್ತಿದ್ದಳು. ಅವಳು ಅದಕ್ಕಾಗಿ ಬೇಕಾದ ರೋಷವನ್ನು ಕಂಡುಕೊಂಡು ತನ್ನ ಗಂಡ ಪೋಲು ಮಾಡಿದ ಸಂಪತ್ತನ್ನು ಮತ್ತು ಸುರಿಮಳೆ ನಿರ್ನಾಮ ಮಾಡಿದ್ದನ್ನು ಮರಳಿ ಪಡೆಯುವುದಾಗಿ ಪ್ರಮಾಣ ಮಾಡಿದಳು. ಅವಳ ಆ ನಿರ್ಧಾರ ಎಷ್ಟು ದೃಢವಾಗಿತ್ತೆಂದರೆ ಅವಳು ಕೊನೆಯ ಸಂದೇಶ ಕಳುಹಿಸಿಕೊಟ್ಟು ಎಂಟು ತಿಂಗಳಾದ ಮೇಲೆ ಅವಳ ಮನೆಗೆ ಅವ್ರೇಲಿಯಾನೋ ಸೆಗುಂದೋ ವಾಪಾಸು ಹೋದಾಗ, ಕಣ್ಣುಗಳು ಗುಳಿಬಿದ್ದು, ಚರ್ಮರೋಗ ಬಡಿದು ಅಂದಗೆಟ್ಟಿದ್ದರೂ, ಲಾಟರಿ ಶುರು ಮಾಡುವುದಕ್ಕಾಗಿ ತುಂಡು ಕಾಗದಗಳ ಮೇಲೆ ನಂಬರುಗಳನ್ನು ಬರೆಯುತ್ತಿದ್ದನ್ನು ಕಂಡು ಆಶ್ಚರ್ಯವಾಯಿತು. ಅವನು ತೀರ ಕೊಳಕಾಗಿ ವಿಪರೀತ ಗಂಭೀರನಾಗಿದ್ದು ಪೆತ್ರಾ ಕೊತೆಸ್ ತನ್ನನ್ನು ನೋಡಲು ಬಂದವನು ತನ್ನ ಪ್ರಿಯತಮನಲ್ಲ ಅವನ ಅವಳಿ ಸೋದರ ಎಂದು ಭಾವಿಸಿದಳು. +ಅವನು ಅವಳಿಗೆ, “ನಿಂಗೆಲ್ಲೋ ಹುಚ್ಚು. ಮೈಯಲ್ಲಿರೋ ಮೂಳೆಗಳ ಲಾಟರಿ ಮಾಡಿದ್ರೆ ಮಾತ್ರ ಸಾಧ್ಯ” ಎಂದ. +ಅನಂತರ ಅವಳು ಅವನಿಗೆ ಬೆಡ್‌ರೂಮನ್ನು ನೋಡಲು ಹೇಳಿದಳು ಮತ್ತು ಅಲ್ಲಿ ಅವ್ರೇಲಿಯಾನೋ ಸೆಗುಂದೋ ಹಂದಿಯೊಂದನ್ನು ನೋಡಿದ. ಅದರ ಮೈ ಚರ್ಮ ಅದರ ಒಡತಿಯಂತೆ ಮೂಳೆಗಂಟಿದ್ದರೂ ಬದುಕಿತ್ತು ಮತ್ತು ಅವಳ ಹಾಗೆ ಹಠವಿತ್ತು. ಪೆತ್ರಾ ಕೊತೆಸ್ ಅದಕ್ಕೆ ತಿನ್ನಲು ಬೈಗುಳನ್ನು ಕೊಟ್ಟಿದ್ದಳು. ಮನೆಯಲ್ಲಿ ಬೇರೆ ಯಾವ ಕಾಳು ಕಡ್ಡಿ ಇಲ್ಲದೆ ಹೋದಾಗ ಅದಕ್ಕೆ ತನ್ನ ಬೆಡ್‌ರೂಮಿನಲ್ಲಿಯೇ ಆಶ್ರಯ ಕೊಟ್ಟು, ತಿನ್ನುವುದಕ್ಕೆ ಹೊದಿಕೆ, ಪರ್ಷಿಯಾದ ರಗ್ಗು, ಬೆಡ್ ಸ್ಪ್ರೆಡ್, ವೆಲ್‌ವೆಟ್ ಬಟ್ಟೆ ಮತ್ತು ಸಿಂಗಾರದ ಮಂಚದ ಮೇಲಿನ ಬಂಗಾರದ ದಾರದ ಬಟ್ಟೆ ಮತ್ತು ಸಿಲ್ಕ್‌ನ ಕುಚ್ಚುಗಳನ್ನು ಕೊಟ್ಟಿದ್ದಳು. +೧೭ +ಮಳೆ ನಿಂತ ಮೇಲೆ ಸಾಯುತ್ತೇನೆಂದು ಮಾಡಿದ ವಾಗ್ದಾನವನ್ನು ಉಳಿಸಿಕೊಳ್ಳಲು ಉರ್ಸುಲಾ ಬಹಳ ಕಷ್ಟಪಡಬೇಕಾಯಿತು. ಮಳೆ ಸುರಿಯುತ್ತಿದ್ದ ಕಾಲದಲ್ಲಿ ಸ್ಪಷ್ಟವಾಗಿ ಕಾಣುವುದು ವಿರಳವಾಗಿದ್ದದ್ದು, ಆಗಸ್ಟ್ ನಂತರ ಮತ್ತಷ್ಟು ಹೆಚ್ಚಾಗಿ, ಒಣ ಗಾಳಿ ಗುಲಾಬಿ ಪೊದೆಗಳ ಮೇಲೆ ಉಸಿರುಗಟ್ಟಿಸುವಷ್ಟು ಬೀಸಿ ಮತ್ತು ಪೇರಿಸಿದ್ದ ಕೆಸರು ಗುಪ್ಪೆಗಳನ್ನು ಗಟ್ಟಿ ಮಾಡಿತು. ಮತ್ತು ಅದು ಮಕೋಂದೋ ಮೇಲೆ ಒಣ ಧೂಳನ್ನು ಹರಡಿ ಜಿಂಕ್ ಚಾವಣಿಗ; ಮೇಲೆ ಮತ್ತು ಹಳೆಯ ಕಾಲದ ಬಾದಾಮಿ ಮರದ ಮೇಲೆ ನೆಲೆಯೂರುವಂತೆ ಮಾಡಿತು. ಉರ್ಸುಲಾ ತಾನು ಮೂರು ವರ್ಷಗಳಿಗೂ ಹೆಚ್ಚು ಕಾಲ ಮಕ್ಕಳ ಜೊತೆ ಆಡಿಕೊಂಡು ಕಳೆದಿದ್ದೇನೆಂದು ಯೋಚಿಸಿ ಮುಳು ಮುಳು ಅತ್ತಳು. ಅವಳು ಪೇಂಟ್ ಮಾಡಿದ ಮುಖವನ್ನು ಒರೆಸಿಕೊಂಡು, ಕೊಂಚ ಬಣ್ಣ ಹೊಳೆಯುತ್ತಿದ್ದ ಬಟ್ಟೆ ತುಂಡುಗಳನ್ನು ತೆಗೆದುಕೊಂಡು ಹಲ್ಲಿ ಮತ್ತು ಕಪ್ಪೆಗಳ ಮೈ ಒರೆಸಿದಳು. ಮತ್ತು ತನ್ನ ಮೈಮೇಲೆಲ್ಲಾ ಅವರು ಇಳಿಬಿಟ್ಟಿದ್ದ ಹಳೆಯ ಅರಬ್ ನೆಕ್ಲೇಸ್‌ಗಳನ್ನು ಕೂಡ. ಅವಳು ಅಮರಾಂತ ಸತ್ತ ಮೇಲೆ ಮೊದಲ ಬಾರಿಗೆ ಹಾಸಿಗೆಯಿಂದ ಯಾರ ಸಹಾಯವೂ ಇಲ್ಲದೆ ಎದ್ದು ಮನೆಯವರ ಜೊತೆ ಸೇರಿಕೊಂಡಳು. ಅವಳ ಅಂತಃಶಕ್ತಿ ನೆರಳುಗಳ ಮೂಲಕ ಪ್ರಜ್ಞೆ ಮೂಡಿಸಿತು. ಅವಳು ಯಾವುದಾದರೊಂದಕ್ಕೆ ಡಿಕ್ಕಿ ಹೊಡೆದದ್ದನ್ನು ಮತ್ತು ತಲೆಯ ತನಕ ಕೈಯನ್ನು ಎತ್ತಿ ಹಿಡಿದುಕೊಂಡಿದ್ದನ್ನುನೋಡಿದಾಗ ಅವಳಿಗೆ ಮೈಯಲ್ಲೇನೋ ತೊಂದರೆಯಾಗಿದೆ ಎಂದು ತಿಳಿದುಕೊಳ್ಳುತ್ತಿದ್ದರಲ್ಲದೆ ಕುರುಡಿ ಎಂದು ಭಾವಿಸುತ್ತಿರಲಿಲ್ಲ. ಮನೆಯನ್ನು ಮತ್ತೆ ಕಟ್ಟಿದಾಗ ಅಷ್ಟೊಂದು ಮನಸ್ಸಿಟ್ಟು ಬೆಳೆಸಿದ ಹೂದೋಟ ಮಳೆಯಿಂದ ಮತ್ತು ಅವ್ರೇಲಿಯಾನೋ ಸೆಗುಂದೋ ಅಗೆಸಿದ್ದರಿಂದ ಹಾಳಾಗಿರುವುದನ್ನು ತಿಳಿದುಕೊಳ್ಳಲು ಅವಳು ನೋಡಬೇಕಾಗಿರಲಿಲ್ಲ. ಹಾಗೆಯೇ ನೆಲ ಬಿರುಕು ಬಿಟ್ಟಿರುವುದನ್ನು, ಪೀಠೋಪಕರಣಗಳ ಬಣ್ಣ ಮಂಕಾಗಿರುವುದನ್ನು, ಬಾಗಿಲುಗಳ ತಿರುಗಣಿಗಳು ಬಿದ್ದು ಹೋಗಿರುವುದನ್ನು ಮತ್ತು ತನ್ನ ಕಾಲದಲ್ಲಿ ಊಹಿಸಲೂ ಸಾಧ್ಯವಾಗದಿದ್ದ ಹಾಗೆ ಮನೆಯವರು ಹತಾಶೆಯಿಂದ ಕೈಚೆಲ್ಲಿ ಕುಳಿತಿದ್ದನ್ನು ಕೂಡ. ಖಾಲಿ ಇರುವ ಬೆಡ್‌ರೂಮಿನೊಳಗೆ ಓಡಾಡುತ್ತಿರುವಾಗ ಮರದ ವಸ್ತುಗಳಲ್ಲಿ ಗೆದ್ದಿಲು ಹತ್ತಿರುವುದನ್ನು, ಮುಚ್ಚಿದ ಕಪಾಟುಗಳಲ್ಲಿ ನುಸಿ ಹುಳುಗಳು ಇರುವುದನ್ನು, ಸುರಿ ಮಳೆಯ ದಿನಗಳಲ್ಲಿ ತೀರಾ ಹೆಚ್ಚಾದ ಕೆಂಜಿಗದ ಸದ್ದನ್ನು ಮತ್ತು ಅವು ಅಡಿಪಾಯಕ್ಕೂ ನುಗ್ಗುವುದನ್ನು ಗಮನಿಸಿದ್ದಳು. ಒಂದು ದಿನ ಅವಳು ಪವಿತ್ರ ಟ್ರಂಕನ್ನು ತೆಗೆದಳು. ಅನಂತರ ಅವಳು ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಕರೆದು ಮೈಮೇಲೆ ಹತ್ತಿರುವ ಜಿಗಣೆಗಳನ್ನು ಓಡಿಸಲು ಹೇಳಬೇಕಾಯಿತು. ಅವು ಆಗಲೇ ಬಟ್ಟೆಗಳನ್ನು ಪುಡಿ ಮಾಡಿದ್ದವು. ಅವಳು “ಇಷ್ಟೊಂದು ನಿರ್ಲಕ್ಷ್ಯದಿಂದ ಇರೋದು ಸರಿಯಿಲ್ಲ, ತಾವು ಹೀಗೆ ಇದ್ರೆ ಪ್ರಾಣಿಗಳು ನಮ್ಮನ್ನು ಮುಗಿಸಿಬಿಡ್ತವೆ” ಎಂದಳು. ಅನಂತರ ಅವಳು ಒಂದು ಕ್ಷಣವೂ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಸೂರ್ಯ ಹುಟ್ಟುವ ಮೊದಲೇ ಎದ್ದು, ಯಾರೆಂದರೆ ಅವರನ್ನು, ಮಕ್ಕಳನ್ನು ಕೂಡ, ಉಪಯೋಗಿಸಿಕೊಳ್ಳುತ್ತಿದ್ದಳು. ಇನ್ನೂ ಬಳಸಲು ಸಾಧ್ಯವಿರುವ ವಸ್ತುಗಳನ್ನು ಬಿಸಿಲಿಗೆ ಹಾಕುತ್ತಿದ್ದಳು. ಕ್ರಿಮಿನಾಶಕಗಳನ್ನು ಹಾಕಿ ಜಿರಲೆಗಳನ್ನು ಓಡಿಸುತ್ತಿದ್ದಳು, ಬಾಗಿಲು ಹಾಗೂ ಕಿಟಕಿಗಳಿಗೆ ಗೆದ್ದಿಲು ಹಿಡಿದ ಸಂದುಗಳನ್ನು ಗೀರಿ ತೆಗೆಯುತ್ತಿದ್ದಳು, ಇರುವೆಗಳ ಗೂಡುಗಳನ್ನು ಸುಣ್ಣ ಹಾಕಿ ಮುಚ್ಚಿ ಉಸಿರುಗಟ್ಟಿಸುತ್ತಿದ್ದಳು. ಎಲ್ಲವನ್ನೂ ಸರಿಪಡಿಸುವ ಉಮೇದು ಅವಳನ್ನು ಮರೆತುಬಿಟ್ಟಿದ್ದ ರೂಮುಗಳಿಗೆ ಕರೆದುಕೊಂಡು ಹೋಯಿತು. ಅವಳು ಸ್ಪರ್ಶ ಮಣಿಗಳನ್ನು ಹುಡುಕುತ್ತ ತಿಕ್ಕಲು ಹಿಡಿಸಿಕೊಂಡಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿನಲ್ಲಿ ಕಟ್ಟಿದ್ದ ಇಲ್ಲಣಗಳನ್ನು, ರದ್ದಿಯನ್ನು ಹೋಗಲಾಡಿಸಿದಳು. ಸೈನಿಕರು ಚಿಂದಿಯೆಬ್ಬಿಸಿದ್ದ ಬೆಳ್ಳಿಯಂಗಡಿಯನ್ನು ಒಪ್ಪಮಾಡಿದಳು ಮತ್ತು ಕೊನೆಯದಾಗಿ ಅವಳು ಮೆಲ್‌ಕಿಯಾದೆಸ್‌ನ ರೂಮು ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಲು ಬೀಗದ ಕೈಯನ್ನು ಕೇಳಿದಳು. ಹೊಸೆ ಅರ್ಕಾದಿಯೋ ಸೆಗುಂದೋನ ಅಪೇಕ್ಷೆಯಂತೆ ಅವನು ಸತ್ತುಹೋದನೆಂದು ಖಚಿತವಾಗಿ ತಿಳಿಯುವ ತನಕ ಯಾರಿಗೂ ಬಾಗಿಲು ತೆಗೆಯಬಾರದು ಎನ್ನುವುದನ್ನು ಪಾಲಿಸುವುದಕ್ಕಾಗಿ ಸಾಂತ ಸೋಫಿಯಾ ದೆಲಾ ಪಿಯದಾದ್, ಉರ್ಸುಲಾ ವಿಷಯ ಬದಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದಳು. ಆದರೆ ಮನೆಯ ಯಾವುದೇ ಕಾಣದ ಮೂಲೆಯನ್ನು ಹುಳುಗಳಿಗೆ ಬಿಡಬಾರದು ಎನ್ನುವ ಅವಳ ನಿರ್ಧಾರ ಯಾವುದೇ ಅಡಚಣೆಗೆ ಬಗ್ಗಲಾರದಷ್ಟು ಅಚಲವಾಗಿತ್ತು ಮತ್ತು ಮೂರು ದಿನಗಳ ಸತತ ಪ್ರಯತ್ನದಿಂದ ಅವಳು ರೂಮಿನ ಬಾಗಿಲು ತೆಗೆಸಲು ಯಶಸ್ವಿಯಾದಳು. ಅವಳು ತನಗೆ ಬಡಿದ ದುರ್ವಾಸನೆಯಿಂದ ಬೀಳದಿರುವಂತೆ ಬಾಗಿಲು ಹಿಡಿಕೆಯನ್ನು ಹಿಡಿದುಕೊಳ್ಳಬೇಕಾಯಿತು., ಆದರೆ ಸ್ಕೂಲ್ ಹುಡುಗಿಯರ ಎಪ್ಪತ್ತೆರಡು ಉಚ್ಚೆ ಪಾತ್ರೆಗಳು ಅಲ್ಲಿರುವುದನ್ನು ಮತ್ತು ಒಂದು ಮಳೆಗಾಲದ ರಾತ್ರಿ ಸೈನಿಕರು ಹೊಸೆ ಅರ್ಕಾದಿಯೋ ಸೆಗುಂದೋನನ್ನು ಹುಡುಕಲು ಸಾಧ್ಯವಾಗದೇ ಹೋದದ್ದನ್ನು ನೆನಪಸಿಕೊಳ್ಳಲು ಅವಳಿಗೆ ಎರಡು ಸೆಕೆಂಡು ಬೇಕಾಯಿತು. +ಅವಳು ಎಲ್ಲವನ್ನೂ ನೋಡುತ್ತಿರುವ ಹಾಗೆ, “ದೇವರೇ ನಮ್ಮನ್ನು ಕಾಪಾಡು! ನಿಂಗೆ ಒಳ್ಳೆ ನಡತೆ ಹೇಳಿಕೊಡೋದಕ್ಕೆ ಎಷ್ಟು ಕಷ್ಟಪಟ್ಟಿದ್ದೀನಿ. ಆದರೆ ನೀನು ಹಂದಿ ತರಹ ಇದೀಯ” ಎಂದಳು. +ಹೊಸೆ ಅರ್ಕಾದಿಯೋ ಸೆಗುಂದೋ ಇನ್ನೂ ಬರಹವನ್ನು ಓದುತ್ತಿದ್ದ. ಅವನ ಗಂಟು ಕಟ್ಟಿದ ಕೂದಲಿನ ಮಧ್ಯೆ ಕಾಣುತ್ತಿದ್ದದ್ದು ಹಸಿರುಗಟ್ಟಿದ ಹಲ್ಲುಗಳು ಮತ್ತು ಅಲ್ಲಾಡದ ಕಣ್ಣುಗಳು. ಅವನೂ ತನ್ನ ಮುತ್ತಜ್ಜಿಯನ್ನೂ ಗುರುತು ಹಿಡಿದ ಕೂಡಲೆ ಬಾಗಿಲು ಕಡೆ ನೋಡಿ ನಸುನಗಲು ಪ್ರಯತ್ನಿಸಿದ ಮತ್ತು ತನಗೆ ಅರಿವಾಗದಂತೆಯೇ ಉರ್ಸುಲಾ ಹೇಳುತ್ತಿದ್ದ ಹಳೆಯ ಮಾತನ್ನು ಮತ್ತೊಮ್ಮೆ ಹೇಳಿದ: +ಅವನು “ನೀವೇನು ನಿರೀಕ್ಷೆ ಮಾಡಿದ್ರಿ?…. ಸಮಯ ಕಳೆದು ಹೋಗುತ್ತೆ” ಎಂದ. +ಉರ್ಸುಲಾ ” ಅದು ಹಾಗಾಗತ್ತೆ, ಅದ್ರೆ ಹೀಗಲ್ಲ” ಎಂದಳು. +ಅವಳು ಹಾಗೆ ಹೇಳಿದಾಗ ತಾನು ಸಾವಿನ ಕೂಪದಲ್ಲಿದ್ದ್ಲ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೊಟ್ಟ ಉತ್ತರವನ್ನೇ ಹೇಳುತ್ತಿದ್ದೇನೆ ಎನ್ನುವುದರ ಅರಿವಾಯಿತು ಮತ್ತು ಕಾಲ ಚಲಿಸುತ್ತಿರಲಿಲ್ಲ ಎನ್ನುವುದರ ಪುರಾವೆಯಿಂದ ನಡುಗಿದಳು. ಆದರೆ ಅದು ವೃತ್ತವೊಂದರಲ್ಲಿ ಚಲಿಸುತ್ತಿತ್ತು. ಆದರೂ ಅವಳು ಸಮಾಧಾನಕ್ಕೆ ಆಸ್ಪದ ಕೊಡಲಿಲ್ಲ. ಹೊಸೆ ಅರ್ಕಾದಿಯೋ ಸೆಗುಂದೋ ಚಿಕ್ಕ ಮಗು ಎನ್ನುವ ಹಾಗೆ ಅವನನ್ನು ಬೈದಳು. ಮತ್ತು ಶೇವ್ ಮಾಡಿಕೊಂಡು, ಸ್ನಾನ ಮಾಡಿ, ಮನೆಯನ್ನು ಸರಿಪಡಿಸಲು ಸಹಕರಿಸಬೇಕೆಂದು ಒತ್ತಾಯಿಸಿದಳು. ತನಗೆ ಶಾಂತಿ ತಂದುಕೊಟ್ಟ ರೂಮನ್ನು ಬಿಡಬೇಕೆಂಬ ಆಲೋಚನೆಯಿಂದಲೇ, ಹೊಸೆ ಅರ್ಕಾದಿಯೋ ಸೆಗುಂದೋ ಭಯಗೊಂಡ. ತನ್ನನ್ನು ರೂಮಿನಿಂದ ಆಚೆ ಹೋಗುವಂತೆ ಮಾಡುವ ಯಾವ ಮಾನವ ಶಕ್ತಿಯೂ ಇಲ್ಲವೆಂದು ಅಬ್ಬರಿಸಿದ. ಅದು ಏಕೆಂದರೆ, ಸತ್ತವರನ್ನು ತುಂಬಿರುವ ಇನ್ನೂರು ಬೋಗಿಗಳ ರೈಲು ಪ್ರತಿ ದಿನ ಮಕೋಂದೋದಿಂದ ಸಮುದ್ರದ ಕಡೆ ಹೋಗುವುದನ್ನು ತನಗೆ ನೋಡಲು ಇಷ್ಟವಿಲ್ಲವೆಂದು ಹೇಳಿದ. ಜೊತೆಗೆ, “ಅವರೆಲ್ಲ ಸ್ಟೇಷನ್ ಹತ್ರ ಇದ್ದೋರು. ಮೂರು ಸಾವಿರದ ನಾನೂರ ಎಂಟು ಜನ” ಎಂದು ಕೂಗಿದ. ಉರ್ಸುಲಾಗೆ ಅವನು ನೆರಳುಗಳ ಪ್ರಪಂಚದಲ್ಲಿ ಭೇದಿಸಲಾಗದಂತೆ ಇರುವನೆಂದು ಮತ್ತು ಅವನ ಮುತ್ತಜ್ಜನ ಹಾಗೆ ನಿಲುಕಲಾರದವನು ಹಾಗೂ ಒಂಟಿ ಎಂದು ಅರಿವಾಯಿತು. ಅವಳು ಅವನನ್ನು ರೂಮಿನಲ್ಲಿಯೇ ಬಿಟ್ಟಳು. ಆದರೆ ಆ ರೂಮಿಗೆ ಬೀಗ ಹಾಕದಿರುವಂತೆ ಮಾಡಲು, ಪ್ರತಿದಿನ ಸ್ವಚ್ಛಗೊಳಿಸಲು, ಒಂದನ್ನು ಬಿಟ್ಟು ಮಿಕ್ಕೆಲ್ಲ ಉಚ್ಚೆ ಪಾತ್ರೆಗಳನ್ನು ಬಿಸಾಕುವಂತೆ ಮಾಡಲು ಮತ್ತು ಹೊಸೆ ಅರ್ಕಾದಿಯೋನನ್ನು ಅವನ ಮುತ್ತಜ್ಜ ಬಾದಾಮಿ ಮರದ ಕೆಳಗೆ ಬಂಧನದಲ್ಲಿದ್ದಾಗ ಇದ್ದ ಹಾಗೆ ಎಷ್ಟು ಸಾಧ್ಯವೋ ಅಷ್ಟು ಶುಭ್ರವಾಗಿ ನೋಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡುವುದರಲ್ಲಿ ಯಶಸ್ವಿಯಾದಳು. ಪ್ರಾರಂಭದಲ್ಲಿ ಫೆರ್ನಾಂಡಗೆ ಅಷ್ಟೊಂದು ಕೆಲಸಗಳು ತಿಳಿಗೇಡಿತನ ಎಂದು ತೋರಿತು ಮತ್ತು ಅವಳಿಗೆ ಉಂಟಾದ ಉದ್ರೇಕವನ್ನು ತಡೆಹಿಡಿಯಲಾಗಲಿಲ್ಲ. ಆದರೆ ಆ ಸಮಯದಲ್ಲಿ ಹೊಸೆ ಅರ್ಕಾದಿಯೋ ಕೊನೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು ರೋಮ್‌ನಿಂದ ಬರುವುದಾಗಿ ತಿಳಿಸಿದ್ದ. ಆ ಒಳ್ಳೆಯ ಸುದ್ದಿ ಅವಳಲ್ಲಿ ಉತ್ಸಾಹ ತುಂಬಿಕೊಳ್ಳುವಂತೆ ಮಾಡಿತ್ತು. ತನ್ನ ಮಗ ಮನೆಯ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಬಾರದು ಎಂದು ಅವಳು ಬೆಳಿಗ್ಗೆಯಿಂದ ರಾತ್ರಿಯ ತನಕ ಹೂಗಿಡಗಳಿಗೆ ನಾಲ್ಕು ಸಲ ನೀರು ಹಾಕುತ್ತಿದ್ದಳು. ಅದೇ ಸಂಗತಿಯೇ ಅವಳನ್ನು ಮತ್ತೆ ಕಾಣದ ಡಾಕ್ಟರುಗಳೊಂದಿಗೆ ಪತ್ರ ವ್ಯವಹಾರವನ್ನು ತ್ವರಿತಗೊಳಿಸಲು ಪ್ರೇರೇಪಿಸಿತು ಮತ್ತು ಉರ್ಸುಲಾಗೆ ಅವ್ರೇಲಿಯಾನೋ ಸೆಗುಂದೋನ ರೋಷ ನಾಶ ಮಾಡಿತೆಂದು ತಿಳಿಯುವ ಮೊದಲೇ ಬದಲಿ ಬೆಗೋನಿಯಾ ಹಾಗೂ ಜರ್ರ್ರ್ರಿ ಗಿಡಗಳ ಕುಂಡಗಳನ್ನು ಹೊಂದಿಸಿಟ್ಟರು. ಅನಂತರ ಅವಳು ಬೆಳ್ಳಿಯ ಕೆಲವು ಪಾತ್ರೆಗಳನ್ನು ಮಾರಿ ಪಿಂಗಾಣಿಯ, ಮಿಶ್ರ ಲೋಹದ ಪಾತ್ರೆಗಳನ್ನು, ಸೂಪ್ ಕುಡಿಯುವ ಚಮಚ, ಮೃದು ಟೇಬಲ್ ಕ್ಲಾತ್‌ಗಳನ್ನು ತಂದಳು. ಆ ಮೂಲಕ ಕಪಾಟುಗಳಲ್ಲಿ ತುಂಬಿರುತ್ತಿದ್ದ ಇಂಡಿಯಾ ಕಂಪನಿಯ ಸಾಮಾನುಗಳು ಮತ್ತು ಬೊಹಿಮಿಯಾ ಹರಳುಗಳನ್ನು ಕಡಿಮೆ ಮಾಡಿದಳು. ಉರ್ಸುಲಾ ಯಾವಾಗಲೂ ಒಂದು ಹೆಜ್ಜೆ ಮುಂದಿಡಲು ಪ್ರಯತ್ನಿಸುತ್ತಿದ್ದಳು. ಅವಳು, “ಕಿಟಕಿ ಬಾಗಿಲು ತೆಗೀರಿ. ಒಂದಿಷ್ಟು ಮೀನು ಮಾಂಸದ ಅಡುಗೆ ಮಾಡಿ, ದೊಡ್ಡ ಸೈಜಿನ ಆಮೆ ತೊಗೊಳ್ಳಿ. ಅವರಿವರು ಬಂದು ಗುಲಾಬಿ ಪೊದೇಲಿ ಉಚ್ಚೆ ಹೊಯ್ದು, ಆ ಕಡೆ ಮೂಲೇಲಿ ಚಾಪೆ ಹಾಕಿಕೊಂಡು ಕೂತು ಎಷ್ಟು ಸಲ ಬೇಕೋ ಅಷ್ಟು ತಿನ್ನಲಿ. ಎಲ್ಲ ಕಡೆ ಬೂಟುಗಾಲಿನಿಂದ ಓಡಾಡಿ ಗಲೀಜು ಮಾಡಿದ್ರೂ ಸರಿ. ಅವರು ನಮ್ಗೆ ಏನು ಬೇಕಾದ್ರೂ ಮಾಡಲಿ ಬಿಟ್ಟು ಬಿಡಿ. ಏಕೆಂದರೆ ದರಿದ್ರಾನ ಓಡಿಸೋಕೆ ಅದೊಂದೇ ದಾರಿ” ಎಂದು ಹೇಳುತ್ತಿದ್ದಳು. ಆದರೆ ಅದು ವ್ಯರ್ಥ ಭ್ರಮೆಯಾಗಿತ್ತು. ಆಗ ಅವಳಿಗೆ ತುಂಬಾ ವಯಸ್ಸಾಗಿತ್ತು ಮತ್ತು ಅವಳು ಎರವಲು ತಂದ ಕಾಲದಲ್ಲಿ ಜೀವಿಸುತ್ತಿದ್ದಳು ಮತ್ತು ಹಿಂದೆ ಪ್ರಾಣಿಗಳ ತಿನಿಸುಗಳನ್ನು ಮಾಡುತ್ತಿದ್ದ ಮಾಂತ್ರಿಕತೆಯನ್ನು ಮತ್ತೊಂದು ಸಲ ಮಾಡಲು ಸಾಧ್ಯವಿರಲಿಲ್ಲ. ಅವಳ ಸಂತತಿಯ ಯಾರೂ ಅವಳ ಶಕ್ತಿಯನ್ನೂ ಬಳುವಳಿ ಪಡೆದಿರಲಿಲ್ಲ. ಫೆರ್ನಾಂಡಳ ಅಪ್ಪಣೆಯಂತೆ ಮನೆ ಬಾಗಿಲು ಹಾಕಲಾಯಿತು. +ಪೆತ್ರಾ ಕೊತೆಸ್ ಮನೆಗೆ ಟ್ರಂಕುಗಳನ್ನು ವಾಪಸು ತೆಗೆದುಕೊಂಡು ಹೋದ ಅವ್ರೇಲಿಯಾನೋ ಸೆಗುಂದೋಗೆ ಮನೆಯವರು ಉಪವಾಸದಿಂದ ಸಾಯದಿರುವಂತೆ ಮಾಡಲು ಮಾರ್ಗಗಳಿರಲಿಲ್ಲ. ಹಂದಿಯ ಲಾಟರಿಯಿಂದ ಅವನು ಮತ್ತು ಪೆತ್ರಾ ಕೊತೆಸ್ ಇನ್ನಷ್ಟು ಪ್ರಾಣಿಗಳನ್ನು ತಂದು ಹಳೆಯ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದ್ದರು. ಅವ್ರೇಲಿಯಾನೋ ಸೆಗುಂದೋ ತಾನೇ ಬರೆದು, ಬಣ್ಣದ ಇಂಕ್‌ನಿಂದ ನಂಬಿಕೆ ಬರಲೆಂದು, ಚೆನ್ನಾಗಿ ಕಾಣಲೆಂದು ತಯಾರಿಸಿದ್ದ ಲಾಟರಿ ಟಿಕೇಟುಗಳನ್ನು ಮಾರುವುದಕ್ಕೆ ಮನೆಯಿಂದ ಮನೆಗೆ ಹೋಗುತ್ತಿದ್ದ. ಆದರೆ ಅವನಿಗೆ ಬಹಳಷ್ಟು ಜನರು ಕೃತಜ್ಞತೆಯಿಂದ, ಮರುಕದಿಂದ ಕೊಂಡುಕೊಳ್ಳುತ್ತಿದ್ದರು ಎಂದು ತಿಳಿದಿರಲಿಲ್ಲ. ಆದರೂ ಕೂಡಾ ಅಂಥವರಿಗೂ ಇಪ್ಪತ್ತು ಸೆಂಟ್‌ಗೆ ಒಂದು ಹಂದಿಯನ್ನು ಅಥವಾ ಮೂವತ್ತಕ್ಕೆ ಒಂದು ಕರುವನ್ನು ಗೆಲ್ಲುವ ಅವಕಾಶವಿತ್ತು. ಅವರಿಗೆಲ್ಲ ಆಸೆ ಮೂಡಿ ಮಂಗಳವಾರ ರಾತ್ರಿ ಪೆತ್ರ್ರಾ ಕೊತೆಸ್ ಮನೆಯ ಅಂಗಳದಲ್ಲಿ ಸೇರಿ, ಮಗುವೊಂದು ಚೀಲದಲ್ಲಿ ಬೆರೆಸಿ ಹಾಕಿದ್ದರಲ್ಲಿ ಗೆಲ್ಲುವ ನಂಬರಿನ ಚೀಟಿಯನ್ನು ತೆಗೆಯುವ ಕ್ಷಣಕ್ಕಾಗಿ ಕಾಯುತ್ತಿದ್ದರು. ಅದು ಪ್ರತಿ ವಾರದ ಸಂಗತಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸಂಜೆ ಅಲ್ಲಿ ಅಂಗಳದಲ್ಲಿ ತಿನ್ನಲು ಹಾಗೂ ಕುಡಿಯಲು ಸ್ಯ್ಟಾಂಡ್‌ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿತ್ತು. ಅಲ್ಲದೆ ಕೆಲವರು ತಾವು ಗೆದ್ದ ಪ್ರಾಣಿಯನ್ನು ಅಲ್ಲೇ ಕತ್ತರಿಸಿ, ಮದ್ಯದ ಸರಬರಾಜು ಮತ್ತು ಸಂಗೀತವನ್ನು ಮಾತ್ರ ಬೇರೊಬ್ಬ ನೋಡಿಕೊಳ್ಳಬೇಕು ಎನ್ನುವ ಷರತ್ತನ್ನು ಅಪೇಕ್ಷೆಪಡುತ್ತಿದ್ದರು. ಇದರಿಂದಾಗಿ ಇಷ್ಟವಿಲ್ಲದೆಯೂ ಕೂಡ ಅವ್ರೇಲಿಯಾನೋ ಸೆಗುಂದೋ ಅಕಾರ್ಡಿಯನ್ ನುಡಿಸುವುದನ್ನು ಮತ್ತೆ ಪ್ರಾರಂಭಿಸಿದ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ತೊಡಗಿದ. ಹಿಂದಿನ ದಿನಗಳ ಮೆರೆದಾಟದ ಪೇಲವ ನಕಲುಗಳಂತೆ ಇದ್ದ ಅವು ಅವ್ರೇಲಿಯಾನೋ ಸೆಗುಂದೋಗೆ ಅವನ ಉತ್ಸಾಹ ಎಷ್ಟು ತಗ್ಗಿದೆ ಮತ್ತು ಕುಡಿತದ ಭರಾಟೆಯಲ್ಲಿ ಮೇರೆ ಮೀರುತ್ತಿದ್ದ ಅವನ ಚತುರತೆ ಯಾವ ಮಟ್ಟಕ್ಕೆ ಇಳಿದಿದೆ ಎಂದು ತೋರಿಸಿಕೊಟ್ಟವು. ಈಗ ಅವನು ಬದಲಾದ ಮನುಷ್ಯನಾಗಿದ್ದ. ‘ಆನೆ\’ ಅವನಿಗೆ ಸವಾಲು ಹಾಕಿದಾಗ ಇನ್ನೂರ ನಲವತ್ತು ಪೌಂಡ್ ಇದ್ದವನು ಈಗ ನೂರ ಐವತ್ತಾರಕ್ಕೆ ಇಳಿದಿದ್ದ. ಮಿರಿಮಿರಿ ಮಿಂಚು ಆಮೆಯಂತೆ ಉಬ್ಬಿದ್ದ ಮುಖ ಉಡದ ಹಾಗಾಗಿತ್ತು. ಅಲ್ಲದೆ ಅವನು ಯಾವಾಗಲೂ ಬೇಸರದಿಂದ ಮತ್ತು ಸುಸ್ತಾಗಿರುತ್ತಿದ್ದ. ಆದರೆ ಪೆತ್ರಾ ಕೊತೆಸ್‌ಗೆ ಹಿಂದಿಗಿಂತ ಅವನು ಒಳ್ಳೆಯ ಮನುಷ್ಯನಾಗಿದ್ದ. ಬಹುಶಃ ಅವನ ಬಗ್ಗೆ ಪ್ರೀತಿಯ ಜೊತೆ ಮರುಕ ಬೆರೆತಿತ್ತು. ಅಲ್ಲದೆ ಇಬ್ಬರಲ್ಲೂ ವ್ಯಥೆ ತಂದುಕೊಟ್ಟ ಬಿಗಿಬಾಂಧವ್ಯದ ಭಾವನೆ ಬೆಳೆದಿತ್ತು. ಮುರಿದು ಹೋಗಿದ್ದ ಮಂಚದಲ್ಲಿ ಹಿಂದಿನ ಅತಿರೇಕಗಳಿರಲಿಲ್ಲ. ಅದು ಆತ್ಮೀಯ ಹೊಂದಾಣಿಕೆಯಲ್ಲಿ ಬದಲಾಗಿತ್ತು. ಲಾಟರಿಗೋಸ್ಕರ ಮತ್ತಷ್ಟು ಪ್ರಾಣಿಗಳನ್ನು ಖರೀದಿಸಲು ಅದನ್ನೇ ಮತ್ತೆ ಮತ್ತೆ ಬಿಂಬಿಸುತ್ತಿದ್ದ ಕನ್ನಡಿಗಳನ್ನು ಮಾರಿ, ಹಂದಿಗಳು ತಿಂದು ಚಿಂದಿ ಮಾಡಿದ್ದ ವೆಲ್‌ವೆಟ್‌ಗಳಿಂದ ದೂರವಾಗಿ ಅವರು ಮಧ್ಯ ರಾತ್ರಿಯ ತನಕ ನಿದ್ದೆಯಿಲ್ಲದೆ, ಮುಗ್ಧ ಅಜ್ಜ-ಅಜ್ಜಿಯರ ಹಾಗೆ ಎಚ್ಚರವಾಗಿರುತ್ತಿದ್ದರು. ಆಗ ಅವರು ಸಿಕ್ಕ ಸಮಯವನ್ನು ಲೆಕ್ಕ ಬರೆಯುವುದಕ್ಕೆ ಉಪಯೋಗಿಸುತ್ತಿದ್ದರು. ಹಿಂದೆ ಸುಮ್ಮನೆ ವ್ಯರ್ಥವಾಗುತ್ತಿದ್ದ ಪೆನ್ನಿಗಳನ್ನು ಮಿಗಿಸುತ್ತಿದ್ದರು. ಕೆಲವು ಸಲ ನಾಣ್ಯಗಳನ್ನು ಎಣಿಸಿ, ಇಲ್ಲಿಂದ ಅಷ್ಟೂ ತೆಗೆದುಕೊಂಡು ಮತ್ತೊಂದಕ್ಕೆ ಹಾಕಿ, ಫೆರ್ನಾಂಡ ಖುಷಿ ಪಡಲು ಇಷ್ಟು ಸಾಕು, ಅದು ಅಮರಾಂತ ಉರ್ಸುಲಾಳ ಶೂಗೆ, ಇನ್ನೊಂದು, ಕೂಗಾಟದ ದಿನಗಳಿಂದ ಹೊಸ ಡ್ರೆಸ್ ತೆಗೆದುಕೊಳ್ಳದ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಹಾಗೂ ಇದು ಉರ್ಸುಲಾ ಸತ್ತರೆ ಶವಪೆಟ್ಟಿಗೆಗಾಗಿ, ಮತ್ತೆ ಇದು ಮೂರು ತಿಂಗಳಿಗೆ ಒಂದು ಪೌಂಡ್‌ಗೆ ಒಂದು ಸೆಂಟ್‌ನಂತೆ ಹೆಚ್ಚಾಗುತ್ತಿದ್ದ ಕಾಫಿ ಪುಡಿಗೆ, ಇದಿಷ್ಟು ಪ್ರತಿದಿನ ಸಿಹಿ ಕಡಿಮೆಯಾಗುತ್ತಿದ್ದ ಸಕ್ಕರೆಗೆ, ಇದು, ಮಳೆಯಿಂದಾಗಿ ಇನ್ನೂ ತೇವದಿಂದಿದ್ದ ಹರಕು ಮುರುಕು ಸಾಮಾನಿಗೆ, ಇದಿಷ್ಟು ಪೇಪರ್‌ಗೆ, ಮತ್ತಷ್ಟು ಟಿಕೆಟ್ ಮಾಡಬೇಕಾದ ಬಣ್ಣ ಇಂಕ್‌ಗೆ, ಮತ್ತು ಇದು, ಆಗಷ್ಟೇ ಎಲ್ಲಾ ಟಿಕೇಟ್‌ಗಳು ಮಾರಾಟವಾದ ಏಪ್ರಿಲ್ ತಿಂಗಳ ಲಾಟರಿಯಲ್ಲಿ ಕರು ಗೆದ್ದವನಿಗೆ ಕೊಡಲು ಕುರು ರೋಗ ಹರಡುವ ಸೂಚನೆ ಇರುವಂಥದನ್ನು ತಂದು ಮಿಗಿಸಿರುವುದು, ಎಂದು ಜೋಡಿಸಿ, ಮರು ಜೋಡಿಸುವಷ್ಟರಲ್ಲಿ ಅನೇಕ ಸಲ ಬೆಳಗಿನ ಕೋಳಿ ಕೂಗುತ್ತಿತ್ತು. ಬಡತನ ವಿಧಿವಿಧಾನಗಳು ಎಷ್ಟು ಸ್ಪಷ್ಟವಾಗಿದ್ದವೆಂದರೆ ಅವರು ಫೆರ್ನಾಂಡಳಿಗೆ ಎಲ್ಲಕ್ಕಿಂತ ಹೆಚ್ಚಿನ ಭಾಗವನ್ನು ತೆಗೆದಿಡುತ್ತಿದ್ದರು. ಅವರು ಅದನ್ನು ದಾನವಾಗಿ ಅಥವಾ ಪಶ್ಚಾತ್ತಾಪದಿಂದ ಮಾಡುತ್ತಿರಲಿಲ್ಲ. ಅವರಿಗೆ ತಮಗಿಂತ ಅವಳು ಕ್ಷೇಮವಾಗಿರುವುದು ಮುಖ್ಯವಾಗಿತ್ತು. ನಿಜಕ್ಕೂ ಅವರಿಬ್ಬರಿಗೆ ಅರಿವಾಗದೆ ಹೋದದ್ದೇನೆಂದರೆ ಫೆರ್ನಾಂಡಳನ್ನು ಇಲ್ಲಿಯ ತನಕ ತಮಗೆ ಸಾಧ್ಯವಾಗದೆ ಹೋದ ಮತ್ತು ಇಷ್ಟಪಡುವ ಮಗಳ ಹಾಗೆ ಕಾಣುತ್ತಿದ್ದದ್ದು. ಇದಕ್ಕಾಗಿ ಕೆಲವು ಬಾರಿ ಅವಳು ಡಚ್ ಟೇಬಲ್ ಕ್ಲಾತ್ ಕೊಂಡುಕೊಳ್ಳಲಿ ಎಂದು ಅವರು ಮೂರು ದಿನ ರೊಟ್ಟಿಯ ತುಣುಕುಗಳನ್ನು ಮಾತ್ರ ತಿನ್ನುವುದರಲ್ಲಿ ತೃಪ್ತಿ ಹೊಂದುತ್ತಿದ್ದರು. ಆದರೂ ಅವರು ಅಷ್ಟು ಕೆಲಸ ಮಾಡಿ ತಮ್ಮನ್ನು ಸಾವು ನಾಶಪಡಿಸಿಕೊಳ್ಳುತ್ತಿದ್ದರೂ ಕೂಡ, ಆದೆಷ್ಟು ಹಣವನ್ನು ಅವಳು ಉಳಿಸಿದರೂ ಕೂಡ, ಅದೆಷ್ಟು ಬಗೆ ಯೋಜನೆಗಳನ್ನು ಯೋಚಿಸಿದರೂ ಕೂಡ ನಾಣ್ಯಗಳನ್ನು ಒಟ್ಟು ಮಾಡಿ, ಬದುಕಲು ಬೇಕಾದಷ್ಟನ್ನು ಮಾತ್ರ ತೆಗೆಯುತ್ತಿದ್ದಾಗ ಅವರನ್ನು ಪಾಲಿಸುವ ದೈವ ದಣಿವಿನಿಂದ ಮಲಗಿತ್ತು. ಲೆಕ್ಕ ಅನುಕೂಲವಾಗದ ಸಮಯದಲ್ಲಿ ಅವರಿಗೆ ಮೊದಲಿನಂತೆ ಪ್ರಾಣಿಗಳು ಮರಿಗಳನ್ನು ಹಾಕುವುದಿಲ್ಲವೇಕೆ, ಹಣವೇಕೆ ಬೆರಳುಗಳ ಸಂದಿಯಿಂದ ಸೋರಿಹೋಗುತ್ತದೆ ಮತ್ತು ಕೆಲವೇ ಕಾಲದ ಹಿಂದೆ ಕುಡಿತಕ್ಕಾಗಿ ಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದ ಜನರು, ಆರು ಕೋಳಿಗಳ ಲಾಟರಿಗೆ ಹನ್ನೆgಡು ಸೆಂಟು ವಿಧಿಸುವುದನ್ನು ಹೆದ್ದಾರಿಯ ದರೋಡೆ ಎನ್ನುವಂತೆ ಭಾವಿಸುತ್ತಿರುವುದು ಏಕೆ ಎಂದು ಯೋಚಿಸುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ಬಾಯಿ ಬಿಟ್ಟು ಹೇಳದಿದ್ದರೂ ಕೆಡಕಿರುವುದು ಹೊರಗಿನ ಪ್ರಪಂಚದಲ್ಲಲ್ಲ, ಪೆತ್ರಾ ಕೊತೆಸ್‌ಳ ನಿಗೂಢ ಹೃದಯದಲ್ಲಿ ಅಡಗಿದೆ ಎಂದು ಯೋಚಿಸಿದ. ಸುರಿಮಳೆಯ ಅವಧಿಯಲ್ಲಿ ಎಂಥದೋ ಜರುಗಿ ಪ್ರಾಣಿಗಳು ನಿರ್ವೀರ್‍ಯವಾಗಿ, ಹಣದ ಮುಗ್ಗಟ್ಟು ಉಂಟಾಗಿದೆ ಎಂದು ಭಾವಿಸಿದ. ಅದರ ನಿಗೂಢ ಸಮಸ್ಯೆಯಲ್ಲಿ ಮುಳುಗಿ ಅವಳ ಭಾವನೆಗಳಾಳಕ್ಕೆ ಹುಡುಕುತ್ತ ಇಳಿದಾಗ ಅವನಿಗೆ ಕಂಡದ್ದು ಪ್ರೀತಿ. ಏಕೆಂದರೆ ತನ್ನನ್ನು ಪ್ರೀತಿಸುವಂತೆ ಮಾಡಿದ ಪ್ರಯತ್ನದಲ್ಲಿ ಕೊನೆಗೆ ಅವನು ಅವಳನ್ನು ಪ್ರೀತಿಸಲು ತೊಡಗಿದ. ಪೆತ್ರಾ ಕೊತೆಸ್ ತನ್ನಷ್ಟಕ್ಕೆ ಅವನ ಪ್ರೀತಿ ಹೆಚ್ಚಾದಂತೆ ಕಂಡು ಹೆಚ್ಚು ಹೆಚ್ಚು ಪ್ರೀತಿಸಿದಳು. ಇದರಿಂದ ಶರತ್ಕಾಲದ ಉತ್ತುಂಗದಲ್ಲಿ ಮತ್ತೆ ಅವಳು, ಬಡತನ ಪ್ರೀತಿಯ ದಾಸ ಎಂಬ ಮೂಢನಂಬಿಕೆಯನ್ನು ಬೆಂಬಲಿಸುವುದಕ್ಕೆ ಪ್ರಾರಂಭಿಸಿದಳು. ಅವರಿಗೆ ಹಳೆಯ ಮೆರೆದಾಟ, ಸಂಪತ್ತುಗಳು ಕೋಪ ತರಿಸುವ ಸಂಗತಿಗಳೆಂದು ಕಂಡವು ಮತ್ತು ಸ್ವರ್ಗದ ಸಹಭಾಗಿತ್ವದ ಏಕಾಂತ ಕಂಡುಕೊಳ್ಳುವುದಕ್ಕೆ ತಮ್ಮ ಜೀವನದ ಬಹುಪಾಲು ಭಾಗ ಬೇಕಾಯಿತೆಂದು ಭಾವಿಸಿದರು. ಅನೇಕ ವರ್ಷಗಳ ಕಾಲ ಜೊತೆಜೊತೆಯಾಗಿದ್ದರೂ ಜೀವ ಕಳೆ ಇಲ್ಲದೆ ಇದ್ದ ನಂತರ, ಈಗ ಅವರು ಪ್ರೇಮದ ಮಾಂತ್ರಿಕತೆಯನ್ನು ಹಾಸಿಗೆಯಲ್ಲಿದ್ದ ಹಾಗೆ ಟೇಬಲ್ಲಿನಲ್ಲಿಯೂ ಕಳೆಯುತ್ತಿದ್ದರು. ಅವರು ಎಲ್ಲ ಕಳೆದುಕೊಂಡು ವಯಸ್ಸಾದವರಾಗಿದ್ದರೂ ಚಿಕ್ಕ ಮಕ್ಕಳ ಹಾಗೆ ಮಿರುಗುತ್ತಿದ್ದರು ಮತ್ತು ನಾಯಿಗಳ ಹಾಗೆ ಆಟವಾಡುತ್ತಿದ್ದರು. +ಲಾಟರಿಯ ವ್ಯವಹಾರ ಬಹಳ ಕಾಲ ನಡೆಯಲಿಲ್ಲ. ಪ್ರಾರಂಭದಲ್ಲಿ ಅವ್ರೇಲಿಯಾನೋ ಸೆಗುಂದೋ ವಾರದಲ್ಲಿ ಮೂರು ದಿನ ತನ್ನ ಆಫೀಸಿನಲ್ಲಿ ಒಂದೊಂದು ಟಿಕೇಟನ್ನೂ ತೆಗೆದುಕೊಂಡು ಅದರ ಮೇಲೆ ಕೆಂಪು ಹಸು, ಹಸಿರು ಹಂದಿ ಅಥವಾ ನೀಲಿ ಕೋಳಿಗಳ ಗುಂಪು ಹೀಗೆ ಲಾಟರಿಗಿಟ್ಟಿರುವ ಪ್ರಾಣಿಯ ಚಿತ್ರ ಬರೆಯುತ್ತಿದ್ದ. ಅನಂತರ ಪ್ರಿಂಟ್ ?ಜಜಿ;iಡಿದ ನಂಬರುಗಳಂತೆ ಮತ್ತು ಎಲ್ಲ ವ್ಯವಹಾರಕ್ಕೂ ಒಳ್ಳೆಯದೆಂದು ಪೆತ್ರಾ ಕೊತೆಸ್ ಹೇಳಿದ ಹಾಗೆ ದೈವ ಕೃಪೆಯ ಲಾಟರಿ ಎಂದು ಬರೆಯುತ್ತಿದ್ದ. ಪ್ರಾಣಿಗಳನ್ನು ಹೊಂದಿಸಿಕೊಂಡ ಮೇಲೆ ಎರಡು ಸಾವಿರ ಟಿಕೇಟುಗಳನ್ನೂ ತಯಾರಿಸಿ, ಹೆಸರು ಮತ್ತು ರಬ್ಬರ್ ಸ್ಟಾಂಪಿನ ಮೇಲೆ ನಂಬರುಗಳನ್ನು ಹಾಕಿದ ನಂತರ ಬೇರೆ ಬೇರೆ ಬಣ್ಣದ ಪ್ಯಾಡುಗಳಾಗಿ ಮಾಡುವ ಕೆಲಸ ಉಳಿದಿರುತ್ತಿತ್ತು. ಕಳೆದ ವರ್ಷ ಅವನಿಗೆ ನಂಬರುಗಳ ಬದಲಿಗೆ ಸಮಸ್ಯೆಗಳನ್ನು ಹಾಕಿದರೆ ಅದನ್ನು ಸರಿಯಾಗಿ ಊಹೆ ಮಾಡಿದವರೆಲ್ಲರೂ ಬಹುಮಾನವನ್ನು ಹಂಚಿಕೊಂಡರೆ ಹೇಗೆ? ಎಂದು ಯೋಚಿಸಿದ. ಆದರ ವ್ಯವಸ್ಥೆ ತೀರ ಗೋಜಲೆನಿಸಿತಲ್ಲದೆ ತೀರ ಸಂದೇಹಕ್ಕೆ ಆಸ್ಪದ ಮಾಡಿಕೊಟ್ಟಿದ್ದಕ್ಕಾಗಿ, ಎರಡನೆ ಪ್ರಯತ್ನಕ್ಕೇ ಅದನ್ನು ನಿಲ್ಲಿಸಬೇಕಾಯಿತು. +ಅವ್ರೇಲಿಯಾನೋ ಸೆಗುಂದೋಗೆ ಲಾಟರಿಯ ಘನತೆಯನ್ನು ಕಾಪಾಡುವುದಕ್ಕಾಗಿ ಎಷ್ಟು ಬಿಡುವಿಲ್ಲದವನಾಗಿದ್ದನೆಂದರೆ ಅವನಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿರಲಿಲ್ಲ. ಅಮರಾಂತ ಉರ್ಸುಲಾಳನ್ನು ಫೆರ್ನಾಂಡ ಆರು ಹುಡುಗಿಯರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದ ಖಾಸಗಿ ಸ್ಕೂಲಿಗೆ ಸೇರಿಸಿದಳು. ಆದರೆ ಅವಳು ಅವ್ರೇಲಿಯಾನೋವನ್ನು ಸಾರ್ವಜನಿಕ ಸ್ಕೂಲಿಗೆ ಸೇರಿಸಬೇಕೆನ್ನುವುದನ್ನು ನಿರಾಕರಿಸಿದಳು. ರೂಮಿನಿಂದ ಅವನು ಆಚೆ ಹೋಗುವುದಕ್ಕೆ ಆಗಲೆ ಸಾಕಷ್ಟು ಅವಕಾಶ ಕೊಟ್ಟಿದ್ದಾಗಿದೆ ಎಂದು ಅವಳು ಪರಿಗಣಿಸಿದಳು. ಜೊತೆಗೆ ಆಗಿನ ಕಾಲದಲ್ಲಿ ಸ್ಕೂಲುಗಳು ಕ್ಯಾಥೊಲಿಕ್ ಸಂಪ್ರದಾಯದ ಮದುವೆಯಿಂದ ಹುಟ್ಟಿದ ನ್ಯಾಯ ಸಮ್ಮತವಾದ ಮಕ್ಕಳಿಗೆ ಮಾತ್ರ ಪ್ರವೇಶವನ್ನು ಒಪ್ಪಿಕೊಳ್ಳುತ್ತಿದ್ದವು. ಅವ್ರೇಲಿಯಾನೋನನ್ನು ಮನೆಗೆ ಕರೆದುಕೊಂಡು ಬಂದಾಗ ಅವನ ಶರಟಿಗೆ ಸಿಕ್ಕಿಸಿದ್ದ ಅವನು ಹುಟ್ಟಿದ ಸರ್ಟಿಫಿಕೇಟಿನಲ್ಲಿ ‘ಅನರ್ಹ\’ ಎಂದು ನಮೂದಿಸಲಾಗಿತ್ತು. ಆದ್ದರಿಂದ ಅವನು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಅಕ್ಕರೆಯಲ್ಲಿ ಮತ್ತು ಉರ್ಸುಲಾಳ ವಿಚಿತ್ರ ಮನಸ್ಥಿತಿಯ ರಕ್ಷಣೆಯಲ್ಲೇ ಉಳಿದುಕೊಂಡ ಮತ್ತು ಮನೆಯ ಸೀಮಿತ ಪ್ರಪಂಚದಲ್ಲಿ ಅಜ್ಜಿಯವರು ಹೇಳಿದ್ದನ್ನು ಕಲಿಯಬೇಕಾಯಿತು. ಅವನು ತೆಳ್ಳಗೆ, ಸೂಕ್ಷ್ಮ ಸ್ವಭಾವದವಾಗಿದ್ದ ಮತ್ತು ಅವನಿಗಿದ್ದ ಕುತೂಹಲ ಎಂಥವರನ್ನೂ ದಂಗು ಬಡಿಸುತ್ತಿತ್ತು. ಆದರೆ ಅವನು ಆ ವಯಸ್ಸಿನಲ್ಲಿ ಕರ್ನಲ್‌ಗೆ ಇದ್ದ ಹಾಗೆ ಕುತೂಹಲದೃಷ್ಟಿ ಮತ್ತು ಅಸಾಧಾರಣ ನೋಟವಿರದೆ, ಅವನ ನೋಟದಲ್ಲಿ ಸ್ವಲ್ಪ ಮಟ್ಟಿಗೆ ಅಸ್ಥಿರತೆ ಇತ್ತು. ಅಮರಾಂತ ಉರ್ಸುಲಾ ಕಿಂಡರ್‌ಗಾರ್ಟನ್‌ನಲ್ಲಿದ್ದರೆ ಅವನು ಎರೆ ಹುಳುಗಳನ್ನು ಹಿಡಿಯುತ್ತಿದ್ದ ಮತ್ತು ಕೈತೋಟದಲ್ಲಿ ಹುಳುಗಳನ್ನು ಹಿಂಸಿಸುತ್ತಿದ್ದ. ಆದರೆ ಒಂದು ಸಲ ಉರ್ಸುಲಾಳ ಹಾಸಿಗೆಯಲ್ಲಿ ಬಿಡುವುದಕ್ಕಾಗಿ ಚೇಳುಗಳನ್ನು ಡಬ್ಬಿಯಲ್ಲಿ ಇಟ್ಟುಕೊಂಡಿರುವುದನ್ನು ನೋಡಿದಾಗ ಅವನನ್ನು ಮೆಮೆಯ ರೂಮಿನಲ್ಲಿ ಕೂಡಿ ಹಾಕಿದರೆ ಏಕಾಂತದಲ್ಲಿ ಅವನು ವಿಶ್ವಕೋಶದಲ್ಲಿರುವ ಚಿತ್ರಗಳನ್ನು ನೋಡುತ್ತ ಕೆಲವು ಗಂಟೆಗಳನ್ನು ಕಳೆದ. ಒಂದು ಮಧ್ಯಾಹ್ನ ಉರ್ಸುಲಾ ಮನೆಯಲ್ಲಿ ಭಟ್ಟಿ ಇಳಿಸಿದ ನೀರನ್ನು ಚಿಮುಕಿಸುತ್ತಿದ್ದಾಗ ಅನೇಕ ಸಲ ಅವನ ಜೊತೆ ಇದ್ದರೂ ಕೂಡ, ಅವನು ಯಾರು ಎಂದು ಕೇಳಿದಳು. +ಅವನು, “ನಾನು ಅವ್ರೇಲಿಯಾನೋ ಬ್ಯುಂದಿಯಾ”ಎಂದ. +ಅವಳು ಅದಕ್ಕೆ, “ಅದ್ಸರಿ, ಈಗ ನೀನು ಅಕ್ಕಸಾಲಿಗ ಕೆಲಸವನ್ನು ಕಲಿಯಕ್ಕೆ ಸರಿಯಾದ ಸಮಯ” ಎಂದಳು. +ಅವಳು ಮತ್ತೆ ಅವನನ್ನು ತನ್ನ ಮಗನೆಂದು ತಪ್ಪು ತಿಳಿದುಕೊಂಡಿದ್ದಳು. ಏಕೆಂದರೆ ಸುರಿಮಳೆಯ ಕಾಲ ಮುಗಿದ ಮೇಲೆ ಆಗಾಗ ಉರ್ಸುಲಾಳ ಮೆದುಳಿಗೆ ಸ್ಪಷ್ಟತೆಯ ಅಲೆಯನ್ನು ತಂದಿದ್ದ ಬಿಸಿಗಾಳಿ ಇಲ್ಲವಾಗಿತ್ತು. ಅವಳಿಗೆ ಸರಿಯಾದ ಆಲೋಚನಾಶಕ್ತಿ ಮತ್ತೆ ಬರಲಿಲ್ಲ. ಅವಳು ಬೆಡ್‌ರೂಮಿಗೆ ಹೋದಾಗ ಅವಳಿಗೆ ಸಾಮಾನ್ಯವಾಗಿ ಹೊರಗೆ ಹೋಗುವಾಗ ತೊಡುವ ಉಬ್ಬುಪಟ್ಟಿ ಇರುವ ರವಿಕೆ ಮತ್ತು ಅಂಚುಪಟ್ಟಿ ಇರುವ ಜಾಕೆಟ್ ಹಾಕಿಕೊಂಡು ಇರುಸುಮುರುಸು ಪಡುತ್ತಿದ್ದ ಪೆತ್ರೋನಿಲಾ ಇಗ್ವಾರಾನ್, ಟ್ರಾಂಕ್ಟಿಲಿನಾ ಮರಿಯಾ ಮಿನಾತಾ ಅಲೆಕೊಕ್ ಬ್ಯುಂದಿಯಾ, ತುಂಡಾಗಿದ್ದ ತೂಗಾಡುವ ಕುರ್ಚಿಯಲ್ಲಿ ಕುಳಿತು ನವಿಲುಗಳ ಗರಿಗಳ ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದ ಅವಳ ಅಜ್ಜಿ ಮತ್ತು ವೈಸ್‌ರಾಯ್ ಸಂಬಂಧಿತ ನಕಲಿಯ ಟರ್ಕಿ ಮೇಲುಡುಗೆಯನ್ನು ತೊಟ್ಟಿದ್ದ ಅವಳ ಮುತ್ತಜ್ಜ ಅವ್ರೇಲಿಯಾನೋ ಅರ್ಕಾದಿಯೋ ಕಾಣಿಸಿದರು. ಇವರಲ್ಲದೆ, ಪ್ರಾರ್ಥನೆಯೊಂದನ್ನು ಕಂಡು ಹಿಡಿದು ಅದರ ಮೂಲಕ ಹಸುಗಳ ಮೇಲಿನ ಹುಳುಗಳು ಕೆಳಕ್ಕೆ ಬೀಳುವ ಹಾಗೆ ಮಾಡುತ್ತಿದ್ದ ಅವಳ ಅಪ್ಪ ಮತ್ತು ಮೆತ್ತನೆ ಸ್ವಭಾವದ ತಾಯಿ, ಹಂದಿಯ ಬಾಲವಿರುವ ಸೋದರ ಸಂಬಂಧಿ, ಗೋಡೆಯ ಪಕ್ಕದಲ್ಲಿ ಸಾಲಾಗಿ ಕುರ್ಚಿಯಲ್ಲಿ ಬಂದಿರುವುದು ಭೇಟಿಗಾಗಿ ಅಲ್ಲ, ಜಾಗರಣೆಗಾಗಿ ಎನ್ನುವಂತೆ ಕುಳಿತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹಾಗೂ ಸತ್ತ ಅವನ ಮಕ್ಕಳು ಕಾಣಿಸಿದರು. ಅವಳು ಬೇರೆ ಬೇರೆ ಸ್ಥಳಗಳ, ಬೇರೆ ಬೇರೆ ಕಾಲದ ವಸ್ತುಗಳ ಬಗ್ಗೆ ಬಣ್ಣದ ಮಾತಿನ ನೇಯ್ಗೆಯನ್ನು ಹೆಣೆಯುತ್ತಿದ್ದಳು. ಇದರಿಂದಾಗಿ ಅಮರಾಂತ ಉರ್ಸುಲಾ ಸ್ಕೂಲಿನಿಂದ ಹಿಂದಿರುಗಿದಾಗ ಮತ್ತು ಅವ್ರೇಲಿಯಾನೋ ವಿಶ್ವಕೋಶವನ್ನು ನೋಡಿ ನೋಡಿ ಸುಸ್ತಾದಾಗ ಅವಳು ಹಾಸಿಗೆಯಲ್ಲಿ ಕುಳಿತುಕೊಂಡು ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತ ಮತ್ತು ಸತ್ತವರ ಸಂಗದಲ್ಲಿ ಮುಳುಗಿಹೋಗಿರುವುದು ಅವರಿಗೆ ಕಾಣುತ್ತಿತ್ತು. ಅವಳು ಒಂದು ಸಲ, “ಬೆಂಕಿ” ಎಂದು ಗಾಬರಿಯಿಂದ ಕೂಗಿದಳು. ಮರುಕ್ಷಣ ಮನೆಯಲ್ಲಿ ಆತಂಕ ಹಬ್ಬಿತು. ಆದರೆ ಅವಳು ತಾನು ನಾಲ್ಕು ವರ್ಷದವಳಿದ್ದಾಗ ಕಣಜ ಹೊತ್ತಿ ಉರಿಯುತ್ತಿದ್ದನ್ನು ನೋಡಿದ್ದರ ಬಗ್ಗೆ ಹೇಳುತ್ತಿದ್ದಳು. ಕೊನೆಗೆ ಅವಳು ಭೂತಕಾಲವನ್ನು ವರ್ತಮಾನಕಾಲದೊಂದಿಗೆ ಎಷ್ಟರಮಟ್ಟಿಗೆ ಮಿಶ್ರಣ ಮಾಡುತ್ತಿದ್ದಳೆಂದರೆ ಅವಳು ಹೇಳುತ್ತಿರುವುದು ನೆನಪುಮಾಡಿಕೊಂಡಿದ್ದನ್ನೋ ಅಥವಾ ಭಾವಿಸಿದ್ದನ್ನೋ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಅವಳು ಕುಗ್ಗಿ ಮಾಂಸದ ಮುದ್ದೆಯಾಗಿ ಬದುಕಿದ ಕೊನೆಯ ತಿಂಗಳುಗಳಲ್ಲಿ ನೈಟ್ ಗೌನ್‌ನಲ್ಲಿ ಮರೆಯಾದ ಒಣಗಿ ಹೋದ ದ್ರಾಕ್ಷಿ ಬಳ್ಳಿಯಂತಾದಳು. ಅವಳು ಯಾವಾಗಲೂ ಎತ್ತಿ ಹಿಡಿದಿರುತ್ತಿದ್ದ ಕೈ ಕೋತಿಯ ಅಂಗೈನಂತೆ ಕಾಣುತ್ತಿತ್ತು. ಅವಳು ಅನೇಕ ವಾರ ಚಲಿಸದೆ ಇದ್ದಳು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್ ಅವಳನ್ನು ಅಲ್ಲಾಡಿಸಿ ನೋಡಿ ಬದುಕಿದ್ದಾಳೆ ಎಂದು ತನಗೆ ತಾನು ಸಮರ್ಥಿಸಿಕೊಳ್ಳಬೇಕಾಗಿತ್ತು. ಹಾಗೆಯೇ ಅವಳನ್ನು ತೊಡೆಯ ಮೇಲೆ ಕೂಡಿಸಿಕೊಂಡು ಸ್ಪೂನಿನಲ್ಲಿ ಸಕ್ಕರೆ ನೀರನ್ನು ಕುಡಿಸಬೇಕಿತ್ತು. ಅವಳು ಆಗಷ್ಟೇ ಹುಟ್ಟಿದ ಮುದುಕಿಯಂತಿದ್ದಳು. ಅಮರಾಂತ ಉರ್ಸುಲಾ ಮತ್ತು ಅವ್ರೇಲಿಯಾನೋ ಅವಳನ್ನು ಬೆಡ್‌ರೂಮಿನಿಂದ ಒಳಗೆ ಮತ್ತು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಅವಳು ಬಾಲಕ್ರೈಸ್ತನಿಗಿಂತ ಎತ್ತರವಾಗಿದ್ದಾಳೆಯೇ ಎಂದು ನೋಡಲು ಪವಿತ್ರ ಸ್ಥಾನದಲ್ಲಿ ಕೂಡಿಸುತ್ತಿದ್ದರು. ಒಂದು ದಿನ ಅವರು ಅವಳನ್ನು ಅಡುಗೆಯ ಮನೆಯ ಕಪಾಟೊಂದರಲ್ಲಿ ಅಡಗಿಸಿದ್ದರು. ಅವಳನ್ನು ಅಲ್ಲಿ ಇಲಿಗಳು ತಿಂದು ಹಾಕುವುದರಲ್ಲಿದ್ದವು. ಒಂದು ಕ್ರೈಸ್ತ ಉತ್ಸವದ ದಿನಾಚರಣೆಯ ಸಂದರ್ಭದಲ್ಲಿ ಫೆರ್ನಾಂಡ ಚರ್ಚ್‌ಗೆ ಹೋದಾಗ ಅವರು ಅವಳ ಬೆಡ್‌ರೂಮಿಗೆ ಹೋಗಿ ಕುತ್ತಿಗೆ ಮತ್ತು ಮೊಳಕಾಲು ಹಿಡಿದುಕೊಂಡು ಹೊರಗೆ ಕರೆದುಕೊಂಡು ಹೋದರು. +ಅಮರಾಂತ ಉರ್ಸುಲಾ, “ಪಾಪದ ಮುತ್ತಜ್ಜಿಯ ಅಮ್ಮ ವಯಸ್ಸಾಗಿ ಸತ್ತು ಹೋದಳು” ಎಂದಳು. +“ನಾನು ಬದುಕಿದೀನಿ!” ಎಂದಳು. +ಅಮರಾಂತ ಉರ್ಸುಲಾ ನಗುವನ್ನು ತಡೆಹಿಡಿದುಕೊಂಡು, “ನೋಡಿ, ಅವಳು ಉಸಿರಾಡ್ತಾನೂ ಇಲ್ಲ” ಎಂದಳು. +ಉರ್ಸುಲಾ, “ನಾನು ಮಾತಾಡ್ತಾ ಇದೀನಿ!” ಎಂದಳು. +ಅವ್ರೇಲಿಯಾನೋ, “ಅವಳಿಗೆ ಮಾತಾಡಕ್ಕೂ ಆಗ್ತಿಲ್ಲ. ಹುಳು ತರಹ ಸತ್ತು ಹೋದ್ಲು” ಎಂದಳು. +ಅನಂತರ ಉರ್ಸುಲಾ ಸಾಕ್ಷಿ ಕೊಡಬೇಕಾಯಿತು. ಅವಳು ಕ್ಷೀಣ ಸ್ವರದಲ್ಲಿ, “ಹಾಗಾದ್ರೆ ಸಾಯೋದು ಅಂದ್ರೆ ಹೀಗೆ” ಎಂದಳು. ಅವಳು ಕೊನೆಯಿಲ್ಲದ, ದೀರ್ಘವಾದ, ಆಳದ ಪ್ರಾರ್ಥನೆಯನ್ನು ಪ್ರಾರಂಭಿಸಿದಳು. ಅದು ಎರಡು ದಿನಗಳಿಗಿಂತ ಹೆಚ್ಚಿಗೆ ನಡೆಯಿತು. ಅನಂತರ ಮಂಗಳವಾರದ ಹೊತ್ತಿಗೆ ದೇವರಿಗೆ ಸಲ್ಲಿಸುವ ಬೇಡಿಕೆಯಲ್ಲಿ ಕಲಸುಮೇಲೋಗರವಾಯಿತು. ಅವಳು ಕೆಂಜಿಗಗಳು ಮನೆಯನ್ನು ಉರುಳಿಸದಿರಲಿ ಎಂದು ಕೇಳಿಕೊಂಡಳು. ರೆಮಿದಿಯೋಸ್‌ಳ ಛಾಯಾಗ್ರಹಣದ ಉಪಕರಣದ ಮೇಲೆ ಕ್ಯಾಂಡಲನ್ನು ಹೊತ್ತಿಸಿಟ್ಟಿರುವಂತೆ, ಬ್ಯುಂದಿಯಾನೊಬ್ಬನನ್ನು ಅದೇ ರಕ್ತಸಂಬಂಧದಲ್ಲಿ ಮದುವೆಯಾಗುವುದಕ್ಕೆ ಬಿಡಬಾರದು. ಏಕೆಂದರೆ ಹುಟ್ಟುವ ಮಕ್ಕಳಿಗೆ ಹಂದಿಯ ಬಾಲವಿರುತ್ತದೆ ಎಂದು ಹೇಳಿದಳು. ಅವ್ರೇಲಿಯಾನೋ ಸೆಗುಂದೋ ಅವಳ ಪರಿಸ್ಥಿತಿಯ ಉಪಯೋಗ ಪಡೆದುಕೊಂಡು ಬಂಗಾರವನ್ನು ಹೂತಿಟ್ಟಿರುವ ಜಾಗವನ್ನು ಹೇಳಲಿ ಎಂದು ಪ್ರಯತ್ನಿಸಿದ. ಆದರೆ ಅವನು ಪುಸಲಾಯಿಸಿದ್ದು ವ್ಯರ್ಥವಾಯಿತು. ಉರ್ಸುಲಾ “ಅದರೊಡೆಯ ಬಂದಾಗ ದೇವರು ಅವನಿಗೆ ಎಲ್ಲಿದೆ ಎಂದು ತಿಳಿಸ್ತಾನೆ” ಎಂದಳು. ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅವಳು ಈ ಕ್ಷಣದಲ್ಲಿ ಅಲ್ಲದಿದ್ದರೆ ಮತ್ತೊಂದು ಕ್ಷಣದಲ್ಲಿ ಸಾಯುತ್ತಾಳೆ ಎಂದು ಖಚಿತವಾಯಿತು. ಏಕೆಂದರೆ ಅವಳು ಆ ದಿನಗಳಲ್ಲಿ ಪ್ರಕೃತಿಯಲ್ಲಿ ಹಲಕೆಲವು ವೈಪರೀತ್ಯಗಳನ್ನು ಗಮನಿಸಿದಳು : ಗುಲಾಬಿ ಹೂಗಳು ರೇಷ್ಮೆಗೂಡಿನ ಹಾಗೆ ವಾಸನೆ ಬೀರಿದವು, ಮಾಂಸದ ತುಂಡುಗಳು ಉರುಳಿಬಿದ್ದವು ಮತ್ತು ಅವರೆ ಕಾಯಿಗಳು ನೆಲದ ಮೇಲೆ ಹರಡಿ ಬಿದ್ದು, ಸ್ಟಾರ್ ಫಿಶ್‌ನ ಆಕಾರ ಪಡೆದವು. ಅಲ್ಲದೆ ಮತ್ತೊಂದು ದಿನ ಅವಳು ಆಕಾಶದಲ್ಲಿ ಹೊಳೆವ ಕಿತ್ತಲೆ ಗೋಳಗಳು ಹಾದುಹೋದದ್ದನ್ನು ನೋಡಿದಳು. +ಗುಡ್‌ಫ್ರೈಡೆ ಬೆಳಿಗ್ಗೆ ಅವಳು ಸತ್ತು ಹೋದದ್ದು ಕಂಡುಬಂತು. ಬಾಳೆ ತೋಟದ ಕಂಪನಿ ಇದ್ದಾಗ ಅವಳ ವಯಸ್ಸನ್ನು ಲೆಕ್ಕಹಾಕಿದಾಗ ಅವಳು ಅದನ್ನು ಸುಮಾರು ನೂರಾ ಹದಿನೈದರಿಂದ ನೂರಾ ಇಪ್ಪತ್ತೆರಡರ ಮಧ್ಯೆ ಇರಬೇಕೆಂದಿದ್ದಳು. ಅವರು ಅವಳನ್ನು ಅವ್ರೇಲಿಯಾನೋನನ್ನು ತಂದಿದ್ದ, ಬುಟ್ಟಿಗಿಂತ ಬಹಳ ದೊಡ್ಡದಲ್ಲದ ಶವಪೆಟ್ಟಿಗೆಯಲ್ಲಿಟ್ಟು ಹೂಳಿದರು. ಶವಸಂಸ್ಕಾರದಲ್ಲಿ ಬಹಳ ಕಡಿಮೆ ಜನರಿದ್ದರು. ಏಕೆಂದರೆ ಅವಳನ್ನು ಬಲ್ಲವರು ತುಂಬಾ ಕಡಿಮೆ ಇದ್ದರು ಮತ್ತು ಮಧ್ಯಾಹ್ನದ ಉರಿಬಿಸಿಲು ತೀರಾ ಹೆಚ್ಚಾಗಿದ್ದು, ಹಕ್ಕಿಗಳು ಗೊಂದಲಗೊಂಡು ಮಣ್ಣಿನ ಪಾರಿವಾಳಗಳ ಹಾಗೆ ಗೋಡೆಗಳಿಗೆ ಬಡಿಯುತ್ತಿದ್ದವು ಮತ್ತು ಪರದೆಗಳ ಮೂಲಕ ಬೆಡ್‌ರೂಮಿನಲ್ಲಿ ಬಿದ್ದು ಸಾಯುತ್ತಿದ್ದವು. +ಪ್ರಾರಂಭದಲ್ಲಿ ಅವರು ಅದನ್ನು ಪ್ಲೇಗ್ ಎಂದು ತಿಳಿದರು. ಮನೆಯ ಹೆಂಗಸರಿಗೆ ಅಷ್ಟೊಂದು ಸತ್ತ ಹಕ್ಕಿಗಳನ್ನು, ಅದರಲ್ಲೂ ಮಧ್ಯಾಹ್ನದ ಮಲಗುವ ಸಮಯದಲ್ಲಿ, ಗುಡಿಸಿ ಹೊರಗೆ ಹಾಕುವುದರಲ್ಲಿ ಸಾಕು ಸಾಕಾಯಿತು. ಗಂಡಸರು ಅವುಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಹೋಗಿ ನದಿಗೆ ಹಾಕಿದರು. ಈಸ್ಟರ್ ಭಾನುವಾರ ನೂರು ವರ್ಷದ ಫಾದರ್ ಆಂಟೋನಿಯೋ ಇಸಬೆಲ್ ಉಪದೇಶ ವೇದಿಕೆಯಿಂದ ಹಕಿಗಳು ಸತ್ತದ್ದು ಕಳೆದ ರಾತ್ರಿ ತಾನು ನೋಡಿದ ಅಲೆಮಾರಿ ಯಹೂದಿಯಿಂದಾಗಿ ಎಂದು ಹೇಳಿದ. ಅದು ಗಂಡು ಮತ್ತು ಹೆಣ್ಣು ಮೇಕೆಗಳ ನಡುವಿನ ಪ್ರಾಣಿಯಾಗಿದ್ದು ಆ ಪ್ರಾಣಿಯ ಉಸಿರು ಗಾಳಿಗೆ ಕಿಚ್ಚು ಹಬ್ಬಿಸಿದ್ದಲ್ಲದೆ ಅದರ ನೋಟ ಹೊಸದಾಗಿ ಮದುವೆಯಾದ ಹೆಂಗಸರಲ್ಲಿ ರಾಕ್ಷಸರು ಹುಟ್ಟುವಂತೆ ಮಾಡುತ್ತದೆ ಎಂದು ವಿವರಿಸಿದ. ಅವನ ಕಾಲಜ್ಞಾನದ ಬಗ್ಗೆ ಆಸಕ್ತಿ ಇದ್ದವರು ಬಹಳ ಕಡಿಮೆ. ಏಕೆಂದರೆ ಅವನಿಗೆ ವಯಸ್ಸಾಗಿರುವುದರಿಂದ ಹೀಗೆ ಓಡಾಡಿಕೊಂಡಿದ್ದಾನೆ ಎಂದು ತಿಳಿದುಕೊಂಡಿದ್ದರು. ಆದರೆ ಬುಧವಾರ ಒಬ್ಬ ಹೆಂಗಸು ಪ್ರತಿಯೊಬ್ಬರನ್ನೂ ಮುಂಚೆಯೇ ಏಳುವಂತೆ ಮಾಡಿದಳು. ಏಕೆಂದರೆ ಅವಳು ಎರಡು ಕಾಲಿನ ಭಾರಿ ಪ್ರಾಣಿಯ ಸೀಳುಪಾದಗಳ ಗುರುತನ್ನು ಕಂಡಿದ್ದಳು. ಅದನ್ನು ನೋಡಿದ ಯಾರಿಗೂ ಪಾದ್ರಿ ಹೇಳಿದ ಭಯಾನಕ ಪ್ರಾಣಿ ಇರುವುದರ ಬಗ್ಗೆ ಅನುಮಾನವಿರಲಿಲ್ಲ ಮತ್ತು ಅದಕ್ಕಾಗಿ ತಮ್ಮ ಅಂಗಳದಲ್ಲಿ ಬಲೆ ನಿರ್ಮಿಸಲು ಪ್ರಾರಂಭಿಸಿದರು. ಇದರಿಂದ ಅವರು ಅದನ್ನು ಹಿಡಿಯುವುದರಲ್ಲಿ ಯಶಸ್ವಿಯಾದರು. ಉರ್ಸುಲಾ ಸತ್ತು ಎರಡು ವಾರದ ನಂತರ ಪೆತ್ರಾ ಕೊತೆಸ್ ಮತ್ತು ಅವ್ರೇಲಿಯಾನೋ ಸೆಗುಂದೋ ಹತ್ತಿರದಲ್ಲಿ ಕರುವೊಂದು ಗಟ್ಟಿಯಾಗಿ ಕೂಗುತ್ತಿದ್ದರಿಂದ ಗಾಬರಿಯಾಗಿ ಎಚ್ಚರಗೊಂಡರು. ಅವರು ಅಲ್ಲಿಗೆ ಹೋದಾಗ ಒಣಗಿದ ಎಲೆಗಳಿಂದ ಮುಚ್ಚಿದ ಗುಂಡಿಯೊಂದರಿಂದ ಚೂಪು ಕೋಲುಗಳಿಂದ ಭಾರಿ ಪ್ರಾಣಿಯೊಂದನ್ನು ಹಿಡಿದೆತ್ತುತ್ತಿದ್ದರು ಮತ್ತು ಅದು ಕೂಗುವುದನ್ನು ನಿಲ್ಲಿಸಿತು. ಅದು ಚಿಕ್ಕ ಹೋರಿಯಷ್ಟು ಎತ್ತರವಾಗಿರಲಿಲ್ಲವಾದರೂ ಬಲವಾದ ಎತ್ತಿನಷ್ಟಿತ್ತು. ಅದಕ್ಕೆ ಆದ ಗಾಯಗಳಿಂದ ಹಸಿರು ಬಣ್ಣದ ಲೋಳೆ ಲೋಳೆ ಒಸರುತ್ತಿತ್ತು. ಅದರ ಮೈ ತುಂಬಾ ಒರಟು ಕೂದಲಿತ್ತು. ಜೊತೆಗೆ ಅಲ್ಲಲ್ಲಿ ಗಂಟುಗಳಿದ್ದವು. ಮೈ ಚರ್ಮ ಮೀನಿನ ಹೊರಮೈಯಿನ ಹೆಕ್ಕಳದಂತಿತ್ತು. ಆದರೆ ಪಾದ್ರಿ ಹೇಳಿದ ವಿವರದಂತಿರಲಿಲ್ಲ. ಅದರ ಮಾನವ ರೂಪದ ಭಾಗಗಳು ಗಂಡಸಿನ ಹಾಗಿರದೆ ಸೊರಗಿದ ದೇವತೆಯಂತಿತ್ತು. ಏಕೆಂದರೆ ಅದರ ಕೈಗಳು ಸೆಟೆದುಕೊಂಡಿದ್ದವು, ಮಂಕಾದ ದೊಡ್ಡ ಕಣ್ಣುಗಳಿದ್ದವು. ಭುಜದಲ್ಲಿದ್ದ ರೆಕ್ಕೆಗಳನ್ನು ಕೊಡಲಿಯಿಂದ ಕತ್ತರಿಸಿ ಹಾಕಿದ್ದರಿಂದ ಉಂಟಾದ ಗಾಯದ ಕಲೆ ಇತ್ತು. ಅವರು ಅದನ್ನು ಚೌಕದಲ್ಲಿದ್ದ ಬಾದಾಮಿ ಮರಕ್ಕೆ ಎಲ್ಲರೂ ನೋಡಲೆಂದು ಕಟ್ಟಿ ಹಾಕಿದರು. ಅದು ಕೊಳೆಯುವುದಕ್ಕೆ ಪ್ರಾರಂಭವಾದಾಗ ಸುಟ್ಟು ಹಾಕಿದರು. ಏಕೆಂದರೆ ನದಿಯಲ್ಲಿ ಎಸೆಯುವುದಕ್ಕೆ ಅದು ಪ್ರಾಣಿಯೋ ಅಥವಾ ಹೂಳುವುದಕ್ಕೆ ಮನುಷ್ಯನೋ ಎಂದು ಅವರಿಗೆ ನಿರ್ಧರಿಸಲಾಗಲಿಲ್ಲ. ಪಕ್ಷಿಗಳು ಸಾಯಲು ಅದೇ ಕಾರಣವೇ ಹೇಗೆ ಎನ್ನುವುದಕ್ಕೆ ಸಮರ್ಥನೆ ದೊರೆಯಲಿಲ್ಲ. ಆದರೆ ಹೊಸದಾಗಿ ಮದುವೆಯಾದ ಹೆಣ್ಣುಗಳು, ರಾಕ್ಷಸರನ್ನು ಹೆರಲಿಲ್ಲ. ಅಲ್ಲದೆ ಬಿಸಿಲಿನ ತೀವ್ರತೆಯೂ ಕಡಿಮೆಯಾಗಲಿಲ್ಲ. +ಆ ವರ್ಷದ ಕೊನೆಯಲ್ಲಿ ರೆಬೇಕ ಸತ್ತಳು. ಮೂರು ದಿನಗಳಿಂದ ಬೆಡ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡಿದ್ದನ್ನು ತೆಗೆಸಲು ಅವಳ ಜೀವನದುದ್ದಕ್ಕೂ ಸೇವಕಿಯಾಗಿದ್ದ ಆರ್ಗೆನೀಡಾ ಅಧಿಕಾರಿಗಳನ್ನು ಕೇಳಿದಳು. ಅವರು ಒಂಟಿ ಹಾಸಿಗೆಯಲ್ಲಿ ಸಿಗಡಿಯ ಹಾಗೆ ಮುದುಡಿಕೊಂಡು, ತಲೆಯೆಲ್ಲಾ ಹುಳುಕಡ್ಡಿಯಿಂದ ಬೋಳಾಗಿ, ಬಾಯಲ್ಲಿ ಬೆರಳನ್ನಿಟ್ಟುಕೊಂಡಿದ್ದ ಅವಳನ್ನು ಕಂಡರು. ಅವ್ರೇಲಿಯಾನೋ ಸೆಗುಂದೋ ಶವ ಸಂಸ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡ ಮತ್ತು ಮಾರುವುದಕ್ಕಾಗಿ ಮನೆಯನ್ನು ಒಂದು ವ್ಯವಸ್ಥೆಗೆ ತರುವುದಕ್ಕೆ ಪ್ರಯತ್ನಿಸಿದ. ಆದರೆ ಅದೆಷ್ಟು ಹಾಳಾಗಿತ್ತೆಂದರೆ ಬಣ್ಣ ಬಳಿದರೆ ಗೋಡೆಗಳಿಂದ ಹೆಕ್ಕಳ ಉದುರುತ್ತಿದ್ದವು. ನೆಲದಲ್ಲಿ ಕಳೆ ಹಬ್ಬುವುದನ್ನು ಮತ್ತು ತೊಲೆಗಳಲ್ಲಿ ಬಳ್ಳಿಗಳು ಕೊಳೆಯುವುದನ್ನು ತಡೆಯುವಷ್ಟು ಗಾರೆ ಇರಲಿಲ್ಲ. +ಮಳೆ ನಿಂತ ಮೇಲೆ ಪ್ರತಿಯೊಂದರ ಸ್ಥಿತಿ ಇದ್ದದ್ದು ಹೀಗೆ. ಮರೆತು ಹೋದ ಜೀವನೋತ್ಸಾಹಕ್ಕೆ ಪ್ರತಿಯಾಗಿ ಜನರ ಸೋಮಾರಿತನವಿತ್ತು. ಅದು ದಯೆ ಇಲ್ಲದೆ ಹಿಂದಿನ ನೆನಪುಗಳ ಮಹತ್ವವನ್ನು ಎಷ್ಟರಮಟ್ಟಿಗೆ ಇಳಿಸಿತ್ತು ಎಂದರೆ ನಿರ್ಲಾಂದಿಯಾದ ವಾರ್ಷಿಕೋತ್ಸವಕ್ಕಾಗಿ ಗಣರಾಜ್ಯದ ಪ್ರತಿನಿಧಿಗಳು ಅನೇಕ ಬಾರಿ ಕರ್ನಲ್ ಅವ್ರೇಲಿಯಾನೋ ಬ್ಯುಂಡಿಯ ತಿರಸ್ಕರಿಸಿದ್ದ ಪ್ರಶಸ್ತಿಯನ್ನು ಕೊನೆಗೊಮ್ಮೆ ನೀಡುವುದಕ್ಕಾಗಿ ನಿರ್ಧರಿಸಿ ಮಕೋಂದೋಗೆ ಬಂದಾಗ, ಅವರು ಇಡೀ ಮಧ್ಯಾಹ್ನವನ್ನು ಅವನ ವಂಶಜರು ಯಾರಿದ್ದಾರೆ ಎಂದು ಹುಡುಕುವುದಕ್ಕಾಗಿ ಕಳೆಯಬೇಕಾಯಿತು. ಅವ್ರೇಲಿಯಾನೋ ಸೆಗುಂದೋಗೆ ಅದು ಮೊದಲು ಅಪ್ಪಟ ಬಂಗಾರದ್ದಾಗಿರಬೇಕೆಂದು ತಿಳಿದು ಪ್ರಶಸ್ತಿಯನ್ನು ತಾನು ಸ್ವೀಕರಿಸುವ ಆಲೋಚನೆ ಬಂತು. ಆದರೆ ಸಮಾರಂಭಕ್ಕೆ ಪ್ರತಿನಿಧಿಗಳು ಕೆಲವು ಹೇಳಿಕೆ ಮತ್ತು ಭಾಷಣಗಳನ್ನು ಸಿದ್ಧಪಡಿಸಿಕೊಂಡು ಬಂದಿರುವಾಗ ಹಾಗೆ ಮಾಡುವುದು ಸರಿಯಲ್ಲ ಎಂದು ಅವನಿಗೆ ಮನದಟ್ಟು ಮಾಡಿದರು. ಸುಮಾರು ಅದೇ ಸಮಯಕ್ಕೆ ಮೆಲ್‌ಕಿಯಾದೆಸ್‌ನ ವಿಜ್ಞಾನದ ಕೊನೆಯ ವಾರಸುದಾರರಾಗಿ ಜಿಪ್ಸಿಗಳು ಮತ್ತೆ ಬಂದಾಗ, ಅವರಿಗೆ ಊರು ಹೀನಾಯ ಸ್ಥಿತಿಯಲ್ಲಿದ್ದು ಅಲ್ಲಿ ವಾಸಿಸುವವರು ಉಳಿದ ಪ್ರಪಂಚದಿಂದ ಎಷ್ಟು ದೂರವಾಗಿ ಕಂಡರೆಂದರೆ ಅವರು ಬ್ಯಾಬಿಲೋನಿಯಾದ ಇತ್ತೀಚಿನ ಶೋಧನೆ ಎನ್ನುವಂತೆ ಅಯಸ್ಕಾಂತದ ಇಟ್ಟಿಗೆಗಳನ್ನು ಮನೆಗಳ ಮುಂದೆ ಎಳೆದುಕೊಂಡು ಹೋದರು. ಅಲ್ಲದೆ ಅವರು ಮತ್ತೆ ದೊಡ್ಡ ಭೂತಗನ್ನಡಿಯ ಮೂಲಕ ಸೂರ್ಯನ ಕಿರಣಗಳನ್ನು ಹಾಯಿಸಿ ಕೇಂದ್ರೀಕರಿಸಿದರು. ಪಾತ್ರೆಗಳು, ಕೆಟಲುಗಳು ಉರುಳಿ ಬೀಳುವುದನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಜನರಿಗೇನೂ ಕೊರತೆ ಇರಲಿಲ್ಲ. ಜೊತೆಗೆ ಐವತ್ತು ಸೆಂಟುಗಳನ್ನು ಕೊಟ್ಟು ಜಿಪ್ಸಿ ಹೆಂಗಸೊಬ್ಬಳು ಕಟ್ಟಿಸಿದ ಹಲ್ಲನ್ನು ಹೊರಗೆ ತೆಗೆದು ಮತ್ತೆ ಹಾಕಿಕೊಳ್ಳುತ್ತಿದ್ದನ್ನು ನೋಡುವವರೂ ಇದ್ದರು. ಯಾರನ್ನೂ ಕರೆದುಕೊಂಡು ಬರದ , ಯಾರನ್ನೂ ಕರೆದುಕೊಂಡು ಹೋಗದೆ ಅಲ್ಲಿ ನಿಲ್ಲುತ್ತಲೂ ಇರದ, ಮಿಸ್ಟರ್ ಬ್ರೌನ್ ತಗಲು ಹಾಕಿದ, ಮುರಿದು ಹೋದ ಹಳದಿ ಬಣ್ಣದ ಉದ್ದನೆಯ ಗಾಜುಗಳಿದ್ದ, ಮಾವಿನ ತೊಗಟೆಯಾಕಾರದ ಕುರ್ಚಿಗಳ ಬೋಗಿ ಮತ್ತು ಹಣ್ಣನ್ನು ಸಾಗಿಸುತ್ತಿದ್ದ ನೂರಾ‌ಇಪ್ಪತ್ತು ಬೋಗಿಗಳ ಮತ್ತು ಅದು ಸ್ಟೇಶನ್‌ನಿಂದ ಹೊರಗೆ ಹೋಗಲು ಇಡೀ ಮಧ್ಯಾಹ್ನ ತೆಗೆದುಕೊಳ್ಳುತ್ತಿದ್ದ ರೈಲೊಂದೇ ಉಳಿದಿತ್ತು. ಸೋಜಿಗದ ರೀತಿಯಲ್ಲಿ ಪಕ್ಷಿಗಳು ಸತ್ತದ್ದನ್ನು ಮತ್ತು ಅಲೆಮಾರಿ ಯಹೂದಿಯ ಆತ್ಮಹತ್ಯೆಯ ವಿಚಾರಣೆಗೆಂದು ದೂರದಿಂದ ಬಂದವರಿಗೆ ಫಾದರ್ ಅನೊಂಶಿಯೋ ಇಸಬಲ್ ಮಕ್ಕಳ ಜೊತೆ ಕುರುಡನ ಆಟವಾಡುತ್ತಿದ್ದದ್ದು ಕಂಡಿತು. ಅವನು ಹೇಳಿದ್ದು ಭ್ರಮೆಯ ಫಲವೆಂದು ಪರಿಗಣಿಸಿ ಅವನನ್ನು ಆಶ್ರಮಕ್ಕೆ ಕರೆದುಕೊಂಡು ಹೋದರು. ಸ್ವಲ್ಪ ಕಾಲದಲ್ಲಿಯೇ ಅವರು ಹೊಸ ರೀತಿಯ ಧೈರ್ಯವಂತ ಹಾಗೂ ಸಾಹಸ ಪ್ರವೃತ್ತಿಯ ಜನರು ಸೋಮಾರಿಯಾಗಿರಬಾರದೆಂದು ತಾನೇ ಸ್ವತಃ ದಿನಕ್ಕೆ ಹಲವಾರು ಸಲ ಗಂಟೆ ಬಾರಿಸುವ ಫಾದರ್ ಏಂಜಲ್‌ರನ್ನು ಕಳಿಸಿದರು. ಅವನು ಮನೆಯಿಂದ ಮನೆಗೆ ಸಾಮೂಹಿಕ ಪ್ರಾರ್ಥನೆಗೆಂದು ಮಲಗಿದವರನ್ನು ಎಬ್ಬಿಸುತ್ತಿದ್ದ. ಆದರೆ ಒಂದು ವರ್ಷ ಕಳೆಯುವುದರೊಳಗೆ ಅವನಿಗೆ, ಅಲ್ಲಿನ ಗಾಳಿಯಲ್ಲಿ ಉಸಿರಾಡುತ್ತಿದ್ದ ನಿರ್ಲಕ್ಷ್ಯ ಹಾಗೂ ಪ್ರತಿಯೊಂದನ್ನೂ ಹಳತಾಗಿಸುತ್ತಿದ್ದು ಬಿಸಿಗಾಳಿ ಮತ್ತು ಊಟವಾದ ಮೇಲೆ ಮಧ್ಯಾಹ್ನದ ತೂಕಡಿಕೆ ಮುತ್ತಿಕೊಂಡಿತು. +ಉರ್ಸುಲಾ ಸತ್ತ ಮೇಲೆ ಗಟ್ಟಿ ಮನಸ್ಸಿನವಳಾದ ಅಮರಾಂತ ಉರ್ಸುಲಾಳಂಥ ಚಟುವಟಿಕೆಯುಳ್ಳವಳಿಂದಲೂ ಕಾಪಾಡಲಾಗದ ರೀತಿಯಲ್ಲಿ ಮನೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಆದರೆ ಅನೇಕ ವರ್ಷಗಳ ನಂತರ ಯಾವುದೇ ಪೂರ್ವ ಕಲ್ಪಿತ ಅಭಿಪ್ರಾಯಗಳಿಲ್ಲದೆ, ವಾಸ್ತವವನ್ನು ಅರಿತ ಅವಳು ಕಳೆಗಟ್ಟಿದ್ದನ್ನು ಹೊರಹಾಕಲು ಕಿಟಕಿ ಬಾಗಿಲುಗಳನ್ನು ತೆಗೆದಳು, ಕೈತೋಟವನ್ನು ಮೊದಲಿನ ಸ್ಥಿತಿಗೆ ತಂದಳು. ಬೆಳಕಿದ್ದಾಗಲೆ ಸರಿದಾಡುತ್ತಿದ್ದ ಕೆಂಜಿಗಗಳನ್ನು ನಾಶಪಡಿಸಿದಳು ಮತ್ತು ಅತಿಥಿ ಸತ್ಕಾರದ ವೈಭವವನ್ನು ಮತ್ತೆ ಸ್ಥಾಪಿಸಲು ವ್ಯರ್ಥ ಪ್ರಯತ್ನ ಮಾಡಿದಳು. ಫೆರ್ನಾಂಡಳ ಏಕಾಂತ ಪ್ರಿಯತೆ ಉರ್ಸುಲಾಳ ಬಿರುಸಿನ ಜೀವನದ ಎದುರಾಗಿ ಭೇದಿಸಲಾಗದಂಥ ತಡೆಯನ್ನು ನಿರ್ಮಿಸಿತ್ತು. +ಒಣಗಾಳಿ ಬೀಸಿದಾಗ ಬಾಗಿಲುಗಳನ್ನು ತೆಗೆಯಲು ಅವಳು ನಿರಾಕರಿಸಿದ್ದಲ್ಲದೆ, ಕಿಟಕಿಗಳಿಗೆ ಕ್ರಾಸ್ ಆಕಾರದ ಹಲಗೆ ಮುಚ್ಚಿ ಮೊಳೆಹೊಡೆದು ಬದುಕಿರುವಾಗಲೇ ಗೋರಿಯಾಗಬೇಕೆಂಬ ಅಪ್ಪಣೆಯನ್ನು ಪಾಲಿಸಿದಳು. ಕಾಣದ ಡಾಕ್ಟರುಗಳ ಜೊತೆ ನಡೆಸಿದ ದೀರ್ಘಕಾಲದ ಪತ್ರ ವ್ಯವಹಾರ ಸೋಲಿನಲ್ಲಿ ಮುಕ್ತಾಯವಾಯಿತು. ಅನೇಕ ಬಾರಿ ಮುಂದೂಡಲ್ಪಟ್ಟು ಕೊನೆಗೆ ಒಪ್ಪಿಗೆಯಾದ ದಿನ ಮತ್ತು ವೇಳೆಯಲ್ಲಿ ಅವಳು ಬಿಳಿಯ ಹೊದಿಕೆ ಹೊದ್ದುಕೊಂಡು ಅಂಗಾತ ಮಲಗಿದ ಮೇಲೆ ಒಂದು ಗಂಟೆಯ ವೇಳೆಗೆ ತನ್ನ ತಲೆಯನ್ನು ತಿಳಿಯಾದ ದ್ರವದಲ್ಲಿ ತೋಯಿಸಿದ ಕರ್ಚೀಫ್‌ನಿಂದ ಮುಚ್ಚುತ್ತಿದ್ದಾರೆಂದು ಭಾಸವಾಯಿತು. ಅವಳಿಗೆ ಎಚ್ಚರವಾದಾಗ ಕಿಟಕಿಯಲ್ಲಿ ಸೂರ್ಯ ಹೊಳೆಯುತ್ತಿದ್ದ ಮತ್ತು ಅವಳ ಕೆಳಹೊಟ್ಟೆಯಿಂದ ಎದೆಗೂಡಿನ ಕಮಾನಿನ ತನಕ ಒರಟಾದ ಹೊಲಿಗೆ ಹಾಕಲಾಗಿತ್ತು. ಆದರೆ ಅವಳು ನಿಗದಿಯಾದ ಪರೀಕ್ಷೆಯನ್ನು ಪೂರೈಸುವ ಮೊದಲೇ, ಕಾಣದ ಡಾಕ್ಟರುಗಳು ಅವಳನ್ನು ಆರು ಗಂಟೆಗಳ ಕಾಲ ವಿಶ್ಲೇಷಿಸಿದ ನಂತರ, ಅವಳು ಅನೇಕ ಬಾರಿ ವಿವರಿಸಿದಂಥ ರೋಗದ ಲPಣಗಳನ್ನು ಸಮರ್ಥಿಸುವಂಥಾದ್ದು ಸಿಕ್ಕಲಿಲ್ಲವೆಂದು ಬರೆದದ್ದು, ಅವಳ ಅಶಾಂತಿಗೆ ಕಾರಣವಾಯಿತು. ವಾಸ್ತವವಾಗಿ ವಸ್ತುಗಳನ್ನು ಅದೇ ಹೆಸರಿನಿಂದ ಕರೆಯದ ಅವಳ ದುರಭ್ಯಾಸದ ಫಲವಾಗಿ ಹೊಸ ಗೊಂದಲಗಳು ಉಂಟಾಗಿದ್ದವು. ಏಕೆಂದರೆ ಮನೋಸ್ಪರ್ಶ ಸರ್ಜನ್‌ಗಳಿಗೆ ಕಂಡ ಒಂದೇ ಒಂದು ಅಂಶವೆಂದರೆ ಗರ್ಭಕೋಶದಲ್ಲಿ ವಸ್ತುವೊಂದಿದ್ದು ಅದನ್ನು ಗರ್ಭಾಶಯವನ್ನು ಸ್ಥಾನ ಪಲ್ಲಟ ಮಾಡುವ ಸಲಕರಣೆಗಳಿಂದ ಸರಿಪಡಿಸಬಹುದು, ಎಂದು. ಇದರಿಂದ ಭ್ರಮನಿರಸನಗೊಂಡ ಫೆರ್ನಾಂಡ ಹೆಚ್ಚಿನ ವಿವರಗಳನ್ನು ಅವರಿಂದ ಪಡೆಯಲು ಪ್ರಯತ್ನಿಸಿದರೂ ಅವರಿಂದ ಅವಳ ಕಾಗದಗಳಿಗೆ ಮತ್ತೆ ಯಾವ ಉತ್ತರವೂ ಸಿಗಲಲಿಲ್ಲ. ಅವಳಿಗೆ ತಾನರಿಯದ ಸಂಗತಿಗಳಿಂದ ಸೋಲುಂಟಾದ ಭಾವನೆ ಬಂದು, ನಾಚಿಕೆಯನ್ನು ಪಕ್ಕಕ್ಕಿಟ್ಟು, ಗರ್ಭಾಶಯ ಪಲ್ಲಟಗೊಳಿಸುವುದು ಎಂದರೆ ಏನು ಎಂದು ಕೇಳಿದಳು. ಆದರೆ ಅವಳಿಗೆ ಆ ಫ್ರೆಂಚ್ ಡಾಕ್ಟರ್ ಮೂರು ತಿಂಗಳ ಹಿಂದೆ ತೊಲೆಗೆ ನೇಣು ಹಾಕಿಕೊಂಡನೆಂದೂ ಮತ್ತು ಊರಿನವರ ಇಷ್ಟಕ್ಕೆ ವಿರೋಧವಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಂಗಾತಿಯೊಬ್ಬ ಅವನನ್ನು ಹೂತು ಹಾಕಿದನೆಂದು ತಿಳಿಯಿತು. ಅನಂತರ ಅವಳು ತನ್ನ ಮಗ ಹೊಸೆ ಅರ್ಕಾದಿಯೋಗೆ ಎಲ್ಲ ವಿಷಯ ತಿಳಿಸಿದಳು. ಅವನು ರೋಮ್‌ನಿಂದ ಅದಕ್ಕೆ ಬೇಕಾದ ಸಲಕರಣೆಗಳನ್ನು ಮತ್ತು ಅದರೊಂದಿಗೆ ಅದನ್ನು ಉಪಯೋಗಿಸುವುದು ಹೇಗೆನ್ನುವ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕಳಿಸಿದ್ದ. ಅವಳು ಅದನ್ನು ಬಾಯಿಪಾಠ ಮಾಡಿಕೊಂಡು ಯಾರಿಗೂ ತನ್ನ ತೊಂದರೆ ತಿಳಿಯಬಾರದೆಂದು ಆ ಕಾಗದವನ್ನು ಬಚ್ಚಲೊಳಗೆ ಹಾಕಿದಳು. ಅದು ಅನಗತ್ಯವಾಗಿತ್ತು. ಏಕೆಂದರೆ ಮನೆಯಲ್ಲಿದ್ದವರು ಯಾರೂ ಅವಳ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಮುದಿತನದ ಏಕಾಂತದಲ್ಲಿ ಅಡುಗೆ ಮಾಡಿಕೊಂಡು, ಹೊಸೆ ಅರ್ಕಾದಿಯೋ ಸೆಗುಂದೋನ ಯೋಗಕ್ಷೇಮಕ್ಕೆ ಮುಡುಪಾಗಿ ಓಡಾಡಿಕೊಂಡಿದ್ದಳು. ಸುಂದರಿ ರೆಮಿದಿಯೋಸ್‌ಳ ಕೆಲವು ಲಕ್ಷಣಗಳನ್ನು ಹೊಂದಿದ್ದ ಉರ್ಸುಲಾ ಅಮರಾಂತ, ಸ್ಕೂಲಿಗೆ ಹೋಗುವಾಗ ಉರ್ಸುಲಾಳನ್ನು ರೇಗಿಸುವುದರಲ್ಲಿ ವ್ಯರ್ಥ ಮಾಡಿದ ಸಮಯವನ್ನು ಒಳ್ಳೆಯ ನಿರ್ಧಾರದಲ್ಲಿ ಮತ್ತು ಓದಿನಲ್ಲಿ ಮಗ್ನಳಾಗಿ, ಅವ್ರೇಲಿಯಾನೋ ಸೆಗುಂದೋಗೆ ಮೆಮೆ ಉಂಟುಮಾಡಿದ್ದ ಉತ್ಸಾಹವನ್ನು ಮರಳಿ ತಂದುಕೊಟ್ಟಳು. ಬಾಳೆ ತೋಟದ ಕಂಪನಿಯ ಪದ್ಧತಿಯಂತೆ ಅವಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬ್ರುಸೆಲ್ಸ್‌ಗೆ ಕಳಿಸುತ್ತೇನೆಂದು ಮಾತುಕೊಟ್ಟ. ಆ ಆಲೋಚನೆ ಸುರಿಮಳೆಯಲ್ಲಿ ನಾಶವಾದ ತನ್ನ ಭೂಮಿಯನ್ನು ಮತ್ತೆ ಸರಿಪಡಿಸುವ ಪ್ರಯತ್ನದಲ್ಲಿ ತೊಡಗುವಂತೆ ಮಾಡಿತು. ಅವನು ಅಮರಾಂತ ಉರ್ಸುಲಾಳಿಗಾಗಿ ಕೆಲವು ಸಲ ಮನೆಗೆ ಹೋದ. ಏಕೆಂದರೆ ಕಾಲ ಕಳೆದಂತೆ ಅವನು ಫೆರ್ನಾಂಡಳಿಗೆ ಅಪರಿಚಿತನಾದಂತಿದ್ದ ಮತ್ತು ಪುಟ್ಟ ಅವ್ರೇಲಿಯಾನೋ ಹದಿವಯಸ್ಸಿಗೆ ಕಾಲಿಡುತ್ತಿದ್ದಂತೆ ಅಂತರ್‌ಮುಖಿಯಾಗುತ್ತಿದ್ದ. ವಯಸ್ಸಾಗುತ್ತ ಹಾಗೆ ಫರ್ನಾಂಡಳ ಹೃದಯ ಮೃದುವಾಗುವುದೆಂದೂ ಹಾಗೂ ಊರಿನವರೊಡನೆ ಒಂದಾಗುವ ಅವನ ಮೂಲದ ಬಗ್ಗೆ ಯಾರೂ ಅನುಮಾನ ಪಡುವುದಿಲ್ಲವೆಂದು ಅವ್ರೇಲಿಯಾನೋ ಸೆಗುಂದೋಗೆ ನಂಬಿಕೆ ಇತ್ತು. ಆದರೆ ಅವ್ರೇಲಿಯಾನೋ ತನ್ನಷ್ಟಕ್ಕೆ ಏಕಾಂತದಲ್ಲಿರುವುದನ್ನು ಅಪೇಕ್ಷಿಸುವವನಂತೆ ಕಾಣುತ್ತಿದ್ದ ಮತ್ತು ಮನೆಯ ಹೊರಬಾಗಿಲಿಂದ ಆಚೆ ಊರಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಯಾವ ಆಸೆಯೂ ಇರಲಿಲ್ಲ. ಉರ್ಸುಲಾ ಮೆಲ್‌ಕಿಯಾದೆಸ್‌ನ ಜೊತೆ ರೂಮಿನ ಬಾಗಿಲನ್ನು ತೆಗೆಸಿದಾಗ, ಅದರ ಬಳಿ ಸುಳಿದಾಡುತ್ತ ಅರ್ಧ ತೆರೆದ ಬಾಗಿಲು ಮೂಲಕ ಒಳಗಡೆ ಇಣುಕುತ್ತಿದ್ದ ಮತ್ತು ಅವನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಯಾವ ಕ್ಷಣದಲ್ಲಿ ಪರಸ್ಪರ ವಿಶ್ವಾಸ ಬೆಳೆಸಿಕೊಂಡು ಹತ್ತಿರದವನಾದ ಎಂದು ಯಾರಿಗೂ ಗೊತ್ತಿರಲಿಲ್ಲ. ಆ ಪುಟ್ಟ ಹುಡುಗ ಸ್ಟೇಷನ್‌ನಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಮಾತಾಡುತ್ತಿದ್ದನ್ನು ಕೇಳಿದಾಗಲೇ ಅವ್ರೇಲಿಯಾನೋ ಸೆಗುಂದೋಗೆ ಅವರಿಬ್ಬರಲ್ಲೂ ಬೆಳೆದ ಸ್ನೇಹದ ಬಗ್ಗೆ ಬಹಳ ದಿನಗಳಾದ ಮೇಲೆ ತಿಳಿಯಿತು. ಟೇಬಲ್‌ನಲ್ಲಿ ಕುಳಿತಾಗ ಯಾರೋ ಒಬ್ಬರು ಊರು ಹಾಳಾಗುವುದಕ್ಕೆ ಪ್ರಾರಂಭವಾದದ್ದು ಬಾಳೆ ತೋಟದ ಕಂಪನಿ ಊರನ್ನು ಬಿಟ್ಟು ಹೋದಾಗ ಎಂದು ಹೇಳಿದಾಗ ಅವ್ರೇಲಿಯಾನೋ ಅದನ್ನು ಪ್ರಬುದ್ಧ ರೀತಿಯಲ್ಲಿ ಮತ್ತು ಬೆಳೆದವನ ದೃಷ್ಟಿಯಿಂದ ಅಲ್ಲಗಳೆದ. ಸಾಮಾನ್ಯವಾದ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಾಳೆತೋಟದ ಕಂಪನಿಯವರು ಕಂಡುಹಿಡಿದು ಭ್ರಷ್ಟಗೊಳಿಸುವ ತನಕ ಮಕೋಂದೋ, ಸಮೃದ್ಧವಾದ ಪ್ರದೇಶವಾಗಿದ್ದು ಹಾಗೆಯೇ ಮುಂದುವರೆಯುತ್ತಿತ್ತೆಂದೂ ಮತ್ತು ಕೆಲಸಗಾರರಿಗೆ ಕೊಟ್ಟ ವಾಗ್ದಾನವನ್ನು ತಪ್ಪಿಸಿಕೊಳ್ಳಲು ಅದರ ಎಂಜಿನಿಯರುಗಳು ಬಿಡದ ಮಳೆಗಾಲವನ್ನು ನೆಪಮಾಡಿಕೊಂಡರೆಂದು ಹೇಳಿದ. ಅವನು ಅರ್ಥವತ್ತಾಗಿ ಮಾತಾಡುತ್ತಿದ್ದರಿಂದ ಫೆರ್ನಾಂಡಳಿಗೆ ಅವನು ತಿಳಿದವರಲ್ಲಿ ಜೀಸಸ್‌ನ ಅಪವಿತ್ರ ಅಣಕಿನಂತೆ ಕಾಣುತ್ತಿದ್ದ. ಅಲ್ಲದೆ ಅವನು ತೀರಾ ನಿಖರವಾಗಿ ಒಪ್ಪಿಗೆಯಾಗುವಂಥ ವಿವರಗಳ ಮೂಲಕ ಸೈನಿಕರು ಮೆಷಿನ್‌ಗನ್‌ನಿಂದ ಸ್ಟೇಷನ್‌ನಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿಗೆ ಕೆಲಸಗಾರರನ್ನು ಹೊಡೆದುರುಳಿಸಿದರು ಮತ್ತು ಇನ್ನೂರು ಬೋಗಿಗಳಿರುವ ಟ್ರೈನ್‌ನಲ್ಲಿ ಹೆಣಗಳನ್ನು ತುಂಬಿ ಸಾಗಿಸಿ ಸಮುದ್ರಕ್ಕೆ ಎಸೆದರು ಎಂದು ಹೇಳಿದ. ಸಾಮಾನ್ಯವಾಗಿ ಬಹಳ ಜನರು ಒಪ್ಪಿದ ಅಧಿಕೃತ ವರದಿಯಂತೆ ಏನೂ ಆಗಿಲ್ಲ ಎಂದು ತಿಳಿದಿದ್ದ ಫೆರ್ನಾಂಡಳಿಗೆ ಆ ವ್ಯಾಖ್ಯಾನದಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ, ಆದಿಮ ರೀತಿಯ ಆಲೋಚನೆಗಳನ್ನು ಬಳುವಳಿ ಪಡೆದಿರಬಹುದೆಂದು ಜಿಗುಪ್ಸೆ ಉಂಟಾಗಿ ಮತ್ತು ಅವನನ್ನು ಸುಮ್ಮನಿರುವಂತೆ ಹೇಳಿದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅವನಲ್ಲಿ ತನ್ನ ಅವಳಿ ಸೋದರನನ್ನು ಕಂಡ. ವಾಸ್ತವವಾಗಿ, ಹೊಸೆ ಆರ್ಕೆಡೋನನ್ನು ಪ್ರತಿಯೊಬ್ಬರೂ ಹುಚ್ಚನೆಂದು ಪರಿಗಣಿಸಿದ್ದರೂ, ಇಡೀ ಮನೆಯಲ್ಲಿ ಅವನೊಬ್ಬನೇ ತಿಳುವಳಿಕೆಯಿಂದ ಇದ್ದವನು. ಅವನು ಪುಟ್ಟ ಅವ್ರೇಲಿಯಾನೋಗೆ ಓದು, ಬರಹ ಹೇಳಿಕೊಟ್ಟು, ಚರ್ಮದ ಹಾಳೆಯ ಮೇಲಿನ ಲೇಖನಗಳನ್ನು ಅಭ್ಯಾಸ ಮಾಡುವುದು ಹೇಗೆಂದು ತಿಳಿಸಿದ ಮತ್ತು ಅವನು ಬಾಳೆ ತೋಟದ ಕಂಪನಿ ಮಕೋಂದೋಗೆ ಯಾವ ವಿಧವಾದ ಸಂಬಂಧ ಹೊಂದಿತ್ತು ಎನ್ನುವುದರಲ್ಲಿ ತನ್ನ ವೈಯುಕ್ತಿಕ ನಿಲುವನ್ನು ಬೇರೂರುವಂತೆ ಮಾಡಿದ. ಅದರಂತೆಯೇ ವರ್ಷಗಳ ನಂತರ ಪ್ರಪಂಚ ಭಾಗವಾದಾಗ ಅವ್ರೇಲಿಯಾನೋ ಅವನು ಹೇಳುತ್ತಿರುವುದು ಕಲ್ಪಿತ ವಿಷಯಗಳೆಂದು ಯಾರಾದರೂ ತಿಳಿದುಕೊಳ್ಳುತ್ತಿದ್ದರು. ಏಕೆಂದರೆ ಅದು ಇತಿಹಾಸಕಾರರು ತೆಗೆದುಕೊಂಡಿದ್ದ ಸುಳ್ಳುಸೃಷ್ಟಿಗೆ ಮತ್ತು ಸ್ಕೂಲಿನ ಪಠ್ಯ ಪುಸ್ತಕಗಳಲ್ಲಿ ನಮೂದಿಸಿರುವುದಕ್ಕೆ ಸಂಪೂರ್ಣ ವಿರೋಧವಾಗಿತ್ತು. ಒಣಗಾಳಿ, ಧೂಳು ಅಥವಾ ಧಗೆ ಎಂದೂ ಪ್ರವೇಶಿಸಿರದ ಪ್ರತ್ಯೇಕವಾಗಿದ್ದ ರೂಮಿನಲ್ಲಿ, ಕಾಗೆಯ ರೆಕ್ಕೆಯ ಹಾಗಿದ್ದ ಹ್ಯಾಟ್ ಹಾಕಿಕೊಂಡು, ಕಿಟಕಿಗೆ ಬೆನ್ನು ಮಾಡಿಕೊಂಡು, ತಲೆಮಾರುಗಳ ಹಿಂದಿನ ಕಾಲದ ಬಗ್ಗೆ, ಅನೇಕ ವರ್ಷಗಳ ಹಿಂದಿನ, ಅವರು ಹುಟ್ಟುವ ಮೊದಲಿನ ಪ್ರಪಂಚದ ಬಗ್ಗೆ ಮಾತನಾಡುತ್ತಿದ್ದವನನ್ನು ಕಂಡರು. ಇಬ್ಬರೂ ಒಂದೇ ಬಾರಿಗೆ ಯಾವಾಗಲೂ ಮಾರ್ಚ್ ತಿಂಗಳೇ ಇರುತ್ತದೆ ಮತ್ತು ಯಾವಾಗಲೂ ಸೋಮವಾರವೇ ಎಂದು ಹೇಳಿದಳು. ಆಗ ಅವನಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಮನೆಯವರು ತಿಳಿದಂತೆ ತಲೆ ಕೆಟ್ಟವನಲ್ಲವೆಂದೂ, ಕಾಲ ಕೂಡಾ ಮುಗ್ಗರಿಸಿತೆಂದು, ಗ್ರಹಿಸುವ ಪರಿಜ್ಞಾನವಿರುವುದು ಅವನೊಬ್ಬನಿಗೆ ಮಾತ್ರ ಎಂದು ಗೊತ್ತಾಯಿತು ಮತ್ತು ಕಾಲ ಅದಕ್ಕಾಗಿಯೇ ಚೂರುಗಳಾಗುವುದಲ್ಲದೆ ನಿರಂತರವಾಗಿರುವ ಭಾಗವನ್ನು ರೂಮಿನಲ್ಲಿ ಬಿಟ್ಟು ಹೋಗಿತ್ತು. ಅಲ್ಲದೆ ಹೊಸೆ ಅರ್ಕಾದಿಯೋ ಸೆಗುಂದೋ ಚರ್ಮದ ಹಾಳೆಯ ಮೇಲಿನ ಲೇಖನಗಳನ್ನು ಪರಿಗ್ರಹಿಸುವುದನ್ನು ರೂಢಿಸಿಕೊಂಡಿದ್ದ. ಅವು ನಲವತ್ತೇಳರಿಂದ ಐವತ್ಮೂರು ಅಕ್ಷರಗಳನ್ನು ಹೊಂದಿದ್ದು, ಪ್ರತ್ಯೇಕಿಸಿದಾಗ ಗೀಚಿದಂತೆ, ಗೀರಿದಂತೆ ಕಾಣುವುದಲ್ಲದೆ ಮೆಲ್‌ಕಿಯಾದೆಸ್‌ನ ಮುದ್ದಾದ ಕೈಬರಹದಲ್ಲಿ, ಹಗ್ಗದ ಮೇಲೆ ಒಣಗಲು ಹಾಕಿದ ಬಟ್ಟೆಗಳಂತೆ ಕಾಣುತ್ತಿದ್ದವು. ಅವ್ರೇಲಿಯಾನೋಗೆ ಅದರಂಥದನ್ನು ವಿಶ್ವಕೋಶದಲ್ಲಿ ನೋಡಿದ್ದು ನೆನಪಾಯಿತು. ಅದಕ್ಕಾಗಿ ಅವನು ಅದನ್ನು ಹೊಸೆ ಅರ್ಕಾದಿಯೋನ ಹತ್ತಿರ ಇದ್ದದ್ದಕ್ಕೆ ಹೋಲಿಸಿ ನೋಡುವುದಕ್ಕೆ ರೂಮಿಗೆ ತೆಗೆದುಕೊಂಡು ಬಂದ. ಅವೆರಡೂ ಒಂದೇ ಆಗಿದ್ದು ವಿಶೇಷವಾಗಿತ್ತು. +ಲಾಟರಿ ನಡೆಸುತ್ತಿದ್ದ ಕಾಲದಲ್ಲಿ ಅವ್ರೇಲಿಯಾನೋ ಸೆಗುಂದೋ ಹೊಟ್ಟೆಯಲ್ಲಿ ಗಂಟಾಗಿ ಅಳು ತಡೆಹಿಡಿಯುವುದಕ್ಕೇನೋ ಎನ್ನುವಂತೆ ಎಚ್ಚರಗೊಳ್ಳುತ್ತಿದ್ದ. ಪೆತ್ರಾ ಕೊತೆಸ್ ಅದನ್ನು ಕೆಟ್ಟ ಗಳಿಗೆಯಿಂದ ಉಂಟಾಗುತ್ತಿದ್ದ ಅನೇಕ ಏರುಪೇರುಗಳಲ್ಲಿ ಒಂದು ಎಂದು ತಿಳಿದುಕೊಂಡಳು. ಒಂದು ವರ್ಷಕಾಲ ಪ್ರತಿ ದಿನ ಅವಳು ಅವನ ಹೊಟ್ಟೆಯ ಮೇಲೆ ಜೇನುತುಪ್ಪ ಹಚ್ಚುತ್ತಿದ್ದಳು ಮತ್ತು ಕಷಾಯ ಕೊಡುತ್ತಿದ್ದಳು. ಉಸಿರಾಡುವುದಕ್ಕೂ ಕಷ್ಟವಾಗುವಷ್ಟು ಗಂಟು ದೊಡ್ಡದಾದಾಗ ಅವ್ರೇಲಿಯಾನೋ ಸೆಗುಂದೋ ಪಿಲರ್ ಟೆರ್‍ನೆರಾಳಿಗೆ ನಾಟಿ ಔಷಧಿಯಿಂದ ಗುಣಪಡಿಸುವುದು ಗೊತ್ತಿದೆಯೋ ಏನೋ ಎಂದು ಅವಳ ಹತ್ತಿರ ಹೋದ. ನೂರು ವರ್ಷ ತಲುಪಿದ್ದ ವೇಶ್ಯಾಗೃಹ ನಡೆಸುತ್ತಿದ್ದ ಅವಳಿಗೆ ವಿಚಿತ್ರ ಮೂಢ ನಂಬಿಕೆಗಳಲ್ಲಿ ವಿಶ್ವಾಸವಿರಲಿಲ್ಲ. ಆದ್ದರಿಂದ ಅವಳು ಕಾರ್ಡುಗಳ ಮೊರೆ ಹೊಕ್ಕಳು. ಅವಳಿಗೆ ವಜ್ರಗಳ ಕ್ವೀನ್ ಸ್ಪೇಡಿನ ಗಂಟಲಲ್ಲಿ ಗಾಯವಾಗಿದ್ದು ಕಂಡಿತು. ಆದರಿಂದ ಫೆರ್ನಾಂಡ, ಅಪನಂಬಿಕೆಗೊಂಡ ಅವನ ಚಿತ್ರಕ್ಕೆ ಪಿನ್ನುಗಳಿಂದ ಚುಚ್ಚಿ, ಅವನು ಮನೆಗೆ ವಾಪಸು ಬರುವಂತೆ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ತೀರ್ಮಾನಿಸಿದಳು. ಆದರೆ ಅವಳಿಗೆ ಕಪ್ಪು ಕಲೆಯ ಬಗ್ಗೆ ಅರ್ಧಂಬರ್ಧ ತಿಳುವಳಿಕೆ ಇರುವುದರಿಂದ ಅವನ ಹೊಟ್ಟೆಯಲ್ಲಿ ಗಡ್ಡೆಯಾಗುವಂತೆ ಮಾಡಿದ್ದಾಳೆಂದು ತಿಳಿಸಿದಳು. ಮದುವೆಯ ಫೋಟೋಗಳಲ್ಲದೆ ಬೇರೆ ಯಾವುದೂ ಇರದಿದ್ದರಿಂದ, ಅವ್ರೇಲಿಯಾನೋ ಸೆಗುಂದೋ ತನ್ನ ಹೆಂಡತಿ ಗಮನಿಸದಿರುವಾಗ ಮನೆಯಲ್ಲೆಲ್ಲ ಹುಡುಕಿದ. ಕೊನೆಗೆ ಅವನಿಗೆ ಉಡುಗೆ ಸಲಕರಣೆಯ ಟೇಬಲ್ಲಿನಲ್ಲಿ ಕೆಳಗಡೆ, ಅರ್ಧ ಡಜನ್ ಗರ್ಭಾಶಯ ಪಲ್ಲಟಗೊಳಿಸುವ ಉಪಕರಣಗಳ ಬಾಕ್ಸ್‌ಗಳು ಸಿಕ್ಕವು. ಕೆಂಪನೆಯ ರಿಂಗುಗಳು ಮಾಟದ ವಸ್ತುಗಳು ಎಂದು ತಿಳಿದು ಪಿಲರ್ ಟೆರ್‍ನೆರಾ ಅವುಗಳನ್ನು ನೋಡಲೆಂದು ಜೇಬಿನಲ್ಲಿ ಇಟ್ಟುಕೊಂಡ. ಅವಳಿಗೆ ಅವುಗಳ ಗುಣವನ್ನು ಪತ್ತೆ ಹಚ್ಚಲಾಗಲಿಲ್ಲ. ಆದರೆ ತೀರ ಅನುಮಾನ ಬಂದು ಹೇಗಾದರೂ ಸರಿ ಎಂದು ಅಂಗಳದಲ್ಲಿಟ್ಟು ಸುಟ್ಟು ಹಾಕಿದಳು. ಫೆರ್ನಾಂಡ ಪ್ರಯೋಗಿಸಿದ್ದ ಮಾಟದಿಂದ ಪಾರಾಗಲು, ಕಾವಿಗೆ ಕುಳಿತುಕೊಳ್ಳಲು ಸಿದ್ಧವಿರುವ ಕೋಳಿಯೊಂದನ್ನು ತೋಯಿಸಿಟ್ಟು, ಸಜೀವವಾಗಿ ಅದನ್ನು ಬಾದಾಮಿ ಮರದ ಬುಡದಲ್ಲಿ ಹೂಳುವಂತೆ ಹೇಳಿದಳು. ಅವನು ಅದನ್ನು ನಂಬಿಕೆಯಿಂದ ಕೈಗೊಂಡು ಒಣಗಿದ ಎಲೆಗಳಿಂದ ಅದನ್ನು ಮುಚ್ಚುತ್ತಿದ್ದ ಹಾಗೆಯೇ ತಾನು ಉತ್ತಮವಾಗಿ ಉಸಿರಾಡುತ್ತಿದ್ದೇನೆ ಎಂದು ಭಾವಿಸಿದ. ಫೆರ್ನಾಂಡ ಮಾತ್ರ ಅವೆಲ್ಲ ಕಾಣೆಯಾದದ್ದು ಕಾಣದ ಡಾಕ್ಟರ್‌ಗಳು ಮುಯ್ಯಿ ತೀರಿಸಿಕೊಂಡಿದ್ದರಿಂದ ಎಂದು ತಿಳಿದುಕೊಂಡಳು ಮತ್ತು ತನ್ನ ಮಗ ಕಳಿಸಿಕೊಟ್ಟ ಅಂಥವುಗಳನ್ನು ಒಳ ಉಡುಪಿನಲ್ಲಿ ಪಾಕೆಟ್ ಹೊಲಿದು ಇಟ್ಟುಕೊಂಡಳು. +ಕೋಳಿಯನ್ನು ಹೂಳಿ ಆರು ತಿಂಗಳ ನಂತರ ಕೆಮ್ಮು ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಅವ್ರೇಲಿಯಾನೋ ಸೆಗುಂದೋ ಎದ್ದು ಕುಳಿತ. ಅವನಿಗೆ ಹೊಟ್ಟೆಯಲ್ಲಿ ಹಿಂಡುತ್ತಿರುವಂತೆ ಭಾಸವಾಗುತ್ತಿತ್ತು. ಆಗ ಅವನಿಗೆ ತಾನು ಗರ್ಭಾಶಯ ಪಲ್ಲಟಗೊಳಿಸುವ ವಸ್ತುಗಳನ್ನು ಹಾಳುಮಾಡಿದ್ದಕ್ಕೆ ಮತ್ತು ಕಾವು ಪಡೆಯಲು ತಯಾರಾಗಿದ್ದ ಕೋಳಿಗಳನ್ನು ಕತ್ತರಿಸಿದ್ದಕ್ಕೆ ಅರಿವಾದ ಒಂದೇ ಒಂದು ಸತ್ಯವಾದ ಸಂಗತಿಯೆಂದರೆ ತಾನು ಸಾಯುತ್ತಿದ್ದೇ, ಎಂದು. ಅವನು ಯಾರಿಗೂ ಹೇಳಲಿಲ್ಲ. ಅಮರಾಂತ ಉರ್ಸುಲಾಳನ್ನು ಬ್ರುಸೆಲ್ಸ್‌ಗೆ ಕಳಿಸದೇ ಸಾಯುತ್ತಿದ್ದೇನೆಂಬ ಸಂಕಟದಿಂದ ಅವನು ಹಿಂದೆಂದೂ ಮಾಡದಷ್ಟು ಕೆಲಸ ಮಾಡಿದ. ವಾರಕ್ಕೆ ಒಂದರ ಬದಲಾಗಿ ಮೂರು ಲಾಟರಿಗಳನ್ನು ಮಾಡಿದ. ಲಾಟರಿ ಟಿಕೆಟ್ಟುಗಳನ್ನು ಸಾಯುತ್ತಿರುವ ಮನುಷ್ಯನಿಗೆ ಮಾತ್ರ ಅರ್ಥವಾಗುವ ಆತಂಕದಿಂದ ಮಾರುವುದಕ್ಕೆ ಬೆಳಿಗ್ಗೆ ಬೇಗನೆ ಊರೊಳಗೆ ಹಾಗೂ ದೂರದಲ್ಲಿರುವ ಮತ್ತು ಬಡವರು ವಾಸಿಸುವ ಕಡೆಯಲ್ಲಿ ಕೂಡ ಸುತ್ತಾಡುತ್ತಿದ್ದ. ಅವನು, “ಇದು ದೈವ ನಿಮಾಯಕ. ಅದನ್ನು ಸುಮ್ಮನೆ ಬಿಟ್ಟುಬಿಡಬೇಡಿ. ಯಾಕಂದ್ರೆ ಅದು ನೂರು ವರ್ಷಕ್ಕೆ ಒಂದ್ಸಲ ಮಾತ್ರ ಬರೋದು” ಎನ್ನುತ್ತಿದ್ದ. ಅವನು ಗೆಲುವಾಗಿರಲು, ಖುಷಿಯಾಗಿರಲು ಮತ್ತು ವಾಚಾಳಿಯಾಗಿರಲು ಪ್ರಯತ್ನಿಸುತ್ತಿದ್ದ. ಆದರೆ ಅವನ ಒಳಗಿನ ಒದ್ದಾಟವನ್ನು ತಿಳಿಯಲು ಅವನ ಮುಖದ ಮೇಲಿದ್ದ ಬೆವರುಗಳನ್ನು ನೋಡಿದರೆ ಸಾಕಾಗಿತ್ತು. ಕೆಲವೊಮ್ಮೆ ಅವನು ಯಾರೂ ಇರದ ಜಾಗಕ್ಕೆ ತನ್ನನ್ನು ಸೀಳಿ ಬಗೆಯುತ್ತಿರುವುದರಿಂದ ವಿಶ್ರಾಂತಿ ಪಡೆಯಲು ಹೋಗುತ್ತಿದ್ದ. ಅವನು ಮಧ್ಯರಾತ್ರಿಯಲ್ಲಿ ಕೆಂಪು ದೀಪ ಪ್ರದೇಶಕ್ಕೆ ಹೋಗುತ್ತಿದ್ದ. ಅಲ್ಲಿನ ಒಂಟಿ ಹೆಣ್ಣುಗಳಿಗೆ, “ನೋಡಿ ಈ ನಂಬರ್ರು ನಾಲ್ಕು ತಿಂಗಳಿಂದ ಬಂದಿಲ್ಲ” ಎಂದು ಟಿಕೇಟುಗಳನ್ನು ತೋರಿಸಿ ಹೇಳುತ್ತಿದ್ದ. ಅಲ್ಲದೆ, “ಅದನ್ನು ಹಾಗೇ ಹೋಗಕ್ಕೆ ಬಿಡ್ಬೇಡಿ. ನೀವು ಅಂದ್ಕೊಂಡಿರೋದಕ್ಕಿಂತ ಜೀವನ ಕ್ಷಣಿಕ” ಎನ್ನುತ್ತಿದ್ದ. ಕೊನೆಗೆ ಅವರು ಅವನಿಗೆ ಗೌರವ ಕೊಡುವುದನ್ನು ಬಿಟ್ಟರು ಮತ್ತು ಅವನ ಬಗ್ಗೆ ತಮಾಷೆ ಮಾಡಿದರು. ಅವನ ಕೊನೆಯ ತಿಂಗಳುಗಳಲ್ಲಿ ಅವನನ್ನು ‘ಮಿಸ್ಟರ್\’ ಅವ್ರೇಲಿಯಾನೋ ಎಂದು ಮೊದಲು ಕರೆಯುತ್ತಿದ್ದಕ್ಕೆ ಬದಲಾಗಿ “ಮಿಸ್ಟರ್ ದೈವ ನಿಯಾಮಕ” ಎಂದು ಅವನೆದುರಿಗೇ ಹೇಳುತ್ತಿದ್ದರು. ಅವನ ಧ್ವನಿ ಉಡುಗುತ್ತಿತ್ತು ಮತ್ತು ಕೊನೆಗೆ ಅದು ನಾಯಿಯ ಗೊಗ್ಗರ ಧ್ವನಿಯಂತಾಯಿತು. ಆದರೂ ಪೆತ್ರಾ ಕೊತೆಸ್‌ಳ ಅಂಗಳಕ್ಕೆ ಜನರು ಕಡಿಮೆಯಾಗದ ಹಾಗೆ ಮಾಡಲು ಇನ್ನೂ ಸಾಕಷ್ಟು ಉತ್ಸಾಹವಿತ್ತು. ಅವನು ಧ್ವನಿ ಕಳೆದುಕೊಂಡ ಮೇಲೆ ಸ್ವಲ್ಪ ಕಾಲದಲ್ಲಿಯೇ ತನಗೆ ತಡೆದುಕೊಳ್ಳಲಾಗದಷ್ಟು ನೋವು ಉಂಟಾಗುವುದೆಂದು ಮತ್ತು ಹಂದಿಗಳ, ಮೇಕೆಗಳ ಲಾಟರಿಯಿಂದ ಮಗಳು ಬ್ರುಸೆಲ್ಸ್‌ಗೆ ಹೋಗುವುದು ಸಾಧ್ಯವಾಗುವುದಿಲ್ಲವೆಂದು ಅರಿವಾಯಿತು. ಆದ್ದರಿಂದ ಅವನು ಸುರಿಮಳೆಯಿಂದ ನಾಶವಾದ ಭೂಮಿಯ ಲಾಟರಿಯನ್ನು ವ್ಯವಸ್ಥೆ ಮಾಡಬೇಕೆಂಬ ಅದ್ಭುತವಾದ ಯೋಚನೆ ಮಾಡಿದ ಮತ್ತು ದುಡ್ಡಿರುವ ಮನುಷ್ಯನಿಗೆ ಅದನ್ನು ಪಡೆಯುವುದು ತೀರಾ ಸುಲಭ ಎಂದು ಭಾವಿಸಿದ. ಅದು ಎಷ್ಟು ಅದ್ದೂರಿಯಾದ ಕಾರ್ಯವಾಗಿತ್ತೆಂದರೆ ಸ್ವತಃ ಮೇಯರ್ ಅದನ್ನು ಹೇಳಿಕೆಯಿಂದ ಪ್ರಚುರಪಡಿಸಿ ಸಹಾಯ ಮಾಡಿದ ಮತ್ತು ನೂರು ಪೆಸೋಗಳ ಟಿಕೇಟುಗಳನ್ನು ಮಾರುವುದಕ್ಕೆ ಸಂಘಗಳನ್ನು ರಚಿಸಲಾಯಿತು. ಟಿಕೇಟುಗಳೆಲ್ಲಾ ವಾರದೊಳಗೆ ಖರ್ಚಾಯಿತು. ಲಾಟರಿ ಇತ್ಯರ್ಥವಾದ ದಿನ ಗೆದ್ದವರು ಬಾಳ ತೋಟದ ಕಂಪನಿಯವರಿಗೆ ಹೋಲಿಸಬಹುದಾದಂಥ ಅದ್ದೂರಿಯ ಸಮಾರಂಭವನ್ನು ಏರ್ಪಡಿಸಿದರು ಮತ್ತು ಅವ್ರೇಲಿಯಾನೋ ಕೊನೆಯ ಬಾರಿಗೆ ಅವ್ರೇಲಿಯಾನೋ ಸೆಗುಂದೋ ಮರೆತುಹೋಗಿದ್ದ ಪುರುಷ ಫ್ರಾನ್ಸಿಸ್ಕೋನ ಹಾಡುಗಳನ್ನು ಅಕಾರ್ಡಿನ್‌ನಲ್ಲಿ ನುಡಿಸಿದ. ಆದರೆ ಅವನಿಗೆ ಅವುಗಳನ್ನು ಹಾಡಲಾಗಲಿಲ್ಲ. +ಎರಡು ತಿಂಗಳಾದ ಮೇಲೆ ಅಮರಾಂತ ಉರ್ಸುಲಾ ಬ್ರುಸೆಲ್ಸ್‌ಗೆ ಹೋದಳು. ಅವ್ರೇಲಿಯಾನೋ ಸೆಗುಂದೋ ಅವಳಿಗೆ ವಿಶೇಷವಾದ ಲಾಟರಿಯಿಂದ ಬಂದ ದುಡ್ಡನ್ನಲ್ಲದೆ ಹಿಂದಿನ ತಿಂಗಳುಗಳಲ್ಲಿ ಉಳಿಸಲು ಸಾಧ್ಯವಾದದ್ದನ್ನು, ಪಿಯಾನೋದಂಥದನ್ನು ಹಾಗೂ ಅದಕ್ಕೆ ಮೂಲವಾದ್ದುದನ್ನು ಮಾರಿದ್ದರಿಂದ ಬಂದ ಅಲ್ಪಸ್ವಲ್ಪವನ್ನು, ರಿಪೇರಿಯಾಗದಂಥ ವಸ್ತುಗಳನ್ನು ಮಾರಿದ್ದರಿಂದ ಗಳಿಸಿದ್ದನ್ನು ಕೂಡ ಕೊಟ್ಟ. ಅವನ ಲೆಕ್ಕಾಚಾರದ ಪ್ರಕಾರ ಅದು ಅವಳ ವಿದ್ಯಾಭ್ಯಾಸಕ್ಕೆ ಸಾಕಾಗಿತ್ತು ಮತ್ತು ವಾಪಸು ಬರುವುದಕ್ಕೆ ಮಾತ್ರ ಕಡಿಮೆ ಇತ್ತು. ಕೊನೆಯ ಗಳಿಗೆಯ ತನಕ ಫೆರ್ನಾಂಡೋ ಅಲ್ಲಿ ಹೋಗುವುದನ್ನು ವಿರೋಧಿಸಿದಳು. ಏಕೆಂದರೆ ಬ್ರುಸೆಲ್ಸ್ ವಿನಾಶಕಾರಿ ಪ್ಯಾರಿಸ್‌ಗೆ ಹತ್ತಿರವಿದೆ ಎನ್ನುವ ಗಾಬರಿಯಿಂದ. ಆದರೆ ವಿದ್ಯಾಭ್ಯಾಸ ಮುಗಿಯುವ ತನಕ ಕ್ಯಾಥೊಲಿಕ್ ಹುಡುಗಿಯರ ವಸತಿಗೃಹದಲ್ಲಿರಲು ಅಮರಾಂತ ಉರ್ಸುಲಾ ಒಪ್ಪಿಕೊಂಡಿದ್ದಕ್ಕಾಗಿ ಫಾದರ್ ಏಂಜಲ್ ಅದನ್ನು ನಡೆಸುತ್ತಿದ್ದ ನನ್‌ಗಳಿಗೆ ಕಾಗದ ಕೊಟ್ಟ ನಂತರ ಅವಳು ಶಾಂತಳಾದಳು. ಅಷ್ಟೇ ಅಲ್ಲದೆ, ಆ ಪಾದ್ರಿ ಅವಳನ್ನು ಟಾಲೆಡೋಗೆ ಹೋಗುವ ಫ್ರಾನ್ಸಿಸ್ಕಾದ ನನ್‌ಗಳ ಸಂಗಡ ಪ್ರಯಾಣ ಮಾಡುವುದಕ್ಕೆ ಏರ್ಪಾಡು ಮಾಡಿದರು. ಅಲ್ಲಿಂದ ಬೆಲ್ಜಿಯಮ್‌ಗೆ ಹೋಗಲು ವಿಶ್ವಾಸವಿರುವ ಜನ ಸಿಗುತ್ತಾರೆ ಎಂದು ಭಾವಿಸಿದರು. ಈ ರೀತಿಯ ಹೊಂದಾಣಿಕೆಗಾಗಿ ನಡೆಸಿದ ಪತ್ರ ವ್ಯವಹಾರದಿಂದ ಮುಂದೆ ಹೋದದಕ್ಕೆ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್‌ಳ ಸಹಾಯದಿಂದ ಅವಳ ಗಂಟು ಮೂಟೆಯನ್ನು ಸಿದ್ಧಗೊಳಿಸಿದ. ಅವರು ಆ ರಾತ್ರಿ ಫೆರ್ನಾಂಡ ಮದುವಣಗಿತ್ತಿಯಾದಾಗಿನ ಟ್ರಂಕುಗಳಲ್ಲೊಂದನ್ನು ಭರ್ತಿ ಮಾಡುವ ಹೊತ್ತಿಗೆ ಪ್ರತಿಯೊಂದೂ ಎಷ್ಟು ವ್ಯವಸ್ಥಿತವಾಗಿತ್ತೆಂದರೆ ಅಮರಾಂತ ಉರ್ಸುಲಾಗೆ ಅಟ್ಲಾಂಟಿಕ್ ದಾಟುವಾಗ ಯಾವ ಬಟ್ಟೆ ಮತ್ತು ಯಾವ ಚಪ್ಪಲಿ ಹಾಕಿಕೊಳ್ಳಬೇಕೆನ್ನುವುದು ಮತ್ತು ಇಳಿಯುವ ಸಮಯದಲ್ಲಿ ತಾಮ್ರದ ಗುಂಡಿಗಳಿರುವ ನೀಲಿ ಉಡುಪುಗಳನ್ನು ಮತ್ತು ಕ್ಯಾನ್‌ವಾಸ್ ಶೂಗಳನ್ನು ಹಾಕಿಕೊಂಡಿರಬೇಕೆನ್ನುವುದು ಬಾಯಿಪಾಠವಾಗಿತ್ತು. ಅವಳು ಹಲಗೆಹಾಸಿನ ಮೇಲೆ ನಡೆಯುವಾಗ ನೀರಿಗೆ ಬೀಳದ ಹಾಗೆ ಹೇಗೆ ನಡೆಯಬೇಕೆಂದು ಮತ್ತು ತಿನ್ನುವುದಕ್ಕಲ್ಲದೆ ಬೇರೆ ಯಾವ ಸಮಯದಲ್ಲೂ ನನ್‌ಗಳನ್ನು ಬಿಟ್ಟಿರಕೂಡದೆಂದು ಹಾಗೂ ಸಮುದ್ರ ತೀರದಲ್ಲಿ ಇರುವಾಗ ಗಂಡಸಾಗಲಿ, ಹೆಂಗಸಾಗಲಿ ಯಾರ ಪ್ರಶ್ನೆಗಳಿಗೂ ಉತ್ತರ ಕೊಡಬಾರದೆಂದು ತಿಳಿದಿತ್ತು. ಅವಳು ಸಮುದ್ರ ಪ್ರಯಾಣದಲ್ಲಿ ಉಂಟಾಗುವ ಪಿತ್ತಕ್ಕೆ ಔಷಧಿಯನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ಬಾಟಲನ್ನು ಮತ್ತು ಸಮುದ್ರದಲ್ಲಿ ಉಬ್ಬರಗಳ ಪ್ರತಿರೋಧಕ್ಕಾಗಿ ಫಾದರ್ ತಮ್ಮ ಕೈಯಲ್ಲೇ ಬರೆದಿದ್ದ ಆರು ಪ್ರಾರ್ಥನೆಗಳಿರುವ ನೋಟ್‌ಬುಕ್‌ನ್ನು ಇಟ್ಟುಕೊಂಡಿದ್ದಳು. ದುಡ್ಡನ್ನು ಇಟ್ಟುಕೊಳ್ಳಲು ಫೆರ್ನಾಂಡ ಅವಳಿಗೆ ಕ್ಯಾನ್‌ವಾಸಿನ ಬೆಲ್ಟ್ ಮಾಡಿಕೊಟ್ಟಳು ಮತ್ತು ಅದನ್ನು ಅವಳು ಮಲಗಿದಾಗಲೂ ತೆಗೆಯುವಂತಿರಲಿಲ್ಲ. ಅವಳಿಗೆ ಉಪ್ಪು ನೀರಿಂದ ತೊಳೆದ ಮತ್ತು ಅಂಟು ಜಾಢ್ಯ ಬರದಂತೆ ಆಲ್ಕೋಹಾಲ್ ಉಪಯೋಗಿಸಿದ ಉಚ್ಚೆ ಪಾತ್ರೆಯನ್ನು ಕೊಡಲು ಪ್ರಯತ್ನಿಸಿದಳು. ಆದರೆ ಸಹಪಾಠಿಗಳು ತಮಾಷೆ ಮಾಡುತ್ತಾರೆಂದು ಅಮರಾಂತ ಉರ್ಸುಲಾ ಅದನ್ನು ನಿರಾಕರಿಸಿದಳು. ಕೆಲವು ತಿಂಗಳಾದ ಮೇಲೆ ಸಾಯುವ ಸಮಯದಲ್ಲಿ ಅವಳು ಫೆರ್ನಾಂಡಳ ಅಂತಿಮ ಉಪದೇಶವನ್ನು ಕೇಳಿಸಿಕೊಳ್ಳಲು, ಸೆಕೆಂಡ್ ಕ್ಲಾಸ್ ಬೋಗಿಯ ಕಿಟಕಿಯ ಗಾಜನ್ನು ತೆಗೆಯುವುದಕ್ಕೆ ಪ್ರಯತ್ನಿಸುತ್ತ ವಿಫಲಳಾದದ್ದನ್ನು ಅವ್ರೇಲಿಯಾನೋ ಸೆಗುಂದೋ ನೆನಪಿಸಿಕೊಂಡ. ಅವಳು ನೇರಳೆ ಬಣ್ಣದ ಸಿಲ್ಕ್ ಡ್ರೆಸ್ ಹಾಕಿಕೊಂಡು ಭುಜಕ್ಕೆ ಕೃತಕ ಕುಪ್ಪಸವನ್ನು ಪಿನ್ ಮಾಡಿಕೊಂಡಿದ್ದಳು. ಅವಳು ಹಾಕಿಕೊಂಡ ಕ್ಯಾನ್‌ವಾಸ್ ಶೂಗೆ ಬಕಲ್‌ಗಳಿದ್ದು ಹಿಮ್ಮಡಿ ಕೆಳಗಿತ್ತು ಮತ್ತು ತೊಡೆಯ ತನಕ ಇದ್ದ ಸ್ಟಾಕಿಂಗ್ಸ್‌ನ್ನು ಹಿಗ್ಗುವ ಪಟ್ಟಿಗಳು ಹಿಡಿದಿದ್ದವು. ಅವಳ ದೇಹ ನೀಳವಾಗಿತ್ತು. ಸಡಿಲವಾದ ಉದ್ದ ಕೂದಲಿದ್ದು ಉರ್ಸುಲಾಗೆ ಅವಳ ವಯಸ್ಸಿನಲ್ಲಿ ಇದ್ದ ಹಾಗೆ ಹೊಳುಪು ಕಣ್ಣುಗಳಿದ್ದವು. ಅಲ್ಲದೆ ಅವಳು ಅಳದೇ, ನಸುನಗದೆ, ವಿದಾಯ ಹೇಳಿದ್ದರಿಂದ ಅವಳ ಹಾಗೆಯೇ ಶಕ್ತಿಯುತ ಸ್ವಭಾವ ಕಾಣುತ್ತಿತ್ತು. ಬೋಗಿಯ ಜೊತೆ ಮುಗ್ಗರಿಸದ ಹಾಗೆ, ಫೆರ್ನಾಂಡಳ ಕೈ ಹಿಡಿದು ಅವಳೂ ಮುಗ್ಗರಿಸಿದ ಹಾಗೆ ಓಡುತ್ತಾ, ಅವಳು ಬೆರಳ ತುದಿಯಿಂದ ಮುತ್ತೊಂದನ್ನು ಬೀಸಿದಾಗ, ಅವ್ರೇಲಿಯಾನೋ ಸೆಗುಂದೋಗೆ ಕೈಬೀಸಲು ಸಮಯವಿರಲಿಲ್ಲ. ದಂಪತಿಗಳು ಮದುವೆಯಾದ ಮೇಲೆ ಮೊದಲ ಬಾರಿಗೆ ಕೈಯೊಳಗೆ ಕೈ ಹಾಕಿಕೊಂಡು, ಉರಿಬಿಸಿಲಿನಲ್ಲಿ ನಿಂತುಕೊಂಡು, ರೈಲು ದಿಗಂತದಲ್ಲಿ ಕರಿಛಾಯೆಯೊಡನೆ ಮಿಳಿತಗೊಳ್ಳುವ ತನಕ ನೋಡುತ್ತಿದ್ದರು. +ಆಗಸ್ಟ್ ಒಂಬತ್ತರಂದು, ಬ್ರುಸೆಲ್ಸ್‌ನಿಂದ ಮೊದಲನೆ ಕಾಗದ ಬರುವುದಕ್ಕಿಂತ ಮುಂಚೆ, ಹೊಸೆ ಅರ್ಕಾದಿಯೋ ಸೆಗುಂದೋ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಅವ್ರೇಲಿಯಾನೋ ಜೊತೆ ತನಗರಿಯದಂತೆ ಮಾತನಾಡುತ್ತಿದ್ದ. +ಅವನು, “ಯಾವಾಗಲೂ ನೆನಪಿಟ್ಟುಕೋ. ಅವರು ಮೂರು ಸಾವಿರಕ್ಕಿಂತ ಹೆಚ್ಚಿಗೆ ಇದ್ದರು ಮತ್ತೆ ಅವರನ್ನೆಲ್ಲ ಸಮುದ್ರಕ್ಕೆ ಎಸೆದರು.” ಎಂದ. +ಅನಂತರ ಅವನು ಚರ್ಮದ ಬರಹಗಳ ಹಾಳೆಯ ಮೇಲೆ ಬಿದ್ದ ಮತ್ತು ಕಣ್ಣು ಬಿಟ್ಟುಕೊಂಡು ಸತ್ತು ಹೋದ. ಅದೇ ಕ್ಷಣದಲ್ಲಿ ಫೆರ್ನಾಂಡಳ ಹಾಸಿಗೆಯಲ್ಲಿದ್ದ, ಅವನ ಅವಳಿ ಸೋದರ ಉಕ್ಕಿನ ಉಗುರುಗಳಿಂದ ಹೊಟ್ಟೆಯನ್ನು ಕಿತ್ತು ತಿನ್ನುತ್ತಿದ್ದ ಕಾಯಿಲೆಯ ದೀರ್ಘವಾದ ಅವಧಿಯ ಅಂತ್ಯಕ್ಕೆ ಬಂದಿದ್ದ. ಒಂದು ವಾರದ ಹಿಂದೆ ಧ್ವನಿ ಸಂಪೂರ್ಣ ಉಡುಗಿ ಹೋಗಿ, ಉಸಿರಾಡಲು ಕಷ್ಟವಾಗಿ, ಕೇವಲ ಎಲುಬು ಮತ್ತು ಚರ್ಮದ ಹಂದರವಾಗಿ, ಅತ್ತಿತ್ತ ಓಡಾಡುತ್ತಿದ್ದ ಟ್ರಂಕುಗಳು ಮತ್ತ್ಟು ಕೆಟ್ಟುಹೋದ ಅಕಾರ್ಡಿಯನ್ ಸಮೇತ ಹೆಂಡತಿಯ ಪಕ್ಕದಲ್ಲಿ ಸಾಯುತ್ತೇನೆ ಎನ್ನುವುದನ್ನು ಪೂರೈಸುವುದಕ್ಕೋಸ್ಕರ ಮನೆಗೆ ವಾಪಸು ಬಂದಿದ್ದ. ಪೆತ್ರಾ ಕೊತೆಸ್ ಅವನ ಬಟ್ಟೆಗಳನ್ನು ಕಟ್ಟಿ ಕೊಟ್ಟು ಕಣ್ಣೀರು ಹಾಕದೆ ವಿದಾಯ ಹೇಳಿದಳು. ಆದರೆ ಅವಳು ಅವನು ಶವ ಪೆಟ್ಟಿಗೆಯಲ್ಲಿ ಹಾಕಿಕೊಳ್ಳಬೇಕೆಂದಿದ್ದ ಚರ್ಮದ ಶೂಗಳನ್ನು ಕೊಡಲು ಮರೆತಳು. ಆದ್ದರಿಂದ ಅವನು ಸತ್ತನೆಂದು ತಿಳಿದಾಗ ಅವಳು ಕಪ್ಪು ಬಟ್ಟೆ ಹಾಕಿಕೊಂಡು, ಶೂಗಳನ್ನು ದಿನ ಪತ್ರಿಕೆಯಲ್ಲಿ ಸುತ್ತಿಕೊಂಡು ಹೋಗಿ ಅವನ ದೇಹವನ್ನು ನೋಡುವುದಕ್ಕೆ ಫೆರ್ನಾಂಡಳ ಅನುಮತಿ ಕೇಳಿದಳು. ಫೆರ್ನಾಂಡ ಅವಳನ್ನು ಬಾಗಿಲೊಳಗೆ ಬರಲು ಬಿಡಲಿಲ್ಲ. +ಪೆತ್ರಾ ಕೊತೆಸ್ “ನೀವೇ ನನ್ನ ಜಾಗದಲ್ಲಿ ಇದ್ದುಕೊಂಡು ಯೋಚನೆ ಮಾಡಿ. ಈ ಅವಮಾನ ಸಹಿಸೋದಕ್ಕೆ ನಾನು ಅವನನ್ನು ಎಷ್ಟು ಪ್ರೀತಿ ಮಾಡಿರ್‍ಬೇಕು ನೋಡಿ” ಎಂದು ಬೇಡಿಕೊಂಡಳು. +ಫೆರ್ನಾಂಡ “ಇಟ್ಟುಕೊಂಡೋಳಿಗೆ ಎಂಥ ಅವಮಾನಾನೂ ದೊಡ್ಡದಲ್ಲ. ಇನ್ಯಾವನಾದ್ರೂ ನಿನ್ನ ಮಿಂಡ ಸಾಯೋವರೆಗೂ ಕಾದಿದ್ದು ಅವ್ನಿಗೆ ಈ ಶೂನ ಹಾಕು.”ಎಂದು ಉತ್ತರಿಸಿದಳು. +ಸಾಂತ ಸೋಫಿಯಾ ದೆಲಾ ಪಿಯದಾದ್ ಮಾತು ಕೊಟ್ಟ ಹಾಗೆ ಹೊಸೆ ಅರ್ಕಾದಿಯೋ ಸೆಗುಂದೋನ ಹೊಟ್ಟೆಯನ್ನು ಅಡುಗೆ ಚಾಕುವಿನಿಂದ ಸೀಳಿ ಅವನನ್ನು ಜೀವ ಸಹಿತ ಹೂಳುವುದಿಲ್ಲ, ಎನ್ನುವುದನ್ನು ಖಾತರಿಪಡಿಸಿಕೊಂಡಳು. ಎರಡು ದೇಹಗಳನ್ನು ಒಂದೇ ರೀತಿಯ ಶವ ಪೆಟ್ಟಿಗೆಯಲ್ಲಿ ಇಡಲಾಯಿತು. ಅವರಿಬ್ಬರೂ ಸಾವಿನಲ್ಲಿ ಕೂಡ ಹದಿವಯಸ್ಸಿಗೆ ಬರುವ ತನಕ ಒಂದೇ ರೀತಿಯಲ್ಲಿ ಇದ್ದಂತೆ ಇದ್ದದ್ದನ್ನು ಕಾಣಬಹುದಿತ್ತು. ಅವ್ರೇಲಿಯಾನೋನ ಹಳೆಯ ಅತಿ ಕುಡುಕ ಸ್ನೇಹಿತರು, ಅಲ್ಲಿದ್ದ ಪಾತ್ರೆಯ ಮೇಲೆ ಕಡುಗೆಂಪು ಬಣ್ಣದ ರಿಬ್ಬನ್ನಿನ ಮೇಲೆ “ಮುಗಿಸಿ, ಬೇಗ ಮುಗಿಸಿ, ಜೀವನ ಕ್ಷಣಿಕ” ಎಂದು ಬರೆದ ಹೂಗುಚ್ಛವನ್ನು ಇಟ್ಟರು. ಪೆರ್ನಾಂಡಗೆ ಅಂಥ ಅಸಾಂಗತ್ಯದಿಂದ ವಿಪರೀತ ಸಿಟ್ಟು ಬಂದು ಹೂಗುಚ್ಛವನ್ನು ತಿಪ್ಪೆಗೆಸೆಯುವಂತೆ ಹೇಳಿದಳು. ಕೊನೆಗಳಿಗೆಯ ಗೊಂದಲದಲ್ಲಿ ಶವ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋದ ಕುಡುಕರು ಒಂದಕ್ಕೊಂದು ಕಲ್ಪಿಸಿಕೊಂಡು ತಪ್ಪು ಗೋರಿಗಳಲ್ಲಿ ಹೂಳಿದರು. +೧೮ +ಅವ್ರೇಲಿಯಾನೋ ಬಹಳ ಕಾಲದವರೆಗೆ ಮೆಲ್‌ಕಿಯಾದೆಸ್‌ನ ರೂಮನ್ನು ಬಿಡಲಿಲ್ಲ. ಅವನು ಪುಡಿಯಾಗುತ್ತಿದ್ದ ಪುಸ್ತಕಗಳಲ್ಲಿನ ಪ್ರಗಾಥೆಗಳನ್ನು, ಅಪಾಂಗ ಹೆರ್‌ಮನ್‌ನ ಸಿದ್ಧಾಂತಗಳಲ್ಲಿದ್ದ ಹೊಂದಾಣಿಕೆಯನ್ನು ಭೂತ ವಿದ್ಯೆಯಲ್ಲಿರುವ ವಿಜ್ಞಾನವನ್ನು, ಸ್ಪರ್ಶ ಮಣಿಗಳನ್ನು ಅರಿಯುವ ಸೂತ್ರಗಳನ್ನು, ನಾಸ್ಟರ್‌ಡಾಮಸ್‌ನ ‘ಶತಮಾನ\’ಗಳನ್ನು ಬಾಯಿಪಾಠ ಮಾಡಿದ ಮತ್ತು ಪ್ಲೇಗ್ ಬಗ್ಗೆ ಅಧ್ಯಯನ ನಡೆಸಿದ. ಇವೆಲ್ಲದರಿಂದ ಹದಿವಯಸ್ಸಿಗೆ ಬಂದಾಗ ತನ್ನ ಕಾಲದ ಬಗ್ಗೆ ಏನೂ ತಿಳಿಯದೆ ಮಧ್ಯಯುಗದ ಮನುಷ್ಯನ ಬಗ್ಗೆ ಅರಿತುಕೊಂಡ. ಸಾಂತ ಸೋಫಿಯಾ ದೆಲಾ ಪಿಯದಾದ್ ಯಾವುದೇ ಸಮಯದಲ್ಲಿ ಅವನ ರೂಮಿಗೆ ಹೋದರೂ ಅವನು ಓದುವುದರಲ್ಲಿ ಮಗ್ನನಾಗಿರುತ್ತಿದ್ದ. ಮುಂಜಾನೆ ಅವನಿಗೆ ಒಂದು ಲೋಟ ಸಕ್ಕರೆಯಿಲ್ಲದ ಕಾಫಿ ತಂದುಕೊಡುತ್ತಿದ್ದಳು. ಮಧ್ಯಾಹ್ನ ಒಂದು ಪ್ಲೇಟ್ ಅನ್ನ ಹಾಗೂ ಹುರಿದ ಬಾಳೆಕಾಯಿಯನ್ನು ಕೊಡುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ತೀರಿಕೊಂಡಾಗಿನಿಂದ ಮನೆಯಲ್ಲಿ ತಿನ್ನುತ್ತಿದ್ದದ್ದು ಅಷ್ಟನ್ನು ಮಾತ್ರ. ಅವಳು ಅವನಿಗೆ ಹೇರ್‌ಕಟ್ ಮಾಡಿಸಿ, ಹೇನು ತೆಗೆದು, ಮರೆತುಬಿಟ್ಟಿದ್ದ ಟ್ರಂಕುಗಳಲ್ಲಿದ್ದ ಬಟ್ಟೆಗಳನ್ನು ತೆಗೆದು ಅವನ ಅಳತೆಗೆ ಸರಿಮಾಡಿಸಿದಳು. ಅವನಿಗೆ ಮೀಸೆ ಬೆಳೆಯಲು ಶುರುವಾದಾಗ ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಉಪಯೋಗಿಸುತ್ತಿದ್ದ ರೇಜರ್ ಮತ್ತು ಶೇವಿಂಗ್ ಕಪ್ ಮಾಡಿಕೊಂಡಿದ್ದ ಸೋರೆ ಬುರುಡೆಯನ್ನು ತಂದುಕೊಟ್ಟಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳಲ್ಲಿ ಯಾರಿಗೂ ಕೂಡ ಮುಖ್ಯವಾಗಿ ಎದ್ದು ಕಾಣುವ ಚೂಪುಗಲ್ಲ ಹಾಗೂ ಬಿರುದುಟಿಗಳು ಅವ್ರೇಲಿಯಾನೋಗಿರುವಂತೆ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ರೂಮಿನಲ್ಲಿ ಓದುತ್ತಿದ್ದಾಗ ಉರ್ಸುಲಾಗೆ ಆದ ಹಾಗೆ ಅವ್ರೇಲಿಯಾನೋ ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಿದ್ದಾನೆ ಎಂದು ತಿಳಿದಳು. ವಾಸ್ತವವಾಗಿ ಅವನು ಮೆಲ್‌ಕಿಯಾದೆಸ್ ಜೊತೆ ಮಾತಾಡುತ್ತಿದ್ದ. ಅವಳಿ ಸೋದರರು ಸ;ತ್ತ ಸ್ವಲ್ಪ ಕಾಲದ ಮೇಲೆ ಒಂದು ಉರಿಬಿಸಿಲಿನ ದಿನ ಕಿಟಕಿಯ ಬೆಳಕಿಗೆ ಎದುರಾಗಿ, ತಾನು ಹುಟ್ಟುವುದಕ್ಕಿಂತಲೂ ಮುಂಚಿನಿಂದ ಇದ್ದ ನೆನಪೊಂದು ಸಾಕಾರ ಪಡೆದ ಹಾಗೆ, ಕಾಗೆಯ ರೆಕ್ಕೆಯಂಥ ಹ್ಯಾಟ್ ಧರಿಸಿದ್ದ, ಸಪ್ಪೆ ಮುಖದ ಮನುಷ್ಯನೊಬ್ಬನನ್ನು ಕಂಡ. ಅವ್ರೇಲಿಯಾನೋ ಚರ್ಮದ ಹಾಳೆಯ ಮೇಲಿನ ವರ್ಣಮಾಲೆಯನ್ನು ವಿಂಗಡಿಸುವುದನ್ನು ಪೂರೈಸಿದ್ದ. ಆದ್ದರಿಂದ ಮೆಲ್‌ಕಿಯಾದೆಸ್ ಅವು ಯಾವ ಭಾಷೆಯಲ್ಲಿ ಬರೆದಿದೆ ಎಂದು ಅವನನ್ನು ಕೇಳಿದಾಗ ಅವನು ಉತ್ತರ ಕೊಡಲು ಅನುಮಾನಿಸಲಿಲ್ಲ. +ಅವನು “ಸಂಸ್ಕೃತ” ಎಂದು ಹೇಳಿದ. +ಮೆಲ್‌ಕಿಯಾದೆಸ್ ತಾನು ರೂಮಿಗೆ ಹಿಂತಿರುಗುವ ಅವಕಾಶಗಳು ಕಡಿಮೆ ಎಂದ. ಅವನು ಶಾಂತಿಯಿಂದ ಸಾವಿನ ಕೂಪಕ್ಕೆ ಹೋಗುವುದೇಕೆಂದರೆ ಚರ್ಮದ ಹಾಳೆಗಳಿಗೆ ಒಂದು ನೂರು ವರ್ಷವಾಗುವ ತನಕ ಅದರಲ್ಲಿರುವುದನ್ನು ಅರ್ಥೈಸುವುದಕ್ಕೆ ಉಳಿದ ವರ್ಷಗಳಲ್ಲಿ ಅವ್ರೇಲಿಯಾನೋಗೆ ಸಂಸ್ಕೃತವನ್ನು ಕಲಿಯಲು ಸಮಯವಿದೆ ಎಂದ. ಅವನು ಅವ್ರೇಲಿಯಾನೋಗೆ ನದಿಗೆ ಹೋಗುವಾಗ ಇರುವ ಕಿರಿದಾದ ರಸ್ತೆಯೊಂದರಲ್ಲಿ ಬಾಳೆತೋಟದ ಕಂಪನಿಯವರ ಕಾಲದಲ್ಲಿ ಕನಸುಗಳನ್ನು ವಿಶ್ಲೇಷಿಸುವ ಸ್ಥಳವೊಂದಿತ್ತೆಂದೂ, ಅಲ್ಲಿ ಕತಲುನಿಯಾದವನೊಬ್ಬ ಪುಸ್ತಕದ ಅಂಗಡಿ ಇಟ್ಟುಕೊಂಡಿದ್ದಾನೆ ಮತ್ತು ಅಲ್ಲಿ ಸಂಸ್ಕೃತ ಬಾಲಬೋಧೆ ಇರವುದಲ್ಲದೆ, ಅದನ್ನು ಬೇಗ ಕೊಂಡುಕೊಳ್ಳದಿದ್ದರೆ ಇನ್ನು ಆರು ತಿಂಗಳಲ್ಲಿ ಅವನ್ನು ಗೆದ್ದಿಲು ತಿಂದು ಹಾಕುತ್ತವೆ ಎಂದು ಹೇಳಿದ. ಅವ್ರೇಲಿಯಾನೋ ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಪುಸ್ತಕಗಳ ಎರಡನೆ ಶೆಲ್ಫ್‌ನಲ್ಲಿ ಬಲಗಡೆ ಕೊನೆಯಲ್ಲಿ ಜರುಸಲಮ್‌ನ ವಿಮೋಚನೆ ಮತ್ತು ಮಿಲ್ಟನ್ನನ ಪದ್ಯಗಳು ಪುಸ್ತಕಗಳ ಮಧ್ಯೆ ಇರುವ ಆ ಪುಸ್ತಕವನ್ನು ತಂದುಕೊಡಲು ಹೇಳಿದಾಗ ಅವಳು ತನ್ನ ದೀರ್ಘ ಜೀವನದಲ್ಲಿ ಮೊದಲ ಬಾರಿಗೆ ಚಕಿತಗೊಂಡಳು. ಅವಳಿಗೆ ಓದಲು ಬರುತ್ತಿರಲಿಲ್ಲವಾದ್ದರಿಂದ ಅವನು ಹೇಳಿದ್ದನ್ನು ಬಾಯಿಪಾಠ ಮಾಡಿಕೊಂಡಳು ಮತ್ತು ಸೈನಿಕರು ಮನೆಯನ್ನು ಹುಡುಕಿ ಹೋದ ಮೇಲೆ ತನಗೆ ಮತ್ತು ಅವ್ರೇಲಿಯಾನೋಗೆ ಮಾತ್ರ ಬಚ್ಚಿಟ್ಟಿರುವುದು ಎಲ್ಲಿ ಎಂದು ಗೊತ್ತಿದ್ದ ವರ್ಕ್‌ಶಾಪಿನಲ್ಲಿದ್ದ ಹದಿನೇಳು ಬಂಗಾರದ ಮೀನುಗಳಲ್ಲಿ ಒಂದನ್ನು ಮಾರಿದ್ದರಿಂದ ಸ್ವಲ್ಪ ಹಣ ಗಳಿಸಿದಳು. +ಮೆಲ್‌ಕಿಯಾದೆಸ್ ಬಂದು ಹೋಗುವುದು ಬರಬರುತ್ತ ಕಡಿಮೆಯಾಗುತ್ತಿದ್ದ ಹಾಗೆ, ಅವನು ಚಂದ್ರನ ಪ್ರಕಾಶದಲ್ಲಿ ಕರಗಿ ದೂರ ಹೋಗುತ್ತಿದ್ದ ಹಾಗೆ, ಅವ್ರೇಲಿಯಾನೋ ಸಂಸ್ಕೃತದ ಅಭ್ಯಾಸದಲ್ಲಿ ಪ್ರಗತಿ ಹೊಂದಿದ. ತೀರ ಇತ್ತೀಚೆಗೆ ಅವ್ರೇಲಿಯಾನೋ ನೋಡಿದಾಗ ಕಾಣಿಸದಂತಿದ್ದ ಅವನು ಮೆಲುದನಿಯಲ್ಲಿ, “ನಾನು ಸಿಂಗಪೂರಿನ ಮರಳುರಾಶಿಯಲ್ಲಿ ಸತ್ತು ಹೋದೆ” ಎಂದ. ಅನಂತರ ರೂಮು ಧೂಳು, ಧಗೆ, ನುಸಿಹುಳು, ಕೆಂಜಿಗ ಮತ್ತು ಗೆದ್ದಿಲಿಗೆ ಅವಕಾಶ ಕಲ್ಪಿಸಿತು ಮತ್ತು ಅವು ಚರ್ಮ ಹಾಳೆಯ ಜ್ಞಾನಸಂಪತ್ತನ್ನು ಪುಡಿ ಮಾಡಿದವು. +ಮನೆಯಲ್ಲಿ ಆಹಾರಕ್ಕೆ ಕೊರತೆ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ಸತ್ತ ಮಾರನೆಯ ದಿನ ಅಸಾಂಗತ್ಯ ಬರಹವನ್ನು ತಂದಿದ್ದ ಅವನ ಸ್ನೇಹಿತರಲ್ಲೊಬ್ಬ ಫೆರ್ನಾಂಡಳಿಗೆ ಅವಳ ಗಂಡನಿಗೆ ಕೊಡಬೇಕಾಗಿದ್ದ ಒಂದಿಷ್ಟು ಹಣ ತಂದು ಕೊಟ್ಟ. ಅದಾದ ಮೇಲೆ ಪ್ರತಿ ಬುಧವಾರ ಒಬ್ಬ ಹುಡುಗ ಬುಟ್ಟಿಯಲ್ಲಿ ಅಡುಗೆ ಪದಾರ್ಥವನ್ನು ತಂದುಕೊಡುತ್ತಿದ್ದ ಮತ್ತು ಅದು ಒಂದು ವಾರಕ್ಕೆ ಸಾಕಾಗುತ್ತಿತ್ತು. ಆ ಸಾಮಾನುಗಳನ್ನು ಪೆತ್ರಾ ಕೊತೆಸ್ ತನಗೆ ಅವಮಾನ ಮಾಡಿದವಳಿಗೆ ದಾನ ಮಾಡುತ್ತ ಹೋಗುವುದೇ ಅವಳನ್ನು ಅವಮಾನಿಸುವ ದಾರಿ ಎಂದು ಕೊಟ್ಟು ಕಳಿಸುತ್ತಿದ್ದಾಳೆ ಎಂದು ಯಾರಿಗೂ ತಿಳಿಯಲಿಲ್ಲ. ಆದರೆ ಆ ದ್ವೇಷ ಅವಳು ನಿರೀಕ್ಷಿಸಿದ್ದಕ್ಕಿಂತಲೂ ಬೇಗನೆ ಕರಗಿ ಹೋಗಿ, ಪ್ರತಿಷ್ಠೆಯಿಂದ ಹಾಗೂ ಕೊನೆಗೆ ಅಂತಃಕರಣದಿಂದ ಅಡುಗೆ ಪದಾರ್ಥಗಳನ್ನು ಕಳಿಸುತ್ತಿದ್ದಳು. ಅನೇಕ ಸಲ ಅವಳಿಗೆ ಲಾಟರಿ ವ್ಯವಸ್ಥೆ ಮಾಡಲು ಪ್ರಾಣಿಗಳೇ ಇರುತ್ತಿರಲಿಲ್ಲ ಮತ್ತು ಜನರು ಅದರಲ್ಲಿ ಆಸಕ್ತಿ ಕಳೆದುಕೊಂಡರು. ಅನೇಕ ಸಲ ಫೆರ್ನಂಡ ಏನಾದರೂ ತಿನ್ನಲಿ ಎಂದು ತಾನು ಉಪವಾಸವಿರುತ್ತಿದ್ದಳು. ಅವಳು ಅದನ್ನು ಅವಳ ಶವಯಾತ್ರೆಯ ತನಕ ವ್ರತದ ಹಾಗೆ ಕಾಪಾಡಿಕೊಂಡು ಬಂದಳು. +ಮನೆಯಲ್ಲಿ ಜನರ ಸಂಖ್ಯೆ ಕಡಿಮೆಯಾದ್ದರಿಂದ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅರ್ಧ ಶತಮಾನ ಕೆಲಸ ಮಾಡಿದ ನಂತರ ದೊರೆಯಬೇಕಾಗಿದ್ದ ವಿಶ್ರಾಂತಿ ಸಿಗಬೇಕಾಗಿತ್ತು. ಆ ಕುಟುಂಬದಲ್ಲಿ ದೇವತೆಯಂಥ ಸುಂದರಿ ರೆಮಿದಿಯೋಸ್ ಮತ್ತು ನಿಗೂಢ ವ್ಯಕ್ತಿ ಹೊಸೆ ಅರ್ಕಾದಿಯೋ ಸೆಗುಂದೋನಂಥವರನ್ನು ಹುಟ್ಟಿಸಿದ, ಎಂದೂ ತುಟಿಪಿಟಕ್ಕೆನ್ನದ, ತನ್ನ ಇಡೀ ಜೀವನದ ಏಕಾಂತತೆ ಹಾಗೂ ಸಂಕಲ್ಪವನ್ನು, ತನ್ನ ಮಕ್ಕಳೋ ಅಥವಾ ಮೊಮ್ಮಕ್ಕಳೋ ಎಂದು ಅರಿಯದೆ ಅವರನ್ನು ಪಾಲಿಸುವುದರಲ್ಲೇ ಕಳೆದಳು. ಅವ್ರೇಲಿಯಾನೋನನ್ನು ತಾನವನ ಮುತ್ತಜ್ಜಿ ಎಂದೂ ತಿಳಿಯದೆ ತನ್ನ ಹೊಟ್ಟೆಯಲ್ಲಿ ಹುಟ್ಟಿದವನಂತೆ ನೋಡಿಕೊಂಡಳು. ಅವಳು ಅಡುಗೆ ಮನೆಯ ನೆಲದ ಮೇಲೆ ಇಲಿಗಳ ಚೀಗುಟ್ಟುವಿಕೆಯ ಮಧ್ಯೆ ಮಲಗುವುದನ್ನು ಅಂಥ ಮನೆಯಲ್ಲಿ ಮಾತ್ರ ಕಲ್ಪಿಸಿಕೊಳ್ಳುವುದು ಸಾಧ್ಯ. ಅವಳು ಒಂದು ದಿನ ಕತ್ತಲಲ್ಲಿ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬ ಭಾವನೆಯಿಂದ ಎಚ್ಚರಗೊಂಡಳು. ಆಗ ಹಾವೊಂದು ಅವಳ ಹೊಟ್ಟೆಯ ಮೇಲೆ ಹರಿದು ಹೋಗುತ್ತಿತ್ತು. ಅವಳು ಅದನ್ನು ಯಾರಿಗೂ ಹೇಳಲಿಲ್ಲ. ಉರ್ಸುಲಾಗೆ ಅದನ್ನು ಹೇಳಿದ್ದರೆ ತನ್ನ ಹಾಸಿಗೆಯಲ್ಲೇ ಮಲಗು ಎಂದು ಹೇಳುತ್ತಾಳೆಂದೂ ಅವಳಿಗೆ ಗೊತ್ತಿತ್ತು. ಆದರೆ ಆ ದಿನಗಳಲ್ಲಿ ಅಂಗಳದಲ್ಲಿ ನಿಂತು ಕೂಗದಿದ್ದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಬಂದೂಕಿನ ಶಬ್ದ, ಯುದ್ಧದ ಅಚ್ಚರಿಗಳು, ಮಕ್ಕಳ ಯೋಗಕ್ಷೇಮ ಇವುಗಳ ಮಧ್ಯೆ ಮತ್ತೊಬ್ಬರ ಸುಖದ ಬಗ್ಗೆ ಯೋಚಿಸುವಷ್ಟು ಸಮಯವಿರಲಿಲ್ಲ. ಎಂದೂ ನೋಡದ ಪೆತ್ರಾ ಕೊತೆಸ್ ಒಬ್ಬಳೇ ಅವಳನ್ನು ನೆನಪಿನಲ್ಲಿಟ್ಟುಕೊಂಡಿದ್ದವಳು. ಅವಳಿಗೆ ಯಾವಾಗಲೂ ಚಪ್ಪಲಿ ಇರುವಂತೆ, ಲಾಟರಿ ವ್ಯವಹಾರ ಯಾವುದೋ ಪವಾಡದ ಹಾಗೆ ನಡೆಯುತ್ತಿದ್ದಾಗಲೂ ಕೂಡ ಉಟ್ಟುಕೊಳ್ಳುವುದಕ್ಕೆ ಬಟ್ಟೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಫೆರ್ನಾಂಡ ಮನೆಗೆ ಬಂದಾಗ ಅವಳನ್ನು ವಯಸ್ಸೇ ಆಗದ ಕೆಲಸದವಳಂತೆ ತಿಳಿದುಕೊಳ್ಳಲು ಕಾರಣವಿತ್ತು. ಅವಳು ತನ್ನ ಗಂಡನ ತಾಯಿಯೆಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದರೂ ಅದನ್ನು ಮರೆಯುವುದಕ್ಕಿಂತ ಪತ್ತೆ ಹಚ್ಚುವುದಕ್ಕೇ ಹೆಚ್ಚಿಗೆ ಸಮಯ ಹಿಡಿಯಿತು. ಸಾಂತ ಸೋಫಿಯಾ ದೆಲಾ ಪಿಯದಾದ್ ತನಗೆ ಸಿಕ್ಕಿದ ಅಲ್ಪ ಸ್ಥಾನವನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅವಳು ಗೊಣಗಾಡದೆ ಮೂಲೆಯಲ್ಲೆಲ್ಲೋ ಇರುವುದಕ್ಕೆ ಇಷ್ಟಪಡುವಳೆಂಬ ಭಾವನೆ ಬರುತ್ತಿತ್ತು. ಅಲ್ಲದೆ ಅವಳು ತನ್ನ ಎಳೆಯ ದಿನಗಳಲ್ಲಿ ಮತ್ತು ಮುಖ್ಯವಾಗಿ ಬಾಳೆ ತೋಟದ ಕಂಪನಿಯವರಿದ್ದಾಗ ಇದ್ದ ದೊಡ್ಡ ಮನೆಗೆ ಹೋಲಿಸಿದರೆ ಅವಳಿದ್ದದ್ದು ಮನೆಗಿಂತ ಹೆಚ್ಚಾಗಿ ಸಿಪಾಯಿಗಳಿರುವ ಮನೆಯಾಗಿತ್ತು. ಆದರೆ ಉರ್ಸುಲಾ ಸತ್ತ ಮೇಲೆ ಅಮಾನುಷ ದೃಢತೆ ಮತ್ತು ಕೆಲಸ ಮಾಡುವ ಸಾಮರ್ಥ್ಯ ತೀರಾ ಕಡಿಮೆಯಾಯಿತು. ಅವಳಿಗೆ ವಯಸ್ಸಾಗಿ ಸುಸ್ತಾದದ್ದಲ್ಲದೆ ರಾತ್ರೋರಾತ್ರಿ ಇಡೀ ಮನೆ ದುರ್ಬಲತೆಯ ಮಡುವಿನಲ್ಲಿ ಮುಳುಗಿತು. ಗೋಡೆಗಳ ಮೇಲೆ ಪಾಚಿ ಕಟ್ಟಿತು. ಅಂಗಳದಲ್ಲಿ ಓಡಾಡುವರಿಲ್ಲದೆ, ಗಾಜಿನಂತೆ ಕಾಂಕ್ರೀಟನ್ನೊಡೆದು ಬಳ್ಳಿಗಳು ಹೊರಬಂದವು. ಆ ಸಂದಿಗಳ ಒಳಗಿನಿಂದ ಒಂದು ಶತಮಾನದ ಹಿಂದೆ ಉರ್ಸುಲಾ ಮೆಲ್‌ಕಿಯಾದೆಸ್‌ನ ಕಟ್ಟಿಸಿದ ಹಲ್ಲಗಳನ್ನು ಇಡುತ್ತಿದ್ದ ಗಾಜಿನ ಬಟ್ಟಲಲ್ಲಿ ಬೆಳೆದಿದ್ದ ಅಂಥದೇ ಹಳದಿ ಹೂಗಳು ಬೆಳೆದವು. ಪ್ರಕೃತಿಗೆ ಸವಾಲೊಡ್ಡಲು ಸಮಯ ಮತ್ತು ಸಂಪನ್ಮೂಲಗಳು ಇಲ್ಲದ ಕಾರಣ ಸಾಂತ ಸೋಫಿಯಾ ದೆಲಾ ಪಿಯದಾದ್, ದಿನವೆಲ್ಲ ಬೆಡ್‌ರೂಮಿನಿಂದ ಹಲ್ಲಿಗಳನ್ನು ಓಡಿಸುತ್ತಾ ಕಳೆದರೆ, ಅವು ರಾತ್ರಿ ವಾಪಸು ಬರುತ್ತಿದ್ದವು. ಒಂದು ದಿನ ಕೆಂಜಿಗಗಳು ಆಗಲೆ ಹಾಳಾಗಿದ್ದ ಅಡಿಪಾಯವನ್ನು ಬಿಟ್ಟು ಕೈತೋಟವನ್ನು ದಾಟಿ, ಮಣ್ಣಿನ ಬಣ್ಣವಾಗಿದ್ದ ಬೆಗೇನಿಯಾ ಗಿಡಗಳಿದ್ದ ಸ್ಥಳದಲ್ಲಿದ್ದ ಕಂಬಿಗಳನ್ನು ಹತ್ತಿ ಮನೆಯ ಮಧ್ಯಕ್ಕೆ ಕೊರೆದು ಬಂದಿದ್ದವು. ಪ್ರಾರಂಭದಲ್ಲಿ ಪೊರಕೆಯಿಂದ ಅನಂತರ ಕ್ರಿಮಿನಾಶಕ ಮತ್ತು ಕೊನೆಗೆ ಉಪ್ಪು ನೀರಿನಿಂದ ಅವುಗಳನ್ನು ಕೊಲ್ಲಲು ಪ್ರಯತ್ನಿಸಿದಳು. ಆದರೆ ಮರುದಿನ ಅವು ಬಿಡದೆ ಮತ್ತೆ ಅದೇ ಸ್ಥಳಕ್ಕೆ ಬರುತ್ತಿದ್ದವು. ಮಕ್ಕಳಿಗೆ ಕಾಗದ ಬರೆಯುವುದರಲ್ಲಿ ನಿರತಳಾಗಿದ್ದ ಫೆರ್ನಾಂಡಗೆ ತಡೆಯಿಲ್ಲದೆ ಅವು ಹಾಳುಗೆಡುವುತ್ತಿದ್ದ ಕಡೆ ಗಮನವಿರಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಒಬ್ಬಳೇ, ಅಡುಗೆ ಮನೆಗೆ ಬಾರದಿರುವಂತೆ ಮತ್ತು ಗೋಡೆಗಳಲ್ಲಿ ಕಟ್ಟಿದ್ದ ಬಳ್ಳಿಗಳನ್ನು ಕಿತ್ತು ಹಾಕಿದರೂ ಕೆಲವೇ ಗಂಟೆಗಳಲ್ಲಿ ಕಟ್ಟುತ್ತಿದ್ದ ಜೇಡರ ಬಲೆಗಳನ್ನು ಮತ್ತು ಗೆದ್ದಲುಗಳನ್ನು ಕೆರೆದು ಹಾಕುತ್ತಿದ್ದಳು. ಆದರೆ ಪ್ರತಿ ದಿನ ಮೂರು ಸಲ ಗುಡಿಸಿದರೂ ಮೆಲ್‌ಕಿಯಾದೆಸ್‌ನ ರೂಮಿನಲ್ಲಿರುವ ಧೂಳು, ಜೇಡರ ಬಲೆಗಳನ್ನು ಕಂಡಾಗ ಮತ್ತು ಚೆನ್ನಾಗಿ ಶುಚಿ ಮಾಡಿದಷ್ಟೂ ಕೊಳೆ ಹೋಗಲಿಲ್ಲ. ಹಾಗೂ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ಹರೆಯದ ಅಧಿಕಾರಿ ಮುಂದಾಗುವ ಯಾತನೆಯನ್ನು ತಿಳಿಸಿದ್ದರ ಹಿನ್ನೆಲೆಯಲ್ಲಿ ಅವಳಿಗೆ ತಾನು ಸೋತೆನೆಂದು ಅರಿವಾಯಿತು. ಅನಂತರ ಅವಳು ಭಾನುವಾರದ ಹಳೆಯ ಬಟ್ಟೆಗಳನ್ನು ಉಟ್ಟುಕೊಂಡು ಉರ್ಸುಲಾಳ ಹಳೆಯ ಶೂ ಹಾಗೂ ಅಮರಾಂತ ಉರ್ಸುಲಾ ಕೊಟ್ಟ ಒಂದು ಜೊತೆ ಕಾಲುಚೀಲವನ್ನು ಹಾಕಿಕೊಂಡಳು ಮತ್ತು ಉಳಿದ ಬಟ್ಟೆಗಳನ್ನು ಗಂಟು ಕಟ್ಟಿದಳು. +ಅವಳು ಅವ್ರೇಲಿಯಾನೋಗೆ, “ನನ್ನ ಕೈಲಿ ಇನ್ನಾಗಲ್ಲ. ಇದೆಲ್ಲ ವಯಸ್ಸಾದ ನನ್ನ ಶಕ್ತಿಗೆ ಮೀರಿದ್ದು” ಎಂದಳು. +ಅವ್ರೇಲಿಯಾನೋ ಅವಳನ್ನು ಎಲ್ಲಿಗೆ ಹೋಗುತ್ತೀಯ ಎಂದು ಕೇಳಿದ್ದಕ್ಕೆ ಏನೆಂದು ತಿಳಿಯದಂತೆ ಸುಮ್ಮನೆ ಕೈ ಅಲ್ಲಾಡಿಸಿದಳು. ಅವಳು ತನ್ನ ಸಂಬಂಧಿ ಇರುವ ರಿಯೋ‌ಅಕದಲ್ಲಿ ಕೊನೆಯ ದಿನಗಳು ಕಳೆಯಬೇಕೆಂದಿರುವುದನ್ನು ನಿಖರವಾಗಿ ತಿಳಿಸಲು ಪ್ರಯತ್ನಪಟ್ಟಳು. ಅದು ಹಾಗೆಂದು ಕಾಣುವ ವಿವರಣೆಯಾಗಿರಲಿಲ್ಲ ಅವಳ ತಂದೆ ತಾಯಿ ಸತ್ತ ಮೇಲೆ ಅವಳಿಗೆ ಯಾರಿಂದಲೂ ಕಾಗದವಾಗಲೀ ಸಂದೇಶವಾಗಲೀ ಬಂದಿರಲಿಲ್ಲ ಮತ್ತು ಆ ಊರಿನಲ್ಲಿ ಯಾರೊಂದಿಗೂ ಸಂಪರ್ಕವಿರಲಿಲ್ಲ. ಜೊತೆಗೆ ಅವಳು ಯಾವ ಸಂಬಂಧಿಕರನ್ನು ಕುರಿತು ಮಾತನಾಡಿರಲಿಲ್ಲ. ಅವಳು ತನ್ನ ಬಳಿ ಇದ್ದ ಒಂದು ಪೇಸೋ ಮತ್ತು ಇಪ್ಪತ್ತೈದು ಸೆಂಟುಗಳನ್ನು ಮಾತ್ರ ತೆಗೆದುಕೊಂಡು ಹೊರಟು ಹೋಗುತ್ತೇನೆಂದು ಹಠ ಮಾಡಿದಾಗ ಅವ್ರೇಲಿಯಾನೋ ಅವಳಿಗೆ ಹದಿನಾಲ್ಕು ಬಂಗಾರದ ಸಣ್ಣ ಮೀನುಗಳನ್ನು ಕೊಟ್ಟ. ರೂಮಿನ ಕಿಟಕಿಯಿಂದ ಅವಳು ಬಟ್ಟೆಯ ಗಂಟನ್ನು ಹಿಡಿದುಕೊಂಡು ಅಂಗಳವನ್ನು ದಾಟಿದ್ದು ಮತ್ತು ಮುಂಬಾಗಿಲಿನಲ್ಲಿದ್ದ ಸಣ್ಣ ತೆರೆದ ಜಾಗದಿಂದ ಕೈ ತೂರಿಸಿದ್ದು ಅವನಿಗೆ ಕಾಣಿಸಿತು. ಅವಳು ಹೊರಗೆ ಹೋದ ಮೇಲೆ ಅಡ್ಡಪಟ್ಟಿಯನ್ನು ಮುಂಚಿನ ರೀತಿಯಲ್ಲೆ ಇಟ್ಟಳು. ಅನಂತರ ಅವಳ ಬಗ್ಗೆ ಏನೂ ಕೇಳಿಬರಲಿಲ್ಲ. +ಅವಳು ಹೊರಟು ಹೋದದ್ದನ್ನು ತಿಳಿದ ಫೆರ್ನಾಂಡ ಇಡೀ ದಿನ ಟ್ರಂಕುಗಳನ್ನು, ಬಟ್ಟೆಗಳನ್ನು, ಕಪಾಟುಗಳನ್ನು ಒಂದೊಂದಾಗಿ ಪರೀಕ್ಷಿಸಿ, ಸಾಂತ ಸೋಫಿಯಾ ದೆಲಾ ಪಿಯದಾದ್ ಏನನ್ನಾದರೂ ಹಾರಿಸಿಕೊಂಡು ಹೋಗಿದ್ದಾಳೆಯೋ ಏನೋ ಎಂದು ನೋಡಿದಳು. ಅವಳು ತನ್ನ ಜೀವನದಲ್ಲಿ ಮೊದಲ ಸಲ ಉರಿ ಹಚ್ಚಲು ಹೋಗಿ ಬೆರಳುಗಳನ್ನು ಸುಟ್ಟುಕೊಂಡಳು ಮತ್ತು ಕಾಫಿ ಹೇಗೆ ಮಾಡಬೇಕೆಂದು ತೋರಿಸಲು ಅವಳು ಅವ್ರೇಲಿಯಾನೋನನ್ನು ಕೇಳಬೇಕಾಯಿತು. ಸಮಯ ಕಳೆದಂತೆ ಅವನು ಅಡುಗೆ ಮನೆಯ ಕೆಲಸಗಳನ್ನು ವಹಿಸಿಕೊಂಡ. ಫೆರ್ನಾಂಡ ಎದ್ದಾಗ ಬೆಳಗಿನ ತಿಂಡಿ ಸಿದ್ಧವಾಗಿರುತ್ತಿತ್ತು. ಅವಳು ಮತ್ತೆ ತನ್ನ ರೂಮಿನಿಂದ ಅವ್ರೇಲಿಯಾನೋ ಸಣ್ಣ ಕೆಂಡದ ಮೇಲೆ ಇಟ್ಟಿರುತ್ತಿದ್ದ ಊಟವನ್ನು ತೆಗೆದುಕೊಂಡು ಹೋಗಲು ಮಾತ್ರ ಹೊರಗೆ ಬರುತಿದ್ದಳು. ಅವಳು ಅದನ್ನು ಟೇಬಲ್ ಕ್ಲಾತ್ ಹಾಕಿರುವ ಹಾಗೂ ದೀಪಸ್ತಂಭಗಳನ್ನು ಇಡುತ್ತಿದ್ದ ಟೇಬಲ್ಲಿನಲ್ಲಿ ಖಾಲಿಯಿರುವ ಹದಿನೈದು ಕುರ್ಚಿಗಳ ಎದುರಿಗೆ ಒಬ್ಬಳೇ ಕುಳಿತುಕೊಳ್ಳುತ್ತಿದ್ದಳು. ಅಂತಹ ಸಂದರ್ಭಗಳಲ್ಲಿ ಕೂಡ ಫೆರ್ನಾಂಡ ಮತ್ತು ಅವ್ರೇಲಿಯಾನೋ ತಮ್ಮ ಏಕಾಂತವನ್ನು ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಅವರು ತಮ್ಮಷ್ಟಕ್ಕೇ ಇದ್ದು ತಮ್ಮ ತಮ್ಮ ರೂಮುಗಳನ್ನು ಸ್ವಚ್ಛಮಾಡಿಕೊಳ್ಳುತ್ತಿದ್ದರಾದರೂ ಗುಲಾಬಿ ಪೊದೆಗಳ ಮೇಲೆ ಮಂಜಿನ ಹಾಗೆ ಜೇಡರ ಬಲೆಗಳು ಬೀಳುತ್ತಿದ್ದವು. ತೊಲೆಗಳ ಮೇಲೆ ಚಾಪೆ ಹಾಸಿದಂತೆ ಹಬ್ಬುತ್ತಿದ್ದವು, ಗೋಡೆಗಳ ಮೇಲೆ ಕುಷನ್ನಿನ ಹಾಗೆ ಹೆಣೆಯುತ್ತಿದ್ದವು. ಸರಿ ಸುಮಾರು ಅದೇ ಸಮಯದಲ್ಲಿ ಫೆರ್ನಾಂಡಳಿಗೆ ಮನೆ ದೆವ್ವಗಳಿಂದ ತುಂಬಿದೆ ಎಂಬ ಭಾವನೆ ಬಂತು. ವಸ್ತು, ಅದರಲ್ಲೂ ದಿನನಿತ್ಯ ಉಪಯೋಗಿಸುವಂಥವು ತಮ್ಮಷ್ಟಕ್ಕೆ ತಾವೇ ಸ್ಥಳ ಬದಲಾವಣೆ ಮಾಡಿಕೊಳ್ಳುವ ಪರಿಪಾಠ ಪ್ರಾರಂಭಿಸಿದ್ದವು. ತಾನು ಹಾಸಿಗೆಯ ಮೇಲೆ ಇಟ್ಟಿದ್ದೇನೆಂದು ಖಾತರಿಯಿದ್ದ ಉಣ್ಣೆಗತ್ತರಿಗಳನ್ನು ಹುಡುಕಲು ಸಮಯ ವ್ಯರ್ಥಮಾಡುತ್ತಿದ್ದಳು. ಮನೆಯೆಲ್ಲ ಹುಡುಕಿದ ಮೇಲೆ ಅದು ಅಡುಗೆಯ ಮನೆಯ ಶೆಲ್ಪೊಂದರಲ್ಲಿ ಸಿಗುತ್ತಿತ್ತು. ಆದರೆ ಅವಳು ತಾನು ನಾಲ್ಕು ದಿನಗಳಿಂದ ಅಲ್ಲಿಗೆ ಹೋಗಿಯೇ ಇಲ್ಲವೆಂದು ತಿಳಿದುಕೊಂಡಿರುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಬೆಳ್ಳಿಯ ಬೋಗುಣಿಯಲ್ಲಿ ಫೋರ್ಕ್ ಇರುತ್ತಿರಲಿಲ್ಲ ಮತ್ತು ಅವುಗಳಲ್ಲಿ ಆರು ಪವಿತ್ರ ಪೀಠದಲ್ಲಿ ಹಾಗೂ ಮೂರು ಬಟ್ಟೆ ಒಗೆಯುವ ಸ್ಥಳದಲ್ಲಿ ಕಾಣುತ್ತಿದ್ದವು. ಈ ಹುಡುಕಾಟ ಅವಳು ಬರೆಯುವುದಕ್ಕೆ ಕುಳಿತಾಗ ಇನ್ನೂ ಸುಸ್ತು ತರಿಸುತ್ತಿತ್ತು. ಬಲಗಡೆ ಇಟ್ಟ ಮಸಿ ಕುಡಿಕೆ ಎಡಗಡೆ ಇರುತ್ತಿತ್ತು. ಮಸಿ ಹೀರುವ ಕಾಗದ ಕಳೆದುಹೋಗಿ ಎರಡು ದಿನಗಳ ನಂತರ ದಿಂಬಿನ ಕೆಳಗೆ ಸಿಗುತ್ತಿತ್ತು. ಹೊಸೆ ಅರ್ಕಾದಿಯೋಗೆ ಬರೆದ ಹಾಳೆಗಳು ಅಮರಾಂತ ಉರ್ಸುಲಾಳ ಕಾಗದಗಳ ಜೊತೆಯಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅಲ್ಲದೆ ಅವಳು ಒಬ್ಬರಿಗೆ ಬರೆದ ಕಾಗದಗಳನ್ನು ಮತ್ತೊಬ್ಬರ ಕವರುಗಳಲ್ಲಿ ಹಾಕಿದ್ದೇನೆಂದು ಯಾವಾಗಲೂ ನೊಂದುಕೊಳ್ಳುತ್ತಿದ್ದಳು. ಜೊತೆಗೆ ಅನೇಕ ಸಲ ನಿಜಕ್ಕೂ ಹೀಗಾಗಿತ್ತು. ಒಂದು ಸಲ ಅವಳು ಪೆನ್ ಕಳೆದುಕೊಂಡಳು. ಎರಡು ವಾರಗಳ ನಂತರ ಟಪಾಲು ಕೊಡುವವನು ಅವನ ಬ್ಯಾಗ್‌ನಲ್ಲಿದೆ ಎಂದು ಹೇಳಿ ವಾಪಸು ಕೊಟ್ಟ. ಅವನು ಅದು ಯಾರದ್ದು ಎಂದು ಕೇಳುತ್ತ ಮನೆಯಿಂದ ಮನೆಗೆ ಹೋದ. ಪ್ರಾರಂಭದಲ್ಲಿ ಅವಳು ಗರ್ಭಕೋಶ ಪಲ್ಲಟದ ಉಪಕರಣಗಳಂತೆ ಅದು ಕಾಣದ ಡಾಕ್ಟರುಗಳ ಕಿತಾಪತಿ ಎಂದು ತಿಳಿದುಕೊಂಡಿದ್ದಳು ಮತ್ತು ತನ್ನಷ್ಟಕ್ಕೆ ಬಿಟ್ಟು ಬಿಡಿ ಎಂದು ಕೇಳಿ ಅವರಿಗೆ ಪತ್ರ ಬರೆಯುವುದರಲ್ಲಿದ್ದಳು ಕೂಡ. ಆದರೆ ಅವಳು ಇನ್ನೇನೋ ಮಾಡಬೇಕಾದ್ದರಿಂದ ನಿಲ್ಲಿಸಿದಳು. ಅವಳು ವಾಪಸು ಹೋದಾಗ ಬರೆಯುತ್ತಿದ್ದ ಕಾಗದ ಅಲ್ಲಿರಲಿಲ್ಲ ಮತ್ತು ತಾನು ಅವಳಿಗೆ ಬರೆಯುತ್ತಿದ್ದರ ಕಾರಣವೂ ಮರೆತು ಹೋಯಿತು. ಸ್ವಲ್ಪ ಕಾಲ ಇದಕ್ಕೆಲ್ಲ ಅವ್ರೇಲಿಯಾನೋ ಕಾರಣವಿರಬೇಕು ಎಂದು ಭಾವಿಸಿ ಅವನ ಮೇಲೆ ನಿಗಾ ಇಟ್ಟಿದ್ದಳು. ಅವನು ಓಡಾಡುವ ಕಡೆ ಸಾಮಾನುಗಳನ್ನಿಟ್ಟು ಅದನ್ನು ಬದಲಾಯಿಸುವಾಗ ಅವನನ್ನು ಹಿಡಿಯಬೇಕೆಂದಿದ್ದಳು. ಆದರೆ ಅವಳಿಗೆ ಅವ್ರೇಲಿಯಾನೋ ಅಡುಗೆ ಮನೆಗೆ ಮತ್ತು ಬಚ್ಚಲು ಮನೆಗೆ ಹೋಗುವುದಕ್ಕೆ ಬಿಟ್ಟರೆ ಮೆಲ್‌ಕಿಯಾದೆಸ್‌ನ ರೂಮಿನಿಂದ ಆಚೆ ಬರುತ್ತಿಲ್ಲವೆಂದು ಬೇಗನೆ ಗೊತ್ತಾಯಿತು. ಅಲ್ಲದೆ ಅವನು ಕಿತಾಪತಿ ಮಾಡುವ ಮನುಷ್ಯನಲ್ಲವೆಂದು ಕೂಡ. ಆದ್ದರಿಂದ ಕೊನೆಗೆ ಅವಳು ಅದೆಲ್ಲ ದೆವ್ವಗಳ ಕಾಟವೆಂದು ನಂಬಿದಳು ಮತ್ತು ಸಾಮಾನುಗಳನ್ನು ಅವುಗಳನ್ನು ಉಪಯೋಗಿಸುವ ಸ್ಥಾನದಲ್ಲಿ ಇರಿಸಲು ಭದ್ರ ವ್ಯವಸ್ಥೆ ಮಾಡಲು ನಿರ್ಧರಿಸಿದಳು. ಉಣ್ಣೆಗತ್ತರಿಯನ್ನು ಹಾಸಿಗೆಯ ತಲೆಯ ಭಾಗದ ಹತ್ತಿರ ಉದ್ದನೆಯ ದಾರದಿಂದ ಕಟ್ಟಿದಳು. ಪೆನ್ನು ಮತ್ತು ಮಸಿ ಹೀರುವ ಪೇಪರನ್ನು ಟೇಬಲ್ಲಿನ ಎಡಭಾಗದಲ್ಲಿ ಇಟ್ಟಳು ಮತ್ತು ಇಂಕ್ ಬಾಟಲನ್ನು ಸಾಮಾನ್ಯವಾಗಿ ತಾನು ಬರೆಯುವ ಕಡೆ ಬಲಗಡೆಯಲ್ಲಿಟ್ಟು, ಕೊನೆಗೆ ಅಲ್ಲಾಡದಂತೆ ಮಾಡಿದಳು. ಸಮಸ್ಯೆಗಳು ತಕ್ಷಣವೇ ಬಗೆಹರಿಯಲಿಲ್ಲ. ಕಟ್ಟಿದ ಕೆಲವೇ ಗಂಟೆಗಳಲ್ಲಿ ದೆವ್ವಗಳು ಕಡಿಮೆ ಮಾಡಿದವೋ ಎನ್ನುವಂತೆ ಅದನ್ನು ಉಪಯೋಗಿಸಿ ಕಟ್ ಮಾಡಲು ಸಾಧ್ಯವಾಗದಂತಾಯಿತು. ಪೆನ್ನಿಗೆ ಕಟ್ಟಿದ್ದಕ್ಕೂ ಹಾಗೆಯೇ ಆಯಿತು. ಮತ್ತು ಸ್ವಲ್ಪ ಕಾಲದಲ್ಲಿಯೇ ಅವಳ ಕೈ ಕೂಡಾ ಇಂಕ್ ಬಾಟಲ್ ತಲುಪದಂತಾಯಿತು. ಬ್ರುಸೆಲ್ಸ್‌ನಲ್ಲಿದ್ದ ಅಮರಾಂತ ಉರ್ಸುಲಾಗೆ ಅಥವಾ ರೋಮ್‌ನಲ್ಲಿದ್ದ ಹೊಸೆ ಅರ್ಕಾದಿಯೋಗೆ ಈ ಅನಾಹುತಗಳ ಬಗ್ಗೆ ತಿಳಿಯಲಿಲ್ಲ. ತಾನು ಸುಖವಾಗಿರುವೆನೆಂದು ಫೆರ್ನಾಂಡ ಅವರಿಗೆ ತಿಳಿಸಿದಳು. ವಾಸ್ತವವಾಗಿ ಅವಳು ಹಾಗೆಯೇ ಇದ್ದಳು. ಏಕೆಂದರೆ ಅವಳು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಮುಕ್ತಳಾಗಿದ್ದಳು. ಅವಳಿಗೆ ತನ್ನ ತಂದೆ ತಾಯಿಯ ಮನೆಯಲ್ಲಿದ್ದಂತೆ ದೈನಂದಿನ ಸಮಸ್ಯೆಗಳಿಂದ, ಅವು ಮುಂಚೆಯೇ ನಿವಾರಣೆಯಾಗುತ್ತಿದ್ದ ರೀತಿಯಲ್ಲಿ ತನ್ನ ಜೀವನ ಸಾಗುತ್ತಿದೆ ಎಂದು ಭಾವಿಸಿದಳು. ಅವಳು ಮಾಡುತ್ತಿದ್ದ ಮುಖ್ಯವಾಗಿ ಕೊನೆಯಿಲ್ಲದ ಪತ್ರ ವ್ಯವಹಾರದಿಂದ ಸಾಂತ ಸೋಫಿಯಾ ಪಿಯದಾದ್ ಹೊರಟು ಹೋದ ಮೇಲೆ ಕಾಲದ ಬಗ್ಗೆ ಹಿಡಿತ ತಪ್ಪಿತು. ಅವಳಿಗೆ ದಿನ, ತಿಂಗಳು, ವರ್ಷಗಳ ಬಗ್ಗೆ ಸರಿಯಾದ ಪರಿಕಲ್ಪನೆ ಇತ್ತು. ಏಕೆಂದರೆ ಅವಳ ಮಕ್ಕಳು ಹಿಂದಿರುಗಿ ಬರುವ ತಾರೀಖನ್ನು ಅವು ಸೂಚಿಸುತ್ತಿದ್ದವು. ಆದರೆ ಮತ್ತೆ ಮತ್ತೆ ಅವರು ಅದನ್ನು ಮುಂದೆ ಹಾಕಿದಾಗ ಅವಳಿಗೆ ತಾರೀಖುಗಳಲ್ಲಿ ಗೊಂದಲ ಉಂಟಾಯಿತು. ಅವಧಿಗಳು ತಪ್ಪಿಹೋದವು ಮತ್ತು ಒಂದೇ ದಿನ ಮತ್ತೊಂದರಂತೆಯೇ ಕಂಡು ಅದು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅವಳಿಗೆ ಅದರಿಂದ ತಾಳ್ಮೆ ಕಳೆದುಕೊಳ್ಳುವ ಬದಲು ಆಳದಲ್ಲಿ ಸಂತೋಷವಾಗುತ್ತಿತ್ತು. ಹೊಸೆ ಅರ್ಕಾದಿಯೋ ಅಂತಿಮ ಪ್ರಮಾಣಗಳನ್ನು ತೆಗೆದುಕೊಂಡು ಅನೇಕ ವರ್ಷಗಳಾಗಿದ್ದರೂ ರಾಯಭಾರ ಕೌಶಲ್ಯದ ಬಗ್ಗೆ ಉನ್ನತ ವ್ಯಾಸಂಗ ಪೂರೈಸುವುದಕ್ಕೆ ಕಾಯುತ್ತಿದ್ದೇನೆಂದು ತಿಳಿಸಿದಾಗ ಅವಳಿಗೆ ಯೋಚನೆಯಾಗಲಿಲ್ಲ. ಏಕೆಂದರೆ ಅವಳಿಗೆ ಸಂತ ಪೀಟರನನ್ನು ತಲುಪುವ ಮುಂಚಿನ ಮೆಟ್ಟಿಲುಗಳನ್ನು ಏರುವಾಗ ಎಂಥೆಂಥ ಅಡೆತಡೆಗಳು ಉಂಟಾಗುತ್ತವೆಂದು ಗೊತ್ತಿತ್ತು. ಆದರೆ ಇತರರಿಗೆ ಅಮುಖ್ಯವೆಂದು ತೋರುವ ಸುದ್ದಿಯೊಂದು, ಅಂದರೆ ತನ್ನ ಮಗ ಪೋಪ್‌ನನ್ನು ನೋಡಿದನೆನ್ನುವುದು ಅವಳ ಉತ್ಸಾಹವನ್ನು ಹೆಚ್ಚಿಸಿತ್ತು. ಅಮರಾಂತ ಉರ್ಸುಲಾ ತನ್ನ ವಿದ್ಯಾಭ್ಯಾಸದ ಅವಧಿ ಈ ಮುಂಚೆ ಭಾವಿಸಿದ್ದಕ್ಕಿಂತ ಇನ್ನೂ ಹೆಚ್ಚಾಗುತ್ತದೆ, ಏಕೆಂದರೆ ತನ್ನ ಜಾಣ್ಮೆ ಹಲವೊಂದು ಅನುಕೂಲಗಳನ್ನು ಮಾಡಿಕೊಟ್ಟಿದೆ ಮತ್ತು ಅದನ್ನು ತನ್ನ ತಂದೆ ಪರಿಗಣಿಸಿರಲಿಲ್ಲವೆಂದು ಬರೆದಾಗ ಅದೇ ರೀತಿಯ ಸಂತೋಷವಾಯಿತು. +ಸಾಂತ ಸೋಫಿಯಾ ದೆಲಾ ಪಿಯದಾದ್ ವ್ಯಾಕರಣದ ಪುಸ್ತಕವನ್ನು ತಂದುಕೊಟ್ಟು ಮೂರು ವರ್ಷವಾದ ಮೇಲೆ ಅವ್ರೇಲಿಯಾನೋ ಮೊದಲನೆ ಹಾಳೆಯಲ್ಲಿದ್ದದ್ದನ್ನು ಭಾಷಾಂತರಿಸುವುದರಲ್ಲಿ ಯಶಸ್ವಿಯಾದ. ಅದೊಂದು ವ್ಯರ್ಥವಾದ ಚಿಲ್ಲರೆ ಕೆಲಸವಾಗಿರಲಿಲ್ಲ. ಆದರೆ ಅದು ಉದ್ದವೆಷ್ಟಿದೆ ಎಂದು ತಿಳಿಯಲು ಸಾಧ್ಯವಿಲ್ಲದ ರಸ್ತೆಯಲ್ಲಿ ಮೊದಲನೆಯ ಹೆಜ್ಜೆಯಾಗಿತ್ತು. ಏಕೆಂದರೆ ಸ್ಪ್ಯಾನಿಷ್‌ನಲ್ಲಿದ್ದ ಪಠ್ಯಕ್ಕೆ ಯಾವುದೇ ಅರ್ಥವಿರಲಿಲ್ಲ. ಅದರ ಸಾಲುಗಳು ಸಂಕೇತ ಭಾಷೆಯಲ್ಲಿತ್ತು. ಅವ್ರೇಲಿಯಾನೋಗೆ ಅವುಗಳನ್ನು ಅರಿಯುವ ಸೂತ್ರ ಗೊತ್ತಿರಲಿಲ್ಲ. ಆದರೆ ಮೆಲ್‌ಕಿಯಾದೆಸ್ ಅವರಿಗೆ ಹಾಳೆಯಲ್ಲಿರುವುದರ ತಳ ಶೋಧಿಸಲು ಕತಲುನಿಯಾದವನ ಅಂಗಡಿಯಲ್ಲಿರುವ ಪುಸ್ತಕದ ಅಗತ್ಯವಿದೆ ಎಂದು ಹೇಳಿದ್ದರಿಂದ, ತನಗೆ ಅದು ಸಿಗುವಂತೆ ಮಾಡಲು ಫೆರ್ನಾಂಡಳ ಜೊತೆ ಮಾತನಾಡಲು ನಿರ್ಧರಿಸಿದ. ಅವಳನ್ನು ಕೇಳುವ ರೀತಿಯನ್ನು ಚಿಂದಿಯಾಗಿದ್ದ ತನ್ನ ರೂಮಿನಲ್ಲಿ ಯೋಚಿಸಿದ. ಆದರೆ ಸಣ್ಣಕೆಂಡದ ಮೇಲಿರುವ ಊಟವನ್ನು ತೆಗೆದುಕೊಂಡು ಹೋಗಲು ಬರುವಾಗ ಮಾತ್ರ ಅವಳೊಂದಿಗೆ ಮಾತನಾಡುವುದಕ್ಕೆ ಸಾಧ್ಯ ಎಂದು ಕಂಡಾಗ ಅವನು ಕಷ್ಟಪಟ್ಟು ಸಿದ್ಧಪಡಿಸಿಕೊಂಡಿದ್ದ ಮಾತುಗಳು ಗಂಟಲಲ್ಲೇ ಉಳಿದು ಮಾತು ಹೊರಡದಾಯಿತು. ಆ ಸಮಯದಲ್ಲಿ ಮಾತ್ರ ಅವನು ಅವಳನ್ನು ನೋಡುತ್ತಿದ್ದ. ಅವಳ ಬೆಡ್‌ರೂಮಿನಲ್ಲಿನ ಅವಳ ಹೆಜ್ಜೆ ಸಪ್ಪಳವನ್ನು ಕೇಳಿಸಿಕೊಂಡ. ಅವಳು ಅಂಚೆಯಾತನಿಂದ ಮಕ್ಕಳಿಂದ ಬರುವ ಕಾಗದಗಳನ್ನು ತೆಗೆದುಕೊಳ್ಳಲು ಮತ್ತು ತಾನು ತನ್ನ ಮಕ್ಕಳಿಗೆ ಬರೆದ ಕಾಗದಗಳನ್ನು ಕೊಡಲು ಮುಂಬಾಗಿಲಿಗೆ ಹೋಗುವ ಸದ್ದನ್ನು ಕೇಳಿಸಿಕೊಂಡ. ಅವನು ಲೈಟಿನ ಸ್ವಿಚ್ ಶಬ್ದದ ಮುಂಚೆ ರಾತ್ರಿ ಬಹಳ ಹೊತ್ತಿನ ತನಕ ಪೇಪರಿನ ಮೇಲೆ ಪೆನ್ನು ಮಾಡುವ ಕರ್ಕಶ ಶಬ್ದ ಮತ್ತು ಹಾಗೂ ಪ್ರಾರ್ಥನೆಯ ಪಿಸುದನಿಯನ್ನು ಕತ್ತಲಲ್ಲಿ ಕೇಳಿಸಿಕೊಂಡ. ಆ ನಂತರವೇ ಕಾದಿರುವ ಅವಕಾಶ ನಾಳೆ ಸಿಗುತ್ತದೆ ಎಂಬ ನಂಬಿಕೆಯಿಂದ ನಿದ್ದೆ ಹೋದ. ಒಂದು ದಿನ ಅವನು ಎಷ್ಟು ಉತ್ಸಾಹಭರಿತನಾಗಿದ್ದನೆಂದರೆ ಅವಕಾಶ ಸಿಕ್ಕೇ ಸಿಕ್ಕುತ್ತದೆ ಎಂದು ಭಾವಿಸಿ, ಭುಜದ ತನಕ ಇಳಿಬಿದ್ದಿದ್ದ ಕೂದಲನ್ನು ಕತ್ತರಿಸಿಕೊಂಡು, ಜೋತಾಡುತ್ತಿದ್ದ ಗಡ್ಡ ಶೇವ್ ಮಾಡಿಕೊಂಡು, ಬಿಗಿಯಾಗಿದ್ದ ಪ್ಯಾಂಟ್ ಮತ್ತು ಎಲ್ಲಿಂದ ಬಂದಿತ್ತೆಂದು ತಿಳಿಯದ ಕಾಲರಿದ್ದ ಶರಟನ್ನು ಹಾಕಿಕೊಂಡು ಫೆರ್ನಾಂಡ ಬೆಳಗಿನ ತಿಂಡಿ ತೆಗೆದುಕೊಳ್ಳುವುದಕ್ಕಾಗಿ ಕಾದ. ಪ್ರತಿದಿನ ಬರುತ್ತಿದ್ದ ಆ ಹೈ ಹೀಲ್ಸ್ ಚಪ್ಪಲಿಯ ಸೆಟೆದುಕೊಂಡಿರುತ್ತಿದ್ದ ಆ ಹೆಂಗಸು ದಿನ ಬರಲಿಲ್ಲ. ಆದರೆ ವಯಸ್ಸಾದ, ತೋಳಿಲ್ಲದ ಜುಬ್ಬ ತೊಟ್ಟಿದ್ದ ಸುಂದರಳಾಗಿದ್ದ, ಚಿನ್ನದ ಲೇಪ ಹಾಕಿದ ಕಿರೀಟವನ್ನು ಇಟ್ಟುಕೊಂಡು, ಗುಟ್ಟಾಗಿ ತನ್ನಷ್ಟಕ್ಕೆ ಅಳುವ, ಚಟುವಟಿಕೆ ಇಲ್ಲದವಳೊಬ್ಬಳು ಬಂದಳು. ವಾಸ್ತವವಾಗಿ ಫೆರ್ನಾಂಡ ಅವ್ರೇಲಿಯಾನೋ ಸೆಗುಂದೋನ ಟ್ರಂಕುಗಳಲ್ಲಿ ಸಿಕ್ಕ ರಾಣಿಯ ಡ್ರೆಸ್ಸನ್ನು ಅನೇಕ ಬಾರಿ ಉಟ್ಟುಕೊಂಡಿದ್ದಳು. ಯಾರಾದರೂ ಅವಳು ತೀರ ಸಂತೋಷದಿಂದ ವೈಯ್ಯಾರ ಮಾಡುತ್ತ ಕನ್ನಡಿ ಎದುರು ನಿಂತಿದ್ದನ್ನು ನೋಡಿದ್ದರೆ ಅವಳಿಗೆ ಹುಚ್ಚು ಹಿಡಿದಿದೆ ಎನ್ನಬಹುದಿತ್ತು. ಆದರೆ ಅವಳು ಹುಚ್ಚಿಯಾಗಿರಲಿಲ್ಲ. ಅವಳು ರಾಜರ ವಿಶೇಷ ಲಾಂಛನಗಳನ್ನು ನೆನಪುಗಳಾಗಿ ಬದಲಿಸಿಕೊಂಡ್ಡಿದ್ದಳು. ಅವಳು ಮೊದಲ ಸಲ ಅವನ್ನು ಉಟ್ಟುಕೊಂಡಾಗ ಹೊಟ್ಟೆಯೊಳಗೆ ಉಂಟಾಗುತ್ತಿದ್ದ ಸಂಕಟವನ್ನು ತಡೆಯಲಾಗಲಿಲ್ಲ. ಅವಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಏಕೆಂದರೆ ಅವಳಿಗೆ ಆ ಗಳಿಗೆಯಲ್ಲಿ ರಾಣಿ ಮಾಡುವುದಕ್ಕಾಗಿ ತನ್ನನ್ನು ಮನೆಗೆ ಕರೆದುಕೊಂಡು ಹೋಗಲು ಬಂದವನ ಶೂಗಳ ಪಾಲೀಷಿನ ವಾಸನೆ ಮೂಗಿಗೆ ಬಡಿದಿತ್ತು. ಕಮರಿದ ಕನಸುಗಳ ನೋವು ಅವಳೊಳಗೆ ತುಂಬಿತು. ಅವಳಿಗೆ ತನಗೆಷ್ಟು ವಯಸ್ಸಾಗಿ ಸೊರಗಿ ಹೋಗಿ, ತನ್ನ ಜೀವನದ ಅತ್ಯುತ್ತಮ ಕ್ಷಣಗಳಿಂದ ಬಹಳಷ್ಟು ದೂರವಾಗಿದ್ದೇನೆ ಎಂದು ತೋರಿತೆಂದರೆ, ಅವಳು ಕನಿಷ್ಠವೆಂದು ಭಾವಿಸಿದ್ದ ಕ್ಷಣಗಳಿಗೂ ಕೂಡ ಕಾತರಿಸಿದಳು. ಆಗಲೇ ಅವಳಿಗೆ ತಾನಿದ್ದ ಊರಿನ ಗಾಳಿ, ಸಂಜೆಯಲ್ಲಿ ಗುಲಾಬಿಗಳ ಸುಗಂಧ ಮುಂತಾದವುಗಳನ್ನು ಕಳೆದುಕೊಂಡಿದ್ದ ಗಟ್ಟಿ ಕುಳಗಳ ನಿರ್ದಯತೆ ಅರಿವಿಗೆ ಬಂತು. ದಿನನಿತ್ಯದ ಬಲವಾದ ಹೊಡೆತಗಳನ್ನು ತೊಂದರೆ ಪಟ್ಟುಕೊಳ್ಳದೆ ತಡೆದುಕೊಳ್ಳುತ್ತಿದ್ದ ಅವಳ ಹುಡಿಯಾದ ಹೃದಯ, ಈ ನೋವಿನಿಂದ ಉದುರಿ ಬಿತ್ತು. ಕುಗ್ಗಿಸುತ್ತಿದ್ದ ವಯಸ್ಸಿನಿಂದಾಗಿ ಅವಳಿಗೆ ಬೇಸರಪಟ್ಟುಕೊಳ್ಳುವುದೊಂದು ದುರಭ್ಯಾಸವಿತ್ತು. ಅವಳು ಏಕಾಂತದಲ್ಲಿ ಸಾಕಷ್ಟು ಮೃದುವಾದಳು. ಹೀಗಿದ್ದರೂ ಅವಳು ಅಡುಗೆ ಮನೆಗೆ ಹೋದ ಆ ದಿನ, ಭಯಗೊಂಡ ಕಣ್ಣುಗಳ, ಮಂಕಾದ, ಮೂಳೆ ಮೂಳೆಯ, ಹದಿಹರೆಯದವನೊಬ್ಬ ಕಾಫಿ ಕೊಟ್ಟಾಗ ಅವಳಿಗೆ ವಿಚಿತ್ರವಾಗಿ ಕಾಣಿಸಿತು. ಅವಳು ಅವನಿಗೆ ಅನುಮತಿ ನಿರಾಕರಿಸಿದ್ದಷ್ಟೇ ಅಲ್ಲದೆ ತಾನು ಉಪಯೋಗಿಸದೆ ಇಟ್ಟಿದ್ದ ಗರ್ಭಾಶಯ ಪಲ್ಲಟದ ಸಲಕರಣೆಗಳಿರುವ ಮನೆಯ ಬೀಗದ ಕೈಯನ್ನು ಅಂದಿನಿಂದ ತನ್ನ ಪಾಕೆಟ್‌ನಲ್ಲಿ ಇಟ್ಟುಕೊಂಡಳು. ಅದು ನಿರುಪಯೋಗವಾಗಿತ್ತು. ಏಕೆಂದರೆ ಅವ್ರೇಲಿಯಾನೋಗೆ ಬೇಕಿದ್ದರೆ ಯಾವಾಗಲಾದರೂ ಮನೆಯಿಂದ ಹೊರಗೆ ಹೋಗಿ ಪುನಃ ವಾಪಸು ಬರುವುದು ಸಾಧ್ಯವಿತ್ತು. ಆದರೆ ಬಹಳ ದಿನಗಳ ಬಂಧನ, ಅನಿಶ್ಚಿತವಾಗಿರುವ ಪ್ರಪಂಚ, ವಿಧೇಯನಾಗಿರುವ ಸ್ವಭಾವ ಅವನಲ್ಲಿ ಬಂಡಾಯದ ಭಾವನೆಯನ್ನು ಅಳಿಸಿಹಾಕಿತ್ತು. ಆದ್ದರಿಂದ ಅವನು ಮತ್ತೆ ತನ್ನ ಕೋಣೆಗೆ ಹೋಗಿ ಓದಿದ ಚರ್ಮದ ಹಾಳೆಯ ಮೇಲಿನ ಬರಹಗಳನ್ನು ಮತ್ತೆ ಮತ್ತೆ ಓದುತ್ತಿದ್ದ ಮತ್ತು ರಾತ್ರಿ ಬಹಳ ಹೊತ್ತಾದ ಮೇಲೆ ಫೆರ್ನಾಂಡ ಬಿಕ್ಕಳಿಸುವುದನ್ನು ಕೇಳಿಸಿಕೊಳ್ಳುತ್ತಿದ್ದ. ಒಂದು ದಿನ ಅವನು ಎಂದಿನಂತೆ ಒಲೆ ಉರಿ ಹೊತ್ತಿಸುವುದಕ್ಕೆ ಹೋದಾಗ, ನಂದಿ ಹೋದ ಕೆಂಡದ ಮೇಲೆ ಹಿಂದಿನ ದಿನ ಇಟ್ಟಿದ್ದ ಊಟ ಹಾಗೆಯೇ ಇದ್ದದ್ದನ್ನು ಕಂಡ. ಆಗ ಅವನು ಅವಳ ಬೆಡ್‌ರೂಮಿನಲ್ಲಿ ನೋಡಿದಾಗ ತೋಳಿಲ್ಲದ ಜುಬ್ಬ ತೊಟ್ಟು ಹಾಸಿಗೆಯಲ್ಲಿ ಮೈ ಚಾಚಿದ್ದ, ದಂತದ ಬಣ್ಣಕ್ಕೆ ತಿರುಗಿದ ಚರ್ಮದ ಎಂದಿಗಿಂತ ಹೆಚ್ಚು ಸುಂದರವಾಗಿದ್ದವಳನ್ನು ಕಂಡ. ನಾಲ್ಕು ತಿಂಗಳ ನಂತರ ಹೊಸೆ ಅರ್ಕಾದಿಯೋ ಬಂದಾಗ ಅವಳು ಹಾಗೆಯೇ ಇದ್ದಳು. +ಅವನ ತಾಯಿಯ ಹೋಲುವ ಮನುಷ್ಯನನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಅವನು ದುಂಡನೆಯ ಗಡುಸಾದ ಕಾಲರ್ ಇದ್ದ ಶರ್ಟ್ ಸೂಟ್ ಹಾಕಿಕೊಂಡಿದ್ದು ಕತ್ತಿನ ಸುತ್ತ ನೆಕ್ ಟೈಗೆ ಬದಲಾಗಿ ಸಿಲ್ಕ್ ರಿಬ್ಬನ್‌ನನ್ನು ಬೋ ಟೈ ರೀತಿ ಕಟ್ಟಿಕೊಂಡಿದ್ದ. ಅವನು ಲವಲವಿಕೆ ಇದ್ದವನಂತೆ ಕಾಣದೆ, ಬೆರಗಾದವನಂತೆ ಕಾಣುತ್ತಿದ್ದ. ಅವನ ತುಟಿಗಳು ತುಂಬಿಕೊಂಡಿರಲಿಲ್ಲ ಮತ್ತು ಎದ್ದು ಕಾಣದ ಮಧ್ಯೆ ಬೈತಲೆಯ ಕಪ್ಪುಗೂದಲಿನವನಾಗಿದ್ದು, ಅದು ಸಂತರು ಕೂದಲು ಬಿಡುವ ರೀತಿಯದಾಗಿತ್ತು. ಅವನ ಚೂಪು ಗಡ್ಡ ಮನಸ್ಸಾಕ್ಷಿಯನ್ನು ಬಿಂಬಿಸುತ್ತಿತ್ತು. ಅವನ ಕೈಗಳು ಒಣಗಿದ್ದು ಹಸಿರು ನರಗಳು ಕಾಣುತ್ತಿದ್ದವು ಮತ್ತು ಬೆರಳುಗಳು ರಕ್ತಹೀನವಾಗಿದ್ದವು. ಅವನು ಎಡ ತೋರು ಬೆರಳಲ್ಲಿ ಸೂರ್ಯಕಾಂತಿ ಹೂವಿನ ಬಣ್ಣದ ಅಪ್ಪಟ ಬಂಗಾರದ ಉಂಗುರ ಹಾಕಿಕೊಂಡಿದ್ದ. ಮನೆಯ ಮುಂಬಾಗಿಲನ್ನು ತೆರೆದಾಗ ಅವನು ಬಹಳ ದೂರದಿಂದ ಬಂದಿದ್ದಾನೆಂದು ಅವ್ರೇಲಿಯಾನೋಗೆ ಯಾರೂ ಹೇಳಬೇಕಾಗಿರಲಿಲ್ಲ. ಅವನು ಮನೆಯೊಳಗೆ ಓಡಾಡಿದಾಗ ನೆರಳುಗಳ ನಡುವೆ ಅವನು ಎಲ್ಲಿದ್ದಾನೆಂದು ತಿಳಿಯಲು ಉರ್ಸುಲಾ ಅವನ ಮೇಲೆ ಬಚ್ಚಲು ಮನೆಯ ನೀರನ್ನು ಸಿಂಪಡಿಸುತ್ತಿದ್ದಾಗ ಇರುತ್ತಿದ್ದ ವಾಸನೆ ಮನೆಯನ್ನೆಲ್ಲ ಹರಡಿತು. ಅನೇಕ ವರ್ಷಗಳು ಅಲ್ಲಿಲ್ಲದ ಕಾರಣ ಹೊಸೆ ಅರ್ಕಾದಿಯೋ ಇನ್ನೂ ಒಂಟಿಯಾಗಿರುವ, ವ್ಯಥೆಗೊಳಗಾಗಿರುವ ಪ್ರಾಯಕ್ಕೆ ಬಂದ ಹುಡುಗನಾಗಿಯೇ ಇದ್ದಾನೆಂದು ಪರಿಗಣಿಸುವುದು ಅಸಾಧ್ಯವಾಗಿತ್ತು. ಅವನು ನೇರವಾಗಿ ಅವ್ರೇಲಿಯಾನೋ ಮೆಲ್‌ಕಿಯಾದೆಸ್‌ನ ಸೂತ್ರದ ಪ್ರಕಾರ, ದೇಹವನ್ನು ಕಾಪಾಡುವುದಕ್ಕಾಗಿ, ಅಜ್ಜನ ತಂದೆಯ ನೀರಿನ ಪೈಪ್‌ನಲ್ಲಿ ನಾಲ್ಕು ತಿಂಗಳ ಕಾಲ ಪಾದರಸವನ್ನು ಕುದಿಸಿದ್ದ ತನ್ನ ತಾಯಿಯ ಬೆಡ್‌ರೂಮಿಗೆ ಹೋದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಗೆ ಹೆಚ್ಚಿಗೆ ಪ್ರಶ್ನೆಗಳನ್ನು ಕೇಳಲಿಲ್ಲ. ಅವನು ಹೆಣದ ಹಣೆಗೆ ಮುತ್ತಿಟ್ಟ. ಅನಂತರ ಅವಳ ಸ್ಕರ್ಟಿನ ಪಾಕೆಟ್‌ನಲ್ಲಿದ್ದ ಇನ್ನೂ ಮೂರು ಉಪಯೋಗಿಸದ ಗರ್ಭಾಶಯ ಪಲ್ಲಟಗೊಳಿಸಲು ಉಪಯೋಗಕ್ಕೆ ಬರುವ ವಸ್ತುಗಳನ್ನು ಮತ್ತು ಅವಳ ಕಪಾಟಿನ ಬೀಗದ ಕೈಯನ್ನು ತೆಗೆದ. ಅವನು ಚಟುವಟಿಕೆ ಇಲ್ಲದಂತೆ ಕಾಣುತ್ತಿದ್ದದ್ದಕ್ಕೆ ವ್ಯತಿರಿಕ್ತವಾಗಿ ತೀರ ನಿಖರವಾದ ಮತ್ತು ನೇರವಾದ ಚಲನೆಗಳಿಂದ ಪ್ರತಿಯೊಂದನ್ನೂ ನಿರ್ವಹಿಸಿದ. ಅವನು ಕಪಾಟಿನಿಂದ ಗಂಧದ ವಾಸನೆ ಇರುವ ಸಣ್ಣ ಪೆಟ್ಟಿಗೆಯಲ್ಲಿ ಫೆರ್ನಾಂಡ ಅವನಿಂದ ಗುಟ್ಟಾಗಿಟ್ಟಿದ್ದ ಅನೇಕ ಸತ್ಯ ಸಂಗತಿಗಳನ್ನು ಬರೆದು ಹೃದಯ ಹಗುರ ಮಾಡಿಕೊಂಡಿದ್ದ, ಉದ್ದನೆಯ ಕಾಗದ ತೆಗೆದ. ಅವನು ನಿಂತುಕೊಂಡೇ ಏನೂ ಆತಂಕ ಪಡದೆ ಅದನ್ನು ಓದತೊಡಗಿದ ಮತ್ತು ಮೂರನೆ ಪುಟಕ್ಕೆ ಬಂದಾಗ ನಿಲ್ಲಿಸಿ, ತಲೆ ಎತ್ತಿ ಅವ್ರೇಲಿಯಾನೋನನ್ನು ಎರಡನೆ ಬಾರಿ ಗುರುತು ಹಿಡಿದವನಂತೆ ನೋಡಿದ. +ಅವನು ತೀಕ್ಷ್ಣವಾದ ಧ್ವನಿಯಲ್ಲಿ, “ಹಾಗಾದ್ರೆ ನೀನು ಹಾದರಕ್ಕೆ ಹುಟ್ಟಿರೋದು” ಎಂದ. +“ನಾನು ಅವ್ರೇಲಿಯಾನೋ ಬ್ಯುಂದಿಯಾ” +ಹೊಸೆ ಅರ್ಕಾದಿಯೋ, “ರೂಮಿಗೆ ಹೋಗು” ಎಂದ. +ಅವ್ರೇಲಿಯಾನೋ ಹೋದ ಮತ್ತು ಅವನು ಕುತೂಹಲಕ್ಕಾಗಿ ಕೂಡ ಶವಸಂಸ್ಕಾರದ ಸಿದ್ಧತೆಗಳು ಉಂಟುಮಾಡುತ್ತಿದ್ದ ಶಬ್ದ ಕೇಳಿ ಹೊರಗೆ ಬರಲಿಲ್ಲ. ಕೆಲವು ಸಲ ಅವನು ಅಡುಗೆ ಮನೆಯಿಂದ ಹೊಸೆ ಅರ್ಕಾದಿಯೋ ಮನೆಯಲ್ಲಿ ಆತಂಕದಿಂದ ಉಸಿರಾಡುತ್ತ ಓಡಾಡುತ್ತಿದ್ದನ್ನು ನೋಡಿದ. ಅವನಿಗೆ ಮಧ್ಯ ರಾತ್ರಿ ಕಳೆದ ಮೇಲೆ ಕೂಡ ಹೆಜ್ಜೆ ಸಪ್ಪಳ ಕೇಳಿಸುವುದು ಮುಂದುವರೆಯಿತು. ಅವನಿಗೆ ಅನೇಕ ತಿಂಗಳ ಕಾಲ ಅವನ ಧ್ವನಿ ಕೇಳಿಸಲಿಲ್ಲ. ಇದಕ್ಕೆ ಹೊಸೆ ಅರ್ಕಾದಿಯೋ ಅವನನ್ನು ಕರೆಯದೇ ಇದ್ದದ್ದು ಒಂದಾದರೆ, ಅವನಿಗೂ ಹಾಗಾಗುವುದು ಬೇಡವಾಗಿತ್ತು. ಜೊತಗೆ ಅವನಿಗೆ ಚರ್ಮದ ಹಾಳೆಯ ಬರಹಗಳನ್ನು ಬಿಟ್ಟ ಬೇರೆ ಏನನ್ನು ಯೋಚಿಸುವುದಕ್ಕೂ ಸಮಯವಿರಲಿಲ್ಲ. ಫೆರ್ನಾಂಡ ಸತ್ತ ಮೇಲೆ ಉಳಿದಿದ್ದ ಸಣ್ಣ ಬಂಗಾರದ ಮೀನನ್ನು ತೆಗೆದುಕೊಂಡು ತನಗೆ ಬೇಕಾದ ಪುಸ್ತಕಗಳನ್ನು ಹುಡುಕಿಕೊಂಡು, ಕತಲುನಿಯಾದವನ ಪುಸ್ತಕದಂಗಡಿಗೆ ಹೋಗಿದ್ದ. ದಾರಿಯಲ್ಲಿ ಕಂಡ ಯಾವುದರ ಬಗ್ಗೆಯೂ ಅವನಿಗೆ ಆಸಕ್ತಿ ಇರಲಿಲ್ಲ. ಪ್ರಾಯಶಃ ಅವನಲ್ಲಿ ಹೋಲಿಕೆ ಮಾಡುವ ನೆನಪುಗಳು ಕಡಿಮೆಯಾಗಿದ್ದವು. ನಿರ್ಜನವಾದ ರಸ್ತೆಗಳು ಹಾಗೂ ಹಾಳು ಸುರಿಯುತ್ತಿದ್ದ ಮನೆಗಳು ಹಿಂದೊಮ್ಮೆ ಅವನು ಕಲ್ಪಿಸಿಕೊಂಡು ಅವುಗಳ ಬಗ್ಗೆ ಅರಿಯಲು ಜೀವ ಕೊಡುವಂತೆ ಇದ್ದ ಹಾಗೆಯೇ ಈಗಲೂ ಇದ್ದವು. ಹಿಂದೆ ಫೆರ್ನಾಂಡ ನಿರಾಕರಿಸಿದ್ದ ಅವಕಾಶವನ್ನು, ಅಗತ್ಯವಾದ ಕನಿಷ್ಠವಾದ ಅವಧಿಯನ್ನು, ಮೊದಲ ಬಾರಿಗೆ ತನಗೆ ತಾನೇ ಕೊಟ್ಟುಕೊಂಡಿದ್ದ. ಆದ್ದರಿಂದ ಸಮಯ ವ್ಯರ್ಥಮಾಡದೆ, ಕನಸುಗಳನ್ನು ವ್ಯಾಖ್ಯಾನಿಸಲಾಗುತ್ತಿದ್ದ ಮನೆಯಿದ್ದ ಸಣ್ಣ ರಸ್ತೆಯಲ್ಲಿ, ಹನ್ನೊಂದು ಬ್ಲಾಕುಗಳನ್ನು ದಾಟಿ, ಏದುಸಿರು ಬಿಡುತ್ತ, ಗೊಂದಲಗೊಂಡು, ಕಾಲಿಡಲು ಸ್ಥಳವಿಲ್ಲದ ಸ್ಥಳಕ್ಕೆ ಹೋದ. ಅದು ಪುಸ್ತಕದ ಅಂಗಡಿಗಿಂತ ಹೆಚ್ಚಾಗಿ ಹಳೆಯ ಪುಸ್ತಕಗಳ ಗುಪ್ಪೆಯಂತೆ ಕಂಡಿತು. ಅಲ್ಲಿ ಶೆಲ್ಫ್‌ಗಳಿಗೆ ಗೆದ್ದಲು ಹತ್ತಿತ್ತು, ಮೂಲೆಗಳಲ್ಲಿ ಹಾಗೂ ಓಡಾಡುವುದಕ್ಕೆಂದು ಇದ್ದ ಸಣ್ಣ ಜಾಗದಲ್ಲಿಯೂ ಜೇಡರ ಬಲೆಗಳಿದ್ದವು. ಉದ್ದನೆ ಟೇಬಲ್ಲಿನ ಮೇಲೆ ಹಳೆಯ ಪುಸ್ತಕಗಳು ಮತ್ತು ಪೇಪರುಗಳು ಇದ್ದ ಗುಪ್ಪೆಯ ಜೊತೆಗೆ ಅಂಗಡಿಯ ಮಾಲೀಕ ನೇರಳೆ ಬಣ್ಣದ ಅಕ್ಷರಗಳಲ್ಲಿ ಬರೆಯುತ್ತಿದ್ದ. ಅಲ್ಲದೆ ಸ್ಕೂಲ್ ನೋಟ್ ಪುಸ್ತಕದ ಬಿಡಿಹಾಳೆಗಳಲ್ಲಿ ಕೂಡ. ಅವನಿಗೆ ಹಣೆಯ ಮೇಲೆ ಜುಟ್ಟಿರುವ ಗಿಣಿಯಂತೆ ಬಿದ್ದಿದ್ದ ಬಿಳಿಗೂದಲಿತ್ತು. ಅವನ ನೀಲಿಗಣ್ಣುಗಳು ಎಲ್ಲ ಪುಸ್ತಕಗಳನ್ನು ಓದಿದ್ದನೆಂದು ಹೇಳುತ್ತಿದ್ದವು. ಅವನು ಚಡ್ಡಿ ಹಾಕಿಕೊಂಡಿದ್ದು ಮೈಯೆಲ್ಲ ಬೆವೆತು ಹೋಗಿತ್ತು ಮತ್ತು ಬಂದವರು ಯಾರೆಂದು ನೋಡುವುದಕ್ಕಾಗಿ ಬರೆಯುವುದನ್ನು ನಿಲ್ಲಿಸಲಿಲ್ಲ. ಅಲ್ಲಿನ ಅವ್ಯವಸ್ಥೆಯ ಮಧ್ಯದಲ್ಲಿಯೂ ಅವ್ರೇಲಿಯಾನೋ ತಾನು ಹುಡುಕುತ್ತಿದ್ದ ಐದು ಪುಸ್ತಕಗಳನ್ನು ಹೊರತೆಗೆದ. ಏಕೆಂದರೆ ಅವು ಮೆಲ್‌ಕಿಯಾದೆಸ್ ಹೇಳಿದ ಸ್ಥಳದಲ್ಲೇ ಇದ್ದವು. ಅವನು ಏನೂ ಮಾತಾಡದೆ ಆ ಪುಸ್ತಕಗಳನ್ನು ಮತ್ತು ಸಣ್ಣ ಬಂಗಾರದ ಮೀನನ್ನು ಕತಲುನಿಯಾದವನಿಗೆ ಕೊಟ್ಟ. ಅವನು ಕಣ್ಣನ್ನು ಎರಡು ಚಿಪ್ಪು ಮೀನಿನ ಥರ ಕಿರಿದಾಗಿಸಿ ಅವುಗಳನ್ನು ಪರೀಕ್ಷಿಸಿದ. ಅನಂತರ ತನ್ನದೇ ಭಾಷೆಯಲ್ಲಿ, “ನಿಂಗೆಲ್ಲೋ ಹುಚ್ಚು ಹಿಡಿದಿರ್‍ಬೇಕು” ಎಂದು ಹೇಳಿ ಭುಜ ಕೊಡವಿದ ಮತ್ತು ಅವ್ರೇಲಿಯಾನೋಗೆ ಐದು ಪುಸ್ತಕಗಳನ್ನು ಹಾಗೂ ಬಂಗಾರದ ಮೀನನ್ನು ವಾಪಸು ಕೊಟ್ಟ. +ಅವನು ಸ್ಪ್ಯಾನಿಷ್‌ನಲ್ಲಿ, “ನೀನವನ್ನು ತೊಗೋ. ಅವನ್ನು ಓದಿದ ಕೊನೇಯವ್ನು ಅಂದ್ರೆ ಕುರುಡನಾದ ಐಸಾಕ್ ಇರ್‍ಬೇಕು. ನೋಡು, ಏನು ಮಾಡ್ತಾ ಇದೀನೀಂತ ಯೋಚ್ನೆ ಮಾಡು” ಎಂದ. +ಹೊಸೆ ಅರ್ಕಾದಿಯೋ ಮೆಮೆಯ ರೂಮನ್ನು ಸುವ್ಯವಸ್ಥೆಗೊಳಿಸಿದ ಮತ್ತು ವೆಲ್‌ವೆಟ್ ಕರ್ಟನ್ನುಗಳನ್ನು ಶುಚಿಗೊಳಿಸಿ ವೈಭವದ ಮಂಚವನ್ನು ಸರಿಪಡಿಸಿದ ಅಲ್ಲದೆ ಉಪಯೋಗಿಸದೆ ಬಿಟ್ಟಿದ್ದ ಬಚ್ಚಲು ಮನೆಯಲ್ಲಿದ್ದ ಕಪ್ಪು ಬಡಿದಿದ್ದ ಸಿಮೆಂಟ್ ಕೊಳವನ್ನು ಉಪಯೋಗಕ್ಕೆ ತಂದ, ಅವನು ತನ್ನ ವೈಭವದ ಪೋಷಾಕು, ಕೃತಕ ಸುಗಂಧ ಮತ್ತು ನಕಲಿ ಒಡವೆಗಳನ್ನು ಬೇಕಾದ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಿದ. ಮನೆಯ ಉಳಿದ ಭಾಗದಲ್ಲಿ ಕಾಣುವಂತೆ ತೋರುತ್ತಿದ್ದ ಒಂದೇ ವಸ್ತುವೆಂದರೆ ಪವಿತ್ರ ಪೀಠದಲ್ಲಿದ್ದ ಸಂತರುಗಳ ವಿಗ್ರಹಗಳು. ಒಂದು ಮಧ್ಯಾಹ್ನ ಅವನು ಅವುಗಳನ್ನೆಲ್ಲ ಅಂಗಳದಲ್ಲಿಟ್ಟು ಬೆಂಕಿ ಹಚ್ಚಿದ. ಸಾಮಾನ್ಯವಾಗಿ ಅವನು ಹನ್ನೊಂದು ಗಂಟೆ ದಾಟುವ ತನಕ ಮಲಗಿರುತ್ತಿದ್ದ. ಅವನು ಬಂಗಾರದ ಡ್ರೇಗಾನ್‌ಗಳಿದ್ದ ಕೊಳಕು ಬಟ್ಟೆಯಲ್ಲಿ ಕಾಲಿಗೆ ಹಳದಿ ಬಣ್ಣದ ಚಪ್ಪಲಿಗಳನ್ನು ಹಾಕಿಕೊಂಡು ಬಚ್ಚಲು ಮನೆಗೆ ಹೋಗುತ್ತಿದ್ದ. ಅಲ್ಲಿ ವಿಧ್ಯುಕ್ತ ಕ್ರಿಯೆಯನ್ನು ಕ್ರಮವಾಗಿ ಜರುಗಿಸಿ ಸುಂದರಿ ರೆಮಿದಿಯೋಸ್‌ಳನ್ನು ಕರೆತರುತ್ತಿದ್ದ. ಸ್ನಾನ ಮಾಡುವುದಕ್ಕಿಂತ ಮುಂಚೆ, ಮೂರು ಡೇಗೆ ರೂಪದ ವಿಶಿಷ್ಟ ಕಲ್ಲಿನ ಪೆಟ್ಟಿಗೆಯಲ್ಲಿ ತಾನು ತೆಗೆದುಕೊಂಡು ಹೋಗುತ್ತಿದ್ದ ಲವಣಗಳನ್ನು ಹಾಕುತ್ತಿದ್ದ. ಅವನು ಸೋರೆ ಬುರುಡೆಯಿಂದ ಸ್ನಾನ ಮಾಡುತ್ತಿರಲಿಲ್ಲ. ಆದರೆ ಅದರಲ್ಲಿ ಎರಡು ಗಂಟೆ ಕಾಲ ತಳ್ಳುತ್ತ, ಅಮರಾಂತಗಳನ್ನು ನೆನಪು ಮಾಡಿಕೊಳ್ಳುತ್ತ ಇರುತ್ತಿದ್ದ. ಅವನು ಊರಿಗೆ ಬಂದು ಕೆಲವು ದಿನಗಳಾದ ನಂತರ ಆ ಊರಿನಲ್ಲಿ ತೀರ ಶಾಖವಾಗಿದ್ದರಿಂದ ಮತ್ತು ಅವನಲ್ಲಿ ಇದ್ದ ಅದೊಂದೇ ಸೂಟ್ ಇತ್ತು, ಪಿಯತ್ರೋ ಕ್ರೆಸ್ಪಿ ನೃತ್ಯಾಭ್ಯಾಸ ಮಾಡಿಸುತ್ತಿದ್ದ ದಿನಗಳಲ್ಲಿ ಉಟ್ಟುಕೊಂಡಿದ್ದಂಥ ಕೆಲವು ಬಿಗಿಯಾದ ಪ್ಯಾಂಟ್‌ಗಳಿಗೆ, ಜೀವವಿರುವ ಕಂಬಳಿ ಹುಳುಗಳಿಂದ ನೇಯ್ದ, ಹೃದಯಕ್ಕೆ ಹೊಂದುವ ಸ್ಥಳದ ಹತ್ತಿರ ಇನಿಷಿಯಲ್ಸ್‌ನ ಕಸೂತಿ ಮಾಡಿರುವ ಸಿಲ್ಕ್ ಶರಟಿಗೆ ಅದಲು ಬದಲು ಮಾಡಿಕೊಂಡ. ವಾರಕ್ಕೆ ಎರಡು ಸಲ ಬಟ್ಟೆ ಶುಚಿ ಮಾಡಿ, ಹಾಕಿಕೊಳ್ಳಲು ಬೇರೆ ಯಾವುದೂ ಇಲ್ಲದ ಕಾರಣ ಅದು ಒಣಗುವ ತನಕ ಮೇಲು ಹೊದಿಕೆಯಲ್ಲಿ ಇರುತ್ತಿದ್ದ. ಅವನು ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅವನು ಮಧ್ಯಾಹ್ನದ ಬಿಸಿಲು ಕಡಿಮೆಯಾದ ಮೇಲೆ ಹೊರಗೆ ಹೋಗುತ್ತ ಮತ್ತು ರಾತ್ರಿ ಬಹಳ ಹೊತ್ತಾದ ಮೇಲೆ ವಾಪಸು ಬರುತ್ತಿದ್ದ. ಅನಂತರ ಅವನು ಆತಂಕದಿಂದ ಅತ್ತಿಂದಿತ್ತ ಬೆಕ್ಕಿನ ಹಾಗೆ ಓಡಾಡುತ್ತ, ಅಮರಾಂತಳನ್ನು ಕುರಿತು ಯೋಚಿಸುತ್ತಿದ್ದ. ಅವಳು ಮತ್ತು ಆರದ ದೀಪದೆದುರು ಇದ್ದ ಪೂಜ್ಯರ ವಿಗ್ರಹದ ಹೆದರಿಸುವ ನೋಟಗಳು ಅವನಿಗೆ ಆ ಮನೆಯಲ್ಲಿನ ನೆನಪುಗಳನ್ನು ಉಳಿಸಿಕೊಂಡಿದ್ದ. ಅಗಸ್ಟ್‌ನಲ್ಲಿ ಅನೇಕ ಸಲ ಭ್ರಮೆಗೊಳಿಸುವ ನಿದ್ದೆಯ ಮಧ್ಯೆ, ಕಣ್ತೆರೆದು ಲೇಸ್ ಹಾಕಿದ ಒಳಲಂಗ ಮತ್ತು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದ ಅಮರಾಂತ, ಅಮೃತ ಶಿಲೆಯ ಅಂಚಿರುವ ಕೊಳದಿಂz, ದೇಶಬಿಟ್ಟು ಹೋಗಬೇಕಾದ ಆತಂಕದಿಂದ ಹೊರಗೆ ಬರುತ್ತಿರುವುದನ್ನು ನೋಡುತ್ತಿದ್ದ. ಆ ಕಲ್ಪನೆಯನ್ನು ಯುದ್ಧದ ರಕ್ತದೋಕಳಿಯಲ್ಲಿ ಮುಳುಗಿಸುವುದಕ್ಕೆ ಪ್ರಯತ್ನಿಸಿದ. ಅವ್ರೇಲಿಯಾನೋ ಹೊಸೆಗೆ ವ್ಯತಿರಿಕ್ತವಾಗಿ ಅವನು ಅದನ್ನು ತನ್ನ ವಿಷಯಾಸಕ್ತಿಯ ನಡವಳಿಕೆಯಲ್ಲಿ ಜೀವಂತವಾಗಿಡುವುದರ ಜೊತೆಗೆ ತನ್ನ ತಾಯಿಯನ್ನು ಪೂಜ್ಯ ಧೋರಣೆಗೆ ತಕ್ಕ ರೀತಿಯಿಂದ ಸಂತುಷ್ಟಗೊಳಿಸಿದ್ದ. ಅವನಿಗಾಗಲಿ ಅಥವ ಫೆರ್ನಾಂಡಳಿಗಾಗಲಿ ಭ್ರಮೆಗಳನ್ನು ಅದಲು ಬದಲು ಮಾಡಿಕೊಳ್ಳುವುದಕ್ಕಾಗಿ ಪರಸ್ಪರ ಸಂಪರ್ಕಿಸುತ್ತಿರುವುದೆಂದು ತಿಳಿದಿರಲಿಲ್ಲ. ಹೊಸೆ ಅರ್ಕಾದಿಯೋ ರೋಮ್ ತಲುಪಿದ ಕೂಡಲೇ ಧಾರ್ಮಿಕ ವಿದ್ಯಾಭ್ಯಾಸವನ್ನು ಬಿಟ್ಟು, ತನ್ನ ತಾಯಿಯ ಭ್ರಮಾದೀನ ಪಾತ್ರಗಳಲ್ಲಿ ತಿಳಿಸುತ್ತಿದ್ದ ಪರಂಪಾಗತ ವೈಭವವನ್ನು ಹಾಳುಗೆಡವಬಾರದೆಂದು, ಮತಧರ್ಮಶಾಸ್ತ್ರದ ಪ್ರಗಾಥೆಗಳನ್ನು ಮತ್ತು ಕ್ರೈಸ್ತ ಮಠದ ಕಾನೂನನ್ನು ಕಲಿಯುತ್ತಿದ್ದ. ಅಲ್ಲದೆ ಅದು ಅವನು ತನ್ನ ಇಬ್ಬರು ಸ್ನೇಹಿತರೊಂದಿಗೆ ಅನುಭವಿಸಿದ ಯಾತನೆಯನ್ನು ದೂರಮಾಡಿತ್ತು. ಅವನಿಗೆ ಫೆರ್ನಾಂಡಳ ಸಾವು ಹತ್ತಿರದಲ್ಲಿದೆ ಎನ್ನುವ ಭಾವನೆ ತರಿಸಿದ ಕೊನೆಯ ಕಾಗದ ತಲುಪಿದಾಗ ಅವನು ಬಾಕಿ ಉಳಿದ ತನ್ನ ಬೂಟಾಟಿಕೆಯ ವೈಭವವನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಕಸಾಯಿಖಾನೆಗೆ ಹೋಗುವುದಕ್ಕಾಗಿ ಪ್ರಾಣಿಗಳನ್ನು ಒಟ್ಟಿರುವಂತೆ ಹೊರದೇಶದವರನ್ನು ತುಂಬಿದ್ದ ಹಡಗೊಂದರಲ್ಲಿ ಸೇವಿಗೆ ಮತ್ತು ಹುಳು ಹಿಡಿದ ಚೀಸ್ ತಿಂದು ಸಮು;ದ್ರ ದಾಟಿದ. ಅವನು ಫೆರ್ನಾಂಡ ತನ್ನ ದುರದೃಷ್ಟವನ್ನು ಮಾತ್ರ ವಿವರಿಸಿ ಬರೆದಿದ್ದ ಅವಳ ವಿಲ್ ಓದುವ ಮುಂಚೆಯೇ, ಎಂದೆಂದಿಗೂ ರೋಮ್‌ನಿಂದ ದೂರವಾಗಿ, ಮುರಿದು ಹೋಗಿದ್ದ ಪೀಠೋಪಕರಣಗಳು ಮತ್ತು ಅಂಗಳದಲ್ಲಿ ಬೆಳೆದಿದ್ದ ಕಳೆಯಿಂದ ತಪ್ಪಿಸಿಕೊಳ್ಳಲಾಗದಂಥ ಬಲೆಗೆ ಬಿದ್ದಿರುವುದನ್ನು ಸೂಚಿಸಿದ್ದವು. ಆಸ್ತಮಾದಿಂದ ನಿದ್ದೆ ಬಾರದ ಅವಧಿಯಲ್ಲಿ, ಉರ್ಸುಲಾ ತನ್ನ ಕುಗ್ಗಿದ ದನಿಯಲ್ಲಿ ಪ್ರಪಂಚದ ಬಗ್ಗೆ ಉಂಟುಮಾಡಿದ್ದ ಭಯದ ನೆರಳುಗಳು ತುಂಬಿದ ಮನೆಯಲ್ಲಿ, ತನ್ನ ದುರದೃಷ್ಟದ ಪ್ರಮಾಣವನ್ನು ಲೆಕ್ಕಹಾಕುತ್ತಿದ್ದ ನೆರಳುಗಳಲ್ಲಿ ಅವನು ಕಳೆದುಹೋಗಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಯಸಿದಳು. ಅದಕ್ಕಾಗಿ ಅವನಿಗೆ ಮನೆಯಲ್ಲಿ ಸೂರ್ಯ ಮುಳುಗಿದ ಮೇಲೆ ಓಡಾಡುವ ಸತ್ತವರ ದೆವ್ವಗಳಿಂದ ಕ್ಷೇಮವಾಗಿರಲೆಂದು ಬೆಡ್‌ರೂಮಿನ ಮೂಲೆಯಲ್ಲಿ ಸ್ಥಳ ಮಾಡಿಕೊಟ್ಟಿದ್ದಳು. ಉರ್ಸುಲಾ ಅವನಿಗೆ, ‘ನೀನೇನಾದ್ರೂ ಕೆಟ್ಟದ್ದನ್ನು ಮಾಡಿದ್ರೆ ಪೂಜ್ಯರು ನಂಗೆ ಹೇಳಿಬಿಡ್ತಾರೆ” ಎನ್ನುತ್ತಿದ್ದಳು. ಭಯ ತುಂಬಿದ ಬಾಲ್ಯದ ರಾತ್ರಿಗಳಲ್ಲಿ, ಮೂಲೆಯಲ್ಲಿ ನಿದ್ದೆ ಬರುವ ತನಕ ಅಲ್ಲಾಡದೆ, ಬೆವರು ಸುರಿಸುತ್ತ, ಸಂತರ ಕಾಯುವ ನೋಟದ ಎದುರು ಸ್ಟೂಲಿನ ಮೇಲೆ ಕುಳಿತುಕೊಂಡಿರುವುದಕ್ಕೆ ಅವನ ಬಾಲ್ಯ ಸೀಮಿತವಾಗಿತ್ತು. ಅದೊಂದು ಅನಗತ್ಯ ಹಿಂಸೆಯಾಗಿತ್ತು. ಏಕೆಂದರೆ ಆ ವೇಳೆಗಾಗಲೇ ಸುತ್ತಮುತ್ತಲ ಎಲ್ಲದರ ಬಗ್ಗೆ ಭಯ ಉಂಟಾಗಿತ್ತು ಮತ್ತು ಜೀವನದಲ್ಲಿ ಏನನ್ನು ಎದುರಿಸಿದರೂ ಭಯಗೊಳ್ಳಲು ಅವನು ಸಿದ್ಧನಾಗಿರುತ್ತಿದ್ದ: ದಾರಿಯಲ್ಲಿ ಅವನ ರಕ್ತವನ್ನು ಕುಲಗೆಡಿಸುವ ಹೆಂಗಸರು; ಹಂದಿಯ ಬಾಲದ ಮಕ್ಕಳನ್ನು ಹೆರುವ ಹೆಂಗಸರು; ಮನುಷ್ಯರನ್ನು ಕೊನೆಗಾಣಿಸಿ ಮನೆಮಂದಿಗೆಲ್ಲ ಯಾತನೆ ಉಂಟುಮಾಡುವ ಹುಂಜದ ಕಾಳಗ; ಮುಟ್ಟಿದರೆ ಸಾಕು ಇಪ್ಪತ್ತು ವರ್ಷ ಹೋರಾಟವನ್ನು ನೆಲಸಮ ಮಾಡುವ ಬಂದೂಕುಗಳು; ಕೇವಲ ಭ್ರಮ ನಿರಸನ ಮತ್ತು ಹುಚ್ಚು ಹಿಡಿಸುವ ಅನಿಶ್ಚಿತ ಸಾಹಸಗಳು-ಪ್ರತಿಯೊಂದೂ ಇದ್ದವು. ಒಟ್ಟಾಗಿ ದೇವರು ತೀರದ ವಿಶ್ವಾಸದಿಂದ ಸೃಷ್ಟಿಸಿದ್ದನ್ನು, ದೆವ್ವ ತಿರುಚಿದ್ದನ್ನು ಕಂಡು, ಅವನು ದುಃಸ್ವಪ್ನಗಳಿಂದ ಎದ್ದ ಮೇಲೆ, ಕಿಟಕಿಯಲ್ಲಿನ ಬೆಳಕಿನಿಂದ ಮತ್ತು ಅಮರಾಂತ ಮೈಯುಜ್ಜಿ ಸ್ನಾನ ಮಾಡಿಸಿ, ಸಿಲ್ಕ್ ಪಫ್‌ನಿಂದ ಕಾಲುಗಳ ಮಧ್ಯೆ ಪೌಡರ್ ಹಚ್ಚುವಾಗ, ಭಯದಿಂದ ಬಿಡುಗಡೆ ಹೊಂದುತ್ತಿದ್ದ. ಉರ್ಸುಲಾ ಕೂಡ ಕೈತೋಟದಲ್ಲಿ, ಆ ಬೆಳಕಿನಲ್ಲಿ ಬೇರೆಯಾಗಿರುತ್ತಿದ್ದಳು. ಏಕೆಂದರೆ ಅವಳು ಅಲ್ಲಿ ಭಯ ಹುಟ್ಟಿಸುವ ವಿಷಯದ ಬಗ್ಗೆ ಮಾತಾಡುತ್ತಿರಲಿಲ್ಲ. ಆದರೆ ಇದ್ದಲು ಪುಡಿಯಿಂದ ಪೋಪ್‌ಗಿರುವ ಮಿರುಗುವ ನಗುವಿರಲೆಂದು ಉಜ್ಜುತ್ತಿದ್ದಳು. ಅವಳು ಅವನ ಉಗುರುಗಳನ್ನು ಕತ್ತರಿಸಿ ಪ್ರಪಂಚದ ಎಲ್ಲ ಕಡೆಯಿಂದ ರೋಮ್‌ಗೆ ಬರುವ ಭಕ್ತರು ತಮ್ಮನ್ನು ಆಶೀರ್ವದಿಸುವ ಪೋಪ್‌ನ ಕೈಗಳು ಎಷ್ಟು ಚೆನ್ನಾಗಿವೆ ಎಂದು ಬೆಚ್ಚುವಂತಾಗಲಿ ಎಂದು ಅವಕ್ಕೆ ಪಾಲೀಷು ಮಾಡುತ್ತಿದ್ದಳು. ಪೋಪ್‌ನ ಹಾಗೆ ತಲೆ ಬಾಚಿ, ಪೋಪ್‌ಗಿರುವ ಸುವಾಸನೆ ಇರಲೆಂದು ತೊಟ್ಟುಕೊಂಡ ಬಟ್ಟೆಯ ಮೇಲೆ ಬಚ್ಚಲು ಮನೆಗೆ ಹಾಕುವ ಸುಗಂಧವನ್ನು ಸಿಂಪಡಿಸುತ್ತಿದ್ದಳು. ಅವನು ಗಾಂಡಾಲ್ಫೋ ಸೌಧದ ಪ್ರಾಂಗಣದಲ್ಲಿ ಪೋಪ್ ಬಾಲ್ಕನಿಯಿಂದ ನೆರೆದಿದ್ದ ಭಕ್ತರ ಗುಂಪಿಗಾಗಿ ಏಳು ಭಾಷೆಗಳಲ್ಲಿ ಅದೇ ಭಾಷಣ ಮಾಡುತ್ತಿದ್ದನ್ನು ಕೇಳಿದ್ದ. ಅವನ ಗಮನವನ್ನು ಸೆಳೆದ ಒಂದೇ ಒಂದು ಸಂಗತಿಯೆಂದರೆ ಉಪ್ಪು ನೀರಿನಲ್ಲಿ ಅದ್ದಿದ ಅವನ ಕೈಗಳ ಹೊಳಪು ಮತ್ತು ಮಿರುಗುತ್ತಿದ್ದ ಅವನ ಬೇಸಿಗೆಯುಡುಪು ಹಾಗೂ ಕಾಣದಿದ್ದ ಬಚ್ಚಲಿಗೆ ಹಾಕುವ ಸುಗಂಧ ಬೆರೆಸಿದ ನೀರಿನ ವಾಸನೆ. +ಅವನು ಮನೆಗೆ ಬಂದು ಸುಮಾರು ಒಂದು ವರ್ಷದ ಮೇಲೆ ಆಹಾರಕ್ಕಾಗಿ ಬೆಳ್ಳಿಯ ಕ್ಯಾಂಡಲ್‌ಸ್ಟಿಕ್‌ಗಳನ್ನು ಮತ್ತು ಆಗ ಕಂಠದಲ್ಲಿ ಮಾತ್ರ ಕೊಂಚ ಬಂಗಾರದ ಲೇಪವಿದ್ದ ವಂಶದ ಲಾಂಛನವಿದ್ದ ಉಚ್ಚೆ ಪಾತ್ರೆಗಳನ್ನು ಮಾರಿದ ಮೇಲೆ ಹೊಸೆ ಅರ್ಕಾದಿಯೋಗೆ ಊರಿನಲ್ಲಿದ್ದ ಮಕ್ಕಳನ್ನು, ಆಡುವುದಕ್ಕೆಂದು ಮನೆಗೆ ಕರೆದುಕೊಂಡು ಬರುವುದು ಮಾತ್ರ ಮನಸ್ಸು ಬೇರೆ ಕಡೆ ತಿರುಗಲು ಇದ್ದ ಅವಕಾಶ. ಅವನು ಮಧ್ಯಾಹ್ನ ಮಲಗುವ ಸಮಯಕ್ಕೆ ಅವರ ಜೊತೆ ಇದ್ದು, ಅವರಿಗೆ ಕೈತೋಟದಲ್ಲಿ ಹಗ್ಗದಾಟ, ಅಂಗಳದಲ್ಲಿ ಹಾಡುವುದು ಮತ್ತು ಹಜಾರದಲ್ಲಿ ಪೀಠೋಪಕರಣಗಳ ಮೇಲೆ ಹಾರಿ ಕುಣಿದು ಮಾಡಲು ಬಿಟ್ಟು ನಂತರ ಅವನು ಅವರಿಗೆ ಒಳ್ಳೆಯ ನಡತೆಯ ಬಗ್ಗೆ ತಿಳಿಸಿ ಹೇಳುತ್ತಿದ್ದ. ಆ ಸಮಯದಲ್ಲಿ ಅವನು ಬಿಗಿ ಪ್ಯಾಂಟು, ಸಿಲ್ಕ್ ಶರಟುಗಳನ್ನು ಬಿಟ್ಟು ಅರಬ್ ಅಂಗಡಿನಲ್ಲಿ ಖರೀದಿಸಿದ ಸಾಮಾನ್ಯ ಸೂಟ್ ಹಾಕಿಕೊಂಡಿದ್ದನಾದರೂ ಗಂಭೀರನಾಗಿದ್ದು ಪೋಪ್‌ನಂತೆ ವರ್ತಿಸುತ್ತಿದ್ದ. ಹಿಂದೆ ಮೆಮೆಯ ಗೆಳತಿಯರು ಮಾಡಿದಂತೆ ಮಕ್ಕಳು ಮನೆಯನ್ನು ಆಕ್ರಮಿಸಿದರು. ಮಧ್ಯರಾತ್ರಿಯವರೆಗೂ ಅವರು ಹರಟಿ, ಹಾಡಿ, ಕುಣಿಯುತ್ತಿದ್ದರಿಂದ ಮನೆ ಶಿಸ್ತಿಲ್ಲದ ವಿದ್ಯಾರ್ಥಿ ನಿಲಯದಂತಾಯಿತು. ಮೇಲ್‌ಕಿಯಾದೆಸ್‌ನ ರೂಮಿನಲ್ಲಿ ತನಗೆ ತೊಂದರೆ ಕೊಡದಿದ್ದರೆ ಸಾಕೆಂದು ಅವ್ರೇಲಿಯಾನೋ ಅವನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ದಿನ ಬೆಳಿಗ್ಗೆ ಇಬ್ಬರು ಹುಡುಗರು ಬಾಗಿಲು ತಳ್ಳಿ ಕೊಳಕಾದ ಮತ್ತು ಕೂದಲು ಬಿಟ್ಟುಕೊಂಡಿದ್ದವನೊಬ್ಬ ಟೇಬಲ್ ಮೇಲೆ ಚರ್ಮದ ಹಾಳೆಯ ಮೇಲಿನ ಬರಹವನ್ನು ಅರ್ಥೈಸುವುದರಲ್ಲಿ ಮಗ್ನನಾಗಿರುವುದನ್ನು ಕಂಡು ಬೆಚ್ಚಿದರು. ಅವರು ಬಿರುಕುಗಳ ಮೂಲಕ ನೋಡಿ ಪಿಸುಗುಟ್ಟಿ, ಬಾಗಿಲ ಅಡ್ಡಪಟ್ಟಿಯ ಮೂಲಕ ಜೀವವಿರುವ ಜಂತುಗಳನ್ನು ಒಳಗೆ ಹಾಕುತ್ತಿದ್ದರು. ಒಂದು ಸಲ ಅವರು ಕಿಟಕಿ ಮತ್ತು ಬಾಗಿಲಿಗೆ ಮೊಳೆ ಹೊಡೆದದ್ದರಿಂದ ಅದನ್ನು ತೆಗೆಯಲು ಅವ್ರೇಲಿಯಾನೋಗೆ ಅರ್ಧ ದಿನ ಹಿಡಿಯಿತು. ತಮ್ಮ ತುಂಟತನಕ್ಕೆ ಶಿಕ್ಷೆಯಾಗದ್ದರಿಂದ ಆಶ್ಚರ್ಯಗೊಂಡು ಒಂದು ದಿನ ಅವ್ರೇಲಿಯಾನೋ ಅಡುಗೆ ಮನೆಯಲ್ಲಿರುವಾಗ, ನಾಲ್ಕು ಜನ ಹುಡುಗರು ಚರ್ಮದ ಹಾಳೆಯನ್ನು ಹಾಳುಮಾಡುವುದಕ್ಕೆ ಸಿದ್ಧರಾದರು. ಆದರೆ ಆ ಹಳದಿ ಹಾಳೆಗಳ ಮೇಲೆ ಕೈಯಿಟ್ಟ ಕೂಡಲೇ ಅತೀವ ಶಕ್ತಿಯೊಂದು ಅವರನ್ನು ನೆಲದಿಂದ ಮೇಲಕ್ಕೆತ್ತಿ ಅವ್ರೇಲಿಯಾನೋ ಬಂದು ಅವರಿಂದ ಚರ್ಮದ ಹಾಳೆಗಳನ್ನು ತೆಗೆದುಕೊಳ್ಳುವ ತನಕ ಗಾಳಿಯಲ್ಲಿ ತೇಲುವಂತೆ ಮಾಡಿತು. ಅದಾದ ನಂತರ ಅವರು ಅವನ ತಂಟೆಗೆ ಬರಲಿಲ್ಲ. +ಅವರಲ್ಲಿ ಹೆಚ್ಚಿನ ವಯಸ್ಸಿನ, ಚಡ್ಡಿಯನ್ನು ಹಾಕಿಕೊಂಡಿದ್ದ ಇನ್ನೇನು ಹದಿವಯಸ್ಸಿಗೆ ಬರಲಿದ್ದ ನಾಲ್ವರು ಹೊಸೆ ಅರ್ಕಾದಿಯೋನ ವೈಯಕ್ತಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಇತರರಿಗಿಂತ ಮುಂಚೆ ಬರುತ್ತಿದ್ದರು ಮತ್ತು ಬೆಳಿಗ್ಗೆ ಅವನಿಗೆ ಶೇವ್ ಮಾಡುವುದರಲ್ಲಿ, ಬಿಸಿ ಬಟ್ಟೆಗಳಿಂದ ಮಾಲೀಷು ಮಾಡುವುದರಲ್ಲಿ, ಕೈ ಕಾಲುಗಳ ಉಗುರು ಕತ್ತರಿಗೆ ಪಾಲೀಶು ಮಾಡುವುದರಲ್ಲಿ ಮತ್ತು ಸುಗಂಧ ದ್ರವ್ಯ ಹಚ್ಚುವುದರಲ್ಲಿ ಕಳೆಯುತ್ತಿದ್ದರು. ಅನೇಕ ಸಲ ಅವರು ಕೊಳದಲ್ಲಿಳಿದು, ಅವನು ಅಮರಾಂತ ಬಗ್ಗೆ ಯೋಚಿಸುತ್ತ ಅದರಲ್ಲಿ ತೇಲುತ್ತಿದ್ದಂತೆ, ತಲೆಯಿಂದ ಕಾಲಿನ ತನಕ ಸೋಪು ಹಚ್ಚುತ್ತಿದ್ದರು. ಅನಂತರ ಅವರು ಅವನನ್ನು ಒರೆಸಿ, ಪೌಡರ್ ಹಚ್ಚಿ, ಬಟ್ಟೆ ತೊಡಿಸುತ್ತಿದ್ದರು. ಅವರಲ್ಲಿ ಗುಂಗುರು ಕೆಂಗೂದಲಿನ, ಮೊಲದ ಹಾಗೆ ನೇರಳೆ ಬಣ್ಣದ ಕಣ್ಣುಗಳಿದ್ದವನೊಬ್ಬ ಮನೆಯಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಅವನಿಗೂ ಮತ್ತು ಹೊಸೆ ಅರ್ಕಾದಿಯೋಗೂ ತೀವ್ರವಾದ ಸಂಬಂಧವಿದ್ದು ಅವನು ಅಸ್ತಮಾದಿಂದ ನಿದ್ದೆ ಬಾರದ ಸಂದರ್ಭಗಳಲ್ಲಿ ಜೊತೆಗಿದ್ದು, ಮಾತನಾಡದೆ, ಅವನ ಜೊತೆ ಕತ್ತಲಲ್ಲಿ ಮನೆಯೆಲ್ಲ ಓಡಾಡುತ್ತಿದ್ದ. ಒಂದು ರಾತ್ರಿ ಉರ್ಸುಲಾ ಮಲುಗುತ್ತಿದ್ದ ರೂಮಿನಲ್ಲಿ ಬಿರುಕು ಬಿಟ್ಟ ಸಿಮೆಂಟಿನಿಂದ ಹಳದಿ ಬೆಳಕೊಂದು, ನೆಲದೊಳಗೊಬ್ಬ ಸೂರ್ಯ ರೂಮಿನ ನೆಲವನ್ನು ಗಾಜಿನ ಹಾಸಿನಂತೆ ಮಾಡಿದ್ದಾನೋ ಎನ್ನುವಂತೆ ಅವರಿಗೆ ಕಾಣಿಸಿತು. ಅವರು ರೂಮ್‌ನಲ್ಲಿ ದೀಪ ಹಾಕಬೇಕಾಗಿರಲಿಲ್ಲ. ಅವರು ಉರ್ಸುಲಾಳ ಹಾಸಿಗೆ ಇರುತ್ತಿದ್ದ ಜಾಗದ ಮೂಲೆಯಲ್ಲಿ ಮುರಿದು ಹೋಗಿದ್ದ ಪ್ರಭೆ ತೀವ್ರವಾಗಿ, ಅವ್ರೇಲಿಯಾನೋ ಸೆಗುಂದೋ ಹುಚ್ಚೆದ್ದು ಹುಡುಕುತ್ತಿದ್ದ ಗುಪ್ತನಿಧಿ ಅವರಿಗೆ ಕಂಡಿತು. ಅಲ್ಲಿ ತಾಮ್ರದ ತಂತಿಗಳಿಂದ ಬಿಗಿದು ಕಟ್ಟಿದ್ದ ಮೂರು ಬಟ್ಟೆಯ ಚೀಲಗಳಿದ್ದು, ಅದರೊಳಗೆ ಎಂಟರ ಏಳು ಸಾವಿರದ ಇನ್ನೂರ ಹದಿನಾಲ್ಕು ನಾಣ್ಯಗಳು ಕತ್ತಲೆಯಲ್ಲಿ ಸಣ್ಣ ಕೆಂಡದ ಹಾಗೆ ಹೊಳೆಯುತ್ತಿದ್ದವು. +ನಿಧಿಯನ್ನು ಕಂಡು ಹಿಡಿದದ್ದು ಜ್ವಾಲೆಯಂತಾಯಿತು. ಹಠಾತ್ ಸಿಕ್ಕ ಸಂಪತ್ತಿನೊಡನೆ ವ್ಯಥೆ ತುಂಬಿದ ದಿನಗಳ ಕನಸಿನಂತೆ ರೋಮ್‌ಗೆ ವಾಪಸ್ಸಾಗುವ ಬದಲು ಹೊಸೆ ಅರ್ಕಾದಿಯೋ, ಮನೆಯನ್ನು ಇನ್ನೇನು ಅವನತಿಯಾಗುವ ಸ್ವರ್ಗವನ್ನಾಗಿ ಪರಿವರ್ತಿಸಿದ. ಅವನು ಮಂಚದ ಕರ್ಟನ್ ಮತ್ತು ಅದರ ಹೆಚ್ಚಳದ ವೆಲ್‌ವೆಟ್ಟನ್ನು ಹೊಸದಕ್ಕೆ ಬದಲಾಯಿಸಿದ. ಬಾತ್‌ರೂಮಿನ ನೆಲಕ್ಕೆ ಸಿಂಗರಿಸಿದ ಕಲ್ಲು ಮತ್ತು ಗೋಡೆಗಳಿಗೆ ಟೈಲ್ಸ್‌ಗಳನ್ನು ಹಾಕಿಸಿದ. ಊಟದ ರೂಮಿನ ಕಪಾಟುಗಳ ತುಂಬ ಹಣ್ಣು, ಉಪ್ಪಿನಕಾಯಿಯಿಂದ ತುಂಬಿದ ಮತ್ತು ಉಪಯೋಗಿಸದೆ ಇದ್ದ ಅಡುಗೆ ಮನೆಯ ಭಾಗದಲ್ಲಿ ಹೊಸೆ ಅರ್ಕಾದಿಯೋ ರೈಲ್ವೇ ಸ್ಟೇಷನ್‌ನಿಂದ ವೈನ್ ಮತ್ತು ಮಧ್ಯದ ಕ್ರೇಟುಗಳ ಮೇಲೆ ತನ್ನ ಹೆಸರು ಬರೆಸಿ ತಂದವುಗಳ ಶೇಖರಣೆಗಾಗಿ ಮತ್ತೆ ಉಪಯೋಗಿಸತೊಡಗಿದ. ಒಂದು ರಾತ್ರಿ ನಾಲ್ವರು ಸಾಕಷ್ಟು ವಯಸ್ಸಾದ ಮಕ್ಕಳ ಜೊತೆ ನಡೆಯುತ್ತಿದ್ದ ಪಾರ್ಟಿ ಬೆಳಗಿನ ಜಾವದ ತನಕ ನಡೆಯಿತು. ಬೆಳಿಗ್ಗೆ ಆರು ಗಂಟೆಗೆ ಅವರು ಬೆಡ್‌ರೂಮಿನಿಂದ ಬೆತ್ತಲಾಗಿ ಬಂದು ಕೊಳವನ್ನು ಶಾಂಪೇನ್‌ನಿಂದ ತುಂಬಿದರು. ಅವರು ಅದರೊಳಗೆ ಹಾರಿ ಸುಗಂಧ ಪೂರಿತ ಗುಳ್ಳೆಗಳ ನಡುವೆ ಹಾರಾಡುವಂತೆ ಈಜಾಡುತ್ತಿದ್ದರೆ ಹೊಸೆ ಅರ್ಕಾದಿಯೋ ಅಂಗಾತ ತೇಲುತ್ತ, ಸಂಭ್ರಮಿಸುತ್ತ, ಕಣ್ಣು ಬಿಟ್ಟುಕೊಂಡು ಅಮರಾಂತಳ ಬಗ್ಗೆ ಯೋಚಿಸುತ್ತಿದ್ದ. ಅವನು ಅದೇ ರೀತಿಯಲ್ಲಿ, ಹುಡುಗರು ಸುಸ್ತಾಗಿ, ಬೆಡ್‌ರೂಮ್‌ಗೆ ಹೋಗಿ, ಒರೆಸಿಕೊಳ್ಳಲು ಕರ್ಟನ್‌ಗಳನ್ನು ಎಳೆದು ಹರಿದು ಹಾಕುವ ತನಕ ಕ್ರೌರ್ಯದಿಂದ ಕೂಡಿದ, ಸಂಶಯಾತ್ಮಕವಾದ ಸಂತೋಷದ ಬಗ್ಗೆ ಯೋಚಿಸುತ್ತಿದ್ದ. ಆ ವ್ಯವಸ್ಥೆಯಲ್ಲಿ ಅವರು ರಾಕ್‌ಕ್ರಿಸ್ಟಲ್ ಕನ್ನಡಿಯನ್ನು ಒಡೆದು ತುಂಡು ಮಾಡಿದರು ಮತ್ತು ಮಲಗುವ ಅವಸರದಲ್ಲಿ ಮಂಚದ ಅಲಂಕಾರದ ಭಾಗವನ್ನು ಹಾಳುಗೆಡವಿದರು. ಹೊಸೆ ಆರ್ಕೆಡೋ ಬಾತ್‌ರೂಮಿನಿಂದ ವಾಪಸು ಬಂದಾಗ ಅವರು ಬೆತ್ತಲೆ ಗುಪ್ಪೆಯಾಗಿ ಮಲಗಿದ್ದನ್ನು ಕಂಡ. ಅವರು ಹಾಳುಮಾಡಿದ್ದಕ್ಕಿಂತ ಹೆಚ್ಚಾಗಿ ಸ್ವೇಚ್ಛಾ ಕ್ರೀಡೆಯಿಂದ ವ್ಯಥೆಗೊಂಡು ಜಿಗುಪ್ಸೆಯಿಂದ ಟ್ರಂಕ್‌ನೊಳಗೆ ಉಪಯೋಗಿಸದೇ ಇಟ್ಟಿದ್ದ ಬಾರುಕೋಲು ತೆಗೆದುಕೊಂಡು ಹುಚ್ಚನ ಹಾಗೆ ಕೂಗಾಡುತ್ತ, ಹುಡುಗರಿಗೆಲ್ಲ ಅಳತೆಗೆಟ್ಟು ಬಾರಿಸಿ ಮನೆಯಿಂದ ಹೊರಹಾಕಿದ. ಅನಂತರ ಅವನು ಅಸ್ತಮಾದಿಂದ ವಿಪರೀತ ಕುಗ್ಗಿ ಹೋಗಿ ಸಾಯುವವನಂತೆ ಕಂಡ. ಆ ಹಿಂಸೆ ಮುಗಿದು ಮೂರು ದಿನದ ನಂತರ ಉಸಿರುಗಟ್ಟಿ, ಹತ್ತಿರದ ಔಷಧಿ ಅಂಗಡಿಯಿಂದ ಒಳಗೆ ಹೀರಿಕೊಳ್ಳುವಂಥ ಪೌಡರನ್ನು ತಂದುಕೊಡುವಂತೆ ಕೇಳಲು ಅವ್ರೇಲಿಯಾನೋನ ರೂಮಿಗೆ ಹೋದ. ಇದರಿಂದ ಅವ್ರೇಲಿಯಾನೋ ಎರಡನೆ ಬಾರಿ ಹೊರಗೆ ಹೋಗುವಂತಾಯಿತು. ಅವನು ಎರಡು ಬ್ಲಾಕುಗಳ ಆಚೆ ಧೂಳು ಮುಚ್ಚಿದ ಕಿಟಕಿಗಳಿದ್ದ, ಲ್ಯಾಟಿನ್‌ನಲ್ಲಿ ಬರೆದ ಚೀಟಿಗಳಿದ್ದ ಪಿಂಗಾಣಿ ಬಾಟಲುಗಳಿದ್ದ ಔಷಧಿ ಅಂಗಡಿಗೆ ಹೋದ. ಅಲ್ಲಿ ನೈಲ್‌ನಷ್ಟು ಸುಂದರವಾಗಿದ್ದ ಹುಡುಗಿಯೊಬ್ಬಳು ಹೊಸೆ ಅರ್ಕಾದಿಯೋ ಚೀಟಿಯೊಂದರಲ್ಲಿ ಬರೆದುಕೊಟ್ಟಿದ್ದ ಔಷಧಿಯನ್ನು ಕೊಟ್ಟಳು. ಜನರಿಲ್ಲದ, ಹಳದಿ ಛಾಯೆಯ ಬಲ್ಬುಗಳು ರಸ್ತೆಯ ಮೇಲೆ ಬೀರಿದ್ದ ಬೆಳಕು ಅವ್ರೇಲಿಯಾನೋನ ಮೇಲೆ ಮೊದಲ ಸಲಕ್ಕಿಂತ ಹೆಚ್ಚಿನ ಕುತೂಹಲ ಉಂಟುಮಾಡಲಿಲ್ಲ. ಅವನು ಓಡಿಹೋದನೆಂದು ಹೊಸೆ ಅರ್ಕಾದಿಯೋ ಯೋಚಿಸುತ್ತಿದ್ದಂತೆ ಏದುಸಿರು ಬಿಡುತ್ತ, ಒಳಗೇ ಕುಳಿತು ಓಡಾಟವಿಲ್ಲದೆ ಸೊರಗಿ ಭಾರವಾದ ಕಾಲುಗಳನ್ನು ಎಳೆದು ಹಾಕುತ್ತ ಬಂದ. ಹೊರಗಿನ ಪ್ರಪಂಚದ ಬಗ್ಗೆ ಅವನ ನಿರ್ಲಕ್ಷ್ಯ ಎಷ್ಟು ನಿಶ್ಚಿತವಾಗಿತ್ತೆಂದರೆ ಕೆಲವು ದಿನಗಳಾದ ನಂತರ ಹೊಸೆ ಅರ್ಕಾದಿಯೋ ತನ್ನ ತಾಯಿಗೆ ಕೊಟ್ಟ ಮಾತನ್ನು ಮುರಿದು ಅವನು ಇಷ್ಟ ಬಂದ ಕಡೆ ಹೋಗಲು ಬಿಟ್ಟುಬಿಟ್ಟ. +ಅವ್ರೇಲಿಯಾನೋ ಅವನಿಗೆ, “ನಂಗೆ ಹೊರಗೇನೂ ಮಾಡಬೇಕಾಗಿಲ್ಲ\’ ಎಂದ +ಅವನು ಬಾಗಿಲು ಹಾಕಿಕೊಂಡು ಈಗೀಗ ಕೊಂಚ ತೆರೆದುಕೊಳ್ಳುತ್ತಿದ್ದ, ಆದರೆ ವ್ಯಾಖ್ಯಾನಿಸಲು ಅರ್ಥವಾಗದ ಚರ್ಮದ ಹಾಳೆಗಳ ಬರಹದಲ್ಲಿ ಮಗ್ನನಾದ. ಹೊಸೆ ಅರ್ಕಾದಿಯೋ ಅವನಿಗೆ ಹಂದಿ ಮಾಂಸದ ತುಂಡುಗಳನ್ನು, ಸಕ್ಕರೆ ಸವರಿದ ಹೂಗಳನ್ನು ತಂದುಕೊಡುತ್ತಿದ್ದ ಮತ್ತು ಎರಡು ಸಲ ವೈನ್ ಕೊಟ್ಟ. ಅವನಿಗೆ ಚರ್ಮದ ಹಾಳೆಗಳ ಬರಹಗಳ ಬಗ್ಗೆ ಆಸಕ್ತಿ ಇರಲಿಲ್ಲ. ಏಕೆಂದರೆ ಅವು ಹೊಸ ಇತಿಹಾಸವನ್ನು ತಿಳಿಸುತ್ತದೆ ಎಂದು ಅವನು ತಿಳಿದುಕೊಂಡಿದ್ದ. ಆದರೆ ಅನಾಥನಾದ ಅವನ ಸಂಬಂಧಿಗೆ ಪ್ರಪಂಚದ ಬಗ್ಗೆ ಇರುವ ಅಪಾರ ತಿಳಿವಳಿಕೆ ಮತ್ತು ಜ್ಞಾನ ಅವನನ್ನು ಸೆಳೆಯಿತು. ಅವನಿಗೆ ಲಿಖಿತ ರೂಪದ ಇಂಗ್ಲಿಷ್ ತಿಳಿಯುವುದೆಂದು ಮತ್ತು ಚರ್ಮದ ಹಾಳೆಗಳ ಬರಹದ ಮೂಲಕ ವಿಶ್ವಕೋಶದ ಮೊದಲನೆ ಪುಟದಿಂದ ಆರನೆ ಸಂಪುಟದ ಕೊನೆಯ ತನಕ, ಅದೊಂದು ಕಾದಂಬರಿ ಎನ್ನುವಂತೆ ಓದಿದ್ದಾನೆ ಎಂದು ತಿಳಿಯಿತು. ಪ್ರಾರಂಭದಲ್ಲಿ ಅವನು ರೋಮ್ ಬಗ್ಗೆ ಅವ್ರೇಲಿಯಾನೋ ಇಲ್ಲದಿರುವ ಏನನ್ನೋ ಮಾತಾಡುತ್ತಿದ್ದಾನೆಂದು ತಿಳಿದಿದ್ದ. ಆದರೆ ಬೇಗನೆ ಅವನಿಗೆ ವಿಶ್ವಕೋಶದಲ್ಲಿ ಇರದಿದ್ದ ವಿಷಯಗಳೂ ಗೊತ್ತಿದೆ ಎಂದು ಅರಿವಾಯಿತು. ಉದಾಹರಣೆಗೆ ವಸ್ತುಗಳ ಮೌಲ್ಯ. ಎಲ್ಲಿಂದ ಆ ವಿಷಯ ಗೊತ್ತಾಯಿತೆಂದು ಕೇಳಿದ್ದಕ್ಕೆ ಅವನು, “ಪ್ರತಿಯೊಂದೂ ಗೊತ್ತಿರೋದೇ” ಎಂದು ಮಾತ್ರ ಹೇಳುತ್ತಿದ್ದ. ಅವ್ರೇಲಿಯಾನೋನ ಮಟ್ಟಿಗೆ ತಾನು ಹೊಸೆ ಅರ್ಕಾದಿಯೋನನ್ನು ಹತ್ತಿರದಿಂದ ಕಂಡಿದ್ದಕ್ಕೂ ಮತ್ತು ಮನೆಯಲ್ಲಿ ಓಡಾಡಿಕೊಂಡಿದ್ದಾಗ ಕಲ್ಪಿಸಿಕೊಂಡಿದ್ದಕ್ಕೂ ತುಂಬ ವ್ಯತ್ಯಾಸವಿದೆ ಎಂದು ಆಶ್ಚರ್ಯಗೊಂಡ. ಅವನಿಗೆ ನಗಲು, ಆಗಿಂದಾಗ್ಗೆ ವ್ಯಥೆಗೊಂಡು ಮನೆಯ ಬಗ್ಗೆ ಯೋಚಿಸಲು, ಮೆಲ್‌ಕಿಯಾದೆಸ್‌ನ ರೂಮಿನ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿತ್ತು. ಒಂದೇ ರಕ್ತಕ್ಕೆ ಸೇರಿದ ಇಬ್ಬರು ಒಬ್ಬಂಟಿಗಳನ್ನು ಅದು ಹತ್ತಿರ ತಂದಿದ್ದ ಅವರಲ್ಲಿ ಸ್ನೇಹವಿರಲಿಲ್ಲ. ಅವರಿಬ್ಬರು ಭಿನ್ನವಾಗಿದ್ದರೂ ಒಟ್ಟಿಗೆ ಬಿಗಿದ ಬಾಂಧವ್ಯ ಅವರಿಬ್ಬರನ್ನೂ ಸಹನಶೀಲರನ್ನಾಗಿ ಮಾಡಿತ್ತು. ತನಗೆ ರೇಜಿಗೆ ತಂದ ಮನೆಯ ಸಮಸ್ಯೆಯೊಂದನ್ನು ಬಿಡಿಸಲು ಹೊಸೆ ಅರ್ಕಾದಿಯೋ ಅವ್ರೇಲಿಯಾನೋನನ್ನು ಕೇಳಿದರೆ ಅವ್ರೇಲಿಯಾನೋ ಅಂಗಳದಲ್ಲಿ ಕುಳಿತು ಎಂದಿನಂತೆ ಕರಾರುವಾಕ್ಕಾಗಿ ಬರುತ್ತಿದ್ದ ಅಮರಾಂತ ಉರ್ಸುಲಾಳ ಕಾಗದಗಳನ್ನು ಓದುತ್ತಿದ್ದ. ಅಲ್ಲದೆ ಅವನು ಹೊಸೆ ಅರ್ಕಾದಿಯೋ ಬಂದ ಮೇಲೆ ನಿರ್ಬಂಧಗೊಳಿಸಿದ್ದ ಬಾತ್ ರೂಮನ್ನು ಉಪಯೋಗಿಸಬಹುದಿತ್ತು. +ಅದೊಂದು ದಿನ ಮುಂಜಾನೆ ಅವಸರದ ಮುಂಬಾಗಿಲು ಬಡಿತದ ಶಬ್ದದಿಂದಾಗಿ ಇಬ್ಬರೂ ಏಳಬೇಕಾಯಿತು. ಅವನೊಬ್ಬ ವಯಸ್ಸಾದ, ಭೂತದ ಹಾಗಿರುವ ಹಸಿರುಗಣ್ಣಿನ ಮತ್ತು ಹಣೆಯ ಮೇಲೆ ಬೂದಿಯ ಕ್ರಾಸ್ ಇದ್ದವನಾಗಿದ್ದ. ಅವನ ಬಟ್ಟೆಗಳು ಚಿಂದಿಯಾಗಿ, ಬೂಟುಗಳು ಬಿರುಕು ಬಿಟ್ಟು, ಹೆಗಲ ಮೇಲೊಂದು ಹಳೆಯ ಗಂಟಿತ್ತು ಮತ್ತು ಅವನಲ್ಲಿದ್ದ ಒಟ್ಟಾರೆ ಘನತೆ ಅವನು ಕಾಣಿಸುತ್ತಿದ್ದಕ್ಕೆ ವ್ಯತಿರಿಕ್ತವಾಗಿದ್ದನ್ನು ಬಿಟ್ಟರೆ ಅವನೊಬ್ಬ ಭಿಕ್ಷುಕನಂತಿದ್ದ. ಆ ಅಂಗಳದಲ್ಲಿನ ಅರೆಬೆಳಕಿನಲ್ಲಿ ಅವನನ್ನು ಒಂದು ಸಲ ನೋಡಿದರೆ ಅವನಿಗೆ ಬದುಕುವಂತೆ ಮಾಡಿರುವುದರ ರಹಸ್ಯ ಸ್ವಂತಿಕೆಯನ್ನು ಉಳಿಸಿಕೊಳ್ಳಬೇಕು ಎನ್ನುವುದರ ಪ್ರೇರಣೆಯ ಹೆದರಿಕೆಯ ಅಭ್ಯಾಸ ಬಲದಿಂದ ಎನ್ನುವುದು ಅರಿವಾಗುತ್ತಿತ್ತು. ಅವನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹದಿನೇಳು ಗಂಡು ಮಕ್ಕಳಲ್ಲಿ ಬದುಕುಳಿದಿದ್ದ ಒಬ್ಬನೇ ಒಬ್ಬನಾದ ಮತ್ತು ತಲೆತಪ್ಪಿಸಿಕೊಂಡು ಓಡಾಡುವ ಬದುಕಿಗೆ ಬದಲಾಗಿ ನೆಮ್ಮದಿಯ ನೆಲೆಯನ್ನು ಹುಡುಕುತ್ತಿದ್ದ ಅವ್ರೇಲಿಯಾನೋ ಅಮದೋರ್ ಎಂದು ತನ್ನ ಗುರುತು ಹೇಳಿಕೊಂಡು, ಹೀನಾಯವಾಗಿ ಕಳೆದ ರಾತ್ರಿಗಳಲ್ಲಿ ಇದೊಂದೇ ಕ್ಷೇಮವಾದ ಸ್ಥಳ ಎಂದು ನೆನಪಿಸಿಕೊಂಡದ್ದರಿಂದ, ಆ ಮನೆಯಲ್ಲಿ ಆಶ್ರಯ ಕೊಡಬೇಕೆಂದು ಕೇಳಿಕೊಂಡ. ಅವನೊಬ್ಬ ಅಲೆಮಾರಿ ಎಂದು ಭಾವಿಸಿ ಅವರು ಅವನನ್ನು ರಸ್ತೆಗೆ ದಬ್ಬಿದರು. ಆಗ ಅವರಿಬ್ಬರೂ ಹೊಸೆ ಅರ್ಕಾದಿಯೋಗೆ ವಿಚಾರ ಶಕ್ತಿ ಬರುವ ವಯಸ್ಸಿನ ಮುಂಚೆಯೇ ಪ್ರಾರಂಭವಾಗಿದ್ದ ನಾಟಕವೊಂದರ ಅಂತ್ಯವನ್ನು ಬಾಗಿಲಲ್ಲಿ ನಿಂತು ನೋಡಿದರು. ಹತ್ತು ವರ್ಷಗಳಿಂದಲೂ ಅವ್ರೇಲಿಯಾನೋ ಅಮದೋರ್‌ನನ್ನು ಬೆನ್ನು ಹತ್ತಿದ್ದ ಇಬ್ಬರು ಪೋಲೀಸರು ಎದುರು ರಸ್ತೆಯ ಆಚೆ ಬದಿಯಲ್ಲಿದ್ದ ಬಾದಾಮಿ ಮರಗಳಿಂದ ಹೊರಗೆ ಬಂದು ಬಂದೂಕಿನಿಂದ ಅವನ ಹಣೆಯ ಬೂದಿಯ ಕ್ರಾಸನ್ನು ಸರಿಯಾಗಿ ಭೇದಿಸುವಂತೆ ಎರಡು ಗುಂಡು ಹೊಡೆದರು. +ಹುಡುಗರನ್ನು ಮನೆಯಿಂದ ಒದ್ದೋಡಿಸಿದ್ದಾಗಿನಿಂದಲೂ ಹೊಸೆ ಅರ್ಕಾದಿಯೋ ನೇಪಲ್ಸ್‌ನಿಂದ ಕ್ರಿಸ್‌ಮಸ್‌ಗಿಂತ ಮುಂಚೆ ಹೊರಡುವ ಹಡಗು ಸಂಚಾರದ ಸುದ್ದಿಯ ಬಗ್ಗೆ ನಿಜವಾಗಲೂ ಕಾಯುತ್ತಿದ್ದ. ಅವನು ಅವ್ರೇಲಿಯಾನೋಗೆ ಯಾವುದಾದರೂ ಉದ್ದಿಮೆಯನ್ನು ಜೀವನಾಧಾರಕ್ಕಾಗಿ ಹೊಂದಿಸಿಕೊಡುವುದಾಗಿ ಹೇಳಿದ್ದ. ಏಕೆಂದರೆ ಫೆರ್ನಾಂಡ ಸತ್ತ ಮೇಲೆ ಆಹಾರದ ಬುಟ್ಟಿಗಳು ಬರುವುದು ನಿಂತು ಹೋಗಿತ್ತು. ಆದರೆ ಆ ಕೊನೆಯ ಕನಸೂ ಫಲಗೂಡಲಿಲ್ಲ. ಸೆಪ್ಟೆಂಬರ್‌ನಲ್ಲಿ ಒಂದು ದಿನ ಬೆಳಿಗ್ಗೆ ಅಡುಗೆ ಮನೆಯಲ್ಲಿ ಅವ್ರೇಲಿಯಾನೋನ ಜೊತೆ ಕಾಫಿ ಕುಡಿದು ಹೊಸೆ ಅರ್ಕಾದಿಯೋ ದಿನ ನಿತ್ಯದ ಸ್ನಾನವನ್ನು ಮುಗಿಸುತ್ತಿದ್ದಂತೆ ಹೆಂಚುಗಳನ್ನು ತೆಗೆದು ಮನೆಯಿಂದ ಹೊರಹಾಕಿದ್ದ ನಾಲ್ವರು ಹುಡುಗರು ಮನೆಯೊಳಗೆ ಹಾರಿ ನುಗ್ಗಿದರು. ಅವನಿಗೆ ರಕ್ಷಿಸಿಕೊಳ್ಳಲು ಅವಕಾಶವೇ ಕೊಡದಂತೆ, ಪೂರ್ತಿ ಬಟ್ಟೆಯುಟ್ಟುಕೊಂಡು ಕೊಳಕ್ಕೆ ಹಾರಿ, ಅವನ ಕೂದಲು ಹಿಡಿದುಕೊಂಡು, ತಲೆಯನ್ನು ನೀರಿನಲ್ಲಿ ಮುಳುಗಿಸಿ, ಸಾಯುವ ತನಕ ಮೇಲೆ ಬರುತ್ತಿದ್ದ ಗುಳ್ಳೆಗಳು ನಿಲ್ಲುವ ತನಕ ಹಾಗೆಯೇ ಹಿಡಿದಿದ್ದರು. ಅನಂತರ ಸುಮ್ಮನಾದ ಅವನ ದೇಹ ಸುಗಂಧಪೂರಿತ ನೀರಿನ ತಳಭಾಗಕ್ಕೆ ಜರುಗಿತು. ಅನಂತರ ಅವರಿಗೆ ಮತ್ತು ಸತ್ತವನಿಗೆ ಮಾತ್ರ ಗೊತ್ತಿದ್ದ ಬಂಗಾರವಿದ್ದ ಮೂರು ಚೀಲಗಳನ್ನು ಬಚ್ಚಿಟ್ಟ ಸ್ಥಳದಿಂದ ಹೊರಗೆ ತೆಗೆದರು. ಅದೆಷ್ಟು ಶೀಘ್ರವಾದ ಮತ್ತು ಕ್ರಮಬದ್ಧವಾದ ಕ್ರಿಯೆಯಾಗಿತ್ತೆಂದರೆ, ಮಿಲಿಟರಿ ಕಾರ್ಯಾಚರಣೆಯಂತಿತ್ತು. ಬಾಗಿಲು ಹಾಕಿಕೊಂಡು ರೂಮಿನಲ್ಲಿದ್ದ ಅವ್ರೇಲಿಯಾನೋಗೆ ಯಾವುದೂ ತಿಳಿಯಲಿಲ್ಲ. ಅವನು ಅಡುಗೆ ಮನೆಯಲ್ಲಿ ಮಧ್ಯಾಹ್ನ ಸಿಗದೇ ಹೋದದ್ದರಿಂದ ;ಸೆ ಅರ್ಕಾದಿಯೋಗಾಗಿ ಮನೆಯೆಲ್ಲ ಹುಡುಕಿದ ಅವ್ರೇಲಿಯಾನೋಗೆ ಕೊಳದಲ್ಲಿ ಸುಗಂಧಿತ ಕನ್ನಡಿಯ ಮೇಲೆ ತೇಲುತ್ತ, ಊದಿಕೊಂಡಿದ್ದ ಹಾಗೂ ಇನ್ನೂ ಅಮರಾಂತಳ ಬಗ್ಗೆ ಯೋಚಿಸುತ್ತಿದ್ದವನು ಕಂಡ. ಆಗಲೇ ಅವನಿಗೆ ಅವನನ್ನು ತಾನೆಷ್ಟು ಪ್ರೀತಿಸುತ್ತಿದ್ದೇನೆ ಎಂದು ತಿಳಿದದ್ದು. +೧೯ +ಅಮರಾಂತ ಉರ್ಸುಲಾ ಡಿಸೆಂಬರ್‌ನ ಪ್ರಾರಂಭದಲ್ಲಿ ನೌಕೆಯೊಂದರಲ್ಲಿ ಕತ್ತಿಗೆ ಸಿಲ್ಕ್ ದಾರ ಸುತ್ತಿದ ಗಂಡನ ಜೊತೆ ವಾಪಸು ಬಂದಳು. ಅವಳು ಯಾವುದೇ ಮುನ್ನೆಚ್ಚರಿಕೆ ಕೊಡದೆ, ದಂತದ ಬಣ್ಣದ ಮಂಡಿಯ ತನಕ ಇಳಿದ ಹರಳುಗಳ, ಪಚ್ಚೆಯ ಮತ್ತು ಗೋಮೇಧಿಕದ ಉಡುಗೆ ತೊಟ್ಟುಕೊಂಡು ಮತ್ತು ಕೂದಲನ್ನು ಕಿವಿಯ ಹಿಂದಕ್ಕೆ ಪಿನ್ನುಗಳಿಂದ ಕಟ್ಟಿ ಕಾಣಿಸಿಕೊಂಡಳು. ಅವಳು ಆರು ತಿಂಗಳ ಹಿಂದೆ ಮದುವೆಯಾಗಿ ನೀಳಕಾಯದವನಾಗಿದ್ದವನು ನೋಡುವುದಕ್ಕೆ ನೌಕಾಯಾನ ಮಾಡುವವನ ಹಾಗಿದ್ದ. ತಾನು ಮನೆಯಿಂದ ಹೋಗಿ ಬಹಳ ಕಾಲವಾಯಿತೆಂದು ಮತ್ತು ತಾನು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚು ಹಾಳಾಗಿರುವುದನ್ನು ತಿಳಿದುಕೊಳ್ಳಲು ಅವಳು ಮುಂಬಾಗಿಲನ್ನು ತೆಗೆಯಬೇಕಾಯಿತಷ್ಟೆ. +ಅವಳಿಗೆ ಆಶ್ಚರ್ಯಕ್ಕಿಂತ ವಿಚಿತ್ರ ಸಂತೋಷವಾಗಿ, “ಅಯ್ಯೋ ದೇವರೆ! ಈ ಮನೇಲಿ ಹೆಂಗಸರ್‍ಯಾರೂ ಇಲ್ಲ ಅಂತ ನೋಡಿದ್ರೇ ಗೊತ್ತಾಗುತ್ತೆ” ಎಂದಳು. +ಸಾಮಾನುಗಳನ್ನಿಡಲು ಅಂಗಳ ಸಾಕಾಗಲಿಲ್ಲ. ಅವಳನ್ನು ಸ್ಕೂಲಿಗೆ ಕಳಿಸಿ ಕೊಟ್ಟಾಗ ಫೆರ್ನಾಂಡಳ ಎರಡು ಹಳೆಯ ಟ್ರಂಕುಗಳಲ್ಲದೆ ಇನ್ನೆರಡು ಟ್ರಂಕುಗಳು, ನಾಲ್ಕು ದೊಡ್ಡ ಸೂಟ್‌ಕೇಸುಗಳು, ಕೊಡೆಗಳ ಬ್ಯಾಗ್, ಎಂಟು ಟೋಪಿ ಬಾಕ್ಸ್‌ಗಳು, ಐವತ್ತು ಕನೇರಿ ಹಕ್ಕಿಗಳಿದ್ದ ದೊಡ್ಡ ಪಂಜರ ಮತ್ತು ಅವಳ ಗಂಡ ಮುರಿದು ಹೋಗಿದ್ದರೂ ಹಳೆಯ ಕಾಲದ ವಾಹನವನ್ನು ಪೆಟ್ಟಿಗೆಯೊಳಗೆ ತಂದಿದ್ದ. ಅವಳು ದೂರದ ಪ್ರಯಾಣದ ನಂತರ ಒಂದು ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳಲಿಲ್ಲ. ತನ್ನ ಗಂಡ ಇತರೆ ವಾಹನ ಸಲಕರಣೆಗಳ ಜೊತೆ ತಂದಿದ್ದ ಒಂದು ಮೇಲುಡುಗೆಯನ್ನು ತೊಟ್ಟು ಮನೆಯನ್ನು ಸುವ್ಯವಸ್ಥಿತವಾಗಿಡಲು ಪ್ರಾರಂಭಿಸಿದಳು. ಅವಳು ಅಂಗಳವನ್ನು ಆಕ್ರಮಿಸಿದ್ದ ಕೆಂಜಿಗಗಳನ್ನು ಓಡಿಸಿದಳು. ಕೆಂಗುಲಾಬಿಯ ಪೊದೆಗಳಿಗೆ ಮತ್ತೆ ಜೀವ ತುಂಬಿದಳು. ಕಳೆ ಕೀಳಿಸಿದಳು. ಜರ್ರ್ರೀ ಗಿಡ ಮತ್ತು ಬೆಗೋನಿಯಾಗಳನ್ನು ಪಾಟುಗಳಲ್ಲಿ ಮೆಟ್ಟಿಲುಗಳ ಮೇಲೆ ಇಟ್ಟಳು. ಅವಳು ಮರಗೆಲಸದವರು, ಗಾರೆಯವರು, ಕುಲುಮೆಯವರು ಸೇರಿದ ಗುಂಪಿನ ಉಸ್ತುವಾರಿ ವಹಿಸಿಕೊಂಡಳು. ಅವರು ನೆಲದ ಬಿರುಕುಗಳನ್ನು ಮುಚ್ಚಿದರು, ಕಿಟಕಿ, ಬಾಗಿಲುಗಳನ್ನು ಸರಿಪಡಿಸಿದರು. ಪೀಠೋಪಕರಣಗಳನ್ನು ರಿಪೇರಿ ಮಾಡಿದರು ಮತ್ತು ಮನೆಯ ಒಳ ಹೊರಗೆ ಸುಣ್ಣ ಬಳಿದರು. ಇದರಿಂದಾಗಿ ಅವರು ಒಂದು ಮೂರು ತಿಂಗಳಲ್ಲಿ ಪಿಯಾನೋದಂಥ ವಾದ್ಯವಿದ್ದ ಕಾಲದಲ್ಲಿದ್ದ ಉತ್ಸಾಹ ಮತ್ತು ಲವಲವಿಕೆಯ ವಾತಾವರಣ ಮರುಕಳಿಸಿದ್ದನ್ನು ಯಾರಾದರೂ ಕಾಣಬಹುದಿತ್ತು. ಯಾರೂ ಎಂದೂ ಯಾವ ಸಮಯದಲ್ಲಾದರೂ, ಸಂದರ್ಭದಲ್ಲಾದರೂ ಇಂದಿನಷ್ಟು ಗೆಲುವಿನ ಮನಸ್ಥಿತಿಯಲ್ಲಿರಲಿಲ್ಲ. ಹಳೆಯ ಪದ್ಧತಿಗಳನ್ನು ಮೂಲೆಗೆಸೆದು ಹಾಡಿ ಕುಣಿಯುವುದಕ್ಕೆ ಸಿದ್ಧರಿರಲಿಲ್ಲ. ಅವಳು ಶವಸಂಸ್ಕಾರದ ಕಾಣಿಕೆಗಳು ಮತ್ತು ಮೂಲೆಯಲ್ಲಿ ಸೇರಿಸಿಟ್ಟಿದ್ದ ಮೂಢ ನಂಬಿಕೆಗಳ ವಸ್ತುಗಳನ್ನು ಕಸಬರಿಕೆಯಿಂದ ಗುಡಿಸಿ ಎಸೆದಳು. ಉರ್ಸುಲಾಳ ಬಗ್ಗೆ ತಳೆದ ಕೃತಜ್ಞತೆಯ ಭಾವದಿಂದ ಹಾಗೆ ಮಾಡದೆ ಬಿಟ್ಟ ವಸ್ತುವೆಂದರೆ ನಡುಮನೆಯಲ್ಲಿದ್ದ ರೇಡಿಯೋಗಳ ಛಾಯಾಗ್ರಾಹಕ ಉಪಕರಣವನ್ನು ಮಾತ್ರ. ಅವಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಾ, “ನನ್ನದೆಂಥ ಭಾಗ್ಯ. . .ಹದಿನಾಲ್ಕು ವರ್ಷದ ಅಜ್ಜಿ!” ಎಂದಳು. ಗಾರೆ ಕೆಲಸದವನೊಬ್ಬ ಮನೆಯ ತುಂಬ ದೆವ್ವಗಳಿವೆಯೆಂದೂ, ಅವುಗಳನ್ನು ಓಡಿಸಬೇಕಾದರೆ ಅವು ಹೂತಿಟ್ಟಿರುವ ಸಂಪತ್ತನ್ನು ಹುಡುಕಿ ತೆಗೆಯಬೇಕೆಂದೂ ಹೇಳಿದಾಗ ಅವಳು ನಗುತ್ತಾ ಗಂಡಸರಿಗೆ ಅಷ್ಟೊಂದು ಮೂಢನಂಬಿಕೆ ಇರುವುದು ಸರಿಯಲ್ಲ ಎಂದಳು. ಅವಳೆಷ್ಟು ಬಿಡುಗಡೆ ಹೊಂದಿದ, ಮುಕ್ತಳಾದ, ನವಭಾವದ ವ್ಯಕ್ತಿಯಾಗಿದ್ದಳೆಂದರೆ ಅವಳನ್ನು ಕಂಡಾಗ ಅವ್ರೇಲಿಯಾನೋಗೆ ತಾನೇನು ಮಾಡಬೇಕೆಂದು ತಿಳಿಯಲಿಲ್ಲ. ಅವಳ, “ನನ್ನ…ನನ್ನ.. . ಪ್ರೀತಿಯ ನರಭಕ್ಷಕ ಎಷ್ಟು ಬೆಳೆದಿದ್ದಾನೆ ನೋಡಿ!” ಎಂದಳು. ಸಂತೋಷದಿಂದ ನಕ್ಕು ಕೈ ಚಾಚಿ ಹೇಳಿದಳು. ಅವನು ಪ್ರತಿಕ್ರಿಯೆ ತೋರಿಸುವ ಮೊದಲೇ, ತನ್ನ ಜೊತೆ ತಂದಿದ್ದ ಫೋನೋಗ್ರಾಫ್‌ನಲ್ಲಿ ರಿಕಾರ್ಡ್ ಒಂದನ್ನು ಹಾಕಿ, ಅವನಿಗೆ ನೃತ್ಯದ ಇತ್ತೀಚಿನ ಹೆಜ್ಜೆಗಳನ್ನು ಹೇಳಿಕೊಡಲು ಪ್ರಾರಂಭಿಸಿದಳು. ಅವನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ಬಳುವಳಿ ಪಡೆದಿದ್ದ ಕೊಳಕು ಪ್ಯಾಂಟನ್ನು ಕಳಚಲು ಹೇಳಿ ಹರೆಯ ಬಿಂಬಿಸುವ ಶರಟು ಮತ್ತು ಶೂಗಳನ್ನು ಹಾಕಿಕೊಳ್ಳಲು ಕೊಟ್ಟಳು ಮತ್ತು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ತುಂಬ ಸಮಯ ಕಳೆಯುತ್ತಿದ್ದ ಅವನನ್ನು ಮನೆಯಿಂದ ಹೊರಗೆ ಕಳಿಸುತ್ತಿದ್ದಳು. +ಉರ್ಸುಲಾಳ ಹಾಗೆ ಚಿಕ್ಕ ಆಕಾರವಿದ್ದ, ಚಟುವಟಿಕೆಯ, ದೃಢ ಚಿತ್ತದ ಮತ್ತು ಸುಂದರಿ ರೆಮಿದಿಯೋಸ್‌ಳಂತೆ ಪ್ರಚೋದಕಳಾಗಿದ್ದ ಅವಳಿಗೆ ಫ್ಯಾಶನ್‌ಗಳನ್ನು ಮುಂಗಾಣುವ ಶಕ್ತಿಯಿತ್ತು. ಟಪಾಲಿನಲ್ಲಿ ತೀರ ಇತ್ತೀಚಿನ ಫ್ಯಾಶನ್‌ಗಳ ಚಿತ್ರಗಳು ಬಂದಾಗ ತಾನು ಡಿಸೈನ್ ಮಾಡಿದ್ದರಲ್ಲಿ ತಪ್ಪಿಲ್ಲ ಎನ್ನುವುದಕ್ಕೆ ಪುರಾವೆ ಒದಗಿಸುತ್ತಿತ್ತು ಮತ್ತು ಅವುಗಳನ್ನು ಅಮರಾಂತಳ ಕಾಲಿನಿಂದ ಒತ್ತುವ ಯಂತ್ರದಲ್ಲಿ ಹೊಲಿಗೆ ಮಾಡಿದ್ದಳು. ಅವಳು ಯೂರೋಪಿನಿಂದ ಪ್ರಕಟವಾಗುವ ಪ್ರತಿಯೊಂದು ಫ್ಯಾಷನ್ ಮ್ಯಾಗಸೈನ್‌ಗೆ, ಕಲಾಸಂಚಿಕೆಗಳಿಗೆ ಮತ್ತು ಜನಪ್ರಿಯ ಸಂಗೀತದ ವಿಮರ್ಶೆಯ ಪತ್ರಿಕೆಗಳಿಗೆ ಚಂದಾದಾರಳಾದಳು. ಅವುಗಳ ಕಡೆಗೆ ಒಂದು ನೋಟ ಮಾತ್ರದಿಂದಲೇ ತಾನು ಕಲ್ಪಿಸಿದಂತೆ ಜಗತ್ತಿನಲ್ಲಿ ಜರುಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು ಅವಳಿಗೆ ಸಾಕಾಗಿತ್ತು. ಆ ರೀತಿಯ ಶಕ್ತಿಯುಳ್ಳ ಹೆಂಗಸೊಬ್ಬಳು ಧೂಳು ಮತ್ತು ಶಾಖದಿಂದ ಸತ್ತು ಸೊರಗಿದ ಊರಿಗೆ ಏತಕ್ಕಾಗಿ ವಾಪಸು ಬಂದಳೆಂದು ತಿಳಿಯುವುದು ಸಾಧ್ಯವಿರಲಿಲಲ. ಅದರಲ್ಲೂ ಪ್ರಪಂಚದ ಯಾವ ಭಾಗದಲ್ಲಾದರೂ ಜೀವಿಸಿರಬಹುದಾದಷ್ಟು ಹಣವಂತ ಮತ್ತು ಅತೀವವಾಗಿ ಪ್ರೀತಿಸುವ ಗಂಡನಿರುವಾಗ. ಕ್ರಮೇಣ ಕಾಲ ಕಳೆದಂತೆ ಅವಳು ಅಲ್ಲಿ ನೆಲೆಸುವ ಅಂಶ ಸ್ಪಷ್ಟವಾಗುತ್ತ ಬಂತು. ಏಕೆಂದರೆ ಅವರು ದೂರದೃಷ್ಟಿ ಇರದ ಯಾವುದನ್ನೂ ಮಾಡುತ್ತಿರಲಿಲ್ಲ. ಅಲ್ಲದೆ ಮಕೋಂದೋದಲ್ಲಿ ಅನುಕೂಲಕರವಾದ ಮತ್ತು ಶಾಂತಿಯಿಂದ ಇಳಿವಯಸ್ಸನ್ನು ಕಳೆಯುವ ಕೆಲಸಗಳನ್ನಲ್ಲದೆ ಬೇರೆ ಯಾವುದನ್ನೂ ಮಾಡುತ್ತಿರಲಿಲ್ಲ. ಕನೇರಿ ಪಕ್ಷಿಗಳಿದ್ದ ಪಂಜರ ಆ ನಿರ್ಧಾರ ಕ್ಷಣವೊಂದರಲ್ಲಿ ತೆಗೆದುಕೊಂಡದ್ದೆಂದು ತಿಳಿಸುತ್ತಿತ್ತು. ಅವಳ ತಾಯಿ ಪಕ್ಷಿಗಳು ಕಾಣೆಯಾಗುತ್ತಿವೆ ಎಂದು ಬರೆದ ಕಾಗದವೊಂದರ ಕಾರಣದಿಂದ, ನೌಕೆ ಫಾರ್‍ಚೂನ್ ದ್ವೀಪಗಳಲ್ಲಿ ನಿಂತು ಮತ್ತು ಅವಳು ಅಲ್ಲಿ ಅತ್ಯಂತ ಚೆಲುವಿನ ಇಪ್ಪತ್ತೈದು ಜೊತೆ ಕನೇರಿ ಪಕ್ಷಿಗಳನ್ನು ಮಕೋಂದೋದ ಆಕಾಶದಲ್ಲಿ ಮತ್ತೆ ಹಾರಿ ಬಿಡುವುದಕ್ಕೋಸ್ಕರ ಪ್ರಯಾಣವನ್ನು ಅನೇಕ ತಿಂಗಳುಗಳ ಕಾಲ ನಿಧಾನಗೊಳಿಸಿದ್ದಳು. ಅವಳು ಉತ್ಸಾಹದಿಂದ ಕೈಗೊಂಡ ಅನೇಕ ಕಾರ್ಯಗಳಲ್ಲಿ ಅದು ಎಲ್ಲಕ್ಕಿಂತ ಹೆಚ್ಚಿನದು. ಅವುಗಳಿಂದ ಮತ್ತಷ್ಟು ಹಕ್ಕಿಗಳು ಹುಟ್ಟಿದ ಮೇಲೆ ಅಮರಾಂತ ಉರ್ಸುಲಾ ಅವುಗಳನ್ನು ಜೋಡಿಯಾಗಿ ಬಿಡುಗಡೆ ಮಾಡುತ್ತಿದ್ದಳು. ಅವುಗಳಿಗೆ ತಾವು ಬಂಧಮುಕ್ತವೆಂದು ಭಾವನೆ ಬಂದ ಕೂಡಲೇ ಊರಿನಿಂದ ಆಚೆ ಓಡುತ್ತಿದ್ದವು. ಉರ್ಸುಲಾ ಮೊದಲು ಮನೆಯ ಮರುನಿರ್ಮಾಣದಲ್ಲಿ ಮಾಡಿದ ಹಾಗೆ, ಪಂಜರದ ಹಕ್ಕಿಗಳಲ್ಲಿ ಪ್ರೇಮವನ್ನು ಜಾಗೃತಗೊಳಿಸಲು ಅವಳು ಪ್ರಯತ್ನಿಸಿದ್ದು ವ್ಯರ್ಥವಾಯಿತು. ಅದೇ ರೀತಿ ಬಾದಾಮಿ ಮರಗಳಲ್ಲಿ ನಿರ್ಮಿಸಿದ ಕೃತಕ ಹುಲ್ಲುಗಳಿಂದ ನಿರ್ಮಿಸಿದ ಗೂಡುಗಳು ಕೂಡ. ಅಲ್ಲದೆ, ಮನೆಯ ತಾರಸಿಯ ಮೇಲೆ ಹಾಕಿದ ಹಕ್ಕಿಕಾಳು ಮತ್ತು ಪಂಜರದ ಹಕ್ಕಿಗಳನ್ನು ಉತ್ತೇಜಿಸಿ, ತೊರೆದು ಹೋಗುವಂಥವುಗಳನ್ನು ತಡೆಹಿಡಿಯಲು ಮಾಡಿದ ಪ್ರಯತ್ನ ಕೂಡ. ಏಕೆಂದರೆ ಅವು ತಮ್ಮ ಮೊದಲ ಪ್ರಯತ್ನದಲ್ಲಿಯೇ ಆಕಾಶಕ್ಕೆ ಹಾರಿ ತಕ್ಷಣವೇ ಫಾರ್ಚೂನ್ ದ್ವೀಪಗಳ ಕಡೆ ಹೋಗುತ್ತಿದ್ದವು. +ಅಮರಾಂತ ಉರ್ಸುಲಾ ಹಿಂದಿರುಗಿ ಒಂದು ವರ್ಷ ಕಳೆದರೂ ಅವಳು ಯಾವುದೇ ಸ್ನೇಹಿತರನ್ನು ಸಂಪಾದಿಸಲು ಯಶಸ್ವಿಯಾಗಿರದಿದ್ದರೂ ಅಥವಾ ಯಾವುದೇ ಪಾರ್ಟಿ ಕೊಡದಿದ್ದರೂ ಕೂಡ ದುರದೃಷ್ಟಕ್ಕೆ ಮತ್ತೆ ಮತ್ತೆ ಸಿಲುಕಿದ ಕುಟುಂಬವನ್ನು ಕಾಪಾಡಲು ಇನ್ನೂ ಸಾಧ್ಯ ಎಂದು ನಂಬಿದ್ದಳು. ಅವಳ ಗಂಡ ಗಾತ್ಸನ್‌ಗೆ, ಆ ದುರ್ದಿನ ಟ್ರೈನಿನಿಂದ ಇಳಿದಾಗ, ತನ್ನ ಹೆಂಡತಿಯ ನಿರ್ಧಾರ ಪಳೆಯುಳಿಕೆಯಿಂದ ಪ್ರೇರಿತವಾದದ್ದೆಂದು ಅರಿವಾದರೂ ಅವಳನ್ನು ರೇಗಿಸಲು ಹೋಗಿರಲಿಲ್ಲ. ಅಲ್ಲಿನ ವಾಸ್ತವಾಂಶಗಳಿಂದ ಅವಳು ಹತಾಶಳಾಗುತ್ತಾಳೆಂದು ಭಾವಿಸಿ ಅವನು ಮನೋವ್ಯಥೆಯಿಂದ ಮುದುಡಿ ಹೋಗಿದ್ದ. ವಾಹನವನ್ನೂ ರಿಪೇರಿ ಮಾಡಲಿಲ್ಲ. ಆದರೆ ಗಾರೆ ಕೆಲಸದವರು ಉರುಳಿಸಿದ್ದ ಜೇಡರ ಬಲೆಗಳಲ್ಲಿ ದೊಡ್ಡ ಮೊಟ್ಟೆ ಇರುವಂಥವುಗಳನ್ನು ಹುಡುಕಿ, ಉಗುರಿನಿಂದ ಕಿತ್ತು ಅದರೊಳಗಿಂದ ಹೊರಡುವ ಸಣ್ಣ ಜೇಡಗಳನ್ನು ಭೂತಗನ್ನಡಿಯಿಂದ ನೋಡುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದ. ಕ್ರಮೇಣ ಅಮರಾಂತ ಉರ್ಸುಲಾಳಿಗೆ ರಿಪೇರಿಯಿಂದಾಗಿ ಬಿಡುವಿಲ್ಲವೆಂದು ತಿಳಿದು, ಮುಂದಿನ ಚಕ್ರ ಹಿಂದಿನದಕ್ಕಿಂತ ದೊಡ್ಡದಾಗಿದ್ದ ಚಂದವಾಗಿ ಕಾಣಿಸುವ ಬೈಸಿಕಲ್ ರಿಪೇರಿ ಮಾಡಲು ನಿರ್ಧರಿಸಿದ. ಅಲ್ಲದೆ ಅಲ್ಲಿನ ಪ್ರತಿಯೊಂದು ಸ್ಥಳೀಯ ಜಂತುವನ್ನು ಹಿಡಿದು, ಗುಣಪಡಿಸಿ, ಜಾರ್‌ಗಳಲ್ಲಿ ಹಾಕಿ, ಲೀಗೆ ವಿಶ್ವವಿದ್ಯಾಯಾಲಯದಲ್ಲಿ ಅವನಿಗೆ ಪ್ರಕೃತಿ ಇತಿಹಾಸದಲ್ಲಿ ತನಗೆ ಪ್ರೊಫೆಸರ್ ಆಗಿದ್ದವರಿಗೆ ಕಳಿಸಿಕೊಡುತ್ತಿದ್ದ. ಅಲ್ಲಿ ಅವನು ಪ್ರಮುಖವಾಗಿ ವಿಮಾನ ಚಾಲನೆಯನ್ನು ಅಭ್ಯಾಸ ಮಾಡಿದ್ದರೂ ಕ್ರಿಮಿಶಾಸ್ತ್ರ ವಿದ್ಯೆಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ್ದ. ಅವನು ಸೈಕಲ್ ಓಡಿಸುವಾಗ ಬಿಗಿಯುಡುಗೆ ತೊಟ್ಟು, ಬಣ್ಣ ಬಣ್ಣದ ಕಾಲುಚೀಲ ಮತ್ತು ಶೆರ್‌ಲಾಕ್ ಹೋಮ್ಸ್‌ನ ಹ್ಯಾಟ್ ಹಾಕಿಕೊಂಡಿರುತ್ತಿದ್ದ. ಆದರೆ ಕಾಲು ನಡಿಗೆಯಲ್ಲಿ ಅವನು ಕುಂದಿರದ ಹತ್ತಿ ಬಟ್ಟೆಯ ಸೂಟ್, ಬಿಳಿ ಶೂ, ಸಿಲ್ಕ್ ಬೋ ಟೈ ಹಾಕಿಕೊಂಡು, ಕೈಯಲ್ಲೊಂದು ಬೆತ್ತ ಹಿಡಿದುಕೊಂಡಿರುತ್ತಿದ್ದ. ಅವನ ಸಪ್ಪೆ ಮುಖ ನೌಕಾಯಾನ ಮಾಡುವವನ ಲಕ್ಷಣವನ್ನು ಎದ್ದು ತೋರಿಸುತ್ತಿತ್ತು ಮತ್ತು ಅವನ ಸಣ್ಣ ಮೀಸೆ ಅಳಿಲಿನ ಕೂದಲಂತೆ ಕಾಣುತ್ತಿತ್ತು. ಅವನು ಅವನ ಹೆಂಡತಿಗಿಂತ ಹದಿನೈದು ವರ್ಷ ದೊಡ್ಡವನಾದರೂ ಅವಳನ್ನು ಸಂತೋಷವಾಗಿರಿಸುವುದಕ್ಕೆ ಅವನ ತೀವ್ರವಾದ ದೃಢತೆ ಮತ್ತು ಪ್ರೇಮಿಯಾಗಿ ಉತ್ತಮ ಗುಣಗಳು ಆ ವ್ಯತ್ಯಾಸವನ್ನು ಸರಿದೂಗಿಸಿದ್ದವು. ನಲವತ್ತರಲ್ಲಿದ್ದ ಅವನ ಕ್ರಮಬದ್ಧವಾದ ಅಭ್ಯಾಸಗಳು, ಕತ್ತಿಗೆ ಸುತ್ತುವರಿದ ಚರ್ಮದ ಹುರಿ ಮತ್ತು ಸರ್ಕಸ್ಸಿನ ಬೈಸಿಕಲ್‌ಗಳನ್ನು ನೋಡಿದವರು ಹೆಂಡತಿಯ ಪ್ರೇಮದ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದಾನೆಂದೂ ತೀರ ಅಸಮರ್ಪಕ ಸ್ಥಳಗಳಲ್ಲಿ ಹಾಗೂ ಭಾವ ಪ್ರಚೋದಿಸುವ ಕಡೆಗಳಲ್ಲಿ ಪರಸ್ಪರ ಪ್ರತಿಕ್ರಿಯಿಸುತ್ತಾರೆಂದೂ ತಿಳಿಯುವಂತಿತ್ತು. ಅವರು ಪರಸ್ಪರ ಸಂಗಾತಿಗಳಾಗಿರಲು ಪ್ರಾರಂಭಿಸಿದಾಗಿನಿಂದ ಹಾಗೆ ಮಾಡುತ್ತಿದ್ದರು. ಅಲ್ಲದೆ ಸಮಯ ಉರುಳಿದಂತೆ ಮತ್ತು ಹೆಚ್ಚು ಹೆಚ್ಚು ಅಸಾಮಾನ್ಯ ಸನ್ನಿವೇಶಗಳಿಂದಾಗಿ ಪ್ರೇಮಾವೇಶ ಹೆಚ್ಚಾಗಿತ್ತು. ಗ್ಯಾತ್ಸನ್ ತನ್ನ ಮೇರೆ ಇರದ ಕಲ್ಪನೆ ಮತ್ತು ಜಾಣ್ಮೆಯಿಂದ ಕೂಡಿದ ತೀವ್ರ ಸ್ವರೂಪದ ಪ್ರೇಮಿಯಷ್ಟೇ ಆಗಿರಲಿಲ್ಲ. ಬಹುಶಃ ಇಡೀ ಮಾನವ ಕುಲದ ಇತಿಹಾಸದಲ್ಲಿಯೇ, ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಿದವರಲ್ಲಿ ಮೊದಲನೆಯವನಾಗಿದ್ದ. ಬಿಳಿ ಹೂಗಳ ಗದ್ದೆಯಲ್ಲಿ ಹೆಂಡತಿಯೊಂದಿಗೆ ಕೇವಲ ರಮಿಸುವ ಕಾರಣದಿಂದ ಹಾಗೆ ಮಾಡಿದಾಗ ಅವರಿಬ್ಬರೂ ಇನ್ನೇನು ಸಾಯುವುದರಲ್ಲಿದ್ದರು. +ಅವರು ಮದುವೆಗೆ ಎರಡು ವರ್ಷದ ಮುಂಚೆ ಭೇಟಿಯಾಗಿದ್ದರು. ಆಗ ಅವನು ನಿರ್ವಹಿಸುತ್ತಿದ್ದ ಸ್ಪೋರ್ಟ್ಸ್ ವಿಮಾನ ಅಮರಾಂತ ಉರ್ಸುಲಾ ಓದುತ್ತಿದ್ದ ಸ್ಕೂಲಿನ ಮೇಲೆ ಉರುಳುರುಳಿ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆಯದಂತೆ ಮಾಡಿದ್ದ ಮತ್ತು ಬಾಲಕ್ಕೆ ತಗುಲಿ ಕ್ಯಾನ್‌ವಾಸ್‌ನ ಚೌಕಟ್ಟು ಹಾಗೂ ಅಲ್ಯುಮಿನಿಯಂ ಹಾಳೆಗಳು ಎಲೆಕ್ಟ್ರಿಕ್ ತಂತಿಗಳಿಗೆ ಸಿಕ್ಕಿಹಾಕಿಕೊಂಡಿದ್ದವು. ಅದಾದ ನಂತರ ಕಾಲಿಗೆ ಆದ ತೊಂದರೆಯನ್ನು ಗಮನಿಸದೆ ಅಮರಾಂತಳಿದ್ದ ನನ್‌ಗಳ ವಸತಿ ಗೃಹದಿಂದ ವಾರಾಂತ್ಯದಲ್ಲಿ ಅವಳನ್ನು ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ಫೆರ್ನಾಂಡ ಬಯಸಿದಷ್ಟು ನಿರ್ಬಂಧವಿರಲಿಲ್ಲ. ಅವನು ಅವಳನ್ನು ತನ್ನ ಕಂಟ್ರಿ ಕ್ಲಬ್‌ಗೆ ಕೊಂಡೊಯ್ಯುತ್ತಿದ್ದ. ಅವರು ಭಾನುವಾರದ ವಿಲಾಸದಲ್ಲಿ ಸಾವಿರದ ಐನೂರು ಅಡಿ ಎತ್ತರದಲ್ಲಿ ಪ್ರೇಮಿಸುವುದಕ್ಕೆ ಪ್ರಾರಂಭಿಸಿದರು ಮತ್ತು ಭೂಮಿಯ ಮೇಲಿನವರು ಹೆಚ್ಚು ಹೆಚ್ಚು ಸಣ್ಣಗಾದಷ್ಟೂ ತಾವು ಹೆಚ್ಚು ಹತ್ತಿರಕ್ಕೆ ಬರುತ್ತಿದ್ದೇವೆಂದು ಭಾವಿಸುತ್ತಿದ್ದರು. ಅವಳು ಮಕೋಂದೋ ಬಗ್ಗೆ ಮಾತನಾಡುತ್ತ ಅದು ಭೂಮಿಯ ಮೇಲಿರುವ ಅತ್ಯಂತ ಕಾಂತಿಯುಕ್ತ ಮತ್ತು ಶಾಂತಿಪೂರ್ಣ ಊರೆಂದು ಹೇಳಿದಳು. ಸುಗಂಧಭರಿತ ಆ ಭಾರಿ ಮನೆಯಲ್ಲಿ ಹಣ್ಣಾಗುವ ತನಕ ತನ್ನವನೇ ಆದ ಗಂಡನೊಡನೆ ಬಾಳಬೇಕೆಂದು ಮತ್ತು ಎಂದಿಗೂ ಅವ್ರೇಲಿಯಾನೋ, ಹೊಸೆ ಆರ್ಕಾದಿಯೋ ಎಂದಿರದೆ ರೊಡ್ರಿಗೋ, ಗೋನ್ಜಾಲೋ ಎಂಬ ಇಬ್ಬರು ಶಕ್ತಿವಂತ ಗಂಡು ಮಕ್ಕಳನ್ನು ಹಾಗೂ ರೆಮಿದಿಯೋಸ್ ಅಲ್ಲದೆ ವರ್ಜೀನಿಯಾ ಎಂಬ ಮಗಳನ್ನು ಪಡೆಯುವ ಅಪೇಕ್ಷೆಯನ್ನು ಕುರಿತು ಹೇಳಿದಳು. ಅವಳು ಹಳೆಯ ನೆನಪುಗಳಿಂದ ತೀವ್ರವಾಗಿ ಆದರ್ಶೀಕರಿಸಿದ ಮಕೋಂದೋಗೆ ಅವಳನ್ನು ಕರೆದುಕೊಂಡು ಹೋಗದಿದ್ದರೆ ತನ್ನನ್ನು ಮದುವೆಯಾಗುವುದಿಲ್ಲವೆಂದು ಗ್ಯಾತ್ಸನ್‌ಗೆ ಗೊತ್ತಾಯಿತು. ಅದೊಂದು ಸಮಯ ಕಳೆದಂತೆ ನಶಿಸಿಹೋಗುವ ಅಭಿಲಾಷೆ ಎಂದುಕೊಂಡು ಅವನು ಅದಕ್ಕೆ ಒಪ್ಪಿಕೊಂಡ. ಆದರೆ ಮಕೋಂದೋದಲ್ಲಿ ಎರಡು ವರ್ಷದ ಮೇಲೆ ಕೂಡ ಅಮರಾಂತ ಉರ್ಸುಲಾ ಮೊದಲನೆಯ ದಿನದಷ್ಟೇ ಸಂತೋಷವಾಗಿದ್ದುದನ್ನು ಕಂಡು ಅವನಿಗೆ ಆತಂಕವಾಯಿತು. ಆ ವೇಳೆಗಾಗಲೇ ಅವನು ಆ ಪ್ರದೇಶದಲ್ಲಿ ಕತ್ತರಿಸಬಹುದಾದ ಎಲ್ಲ ಹುಳುಗಳನ್ನು ಕತ್ತರಿಸಿದ್ದ. ಅವನು ಸ್ಪ್ಯಾನಿಷ್ ಭಾಷೆಯನ್ನು ಸ್ಥಳೀಯನೆನ್ನುವ ಹಾಗೆ ಮಾತಾಡುತ್ತಿದ್ದ. ಟಪಾಲಿನಲ್ಲಿ ಬರುತ್ತಿದ್ದ ಮ್ಯಾಗಸೈನ್‌ನಲ್ಲಿರುತ್ತಿದ್ದ ಪದಬಂಧಗಳನ್ನು ಬಿಡಿಸುತ್ತಿದ್ದ. ಅವನು ಒಳ್ಳೆಯ ಹವಾಮಾನ ಮರಳಿ ಬರಲೆಂದು ಅಪೇಕ್ಷಿಸುತ್ತಿರಲಿಲ್ಲ. ಏಕೆಂದರೆ ಪ್ರಕೃತಿದತ್ತವಾಗಿಯೇ ಮಧ್ಯಾಹ್ನದ ಹೊತ್ತು ಮಲಗುವುದನ್ನು ನಿಗ್ರಹಿಸುವ ಮತ್ತು ಜಲಜಂತುಗಳನ್ನು ನಿರೋಧಿಸುವ ಪಿತ್ತಜನಕಾಂಗವನ್ನು ಹೊಂದಿದ್ದ. ಅವನು ಸ್ಥಳೀಯ ಅಡುಗೆಯನ್ನು ಎಷ್ಟು ಇಷ್ಟಪಟ್ಟಿದ್ದನೆಂದರೆ ಒಂದು ಸಲ ಕುಳಿತಾಗ ಎಂಭತ್ತೆರಡು ಇಗ್ವಾನಾ ಮೊಟ್ಟೆಗಳನ್ನು ತಿಂದಿದ್ದ. ಅಮರಾಂತ ಉರ್ಸುಲಾ ರೈಲಿನಲ್ಲಿ ಬರುವಾಗ ಐಸ್ ಬಾಕ್ಸ್‌ಗಳಲ್ಲಿ ಅವಳಿಗೆ ಮಾತ್ರ ತಿನ್ನಲು ಸಾಧ್ಯವಾದ ವಸ್ತುಗಳಾದ ಮೀನುಗಳನ್ನು, ಡಬ್ಬದಲ್ಲಿ ಮಾಂಸ ಮತ್ತು ರಕ್ಷಿಸಲ್ಪಟ್ಟ ಹಣ್ಣುಗಳನ್ನು ತಂದಿದ್ದಳು. ಅವಳಿನ್ನೂ ಯೂರೋಪಿನ ಶೈಲಿಯಲ್ಲಿ ಡ್ರೆಸ್ ಮಾಡುತ್ತಿದ್ದಳು ಮತ್ತು ಹೋಗಬೇಕಾದ ಸ್ಥಳ ಯಾವುದೂ ಇರದಿದ್ದರೂ ಮತ್ತು ಭೇಟಿಯಾಗಬೇಕಾದವರು ಯಾರೂ ಇರದಿದ್ದರೂ ಟಪಾಲಿನಲ್ಲಿ ಡಿಸೈನ್‌ಗಳು ಬರುತ್ತಿತ್ತು. ಆ ಸಮಯಕ್ಕೆ ಅವಳ ಗಂಡನಿಗೆ ಅವಳ ತುಂಡುಲಂಗಗಳು, ಓರೆ ಮಾಡಿದ ಫೆಲ್ಟ್ ಹ್ಯಾಟ್‌ಗಳು ಏಳು ಎಳೆಗಳ ನೆಕ್‌ಲೇಸ್‌ಗಳನ್ನು ಮೆಚ್ಚುವ ಮನಸ್ಸಿರಲಿಲ್ಲ. ಅವಳು ಯಾವಾಗಲೂ ಕೆಲಸ ಮಾಡುತ್ತಿರುವುದಕ್ಕೆ ಮಾರ್ಗಗಳನ್ನು ಹೊಂದಿಸಿಕೊಳ್ಳುತ್ತಿದ್ದಳು. ತಾನೇ ಸೃಷ್ಟಿಸಿದ ಮನೆಯ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮತ್ತು ಸರಿಯಾಗಿ ಪೂರೈಸದ ಸಾವಿರಾರು ಕೆಲಸಗಳನ್ನು ಮರುದಿನ ಸರಿಪಡಿಸಬೇಕೆಂಬ ದೃಢತೆಯಿಂದ ನಿರ್ವಹಿಸುತ್ತಿದ್ದು, ಅದು ಫೆರ್ನಾಂಡಳನ್ನು ಕುರಿತು ಮತ್ತು ವಂಶಪಾರಂಪರ್‍ಯವಾಗಿ ಬಂದ ಕೆಡಿಸಲಕ್ಕಾಗಿಯೇ ಕೆಲಸ ಮಾಡುವ ದುರ್ಗುಣವನ್ನು ಕುರಿತು ಯೋಚಿಸುವಂತೆ ಮಾಡುತ್ತಿತ್ತು. ಅವಳಲ್ಲಿ ಸಂಭ್ರಮಗೊಳ್ಳುವ ಪ್ರವೃತ್ತಿ ಇನ್ನೂ ಎಷ್ಟು ಜೀವಂತವಾಗಿತ್ತೆಂದರೆ ಹೊಸ ರೆಕಾರ್ಡುಗಳು ತಲುಪಿದಾಗ, ತನ್ನ ಸ್ಕೂಲಿನ ಗೆಳತಿಯರು ಚಿತ್ರ ಬರೆದು ವಿವರಿಸಿದ್ದಂತೆ ನೃತ್ಯದ ಹೆಜ್ಜೆಗಳನ್ನು ಹಾಕಲು ಗ್ಯಾತ್ಸನ್‌ಗೆ ನಡುಮನೆಯಲ್ಲಿ ಬಹಳ ಹೊತ್ತಿನ ತನಕ ಇರಲು ಹೇಳುತ್ತಿದ್ದಳು ಮತ್ತು ಅವಳು ಸಾಮಾನ್ಯವಾಗಿ ವಿಯನ್ನಾದ ತೊನೆದಾಡುವ ಕುರ್ಚಿಯಲ್ಲೋ ಅಥವಾ ಬರಿ ನೆಲದ ಮೇಲೋ ಪ್ರೇಮಿಸುವುದರೊಂದಿಗೆ ಮುಕ್ತಾಯ ಮಾಡುತ್ತಿದ್ದರು. ಅವಳಿಗೆ ಸಂಪೂರ್ಣ ಸಂತೋಷ ಕೊಟ್ಟ ಸಂಗತಿಯೆಂದರೆ ಮಕ್ಕಳು ಹುಟ್ಟಿದ್ದು. ಆದರೆ ಮದುವೆಯಾಗಿ ಐದು ವರ್ಷದ ತನಕ ಮಕ್ಕಳು ಬೇಡವೆಂದು ಗಂಡನೊಡನೆ ಮಾಡಿಕೊಂಡ ಹೊಂದಾಣಿಕೆಯನ್ನು ಗೌರವಿಸಿದ್ದಳು. +ಸುಮ್ಮನೆ ವ್ಯರ್ಥವಾಗಿ ಹೋಗುತ್ತಿದ್ದ ಸಮಯವನ್ನು ಏನಾದರೊಂದಕ್ಕೆ ಉಪಯೋಗಿಸಬೇಕೆಂದು ಹುಡುಕುತ್ತಿದ್ದ ಗ್ಯಾತ್ಸನ್, ಬೆಳಗಿನ ಹೊತ್ತು ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಇರುತ್ತಿದ್ದ ಸಂಕೋಚ ಸ್ವಭಾವದ ಅವ್ರೇಲಿಯಾನೋ ಜೊತೆ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡ. ಅವನ ಜೊತೆ ತನ್ನ ದೇಶದ ಮೂಲೆಮೂಲೆಗಳನ್ನು ನೆನಪಿಸಿಕೊಳ್ಳುತ್ತ ಸಂತೋಷಪಡುತ್ತಿದ್ದರೆ, ಅವ್ರೇಲಿಯಾನೋ ಆ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆದಷ್ಟು ಅವುಗಳ ಬಗ್ಗೆ ತಿಳಿದುಕೊಂಡಿದ್ದ. ಗ್ಯಾತ್ಸನ್ ಅವನಿಗೆ ವಿಶ್ವಕೋಶದಲ್ಲಿ ಇಲ್ಲದಿರುವಂಥ ವಿಷಯಗಳನ್ನು ತಿಳಿಯುವುದಕ್ಕಾಗಿ ಮಾಡಿದ್ದೇನು ಎಂದು ಅವ್ರೇಲಿಯಾನೋವನ್ನು ಕೇಳಿದರೆ ಅವನಿಗೆ ಹೊಸೆ ಅರ್ಕಾದಿಯೋಗೆ ಸಿಕ್ಕ ಉತ್ತರವೇ ಸಿಕ್ಕಿತು. “ಪ್ರತಿಯೊಂದೂ ಗೊತ್ತಿದೆ”. ಸಂಸ್ಕೃತದೊಂದಿಗೆ ಇಂಗ್ಲಿಷ್, ಫ್ರೆಂಚ್, ಕೊಂಚ ಲ್ಯಾಟಿನ್ ಮತ್ತು ಗ್ರೀಕ್ ಕಲಿತಿದ್ದ. ಅವನು ಪ್ರತಿದಿನ ಮಧ್ಯಾಹ್ನ ಹೊರಗೆ ಹೋಗುತ್ತಿದ್ದರಿಂದ, ಅಮರಾಂತ ಉರ್ಸುಲಾ ಅವ; ವಾರದ ಖರ್ಚಿಗೆಂದು ಅಷ್ಟು ಹಣವನ್ನು ತೆಗೆದಿರಿಸುತ್ತಿದ್ದಳು. ಅವನ ರೂಮು ಕತಲುನಿಯಾದ ಜಾಣನ ಪುಸ್ತಕದಂಗಡಿಯ ಭಾಗವಾಗಿ ಮಾರ್ಪಾಡಾಗಿತ್ತು. ಅವನು ರಾತ್ರಿ ಬಹಳ ಹೊತ್ತಿನ ತನಕ ಓದುತ್ತಿದ್ದ. ಅವನು ಓದುತ್ತಿದ್ದ ರೀತಿಯಿಂದ ಗ್ಯಾತ್ಸನ್‌ಗೆ ಅವನು ಜ್ಞಾನವನ್ನು ಪಡೆಯಲು ಪುಸ್ತಕಗಳನ್ನು ಕೊಳ್ಳುತ್ತಿಲ್ಲ, ಬದಲಿಗೆ ತನ್ನ ಜ್ಞಾನದ ಸತ್ಯವನ್ನು ಪರೀಕ್ಷಿಸುವುದಕ್ಕಾಗಿ ಎಂದುಕೊಂಡ ಮತ್ತು ಅವನಿಗೆ ಬೆಳಗಿನ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಿದ್ದ, ಚರ್ಮದ ಹಾಳೆಗಳ ಮೇಲಿನ ಬರಹದಷ್ಟು ಬೇರೆ ಇನ್ನು ಯಾವುದರಲ್ಲೂ ಆಸಕ್ತಿ ಹೊಂದಿಲ್ಲವೆಂದು ಗೊತ್ತಾಯಿತು. ಗ್ಯಾತ್ಸನ್ ಮತ್ತು ಅವನ ಹೆಂಡತಿ ಅವನನ್ನು ಮನೆಯ ವಿಷಯಗಳಲ್ಲಿ ಒಳಗೊಳ್ಳುವಂತೆ ಬಯಸಿದ್ದರು. ಆದರೆ ಅವ್ರೇಲಿಯಾನೋ ಸಮಯ ಹೋದಷ್ಟು ಹೆಚ್ಚು ನಿಗೂಢವಾಗುತ್ತಿದ್ದ ರಸತಂತ್ರಜ್ಞಾನದ ಮನುಷ್ಯನಾಗಿದ್ದ. ಅದೊಂದು ವಿಚಿತ್ರ ಪರಿಸ್ಥಿತಿಯಾಗಿ ಗ್ಯಾತ್ಸನ್ ಅವನ ಜೊತೆ ಆತ್ಮೀಯವಾಗುವ ಪ್ರಯತ್ನದಲ್ಲಿ ಸೋತು ಹೊತ್ತು ಕಳೆಯಲು ಬೇರೆ ದಾರಿಯನ್ನು ಹುಡುಕಬೇಕಾಯಿತು. ಅದೇ ಸಮಯದಲ್ಲಿ ಅವನಿಗೆ ಏರ್‌ಮೇಲ್ ಸೇವೆಯನ್ನು ಪ್ರಾರಂಭಿಸುವ ಆಲೋಚನೆ ಬಂತು. +ಅದು ಹೊಸ ಯೋಜನೆಯಾಗಿರಲಿಲ್ಲ. ಅಮರಾಂತ ಉರ್ಸುಲಾಳನ್ನು ಭೇಟಿಯಾದಾಗಲೇ ಅವನು ಆ ವಿಷಯದಲ್ಲಿ ಸಾಕಷ್ಟು ಪ್ರಗತಿ ಪಡೆದಿದ್ದ. ಆದರೆ ಅದು ಮಕೋಂದೋಗೆ ಆಗಿರದೆ, ತನ್ನ ಮನೆಯವರು ತಾಳೆ ಎಣ್ಣೆ ವ್ಯವಹಾರದಲ್ಲಿ ಹಣ ಹೂಡಿಸಿದ್ದ ಬೆಲ್ಜಿಯನ್ ಕಾಂಗೋಕ್ಕಾಗಿ. ಮದುವೆ ಮತ್ತು ಹೆಂಡತಿಯನ್ನು ಖುಷಿಪಡಿಸುವುದಕ್ಕಾಗಿ ಕೆಲವು ತಿಂಗಳು ಮಕೋಂದೋದಲ್ಲಿ ಕಳೆಯಲು ನಿರ್ಧರಿಸಿದ್ದರಿಂದ ಮುಂದಕ್ಕೆ ಹಾಕಬೇಕಾಗಿತ್ತು. ಆದರೆ ಸಾರ್ವಜನಿಕ ಪ್ರಗತಿಗಾಗಿ ವ್ಯವಸ್ಥೆಯೊಂದನ್ನು ರೂಪಿಸಲು ಅಮರಾಂತ ಉರ್ಸುಲಾ ಯೋಚಿಸುತ್ತಿರುವುದನ್ನು ಕಂಡು, ವಾಪಸು ಹೋಗುವುದೆಂದು ಸೂಚಿಸಿದಾಗ ಅವಳು ನಕ್ಕುಬಿಟ್ಟಿದ್ದಳು. ಇದರಿಂದ ಅವನಿಗೆ ಬಹಳ ಸಮಯ ಹಿಡಿಯುತ್ತದೆ ಎಂದು ತಿಳಿದು, ಬ್ರುಸೆಲ್ಸ್‌ನಲ್ಲಿದ್ದ ಮರೆತುಹೋಗಿದ್ದ ಪಾರ್ಟನರ್‍ಸ್ ಸಂಗಡ, ಆಫ್ರಿಕಾದಲ್ಲಿ ಇದ್ದಂತೆ ಕ್ಯಾಂಬಿಯನ್‌ನಲ್ಲಿ ಕೂಡ ಸ್ಥಾಪಿಸುವುದು ಸರಿ ಎಂದು ಭಾವಿಸಿ, ಸಂಪರ್ಕವನ್ನು ಮತ್ತೆ ಪ್ರಾರಂಭಿಸಿದ. ಅವನು ತನ್ನ ಕೆಲಸದಲ್ಲಿ ಪ್ರಗತಿ ಸಾಧಿಸುತ್ತಿದ್ದ ಹಾಗೆ ಹಳೆಯ ಚಂದದ ಪ್ರದೇಶವಾಗಿದ್ದು ಈಗ ಹುಡಿಯಾದ ಚಕಮಕಿ ಕಲ್ಲಿನಿಂದ ಕೂಡಿದ ವಿಸ್ತಾರದಲ್ಲಿ ವಿಮಾನ ಬಂದಿಳಿಯಲು ಸ್ಥಳವನ್ನು ಏರ್ಪಾಡು ಮಾಡಿದ. ಅವನು ಗಾಳಿ ಬೀಸುವ ದಿಕ್ಕನ್ನು ಮತ್ತು ಸಮುದ್ರ ತೀರದ ಭೌಗೋಳಿಕ ಅಂಶಗಳನ್ನು ಅಭ್ಯಾಸ ಮಾಡಿದ. ಅವನು ಗಾಳಿಯಲ್ಲಿ ಪ್ರಯಾಣಿಸುವುದಕ್ಕೆ ತುಂಬ ಎಚ್ಚರಿಕೆಯಿಂದ ಮಾಡುತ್ತಿದ್ದ ಪ್ರಯತ್ನಗಳು ಅವನಿಗೇ ತಿಳಿಯದಂತೆ ಮಿಸ್ಟರ್ ಹರ್‌ಬರ್ಟ್ ಮಾಡಿದ ರೀತಿಯಂತಿದ್ದವು. ಇದರಿಂದ ಊರಿನವರಿಗೆ ಅವನ ಯೋಜನೆ ಬಾಳೆ ಗಿಡಗಳನ್ನು ನೆಡುವುದಕ್ಕಾಗಿ ಎನ್ನುವ ಅಪಾಯದ ಅನುಮಾನವಾಗಿ ತೋರಿತು. ತನಗೆ ಬಂದ ವಿಶೇಷ ಆಲೋಚನೆಯಿಂದ ಮಕೋಂದೋದಲ್ಲಿ ತಾನು ನೆಲೆಯೂರುವುದಕ್ಕೆ ಸರಿಯಾದ ಕಾರಣ ಸಿಗುವ ಉತ್ಸಾಹದಿಂದ ಅವನು ಆ ಪ್ರಾಂತ್ಯದ ರಾಜಧಾನಿಗೆ ಅನೇಕ ಬಾರಿ ಹೋಗಿ ಬಂದ, ಅಧಿಕಾರಿಗಳನ್ನು ಭೇಟಿಯಾದ, ಲೈಸನ್ಸ್‌ನ್ನು ಪಡೆದ ಮತ್ತು ಪ್ರತ್ಯೇಕ ಹಕ್ಕುಗಳ ಗುತ್ತಿಗೆ ಸಿದ್ಧಪಡಿಸಿದ. ಇದರ ಮಧ್ಯೆ ಬ್ರುಸೆಲ್ಸ್‌ನಲ್ಲಿದ್ದ ತನ್ನ ಪಾರ್ಟ್‌ನರ್‍ಸ್ ಜೊತೆ ಸಂಪರ್ಕವಿರಿಸಿದ್ದು ಫೆರ್ನಾಂಡ ಕಾಣದ ಡಾಕ್ಟರುಗಳೊಂದಿಗೆ ಇಟ್ಟುಕೊಂಡಿದ್ದ ಪತ್ರ ವ್ಯವಹಾರದಂತಿತ್ತು. ಕೊನೆಗೆ ಅವನು ಅವರಿಗೆ ಪರಿಣತ ಮೆಕ್ಯಾನಿಕ್‌ನ ಪರಿವೀಕ್ಷಣೆಯಲ್ಲಿ ಹತ್ತಿರದ ಸ್ಥಳವೊಂದರಲ್ಲಿ ನಿರ್ಮಿಸಿದ ವಿಮಾನವೊಂದನ್ನು ಮಕೋಂದೋಗೆ ಪ್ರಯಾಣಗೊಳಿಸಲು ಒಪ್ಪಿಸಿದ. ಅದರ ಬಗ್ಗೆ ಆಲೋಚನಾ ಮಗ್ನನಾದ ಒಂದು ವರ್ಷಕ್ಕೆ ಮತ್ತು ಹವಾ ನಿರೀಕ್ಷಣೆಯ ಲೆಕ್ಕಾಚಾರದಂತೆ, ತಾನು ಮಾಡಿದ ಪತ್ರ ವ್ಯವಹಾರದ ವಾಗ್ದಾನದಲ್ಲಿ ನಂಬಿಕೆಯಿಟ್ಟು, ಆಕಾಶದ ಕಡೆ ನೋಡುತ್ತ, ಬೀಸುವ ಗಾಳಿ ತರುವ ಸದ್ದು ಏರೋಪ್ಲೇನ್ ಬರುವುದೆನ್ನುವ ನಿರೀಕ್ಷೆಯಿಂದ, ಅವನು ರಸ್ತೆಯಲ್ಲಿ ತಿರುಗಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ. +ಅವರು ಗಮನಿಸದೆ ಇದ್ದರೂ ಅಮರಾಂತ ಉರ್ಸುಲಾ ವಾಪಸು ಬಂದಿದ್ದರಿಂದ ಅವ್ರೇಲಿಯಾನೋನ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಹೊಸೆ ಅರ್ಕಾದಿಯೋ ಸತ್ತ ಮೇಲೆ ಅವನು ಜಾಣ ಕತಲುನಿಯಾದವನ ಪುಸ್ತಕದಂಗಡಿಯ ಮಾಮೂಲಿನ ಗಿರಾಕಿಯಾಗಿದ್ದ. ಅವನಿಗೆ ಅಲ್ಲಿ ಸಿಗುತ್ತಿದ್ದ ಸ್ವಾತಂತ್ರ್ಯ ಮತ್ತು ಇದ್ದ ಕಾಲಾವಕಾಶ ಊರಿನ ಬಗ್ಗೆ ಕೆಲವು ಕುತೂಹಲಗಳು ಹುಟ್ಟುವಂತೆ ಮಾಡಿತು. ಅವುಗಳನ್ನು ತಿಳಿದು ಅವನು ಆಶ್ಚರ್ಯಗೊಳ್ಳಲಿಲ್ಲ. ಅವನು ಧೂಳು ತುಂಬಿದ ನಿರ್ಜನ ರಸ್ತೆಗಳಲ್ಲಿ ಹೋಗಿ, ಪಾಳು ಬಿದ್ದ ಮನೆಗಳ ಒಳಗನ್ನು ವೈಜ್ಞಾನಿಕ ವಿಶ್ಲೇಷಣೆಯಿಂದ ನೋಡಿ, ಅಲ್ಲಿದ್ದ ಲೋಹದ ಕಿಟಕಿಗಳ ಪರದೆಗಳು ತುಕ್ಕು ಹಿಡಿದು ಸಾಯಲಿದ್ದ ಹಕ್ಕಿಗಳ ಬಡಿತಕ್ಕೆ ಸಿಕ್ಕು ತುಂಡಾದದ್ದನ್ನು ನೋಡಿದ ಮತ್ತು ನೆನಪಿನ ಭಾರದಿಂದ ಬಗ್ಗಿ ಹೋದ ಸ್ಥಳೀಯರನ್ನು ಕಂಡ. ಅವನು ಬಾಳೆ ತೋಟದ ಕಂಪನಿಯವರ ವೈಭವದ ಕಾಲದ ಸ್ವಿಮ್ಮಿಂಗ್ ಪೂಲ್ ತುಂಬ ಈಗ ಕೊಳೆತು ಹೋದ ಗಂಡಸರು ಮತ್ತು ಹೆಂಗಸರ ಶೂಗಳಿದ್ದದ್ದನ್ನು ಕಂಡು ಅಂದಿನದನ್ನು ತನ್ನ ಕಲ್ಪನೆಯಲ್ಲಿ ಮರುನಿರ್ಮಿಸಲು ಪ್ರಯತ್ನಿಸಿದ. ಹುಲ್ಲಿನಿಂದ ನಿರ್ನಾಮಗೊಂಡ ಮನೆಗಳೊಂದರಲ್ಲಿ ಅವನಿಗೆ ರಿಂಗೊಂದಕ್ಕೆ ಸ್ಟೀಲ್ ಚೈನ್‌ನಿಂದ ಕಟ್ಟಿದ ನಾಯಿಯ ಅಸ್ಥಿಪಂಜರ ಸಿಕ್ಕಿತು ಮತ್ತು ಅಲ್ಲಿದ್ದ ಟೆಲಿಫೋನ್ ಅವನು ಎತ್ತಿಕೊಳ್ಳುವ ತನಕ ರಿಂಗಣಿಸುತ್ತಲೇ ಇತ್ತು. ಹೆಂಗಸೊಬ್ಬಳು ಇಂಗ್ಲಿಷ್‌ನಲ್ಲಿ ದೂರದಿಂದ ಮಾತಾಡುವಂತೆ ಮಾತನಾಡಿದಳು. ಅವನು, ಹೌದು, ಸ್ಟ್ರೈಕ್ ಮುಕ್ತಾಯಗೊಂಡಿದೆ, ಸತ್ತ ಮೂರು ಸಾವಿರ ಜನರನ್ನು ಸಮುದ್ರಕ್ಕೆ ಎಸೆಯಲಾಗಿದೆ. ಬಾಳೆತೋಟದ ಕಂಪನಿಯವರು ಹೊರಟು ಹೋಗಿದ್ದಾರೆ ಮತ್ತು ಕೊನೆಗೂ ಅನೇಕ ವರ್ಷಗಳ ನಂತರ ಮಕೋಂದೋದಲ್ಲಿ ಶಾಂತಿ ನೆಲೆಸಿದೆ, ಎಂದ. ಅವನ ತಿರುಗಾಟ ಕೆಂಪು ದೀಪ ಪ್ರದೇಶಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಹಿಂದೊಮ್ಮೆ ನಲಿದಾಟವನ್ನು ಹೆಚ್ಚು ಮಾಡುವುದಕ್ಕೆ ಬ್ಯಾಂಕ್ ನೋಟುಗಳನ್ನು ಉರಿಸಲಾಗುತ್ತಿತ್ತು. ಆಗ ಅದು ಬೇರೆಯದಕ್ಕಿಂತ ಹೆಚ್ಚು ಗಜಿಬಿಜಿಯಾದ ತೀವ್ರ ಸಂಕಷ್ಟದ ಮತ್ತು ದಾರುಣ ಸ್ಥಿತಿಯ ರಸ್ತೆಯಾಗಿತ್ತು. ಆಗಲೂ ಇಲ್ಲಿ ಕೆಲವು ಕೆಂಪು ದೀಪಗಳು ಹೊತ್ತಿಕೊಂಡಿದ್ದು ಅಳಿದುಳಿದಿದ್ದರಲ್ಲಿ ಡಾನ್ಸ್ ಹಾಲ್‌ಗಳಿದ್ದು, ಸಪ್ಪೆಯಾದ ಯಾರ ವಿಧವೆಯರಲ್ಲದ ದಡೂತಿಯರು, ಫ್ರೆಂಚ್ ಮುತ್ತಜ್ಜಿ-ಅಮ್ಮಗಳು ಮತ್ತು ಪಕ್ಕದಲ್ಲಿ ಫೋನೋಗ್ರಾಮ್‌ಗಳನ್ನು ಇಟ್ಟುಕೊಂಡ ಬಾಬಿಲೋನಿಯಾದ ಹೆಂಗಸರು ಇನ್ನೂ ಇದ್ದರು. ಅವ್ರೇಲಿಯಾನೋಗೆ ತಮ್ಮ ಮನೆತನದ ಬಗ್ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಕೂಡ ತಿಳಿದವರು, ಎಲ್ಲರಿಗಿಂತ ಹೆಚ್ಚಿಗೆ ವಯಸ್ಸಾದ, ಹತ್ತಿಯಂತೆ ಕೂದಲಿದ್ದು, ಫೋಟೋ ನೆಗೆಟಿವ್‌ನಂತಿದ್ದ ವೆಸ್ಟ್ ಇಂಡಿಯಾದ ನೀಗ್ರೋನನ್ನು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲ. ಅವನು ಆಗಲೂ ಮನೆಯ ಮುಂಬಾಗಿಲಿನಲ್ಲಿ ನಿಂತು ದುಃಖಸೂಚಕ ಸಂಧ್ಯಾಗೀತೆಗಳನ್ನು ಹಾಡುತ್ತಿದ್ದ. ಅವ್ರೇಲೀಯಾನೋ ಅವನ ಜೊತೆ ಕೆಲವು ವಾರಗಳಲ್ಲಿ ಕಲಿತ, ಅಪಭ್ರಂಶ ಪಾಷಿಯಾಮೆಂತೋದಲ್ಲಿ ಮಾತನಾಡುತ್ತಿದ್ದ ಮತ್ತು ಕೆಲವು ಸಲ ಮರಿಮಗಳು ಮಾಡಿದ್ದ ಚಿಕನ್‌ಸೂಪನ್ನು ಅವನ ಸಂಗಡ ಕುಡಿಯುತ್ತಿದ್ದ. ಅವಳೊಬ್ಬ ಗಟ್ಟಿ ಮೂಳೆಯ ದಪ್ಪಗಿದ್ದ ಕಪ್ಪನೆ ಹೆಂಗಸು. ಅವಳ ಕುಂಡೆಗಳು ಹೆಣ್ಣು ಕುದುರೆಯ ಹಾಗೆ, ಮೊಲೆಗಳು ಕಲ್ಲಂಗಡಿಯ ಹಾಗೆ ಮತ್ತು ದುಂಡನೆ ತಲೆಯ ಮೇಲೆ ಇದ್ದ ಕೂದಲು ಮಧ್ಯ ಯುಗದ ಯೋಧನ ಕವಚದಂತಿತ್ತು. ಅವಳ ಹೆಸರು ನಿಗ್ರೊಮಾಂತ. ಆ ದಿನಗಳಲ್ಲಿ ಅವ್ರೇಲಿಯಾನೋ ಬೆಳ್ಳಿಯ ಸಾಮಾನುಗಳು, ಮೇಣದ ಬತ್ತಿಗಳು ಮತ್ತು ಇತರೆ ಮನೆಗೆ ಉಪಯೋಗವಾಗುವ ವಸ್ತುಗಳನ್ನು ಮಾರಿ ಜೀವಿಸುತ್ತಿದ್ದ. ಅವನ ಹತ್ತಿರ ಬಿಡಿಗಾಸು ಇಲ್ಲದಿದ್ದಾಗ, ಹೆಚ್ಚಿನ ಸಮಯ ಹಾಗೆಯೇ ಇರುತ್ತಿದ್ದದ್ದು, ಅವನು ಮಾರ್ಕೆಟ್ಟಿನಲ್ಲಿ ಹಿಂದುಗಡೆ ಎಸೆಯುತ್ತಿದ್ದ ಕೋಳಿ ತಲೆಗಳನ್ನು ತಂದು ಕೊಡಲು ಕೆಲವರಿಗೆ ಹೇಳಿದ ಮತ್ತು ಅವನು ಅವುಗಳನ್ನು ತೆಗೆದುಕೊಂಡು ಹೋಗಿ ನಿಗ್ರೋಮಾಂತಳಿಗೆ ಮಸಾಲೆ ಹಾಕಿ ಸೂಪ್ ಮಾಡಲು ಕೊಡುತ್ತಿದ್ದ. ಮುತ್ತಜ್ಜನ ಅಪ್ಪ ಸತ್ತ ಮೆಲೆ ಅವನು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ. ಆದರೆ ಚೌಕದಲ್ಲಿದ್ದ ಕಪ್ಪು ಬಾದಾಮಿ ಮರದ ಬಳಿ ಆಗಾಗ ಅವಳನ್ನು ಸಂಧಿಸುತ್ತಿದ್ದ. ಆಗ ಅವಳ ಕಾಡು ಪ್ರಾಣಿಯ ರೀತಿಯ ಶಿಳ್ಳೆ ಹಾಕುವುದನ್ನು ಪ್ರಯೋಗಿಸಿ ಹಲಕೆಲವು ಗೂಬೆಗಳನ್ನು ಕರೆಯುತ್ತಿದ್ದ. ಅನೇಕ ಸಲ ಅವಳ ಜೊತೆ ಪಾಷಿಯಾಮೆಂತೋದಲ್ಲಿ ಚಿಕನ್ ಸೂಪ್ ಮತ್ತು ಇತರೆ ತೊಂದರೆಗಳ ಬಗ್ಗೆ ಮಾತನಾಡುತ್ತ, ಅವನು ಅಲ್ಲಿರುವುದರಿಂದ ಗಿರಾಕಿಗಳು ಹೆದರುತ್ತಾರೆಂದು ಅವಳು ಹೇಳುವ ತನಕ ಅಲ್ಲಿಯೇ ಇರುತ್ತಿದ್ದ. ಆಗಾಗ್ಗೆ ಅವನಲ್ಲಿ ಆಕರ್ಷಣೆ ಉಂಟಾದರೂ, ನಿಗ್ರೊಮಾಂತ ಮನೋವ್ಯಥೆಗಳನ್ನು ಹಂಚಿಕೊಂಡವಳಂತೆ ಕಂಡರೂ, ಅವನು ಅವಳ ಜೊತೆ ಮಲಗಲಿಲ್ಲ. ಇದರಿಂದ ಅಮರಾಂತ ಉರ್ಸುಲಾ ಹಿಂತಿರುಗಿ ಬಂದಾಗಲೂ ಅವನು ಹೆಣ್ಣಿನ ಸಂಗ ಅರಿಯದವನಾಗಿದ್ದ. ಅವಳು ಸೋದರಿಯಂತೆ ಅವನನ್ನು ಆಲಂಗಿಸಿದಾಗ ಅವನಿಗೆ ಉಸಿರು ಕಟ್ಟಿತ್ತು. ಪ್ರತಿ ಬಾರಿ ಅವಳನ್ನು ನೋಡಿದಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ನೃತ್ಯಗಳನ್ನು ತೋರಿಸಿದಾಗ, ಮುತ್ತಜ್ಜನ ಅಪ್ಪನಿಗೆ ಪಿಲರ್ ಟೆರ್‍ನೆರಾ ಧಾನ್ಯದ ಉಗ್ರಾಣದಲ್ಲಿ ಕಾರ್ಡುಗಳ ನೆಪ ಹೂಡಿದಾಗ ಆದಂತೆ, ಮೂಳೆಗಳಲ್ಲೆಲ್ಲ ಮೃದು ಸಿಂಚನವಾದ ಹಾಗೆ ಭಾಸವಾಗುತ್ತಿತ್ತು. ಈ ವೇದನೆಯನ್ನು ಅಡಗಿಸಲು ಚರ್ಮದ ಹಾಳೆಯ ಮೇಲಿನ ಬರಹಗಳಲ್ಲಿ ಮತ್ತಷ್ಟು ಮುಳುಗಿದ ಮತ್ತು ಯಾತನೆಯ ಧಾರೆಯಿಂದ ರಾತ್ರಿಗಳಿಗೆ ವಿಷ ತುಂಬುತ್ತಿದ್ದ ಅವಳ ಮುಗ್ಧ ಹೊಗಳಿಕೆಗಳಿಂದ ತಪ್ಪಿಸಿಕೊಂಡ. ಆದರೆ ಅವಳನ್ನು ತಪ್ಪಿಸಿಕೊಂಡಷ್ಟೇ ಹೆಚ್ಚು ಹೆಚ್ಚಾಗಿ, ಅವಳ ಸೀಳು ನಗುವಿಗಾಗಿ, ಸಂತೋಷಗೊಂಡ ಬೆಕ್ಕಿನ ಮುದ್ದುಗರೆತದ ಕೂಗಿಗಾಗಿ, ಅವಳ ಕೃತಜ್ಞತಾಪೂರ್ಣ ಹಾಡುಗಳು ಹಾಗೂ ಮನೆಯಲ್ಲಿ ನಿರೀಕ್ಷಿಸಿದ ಕಡೆಗಳಲ್ಲಿ ಪ್ರೇಮದ ವೇದನೆಯ ಹಾಡುಗಳಿಗಾಗಿ ಆತಂಕದಿಂದ ಕಾಯುತ್ತಿದ್ದ. ಒಂದು ರಾತ್ರಿ ಹಾಸಿಗೆಯಿಂದ ಮೂವತ್ತು ಅಡಿ ದೂರದಲ್ಲಿ, ಬೆಳ್ಳಿಯ ಕೆಲಸ ಮಾಡುವ ಟೇಬಲ್ಲಿನ ಮೇಲೆ, ದಂಪತಿಗಳು ಹೊರಳಾಡುತ್ತ ಬಾಟಲುಗಳನ್ನು ಒಡೆದು, ಚೆಲ್ಲಿ ಹರಡಿದ ಹೈಡ್ರೋಕ್ಲೋರಿಕ್ ಆಮ್ಲದ ತೆಳುಗೊಳದಲ್ಲಿ ಪ್ರೇಮಿಸುವುದರಲ್ಲಿ ಕಳೆದರು. ಅವ್ರೇಲಿಯಾನೋ ಒಂದು ಕ್ಷಣವೂ ನಿದ್ದೆ ಮಾಡಲಿಲ್ಲ. ಅಲ್ಲದೆ, ಮಾರನೆಯ ದಿನ ಜ್ವರ ಬಂದು ರೋಷದಿಂದ ಬಿಕ್ಕುತ್ತ ಕಳೆದ. ಅವನು ಮೊದಲ ಸಲ ರಾತ್ರಿ ನಿಗ್ರೋಮಾಂತಳಿಗಾಗಿ ಬಾದಾಮಿ ಮರದ ನೆರಳಿಗೆ ಬರುವಂತೆ ಹೇಳಿ ಕಾಯುತ್ತಾ ಕುಳಿತದ್ದು ಕೊನೆಯಿಲ್ಲದಂತೆ ಕಂಡು, ಅನಿಶ್ಚಯದ ಸೂಜಿ ಮೊನೆಗಳಿಂದ ತಿವಿಸಿಕೊಳ್ಳುತ್ತ ಮತ್ತು ಮುಷ್ಟಿಯಲ್ಲಿ ಅಮರಾಂತ ಉರ್ಸುಲಾಳಿಂದ ಪಡೆದ ಒಂದು ಪೇಸೋ ಹಾಗೂ ಐವತ್ತು ಸೆಂಟುಗಳನ್ನು ಹಿಡಿದು ನಿಂತಿದ್ದ. ಅವನು ಅವಳನ್ನು ತನ್ನ ಸಾಹಸದಲ್ಲಿ ಭಾಗಿಯಾಗಿಸುವ ಅಗತ್ಯಕ್ಕಲ್ಲದಿದ್ದರೂ ಯಾವುದೋ ವಿಧದಲ್ಲಿ ಹಾದರಕ್ಕಿಳಿಸುವುದಕ್ಕಾಗಿ ಹಾಗೆ ಮಾಡಿದ. ನಿಗ್ರೊಮಾಂತ ಅವನನ್ನು ಅರೆಬೆಳಕಿದ್ದ, ಮಡಚುವ ಮಂಚವಿದ್ದ, ಕೆಟ್ಟ ಪ್ರೇಮಿಗಳ ಕಲೆಗಳಿದ್ದ ಹಾಸಿಗೆಯಿದ್ದ ರೂಮಿಗೆ ಕರೆದುಕೊಂಡು ಹೋದಳು. ಅವಳು ಕಾಡುನಾಯಿಯ ಹಾಗೆ, ಆತ್ಮವಿಲ್ಲದ ಗಡಸು ದೇಹದಿಂದ ಒಳಗೊಂಡಳು. ಆ ದೇಹ ಅವನನ್ನು ಬೆದರಿದ ಮಗುವಿನಂತೆ ನಿರಾಕರಿಸುವುದಕ್ಕೆ ಸಿದ್ಧವಾಗಿತ್ತು. ಆದರೆ ಪ್ರಚಂಡಶಕ್ತಿಯ ಪುರುಷನೊಬ್ಬ ಅದಕ್ಕೆ ದೊರೆತು, ಅವಳ ಒಳಗೆ ಭುಗಿಲೇಳುವ ಮರುಹೊಂದಾಣಿಕೆಯನ್ನು ಅಪೇಕ್ಷಿಸುತ್ತಿತ್ತು. +ಅವರಿಬ್ಬರೂ ಪ್ರೇಮಿಗಳಾದರು. ಅವ್ರೇಲಿಯಾನೋ ಬೆಳಿಗ್ಗೆ ಚರ್ಮದ ಹಾಳೆಗಳ ಬರಹವನ್ನು ವಿಶ್ಲೇಷಿಸುವುದರಲ್ಲಿ ಕಳೆದು ಮಧ್ಯಾಹ್ನ ಅವನಿಗಾಗಿ ಕಾಯುತ್ತಿರುವ ನಿಗ್ರೊಮಾಂತಳ ಬೆಡ್‌ರೂಮಿಗೆ ಹೋಗುತ್ತಿದ್ದ. ಅವಳು ಮೊದಲು ಅವನಿಗೆ ಎರೆಹುಳುಗಳಂತೆ ಅನಂತರ ಬಸವನ ಹುಳುವಿನಂತೆ ಮತ್ತು ಕೊನೆಗೆ ಏಡಿಯ ಹಾಗೆ ಪ್ರೇಮಿಸುವುದು ಹೇಗೆಂದು ಹೇಳಿಕೊಟ್ಟ ಮೇಲೆ, ಅವನನ್ನು ಬಿಟ್ಟು ಅಲೆಮಾರಿ ಪ್ರೇಮಿಗಳಿಗಾಗಿ ಕಾಯುತ್ತಿದ್ದಳು. ಅನೇಕ ತಿಂಗಳು ಕಳೆದ ನಂತರ ಅವಳ ಸೊಂಟದ ಸುತ್ತ ವಿಶೇಷ ಹುರಿಯಿಂದ ಮಾಡಿದಂಥ ಬೆಲ್ಟ್ ಕಟ್ಟಿಕೊಂಡಿರುವುದನ್ನು ಕಂಡ. ಆದರೆ ಅದು ಉಕ್ಕಿನಷ್ಟು ಬಲವಾಗಿದ್ದು ಕೊನೆ ಇರದೆ ಹುಟ್ಟಿನಿಂದಲೇ ಬಂದು, ಅವಳ ಜೊತೆಗೆ ಬೆಳೆದ ಹಾಗೆ ತೋರಿತು. ಹೆಚ್ಚು ಕಡಿಮೆ ಯಾವಾಗಲೂ ಅವರು ಪ್ರೇಮಿಸುವ ನಡುವಿನ ಅವಧಿಯಲ್ಲಿ, ಹಾಸಿಗೆಯಲ್ಲಿ ಬೆತ್ತಲಾಗಿ, ಭ್ರಮೆಗೊಳಿಸುವ ಶೆಖೆಯಲ್ಲಿ ಮತ್ತು ಜಿಂಕ್ ಛಾವಣಿಯ ಮೇಲೆ ತುಕ್ಕು ಹಿಡಿದ ಕಡೆಯಲ್ಲಿ ಬಿದ್ದು ಮಿರುಗುವ ಹಗಲಿನ ನಕ್ಷತ್ರಗಳ ಕೆಳಗೆ ಊಟ ಮಾಡುತ್ತಿದ್ದರು. ಇದು ಮೊದಲ ಸಲಕ್ಕೆ ನಿಗ್ರೋಮಾಂತಳಿಗೆ ಒಬ್ಬ ಸಮಸ್ಥಿತಿಯ ಮನುಷ್ಯ ದೊರಕಿದ್ದು, ಅಲ್ಲದೆ ಅವಳೇ ನಗುತ್ತ ಹೇಳಿದ ಹಾಗೆ ಉಂಗುಷ್ಠದಿಂದ ನೆತ್ತಿಯ ತನಕ ಮೂಳೆ ಪುಡಿಮಾಡುವನು ಮತ್ತು ಅವ್ರೇಲಿಯಾನೋ ಅಮರಾಂತ ಉರ್ಸುಲಾಳ ಬಗ್ಗೆ ತಡೆ ಹಿಡಿದಿರುವ ಮೋಹದ ಬಗ್ಗೆ ಹೇಳಿದಾಗ ಅವಳು ಪ್ರೇಮವನ್ನು ಕುರಿತು ಕಲ್ಪಿಸಿಕೊಳ್ಳಲು ಪ್ರಾರಂಭಿಸಿದಳು. ಅವನಿಗೆ ಪರ್ಯಾಯ ವ್ಯವಸ್ಥೆಯಿಂದ ಅದನ್ನು ಶಮನಪಡಿಸಲಾಗಿರಲಿಲ್ಲ. ಆದರೆ ಅನುಭವದಿಂದ ಉಂಟಾದ ಪ್ರೇಮದ ವಿಸ್ತಾರ ಅವನನ್ನು ಹಿಂಡಿ ಹಾಕುತಿತ್ತು. ಅದಾದ ನಂತರ ನಿಗ್ರೋಮಾಂತ ಅವನನ್ನು ಎಂದಿನಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಳು. ಆದರೆ ತನ್ನ ಸೇವೆಗಾಗಿ ತುಂಬಾ ಕರಾರುವಾಕ್ಕಾಗಿ ದುಡ್ಡು ಕೊಡುವಂತೆ ಮಾಡಿದಳು. ಅವನ ಬಳಿ ದುಡ್ಡಿಲ್ಲದಿದ್ದಾಗ ಅವನ ಲೆಕ್ಕಕ್ಕೆ ಬಾಗಿಲ ಹಿಂದುಗಡೆ ಉಗುರಿನಿಂದ ಗೆರೆ ಎಳೆದು ಗುರುತು ಮಾಡುತ್ತಿದ್ದಳು. ಸೂರ್ಯ ಮುಳುಗಿದ ಮೇಲೆ ಅವಳು ಚೌಕದ ನೆರಳುಗಳಲ್ಲಿ ಜಾರಿ ಹೋಗುತ್ತಿರುವಾಗ, ಆ ಸಮಯದಲ್ಲಿ ಊಟ ಮಾಡುತ್ತಿದ್ದ ಅಮರಾಂತ ಉರ್ಸುಲಾ ಮತ್ತು ಗ್ಯಾತ್ಸನ್ನರನ್ನು ಗಮನಿಸದೆ, ಅಪರಿಚಿತನಂತೆ ಅಂಗಳದ ಮುಖಾಂತರ ಹೋಗಿ ರೂಮಿನ ಬಾಗಿಲು ಹಾಕಿಕೊಂಡರೆ, ಓದುವುದಕ್ಕೆ, ಬರೆಯುವುದಕ್ಕೆ ಅಥವಾ ಯೋಚಿಸುವುದಕ್ಕೂ ಆಗುತ್ತಿರಲಿಲ್ಲ. ಏಕೆಂದರೆ ಅವರ ನಗು, ನಲಿದಾಟ, ಪಿಸುಮಾತುಗಳು ಅವನಲ್ಲಿ ಆತಂಕ ಹುಟ್ಟಿಸುತ್ತಿದ್ದವು. ರಾತ್ರಿ ಅವರ ಉಕ್ಕೇರುವ ಸಂತೋಷ ಮನೆಯನ್ನು ಆವರಿಸುತ್ತಿತ್ತು. ಅದು ಗ್ಯಾತ್ಸನ್ ಏರೋಪ್ಲೇನಿಗಾಗಿ ಎರಡು ವರ್ಷ ಕಾಯುತ್ತಿದ್ದ ಮುಂಚಿನ ಕಾಲದಲ್ಲಿ ಅವನ ಜೀವನವಾಗಿತ್ತು. ಅದು ಹಾಗೆಯೇ ಮುಂದುವರೆದು ಅವನು ಒಂದು ದಿನ ಮಧ್ಯಾಹ್ನ ಜಾಣ ಕತಲುನಿಯಾದವನ ಪುಸ್ತಕದಂಗಡಿಗೆ ಹೋದಾಗ ನಾಲ್ಕು ಜನ ಹುಡುಗರು ಮಧ್ಯಕಾಲದಲ್ಲಿ ಜಿರಲೆಗಳನ್ನು ಕೊಲ್ಲುವುದಕ್ಕೆ ಉಪಯೋಗಿಸುತ್ತಿದ್ದ ವಿಧಾನಗಳನ್ನು ಕುರಿತು ಆವೇಶದಿಂದ ಚರ್ಚಿಸುತ್ತಿದ್ದರು. ಅವ್ರೇಲಿಯಾನೋಗೆ ಬಿದೆ ಎಂಬುವನು ಮಾತ್ರ ಓದಿದ್ದ ಪುಸ್ತಕಗಳ ಬಗ್ಗೆ ಇದ್ದ ಪ್ರೀತಿಯನ್ನು ಗೊತ್ತಿದ್ದ ವಯಸ್ಸಾದ ಅಂಗಡಿಯಾತ, ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರೀತಿಯಿಂದ ಒತ್ತಾಯಿಸಿದ. ಅವನು ಒಂದು ಸಲ ಉಸಿರು ಕೂಡ ಎಳೆದುಕೊಳ್ಳದೆ, ಭೂಮಿಯ ಮೇಲೆ ಇರುವ ಎರಡು ರೆಕ್ಕೆಗಳ ಹುಳುವಾದ ಜಿರಲೆ, ಎಲ್ಲದಕ್ಕಿಂತ ಪುರಾತನದ್ದೆಂದೂ, ಅದಾಗಲೇ ಓಲ್ಡ್ ಟೆಸ್ಟ್‌ಮೆಂಟಿನಲ್ಲಿ ಚಪ್ಪಲಿಗಳ ಕೆಳಗೆ ಸಿಕ್ಕಿ ಸತ್ತು ಹೋಗಿದೆಯೆಂದೂ, ಆದರೆ ಎಲ್ಲ ಬಗೆಯ ನಿರ್ನಾಮ ಕ್ರಿಯೆಯನ್ನು ವಿರೋಧಿಸುತ್ತಿದೆಯೆಂದೂ, ಬೋರಾಕ್ಸ್ ಪುಡಿ ಹಾಗು ಸಕ್ಕರೆ ಬೆರೆಸಿದ ಟೊಮ್ಯಾಟೋ ಹೋಳುಗಳು ಅಲ್ಲದೆ ಅದರ ಸಾವಿರದ ಆರುನೂರ ಮೂರು ವಿಧಗಳು ಕರುಣೆ ಇಲ್ಲದ ಅತ್ಯಂತ ಪುರಾತನವಾದ ನಿರ್ನಾಮ ಮಾಡುವ ರೀತಿಗಳನ್ನು ವಿರೋಧಿಸುತ್ತಾ ಬಂದಿವೆ. ಇದು ಮನುಷ್ಯ ಜೀವವಿರುವ ವಸ್ತುವಿನ ಮೇಲೆ, ಮನುಷ್ಯನನ್ನು ಸೇರಿಕೊಂಡಂತೆ, ಪ್ರಾರಂಭದಿಂದಲೂ ಪ್ರಯೋಗಿಸುತ್ತ ಬಂದಿದ್ದಾನೆ. ಅದು ಎಷ್ಟರ ಮಟ್ಟಿಗೆ ಎಂದರೆ ಮನುಷ್ಯ ಜೀವಿಗೆ ಸಂತಾನ ಹೊಂದುವುದು ಅಂತ:ಸ್ಫೂರ್ತಿಯಾಗಿರುವಂತೆ, ಜಿರಲೆಗಳನ್ನು ಕೊನೆಗಾಣಿಸುವುದು ಅದಕ್ಕಿಂತ ಖಚಿತವಾದ, ತುರ್ತಾದ ಅಗತ್ಯವಿರಬೇಕು. ಆದರೆ ಜಿರಲೆಗಳು ಮನುಷ್ಯನ ಕ್ರೌರ್ಯಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದರೆ ಅವು ನೆರಳುಗಳಲ್ಲಿ ಆಶ್ರಯ ಪಡೆದದ್ದು ಕಾರಣ, ಏಕೆಂದರೆ ಮನುಷ್ಯನಿಗೆ ಕತ್ತಲೆಯ ಭಯವಿದೆ. ಆದರೆ ಮತ್ತೊಂದು ವಿಧದಲ್ಲಿ ಅವುಗಳಿಗೆ ಮಧ್ಯಾಹ್ನದ ಬೆಳಕಿನ ಬಗ್ಗೆ ಆಕರ್ಷಣೆ ಇದೆ. ಆದ್ದರಿಂದ ಮಧ್ಯಯುಗದಿಂದಲೇ, ಈಗಿನಂತೆ ಜಿರಲೆಗಳನ್ನು ಕೊಲ್ಲುವ ಅತ್ಯಂತ ಪ್ರಭಾವಿ ಮಾರ್ಗವೆಂದರೆ ಸೂರ್ಯನ ಬೆಳಕು, ಎಂದ. +ವಿಶ್ವಕೋಶಕ್ಕೆ ಸರಿಹೊಂದಿದ ಆ ವಿವರಣೆ ಸ್ನೇಹಕ್ಕೆ ನಾಂದಿಯಾಯಿತು. ಅವ್ರೇಲಿಯಾನೋ ಮಧ್ಯಾಹ್ನ ಹೊತ್ತು ಚರ್ಚಿಸುವ ಅವರ ಜೊತೆ ಸೇರಿಕೊಳ್ಳುತ್ತಿದ್ದ ಅವರ ಹೆಸರುಗಳು ಅಲ್ಫಾರೋ, ಅಲ್ಫಾಜೋ, ಖೆರ್ಮಾನ್ ಮತ್ತು ಗ್ಯಾಬ್ರಿಯಲ್. ಅವರು ಅವನ ಜೀವನದಲ್ಲಿ ಮೊದಲನೆ ಮತ್ತು ಕೊನೆಯ ಸ್ನೇಹಿತರಾಗಿದ್ದರು. ಕೇವಲ ಬರೆದ ವಾಸ್ತವದಲ್ಲಿ ಮುಳುಗಿದ್ದವನಿಗೆ ಪುಸ್ತಕದಂಗಡಿಯಲ್ಲಿ ಪ್ರಾರಂಭವಾಗುವ ತೀವ್ರವಾದ ಕೂಟಗಳು, ಬೆಳಿಗ್ಗೆ ವೇಶ್ಯಾಗೃಹಗಳಲ್ಲಿ ಕೊನೆಗೊಳ್ಳುತ್ತ ಹೊಸ ಬಗೆಯನ್ನು ತೆರೆದುಕೊಟ್ಟಿತು. ಅಲ್ಲಿಯ ತನಕ ಅವನು, ಸಾಹಿತ್ಯ ಜನರನ್ನು ತಮಾಷೆ ಮಾಡಲು ಎಂದಿನಿಂದಲೂ ಸೃಷ್ಟಿಯಾದ ಅತ್ಯುತ್ತಮ ಆಟದ ವಸ್ತು ಎಂದು ಅಲ್ಫಾರೋ ಒಂದು ದಿನ ರಾತ್ರಿ ವಿಲಾಸದಲ್ಲಿದ್ದಾಗ ಪ್ರಯೋಗಿಸಿ ತೋರಿಸುವವರೆಗೆ ಯೋಚಿಸಿರಲಿಲ್ಲ. ಈ ಬಗೆಯ ವಿವಿಧ ದೃಷ್ಟಿಕೋನಗಳು ಜಾಣ ಕತಲುನಿಯಾದವನ ಮೂಲದವು. ಏಕೆಂದರೆ ಜ್ಞಾನದಿಂದ ವಸ್ತುವೊಂದನ್ನು ಮಾಡುವುದರ ಹೊಸ ರೀತಿಯನ್ನು ತೋರಿಸುವುದಕ್ಕೆ ಸಾಧ್ಯವಿಲ್ಲದಿದ್ದರೆ, ಅದಕ್ಕೆ ಏನೂ ಬೆಲೆ ಇಲ್ಲ ಎಂದು ಅವನ ಅಭಿಪ್ರಾಯ. +ಜಿರಲೆಗಳನ್ನು ಕುರಿತು ಅವ್ರೇಲಿಯಾನೋ ಭಾಷಣ ಮಾಡಿದ ಮೇಲೆ ಉಂಟಾದ ವಾದ ಮಕೋಂದೋದ ಹೊರವಲಯದಲ್ಲಿ ಹಸಿವಿನ ಕಾರಣದಿಂದ ಮಲಗುತ್ತಿದ್ದ ಹುಡುಗಿಯರ ವೇಶ್ಯಾಗೃಹದಲ್ಲಿ ಕೊನೆಯಾಗಿತ್ತು. ಬಾಗಿಲು ಹಾಕಿ ತೆಗೆಯುವ; ಒಂದು ವ್ಯಸನದಿಂದ ನರಳುತ್ತಿದ್ದ ಒಬ್ಬ ನಗುಮೊಗದವಳು ಅದರ ಒಡತಿ. ನಿರಂತರವಾಗಿರುತ್ತಿದ್ದ ಅವಳ ನಸುನಗುವಿಗೆ, ಯಾವುದೇ ವ್ಯವಸ್ಥೆ ಇರದಿರುವುದನ್ನು ಕಲ್ಪನೆಯಲ್ಲಿ ಮಾತ್ರ ಬಿಟ್ಟು, ಒಪ್ಪಿಕೊಂಡಿದ್ದ ಗಿರಾಕಿಗಳ ವಿಚಾರ ಶೂನ್ಯತೆ ಕಾರಣವಾಗಿತ್ತು. ಏಕೆಂದರೆ ತೀರ ಸಾಮಾನ್ಯ ವಸ್ತುಗಳೂ ಸಹ ಅಸಮರ್ಪಕವಾಗಿದ್ದವು. ಕುಳಿತ ಕೂಡಲೇ ಪೀಠೋಪಕರಣಗಳು ಮುರಿದು ಬೀಳುತ್ತಿದ್ದವು, ಹೊಟ್ಟೆ ಬಗೆದಿದ್ದ ಫೋನೋಗ್ರಾಮ್‌ನಲ್ಲಿ ಕೋಳಿ ಗೂಡಿತ್ತು; ಕಾಗದದ ಹೂಗಳ ಕೈತೋಟ ಇತ್ತು; ಬಾಳೆತೋಟದ ಕಂಪನಿ ಬರುವುದಕ್ಕಿಂತ ಹಿಂದಿನ ಕ್ಯಾಲಂಡರ್; ಪ್ರಕಟವಾಗದಿದ್ದ ಮ್ಯಾಗಸೈನ್‌ಗಳಿಂದ ಕತ್ತರಿಸಿದ ಚಿತ್ರಗಳಿದ್ದ ಫ್ರೇಮುಗಳಿದ್ದವು. ಗಿರಾಕಿಗಳು ಬಂದಿದ್ದಾರೆಂದು ಒಡತಿ ಹೇಳಿ ಕಳಿಸುತ್ತಿದ್ದ ಅಕ್ಕಪಕ್ಕದ ಕಡೆಯಿಂದ ಬರುತ್ತಿದ್ದ ಪುಟ್ಟ, ಪುಕ್ಕಲು ಸೂಳೆಯರನ್ನು ಕೂಡಾ ಅವಳು ಕಂಡುಹಿಡಿದದ್ದು. ಅವರು ಯಾವುದೇ ಗೆಲುವಿಲ್ಲದೆ ಐದು ವರ್ಷ ಚಿಕ್ಕವರಾಗಿದ್ದಾಗ, ಉಳಿದ ಬಟ್ಟೆಯಿಂದ ಹೊಲಿದದ್ದನ್ನು ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು ಮತ್ತು ಹೇಗೆ ಕಾಣಿಸಿಕೊಂಡಿದ್ದರೋ ಅದೇ ಮುಗ್ಧತೆಯಿಂದ ಅವನ್ನು ಕಳಚುತ್ತಿದ್ದರು. ಪ್ರಣಯದ ಆವೇಶದಲ್ಲಿ, “ಹೋ, ಹೋ, ನೋಡಿ ತಾರಸಿ ಹೇಗೆ ಬೀಳುತ್ತಿದೆ” ಎಂದು ಉದ್ಗರಿಸುತ್ತಿದ್ದರು. ಅವರು ಪೇಸೋ ಮತ್ತು ಐವತ್ತು ಸೆಂಟ್ ಪಡೆದಾಗ ಅದನ್ನು ಒಡತಿ ಮಾರುತ್ತಿದ್ದ ಚೀಸ್ ಸುರುಳಿಗೆ ಖರ್ಚು ಮಾಡುತ್ತಿದ್ದರು. ಏಕೆಂದರೆ ಅವಳಿಗೆ ಮಾತ್ರ ಆ ಊಟ ಕೂಡ ನಿಜವಲ್ಲವೆಂದು ಗೊತ್ತಿತ್ತು. ಆ ದಿನಗಳಲ್ಲಿ ಮೆಲ್‌ಕಿಯಾದೆಸ್‌ನ ಚರ್ಮದ ಹಾಳೆಯ ಮೇಲಿನ ಬರಹಗಳಿಂದ ಪ್ರಾರಂಭವಾಗಿ, ನಿಗ್ರೋಮಾಂತಳ ಹಾಸಿಗೆಯಲ್ಲಿ ಕೊನೆಗೊಳ್ಳುತ್ತಿದ್ದ ಅವ್ರೇಲಿಯಾನೋ ಪ್ರಪಂಚದ ಪುಕ್ಕಲುತನ ಕಲ್ಪನೆಯ ವೇಶ್ಯಾಗೃಹದಲ್ಲಿ ವಾಸಿಯಾಗುವುದನ್ನು ಕಂಡುಕೊಂಡಿದ್ದ. ಮೊದಮೊದಲು ಒಡತಿ ಪ್ರಣಯದ ಚಂದದ ಗಳಿಗೆಗಳಲ್ಲಿ ಆ ಲಾವಣ್ಯದ ಬಗ್ಗೆ ಎಲ್ಲ ರೀತಿಯ ಟಿಪ್ಪಣಿ ಕೊಡುತ್ತಿದ್ದುದರಿಂದ ಅವನಿಗೆ ಏನೊಂದೂ ತಿಳಿಯುತ್ತಿರಲಿಲ್ಲ. ಆದರೆ ಕಾಲ ಕಳೆದಂತೆ ಈ ಪ್ರಪಂಚದ ದೂರದೃಷ್ಟಿಗಳಿಗೆ ಹೊಂದಿಕೊಂಡ. ಒಂದು ದಿನ ರಾತ್ರಿ ಅವನು ಚಿಕ್ಕ ರೆಸೆಪ್ಷನ್ ರೂಮಿನಲ್ಲಿ ಬಟ್ಟೆ ಕಳಚಿ ತನ್ನ ಭಾರೀ ಆಕಾರದ ಮರ್ಮಾಂಗದ ಮೇಲೆ ಬೀರ್ ಬಾಟಲನ್ನು ಇಟ್ಟು ಸರಿದೂಗಿಸುತ್ತ ಇಡೀ ಮನೆಯ ತುಂಬ ಓಡಿದ. ಅವನು ಅತಿಯಾಗಿ ಸಂಭ್ರಮಿಸುವ ಒಡತಿಯ ಯಾವಾಗಲೂ ಇರುವ ನಸುನಗುವನ್ನು ಯಾವ ವಿರೋಧವೂ ಇಲ್ಲದೆ, ಅದರಲ್ಲಿ ನಂಬಿಕೆ ಇರದೆ, ಅಲಂಕಾರಿಕವನ್ನಾಗಿ ಮಾಡಿದ. ಅದೇ ಸಮಯದಲ್ಲಿ ಆ ಮನೆಯೇ ಇರಲಿಲ್ಲವೆಂದು ತೋರಿಸಲು ಖೆರ್ಮಾನ್ ಅದನ್ನು ಸುಟ್ಟು ಹಾಕಲು ಪ್ರಯತ್ನಿಸುತ್ತಿದ್ದಂತೆ ಅಲ್ಫಾನ್ಫೋ ಗಿಣಿಯ ಕತ್ತು ಮುರಿದು ಕೋಳಿ ಸಾರು ಕುದಿಯಲು ಪ್ರಾರಂಭಿಸಿದ್ದ ಪಾತ್ರೆಗೆ ಹಾಕಿದ. +ಅವ್ರೇಲಿಯಾನೋ ಆ ನಾಲ್ಕು ಜನ ಸ್ನೇಹಿತರೊಂದಿಗೆ ಸಮಾನವಾದ ವಿಶ್ವಾಸದಿಂದ ಮತ್ತು ಸಮಾನ ವಿಶ್ವಾಸದಿಂದ ಅವರೆಲ್ಲ ಕೂಡಿ ಒಬ್ಬನೇ ವ್ಯಕ್ತಿ ಎನ್ನುವ ಮಟ್ಟಿಗೆ ಬಂಧಿಸಲ್ಪಟ್ಟಿದ್ದರೂ ಅವನು ಗಾಬ್ರಿಯಲ್‌ಗೆ ಇತರರಿಗಿಂತ ಹೆಚ್ಚು ಸಮೀಪವಾಗಿದ್ದ. ಅದೊಂದು ರಾತ್ರಿ ಅವನು ಸುಮ್ಮನೆ ಕರ್ನಲ್ ಅವ್ರೇಲಿಯನೋ ಬ್ಯುಂದಿಯಾನನ್ನು ಹೆಸರಿಸಿದಾಗ ಗಾಬ್ರಿಯಲ್ ಒಬ್ಬನೇ, ಅವನು ತಮಾಷೆ ಮಾಡುತ್ತಿಲ್ಲ ಎಂದು ತಿಳಿದವನು. ಸಾಮಾನ್ಯವಾಗಿ ಯಾವ ಸಂಭಾಷಣೆಯಲ್ಲೂ ಭಾಗವಹಿಸದ ಒಡತಿ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಹೆಸರನ್ನು ಕೇಳಿರುವುದಾಗಿಯೂ ಮತ್ತು ಸರ್ಕಾರ ಮುಕ್ತವಾದಿಗಳನ್ನು ಕೊಂದು ಹಾಕಲು ಅವನನ್ನು ನೆಪ ಮಾಡಿಕೊಂಡಿದ್ದಾಗಿ ಅವೇಶದಿಂದ ಹೇಳಿದಳು. ಅದಕ್ಕೆ ಪ್ರತಿಯಾಗಿ ಗಾಬ್ರಿಯಲ್‌ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಇದ್ದದ್ದರ ಬಗ್ಗೆ ಅನುಮಾನವಿರಲಿಲ್ಲ. ಏಕೆಂದರೆ ಅವನ ಮುತ್ತಜ್ಜನ ಅಪ್ಪ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನ ಆಪ್ತ ಸಹವರ್ತಿಗಳಲ್ಲಿ ಒಬ್ಬನಾಗಿದ್ದ. ಆ ಅಸ್ಪಷ್ಟ ನೆನಪುಗಳು ಕೆಲಸಗಾರರ ವಿಷಯ ಬಂದಾಗ ಮತ್ತಷ್ಟು ಸೂಕ್ಷ್ಮವಾಗುತ್ತಿದ್ದವು. ಪ್ರತಿ ಬಾರಿ ಅವ್ರೇಲಿಯಾನೋ ಅದನ್ನು ಪ್ರಸ್ತಾಪಮಾಡಿದಾಗ ಅಲ್ಲಿನ ಒಡತಿಯಲ್ಲದೆ ಅವಳಿಗಿಂತ ವಯಸ್ಸಾದವರೂ ಕೂಡಾ ಸ್ಟೇಷನ್ ಬಳಿ ಕೆಲಸಗಾರರ ಹತ್ಯಾಕಾಂಡವನ್ನು ಮತ್ತು ಸತ್ತವರನ್ನು ತುಂಬಿದ ಇನ್ನೂರು ಬೋಗಿಗಳ ಟ್ರೈನಿನ ಮಿಥ್ಯೆಯನ್ನು ನಿರಾಕರಿಸುತ್ತಿದ್ದರು. ಅಲ್ಲದೆ ಪ್ರತಿಯೊಂದು ನ್ಯಾಯಾಂಗ ದಾಖಲೆಯಲ್ಲಿ ಮತ್ತು ಪ್ರಾಥಮಿಕ ಸ್ಕೂಲಿನ ಪಠ್ಯದಲ್ಲಿ ನಿರೂಪಿತವಾಗಿದೆ ಎಂದು ಪ್ರತಿಪಾದಿಸುತ್ತಿದ್ದರು; ಅದೇನೆಂದರೆ ಬಾಳೆ ತೋಟದ ಕಂಪನಿ ಇರಲೇ ಇಲ್ಲ, ಎಂದು. ಇದರಿಂದಾಗಿ ಅವ್ರೇಲಿಯಾನೋ ಮತ್ತು ಗ್ಯಾಬ್ರಿಯಲ್ ಯಾರೂ ನಂಬದ ವಾಸ್ತವದ ಸಂಗತಿಯಲ್ಲಿ ಭಾಗಿಗಳಾಗಿದ್ದರು. ಅದು ಅವರ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ಕೊನೆಗೊಂಡ ಪ್ರಪಂಚದುಬ್ಬರದ ದಿಕ್ಕಿನಿಂದ ಹೊರತಾದವರ ಸ್ಥಿತಿ ತಲುಪಿ, ಕೇವಲ ಮನೋವ್ಯಥೆಯಷ್ಟೇ ಉಳಿಯಿತು. ಕಾಲದ ವೇಗ ಅವನ ಹೊಂದಾಣಿಕೆಯನ್ನು ಮೀರಿದಾಗ ಗಾಬ್ರಿಯಲ್ ಎಲ್ಲಂದರಲ್ಲಿ ಮಲಗುತ್ತಿದ್ದ. ಅವ್ರೇಲಿಯಾನೋ ಅನೇಕ ಸಲ ಅವನನ್ನು ಬೆಳ್ಳಿ ಕೆಲಸದ ವರ್ಕ್‌ಶಾಪಿನಲ್ಲಿ ಇರಲು ಬಿಡುತ್ತಿದ್ದ. ಆದರೆ ಅವನು ಬೆಳಗಿನ ತನಕ ಮನೆಯಲ್ಲಿ ಓಡಾಡುವ ಸತ್ತವರ ಶಬ್ದದಿಂದಾಗಿ ಇಡೀ ರಾತ್ರಿ ಎಚ್ಚರವಿದ್ದು ಕಳೆಯುತ್ತಿದ್ದ. ಅನಂತರ ಅವನನ್ನು ನಿಗ್ರೊಮಾಂತಳ ಹತ್ತಿರ ಬಿಟ್ಟ. ಅವಳು ತನಗೆ ಪುರುಸೊತ್ತಿದ್ದಾಗ ಅವನನ್ನು ಒಳ್ಳೆಯ ರೂಮಿಗೆ ಕರೆದುಕೊಂಡು ಹೋಗುತ್ತಿದ್ದಳು ಮತ್ತು ಅವನ ಲೆಕ್ಕವನ್ನು ಬಾಗಿಲ ಹಿಂದುಗಡೆ ಅವ್ರೇಲಿಯಾನೋ ಸಾಲದ ಲೆಕ್ಕದಲ್ಲಿ ಉಳಿದ ಜಾಗದಲ್ಲಿ ಉದ್ದುದ್ದಾಗಿ ಗುರುತು ಹಾಕುತ್ತಿದ್ದಳು. +ತೀರ ಅವ್ಯವಸ್ಥಿತವಾದ ಜೀವನವಿದ್ದರೂ ಜಾಣ ಕತಲುನಿಯಾದವನ ಆಗ್ರಹದ ಮೇರೆಗೆ ಆ ಗುಂಪಿನವರು ಏನಾದರೊಂದು ಶಾಶ್ವತವಾದದ್ದನ್ನು ಮಾಡಲು ಪ್ರಯತ್ನಿಸಿದರು. ಶ್ರೇಷ್ಠ ಸಾಹಿತ್ಯದ ಪ್ರೊಫೆಸರ್ ಆಗಿದ್ದ ಅವನ ಅಂಗಡಿಯಲ್ಲಿದ್ದ ಅಪರೂಪದ ಪುಸ್ತಕಗಳಿಂದ ಪ್ರೈಮರಿ ಸ್ಕೂಲಿನಿಂದ ಮುಂದಕ್ಕೆ ಓದಲು ಯಾರಿಗೂ ಆಸಕ್ತಿ ಇಲ್ಲದಿರುವ ಊರಿನಲ್ಲಿ ಅವರನ್ನು ಇಡೀ ರಾತ್ರಿ ಮೂವತ್ತೇಳು ನಾಟಕೀಯ ಸಂದರ್ಭಗಳನ್ನು ಹುಡುಕುವಂತೆ ಮಾಡಿದ. ಸ್ನೇಹವನ್ನು ಕಂಡು ಕೊಂಡ ಉತ್ಸಾಹದಲ್ಲಿ, ಸಣ್ಣತನದಿಂದ ಫೆರ್ನಾಂಡ ನಿರ್ಬಂಧಿಸಿದ್ದ ಪ್ರಪಂಚದ ಚೆಲುವಿನಿಂದ ಬೆರಗಾದ. ಅವ್ರೇಲಿಯಾನೋ ಚರ್ಮದ ಹಾಳೆಯ ಮೇಲಿನ ಬರಹಗಳು, ಸಂಕೇತಗಳ ಕಾವ್ಯದ ಸಾಲುಗಳ ಮೂಲಕ ಭವಿಷ್ಯ ವಾಣಿಯಂತೆ ತಮ್ಮನ್ನು ತೆರೆದಿಡುವುದಕ್ಕೆ ಪ್ರಾರಂಭ ಮಾಡಿದ. ಅದೇ ವಿಷಯದಲ್ಲಿ ಅವ್ರೇಲಿಯಾನೋ ಅವುಗಳ ಪರಿಶೀಲನೆಯನ್ನು ಕೈ ಬಿಟ್ಟ. ಆದರೆ ವೇಶ್ಯಾಗೃಹಕ್ಕೆ ಹೋಗುವುದನ್ನು ಬಿಡದೆ ಪ್ರತಿಯೊಂದಕ್ಕೂ ಸಾಕಷ್ಟು ಸಮಯವಿರುತ್ತದೆ ಎನ್ನುವುದಕ್ಕೆ ಪುರಾವೆ ಸಿಕ್ಕ ಮೇಲೆ, ಅವನು ಮತ್ತೆ ಮೆಲ್‌ಕಿಯಾದೆಸ್‌ನ ರೂಮಿಗೆ ಹೋಗಲು ಇಚ್ಛೆಯುಂಟಾಗಿ ತನ್ನ ಪ್ರಯತ್ನವನ್ನು ಅದರ ಕೊನೆಯ ಸೂತ್ರಗಳು ಸಿಗುವ ತನಕ ಕೈ ಬಿಡಬಾರದು ಎಂದುಕೊಂಡ. ಸುಮಾರು ಅದೇ ಸಮಯದಲ್ಲಿ ಗ್ಯಾತ್ಸನ್ ಏರೋಪ್ಲೇನಿಗಾಗಿ ಕಾಯುತ್ತಿದ್ದ. ಅಲ್ಲದೆ ತೀರ ಒಂಟಿಯಾಗಿದ್ದ ಅಮರಾಂತ ಉರ್ಸುಲಾ ಒಂದು ದಿನ ಬೆಳಿಗ್ಗೆ ಅವ್ರೇಲಿಯಾನೋನ ರೂಮಿಗೆ ಹೋದಳು. +ಅವಳು, “ಹಲೋ ರಾಕ್ಷಸ! ಮತ್ತೆ ಗುಹೆ ಸೇರಿಕೊಂಡೆಯಾ” ಎಂದಳು. +ಅವಳೇ ಮಾಡಿದ ಉದ್ದನೆಯ ನೆಕ್‌ಲೇಸ್ ಮತ್ತು ವಿನ್ಯಾಸಗೊಳಿಸಿದ್ದ ಡ್ರೆಸ್ ಹಾಕಿಕೊಂಡಿದ್ದ ಅವಳು ತೀರ ಆಕರ್ಷಕವಾಗಿದ್ದಳು. ಅವಳು ತನ್ನ ಗಂಡನ ವಿಧೇಯತೆಯನ್ನು ಮನಗಂಡು ಚರ್ಮದ ಹುರಿಯನ್ನು ಉಪಯೋಗಿಸುವುದನ್ನು ಬಿಟ್ಟುಬಿಟ್ಟಿದ್ದಳು ಮತ್ತು ವಾಪಸು ಬಂದ ಮೇಲೆ ಮೊದಲ ಬಾರಿಗೆ ನಿರಾಳವಾದ ಮನಸ್ಥಿತಿ ದೊರಕಿಸಿಕೊಂಡಂತಿದ್ದಳು. ಅವಳು ಬಂದಳೆಂದು ಗೊತ್ತಾಗುವುದಕ್ಕೆ ಅವಳನ್ನು ಅವ್ರೇಲಿಯಾನೋ ನೋಡಬೇಕಾಗಿರಲಿಲ್ಲ. ಅವಳು ಟೇಬಲ್ ಮೇಲೆ ಮುಂಗೈಯೂರಿ ಅವನಿಗೆ ತೀರ ಹತ್ತಿರವಿದ್ದಳು. ಅದರಿಂದಾಗಿ ಅವ್ರೇಲಿಯಾನೋ ಅವಳ ಮೂಳೆಯಾಳದ ಶಬ್ದಗಳನ್ನು ಕೇಳಿಸಿಕೊಂಡ. ಅವಳು ಚರ್ಮ ಹಾಳೆಯ ಮೇಲಿನ ಬರಹಗಳ ಬಗ್ಗೆ ಆಸಕ್ತಿ ವಹಿಸಿದಳು. ಅವನು ತನಗುಂಟಾದ ತೊಂದರೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತ, ಉಡುಗುತ್ತಿದ್ದ ತನ್ನ ಧ್ವನಿಯನ್ನು, ಹೊರಹಾರುತ್ತಿದ್ದ ತನ್ನ ಹೃದಯವನ್ನು, ಕಲ್ಲಾಗುತ್ತಿದ್ದ ಹವಳದ ಹುಳುವಿನ ರೀತಿಯ ತನ್ನ ನೆನಪನ್ನು ಬಿಗಿ ಹಿಡಿದ. ಅವನು ಅವಳಿಗೆ ಸಂಸ್ಕೃತದ ರಾಜಗಾಂಭೀರ್ಯದ ಬಗ್ಗೆ, ಕಾಗದದಲ್ಲಿ ಬರೆದದ್ದನ್ನು ನಿಚ್ಛಳ ಬೆಳಕಿನಲ್ಲಿ ಕಾಣುವ ಹಾಗೆ ಕಾಲದ ಚಲನೆಯಲ್ಲಿ ಭವಿಷ್ಯವನ್ನು ವೈಜ್ಞಾನಿಕವಾಗಿ ಕಾಣುವ ಸಾಧ್ಯತೆಯ ಬಗ್ಗೆ, ಆ ಭವಿಷ್ಯ ಸೂಚಕಗಳನ್ನು ವಿಶ್ಲೇಷಿಸುವ ಅಗತ್ಯದ ಬಗ್ಗೆ ಮತ್ತು ನಾಸ್ಟರ್ ಡಾಮಸ್‌ನ ‘ಶತಮಾನಗಳು\’ ಹಾಗೂ ಸಂತ ಮಿಲಾನಸ್ ನುಡಿದ ಭವಿಷ್ಯದಂತೆ ಕಂತಾಬ್ರಿಯಾದ ವಿನಾಶದ ಬಗ್ಗೆ ತಿಳಿಸಿದ. ಇದ್ದಕ್ಕಿದ್ದ ಹಾಗೆ ಅವನು ಹುಟ್ಟಿದಾಗಿನಿಂದಲೂ ತೆಗೆದುಕೊಳ್ಳದೆ ಹೋದ ಮತ್ತು ಈಗಿನ ಹಠಾತ್ ನಿರ್ಣಯದಿಂದ ತನ್ನ ಅನುಮಾನಗಳು ಕೊನೆಗೊಳ್ಳುವುದೆಂದು ಅವಳ ಕೈ ಮೇಲೆ ತನ್ನ ಕೈಯನ್ನಿಟ್ಟ. ಅವಳಾದರೂ ಚಿಕ್ಕಂದಿನಿಂದಲೂ ಇದ್ದ ರೀತಿಯ ಮುಗ್ಧ ವಿಶ್ವಾಸದಲ್ಲಿ ಅವನ ತೋರುಬೆರಳನ್ನು ಹಿಡಿದುಕೊಂಡಳು. ಅವನು ಉತ್ತರ ಕೊಡುತ್ತಿರುವಾಗ ಹಾಗೆಯೇ ಹಿಡಿದುಕೊಂಡಿದ್ದಳು. ಯಾವುದನ್ನೂ, ಯಾವುದೇ ರೀತಿಯಲ್ಲಿ ತಿಳಿಸದ ತೋರುಬೆರಳುಗಳ ಶೀತಲ ಸ್ಪರ್ಶದಲ್ಲಿ ಅವಳು ಆ ಕ್ಷಣದ ಕನಸಿನಿಂದ ಎಚ್ಚೆತ್ತುಕೊಳ್ಳುವ ತನಕ ಹಾಗೆಯೇ ಇದ್ದಳು. ಅವಳು ಹಣೆ ಬಡಿದುಕೊಂಡು, “ಕೆಂಜಿಗ” ಎಂದು ಕೂಗಿದಳು. ಹಸ್ತಪ್ರತಿಗಳನ್ನು ಮರೆತು, ನೃತ್ಯದ ಹೆಜ್ಜೆ ಹಾಕುತ್ತ ಬಾಗಿಲಿಗೆ ಹೋಗಿ ಅಲ್ಲಿಂದ ಬೆರಳ ತುದಿಯಿಂದ, ಅವಳು ಆ ದಿನ ಬ್ರುಸೆಲ್ಸ್‌ಗೆ ಹೋಗುವಾಗ ತನ್ನ ತಂದೆಗೆ ವಿದಾಯ ಹೇಳುತ್ತ ಮಾಡಿದ ಹಾಗೆ, ಮುತ್ತೊಂದನ್ನು ಅವ್ರೇಲಿಯಾನೋಗೆ ತೂರಿದಳು. +ಅವಳು, “ಆಮೇಲೆ ಹೇಳುವಂತೆ, ಇವತ್ತು ಕೆಂಜಿಗದ ಗೂಡಿನ ಮೇಲೆ ಸುಣ್ಣ ಹಾಕ್ಬೇಕಿತ್ತು ಅನ್ನೋದನ್ನ ಮರೆತು ಬಿಟ್ಟಿದ್ದೆ” ಎಂದಳು. +ಅವಳು ಮನೆಯ ಆ ಭಾಗದಲ್ಲಿ ಏನಾದರೂ ಕೆಲಸ ಮಾಡಬೇಕೆಂದಿದ್ದಾಗ ಅವನ ರೂಮಿಗೆ ಹೋಗುವುದನ್ನು ಮುಂದುವರೆಸಿದಳು. ಅವಳ ಗಂಡ ಆಕಾಶದ ಕಡೆ ನೋಡುತ್ತಿದ್ದಾಗ, ಅವಳು ಅಲ್ಲಿ ಕೆಲವು ನಿಮಿಷಗಳನ್ನು ಕಳೆಯುತ್ತಿದ್ದಳು. ಆ ಬದಲಾವಣೆಯಿಂದ ಉತ್ತೇಜಿತನಾದ ಅವ್ರೇಲಿಯಾನೋ ಅಮರಾಂತ ಉರ್ಸುಲಾ ವಾಪಸು ಬಂದಾಗ ಮೊದಲ ಕೆಲವು ತಿಂಗಳಲ್ಲಿ ಮಾಡದಿದ್ದ ಹಾಗೆ ಉಳಿದವರ ಜೊತೆ ಊಟ ಮಾಡಲು ಮನೆಯಲ್ಲೇ ಇರುತ್ತಿದ್ದ. ಇದರಿಂದ ಗ್ಯಾತ್ಸನ್‌ಗೆ ಸಂತೋಷವಾಯಿತು. ಸಾಮಾನ್ಯವಾಗಿ ಊಟವಾದ ಮೇಲೆ ನಡೆಯುತ್ತಿದ್ದ ಒಂದು ಗಂಟೆ ಮಾತುಕತೆಯಲ್ಲಿ ಗ್ಯಾತ್ಸನ್, ಅವನ ಪಾರ್ಟ್‌ನರ್‍ಸ್ ಮೋಸ ಮಾಡುತ್ತಿದ್ದಾರೆ ಎಂದ. ಅವರು ಏರೋಪ್ಲೇನನ್ನು ಹಾಕಿ ಕಳಿಸಿದ್ದೇವೆಂದು ತಿಳಿಸಿದ ಹಡಗು ಬರಲಿಲ್ಲ. ಅದರ ಸಾಗಣೆಯ ಏಜೆಂಟರು, ಕ್ಯಾರಿಬಿಯನ್ ನೌಕೆಗಳ ಪಟ್ಟಿಯಲ್ಲಿ ಅದು ಇಲ್ಲವೆಂದು ಹೇಳಿದರೂ, ಅವನ ಪಾರ್ಟ್‌ನರ್‍ಸ್ ತಾವು ಕಳಿಸಿಕೊಟ್ಟಿರುವುದು ನಿಜ ಎಂದು ಪದೇ ಪದೇ ಹೇಳುತ್ತಿದ್ದರು. ಮತ್ತು ಗ್ಯಾತ್ಸನ್ ಅವನ ಕಾಗದದಲ್ಲಿ ಸುಳ್ಳು ಹೇಳುತ್ತಿದ್ದಾನೆಂದು ಪರೋಕ್ಷವಾಗಿ ಹೇಳಿದರು. ಈ ಪತ್ರ ವ್ಯವಹಾರದಿಂದ ಉಂಟಾದ ಸಂಶಯ ಯಾವ ಮಟ್ಟ ತಲುಪಿತೆಂದರೆ ಗ್ಯಾತ್ಸನ್ ಆ ಬಗ್ಗೆ ಮತ್ತೆ ಬರೆಯಬಾರದು ಎಂದು ತೀರ್ಮಾನಿಸಿದ. ಅವನು ಎಲ್ಲವನ್ನೂ ಸ್ಪಷ್ಟಪಡಿಸಿಕೊಳ್ಳುವುದಕ್ಕೋಸ್ಕರ ಬ್ರುಸೆಲ್ಸ್‌ಗೆ ಸ್ವಲ್ಪ ಕಾಲ ಹೋಗಿ ಏರೋಪ್ಲೇನಿನೊಂದಿಗೆ ಹಿಂತಿರುಗುವ ಸೂಚನೆಯನ್ನು ಮುಂದಿಟ್ಟ. ಅಮರಾಂತ ಉರ್ಸುಲಾ ತಾನು ಗಂಡನನ್ನು ಬೇಕಾದರೂ ಬಿಟ್ಟಿರಬಲ್ಲೆ, ಆದರೆ ಮಕೋಂದೋದಿಂದ ಹೊರಗೆ ಹೋಗಲಾರೆ ಎಂದು ಪಟ್ಟು ಹಿಡಿದಿದ್ದರಿಂದ ಆ ಯೋಜನೆ ಹುಸಿಯಾಯಿತು. ಪ್ರಾರಂಭದ ದಿನಗಳಲ್ಲಿ ಸಾಮಾನ್ಯ ಅಭಿಪ್ರಾಯವಿದ್ದ ಹಾಗೆ ಅವ್ರೇಲಿಯನೋ ಕೂಡ ಗ್ಯಾತ್ಸನ್‌ನನ್ನು ಮುರಿದ ಮೋಟಾರು ವಾಹನದ ಮೂರ್ಖನೆಂದು ತಿಳಿದಿದ್ದ. ಅಲ್ಲದೆ ಅದು ಅವನ ಬಗ್ಗೆ ಮರುಕವನ್ನು ತಂದಿತ್ತು. ಅನಂತರ ವೇಶ್ಯಾಗೃಹದಲ್ಲಿ ಮನುಷ್ಯರ ವಿವಿಧ ಗುಣಗಳ ಬಗ್ಗೆ ಆಳವಾದ ಮಾಹಿತಿ ದೊರೆತ ಮೇ, ಅವನಿಗೆ ಗ್ಯಾತ್ಸನ್‌ನ ನಮ್ರತೆಗೆ ಅವನಲ್ಲಿರುವ ಭ್ರಷ್ಟವ್ಯಾಮೋಹವೇ ಕಾರಣ ಎಂದು ತಿಳಿಯಿತು. ಅವನನ್ನು ಇನ್ನೂ ಹೆಚ್ಚು ಅರಿತ ಮೇಲೆ, ಅವನ ನಿಜವಾದ ಸ್ವಭಾವ ಅವನ ವಿಧೇಯ ವರ್ತನೆಗೆ ವ್ಯತಿರಿಕ್ತವಾಗಿದ್ದು, ಅವನು ಏರೋಪ್ಲೇನಿಗಾಗಿ ಕಾಯುತ್ತಿರುವುದೂ ಕೂಡ ಒಂದು ನಾಟಕವೆಂದು ಭಾವಿಸಿದ. ಅಲ್ಲದೆ ಗ್ಯಾತ್ಸನ್ ಕಾಣಿಸುವಷ್ಟು ಮೂರ್ಖನಲ್ಲವೆಂದು, ಅವನೊಬ್ಬ ಅತೀವ ಸಾಮರ್ಥ್ಯವಿರುವ ಹಾಗೂ ತಾಳ್ಮೆ ಇದ್ದವನಾಗಿದ್ದು, ತೀರದ ಒಪ್ಪಂದದಿಂದ ಯಾವುದಕ್ಕೂ ಇಲ್ಲವೆನ್ನದೆ, ಸುತ್ತಲಿನ ಭ್ರಾಮಕಗಳಿಂದ ಸೋತು, ಸೊರಗಿ, ತಡೆಯದಂತಾಗುವ ದಿನದ ತನಕ ಅವಳು ನೇಯ್ದ ಜಾಲದಲ್ಲಿ ಅವಳೇ ಸಿಕ್ಕಿ ಹಾಕಿಕೊಳ್ಳಲು ಬಿಟ್ಟು, ನಂತರ ಅವಳೇ ಗಂಟು ಮೂಟೆ ಕಟ್ಟಿ ಯೂರೋಪಿಗೆ ಹಿಂದಿರುಗುವಂತೆ ಮಾಡಬೇಕೆಂದಿದ್ದಾನೆ ಎಂದುಕೊಂಡ. ಅವ್ರೇಲಿಯಾನೋನ ಹಿಂದಿನ ಮರುಕ ಈಗ ಇಷ್ಟಪಡದ ರೀತಿಗೆ ಪರಿವರ್ತಿತವಾಯಿತು. ಗ್ಯಾತ್ಸನ್‌ನ ರೀತಿ ಅತಿರೇಕವೆನ್ನಿಸಿತು. ಅದೇ ಸಮಯದಲ್ಲಿ ಅಮರಾಂತ ಉರ್ಸುಲಾಗೆ ಎಚ್ಚರಿಕೆಯ ಸೂಚನೆ ಕೊಡಲು ಧೈರ್ಯ ವಹಿಸಿದ. ಅವಳು ಅವನ ಅನುಮಾನಕ್ಕೆ ನಕ್ಕು ಬಿಟ್ಟಳು. ಆದರೆ ಅವನಲ್ಲಿರುವ ಪ್ರೇಮದ ಭಾರ, ಅನಿಶ್ಚಯತೆ ಮತ್ತು ಮಾತ್ಸರ್ಯವನ್ನ್ನು ಅವಳು ಗುರುತಿಸಲಿಲ್ಲ. ಅವಳಿಗೆ ತಾನು ಅವ್ರೇಲಿಯಾನೋನಲ್ಲಿ ಆತ್ಮೀಯ ಸಂಬಂಧದ ಭಾವನೆಗಿಂತ ಹೆಚ್ಚಿನದನ್ನು ಉಂಟುಮಾಡುತ್ತಿದ್ದೇನೆ ಎನ್ನುವುದು ಅವಳು ಡಬ್ಬಿಯೊಂದನ್ನು ತೆಗೆಯುವಾಗ ಕೈ ಗಾಯ ಮಾಡಿಕೊಂಡ ನಂತರ ಅವನು ಹಠಾತ್ತನೆ ಅದನ್ನು ಎಳೆದುಕೊಂಡು ಆಸೆಯಿಂದ ಮತ್ತು ಭಕ್ತಿಯಿಂದ ರಕ್ತ ಚೀಪುವ ತನಕ ಹೊಳೆದಿರಲಿಲ್ಲ. ಅದು ಅವಳ ಬೆನ್ನಹುರಿಯಲ್ಲಿ ಮಂಜು ಹರಿಸಿತು. ಗಲಿಬಿಲಿಗೊಂಡ ಅವಳು, “ಅವ್ರೇಲಿಯಾನೋ… ನೀನು ತೀರಾ ವಿಪರೀತದವನಪ್ಪ” ಎಂದಳು. +ಅನಂತರ ಅವ್ರೇಲಿಯಾನೋ ಮುಕ್ತವಾಗಿ ಮುಂದುವರೆಸಿದ. ಅವಳ ಗಾಯದ ಕೈಗೆ ಇಷ್ಟಿಷ್ಟೆ ಇಷ್ಟಿಷ್ಟೆ ಮುತ್ತಿಡುತ್ತ ಅವನು ತನ್ನ ಹೃದಯದಲ್ಲಿ ಎಲ್ಲೋ ಅಡಗಿದ್ದ ಮಾರ್ಗಗಳನ್ನು ತೆರೆದಿಟ್ಟ ಮತ್ತು ಕೊನೆಯಿಂದ ನೋವಿನ ಕರುಳಿನ ನೇಯ್ಗೆಯನ್ನು ನೇಯ್ದು, ತನ್ನ ಹುತಾತ್ಮತೆಯಲ್ಲಿ ಹುದುಗಿದ್ದ ನಿರಾವಲಂಬಿ ಪ್ರಾಣಿಯನ್ನು ಹೊರ ಹಾಕಿದ. ತಾನು ಮಧ್ಯರಾತ್ರಿಯಲ್ಲಿ ಎದ್ದು, ಒಂಟಿಯಾಗಿ ಅಳುತ್ತ ಬಾತ್‌ರೂಮಿನಲ್ಲಿ ಅವಳ ಒಣಗಲು ಹಾಕಿದ ಅಂಡರ್‌ವೇರ್‌ನ್ನು ನೋಡಿ ರೋಷಗೊಳ್ಳುತ್ತಿರುವುದನ್ನು ಹೇಳಿದ. ನಿಗ್ರೊಮಾಂತಳಿಗೆ ಬೆಕ್ಕಿನ ರೀತಿ ಕೂಗು ಎಂದು ಆತಂಕದಿಂದ ಕೇಳಿಕೊಂಡಿದ್ದನ್ನು, ಗ್ಯಾತ್ಸನ್, ಗ್ಯಾತ್ಸನ್ ಎಂದು ತನ್ನ ಕಿವಿಯಲ್ಲಿ ಪಿಸುಗುಡುವಂತೆ ಹೇಳಿದ್ದನ್ನು ಮತ್ತು ಅವಳ ಸುಗಂಧದ ಸೀಸೆಗಳನ್ನು ಕದ್ದು ಹಸಿವಿಗಾಗಿ ಮಲಗುವ ಹುಡುಗಿಯರ ಕತ್ತಿನ ಮೇಲೆ ಹಾಕಿ ಪರಿಮಳವನ್ನು ಆಸ್ವಾದಿಸಿದ್ದನ್ನು ಹೇಳಿದ. ಅವನು ಆವೇಶಭರಿತನಾಗಿ, ಕಾರಿಕೊಂಡ ಮೋಹದಿಂದ ಬೆದರಿ ಅಮರಾಂತ ಉರ್ಸುಲಾ ಬೆರಳುಗಳನ್ನು ಮಡಚಿ ನೋವಿನಿಂದ ಮುಕ್ತಳಾಗುವ ತನಕ ಶೆಲ್‌ಫಿಶ್ ರೀತಿಯಲ್ಲಿ ಕಿರಿದಾಗಿಸಿದಳು. ಮತ್ತದೇ ಮರುಕ ಬದಲುಗೊಂಡು, ಪಚ್ಚೆ ಗೋಮೇಧಿಕದಿಂದ ಕೂಡಿದ ಸೆಟೆದ ಕೈಯಾಯಿತು. +ಅವಳು ಥೂಕರಿಸುವಂತೆ, “ಮೂರ್ಖ, ನಾನು ಬೆಲ್ಜಿಯಮ್‌ಗೆ ಹೋಗುವ ಮೊದಲನೇ ಶಿಪ್‌ನಲ್ಲಿ ಹೋಗುತ್ತೇನೆ” ಎಂದಳು. +ಒಂದು ದಿನ ಮಧ್ಯಾಹ್ನ ಜಾಣ ಕತಲುನಿಯಾದವನ ಪುಸ್ತಕದಂಗಡಿಗೆ, ಅಲ್ಫಾರೋ ದೊಡ್ಡ ಗಂಟಲಿನಲ್ಲಿ ತಾನು ಹೊಸದಾಗಿ ಕಂಡು ಹಿಡಿದಿದ್ದನ್ನು ಕೂಗಿ ಹೇಳುತ್ತ ಬಂದ; ಅದು ಪ್ರಾಣಿಗಳ ವೇಶ್ಯಾಗೃಹ. ಅದನ್ನು ಬಂಗಾರದ ಮಗು ಎಂದು ಕರೆಯಲಾಗಿತ್ತು ಮತ್ತು ಅದೊಂದು ದೊಡ್ಡ ಹೊರಾಂಗಣದಲ್ಲಿದ್ದು, ಅದರ ಮೂಲಕ ಏನಿಲ್ಲವೆಂದರೂ ಇನ್ನೂರು ಜೌಗು ಪ್ರದೇಶದ ಪಕ್ಷಿಗಳು ಕಿವುಡಾಗುವ ಹಾಗೆ ಕೇಕೆ ಹಾಕುತ್ತ ಸಮಯವನ್ನು ತಿಳಿಸುತ್ತಿದ್ದವು. ಸುತ್ತ ತಂತಿ ಬೇಲಿ ಇದ್ದ ಡಾನ್ಸ್ ಹಾಲ್‌ನಲ್ಲಿ ಮತ್ತು ಅಮೆಜಾನಿನ ಉಷ್ಟ್ರಪಕ್ಷಿಗಳ ಜೊತೆ, ಅನೇಕ ಬಣ್ಣದ ಕ್ರೌಂಚಪಕ್ಷಿಗಳು ಹಂದಿಯ ಗಾತ್ರದ ಮೊಸಳೆಗಳು, ಹಾಗೂ ರಟ ರಟ ಶಬ್ದ ಮಾಡುವ ಹಾವುಗಳಿದ್ದವು. ಅಲ್ಲದೆ ವಿಚಿತ್ರ ಹೊರಮೈ ಇದ್ದ ಆಮೆಗಳು ಕೃತಕವಾದ ಸಣ್ಣ ಕೊಳದಲ್ಲಿ ಹಾರಿ ಬೀಳುತ್ತಿದ್ದವು. ಅಲ್ಲೊಂದು ಭಾರಿ ಗಾತ್ರದ ಸಪ್ಪಗಿದ್ದ ಬಿಳಿ ನಾಯಿ, ಹೊಟ್ಟೆಪಾಡಿಗಾಗಿ ತಳಿ ಹೆಚ್ಚಿಸುವ ಕೆಲಸ ಮಾಡುತ್ತಿತ್ತು. ಇಡೀ ವಾತಾವರಣ ಆಗತಾನೇ ಸೃಷ್ಟಿಯಾದಂತೆ, ಚಟುವಟಿಕೆಯಿಂದಿದ್ದು, ಮುಗ್ಧತೆಯಿಂದ ಕೂಡಿತ್ತು. ಮಿಶ್ರ ಸಂತಾನದ ಹುಡುಗಿಯರು ಕಡುಗೆಂಪು ಪಕಳೆಗಳ ಮಧ್ಯೆ ಕಾಯುತ್ತ ನಿಂತಿದ್ದರು. ಅಲ್ಲದೆ ಫೋನೋಗ್ರಾಮ್ ರೆಕಾರ್ಡುಗಳಿಗೆ, ಭೂಸ್ವರ್ಗದ ಮರೆತು ಹೋದ ಪ್ರಣಯದ ರೀತಿಗಳು ಗೊತ್ತಿತ್ತು. ಮೊದಲ ದಿನ ಆ ಗುಂಪು ತುಯ್ದಾಡುವ ಕುರ್ಚಿಯಲ್ಲಿ ಕುಳಿತು ಕಡಿಮೆ ಮಾತಾಡುತ್ತಿದ್ದ, ವಿಚಿತ್ರ ಹೆಂಗಸು ರಕ್ಷಿಸುತ್ತಿದ್ದ, ಭ್ರಾಮಕದ ಹಸಿರುಮನೆಗೆ ಹೋದಾಗ, ಅವರಿಗೆ ಕಾಲ ಹಿಂದಕ್ಕೋಡಿದಂತೆ ಭಾಸವಾಯಿತು. ಆಗ ಬರುತ್ತಿದ್ದ ಐವರಲ್ಲಿ ಪೀಚಾದ, ಉಬ್ಬಿದ ಕೆನ್ನೆಮೂಳೆಯ ಮತ್ತು ಮುಖದಲ್ಲಿ ಪ್ರಪಂಚ ಹುಟ್ಟಿದ ಕಾಲದಿಂದ ಸಿಡುಬಿನಂತೆ ಅಚ್ಚೊತ್ತಿದ ಏಕಾಂತದ ಲಕ್ಷಣವಿದ್ದವನನ್ನು ನೋಡಿದಳು. +ಅವಳು, “ದೇವರೇ! ಅವ್ರೇಲಿಯಾನೋ” ಎಂದಳು. +ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು, ಕಂದೀಲು ಬೆಳಕಲ್ಲಿ ಮುದ್ದಾದ ಮಂಜಿನ ದಿನಗಳಲ್ಲಿ ನೋಡಿದಂತೆ, ವೈಭವದಲ್ಲಿ ನಾಶವಾಗುವ ಮತ್ತು ಭ್ರಮನಿರಸನಗೊಂಡು ದೇಶ ಬಿಡುವ ಮೊದಲು, ಆ ದಿನ ಬೆಳಿಗ್ಗೆ ಅವನು ತನ್ನ ಜೀವನದ ಮೊದಲನೆ ಅಪ್ಪಣೆ ಕೊಡಲು, ಪ್ರೇಮಿಸು ಎಂದು ಅಪ್ಪಣೆ ಕೊಡಲು ಅವಳ ಬೆಡ್‌ರೂಮಿಗೆ ಬಂದಾಗ ನೋಡಿದಂತೆ ನೋಡಿದಳು. ಅವಳು ಪಿಲರ್ ಟೆರ್‍ನೆರಾ. ವರ್ಷಗಳ ಹಿಂದೆ ಅವಳಿಗೆ ನೂರಾನಲವತ್ತು ವರ್ಷ ವಯಸ್ಸಾದಾಗ ವಯಸ್ಸನ್ನು ಲೆಕ್ಕ ಇಡುವ ಹಾನಿಕಾರಕ ಪದ್ಧತಿಯನ್ನು ಕೈಬಿಟ್ಟಿದ್ದಳು. ಅವಳು ಚಲಿಸದ ಹಾಗೂ ನೆನಪುಗಳ ಕೊಸರು ಕಾಲದಲ್ಲಿ ಜೀವಿಸುತ್ತಿದ್ದಳು. ಅಲ್ಲಿ ಅವಳಿಗೆ ಸ್ಪಷ್ಟವಾಗಿ ತೆರೆದುಕೊಂಡು, ವ್ಯವಸ್ಥಿತವಾಗಿ ಕಂಡು ಎಲ್ಲ ಭವಿಷ್ಯಗಳಾಚೆ ಮೋಸದ ಉಪಾಯಗಳಿಂದ ಮತ್ತು ಕಾರ್ಯಗಳಿಂದ ಖೇದಗೊಂಡಿದ್ದಳು. ಆ ರಾತ್ರಿಯಿಂದ ಅವ್ರೇಲಿಯಾನೋ ಅವನಿಗೆ ಗೊತ್ತಿಲ್ಲದ ಮುತ್ತಜ್ಜಿಯ ಅಮ್ಮನ ಮೃದು ಅಂತಃಕರಣ ಮತ್ತು ವಾತ್ಸಲ್ಯದಲ್ಲಿ ಆಶ್ರಯ ಪಡೆದ. ಅವಳು ಹಗ್ಗದ ತುಯ್ದಾಡುವ ಕುರ್ಚಿಯಲ್ಲಿ ಕುಳಿತು, ಹಳೆಯದನ್ನು ನೆನಪಿಸಿಕೊಂಡು, ಸಂಸಾರದ ಮತ್ತು ಮಕೋಂದೋದ ಈಗಿಲ್ಲದ ವೈಭವ ಹಾಗೂ ದುರಂತಗಳನ್ನು ಮತ್ತೆ ಸೃಷ್ಟಿಸುತ್ತಿದ್ದಳು. ಆಗ ಅವ್ರೇಲಿಯಾನೋ ಗಟ್ಟಿಯಾಗಿ ನಕ್ಕು ಮೊಸಳೆಗಳನ್ನು ಗಾಬರಿಗೊಳಿಸುತ್ತಿದ್ದ. ಅಲ್ಫಾನ್ಫೋ ಜೌಗು ಪ್ರದೇಶದ ಪಕ್ಷಿಗಳು ಕಳೆದ ವಾರ ಕೆಟ್ಟದಾಗಿ ನಡೆದುಕೊಂಡ ಗಿರಾಕಿಗಳ ಕಣ್ಣು ಕಿತ್ತವೆಂದು ಕತೆ ಕಟ್ಟಿದ. ಗಾಬ್ರಿಯಲ್ ದುಡ್ಡು ವಸೂಲು ಮಾಡದ ಮಿಶ್ರ ಸಂತಾನದ ಹುಡುಗಿಯ ರೂಮಿನಲ್ಲಿದ್ದ. ಅದಕ್ಕೆ ಬದಲಾಗಿ ಒರಿನೋಕೇಡದ ಆಚೆಯ ಕಡೆಯ ಜೈಲಿನಲ್ಲಿರುವ ಕಳ್ಳ ಸಾಗಣೆ ಮಾಡುವ ಹುಡುಗನಿಗೆ ಕಾಗದಗಳನ್ನು ತಲುಪಿಸಲು ಹೇಳಿದ. ಏಕೆಂದರೆ ಅವನನ್ನು ಗಡಿ ರಕ್ಷಣಾ ಪಡೆಯವರು ಹಿಡಿದಿದ್ದರು ಮತ್ತು ಅವನನ್ನು ಹೇಲು ಮತ್ತು ಕಲ್ಲುಗಳು ತುಂಬಿದ ಉಚ್ಚೆ ಪಾತ್ರೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದರು. ತಾಯಿಯಂಥ ಒಡತಿ ಇದ್ದ ವೇಶ್ಯಾಗೃಹವೊಂದನ್ನು ಅವ್ರೇಲಿಯಾನೋ ತನ್ನ ವಿಸ್ತೃತ ಬಂಧನದಲ್ಲಿ ಕಲ್ಪಿಸಿಕೊಂಡಿದ್ದ. ಅಮರಾಂತ ಉರ್ಸುಲಾ ಅವನ ಎಲ್ಲ ನಿರೀಕ್ಷೆಗಳನ್ನು ಹುಡಿಮಾಡಿದ ಮಧ್ಯಾಹ್ನ, ಅವನು ತನಗೆ ಸಮಾಧಾನಕ್ಕಾಗಿ ಮತ್ತು ಸಾಂತ್ವನಕ್ಕಾಗಿ ಬೇರೆ ಇನ್ನು ಯಾವ ಆಶ್ರಯನ್ನೂ ಬಯಸಲಿಲ್ಲ. ಅವನು ತನ್ನ ಎದೆಯೊಳಗಿದ್ದ ಕಗ್ಗಂಟನ್ನು ಬಿಡಿಸುವುದಕ್ಕಾಗಿ, ತನ್ನ ಮೇಲಿನ ಭಾರವನ್ನು ವಿವರಿಸಿ ಹೇಳುವುದಕ್ಕೆ ಸಿದ್ದನಿದ್ದ. ಆದರೆ ಅವನಿಗೆ ಪಿಲರ್ ಟೆರ್‍ನೆರಾಳ ತೊಡೆಯ ಮೇಲೆ ಮುಖವಿಟ್ಟು ಅಳುವುದಕ್ಕೆ ಮಾತ್ರ ಸಾಧ್ಯವಾಯಿತು. ಅವಳು ಅವನ ತಲೆಗೂದಲಲ್ಲಿ ಬೆರಳಾಡಿಸುತ್ತ ಅವನು ಮುಗಿಸುವುದಕ್ಕೆ ಬಿಟ್ಟಳು. ಅವನು ಪ್ರೇಮದಿಂದಾಗಿ ಅಳುತ್ತಿದ್ದೇನೆ ಎಂದು ಹೇಳದಿದ್ದರೂ ಅವಳು ಗಂಡು ಪ್ರಾಣಿಯ ಇತಿಹಾಸದಲ್ಲಿ ಪುರಾತನವಾದ ಬಿಕ್ಕಳಿಕೆಗಳನ್ನು ಗುರುತಿಸಿದಳು. +ಅವಳು ಸಮಾಧಾನಪಡಿಸುತ್ತಾ, “ಅದೆಲ್ಲ ಸರಿ. . ಈಗ ಹೇಳು ಯಾರವಳು” ಎಂದಳು. +ಅವ್ರೇಲಿಯಾನೋ ತಿಳಿಸಿ ಹೇಳಿದ ಮೇಲೆ ಪಿಲರ್ ಟೆರ್‍ನೆರಾ ತಡೆ ಇಲ್ಲದೆ ನಕ್ಕಳು ಮತ್ತು ಅದು ಪಾರಿವಾಳಗಳ ಪ್ರಣಯ ಸಲ್ಲಾಪದ ರೀತಿಯಲ್ಲಿ ಕೊನೆಗೊಂಡಿತು. ಬ್ಯುಂದಿಯಾನೊಬ್ಬನ ಎದೆಯಲ್ಲಿ ಭೇದಿಸಲಾಗದಂಥ ಯಾವ ರಹಸ್ಯವೂ ಅವಳಿಗಿರಲಿಲ್ಲ. ಏಕೆಂದರೆ ಒಂದು ಶತಮಾನದ ಕಾರ್ಡುಗಳು ಮತ್ತು ಆ ಮನೆತನದ ಇತಿಹಾಸ ತಪ್ಪಿಸಿಕೊಳ್ಳಲು ಸಾಧ್ಯವಾಗದಂಥ ಪುನರಾವರ್ತನೆಗಳಿರುವ ಮೆಷಿನ್ ಎಂದೂ ಮತ್ತು ಆ ತಿರುಗುವ ಚಕ್ರ ರಿಪೇರಿ ಮಾಡಲು ಸಾಧ್ಯವಿರದ ಹಾಗೆ, ಅದರ ಸೂತ್ರ ಭಾಗ ಸವೆಯದೆ ಹೋಗಿದ್ದರೆ, ನಿರಂತರವಾಗಿ ಸುತ್ತುತ್ತಿತ್ತು ಎಂದು ಅನುಭವ ಅವಳಿಗೆ ಕಲಿಸಿತ್ತು. ಅವಳು ನಗುತ್ತಾ, “ನೀನೇನೂ ಯೋಚಿಸಬೇಡ. ಈಗ ಅವಳೆಲ್ಲಿದ್ರೂ ನಿಂಗೋಸ್ಕರ ಕಾಯ್ತಿದಾಳೆ” ಎಂದಳು. +ಅಮರಾಂತ ಉರ್ಸುಲಾ ಸ್ನಾನ ಮಾಡಿ ಹೊರ ಬಂದಾಗ ಮಧ್ಯಾಹ್ನ ನಾಲ್ಕೂವರೆ. ಅವ್ರೇಲಿಯಾನೋ ಅವಳು ಮೃದು ಮಡಿಕೆಗಳ ಬಟ್ಟೆ ಸುತ್ತಿಕೊಂಡು ಮತ್ತು ತಲೆಯ ಸುತ್ತ ಟರ್ಬನ್ನಿನ ಹಾಗೆ ಟವಲ್ ಸುತ್ತಿಕೊಂಡು ಅವಳ ರೂಮಿಗೆ ಹೋದದ್ದನ್ನು ಕಂಡ. ಅವನು ಹೆಚ್ಚು ಕಡಿಮೆ ತುದಿಗಾಲಲ್ಲಿ ನಡೆಯುತ್ತ, ಕುಡಿದಿದ್ದರಿಂದ ಮುಗ್ಗರಿಸುತ್ತ, ಅವಳನ್ನು ಹಿಂಬಾಲಿಸಿದ. ಅವನು ಒಳಗೆ ಹೋದ ಮೇಲೆ ಬಟ್ಟೆ ತೆಗೆಯಲು ಹೋದವಳು ಮತ್ತೆ ಹೆದರಿಕೆಯಿಂದ ಮುಚ್ಚಿದಳು. ಅವನು ಪಕ್ಕದ ರೂಮಿನ ಕಡೆ ಮೌನವಾಗಿ ಸನ್ನೆ ಮಾಡಿದ. ಅದರ ಬಾಗಿಲು ಅರ್ಧ ತೆರೆದಿತ್ತು ಮತ್ತು ಅಲ್ಲಿ ಗ್ಯಾತ್ಸನ್ ಕಾಗದವೊಂದನ್ನು ಬರೆಯಲು ಪ್ರಾರಂಭಿಸಿದ್ದಾನೆ ಎಂದು ಅವ್ರೇಲಿಯಾನೋಗೆ ಗೊತ್ತಿತ್ತು. +ಅವಳು ಕ್ಷೀಣವಾಗಿ, “ಹೊರಟು ಹೋಗು” ಎಂದಳು. +ಅವ್ರೇಲಿಯಾನೋ ನಕ್ಕು ಬೆಗೋನಿಯಾ ಗಿಡಗಳಂತೆ ಎರಡೂ ಕೈಗಳಿಂದ ಅವಳ ಸೊಂಟ ಹಿಡಿದು ಎತ್ತಿಕೊಂಡು ಹಾಸಿಗೆಯಲ್ಲಿ ಅಂಗಾತ ಮಲಗಿಸಿದ. ಅವಳು ವಿರೋಧಿಸುವುದಕ್ಕೆ ಮುಂಚೆಯೇ ಅವಳು ಹೊದ್ದುಕೊಂಡಿದ್ದ ಬಾತ್‌ರೂಮಿನ ಬಟ್ಟೆಯನ್ನು ಒರಟಾಗಿ ಕಿತ್ತೊಗೆದ. ಅವನಿಗೆ ಅಸ್ಪಷ್ಟವಾಗಿ, ಆಗ ತಾನೆ ತೊಳೆದ ಬೆತ್ತಲೆಯ ಮೈ ಬಣ್ಣ, ರೇಖೆಗಳು ಮತ್ತು ಅಡಗಿದ ಕಲೆಗಳು, ಪಕ್ಕದ ರೂಮುಗಳ ನೆರಳುಗಳಲ್ಲಿ ಕಲ್ಪಿಸಿಕೊಂಡಂತೆ ಕಂಡವು. ಅಮರಾಂತ ಉರ್ಸುಲಾ ತಿಳಿವಳಿಕಸ್ಥಳಂತೆ ಬಾಗುತ್ತ, ಸುಗಂಧ ಸೂಸುತ್ತಿದ್ದ ಮೊಣಕಾಲಿನಿಂದ ಅವನ ಪಕ್ಕಕ್ಕೆ ಒದ್ದು, ಅವನ ಮುಖವನ್ನು ಉಗುರುಗಳಿಂದ ಚೇಳಿನ ಹಾಗೆ ಚಿವುಟಿ ರಕ್ಷಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವೆರಡೂ ಕೂಡ, ನಿಟ್ಟುಸಿರು ಬಿಡುತ್ತ ಕಿಟಕಿಯ ಮೂಲಕ ಏಪ್ರಿಲ್ ತಿಂಗಳ ಸೂರ್ಯಾಸ್ತವನ್ನು ನೋಡುತ್ತಿದ್ದ ವ್ಯಕ್ತಿಯ, ಸಹಜ ಉಸಿರಾಟ ಎಂದು ಹೇಳುವಂತಿರಲಿಲ್ಲ. ಅದೊಂದು ತೀವ್ರ ರೀತಿ ಹೋರಾಟವಾಗಿತ್ತು, ಸಾಯುವರೆಗಿನ ಹೋರಾಟ. ಆದರೆ ಅದು ಹಿಂಸೆಯಿಂದ ಕೂಡಿರಲಿಲ್ಲ. ಏಕೆಂದರೆ ಅದು ಅಸಮ ಆಘಾತಗಳನ್ನು ತಪ್ಪಿಸಿಕೊಳ್ಳುವುದಾಗಿತ್ತು. ಜೊತೆಗೆ ನಿಧಾನವಾದ ಜಾಗರೂಕತೆಯದಾಗಿದ್ದು, ಅವೆಲ್ಲದರ ನಡುವೆ ಹೂ ಬಿಡುವುದಕ್ಕೆ ಕಾಲಾವಕಾಶವಿತ್ತು. ಅಲ್ಲದೆ ಪಕ್ಕದ ರೂಮಿನಲ್ಲಿ ಶತ್ರುಗಳಾದ ಇಬ್ಬರು ಪ್ರೇಮಿಗಳು ಆಕ್ವೇರಿಯಮ್‌ನ ತಳದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೇನೋ ಎನ್ನುವ ಹಾಗಿದ್ದರೆ ಗ್ಯಾತ್ಸನ್‌ಗೆ ವಿಮಾನ ಚಾಲನೆಯ ಕನಸನ್ನು ಮರೆಯುವಂತಾಯಿತು. ಆ ಹೋರಾಟದ ಕಾವಿನಲ್ಲಿ ತನ್ನ ಮೌನ ಎಷ್ಟು ಅಸಮಂಜಸ ಎಂದರೆ, ತನ್ನ ಗಂಡನಿಗೆ ತಾವು ಮಾಡುತ್ತಿದ್ದ ಕಾದಾಟದ ಶಬ್ದ ಅದಕ್ಕಿಂತ ಹೆಚ್ಚಿನ ಅನುಮಾನ ಉಂಟುಮಾಡುತ್ತದೆ ಎಂದು ಗೊತ್ತಾಯಿತು. ಅನಂತರ ಅವಳು ತುಟಿ ಬಿಗಿ ಹಿಡಿದುಕೊಂಡು, ಸೆಣಸಾಡುವುದನ್ನು ಬಿಡದೆ ನಗುವುದಕ್ಕೆ ಪ್ರಾರಂಭಿಸಿದಳು ಹಾಗೂ ಹುಸಿ ಏಟುಗಳಿಂದ ರಕ್ಷಿಸಿಕೊಳ್ಳಲು ತೊಡಗಿದಳು. ಅಲ್ಲದೆ ಏಕಕಾಲಕ್ಕೆ ಇಬ್ಬರಿಗೂ ಮತ್ತೊಬ್ಬರು ಹಿತಶತ್ರುಗಳಾಗಿರುವುದು ಅರಿವಾಗುವ ತನಕ ಮೈಯನ್ನು ಸ್ವಲ್ಪ ಸ್ವಲ್ಪವಾಗಿ ಸಡಿಲವಾಗಿಸಿದಳು. ಆಗ ಕಾದಾಟ ಎಂದಿನ ರೀತಿಯಂತೆ ಕುಣಿದಾಟದಂತೆ ಬದಲಾಗಿ, ಹೊಡೆತಗಳು ನೇವರಿಸುವ ರೀತಿಯದಾದವು. ಇದ್ದಕ್ಕಿದ್ದಂತೆ ಅಮರಾಂತ ಉರ್ಸುಲಾ ಮತ್ತೊಂದು ತುಂಟಾಟದ ಹಾಗೆ ರಕ್ಷಿಸಿಕೊಳ್ಳುವುದನ್ನು ಕೈಬಿಟ್ಟು, ತಾನು ಹಾಗೆ ಮಾಡಿದ್ದರಿಂದ ಭಯಗೊಂಡು ಮತ್ತೆ ಮೊದಲಿನಂತಾಗಲು ಪ್ರಯತ್ನಿಸುವ ಹೊತ್ತಿಗೆ ತೀರ ತಡವಾಗಿತ್ತು. ಅವಳ ಕೇಂದ್ರದಲ್ಲಿ ಅತೀವ ಗಲಿಬಿಲಿಯುಂಟಾಗಿ ಅವಳನ್ನು ಅಚಲಳನ್ನಾಗಿಸಿ, ಅವಳ ಸ್ಥಾನದಲ್ಲಿ ಅವಳನ್ನಿರಿಸಿತು. ಅವಳ ರಕ್ಷಣೆಯ ಸ್ಥೈರ್ಯ, ಸಾವಿನ ಆಚೆಯಲ್ಲಿ ಕಾಣದಿರುವ ಹೊಸ ಬಗೆಗಳು ಹೇಗಿರುತ್ತೆಂದು ಅರಿಯುವ ಆತಂಕದಲ್ಲಿ ಕೊಚ್ಚಿ ಹೋಯಿತು. ಅವಳಿಗೆ ಕೈ ಚಾಚಿ, ಟವಲನ್ನು ಸೆಳೆದುಕೊಂಡು ಬಾಯಿಗೆ ತುರುಕಿಕೊಳ್ಳುವುದಕ್ಕೂ ಸಮಯವಿರದೆ ಚೀರಾಟಗಳು ಕೇಳದಂತೆ ನುಗ್ಗೇರುತ್ತಿದ್ದವು. +೨೦ +ಪಿಲರ್ ಟೆರ್‍ನೆರಾ ಹಗ್ಗದ ತುಯ್ದಾಡುವ ಕುರ್ಚಿಯಲ್ಲಿ ಕುಳಿತು, ಹಬ್ಬದಾಚರಣೆಯ ಒಂದು ರಾತ್ರಿ ಸ್ವರ್ಗದ ಬಾಗಿಲನ್ನು ನೋಡುತ್ತಿದ್ದಾಗ ಸತ್ತಳು. ಅವಳ ಅಂತಿಮ ಅಪೇಕ್ಷೆಯಂತೆ, ಅವಳನ್ನು ಶವಪೆಟ್ಟಿಗೆಯಲ್ಲಿಟ್ಟು ಹೂಳz, ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದಂತೆ, ಡಾನ್ಸ್ ಮಾಡುವ ಪ್ರಾಂಗಣದ ಮಧ್ಯದಲ್ಲಿ ಅಗೆದಿದ್ದ ದೊಡ್ಡ ಗುಂಡಿಯಲ್ಲಿ ಎಂಟು ಜನರು ಹಗ್ಗದಿಂದ ಕೆಳಗೆ ಇಳಿಸಿದರು. ಮಿಶ್ರ ಸಂತಾನದ ಹುಡುಗಿಯರು ಕಪ್ಪು ಬಟ್ಟೆ ಹಾಕಿಕೊಂಡು, ಅತ್ತು ಅತ್ತು ಸಪ್ಪೆಗಾಗಿ, ಗುಂಡಿಯನ್ನು ಚಪ್ಪಡಿಯಿಂದ ಮುಚ್ಚುವ ಮೊದಲು ಕಿವಿಯೋಲೆಗಳನ್ನು, ಸೂಜಿಗಳನ್ನು ಹಾಗೂ ಉಂಗುರಗಳನ್ನು ತೆಗೆದು ಅಮೆಜಾನಿನ ವಿಶೇಷ ವಸ್ತುವಿನಿಂದ ಪೇರಿಸುವ ಮುಂಚೆ ಅದರಲ್ಲಿ ಹಾಕುವ ವಿಧ್ಯುಕ್ತ ಕ್ರಿಯೆಯನ್ನು ನೆರವೇರಿಸಿದರು. ಅನಂತರ ಎಲ್ಲ ಪ್ರಾಣಿಗಳಿಗೆ ವಿಷ ಹಾಕಿ ಕಿಟಕಿ ಬಾಗಿಲುಗಳನ್ನು ಇಟ್ಟಿಗೆ ಗಾರೆಯಿಂದ ಮುಚ್ಚಿದ ಮೇಲೆ ಮರದ ಪೆಟ್ಟಿಗೆಗಳಲ್ಲಿ ಪ್ರಪಂಚದ ವಿವಿಧ ಸಂತರ ಚಿತ್ರಗಳು, ಮ್ಯಾಗಸೈನ್‌ಗಳ ಚಿತ್ರಗಳು, ಅದ್ಭುತವಾದ, ದೂರದಲ್ಲಿರುವ, ಕೆಲಕಾಲದ ಪ್ರಿಯತಮೆಯರ ಚಿತ್ರಗಳು, ಮಿತಿಮೀರಿ ತಿಂದು ತೇಗಿ, ಅಗಾಧ ಸಂಪತ್ತಿನಲ್ಲಿ ಮೆರೆದವರ ಫೋಟೋಗಳು ಅಥವಾ ಸಮುದ್ರದುಬ್ಬರದಲ್ಲಿ ಇಸ್ಪೀಟು ರಾಜರೆಂದು ಕಿರೀಟಧಾರಣೆ ಮಾಡಿಸಿಕೊಂಡವರ ಚಿತ್ರಗಳನ್ನು ತುಂಬಿಕೊಂಡು ಹೊರಟು ಹೋದರು. +ಅದು ಅಂತಿಮವಾಯಿತು. ಪಿಲರ್ ಟೆರ್‍ನೆರಾಳ ಗೋರಿಯಲ್ಲಿ, ಪವಿತ್ರ ಗೀತೆಗಳ ಪುಸ್ತಕ ಮತ್ತು ಅಗ್ಗವಾದ ವೇಶ್ಯೆಯರ ಆಭರಣಗಳ ಜೊತೆಗೆ ಹಳೆಯ ದುರಂತಗಳು ಕೊಳೆಯುತ್ತಿದ್ದವು. ಕತಲುನಿಯಾದ ಜಾಣ ಹೆಚ್ಚು ಕಾಲ ಇರುವ ಚೈತ್ರದ ದಿನಗಳಿಗೆ ಹಂಬಲಿಸಿ ಪುಸ್ತಕದಂಗಡಿಯನ್ನು ಹರಾಜು ಹಾಕಿದ ಮೇಲೆ, ಅವನು ಹುಟ್ಟಿದ ಮೆಡಿಟರೇನಿಯನ್ನಿನ ಹಳ್ಳಿಗೆ ಹಿಂತಿರುಗಿದ ಮೇಲೆ, ಅಲ್ಲಿ ಉಳಿದದ್ದು ಅತಿ ಕಡಿಮೆ. ಅವನ ನಿರ್ಧಾರವನ್ನು ಯಾರೂ ಮೊದಲೇ ಯೋಚಿಸಿರಲಿಲ್ಲ. ಅವನು ಮಕೋಂದೋಗೆ ಬಾಳೆ ತೋಟದ ಕಂಪನಿಯವರ ವೈಭವದ ಕಾಲದಲ್ಲಿ ಯುದ್ಧಗಳಿಂದ ತಪ್ಪಿಸಿಕೊಂಡು ಬಂದಿದ್ದ. ಅವನಿಗೆ ಪ್ರಾಥಮಿಕ ಮಟ್ಟದ ಮತ್ತು ಅನೇಕ ಭಾಷೆಗಳ ಪ್ರಥಮ ಆವೃತ್ತಿಯ ಪುಸ್ತಕದಂಗಡಿಯನ್ನು ತೆರೆಯುವುದು ಬಿಟ್ಟು ಬೇರೆ ಹೊಳೆದಿರಲಿಲ್ಲ. ಅಲ್ಲಿಗೆ ಬರುತ್ತಿದ್ದ ಸಾಮಾನ್ಯರು ಅವುಗಳ ಮೇಲೆ ಜಾಗರೂಕತೆಯಿಂದ ಹೆಬ್ಬೆರಳನ್ನು ಆಡಿಸುತ್ತ, ಪಕ್ಕದ ಮನೆಯಲ್ಲಿ ತಮ್ಮ ಕನಸುಗಳನ್ನು ವ್ಯಾಖ್ಯಾನಿಸುವುದನ್ನು ಕೇಳಲು, ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಅವನು ತನ್ನ ಜೀವನದ ಅರ್ಧ ಭಾಗವನ್ನು ಪುಸ್ತಕದಂಗಡಿಯ ಹಿಂಭಾಗದಲ್ಲಿ, ಸ್ಕೂಲ್ ನೋಟ್‌ಬುಕ್ಕುಗಳಿಂದ ಹರಿದ ಹಾಳೆಗಳಲ್ಲಿ, ತುಂಬ ಜಾಗರೂಕತೆಯಿಂದ ನೋಡಿಕೊಳ್ಳುತ್ತ ಇಂಕ್‌ನಲ್ಲಿ ಬರೆಯುತ್ತಿದ್ದರೂ, ಯಾರಿಗೂ ಅವನು ಏನು ಬರೆಯುತ್ತಿದ್ದಾನೆಂದು ಗೊತ್ತಿರಲಿಲ್ಲ. ಅವ್ರೇಲಿಯಾನೋ ಮೊದಲು ಅವನನ್ನು ಭೇಟಿಯಾದಾಗ ಅವನ ಬಳಿ ಆ ರೀತಿಯ ಹಾಳೆಗಳ ಎರಡು ಪೆಟ್ಟಿಗೆಗಳಿದ್ದು, ಅವನ್ನು ನೋಡಿದಾಗ ಅವನಿಗೆ ಮೆಲ್‌ಕಿಯಾದೆಸ್‌ನ ಚರ್ಮದ ಹಾಳೆಯ ಮೇಲಿನ ಬರಹಗಳಂತೆ ಭಾಸವಾಗುತ್ತಿತ್ತು. ಆ ಸಮಯದಿಂದ ಅವನು ಮಕೋಂದೋ ಬಿಡುವ ವೇಳೆಗೆ ಮೂರನೆಯದನ್ನು ತುಂಬಿದ್ದ. ಆದ್ದರಿಂದ ಮಕೋಂದೋದಲ್ಲಿದ್ದಾಗ ಅವನು ಇನ್ನೇನನ್ನೂ ಮಾಡಲಿಲ್ಲ ಎಂದು ತಿಳಿಯಬಹುದಿತ್ತು. ಅವನು ಸಂಪರ್ಕದಲ್ಲಿಟ್ಟುಕೊಂಡಿದ್ದ ಜನರೆಂದರೆ ನಾಲ್ಕು ಜನ ಸ್ನೇಹಿತರು. ಅವನು ಅವರಿಂದ ಪುಸ್ತಕಗಳ ಬದಲಿಗೆ ಮೇಲುಡಿಗೆ ಹಾಗೂ ಗಾಳಿಪಟಗಳನ್ನು ತೆಗೆದುಕೊಂಡಿದ್ದ ಮತ್ತು ಅವರು ಇನ್ನೂ ಗ್ರಾಮರ್ ಸ್ಕೂಲಿನಲ್ಲಿರುವಾಗಲೇ, ಸೆನೆಕಾ ಮತ್ತು ಓವಿಡ್ ಓದುವಂತೆ ಮಾಡಿದ್ದ. ಅವನು ಶ್ರೇಷ್ಠ ಬರಹಗಾರರನ್ನು ಮನೆಯವರಷ್ಟು ಸಲಿಗೆಯಿಂದ, ಅವರೆಲ್ಲ ಒಂದು ಕಾಲದಲ್ಲಿ ತನ್ನೊಂದಿಗೆ ರೂಮಿನಲ್ಲಿ ಇದ್ದವರೇನೋ ಎನ್ನುವಂತೆ ನಡೆಸಿಕೊಂಡಿದ್ದ ಮತ್ತು ಅವನಿಗೆ ಗೊತ್ತಿರಬಾರದ ಸಾಕಷ್ಟು ವಿಷಯಗಳು ಗೊತ್ತಿದ್ದವು. ಸಂತ ಅಗಸ್ಟಿನ್ ಉಣ್ಣೆಯ ಜಾಕೆಟೊಂದನ್ನು ಒಳಗೆ ಹಾಕಿಕೊಂಡಿದ್ದು ಅದನ್ನು ಹದಿನಾಲ್ಕು ವರ್ಷ ತೆಗೆದಿರಲಿಲ್ಲ ಮತ್ತು ಸತ್ತವರ ಜೊತೆ ಮಾತಾಡುವ ವಿಲನೋವದ ಆರ್ನಾಲ್ಡೊ ಹುಟ್ಟಿನಿಂದ ನಪುಂಸಕ ಮುಂತಾದವು. ಅವನಿಗೆ ಬರೆದ ಪದಗಳ ಬಗ್ಗೆ ಗೌರವ ಮತ್ತು ಅನಾದರವಿತ್ತು. ಅವನ ಸ್ವಂತ ಬರಹಗಳೇ ಈ ದ್ವಂದ್ವದಿಂದ ಹೊರತಾಗಿರಲಿಲ್ಲ. ಅಲ್ಫಾನ್ಫೋ ಅವುಗಳನ್ನು ಅನುವಾದಿಸಬೇಕೆಂದು ಕತಲುನಿಯಾ ಭಾಷೆಯನನ್ನು ಕಲಿತ ಮೇಲೆ ವೃತ್ತ ಪತ್ರಿಕೆಯ ಕತ್ತರಿಸಿದ ತುಂಡುಗಳು ಮತ್ತು ವಿಚಿತ್ರ ವ್ಯವಹಾರದ ಕೈಪಿಡಿಗಳು ಯಾವಾಗಲೂ ತುಂಬಿರುತ್ತಿದ್ದ ತನ್ನ ಜೇಬಿನಲ್ಲಿ ಕಾಗದದ ಸುರುಳಿಗಳನ್ನು ಇಟ್ಟುಕೊಂಡಿರುತ್ತಿದ್ದ. ಅದೊಂದು ದಿನ ರಾತ್ರಿ ಹಸಿವೆಗಾಗಿ ಅವನ ಜೊತೆ ಮಲಗಿದ ಚಿಕ್ಕ ಹುಡುಗಿಯರ ಮನೆಯಲ್ಲಿ ಅವುಗಳನ್ನು ಕಳೆದುಕೊಂಡ. ಅದನ್ನು ಮುತ್ತಜ್ಜ ಕಂಡು ಹಿಡಿದಾಗ, ಗಲಾಟೆ ಎಬ್ಬಿಸುತ್ತಿದ್ದಾನೆಂದು ತಿಳಿದ ಅವನು, ಹೊಟ್ಟೆ ಹುಣ್ಣಾಗುವಂತೆ ನಗುತ್ತ, ಅದು ಸಾಹಿತ್ಯದ ಸಹಜ ಅಂತ್ಯ, ಎಂದ. ಆದರೆ ಅವನು ತನ್ನ ಹಳ್ಳಿಗೆ ಹೊರಟಾಗ ಆ ಮೂರು ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗದಿರುವಂತೆ ಮಾಡುವ ಶಕ್ತಿ ಭೂಮಿಯ ಮೇಲೆ ಯಾರಿಗೂ ಇರಲಿಲ್ಲ. ಅವನು ಅವುಗಳನ್ನು ಸರಕು ಎಂದು ಸಾಗಣೆಗೆ ಪರಿಗಣಿಸಿ, ಅವುಗಳನ್ನು ತನ್ನ ಜೊತೆ ಇಟ್ಟುಕೊಳ್ಳಲು ಬಿಡುವ ತನಕ ರೈಲ್ವೆ ಪರಿವೀಕ್ಷಕರನ್ನು ಅವನು ಮನಸಾರೆ ಬೈದ. ಅವನು, “ಇದು ತಲೆ ಕೆಟ್ಟ ಪ್ರಪಂಚ. . .ಇಲ್ಲಿ ಮನುಷ್ಯ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ರೆ, ಸಾಹಿತ್ಯ ಸರಕಿನ ಥರ ಹೋಗ್ಬೇಕಾಗಿದೆ.” ಎಂದ. ಅವು ಅವನು ಆಡಿದ ಕೊನೆಯ ಮಾತುಗಳು. ಒಂದು ವಾರ ಅವನು ಹೊರಡಬೇಕೆಂಬ ಸಿದ್ಧತೆಯಲ್ಲಿ ಅತೀವ ನೋವಿನಿಂದ ಕಳೆದ. ಏಕೆಂದರೆ ಆ ಸಮಯ ಹತ್ತಿರ ಬರುತ್ತಿದ್ದ ಹಾಗೆ ಅವನಲ್ಲಿದ್ದ ಹಾಸ್ಯ ಪ್ರವೃತ್ತಿ ಕಡಿದು ಬಿತ್ತು, ವಸ್ತುಗಳನ್ನು ಇಡಬೇಕಾದ ಸ್ಥಳದಲ್ಲಿ ಇಡುತ್ತಿರಲಿಲ್ಲ. ಒಂದು ಕಡೆ ಇಟ್ಟ ವಸ್ತುಗಳು ಮತ್ತೊಂದು ಕಡೆ ಕಾಣುತ್ತಿದ್ದು ಅವನಿಗೂ ಫೆರ್ನಾಂಡಳಿಗೆ ಆದಂತೆ ಆಗಿತ್ತು. ಅವನು ಶಾಪ ಹಾಕುತ್ತಿದ್ದ. +ಖೆರ್ಮಾನ್ ಮತ್ತು ಅವ್ರೇಲಿಯಾನೋ ಅವನನ್ನು ನೋಡಿಕೊಂಡಿದ್ದರು. ಮಗುವಿನ ಹಾಗೆ ಅವನಿಗೆ ಸಹಾಯಮಾಡಿ, ಟಿಕೆಟ್ಟುಗಳನ್ನು ಮತ್ತು ವಲಸೆಗಾರನೆಂಬ ದಾಖಲೆಗಳನ್ನು ಜೇಬಿನಲ್ಲಿಟ್ಟು ಪಿನ್ನು ಹಾಕಿ, ಮಕೋಂದೋ ಬಿಟ್ಟ ನಂತರ ಬಾರ್‍ಸಿಲೋನಾ ತಲುಪುವ ತನಕ ಎಲ್ಲೆಲ್ಲಿ ಏನೇನು ಮಾಡಬೇಕೆಂಬ ವಿವರಗಳ ಪಟ್ಟಿಯನ್ನು ಕೊಟ್ಟಿದ್ದರು. ಅದರೂ ಕೂಡ ತನ್ನ ಬಳಿ ಇದ್ದ ಅರ್ಧದಷ್ಟು ಹಣವಿದ್ದ ಒಂದು ಜೊತೆ ಪ್ಯಾಂಟನ್ನು ಗೊತ್ತಾಗದೆ ಎಸೆದು ಬಿಟ್ಟ. ಪ್ರಯಾಣದ ಹಿಂದಿನ ದಿನ ರಾತ್ರಿ, ಪೆಟ್ಟಿಗೆಗಳಿಗೆ ಮೊಳೆ ಹೊಡೆದ ನಂತರ, ತಾನು ಅಲ್ಲಿಗೆ ಬಂದಾಗ ತಂದಿದ್ದ ಅದೇ ಸೂಟ್‌ಕೇಸಿನಲ್ಲಿ ಬಟ್ಟೆಗಳನ್ನು ಹಾಕಿ, ಕಣ್ಣನ್ನು ಕಿರಿದು ಮಾಡಿ, ತಾನು ದೇಶ ಬಿಟ್ಟು ಬಂದದ್ದನ್ನು ತಡೆದುಕೊಳ್ಳುವಂತೆ ಮಾಡಿದ ಪೇರಿಸಿದ್ದ ಪುಸ್ತಕಗಳನ್ನು ನೋಡಿ, ಅವನ ಸ್ನೇಹಿತರಿಗೆ ಹೇಳಿದ : +“ಈ ಕೆಲಸಕ್ಕೆ ಬಾರದದ್ದನ್ನೆಲ್ಲ ನಿಮ್ಗೇ ಬಿಟ್ಟು ಬಿಡ್ತೀನಿ!” +ಮೂರು ತಿಂಗಳ ನಂತರ ಮೂರು ದೊಡ್ಡ ಕವರುಗಳಲ್ಲಿ ಸಮುದ್ರಯಾನದಲ್ಲಿ ಬರೆದ ಇಪ್ಪತೆಂಟು ಕಾಗದಗಳು ಮತ್ತು ಒಟ್ಟು ಮಾಡಿದ ಐವತ್ತಕ್ಕಿಂತ ಹೆಚ್ಚು ಚಿತ್ರಗಳು ಅವರಿಗೆ ತಲುಪಿತು. ಅವನು ಅವುಗಳಲ್ಲಿ ತಾರೀಖುಗಳನ್ನು ಬರೆದಿರದಿದ್ದರೂ ಆ ಕಾಗದಗಳನ್ನು ಬರೆದ ಕ್ರಮ ಸ್ಪಷ್ಟವಾಗಿತ್ತು. ಮೊದಲಿನವು ಅವನ ಮಾಮೂಲಿನ ಹಾಸ್ಯ ಲೇಪದಿಂದ ಕೂಡಿ, ದಾಟಬೇಕಾದದ್ದರ ತೊಂದರೆಗಳನ್ನು ತಿಳಿಸಿದ್ದ. ಅವನು ಆ ಪೆಟ್ಟಿಗೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಬಿಡದಿದ್ದರಿಂದ ಸರಕಿಗೆ ಸಂಬಂಧಪಟ್ಟ ಅಧಿಕಾರಿಯನ್ನು ಆಚೆ ತಳ್ಳಬೇಕಾಗಿದ್ದನ್ನು, ಹದಿಮೂರು ಸಂಖ್ಯೆಯಿಂದ ಗಾಬರಿಗೊಂಡಿದ್ದ ಹೆಂಗಸೊಬ್ಬಳ ಬಲಹೀನತೆಯನ್ನು ಅದು ಮೂಢನಂಬಿಕೆ ಎನ್ನುವುದಕ್ಕಲ್ಲದೆ ಆ ಸಂಖ್ಯೆ ಕೊನೆಯಾಗದ ಸಂಖ್ಯೆ ಎಂದು ಆಕೆ ಭಾವಿಸಿದ್ದನ್ನು ಮತ್ತು ಮೊದಲ ಸಲ ಊಟ ಮಾಡುವಾಗ ಕುಡಿಯುವ ನೀರಿನಲ್ಲಿ ರಾತ್ರಿ ಕಿತ್ತ ಗೆಡ್ಡೆಯ ವಾಸನೆ ಇದೆ ಎಂದು ಹೇಳಿ ಬಾಜಿ ಗೆದ್ದದ್ದರ ಬಗ್ಗೆ ಬರೆದಿದ್ದ. ಆದರೆ ದಿನಗಳು ಕಳೆದ ಹಾಗೆ ಹಡಗಿನ ಮೇಲಿನ ಜೀವನದ ವಾಸ್ತವತೆಯ ಬಗ್ಗೆ ಅವನಿಗೆ ಆಸಕ್ತಿ ಕಡಿಮೆಯಾಯಿತು ಮತ್ತು ಅತಿ ಕನಿಷ್ಠವಾದ ನಡೆದ ಘಟನೆಗಳೂ ಕೂಡ ಮನೋವ್ಯಥೆಗೆ ಕಾರಣವಾದವು. ಏಕೆಂದರೆ ಹಡಗು ಮುಂದೆ ಹೋದಂತೆ ಅವನಿಗೆ ನೆನಪುಗಳಿಂದ ದುಃಖವಾಯಿತು. ಅವನ ಮನೋವ್ಯಥೆಯ ಪ್ರಕ್ರಿಯೆಯೂ ಚಿತ್ರಗಳಿಂದ ತಿಳಿಯುತ್ತಿತ್ತು. ಮೊದಲ ಚಿತ್ರಗಳಲ್ಲಿ ಅವನು ಸಂತೋಷದಿಂದ ಇರುವನಂತೆ ಆಸ್ಪತ್ರೆಯ ಜಾಕೆಟ್‌ನ ಹಾಗೆ ಕಾಣುತ್ತಿದ್ದ ಸ್ಪೋರ್ಟ್ಸ್ ಶರಟನ್ನು ಹಾಕಿಕೊಂಡಿದ್ದ ಮತ್ತು ಬಿಳಿಯ ಟೋಪಿಗಳಿದ್ದ ಅಕ್ಟೋಬರ್ ಕ್ಯಾರಿಬಿಯನ್‌ನ ಉದ್ದನೆ ಕೂದಲಿತ್ತು. ಕೊನೆಯ ಚಿತ್ರಗಳಲ್ಲಿ ಕಪ್ಪು ಕೋಟು, ಸಿಲ್ಕ್ ಸ್ಕಾರ್‍ಫ್ ಹಾಕಿಕೊಂಡು ಸಮುದ್ರದಲ್ಲಿ ನಿದ್ದೆಯಲ್ಲಿ ನಡೆಯುವಂತಾಗಿದ್ದ ಹಡಗಿನಲ್ಲಿ ಅತ್ಯಂತ ಮಿತ ಭಾಷಿಯಾಗಿದ್ದನೆಂದು ತೋರುತ್ತಿತ್ತು. ಖೆರ್ಮಾನ್ ಮತ್ತು ಅಲ್ಫಾನ್ಫೋ ಅವನ ಕಾಗದಗಳಿಗೆ ಉತ್ತರ ಕೊಟ್ಟರು. ಅವನು ಮೊದಲನೆ ತಿಂಗಳಲ್ಲಿ ಎಷ್ಟೊಂದು ಕಾಗದ ಬರೆದನೆಂದರೆ ಅವನು ಮಕೋಂದೋದಲ್ಲಿ ಇದ್ದದ್ದಕ್ಕಿಂತ ಹತ್ತಿರದವನಾದನೆಂದು ಅವರಿಗೆ ಭಾಸವಾಯಿತು. ಅಲ್ಲಿಂದ ಹೋಗುವಾಗ ಅವರಲ್ಲಿ ಉಂಟುಮಾಡಿದ್ದ ದ್ವೇಷವನ್ನು ನಿವಾರಿಸಿತ್ತು. ಅವನು ಅವರಿಗೆ ಪ್ರತಿಯೊಂದೂ ಹಾಗೆಯೇ ಇರುವುದೆಂದೂ, ತಾನು ಹುಟ್ಟಿದ ಮನೆಯಲ್ಲಿ ಇನ್ನೂ ಕಡುಗೆಂಪಿನ ಬಸವನ ಹುಳುಗಳು ಇವೆಯೆಂದೂ ಒಣಗಿದ ಒಣಗಿದ ಮೀನುಗಳ ಟೋಸ್ಟ್‌ಗೆ ಇನ್ನೂ ಅದೇ ರುಚಿ ಇದೆಯೆಂದೂ ಮತ್ತು ಹಳ್ಳಿಯ ಜಲಪಾತಗಳಲ್ಲಿ ಸಂಜೆಯ ಹೊತ್ತು ಇನ್ನೂ ಅದೇ ವಾಸನೆ ಇದೆಯೆಂದೂ ಬರೆದಿದ್ದ. ಅವು ಮತ್ತೆ ನೋಟ್ ಬುಕ್ಕಿನ ನೇರಳೆ ಬಣ್ಣದಲ್ಲಿ ಬರೆದ ಹಾಳೆಗಳಾಗಿದ್ದು ಒಂದೊಂದಕ್ಕೂ ವಿಶೇಷ ಪ್ಯಾರಾಗಳನ್ನು ಮೀಸಲಿರಿಸಿದ್ದ. ಆದರೂ ಅವನೇ ಗಮನಿಸದಂತೆ ಕಂಡರೂ ಮರಳಿ ಪಡೆದ ಆ ಕಾಗದಗಳು ಮತ್ತು ಪಡೆದ ಪ್ರಚೋದನೆ, ನಿಧಾನವಾಗಿ ಕುಗ್ಗಿದ ಉತ್ಸಾಹದ ಹೇಳಿಕೆಗಳಿಗಾಗಿ ಬದಲಾದವು. ಒಂದು ಚಳಿಗಾಲದ ರಾತ್ರಿಯಲ್ಲಿ ಸೂಪ್ ಕುಡಿಯುತ್ತಿದ್ದಾಗ, ತನ್ನ ಅಂಗಡಿಯ ಹಿಂದುಗಡೆಯ ಶಾಖವನ್ನು, ಧೂಳು ಮುಸುಕಿದ ಬಾದಾಮಿ ಮರದ ಮೇಲೆ ಸೂರ್ಯನ ಸ್ಪರ್ಶವನ್ನು, ಮಧ್ಯಾಹ್ನದ ನಿದ್ದೆಯ ಸಮಯದಲ್ಲಿನ ರೈಲಿನ ಶಿಳ್ಳೆಯನ್ನು, ಮಕೋಂದೋದಲ್ಲಿ ಆದ ಹಾಗೆ, ಚಳಿಗಾಲದಲ್ಲಿ ಉರಿಯ ಮೇಲಿನ ಸೂಪ್‌ನ್ನು, ಕಾಫಿ ಪುಡಿ ಮಾರುವವನ ಕೂಗನ್ನು ಗಮನಿಸಲಿಲ್ಲ. ಒಂದರ ಎದುರು ಮತ್ತೊಂದು ಕನ್ನಡಿ ಇರುವ ಹಾಗೆ ಮನೋವ್ಯಥೆಗಳಿಂದ ಉದ್ವಿಗ್ನನಾದ ಅವನು, ತನ್ನ ಅದ್ಭುತ ಅವಾಸ್ತವ ಗ್ರಹಿಕೆಯನ್ನು ಕಳೆದುಕೊಂಡ. ಅವನು ಕೊನೆಗೆ ಎಲ್ಲರಿಗೂ ಮಕೋಂದೋ ಬಿಟ್ಟು ಹೋಗಬೇಕೆಂದು ತಾಕೀತು ಮಾಡುವಂತಾದನಲ್ಲದೆ ತಾನು ಅವರಿಗೆ ಪ್ರಪಂಚದ ಬಗ್ಗೆ ಮಾನವನ ಹೃದಯದ ಬಗ್ಗೆ ಹೇಳಿಕೊಟ್ಟಿದ್ದೆಲ್ಲವನ್ನೂ ಮರೆತು ಬಿಡಲು ಹೇಳಿದ. ಎಲ್ಲಿದ್ದರೂ ಭೂತ ಸುಳ್ಳೆಂದೂ, ನೆನಪು ಮರಳಿ ಘಟಿಸದೆಂದೂ ಮತ್ತು ಕಳೆದು ಹೋದ ಚೈತ್ರಗಳು ಎಂದಿಗೂ ಪಡೆಯಲಾಗದೆನ್ನುವುದನ್ನು ನೆನಪಿಟ್ಟುಕೊಳ್ಳುವಂತೆ ಹೇಳಿದ ಮತ್ತು ಎಲ್ಲಕ್ಕಿಂತ ಉತ್ಕಟವಾದ ಪ್ರೇಮವೇ ಅಂತಿಮ ಸತ್ಯ ಎಂದ. +ಮಕೋಂದೋವನ್ನು ತ್ಯಜಿಸಬೇಕೆಂಬ ಸಲಹೆಯನ್ನು ಸ್ವೀಕರಿಸಿದ ಮೊದಲಿಗರಲ್ಲಿ ಅಲ್ವಾರೋ ಒಬ್ಬ. ನಡುಮನೆಯಿಂದ ಅತ್ತಿತ್ತ ಓಡಾಡುವವರನ್ನು ಕೀಟಲೆಮಾಡುತ್ತಿದ್ದ ಸಾಕಿದ ಚಿರತೆಯೂ ಸೇರಿದಂತೆ ಅವನು ಎಲ್ಲವನ್ನೂ ಮಾರಿದ. ಅವನು ಸದಾಕಾಲಕ್ಕೆಂದು ಟ್ರೈನ್ ಟಿಕೆಟ್ ಕೊಂಡುಕೊಂಡ. ಅವನು ಮಧ್ಯದ ಸ್ಟೇಷನ್‌ಗಳಲ್ಲಿ ಬೋಗಿಯ ಕಿಟಕಿಯಿಂದಾಚೆ ಆ ಕ್ಷಣದಲ್ಲಿ ಕಾಣುವುದನ್ನು ವಿವರಿಸಿ ಪೋಸ್ಟ್ ಕಾರ್ಡಿನಲ್ಲಿ ಬರೆಯುತ್ತಿದ್ದ. ಅದೊಂದು ರೀತಿಯಲ್ಲಿ ಉದ್ದನೆಯ ಕವನವೊಂದನ್ನು ಹರಿದು ವಿಸ್ಮೃತಿಗೆ ಹಾಕಿದಂತಿತ್ತು. ಲೂಸಿಯಾನದ ಹತ್ತಿಯ ಗಿಡಗಳಲ್ಲಿನ ನೀಗ್ರೋಗಳು, ಕೆಂಟಕಿಯ ರೆಕ್ಕೆ ಇರುವ ಕುದುರೆಗಳು, ಅರಿನೋವಾದ ಸೂರ್ಯಾಸ್ತದಲ್ಲಿನ ಗ್ರೀಕ್ ಪ್ರೇಮಿಗಳು, ಮಿಚಿಗನ್‌ನ ಕೆರೆಯ ಬಳಿ ಚಿತ್ರ ಬಿಡಿಸುತ್ತಿದ್ದ ಕೆಂಪು ಸ್ವೆಟರ್ ಹಾಕಿಕೊಂಡ ಹುಡುಗಿ ಹುಡುಗನೊಬ್ಬನಿಗೆ ಬ್ರಷ್ ಹಿಡಿದು ಕೈ ಬೀಸುತ್ತಿರುವುದು; ವಿದಾಯ ಹೇಳುವುದಕ್ಕಲ್ಲ, ಆಸೆ ಇಟ್ಟುಕೊಳ್ಳುವುದಕ್ಕಾಗಿ ಹೇಳುತ್ತ. ಏಕೆಂದರೆ ಅವಳಿಗೆ ಆ ಟ್ರೈನು ಮತ್ತೆ ವಾಪಸು ಬರುವುದಿಲ್ಲವೆಂದು ಗೊತ್ತಿರಲಿಲ್ಲ. ಅನಂತರ ಅಲ್ಫಾಲ್ಫೋ ಮತ್ತು ಖೆರ್ಮಾನ್ ಒಂದು ಶನಿವಾರ ಬಂದು ಸೋಮವಾರ ಹಿಂತಿರುಗುವ ಉದ್ದೇಶದಿಂದ ಹೊರಟರು. ಆದರೆ ಅವರಿಂದ ಮತ್ತೆ ಯಾವ ಸುದ್ದಿಯೂ ಕೇಳಿ ಬರಲಿಲ್ಲ. ಕತಲುನಿಯಾದ ಜಾಣ ಹೊರಟು ಹೋಗಿ ಒಂದು ವರ್ಷದ ನಂತರ ನಿಗ್ರೊಮಾಂತಳ ಕೃಪೆಯಲ್ಲಿ ಹಿಗ್ಗಾಡುತ್ತಿದ್ದ ಒಬ್ಬನೇ ವ್ಯಕ್ತಿಯೆಂದರೆ ಗಾಬ್ರಿಯಲ್. ಅವನು ಪ್ಯಾರಿಸ್‌ಗೆ ಪ್ರವಾಸದ ಮೊದಲನೆ ಬಹುಮಾನವೆಂದು ಇರುವ, ಫ್ರೆಂಚ್ ಪತ್ರಿಕೆಗಳಲ್ಲಿ ಬರುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಆ ಸಂಚಿಕೆಗೆ ಚಂದಾದಾರನಾಗಿದ್ದ ಅವ್ರೇಲಿಯಾನೋ, ಕೆಲವು ಸಲ ಗಾಬ್ರಿಯಾಲ್‌ನ ಮನೆಯಲ್ಲಿ ಮತ್ತು ಹೆಚ್ಚಾಗಿ ಪಿಂಗಾಣಿ ಬಾಟಲುಗಳಿದ್ದ ಮತ್ತು ಇಡೀ ಮಕೋಂದೋದಲ್ಲಿ ಕಟುವಾಸನೆಯಿದ್ದ ಔಷಧಿ ಅಂಗಡಿಯಲ್ಲಿ ಹಾಗೂ ಗಾಬ್ರಿಯಲ್‌ನನ್ನು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದ ಮರ್ಸಿದೆಸ್ ವಾಸಿಸುತ್ತಿದ್ದ ಸ್ಥಳದಲ್ಲಿ ಉತ್ತರಗಳನ್ನು ಭರ್ತಿಮಾಡಲು ಅವನಿಗೆ ಸಹಾಯ ಮಾಡುತ್ತಿದ್ದ. ತನ್ನನ್ನೇ ತಾನು ತಿಂದುಕೊಂಡು, ಸರ್ವನಾಶವಾಗುತ್ತಿದ್ದ ಮತ್ತು ಪ್ರತಿ ಕ್ಷಣವೂ ಕೊನೆಯಾಗುತ್ತಿದ್ದ ಆದರೆ ಕೊನೆಯಾಗುವುದನ್ನು ಕೊನೆಯಾಗಿಸದಿದ್ದ ಹಳೆಯದರಲ್ಲಿ ಉಳಿದದ್ದು ಅದೊಂದೇ. ಆ ಊರು ಎಷ್ಟರಮಟ್ಟಿಗೆ ಚಟುವಟಿಕೆಯನ್ನು ಕಳೆದುಕೊಂಡಿತ್ತೆಂದರೆ ಗಾಬ್ರಿಯಲ್ ಸ್ಪರ್ಧೆಯಲ್ಲಿ ಗೆದ್ದು ಪ್ಯಾರಿಸ್‌ಗೆ ಎರಡು ಜೊತೆ ಬಟ್ಟೆ, ಒಂದು ಜೊತೆ ಶೂ ಮತ್ತು ರಬೆಲಾಸ್‌ನ ಸಮಗ್ರ ಕೃತಿಗಳ ಜೊತೆ ಹೊರಟಾಗ ಅವನು ರೈಲಿನ ಎಂಜಿನಿಯರ್‌ನ ನಿಲ್ಲಿಸೆಂದು ಸನ್ನೆ ಮಾಡಿ, ಹತ್ತಬೇಕಾಯಿತು. ಟರ್ಕಿಗಳ ಹಳೆ ರಸ್ತೆ ಆ ಸಮಯದಲ್ಲಿ ಹಾಳು ಸುರಿಯುವ ಮೂಲೆಯಾಗಿತ್ತು. ಅಲ್ಲಿ ಕೊನೆಯದಾಗಿದ್ದ ಅರಬರು ಹಳೆಯ ಪದ್ಧತಿಯಂತೆ ಬಾಗಿಲಲ್ಲಿ ಕುಳಿತು ಹೊರಗೆ ಎಳೆದು ಹಾಕಿಸಿಕೊಂಡರು. ಅವರು ಅದಕ್ಕೆ ವರ್ಷಗಳ ಮೊದಲೇ ಕೊನೆಯ ಇಂಚಿನ ಬಟ್ಟೆಯನ್ನೂ ಮಾರಿದ್ದರು. ಪ್ಯಾಟ್ರಿಷಿಯಾ ಬ್ರೌನ್ ಬಾಳೆ ತೋಟದ ಪಟ್ಟಣದ ಬಗ್ಗೆ ಆಸಕ್ತಿ ಹುಟ್ಟಲೆಂದು ಅಸಹನೆಯ ರಾತ್ರಿಗಳಲ್ಲಿ ಮಾಡಿದ ಪ್ರಯತ್ನ ಮತ್ತು ಅಲಬಾಮಾದ ಪಾತರ್‌ವಿಲಾದಲ್ಲಿ ಉಪ್ಪಿನಕಾಯಿಯನ್ನು ಮಾಡಬೇಕೆಂಬ ಪ್ರದೇಶದಲ್ಲಿ ಈಗ ಕಾಡುಹುಲ್ಲು ಬೆಳೆದಿತ್ತು. ಫಾದರ್ ಏಂಜೆಲ್‌ನ ಸ್ಥಾನಕ್ಕೆ ಬಂದಿದ್ದ ಪಾದ್ರಿಯ ಹೆಸರು ಯಾರಿಗೂ ಗೊತ್ತಿರಲಿಲ್ಲ ಮತ್ತು ಅವನು ಸಂಧಿವಾತ ರೋಗ ಮತ್ತು ನಿದ್ದೆ ಬಾರದ ರೋಗದಿಂದ ಹಾಸಿಗೆಯಲ್ಲಿ ಮಲಗಿ ದೈವಕೃಪೆಗಾಗಿ ಕಾಯುತ್ತಿದ್ದ. ಆದರೆ ಅಲ್ಲಿದ್ದ ಹಲ್ಲಿ ಮತ್ತು ಇಲಿಗಳು ಪಕ್ಕದ ಚರ್ಚ್ ತಲೆತಲಾಂತರವಾಗಿ ಯಾರಿಗೆ ಸೇರಬೇಕು ಎನ್ನುವುದಕ್ಕಾಗಿ ಕಚ್ಚಾಡುತ್ತಿದ್ದವು. ಪಕ್ಷಿಗಳು ಕೂಡ ಮಕೋಂದೋವನ್ನು ಮರೆತು ಬಿಟ್ಟಿದ್ದವು. ಅಲ್ಲಿ ಧೂಳು ಮತ್ತು ಬಿಸಿಲಿನ ತಾಪ ಎಷ್ಟಿತ್ತೆಂದರೆ ಉಸಿರಾಡುವುದು ಕೂಡ ಕಷ್ಟವಾಗಿತ್ತು. ಏಕಾಂತ ಮತ್ತು ಪ್ರೇಮದಿಂದ ಪ್ರತ್ಯೇಕವಾಗಿದ್ದು ಮತ್ತು ಪ್ರೇಮದ ಏಕಾಂತದಲ್ಲಿ ಉಸಿರಾಡುವುದೇ ಕೆಂಜಿಗಗಳ ಸದ್ದಿನಿಂದ ಕಷ್ಟವಾಗಿತ್ತು. ಆದರೆ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಮಾತ್ರ ಭೂಮಿಯ ಮೇಲೆ ಇರುವವರಲ್ಲಿ ಅತ್ಯಂತ ಸಂತೋಷದಿಂದಿದ್ದವರು. +ಗ್ಯಾತ್ಸನ್ ಬ್ರುಸೆಲ್ಸ್‌ಗೆ ವಾಪಸು ಹೋದ. ಏರೋಪ್ಲೇನಿಗಾಗಿ ಕಾದು, ತೀರ ಅಗತ್ಯವಾದ ಸಾಮಾನುಗಳನ್ನು ಸಣ್ಣ ಸೂಟ್‌ಕೇಸಿನಲ್ಲಿ ಹಾಕಿಕೊಂಡು, ಪತ್ರವ್ಯವಹಾರಗಳ ಫೈಲನ್ನು ತೆಗೆದುಕೊಂಡು, ತನಗೆ ಕೊಟ್ಟ ರಿಯಾಯಿತಿಗಳನ್ನು ತನಗಿಂತ ಹೆಚ್ಚು ಆಶಯದ ಯೋಜನೆಗಳನ್ನು ಪ್ರಾಂತೀಯ ಅಧಿಕಾರಿಗಳಿಗೆ ಕೊಟ್ಟಿದ್ದ. ಖೆರ್ಮಾನ್ ಪೈಲಟ್‌ಗಳಿಗೆ ಕೊಡುವುದಕ್ಕೆ ಮುಂಚೆ ಆಕಾಶದ ಮೂಲಕ ಹಿಂತಿರುಗುವ ಆಲೋಚನೆಯಿಂದ ಹೊರಟಿದ್ದ. ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾರ ಆ ದಿನ ಮಧ್ಯಾಹ್ನದ ಪ್ರಥಮ ಪ್ರಣಯದ ನಂತರ, ಅವಳು ತನ್ನ ಗಂಡನ ಅಪರೂಪದ ರಕ್ಷಣೆ ಇಲ್ಲದ ಸಮಯದ ಉಪಯೋಗ ಪಡೆದು, ಆಕಸ್ಮಿಕ ಭೇಟಿಗಳಲ್ಲಿ ಅವನೊಡನೆ ಅಬ್ಬರದ ಪ್ರಣಯಕ್ಕಿಳಿಯುತ್ತಿದ್ದಳು ಮತ್ತು ಅದು ಪ್ರತಿ ಬಾರಿ ಅಡೆತಡೆಗೆ ಒಳಗಾಗುತ್ತಿತ್ತು. ಆದರೆ ಮನೆಯೊಳಗೆ ಅವರಿಬ್ಬರೇ ಇದ್ದಾಗ ಕಳೆದುಕೊಂಡ ಸಮಯವನ್ನು ಸರಿದೂಗಿಸುವ ಹಾಗೆ ಪ್ರಣಯದಾವೇಶದಲ್ಲಿರುತ್ತಿದ್ದರು. ಅದೊಂದು ಫೆರ್ನಾಂಡ ಅವಳ ಗೋರಿಯಲ್ಲಿ ನಡುಗುವಂತೆ ಮಾಡಿದ ವ್ಯಾಮೋಹ ಮತ್ತು ಅವರನ್ನು ಸದಾ ಕಾಲ ಉತ್ಸಾಹದಿಂದ ಇರುವಂತೆ ಮಾಡಿತ್ತು. ಅಮರಾಂತ ಉರ್ಸುಲಾಳ ಚೀರಾಟಗಳು ಮತ್ತು ಸಂಕಟದ ಹಾಡುಗಳು ಮಧ್ಯಾಹ್ನ ಎರಡು ಗಂಟೆಗೆ ಡೈನಿಂಗ್ ಟೇಬಲ್‌ನ ಮೇಲೆ ಮತ್ತು ಬೆಳಗಿನ ಜಾವ ಎರಡು ಗಂಟೆಗೆ ಅಡುಗೆ ಮನೆಯಿಂದ ಕೇಳಿ ಬರುತ್ತಿತ್ತು. ಅವಳು, “ನಂಗೇನು ಬೇಜಾರಾಗುತ್ತೆ ಅಂದ್ರೆ, ನಾವು ಎಷ್ಟೊಂದು ಟೈಂ ಹಾಳು ಮಾಡಿ ಬಿಟ್ಟಿದ್ದೀವಲ್ಲ ಅಂತ” ಎಂದು ಹೇಳುತ್ತಿದ್ದಳು. ವ್ಯಾಮೋಹದ ವೈಭವದಲ್ಲಿದ್ದ ಅವಳು ಕೆಂಜಿಗಗಳು ಅಂಗಳವನ್ನು ಹಾಳುಗೆಡುವುದನ್ನು, ತನ್ನ ಇತಿಹಾಸಪೂರ್ವ ಹಸಿವನ್ನು ತೊಲೆಗಳಲ್ಲಿ ತೃಪ್ತಿಪಡಿಸಿಕೊಳ್ಳುವುದನ್ನು ಗಮನಿಸಿದಳು ಮತ್ತು ಆ ಜೀವಿಗಳ ಮಹಾಪೂರ ಅಂಗಳವನ್ನು ಮತ್ತೆ ಆಕ್ರಮಿಸಿಕೊಂಡಿದ್ದನ್ನು ಕೂಡ. ಆದರೆ ಅವು ಅವಳ ಬೆಡ್‌ರೂಮಿಗೆ ಬಂದಾಗ ಮಾತ್ರ ಅವುಗಳೊಂದಿಗೆ ಹೋರಾಡುವ ಮನಸ್ಸು ಮಾಡಿದಳು. ಅವ್ರೇಲಿಯಾನೋ ಚರ್ಮದ ಹಾಳೆಯ ಬರಹಗಳನ್ನು ನಿರ್ಲಕ್ಷಿಸಿದನಲ್ಲದೆ ಮನೆಯಿಂದ ಹೊರಗೆ ಮತ್ತೆ ಹೋಗಲಿಲ್ಲ. ಅವನು ಕತಲುನಿಯಾದ ಜಾಣನ ಕಾಗದಗಳಿಗೆ ಉಪೇಕ್ಷೆಯಿಂದ ಉತ್ತರಿಸುತ್ತಿದ್ದ. ಅವರು ವಾಸ್ತವದ ಅರಿವು, ಕಾಲದ ಪ್ರಜ್ಞೆ, ದಿನನಿತ್ಯದ ಅಭ್ಯಾಸಗಳ ಲಯವನ್ನು ಕಳೆದುಕೊಂಡರು. ಅವರು ಬಟ್ಟೆ ಕಳಚುವುದಕ್ಕೆ ಸಮಯ ವ್ಯರ್ಥಮಾಡಬಾರದೆಂದು ಕಿಟಕಿ ಬಾಗಿಲುಗಳನ್ನು ಹಾಕಿದರು ಮತ್ತು ಸುಂದರಿ ರೆಮಿದಿಯೋಸ್ಳಂತೆ ನಡುಮನೆಯ ಹಸಿಮಣ್ಣಿನಲ್ಲಿ ಓಡಾಡುತ್ತಿದ್ದರು. ಅವರು ಒಂದು ನೀರಿನ ತೊಟ್ಟಿಯಲ್ಲಿ ಪ್ರೇಮಿಸುತ್ತ ಮುಳುಗಿ ಬಿಡುತ್ತಿದ್ದರು. ಸ್ವಲ್ಪ ಕಾಲದಲ್ಲಿಯೇ ಅವರು ಕೆಂಜಿಗಗಳು ಹಾಳುಗೆಡವಿದ್ದಕ್ಕಿಂತ ಹೆಚ್ಚಿಗೆ ಹಾಳುಮಾಡಿದರು. ಅವರು ಅಂಗಳದಲ್ಲಿದ್ದ ಪೀಠೋಪಕರಣಗಳನ್ನು ಮುರಿದು ಹಾಕಿದರು. ಅವರ ಹುಚ್ಚುತನದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆವೇಶದ ಪ್ರಣಯಗಳನ್ನು ತಡೆದುಕೊಂಡಿದ್ದ ಮಂಚವನ್ನು ತುಂಡು ತುಂಡು ಮಾಡಿದರು. ಹಾಸಿಗೆಯನ್ನು ಚಿಂದಿ ಚಿಂದಿ ಮಾಡಿ ನೆಲದ ಮೇಲೆ ಚೆಲ್ಲಿ, ಹತ್ತಿ ಮುತ್ತಿದ್ದರಿಂದ ಉಸಿರುಗಟ್ಟಿದಂತಾಯಿತು. ಅವ್ರೇಲಿಯಾನೋ ತನ್ನ ಪ್ರತಿಸ್ಪರ್ಧಿಗಿಂತ ಆವೇಶಭರಿತ ಪ್ರೇಮಿಯಾದರೂ, ಆ ದುರಂತದ ಸ್ವರ್ಗವನ್ನು ಅಮರಾಂತ ಉರ್ಸುಲಾ, ತನ್ನ ಹುಚ್ಚು ಪ್ರತಿಭೆಯಿಂದ ಹಾಗೂ ಲಯಭರಿತ ಕೌಶಲ್ಯದಿಂದ, ಅವಳ ಮುತ್ತಜ್ಜಿಯ ಅಮ್ಮ ಪ್ರಾಣಿಗಳ ತಿನುಸನ್ನು ಮಾಡುತ್ತಿದ್ದಾಗ ಇದ್ದ ಅಪಾರ ಶಕ್ತಿಯನ್ನು ತನಗೆ ಕೊಟ್ಟಿದ್ದಾಳೆ ಎನ್ನುವ ಹಾಗೆ ಪ್ರಣಯದಲ್ಲಿ ಕೇಂದ್ರೀಕರಿಸಿದ್ದಳು. ಅವಳು ಸಂತೋಷದಿಂದ ಹಾಡುತ್ತ, ಸಾಯುವಷ್ಟು ನಗುತ್ತಿದ್ದರೆ, ಅವ್ರೇಲಿಯಾನೋ ಹೆಚ್ಚು ಹೆಚ್ಚು ತನ್ನೊಳಗೇ ಐಕ್ಯವಾಗುತ್ತ, ಮೌನಿಯಾಗುತ್ತಿದ್ದ. ಏಕೆಂದರೆ ಅವನ ವ್ಯಾಮೋಹ ಸ್ವಕೇಂದ್ರಿತವಾಗಿ ಕುದಿಯುತ್ತಿತ್ತು. ಹೀಗಿದ್ದರೂ ಅವರಿಬ್ಬರೂ ಉತ್ತುಂಗ ತಲುಪಿ ಉತ್ಸಾಹದಿಂದ ಸೋತ ನಂತರ ಅವರಿಗಾದ ದಣಿವಿನ ಉಪಯೋಗ ಪಡೆಯುತ್ತಿದ್ದರು. ಅವರು ತಮ್ಮ ದೇಹಗಳನ್ನು ಆರಾಧಿಸುತ್ತ ಪ್ರಣಯದ ಮಧ್ಯದ ವಿಶ್ರಾಂತಿಯ ಅವಧಿಯಲ್ಲಿ ಆ ತನಕ ಶೋಧಿಸದಿದ್ದ ಅಪೇಕ್ಷೆಗಿಂತಲೂ ಹೆಚ್ಚಿನ ಸಾಧ್ಯತೆಗಳನ್ನು ಕಂಡುಕೊಂಡರು. ಅವನು ಅಮರಾಂತ ಉರ್ಸುಲಾಳ ನಿಮಿರಿದ ಮೊಲೆಗಳಿಗೆ ಮೊಟ್ಟೆಯನ್ನು ಹಚ್ಚಿ ಸವರಿ, ಅವಳ ಮೃದು ತೊಡೆಗಳನ್ನು ಮತ್ತು ಅವಳ ಹೊಟ್ಟೆಯನ್ನು ಬೆಣ್ಣೆ ಹಚ್ಚಿ ನೀವುತ್ತಿದ್ದರೆ, ಅ?ಜಜಿ;ಳು ಅವನ ಮರ್ಮಾಂಗದೊಂದಿಗೆ ಅದೊಂದು ಗೊಂಬೆ ಎನ್ನುವ ಹಾಗೆ ಆಟವಾಡುತ್ತ, ಅದಕ್ಕೆ ಲಿಪ್‌ಸ್ಟಿಕ್‌ನಿಂದ ಕಣ್ಣು ಬರೆದು, ಕಾಡಿಗೆ ತೀಡುವ ಪೆನ್ಸಿಲ್‌ನಿಂದ ಟರ್ಕಿಯವನ ರೀತಿಯ ಮೀಸೆ, ಬೋ ಟೈ ಮತ್ತು ಹ್ಯಾಟ್ ಹಾಕುತ್ತಿದ್ದಳು. ಒಂದು ರಾತ್ರಿ ಅವರು ಉಂಗುಷ್ಠದಿಂದ ತಲೆಯ ತನಕ ಜಾಮ್ ಬಳಿದುಕೊಂಡು ನಾಯಿಗಳ ಹಾಗೆ ಒಬ್ಬರು ಮತ್ತೊಬ್ಬರನ್ನು ನೆಕ್ಕಿದರು ಮತ್ತು ಅಂಗಳದ ನೆಲದಲ್ಲಿ ಪ್ರೇಮಿಸಿದರು. ಅವರನ್ನು ಜೀವಸಹಿತ ತಿಂದು ಹಾಕಲು ಸಿದ್ಧವಿದ್ದ ಇರುವೆಗಳ ಪ್ರವಾಹ ಎಚ್ಚರಿಸಿತು. +ಅವರ ಭ್ರಮಾಧೀನತೆಯ ಮಧ್ಯದ ವಿರಾಮದಲ್ಲಿ ಅಮರಾಂತ ಗ್ಯಾತ್ಸನ್‌ನ ಕಾಗದಗಳಿಗೆ ಉತ್ತರಿಸುತ್ತಿದ್ದಳು. ಅವನು ಬಹಳ ದೂರವಿದ್ದು ಹಿಂತಿರುಗುವುದು ಅಸಾಧ್ಯವೆಂದು ತಿಳಿದಳು. ಅವನ ಮೊದಲ ಕಾಗದಗಳಲ್ಲಿ ಅವಳಿಗೆ ತನ್ನ ಪಾರ್ಟ್‌ನರ್‍ಸ್ ಏರೋಪ್ಲೇನನ್ನು ಕಳಿಸಿದ್ದಾರೆಂದೂ, ಆದರೆ ರವಾನಿಸಬೇಕಾದ ಏಜೆಂಟ್ ಅದನ್ನು ತಪ್ಪಾಗಿ ತಾಂಗಾನಿಕಾಗೆ ಕಳಿಸಿ, ಅಲ್ಲಿ ಅದು ಹಂಚಿಹೋಗಿರುವ ಮಕೋಂದೋದ ಬುಡಕಟ್ಟಿನವರಿಗೆ ಕೊಟ್ಟುಬಿಟ್ಟಿದ್ದಾರೆಂದೂ ಬರೆದಿದ್ದ. ಆ ಗೊಂದಲದಿಂದ ಮತ್ತೆ ಏರೋಪ್ಲೇನ್‌ನನ್ನು ಮರಳಿ ಪಡೆಯಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ ಎಂದು ತಿಳಿಸಿದ್ದ. ಆದ್ದರಿಂದ ಅಮರಾಂತ ಉರ್ಸುಲಾ ಅಕಾಲದಲ್ಲಿ ಹಿಂತಿರುಗುವ ಸಾಧ್ಯತೆಯನ್ನು ತಳ್ಳಿ ಹಾಕಿದಳು. ಅವ್ರೇಲಿಯಾನೋಗೆ ಅವನ ಮಟ್ಟಿಗೆ ಕತಲುನಿಯಾದ ಜಾಣನ ಕಾಗದಗಳನ್ನು ಬಿಟ್ಟರೆ ಪ್ರಪಂಚದೊಡನೆ ಬೇರೆ ಯಾವ ಸಂಪರ್ಕವಿರಲಿಲ್ಲ ಮತ್ತು ಔಷಧಿಯಂಗಡಿಯ ಮೌನಿ ಮರ್ಸಿಡೆಸ್ ಮೂಲಕ ಗಾಬ್ರಿಯಲ್ ಬಗ್ಗೆ ದೊರೆಯುವ ಸುದ್ದಿ. ಗ್ಯಾಬ್ರಿಯಲ್ ಪ್ಯಾರಿಸ್‌ನಲ್ಲಿ ನೆಲೆಸುವುದಕ್ಕೋಸ್ಕರ ಹಿಂತಿರುಗುವ ಟಿಕೆಟ್‌ಗಾಗಿ, ರುಧಾಫೀನ್‌ನ ಮಂಕು ಹೊಟೇಲ್‌ನಿಂದ ಎಸೆದ ಹಳೆಯ ಕಾಗದ ಮತ್ತು ಮನೆಗೆಲಸದವರಿಗಾಗಿ ಬಾಟಲುಗಳನ್ನು ಮಾರುತ್ತಿದ್ದ. ಅವ್ರೇಲಿಯಾನೋ ಕತ್ತಿನ ತನಕ ಸ್ವೆಟರ್ ಹಾಕಿಕೊಂಡು, ಮೌಂತ್‌ಫರ್ನಾನೆಯಲ್ಲಿನ ಕಿರುದಾರಿಗಳಲ್ಲಿರುವ ಕೆಫೆಗಳೆಲ್ಲ ಪ್ರೇಮಿಗಳು ತುಂಬಿದಾಗ, ಅವನು ಅದನ್ನು ತೆಗೆಯುವನೆಂದು ಕಲ್ಪಿಸಿದ ಮತ್ತು ಹಸಿವೆಯನ್ನು ಮರೆಯಲು ದಿನವೆಲ್ಲ ಕುದಿವ ಹೂ ಕೋಸಿನ ವಾಸನೆಯ, ರೊಕೆಮಡೋರ್ ರೂಮಿನಲ್ಲಿ ದಿನವೆಲ್ಲ ಮಲಗಿ, ರಾತ್ರಿಯೆಲ್ಲ ಬರೆಯುತ್ತಿದ್ದ. ಆದರೂ ಸಹ ಅವನ ಬಗ್ಗೆ ಸುದ್ದಿ ಅನಿಶ್ಚಿತವಾಗಿತ್ತು. ಕತುಲುನಿಯಾದ ಜಾಣನಿಂದ ಬರುವ ಕಾಗದಗಳು ದುಃಖತಪ್ತವಾಗಿದ್ದು, ಅವ್ರೇಲಿಯಾನೋ ಅವುಗಳ ಬಗ್ಗೆ ಮತ್ತು ಅಮರಾಂತ ಉರ್ಸುಲಾ ತನ್ನ ಗಂಡನನ್ನು ಕುರಿತು ಆಲೋಚಿಸುತ್ತಿದ್ದರು. ಅಲ್ಲದೆ ಅವರಿಬ್ಬರೂ ಬೇರೆ ಏನೂ ಇರದ ಕೇವಲ ಪ್ರಣಯ ಮಾತ್ರ ದಿನನಿತ್ಯದ ಮತ್ತು ನಿರಂತರ ವಾಸ್ತವವಾಗಿದ್ದ ಜಗತ್ತಿನಲ್ಲಿ ತೇಲುತ್ತಿದ್ದರು. +ಇದ್ದಕ್ಕಿದ್ದ ಹಾಗೆ, ಗೊತ್ತಿರದೆ ಆಗುವ ಆಘಾತದಂತೆ, ಗ್ಯಾತ್ಸನ್ ಹಿಂತಿರುಗುವ ಸುದ್ದಿ ಬಂತು. ಅಮರಾಂತ ಉರ್ಸುಲಾ ಮತ್ತು ಅವ್ರೇಲಿಯನೋ ಆಗ ಕಣ್ಣು ಬಿಟ್ಟು, ತಮ್ಮೊಳಗನ್ನು ನೋಡಿಕೊಳ್ಳುತ್ತ, ಎದೆ ಕೆದಕಿ ಕಾಗದದ ಕಡೆ ನೋಡಿದರು. ಅವರಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಸಮೀಪದವರಾಗಿದ್ದರೆಂದರೆ ತಾವು ಬೇರ್ಪಡುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದುಕೊಂಡರು. ಅವಳು ಗಂಡನಿಗೆ ಸತ್ಯಕ್ಕೆ ವಿರುದ್ಧವಾಗಿ ಅವನ ಬಗ್ಗೆ ಇರುವ ಪ್ರೇಮ ಇನ್ನೊಮ್ಮೆ ತಿಳಿಸಿ, ಅವನನ್ನು ಕಾಣಲು ಕಾತರಳಾಗಿದ್ದೇನೆಂದೂ ಮತ್ತು ಜೊತೆಯಲ್ಲಿಯೇ ಅವ್ರೇಲಿಯಾನೋನನ್ನು ಬಿಟ್ಟು ಬದುಕುವುದು ಅಸಾಧ್ಯವೆಂದು ಮಾಡಿರುವ ವಿಧಿಯ ಕೈವಾಡವನ್ನು ತಾನು ಒಪ್ಪಿಕೊಂಡಿರುವುದನ್ನು ಬರೆದಳು. ಅವರ ನಿರೀಕ್ಷಣೆಗೆ ವ್ಯತಿರಿಕ್ತವಾಗಿ, ಗ್ಯಾತ್ಸನ್ ಸಮಾಧಾನಕರವಾಗಿ, ಎರಡು ಪುಟಗಳಲ್ಲಿ ವ್ಯಾಮೋಹದ ಚಂಚಲತೆಯ ಬಗ್ಗೆ ಬರೆದು ಕೊನೆಯ ಪ್ಯಾರಾದಲ್ಲಿ ಅವರಿಬ್ಬರಿಗೂ ಅನುಮಾನಗೊಳ್ಳದಂತೆ ಶುಭಾಶಯಗಳನ್ನು ತಿಳಿಸುತ್ತ, ಅವರು ಅಲ್ಪಾವಧಿಯಲ್ಲಿ ಹೊಂದಿದ್ದ ದಾಂಪತ್ಯ ರೀತಿಯ ಅನುಭವದಲ್ಲೆ ಸಂತೋಷವಾಗಿರಲು ಹೇಳಿದ್ದ. ಅದೊಂದು ಅನಿರೀಕ್ಷಿತ ಧೋರಣೆಯಾಗಿದ್ದು ಅಮರಾಂತ ಉರ್ಸುಲಾಳಿಗೆ, ತನ್ನ ಗಂಡನಿಗೆ ತನ್ನನ್ನು ವಿಧಿ ಲಿಖಿತಕ್ಕೆ ಬಿಟ್ಟು ಬಿಡುವಂತೆ ಅವಕಾಶ ಕೊಟ್ಟಿದ್ದಕ್ಕಾಗಿ ಅವಮಾನವಾದಂತಾಯಿತು. ಆರು ತಿಂಗಳ ನಂತರ ಗ್ಯಾತ್ಸನ್ ಲಿಯೋಪಾಲ್ಡ್‌ವಿಲ್ಲಾದಿಂದ ತನಗೆ ಏರೋಪ್ಲೇನ್ ಸಿಕ್ಕಿದೆಯೆಂದೂ, ತನ್ನ ಮುರುಕು ಮೋಟಾರು ಬೈಕನ್ನು ಕಳಿಸಿಕೊಡಬೇಕೆಂದೂ ಏಕೆಂದರೆ ಮಕೋಂದೋದಲ್ಲಿ ತನ್ನದೆನ್ನುವ ಆತ್ಮೀಯ ವಸ್ತು ಉಳಿದಿರುವುದು ಅದೊಂದೇ ಎಂದು ಬರೆದಾಗ ದ್ವೇಷ ಹೆಚ್ಚಾಯಿತು. ಅವ್ರೇಲಿಯಾನೋ ಅಮರಾಂತಳ ಸಂಕಟವನ್ನು ತಾಳ್ಮೆಯಿಂದ ಸಹಿಸಿಕೊಂಡು, ಸಂತೋಷದಲ್ಲಿದ್ದ ಹಾಗೆ ದುಃಖದಲ್ಲಿಯೂ ಒಳ್ಳೆಯ ಗಂಡನಾಗಿರಲು ಸಾಧ್ಯ ಎನ್ನುವುದನ್ನು ತೋರಿಸಲು ಪ್ರಯತ್ನಿಸಿದ. ದಿನನಿತ್ಯದ ಬಳಕೆಗೆಂದು ಗ್ಯಾತ್ಸನ್ ಕೊಟ್ಟಿದ್ದ ಹಣ ಮುಗಿಯುತ್ತಿದ್ದಂತೆ ಅವರಿಬ್ಬರಲ್ಲಿ ಬಲವಾದ ಬಂಧವ್ಯ ಬೆಳೆದರೂ ಅದಕ್ಕೆ ವ್ಯಾಮೋಹದಷ್ಟು ವಿಜೃಂಭಣೆ ಇರಲಿಲ್ಲ. ಆದರೆ ಕಾಮೋದ್ರೇಕದ ದಿನಗಳಷ್ಟೇ ಸಂತೋಷದಿಂದ ಇರಲು ಅವಕಾಶ ಮಾಡಿತ್ತು. ಪಿಲರ್ ಟೆರ್‍ನೆರಾ ಸತ್ತ ಸಮಯದಲ್ಲಿ ಅವರು ಮಗುವನ್ನು ನಿರೀಕ್ಷಿಸುತ್ತಿದ್ದರು. +ಅವಳು ಬಸುರಿಯಾದ ಆಲಸ್ಯದಲ್ಲಿ ಅಮರಾಂತ ಉರ್ಸುಲಾ ಮೀನಿನ ಬೆನ್ನೆಲುಬುಗಳಿಂದ ಮಾಡಿದ ನೆಕ್ಲೇಸುಗಳ ವ್ಯವಹಾರ ಮಾಡಲು ಪ್ರಯತ್ನಿಸಿದಳು. ಅದನ್ನು ಒಂದು ಡಜ಼ನ್ ಕೊಂಡುಕೊಂಡ ಮರ್ಸಿದೆಸ್ ಬಿಟ್ಟರೆ ಬೇರೆ ಯಾವ ಗಿರಾಕಿಗಳೂ ಅವಳಿಗೆ ಸಿಗಲಿಲ್ಲ. ಅವ್ರೇಲಿಯಾನೋಗೆ ಮೊಟ್ಟ ಮೊದಲ ಬಾರಿಗೆ ತನಗಿದ್ದ ಭಾಷೆಗಳ ಪ್ರಬುದ್ಧತೆ, ವಿಶ್ವಕೋಶದ ಜ್ಞಾನ, ತಾನು ಆಯಾ ಸ್ಥಳಗಳಲ್ಲಿ ಇರದೆ ಎಲ್ಲೆಲ್ಲೋ ನಡೆದ ಘಟನೆಗಳ ವಿವರಗಳನ್ನು ಅರಿಯುವ ಸಾಮರ್ಥ್ಯಗಳು, ಅವನ ಹೆಂಡತಿಯ ಹತ್ತಿರವಿದ್ದ ಮಕೋಂದೋದ ಅರ್ಧದಷ್ಟು ಮೂಲನಿವಾಸಿಗಳ ಬಳಿ ಇದ್ದದ್ದೆಲ್ಲವನ್ನೂ ಒಟ್ಟು ಮಾಡಿದಷ್ಟಿದ್ದ ಅಪ್ಪಟ ಒಡವೆಗಳ ಪೆಟ್ಟಿಗೆಗಳಂತೆ, ಯಾವ ಉಪಯೋಗಕ್ಕೂ ಬರುವುದಿಲ್ಲ ಎಂಬ ಅರಿವಾಯಿತು. ಅವರು ಹೇಗೋ ಬದುಕಿದ್ದರು. ಅಮರಾಂತ ಉರ್ಸುಲಾ ತನ್ನ ಹಾಸ್ಯ ಪ್ರವೃತ್ತಿಯನ್ನು ಮತ್ತು ಪ್ರಚೋದನೆಯ ತುಂಟಾಟವನ್ನು ಕಡಿಮೆ ಮಾಡಿಕೊಳ್ಳದಿದ್ದರೂ ಊಟವಾದ ಮೇಲೆ ಅಂಗಳದಲ್ಲಿ ಯೋಚಿಸುತ್ತ ಕುಳಿತುಕೊಂಡಿರುತ್ತಿದ್ದರೆ, ಅವ್ರೇಲಿಯಾನೋ ಕೂಡ ಅವಳ ಜೊತೆ ಇರುತ್ತಿದ್ದ. ಅವರು ಒಬ್ಬರಿಗೊಬ್ಬರು ನೋಡುತ್ತ, ಮೌನವಾಗಿ ಕತ್ತಲಾಗುವ ತನಕ ಕುಳಿತು, ಅತಿರೇಕದ ದಿನಗಳಷ್ಟೇ ಪರಸ್ಪರ ಪ್ರೀತಿಸುತ್ತಿದ್ದರು. ಅನಿಶ್ಚಯದ ಭವಿಷ್ಯ ಅವರನ್ನು ಭೂತಕಾಲದ ಕಡೆ ನೋಡುವಂತೆ ಮಾಡಿತ್ತು, ಅವರು ಸುರಿಮಳೆಯ ಸ್ವರ್ಗದ ಕಾಲದಲ್ಲಿದ್ದರು: ನಡುಮನೆಯ ನೀರನ್ನು ಎಗರಿಸುತ್ತಾ, ಉರ್ಸುಲಾಳ ಮೇಲೆ ಹಾಕಲು ಹಲ್ಲಿಗಳನ್ನು ಸಾಯಿಸುತ್ತ, ಅವಳನ್ನು ಜೀವ ಸಹಿತ ಹೂಳುವಂತೆ ನಟಿಸುತ್ತ ಮತ್ತು ಆ ನೆನಪುಗಳು ಇದ್ದದ್ದರಿಂದ ಅವರು ಒಟ್ಟಿಗಿದ್ದಾಗ ಸಂತೋಷವಾಗಿದ್ದರು ಎನ್ನುವ ಸತ್ಯವನ್ನು ಆ ನೆನಪುಗಳು ತೆರೆದಿಟ್ಟಿದ್ದವು. ಭೂತ ಕಾಲದಲ್ಲಿ ಮತ್ತಷ್ಟು ಆಳವಾಗಿ ಹೋದ ಮೇಲೆ ಅಮರಾಂತ ಉರ್ಸುಲಾಗೆ, ಆ ದಿನ ಮಧ್ಯಾಹ್ನ ಬಂಗಾರದಂಗಡಿಗೆ ಹೋದಾಗ, ಅವಳ ತಾಯಿ ಪುಟ್ಟ ಅವ್ರೇಲಿಯನೋ ಬುಟ್ಟಿಯಲ್ಲಿ ಸಿಕ್ಕಿದ್ದರಿಂದ ಅವನು ಯಾರ ಮಗುವೂ ಅಲ್ಲ ಎಂದು ಹೇಳಿದ್ದು ನೆನಪಾಯಿತು. ಹಾಗಿರುವುದು ಅಸಂಭವ ಎಂದು ಅವರಿಗೆ ತೋರಿದರೂ ಅದನ್ನು ಬದಲಾಯಿಸುವ ಬೇರೆ ಯಾವ ಸತ್ಯ ಸಂಗತಿಯೂ ಅವರಿಗೆ ದೊರೆಯಲಿಲ್ಲ. ಎಲ್ಲ ಸಾಧ್ಯತೆಗಳನ್ನೂ ಪರಿಗಣಿಸಿದ ಮೇಲೆ ಫೆರ್ನಾಂಡ ಅವನ ತಾಯಿ ಅಲ್ಲ ಎನ್ನುವುದು ಅವರಿಗೆ ಖಾತರಿಯಾಗಿತ್ತು. ಅಮರಾಂತ ಉರ್ಸುಲಾಗೆ ಅವನ ಅಪಕೀರ್ತಿಯ ಕತೆಗಳನ್ನು ಕೇಳಿದ್ದ ಪೆತ್ರಾ ಕೊತೆಸ್‌ಳ ಮಗನೆಂದು ಅನುಮಾನ ಬಂದು, ಆ ಸಾಧ್ಯತೆ ಅವಳ ಹೃದಯದಲ್ಲಿ ಹೆದರಿಕೆಯನ್ನು ಹುಟ್ಟಿಸಿತು. +ತಾನು ತನ್ನ ಹೆಂಡತಿಯ ಸೋದರನೆಂದು ಖಚಿತವಾದದ್ದರಿಂದ ಹಿಂಸೆಗೊಳಗಾದ ಅವ್ರೇಲಿಯಾನೋ ಪಾದ್ರಿಯ ಮನೆಯಲ್ಲಿ ಗೆದ್ದಲು ಹಿಡಿದ ಹಳೆಯ ದಾಖಲೆಗಳಲ್ಲಿ ತನ್ನ ತಂದೆಯ ಸುಳಿವಿಗಾಗಿ ಹುಡುಕಾಡಿದ. ಅವನಿಗೆ ಸಿಕ್ಕ ಅತ್ಯಂತ ಹಳೆಯ ಸರ್ಟಿಫಿಕೇಟ್ ಎಂದರೆ ಅಮರಾಂತ ಬ್ಯುಂದಿಯಾ ಕುರಿತು ಅವನು ಹುಡುಗನಾಗಿದ್ದಾಗ ಫಾದರ್ ನಿಕನೋರ್ ರೆಯ್ನಾ ದೇವರ ಅಸ್ತಿತ್ವವನ್ನು ಚಾಕಲೇಟ್ ಟ್ರಕ್ಕುಗಳ ಮೂಲಕ ಪುರಾವೆ ಒದಗಿಸಲು ಮಾಡುತ್ತಿದ್ದ ಕಾಲದ್ದು. ಅವನು ತಾನು ಹದಿನೇಳು ಅವ್ರೇಲಿಯಾನೋರಲ್ಲಿ ಒಬ್ಬನೆಂಬ ಭಾವನೆ, ಅವರು ಹುಟ್ಟಿದ ಸರ್ಟಿಫಿಕೇಟುಗಳ ನಾಲ್ಕು ಸಂಪುಟಗಳನ್ನು ಪರಿಶೀಲಿಸಿದಾಗ ಮೂಡಿತು. ಆದರೆ ಆ ದಿನಾಂಕಗಳು ಅವನ ವಯಸ್ಸಿಗೆ ಬಹಳ ಹಿಂದಿನದಾಗಿದ್ದವು. ಸಂಬಂಧದ ಗೋಜಲಿನಲ್ಲಿ ಸಿಕ್ಕಿಕೊಂಡು, ಅನಿಶ್ಚಿಯತೆಯಿಂದ ವಿಹ್ವಲನಾಗಿದ್ದ ಅವನನ್ನು ಕಂಡು ಸಂಧಿವಾತ ಪೀಡಿತ ಪಾದ್ರಿ ಹಾಸಿಗೆಯಲ್ಲಿ ಮಲಗಿಕೊಂಡೇ ಅವನ ಹೆಸರೇನೆಂದು ಕೇಳಿದ. +ಅವನು, “ಅವ್ರೇಲಿಯಾನೋ ಬ್ಯುಂದಿಯಾ” ಎಂದ. +ಪಾದ್ರಿ ಖಂಡತುಂಡಾಗಿ, “ನೀವೇನು ತಲೆ ಕೆಡಿಸಿಕೊಳ್ಳಬೇಡಿ, ಅನೇಕ ವರ್ಷಗಳ ಹಿಂದೆ ಇಲ್ಲಿ ಆ ಹೆಸರಿನ ಒಂದು ರಸ್ತೆ ಇತ್ತು. ಮತ್ತೆ ಮಕ್ಕಳಿಗೆ ರಸ್ತೆಗಳ ಹೆಸರಿಡೋ ಪದ್ಧತಿ ಕೂಡ ಆಗ ಇತ್ತು”. ಅವ್ರೇಲಿಯಾನೋಗೆ ರೋಷ ಉಕ್ಕಿ ಬಂತು. +ಅವನು, “ಹಾಗಾದ್ರೆ ನೀವು ಅದನ್ನು ನಂಬಲ್ಲ” ಎಂದ. +“ನಂಬೋದು? ಯಾವದನ್ನ?” +ಅವ್ರೇಲಿಯಾನೋ, “ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮೂವತ್ತೆರಡು ಯುದ್ಧ ಮಾಡಿ ಎಲ್ಲದರಲ್ಲೂ ಸೋತ ಅನ್ನೋದನ್ನ. ಅಲ್ದೆ, ಮೂರು ಸಾವಿರ ಜನ ಕೆಲಸಗಾರರನ್ನು ಸಿಪಾಯಿಗಳು ಮೆಷಿನ್ ಗನ್‌ನಿಂದ ಉರುಳಿಸಿ ಅವರ ದೇಹಗಳನ್ನು ಇನ್ನೂರು ಬೋಗಿಗಳಿದ್ದ ಟ್ರೈನಿನಲ್ಲಿ ತೊಗೊಂಡು ಹೋಗಿ ಸಮುದ್ರಕ್ಕೆ ಎಸೆದ್ರು ಅನ್ನೋದನ್ನ” ಎಂದ. +ಪಾದ್ರಿ ಅವನನ್ನು ಅನುಕಂಪದಿಂದ ಅಳೆಯುವ ದೃಷ್ಟಿಯಿಂದ ನೋಡಿದ. +ಅವನು ನಿಟ್ಟುಸಿರು ಬಿಡುತ್ತ, “ಮಗನೇ, ನೀನು ಮತ್ತು ನಾನು ಈ ಕ್ಷಣದಲ್ಲಿ ಬದುಕಿದೀವಿ ಅನ್ನೋದು ಸಾಕು ನಂಗೆ” ಎಂದ. +ಇದರಿಂದ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಬುಟ್ಟಿಯ ವ್ಯಾಖ್ಯೆಯನ್ನು ನಂಬಿಕೆಯಿಂದಲ್ಲದೆ ಭಯ ನಿವಾರಣೆಯ ಕಾರಣದಿಂದ ಒಪ್ಪಿಕೊಂಡರು. ಅವಳ ಬಸಿರಿನ ದಿನಗಳು ಮುಂದುವರಿದಂತೆ ಅವರಿಬ್ಬರು, ಕೆಳಗುರುಳಿ ಬೀಳಲು ಒಂದೇ ಹೊಡೆತ ಸಾಕೆನ್ನುವುದರಲ್ಲಿದ್ದ ಮನೆಯಲ್ಲಿ, ಏಕಾಂತದಲ್ಲಿ ಬೆಸೆದು ಹೋಗಿದ್ದರು. ಅವರು ತೀರ ಅಗತ್ಯವಾದ ಕಡೆಗಳಿಗೆ, ಪ್ರೇಮದ ಭಂಗಿಗಳು ಕಾಣುತ್ತಿದ್ದ ಫೆರ್ನಾಂಡಳ ಬೆಡ್‌ರೂಮಿಗೆ, ಅಮರಾಂತ ಉರ್ಸುಲಾ ಹುಟ್ಟುವ ಮಗುವಿಗೆ ಕುಲಾವಿಗಳನ್ನು ಹೊಲಿಯುವ ಮತ್ತು ಅವ್ರೇಲಿಯಾನೋ ಕತಲುನಿಯಾದ ಜಾಣನಿಗೆ ಆಗೀಗ ಕಾಗದಗಳನ್ನು ಬರೆಯುತ್ತಿದ್ದ ಸ್ಥಳಕ್ಕೆ ತಮ್ಮ ಓಡಾಟವನ್ನು ಸೀಮಿತಗೊಳಿಸಿ, ಮನೆಯ ಉಳಿದ ಭಾಗವನ್ನು ಹಾಳಾಗಲು ಬಿಟ್ಟು ಬಿಟ್ಟಿದ್ದರು. ಬೆಳ್ಳಿಯ ಅಂಗಡಿ, ಮೆಲ್‌ಕಿಯಾದೆಸ್‌ನ ರೂಮು ಮತ್ತು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಪುರಾತನ ಮತ್ತು ನಿಶ್ಶಬ್ದ ಪ್ರಪಂಚ ಎಲ್ಲೋ ಹುದುಗಿ ಹೋಗಿ, ಯಾರಿಗೂ ಅದನ್ನು ಭೇದಿಸುವ ಧೈರ್ಯವಿರಲಿಲ್ಲ. ಅವರಿಬ್ಬರೂ ಸುತ್ತುವರಿದ ಪ್ರಕೃತಿಯ ಪ್ರಕೋಪದ ನಡುವೆ, ಬೆಗೋನಿಯಾ ಗಿಡಗಳನ್ನು ಬೆಳೆಸಿ, ತಮಗೆ ಬೇಕಾದ ಆವರಣವನ್ನು ಸುಣ್ಣದ ಕಲ್ಲಿನಿಂದ ಗುರುತು ಮಾಡಿಕೊಂಡಿದ್ದರು ಮತ್ತು ಮನುಷ್ಯ ಮತ್ತು ಇರುವೆಯ ನಡುವೆ ಶತಮಾನಗಳಿಂದ ನಡೆಯುತ್ತಿರುವ ಹೋರಾಟದಿಂದಾಗಿ ಕೊನೆಯ ಗುಂಡಿಗಳನ್ನು ತೋಡಿದ್ದರು. ಪಂಜರದಲ್ಲಿ ಅದೃಷ್ಟಹೀನ ಕನೇರಿ ಪಕ್ಷಿಗಳು ಮತ್ತು ಸೆರೆಯಲ್ಲಿ ಇದ್ದ ಹಾಗಿದ್ದ ಗಂಡನ ಜೊತೆ ಬಂದಾಗ, ಹರೆಯದ ಮೂರ್ತಿಯಾಗಿದ್ದ ಅಮರಾಂತ ಉರ್ಸುಲಾಳನ್ನು, ನಿರ್ಲಕ್ಷಿತ ಉದ್ದನೆಯ ಕೂದಲು, ಮುಖದಲ್ಲಿ ಉಂಟಾಗುತ್ತಿದ್ದ ಕಲೆಗಳು, ಉಬ್ಬುತ್ತಿದ್ದ ಕಾಲುಗಳು, ಪ್ರಣಯಕ್ಕಿಳಿದಾಗ ಹಿಂಜುತ್ತಿದ್ದ ದೇಹದ ಪರಿವರ್ತನೆಗಳು ಬದಲು ಮಾಡಿದ್ದವು. ಆದರೆ ಅವಳೊಳಗಿನ ಭಾವ ತೀವ್ರತೆಯನ್ನು ಕಡಿಮೆ ಮಾಡಿರಲಿಲ್ಲ. ಅವಳು ವಿಚಿತ್ರವಾಗಿ ನಗುತ್ತ, “ಈ ಥರ ದರಿದ್ರರಂತೆ ಬಾಳ್ತೀವಿ ಅಂತ ಯಾರು ಕನಸು ಕಂಡಿದ್ರು!” ಎಂದಳು. ಅವಳು ಆರು ತಿಂಗಳ ಬಸುರಿಯಾಗಿದ್ದಾಗ ಬಂದ ಕಾಗದದಿಂದ ಹೊರ ಪ್ರಪಂಚದೊಡನೆ ಇದ್ದ ಕೊನೆ ಎಳೆ ಕಳಚಿ ಬಿತ್ತು. ಸಹಜವಾಗಿಯೇ ಅದು ಕತಲುನಿಯಾದ ಜಾಣನದಾಗಿರಲಿಲ್ಲ. ಅದನ್ನು ಬಾರ್ಸಿಲೋನಿಯಾದಿಂದ ಅಂಚೆಗೆ ಹಾಕಲಾಗಿತ್ತು. ಆದರೆ ಕವರಿನ ಮೇಲೆ ನೀಲಿ ಇಂಕ್‌ನಲ್ಲಿ ಅಧಿಕಾರಿಯೊಬ್ಬ ಬರೆದ ವಿಳಾಸವಿತ್ತು ಮತ್ತು ಅದು ಬೆದರಿಸುವ ರೀತಿಯಲ್ಲಿ ಕಾಣುತ್ತಿತ್ತು. ಅವ್ರೇಲಿಯಾನೋ ಇನ್ನೇನು ಅದನ್ನು ಒಡೆಯುತ್ತಿದ್ದ ಅಮರಾಂತ ಉರ್ಸುಲಾಳ ಕೈಯಿಂದ ಕಿತ್ತುಕೊಂಡ. +ಅವನು, “ಬೇq, ಬೇಡ . . ಇದರಲ್ಲಿ ಏನಿದೆ ಅಂತ ನಂಗೆ ಗೊತ್ತಾಗೋದು ಬೇಡ” ಎಂದ. +ಅವನು ಊಹಿಸಿದಂತೆ ಕತುಲೂನಿಯಾದ ಜಾಣ ಮತ್ತೆ ಕಾಗದ ಬರೆಯಲಿಲ್ಲ. ಯಾರೂ ಓದದ ಆ ಅಪರಿಚಿತನ ಕಾಗದ ಅಲ್ಫ್‌ನ ಗೆದ್ದಲು ಹುಳುಗಳಿಗಾಗಿ, ಹಿಂದೆ ಫೆರ್ನಾಂಡ ಮದುವೆಯ ಉಂಗುರವನ್ನು ಮರೆತು ಬಿಟ್ಟಿದ್ದ ಸ್ಥಳದಲ್ಲಿ ಇಟ್ಟು ಬಿಟ್ಟರು. ಕೊನೆಯ ಹಂತದ ಅಲೆಗಳ ವಿರುದ್ಧ ಏಕಾಂತ ಪ್ರೇಮಿಗಳು ತೇಲುತ್ತಿದ್ದರೆ, ಕೆಟ್ಟ ಸುದ್ದಿಯಿಂದ ತನ್ನದೇ ಉರಿಯಲ್ಲಿ ನಿರ್ನಾಮವಾಗಲು ಅದು ಅಲ್ಲಿಯೇ ಇತ್ತು. ಅವರ ಪಶ್ಚಾತ್ತಾಪವಿಲ್ಲದ ಮತ್ತು ದುರದೃಷ್ಟದ ಆ ಸಮಯ ನಿರ್ಮೋಹದ ಮತ್ತು ವಿಪತ್ತಿನ ಮರಳುಗಾಡಿಗೆ ಸೆಳೆದುಹೋಗುವುದರಲ್ಲಿ ಕಳೆದುಹೋಯಿತು. ಆ ವಿನಾಶದ ಅರಿವಾಗಿ ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾ ಉಸಿರು ಬಿಗಿ ಹಿಡಿದುಕೊಂಡು, ವ್ಯಭಿಚಾರದ ಹುಚ್ಚಿನಲ್ಲಿ ಕಣ್ಬಿಡುವ ಮಗುವಿನ ಬಗ್ಗೆ ಅಪಾರ ಪ್ರೇಮದಲ್ಲಿ ಕಳೆದರು. ರಾತ್ರಿಯ ಸಮಯದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಹಿಡಿದುಕೊಂಡು ಕುಳಿತ ಅವರು, ಹೆಚ್ಚುತ್ತಿರುವ ಇರುವೆಗಳಿಂದ ಅಥವಾ ಹೆಗ್ಗಣಗಳ ಸದ್ದಿನಿಂದ ಅಥವಾ ಪಕ್ಕದ ರೂಮುಗಳಲ್ಲಿ ಶಿಳ್ಳೆ ಹೊಡೆಯುತ್ತ ಬೆಳೆಯುತ್ತಿದ್ದ ಕಳೆಗಳಿಂದ ಹೆದರುತ್ತಿರಲಿಲ್ಲ. ಅನೇಕ ಸಲ ಸತ್ತವರ ಓಡಾಟದಿಂದ ಎಚ್ಚರಗೊಳ್ಳುತ್ತಿದ್ದರು. ಅವರಿಗೆ ಉರ್ಸುಲಾ ನಿಗದಿತ ಪರಿಧಿಯಲ್ಲೇ ನಿರ್ವಹಿಸಬೇಕಾದ ಸೃಷ್ಟಿಯ ಕಟ್ಟಲೆಗಳ ವಿರುದ್ಧ ಹೋರಾಡುವುದು ಕೇಳಿಸುತ್ತಿತ್ತು ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾ ಆವಿಷ್ಕಾರಗಳ ಮಿಥ್ಯೆಯ ಸತ್ಯವನ್ನು ಹುಡುಕುವುದು, ಫೆರ್ನಾಂಡ ಪ್ರಾರ್ಥಿಸುವುದು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಮೋಸದಿಂದ ಮತ್ತು ಸಣ್ಣ ಬಂಗಾರದ ಮೀನುಗಳಿಂದ ಪೆಚ್ಚಾಗುವುದು, ಅವ್ರೇಲಿಯಾನೋ ಸೆಗುಂದೋ ವ್ಯಭಿಚಾರದ ಬೇಗೆಯಲ್ಲಿ ಸಾಯುವ ಏಕಾಂತದಲ್ಲಿರುವುದು ಹಾಗೂ ಅನಂತರ, ಮೀರಿದ ವ್ಯಾಮೋಹ ಸಾವನ್ನು ಮೀರಿಸುತ್ತದೆ, ಎನ್ನುವುದನ್ನು ಅರಿತರು. ಅಲ್ಲದೆ ಇತರೆ ಭವಿಷ್ಯದ ಪ್ರಾಣಿಗಳ ಸಂತತಿಗಳು, ಮನುಷ್ಯನಿಂದ ಯಾತನೆಯ ಸ್ವರ್ಗವನ್ನು ಕೊಳ್ಳೆ ಹೊಡೆಯುವ ಜಂತುಗಳಿಂದ ಕದಿಯುವ ತನಕ, ತಾವು ಭೂತಗಳ ಹಾಗೆ ಪ್ರೇಮಿಸುತ್ತಿರಬಹುದೆಂಬ ನೆಚ್ಚಿಕೆಯಿಂದ ಸಂತೋಷವಾಗಿದ್ದರು. +ಒಂದು ಭಾನುವಾರ ಸಂಜೆ ಆರು ಗಂಟೆಗೆ ಅಮರಾಂತ ಉರ್ಸುಲಾಗೆ ಹೆರಿಗೆಯ ನೋವು ಪ್ರಾರಂಭವಾಯಿತು. ಹಸಿವೆಗಾಗಿ ಮಲಗುತ್ತಿದ್ದ ಎಳೆಯ ಹುಡುಗಿಯರ ನಗುಮುಖದ ಒಡತಿ ಅವಳನ್ನು ಡೈನಿಂಗ್ ಟೇಬಲ್‌ಗೆ ಕೊಂಡೊಯ್ದಳು. ಅಲ್ಲಿ ಅವಳ ಹೊಟ್ಟೆಯನ್ನು ಹಿಚುಕಿ, ಸರಿಯಾಗಿ ನೋಡಿಕೊಳ್ಳದೆ ಕೊನೆಗೆ ಅವಳ ಕೂಗುಗಳು ಗಂಡು ಮಗುವಿನ ಅಳುವಿನಲ್ಲಿ ಮುಳುಗಿಹೋಯಿತು. ಕಣ್ಣೀರಿನ ಮೂಲಕವೇ ಅಮರಾಂತ ಉರ್ಸುಲಾ ಭಾರೀ ಬ್ಯುಂದಿಯಾರಲ್ಲಿ ಒಬ್ಬನಾದ, ಹೊಸೆ ಅರ್ಕಾದಿಯೋನ ಹಾಗೆ ಶಕ್ತಿವಂತನಾದ, ಅವ್ರೇಲಿಯಾನೋಗಳಂತೆ ಅತೀಂದ್ರಿಯ ದೃಷ್ಟಿಯುಳ್ಳವನಾದ ಮತ್ತು ಆ ಜನಾಂಗವನ್ನು ಮತ್ತೆ ಪ್ರಾರಂಭದಿಂದ ಶುರುಮಾಡಿ, ಅದರ ಕೆಟ್ಟ ಗುಣಗಳನ್ನು ತೊಡೆದು ಹಾಕುವ ಒಂಟಿ ಧ್ವನಿಯುಳ್ಳವನನ್ನು ನೋಡಿದಳು. ಏಕೆಂದರೆ ಇಡೀ ಶತಮಾನದಲ್ಲಿ ಪ್ರೇಮದ ಪೂರೈಕೆಯನ್ನು ಅವನೊಬ್ಬ ಮಾತ್ರ ಪಡೆದಿದ್ದ. +ಅವಳು, “ಅವನೊಬ್ಬ ಧಾಂಡಿಗ, ಅವನ್ಗೆ ರೋಡ್ರಿಗೋ ಅಂತ ಹೆಸರಿಡೋಣ” ಎಂದಳು. +ಅವಳ ಗಂಡ, “ಬೇಡ, ಅವನನ್ನ ಅವ್ರೇಲಿಯಾನೋ ಅನ್ನೋಣ. ಅವ್ನು ಮೂವತ್ತೆರಡು ಯುದ್ಧಗಳನ್ನು ಗೆಲ್ತಾನೆ” ಎಂದ. +ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ನಂತರ ಅವ್ರೇಲಿಯಾನೋ ದೀಪ ಹಿಡಿದಾಗ ಸೂಲಗಿತ್ತಿ ಮಗುವಿಗೆ ಮೆತ್ತಿದ್ದ ನೀಲಿ ಲೋಳೆಯನ್ನು ಬಟ್ಟೆಯಿಂದ ಒರೆಸಿದಳು. ಅದನ್ನು ಹೊಟ್ಟೆಯ ಮೇಲೆ ಮಲಗಿಸಿದಾಗ ಮಾತ್ರ ಉಳಿದ ಗಂಡು ಮಕ್ಕಳಿಗೆ ಇರುವುದಕ್ಕಿಂತ ಹೆಚ್ಚಿನದಿದೆ ಎಂದು ಅವರಿಗೆ ಕಂಡು ಬಂದು ಬಾಗಿ ನೋಡಿದರು. ಅದು ಹಂದಿಯ ಬಾಲದಂತಿತ್ತು. +ಅವರಿಗೆ ಗಾಬರಿಯಾಗಲಿಲ್ಲ. ಅವ್ರೇಲಿಯಾನೋ ಮತ್ತು ಅಮರಾಂತ ಉರ್ಸುಲಾಗೆ ಮನೆತನದ ಹಿನ್ನೆಲೆ ಗೊತ್ತಿರಲಿಲ್ಲ. ಅಲ್ಲದೆ ಅವರಿಗೆ ಉರ್ಸುಲಾಳ ಹೆದರಿಕೆಯ ಬುದ್ಧಿವಾದಗಳು ನೆನಪಿರಲಿಲ್ಲ. ಸೂಲಗಿತ್ತಿ ಅವರಿಗೆ ಅದನ್ನು ಮಗುವಿಗೆ ಎರಡನೇ ಹಲ್ಲು ಬಂದಾಗ ಕತ್ತರಿಸಿ ಹಾಕಬಹುದು ಎಂದು ಸಮಾಧಾನಪಡಿಸಿದಳು. ಅನಂತರ ಅವರಿಗೆ ಮತ್ತೆ ಅದರ ಬಗ್ಗೆ ಯೋಚಿಸಲು ಸಮಯವಿರಲಿಲ್ಲ. ಏಕೆಂದರೆ ಅಮರಾಂತ ಉರ್ಸುಲಾಗೆ ತಡೆಯಲು ಸಾಧ್ಯವಿಲ್ಲದಷ್ಟು ರಕ್ತಸ್ರಾವವಾಗುತ್ತಿತ್ತು. ಅದನ್ನು ಬೂದಿಯುಂಡೆಗಳಿಂದ ತಡೆಯಲು ಪ್ರಯತ್ನಿಸಿದರು. ಆದರೆ ಅದು ಚಿಲುಮೆಯೊಂದನ್ನು ಕೈಯಿಂದ ಮುಚ್ಚಿ ನಿಲ್ಲಿಸಲು ಪ್ರಯತ್ನಿಸಿದಂತಾಯಿತು. ಪ್ರಾರಂಭದ ಗಂಟೆಗಳಲ್ಲಿ ಅವಳು ತನ್ನ ಹಾಸ್ಯ ಪ್ರವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಳು. ಅವಳು ಹೆದರಿದ ಅವ್ರೇಲಿಯಾನೋನನ್ನು ಯೋಚಿಸಬಾರದೆಂದು ಕೈ ಹಿಡಿದು ಕೇಳಿದಳು. ಏಕೆಂದರೆ ಅವಳಂಥ ಜನರು ಅವರ ಇಚ್ಛೆಗೆ ವಿರುದ್ಧವಾಗಿ ಸಾಯುವುದಿಲ್ಲವೆಂದು ಹೇಳಿದಳು. ಅವಳು ಸೂಲಗಿತ್ತಿಯ ಅತಿರೇಕದಿಂದ ಔಷಧೋಪಚಾರದಿಂದ ಮನಸಾರೆ ನಕ್ಕಳು. ಆದರೆ ಅವ್ರೇಲಿಯಾನೋನ ಆಸೆ ಕರಗುತ್ತಿದ್ದಂತೆ, ಅವಳ ಮೇಲಿನ ಬೆಳಕು ನಶಿಸುತ್ತಿದೆಯೋ ಎನ್ನುವಂತೆ, ತೂಕಡಿಕೆಯಲ್ಲಿ ಮುಳುಗಿದಳು. ಸೋಮವಾರ ಬೆಳಿಗ್ಗೆ ಅವಳ ಹಾಸಿಗೆಯ ಪಕ್ಕದವರಿಗೂ ಕೇಳಿಸದಂತೆ ಪ್ರಾರ್ಥಿಸಿ ಚುಟಿಕೆ ಹಾಕುವ ಹೆಂಗಸೊಬ್ಬಳನ್ನು ಕರೆತಂದರು. ಆದರೆ ಯಾವುದೇ ರೀತಿಯ ಪ್ರೇಮವಿರದ ರೀತಿಗೆ ಅವಳ ರಕ್ತ ಪ್ರತಿಕ್ರಿಯಿಸುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ, ಇಪ್ಪತ್ನಾಲ್ಕು ಗಂಟೆಗಳ ಹತಾಶೆಯ ನಂತರ ಅವಳು ಸತ್ತುಹೋಗಿದ್ದಾಳೆಂದು ಅವರಿಗೆ ತಿಳಿಯಿತು. ಏಕೆಂದರೆ ಶುಶ್ರೂಷೆಯಿಲ್ಲದೆ ಸೋರುವುದು ನಿಂತಿತ್ತು. ಅವಳು ಸೆಟೆದುಕೊಳ್ಳುತ್ತಿದ್ದಂತೆ ಮುಖದ ಮೇಲಿನ ಬೊಬ್ಬೆಗಳು ಇಂಗಿಹೋದದ್ದಲ್ಲದೆ ನಸು ನಗುವಿತ್ತು. +ಅಲ್ಲಿಯ ತನಕ ಅವ್ರೇಲಿಯಾನೋಗೆ ತನ್ನ ಸ್ನೇಹಿತರನ್ನು ಎಷ್ಟು ಪ್ರೀತಿಸುತ್ತೇನೆಂದು, ಎಷ್ಟು ಕಳೆದು ಕೊಂಡಿದ್ದೇನೆಂದು ಮತ್ತು ಅವರ ಜೊತೆ ಆ ಕ್ಷಣದಲ್ಲಿ ಇರುವುದಕ್ಕಾಗಿ ಎಷ್ಟೆಲ್ಲ ಕೊಡಲು ಸಿದ್ಧವಾಗಿರುವುದು ತಿಳಿದಿರಲಿಲ್ಲ. ಅವರ ತಾಯಿ ಸಿದ್ಧಪಡಿಸಿದ್ದ ಬುಟ್ಟಿಯಲ್ಲಿ ಮಗುವನ್ನಿಟ್ಟು, ಹೆಣದ ಮುಖವನ್ನು ಹೊದಿಕೆಯಿಂದ ಮುಚ್ಚಿದ. ಅನಂತರ ಊರಿನಲ್ಲೆಲ್ಲ ಗುರಿಯಿರದೆ, ಹಿಂದಿನವರನ್ನು ಹುಡುಕುತ್ತ ಓಡಾಡಿದ. ಅವನು ಇತ್ತೀಚೆಗೆ ಹೋಗಿದ್ದ ಔಷಧಿ ಅಂಗಡಿಯ ಬಾಗಿಲು ಬಡಿದಾಗ ಅದು ಬಡಗಿಯವನದಾಗಿತ್ತು. ಕೈಯಲ್ಲೊಂದು ದೀಪ ಹಿಡಿದುಕೊಂಡು ಬಂದ ವಯಸ್ಸಾದ ಹೆಂಗಸೊಬ್ಬಳು ಅವನ ಭ್ರಮೆಗಾಗಿ ಮರುಕಗೊಂಡು, ಅಲ್ಲಿ ಎಂದೂ ಔಷಧಿಯಂಗಡಿ ಇರಲಿಲ್ಲವಷ್ಟೇ ಅಲ್ಲದೆ ನೀಳ ಕತ್ತಿನ, ನಿದ್ದೆಗಣ್ಣಿನ ಮರ್ಸಿದೆಸ್ ಎಂಬುವಳನ್ನು ನೋಡಿಯೇ ಇಲ್ಲವೆಂದು ಹೇಳಿದಳು. ಅವನು ಕತಲುನಿಯಾದ ಜಾಣನ ಪುಸ್ತಕದಂಗಡಿಯ ಬಾಗಿಲಿಗೆ ಹಣೆ ಇಟ್ಟು ಅತ್ತ. ಹೀಗೆ ಮಾಡುವಾಗ ಅವನಿಗೆ ಅಂಥ ಸಮಯದಲ್ಲಿ ಪ್ರೇಮದ ಭಾವಕ್ಕೆ ಕುಂದು ಬರದ ಹಾಗೆ ಸಾವಿಗಾಗಿ, ಕೆಟ್ಟದಾಗಿ ಬಿಕ್ಕುವುದನ್ನು ನಿರಾಕರಿಸುತ್ತೇನೆ ಎಂದುಕೊಂಡಿದ್ದರ ಅರಿವಿತ್ತು. ಅವನು ಪಿಲರ್ ಟೆರ್‍ನೆರಾಳನ್ನು ಕೂಗುತ್ತ ‘ಬಂಗಾರದ ಮಗು\’ವಿನ ಸಿಮೆಂಟು ಗೋಡೆಗೆ ತಲೆ ಚಚ್ಚಿಕೊಳ್ಳುತ್ತ, ಆಕಾಶದಲ್ಲಿ ಬೆಳಗುವ ಕಿತ್ತಲೆ ಗೋಳಗಳು ಹಾದು ಹೋಗುವುದನ್ನು, ತಾನು ರಜಾ ದಿನದ ರಾತ್ರಿಗಳಲ್ಲಿ ಹುಡುಗತನದ ಹುಮ್ಮಸ್ಸಿನಲ್ಲಿ ನಡುಮನೆಯಿಂದ ಕ್ರೌಂಚ್ ಪಕ್ಷಿಗಳೆಂದು ಭಾವಿಸಿದ್ದನ್ನು ಗಮನಿಸಲಿಲ್ಲ. ಹಾಳು ಬಿದ್ದ ಕೆಂಪು ದೀಪದ ಪ್ರದೇಶದಲ್ಲಿ ತೆರೆದಿದ್ದ ಕೊನೆಯ ದೊಡ್ಡ ಹಜಾರದಲ್ಲಿ ಗುಂಪೊಂದು ಬಿಷಪ್‌ನ ಸಂಬಂಧಿಯಾದ, ಮಹಾಪುರುಷ ಫ್ರಾನ್ಸಿಸ್ಕೋನ ರಹಸ್ಯಗಳ ವಾರಸುದಾರನಾದ, ರಫೆಲ್ ಎಸ್ಕಲೋನಾನ ಹಾಡುಗಳನ್ನು ಅಕಾರ್ಡಿಯನ್‌ನಲ್ಲಿ ನುಡಿಸುತ್ತಿದ್ದರು. ತನ್ನ ತಾಯಿಯ ಮೇಲೆ ಕೈ ಎತ್ತಿದ್ದರಿಂದ ಮುದುಡಿಹೋಗಿದ್ದ ಕೈಯಿನ ಮದ್ಯ ಹಂಚುವ ಹುಡುಗ, ಅವ್ರೇಲಿಯಾನನ್ನು ಜಲ್ಲೆಯ ಮದ್ಯ ಕುಡಿಯಲು ಕರೆದ. ಅವ್ರೇಲಿಯಾನೋ ಅದರಲ್ಲಿ ಒಂದನ್ನು ಕೊಂಡುಕೊಂಡ. ಆ ಹುಡುಗ ತನ್ನ ಕೈಗೆ ಉಂಟಾದ ದುರವಸ್ಥೆಯನ್ನು ಹೇಳಿದ. ಅವ್ರೇಲಿಯಾನೋ ತನ್ನ ಸೋದರಿಯ ವಿರುದ್ಧ ವರ್ತಿಸಿದ್ದಕ್ಕಾಗಿ ಸೊರಗಿ, ತನ್ನ ಹೃದಯಕ್ಕೆ ಉಂಟಾದ ದುರವಸ್ಥೆಯನ್ನು ಹೇಳಿದ. ಕೊನೆಗೆ ಅವರಿಬ್ಬರು ಅಳುತ್ತ ಕುಳಿತರು ಮತ್ತು ಅವ್ರೇಲಿಯಾನೋಗೆ ಒಂದು ಕ್ಷಣ ನೋವು ಇಂಗಿದಂತಾಯಿತು. ಆದರೆ ಅವನು ಮಕೋಂದೋದ ಕೊನೆಯ ಬೆಳಿಗ್ಗೆ ಒಬ್ಬನೇ ಇದ್ದಾಗ, ಚೌಕದ ಮಧ್ಯದಲ್ಲಿ ಕೈಗಳನ್ನು ಅಗಲಿಸಿ, ಇಡೀ ಪ್ರಪಂಚವನ್ನು ಎಬ್ಬಿಸಲು ತಯಾರಾಗಿ, ಎತ್ತರದ ಧ್ವನಿಯಲ್ಲಿ ಕೂಗಿದ. +“ಸ್ನೇಹಿತರೆಲ್ಲ ಹಾದರಕ್ಕೆ ಹುಟ್ಟಿದೋರು!” +ನಿಗ್ರೊಮಾಂತ ವಾಂತಿ ಮತ್ತು ಕಣ್ಣೀರಿನಲ್ಲಿ ಮುಳುಗಿದ್ದ ಅವನನ್ನು ಕಾಪಾಡಿದಳು. ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ, ತೊಳೆದು, ಒಂದು ಕಪ್ ಮಾಂಸದ ಸಾರು ಕುಡಿಯುವಂತೆ ಮಾಡಿದಳು. ಅವನು ಅದರಿಂದ ಸಮಾಧಾನಗೊಳ್ಳುತ್ತಾನೆಂದು ತಿಳಿದು ಒಂದು ತುಂಡು ಇದ್ದಿಲನ್ನು ತೆಗೆದುಕೊಂಡು, ಲೆಕ್ಕವಿಲ್ಲದಷ್ಟು ಸಲ ಪ್ರೇಮಿಸಿದಕ್ಕಾಗಿ ಇನ್ನೂ ಕೊಡಬೇಕಾಗಿದ್ದ ಬಾಕಿಯನ್ನು ಅಳಿಸಿ ಹಾಕಿದಳು. ಅವಳು ಅವನನ್ನು ಅಳುತ್ತ ಒಬ್ಬನೇ ಇರುವುದಕ್ಕೆ ಬಿಡದೆ ತನ್ನ ದುಃಖಗಳನ್ನೂ ಹೇಳಿಕೊಂಡಳು. ಅವನು ಸ್ವಲ್ಪ ನಿದ್ದೆ ಮಾಡಿ ಎಚ್ಚರವಾದಾಗ ಅವ್ರೇಲಿಯಾನೋಗೆ ತಲೆ ನೋಯುತ್ತಿರುವುದು ತಿಳಿಯಿತು. ಅವನು ಕಣ್ಣು ಬಿಟ್ಟು ಮಗುವನ್ನು ನೆನಪಿಸಿಕೊಂಡ. +ಅವನಿಗೆ ಬುಟ್ಟಿ ಸಿಗಲಿಲ್ಲ. ಸತ್ತ ಅಮರಾಂತ ಉರ್ಸುಲಾ ಮಗುವನ್ನು ನೋಡಿಕೊಳ್ಳುವುದಕ್ಕಾಗಿ ಎದ್ದಿರಬಹುದೆಂದು ಅವನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಆದರೆ ಅವಳ ದೇಹ ಕಲ್ಲಿನಂತೆ ಹೊದಿಕೆಯ ಕೆಳಗಿತ್ತು. ತಾನು ಬಂದಾಗ ಬೆಡ್‌ರೂಮಿನ ಬಾಗಿಲು ತೆರೆದಿತ್ತು ಎಂದು ಅರಿವಿದ್ದ ಅವ್ರೇಲಿಯಾನೋ ಒರೆಗನೋ ಗಿಡಗಳ ನಿಟ್ಟುಸಿರಿಂದ ತುಂಬಿ ಹೋಗಿದ್ದ ಅಂಗಳವನ್ನು ದಾಟಿ, ಡೈನಿಂಗ್ ರೂಮಿನ ಕಡೆ ನೋಡಿದ. ಅಲ್ಲಿ ಹೆರಿಗೆಯ ಸಮಯದ ವಸ್ತುಗಳು ಇನ್ನೂ ಇದ್ದವು; ದೊಡ್ಡ ಪಾತ್ರೆ, ರಕ್ತದ ಕಲೆಗಳ ಬಟ್ಟೆಗಳು, ಬೂದಿ ತುಂಬಿದ್ದ ಪಾತ್ರೆಗಳು ಮತ್ತು ಸುರುಟಿ ಹೋಗಿದ್ದ ಹೊಕ್ಕುಳ ಬಳ್ಳಿ, ಟೇಬಲ್ ಮೇಲೆ ಕತ್ತರಿ ಮತ್ತು ಇತರ ಸಲಕರಣೆ ಪಕ್ಕದಲ್ಲಿತ್ತು. ಸೂಲಗಿತ್ತಿ ಮಗುವನ್ನು ನೋಡಲು ರಾತ್ರಿ ಬಂದಿದ್ದಳು ಎನ್ನುವ ಸಂಗತಿ ಅವನಿಗೆ ಯೋಚಿಸುವುದಕ್ಕೆ ಕೊಂಚ ಅವಕಾಶ ಕೊಟ್ಟಿತು. ಅವನು ತುಯ್ದಾಡುವ ಕುರ್ಚಿಯಲ್ಲಿ ರಬೇಕಾ ಕಸೂತಿ ಪಾಠ ಹೇಳಿ ಕೊಡುವಾಗ ಕುಳಿತುಕೊಳ್ಳುತ್ತಿದ್ದ ಹಾಗೆ, ಅಮರಾಂತ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಜೊತೆ ಚೀನೀಯರದೊಂದು ಆಟವಾಡುವಾಗ ಕುಳಿತುಕೊಳ್ಳುತ್ತಿದ್ದ ಹಾಗೆ ಮತ್ತು ಅಮರಾಂತ ಉರ್ಸುಲಾ ಮಗುವಿಗೆ ಕುಲಾವಿ ಹೊಲಿಯಲು ಕುಳಿತುಕೊಳ್ಳುತ್ತಿದ್ದ ಹಾಗೆ ಕುಳಿತ. ಆಗ ಅವನಿಗೆ ತನ್ನೊಳಗೆ ಆ ಎಲ್ಲ ಭೂತಕಾಲದ ಭಾರವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎನ್ನುವುದು ಅರಿವಿಗೆ ಬಂತು. ಮಾರಣಾಂತಿಕವಾದ ತನ್ನ ಮತ್ತು ಇತರರ ಮನೋವ್ಯಥೆಯಿಂದ ಘಾಸಿಗೊಂಡು ಅವನು, ಗುಲಾಬಿ ಪೊದೆಗಳ ಮೇಲೆ ಪಟ್ಟು ಹಿಡಿದು ಹಬ್ಬುವ ಜೇಡರ ಬಲೆಗಳನ್ನು, ಸತತ ಪ್ರಯತ್ನದಿಂದ ಹಬ್ಬುವ ಹುಲ್ಲನ್ನು, ಫೆಬ್ರವರಿ ಬೆಳಗಿನ ತಾಳ್ಮೆಯ ಗಾಳಿಯನ್ನು ಮೆಚ್ಚಿಕೊಂಡ. ಅನಂತರ ಅವನು ಮಗುವನ್ನು ನೋಡಿದ. ಅದು ಒಣಗಿದ ಹಾಗೂ ಉಬ್ಬಿದ ಚರ್ಮದ ಚೀಲವಾಗಿದ್ದು, ಅದನ್ನು ಪ್ರಪಂಚದೆಲ್ಲ ಇರುವೆಗಳು ಸೇರಿ ಬಿರುಕಿನ ಕಡೆಗೆ, ಕೈತೋಟದ ಕಲ್ಲು ಹಾಸಿನ ಮೇಲೆ ಎಳೆದುಕೊಂಡು ಹೋಗುತ್ತಿದ್ದವು. ಅವ್ರೇಲಿಯಾನೋಗೆ ಚಲಿಸಲಾಗಲಿಲ್ಲ. ಅದು ಅವನು ಆ ಭೀಕರತೆಯಿಂದ ಮರಗಟ್ಟಿದ ಕಾರಣದಿಂದಲ್ಲ ಆದರೆ ಆ ಅದ್ಭುತ ಕ್ಷಣದಲ್ಲಿ ಮೆಲ್‌ಕಿಯಾದೆಸ್‌ನ ಕೊನೆಯ ಸೂತ್ರಗಳು ಬಗೆ ತೆರೆದು ತೋರಿದವು. ಅವನು ಚರ್ಮದ ಹಾಳೆಯ ಮೇಲಿನ ಬರಹಗಳು ಮನುಷ್ಯನ ಕಾಲ ಮತ್ತು ಅವಕಾಶದ ಕ್ರಮದಲ್ಲಿ ನಮೂದಿಸಿದ್ದನ್ನು ಕಂಡ : ಮೊದಲನೆಯವನನ್ನು ಮರಕ್ಕೆ ಕಟ್ಟಿ ಹಾಕಿದೆ ಮತ್ತು ಕೊನೆಯವನನ್ನು ಇರುವೆಗಳು ತಿನ್ನುತ್ತಿವೆ. +ಅವ್ರೇಲಿಯಾನೋ ಸತ್ತವರನ್ನು ಮತ್ತು ಸತ್ತವರ ನೋವನ್ನು ಮರೆತಾಗ ಇದ್ದದ್ದಕ್ಕಿಂತ, ತನ್ನ ಇಡೀ ಜೀವನದಲ್ಲಿ ಎಂದೂ ಇಷ್ಟು ಸ್ತಿಮಿತವಾಗಿರಲಿಲ್ಲ. ಅವನು ಪ್ರಪಂಚದ ಯಾವ ಆಕರ್ಷಣೆಯೂ ಬೇಡವೆಂದು ಬಾಗಿಲು ಕಿಟಕಿಗಳಿಗೆ ಫೆರ್ನಾಂಡಳ ಬಳಿ ಇದ್ದ ಅಡ್ಡಪಟ್ಟಿಗಳನ್ನಿಟ್ಟು ಮೊಳೆ ಹೊಡೆದ. ಏಕೆಂದರೆ ತನ್ನ ವಿಧಿಯನ್ನು ಮೆಲ್‌ಕಿಯಾದೆಸ್ ಚರ್ಮದ ಹಾಳೆಯ ಬರಹಗಳಲ್ಲಿ ಬರೆದಿದ್ದಾನೆಂದು ಅವನಿಗೆ ಗೊತ್ತಿತ್ತು. ಅವನು ಮನುಷ್ಯರಿದ್ದ ಎಲ್ಲ ಗುರುತುಗಳನ್ನು ಕಿತ್ತೊಗೆದಿದ್ದ ಆ ರೂಮಿನಲ್ಲಿ ಇತಿಹಾಸಪೂರ್ವ ಗಿಡಗಳ ಹಬೆಗುಡುವ ಕೊಚ್ಚೆಯ ಮತ್ತು ಮಿನುಗುವ ಹುಳುಗಳ ಮಧ್ಯೆ, ಚರ್ಮದ ಹಾಳೆಗಳನ್ನು ಕಂಡ. ಅವನಿಗೆ ಅವನ್ನೆಲ್ಲ ಹೊರಬೆಳಕಿಗೆ ತೆಗೆದುಕೊಂಡು ಹೋಗಬೇಕೆಂಬ ಶಾಂತ ಮನ:ಸ್ಥಿತಿ ಇರಲಿಲ್ಲ. ಆದರೆ ಅವನು ಅಲ್ಲಿ ನಿಂತುಕೊಂಡೇ, ಏನೂ ಕಷ್ಟವಿಲ್ಲದೆ, ಅವೆಲ್ಲ ಸ್ಪ್ಯಾನಿಷ್‌ನಲ್ಲಿ ಬರೆದಿದೆ ಎನ್ನುವಂತೆ ಮತ್ತು ಮಧ್ಯಾಹ್ನದ ಮಿರುಗುವ ಬೆಳಕಲ್ಲಿ ಗಟ್ಟಿಯಾಗಿ ಓದುತ್ತಿರುವಂತೆ, ಅವನು ಅವುಗಳನ್ನು ಅರ್ಥೈಸಲು ಪ್ರಾರಂಭಿಸಿದ. ಅದು ಮೆಲ್‌ಕ್ವಿಯದೆಸ್ ಬರೆದ, ಅತ್ಯಂತ ಕನಿಷ್ಠದ ವಿವರಗಳನ್ನು ಒಳಗೊಂಡ, ಒಂದು ಶತಮಾನ ಮುಂದಿನ ಕಾಲದ, ಒಂದು ಮನೆತನದ ಚರಿತ್ರೆಯಾಗಿತ್ತು. ಅವನು ಅದನ್ನು ಅವನ ಮಾತೃಭಾಷೆಯಾದ ಸಂಸ್ಕೃತದಲ್ಲಿ ಬರೆದಿದ್ದ. ಅವನು ಸರಿಸಾಲುಗಳಲ್ಲಿದ್ದ ಅಗಸ್ಟಸ್ ರಾಜನ ಖಾಸಗಿ ಸಂಕೇತಗಳನ್ನು ಹಾಗೂ ಬೆಸಸಾಲುಗಳಲ್ಲಿದ್ದ ಲೆಸಿಡಮೋನಿಯಾದ ಮಿಲಿಟರಿ ಸಂಕೇತಗಳನ್ನು ಅರ್ಥೈಸಿದ್ದ. ಅವ್ರೇಲಿಯಾನೋ ಅಮರಾಂತ ಉರ್ಸುಲಾಳ ಪ್ರೇಮವನ್ನು ಕುರಿತ ಭಾಗವನ್ನು ಓದಿ ಗೊಂದಲಕ್ಕೆ ಸಿಲುಕಿದಾಗ, ಅದು ಮೆಲ್‌ಕಿಯಾಡೆಸ್ ಘಟನೆಗಳನ್ನು ಸಾಮಾನ್ಯವಾಗಿ ಮನುಷ್ಯ ಗ್ರಹಿಸುವ ಕಾಲದ ರೀತಿಯಲ್ಲಿ ನಿರೂಪಿಸಿರಲಿಲ್ಲ ಎನ್ನುವುದಕ್ಕೆ ಅಂತಿಮ ಆಧಾರವಾಯಿತು. ಆದರೆ ಅವನು ಒಂದು ಶತಮಾನದ ದೈನಂದಿನ ಘಟನೆಗಳನ್ನು ಅವು ಒಂದೇ ಸಮಯದಲ್ಲಿ ಒಟ್ಟಿಗೆ ಇರುವ ಹಾಗೆ ವ್ಯವಸ್ಥಿಸಿದ್ದ. ತಾನು ಕಂಡುಹಿಡಿದಿದ್ದರಿಂದ ಉಲ್ಲಾಸಗೊಂಡು ಅವ್ರೇಲಿಯಾನೋ ಪುಟ ಎಗರಿಸದೆ ಸ್ವತಃ ಮೆಲ್‌ಕಿಯಾದೆಸ್ ಅರ್ಕಾಡಿಯೊಗೆ ಕೇಳುವಂತೆ ಮಾಡಿದ ಪೋಪ್ ಗುರುವಿನ ನಿರೂಪಣೆಗಳನ್ನು ಗಟ್ಟಿಯಾಗಿ ಉಚ್ಛರಿಸಿದ. ವಾಸ್ತವವಾಗಿ ಅವು ಅವನ ವಧೆಯ ಮುನ್ಸೂಚನೆಯಾಗಿತ್ತು. ಅವನಿಗೆ ಪ್ರಪಂಚದ ಅತ್ಯಂತ ಸುಂದರಿಯ ಹುಟ್ಟಿನ ಉಲ್ಲೇಖ ಕಂಡು, ಅವಳು ದೇಹ ಮತ್ತು ಆತ್ಮಗಳ ಸಮೇತ ಸ್ವರ್ಗಕ್ಕೆ ಹೋದದ್ದನ್ನು, ಚರ್ಮ ಹಾಳೆಯ ಬರಹಗಳನ್ನು ಅರ್ಥೈಸುವುದನ್ನು ಕೈಬಿಟ್ಟ ಅವಳಿಗಳ ಮೂಲವನ್ನು ಕಂಡ. ಅವರು ಹಾಗೆ ಮಾಡಿದ್ದು ಉತ್ಸಾಹ ಮತ್ತು ಸಾಮರ್ಥ್ಯದ ಕೊರತೆಯಿಂದಲ್ಲ. ಆದರೆ ಅವರ ಪ್ರಯತ್ನ ಪ್ರಬುದ್ಧತೆಗೆ ಮುಂಚಿನದಾಗಿತ್ತು. ಆ ಸಮಯದಲ್ಲಿ ತನ್ನ ಮೂಲವನ್ನು ಅರಿಯಬೇಕೆಂದು ತಾಳ್ಮೆಗೆಟ್ಟು, ಅವ್ರೇಲಿಯಾನೋ ಹಾಳೆಗಳನ್ನು ಬಿಟ್ಟು ಮುಂದೆ ಹೋದ. ಆಗ ಹಿತವಾದ, ಆರಂಭದ, ಭೂತಕಾಲದ ಧ್ವನಿಗಳು ತುಂಬಿದ ಪುರಾತನ ಗಿಡಗಳ ಮರ್ಮರಗಳ ಗಾಳಿ ಪ್ರಾರಂಭವಾಯಿತು. ತೀರ ಜಿಗುಟಿನ ಮನೋವ್ಯಥೆಯೊಂದಿಗೆ ನಿರ್ಮೋಹದ ನಿಟ್ಟುಸಿರು ಸೇರಿತು. ಅವನು ಅದನ್ನು ಆಗ ಗಮನಿಸಲಿಲ್ಲ. ಏಕೆಂದರೆ ಆ ಸಮಯದಲ್ಲಿ ಅವನು ತನ್ನ ಅಸ್ತಿತ್ವದ ಬಗ್ಗೆ ಮೊದಲ ಸೂಚನೆಗಳನ್ನು, ತನ್ನನ್ನು ಸಂತೋಷಪಡಿಸುವ ಸುಂದರಿಗಾಗಿ ಹುಡುಕುತ್ತ, ಭ್ರಾಮಕ ಪ್ರದೇಶಗಳಲ್ಲೆಲ್ಲ ಸುತ್ತಿದ ಕಾಮುಕ ಅಜ್ಜನಲ್ಲಿ ಕಂಡುಕೊಂಡ. ಅವ್ರೇಲಿಯಾನೋ ಅವನನ್ನು ಗುರುತು ಹಿಡಿದು, ಆ ರಹಸ್ಯ ಮಾರ್ಗದಲ್ಲಿ ಮುಂದೆ ಹೋದ ಮತ್ತು ಅವನಿಗೆ ಚೇಳುಗಳು ಹಾಗೂ ಹಳದಿ ಚಿಟ್ಟೆಗಳ ಮಧ್ಯೆ, ಸೂರ್ಯ ಹುಟ್ಟುತ್ತಿರುವಾಗ, ಬಾತ್‌ರೂಮಿನಲ್ಲಿ, ಬಂಡಾಯದ ಕಾರಣ ತನ್ನನ್ನು ಒಪ್ಪಿಸಿಕೊಂಡ ಹೆಂಗಸಿನಲ್ಲಿ ತನ್ನ ಕಾಮ ತೃಷೆ ತೀರಿಸಿಕೊಂಡಾಗ, ತನ್ನ ಗರ್ಭಧಾರಣೆಯಾಯಿತೆಂದು ಕಂಡು ಹಿಡಿದ. ಅವನೆಷ್ಟು ತನ್ಮಯನಾಗಿದ್ದನೆಂದರೆ ಎರಡನೆ ಬಾರಿ ಬಲವಾಗಿ ಬೀಸಿದ ಬಿರುಗಾಳಿ ಬಾಗಿಲು ಕಿಟಕಿಗಳನ್ನು ಅವುಗಳ ತಿರುಗಣಿಗಳಿಂದ ಕಿತ್ತುಹಾಕಿದ್ದನ್ನು, ಪೂರ್ವದ ಕಡೆಯ ಛಾವಣಿಯನ್ನು ಕೆಳಗೆ ಬೀಳಿಸಿದ್ದನ್ನು ಮತ್ತು ಅಡಿಪಾಯವನ್ನು ಬುಡಮೇಲು ಮಾಡಿದ್ದನ್ನು ಗಮನಿಸಲಿಲ್ಲ. ಆಗಲೇ ಅವನಿಗೆ ಗೊತ್ತಾದದ್ದು ಅಮರಾಂತ ಉರ್ಸುಲಾ ತನ್ನ ಸೋದರಿಯಲ್ಲ, ಚಿಕ್ಕಮ್ಮ ಎಂದು. ಅವರು ಒಬ್ಬರನ್ನೊಬ್ಬರು ಅತ್ಯಂತ ಸಂಕೀರ್ಣವಾದ ರಕ್ತ ಸಂಬಂಧದಿಂದ ತಿಳಿದುಕೊಳ್ಳುವುದಕ್ಕಲ್ಲದೆ, ಅವರಿಗೆ ಪ್ರಿಯವಾಗುವ ವಿಚಿತ್ರ ಪ್ರಾಣಿಯ ಹುಟ್ಟು ಅವರ ವಂಶವನ್ನು ನಿರ್ನಾಮಗೊಳಿಸುತ್ತದೆ ಎನ್ನುವುದಕ್ಕಾಗಿ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಣ ಮಾಡಿದ. ಅವ್ರೇಲಿಯಾನೋ ತನಗೆ ಈಗಾಗಲೇ ಚೆನ್ನಾಗಿ ಗೊತ್ತಿರುವ ಸಂಗತಿಗಳಿಗೆ ಸಮಯ ವ್ಯರ್ಥ ಮಾಡಬಾರದೆಂದು ಹನ್ನೊಂದು ಪುಟಗಳನ್ನು ಬಿಟ್ಟು ಮುಂದುವರಿಸಿದಾಗ, ಮಕೋಂದೋಗೆ ಆಗಲೇ ಧೂಳು ಮುತ್ತಿ, ಚಿಂದಿಯಾಗಿ, ಸುಂಟರಗಾಳಿಗೆ ಸಿಲುಕಿತ್ತು. ಅನಂತರ ಅವನು ಆ ಕ್ಷಣದಲ್ಲಿ ಜೀವಿಸುವುದನ್ನು ಅರ್ಥೈಸಿದ. ಜೀವಿಸುತ್ತಿದ್ದಂತೆಯೇ ಅರ್ಥೈಸುತ್ತ, ಮಾತಾಡುವ ಕನ್ನಡಿಯೊಂದನ್ನು ನೋಡುತ್ತಿರುವ ಹಾಗೆ, ಚರ್ಮ ಹಾಳೆಯ ಕೊನೆಯ ಪುಟದ ಬರಹವನ್ನು ಅರ್ಥೈಸುತ್ತ, ತನಗೆ ತಾನೇ ಭವಿಷ್ಯ ಹೇಳಿಕೊಂಡ. ಅನಂತರ ಅವನು ತನ್ನ ಸಾವಿನ ಸಂದರ್ಭ ಮತ್ತು ದಿನಾಂಕಗಳ ಭವಿಷ್ಯವನ್ನು ಅರಿಯುವುದಕ್ಕಾಗಿ ಮತ್ತೆ ಪುಟಗಳನ್ನು ಎಗರಿಸಿದ. ಆದರೆ ಕೊನೆಯ ಸಾಲನ್ನು ತಲುಪುವ ಮುಂಚೆ ತಾನು ರೂಮಿನಿಂದ ಹೊರಗೆ ಹೋಗುವುದಿಲ್ಲವೆಂದು ಅವನಿಗಾಗಲೇ ತಿಳಿದಿತ್ತು. ಏಕೆಂದರೆ ಕನ್ನಡಿಗಳ (ಅಥವಾ ಬಿಸಿಲುಗುದರೆಯ) ಪಟ್ಟಣ ಧೂಳೀಪಟವಾಗುವುದೆಂದು ಹಾಗೂ ಅವ್ರೇಲಿಯಾನೋ ಅರ್ಥೈಸುವುದನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಮನುಷ್ಯರ ನೆನಪಿನಿಂದ ಅಳಿಸಿ ಹೋಗುವುದೆಂದು ಮೊದಲೇ ನಮೂದಿಸಲಾಗಿತ್ತು ಮತ್ತು ಅದರ ಮೇಲೆ ಬರೆದ ಪ್ರತಿಯೊಂದನ್ನು ಅನಾದಿ ಕಾಲದಿಂದ ಮತ್ತು ಎಂದೆಂದಿಗೂ ಮತ್ತೆ ಬರೆಯುವಂತಿರಲಿಲ್ಲ. ಏಕೆಂದರೆ ಒಂದು ನೂರು ವರ್ಷದ ಏಕಾಂತದ ದಂಡನೆಗೆ ಒಳಗಾದ ಜನಾಂಗಕ್ಕೆ ಭೂಮಿಯ ಮೇಲೆ ಮತ್ತೊಂದು ಅವಕಾಶವಿರಲಿಲ್ಲ. +***** +ಮುಗಿಯಿತು +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […] +ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_301.txt b/Kannada Sahitya/article_301.txt new file mode 100644 index 0000000000000000000000000000000000000000..491dcdc6f3f11dd0492f37aaaa986908a1991ce1 --- /dev/null +++ b/Kannada Sahitya/article_301.txt @@ -0,0 +1,814 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪಂಚಮಾಶ್ವಾಸಂ +ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ ಇನ್ನೊಬ್ಬರು ತನ್ನ ಪಾದಗಳಿಷ್ಟಿರಬೇಕು ಎಂದು ಭಾವಿಸುವವನಾದ ಅವನು ಕೊತ್ತಲಿಗಿಗೆ ಮಾಡಿದ ದೊಡ್ಡ ಉಪಕಾರವೆಂದರೆ ಬ್ಯಾಂಕು ಮುಂಜೂರು ಮಾಡಿಸಿದ್ದು. ದಲಿತರು, ಶೂದ್ರರು, ದೇವದಾಸಿಯರು, ರಂಗಕಲಾವಿದರೇ ಬಹುಪಾಲು ವಾಸಿಸುತ್ತಿರುವ ಸೋಮವಾರಪೇಟೆ, ಶನಿವಾರಪೇಟೆ, ಅಂಬೇಡಕರ ನಗರ, ಇಂದಿರಾನಗರ ಇಂಥ ಒಂದೊಂದು ಓಣಿಗೂ ಒಬ್ಬೊಬ್ಬರಂತೆ ಇರುವ ಅಮರ ಅಕ್ಬರ ಅಂಥೋಣಿ ಮುಂತಾದ ಪಿಗ್ಮಿ ಕಲೆಕ್ಟರುಗಳು ಸಂಗ್ರಹಿಸಿ ತಂದು ಕಟ್ಟುವ ಹಣವನ್ನೇ ಸದರಿ ಗ್ರಾಮದ ಸೀನಪ್ಪ, ಯಂಟೇಸಪ್ಪ, ಉಮೇಚಪ್ಪ ಮೊದಲಾದ ಸಿರಿವಂತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದು ಅವರು ಅದನ್ನೇ ಹೆಚ್ಚಿನ ಬಡ್ಡಿ ದರದಲ್ಲಿ ಸೋಮವಾರಪೇಟೆ, ಶನಿವಾರಪೇಟೆ ಮೊದಲಾದ ಕಡೆ ವಾಸಿಸುತ್ತಿರುವ ಶ್ರಮಿಕರಿಗೆ ಸಾಲ ಕೊಡುವುದು. ಹೀಗಾಗಿ ಆ ಬ್ಯಾಂಕು ಬಂದಂದಿನಿಂದ ಬಡವರ ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದೆ. ಅದಕ್ಕಾಗಿ ಶ್ರಮಿಸುವ ಮತ್ತು ದೇಶಾವರಿ ನಗೆಯನ್ನು ಗಾಳ, ದಾಳ ಎರಡೂ ಮಾಡಿಕೊಂಡಿರುವ ಬ್ಯಾಂಕಿನ ಸ್ಟಾಫು ಒಂದೇ ಮರದ ಎರಡು ಕೊಂಬೆ ರೆಂಬೆಗಳಂತಿರುವುದು. ಆ ಮರದ ಕಾಂಡವೇ ಮ್ಯಾನೇಜರು. +ಜವಾನ ಕಂ ಅಟೆಂಡರನಾಗಿರುವ ಓಬಯ್ಯ ಆ ಬ್ಯಾಂಕಿಗೇನೆ ಒಂದು ಹಾರ್ಟ್ ಇದ್ದಂತೆ. ಸೋಮವಾರಪೇಟೆಯ ಎಸ್. ಎಸ್.ಎಲ್.ಸಿ ಪದವಿಯನ್ನು ಏಳನೆ ಅಟೆಂಪ್ಟಿಗೆ ಪಡೆದವನೂ, ಹುಣಸೇಮರದ ಮನೆಯ ಓಬವ್ವ ಅಲಿಯಾಸ್ ಅನಾರ್ಕಲಿಯ ಮೊಮ್ಮಗನೂ ವಿಟಪುರುಷನೊಂದಿಗೆ ನಡೆದ ಮಾರಾಮಾರಿಯಲ್ಲಿ ಎಡಗಾಲಿನ ಮೂರು ಬೆರಳುಗಳನ್ನುಕಳೆದುಕೊಂಡವನೂ, ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್ ಡ್.ರಾಜೇಂದ್ರಗುಪ್ತ ಎಂ.ಬಿ.ಬಿ.ಎಸ್., ಎಂ.ಎಸ್., ಅವರ ಕೈ ಬೆಚ್ಚಗೆ ಮಾಡಿ ಅಂಗವಿಕಲನೆಂದು ಸರ್ಟಿಫಿಕೇಟ್ ಪಡೆದು ಆ ಆಧಾರದ ಮೇಲೆ ನೌಕರಿಗೆ ಸೇರಿದಂಥವನೂ, ಇಲಿಯನ್ನು ಹುಲಿಯನ್ನಾಗಿಯೂ; ಹುಲಿಯನ್ನು ಇಲಿಯಾಗಿಯೂ ಮಾಡುವುದರಲ್ಲಿ ನಿಸ್ಸೀಮನೂ ಆದಂಥ ಅವನು ಮಿರಿಮಿರಿ ಮಿಂಚುವ ಬುಷ್‌ಷರ್ಟ್ ಪ್ಯಾಂಟು ತೊಟ್ಟುಕೊಂಡು ಹುಣಸೆ ಮರದ ಮನೆಯಿಂದ ಹೊರಬಿದ್ದು ಖಲೀನನ ಪಾನ್ ಶಾಪಿನಲ್ಲಿ ಪಡೆದ ತ್ರೀಹಂಡ್ರಡ್ಡನ್ನು ದವಡೆಯಲ್ಲಿ ಪ್ರತಿಷ್ಟಾಪಿಸಿಕೊಂಡು ಶನಿವಾರ ಪೇಟೆಯಲ್ಲಿ ಹತ್ತು ಸಾರಿ ಕೊಟ್ಟೆಲಪ್ಪನ ತೇರು ಬಜಾರದಲ್ಲಿ ಐದುಸಾರಿ, ನಂತರ ಬರುವ ಬಸ್‌ಸ್ಟಾಂಡಿನಲ್ಲಿ ಮೂರು ಸಾರಿ ಪಿಚುಕು ಪಿಚುಕು ಅಂತ ಉಗುಳಿ ಭೂಮ್ತಾಯಿರುಣಾ ತೀರಿಸುತ್ತ, ತೊಂಬೂಲದುಂಡೆಯನ್ನು ಮುನುಸೋಬರ ಮನೆ ಮುಂದಿರುವ ಮಾತ್ಮಾಗಾಂಧಿಯವರ ಕಾಲಬುಡಕ್ಕೆ ಉಗುಳಿ ಹತ್ತೂಕಾಲಿಗೆಲ್ಲ ಬ್ಯಾಂಕು ಸೇರಿಕೊಂಡು ಬರುವವರನ್ನು ಮಾವಂದಿರಂತೆಯೂ, ಹೋಗುವವರನ್ನು ಅಳಿಯರಂತೆಯೂ ಸಂಭೋದಿಸುತ್ತ ಇಡಿ ಬ್ಯಾಂಕಿನಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿರುವನು. +ಮೀಸಲಾತಿ ಆಧಾರದ ಮೇಲೆ ಬಿ.ಎ., ಪಾಸು ಮಾಡಿ ನೌಕರಿಗೆ ಸೇರಿರುವ ಟಿ.ಎಂ.ಕೆ. ವಿಶ್ವೇಶ್ವರನು (ಅಂದರೆ ತೂಲಹಳ್ಳಿ ಮಾದಿಗರ ಕರಿಯಪ್ಪನ ಮಗ ವಿಶ್ವೇಶ್ವರ) ಲಟಿಗಾಪುಟಿಗಾ ಲೂನಾದ ಮೇಲೆ ವಯಾ ಬಡೇಲಡುಕು ಮೂಲಕ ತೂಲ ಹಳ್ಳಿಯಿಂದ ಅಪ್ ಅಂಡ್ ಡೌನು ಮಾಡುತ್ತಿದ್ದರೆ, ಜಮಾತೇ ಇಸ್ಲಾಮಿನ ಹೊಸಪೇಟೆ ವಿಭಾಗದ ಸಂಚಾಲಕರ ಮಗನಾದ ಇಸ್ಮಾಯಿಲು ಮಾದೇದೇವಿ ಮೂಲಕ ಅಂಡ್ ಡೌನ್ ಮಾ‌ಉತ್ತಿರುವನು. ಕುಪ್ಪಿನಕೇರಿ ಲಿಂಗಾಜನೇಯನ (ಹದಿನಾರನೆ ಶತಮಾನದಲ್ಲಿ ಕುಂತಳ ನಾಡಿನ ಪಂಚಗಣಾಧೀಶ್ವರರಾದ ಕೊಟ್ಟೂರಿನ ಕೊಟ್ಟೂರೆಶ್ವರರ, ನಾಯಕನ ಹಟ್ಟಿ ತಿಪ್ಪ್ರುದ್ರಸ್ವಾಮಿ, ಕೂಲಹಳ್ಳಿ ಮುದ್ಧಾನೇಶ, ಅರಸೀಕೆರೆಯ ಕೋಲ ಶಾಂಟೇಶ, ಹರಪನಹಳ್ಳಿ ಕೋಲ ಶಾಂತೆಶರು ಅದೇ ತಾನೆ ಹಾಳಾದ ಹಂಪೆಯಿಂದ ತಂತಮ್ಮ ಕಾರ್ಯಕ್ಷೇತ್ರಗಳಿಗೆ ಹೊರಟು ಹಾದಿ ಮಧ್ಯೆ ಬಂದ ಕುಪ್ಪಿನಕೇರಿ ಗ್ರಾಮದಲ್ಲಿ ತಂಗಿದರು. ತಮ್ಮನ್ನು ಸತ್ಕರಿಸಲೆಂದು ಬಂದ ಗ್ರಾಮಕಾಧಿದೇವತೆಯಾದ ಆಂಜನೇಯನ ಕೊರಳಲ್ಲಿ ಲಿಂಗವಿರದಿರುವುದನ್ನು ನೋಡಿ ಖೇದಗೊಂಡರು. ಲಿಂಗಾಂಗಿಯಲ್ಲದವರಿಂದ ಸತ್ಕಾರ ಸ್ವೀಕರಿಸಲು ನಿರಾಕರಿಸಿದರು. ಆಗ ಬೇರೆ ದಾರಿ ಕಾಣದೆ ಒಪ್ಪಿಕೊಂಡ ಆಂಜನೇಯನಿಗೆ ಲಿಂಗಧಾರಣೆ ಮಾಡಿದರು. ಅಂದಿನಿಂದ ಲಿಂಗಾಂಜನೇಯನೆಂದು ಹೆಸರಾಗಿ ವೀರಶೈವರಿಂದ ಪೂಜಿಸಿಕೊಳ್ಳತೊಡಗಿದನು. ಪ್ರಪಂಚದಲ್ಲಿ ತನ್ನ ಆಂಜನೇಯನೊಂದೇ ಲಿಂಗ ಧರಿಸಿರುವುದೆಂಬ ಹೆಗ್ಗಳಿಕೆಯಿಂದ ಕುಪ್ಪಿನಕೆರಿಯ ಒಂದೊಂದ್ಹೊತ್ತಿಗೂ ಪರದಾಡುತ್ತಿರುವ ಸದ್ಭಕ್ತ ಗಣಂಗಾದಿಗಳು ಬೀಗುತ್ತಿರುವರು) ಅರ್ಚಕನೂ, ಬಿಪಿ‌ಎಮ್ಮೂ, ಮತ್ತಿಸ್ಕೂಲು ಟೀಚರೂ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷರೂ, ಅಸ್ತ್ಮಾ ರೊಗಿಗಳು ಆದಂಥ ಗರಡಿ ಮನೆ ಹನುಮಂಥಯ್ಯನವರ ಪಂಚಮ ಸುಪುತ್ರಿ ಕುಮಾರಿ ಜಿ.ಎಂ. ಶಾಂತಿ ಮೇರಾಲಾಂ ಮೂಲಕ ಅಪ್ ಅಂಡ್ ಡೌನ್ ಮಾಡುತ್ತಿರುವಳು. +ನುಗ್ಗೇಹಳ್ಳಿ ಪೀಠದ ಜಗದ್ಗಿರುಗಳ ಅಂತರಂಗದ ಬಂಟರೆಂದೇ ಖ್ಯಾತರಾಗಿರುವ ಪ್ರಭು ಒಡೆಯರ ಮಠದ ಚಂಬಸ್ಯನವರು ಕೊತ್ತಲಿಗಿಗೆ ಅಪ್ ಅಂಡ್ ದ‌ಊನ್ ಮಾಡಲು ಸೆಕೆಂಡ್ಯಾಂಡು ಬಜಾಜ್ ಸೂಪರು ಮಾಡಿಕೊಡಿರಿವರು. +ರಾಷ್ಟ್ರೀಯ ಸ್ವಯಂ ಸೇವಾ ದಳದ ಕಾರ್ಯಕರ್ತರೂ; ಅತಲ್ ಬಿಹಾರಿ ವಾಜಪೇಯಿಗಳ ಉಗ್ರಾಭಿಮಾನಿಗಳೂ ಆದಂಥ ಗೋವಿಂದಾಚಾರ್ಯರು ಹೀರೋಹೋಂಡಾದ ಮೂಲಕ ಹೊಸಪೇಟೆಯಿಂದ ಅಪ್ ಅಂಡ್ ದೌನ್ ಮಾಡುತ್ತಿರುವರು. ಶ್ರೀಯುತ ಹೆಬ್ರಿಯವರು ಬಾಬ್ರಿ ಮಸೀದಿ ಕೆಡವಲೆಂದು ಅಯೋಧ್ಯೆಗೆ ಹೋಗಿ ಅಲ್ಲಿಂದ ಮಸೀದಿಯ ಇಟ್ಟಿಗೆಯ ಚೂರು ತಂದು ತಮ್ಮ ಮನೆಯ ಮುಂದೆ ಸಾರ್ವಜನಿಕವಾಗಿ ವೀಕ್ಷಣೆಗೆ ಇರಿಸಿದ್ದರು. ನರರೂಪ ರಾಕ್ಷಸನೂ; ಹಿಟ್ಲರನ ಆಂತರಂಗಿಕ ವ್ಯಕ್ತಿಯೂ ಆದಂಥ ಷಿಂಡ್ಲರ್ ಸಮಾಧಿ ಕಡೆ ಯಹೂದಿಗಳು ತಿರಸ್ಕಾರದಿಂದ ನೋಡುತ್ತಿದ್ದರಲ್ಲ ಹಾಗೆಯೇ ರಾಮಜನ್ಮಭೂಮಿ ಕಾರ್ಯಕರ್ತರು ನೋಡಿ ಖುಷಿಪಟ್ಟರು. ಹೆಬ್ರಿಯವರು ಆ ಇಟ್ಟಿಗೆ ತುಂಡನ್ನು ಇಕ್ಬಾಲ್ಕೇರಿಯೊಳಗೆ ಮೆರವಣಿಗೆ ಮಾಡಿಸಿ ಲಾಲಕ್ರಿಷ್ಣ ಅದ್ವಾನಿಯವರ ಗಮನ ಸೆಳೆಯಲು ಪ್ರಯತ್ನಪಟ್ಟರಾದರೂ ಪೊಲಿಸ್ ಅಧಿಕಾರಗಳ ಸಕಾಲಿಕ ಎಚ್ಚರದಿಂದಾಗಿ ಅದು ಸಾಧ್ಯವಾಗಲಿಲ್ಲ. ಹೋದೋರು, ಬಂದೋರಿಗೆಲ್ಲ ತಾವು ತಾವು ಫೋಟೊ ತೋರಿಸುತ್ತ ಉ.ಪ್ರ.ಮು.ಮಂ.ಕಲ್ಯಾಣಸಿಂಗ್ ಯಾದವರ ಜೊತೆ ತೆಗೆಸಿಕೊಂಡ ಈಸ್ಟ್ಮನ್ ಕಲ್ಲರು ತಾವು ಫೋಟೊ ತೋರಿಸುತ್ತ “ನಿಜವಾದ ಮುಖ್ಯಮಂತ್ರಿ ಅಂದ್ರೆ ನೋಡಿ ಮಾರಾಯ್ರೆ… ಅಂಥೋರು ನಮ್ಮ ಮುಖ್ಯಮಂತ್ರಿ ಆದಾಗ ಮಾತ್ರ ಕರ್ನಾಟಕದ ಉದ್ಧಾರ ಸಾಧ್ಯ ಎಂದೋ, ಶ್ರೀರಾಮ ಕರ್ನಾಟಕದಲ್ಲಿ ಹುಟ್ಟಿದ್ದರೆ ಆ ಕಥೆಯೇ ಬೇರೆ ಆಗ್ತಿತ್ತೆಂದೋ ಹೇಳುತ್ತಿದ್ದರು. ಬಾಬ್ರಿ ಮಸೀದಿಯನ್ನೂ, ಮುಸ್ಲಿಮ್ಮರನ್ನೂ ಬಯ್ದವರಿಗೆ ಮಾತ್ರ ಸಾಲ ಮುಂಜೂರುಮಾಡುವರು. ಈ ಕಾರಣದಿಂದಾಗಿ ಹಲ್ಲು ಸಂಧಿಯಲ್ಲಿ ಕಡ್ಡಿ ತೂರಿಸುವುದನ್ನು ಅಬ್ಯಾಸ ಮಾಡಿಕೊಂಡಿರುವ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರಿಗೂ; ಅಲಗಾಡುತ್ತಿರುವ ಮೇಲ್ದವಡೆಯ ಮುಂಬಾಗದ ಹಲ್ಲಿನ ಹಿಂದೂ ಮುಂದೂ ಜಿಹ್ವಾ ಸಂಚಲನ ಮಾಡುವ ಜಮಾತೆ ಇಸ್ಲಾಮಿನ ಔರಸಪುತ್ರ ಇಸ್ಮಾಯಿಲರಿಗೂ ಸದಾ ಎಣ್ಣೆ ಸೀಗೇಕಾಯಿ ಸಂಬಂಧ. ಗಿರಾಕಿಗಳನ್ನೂ, ಜನರನ್ನೂ ಪರಸ್ಪರ ವಿರುದ್ಧ ಎತ್ತಿಕಟ್ಟುವುದರಲ್ಲಿಯೇ ಅರ್ಧಾಯುಷ್ಯ ಕಳೆದಿರುವ ಇವರು ತೋರಿಕೆಗೆ ಸದಾ ಮುಗುನಗುತ್ತಲಿರುವರು. ರಾಜಕೀಯ ಬೆಂಬಲವಿಲ್ಲದಿದ್ದರೆ ಅವರು ಮಥುರೆಯ ಯಾದವರಂತೆ ಪರಸ್ಪರ ಹೊಡೆದಾಡಿಕೊಂಡು ಸಾಯುವರೆ? ಆದರೆ ಸ್ಥಳೀಯ ರಾಜಕಾರಣಿಯಾದ ಗುಲಾಂನಬಿಯ ‘ದು‌ಆ’ ಇಸ್ಮಾಯಿಲರ ಮೇಲೂ, ಕರಣಂ ಸೇತೂ ಮಾಧವಾಚಾರ್ಯ ಹಿರಿಯ ಕಾಂಗ್ರೆಸ್ ಮುಖಂಡರ (ಹರಪನಹಳ್ಳಿಯ ಕರಣಂಗಾರಿ ಓಣಿಯಲ್ಲಿರುವ ಅವರ ಮನೆಯಲ್ಲಿ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರೊಂದಿಗೆ ತೆಗೆಸಿಕೊಂಡಿರುವ ಬ್ಲಾಕ್ ಅಂಡ್ ವೈಟ್‌ಭಾವಚಿತ್ರವನ್ನು ಇಂದಿಗೂ ನೋಡಬಹುದಾಗಿದೆ) ‘ಧೀರ್ಘಾಯುಷ್ಮಾನ್ ಭವ’ ಎಂಬ ಆಶೀರ್ವಾದ ಹೆಬ್ರಿಯವರ ಮೇಲಿರುವುದು. +ಅವರೀರವರನ್ನು ಕೂಳು ನೀರು ದೊರಕದ ಊರಿಗೆ ಎತ್ತಂಗಡಿ ಮಾಡಿಸಿ ಅವರ ಜಾಗದಲ್ಲಿ ವೀರಶೈವ ಜಂಗಮ ಕೋಮಿಗೆ ಸೇರಿದವರನ್ನು ತರಲೋಸುಗ ಶ್ರೀಯುತ ಪಿ.ಎಂ.ಚಂಬಸಯ್ಯನವರು ಜಗದ್ಗುರುಗಳ ಮೂಲಕ ಮಾಡುತ್ತಿರುವ ಪ್ರಯತ್ನ ಇದುವರೆಗೂ ನೆರವೇರಿಲ್ಲ. +ಹದಿನೇಳು ವರ್ಷಗಳಲ್ಲಿ ಹಿಂದೆಯೇ ಋತುಮತಿಯಾಗಿದ್ದು ಅವಿವಾಹಿತೆಯಾಗಿ ಉಳಿದಿರುವ ಕು.ಜಿ.ಎಂ.ಶಾಂತಿಯವರಿರದಿದ್ದಲ್ಲಿ ಆ ಬ್ಯಾಂಕು ಎಂದೋ ಸರಯೂ ನದಿಯ ತಟವಾಗಿರುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ವಿವಾಹವೇ ದುಃಖಕ್ಕೆ ಮೂಲ ಎಂದು ವಾದಿದುವ ಉಗ್ರ ಸ್ತ್ರೀವಾದಿಯಾಗಿರುವ ಆಕೆ ಸ್ಲೀವ್ಲೆಸ್ ಬ್ಲೌಜು ತೊಟ್ಟು; ಹೊಕ್ಕಳ ಮತ್ತು ಕಿಬ್ಬೊಟ್ಟೆ ಕಾಣಿವಂತೆ ಪಾರದರ್ಶಕ ಸೀರೆ ಉಟ್ಟು ಬರುವ ಆಕೆ ಜೂನಿಯರ್ ಸಿಲ್ಕ್ ಸ್ಮಿತಾ ಎಂದೇ ಹೆಸರಾಗಿರುವಳು… ಆಕೆಯಿಂದಾಗಿಯೇ ಸದರೀ ಬ್ಯಾಂಕಿನ ಠೇವಣಿ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆಯಾಗಿರುವುದು. ಎಂಥ ಘೇಂಡಾಮೃಗವೂ ಆಕೆಯತ್ತ ಮುಗುಳುನಗೆ ಚೆಲ್ಲದೆ ಇರದು. ಮೇನೇಜರು ಗೋವಿಂದಾಚಾರ್ಯರೂ; ಇಸ್ಮಾಯಿಲ್; ಚಂಬಸ್ಯ ಈ ಮೂವರು ಈಕೆಯ ಕೃಪಾಕಟಾಕ್ಷಕ್ಕೆ ಒಳಗಾಗಲು ತಂತಮ್ಮ ಜಾತಿಮತ ಸಂಘಟನೆಗಳನ್ನು ಮರೆಯುವರು… ಪತ್ತೆದಾರಿ ಕಾದಂಬರಿಯ ಪುರುಷೋತ್ತಮನಾದ ಓಬಲೇಶನು ಬ್ಯಾಂಕಿನ ವಿದ್ಯಮಾನಗಳಿಗೆ ಉಪ್ಪು, ಹುಳಿ ಖಾರ ಬೆರೆಸಿ ಊರಲ್ಲಿ ಟಾಂ ಟಾಂ ಹೊಡೆಯುವನು. +ಇಂಥ ಸನ್ನಿವೇಶದಲಿಯೇ ಶಾಮಾ ಶಾಸ್ತ್ರಿಯು ಡ್ಯೂಟಿಗೆ ಜಾಯಿನಾದುದು. ಹೇಗೋ ಸ್ಮಾರ್ಥ ಬ್ರಾಹ್ಮಣನಾದ ಶಾಸ್ತ್ರಿಯು ಬಂದು ತನ್ನ ಬಲಗೈಯನ್ನು ಬಲಪಡಿಸಿದಂತಾಯ್ತು ಎಂದು ಮೇನೇಜರು ಬಗೆದನು. +“ಮೇನೇಜರ್ರೂ ಆರೆಸ್ಸೆಸ್ಸು ಕುಳ ಶಾಸ್ತ್ರಿ… ಅಯೋಧ್ಯೆಯನ್ನು ಹೃದಯದಲ್ಲಿಟ್ಕೊಂಡು ಅವನು ಕೆಲಸ ಮಾಡ್ತಿರೋದು ಮ್ಯಾನೇಜ್ಮೆಂಟಿಗೆ ಗೊತ್ತಾಗಿದೆ… ಅವನನ್ನು ಯಾವುದಲ್ಲಾದರೂ ಇರುಕಿಸಿ ಬೆಂಡೆತ್ತಬೇಕೆಂದು ಗೌರ್‍ಮೆಂಟೂ ಕಾಯ್ತಾ ಇದೆ… ಅವನತ್ರ ಸ್ವಲ್ಪ ಹುಷಾರಿಂದ ವರ್ತಿಸು…” ಎಂದು ಇಸ್ಮಾಯಿಲೂ… +ಸ್ಮಾರ್ಥರೆಂದರೆ ಲಿಂಗಾತ್ಯರಿದ್ದಂತೆ… ನೀವೂ ಹರಿಹರರ ನಡುವೆ ಭಿನ್ನ ಇಲ್ಲಾಂತ ಹೇಳ್ತೀರಿ ನಾವು ಇದೆ ಅಂತ ಹೇಳ್ತೀವಿ ಅಷ್ಟೆ… ನೀವು ವೀಭೂತಿ ಹಚ್ತೀರಿ… ನಾವೂ ವೀಭೂತಿ ಹಚ್ತೀವಿ… ಶಿವಭಕ್ತ ರಾವಣನನ್ನು ಕೊಂದ ರಾಮ ಇಂಥಲ್ಲೇ ಹುಟ್ಟಿದ್ದೂಂಥ ಹೇಳ್ತಾನಲ್ಲ ಆ ಮೇನೇಜರು ಅವನೆನಾದ್ರು ಹೋಗಿ ಕೌಸಲ್ಯಮ್ಮನ ಹೆರಿಗೆ ಮಾಡಿಸಿದ್ದನೇನು?… ಅವ್ನೂ ಅಷ್ಟೇ ಆ ಜಮಾತೆ ಇಸ್ಲಾಮಿನ ಇಸ್ಮಾಯಿಲೂ ಅಷ್ಟೆ… ಅವರಿಬ್ರು ಒಂದು ಹಾವಿನ ಎರಡು ತಲೆಗಳಿದ್ದಂತೆ… ಅವರಿಬ್ರನ್ನು ಪೋಲೀಸ್ರು ಇಂದಲ್ಲ ನಾಳೆ ಹಿದ್ಕೊಂಡು ಹೋಗಿ ಒದಿತಾರೆ ನೋಡ್ತಿರು…. ಅದ್ರಿಂದ ಅವರಿಬ್ರ ಜೊತೆ ಸಲಿಗೆ ಬೆಳಸಬೇಡ… ಅದೇನಿದ್ರು ನನ್ ಜೊತೆ ಬೆಳೆಸು… ವಿಭೂತಿ ಹಚ್ಚೋ ನಾವಿಬ್ರು ಎಂದಿದ್ರು ಒಂದೆ ಏನಂತೀ?ಆ?” ಎಂದು ಪಿ.ಎಂ.ಚಂಬಸ್ಯನೂ ಶಾಸ್ತ್ರಿಯ ಕಿವಿಯಲ್ಲಿ ಊದತೊಡಗಿದರು. +ಶಾಮಾಶಾಸ್ತ್ರಿ ಈ ಮುವ್ವರನ್ನು ಒಂದು ಪಗಡಿಯಲ್ಲೂ; ಜಿ.ಎಂ.ಶಾಂತಿಯ ಸ್ಲೀವ್ ಲೆಸ್ ತೋಳನ್ನು ಇನ್ನೊಂದು ಪಗಡೆಯಲ್ಲೂ ಇಟ್ಟು ತೂಗತೊಡಗಿದ. ಆಕೆಯ ತುಂಬುದೋಳಿನ ಮೇಲೆ ಒಂದರ ಕೆಳಗೆ ಒಂದರಂತೆ ಇದ್ದ ಹಳೆ ಇಪ್ಪತ್ತು ಪೈಸೆದಷ್ಟು ಅಗಲದ ಮೈಲಿ ಕಲೆಗಳು ಆತನ ಹೃದಯ ರಹಸ್ಯ ಸ್ಥಾವರದ ಮೇಲೆ ಧಾಳಿ ಮಾಡತೊಡಗಿದವು. +“ನಿಮ್ಮ ತೋಳಿನ ಮೇಲೆ ಒಂದು ಕವಿತೆ ಬರೆಯುವ ಆಸೆಯಾಗಿದೆ… ಅದನ್ನು ಮುಟ್ಟಲು ಆಸ್ಪದ ಕೊಟ್ಟು ಕವಿತೆಯನ್ನು ಸದೃಢಗೊಳಿಸುವಿರಾ?” ಎಂದು ಕೇಳುವ ಪ್ರಯತ್ನ ದಿನಂಪ್ರತಿ ಮಾಡತೊಡಗಿದ… ತುಂಬ ಗುಟ್ಟಾಗಿ… +ತೋಳಿಲ್ಲದ ರವಿಕೆ ಹೆಣ್ಣೆ +ಕುಣಿಯುವ ನವಿಲಿನ ಕಣ್ಣೆ +ಹೃದಯದಿ ಗೀತೆಯ ರಚಿಸು +ಅರಳಲಿ ಬದುಕಿನ ಸೊಗಸು +…ಎಂಬಂಥ ಚೌಪದಿ ಪದಿಯನ್ನು ರಚಿಸಿ ‘ಶ್ಯಾಂ’ ಎಂಬ ಸಂಕ್ಷಿಪ್ತ ನಾಮದಿಂದ ಕಳಿಸಿದ ಅದು ಜನ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಯುವಕರ ಗಮನ ಮಾತ್ರ ಸೆಳೆಯಿತು. ಅವರು ಅಲ್ಲಲ್ಲಿ ಗಟ್ಟಿಯಾಗಿ ಹಾಡಿಕೊಂಡರು. ಗೋಡೆಗಳ ಮೇಲೂ ಬರೆದು ಖುಷಿಪಟ್ಟರು. ತಿಂಗಳ ಭವಿಷ್ಯ ಓದುವ ಪ್ರೌಡರ ಗಮನವನ್ನು ಅದು ಸೆಳೆಯಲಿಲ್ಲ. ಸೆಳೆದರೂ ಪೋಲಿ ಪದ್ಯ ಎಂದುಕೊಂಡರು… +ಆ ಹನಿಗವಿತೆ ಪ್ರಕಟಗೊಂಡ ತರುಣದಲ್ಲಿ ಶಾಸ್ತ್ರಿಗೆ ಸಂತೋಷವಾಯಿತಾದರೂ ಅದು ಅಲ್ಪಾಯುಷಿಯಾಗಿತ್ತು. ‘ಶ್ಯಾಂ’ ಎಂಬುದರ ಬದಲು ಶಾಮಾಶಾಸ್ತ್ರಿ ಎಂದು ಬರೆದು ಕಳುಹಿಸಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಕಾವ್ಯದ ಬಗ್ಗೆ ಯಾವುದೇ ಆಸಕ್ತಿ ಉಳಿಸಿಕೊಂಡಿರದಿದ್ದ ಶಾಂತಿ ಆ ಕಡೆ ತಿರುಗಿ ಸಹ ನೋಡಲಿಲ್ಲ… +ಆದರೆ ಶಾಮ ನಿರಾಶನಾಗಲಿಲ್ಲ… ತೋಳಿಲ್ಲದ ರವಿಕೆ ಕುರಿತು ಯಶಸ್ವಿಯಾದ ಚೌಪದಿಗಳನ್ನು ರಚಿಸುವುದರಲ್ಲಿ ಪಳಗಿದ. ದಿನಕ್ಕೊಂದರಂತೆ ಬರೆಯತೊಡಗಿದ. ಅದೂ ಯಾರಿಗೂ ಕಾಣದಂತೆ… ಮುಖ್ಯವಾಗಿ ಟಾಯ್ಲೆಟ್ಟಿಗೆ ಹೋದಾಗ ಚೌಪದಿಗಳು ಮೊಳೆಯತೊಡಗಿ ಮಲಗಿದ ಸ್ವಲ್ಪ ಹೊತ್ತಿಗೆಪೂರ್ಣ ರೂಪ ಪಡೆಯತೊಡಗಿದವು… ಹೊತ್ತಿಲ್ಲದ ಗೊತ್ತಿಲ್ಲದ ಹೊತ್ತಿನಲ್ಲಿ ಎದ್ದು ಡೈರಿಯಲ್ಲಿ ಬರೆದಿಟ್ಟುಕೊಂಡುಬಿಡುತ್ತಿದ್ದ. +ಇದೇ ತೋಳಿಲ್ಲದ ರವಿಕೆಯ ಉಪಾಸನೆಯಿಂದಾಗಿಯೇ ಅವನು ಅನಸೂಯಾ ತೋಳಿಲ್ಲದ ರವಿಕೆ ತೊಡುವುದನ್ನು ಅಭ್ಯಾಸ ಮಾಡಿಕೊಂಡಿರುವಳೋ ಇಲ್ಲವೋ ಎಂದು ಯೋಚಿಸಿ ಬೆಂಗಳೂರಿಗೆ ಹೋಗಲು ದಾರಿ ಮಾಡಿಕೊಟ್ಟಿತು. ಎಂದೂ ಊಹಿಸಬಹುದು. +ಇಂಥ ಚೌಪದಿಗಳ ರಚನಾ ಚಟದಿಂದಾಗಿ ಅವನು ಯಾವ ಕಡೆಗೂ ವಾಲದ ನಿಟ್ಟನೆ ನಿಟಾರಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡ. ಯಾರ ಜೊತೆಗೂ ಹೆಚ್ಚಿಗೆ ಬೆರೆಯುತ್ತಿರಲಿಲ್ಲ ನೀರಲ್ಲಿನ ತುಪ್ಪದ ಹನಿಯಂತೆ ಮಾತಾಡಿದರೆ ಹೋಯ್ತು, ಮುತ್ತು ಹೊಡೆಯದರೆ ಹೋಯ್ತು ಎಂಬ ಗಾದೆ ಮಾತಿನ ಸಮರ್ಥಕನಂತೆ ಇದ್ದುಬಿಡುತ್ತಿದ್ದ. ತಾನಾಯಿತು, ತನ್ನ ಕೆಲಸವಾಯಿತು. ಯಾವುದೋ ಒಂದು ಬಸ್ಸು ಏರುತ್ತಿದ್ದ. ಸಕಾಲಿಕವಾಗಿ ತಲುಪುತ್ತಿದ್ದ. ಕೆಲಸ ಮಾಡುವ ನಡುವೆ ಓರೆಗಣ್ಣಿನಿಂದ ಶಾಂತಿಯ ಸ್ಲೀವ್ ಲೆಸ್ ರವಿಕೆ ಕಡೆ ನೋಡುತ್ತಿದ್ದ. ಆಕೆ ನೋಡಿದೊಡನೆ ಮುಖ ತಗ್ಗಿಸಿ ಜಲಜಲ ಬೆವೆಯುತ್ತಿದ್ದ. ಯಾರು ಏನು ಕೇಳಿದ್ರು, ಹೇಳಿದ್ರು ‘ಎಸ್’ ಎಂತಲೋ ‘ಆಯ್ತು’ ಎಂತಲೋ ಅಂತಿದ್ದ. ‘ನೋ’ ಅಥವಾ ‘ಇಲ್ಲ’ ಎಂಬ ಶಬ್ದ ಅವನ ಸ್ಮೃತಿಪಟಲದಲ್ಲೇ ಇರಲಿಲ್ಲ. ಲಂಚ್ ಅವರ್‍ನಲ್ಲೂ ಅಷ್ಟೆ. ಎಲ್ಲರೂ ಒಂದು ಕಡೆ, ಅವನು ಕೂಡುತ್ತಿದ್ದುದೇ ಮತ್ತೊಂದು ಕಡೆ… ಯಾರೊಬ್ಬರ ಟಿಫಿನ್ ಬಾಕ್ಸ್‌ಗಳ ಕಡೆ ಅಪ್ಪಿತಪ್ಪಿ ಇಣುಕಿ ನೋಡುತ್ತಿರಲಿಲ್ಲ. ತನ್ನ ಟಿಫಿನ್ ಬಾಕ್ಸ್‌ನಲ್ಲಿಣುಕಲು ಯಾರಿಗೂ ಆಸ್ಪದ ಕೊಡುತ್ತಿರಲಿಲ್ಲ… ಅಯೋಧ್ಯೆಯಲ್ಲಿ ಚಳಿ ತಾಳಲಾರದೆ ಗೋವಿಂದಾಚಾರ್ಯ ಅಮೇಧ್ಯ ತಿಂದ, ಮದ್ಯ ಕುಡಿದ ಎಂಬ ಸುದ್ದಿ ಓಬಲೇಶನ ಮೂಲಕ ಹಬ್ಬಿದ್ದ ಕಾರಣದಿಂದ ಅವನು ದೂರ ಇರುತ್ತಿದ್ದ. ಇಸ್ಮಾಯಿಲನದಂತೂ ಇನ್ನೊಂದು ಕರ್ಮ. ಯಾವುದೇ ಪ್ರಾಣಿಯ ಮಾಂಸ ತಿಂದರೂ ಅವನ ಮೈತುಂಬ ತಿಂಡಿ ತುರಿಕೆ ಅಲರ್ಜಿ, ಚಂಬಸ್ಯವರಂತೂ ಅಪ್ಪಟ ಸಸ್ಯಾಹಾರಿಯಾಗಿದ್ದರೂ ಮಾಂಸ ತಿನ್ನುತ್ತಿರುವಂಥ, ಮದ್ಯ ಕುಡಿಯುತ್ತಿರುವಂಥ, ಕನಸುಗಳನ್ನು ಕಾಣುತ್ತಿದ್ದರು. ಅಂಗ ಸೌಷ್ಟವ ಕಾಪಾಡಿಕೊಳ್ಳುವ ನಿಮಿತ್ತ ಶಾಂತಿಯವರ ಬಾಕ್ಸಿನಲ್ಲಿ ಹಸೀತರಕಾರಿಯೇ ಹೆಚ್ಚಿನ ಪ್ರಮಾಣದಲ್ಲಿರುತ್ತಿತ್ತು. ಆಕೆ ತುಟಿಗೆ ಅಂಟಿಸದೆ ತಿನ್ನುತ್ತಿದ್ದಾಗ ಅವರೆಲ್ಲರಂತೆ ವಕ್ಶಸ್ಥಳವನ್ನು ನೋಡುವ ಧೈರ್ಯ ಶಾಮಣ್ಣ ಮಾಡುತ್ತಿರಲಿಲ್ಲ… ಬೇರೆ ಯಾರೊಂದಿಗೂ ಮಾತಾಡುತ್ತಿರಲಿಲ್ಲ… ಮಾತಾಡುತ್ತಿದ್ದುದೂ ಎಷ್ಟು ಬೇಕೋ ಅಷ್ಟು ಹಾಲಿಗೆ ಹೆಪ್ಪು ಬೆರೆಸಿದಂತೆ. ಆದ್ದರಿಂದ ಅವರೆಲ್ಲರು ಅವನಿಗೆ ‘ಗುಮ್ಮನ ಗುಸುಗ’ ಎಂದು ಬಿರುದು ಕೊಟ್ಟಿದ್ದರು. +ಮಿತಭಾಷಿ ‘ಗುಮ್ಮನ ಗುಸುಗ’ ಮುಂದೊಂದಿನ ತನ್ನ ವಿವಾಹ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಹಂಚಿದ. ಮುಹೂರ್ತಕ್ಕೆ ಮೊದಲೆ ಹೋಗಿ ಮುಯ್ಯಿ ಮಾಡಿ ಶುಭಕೋರಿ ಬಂದರು. ಗುಮ್ಮನ ಗುಸುಗನ ಮಧುಚಂದ್ರಕ್ಕಾಗಲೀ; ತಾತನ ಶವಸಂಸ್ಕಾರಕ್ಕಾಗಲೀ; ಶ್ರಾದ್ಧ ಕಾರ್ಯಗಳಿಗಾಗಲೀ ಮೇನೇಜರ್ ಹೆಬ್ರಿ ಗೋವಿಂದಾಚಾರ್ಯರು ಸಾಕಷ್ಟಿ ರಜೆಯನ್ನು ಮುಂಜೂರು ಮಾಡಿದರಲ್ಲದೆ, ಆಗಾಗ್ಗೆ ಹಣ ಸಹಾಯ ಮಾಡಿದರು. ಎಲ್ಲ ಮುಗಿಸಿಕೊಂಡು ಬಂದ ಗುಮ್ಮನ ಗುಸುಗ ತನ್ನ ಜೀವನದಲ್ಲಿ ಯಾವೊಂದು ಮಹತ್ವದ ಘಟನೆ ನಡೆದೇ ಇಲ್ಲವೆಂಬಂತೆ ಇದ್ದುಬಿಟ್ಟ. ಯಾರಾದರೂ ಮಾತಾಡಿಸಿದರೆ ಹ್ಹೂಂ… ಹ್ಹಾಂ… ಅಷ್ಟೇ. ಜಿ.ಎಂ. ಶಾಂತಿಯ ಸ್ಲೀವ್‌ಲೆಸ್ ಬ್ಲೌಜು ಕೂಡಾ ಆಕರ್ಶಣೆ ಕಳೆದುಕೊಂಡಿತ್?. ತನ್ನ ತೋಳೇ ಆಕರ್ಷಣೆ ಕಳೆದುಕೊಂಡಿರುವುದೋ ಎಂಬ ಅನುಮಾನ ಬಂದು ಕು.ಶಾಂತಿ ಒಳಗೊಳಗೆ ಸಂಕಟಪಡ ತೊಡಗಿದಳು… ಶಾಸ್ತ್ರಿಯ ಸಿಂಪ್ಲಿಸಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕಾವನ ಗಮನ ಸೆಳೆಯಲು ಪ್ರಯತ್ನ ಮಾಡಿದಳು. ಕೊನೆಗೂ ಸಾಧ್ಯವಾಗದಿದ್ದಾಗ ಹಾಳು ಬಾವಿಗೆ ಬೀಳು ಎಂದು ತನ್ನ ಪಾಡಿಗೆ ತಾನು ಇದ್ದುಬಿಟ್ಟಳು. +ಅವರಾರಿಗೂ ಅರ್ಥವಾಗದ ಸಂಕಟವನ್ನು ಶಾಸ್ತ್ರಿಯು ಅನುಭವಿಸುತ್ತಿದ್ದ. ಬದುಕಿನ ಕ್ಷಣ ಭಂಗುರಕ್ಕೆ ಕನ್ನಡಿ ಹಿಡಿಯುವ ಸಂಕಟವದು. ಬಲವಂತ ಸಂಭೋಗಕ್ಕೆ ಸಮನಾದ ಸಂಕಟವದು. ಆ ಸಂಕಟ ಕುರಿತು +ಸಂಕಟ ಸಂಕಟ ಬಾಳೆಲ್ಲ ಸಂಕಟ +ಬದುಕಿಗೆ ಹೆಂಡತಿಯೆಂಬುದು ಕಂಟಕ +ಸಂಸಾರವೆಂಬುದು ಒಣರೊಟ್ಟಿ ಕಡಿದಂತೆ +ಕೊರೆವ ಚಳಿಯಲ್ಲಿ ತಣ್ಣೀರೊಳಗೆ ಮಿಂದಂತೆ +…ಎಂದು ಡೈರಿಯಲ್ಲಿ ಬರೆದುಕೊಂಡ… ಅದು ಅವನಿಗಷ್ಟೇ ಗೊತ್ತು…! +ಯಾರಿಗೂ ಹೇಳದಿದ್ದರೂ ಆ ಸಂಕಟವನ್ನು ಅವನ ಮುಖದ ನಿರಿಗೆಗಳು ಪ್ರಕಟಿಸದೆ ಇರುತ್ತಿರಲಿಲ್ಲ. ಅಲ್ಲದೆ ಕೊತ್ತಲಿಗೆ ಏನು ಕೊಟ್ಟೂರಿಗೆ ದೂರದ ಗ್ರಾಮವಾಗಿರಲಿಲ್ಲ… ಕೊಟ್ಟೂರಿನಲ್ಲಿ ಹೂಸು ಬಿಟ್ಟರೆ ಕೊತ್ತಲಿಗಿ ಗ್ರಾಮದವರು ಮೂಗು ಮುಚ್ಚಿಕೊಳ್ಳುವರು. ಗುಲಾಂನಬಿ ಕೆಮ್ಮಿದರೆ, ಸೋಮವಾರಪೇಟೆಯಲ್ಲಿ ಮುಲುಕಿದರೆ ಕೊಟ್ಟೂರಿನಲ್ಲಿ ಸದ್ಗೃಹಸ್ಥರು ಹ್ಹಾಹಾಽಽ ಎಂದು ಉದ್ಗರಿಸುವರು… +ಆ ದಿನ ಲಂಚ್ ಅವರಿನಲ್ಲಿ ತನ್ನ ಮೂಲೆ ಅಲಂಕರಿಸಿದ್ದ ಶಾಮಣ್ಣ ತಲೆತಗ್ಗಿಸಿ ಕೂತಿದ್ದ. ಕೆಟ್ಟದಾಗಿ ಹಸಿದಿದ್ದ. ಹಸಿವೆಗಿಂತಲೂ ಭಯಂಕರವಾದುದು ತಾಯಿ ಹೆಂಡತಿ ನಡುವಿನ ಜಗಳ. ಅವರು ಪರಸ್ಪರ ಎಸೆಯುತ್ತಿದ್ದ ಮಾತುಗಳು ತಲೆತಿನ್ನತೊಡಗಿದವು. ದೇಹದ ಬಿಳಿ ಮತ್ತು ಕೆಂಪು ರಕ್ತ ಕಣಗಳು ಕ್ರಿಯಾಶೂನ್ಯವಾಗಿದ್ದವು. ಯಾರನ್ನೋ ನೆನಪಿಸಿಕೊಂಡರೆ ಯಾರೋ ನೆನಪಾಗತೊಡಗಿದರು… ಭಯವಾಯಿತು… ಕಣ್ಣಲ್ಲಿ ನೀರು ಒತ್ತರಿಸಿ ಬಂದು ಹನಿಹನಿಯಾಗಿ ಧುಮ್ಮಿಕ್ಕಿದವು. +ಶಾಮಣ್ಣ ಯಾರಿಗೂ ಗೊತ್ತಗದಂತೆ ಅಳುತ್ತಿರುವುದು ಓಬಳೇಶ ಪತ್ತೆ ಹಚ್ಚಿದ. ಶಾಸ್ತ್ರಿಗೂ ಅಳಲಿಕ್ಕೆ ಬರ್‍ತದೆ ಎಂದು ಟಾಂಟಾಂ ಸಾರಿದ. ಅದನ್ನು ಕೇಳಿ ಕೆಲವರು ನಕ್ಕರು. ಆದರೆ ಸಹೋದ್ಯೋಗಿಗಳು ನಗಲಿಲ್ಲ… ಅಳಲಿಕ್ಕೇನಾಗಿದೆ ಈ ಹೊಸ ಮದು ಮಗನಿಗೆ… ತಾವ್ನಾದದ್ರು ಇವನ ಪಾಲಿಗೆ ಸತ್ತು ಹೋಗಿದ್ದೀವಾ? ತಮ್ಮ ಬಳಿ ಹೇಳಲಿಕ್ಕಾಗದಂಥ ಯಾವ ಸಂಕಟವು ಇವನನ್ನು ತಿನ್ನುತ್ತಿರುವುದು! ಧಾವಿಸಿದರು ಅವನ ಬಳಿಗೆ… ಚಂಬಸಯ್ಯ ಅವನ ಮುಖ ಮೇಲೆತ್ತಿಸಿದ. ಇಸ್ಮಾಯಿಲ್ ಕರವಸ್ತ್ರದಿಂದ ಕಣ್ಣೊರೆಸಿದ… ಶಾಂತಿ ಲೊಚಗುಟ್ಟಿದಳು… “ರ್ರೀ… ಯಾರಾದ್ರು ಅವರ್‍ನ ಕರ್ಕೊಂಡು ಹೋಗಿ ತಿಂಡಿ ಕೊಡಿಸಿಕೊಂಡು ಬರಬಾರದೆ” ಎಂದರು ಮೇನೇಜರು… +ಆಗೋದೆಲ್ಲ ಆಯಿತು. ಎದೆಯೊಳಗೆ ಸಮಾಧಾನದ ತಂಗಾಳಿ ಬೀಸಿತು. ದೇಹ ಮನಸ್ಸು ಹಗುರಾಯಿತು. ಶಾಸ್ತ್ರಿ ತಾನು ಕೊತ್ತಲಿಗಿಯಲ್ಲಿ ಸಂಸಾರ ಹೂಡಬೇಕಾಗುವ ಅನಿವಾರ್ಯತೆ ಕುರಿತು ಕೊನೆಗೂ ಹೇಳಿದ. +ಅದನ್ನು ಕೇಳಿ ಅವರೆಲ್ಲರು ಹ್ಹಾಽಽ ಎಂದು ಉದ್ಗರಿಸಿದರು. +ಊರಿಗೆ ಬಂದವರ ಪೈಕಿ ಒಬ್ಬರಾದರೂ ನೀರಿಗೆ ಬಂದರಲ್ಲ… +ಓಬಳೇಶ ನಗಾಡಿದ. ಅವನ ಅಂಗಿಯ ಪಾರದರ್ಶಕತೆ ಆ ನಗುವನ್ನು ಮರೆಮಾಚಿತು. +* +* +* +ಶಾಮಣ್ಣ ಕೊತ್ತಲಿಗಿಯಲ್ಲಿ ಮನೆ ಮಾಡುವನೆಂದೂ; ಅದರಲ್ಲಿ ತನ್ನ ಹೊಸ ಹೆಂಡತಿಯನ್ನು ತಂದು ಸಂಸಾರಹೂಡಲಿರುವನೆಂದೂ ಈ ಮೂಲಕ ಹಲವಾರು ದಶಕಗಳಿಂದ ತಮ್ಮ ಗ್ರಾಮಕ್ಕೆ ವಕ್ಕರಿಸಿದ ಅಪ ಶೃತಿ, ಅಪನಿಂದೆಗಳು ದೂರವಾಗುವುದರ ಮಂಗಳಕರ ಸೂಚನೆ ಎಂದು ಓಬಳೇಶನು ಕಂಡಕಂಡವರಿಗೆಲ್ಲ ಹೇಳುತ್ತ ಹೋಗಿ ಗ್ರಾಮದ ಮೂಲನಿವಾಸಿಗಳು ಸಮಾಧಾನದ ಉಸಿರು ಬಿದಲಿಕ್ಕೆ ಕಾರಣನಾದನು. +ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಶಾಮಾ ಶಾಸ್ತ್ರಿ ತಮ್ಮ ಗ್ರಾಮದಲ್ಲಿ ಮನೆ ಮಾಡುವುದು ಶುಭಸೂಚಕವೆಂದೇ ಎಲ್ಲರು ಭಾವಿಸಿದರು. ಸದ್ಗೃಹಸ್ತ ಕಲ್ಪನೆಯೇ ಅಪರೂಪವಾಗಿದ್ದಂಥ ಗ್ರಾಮವದು. ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದರೂ ಒಂದೇ ಒಂದು ಜಿನತತ್ವವು ಕೇಳಲು ಸಾಧ್ಯವಿಲ್ಲದಂಥ ಗ್ರಾಮವದು. ಕದಂಬ, ಚಾಲುಕ್ಯರ ಶಿಲ್ಪ ಶಾಸನಗಳೊಂದೇ ಅಲ್ಲದೆ ವಿಜಯನಗರದ, ಚಿತ್ರದುರ್ಗದ, ಹೈದರಾಲಿ ಟಿಪ್ಪೂಸುಲ್ತಾನ ಕಾಲದ ಶಿಲ್ಪಾವಶೇಷಗಳು ಗ್ರಾಮದ ಒಳಹೊರಗೆ ಚೆಲ್ಲಾಪಿಲ್ಲಿಯಾಗಿರುವುವು. ಗುಡೇಕೋಟೆ, ಜರ್ಮಲಿ, ಹರಪನಹಳ್ಳಿ ಮೊದಲಾದ ಪಾಳೆಪಟ್ಟುಗಳ ಅಧೀನದಲ್ಲಿದ್ದಂಥ ಗ್ರಾಮವದು. ದಕ್ಷಿಣ ಭಾರತದ ಪ್ರಾಚೀನ ಜೈನ ಕೇಂದ್ರವೆಂದು ಹೆಸರು ಪಡೆದಿದ್ದ ಕೋಗಳಿ, ಹಡಗಲಿ, ಕೊಪ್ಪಳಗಳೇನು ಸದರಿ ಗ್ರಾಮಕ್ಕೆ ದೂರವಿಲ್ಲ… ಆದರೂ ಈ ಗ್ರಾಮದಲ್ಲಿ ಜೈನಮತದ ಒಂಚುರು ನೆರಳು ಸಹ ಇಲ್ಲ. +ರಾಜಾಸ್ಥಾನದ ಸುಡುಸುಡು ಮರುಭೂಮಿಗೆ ಬೇಸತ್ತು ಮಾರ್ವಾಡಿಗಳು ಗುಂಪುಗುಂಪಾಗಿ ಎಲ್ಲ ಗ್ರಾಮಗಳನ್ನು ಸೇರಿಕೊಂಡರಾಗಲೀ ಸದರಿ ಗ್ರಾಮವನ್ನು ಮಾತ್ರ ಸೇರಿಕೊಳ್ಳಲಿಲ. ಫೂಕ್‌ಚಂದ್ ಅಮೃತ್‌ಲಾಲ್ ಎಂಬ ಮಾರ್ವಾಡಿಯು ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮ ಸೇರಿಕೊಂಡು ಜವಳಿ ವ್ಯಾಪಾರ ಆರಂಭಿಸುವುದರ ಜೊತೆಗೆ ಬಡ್ಡಿ ವ್ಯಾಪಾರವನ್ನೂ ಶುರುಮಾಡಿದ್ದುಂಟು. ಗ್ರಾಮಸ್ಥರು ಕೂಡ ಅನ್ಯೋನ್ಯವಾಗಿಯೇ ಇದ್ದರು. ಸ್ವಾತಂತ್ರ್ಯ ಬಂದ ಎರಡನೇ ವರ್ಷದಲ್ಲಿ ಏನಾಯಿತೋ ಏನೋ? ಸೋಮವಾರಪೇಟೆಯ ವಾಲ್ಮೀಕಿ ಜನಾಂಗದವರು ರಾತ್ರೋರಾತ್ರಿ ಆ ಮಾರ್ವಾಡಿ ಮನೆ ಮೇಲೆ ಕ್ರೂರವಾಗಿ ಧಾಳಿ ಮಾಡಿದರು. ಇದರಿಂದ ತತ್ತರಿಸಿ ಹೋಯಿತು ಆ ಅಹಿಂಸಾವಾದಿ ಕುಟುಂಬವು. ಆ ಕುಟುಂಬದ ಸಮಸ್ತರನ್ನು ದಾರುಣವಾಗಿ ಕೊಲೆ ಮಾಡಿ ಅವರ ಹೆಣಗಳನ್ನು ಸಾಲು ಮರಗಳಿಗೆ ನೇತು ಹಾಕಿದರು… ಎಂಬುದು ಒಂದು ವರ್ಗದವರ ಅಂಬೊಣ. +ಸಂಡೂರು ಪ್ರಾಂತದ ದಟ್ಟ ಅರಣ್ಯಗಳಿಂದ ಶ್ರೀಗಂಧದ ಲೂಟಿ ಮಾಡಿ ಪೋಲಿಸ್ ವ್ಯವಸ್ಥೆಯು ತಲೆ ತಿನ್ನುತ್ತಿದ್ದ ಬೋಳುತಲೆ ದುರುಗಪ್ಪನು ಈ ಗ್ರಾಮದವನೆ, ಸ್ವಗ್ರಾಮದಲ್ಲೊಂದೇ ಅಲ್ಲದೆ ಮಲಮೂತ್ರ ಮೈಥುನ ನಾಗರೀಕ ದಾಟಿಯಲ್ಲಿ ಮಾಡಲರಿಯದ, ದೇಹದ ಮುಖ್ಯ ಭಾಗವನ್ನು ಸರಿಯಾದ ಬಟ್ಟೆ ಬರೆಯಿಂದ ಮುಚ್ಚಿಕೊಳ್ಳಲರಿಯದ, ಅಡುಗೆ ಮಾಡಲರಿಯದ, ಉಂಡಕೂಳನ್ನು ಅರಗಿಸಿಕೊಳ್ಳಲರಿಯದ ಜನರೇ ತುಂಬಿರುವ ಗೊಲ್ರಟ್ಟಿ, ಮಾದೇಪ್ರ, ಜರುಮಲಿ, ಗುಂಡುಮುಳುಗೇ ಮೊದಲಾದ ಕುಗ್ರಾಮಗಳಿಂದ ಐವತ್ತು ನೂರು ರೂಪೈಗೊಂದರಂತೆ ಹೆಣ್ಣುಗಳನ್ನು ಕೊಂಡು ಪೂನಾ ಬಾಂಬೆಗಳಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ ಧನಕನಕ ಸಂಪಾದಿಸಿ ರಾಷ್ಟ್ರೀಯ ಹೆದ್ದಾರಿಗಂಟಿಕೊಂಡಂತೆ ನಿಪ್ಪಾಣಿ ಬಳಿ ರಾಜ್ ವಿಹಾರ್ ಹೋಟೆಲ್ ಕಟ್ಟಿಸಿಕೊಂಡು ಚಿನ್ನದ ಚಮಚೆಯಿಂದ ಫ್ರೂಟ್ಸಾಲಾ ತಿಂದು ಹಂಸತೂಲಿಕಾ ತಲ್ಪದ ಮೆಲೆ ಮಲಗುತ್ತಿರುವ ಅಂಬುಜಾಕ್ಷಿ ಅಲಿಯಾಸ್ ತುಂಬರಗುದ್ದಿ ಚವುಡವ್ವನ ಸ್ವಾಸ್ತಿ ಸದರೀ ಗ್ರಾಮವೇ. ಇಂಥ ಅನೇಕ ವಿಧ್ವಂಸಕ ದೃಶ್ಯಾವಳಿಗಳ ತವರೆನಿಸಿಕೊಂಡದ್ದು ಸ್ವಾತಂತ್ರ್ಯಾ ನಂತರವೇ ಎಂಬುದು ಗಮನಾರ್ಹ ಸಂಗತಿ. +ವಿಜಯನಗರದ ಪತನಾನಂತರ ವಿಜಯನಗರದಿಂದಲೂ; ಮೈಸೂರು ಪ್ರಾಂತ ಪತನಾ ನಂತರ ಮೈಸೂರು ಪ್ರಾಂತದಿಂದಲೂ ಹರಪನಹಳ್ಳಿ ಪತನಾ ನಂತರ ಹರಪನಹಳ್ಳಿ ಕಡೆಯಿಂದಲೂ; ಹೀಗೆ ಚಿತ್ರದುರ್ಗ, ಸೀರ್ಯ, ಬಿಜಾಪುರ, ಗೋಲ್ಕೊಂಡಾ ಪ್ರಾಂತಗಳಿಂದ ಇತಿಹಾಸ ಪ್ರಸಿದ್ಧ ಜಟ್ಟಿಗಳೂ, ಸಂಗೀತಗಾರರೂ; ರಂಗ ನಟರೂ, ನಟಿಯರೂ ತಂಡೋಪತಂಡವಾಗಿ ಹರಿದು ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟರು ಎಂದು ಈ ಕುರಿತು ಮಹಾ ಸಂಶೋಧನಾ ಪ್ರಬಂಧ ಮಂಡಿಸಿರುವ ಡಾ. ಅಭಿಷೇಕ್ ಗೋಡ್ಲೆಯವರು ಅಭಿಪ್ರಾಯಪಟ್ಟಿರುವರು. ಉದರಂಭರಣಕ್ಕಾಗಿ ಪೈಲ್ವಾನರಾಗಲೀ; ಯಾರಾಗಲೀ ಒಳ್ಳೆಯದೂ ಮಾಡಿರಬಹುದು ಹಾಗೇ ಕೆಟ್ಟದ್ದೂ ಮಾಡಿರಬಹುದು. +ಈಗಲೂ ಕೊತ್ತಲಿಗಿಯ ಸೋಮವಾರಪೇಟೆಯಲ್ಲಿ ಯಾವುದೇ ಬಯಲಾಟ, ನಾಟಕ, ಭಾಮಾಕಲಾಪವೇ ಮೊದಲಾದ ರಂಗಪ್ರಾಕಾರಗಳ ಪಠ್ಯವನ್ನು ನೋಡುತ್ತಲೆ, ಕೇಳುತ್ತಲೆ ಬಾಯಿಪಾಟ ಮಾಡಿ ಆಯಾ ಪಾತ್ರ ಹೊಕ್ಕು ಬೆಳ್ಳಂಬೆಳಗು ಅಭಿನಯಿಸುವ ಸಾಮರ್ಥ್ಯವುಳ್ಳ ರಂಗನಟಿಯರಿದ್ದಾರೆ. ದಿನಕ್ಕೊಂದು ಟನ್ ಹುಣಸೆ ಬೊಟ್ಟು ಕುಟ್ಟುವಂಥ ದಿನಗಟ್ಟಲೆ ಉಪವಾಸವಿದ್ದರೂ ಮೈ ಮತ್ತು ಮುಗುಳುನಗೆ ಮಾಸದಂಥ, ಎಷ್ಟು ಹಡೆದರೂ ಕಿಪ್ಪೊಟ್ಟೆ ಮಾಂಸ ತುಳುಕಾಡುತ್ತಿರುವ ಸೋಮವಾರಪೇಟೆಯಿಂದಾಗಿಯೇ ಸದರೀ ಗ್ರಾಮಕ್ಕೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿರುವುದು. ಎಂಥ ಪೈಲ್ವಾನರನ್ನೂ; ಜಿತೇಂದ್ರಿಯರನ್ನೂಹಾಸಿಗೆ ಮೇಲೆ ಕೆಡವ ಬಲ್ಲಂಥ ನೂರಾರು ಸುಂದರ ಮತ್ತು ಬಟ್ಟಲುಗಣ್ಣುಗಳಿಗಿಲ್ಲಿ ಬರವಿಲ್ಲ. ಈ ಗ್ರಾಮದ ವಾತಾವರಣದಲ್ಲಿ ತೆಗೆದುಕೊಳ್ಳುವ ಉಚ್ವಾಸವೇ ರತಿಕ್ರಿಡಾ ಮನೋಭಾವವನ್ನು ಏಕ್‌ಧಂ ಉದ್ದೀಪಿಸುತ್ತದೆ. ಶೂನ್ಯದಿಂದ ಕೈಬಳೆ, ಕಾಲ್ಗೆಜ್ಜೆ ಮುಲುಕುವ ಸದ್ದು ಕೇಳಿ ಬರುತ್ತದೆ. ಕಕ್ಕಸುಗೇರಿಯಲ್ಲಿ ನಿಂತರೂ ಕುಂತರೂ ಸುಗಂಧ ಪರಿಮಳ ದ್ರವ್ಯ ಮೂಗಿಗೆ ತುರಿ ಪಂಚೇಂದ್ರಿಯಗಳಿಗೆ ರೆಕ್ಕೆ ಮೂದಿಸುತ್ತದೆ, ಎಂಥ ಅಮಾಯಕನೂ ರಾಸಲೀಲಾ ವಿನೋದದ ಸೆಳವಿಗೆ ಸಿಲುಕಿ ಸೋಮವಾರ ಪೇಟೆ ಕಡೆಗೆ ಪರಾವರ್ತಿತ ಪ್ರತಿಕ್ರಿಯೆಯಿಂದ ನಡೆಯುತ್ತಾನೆ… ಈ ಗ್ರಾಮದಲ್ಲಿ ಕಾಗೆ ಕೋಗಿಲೆಯಾಗಿದೆ, ಕೆಂಬೂತ ನವಿಲಾಗಿದೆ, ಕೊಕ್ಕರೆ ಚಕೋರಿಯಾಗಿದೆ. ಗ್ರಾಮದ ಓಣಿ ಓಣಿಯಲ್ಲಿ “ಲೈಂಗಿಕ ರೋಗತಜ್ಞರು” ಎಂದು ಬೋರ್ಡು ಹಾಕ್ಕೊಂಡಿರುವ ಡಾಕ್ಟರು ಸಿಗುತ್ತಾರೆ. ಈ ಊರಿಗೆ ಬರುವ ಎಂಥ ಪತಿವ್ರತೆಯರೂ ಈ ಗಾಳಿ ತಗುಲು ಕೆಡುತ್ತಾರೆ ಎಂಬ ಪ್ರತೀತಿ ಇದೆ. ಕೆಲವೊಂದು ಸಂದರ್ಭಗಳಲ್ಲಿ ಅದು ನಿಜವಾಗಿರುವ ಉದಾಹರಣೆಗಳು ಇಲ್ಲದಿಲ್ಲ. ಪುಂಖಾನುಪುಂಖವಾಗಿ ಕುಂತಳನಾಡನ್ನೊಂದೇ ಅಲ್ಲದೇ, ಯಡದೊರೆನಾಡು, ಸಿಂಧುವಾಡಿನಾಡು, ಇಂದುವಾಡಿನಾಡು ಇವೇ ಮೊದಲಾದ ಛಪ್ಪಾನಾರು ನಾಡುಗಳಲ್ಲಿ ಹರಡಿರುವ ಕಾರಣದಿಂದಾಗಿಯೋ ಏನೋ ಮರ್ಯಾದೆಯುಳ್ಳ ಯಾವ ಸದ್ಗೃಹಸ್ತನೂ ಸಂಸಾರ ಸಮೇತ ಬಂದು ಇಲ್ಲಿ ಇರಲು ಇಷ್ಟಪಡುವುದಿಲ್ಲ… ಅಥವಾ ಇದನ್ನೇ ಒಂದು ನೆವ ಮಾಡಿ ಮನುಜ್ಷ್ಯ ಸದ್ಗೃಹಸ್ಥ ಮನೋಭಾವದಿಮ್ದ ದೂರ ಉಳಿಯುವ ಪ್ರಯತ್ನಮಾಡಿರಬಹುದು. ಇದೆಲ್ಲ ಅಂತೆ ಕಂತೆ ಮಾತ್ರ. ಇದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ? ಇಂಥ ಅನುಭವಗಳಿಗೆ ತುತ್ತಾದವರೇ ಹೇಳಬೇಕು… +ಇಂಥ ಕಪೋಲಕಲ್ಪಿತವೋ; ನಿಜವೋ ಆದ ಸುದ್ದಿಗಳು ತಾಂಡವಾಡುತ್ತಿದ್ದುದರಿಂದಾಗಿ ಸಾಮಾನ್ಯವಾಗಿ ಸರಕಾರಿ ನೌಕರರು ಹೆಂಡತಿಯೊಡನೆ ಬಂದು ಸಂಸಾರ ಹೂದುವುದಿಲ್ಲ… ಅಥವಾ ಯಾವ ಹೆಂಡತಿಯೂ ಈ ಊರಿಗೆ ಬಂದು ಗಂಡನೊಂದಿಗೆ ಜೀವಿಸಲು ಒಪ್ಪುವುದಿಲ್ಲ. ಹೆಂಡತಿ ಕಾಟ ಕೊಟ್ಟು ಗಂಡನನ್ನು ವರ್ಗ ಮಾಡಿಸುವುದು, ಗಂಡನ ಒತ್ತಾಯಕ್ಕೆ ಹೆಂಡತಿ ಮೆಡಿಕಲ್ ಲೀವ್ ಹಾಕಿ ವರ್ಗ ಮಾಡಿಸಿಕೊಂಡು ಹೋಗುವಳು. ಆದ್ದರಿಂದ ಅನಿವಾರ್ಯವಾಗಿ ಉಳಿದವರು ಸಾಮಾನ್ಯ ಕಂತಿನ ಮೇಲೆ ಗಾಡಿಗಳನ್ನು ಕೊಂಡು ಅಪ್ ಅಂಡ್ ಡೌನ್ ಮಾಡ್ತಿರೋದೇ ಹೆಚ್ಚು. +ಇಂಥ ವಿವರಣೆ, ವಿಶ್ಲೇಷಣೆಗಳಿಗೆ ಸತ್ಯ ಮಿಥ್ಯಗಳಿಗತೀತವಾಗಿ ಉಳಿದಿರುವ ಘಟನೆ ಸಂಘಟನೆಗಳ ಕಾರಣದಿಂದಾಗಿ ಶಾಮಣ್ಣ ಕೊತ್ತಲಿಗಿಯಲ್ಲೇ ಮನೆ ಮಾಡಬೇಕಿದೆ! ಎಂದು ಹೇಳಿದಾಗ ಸಹೋದ್ಯೋಗಿಗಳೆಲ್ಲರು ಅವನ ಕಡೆ ಬೆಕ್ಕಸ ಬೆರಗಾಗಿ ನೋಡಿದರು. ಪ್ರಪಂಚ ಜ್ಞಾನದ ರಿಸೀವರ್ರಾದ ಯಾಂಟನಾದಂತಿದ್ದ ಅವರು ಗರುಡ ಪುರಾಣದಲ್ಲಿ ಬರುವ ಫಲ್ಗುಣಿ ಎಂಬ ರೌರವ ನದಿಯ ಒಟ್ಟು ಮೊತ್ತವೇಕೊತ್ತಲಗಿ ಗ್ರಾಮವು ಎಂದು ಈ ಮೊದಲೆ ತಿಳಿದುಕೊಂಡಿದ್ದ. ಅವನ ಸಾಂಪ್ರದಾಯಿಕ ಕರ್ಮಠ ಮನಸ್ಸು ‘ಇಸ್ಸಿ’ ಅಂತಿದ್ದರೆ, ಸೃಜನಶೀಲ ಮನಸ್ಸು ಮನುಷ್ಯರ ಕ್ಷುದ್ರ ಬದುಕನ್ನೇ ಕಥೆ, ಕವಿತೆ, ಕಾದಂಬರಿಯನ್ನಾಗಿಸಬೇಕೆಂದು ಹೇಳುತ್ತಿತ್ತು. ಅದೇ ಮನಸ್ಸಿನ ಕ್ರಾಂತಿಕಾರಕ ಭಾಗವು ವೆರಿಯರ್ ಎಲ್ವಿನ್ ಗೊಂಡೋ ಪ್ರದೇಶದ ಆದಿವಾಸಿಗಳನ್ನು ಉದ್ಧಾರ ಮಾಡಿದಂತೆ ನೀನೂ ಇಲ್ಲೇ ನೆಲೆಗೊಂಡು ಈ ಗ್ರಾಮದಲ್ಲಿ ಸಾಮಾಜಿಕ ಬದಲಾವಣೆ ಮಾಡು ಎಂದು ಬೋಧಿಸುತ್ತಿತ್ತು. ವೇಷ ಮರೆಸಿಕೊಳ್ಳುವುದರಲ್ಲಿ ಈಗಾಗಲೇ ನಿಷ್ಣಾತನಾಗಿರುವ ಶಾಮಣ್ಣ ಬಹುಶಃ ಓಬಳೇಶನಿಗೂ ಗೊತ್ತಿಲ್ಲದಂತೆ ವೇಷ ಮರೆಸಿಕೊಂಡುಸೋಮವಾರಪೇಟೆಯನ್ನು ಪ್ರವೇಶಿಸಿ ದೇವದಾಸಿಯರೂ, ರಂಗಕಲಾವಿದರೂ ಎಂಬೊಂದು ಸಚಿತ್ರ ಲೇಖನಕ್ಕೆ ವಿಷಯ ಸಂಗ್ರಹಿಸಿದ್ದನು. ಹೀಗೆ ಸಂಗ್ರಹಿಸುವಾಗ ಆರುಮೂರಾಗ್ಲಿ, ಮೂರು ಆರಾಗ್ಲಿ ಈ ಊರಿಗೆ ಹೆಂಡತಿಯನ್ನು ಕರೆದುಕೊಂಡು ಬಂದು ವಾಸ ಮಾಡಬಾರದೆಂದು ಶಪಥ ಮಾಡಿದ್ದನು. ತಾಯಿ ಮತ್ತು ಹೆಂಡತಿಯರೆಂಬ ಅಜ್ಞಾತ ಅಂಶಗಳಿರುವ ಎರಡು ಸಮೀಕರಣಗಳನ್ನು ‘ನಾನು’ ಎಂಬ ಒಂದೇ ಸೂತ್ರದಿಂದ ಬಿಡಿಸುವುದು ಸಾಧ್ಯವಿಲ್ಲವೆಂಬ ಸಂಗತಿಯನ್ನು ಮನದಟ್ಟು ಮಾಡಿಕೊಂಡಿದ್ದನು. ಸಂಕಲನದ ವ್ಯವಸ್ಥೆಯೇ ಬೇರೆ, ವ್ಯವಕಲನದ ವ್ಯವಸ್ಥೆಯೇ ಬೇರೆ; ಅವೆರಡು ಒಂದೇ ಚಿನ್ಹೆಯೊಳಗೆ ಅಡಾಗುವುದಿಲ್ಲ… ಆ ಎರಡು ಭಿನ್ನ ಜಾತಿಯ ಧೃವಗಳು ಒಂದಾಗಿದ್ದೇ ಆದರೆ ಬಕ್ಷಾಲಿಯ ಗಣಿತ ಗ್ರಂಥಕ್ಕೆ ಸರಿಸಮಾನರಾಗುತ್ತಾರೆ. ಎರಡು ಭಿನ್ನ ಮನೋಭಾವದ ಪ್ರಾಣಿಗಳು ಒಂದೇ ಬೋನಿನಲ್ಲಿ ಒಟ್ಟಿಗೆ ಇರಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೆ ತಾಯಿ ಮತ್ತು ಹೆಂಡತಿ +ಹಿಂಗಾಳಿ, ಮುಂಗಾಳಿಗಳಾಗಿ ಒಟ್ಟಿಗೆ ಜೀವಿಸಲುಸಾಧ್ಯವೇ ಇಲ್ಲವೆಂದು ಬಗೆದೇ ಕೊತ್ತಲಗಿಯಲ್ಲಿ ಮನೆ ಹುಡುಕಲು ನಿಶ್ಚಯಿಸಿದನು. ಈ ಕುರಿತು ಗೆಳೆಯರ ಸಹಕಾರವನ್ನು ಕೋರಿದನು. ಅಷ್ಟೊತ್ತಿಗಾಗಲೇ ಪರಸ್ಪರ ಏಕವಚನ ಸಂಬೋಧಿಸುವಷ್ಟರ ಮಟ್ಟಿಗೆ ಸಲಿಗೆ ಸಾಧಿಸಿದ್ದ ಅವರ ಪೈಕಿ ಒಬ್ಬನಾದ ಪಿ.ಎಂ.ಚಂಬಸ್ಯನು – +“ನಿಂಗೆ ಬುದ್ಧಿ ನೆಟ್ಟಗಿದ್ದಂಗಿಲ್ಲ ಶಾಸ್ತ್ರೀ… ನಿನ್ನಂಥೋರು ನಮ್ಮಂಥೋರು ಗೊತ್ತಿದ್ದೂ ಗೊತ್ತಿದ್ದು ಈ ಊರಲ್ಲಿ ಸಂಸಾರ ಹೂಡೋದೇನು! ನೌಕರಿ ಮಾಡ್ತಿರೋ ತಪ್ಪಿಗೆ ಗಾಡಿ ತಗೊಂಡು ಅಪ್ಪಂಡೌನ್ ಮಾಡ್ಬೇಕಯ್ಯಾ ಅಪ್ಪಂಡೌನೂ” ಎಂದು ಕೆಮ್ಮಿದನು. +“ನೀನು ಅಪ್ಪಂಡೌನು ಮಾಡೋದಾದ್ರೆ ನಾನೊಂದೊಳ್ಳೆ ಗಾಡೀನ ಕಡ್ಮೆ ರೇಟಿಗೆ ಕೊಡಿಸ್ತೀನಿ ಮೇರಾ ದೋಸ್ತ್. ಜಾಡ್ರ ಕಾಳಪ್ಪನತ್ರ ಯಯ್ಪಿಸಿಕ್ಸ್ ಮಾಡೆಲ್ ಅವಂತಿ ಐತೆ. ಬೋತಿಂಗು ಬರ್ದಂಗೆ ಓರಾಯ್ಲು ಮಾಡಿಸಿಟ್ಟಿದ್ದಾನೆ… ಏನು ಬ್ರೇಕೂ? ಏನು ಗೇರೂ? ಒಂದ್ಲೀಟ್ರೀಗೆ ಫಿಫ್ಟಿಫೈವ್ ಕೊಡ್ತದಪ್ಪಾ… ಒಳ್ಳೆ ರೆಡ್ಡು ಪೇಂಟಾಕಿಸಿದ್ದಾನೆ… ಬೇಕಂದ್ರೆ ಕೊಡಿಸ್ತೀನಿ… ಇನ್‌ಸ್ಟಾಲ್ಮೆಂಟ್‌ಮ್ಯಾಲೇ ಕೊಟ್ರಾಯ್ತು… ಚಂಬಸ್ಯಯ್ಯ ಹೇಳ್ದಂತೆ ಕೊಟ್ರೂಗೂ ಇಲ್ಗೂ ಅಪ್ಪಂಡೌನ್ ಮಾಡಿಬಿಡು ಮಾರಾಯಾ” ಎಂದು ಇಸ್ಮಾಯಿಲು ಕಕ್ಕುಲಾತಿಯಿಂದ ನುಡಿದನು. +ಮೇನೇಜರು ಹೆಬ್ರಿಯವರು… +“ಉತ್ತರ ಪ್ರದೇಶದ ಸರಯೂದ್ಂದಾ ಕಡೆ ಇನ್ನೂ ರಮಾಯಣ, ಮಹಾಭಾರತದ ಎಪಿಕ್ ಲೈಫ್ ಸ್ಟೈಲು ಇನ್ನೂ ಜೀವಂತ ಇದೆ ನೋಡು ಇಸ್ಮಾಯಿಲ್… ಅಲ್ಲಿ ಗೋಡೋ, ಗೋರಖ್ಪುರ್ ಕಾಡೊಳ್ಗೆ ಇನ್ನೂ ಭಾರತೀಯ ಆರ್ಷೇಯ ಸಂಸ್ಕೃತಿ ಆಚರಿಸ್ತಾನೆ ಬದುಕಿದ್ದಾರೆ ಜನ… +ಅಲ್ಲಿನ ಯಾವ ಲೈಂಗಿಕ ಕ್ರಿಯೆಗೂ ವ್ಯಭಿಚಾರ, ಸೂಳೆಗಾರಿಕೆ ಅನ್ನೋದೆ ಇಲ್ಲ ನೋಡಿ. ಅಲ್ಲಿ ಒಬ್ಬನಿಗೆ ಐದಾರು ಜನ ಹೆಂಡ್ರು ಇರೋದ್ನೂ ನೋಡಿದೆ. ಏಳೆಂಟು ಮಂದಿ ಗಂಡಸರೊಂದಿಗೆ ಬಾಳುವೆ ಮಾಡ್ತಿರೋ ಫೂಲವಂತಿ ಮೊಲೆ ಇಷ್ಟಿಷ್ಟು ದಪ್ಪ ಇರಬೌದು ನೋಡಿ. ನನ್ನ ಲೆಕ್ಕಾಚಾರದ ಪ್ರಕಾರ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಶ್ರೀರಾಮಚಂದ್ರನ ಸಂಗಡ ಅಯೋಧ್ಯೆಯ ಸಾವಿರಾರು ಮಂದಿ ಸ್ರೀಪುರುಷರೂ ಹೋದ್ರು ಎಂಬ ಸತ್ಯವನ್ನು ನಾನು ಇತ್ತೀಚೆಗೆ ಪತ್ತೆ ಹಚ್ಚಿದ್ದೀನಿ ಚಂಬಸ್ಯಯ್ಯಾ… ಕಳಕೊಂಡಸತಿಯನ್ನು ರಾಮ ಹುಡುಕುತ್ತಾ, ಹುಡುಕುತ್ತಾ ವಯಾ ಈ ಪ್ರದೇಶದ ಮೂಲಕ ಶ್ರೀಲಂಕಾದ ಕಡೆ ಹೋದ… ಶ್ರೀರಾಮನನ್ನು ಹುಡುಕುತ್ತಾ, ಹುಡುಕುತ್ತಾ ಸಾವಿರಾರು ಮಂದಿ ಅಯೋಧ್ಯೆಯ ಸ್ರೀಪುರುಷರೂ ಸುಸ್ತಾಗಿ ಈ ಇಲ್ಲೇ ನೆಲೆ ನಿಂತರು ನೋಡು… ಅವರೇ ಕೊತ್ತಲಿಗಿಯ ಮೂಲ ನಿವಾಸಿಗಳು ಕಣಪ್ಪಾ… ಇಂಥ ಕಡೆ ಸಂಸಾರ ಸಮೇತ ವಾಸ ಮಾಡೋಕೂ ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರ್ಬೇಕು ಶಾಸ್ತ್ರಿ. ಮಕ್ಳು ಪಥ ಸಂಚಲನಕ್ಕೆ ಹೋಗ್ತಿರೋದ್ರಿಂದ ನೀನು ಅಪ್ಪಂಡೌನ್ ಮಾಡಬೇಕಾಗಿದೆ” ಎಂದು ಮುಂತಾಗಿ ಹೇಳಿದರು ನಿರರ್ಗಳವಾಗಿ. +ಇಸ್ಮಾಯಿಲ್ಲಗೆ ಅದಕ್ಕೆ ಪ್ರತಿಯಾಗಿ ಏನು ಹೇಳಬೇಕೋ ತಿಳಿಯಲಿಲ್ಲ. ಚಂಬಸ್ಯನೂ ಅಷ್ಟೆ… ತಲೆ ಕೆರೆದುಕೊಂಡ. +ಅವರೆಲ್ಲ ಅಲ್ಲಿಂದ ಕದ್ಲಿ ಹೋದ ಮೆಲೆ ಓಬಳೇಶ ಶಾಮಣ್ಣಗೆ ಜೊತೆಯಾದ… +“ಅವ್ರೆಲ್ಲ ಇಲ್ಲಿ ವಾಸ ಮಾಡ್ತಿರೋರು ದನಗಳೂಂತ ತಿಳ್ಕೊಂಡಾರೆ… ಅವರ ಮಾತು ಕಟ್ಕೊಂರೆ ಕೂಳಿಗೆ ಕೂಳು, ನೀರಿಗೆ ನೀರು ಅಷ್ಟೇ” ಎಂದು ಹೇಳಿದ ಅವನಿಗೆ ಶಾಮಣ್ಣ ಒಂದು ಮಸಾಲೆ ದೋಸೆ ತಿನ್ನಿಸಿ ಒಂದು ಕಾಫಿ ಕುಡಿಸಿದ. ಇದರಿಂದ ಹುಮ್ಮಸ್ಸು ಹೆಚ್ಚಿಸಿಕೊಂಡ ಓಬಳೇಶ ಸ್ವಲ್ಪ ಓಪನ್ ಆದ. +“ಈ ಮೂರ್‍ಮಂದಿ ಒಳಾಗಿಂದು ಹೊರಾಗಿಂದು ನಂಗೆಲ್ಲ ಗೊತ್ತು ಸೋಮಿ… ಎಲ್ಲಾ ಬಿಚ್ಚಿ ಡ್ರಾಯರು ಮ್ಯಾಲೆ ಅವ್ರು ನಿಂತ್ಕಳ್ಳಿ ಗಂಡಸ್ರಾದ್ರೆ… ಆಗ ಗೊತ್ತಾಗತೈತಿ ಅವ್ರ ಹಣೇ ಬರಾ… ಈ ಊರಾಗೇನೈತೋ ಅದೆಲ್ಲ ಅವ್ರ ಮಯ್ಯಿಮ್ಯಾಗ ಐತೆ ನೋಡ್ರಿ… ಆ ಚಂಬಸ್ಯಯ್ಯ ತನ್ ಮಗಳ್ನ ಎಲ್ಲೆಲ್ಲಿ ಎನೇನು ಮಾಡಲಕ ಇಟ್ಟಾನೆಂಬೋದು ನಿಮ್ಗೆ ಗೊತ್ತಾದ್ರೆ ನೀವಿವ್ರ ಸಂಗಾಟ ಒಂದ್ ಸೆಕೆಂಡಿರಾಕಿಲ್ಲ ಬಿಡ್ರಿ… ಆ ಇಸ್ಮಾಯಿಲ್ಲೂ ಅಷ್ಟೆ… ಹೆಬ್ರಿನೂ ಅಷ್ಟೆ ಅದ್ನೆಲ್ಲ ಕಟ್ಕೊಂಡೀಗ ಮಾಡೊದಾದ್ರು ಏನೈತೆ… ಈಗ್ನಿಮ್ಗೊಂದು ಮನಿ ತೋರಿಸ್ಬೇಕಷ್ಟೆ!… ಆ ಕೆಲಸಾನ ನಂಗೆ ಬಿಡ್ರಿ… ಅರ್‍ಮನೆಯಂಥ ಮನೇನ ಕೊಡ್ಸೋ ಜವಾಬ್ದಾರಿ ನಂದು… ನೀವು ಚಿಂತೆ ಮಾಡೋದು ಬ್ಯಾಡ… ನೀವು ನಾಳೆ ಬರೋ ಹೊತ್ಗೆ ನೋಡಿಟ್ಟಿರ್‍ತೀನಿ” ಎಂದು ಹೇಳಿ ಹೋದನು. +ಸಹೋದ್ಯೋಗಿಗಳ ಪೈಕಿ ಇಸ್ಮಾಯಿಲ, ಚಂಬಸ್ಯಯ್ಯ ಆಡಿದ ಮಾತುಗಳನ್ನು ಹೆಜ್ಜೆಹೆಜ್ಜೆಗೊಂದರಂತೆ ಗಾಳಿಗೆ ಬಿಟ್ಟನು. ಹೆಬ್ರಿಯವರ ಮಾತಿನಲ್ಲಿ ಕೆಲವೊಂದು ಪೂರ್ವಗ್ರಹಗಳ ವಾಸನೆ ಇರುವುದನ್ನು ಗುರುತಿಸಿದನು. +“ಏನೋ ಶಾಮಾ… ಹೆತ್ತೋಳ್ಗಿಂತ ಹೆಚ್ಚಾದ್ಲೇನೋ ನಿಂಗೆ… ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ಅವಳ್ನೊಂದೆ ಕರ್‍ಕೊಂಡೋಗಬೇಕೆಂದ್ಕೊಂಡಿದ್ದೀಯಾ… ಅಲ್ಲಿ ಅವಳೇನು ನಿನ್ನ ಆರೈಕೆ ಮಾಡ್ತಾಳೋ ಮಾಡ್ಲಿ… ನನ್ನ ದೇಹ ನನ್ಗೆ ಭಾರ ಆದೀತಾ… ತುಲಸಿ ರಾಮಾಯಣವನ್ನೋ; ಲಲಿತಾಷ್ಟಕವನ್ನೋ ಓದ್ಕೊಂಡು ಕಾಲ ಹಾಕ್ತೀನಿ…. ಏನೇ ವರಲಕ್ಷ್ಮೀ… ತಾಯಿ ಮಗನ್ನಗಲಿಸಿ ಅದ್ಯಾವ ನರಕಕ್ಕೆ ಹೋಗ್ತೀಯೇ ಮಳ್ಳೀ… ಅದೆಷ್ಟು ದಿನ ನಿನ್ನಾಟ ನಡೀತದೋ ನಡಿಯಲಿ… ನಾನೂ ನೋಡ್ತೀನಿ” ಎಂದು ತಾಯಿ ವಟಗುಟ್ಟುತ್ತಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ ಗ್ರಾಮೀಣ ಸಾರಿಗೆ ಹತ್ತಿದ…. +ಜೀವಾವಧಿ ಶಿಕ್ಷೆಗೊಳಗಾಗಿರುವ ಖೈದಿಯಂತೆ ತಲೆ ತಗ್ಗಿಸಿ ನಡೆಯುತ್ತ ಮನೆ ತಲುಪಿದ. ಪಡಸಾಲೆಯ ಒಂದು ಕಡೆ ಬತ್ತಿ ಹೊಸೆಯುತ್ತ ಕೂತಿದ್ದ ತಾಯಿ ಅಲುಮೇಲಮ್ಮನೂ; ನೆಲ ಬಳಿಯುತ್ತಿದ್ದ ಹೆಂಡತಿ ವರಲಕ್ಷ್ಮಿಯೂ ತಲಾ ಒಂದೊಂದು ಕೋನದಲ್ಲಿ ತನ್ನ ಕಡೆ ನೋಡಿ ನಿಟ್ಟುಸಿರು ಬಿಟ್ಟರು ಸುಯ್ ಅಂತ. +ಬಟ್ಟೆ ಬದಲಾಯಿಸಿ ಬಚ್ಚಲಿಗೆ ಹೋಗಿ ಬಂದ. +“ಸ್ನಾನ ಮಾಡಿ ಸಂಧ್ಯಾವಂದನೇನೆ ಮಾಡಲ್ವೇನೋ… ಪುರುಷ ಸೂಕ್ತ ಹೇಳೋದ್ಬೇ ವಾರ್‍ದಿಂದ ನಾನು ಕೇಳೇ ಇಲ್ಲ… ಮಾವನವ್ರು ಹೊರಟು ಹೋದ್ಮೇಲೆ ಮನೆ ಎಂಬೊದು ಶೂದ್ರರ ದನದ ಕೊಟ್ಟಿಗೆಗಿಂತ ಅತ್ತತ್ತ ಆಯ್ತು… ಒಂದು ಮಡಿ ಇಲ್ಲ ಒಂದು ಆಚಾರ ಇಲ್ಲ…” ಎಂದು ಕೂತ ಕಡೆಯಿಂದ ಕೂಗಿ ಹೇಳಿತು. +ಆ ಮಾತಿನಿಂದ ಖತಿತಳಾಗಿ ವರಲಕ್ಷ್ಮಿಯು – +“ಅದಕ್ಯಕತ್ತೆ ಹಂಗತೀರಾ… ನಾನೇನೀ ಮನೇನ ದನದ ಕೊಟ್ಟಿಗಿ ಮಾಡೀವ್ನಾ… ಬೆಳಗ್ನಿಂದ ಒಂದು ಕಾಳು ನೀರ್‍ನ ಬಾಯ್ಗೆ ಹಾಕ್ಕೊಳ್ದೆ ವಿಶೇಷಾರ್ಚನೆ ಮಾಡ್ಲಿವಾ…” ಎಂದು ಮಾತೆಸೆದಳು. +“ಹ್ಹಾ…ಹ್ಹಾ… ಮಾಡಿದ್ದೀಯಾ… ಮಸಡಿದ್ದೀಯಾ… ಬಚ್ಚಲೊಳಗೆ ಕೂತ್ಕೊಂಡು ಅವಲಕ್ಕಿ ಕೊಬ್ರಿ ಮುಕ್ಕುತ್ತಿದ್ನ ನಾನ್ನೋಡಿಲ್ಲಾಂತ ಅಂದ್ಕೊಂಡೀ ಏನು!” +ಅತ್ತೆಯವರ ಮಾತು ಕೂರ್ದನಿಯಂತೆ ತಿವಿಯಲು ಜಿಗಿದು ನಿಂತಳು ವರಲಕ್ಷ್ಮಿಯು – +“ಆಯ್ಯೋ ರಾಮ ರಾಮಾ… ಎಂಥಾ ಮಾತಾಡ್ತಿದೀರಲ್ಲ ಅತ್ತೆ. ನಾನೇನಾದ್ರು ಹಾಗೆ ಮಾಡಿದ್ದ ಪಕ್ಷದಲ್ಲಿ ನನ್ನ ಕೈಕಾಲು ಬಿದ್ದು ಹೋಗ್ಲಿ… ಇವತ್ತು ಹೇಳಿ ಕೇಳಿ ರಥಸಪ್ತಮಿ, ತಿಲಮಿಶ್ರಿತ ಜಲಸ್ನಾನ ಮಾಡಿ ಹೊರಗಡೆ ಬಂದು ಯದಾ ಜನ್ಮಕ್ಷತಂ ಶಾಪಂ ಮಯಾ ಅಂತ ನೂರು ಸಾರಿ ಜಪಿಸಿದ್ದನ್ನು ನೀವೇ ಕೇಳಿದ್ದೀರಿ… ಅವರ ಸಂಧ್ಯಾವಂದನೆಗೆ ಅನುಕೂಲವಾಗ್ಲೀ ಅಂತ ನಾನು ಶುಚಿ ಮಾಡ್ತಿದ್ರೆ ಮೇಲೀ ಮಾತಾಡ್ತಿದ್ದೀರಿ” ಎಂದು ಪಟಪಟ ಹೇಳಿ ನನ್ನ ಕಡೆ ತಿರುಗಿ – +“ಅವ್ರ ಮಾತು ಕೇಳಿ ಅಪಾರ್ಥ ಮಾಡ್ಕೋಬೇಡಿ… ವಯಸ್ಸಾದೋರು ಹಾಗೆ ಮಾತಾಡೋದ್ರಲ್ಲಿ ತಪ್ಪೇನು ಇಲ್ಲ… ಯಾರು ಏನೇ ಹೇಳ್ಕೊಳ್ಳಿ… ನಾನು ಪ್ರಾಣ ಬೇಕಾದ್ರೆ ಬಿಡ್ತೀನೇ ಹೊರತು ಆಚಾರ ವಿಚಾರವನ್ನು ಮಾತ್ರ ಬಿಡೋಳಲ್ಲ” ಎಂದು ಅಫಿಡವಿಟ್ ಸಲ್ಲಿಸಿದಳು. +ತನ್ನ ತಾಯಿ ಮಾಡುತ್ತಿರುವುದು ಸುಳ್ಳು ಅಪಾದನೆಯಂತ ತನಗೆ ಗೊತ್ತು. ತನ್ನನ್ನು ಹೆಂಡತಿ ವಿರುದ್ಧ ಎತ್ತಿಕಟ್ಟುವ +ಪ್ರಯತ್ನವನ್ನು ಅನೇಕ ಸಾರಿ ಮಾಡಿರುವಳು. ಆದರೆ ತಾನು ಎಹ್ಟು ಮಾತ್ರಕ್ಕೆ ಸೊಪ್ಪು ಹಾಕಿಲ್ಲ. ತನಗು ವರಲಕ್ಷ್ಮಿ ಬಚ್ಚಲಲ್ಲಿ ಏನೆಲ್ಲ ತಿನ್ನುವುದು ಬೇಕಾಗಿದೆ. ಆದರೆ ಆಕೆ ಹಾಗೆ ಮಾಡಬೇಕಲ್ಲ. ಮಡಿ ಆಚಾರಗಳೇ ಸ್ತ್ರೀರೂಪ ಧರಿಸಿ ತನ್ನ ಹೆಂಡತಿಯಾಗಿರುವಳೆಂದುಕೊಂಡಿರುವೆನು. +ಪ್ರತಿದಿನ ಒಂದಲ್ಲಾ ಒಂದು ತಿಥಿ ನಕ್ಷತ್ರ ಶೋದಿಸಿಯೇ ಆಕೆ ದಿನಚರಿ ಆರಂಭಿಸುವುದು. ಯಾವುದೇ ವ್ರತ ನಿಯಮ ನೋಂಪಿಯನ್ನು ಪತಿಪತ್ನಿಯರೀರ್ವರೂ ಸೇರಿ ಮಾಡಿದಾಗ ಮಾತ್ರ ಪುಣ್ಯ ಸಂಚಯವಾಗುವುದಾಗಿ ಹೇಳುವಳು… +ಆದರೆ ಇವತ್ತು ರಥಸಪ್ತಮಿಯನ್ನು ಹಿಡಿದುಕೊಂಡಿದ್ದಾಳೆ. ಮನೆಯಲ್ಲಿದ್ದರೆ ಕಾಫಿ ಒತ್ತಟ್ಟಿಗಿರಲಿ ಒಂದು ಕಪ್ಪು ನೀರನ್ನು ಸಹ ಕುಡಿಯಲು ಆಸ್ಪದ ಕೊಡಲಾರಳೆಂದುಕೊಂಡ ಶಾಮ ಹೊರಡುವ ಅವಸರದಲ್ಲಿ ಎಡಗಾಲ ಚಪ್ಪಲಿಯನ್ನು ಬಲಗಾಲಿಗೂ ಬಲಗಾಲ ಚಪ್ಪಲಿಯನ್ನು ಎಡಗಾಲಿಗೂ ತೊಡುವ ಪ್ರಯತ್ನ ಮಾಡುತ್ತ ಸಿಕ್ಕಿಬಿದ್ದ. +“ನ್ರೀ, ಆಗಲೇ ಹೊರಡ್ತಿದೀರಲ್ಲ… ಇವತ್ತು ರಥಸಪ್ತಮಿ ಎಂಬುದನ್ನು ಮರ್‍ತುಬಿಟ್ಟಿರೇನು? ಅದ್ಹೇಗೆ ಬೇಳೆಸಿದ್ರೆನೋ ಈ ಅತ್ತೆಯವರು- ಶ್ರೀರಾಮನಿಗೇ ಗೊತ್ತು!” ಎಂದು ಓಡಿ ಬಂದು ಕೈಹಿಡಿದು ತಡೆದಳು ವರಲಕ್ಷ್ಮಿ. +ಆಕೆಯ ಸ್ಪರ್ಶ ಎಷ್ಟೊಂದು ಆಪ್ಯಾಯಮಾನವಾಗಿತ್ತು ಎಂದರೆ ಆ ಕೂಡಲೆ ಸುಖೋಪಭೋಗವನ್ನು ಸವಿಯಬೇಕೆಂಬ ಮನಸ್ಸಾಯಿತು. ಆದರೆ ಆ ಆಸೆ ಕ್ಷಣಭಂಗುರವೆಂದು ಅರ್ಥವಾಯಿತು. +“ಏನೇ… ನನ್ನ ಮಗನ್ನ ನಾನೂ, ಮಾವನವ್ರೂ ಹೇಗೆ ಬೆಳೆಸಿದೆವಂಥ ಕೇಳ್ತಿದ್ದೀಯಾ… ಹೇಳ್ತೀನಿ ಕೇಳೆ…” ತಾಯಿಯ ಮಾತು ಮುಂದುವರಿದಿರುವುದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೆಂಡತಿಯು ತನ್ನನ್ನು ಬಚ್ಚಲಿಗೆ ಎಳೆದುಕೊಂಡು ಹೋಗಿ +ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು +(ಹೇಳ್ತಾ ಸ್ನಾನ ಮಾಡ್ತೀ… ಆ ಎಲ್ಲ ಮಂತ್ರ ತನಗೆ ನೆನಪಿದ್ದರೆ ತಾನೆ! ಆಕೆ ಹೇಳಿದಳು) +ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮಿ +ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ| +ಮನೋ ವಾಕ್ಕಾಯಜಂ ಯಚ್ಚ ಜ್ಞಾತಾ ಜ್ಞಾತೇಚಯೇ ಪುನಃ +ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ +ಸಪ್ತವ್ಯಾಧಿ ಸಮಾಯುಕ್ತ ಹರಮಾಕರಿ ಸಪ್ತಮಿ||… ಎಂದು ಮುಂತಾಗಿ ಆಕೆಯೆ ಹೇಳುತ್ತ ಸ್ನಾನ ಮಾಡಿಸಿದಳು… ಹೆತ್ತ ಕೂಸಿಗೆ ತಾಯಿ ಸ್ನಾನ ಮಾಡಿಸಿದಂತೆ… +ಇವತ್ತು ರಥಸಪ್ತಮಿ ಎಂದು ಮೊದಲೇ ನೆನಪಿಗೆ ಬಂದಿದ್ದಲ್ಲಿ ಆತ ಹೋಟಲಿಗೆ ಹೋಗಿ ತಿಂಡಿ ಗಿಂಡಿ ತೆಗೆದುಕೊಂಡು ಮನೆಯಲ್ಲಿ ಕಾಲಿಡುತ್ತಿದ್ದ… ತೋಳಿಲ್ಲದ ರವಿಕೆಯನ್ನು ತೊಡೆಸಿದರೆ ತನ್ನ ಹೆಂಡತಿ ಜಿ.ಎಂ.ಶಾಂತಿ ಥರ ಕಾಣಿಸಬಹುದೆ ಎಂದುಕೊಂಡ. ಹಾಗೆ ಕಲ್ಪಿಸಿಕೊಂಡು ಹೆಂಡತಿಯ ತೋಳು ಸವರಲು ಪ್ರಯತ್ನಿಸುತ್ತಲೇ ‘ಸಪ್ತ ಸಪ್ತಿವಹ” ಎಂಬ ಮಂತ್ರ ಗೊಣಗುತ್ತ ಸೂರ್ಯದೇವನಿಗೆ ಅರ್ಘ್ಯ ಕೊಟ್ಟ… +ಉತ್ತರಾಬಾದ್ರೆ ನಕ್ಷತ್ರದಲ್ಲಿ ಹುಟ್ಟಿ ಮೀನ ರಾಶಿಯಲ್ಲಿ ಜಾಗ ಪಡೆದಿರುವ ತಾನು ರಥಸಪ್ತಮಿಯ ಪುಣ್ಯ ರಾತ್ರಿಯಂದು ಹೊಟ್ಟೆತುಂಬ ಊಟಮಾಡಬಾರದೆಂದೂ, ಸಂಭೋಗ ಕಲ್ಪಿಸಿಕೊಂಡರೆ ರೌರವ ನರಕ ಪ್ರಾಪ್ತವಾಗುವುದೆಂದೂ ಆಕೆ ಹೇಳಲು ಶಾಮನು ವಿಧಿಯನ್ನು ಹಳಿಯುತ್ತ ಅವಲಕ್ಕಿ ತಿಂದು ಬೋರಲು ಮಲಗಿ ನೂರಾರು ಕನಸು ಕಂಡನು. ಪರಸ್ತ್ರೀಯರ್ರ್‍ ಕಿಕ್ಕಿರಿದ್ದಿಂತಹ ಕನಸುಗಳು ಅವು… ಬೆಳಗಾಗೆ ಹೆಂಡತಿಗೆ ಹೇಳಿದರೆ ವಿವಾಹೇತರ ಸಂಬಂಧವನ್ನು ತನ್ನ ಗಂಡ ಕನಸಿನಲ್ಲಾದರೂ ಇಟ್ತುಕೊಂಡಿರಬಹುದೆಂದು ಆಕೆ ಊಹಿಸಿ ಸಂದೇಹಿಸದಿರಲಾರಳೆಂದುಕೊಂಡ. +ಮರುದಿನ ಸೂರ್ಯೋದಯಕ್ಕೂ ಪೂರ್ವದಲ್ಲೇ ಅತ್ತೆ ಸೊಸೆಯರೀರ್ವರ ವಾಗ್ವಾದ ತಾರಕಕ್ಕೆ ಮುಟ್ಟಿತ್ತು. ಅವರ ಜಗಳಕ್ಕೆ ಹೆದರಿ ಉದಿಸಲು ದಿನಕರ ಹಿಂದೇಟು ಹಾಕುತ್ತಿದ್ದ. ತಾಯಿ ವ್ಯಾಸ ಪೀಠದ ಮುಂದೆ ಜಪಮಾಲೆ ಹಿಡಿದು ಕೂತಿರುವುದನ್ನೂ; ಹೆಂಡತಿ ತುಲಸೀ ಕಟ್ಟೆಗೆ ಪೂಜೆಮಾಡುತ್ತಿರುವುದನ್ನೂ ಗಮನಿಸಿ ಎಚ್ಚರಗೊಂಡ. ಬ್ರಾಹ್ಮೀ ಮುಹೂರ್ತದಲ್ಲಿ ಗಂಡನನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಳು. +ಲಗುಬಗೆಯಿಂದ ಶಾಮ ಎದ್ದು ಒಂದಿತ್ತು, ಒಂದಲ್ಲ ಎನ್ನೋ ಹಾಗೆ ಶೌಚಾದಿ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ನಶ್ಯ ಪುಡಿ ಬಣ್ಣದ ಪ್ಯಾಂಟು ಧರಿಸಿದ. ಪವಿತ್ರ ಶ್ರೋತ್ರಿಗಳ ವಂಶದಲ್ಲಿ ಜನಿಸಿ ಪ್ಯಾಂಟು ತೊಡುವುದೆಂದರೇನು? ಮಡಿಧೊತರ ಉಟ್ಟು ನೌಕರಿಗೆ ಹೋಗಬಾರದೇಕೆ? ಹೆಂಡತಿ ಗೊಣಗುತ್ತ ಮಜ್ಜಿಗೆ ಅನ್ನ ಕಲೆಸಿಟ್ಟಿದ್ದ ಟಿಫಿನ್ ಬಾಕ್ಸ್ ಕೈಗೆ ಕೊಟ್ಟಳು. +ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಹೊರಟು ಕೊತ್ತಲಿಗಿ ತಲುಪಿದ. +ಹಿಂದಿನ ದಿನ ರಥ ಸಪ್ತಮಿಯಾಗಿದ್ದ ಕಾರಣಕ್ಕೋ ಅದು ಪವಿತ್ರ ಮಾಘಮಾಸದ ಅಷ್ಟಮಿಯ ದಿನವಾಗಿದ್ದರಿಂದಾಗಿಯೋ, ಹಿರೇಮಗಳುರಿರಿನಿಂದ ‘ರಾಸ್ವಸೇ’ದ ರಾಜ್ಯ ಘಟಕದ ಸಂಚಾಲಕರಾದ ಶ್ರೀಯುತ ಚಕ್ರವರ್ತಿಯವರು ಬಂದು ನಿಕ್ಕರು ಪ್ರದರ್ಶಿಸಲಿರುವ ಕಾರಣಕ್ಕೋ ಮೇನೇಜರು ಹೆಬ್ರಿಯವರು ಅಂದು ರಜೆ ಹಾಕಿದ್ದರು. +ಇಸ್ಲಾಮಿನ ಪವಿತ್ರ ಮೂರ್ತಿಯಾದ ಅಯತುಲ್ಲಾ ಖೋಮೇನಿ ಮರಣದಂಡನೆ ಘೋಷಿಸಿರುವ ಸಲ್ಮಾನ್ ರಷ್ಡಿ ಬರೆದದ್ದೆನಲಾದ ಕೃತಿಯೊಳಗಿಂದ ಜಮಾತೆ ಇಸ್ಲಾಮಿಗೆ ಸ್ಪೂರ್ತಿ ಪಡೆಯುವ ನಿಮಿತ್ತ ಸೆಟಾನಿಕ್ ವರ್ಸೆಸ್ಸನ್ನು ಕಂಕುಳಲ್ಲಿಟ್ಟುಕೊಂಡು ಇಸ್ಮಾಯಿಲು ಮೇನೇಜರ ಗತ್ತಿನಿಂದ ಬ್ಯಾಂಕಿನೊಳಗೆ ತಿರುಗಾಡುತ್ತಿದ್ದನು. (ಪ್ರವಾದಿಯವರನ್ನು ಹೀಗಳೆದ ಕಥೆ ಪ್ರಕಟಿಸಿದ್ದ ಇಂಗ್ಲೀಷ್ ದಿನಪತ್ರಿಕೆಯ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲು ಕುಂತಳನಾಡಿನಿಂದ ಹೋಗಿದ್ದ ನೂರು ಮಂದಿ ತಂಡದ ನೇತೃತ್ವವನ್ನು ಇಸ್ಮಾಯಿಲು ವಹಿಸಿದ್ದ ಎಂಬುದು ಪೋಲೀಸ್ ದಾಖಲೆಯಲ್ಲಿದೆ) +ತನ್ನನ್ನು ಯಾರೋ ನೋಡಲು ದುಬಾ‌ಐಯಿಂದ ಬರುತ್ತಿದ್ದಾರೆ ಎಂಬ ಕಾರಣದಿಂದ ಕು.ಜಿ.ಎಂ.ಶಾಂತಿ ರಜೆ ಹಾಕಿದ್ದಳು. ಅದನ್ನೇ ಒಂದು ಜೋಕು ಮಾಡಿಕೊಂಡು ಅಡ್ಡಾಡುತ್ತಿದ್ದ ಓಬಳೇಶನು ತನ್ನ ಪ್ರಿಯತಮೆ ಏನೋ ಎಂಬಂತೆ ಫೈಲು ಹಿಡಿದು ಬಂದು ಕಿವಿಯಲ್ಲಿ ತ್ರೀ ಹಂಡ್ರಡ್ ಬಾಯಿ ಇಟ್ಟು “ಸೋಮಿ… ಮನೆ ನೋಡಿದ್ದೀನಿ… ಲಂಚ್ ಅವರಾದ್ಮೇಲೆ ಹೋಗಾಣು” ಎಂದ. ಶಾಮ ಹ್ಹೂ ಅಂದ. +ಅದಕ್ಕೂ ಮೊದಲೆ ಗುಂಡುಮುಣುಗು ಸಿದ್ದನಗೌಡ ಎಂಬ ರೋಹಿಯಾವಾದಿ ಸಾಲಕೊಡಿಸಲು ಹತ್ತಾರು ಮಂದಿ ರೈತರನ್ನು ಕಟ್ಟಿಕೊಂಡು ಬಂದು ಒಳಗೆ ಬೀಡು ಬಿಟ್ಟಿದ್ದ. ಆತ ಮಾತು ಮಾತಿಗೆ ಲೋಹಿಯಾರವರು ಹಳ್ಳಿಗಳ ಸರ್ವತೋಮುಖ ಪ್ರಗತಿ ಕುರಿತು ಏನು ಹೇಳಿದ್ದಾರೆಂದರೆ ಎಂಬ ಪಲ್ಲವಿ ಪೋಣಿಸುತ್ತ ತಲೆ ನೋವಾಗಿದ್ದ. ಆ ತಲೆನೋವಿಗೆ ಒಂದು ತಿಂಗಳ ಇತಿಹಾಸವಿದೆ. +ಅಪಾತ್ರರಿಗೆ ಸಾಲವನ್ನಾಗಲೀ, ವಿದ್ಯೆಯನ್ನಾಗಲೀ, ಅನ್ನವಾಗಲೀ ಕೊಡಬಾರದೆಂದು ವೇದೋಪನಿಷತ್ತುಗಳಲ್ಲಿ ಹೇಳಿದೆ ಎಂದು ಯೋಚಿಸಿ ಮನಸ್ಸಿನಲ್ಲಿಟ್ಟುಕೊಂಡು ಸದರಿ ದಿನ ಬರಲು ಹೇಳಿ ಬರಲು ಹೆಬ್ರಿ ರಜೆ ಹಾಕಿದ್ದರು. +ನಲವತ್ತನೇ ವಯಸ್ಸಿನಲ್ಲಿ ಅಂದರೆ ಕಳೆದ ವಾರ ಇನ್ನೇನು ಮುಟ್ಟು ನಿಲ್ಲಲ್ಲಿದೆ ಎಂಬಂತಿದ್ದ ಹೆಂಗಸನ್ನು ಮದುವೆಯಾಗಿ ಕ್ರಾಂತಿ ಮಾಡಿದ ಗೌಡರು “ಕಸ್ಟಮರ್ ಈಸ್ ಗಾಡ್, ಗಾಡ್ ಈಸ್ ಕಸ್ಟಮರ್ ಕಣ್ರೀ… ನೇಗಿಲಿಗೆ ಸಿಟ್ಟು ಬರೋಕು ಮೊದ್ಲೆ ಇವ್ರೀಗೆ ಲೋನ್ ಸ್ಯಾಂಕ್ಷನ್ ಮಾಡ್ರಿ… ಇಲ್ಲಾಂದ್ರೆ… ನಾವು ರೈತ ವಿರೋಧಿ ಬ್ಯಾಂಕಿನ ಮುಂದೆ ಸತ್ಯಾಗ್ರಹ ಆರಂಭಿಸ್ತೀವಿ” ಎಂದು ಷೋಕಾಸ್ ನೋಟೀಸು ನೀಡಿಬಿಟ್ಟ. +ಅದನ್ನು ಕೇಳಿ ಎಲ್ಲರು ಅಲ್ಲಾಡಿ ಹೋದರು. ಕೊತ್ತಲಿಗಿ ಸೆಗ್ಮೆಂಟ್ ಏರಿಯಾದಲ್ಲಿ ನೂರಾರು ಚಳುವಳಿ ಮಾಡಿರುವ ಅನುಭವ +ಗುಂಡುಮುಣುಗು ಗೌಡರಿಗುಂಟು. ಉಪವಾಸ ಕೂತು ರಾಜ್ಯದ ನೂರಾರು ಮಂದಿ ನಾಯಕರ ಗಮನ ಸೆಳೆದಿರುವ ಆತನನ್ನು ಎದುರು ಹಾಕಿಕೊಳ್ಳುವ ಧೈರ್ಯ ಖುದ್ದ ಚಿನ್ನದಿಂದ ಮಾಡಲ್ಪಟ್ಟ ಈಚಲು ಮರವನ್ನು ಪೂಜಿಸುವ ಈಡಿಗರಿಗೂ ಇಲ್ಲ… +ಹೆಬ್ರಿ ಮೇಲೆ ರೈತ ನಾಯಕರನ್ನು ಎತ್ತಿಕಟ್ಟಲು ಇದೇ ಸುವರ್ಣಾವಕಾಶವೆಂದು ಬಗೆದ ಇಸ್ಮಾಯಿಲು, ಚಂಬಸ್ಯಯ್ಯ ಗೌಡರ ಬಳಿಗೆ ಹೋಗಿ “ಇದ್ರಲ್ಲಿ ನಮ್ಮದೇನು ತಪ್ಪು ಐತೆ ಗೌಡ್ರೇ…” ಬರಲಿಕ್ಕೆ ಹೇಳಿ ರಜೆ ಹಾಕಿದ್ದು ಮೇನೇಜರ್ರು ತಪ್ಪಲ್ಲೇನು? ಆತ ಬಂದ್ಮೇಲೆ ಕೊರಳ ಪಟ್ತಿ ಹಿಡ್ದು ಕೇಳಿ… ಅದ್ಕೆ ಅಡ್ಡ ಬಂದ್ರೆ ಕಪಾಳಕ್ಕೆ ಹಾಕಿ, ಆಯ್ತಾ” ಎಂದು ಹೇಳಿದರು. +“ಆ ಹೆಬ್ರೀನೂ ಅಷ್ಟೇ ನೀವು ಕೊಬ್ರೀನೂ ಅಷ್ಟೇ ಕಾಣ್ರೀ… ಬ್ರಾಂದಿ ಇನ್ ಡಿಫರೆಂಟ್ ಬಾಟಲ್ಸು… ನಿಮ್ಮಂಥ ಬ್ಯೂರೋಕ್ರಾಟ್ಸನ್ನ ನಂಬ ಬಾರ್ದೂಂತ ನಮ್ ಲೋಹಿಯಾ ಹೇಳಿದ್ದಾರೆ. ಅದ್ಕೆ ನಾವು ಅಮರಾಣಾಂತ ಉಪಾಸ ಸತ್ಯಾಗ್ರಹ ಆರಂಭಿಸ್ತೀವಿ” ಎಂದು ಅವರ ಮುಖಕ್ಕೆ ರಾಚಿದಂತೆ ಹೇಳಿ ಸಣ್ಣ ರೈತರ ಕಡೆ ತಿರುಗಿ “ಇವ್ರಿಗೆ ಬುದ್ಧಿ ಕಲಿಸಬೇಕೆಂದ್ರೆ ಉಪಾಸ ಸತ್ಯಾಗ್ರಹವೊಂದೇ ಬ್ರಹ್ಮಾಸ್ತ್ರ, ಬರ್ರಿ ಸತ್ಯಾಗ್ರಹ ಮಾಡೋಣ” ಎಂದು ಹೇಳಿದನು ಗುಮುಸಿ ಗೌಡ’ +ಆತನ ಮಾತು ಕೇಳಿ ರೈತರು ತಲೆಕೆರೆದುಕೊಂಡರು. +“ಏಯ್… ಹೋಗಿ ಗವುಡ್ರೆ… ಸಾಲ ಕೊಡಿಸ್ತೀನಂತ ಕರ್ಕೊಂಡು ಬಂದು ನಮ್ಮನ್ನ ಉಪಾಸನ್ವಾಸ ಕುಂಡ್ರುಸ್ತಿದ್ದೀರಲ್ಲ? ಇದೇ ಕೆಲಸಾನ ನಮ್ಮನ್ಯಾಗ ನಾವು ಮಾಡ್ತಿಲ್ಲೇನು? ಬ್ಯಾಂಕಿನೋರು ಸಾಲ ಕೊಟ್ರೆ ಹತ್ತು, ಕೊಡ್ಲಿಲ್ದಿದ್ರೆ ಇಪ್ಪತ್ತು… ನಡ್ಕೋತ ನಮ್ಮೂರ್‍ಕಡೀಕೆ ನಾವೊಂಟೋಕೀವಿ… ನಿಮ್ಗೂ ಬುದ್ಧಿ ಇಲ್ಲಾಂದ್ರೆ ನಮ್ಗೂ ಇಲ್ಲೇನು?” ಎಂದು ಹೇಳಿ, ಟುವೆಲ್ಲು ಕೊಡವಿ ಹೆಗಲ ಮೇಲೆ ಹಾಕಿಕೊಂಡು ಬಸ್‌ಸ್ಟಾಂಡಿನ ದಾರಿ ಎಲ್ಲೈತೆಲ್ಲೈತಂತ ಹೊರಟೇ ಬಿಟ್ಟರು. +“ಹೋಗ್ರೋ ಹೋಗ್ರಿ… ಸತ್ಯಾಗ್ರಹದ ಮರ್ಮ ಅರ್ಥಾಗ್ದ ಹೊರ್‍ತು ನೀವು ಉದ್ಧಾರಾಗೋದಿಲ್ಲ… ನಮ್ಮ ದೇಶ ಉದ್ಧಾರಾಗ್ದೆ ಐದು ಸಾವ್ರ ವರ್ಷದ ಹಿಂದೆ ಎಲ್ಲಿತ್ತೋ ಅಲ್ಲೇ ಉಳಿಕೋತೈತಿ” ಎಂದು ಅವರನ್ನು ಬೀಳ್ಕೊಟ್ಟು ಗೌಡರ ತನ್ನ ಹೆಗಲ ಮೇಲಿದ್ದ ಹಸಿರು ಟವಲನ್ನೇ ಧ್ವಜದೊಪಾದಿಯಲ್ಲಿ ಅಂಗಳದ ಕ್ರೋಟನ್ ಗಿಡಕ್ಕೆ ನೇತುಹಾಕಿ, ಪದ್ಮಾಸನ ಹಾಕಿಕೊಂಡು ಕೂತೇ ಬಿಟ್ಟರು. +ಇವರ ಹೆಂಡತಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿ ಚಂಬಸ್ಯಯ್ಯ ಕಾಫಿ ಕುಡ್ದು ಬರ್ತೀನಂತ ಹೇಳಿ ಹೊರಹೊಂಟನು. ಅವತ್ತು ಕೆಟ್ಟಗಳಿಗೆ ಇದ್ದುದರಿಂದಾಗಿಯೋ! ಜಿಲ್ಲಾ ನಾಯಕನೋರ್ವನ ಭಾಷಣ ಸದರೀ ಗ್ರಾಮದಲ್ಲಿ ಇದ್ದುದ್ದರಿಂದಾಗಿಯೇ ಏನೋ ಯಾರೊಬ್ಬರೂ ಬ್ಯಾಂಕಿನ ಕಡೆ ಬಂದಿರಲಿಲ್ಲ. +ಅರ್ಧ ಮುಕ್ಕಾಲು ಗಂಟೆಗೂ ಮೊದಲೆ ಲಂಚ್ ಅವರ್ ಶುರು ಆಯಿತು. ಕು.ಶಾಂತಿಯ ಗೈರುಹಾಜರಿಯಿಂದಾಗಿ ‘ಲಂಚವರ್ರೂ’ ಬನ್ನಿ ವೃಕ್ಷದಂತೆ ಬಿಕೋ ಎನ್ನಲಾರಂಭಿಸಿತು. +ತನ್ನ ಗಂಡನ ದೇಹದಲ್ಲಿ ತಾಮಸ ಗುಣ ಉದ್ಭವಿಸಬಾರದೆಂಬ ಕಾರಣದಿಂದ ಹೆಂಡತಿ ಕಟ್ಟಿದ್ದ ಮಜ್ಜಿಗೆ ಅನ್ನವನ್ನು ಬ್ಯಾಂಕಿನ ಘೂರ್ಕಾ ಎಂದೇ ಹೆಸರುಪಡೆದಿದ್ದ ನಾಯಿಗೆ ಹಾಕಲು ಓಬಳೇಶನಿಗೆ ಕೊಟ್ಟ. ಅವನು ಹಾಕಿ ಬಂದು “ಇನ್ನು ನಾವು ಮನೆ ನೋಡಲಕ ಹೋಂಡೋನೇನ್ರಿ” ಅಂದ. +ಇಸ್ಮಾಯಿಲ್ ಹೇಳಿದ “ಗೌಡ ಯಜಿಟೇಷನ್ನು ಮಾಡ್ತಿರುವಾಗ್ಲೆ ಹೋಗಬೇಕೇನು ಶಾಸ್ತ್ರಿ” ಅಂದ. ಅದೇ ಹೊತ್ತಿಗೆ ಚಂಬಸ್ಯನ ಜೊತೆ ಬಂದ ಶ್ರೀಮತಿ ಪಾರ್ವತಮ್ಮ ಗುಮಿಸಿಗೌಡರಿಂದಾಗಿ ಸತ್ಯಾಗ್ರಹ ಕಾಲಾಫ್ ಲಕ್ಷಣ ತೋರಿತು. +ಶಾಮು ಓಬಳೇಶರು ಪದ ವಿಂಗಡನೆಗೊಂಡ ವಕ್ರ ಮತ್ತು ಉಕ್ತಿಗಳಂತೆ ಹೊರ ಹೊಂಟರು. ಇಲ್ಲಿ ಮುಳುಗುತ್ತ ಅಲ್ಲಿ ತೇಲುತ್ತ; ಅಲ್ಲಿ ಮುಳುಗುತ್ತ ಇಲ್ಲಿ ತೇಲುತ್ತ ಸೈಬೀರಿಯನ್ ಹಕ್ಕಿಗಳಂತೆ ಅವರೀರ್ವರು ನಡೆಯತೊಡಗಿದರು. +ತಾಮಸ, ಸಾತ್ವಿಕ ಪ್ರವೃತ್ತಿಗಳೇ ವ್ಯಕ್ತಿರೂಪ ಧರಿಸಿ ನಡೆಯುತ್ತರುವರೇನೋ ಎಂಬಂತೆ ಅವರೀರ್ವರೂ ನಡೆಯ ತೊಡಗಿದರು. +ನಾಗರೀಕ ಅನಾಗರೀಕ ಜಾಯಮಾನಗಳಂತೆ; ಸುರ ಅಸುರರಂತೆ; ಹಿಂದಿನಕಾಲದ ಇಂದಿನ ಕಾಲಗಳಂತೆ; ಅಂತರಂಗ ಬಹಿರಂಗದಂತೆ ಅವರು ನಡೆಯುತ್ತಿರುವುದನ್ನು ಸಮಸ್ತರು ನೋಡತೊಡಗಿದರು. +ಕೆಲವರಂತೂ ಅಯ್ಯೋ ಪಾಪ!… ಇವನಿಗೇನು ಬಂತು ರೋಗ ಎಂಬಂತೆ ನೋಡ ತೊಡಗಿದರು. ಕೆಲವರು ಹ್ಹೋಽಽಹ್ಹೋಽಽಹ್ಹೋಽಽಃಃಓಽಽ ಎಂದು ಉದ್ಗರಿಸಿ ಶುಭ ಕೋರಿದರು. ಇಂಥ ಕಂಟಕ, ಸಂಕಟಗಳ ಮೂರ್ತಿವೆತ್ತ ಓಬಳೇಶನೇ ಪಕ್ಕದಲ್ಲಿರುವಾಗ ಶಾಮ ಯಾಕೆ ಹೆದರುವುದು? +ತ್ರಿಕಾಲ ಪೂಜೆ ಮಾಡುವಳೆಂದೂ, ಒಬ್ಬ ಬ್ರಾಹ್ಮಣನಿಗಾದರೂ ಊಟಹಾಕದ ಹೊರತು ಒಂದು ತುತ್ತು ಅನ್ನ ಮುಟ್ತುವವಳು ಅಲ್ಲವೆಂದೂ; ಈ ಪ್ರಪಂಚದಲ್ಲಿರುವ ಸಮಸ್ತ ದೇವಾನುದೇವತೆಗಳ ಫೋಟೋಗಳಿಂದ ಮನೆಯ ಗೋಡೆಗಳನ್ನು ಅಲಂಕರಿಸಿರುವಳೆಂದೂ ಸದ್ಗುರು ಸದಾನಂದ ಬಾಬಾರವರು ಮಂತ್ರಿಸಿಕೊಟ್ತಿರುವ ಪವಿತ್ರ ಭಸ್ಮ, ಕುಂಕುಮ ಸದಾ ನೊಸಲ ಮೇಲೆ ಅಲಂಕರಿಸಿಕೊಂಡಿರುವಳೆಂದೂ ಎಂದು ಮುಂತಾಗಿ ಮನೆ ಮಾಲೀಕಳಾದ ಕಾವಲಿ ಫಕೀರಮ್ಮನ ಗುಣಗಾನ ಮಾಡಿದ ಓಬಳೇಶ ದಾರಿಯುದ್ದಕ್ಕೂ. +ಓಬಳೇಶ ಪರಮೆಶ್ವರ ಶಾಸ್ತ್ರಿಗಳ ಮೊಮ್ಮಗನೂ, ಸದರೀ ಗ್ರಮದ ಬ್ಯಾಂಕ್ ಆಫೀಸರನೂ ಆದ ಶಾಮಾ ಶಾಸ್ತ್ರಿಯನ್ನು ತಮ್ಮ ಕೇರಿಗೆ ಕರೆದುಕೊಂದು ಬರುತ್ತಿರುವನೆಂಬ ಸಂಗತಿಯು ಅದಾವ ಮಾದಿಯಿಂದಾಗಿಯೋ ಕೇರಿಯಲ್ಲಿ ಬಿತ್ತರವಾಗಿದ್ದಿತು. ಅಲ್ಲಿನ ಇರುವೆ ಎಂಬತ್ತು ನಾಲ್ಕು ಕೋಟಿ ಜೀವರಾಶಿಗಳು ಆ ಮಹಾಮಹಿಮನನ್ನು ಸ್ವಾಗತಿಸಲು ತುದಿಗಾಲಮೇಲೆ ನಿಂತು ಕಾಯಿತ್ತಿದ್ದವು. +ಬರೀ ಒಂದೇ ನಮೂನಿಯ ಮತ್ತು ಸವಕಲಾದ ಪ್ರಪಂಚವನ್ನು ನೋಡೀ, ನೋಡೀ ಸಾಕಾಗಿದ್ದ ಶಾಮಣ್ಣ ಎದುರಾಗುತ್ತಿದ್ದ ಶಾಮಣ್ಣ ಎದುರಾಗುತ್ತಿದ್ದ ಹೊಸ ಪ್ರಪಂಚವನ್ನೂ,ಹೊಸ ಪ್ರಪಂಚದ ರಂಗುರಂಗಿನ ಜೀವರಾಶಿಯನ್ನೂ; ಪುಳಕಗೊಳಿಸುತ್ತಿರುವ ಭಾವನೆಗಳನ್ನೂ ನೋಡಿ ಮೂಕ ವಿಸ್ಮಿತನಾಗುತ್ತಿದ್ದನು. ನರಕವಾಸಿಯೋರ್ವನಿಗೆ ಸ್ವರ್ಗ ತೋರಿಸಿದಾಗ ಅವನು ಯಾವ ರೀತಿ ಪ್ರತಿಕ್ರಿಯಿಸಬಹುದೋ ಬೆರಗಾಗಬಹುದೋ ಹಾಗೆ… +ಈಗ ಇರುವುಂಥ ಯಾವುದೇ ಅಸಹ್ಯಕರ ಭಾವನೆ ಆ ಕಾಲದಲ್ಲಿರಲಿಲ್ಲ. ಆ ಕಾಲದಲ್ಲಿ ಅದು ಯಕ್ಷರು, ಕಿನ್ನರರು, ಕಿಂಪುರುಷರು, ಗಂಧರ್ವರು ವಾಸಿಸುತ್ತಿರುವ, ವಾಸಿಸಲು ಯೋಗ್ಯವಾದ ಬಡಾವಣೆಯಾಗಿತ್ತು. ಆ ಬಡಾವಣೆಯನ್ನು ದೂರದಿಂದ, ಹತ್ತಿರದಿಂದ ನೋಡಲು ಪ್ರವೇಶಿಸಲು ಎಂಥ ಸಜ್ಜನರು ಹಾತೊರೆಯುತ್ತಿದ್ದರು. +ಶೂದ್ರಾತಿ ಶೂದ್ರನಂತೆ ವೇಷಮರೆಯಿಸಿಕೊಂಡು ಬಂದು ಹೋದ ಅನುಭವಕ್ಕಿಂತ ಶ್ರೋತ್ರಿಯ ನೈಜ ಸ್ವರೂಪದಲ್ಲಿ ಪ್ರವೇಶಿಸುವ ಅನುಭವವೇ ಅನನ್ಯವೆನಿಸಿತು. +ಶನಿವಾರಪೇಟೆ ದಾಟಿದ ನಂತರ ಎದುರಾದ ಬುಧವಾರಪೇಟೆಯೇ ಸೋಮವಾರಪೇಟೆಯ ಬುಲಂದೇ ದರವಾಜ ಇದ್ದಂತೆ ಎಂದೊಂದು ಕ್ಷಣ ಶಾಮನಿಗೆ ಅರ್ಥವಾಗಲಿಲ್ಲ. ದೂರದಲ್ಲೆಲ್ಲೋ ತಬಲ, ಮದ್ದಲೆ, ಕಂಜರ, ದಂಬಡಿಯೇ ಮೊದಲಾದ ಚರ್ಮ ವಾದ್ಯಗಳೂ; ಪಿಟೀಲು, ವೀಣೆ, ತಂಬುರಿಗಳೇ ಮೊದಲಾದ ತಂತಿ ವಾದ್ಯಗಳೂ, ಹಾರ್ಮೋನಿಯುಂಗಳು ಪರಸ್ಪರ ಮಧುರವಾಗಿ ಸಂಭಾಷಿಸುತ್ತಿರುವವೇನೋ ಎಂಬಂತೆ ಕೇಳಿ ಬರುತ್ತಿರುವುದು. +ಅಲ್ಲೊಂದೆರಡು ಕಡೆ ಹುಡುಗಿಯರು ಹುಡುಗರು ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ ಮೊದಲಾದ ಆಟಗಳನ್ನು ಆಡುತ್ತಿರುವುದು ಕಂಡಿತು. ಪಿಟ್ಟೆ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದ ಎರಡು ನಾಯಿಗಳು ಬಂದು ಶಾಮನ ಕಾಲ ಮೀನ ಖಂಡವನ್ನು ಮೂಸಿ ಹೋದವು. +ಬಾಗಿಲಲ್ಲಿ; ಕಿಟಕಿಯಲ್ಲಿ ನಿಂತು ಕೂತು ಅಡಗಿ ಇಣುಕುವ ಕಿನ್ನರಿ ಯಕ್ಷಿಯರು. +ಸಿದ್ಧಾರ್ಥನ ಕುತೋಹಲದಿಂದ ನೋಡುತ್ತ ಓಬಳೇಶನ ಹಿಂದೆ ಸಾಗಿದ ಶಾಮಣ್ಣ ಅಲ್ಲಿಂದ ಒಂದೈವತ್ತು ಹೆಜ್ಜೆ ನಡೆದು ಅವರು ಮನೆಯೊಂದರ ಮುಂದೆ ನಿಂತರು. ಬಾಗಿಲ ಮುಂದೆ ಸುಂದರವಾದ ತುಲಸಿಕಟ್ಟೆ. +ಓಬಳೇಶ “ಓಯ್ ಪಕ್ಕೀರಮ್ಮತ್ತಾ… ಇಂಟ್ಲೂ ಉನ್ನಾವಾ ಲೇದಾ… ಯಾವರೋಚ್ಚಾರೂ ಸೂಡು… ಬಿರ್‍ನರಾವೇ” ಎಂದು ಕೂಗಿದ. +ತ್ರಿಪುಂಡ್ರಾಕ್ಷೆಯಾಗಿದ್ದ ಸ್ಥೂಲ ದೇಹಿಯೋರ್ವಳು ‘ವಸ್ತುನ್ನಾ, ವಸ್ತುನ್ನಾಽಽ’ ಎನ್ನುತ್ತ ಹೊರಗೆ ಬಂದಳು. +(ಹಿಂದೆ ರಂತಿ ದೇವರು ಮಾಡಿದ ಯಜ್ಞದಲ್ಲಿ ಅನೇಕ ಪಶುಗಳನ್ನು ಕೊಂದು ಅವುಗಳ ಚರ್ಮ ರಾಶಿ ಹಾಕಿರಲಾಗಿ ಅಲ್ಲಿಂದ ಹರಿದು ಬಂದು ಔರೈಯಾದ ಬಳಿ ಯಮುನೆಯನ್ನು ಸೇರಿಕೊಳ್ಳುವ ಚಂಬಲ್ ನದಿಯೇ ಸ್ತ್ರೀರೂಪ ಧರಿಸಿ ಫಕೀರಮ್ಮ ಎಂಬ ಅಭಿಧಾನ ಪಡೆದಿರುವುದೋ…) +ಮಹಾ ಪತಿವ್ರತೆಯೂ; ಅತ್ರಿಮುನಿಯ ಪತ್ನಿಯೂ; ಕರ್ದಮ ಮುನಿಯಿಂದ ದೇವಹೂತಿಯೆಂಬಾಕೆಯಲ್ಲಿ ಜನಿಸಿದವಳೂ ಆದಂಥ ಅನಸೂಯಳು ತನ್ನ ಪ್ರಾತಿವ್ರತ್ಯದ ಪರೀಕ್ಷಾರ್ಥವಾಗಿ ಬಂದ ತ್ರಿಮೂರ್ತಿಗಳಿಗೆ ನಮಸ್ಕರಿಸಿ ಪರ್ಣಕುಟಿಯೊಳಗೆ ಕರೆದುಕೊಂಡು ಹೋದಂತೆ ಫಕೀರಮ್ಮ ನಮಸ್ಕರಿಸಿ ಶಾಮಣ್ಣನನ್ನು ಒಳಗಡೆ ಕರೆದುಕೊಂಡು ಹೋಗಿ ಉನ್ನತಾಸನದ ಮೇಲೆ ಕುಳ್ಳರಿಸಿ, ಹಣ್ಣು ಹಂಪಲು ನೀಡಿ ಸತ್ಕರಿಸಿ ಅಷ್ಟು ದೂರ ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತುಕೊಂಡಳು. ಒಂದಿಬ್ಬರು ಮೂರು ಮಂದಿ ತರುಣಿಯರು ಆಕೆಯ ಎಡಬಲಕ್ಕೆ ಕೂತುಕೊಂಡು ತಾವು ಅಮಾಯಕರೇನೋ ಎಂಬಂತೆ ನೋಡ ತೊಡಗಿದರು. +ಅವರ ಆ ಮಾದಕ ನೋಟಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯಲಾರದೆ ಕಕ್ಕಾಬಿಕ್ಕಿಯಾಗಿ, ಆ ಕಕ್ಕಾಬಿಕ್ಕಿಯನ್ನು ಹೊರಗಡೆ ತೋರಗೊಡದಂತೆ, ಅಮಾಯಕನಂತೆ ಕುತಿದ್ದ ಶಾಮಣ್ಣನು ಒಳಗೊಳಗೆ ಪ್ರಾಪಂಚಿಕ ಸೌಂದರ್ಯದ ಬಗ್ಗೆ ಮೂಕವಿಸ್ಮಿತನಾದನಾದರೂ ಮಂದಸ್ಮಿತನಾಗಲಿಲ್ಲ. +( ಅವು ಹಿಂದೆಂದಾರೂ ಮಂದಸ್ಮಿತ ನೋಟದಿಂದ ಯಾವ ಸುಂದರಿಯ ನೋಟವನ್ನು ಎದುರಿದವನಾಗಿದ್ದರೆ ತಾನೆ) +ಫಕೀರಮ್ಮ ಆ ಹುಡುಗಿಯರ ಕಡೆ ತಿರುಗಿ – “ಏಯ್… ಪೆದ್ದವಾಳ್ಳು… ವಾಳ್ಳ ಕಾಳ್ಳಕಿ ಮೊಕ್ಕಿ ನಮಸ್ಕರಿಂಚಕೂಡಾ ಅಲಾಗೆ ಕೂಚಾರಾಮಿ! ಪೋಯಿ ನಮಸ್ಕರಿಂಚಂಡಿ” ಎಂದು ತಾರೀಫು ಮಾಡಿದ್ದು ಕಂಡು ಶಾಮಣ್ಣನ ಎದೆ ಧಸಕ್ಕೆಂದಿತು. ಅವರೆಲ್ಲಿ ಬಂದು ತನ್ನ ಸೂಕ್ಷ್ಮ ಗ್ರಾಹಿಯಾದ ಪಾದಮುಟ್ಟಿ ಬಿಡುವರೋ; ಅದರಿಂದ ತನ್ನ ದೇಹದ ಉಷ್ಣಮಾನದ ಏರಿಕೆಯಾಗಿ ಬಿಡುವುದೋ ಎಂದು ಅವನು ಹೆದರುತ್ತಿರುವಾಗಲೆ ಅವರು ಒಬ್ಬೊಬ್ಬರ್ಂತೆ ಎದ್ದು ಹೋಗಿ ಪಾದ ಮುಟ್ಟಿ ನಮಸ್ಕರಿಸಿಯೇ ಬಿಟ್ಟರು. +ದೀರ್ಘಾಯುಷ್ಮಾನ್ ಭವ ಎಂದು ಆಶೀವದಿಸಬೇಕೋ, ಶೀಗ್ರ ಕಲ್ಯಾಣಮಸ್ತು ಎಂದು ಅಶೀರ್ವದಿಸಬೇಕೋ, ಶತಪುತ್ರ ಸೌಭಾಗ್ಯವತೀರಸ್ತು ಎಂಬ ಗೊಂದಲಕ್ಕೆ ಬಿದ್ದ ಶಾಮಣ್ಣನಿಗೆ ಪೂರ್ಣಚಂದ್ರನ ಮೆಲಿರುವ ಹದಿನರು ಕಾಮಕಲೆಗಳ ಕುರಿತಾದ ಶ್ಲೋಕವೊಂದು ತನಗರಿವಿಲ್ಲದಂತೆ ನೆನಪಾಗಿ ಬಿಡಲು ಅವನು – +ಪೂಷಾ ಯಶಾಸ್ಸು ಮನಸಾ ರತಿಃ ಪ್ರಾಪ್ತಿಸ್ತಥಾ ದೃತಿಃ +ಋದ್ಧಿ ಸ್ಯೌಮ್ಯಾ ಮರೀಶಸ್ಚ ತಥಾ ಚೈವಾಂಶು ಮಾಲಿನೀ +ಅಂಗೀರಾ ಶಶಿನೀ ಚೇತಿ ಛಾಯಾ ಸಂಪೂರ್ಣ ಮಂಡಲಾ +ತಿಷ್ಟಿಶ್ಚೈವಾಮೃತಾ ಚೇತಿ ಕಲಾಸೋಮಸ್ಯ ಷೋಡಶ… +… ಎಂದು ಕಣ್ಣುಮುಚ್ಚಿ ಗಟ್ಟಿಯಾಗಿ ನುಡಿದುಬಿಟ್ಟನು. +ಅದನ್ನು ಕೇಳಿ ಫಕೀರಮ್ಮ ಭಕ್ತಿ ಪರವಳಾಗಿ “ಸಾಕ್ಷಾತ್ ಪರಮೇಶ್ವರ ಶಾಸ್ತ್ರಿಗಳೇ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡ್ದಂಗಾಯ್ತು” ಎಂದು ಉದ್ಗರಿಸಿದಳು. +ಹುಡುಗಿಯರ ಪೈಕಿ ಎತ್ತರದ ನಿಲುವಿನ ಹುಡುಗಿ ಮಾತ್ರ ಶಾಮಣ್ಣನ ಶ್ಲೋಕೋಚ್ಚಾಣೆಯಿಂದ ಬೆರಗಾಗಲಿಲ್ಲ.. ಆ ಚೌಪದಿಯನ್ನು ಒಂದೆರಡು ಬಾರಿ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಂತೆ ಕಣ್ಮುಚ್ಚಿ ನಿಂತಿದ್ದು ನಂತರ ತೆರೆದಳು. +“ಇದೇ ಶ್ಳೋಕವನ್ನು ನಾನೂ ಹೇಳ್ಲೇನ್ರೀ ಶಾಸ್ತ್ರಿಗಳೇ” ಎಂದು ಕೇಳಿದಳು. +ಅದರಿಂದ ಆತನಿಗೆ ಆಶ್ಚರ್ಯವಾಯಿತು. +“ಅದ್ನೇಳಾಕೇನದು ಚಿತ್ರಾಂಗದ ನಾಟಕದ ಮಾತಂದ್ಕೊಂಡೀ ಏನೇ ವಿಜ್ಜೀ… ಬಾಯಿ ಮುಚ್ಕೊಂಡು ಕೂಕ ಬಾರೇ” ಎಂದು ಫಕೀರಮ್ಮ ಸಿಡುಕಿದಳು. +“ಹೇಳ್ಲಿ ಬಿಡ್ರೀ…” ಎಂದ ಶಾಮ. +ವಿಜಯ ಕಣ್ಣು ಮುಚ್ಚಿಕೊಂಡು ಪೂಷಾಯಶಸ್ಸು… ಎಂದು ರಾಗ ಬದ್ಧವಾಗಿ ಶುರುಮಾಡಿ ಎಲ್ಲೂ ತಡವರಿಸದೆ ಕಲಾ ಸೋಮಸ್ಯೆ ಷೋಡಶ ಎಂಬಲ್ಲಿಗೆ ಮುಗಿಸಿದಳು. +ತಾನು ಚಿಕ್ಕಂದಿನಲ್ಲಿ ಈ ಶ್ಲೋಕ ಬಾಯಿ ಪಾಠ ಮಾಡಲು ತೆಗೆದುಕೊಂಡಿದ್ದು ವಾರಕ್ಕಿಂತಲೂ ಹೆಚ್ಚುಸಮಯವನ್ನು. ಆದರೆ ಈ ತರುಣಿ ಕಿವಿಯಲ್ಲಿ ಕೇಳಿದೊಡನೆ ನಾಲಿಗೆಗೆ ತಂದುಕೊಂಡು ಒಂದೇ ಏಟಿಗೆ ಹೇಳಿಬಿಟ್ಟಳಲ್ಲ! ಅದೂ ಅಲ್ಲದೆ ಶೂದ್ರ ಕುಲದಲ್ಲಿ ಹುಟ್ಟಿದವಳು..! +ಆಶ್ಚರ್ಯ ಮತ್ತು ಸಂತೋಷ ತಡೆಯಲಾಗದೆ ಶಾಮಣ್ಣ ಎದ್ದುಹೋಗಿ ವಿಜಯಳ ತಲೆಯನ್ನು ಮೆಚ್ಚುಗೆಯಿಂದ ನೇವರಿಸಿ “ಅದ್ಭುತ ಪ್ರತಿಭಾವಂತೆ ಕಣಮ್ಮಾ” ಎಂದು ಉದ್ಗರಿಸಿ ಕೂತನು. +ಅದರಿಂದ ವಿಜಯಳ ಮುಖದಲ್ಲಿ ಯಾವುದೇ ಭಾವನೆ ಮೂಡಲಿಲ್ಲ. ಬದಲಿಗೆ – +“ಇದೇ ಚಂದ್ರನ ಮಂತ್ರ ಶಾಸ್ತ್ರದಲ್ಲಿರೋ ಶ್ಲೋಕ ಹೇಳ್ಳೇನ್ರಿ” ಎಂದು ಕೇಳಿದಳು. +“ವಿಜ್ಜಿ ನಿನ್ನ ತಲೆ ಹರಟೆ ಜಾಸ್ತಿ ಆತು…” ಬಾಯಿ ಮುಚ್ಚಿಕೊಂಡು ಬಂದು ಕೂಡ್ತೀಯೋ ಇಲ್ಲವೋ” ಎಂದು ಫಕೀರಮ್ಮ ಗದರಿಸಿದಳು. +“ಹೇಳಮ್ಮಾ.. ಇದ್ಕಿಂತ ಸಂತೋಷ ಯಾವ್ದಿದೆ” ಎಂದು ಶಾಮಣ್ಣ ಕುತೋಹಲದಿಂದ ಹೇಳಿದ. +ವಿಜಯ ಮತ್ತೆ ಕಣ್ಣು ಮುಚ್ಚಿಕೊಂಡು – +“ಅಮೃತಾ ಮಾನದಾ ಪೂಷಾ ಪುಷ್ಟಿಸುತ್ತಿಷ್ಟೀರತಿ ರ್ಧೃರ್ತಿಃ +ಶಶಿನೀ ಚಂದ್ರಿಕಾ ಕಾಂತ ಜ್ಯ್ರೋತ್ಸ್ನಾ ಶ್ರೀಃ ಪ್ರೀತಿ ರಂಗದಾ +ಪೂರ್‍ಣಾ ಪುರ್‍ಣಾಮೃತಾ ಕಾಮದಾಯಿನ್ಯಶೃಶಿನಃ ಕಲಾಃ… ಇದ್ರ ಅರ್ಥ ವಿವರಣೆ ಮಾಡಿ ಹೇಳಲೇನ್ರಿ ಶಾಸ್ತ್ರಿಗಳೇ” ಎಂದು ಮರು ಪ್ರಶ್ನೆ ಹಾಕಿದಳು. +ಮೊಮ್ಮಗಳ ಈ ವರ್ತನೆಯಿಂದ ಬೇಸರಗೊಂಡ ಫಕೀರಮ್ಮ ಆಕೆಯ ಕಿವಿ ಹಿಡಿದು ಎಳೆದುಕೊಂಡು ಬಂದು ಪಕ್ಕದಲ್ಲಿ ಕೂಡ್ರಿಸಿಕೊಂಡಳು. ಆ ಹುಡುಗಿ ಸ್ಥಿತ ಪ್ರಜ್ಞೆಯಂತೆ ಕೂತು ತನ್ನ ಬೊಗಸೆ ಕಣ್ಣುಗಳಿಂದ ಪಿಳಿಪಿಳಿ ನೋಡ ತೊಡಗಿತು. +ಶಾಮಣ್ಣನಿಗೆ ಆಶ್ಚರ್ಯದ ಜೊತೆ ನಾಚಿಕೆಯೂ ಆಯಿತು. ಸಂತೋಷವನ್ನು, ಮೆಚ್ಚುಗೆಯನ್ನು ಯಾವ ಪರಿವೇಷದ ಸಹಾಯದಿಂದ ವ್ಯಕ್ತಪಡಿಸಬೇಕೆಂಬುದೇ ಒಂದು ಕ್ಷಣ ತಿಳಿಯಲಿಲ್ಲ. ಬೆವೆತ, ಒರೆಸಿಕೊಂಡ. +“ವಿಜಯಾ.. ನೀನು ಸಾಮಾನ್ಯಳಲ್ಲ.. ಅದ್ಭುತ ಪ್ರತಿಭಾವಂತೆ… ದೇವರು ನಿನ್ಗೆ ಒಳ್ಳೆಯದು ಮಾಡ್ಲಿ… ಅದಿರ್‍ಲಿ… ಏನೋದ್ತಿದೀಯಾ?” ಎಂದು ಕೇಳಿದ. +“ಸಂಸ್ಕೃತದಲ್ಲಿ ಬಿ.ಎ., ಮಾಡ್ತಿದೀನಿ ಶಾಸ್ತ್ರಿಗಳೇ” ಎಮ್ದು ಯಾವ ಬಿಂಕು ಬಿನ್ನಾಣವಿಲ್ಲದೆ ನುಡಿಯಿತು. +ಶಾಮಣ್ಣ ತನ್ನ ತಾತನವರನ್ನು ನೆನಪು ಮಾಡಿಕೊಂಡು ನಿಟ್ಟುಸಿರುಬಿಟ್ಟ. ಮನು ಮಹಾಶಯನೇನಾದರು ಎದುರಿಗೆ ಬಂದರೆ ಎರಡು ಸಾರಿ ಜಾಡಿಸಬೇಕೆನ್ನುವಷ್ಟು ಸಿಟ್ಟು ಬಂತು. +ಈ ಓಣಿ ಈ ಊರು ತಾನು ಸಂಸಾರ ಸಮೇತ ವಾಸಿಸಲಿಕ್ಕೆ ಯೋಗ್ಯ ಸ್ಥಳವೆಂದು ನಿರ್ಧರಿಸಿದ. +“ಯತ್ತೈ ಬ್ಯಾಂಕೀಕಿ ಪೋಡಾನಿಕಿ ಪೊದ್ದವುತುಂದಿ… ಇಲ್ಲುನಿ ಚ್ಸೇಕಿ ಪೋದಾಮು” ಎಂದು ಓಬಲೇಶ ಸಮಯ ಪ್ರಜ್ಞೆಯಿಂದ ಎಚ್ಚರಿಸಿದ. +ವಿಜಯಳ ರೂಪ ಮತ್ತು ಬುದ್ಧಿಮತ್ತೆ ತುಂಬಿಕೊಂಡು ಬಾಗಿಲು ದಾಟಿದಾದ ಮೇಲೆ ಆಕೆ ಕಡೆ ಅಭಿಮಾನದಿಂದ ನೋಡಿದ. +ಫಕೀರಮ್ಮ ತಾನು ಕಳೆದು ವರ್ಷವಷ್ಟೆ ಕಟ್ಟಿಸಿರುವ ಮನೆ ಅಲ್ಲಿಗೆ ಕೇವಲ ನೂರು ಅಡಿ ದೂರದಲ್ಲಿತ್ತು. ಮನೆ ಬಗ್ಗೆ ಶಾಮನಿಗೆ ಯಾವ ಕುತೋಹಲವೂ ಉಳಿದಿರಲಿಲ್ಲ. ಅವನಿಗೆ ಕುತೋಹಲವಿದ್ದುದು ವಿಜಯಳ ಬಗ್ಗೆ… ಈ ವಯಸ್ಸಿನಲ್ಲಿ ಅದ್ಭುತ ಸೂಕ್ಷ್ಮಗ್ರಾಹಿಯಾಗಿರುವ ಅವಳು ಅದ್ಭುತ ಹುಡುಗಿ ಎಂದುಕೊಂಡ. +ಆಕೆಯ ನೆನಪಿನಲ್ಲಿ ಮನೆಯ ಮುಂದೆ ಕೊಟ್ಟೂರಿನ ತನ್ನ ಮನೆಯಷ್ಟು ಕಿಮ್ಮತ್ತಿನ ಬಾಗಿಲು, ನಿಷ್ಣಾತ ಕಾಷ್ಠ ಶಿಲ್ಪಿ ತಯಾರಿಸಿದ ಅದರ ಮೇಲೆ ಪರಮೇಶ್ವರ ಕಾಮ ದಹನ ಮಾ‌ಅಡಿದ ಚಿತ್ರಣಾತ್ಮಕ ವಿವರವಿತ್ತು. ಬಾಗಿಲ ಪಲಕಗಳ ಒಂದುಕಡೆ ಪದ್ಮಾಸನೆಯಾದ ಲಕ್ಷ್ಮಿದೇವಿಯ ಚಿತ್ರವಿದ್ದರೆ ಇನ್ನೊಂದು ಪಲಕದ ಮೇಲೆ ಮಹಿಷಾಸುರನನ್ನು ಮೆಟ್ಟಿನಿಂತಿರುವ ಚಾಮುಂಡಿಯ ಚಿತ್ರ ಇರುವುದು. +ಫಕೀರಮ್ಮ ತನ್ನ ಬೊಜ್ಜು ಹೊಟ್ಟೆಯ ‘ಬಾಳೆ’ಯಿಂದ ಬೀಗದ ಗೊಂಚಲು ತೆಗೆಯುವಾಗ ಶಾಮ ಆಕೆಯ ಕಿಬ್ಬೊಟ್ಟೆಯನ್ನೂ; ಸುರುಳಿ ಸುತ್ತಿ ಆತ್ಮಲಿಂಗದಂತಿದ್ದ ಹೊಕ್ಕಳನ್ನೂ ನೋಡಿದ. ಮೂರು ನಾಲ್ಕು ನಮೂನಿಯ ಉಂಗುರಗಳಿದ್ದ ನೀಳ ಬೆರಳುಗಳಲ್ಲಿ ಛಾವಿ ಹಿಡಿದು ಆಕೆ ಅದನ್ನು ಪತ್ತಾಡೊಳಗಡೆ ತೂರಿಸಿ ತಿರುವಿದ್ದು ಅರ್ಥಗರ್ಭಿತವಾಗಿ ಕಂಡಿತು. +ತೆರೆದ ಬಾಗಿಲೊಳಗಡೆ ಮೊದಲಿಗೆ ಪ್ರವೇಶಿಸಿದ ಓಬಳೇಶ ಲೈಟು ಹಾಕಿದನಲ್ಲದೆ ಕಿಟಕಿಗಳನ್ನೂ ತೆರೆದ. +ಅಡುಗೆ ಮನೆಯನ್ನು ಕಿಚನ್‌ರೂಂ ಎಂದೂ; ಬಚ್ಚಲ ಕೋಣೆಯನ್ನು ಬಾತ್ರೂಮ್ ಎಂದೂ, ದೇವರ ಕೋಣೆಯನ್ನು ದೇವರ ಕೋಣೆ ಎಂದೂ ವಿವರಿಸಿದ. ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು, ಈ ರೂಮನ್ನಾದ್ರು ಬೆಡ್ರೂಮಾದ್ರು ಮಾಡ್ಕೋ ಬೌದು ಎಂದ. ಒಂದೊಂದು ರೂಮಿಗೂ ಎರಡೆರಡು ಕಪಾಟುಗಳಿದ್ದವು. ಐವತ್ತು ಮಂದಿ ಸಲೀಸಾಗಿ ಕೂಡ್ರಬಹುದಾದಷ್ಟು ವಿಶಾಲವಾದ ಹಝಾರ ಬೇರೆ… ಮನೆ ಹೆಣ್ಣು ಮಕ್ಕಳು ಸಣ್ಣಪುಟ್ಟ ಕೆಲಸಗಳಿಗೆ ಹೊರಗೆ ಹೋಗುವಂತಿಲ್ಲ… ಎರಡು ಮೂರು ಕಡೆ ಕೊಳಾಯಿ, ಕಕ್ಕಸು ಕೋಣೆ, ಅಲ್ಲೊಂದು ಇಲ್ಲೊಂದು ಕಡೆ ಇರುವ ಪುಟ್ಟ ತೆಂಗಿನ ಗಿಡಗಳ ಬುಡಕ್ಕೆ ಬಟ್ಟೆ ತೊಳೆದ ನೀರು ಹರಿದು ಹೋಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ಬೆಳೆದು ನೆರಳು ಕೊಡಲಿರುವ ಕಣಗಿಲೆ, ದಾಸವಾಳ ಗಿಡಗಳಡಿ ಆರಾಮ ಛೇರಿನ ಮೇಲೆ ಒರಗಿಕೊಂಡು ಪುರಾಣ ಪಾರಾಯಣ ಮಾಡಬಹುದು. ಈ ಕಡೆ ನಿಂತರೆ ಆ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆ ಕಡೆಯಲ್ಲಿ ನಿಂತರೆ ಈ ಕಡೆಯಲ್ಲಿರುವ ಮನೆಯವರು ಕಾಣುತ್ತಾರೆ. ಆದರೆ ಆ ಕಡೆ ಈ ಕಡೆಯಲ್ಲಿರುವ ಮನೆಯವರಿಗೆ ಈ ಮನೆಯವರು ಮಾತ್ರ ಕಾಣುವುದಿಲ್ಲ… ಫಕೀರಮ್ಮನ ಅಳಿಯ ಚಲುವಯ್ಯನವರು ಮಾಡಿಕೊಟ್ಟ ಬ್ಲೂಪ್ರಿಂಟ್ ಆಧಾರದ ಮೇಲೆ ಕಟ್ಟಿರುವ ಮನೆ, ಚಲುವಯ್ಯ ಅನೇಕ ಮಂತ್ರಿಗಳ ಮನೆಗಳ ಆರ್ಕಿಟೆಕ್ಟು. ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲನಿಯ ಬಹುಪಾಲು ಮನೆಗಳ ವಾಸ್ತುಶಿಲ್ಪಿ, ಬೆಂಗಳೂರಿನಿಂದ ವರ್ಷಕ್ಕೆರಡು ಮೂರು ಸಾರಿ ಇಲ್ಲಿಗೆ ಬಂದು ತಮ್ಮ ವಿಜಯಾಳ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ. ಪಾಪ! ತಾಯಿಯಿಲ್ಲದ ಹುಡುಗಿಗೆ ಆಕೆಯ ಹೆಣ್ಣಜ್ಜಿಯಾದ ಫಕೀರಮ್ಮನೇ ದಿಕ್ಕು , ಮಗಳಿಗೆಂದು ಚಲುವಯ್ಯನವರೇ ಕಟ್ಟಿಸಿಕೊಟ್ಟಿರುವ ಮನೆ ಇದು. +ಇದೇ ಮನೆಯನ್ನು ಪಾರ್ಟಿ ಆಫೀಸು ಮಾಡಿಕೊಳ್ಳಬೇಕೆಂದು ರಾಜಕಾರನಿಗಳಾದ ಗುಲಾಂ ನಬಿ, ದಯಾನಂದ ಸಾಗರ್ ಮೊದಲಾದವರು ಪೈಪೋಟಿಗಿಳಿದ್ದಿದ್ದುಂಟು. ಜಮಾತೆ ಇಸ್ಲಾಮಿಯ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಇಸ್ಮಾಯಿಲನೂ, ಆರ್.ಎಸ್.ಎಸ್.ನ ವಲಯ ಕಛೇರಿಯನ್ನಾಗಿ ಮಾಡಿಕೊಳ್ಳಬೇಕೆಂದು ಹೆಬ್ರಿಯೂ ಪ್ರಯತ್ನಿಸಿದ್ದುಂಟು. ಪ್ರಸಿದ್ಧ ಆರೆಂಪಿ ಸರ್ಜನ್ ರಾಮಣ್ಣನವರಿಗೂ ಕೊಡಲಿಕ್ಕಾಗಲಿಲ್ಲವೆಂದ ಮೇಲೆ ಪಾರ್ಟಿ ಆಫೀಸಿಗಾಗಲೀ, ಸಂಘಟನೆಯ ಕಛೇರಿಗಳಿಗಾಗಲೀ ಕೊಡಲಿಕ್ಕಾಗುವುದೇ? ಕಮ್ಯುನಿಸ್ಟ್ ಪಾರ್ಟಿ ಕಛೇರಿ ಮಾಡ್ಲಿಕ್ಕೆ ಕಾಮ್ರೇಡ್ ರಾಮಚಂದ್ರರಾವ್ ಕೇಳಿದ್ರು ಅಂದ ಮೇಲೆ ನೀವೇ ಲೆಕ್ಕ ಹಾಕಿ… ಇಲ್ಲಿಗೆ ಒಂದು ಹರಿದಾರಿ ದೂರದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ವಿಜಯನಗರ ಉಕ್ಕಿನ ಕಾರ್ಖಾನೆ ಮಾಡಬೇಕೆಂದು ನಿರ್ಧರಿಸಿ ಒಂದೆರಡು ದಶಕಗಳ ಹಿಂದೆ ಶಿಲಾನ್ಯಾಸ ಮಾಡಿರೋದ್ರಿಂದಾಗಿಯೇ ಎಡಪಂಥದೋರು, ಬಲಪಂಥದೋರು, ಒಳ್ಳೆಯೋರು, ಕೆಟ್ಟೋರು ಎಲ್ಲಾರು ಇಲ್ಲಿಗೆ ಮುಗೆ ಬಿದ್ದಿರೋದು… ಈ ಮನೆಯ ವಾಸ್ತು ಇಟ್ಟುಕೊಟ್ಟೋರು ನಿಮ್ಮ ತಾತಂದಿರಾಗಿರೋದ್ರಿಂದಾಗಿಯೂ ಇದರಲ್ಲಿ ವಾಸೊಸಲಿಕ್ಕೆ ಎಲ್ಲಾರು ಒಂದಲ್ಲಾ ಒಂದು ಪ್ರಯತ್ನ ಮಾಡ್ತಾನೆ ಇದ್ದಾರೆ. +ಈ ಮನೆಯೊಂದೇ ಅಲ್ಲ… ಇದರ ಜಾಗ ಕೂಡ ಅದ್ಭುತವಾದದ್ದು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದಿಂದ ರಾಯನೋರ್ವ ಈ ಊರಿಗೆ ಬ್ರೆಡ್ಡಿನ ಸಂಸ್ಕೃತಿಯನ್ನು ಪರಿಚಯಿಸಿದ್ದೂ ಜಾಗದಿಂದಲೇ …ಹೀಗೆ ಹೇಳ್ತಾಹೋದ್ರೆ ಹೊತ್ತು ಹೋಗಿದ್ದೇ ತಿಳಿಯುವುದಿಲ್ಲ. +ಇದಿಷ್ಟು ಓಬಳೇಶನ ಮಾತಿನ ಗ್ರಾಂಥಿಕ ಭಾಷಾ ರೂಪ. +“ಸೋಮಿ, ನಿಮ್ಮ ತಾತನವರೆ ಕಣಪ್ಪ ನಮ್ ಚೆಲುವ್ನೀಗೆ ಒಂದು ದಾರಿ ತೋರಿಸಿಕೊಟ್ಟೋರು. ಅವನೆಷ್ಟಿದ್ರೂ ಮೂರು ಹೆಣುಮಕ್ಳುಹುಟ್ಟಿದ್ಮ್ಯಾಕ ಹುಟ್ದೋನು… ಜನ್ಮದಾರಭ್ಯ ಕುಜ ದೋಷದಿಂದ ಬಳಲ್ತಾ ಇದ್ದ… ನಿಮ್ಮ ತಾತ್ನೋರು ಯಾವ ಗಳಿಗೇಲಿ ಅಂತ್ರ ಮಂತ್ರಿಸಿ ಕಟ್ಟಿದ್ರೋ ಏನೋ… ಅವತ್ನಿಂದ ಛೇಂಜಾತು ನೋಡ್ರಿ ನಮ್ಮ ಚಲುವ್ನ ನಸೀಬು… ಬಂಗಾರದ್ತಟ್ಯಾಗ ಉಂಬುವಷ್ಟು ಆ ದೇವ್ರು ಸಿರಿವಂತಿಗೆ ಕೊಟ್ಟಾನ. ಅದೆಲ್ಲ ಪರಮೇಶ್ವರ ಶಾಸ್ತ್ರಿಗಳ ಆಶೀರ್ವಾದ ಕಣ್ರಪ್ಪಾ… ಹೆಂಗೋ ದೇವ್ರು ಮೆಚ್ಯಾನ… ನೀವಿಲ್ದಿದ್ರೆ ಹೆಂಗೋ ನಮ್ಮನ್ಯಾಗ ಪೂಜೆ ಪುನ್ಸ್ಕಾರ ಸುಸೂತ್ರವಾಗಿ ನಡೀತಾವ… ಇರಾಮ ಸಿಕ್‌ಸಿಕ್ಕಾಗ ನನ್ ಮಮ್ಮಕ್ಳೀಗೆ ಸ್ಲೋಕಾಭ್ಯಾಸ ಮಾಡಿಸ್ರಿ… ನಿಮ್ಗೆ ತಿಳ್ದಷ್ಟು ಬಾಡಿಗೆ ಕೊಡ್ರಿ… ನಾನೇನು ಅಡುವಾನ್ಸು, ಗಿಡುವಾನ್ಸು ಕೇಳೋಳಲ್ಲ… ಆ ದೇವ್ರು ಬೇಕಾದಂಗ ಕೊಟ್ತು ಮರ್‍ತಾನ… ಒಳ್ಳೆ ಟೇಮು ನೋಡಿ ಅಮ್ಮಾವರ್‍ನ ಕರ್ಕೊಂಡು ಬಂದು ಬಿಡ್ರಿ… ಮನೆ ತೊಳ್ಸೀ..ಬಳ್ಸೀ ರೆಡಿ ಮಾಡಿಟ್ಟಿರ್‍ತೀನಿ…” ಎಂದು ಹೇಳಿದ ಫಕೀರಮ್ಮನ ಅಂತಃಕರಣಕ್ಕೆ ಶಾಮ ಶರಣಾಗಿ ಹೋದ. +“ಆಯ್ತಮ್ಮಾ ನಿಮಿಷ್ಟದಂತಾಗ್ಲಿ… ನಾಡಿದ್ದು ದಿನ ಪ್ರಶಸ್ತವಾಗಿದೆ. ಸಂಸಾರ ಸಮೇತ ಬಂದು ಬಿಡ್ತೀವಿ…” ಎಂದ ಶಾಮಣ್ಣ. ಓಬಳೇಶನೊಂದಿಗೆ ಅಲ್ಲಿಂದ ಬೀಳ್ಕೊಂಡ. +* +* +* +ಅತ್ತೆಯಿಂದ ಸೊಸೆ ಅಗಲೋದು ಸೊಸೆಯಿಂದ ಅತ್ತೆ ಅಗಲೋದು ಎಷ್ಜ್ಟೊಂದು ಹೃದಯ ಸ್ಪರ್ಶಿಯಾಗಿರುತ್ತದೆಂಬುದಕ್ಕೆ ಹೊರಟುನಿಂತ ವರಲಕ್ಷ್ಮಿ ಅತ್ತೆಯವರಿಂದ ಅಲುಮೇಲಮ್ಮನ ಪಾದಕ್ಕೆ ಬಿದ್ದು “ಆಶೀರ್ವಾದ ಮಾಡತ್ತೆ…” ಎಂದು ಕೇಳಿದ್ದೇ ಸಾಕ್ಷಿ. ಅದಕ್ಕೂ ಮೊದಲು ಅವರೀರ್ವರ ನಡುವೆ ಭೀಕರ ವಾಗ್ಗದನವಾಗಿತ್ತು. +ತನ್ನನ್ನು ಒಂಟಿ ಮಾಡಿ ಮಗ ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗಲಿದ್ದಾನೆ ಎಂಬ ಸುದ್ದಿ ತಿಳಿದ ಕ್ಷಣದಿಂದ ಅಲುಮೇಲಮ್ಮ ಕರುಳನ್ನು ಬಾಯಿಗೆ ತಂದುಕೊಂಡು ಹೊಯ್ದಾಡಿದ್ದರು. +ಪೂಜ್ಯ ಶಾಸ್ತ್ರಿಗಳ ಫೋಟೊದೆದುರಿಗೆ ನಿಂತುಕೊಂಡು – “ನೀವು ನನ್ನನ್ನು ಅನಾಥೆಯನ್ನಾಗಿ ಮಾಡಿ ಹೋಗಿ ಬಿಟ್ರಿ ಮಾವನೋರೆ… ನಿಮ್ ಜೊತೆ ನಾನೂ ಹೊರಟು ಬಂದಿದ್ರೆ ಈ ನರಕ ಅನುಭೋಸ ಬೇಕಾಗ್ತಿರ್‍ಲಿಲ್ಲ. ನಾನೇನು ತಪ್ಪು ಮಾಡ್ತಿದ್ದೀನೀಂತ ಈ ನಿಮ್ಮ ಮೊಮ್ಮಗ ನನ್ನನ್ನಿಲ್ಲಿ ಒಂಟಿಯಾಗಿ ಬಿಟ್ಟು ತನ್ನ ಹೆಂಡತಿಯನ್ನು ತಾನು ಕರ್‍ಕೊಂಡು ಹೋಗ್ಲಿಕ್ಕೆ ಸಜ್ಜಾಗಿದಾನೆ? ಎಂಥಾ ಸೊಸೇನ ತಂದು ಕೂರಿಸಿದ್ದೀರಿ ನನ್ ನರೆತಿರೋ ತಲೆ ಮೇಲೆ… ಆಕೆ ಬಂದದ್ದೇ ಬಂದದ್ದು ಮನೆ ರಣರಂಗ ಆಗಿಬಿಟ್ತು. ಮಗನ್ನೂ ಸೊಸೆಯನ್ನೂ ಅವರ ಪಾಡಿಗೆ ಅವರ್‍ನ ಬಿಟ್ಟು ದೂರ ಹೊರಟು ಹೋಗೋಣಾಂದ್ರೆ ನನ್ಗೆ ನನ್ನೋರು ತನ್ನೋರ್ರೆಂಭೋರು ಯಾರಿದ್ದಾರೇಳ್ರಿ…” ಎಂದು ಮುಂತಾಗಿ ಏಕಪ್ರಕಾರವಾಗಿ ಮಾಡುತ್ತಿದ್ದ ಧಾಳಿಯನ್ನು ಹೆಂಡತಿ ವರಲಕ್ಷ್ಮಿಯೂ ಸಮರ್ಥಳಾಗೇ ಎದುರಿಸಿದಳು. +ಓಣಿಯವರು ಬಂದು ಅವರೀರ್ವರ ನಡುವೆ ರಾಜಿ ಕುದುರಿಸಲು ಕೆಲವು ಸೂತ್ರಗಳನ್ನು ಮಂಡಿಸಿದರಾದರೂ ಅವು ಇರುಪಕ್ಷಗಳಿಂದ ತಿರಸ್ಕೃತವಾದವು. ತನ್ನ ಹೆಂಡತಿಯನ್ನು ತಾನು ಕರೆದುಕೊಂಡು ಹೋಗದೆ ಬೇರೆ ದಾರಿಯೇ ಉಳಿಯಲಿಲ್ಲ ಶಾಮನಿಗೆ. +ಒಂಟೆತ್ತಿನ ಬಂಡಿಯ ನಂಜುಂಡಿ ಲಗ್ಗೇಜನ್ನೆಲ್ಲ ಹೇರಿಕೊಂಡು ಬಸ್‌ಸ್ಟಾಂಡ್ ಕಡೆ ಹೋಗಿದ್ದಾನೆ. “ಆಗಾಗ್ಗೆ ಬಂದು ಮುದುಕಿ ಯೋಗಕ್ಷೇಮ ನೋಡ್ಕೊಂಡು ಹೋಗ್ತಿರಪ್ಪ… ಹೆತ್ತ ತಾಯಿ ಎಷ್ಟು ಕೊಟ್ರು ಸಿಗೋದಿಲ್ಲವೆಂದು ಹೆತ್ತೇಳು ಮಕ್ಕಳಿಂದಲೂ ತಿರಸ್ಕೃತಗೊಂಡಿರುವ ವೃದ್ಧೆ ಗಂಗವ್ವ ಹೇಳಿದಾದ ಮೇಲೆ +ತಾನೇನು ಕಡ್ಮೆ ಅಂತ ಬಂದ ಅಂಬಾರಿ ಸುಶೀಲವ್ವ – +“ವರಲಕ್ಷ್ಮಿ ಬಂಗಾರದಂಥ ಹುಡುಗಿಯಪ್ಪಾ… ತಗ್ಗಿಸಿದ ತಲೇನ ಮೇಲೆತ್ತೋದಿಲ್ಲ… ಈಗಿನ ಕಾಲದ ಹುಡುಗಿಯರಂತೆ ಚಮಕ್ ಚಮಕ್ಕಂತ ಅಡ್ಡಾಡೊದಿಲ್ಲ ತಾನಾಯ್ತು ತನ್ ಬಾಳ್ವೆಯಾತು ಅನ್ನಂಗಿರ್‍ತಾಳೆ… ಇಂಥ ಪುರಾಣ ಕಾಲದ ಹುಡುಗೀನ ಮದುವೆಯಾಗಿರೋ ನೀನೇ ಪುಣ್ಯವಂತ… ಹೆಂಡ್ತಿ ಮಾತ್ನ ಮೀರಬ್ಯಾಡ… ಆಕೇ ಮನಸೀಗೆ ನೋವಾಗೋ ಹಂಗ ನಡಕೋ ಬೇಡ… ಮನೆ ಹೆಂಡತಿ ಉಸ್ರು ಬಿಟ್ರೆ ಒಳ್ಳೆಯದಾಗೊಲ್ಲ…” ಎಂದು ಮುಂತಾಗಿ ಸಾಂಸಾರಿಕ ನೀತಿ ಸಂಹಿತೆಯನ್ನು ಮಂಡಿಸಿದಳು. +ಏನು ತಿಳಿಯಿತೋ ಏನೋ ವರಲಕ್ಷ್ಮಿ ಕಣ್ಣಿರಿನಿಂದ ಮುಖವನ್ನು ಒದ್ದೆ ಮಾಡ್ಕೊಂಡು ನಿಂತಿದ್ದ ತನ್ನತ್ತೆಯ ಬಳಿಗೆ ದುಡುದುಡನೆ ಹೋದವಳೆ ಕೊಸರಿ ದೂರಸರಿಯಲು ಸಾಧ್ಯವಾಗದಂತೆ ಆಕೆಯ ಪಾದವನು ಗಟ್ಟಿಯಾಗಿ ಹಿಡಿದುಕೊಂಡು – +“ಅಷ್ಟಪುತ್ರ ಸೌಭಾಗ್ಯವತೀರಸ್ತೂಂತ ಆಶೀರ್ವಾದ ಮಾಡ್ರಿ ಅತ್ತೆಮಾಽಽ” ಎಂದು ಕೇಳಿಯೇ ಬಿಟ್ಟಳು. +ಸೊಸೆ ವರ್ತನೆಯಿಂದ ಅತ್ತೆಯ ಹೃದಯ ಜಲಜಲ ಕರಗಿ ಹೋಯಿತು. ಆ ಸಂತೋಷಕ್ಕೂ ಅಳುತ್ತ ಆಶೀರ್ವಾದ ಮಾಡಿದಳಲ್ಲದೆ ರೆಟ್ಟೆ ಹಿಡಿದು ಮೇಲಕ್ಕೆತ್ತಿ ಗಾಢವಾಗಿ ಅಪ್ಪಿಕೊಂಡು… ಅತ್ತೆಯ ಹುದಯಪರಿವರ್ತನೆಗೆ ಬೆರಗಾಗಿ ಸೊಸೆಯೂ ಭಾವ ಪರವಶಳಾದಳು… ಆ ಕ್ಷಣದಿಂದ ಅವರಿಬ್ಬರು ಅಂತಃಕರಣದ ಎರಡು ನಮೂನೆಗಳಾದರು. ನೋಡಿದವರೆಲ್ಲರೂ ಗದ್ಗದಿರಾದರು. +ಅತ್ತೆ ಸೊಸೆಯಂದಿರಿದ್ದರೆ ಅಲುಮೇಲಮ್ಮ ವರಲಕ್ಷ್ಮಿಯರಂತಿರಬೇಕು ಎಂಬಂತೆ. +“ಅತ್ತೆಮ್ಮಾ ನೀವೊಬ್ರೆ ಹೆಂಗಿರ್‍ತೀರಾ? … ನಂಗೆ ಭಯವಾಗ್ತದೆ ನಾನು ಹೋಗೋದಿಲ್ಲ ನಿಮ್ ಸೇವೆ ಮಾಡ್ಕೊಂಡಿಲ್ಲೇ ಇರ್‍ತೀನಿ ಅತ್ತೆಮ್ಮಾ” ವರಲಕ್ಷ್ಮಿ ಪ್ಲೇಟು ಬದಲಾಯಿಸಿ ಎಲ್ಲರನ್ನೂ ಮುಖ್ಯವಾಗಿ ಗಂಡನನ್ನು ಅಚ್ಚರಿಗೀಡು ಮಾಡಿದಳು. +ಅದಕ್ಕಿದ್ದು ಅಲುಮೆಲಮ್ಮ ಬಾಯಿ ದೊಡ್ಡದು ಮಾಡಿ ನಗೆಯಾಡುತ್ತ – +“ದೀಪ ನುಂಗೋ ನನ್ಗೆ ದೀವಟಿಗೆ ನುಂಗೋ ಸೊಸೆಯಾಗಿರೋ ನೀನೆ ಹೇಗಾಡಿದ್ರೆ ಹೇಗಮ್ಮಾ… ನೀನು ನಿನ್ ಗಂಡನ್ಜೊತೆ ಒಂದು ಕಡೆ ನೆಮ್ಮದಿಯಿಂದ ಜೀವಿಸಬೇಕೆಂದಾಗಬೇಕೆಂದೇ ನಾನೀ ಹಂಚಿಕೆ ಹೂಡಿದ್ದು… ನಿನ್ನಂತೆ ನಾನೇನು ಆ ಅಂಜುಪುಕ್ಕನ ಹೆಂಡತಿಯಾಗಿದ್ದೆ ಅಂತ ತಿಳ್ಕೊಂಡಿ ಏನು? ನಾನು ಮಿಲಿಟರಿ ಆಫೀಸರ ಹೆಂಡತಿಯಾಗಿದ್ದೋಳು ತಿಳಿತಾ… ನನ್ ಕಡೆ ನೀವು ಚಿಂತೆ ಮಾಡೋದು ಬೇಕಾಗಿಲ್ಲ…” ಎಂದು ಕೆಚ್ಚೆದೆಯಿಂದ ಧೈರ್ಯ ಹೇಳಿದ್ದು ಕಂಡು ಶಾಮಣ್ಣನಿಗೆ ಆಶ್ಚರ್ಯ ಮತ್ತು ಸಂತೋಷವಾಯಿತು. +ಅಲುಮೆಲಮ್ಮ ಅಷ್ಟು ದೂರದವರೆಗೆ ಹೋಗಿ ಮಗ ಸೊಸೆಯನ್ನು ಬೀಳ್ಕೊಟ್ಟಳು. +ಶಾಮಂಣ ದಂಪತಿಗಳು ಜೊತೆ ಜೊತೆಯಾಗಿ ಬಸ್‌ಸ್ತಾಂಡ್ ಕಡೆ ದಯಮಾಡಿಸುತ್ತಿರುವುದನ್ನು ಓಣಿಯ ಅಬಾಲವೃದ್ಧರಾದಿಯಾಗಿ ಎಲ್ಲರೂ ಕಣ್ತುಂಬ ನೋಡಿ ಶುಭ ಕೋರಿದರು. “ಲೋ ಮಿತ್ರ… ನಿನ್ ಬರವಣಿಗೆಗೆ ತುಸು ಹೊತ್ತು ವಿಶ್ರಾಂತಿ ಕೊಡ್ತೀಯಾ ನಮ್ಮಪ್ಪಾ… ಗಾರ್ದಭವೊಂದು ಮೂತ್ರ ವಿಸರ್ಜಿಸಿದಂತೆ ಸುಮ್ಮನೆ ಬರ್‍ಕೊಂಡು ಹೋಗ್ತಿದೀಯಲ್ಲ… ಕೆಲವು ಕಡೆ ಓದುಗರನ್ನು ರಂಜಿಸುವ ನಿಮಿತ್ತ ಸುಳ್ಳುಗಳನ್ನು ಪೋಣಿಸ್ತಿದೀಯಾಂತ ಅನ್ನಿಸ್ತಿದೆ” ಹಸ್ತ ಪ್ರತಿಯೊಳಗಿಂದ ಶಾಮಣ್ಣನ ಆತ್ಮವು ಕೂಗಿಕೊಂಡಿತು. +ಬಸ್ಸಿನಲ್ಲಿ ತಾನು ಹಿಡಿದ ಸೀಟಿನಲ್ಲಿ ಹೆಂಡತಿಯನ್ನು ಪ್ರತಿಷ್ಟಾಪಿಸಿ ಚಿಲ್ಲರೆ ವಿಷಯವಾಗಿಯೋ ಟಿಕೆಟ್ +ಕೊಡಲಿಲ್ಲವೆಂದೋ, ಕೊಟ್ಟ ಟಿಕೆಟ್‌ನಲ್ಲಿ ಪಂಛ್ ಮಾಡಿಲ್ಲ ಎಂದೋ ತನಗಿರೋ ಪ್ರಪಂಚ ಜ್ಞಾನ ಅನುಮಾನಿಸ್ತಿದೀಯಾ ಎಂದೋ ಶಾಮಣ್ಣ ಕಂಡಕ್ಟರ್ ಬಳಿ ತಗಾದೆ ಶುರು ಮಾಡಿದ ಎಂದು ನಾನು ಬರೆಯುತ್ತಿದ್ದ ನಾನು ಬರೆದದ್ದನ್ನು ಅರ್ಧಕ್ಕೆ ನಿಲ್ಲಿಸಿ ದಿಗ್ಭ್ರಮೆಗೊಂಡು ಆರೊಗ್ಯ ಸುಧಾರಿಸಿ ಹೊಸತನದಿಂದ ನಳನಳಿಸುತ್ತಿರುವ ಶಾಮಣ್ಣನ ಪಾತ್ರದ ಕಡೆ ನೋಡಿದೆ. +“ನಡುವೆ ಮತ್ತೆ ಕಾಣಿಸಿಕೊಂಡು ತಕರಾರೆತ್ತಿದ್ದಕ್ಕೆ ಕೃತಜ್ಞತೆಗಳು ಶಾಮೂ… ಕೆಲವು ವಾಸ್ತವಾಂಶಗಳನ್ನು ಅನುಲಕ್ಷಿಸಿ ಕೆಲವು ಸುಳ್ಳುಗಳನ್ನು ಪೋಣಿಸದೇ ಹೋದ್ರೆ ಕಾದಂಬರಿ ಕಳೆಗಟ್ತಿದೇನೋ… ಸದರೀ ಕಾದಂಬರಿಯ ವಿವಿಧ ಅಂಗಳಗಳಲ್ಲಿ ವರ್ಣ ವಕ್ರತೆ, ಪದ ವಕ್ರತೆ ಬಳಸದೆ ಹೋದರೆ ಬರಹದಿಂದ ಧ್ವನಿ ಎಂಬುದು ಹುಟ್ಟಬಹುದೇನೋ… ‘ಕವಿ ವ್ಯಾಪಾರ ವಕ್ರತಾ’ ಎಂಬ ಕುಂತಕನ ಸಿದ್ಧಾಂತ ಬಳಸಿಕೊಂಡು ಬರೆ ಅಂತ ನೀನೇ ಹೇಳಿದ್ದು ಮರೆತು ಬಿಟ್ಟೆ ಏನು?” ಎಂದು ನನ್ನ ವಕ್ರಬುದ್ಧಿಯನ್ನು ಸಮರ್ಥಿಸಿಕೊಂಡೆನು. +ಏನೋ ಒಂದಿಷ್ಟು ಬರೆದ ಮಾತ್ರಕ್ಕೆ ಕುಂತಕನ ಮರಿಮೊಮ್ಮಗನಂತೆ ಮಾತಾಡ್ತಿದ್ದೀಯಲ್ಲೋ ಬೇಕೂಫಾ… ವಾಣಿಜ್ಯ ದೃಷ್ಟಿಯಿಂದ ನೀನು ಕೆಲವು ರಂಜನೀಯ ಅಂಶಗಳನ್ನು ಸೇರಿಸ್ತಿದೀಯಲ್ಲಾ… ಇದ್ಕೆ ನಾನು ನಿನಗೆ ಏನು ಹೇಳೋದು? ಡಾ. ಅಭಿಷೇಕ್ ಗೋಡ್ಲೆ ಬರೆದಿರೋ ಪಿಹೆಚ್ಡೀ ಪ್ರಬಂದವನ್ನಷ್ಟೇ ಆಧಾರವಾಗಿಟ್ಟುಕೊಂಡು ಕೊತ್ತಲಿಗಿಯ ಸಾಮಾಜಿಕ ವಿನ್ಯಾಸವನ್ನು ವಿಶ್ಲೇಷಿದ್ದು ಎಷ್ಟರಮಟ್ಟಿಗೆ ಸರಿ? ನೀನು ನಿನ್ನ ಬದುಕಿನ ದ್ರವ್ಯದ ಮಾಪನದಿಂದ ನೋಡುವ ಗೋಜಿಗೆ ಹೋಗಲಿಲ್ಲ. ಹೆಬ್ರಿ, ಇಸ್ಮಾಯಿಲ್ ಎಂಬಿಬ್ಬರು ಮೂಲಭೂತವಾದಿಗಳಿಗೆ ಮುಖಾಮುಖಿಯಾಗಿ ಕಾಮ್ರೇಡ್ ಪಶುಪತಿ ಎಂಬುವನು ಆ ವ್ಯವಸ್ಥೆಯೊಳಗೆ ಹುಟ್ಟಿಕೊಂಡಿದ್ದು ನಾನಲ್ಲಿಗೆ ನೌಕರಿಗೆ ಸೇರಿದ ಮೇಲೆಯೇ. ಅವನು ಹಿಂದೆಂದೋ ಆರ್.ಎ ಬ್ರಾಂಡಿನ ರಘುರಾಮನ ಪೂರ್ವಾಶ್ರಮದಲ್ಲಿದ್ದು; ಅವನಿಂದ ತರಬೇತಿ ಪಡೆದು ಬಂದಿದ್ದನಂತೆ. ನನ್ನ ಬ್ರಾಹ್ಮಣ್ಯವನ್ನೆ ಒಂದು ದೌರ್ಬಲ್ಯವೆಂದು ಭಾವಿಸಿ ಅನೇಕ ಸಂದರ್ಭಗಳಲ್ಲಿ ನನ್ನ ಮೇಲೆ ಮಾನಸಿಕವಾಗಿ ಆಕ್ರಮಣ ಮಾಡಿದ. ಅದರ ಕಡೆ ನೀನು ಕಣ್ಣು ಹೊರಳಿಸಲಿಲ್ಲ. +ಆ ಇಂಜಿನಿಯರ್ ಚಲುವಯ್ಯನ ಮಗಳು ವಿಜಯ ಸಂಸ್ಕೃತದಲ್ಲಿ ನನಗಿಂತ ಬುದ್ಧಿವಂತಳು ಎಂಬ ಅರ್ಥದಲ್ಲಿ ಬರೆದಿರುವಿ… ಕೇವಲ ಶೂದ್ರತ್ವ ಮತ್ತು ಲಿಂಗದ ಆಧಾರದ ಮೇಲೆ ನೀನು ಆಕೆ ಪರ ವಕಾಲತ್ತು ಮಾಡಿರುವಿಯಲ್ಲದೆ, ನಾನು ಶತದಡ್ಡ; ಮೂರ್ಖನೆಂಬಂತೆ ಬರೆದಿರುವಿ. ಆಕೆ ತಾನು ಹೇಳಿದ ಶ್ಲೋಕಾರ್ಥ ವಿವರಿಸಲಿಕ್ಕೆ ನೀನು ಅಡ್ಡಗಾಲು ಹಾಕಿದಿ ಅಲ್ಲವೆ? ಪ್ರೀತಿಸಿದೋನು ಕೈಹಿಡಿಯಲಾರದ ಕಾರಣಕ್ಕೆ ಸತ್ತು ಹೋದ ಸಾವಿತ್ರಿಯ ಮಗಳು ಎಂಬ ವಿವರ ನಿನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಗುಂಡೂರವ್‌ರವರ ಮನೆಗೆ ಬ್ಲೂಪ್ರಿಂಟ್ ಒದಗಿಸಿದೋನು ತಾನೆಂಬ ಕಾರಣದಿಂದಾಗಿ ಆ ಇಂಜಿನೀಯರ್ ಚಲುವಯ್ಯ ವಿಜಯಾ ತನ್ನ ಮಗಳು ಅಂತ ಸಾರ್ವಜನಿಕವಾಗಿ ಹೇಳಿಕೊಳ್ಳೊದಿಲ್ಲ. ಬೆಂಗಳೂರಲ್ಲಿ ರಘುರಾಮನ ಮನೆಯ ಹಿಂಭಾಗದ ರಸ್ತೆಯ ಕನ್ನೀರವ್ವನ ಬಾವಿ ಆಕಾರದ ಮನೆಯೇ ಆತನದು. ಅವನೇ ಮುಂದೊಂದಿನ ಆ ರಘುರಾಮನ ಮಾತು ಕಟ್ಟಿಕೊಂಡು ನನ್ನನ್ನು ತನ್ನ ಮನೆಯಿಂದ ಬಿಡಿಸಿದ್ದು. ಇಂಥ ಎಷ್ಟೋ ವಿವರಗಳು ನಿನಗೆ ಅಷ್ಟು ಸುಲಭವಾಗಿ ತಿಳಿಯಲಾರವು. ತಿಳಿದುಕೊಳ್ಳುವ ಗೋಜಿಗೂ ನೀನು ಹೋಗುವವನಲ್ಲ. ಮತ್ತೊಂದು ವಿಷಯ ಅಂದರೆ ನನ್ನ ತಾಯಿ ಮತ್ತು ಹೆಂಡತಿ ನಡುವೆ ಪ್ರಸಿದ್ಧವಾದ ಜಗಳ ಎಂದೂ ನಡೆದಿರಲಿಲ್ಲ. ನನ್ನ ಮೇಲೆ ಹಕ್ಕು ಚಲಾಯಿಸುವ ನಿಮಿತ್ತ ಅವರು ಮಾಡುತ್ತಿದ್ದುದು ಕೇವಲ ಕೋಳಿಜಗಳ ಮಾತ್ರವಾಗಿತ್ತು. ತಾಯಿಯೋರ್ವಳು ತನ್ನ ಮಗನನ್ನು ಪ್ರೀತಿಸುವುದಕ್ಕಿಂತ ಹೆಚ್ಚಗಿ, ಹೆಂಡತಿಯೋರ್ವಳು ತನ್ನ ಗಂಡನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ, ಅತ್ತೆ ಸೊಸೆಯನ್ನೂ; ಸೊಸೆ ಅತ್ತೆಯನ್ನೂ ಪ್ರೀತಿಸುತ್ತಿದ್ದರು ಎಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಸೊಸೆ ಅತ್ತೆಯೊಳಗೆ ತಾಯಿಯ ಹುಡುಕಾಟ ನಡೆಸಿದರೆ, ಅತ್ತೆ, ಸೊಸೆಯೊಳಗೆ ಗತಿಸಿದ ತನ್ನ ಮಾವನ ಹುಡುಕಾಟ ನಡೆಸಿದ್ದಳು. ಇನ್ನೊಂದು ವಿಚಿತ್ರ ಅಂಶವೆಂದರೆ ನನ್ನ ತಾಯಿ ತನ್ನ ಮಗನಾದ ನನ್ನೊಳಗೆ ಗತಿಸಿದ ತನ್ನ ಗಂಡ (ಅಂದರೆ ನನ್ನ ತಂದೆ)ನನ್ನು ಹುಡುಕುತ್ತಿದ್ದಳು. ಹೆಂಡತಿಯಾದ ವರಲಕ್ಷ್ಮಿ ತನ್ನ ಗಂಡನಾದ ನನ್ನಲ್ಲಿ ತಾನು ಎಂದೋ ಓದಿ ಮರೆತಿದ್ದ ಪುರಾತನ ಶ್ಲೋಕವನ್ನು ಹುಡುಕುವ ಕ್ರಿಯೆ ಆರಂಭಿಸಿದ್ದಳು. +ತಾಯಿ ಮಗನನ್ನು ಮಗ ಎಂದು ಗುರುತಿಸದಿರುವಾಗ ಹೆಂಡತಿ ಗಂಡನನ್ನು ಗಂಡ ಎಂದು ಗುರುತಿಸದಿರುವಾಗ ನಾನು ತಾಯಿಯನ್ನು ತಾಯಿ ಎಂದಾಗಲೀ ಹೆಂಡತಿಯನ್ನು ಹೆಂಡತಿ ಎಂದಾಗಲೀ ಗುರುತಿಸಲು ಹೇಗೆ ಸಾಧ್ಯವಾದೀತು? ಆ ಕರ್ಮಠ ವ್ಯವಸ್ಥೆಯೊಳಗೆ ನಾನು ಸಹಜವಾಗಿ ಅರಳಲೇ ಇಲ್ಲ. ತಾತ, ತಾಯಿ, ಹೆಂಡತಿ, ನೆನಪುಗಳು, ಸ್ಮೃತಿಗಳು, ಗೆಳೆಯರು ಇವರೆಲ್ಲ ನಿಷೇದಿತ ಪ್ರದೇಶಕ್ಕೆ ಕಾವಲಿರುವ ಸೈನಿಕರಂತೆಯೇ ಕಾಣಿಸುತ್ತಿದ್ದರೇ ಹೊರತು ನನ್ನ ಅಂತರಂಗದ ಧ್ವನಿಗಳಾಗಲಿಲ್ಲ. ನನ್ನ ಯಾವ ಭಾವನೆಗಳಿಗೂ ಸ್ಪಂದಿಸಲೇ ಇಲ್ಲ. ಹೀಗಾಗಿ ನಾನು ಸಂಬಂಧಗಳನ್ನು ಉಲ್ಲಂಘಿಸುವ ಕನಸು ಕಾಣತೊಡಗಿದೆ. ಈ ಕನಸು ವಯಸ್ಸಿನಲ್ಲಿ ನನಗಿಂತ ಹಿರಿಯದಾದುದು ಎಂದರೆ ಅರ್ಥವಾಗುತ್ತದೆ ತಾನೆ? ಪೂರ್ಣ ಪ್ರಮಾಣದಲ್ಲಿ ಕರ್ಮಠ ವ್ಯವಸ್ಥೆಯನ್ನು ಉಲ್ಲಂಘಿಸುವ ಸಮರ್ಥನೋರ್ವನ ನಿರೀಕ್ಷೆಯಲ್ಲಿಯೇ ಒಬ್ಬರನ್ನೊಬ್ಬರು ಹುಟ್ಟಿಸುತ್ತ ಪೋಷಣೆ ಎಂಬರ್ಥದಲ್ಲಿ ಬೇಟೆಯಾಡುತ್ತಿದ್ದರು. ನಮ್ಮ ವಂಶದ ಹಿರಿಯರು ಎಂದು ಹೇಳಿದರೆ ಕ್ರೌರ್ಯ ಎಂದು ಭಾವಿಸಬೇಡ. ಆದ್ದರಿಂದ ಉಲ್ಲಂಘನೆಯನ್ನೇ ನನ್ನ ಕಾಯಕ ಮತ್ತು ಧ್ಯೇಯ ಮಾಡಿಕೊಂಡೆ. ಪ್ರತಿಕ್ಷಣ ಪ್ರತಿಯೊಂದನ್ನು ಉಲ್ಲಂಘಿಸುತ್ತಲೇ ಹೋದೆ. ಸಾಯುವ ಕ್ಷಣದಲ್ಲೂ ಉಲ್ಲಂಘಿಸುವಂಥಾದ್ದು ಏನು ಉಳಿದಿದೆ ಎಂದು ಯೋಚಿಸುತ್ತಿದ್ದ ನಾನು ಮಣಿಕರ್ಣಿಕಾಚಕ್ರ ಪುಷ್ಕರಣಿಯ ಕನಸು ಕಂಡೆ…. ಬದುಕಿದವರನ್ನು ಒಂದಲ್ಲಾ ಒಂದು ಇಕ್ಕಟ್ಟಿಗೆ ಸಿಕ್ಕಿಸುವ?ವಂಶದ ಬಳುವಳಿಯನ್ನು ನಾನೂ ಮುಂದುವರಿಸಿದೆ ಅಷ್ಟೆ” ಎಂದು ಒಂದೇ ಉಸುರಿಗೆ ಹೇಳಿ ಶಾಮಣ್ಣ ಪಾತ್ರವು ಒಂದು ಕ್ಷನ ಚಿಂತಾಕ್ರಾಂತವಾಯಿತು. +ಅದರ ಮಾತುಗಳು ನನ್ನ ಮನಕಲಕಿದವು. ನಾನು ಒಂದು ಕ್ಷಣ ಮೌನ ವಹಿಸಿದೆ. ನಂತರ ನಾನು ಮಾತಾಡಿದೆ. “ಶಾಮಾ ನಿನ್ನ ಸಂಕಟವನ್ನು ಅರ್ಥ ಮಾಡಿಕೊಳ್ಳುತ್ತಿರುವ ಒಂದು ಕಿರು ಪ್ರಯತ್ನ ಮಾಡುತ್ತಿರುವೆ. ಉಲ್ಲಂಘನೆ ಎಂಬ ಕ್ರಿಯಾಪದದ ವ್ಯಾಖ್ಯಾನ ರೂಪವೇ ನಿನ್ನ ಬದುಕು. ಆ ಶಬ್ದವನ್ನು ಸಾರ್ಥಕಪಡಿಸಲೆಂದೇ, ಧೃಡಗೊಳಿಸಲೆಂದೇ ನೀನು ಅವತರಿಸಿದಿ ಎಂದು ಕಾಣುತ್ತದೆ… ಉಲ್ಲಂಘಿಸಬೇಕಿದ್ದುದನ್ನೆಲ್ಲ … ಯಾವುದು ಉಲ್ಲಂಘಿಸಬಾರದಿತ್ತೋ ಅದೆಲ್ಲವನ್ನು ಉಲ್ಲಂಘಿಸಿದ್ದಾಯಿತು. ನೀನು ಸತ್ತು ಹೋದಿ… ಮಾನವ ಜಗತ್ತಿನಲ್ಲಿ ನೀನು ನಗಣ್ಯ … ಜೀವ ಜಗತ್ತಿನಲ್ಲಿ ಆತ್ಮಗಳಿಗೆ ಯಾವ ಬೆಲೆ ಇದೆ ಹೇಳು? ಆದ್ದರಿಂದ ಸಮಾಜದಲ್ಲಿ ಸಂಬಂಧಗಳು ಯಾವ ಭಾವನಾತ್ಮಕ ನೆಲೆಯಲ್ಲಿ ಗುರುತಿಸಲ್ಪಡುತ್ತಿದ್ದವು ಎಂಬುದು ಮುಖ್ಯವೇ ಹೊರತು ಯಾರು? ಯಾರಲ್ಲಿ? ಏನನ್ನು ಕುರಿತು ಹುಡುಕಾಟ ನಡೆಸಿದ್ದರು ಎಂಬುದು ಮುಖ್ಯ! ನಾನೂ ಕೂಡ ಅಷ್ಟೆ. ಓದುಗರ, ಬುದ್ಧಿಜೀವಿಗಳ, ಜ್ಯೂರಿಗಳನ್ನಾಕರ್ಷಿಸುವ ಯಾವ ಅಂಶಗಳು ನಿನ್ನ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿದ್ದವು ಎಂಬುದನ್ನು ಶೋದಿಸುತ್ತಿರುವೆ. ನೀನು ಯಾವ ಸ್ಥಿತಿಯಲ್ಲಿದ್ದು ಸಮಾಜವನ್ನು ಪುಳಕಗೊಳಿಸಿದಿ ಎಂಬುದು ಮುಖ್ಯ. ನಾವೆಲ್ಲ ಬದುಕೆಂಬ ಕೇರಂ ಬೋರ್ಡ್ ಮೇಲೆ ಕಪ್ಪು ಬಿಳಿ ಕಾಯಿಗಳು ಮಾತ್ರ… ನಾವೆಂದೂ ಸ್ಟ್ರೆಕರ್ ಆಗುವುದು ಸಾಧ್ಯವಿಲ್ಲ… ಚಲನೆ ಒಬ್ಬರಿಗಿಂದ ಇನ್ನೊಬ್ಬರಿಗೆ ವಿಸ್ತರಿಸುತ್ತದೆ. ನೀನು ಆಟದಿಂದ ಹೊರಬಿದ್ದಿರುವಿ. ನಾನು ಹೊರಬೀಳುವುದನ್ನೇ ಸಮಾಜ ಕಾಯುತ್ತಿದೆ ಅಷ್ಟೆ . ಆದ್ದರಿಂದ ಸೇಡು ಎಂಬ ಕ್ರಿಯೆಗೆ ಪ್ರತ್ಯಯ ಸ್ಥಾನ ಕೊಡಬೇಡ. +ಕಾಮ್ರೇಡ್ ಪಶುಪತಿ ಬಗ್ಗೆ ವಿಷಯ ಸಂಗ್ರಹಿಸಿದ್ದೇನಾದರೂ ಆ ಪಾತ್ರವನ್ನು ಮಂಡಲ್ ಎಲೆಕ್ಷನ್ ಸಮಯದಲ್ಲಿ ಹೊರತರಬೆಕೆಂದಿದ್ದೆ. ಇನ್ನು ವಿಜಯಾಳನ್ನು ಕಟ್ಕೊಂಡು ಮಾಡಬೇಕಾಗಿರೋದಾದ್ರು ಏನು? ಮುಂದೆ ಕಾಂಚನಾ ಪಾತ್ರ ಬರಲಿರುವುದರಿಂದ ವಿಜಯಾಳನ್ನು ನೇಪಥ್ಯಕ್ಕೆ ತಳ್ಳುವುದು ವಾಸಿ, ಏನಂತೀಯಾ? ಕಾದಂಬರಿಯ ವಸ್ತು ಸಂವಿಧಾನದಲ್ಲಿ ಕೆಲವು ಕಡೆ ರಾಜಿ ಮಾಡ್ಕೋ ಬೇಕಾಗುತ್ತೆ ಮಾರಾಯಾ… ನನ್ನನ್ನು ಅನಾವಶ್ಯಕ ಪ್ರಾಸಿಕ್ಯೂಟ್ ಮಾಡಿ ಗೊಂದಲದಲ್ಲಿ ಸಿಕ್ಕಿಸಬೆಡ” ಎಂದು ಸ್ಪಷ್ಟವಾಗಿ ಹೇಳಿದೆ. +ಅದಕ್ಕೆ ಪ್ರತಿಕ್ರಿಯೆಯಾಗಿ ಶಾಮಣ್ಣ ಪಾತ್ರವು ಕಣ್ಣಂಚಿನಲ್ಲಿ ನಕ್ಕಿತು. +” ಆಳೋ ಪಕ್ಷದ ಮರ್ಜಿ ಹಿಡಿದು ಕಾಮ್ರೇಡ್ತನಕ್ಕೆ ತಿಲಾಂಜಲಿಕೊಟ್ಟು ಕೊಳಚೆ ನಿರ್ಮೂಲಾ ಪ್ರಾಧಿಕಾರದ ಅಧ್ಯಕ್ಷನಾದ. ಅವನು ಅಲ್ಲಿಂದ ಇನ್ನೊಂದು ಪಕ್ಷ ಸೇರಿ ಆ ಪಕ್ಷದ ಯುವ ಶಾಖೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ನೀನೀ ಕಾದಂಬರಿ ಮುಗಿಸೋ ಹೊತ್ತಿಗೆ ಅಥವಾ ನಂತರ ಅವನು ಮಂತ್ರಿಯಾಗಲೂಬಹುದು. ಎಷ್ಟು ಪ್ರೀತಿ ತೋರಿಸಿದರೂ ಬ್ರಾಹ್ಮಣ್ಯ ಕಾರಣಕ್ಕೆ ನನಗೆ ಬಗೆಯ ಬಾರದ ದ್ರೋಹ ಬಗೆದ ಅವನು ನಿನ್ನ ಮೇಲೆ ಖಂಡಿತ ಸೇಡು ತೀರಿಸಿಕೊಳ್ಳಲಾರದೆ ಇರಲಾರ. ಸ್ವಲ್ಪ ಹುಷಾರಿಂದಿರು. ಕಾಲ ಹೀಗೆ ಇರೋದಿಲ್ಲ… ಆ ಹೆಬ್ರೀನೂ ಅಷ್ಟೆ. ಬ್ರಾಹ್ಮಣ್ಯವನ್ನು ಸರಿಯಾಗಿ ಪ್ರಕಟಿಸುತ್ತಿಲ್ಲವೆಂಬೊಂದೇ ಕಾರಣದಿಂದ ಆ ನೀಚ ಅವನೊಂದಿಗೆ ಶಾಮೀಲಾಗಿ ನನ್ನನ್ನು ಕಸದ ಬುಟ್ಟಿಗೆ ತಳ್ಳಿದ… ಅಂಥವರ ಮುಗುಳು ನಗೆಯೇ ಅಮೇರಿಕೆಯ ಪರಮಾಣು ಅಸ್ತ್ರಗಳಿಗಿಂತ ಅಪಾಯಕಾರಿಯಾದುದು ಎಂಬುದು ಜ್ಞಾಪಕದಲ್ಲಿರಲಿ ಮಹಾರಾಯಾ… ಸಾಮಾಜಿಕವಾಗಿ ಪ್ರಿಯವಾಗುವಂತಹ ಅಂಶಗಳನ್ನು ನಮ್ಮ ವಂಶದ ಕಮ್ಮಠ ತಾಕೀತುದಾರರಾದ ತಾತನವರಾಗಲೀ, ತಾಯಿಯಾಗಲೀ, ಹೆಂಡತಿಯಾಗಲೀ ಬೆಳೆಸಿ ಪೋಷಿಸಿ, ಪ್ರಕಟಗೊಳಿಸಲು ಅವಕಾಶ ಕೊಟಿದ್ದಲ್ಲಿ ನಾನು ಖಂಡಿತ ಉಲ್ಲಂಘಿಸುವ ಕಾರ್ಯಕ್ಕೆ ತೊಡಗುತ್ತಿರಲಿಲ್ಲ. ನಾನೂ ಎಲ್ಲರಂತೆ ಹನ್ನೊಂದರ ಪೈಕಿ ಇನ್ನೊಂದಾಗಿ ಸುಖವಾಗಿರುತ್ತಿದ್ದೆನು. ಅವರೆಲ್ಲ ತಮ್ಮ ಮೂಗುದಾಣ, ಲಗಾಮು ಇತ್ಯಾದಿಗಳನ್ನು ಬಿಗಿಪಡಿಸುತ್ತಲೇ ಹೋದರು. ಪ್ರಪಾತ ಸೃಷ್ಟಿಸಿದವರೂ; ಅದರಲ್ಲಿ ನೂಕಿದವರೂ; ನಾನು ಬೀಳುವ ವಿವಿಧ ಭಂಗಿಗಳನ್ನು ನೋಡಿ ದುಃಖದ ಮರೆಯಲ್ಲಿ ಸಂತೋಷಪಟ್ಟವರೂ ಆ ನನ್ನ ತಾಕೀತುದಾರರೇ. ಮೀಸೆ ಟ್ರಿಮ್ ಮಾಡಿದರೆ ಪಾತ್ರದ ಗಾತ್ರವನ್ನು ಸ್ಲಿಮ್ ಮಾಡಿದರೆ ಮಾತಿನ ಧಾಟಿಯನ್ನು ಅವರೋಹಣಗೊಳಿಸಿದರೆ ನಾಯಕ ಸ್ಥಾನ ಪಡೆಯುವ ಅದೇ ಪಾತ್ರವು ಮೀಸೆ ಹುರಿಗೊಳಿಸಿದರೆ; ದೇಹ ಸ್ಥೂಲ ಮಾಡಿದರೆ, ಮಾತಿನ ಧಾಟಿ ಆರೋಹನಗೊಳಿಸಿದರೆ ಖಳನಾಯಕನ ಸ್ಥಾನಕ್ಕೇರುತ್ತದೆ. ಇದೆಲ್ಲ ಮೇಕಪ್ ಮಾಡುವವರ ನಿರ್ದೇಶಕರ ಕೈಯಲ್ಲಿರುತ್ತದೆ. ಅವರೆಲ್ಲ ನೇಪಥ್ಯದಲ್ಲಿರುತ್ತಾರಾದ್ದರಿಂದ ಅವರು ಸಾಮಾಜಿಕವಾಗಿ ಅರ್ಥವಾಗುವುದೇ ಇಲ… ಅವರು ಮಾಡಿದಂತೆ ಮಾಡಿಸಿಕೊಂಡು; ಅವರು ಕುಣಿಸಿದಂತೆ ಕುಣಿಯುವ ಪಾತ್ರಗಳು ಸಾಮಾಜಿಕವಾಗಿ ಛೀ ಥೂ ಎಂದು ಉಗುಳಿಸಿಕೊಳ್ಳುತ್ತವೆ. ಹಾಗಾದವನು ನಾನು… ಅಂದ ಮಾತ್ರಕ್ಕೆ ನೇಪಥ್ಯದಲ್ಲಿರುವ ಸಂಚುಗಾರರ ಕಡೆ ಬೆರಳು ಮಾಡಿ ತೋರಿಸುತ್ತಿರುವೆನೆಂದು ತಿಳಿದುಕೊಳ್ಳೇಡ… ಅವರು ವ್ಯವಸ್ಠೆಯ ಒಂದು ಕಿರು ಭಾಗ ಮಾತ್ರ. ಸ್ವಾತಾಂತ್ತ್ಯೋತ್ತರವಾಗಿ ಸಾಮಾಜಿಕ ಪರಿವೇಷವೇ ಹಾಗೆ ಬದಲಾಗುತ್ತ ಹೋಗುತ್ತಿದೆ. ಬದಲಾ‌ಅಗುತ್ತಿರುವ ಪರಿಸ್ಥಿತಿಯಲ್ಲಿ ಯಾರು ಯಾವ, ಯಾವ ಕಾರ್ಯನಿರ್ವಹಿಸುತ್ತಿದ್ದಾರೆ? ಯಾರು ಯಾರನ್ನು, ಯಾವ ಯಾವ, ಪ್ರಮಾಣದ ಮುಗುಳು ನಗೆ ಆತ್ಮೀಯತೆಯಿಂದ ಬೇಟೆಯಾಡುತ್ತಾರೆ? ನಿಮ್ಮ ಮಸೂರ ಹಾಕುವ ಕಡೆಯಲ್ಲಿ ಪೀನ ಮಸೂರವನ್ನೋ; ಪೀನ ಮಸೂರ ಹಾಕುವ ಕಡೆಯಲ್ಲಿ ನಿಮ್ನ ಮಸುರವನ್ನೋ ಹಾಕಿ ರಸ್ತೆಗಳ ಮೂಲ ಆಕಾರವನ್ನೇ ಹೆಚ್ಚು ಕಡಿಮೆ ಮಾಡಿ ಬಿಡಬಲ್ಲ ಚಾಣಾಕ್ಷರಿಂದಲೇ ಈ ಸಮಾಜ ತುಂಬಿಕೊಂದಿದೆ ಕಣಯ್ಯಾ… ನಾನಾ ನಮೂನೆಯ ಹಸಿವುಗಳನ್ನು ಸೃಷ್ಟಿಸುವವರೂ ಅವರೇ; ಆ ಜಾಗಗಳಲ್ಲಿ ಕಮರುಡೇಗುಗಳಲ್ಲಿ ಪ್ರತಿಷ್ಠಾಪಿಸುವವರೂ ಅವರೇ ಮಿತ್ರ… ಚಿತ್ರ ವಿಚಿತ್ರಕಾರದ, ಪಂಚೇಂದ್ರಿಯಗಳಿಗೆ ನಿಲುಕದಂಥ ಜೇಡರ ಬಲೆಗಳ ಕೇಂಗಳಲ್ಲಿ ನಿಗೂಢವಾಗಿ ಕೂತು ಕಬಳಿಸುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿರುವ ಅವರಿಗೆ ಮಾನವೀಯ ಸಂಬಂಧಗಳ ಸೂಕ್ಷ್ಮ ಅರಿವು ಇರುವುದಿಲ್ಲ. ಬೇಟೆಯ ಗುಣ, ಸ್ವಭಾವ, ಕರಾಮತ್ತಿಗೆ ಮರುಳಾದ, ಪರವಶರಾದ ಅವರು ಮುಂದೆ ತಮ್ಮನ್ನು ತಾವೇ ಬೇಟೆಯಾಡಿಕೊಳ್ಳುತ್ತಾರೆ ನೋಡು… ವ್ಯವಸ್ಥೆ ಎಂಬುದು ದೊಡ್ಡ ಜೇಡರ ಹುಳ. ಒಂದು ವ್ಯವಸ್ಥೆ ಇನ್ನೊಂದು ವ್ಯವಸ್ಥೆಯನ್ನು ಕಬಳಿಸುತ್ತ ಹೋಗುತ್ತದೆ. ಯಾವ ಜೇಡರ ಹುಳ ಸಂಜೀವಿನಿ ಪರ್ವತದ ಶಿಖಿರಾಗ್ರದ ಮೇಲೆ ವಿರಾಜಮಾನವಾಗಿರುವುದು ಹೇ‌ಉ? ಯಾವ ಜೇಡರ ಹುಳು ಅಮೃತ ಕುಡಿದು ಅನಾದಿ ಕಾಲದಿಂದ ಜೀವಂತವಾಗಿರುವುದು?… ಆದ್ದರಿಂದ ಇದೆಲ್ಲ ಯಾವ ಸಿದ್ಧಾಂತದ ಮಾಪನಗಳಿಗೆ ಎಟಕುವಂಥಾದ್ದಲ್ಲ… ಇದೆಲ್ಲ ಯಾವ ಅಸ್ತ್ರಕ್ಕೂ ಬಗ್ಗುವಂಥಾದ್ದಲ್ಲ… ಇದೆಲ್ಲ ಯಾವ ಬದುಕಿಗೂ ನಿಲುಕುವಂಥಾದ್ದಲ್ಲ… ಇದೆಲ್ಲ ಆ ಪರಮಾತ್ಮನ ಪಂಚೇಂದ್ರಿಯಗಳಿಗೂ ಜೀರ್ಣವಾಗುವಂಥಾದ್ದಲ್ಲ… ಸೃಷ್ಟಿ, ಸ್ಥಿತಿ, ಲಯ ಶಕ್ತಿ ಕೇಂದ್ರಗಳೆಂದು ಆರ್ಷೇಯ ಕಲ್ಪನೆಗಳಿಂದ ಗುರುತಲ್ಪಡುತ್ತಿರುವಂಥ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿತ್ವ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸೃಷ್ಟಿಯನ್ನು ಸ್ಥಿತಿಯೂ; ಸ್ಥಿತಿಯನ್ನು ಲಯವೂ; ಲಯವನ್ನು ಸೃಷ್ಟಿಯೂ ಕಬಳಿಸುತ್ತಾ ಹೋಗುತ್ತದೆ. ಕೊಟ್ಟ ಕೊನೆಗೆ ಉಳಿದುಕೊಳ್ಳುವುದು ತ್ರಿಮೂರ್ತಿತ್ವದ ಸ್ಥಿತಿಯೇ ಎಂಬುದನ್ನು ಜ್ಞಾಪಕದಲ್ಲಿಟ್ಟಿಕೋ ಮಿತ್ರಮಾ…” ಎಂದು ಮುಂತಾಗಿ ಶಾಮಣ್ಣ ಆಚಾರ್ಯತ್ರಯರೇ ಏಕೀಭವಿಸಿದಂತೆ ಮಾತಾಡಿತ್ತಿರುವುದು ಕೇಳಿ ನಾನು ಸಖೇದಾಸ್ಚರ್ಯಗೊಂಡೆನು. +“ಅಬ್ಬಾ! ಎಷ್ಟೊಂದು ಅದ್ಭುತವಾಗಿ ಮಾತಾಡಿದೆಯೋ ಶಾಮಾ… ರಜನೀಶ, ಸಾಯಿಬಾಬಾರಿಂದ ಹಿಡಿದು ಬನ್ನಂಜೆ ಗೋವಿಂದಾಚಾರ್ಯರವರೆಗೆ ಅನೇಕರ ಭಾಷಣ ಕೇಳಿದ್ದೀನಿ. ಆದರೆ ಅವರ ಯಾವ ಮಾತುಗಳೂ ನಿನ್ನ ಮಾತುಗಳಷ್ಟು ಪರವಶಗೊಳಿಸಿರಲಿಲ್ಲ ನೋಡು… ಸಾವು ವಿಜೃಂಭಿಸಿರುವ ಬದುಕಿನ ಅಖಾಡಕ್ಕೆ ನುಗ್ಗಿ ಅದನ್ನು ಸಮರ್ಥವಾಗಿ ಎದುರಿಸಿದಂಥವನಾದ ನೀನು ಕೆಲಕಾಲ ನಮ್ಮೊಂದಿಗಿರಲಿಲ್ಲವೆಂಬುದೇ ಬೇಸರದ ಸಂಗತಿ. ಹ್ಹೂ ಇರಲೀ… ಹೀಗೆ ಮಾತಾಡ್ತಾ ಕಾಲ ಹರಣ ಮಾಡೋಕೆ ಸಮಯವಿಲ್ಲ!… ಈ ಕಾದಂಬರಿಯ ಪ್ರಕಾಶಕ ಚನ್ನಬಸವಣ್ಣ ಎಂಥೊರಂಥ ನಿನ್ಗೂ ಗೊತ್ತಿರಬೇಕಲ್ಲ?” +“ಯಾವ ಚನ್ನಬಸವಣ್ಣ?” +“ಅದೇ ಕಣಪ್ಪಾ… ಹಿಂದೊಮ್ಮೆ ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಬಂಡಾಯ ಸಮ್ಮೇಳನಕ್ಕೆ ನೀನೂ ನಾನೂ ಹೋಗಿದ್ದಿಲ್ಲೇ… ರಂಗನಾಥೂ; ವಡ್ಡರ್ಸೆ ಶೆಟ್ರೂ ಅವ್ರೂ ಇವ್ರೂ ಬಂದಿದ್ರಲ್ಲ… ನಿನ್ಗೂ ವೀರಣ್ಣಗೂ ಜಗಳ ಬಿದ್ದಿತ್ತು ನೋಡು!…” +“ನನ್ನ ಜಗಳದಿಂದ ತಪ್ಪಿಸಿಕೊಂಡೊರ್‍ಯಾರೂ ಇಲ್ಲ ಬಿಡು… ಅಂದ ಹಾಗೆ ರಾಜಶೇಖರ ನೀರಮಾನ್ವಿ ಜೊತೆಯಲ್ಲಿ… ಗಂಜಿ ಮಾಡಿದ ಬಿಳಿ ಬಟ್ಟೆ ಉಟ್ಕೊಂಡು ಗಡ್ಡ ಬಿಟ್ಕೊಂಡು ಯುವ ರಾಜಕಾರಣಿಯಂತೆ ಅಡ್ಡಾಡ್ತಿದ್ದರಲ್ಲ… ನಮ್ಮನ್ನೆಲ್ರನ್ನ ಮನೆಗೆ ಕರ್ಕೊಂಡು ಹೋಗಿ ಬಿಳಿಜೋಳದ ರೊಟ್ಟಿ ಎಣ್ಣೆಗಾಯಿ ಕಡ್ಲೆಪುರಿ ಗುರಾಳುಪುಡಿ ಗೋದಿಹುಗ್ಗಿ, ಇದೆಲ್ಲ ತಿನ್ನಲು ಕೊಟ್ತು ಮೇಲೊಂದು ಕಪ್ಪು ಕಷಾಯ ಕುಡಿಯಲು ಕೊಟ್ರಲ್ಲ…” +“ಹ್ಹಾ…ಹ್ಹಾ… ಅವರೇ ಕಣೋ ಶಾಮೂ…” +“ಹೌದೇನು! ಆ ಮನುಷ್ಯನ್ನ ಹೇಗೆ ಮರೀಲಿಕ್ಕೆ ಸಾಧ್ಯವೋ… ಅವರು ಜೋಳದನ್ನ ಕಟಂಬಲಿ,ಕಿಚಡಿ, ನವಣಕ್ಕಿ ಬಾನದ ಬಗ್ಗೆ ಮಾಡಿದ ಉಪನ್ಯಾಸ ನನ್ ಕಿವಿಯಲ್ಲಿ ಇನ್ನೂ ಗುಂಯ್‌ಗುದುತ್ತಲೇ ಇದೆ. ಅದ್ನೆಲ್ಲ ನಾನು ನಮ್ ಅನಸೂಯಳ ಕೈಯಿಂದ ಮಾಡಿಸ್ಕೊಂಡು ತಿಂದೆ ಬಿಡು… ಅವರೊಂದ್ನಮೂನಿ ಸ್ಟ್ರಿಕ್ಟೂಂತ ಕೇಳಿದ್ದೆ…” +“ಹೌದಪ್ಪಾಹೌದು… ಸ್ಟ್ರಿಕ್ಟಿರೋ ಕಡೆ ಸ್ಟ್ರಿಕ್ಟು… ಸಲಿಗೆ ಇರೋ ಕಡೆ ಸಲಿಗೆಯಿಂದ ಇರ್‍ತಾರೆ… ಈಗ ಸಧ್ಯಕ್ಕೆ ಬಳ್ಳಾರೀಲಿ ಲೋಹಿಯಾದ ತಲೆ ಕೆಡೆಸಿಕೊಂಡು ಕಾರ್ಯಕ್ರಮ ಏರ್ಪಡಿಸ್ತಿರೋರು ಅವರೊಬ್ರೆ. ಇದೇ ಮಾರ್ಚ್ ಇಪ್ಪತ್ಮೂರರಂದು ಬಳ್ಳಾರೀಲಿ ಲೋಹಿಯಾರವರ ಎಪ್ಪತ್ತೆಂಟನೆ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಕಣಪ್ಪಾ… ಅವತ್ತು ನಿನ್ ಕಥಿ ಇರೋ ಈ ಕಾದಂಬರಿ ಬಿಡುಗಡೆ ಆಗಬೇಕಾಗಿದೆ. ಮಾರ್ಚ್ ಇನ್ನೆಷ್ಟು ದೂರ ಇದೆ? ಈ ಫೆಬ್ರವರಿ ಆದ ಮೇಲೆ ಬರೋದೆ ಮಾರ್ಚು… ಅದ್ಕೆ ಬರೆಯೋ ನಡ್ವೆ ತತ್ವಜ್ಞಾನ ಬಿಚ್ಕೊಂಡು ಕೂಡ್ರಲಿಕ್ಕೆ ಸಮಯವಿಲ್ಲ…” +“ಹೋ…ಹಾಗೋ ಸಮಾಚಾರ! ಹೋಗಿಹೋಗಿ ಆ ಪುಣ್ಯಾತ್ಮನ ಹುಟ್ಟುಹಬ್ಬದಂದು ನನ್ನಂಥ ನರಾಧಮನ ಕುರಿತಾದ ಕಾದಂಬರೀನ ಪ್ರಕಟಿಸಲಿಕ್ಕೆ ಯಾಕೆ ಹೋದ್ರೂಂತ ಆ ಚನ್ನಬಸಣ್ಣ… ಅವರಿಗೆ ಇದು ಬಿಟ್ರೆ ಬೇರೆ ಯಾವ್ದೂ ಸಿಗಲಿಲ್ವೆ!” +“ಅದೆಲ್ಲ ಇರ್‍ಲಿ ಮಾರಾಯ… ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿದರೆ ಫಲವೇನು? ಉಳಿದಿರೋ ಸಮಯಾವಕಾಶದೊಳಗೆ ಕಾದಂಬರಿ ಮುಗಿಸಕೊಡಬೇಕಿದೆ… ಪಂಚಾಯ್ತಿ ಮಾಡೋದು ಬೇಡ… ಈಗ ನಿನ್ನ ಕಥೀನ ನಾನೇ ಶುರು ಮಾಡ್ಲೋ… ನೀನೆ ನಿನ್ನ ಕಥೀನ ಶುರುವು ಮಾಡ್ತೀಯೋ ಅಷ್ಟು ಹೇಳು?” +“ಒಳ್ಳೆ ಶಾರ್ಟ್‌ಟೆಂಪರ್ನ ಕೈಲಿ ಸಿಕ್ಕಿ ಹಾಕ್ಕೊಂಡು ಬಿಟ್ಟಿದ್ದೀನಲ್ಲಪ್ಪಾ ಶಿವ್ನೇ… ಈ ಭಾಗವನ್ನು ನೀನು ಬರೆದ್ರೆ ರಂಜನೀಯಾಂಶಗಳನ್ನು ಸೇರಿಸಿ ನನ್ನ ಕಥೀನ ವಾಸ್ತವಾಂಶಗಳಿಮ್ದ ದೂರ ಇಡ್ತೀ… ಅದ್ಕೆ ಒಂದು ಧಂ ನಾನು ನನ್ನ ಕಥಿಯನ್ನೇ ಹೇಳಬೇಕೆಂದು ನಿರ್ಧರಿಸಿದ್ದೀನಿ… ಈ ಭಾಗದಲ್ಲಿ ನಾನು ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡಬೇಕೆಂದು ತೋಚ್ತಾ ಇಲ್ಲ… ಮೊದಲಿಂದ ಹೇಳಬೇಕೆಂದರೆ ಪರಮ ಸ್ವಾರ್ಥಿಯಾದ ನೀನು ಆಗ್ಲೆ ಬರೆದು ಬಿಟ್ಟಿರುವಿ… ನೀನು ಅದೆಷ್ಟು ನಿಷ್ಕರುಣಿ ಎಂದರೆ ನೀನು ಕಥೆ ನಡುವೆ ನನ್ನನ್ನು ಕೊಂದು ಇದ್ದೊಂದು ಮನೆಯನ್ನು ವಿಲೇವಾರಿ ಮಾಡಿ ಬಿಟ್ಟಿರುವಿ… ಅದಾವ ಪ್ರೇರಣೆಯಿಂದ ನೀನು ಅನಂತಪುರಕ್ಕೆ ಹೋಗಿ ನನ್ನ ಹೆಂಡತಿಯನ್ನು ಕಂಡೆಯೊ ಏನೋ? ವಿಧವೆಯಾದ ನಂತರ ವರಲಕ್ಷ್ಮಿ ಹುತಾತ್ಮಳಂತೆ ಬದುಕುತ್ತಿರುವಳೆಂದು ಚಿತ್ರಿಸಿರುವಿ. ಮದುವೆಯಾದ ಕ್ಷಣದಿಂದ ಆಕೆ ವೈಧವ್ಯದ ಏಳು ಸುತ್ತಿನ ಕೋಟೆಯ ನಿರ್ಮಾಣಕ್ಕೆ ತೊಡಗಿದಳು. ಅದರ ಸುಳಿವು ದೊರಕಿದ್ದು ಮಧುಚಂದ್ರ ಎಂಬ ಆಕೆಯ ಅಟ್ಟಹಾಸಕ್ಕೆ ಹೋಗಿದ್ದಾಗ… ಅದರ ಪೂರ್ಣ ಅರಿವು ಆಗಿದ್ದು ಆಕೆಯೊಡನೆ ಕೊತ್ತಲಗಿಯಲ್ಲಿ ಸಂಸಾರ ಹೂಡಿದಾಗ… ಆಕೆ ಪಾತಿವ್ರತ್ಯವೆಂಬ ಕ್ರೌರ್ಯವನ್ನು ಪ್ರತಿಕ್ಷಣ ಝಳಪಿಸ ತೊಡಗಿದಾಗ … ಎಲ್ಲಿಂದ ಶುರು ಮಾಡಲಿ ಮಿತ್ರಮಾ?” +“ಕುರಿಕೇಳಿ ಮಸಾಲೆ ಅರೀತಾರೇನೋ ಮಾರಾಯಾ…ಬಂದ, ಕೊಂದ, ತಿಂದ ಅಂತ ಮೂರೇ ಶಬ್ದಗಳಲ್ಲಿ ಕಥೆ ಮುಗಿಸಿದ್ರೆ ಕೇಳೋದ್ಕೆ ಯಾವ ಸ್ವಾರಸ್ಯ ಇರ್‍ತದೆ ಹೇಳು… ನೀನು ಹೇಳೋದು ಆಗಲೆ ನನಗೂ ಓದುಗರಿಗೂ ಮನವರಿಕೆಯಾಗಿದೆ! ಬೀಜ ಮೊಳೆಯುವ, ಗಿಡವಾಗುವ, ಹೂವು ಹೀಚುಗಾಯಿ ಹಣ್ಣು ಬಿಡುವ ಕ್ರಮದಂತೆಯೇ ಸ್ವಾಭಾವಿಕವಾಗಿ ಬದುಕು ಬದುಕಾಗಿ ಅರಳಬೇಕು. ಸಮಾಜವೆಂಬುದು ಬಯೋಲಾಗಿಕಲ್ ಗಾರ್ಡನ್ ಕಣಪ್ಪಾ… ಅಲ್ಲಿನ ಒಂದೊಂದು ಘಟಕಕ್ಕೂ ಒಂದು ನಿರ್ದಿಷ್ಟವಾದ ನೀತಿ ಸಂಹಿತೆ ಇರುತ್ತೆ. ತುಲಸಿ ಗಿಡ ತುಲಸಿ ಗಿಡಾನೆ, ಅಶ್ವಥ್ ಮರ ಅಶ್ವಥ್ ಮರಾನೇ… ಪೂಜಿಸಿಕೊಳ್ಳುವ ಒಂದೇ ಕಾರಣದಿಂದ ಅವುಗಳು ತಮ್ಮ ಜಾಯಿಮಾನವನ್ನು ಅದುಲು ಬದುಲು ಮಾಡಿಕೊಳ್ಳಲು ಸಾಧ್ಯವಿಲ್ಲ. ಯರನ್ನೇ ಕೇಳಿದರೂ ತುಲಸಿ ಗಿಡವನ್ನು ಅಶ್ವತ್ಥಮರ ಎಂದು ಹೇಳಲಾರರು. ಮನುಷ್ಯನ ಬದುಕು ಯಾವ ಹಂತದಲ್ಲಿಯಾದರೂ ಆರಂಭವಾಗಿರುವುದೇ ಇಲ್ಲ. ಕೆಲವರ ಬದುಕು ಆರಂಭವಾಗುವುದು ಸತ್ತ ನಂತರವೇ. ಬದುಕು ಮತ್ತು ಸಾವು ಇವು ಕೇವಲ ಮನುಷ್ಯ ಬದುಕಿನ ಎರಡು ನೆಪಗಳು ಮಾತ್ರ. ಆದ್ದರಿಂದ ಕಥೆಗೆ ಮನುಷ್ಯ ಬದುಕಿನ ಯಾವ ಮುಲಾಜೂ ಇರೋದಿಲ್ಲಾಪ್ಪ… ನೀನು ಎಲ್ಲಿಂದ ಅಂದರೆ ಅಲ್ಲಿಂದಲೇ ಆರಂಭಿಸಬಹುದು. ಇದಕ್ಕೆ ನಿರೂಪಕನಾದ ನನ್ನ ಅಭಂತರ ಇಲ್ಲ.” +“ನೀನು ಹೇಳ್ತಿರೊದು ಸರಿ ಇದೆ ಕುಂವೀ… ಎಲ್ಲಿಂದಲಾದರೂ ಯಾಕೆ ಆರಂಭಿಸಲಿ, ಹೇಗೋ ನೀನು ದಂಪತಿಗಳಾದ ನಮ್ಮನ್ನು ಕರ್ಕೊಂಡು ಬಂದು ಕೊತ್ತಲಿಗಿಗೆ ಬಿಟ್ಟಿದ್ದೀಯಲ್ಲ… ಅಲ್ಲಿಂದಲೇ ಚೂಟಿಯಾಗಿ ಆರಂಭಿಸಿಬಿಡ್ತೇನೆ… ಜವಾನನ ಹೆಸರು ಓಬಳೇಶನಲ್ಲ… ಅವನ ಹೆಸರು ಮಾದನ್ನ ಅಂತ. ಹಾಗೆ ಚಂಬಸ್ಯಯ್ಯನ ಹೆಸರು ಓಂಕಾರಯ್ಯ ಅಂತ…. ಇಸ್ಮಾಯಿಲನ ಜನ್ಮಾಂಕಿತ ಔರಂಗ ಜೇಬ ಅಂತ. ನಂತರ ಅವನು ಇರಿಸಿಕೊಂಡಿದ್ದು ಖಲೀಲ ಅಂತ. ಹೀಗೆಲ್ಲ ಹೆಸರುಗಳನ್ನು ಎಚ್ಚರಿಕೆಯಿಂದ ಬದಲಾಯಿಸಿಕೊಂಡಿರುವಿ. ನಾನು ಮತ್ತೆ ಏರು ಪೇರು ಮಾಡೊದು ಬೇಡ. ನೀನು ಈಗಾಗಲೇ ಬದಲಾಯಿಸಿದ ಹೆಸರುಗಳನ್ನು ಹಾಗೇ ಬಳಸಿಕೊಂಡು ಹೇಳುವೆ. ಕೈಗೆ ಪೆನ್ನು, ಪ್ಯಾಡು, ಪೇಪರೂ ತಗೋ” +* +* +* +ಹ್ಹಾ… ಹ್ಹಾ… ನನ್ನ ಧರ್ಮ ಪತ್ನಿಯಾದ ವರಲಕ್ಷ್ಮಿಯೇ… ನೀನೇ ಪಾತಿವ್ರತ್ಯದ ಏಕಮಾತ್ರ ವಾರಸುದಾರಳಂತೆ ಎಷ್ಟು ಬಿಂಕದಿಂದ ಮುಂದೆ ನಡೆಯುತ್ತಿದ್ದಂತೆಯೇ ಪುಣ್ಯಾತ್ಗಿತ್ತಿ… ನೀನು ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಅಕ್ಕ ಪಕ್ಕದ ಮನೆಗಳು ಅಲ್ಲಾಡಿಹೋಗಿ ಒಳಗಿದ್ದವರು ಹೊರಗಡೆ ಬಂದು; ಹೊರಗಿದ್ದವರು ಒಳಗಡೆ ಹೋಗಿ ಪಂಚಮಹಾಪತಿವ್ರತೆಯರೇ ಶಾಮಾಶಾಸ್ತ್ರಿಯ ಹೆಂಡತಿಯಾಗಿ ಮುಂದೆಮುಂದೆ ಅದೆಷ್ಟು ಸತ್ವದಿಂದ ನಡೆಯುತ್ತಿರುವಳು ಎಂದು ಮಾತಾಡಿಕೊಂಡರು. ಪ್ರತಿಯೊಂದು ಹೆಜ್ಜೆ ಮೂಲಕ ತಾನು ಉಚ್ಚಕುಲ ಸಂಜಾತೆಯೆಂಬ ಭಾವನೆ ಪ್ರಕಟಿಸುತ್ತಿದ್ದಳು. +ಆ ಓಣಿ ಈ ಓಣಿಗಳೆಲ್ಲ ದಾಟಿ ಬುಧವಾರ ಪೇಟೆ ತಲುಪಿದಾಗ ಫಕೀರಮ್ಮ, ವಿಜಯ, ಓಬಳೇಶ ಮೊದಲಾದವರ ಕಚ್ಚಾ ದೇಗುಲಗಳನ್ನು ನೋಡಿ “ಏನ್ರೀ ಬರೀ ಹೆಣ್ದೇವತೆಗಳ ಗುಡಿಳದಾಳೆ… ಬರೀ ಶೂದ್ರ ದೇವತೆಗಳು ಇವು… “ಪುರುಷ ದೇವತೆಗಳ ಗುಡಿಗಳೊಂದೂ ಕಾಣಿಸ್ತಿಲ್ವಲ್ಲಾ” ಎಂದು ಖೇದ ವ್ಯಕ್ತಪಡಿಸಿದಳು. +“ಇಲ್ರಮ್ಮಾ… ಈ ಓಣಿ ಆಚೆ ಕಡೆ ಆಂಜನೇಯಸ್ವಾಮಿ ಗುಡಿಯೊಂದೈತೆ…” ಎಮ್ದು ಓಬಳೇಶ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ. +“ನಮ್ ಮನಿ ಬಾಗ್ಲಮೇಲ ಎಲಾ ದೇವಾನ್ದೇವತೆಗಳಾದವು… ಮನಸೊಂದ್ನ ಸುದ್ದಿಟ್ಕಂಡ್ರೆ ಕೈಲಾಸ ವಯಕುಂಟ ಎಲ್ಲಾವು ಮನ್ಸಾಗೆರ್‍ತಾವು.” ಎಂದು ಫಕೀರಮ್ಮ ಹೇಳಿದ್ದು ಆಕೆಗೆ ಸರಿಕಾಣಲಿಲ್ಲ. +ಒಂದು ಕೇಳುತ್ತ ಒಂದು ಬಿಡುತ್ತ ನಡೆದು ಮನೆಯ ಏರಿಕೆ ಬಾಗಿಲು ನೋಡಿ ತೃಪ್ತಿ ಪಟ್ಟಳು. ಅಡುಗೆಮನೆ, ಬಚ್ಚಲಮನೆ, ದೇವರಕೋಣೆ, ಹಿತ್ತಿಲು, ಹಜಾರನೋಡಿ ಸಂತೋಷಪಟ್ಟಳು. ಒಳ್ಳೆ ದೈವಭಕ್ತರು ಈ ಮನೇನ ಕಟ್ಟಿಸಿದಂತಿದೆ ಎಂದು ಗೊಣಗುತ್ತ ತಾನೊಬ್ಬಳೆ ಸಾಮಾನುಗಳನ್ನು ಆಯಾ ಜಾಗಕ್ಕೆ ಸರಿ ಹೊಂದಿಸಿದಳು… ಹೆಸರು, ನಡೆ, ನುಡಿ, ಅನುಮಾನಿಸಿ ಯಾರನ್ನೂ ಬಾಗಿಲಿಂದೀಚೆ ಬಿಟ್ಟುಕೊಳ್ಳಲಿಲ್ಲ. ಅವರ್‍ಯಾರೂ ಬಾಗಿಲು ದಾಟುವ ಪ್ರಯತ್ನವನ್ನೂ ಮಾಡಿಲಿಲ್ಲ. ಸುಜಾ ತಂದುಕೊಟ್ಟ ಒಂದುತಂಬಿಗೆ ಹಾಲನ್ನು ಕಾಯಿಸಿ ಉಕ್ಕಿಸಲೆಂದು ಒಳ ಒಯ್ದಳು. ಫಕೀರಮ್ಮ ಕಾಯಿಪಲ್ಲೆ ಅದೂ ಇದೂ ತಂದಿಟ್ಟಳು. ಅದನ್ನೂ ಒಳಗೊಯ್ದಳು. ಓಣಿಯ ಸದಭಿರುಚಿ ವರ್ತನೆಯನ್ನೂ; ಆಕೆಯ ಮಡಿಯುಡಿಯ ಪ್ರತಿಕ್ರಿಯೆಯನ್ನು ನೋಡಿ ವಿಜಯ ದೂರದಲ್ಲಿ ನಗಾಡುತ್ತಿದ್ದಳು. +ನನ್ನ ಹೊಟ್ಟೆ ಹಸಿದಿತ್ತು… ನೀರು ತುಂಬಿಸಿಟ್ಟು “ಬೇಗನೆ ಅಡುಗೆ ಮಾಡಿದರೆ…” ಎಂದೆ. “ಶ್ರೋತ್ರಿಗಳ ವಂಶರವರಾದ ನೀವೆ ಹೀಗೆ ಮಾತಾಡೋದೆ? …ಗೃಹ ಶಾಂತಿ, ನವಗ್ರಹ ಪೂಜೆ, ಇತ್ಯಾದಿ ಎಲ್ಲ ಮಾಡಿಸಬೇಕಿದೆ. ಹೋಗಿ ವೈದೀಕಕ್ಕೆ ಒಳ್ಳೆ ಪುರೋಹಿತರನ್ನು ಕರ್ಕೊಂಡು ಬನ್ನಿ” ಅಂದಳು… ನಾನು ಸ್ನಾನ ಮಾಡಿ ಸೀದ ಊಳೂರು ಕೃಷ್ಣಮೂರ್ತಿ ಶರ್ಮರ ಮನೆಗೆ ಹೋದೆ. ರಾತ್ರಿ ಊಟದ ತಾಪತ್ರಯದಿಂದಾಗಿ ಇಂಥದೇ ಆಮಂತ್ರಣದ ನಿರೀಕ್ಷೆಯಲ್ಲಿದ್ದ ಅವರು ಕೂಡಲೆ ಜೊತೆಗೆ ಹೊರಟು ಬಂದರು. ಫಕೀರಮ್ಮನನ್ನು ಮಹಾ ಬ್ರಾಹ್ಮಣ ಪ್ರೇಮಿ ಎಂದೂ ದೈವ ಭಕ್ತೆ ಎಮ್ದೂ ಹೊಗಳಿದರು. +ಹೋಗುತ್ತಲೆ ವರಲಕ್ಷ್ನಿ ಅವರ ಪಾದಕ್ಕೆ ನೀರು ಸುರಿದು ಒಳ ಬರಮಾಡಿಕೊಂಡಳು. ವೈದಿಕ ವಿಶಯದಲ್ಲಿ ಅಪಾರ ಆಸಕ್ತಿ ವಹಿಸಿದ ವರಲಕ್ಷ್ಮಿಯನ್ನೂ ಪರಮೇಶ್ವರ ಶಾಸ್ತ್ರಿಗಳ ಮನೆಯ ಸೊಸೆ ಅಂದರೆ ನಿನ್ನಂತಿರಬೆಕಮ್ಮಾ ಎಂದು ಹೊಗಳಿದರು. ದಂಪತಿಗಳಾದ ನೀವೀರ್ವರೂ ಬುಧವಾರ ಪೇಟೆಯನ್ನು, ಗುರುವಾರ ಪೇಟೆಯನ್ನಾಗಿ ಮಾಡಬೇಕೆಂದು ಸಲಹೆ ಕೊಟ್ಟರು. +ಮನೆಯ ಹಜಾರದ ನಡುವೆ ಪುಟ್ಟ ಯಜ್ಞ ಕುಂಡ ಸ್ಥಾಪಿಸಿ ವೃದ್ಧ ಶರ್ಮರು ಹವನ, ಹೋಮ ಮಾಡಿಸಿದರು. ಮನಸೇಚ್ಛೆ ಮಂತ್ರಗಳನ್ನು ಹೇಳಿದರು. ಓನಿಯ ಹುಡುಗರು ಹುಡುಗಿಯರು ಕುತೋಹಲದಿಂದ ಇಣುಕಿ ಹಾಕುತ್ತಿದ್ದುದ್ದನ್ನು ದೀಕ್ಷಾ ಕೈಕರ್ಯದ ನಡುವೆ ನಾನು ಓಡಿಸಬೇಕಾಗಿತ್ತು. ಏನೋ ಹುಡುಗರು ಕುತೋಹಲ; ನೋಡಿಕೊಳ್ಳಲಿ ಎಂದು ನಾನು ಸುಮ್ಮನಿದ್ದರೆ ಆಕೆಯೇ ದೊಡ್ಡ ದನಿ ತೆಗೆಯುತ್ತಿದ್ದಳು. +ಹಜಾರದಿಮ್ದೀಚೆ ಕೂತಿದ್ದ ಫಕೀರವ್ವ, ಓಬವ್ವ, ಚವುಡವ್ವ, ತಮ್ಮಣ್ಣ ಮೊದಲಾದವರು ತಮ್ಮ ಕೇರಿಯಲ್ಲಿ ಇಂಥದೊಂದು ಪೂಜೆ ಆಗುತ್ತಿರುವುದನ್ನು ಉಲ್ಲಾಸಮಯ ಭಕ್ತಿಯಿಂದ ನೋಡುತ್ತಿದ್ದರು +ಮಂಗಳಾರತಿಗೆ ಮೊದಲು ನಿಲುವಂಜಿ ನಿಂಗವ್ವ ಮತ್ತಕೆಯ ಸಂಗಡಿಗರು ಇದ್ದಕ್ಕಿದ್ದಂತೆ ಸ್ಪೂರ್ತಿಯಿಂದ +ಉಣ್ಣಬಾರದು ನಿಮ್ಮ ಮನೆಯಲ್ಲಿ ನಾವು +ಗನ್ನಗಾತಕ ಪಾಪಿ ನೀವು +ಅನ್ನವನುಂಡರೆ ನಿಮ್ಮ ಬ್ರಾಹ್ಮಣಿಕೆ ಹೋಗುವುದೆಂದು +ದುಮ್ಮಾನದಲ್ಲಿ ಹರಿನುಡಿದ +ಉಪ್ಪರಿಗೆ ಹತ್ತಿ ಭುವನತ್ರಿಗೆ ಬೀಳಲು +…ಎಂದು ಏರು ದನಿಯಲ್ಲಿ ಹಾಡುತಲೆ ನನ್ನ ಹೆಂಡತಿ “ಸಾಕು ಮಾಡ್ರೆಮ್ಮ ಸಾಕು ಮಾಡಿ ಹಾಡಲು ಇಂಥ ಹಾಡು ಸಿಕ್ಕಿತೇನು ನಿಮ್ಗೆ… ನಾವೇನು ನಿಮ್ಗೆ ಊಟ ಬಡಿಸ್ತೀವಾ” ಎಂದು ತಕರಾರು ಎತ್ತಿದಳು. +ನಾವು ಹಾಡಿದರಲ್ಲಿ ತಪ್ಪೇನೈತಿ… ಅಧ್ಯಾತುಮದ ಗೀತೆಗೆ ಬ್ಯೆಲೆ ಕೊಡ್ತಿಲ್ವಲ್ಲೀ ತಾಯಿ?” ಎಂದು ಅವರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. +ವರಲಕ್ಷ್ಮಿಗೂ ಅವರಿಗೂ ಇನ್ನೇನು ಜಟಾಪಟಿ ನಡೆಯುವುದು ಎನ್ನುವಷ್ಟರಲ್ಲಿ ಫಕೀರಮ್ಮ ಪುಸಲಾಯಿಸಿದ್ದಕ್ಕೆ ವಿಜಯಾ – +ಮಂಗಳಂ ಸುಗುಣಾಭಿ ರಾಮಗೆ +ಮಂಗಳಂ ಗುಣಧಾಮಗೆ +…ಎಂದು ಸುಶ್ರಾವ್ಯವಾಗಿ ಹಾಡತೊಡಗಿದಳು. ಒಂದು ಕ್ಷಣ ಆ ತರುಣಿಯ ಮಧುರ ಶಾರೀರಕ್ಕೆ ವರಲಕ್ಷ್ಮಿ ಮನಸೋತು – +ಜಾನಕೀರಮಣನಿಗೆ +ಮುನಿಗಣ ಸೇವ್ಯಗೆ +ಮಾನವೇಂದ್ರಗೆ ಪೂರ್ಣಚಂದ್ರಗೆ +ಧೇನುಪುರಿ ಶ್ರೀರಾಮಗೆ +… ಎಂದು ತಾನೂ ಧ್ವನಿ ಸೇರಿಸಿ ಹಾಡಿದಳು. +ಮಂಗಳಾರತಿ ಆದ ನಂತರ ಎಲ್ಲರೂ ಚದುರಿದರು. ಹೊರಡಲಿದ್ದ ವಿಜಯಾಳನ್ನು ಹತ್ತಿರ ಕರೆದು ವರಲಕ್ಷ್ಮಿ ಆಕೆಯ ತಲೆ ನೆವರಿಸಿ ಏನಮ್ಮಾ ಎಂತಮ್ಮಾ ಎಂದು ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದಳು. +ಆ ಕ್ಷಣದಿಂದ ನಮ್ಮ ಹೊಸ ಮನೆ ಹೊಸ ಸಂಸಾರ ಅಧಿಕೃತವಾಗಿ ಆರಂಭವಾಯಿತು. ರಾತ್ರಿ ಬಹಳ ಹೊತ್ತು ಆಕೆ ಮಲಗಲಿಲ್ಲ. ಊರು, ಓಣಿ, ಜನ, ಮತ್ತವರ ಸ್ವಭಾವ ಕುರಿತು ಅದು ಇದು ಮಾತಾ‌ಇದಳು. ಅತ್ತೆಯವರು ಊಟ ಮಾಡಿದ್ರೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದಳು. ಆ ಹುಡುಗಿ ವಿಜಯ ಎಷ್ಟೊಂದು ಚೆನ್ನಾಗಿ ಹಾಡಿದ್ಲು ಅಲ್ಲಾವಾ… ಅಂಥದೊಂದು ಹೆಣ್ಣು ಮಗಳು ನಮಗೆ ಹುಟ್ಟಿದರೆ ಹೀಗಿರ್‍ತದೆ… ನೀವು ಗಂಡು ಮಗು ಆಗಬೇಕೂಂತ ಬಯಸ್ತೀದೀರೇನೋ! ಎಂದಿತ್ಯಾದಿ ಮಾತಾಡಿದಳು. ನಾನು ಆಕೆಯ ಪ್ರತಿ ಮಾತಿಗೆ ಹ್ಹೂಂಗುಟ್ತುತ್ತಿದ್ದೆನು. ಏನ್ರೀ ಎಲ್ಲಾದ್ಕೂ ಹ್ಹೂಂಗುಟ್ಟುತ್ತಿದ್ದೀರಲ್ಲ ಎಂದು ತಕರಾರು ಎತ್ತಿದಳು. +“ಹೌದು! ನಾನು ಆಕೆಯ ಮಾತಿಗೆ ಪ್ರತಿನುಡಿಯುತ್ತಿರಲಿಲ್ಲ.. ಆಕೆ ಎಂದರೆ ನನಗೊಂದು ರೀತಿಯ ಭಯ. ಯಾವುದೋ… ನನ್ನನ್ನು ವಿರೋಧಿಸುವ ಶಕ್ತಿ ಆಕೆಯಲ್ಲಿ ಆಶ್ರಯ ಪಡೆದಿದೆ ಎಂದು ದೃಡವಾಗಿ ನಂಬಿದ್ದೆ. ಅದನ್ನು ಓಡಿಸುವ ಪ್ರಯತ್ನ ನಾನು ಮಾಡಿರಲಿಲ್ಲ. +“ಹೌದು! ಅಂಥದೊಂದು ಹೆಣ್ಣು ಮಗಳ ತಂದೆಯಾಗುವುದು ಹೆಮ್ಮೆಯ ವಿಷಯ; ಇದನ್ನು ಹೇಳಬೇಕೆಂದು ಕೊಂಡಿದ್ದಾಗ – +“ಏನ್ರೀ… ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ತನ್ನನ್ನು ಯಾರೂ ನೋಡ್ಲಿಲ್ಲಾಂತ ತಿಳ್ಕೊಳ್ತದಂತೆ” ಎಂದು ಇದ್ದಕ್ಕಿದ್ದಂತೆ ಮುಖ ದಿಮ್ಮನೆ ಮಾಡಿಕೊಂಡಳು. +ಏನಾದರೂ ಹೇಳಲಿಕ್ಕೆ ಕೇಳಲಿಕ್ಕೆ ಕೊಟ್ಟೂರಲ್ಲಾದರೆ ಅಮ್ಮ ಇರುತ್ತಿದ್ದಳು. ಆದರೆ ಇಲ್ಲಿ ತಾನೆ ಯಾರಿದ್ದಾರೆ… ಮಾಪಕ ಕಡ್ಡಿಯ ಒಂದು ತುದಿಯಲ್ಲಿ ನಾನಿದ್ದರೆ ಇನ್ನೊಂದು ತುದಿಯಲ್ಲಿ ಹೆಂಡತಿವರಲಕ್ಷ್ಮಿ ಇರುವಳು. ಮೆಲಿಂದ ಕೆಳಗೆ ಸಂಖ್ಯೆಗಳನ್ನು ಎಣಿಸುತ್ತಿದ್ದರೆ ಆಕೆ ಕೆಳಗಿಂದ ಮೇಲಕ್ಕೆ ಸಂಖ್ಯೆಗಳನ್ನು ಎಣಿಸುವಳು. +“ಯಾಕೆ… ಹಾಗಂತೀಯ ವರಲಕ್ಷ್ಮೀ” ಎಂದು ಪ್ರೀತಿಯಿಂದಲೇ ಕೇಳಿದೆ. +“ಮತ್ತೇನು… ನೀವು ಆ ಹುಡುಗಿ ಕಡೆ ಹುಳಿಹುಳಿ ನೋಡ್ತಿದ್ದುದನ್ನು ನಾನು ನೋಡ್ಲಿಲ್ಲಾಂತ ತಿಳ್ಕೊಂಡಿದ್ದೀರೇನು?” ಎಂದಳು, ಬಾರಕೋಲಿನಿಂದ ಬಾರಿಸಿದಂತೆ. +ಆಕೆ ಹಾಗೆ ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ… ಅದನ್ನು ಕೇಳಿ ನನಗೆ ಬೇಸರವಾಗಲೀ ದುಃಖವಾಗಲೀ ಆಗಲಿಲ್ಲ. ಬದಲಿಗೆ ಅನುಕಂಪ ಮೂಡಿತು. +“ಹುಚ್ಚಿ… ತಮಾಷೆ ಮಾಡ್ಬೇಡ… ಅದಕ್ಕೂ ಒಂದು ಮಿತಿ ಇರಬೇಕು…” ಎಂದು ರಮಿಸುವ ಪ್ರಯತ್ನ ಮಾಡಿದೆ. ಒಂದು ಕ್ಷಣ ನನ್ನ ಮುಖವನ್ನು ದಿಟ್ಟಿಸಿದಳು. +“ನೀವಂಥೊರಲ್ಲ ಬಿಡ್ರಿ” ಎಂದಳು… ನಾನು ಸುಮ್ಮನಿದ್ದೆ. ಹೌದು : ಖಂಡಿತ ನಾನು ಅಂಥವನಲ್ಲ… ಅಫಿಡವಿಟ್ ಮುಂಜೂರು ಮಾಡುವ ಕೋರ್ಟಿನ ಶಿರಸ್ತೆದಾರಳಂತಿರುವ ಹೆಂಡತಿಯಿಂದ ನಾನು ನನ್ನ ಪ್ರತಿಯೊಂದು ನಡೆ ನುಡಿ ಕುರಿತು ಪ್ರಮಾಣ ಪತ್ರ ಪಡೆಯಬೇಕು…. ಎಂಥ ವಿಚಿತ್ರ! ಪ್ರತಿ ಕ್ಷಣ, ಪ್ರತಿ ಚಲನವಲನವನ್ನು ಆಕೆ ಗಮನಿಸುವಳು… ಅನುಮಾನ ಬಂತೆಂದರೆ ಹಿಂದು ಮುಂದು ನೋಡದೆ ಪಾಟೀ ಸವಾಲಿಗೆ ಗುರಿ ಮಾಡುವಳು… ಹೌದು, ನನ್ನ ಗಂಡ ನಿರಪರಾಧಿ ಎಂದು ಸಮಾಧಾನ ಪಡುವಳು. ದೇವರ ಮೇಲೆ ಹೂವು ತಪ್ಪಬಹುದು… ಆದರೆ ಈ ಪಾಟೀ ಸವಾಲಾಗಲೀ, ಸಮಾಧಾನ ಹೊಂದುವುದಾಗಲೀ ತಪ್ಪುವುದಿಲ್ಲ… ಇದು ನಾನು ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ನಿತ್ಯಕರ್ಮ. +ಮರುದಿನ ಬ್ಯಾಂಕಿಗೆ ಹೋದಾಗ ಎಲ್ಲರೂ ಬುಧವಾರ ಪೇಟೆಯಲ್ಲಿ ಮನೆ ಮಾಡೋದೆಂದರೆ ಸಾಮಾನ್ಯ ಸಂಗತಿಯೇ ಎಂದು ಆಶ್ಚರ್ಯ ವ್ಯಕ್ಯಪಡಿಸಿದರು. “ವೈನಿಯವ್ರ ಕೈರುಚಿ ತೋರಿಸಲ್ವೇ ಶಾಸ್ತ್ರಿ” ಎಂದು ಹೆಬ್ರಿ ಕೇಳಿಯೇ ಬಿಟ್ಟ. ಅದಕ್ಕೆ ಎಲ್ಲರೂ ಹೌದೌದೆಂದು ತಲೆ ಅಲ್ಲಾಡಿಸಿದರು. ಇಸ್ಮಾಯಿಲ ನನ್ನ ಕಿವಿಯಲ್ಲಿ “ಹಾಗೇನಾದ್ರು ಕರ್ಕೊಂಡೋಗೀಯಾ ಶಾಸ್ತ್ರಿ! ಅವನ ಕಚ್ಚೆ ಸುಮಾರಂತ ನನ್ನ ಮಾತಿನ ಅರ್ಥವಲ್ಲ. ಸಂಪ್ರದಾಯಸ್ಥ ಹೆಂಗಸರನ್ನು ಆರೆಸ್ಸೆಸ್‌ಗೆ ಹೆಚ್ಚು ಹೆಚ್ಚಾಗಿ ಸೇರಿಸ್ಕೋಬೇಕಂತ ಮೇಲಿಂದ ಹುಕುಂ ಬಂದಿದೆಯಂತೆ… ಹೆಂಗಸರು ಪರಿಚಯವಾದೊಡನೆ ಆತ ಹೇಳೋದು ಪಥ ಸಂಚಲನದ ಮಹತ್ವದ ಬಗ್ಗೆ. ಪಥ ಸಂಚಲನ ಒಂಥರಾ ಅಫೀಮಿದ್ದಂತೆ… ಅದ್ಕೆ ಒಂದ್ಸಾರಿ ಅಡಿಕ್ಟಾದರೆ… ಮುಖ್ಯವಾಗಿ ಲೇಡೀಸು… ಮಾಡ್ಕೊಂಡ ಗಂಡನ್ನಾದ್ರು ಬಿಟ್ಟಾರು ಪಥ ಸಂಚಲವನ್ನು ಮಾತ್ರ ಬಿಡಲಾರರು, ಹೇಳ್ದೆ ಕೇಳ್ದೆ ಹೆಬ್ರಿ ಬಂದು ಬಿಡ್ತಾನೆ ಹುಷಾರ್…” ಎಂದು ಪಿಸು ನುಡಿದ… +ಇದನ್ನು ದೂರದಿಂದಲೇ ಗಮನಿಸಿದ ಚಂಬಸ್ಯಯ್ಯ ಲಂಚ್ ಅವರ್‌ಗಿಂತ ಸ್ವಲ್ಪ ಮುಂಚೆ ಟಾಯ್ಲೆಟ್ ಬಳಿ ಜೊತೆಯಾದ…. “ಏನಾ ಇಸ್ಮಾಯಿಲೂ ನೀನೂ ತುಂಬ ಮಾತಾಡ್ತಿದ್ರಲ್ಲ… ಏನ್ಸಮಾಚಾರ! ಹಂಚಿನ ಗುಡೀಲಿ ರುಕ್ಕಮ್ಮ ಎಂಬ ರಂಡೇನ ಜೊತೆ ಮಾಡ್ಕೊಂಡಿರೋದು ಯಾರ್‍ಗೂಗೊತ್ತಾಗಲ್ಲಾಂತ ತಿಲ್ಕೊಂಡಿದ್ದಾನೀಸುಮಾಯಿಲು… ಹಿಂದೂ ಸ್ತ್ರೀಯರೆಂದರೆ ಅವನಿಗೆ ಎಳ್ಳಷ್ಟು ಗೌರವವಿಲ್ಲ ಶಾಸ್ತ್ರಿ… ಸ್ವಲ್ಪ ಹುಷಾರಿಂದ ಇರಪ್ಪ… ನೀನು ಮೊದ್ಲೇ ಬಾಯಿ ಸತ್ತೋನು… ಈ ದರಿದ್ರ ಊರಲ್ಲಿ ಸಂಸಾರ ಹೂಡಿ… ದಾರಿದ್ರ್ಯವನ್ನು ಮೈ ಮೇಲೆ ಎಳ್ಕೊಳ್ಳಕ್ಕೆ ಸಜ್ಜಾಗಿದ್ದೀಯ” ಎಂದು ಒಂದ ಮಾಡುತ್ತ ಹೇಳಿದ. +ನಂತರ ಅವನು ಅಣ್ಣತಮ್ಮಂದಿರಂತೆ ನಗುನಗುತ್ತ ಇದ್ದುದು ಕಂಡು ನನಗೆ ಆಶ್ಚರ್ಯವಾಯಿತು. ಅಲಾಯಿದವಾಗಿ ನನ್ನ ಕಡೆ ಕಣ್ಣು ಮಿಟುಕಿಸುತ್ತಿದ್ದರು. ಅವರ ಪರಸ್ಪರ ಬೇಟೆಯಾಡುವುದರಲ್ಲಿ ನಿಷ್ಣಾತರಿರುವರು ಎಂದುಕೊಂಡೆ. +ನಾನು ನೌಕರಿಗೆ ಸೇರುವುದಕ್ಕಿಂಥ ಮೊದಲಿಂದಲೂ ಆ ಮುವ್ವರ ಪರಿಚಯ ನನಗಿಲ್ಲದಿರಲಿಲ್ಲ. ಹೆಬ್ರಿ ಗೋವಿಂದಾಚಾರ್ಯ ತುರ್ತು ಪರಿಸ್ಥಿತಿ ಅವಧಿಯಲ್ಲಿ ಸರಕಾರದ ವಿರುದ್ಧ ಪಿತೂರಿ ಮಾಡಿದ ಆಪಾದನೆಗಾಗಿ ಜೈಲಿಗೆ ಹೋಗಿದ್ದ. ಅವನಿದ್ದದ್ದು ಪ್ರಸಿದ್ಧ ಯರವಾಡ ಜೈಲಿನಲ್ಲಿ… ಜೈಲೊಳಗೆ ಇದ್ದು ಆರೆಸ್ಸೆಸ್ ಮುಖವಾಣಿ ಪತ್ರಿಗೆಗೆ ಪ್ರಾಸಬದ್ಧ ಮತ್ತು ಒತ್ತಕ್ಷರದ ಕಠಿಣ ಪದಗಳುಳ್ಳ ಕಿರು ಲೇಖನಗಳನ್ನು ಗುಪ್ತನಾಮ ಇಟ್ಟುಕೊಂಡು ಬರೆಯುತ್ತಿದ್ದ. ಒತ್ತಕ್ಷರ ಬಳಕೆ ಕುರಿತು ಕಲಿಯುತ್ತಿದ್ದ ನಾನು ಅದನ್ನು ಗುಟ್ಟಾಗಿ ಸಂಪಾದಿಸಿ ಓದುತ್ತಿದ್ದೆ. ಅವುಗಳಿಂದ ಪ್ರೇರಿತನಾಗಿ ನಾನು ಕೂಡ ಒಂದು ಖಾಕಿ ಚೆಡ್ಡಿ ಹೊಲಿಸಿಟ್ಟುಕೊಂಡಿದ್ದೆ. ತೊಡುತ್ತಿರಲಿಲ್ಲ. ವಾರದ ಎರಡು ಸಲ ಪಥ ಸಂಚಲನದ ಕನಸು ಕಾಣುತ್ತಿದ್ದೆ. ತುರ್ತು ಪರಿಸ್ಥಿತಿ ತೆಗೆದು ಹಾಕಿದ ಮರು ವಾರ ಕೊಟ್ಟೂರಿನ ಮೈದಾನದಲ್ಲಿ ಆತ ತನ್ನ ಸಂಗಡಿಗರೊಡನೆ ಪಥ ಸಂಚಲನ ಮಾಡಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. +ಇಸ್ಮಾಯಿಲ ಹರಪನಳ್ಳಿ ಆಚೆ ಇರುವ ಕ್ಯಾದಿಗೆ ಹಳ್ಳಿ ಬಸಾಪುರ, ಹುಣಿಸೀಕಟ್ಟೆ ದಲಿತರನ್ನು ಕೆಲವು ಸವರ್ಣೀಯರನ್ನು ತಿರುಚನಾಪಳ್ಳಿಯ ದರಗಾಕ್ಕೆ ಸಾಗಿಸಿ ಇಸ್ಲಾಂ ಮತಕ್ಕೆ ಮತಾಂತರಗೊಳಿಸಿದ ಜಮಾತೆ ಇಸ್ಲಾಮಿನ ಗುಂಪಿನಲ್ಲಿದ್ದುದಾಗಿ ಕೇಳಿದ್ದೆ. ವಕೀಲರೋರ್ವರ ತಂಗಿಯನ್ನಪಹರಿಸಿ ಸಿಕ್ಕಿಹಾಕಿಕೊಂಡು ಹಲ್ಲೆಗೀಡಾಗಿದ್ದ. ಅವನು ಮತಾಂತರಗೊಳಿಸಿದವರ ಪೈಕಿ ಪ್ರಭುದೇವನೆಂಭೋರ್ವನು ಈಗಲೂ ಕೊಟ್ಟೂರು ಬಳಿ ನಗೀರ್ ಅಹಮದ್ ಎಂಬ ಹೆಸರಿಟ್ಟುಕೊಂಡು ದೆಹಲಿಯ ಚಾಂದಿನಿ ಚೌಕದಲ್ಲಿ ತಯಾರಾಗುತ್ತಿರುವ ತಂಬಾಕಿನ ವಿವಿಧ ನಮೂನೆಗಳನ್ನು ಗ್ರಾಮದ ಜನರಿಗೆ ಪರಿಚಯಿಸುತ್ತಿರುವನು. ಅವನೂ, ಇಸ್ಮಾಯಿಲೂ ಈಗಲೂ ವರ್ಹಕ್ಕೊಂದು ಸಾರಿ ಅಜ್ಮೀರಿಗೆ ಹೋಗಿ ಬರುತ್ತಿರುತ್ತಾರೆ. +ಚಂಬ್ಸ್ಯಯ್ಯ ಮಾತ್ರ ಅವರಿಬ್ಬರಿಗಿಂತ ಚೆನ್ನಾಗಿ ಪರಿಚಯ. ಪೀಠದ ಅಧಿಕಾರ ಕುರಿತಂತೆ ಲಿಂಗಾಯಿತ ಜಾತಿಯ ಎರಡು ಕೋಮುಗಳ ನಡುವೆ ಐದಾರು ವರ್ಷಕ್ಕೊಮ್ಮೆಯಾದರೂ ಸಂಭವಿಸುವ ಗಲಭೆಯಲ್ಲಿ ಆತ ಮಚ್ಚು ಹಿಡಿದುಕೊಂಡು ಪಂಚಾಚಾರ್ಯ ಮಾರಾಜ್ಕೂ ‘ಜೈ’ಎಂದು ಕೂಗುತ್ತ ಅಡ್ಡಡುತ್ತಿದ್ದುದನ್ನು ನಾನು ನೋಡಿರುವುದುಂಟು. ಅಲ್ಲದೆ ಆತ ತನ್ನ ಕಿರಿ ಪತ್ನಿ ಗೌರಮ್ಮನನ್ನು ವೃದ್ಧಾತಿ ವೃದ್ಧ ಜಗದ್ಗುರುಗಳ ಸೇವೆಗೆ ಬಿಟ್ಟಿದ್ದಾನೆ. ಜಗದ್ಗುರುಗಳ ಸ್ನಾನ ಕಾರ್ಯದ ಮೇಲ್ವಿಚಾರಕಿಯಾದ ಆಕೆಯ ಮೂಲಕ ಹಲವು ವೀರಶೈವ ಪುಡಾರಿಗಳು ಜಗದ್ಗುರುಗಳಿಂದ ರಾಜಕೀಯ ಮತ್ತು ರಾಜಕೀಯೇತರ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿರುವರೆಂದು ನಾನು ಕೇಳಿರುವುದುಂಟು. ಗೌರಮ್ಮ ಜಗದ್ಗುರುಗಳ ನೂರೆರಡನೇ ಹುಟ್ಟುಹಬ್ಬವನ್ನು ಅವರಿಂದ ವೀರ್ಯಸ್ಖಲನ ಮಾಡಿಸುವುದರ ಮೂಲಕ ಯಶಸ್ವಿಯಾಗಿ ಆಚರಿಸಿದಳೆಂದು ಮುಂತಾಗಿ ವಿಡಂಬನಾತ್ಮಕ ಲೇಖನ ಬರೆದು ಕರಪತ್ರ ಹಂಚಿದ ಕಾರಣಕ್ಕಾಗಿ ಸ್ಥಳೀಯ ಹವ್ಯಾಸಿ ಪತ್ರಕರ್ತ ಪ್ರಕಾಶನನ್ನು ಹಿಡಿದು ಅವನ ತಲೆ ಬೋಳಿಸಿ ಕತ್ತೆ ಮೇಲೆ ಬತ್ತಲೆಯಾಗಿ ಕೂಡ್ರಿಸಿ ಪೀಠದ ಕೇಂದ್ರ ಸ್ಥಳವಾದ ಶಿವಪುರದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದಂದಿನಿಂದಲೇ ಚಂಬಸ್ಯಯ್ಯ ಹೆಚ್ಚಿಗೆ ಪ್ರಚಾರಕ್ಕೆ ಬಂದದ್ದು. +ಆದರೆ ಈ ಮೂವರು ಈ ಚರಿತ್ರೆ ಎಲ್ಲ ನನಗೆ ಗೊತ್ತಿಲ್ಲವೆಂದುಕೊಂಡು ಪರಮ ಸಜ್ಜನರಂತೆ ವರ್ತಿಸುತ್ತಿರುವರು. ಇದನ್ನೆಲ್ಲ ಸಂದರ್ಭಾನುಸಾರ ಪ್ರಕಟಿಸಿ ಅವರ ಮೇಲೆ ಹಿಡಿತ ಸಾಧಿಸಬೇಕೆಂದು ನಿರ್ಧರಿಸಿದೆ. ಇವರೊಂದೇ ಅಲ್ಲ, ಸಮಾಜದ ಅನೇಕರ ಒಳಗುಟ್ಟುಗಳನ್ನು ದಾಖಲು ಮಾಡಿಕೊಂಡಿರುವೆ. ಇದು ನನ್ನ ಪ್ರಮುಖ ಹವ್ಯಾಸಗಳಲ್ಲಿ ಒಂದು. ನಮ್ಮ ವಂಶದ ತಾಕೀತುದಾರರ ಗುಟ್ಟುಗಳನ್ನೂ ನಾನು ಸಂಗ್ರಹಿಸಿಕೊಂಡಿರುವೆ – ತಂದೆಯವು, ತಾತನವು, ತಾಯಿಯವು… ಆದರೆ ಹೆಂಡತಿ ಮಾತ್ರ ಗುಟ್ಟುಗಳೇ ಇಲ್ಲದ ಶೂನ್ಯ ಸಿಂಹಾಸನದಂತೆ ಗೋಚರಿಸುತ್ತಿರುವಳು. +ವಿವಾಹ ನಂತರದ ಇಷ್ಟು ದಿನಗಳಲ್ಲಿ ಆಕೆ ತನ್ನ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಒಂದೇ ಒಂದು ಗುಟ್ಟನ್ನು ಅನುಭವಿಸುವುದಾಗಿಲ್ಲ. ಬಚ್ಚಿಟ್ಟುಕೊಳ್ಳುವುದಾಗಿಲ್ಲ… ಅದಕ್ಕೆಂದು ನಾನು ಅನೇಕ ಅವಕಾಶಗಳನ್ನು ಕಲ್ಪಿಸಿರುವುದುಂಟು. ಆಕೆ ಮುಖ್ಯವಾಗಿ ನಿರ್ಮೋಹಿ. ಆಕೆಯನ್ನು ಆಕರ್ಶಿಸುವ ಯಾವ ವಸ್ತುವೂ ಭೂಮಿ ಮೇಲಿಲ್ಲ. ಮಲ್ಲಿಗೆ ಮತ್ತು ಗುಲಾಬಿ ಹೂಗಳ ನಡುವೆ ಅಂತರ ಗುರುತಿಸಲಾರಳು. ಕಾಗೆ ಮತ್ತು ನವಿಲಿನ ನಡುವೆಯೂ ಅಷ್ಟೆ. ಆಕೆಯ ಚಿತ್ತವನ್ನು ಸೂರೆಗೊಳ್ಳುವ ಶಕ್ತಿಗಾಗಿ ಹುಡುಕಾಟ ನಡೆಸಿ ವಿಫಲನಾದೆ… ಆಕೆಯನ್ನು ಲೈಂಗಿಕವಾಗಿ ಉದ್ರೇಕಿಸುವ ವಸ್ತುವನ್ನು ಆ ಸೃಷ್ಟಿಕರ್ತನು ಸೃಷ್ಟಿಸಿಯೇ ಇಲ್ಲವೆಂದು ನನಗೆ ಗೊತ್ತಾದದ್ದು ಯಾವಾಗ ಎಂದರೆ ಗಂಡು ಹೆಣ್ಣುಗಳು ಬತ್ತಲೆಯಾಗಿ ಸಾಮೂಹಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿರುವಂಥ ಚಿತ್ರಗಳೇ ತುಂಬಿದ್ದ ‘ರತಿವಿಲಾಸ’ ಎಂಬ ನಿಷೇದಿತ ಪತ್ರಿಕೆಯನ್ನು ‘ಸ್ವರ್ಣಗೌರಿ ವ್ರತವು’ ಎಂಬ ಪುಸ್ತಕದ ಒಳಗಿರಿಸಿ ಕಿಟಕಿ ಕಿಂಡಿಯಲ್ಲಿಣುಕಿ ನಾನು ಆಕೆಯ ಪ್ರತಿಕ್ರಿಯೆಯನ್ನು ಗಮನಿಸಿದ್ದುಂಟು. ಅದನ್ನು ತೆರೆದು ನೋಡಿ ಆಕೆ ಮೂರ್ಛೆ ಹೋದಳು. ಎದೆ ಎದೆ ಬಡಿದುಕೊಂಡಳು. ಅದನ್ನು ಹರಿದು ಚಿಂದಿಮಾಡಿ ಸುಟ್ಟು ಗೋಮೂತ್ರ ಸಿಂಪಡಿಸಿ ಮನೆಯನ್ನು ಶುದ್ಧ ಮಾಡಿದಳು. ನನ್ನನ್ನು ವಾರದ ದಿನಮಾನ ಕೆಟ್ಟದಾಗಿ ತರಾಟೆ ತೆಗೆದುಕೊಂಡು ಶಿಕ್ಷಿಸಿದಳು ಇತ್ಯಾದಿ… +ಒಂದು ನಿಜ ಹೇಳಬೇಕೆಂದರೆ ಆಕೆಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಕಾಮೋತ್ತೇಜಕ ವಸ್ತುಗಳಿಗಾಗಿ ನಾನು ಗುಟ್ಟಾಗಿ ಹುಡುಕಾಟ ನಡೆಸಿದ್ದುಂಟು. ಕಿಷ್ಕಿಂದೆಯಲ್ಲಿ ಆಂಧ್ರದಲ್ಲಿ ರೆಡ್ಡಿಯವರು ರಾಜಸುಯಯಜ್ಞ ನಡೆಸುತ್ತಿರುವರೆಂಬ ಸುದ್ದಿ ಕೇಳಿ ಹೊಸಪೇಟೆ ತಲುಪಿ ಉಳ್ಳಾಗೆಡ್ಡೆಯವರೋಣಿಯಲ್ಲಿ ಲೈಂಗಿಕ ತಜ್ಞರೋರ್ವರ ವಿಳಾಸ ಪಡೆದು ರಾಣಿಪೇಟೆಯಲ್ಲಿದ್ದ ಅವರನ್ನು ಸಂಪರ್ಕಿಸಿ, ನೂರಾರು ರುಪಾಯಿಕೊಟ್ಟು ಪಡೆದ ಐದು ಗ್ರಾಂ ಭಸ್ಮವನ್ನು ಆಕೆಗರಿವಿಲ್ಲದಂತೆ ಪಂಚಕಜ್ಜಾಯದಲ್ಲಿರಿಸಿ ತಿನ್ನಿಸಿದ್ದೂ ಉಂಟು. +ಇದೇ ಮೊನ್ನೆ ಬಸ್ಸಿನಲ್ಲಿ ಪ್ರಯಾಣಿಸುವಾಗ್ಗೆ ಪ್ರೌಡ ಶಾಲಾ ವಿಧ್ಯಾರ್ಥಿಯೋರ್ವನು ಭುಜ ತಾಕಿಸಿದ ಎಂಬ ಕಾರಣಕ್ಕೆ ದೊಡ್ಡ ರಂಪಾಟ ಮಾಡಿಬಿಟ್ಟಂಥ ನನ್ನ ಹೆಂಡತಿಯಲ್ಲಿ ಯಾವ ಗುಟ್ಟುಗಲನ್ನು ಹುಡುಕಲು ಸಾಧ್ಯವಾದೀತು? ಸಮಾಜಕ್ಕೆ ನಿರುಪದ್ರವಿಯೂ; ನನಗೆ ಕರ್ಮಠ ಉಪದ್ರವಿಯೂ ಆದೆ ಆಕೆ ದ್ವೀಪದಂತೆ ವಾಸಿಸಬೇಕೆಂದು ಇಚ್ಛಿಸುತ್ತಾಳೆ. ವಾರಕ್ಕೊಂದಾದರೂ ವ್ರತವನ್ನು ಮಾಡುತ್ತಾಳೆ. ನನ್ನ ಹೆಂಡತಿಗೆ ತಿಥಿಗಳ ಪರಿಚಯವಿದೆ.. ನಕ್ಷತ್ರಗಳ ಪರಿಚಯವಿದೆ, ವಾರಗಳ ಪರಿಚಯವಿದೆ, ಘಳಿಗೆಗಳ ಪರಿಚಯವಿದೆ. ಆಕೆ ಜೀವಂತ ಪಂಚಾಂಗವೆಂದರೂ ಸರಿಯೇ. ಆದರೆ, ಗಂಡನಾದ ನನ್ನ ಮನಸ್ಸಿನ ಭಾವನೆಗಳ ಪರಿಚಯವಿಲ್ಲ.. ಸಾಂಸಾರಿಕ ಛಂದಸ್ಸಿನ ಪರಿಚಯವಿಲ್ಲ, ದಾಂಪತ್ಯದ ವ್ಯಾಕರಣದ ಪರಿಚಯವಿಲ್ಲ. ಅವುಗಳನ್ನು ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸಂಸಾರವೆಂಬ ಉದಕದಲ್ಲಿ ತೈಲದ ಬಿಂದುವಿನಂತೆ ಇರುವ ಆಕೆಯಲ್ಲಿ ಯಾವ ಗುಟ್ಟನ್ನು ಯಾವ ದೋಶವನ್ನು ಹುಡುಕಲಿ? +ದಿನಗಳೆದಂತೆ ಬುಧವಾರಪೇಟೆ ಆಕೆಗೆ ನರಕ ಸದೃಶವಾಗ ತೊಡಗಿತು. ಅವರು ಹಾಗೆ! ಇವರು ಹೀಗೆ! ಎಂದು ಸಿಡಿಮಿಡಿಗುಟ್ಟ ತೊಡಗಿದಳು. ಪೂರ್ವ ನಿರ್ಧರಿತ ಒಪ್ಪಂದದಂತೆ ನಾನು ಫಕೀರಮ್ಮನ ಮನೆಯಲ್ಲಿ ದಿನಕ್ಕೆ ಒಂದಾವರ್ತಿ ಪ್ರಾತಃಕಾಲದಲ್ಲಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವುದರ ಬಗ್ಗೆ; ಐದು ರೂಪಾಯಿ ದಕ್ಷಿಣೆ ಸ್ವೀಕರಿಸುವ ಬಗ್ಗೆ, ಪಾದಾಭಿವಂದನೆ ಸ್ವೀಕರಿಸುವ ಬಗ್ಗೆ ತಕರಾರು ಶುರು ಮಾಡಿದಳು. ಪಾಪ ಸಂಚಯದ ಒಂದು ಭಾಗವೇ ದಕ್ಷಿಣೆ ಎಂದು ವಾದಿಸತೊಡಗಿದಳು. ಪಾದಾಭಿವಂದನೆ ಮಾಡುವುದರ ಮೂಲಕ ವಕ್ಷಸ್ಥಳ ತೋರಿಸಿ ತನ್ನ ಗಂಡನಾದ ನನ್ನ ಚಿತ್ತವನ್ನು ಅಪಹರಿಸುವ ಪ್ರಯತ್ನ ಮಾಡುತ್ತಿರುವರೆಂದು ತರ್ಕಿಸ ತೊಡಗಿದಳು. ಆಕೆಯ ತರ್ಕಕ್ಕೆ ಗೊಬ್ಬರ ಹಾಕುವ ರೀತಿಯಲ್ಲಿ ವಿಜಯಾ; ರಾಗಿಣಿ; ಮೇನಕೆ ಎಂಬ ತರುಣಿಯರು ಕೂಡಾ ಅಷ್ಟೇ ಸಲಿಗೆಯಿಂದ ಇದ್ದರು. ವಿಜಯಾ ಶಂಕರಾಚಾರ್ಯ ವಿರಚಿತ ‘ಸೌಂದರ್ಯಲಹರಿ’ಯ ಕೆಲವು ಕ್ಲಿಷ್ಟ ಸ್ತೋತ್ರಗಳ ಅರ್ಥ ಬಯಸಿ ಆಗೊಮ್ಮೆ, ಈಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದುದು ಕ್ರಮೇಣ ಇಷ್ಟಪಡದಾದಳು. ಆದಿತಾಳದ ರೂಪರೇಷೆಗಳನ್ನು ತಿಳಿದುಕೊಳ್ಳುವ ನಿಮಿತ್ತ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಕರ್ನಾಟಕ ಸಂಗೀತ ವಿದ್ಯಾರ್ಥಿನಿ ರಾಗಿಣಿಯ ಮೇಲೆ ಕಿಡಿಕಾರ ತೊಡಗಿದಳು. ಸಂಖ್ಯಾಶಾಸ್ತ್ರದ ವಿದ್ಯಾರ್ಥಿನಿಯಾದ ಮೇನಕೆಗೂ ವರಲಕ್ಷ್ಮಿಗೂ ನನ್ನ ಗೈರುಹಾಜರಿಯಲ್ಲಿ ಜಗಳ ಆಯಿತೆಂದು ವಿದ್ಯುತ್ ಇಲಾಖೆಯ ಮೀಟರ್ರೀಡರು ಯಾಕೂಬ ಹೇಳಿದ. ಇದರಲ್ಲಿ ಸುಳ್ಳೆಷ್ಟೊ ನಿಜವೆಷ್ಟೋ!… ಆಕೆ ಎಷ್ಟೇ ವಿರೋಧಿಸಿದರು ಆ ಮೂರು ಮಂದಿ ತರುಣಿಯರು ನನ್ನಿಂದ ಸಾಧ್ಯವಾದಷ್ಟು ಜ್ಞಾನವನ್ನು ಸಂಪಾದಿಸುತ್ತಿದ್ದರು. ಅವರೆಂದೂ ನನ್ನ ಬಳಿ ಅಶ್ಲೀಲವಾಗಿ, ಅಸಭ್ಯವಾಗಿ ವರ್ತಿಸುದುದಿಲ್ಲ. ಹತ್ತಿರ ಬಂದರೆ ದೂರ ಸರಿಯುವ, ದೂರವಾದರೆ ಹತ್ತಿರ ಸುಳಿಯುವ ನನ್ನ ಸ್ವಭಾವ ನನಗೆ ಗೊತ್ತಿದ್ದೇ ಇತ್ತು. ವರಲಕ್ಷ್ಮಿಯ ಕಾರುಬಾರಿನಿಂದ ಅವರೆಲ್ಲಿ ದೂರವಾಗಿಬಿಡುವರೋ! ಆಗ ಮತ್ತೆಲ್ಲಿ ತಾನು ಅವರಿಗೆ ಹತ್ತಿರವಾಗಲು ಪ್ರಯತ್ನಿಸುವೆನೋ ಎಂಬ ಅಳುಕಿನಿಂದಾಗಿ ನಾನು, ಅವರ ಮತ್ತು ನನ್ನ ನಡುವೆ ಒಂದು ಅಂತರ ಕಾಯ್ದುಕೊಂಡು ಬಂದಿದ್ದೆ. ಯಾರು ಯಾರನ್ನೂ ಮೋಹಿಸುವುದು ಸಾಧ್ಯವಿರಲಿಲ್ಲ!… ಆದರೆ ಅದು ಆಕೆಗೆ ಅರ್ಥವಾಗುವುದು ಸಾಧ್ಯವಿರಲಿಲ್ಲ. ರೆಡ್‌ಹ್ಯಾಂಡ್ನಲ್ಲಿ ಹಿಡಿಯಬೇಕೆಂದು ನಿರ್ಧರಿಸಿರುವಳಂತೆ ಇರುತ್ತಿದ್ದಳು. ಎಲ್ಲರಿಗೂ ಕೇಳಿಸುವಂತೆ “ವಿಜಯಾ ಕಾಲೇಜ್ನಿಂದ ಈಗ ಬಂದ್ಯಾ… ಊಟಾ ಆಯ್ತಾರಾಗಿಣಿ… ಸಂಗೀತ ತರಗತಿಗೆ ಹೋಗಿದ್ಯಾ… ಇತ್ಯಾದಿ ಇತ್ಯಾದಿ ಹೊರಗಡೆ ಮಾತಾಡಿಸುತ್ತಿದ್ದ ಆಕೆ ಅವರೇನಾದರೂ ಮನೆ ಕಡೆ ಸುಳಿದರೆ ಬನ್ರಮ್ಮಾ ಕೂತ್ಕೋಳ್ಳಿ… ಒಂದು ಕಪ್ಪು ಪಾನಕ ಮಾಡಿಕೊಡ್ತೀನಿ… ಕೋಸಂಬರಿ ತಿಂದು ಕುಡಿಯುವಿರಂತೆ” ಎಂದೆನ್ನುತ್ತಿರಲಿಲ್ಲ. ಶ್ರೀಲಲಿತಾಷ್ಟಕದ ಮೂರು ಖಂಡಗಳಂತಿದ್ದ ಆ ಮುವ್ವರನ್ನು ನಾನು ಪರಿಭಾವಿಸುವುದೆಂಬ ಗೊಂದಲದಲ್ಲಿದ್ದ ನಾನು ತಾತ, ತಾಯಿ ಮತ್ತು ಕರ್ಮಠವೆಂಬೀ ಮೂರು ಕೋರ್ಟುಗಳು ಜೀವಾವಧಿ ಶಿಕ್ಷೆ ವಿಧಿಸಿ ತುರಂಗ ಪಾಲು ಮಾಡಿರುವ ಸಂಗೀತ, ಸಾಹಿತ್ಯ ಮತ್ತು ಸಂಖ್ಯಾ ಶಾಸ್ತ್ರಗಳ ಮೂರು ಹವ್ಯಾಸಗಳೆ; ಪ್ರತಿಭೆಗಳೇ ಈ ಮೂರು ಮಂದಿ ತರುಣಿಯರು ಎಂದು ಭಾವಿಸಿದ್ದೆನು. ಆದ್ದರಿಂದ ಅವರ ತರುಣ ಪ್ರತಿಭೆಗಳನ್ನು ಆರಾಧಿಸುತ್ತಿದ್ದೆ ಮತ್ತು ಗೌರವಿಸುತ್ತಿದ್ದೆನೇ ಹೊರತು ಕಾಮ ದೃಷ್ಟಿಯಿಂದ ಪ್ರೀತಿಸುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೆ ಅಳುಕು ಎಂಬ ಸಂಕೋಲೆಯನ್ನು ಕಾಲಿಗೆ ತೊಡರಿಸಿಕೊಂಡು ಸಂಕೋಚವೇ ಮೂರ್ತಿವೆತ್ತಂತೆ ಅಡ್ಡಾಡುತ್ತಿದ್ದೆನು. +ನಾನು ಸ್ಲೀವ್‌ಲೆಸ್ ಬ್ಲೌಸಿನ ಆಕೆ, ಮನೆಗೆ ನನ್ನ ಗೈರುಹಾಜರಿಯಲ್ಲಿ ಬಂದು ಲಗ್ನ ಪತ್ರಿಕೆಯನ್ನು ನನ್ನ ಹೆಂಡತಿಗೆ ತಂದು ಕೊಟ್ಟು ಅಕೆಯೊಂದಿಗೆ ಗಂಟೆಗಟ್ಟಲೆ ಹರಟಬಹುದು ಎಂದು ಯೋಚಿಸಿರಲಿಲ್ಲ… ಹೆಬ್ರಿಯವರ ಊರಿಗೆ ಹೋಗಿ ಹೆಬ್ರಿಗೂ, ಇಸ್ಮಾಯಿಲರ ಊರಿಗೆ ಹೋಗಿ ಇಸ್ಮಾಯಿಲಗೂ; ಚಂಬಸ್ಯಯ್ಯನ ಊರಿಗೆ ಹೋಗಿ ಚಂಬಸ್ಯಯ್ಯನಿಗೂ ಕೊಟ್ಟಿದ್ದ ಆಕೆ, ಕೊಟ್ಟೂರಿಗೆ ಹೋಗಿ ನನ್ನ ತಾಯಿಯವರಿಗೂ ಕೊಟ್ಟಿರಬಹುದೆಂದು ಭಾವಿಸಿದ್ದುದೇ ತಪ್ಪಾಗಿತ್ತು. ಗ್ರಹಲಾಘವವೇ ಸಿದ್ಧಾಂತ ರಹಸ್ಯವೇ ಹೆಣ್ಣು ರೂಪ ಧರಿಸಿರುವುದೇನೋ ಎಂಬಂತಿದ್ದ ಆಕೆಗೆ ಏನ್ರೀ ಶಾಂತೀ ನನ್ಗೆ ನಿಮ್ಮ ಲಗ್ನ ಪತ್ರಿಕೆ ಕೊಡ್ಲಿಲ್ವಲ್ಲಾ” ಎಂದು ಕೇಳುವ ಬಯಕೆಯಿಂದ ಕೇಳುವ ಧೈರ್ಯ ಮಾಡಲೂ ಇಲ್ಲ ನಾನು. ಅದೇ ದಿನ ಗುಂಡುಮುಗುಳು ಸಿದ್ಧನಗೌಡ ನನಗೆ ಪಶುಪತಿಯೆಂಬ ದೊಗಳೆ ಉಡುಪುಧರಿಸಿದ್ದ ದೊಗಳೆ ವ್ಯಕ್ತಿಯನ್ನು ಪರಿಚಯಿಸಿಕೊಟ್ಟಿದ್ದ. ಈ ದೇಶದಲ್ಲಿ ಮಾರ್ಕ್ಸಿಜಂ ಜೀವಂತವಾಗಿ ಉಳಿದಿರೋದಾದ್ರೆ ಅದು ಬ್ರಾಹ್ಮಣರಿಂದ ಮಾತ್ರ ಎಂದು ಅವನು ಪರಿಚಯವಾದ ಕ್ಷಣ ಹಸ್ತಲಾಘವ ಮಾಡಿ ಹೇಳಿ ಬಿಟ್ಟಿದ್ದ. ಅವನು ನನ್ನನ್ನು ಹೊಗಳಿದನೋ, ತೆಗಳಿದನೋ ಎಂದೊಂದು ಕ್ಷಣ ಅರ್ಥವಾಗಲಿಲ್ಲ. ಚತುರ್ಭುಜಾಕೃತಿಗಳನ್ನು ಚೌರಸಗಳನ್ನಾಗಿಯೂ; ಚೌರಸಗಳನ್ನು ವೃತ್ತಗಳನ್ನಾಗಿಯೂ ಮಾರ್ಪಡಿಸಬಲ್ಲ ಚಾಣಾಕ್ಷನಂತಿದ್ದ. ಪೈಥಾಗೋರಿಯಸ್ ಪ್ರಮೇಯದ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳಲು, ಪಡೆವ ಉತ್ತರಕ್ಕೆ ತಾನೇ ವಾರಸುದಾರನೆಂಬಂತೆ ಬೀಗುತ್ತಿದ್ದ. ಮೂರುಗ್ ಗೂಟಗಳ ನಡುವೆ ಕಟ್ಟಿದ ದಾರಗಳ ಪೈಕಿ ನನಗೂ ಆ ಪೈಕಿ ಒಂದನ್ನು ಕೊಟ್ಟಿದ್ದ. ಅಲುಮೇಲಮ್ಮ ನನಗೆ ಗೊತ್ತಿದ್ದಲೇ ಹೊರತು ಮಾರ್ಕ್ಸಿಜಮ್ಮ ನನಗೆ ಗೊತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳುವ, ಭೇದಿಸುವ ಗೋಜಿಗೂ ನಾನು ಹೋಗಿರಲಿಲ್ಲ. ಸಹನೌಭುನಕ್ತು, ಸಹವೀರ್ಯಂ ಕರವಾವಹೈ ಎಂಬುದರಲ್ಲಿಯೇ ಇದೆಲ್ಲ ಅಡಗಿಹೋಗಿದೆಯಲ್ಲಾ ಎಂದು ಕೊಂಡಿದ್ದ ನಾನು… ನಾನು ಗೂಟದ ಈಶಾನ್ಯಕ್ಕಿದ್ದರೆ ಪಶುಪತಿ ಯಮ ದಿಕ್ಕಿನಲ್ಲಿ; ಗುಮಿಸಿ ಗೌಡ ನೈರುತ್ಯ ದಿಕ್ಕಿನಲ್ಲಿದ್ದರು. ಅವರು ತಂತಮ್ಮ ಕಡೆ ಜಗ್ಗಾಡುತ್ತಿರುವಾಗ ನಾನೋರ್ವನೇ ಗೂಟಕಿತ್ತು ಕೊಂಡು ಮನೆ ಕಡೆ ಓಡುವುದು ಹೇಗೆ ಸಾಧ್ಯವಾದೀತು?… ನಾನೀ ಬಿಡುಗಡೆ ಪ್ರಯತ್ನದಲ್ಲಿರುವಾಗಲೇ ಶಾಂತಿ ಲಗ್ನ ಪತ್ರಿಕೆಗಳನ್ನು ಅಂಕಗಣಿತ; ಬೀಜಗಣಿತ, ರೇಖಾಗಣಿತವನ್ನಡಗಿಸಿಟ್ಟುಕೊಂಡಂತಿದ್ದ ನಿಘೂಡ ವ್ಯಾನಿಟ್ ಬ್ಯಾಗಿನೊಳಗಿಟುಕೊಂಡು ಬ್ಯಾಂಕಿನಿಂದ ಸೀದ ಬುಧವಾರ ಪೇಟೆ ಕಡೆ ಲಟಗೂ ಪುಟಗೂ ಹೊರಟಿದ್ದಳು. +ಆಕೆ ನಮ್ಮ ಮನೆ ತಲುಪುವ ಕೆಲವು ಕ್ಷಣಗಳ ಹಿಂದೆಯಷ್ಟೆ ವರಲಕ್ಷ್ಮಿಯು ಮಡಿಮುಡಿಯಿಂದ ಮಾಧ್ವನವಮಿಯನ್ನು ಆಚರಿಸುವ ಸನ್ನಾಹದಲ್ಲಿದ್ದಳು. ಈಶ್ವರಾಂಶ ಸಂಭೂತವಾದ ಜೀವಾತ್ಮನೇ ನಿತ್ಯಶಾಶ್ವತವೆಂದು ಬೋಧಿಸುವ ತಹತಹಿಕೆಯಿಂದ ಶ್ರೋತೃವಿಗಾಗಿ ಹುಡುಕಾಡುತ್ತ ಹಿತ್ತಲಿಗೂ ಅಂಗಳಕ್ಕೂ ನಡುವೆ ಅಡ್ಡಾದುತ್ತಿದ್ದಳು. ಕೇಳುವವರು, ಜ್ಞಾನತೃಷಿಗಳೊಬ್ಬರೂ ಆಕೆಗೆ ದೊರಕಿರಾಲಿಲ್ಲ. ಅನ್ಯಥಾರ್ಗತಿನಾಸ್ತಿ ಎಂಬಂತೆ ತನ್ನ ನಿರುಪಾದಿಕವಾದ ಪ್ರತಿಬಿಂಬವನ್ನೇ ಎದುರಿಗಿಟ್ಟುಕೊಂಡು ಅದಕ್ಕೆ ಆಚಾರ್ಯತ್ರಯರಲ್ಲೋರ್ವರಾದ ಮಾಧ್ವಾಚಾರ್ಯರ ತತ್ವದ ನಿರ್ವಚನವನ್ನು ಹೇಳತೊಡಗಿದಳು ಮೌನವಾಗಿ -ಮಳೆ ಬರುತ್ತಾ ಇರುವುದು, ಒಂದೇ ಸಮನೆ ಸುರಿಯುತ್ತಿರುವ, ಸಿಂಪಡಿಸುತ್ತಿರುವ ತುಂತುರು ಮಳೆ ಅದು…ಮೇಘಾಚ್ಛಾಧಿತ ಆಕಾಶ. ಸೂರ್ಯಕಿರಣಗಳು ಹಾಯದಂತೆ ತಡೆಯುತ್ತಿರುವ ಅಪಾರದರ್ಶಕ ಮೋಡಗಳು. ಆದ್ದರಿಂದ ನಮಗೆ ಸೂರ್ಯದರ್ಶನವಾಗದು. ಕ್ರಮೇಣ ಮಳೆ ಕಡಿಮೆಯಾಗುತ್ತದೆ. ಮೇಘಗಳು ಕರಗುತ್ತವೆ, ತಿಳಿಗೊಳ್ಳುತ್ತವೆ. ಆಗ ಸೂರ್ಯ ಕಿರಣಗಳು ನಯನ ಮನೋಹರವಾಗಿ; ಆಹ್ಲಾದಕರವಾಗಿ ಕಾಣಲಾರಂಭಿಸುವವು. ಆದರೂ ತುಂತುರು ತುಂತುರುಗಳ ಪೈಕಿ ಯಾವುದೋ ಒಂದು ಬಿಂದುವನ್ನು ಕಿರಣ ಪ್ರವೇಶಿಸಿ ವಕ್ರವಾಗಿ ಬಾಗಿ ವರ್ಣ ವಿಭಜನೆ ಗೊಳ್ಳುವುದು… ಬಿಂದುವೇ ಸೂರ್ಯನ ಕಿರಣವನ್ನು ವಿಶ್ಲೇಷಿಸಿ ಇಂದ್ರ ಧನಸ್ಸೊಂದನ್ನು ನಿರ್ಮಿಸಿ ದಿಗಂತದಲ್ಲಿ ಪ್ರತಿಷ್ಟಾಪಿಸುವುದು. ಹಾಗೆ ನಿರ್ಮಿತಗೊಂಡ ಇಂದ್ರ ಧನಸ್ಸಿಗೆ ಉಪಾಧಿಯೇಯೇ ವರ್ಷ ಬಿಂದುವು. ಆದರೆ ಅದು ಅಲ್ಲಿರುವುದಿಲ್ಲ. ಇಂದ್ರಧನಸ್ಸನ್ನು ನಿರ್ಮಿಸಿದ ಸೂರ್ಯನಿಗಾಗಲೀ, ಸೂರ್ಯಕಾಂತಿಯ ಕಿರಣಕ್ಕಾಗಲೀ; ಅದನ್ನು ಗ್ರಹಿಸಿ ಸಪ್ತ ವರ್ಣಗಳಾಗಿ ವಿಶ್ಲೇಷಣೆಗೊಂಡು ಆಕೃತಿ ತಳೆದಂಥ ಇಂದ್ರಧನಸ್ಸುಗಾಗಲೀ ನಡುವೆ ಯಾವುದೇ ಹೋಲಿಕೆಗಳಿರುವುದಿಲ್ಲ. ಆದರೆ ಜಲಬಿಂದುವನ್ನು ಪ್ರವೇಶಿಸಿದ ಕಿರಣವೇ ಇಂದ್ರಧನಸ್ಸಾಗಿ ಪರಿವರ್ತನೆಗೊಳ್ಳುವುದು. ಆದರೆ ಇಂದ್ರ ಧನಸ್ಸಿಗೂ ಸೂರ್ಯನಿಗೂ ನಡುವೆ ವ್ಯತ್ಯಾಸ ಅಪಾರ. ಆದರೆ ಸೂರ್ಯನಿಲ್ಲದೆ ಇಂದ್ರಧನಸ್ಸಿಗೆ ಅಸ್ತಿತ್ವವೇ ಇಲ್ಲ. ಇಂದ್ರ ಧನಸ್ಸಿನ ರಚನೆಗೆ ಮೂಲಕಾರಕವೂ, ಪ್ರೇರಕವೂ ಆದ ಉಪಾಧಿ ಸ್ಥಿತಿಯಲ್ಲಿದ್ದ ಜಲಬಿಂದುವೂ ಇಲ್ಲ… ಇಂಥದೇ ಆದ ನಿರುಪಾಧಿಕ ಪ್ರತಿಬಿಂಬವನ್ನೇ ಆಕೆ ಅಂತರಂಗದಿಂದ ಹೊರಗಡೆ ತೆಗೆದಿಟ್ಟುಕೊಂಡು ಸಂಭಾಷಿಸುವ ಪ್ರಯತ್ನಕ್ಕೆ ತೊಡಗಿದ್ದಳು. ಸತ್ಯ, ಜ್ಞಾನ, ಅನಂತ, ಆನಂದಗಲೆಂಬೀ ಕಲ್ಯಾಣ ಗುಣಗಳ ಪೈಕಿ ಒಂದಾದರೂ ಬುಧವಾರ ಪೇಟೆಯ ತಮ್ಮ ಮನೆಯಂಗಳದಲ್ಲಿ ತಿರುಗಾಡುತಿಲ್ಲವಲ್ಲ ಎಂದು ಆಕೆ ಬೇಸರಗೊಂಡಿದ್ದಳು. +ಇನ್ನೇನು ಆಕೆ ನಿರಾಸೆಗೊಳ್ಳಲಿರುವಳು ಎನ್ನುವಷ್ಟರಲ್ಲಿ ಶಾಂತಿ ಬಂದು ಅಂಗಳದಲ್ಲಿದ್ದ ಐವತ್ತಾರು ಚುಕ್ಕಿಗಳಷ್ಟು ಉದ್ದದ ಮುವತ್ತಾರು ಚುಕ್ಕಿಗಳಷ್ಟು ಅಗಲದ, ಪ್ರತಿ ಆರು ಚುಕ್ಕಿಗಳ ಸಹಾಯದಿಂದ ಏಳುದಳಗಳುಳ್ಳ, ಪುಷ್ಪಗಳಳುಳ್ಳ ರಂಗವಲ್ಲಿ ಕಂಡು ಎಕ್ಸಲೆಂಟ್ ಎಂದು ಉದ್ಗರಿಸಿದಳು. ತಾನು ಶಾಮಾಶಾಸ್ತ್ರಿಯ ಧರ್ಮ ಪತ್ನಿಯನ್ನು ನೋಡುತ್ತಿರುವುದು ಇದೇ ಪ್ರಥಮ ಸಲ. ಇನ್ನೇನು ತಾನು ಕೂಗಿದೊಡನೆ ಹೊರಬಂದು ಕಾಣಿಸಿಕೊಳ್ಳಲಿರುವ ಆಕೆ ಅವರಂತಿರಬಹುದೇ? ಇವರಂತಿರಂತಿರಬಹುದೇ ಎಂದು ಕಲ್ಪಿಸಿಕೊಳ್ಳತೊಡಗಿದಳು. ಅವರಂತಿದ್ದರೆ ಹೇಗೆ ಸಂಭೋದಿಸಲಿ? ಇವರಂತಿರಂತಿದ್ದರೆ ಹೇಗೆ ಸಂಭೋದಿಸಲಿ? ಎಂದೊಂದು ಕ್ಷಣ ಭಾಷಾ ಲೆಕ್ಕಾಚಾರಕ್ಕೆ ತೊಡಗಿದಳು. ಮಡಿಯುಡಿ ಆಚಾರ ವಿಚಾರದಲ್ಲಿ ಶಾಸ್ತ್ರಿಪತ್ನಿ ತುಂಬ ಕಟ್ಟುನಿಟ್ತೆಂದೂ; ಮನುಮನ್ವಂತರದ ತಾನೂ ಒಂದು ಸ್ಮೃತಿ ಬರೆದು ಹೊಸದೊಂದು ಮನ್ವಂತರ ಅವತರಿಸುವಂತೆ ಮಾಡಲು ತುಂಬ ಸನ್ನದ್ಧಳಾಗಿರುವಳೆಂದೂ; ಯಾರನ್ನೇ ಪ್ರಪಥಮ ಬೆಟ್ಟಿಯಾದರೂ ಅವರನ್ನು ನೋಟದಿಂದ ಅಟಕಾಯಿಸಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತದ ಸಿದ್ಧಾಂತಗಳ ಮೂಲಕ ವಿಶ್ಲೇಷಿಸಿ ಬಿಡಬಲ್ಲ ಸಮರ್ಥಲೇಂದೂ ಅವರಿವರಿಂದ ಕೇಳಿ ತಿಳಿದುಕೊಂಡಿದ್ದ ಶಾಂತಿ “ಯಾರಿದ್ದೀರಿ” ಒಳಗಡೆ? ಎಂದು ಕೂಗಲೆಂದು ಬಾಯಿ ತೆರೆದಳಾದರೂ ಅದು ಸಾಧ್ಯವಾಗಲಿಲ್ಲ. ಅಕ್ಕದ ಮನೆಯ ರುಕ್ಮಿಣಿ; ಪಕ್ಕದ ಮನೆಯ ದಾರಾಸಿಂಗ್; ಎದುರುಮನೆಯ ವೆಂಕಮ್ಮರೇ ಮೊದಲಾದ ಅಷ್ಟದಿಕ್ಪಾಲಕರು ಬಂದು ಬಂದು ಇಣುಕಿ ನೋಡಿ ಹೋದರು. ಕುಂಟೋ ಬಿಲ್ಲೆ ಆಟದಲ್ಲಿ ಇಡಿ ಬುಧುವಾರಪೇಟೆಗೇ ಛಾಂಪಿಯನ್ನಲೇಂದು ಹೆಸರಾಗಿದ್ದ ಹೇಮಮಾಲಿನಿ ಎಂಬ ಬಾಲೆಯೋರ್ವಳು ಒಳ್ಳೆಬ್ಯಾಲೆಪಟುವಿನಂತೆ ಕುಂಟುತ್ತ ಬಂದು “ಆಂಟೀ… ಆಂಟೀ… ಬಂದಿದ್ದಾರ್‍ನೋಡ್ರೀ ವರಲಕ್ಷ್ಮಾಂಟೀ” ಎಂದು ಕೂಗಿ ಹಾಗೆಯೇ ಕುಂಟುತ್ತಾ ಹೋದಳು. +ಒಂದು ಕೈಯಲ್ಲಿ ಯಾವುದೋ ಪೂಜಾ ಸಾಮಗ್ರಿ ಹಿಡಿದುಕೊಂಡು ಇನ್ನೊಂದು ಕೈಯನ್ನು ನಾರುಮಡಿಯುಡಿಗೆ ಒರೆಸಿಕೊಳ್ಳುತ್ತಾ ಹೊರಬಂದ ವರಲಕ್ಷ್ಮಿಯು ಆಗಂತುಕೆಯನ್ನು ಲೇಡಿಹೆಲ್ತ್‌ವರ್ಕರಳೆಂದು ಅಪಾರ್ಥ ಮಾಡಿಕೊಂಡು “ಬಂದೆ ಏನಮ್ಮಾ ಬಂದೆಯಾ?… ಎಲ್ರೂ ಆರೋಗ್ಯದಿಂದೇವಮ್ಮಾ ನನಗಿನ್ನೂಮುಟ್ಟು ನಿಂತಿಲ್ಲಮ್ಮಾ… ಮುಟ್ಟು ನಿಂತಾಗ ನಾನೇ ಹೇಳಿ ಕಳಸ್ತೀನಿ ಬರುವಿಯಂತಮ್ಮಾ” ಎಂದು ದಡ ದಡ ನುಡಿದಳು. +ಅದನ್ನು ಕೇಳಿ ಶಾಂತಿಗೆ ಆಶ್ಚರ್ಯವಾಯಿತು. ತಾನು ಬಿಳಿ ಸೀರೆ ಬಿಳಿ ರವಿಕೆ ತೊಟ್ಟು ಸಿಂಪಲ್ಲಾಗಿ ಬಂದಿರುವುದನ್ನು ಕಂಡು ತಪ್ಪು ತಿಳಿದಿದ್ದಾಳೀ ಅಪೂರ್ವ ಸತಿಯು ಎಂದು ಊಹಿಸಿ – +“ಅದಲ್ರೀ ನಾನೂ…” ಎಂದು ಸರಿಪಡಿಸಲೆತ್ನಿಸುತ್ತಿರುವಷ್ಟರಲ್ಲಿ, +“ಓಹೋ… ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದವಳೋ… ನಿನ್ಗೆ ಎಷ್ಟು ಸಾರಿ ಹೇಳಬೇಕಮ್ಮಾ… ಹೀಗೆವಾರಕ್ಕೊಂದೆರಡು ಸಾರಿ ಬಂದು ಪೀಡಿಸಬೇಡಾಂತ… ನಮ್ಮನೇಲೇ ಸಾವ್ರಾರಮಂದಿಗೆ ಹಂಚೋವಷ್ಟು ಆಧ್ಯಾತ್ಮ ತುಂಬಿಕೊಂಡಿದೆ. ನಮ್ಮೆಜಮಾನ್ರು ಯಾರಂತ ತಿಳಿಕೊಂಡೀಯೇ ತಾಯಿ, ಪರಮ ಪಂಡಿತರಾದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಳೂ… ವೇದೋಪನಿಷತ್ತುಗಳನ್ನೆಲ್ಲ ಅವರ ಪತ್ನಿಯಾದ ನಾನೂ ತಿಳ್ಕೊಂಡಿದ್ದೀನಮ್ಮಾ… ತಿಳಿತಾ… ಹೋಗಿ ಬಾ… ಇವತ್ತು ಮಧ್ವ ನವಮಿ… ದಯವಿಟ್ಟು ತೊಂದರೆ ಕೊಡಬೇಡ…” ಎಂದು ವರಲಕ್ಷ್ಮಿಯು ಮತ್ತೆ ಅನ್ಯಥಾ ಭಾವಿಸಿ ನುಡಿದಿದ್ದನ್ನು ಕೇಳಿ ಜಿ.ಎಂ.ಶಾಂತಿಗೆ ಅಪಾರ ನಗು ಬಂತು. +“ನಾನು ಕಣ್ರೀ… ನಿಮ್ಮೆಜಮಾನ್ರ ಕೊಲಿಗ್ಗೂ…” ಒಳಗೆ ಕರೆಯದಿದ್ದುದನ್ನು ನೋಡಿ ’ಸ್ವಲ್ಪ ಕೆಲಸ ಇದೆ ಒಳಗೆ ಬರ್‍ಲೇ” ಎಂದು ಕೇಳಿದಳು. +ಒಳಗೆ ಚಾಪೆ ಹಾಕಿ ಕೂಡ್ರಿಸಿದಳು ವರಲಕ್ಷ್ಮಿ. ಯಾವ ಜಾತಿ? ಏನು ಕೆಲಸ? ಹೇಗಂತ ಕೇಳುವುದು… ಶಾಂತಿ ತಾನು ಹೀಗೆ ಅಂತ ಹೇಳಿಕೊಂಡಳು. ಜಿ.ಎಂ. ಅಂತ ಇನ್ಷಿಯಲ್ಲಿರೋದರಿಂದ ಜಂಗಮರಿರಬಹುದೆಂದು ಊಹಿಸಿದಳು. ವಿವಾಹಿತಳೋ ಅವಿವಾಹಿತಳೋ ಎಂಉ ಕೊರಳ ಕಡೆ ನೋಡಿದಳು. ಯಾವುದೋ ಕಪ್ಪು ಮಣಿದಾರ ನೋಡಿ ವಿವಾಹಿತೆ ಎಂದೂಹಿಸಿದಳು. ತಾಯ್ತನದ ರೇಖೆಗಳು ನೋಡಬೇಕೆಂದರೆ ಸೀರೆಯನ್ನು ಹೊಕ್ಕಳು ಕಾಣಿಸದಂತೆ ಉಟ್ಟಿರುವಳು… ಸೊಂಟದ ಸ್ನಾಯುಗಳು ಉಬ್ಬಿರಿವುದು ನೋಡಿದರೆ ಆಗಲೆ ಎರಡಾದರೂ ಹೆರಿಗೆಯಾಗಿರಬಹುದು! +“ಮಕ್ಳೆಷ್ಟು?” ಎಂದು ಕೇಳಿಯೇ ಬಿಟ್ಟಳು ಪರಮ ಮುಗ್ಢೆ. +“ಇನ್ನೂ ಎಲ್ರೀ!” ಅಡಗೋಡೆ ಮೇಲೆ ದೀಪ ಇಟ್ಟಂತೆ , +“ಅಯ್ಯೋ ಪಾಪ ಭಗವಂತ ಕೊಟ್ಟಿಲ್ವೆ!” +“ಮದುವೆ ಆಗಿದ್ರೆ ತಾನೆ ಮಕ್ಳಾಗೋದು!” +“ಇನ್ನೂ ಮದುವೆ ಆಗಿಲ್ವೆ… ಪಾಪ” +“ಲಗ್ನ ಪತ್ರಿಕೆ ಕೊಡ್ಲಿಕ್ಕೆ ಕಣ್ರೀ ನಾನು ಬಂದಿರೋದು?” ಎಂದು ಶಾಂತಿ ಹೇಳುತ್ತಲೆ ವರಲಕ್ಷ್ಮಿ ಈಗಾಗಲೇ ಎಷ್ಟು ಉರಿದಿರಬಹುದೆಂದು ಯೋಚಿಸಿದಳು. ತನ್ನ ಗಂಡ ಎಳೆ ತೋರಿಸಿದರೆ ಹಚ್ಚಡ ನುಂಗುವ ಸ್ವಭಾವದವನಲ್ಲ… ಆದರೂ ಅವರಿಗೆ ಒಳಗಡೆ ಬುದ್ಧಿ – +ಲಗ್ನಪತ್ರಿಕೆ ಕೊಟ್ಟದ್ದೂ ಇಸಿಕೊಂಡದ್ದೂ ಎಲ್ಲಾ ಆಯಿತು. ಚಹಾ, ಕಾಫಿ, ಪಾನಕ ಇದೆಲ್ಲ ಮಾಡುಕೊಡುವ ಜಾಯಮಾನದವಳಲ್ಲ ನನ್ನ ಹೆಂಡತಿ. ಶಾಂತಿ ಒಂದು ಕಪ್ಪು ನೀರು ಇಸಿದುಕೊಂಡು ಕುಡಿದು ಆಕೆಯ ನಿರ್ದೇಶನದಂತೆ ಅಲ್ಲೆ ಒಂದುಕಡೆ ಬೋರಲಿಟ್ಟಳು. “ನಿಮ್ಮ ಗಂಡ ತುಂಬ ಓಳ್ಳೆಯವರು, ಯಾರೊಂದಿಗೂ ಹೆಚ್ಚು ಮಾತಾಡುವವರಲ್ಲ… ಕೆಲಸದಲ್ಲೂ ಅಷ್ಟೆ, ವೆರಿ ಸಿನ್ಸಿಯರ್ರು… ನೀವು ಕೂಡಾ ಅಷ್ಟೆ… ತುಂಬಿದ ಕೊಡ ಇದ್ದಂತಿರುವಿರಿ… ಅವರಿಗೆ ನಿಮ್ಮನ್ನು; ನಿಮಗೆ ಅವರನ್ನು ಜೊತೆ ಮಾಡಿದ ಆ ದೇವರನ್ನು ಅಭಿನಂದಿಸಲೇ ಬೇಕು. ನಿಮ್ಮಂಥ ಆದಿ ದಂಪತಿಗಳು ವಾಸಿಸುತ್ತಿರುವುದರಿಂದ ಈ ಬುಧವಾರ ಪೇಟೆಗೆ ಖಂಡಿತ ಒಳ್ಳೆಯದಾಗುತ್ತದೆ. ಋಷಿಗಳು ತಪಸ್ಸು ಮಾಡುತ್ತಿದ್ದ ಕಾಡು ಅರಣ್ಯಗಳಿಗಿಂತ ಈ ಬುಧವಾರ ಪೇಟೆಯನ್ನು ನೀವು ತಿದ್ದಬೇಕು. ಹಾಗೆ ಹೀಗೆ ಅಂತ ಶಾಂತಿ ನನ್ನ ಬಗ್ಗೆ ಪ್ರಮಾಣಪತ್ರ ಮುಂಜೂರು ಮಾಡಿದಳು. +ಆಕೆಯ ಮಾತುಗಳಿಂದ ವರಲಕ್ಷ್ಮಿ ಉಬ್ಬಿಹೋದಳು. ನಿಂಬೆಹಣ್ಣು ಇದ್ದಿದ್ದರೆ, ಪಾನಕ ಮಾಡಿಕೊಡದೆ ಇರುತ್ತಿರಲಿಲ್ಲ ಆಕೆ. ತನ್ನ ಗಂಡ ಈಗ ಎಲ್ಲಿರಬಹುದು? ಏನು ಮಾಡುತ್ತಿರಬಹುದು ಎಂದು ಆಕೆ ಊಹಿಸುತ್ತಿರುವಾಗಲೇ ನಾನು ಬಂದದ್ದು. ಎರಡು ನಮೂನೆಯ ಕ್ಲಿಷ್ಟ ಗ್ರಂಥಗಳು ಒಂದಾಗಿರುವವೆಂದುಕೊಂಡ, ಕೊಲಿಗ್ಗೇನೋ ಆತ್ಮೀಯತೆಯಿಂದಲೇ ಮಾತಾಡಿಸಿದಳು… ನಾನು ಆಕೆಗೆ ಏನು ಕೇಳುವುದು ಏನು ಬಿಡುವುದು! ಯಾವ ಕೋನದಲ್ಲಿ ಹೇಗೆ ಕುಳಿತುಕೊಳ್ಳುವುದು! ಎಂಬ ಗೊಂದಲಕ್ಕೀಡಾದೆ. ಪರಸ್ತ್ರೀ ಎದುರಿಗೆ ನನ್ನ ವರ್ತನೆ ಹೀಗೇ ಇರಬೇಕೆಂದು ನಿರ್ಧರಿಸುವಾಕಿ ನನ್ನ ಹೆಂಡತಿ, ಸಾಂಪ್ರತು ನಾನೂ ಮಾತಾಡದೆ ಇರಲಿಲ್ಲ. “ಮದುವೆಗೆ ತಪ್ಪಿಸಬಾರ್ದೂರೀ… ನಿಮ್ಮ ಮಿಸೆಸ್ಸನ್ನು ಕರ್‍ಕೊಂಡು ಬನ್ನಿ” ಎಂದು ಹೇಳಿ ಅಲ್ಲಿಂದ ಹೋದಳು! +ಶಾಂತಿಯಂಥ ಸಹೋದ್ಯೋಗಿ ಜೊತೆ ನಾನು ಕೆಲಸ ಮಾಡ್ತಿದೀನಂತ ನಾನು ಹಿಂದೆ ಹೇಳಿರಲಿಲ್ಲ. ಯಾಕೆ ಹೇಳೋದಂತ ಸುಮ್ಮನಿದ್ದೆ. ಆ ಕಾರಣದಿಂದ ವರಲಕ್ಷ್ಮಿ ಚಾವತ್ತು ದಿಮ್ಮಗೆ ಇದ್ದಳು. ಆದರೆ ನನಗೆ ಮಾತ್ರ ದಿಮ್ಮಗೆ ಇರುವ ಸ್ವಾತಂತ್ರ್ಯವೂ ಇರಲಿಲ್ಲ.. ನಾನು ಎದುರಿಗಿದ್ದರೆ ಅಂತರಂಗವನ್ನು ಹೊಕ್ಕು ಮನದ ಕೋಣೆ ಕೋಣೆಗಳನ್ನು ಜಾಲಾಡುತ್ತಿದ್ದಳು. ದೂರವಿದ್ದರೆ ತನ್ನ ಮನಸ್ಸನ್ನು ಕಾವಲು ನಾಯಿಯೊಗಿ ನನ್ನೊಂದಿಗೆ ಕಳಿಸುತ್ತಿದ್ದಳು… ಆ ನಾಯಿ ನಾನು ಎಲ್ಲಿ ಹೋದರೆ ಅಲ್ಲಿ ಬಿಜಯಂಗೈಯುತ್ತಿತ್ತು. ಮೌನವಾಗಿ ಬೊಗುಳಿ ಎಚ್ಚರಿಸುತ್ತಿತ್ತು. ನಡುವಳಿಕೆಯನ್ನು ನಿಯಂತ್ರಿಸುತ್ತಿತ್ತು. ಆ ನಾಯಿಯೊಂದು ನಮೂನಿಯ ಸದ್ಭಾವನಾ ಯಾತ್ರೆ ಎಂದರೂ ಸರಿಯೆ?… +ಮೊದಲೇ ನನ್ನನ್ನು ನಿರ್ಬಂಧಿತ ವ್ಯಕ್ತಿತ್ವ, ಮಂಗಳಾರತಿ ಕೊಟ್ಟರೆ ಉಷ್ಣ ತೀರ್ಥ ಕೊಟ್ಟರೆ ಶೀತ ಎಂಬ ಜಯಮಾನದ್ದು. ತನ್ನ ಪಾತಿವ್ರತ್ಯ ಪ್ರಭಾವದಿಂದ ಗಂಡನ ಆಯುರಾರೋಗ್ಯ ವೃದ್ಧಿಸುವಂತೆ ಮಾಡಬೇಕೆಂದೂ; ಅವನು ಅರಿಷಡ್ವರ್ಗಗಳಿಂದ ಬಹುದೂರ ಬಹುದುರ ಉಳಿದು ಸಂತತ್ವದಿಂದ ಪ್ರಜ್ವಲಿಸಬೇಕೆಂದೂ ಅಕೆ ದಿನ ದಿನಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೋಳ್ಳುತ್ತಿದ್ದಳು. ಇದನ್ನು ವಿರೋಧಿಸುವ ಶಕ್ತಿ ನನ್ನಲ್ಲಿಲ್ಲದಿರಲಿಲ್ಲ… ಆದರೆ ಅದನ್ನು ಪ್ರಕಟಿಸುವ ಧೈರ್ಯ, ವ್ಯವಧಾನ ಇರಲಿಲ್ಲವೆಂದು ಹೇಳಬಹುದು. +ಆಕೆ ಬೆಚ್ಚಿ ಬೀಳುವಂತೆ ಗದರಿಸಬೇಕೆಂದು ನಾನು ಅನೇಕ ಸಾರಿ ನಿರ್ಧರಿಸಿದ್ದುಂಟು. ಆದರೆ ಅದು ಕೇವಲ ನಿರ್ಧಾರವಾಗಿ ಮಾತ್ರ ಉಳಿಯಿತು. ನನಗರಿವಿಲ್ಲದಂತೆ ಅದು ನಿಧಾನವಾಗಿ ಬೆಳೆಯತೊದಗಿತ್ತು. ಅದು ನನ್ನ ಗಮನಕ್ಕೆ ಬರಲಿಲ್ಲ. ಸನಿಹದಲ್ಲೆ ದೊಡ್ಡದೊಂದು‌ಉಕ್ಕಿನ ಕಾರ್ಖಾನೆ ಉದ್ಭವಿಸಲಿರುವುದರಿಂದ; ಸಾವಿರಾರು ಕಾರ್ಮಿಕರು ಕೆಲಸ ಮಾಡಲಿರುವುದರಿಂದ; ಸಾವಿರಾರು ಹೊಸ ಸಂಸಾರಗಾಲು ನೆಲೆಯೂರಲಿರುವುದರಿಂದ; ಒಂದೊಂದನ್ನು ಒಂದೊಂದು ನುಂಗುವ ಹೊಂಚುವ ಕೆಲಸ ಮಾಡುವ ಶಕ್ತಿಗಳು ವಿಜೃಂಭಿಸಲಿರುವುದರಿಂದ, ಅದಕ್ಕೆ ಸಮಷ್ಟಿಯಾಗಿ ವ್ಯಭಿಚಾರ, ಜೂಜು, ಬ್ರಷ್ಟಾಚಾರ ದಬ್ಬಾಳಿಕೆ; ಶೋಶಣೆ ಇತ್ಯಾದಿ ಅವಾಂತರಗಳು ಹುಟ್ಟಿಕೊಳ್ಳಲಿರುವುದರಿಂದ… ಇದೆಲ್ಲ… ಅಂದರೆ ಹತ್ತದಿನೈದು ವರ್ಷಗಳ ನಂತರ… ಆದರೆ ಸಂಘಟಕನಾದವನು ಈ ಕ್ಷಣದಿಂದಲೇ ಎಚ್ಚೆತ್ತುಕೊಳ್ಳಬೇಕು. ಉಸಿರಾಡೋಕೆ ಆಮ್ಲಜನಕ ಸಿಗೋದೋರನ್ನೆಲ್ಲ ಒಂದೇ ಕಟ್ಟಿಗೆ ತರಬೇಕು. ವ್ಯವಸ್ಥೆ ನಿಯಂತ್ರಕರಿಗೆ ತಲೆ ನೋವಾಗಬೇಕು. ಅದ್ಕೆ ಏನು ಮಾಡಬೇಕು ಗೊತ್ತಾ? ಒಂದು ಭೂಗತ ಪತ್ರಿಕೆ ಪತ್ರಿಕೆ ಮತ್ತು ಚಟುವಟಿಕೆ ಆರಂಭಿಸಬೇಕು. ಅದರಲ್ಲಿ ಅಂಥದ್ದೇನೂನೂ ಇರೊದಿಲ್ಲ ಕಣಪ್ಪಾ… ಹೆಸರಿಗೆ ಭೂಗತ ಅಷ್ಟೆ… ಈ ಪ್ರಕಾರವಾಗಿ ಮಧ್ಯ ಪ್ರವೇಶಿಸಿದ ಪಶುಪತಿ ಗದರಿಸಬೇಕೆಂಬ ನಿರ್ಧಾರವನ್ನು ಕೆಡದಂತೆ ಮೀಥೆಲ್ ಎಂಬ ದ್ರವದೊಳಗಿರಿಸಿದ. ತನ್ನ ಸೈಕ್ಲೋಸ್ಟೈಲ್ ಪತ್ರಿಕೆಗೆ ಕ್ರಾಂತಿಕಾರಿ ಪ್ರೇಮ ಕವಿತೆಗಳನ್ನು ಬರೆಯಬೇಕೆಂದೂ; ಅವಕ್ಕೆಲ್ಲ ‘ಮಾಲೆ’ ಎಂಬ ಗುಪ್ತ ನಾಮ ಇಟ್ತುಕೋ ಎಂದು ಸೂಚಿಸಿದ. (ಮಾ…ಎಂದರೆ ಮಾವೋ; ಲೆ ಅಂದರೆ ಲೆನಿನ್)… ನಾನು ಭಲಾ ಎಂದೆ. ವಂತಿಗೆ ಕೇಳಿದ… ಜೇಬಿನಲ್ಲಿದ್ದ ಐವತ್ತು ರೂಪಾಯಿ ಕೊಟ್ಟೆ. +ಗುಮುಸಿ ಗೌಡ ಯಾವ ಗಳಿಗೆಯಲ್ಲಿ ಪರಿಚಿಯಿಸಿದನೋ ಪಶುಪತಿ ಏಕವಚನ ಸಂಭೋದನೆಯಿಂದ ಬಲವಾಗಿ ತಗುಲಿಕೊಂಡ… ಯಾಕೋ ಆತ್ಮೀಯ ಎನ್ನಿಸಿದ. ಆ ಕೆಂಪಂಗಿ ತೊಟ್ಟುಕೊಂಡೋರು ಸದಾ ಹುಳಿ ಹುಳಿ ನೋಡುತ್ತಿರುತ್ತಾರೆ ಕಣ್ರೀ… ಅವರಿಂದ ದೂರ ಇರ್ರೀ… ಅವನ ಪರಿಚಯಯಾದಂದಿನಿಂದ ನಿಮ್ಮ ತುಟಿ ಕಪ್ಪಾಗ್ತಿವೆ. ಕೈಬೆರಳಿಂದ ಎಂಥದೋ ವಾಸನೆ ಎಂದು ಹೆಂಡತಿ ಕೇಳತೊಡಗಿದ ಕ್ಷಣ ಗದರಲಿಕ್ಕೆ ಯೋಗ್ಯವಾದುದು ಎಂದುಕೊಂಡೆ. ಆತ ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲಿ ಮಾರ್ಕ್ಸಿಜಂ ಗಾಳಿ ಬೀಸಿದುದರ ಬಗ್ಗೆ ಹೇಳುತ್ತ ಸಿಗರೇಟು ಚುಟ್ಟ ಸೇದುವ ಅಭ್ಯಾಸ ಮಾಡಿಸಿದ. ಒಂದು ಗ್ಲಾಸ್ ಬಿಯರ್ ಕುದಿಯೋದ್ರಿಂದ ಮನುಷ್ಯನ ಅಂತರಂಗದ ಮತ್ತು ಬಹಿರಂಗ ಕೆಂಪು ವರ್ಣಕ್ಕೆ ತಿರುಗುವುದೆಂದು ಹೇಳಿದ್ದ… ನನ್ನ ಅಂತರಂಗದ ಯಾವುದೋ ಅನಾಥ ಕೂಗಿಗೆ ಗುಮುಸಿ ಗೌಡ ಮತ್ತು ಪಶುಪತಿ ಸ್ಪಂದಿಸುತ್ತಿರುವರೆಂದುಕೊಂಡೆ. ಅವರೂ; ಅವಾಲೋಚನೆಗಳೂ; ಭಾವನೆಗಳೂ, ಚಟಗಳೂ ಪವಿತ್ರ… ಆಧುನಿಕ ಮನುಷ್ಯ ಕೂಪಸ್ಥ ಮಂಡೂಕವಾಗಿರಬೇಕೆ? +“ರ್ರೀ ಸಿಗರೇಟು ಸೇದೋದ್ನ ಕಲ್ತಿದೀರಿ… ಹೌದು ತಾನೆ?” ಎಂದೊಂದು ದಿನ ಜಗ್ಗಿ ಕೇಳಿಯೇ ಬಿಟ್ಟಳು. ಸಂರಕ್ಷಕ ದ್ರವದಿಂದ ನಿರ್ಧಾರದ ಪುಟ್ಟ ಕಳೇಬರ ಹೊರಗೆ ಬಂದು ಜೀವ ಪಡೆಯಿತು. +“ಹೌದೇ ನಿಂದೆನು ಭಯಾನಾ? ನಾನು ಗಂಡ್ಸು… ಬೇಕಾದ್ದು ಮಾಡ್ತೀನಿ… ಇವತ್ತು ಸೇದ್ತೀನಿ… ನಾಳೆ ಕುಡಿಯೋದನ್ನ ಕಲೀತೀನಿ… ನಾಡಿದ್ದು ತಿನ್ನೋದನ್ನ ಕಲೀತೀನಿ… ಅದ್ನ್ಯಾರೆ ನೀನು ಕೇಳೋಕೆ… ತಾತನ ಬದ್ಲೀಗೆ ನೀನು ಹುಟ್ಕೊಂಡಿದ್ದೀಯಾ ಅಷ್ಟೆ;” ಎಂದು ಕಣ್ಣು ಉರಿ ಮಾಡಿ ಇಡೀ ಕೇರಿಗೇ ಕೇಳಿಸುವಂತೆ ಗದರಿಸಿಯೇ ಬಿಟ್ಟೆ. ಪ್ರತಿಘಟಿಸಿದ್ದಲ್ಲಿ ಛಳೀರನೆ ಏಟುಕೊ‌ಅಬೇಕೆಂದುಕೊಂದಿದ್ದೆನಾದರೂ ಅದಕ್ಕೆ ಆಸ್ಪದ ಕೊಡಲಿಲ್ಲ. +ನಾನು ಗದರಿಸಿದ್ದು ಕೇರಿಯಲ್ಲಿ ಮತ್ತು ಬ್ಯಾಂಕಿನಲ್ಲಿ ದೊಡ್ಡ ಸುದ್ದಿಯಾಯಿತು. ಅವರೆಲ್ಲ ಕೊಲೆಗಾರನ ಕಡೆ ನೋಡುವಂತೆ ಭಯಾಶ್ಚರ್ಯ ಗಳಿಂದ ನೋಡತೊಡಗಿದರು. “ಅಂತೂ ಶಾಸ್ತ್ರಿಗಳು ತಮ್ಮ ಹೆಂಡರನ್ನು ಗದರಿಸಿದಳು. ದೇವರು ದೊಡ್ಡವನು” – ಕೇರಿಯ ಮಂದಿ ಮಂಗಳಾರತಿ ಮಾಡಿ ಅಭಿನಂದಿಸುವುದೊಂದೇ ಬಾಕಿ! +ನಾನು ನನಗೇ ಕಗ್ಗಂಟಾಗಿದ್ದೆನೆಂಬುದಕ್ಕೆ ಸಾಕ್ಷಿಯಾಗಿ ನಾನು ಅಂದಿನಿಂದ ಸಿಗರೇಟನ್ನು ಸಾರ್ವಜನಿಕವಾಗಿ ಸೇದತೊಡಗಿದೆ. “ಅಲ್ಲಾಹು… ನೀನು ದೊಡ್ಡೋನು.” ಎಂದು ಇಸ್ಮಾಯಿಲು ನನ್ನಿಂದ ಸಿಗರೇಟು ವಿನಿಮಯ ಮಾಡಿಕೊಳ್ಳತೊಡಗಿದ. ಹೊಟ್ಟೆ ಹುಣ್ಣು ಎಂಬ ಕಾರಣದಿಂದ ಚಂಬಸ್ಯಯ್ಯ ಧೂಮ್ರಪಾನದಿಂದ ದೂರ ಇದ್ದನಾದರೂ ಮತ್ತೆ ಸೇದ ತೊಡಗಿದ. ನಾವು ಮುವ್ವರು ಸಿಗರೇಟು ಸೇದುತ್ತಿದ್ದರೆ ಹೆಬ್ರಿಯ ಕಣ್ಣುಗಳು ಕೆಂಪಾಗತೊಡಗಿದವು. ನಮ್ಮ ಗಂಟಲುಗಳಿಗೆ ಹೊಗೆ ಅಡರಿದರೆ ಆತ ಕೆಮ್ಮ ತೊಡಗಿದ… +ಆಗಲೆ ಹಿಂದೊಮ್ಮೆ ಹೋಗಿ ಪರಿಚಯ ಮಾಡಿಕೊಂದಿದ್ದ ಹೆಬ್ರಿ ನನ್ನ ಗೈರು ಹಾಜರಿಯಲ್ಲಿ ಒಂದೆರಡು ಬಾರಿ ಮನೆಗೆ ಹೋಗಿ ನನ್ನ ಹೆಂಡತಿಯ ಕಿವಿ ಚುಚ್ಚಿದ – ಪತಿಯನ್ನು ಸನ್ಮಾರ್ಗದಲ್ಲಿ ನಡೆಸೂ ಅಂತ. ಅಲ್ಲಾಡಿ ಹೋಗಿದ್ದ ಆಕೆ ಕೆಲ ದಿನ ಹೇಳಿರಲಿಲ್ಲ. +ಅಲ್ಲದೆ ನಾನು ಆಕೆಯನ್ನು ಗದರಿಸದೇ ಮಾತಾಡುತ್ತಿರಲಿಲ್ಲ. ಅಂಗಳದಲ್ಲಿ, ಹಿತ್ತಿಲಲ್ಲಿ ಕೂತು ರಾಜಾರೋಷವಾಗಿ ಸಿಗರೇಟು ಸೇದುತ್ತಿದ್ದಿದನ್ನು ನೋಡಿ ಪರವಾ ಇಲ್ಲ ಎಂದು ಕೊಂಡರು. ಕೇರಿ ಜನ. ನಡೆದ ಝಟಾಪಟಿ ನಾನು ವರಲಕ್ಷ್ಮಿಯ ಜಡೆ ಹಿಡಿದು ಎಳೆದಾಡಿದ್ದುಂಟು. ಅತ್ತೆಯವರ ಪಾದ ಸೇವೆಯೇ ಮೇಲು ಎಂದು ನಿರ್ಧರಿಸಿದಳಾದರೂ ತನ್ನ ಗಂಡ ಮತ್ತಷ್ಟು ಕೆಟ್ಟರೆ ಎಂದು ಅನುಮಾನ ಬಂದು ನಿಂತುಕೊಂಡಳು. +ಆಕೆಯ ಸಮಕ್ಷಮದಲ್ಲಿ ಪ್ರಕಟಗೊಳ್ಳುತ್ತಿದ್ದ ವರ್ತನೆ ಎಲ್ಲರೆದುರಿಗೂ ಪ್ರಕಟವಾಗ ತೊಡಗಿತು. ಯಾರಾದರು ‘ಅಪ್ಪ’ ಎಂದರೆ ನಾನು ‘ತಾತ’ ಎನ್ನತೊಡಗಿದೆ. ಕೆರೆಯ ಒಡ್ಡಿಗೆ ಅಚ್ಚುಕಟ್ಟಾಗಿ ಹೊಂದಿಕೊಂಡು ಏರಿ ಆಕೃತಿ ಎಲ್ಲಿವರೆಗೆ ದೃಡವಾಗಿರುತ್ತದೋ ಅಲ್ಲಿವರೆಗೆ ನೀರಿನ ಸಂಗ್ರಹ ಇರುತ್ತದೆ. ಏರಿಯ ಒಂದು ಕಲ್ಲು ಕದಲಿದರೆ ನೀರು ಇಡೀ ಏರಿಯನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಧೀರ್ಘಕಾಲ ಬಂಧನದಲ್ಲಿರುವ ಹಕ್ಕಿಗೆ ಸ್ವಾತಂತ್ರ್ಯದ ರುಚಿ ತೋರಿಸಿದರೆ ಅದು ಆಗಸದ ತುಂಬ ರೆಕ್ಕೆಗಳನ್ನು ಹರಡಿ ಅಳೆಯುತ್ತಿದೆ. ಇದಕ್ಕೆ ನಾನೇ ಸಾಕ್ಷಿಯಾದೆ. ನನಗೆ ಹೆಂಡತಿ ಮೇಲೆ ಪ್ರೀತಿ ಇಲ್ಲದಿರಲಿಲ್ಲ… ಆದರೆ ಮತ್ತೆಲ್ಲಿ ನನ್ನ ಮೇಲೆ ಹಿಡಿತ ಸಾಧಿಸುವಳೋ ಎಂಬ ಆತಂಕ. ಆಕೆ ಗುಟ್ಟಾಗಿ ವಾರ್ತಾಯ ಸುಯಂತಾಂ ಪ್ರವಾಚಿತಃ ವರಲಕ್ಷ್ಮೀ ಶಾಸ್ತ್ರೀಯಾ… ಎಂದು. +ಪತ್ರದ ಮೂಲಕ ಸದರೀ ವಾರ್ತೆಯನ್ನು ಕೊಟ್ಟೂರಿನಲ್ಲಿರುವ ನನ್ನ ತಾಯಿಯವರಿಗೆ ಬಿತ್ತರಿಸಿದಳೋ; ಅಥವಾ ಆಕೆಗೆ ಕನಸು ಬಿತ್ತೋ… ಆಕೆಯ ಎಚ್ಚರಿಕೆ ನೀಡುವ ದೀರ್ಘಾಯುಷ್ಯ ಕೋರುವ ಪತ್ರವೂ ಬೆಂಗಳೂರಲ್ಲಿ ಪ್ರಸಿದ್ಧ ಪತ್ರಕರ್ತನಾಗಿರುವ ಪದ್ಮಶ್ರೀ ಬಿರುದಾಂಕಿತನಾಗಿರುವ ಕಮಲಾಕರನ ಪತ್ರವೂ, ಏಕ ಕಾಲದಲ್ಲಿ ಬಂದವು. ಆತ ತನ್ನ ಪತ್ರದಲ್ಲಿ ಆಡಳಿತ ಪಕ್ಷವಾದ ಕಾಂಗ್ರೇಸ್‌ನ ದುರಾಡಳಿತದಿಂದ ಕರ್ನಾಟಕದ ಪ್ರಜೆಗಳು ಬೇಸತ್ತಿರುವರೆಂದೂ; ವಿರೋಧ ಪಕ್ಷವಾಗಿರುವ ಜನತಾದಳವು ಮುಂಬರುವ ಚುನಾವಣೆಯಲ್ಲಿ ನಿಚ್ಚಳವಾದ ಬಹುಮತ ಸಾಧಿಸಲಿರುವುದೆಂದೂ; ಅದಕ್ಕೆ ಸ್ಲೋಗನ್ನುಗಳೇ ಮೊದಲಾದ ಹಾಡುಗಳನ್ನು ನೀನು ಕೂಡಲೆ ಬಂದು ಬರೆದುಕೊಟ್ಟಲ್ಲಿ ಕೈತುಂಬ ಒಳ್ಳೆ ಸಂಭಾವನೆ ದೊರಕುವುದಲ್ಲದೆ ನೀನು ಸಾಹಿತ್ಯ ಅಕಾಡೆಮಿಯ ಸದಸ್ಯನಾಗುವಿ ಎಂದು ಬರೆದಿದ್ದ. ಅಲ್ಲಿ ಅಂಥ ಕವಿಗಳೇ ಸಾಕಷ್ಟಿರುವಾಗ ನಾನಲ್ಲಿಗೆ ಹೊಗಿ ಏನು ಕಡಿಯುವುದು! +ಹೆಬ್ರಿಗೂ ಗುಟ್ಟಾಗಿ ಹೇಳಿರುವಿಯಲ್ಲದೆ ಕೊಟ್ಟೂರಿಗೂ ಪತ್ರ ಬರೆದು ತಿಳಿಸಿರುವಿಯಾ: ಆ ಮುದುಕಿ ಎದುರಿಗೇ ಹೋಗಿ ಸಿಗರೇಟು ಸೇದಲಿಕ್ಕು ಹೆದರುವುದಿಲ್ಲವೆಂದು ಹೆಂಡತಿಯನ್ನು ಕೈಗೆ ತೆಗೆದುಕೊಂಡೆ. ಆಕೆಗೂ ನನಗೂ ನಡುವೆ ಮಾತಿಗೆ ಮಾತು ಬೆಳೆದು ಕಪಾಳಕ್ಕೆ ಛಳೀರನೆ ಒಂದು ಏಟು ಕೊಟ್ಟೆ. ನಂತರ ರಾತ್ರಿ ಆಕೆ ಮುಲುಕಿದಾಗ ಅದೇ ಕಪಾಲಕ್ಕೆ ನಾನೇ ತೈಲ ಲೇಪಿಸಿ ಸಮಾಧಾನ ಮಾಡಿದೆ. ನನ್ನ ದೂರ ಮಾಡಬೇಡಿರೆಂದು ಆಕೆ ಗೊಣಗುತ್ತ ಆಕೆ ನನ್ನನ್ನು ತಬ್ಬಿಕೊಂಡಳು. ಮನಸ್ಸಿನಲ್ಲಿ ಯಾರನ್ನೋ ಕಲ್ಪಿಸಿಕೊಂಡು ನಾನೂ ಆಕೆಯನ್ನು ತಬ್ಬಿಕೊಂಡೆ. ಮುಂದೆಂದೂ ಹೊಡೆಯುವುದಿಲ್ಲವೆಂದು ಭರವಸೆ ನೀಡಿದೆ. +ಮಹಾಪತಿವ್ರತೆಯಾದ ಹೆಂಡತಿಯನ್ನು ಹೊಡೆಯುವುದರ ಮೂಲಕ ಕರ್ಮಠ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ನನ್ನನ್ನು ಮನೆಗೆ ಬರ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡಿಸುವುದನ್ನು ಫಕೀರಮ್ಮ ಹಂತ ಹಂತವಾಗಿ ನಿಲ್ಲಿಸಿದಳು. ಯ್ಯಜ್ಞವಲ್ಕ್ಯರ ಶಿಕ್ಷಾಸ್ಮೃತಿವರೆಗೆ ಬಂದಿದ್ದ ವಿಜಯಾಳನ್ನು ಆಕೆಯ ತಂದೆ ಚಲುವಯ್ಯ ಬೆಂಗಳೂರಿಗೆ ಕರೆದುಕೊಂಡು ಹೋಗಿ (ವಿಚಿತ್ರವೆಂದರೆ) ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಸಂಸ್ಥೆಗೆ ಸೇರಿಸಿದ. ಮಕ್ಕಳೊಂದಿಗ ಮತ್ತು ವಿವಾಹಿತನೂ ಆದ ತನ್ನ ಸಂಗೀತ ಮಾಸ್ತರ ವೃಷಭೇಂದ್ರಾಚಾರನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಳು ರಾಗಿಣಿ. ಮೂರನೆ ಹುಡುಗಿ ಮೇನಕೆಯ ರಕ್ತ ರಾತ್ರಿ ನಾಟಕದಲ್ಲಿ ಉತ್ತರೆಯ ಪಾತ್ರ ವಹಿಸಲು ಆಂಧ್ರದ ಬೊಮ್ಮನಾಳಿಗೆ ಹೋಗಿ ಧರ್ಮರಾಯನ ಪಾತ್ರ ವಹಿಸಿದ್ದ ಪ್ರತಾಪರೆಡ್ಡಿಯೊಂದಿಗೆ ದೈಹಿಕ ಸಂಬಂಧವಿರಿಸಿಕೊಂಡು ಅಲ್ಲಿಯೇ ಶಾಶ್ವತವಾಗಿ ಉಳಿದುಬಿಟ್ಟಳು. +ಈ ಎಲ್ಲ ಅಹಿತಕರ ವಿದ್ಯಮಾನಗಳಿಂದ ಜ್ಞಾನೋದಯವಾಗಿ ಫಕೀರಮ್ಮ ಸದಾನಂದ ಬಾಬಾನೇ ದಿಕ್ಕು ಎಂದು ಭಾವಿಸಿ ಆತನ ಆಶ್ರಮವನ್ನು ಹುಡುಕಾಡುವ ನಿಮಿತ್ತ ಹೇಳದೆ ಕೇಳದೆ ಹೊರಟು ಹೋಗಿ ಕೆಲ ದಿನಗಳಾಗಿರುವುದು. ಅನೇಕ ಪ್ರಮುಖ ರಾಜಕಾರಣಿಗಳನ್ನು ಶಿಷ್ಯರನ್ನಾಗಿ ಹೊಂದಿದ್ದೂ ಸಾಂಗ್ಲಿಯಾನಾ ಐ.ಪಿ.ಎಸ್. ಎಂಬ ಚಲನಚಿತ್ರ ಬಿಡುಗಡೆಯಾದಂದಿನಿಂದ ಮನಶ್ಶಾಂತಿ ಬಯಸಿ ದಿನಕ್ಕೊಂದು ಟೆಂಟ್ ಬದಲಾಯಿಸುತ್ತಿರುವ ಬಾಬಾ ಎಲ್ಲಿರುವನೆಂದು ಹೇಗೆ ಹೇಳುವುದು? ಸ್ಥಳ ಬದಲಾಯಿಸುತಿರುವುದರ ಜೊತೆಗೆ ವೇಷವನ್ನೂ ಬದಲಾಯಿಸುತಿರುವನೆಂದು ಪ್ರತೀತಿ ಹುಟ್ಟಿಕೊಂಡಿರುವುದರಿಂದ ಆತ ಇಂಥಲ್ಲಿ, ಇದೇ ವೇಷದಲ್ಲಿರುವನೆಂದು ಯಾರು ನಿಖಿರವಾಗಿ ಹೇಳುವುದು ಸಾಧ್ಯ! ಆತನ ಇರುವಿಕೆಗಾಗಿ ಕರ್ನಾಟಕ ತುಂಬ ಪ್ಯಾಸೆಂಜರ್ ಗಾಡಿಯಂತೆ ಫಕೀರಮ್ಮ ಅಡ್ಡಾಡಿದಳು. ಹುಬ್ಬಳ್ಳಿಯ ರೇಲ್ವೆ ಪ್ಲಾಟ್‌ಫಾರಂ ಮೇಲೆ ಮಲಗಿದ್ದ ಆಕೆಯ ಕನಸಿನಲ್ಲಿ ಬಾಬಾ ಕಾಣಿಸಿಕೊಂಡು ‘ಈ ಕೂಡಲೆ ನೀನು ದೇಹತ್ಯಾಗ ಮಾಡಿ ಸ್ವರ್ಗ ಮತ್ತು ನರಕದ ಚೌರಾಸ್ತಾದಲ್ಲಿ ಕಾಯುತ್ತಿರು… ನಾನು ಸಾಂಗ್ಲಿಯಾನಾ ಚಿತ್ರಕ್ಕೆ ಮೋಕ್ಷ ದಯಪಾಲಿಸಿ ಬಂದು ಸ್ವರ್ಗಕ್ಕೆ ಕರೆದುಕೊಂಡು ಹೋಗುವೆ’ನೆಂದು ಅಪ್ಪಣೆ ಕೊಡಿಸಿದನಂತೆ. ಸಂಗತಿಗಳು ಹೀಗಿರುವಾಗ ಇಂಜಿನಿಯರ್ ಚಲುವಯ್ಯ ತನ್ನ ಅತ್ತೆಯ ಅನ್ವೇಷಣಾ ಕಾರ್ಯವನ್ನು ನಿಲ್ಲಿಸಿ ಆಕೆಯ ಹೆಸರಿನಲ್ಲಿ ತಿಥಿ ಶ್ರಾದ್ಧ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪೂರೈಸಿದ. ಕೊತ್ತಲಿಗಿಯ ತಮ್ಮ ಹೊಸ ಮನೆಯಲ್ಲಿ ಆಕೆಯ ಪ್ರಥಮ ಪುಣ್ಯತಿಥಿಯಂದು ಶರಣೆ ಫಕೀರಮ್ಮನ ಭಜನಾ ಮಂಡಲಿಯನ್ನು ಶುರು ಮಾಡಬೇಕೆಂದಿರುವನು. ಅದರ ಪ್ರಾರಂಭೋತ್ಸವಕ್ಕೆ ಭದ್ರಗಿರಿ ಅಚ್ಯುತ ಕೇಶವದಾಸರನ್ನು ಕರೆಸಬೇಕೆಂದಿರುವನಂತೆ. “ಎಷ್ಟು ದಿನಗಳಲ್ಲಿ ಮನೆಯನ್ನು ಖಾಲಿ ಮಾಡಲು ಸಾಧ್ಯ ಶಾಸ್ತ್ರಿಗಳೇ?” ಎಂಬೊಂದು ಮಾತು ಆತನಿಂದ ಬಂತು…. (ಕೋರ್ಟ್‌ನಲ್ಲಿ ನೋಟರಿ ತಗಿನ ಮಠರನ್ನು ಹಿಡಿದುಕೊಂಡು ಶಾಸ್ತ್ರಿ ಎಂಬ ವಿಶೇಷಣವನ್ನು ಹೆಸರಿನಿಂದ ಖಾಯಂ ಆಗಿ ಬೇರ್ಪಡಿಸಬೇಕು. ಅದು ಎಂದು ಸಾಧ್ಯವಾಗುವುದೋ?) +ಹೀಗೆ ಹೇಳಿಕೊಳ್ಳೋದು ಸಾಕಷ್ಟಿದೆ ಕುಂವೀ… ಆದರೆ ನೀನು ಕಥಾನಕವನ್ನು ಬೇಗನೆ ಮುಗಿಸಬೇಕೆಂದು ಆತುರ ಪಡುತ್ತಿರುವಿ. ಪ್ರಕಾಶಕ ಚನ್ನಬಸವಣ್ಣನವರು ನಿನ್ನ ಮೇಲೆ ಒತ್ತಡ ಹೇರಿರುವುದು ನನಗೆ ಅರ್ಥವಾಗುತ್ತದೆ. ಈ ಕಾದಂಬರಿಯ ಕೆಲವು ಕಂತುಗಳನ್ನು ಸಿದ್ಧಣ ಅರಕೆಯವರು ತಮ್ಮ ವಾರ ಪತ್ರಿಕೆಯಲ್ಲಿ ನಾನು ಓದಿರಲಿಲ್ಲವೆಂದು ತಿಳಿದುಕೊಳ್ಳಬೇಡ. ಓದಿ ಆತಂಕ ಗೊಂಡಿದ್ದೆ. ಏನಪ್ಪಾ ಇವನು ನನ್ನ ಬದುಕಿನ ಪೂರ್ವೋತ್ತರವನ್ನು ಅದೆಷ್ಟು ರೋಮಾಂಟಿಕ್ಕಾಗಿ ನೋಡ್ತಿದ್ದಾನಲ್ಲ ಎಂದು ಬೇಸರಪಟ್ಟಿದ್ದೆ. ಅಷ್ಟರಲ್ಲಿ ನಿನಗೂ, ಚಂದ್ರಶೇಕರ ಆಲೂರು ಎಂಬದರ ಸಂಪಾದಕ ಮಹಾಶಯನಿಗೂ ವಾಗ್ವಾದ ನಡೆದು ಕಂತು ಕೊಡುವುದನ್ನು ಅಲ್ಲಿಗೆ ನಿಲ್ಲಿಸಬಿಟ್ಟೆ ಎಂಬುದೂ ಅಷ್ಟೊತ್ತಿಗಾಗಲೆ ಸತ್ತಿದ್ದ ನನಗೆ ಗೊತ್ತಾಯಿತು. ಬದುಕಿದೆ ಎಂದು ಸಮಾಧಾನದ ಉಸಿರುಬಿಟ್ಟೆ. +ಮನುಷ್ಯ ಎಷ್ಟೇ ಆಧುನಿಕ, ನಾಗರಿಕ, ಸನಾತನಿ ಎಂದುಕೊಂಡರೂ ಅವನು ಬೇಟೆಯಡುವ ಗುಣದಿಂದ ಪಾರಾಗಿಲ್ಲ. ಅದನ್ನೇ ಸ್ಥಾಯಿಯಾಗಿಟ್ಟುಕೊಂಡು ಒಬ್ಬನ ಅಸ್ತಿತ್ವವನ್ನು ಇನ್ನೋರ್ವನು ಮುಗಿಸುತ್ತ ನಡೆದಿರುವನು. ಯಾವುದೋ ಒಂದು ಅನುಭೂತಿಗಾಗಿ ಹಪಹಪಿಸುತ್ತಿರುವನು. ಇದಕ್ಕೆ ಉಲ್ಲೇಖಾರ್ಹ ಉದಾಹರಣೆ ಎಂದರೆ ನಾನು ಮತ್ತು ನನ್ನ ಬದುಕು. ನೀನು ಮತ್ತು ನಿನ್ನ ಬದುಕು, ಅವರು ಮತ್ತು ಅವರ ಬದುಕು, ಇವರು ಮತ್ತು ಇವರ ಬದುಕು, ನೀನು, ನಾನು, ಅವರು, ಇವರು ಮೊದಲಾದವರೆಲ್ಲ ಮಾನವ ಸರಪಣಿ ಕೊಂಡಿಗಳು. ಒಂದು ಕಳಚಿಕೊಂಡರೆ ಇಡೀ ಸರಪಳಿಯೇ ದುರ್ಬಲವಾಗುತ್ತದೆ. ಈ ಸಂದರ್ಭದಲ್ಲಿ ವಾಲ್ಮೀಕಿಯ ದಶರಥನ ಬಾಯಿಯಿಂದ ಒಂದು ಮಾತು ಹೇಳಿಸುತ್ತಾನೆ. ಅದೇನೆಂದರೆ – +ಭಯೋ ವಿನಯ ಮಾಸ್ಥಾಯ ಭವ ನಿತ್ಯಂತ ಜಿತೇಂದ್ರಿಯಃ +ಕಾಮಕ್ರೋಧ ಸಮುತ್ಥಾನಿತ್ಯಜೇಥಾ ವ್ಯಸನಾನಿ ಚ… ಅಂತ… ಅಂದರೆ – +ಹೆಚ್ಚು ವಿನಯ ಸಂಪನ್ನನಾಗಿ ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೋ ಕಾಮಕ್ರೋಧಾದಿ ಮದ್ಯ ಮೃಗಯಾದಿ ವ್ಯಸನಗಳನ್ನು ಹತ್ತಿರ ಸೇರಿಸಬೇಡ ಅಂತ. ಆದರೆ ರಾಮನನ್ನು ಕಾಡಿದ್ದು ಅಧಃಪತನಕ್ಕೀಡು ಮಾಡಿದ್ದು ಅವೆ… ಇಡೀ ರಾಮಾಯಣ, ಮಹಾಭಾರತದಂಥ ಮಹಾಕಾವ್ಯದಲ್ಲಿ ಪ್ರತಿಯೊಂದು ಪಾತ್ರಕ್ಕೂ ಕಾರ್ಯ ಕಾರಣ ಸಂಬಂಧವಿದೆ. ಬೇಕು ಬೇಡಗಳ ಘರ್ಷಣೆ ಇದೆ. ಒಂದು ಪಾತ್ರ ಇನ್ನೊಂದು ಪಾತ್ರದ ಅಸ್ತಿತ್ವದ ಮೇಲೆ ಆಕ್ರಮಣ ಮಾಡುತ್ತದೆ. ಕಟ್ಟಕೊನೆಗೆ ಮಹಾಕಾವ್ಯ ಧ್ವನಿಸುವುದು ಬೇಟೆ ಸ್ವಭಾವನ್ನೇ. ಇದು ನಮ್ಮೆಲ್ಲರ ಭಾವ-ಸ್ವಭಾವಗಳನ್ನು ನಿಯಂತ್ರಿಸುತ್ತದೆ. ಪ್ರೇರೇಪುಸುತ್ತದೆ. ಆದ್ದರಿಂದ ನಾವು ಹೊರಗೆ ಕಾಣಿಸುವುದೇ ಬೇರೆ, ಅಂತರಂಗದ ಮುಲಕ ಹೊಂಚುವುದೇ ಬೇರೆ… ಬರು ಬರುತ್ತ ಯಾರು ಯಾರಿಗೂ ಗುರುತು ಸಿಗುವುದೇ ಇಲ್ಲ… ಅಂತಿಮ ಕ್ಷಣಗಳಲ್ಲಿ ನಮ್ಮ ನಮ್ಮ ಮುಖಚಹರೆಯೇ ಬದಲಾಗಿರುತ್ತದೆ. ವಿಶಾದದ ಮೂಟೆಗಳಂತಾಗಿ ಬಿಡುತ್ತೇವೆ. ನನ್ನದೂ ಹಾಗೆಯೇ ಸಂಭವಿಸಿದ್ದು. ಎಲ್ಲರಿದ್ದೂ ಒಂಟಿಯಾಗಿ ಬಿಟ್ಟೆ. ಜಾತ್ರೆಯಲ್ಲಿ ನನ್ನದು ಅರಣ್ಯ ರೋದನವಾಗಿತ್ತು. ಅದನ್ನು ಕೆಳಿ ಇಡೀ ಜಾತ್ರೆ ಆನಂದಿಸುತ್ತಿತ್ತು. ಅದಿರಲಿ, ಈಗವನ್ನೆಲ್ಲ ಕೂಡ್ರಲಿಕ್ಕೆ ಸಮಯವಿಲ್ಲ. ಯಾವ್ಯಾವಾಗ ಏನು ನಡೆಯಬೇಕಿತ್ತೋ ಅದೆಲ್ಲ ನಡೆಯಿತು. ನನ್ನ ಬದುಕಿನಲ್ಲಿ ನಡೆದ ಮಾರ್ಪಾಡುಗಳಿಗೆ ಯಾರೊಬ್ಬರು ಕಾರಣವಲ್ಲ ನಾನೇ ಕಾರಣ. +ನಾನು ಬಯ್ದಾಗ ಹೊಡೆದಾಗ, ಜರಿದಾಗ ವರಲಕ್ಷ್ಮಿ ಪ್ರತಿಭಟನೆಯನ್ನೊಡ್ಡಿದ್ದಲ್ಲಿ ನಾನು ಉಲ್ಲಂಘನೆಗೆ ಮುಂದಾಗುತ್ತಿರಲಿಲ್ಲ. ನನ್ನ ವರ್ತನೆ ಆಕೆಯ ಮೇಲೆ ಅಷ್ಟೊಂದು ದುಷ್ಪ್ರಭಾವ ಬೀರಬಹುದೆಂದು ಗೊತ್ತಿದ್ದರೆ ಆಕೆಯನ್ನು ಸೂತ್ರದ ಗೊಂಬೆ ಎಂದು ಭಾವಿಸುತ್ತಿರಲಿಲ್ಲವೇನೋ! ಆದರೆ ಏನು ಮಾಡುವುದು? ಪರಿಸ್ಥಿತಿಯ ಕೈಗೊಂಬೆಯಾಗಿದ್ದ ನಾನೇ ಕಿಳ್ಳೇಕ್ಯಾತರವರಾಗಿ ಇನ್ನೊಂದು ಗೊಂಬೆಯನ್ನು ಆಡಿಸುತ್ತಿದ್ದುದು ಸೋಜಿಗದ ವಿಷಯ. +“ಶಾಮಣ್ಣಾ… ತಾತ್ವಿಕವಾಗಿ ಮಾತೋಡೋದಿಕ್ಕೆ ಸಮಯವಿಲ್ಲ. ಆಡುವವರ ವಿಷಯ ಆಡಿಸುವವರಿಗೆ ಗೊತ್ತು. ಆಡಿಸುವವರ ವಿಷಯ ಆಡುವವರಿಗೆ ಗೊತ್ತು. ಅವರಿಬ್ಬರ ನಡುವೆ ಒಪ್ಪಂದ ಇರುತ್ತದೆ. ಕೃತಿಯ ಮೂಲ ಉದ್ದೇಶ ಆ ಅಂಥ ಒಪ್ಪಂದವನ್ನು ಭೇದಿಸುವುದೇ ಆಗಿದೆ. ಆದ್ದರಿಂದ ನೀನು ನಿನ್ನ ಪತ್ನಿ ಬಗ್ಗೆ ಹೆಚ್ಚು ಒತ್ತು ಕೊಡಬೇಡ. ಹೆಂಡತಿ, ತಾಯಿ, ಗಂಡ, ಮಗ ಈ ಪಾತ್ರಗಳ ಪೈಕಿ ಓದುಗ ಒಬ್ಬನಾಗಿರುತ್ತಾನೆ. ಗಂಡನಿಂದ ಒದೆ ತಿಂದ ಹೆಂಡತಿ ಏನು ಮಾಡಬೇಕೋ ವರಲಕ್ಷ್ಮಿ ಅದನ್ನೆ ಮಾಡಿದ್ದಾಳೆ. ನಿನ್ನ ತಾಯಿ ಬಿಟ್ರೆ ಯಾರಿದ್ದರೆ ಆಕೆಗೆ ದಿಕ್ಕು? ತನ್ನ ಕಷ್ಟ ಸುಖ ಹೇಳಿಕೊಳ್ಳಲು ಆಕೆಗಿದ್ದ ಒಂದೇ ಒಂದು ಆಸರೆ ತನ್ನತ್ತೆ ಅಂದರೆ ನಿನ್ನ ತಾಯಿ. ಆ ಸೇತುವೆಯನ್ನು ಸ್ಪೋಟಿಸುವ ಪ್ರಯತ್ನ ಮಾಡೀಡೀ ನೀನು, ತನ್ನ ಗಂಡ ಸತ್ಯಹರಿಶ್ಚಂದ್ರನಂತೆ, ಏಕಪತ್ನಿ ವ್ರತಸ್ಥ ಶ್ರೀರಾಮಚಂದ್ರನಂತಿರಬೇಂಬುದು ಪ್ರತಿಯೊಂದು ಹೆಣ್ಣಿನ ಆಸೆ… ವಿವಾಹದ ನಂತರ ಹೆಂಡತಿಯೇ ತಾಯಿ, ತಂದೆ ಎಲ್ಲ… ಅದನ್ನು ಅರ್ಥ ಮಾಡಿಕೊಳ್ಳದೆ ಹೆಂಡತಿಯಂಥ ರೋಗ ನಿರೊಧಕ ಶಕ್ತಿಯನ್ನು ತುಚ್ಛೀಕರಿಸಿದೆ. ನೀನು ಸಿಗರೇಟು ಸೇತ್ತಿದ್ದೀ, ಜೂಜಾತಿದ್ದೀ, ಪರಸ್ತ್ರೀ ವ್ಯಾಮೋಹಿಯಾಗ್ತಿದ್ದೀ ಇದು ಸರಿಯಲ್ಲ ಎಂದು ಪ್ರಶ್ನಿಸಿದ ತಾಯಿಯನ್ನು ಕೇರ್ ಮಾಡದವನು ನೀನು.. ಇದೆಲ್ಲ ತಪ್ಪು ಹೌದಲ್ಲೋ… ನಿಜ ಹೇಳು?” +“ಇದು ತಪ್ಪು ಒಪ್ಪುಗಳ ವಿಚಾರ ಸಂಕಿರಣವಲ್ಲೋ ಬೆಪ್ಪೇ… ಪ್ರತಿಯೊಂದು ಕಾಲಘಟ್ಟದಲ್ಲಿ ಉಬ್ಬರವಿಳಿತಗಳು ಸಹಜ ಮತ್ತು ಪ್ರಕೃತಿ ನಿಯಮ. ಬಂಧಿಸಲ್ಪತ ಪ್ರತಿಯೊಂದು ಜೀವಿ ಸ್ವೇಚ್ಛೆಗಾಗಿ ತಹತಹಿಸುತ್ತದೆ ಪಡೆಯುತ್ತದೆ ಮತ್ತು ಅನುಭವಿಸುತ್ತದೆ. ಅದರ ಆವರ್ತನೆಯನ್ನು ಸಮಾಜ ಅಪಾಯಕಾರಿ ಎಂದು ಭಾವಿಸಬಹುದು. ಆದರೆ ಅದಕ್ಕೆ ಆ ಪ್ರೇರಣೆ ಸಿಕ್ಕದ್ದು ‘ಬಂಧನ” ಎಂಬ ಸಂದರ್ಭದಲ್ಲಿಯೇ. ವರಲಖ್ಮಿ ನನ್ನ ಒಬ್ಬ ಶ್ರೋತ್ರಿ ಎಂದು ಭಾವಿಸಿದಳೇ ಹೊರತು ತನ್ನ ಗಂಡ ಎಂದು ಭಾವಿಸಲಿಲ್ಲ. ಯಾವ ಯಾವ ಸಮಯದಲ್ಲಿ ಸಂಭೋಗಿಸಿದರೆ ಯಾವ ಯಾವ ಜಾಯಮಾನದ ಮಕ್ಕಳು ಹುಟ್ಟುವರೆಂದು ಆಕೆ ಓದಿ ತಿಳಿದುಕೊಂಡಿದ್ದಳು. ಆಕೆಯ ದೃಷ್ಟಿಯಲ್ಲಿ ಸತಿ ಪತಿ ಮಿಲನ ವಂಶೋದ್ಧಾರದ ಪವಿತ್ರ ಕಾರ್ಯವಾಗಿತ್ತೇ ಹೊರತು ಸ್ವಾಭಾವಿಕ ಕ್ರಿಯೆಯಾಗಿರಲಿಲ್ಲ; ಹಸಿವು ತೃಷೆಗಳಂತೆ ಒಂದು ದೈಹಿಕ ಅಗತ್ಯವಂತೂ ಮೊದಲೇ ಆಗಿರಲಿಲ್ಲ. ಸ್ಪರ್ಷ ಮತ್ತು ಸಲಿಗೆಯನ್ನು ಅನಾಗರೀಕವೆಂದು ತಿಳಿದುಕೊಂಡಿದ್ದಳು. ಆಕೆಯ ವ್ಯಕ್ತಿತ್ವವೇ ಹಾಗೆ ರೂಪಗೊಂದಿತ್ತು, ಮಹರಾಯ, ಆಕೆಯ ಭಾವನೆಗಳನ್ನು ಬದಲಾಯಿಸುವುದು ಒಂದೆ, ಕಪ್ಪು ನಾಯಿಯ ಬಣ್ಣ ಬಿಳಿ ಮಾಡುವುದು ಒಂದೇ ಎಂದು ಅರ್ಥಮಾಡಿಕೊಂಡೆ. ಆಕೆ ದೈಹಿಕವಾಗಿ ಭಾವನಾತ್ಮಕವಾಗಿ ಸ್ಪಂದಿಸಿದ್ದರೆ ನಾನ್ಯಾಕೆ ಪಶುಪತಿಯ ಕಾಮ್ರೇಡುತನಕ್ಕೆ ಮರುಳಾಗುತ್ತಿದ್ದೆನೋ! ನೀನೇ ಹೇಳು. ವೈವಾಹಿಕ ವ್ಯವಸ್ಥೆ ಮತ್ತು ಧರ್ಮದಿಂದ ದೊರೆಯದಿದ್ದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಂಡ್ಕೊಂಡ ದಾರಿಯ ಪೈಕಿ ಪಶುಪತಿಯೂ ಒಂದು ಎಂದು ಹೇಳಬಹುದು. ದಾರಿಯೊಳಗಿಂದ ಮತ್ತೊಂದು ದಾರಿ ಹುಟ್ಟುವುದಲ್ಲಾ, ಹಾಗೆ ಮುಂದೊಂದು ದಿನ ಹುಟ್ಟಿದ್ದು ರಾಖೇಶ ಎಂಬ ಕಾಲು ಹಾದಿ, ನನಗೆ ಅರ್ಥವಾಗದೆ ಉಳಿದವರ ಪೈಕಿ ಅವನೂ ಒಬ್ಬ, ಅವನ ಬಗ್ಗೆ ನೀನು ಅವಕಾಶಕೊಟ್ಟರೆ ಸವಿಸ್ತಾರವಾಗಿ ಹೇಳುವೆ. ಇಲ್ಲವಾದರೆ ಇಲ್ಲ. ಅವನನ್ನು ಪೂರ್ತಿ ನಿರ್ಲಕ್ಷಿಸಿದರೆ ಕಥೆಯೇ ನಿರ್ಜೀವವಾಗಿ ಬಿಡುತ್ತದೆ. ಊಟದ ರುಚಿಯನ್ನು ಉಪ್ಪು ಹೇಗೆ ಹೆಚ್ಚಿಸುವುದೋ ಹಾಗೆ ರಾಖೇಶನ ಬಗ್ಗೆ ಸ್ವಲ್ಪಾದ್ರು ಪ್ರಸ್ತಾಪಿಸಲಿಲ್ಲಾಂದ್ರೆ ಕಥೆಗೆ ಕ್ಲೈಮ್ಯಾಕ್ಸ್ ಎಂಬುದೇ ಇರುವುದಿಲ್ಲ. ವಾಟ್ ಎ ಗ್ರೇಟ್ ಪರ್ಸನ್ ರಾಖೇಶ್… ದೊಡ್ಡಸ್ತಿಕೆ ದೊಡ್ಡತನ, ಮಾನವೀಯತೆಯ ಸೆಲೆ ಅಂಥ ಚಿಲ್ಲರೆ ಮಂದಿ (ಚಿಲ್ಲರೆ ಎಂದು ಕರೆದವರು ಯಾರು?)ಯ ಮನಸ್ಸಿನಲ್ಲಿ ಆಶ್ರಯ ಪಡೆಯುತ್ತದೆ. ನಾನು ಕೆಲವು ಸಂದರ್ಭದಲ್ಲಿ ಇನ್ನೇನು ಮುಳುಗಿ ಹೋಗುತ್ತಿರುವನೆಂದು ಕೈಚೆಲ್ಲಿದಾಗ ಆಪದ್ಭಾಂಧವನಂತೆ ಬಂದು ಕೈಹಿಡಿದೆತ್ತಿ ಮತ್ತೆ ಬದುಕು ನೀಡಲು ಪ್ರಯತ್ನಿಸಿದ ಅವನು ನನ್ನ ದೃಷ್ಟಿಯಲ್ಲಿ ನನ್ನ ತಾತ; ನನ್ನ ತಾಯಿ, ನನ್ನ ಹೆಂಡತಿ, ನಿನ್ನಂಥ ಗೆಳೆಯರಿಗಿಂತ ಅವನೇ ಹೆಚ್ಚು. ಎಲ್ಲರೂ ನನ್ನ ಬಗ್ಗೆ ಅಸಹ್ಯ ಪಟ್ಟು ಛೀ ಥೂ ಎಂದು ಉಗುಳುತ್ತಿದ್ದ ಕಾಲದಲ್ಲಿ ಅವನು ನನ್ನನ್ನು ಪ್ರೀತಿಸಿದ. ಗೌರವಿಸಿದ ತಾಯಿಯಂತೆ ವಾತ್ಸಲ್ಯ ಹರಿಸಿದ. ಯಾರನ್ನಾದರೂ ಮರೆತೇನು? ಆದರೆ ಅವನನ್ನು ಮಾತ್ರ ಮರೆಯಲಾರೆ! ಆದ್ದರಿಂದ ಕಾದಂಬರಿಯ ಉದ್ದಗಲಗಳ ವಿಸ್ತೀರ್ಣದ ಬಗ್ಗೆ ತಲೆಕೆಡೆಸಿಕೊಳ್ಲದೆ ಅವನ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಿಕ್ಕೆ ಅನುಮತಿ ಕೊಡು. +“ಆಯ್ತು ಅವನನ್ನು ಲವಣ ಪ್ರಮಾಣದಲ್ಲಿ ಪ್ರಸ್ತಾಪಿಸುವಿಯಂತೆ… ಈಗ ಮಾತ್ರ ನೀನು ನಿನ್ನ ಬದುಕಿನ ಸಂಕ್ರಮಣದ ಕಾಲದ ಬಗ್ಗೆ ಸಂಕ್ಷಿಪ್ತವಾಗಿ ಅರ್ಥಗರ್ಭಿತವಾಗಿ ಹೇಳುವ ಪ್ರಯತ್ನ ಮಾಡಬೇಕು ನೋಡು. ನಾನು ತಿಳಿದಿರೋ ಮಟ್ಟಿಗೆ ಪಶುಪತಿ ನಿನ್ನನ್ನು ಕಾಮ್ರೇಡ್ ಬಲೆಯಲ್ಲಿ ಕೆಡವಲು ಪ್ರಯತ್ನಿಸಿದ. ಅವನು ಎಲ್ಲಾ ಕಾಮ್ರೇಡರಂತೆ ಸತ್ಕುಲ ಸಂಜಾತ… ಎಲ್ಲೋ ಹುಟ್ಟಿದ; ನಿನ್ನನ್ನು ನಿನ್ನ ತಾತನವರು ನಿನ್ನ ಬಗ್ಗೆ ಎಂಥೆಂಥ ಕನಸುಗಳನ್ನು ಇಟ್ಟುಕೊಂದಿದ್ದರೋ ಅವನ ಬಗ್ಗೆ ಅವನ ಹೆತ್ತವರೂ ಕನಸಿನ ಗೋಪುರ ಕಟ್ಟಿಕೊಂಡಿದ್ದರು. ನನಗೆ ತಿಳಿದ ಮಟ್ಯಿಗೆ ಪದವಿಪೂರ್ವ ತರಗತಿಯಲ್ಲಿ ಓದುತ್ತಿದ್ದಾಗ ಡಾ.ಕುರುವಳ್ಳಿ ಗೋವಿಂದರೆಡ್ಡಿ ಎಂಬ ಮೇಷ್ಟ್ರು ಅವನ ಮೇಲೆ ಮಾರ್ಕ್ಸ್‌ವಾದದ ಪ್ರಭಾವ ಬೀರಿದರು. ಮೇಲ್ಜಾತಿಗಳ ಬಗ್ಗೆ ಬಂಡವಾಳಶಾಹಿಗಳ ಬಗ್ಗೆ ಕುತಾರ್ಕಿಕ ನಿಲುವುಗಳನ್ನು ಪಡೆದ, ಓದದ ಹುಡುಗರನ್ನು ಅದೇ ತನ್ನ ಮೇಷ್ಟ್ರ ವಿರುದ್ಧ ಎತ್ತಿಕಟ್ಟಿ ಕಾಲೇಜಿಂದ ಬಹಿಷ್ಕರಿಸಲ್ಪಟ್ಟ ನಂತರ ಗುಲಬರ್ಗಾದಲ್ಲಿ ನಡೆದ ಕಿಸಾನ್ ರ್‍ಯಾಲಿಯಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರನ್ನು ಟೀಕಿಸಿ ಗುಮಿಸಿ ಗೌಡರ ಪರಿಚಯ ಮಾಡಿಕೊಂಡ. ಗೌಡನೇ ಅವನನ್ನು ಕೊತ್ತಲಿಗೆಗೆ ಕರೆತಂದು ಉಡಾಫೆ ಕೆಲಸಗಳಿಗೆ ಹಚ್ಚಿದ. ನಿನಗೂ ಅಂಥ ಗೆಳೆಯನ ಅಗತ್ಯ ಇತ್ತು… ಪರಿಚಯ ಮಾಡಿಕೊಂಡೆ. ಕಳ್ಳಿ ಹಾಲನ್ನು ಹಾಲೆಂದು ಭ್ರಮಿಸುವ ನೀನು ಅವನು ಹೇಳಿದ್ದಕ್ಕೆಲ್ಲ ಕುಣಿದು ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡೆ. +ಎರಡನೆಯದಾಗಿ ರಾಖೇಶನ ಬಗ್ಗೆ ಸಂಕ್ಷಿಪ್ತವಾಗಿ ಕಾದಂಬರಿಯಲ್ಲಿ ಪರಿಚಯಿಸಿರುವೆ. ಅವನ ವ್ಯಕ್ತಿತ್ವಕ್ಕೆ ನಿನ್ನಂತೆ ನಾನೂ ಮಾರು ಹೋದೆ. ನನಗೆ ಟಲೆಹಿಡುಕರ ಪರಿಚಯ ಇಲ್ಲ. ಅವರಂತೆ ಅವನೂ ಏನೋ ಸಹಾಯ ಮಾಡುತ್ತಿರುವಂತೆ ನಟಿಸಿದ. ತಾನು ತೋರಿಸಿದವರೊಂದಿಗೆ ಮಲಗದ ನನ್ನನ್ನು ಸಂದೇಹಿಸಿದ. ಅವನ ಪಾದರಸದಮ್ಥ ಚಟುವಟಿಕೆ ನನಗಿಷ್ಟವಾಯಿತು. ಒಂದು ಸುದೀರ್ಘ ಕಾದಂಬರಿಯಾಗುವಷ್ಟು ಬದುಕು ಅವನದಾಗಿರಬಹುದು. ಸದ್ಯಕ್ಕೆ ಅದೆಲ್ಲ ಬೇಕಾಗಿಲ್ಲ. ನೀನು ಮುಂದೆ ಹೇಳುವ ಘಟನೆಗಳಿಗೆ ಅದು ಪೂರಕವೆನಿಸಿದರೆ ಎಷ್ಟು ಬೇಕೋ ಅಷ್ಟು ಬಳಸಿಕೋ; ನನ್ನ ಅಭ್ಯಂತರವಿಲ್ಲ. +ಈಗ ನೀನು ಹೆಂಡತಿ ಮತ್ತು ತಾಯಿಯರೊಂದಿಗೆ ಘರ್ಷಣೆಗಿಳಿದಿರುವಿ, ಮೊದ ಮೊದಲು ಹಾವು ಮುಂಗುಸಿಯಂತೆ ಪರಸ್ಪರ ಕಚ್ಚಾಡುತ್ತಿದ್ದ ಅವರು ಈಗ ಒಂದಾಗಿರುವರು, ಸತ್ಕುಲ ಪ್ರಸೂತನಾದ ನಿನ್ನ ಪತನವಾಗದಂತೆ ನೋಡಿಕೊಳ್ಳಲು ಗುಟ್ಟಾಗಿ ಒಪ್ಪಂದಮಾಡಿರುವರೆಂದುಕೋ… ಅದಕ್ಕೆ ಪುರಕವಾಗಿ ಪ್ರತಿಭಟನೆಯ ನಡುವೆಯು ನಿನ್ನ ಹೆಂಡತಿಯ ಮುಟ್ಟು ನಿಂತಿದೆ. ಆಕೆಗೆ ಉಂಡಕೂಳು ಸೇರುತ್ತಿಲ್ಲ. ತಲೆ ಸುತ್ತು ಬಂದಂತಾಗುತ್ತಿದೆ. ಅಡುಗೆ ಮನೆ ಹೊಕ್ಕೊಡನೆ ಆಕೆ ಹೊಯ್ಕ ಹೊಯ್ಕಂತ ವಾಂತಿ ಮಾಡಿಕೊಳ್ಳುತ್ತಿರುವಳು ( ವಾತ್ಸಾಯನನನ್ನು ಓದಿಕೊಂಡಿರುವೆಯಾದರೂ ತಾಯ್ತನವನ್ನು ಅನುಭವಿಸುವ ಕುರಿತು ನೀನು ಓದಿಕೊಂದಿಲ್ಲ.) ಆ ಸ್ಥಿತಿಯಲ್ಲಿ ನೀನು ನಿನ್ನ ಹೆಂಡತಿಯನ್ನು ಅಲಕ್ಷಿಸುವಷ್ಟು, ತಿರಸ್ಕರಿವಷ್ಟು ಕ್ರೂರಿ ಅಲ್ಲ ಎಂಬುದು ನನಗೂ ಗೊತ್ತು. ನೀನೇ ಅಡುಗೆ ಮಾಡುವಿ ( ಆಕೆ ಮಾಸಿಕ ಮುಟ್ಟು ಅನುಭವಿಸಿದಾಗ ಅಡುಗೆ ಮಾಡಿರುವ ಅನುಭವ ಈಗ ನಿನ್ನ ಸಹಾಯಕ್ಕೊದಗುತ್ತದೆ ನೋಡು) ನೀನೆ ಆಕೆಗೆ ಬಡಿಸುವಿ… ಒಮ್ಮೊಮ್ಮೆ ಒತ್ತಾಯದಿಂದ, ಪ್ರೀತಿಯಿಂದ … ಆಕೆ ಮಾಡಿಕೊಳ್ಳುವ ವಾಂತಿಯನ್ನು ಬಳಿಯುವಿ… ಮಾತೃಪ್ರಧಾನ ಭಾವನೆಯಿಂದ, ತಾಯ್ತನದ ಅರಿವು ಆಕೆಗು ಇಲ್ಲ. ಯಾರಾದರೂ ತನಗೆ ಮಾಟ ಮಡಿಸಿರಬಹುದೇ? ಯಾರಾದರೂ ತನಗೆ ಮದ್ದು ಇಟ್ಟಿರಬಹುದೆ ಎಂದು ಆಕೆ ಶಂಕಿಸುತ್ತಾಳೆ. ಮನೆಯಲ್ಲಿ ವೃದ್ಧೆಯರಿದ್ದರೆ ಹೀಗೆ ಆಕೆ ಶಂಕಿಸುತ್ತಿರಲಿಲ್ಲ. ಆಕೆ ದಿನದಿಂದ ದಿನಕ್ಕೆ ಸೊರಗುತ್ತ ಹೋಗುತ್ತಾಳೆ. ಹುಣಸೆಕಾಯಿ ಚೀಪುವ ಆಸೆಯಾಗುತ್ತದೆ. ಜೋಡಿಮಣ್ಣು ತಿನ್ನುವ ಆಸೆಯಾಗುತ್ತದೆ, ಯಾರಾದರು ತಲೆ ಇರಿಸಿ ಮಲಗಿಕೊಳ್ಳಲು ತನ್ನ ತೊಡೆಯ ಆಶ್ರಯವನ್ನು ಕೊಡಬಾರದೆ ಎಂದು ಆಶಿಸುತ್ತಾಳೆ. ಆಕೆಯ ಬಯಕೆ, ಆಸೆ, ನಿರಾಸೆ, ಕೋರಿಕೆ ಕನವರಿಕೆಗಳೆಲ್ಲ ನಿನ್ನಲ್ಲಿ ಆಶ್ಚರ್ಯ ಹುಟ್ಟಿಸುತ್ತವೆ. ಆತುರದಿಂದ ಸ್ಪಂದಿಸದೇ ಇರುವುದಿಲ್ಲ ನೀನು. ಆ ಒಂದು ದಿನ ಬ್ಯಾಂಕಿಗೆ ರಜೆ ಹಾಕಿರುವ ನೀನು ಶನಿವಾರ ಪೇಟೆಯ ಕೊನೆಯಲ್ಲಿರುವ ಡಾಕ್ಟರ್ ಶೋಬಾರವರನ್ನು ಮನೆಗೆ ಕರೆ ತಂದು ಹೆಂಡತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿರುವಿ, ಪರೀಕ್ಷಿಸಿದ ನಂತರ ಡಾಕ್ಟರ ಮುಖ ಅರಳಿದ್ದು ನೋಡಿ ನೀನು ಗಾಬರಿಗೊಳ್ಳುತ್ತೀ… ಆಗ ಡಾಕ್ಟರ್ ಹೇಳುತ್ತಾರೆ +“ಶಾಸ್ತ್ರಿಯವರೇ ನೀವು ತಂದೆಯಾಗ್ತಿದ್ದೀರಿ… ಅಂತ”… ಆಗ ನಿನ್ನ ಮುಖ ಹಿರಿಹಿರಿ ಹಿಗ್ಗಿ ಕುಂಬಳಕಾಯಿಯಾಗುತ್ತದೆ. +ನುರಿತ ನಾಟಕೀಯ ಶೈಲಿಯಲ್ಲಿ ‘ಥ್ಯಾಂಕ್ಸ್ ಡಾಕ್ಟರ್ ಥ್ಯಾಂಕ್ಸ್’ ಎಂದು ಹೇಳುವಿ. ಗರ್ಭಿಣಿಯ ಆರೈಕೆ ಕುರಿತು ಅವರು ನಿನಗೆ ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇಂಥಾದ್ದು ಇಷ್ಟು ಪ್ರಮಾಣದಲ್ಲಿ ಕುಡಿಯಬೇಕು, ತಿನ್ನಬೇಕು… ಇತ್ಯಾದಿ. ಮಾನಸಿಕವಾಗಿಯೂ ಗರ್ಭಿಣಿ ನೆಮ್ಮದಿಯಿಂದಿರಬೆಕೆಂದು ಹೇಳುತ್ತರೆ. ಆಗ ನೀನು ಹ್ಹಾ! ಹ್ಹೂ ಎಂದು ಉದ್ಗರಿಸುವಿ ಪೆದ್ದನಂತೆ. ಆ ಕೂಡಲೆ ನೀನು ನಿನ್ನ ತಾಯಿಯ ಗರ್ಭದಲ್ಲಿದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವಿ. ತಾಯಿ ಅನುಭವಿಸಿದ ಸಂಕಟ, ಸಂತೋಷ ಊಹಿಸಿಕೊಳ್ಳುವಿ… ಇಂಥ ಊಹೆಗಳಿಂದ ನಿನಗೆ ಹೆಂಡತಿ ಬಗ್ಗೆ ಪ್ರೀತಿ ಕಾಕ್ಕುಲಾತಿ ಹೆಚ್ಚುತ್ತದೆ; ಹುಟ್ತುವ ಮಗು ಗಂಡೊ; ಹೆಣ್ಣೋ ಎಂಬ ಸಂದೇಹ ಕಾಡಲಾರಂಭಿಸುತ್ತದೆ. ತಾನು ಗರ್ಭಿಣಿ ಎಂದು ತಿಳಿದ ವರಲಕ್ಷ್ಮಿಯ ಮುಖದಲ್ಲಿ ಹೆಮ್ಮೆ ಮೂಡುತ್ತದೆ. ಜಂಗಮರುಂಡ ಗಂಗಾಳದಂಥ ತನ್ನ ತವರುಮನೆಯನ್ನು ನೆನಪಿಸಿಕೊಂಡು ಮತ್ತೆ ಆಕೆ ಮ್ಲಾನವದನೆಯಾಗುವಳು. ಹಾಲುಂಡ ತವರು ಎಲ್ಲ ನೀನೆ ಎಂಬಂತೆ ಆಕೆ ನಿನ್ನ ಕಡೆ ನೋಡಿ ನಿಟ್ಟುಸಿರು ಬಿಡುತ್ತಾಳೆ. ಆ ಕ್ಷಣ ಆಕೆಯನ್ನು ನೀನು ಅಪ್ಪಿಕೊಂಡು ಮುದ್ದಿಸುತ್ತೀ… ಧೈರ್ಯ ನೀಡುತ್ತೀ… ಅಜ್ಜಿಯಾಗುವಿ ಎಂದು ಕೊಟ್ಟುರಿಗೆ ಸುದ್ದಿ ತಿಳಿಸುತ್ತೀ… ಅಜ್ಜಿಯ ಚರಪಟ್ಟಾಧ್ಯಕ್ಷೆ ಸ್ತಾನ ಅಲಂಕರಿಸಲಿರುವ ಕ್ಷಣಗಳನ್ನು ನೆನೆದು ಪುಳಕಗೋಳ್ಳುತ್ತ ಅಲುಮೆಲಮ್ಮ ಸೀದಾ ನಿಮ್ಮ ಮನೆಗೆ ಬಂದುಬಿಡುತ್ತದೆ. ಗರ್ಭಿಣಿ ಸೊಸೆಯ ಮೇಲೆ ವಾತ್ಸಲ್ಯದ ಮಹಾಪೂರ ಹರಿಸುತ್ತದೆ. ಅವರಿಬ್ಬರು ಮತ್ತೆ ಕಚ್ಚಾಡಬಹುದೆಂದು ಊಹಿಸುತ್ತೀ… ಸೋಲುವುದೇ ಆನಂದದ ಅನುಭವ. ಗೆಳೆಯರೊಂದಿಗೆ ಆ ಆನಂದವನ್ನು ಹಂಚಿಕೊಳ್ಳುವ ತವಕ. ಬ್ಯಾಂಕಿಗೆ ಹೋಗುತ್ತೀ. ಸಂತೋಷದ ಕಾರಣ ಹೇಳುತ್ತೀ. ಅವರಿಗೆ ‘ಎಸ್ಕೇಸಿ’ ತರಿಸುತ್ತೀ…” ಎಂದು ಸವಿವರವಾಗಿ ವಿವರಿಸಿ ನಂತರ – +“ಆದರೆ ಇದೆಲ್ಲ ಸರಿಕಣಪ್ಪಾ! ಈ ಎಲ್ಲ ವಿವರಗಳು ಜನಸಾಮಾನ್ಯ ಓದುಗರಿಗೆ ಈಗಾಗಲೆ ಅರ್ಥ ಆಗಿರ್‍ತವೆ. ಪತ್ನಿಯ ಆಯುರಾರೋಗ್ಯ ಬಯಸಿ ಪತಿಯು ಕೊಲ್ಲೂರು ಮೂಕಾಂಬಿಕೆಗೆ ಸಹಸ್ರ ಕುಂಕುಮಾರ್ಚನೆ ಮಾಡಿಸುವುದಾಗಿ ಹರಕೆ ಹೊತ್ತನು ಎಂಬ ವರ್ಣಾತ್ಮಕ ವಿವರಗಳು ಈಗಾಗಲೇ ಜನಪ್ರಿಯ ಕಥಾನಕಗಳಲ್ಲಿ ಬಂದಿವೆ. ಈಗ ಓದುಗರ ಕುತೋಹಲವಿರುವುದು ನಿನಗೂ ಮತ್ತು ಅನಸೂಯಳಿಗೂ ಹೇಗೆ ಸಂಬಂಧವೇರ್ಪಟ್ಟಿರು ಎಂಬ ಬಗ್ಗೆ. ದಯವಿಟ್ಟು ಅದರ ಬಗ್ಗೆ ಹೇಳಿ ಪುಣ್ಯ ಕಟ್ಟಿಕೋ ಮಹಾರಾಯ” ಎಂದು ಅಂಜಲೀಬದ್ಧನಾಗಿ ಕೇಳಿಕೊಂಡೆನು. +ನನ್ನ ಮಾತು ಕೇಳಿ ಶಾಮಣ್ನ ಪಾತ್ರವು ಚಿಂತಾಕ್ರಾಂತವಾಯಿತು. ಅದರ ತುಟಿಗಳು ಕಂಪಿಸತೊಡಗಿದವು. ಮುಖದ ಸ್ನಾಯುಗಳು ಹಿಂದಕ್ಕೂ ಮುಂದಕ್ಕೂ ಸರಿದಾಡಿದವು. ಒಂದು ಕ್ಷಣ ಕಣ್ಣು ಮುಚ್ಚಿ ನಿಟ್ಟುಸಿರು ಬಿಡುತ್ತ ತೆರೆಯಿತು. ನನ್ನನ್ನೆ ತೀಕ್ಷ್ಣವಾಗಿ ದಿಟ್ಟಿಸಿತು. ಅದನ್ನು ಅದರ ಪಾಡಿಗೆ ಬಿಟ್ಟು ಹೆಂಡತಿ ತಂದುಕೊಟ್ಟ ಚಹಕುಡಿದೆ. +“ನೋಡು, ಅನ್ನಪೂರ್ಣ… ನನ್ನ ಪ್ರೀತಿಯ ಗೆಳೆಯನಾದ ಶಾಮಣ್ಣ ಹಸ್ತಪ್ರತಿಯೊಳಗೆ ಹೇಗೆ ಮಿಸುಕಾಡುತ್ತಿದ್ದನೆ… ಅವನ ಪರಿಸ್ಥಿತಿ ಸಾಮಾಜಿಕವಾಗಿ ಬಿಗಡಾಯಿಸಿದ್ದಾಗ ನೀನೆ ಒಮ್ಮೆ ಏನ್ರೀ ಶಾಮಣ್ಣ ಅಂತೊಬ್ಬ ಗೆಳೆಯ ನಿಮಗಿದ್ದಾನಲ್ಲ… ಆತನಿಗೂ ನಿಮ್ಗೂ ಆಗಾಗ್ಗೆ ಜಗಳ ಆಗ್ತಿತ್ತಂತೆ, +ಆದ್ರೂ ನೀವು ಪರಸ್ಪರ ಕಂಡೊಡನೆ ಹಲೋ ಹಲೋ ಅಂತಿದ್ದರಂತಲ್ಲ ಎಂದು ಕೇಳಿದ್ದಿ. ಸಾಮಾಜಿಕವಾಗಿ ಅಪಭ್ರಂಶಗೊಂಡಿರುವ ಅವನನ್ನು ನಿನಗೆ ಪರಿಚಯ ಮಾಡಿಸಿರಲಿಲ್ಲ. ಈಗ ಇಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ನೋಡು” ಎಂದು ಹೇಳಬೇಕೆನ್ನಿಸಿತು. +ಅಕ್ಷರಗಳ ಕ್ರೋಟಾನ್ ಪೊದೆಗಳ ನಡುವೆ ತಲೆ ಮರೆಸಿಕೊಂಡಿರುವ ಅವನನ್ನು ಆಕೆ ಗುರುತಿಸಲಾರಳು ಎಂದುಕೊಂಡು ಸುಮ್ಮನಾದೆ. ಆದರೆ ಶಾಮಣ್ಣನ ಪಾತ್ರವು ಮಾತ್ರ ಆಕೆಯನ್ನು ನೋಡಿರದೆ ಇರಲಿಲ್ಲ. “ಒಳ್ಳೆ ಹೋಂಸಿಕ್‌ನ ಕೈಲಿ ಸಿಕ್ಕಿಹಾಕಿಕೊಂಡಿದ್ದೀನಲ್ಲಪ್ಪಾ ಶಿವನೇ. ಬೇರೆ ಯಾವ ವಿಷಯದ ಬಗ್ಗೆ ನಿಸ್ಸಂಕೋಚವಾಗಿ ಹೇಳಬಹುದು. ಆದರೆ ಅನಸೂಯಳ ಪರಿಚಯಕ್ಕೆ ಕಾರಣವಾದ ಘಟನೆ ಬಗ್ಗೆ ಹೇಗೆ ಹೇಳುವುದು? ಆತ್ಮಹತ್ಯಾ ಸದೃಶವಾದ ಘಟನೆ ಅದು… ಹೇಳದಿದ್ದರೆ ಬಾಯಿಗೆ ಬಂದಂತೆ ಬರೆದು ಬಿಸಾಕಲಿಕ್ಕೂ ಹೇಸುವವನಲ್ಲ ಈತ… ನಾನೇನು ತಪ್ಪು ಮಾಡಿದ್ದೀನಂತ ಹಿಂಜರಿಯಲಿ? ಎಲ್ಲರೂ ಮಾಡಿದ್ದೇ ನಾನು ಮಾಡಿದ್ದು! ಅದರಲ್ಲಿ ತಪ್ಪೇನು… ಹೇಳಿ ಬಿಡುವುದೇ ವಾಸಿ” ಎಂದು ಮನದಲ್ಲಿ ಮಂಡಿಗೆ ತಿಂದು ಶಾಮಣ್ಣ ಪಾತ್ರವು ಅಕ್ಷರಗಳಿಮ್ದ ಮೆಲ್ಲಗೆ ನವನೀತದಂತೆ ತೇಲಿ ಬಂದಿತು. “ಹೇಳ್ತೀನಿ ಮಾರಾಯ ಹೇಳ್ತೀನಿ ಅದನ್ಯಾಕೆ ಮುಚ್ಚಿಟ್ಟುಕೊಳ್ಳಲಿ” ಎಂದು ಶುರು ಮಾಡಿತು. +* +* +* +ಆಕೆ ಬಹು ಪತಿವ್ರತಾ ಶಿರೊಮಣಿಯಂತೆ ಉದಾತ್ತಧ್ಯೇಯದ ಹೆಂಗಸಾಗಿರಲಿಲ್ಲ. ಒಂದೇ ಮಾಪಕದಿಂದ ಎಲ್ಲ ಗಂಡಸರನ್ನು ಅಳೆಯುವಂತೆ ನನ್ನನ್ನೂ ಅಳೆದಂಥವಳು ಕಣಪ್ಪಾ… ಆಕೆಯೊಂದಿಗೆ ನನ್ನ ದೈಹಿಕ ಸಂಬಂಧವೇರ್ಪಡಬಹುದು ಅಂತ ನಾನುಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಪರಸ್ತ್ರೀಯರ ವಿಷಯದಲ್ಲಿ ನಾನು ಮಾನಸಿಕವಾಗಿ ಉದ್ರೇಕಗೋಳ್ಳುತ್ತಿದ್ದೆನೇ ಹೊರತು ದೈಹಿಕವಾಗಿ ಸಂಬಂಧವೇರ್ಪಡಿಸಿಕೊಳ್ಳಲು ನಾನೆಂದೂ ಮುನ್ನುಗ್ಗುತ್ತಿರಲಿಲ್ಲ. ಹಾಗೆ ನಾನು ಪ್ರಯತ್ನಪಟ್ಟಿದ್ದಲ್ಲಿ ಮಧುಚಂದ್ರವೆಂಬ ಅಣಕಕ್ಕೆ ಹೆಂಡತಿಯೊಂದಿಗೆ ಶೃಂಗೇರಿಗೆ ಹೋಗಿದ್ದಾಗಲೇ ಮಾಡಬಹುದಿತ್ತು. ತುಂಗೆಯಲ್ಲಿ ಸ್ನಾನ ಮಾಡುವಾಗ ತಿರಮಕೂಡಲು ನರಸೀಪುರದ ಶಾಮಲವರ್ಣದ ಕೋಮಟಿಗರ ಮಹಿಳೆಯೋರ್ವಳು ಕಣ್ಣುಗಳಿಂದ ನನ್ನನ್ನು ಅಟಕಾಯಿಸಿದ್ದಳು, ಹೆಂಡತಿಯ ಉಗ್ರವ್ರತೋಪಾಸನೆಯಿಂದಾಗಿ ನನಗೂ ಆಸೆಯಾಯಿತು ಅಂತಿಟ್ಟುಕೋ… ಮುಂದುವರೆಯುವುದು ಯಾಕೋ ನನ್ನಿಂದ ಸಾಧ್ಯವಾಗಲಿಲ್ಲ. ರುದ್ರನಾಯಕನ ಮಗಳು ಅನಸೂಯಳೊಂದಿಗೆ ಲೈಂಗಿಕ ಮುದ್ರೆಯೊತ್ತಲಿಕ್ಕೆ ನಾನು ಸಾಕಷ್ಟು ಸ್ವತಂತ್ರನಿದ್ದೆ. (ಇಗೋ, ಮತ್ತೊಂದು ವಿಷಯ ಉತ್ತರದ ಕಡೆ ದೀರ್ಘಕಾಲ ಹೋಗಿದ್ದ ರುದ್ರನಾಯಕ ರುದ್ರಾನಂದಾವದೂತನಾಗಿ ಬೆಂಗಳೂರಿಗೆ ಬಂದು ನೆಲೆಸಿ ಐದಾರು ತಿಂಗಳಾಗಿದೆ… ಆತ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸಿ ಆಳುವ ಮತ್ತು ವಿರೋಧ ಪಕ್ಷದ ಅನೇಕ ಧುರೀಣರ ಗಮನ ಸೆಳೆದಿದ್ದಾನೆ. ಅನೇಕ ಜನ ಸಿನಿಮಾ ನಿರ್ಮಾಪಕರೂ, ನಿರ್ದೇಶಕರೂ; ಜನಪ್ರಿಯ ನಟ ನಟಿಯರೂ ಆತನ ದರ್ಶನಕ್ಕಾಗಿ ಸಾಲು ಸಾಲಾಗಿ ನಿಂತು ಕಾಯುತ್ತಿದ್ದಾರೆ. ಉತ್ತರ ಭಾರತದ ಬನ್ಸಿಲಾಲ್ ಮಿರ್ದಾ, ಮೆಹ್ರಾ, ಗ್ರೋವರ್, ಮೊದಲಾದ ರಾಜಕಾರಣಿಗಳೂ; ಟಾಟಾ, ಬಿರ್ಲಾ, ಮಫತ್ಲಾಲ್ ಮೊದಲಾದ ಕೈಗಾರಿಕೋದ್ಯಮಿಗಳೂ ಆತನ ಪರಮ ಶಿಷ್ಯ ವಲಯದಲ್ಲಿ ಈಗಾಗಲೆ ಸೇರಿರುವರಂತೆ, ಆತನ ಮಂತ್ರದಿಂದಾಗಿಯೇ ರಾಷ್ಟ್ರಪತಿಗಳ ಗಬ್ಬು ಲೋಳೆಯನ್ನು ಸ್ರವಿಸುತ್ತಿದ್ದ ಎಡಗಿವಿ ಸಂಪೂರ್ಣ ಆರೋಗ್ಯವಾಗಿರುವುದಂತೆ, ಫ್ರಾಂಸ್ ದೇಶದಲ್ಲಿ ವಿಶೇಷವಾಗಿ ತಯಾರಿಸಲಾದ ಸೆಂಟ್ ಅನ್ನು ಗುಟ್ಟಾಗಿ ತರಿಸಿ ಅರಳೆಯಲ್ಲದ್ದಿ ಕಿವಿಯಲ್ಲಿಟ್ಟುಕೊಳ್ಳುತ್ತಿದ್ದುದೂ ಅದಾ ಪರಿಮಳದಲ್ಲಾವುದೋ ಮಾಂತ್ರಿಕ ಶಕ್ತಿ ಇರುವುದೆಂದೂ ಅದರೀದಾಗಿಯೇ ಅವರು ಪ್ರಧಾನ ಮಂತ್ರಿಗಳನ್ನೂ ಅವರ ಸಚಿವ ಸಂಪುಟವನ್ನು ಕೇರ್ ಮಾಡುತ್ತಿಲ್ಲವೆಂದೂ ಕೆಲವು ರಾಜಕಾರಿಣಿಗಳು ಪಾರ್ಲಿಮೆಂಟಿನಲ್ಲಿ ಹುಯಿಲೆಬ್ಬಿಸಿದ್ದ ಸುದ್ದಿ ಎಲ್ಲ ಪತ್ರಿಗೆಗಳಲ್ಲಿ ಪ್ರಕಟವಾಗಿತ್ತು. ನೀವು ಗಮನಿಸಿರಬಹುದು. .. ಆ ರಾಷ್ಟ್ರಪತಿಗಳೇ ತಮ್ಮ ಎಡಗಿವಿ ಗುಣವಾದ ಕಾರಣಕ್ಕೆ ಅದೇ ದೆಹಲಿಯ ಕಮಲಾಕಾರದ ಬವಾಯಿ ಧ್ಯಾನ ಮಂದಿರದಲ್ಲಿ ಬೀಡುಬಿಟ್ಟಿದ್ದ ರುದ್ರಾನಂದಾವಧೂತರ ಬಳಿಗೆ ಬಂದು ಪಾದಾಭಿವಂದನೆ ಮಾಡಿದ ಫೋಟೋಗಳನ್ನೂ ಎಲ್ಲ ಪತ್ರಿಕೆಗಳೂ ಪ್ರಕಟಿಸಿದವು. ನೀನು ಗಮನಿಸಿದೆಯೊ! ಇಲ್ಲವೋ! ಈಗ ಆತ ತನ್ನ ನೂರೊಂದು ಮಂದಿ ಸ್ತ್ರೀ ಪುರುಷ ಶಿಷ್ಯರೊಂದಿಗೆ ಕರ್ನಾಟಕಕ್ಕೆ ಬಂದಿರುವುದು ರಾಜ್ಯ ರಾಜಕಾರಣವನ್ನು ಆಮೂಲಾಗ್ರ ಬದಲಾಯಿಸಲಿಕ್ಕೇ ಅಮ್ತ. ದೇವಲೋಕದ ನಂದನವನದಲ್ಲಿ ವಾಸಿಸುವ ದುಂಬಿಗಳೆಲ್ಲವು ಆತನ ಜಿಹ್ವಾಗ್ರದ ಮೇಲೆ ನೆಲೆಸಿರುವವಂತೆ… ಅದಕ್ಕೆ ಆತ ‘ಗುಂಯ್ ಎಂದೊಡನೆ ಪಾಪ, ನರಕ ಎಲ್ಲವೂ ಹೇಳದೆ ಕೇಳದೆ ಓಡಿ ಹೋಗಿ ಭಕ್ತರ ಇಷ್ಟಾರ್ಥಗಳು ಆ ಕ್ಷಣ ಕೈಗೂಡಿ ಬಿಡುವವಂತೆ… ಪರಮ ದೈವಭಕ್ತರೂ, ಸನಾತನ ಪ್ರೇಮಿಗಳೂ ಆದ ಮುಖ್ಯಮಂತ್ರಿಗಳು ಆತಗೆ ಆಶ್ರಮ ನಿರ್ಮಿಸಿಕೊಳ್ಳಲೆಂದು ನೆಲಮಂಗಲದ ಬಳಿ, ರಾಷ್ಟ್ರೀಯ ಹೆದ್ದಾರಿಗಂಟಿಕೊಂಡಂತೆ ಒಂದು ನೂರಾ ಐವತ್ತೆರಡೆಕರೆ ಇಪ್ಪತ್ತೇಳು ಸೆಂಟ್ಸ್ ಜಮೀನು ಮುಂಜೂರು ಮಾಡಿರುವರಲ್ಲದೆ ಸರಕಾರದ ಬೊಕ್ಕಸದಿಂದ ಒಂದು ಕೋಟಿ ಬಿಡುಗಡೆ ಮಾಡಿ ವಿರೋಧ ಪಕ್ಷದವರ ಟೀಕೆಗೆ ಗುರಿಯಾಗಿರುವರಂತೆ. ಕರ್ನಾಟಕದ ಏಳೆಂಟು ಕೋಟಿ ಪ್ರಜೆಗಳ ಕಲ್ಯಾಣೊದ್ಧಾರ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ರುದ್ರಾನಂದಾವಧೂತರು ಕರ್ನಾಟಕದ ಮಹಾನ್ ಅಲೌಕಿಕ ಆಧ್ಯಾತ್ಮದ ಆಸ್ತಿ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿರುವರಂತೆ. ಹೀಗೆ ಸಂಪಾದಿಸುತ್ತಿರುವ ಹಣವನ್ನು ಆತ ಗುಟ್ಟಾಗಿ ತಮ್ಮ ಮಗಳ ಬಳಿಗೆ ಸಾಗಿಸುತ್ತಿರುವವರಂತೆ. ಅಂತರಾಷ್ಟ್ರೀಯ ಇನ್‌ಸ್ಟ್ಯಾಂಟ್ ಫುಡ್ ತಯಾರಿಕಾ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ರಘುರಾಮ ಆಗಾಗ್ಗೆ ಉಪನ್ಯಾಸಕೊಡುವ ನೆಪದಲ್ಲಿ ವಿದೇಶಗಳಿಗೆ ಹಾರುತ್ತ ಆ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಭದ್ರಪಡಿಸುತ್ತಿರುವನಂತೆ. ಮುಂದೊಂದು ದಿನ ಎಕ್ಸಾರ್‌ಸಿಸ್ಟ್‌ಥರದ ಭಯಾನಕ ಇಂಗ್ಲೀಷ್ ಚಿತ್ರವನ್ನು ಕೊಪ್ಪೆಲಾ ಎಂಬುವವನ ನಿರ್ದೇಶನದಲ್ಲಿ ತೆಗೆಯಬೇಕೆಂದು ಪೂರ್ವಸಿದ್ಧತೆ ನಡೆಸಿರುವನಂತೆ. ಇದು ನಿಜ… ಬೇಕಾದರೆ ನೀನು ಹೋಗಿ ನೋಡಿ ಸತ್ಯಾಸತ್ಯಗಳನ್ನು ತಿಳಿದುಕೊಳ್ಳಬಹುದು) ಆದರೆ ಆಕೆ ನನ್ನನ್ನು ತನ್ನ ಹೃದಯದಲ್ಲಿ ಉದಾತ್ತ ಪ್ರೇಮಿಯ ಸ್ಥಾನದಲ್ಲಿರಿಸಿದ್ದಳೋ, ಕಾಮಾತುರನ ಸ್ಥಾನದಲ್ಲಿರಿಸಿದ್ದಳೋ, ಸೊದರ ಸ್ಥಾನದಲ್ಲಿರಿಸಿದ್ದಳೋ, ನನಗೊಂದೂ ಅರ್ಥವಾಗದೆ ಹತ್ತಿರವಿದ್ದರೂ ಬಹುದೂರ ಉಳಿದುಬಿಟ್ಟೆ. ಇನ್ನು ಜಲಜಾಕ್ಷಿ ತನ್ನ ರಫ್‌ನೆಸ್ ನಡುವಳಿಯಿಂದಾಗಿ ನನ್ನಲ್ಲಿ ಲೈಂಗಿಕಾಸಕ್ತಿ ಹುಟ್ಟಿಸಲೇ ಇಲ್ಲ. ನನಗೆ ಮೊದಲಿಂದಲೂ ಬಾಡಿಬಿಲ್ಡರ್ಸ್‌ಗಳೆಂದರೆ ಎಲ್ಲಿಲ್ಲದ ಹೆದರಿಕೆ. ಇನ್ನು ನನಗೆ ಮುಂದೆಂದೂ ಯಾವ ಸ್ತ್ರೀಯೊಂದಿಗೂ ಲೈಂಗಿಕ ಸಂಪರ್ಕವಿಟ್ಟುಕೊಳ್ಳಳು ಸಾಧ್ಯವಗಲೇ ಇಲ್ಲ. ಇದಕ್ಕೆ ಪ್ರಮುಖ ಕಾರಣವನು ನಿನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದೇನೆ. ಕೇಳಿಸಿಕೋ… ನನ್ನ ಶಿಶ್ನ ತುಂಬ ಚಿಕ್ಕದು. ಬಾಕಿ ಟೈಂನಲ್ಲಿ ಎರೆಕ್ಟಾಗಿರ್ತದೆ. ಆದರೆ ಹೆಂಗಸರು ಲೈಂಗಿಕವಾಗಿ ಇಷ್ಟ ಪಡುತ್ತಾರೆ ಎನ್ನು ಕ್ಷಣದಲ್ಲಿ ಇದ್ದಕ್ಕಿದ್ದಂತೆ ಮುದುಡಿಕೊಂಡು ಬಿಡುತ್ತದೆ. ಈಡಿಪಸ್ ಕಾಂಪ್ಲೆಕ್ಸ್ ಅಂತೀಯೋ ಸುಡುಗಾಡಂತೀಯೋ… ನಂಗೊತ್ತಿಲ್ಲಪ್ಪಾ… ನನ್ನ ನೀನು ತಾಯಿಗ್ಗಂಡ ಎಂದು ಬೈದರೂ ಸರುಯೇ.. ಹೇಳಿ ಬಿಡ್ತಿದೀನಿ. ನನ್ನ ತಾಯಿ ನನ್ನ ಕೈಯಿಂದ ಬೆನ್ನುಜ್ಜುತ್ತಿದ್ದಳು… ಆಕೆಯ ಬೆನ್ನು ಆಕರ್ಷಕವಾಗಿತ್ತು. ಸ್ಪರ್ಷದ ಮೂಲಕ ನನ್ನಲ್ಲಿ ರೋಮಾಂಚನದ ತರಂಗಗಳನ್ನು ಹರಡಿಸುತ್ತಿದ್ದಳು. ಒಮ್ಮೊಮ್ಮೆ ಆಕೆ ನನ್ನನ್ನು ತನ್ನ ಬೆನ್ನುಜ್ಜಲು ಕರೆಯದಿದ್ದಾಗ ನನಗೆ ಅಳುವೇ ಬಂದು ಬಿಡುತ್ತಿತ್ತು. ಆಕೆಯ ಬೆನ್ನು ಉಜ್ಜುವುದು ಕೂಡ ನನ್ನ ಪಾಲಿಗೆ ಹಸ್ತ ಮೈಥುನ ಜಾತಿಯ ಮತ್ತೊಂದು ಕ್ರಿಯೆಯಾಗಿತ್ತು. ಯಾಕೆಂದರೆ ನನ್ನ ಅರಿವಿಗೆ, ಕೈಗೆ ಎಟುಕುತ್ತಿದ್ದ ತಾಯಿ ಮಾತ್ರ ಏಕ ಮಾತ್ರ ಮಹಿಳೆಯಾಗಿದ್ದಳು. ಮತ್ತೊಂದು ವಿಷಯವೆಂದರೆ ಚಿಕ್ಕ ಗಾತ್ರದ ಶಿಶ್ನವನ್ನು ಯಾರಾದರೂ ನೋಡಿ ಅಪಹಾಸ್ಯ ಮಾಡಿಯಾರೆಂಬ ಅಳುಕು ನನ್ನನ್ನು ಕಾಡುತ್ತಿತ್ತು. ಗುದದ್ವಾರವೂ ಚಿಕ್ಕದಿತ್ತು. ಆದ್ದರಿಂದ ಘನಪದಾರ್ಥ ತಿನ್ನಲು ಹಿಂಜರಿಯುತ್ತಿದ್ದೆನು. ಹಾಗೆಯೇ ಶಿಶ್ನದ ದ್ವಾರಕೂಡ… ಮಲ ಮೂತ್ರ ವಿಸರ್ಗಿಸುವಾಗ ಸಾಕಷ್ಟು ತಿಣುಕುತ್ತಿದ್ದುದು ಅನಿವಾರ್ಯವಾಗಿತ್ತು. ಆದ್ದರಿಂದ ನಾನು ಯಾರೊಂದಿಗೂ ಶೌಚಕಾರ್ಯಕ್ಕೆ ಹೊಗುತ್ತಿರಲಿಲ್ಲ. ಒಂಟಿಯಾಗಿ ಬಹುದೂರ ಹೋಗಿ ಸುತ್ತಮುತ ಯಾವ ನರಹುಳುವಿಲ್ಲದಿರುವುದನ್ನು ಖಚಿತಪಡಿಸಿಕೊಂಡು ಪೊದೆಗಳ ನಡುವೆ ಕುತು ಮುಗಿಸುತ್ತಿದ್ದೆ. ಇಷ್ಟೊಂದು ಸಂಕೋಚದಿಂದ ಮುದುಡಿ ಹೋಗುತ್ತಿದ್ದ ನಾನು ಪ್ರೇಮ ಮದುವೆ ಎಂದರೆ ಹೆದರುತ್ತಿದ್ದೆ. ಮದುವೆಯ ನಂತರ ಒಂದು ದಿನ ‘ಸೌಂದರ್ಯ ಲಹರಿ’ ಯ ಪಠಣದಿಂದ ಉದ್ರೇಕಗೊಂಡು ನನ್ನನ್ನು ಅಂಗಾತಮಲಗಿಸಿ ತುಂಬ ಹೊತ್ತಿನ ತನಕ ನನ್ನ ಶಿಶ್ನದೊಂದಿಗೆ ಬಗೆ ಬಗೆಯ ಆಟ ಆಡಿದಳು… ಅದಕ್ಕೊಂದು ವ್ಯಕ್ತಿತ್ವ ಸೃಷ್ಟಿಸಿದಳು. ಸಂಕೋಚ ಭಯ, ಆತಂಕ ದೂರ ಮಾಡಿದಳು… ಅತ್ಯತಿದ್ದಷ್ಟದಶಾಂಗುಲಂ… ಎಂದು ಮುಂತಾಗಿ ಪುರುಷಸೂಕ್ತ ಜಪಿಸುತ್ತ ಅದೇ ನಾನಾಗಿದ್ದೆ…. ಕ್ರಮೇಣ ಪ್ರವೇಶಿಸಿದಳು… ದೇದಿಪ್ಯಮಾನವಾಗಿ ಹೊಳೆದ ಗರ್ಭಗುಡಿಯನ್ನು ನೂರೆಂಟು ವಾದ್ಯನಿನಾದಗಳೊಂದಿಗೆ ಉತ್ಸವ ಮೂರ್ತಿ ತುಂಬುತ್ತಿರುವಂಥ ಅನುಭವವಾಯಿತು. ಅದೊಂದು ನಿರ್ವಚನೀಯ ಆನಂದವಾಗಿತ್ತು… ಅಂಥ ಆನಂದ ನೀಡಿದ ದಿವ್ಯ ಮಹಿಳಾಮೂರ್ತಿಯಾದ ವರಲಕ್ಷ್ಮಿ ನನ್ನ ಪಾಲಿಗೆ ಆರಾಧ್ಯದೈವವಾದಳು. ಆ ದೈವ ಪ್ರವೇಶಕ್ಕೆ ನಿಯೋಗ ಸೂತ್ರಗಳ ಆಧಾರದಿಂದ ನಿರಾಕರಿಸಿದಾಗ ನಾನು ಕನಲುತ್ತಿದ್ದೆ… ಅಂಗಲಾಚುತ್ತಿದ್ದೆ… ದೈಹಿಕ ಸ್ಪಂದನ, ಸ್ಪರ್ಷ; ಆಕ್ರಂದನಗಳಿಗಾಗಿ ಮೊರೆ ಇಡುತ್ತಿದ್ದೆ… ಆಯುರ್ವೇದದ ಬ್ರಹ್ಮಚಾರಿತ್ರ್ಯದ ಶ್ಲೋಕ ಸೃಂಖಲೆಯಿಂದ ಬಂಧಿತಳಾಗಿದ್ದ ಆಕೆ ನಿಯಮಿತ ಮತ್ತು ವಂಶೋದ್ಧಾರಕ್ಕೆ ಮಾತ್ರ ಸಂಭೋಗವೆಂಬ ಪವಿತ್ರ ಕಾರ್ಯವನ್ನು ಕೈಗೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸಲಹೆ ನೀಡುತ್ತಿದ್ದಳು. ತಾನು ಅದರಂತೆ ಪಾಲಿಸುತ್ತಿದ್ದಳು… ಇಂಥದೊಂದು ಕೌಟುಂಬಿಕ ವಲಯದಲ್ಲಿ ಸಿಲುಕಿಕೊಂಡಿದ್ದ ನಾನು ಕಚ್ಚೆಹರುಕನಾಗಲು ಹೇಗೆ ಸಾಧ್ಯ? ನೀನೆ ಊಹಿಸು… ನನ್ನ ತಳಮಳ, ದುಗುಡ, ಮೌನಾಕ್ರಂದಗಳನ್ನು… +ಹೌದು ನೀನು ನನ್ನ ಮಾತೃತ್ವದ ಸಾಯುಜ್ಯವನ್ನು ಊಹಿಸಿರುವುದು ಸರಿಯಾಗಿದೆ. ಅದುವರೆಗೆ ತಾಯಿಯೋರ್ವಳ ಮಗನಾಗಿದ್ದ ನಾನು; ಹೆಂಡತಿಯೋರ್ವಳ ಗಂಡನಾಗಿದ್ದ ನಾನು ಕೆಲವು ತಿಂಗಳಲ್ಲಿ ತಂದೆಯಾಗಲಿರುವನೆಂದು ಡಾಕ್ಟರ್ ಶೋಭಾ ತಿಳಿಸಿದಾಗ ಆದ ಆನಂದ ಅಷ್ಟಿಷ್ಟಲ್ಲ… ಆ ಅನಂದವನ್ನು ಹೇಗೆ ಪ್ರಕಟಿಸಬೇಕೆಂದು ನನಗೆ ತಿಳಿಯಲಿಲ್ಲ. ತಾಯ್ತನವೆಂಬುದು ಸೃಷ್ಟಿಶೀಲ ಕಾವ್ಯಕ್ರಿಯೆ ಎಂಬುದು ನನಗೆ ಹೊಳೆಯಲಿಲ್ಲ… ನನ್ನ ಹೆಂಡತಿ ನನ್ನನ್ನು ಮೀರಿ ಬೆಳೆಯುತ್ತಿರುವಳೆಂದುಕೊಂಡೆ… ನನ್ನನ್ನು ಶಿಕ್ಷಿಸುವ, ಪ್ರೀತಿಸುವ, ಸಂಸಾರಿಕ ವ್ಯವಸ್ಥೆಯ ವರ್ಣರಂಜಿತ ಗೋಪುರಕ್ಕೆ ನವರತ್ನ ಖಜಿತ ಕಳಸವೊಂದು ಭ್ರೂಣದ ರೂಪದಲ್ಲಿ ಆಕೆಯ ಗರ್ಭದಲ್ಲಡಗಿ ಕೂತಿದೆ ಎಂದುಕೊಂಡೆ… ಅದು ವೇಗವಾಗಿ ಬೆಳೆದು ಆಕ್ರಮಿಸುತ್ತಿರುವುದೆಂದು ಕೊಂಡೆ. ಹಿತ್ತಲ ದಾಸವಾಳ ಗಿಡದಡಿ ನೆರಳಲ್ಲಿ ಮೆತ್ತನೆಯ ಕುರ್ಚಿ ಮೇಲೆ ಆಕೆಯನ್ನು ಕೂಡ್ರಿಸಿ ಆಕೆಯ ಪುರಾಣ ಸದೃಶ, ಪವಾಡ ಸದೃಶವಾದ ಕಿಪ್ಪೊಟ್ಟೆಯನ್ನು ನೋಡುತ್ತಾ, ಆನಂದಿಸುತ್ತ, ಪುಳಕಗೋಳ್ಳುತ್ತ ಕ್ಷಣಗಳನ್ನು ಎಣಿಸುತ್ತ ಹೋಗಿ ಇನ್ನೂರಾ ಎಂಬತ್ತೆಂಟನೇ ದಿನವನ್ನು ತಲುಪಬೇಕೆಂದುಕೊಂಡೆ. ಆದರೆ ವರಲಕ್ಷ್ಮಿ ನನ್ನ ಕಾವ್ಯಮಯ ಆಲೋಚನೆಯನ್ನು ಪರಸ್ಕರಿಸಲಿಲ್ಲ… ಅನಾಗರೀಕ, ಆದಿವಾಸಿ ಕಲ್ಪನೆ ಎಂದು ದೂರುತ್ತಿದ್ದಳು. ತಾನು ಧರಿಸಿರುವ ಗರ್ಭ ತನ್ನ ಸ್ವಾರ್ಜಿತವೆಂದು ಭಾವಿಸಿದ್ದಳೊ ಏನೋ! ತನ್ನ ಗರ್ಭಸ್ಥ ಮಗು ಹೆಚ್ಚು ಸಾತ್ವಿಕಗಳನ್ನು ರೂಢಿಸಿಕೊಳ್ಳಲೆಂದೋ ಪರಮ ದೈವೀಭೀರುವಾಗಲೆಂದೋ… ಆಕೆ ಪ್ರತಿನಿತ್ಯ ಪವಿತ್ರ ಧಾರ್ಮಿಕ ಗ್ರಮ್ಥಗಳ ಪಠಣ ಮಾಡುತ್ತಿದ್ದಳು… ಆಯಾ ದಿನಕ್ಕೆ ಸಂಬಂಧಿಸಿದ; ಆಯಾ ತಿಥಿಗಳಿಗೆ ಸಂಬಂಧಿಸಿದ; ಆಯಾ ನಕ್ಷತ್ರಗಳಿಗೆ ಸಂಬಂಧಿಸಿದ; ಆಯಾ ದಿನದ ವಾರಸುದಾರರಾದ ದೇವತೆಗಳಿಗೆ ಸಂಬಂಧಿಸಿದಂತೆ ವ್ರತೋಪಾಸನೆ ಮಾಡುತ್ತಿದ್ದಳು… +ಆ ವ್ರತೋಪಾಸನೆಗಳಿಗೆ ಪರಿಕರಗಳನ್ನು ಒದಗಿಸುವುದು ನನ್ನ ದಿನಚರಿಯ ಪ್ರಮುಖ ಅಂಶವಾಗಿತ್ತು. ಅವನ್ನೆಲ್ಲ ಶ್ರದ್ಧೆಯಿಂದ ಪ್ರೀತಿಯಿಂದ ತಂದು ಕೊಡುತ್ತಿದ್ದೆ. ತುಂಬೆ ಹೂವು, ಗರಿಕೆ; ಬಿಲ್ವ ಪತ್ರೆಗಾಗಿ ನಾನು ಕೊತ್ತಲಗಿಯ ಆಜು ಬಾಜಿನಲ್ಲಿದ್ದ ಕುರುಚಲ ಕಾಡಿನಲ್ಲಿ ಅಲೆದಾಡುತ್ತಿದ್ದೆ… ಹಾಗೆ ಅಲೆದಾಡುವ ಸಂದರ್ಭದಲ್ಲಿ ಕೆಲವು ರೈತಾಪಿ ಮಹಿಳೆಯರು ಕಟ್ಟಿಗೆ ಹುಲ್ಲಿನ ಹೊರೆಯನ್ನು ಹೊತ್ತು ಎದುರಾಗುತ್ತಿದ್ದರು. ಅವರ ಸುಂದರ ನಿತಂಬಗಳನ್ನು ಮರೆಯಾಗುವವರೆಗೂ ನೋಡಿ ಸಂತೋಷಪಡುತ್ತಿದ್ದೆ; ಉದ್ರೇಕಗೊಳ್ಳುತ್ತಿದ್ದೆ. ಲೈಂಗಿಕ ಸಾಮರಸ್ಯಕ್ಕೆ ಪೂರ್ಣ ವಿರಾಮ ಜಾರಿಕೊಂಡಿದ್ದ ನಾನು ನನ್ನ ಹವ್ಯಾಸಗಳಾದ ಚಿತ್ರಕಲೆ, ಸಂಗೀತ, ಸಾಹಿತ್ಯದ ಕಡೆ ಹೆಚ್ಚು ಗಮನಹರಿಸಿದೆ… ಕಲಾಪ್ರಕಾರಗಳಿಗೂ ಲೈಂಗಿಕ ಚಟುವಟಿಕೆಗಳಿಗೂ ನಡುವೆ ಗಹನ ವ್ಯತ್ಯಾಸವಿಲ್ಲವೆಂದು ನನ್ನ ಭಾವನೆ… ‘ಶಾಶಾ’ ಎಂಬ ಹೆಸರಿಟ್ಟುಕೊಂಡು ಬರೆದ ವ್ಯಂಗಚಿತ್ರಗಳು ಸಾಕಹ್ಟು ಪತ್ರಿಗೆಗಳಲ್ಲಿ ಪ್ರಕಟಗೊಂಡವು. ವೃಷಭೇಂದ್ರಾಚಾರ್ ತನ್ನ ಮೆಚ್ಚಿನ ಶಿಷ್ಯೆ ರಾಗಿಣಿಯೊಂದಿಗೆ ತಮಿಳುನಾಡಿನ ಧರ್ಮಪುರಿಗೆ ಓಡಿಹೋಗಿದ್ದರಿಂದ ಬಿಕೋ ಎನ್ನುತ್ತಿದ್ದ ಗಂಡನ ಹಾರ್ಮೋನಿಯಮ್ಮನ್ನು ಆತನ ಹೆಂಡತಿ ಸರಸತಮ್ಮ ವಾರದ ಉದರಭರನಕ್ಕಾಗಿ ನನಗೆ ಕಡಿಮೆ ಬೆಲೆಗೆ ಮಾರಿದ್ದಳು… ಅದನ್ನು ವಿರಾಮದ ಸಮಯದಲ್ಲಿ ಎದುರಿಗಿಟ್ಟುಕೊಂಡು ನುಡಿಸುತ್ತಿದ್ದೆ. ಸಣ್ಣ ದ್ವನಿಯಲ್ಲಿ ಹಾಡುತ್ತಿದ್ದೆ. ಶಂಕರಾಭರಣರಾಗವೊಂದನ್ನು ಹೊರತುಪಡಿಸಿ ಮಿಕ್ಕ ರಾಗಗಳನ್ನು ನುಡಿಸುತ್ತಿದ್ದೆ (ಎಲವೋ… ಮುಂದೆ ಎಂದಾದರು ಶಂಕರಾಭರಣರಾಗದ ಆ ದಿಕ್ಷಿತರ ಕೃತಿಯನ್ನು ನೀನು ಹಾಡಿದಿ ಎಂದರೆ ನಿನ್ನ ನಾಲಿಗೆ ತುಕ್ಕು ಹಿಡಿಯುತ್ತದೆ… ಅಂಗವಿಕಲ ಬುದ್ಧಿಗೇಡಿ ಮಕ್ಕಳಿಗೆ ತಂದೆಯಾಗಿ ಪಡಬಾರದ ನೋವು ಅನುಭವಿಸುವಿ ಹುಷಾರ್… ಪೂಜ್ಯರಾದ ಶಾಸ್ರಿಗಳ ಆಜ್ಞೆಯನ್ನು ಉಲ್ಲಂಘಿಸುವುದುಂಟೇನು?). ಅಕ್ಕ ಪಕ್ಕದ ಮನೆಯವರು ಗುಟ್ಟಾಗಿ ಕೇಳಿ ಸಂತೋಷ ಪಡುತ್ತಿದ್ದರು… ಬುಧವಾರಪೇಟೆಯ ಕೊನೆ ಮನೆಗೆ ಬಂದು ಹೋಗುತ್ತಿದ್ದ ನಿವೃತ್ತ ಕನ್ನಡ ಪಂಡಿತರಾದ ನಾಗಭೂಶಣ ಶರ್ಮರು ಲಯದಗುಂಟ ಬಳಿಗೆ ಬಂದು ‘ದುರ್ಗದ ಭೈರವಿ ವೆಂಕಟ ಸುಬ್ಬಯ್ಯ ನವರೇ ನೀನಾಗಿ ಹುಟ್ಟಿರುವಿಯಪ್ಪಾ ’ ಎಂದು ಮೆಚ್ಚಿಗೆಯಿಂದ ಉದ್ಗರಿಸಿ ಹೋದರು… ಇದಾವುದೋ ಪಾತರದವರ ಮನೆ ಎಂದು ಪರಸ್ಥಳದವರು ಬಂದು ನಿಜ ತಿಳಿದುಕೊಂಡು ಹೋದ ಉದಾಹರಣೆಗಳು ಉಂಟು. +ಇನ್ನು ಸಾಹಿತ್ಯ ಅಂದರೆ ಚೌಪದಿ, ಚೌಪದಿ ಅಂದರೆ ಸಾಹಿತ್ಯ ಅಂತ ತಿಳಿದುಕೊಂಡಿದ್ದೆ. ಹಡಗಲಿಯ ತೋಟದ ಮನೆಯಲ್ಲಿ ಜೋತಿಷಿಯ ರೂಪ ಧರಿಸಿ ಅಡಗಿಕೊಂಡಿದ್ದ ಆಂಧ್ರದ ನಕ್ಸಲೀಯ ವೇಣುಗೂ, ಪೋಲೀಸರಿಗೂ ನಡೆದ ಎನ್‌ಕೌಂಟರ್‍ನಲ್ಲಿ ಪ್ರಾಣಾರ್ಪಣೆ ಮಾಡಿದ್ದ ನರಸಪ್ಪ ಎಂಬ ಪಿಸೀಯ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ ಕಾಮ್ರೇಡ್ ಪಶುಪತಿಯ ಭೂಗತ ಕೈ ಬರಹದ ಪತ್ರಿಕೆಗೆ ಆಗೊಮ್ಮೆ ಈಗೊಮ್ಮೆ ‘ಚೂರಿ’ ಗುಪ್ತನಾಮ ಇಟ್ತುಕೊಂಡು ಸರಕಾರದ ಬಗ್ಗೆ ಖಾರವಾದ ಲೆಖನಗಳನ್ನು ಬರೆಯುತ್ತಿದ್ದೆ. ಜೊತೆಗೆ ಮನ್ಮಥ ಎಂಬ ಹೆಸರಿನಲ್ಲಿ ಜನಪ್ರಿಯ ಲೈಂಗಿಕ ಪತ್ರಿಕೆಗೆ ವೈವಿಧ್ಯಮಯ ಸಂಭೋಗ ಕುರಿತು ಲೇಖನಗಳನ್ನು ಬರೆಯುತ್ತಿದ್ದೆ. ವಿಪ್ರ ಎಂಬ ಹೆಸರಿನಿಂದ ಧರ್ಮವಾಣಿ, ವಿಕ್ರಮ, ಮೊದಲಾದ ಧಾರ್ಮಿಕ, ಬಲಪಂಥೀಯ ಪತ್ರಿಕೆಗಳಿಗೂ ಬರೆಯುತ್ತಿದ್ದೆನು. ಆದರೆ ನಿಜನಾಮದಿಂದ ಮಾತ್ರ ಬರೆಯುತ್ತಿರಲಿಲ್ಲ… ಇಷ್ಟು ಮಾಡಿಯೂ ಇರುತ್ತಿದ್ದ ಬಿಡುವಿನ ಸಮಯವನ್ನು ಗುಮುಸಿಗೌಡ, ಪಶುಪತಿಯರೊಂದಿಗೆ ( ಬ್ರಾಹ್ನಣರಾಗಿದ್ದೂ ಯೌವನದಲ್ಲಿ ಕುಸ್ತಿ ದೇಹದಾರ್‍ಧ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಂಗ್ಲಾಧಿಕಾರಿಗಳಿಂದ ಪೈಲ್ವಾನಾಚಾರ್ಯರೆಂದು ಕರೆಸಿಕೊಂಡಂಥವರು) ಅಲೌಕಿಕ ಆಧ್ಯಾತ್ಮಿಕವಾಗಿಯೂ; ಓಬಳೇಶ, ಮಾರುತಿ, ಅಂಜಿನಿ, ಕೊಟ್ರರೇ ಮೊದಲಾದ ಅರಿಷಡ್ವರ್ಗಗಳೊಂದಿಗೆ ಲೌಕಿಕವಾಗಿಯೂ; ( ಈ ಸಂಧರ್ಭದಲ್ಲಿಯೇ ತನ್ನ ಚತುರ್ಭಾಷಾ ಪಾಂದಿತ್ಯದೊಂದಿಗೆ ರಾಖೇಶ ಎಂಬ ಪ್ರಸಿದ್ಧ ಪಿಂಪ್ ಚಕ್ರವರ್ತಿಯ ಪರಿಚಯವಾದದ್ದು) ಹೆಬ್ರಿ, ಇಸ್ಮಾಯಿಲ ಚಂಬಸ್ಯಯ್ಯ, (ಶ್ರೀಮತಿ ಶಾಂತಿ ತನ್ನ ಗಲ್ಫ್ ಪತಿಯೊಂದಿಗೆ ಹನಿಮೂನಿಗೆಂದು ಕೆಮ್ಮಣ್ಣು ಗುಂಡಿಗೆ ಹೋಗಿ ಅಲ್ಲಿಯೇ ಮೊಕ್ಕಂ ಮಾಡಿರುವಳು)ರೊಂದಿಗೆ ನವುಕರಿಕವಾಗಿಯೂ ಕಳೆಯುತ್ತಿದ್ದೆನು. ಒಂದು ವಿಚಿತ್ರವೆಂದರೆ ಗೌಡ, ಪಶುಪತಿಗಳಂಥ ಕಾಮ್ರೇಡರೊಂದಿಗೆ ಮಾತಾಡುವಾಗ ಯಾರು ಯಾರ್‍ಯಾರ ಜೊತೆ, ಯಾವ ಯಾವ ವಿವಿಧ ಲೈಂಗಿಕ ಚಟುವಟಿಕೆ ಆರಂಭಿಸಿದರು ಎಂಬುದು ಚರ್ಚನೀಯವಾಗಿರುತ್ತಿತ್ತು. ಪೈಲ್ವಾನಾಚಾರ್ಯರಿಗಿಂತ, ಶರ್ಮರು ಕುಮಾರವ್ಯಾಸ, ಲಕ್ಷ್ಮೀಶನ ಕಾಲದಲ್ಲಿದ್ದ ಪೈಲ್ವಾನರಿಗೆ ಒತ್ತುಕೊಟ್ಟು ಮಾತಾಡುತ್ತಿದ್ದರು. ಓಬಳೇಶ, ಮಾರುತಿ ಮೊದಲಾದವರು ನಶ್ವರ ಜಗತ್ತಿನ ಬಗ್ಗೆ ಮಾತಾಡುತಿದ್ದರೆ ಹೆಬ್ರಿ ಮತ್ತು ಸಂಗಡಿಗರು ಕೆಮ್ಮಣ್ಣು ಗುಂಡಿಯಂಥ ನಿಸರ್ಗ ಧಾಮದಲ್ಲಿ ತಮ್ಮ ಕೊಲಿಗ್ಗು ಶಾಮ್ತಿಯ ಲೈಂಗಿಕ ಚಟುವಟಿಕೆಯನ್ನು ಊಹಿಸಿ ಮಾತಾಡುತ್ತಿದ್ದರು. ಅದಾ ಸೊಬಗಿನಿಂದ ಪರಿಚಿತಗೊಂಡಿದ್ದ ನಾನು ಎರೋಟಿಕ್ ಮಾತುಗಳನ್ನು ಕೇಳಿ ಆನಂದಿಸುತ್ತಿದ್ದೆ ಮತ್ತು ಗುಪ್ತ ರೀತಿಯಲ್ಲಿ ವಿವಾಹಿತನಾಗಿದ್ದೂ ವಾರಕ್ಕೊಂದೆರಡು ಬಾರಿ ಹಸ್ತ ಮೈಥುನ ಮಾಡಿ ಸುಖ ಪಡುತ್ತಿದ್ದೆನು. ಮಾನಸಿಕವಾಗಿ ಈ ಅವ್ಯವಸ್ಥೆಯಲ್ಲಿದ್ದ ನಾನು ತೋರಿಕೆಗೆ ಮಹಾ ಸೆಕ್ಸೀ ಎಂಬಂತೆ ಕೊಚ್ಚಿಕೊಳ್ಳುತ್ತಿದ್ದೆನು. ಹಾಗೆ ವರ್ತಿಸುತ್ತಿದ್ದೆನು. +ಅಷ್ಟೊತ್ತಿಗಾಗಲೆ ನಾನು ಸದರಿ ಗ್ರಾಮದ ಹಲವು ಪ್ರತಿಭೆಗಳ ತ್ರಿವೇಣಿ ಸಂಗಮ ಎಂದೇ ಹೆಸರಾಗಿ ಬಿಟ್ತಿದ್ದೇ. “ರ್ರೀ… ಅಲ್ಲಿ ಹೊಗ್ತಿದ್ದಾರಲ್ಲ… ಹನುಮಂತೇವ್ರು ಅರ್ಚಕರಿಗೆ ಪ್ಯಾಂಟು ತೊಡಿಸಿದ್ರೆ ಹೇಗಿರುತ್ತೋ ಹಾಗಿದಾರಲ್ಲ ಅವ್ರೆ ಕಣ್ರೀ… ಅವ್ರು ಎಷ್ಟು ಚಂದ ಚಿತ್ರ ಬರೀತಾರೆ ಗೊತ್ತಾ? ಯಾರಾದ್ರು ನೋಡಿದ್ರೆ ಅವ್ರಂಗೆ ಚಿತ್ರ ಬಿಡಿಸಿ ಬಿಡ್ತಾರೆ ನೋಡ್ರಿ” ಎಂದು ಗೃಹಿಣಿಯೋರ್ವಳು ತನ್ನ ಗಂಡಗೆ ಹೇಳಿಕೊಳ್ಳುತ್ತಿರುವುದು ಕಿವಿಗೆ ಬಿತ್ತು. ಅವ್ರು ಚಿತ್ರ ಬರಿತಾರಂತ ನಿನಗೆ ಹೇಗೆ ಗೊತ್ತಾಯ್ತು ಕಣೆ… ಅವ್ರು ಬ್ಯಾಂಕ್ನಲ್ಲಿ ಕೆಲ್ಸ ಮಾಡ್ತಿರೋದು ನಂಗೊತ್ತಿಲ್ಲಂದ್ಕೊಂಡೀ ಏನು” ಎಂದು ಆಕೆಯ ಗಂಡ ಸಿಡುಕುತ್ತಿರುವುದನ್ನೂ ಗಮನಿಸದೇ ಇರಲಿಲ್ಲ. +ಹೀಗೆ ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಕೂಡ… ಲಲಿತಲವಂಗ ಲತಾಪರಿಶೀಲನ… ಎಂಬ ಜಯದೇವನ ಸಾಲುಗಳನ್ನು ಸಣ್ಣಗೆ ಗೊಣಗುತ್ತಿದ್ದುದನ್ನು ಕೇಳಿಸಿಕೊಂಡ ಎಂಥವರಿಗೂ ಈತಗೆ ಹಾಡಲಿಕ್ಕೆ ಬರ್‍ತದೆಂದು ಗೊತ್ತಾಗುತ್ತಿತ್ತು. ಅದು ಇದು ಓದಿದವರಿಗೆ ಗಮನಿಸಿದವರು ಇವನಿಗೆ ಬರೆಯೋ ಐಲು ಬೇರೆ ಇದೆ ಎಂದು ತಮಾಷೆ ಮಾಡದೆ ಇರುತ್ತಿರಲಿಲ್ಲ ಪರಸ್ಪರ. ಆದರೆ ಬ್ಯಾಂಕಿನಲ್ಲಿ ನಮ್ಮ ಕೊಲಿಗ್ಸು ಮಾತ್ರ… ತಮಗೆ ಗೊತ್ತಿಲ್ಲದ್ದು ಇವನಿಗೇನು ಗೊತ್ತೈತೆ… ಇವ್ನೇನು ಮಹಾ… ಗುಮ್ಮನಸುಗ, ಹೋಂಸಿಕ್ಕೂ ಇತ್ಯಾದಿ ಲೇಬಲ್ಲುಗಳನ್ನು ಒಳಗೊಳಗೆ ಅಂಟಿಸಿ ಹೊರಗಡೆ ಮಾತ್ರ “ಏನು ಶಾಸ್ತ್ರಿ… ನೀನು ಚಿತ್ರ ಬಿಡಿಸ್ತೀಯಂತೆ, ನೀನು ಪದ ಹಾಡ್ತೀಯಂತೆ, ನೀನು ಜೂನಿಯರ್ ಕುವೆಂಪು ಅಂತೆ” ಇತ್ಯಾದಿ ಲೇವಡಿ ಮಾಡುತ್ತಿದ್ದರು. ನಾನು ಅವರೆದುರಿಗೆ ಪ್ರತಿಭೆ ಪ್ರಕಟಿಸುವ ಗೋಜಿಗೆ ಹೊಗುತ್ತಿರಲಿಲ್ಲ. ಈ ಒಳಗಾಗಿ ಅವರು ಮೂವ್ವರು ಪರಸ್ಪರ ಸಂಚು ನಡೆಸಿ ಒಲೆಯ ಮೂರು ಗುಂಡುಗಳಂತೆ ಹಲ್ಲು ಕಡಿಯುತ್ತ ಇದ್ದು ಬಿಟ್ಟಿದ್ದರು. ಅದೊಂದು ನಮೂನಿ ಮಾನಸಿಕವಾಗಿ ಮರಣಾಂತಿಕ ಹಲ್ಲೆಯ ಕ್ರಮವೆನ್ನಬಹುದೇನೋ. ಬ್ಯಾಂಕಿನೊಳಗಡೆ ಸೋದರ ವಾತ್ಸಲ್ಯದ ಮೂರು ಟೊಂಗೆಗಳೇ ತಾವೆಂಬಂತೆ ಪೋಜುಕೊಡುತ್ತಿದ್ದ ಅವರು ಎಂಟೀ ಮೀಲ್ಸ್ ಬಾಕ್ಸ್‌ಗಳೊಡನೆ ಬ್ಯಾಂಕು ದಾಟುತ್ತಲೆ ಬಣ್ಣಬದಲಾಯಿಸಿಕೊಂಡು ಬಿಡುತ್ತಿದ್ದರು. ನನ್ನನ್ನು ಜಾತಿವಾದಿ, ಕರ್ಮಠ ಬ್ರಾಹ್ಮಣ, ಮಹಾಸಂಪ್ರದಾಯವಾದಿ ಎಂದು ಬರೆಯುತ್ತಿದ್ದ ಅವರು ಅದೆಂಥ ಕ್ರಿಯಾ ಸ್ವಭಾವ ಉಳ್ಳವರಾಗಿದ್ದರೆಂದರೆ ಹೇಳುತ್ತೇನೆ ಕೇಳು – +ಚಂಬಸ್ಯಯ್ಯ ಪಂಚಮ ಶೀಲ ಲಿಂಗಾಯತರನ್ನು ಜೊತೆ ಮಾಡಿಕೊಂಡು ಇಸ್ಮಾಯಲಿ ಮತ್ತು ಹೆಬ್ರಿ ವಿರುದ್ಧ ಹಲ್ಲು ಮಸೆಯುತ್ತಿದ್ದರೆ ಇಸ್ಮಾಯಿಲ ಅಮಾಯಕ ಮುಸ್ಲಿಮರಿಗೆ ಅವರಿಬ್ಬರ ಬಗ್ಗೆ ಚಾಡಿ ಟೊಂಗು ಟುಸುಕು ಚುಚ್ಚುತ್ತಿದ್ದನು. ಹೆಬ್ರಿ ಬ್ರಾಹ್ಮಣರನ್ನು ಜೊತೆ ಮಾಡಿಕೊಂಡು ಮಾಡುತ್ತಿದ್ದುದು ಅದೇ ಕೆಲಸವನ್ನೇ… ಚಂಬಸಯ್ಯ ವೀರಶೈವ ಮಹಾಸಮ್ಮೇಳನ ಮಾಡಲು ಪ್ರಯತ್ನಿಸುತ್ತಿದ್ದನು… ಆ ಬಗ್ಗೆ ಒಳಗೊಳಗೆ ಚಂದಾ ಎತ್ತುತ್ತಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಅವನು ಸುಮ್ಮನಿದ್ದರೂ ಅವನ ಹಣೆ ಮೇಲೆ ಲಕಲಕ ಹೊಳೆಯುತ್ತಿದ್ದ ತ್ರಿಪುಂಡ್ರ ಭಸ್ಮಧಾರಣವೇ ಸಂಘಟನೆಯ ಕಾರ್ಯವನ್ನು ಮಾಡುತ್ತಿತ್ತು. ಅಲ್ಲದೆ ಪೀಠದ ಜಗದ್ಗುರುಗಳು ಆ ಕ‌ಎ ಈ ಕಡೆ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿಮಿತ್ತ ಹೊರಡುವಾಗ ಬ್ಯಾಂಕಿನಾಚೆ ತಿಂಗಳಿಗೊಮ್ಮೆಯಾದರೂ ಕಾರು ನಿಲ್ಲಿಸಿ ಆತಗೆ ಬರಲು ಹೇಳುತ್ತಿದ್ದರು. ಇದೊಂದು ಅವನಿಗೆ ಕೋಡು ಮೂಡಿಸಲು ಸಹಾಯಕವಾಗಿತ್ತು. ಇತ್ತೀಚೆಗೆ ಇಸ್ಲಾಮ್ ಮತದ ಲಾಂಛನ ಪ್ರಾಯವಾಗಿ ತಾನು ಬಿಟ್ತಿರುವ ಗಡ್ಡವನ್ನು ಪ್ರದರ್ಶಿಸುತ್ತ ಸದರೀ ಗ್ರಾಮದಲ್ಲಿ ಜಮಾತೆ ಸಂಘಟನೆಯ ಶಾಖೆ ತೆರೆಯುವ ನಿಮಿತ್ತ, ಇಸ್ಮಾಯಿಲ್ ನಿರುಪದ್ರವಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರ ತೊಡಗಿದ್ದುದು ಗುಟ್ಟಾಗಿ ಉಳಿದಿರಲಿಲ್ಲ. ಒಂದು ಮಸೀದಿ ಕಟ್ಟಿಸುವುದು ಅವನ ಪರಮ ಗುರಿಯಾಗಿತ್ತು. ಭ್ರಾತೃತ್ವ, ಸೋದರತೆ ಸಾರುವ ಬಕ್ರೀದ್, ರಂಜಾನ್ ಹಬ್ಬಗಳನ್ನು ಅವನು ಸತ್ರಗಳಂತೆ ಬಳಸಿಕೊಳ್ಳ ತೊಡಗಿದ್ದನು. ತಾನು ಬೊಂಬಾಯಿಯಲ್ಲಿರುವ ಹಾಜಿಮಸ್ತಾನ್ ಯೂಸೂಫ್ ಪಟೇಲರಿಗೆ ಒಂದು ಪತ್ರ ಬರೆದರೆ ಸಾಕು ಅವರು ಲಕ್ಷಾಂತರ ರೂಪಾಯಿ ಸೂಟ್ಕೇಸಿನಲ್ಲಿಟ್ಟು ಕಳಿಸಿಬಿಡುವರೆಂದು ಹೇಳಿಕೊಳ್ಳುತ್ತಿದ್ದುದು ಸೋಜಿಗದ ಸಂಗತಿಯಾಗಿತ್ತು. ಇವರಿಬ್ಬರಿಗಿಂತ ಹೆಬ್ರಿಯ ಸಂಘಟನೆ ತುಂಬ ಅಚ್ಚುಕಟ್ಟಾಗಿತ್ತು. ಅವನು ಆಗಲೆ ಉಡುಪಿ ಹೋಟಲಿನ ರಾಮಕೃಷ್ಣ ಭಟ್ಟರನ್ನು ಹಿಡಿದುಕೊಂಡು ಛೋಟಾ ಬೃಂದಾವನ್ ಸ್ಥಾಪಿಸುವುದರಲ್ಲಿ ಯಶಸ್ವಿಯಾಗಿದ್ದನು. ಶ್ರೀ ಶ್ರೀ ಶ್ರೀ ರಾಘವೇಂದ್ರ ಯತೀಂದ್ರರು ಮಂಚಾಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಆಯಾಸ ಪರಿಹಾರಾರ್ಥವಾಗಿ ಕೊತ್ತಲಗಿಗೆ ಆಗಮಿಸಿದ್ದರಲ್ಲದೆ ಈಗ ಬೃಂದಾವನ ಸ್ಥಾಪಿಸಿರುವ ಜಾಗದಲ್ಲೆ ವಿಶ್ರಮಿಸಿಕೊಂಡರೆಂಬ ಕಥೆಗಳನ್ನು ಹೇಳುತ್ತಿದ್ದರು. ಆದವಾನಿಯ ಸಿದ್ದಿಮಸೂದ್ ಖಾನನಿಗೆ ಅವರು ಜನಿವಾರ ಹಾಕಿದ್ದಲ್ಲದೆ ಅವನನ್ನು ಅಪ್ಪಟ ಸಸ್ಯಾಹಾರಿಯನ್ನಾಗಿ ಮಾಡಿದರೆಂದು ಹೇಳುತ್ತಿದ್ದರು. ರಾವಣನು ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿ ಒಯ್ಯುತ್ತಿದ್ದಗ ಆಕೆ ತನ್ನ ಕಾಲಲ್ಲಿದ್ದ ಕೊತ್ತಲಗ ಎಂಬ ಆಭರಣವನ್ನು ಬಿಚ್ಚಿ ಎಸೆದಳೆಂದೂ; ಅದು ಬಿದ್ದ ಈ ಜಾಗವೇ ಕೊತ್ತಲಗಿ ಎಂದು ಹೆಸರಾಗಿದೆ ಎಂದೂ ನಿರ್ಭಿಡೆಯಿಂದ ಹೇಳಿ ಜನರನ್ನು ಮರುಳು ಮಾಡುತ್ತಿದ್ದನು. ಸೀತಾನ್ವೇಷಣೆಯಲ್ಲಿದ್ದ ಶ್ರೀರಾಮಚಂದ್ರನು ಸುಗ್ರೀವ, ಅಂಗದ ಜಾಂಬುವಂತ, ಆಂಜನೇಯರೇ ಮೊದಲಾದ ಕಪಿಸೇನೆಯೊಂದಿಗಿಲ್ಲಿ ಬಂದು ತಂಗಿದ್ದನೆಂದು ವಾದಿಸುತ್ತಿದ್ದನು. ತನ್ನ ವಾದಕ್ಕೆ ಪೂರಕವಾಗಿ ಅಷ್ಟೊತ್ತಿಗಾಗಲೇ ಇದ್ದ ರಾಮದೇವರ ಗುಡಿ, ಆಂಜನೇಯ ಗುಡಿಗಳ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದನು. ಕುಪ್ಪಿಕರ ಕೇರಿ ಆಂಜನೇಯ ಸ್ವಾಮಿ ಕೊರಲಲ್ಲಿರುವುದು ಶಿವದಾರವಲ್ಲವೆಂದೂ; ಅದು ಜನಿವಾರವೆಂದೂ ವಾದಿಸಲು ಹೋಗಿ ಅಲ್ಲಿನ ಪೈಲ್ವಾನರಿಂದ ಒದೆಸಿಕೊಂಡು ಮರಳಿರುವುದೂ ಉಂಟು. ಮತ್ತೊಂದು ವಿಷಯವೆಂದರೆ ಹೆಬ್ರಿಯವರ ಸೂಚನೆ ಮೇರೆಗೆ ಆ ಗ್ರಾಮದ ಅನೇಕ ಜನ ಬ್ರಾಹ್ಮಣರು ಈ ದೇಶವನ್ನು ಭಾರತ ಅಥವಾ ಇಂಡಿಯ ಎನ್ನುತ್ತಿರಲಿಲ್ಲ. ನಮ್ಮ ದೇಶ ‘ಹಿಂದೂಸ್ತಾನ” ಎಂದು ಹೇಳಿಕೊಳ್ಳುತ್ತಿದ್ದರು. ಸದರಿ ಗ್ರಾಮದ ಶಿಕ್ಷಣ ಸಂಸ್ಥೆಗಳ ಲೆಕ್ಚರ್‍ಸೂ, ಮಾಸ್ತರನ್ನು ಹಿಡಿದುಕೊಂಡು ಆರೆಸ್ಸೆಸ್ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದನು. ವಾರಕ್ಕೊಂದೆರಡು ಸಾರಿಯಾದರೂ ಮುಂಗಡವಾಗಿ ಬಂದು ಪಥ ಸಂಚಲನವನ್ನು ಪರಾಮರ್ಶಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಿದ್ದನು. ಹಾಗೆಯೇ ಉತ್ತರ ಭಾರತದ ಕೋಮು ಗಲಭೆಯನ್ನು ಪ್ರಸ್ತಾಪಿಸುತ್ತ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ ಮಾಡಿದರೆಂಬುದರ ಬಗ್ಗೆ ನಿಖರವಾಗಿ ಅಂಕಿ ಅಂಶಗಳನ್ನು ಒದಗಿಸುತ್ತಿದ್ದನು. ಆದರೆ ಅವನು ಹೇಳುತ್ತಿದ್ದ ಯಾವುದೂ ಎಲ್ಲ ಪಥ ಸಂಚಲಿಗರ ಮಿದುಳು ತೂರಿ ಆಶ್ರಯ ಪಡೆಯುತ್ತಿರಲಿಲ್ಲವೆಂಬುದೇ ಸಮಾಧಾನದ ಸಂಗತಿಯಾಗಿತ್ತು. +ಈ ಮೂವರ ಧಾರಾವಾಹಿಗಳು ಈ ಪ್ರಕಾರವಾಗಿ ಮುಂದುವರಿಯುತ್ತಿರುವಾಗ್ಗೆ ಗುಮುಸಿ ಗೌಡ ಮತ್ತು ಪಶುಪತಿಯರೆಂಬ ಕಾಮ್ರೇಡುಗಳು ಗ್ರಾಮದಲ್ಲಿ ಮಾಡುತ್ತಿದ್ದ ಸಂಘಟನೆಯೇ ವಿಚಿತ್ರವಾಗಿತ್ತು. “ನೋಡಯ್ಯಾ ಗೌಡ… ಜಮಾತೆ, ಆರೆಸ್ಸೆಸ್ ಚಡ್ಡಿಗಳಿಗಿಂತ ಈ ದೇಶಕ್ಕೆ ಅಪಾಯಕಾರಿಯಾದುದೆಂದ್ರೆ ಮಾರ್ಕ್ಸಿಜಮ್ಮು… ಕನಿಷ್ಟ ಜಮಾತೆಯರೂ; ಆರೆಸ್ಸೆಸ್ನೋರೂ ತಂತಮ್ಮ ಜಾತಿಗಳ ಬಗ್ಗೆ ಒತ್ತಿ ಒತ್ತಿ ಹೇಳ್ತಾನೆ ಜಾತ್ಯಾತೀತ ಕಲ್ಪನೇನ; ಅದರಿಂದಾಗೋ ಅಪಾಯಗಳ್ನ ಪರೋಕ್ಷವಾಗಿ ತಿಳಿಸಿಕೊಡ್ತಿದ್ದಾರೆ… ಜನರಿಗೆ ಒಂದು ಜಾತಿ ಬಗ್ಗೆ ತಿಳಿದೊಡನೆ ಆ ಜಾತಿಯಿಂದಾಗುವ ಅಪಾಯವೂ ಗೊತ್ತಾಗುತ್ತೆ… ಆದರೆ ಕಾಮ್ರೇಡ್ಸ್ ಕಥೆ ಆ ಥರ ಅಲ್ಲ… ಅವರಿಗೆ ಜಾತಿ ಸಮಸ್ಯೆ ಮುಖ್ಯ ಅಲ್ಲ… ಅವರಿಗೆ ವರ್ಗ ಸಮಸ್ಯೆ ಮುಖ್ಯ… ಅದ್ನ ಮನವರಿಕೆ ಮಾಡಿಕೊಡೋದೆ ನಮ್ಮ ರೈತ ಸಂಘಟನೆಯ ಮುಖ್ಯ ಅಂಶಗಳಲ್ಲಿ ಒಂದು ಕಣಪ್ಪಾ… ಮುಂದೆ ಒಂದಲ್ಲಾ ಒಂದು ದಿನ ಹಸಿರು ಟವೆಲ್ಲು ವಿಧಾನಸೌದದ ಮೇಲೆ ಹಾರೇ ಹಾರಾಡ್ತದೆ… ಅದ್ರಿಂದ ನೀನು ರೈತ ಸಂಘಟನೆ ಬಿಟ್ಟು ಕಾಮ್ರೇಡ್ಸ್ ಜೊತೆ ಸೇರ್‍ತೀನಿ ಅನ್ನೋದು ಸರಿ ಅಲ್ಲ” ಎಂದು ಪ್ರೊ. ನಂಜುಂಡಸ್ವಾಮಿ ಗೌಡನ ರಾಜೀನಾಮೆ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಬುದ್ಧಿ ಧೋರಣೆಯಿಂದಾಗಿ ನನ್ಗೆ ಬೇಸರವಾಗಿದೆ. ನಿಮ್ಮ ರೈತ ಸಂಘದಿಂದ ನಮ್ಮ ರೈತಾಪಿ ಮಂದಿಗೆ ಬ್ಯಾಂಕಿನಿಂದ ಸಾಲ ಕೊಡಿಸ್ಲಿಕ್ಕೆ ಆಗ್ತಾ ಇಲ್ಲ… ಹಸಿರು ಕಲರ್‍ನ ನೋಡಿದಾಕ್ಷಣ ಗೋರ್ಮೆಂಟ್ ಎಂಪ್ಲಾಯಿಸು ಜೋರಾಗಿ ನಗಾಡ್ತಾರೆ… ನಿಮ್ಮ ರೈತ ಸಂಘದಿಂದ ನಮ್ಮ ರೈತಾಪಿ ಮಂದಿಗೆ ಬೈಂಸೂ ಅಮ್ತಾರೆ… ನಮ್ ಕೈಗೆ ಈಗ ಬೇಕಾಗಿರೋದು ಗ್ರೀನಲ್ಲ… ರೆಡ್ಡು… ರೆಡ್ಡೊಂದ್ರೆ ಡಾರ್‍ಕ್‌ರೆಡ್ಡೂ” ಎಂದು ಗುಡುಗುಡಿಸಿ ಗೌಡ ತನ್ನ ಹೆಗಲ ಮೇಲಿದ್ದ ಹೆನ್ನರಡು ಮುಕ್ಕಾಲು ರುಪಾಯಿ ಬೆಲೆ ಬಾಳುವ ಹಸಿರು ಟವಲನ್ನು ಪ್ರೊಫೆಸರ್ ಮುಂದಿದ್ದ ಟೇಬಲ್ ಮೇಲಿಟ್ಟು ಬಂದು ಪಶುಪತಿಯಿಂದ ಕಾಮ್ರೇಡ್ ಎಂಬ ಬಿರುದು ಪಡೆದಿದ್ದ. ಅದೂ ಅಲ್ಲದೆ ಶ್ರೀಮತಿ ಗೌಡ ಈ ಮೊದಲೆ ಕಾಮ್ರೇಡ್ ಎಂದು ಹೆಸರು ಪಡೆದಿದ್ದಂಥಾಕಿಯಾಗಿದ್ದಳು. +ಇವರಿಬ್ಬರು ತಮ್ಮ ಹೋರಾಟ ಈ ದೇಶದ ಜಾತಿ ವ್ಯವಸ್ಥೆ ವಿರುದ್ಧವಾಗಲೀ; ವರ್ಣ ವ್ಯವಸ್ಥೆ ವಿರುದ್ಧವಾಗಲೀ ಅಲ್ಲ… ಈ ಬಂದವಾಳ ಶಾಹಿ ವ್ಯವಸ್ಥೆ ವಿರುದ್ಧ ಎಂಬ ಘೋಷಣೆಯೊಂದಿಗೆ ತಮ್ಮ ಸಂಘಟನೆ ಆರಂಬಿಸಿದ್ದರು. ಉದಾರ ಮನೋಭಾವದಿಂದ ಛೋಟಾ ಬೃಂದಾವನ್ ಕಟ್ಟಿಸಿದ್ದ ಮತ್ತು ಪಥ ಸಂಚಲನಾಕಾರ್ಯದ ಯಾಜಕರಾಗಿದ್ದ ರಾ.ಕೃ. ಭಟ್ಟರು ತಮ್ಮ ಹೋಟೆಲ್ಲಿನ ಮಹಡಿಯಲ್ಲಿದ್ದ ಕೋಣೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫೀಸ್ ತೆರೆದುಕೊಳ್ಳಲು ಪಶುಪತಿಗೆ ಬಿಟ್ಟುಕೊಟ್ಟಿದ್ದರು. ಇದಕ್ಕೆ ತಕರಾರೆತ್ತಿದ ಹೆಬ್ರಿಗೆ ” ಆ ಪಶುಪತಿ ಪಾಪ ನಕ್ಸಲೈಟ್ ಥರ ಕಾಣ್ತಿದ್ದಾನೆ… ಒಂದು ಹೋಗಿ ಒಂದು ಆದ್ರೆ ಏನು ಮಾಡೋದು ಸ್ವಾಮಿ… ಆ ಮಾರ್ವಾಡಿಗೆ ಆದ ಗತಿ ನಮ್ಗೂ ಆದ್ರೆ ಏನು ಮಾಡೋದುಂಟು… ನಾವು ಮೊದ್ಲೇ ಘಾಟಾಚೆಗಿನ ಮಂದಿ… ಅವ್ರ ಜುಟ್ಟು ನಂ ಕೈಲಿ ಇರ್ಲಿ ಅಂತ ಬಿಟ್ಟುಕೊಟ್ಟಿದ್ದೀನಿ…” ಎಂದು ಹೇಳಿದ್ದರು. ನಾನು ಆಗೊಮ್ಮೆ, ಈಗೊಮ್ಮೆ ಪಾರ್ಟಿ ಆಫೀಸಿಗೆ ಹೋಗುವಾಗ ಶ್ರೀಯುತ ರಾ.ಕೃ. ಭಟ್ಟರು ಎಂಥದು ಮಾರಾಯ್ರೆ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳಾದ ನೀವು ಕಾಮ್ರೇಡ್ಸ್ ಜನ ಹುಡುಕ್ಕೊಂಡು ಬರೋದೇ?” ಎಂದೊಂದು ಮಾತನ್ನು ಮಾತ್ರ ಹೇಳುತ್ತಿದ್ದರು. ಆಗ ನಾನು ಟೈಂಪಾಸ್ಗೆ ಎಂಬೊಂದು ಮಾತನ್ನು ಹೇಳುತ್ತಿದ್ದೆನು. +ಕಾಮ್ರೇಡ್ಗಳೀರ್ವರು ಕಲೆಯನ್ನೇ ಒಂದು ಶ್ರಮವೆಂದೂ, ಭ್ರಮೆ ಎಂದು ಭಾವಿಸಿ ಬುಧವಾರ ಪೇಟೆ, ಸೋಮವಾರಪೇಟೆ ಮತ್ತು ಗ್ರಾಮಕ್ಕಂಟಿಕೊಂಡಂತಿರುವ ಕೇರಿ ಓಣಿಗಳಲ್ಲಿ ವ್ಯಕ್ತಿ ಮತ್ತು ಜನಪದ ರಮ್ಗಭೂಮಿಯನ್ನು ನೆಚ್ಚಿಕೊಂಡು ಬದುಕುತ್ತಿರುವ ಹಿರಿ ಕಿರಿಯ ಕಲಾವಿದ, ಕಲಾವಿದೆಯರನ್ನು ತಮ್ಮ ಸಂಘಟನೆಯ ತೆಕ್ಕೆಗೆ ತರಲು ಅಪಾರವಾಗಿ ಶ್ರಮಿಸಿದರು. ಬೆಂಗಳೂರಲ್ಲಿ ಮಕ್ಕಳು ಮತ್ತು ಮಹಿಳಾ ಕಲ್ಯಾಣ ನಿಗಮದ ಅಧ್ಯಕ್ಷೆಯಾಗಿಯೂ; ಜೊತೆಗೆ ಕಬ್ಬನ್‌ಪಾರ್ಕನ್ನು ಖಾಸಗಿ ಮತ್ತು ಹವ್ಯಾಸೀ ಪ್ರಣಯಿಗಳಿಂದ ಮುಕ್ತಗೊಳಿಸಿ ಧ್ಯಾನ, ತಪಸ್ಸು ಮಾಡಲು ಯೋಗ್ಯವಾದಂಥ ವಾತಾವರಣವನ್ನು ಸೃಷ್ಟಿಸಬೇಕೆಂದು ಸರಕಾರ ರಚಿಸಿರುವ ಆಯೋಗವೊಂದರ ಸದಸ್ಯೆಯೂ ಆಗಿರುವಂಥ ಭುವನೇಶ್ವರಿ ದೇವಿಯವರು ಒಮ್ಮೆ ಬಂದು ಸಾಂಕೇತಿಕವಾಗಿ ಕಲಾವಿದರ ಸಂಘಟನೆಯನ್ನು ಉದ್ಘಾಟಿಸಿದ್ದುಂಟು. +ಕೊತ್ತಲಿಗಿಯ ಎರಡು ಕಣ್ಣುಗಳೇ ಗೌಡ ಮತ್ತು ಪಶುಪತಿಯರೆಂದೂ ವರ್ಣಿಸಿ ಆಕೆ ಕಂಟೆಸ್ಸಾ ಕಾರು ಹತ್ತುವಾಗ ಮುಪ್ಪಾನು ಮುದುಕಿ ಮುಕುಡವ್ವೆ ಅಡ್ಡ ತುರುಬಿ ‘ಏನಭೇ ಬುವ್ವೀ… ಕುಂಡರಲಾಕ ಕಾರು ಬಂದಾಚ್ನಣ ನಾವ್ಯಾರು ನಿನ ಕಣ್ಣಿಗೆ ಬೀಳಲ್ಲೇನೆ. ನನ್ ಮೊಮ್ಮಕ್ಳೀಗೆ ಒಂದು ಬಾರಿ ತೋರಿಸೇ ನೀನು ಹೊಂಡಬೇಕು’ ಎಂದು ಸೀರೆ ಹಿಡಿದು ಜಗ್ಗಾಡಿದಳು… ಆಕೆಗೆ ಏನೋ ಒಂದು ಸಮಾಧಾನ ಹೇಳಿ ಅಧ್ಯಕ್ಷೆ ಕಾರು ಹತ್ತಿ ಹೋಗಿ ಬಿಟ್ಟಳು. ಆ ದಿನದಿಂದ ಕಾಮ್ರೇಡರ ನಸೀಬ ಸ್ವಲ್ಪ ಸುಧಾರಿಸಿತು. ಅಖಿಲ ಕರ್ನಾಟಕ ಗ್ರಾಮಾಂತರ ಕಲಾವಿದರ ಮಹಾಸಮ್ಮೇಳನವನ್ನು ನಡೆಸಿ ಸರಕಾರದ ಗಮನವನ್ನು ಸೆಳೆಯಬೇಕೆಂದು ಅವರು ಕೆಲಸ ಶುರುಮಾಡಿದರು. ಜಮಾತೆ ಅಂತ ಇಸ್ಮಾಯಿಲನನ್ನಾಗಲೀ; ಜಂಗಮ ಎನ್ನೋ ಕಾರನದಿಂದ ಚಂಬಸ್ಯಯ್ಯನನ್ನಾಗಲೀ; ಆರೆಸ್ಸೆಸ್ ಎಂಬ ಕಾರಣದಿಂದ ಹೆಬ್ರಿಯವರನ್ನಾಗಲೀ ಅವರು ದೂರ ಮಾಡಲಿಲ್ಲ… ಒಮ್ಮೆ ಪೀಠಾಪುರಕ್ಕೆ ಬಂದಿದ್ದ ಪಶುಪತಿ ಜಗದ್ಗುರುಗಳ ಪಾದಕ್ಕೆ ಅಡ್ಡಬಿದ್ದಿದ್ದ ಎಂಬ ಕಾರಣದಿಂದ, ಅವನ ತಂದೆ ಲಿಂಗಾಯಿತ ಎಂಬ ಕಾರಣದಿಂದ ಚಂಬಸ್ಯಯ್ಯ ಅವನನ್ನು ಬಲವಾಗಿ ಹಚ್ಚಿಕೊಂಡ. ಆದರೆ ತಾಯಿ ಅನ್ಯ ಜಾತಿಯವಳು ಎಂಬ ಕಾರಣದಿಂದ ತೀರಾ ಹತ್ತಿರ ಮಾತ್ರ ಸೇರಿಸಿಕೊಳ್ಳಲಿಲ್ಲ. +ಈ ಎಲ್ಲ ವಿದ್ಯ ಮಾನಗಳಿಗೆ ಪ್ರೋತ್ಸಾಹ ನೀಡುತ್ತ ಎಲ್ಲ ಸಂಘಟನೆಗಳಿಂದ ರಾಜಕೀಯ ಲಾಭ ಪಡೆಯ ತೊಡಗಿದ +ಗುಲಾಂನಬಿ ಅಮೇರಿಕಾದಿಂದ ಹೇರ್‌ಡೈತರಿಸಿಕೊಳ್ಳುತ್ತಿದ್ದಾನೆಂಬ ಖ್ಯಾತಿಗೆ ಪಾತ್ರನಾಗಿದ್ದು ಅದಕ್ಕೂ ಒಂದು ತಿಂಗಳ ಹಿಂದಿನಿಂದಲೇ ಗುಲಾಮ್ ನಬಿ ಬಜಾರಕ್ಕೆ ಹೊರಟ ಎಂದರೆ ಅದೊಂದು ಡೆಮಾನ್‌ಸ್ಟ್ರೇಟ್ ಇದ್ದಂತಿರುತ್ತಿತ್ತು. ಅಮೇರಿಕಾದ ಬ್ರಿಯರ್ಲೀ ಹೇರ್ ಡೈಯನ್ನೇ ಉಪಯೋಗಿಸಿ ಹೊಸ ಯೌವನ ಪಡೆಯಿರಿ ಎಂಬ ಜಾಹಿರಾತೇ ಜೀವಂತವಾಗಿ ಅಡ್ಡಾಡುತ್ತಿರುವುದೇನೋ ಎಂಬಂತೆ ಇರುತ್ತಿತ್ತು. ಅನೇಕ ಮಧ್ಯ ವಯಸ್ಕರು ಆತನ ಕಾರಿರುಳಿನಂಥ ಗಡ್ಡ ಮೀಸೆಯಿಂದ ಸ್ಪೂರ್ತಿ ಪಡೆದಿದ್ದರು. ಅಲ್ಲದೆ ಆತ ಗೋಲ್ಡನ್ ಕೇಸ್‌ನಿಂದ ಸಿಗರೇಟು ತೆಗೆದು ರಜನೀಕಾಂತ್ ಸ್ಟೈಲ್‌ನಲ್ಲಿ ಬಾಯಿಗೆ ಎಸೆದುಕೊಳ್ಳುತ್ತಿದ್ದುದನ್ನು ನೋಡಿ ಕಾಲೇಜ್ ವಿದ್ಯಾರ್ಥಿಗಳು ಸ್ಪೂರ್ತಿ ಪಡೆದಿದ್ದರು. ಹೀಗೆ ಇಡೀ ಗ್ರಾಮಕ್ಕೆ ಸ್ಪೂರ್ತಿಯ, ತಾರುಣ್ಯದ ಚಿಲುಮೆಯಾಗಿದ್ದ ಗುಲಾಂನಬಿ ‘ಸರ್ವೇಜನೋ ಸುಖಿನೋ ಭವಂತು’ ಎಂಬ ಆರ್ಯೋಕ್ತಿಗೆ ಮಾದರಿಯಂತಿದ್ದ ಮತ್ತು ಒಳಗೊಳಗೇ ಮುಂದೆ ಬಂದವರನ್ನು ಹಾಯುತ್ತಿದ್ದ. ಹಿಂದೆ ಬಂದವರನ್ನು ತಿವಿಯುತ್ತಿದ್ದ. ಆದರದು ಹಾಯಿಸಿಕೊಂದವರಿಗಾಗಲೀ. ತಿವಿಸಿಕೊಂಡವರಿಗಾಗಲೀ ಆ ಕೂಡಲೆ ಅರಿವಾಗುತ್ತಿರಲಿಲ್ಲ. ಇಂಥ ಜಾಯಮಾನದ ಗುಲಾಂನಬಿಯಿ ಎಲ್ಲಾ ಸಂಘಟನೆಗಳಿಗೆ ಬೆಂಬಲ ನೀಡುತ್ತ ಬೆಂಬಲ ಪಡೆಯುವುದರಲ್ಲಿ ನಿಸ್ಸೀಮ ರಾಜಕಾರಣಿಯಾಗಿದ್ದ, ಸಂಘಟಕರಾದ ಚಂಬಸ್ಯಯ್ಯ; ಇಸ್ಮಾಯಿಲೂ, ಹೆಬ್ರಿ, ಗೌಡ, ಪಶುಪತಿ, ಅವನು ಒಂದು ವರ್ಷದ ಹಿಂದೆ ಹಾಲುಗಲ್ಲಿನಿಂದ ಕಟ್ಟಿಸಿರುವ ಮನೆಗೆ ವಾರಕ್ಕೊಮ್ಮೆಯಾದರೂ ಎಡತಾಕುತ್ತಿದ್ದರಾದರೂ ನಾನು ಮಾತ್ರ ಯಾರು ಪುಸಲಾಯಿಸಿದರೂ ಅಲ್ಲಿಗೆ ಹೋಗಿರಲಿಲ್ಲ… ಅವರಿವರ ಬಳಿ ನಬಿ “ಬುಧವಾರ ಪೇಟೇಲಿ ವಾಸ ಮಾಡುತ್ತಿದ್ದು ನಿಂ ಬ್ಯಾಂಕಿನಲ್ಲಿ ಕೆಲಸ ಮಾಡ್ತಿದ್ದಾನಂತಲ್ರೀ… ಆತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನಂತಲ್ರೀ… ಆತ ಒಮ್ಮೆ ಕೂಡ ನನ್ನ ಕಂಡಿಲ್ಲಲ್ರೀ” ಎಂದು ಹೇಳಿಕೊಳ್ಳುತ್ತಿದ್ದುದುಂಟು. +ಆ ನಂತರ ಆತನನ್ನು ನಾನು ಕಾಣಬೇಕಾಗಿ ಬಂತು. ಕಂಡೊಡನೆ ನನ್ನ ಬಗ್ಗೆ ಒಂದು ವ್ಯಂಗ ಚಿತ್ರ ಬರೀರಿ ಅಂದ. ಸಿಗರೇಟ್ ಹೊಕ್ಕೊಳ್ಳುತ್ತಿರುವ ಚಿತ್ರ ಬರೆದು ತೋರಿಸಿದೆ. ಅಮೇರಿಕಾದ “ಜಿಮ್ಮಿಕಾರ್ಟರ್ ಮೀಸೆ ಬಿಟ್ಟರೆ ಹೇಗಿರ್ತದೋ ಹಾಗಿದ್ದೀನಲ್ರಿ’ ನಾನು ಅಂದ. “ಹೌದ್ರಿ” ಅಂದೆ. +“ಕೊತ್ತಲಗೀಲಿ ಜೂನಿಯರ್ ದಿನಕರ್ ದ್ಸಾಯಿ ಅಂತ ಹೆಸರಾಗಿದ್ದರಲ್ಲ… ಹಾಗಿದ್ದ ನನ್ ಮೆಲೋಂದು ಚೌಪದಿ ಬರ್ದು ತೋರಿಸ್ರಿ” ಅಂದ. ನಾನು ಕೂಡಲೆ ಆತನ ಪೈಲಟ್ ಪೆನ್ನನ್ನೂ ಬೈಸನ್ ಬ್ರಾಂಡ್ ಪೇಪರನ್ನೂ ಇಸುಕೊಂಡು – +ಕೊತ್ತಲಗಿಯ ರವಿಚಂದ್ರ ನಮ್ಮ ಗುಲಾಂ ನಬೀ +ಈ ಜನಕ್ಕೆಲ್ಲ ನಿನೇ ಕಣಪ್ಪಾ ಹರಿಯಾಣ ಜಿಲೇಬಿ +ನಿನ್ನ ನಂಬಿದ ಜನಕೆ ಸಿಗುವುದು ಕೂಳು ನೀರು +ನಂಬದವರು ನೆಕ್ಕುವರು ಒಣ ಜಾಲಿ ಬೇರು +…ಎಂದು ಬರೆದು ತೋರಿಸಿದೆ. ಅದನ್ನು ಓದಿ ನಕ್ಕೂ ನಕ್ಕೂ ಸುಸ್ತಾದ… “ವಂಡರ್ ಫುಲ್ ವಂಡರಫುಲ್” ಎಂದು ಉದ್ಗರಿಸಿ ಹಸ್ತಲಾಘವ ಮಾಡಿದ. ’ಅಲ್ರೀ ಶಾಸ್ತ್ರೀ… ನೀವು ಸೊಗಸಾಗಿ ಪದ ಹಾಡ್ತೀರಂತೆ ಹೌದೇನು ಎಂದು ಕೇಳಿದ. ’ಹೌದ್ರೀ’ ಅಂದೆ. ಯಾವ ಪದ ಅಂತ ಕೇಲಿದ. ’ತ್ಯಾಗರಾಜ, ದೀಕ್ಷಿತ, ಪುರಂದರದಾಸ’ ಅಂದೆ. “ಸಿ.ಎಚ್.ಆತ್ಮಾ, ಸೈಗಲ್ ಮುಖೇಶ್ರವು ಬರಲ್ವೇನು?” ಅಂದ. ಇಲ್ಲ ಅಂದೆ. ’ಮೇರಾ ದಿಲ್ ಹೀ ಟೂಟ್ಗಯಾ” ಎಂದು ತಾನೇ ಹಾಡಿದ. ಸೊಗಸಾದ ಶಾರೀರ ಎಂದೆ. ತನ್ನ ದೇಹ ನೋಡಿಕೊಂಡು “ಪ್ರತಿದಿನ ಜಾಗಿಂಗೂ ವ್ಯಾಯಾಮ ಮಾಡ್ತೀನ್ರೀ ಅದ್ಕೇ ನನ್ ಪರ್ಸನಾಲಿಟಿ ಹೀಗಿರೋದು” ಎಂದ. ನಮ್ಮ ನಾಯಕರಾದ ಹೆಗಡೆಯವರಿಗೂ ನಾನೇ ವ್ಯಾಯಾಮದ ಪ್ರಾಮುಖ್ಯ ಹೇಳಿಕೊಟ್ಟಿದ್ದು… ಅದ್ಕೆ ಅವರು ಸ್ಲಿಮ್ಮಾಗಿ, ಯಂಗಾಗಿ ಕಾಣ್ತೊರೋದು… ಒಮ್ಮೆ ನನ್ ಜೊತೆ ಬೆಂಗ್ಳೂರಿಗೆ ಬನ್ನಿ… ಅವ್ರ ಪರಿಚಯ ಮಾಡ್ಕೋಡ್ತೀನಿ… ಆ ಪಟೇಲ್ರೂನೂ ಕೂಡ… ಅವರಿಗೆಲ್ಲ ನಿಮ್ಮಂಥೋರ್‍ನ ಕಂಡ್ರೆ ತುಂಬ ಇಷ್ಟ’ ಅಂದ. ನಾನು ಆಗ್ಲಿ ಅಂದೆ… “ಒಳ್ಳೆ ಚಿಕನ್ ಪುಲಾವ್ ಮಾಡಿದ್ದಾರೆ ತಿಂಥಿರೇನು” ಅಂದ. ನಾನು ಸಸ್ಯಾಹಾರಿ ಅಂದೆ. “ಸ್ಟೆಬಿಲಿಟಿ ಸ್ಟೆಮಿನಾ ಹೆಚ್‌ಬೇಕೆಂದ್ರೆ ನಿಮ್ಮಂಥ ಯಂಗ್ ಪೀಪಲ್ಲು ಚಿಕನ್ನು ತಿನ್ನ ಬೇಕ್ರಿ, ಚಿಕ್ಕನ್” ಅಂದ. ನಾನು ಸುಮ್ಮನಿದ್ದೆ. ತದನಂತರ ಆತ ಆಶ್ಚರ್ಯಕರ ರೀತಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಶ್ಲೋಕಗಳನ್ನು ಉದ್ಧರಿಸಿ ಮಾತಾಡಿದ. ಅವತ್ತಿನಿಂದ ನಾನು ಆತನ ಸ್ನೇಹ ಬೆಳೆಸಿಕೊಂಡೆ ಎನ್ನುವುದಕ್ಕಿಂತ, ಆತನೇ ನನ್ನ ಸ್ನೇಹ ಬೆಳೆಸಿಕೊಂಡ ಎಂದು ಹೇಳಬಹುದು. +ಅಲ್ಲಿಂದ ಬಂದ ಮೇಲೆ ನಾನು ನಬೀ ಮನೆಯಲ್ಲಿ ಚಿಕನ್ ತಿಂದೆ ಎಂಬ ಗುಲ್ಲು ಹಬ್ಬಿತು. ನನ್ನ ಹೆಂಡತಿ ನನ್ನ ಬಾಯಿ ಕೈ ಮೂಸಿ ನೋಡಿ ಅಯ್ಯೋ ಚಿಕನ್ ವಾಸನೆ ಎಂದು ರಂಪ ಮಾಡುವುದು, ತಣ್ಣ್ಗಾಗುವುದು. ಇದು ದಿನಚರಿ ಮಾಡಿಕೊಂಡಳು. +ಅಂದಿನಿಂದ ಮನೆ ಮುಂದೆ ಎಂಜಲು ಹೆಕ್ಕಲು ಬರುತಿದ್ದ ಕೋಳಿಗಳನ್ನು ನೋಡಿದೊಡನೆ ಅರಿವಿಲ್ಲದಂತೆ ಜೊಲ್ಲು ಸುರಿಸಲು ಶುರು ಮಾಡಿದೆ. ಚಿಕನ್ ಬಿರ್ಯಾನಿ ತಿಂದೇ ತೀರಬೇಕೆಂದು ಕಠೋರ ನಿರ್ಧಾರಕೈಕೊಂಡು ಹೊಸಪೇಟೆಯ ಚಂದ್ರಶೀಲಾ ಮಿಲಿಟರಿ ಖಾನಾವಳಿಗೆ ಹೋಗಿ ಚಿಕನ್ ಬಿರಿಯಾನಿ ತಿಂದೇ ಬಿಟ್ಟು ಮನೆಗೆ ವಾಪಸಾದೆ. ಅಭ್ಯಾಸ ಬಲದಿಂದ ನನ್ನ ಹೆಂಡತಿ ಕೈ ಬಾಯಿ ಮೂಸಿ ನೋಡಿ “ಪರವಾ ಇಲ್ಲ ಪುಳಿಯೋಗರೆ ವಾಸನೆ ಬರ್‍ತೀದೆ… ದೇವರು ಈಗಲಾದ್ರು ನಿಮಗೆ ಒಳ್ಳೆಬುದ್ಧಿ ಕೊಟ್ಟನಲ್ಲ” ಎಂದು ಸಮಾಧನ ಗೊಂಡಳು. ಅಂದಿನಿಂದ ನಾನು ವಾರಕ್ಕೆರಡು ಬಾರಿಯಾದರೂ ಚಿಕನ್ ಬಿರಿಯಾನಿ ಗುಟ್ಟಾಗಿ ತಿನ್ನತೊಡಗಿದೆ. ಇದನ್ನು ಹೇಗೋ ಪತ್ತೆ ಮಾಡಿದ ಪಶುಪತಿ “ಪ್ರಸಾದದೊಂದಿಗೆ ತೀರ್ಥ ಹೇಗೋ ಹಾಗೆ ಬಿರಿಯಾನಿಗಿಂತ ಮೊದಲು ಬಿಯರು ಕುಡಿದ್ರೆ ಮೈಂಡು ಚುರುಕಾಗುತ್ತೆ, ಮೈಗು ಕಲರ್ ಬರುತ್ತೆ… ಬೀಯರ್ರೂ ಬ್ರಾಂಡಿ ಕುಡಿದೇ ಇದ್ರೆ ಮಾರ್ಕ್ಸ್ ಏಂಜಲ್, ಚೆಗುವೆರಾ ಇವರಾರೂ ಅರ್ಥಾಗೊಲ್ಲ ಶಾಸ್ತ್ರೀ… ಒಂದು ವಿಚಿತ್ರ ಅಂದ್ರೆ ಬ್ರಾಂದಿ ಕುಡೀದೆ ಇದ್ರೆ ಗಾಂಧಿನೂ ಅರ್ಥಾಗೊಲ್ಲ…” ಎಂದು ಏನೇನೋ ಹೇಳಿದ… +ಅವತ್ತು ನಾನು ಕುದಿಯದೇ ಇದ್ದರೂ ಕುಡಿದೇ ಎಂಬ ಸುದ್ದಿ ಹಬ್ಬಿತು. ಯಥಾ ರೀತಿ ಮುಗ್ಧ ಹೆಂಡತಿ ಸಂದೇಹಿಸಿದಳು. ನಾನು ಬಿಯರ್ ಕುಡಿದು ಮನೆಗೆ ಬರತೊಡಗಿದ ಮೇಲೆ “ಓಹೋ ನನ್ನ ಗಂಡ ಕುಡಿದಿರೋದು ಶ್ರೀರಾಮ ಎಂಬ ಪಾಯಸವನ್ನು ಅಂತೂ ಬುದ್ಧಿ ಬಂತು” ಎಂದು ಸಮಾಧಾನ ಪಟ್ಟುಕೊಂಡಳು. ಅಂದಿನಿಂದ ನಾನು ಕುಡಿದೂ ತಿಂದು ಬರತೊಡಗಿದೆ. ಪಾಪ… ನನ್ನ ಹೆಂಡತಿ ವರಲಕ್ಷ್ಮಿಗಿದು ಗೊತ್ತಾಗಬೇಕಲ್ಲ… ಮೊದಲೇ ಕರ್ಮಠ ಹೆಂಗಸು. +ಶಾಮಣ್ಣ ಪಾತ್ರವು ನಿರರ್ಗಳವಾಗಿ ಹೇಳುತ್ತಿರುವಾಗ – +ಹಸ್ತ ಪ್ರತಿಯೊಳಗಿಂದ ವರಲಕ್ಷ್ಮಿ ಪಾತ್ರವು ಎಲ್ಲರನ್ನು ತಳ್ಳಿಕೊಂಡು ಮುನ್ನುಗ್ಗಿ ಬಂದು… “ಕಾದಂಬರಿಕಾರರೇ… ಮುಂದೆ ಹೇಳೋದಿಕ್ಕೆ ನನ್ನ ಗಂಡನಿಗೆ ಆಸ್ಪದ ಕೊಡಬೇಡಿ… ತಾವು ಆಡುತ್ತಿದ್ದ ಆಟ ನನಗೆ ಗೊತ್ತಿರಲಿಲ್ಲಾಂತ ತಿಳಿಕೊಂದಿರುವ ಅವರು ಮುಗ್ಧರು… ಅವರು ಕುಡಿಯೋದನ್ನು; ತಿನ್ನೋದನ್ನು ಅಭ್ಯಾಸ ಮಾಡಿಕೊಂಡಿದ್ದೆಲ್ಲ ನನಗೆ ಚೆನ್ನಾಗಿ ಗೊತ್ತು… ಆದರೇನು ಮಾಡಬೇಕಿತ್ತು? ನಾನು… ಅತ್ತು ರಂಪಾಟ ಮಾಡಿ ಪ್ರತಿಭಟಿಸಿದಾಗಲೆಲ್ಲ ಅವರು ದನಕ್ಕೆ ಚುಚ್ಚುವ ಹಾಗೆ ಚುಚ್ಚುತ್ತಿದ್ದರು. ಕಷ್ಟ ಸುಖ ಹೇಳಿಕೊಳಲಿಕ್ಕೆ ನನ್ಗೂ ಯಾರು ಇರಲಿಲ್ಲ… ಆಯಕಟ್ಟಾದ ಜಾಗಕ್ಕೆ ಬಲವಾದ ಏಟು ಬಿದ್ದು ನಾನು ಸತ್ತರೆ ಅನುಭೋಸೋರು ನನ್ನ ಗಂಡತಾನೆ… ಎಂದು ಯೋಚಿಸಿ ನಾನು ತೆಪ್ಪಗಿದ್ದು ಬಿಟ್ಟೆ ನನ್ನ ಕರ್ಮ… ತಪ್ಪಿಸಲಿಕ್ಕೆ ಯಾರಿಗೂ ಸಾಧ್ಯವಿರಲಿಲ್ಲ. ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಮ್ತ ಹಿರಿಯರು ಹೇಳಿರುವುರು… ಅವರೇನು ಹೇಳ್ತಿದ್ದಾರಂತ ಲೇಖಕರಾದ ನೀವು ಹಾಗೇ ಬರೆದುಬಿಡಬಹುದೇನು? ನಾಳೆ ದಿನ ನಮ್ಮ ಗತಿ ಏನು? ಬಾಳಿ ಬದುಕಬೇಕಾಗಿರುವ ನನ್ನಿಬ್ಬರು ಮಕ್ಕಳ ಗತಿ ಏನು? ಅವರು ಸತ್ರು… ಆದರೆ ಅವರ ಮನಸ್ಸಿನ ಶೂದ್ರತ್ವ ಸಾಯ್ಲಿಲ್ಲ ನೋಡಿ… ಆದ್ರಿಂದ ಬರೆಯುವಾಗ ನೀವು ಜರಡಿ ಹಿಡಿದರೆ ಒಳ್ಳೆಯದು… ಒಡಹುಟ್ಟಿದ ಅಣ್ಣನಿಗಿಂತ ಹೆಚ್ಚು ಅಂತ ತಿಳ್ಕೊಂಡು ಹೇಳ್ತಿದೀನಿ…” ಎಂದು ದಡ ಬಡ ಹೇಳಿ ಮತ್ತೆ ಮರೆಯಾಗಿ ಹೋಯಿತು. +ಹೆಂಡತಿಯ ಮಾತು ಕೇಳಿ ಶಾಮಣ್ಣ ಪಾತ್ರ ಒಂದು ಕ್ಷಣ ದಿಗ್ಭ್ರಮೆಗೊಂಡಿತು. ನಾನು ತಿಂದದ್ದು ಕುಡಿದದ್ದನೆಲ್ಲ… ಪಾಯಸ ತೀರ್ಥ, ಪ್ರಸಾದ ಅಂತ ಬೊಗಳೆ ಬಿಟ್ಟು ತೆಪ್ಪಗಿದ್ದು ಪ್ರೋತ್ಸಾಹಿಸಿದಳಲ್ಲ ಇವಳು… ಇದ್ದದ್ದು ಇದ್ದಂತೆ ಪ್ರತಿಭಟಿಸಿದ್ರೆ ನಾನೇನು ಜೀವ ತೆಗೆಯುತ್ತಿದ್ದೆನೇನು! ಶಿವ… ಶಿವಾ… ಎಂಥ ಸ್ತ್ರೀಯರಿದ್ದಾರೀ ಪ್ರಪಂಚದಲ್ಲಿ?… ಆಕೆಯ ಮೌನವನ್ನು ನಾನು ಅಪಾರ್ಥ ಮಾಡಿಕೊಂಡು ಮುಂದುವರೆದೆನಲ್ಲಾ… ಎಂದು ಒಳಗೊಲಗೇ ಮಮ್ಮಲನೆ ಮರುಗಿತು… +“ಶಾಮಣ್ಣ… ಈಗ ಅದ್ನೆಲ್ಲಾ ಯೋಚಿಸಿದರೇನು ಉಪಯೋಗವಿಲ್ಲ… ಮಾನವೇ ಸ್ತ್ರೀಯರ ದೊಡ್ಡಸ್ತಿಕೆ… ಆಕೆಗೆ ನೀನು ಅಲ್ಲದೆ ನನ್ನೋರು ತನ್ನೋರು ಎಂಬುವವರು ಯಾರಿದ್ದರು ಹೇಳು! ನೀನು ಆಕೆಗೆ ಅರ್ಥಪೂರ್ಣವಾದ ಆಶ್ರಯವನ್ನು ನೀಡಲಿಲ್ಲ. ಆಕೆಯ ಭಾವನೆಗಳನ್ನು ನೀನು ಗೌರವಿಸಲಿಲ್ಲ. ನಿನ್ನ ಭಾವನೆಗಳನ್ನು ಆ ಸಾಧ್ವಿ ಅರ್ಥ ಮಾಡಿಕೊಳ್ಳಲಿಲ್ಲ. ಅದೆಲ್ಲ ಇರಲಿ… ಏನೋ ಹೇಳಿ ಇಲ್ಲದ ರಗಳೆಗೆ ದಾರಿ ಮಾಡಿಕೊಡೋದು ಬೇಡ… +ನಾನು ನಿನ್ನಲ್ಲಿ ಯಾವ ವಿಷಯದ ಬಗ್ಗೆ ಅರಿಕೆ ಮಾಡಿಕೊಂಡಿದ್ದೆನೆಂದರೆ… ಅದನ್ನು ಮರೆತಿರುವಿಯೋ ಅಥವಾ ವಿತಂಡವಾದಕ್ಕೆ ಹೆಸರಾಗಿರುವ ನೀನು ನನ್ನನ್ನು ದಾರಿ ತಪ್ಪಿಸುತ್ತಿರುವಿಯೋ? ಭಗವಂತನಿಗೇ ಗೊತ್ತು… ಅನಸೂಯಾಳೊಂದಿಗೆ ನಿನ್ನ ಸಂಬಂಧ ಏರ್ಪಟ್ಟ ಬಗ್ಗೆ ಹೇಳು ಅಂತ…” +“ಅದನ್ನೆ ಹೇಳಬೇಕೆಂದಿದ್ದೆನೋ ಮಹಾರಾಯ… ಆದ್ರೆ ಅಷ್ಟರಲ್ಲಿ ಅವಳು ಬೇರೆ ಶಿವಪೂಜೆಲಿ ಕರಡಿ ಬಿಟ್ಟಂತೆ ಒಂದು ಗಲಿಬಿಲಿಗೊಳಿಸಿಬಿಟ್ಟಳು ನೋಡು… ಎಲ್ಲ ಗೊತ್ತಿದ್ದೂ ಆಕೆ ತೆಪ್ಪಗಿದ್ದು ಸಹಿಸಿಕೊಂಡಲೆಂಬ ಸಂಗತಿ ತಿಳಿದು ಬರಸಿಡಿಲೆರಗಿದಂತಾಯ್ತು ನೋಡು… ತಾನು ಬಯಸಿ ಬಂದ ವೈಧವ್ಯದ ಭಾಗ್ಯವನ್ನು ಆಕೆ ಅನುಭವಿಸ್ತಿದ್ದಾಳೀಗ… ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ಮರಣೋತ್ತರವಾಗಿ ಹೇಳುತ್ತಿರುವುದನ್ನೆಲ್ಲ ಆಕೆ ಕದ್ದು ಕೇಳುತ್ತಿರುವಳೆಂದು ಅರ್ಥವಾಯಿತು. ನಾನು ಬದುಕಿದ್ದಾಗ ಕೇಳಲಿಕ್ಕೆ ಸನ್ನದ್ಧಳಾಗಿದ್ದರೆ ಖಂಡಿತ ಸವಿವರವಾಗಿ ಹೇಳಿ ಹೃದಯದ ಭಾರವನ್ನು ತುಸುವಾದರೂ ಕಡಿಮೆ ಮಾಡಿಕೊಂಡು ಸಾಯುತ್ತಿದ್ದೆ. ಈಗಲಾದ್ರು ನನ್ನ ಕಥೆ ಕೇಳಿ ಆಕೆ ಸಂತೋಷದಿಂದ ಹಾಲು ಕೀರು ಕುಡಿಯಲಿ… ಏನಾಗಬೇಕಿದೆ ಅದರಿಂದ… ಈಕೆಯಂತೂ ಹೊರಗಿನಿಂದ ಬಂದವಳು… ಸರೆ… ನನ್ನ ತಾಯಿಗಾದರೂ ನನ್ನ ಮೇಲೆ ಒಂಚೂರು ಕರುಣೆ ಇರಲಿಲ್ಲವಲ್ಲ. ಆ ಮುದುಕಿಗೆ ಹೆತ್ತ ಮಗನಿಗಿಂತ ಕರ್ಮಠ ಬ್ರಾಹ್ಮಣ್ಯ ಹೆಚ್ಚಾಯ್ತು ನೋಡು… ನೀನಿಲ್ಲಿಂದ ತೊಲಗ್ಲಿಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೊಂಡು ಬಿಡ್ತೀನಂತ ಹೆದರಿಸ್ತು ಕಣೋ ಆ ನನ್ನ ತಾಯಿ… ಇಂಥಾದ್ನೆಲ್ಲ ನೆನೆಸಿಕೊಂಡ್ರೆ ಸತ್ತಿರೋ ನಾನು ಮತ್ತಷ್ಟು ಸಾಯಬೇಕೆನಿಸುತ್ತೋ ಕುಂವೀ… ಹಾಳಾದೋನೇ!” ಎಂದು ಹೇಳಿ ಬಿಕ್ಕ ತೊಡಗಿತು. +ಅದರ ಮಾತು ಕೇಳಿ ನನ್ನ ಕರುಳು ಕಿತ್ತು ಬಾಯಿಗೆ ಬಂದಿತು – +“ನನ್ ಮಾತಿಗೆ ಬೆಲೆಕೊಟ್ಟು ಸುಮ್ನಿರ್‍ತೀಯೋ ಇಲ್ವೋ ಶಾಮಾ… ಧೈರ್ಯ ತಂದ್ಕೋ ಮಾರಾಯಾ… ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಸತ್ತಮೇಲೂ ಸಹ ನೀನು ನಿನ್ನ ತಾಯಿ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆಯ ಬೇಡ… ಆ ವೃದ್ಧ ಮಾತೆ ಕಾಶೀಕ್ಷೇತ್ರದಲ್ಲಿ ಅನಾಥಳಾಗಿ ತಿರುಗಾಡುತ್ತಿದೆಯಮ್ತೆ… ಸಂಪರ್ಕ ಮಾಧ್ಯಮಗಳಿಗೆ ನಿಲುಕದ ರೀತಿಯಲ್ಲಿ… ಆಕೆಯ ಪ್ರಜ್ಞೆ ಪ್ರವಾಹದ ಮೂಲಕ ಅದೆಷ್ಟು ಕಹಿ, ಸವಿ ವಾಸ್ತವ ಅವಾಸ್ತವ ಸಂಗತಿಗಳು ಓತ ಪ್ರೋತವಾಗಿ ಕೊಚ್ಚಿ ಹೋಗ್ತಿವೆಯೋ ಏನೋ… ಅದನ್ನೆಲ್ಲ ಸೃಜನಶೀಲತೆಯ ಅಣೆಕಟ್ಟಿನಲ್ಲಿ ಹಿಡಿದಿಟ್ಟರೆ ಒಂದು ಮಹಾಕಾವ್ಯವೇ ಹುಟ್ಟಬಹುದು. ಆಕೆ ಎಂದೋ ನಿನ್ನ ಕುರಿತಂತೆ ಕಹಿಯಾಗಿ ನಡೆದುಕೊಂಡ ಆಡಿದ ಮಾತುಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿರಬಹುದು ಗೆಳೆಯಾ! ತಾಯಿ ಹೃದಯ ಅರ್ಥ ಮಾಡಿಕೋ! ಗಾರ್ಕಿ ಕಥೆಯಲ್ಲಿ ಬರುವ ತಾಯಿ ವಿನಃ ಮಾನವೇತಿಹಾಸದ ಯಾವ ತಾಯಿಯೂ ತನ್ನ ಮಗನಿಗೆ ಅಹಿತ ಬಯಸಿರಲಾರಳು… ಅದನ್ನೆಲ್ಲ ಮರೆತು, ಇಲ್ಲವೆ ಬದಿಗಿರಿಸಿ ನೀನು ಹೇಳಬೇಕೆಂದಿರೋದನ್ನು ಹೇಳಿ ಹೃದಯ ಹಗುರ ಮಾಡಿಕೋ… ಹೇಳಪ್ಪಾ… ಹೇಳು… ಕಾದಂಬರಿ ಬಿಡುಗಡೆಯಾಗುವ ದಿನ ದೂರವಿಲ್ಲ…” ಎಂದು ಸಮಾಧಾನದ ಮಾತುಗಳನ್ನಾಡಿದೆ. +ಇದ್ದಕ್ಕಿದ್ದಂತೆ ಕಿಟಾರನೆ ಕಿರುಚಿಕೊಂಡು ಅಳಲು ಶುರು ಮಾಡಿದ ಪ್ರವರ ಅಲಿಯಾಸ್ ನಿರ್ವಾಣವನ್ನು ತೊಟ್ಟಿಲಿಂದ ಎತ್ತಿಕೊಂಡ ಅನ್ನಪೂರ್ಣ ಮೂಲೆ ಸೇರಿ ಮೊಲೆ ಉಣಿಸುತ್ತ ಏನೇನೋ ಗೊಣಗುಟ್ಟತೊಡಗಿದಳು. +ಒಂದು ಕ್ಷಣ ಕವಿದ ಮೌನ ಭೇದಿಸಿ ಶಾಮಣ್ಣ ಪಾತ್ರವೇ ಮಾತನಾಡಲಾರಂಭಿಸಿತು. +“ಕಾಶಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವಳೆಂದು ನೀನು ಹೇಳಿದರೆ ನಾನು ನಂಬುವುದಿಲ್ಲ್?. ಆಕೆ ಮಧ್ಯಪ್ರದೇಶದ ಜಬ್ಬಲ್ಪುರ ಸಮೀಪದಲ್ಲಿ ನರ್ಮದಾ ತೀರದ ಎಡಬಲ ಎಲ್ಲೋ ಅಲೆದಾಡುತ್ತಿರುವಳೆಂಬುದು ನನ್ನ ಭಾವನೆ… ಇರಲಿ… ಅದೆಲ್ಲ ಕಟ್ಕೋಂಡೆನಾಬೇಕಾಗಿದೆ ಈಗ… ಬದುಕಿಗಿಂತ ಸದೃಶವಾದ ನರಕ ಬೇರೊಂದಿಲ್ಲಾಂತ ಆ ಹೆಂಡತಿಗೆ; ತಾಯಿಗೆ ಈಗಾಗಲೆ ಅರ್ಥವಾಗಿರಬೇಕು… ಅರ್ಥವಾಗಿರದಿದ್ದರೆ ಅದು ಅವರವರ ಕರ್ಮ. ಇವರೆಲ್ಲ ನಡುನಡುವೆ ಕ್ಯಾತೆ ತೆಗೆದು ನನಗೆ ತೊಂದರೆ ಕೊಡುತ್ತಿದ್ದಾರೆ. ನಾನೆಲ್ಲಿ ಅವರ ಸಚ್ಚಾರಿತ್ರ್ಯದ ವಿರುದ್ಧ ಸಾಕ್ಷಿ ನುಡಿದುಬಿಡುವೆನೋ! ಎಂಬ ಭಯ ಕಾಡುತ್ತಿರಬಹುದು. ನಾನು ಯಾರ ಪರವೂ ಇಲ್ಲ… ಯಾರ ವಿರುದ್ಧವೂ ಅ ನೀನು ನನ್ನ ಮೆಲೆ ನಿರೂಪಕ ಶಕ್ತಿಯನ್ನು ಹೇರಿರದಿದ್ದರೆ ನಾನು ಚುನಾವಣಾ ಪ್ರಚಾರಕಾರ್ಯಕ್ಕೆ ಸೋನಿಯಾರೊಂದಿಗೆ ಬರಲಿರುವ ಪ್ರಿಯಾಂಕಳನ್ನು ನೋಡಲು ಹೋಗುತ್ತಿದ್ದೆ… ಕುಂವೀ… ಯಾವ ಪಕ್ಷ ಬಹುಮತ ಸಾಧಿಸಬಹುದು ಈ ಚುನಾವಣೆಯಲ್ಲಿ?” +ಅದರ ಮಾತು ಕೇಳಿ ನನಗೆ ಬೇಸರವಾಯಿತು. ಸುಮ್ಮನೆ ಕಾಲಕ್ಷೇಪ ಮಾಡುತ್ತಿರುವುದಲ್ಲ ಇದು. +ಯಾವುದಾದ್ರು ಬರ್ಲಿ ಕಣಪ್ಪಾ… ನಿಂದು ನೀನು ಹೇಳು ಅಂದ್ರೆ-” ಎಂದೆ. +“ಅತಂತ್ರ ಲೋಕಸಭೆಗೂ, ನನಗೂ ಯಾವ ವ್ಯತ್ಯಾಸವಿಲ್ಲ ನೋಡು… ಆಯ್ತು ಹೇಳ್ಟೇನೆ… ಇಲ್ಲಿವರೆಗೆ ನಾನು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಹಾಗೆ ಸರಿಯಾಗಿ ಬರೆದುಕೊಂಡಿರುವೆ ತಾನೆ. ನೀನು ಯಾವ ಸಂಗತಿಯನ್ನಾದ್ರು ಮರೆಮಾಚಿದೀ ಅಂದರೆ ನನ್ನ ಕಥೆಗೆ ಊನ ತಟ್ಟುತ್ತದೆ. ನಾನು ಹೇಳಿದ್ದು ಯವುದೋ ಪಠ್ಯೇತರವೆಂದು ಭಾವಿಸಬೇಡ… ಮುಂದಿನ ಕಥೆಗೆ ಅದೆಲ್ಲ ಬೇಸ್ಮೆಂಟ್ ಇದ್ದಂತೆ… ನಾನು ಚೆನ್ನಾಗಿರುವಷ್ಟು ಕಾಲ ಎಲ್ಲರೂ ನನ್ನೊಂದಿಗೆ ಚೆನ್ನಾಗೇ ಇದ್ದರು. ಗುಲಾಂ ನಬಿ ಕೂಡ ಅಷ್ಟೆ. ಯಾವಾಗ? ಯಾರಿಗೆ? ಯಾವ ರೀತಿಯ ಹುಳ ಕಡಿಯುವುದೋ ದೇವರಿಗೇ ಗೊತ್ತು? ಇದ್ದಕ್ಕಿದ್ದಂತೆ ಬೆನ್ನು ಮಾಡಿ ಬಿಡುತ್ತರೆ… ತೋಳ ಹಾಳು ಬಾವಿಗೆ ಬೀಳುವುದನ್ನೇ ಕಾಯುತ್ತಿರುತ್ತಾರೆ ಕೈಯಲ್ಲಿ ಕಲ್ಲು ಹಿಡಿದುಕೊಂಡು. ಚಿಕ್ಕ ಗಾಯಗೊಂಡ ಕಾಳೋರಗ ನಿರ್ನಾಮವಾಗುವುದು ಸಾವಿರ ಸಾವಿರ ಇರುವೆಗಳಿಂದ ಎಂಬುದನ್ನು ಮರೆಯಬೇಡ… ಇವತ್ತಿನ ಸಮಾಜದಲ್ಲಿ ಮನುಷ್ಯ ಸದೃಡವಾಗಿ ಬದುಕಿರಬೇಕಾದರೆ, ಲಾಂಛನಪ್ರಾಯವಾಗಿ ಜೀವಿಸಬೇಕಾದರೆ ಅವನು ಮುಖವಾಡಗಳ ಮೊರೆ ಹೋಗಬೇಕು. ಅವುಗಲನ್ನು ಆಶ್ರಯಿಸಬೇಕು. ಅವುಗಳನ್ನು ಪಡೆಯಬೇಕು. ಸಾಂದರ್ಭಿಕವಾಗಿ ಸಕಾಲಿಕವಾಗಿ ಧರಿಸಬೇಕು. ಹೀಗಾಗಿ ಮುಖವಾಡಗಳನ್ನು ಧರಿಸಿರುವ ಮನುಷ್ಯರಿಂದಲೇ ಸಮಕಾಲೀನ ಸಮಾಜ ತುಂಬಿಕೊಂಡಿದೆ. ಯಾರ ನೈಜಸ್ವರುಪ ತಿಳಿಯುವುದೇ ಇಲ್ಲ. ಯಾವ ಮುಖವಾಡದ ಹಿಂದೆ ಯಾರು ಇದ್ದು ಯಾವ ಸಂಚು ಹೂಡಿರುತ್ತಾರೋ ಅರ್ಥವಾಗುವುದಿಲ್ಲಪ್ಪಾ… ಹೆಂಡತಿ, ತಾಯಿ, ಎಲ್ಲರೂ ಇದಕ್ಕೆ ಹೊರತಲ್ಲ… ಆದರೆ ಮುಖವಾಡ ಧರಿಸದೆ ಸ್ಪಂದಿಸಿದವಳೆಂದರೆ ಅನಸೂಯ ಮಾತ್ರ ನೋಡು… ಆಕೆಯ ಪರಿಚಯವಾಗಿರದಿದ್ದಲ್ಲಿ… ನನ್ನ ದೇಹಕ್ಕೆ, ಮನಸ್ಸಿಗೆ, ಬದುಕಿಗೆ, ತಪ್ಪಿಗೆ, ಒಪ್ಪಿಗೆ ಆಕೆ ಸ್ಪಂದಿಸಿರದಿದ್ದಲ್ಲಿ ನಾನೆಂದೋ ನಿಮ್ಹಾನ್ಸ್ ಶವಾಗಾರ ಪೆಟ್ಟಿಗೆಯಲ್ಲಿ ಕೊಳೆಯುತ್ತ ಬಿದ್ದಿರುತ್ತಿದ್ದೆ. ನನ್ನ ಬದುಕು ನಿನ್ನಂಥ ಯಾರನ್ನೂ ಆಕರ್ಷಿಸುತ್ತಿರಲಿಲ್ಲ. +ಆಕೆಯ ಪರಿಚಯವಾದದ್ದು ನನ್ನ ಬದುಕಿನ ಸುವರ್ಣಾಧ್ಯಾಯವೆಂದೇ ನಾನು ಭಾವಿಸುತ್ತೇನೆ… +* +* +* +ನಾನು ಚಿಕ್ಕಂದಿನಿಂದ ಮುಂದೇನಾಗಬೇಕೆಂದು ಯೋಚಿಸಿರಲಿಲ್ಲವಾದರೂ ಬ್ಯಾಂಕ್ ನೌಕರಿಗೆ ಸೇರಿಕೊಂಡ ಕೆಲ ವರ್ಷಗಳ ನಂತರ ಶಿಕ್ಷಕನಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳತೊಡಗಿಡೆ. ಯಾವುದೇ ಒಂದು ನೌಕರಿಗೆ ಅವರದೇ ಆದ ಒಂದು ನಿರ್ದಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರೆ ಚೆನ್ನಾಗಿರುತ್ತದೆ. ಪೋಲೀಸ್ ಆಗೋರು ಶಿಕ್ಷಕ ವೃತ್ತಿಗೆ ಹೇಗೆ ಸರಿ ಹೋಗುವುದಿಲ್ಲವೋ ಹಾಗೆ, ಶಿಕ್ಷಕನೋರ್ವನ ಉತ್ತಮ ಅಂಶಗಳೆಲ್ಲವು ನನ್ನ ವ್ಯಕ್ತಿತ್ವದಲ್ಲಿದ್ದವು. ಮುಖ್ಯವಾಗಿ ಅಮಾಯಕತೆ, ಯಾರಿಂದಲೂ ಮೋಸಹೋಗಲಾರದಂಥ ಸೌಮ್ಯ ವ್ಯಕ್ತಿತ್ವ. ಅದರ ಅರಿವಾಗುವ ಹೊತ್ತಿಗೆ ತುಂಬ ವಿಳಂಬವಾಗಿತ್ತು. ಇದಕ್ಕೆ ಕಾರಣಗಳಿಲ್ಲದಿಲ್ಲ. ಇದಕ್ಕೆ ಸಂಬಂಧಿಸಿದ ವಿವರಗಳು ಮುಂದೆ ಅನಿವಾರ್ಯ ಸ್ಥಿತಿಯಲ್ಲಿ ಬರುತ್ತದೆ. +ಇದ್ದಕ್ಕಿದ್ದಂತೆ ನಮ್ಮ ಬ್ಯಾಂಕಿನ ಸಂಘದ ರಾಷ್ತ್ರಮಟ್ಟದ ಪದಾಧಿಕಾರಿಗಳ ಪೈಕಿ ಕಲ್ಕತ್ತಾದಿಂದ ಶ್ರೀಕಾಂತ್ ಬರುವಾ; ದೆಹಲಿಯಿಂದ ಅತುಲ್ಕುಮಾರ್ಬಗೀಚ, ಬೊಂಬೈಯಿಂದ ಸುನೀತ್ ಚೌಗಲೆ ಬೆಂಗಳೂರಿಂದ ಆತ್ಮಾನಂದ್ ಮೇಲು ಕೋಟೆ ಮೊದಲಾದವರು ಕೊತ್ತಲಿಗಿಗೆ ಬಂದುಬಿಟ್ಟರು. ಒಂದಲ್ಲಾ ಒಂದು ಭೂಗತಚಟುವಟಿಕೆಗಳು ಉತ್ತರ ಭಾರತದ ಬಹುಪಾಲು ನಗರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದುದರಿಂದ ಈ ಸಾಲಿನ ಬ್ಯಾಂಕ್ ನೌಕರರ ಪೂರ್ಣಾಧಿವೇಶನವನ್ನೂ ಜೊತೆಗೆ ಬ್ಯಾಂಕಿನ ಸುವಾರ್ಣ ಮಹೋತ್ಸವವನ್ನೂ ಒಟ್ಟಿಗೆ ವಿಜೃಂಭಣೆಯಿಂದ ಆಚರಿಸಲು ಸೌಮ್ಯ ಮತ್ತು ನಿರುಪದ್ರವಿ ಸ್ಥಳವಾದ ಕೊತ್ತಲಿಗಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಶ್ರೀಲಂಕಾದಿಂದ ತಮಿಳು ಉಗ್ರಗಾಮಿಗಳ ತಂಡವೊಂದು ಬೆಂಗಳೂರಲ್ಲಿ ಸ್ಥಾವರ ಸ್ಥಾಪಿಸಿಕೊಂಡು ಬುಡಮೇಲು ಕೃತ್ಯದಲ್ಲಿ ತೊಡಗಿದೆ ಎಂದು ಗುಪ್ತವರದಿ ಆಧಾರದ ಮೇಲೆ ಬೆಂಗಳೂರಲ್ಲಿ ಮಾಡಲು ಸಾಧ್ಯವಿರಲಿಲ್ಲ. ಬ್ಯಾಂಕ್ ವ್ಯವಸ್ಥೇನೆ ಬಂಡವಾಳ ಶಾಹಿಗಳ ಮತ್ತು ಜಮೀನ್ದಾರರ ಪರವಾಗಿದೆ. (ಈಗಲೂ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಲಕ್ಷಗಟ್ಟಲೆ ಹಣವನ್ನು ಕಡಿಮೆ ಬಡ್ಡಿ ಧರಕ್ಕೆ ಪಡೆದು ಶೇ. ಹತ್ತರಷ್ಟು ಬಡ್ಡಿದರ ಹೇರಿ ಚಿಕ್ಕ ಚಿಕ್ಕ ಹಿದುವಳಿದಾರರಿಗೆ ಸಾಲ ನೀಡಿರುವ ನೂರಾರು ಮಂದಿ ಜಮೀನ್ದಾರರನ್ನು ನೋಡಬಹುದಾಗಿದೆ!) ಆದ್ದರಿಂದ ಆಂಧ್ರದ ಯಾವ ಭಾಗದಲ್ಲೂ ಈ ಅಧಿವೇಶನ ನಡೆಸುವುದಕ್ಕೆ ಆಸ್ಪದಕೊಡುವುದಿಲ್ಲವೆಂದು ನಕ್ಸಲೈಟ್ಸ್ ಬೆದರಿಕೆಯೊಡ್ಡಿರುವುದರಿಂದ ಆಂಧ್ರಪ್ರದೇಶದಲ್ಲಿ ಮಾಡಲು ಸಾಧ್ಯವಿಲ್ಲ. ಭೂಗತ ದೊರೆಗಳು; ರಾಜಕಾರಣಿಗಳು, ಷೇರ್ ದಲ್ಲಾಳಿಗಳು, ಹವಾಲ ದೊರೆಗಳು ಇವರ ಪರವಾಗಿ ಬ್ಯಾಂಕ್ ವ್ಯವಸ್ಥೆ ವಿರುದ್ಧ ಶಿವಸೇನಾ ನಾಯಕರು ಸಮರ ಸಾರಿರುವುದರಿಂದ ಮಹಾರಾಷ್ಟ್ರದಲ್ಲೂ ನಡೆಸುವಂತಿಲ್ಲ. ಹೀಗೆ ಪ್ರತಿಯೊಂದು ರಾಜ್ಯದಲ್ಲಿ ಒಂದಲ್ಲ ಒಂದು ತಳಮಳಗಳು ಬ್ಯಾಂಕಿನ ಅವಿಭಾಜ್ಯ ಅಂಗವಾದ ಪತ್ತೆದಾರಿಕೆಯ ಶಾಖೆಯ ಛೀಫ್ ಕುರಿಯನ್ ನೀಡಿರುವ ವರದಿಯ ಆಧಾರದ ಮೇಲೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಮತ್ತು ಕಲಾ ಸಾಂಸೃತಿಕ ಪುಟ್ಟ ನಗರವೆಂದು ಹೆಸರಾದ ಕೊತ್ತಲಿಗಿಯೇ ಮಹಾ ಅಧಿವೇಶನ ನಡೆಸಲು ಸೂಕ್ತ ಎಂಬ ನಿರ್ಣಯವನ್ನು ಕಳೆದೆರಡು ತಿಂಗಳ ಹಿಂದೆ ಡೆಹ್ರಾಡೋನ್‌ನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ‌ಒಮ್ಮತದಿಂದ ಸ್ವೀಕರಿಸಲಾಯಿತು. ಒಂದು ಉಲ್ಲೇಖಾರ್ಹ ಸಂಗತಿ ಎಂದರೆ ಕೊತ್ತಲಿಗಿ ಶಾಖೆ ಠೇವಣಿ ಸಂಗ್ರಹಣಾ ಕಾರ್ಯದಲ್ಲಿ ಎಲ್ಲಾ ಶಾಖೆಗಳಿಗಿಂತ ಮುಂಚೂಣಿಯಲ್ಲಿರುವುದೆಂದೂ, ಇದಕ್ಕೆ ಶಕ್ತಿ ಮೀರಿ ಶ್ರಮಿಸಿದವರು ಶ್ರೀಮತಿ ಶಾಂತಿ ಗರಡಿಮನಿ ಮತ್ತು ಪಂಡಿತ್ ಶಾಮಾಶಾಸ್ತ್ರಿ (ಪಂಡಿತ್ ಎಂಬುದು ನಮ್ಮ ಮನೆ ಹೆಸರು… ನಿನಗೆ ಗೊತ್ತಿಲ್ಲ) ಎಂದೂ ಕುರಿಯನ್ ತಮ್ಮ ಗುಪ್ತ ವರದಿಯಲ್ಲಿ ವ್ಯಕ್ತಪಡಿಸಿದ್ದರು. ಸೌಂದರ್ಯ ಮತ್ತು ಸಂಸ್ಕೃತ ಇವೆರಡೂ ಜೊತೆಜೊತೆಯಾಗಿದ್ದರೆ ಎಂಥ ಪವಾಡ ನಡೆಯುತ್ತದೆ ಎಂಬುದಕ್ಕೆ ಇವರೀರ್ವರೇ ನಿದರ್ಶನವೆಂದು ವರದಿಯಲ್ಲಿ ಪ್ರಶಂಸಿಸಲಾಗಿತ್ತು. ಗುಪ್ತ ವರದಿಯಲ್ಲಿದ್ದ ಇನ್ನು ಕೆಲವು ಪ್ರಮುಖ ಅಂಶಗಳೆಂದರೆ ಇಡೀ ಭಾರತದಲ್ಲಿ ವಾಯು ಮಾಲಿನ್ಯ ಶಬ್ದ ಮಾಲಿನ್ಯವಿಲ್ಲದ ಮತ್ತು ಫ್ಲೋರಿನ್ ಯುಕ್ತ ಶುದ್ಧ ನೀರು ದೊರಕುವ ಏಕೈಕ ಕಿರುನಗರಿ ಕೊತ್ತಲಿಗಿ ಎಂದು ಹೆಗ್ಗಳಿಸಲಾಗಿತ್ತು. ಇವೆಲ್ಲವುಗಳ ಜೊತೆಗೆ ಬ್ಯಾಂಕಿನ ಸೀನಿಯರ್ ನೌಕರರಾದ ಚಂಬಸ್ಯಯ್ಯ ; ಇಸ್ಮಾಯಿಲ್ ಮತ್ತು ಹೆಬ್ರಿಯವರನ್ನು ಸ್ವಜಾತಿ ದ್ರೋಹಿಗಳೆಂದೂ, ಸ್ವಹಿತ ಸಾಧಿಸಿಕೊಳ್ಳುವ ಸಲುವಾಗಿ ಬ್ಯಾಂಕ್ ಹಿತಾಸಕ್ತಿಯನ್ನು ಬಲಿಕೊಡಲಿಕ್ಕೂ ಹಿಂಜರಿಯದವರೆಂದೂ. ನಡುವಳಿಕೆ ಉತ್ತಮಪಡಿಸಿಕೊಳ್ಳಲು ಆರು ತಿಂಗಳು ಕಾಲಾವಧಿಯನ್ನು ನೀಡಲಾಗುವುದೆಂದೂ ವಿವರಿಸಲಾಗಿತ್ತು. +ಬರೂವ ಮತ್ತು ಬಗೀಚರು ಆ ಮುವ್ವರಿಗೆ ಛೀಮಾರಿ ಹಾಕಿದರು. ಹಾಗೆಯೇ ಶ್ರೀಮತಿ ಶಾಂತಿ ಮತ್ತು ಪಂ.ಶಾಮಾಶಾಸ್ತ್ರಿಯವರ ಕೈಕುಲುಕಿ ರಾಷ್ರೀಯ ಮಟ್ಟದಲ್ಲಿ ಅತ್ಯುತ್ತಮ ಸೇವಾ ಸ್ವರ್ಣ ಪದಕ ಪಡೆದುದಕ್ಕೆ ಅಭಿನಂದನೆಗಳೆಂದೂ, ಮುಂದೆ ನಡೆದ ಮಹಾಧಿವೇಶನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವ ಸನ್ಮಾನ್ಯ ರಿಜರ್ವ್ ಬ್ಯಾಂಕ್ ಗವರ್ನರರೇ ತಮ್ಮ ಅಮೃತ ಹಸ್ತದಿಂದ ಪ್ರಶಸ್ತಿ ಪ್ರಧಾನ ಮಾಡುವರೆಂದೂ ನಿಮಗೆ ಉತ್ತಮ ಅವಕಾಶಗಳು ಕಾದಿವೆ ಎಂದೂ ಹೇಳಿದರು. +ಶ್ರೀಯುತ ಮೇಲುಕೋಟೆಯವರಿಗೆ ಮಹಾಧಿವೇಶನವನ್ನು ನಡೆಸುವ ಜವಾಬ್ದಾರಿ ವಹಿಸಿ ಅವರೆಲ್ಲ ಶಿಸ್ತಿನ ಸಿಪಾಯಿಗಳಂತೆ ಗೊತ್ತುಪಡಿಸಿದ ವೇಳೆಗೆ ಅಲ್ಲಿಂದ ಬೀಳ್ಕೊಂಡರು. +ಬಂದು ಹೋದವರ ಟಿಪ್ ಟಾಪ್ ಡ್ರೆಸ್ಸೂ; ಗಡ್ಡ ಮೀಸೆ ರಹಿತ ಕಿತ್ತಳೆ ವರ್ಣದ ಮುಖಗಳನ್ನು ಅವರು ಟಿಸ್ಸಾ ಪುಸ್ಸಾ ಅಂತ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಸ್ಟೈಲು ಇವೆಲ್ಲವನ್ನು ಗಮನಿಸಿದ ಗ್ರಾಮದ ಮುಗ್ಧ ಜನತೆಯು ಅವರನ್ನು ವಿಶ್ವಸುಂದರಿ ನಡೆಸಬೇಕೆಂದಿರುವ ಜನಪ್ರಿಯ ಹಿಂದಿ ಸಿನಿಮ್ಮ ನಟರೆಂದು ಅಪಾರ್ಥ ಮಾ‌ಇಕೊಂಡರು. ಅವರಲ್ಲಿ ಶಶಿಕಪೂರ್ ಯಾರು? ದಿಲೀಪ್ ಕುಮಾರ್ ಯಾರು! ಧರ್ಮೇಂದ್ರ ಯಾರು ಅಂತೆಲ್ಲ ಕೇಳಿ ನಿಜ ತಿಳಿದುಕೊಂಡು ಮುಖ ಚಿಕ್ಕದು ಮಾಡಿಕೊಂಡು ಹೋಗತೊಡಗಿದರು. ಅವರ ಪೈಕಿ ಅನೇಕರು ನನ್ನನ್ನು ಶಾಂತಿಯನ್ನು ಹೀರೋ ಹೀರೋಯಿನ್ನುಗಳೆಂದು ಆಯ್ಕೆ ಮಾಡಲಿಕ್ಕೆ ಬಂದಿರುವರೆಂದು ಊಹಿಸಿ ಪೆಚ್ಚಾದರು. +ಅತ್ಯುತ್ತಮ ಸೇವಾ ಪ್ರಶಸ್ತಿಯ ಬಗ್ಗೆ ನನ್ನಲ್ಲಿ ಯಾವ ಭಾವನೆಗಳೂ ಇರಲಿಲ್ಲ… ಅದನ್ನು ಸೃಷ್ಟಿಸಿದವಳೇ ಶಾಂತಿ. ನಾನು ಶಾಂತಿ ಜನರ ದೃಷ್ಟಿಯಲ್ಲಿ ಹೀರೋ ಹೀರೋಯಿನ್ನುಗಳೇ ಆದೆವು. ಕೆಲವು ಪತ್ರಕರ್ತರು ಬಂದು ವಿಷಯ ತಿಳಿದು ಫೋಟೋ ಕ್ಲಿಕ್ಕೆನಿಸಿಕೊಂಡು ಹೋದರು. ಓಬಳೇಶ ಕ್ವಾರ್ಟುಬೇಕಂತ ‘ಪಾತಿಕ ರುಪಾಯಿ’ ಇಸಿದುಕೊಂಡು ಹೋದ. ಆದರೆ ತ್ರಿಮೂರ್ತಿಗಳ ಮುಖದಿಮ್ಮಗುಟ್ಟತೊಡಗಿತು. ಅವರ ಕುರ್ತ್ಸಿತ ಭಾವನೆಯಿಂದ ಅವರು ಒಟ್ಟಾದರು – ದ್ರೌಪದಿಯ ವಸ್ತ್ರಾಪಹರಣ ಮಾಡಲಿಕ್ಕೆ ಗಾಂಧಾರಿ ಪುತ್ರರು ಒಟ್ಟಾದ ಹಾಗೆ. +ಇನ್ನೇನು ಮನೆಗೆ ಹೋಗಿ ಗರ್ಭಿಣಿ ಪತ್ನಿಗೆ ವಿಷಯ ಅರುಹಿ ಸಂತೋಷಪಡಿಸಬೇಕೆಂದು ಹೊರಡಬೇಕೆನ್ನುವಷ್ಟರಲ್ಲಿ ಗುಲಾಂನಬಿ ಕಾರುಕೊಟ್ತು ಮನೆಗೆ ಕರೆಯಿಸಿಕೊಂಡು ನಮ್ಮೀರ್ವರನ್ನು ಸತ್ಕರಿಸಿ ಸಂತೋಷಿಸಿದ ಹಳೇಕೋಟೆ ವೃತ್ತದ ಬಳಿ ಗುಮಿಸಿಗೌಡ “ಇದು ಕಮ್ಯುನಿಷ್ಟರ ಜನಪರ ಕಾಳಜಿಗೆ ಸಂದ ಪ್ರಶಸ್ತಿ” ಎಂದು ಪ್ರಶಂಸಿಸಿದ. ಅವರೆಲ್ಲರಿಮ್ದ ಬಿಡಿಸಿಕೊಂಡು ಮನೆಗೆ ಹೋದರಲ್ಲಿ ‘ಯಾರೋ ಶೂದ್ರಹುಡುಗರು ತನ್ನ ಮೇಲೆ ನೀರು ಸಿಂಪಡಿಸಿ ಮಡಿ ಕೇಡೆಸಿದರೆಂಬ’ ಕಾರಣಕ್ಕೆ ಹೆಂಡತಿ ಸಿಡಿ ಮಿಡಿಗೊಂಡಿರುವುದು ಕಂಡಿತು. ಮತ್ತೆ ಸ್ನಾನ ಮಾಡಿ ಮಡಿಯಿಂದ ಬಂದ ಆಕೆ ಅಪ್ಪಿಕೊಳ್ಳಲು ಬಂದ ನನ್ನಿಂದ ದೂರ ಸಿಡಿದಳು. ಸಂತೋಷದ ಕಾರಣ ಹೇಳಿದೆ. ನಾನು ಹೇಳಿದ್ದನ್ನು ಆಕೆ ಹೇಗೆ ಅರ್ಥೈಸಿಕೊಂಡಳೋ ತಿಳಿಯದು. ‘ಹೌದಾ’ ಅಂದಳು ಅಷ್ಟೆ. ಅವಳ ನಿರ್ಲಕ್ಷ್ಯ ಪೂರಕ ಪ್ರತಿಕ್ರಿಯೆಯಿಂದ ನಾನು ಪಾತಾಳಕ್ಕಿಳಿದು ಹೋದೆ… ‘ಥೂ ನಿರ್ಜೀವ ಕಾಷ್ಟ ಶಿಲ್ಪ’ ಎಂದು ಮನಸ್ಸಿನಲ್ಲೇ ಬಯ್ದುಕೊಂಡೆ. +(ಛೇ! ಎಷ್ಟೊಂದು ಸುಳ್ಳು ಹೇಳ್ತಿದಾರಲ್ಲ ಇವ್ರು… ಅದನ್ನು ಕೇಳುತ್ತಲೆ ನಾನು ಸಂತೋಷದಿಂದ ಉಬ್ಬಿಹೋದುದರ ಬಗೆಗಾಗಲೀ, ಲಜ್ಜಾಭರಣ ಕಳಚಿಟ್ಟು ಅಪ್ಪಿಕೊಂಡು ಮುದ್ದಿಸಿದ್ದರ ಬಗೆಗಾಗಲೀ ಇವರು ಚಕಾರ ಎತ್ತುತ್ತಿಲ್ಲವಲ್ಲ. ನನ್ನನ್ನು ಅರ್ಥ ಮಾಡಿಕೊಂಡಿದ್ದು ಇಷ್ಟೇ ಏನು) +ಸಂತೋಷದ ಸಂಗತಿಯ ಬಗೆಗಾಗಲೀ; ದುಃಖದ ಸಂಗತಿಯ ಬಗೆಗಾಗಲೀ ಹೇಳಿಕೊಳ್ಳ ಬೇಕೆಂದಿದ್ದರೆ ಮಾಡಿದ್ದಾರೆ ಈ ಪ್ರಪಂಚದಲ್ಲಿ? ಮಾಡಿಕೊಂಡ ಹೆಂಡತಿಯೇ ನನ್ನ ಸಂತೋಷದ ಗಳಿಗೆಗಳ ಬಗ್ಗೆ ಸ್ಪಂದಿಸಲಿಲ್ಲವೆಂದ ಮೇಲೆ ಬೇರೆಯವರು ಹೇಗೆ ಸ್ಪಂದಿಸುಯಾರು? ಎಂದು ಯೋಚಿಸಿ ಭ್ರಮ ನಿರಸನ ಪಟ್ಟುಕೊಂಡೆ. ಯಾವುದೇ ವಿಷಯವನ್ನು ಅರ್ಧಾಂಗಿಯ ಬಳಿ (ಅರ್ಧಾಂಗ ಲಕ್ವ ಪೀಡಿತ) ಹೇಳಬಾರದೆಂದು ಆ ಕ್ಷಣ ನಿರ್ಧರಿಸಿದ ನಾನು ಮುಂದೆಂದೂ ವಿಚಲಿತನಾಗಲಿಲ್ಲ. +ಮುಂದೆ ಎರಡು ಪ್ರಮುಖ ಘಟನೆಗಳು ಕೆಲವೇ ದಿನಗಳಲ್ಲಿ ನಡೆದವು. ಅವುಗಳ ಪೈಕಿ ಒಂದೆಂದರೆ ಕಾಮ್ರೇಡ್ ಪಶುಪತಿಗೆ ಲೆನಿನ್ ಗ್ರಾಡ್‌ನಲ್ಲಿ ನಡೆಯಲಿರುವ ಎಡಪಂಥೀಯ ಮಹಾಸಮ್ಮೇಳನದಲ್ಲಿ ಪಾಲ್ಗೊಂಡು ರಷ್ಯಾ ಪ್ರವಾಸ ಮಾಡಿ ಜಾಗತಿಕ ಮಾದಲ್ಲಿ ತಮ್ಮ ಕಮ್ಯುನಿಸ್ಟ್ ರಾಷ್ಟ್ರದ ಹಿರಿಮೆಯನ್ನು ಸಾರಬೇಕೆಂದು ರಷ್ಯಾ ಸರಕಾರದಿಂದ ಆಮಂತ್ರಣ ಬಂದಿದ್ದು. ವೃತ್ತಿ ರಂಗಭೂಮಿ ಕಲಾವಿದೆಯರಿಂದ ಸಂಗ್ರಹಿಸಲ್ಪಟ್ಟ ಹಣವನ್ನೆಲ್ಲ ವಶೀಲಿಗೆ ಉಪಯೋಗಿಸಿದ್ದನೆಂಬುದು ತದನಂತರ ನನಗೆ ಅರ್ಥವಾಯಿತು. ಬೆಂಗಳೂರಲ್ಲಿ ಕಮ್ಯೂನಿಸ್ಟ್ ಪಕ್ಷದ ರಾಷ್ರನಾಯಕರಾದ ಶ್ರೀನಿವಾಸ ಅಯ್ಯರ್, ನೆಡುಂಚಿಯನ್ ಮೊದಲಾದವರ ಕೈಕಾಲಿಗೆ ಬಿದ್ದು ಅಂಗಲಾಚಿದ್ದ. ಇದಕ್ಕೆ ಸಂಬಂಧಿಸಿದಂತೆ ತಾನು ಸೃಷ್ಟಿಸಿದ ಖೋಟಾ ದಾಖಲೆಗಳನ್ನು ತೋರಿಸಿ ನಂಬಿಸಿದ್ದ. ನಡಬಾನಳ್ಳಿಗೆ ಹೋಗಿ ಬರುವುದಾಗಿ ಹೇಳಿಹೋದವನು ಕಾಮ್ರೇಡ್ ಸತ್ಯಮೂರ್ತಿಯೊಂದಿಗೆ ದೆಹಲಿಗೂ ಹೋಗಿ ಡಾಂಗೆಯವರಿಗೆ ಕಲೆ ಬಿದ್ದು ಬಂದ. ಅವನ ತಿಂಗಳುಗಳ ಶ್ರಮ ವ್ಯರ್ಥವಾಗಲಿಲ್ಲ. ಅಲ್ಲಿಂದ ಬಂದ ಆಮಂತ್ರಣ ಹಿಡಿದುಕೊಂಡು ಎಡ ಬಲಗಳ ನಡುವೆ ಭೇದವೆಣಿಸದೆ ಎಲ್ಲರ ಮನೆ ಬಾಗಿಲು ತಟ್ಟಿ ಗುಟ್ಟಾಗಿ ಹಣ ಸಂಗ್ರಹಿಸಿದ. ಮುಗ್ದ ನಿರುಪದ್ರವಿ, ಅಮಾಯಕ ಕಾರ್ಯಕರ್ತನಾಗಿದ್ದ ಗೌಡ ತನ್ನ ಇಪ್ಪತ್ತೆಕರೆ ಹೊಲವನ್ನು ಚಿನ್ನಡೀಚಲುಮ ಪೂಜೆ ಮಾಡುವವರಿಗೆ ಆಯ್ಕೆ ಮಾಡಿ ಕೊಟ್ಟು ಪಡೆದ ಸಾಲದ ಮೊಬಲಗನ್ನು ತನ್ನರ್ಧ ವಯಸ್ಸಿನ ಪಶುಪತಿಗೆ ನೀಡಿದ್ದು ಕೂಡ ಮೂರನೇ ವ್ಯಕ್ತಿಗೆ ತಿಳಿಯದು. ಅದಕ್ಕಿಂತ ಮೊದಲು ತನ್ನ ತಂದೆ ಲಕ್ಷಾಧೀಶ್ವರರೆಂದೂ; ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಕೌಂಡ್‌ದೌನ್ ಸ್ಥಿತಿಯಲ್ಲಿರುವ ಅವರಿಗೆ ತಾನು ಏಕ ಮಾತ್ರ ಪುತ್ರನೆಂದೂ. ಅವರು ಇಷ್ಟರಲ್ಲೇ ಸ್ವರ್ಗೈಕ್ಯರಾದೊಡನೆ ಲಕ್ಷಾಂತರ ರೂಪಾಯಿ ಆಸ್ತಿ ತನ್ನದಾಗುವುದೆಂದು ಹೇಳಿ ಅನೇಕರನ್ನು ನಂಬಿಸಿದ್ದಂತೆ ನನ್ನನ್ನೂ ನಂಬಿಸಿದ್ದ. ಕುಂಟಳನಾಡಿನಲ್ಲಿ ಕಮ್ಯುನಿಸ್ಟ್ ಸಂಘಟನೆಗಾಗಿ ಸೋವಿಯತ್ ಸರಕಾರ ರನಗೆ ಒಂದು ಲಕ್ಷಡಾಲರ್ ಅಂದರೆ ಮೂವತ್ತೈದು ಲಕ್ಷ ನಗದು ಕೊಡಲಿದೆ ಎಂದು ಅವನು ಹೇಳಿದ್ದಕ್ಕೆ ಎಲ್ಲರಂತೆ ಒಪ್ಪಿದೆ. ಪ್ರಪಂಚ ಜ್ಞಾನಶೂನ್ಯ ನಾನು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಅವನ ವಾಗ್ ವೈಖರಿ ಪ್ರಚಂಡವಾಗಿತ್ತು. ಅವನ ಬೆಣ್ಣೆಯಲ್ಲಿ ಮುಳ್ಳುಮುರಿಯುವ, ಕೂದಲು ಸೀಳುವ ಅವನ ತಂಜಾವರಿ ಮಾತುಗಳಿಗೆ ಕಲ್ಲುಗಳೂ ಸ್ಪಂದಿಸುತ್ತಿದ್ದವು. ಬ್ಯಾಂಕಿನಿಂದ ಐವತ್ತು ಸಾವಿರ ತುಪಾಯಿ ಸಾಲ ಕೊಡಿಸುವಂತೆ ಅವನು ನಂಗೆ ದುಂಬಾಲು ಬಿದ್ದ. ಸೋವಿಯತ್ತಿನಿಂದ ಮರಳಿದ ಮರು ದಿನವೇ ಸಾಲ ಚುಕ್ತಾ ಮಾಡುವುದಾಗಿ ನಂಬಿಸಿದ. ನಾನು ನಂಬಿ ಬಿಟ್ಟೆ.ನಾನೇ ಜಾಮೀನು ಕೊಟ್ಟು ಅವನಿಗೆ ಬ್ಯಾಂಕಿನಿಂದ ಹಣ ಕೊಡಿಸಿಯೂ ಬಿಟ್ಟೆ. ಇದಕ್ಕೆ ತ್ರಿಮೂರ್ತಿಗಳು ಎಷ್ಟೊಂದು ಅದ್ಭುತ ರೀತಿಯಲ್ಲಿ ಸಹಕರಿಸಿದರೆಂಬುದು ನೆನೆದರೆ ಭಯವಾಗುತ್ತದೆ. ಹಾಗೆ ಲಕ್ಷಗಟ್ಟಲೆ ಹಣ ಸಂಗ್ರಹಿಸಿಕೊಂಡ ಅವನು ಸೋವಿಯತ್‌ಗೆ ಹೋಗಲಿಲ್ಲ. ಬದಲಿಗೆ ಬೊಂಬಾಯಿಗೆ ಹೋಗಿ ನೆಲೆಸಿರುವನೆಂದು ನನಗೆ ಧೀರ್ಘಕಾಲದ ನಂತರ ತಿಳಿದುಬಂತು… ಅಷ್ಟೊತ್ತಿಗೆ ಕಾಲ ನನ್ನನ್ನು ಜೀರ್ಣಿಸಿಕೊಂಡು ಬಿಟ್ತಿತ್ತು. +ಇನ್ನೊಂದು ಘಟನೆಯೆಂದರೆ ಡಾ. ಮೇಲುಕೋಟೆಯವರ ಅಧ್ಯಕ್ಷತೆಯಲ್ಲಿ ರಚಿತಗೊಂಡಿದ್ದ ಸಮಿತಿ ನಡೆಸಿದ ಕಲಾಪಗಳು… ಡಾ. ಮೇಲುಕೋಟೆ ಎಂಬ ಹೆಸರು ಕೇಳಿ ಅಯ್ಯಂಗಾರರಿರಬೇಕೆಂದುಕೊಂಡರೆ ತಪ್ಪು. ಮೇಲುಕೋಟೆಯ ದಲಿತಕೇರಿಯಿಂದ ಬಂದಂಥವರಾಗಿದ್ದ ಅವರು ಸಂಘಟನಾಕಾರ್ಯದಲ್ಲಿ; ಬ್ಯಾಂಕ್ ವಹಿವಾಟು ಜ್ಞಾನದಲ್ಲಿ ನುರಿತ ವ್ಯಕ್ತಿಯಾಗಿದ್ದು ಮೇನೇಜ್‌ಮೆಂಟಿನಿಂದ ಮೆಚ್ಚುಗೆ ಗಳಿಸಿದ್ದ ಪ್ರಭಾವಶಾಲಿ ಮಧ್ಯವಯಸ್ಕರಾಗಿದ್ದರು. ಪಾದರಸದಂತಿದ್ದ ವ್ಯಕ್ತಿತ್ವದ ಅವರು ಜಿಲ್ಲೆಯ ಅನೇಕ ರಾಜಕಾರಣಿಗಳನ್ನು‌ಊ, ವರ್ತಕರನ್ನೂ; ಪ್ರಗತಿಪರ ಮನಸ್ಕರನ್ನೂ ಸಂಪರ್ಕಿಸಿದ್ದು ತಡವಾಗಲಿಲ್ಲ ಮತ್ತು ಅದರಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಂಡಿದ್ದೂ ತಡವಾಗಲಿಲ್ಲ. ಅಲ್ಲದೆ ರಾಜ್ಯ ಸರಕಾರ ಕೂಡ ತನ್ನ ಎಲ್ಲ ಇಲಾಖೆಗಳಿಗೆ ಸಹಕರಿಸುವಂತೆ ಆಜ್ಞೆ ಹೊರಡಿಸಿತು. ಸಾಂಸ್ಕೃತಿಕ ಅಧ್ಯಕ್ಷತೆಗೆ ನನ್ನ ಹೆಸರನ್ನು ಹೆಬ್ರಿ ಸೂಚಿಸಿದರೆ ಚಂಬಸ್ಯಯ್ಯ, ಇಸಮಾಯಿಲು ಒಕ್ಕೊರಲಿಂದ ಬೆಂಬಲಿಸಿದರು. ಕಾಂ.ಪಶುಪತಿ ಸೋವಿಯತ್‌ನಲ್ಲಿ ಈಗ ಏನು ಮಾಡುತ್ತಿರಬಹುದೆಂದು ಯೊಚಿಸಿದ್ದ ನಾನು ದಿಗ್ಗನೆ ಎಚ್ಚತ್ತು ನಿರಾಕರಿಸಿದೆ. ಡಾ. ಮೇಲುಕೋಟೆಯವರ ಒತ್ತಾಯಕ್ಕೆ ಮಣಿಯಬೇಕಾಯಿತು. ಸಾಂಸ್ಕೃತಿಕ ಸಲಹಾ ಸಮಿತಿಯ ಸದಸ್ಯತ್ವ ಸ್ವೀಕರಿಸುವಂತೆ ಗೌಡನನ್ನು ಒತ್ತಯಿಸಿದೆ… ನನ್ನವರು, ತನ್ನವರು ಎನ್ನುವವರು ಒಬ್ಬರು ಇರಲಿ ಅಂತ, ಪಶುಪತಿಯ ಬಗ್ಗೆ ಅನುಮಾನ ಶುರುವಾಗಿತ್ತೋ ಏಮೋ! ಆತ ಒಪ್ಪಿಕೊಳ್ಳಲಿಲ್ಲ. ಮಂಕಾಗಿದ್ದ… ಸಾಂಸ್ಕೃತಿಕ ಸಲಹಾ ಸಮಿತಿಗೆ ಸ್ಥಳೀಯ ಕಲಾವಿದೆಯರಿರದಿದ್ದರೆ ಸರಿ ಕಾಣುವುದಿಲ್ಲ ಎಂದಾ ಹೆಬ್ರಿ ಸೂಚಿಸಿದ. ಅದಕ್ಕೆ ಎಲ್ಲರೂ ‘ಹೌದೌದು’ ಎಂದರು. ಕಳೆದ ಇಪ್ಪತ್ತು ವರ್ಷಗಳಿಂದ ಸಾವಿರಾರು ರಂಗ ಪ್ರಯೋಗಗಳಲ್ಲಿ ನಟಿಸಿ ನಾಡಿನಾದ್ಯಂತ ಮನೆಮಾತಿರುವ ಹುಲಕೋಟಿ ರಮಾಬಾಯಿಯವರ ಹೆಸರನ್ನು ಸೂಚಿಸಿದವರು ಮೇಲುಕೋಟೆಯವರೆಂದರೆ ನಿನಗೆ ಆಶ್ಚರ್ಯವಾಗಬಹುದು. ನಿನ್ನಂತೆ ಆಕೆಯ ಹೆಸರು ಕೇಳಿದ್ದೆನಾದದರು ಆಕೆ ಇದೇ ಕೊತ್ತಲಿಗಿಯಲ್ಲಿರುವಳೆಂಬ ಸಂಗತಿ ನನಗೂ ಗೊತ್ತಿರಲಿಲ್ಲ. ವರದಾಚಾರ್, ಸದಾಶಿವರಾಯರು, ಹಿರಣ್ಣಯ್ಯ, ವೆಂಕೋಬರಾಯರು, ನಲವಡಿಯವರು, ಕಂದಗಲ್ಲುರವರು… ಇವರೇ ಅಲ್ಲದೆ ಗತಕಾಲದ ಶ್ರೀಮಂತ ರಂಗ ಪ್ರತಿಭೆಗಳೊಂದಿಗೆ ಸಾವಿರಾರು ನಾಟಕಗಳಲ್ಲಿ ನಟಿಸಿರುವ, ಸಾವಿರ, ಸಾವಿರ, ರಂಗ ಗೀತೆಗಳನ್ನು ಹಾಡಿ ನಾಡ ಹೃದಯವನ್ನು ಸೂರೆಗೊಂಡಿರುವ ಆಕೆಗೆ ಮಾಸಾಶನ ಬರುವಂತೆ ಮಾಡಿದವರು ಬೇರೆ ಯಾರೂ ಅಲ್ಲ… ಈಗ ಸಚಿವರಾಗಿರುವ ಎಂ.ಪಿ. ಪ್ರಕಾಶ್‌ರವರೇ… ಅವರ ಶ್ರಮದಿಂದಾಗಿಯೇ ರಮಾಬಾಯಿಯವರಿಗೆ ಸರಕಾರ ಆಶನವಸನ ಕಲ್ಪಿಸಿಕೊಟ್ಟಿತ್ತು. ಡಾ. ಮೆಲುಕೋಟೆಯವರೇ ಕಾರು ಕೊಟು ಓಬಳೇಶನನ್ನು ಕಳಿಸಿ ರಮಾಬಾಯಿಯವರನ್ನು ಕರೆಸಿಕೊಂಡರು. ಆ ತೊಂಬತ್ತರ ಹರೆಯದ ವೃದ್ಧೆ ಬರುತ್ತಲೆ ಡಾ. ಮೇಲುಕೋಟೆ ಎದ್ದು ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ನಾನೂ ಆಕೆಯ ತೆಜಸ್ಸಿಗೆ ಬೆರಗಾಗಿ ನಾನೂ ನಮಸ್ಕರಿಸಿದೆ. ನಮ್ಮ ಅಪೇಕ್ಷೆಯಂತೆ ಆಕೆ ಸದಸ್ಯತ್ವ ಒಪ್ಪಿಕೊಂಡರು. ಒಂದು ಗಂಟೆಹೊತ್ತು ನಮ್ಮೆಲ್ಲರೊಂದಿಗೆ ಗತಕಾಲದ ರಸನಿಮಿಷಗಳ ಬಗ್ಗೆ ಹೇಳಿತು. ಒಂದೆರಡು ರಂಗ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿತು. ಈಗ ಪಾಕಿಸ್ತಾನದಲ್ಲಿರುವ ನೂರ್‍ಜಹಾನ್ ರಮಾಬಾಯಿಯವರ ಮೆಚ್ಚಿನ ಶಿಷ್ಯೆಯಾಗಿದ್ದಳಂದರೆ, ಆಕೆಯ ದೈತ್ಯಪ್ರತಿಭೆಯನ್ನು, ಹಾಗೆಯೇ ಕುಂದನ್ಲಾಲ್ ಸೈಗಲ್ರವರೂ ಆಕೆಯ ಶಾರೀರಕ್ಕೆ ಮಾರು ಹೋಗಿದ್ದರೆಂದರೆ ನೀನೇ ಊಹಿಸಿಕೋ ಆಕೆಯ ದೈತ್ಯಪ್ರತಿಭೆಯನ್ನು, ಆಕೆಯ ಹಾಸ್ಯ ಪ್ರಜ್ಞೆಗೆ ನಾವು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು. +ನಾವೆಲ್ಲರು ಯಾವ? ಯಾವ? ಮತ್ತು ಎಂಥ? ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಒಂದು ಗಂಟೆ ಕಾಲ ಚರ್ಚಿಸಿ ಕೆಲವು ನಿರ್ಧಾರಗಳಿಗೆ ಬಂದೆವು. ಬೆಂಗಳೂರು, ಮೈಸೂರಿನಿಂದ ಇಂಥಿಂಥ ಕಲಾವಿದರನ್ನು ಕರೆಸುವುದೆಂದು ನಿರ್ಧಾರವಾದ ಮೇಲೆ ಬ್ಯಾಂಕ್ ಕಲಾವಿದರೇ ಒಂದು ಜನಪ್ರಿಯ ನಾಟಕವನ್ನು ಅಭಿನಯಿಸಿದರೆ ಹೇಗೆ ಎಂಬ ವಿಷಯ ಪ್ರಸ್ತಾಪವಾಯಿತು. ಆ ಕುರಿತ ಚರ್ಚೆಯೇ ಅರ್ಧ ತಾಸು ತಿಂತು. ತದ ನಂತರ ಸಂಗ್ಯಾಬಾಳ್ಯಾ ಎಂಬ ಸರಳ ಸುಂದರ ಪ್ರೇಮ ದುರಂತಗಳಿಂದ ಕೂಡಿದ ನಾಟಕವನ್ನು ಅಭಿನಯಿಸುವುದೆಂದು ತೀರ್ಮಾನಿಸಲಾಯಿತು. +ಸಂಗ್ಯಾಬಾಳ್ಯಾ ಎಂಬ ನಾಟಕದ ಬಗ್ಗೆ ನಿನಗೆ ಗೊತ್ತಿರಬೇಕಲ್ಲವೆ? ನಾನೂ, ನೀನೂ ಹೂವಿನ ಹಡಗಲಿಗೆ ಹೋಗಿ ನೋಡಿ ಬಂದೆವಲ್ಲ ಅದು. ಗಂಗಿಯ ತಳಮಳದ ಸುತ್ತ ಹೆಣೆದುಕೊಳ್ಳುವ ಆ ದುರಂತಮಯ ನಾಟಕವನ್ನು ಮರೆಯಲು ಹೇಗೆ ಸಾಧ್ಯಾ ಮಿತ್ರಾ? ಅದರ ಒಂದೊಂದು ದೃಶ್ಯವೂ ಕಣ್ಣಿಗೆ ಕಟ್ಟಿದಂತಿದೆ ಅಲ್ಲವೆ? ನೋಡಿದ ಆದಿನ ಸಂಗ್ಯಾನ ಪಾತ್ರದಲ್ಲಿ ನಾನು ಎಂದಾದರೊಂದು ದಿನ ಕಾಣಿಸಿಕೊಳ್ಳಬೇಕೆಂದು ಇಷ್ಟಪಟ್ಟಿದ್ದೆ. ಆ ಬಗ್ಗೆ ನಿನ್ನ ಬಳಿ ಪ್ರಸ್ತಾಪಿಸಿದ್ದೆ ಕೂಡ. +ಆಗ ನೀನು ‘ನಿನ್ನಂಥ ಪುಕ್ಕಲು ಮನುಷ್ಯ ಆ ಪಾತ್ರ ಮಾಡುವುದು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಿ. ನಿನ್ನ ಪ್ರತಿಕ್ರಿಯೆಯೊಂದಿಗೆ ನನ್ನ ಆಸೆ ತಳುಕುಬಿದ್ದು ಆ ಕ್ಷಣದಿಂದ ನನ್ನಲ್ಲಿ ಬೆಳೆಯಿತು. ಗೃಹಿಣಿಯಾದ ಗಂಗಿಯನ್ನು ಉತ್ಕಟವಾಗಿ ಪ್ರೀತಿಸುವ ಸಂಗ್ಯಾನ ಪಾತ್ರ ನನ್ನ ನೆನಪಿನ ಶೃಂಖಲೆಯಿಂದ ಕಳಚಿಕೊಂಡು ಹೋಗಲೇ ಇಲ್ಲ. ಗತಕಾಲದ ನೆನಪನ್ನು ಗುತ್ತಿಗೆ ಹಿಡಿದು ಆ ಪಾತ್ರವನ್ನು ಅಭಿನಯಿಸುವ ನಿಮಿತ್ತ ನಾನೇ ಆ ನಾಟಕವನ್ನು ಸೂಚಿಸಿದೆ ಎಂದುಕೊಳ್ಳಬೇಡ. ಕಾರಣ ಅದು ಆಕಾರ ಕಳೆದುಕೊಂಡು ಪೇಲವ ನೆನಪಾಗಿ ಮಾತ್ರ ಉಳಿದುಕೊಂಡಿತ್ತು. ರಮಾಬಾಯಿ ಅಜ್ಜಿ ಆ ನಾಟಕವನ್ನು ಪ್ರಸ್ತಾಪಿಸುತ್ತಲೇ ನನ್ನ ಮೈ ಜುಂ ಎಂದಿತು. ಪಾತ್ರ ಹಂಚಿಕೆಯಾಗುವಾಗ ಸಂಗ್ಯಾನ ಪಾತ್ರವನ್ನು ನಾನೇ ವಹಿಸಬೇಕೆಂದು ಅಜ್ಜಿಯೇ ಸೂಚಿಸಿದ್ದ. ನನ್ನ ಅಂತರಾಳದಿಂದ ನೆಲಮುಗಿಲಿಗೇಕಾಗಿ ಚಕಚಕ ಬೆಳೆದು ನಿಂತ ಸಂಗ್ಯಾ “ಎಲ್ಲಿ ನಿನ್ನ ಗಂಗಿ? ಜಾತ್ರೆಯಲ್ಲಿ ನನ್ನ ಮನವನ್ನು ಸೂರೆಗೊಂಡ ಗಂಗಿ ಎಲ್ಲಿ?” ಎಂದು ಕಣ್ಣು ಹಿಗ್ಗಲಿಸಿ ಹುಡುಕಾಡತೊಡಗಿದ. ಆ ಪಾತ್ರದ ಚುಂಬಕ ಶಕ್ತಿಗೆ ಈಡಾಗಿದ್ದ ನಾನು ಒಂದೇ ಮಾತಿಗೆ ಒಪ್ಪಿಕೊಂಡೆ. +ಹುಚ್ಚು ಹಿಡಿದು ಮೆಚ್ಚಿ ಬಂದೆ ನಿನ್ನಾ ರೂಪಕೆ +ಜರತಾರ ಸೆಲ್ಲೆ ಹಾಸಲೇನು ನಿನ್ನ ಪಾದಕೆ… ಆಳದಿಂದ ದೀರ್ಘ ನಿದ್ದೆಯಿಂದ ಆಕಳಿಸುತ್ತ; ಮೈಮುರಿಯುತ್ತ ಎದ್ದ ಅಕ್ಷರಗಳು ಒಂದರ ಪಕ್ಕ ಒಂದರಂತೆ (ಶಾಲಾ ಮಕ್ಕಳು ಪ್ರಭಾತಫೇರಿಗೆ ಹೊರಡಲು ನಿಲ್ಲುತ್ತಾರಲ್ಲ ಹಾಗೆ) ನಿಂತು ಕೊಂಬು, ವಟ್ರುಸುಳಿ, ದೀರ್ಘ, ಗುಡಿಸಿ ಮುಡಿದುಕೊಂಡು ಹಾಡಾಗಿ ತಳೆದು ನಾಲಿಗೆ ಕಡೆ ನಡೆಯತೊಡಗಿದವು. +ಸಂಗ್ಯಾ ನಿನ್ನ ಜರತಾರಿ ಸಲ್ಲೇವು ಹಾಸಲೆತ್ನಿಸಿದ ಆ ಪಾದಗಳನ್ನು ನೆನೆಸಿಕೊಂಡು ರೋಮಾಂಚನಗೊಂಡೆ… ಸಂಗ್ಯಾನ ಮನಪರವಶಗೊಳಿಸಿದ್ದು ಗಂಗಿಯ ಪಾದಗಳೇ ಹೊರತು ಆಕೆಯ ಮುಖವಲ್ಲವೆಂದು ನನ್ನ ಅನಿಸಿಕೆ… +ನಾನು ಉದ್ರೇಕಗೊಳ್ಳುತ್ತಿದ್ದುದು ನನಗೆ ಮೋಡಿ ಮಾಡುತ್ತಿದ್ದುದು ಯಾವುದೇ ಹೆಣ್ಣಿನ ಸುಂದರ ಪಾದಗಳು ಮಾತ್ರ… ತಲೆ ತಗ್ಗಿಸಿ ಮಹಾಮಳ್ಳಿಗನಂತೆ +ನಡೆಯುತ್ತಿದ್ದ ನಾನು ಕದ್ದು ಮುಚ್ಚಿ ನೋಡುತ್ತಿದ್ದುದು ಹೆಣ್ಣುಗಳ ಪಾದ ಮಾತ್ರ ಎಂದರೆ ನಿನಗೆ ಆಶ್ಚರ್ಯವಾಗಬಹುದು! +ನನ್ನಂಥ ವ್ಯಕ್ತಿಯ ಸೂಕ್ಷ್ಮವೂ ಹಾಸ್ಯಾಸ್ಪದವೂ ಆದ ಲೈಂಗಿಕ ತೆವಲುಗಳು ನಿನಗೆ ವಿಚಿತ್ರವೆಂಬಂತೆ ಕಾಣಬಹುದು. ಆಕೆಯ ವ್ಯಭಿಚಾರಕಾಗಿ ನನ್ನ ತಂದೆಯ ಚಿತ್ರವನ್ನು ತಾಯಿಗೆ ತೋರಿಸಿವ ಹ್ಯಾಮ್ಲೆಟ್‌ಗೆ ನನ್ನನ್ನು ನೀನು ಹೋಲಿಸಲೂಬಹುದು. ಹೋಲಿಸು, ಪರವಾ ಇಲ್ಲ… ಮತ್ತೊಮ್ಮೆ ಹೇಳುತ್ತೇನೆ ನನ್ನ ಮನವನ್ನು ಸೂರೆಗೊಳ್ಳುತ್ತಿದ್ದುದು, ಉದ್ರೇಕಿಸುತ್ತಿದ್ದುದು ಹೆಂಗಸರ ಸುಂದರ ಪಾದಗಳು ಮಾತ್ರ. ತನ್ನ ಮುವ್ವತ್ತೆರಡನೆ ವಯಸ್ಸಿನ ಏರು ಯೌವನದ ಕಾಲದಲ್ಲಿ‌ಇಹಲೋಕ ತ್ಯಜಿಸಿದ ಆಚಾರ್ಯ ತ್ರಯರಲ್ಲೊಬ್ಬರಾದ ಶಂಕರರು ಮೋಹಿಸಿದ್ದು ಪರಶಕ್ತಿಯ ಮೋಹಕ ರೂಪವನ್ನು, ಬೋದಿಲೇರನ ಕಥೆ ನಿನಗೆ ಗೊತ್ತೇ ಇದೆ. ಮೀರಾ ಅಕ್ಕ ಮಹಾದೇವಿಯರ ಬದುಕನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ಪುರುಷರೂಪ ಯಾವುದು ಅಂತ ನಿನಗೆ ಗೊತ್ತೇ ಇದೆ… ಗಂಡಸನ್ನು ಸ್ಪಂದಿಸುವ, ಮೀಟುವ ಶಕ್ತಿ ಒಂದೊಂದು ಹೆಣ್ಣಿನ ಒಂದೊಂದು ಅಂಗಗಳಲ್ಲಿರುತ್ತದೆ. ಒಬ್ಬ ಜಡೆಯನ್ನೋ, ಇನ್ನೊಬ್ಬ ಕುತ್ತಿಗೆಯನ್ನೋ; ಮಗದೊಬ್ಬ ಕಾಲಮೀನ ಖಂಡವನ್ನೋ; ಮಗದೊಬ್ಬ ವಕ್ಷವನ್ನೋ, ಕಿಪ್ಪೊಟ್ಟೆಯನ್ನೋ; ನಿತಂಬವನ್ನೋ ಮತ್ತಾವ ಅಂಗವನ್ನೋ.. ನನ್ನ ಗೆಳೆಯ ಶುಕೂರ್ ಎಂಬುವವನಿದ್ದ; ಅವನು ತಾನು ನೋಡಲೆಂದು ಹೋದ ಸುಂದರ ಹುಡುಗಿಯ ವಿಧವಾ ತಾಯಿಯನ್ನು ಮೋಹಿಸಿ ಪ್ರೀತಿಸಿ ಮದುವೆಯಾದ! ಅವನನ್ನು ಆಕರ್ಷಿಸಿದ್ದು, ಹುಚ್ಚು ಹಿಡಿಸಿದ್ದು ಆ ವಿಧವೆಯ ಕಿಪ್ಪೊಟ್ಟೆ ಮೇಲಿದ್ದ ತಾಯ್ತನದ ಗೆರೆಗಳು ಎಂದರೆ ನೀನು ನಂಬಲಿಕ್ಕಿಲ್ಲ… ಇನ್ನೊಬ್ಬ ತನಗಿಂತ ಹೆಚ್ಚು ವಯಸ್ಸಾಗಿರುವವಳನ್ನು ಇಷ್ಟಪಡುತ್ತಾನೆ. ಸುರಸುಂದರ ಹೆಂಡತಿ ಇದ್ದೂ ಚಾರ್ಲ್ಸ್‌ಡಿಕನ್ಸ್‌ನಂಥಾ ಮಹಾನ್ ಲೇಖಕ ಕುರೂಪಿಯೂ, ರೋಗಿಷ್ಟೆಯೂ ಆದ ವೇಶ್ಯೆಯನ್ನು ಸಂಭೋಗಿಸಿ ಗೋನೋರಿಯಾ, ಸಿಫಿಲಿಸ್ಗಳಂಥ ಸುಖವ್ಯಾದಿಗಳಿಗೆ ತುತ್ತಾಗುತ್ತಾನೆ. ಲಿಯೋನಾರ್ಡೋ ಡಾವಿಂಚಿಯಂಥ ಕಲಾವಿದ ತನ್ನನ್ನು ತಾನು ಮೋಹಿಸಿಕೊಳ್ಳುತ್ತಾನೆ… ನೀನು ಹೆಣ್ಣಿನ +ಯಾವ ಭಾಗವನ್ನು ಇಷ್ಟಪಡುತ್ತಿರುವಿಯೋ ನಿನಗೇ ಗೊತ್ತು? ನೀನು ಯೋನಿಯನ್ನು ಅಂದರೆ ನಿನ್ನ ಬಗ್ಗೆ ನನಗೆ ತಿರಸ್ಕಾರ ಹುಟ್ಟುತ್ತದೆ. ಇರಲಿ… ನಿನ್ನದು ನಿನಗೆ; ನನ್ನದು ನನಗೆ; +ಸಂಗ್ಯಾ ಬಾಳ್ಯಾ ನಾಟಕದ ಬಗೆಗಾಗಲೀ; ಆ ನಾಟಕದಲ್ಲಿ ನಾನು ಸಂಗ್ಯಾನ ಪಾತ್ರವನ್ನು ನಿಭಾಯಿಸಲಿರುವುದರ ಬಗೆಗಾಗಲೀ ನನ್ನ ಹೆಂಡತಿ ವರಲಕ್ಷ್ಮಿಗೆ ಹೇಳುವ ಗೋಜಿಗೆ ಹೋಗಲಿಲ್ಲ. ಲಿಯನಾರ್ಡೋ ಡಾವಿಂಚಿಯಂತೆ ಅತ್ಮರತಿ ಮಾಡಿಕೊಳ್ಳುತ್ತಿದ್ದ ನನ್ನ ಸೃಜನ ಶೀಲ ಪಠ್ಯೇತರ ಚಟುವಟಿಕೆಗಳ ಬಗ್ಗೆ; ನನ್ನ ಖಾಸಗಿ ಬದುಕಿನ ವಿದ್ಯಮಾನಗಳ ಬಗ್ಗೆ ಯಾವ ಆಸಕ್ತಿ ಕುತೋಹಲವಿರಲಿಲ್ಲ… ಹೇಳಿದರೆ ಹ್ಹಾ! ಹ್ಹೂ ಎನ್ನುತ್ತಿದ್ದಳು. +“ಪಶುಪತಿ ಎಂಬ ನಿಮ್ಮ ಗೆಳೆಯ… ಸತ್ನಲ್ಲ ಕಂಡಕ್ಟ್ರು… ಆತ್ನ ಹೆಂಡತಿಯ ಒಡವೇನೆಲ್ಲ ದೋಚಿಕೊಂಡು ಹೊಗ್ಯಾನ್ಂತೆ ನೋಡ್ರೀ” ಎಂಬೋದು ಅತಿರಿಕ್ತ ಮಾತನ್ನು ಹೇಳಲು ಆಕೆಗೆ ಸಾಧ್ಯವಾಯಿತು. ಯಾರೋ ಮಾತಾಡುತ್ತಿದ್ದುದು ಆ ಕ್ಷಣ ನಿಜವೆನ್ನಿಸಿ ಗಾಬರಿಗೊಂಡೆ. +ನಾನು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. +ತಾಯಿಯ ಅಪೇಕ್ಷೆ ಮೇರೆಗೋ; ಗೃಹ ಬಂಧನಕ್ಕೆ ರೋಸಿಯೋ ಗರ್ಭಿಣಿ ವರಲಕ್ಷ್ಮಿಯನ್ನು ಕರೆದೊಯ್ದು ಕೊಟ್ಟುರಿನಲ್ಲಿ ಬಿಟ್ಟೆ. ಒಂದಿಷ್ಟು ಹಣದ ಕೊಂತೆಯನ್ನು ವ್ಯಾಸಪೀಠದ ಸಂದಿಯಲ್ಲಿರಿಸಿದೆ. ನನ್ನ ತಾಯಿ ನನ್ನನ್ನು ಸಮಕ್ಷಮ ನಿಲ್ಲಿಸಿಕೊಂಡು ಅಪಾದಮಸ್ತಕ ನೋಡಿ ಆ ಶಾಮನೇ ಬೇರೆ; ಈ ಶಾಮನೇ ಬೇರೆ ಎಂದು ಗೊಣಗಿದಳು… ಸಂಧ್ಯಾವಂದನೆ ವ್ರತ ನಿಯಮಗಳಿಗೆಲ್ಲ ಈ ಮುಠ್ಠಾಳ ತಿಲಾಂಜಲಿಕೊಟ್ಟಿರುವನೆಂದು ಆಕೆ ಅರ್ಥ ಮಾಡಿಕೊಂಡಳು. ತನ್ನ ಗಂಡನಂತೆ ಇವನೂ ದುರಾಭ್ಯಾಸಗಳಿಗೆ ದಾಸನಾಗದಂತೆ ತಡೆಯುವಾ ಭಗವಂತನೇ ಎಂದು ಮುಚ್ಚಿಕೊಂಡ ಕಣ್ಣಂಚಿನಲ್ಲಿ ಒಂದು ಹನಿ ಶ್ರೇಷ್ಠ ಜಾತಿಯ ಮುತ್ತಿನಂತೆ ಗೋಚರಿಸಿತು. +ತಲೆ ಆವರಿಸಿದ್ದ ಸಂಗ್ಯಾನಾಗಲೀ; ಬಾಳ್ಯಾನಾಗಲೀ ನನ್ನನ್ನಲ್ಲಿರಲಿಕ್ಕೆ ಬಿಡಲಿಲ್ಲ… ಗಂಗಿಯ ಪಾತ್ರ ಇಥ್ಯರ್ಥವಾಗುವ ದಿನವೇ ಅದಾಗಿತ್ತು. ದ್ರೌಪದಿ, ಸೀತೆ, ಮಂಡೋದರಿಗಳಂಥ ಪಾತ್ರಗಳನ್ನು ವಹಿಸಿದಷ್ಟು ಸುಲಭವಲ್ಲ ಗಂಗಿಯ ಪಾತ್ರ ವಹಿಸುವುದು! ಪಾತಿವ್ರತ್ಯದ ಪಂಜರದ ಬೀಗ ತೆರೆಯುವ ಮೊದಲು, ಪಂಜರಸ್ಥ ಅರಗಿಣಿಯಲ್ಲಿ ಪಂಜರದ ನಿಕೃಷ್ಟತೆ ಮತ್ತು ನಿಸ್ಸಾರತೆಗಳನ್ನು ಹುಟ್ಟಿಸುವ ಕೆಲಸವನ್ನು ಮಾಡುತ್ತಾನೆ ಸಂಗ್ಯಾ. ಇದಕ್ಕೆ ಕುಂಟಲಗಿತ್ತಿ ಮುದುಕಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸುಂದರವಾದ ಪತಿಪುರುಷ ಕ್ರಮೇಣ ಕುರೂಪಿಯಾಗಿ, ನಿಸ್ಸಾರವಾಗಿ ಕಾಣ ತೊಡಗುತಾನೆ… ಆಕೆಯ ಸಾತ್ವಿಕ ಮನಸ್ಸು ಹಾದರಕ್ಕಾಗಿ ಹಾತೊರೆಯತೊಡಗುತ್ತದೆ. ಚಾಪಡಿಸತೊಡಗುತ್ತದೆ. ಬೆವರಿನ‌ಒಂದೊಂದು ಹನಿ ಮೂಲಕ ಪಾತಿವ್ರತ್ಯ ಗರತಿತನ ನೀರಾಗಿ ಹರಿಯತೊಡಗುತ್ತದೆ… ಪಂಜರ ಅಂದರೆ ಪಾತಿವ್ರತ್ಯದ ಕಳಚುತ್ತಲೆ ಆಕೆ ಹಾದರದ ತೆಕ್ಕೆಗೆ ಬೀಳುತ್ತಾಳೆ… ತಿಳಿದು ಮಾಡೋ ಹಾದರ… ನೇಪಥ್ಯದ ಹಾಡು ಧ್ವನಿಸುತ್ತಿರುವಾಗಲೆ ನಾಟಕ ಮುಗಿಯುತ್ತದೆ. +ಪತಿವ್ರತೆಯೊಳಗೆ ಹಾದರ ಹುಟ್ಟಿಸುವ ನಿನಗೆ ದಿಗ್ಭ್ರಮೆ ಹುಟ್ಟಿಸಲಾರದು. ನೀನು ಅಥವಾ ನಿನ್ನಂಥೋರು ಪಾತಿವ್ರತ್ಯ ಎಂಬ ಕಲ್ಪನೆಯನ್ನೇ ಕಪ್ಪು ಬಿಳುಪಾಗಿ ನೋಡಬಲ್ಲಿರಿ. ಮಹಾತತ್ವಜ್ಞಾನಿಗಳಂತೆ, ಪಾತಿವ್ರತ್ಯದ ಏಕಮಾತ್ರ ವಾರಸುದಾರರಂತೆ ಮಿಸ್ ಇಂಟರ್ ಪ್ರಿಟೇಷನ್ ಮಾಡ್ಟೀದಿ… ಮಹಾಭಾರತದಲ್ಲಿ ಜಂಬೂ ನೇರಳೆ ಹಣ್ಣಿನ ಪ್ರಸಂಗದ ಮೂಲಕ ಮಹಾಪತಿವ್ರತೆಯಾದ ದ್ರೌಪದಿಯ ಎದೆಯೊಳಗೆ… (ದ್ರೌಪದಿ ಸಾಮಾನ್ಯಳಲ್ಲ… ಮೂರು ಲೋಕದ ಗಂಡರೈವರಿಗೆ ಹೆಂಡತಿಯಾಗಿದ್ದವಳು. ಮೂರು ಲೋಕಕ್ಕೆ ಗಂಡರಾದವರಿಗೆ ಸಾಮಾನ್ಯ ಸ್ರೀಯಳೋರ್ವಳ ಹೃದಯಕ್ಕೆ ಸ್ಪಂದಿಸುವುದು ಗೊತ್ತಿಲ್ಲ… ಎಂದೂ ಸ್ಪಂದಿಸಲಿಲ್ಲ. ವಸ್ತ್ರಾಪಹರಣದ ಸಂಬಂಧದಲ್ಲಿ ಇಂದುಮುಖಿಯಾದ ಆಕೆಯ ಬಾಯಿಯಿಂದ ಗಂಡರೋ ನೀವು ಷಂಡರೋ ಎಂಬ ಮಾತನ್ನು ಕುಮಾರವ್ಯಾಸ ಧ್ವನಿಪೂರ್ಣವಾಗಿ ಹೊರಡಿಸುತ್ತಾನೆ…) ಧಗಧಗ ನೆಲದ ಮರೆಯ ನಿಧಾನದಂತೆ ಧಗಧಗ ಉರಿಯುತ್ತಿದ್ದ ಹಾದರದ ಕಿಚ್ಚಿನ ಸೂಕ್ಷ್ಮವನ್ನು ಆಕೆಯ ಬಾಯಿಂದಲೇ ಹೊರಗೆಡಹಿ ಕೆಳಬಿದ್ದ ಹಣ್ಣ ಮೂಲದ ತೊಟ್ಟಿಗೆ ಸೇರಿಸುವ ಕೆಲಸವನ್ನು ಆಕೆಯ ಅಣ್ಣನಾದ ಶ್ರೀಕೃಷ್ಣಪರಮಾತ್ಮನೇ ಮಾಡುತ್ತಾನೆ… ಇದರ ಬಗ್ಗೆ ನೀನು ಏನು ಹೇಳುವಿಯೋ ತಿಳಿಯದು. +ಯಶೋಧರನಂಥ ಅರಸರ ಪತ್ನಿಯಾಗಿದ್ದು ಸುಖ ಸಾಮ್ರಾಜ್ಯದ ಒಡತಿಯಾಗಿದ್ದು ಅಮೃತಮತಿ ಅಷ್ಟಾವಂತನಂಥ ಕುರೂಪಿ ಮಾಹುತನನ್ನು ಮೋಹಿಸುವುದಾದರೂ ನಿನಗೆ ಗೊತ್ತಿರಬೇಕಲ್ಲ… ಯಾವ ಶಕ್ತಿ ಆಕೆಯಲ್ಲಿ ಹಾದರದ ಭಾವನೆಯನ್ನು ಉದ್ದೀಪಿಸಿತು ಪ್ರೇರೇಪಿಸಿತು! ಹೇಳಬಲ್ಲೆಯಾ? +ನಾನು ಯಾವುದೇ ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ಬಗೆಯೇ ಹೀಗೆ… +ಆ ದಿನ ಸಂಸ್ಕೃತಿಕ ಸಮಿತಿಯ ಅಧ್ಯಕ್ಷನಾಗಿದ್ದ ನಾನು ಲಗುಬಗೆಯಿಂದ ಹೊರಟು ಸೇರಿದೆ… ವೃದ್ಧೆ ರಮಾಬಾಯಿಯವರ ಸಲಹೆ ಮೇರೆಗೆ ಯಾರು? ಯಾರು? ಯಾವ್ಯಾವ ಪಾತ್ರಗಳಿಗೆ ಸರಿ ಹೊಂದಬಹುದೆಂದು ಲೆಕ್ಕ ಹಾಕಿದೆವು. ನಾನು ಮೊದಲೇ ಸಾಹುಕಾರ ಸಂಗ್ಯಾನ ಪಾತ್ರಕ್ಕೆ ಗೊತ್ತಾಗಿದ್ದೆನಲ್ಲ!… ಬಾಳ್ಯಾನ ಪಾತ್ರಕ್ಕೆ ಓಬಳೇಶ ಗೊತ್ತಾದರೆ, ಗಂಗಿಯ ಗಂಡ ಈರ್‍ಯಾನ ಪಾತ್ರಕ್ಕೆ ಚಂಬಸ್ಯಯ್ಯ ಎಂದು ಗೊತ್ತಾದರು. ಈರ್‍ಯಾನ ತಮ್ಮಂದಿರ ಪೈಕಿ ಬಸವನ ಪಾತ್ರವನ್ನು ಇಸುಮಾಯಿಲೂ, ಇರುಪಾಕ್ಷಿಯ ಪಾತ್ರವನ್ನು ಹೆಬ್ರಿ ಮಾಡುವುದೆಂದು ನಿರ್ಧಾರವಾಯಿತು. ಸಂಗ್ಯಾನನ್ನು ಹಿಡಿದು ಕೊಲೆ ಮಾಡುವ ಪಾತ್ರಗಳಾದ ಅವನ್ನು ಅವರು ಸ್ವಸಂತೋಶದಿಂದಲೇ ಒಪ್ಪಿಕೊಂಡರು. ನನ್ನತ್ತ ಅವರು ಆ ಕ್ಷಣ ಕೆಕ್ಕರಿಸಿ ನೋಡುವುದನ್ನು ಮರೆಯಲಿಲ್ಲ. ಕುಂಟಲಗಿತ್ತಿ ಮುದುಕಿ ಪಾತ್ರ ಮಾಡಿ ಹೆಸರಾಗಿರುವ ಫಕೀರವ್ವ ಈಗಿದ್ದರೆ ಚೆನ್ನಾಗಿತ್ತು. ಆಕೆ ಇಲ್ಲ. ಸನ್ಯಾಸಿನಿಯಾಗಿರುವಳೆಂದು ಒಬ್ಬರು ಹೇಳಿದರೆ, ಚಲುವಯ್ಯನಂಥ ಇಂಜಿನಿಯರ್ ಅಳಿಯಂದರು ಆಕೆ ಆತ್ಮಹತ್ಯ ಮಾಡಿಕೊಂಡಿರುವಳೆಂದು ಹೇಳುವರು. ಈಗ ಸೋಮವಾರ ಪೇಟೆಯಲ್ಲಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವವಳೆಂದರೆ ಕಾವಲಿ ಹನುಮಕ್ಕ ಎಂಬ ಮುದುಕಿ. ಆಕೆಯನ್ನು ಕರೆಯಿಸಿ ಒಪ್ಪಿಸಿದ್ದಾಯಿತು. “ಈ ಜಲುಮದುದ್ದಕ್ಕೂ ಬರೀ ಇಂಥ ಪಾತರ ಮಾಡೋದೇ ಆಯ್ತಲ್ಲಪ್ಪಾ… ಆ ಬ್ರೆಮ್ಮ ನನ್ನ ಹಣ್ಯಾಗ ಕುಂತಲಗಿತ್ತಿ ಪಾತರ ಮಾಡ್ತಿರು ಎಂದು ಬರೆದಾನೋ ಏನೋ… ಬಾಳದಿನಗಳಾದುವ್ರಪ್ಪಾ… ಇಂಥ ಪಾತುರ ಮಾಡ್ದೆ… ನಾಲ್ಗಿ ಚುಟು ಚುಟು ಅಂತಿತ್ತು…” ಎಂದು ಗೊಣಗಿ ಒಪ್ಪಿಕೊಂಡಿತು. +ಇನ್ನು ಗಂಗಿ ಪಾತ್ರವನ್ನು ಯಾರಿಂದ ನಿಭಾಯಿಸುವುದೆಂದು ಯಕ್ಷ ಪ್ರಶ್ನೆಯಾಗಿ ಉಳಿಯಿತು. ಸುಂದರಾಂಗಳೂ; ಚಂಚಲನೇತ್ರೆಯೂ; ಕಾಮಾಗ್ನಿಯನ್ನೂ, ಪಾತಿವ್ರತ್ಯವನ್ನೂ ಅಂಗಾಂಗಗಳ ಅಭಿನಯದ ಮೂಲಕ ಪ್ರಕಟಿಸುವಂಥವಳೇ ಬೇಕು. ಆಕೆ ಪಾತಿವ್ರತ್ಯ ಮತ್ತು ಹಾದರದ ಪ್ರತಿನಿಧಿ! +ಆ ಪಾತ್ರ ಮಾಡೋರೆ ಈ ಸೂಕ್ಷ್ಮ ಕಾಲದಲ್ಲಿ ಅಪರೂಪ. ಸಮಾಜ ಸಂಗ್ಯಾಬಾಳ್ಯಾ ನಾಟಕ ಅಶ್ಲೀಲವೆಂಬ ಕಾರಣ ಸೂಚಿಸಿ ನೇಪಥ್ಯಕ್ಕೆ ತಳ್ಳಿಬಿಟ್ಟಿರುವುದರಿಂದ ಯಾರೂ ಬಹಳ ದಿನಗಳಿಂದ ಈ ಪಾತ್ರ ವಹಿಸಿಲ್ಲ. ಇಂಥ ಪಾತ್ರ ವಹಿಸೋದು ಸೋಮವಾರ ಪೇಟೆಯಲ್ಲಿ ಸಾಕಷ್ಟು ಇರುವರು! ಅಂಥವರ ಪೈಕಿ ಚವುಡವ್ವನನ್ನು ಕರೆಸಿ ಕೇಳಿದರೆ “ಇಲ್ರಪ್ಪಾ… ಹೇಮರೆಡ್ಡಿ ಮಲ್ಲಮ್ಮನ ಪಾರ್ಟ್ ಮಾಡೀ ಮಾಡೀ ಗಂಗೀ ಪಾರ್ಟ್ ಮರೆತೇ ಹೋಗೈತೆ!” ಎಂದು ದೂರ ಸರಿದುಕೊಂಡಳು. ಅಮ್ಮನಕೇರಿ ಬಸವ್ವನನ್ನು ಕೇಳಿದರೆ ತಾನು ಮಂಡೋದರಿ ಪಾತ್ರಕ್ಕಷ್ಟೆ ಲಾಯಕ್ಕಾಗಿ ಬಿಟ್ಟಿದ್ದೀನಿ ಎಂದಳು. ಕುಪ್ಪಿನಕೇರಿ ಕಾಳವ್ವ; ಗೋಪ್ಪಲಾಪುರದ ಗೋಣೆವ್ವ; ಹಲಕಂದಿ ಅಂಬುಜಾ ಮುಂತಾದವರನ್ನೆಲ್ಲ ಕರೆಸಿ ನಿರಾಸೆ ಪಟ್ಟಿದ್ದಾಯ್ತು. ಅವರು ತಮ್ಮ ಅಂಗಾಂಗಗಳಿಗೆ ಹಾದರವನ್ನು ಸಮರ್ಥವಾಗಿ ಪ್ರತಿಬಿಂಬಿಸೋದು ಸಾಧ್ಯವಿಲ್ಲವೆಂದು ಪ್ರಮಾಣಿಕವಾಗಿ ಹೇಳಿದರು. ಅವರನ್ನೆಲ್ಲ ಸಮಾಜ ಗುರುತಿಸಿರೋದು ವೇಶ್ಯೆಯರೆಂದೇ ಎಂಬುದನ್ನು ನೆನಪಿಟ್ಟುಕೋ… +ರಮಾಬಾಯಜ್ಜಿ ಇದ್ದಕ್ಕಿದ್ದಂತೆ ಓಬಳೇಶನ ಕಡೆ ತಿರುಗಿ “ದಪ್ಪಿನ ದ್ಯಾಮವ್ವನ ಮಗ್ಳು ಅನಸೂವಿ ಊರಾಗದಾಳ!” ಎಂದು ಕೇಳಿತು. ನನಗೆ ಇದ್ದಕ್ಕಿದ್ದಂತೆ ಬೆಂಗಳೂರಲ್ಲಿರೋ ಅನಸೂಯಳ ನೆನಪಾಗಿ ದೇಹದ ತುಂಬ ಅರ್ಥವಾಗದ ಭಾವನೆಗಳ ಮಹಾಪೂರ ತುಳುಕಾಡಿತು. +“ಇಲ್ಲೆವ್ವೋ… ಆಯಕ್ಕ ರಕ್ತ ರಾತ್ರಿ ಆಡಲಾಕಂತ ನೈಜಾಮಕಡೀಕ ಹೋದಾಕಿ ಬಂದಂಗಿಲ್ಲ” ಎಂದು ಓಬಳೇಶ ಹೇಳಿದ. +ಯಾವತ್ತು ಹೋದಳು? ಯಾವೂರಿಗೆ ಹೋದಳು? ಯಾವಾಗ ಬರುತ್ತಾಳೆ? ಎಂಬಿತ್ಯಾದಿ ವಿವರ ಒಪ್ಪಿಸಲು ಅವೆಲ್ಲ ಓಬಳೇಶಗೆ ಗೊತ್ತಿಲ್ಲ…. ರಾಖೇಶಗೆ ಗೊತ್ತಿರಬಹುದೆಂದು ಹೇಳಿದೆ. ಅವನು ಅವನನ್ನು ಕರೆತರಲೆಂದು ಬಸ್‌ಸ್ಟಾಂಡ್ ಕಡೆ ಹೋದ. +ನಾನೂ ಅವನ ವ್ಯಕ್ತಿತ್ವವನ್ನು ನೆನೆಸಿಕೊಂಡೆ. ಕೊತ್ತಲಗಿ ಎಂದರೆ ರಾಖೇಶ; ರಾಖೇಶ ಎಂದರೆ ಕೊತ್ತಲಗಿ. ದೂರ ದೂರದಿಂದ ಬರುವ ದೊಡ್ಡ ದೊಡ್ಡ ಪ್ರತಿಷ್ಠಿತರು ಕೊತ್ತಲಗಿಯಲ್ಲಿ ಇಳಿದೊಡನೆ ಕೇಳುವ ಪ್ರಶ್ನೆ ಒಂದೆ – “ಇಲ್ಲಿ ರಾಖೇಶ ಎಂಭೋರು ಎಲ್ಲಿರ್ತಾರೆ?” ಅಂತ. ನಾಯಿ ಕೂಡ ಬೊಟ್ಟು ಮಾಡಿ ತೋರಿಸುತ್ತದೆ. ಅಷ್ಟು ಜನಪ್ರಿಯ ವ್ಯಕ್ತಿ ಅವನು. ಕೇಳಿದೊಡನೆ ನಾನೇ ಸ್ವಾಮಿ ಎನ್ನುತ್ತಾನೆ. ಅವನ ಗೈರುಹಾಜರಿಯಲ್ಲಿ ಅಪಾರಿ, ಸೆಂಡ್ರ, ಕೊಬ್ರಿಯಂಥೊರು ರಾಖೇಶ ಎಂದು ಅಪರಿಚಿತರಿಂದ ಲಾಭ ಪಡೆಯುತ್ತಾರೆ. ಕೆಲವು ಗಿರಾಕಿ ಅವನು ಬರುವ ಮಟಕಾಯುವರು. ಚತುರ್ ಭಾಷಾ ಕೋವಿದನಾದ ಅವನ ಜನಪ್ರಿಯತೆಯನ್ನು ಲೆಕ್ಕಹಾಕಿ ಗುಲಾಂನಬಿ ಹಿಂದೊಮ್ಮೆ ಅವನನ್ನು ಎಮ್ಮೆಲ್ಲೆ ಚುನಾವಣೆಯಲ್ಲಿ ಮಾಜಿಮಂತ್ರಿ ಜಯಾನಂದರ ವಿರುದ್ಧ ನಿಲ್ಲಿಸುವ ಪ್ರಯತ್ನ ಮಾಡಿದ್ದುಂಟು “ಯಾರ್‍ನ ಯಾರ್‍ಗೋ ಅಡ್ಡ ಹಾಕೋ ನಮ್ಮಥೋರಿಗ್ಯಾಕ್ರಿ ಎಲೆಕ್ಷನ್ನು” ಎಂದು ನಕ್ಕು ನಿರಾಕರಿಸಿದ್ದನಂತೆ. ಗುಲಾಂನಬಿಯೂ ಕೂಡ ತನ್ನ ಪೂರ್ವಾಶ್ರಮದಲ್ಲಿ ಅದೇ ಕೆಲಸ ಮಾಡುತ್ತಿದ್ದುದು. ಆ ಕೆಲಸ ಮಾಡೇ ಮೇಲಕ್ಕೆ ಬಂದಿರುವುದು. ಆಗ ಮಾಡುತ್ತಿದ್ದುದು ಅದನ್ನೆ, ಈಗ ಮಾಡುತ್ತಿರುವುದು ಅದನ್ನೆ… ಆದರೆ ಕ್ಲಾಸ್ ಮಾತ್ರ ಬದಲಾಗಿದೆ ಅಷ್ಟೆ. ನಾನು ಕೊತ್ತಲಗಿಗೆ ಬಂದ ಪ್ರಥಮದಲ್ಲಿ… ಆ ನೆಲದ ಗುಣವೊ ಎಂಬಂತೆ ಕೇಳಿದ್ದು ಅವನನ್ನೇ. “ಏನ್ರೀ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳಾದ ನೀವು ಕೂಡ…” ಎಂದಿದ್ದರು ಕೆಲವರು… ಒಂದೊಂದು ಗಳಿಗೆಯಲ್ಲಿ ಒಂದೊಂದು ಇಂಗ್ಲೀಷ್ ವರ್ಣಮಾಲೆಯ ಅಕ್ಷರವನ್ನು ನೆನಪಿಸುವಂಥ ವ್ಯಕ್ತಿತ್ವದ ಅವನನ್ನು ನಾನು ದುರದಿಂದ ನೋಡಿದ್ದೆನಾದರೂ ಮಾತಾಡಿಸುವ ಪರಿಚಯ ಮಾಡಿಕೊಳ್ಳುವ ಉಸಾಬರಿಗೆ ಹೋಗಿರಲಿಲ್ಲ. ಬಾಲಕ ಮೂಕಿ ಟಾಕಿ ಸಿನಿಮಾ ನೋಡುವಂತೆ ದುರದಿಮ್ದ ಅವನನ್ನು ನೋಡಿ ಕುತೋಹಲ ತಣಿಸಿಕೊಳ್ಳುತ್ತಿದ್ದೆ. +ಸ್ವಲ್ಪ ಹೊತ್ತಿನ ನಂತರ ಓಬಳೇಶ, ರಾಖೇಶ ರಾಹುಕೇತುಗಳೇ ತಾವು ಎಂಬಂತೆ ಒಳಪ್ರವೇಶಿಸಿದರು. +ರಮಾಬಾಯಿಯವರನ್ನು ನೋಡುತ್ತಲೆ ರಾಖೇಶ “ಏನಬೇ ನಿನ್ನೌನ… ನಾನ್ ನಿಂಗೆ ಎಲ್ಲೆಲ್ಲೋ ಹುಡುಕಾಡಲಾಕ ಹತ್ತಿದ್ದೆ… ಬಸ್‌ಸ್ಟಾಂಡಿನಾಗ ಕತ್ರಿಗೆ ನಿತ್ಕಂಡಿದ್ದ ಒಬ್ಬ ರಮಾಭಾಯಿ ಮನೆ ಯಲ್ಲೈತಂತ ಕೇಳ್ತಿದ್ದ! ನಿನ್ನೋಡಿದ್ರೆ ಇಲ್ಲಿದ್ದೀ” ಎಂದು ಗಂಟೆ ಹೊಡೆದಂತೆ ಮಾತಾಡಿದ. +“ಏನ್ಲೋ ನನ್ನಾಟಗಳ್ಳ (ಬೇಸರಿಸಬೇಡ… ಇದೇ ಇಲ್ಲಿ ಅಧಿಕೃತ ನಾಗರೀಕ ಭಾಷೆ) ಯಾರೋ ಅದು ನನ್ನುಕಾಡ್ಕಂತ ಬಂದಿರೋದು… ಹೋಗಿ ಹೋಗಿ ಈ ಮುದ್ಕೀನೆ ಬೇಕಾಗಿತ್ತೇನೋ ಅವ್ನೀಗೆ… ಯಾರವ್ರು ಹೇಳು! ಇಲ್ಲಾಂದ್ರೆ ನಿನ್ತಲಿ ಸಾವಿರ ಹೋಳು” ಎಂದು ನಕ್ಕೋತ ನಾಟಕೀಯವಾಗಿ ನುಡಿಯಿತು. +“ಈ ವಯಸ್ಸಿನಾಗಿರೋ ನಿನ್ನ ಯಾರುಡುಕಾಡ್ಕಂತ ಬರಭೋದು ಹೇಳು ಮತ್ತೆ… ಅದೇ ಕಣಭೇ ಯಮಧರ್ಮರಾಜ…” ಎಂದವನಂದೊಡನೆ ಮುದುಕಿಯೇ ಮೊದಲಾಗಿ ಎಲ್ರು ಗೊಳ್ಳನೆ ನಕ್ಕರು. +ಕೂಕ್ಕೊಳ್ಳುವುದಕ್ಕಿಂತ ಮೊದಲು ಏನು ಮಾಮ್ಮೋ ಅಂತ ಚಂಬಸ್ಯಯ್ಯನನ್ನೂ; ಕ್ಯಾ ಮಾಮೂ ಅಂತ ಇಸ್ಮಾಯಿಲನನ್ನೂ; ಎಂಥದು ಮಾಮಾವ್ರೆ ಅಂತ ಹೆಬ್ರಿಯನ್ನೂ ಮಾತಾಡಿಸಿದ. +ಕಳ್ಳರ ಮನಸ್ಸು ಹುಳ್ಳುಹುಳ್ಳಗೆ ಎಂಬಂತೆ ಅವರು ತಲೆ ತಗ್ಗಿಸಿದರು. ಅವನು ಅಲ್ಲಿಂದ ಸರನೆ ಹೋಗಿ ರಮಾಬಾಯಿಯವರ ಎರಡೂ ಗಲ್ಲಗಳಿರಡೆರಡು ಮುದ್ದು ಕೊಟ್ಟು – ನನ್ನನ್ನು ಕರೆಸಿಕೊಂಡ ಕಾರಣವೇನು ಕಾಂತೆ ಅತಿಗುಣವಂತೆ” ಎಂದು ನಾಟಕೀಯ ಗತ್ತಿನಿಂದ ಕೇಳಿ ರಂಜಿಸಿದನು. +ಯಾರಿಗಾದರು ವಯಸ್ಸಾದರೆ ತನಗಾದಂತೆ ಆಗಬೆಕು ಎಂಬಂತಿದ್ದ ರಮಾಬಾಯಿ ಎಂಥ ಅದ್ಬುತ ವೃದ್ಧೆ ಎಂದು ನನಗಾಗ ಅರ್ಥವಾಯಿತು. ಆ ಮುದುಕಿ ಎದ್ದು ನಿಂತು ಟೇಬಲ್ ಮೇಲಿದ್ದ ಹೂದಾನಿಯನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯನ್ನು ತೊಂಕದ ಮೇಲಿಟ್ಟುಕೊಂಡು – +“ಎಲವೋ ಕಾಂತಾ… ನಾನು ಧಾರೆಂದರೆ… ಬಂಡೀ ಸೀನಪ್ಪಸೆಟ್ಟಿಯು ವಯ್ಯರದಿಂದ ಬಂದು ತಪೋನಿರತಳಾಗಿದ್ದ ಹರಲಾಪುರದ ಹುಸೇನಮ್ಮನ ತಪೋಭಂಗಮಂ ಮಾಡಲಾಗಿ ಅವರಿಬ್ಬರ ಸಮಾಗಮನವಾಯಿತು. ಆ ಅವರ ರತಿಕ್ರೀಡಾ ಷೀಲ್ಲ್ಡೇ ಮುಂದೊಂದು ದಿನ ರಮಾಬಾಯಿ ಎಂಬ ನಾಮಾಂಕಿತಮಂ ಧರಿಸಿ ಅಂಗ, ವಂಗ ಕಳಿಂಗವೇ ಮೊದಲಾದ ಛಪ್ಪಾನಾರು ದೇಸವಿದೇಸಗಳಲ್ಲಿ ವಿಕ್ಯಾತವಾಯಿತು. ಆಕೆಯೇ ನಾನೆಂದು ತಿಳಿಯಲೌ ಮೂರ್ಖ ಶಿಖಾಮಣಿ… ಜೋಗಮ್ಮನ ಕೊಳ್ಳಾಗಿನ ಕರಿಮಣಿ…” ಎಂದು ನುಡಿಯುತ್ತಲೆ ನಾವೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಾಡಿದೆವು. +ಮುದುಕಿಯೂ ಬಾಯಿ ತುಂಬ ನಕ್ಕಾದ ಮೇಲೆ – +“ಏನೋ ಭಾಡ್ಖಾವ್… ನನ್ನಂಥ ಮುದುಕೀನು ಬುಡುವಲ್ಲೆಲ್ಲ ನೀನು… ಇನ್ನು ಹರೇದ ಹುಡ್ಗೀರ್‍ನ ಹೆಂಗೆ ಬುಡುತ್ತೀಯೋ” ಎಂದು ತಮಾಷೆ ಮಾಡಿತು. +ನಂತರ ಅವರು ತಂತಮ್ಮ ಸ್ವಭಾವ ಕಳಚಿ ನಾಗರಿಕ ಸ್ಥಿತಿಗೆ ಮರಳಿದರು. ಮುದುಕಿ ಎಲ್ಲ ಹೇಳಿದ್ದನ್ನು ಕೇಳಿಯಾದ ಮೇಲೆ ರಾಖೇಸ ಅನಸೂವಮ್ಮ ಇರುವ ಸುಳಿವನ್ನು ನೀದಿದನು. +ಈಗ್ಗೆ ಐದೂವರೆ ತಿಂಗಳ ಹಿಂದೆ ನೈಜಾಂ ಕಡೀಕಿರೋ ಸಿರವಾರದಲ್ಲಿ‌ಇನ್ನೂರೆಕರೆ ವತನದಾರರಾದ ಶಿವಾಜಿರಾವ್ ದೇಶಮುಖ್ ತಮ್ಮ ಖಾಸಾಮಿತ್ರ ಒಂದು ಹೆಣ್ಣಿನ ವರ್ಣನೆ ಮಾಡಿದ್ದಕ್ಕೆ ಮನಸೋತು ತಾನೂ ಸಂಗ್ಯಾಬಾಳ್ಯಾ ನಾಟಕ ಆಡಿಸಿ ಅದರಲ್ಲಿ ತಾನು ಸಂಗ್ಯಾನ ಪಾತ್ರ ಮಾಡುವುದೆಂದು ನಿರ್ಧರಿಸಿದನು. ಕುಂತಳನಾಡಿನ ಗಂಗೀ ಎಂದೇ ಹೆಸರಾಗಿರುವ ಅನಸೂಯಾನ್ನು ಕರೆತರಲು ಖಾಸಾ ಮಿತ್ರನೂ, ತಲೆ ಹಿಡುಕನೂ ಆಗಿದ್ದ ಬೂದೆಪ್ಪನನ್ನು ಕೊತ್ತಲಗಿಗೆ ಅಟ್ಟಿದನು. ಇಂಥದ್ದರಲ್ಲಿ ನಿಸ್ಸೀಮನಾದ ಬೂದೆಪ್ಪ… ರಾಖೇಶನ ಕೈಬೆಚ್ಚಗೆ ಮಾಡಿ ಅನಸೂವಮ್ಮಳನ್ನು ಕಂಡು ಒಂದು ನೋಟಿನ ಕಟ್ಟನ್ನು ಮುಂಗಡವಾಗಿ ಕೊಟ್ಟುತಾನು ತಂದಿದ್ದ ಜೀಪಿನಲ್ಲಿ ಕುಂಡ್ರಿಸಿಕೊಂಡು ಸಿರಿವಾರಕ್ಕೆ ಕರೆದುಕೊಂಡು ಹೋದನು. ದೇಶ್‌ಮುಖ್ ಆಕೆಯ ರೂಪರಾಶಿಗೆ ಮಾರು ಹೋದನು. ಆಕೆ ತನ್ನ ಅಭಿನಯದ ಮೂಲಕ ಸುತ್ತು ಹತ್ತು ಹಳ್ಳಿಗಳ ಮಂದಿಯನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಟ್ಟಳು. ಆರು ತಿಂಗಳು ಉಪಪತ್ನಿಯಾಗಿರಲಿಕ್ಕೆ ಎರಡೆಕರೆ ಗದ್ದೆ ರಿಜಿಸ್ಟರ್ ಮಾಡಿಸಿಕೊಂಡು ಆಕೆ ಉಟ್ಟಬಟ್ಟೆಯೊಡನೆ ಅಲ್ಲೆ ಎಂದರೆ ತೋಟದ ಮನೆಯಲ್ಲಿ ಉಳಿದುಕೊಂಡು ಬಿಟ್ಟಳು. +ಇನ್ನೆನು ಕರಾರು ಹದಿನೈದು ದಿನಗಳಲ್ಲಿ ಮುಗಿಯಲಿದೆ ಎಮ್ದಾಗ ಗುತ್ತಿಗೆರೆಯ ಗೌಡ ಜಾಲಿಹಾಳ್ ಜಮೀನ್ದಾರ ನಾನು ಅಷ್ಟು ಕೋಡ್ತೀನಿ ಎಂದು ಸ್ಪರ್ಧೆಗಿಳ್ದು ಬಿಟ್ಟಿದ್ದರು. ಗದ್ದೆಗೆ ಆಸೆಪಟ್ಟ್ರೆ ನಂದು ಹರಕೊಂಡೋಗ್ತದೆ ಎಂದು ನಿರಾಕರಿಸಿದಳು ಆ ಲಲನೆ. +ಅದೇ ಸಂದರ್ಭದಲ್ಲಿ ನಾವು ರಾಖೇಶನನ್ನು ಅಲ್ಲಿಗೆ ಕಳಿಸಿದ್ದು. ತ್ರಿಮೂತಿಗಳಾದ ಬ್ರಹ್ಮ, ವಿಷ್ಣು, ಪರಮೇಶ್ವರ ಮಾತು ಮೀರಬಹುದು, ಆದರೆ ರಮಾಬಾಯಿಯು ಹಾಕಿದ ಗೆರೆಯನ್ನು ಮಾತ್ರ ದಾಟಲಾರಳು. ಇನ್ನೇನು ಟ್ರಂಕು ತೆಗೆದುಕೊಂಡು ಹೊರಡಲಿದ್ದಾಳೆ ಎನ್ನುವಾಗ ಆಕೆಯನ್ನು ಅಪರಿಸುವ ಯತ್ನವೂ ನಡೆಯಿತು. ‘ಬರ್ರೆಲೋ ಒಬ್ಬೊಬ್ರನ ಕಡ್ಡು ಸರಗಾ ಚೆಲ್ತೀನಿ’ ಎಂದು ಕತ್ತಿ ಹಿಡಿದು ಆಕೆ ನಿಲ್ಲಲು ಹೇಮಾಹೇಮಿ ಜಮೀನ್ದಾರರೆಲ್ಲ ದಿಕ್ಕಾಪಾಲಾಗಿ ಓಡಿಬಿಟ್ಟರು ಎಲ್ಲಿಂದರಲ್ಲಿ ದೋತರ ಉದುರಿಸುತ್ತ. ಇಡೀ ಆಸ್ತಿ ಪಾಸ್ತಿನೆಲ್ಲ ನಿನ್ನೆಸ್ರಿಗೆ ಮಾಡಿಸಿಕೊಡ್ತೀನಿ… ಇದ್ದು ಬಿಡು ಮುಂತಾಗಿ ಗೋಗರೆದ ದೇಶಮುಖನಿಗೆ ‘ಹೋಗೋ ಹೋಗು… ನಿನ್ನ ಸಿರಿವಂತಿಕೆಗೆ ಆಸೆಪಟ್ಟು ಇರೋಕೆ ನಾನೇನು ಪತಿವ್ರತಾ ಸಿರೋಮಣಿ ಅಲ್ಲ. ನಾನು ಹೇಳಿ ಕೇಳಿ ಕವಡೆ ಕಾಸಿನ ಸೂಳೆ… ಎಲ್ಲ ಹೆಂಗಸರತ್ರ ಇರೋದೆ ನನ್ನತ್ರಾನೂ ಇರೋದು… ನಂದೇನು ಬಂಗಾರದಲ್ಲ… ಬೆಳ್ಳೀದಲ್ಲ… ಇದಕ್ಯಾಕ ಹಿರೇರು ಮಾಡಿಟ್ಟ ಆಸ್ತಿ ಕಳಿತಿ… ಮಾಡ್ಕೊಂಡ ಹೆಂಡತಿ ಇನ್ನೊಬ್ರತ್ರ ಮಲಿಕ್ಕಂಡ್ರೆ ಸುಮಕಿರ್‍ತೀ ಏನು? ನನ್ ಮೇಲೆ ತೋರಿಸ್ತಿರೋ ಪ್ರೀತಿಯನ್ನೇ ನಿನ್ನ ಹೆಂಡ್ತಿ ಮ್ಯಾಲ ತೋರಿಸು… ಸಂಗ್ಯಾಬಾಳ್ಯಾ ಆಟ ಆಡಿದ್ರು ನಿಂಗೆ ಬುದ್ದಿ ಬರ್ಲಿಲ್ಲ” ಎಂದು ಮಿಖಕ್ಕೆ ಹೊಡೆದಂತೆ ಹೇಳಿದಳು. +ದೇಶಮುಖನ ಹೆಂಡತಿ ‘ಗೋದಮ್ಮಾ ನೀನು ಸಾಮಾನ್ಯಕಿ ಅಲ್ಲವ್ವಾ… ನನ್ ಸವುಭಾಗ್ಯ ಉಳಿಸಿದೆ’ ಎಂಉ ಸೀರೆ ಕುಪ್ಪಸ ಕೊಟ್ಟು ಉಡಿತುಂಬಿ ಅನಸೂವಿಯನ್ನು ರಾಖೇಶನೊಂದಿಗೆ ತುಂಬು ಹೃದಯದಿಂದ ಬೀಳ್ಕೊಟ್ಟಳು. +ಎಂದು ಮುಂತಾಗಿ ಹೇಳಿ ಶಾಮಣ್ಣ ಪಾತ್ರವು ಒಂದು ಕ್ಷಣ ಮೌನವಹಿಸಿ ನಂತರ ಹೇಳಿತು, +ನನ್ನ ಅನಸೂಯ ಎಂಥವಳು ಅಂಥ ಈಗಲಾದ್ರು ನಿನಗರ್ಥವಾಗಿರಬೇಕಲ್ಲ ಕುಂವೀ… ಅಂಥವಳು ಹುಟ್ಟುವುದು ಸಾವಿರಕ್ಕೊಬ್ಬಳೋ ಲಕ್ಷಕ್ಕೊಬ್ಬಳೋ… ಆಕರಣೆ, ನಿರಾಕರಣೆಯಲ್ಲಿಯೇ ಹೆಂಗಸರ ದೊಡ್ಡಸ್ತಿಕೆ ಇರುತ್ತದೆ ನೋಡು… ಆಕೆಯೂ ಎಲ್ಲರಂತೆ ಮಾಂಸ ಮಜ್ಜೆಯಿಂದ ಮಾಡಲ್ಪಟ್ಟವಳೇ! ಆದರೆ ಮಾಂತ್ರಿಕ ಶಕ್ತಿ ಇರುವುದು ಅಂಥವರ ಸ್ಪರ್ಶದಲ್ಲಿ; ಸ್ಪಂದನದಲ್ಲಿ… ಅಂಥವರ ದೈಹಿಕ, ಮಾನಸಿಕ ಸೌಂದರ್ಯವನ್ನು ಅಳೆಯುವ ಶಕ್ತಿ ಈ ನಶ್ವರ ಪ್ರಪಂಚದ ಯಾವ ಮಾಪನಕ್ಕೂ ಇಲ. ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿ; ಲಲಿತಾಷ್ಟಕಗಳಲ್ಲಿ ಯಾವ ದೇವಿಯನ್ನು ಉಪಾಸನೆ ಮಾಡಿದ್ದಾರೋ ಅದೇ ದೇವಿಯೇ ಈಕೆ ನೋಡು” ಎಂದು ನನ್ನನ್ನು ದಿಟ್ಟಿಸಿತು. +ಅದರ ಮಾತು ಕೇಳಿ ನನಗೆ ಅಚ್ಚರಿಯಾಯಿತು. ನಾನು ಆಕೆಯನ್ನು ನೋಡಿ ಮಾತಾಡಿ ಬಂದಿರೋನು ತಾನೆ? ಆಕೆ ಸುಂದರಿ ಎಂಬುದು ನಿಜ. ಆದರೆ ಯಾರಿಗೂ ಹುಚ್ಚುಹಿಡಿಸುವಷ್ಟು ಸೌಂದರ್ಯವತಿಯಂತು ಖಂಡಿತ ಅಲ್ಲ… ಆಕೆಯ ಕಣ್ಣುಗಳಲ್ಲಿ ಆಯಸ್ಕಾಂತದ ಶಕ್ತಿ ಇರುವುದನ್ನು ನಶ್ಯೆಪುಡಿ ಉಜ್ಜಿ ಕರೆಗಟ್ಟಿದ ಹಲ್ಲುಗಳನ್ನು ನೋಡಿದ್ದೆ. +“ಎಲವೋ ಮೂರ್ಖ ನೀನು ಏನಾಲೋಚಿಸ್ತಿದ್ದೀ ಅಂತ ಗೊತ್ತು. ಆಕೆಯ ಸೌಂದರ್ಯವನ್ನು ಸಂದೇಹಿಸುತ್ತಿರುವ ನಿನ್ನನ್ನು ಯಾವ ಶಬ್ದಗಳಿಂದ ಬಯ್ಯಬೇಕೋ ಅರ್ಥಾಗ್ತಾ ಇಲ್ಲ. ಒಳಗಿನ ಕಣ್ಣು ತೆರೆದು ನೋಡಿದರೆ ಮಾತ್ರ ಅಂಥ ಸೌಂದರ್ಯದ ವಿರಾಟ್ ಶಕ್ತಿ ಅರ್ಥ ಆಗೋದು… ನಿನ್ನಂಥ ಕುರುಡನಿಗೇನು ಕಾಣಿಸೀತು ಬೆಳಕಿನ ಪವಾಡ… ನಾನು ಉತ್ಪ್ರೇಕ್ಷೆ ಮಾಡ್ತಿರಬಹುದಂತ ನೀನು ತಿಳ್ಕೊಂಡಿದ್ರೆ; ನಾನು ಸುಳ್ಳು ಹೇಳ್ತಿರಬಹುದಂತ ನೀನು ತಿಳ್ಕೊಂದಿದ್ರೆ ಸಿರಿವಾರಕ್ಕೆ ಹೋಗು, ಹುಚ್ಚು ಹಿಡಿದು ಆಂಜನೇಯ ಗುಡಿಯೊಳಗೆ ಕೂತಿರೋ ದೇಶಮುಖನನ್ನು ಮಾತಾಡ್ಸು… ಆಗಾದ್ರು ಅರ್ತಾದೀತು… ಸಿರಿವಾರ ಏನು ದಕ್ಷಿಣ ಅಮೆರಿಕದ ಅಮೆಜಾನ್ ನದಿ ತೀರದಲ್ಲಿಲ್ಲ… ತುಂಗಭದ್ರೆ ದಾಟಿದ್ರೆ ಬರುವ ಯಡದೊರೆನಾಡಿನಲ್ಲೆ ಅದೀರೋದು!” ಎಂದು ಹೇಳಿತು. +‘ನಾನು ಅನುಮಾನಿಸ್ತಿರೋ ಸ್ವಾತಂತ್ರ್ಯಕ್ಕೆ ಯಾಕೆ ಅಡ್ಡಿ ಮಾಡ್ತೀ… ಒಂದೊಂದು ಬಣ್ಣದ ಗಾಜಿನ ಮೂಲಕ ನೋಡಿದಾಗ ಒಂದೊಂದು ರೀತಿಯಲ್ಲಿ ಸೌಂದರ್ಯ ಕಾಣಿಸ್ತದೆ… ಸೌಂದರ್ಯದ ಸ್ಥಿತಿ ಹೀಗೇ ಅಂತ ನಿಖರವಾಗಿ ಹೇಳಲು ಹೇಗೆ ಸಾಧ್ಯ?… ಒಂದೊಂದು ವಸ್ತು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸೌಂದರ್ಯಾನುಭವ ನೀಡ್ತದೆ. ಸೌಂದರ್ಯ ಎನ್ನುವುದು ನೋಡುವವನ ಮನಸ್ಸಿನ ಪ್ರವೃತ್ತಿ, ಸಂಸ್ಕಾರ, ಪ್ರಜ್ಞೆಗೆ ಸಂಬಂಧಿಸಿದ್ದು. ಕೆಲವರಿಗೆ ಸೌಂದರ್ಯಾನುಭವ ನೋಡುವುದರಿಂದಾಗಬಹುದು. ಕೆಲವರಿಗೆ ಸ್ಪರ್ಶದ ಮೂಲಕ ಆಗಬಹುದು. ನನಗೆ ಕಣ್ಣಿನಿಂದಲೂ ಆಗಿರದ ಸೌಂದರ್ಯಾನುಭವ ನಿನಗೆ ಸ್ಪರ್ಶದ ಮೂಲಕ ಆಗಿರಬಹುದಷ್ಟೆ… ಅದಕ್ಯಾಕೆ ಇಷ್ಟು ತಲೆ ಕೆಡೆಸಿಕೊಳ್ಳುತ್ತೀ ಅಂತ” +“ನಿನ್ನಂಥ ಅರಸಿಕ ಮಾತ್ರ ಹೀಗೆ ಮಾತಾಡಲು ಸಾಧ್ಯ ನೋಡು. ಸೌಂದರ್ಯ ಎನ್ನುವುದು ಪ್ರಮಾಣ ಬದ್ಧವಾದ ಸಮರೂಪದ ಸಂಯೋಜನೆ ಮತ್ತು ವಿವಿಧ ಅಂಗಗಳ ಜೀವಂತ ವಿನ್ಯಾಸ ಕ್ರಮ, ಪಂಚೇಂದ್ರಿಯಗಳಿಗೆ ಸಮಪ್ರಮಾಣದಲ್ಲಿ ನಿಲುಕವಂಥದ್ದು ಕಣೋ ಬೆಪ್ಪೆ. ಇಂದ್ರಿಯಗಳಿಗೆ ನಿಲುಕಿ ದೈಹಿಕ ತೃಪ್ತಿ ಕರುಣಿಸುವಂಥ ಅನುಭೂತಿ ಅದು. ನಾದವಿನ್ಯಾಸ, ದೈಹಿಕ ಚಲನೆ ಮೂಲಕ ನಾನು ಅನಸೂಯಳಲ್ಲಿ ಅನುರಕ್ತನಾದೆ…ತಿಳಿತಾ” +“ಹೋಗ್ಲಿ ಬಿಡಪ್ಪಾ… ಸೌಂದರ್ಯ ವ್ಯಕ್ತಿಯಿಂದ ವ್ಯಕ್ತಿಗ್; ಕಾಲದಿಂದ ಕಾಲಕ್ಕೆ; ಸಮಾಜದಿಂದ ಸಮಾಜಕ್ಕೆ ಬದಲಾಗುತ್ತ ಹೋಗುತ್ತದೆ. ನಿಗ್ರೋಗಳಿಗೆ ಸುಂದರವಾಗಿ ಕಂಡದ್ದು ಜಪಾನಿಯರಿಗೂ ಹಾಗೆಯೇ ಕಾಣಬೇಕೆಂದರೆ ಹೇಗೆ ಸಾಧ್ಯ? ನನ್ನ ದೃಷ್ಟಿಯಲ್ಲಿ ಸೌಂದರ್ಯ ಬೌದ್ಧಿಕ ಕ್ರಮವಾಗಿರಬಹುದು. ನಿನ್ನಂಥೋರಿಗೆ ಅದು ದೈಹಿಕ ಕ್ರಮವಾಗಿರಬಹುದು… ಇವೆರಡಕ್ಕೂ ಮಾನಸಿಕ ಸಂಸಿದ್ಧತೆ ಬೇಕು… ಅದು ನಿನ್ನಲ್ಲಿತ್ತು ಅಂತ ತಿಳ್ಕೊಂಡಿದ್ದೀನಿ. ಆಯ್ತಾ… ಮುಂದಿನದು ಹೇಳು… ನೀನು ಈಗ ಎಡ್ವರ್ಡ್ ಬುಲ್ಲೋನಥರ ಮಾತಾಡಬೇಡ… ಸಾಮಾನ್ಯ ಮನುಷ್ಯನೊಂದಿಗೆ ಸಂವಾದಿಸುತ್ತಿರುವ ಮನುಷ್ಯನ ಥರ ಮಾತಾಡು…” +“ಅಂತೂ ದಾರಿಗೆ ಬಂದೆಯಲ್ಲ… ನಾನು ಆಕೆ ಕುರಿತು ಮಾತಾಡುವಾಗ, ಆಲೋಚಿಸುವಾಗ ತುಂಬ ಭಾವುಕನಾಗ್ತೀನಿ… ಅದನ್ನು ನೀನು ಮಿಸ್‌ಇಂಟರ್‌ಪ್ರಿಟ್ ಮಾಡಬೇಡ. ನಾನು ಆಕೆಯನ್ನು ಪ್ರಪ್ರಥಮವಾಗಿ ರಮಾಬಾಯಿ ಮತ್ತಿತರ ಸಮಕ್ಷಮದಲ್ಲಿ ನೋಡಿದೊಡನೆ ಅಭಿನವ ಗುಪ್ತನ ತಂತ್ರಾಲೋಕದ ಒಂದು ಶ್ಲೋಕ ನೆನಪಾಯ್ತು. +ತಥಾಪಿ ಮಧುರೇ ಗೀತೇ ಸ್ಪರ್ಶೇವಾ ಚಂದನಾದಿಕೇ +ಮಾಧ್ಯಸ್ಥ್ಯ ವಿಗಮೇ ಯಾಸು ಹೃದಯೇ ಸ್ಪಂದಮಾನತಾ… +ಇಂಪಾದ ಸಂಗೀತದಿಂದ ಶ್ರವಣೇಂದ್ರಿಯ ಪುಳಕಗೊಳ್ಳುವಂತೆ. ಚಂದನಾದಿ ಸುವಾಸನೆಗಳಿಂದ ಘ್ರಾಣೇಂದ್ರಿಯವಾದ ಮೂಗು ಅರಳುವಂತೆ… ನನ್ನ ಇಡೀ ಸಮಸ್ತ ದೇಹವು ಸ್ಪಂದಿಸಿ ಉಕ್ಕೇರಿತು. ಇದು ನನ್ನಲ್ಲಿನ ಆನಂದದ ಶಕ್ತಿಗೆ ನಿದರ್ಶನ. ಸ್ಪಂದನಗಳ ವೈವಿಧ್ಯಮ ಸೃಷ್ಟಿಯ ಸಮಸ್ತ ರೂಪವೇ ಆಕೆಯಾಗಿದ್ದಳು… +(ಅಯ್ಯೋ… ಅಯ್ಯೋ… ಒಂದಿಷ್ಟಾದ್ರು ಮಾನ ಮರ್ಯಾದೆ ಇಲ್ವಲ್ಲ ಇವ್ರೀಗೆ… ಎಷ್ಟು ಲಜ್ಜೆ ಗೆಟ್ಟು ಆ ಕತ್ತೆ ಸೂಳೆಯನ್ನು ವರ್ಣಿಸುತ್ತಿದ್ದಾರಲ್ಲ ಇವ್ರು… ಅಷ್ಟೊಂದು ಸೌಂದರ್ಯ ಪ್ರಜ್ಞೆ ಇದ್ದೋರು ಅಂಥಾಕಿಯನ್ನು ಕಟ್ಕೊಳ್ಳೋದು ಬಿಟ್ಟು ನನ್ನನ್ಯಾಕೆ ಮದುವೆಯಾಗಿ ಜೀವನಾನ ಹಾಳು ಮಾಡಬೇಕಿತ್ತು ಅಂತೀನಿ…) +ಆದರೆ ಆಕೆ ತನ್ನ ಬಗ್ಗೆ ತಾನು ನಿರ್ಭಾವುಕವಾಗಿದ್ದಳು. ಒಂದು ರೀತಿಯ ಸ್ಥಿತಪ್ರಜ್ಞೆ ಎನ್ನಬಹುದು. ಪಾರಿಜಾತ ಪುಷ್ಪದ ಸೌಂದರ್ಯ ಆವಿರ್ಭವಿಸುವುದು ಬೇರೊಂದು ನಯನೇಂದ್ರಿಯದಲ್ಲಿ, ಪಾರಿಜಾತಪುಷ್ಪದ ಪರಿಮಳ ಅವಿರ್ಭವಿಸುವುದು ಬೇರೊಂದು ಘ್ರಾಣೇಂದ್ರಿಯದಲ್ಲಿ; ಪಾರಿಜಾತ ಸೌಂದರ್ಯವಿಡೀ ನೆಲೆಗೊಳ್ಳುವುದು ಬೇರೊಂದು ಹೃದಯದಲ್ಲಿ. ತಾನು ತನ್ನ ಕಾಂತಿ, ತೇಜಸ್ಸು ಪರಿಮಳದಿಂದ ನೋಡುಗನ ಮನಸ್ಸನ್ನು ಆಕರ್ಷಿಸಿ ಆದ್ರಗೊಳಿಸುವೆನೆಂದು ಆ ಪಾರಿಜಾತಕ್ಕೇನು ಗೊತ್ತು? +ಅಲ್ಲಿದ್ದ ಎಲ್ಲರಿಗಿಂತ ಸೌಂದರ್ಯಾಸ್ವಾದನಾ ವಿಷಯದಲ್ಲಿ ನಾನು ಹೆಚ್ಚು ಸಕ್ರಿಯನಾಗಿದ್ದೆ. ಕೆಟ್ಟದಾಗಿ ಹಸಿದವ ಆಹಾರವೇ ಸೌಂದರ್ಯ; ಸೌಂದರ್ಯವೇ ಆಹಾರವೆಂದು ಅದು ಹೇಗೆ ಭಾವಿಸುವನೋ ಹಾಗೆ ಹಸುವಿನ ನಿರಂತರತೆಯಿಂದ ಬಳಲಿ ಬೆಂಡಾಗಿದ್ದ ನನ್ನ ಕಣ್ಣಿಗೆ ಅನಸೂಯ ಸೌಂದರ್ಯದಿಂದ ಮಾಡಲ್ಪಟ್ಟಿರುವವಳಂತೆ ಗೋಚರಿಸಿದಳು. ಇರಲಿ. ಈ ವಿವೇಚನೆಯನ್ನು ಒತ್ತಟ್ಟಿಗಿಟ್ಟು ಸಂಗ್ಯಾಬಾಳ್ಯಾದ ಬಗ್ಗೆ ಆಕೆ ತೋರಿದ ಆಸಕ್ತಿ ನಿರಾಸಕ್ತಿ ಪ್ರತಿಕ್ರಿಯೆಯ ಕಡೆ ಗಮನ ಹರಿಸೋಣ. +ಅನಸೂಯ ಬಂದೊಡನೆ ರಮಾಬಾಯಿಯ ಪಾದಕುದ್ದೋಕೆ ಬಿದ್ದು “ಯ್ಯೋನಭೇ ಮುದುಕೀ… ಅದ್ಯಾಕಂಗ ತಟ್ಟರಸ್ಲಾರ್‍ದ ಕರಸ್ಕಂಡಿ. ಒಂದೀಟು ತಡಕಾನಾಗಿತ್ತಭೇ ನಿಂಗೆ… ಸಿರಿವಾರದ ಆಟಾನ ಯಾಕಾರ ಒಪ್ಪ್ಕಂಡಂತನ್ನಿಸಿ ಬುಟ್ತು ನ್ವಾಡು… ಅವೇನು ಮಂದ್ಯಭೇ? ಒಂದೊಂದು ದನ ಇದ್ದಂಗದಾವ ನೋಡು… ಗೂಳಿ ತನ್ನೊಟ್ಟಿ ತುಂಬುಸ್ಕನ್ನದಕಿಂತ ಬಣವೇನೆಂಗಾಳ್ಮಾಡ್ತದೋ ಹಂಗ್ಮಾಡ್ತಾವ ನೋಡು… ಹೋದುದ್ಕೂ ನಾನೇನು ಬರಿಕೈಲಿ ಬರ್‍ನಿಲ್ಲ…” ಎಂದು ಹೇಳುತ್ತ ಸೊಂಟದ ಬಾಳೆಕಾಯಿಯಿಂದ ಚಿನ್ನದ ಡಬ್ಬಿಯಿಂದ ನಸ್ಸೆಪುಡಿ ತೆಗೆದು ಅಗ್ನಿ ಸಾಕ್ಷಿಯಾಗಿ ಗಸಗಸ ತಿಕ್ಕಿ ಮುಂದುವರಿದು “ಹೇಳ್ಬಿಡಬೇ ಹೇಳ್ಬಿಡು. ಅದೇನಂತ ಜರೂರಿತ್ತು ಲಗೂನ ಹೇಳ್ಳಿಲ್ಲಂದ್ರೆ +ನೀನು ಹತ್ತದಿನೈದು ವರುಸಾದ್ರು ಸಾಯಕ್ಕಿಲ್ಲ ನೋಡು” ಎಂದಳು. +ಮಾತಿನಲ್ಲೇನು ರಮಾಬಾಯಿ ಹಿಂದಕ್ಕೆ ಬೀಳಲಿಲ್ಲ. +“ಆಟ ಆಡಿ ಬರ್ತೀನಂತ ಹ್ವಾದಾಕಿ ಆಟ ಆಡಿ ಬಣ್ಣ ತೊಳಕಂಡು ಬರಬೇಕವ್ವ ಅದು ಬಿಟ್ಟು”. +“ಏನು ಮಾಡ್ಲೆಭೇ ನೈಜಾಮುಕಡೆ ಮಂದಿ ಹಂಗದಾವು”. +“ಇರ್‍ಲಿ… ಈಗ ನಮ್ ಬ್ಯಾಂಕಿನ್ಮಂದಿ ಬಾಳ್ಯಾ ಸಂಗ್ಯಾರಾಟಾನ ಆಡಬೇಕಂತ ಮಾಡ್ಯಾವ… ನೀನದರಾಕ ಗಂಗಿ ಪಾತರ ಮಾಡಲೇಬೇಕಂತ ಹುಕುಮ ಮಾಡ್ತಿದೀನಿ ನೋಡಲೈ ಮೋಹನಾಂಗಿ..” +ಅದನ್ನು ಕೇಳಿ ಅನಸೂಯ ಬಲಗೈ ತಗಂಡು ಗದ್ದದ ಮೇಲಿಟ್ಟುಕೊಂಡು ಎಲ್ಲರ ಮೂತಿಗಳನ್ನು ನೋಡಿ ಪರೀಕ್ಷಿಸಿ – +ಈ ವಯಸ್ಸಿನಾಗ ನೀನ್ಯಕಿಂಗ ಯೋಚ್ನೆ ಮಾಡ್ಡೀಂತ? ಇವರೊಬ್ಬೊಬ್ರ ಮೂತಿ ಯಾಪಾಟಿ ಅದಾವ ನೋಡು. ಇವ್ನ ಕಟ್ಕೊಂಡು ಯಂಗಾಡಿಸ್ತೀಯಭೇ ಯವ್ವ! ಒಬ್ಬಬ್ರು ಹುಣಸಣ್ ಹೊಡ್ಯೋ ಜೋಟಿಕೋಲಿದ್ದಂಗದಾವ… ಯಿಂಥೋವ್ರ ಸಂಗಾಟ ನಾನು ಗಂಗಿ ಪಾರುಟು ಮಾಡಿ ಹೆಸ್ರು ಖರಾಬು ಮಾಡ್ಕಳ್ಯಾಕ ನಾನ್ತಯಾರಿಲ್ಲಭೇ… ನೀನು ಸಾಪಕೊಡು ಬೇಕಾದ್ರ!” ಎಂದು ಚಟ್ಟನೆ ಸಿಡಿದು ನಿಂತುಬಿಟ್ಟಳು. +ಆಗ ನೀನು ನೋಡಬೇಕಿತ್ತು ನಮ್ಮ ಮುಖಗಳನ್ನು. ಚಿವಿಟಿದರು ರಕ್ತ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವೆಲ್ಲರು ಅಪರಾಧಿಗಳಂತೆ ಮುಖ ತಗ್ಗಿಸಿ ಕೂತುಬಿಟ್ಟೆವು. +ನಮ್ಮ ಪರವಾಗಿ ಓಬಳೇಶನೇ – +“ನೀನೇ ಹಿಂಗಂದ್ರ ನಾನು ಸುಮ್ಕಿರಲ್ಲ ನೋಡು… ಹೋಗಿ ಉರುಲಾಕ್ಕಂತೀನಿ. ಅದೆಂಗಾಡ ಬೇಕೆಂಬೋದ್ನ ಹೇಳ್ಕೊಡು… ಅದು ಬಿಟ್ಟು ಹೊಳ್ಯಾಗ ಹುಂಚಿ ಹಣ್ ತೊಳ್ದಂಗಾಡಬ್ಯಾಡ ಎಂದು ಮಾತಾಡಿಸಿದನು. +ಅಷ್ಟರಲ್ಲಿ ರಮಾಬಾಯಿಯೇ – +“ಹ್ಹಾ… ಹ್ಹಾ… ಘನಸ್ತಿ… ಯ್ಯೋನಾಗ್ಯಾರಭೇ ನಮ್ಮುಡ್ಗುರು… ಮರುವಾದೆಯಿಂದ ವಪ್ಕೊಂಡು ಮುಂದಿನ ಕೆಲ್ಸ ಸುಸೂತ್ರವಾಗಿ ನಡೆಯೋ ಹಂಗ ಮಾಡೇ”- ಎಂದು ಆರ್ಡರು ಮಾಡಿದಳು. +ಅದಕ್ಕೆ ಅನಸೂಯ ಒಪ್ಪಿಕೊಳ್ಳದೆ ವಿಧಿ ಇರಲಿಲ್ಲ – +ನನ್ನಲ್ಲಿ ಸೌಂದರ್ಯ ದೃಷ್ಟಿಯನ್ನು ರೂಪಿಸಲು ಕಾರಣವಾದ ಶಕ್ತಿ ಧಿಮ್ಮಗೆ ಮುಖ ಬಿಗಿದು ಕೂತುಕೋಡಿತು. ಆಕೆ ಗಂಗಿ ಪಾತ್ರ ವಹಿಸಲು ಒಪ್ಪಿದ್ದರಿಂದ ಸಂತೋಷವೂ ಭಯವು ಏಕಕಾಲಕ್ಕೆ ಉಂಟಾದವು. ಸಂತೋಷ ಯಾಕಾಯ್ತಪಾ ಅಂದರೆ ಬಾಳ್ಯಾ ಸಂಗ್ಯಾನಾಟದಲ್ಲಿ ಆಕೆ ಗಂಗಿ ಪಾತ್ರ ವಹಿಸುವುದನ್ನು ನೋಡಲು ಸುತ್ತಾನ್ನಾಕಡೆಯಿಂದ ಸಾವಿರಾರು ಜನ ಪ್ರವಾಹೋಪಾದಿಯಾಲಿ ಹರಿದು ಬರುತ್ತಾರೆ ಎಂಬುದು. ಬ್ಯಾಳಿ ವಿಜಯಕುಮಾರ ಎಂಬುವನ ಆಕೆ ಬಗ್ಗೆ ಬರೆದ ಲೇಖನದಲ್ಲಿ ಗರತಿಯೋರ್ವಳು ಹಾದರಕ್ಕಿಳಿಯುವ ಒಳತೋಟಿಯನ್ನು ಅನಸೂಯಾಳಷ್ಟು ಸಮರ್ಥವಾಗಿ ಯಾರೂ ಪ್ರಕಟಿಸ್ಲಾರರು ಎಂದಿತ್ತು. ಬೆಂಗಳೂರಿನ ನಟರಂಗ ತಂಡದವರಿಂದ ಬಂದಿದ್ದ ಆಮಂತ್ರಣವನ್ನಾಗಲೀ, ಸಿನಿಮಾದವರಿಂದ ಬಂದಿದ್ದ ಆಮಿಷವನ್ನಾಗಲೀ ಒಪ್ಪಿಕೊಳ್ಳದೆ ಆಕೆ ಗ್ರಾಮಾಂತರ ರಂಗಭೂಮಿಗಷ್ಟೆ ಮೀಸಲಾಗಿ ಉಳಿದಿದ್ದಳು. ಸಹಪಾತ್ರಗಳಿಗೆ ಜೀವ ತುಂಬಿ ಬೆಳಗಾಗುವ ಮಟ ನಾಟಕವನ್ನು ರಂಜನೀಯವಾಗಿಸಬಲ್ಲಳು. ನಾಟಕ ಮುಗಿಯುವವರೆಗೆ ಪ್ರೇಕ್ಷಕರು ಮಿಸುಕಾಡದೆ ಕೂತಿದ್ದು ನೋಡುತ್ತಾರೆ… +ಎರಡನೆಯದಾಗಿ ಭಯ ಯಾತಕಾಯಿತೆಂದರೆ ಗಂಗಿಯ ಪಾತ್ರವನ್ನು ಆವಹಿಸಿಕೊಂಡು ವೇದಿಕೆ ಮೇಲೆ ಝಝಗಿಸುವ ಅನಸೂಯಳೆದುರು ಪಾತ್ರವಹಿಸಲು ಎಂಟೆದೆ ಬೇಕು. ಮೊದಲೇ ಅದು ಡಪ್ಪಿನಾಟವಾದರಿಂದ ನಡುಗೆಯ ಲಯ ತಪ್ಪಿದಲ್ಲಿ ಸಂಭಾಷಣೆಯ ಏರಿಳಿತದಲ್ಲಿ ವ್ಯತ್ಯಾಸವಾದ್ದಲ್ಲಿ ಅಂಥ ನಟನನ್ನು ಪ್ರೇಕ್ಷಕರೆದುರೇ ವಾಚಾಮಗೋಚರವಾಗಿ ತರಾಟೆ ತೆಗೆದುಕೊಳ್ಳಲು ಆಕೆ ಹಿಂಜರಿಯುವುದಿಲ್ಲವೆಂಬ ಗಾಳಿ ಮಾತು ಆದರೂ ಪ್ರತಿಯೋರ್ವ ಪುರುಷನೂ ಆಕೆಯೊಂದಿಗೆ ಪಾತ್ರ ಮಾಡಲು ನಾಮುಂದು ತಾಮುಂದು ಅಂತ ಮುನ್ನುಗ್ಗುತ್ತಿರುವಾಗ ನಾವಾದರು ಹಿಂದೇಟು ಹಾಕಲು ಹೇಗೆ ಸಾಧ್ಯ? +ಆಕೆ ಮೌನಮುರಿದು – +“ಸರೆ ಯಪ್ಪಾ ಸರೆ… ವಪ್ಕೊಂತೀನಿ… ನಾನೆಂದಾರ ನಿನ್ನುಗುಳುದಾರಿರೋದುಂಟಾ…ನನಗೊಂದು ಬದುಕೋ ದಾರಿ ತೋರಿಸಿದ ಮಾತಾಯಿಯಾದ ನಿನ್ನ ಮಾತ್ನ ನಾನೆಂದಾರ ಮೀರಿದ್ದೀನಾ?… ಇದರಾಗ ಯಾರ್ಯಾರು? ಯಾವ್ಯಾವ ಪಾರುಟು ಮಾಡುತಾರೆ,,, ಟೇಜಿನ ಮ್ಯಕ ಬಂದು ಏನೇನು ಕಿಸೀತಾರ ಎಂಬುದು ನೋಡದು ಬ್ಯಾಡೇನು? ಅದ್ನ ಒಬ್ಬಬ್ಬರನ ಇಚಾರಿಸ್ಕಂಬಲಕೆ ಪರವಾನಿಗಿ ಕೊಡು” ಎಂದಳು. +ರಮಾಬಾಯಿ “ಯಾಕಾಗಬಾರದೇ” ಎಂದು ಪರವಾನಿಗಿ ಕೊಟ್ಟಳಲ್ಲದೆ… ಯಾರು ಯಾರು! ಯಾವ ಯಾವ ಪಾತರ ಮಾಡುತ್ತಾರೆ ಎಂಬುದನ್ನು ವಿವರಿಸಿ ಹೇಳಿದಳು. ಚೂಟಿಯಾಗಿ, ನಾಕು ಮಾತಿನಲ್ಲಿ ಸಂಗ್ಯಾನ ಪಾತ್ರಕ್ಕೆ ಆಯ್ಕೆಯಾಗಿದ್ದ ನನ್ನ ಕಡೆ ಒಮ್ಮೆ ದುರುಗುಟ್ಟಿ ನೋಡಿದೊಡನೆ ನನ್ನ ಬಾಯಿ ಒಣಗಿತು. ಆಕೆಯ ನೋಟದಲ್ಲಿ ಸಂಗ್ಯಾನ ಪಾತ್ರವಹಿಸುವ ಕಿಂಚತ್ತು ಯೋಗ್ಯತೆ ನಿನಗಿಲ್ಲವೆಂಬ ದಾರ್ಷ್ಟ್ರ ಇತ್ತು. +“ಯೇನಪ್ಪಾ… ನೀನು ಸಂಗ್ಯಾನ ಪಾರುಟು ಮಾಡುತೀಯಾ. ಎಂದಾರ ಯವ್ದಾರ ನಾಟಕದಾಗ ಮಾಡೀ ಏನೋ ಶಾಸ್ತ್ರೀ…” ಅಂದಳು. ನಾನು ಇಲ್ಲ ಅಂದೆ. ಆಪಾದಮಸ್ತಕ ನೋಡಿ ‘ಹ್ಹೂಂ’ ಎಂದಳು. ನಂತರ ಇಸ್ಮಾಯಿಲನ ಬಳಿಗೆ ಹೋಗಿ ಕೆಳಗಿನಿಂದ ಮೆಲಿನವರೆಗೆ ನೋಡಿ ’ಬಸ್ಯಪಾರ್ಟ್‌ನ ನೀನು ಮಾಡ್ತಿಯೋ” ಎಂದಳು. ನಂತರ ಚಂಬಸ್ಯಯ್ಯನ ಎದುರಿಗೆ ನಿಂತು “ಏನ್ಸಾಮೀ… ನೀನು ಇರಪಾಕ್ಸಿ ಪಾರ್ಟ್ ಮಾಡ್ತಿದ್ದೀಯೋ” ಎಂದಳು. ನಂತರ ಹೆಬ್ರಿ ಮುಂದೆ ನಿಂತು ಆಕೆ ನುಡಿದಿದ್ದು ಆಕೆ ಹಾಗೆಯೇ. ಹೀಗೆ ಪ್ರತಿಯೊಬ್ಬರನ್ನು ತನ್ನ ಕಣ್ಣಿನ ಒರೆಗಲ್ಲಿನಿಂದ ತಿಕ್ಕಿ ತಿಕ್ಕಿ ನೋಡಿ ಯೋಗ್ಯತೆ ಅಳೆದಳು. +“ಭೇ ಸೂತ್ರಧಾರಿಣೀ… ನೀನು ಕುಂತಲಗಿತ್ತಿ ಪಾರ್ಟು ಮಾಡಲಕಬೇಕವ್ವಾ…” ಎಂದು ಪಟ್ಟು ಹಿಡಿದ ಅನಸೂಯ ಕೊನೆಗೂ ರಮಾಬಾಯಿಯನ್ನು ಒಪ್ಪಿಸುವಲ್ಲಿ ಯಶ್ಸ್ವಿಯಾದಳು. ಇದ್ದಕ್ಕಿದ್ದಂತೆ ಏನೋ ನೆನಪು ಮಾಡಿಕೊಂಡು … +“ಭೇ ಯವ್ವಾ… ನಿನ್ನ ಮಾಯಿ ಅಂದಿಗುಂಟು ಇಂದಿಗಿಲ್ಲ ಎನ್ನುವವರಿಗೆ ಕಡೆ… ಖಡೆ… ಅದಿರ್ಲಿ ಒಂದು ಮಾತದು ಮಾತ್ರ ಮರೆತು ಬಿಟ್ಟಿದ್ದೆನು… ಅದಾವುದೆಂದರೆ ಬಾಳ್ಯಾನ ಪಾತುರ ಮಾಡಲಿಕ ಯಾರ್‍ನ ಗೊತ್ತು ಮಾಡಿದಿಯಭೇ” ಎಂದು ಕೇಳಿದಳು. +ಅದುವರೆಗೆ ತನ್ನ ಸರ್ದಿ ಬರಲಿಲ್ಲವೆಂದು ಕಾಯುತ್ತಿದ್ದ ಓಬಳೇಶನು – +“ಯಕ್ಕಾ… ಸಂಗ್ಯಾನ ಪರಮಾಪತಮ ಮಿತ್ತಾರನ ಪಾತರವಾದ ಬಾಳೇಹಣ್ಣಿನ ಪಾತರವನ್ನು ಈ ನಿನ್ನ ತಮ್ಮನಾದ ಓಬಳೇಸನು ಮಾಡಲಿರುವನೆಂದು ಜಾಗ್ಗರತೆಯಿಂದ ತಿಳಿಯುವಂಥವಳಾಗೆಲೈ ಯಕ್ಕಾ… ಇಲ್ಲಾಂದ್ರೆ ಹಾರಲಾರದು ನೋಡು ಗುಬ್ಬಕ್ಕ” ಎಂದು ಧಿತ್ತೋ ದತ್ತ ದಿತ್ತೋ ಎಂದು ಕುಣಿದು ಹೇಳಲು ನಾವೆಲ್ಲ ಘೊಳ್ಳೆಂದು ನಕ್ಕೆವು. +ಆದರೆ ಅನಸೂಯ ಅವನ ಕಿವಿ ಹಿಂದುತ್ತ ಜಗ್ಗಾಡುತ್ತ – +“ಸೆವ್ಗೇಡಿ… ನಾದ ಸೆವ್ಗೇಡಿ. ಕುಂಡ್ಯಾಗರ ಪಾವು ಮಾವುಸವು ಇಲ್ಲ… ನೀನು ಬಾಳ್ಯಾನ ಪಾರುಟು ಮಾಡುತಿಯ್ಯೋನಲ್ಲೋ … ಇವೇನು ದೊಡ್ ಸಂಬ್ಳ ತಗೊಂಭಾವು… ಮಾಕತವ… ನಿಂಗ್ಯಾಕ ಇದರ ಉಸಾಬರಿ ಅಂತೀನಿ… ಪಾತರದೋರ ಕುಲದಗ ಹುಟ್ಟಿದ್ದೆ ಹುಟ್ಟಿದ್ದು ಯಾವತ್ತರ ಮಾರಿಗೆ ಬಣ್ಣ ಹಚ್ಕೊಂಡಿದೀಯಾ… ಹೋಗ್ಲಿ… ಅಡ್ಡ ಹಾಕೋ ಕಸುಬನ್ನಾರ ಮಾಡಿದ್ದೀಯಾ… ಮರುವಾದಿಯಿಂದ ದೂರ ಸರಿದ್ರೆ ಸರಿ, ಇಲ್ಲಾಂದ್ರ ನೀನು ಏಳ್ಕೋಳ್ದಾಗ ಉಳ್ಳಾಡಂಗ ಮಾಡ್ತೀನಿ…” ಎಂದು ತಮಾಷೆ ಮಾಡಿದಳು. +ಅವನು ಕೊಸರಿಕೊಳ್ಳುತ್ತಿರುವನಂತೆ ನಟಿಸುತ್ತ – +“ಗಂಗೀನೇ ಬಾಳ್ಯಾನ ಮಧ್ಯಸ್ತಿಕೇನ ಬಿಲ್‌ಕುಲ್ ಬ್ಯಾಡಾಂದ ಮ್ಯಾಲ … ನಾನು ನಿನ್ನ ಮತ್ತು ಸಂಗ್ಯಾನ ನಡುವೆ ಯಾಕೆ ಬರ್ಲಿ… ಬ್ಯಾಡವೇ ಬ್ಯಾಡ ನಾನು ನೇಪಥ್ಯಕ್ಕೆ ಸರೊದು ಹಿಮ್ಮೇಲವನ್ನು ಸೇರಿಕೊಳ್ಳುವೆನು” ಎಂದು ಲಯಬದ್ಧವಾಗಿ ನರ್ತಿಸುತ್ತ ಬಂದು ಸ್ವಸ್ಥಾನದಲ್ಲಿ ಸೇರಿದನು. +ನಂತರ ನಡೆದ ಚರ್ಚೆಯಲ್ಲಿ ಅನಸೂಯಳ ಸಲಹೆ ಮೇರೆಗೆ ಅಕ್ಕಾಪುರದಿಂದ ಆರು ಬೊಟ್ಟಿ ಕಾಳಪ್ಪ ಮಾಸ್ತರನ್ನು; ಬಳ್ಳಾರಿಯಿಂದ ದಾರದ ಮಿಲ್ ಪೊಂಪಣ್ಣನನ್ನು ಮಾರ್‍ಲಾಮಡಕಿಯಿಂದ ಯರ್ರಯ್ಯನನ್ನು ಕರೆಸುವುದೆಂದು ತೀರ್ಮಾನವಾಯಿತು. ಅಷ್ಟರಲ್ಲಿ ಕಾಫಿ ತರಲು ಹೋಗಿದ್ದ ರಾಖೇಶನನ್ನು ನೋಡುತ್ತಲೆ ಅನಸೂಯ :ಲೋ ರಾಖೇಸ ನೀನೇ ನಿಜವಾದ ಬಾಳ್ಯನಾಗಬೇಕು… ಇವತ್ತಿನಿಂದ ನೀನೂ ಸಂಗ್ಯಾನ ಪಾತ್ರಧಾರಿ ಶಾಸ್ತ್ರೀನೂ ದೋಸ್ತಿ ಮಾಡ್ಕಳ್ರೀ” ಎಂದು ಘೋಷಿಸಿಬಿಟ್ಟಳು. +ರಾಖೇಶನೇ ನಿಜವಾದ ಬಾಳ್ಯ ಎಂದು ಗಂಗಿ ಪಾತ್ರಧಾರಿ ಅನಸೂಯಾ ಅಧಿಕೃತವಾಗಿ ಘೋಷಿಸಿದ ಮೇಲೆ ಅವನೂ, ನಾನೂ ನಿಜ ಜೀವನದಲ್ಲೂ ಉತ್ತಮ ಗೆಳೆಯರಾದೆವು… ಅಬ್ಬಾ! ಅವನಿಗಿರುವ ಪ್ರಪಂಚ ಜ್ಞಾನವನ್ನು ನೆನೆಪಿಸಿಕೊಂಡರೆ ನನಗೆ ಈಗಲೂ ರೋಮಾಂಚನವಾಗುತ್ತದೆ. ನೀನು ನಿನ್ನ ಕಥಾನಕದೊಳಗೆ ಚಿತ್ರಿಸಿರುವಂತೆ ಅವನಿಲ್ಲ… ಕಲೆಕ್ಷನ್ ಕಾಳಪ್ಪ ಪಾತ್ರ ಮಾಡಿರೋ ಮುಸುರಿ ಕೃಷ್ಣಮೂರ್ತಿಯಿಂದ ಪ್ರಭಾವಿತನಾಗಿ ನೀನವನ ಪಾತ್ರವನ್ನು ಚಿತ್ರಿಸಿರುವಿ ಎಂದು ಕಾಣುತ್ತದೆ. ನಿಮ್ಮಂಥ ಲೇಖಕರೇ ಒಂದು ರೀತಿ ಖದೀಮರು, ಯಾರ್ಯಾರ ಜೀವನದಿಂದ ಏನೇನೋ ಕದಿಯುತ್ತೀರಿ. ಓದುಗರ ಮೈ ಜುಮ್ಮೆನ್ನಿಸುವ ದೃಷ್ಟಿಯಿಂದ ರಂಜನೀಯವಾಗಿ ಬರೆಯುತ್ತೀರಿ. ಕಾಸು ಮಾಡಿಕೊಳ್ಳುವಿರಿ. ಇದೊಂದು ರೀತಿ ಅಕ್ಷಮ್ಯ ಅಪರಾಧ. ಇದಕ್ಕೆ ಐಪಿಸಿಯಲ್ಲಿ ಶಿಕ್ಷೆ ಇಲ್ಲ. ಬಚಾವಾಗೋಕೆ ನಿಮಗೆ ಒಳಹಾದಿಗಳು ಸಾಕಷ್ಟು ಗೊತ್ತಿವೆ. ಆದ್ದರಿಂದ ಮಾನವೀಯ ಗುಣಗಳಿರೋ ರಾಖೇಶನಂಥವರು ನಿಮ್ಮ ದೃಷ್ಟಿಯಲ್ಲಿ ಅಪ್ಪಟ ವಿಲನ್‌ಗಳಂತೆ ಗೋಚರಿಸುತ್ತಾರೆ… ಇರಲಿ… ಅದು ನೀವು ನಿಪ್ಪಾಪಿ ಓದುಗರ ಮೇಲೇರುತ್ತಿರುವ ಕರ್ಮ. +ಅವನ ಹೆಸರು ಬೇರೆ! ಅರನಿರೋದೆ ಬೇರೆ ಥರ… ಅವನಿಗೊಂದು ಒಳ್ಳೆಯ ಹೆಸರಿಟ್ಟುರುವಿ… ಅದು ಅಣಕ ಅಂತಾನೂ ಗೊತ್ತು. ಅವನು ಓದಿಲ್ಲ… ವಿದ್ಯಾವಂತ ನೀ ಬರೆದಿರುವಿ… ಶಿಕ್ಷಣ ವ್ಯವಸ್ಥೆಯನ್ನು ಲೆವಡಿ ಮಾಡಬೇಕೆಂಬುದೇ ನಿನ್ನ ಉದ್ದೇಶ … ಹಾಗೆ ಯಾಕೆ ಮಾಡಿದ್ಯೋ ಕುಂವೀ ಬರೆಯೋಕಾಗಲಿ ಓದೋಕಾಗಲಿ ಗೊತ್ತಿದ್ದಿದ್ದರೆ ಅವನು ನಮ್ಮೆಲ್ಲಗಿಂತ ಉತ್ತಮ ಲೇಖಕನಾಗಿರುತ್ತಿದ್ದ. ಅವನೆಂಥೋನು ಅಂತ ಅವನೊಂದಿಗೆ ವರ್ಷಾನುಗಟ್ಟಲೆ ಸಂಬಂಧ ಇಟ್ಟುಕೊಂಡಿದ್ದ ನನಗೆ ಗೊತ್ತು! ನಿನಗೇನು ಗೊತ್ತು? +ಅವನು ಒಂದೊಂದು ಮಗ್ಗುಲಿಂದ ನೋಡಿದರೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಿದ್ದ. ಅವನು ಅತ್ಯುತ್ತಮ ಮನಶ್ಶಾಸ್ತ್ರಜ್ಞನಾಗಿದ್ದ… ನೆಲದ ಸೂಕ್ಷ್ಮ ತರಂಗಗಳ ಮೂಲಕ ಎದುರಾಗುತ್ತಿರುವ ಅಪಾಯವನ್ನು ಗ್ರಹಿಸಿತನ್ನನ್ನು ತಾನು ರಕ್ಷಿಸಿಕೊಳ್ಳುವ ಸರ್ಪದ ಜಾಯಮಾನದವನಾಗಿದ್ದ. ಮುಖ ಚಹರೆ ಮೂಲಕ ವ್ಯಕ್ತಿಯೋರ್ವನ ತ್ರಿಕಾಲ ಗ್ರಹಿಸಿ ಬಿಡುತ್ತಿದ್ದ. ಅವನು ಯಾವುದೇ ಜ್ಯೋತಿಷಿಗಿಂತ, ಪ್ಯಾರಾ ಸೈಕಾಲಜಿಸ್ಟನಿಗಿಂತ ಏನೂ ಕಡಿಮೆ ಇರಲಿಲ್ಲ. ಬಡತನ-ಶ್ರೀಮಂತಿಕೆ, ಒಳ್ಳೆಯವರು-ಕೆಟ್ಟವರು, ಸ್ರೀಪುರುಷ ಇತ್ಯಾದಿಗಳ ಬಗ್ಗೆ ಖಚಿತವಾಗಿ ಗ್ರಹಿಸಿ ತನ್ನದೇ ಆದ ಧಾಟಿಯಲ್ಲಿ ವಿಶ್ಲೇಶಿಸುತ್ತಿದ್ದ ಅವನು ಕಾರ್ಲ್‌ಮಾರ್ಕ್ಸ್, ಮಾವೋರಿಗಿಂತ ಕಡಿಮೆ ಇರಲಿಲ್ಲ. ದೇವರು ದಿಂಡರುಗಳ ಬಗ್ಗೆ; ಅರ್ಚಕರ ಬಗ್ಗೆ, ಪುರೋಹಿತ ವೈದಿಕರ ಬಗ್ಗೆ, ಅವರ ನಿರರ್ಥಕ ಮತ್ತು ನರಕಸದೃಶ ಬದುಕಿನ ಬಗ್ಗೆ ಖಡಾ ಖಂಡಿತವಾದಿಯಾಗಿದ್ದ ಅವನು ಯಾವ ಚಾರ್ವಾಕನಿಗಿಂತ ಕಡಿಮೆ ಇರಲಿಲ್ಲ. ಅವನು ಒಳಗೊಳಗೆ ಸೌಂದರ್ಯಾರಾಧಕನಾಗಿದ್ದ… ಯಾವ ಯಾವ ವಸ್ತುವಿನಲ್ಲಿ ಯಾವ ರೀತಿ ಸೌಂದರ್ಯ ಅಡಗಿರುತ್ತದೆ? ಅದನ್ನು ಯಾವ ಇಂದ್ರಿಯದ ಮೂಲಕ ಗ್ರಹಿಸಬೇಕು? ಎಂದು ಮುಂತಾಗಿ ಅವನು ಹೇಳುತ್ತಿದ್ದುದು ಯಾರ ಗಮನವನ್ನೂ ಸೆಳೆದಿಲ್ಲ. ಲೋಕಾನುಭವದಿಂದ ಮಾತ್ರ ಆನಂದಾನುಭವವಾಗುವುದೆಂದು ಅವನು ಹೇಳುತ್ತಿದ್ದುದನ್ನು ಮರೆಯಲು ಹೇಗೆ ಸಾಧ್ಯ? ಮುಖ್ಯವಾಗಿ ಲೌಕಿಕ ಪ್ರಕ್ರಿಯೆಗಳಲ್ಲಿ ಅಗಾಧವಾಗಿ ಪಳಗಿದ್ದ ಅವನನ್ನು ಕೇವಲ ತಲೆಹಿಡುಕನೆಂದು ಹೇಗೆ ಅರ್ಥ ಮಾಡಿಕೊಳ್ಳಲಿ ಹೇಳು? +ಇದೆಲ್ಲ ನನಗೆ ಅರ್ಥವಾಗಿದ್ದು, ಇಷ್ಟವಾಗಿದ್ದು ಅವನು ಬಾಳ್ಯಾನ ಪಾತ್ರಧಾರಿಯಾದ ನಂತರವೇ. ಲೀಲಾಜಾಲವಾಗಿ ಮೂರು ನಾಲ್ಕು ಭಾಷೆಗಳಲ್ಲಿ ಮಾತಾಡುತಿದ್ದ: ಅವರ ಅಂತರಂಗದ ಭಾವನೆಗಳಿಗೆ ಮಾತಿನ ರೂಪಕೊಟ್ಟು ಗ್ರಹಿಸುತ್ತ; ಗ್ರಹಿಸಿ ಅವರ ಮೈಚಳಿ, ಸಂಕೋಚಗಳನ್ನು ಕಳಚುತ್ತ, ಕಳಚಿ ನಗ್ನರಾದ ಅವರನ್ನು ತೆರೆದ ಬಾಗಿಲೊಳಗೆ ಬಿಟ್ಟು ಲೈಂಗಿಕ ಸುಖಾನುಭವಕ್ಕೆ ಈಡುಮಾಡುತ್ತ, ಈಡಾದವರ ಅನುಭವಗಳನ್ನು ಭಾಜಕ ಮತ್ತು ಭಾಜ್ಯಗಳಿಂದ ಸಂಗ್ರಹಿಸುತ್ತ ಉತ್ತರೋತ್ತರ ಅವಧೂತ ಸ್ಥಾನವನ್ನಲಂಕರಿಸಿದ ಅವನು ತುಂಬ ನಿಘೂಡ ವ್ಯಕ್ತಿ ಮಹರಾಯಾ, ಕೆಲವು ನಿರ್ದಿಷ್ಟ ಸುಳ್ಳುಗಳ ಕವಚಗಳೊಳಗೆ ಸದಾ ಅಡಗಿಕೊಂಡಿರುತ್ತಿದ್ದನಾದ್ದರಿಂದ ಒಂದೆರಡು ದಿನಗಳಲ್ಲಿ ನಿನ್ನಂಥವರಿಗೆ ಸಾಧ್ಯವಿಲ್ಲ. ಅವನಿಂದ ನನ್ನನ್ನು; ನನ್ನಿಂದ ಅವನನ್ನು ಬೇರ್ಪಡಿಸಿ ಮಾತಾಡುವುದು ಅರ್ಥ ಮಾಡಿಕೊಳ್ಳುವುದು ಆಗದ ಮಾತು. ಅಂಥ ಗೆಳೆಯನ, ಅಭಿಜಾತ ಕಲಾವಿದನ ಸಾಂಗತ್ಯದಿಂದಾಗಿ ನಾನು ಸಂಗ್ಯಾನ ಪಾತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಳ್ಳುವುದು ಸಾಧ್ಯವಾಯ್ತಪ್ಪಾ. ಅದೇನು ಮಹಾಶಾಸ್ತ್ರೀ! ಅದೇನು ಮಹಾದೊಡ್ಡದು ಸ್ವಾಮಿ ಎಂದು ನನ್ನನ್ನು ಪುಸಲಾಯಿಸಿ ಪಳಗಿಸಿ ನನ್ನಿಂದ ದೊಡ್ಡ ದೊಡ್ಡ ಅಗಾಧವಾದ ಕೆಲಸಗಳನ್ನು ಮಾಡಿಸಿದ. ಮಾಡಿ ಪೆಟ್ಟು ತಿಂದು ದುಃಖದಲ್ಲಿದ್ದಾಗ ಅದಕ್ಯಾಕೆ ಹಂಗ್ ಚಿಂತೆ ಮಾಡ್ತೀರಿ… ಯಾರೂ ಮಾಡಬಾರದ ಕೆಲಸವನ್ನೇನೂ ನೀವು ಮಾಡಿಲ್ವಲ್ಲ ಎಂಥೆಂಥ ಸಮಾಜ ಬಾಹಿರ ಕೆಲಸ ಮಾಡ್ದೋರೆಲ್ಲ ಎಷ್ಟೊಂದು ಸುಖವಾಗಿದ್ದಾರೆ ನೋಡ್ರಿ. ಅವರೆಂದು ಅನುಭವಿಸಿರದ ದುಃಖವನ್ನು ನೀವ್ಯಾಕೆ ಅನುಭವಿಸೋದು? ಯಾವ ಕೆಲಸ ಮಾಡಬೇಕು? ಯಾವ ಕೆಲಸ ಮಾಡಬಾರದು? ಅಂತ ಮಾಡಿರೋರಾದರು ಯಾರು? ನಮ್ಮಂಥೋರು, ನಿಮ್ಮಂಥೋರು ತಾನೆ! ಅದಕ್ಯಾಕೆ ಹೆದರೋದು? ತಪ್ಪು ಎಂಬ ಶಬ್ದಕ್ಕೆ ಬೆಲೆ ಬರೋದು ಅದನ್ನು ಮಾಡಿದಾಗಲೇ… ಎಂದು ಮುಂತಾಗಿ ಹೇಳಿ ನನ್ನ ವ್ಯಕ್ತಿತ್ವದ ಕಾಮಗಾರಿ ಮಾಡುತ್ತಿದ್ದ. ಸವಕಲು ತಡೆಯುತ್ತಿದ್ದ. ಅವನಿಗೆ ನಾನು ನನ್ನ ಹೃದಯದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿಕೊಂಡಿದ್ದೆ. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ನನ್ನ ಬಳಿಗೆ ಕುಲುಕುಲು ನಗುತ್ತ ಬಂದು “ಏನು ಶಾಸ್ತ್ರಿ… ಸಾಯೋದಕ್ಯಾಕೆ ಇಷ್ಟೊಂದು ಯೋಚ್ನೆ ಮಾಡ್ತೀಯಾ! ಈ ಪ್ರಪಂಚದಲ್ಲಿ ಯಾರೂ ಸತ್ತೇ ಇಲ್ಲ ಅಂದ್ಕೊಂಡಿರುವಿ ಏನು? ಬೇಗ ಕೊನೆ ಉಸಿರು ಬಿಟ್ಟು ಸಾವಿಗೆ ಗೌರವ ಕೊಡು… ಹಿಂದು ಮುಂದು ನೋಡಬೇಡ ಅಷ್ಟೆ! ಎಂದು ಆಜ್ಞೆ ಮಾಡಿದ. ಪ್ರೀತಿಯಿಂದ ಒಮ್ಮೆ ಲಘು ಏಟು ನೀಡಿದ… ನಾನು ಕೂಡಲೆ ಪ್ರಾಣ ಬಿಟ್ಟು ಎಲ್ಲ ಗೋಜಲುಗಳಿಂದ ಈರ್ಷೆ ಅಸೂಯೆಗಳಿಂದ ಮುಕ್ತವಾದ ಪ್ರಪಂಚವನ್ನು ಪ್ರವೇಶಿಸಿಬಿಟ್ಟೆ. ಅಂಥ ಅಪರೂಪದ ವ್ಯಕ್ತಿ ಕಣೋ ಅವನು! ಅವನು ಹೀಗೆ ಅಂತ ಹೇಳುವುದು ಕಷ್ಟ. ಪ್ರಪಂಚದ ಆರ್ಳು ನೂರು ಕೋಟಿ ಜನರ ಪೈಕಿ ಸುಖವಾಗಿರುವುದ ಏಕ ಮಾತ್ರ ವ್ಯಕ್ತಿ ಎಂದರೆ ಅವನೇ ನೋಡು. ಸಾಯೋವರೆಗೂ ಬದುಕಿರುವ ಅವನೊಂದಿಗೆ ಸಂಪಾದಿಸಲಾಗುತ್ತಿಲ್ಲವೆಂಬ ಪ್ರೇತ ಸಂಕಟ ನನ್ನನ್ನು ಕಾಡ್ತಾ ಇದೆ.,,” ಎಂದು ಭಾವುಕಗೊಂಡು ನುಡಿಯಿತು ಶಾಮಣ್ಣ ಪಾತ್ರ. +ಅದರ ವಿತಂಡವಾದಕ್ಕೆ ಬೆರಗಾದೆ…. ಬದುಕಿನುದ್ದಕ್ಕೂ ವಿಲಕ್ಷಣತೆಯನ್ನು ಪಡೆಯುತ್ತಲೇ ಹೋದ ಶಾಮಣ್ಣ ಮರಣೋತ್ತರವಾಗಿ ಅದೇ ಜಾಡಿನಲ್ಲಿ ಮುಂದುವರೆದಿರುವುದು ವಿಚಿತ್ರ ಎಂದುಕೊಂಡೆ. ಅವನ ಮಾತುಗಳು ಮೇಲ್ನೋಟಕ್ಕೆ ಅಪಭ್ರಂಶಗೊಂಡಿರುವ ಮಾದರಿ ಎನ್ನಿಸಿದರೂ ಆಂತರ್ಯದಲ್ಲಿ ನಿಘೂಡ ಸತ್ಯಗಳನ್ನು ತುಂಬಿಸಿಕೊಂಡಿರುವವೆಂದು ಭಾಸವಾಯಿತು. +“ಶಾಮಣ್ಣಾ… ನೀನು ಮಾತಾಡ್ತಿರೋದೆ ವಿಚಿತ್ರ… ಅವುಗಳು ಈ ಜನ್ಮದಲ್ಲಿ ನನಗೆ ಅರ್ಥ ಆಗುವುದು ಸಾಧ್ಯವಿಲ್ಲ… ಅರ್ಥ ಮಾಡಿಕೊಳ್ಳೋದು, ಬಿಡೋದು ಓದುಗರಿಗೆ ಸೇರಿದ್ದು. ಅದರ ಬಗ್ಗೆ ನಾವು ವಿಶಾದದಿಂದ ಮಾತಾಡ್ತಾ ಕೂಡ್ರೋದು ಬೇಡ… ಅನಸೂಯ ನಿನ್ನ ಬದುಕಿನಲ್ಲಿ ತನ್ನದೇ ವೈಶಿಷ್ಯದಿಂದ, ವೈಲಕ್ಷಣ್ಯದಿಂದ ಪ್ರವೇಶಿಸಿದಳು. ಇದು ಕಾದಂಬರಿಯ ಒಂದು ಹಂತದಲ್ಲಿ ಸಮಾಧಾನಕರ ಸಂಗತಿ… ಸಾಮಾನ್ಯವಾಗಿ ಕದ್ದುಮುಚ್ಚಿ ಎಲ್ಲ ಮಹಿಳೆಯರ ಸುಂದರ ಪಾದಗಳನ್ನು ಗಮನಿಸುತ್ತಿದ್ದವನಾದ ನೀನು ಅಷ್ಟೊತ್ತು ಆಕೆಯೊಂದಿಗಿದ್ದರೂ ಆಕೆಯ ಪಾದಗಳನ್ನು ಯಾಕೆ ಗಮನಿಸಿಲ್ಲವೆಂಬುದೇ ನಿಘೂಡ ಸಂಗತಿ? ಯಾವ ಸೌಂದರ್ಯಾಣುಭವದ ರಹಸ್ಯ ಆಕೆಯ ಪಾದಗಳಲ್ಲಡಗಿತ್ತು ಎಂಬುದನ್ನು ತಿಳಿದುಕೊಳ್ಳಲು ನಾನು ಕುತೋಹಲಿಯಾಗಿರುವೆ. ಆದರೆ ಯಾಕೋ ಆಕೆ ಮಾತಾಡೋ ಶೈಲಿ ನನಗಿಷ್ಟವಾಗ್ಲಿಲ್ಲಪ್ಪ.. ಜನಪ್ರಿಯ ರಂಗನಟಿಯಾದವಳು ಅಷ್ಟೊಂದು ಜವಾರಿ ರೀತಿಯಲ್ಲಿ ವರ್ತಿಸಿದ್ದು ನನಗ್ಯಾಕೋ ಇಷ್ಟವಾಗಲಿಲ್ಲ… ಯಾಕಂದ್ರೆ ನಾನೀಗಾಗ್ಲೆ ಮಾತ ಅಡಿ ಬಂದಿದ್ದೀನಿ… ನೀನು ನಿನ್ನ ಮಾತಿನಲ್ಲಿ ವರ್ಣಿಸಿದಷ್ಟು ಜವಾರಿ ಥರ ಕಾಣಲಿಲ್ಲ. ಅದ್ಕೆ ಕೇಳಿದ್ದು… ‘ಏನಪ್ಪಾ ಇವ್ನು ನನ್ನ ಪ್ರಿಯತಮೆಯನ್ನು ತಪ್ಪಾಗಿ ಗ್ರಹಿಸಿದ್ದ’ ಎಂದು ತಪ್ಪು ತಿಳಿಯಬೇಡ…” ಎಂದು ನಾನು ನನ್ನಲ್ಲಿ ಕಾಣಿಸಿಕೊಂಡ ಅನುಮಾನವನ್ನು ನಿಸ್ಸಂಕೋಚವಾಗಿ ಎದುರಿಗಿಟ್ಟೆ. +ನನ್ನ ಮಾತಿಗೆ ಶಾಮಣ್ಣ ನಕ್ಕಿತು. – +“ಕಲ್ಚರ್ ಇಜ್ ನಥಿಂಗ್ ಬಟ್ ವರ್‍ಷಿಪ್ ದ ಬ್ಯೂಟಿ ಅಂತ ಬಲ್ಲೋರು ಹೇಳಿದ್ದಾರೆ. ಸೌಂದರ್ಯ ಸೃಷ್ಟಿ ಎಂಬುದು ನಮ್ಮ ನಮ್ಮ ಮನೋ ಧರ್ಮಕ್ಕೆ ತಕ್ಕದಾಗಿರುತ್ತದೆ…ಮಹಾತ್ಮಾ ಗಾಂಧಿಯ ವಿಗ್ರಹ ನೋಡಿ ಮೆಚ್ಚುವುದಕ್ಕೂ, ಜನಪ್ರಿಯ ನಟಿಯೋರ್ವಳ ಸುಂದರ ವಿಗ್ರಹ ನೋಡುವುದಕ್ಕೂ ವ್ಯತ್ಯಾಸವಿದೆ… ದೈಹಿಕ ಪ್ರಮಾಣ ಬದ್ಧತೆಯ ದೃಷ್ಟಿಯಿಂದ ಮಹಾತ್ಮರ ವಿಗ್ರಹದಲ್ಲಿ ಏಕಾಗ್ರತೆಯನ್ನು ಕಾಣಬಹುದು. ಆದರೆ ಆ ಮಹಾಮಹಿಮನ ಬದುಕಿನ ಸಾಧನೆಯ ಪರಿಚಯವಿರುವರಿಗೆ ಅದೊಂದು ಅಪಾರವಾದ ಸೌಂದರ್ಯ ಮೂರ್ತಿಯಾಗಿ ಕಾಣಿಸುತ್ತದೆ. ಆದರೆ ಅದೇ ಅನುಭೂತಿ ಸಿನಿಮಾ ನಟಿಯ ಸುಂದರ ವಿಗ್ರಹ ನೋಡಿದಾಗ ಆಗುವುದಿಲ್ಲ ಎಂಬುದನ್ನು ನೀನೂ ಒಪ್ಪುವಿ ತಾನೆ? ಬದುಕನ್ನು ಗ್ರಹಿಸಿದವರ ಅರ್ಥಮಾಡಿಕೊಂಡವರ ಕಣ್ಣುಗಳಿಗೆ ಮಾತ್ರ ಗಾಂಧೀಜಿಯವರ ವಿಗ್ರಹ ಅಲೌಕಿಕವಾದ, ಆಧ್ಯಾತ್ಮ ಸದೃಶವಾದ ಅನಂದಾನುಭೂತಿ ನೀಡಲು ಸಾಧ್ಯ. ಅಂದರೆ ಯಾವುದನ್ನಾದರೂ ಅರ್ಥಮಾಡಿಕೊಳ್ಳಬೇಕಾದರೆ ಮಾನಸಿಕವಾದ ಒಂದು ಸಿದ್ಧತೆಬೇಕು. ಅದರಂತೆ ಆನಂದದ ದೃಷ್ಟಿ ಬೆಳೆಸಿಕೊಳ್ಳಬೇಕು. ಸುಖದ ಕಲ್ಪನೆ ಉನ್ನತವಾಗಿಸಿಕೊಳ್ಳಬೇಕು. +ಆಗ ಮಾತ್ರ ಸೌಂದರ್ಯ ಪ್ರಜ್ಞೆ ಉದಾತ್ತವಾಗಲು ಸಾಧ್ಯ. ಇದು ಕೇವಲ ಯಾವುದೇ ಇಂದ್ರಿಯದ ಗ್ರಹಿಕೆಗೆ ಸಂಬಂಧಿದ್ದಲ್ಲ. ಅಪ್ರಬುದ್ಧ ಮನಸ್ಸು ಸೌಂದರ್ಯಾನುಭವದ ವಿವಿದ ತರಂಗಗಳನ್ನು ಗ್ರಹಿಸಲಾರದು… ವಸ್ತುವೊಂದರಿಂದ ನಿಶ್ಶಬ್ದವಾಗಿ ಹೊರಡುವ ಭಾವನೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಹೀಚುಗಾಯಿಯಂತ ಮನಸ್ಸಿಗೆ ಇರುವುದಿಲ್ಲ. ಅದೇ ನಿನ್ನಲ್ಲಿ ನಾನು ಕಂಡುಕೊಂಡಿರುವ ಪ್ರಮುಖ ಸಮಸ್ಯೆ. ಅನಸೂಯಳಲ್ಲಿ ಜವಾರಿತನ ಗುರುತಿಸುವ ನಿನಗೂ; ಮಹಾತ್ಮಾ ಗಂಧಿ ವಿಗ್ರಹದಲ್ಲಿ ಕುರೂಪವನ್ನು ಗ್ರಹಿಸುವ ವ್ಯಕ್ತಿಗೂ ನಡುವೆ ವ್ಯತ್ಯಾಸವೇ ಇಲ್ಲ… ಶುಷ್ಕ ಅಧುನಿಕತೆಯಿಂದಾಗಿ ಮರಗಟ್ಟಿರುವ ನಿನ್ನ ಯಾವ ಇಂದ್ರಿಯಕ್ಕೂ ಆಕೆಯ ಸೌಂದರ್ಯ ನಿಲುಕುವುದು ಸಾಧ್ಯವಿಲ್ಲ. ಅದನ್ನು ಎಟಕುವಂತೆ ಮಾಡುವುದೇ ನನ್ನ ನಿರೂಪಣೆಯ ಪ್ರಮುಖ ಗುರಿ… ಮಹಾಕಾವ್ಯ ಅರ್ಥ ಮಾಡಿಕೊಳ್ಳುವುದಕ್ಕೆ: ಅದರ ಧ್ವನಿ ಪ್ರಪಂಚದಿಂದ ವಿಸ್ಮಯಗೊಳ್ಳುವುದಕ್ಕೆ ಅಲಂಕಾರ, ಛಂದಸ್ಸು ವ್ಯಾಕರಣಗಳ ಅಗತ್ಯ ಬೇಕಾದಂತೆ ಅನಸೂಯಳಲ್ಲಿ ಸೌಂದರ್ಯ ಗುರುತಿಸುವ ಮೊದಲು ಆಕೆಯ ಬದುಕನ್ನು ಅರ್ಥ ಮಾ‌ಇಕೊಳ್ಳಬೇಕು…” ಎಂದು ಅವನು ಹೇಳುತ್ತಿದ್ದುದು ಕೇಳಿ ನಾನು ಮೂಕವಿಸ್ಮಿತನಾದೆ… ತನ್ನ ಬದುಕನ್ನು ತಾನು ನಿರೂಪಿಸುವ ಶಕ್ತಿ ಅವನಲ್ಲಿ ಮುಪ್ಪರಿಗೊಂಡಿರುವುದೆಂದು ಅರ್ಥ ಮಾಡಿಕೊಂಡೆ. +ಓದುಗರಲ್ಲಿ ಇದನ್ನು ಶುಷ್ಕ ಚರ್ಚೆ ಎಂದು ಕೊಳ್ಳುವುದೋ ಎಮ್ಬ ಆತಂಕ ಕಾಡತೊಡಗಿತು. “ಆಯ್ತು ಶಾಮಣ್ಣ… ನಾನು ‘ಜವಾರಿತನ” ಎಂಬ ಪದ ಉಚ್ಚರಿಸಿದ್ದರಿಂದಲ್ಲವೆ ನಿನಗೆ ಇಷ್ಟೆಲ್ಲ ಹೇಳಲಿಕ್ಕೆ ಸಾಧ್ಯವಾಯಿತು. ನಿನ್ನ ಮಾತುಗಳು ನನ್ನ ಬೆಳವಣಿಗೆಗೆ ಸಹಾಯಕವಾದವು… ಕಾದಂಬರಿಯ ಪಾತ್ರವೊಂದು ಅದರ ಕತೃವಿನ ಉನ್ನತಿಗೆ ಶ್ರಮಿಸುತ್ತಿರುವುದೆಂದು ತಿಳಿದು ಓದುಗರು ನಿನ್ನ ಬಗ್ಗೆ ಹೆಮ್ಮೆ ಪಡುತ್ತಾರೆ… ನೀನು ಬ್ಯಾಂಕು ನೌಕರಿಯಲ್ಲಿದ್ದಾಗ ಒಂದು ನಾಟಕ ಆಡಿದ್ದಿ ಎಂದು ಅವರಿವರಿಂದ ಕೇಳಿ ತಿಳಿದುಕೊಂಡಿದ್ದೆ. ಅದು ರಕ್ತರಾತ್ರಿಯಂಥ ಪೌರಾಣಿಕವಾಗಿರಬಹುದು; ಬಂಜೆ ತೊಟ್ಟಿಲು, ಗೌಡ್ರಗದ್ದಲದಂಥ ಸಾಮಾಜಿಕವಾಗಿರಬಹುದು, ಕಿತ್ತೂರು ಚೆನ್ನಮ್ಮ; ಎಚ್ಚೆಂ ನಾಯಕ, ಸಂಗೊಳ್ಳಿ ರಾಯಣ್ಣದಂಥ ಐತಿಹಾಸಿಕ ನಾಟಕವಿದ್ದಿರಬಹುದೆಂದು ಊಹಿಸಿದ್ದೆ. ಆದರೆ ಅದು ಸಂಗ್ಯಾಬಾಳ್ಯಾದಂಥ… ಜಾನಪದ ಡಪ್ಪಿನಾಟ ಆಡಿರಬಹುದೆಂದುಕೊಂಡಿರಲಿಲ್ಲ… ನಾನು ತಿಳಿದ ಮಟ್ಟಿಗೆ ಆ ಡಪ್ಪಿನಾಟ ಸಂಪ್ರದಾಯವಾದಿಗಳಿಂದ ತಿರಸ್ಕರಿಸಲ್ಪಟ್ಟು ಇರುವುವಂಥಾದ್ದು. ಮೇಲ್ಜಾತಿಯವರಾಗಲೀ, ಸುಶಿಕ್ಷಿತರಾಗಲೀ ಯಾರೂ ಅದನ್ನು ಆಡಿ ಇಲ್ಲದ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ… ಅದೇನಿದ್ರೂ ಕೆಳವರ್ಗದ ಮಂದಿ ತಂತಮ್ಮ ಕೇರಿಗಳಲ್ಲಿ ಆಡಿಕೊಳ್ತಿರ್‍ತಾರೆ… ಅದು ಅಲ್ಲದೆ ಕುಣಿತ ಮತ್ತು ಹಾಡು ಪ್ರಧಾನವಾಗಿರುವ ಅದನ್ನು ಆಡುವುದು ಅಷ್ಟು ಸುಲಭವಲ್ಲ. ಅಂಥಾದ್ರಲ್ಲಿ ಕುಣಿತ, ಹಾಡು, ಅನುಭವ ಇಲ್ಲದ ಸುಶಿಕ್ಷಿತರಾದ (ನಾನಂದುಕೊಂಡಿರುವುದು) ನೀವು ಕಲಿತದ್ದಾಗ್ಲೀ, ಆಡಿದ್ದಾಗ್ಲೀ ಯಶಸ್ವಿ ಆಯ್ತಾ ಎಂದು ಅನುಮಾನ ಕಾಡ್ತಿದೆ… ನಿನ್ನ ಕುಣಿತ ಅಭಿನಯಾನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರೆ ಅಷ್ಟೇ ಸಾಕು” ಎಂದೆ. +ನನ್ನ ಮಾತು ಕೇಳಿ ಶಾಮಣ್ಣ ಪಾತ್ರಕ್ಕೆ ತುಂಬ ಸಂತೋಷವಾಯಿತು. ಆರೋಗ್ಯವಾಗಿ ಬದುಕಿದ್ದಿದ್ದಲ್ಲಿ ತಾನು ದೊಡ್ಡ ರಂಗನಟ ಆಗಬೇಕು ಅಂತ ಅಂದುಕೊಂಡಿತ್ತೋ ಏನೋ!. +“ಸಂಗ್ಯಾಬಾಳ್ಯಾ ನಾಟಕವನ್ನು ನಾವು ಯಶಸ್ವಿಯಾಗಿ ಆಡಿದ್ದು; ಪ್ರೇಕ್ಷಕರಿಂದ (ಆದರೆ ಒಂದೇ ಒಂದು ಕಂಟಕದ ಹೊರತಾಗಿ) ಮೆಚ್ಚಿಗೆ ಪಡೆದಿದ್ದೂ… ಆ ನಾಟಕ ಅಭಿನಯಿಸಿದ ನಮ್ಮ ಬದುಕಿನ ಮೇಲೂ ಪ್ರಭಾವ ಬೀರಿದ್ದು.. ಅದೆಲ್ಲ ಒಂದು ದೊಡ್ಡ ಕಥೆ ಮಹಾರಾಯ… ಅದನ್ನೆಲ್ಲ ಆಮೂಲಾಗ್ರವಾಗಿ ಹೇಳ್ತಾ ಕೂತ್ರೆ ಹಗಲು ರಾತ್ರಿ ಆಗಿದ್ದಾಗಲೀ; ರಾತ್ರಿ ಹಗಲಾಗಿದ್ದಾಗಲೀ ಗೊತ್ತೇ ಆಗುವುದಿಲ್ಲ… ಅದಕ್ಕೆ ಸಂಕ್ಷಿಪ್ತವಾಗಿ… ಎಹ್ಟು ಬೇಕೋ ಅಷ್ಟು ಹೇಳ್ತೀನಿ… ವಿವರವಾಗಿ ಹೇಳ್ಲಿಲ್ಲಾಂತ ಬೇಸರ ಮಾಡ್ಕೋ ಬೇಡ… ಅದಕ್ಕಿಂತ ಮೊದಲು ನೀನು ಅಡಿಗೆ ಮನೆ ಹೊಕ್ಕು, ಏನಾದ್ರೊಂಚೂರು ಹೊಟ್ಟೆಗೆ ಹಾಕ್ಕೊಂಡು, ಹಾಗೇ ಹೆಂಡತಿಯನ್ನು ಮಾತಾಡಿಸಿಕೊಂಡು ಬಂದು ಕೂಡು. ಹೊಟ್ಟೆಯಲ್ಲಿ ಕೂಳು ಬಿದ್ದಿದ್ದರೆ ಮಾತ್ರ ನಾನು ಹೇಳೋದು ಅರ್ಥ ಆಗ್ತದೆ ಇಲ್ಲಾಂದ್ರೆ ಇಲ್ಲ… ಹಸಿವೆ ಹೆಚ್ಚಿದಷ್ಟು ಆಹಾರದ ರುಚಿಯೂ ಹೆಚ್ಚುತ್ತದೆ… ಅದರಂತೆ ಕುತೂಹಲ, ಪ್ರೀತಿ ಹೆಚ್ಚಿದಾಗ ಮಾತ್ರ ನಾನು ಹೇಳ್ತಿರೋದು ಅರ್ಥವಾಗುತ್ತದೆ ಸಹ್ಯವಾಗ್ತದೆ… ತೆವಲಿಗೆ, ಮುಲಾಜಿಗೆ ಕೂತುಕೊಂಡ್ರೆ ಉಪಯೋಗವಿಲ್ಲ… ಹೋಗಿಬಾ”ರೆಂದು ಹೇಳಿ ‘ಕ್ಷ’ ಎಂಬ ಅಕ್ಷರಕ್ಕೆ ಬೆನ್ನು ಕೊಟ್ಟು ವ್ಯಂಜನ, ಅನುಸ್ವಾರದ ಮೇಲೆ ಉದ್ದೋಕಿ ಕಾಲು ಚಾಚಿ ಕೂತುಕೊಂಡಿತು. +ಅದೇನು ತಿನ್ನುವ ಸ್ಥಿತಿಯಲ್ಲೂ ಇಲ್ಲ, ಕುಡಿಯುವ ಸ್ಥಿತಿಯಲ್ಲೂ ಇಲ್ಲ, +ಅದನ್ನು ಅದರ ಪಾಡಿಗೆ ಬಿಟು ನಾನೊಬ್ಬನೆ ಹೋಗಿ ಕೂಳುಬಾಕನಂತೆ ತಿಂದು ತೇಗುವುದು ಹೇಗೆ ಸಾಧ್ಯ! +ಅದು ತುಂಬ ಸೆಂಟಿಮೆಂಟಲ್ಲು ಮತ್ತು ಸೆಮಿಕ್ರಾಕು. ಮಾತಿಗೆ ಮನ್ನಣೆ ಕೊಟು ಹೋಗಿ ಬರದಿದ್ದರೆ ಅಪಾರ್ಥ ಮಾಡಿಕೊಳ್ಳುತ್ತದೆ ಎಂದುಕೊಂಡು ನಾನು ಅಡುಗೆ ಮನೆಗೆ ಹೋಗಿ ಮರಳಿ ಬಂದು ಕೂತೆ. +* +* +* +ಮನುಷ್ಯ ಸಮೂಹದ ಮನಸ್ಸು ಅದೇಷ್ಟು ವಿಚಿತ್ರ. ಕೋಳಿ ಚಿನ್ನದ ಉಂಗುರವನ್ನು ಗುಳುಮ್ಮನೆ ನುಂಗಿ ಕೂಡಲೆ ಅರಗಿಸಿಕೊಳ್ಳುವಂತೆ ಮನುಷ್ಯ ಗುಂಪಿನಿಂದ ಹೊರಡುವ ಕಚ್ಚಾ ಸುದ್ದಿಗಳನ್ನು ಸಮಾಜವೆಂಬ ಅಕ್ಕಸಾಲಿಗನು ಅದನ್ನು ಪುಟಕ್ಕಿರಿಸಿ, ಕರಗಿಸಿ, ಅಚ್ಚಿಗೆರೆದು ತನ್ನ ಇಚ್ಛೆಯಂತೆ ಆಕಾರ ಬದಲಿಸಿ ಅದಕ್ಕೆ ವಿವಿಧ ಬಣ್ಣ ಲೇಪಿಸಿ ಶೋಕೇಸ್‌ನಲ್ಲಿ ಇಡುತ್ತಾನೆ. ಅದು ಹೇಳಿ, ಕೇಳಿ ಮುದುಕಿಯೂ ಅಲ್ಲದ ಹುಡುಗಿಯಲ್ಲದ ಮಧ್ಯ ವಯಸ್ಕಳಂತ ಊರು. ಚಿಕ್ಕದೂ ಅಲ್ಲದ, ದೊಡ್ಡದೂ ಅಲ್ಲ, ಮಧ್ಯಂತರದ್ದು. ಒಂದೊಂದು ಕೇರಿಯ ಅವಿದ್ಯಾವಂತ ವಿದ್ವಾಂಸರು ಅದರ ಚರಿತ್ರೆಯನ್ನು ಹಳೇ ಕಾಲದ ಶಿಲಾಯುಗದಿಂದ ಆರಂಭಿಸಿ ಜರಿಮಲೆಯ ಪಾಳೆಗಾರ ಹನುಮಣ್ಣ ನಾಯಕ ದೊರೆ ಎಂಬ ಪಾಳ್ಳೆಗಾರ ತನ್ನ ಕುಟುಂಬದ ಎರಡನೆ ಊಟಕ್ಕಾಗಿ ಕೋರ್ಟಿನ ಬಳಿ ವಕೀಲರನ್ನು ಹುಡುಕಿಕೊಂಡು ಅಲೆಯುತ್ತಿರುವನೆಂಬ ಸಂಗತಿವರೆಗೆ ತಂದು ನಿಲ್ಲಿಸುತ್ತಾರೆ. ಆಂಧ್ರಪ್ರದೇಶದ ಮೂಲೆಯಿಂದ ವಲಸೆ ಬಂದ ಈಡಿಗರ ಕುಟುಂಬ ಅಲ್ಲಿ ನೆಲೆಸಿ ಶ್ರೀಮಂತರ ಪೈಕಿ ಶ್ರೀಮಂತವಾಯಿತು. ಅವರ ಅಹರ್ನಿಶಿ ಶ್ರಮದಿಂದ ಕೊತ್ತಲಿಗಿ ಮಾದರಿ ಗ್ರಾಮವೆಂದು ಹೆಸರಾಯಿತು. ನಾಗರೀಕತೆಯ ಎಲ್ಲ ಸೌಲಭ್ಯಗಳನ್ನು ಅವರು ಜನತೆಗೆ ಒದಗಿಸಲು ಪ್ರಯತ್ನಿಸಿದರು. ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಬ್ಯಾಂಕನ್ನು ಸದರಿ ಗ್ರಾಮಕ್ಕೆ ತಂದವರು ಅವರೇ. ಊರಿನ ಮೇಲ್ಮೈ ಲಕ್ಷಣ ಬದಲಾಯಿಸಿತೇ ಹೊರತು ಜನರ ಸ್ವಭಾವ ಬದಲಾಗಲಿಲ್ಲ. ಆಧುನಿಕವೆಂದು ಕಾಣಿಸಿಕೊಳ್ಳುವ ಮನುಷ್ಯ ಒಳಗೊಳಗೇ ಆದಿವಾಸಿ ಮನಸು ಪೋಶಿಸಿಕೊಂಡು ಬಂದ. ಮೊಟ್ಟೆ ಕವಚ ಭೇದಿಸಿ ಮರಿ ಹೊರ ಬರಲು ಹೇಗೆ ಪ್ರಯತ್ನಿಸುವುದೋ ಹಾಗೆಯೇ ಆದಿವಾಸಿ ಮನಸ್ಸು ಹೊರಬರಲು ಪ್ರಯತ್ನಿಸುವುದು. ಅಂಥದಕ್ಕೊಂದು ಗ್ರಾಸವಾಗಿದ್ದ ನಾವು ಮತ್ತು ನಾವು ಅಭಿನಯಿಸಬೇಕಿದ್ದ ಬಾಳ್ಯಾ ಸಂಗ್ಯಾನ ಜಾನಪದ ನಾಟಕವು. ಅಲ್ಲದೆ ಮೇಲ್ಜಾತಿಯವರ ಸಂಪ್ರದಾಯದ ಸಂಚಿನಿಂದಾಗಿ ಈ ಜಾನಪದ ನಾಟಕ ಗ್ರಾಮದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬಹಿಷ್ಕರಿಸಲ್ಪಟ್ಟಿತ್ತು. ಆಡಬೇಕೆಂದವರಿಗೆ ಒಂದಲ್ಲಾ ಒಂದು ವಿಘ್ನಗಳು ಒದಗಿ ಆಡದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು. ಆ ನಾಟಕವನ್ನು ಆಡಿದ ಪಕ್ಷದಲ್ಲಿ ಗಂಡ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ, ಹೆಂಡತಿ ಗಂಡನ್ನು ಕಳೆದುಕೊಳ್ಳುತ್ತಾಳೆ… ಅಥವಾ ತಲೆ ಕೆಟ್ಟು ದೇಶಾಂತರ ಹೋಗುತ್ತಾರೆ… ಇತ್ಯಾದಿ. ಇಂಥವಕ್ಕೆಲ್ಲ ಹೆದರದೆ ಆಗೊಮ್ಮೆ ಈಗೊಮ್ಮೆ ಆಡುತ್ತಿದ್ದವರೆಂದರೆ ಕಪ್ಪು ಜನರು… ಅವರಿಗೆ ಮಾತ್ರ ಆ ನಾಟಕದಿಂದ ಒಳ್ಳೆಯುವುದಾಗುವುದಂತೆ. ಆಡಿದ ಅವರಿಗೆ ಅಗಲಿದ ಗಂಡನನ್ನು ಹೆಂಡತಿಯು ಕೂಡಿಕೊಳ್ಳುತ್ತಾಳೆ; ಅಗಲಿದ ಹೆಂಡತಿಯನ್ನು ಕೂಡಿಕೊಳ್ಳುತ್ತಾನೆ… ತಮ್ಮ ಪುರುಷತ್ವದ ಬಗ್ಗೆ ಅನುಮಾನವಿದ್ದವರು ಆಡಿ ಮರಳಿ ಸಧೃಡವಾದ ಪುರುಷತ್ವವನ್ನು ದೇದೀಪ್ಯಮಾನವಾಗಿ ಪ್ರಕಟಿಸುತ್ತಿರುವುದುಂಟು… ಇತ್ಯಾದಿ… ಮೇಲ್ವರ್ಗದವರು ಸಂಗ್ಯಾ ಬಾಳ್ಯಾ ಎಂದು ಕರೆಯುತ್ತಿದ್ದ ಅದೇ ನಾಟಕವು, ಕೆಳಜಾತಿಯವರು ಬಾಳ್ಯಾ ಸಂಗ್ಯಾನ ಆಟವು ಎಂದು ಕರೆಯುತ್ತಿದ್ದ ವ್ಯಭಿಚಾರ ಪ್ರಧಾನ ಅದೇ ನಾಟಕವು ಒಬ್ಬರ ಕಣ್ಣಿನಲ್ಲಿ ಸುಣ್ಣವನ್ನೂ; ಇನ್ನೊಬ್ಬರ ಕಣ್ಣಲ್ಲಿ ಬೆಣ್ಣೆಯನ್ನೂ ಯಾಕಿಡುತ್ತದೆ ಎಂಬುದು ಅರ್ಥವಾಗದ ಸಂಗತಿಯಾಗಿರುವುದು? ಸಹಜವಾಗಿ ನಾವಿಂಥಾದ್ದೊಂದು ನಾಟಕವನ್ನು ಆಡುತ್ತಿರುವುದು ತಿಳಿದಾಗ ಆ ಗ್ರಾಮದ ಸಮಾಜ ವಿಚಿತ್ರವಾಗಿ ಪ್ರತಿಕ್ರಿಯಲಾರಂಭಿಸಿತು. ಮೇಲ್ವರ್ಗದವರು ಈ ಬ್ಯಾಂಕಿನವರಿಗೆ ಬುದ್ಧಿ ಇರುವುದೋ ಇಲ್ಲವೋ?… ಆಡಿ ತಾವು ಕೆಡುವುದಲ್ಲದೆ ಊರನ್ನೂ ಹಾಳು ಮಾಡಬೇಕೆಂದು ನಿರ್ಧರಿಸಿರುವಂತೆ ಕಾಣುತ್ತದೆ… ಎಂದು ಪ್ರತಿಕ್ರಿಯಿಸತೊಡಗಿದರೆ, ಗ್ರಾಮದ ನಿಮ್ನ ಜಾತಿಯವರು ವಾಸಿಸುವ ಕೇರಿಗಳು ಅಂತೂ ಈಗಲಾದರೂ ಮೇಲ್ಜಾತಿಯವರಿಗೆ ತಾವೂ ಬಾಳ್ಯಾ ಸಂಗ್ಯಾನ ಆಡುವಂಥ ಬುದ್ಧಿಯನ್ನು ದೇವರು ಕೊಟ್ಟನಲ್ಲ… ಯಾರು? ಯಾರನ್ನು ಬಿಟ್ಟು ತಲೆ ಕೆಟ್ಟು ಓಡಿಹೋಗುತ್ತಾರೆಂಬುದನ್ನು ಇವರಾದರೂ ಆಡಿ ಸುಳ್ಳು ಮಾಡಲಿರುವರಲ್ಲ… ಇದೇ ದೊಡ್ಡ ಸಂಗತಿ… ಇವರಿಗೆ ಕಂಟಕಗಳು. ವಿಘ್ನಗಳು ಒದಗದಂತೆ ಸರಸೋತಿಯು, ಗಣಪನಾಯಕನು ಮೈ ಚಳಿ ಬಿಟ್ತು ಆಶೀರ್ವಾದ ಮಾಡಬೇಕು… ಅದು ಆಯಾ ದೇವತೆಗಳ ನೈತಿಕ ಜವಾಬ್ದಾರಿ ಮುಂತಾಗಿ ಆಡಿಕೊಂಡರು. +ಆದರೆ ಈ ಪರ ವಿರೋಧಿ ಪ್ರತಿಕ್ರಿಯೆಗಳು ನಮ್ಮನ್ನು ಎಡತಾಕುವುದು ಅಷ್ಟು ಸುಲಭ ಸಾಧ್ಯ ಸಂಗತಿಯಾಗಿರಲಿಲ್ಲ… ಆರ್ಥೋಡಾಕ್ಸ್, ಈರಸೈವರು ಈರ್ಯಾನ ಪಾತ್ರಧಾರಿ ಚಂಬಸ್ಯಯ್ಯನನ್ನು ಅಲ್ಲಲ್ಲಿ; ಆಯಕಟ್ಟಾದ ಜಾಗದಲ್ಲಿ ತರುಬುತ್ತಿದ್ದುದೂ; “ನಿಮ್ಮಂಥೋರೆ ಹಿಂಗ ಮಾಡಿದ್ರೆ ಹೆಂಗ ಸ್ವಾಮಿ… ಮಾನವ ಧರುಮಕ್ಕೆ ಜಯವಾಗಲಿ ಎಂದು ಹೇಳೋ ಜಾತಿಯವರಾದ ನೀವೇ ಸಂಗ್ಯಾನ ಕೊಲೆ ಮಾಡೋ ಹೀನ ಪಾತ್ರವನ್ನು ಮಾಡೋದಂದ್ರೇನು? ನಿಮ್ಮ ಪಾತ್ರ ನಮಗ್ಯಾಕೋ ಸಜ್ಜು ಕಾಣವಲ್ದು” ಎಂದು ಪ್ರತಿಕ್ರಿಯಿಸುತ್ತಿದ್ದುದೂ ಎಲ್ಲಾ ತಿಳಿದು ಹೋಗಿತ್ತು. +ಆರ್ಥೋಡಾಕ್ಸು ಮುಸ್ಲಿಮರು ಬಸ್ಯಾನ ಪಾತ್ರಧಾರಿ ತಮ್ಮ ಇಸುಮಾಯಿಲನು ಅಲ್ಲಲ್ಲಿ ಅಲ್ಲಲ್ಲಿ ಆಯಕಟ್ಟಾದ ಜಾಗದಲ್ಲಿ “ಅಸ್ಸಲಾಂ ಆಲೈಕುಂ” ಎಂದು ತರುಬಿ “ಅರೆ ಅಲ್ಲಾ..” “ನೀವು ಆ ಕಾಫಿರ್ ಬಸ್ಯಾನ ಪಾತ್ರ ಮಾಡುವುದೆಂದರೇನು ಭ್ಯಾ… ಅದೂ ಕಾಫಿರರ ಜೊತೆ ಸೇರ್‍ಕಂಡು ಕಾಫಿರನ ಹೆಸರಿಟ್ಟುಕೊಂಡು, ಕಾಫಿರನನ್ನು ಕೊಲೆ ಮಾಡೋದೆಂದರೇನು! ನೀವು ಬಸ್ಯಾನ ಹೆಸರಿನ ಬದಲಿಗೆ ಫ್ರಕ್ರುದ್ದೀನಂತ ಹೆಸರಿಟ್ಟುಕೊಂಡಿದ್ರೆ ನಮ್ದೇನು ತಕರಾರ್‍ಲಿಲ್ಲ… ಇದು ಏನಾದ್ರು ಜನಾಬ್ ಹಾಜೀ ಮಸ್ತಾನ್ರಿಗೆ, ಜನಾಬ್ ಯುಸುಫ್ ಸಾಹೇಬ್ರಿಗೆ ಗೊತ್ತಾದ್ರೆ ಅವರು ಜಮಾತೆಗೆ ಸೂಟ್‌ಕೇಸ್ ಕಳಿಸ್ತಾರೆಯೇ… ಜರಾ ಸೋಚೋ ಭ್ಯಾ” ಎಂದು ಪ್ರತಿಕ್ರಿಯಿಸುತ್ತಿದ್ದುದೆಲ್ಲವೂ ತಿಳಿದು ಬರುತ್ತಿತ್ತು! ಆರ್ಥೋಡಾಕ್ಸ್ ಬ್ರಾಹ್ಮಣರು ತಮ್ಮ ಜಾತಿವಂದಿಗರಾದ ಇರುಪಾಕ್ಷಿ ಪಾತ್ರಧಾರಿಯಾದ ಹೆಬ್ರಿಯವರನ್ನು ಅಲ್ಲಲ್ಲಿ ಆಯಕಟ್ಟಾದ ಜಾಗಗಳಲ್ಲಿ “ದೀರ್ಘಾಯುಷ್ಮಾನ್ ಭವ” ಎಂದು ಆಶೀರ್ವಾದ ಮಾಡಿ ತರುಬಿ “ಎಂಥದು ಮಾರಾಯ್ರೆ ಇನ್ನೂ ಎರಡು ಬೃಂದಾವನ ಕಟ್ಟಿಸಬೇಕಾಗಿರೋ ನೀವೆ ಆ ಶೂದ್ರ ಮುಂಡೇ ಪಾತ್ರವಾದ ಇರುಪಾಕ್ಷಿ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿರುವುದೆಂದರೇನು? ಹೋಗಿ ಹೋಗಿ ಅದು ಬ್ಲಡಿ ಲಿಂಗೈತನ ಕೋಮಿನ ಹೆಸರು… ಲಕ್ಷ್ಮಣಾಚಾರ್ಯ ಎಂದು ಹೆಸರಿಟ್ಟುಕೊಂಡು ಸಂಗ್ಯಾನ ಕೊಲೆ ಮಾಡಿದ್ರೆ ನಮ್ದೇನು ಅಭ್ಯಂತರ ಇರುತ್ತಿರಲಿಲ್ಲ. ಇದೇನಾದ್ರು ನಮ್ಮೂರಾರೆಸೆಸ್ಸೆಸ್ನ ಪ್ರಧಾನ ದಂಡನಾಯಕರಾದ ದೇವರಸ್ಸೀಗೆ ಗೊತ್ತಾದ್ರೆ ಅವ್ರ ಮನಸ್ಸಿಗೆ ಎಷ್ಟು ನೋವು ಮಾಡಿಕೊಳ್ಳುವರು ನೀವೇ ಯೋಚಿಸಿ” ಎಂದು ಪ್ರತಿಕ್ರಿಯಿಸುತ್ತಿದ್ದುದೆಲ್ಲವೂ ತಿಳಿದು ಬರುತ್ತಿತ್ತು. +ಅದೆ ಆರ್ಥೋಡಾಕ್ಸ್ ಸ್ಮಾರ್ಥ ಬ್ರಾಹ್ಮಣರು ಸಂಗ್ಯಾನ ಪಾತ್ರಧಾರಿಯಾದ ನನ್ನನ್ನು ಅಲ್ಲಲ್ಲಿ ಆಯಕಟ್ಟಾದ ಜಾಗದಲ್ಲಿ ‘ಅಹಂ ಬ್ರಹ್ಮಾಸ್ಮಿ’ ಎಂದು ತರುಬಿ “ಅಲ್ರೀ ಶಾಸ್ತ್ರೀ ಪಂಡಿತ ಪರಮೇಶ್ವರ ಶಾಸ್ತ್ರಿಗಳಾದ್ರು ಎಂಥವರು, ಏನ್ಕಥೆ? ಅಂಥವರ ಮೊಮ್ಮಕ್ಕಳಾದ ನೀವು ಗಂಗೀ ಅಂಥ ಪರ ಪತ್ನಿಯನ್ನು ವ್ಯಭಿಚಾರಕ್ಕೆ ಉದ್ದೀಪಿಸಿ, ಸಂಭೋಗಿಸಿ ರೌರವ ನರಕಕ್ಕೆ ಪಾತ್ರವಾಗುವಂಥ ಸಂಗ್ಯಾನ ಪಾತ್ರ ಮಾಡುವುದೇನು? ನಮಗೆ ಸರಿಕಾಣ್ತಾ ಇಲ್ಲ… ನಮ್ಮ ಕಣ್ಣೆದುರಿಗೆ ಆ ಇಸುಮಾಯಿಲೂ; ಚಂಬಸ್ಯಯ್ಯ ನಿಮ್ಮನ್ನು ಬೆಂಬತ್ತಿ ಕೊಲೆ ಮಾಡೊದೆಂದರೇನು! ಅಭಿನಯ ಆದರೇನಾಯ್ತು? ಕೊಲೆ ಕೊಲೇನೆ ತಾನೆ? ಇನ್ನೆನಾದ್ರು ನಿಮ್ಮ ತಾತನವರ ಆತ್ಮಕ್ಕೆ ಗೊತ್ತಾದರೆ ಅವರ ಮನಸ್ಸಿಗೆ ಎಷ್ಟು ನೋವಾಗಬೇಡ! ಅದು ಅಲ್ಲದೆ ನೀವು ಬಾಲ್ಯದಲ್ಲಿ ಕಂಚಿ ಕಾಮಕೋಟಿಯ ಶ್ರೀಗಳಿಂದ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿಸಿಕೊಂಡೋರಂತ ಕೇಳಿ ತಿಳಿದುಕೊಂಡಿದ್ದೇವೆ. ತಮ್ಮ ಶಾಖಾ ಶಿಷ್ಯನಾದ ಶಾಮಾಶಾಸ್ತ್ರಿಯೇ ಇಂಥ ಪಾಪಿಷ್ಟ ಪಾತ್ರ ಮಾಡಲಿರುವನೆಂದೇನಾದ್ರು ಶೃಂಗೇರಿ ಶ್ರೀಗಳಗೇನಾದ್ರು ಗೊತ್ತಾದ್ರೆ ಅವರ ಪವಿತ್ರ ಮನಸ್ಸಿಗೆ ಅದೆಷ್ಟು ಖತಿಯಾಗಬೇಡ… ಸ್ವಲ್ಪ ಯೋಚಿಸಿ, ನಿರ್ಧಾರದಿಂದ ನಿರ್ಗಮಿಸಿ” ಎಂದು ಮುಂತಾಗಿ ಪ್ರತಿಕ್ರಿಯಿಸುತ್ತಿದ್ದುದೂ ಉಂಟು. +ಆಯಾ ವರ್ಗದಲ್ಲಿ ಬೆಳೆದಂಥ ಇನ್ನೊಂದು ಅಭಿಪ್ರಾಯವೇನೆಂದರೆ ತಮ್ಮ ಕೋಮಿನ ಇಸುಮಾಯಿಲನು ಕಾಫಿರನ ಪಾತ್ರದಲ್ಲಾದ್ರೂ ಕಾಫಿರನೋರ್ವನ ಕೊಲೆ ಮಾಡ್ತಾನಲ್ಲ ಎಂದು ಮುಸ್ಲೀಂ ಕೋಮಿನ ಕೆಲವರು, ತಮ್ಮ ಚಂಬಸ್ಯಾಯ್ಯನೋರು ಈರ್‍ಯಾನ ಪಾತ್ರದಲ್ಲಾದ್ರು ಒಬ್ಬ ಸ್ಮಾರ್ತನನ್ನು ಕೊಲೆ ಮಾಡ್ತಾನಲ್ಲ ಎಂದು ವೀರ ಶೈವರ ಪೈಕಿ ಕೆಲವರೂ; ತಮ್ಮ ಹೆಬ್ರಿ ಇರೂಪಾಕ್ಷಿ ಪಾತ್ರದಲ್ಲಾದ್ರೂ ಒಬ್ಬ ಸ್ಮಾರ್ತನನ್ನು ಕೊಲೆ ಮಾಡ್ತಾನಲ್ಲ ಎಂದು ಮಾಧ್ವ ಬ್ರಾಹ್ಮಣರ ಪೈಕಿ ಕೆಲವರೂ, ತಮ್ಮ ಶಾಸ್ತ್ರೀ ಸಂಗ್ಯಾನ ಪಾತ್ರದಲ್ಲಾದ್ರು ವೀರಶೈವ ಕೋಮಿಗೆ ಸೇರಿದ ಹೆಣ್ಣಿನ ಪಾತಿವ್ರತ್ಯ ಭಂಗ ಮಾಡ್ತಾನಲ್ಲ ಎಂಬ ಸ್ಮಾರ್ತ ಬ್ರಾಹ್ಮಣರ ಪೈಕಿ ಕೆಲವರೂ ಸಮಾಧಾನಪಟ್ಟುಕೊಳ್ಳುತ್ತಿದ್ದುದೂ ಸೋಜಿಗದ ಸಂಗತಿಯಾಗಿತ್ತು. +ತಂತಮ್ಮ ಕೋಮುಗಳ ಕ್ರಿಯೆ-ಪ್ರತಿಕ್ರಿಯೆಗಳ ಒತ್ತಡಗಳಿಗೆ ಸಿಲುಕಿ ತ್ರಿಮೂರ್ತಿಗಳು ತಂತಮ್ಮ ಪಾತ್ರಗಳನ್ನು ತಂತಮ್ಮ ಹೃದಯದಿಂದ ಹೊಡೆದು ಓಡಿಸಬಲ್ಲವರಂಥ ಸಮರ್ಥರೇ. ಆದರೆ ತಾವಿಷ್ಟು ವರ್ಷ ಸರವೀಸು ಮಾಡ್ತಿದ್ರೂ ಮೊನ್ನೆ ಮೊನ್ನೆ ಬಂದ ಶಾಸ್ತ್ರಿ ರಾಷ್ರ ಮಟ್ಟದಲ್ಲಿ ಅತ್ಯುತ್ತಮ ಸೇವಾ ಪದಕ ಗಿಟ್ಟಿಸಿಕೊಳ್ಳುವುದೆಂದರೇನು! ಶ್ರೀಮತಿ ಶಾಂತಿಯನ್ನು ದೂಷಿಸುವಂತಿಲ್ಲ. ಆಕೆ ಸ್ಲೀವ್ ಲೆಸ್ ಬ್ಲೌಜು ತೊಟ್ಟು ಬರದಿದ್ದಲ್ಲಿ, ಹೊಕ್ಕಳು ಕಾಣಿಸುವಂತೆ ಸೀರೆ ಉಟ್ಟುಕೊಂಡು ಬರದಿದ್ದಲ್ಲಿ ಅಷ್ಟೊಂದು ಡಿಪಾಜಿಟ್ ಸಂಗ್ರಹಿಸಲಾಗುತ್ತಿರಲಿಲ್ಲವೆಂಬುದು ಸರ್ವವೇದ್ಯ ಸಂಗತಿ. ಶಾಸ್ತ್ರಿಯ ಸಂಸ್ಕೃತವಾಗಲೀ, ಪಾಂಡಿತ್ಯವಾಗಲೀ ಬ್ಯಾಂಕಿನ ವಾಣಿಜ್ಯಾಭಿವೃದ್ಧಿಗೆ ಯಾವ ರೀತಿ ಸಹಾಯಕವಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಗುಮ್ಮನಗುಸುಗನಾದ ಅವನು ಒಳಗೊಳಗೆ ಮೇಲ್ಮಟ್ಟದಲ್ಲಿ ಏನೋ ಕರಾಮತ್ತು ನಡೆಸಿಕೊಂಡಿದ್ದಾನೆ- ಇದಕ್ಕೆ ತಮ್ಮ ಬಳಿ ಪುರಾವೆಗಳಿವೇ? ಆಡಳಿತ ವರ್ಗದ ಉಚ್ಚಮಟ್ಟದವರ ಪ್ರೀತಿ ಸಂಪಾದಿಸಿರುವ ಅವನ ಮೇಲೆ ಬಹಿರಂಗವಾಗಿ ಹಲ್ಲೆ ಮಾಡುವಂತಿಲ್ಲ. ಪಶುಪತಿಯು ನಾಯಿಗಿಂತಲೂ ನಂಬಿಕಸ್ಥ ಎಂಬ ಭಾವನೆ ಹುಟ್ತಿಸಿ, ಕೆಲವು ತಾಂತ್ರಿಕ ತೊಂದರೆಗಳಿದ್ದರೂ ಸರಿಪಡಿಸಿ ಪುಸಲಾಯಿಸಿ ಅವನ ಸಾಲಕ್ಕೆ ಶಾಸ್ತ್ರಿಯಿಂದ ಸೆಕ್ಯುರಿಟಿಗೆ ಸಹಿ ಹಾಕಿಸಿದ್ದು ಕೂಡ ಒಂದು ಹಲ್ಲೆಯೇ. ಹಾಗೆಯೇ ಬೇರೆಯವರ ಅಂದರೆ ವೃದ್ಧೆ ಅಮಾಯಕ ರಮಾಬಾಯಿಯವರ ವಕೀಲಿಯಿಂದ ಅನಸೂಯಾಳ ಮೂಲಕ ದುರ್ಗುಣಗಳ ಹರಿಕಾರ ಪ್ರಸಾರಕನಂತಿರುವ ರಾಖೇಶನಿಗೆ ತಲೆ ಹಿಡುಕ ಬಾಳ್ಯಾನ ಪಾತ್ರ ಕೊಡಿಸಿದ್ದೂ ಅಲ್ಲದೆ ಖಾಸಗೀ ಜೀವನದಲ್ಲೂ ಅವರಿಬ್ಬರು ಜೀವನ ಗೆಳೆಯರಾಗಿರುವಂತೆ ಮಾಡಿರುವುದು ಕೂಡ ಒಂದು ರೀತಿಯ ಹಲ್ಲೆಯೇ. ಬೆಣ್ಣೆ ಹೃದಯದ ಶಾಸ್ತ್ರಿಗೆ ಜೂಜು ಮತ್ತು ಕುಡಿತ ಕಲಿಸಲೋಸುಗ ಕೆಲವು ಪರಿಣಿತರನ್ನು ಈಗಾಗಲೇ ಕಾರ್ಯಪ್ರವೃತ್ತರಾಗುವಂತೆ ಮಾಡಿರುವುದು ಕೂಡಾ ಒಂದು ನಮೂನೆಯ ಮಾರಣಾಂತಿಕ ಹಲ್ಲೆಯೇ. ಯಾವುದೇ ವಿಟಪುರುಷನ ಚರಾಸ್ತಿ, ಸ್ಥಿರಾಸ್ತಿ, ಸ್ವಯಾರ್ಜಿತ ಆಸ್ತಿ ಜೊತೆಗೇನೆ ಅವನ ಸಾಧನೆ ವ್ಯಕ್ತಿತ್ವವನ್ನು ಹಿಂಡಿ ಹೀರೆ ಹಿಪ್ಪಿ ಮಾಡಿ ಕಸದ ಬುಟ್ಟಿಗೆ ಎಸೆಯಬಲ್ಲ ಅನಸೂಯಳು ಗಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೂ… ಕ್ರಮೇಣ ಅವರೀರ್ವರ ನಡುವೆ ಅನೈತಿಕ ಸಂಮಂಧವೇರ್ಪಡುವಂತೆ ನಾವು ಮುವ್ವರು ಗುಟ್ಟಾಗಿ ಕೆಲವು ಹುನ್ನಾರಗಳನ್ನು ರೂಪಿಸಿರುವುದು ಕೂಡ ಹಲ್ಲೆಗಿಂತ ಕಡಿಮೆ ಏನಿಲ್ಲ. ಇನ್ನೊಂದು ನಡೆಯಲಿರುವ ಪ್ರಮುಖ ಹಲ್ಲೆ ಎಂದರೆ ಈರ್‍ಯಾ, ಬಸ್ಯಾ, ಇರುಪಾಕ್ಷಿ ಪಾತ್ರವಹಿಸುವ ಮೂಲಕ ಸಂಗ್ಯಾ ಪಾತ್ರಧಾರಿಯಾದ ಶಾಸ್ತ್ರಿಯನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡಲಿರುವುದು. ನಟನೆಯಾದರೇನಂತೆ… ಇದೂ ಕೂಡ ಒಂದು ರೀತಿ ಕೊಲೆ ತಾನೆ! ಸಂಗ್ಯಾನ ಪಾತ್ರಧಾರಿ ಶಾಸ್ತ್ರಿಯನ್ನೋ, ಶಾಸ್ತ್ರೀ ಪಾತ್ರಧಾರಿ ಸಂಗ್ಯಾನನ್ನೂ ತಾವು ಕೊಲೆ ಮಾಡಲಿರುವುದನ್ನು ಪ್ರೇಕ್ಷಕರು ಕಣ್ಣು ತುಂಬ ನೋಡಿ ಸಂತೋಷ ಪಡದೆ ಇರಲಾರರು… ಇದೂ ಕೂಡ ತಮ್ಮ ಒಂದು ಸಾಧನೆಯೇ… ಇಂಥ ಚತುರ್ದಶ ಸಂಚುಮಿಶ್ರಿತ ಆಲೋಚನೆಗಳನ್ನು ಒಳಗೆ ತುಂಬಿಕೊಂಡಿದ್ದೂ ಮೇಲ್ನೋಟಕ್ಕೆ ವಾತ್ಸಲ್ಯದ ಮೊಟ್ಟೆಗಳಂತೆ ವರ್ತಿಸುತ್ತಿದ್ದ ಅವರ ನೈಜ ನಟನೆ ಬೆರಗುಗೊಳಿಸುವಂಥಾದ್ದು ಆಗಿತ್ತು. ಇದನ್ನು ನಾನು ನಂಬದೆ ಇರಲು ಸಾಧ್ಯವಿರಲಿಲ್ಲ. ನನ್ನ ಪಾಲಿನ ಪ್ರಮುಖ ಗೂಢಚಾರನಾದ ಬಾಳ್ಯಾ ಪಾತ್ರಧಾರಿ ರಾಖೇಶನಿಗೆ ಅವರ ಎಲ್ಲ ವಿದ್ಯಮಾನಗಳು ಗೊತ್ತಿಲ್ಲದಿರಲಿಲ್ಲ… ಒಬ್ಬ ಮನುಷ್ಯ, ಇನ್ನೊಬ್ಬ ಮನುಷ್ಯನನ್ನು ಕೆಡೆಸುವುದೆಂದರೇನು! ಮಕ್ಕಳು ಮರಳಿನಿಂದ ಮನೆ ಕಟ್ಟಿ ಆಡಿ ಮತ್ತೆ ಅದನ್ನು ಕೆಡಿಸುತ್ತಾರಲ್ಲ… ಅದರಷ್ಟು ಸುಲಭವ್ನೇನು? ಕೆಡುವ ಮನುಷ್ಯ ಕೆಡುತ್ತಲೇ ಹೋಗುತ್ತಾನೆ… ಹಲವು ಕೆಡಕುಗಳ ಚಂಡಮಾರುತವನ್ನು ತೂರಿಬಿಡಬೇಕು. ಅಷ್ಟೆ ಗಟ್ಟಿ ಇದ್ದರೆ ಬಚಾವಾಗುತಾನೆ. ಇಲ್ಲವಾದರೆ ನಿರ್ನಾಮವಾಗುತ್ತಾನೆ… ನಿರ್ನಾಮವಾಗುವ ತರಗೆಲೆಗಳಂಥ ಮನುಷ್ಯರಿದ್ದು ಸಮಾಜವನ್ನು ಉದ್ಧಾರ ಮಾಡೋದು ಅಷ್ಟರಲ್ಲೇ ಇದೆ… ಎಂದು ಮುಂತಾಗಿ ವಿಲಕ್ಷಣವಾಗಿ, ಗುಟ್ಟಾಗಿ ಆಲೋಚಿಸಬಲ್ಲವನಾಗಿದ್ದ ರಾಖೇಶ… “ಯಾರೇನು ಸ್ಯಾಟ ಹರ್‍ಕೋತಾರೆ ಬಿಡ್ರಿ ಸಾರೂ… ಚಳಿ ಗಾಳಿ ಭಯ ದಡದ ಮೇಲಿರೋರ್‍ನ ಕಾಡ್ತವೇ ವಿನಃ ನೀರಿನಲ್ಲಿ ಮುಳುಗಿದೋರ್‍ನ ಕಾಡೊದಿಲ್ಲ… ಆದ್ದರಿಂದ ದುಡುಮ್ಮಂತ ನೀರಿಗೆ ಧುಮುಕಬೇಕು ಅಷ್ಟೆ” ಎಂದು ಅವನು ಮಾತಾಡುತ್ತಿದ್ದರಲ್ಲಿ ನನಗೆ ಸತ್ಯ ಗೋಚರಿಸಿತು. +ಇದೆಲ್ಲಕ್ಕಿಂತ ಮುಖ್ಯವಾಗಿ ನಾನು ಅವನ ಮೂಲಕ ನನ್ನ ಹೃದಯದಲ್ಲಿ ರಮ್ಯ ಕನಸು ಕಾಣುವ ಅವಿವಾಹಿತ ತರುಣಿಯರಂತೆ ಉಳಿದಿದ್ದ ದ್ವಿದಳ ಧಾನ್ಯದ ಕಾಳುಗಳಿಗೆ ಮೊಳೆಯುವ ಆಶ್ರಯಕ್ಕಾಗಿ ಹುಡುಕಾಟ ನಡೆಸಿದ್ದೆ. ಅವು ಒಂದೇ ಜಾತಿಯ ಕಾಳುಗಳಾಗಿರಲಿಲ್ಲ… ಐದಾರು ವಿಧದ, ನೂರಾರು ತಹತಹಗಳಿಂದ ಕೂಡಿದವುಗಳಾಗಿದ್ದವು. ಅವುಗಳನ್ನು ಎದೆಯಲ್ಲಿ ಹಿಡಿದುಕೊಂಡು ಫಲವತ್ತಾದ ಮಣ್ಣಿಗಾಗಿ ನಿರರ್ಥಕ ಅನ್ವೇಷಣೆಗೆ ತೊಡಗಿದ್ದ ನನ್ನ ದೃಷ್ಟಿಯಲ್ಲಿ ಮಣ್ಣಿನ ಬಗ್ಗೆ ನಿರರ್ಗಳವಾಗಿ ಮಾತಾಡಬಲ್ಲವನಾಗಿದ್ದ ರಾಖೇಶ… ಭೂಲೋಕದ ಸಮಸ್ತ ಮೃತ್ತಿಕೆಯೇ ತನ್ನ ಮುಷ್ಟಿಯಲ್ಲಿದೆ ಎಂಬಂತೆ ಅವನು ಮಾತಾಡುತ್ತಿದ್ದ. ಇಲ್ಲಿ ಅದನ್ನು ಕಲ್ಪಿಸುವೆನು! ಅಲ್ಲಿ ಇದನ್ನು ಕಲ್ಪಿಸುವೆನು ಎಂದು ಪಾದರಸದಂತೆ ನಡೆಯುತ್ತಿದ್ದಾವನಿಗೆ ನೆರಳಾಗಿ ನಡೆಯುತ್ತಿದ್ದೆನು. ಎಷ್ಟೋ ಸಾರಿ! ಕೆಲವು ಹೊಸ ಗಿರಾಕಿಗಳು ನನ್ನನ್ನು ತಲೆಹಿಡುಕನೆಂದು ಗುರುತಿಸಿ ಒಂದೊಳ್ಳೆ ಹುಡುಗಿ ಮನೆಗೆ ಕರ್ಕೊಂಡೋಗ್ತೀಯಾ? ಐವತ್ತು ರುಪಾಯಿ ಕೊಡ್ತೀವಿ ಎಂದು ಕೇಳುತ್ತಿದ್ದರು. ಆ ಅಂಥ ಸಂದರ್ಭದಲ್ಲಿ “ಇಲ್ರಿ ನೀವು ತಲೆಹಿಡುಕ ಅಂತ ಯಾರನ್ನು ತಿಳಿದುಕೊಂಡುವಿರೇಂದ್ರೆನಾದ್ರು ಗೊತ್ತಾದ್ರೆ ನಿಮ್ಮ ಮನಸ್ಸಿನ ಮೇಲೆ ಎಂಥ ಪರಿಣಾಮಾಗ್ತದೆ ಗೊತ್ತಾ? ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಕಣ್ರೀ ನಾನು… ಶಾಮಾಶಾಸ್ತ್ರಿ” ಎಂದು ಹೇಳಲಿಕ್ಕೆ ಸಾಧ್ಯವೇ? ‘ಸಾರಿ’ ಅನ್ನಲಿಕ್ಕಾದೀತೆ?… ನೋಡ್ರಿ ತಾತ… ಈಗ ನಿಮ್ಮ ಮೊಮ್ಮಗನಾದ ನಾನು ಇರುಳಲ್ಲಿ ತಲೆ ಹಿಡುಕನ ಥರ ಕಾಣಿಸ್ತಿದೀನಂತ ಕೂಗಿ ಹೇಳಬೇಕೆನ್ನಿಸಿತು. ನನ್ನ ಪರಮ ಮಿತ್ರನ ಪವಿತ್ರ ಕೆಲಸವನ್ನು ಅವನ ಗೈರುಹಾಜರಿಯಲ್ಲಿ ನಾನು ಮಾಡುವುದರ ಮೂಲಕ ಸ್ನೇಹ ಎಂಬ ಪದಕ್ಕೆ ಗೌರವ ಕೊಡುವುದೆಂದು ನಿರ್ಧರಿಸಿ ಅವರನ್ನು ಸೋಮವಾರಪೇಟೆಗೆ ಕರೆದೊಯ್ದು ದೂರದಿಂದ ಯಾವುದೋ ಒಂದು ಮನೆಯನ್ನು ತೋರಿಸಿ ಅವರಿಂದ ಪಡೆದ ಹಣವನ್ನು ಗೆಳೆಯನಿಗೆ ಕೊಡುತ್ತಿದ್ದೆ. ಆಗ ಅವನು ‘ಶಬ್ಬಾಷ್” ಎಂದು ಉದ್ಗರಿಸುತ್ತಿದ್ದ. ನಾವು ಯಾವ ಕೆಲಸ ಮಾಡ್ತಿದ್ದೀವಿ; ಅದರಲ್ಲಿ ಉತ್ಕೃಷ್ಟ ಯಾವುದು? ನಿಕೃಷ್ಟ ಯಾವುದು ಅಂತ ಯೋಚಿಸೋದ್ರಲ್ಲಿ ಅರ್ಥವಿಲ್ಲ… ಅದರಿಂದ ಪ್ರಾಪ್ತವಾಗುವ ಅನುಭವ ಮುಖ್ಯ… ಪಡೆದ ಅನುಭವ, ಪಡೆದ ತೃಪ್ತಿಯ ಮೂಲಕ ಕೆಲಸದ ಜಾಯಮಾನ ತಿಳಿಯಬೇಕೆಂಬರ್ಥದ ಜವಾರಿ ಮಾತುಗಳನ್ನಡುತ್ತಿದ್ದ ಎದೆಯಲ್ಲಿ ಬೀಜ ಹಿಡಿದುಕೊಂಡಿರುವವನ ನಗೆ; ಕೈಯಲ್ಲಿ ಮೃತ್ತಿಕೆ ಹಿಡಿದುಕೊಡಿರುವ ಅವನು ಪ್ಲೇಟೋನ ಥರ ಕಾಣಿಸುತ್ತಿದ್ದ. +ಅವನೇನಾದರು ಕಣ್ಣಿಗೆ ಬೀಳಲಿಲ್ಲವೆಂದರೆ ನಾನು ಆಗ ವಿಚಿತ್ರವಾಗಿ ವರ್ತಿಸುತ್ತಿದ್ದೆ. ಹಂಬಲಿಸುತ್ತಿದ್ದೆ. ಅವರಿವರ ಕೈ ಬೆಚ್ಚಗೆ ಮಾಡಿ ಅವನನ್ನು ಕರೆ ಕಳಿಸುತ್ತಿದ್ದೆ. ಅವನು ಕಂಡೊಡನೆ “ಎಲ್ಲಿಗೋಗಿದ್ಯೋ” ಎಂದು ಗದರಿಸುತಿದ್ದೆ. ಅವನು ಒಮ್ಮೊಮ್ಮೆ ನನ್ನನ್ನು ಹುಡುಕಿಕೊಂಡು ಬ್ಯಾಂಕಿಗೇ ಬಂದುಬಿಡುತ್ತಿದ್ದ. ಆಗ ನಾನು ಹೆಬ್ರಿ ಬಳಿ ಹೋಗಿ “ಸಾರ್ ನನ್ ಫ್ರೆಂಡ್ ರಾಖೇಶ ಕಾಯ್ತಿದ್ದಾನೆ… ಹೋಗಿ ಬರ್‍ತೀನಿ” ಎಂದು ಕೇಳುತ್ತಿದ್ದೆ. ಆಗ ಆತ ನಸು ನಕ್ಕು “ಓಹೋ ಅಗತ್ಯವಾಗಿ ಹೋಗಿ ಬರ್ರಿ… ಶಾಸ್ತ್ರಿ… ಅರ್ಧ ಗಂಟೆ ಯಾಕೆ ಒಂದು ಗಂಟೆ ಹೋಗ್ರಿ… ಸ್ನೇಹವೆಂಬ ಶಬ್ದಕ್ಕೆ ನೀವಿಬ್ರು ಆದರ್ಶಪ್ರಾಯರಾಗಿದ್ದೀರಿ” ಎಂದು ಪೂಸಿ ಹೊಡೆದು ಕಳಿಸುತ್ತಿದ್ದರ ಮರ್ಮ ನನಗೆ ಅರ್ಥವಾಗುತ್ತಿರಲಿಲ್ಲ. ತಾನು ಮಾಡಬೇಕೆಂದಿದ್ದ ಪಾತ್ರವನ್ನು ಕಸಿದುಕೊಂಡವನ ಗೊಡವೆ ಯಾಕೆ ಅಂತ ಓಬಳೇಶನೂ ನನ್ನ ನಡುವಳಿಕೆಗೆ ಅಣೆಕಟ್ಟು ಕಟ್ಟುವ ಕೆಲಸ ಮಾಡುತ್ತಿರಲಿಲ್ಲ… ಶ್ರೀಮತಿ ಎನಿಸಿಕೊಂಡಿರುವ ಶಾಂತಿ ಬೇರೆ ಲಾಂಗ್ ಲೀವ್ ಹಾಕಿ ಗಂಡನೊಂದಿಗೆ ಕುಪ್ಪಿನಕೇರಿಯಲ್ಲಿ ನಿಂತು ಲಿಂಗಾಂಜನೇಯ ಸ್ವಾಮಿ ದೇವಸ್ತಾನದ ಜೀರ್ಣೊದ್ಧಾರ ಕಾರ್ಯಕ್ಕೆ ನಿಂತಿದ್ದಳು. ಗುಟ್ಟಾಗಿ ಧೀರ್ಘಕಾಲದಿಂದ ಅಕ್ಷರ ಪ್ರೇಮ ನಡೆಸಿದ್ದ ಅವರು ಹಾಗೆ ಬೇಡಿಕೊಂಡಿದ್ದರಂತೆ. ಆದ್ದರಿಂದ ಆಮುವ್ವರು ನನ್ನಿಂದ ತಪ್ಪು ಮಾಡಿಸಲು; ವ್ಯಕ್ತಿತ್ವವನ್ನು ಅಪಮೌಲ್ಯಗಳಿಸಲು ಏನೇನು ಸಾಧ್ಯವೋ ಅದನ್ನೆಲ್ಲ ಮುಗುನಗೆಯಿಂದಲೇ ಮಾಡಿಸುತ್ತಿದ್ದರು. ಸಂಚುಗಾರರು ಮಾತ್ರ ತಮ್ಮ ವಿರುದ್ಧ ಅನ್ಯರು ಸಂಚು ಮಾಡುತ್ತಾರೆ ಎಂದು ಊಹಿಸಲು ಸಾಧ್ಯವೆಂದೂ, ಸಾಧ್ಯವಾದಷ್ಟು ಸಂಚಿನ ಅನುಭವಕ್ಕೆ ತುತ್ತಾಗಿ ‘ಓಹ್ ಇಷ್ಟೇನಾ’ ಎಂದು ಉದ್ಗರಿಸುವಂತಾಗಬೇಕೆಂದೂ ರಾಖೇಶ ಹೇಳುವ ಪ್ರಯತ್ನ ಮಾಡುತ್ತಿದ್ದ. ಆದ್ದರಿಂದ ನಿರ್ವಿಕಲ್ಪ ಚಿತ್ತದಿಂದ ಎಲ್ಲ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದು ನನ್ನಿಂದ ಸಾಧ್ಯವಾಯಿತು, ಮಿತ್ರಮಾ… ಒಂದೊಂದು ವಿಧದ ರೋಮಾಂಚನವನ್ನು ಒಂದೊಂದು ವಿಧದ ಅಪಾಯಗಳನ್ನು ಸ್ವೈಚ್ಛೆಯಿಂದ ಎಳೆದುಕೊಳ್ಳುವ ಮೂಲಕ ಪಡೆದುಕೊಳ್ಳಬಹುದು ಎನ್ನುವುದಕ್ಕೆ ನನ್ನಲ್ಲಿ ಸಾಕಹ್ಟು ಉದಾಹರಣೆಗಳಿವೆ. ಅವನ್ನೆಲ್ಲ ಹಾಗೆ ಎದುರಿಸಿ ವೃದ್ಧಾಪ್ಯದಲ್ಲಿ ದುಕ್ಕುವ ಅನುಭವವನ್ನು ನನ್ನ ಪ್ರೌಡವಯಸ್ಸಿಗೇನೆ ಪಡೆದುಕೊಂಡೆ ಎನ್ನುವುದು ನನಗೆ ಹೆಮ್ಮೆಯ ವಿಷಯ… ಅಪಾಪೋಲಿಯಾಗಿದ್ದವನು ತಲೆಹಿಡುಕನಾಗುವುದು, ತಲೆಹಿಡುಕನಾಗಿದ್ದವನು ನಾಟಕವೊಂದರಲ್ಲಿ ತಲೆ ಹಿಡುಕಪಾತ್ರಧಾರಿಯಾಗುವುದು, ಆ ನಟನೋರ್ವ ಇನ್ನೋರ್ವ ನಟನಾದ ನನಗೆ ಪರಿಚಯವಾಗುವುದು, ಹಾಗೆ ಪರಿಚಯಗೊಂಡವನು ಗೆಳೆಯನಾಗುವುದು, ಗೆಳೆಯನಾದವನು ಪರಮಾಪ್ತನಾಗುವುದು; ಪರಮಾಪ್ತನಾದವನು ಕ್ರಮೇಣ ಗುರುಸ್ಥಾನ ತಲುಪುವುದು, ಗುರುಸ್ಥಾನ ತಲುಪಿದವನು ಅವಧೂತನಂತೆ ಕಂಗೊಳಿಸತೊಡಗುವುದು… ಅವಧೂತನೆಂದರೆ ಸಾಮಾನ್ಯವೇ! ಅದೊಂದು ನಿರ್ವಿಕಲ್ಪ; ನಿರಂಜನ ಮೂರ್ತಿತ್ವದ ಜಾಗರಣಾ ಸ್ಥಳ… ಆ ಸ್ಥಾನವನ್ನು ರಾಖೇಶ ಆಕ್ರಮಿಸಿದನೋ! ನಾನೇ ಅವನಾರೋಹಣಕ್ಕನುಕೂಲ ವಾಗುವಂತೆ ನನ್ನ ವ್ಯಕ್ತಿತ್ವವನ್ನೇ ನಿಚ್ಚಣಿಕೆಯಾಗಿ ಇಟ್ಟೆನೋ ನನಗೊಂದು ತಿಳಿಯದು… ಕಾಲ ಬದಲಾದಂತೆ ತನ್ನ ಉಡಿಗೆ ತೊಡುಗೆ ವಸ್ತ್ರ ವಿಲಾಸವನ್ನು ನನಗೆ ನೀಡಿ… ತಾನು ಬಾಹುಬಲಿಯಾಗಿ, ಮಹಾಬಲೆಶ್ವರ ಮೂರ್ತಿಯಾಗಿ ಶೂನ್ಯ ಸಿಂಹಾಸನದ ಮೇಲೆ ಆರೂಢನಾದ. ನಾನು ನನ್ನ ಹೃದಯದಲ್ಲಿ ಮೊಳೆಯಲು ಹಾತೊರೆಯುತ್ತಿದ್ದ ಆರು ವಿಧದ ದ್ವಿದಳ ಧಾನ್ಯಗಳನ್ನು ಹಿಡಿದುಕೊಂಡು ಮಾಡಲೇಬೇಕಿರುವ ತಪ್ಪುಗಳ; ಎದುರಿಸಲೇಬೇಕಾದಂಥ ಅಪಾಯಗಳ ಒಂದು ಸುಧೀರ್ಘ ಪಟ್ಟಿ ತಯಾರಿಸುತ್ತ ಮೃತ್ತಿಕೆಯ ಪಾತಳಿಗಾಗಿ ಅವನತ್ತ ದೈನ್ಯತೆಯಿಂದ ದೃಷ್ಟಿ ಬೀರುತ್ತಿದ್ದೆ. +ಅವನು ನನ್ನ ಮೇಲೆ ಬೀರಿದ ಪ್ರಭಾವ ಏಳು ಸುತ್ತಿನ ಕೋಟೆ ಸ್ವರೂಪದ್ದು…. ಅವನ ವೇಶ ಭೂಶಣ, ಮಾತು-ಕಥೆ ನಡೆ-ನುಡಿ, ಎಲ್ಲವೂ ನನ್ನ ಮೇಲೆ ಒಂದೊಂದಾಗಿ ಪ್ರಭಾವ ಬೀರುತ್ತಾ ಹೋದವು. ತಾಲೀಮು ಶುರುವಾಗಿರುವಾಗಲೇ ಇಷ್ಟಾದರೆ, ಇನ್ನು ನಾಟಕ ಮುಗಿಯುವ ಹೊತ್ತಿಗೆ ಅಥವಾ ಮುಗಿದ ನಂತರ ಬಾಳ್ಯಾ ಪಾತ್ರವೇ ಸಂಗ್ಯಾನ ಪಾತ್ರವಾಗುವುದೋ; ಸಂಗ್ಯಾನ ಪಾತ್ರವೇ ಬಾಳ್ಯಾನ ಪಾತ್ರವಾಗುವುದೋ! ಅದೊಂದು ನಿಘೂಡ ಸಂಗತಿ… +ನಮ್ಮ ತಾಲೀಮು ಶುರುವಾಗಿದ್ದು ಊರ ಹೊರಗೆ ಪೂರ್ವಾಭಿಮುಖವಾಗಿದ್ದ ಕೊಟ್ರಮ್ಮನ ಗುಡಿಯಲ್ಲಿ… ಅದು ಸಾತವಾಹನನ ಕಾಲದ್ದು. ಜೈನರ ಕೊಟ್ಟವ್ವೆ ಎಂಬ ಯಕ್ಷಿಯ ದೇವಾಲಯವಾಗಿತ್ತೆಂಸು ತುಂಬ ಹಿಂದೆ ಇಲ್ಲಿಗೆ ಬಂದಿದ್ದ ಶಿವರಾಮಕಾರಂತರು ಹೇಳಿರುವರಂತೆ. ಅದೊಂದು ನಿರ್ಮಾನುಷ ಸ್ಥಳ, ಅಲ್ಲಿ ಶವಕಪಾಲಿನೋರ್ವ ಮಾತ್ರ ಇರುತ್ತಿದ್ದ. ಅವನುದಿನದ ಮೂರು ಹೊತ್ತಿನಲ್ಲಿ ಮೂರು ವಿಧದ ಭಂಗಿಯಲ್ಲಿ ಕೂತು ತಾಂತ್ರಿಕೋಪಾಸನೆ ಮಾಡುತ್ತಿದ್ದ. ಅವನು ಜರ್ಮನಿಯ ತಂದೆಗೂ; ಆಂಧ್ರದ ಗೊಂಡಾ ಜಾತಿಯ ತಾಯಿಗೂ ಹುಟ್ಟಿದಂತೆ. ಕೊಟ್ಟವ್ವೆ ದೇವಾಲಯ ಶಕ್ತಿ ಸ್ಥಳವೆಂದು ಭಾವಿಸಿ ಅಲ್ಲಿ ಉಪಾಸನೆ ಮಾಡುತ್ತಿದ್ದನಂತೆ. +ತಾಲೀಮು ಶುರುವಾದ ಹೊಸದರಲ್ಲಿಟ್ಟುಕೊಂಡಿದ್ದ ಕುತೋಹಲ ಕ್ರಮೇಣ ಕರಗಿಹೋಗಿ ಅವನೂ ನಮ್ಮವರಲ್ಲೊಬ್ಬನಾಗಿಬಿಟ್ಟ. ಪೆಟ್ಟಿಗೆ ಮಾಸ್ತರು ಕಾಳಪ್ಪ ಶಿಸ್ತಿನ ಸಿಪಾಯಿಯಾಗಿದ್ದ. ತ್ರಿಮೂರ್ತಿಗಳು ಹೆದರಿ ತತ್ತಿ ಹಾಕುವಂತೆ ಅನಸೂಯಾ ಬರುತ್ತಿದ್ದುದು ನೋಡಲಿಕ್ಕೆ ತುಂಬ ಸೊಗಸಾಗಿರುತ್ತಿತ್ತು. ಆಕೆ ಏನು ನಾಜಿ ಕ್ಯಾಪ್ಟನ್ ಥರ ಇರುತ್ತಿರಲಿಲ್ಲ. ಆಕೆಯನ್ನು ನೋಡಿದೊಡನೆ ನನಗೆ +ಬಡತನಮುಂ ಮಾಂದ್ಯಮುಮಿ +ಟ್ಟೆಡೆಯುಂ ಚಪಲತೆಯುಮಧಿಕತರ ಕುಟಿಲತೆಯುಂ +ಮಡದಿಯ ನಡು ನಡೆ ಮೊಲೆ ಕ +ಣ್ಗಡೆ ಕುರುಳೊಳ್ಪೋರ್ಕುಮಲ್ಲಿ ತಲೆತೋರುಗದು +…ಎಂಬ ಷಡಕ್ಷರದೇವನ ರಾಜಶೇಖರ ವಿಳಾಸದ ಒಂದು ಕಂದಪದ್ಯ ನೆನಪು ಮಾಡಿ ಗೊಣಗಿಕೊಳ್ಳುತ್ತಿದ್ದೆ. ಒಂದೆರಡು ಬಾರಿ ಆಕೆ ಕೇಳಿಸಿಕೊಂಡದ್ದೂ ಉಂಟು. ರಾಖೇಶ “ಯಕ್ಕೋ! ಶಾಸ್ತ್ರೀಗೆ ನೀವೀಟೊಂದು ಸಡ್ಲ ಕೊಡಬಾರ್ದಕ್ಕೋ, ಕೊಡಬಾರ್ದೂ” ಎಂದು ಆಕೆಯ ಕಿವಿಯಲ್ಲಿ ಚುಚ್ಚಿದ. ಆಕೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಿದ್ದ ನನ್ನ ಕಡೆಗೆ ತಿರುಗಿ (ಅವತ್ತು ನಾಟ್ಯಗತಿಯನ್ನು ಹಾಡಿಗೆ ಪೂರಕವಾಗಿ ಹೇಳಿಕೊಳ್ಳುವುದಿತ್ತು) ಭಯಂಕರಮುಖಿಯಾಗಿ ನನ್ನ ಕಡೆ ವಾರೆಗಣ್ಣಿನಿಂದ ನೋಡಿದಳು. ಆ ನೋಟದಿಂದ ಪುಳಕಗೊಂಡೆ. ಹಸಾನ್ಮುಖಿಯಾಗಿ ನೋಟ ಸ್ವೀಕರಿಸಿ “ಏನ್ ಶಾಸ್ತ್ರೀ… ಯೇನ್ಸಮಾಚಾರ! ನನ್ನ ಮೇಲೆ ಕಂದಪದ್ಯ ಗೊಣಗ್ತೀಂತೆ, ಮೈಲಿ ಹೆಂಗೈತೆ? ಎಂದು ಆಕೆ ನನ್ನ ಕೇಳುವ ಬದಲು ತ್ರಿಮೂರ್ತಿಗಳ ಪೈಕಿ ಯಾರನ್ನಾದರೂ ಕೇಳಿದ್ದರೆ ಅವರ ಡ್ರಾಯರೊಳಗೆ ಏರ್‌ಕೂಲ್ಡ್ ಆಗದೆ ಇರುತ್ತಿರಲಿಲ್ಲ. ಕಾರಣ ಆಕೆ ಬಗ್ಗೆ ಎಲ್ಲರಿಗಿಂಥ ಅರ್ಥವಾಗದ ಭಯ ಗೌರವ ಇತ್ತು. ಅಲ್ಲದೆ ಆಕೆ ಜರಿಮಲೆ ಪಾಳೆಗಾರರ ವಂಶ ಸಂಜಾತೆ ಎಂಬ ಗುಸುಗುಸು ಕೂಡ… ಖಾಲಿ ಬೊಗುಣಿಯಂಥ ಪಾಳುಗೋಡೆ ನಡುವೆ ಯಾರಾದರೂ ಎಷ್ಟು ದಿನಾಂತ ಹೊಟ್ಟೆ ಬೋರಲು ಹಾಕಿಕೊಂಡು ಮಲುಗಲು ಸಾಧ್ಯ? ಒಬ್ಬೊಬ್ಬರು ಒಂದೊಂದು ದಾರಿ ಹಿಡಿದುಹೋದಂತೆ… ಅನುಸೂಯಳ ಮುತ್ತಜ್ಜಿಯೂ ಅಂಥದೊಂದು ದಾರಿಗುಂಟ ನಡೆದು ಕೊತ್ತಲಗಿ ತಲುಪಿದ್ದಳು… ಇತಿಹಾಸದ ಎಳೆ ಹಿಡಿದು ಹೊರಟರೆ ಅನಸೂಯಳ ಮೂಲ ಒನಕೆ ಓಬವ್ವನನ್ನು ತಲುಪುತ್ತದೆ…. ಬಾಲ್ಯದಲ್ಲಿ ಆಕೆಯನ್ನು ಕರೆಯುತ್ತಿದ್ದುದು ಹಾಗೆಯೇ. ಮುಕಮುಲಾಜು ನೋಡದೆ ದಡಬಡ ಮಾತಾಡುವುದನ್ನೂ; ಸಮಯ ಬಂದರೆ ಫೈಟಿಂಗ್ ಮಾಡುವುದನ್ನೂ ಪ್ರಯೋಗಿಸುತ್ತಿದ್ದ ಆಕೆ ಎದುರು ಎಂಥವರೂ ತಲೆ ಎತ್ತಿ ನಿಲ್ಲುತ್ತಿರಲಿಲ್ಲ. ಆದರೆ ಆಕೆಯ ಹೃದಯ, ಮನಸ್ಸು ತುಂಬ ಮೃದುವಾಗಿದ್ದವು. ಆಕೆ ಕರಗುತ್ತಿದ್ದಳು… ಸ್ರವಿಸುತ್ತಿದ್ದಳು… ಧಾರಾಳವಾಗುತ್ತಿದ್ದಳು. ಆದ್ದರಿಂದ ಗಂಡಸರು ಅನ್ಯ ದಾರಿ ಕಾಣದೆ ಹೆದರಿ ಮುಖ ತಗ್ಗಿಸುತ್ತಿದ್ದರು. ಸ್ವಲ್ಪ ಹೊತ್ತು ಆಕೆಯ ಚಂಚಲ ನೇತ್ರಗಳನ್ನು ಎದುರಿಸಿದ ಅನುಭವನ್ನು ವರ್ಣಿಸಲು ಸಾಧ್ಯವಿಲ್ಲ. ಆಕೆಯ ಒತ್ತಾಯದ ಮೇರೆಗೆ ನಾನು ಆ ಪದ್ಯವನ್ನು ಗಮಕ ಶೈಲಿಯಲ್ಲಿ ಹೇಳುತ್ತಲೆ ಆಕೆಯ ಬಟ್ಟಲು ಗಣ್ಣುಗಳು ಪಟಪಟ ಬಡಿದುಕೊಂಡವು. ಮುಖ ಅರಳಿತು. ಚೆಂದುಟಿಗಳ ನಡುವೆ ನಗೆ ರಂಗೋಲಿ ಇಟ್ಟಿತು. +“ಅಡ್‌ಗ್ವಾಡೀ ಮ್ಯಾಲ ದೀಪಾ ಇಟ್ಟಂಗ ಹೇಳಿದ್ರೆಂಗರ್ತಾದೀತೋ ಶಾಸ್ತ್ರೀ… ಶಬುದಕ ಶಬುದ ಬುಡಿಸಿ ಅರ್ಥಾ ಒಡೆದು ಹೇಳಲ್ಲ…” ಎಂದು ಕೇಳಿದಳು. +ಆಕೆ ಹೀಗೆ ಮಾತಾಡೋದನ್ನು ನೋಡಿ ನೀನು ಜವಾರಿ ಅಂದಕೋಬ್ಯಾಡ… ನಮ್ಮಪ್ಪ ನಿಮ್ಮಪ್ಪ ಎಲ್ಲರಪ್ಪಗಳಿಗಿಂತ ಆಕೆ ಚೆನ್ನಾಗಿ ಗ್ರಾಂಥಿಕ ಭಾಷೆ ಮಾತಾಡಬಲ್ಲಳು. ಆದರೆ ಅದನ್ನು ಆಕೆ ತೋರಗೊಡುವುದಿಲ್ಲ ಅಷ್ಟೆ. +ನಾನು ಹೆಂಗಪ್ಪಾ ಹೇಳೂದಂತ ಬಾಳ್ಯಾನ ಕಡೆ ನೋಡ್ದೆ… ಬಾಳ್ಯಾ ಆಕೆಗೆ- +“ಇಕ್ಕಡ ಸೆಪ್ಪಂಟೆ ಎಲಾ ಸೆಪ್ತಾಡಕ್ಕಾ… ಇಂಟಿಕಿ ಪಿಲಿಚಿ ಅಡಗಿತೆ ಸೆಪ್ತಾಡು” ಎಂದ ತೆಲುಗಿನಲ್ಲಿ. +ಅವನ ಒಡನಾಟದಲ್ಲಿದ್ದವನಾದ್ದರಿಂದ ನನಗೆ ಅರ್ಥವಾಯಿತು. ಉಳಿದವರಿಗೆ ಅರ್ಥವಾಗಲಿಲ್ಲ. ಆದರೆ ಅವರು ಅವರಿವರನ್ನು ಕೇಳಿ ಅರ್ಥಮಾಡಿಕೊಂಡಿರಲಾರರು ಎಂದುಕೊಂಡೆ. +ಅಂದಿನ ತಾಲೀಮಿನಲ್ಲಿ… ನನ್ನ ಹಾಡು ಕುಣಿತ ಆಕೆಗೆ ತುಂಬ ಇಷ್ಟವಾಯಿತು. “ನಿಜವಾದ ಸಂಗ್ಯಾ ಅಂದ್ರ ನೀನೇ ನೋಡ ಶಾಸ್ತ್ರೀ. ಹಿಂಗೆ ಕುಣಿಯೋರ್‍ನ ನನ್ ಸರ್‌ವೀಸಿನಾಗೀಂದೂ ನೋಡಿಲ್ಲ” ಎಂದು ಅನಸೂಯ ಹೊಗಳಿದಳು… ನಂತರ ಬಂದ ರಮಾಬಾಯಿಗೂ ಇಷ್ಟವಾಯಿತು. ನಮ್ಮಿಬ್ಬರನ್ನು ಒಬ್ಬರ ಎದುರಿಗೆ ನಿಲ್ಲಿಸಿ ನೋಡಿ ಸಮಾಧಾನದ ಉಸಿರುಬಿಟ್ಟಳು… +“ಏನೇ ಅನಸೂವಿ… ನಮ್ಮ ಶಾಸ್ತ್ರಿ ಅಂದ್ರ ಏನಂದ್ಕೊಂಡೀಯೇ… ಇವ್ನೀಗೆ ಬಂಗಾರದ ಪದಕ ಬಂದೈತಲೇ ಬಂಗಾರದ ಪದ್ಕ… ಎಷ್ಟು ಚಂದ ಆಡ್ತಾನೆ ಹಾಡ್ತಾನೆ?… ಅಂತೂ ನಮ್ ಗಂಗೀಗೆ ಸರಿಸಾಟಿಯಾಗೋ ನಿಲ್ಲೋ ಸಂಗ್ಯಾ… ಶಾಸ್ತ್ರೀ ರೂಪದಾಗೆ ಹುಟ್ಟಿ ಬಂದಾನ್ನೋಡು… ನಮ್ಮ ಗಂಗಿ ಸಾಕ್ಷಾತ್ ಗಂಗಮ್ತಾಯಿ ಕಣಪ್ಪಾ ಶಾಸ್ತ್ರೀ… ಆಕೆ ಮಾತು ಬಿಗುವು. ಆದ್ರೆ ಮನಸು ತನುವೆಪ್ಪಾ… ಮುಂದಿನ ದಿನದಾಗ ಗಂಗಿ ಸಂಗ್ಯಾನ್ನಾರ ಉಳಿಸ್ಕೊಳ್ಳಿ, ಸಂಗ್ಯಾ ಗಂಗಿ ಆರ ಉಳಿಸ್ಕಳ್ಳಿ” ಎಂದು ನನ್ನ ಮುಖವನ್ನು ಬೊಗಸೆ ಹಿಡಿದು ಕಣ್ತುಂಬ ನೋಡಿ ರಮಾಬಾಯಿ ಲಟ್ಟಿಗೆ ತೆಗೆದಿ ಹಾರೈಸಿದಳು. +ಅದಕ್ಕೆ ಪ್ರತಿಯಾಗಿ ಅನಸೂಯಾ +“ಶಾಸ್ತ್ರಿ ಖಾಲಿ ಪುಳಿಚಾರೂ ಅಂದ್ಕೊಂಡಿದ್ದೆ. ಒಳ ಒಳಗದಾನವ್ವೋ… ಹೊರಾಗನಿಂದ ಒಳಗಾ ತಗಂಡೋಗಲಾಕ; ಒಳಗಿನಿಂದ ಹೊರಗ ತಗೊಂಡು ಬರಲಾಕ ಅಸಲಿ ಬಾಳ್ಯಾನ್ನೇ ಶಾಸ್ತ್ರೀ ಬಗಲೀಗೆ ತೂಗು ಬಿಟ್ಟಿದ್ದೀನೆವ್ವಾ…” ಎಂದು ನನ್ನ ಕಡೆ ನಿಟ್ಟಿಸಿ ನೋಡಿದಳು. +ನನ್ನ ಜೀವನದ ಅಪರೂಪದ ಗಳಿಗೆ ಎಂದು ಆ ಸಂದರ್ಭವನ್ನು ವರ್ಣಿಸಬಯಸುತ್ತಿರುವೆನು. ಅಷ್ಟೊಂದು ಅಗಲದ, ಬೆಳಕು ತುಂಬಿರುವ, ಅಕ್ಷಯ ಪಾತ್ರೆಯಿಂಥ ಕಣ್ಣ ಗುಡ್ಡೆಗಳುಳ್ಳ ಆಪ್ಯಾಯಮಾನ ನೋಟ ಬೀರುವ ಕಣ್ಣುಗಳನ್ನು ನಾನು ಎಂದೂ ನೋಡಿರಲಿಲ್ಲ… ಅಂಥ ಕಿಕ್ಕಿರಿದ ಜಾತ್ರೆಯಲ್ಲಿ ಸಾವಿರಾರು ಸುಂದರ ಹೆಣ್ಣುಗಳಿದ್ದರೂ ಸಹುಕಾರ ಸಂಗ್ಯಾನ ಚಿತ್ರವನ್ನು ಒಂದೇ ಏಟಿಗೆ ಅಪಹರಿಸಿದ್ದು ಗಂಗಿ ಅಲ್ಲ… ಆಕೆಯ ಕಣ್ಣುಗಳ ನೋಟ… ಆ ಗಂಗಿ ಪಾತ್ರಕ್ಕೆ ನ್ಯಾಯ ದೊರಕುವುದು ಅನಸೂಯಾ ಅಭಿನಯದಿಂದ ಮಾತ್ರ. ಆಕೆಗೆ ಸರಿಜೋಡಿಯಾಗಿ ನಾನು ಸಂಗ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳುವೆನೆಂದು ತಿಳಿದಾಕ್ಷಣ ಇದು ಎಷ್ಟೋ ಜನುಮಗಳ ಆಸೆ ಈ ಜನುಮದಲ್ಲಿ ಈಡೇರ್‍ತದೆ ಎಂದುಕೊಂಡೆ. ಜನುಮಜನುಮದ ಸಂಬಂಧಿಯಾದ ಅನಸೂಯಾಳನ್ನು ಕಂಡರೆ ಎಲ್ಲರೂ ಹೆದರುತ್ತಾರೆಂದು ನಾನ್ಯಾಕೆ ಹೆದರುವುದು? ನಾನು ಆಕೆಯ ಹಕ್ಕು; ಆಕೆ ನನ್ನ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದುಕೊಂಡೆ. ಪಾದ ಮುಚ್ಚುವಂತೆ ನಡೆಯುತ್ತಿದ್ದ; ಪಾದ ಮುಚ್ಚುವಂತೆ ಕೂಡುತ್ತಿದ್ದ, ಹರಟುತ್ತಿದ್ದ ಅನಸೂಯಾ ಕಾಲಿಗೆ ಗೆಜ್ಜೆ ಕಟ್ಟುವುದು ಎಂದೋ ಏನೋ! ಆಕೆಯ ಕಣ್ಣುಗಳನ್ನು ತಪ್ಪಿಸಿ ಆಕೆಯ ಪಾದಗಳನ್ನು ನೋಡುವುದು ಸಾಧ್ಯವಿರಲಿಲ್ಲ. ಯಾವ! ಯಾವ! ಗಂಡುಸು! ತನ್ನ ದೇಹದ ಯಾವ ಯಾವ ಭಾಗವನ್ನು ಗಮನಿಸುತ್ತಿರುವನೆಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಆಕೆಗಿತ್ತು. ಅರೆ ಸೆಕೆಂಡಿನಲ್ಲಿ ಪತ್ತೆ ಹಚ್ಚಿ ಆಕೆ ನೋಡಿಬಿಟ್ಟಳೆಂದರೆ ನೋಡಿಸಿಕೊಂಡವರ ಪುರುಷ ಶಕ್ತಿ ರೆಕ್ಕೆ ಮುರಿದು ಪಾತಾಳ ಸೇರಬೇಕು ಅಷ್ಟೆ, ಆಕೆಯ ಪ್ರೇಮ ನೋಟಕ್ಕೆ ತದ್ವಿರುದ್ಧವಾದ ಶಕ್ತಿ ಇತ್ತು. ಆಕೆ ನೋಟ ಮಾತ್ರದಿಂದ ಕೊರಡನ್ನು ಕೊನರಿಸ ಬಲ್ಲವಳಾಗಿದ್ದಳು. ಅಂಥ ಅನಸೂಯಳ ಕೃಪೆಗೆ ಪಾತ್ರನಾದದ್ದು ನನ್ನ ಜೀವನದ ಮಹತ್ವದ ಘಟನೆ ಎಂದು ಹೇಳಬಹುದು. ಇದೊಂದು ಬಹು ದೊಡ್ಡ ಸಾಧನೆ ಎಂದು ಯಾರೊಬ್ಬರೂ ಗುರುತಿಸಲಿಲ್ಲ. ಅಭಿನಂದಿಸಲಿಲ್ಲ. ಅಭಿನಂದಿಸಿದ ಏಕಮಾತ್ರ ವ್ಯಕ್ತಿ ಎಂದರೆ ಬಾಳ್ಯಾ ಪಾತ್ರಧಾರಿ ರಾಖೇಶ ಮಾತ್ರ. ಇಡೀ ದಿನ ಅನಸೂಯಾಳ್ ದೇಹಸಿರಿ ಮತ್ತು ಆಕೆಯ ಪ್ರಣಯ ವ್ಯವಹಾರಗಳನ್ನು ನಿರ್ಭಿಡೆಯಿಂದ ವರ್ಣಿಸಿದ. ವರ್ತಕ ತನ್ನ ಅಂಗಡಿಯ ಸರಕುಗಳನ್ನು ನಿರ್ಭಿಡೆಯಿಂದ ವರ್ಣಿಸುತ್ತಾನಲ್ಲ ಹಾಗೆ! ಚಿತ್ರಕಾರ ತಾನು ಮಾಡಿದ ಬೊಂಬೆಯ ಸೌಂದರ್ಯವನ್ನು ವರ್ಣಿಸುತ್ತಾನಲ್ಲ ಹಾಗೆ! ದೇಶಭಕ್ತ ತನ್ನ ಮಾತೃದೇಶದ ಬಗ್ಗೆ ಭಾವಪರವಶನಾಗಿ ಮಾತಾಡುತ್ತಾನಲ್ಲ ಹಾಗೆ! ತಾನು ಯಾರನ್ನು ಅಕ್ಕ ಎಂದು ಸಂಭೋದಿಸುತ್ತಿರುವನೋ ಆಕೆ ಅವನ ದೃಷ್ಟಿಯಲ್ಲಿ ಸೋಮವಾರಪೇಟೆ ಎಂಬ ಅಂಗಡಿಯ ಒಂದು ಸರಕು ಮಾತ್ರವಾಗಿದ್ದಳು. ಉದಾತ್ತ ಭಾವನೆಯಿಂದ ಅವನು ಯಾರನ್ನೂ ಕಂಡುದುದಿಲ್ಲ… ಮಾತಾಡುವುದಿಲ್ಲ. ನದಿಯೊಂದು ತಗ್ಗಿನತ್ತ ಪ್ರವಹಿಸುವ ರೀತಿಯಲ್ಲಿಯೇ ಅವನು ಸ್ವಾಭಾವಿಕವಾಗಿ ಮಾತಾಡುವುದು ಫ್ಯಾನ್ ಎಂಬ ಯಂತ್ರ ಸೃಷ್ಟಿಸುವ ಗಾಳಿಗೂ, ಮೆಲ್ಲನೆ ಬೀಸುವ ತಂಗಾಳಿಗೂ ವ್ಯತ್ಯಾಸ ಇರುತ್ತದಲ್ಲ; ಹಾಗೆ. ಅವನದು ಸ್ಫಟಿಕ ಜಲದಂಥ ಮನಸ್ಸು. ಅವನ ಮನಸ್ಸೆಂಬುದು ಪಾರದರ್ಶಕ ಗಾಜಿನ ಕೊಳವೆ… ಅಲ್ಲಿ ಒಬ್ಬೊಬ್ಬರು ಸಾವಿರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ… ಅರಿಷ್ಡ್ವರ್ಗಗಳಿಗೆ ಪಠ್ಯ ಮತ್ತು ಪಠ್ಯೇತರ ಸಂಗತಿಹಳನ್ನು ಭೋದಿಸಿ ಗಟ್ಟಿಗೊಳಿಸುವ ನಾಡೋಜ ಅವನೆ.. ಪಂಪ, ರನ್ನ , ಕುಮಾರವ್ಯಾಸ, ಷಡಕ್ಷರದೇವ, ಲಕ್ಷ್ಮೀಶ ಮೊದಲಾದ ಮಾರ್ಗ ಕವಿಗಳೇನಾದರು ಬದುಕಿದ್ದರೆ ಖಂಡಿತ ಅವನ ಮುಂದೆ ಸೋಲೊಪ್ಪಿಕೊಳ್ಳದೆ ಇರುತ್ತಿರಲಿಲ್ಲ… ಅಂಥದ್ದು ಅವನ ಸುಷ್ಟಿಶೀಲ ವ್ಯಕ್ತಿತ್ವ… ಸೃಜನಶೀಲ ಮನಸ್ಸು… +ಹೆಂಡತಿ ತನ್ನತ್ತೆಯೊಂದಿಗೆ ತಾಯ್ತನದ ಕನಸು ಕಾಣುತ್ತ ಕೊಟ್ಟೂರಿನಲ್ಲಿರುವಾಗ ನಾನೋರ್ವನೆ ಚಲುವಯ್ಯ ಕಟ್ಟಿಸಿದ್ದ ಸುಂದರ ಮನೆಯಲ್ಲಿ ಮೊಳೆಯುವ ಅವಸರದ ಬೀಜಗಳನ್ನು ಎದೆ ಮಡಕೆಯೊಳಗೆ ಧರಿಸಿಕೊಂಡು ಇದ್ದೆನಲ್ಲ. ಆಗ ಅವನನ್ನು ಹೆಚ್ಚು ಜೊತೆ ಮಾಡಿಕೊಂಡೆ. ಅವನು ಇದ್ದಕಿದ್ದಂತೆ ನಾಪತ್ತೆಯಾಗುತ್ತಿದ್ದ, ಇದ್ದಕಿದ್ದಂತೆ ಪ್ರತ್ಯಕ್ಷವಾಗಿಬಿಡುತ್ತಿದ್ದ. +ಅಡಚಣೆ ಎಂಬ ಪದದ ಜೀವಂತ ವ್ಯಾಖ್ಯಾನವಾಗಿದ್ದ. ಪೂರ್ಣಾಂಕ ಸ್ಥಾನದಲ್ಲಿದ್ದಾಗಲೂ ಅಷ್ಟೇ ಖುಷಿಯಿಂದ ಇರುತ್ತಿದ್ದ. ದಶಮಾಂಶ ಸ್ಥಾನದಲ್ಲಿದ್ದಾಗಲೂ ಅಷ್ಟೇ ಖುಷಿಯಿಂದ ಇರುತ್ತಿದ್ದ. ಶೂನ್ಯ ಸ್ಥಾನದಲ್ಲಿದ್ದಾಗಂತೂ ಅವನೇ ‘ಸಕಲಕಲಾವಲ್ಲಭನ್’ ನಾನು ಅಡಚಣೆ ಎಂಬ ಮಾರಕಾಸ್ತ್ರದ ಧಾಳಿಗೆ ತುತ್ತಾಗಿದ್ದಾಗ ಎಲ್ಲಿಂದಲೋ ವಕ್ಕರಿಸುತ್ತಿದ್ದ, ನಿಶ್ಶಬ್ದವಾಗಿ ಜೇಬಿನಲ್ಲಿಟ್ಟುಬಿದುತ್ತಿದ್ದ. ತಾನೂ ಕೂಡ ಅಷ್ಟೆ… ನನಗೆ ಹೇಳದೆ ಕೇಳದೆ ಜೀಬಿನಿಂದ ಲಪಟಾಯಿಸುತ್ತಿದ್ದ. ಹಣವನ್ನೆಂದೂ ಎಣಿಸಿಕೊಳ್ಳುತ್ತಿರಲಿಲ್ಲ… ಮನೆಯಲ್ಲಿ ಕೈಗೆ ಸಿಕ್ಕ ವಸ್ತು ಒಯ್ದು ಬಿಡುವುದು ಬೆಲೆಬಾಳುವುದಾಗಿದ್ದರೆ ಎಲ್ಲಿಯಾದರೂ ಒತ್ತೆ ಇಟ್ಟು ದುಡ್ಡು ಇದ್ದಾಗ ತಾನೇ ಬಿಡಿಸಿಕೊಂಡು ತಂದು ಮನೆಯಲ್ಲಿಡುತ್ತಿದ್ದ. ಇಂಥವನು ಅವನು. ಕೇಳಿದರೆ ನಿನ್ನನ್ಯಾಕೆ ಕೇಳಬೇಕು? ಎಂದು ಗದರಿಸುತ್ತಿದ್ದ. +‘ಅಂಥವನು ಬಂದ… ಅಲ್ಲೇ ಶೌಚಕ್ಕೆ ಹೋಗುವಿಯಂತೆ ಹೊರಡು’ ಎಂದ. ಹೊರಟೆ. ಆಗ ಅವನು ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟದ್ದು ಅನಸೂಯಳ ಮನೆಯಲ್ಲಿ. ಮನೆಯಲ್ಲಿ ತಾನೊಬ್ಬಳೆ ಇದ್ದಳು. ರಾಖೇಶ ಕದ ಮುಚ್ಚಿಕೊಂಡು ಹೋದೊದನೆ ನನ್ನೆದೆ ಡವಡವ ಅಂತ ಬಡಿದುಕೊಳ್ಳತೊಡಗಿತು. ನಡುಗುತ್ತ; ತೊದಲುತ್ತ; ವರ್ತಮಾನದ ಅಸ್ಪಷ್ಟ ಕಲ್ಪನೆಯ ಸೊಗಸಿಗೆ ಬೆರಗಾಗಿ ನಿಂತಿದ್ದ ನನ್ನನ್ನು ಕೂಡ್ರಲು ಹೇಳಿದಳು. +“ಶಾಸ್ತ್ರೀ… ಅದ್ಯಾವುದೋ ಪದ್ಯ ಹೇಳ್ದಿಯಲ್ಲ. ಅದರರ್ಥ ಹೇಳು” ಎಂದಳು. ಆಜ್ಞೆ ಧಾಟಿಯಲ್ಲಿ! ನನ್ನಲ್ಲಿ ಬುದಬುದನೆ ಹುಟ್ಟಿಕೊಂಡ ಭಾವನೆಗಳನ್ನು ಅಳೆಯಲು ಸಾಧ್ಯವೆ? +ಅನಸೂಯಮ್ಮೋರೆಽಽ… ಎಂದು ನಾನು ಹೇಳುತ್ತಿರುವಲ್ಲಿ +“ಥೂ… ನಿನ ಬಾಯಾಗ ನನ ಹಾಟುಯ್ಲಿ!… ಒಳ್ಳೆ ಮಿಂಡನ್ತರ ನೋಡ್ತಿದ್ದೀ… ಏನೆ ತಾನೆ ಅಂತ ಅನ್ನೋಕೇನಾಗೈತೆ ದಾಡಿ. ಶಾಸ್ತ್ರಿ… ಇವತ್ತು ಮಲಿಕ್ಕನ್ನಂಗಿದ್ರೆ ಮಲಿಕ್ಕವಂತೀ… ಅದ್ಯಾಕೋ ನಿನಮ್ಯಾಲ ನಂಗೂ ಮನಸಾಗೈತೆ… ನಿಂಗೂ ನನ್ಮ್ಯಾಲ ಮನಸೈತಿ. ಅಂದ ಮ್ಯಾಲ್ಯಾಕೆ ಅಮ್ಮೋರೆ ಗಿಮ್ಮೋರೆ ಕತ್ತೆ ಸ್ಯಾಟಾ…” ಎಂದು ಏಕ್‌ಧಮ್ ಗದರಿಸಿಬಿತಳು. +ಆಕೆಯ ನೇರ ಮಾತಿಗೆ ಜಲಜಲ ಬೆವತು ಬಿಟ್ಟೆ. ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ಮಾಂತ್ರಿಕ ಶಕ್ತಿಗೆ ವಶವಾದ ಗೊಂಬೆಯಂತೆ ಹತ್ತಿರ ಹೋದೆ. ಸೊಂಟದ ಸುತ್ತ ಕೈ ಹಾಕಿ ಅಮುಕಿದಳು. ನಾನುಹ್ಹಾ ಎಂದು ನರಳಿದೆ. ಭಾಳ ಹಸ್ಕೊಂಡಂಗಿದ್ದೀ ಅಲ್ಲಾ ಎಂದಳು. ನಾನು ‘ಹ್ಹೂಂ’ ಅಂದೆ. ನನ್ನ ಬಗ್ಗೆ; ನನ್ನ ವಂಶದ ಬಗ್ಗೆ; ನನ್ನ ತಾತನವರ ಬಗ್ಗೆನನ್ನ ಸೃಜನಶೀಲ ಅಭಿರುಚಿಗಳ ಬಗ್ಗೆ; ನನ್ನ ವೈವಾಹಿಕ ಸಂಬಂಧದ ಬಗ್ಗೆ; ನಾನು ತನಗಾಗಿ ಹಪಹಪಿಸುತ್ತಿದ್ದುದರ ಬಗ್ಗೆ; ಎಲ್ಲ ವಿಷಯ ಸಂಗ್ರಹಿಸಿದ ನಂತರವೇ ಕರೆಸಿಕೊಂಡಿರುವುದಾಗಿ ಹೇಳಿದಳು. ಈಗ ಈ ದೇಹ ನಿನ್ನದು… ಈ ದೇಹದ ಪ್ರತಿಯೊಂದು ಅಂಗಗಳು ನಿನ್ನವು… ಇವನ್ನೆಲ್ಲ ಮುಟ್ಟುತ್ತ, ತಟ್ಟುತ್ತ ಒಳಹೊಕ್ಕು ಹೃದಯ ತುಂಬಿ ಜೀಕುವ ಕೆಲಸ ಕೆಲಸ ಮಾಡುವಂತೆ ಸೂಚಿಸಿದಳು. “ಅನಸೂವಿ… ಅನಸೂವಿ” ಎಂದು ಉದ್ಗರಿಸುತ್ತ ಆಕೆಯ ದೇಹದ ಉಬ್ಬುತಗ್ಗುಗಳ ತುಂಬ ಸ್ಪರ್ಶದ ಬಿತ್ತನೆ ಮಾಡಿದೆ. “ಅನಸೂವಿ, ಆ ಕಂದಪದ್ಯದ ಅರ್ಥ ಹೇಳ್ಲಾ” ಅಂದೆ. ಮಾಡೋದು ಮಾಡ್ಕೊಳ್ಳೋ ಅಂದ್ರೆ ಅರ್ಥ ಹೇಳ್ತಾನಂತೆ ಅರ್ಥ” ಎಂದು ಗದರಿಸಿದಳು. “ನೀನೆ ಯಾಕೆ ಹೇಳ್ಬೇಕು ನಾನೇ ಹೇಳ್ತೀನಿ ನೋಡು. ಆ ನಾಡಿನಲ್ಲಿ ಬಡತನವೆಂಬುದು ಅಲ್ಲಿನ ಸ್ತ್ರೀಯರ ಬಡ ನಡುವಿನಲ್ಲಿ, ಸೋಮಾರಿತನವೆಂಬುದು ಅವರ ನಿಧಾನ ನಡುಗೆಯಲ್ಲಿ, ಇರಕಟ್ಟೆಂಬೋದು ಅವರ ದೊಡ್ಡ ಮೊಲೆಗಳಲ್ಲಿ, ಚಂಚಲತೆ ಎಂಬುದು ಅವರ ಕುಡಿಗಣ್ಣಿನ ನೋಟದಲ್ಲಿ, ಕುಟಿಲತೆ ಎಂಬೋದು ಅವರ ಮುಂಗುರುಳುಗಳಲ್ಲಿದ್ವೂ ಅಂತ ಷಡಕ್ಷರ ಬರ್‍ಕೊಂಡಿದ್ದಾನೆ… ಇಷ್ಟೇ ಅಲ್ಲೇನು!” ಎಂದು ವಿವರಿಸಿ ಹೇಳಿದೊಡನೆ ಆಕೆಯ ಕಾವ್ಯ ಸಹೃದಯ ಶಕ್ತಿ ಕಂಡು ಮಂತ್ರಮುಗ್ಧನಾದೆ. +ಇಂಥ ನನ್ನ ಅನಸೂಯಾ ಜವಾರಿ ಹೇಗಾದಾಳು! ಹೇಳು? ಇಲ್ಲಿ ರೋಮ್ಯಾಂಟಕ್ಕಾಗಿ, ಎರೋಟಕ್ಕಾಗಿ ವರ್ಣನೆ ಮಾಡ್ಲಿಕ್ಕೆ ನನ್ನಿಂದ ಸಾಧ್ಯವಿಲ್ಲ ಮಾರಾಯ. ಶತ ಶತಮಾನದಿಂದ ಲೈಂಗಿಕ ಸುಖದಿಂದ ವಂಚಿತಗೊಂಡಿರುವ ಮನುಷ್ಯ ಸುಂದರ ಸ್ತ್ರೀಯೊಂದಿಗೆ ಏಕಾಂತದಲ್ಲಿ ಏನು ಮಾಡಿರುವುದು ಸಾಧ್ಯವೋ… ಅದನ್ನೇ ನಾನು ಮಾಡಿದ್ದು… ಲೈಂಗಿಕ ಸಂತೃಪ್ತಿ ಎಂಬುದು ಕೇವಲ ಎರಡು ದೇಹಗಳಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಅರ್ಥಮಾಡಿಕೊಂಡೆ. ಅದೊಂದು ವರ್ಣನೆಗಳಿಗೆ ಅಕ್ಷರಗಳಿಗೆ ಪಂಚೇಂದ್ರಿಯಗಳಿಗೆ ನಿಲುಕದ ಒಂದು ಅಪೂರ್ವ ಸಮಾಗಮ. ಪಾಮರನಾದ ನಾನು ಶಿಖಿರ ತಲುಪಿದ ಸುಖ ಇಂಥದ್ದಕ್ಕೆ ಸಂಬಂಧಿಸಿದ್ದೆಂದು ಹೇಳಿ ಆಕೆಗಾಗಲೀ; ಆಕೆ ದಯಪಾಲಿಸಿದ ಸುಖಕ್ಕಾಗಲೀ ಅಪಚಾರ ಮಾಡಲಾರೆ. ಕುತಜ್ಞತಾಪೂರ್ವಕವಾಗಿ ಆಕೆಯ ದೇಹದ ಸಮಸ್ತ ಒಳಹೊರ ಸೌಂದರ್ಯವನ್ನು ಪಂಚೇಂದ್ರಿಯಗಳವಧರಿಸಿ ಬಂದ ನಂತರ ಎಷ್ಟೋ ದಿನಗಳವರೆಗೆ ಈಡಾಪಿಂಗಳ ಸುಷುಮ್ನ ನಾಳಮಧ್ಯೆ ನಿದ್ದೆ ಹೋಗಿದ್ದೆ… ಅಂದರೆ ಆ ಸುಖದ ಪರಿಮಾಣ ಮತ್ತು ಪ್ರಮಾಣಗಳನು ನೀನೇ ಊಹಿಸು. ಸಂಭೋಗದ ಅತಿಶಯಾನಂದದಿಂದ ಒಳಪ್ರವೇಶಿಸಿ ನೆಲೆಗೊಂಡ ಅನಸೂಯಾ ನನ್ನೆಲ್ಲ ಇಚ್ಛಾಶಕ್ತಿಯಾದಳು. ಮತ್ತೆ ಮತ್ತೆ ನೆನಪಾಗುತ್ತಿದ್ದುದು ಈಕೆಯೇ ಹೊರತು ಹೊರಗಿನ ಉತ್ಸವ ಮೂರ್ತಿ ಅನಸೂಯಳಲ್ಲ. ನಾನು ಕೂಗಿದೊಡನೆ ಅಂತರಂಗದಲ್ಲಿ ದೇವತಾಮೂರ್ತಿ ಅನಸೂಯ ‘ಹೋ’ ಎನ್ನುತ್ತಿದ್ದಳು. ಒಂದೊಂದು ಇಂದ್ರಿಯಕ್ಕೆ ಒಂದೊಂದು ರೂಪ ಕಾಣಿಸಿಕೊಳ್ಳುತ್ತಿದ್ದಳು. ಸುಖ ಕರುಣಿಸುತ್ತಿದ್ದಳು… ರಿಪೇರಿ ಮಾಡುತ್ತಿದ್ದಳು… ಅಥವಾ ಸುಸ್ಥಿತಿಯಲ್ಲಿರುವುದನ್ನು ಕೆಡಿಸುತ್ತಿದ್ದಳು. ನಿಜಕ್ಕೂ ಆಕೆ ಲೀಲಾವಿನೋದಿನಿಯಾಗಿದ್ದಳು ಕಣಪ್ಪಾ… ಈ ನೆನಪಿನಲ್ಲಿದ್ದ ನಾನು ಬಹಳ ದಿನಗಳಿಂದ ಕೊಟ್ಟೂರಿಗೆ ಹೋಗಿರಲಿಲ್ಲ. ಹೆಂಡತಿಯ ತುಂಬುಗರ್ಭವನ್ನು ನೇವರಿಸಿರಲಿಲ್ಲ. ವೃದ್ಧ ಮಾತೆಯ ಆರ್ದ್ರ ಹೃದಯಕ್ಕೆ ಸ್ಪಂದಿಸಿರಲಿಲ್ಲ. ಅಲೌಕಿಕ ಅನುಭೂತಿಯ ಶೃಂಗವನ್ನಲಂಕರಿಸಿದ್ದ ನಾನು ಸ್ವಯಂ ಕೃತಾಪರಾಧಗಳ ಪಟ್ಟಿ ಕಡೆಹೇಗೆ ಕಣ್ಣು ಹರಿಸಲು ಸಾಧ್ಯವಾದೀತು ಅಲ್ಲವೇ? ಈ ಶಾಮ ಪ್ರತಿದಿನ ಅನಸೂಯಳ ಪಲ್ಲಂಗದ ಮೇಲೆ ಬಿದ್ದಿರಬಹುದೆಂದು ಯೋಚಿಸಬೇಡ… ನನಗಾಗಲೀ, ಆಕೆಗಾಗಲೀ ಬೇರೆ ಕೆಲಸವಿರಲಿಲ್ಲವೆಂದು ತಿಳಿದುಕೊಂಡಿರುವಿ ಏನು! ನಾನು ಆಗೊಮ್ಮೆ ಈಗೊಮ್ಮೆ ಆಕೆಯ ಮನೆಗೆ ಹೋಗುತ್ತಿದ್ದುದುಂಟು. ಕಾರಣ ಕಾರಣ ಆಕೆ ಎಲ್ಲಿಂದಲೋ ತಂದು ಸಾಕಿಕೊಂಡಿದ್ದ ಕಾಂಚನಾ ಎಂಬ ಬಾಲಕಿಯ ಅಗತ್ಯಗಳನ್ನು ಪೂರೈಸಲೆಂದು. ಅಲ್ಲದೆ ಆ ಬಾಲಕಿಗೆ ಆಗಾಗ್ಗೆ ಹೋಗಿ ಕರ್ನಾಟಕ ಸಂಗೀತದ ಪಾಠ ಹೇಳಿಕೊಡುತ್ತಿದ್ದೆ. ಅಪರೂಪಕ್ಕೊಮ್ಮೆ ಅನಸೂಯ ದೇಹದ ಸಾಂಗತ್ಯ ಬಯಸಿ ಹೋಗುತ್ತಿದ್ದುದೂ ಉಂಟು. ಒಳಗಡೆ ಯಾರೊಂದಿಗೋ ಮಲಗಿರುವುದು ತಿಳಿದು ವಾಪಸಾಗುತ್ತಿದ್ದುದೂ ಉಂಟು. ಅದನ್ನು ಹೇಳಿದಾಗ “ಕೂಗ್ಲಿಕ್ಕೇನಾಗಿತ್ತು ರೋಗ… ಅವನ್ನ ಕಳಿಸಿ ನಿನ್ನ ಕರ್‍ಕೊಳ್ತಿದ್ನಲ್ಲಾ” ಎಂದು ಹೇಳಿಬಿಡುತ್ತಿದ್ದಳು. ನನ್ನೊಂದಿಗೆ ಆಕೆ ತನ್ನ ಖಾಸಗಿ ಬದುಕಿನ ಬಗ್ಗೆ ಚರ್ಚಿಸುತ್ತಿದ್ದಳು. ನಾನು ಕೂಡ ಅಷ್ಟೆ-ಶಾಲಾ ಬಾಲಕನಂತೆ ಬದುಕಿನ ವರದಿ ಒಪ್ಪಿಸುತ್ತಿದ್ದೆನು. ನಮ್ಮ ಸಂಬಂಧ ವೈವಾಹಿಕ ಚೌಕಟ್ಟಿನೊಳಗೆ ಬರುವುದೋ? ವಿವಾಹೇತರವೋ? ಅನೈತಿಕವೋ?! ನಮ್ಮೀರ್ವರಿಗೂ ತಿಳಿಯದು. ಆದರೆ ಈ ನಮ್ಮ ಸಂಬಂಧದ ಬಗ್ಗೆ ಕೊತ್ತಲಗಿ ಗ್ರಾಮ ಜನತೆ ತಲೆಕೆಡಿಸಿಕೊಂಡದ್ದು; ಅದು ಪ್ರಕಟವಾಗಿದ್ದು ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನದ ದಿನ. ಅದಕ್ಕೂ ಮೊದಲು ಅವರಿವರು, ನನ್ನ ಸಹೋದ್ಯೋಗಿಗಳು ಕೇಳಿದಾಗ ಹೌದೆಂದು ಕೇಳಿದಾಗ ಹೌದೆಂದು ಹೇಳಿ ಬಾಯಿಮುಚ್ಚಿಸಿಬಿಟ್ಟಿದ್ದೆ. +ಎಲ್ಲರಿಗೂ ಹೇಳಿಕೊಂಡು ಅಡ್ಡಡುತ್ತಿದ್ದವನೆಂದರೆ ರಾಖೇಶ. ಎಂಥೆಂಥ ಹೇಮಾಹೇಮಿಗಳಿಗೂ ದೊರಕದ ಅನಸೂಯಾ ಶಾಸ್ರಿ ಕಡ್ಡಿ ಪೈಲ್ವಾನ ಶಾಸ್ತ್ರಿಗೆ ಹೇಗೆ ವಶವಾದಳು? ಅವನೇನಾದರೂ ಆಕೆಗೆ ಮಾಟ ಮಂತ್ರ ಮಾಡಿಸಿರಬಹುದೋ! ಎಂದು ಮುಂತಾಗಿ ಮಾತಾಡಿಕೊಳ್ಳುತ್ತಿದ್ದರು. ಸಂಗ್ಯಾ ಬಾಳ್ಯಾ ನಾಟಕ ಶುರುವಾಗುವಾಗ ಗುಲಾಂನಬಿ ಊರಲ್ಲಿದ್ದಿದ್ದರೆ ಅನಸೂಯಾಳೆದರಿಗೆ ತಾನೇ ಸಂಗ್ಯಾನ ಪಾತ್ರ ಮಾಡುವುದಾಗಿ ಪಟ್ಟುಹಿಡಿದು ಕೂಡ್ರದೆ ಬಿಡುತ್ತಿರಲಿಲ್ಲ. ಶ್ರೀಮತಿ ಹೆಗಡೆಯವರ ಬುಲಾವ್ ಮತ್ತು ಅಪ್ಪಣೆ ಮೇರೆಗೆ ಜಯಮಹಲ್ ಬಡಾವಣೆಯ ಮನೆಯ ಕಿಚನ್ ವಿಭಾಗಕ್ಕೆ ಫರ್ನಿಷಿಂಗ್ ಮಾಡಲು ಹೋಗಿದ್ದನು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಲು ಪೈಪೋಟಿ ನಡೆಸಿದ್ದ ಭುವನೇಶ್ವರಿ ಪ್ರಯತ್ನಕ್ಕೆ ಉಪಮುಖ್ಯಮಂತ್ರಿ ಜಟ್ಟಿ ಜಗನ್ನಥಯ್ಯನವರ ಕೈಯಿಂದ ಕಲ್ಲು ಹಾಕಿಸಿ ಕೊತ್ತಲಿಗಿ ಸೇರಿಕೊಂಡಿದ್ದ. ರಾತ್ರಿ ಬೆಡ್ರೂಮಿಗೆ ಪ್ರವೇಶಿಸುತ್ತಿದ್ದಂತೆ ವಿಷಯ ಎಲ್ಲ ಗೊತ್ತಾಗಿ ಕೈಬೆರಳು, ಕಾಲುಬೆರಳು ಮುರಿದುಕೊಂಡ. ಗಂಜಾಂ ನಾಗಪ್ಪನ ವಜ್ರದಂಗಡಿಯೊಳಗೆ ಕಳುಹಿಸುವುದಾಗಿ ಆಸೆ ತೋರಿಸಿದರೂ ಮಾಜಿ ಮಂತ್ರಿ ಪ್ರಮಾಧೀನೇಂದ್ರ ಹೆಗ್ಗಡೆಯವರೊಂದಿಗೆ ಹೌರಾ ಬ್ರಿಡ್ಜ್ ಮೇಲೆ ವಾಕಿಂಗ್ ಮಾಡದ ಇಷ್ಟ ಪಡದ ಅನಸೂಯಾ ಆ ಪುಳಿಚಾರ್ ಶಾಸ್ರಿಯಲ್ಲಿ ಅದೇನು ಕಂಡಳು? ಅವಳೊಂದಿಗೆ ಸಂಗ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದು ತನ್ನ ಬಹುದಿನದ ಆಸೆ. ಪ್ರಸ್ತಾಪಿಸಿದಾಗ ಆಕೆ, “ಏಯ್… ಸಂಗ್ಯಾನ ಪಾತ್ರ ಅಂದ್ರೆ ಮೀಸಿಗೆ ಬಣ್ಣ ಹಚ್ಕಂಡಷ್ಟು ಸಲಭಾಂತ ತಿಳ್ಕೊಂಡೀ ಏನೋ ಸಾಬಣ್ಣ… ನನ್ ಜತಿ ಬಣ್ಣ ಹಚ್ಚಿಕಳಕಂದ್ರ ಮುಂದಿನ ಜನುಮದಾಗ ಹುಟ್ಟಿ ಬರ್ಬೇಕು…” ಎಂದು ಬಾಯಿಗೆ ಬಂದಂಗ ಮಾತಾಡಿದ್ರೂ ನಬಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಅವನಿಗೆ ಸಿಟ್ಟು ಹುಟ್ಟಿದ್ದು ಸಂಗ್ಯಾನ ಪಾತ್ರಧಾರಿ ಶಾಸ್ತ್ರಿ ಮೇಲೆ. ಅದೂ ಅಲ್ಲದೆ ಅವನು ಅನಸೂಯಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿರುವನೆಂಬುದಾಗಿ ಖುದ್ಧ ರಾಖೇಶನೇ ಬಂದು ಹೇಳಿ ಸಾಬನ ಕೋಪವನ್ನು ದ್ವಿಗುಣಗೋಲಿಸಿದ್ದ. “ನಬೀಗೆ ನಿನ್ ಮೇಲೆ ಸಿಟ್ಟು ಬರೋಹಂಗ ಮಾಡಿದ್ದೀನಿ… ನೀನೆಂಗಂದ್ನ ಎದುರಿಸ್ಟೀಯೋ ಎದುರ್‍ಸು” +– ಎಂದು ಮುಂತಾಗಿ ಹೇಳಿ ನನ್ನನ್ನು ಆತಂಕದ ಸ್ಥಿತಿಯಲ್ಲಿ ಇಟ್ಟವನೂ ಅವನೆ. ಇದನ್ನೆಲ್ಲ ಸಹಿಸಬಹುದು… ಆದರೆ ರಾಂಪುರಕ್ಕೆ ಹೋಗುವುದಾಗಿ ನನ್ನಿಂದ ಐವತ್ತು ರೂಪಾಯಿ ಪಡೆದು ಅವನು ಗುಟ್ಟಾಗಿ ಹೊರಟದ್ದು ಕೊಟ್ಟೂರಿಗೆ. ಯಾವುದೋ ಸೂತಕ ಸುದ್ದಿ ಹೊತ್ತು ತಂದಿರುವವನಂತೆ ಮುಖ ಮಾಡಿಕೊಂಡು “ಅಮ್ಮೋ” ಎಂದು ಕೂಗಿದ್ದನ್ನು ಕೇಳಿಸಿಕೊಂಡು ಅತ್ತೆ ಸೊಸೆಯರೀರ್ವರೂ ಹೌಹಾರಿಬಿಟ್ಟರು. ಅಲ್ಲಿ ನನ್ನ ಪರಮಾಪ್ತ ಗೆಳೆಯನಿಂದ, ನಿಮ್ಮ ಮಗನು ಬಾಯಾ ಸಂಗ್ಯಾನ ಆಟದಲ್ಲಿ ಸಂಗ್ಯಾನ ಪಾರ್ಟುಕಟ್ಟಿರುವನೆಂದೂ, ಸೋಮವಾರಪೇಟೆಯ ಐದಾರು ಮಂದಿ ವೇಶ್ಯೆಯರೊಂದಿಗೆ ಸಂಬಂಧ ಇಟ್ಟುಕೊಂಡಿರುವನೆಂದೂ ಹೇಳಿ ವಾಪಸಾದನು. ಇದು ನನಗೆ ಗೊತ್ತಗಲಿಲ್ಲ. ನಾಳ್ಯೋ ನಾಡಿದ್ದೋ ನಿನ್ಗೆ ಗ್ರಾಚಾರ ವಕರಸತೈತಿ… ಎಸುರಿಸೋಕೆ ಸಜ್ಜಾಗಿರು ಅಂದ. ಗಾಬರಿಗೊಂಡೆ. ಸಿಟ್ಟಿಗೇಳಲಿಲ್ಲ. ನನ್ನನ್ನು ಏನೆಲ್ಲ ತೊಂದರೆಗೀಡುಮಾಡುವ ಸಮಸ್ತ ಅಧಿಕಾರವನ್ನು ಅವನಿಗೆ ಧಾರೆ ಎರೆದುಬಿಟ್ಟಿದ್ದೆ. ಪ್ರತಿಭಟಿಸುವಂತಿರಲಿಲ್ಲ. ಸಿಟ್ಟಿಗೇಳುವಂತಿರಲಿಲ್ಲ. ಹಾಗೇನಾದರೂ ಮಾಡಿದರೆ ಠೂ ಬಿಡುವುದಾಗಿ ಹೆದರಿಸಿದ್ದ. +ತುಂಬು ಗರ್ಭಿಣಿ ಸೊಸೆಯೊಂದಿಗೆ ವೃದ್ಧೆ ಅಲುಮೇಲಮ್ಮನವರು ಮರುದಿನ ಕೊತ್ತಲಗಿಗೆ ಇಳಿದು ಕೊಟ್ರಮ್ಮನ ಗುಡಿಗೆ ಬಂದು “ಅಯ್ಯೋ ನಮ್ಮ ಬ್ರಾಹ್ಮಣ್ಯವೇ” ಎಂದು ಅಬ್ಬರಿಸತೊಡಗಿದಾಗಲೇ ಬಾಳ್ಯಾನ ಕುತಂತ್ರ ನನಗೆ ಅರ್ಥವಾದದ್ದು. ನನ್ನ ಸಹಾಯಕ್ಕೆ ಎಲ್ಲರೂ ಬಂದರಾದರೂ ಬಾಳ್ಯಾ ವೇಷಧಾರಿ ಮಾತ್ರ ಅತ್ತೆ ಸೊಸೆ ಪಕ್ಷ ವಹಿಸಿದನು. +“ಸಂಗ್ಯಾ ಬಾಳ್ಯಾನ ನಾಟ್ಕಾ ಆಡ್ಲಿಕ್ಕೆ ಶಾಸ್ತ್ರಿಗಳ ಪವಿತ್ರ ವಂಶದಲ್ಲಿ ಹುಟ್ಟಿದ ನಿನಗೆ ಅದೆಷ್ಟು ಧೈರ್ಯ ಬಂತೋ ಶಾಮಾ… ಅಮೇಧ್ಯಕ್ಕೆ, ಮದ್ಯಕ್ಕೆ ಹಲ್ಲು ಹತ್ತಿರೋದಲ್ದೆ ಈ ಹೊಲೇರಾಡೋ ನಾಟಕಾನ ಬೇರೆ ಆಡ್ಟೀಯಾ… ಮರ್ಯಾದೆಯಿಂದ ಹೊರಟು ಬರ್‍ತೀಯೋ ಇಲ್ವೋ?” ಎಂದು ಮುಂತಾಗಿ ಅಬ್ಬರದ ಮಾತುಗಳನ್ನಾಡುತ್ತಿರುವ ತಾಯಿಯೂ- +“ರಾಮ ರಾಮಾ… ಎಂಥ ಕೆಲ್ಸ ಮಾಡ್ತಿದೀರಲ್ರಿ ನೀವು… ಇಂಥ ಕೆಟ್ಟ ಗುಣಗಳು ಹೇಗೆ ಬಂದ್ವಂತೀನಿ! ಶೂದ್ರರಾಗಿ ಬಿಟ್ಟಿದ್ದೀರಲ್ಲ ನೀವು… ನಿಮ್ಮ ಮೈಮೇಲೆ ಪವಿತ್ರ ಯಜ್ಞೋಪವೀತ ಮೇರೆ ಕಾಣಿಸ್ತಿಲ್ವಲ್ಲ… ಎಲ್ಲ ದುಷ್ಟರ ಸಾವಾಸ… ನಮ್ಮೆಜಮಾನ್ರಿಗೆ ದುಷ್ಚಟಗಳನ್ನು ಕಲಿಸ್ದೋರ ವಂಶ ನಿರ್ವಂಶ ಅಗದಂತಿರ್‍ತದೇನು! ಪತಿವ್ರತೆಯಾದ ನಾನು ನಿಟ್ಟುಸಿರುಬಿಟ್ಟ್ರೆ ಅವರಿಗೆ ಒಳ್ಳೇದಾಗೊಲ್ಲ… ನೌಕ್ರೀನು ಬೇಡ… ದರಿದ್ರ ಕೊತ್ತಲಗೀನೂ ಬೇಡ… ಹೊರಟು ಬಂದುಬಿಡಿ… ಬದುಕೋಕೆ ವೈದಿಕ ಇದ್ದೇ ಇದೆ” ಎಂದು ರೋಧನ ಮಾಡುತ್ತಿರುವ ತುಂಬ ಗರ್ಭಿಣಿ ಪತ್ನಿಯೂ… +ಅವರ ಯಾವ ಮಾತುಗಳಿಂದಲೂ ನಾನು ಎಳ್ಳಷ್ಟು ವಿಚಲಿತನಾಗಲಿಲ್ಲ. ಅವರ ಗುರಿಯಾದ ಶಾಮ ನಾನಾಗಿರಲಿಲ್ಲ… ಅವರಿವರು ಸಮಾಧಾನ ಹೇಳಿದರೂ ಪ್ರಯೋಜನವಾಗಲಿಲ್ಲ… ಮಾತಿಗೆ ಮಾತು ಸೇರಿ ಹುಟ್ಟಿದ ಕಿಚ್ಚು ವ್ಯಭಿಚಾರದ ಕಡೆಗೆ ತಿರುಗಿತು. +ವರಲಕ್ಷ್ಮಿಗೆ ಇದ್ದಕ್ಕಿದ್ದಂತೆ ಏನೋ ತೋಚಿದಂತಾಗಿ ಕುಪ್ಪಳಿಸಿ ಜಿಗಿದು ಅನಸೂಯಳ ತುರುಬು ಹಿಡಿದುಕೊಂಡು – +“ಏನೇ ಹಾದರಗಿತ್ತಿ – ನನ್ನ ಗಂಡನ್ನ ಇಟ್ಕೋಡಿದ್ದೀಯಂತಲ್ಲಾ… ಇನ್ನೂ ತಾಳಿ ಕಟ್ಟಿಸಿಕೊಂಡಿರೋ ನಾನಿನ್ನೂ ಜೀವಂತವಾಗಿದ್ದೀನಿ ಕಣೇ…” ಎಂದು ಅಬ್ಬರಿಸಿ ಇತಿಹಾಸ ಸೃಷ್ಟಿಸಿದಳು. +“ಹ್ಹೋ ಹ್ಹೋ ಗರತಿ ಅಂತೆ ಗರತಿ… ಇನ್ನು ಮುಂದೆ ನಾನು ನಿನ್ಗಂಡನ್ನ ಪರಮೆಂಟಾಗೇ ಇಟ್ಕೊಂಡ್‌ಬಿಡ್ತೀನಿ… ಅದೇನ್ ಮಾಡ್ತೀಯೋ ಮಾಡ್ಕೋ” ಎಂದು ಘೋಷಿಸಿ ಅನಸೂಯಾ ನನ್ನ ಕೈ ಹಿಡಿದು ದರದರ ಎಳೆದುಕೊಂಡು ಸೋಮವಾರಪೇಟೆ ಕಡೆ ಹೋಗಿಬಿಟ್ಟಳು. +ನನ್ನನ್ನು ತನ್ನ ಮನೆಗೆ ಎಳೆದೊಯ್ದು ನನ್ನ ಕೆನ್ನೆಗೆ ಪಟಪಟ ಬಾರಿಸಿದಳು! +ಇನ್ನು ಮುಂದೆ ನೀನು ನಮ್ಮನ್ಯಲ್ಲೆ ಇರಬೇಕೆಂದು ಆಜ್ಞೆ ಮಾಡಿದಳು! +ಆಕೆ ಹಾಗೆ ಅಂದಲೆಂದಾಕ್ಷಣ ನಾನು ಆಕೆಯಲ್ಲಿ ಠಿಕಾಣಿ ಹೂಡುವುದು ಹೇಗಾದೀತು? +ಯಾರ ಯಾರ ಮಾತುಗಳು ನನ್ನ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿರಲಿಲ್ಲ. ಬಾಳ್ಯಾನ ಪಾತ್ರಧಾರಿ ರಾಖೇಶನ ಅನಿರ್ಬಂದಿತ ಸಹವಾಸದಿಂದಾಗಿ ನನ್ನ ವ್ಯಕ್ತಿತ್ವ ಬಂಡೆಗಲ್ಲಿನಂತೆ ದಡ್ಡು ಬಿದ್ದು ಹೋಗಿತ್ತು. ಯಾರಾದರೂ ಅಷ್ಟೆ ಯಾಕೆ? ಚಿಕ್ಕ ಮಗುವೂ ಕೂಡ ನನ್ನ ಮೇಲೆ ಸುಲಭವಾಗಿ ಹಲ್ಲೆ ಮಾಡಬಹುದಿತ್ತು. ಕಾಲಕ್ಷೇಪಕ್ಕೋ ಆತ್ಮಾನಂದಕ್ಕೋ… ನಾನು ಅನೇಕ ಸಮಾಜಬಾಹಿರ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೆನು… ಸಮಾಜದಲ್ಲಿ ಮತ್ತು ನನ್ನ ಕೌಟುಬಿಕ ವ್ಯವಸ್ಥೆಯಲ್ಲಿ ಅಪಮೌಲ್ಯಗೊಳ್ಳತೊಡಗಿದ್ದ ನನ್ನನ್ನು ನೋಡಿ ನನ್ನ ಸಹೋದ್ಯೋಗಿಗಳು ಒಳಗೊಳಗೇ ಆನಂದಿಸತೊಡಗಿದ್ದರು. ಅವರ ಆನಂದಕ್ಕೂ ನನ್ನಲ್ಲಿ ಯಾವುದೇ ಪ್ರತಿಕ್ರಿಯೆ ಉಳಿದಿರಲಿಲ್ಲ. ಶಾಸ್ತ್ರಕ್ಕೆ ಆಗೊಮ್ಮೆ ಈಗೊಮ್ಮೆ ಕೊಟ್ಟೂರಿಗೆ ಬರುತ್ತಿದ್ದೆನಾದರೂ ಅಲ್ಲೂ ಯಾವುದೇ ಉಲ್ಲಾಸ ಕೊಡುಕೊಳ್ಳುವುದು ಸಾಧ್ಯವಿರಲಿಲ್ಲ. ನಿಜ ಹೇಳಬೇಕೆಂದ್ರೆ ಹುಟ್ಟಲಿರುವ ಮಗುವಿನ ಬಗೆಗೂ ನನಗೆ ಆಸಕ್ತಿ ಇರಲಿಲ್ಲ. +ನನ್ನ ವ್ಯಕ್ತಿತ್ವದೊಳಗೆ ನಿರ್ವಾತವೇರ್ಪಡಲಾರಂಭಿಸಿರುವಾಗಲೇ ಬ್ಯಾಂಕಿನ ಸುವರ್ಣ ಮಹೋತ್ಸವದ ಮಹಾಧಿವೇಶನದ ಕಾರ್ಯಕ್ರಮಗಳು ಮೂರುದಿನಗಳ ಪರ್ಯಂತ ನಡೆದವು. ನಮ್ಮ ನಾಟಕವು ಮಾತ್ರ ಮಹಾಧಿವೇಶನಕ್ಕೆ ಕಳಸವಿಟ್ಟಂತಿತ್ತು. +ಗಂಗಿ ಈರ್ಯನ ಹೆಂಡತಿಯಾಗಿರಲಿಲ್ಲ… ಜಾತ್ರೆಯಲ್ಲಿ ನೋಡಿದ ಕ್ಷಣದಿಂದ ಆಕೆ ಸಂಗ್ಯಾನ ವ್ಯಕ್ತಿತ್ವದ ಸಿಂಹಭಾಗವೇ ಆಗಿಬಿಟ್ಟಿದ್ದಳು. +ಹುಚ್ಚು ಹಿಡಿದು ಮೆಚ್ಚಿ ಬಂದೆ ನಿನ್ನಾ ರೂಪಕೆ ಜರತಾರಸೆಲ್ಲೆ ಹಾಸಲೇನು ನಿನ್ನ ಪಾದ ಬುಡಕೆ… ಎಂದು ಕುಣಿದು ಹಾಡುವಾಗಲಂತೂ ನಾನು ಗಂಗಿಯ ನಿಜವಾದ ಪ್ರೇಮಿ ಸಂಗ್ಯಾ ಆಗಿ ಸಾವಿರಾರು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರನಾದೆ… ಶಾಸ್ತ್ರೀ ಹಂಗ ಸಂಗ್ಯಾನ ಪಾರ್ಟು ಮಾಡೋರು ಹಿಂದೂ ಹುಟ್ಟಿಲ್ಲ, ಇಂದು ಹುಟ್ಟಿಲ್ಲ, ಮುಂದೂ ಹುಟ್ಟೋದಿಲ್ಲವೆಂದು ಸರ್ವರೂ ಹೃದಯ ತುಂಬಿ ಕೊಂಡಾಡಿದರು. ಈರ್ಯನ ಸಲಹೆಯಂತೆ ಕಡಿಯಲು ಬಂದ ಬಸ್ಯಾ ಇರುಪಾಕ್ಷಿಯರೆದುರು ಸಂಗ್ಯಾನ ಪಾತ್ರದಲ್ಲಿ ನಾನು ನೋಡುಗರ ಕರುಳು ಕತ್ತರಿಸುವಂತೆ ಅಭಿನಯಿಸಿದೆ. ನನ್ನ ಅಭಿನಯಕ್ಕೆ ಮಾರು ಹೋಗಿ ಗಂಗಿ ಪಾತ್ರದಲ್ಲಿದ್ದ ಅನಸೂಯ ಓಡಿ ಬಂದು ನನ್ನನ್ನಪ್ಪಿಕೊಂಡು “ಶಾಸ್ತ್ರೀ… ನನ್ನ ಶಾಸ್ತ್ರೀ” ಎಂದು ಉದ್ಗರಿಸಿ ಹತ್ತಾರು ಬಾರಿ ಚುಂಬಿಸಿದಳು. +ಮಾರನೆ ದಿನ ಆಡಳಿತವರ್ಗದ ಮೇಲಧಿಕಾರಿಗಳು, ರಾಜ್ಯ ಸರಕಾರದ ಉಚ್ಚ ಪ್ರತಿನಿಧಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಸನ್ಮಾನ್ಯ ರಿಜರ್ವ್‌ಬ್ಯಾಂಕ್ ಗವರ್ನರರು ನನಗೆ ಪ್ರಶಸ್ತಿ ಪ್ರದಾನಮಾಡುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನಸೂಯಾ ಆನಂದಬಾಷ್ಪ ಸುರಿಸಿದಳು. ಕೆಲವು ಗೆಳೆಯರ ಒತ್ತಾಯದಿಂದ ನಾನು ಸುಶ್ರಾವ್ಯವಾಗಿ ದೀಕ್ಷಿತರ “ರಾಮಕೋಟಿ ನಿಲಯೇ” ಕೃತಿಯನ್ನು ಹಾಡಿ ರ್ಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿಬಿಟ್ಟೆ. ಮುಖ್ಯವಾಗಿ ನನ್ನ ಅನಸೂಯಳಲ್ಲಿ ಆದ ಬಹು ದೊಡ್ಡ ಬದಲಾವಣೆ ಎಂದರೆ ಆಕೆ ಮುಂದೆಂದೂ ಏಕವಚನದಿಂದ ಸಂಬೋಧಿಸಲಿಲ್ಲ ಎಂಬುದು. +ನೋಡಿದಿಯಾ… ನನ್ನ ಬದುಕಿನ ವಿಶಾದಪೂರ್ಣ ಗಳಿಗೆಗಳನ್ನು… ಇದಕ್ಕೆ ಕಾರಣಗಳೇ ಇರಲಿಲ್ಲ… ಬೇಕೆಂದೇ ಸೃಷ್ಟಿಸಿಕೊಂಡಿದ್ದು. ಬೇಕೆಂದೇ ಅನುಭವಿಸಿದ್ದು ಅಷ್ಟೆ. ನಾನು ನಾಯಕನೂ ಆಗಿರಲಿಲ್ಲ… ನಾನು ಖಳನಾಯಕನೂ ಆಗಿರಲಿಲ್ಲ… ಬಫೂನು ಆಗಿರಲಿಲ್ಲ… ಏನೂ ಆಗಿರಲಿಲ್ಲ… ಆದರೆ ಎಲ್ಲಾ ಆಗಿದ್ದೆ. ನೋಡುವವರ ಕಣ್ಣುಗಲಿಗಡ್ಡವಿದ್ದ ಮಸೂರಗಳ ಬಣ್ಣಗಳಂತೆ ನಾನು ಗೋಚರಿಸುತ್ತಿದ್ದೆ. ಸಂಗ್ಯಾನ ಪಾತ್ರದಲ್ಲಿ ನಾನು ಅದ್ಭುತವಾಗಿ ನಟಿಸುತ್ತಿದ್ದಾತ… ದೂರದಲ್ಲೆಲ್ಲೋ ನನ್ನ ಹೆಂಡತಿ ಮತ್ತು ತಾಯಿ ಗಲಾಟೆ ಮಾಡಿ ಪ್ರತಿಭಟಿಸಿ ಹೋಗಿದ್ದರು. +“ಲೋ ಮಗನೇ… ಶಾಮಾ… ಅಂತೂ ಬಣ್ಣ ಹಚ್ಕೊಂಡೆಣ್ಣ… ನಿನ್ ಹಠಾನೇ ಸಾಧಿಸ್ದೀ ಅಲ್ಲಾ… ಈಗ ನೀನು ಬೇಕೆಂದ್ರೆ ಬಣ್ಣ ತೊಳ್ಕೊಂಡು ಅಮ್ಮಾ ಅಂತ ಬಾರೋ… ಹೆಂಡತಿ ವರಲಕ್ಷ್ಮಿ ಇಂದೋ ನಾಳೆಯೋ ಹುಟ್ಟಲಿರುವ ಮಗು ಬೇಕೆಂದ್ರೆ ತೊಳ್ಕೋಳ್ಳೋ ಬಣ್ಣಾನ…” ಎಂದು ತಾಯಿ ಗೇಟಿನಿಂದಾಚೆ ಕೂಗುತ್ತಿದ್ದುದೂ; ಬಾಯಿ ಬಾಯಿ ಬಡಿದುಕೊಳ್ಳುತ್ತಿದೆಲ್ಲವೂ… +ಅವ್ವ ಅವ್ವ ಅಂತಿದ್ದೀ ಹಗಲೆಲ್ಲ +ಅವ್ವನ ಮೊಮ್ಮಗನೇ +ಅದೇನು ಸುದ್ದಿ ಹೇಳು +ನನ ಕಂದಮ್ಮನೇ… ಎಂದು ಅದ್ಭುತವಾಗಿ ಹಾಡುತ್ತ ಕುಣಿಯುತ್ತ ನನಗೆ ಮೋಡಿ ಮಾಡಿದ್ದ ಎಂಬತ್ತೆಂಟು ವರ್ಷ ವಯಸ್ಸಿನ ಕುಂಟಲಗಿತ್ತಿ ಪಾತ್ರಧಾರಿ ರಮಾಬಾಯಿಯ ಪ್ರಭಾವ ವಲಯದಲ್ಲಿದ್ದ ನನಗೆ ಕೇಳಿಸದೇ ಇರಲಿಲ್ಲ. +ಕ್ರಮೇಣ ಅವರು ತಿಲಾಂಜಲಿ ಎಂಬ ಸವರ್ಣಸಂಧಿ ಪ್ರಕರಣಗಳಾಗಿ ಅಲ್ಲಿಂದ ಹೊರಟು ಹೋದರು. ವೇದಿಕೆ ಮೇಲೆ ಗಂಗಿಯ ಜಾತ್ರಾ ಪ್ರಪಂಚದಲ್ಲಿ ಬೆಂಡು ಬತಾಸು ಚೀಪುತ್ತ ಹೆಜ್ಜೆಹೆಜ್ಜೆಗೂ ವಿಸ್ಮಯ ಪ್ರಕಟಿಸುತ್ತ ಆಕೆಯ ದೇಹದ ಒಂದೊಂದು ಅಂಗಕ್ಕೂ ಒಂದೊಂದು ಕಾವ್ಯದ ಆಭರಣ ತೊಡಿಸುತ್ತಿದ್ದ ನನ್ನ ದೃಷ್ಟಿಯಲ್ಲಿ ತಾಯಿ ಹೆಂಡತಿ ಇವರೆಲ್ಲ ಬೆನ್ನ ಗಂಟಿದ ಪ್ರಾರಬ್ಧ ಅಂದುಕೊಂಡೆ. ಯಾವ ಇಲಾಜಿಗೂ ಬಗ್ಗದ ಹುಣ್ಣು ಬೆನ್ನ ಮೇಲಿದ್ದರೆ ಯಾರು ತಾನೆ ಏನು ಮಾಡಬಹುದೋ ಅದನ್ನೇ ನಾನು ಮಾಡತೊಡಗಿದ್ದೆನು! ಇದು ಸರಿಯೆ? ಇದು ತಪ್ಪೆ? ಅವರು ಹೋಗಿದ್ದರೋ! ಅಲ್ಲೇ ಇದ್ದರೋ! ಇಂಥ ಮಗ ಇದ್ದರೆಷ್ಟು ಸತ್ತರೆಷ್ಟು? ಇಂಥ ಮೊಮ್ಮಗ ಅಂಥ ಈಗ ಗೊತ್ತಾಗಿದ್ದಿದ್ದರೆ ದಿ.ಪಂ.ಪ ಶಾಸ್ತ್ರಿಗಳು ಎಂದೋ ಇವನ ನೆನಪುಗಳ ಮೆದೆಗೆ ಬೆಂಕಿ ಹಚ್ಚುತ್ತಿದ್ದರು. ಪಾಪ, ಪಂಚ ಮಹಾಪತಿವ್ರತೆಯರನ್ನು ನೆನಪಿಸುವಂಥ ಧರ್ಮಪತ್ನಿ ವರಲಕ್ಷ್ಮೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾನಲ್ಲಾ! ಹುಟ್ಟೋ ಮಗುವಿನ ಬಗ್ಗೆ ಪ್ರೀತಿ ಇರದ ಇವನು ನರರೂಪದ ರಾಕ್ಷಸ… ಶ್ರೋತ್ರಿಗಳ ಸಹವಂದಿಗನಾಗಿರಬೇಕಾದವನು ಹಲಾಲುಕೋರ ರಾಖೇಶನ ಜೀವದ ಗೆಳೆಯನಾಗಿದ್ದಾನಲ್ಲಾ! ಇವನ ತಲೇಲಿರುವ ವೇದಾಧ್ಯಾನಕ್ಕೆ ಬೆಂಕಿ ಹಚ್ಚಬೇಕು… ಹೀಗೆ… ಇಂಥ… ಒಂದೇ… ಎರಡೇ… ಮೂರೇ… ನೂರಾರು ಕುರ್ದಸಿಗಳು… ಯಾರೂ ನನ್ನನ್ನು ಕೂಪದಿಂದ ಮೆಲೆತ್ತುವ ಕೆಲಸ ಮಾಡಲಿಲ್ಲ… ಅಂಥದೊಂದು ಚಿಕ್ಕ ಪ್ರಯತ್ನವನ್ನಾದರೂ…” ಎಂದು ನಿಟ್ಟುಸಿರು ಬಿಟ್ಟು ಒಂದು ಕ್ಷಣ ಮೌನ ವಹಿಸಿತು ಶಾಮಣ್ಣ ಪಾತ್ರವು. +ಗಂಡನ ಮಾತು ಕೇಳಿ ಶ್ರೀಮತಿ ವರಲಕ್ಷ್ಮಿ ಪಾತ್ರ ಸ್ವಾಭಿಮಾನದಿಂದಲೂ; ದುಃಖದಿಂದಲೂ; ಹತಾಶೆಯಿಂದಲೂ ಉರಿಯತೊಡಗಿತು. +“ರ್ರೀ… ನಿಮ್ ಸ್ನೇಹಿತರು ಆಡ್ತಿರೋ ಮಾತು ಕೇಳ್ತಿದ್ದಿರಾ? ನನಗಂತೂ ಕಿವಿಗೆ ಸೀಸದ ದ್ರಾವಕ ಸುರಿದಂತೆ ಆಗ್ತಾ ಇದೇರಿ… ಇವರು ಕೆಟ್ಟು ಅಧ್ವಾನ್ನಾಗೋಕೆ ಇವರೇ ಕಾರಣ ಅಲ್ರೀ… ಅಂಥೋರಲ್ಲ ನಮ್ಮ ಯಜಮಾನ್ರು . ನಾನು ಅಷ್ಟು ವರ್ಷ ಸಂಸಾರ ಮಾಡಿ ನೋಡಿದೆನಲ್ಲ… ಒಂದು ಕೆಟ್ಟ ಕೃತ್ಯ ಮಾಡೊರಲ್ಲ… ಕೆಟ್ಟ ಮಾತು ನುಡ್ದೋರಲ್ಲ… ಒಂದು ಕೆಟ್ಟ ದೃಶ್ಯ ನೋಡ್ದೋರಲ್ಲ… ಹಾಗಿದ್ದೋರು ಪುಂಡು ಪೋಕರಿಗಳನ್ನು ಕಳಿಸಿ ನಾಟಕದ ಥೇಟರ್ ಮುಂದಿದ್ದ ನಮ್ಮನ್ನು ಬಯ್ಯಿಸಿ ಓಡಿಸಿಬಿಟ್ರು. ಮುಂದೊಂದಿನ ಮದ್ಯ ಸೇವಿಸಿದ್ರೋ ಏನೋ… ಕೊಟ್ಟೂರಿನ ಅಗ್ರಹಾರದ ಬೀದಿಗಳಲ್ಲಿ ಲೋ ತ್ರಂಭ್ಯಕ… ಲೋ ಶಂಕರಾ… ಎಂದು ಕೂಗಾಡಿದ್ದೂ ಅಲ್ಲದೆ… ಮನೆಗೆ ಬಂದು ನನ್ನ ತುರುಬು ಹಿಡಿದು ತಾಯಿ ಆದ ಮೇಲೆ ನಿಂಗೆ ಮೀಸೆ ಬಂದುಬಿಟ್ಟಿದ್ದವಲ್ಲೇ ಎಂದು ಎಳೆದು ರೇಗಾಡಿದರು. ಗಂಡ ಬಯ್ದರೆ ಹೊಡೆದರೆ ಪತ್ನಿ ಆದ ನಾನು ಅಶೀರ್ವಾದ ಅಂದ್ಕೊಳ್ತೀನಿ… ಆದರೆ ತಮ್ಮ ಹೆತ್ತ ತಾಯಿಯನ್ನೇ ಲೇ ಮುದ್ಕಿ… ನೋಡ್ತಿದ್ದೀ ತಾನೆ… ಪಂಡಿತ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನ ಅವಸ್ಥೇನ ಎಂದು ಕೂಗಾಡಿ ಬಿಡೋದೆನು? ಇವರು ಉರದದ್ದು ಒಂದಲ್ಲಾ… ಎರಡಲ್ಲ… ಅವರು ತಳ್ಳಿದ್ರೂ ಅಂತ ದೂರ ಇರಲಿಕ್ಕೆ ಆಗ್ತದೆಯೇ… ಮಗು ಇಸಿ ಮಾಡಿದ ಜಾಗವನ್ನು ತೊಡೆಯಿಂದ ಬೇರ್ಪಡಿಸುವುದು ಯಾವ ತಾಯಿಗೆ ತಾನೆ ಇಷ್ಟವಾದೀತು… “ಮಗೂ +ವರಲಕ್ಷ್ಮೀ… ಅವ್ನು ಶೂದ್ರರ ಸಹವಾಸದಿಂದ ಚೂರಿಗಿಂತಲೂ ಅಪಾಯಕಾರಿ ಆಗಿದ್ದಾನೆ. ಅಂಥವನೊಂದಿಗೆ ಬಾಳುವೆ ಮಾಡ್ತೀನಂದ್ರೆ ನಾನು ಏನು ತಾನೆ ಹೇಳಲಿ” ಎಂದು ಅತೆಯವರು ಏಷ್ಟು ಹೇಳಿದರೂ ನಾನು ಕೇಳಲಿಲ್ಲ… ಎಂಥೆಂಥ ಋಷಿ ಪತ್ನಿಯರೇ ಅನುಭವಿಸಬಾರದ್ದನ್ನೆಲ್ಲ ಅನುಭವಿಸಿದ್ದಾರೆ… ಕಷ್ಟ ಕೋಟಲೆ ನೀಗಿದ್ದಾರೆ. ನಂದೇನು ಮಹಾ! ಸಪ್ತರ್ಷಿಗಳಿಗಿಂತ ಗುಣ ಸ್ವಭಾವ ವಾಕ್ ಸಿದ್ಧಿಯಲ್ಲಿ ನನ್ನ ಗಂಡನೇ ಮೇಲು; ಹೆಂಡತಿಯಾದ ನಾನು ದೂರ ಇದ್ದರೆ ಆತ ಮತ್ತಷ್ಟು ಕೆಡುತ್ತಾನೆ… ಗುರುಸ್ಥಾನ ದಲ್ಲಿದ್ದುಕೊಂಡು, ಮಾತೃಸ್ಥಾನದಲ್ಲಿದ್ದುಕೊಂಡು, ಶುಶ್ರೂಷಕಿ ಸ್ಥಾನದಲ್ಲಿದ್ದುಕೊಂಡು ಗಂಡನ ಸೇವೆ ಮಾಡಬೇಕು ಎಂದು ನಿರ್ಧರಿಸಿಯೇ ನಾನು ಮಗು ಕಟ್ಕೊಂಡು ಕೊತ್ತಲಗಿಗೆ ಹೋದೆ… ಗಂಡಸಿನ ಥರ ಅಡ್ಡಾಡಿ ಅವರಿವರ ಸಹಾಯ ಪಡೆದು ಎಲ್ಲೋ ಒಂದು ಮನೆ ಹುಡುಕಿದೆ ಕಣ್ರೀ… ಪುಣ್ಯಾತ್ಮ ಆ ಅಪ್ಪೇನಳ್ಳಿ ಶಾನುಭೋಗರ್‍ನ ನೆನೆಸಬೇಕು… ಆ ಮನೆಗೆ ಅವರು ಬಂದರೆ ಬರ್‍ತಿದ್ರು… ಇಲ್ಲಾಂದ್ರೆ ಇಲ್ಲ… ಒಂದೆರಡು ಬಾರಿ ಮಗನನ್ನು ಎತ್ತಿ ಆಡಿಸಿದ್ದುಂಟು. ಅವರು ಬ್ಯಾಂಕಿನಿಂದ ಹೊರಟ್ರೂ ಅಂದ್ರೆ ಸೀದ ಆ ಹಾದರಗಿತ್ತಿ ಮನೆಗೆ ಇಲ್ಲಾಂದ್ರೆ ಆ ರಾಖೇಶನ ಅರಿಷಡ್ವರ್ಗಗಳ ಮೂಟೆ ಹುಡುಕ್ಕೊಂಡು ಹೋಗುತ್ತಿದ್ದರು. ರಾಖೇಶನಂತ ದುಷ್ಟ ಈ ಪ್ರಪಂಚದಲ್ಲಿ ಎಲ್ಲೂ ಇರಲಿಕ್ಕಿಲ್ಲ ನೋಡಿ… ಮಾನ ಮರ್ಯಾದೆ ಇಲ್ದೋನಂದ್ರೆ ಅವನು ಮಾತ್ರ. +ಒಂದು ದಿನ ಅವನು ವ್ಯಕ್ತಿಯೋರ್ವನೊಂದಿಗೆ ಬಂದ. ಅವರಿಲ್ಲ ಹೋಗು ಅಂದೆ… ಅವರಿಬ್ರೂ ಸೀದ ಒಳಗಡೆ ಬಂದರು… ನಮ್ಮ ಮನೆಗೆ ಬರೋಕೆ ಯಾರಪ್ಪಣೆ ಯಾಕ ಬೇಕು ಅಂದ್ರು. ನಾನು ಕಾರಣ ಹೇಳಿ ಹೊರಡಿ ಅಂದೆ. ಅದಕಿದ್ದು ಆ ರಾಖೇಶ… (ಅವನಾಡಿದಮಾತು ಕರ್ಣ ಕಠೋರವಾಗಿತ್ತು) ಏಯ್ ವರಲಕ್ಷ್ಮಿ… ಇವ್ರು ಮೈಸೂರು ಕಡೆಯಿಂದ ಬಂದಾರ… ದೊಡ್ ಸ್ರೀಮಂತ್ರು… ಬೇರೆ ಎಲ್ಲೂ ಜಾಗ ಖಾಲಿ ಇರ್‍ಲಿಲ್ಲ… ಅದ್ಕೆ ಕರ್ಕೊಂಡು ಬಂದಿದ್ದೀನಿ… ಇವತ್ತು ರಾತ್ರಿ ನಿನ್ ಜೊತೆ ಮಲಿಕ್ಕೊಂಡಿದ್ದು ನಸುಕ್ನಾಗೆದ್ದು ಹೋಗ್ತಾರೆ; ಎಂದು ನಿರ್ಲಜ್ಜನಾಗಿ ಹೇಳಿದ ಗೊತ್ತೆ! ನಾನು ಪಾದರಕ್ಷೆಯಿಂದ ಹೊಡೆದೂ ಬಡಿದೂ ಅವರೀರ್ವರನ್ನು ಅಲ್ಲಿಂದ ಓಡಿಸಿದೆ. ಆ ನಂತ ಬಂದ ಅವರಿಗೂ ಹೇಳಿದೆ. (ಒಂದು ವಿಚಿತ್ರ ಅಂದರೆ ರಾಖೇಶನೆ ಅವರಿಗೆ ವಿವರಿಸಿ ಹೇಳಿದ್ದ) ಅವರು “ಅವನು ಮಾಡಿದ್ರಲ್ಲಿ ತಪ್ಪೇನಿದೆ? ಅದ್ರಿಂದ ನಿನ್ ಪಾತಿವ್ರತ್ಯ ಹಾಳಾಗ್ತಿತ್ತಾ?… ಎಂದುಬಿಟ್ಟರು. ಇಂಥ ಗಂಡನೊಂದಿಗೆ ಬಾಳುವೆ ಮಾಡುವುದೆಂದರೆ ದಿನಂಪ್ರತಿ ಆತ್ಮಹತ್ಯೆ ಮಾಡಿಕೊಳ್ಳುತ್ತ ಬದುಕುವುದೆಂದೇ ಅರ್ಥ. ಇದೊಂದೆ ಘಟನೆ ಅಲ್ರೀ… ಇಂಥವು ಇದಕ್ಕಿಂಥ ಮಿಗಿಲಾದ ನೂರಾರು ಸಾವಿರಾರು ಘಟನೆಗಳು ಎದೇನ ತುಂಬ್ಕೊಂಡಿವೆ. ಅವನ್ನೆಲ್ಲ ಪರಪುರುಷರಾದ ಅವರ ಗೆಳೆಯರಾದ ನಿಮ್ಮೆದುರಿಗೆ; +ಲೇಖಕರಾದ ನಿಮ್ಮೆದುರಿಗೆ; ಯೋಗ್ಯ ಪತಿ; ಯೋಗ್ಯ ತಂದೆಯಾಗಿರುವ ನಿಮ್ಮೆದುರಿಗೆ; ಹೇಳಲಿಕ್ಕೆ ನಾನು ಸಿದ್ಧಳಿಲ್ಲ. ಇದರಿಂದ ನಿಮ್ಮ ಮನಸ್ಸಿಗೆ ಅಸಹ್ಯವಾಗುತ್ತದೆ… ದುಷ್ಟರೂ, ಒಳ್ಳೆಯವರೂ ಅಂತ ಗುರುತಿಸಲು ಸಾಧ್ಯವೇ ಇಲ್ಲದಂಥ ವ್ಯಕ್ತಿಗಳು ಈ ಭೂಮಿ ಮೇಲೆ ಇರುವರೆಂದು ನಿಮಗೆ ಅರ್ಥ ಅಗುವುದೇ ಇಲ್ಲ. ಹೇಳಿಕೊಂಡರೆ ಹೋಗೋದು ನಮ್ಮ ಯಜಮಾನರ ಗೌರವ ತಾನೆ… ಎಂದು ಮುಂತಾಗಿ ಆ ತಾಯಿ ಹೇಳಿದ್ದು ಕೇಳಿ ನನಗೊಂಥರಾ ಆಯಿತು. ಆಕೆಯ ಮಾತುಗಳನ್ನು ಯಾವ ರೀತಿ ಪರಿಗ್ರಹಿಸಬೇಕೋ ಅರ್ಥವಾಗಲಿಲ್ಲ. +ತನ್ನ ವಿಧವಾ ಪತ್ನಿಯ ಮಾತು ಕೇಳಿ ಶಾಮಣ್ಣ ಪಾತ್ರವು ಅದ್ಭುತವಾಗಿ ನಕ್ಕಿತು. +“ಹುಚ್ಚಿ… ಹುಚ್ಚೀ… ನಿನ್ನ ಪಾತಿವ್ರತ್ಯದ ಸೋಗನ್ನು ಮುಖವಾಡವನ್ನು ಸಮರ್ಥಿಸಲು ಏನೇನು ಮಾತಾಡ್ದಿಯೇ ಮಾರಾಯ್ತಿ… ಮಹಾ ಪತಿವ್ರತೆಯಾಗಿ ನವೆದವಳಾದ ನೀನೀ ಜುಜುಬಿ ಕಾದಂಬರಿಯೊಳಗೆ ಆಚಂದ್ರಾರ್ಕವಾಗಿ ಉಳಿಯಬೇಕೆಂದು ಹುನ್ನಾರ ಮಾಡಿರುವಿ. ನೀನೊಂದು ರೀತಿಯ ನ್ಯಗ್ರೋಧ ಕಣೇ. ರಾಖೇಶ ಮಾಡಿದ್ರಲ್ಲಿ ತಪ್ಪೇನಿದೆ? ಮಾಡಿಕೊಂಡ ಗಂಡನಿಂದ ಲೈಂಗಿಕ ಸುಖ ಅನುಭವಿಸದಿದ್ದ ನನ್ನ ಗೆಳೆಯನ ಹೆಂಡತಿ ಸಾಕಷ್ಟು ಸುಖ ಪಡೆಯಲಿ ಅಂತ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದರಲ್ಲಿ ತಪ್ಪೇನಿದೆ? ‘ಬಿಟ್ಕೋ ಹೋಗು’ ಅಂತ ನಾನೇ ಕಳಿಸಿದ್ದು. (ನೀನು ಗಿರಾಕಿಯನ್ನು ನೋಡಿ ಒಳಗೊಳಗೆ ಇಷ್ಟಪಟ್ಟಿದ್ದಿರಬಹುದು) ಅವತ್ತು ರಾತ್ರಿ ನೀನಾ ವ್ಯಕ್ತಿಯಿಂದ ಲೈಂಗಿಕ ಸುಖ ಅನುಭವಿಸಿದ್ದಲ್ಲಿ – ನಿನಗೆ ವೈವಾಹಿಕ ಬದುಕು ಅರ್ಥವಾಗುತ್ತಿತ್ತು. ನಿನ್ನ ಗಂಡ ಅರ್ಥ ಆಗುತ್ತಿದ್ದ. ಅನಸೂಯ ಅರ್ಥ ಆಗುತ್ತಿದ್ದಳು. ಮಾನಸಿಕವಾಗಿ ಯಾವ ಸಂಧರ್ಭದಲ್ಲೂ ಪರಪುರಷ ಕೊಡಮಾಡುವ ಲೈಂಗಿಕ ಸುಖದ ಬಗ್ಗೆ ಕಿಂಚಿತ್ತಾದರೂ ಯೋಚಿಸಿಯೇ ಇಲ್ಲವೆಂದು ಹೇಳು ನೋಡೋಣ! ದೇವತಾ ಸ್ತೀಯರು ರಾಕ್ಷಸ ಕುಲದ ಪುರುಷರನ್ನು ಇಷ್ಟಪಟ್ಟಿದ್ದಾರೆ. ರಾಕ್ಷಸ ಸ್ತ್ರೀಯರು ದೇವಲೋಕದ ಪುರುಷರನ್ನು ಇಷ್ಟಪಟ್ಟಿದ್ದಾರೆ. ಅಹಲ್ಯೆ ತನ್ನ ಋಷಿಪತಿಯಿಂದ ದೊರೆಯದಿದ್ದ ಸುಖವನ್ನು ಪತಿವೇಶದ ದೇವೇಂದ್ರನಿಂದ ಪಡೆದಳು. ಹೀಗೆ ನೀನು ಯಾರನ್ನು ಉದಾಹರಣೆ ತಗೋ ಪಾತಿವ್ರತ್ಯವೆಂಬ ಪದ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವಂಥಾದ್ದಲ್ಲ ಆ ಪದದ ಮೂಲೆಯಲ್ಲೊಂದು ಕಡೆ ಸಾಮರಸ್ಯದ; ಪ್ರೇಮದ ಸಂದೇಶವಿದೆ. ಇವೆರಡು ಇಲ್ಲಾಂದ್ರೆ ವಿವಾಹಿತ ಹೆಣ್ಣೊರ್ವಳು ತನ್ನ ಗಂಡನ ಮೇಲೆ ಪಾತಿವ್ರತ್ಯವೆಂಬ ಅಸ್ತ್ರದಿಂದ ಹಲ್ಲೆ ಮಾಡುತ್ತಾಳೆ ಎಂದೇ ಅರ್ಥ. ನಿಮ್ಮಂಥವರಿಗೆ ತೇಲಲೀಯದ ಮುಳಗಲೀಯದ ಸ್ಥಿತಿ ಅದು ಅನಸೂಯಳ ಬಗ್ಗೆ ವಿಷಕಾರಿದ್ದೀಯಾ ಎಷ್ಟೋ ಸಾರಿ ನೀನು ಬಂದು ಆಕೆ ಮನೆ ಬಾಗಿಲಿಗೆ ಮಣ್ಣು ತೂರಿ ಸರ್ವನಾಶ ಕೋರಿದ್ದುಂಟು. ಆಕೆಯೇ ನನ್ನನ್ನು ಬಯ್ದು ನಿನ್ನೊಂದಿಗೆ ಜೀವಿಸುವಂತೆ ಮಾಡಿದ್ದು. ಆಕೆಯೇ ಏನೇನು ಬೇಕೇನೋ ಅದನ್ನೆಲ್ಲ ಕಳಿಸುತ್ತಿದ್ದುದು. ನಿನಗೆ ಸೀರೆ ಕುಪ್ಪಸ, ನಿನ್ನ ಮಗನಿಗೆ ಬೆಳ್ಳಿ ಉಡುದಾರ, ಕೊರಳಿಗೆ ಚೈನೂ; ಬೆರಳಿಗೆ ಉಂಗುರ, ಮಲಗಿಸಲು ತೂಗಲು ತೇಗದಿಂದ ಮಾಡಲ್ಪಟ್ಟಂಥ ತೊಟ್ಟಿಲು ಎಲ್ಲವನ್ನು ಕಳಿಸಿದ್ದು ಆಕೆಯೇ. ನಿನಗೆ ಎಷ್ಟೋ ಸಂಗತಿಗಳು ಗೊತ್ತಿಲ್ಲ. ವೇತನ ಸ್ತಂಬಿತವಾಗಿ ಅಡಚಣೆಯಿಂದ ನಾನು ಒದ್ದಾಡಿತ್ತಿದ್ದಾಗ ಸಹಾಯ ಮಾಡುತ್ತಿದ್ದವನು ರಾಖೇಶ, ನಾನು ನಿನ್ನನ್ನು ಕೇಳಿದೆ. ನೀನು ಅರ್ಧ ತೊಲೆ ಚಿನ್ನವನ್ನು ಕೊಡಲೂ ಒಪ್ಪಲಿಲ್ಲ. ಆದರೆ ಅದು ಹೇಗೋ ಗೊತ್ತಾಗಿ ಅನಸೂಯಾ ತನ್ನ ಕೊರಳಲ್ಲಿದ್ದ (ಆ ಸಂದರ್ಭದಲ್ಲಿ ಆಕೆಗೂ ಅಡಚಣೆ) ಕಾಸಿನ ಸರವನ್ನು ಕಳಿಸಿಕೊಟ್ಟಳು ನೀನು ನಿನ್ನ ಸೌಭಾಗ್ಯದ ಕುರುಹೆಂದು ಭಾವಿಸುವ ನನ್ನನ್ನು ಮುಂದೆ ಹೇಗೆ ಕಂಡೆ ಅಂತ ನಿನಗೆ ಗೊತ್ತು ತರ್ಕದಿಂದ ಉಪಯೋಗವಿಲ್ಲ ಎಂದು ಶಾಮಣ್ಣ ಪಾತ್ರವು ತಣ್ಣಗೆ ಮಾತಾಡಿತು. +ಆದರ ಮಾತು ಕೇಳಿ ವರಲಕ್ಶ್ಮಿ ಪಾತ್ರವು ನಿಟ್ಟುಸಿರುಬಿಟ್ಟಿತು. ಮೌನವನ್ನವಧರಿಸಿತು. ನಾನು ಯಾರನ್ನೂ ಸಮರ್ಥಿಸುವ ಸ್ಥಿತಿಯಲ್ಲಿರಲಿಲ್ಲ. ಸಂಕಟದ ದೃಷ್ಟಿಯಿಂದ ನಾನು ಉಭಯಚರ ಜೀವಿಯಾಗಿದ್ದೆ. +ಶಾಮಾ ಹೋಗ್ಲಿ ಬಿಡಪ್ಪಾ ಅನುಭವಿಸುತ್ತಿರುವ ವೈಧವ್ಯಕ್ಕೆ ತುಪ್ಪ ಸುರಿಯುವಂಥ ಮಾತುಗಳನ್ನು ಆಡಬೇಡ. ಅದರಿಂದ ಯಾರಿಗೂ ಉಪಯೋಗವಿಲ್ಲ ರಾಖೇಶ ಮಾಡುತ್ತಿದ್ದುದು ತಪ್ಪು. ಅಕ್ಷಮ್ಯ ಅಪರಾಧ ಅವನ ಪ್ರತಿಯೊಂದು ನಡವಳಿಕೆಯನ್ನು ನೀನು ಸಮರ್ಥಿಸುತ್ತ ಒಪ್ಪುತ್ತ ಹೋಗಿದ್ದರಿಂದಲೇ ಅವನು ಇನ್ನೊಬ್ಬರನ್ನು ಕೆಡಿಸುತ್ತ ಹೋದದ್ದು. ಕೆಟ್ಟಿರುವ ಮನುಷ್ಯ ಕೆಡಿಸುತ್ತಲೇ ಹೋಗುತ್ತಾನೆ. ಕಿಲುಬನ್ನು ಗೌರವಿಸುವ ಕೆಲಸ ಮಾಡಬಾರದಿತ್ತು. ನೀನು ಹೇಳಿದ್ದು ಕೇಳಿದ ಮೇಲೆಯೇ ನನಗೆ ಅವನ ಬಗ್ಗೆ ಅಸಹ್ಯ ಹುಟ್ಟಿದ್ದು ಆ॒ ಕೊಳಕನ ಬಗ್ಗೆ ಯಾಕೆ ಅಷ್ಟೊಂದು ಭಾವುಕನಾಗಿ ಮಾತಾಡ್ತೀಯೋ ಅರ್ಥಾಗ್ತಿಲ್ಲ ಅಗತ್ಯಕ್ಕಿಂತ ಹೆಚ್ಚು ಪ್ರಸ್ತಾಪಿಸಿದೀ ಅವನ ಬಗ್ಗೆ ಎಂದು ಹೇಳಿದೆ. ಗೊನೋರಿಯಾನ ಇಲಾಜು ಮಾಡಿಕೊಳ್ಳುವುದರಲ್ಲಿ; ಅನುಭವಿಸುವುದರಲ್ಲಿರೋ ಸುಖ ಯಾವ ಅಧ್ಯಾತ್ಮದಲ್ಲಾಗಲೀ; ಯಾವ ಉಪಾಸನೆಯಲ್ಲಾಗಲೀ ಇಲ್ಲವೆಂದು ಅವನು ಹೇಳಿದ್ದು ನೆನಪಾಗಿ ಅಸಹ್ಯ ಹುಟ್ಟಿತು. +“ಕುಂವೀ… ಅವನ ಬಗ್ಗೆ ಹೇಳಬೇಡವೆಂಬ ನಿರ್ಬಂಧ ವಿಧಿಸಿದರೆ ಇನ್ನು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೇನು ಉಳಿದಿರ್‍ತದೆ… ಆಮ್ಲಜನಕ ನಿರ್ಗಮಿಸಿದರೆ ಎಷ್ಟೇ ಪ್ರಮಾಣದಲ್ಲಿದ್ದರು ಜಲಜನಕದಿಂದ ಉದಕವಾಗುವುದಿಲ್ಲ. ಕರ್ಷಣ-ವಿಕರ್ಷಣ, ಕ್ರಿಯೆ-ಪ್ರತಿ-ಕ್ರಿಯೆ, ಘಟನೆ-ಪ್ರತಿಘಟನೆ ಇವೆಲ್ಲೆ ಒಂದಕ್ಕೊಂದು ಪೂರಕ… ಒಂದು ಬಿಟ್ಟರೆ ಇನ್ನೊಂದು ಬರುವುದೇ ಇಲ್ಲ. ಆದ್ದರಿಂದ ರಾಖೇಶನನ್ನು ಹೊರತುಪಡಿಸಿದರೆ ನನ್ನ ಪಾತ್ರದಲ್ಲಿ ಶೂನ್ಯ ಆವರಿಸುತ್ತದೆ. ತಂತಿ ಇಲ್ಲದ ವೀಣೆಯನ್ನು ಎಂಥ ವೈಣಿಕನಿಗೂ ನುಡಿಸಲು ಸಾಧ್ಯವಿಲ್ಲ. ನಿಮ್ಮಂತ ಸಾಮಾಜಿಕ ಮಂದಿ ಪ್ಲಸ್ ಅಂತ ತಿಳ್ಕೊಂಡಿರೋದನ್ನ ನಾನು ಮೈನಸ್ ಅಂತ ತಿಳ್ಕೋಳ್ತೀನಿ… ನೀವು ಮೈನಸ್ ಅಂತ ತಿಳ್ಕೊಂಡಿರೋದನ್ನ ನಾನು ಪ್ಲಸ್ ಅಂತ ತಿಳ್ಕೋಳ್ತೀನಿ… ಅಷ್ಟೇ ನಿಮ್ಗೂ, ನನಗೂ ಇರೋ ವ್ಯತ್ಯಾಸ. +ಸಂಕಲನ, ವ್ಯವಕಲನ ಮೇಲ್ನೋಟಕ್ಕೆ ಭಿನ್ನವೆನ್ನಿಸಬಹುದು… ಅವೆರಡು ಕ್ರಿಯೆಗಳು ಪರಸ್ಪರ ಸರಿದೂಗಿಸಲು ಸಮರ್ಥಿಸಲು ಒಂದೊಕ್ಕೊಂದು ಬೇಕೇ ಬೇಕು… ಆದ್ದರಿಂದ ರಾಕೇಶನೆಂಬ ಬೈನಾಕ್ಯುಲರ್ ಮೂಲಕ ನೋಡಿದಾಗ ಮಾತ್ರ ನಾನು ಗೋಚರಿಸುತ್ತೇನೆ.” +“ಆಯ್ತು ಮಾರಾಯ… ಮುಂದಿನದು ಹೇಳಿಬಿಡು ಹೊತ್ತಾಗ್ತಿದೆ. ಮಾಡ್ಲಿಕ್ಕೆ ಸಾಹಿತ್ಯವಲ್ಲದ ಬೇರೆ ಕೆಲಸಗಳು ನೂರಾರಿವೆ. ಕಾದಂಬರಿ ಪ್ರಕಾರಕ್ಕೆ ಒಂದಂಶವಾದರೂ ಬಳಸಬಹುದಾದಂಥ ವಸ್ತು ವಿಶೇಷಣವೇ ನಿನ್ನ ಬದುಕಿನಲ್ಲಿಲ್ಲಪ್ಪಾ… ಬದುಕಿನ ನಿರ್ದಿಷ್ಟ ಸೂತ್ರಗಳೇ ತಲೆಕೆಳಗಾಗುತ್ತಿವೆ… ಯಾರು ಹೀರೋ! ಯಾರು ವಿಲನ್ನೋ? ಒಂದೂ ತಿಳೀವಲ್ದು”. +“ಕಾದಂಬರಿಯ ಕೇಂದ್ರ ವಸ್ತುವಾಗಿರುವ ನಾನಾಗಲೀ ನನ್ನ ಬದುಕಾಗಲಿ ನಾಯಕ ಸ್ಥಾನಕ್ಕೆ ಏರಲಾರದು… ಕಾದಂಬರಿ ನಾಯಕ ಗುಣಗಳು ಪ್ರಕಟಗೊಳಿಸಬಹುದಾದ ಪಾತ್ರಗಳೆಂದರೆ ಒಂದು ರಾಖೇಶ… ಇನ್ನೊಂದು ಅನಸೂಯ… ನೀನು, ನಿನ್ನಂಥವರು ತಿಳಿದುಕೊಂಡಷ್ಟು ಸರಳವಲ್ಲ ಆ ಪಾತ್ರ. ಕಾದಂಬರಿಯೊಳು ಪೆರರಾರುಮನ್ ನೆನೆಯದಿರು ನೆನೆವೊಡೆ… ರಾಖೇಶನಂ ನೆನೆ; ರಾಖೇಶನ ಕಡುನನ್ನಿ; ರಾಖೇಶನ ಚಾಗ, ರಾಖೇಶನ ಭೋಗ… ರಾಖೇಶನ ರಸಾಯನದಿಂದಮಲ್ತೆ ಶಾಮಣ್ಣ ಕಾದಂಬರಿಯಂ ಎಂದು ಹೇಳಬಹುದು… (ನೀನು ಅನಸೂಯಳ ಬಾಯಿಯಿಂದ ಪಂಪಭಾರತ ಕೇಳಬೇಕು… ಹ್ಹಾಹ್ಹಾ… ಅದೊಂದು ಅದ್ಭುತ ಅನುಭವ) ನಾಯಕನಲ್ಲಿ ಪ್ರಕಟವಾಗಬೇಕಾದ ಉದಾತ್ತ ಗುಣಗಳು ರಾಖೇಶನಲ್ಲಿ ಎಲ್ಲಿ ಪ್ರಕಟವಾಗಿವೆ ಎಂದು ನೀನು ಈಗಾಗಲೇ ಗುರುತಿಸಿರಬಹುದು. ಯಾವ ಟೀಕಾ ಭಾಷ್ಯಾ… ವ್ಯಾಖ್ಯಾನಗಳಿಗೆ ನಿಲುಕದ ವ್ಯಕ್ತಿತ್ವ ಪಡೆದಿರುವ ಅನಸೂಯಳಲ್ಲೂ ನೀನು ನಾಯಕಿಯ ಗುಣಗಳನ್ನು ಪತ್ತೆ ಹಚ್ಚಿರಬಹುದು. ಈಗಾಗಲೇ ಗುರುತಿಸಿರಬಹುದು. ನನ್ನ ಮೂಲಕ ಅವರೀರ್ವರನ್ನು ನೋಡುವ (ದರ್ಶಿಸುವ) ಪ್ರಯತ್ನ ಮಾಡು… ಯಾರು ಯಾರಲ್ಲಿ ಪ್ರಕಟವಾಗುವುದೋ ಯಾರಿಗೂ ತಿಳಿಯದು! ಆಲದ ಮರದ ಸುಳಿಯಿಂದ ಬೇವಿನ ಮರ ಚಿಗುರೊಡೆದು ಬೆಳೆಯಬಹುದು. ಬೇವಿನ ಮರದೊಳಗೆ ಮತ್ತಾವುದೋ ಒಂದು ಮರ… ನೆಲದಡಿ ಹರಿದು ಕೊನೆಗೆ ದೂರದಲ್ಲೆಲ್ಲೋ ಕೊನರುವ ಹಸಿರಂತೆ… ಮನುಷ್ಯ ಸರ್ವನ್ನೊಂದು ಪ್ರಾಣಿಗಳ ಮೇಲೋಗರವಲ್ಲವೆ… ಆದ್ದರಿಂದ ಯಾರನ್ನೇ ಆದರೂ ನಿರ್ದಿಷ್ಟ ಪ್ರಕಾರದ ಷೋಕೇಸ್‌ನಲ್ಲಿಟ್ಟು ನೋಡುವುದು ಸರಿಕಾಣದು ಎಂದು ಭಾವಿಸುತ್ತಿರುವೆ. ಕಾದಂಬರಿಯ ನಾನಲ್ಲ, ಬರೆಯುವ ನೀನು ಖಂಡಿತ ಅಲ್ಲ… ಎಂದು ಶಾಮಣ್ಣ ಪಾತ್ರವುಲೆಖಕನಾದ ನನ್ನನ್ನು ನೆನೆಗುದಿಗೆ ಸಿಲುಕಿಸಿತು. +ನನ್ನ ಪರಮ ಮಿತ್ರನಾದ ಶಾಮಂಣನಿಗೆ ಕಥಾನಾಯಕನ ಸ್ಥಾನ ಕೊಟ್ಟು ಕಾದಂಬರಿಯೊಂದನ್ನು ಬರೆಯಬೆಕೆಂದು ನಿರ್ಧರಿಸಿದ್ದು, ಆ ದಿಸೆಯಲ್ಲಿ ತೊಡಗಿದೆ ಕೂಡ. “ಕಾದಂಬರಿ ಬರೆಸಿಕೊಳ್ಳುವಂಥಾದ್ದಾದ್ರು ಅವನ ಬದುಕಿನಲ್ಲೇನೈತಿ? ಅಂಥವನು ಎಂದೆಂದೂ ಯಾರ ಹೊಟ್ಟೆಯಲ್ಲಿ ಹುಟ್ಟಬಾರ್ದು… ಮುಂದೆ ಆ ಶಾಮಾ ಶಾಸ್ತ್ರಿಯಂಗೇನಾದ್ರೂ ಆದಿಗೀದೀಯಾ ಎಂಬೊಂದು ನಾಣ್ಣುಡಿಯನ್ನೇ ಹುಟುಹಾಕುವಂಥ ಮನುಷ್ಯನವನು” ಎಂದು ಮುಂತಾಗಿ ಅವರಿವರು ಬರವಣಿಗೆ ಮೇಲೆ ಕಲ್ಲು ಹಾಕಲು ಪ್ರಯತ್ನಿಸಿದ್ದುಂಟು. ಯಾರ ಬದುಕಿನಲ್ಲಿರದ ವಿಶೇಷಗಳು ನಮ್ಮ ಶಾಮನ ಬದುಕಿನಲ್ಲಿವೆ ಎಂದೆನಿಸಿತ್ತು. ನಾಯಕನ ಗುಣಗಳೊಂದಿಗೆ ಪ್ರತಿನಾಯಕನ ಗುಣಗಳನ್ನೂ ಹಲವು ಸುಳ್ಳುಗಳ ಸಹಾಯದಿಂದ ಬೆರೆಸಿ ರಸವತ್ತಾಗಿ ಹೇಳುವನೆಂದುಕೊಂದಿದ್ದೆ. ಜನಪ್ರಿಯ ಕಾದಂಬರಿಯಲ್ಲಿ ಬರುವ ಒಳ್ಳೆಯವರು, ಕೆಟ್ಟವರು, ಸೂಳೆಗಾರಿಕೆ, ಕಳ್ಳತನ ವಿಲ್ವಾರಿ, ಸಾವು, ಬದುಕು, ಮೊದಲಾದ ರಂಜನೀಯಾಂಶಗಳು ಅವನ ಬದುಕಲ್ಲೂ ಇರುವುದರಿಂದ, ಜೊತೆಗೆ ಅವನೇ ಅಮಿತಭ್ ಬಚ್ಚನ್ ಶೈಲಿಯಲ್ಲಿ ನಿರೂಪಿಸಲಿರುವುದರಿಂದ ಕಾದಂಬರಿ ಬಿಸಿಬಿಸಿ ಮಸಾಲೆ ಥರ ಝಮಾಡಿಸಬಹುದೆಂದುಕೊಂಡಿದ್ದೆ. ಆದರೆ ಅವನು ಹೇಳಿದ್ದಾರೂ ಏನು? ನಾನು ಬರೆದಿದ್ದಾರೂ ಏನು? ಏನೋ ಒಂದು ಸಪ್ಪನೆ ಬೇಳೆಯನ್ನೇ ನಾಯಕನೆಂದು ಓದುಗರು ಭಾವಿಸಿಕೊಂಡು ಹಾಳಾಗಿಹೋಗಲಿಎಂದು ನಿರ್ಧರಿಸುವಷ್ಟರಲ್ಲಿ, “ರಾಖೇಶನನ್ನು; ಅನಸೂಯಳನ್ನು ನಾಯಕ ಕೂಡ್ರಲಿಕ್ಕರೋ ಕುರ್ಚಿಯಲ್ಲಿ ಕೂಡ್ರಿಸು” ಎಂದು ಬೇರೆ ವಕಾಲತ್ತು ಮಾದುತ್ತಿರುವನು. ಇದನ್ನು ಉಗುಳುವಂತಿಲ್ಲ… ನುಂಗುವಂತಿಲ್ಲ… ಫಜೀತಿಗಿಟ್ತುಕೊಂಡಿತು. ನನಗೆ – +“ಆಯ್ತು ಮಾರಾಯಾ… ಕಾದಂಬರಿಕಾರನೇ ನಾಯಕನೆಂದ್ಕೊಂಡು ಯಾವ ನರಕಕ್ಕೆ ಹೋಗ್ಲಿ… ನಿನ್ನಿಂದಾಗಿ ಇಡೀ ಕಾದಂಬರಿಯ ಗೇರೇ ಬದಲಾಯಿಸಿತು. ಅಂತೂ, ಇಂತೂ ಕಾದಂಬರಿಯ ಕೊನೆಯ ಘಟ್ಟಕ್ಕೆ ಬಂದಂತಾಯಿತು. ಏನಾದ್ರು ಫೈಟಿಂಗೋ, ಕ್ಲೈಮಾಕ್ಸೋ ಬರಿದೆಯಾ ನಿನ್ನ ಜೀವನದಲ್ಲಿ… ಅವೆರಡಿದ್ರೆ ನೋಡಪ್ಪಾ… ಕಾದಂಬರಿ ಸೂಪರ್ ಹಿಟ್… ಸಿನಿಮಾ ಮಾಡಿದ್ರೆ ನಿನ್ನ ಪಾತ್ರವನ್ನು ಅನಂತ್‌ನಾಗ್ ಮಾಡಬೌದು… ಅಷ್ಟೊತ್ತಿಗೆ ಅವ್ರೂ ರಾಜಕೀಯದಿಂದ ಬೇಸತ್ತುಕೊಂಡು ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಫ್ರೀಯಾಗಿರ್‍ತಾರೆ… ಮೈಚಳಿ ಬಿಟ್ಟು ನಿನ್ನ ಪಾತ್ರದಲ್ಲಿ ಅಭಿನಯಿಸಬೌದು… ಆಗ ತ್ರಿಶಂಕು ಸ್ಥಿತಿಯಲ್ಲಿರೋ ನೀನೂ ಸಿನಿಮಾ ನೋಡಿ ಸಂತೋಷಪಡ್ತೀಯಾ, ತಿಕಕ್ಕೆ ಗೆದ್ದಲು ಹತ್ತಿಸಿಕೊಂಡು ಬರೆದಿರೋ ನಾನು ಆರಾಮಶೀರು ಫ್ಯಾನ್ ಗಾಳಿಗೆ ತಲೆ ಬಿಟ್ಕೊಂಡು ಕೂತಿರ್‍ತೀನಿ… ಇದ್ಕೆ ಸರಿಯಾಗಿ ಒಂದೆರಡು ಫೈಟ್ ಇರೋ ಕ್ಲೈಮಾಕ್ಸ್ ಹೇಳಿ ಪುಣ್ಯ ಕಟ್ಕೋ… ನೀನು ಮಾಡಿರದಿದ್ರು ಸುಳ್ಳು ಹೇಳು ಪರವಾಗಿಲ್ಲ… ಹುಸಿ ಬದುಕನ್ನು ಬದುಕ್ತಿರೋ ವರ್ತಮಾನಕ್ಕೆ ಇದ್ರಿಂದ ರೋಮಾಂಚನವಾಗಬೌದು! ಏನಂತೀಯಾ?” ಎಂದು ಪೂಸಿ ಹೊಡೆದೆ. +ಅದಕ್ಕೆ ಶಾಮಣ್ಣ ಪಾತ್ರವು ಎಲಾ ದುಷ್ಟಾ ಎಲ್ಲಿಂದೆಲ್ಲಿಗೆ ನಿಚ್ಚಣಿಕೆ ಹಾಕಿದ್ದೀಯಲ್ಲೋ?” ಎಂದು ಪಕಪಕ ನಗಾಡಿತು. +“ನಿನ್ನ ಸಿನಿಮಾ ಕಲ್ಪನೆಗಿಷ್ಟು ಬೆಂಕಿ ಬೀಳ್ಲಿ… ಹಾಗೆನಾದ್ರು ಹೇಳಿದ್ರೆ ನಿನ್ಗೂ ನನ್ಗೂ ಛೀ! ಥೂ! ಅಂತ ಮಂದಿ ಉಗೀತಾರಷ್ಟೇ… ಸತ್ತ ಮೇಲಾದ್ರೂ ನಾನು ತಲೆ ಎತ್ಕೊಂಡು ತಿರುಗಾಡಬಾರ್ದೇನೋ! ನಾನು ಹೆಳ್ತಿರೋದೇನಾದ್ರು ತಿರುಚಿ ಬರ್ದೀಯಾ ಹುಷಾರಣ್ಣ…” ಎಂದು ಎಚ್ಚರಿಸಿತು. +ಪ್ರವರ ಅಲಿಯಾಸ್ ನಿರ್ವಾಣ ಅಂಬೆಗಾಲಿಕ್ಕುತ್ತ ನನ್ನ ಕಡೆಗೆ ಬರುತ್ತಿದ್ದ. ಅವರ ನರಕಕ್ಕೆ ತೊಂದ್ರೆ ಕೊಡಬೇಡ ಬಾರೋ ‘ಮುಠ್ಥಾಳ’ ಎಂದು ಕೂಗುತ್ತ ಬಂದು ಅನ್ನಪೂರ್ಣ ಅವನನ್ನು ಎತ್ತಿಕೊಂಡು ಹಿತ್ತಿಲು ಕಡೆ ಹೋದಳು. +* +* +* +ನನ್ನ ಕಥೆ ಎಲ್ಲಿವರೆಗೆ ಬಂತಪ್ಪಾ ಮಹನುಭಾವ. +ಈಗಾಗಲೆ ರಾಖೇಶ ತನ್ನ ಉಪದ್ವಾಪಿತನದೊಂದಿಗೆ ತನ್ನ ಜೀವನದ ಗೆಳೆಯನಾದದ್ದಾಯಿತು. ಅನಸೂಯ ಪರಿಚಯ ಆದದ್ದಾಯಿತು. ಪರಿಚಯ ಪ್ರಣಯಕ್ಕೆ ತಿರಿಗಿಕೊಂಡದ್ದಾಯಿತು. ಮಹಾಧಿವೇಶನದ ಕಾರ್ಯಕ್ರಮಗಳು ನಡೆದು ನಾನು ಸುವರ್ಣಪದಕ ಸ್ವೀಕರಿಸಿದ್ದಾಯಿತು, (ಸುವರ್ಣ ಪದಕ ಅಂದರೆ ಸುವರ್ಣ ಪದಕ ಅಲ್ವೋ ಅದು; ಸುವರ್ಣ ಲೇಪನದ ಅಲ್ಯೂಮಿನಿಯಂ ತಗಡದು! ಒಂದಿನ ಕಾಸು ಇಲ್ಲದೆ ಪರದಾಡುತ್ತಿದ್ದ ನಾನು ಅದನ್ನು ಗಿರವೀ ಇಡಲೆಂದೋ; ಮಾರಲೆಂದೋ ಪ್ರಸಿದ್ಧ ಲೇವಾದೇವಿಗಾರ ಪೊಬ್ಬತ್ತಿ ವೆಂಕಣ್ಣ ಶೆಟ್ಟಿಯವರ ಬಳಿಗೊಯ್ದು ತೋರಿಸಿದ್ದೆ. ಶೆಟ್ರು ಅದನ್ನು ತಿಕ್ಕಿ ನೋಡಿ… ಇದು ಐದು ರುಪಾಯಿಗೂ ಬೆಲೆಬಾಳುವುದಿಲ್ಲವೆಂದು ಹೇಳಿ ಅಂಗಳಕ್ಕೆ ಎಸೆದಿದ್ದರು. ಅದನ್ನು ಬಿಳಿ ಜೋಳದ ರೊಟ್ಟಿ ಚೂರೆಂದು ಭಾವಿಸಿ ಆಸೆಯಿಂದ ಓಡಿಬಂದ ಬೀದಿ ನಾಯಿ ಅದನ್ನು ಮೂಸಿ ಮುಖ ಸಿಂಡರಿಸಿಕೊಂಡು ವಾಪಸು ಹೋಯಿತು) ಯಶಸ್ವಿಯಾಗಿ ಸಂಗ್ಯಾಬಾಳ್ಯಾ ನಾಟಕವನ್ನು ಆಡಿ ಸೈ ಎನ್ನಿಸಿಕೊಂಡದ್ದಾಯಿತು. ನಾನು ಬಹುಪಾಲು ಸಂಕೋಚ, ಲಜ್ಜೆ, ಸ್ವಾಭಿಮಾನ ಮತ್ತೆಲ್ಲವನ್ನು ದೂರ ಸರಿಸಲಾರಂಭಿಸಿದ್ದೆ. ನನ್ನ ನಾಲಿಗೆ ಅಮೇಧ್ಯ ತಿನ್ನಲು ಹಾತೊರೆಯುತ್ತಿತ್ತು. ಮದ್ಯ ಸೇವನೆ ಮಾಡಲು ನಾಲಿಗೆ ಕುಣಿಯುತ್ತಿತ್ತು. ಇವೆಲ್ಲವುಗಳ ಜೊತೆಗೆ ಇಸಿಪೀಟು, ಮಟಕಾ ಆಡತೊಡಗಿದ್ದೆ. ನಾಯಿ ನೆರಳಾಗಿದ್ದ ರಾಖೇಶ ನನಗೆ ದಿನಕ್ಕೊಂದಾದರೂ ದುರಭ್ಯಾಸ ಕಲಿಸಲು ಪಣತೊಟ್ಟಿರುವವನಂತೆ ವರ್ತಿಸತೊಡಗಿದ್ದ. ಅವನಾಡುತ್ತಿದ್ದ ಪ್ರತಿಯೊಂದು ಮಾತು ಅಲಿಖಿತ ವೇದಗಳಿಂದ ಆರಿಸಿಕೊಂಡಿರುವಂತಿದ್ದುವು ಎಂದು ಭಾವಿಸಿ ಗೌರವಿಸಿ ಅದನ್ನು ಚಾಚೂ ತಪ್ಪದೆ ಪಾಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ. ಅಷ್ಟೊತ್ತಿಗೆ ಗೌರವ ಪೂರ್ವಕವಾಗಿ (ಧರ್ಮಪತ್ನಿಯಂತೆ ದೇಹ ಒಪ್ಪಿಸುತ್ತಿದ್ದ) ಒಪ್ಪಿಸುತ್ತಿದ್ದ ಅನಸೂಯಾಳ ಸುಂದರ ದೇಹದ ಬಗ್ಗೆ ಆಸಕ್ತಿಯ ಒಂದು ಭಾಗ ಕಡಿಮೆಯಾಗಿತ್ತು. ಅಚ್ಚುಕಟ್ಟಾಗಿ ಸ್ಪಂದಿಸುತ್ತಿದ್ದರೆ ಅಂಥವರ ಬಗ್ಗೆ ಕುತೋಹಲ ಉಳಿಯುವುದಾದರೂ ಹೇಗೆ? ಒಂದೇ ಪಟ್ಟು ಕಲಿತ ಯಾವೊಬ್ಬ ಪೈಲ್ವಾನನೂ ಯಶಸ್ವಿ ಕುಸ್ತಿಪಟು ಆಗಲಾರನೆಂದೂ, ವಿವಿಧ ಪಟ್ಟುಗಳನ್ನು ಕಲಿತಾಗಲೇ ಮಾತ್ರ ಅವನು ಪರಿಶೆ ಪೈಕಿ ಪೈಲ್ವಾನನೆಂದೆನಿಸಿಕೊಳ್ಳುವನೆಂದೂ ವರ್ಣನ ಮಾಡಿ ಹೇಳುತ್ತಿದ್ದ ರಾಖೇಶ ನನ್ನನ್ನು ವಿವಿಧ ವಯೋಮಾನದ, ವಿವಿಧ ಮನೋಮಾನದ ವೇಶ್ಯೆಯರ ಬಳಿಗೊಯ್ದು ಬಿಟ್ಟು ಖುಷಿಪಡುತ್ತಿದ್ದ. ಆಗ ನಾನು ಕೊಟ್ಟದ್ದು ಅವರು ಇಸಿದುಕೊಂಡಷ್ಟು. ಅದರ ಫಲವಾಗಿ ನಾನು ಅನೇಕ ಸುಖವ್ಯಾಧಿಗಳಿಗೆ ಆಶ್ರಯದಾತನಾದೆ. (ಮುಂದೆ ದುಡ್ಡಿರದಿದ್ದಾಗ ಅವರವರ ಚಿತ್ರ ಬರೆದೋ, ಅವರವರ ಇಚ್ಛೆಗೆ ತಕ್ಕಂತೆ ಪದ ಹಾಡಿಯೋ; ಅವರವರ ಇಚ್ಛೆಗೆ ತಕ್ಕಂತೆ ಚೌಪದಿಗಳನ್ನು ಬರೆದೋ ದೇಹದ ತೀಟೆ ತಣಿಸಿಕೊಳ್ಳುತ್ತಿದ್ದುದೂ ಉಂಟು.) ಒಳ್ಳೆಯ ಆರೆಂಪಿ ಏಳೆಂಪಿ ವೈದ್ಯರನ್ನು ಹುಡುಕಿಕೊಂಡು ಹೋಗಿ ಇಲಾಜು ಮಾಡಿಸಿಕೊಳ್ಳುತ್ತಿದ್ದೆ. ಧರ್ಮ ವ್ಯಾಧನಿಗೂ, ಸುಖವ್ಯಾಧನಿಗೂ ನಡುವೆ ವ್ಯತ್ಯಾಸವಿಲ್ಲವೆಂದುಕೊಂಡೆ. ಅಳುಕಿನಿಂದ (ಪತ್ನಿಯನ್ನೂ; ಅನಸೂಯಳನ್ನೂ ಬಲವಂತ ಸಂಭೋಗ ಮಾಡಿ ರೋಗಗಳನ್ನು ಹರಡು ಎಂದು ರಾಖೇಶ ಪುಸಲಾಯಿಸುತ್ತಿದ್ದುದನ್ನೂ ಲೆಕ್ಕಿಸದೆ) ನಾನು ಹೆಂಡತಿಯೊಂದಿಗಾಗಲೀ, ಅನುಸೂಯಳೊಂದಿಗಾಗಲೀ ದೈಹಿಕ ಸಂಬಂಧ ಇಟ್ಟುಕೊಳ್ಳದೆ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದೆ. ಕಾಮ ತಣಿಸಿಕೊಳ್ಳಲು; ವರ್ತಮಾನದ ಬೇಗುದಿ ಮರೆಯಲು ಹೆಣಗಾಡುತ್ತಿದ್ದ ನನ್ನನ್ನು ಲಚುಮವ್ವನ ತೋಪಿಗೆ ಕರೆದೊಯ್ದು ರಾಖೇಶ ಹಲವು ಮಂದಿ ಸಾಧೂ ಮಹರಾಜಾಧಿರಾಜರನ್ನು ಪರಿಚಯಿಸಿದ್ದ. ಅವರೂ ನನ್ನ ಹಾಗೆ ಏನೆಲ್ಲ ಕಲಿತು ಹಾಳಾಗಿ ಸಾಧು ಪಟ್ಟ ಕಟ್ಟಿಕೊಂಡಂಥವರೇ. ಅವರು ನನಗೆ ಗುಡುಗುಡಿ ಸೇದುವುದು ಕಲಿಸಿದರು. ಎಷ್ಟೊಂದು ಚಟಗಳು? ಎಷ್ಟೊಂದು ಅನುಭವಗಳು! ಅವುಗಳ ಮೊಣಕಾಲಿಗೂ ನನ್ನ ಪಗಾರ ಸಾಲದಾಯಿತು. ಅವನು ಪರಿಚಯಿಸಿದ ಲೇವಾದೇವಿ ಮಹಾತ್ಮರಿಂದ ವಾರದ ಬಡ್ಡಿ ಸಾಲ ಮಾಡತೊಡಗಿದೆ. ಅವರಿಂದ ತಲೆಮರೆಸಿಕೊಳ್ಳತೊಡಗಿದೆ… ಎರಡನೆ ಬಾರಿಗೆ ಗರ್ಭಿಣಿಯಾಗಿ ಹೆಂಡತಿ ವರಲಕ್ಷ್ಮಿ ಹಾಲು ಹೈನವಿಲ್ಲದೆ ಸಪ್ಪನೆ ಕೂಳು ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದಳು. ಅವಳು ನನ್ನೊಂದಿಗೆ ಮಾಡುತ್ತಿದ್ದ ಜಗಳ ಅರಣ್ಯರೋದನವಾಗಿತ್ತು. ಈ ಎಲ್ಲ ಸುಖಕಾರ್ಪಣ್ಯಗಳಿಂದ ಮುಕ್ತಿಯ ಶಾಂಪಲ್ ನೋಡಲು ರಾಖೇಶನ ಸಲಹೆಯ ಮೇರೆಗೆ ಬ್ಯಾಂಕಿನಲ್ಲಿ ಲೆಕ್ಕ ಹೆಚ್ಚು ಕಡಿಮೆ ಮಾಡಿ ನೂರೋ ಇನ್ನೂರೋ ಕದಿಯ ತೊಡಗಿದೆ… ಇವಿಷ್ಟು ಅನಂತರದಲ್ಲಾಗಿದ್ದ ಕೆಲವು ಪ್ರಮುಖ ಬದಲಾವಣೆಗಳು… ಊಹೆ ನಿರೀಕ್ಷೆಗೂ ಮೀರಿ ನಾನು ಸಮಾಜದ ಉಪೇಕ್ಷ್ರೆ ತುತ್ತಾಗಿದ್ದೆ. ಮತ್ತು ಹೆಚ್ಚಿನ ತಿರಸ್ಕಾರ , ಥೂ, ಹಲ್ಲೆಗಳಿಗೆ ತುತ್ತಾಗಬೇಕಾದರೆ ಯಾವ ಯಾವ ತಪ್ಪುಗಳನ್ನು, ಅಪರಾಧಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದೆ. ಇಂಥದೊಂದು ಆಲೋಚನೆಗಳಿಗೆ ಅಡಿಕ್ಟ್ ಆಗಿದ್ದ ನಾನು, ಆ ಕುರಿತು ರಾಖೇಶನ ಬಳಿ ಅಂಗಲಾಚುತ್ತಿದ್ದೆ ಮಗುವಿನಂತೆ. ಆಗ ಅವನು ಧ್ಯಾನಸ್ಠ ಮುಖಮುದ್ರೆ ಮಾಡಿಕೊಳ್ಳುತ್ತಿದ್ದ. ಹೇಳುವ ಗಳಿಗೆ ಮುಂದೂಡಿ ಗೋಳಾಡಿಸುತ್ತಿದ್ದ. ಆದರೂ ವರ ಕೊಟ್ಟಂತೆ ಕೊನೆಗೂ ಹೇಳುತ್ತಿದ್ದ. ಅದನ್ನು ಯಶಸ್ವಿಯಾಗಿ ಆಚರಣೆಗೆ ತರಲು ಎಟಕುವ, ಎಟುಕದ ಎಲ್ಲಾ ಮಾರ್ಗಗಳನ್ನು ಅವಲಂಬಿಸುತ್ತಿದ್ದೆ. +ಪಶುಪತಿ ಎಂಬ ಕಾಂರೇಡನ ಐವತ್ತು ಸಾವಿರ ರೂಪಾಯಿ ಸಾಲಕ್ಕೆ ನಾನು ಸ್ಯೂರಿಟಿ ನೀಡಿದ್ದುದು ನಿನಗೆ ನೆನಪಿರಬೇಕಲ್ಲವೆ? ಕೊಟ್ಟೋನು ಕೋರಭದ್ರ ಇಸಿದುಕೊಂಡೋನು ಈರಭದ್ರ ಅಂತಾರಲ್ಲ… ಹಾಗೆ! ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದನೋ, ಅವರವರಿಗೆ ಟೋಪಿ ಹಾಕಿ ಹಣ ಸಂಗ್ರಹಿಸಿದ್ದನೋ ಆ ಉದ್ದೇಶಕ್ಕೆ ಅದನ್ನು ಬಳಸದೆ ಅವನು ಬೆಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿ ತನಗಾಗಿ ಕಾಯುತ್ತ ನಿಂತಿದ್ದ ಸೋಫಿಯಾ ಎಂಬ ತರುಣಿಯೊಂದಿಗೆ ಚಕ್ ಬುಕ್ ಚಕ್ ಬುಕ್ ಏರಿ ಬೊಂಬೈ ಸೇರಿಕೊಂಡು ಬಿಟ್ಟಿದ್ದ. ಮಸೀದಿಗಳ ವಿರುದ್ಧ ಹೋರಾಡುವ ಮುಸ್ಲಿಮರ ವಿರುದ್ಧ ಮಾತಾಡುತ್ತ ಆಚಾರ್ಯ ಹಾಜಿ ಮಸ್ತಾನರನ್ನೂ; ರಾಮಜನ್ಮಭೂಮಿ ವಿರುದ್ಧ ಮಾತಾಡುವ ಬ್ರಾಹ್ಮಣರ ವಿರುದ್ಧ ಮಾತಾಡುತ್ತ ಜನಾಬ್ ಬಾಳಾಠಾಕ್ರೆಯವರನ್ನು ಏಕಕಾಲಕ್ಕೆ ಪರಿಚಯ ಮಾಡಿಕೊಂಡ. ನಾಯಕರ ಬೋಳುದಲೆಗಳ ಮೇಲೆ ಕೈ ಆಡಿಸುತ್ತ ಒಂದಿಷ್ಟು ಕಾಸು ಮಾಡಿಕೊಂಡ. ಜೊತೆಯಲ್ಲಿ ಸಹಾಯಕಳಂತಿದ್ದ ಮಾದಕ ಕಣ್ಣುಗಳುಳ್ಳ ಸೋಫಿಯಾಳನ್ನು ಪ್ರಸಿದ್ಧ ನಿರ್ಮಾಪಕ ಸುಖಾಡಿಯಾರ ಬೆಂಜ್ ಕಾರಿಗೆ ತೂರಿಸಿ ತಾನೂ ಒಂದು ಸೆವೆಂಟ್ ಮಾಡೆಲ್ ಫೀಯೆಟ್ ತಗೊಂಡ. ಬೆಳೆಗ್ಗೆ ದಾದರ್‌ನಲ್ಲಿದ್ದರೆ ಮಧ್ಯಾಹ್ನ ಇರುತ್ತಿದ್ದುದು ಕಲ್ಯಾಣದಲ್ಲಿ; ಸಾಯಂಕಾಲ ಜುಹುದಲ್ಲಿದ್ದರೆ, ರಾತ್ರಿ ಬೊರಿವಿಲಿಯಲ್ಲಿರುತ್ತಿದ್ದ. ಅವನು ಬ್ಯಾಂಕಿನ ಲೀಗಲ್ ಅಡ್ವೈಸರ್ ಖರಬಂಡಾರಿಂದ ತಿಂಗಳಿಗೊಂದಾವರ್ತಿಯಂತೆ ವಾಯು ಪ್ರಯಾಣದ ಮೂಲಕ ಹೋಗುತ್ತಿದ್ದ ನೋಟೀಸುಗಳನ್ನು ಹೇಗೆ ಪಡೆದಾನು! ತಾಷ್ಕೆಂಟಿನಿಂದ ಹೊರಟ ಬೋಯಿಂಗ್ ಪೂರ್ವಾಚಲಗಳಿಗೆ ಬಡಿದುನಡೆದ ಅಪಘಾತದಲ್ಲಿ ಸತ್ತ ಐವತ್ತೇಳು ಮಂದಿ ಪೈಕಿ ಪಶುಪತಿ ಎಂಬ ಸಚ್ಚಿದಾನಂದ ಸ್ವರೂಪಿಯಾದ ಕಾಮ್ರೇಡೋರ್ವ ಇದ್ದ ಎಂಬ ಲಕೋಟೆ ಬಂತು. ಪರೋಪಕಾರರ್ಥಮಿದಂ ಶರೀರಂ ಅಂತ ಬಗುಳೆ ಬಿಡ್ತಿದ್ದೀಯಲ್ಲ… ಕಟ್ಟಲೆ ನನ ಮಗ್ನೇ ಎಂದದು ನನ್ನ ಕೊರಳು ಸುತ್ತಿಕೊಂಡಿತು. ನನ್ನ ಪಗಾರದ ಮುಕ್ಕಾಲು ಭಾಗ ಅದರ ಕಂತಿಗೇ ಹೋಗತೊಡಗಿತು. ನಾನೀ ಸಂದರ್ಭದಲ್ಲಿ ಒಣ‌ಒಣ ಭಣಭಣ ಆಗಿರುವಾಗಲೇ ಗರ್ಭಿಣಿ ವರಲಕ್ಷ್ಮಿ ‘ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ’ ಎಂದು ತುಟಿ ಜಾರಿ ಅಂದು ಬಿಟ್ಟಳು. ನಂತರ ನನ್ನ ಮಾತಿನ ಅರ್ಧ ದುರಭ್ಯಾಸಗಳಿಗೆ ಬೆಂಕಿ ಬೀಳಲಿ ಎಂಬುದಾಗಿತ್ತು ಅಂಥ ಸಮರ್ಥಿಸಿಕೊಂಡಳು. ದುಶ್ಚಟಗಳ ಪಾದ್ಧೂಳೊಳಗೆ ಹೊರಳಾಡುತ್ತಿರುವ ನಮ್ಮವನಲ್ಲದ ಶಾಮನಿಗೇ ಬೆಂಕಿ ಬಿದ್ದದ್ದರಿಂದಾಗುವ ನಷ್ಟವೇನು ಎಂದು ಮುಂತಾಗಿ ಹಿಂದಿನ ದಿನ ಬಂದಿದ್ದ ತಾಯಿ ಕೆಕ್ಕರಿಸಿ ಮಾತಾಡಿದಳು… ಅದಕ್ಕೆ ಪೆಟ್ರೋಲು ಸುರಿಯುವವನಂತೆ ಬಂದ ರಾಖೇಶ “ಅನಸೂಯಮ್ಮಗೆ ನೀನು ಈಗಿಂದೀಗ್ಲೆ ನೀನು ಬೇಕೇ ಬೇಕಂತೆ ಹೊರಡು” ಎಂದು ಹೇಳಿದ. ಅತ್ತೆ ಸೊಸೆಯರೀರ್ವರು ಗುಡುಗು ಸಿಡಿಲುಗಳಾಗಿ ಇಡೀ ಊರಿಗೆ ಕೇಳಿಸುವಂತೆ ಬಯ್ದಾಡಿದರು. ಸ್ವಲ್ಪ ಹೊತ್ತಿನ ಹಿಂದೆ ಗುಡುಗುಡಿ ಹೊಡೆದು ಮಂಪರೈಭೋಗದಲ್ಲಿದ್ದ ನನಗೆ ಅವರು ಚಿದಾನಂದಾವಧೂತವಿರಚಿತ ವೇದಾಂತ ಶಿಖಾಮಣಿಯ ಪಂಚಮ ಪರಿಶ್ಚೇದವನ್ನು ಪಠಣ ಮಾಡುತ್ತಿರುವಂತೆ ಅವರ ಮಾತುಗಳು ಕೇಳಿಸುತ್ತಿದ್ದವು. ಅದೇ ಹೊತ್ತಿಗೆ ಬೋಟಿ ವ್ಯಾಪಾರಿ ಭರಮವ್ವ ಬಂದು ಭೋಟ್ ತಿಂದ್ ಡೇಗಿದ ರೊಕ್ಕ ಕೊಡಲ್ಲೇನು? ಎಂದು ಪ್ರಶ್ನೆ ಹಾಕಿ ಹೋದಳು. ಹೆಂಡ ಕುಡಿದಿದ್ದ ಬಾಕಿ ಕೊಡದಿದ್ರೆ! ಎಂದು ಎಚ್ಚರಿಕೆ ನೀಡಿ ಈಡೆಗರ ಇರೂಪಾಕ್ಸಿ ಹೋದ… ಹಾಗೆ ಸಾರಾಯಿ ಅಂಗಡಿಯ ದೊಡ್ಡಿಯೇ ಮೊದಲಾದವರು, ಇದೆಲ್ಲ ಅನುಕೂಲವಾಗಿ ಪರಿಣಮಿಸುತ್ತಿರುವಂತೆ ಅತ್ತೆ ಸೊಸೆಯರೀರ್ವರೂ ಗಂಟು ಮೂಟೆ ಕಟ್ಟಿಕೊಂಡು ಹೊರಡಲನುವಾದರು. “ಈಗ ಅರ್ಜೆಂಟ್ ಹಣ ಬೇಕಾಗಿದೆ ಆ ಒಂಚೂರು ಬಂಗಾರವನ್ನಾದ್ರೂ ಕೊಡು” ಎಂದು ತಣ್ಣಗೆ ಕೇಳಿದೆ… ಅವರಿಬ್ಬರು ಅದಕ್ಕೂ ನಾಲ್ಕು ಸುಡುಸುಡುವ ಮಾತಾನಾಡಿ ಹೋದರು. (ಮುಂದೊಂದಿನ ಅವರು ಮಗುವನ್ನು ಎತ್ತಿಕೊಳ್ಳಲಿಕ್ಕೆ ಅವಕಾಶ ಮಾಡಲಿಲ್ಲ) ನಾನು ಸಮಾಧಾನದ ಉಸಿರು ಬಿಟ್ಟೆ. ಎಲ್ಲ ಶೃಂಖಲೆಗಳು ಚದುರಿದವೆಂದು ಸಂತೋಷಪಟ್ಟೆ… ನನ್ನ ಆ ಸಂತೋಷ ಚದುರಿಸಿ ಓಡಿಸಲು ಹಲವರು ಅನೇಕ ಪ್ರಯತ್ನಗಳನ್ನು ಮಾಡಿದರು. ಅಡಚಣೆ ಮತ್ತು ಲಜ್ಜೆಗೇನೆ ಹೆದರದಿದ್ದ ನಾನು ಅವಕ್ಕೆಲ್ಲ ಹೆದರುವುದು ಸಾಧ್ಯವೇನು? +ನಾನು ಹೆಚ್ಚು ಕಡಿಮೆ ನಿರಾಕರಣ ಸ್ಥಿತಿ ತಲುಪಿದ್ದೆ. ಅದೊಂದು ಥರದ ನಿರುಪದ್ರವದ ಹಂತ ಎಂದು ಹೇಗೆ ಹೇಳಬೇಕೆಂದರೆ ಆಗಲೆ ಗಡ್ಡ ಮೀಸೆ ಬಿಟ್ಟು, ಸ್ರಕ್ಚಂದನಗಳಿತ್ಯಾದಿ ಧರಿಸಿ ಭಾಜಪದ ರೈತ ಶಾಖೆಯ ಹೋಬಳಿ ಅಧ್ಯಕ್ಷನಾಗಿದ್ದ ಗುಮುಸಿ ಗೌಡ ಬಂದೊಡನೆ ಪಶುಪತಿಯನ್ನು ನೂರಕ್ಕೆ ನೂರರಷ್ಟು ಹೋಲುವ ವ್ಯಕ್ತಿಯೋರ್ವ ಬಂದಿರುವನೆಂದೂ, ಅವನನು ತಾವಿಬ್ಬರೂ ಕಂಭಕ್ಕೆ ಕಟ್ಟಿ ಹಾಕಿ ಅವನ ಕಾರನ್ನು ಹರಾಜು ಹಾಕಿ ಸಾಲ ಕಟ್ಟಿಕೊಳ್ಳೋಣವೆಂದೂ ಹೇಳಿದ. ನಾನು ನಗುತ್ತ ಬರೋಲ್ಲ ಎಂದು ಕಳಿಸಿಬಿಟ್ಟೆ… ಆ ಹೊತ್ತಿಗೆ ನನಗೆ ಸಮಯ ಪ್ರಜ್ಞೆ ಎಂಬುದೇ ಇರಲಿಲ್ಲ… ತೊಡೆ ಸಂಧಿಯ ನವೆಯ ಅಧ್ಯಾತ್ಮದ ದಾಹ ತುರಿಸಿ ತಣಿಸುವುದಕ್ಕೆ ಪುರುಸೊತ್ತಿರದಿದ್ದ ನಾನು ಬ್ಯಾಂಕಿಗೆ ಹೊತ್ತಿಗೆ ಸರಿಯಾಗಿ ಹೋಗುತ್ತಿರಲಿಲ್ಲ… ಅಥವಾ ಹೋಗುತ್ತಲೇ ಇರಲಿಲ್ಲ… ಹೋದರೂ ತಪ್ಪುಗಳನ್ನು ಮಾಡುತ್ತಿದ್ದೆ. ತಪ್ಪುಗಳು ಗುರುತರ ಅಪರಾಧಗಳಾಗಿದ್ದವು… ಎಲ್ಲರೂ ಅಪಾದನೆ ಮಾಡಲು ತುದಿಗಾಲ ಮೇಲೆ ನಿಂತಿದ್ದರು – ಅದರ ಪರಿಣಾಮವಾಗಿ ವಿಚಾರಣೆ ನನ್ನನ್ನು ಸಸ್ಪೆಂಡ್ ಅಂತಾರಲ್ಲ… ಅದನ್ನು ಮಾಡಲಾಯಿತು. ಅದಕ್ಕೆ ಪ್ರತಿಕ್ರಿಯಾ ರೂಪದಲ್ಲಿ ನಾನು ನಗು ನಗುತ್ತಾ ನಾನು ಹೊರ ಬಂದೆ. ಅಂತೂ ಇದ್ದೊಂದು ಶೃಂಖಲೆ ಕಳಚುವ ಸೂಚನೆ ನೀಡುತ್ತಿದೆ… ಎಂಥಾ ಸಂತೋಶದ ಸಂಗತಿ! ನಾನು ನೌಕರಿಯಿಂದ ಸಸ್ಪೆಂಡಾಗಿದ್ದೆನೇ ಹೊರತು ಚಟಗಳಿಂದ ಸಸ್ಪೆಂಡಾಗಿರಲಿಲ್ಲ… ಮೊದಲು ಅರೆಕಾಲಿಕ ಉಪನ್ಯಾಸಕರಂತೆ ಕೆಲಸ ಮಾಡುತ್ತಿದ್ದ ದುಶ್ಚಟಗಳು ನಾನು ಸಸ್ಪೆಂಡಾದ ದಿನದಿಂದ ಪೂರ್ಣಾವಧಿಗೆ ನೇಮಕಗೊಂಡು ಚುರುಕಾಗಿ ಕೆಲಸ ಮಾಡತೊಡಗಿದವು. ಅವುಗಳ ಪೈಕಿ ಒಂದನ್ನು ಹಚ್ಚಿಕೊಳ್ಳುವುದು ತುಸುತ್ರಾಸದಾಯಕ… ದೀಕ್ಷೆ ಕೊಡಲಿಕ್ಕೆ ಗುರುಸ್ಥಾನದಲ್ಲಿರುವವರು ಹೇಗೆ ಬೇಕೋ ಹಾಗೆಯೇ ಚಟವೊಂದರ ದೀಕ್ಷೆಕೊಡಲು ರಾಖೇಶ ಎಂಬ ಪಿರಮೆಡ್‌ನ ಸಹಾಯ ಬೇಕೇ ಬೇಕು… ಸ್ವರಗಳನ್ನು ಕಲಿತವರಿಗೆ ವ್ಯಂಜನಗಳನ್ನು ಕಲಿಯುವುದು ಎಷ್ಟು ಸುಲಭವೋ ಅಷ್ಟೇ ಸುಲಭ ಒಂದು ಚಟ ಕಲಿತವರಿಗೆ ಇನ್ನೊಂದು ಚಟ ಕಲಿಯುವುದು. ಅವು ಒಂದಲ್ಲಾ, ಎರಡಲ್ಲ, ಹತ್ತಲ್ಲ, ಇಪ್ಪತ್ತಲ್ಲ, ನೂರಾರುಗಳಿದ್ದವು. ಕಾಗೆಯೊಂದಗುಳ ಕಂಡರೆ ಕರೆಯದ ತನ್ನ ಬಳಗವನ್ನು ಎಂದು ಬಸವಣ್ಣ ಹೇಳಿದ್ದಾನಲ್ಲ… ಹಾಗೆ… ತಾನು ನೆಲೆ ಪಡೆದಿರುವ ಎಡೆಕ್ಡೆ ಚಟವೊಂದು ಕೈ ಬೀಸಿ ಕರೆದು ಸಹಬಾಳುವೆ ನಡೆಸುವುದು. ಒಂದು ಚಟಕ್ಕೇನಾದರು ಧಕ್ಕೆ ಬಂದರೆ ಎಲ್ಲ ಚಟಗಳು ಒಕ್ಕೊರಲಿನಿಂದ ಪ್ರತಿಭಟಿಸುತ್ತವೆ. ಚಳುವಳಿ ಮಾಡುತ್ತವೆ. ಘೇರಾವ್ ಮಾಡುತ್ತವೆ, ಲಾಕ್ ಔಟ್ ತೆರೆ ಎಂದು ಒತ್ತಾಯಿಸುತ್ತವೆ. ಕೊನೆಗೂ ಅವು ಯಶಸ್ವಿಯಾಗುತ್ತವೆ. ಇವು ಗಾಂಧಾರಿ ಸಂತಾನವಿದ್ದಂತೆ… ಇವುಗಳ ಮಹಿಮೆ ಗೊತ್ತಾಗಬೇಕಾದರೆ ನೀನು ಒಂದು ಚಟ ಕಲಿಯಬೇಕು… ಸಿಗರೇಟ್ ಕಲಿತಿ ಅಂದ್ರೆ ಅಡಿಕೆಚೀಟಿ; ಅದಕ್ಕೆ ಡ್ರಿಂಕ್ಸ್… ಅದಕ್ಕೆ ಅಮೇಧ್ಯ; ಜೂಜು, ವ್ಯಭಿಚಾರ… ಹೀಗೆ ಲಿಂಕ್ ಬೆಳೀತಾ ಹೋಗುತ್ತದೆ… ಇದಕ್ಕೆ ಮುಖ್ಯವಾಗಿ ರಾಖೇಶನನ್ನು ದೋಸ್ತಿ ಮಾಡ್ಕೋ ಬೇಕು… (ಖಂಡಿತ ನೀನು ಈ ಕಾದಂಬರಿ ಮುಗಿದೊಡನೆ ಕೊತ್ತಲಗಿಗೆ ಹೋಗಿ ರಾಖೇಶಾನ್ವೇಷಣೆ ನಡೆಸುತ್ತೀ) +ಇರಲಿ… ಅಡಚಣೆ ದತ್ತು ಮಗನಾಗಿದ್ದ ನಾನು (ಅಥವಾ ನಾನೇ ಅಡಚಣೆ ಪುತ್ರ ಪೌತ್ರಸ್ಯ ಪಟ್ಟ ಕಟ್ಟಿದ್ದೆನೋ) ಒಂದಾದರು ಚಟ ಎಲ್ಲಾದ್ರು ಹೋಗು ಯಾರ್ನಾದ್ರು ಆಶ್ರಯಿಸಿಕೋ… ನಿನ್ನ ಪೋಷಿಸೋ ಶಕ್ತಿ ನನಗಿಲ್ಲ ಎಂದು ‘ಬುಜ್ಜುಗಿಂತಲು’ ಮಾಡಿ ಹೇಳಿದೆ. ಮಾಡ್ಕೊಂಡ ಗಂಡನ್ನ ಬಿಟ್ಟು ಇನ್ನೊಬ್ರನ್ನ ಸೇರ್‍ಕೊಂಡು ಜೀವಿಸಿದ್ರೆ ದೇವ್ರು ಮೆಚ್ತಾನೆಯೇ. ಇಷ್ಟಿದ್ದ ನನ್ನ ಇಷ್ಟೆತ್ತರ ಮಾಡಿರುವ ನಿನ್ನೊಂದಿಗೆ ನನ್ನ ಸಂಸ್ಕಾರವೂ ಆಗಬೇಕೆಂದು ಪಟ್ಟು ಹಿಡಿಯಿತು. ಏನಾದರು ಮಾಡು… ಪೋಷಿಸು ಎಂದು ಗೋಗರೆಯಿತು. ಆ ಚಟವನ್ನು ಉಳಿದ ಚಟಗಳೆಲ್ಲ ಬೆಂಬಲಿಸಿದವು… ಹೀಗೆ ಅಣಬೆಗಳಂತೆ ಸಾಮೂಹಿಕವಾಗಿ ಅವು ಗುಳೇ ಹೊರಡಲು ನಿರಾಕರಿಸಿ ಉಳಿದುಕೊಳ್ಳಲು ನಾನು ಚಿಂತಾಕ್ರಾಂತನಾದೆ… ಹೆಂಗಪ್ಪಾ ಇದಕ್ಕೆಲ್ಲ ಜೋಡಿಸುವುದಂತ – ನಾನು ಕೈಚೆಲ್ಲಿ ಕೂಡ್ರದಂತೆ ನೋಡಿಕೊಳ್ಳಲೆಂದೇ ಕೃಷ್ಣ ಪ್ರತಿನಿಧಿಯಾದ ರಾಖೇಶ ಹೇಗೋ ಜೊತೆಯಲ್ಲಿದ್ದ… ಹೆದರಬೇಡ, ಎದೆಗುಂದ ಬೇಡ ಎಂದು ಧೈರ್ಯ ಹೇಳುತ್ತಿದ್ದ. ಮುಚ್ಚಿದ್ದ ದಾರಿಗಳಿಗೆ ರಹದಾರಿ ನೀಡುತ್ತಿದ್ದ. ಅನಸೂಯ ನನ್ನನ್ನು ಕರೆಕಳಿಸುವಂತೆ ಮಾಡುತ್ತಿದ್ದ. ನನ್ನ ವಿಷಾದ ಪೂರ್ಣ ದುಸ್ಥಿತಿ ನೋಡಿ ಅಳುತ್ತಾ ಬರಸೆಳೆದು ಅಪ್ಪಿಕೊಳ್ಳಲು ಧಾವಿಸುತ್ತಿದ್ದಳು. ನನ್ನಲ್ಲಿರೋ ಸುಖ ವ್ಯಾಧಿಗಳ ಕುರಿತು ಇಬ್ಬರಿಗೂ ಎಚ್ಚರಿಕೆ ನೀಡಿ ದೂರ ಮಾಡುತ್ತಿದ್ದ ಮಗನಂತೆ… ಗಂಡನಂತೆ… ತಿಳಿದು ಆಕೆ ಬಯ್ಯುತ್ತಿರುವಾಗ ನಾನು ತಲೆ ತಗ್ಗಿಸಿ ನಿಂತಿರುತ್ತಿದ್ದೆ. ಊಟ ಮುಗಿಸಿ ಕೈಯಲ್ಲಿಂದಿಷ್ಟು ದುಡ್ಡು ಕೊಡುತ್ತಿದ್ದಳು ಕಾಂಚನಾ ಅಂಕಲ್ ಬಿಲಹರಿ ರಾಗ ಹೇಳಿಕೊಡು ಎಂದು ಕೇಳಿಬಿಡುವುದೋ ಎಂದು ಹೆದರಿ ನಾನು ಅಲ್ಲಿಂದ ಜಾರಿಕೊಂಡು ಬಿಡುತ್ತಿದ್ದೆ. ಇದು ದಿನಾಲು ಆಗೋ ಕೆಲಸವಾಗಿರಲಿಲ್ಲ. ಅನಸೂಯಾಳ ಮನೆ ಸನಿಹಕ್ಕೆ ಹೋಗದೆ ತಲೆಮರೆಯಿಸಿಕೊಂಡು ಅಡ್ಡಾಡುತ್ತಿದ್ದೆ. ಮೊದಮೊದಲು ನನ್ನ ಜೊತೆ ರಾಖೇಶ ಇರುತಿದ್ದನಲ್ಲ… ಈಗ ನಾನೇ ಅಣ್ಣ, ತಮ್ಮಾ, ಗುರೂ, ಅಂತ ಅವನ ಜೊತೆಯಲ್ಲಿರತೊಡಗಿದೆ. ಅವನು ಸಾಧ್ಯವಾದಷ್ಟು ನನ್ನನ್ನು ಪೋಷಿಸುವ ಕೆಲಸ ಮಾಡುತ್ತಿದ್ದ. ಕುಡಿದ ಅಮಲಿನಲ್ಲೋ, ಗಾಂಜಾದಮಲಿನಲ್ಲೋ ತಾನು ಅಂಥವನೆಂದು ಇಂಥವನೆಂದೂ ತನ್ನ ತಾಯಿ ನಾರಾಯಣರಾವ್ ಎಂಬ ಸರ್ಕಿಲ್ ಇನ್ಸ್‌ಪೆಕ್ತರ್ ಇಟ್ಟುಕೊಂಡು ಮೋಸ ಮಾಡಿದನೆಂದೂ ಒಮ್ಮೆ ಹೇಳುತ್ತಿದ್ದರೆ, ಇನ್ನೊಮ್ಮೆ ರುದ್ರನಾಯಕನ ಹತ್ತಿರ ಸಂಬಂಧಿ ಎಂದೂ ಹೇಳಿಕೊಳ್ಳುತ್ತಿದ್ದ; ಇನ್ನೊಮ್ಮೆ ನನ್ನ ತಂಗಿ ಶಾಲಿನಿ ಬೆಂಗಳೂರಲ್ಲಿ ರಘುರಾಮನ ಕಂಪನಿಯಲ್ಲಿ ಸ್ಟೆನೋ ಆಗಿ ಕೆಲಸ ಮಾಡುತ್ತಿರುವಳೆಂದೂ ಹೇಳುತ್ತಿದ್ದ, ಮಗದೊಮ್ಮೆ ರಘುರಾಮನ ಮಾತು ಕಟ್ಕೊಂಡು ನಾನು ನಿನ್ಗೆ ದುಶ್ಚಟಗಳನ್ನು ಕಲಿಸಬೇಕಾಯ್ತು ಎಂದು ಹೇಳುತಿದ್ದ… ಇದನ್ನೆಲ್ಲ ತಮಾಷೆಗೆ ಹೇಳಿದೆ, ನಂಬಬೇಡ? ಎಂದು ಜೋರಾಗಿ ನಗುತ್ತಿದ್ದ. ನನಗೇ ಒಂದೂ ಅರ್ಥವಾಗುತ್ತಿರಲಿಲ್ಲ. ನನಗೆ ಒಂದು ಮೊಳ ಉದ್ದದ ಮೊನಚಾದ, ಥಳ ಥಳ ಹೊಳೆಯುತಿದ್ದ ಕತ್ತಿಯೊಂದನ್ನು ತಂದುಕೊಡುತ್ತ “ನೋಡು… ಭರಮಣ್ಣ ನಾಯಕರಿಗೆ ಬಿಚ್ಚುಗತ್ತಿ ಎಂಬ ಬಿರುದು ಬಂದಿದ್ದು ಇದರಿಂದಲೇ! ಪರಮೇಶ್ವರ ಪ್ರತ್ಯಕ್ಷನಾಗಿ ಮುರುಘಾಸ್ವಾಮಿಗಳಿಗೆ ಕೊಟ್ಟನಂತೆ, ಸ್ವಾಮಿಗಳು ನಾಯಕರಿಗೆ ಕೊಟ್ಟು ಬಿರುದು ನೀಡಿದರಂತೆ. ಭರಮಣ್ಣ ಜರಿಮಲೆಯ ಡಂಪಣ್ಣನಿಗೆ ಕೊಟ್ಟನಂತೆ… ಡಂಪಣ್ಣನ ಮರಿಮರಿಮರಿ ಗಿರಿಗಿರಿಗಿರಿ ಮೊಮ್ಮಗ ಬಿಚ್ಚುಗತ್ತಿ ಎಂಬುವವನ ಏಳುಸುತ್ತಿನ ಕೋಟೆ ಪೈಕಿ ಹಿಸ್ಸೆಯಾಗಿ ಇದನ್ನ ಇಟ್ತುಕೋ ಎಂದು ತನ್ನ ಕಝಿನ್ ಸಿಸ್ಟರ್ ಅನಸೂಯಾಳಿಗೆ ಕೊಟ್ಟು ತಾನು ನವಲಗುಂದಕ್ಕೆ ಹೋಗಿ ನಾಗಲಿಂಗ ಸ್ವಾಮಿಗಳ ಸೇವೆ ಮಾಡಿಕೊಂಡಿದ್ದು ಬಿಟ್ಟಿರುವನಂತೆ. ಅನಸೂಯಾ “ಲೋ ರಾಕ್ಯಾ… ಇದ್ಯಾಕೋ ಮನ್ಯಾಗಿರೋದು ಸಜ್ಜು ಕಾಣವಲ್ದು… ಒಯ್ದು ಕರದಂಟಿಗೆ ಹಾಕಿ ಬಿಡು’ ಎಂದುಹೇಳಿ ತನಗೆ ಕೊಟ್ಟಳು. ಎಂದು ಮುಂತಾಗಿ ಹೇಳಿ ಅವನು ಅದನ್ನು ನನಗೆ ಕೊಟ್ಟನು… ಶಾಮಾ… ನನ್ನ ಕೊಲೆಮಾಡಬೇಕೆನಿಸಿದಾಗ ತಪ್ಪದೆ ಇದೇ ಕತ್ತಿಯಿಂದ ಕೊಲೆ ಮಾಡಪ್ಪಾ… ನಿನ್ಗೆ ಆತ್ಮಹತ್ಯೆ ಮಾಡಿಕೊಳ್ಳೋ ಆಲೋಚನೆ ಬಂದಾಗಲೂ ಅಷ್ಟೆ…” ಇದನ್ನು ಸೀರಿಯಸ್ಸಾಗೇ ಹೇಳಿದ್ದ. (ಯಾಕಿದ್ದೀತು ಅಂತ ಅದನ್ನು ನಾನು ಒಯ್ದು ವೀರಭದ್ರ ದೇವರ ಗುಡಿಯಲ್ಲಿಟ್ಟು ಬಂದುಬಿಟ್ಟೆ ಅದು ನೀಡುತ್ತಿದ್ದ ಹಿಂಸೆ ತಾಳಲಾರದೆ… ಮುಂದೊಂದಿನ) +ಅಂಥವನು ನನ್ನ ರಾಖೇಶ… ನನಗೆ ಮತ್ತು ಬರಿಸಲು ಭಟ್ಟಿ ಸಾರಾಯಿ ತರುತ್ತಿದ್ದ. ಅಡಚಣೆಯಿಂದಾಗಿ ಪೋರ್ಕೋ, ಬೀಫೂ ತಂದು ತಿನ್ನಿಸುತ್ತಿದ್ದ. ಯಾವಾಗ್ನೋಡಿದ್ರು ದುಡ್ಡಿಲಾಂತ ಸಾಯ್ತೀಯಲ್ಲೋ… ಈಗಿಲ್ಲಿ ನಿಂತ್ಕೋ… ನಾನು ಮಾಡೊ ಕೆಲಸಾನ ನೀನು ಮಾಡು. ನೀನೇನು ದೊಡ್ಡ ಗವರ್‍ನರನ ಮೊಮ್ಮಗ ಏನು? ಎಂದು ಗದರಿಸಿ ಬಸ್‌ಸ್ಟಾಂಡ್‌ನ ಹೆಲೋಜೆನ್ ದೀಪದ ಬುಡದಲ್ಲಿ ನಿಲ್ಲಿಸುತ್ತಿದ್ದ. (ಅಲ್ಲಿ ನಿಂತಿದ್ದಾರೆ ಪಿಂಪೇ ಇರಬೇಕು. ಆ ಪಿಂಪ್ ಸಾಮಾನ್ಯವಾಗಿ ರಾಖೇಶನೇ ಆಗಿರುತ್ತಾನೆ…) ಹೋಗಿ ಹೋಗಿ ನನ್ ಹೆಸರು ಹೇಳಿದ್ಕೆ ತಲೆ ಹಾಕಿ ನನ್ ಮರ್‍ವಾದಿ ಕಳೀಬ್ಯಾಡ್ವೋ… ಪಂಡಿತ ಪರಮೇಶ್ವರ ಮೊಮ್ಮಗ… ಗ್ರಾಂಡ್‌ಸನ್…ಪೋತೆ ಮನಮಡು… ಶಾಮಾಶಾಸ್ತ್ರಿ ಅಂತ ಹೇಳಿಬಿಡು. ಇದ್ರಲ್ಲಿ ನಾಚ್ಕೋಳ್ಳೋದೇನಿದೆ… ನಾಚಿಕೆಗೆ ನೀನು ಪಾಠ ಹೇಳಿಕೊಡುವಂತಾಗಬೇಕು. ಎಂದು ಹೇಳುತ್ತಿದ್ದ… ಹೀಗೆ ಹೇಳಬಲ್ಲವರು ದಶಲಕ್ಷ್ಕ್ಕೊಬ್ಬರೋ! ಕೋಟಿಗೊಬ್ಬರೋ! +ನಾನು ಹಾಗೆ ನಿರ್ಭಿಡೆಯಿಂದ ಹೇಳುತ್ತಿದ್ದೆ. ಅಂಥೋರ ವಂಶದಲ್ಲಿ ಹುಟ್ಟಿ ನೀವಿಂಥ ಕೆಲಸ ಮಾಡೋದಂದ್ರೇನು! ಎಂದು ಉದ್ಗರಿಸುತ್ತಿದ್ದರು. ನಾಯಿ ತಿಂದು ಬ್ರಹ್ಮರ್ಷಿಯೋರ್ವ ತನ್ನ ಹಸಿವೆ ತೀರಿಸಿಕೊಳ್ಳುವುದು ಸಾಧ್ಯವಿರುವಾಗ ನಾನು ಅದೇ ಅಗತ್ಯ ತೀರಿಸಿಕೊಳ್ಳಲು ಪಿಂಪ್ ಆಗಿ ಕೆಲಸ ಮಾಡುತ್ತಿದ್ದರೆ ತಪ್ಪೇನು? ಹೇಳುವೆನೆಂದಿಟ್ಟುಕೋ… ಆದರೆ ಕೇಳುವವರಿಗೆ ಕೆಲವು ಅರ್ಹತೆಗಳಿಗೆ… ಅವು ಲೇಖಕನಾದ ನಿನ್ನಲ್ಲಿಲ್ಲ… ಇರಲಿ… ಮುಂದೇನಾಯಿತಪ್ಪಾ ಅಂದರೆ… ಈ ಸ್ಥಿತಿಯಲ್ಲಿ ಒಬ್ಬ ಮನುಷ್ಯನಿಗೂ; ಸಮಾಜಕ್ಕೂ ಮುಖಾಮುಖಿಯಾದಾ‌ಅ, ಘರ್ಷಣೆ ಆದಾಗ ಹೇಗಿರುತ್ತದೆ… ಎಂದು ಆಲೋಚಿಸು… ಎಲ್ಲೋ ಕುಡಿದು! ಎಲ್ಲೋ ಬಿದ್ದಿರುತ್ತಿದ್ದ ನನ್ನನ್ನು ಕಂದೀಲು ಹಿಡಿದುಕೊಂಡು ಹುಡುಕುತ್ತ ಬರುತ್ತಿದ್ದಾಕಿ ಸಾಕ್ಷಾತ್ ಅನಸೂಯಾ ಆಗಿರುತ್ತಿದ್ದಳು. ನನ್ನನ್ನು ಹೊರಿಸಿಕೊಂಡೊಯ್ದು ಸ್ನಾನ ಮಾಡಿಸಿ ಹೊಸಬಟ್ಟೆ ಉಡಿಸಿ, ಬಲವಂತ ಉಣ್ಣಿಸಿ ಮಲಗಿಸಿ, ನನಗರಿವಿಲ್ಲದಂತೆ ಜೇಬಿನಲ್ಲಿ ನೂರೋ ಇನ್ನೂರೋ ಇಡುತ್ತಿದ್ದಾಕಿ ಸಾಕ್ಷಾತ್ ಅನಸೂಯ ಆಗಿರುತ್ತಿದ್ದಳು. +ನಾನು ಕೆಟ್ಟೆ, ಕೆಡುತ್ತ ಹೋದೆ. ಕೊಳೆತೆ. ಕೊಳೆಯುತ್ತ ಹೋದೆ… ಕೆಡುವ ಕೊಳೆವ ಸ್ಥಿತಿಯಿಂದ ನನ್ನನ್ನು ಮೇಲೆತ್ತುವ ಕಿರು ಪ್ರಯತ್ನವನ್ನು ಹೆಂಡತಿ ವರಲಕ್ಷ್ಮಿ ಮಾಡಿದ್ದರೆ ನಾನು ಶಹಬ್ಬಾಷ್ ಎನ್ನುತ್ತಿದ್ದೆ… ಅತ್ತೆಯೊಂದಿಗಿದ್ದ ಆಕೆ ಮತ್ತೊಂದು ಗಂಡು ಮಗುವಿಗೆ ಜನ್ಮಕೊಟ್ಟು ಕೊಟ್ಟೂರಲ್ಲಿ ಒಂದಿತ್ತು; ಒಂದಿಲ್ಲ ಎನ್ನುವಂತೆ ಬದುಕುತ್ತ ಸುಖವಾಗಿದ್ದಳು… ತನಗೊಂದು ಮೊಮ್ಮಗನನ್ನು ನೀಡಿದಾದ ಮೇಲೆ ಮಗನಿಗೆ ಒಂದು ಇಡಿಗಂಟನ್ನು ಕೊಟ್ಟು ಜವಾಬ್ದಾರಿ ಕೊಟು ಗೌರವಿಸಬೇಕೆಂದು ನನ್ನ ತಾಯಿ ಹಿಂದೆ ಆಲೋಚಿಸಿದ್ದಳಂತೆ. ಐದು ದಶಕಗಳ ಕಾಲ ಅಹರ್ನಿಶಿ ಶ್ರಮಿಸಿ ನಗನಾಣ್ಯದಿಂದ ಕೂಡಿದ ಗಂಟಾಗಿರುವುದಂತೆ ಅದು. ಎಷ್ಟಿದ್ದರೂ ಅಕಾಲ ಮರಣಕ್ಕೆ ತುತ್ತಾದ ಸೈನಿಕನೋರ್ವನ ಹೆಂಡತಿಯಾಗಿದ್ದವಳು. ಕುಂತಳನಾಡಿನಲ್ಲಿ ಮನೆಮನೆ ಮಾತಾಗಿದ್ದ ಪರಮೇಶ್ವರ ಶಾಸ್ತ್ರಿಗಳ ಸೊಸೆ ಆಗಿದ್ದವಳು. ಅಂಥಾಕಿ ಮಾಡಿದ್ದರೂ ಮಾಡಿರಬಹುದು. ಇದನ್ನು ಹೇಳಿ ನಂಬಿಸಿದವನೂ ರಾಖೇಶನೆ. ಅವನು ಪೂಸಿ ಹೊಡೆದಂತೆ ನಾನು ಶ್ರವಣನಿಗಿಂತ ಮಿಗಿಲಾದ ಸುತನೆಂದು ತಾಯಿಯನ್ನು ನಂಬಿಸುವ, ಶ್ರೀರಾಮ ಚಂದ್ರನಿಗಿಂತ ಮಿಗಿಲಾದ ಪತಿ ಎಂದು ಹೆಂಡತಿಯನ್ನು ನಂಬಿಸುವ ನಾಟಕವನ್ನಾಡುವುದು ನನ್ನಿಂದ ಬಿಲ್ಕುಲ್ ಸಾಧ್ಯವಿರಲಿಲ್ಲ. ಅವನ ಒತ್ತಾಯಕ್ಕೋ ಅಥವಾ ಮತ್ತಾವ ಸೆಳೆವಿಗೋ ಹೋಗಿದ್ದು ನೆನಪಿದೆ. “ಹೇಗಿದ್ದ ಶಾಮಣ್ಣ ಹೇಗಾಗಿ ಬಿಟ್ಟಿದ್ದಾನಲ್ಲ” ಎನ್ನುವ ಜನರ ನಡುವೆ ನಾನು ಹೋಗಿದ್ದು ಎಂಬುದನ್ನು ನೆನಪಿನಲ್ಲಿಟ್ಟುಕೋ! ಹೋದೊಡನೆ ಗುರುತಿಸಲಿಲ್ಲ… ಬ್ರಾಹ್ಮಣ್ಯದ ಕುರುಹುಗಳಿಗಾಗಿ ಹುಡುಕಾಡಿದರು. ಅತ್ತರು ಕರೆದರು ಶಪಿಸಿದರು. ದೇವರ ಕೋಣೆ ಅಡುಗೆಮನೆಯಲ್ಲಿ ಹೆಜ್ಜೆ ಇರಿಸದಂತೆ ಮಕ್ಕಳನ್ನು ಎತ್ತಿಕೊಳ್ಳದಂತೆ ತಡೆದರು. “ಅಮ್ಮಾ ಹಣ ಬೆಕಾಗಿದೆ ತುರ್ತಾಗಿ” ಅಂದ್ರ್. “ಯಾಕೆ” ಎಂದಳು. ಕುಡಿಲಿಕ್ಕೆ ಜೂಡಾಡ್ಲಿಕ್ಕೆ ಅಮೇಧ್ಯ ತಿನ್ಲಿಕ್ಕೆ… ಅಂದೆ… (ಜುಜುಬಿ ಹಣಕ್ಕಾಗಿ ನಾನು ಅಪಥ್ಯ ಆಡಬೇಕಿತ್ತೆ?)… ಅಷ್ಟಕ್ಕೆ ದೊಡ್ಡ ರಂಪಾಟ ಮಾಡಿದರು. ಮಗ ಇಲ್ಲಾಂತ ತಿಳ್ಕೊಂಡು ಎಳ್ಳು ನೀರು ಬಿಟ್ಟು ಶ್ರಾದ್ಧಾ ಮಾಡೋದೊಂದಿದೆ ಬಾಕಿ ಎಂದು ತಾಯಿ; ಪೂರ್ತಿ ವಿಧವೆ ಆಗ್ಲಿಕ್ಕೆ ಯಾವಾಗ ಅವಕಾಶ ಕೊಡ್ತೀರಂತ ಕಾಯ್ತಿದೇನಿ ಎಂದು ಧರ್ಮಪತ್ನಿ ಅಂದಳು. +(ಅಯ್ಯೋ! ಅಯ್ಯೋ! ಎಂಥ ಮಾತಾಡ್ತಿದ್ದಾರಲ್ಲ ರಾಮ ರಾಮ… ಲೇಖಕರೆ ದಯವಿಟ್ಟು ಅವರ ಮಾತುಗಳನ್ನು ಕಾದಂಬರಿಯ ಕಡತದಿಂದ ತೆಗೆದುಬಿಡಿ… ಯಾವ ತಾಯಿ, ಯಾವ ಹೆಂಡತಿ ಹಾಗೆ ವರ್ತಿಸುವುದು ಸಾಧ್ಯ; ಇದು ಹೇಳೋ ಮಾತಲ್ಲ! ಕೇಳೋ ಮಾತಲ್ಲ!) +ಇದ್ದೊಂದು ಮನೆ ಆಕೆ ಹೆಸರಿನಲ್ಲಿರುವುದು. “ಆ ಮುಂಡೆ ಮನೆಯಲ್ಲೇ ಬಿದ್ದು ಹೊರಳಾಡಿ ಸಾಯಿ” ಎಂದು ಮಾತ್ರ ಅವರು ಆಶೀರ್ವಾದ ಮಾಡಿದ್ದು. ಯಾರ ಅಸಹ್ಯ; ಯಾರ ಕೋಪಕ್ಕೂ ನನ್ನ ಭಾವನೆಗಳಲ್ಲಿ ಏರಿಳಿತ ಮಾಡುವುದು ಸಾಧ್ಯವಿರಲಿಲ್ಲ… ಆ ಅವಧಿಯಲ್ಲಿ ನನ್ನನ್ನು ನೌಕರಿಯಿಂದ ಓಡಿಸಿರುವುದಾಗಲೀ; ನನ್ನ ಮೇಲೆ ಖಟ್ಲೆ ಹೂಡಿರುವುದಾಗಲೀ; ನಾನು ಸಾರಿ ಕಟಕಟೆಯಲ್ಲಿ ನಿಂತಿದ್ದಾಗಲೀ; ಅನಸೂಯಾ ನನ್ನ ಪರವಾಗಿ ವಾದಿಸಲು ವಕೀಲರೊಬ್ಬರನ್ನು ನೇಮಿಸಿರುವುದಾಗಲೀ ನನಗೆ ಗೊತ್ತೇ ಇರಲಿಲ್ಲ. +ಅವತ್ತು ಅನಸೂಯ ನನಗೆ ತಾನೆ ಖುದ್ದು ನಿಂತು ಸ್ನಾನ ಮಾಡಿಸಿ ಬಟ್ಟೆ ತೊಡಿಸಿ ತುತ್ತುಣುಸಿ ಸೆರಗಿನಿಂದ ಬಾಯಿ ಒರೆಸಿದ್ದಳು… ಕಣ್ತುಂಬ ನೋಡಿದಳು. ಆಕೆಯ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ಗುರುತಿಸಲು ನನಗಾಗಲೇ ಇಲ್ಲ. ಪ್ರತಿಯೊಂದು ಕಣ್ಣು ಆರೋಗ್ಯದಿಂದ ಇರಬೇಕಾದರೆ ಅಶ್ರು ಎಂಬ ಪವಿತ್ರೋದಕದ ಅಗತ್ಯವಿದೆ ಎಂಬ ವೈಜ್ಞಾನಿಕ ಸತ್ಯವನ್ನೆ ನಾನು ಮರೆತು ಬಿಟ್ಟಿದ್ದೆ ಎಂದರೆ ನಿನಗೆ ಆಶ್ಚರ್ಯವಾಗಬಹುದು +“ಅನೂ” ಎಂದೆ ಮಗುವಿನಂತೆ. “ಏನೋ” ಎಂದಳು. ನಿನ್ ತೊಡೆ ಮೇಲೆ ತಲೆ ಇಟ್ಟು ಚಾವತುಮಲಗಿಕ್ಕೊಳ್ಲಾ!” ಎಂದು ಆರ್ತತೆಯಿಂದ ಕೇಳಿದೆ… ಅಯ್ಯೋ ಮಲಗೋ… ನನ್ ಶಾಮಾ… ನನ್ ರಾಜಾ! ಎಂದಳು… ತೊಡೆ ಮತ್ತು ಕಿಬ್ಬೊಟ್ತೆ ಸಂದಿಯಲ್ಲಿ ತಲೆ ಇರಿಸಿ ಮಲಗಿಕೊಂಡೆ. ನನ್ನನ್ನು ಮಗುವೆಂದು ಭಾವಿಸಿ ತಟ್ಟುತಿದ್ದಳು. ಹನಿ ಉದುರಿಸುತ್ತಿದ್ದಳು. ನಿಟ್ಟುಸಿರು ಬಿ‌ಉತ್ತಿದ್ದಳು. ತ್ರಿಕಾಲಕ್ಕಾತೀತನಂತಿದ್ದ ನಾನು ಬೆಚ್ಚಗೆ ಗೂಡಿಸಿಕೊಂಡು ಮಲಗಿ ನಿದ್ದೆ ಹೋಗಿದ್ದೆ. +ಆಗ ಕುವೆಂಪು ವಿರಚಿತ ರಾಮಾಯಣ ದರ್ಶನದಲ್ಲಿ ಸೀತೆ ಕನಸು ಕಾಣುತ್ತಾಳಲ್ಲ… ಅಂಥದೊಂದು ಕನಸು ನಾನು ಕಂಡೆ. ಅನಸೂಯ ನಗ್ನಳಾಗಿ ಹಿಂದಕ್ಕೆ ಕೈಯೂರಿ ಕುಳಿತಿದ್ದಾಳೆ… ಆಕೆಯ ಎರಡೂ ಮೊಲೆಗಳ ತೊಟ್ಟುಗಳಿಂದ ಎದೆ ಹಾಲು ಕ್ರಮೇಣ ಧಾರೆ ಧಾರೆಯಾಗಿ ಸ್ರವಿಸ ತೊಡಗಿತು. (ಕುಮಾರವ್ಯಾಸನ ಭಾರತದಲ್ಲಿ ಕೃಷ್ಣ ವಿದುರನ ಮನೆಯಲ್ಲಿ ಕುಡಿವಾಗ ಚೆಲ್ಲಿದ ಹಾಲು) ಹಳ್ಳ ಹೊಳೆಯಾಗಿ ಹರಿಯತೊಡಗಿತು. ಮನೆ ಮಠ ಕೋಟೆ ಕೊತ್ತಾಗಳೆಲ್ಲ ಆ ಹಾಲೊಳಗೆ ಮುಳುಗಿ ಹೋಗ ತೊಡಗಿದವು… ಮಗುವೊಂದು ಆ ಕ್ಷೀರ ಕೋಟಲೆಯೊಳಗೆ ಕೈಕಾಲು ಬಡಿದು ಈಜುತ್ತ ತಾಯಿಗಾಗಿ ಹಂಬಲಿಸುತ್ತಿರುವುದು. ಅನಸೂಯ ಬಾಗಿ ಆ ಮಗುವನ್ನೆತ್ತಿಕೊಂಡು ಮೊಲೆಗಮುಚಿಕೊಳ್ಳುತ್ತಾಳೆ… +ಏಂಥ ಕನಸು, ತಾಯ್ತನದ ಹೊಂಗನಸು +ವಾತ್ಸಲ್ಯ ಪ್ರೇಮವನು ನನಗೆ ನೀ ಉಣಿಸು +ದೇಶ ಕೋಶ ಪ್ರೇಮಪಾಶಕ್ಕೆಲ್ಲ ನೀನು ಮಿಗಿಲು +ನನ್ನ ಬದುಕಿನ ಇರುಳಲ್ಲಿ ನೀನೊಂದೆ ಹಗಲು… +ಎಂದೊಂದು ಚೌಪದಿಯನ್ನು ಮನಸ್ಸಿನಲ್ಲಿ ಸರಿಹೊಂದಿಸಿಕೊಳ್ಳುತ್ತಿದ್ದೆ. +“ಬರ್ರೀ… ನಾನವ್ರ್ನ ಎಲ್ಲಿದ್ದಾನಂತ ತೋರಿಸಿದ್ರೆ ನೀವು ನಂಗೊಂದು ಬ್ರಿಸ್ಟಾಲ್ ಕೊಡಿಸ್ತೀರಲ್ಲ” ಎಂದು ಕರಾರು ಮಾಡಿಕೊಂಡು ಬಂದಿದ್ದ ರಾಖೇಶ ಪೋಲೀಸರನ್ನು ಬಾಗಿಲು ತಟ್ಟಲು ಬಿಟ್ಟು ಮೆಲ್ಲಗೆ ಹಿಂದು ಸರಿದು ಕಾಣೆಯಾಗಿದ್ದು ನನಗೆ ತಾನೆ ಹೇಗೆ ಸಾಧ್ಯ?… +ತೀರ್ಪು ಮೊದಲೆ ಗೊತ್ತಿತ್ತೋ ಏನೋ ಆಕೆಗೆ! ತಟ್ಟುವ ಶಬ್ದ ಹೆಚ್ಚಾದಂತೆ ನನ್ನನ್ನು ಬಿಗಿಯಾಗಿ ಅವುಚಿಕೊಳ್ಳ ತೊಡಗಿದಳು. ನನಗೊಂದೂ ಅರ್ಥವಾಗಲಿಲ್ಲ… ನಾನೇ ಬಿಡಿಸಿಕೊಂಡೆದ್ದು ಹೋಗಿ ಬಾಗಿಲು ತೆರೆದೆ, ಓಹ್… ಪೋಲೀಸರು… ಅರಕ್ಷಕರು… ಗೆಳೆಯರು? ಸಹೋದರರು? ಅವರು ನನ್ನ ಕೈಗೆ ಕೊಳ ತೊಡಿಸಿದರು. ಅನಸೂಯ ಗದ್ಗದಿಸಿ ನನ್ನ ಮುಖಕ್ಕೆ ಅಸಂಖ್ಯಾತ ಮುತ್ತುಗಳನ್ನು ಕೊಟ್ಟಳು. ಪೋಲೀಸರು ನನ್ನನ್ನು ಎಲ್ಲಿಗೆ ಕರೆದುಕೊಂಡು?ಹೋದರು ಗೊತ್ತೆ! ಬಳ್ಳಾರಿಯಲ್ಲಿರುವ ಸೆಂಟ್ರಲ್ ಜೈಲ್‌ಗೆ… ಸೆಂಟ್ರಲ್ ಜೈಲ್‌ಗೆ… ಸೆಂಟ್ರಲ್ ಜೈಲು ಒಳಗೆಲ್ಲ ತಿರುಗಾಡಬೇಕೆಂಬುದು ನನ್ನ ಭಾಳ ವರ್ಷಗಳ ಕನಸು ಅಂದು ನನಸಾಗಿತ್ತು… ದೇವರು ದೊಡ್ಡವನು… ಅಂತೂ ಕೆಲಕಾಲ ಜೈಲೊಳಗೆ ನೆಲಸುವಂತೆ ಮಾಡಿದ. ದೇವರು ದೊಡ್ಡವನು… ಹಲವಾರು ಖೈದಿಗಳ ಪರಿಚಯ ಮಾಡಿಕೊಟ್ಟ… ದೇವರು ದೊಡ್ಡವನು. ಮತ್ತೊಮ್ಮೆ ನನ್ನ ಭಾವಚಿತ್ರ ಮತ್ತಿತರ ವಿವರಗಳು ಎಲ್ಲಾ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಿದ. ದೇವರು ದೊಡ್ಡವನು. ಆತ್ಮೀಯರ ಗುಣಸ್ವಭಾವವಗಳನ್ನು ಕಪ್ಪು ಬಿಳುಪುಗಳನ್ನಾಗಿ ವಿಂಗಡಿಸಿದ. +ತುರಂಗವಾಸ ಕೊಟ್ಟಂಥ ಅನಂದಾನುಭೂತಿ; ಪ್ರಪಂಚ ಜ್ಞಾನವನ್ನು ಪ್ರಪಂಚದ ಯಾವ ಸ್ಥಾನವೂ ಕೊಡಲು ಸಾಧ್ಯವಿಲ್ಲ ನೋಡು? ನೀನೂ ಕೂಡ ಮುಂದೆಂದಾದರೊಮ್ಮೆ; ಕೇವಲ ಮೂರು ತಿಂಗಳ ಮಟ್ಟಿಗಾದರೂ ಸರಿಯೇ… ತುರಂಗ ವಾಸ ಅನುಭವಿಸು… ಇದಕ್ಕೆ ಸಹಾಯಕವಾಗುವಂಥ ನೂರಾರು ವಿವರಗಳನ್ನು ಪವಿತ್ರ ಗಂಥವಾದ ‘ಭಾದಂಸಂ’ ನೀಡುತ್ತದೆ. ಅದರಿಂದ ಮಾರ್ಗದರ್ಶನ ಪಡೆ…. ನಾನು ಪರಿಪೂರ್ಣ ಮಾನವನಾಗುವ ದಿಸೆಯಲ್ಲಿ ಒಂದು ಚಿಕ್ಕ ಪ್ರಯತ್ನ ಮಾಡುವುದು ನನಗಲ್ಲಿ ಸಾಧ್ಯವಾಯಿತು. ನನ್ನಲ್ಲಿದ್ದ ಕಲೆ ಸಾಹಿತ್ಯ ಸಂಗೀತದ ತಿಳುವಳಿಕೆಗಳು; ವೇದೋಪನಿಷತ್ತುಗಳ ಬಗೆಗಿದ್ದ ಆರ್ಷೇಯ ಜ್ಞಾನ ನನ್ನನ್ನು ಎಲ್ಲರಿಗೂ ಪ್ರಿಯವಾಗುವಂತೆ ಮಾಡಿದವು… ಅಲ್ಲಿದ್ದ ಕೆಲ ಖೈದಿಗಳು… “ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಸೇರಿಕೊಂಡು ಕೇಂದ್ರಕಾರಾಗೃಹದ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸಿದ. ದೇವರು ದೊಡ್ಡವನು” – ಜೈಲ್ ಸೂಪರಿಂಟೆಂಡೆಂಟ್ ಜವರೇಗೌಡರು ದೇವರಿಗೆ ಕೈ ಎತ್ತಿ ಮುಗಿದರು. +ನಾನಾ ಜೈಲಿನಲ್ಲಿ ಮೂರು ವರ್ಷದ ಅನುಭವವನ್ನು ನಿನಗೆ ಹೇಳಿದರೆ ನೀನು ನಂಬುವುದಿಲ್ಲ… ಎಂಥ ಸಜ್ಜನರಂತೀಯ ಖೈದಿಗಳು! ಎಂಥ ತತ್ವಜ್ಞಾನಿಗಳಂತೀಯಾ ಖೈದಿಗಳು; ಎಂಥ ಅಂತಃಕರಣಿಗಳಂತೀಯಾ ಖೈದಿಗಳು! ಜೈಲು ವಾಸ ಅನುಭವಿಸಲೆಂಬ ಏಕೈಕ ಉದ್ದೇಶದಿಂದಲೇ ಅಪರಾಧಗಳನ್ನು ಮಾಡಿದೆನೇನೋ! ಅಲ್ಲಿನ ಅನುಭವಗಳನ್ನು ಸವಿವರವಾಗಿ ಹೇಳಲು ಇಲ್ಲಿ ಸಾಧ್ಯವಾಗ್ತಾ ಇಲ್ಲ. ಅದನ್ನೆಲ್ಲ ಹೆಳಿಕೊಳ್ತಾ ಕೂತುಕೊಂಡ್ರೆ ಅದೆ ಒಂದು ದೊಡ್ಡ ನಾವೆಲ್ಲಾಗುತ್ತೆ ಅಷ್ಟೆ! ಕಾಂಕ್ರೀಟ್ ಜಂಗಲ್ ಸಿನೆಮಾ ನೋಡಿರಬಹುದಾದ ನೀನು ಹೋಮೋ ಸೆಕ್ಸುಯಲ್ ರೌಡಿಯಿಜಂ, ಫೈಟಿಂಗ್ ಇತ್ಯಾದಿ ಕುರಿತು ಲೆಕ್ಕ ಹಾಕುತ್ತಿರಬಹುದು. ಹೊರ ಪ್ರಪಂಚದಲ್ಲಿಯೇ ಸಭ್ಯಸ್ಥ ಪ್ರಜೆಗಳಿಗಿಂತ ಪರಿಶುಭ್ರವಾದ ಜೈಲೊಳಗಿರೋ ಖೈದಿಗಳೇ ಹೆಚ್ಚು ಸುಖವಾಗಿದ್ದಾರೆ. ಇಂಥೋನು ಅಲ್ಲಿಗೆ ಹೇಗೆ ಬಂದ? ಅಂಥೋನು ಇಲ್ಲಿಗೆ ಹೇಗೆ ಬಂದ? ಅಂಥ ಲೆಕ್ಕ ಹಾಕುವುದರಲ್ಲಿಯೇ ದಿನಗಳು ಹೋಗಿಬಿಡ್ತವೆ ಅಲ್ಲಿ… ಇದು ಸ್ವಯಂ ಕೃತಾನುಭವದಿಂದ ಮಾತ್ರ ದಕ್ಕುವಂತಾದ್ದು; ಓದಿದ್ರೆ ಕೇಳಿದ್ರಷ್ಟೆ ಸಾಕಾಗದು…” ಎಂದು ಹೇಳಿ ಶಾಮಣ್ಣ ಪಾತ್ರವು ಯೋಗಿಯಂತೆ ಕಂಗೊಳಿಸಿತು. +ಅಪರಾಧೀ ಪ್ರಪಂಚವನ್ನು ಸಮರ್ಥಿಸುತ್ತಿರುವಂತೆ ಮಾತಾಡುತ್ತಿರುವ ಶಾಮಣ್ಣ ಪಾತ್ರವನ್ನು ನೋಡಿ ನಾನು ಗಾಬರಿಗೊಂಡೆ. ‘ಭಾದಂಸಂ’ಯನ್ನು ಲೇವಡಿ ಮಾಡುವುದೇನು ಸಣ್ಣ ಅಪರಾಧವಲ್ಲ! ಫ್ಯಾಸಿಜಂ ಆಡಳಿತವಿರುವ ರಾಷ್ಟ್ರಗಳಲ್ಲೇನಾದರೂ ಈ ರೀತಿ ಮಾತಾಡುವ ಶಾಮಣ್ಣನ ಆತ್ಮವನ್ನೂ; ಅವನನ್ನು ಯಥಾವತ್ತಾಗಿ ಬರೆಯುತ್ತಿರುವ ಲೇಖಕನಾದ ನನ್ನನ್ನೂ, ಇದೆಲ್ಲ ಅಡಕಗೊಂಡಿರುವ ಕಾದಂಬರಿಯನ್ನೂ ಎಳೆದೊಯ್ದು ಮರಣದಂಡನೆಗೊಳಗಾದ ಖೈದಿಗಳು ವಾಸಿಸುವ ಗೂಡೊಳಗೆ ಎಸೆದು ಬಿಡುತ್ತಿದ್ದರೆಂದುಕೊಂಡೆ. ಎಷ್ಟಿದ್ದರೂ ನಮ್ಮದು ಪವಿತ್ರ ಭಾರತ ದೇಶ… ಇಲ್ಲಿನ ಡೆಮಾಕ್ರಸಿ ಪ್ರಪಂಚದಲ್ಲೆಲ್ಲ ಪ್ರಸಿದ್ಧವಾದುದು. ಈ ದೇಶದಲ್ಲಿ ‘ಊಮಾಹೇ’ಯಿಂದ ಮೊದಲಾಗಿ ಪ್ರತಿಯೊಂದೂ ಡೆಮಾಕ್ರಟಿಕ್ಟಾಗಿಯೇ ನಡೆಯುತ್ತಿರುವುದರಿಂದ ಸೆರೆಮನೆಗಳನ್ನು ವೈಭವೀಕರಿಸುವ ಮನೋಭಾವವನ್ನು ಅಪರಾಧವೆಂದು ಪರಿಗಣಿಸುವುದು ಸಾಧ್ಯವಿಲ್ಲ. ಇದೊಂದೆ ಸಮಾಧಾನದ ಸಂಗತಿ. +…ಬೇಸರದ ಇನ್ನೊಂದು ಸಂಗತಿ ಎಂದರೆ ಶಾಮಣ್ಣನಂಥ ಒಬ್ಬ ಕ್ರಿಯೇಟಿವ್ ಮನೋಭಾವದ ವ್ಯಕ್ತಿ ಸೆರೆಮನೆಯಲ್ಲಿ ಮೂರು ವರ್ಷಕಾಲ ಇದ್ದರೂ ಥ್ರಿಲ್ಲಾಗಿ ಯೋಚಿಸುವುದನ್ನು ಕಲಿಯದಿದ್ದುದುದು… ತನ್ನ ಜೀವನಕ್ಕೆ ತಾನು ಒಂಚೂರು ಗರಂ ಮಸಾಲೆಯನ್ನಾದರೂ ಸವರುವುದು ಬೇಡವೆ? ಜೀವನ ತಾಳಿಕೆ ಬರುವುದರ ಬಗ್ಗೆ ಯೋಚಿಸರಾದೀತೇನು? ಅದು ಜನರಿಗೆ ರುಚಿಸುವುದು ಬೇಡವೆ? ಮಾಮೂಲು ಸೆರೆಮನೆಯಲ್ಲಿದ್ದರೆ ನಾನು ಯೋಚಿಸುತ್ತಿರಲಿಲ್ಲ. ಎರಡು ವರ್ಷ ಬಳ್ಳಾರಿ ಜೈಲಿನಲ್ಲಿದ್ದು ಇನ್ನೊಂದು ವರ್ಷವನ್ನು ಕಳೆದದ್ದು ಯರವಾಡ ಜೈಲಿನಲ್ಲಿ. ಬಳ್ಳಾರಿ ಜೈಲು ದೇಶದ ಪ್ರಮುಖ ಜೈಲುಗಳಲ್ಲಿ ಒಂದು… ದೇಶದ ಸುಪ್ರಸಿದ್ಧ, ಕುಪ್ರಸಿದ್ಧರೆಲ್ಲರೂ ಇದೇ ಜೈಲಿನಲ್ಲಿದ್ದು ಹೋಗಿರುವವರೇ! ರೌಡಿ ಜಯರಾಮನ ಆತ್ಮರಕ್ಷಣೆ ದೃಷ್ಟಿಯಿಂದ ಅವನನ್ನು ದೂರದ ಬಳ್ಳರಿಯಲ್ಲಿರಿಸಿದ್ದು. ಅನಂತರ ಶಿವಮೊಗ್ಗೆಯಲ್ಲಿ ತರಬೇತಿ ಪಡೆದು ಬೆಂಗಳೂರಲ್ಲಿ ದುಃಸ್ವಪ್ನಗಳನ್ನು ನಿರ್ಮಿಸಿ ಮಾರುತ್ತಿರುವ ಕೆಲವು ರೌಡಿಗಳು ಪೋಲೀಸರಿಗೆ ಬೇಕೆಂದೇ ಸಿಕ್ಕು ಶಾಂತಿಭದ್ರತೆ ದೃಷ್ಟಿಯಿಂದ ಬಳ್ಳರಿ ಜೈಳಿಗೆ ವರ್ಗಾಯಿಸುವಂತೆ ಪ್ರಯತ್ನಿಸಿ ಸಫಲರಾದರೆಂದೂ, ಅವರು ಮಾರಣಾಯುಧಗಳಿಂದ ರೌಡಿ ಜಯರಾಂ ಕಂಗಾಲಾಗಿ ಬಾಯಿ ಬಾಯಿ ಬಡೆದುಕೊಂಡನೆಂದೂ; ಆಗ ಸಣಕಲು ದೇಹದ ಬ್ರಾಹ್ಮಣ ತರುಣೋರ್ವ ಮಿಂಚಿನಂತೆ ಮಧ್ಯೆ ಪ್ರವೇಶಿಸಿ ರೌಡಿಯನ್ನು ಸಮರ್ಥವಾಗಿ ಎದುರಿಸಿ, ಜಯರಾಂನ ಪ್ರಾಣ ಕಾಪಾಡಿದನೆಂದು ವದಂತಿ ಹಬ್ಬಿತು. ಪತ್ರಿಕೆಯೊಂದರಲ್ಲಿ ‘ವಿಚಿತ್ರ ಆದರೂ ಸತ್ಯ’ ಎಂಬ ಕಾಲಂನಲ್ಲೂ ಇದು ಪ್ರಕಟವಾಗಿತ್ತು. +ಅವರ ಮುಂದೆ ಕಂಸಗಳ ನಡುವೆ ಕದಂಬ ಮಯೂರ ಶರ್ಮರನ್ನು ಹೋಲುವ ಬಡಕಲು ದೇಹದ ಆ ತರುಣ ತನ್ನ ನಿಜ ನಾಮಧೇಯವನ್ನು ಪ್ರಕಟಿಸಲು ಒಪ್ಪಿಲ್ಲ! ಎಂಬುದು. +ಆ ಬ್ರಾಹ್ಮಣ ತರುಣ ಬೇರೆಯಾರಿರಲು ಸಾಧ್ಯ ನಮ್ಮ ಶಾಮಣ್ಣನಲ್ಲದೇ? ಅದರ ಬಗ್ಗೆ ರಂಜಕವವಾಗಿ ಹೇಳದಿದ್ದರೆ ಕ್ಯಾಪ್ಟನ್ ತಂದೆಯ ಗಂಟೇನು ಹೋಗುತ್ತಿತ್ತು. +“ಅಲ್ಲಾ ಶಾಮೂ… ರೌಡಿಗಳ ಜಗಳದ ಬಗ್ಗೆ ಒಂಚೂರು ಕ್ಲೂ…” ಎಂದು ನಾನು ಹೇಳುತ್ತಿದ್ದಂತೆ ಶಾಮನ ಪಾತ್ರವು “ಖಬರ್ಧಾರ್… ಆ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿದೀ ಅಂದ್ರೆ ನಿನ್ನ ಕಾದಂಬರಿ ತ್ರಿಶಂಕು ಆಗಿಬಿಡತ್ತೆ…” ಎಂದಿತು. +” ಆ ರೌಡಿ ಜಯರಾಂಗೆ ನೀನು ಕೆಲವು ಅರಣ್ಯಕಗಳನ್ನು ಭೋದಿಸಿದಿಯಂತಲ್ಲ… ಅದರ ಬಗೆಗಾದರೂ… ಎನ್ನುತ್ತಿದ್ದಂತೆ ಅದು ಮತ್ತೆ “ಖಬರ್ಧಾರ್!” ಎಂದು ಎಚ್ಚರಿಸಿತು. ’ಅದು ತುಂಬ ಗೋಪ್ಯ ಕಣಪ್ಪಾ…ಕೇಳ್ದೋರ ತಲೆ ಉಳಿಯೊದಿಲ್ಲ” ಎಂದು ಪೂರ್ಣ ವಿರಾಮ ಹಾಕಿತು. +ಕೆಲಕಾಲ ಬರಹ ಸ್ಥಗಿತ ಗೊಂಡಿತು. ಸ್ವಲ್ಪ ಹೊತ್ತು ಹೇಳುವವನ, ಕೇಳುವವನ ನಡುವೆ ಮೌನ ನೆಲೆಸಿತು. ಶಾಮಣ್ಣನ ಕಥೆ ಒಂದೆರಡು ಉಪ ಭಾಗಗಳೊಂದಿಗೆ ಮುಗಿಯಲಿರುವ ಸಂಗತಿ ನೆನಪಾಗಿ ಬೇಸರ ಆವರಿಸಿತು. +ಸುಮ್ಮನೆ ಕೂತುಕೊಂಡರೆ ನನ್ನ ಆಲೋಚನೆ ತರಗೆಲೆಯಂತೆ ದಿಕ್ಕು ದೆಸೆ ಇಲ್ಲದೆ ಹಾರಾಡಿ ಬರಹ ತಲೆಕೆಳಗಾಗಬಹುದೆಂದುಕೊಂಡೆ…. +“ಶಾಮಾ… ನಿನ್ನ ಕಥೆ ದುರಂತಮಯವಾದುದು ಹಾಗೆ ಹೀಗೆ ಅಂತ ಹೇಳಲು ನನಗೆ ಇಷ್ಟವಿಲ್ಲ ಕಣಪ್ಪಾ… ಜೈಲಿನಲ್ಲಿ; ಜೈಲಿನ ನಂತರ; ಮತ್ತೆ ಇತ್ಯಾದಿ ವಿಶಯಗಳ ಬಗ್ಗೆ ಈಗಾಗಲೇ ಓದುಗರಿಗೆ ಒಂದು ಐಡಿಯಾ ಕೊಟ್ಟಾಗಿದೆ… ಈಗೇನಿದ್ರು ನಿಂದು ಫಿಲ್ ಅಪ್ ದಿ ಬ್ಲಾಂಕ್ಸ್ ಕೆಲಸ… ಅಷ್ಟು ಮಾಡ್ತೀಯಾ ತಂದೆಯೇ!” ಎಂದೆ. +“ಆಯತಪ್ಪಾ… ನನ್ಗೂ ಸುಸ್ತಾಗಿದೆ… ಹೇಳೋದು ಹೇಳಿ ನನ್ನ ಪಾಡಿಗೆ ನಾನು ನಿರ್ಗಮಿಸುತ್ತೇನೆ… ಮುಂದೆ ಹೇಳೋದು ಒಂದು ರೀತಿ ಸೆಕೆಂಡ್ ಪೇಪರ್ ಎದ್ದಂತಿರೋದ್ರಿಂದ ನಾನು ವರ್ಣನಾ ತಂತ್ರ ಬಳಸುವುದಿಲ್ಲ. ನೀನೂ ಈ ತರಲೆ ಕೆಲಸ ಮಾಡಬೇಡ. ರೌಡಿ ಜಯರಾಮನಿಗೆ ನಾನು ಭೋದಿಸಿದ ಅರಣ್ಯಕಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ… ತಿಳೀತಾ” ಅಂದ. +“ಆಗ್ಲಪ್ಪ… ಅರಣ್ಯಕಗಳನ್ನು ಕಟ್ಕೊಂಡು ನಾನೇನು ಮಾಡ್ಲಿ? ಕಡ್ಲೆಹೊಡ್ದು ಗಪ್ಪಂತ ಬಾಯಿಗೆ ಹಾಕ್ಕೋಂಡಂತೆ ಸೂಚ್ಯವಾಗಿ ಹೇಳಿಬಿಡು ಅಷ್ಟೆ… ಈಗಾಗ್ಲೆ ಪ್ರಕಾಶಕ ಮಿತ್ರ ಚನ್ನಬಸವಣ್ಣ ಕಾದಂಬರಿಯ ಲೆಂಗ್ತ್ ಬಗ್ಗೆ ತಲೆ ನೋವು ಮಾಡ್ಕೊಂಡಿದ್ದಾನೆ… ಇದ್ರ ಮುನ್ನೂರೈವತ್ತು ಪುಟಗಳಷ್ಟು ಡಿಟಿಪಿ ಕೆಲಸ ಮುಗ್ದು ಪ್ರೂಫ್‌ಗಂತ ಬಂದಾಗಿದೆ. ಚುನಾವಣೆ ಕೆಲಸಕ್ಕೆ ಹೋಗಬೇಕೆಂದಿರೋದ್ರಿಂದ ಅದನ್ನೆಲ್ಲ ನೋಡ್ಲಿಕ್ಕೆ ನನಗೂ ಪುರಸೊತ್ತಿಲ್ಲ. ಪ್ರೂಫ್ ನೋಡ್ಲಿಕ್ಕೇ ಅಂತ ‘ಅನಾಥ ಪಕ್ಷಿಕಲರವ’ ಖ್ಯಾತಿಯ ಕಥೆಗಾರ ವೀರಭದ್ರರವರಿಗೆ ಈಗಾಗ್ಲೆ ಕಳಿಸಿರಲೂಬಹುದು… ಹೇಳೋದು ಹೇಳಿಬಿಟ್ರೆ ಬರೆಯೋದು ಬರೆದು ಪ್ರಕಾಶಕನಿಗೆ ಮುಟ್ಟಿಸಿ ನಾಳೆ ದಿನ ಎಣ್ಣೆಸ್ನಾನ ಮಾಡಬೇಕೆಂದುಕೊಂಡಿದ್ದೇನಿ… ಏನಂತೀಯಾ?… ಎಂದು ಇರೋ ವಿಷಯ ಅರಿಕೆ ಮಾಡಿಕೊಂಡೆ. +“ಮುಲಾಜಿಗೆ ಬಸುರಾಗಿ ಹಡೆಯೋದ್ಕೆ ಮೂಲೆ ಮೂಲೆ ಹುಡುಕಾಡುವ ಹೆಣ್ಣಿಗೂ, ನಿನಗೂ ಯಾವ ವ್ಯತ್ಯಾಸವಿಲ್ಲ. ಮುಂದಿನದ್ಕೆಲ್ಲ ನನ್ನ ಜವಾಬ್ದಾರನನ್ನಾಗಿ ಮಾಡಬೇಡ… ಮುಂದಿಂದು ಹೇಳ್ತೀನಿ ಬರಕೋ” ಎಂದು ಶಾಮಣ್ಣ ಪಾತ್ರವು ಹೇಳಲು ಶುರು ಮಾಡಿತು. +* +* +* +ನೂರಕ್ಕೇರದೆ ಆರಕ್ಕಿಳಿಯದೆ ನಾನು ಜೈಲಿನಲ್ಲಿದ್ದೇ ಅಂತ ಹೇಳಿದೆನಲ್ಲ… ಅದೊಂದು ನಮೂನೆಯ ಅನಾಥ ಪಕ್ಷಿಯ ಕಲರವ ಆಗಬಹುದಿತ್ತೇನೋ? ಜೈಲು ಸ್ವಂತ ಮನೆಗಿಂತಹೆಚ್ಚು ಆಪ್ಯಾಯಮಾನವಾಗಿತ್ತು. ಅಲ್ಲಿರುವ ಖೈದಿಗಳು ಅದಾವ ಜನುಮದ ಸಂಬಂಧೀಕರೋ ಎಂಬಂತೆ ಹೆಚ್ಚು ಅಂತಃಕರಣವುಳವರಾಗಿದ್ದರು. ಬೇಡ ಎಂದರೂ ಕೇಳದೆ ನನ್ನ ಪಾಲಿನ ಕೆಲಸವನ್ನು ಅವ‌ಏ ಮಾಡಿಮುಗಿಸುತ್ತಿದ್ದರು. ತಮ್ಮ ಪಾಲಿನ ಆಹಾರವನ್ನು ನನಗೆ ಕೊಟ್ತು ನಾನು ತಿನ್ನುವುದನ್ನು ನೋಡಿ ಹರ್ಷಿಸುತ್ತಿದ್ದರು. ಅದಕ್ಕಿಂತ ದೊಡ್ಡ ಮಾನವೀಯ ಗುಣ ಬೇಕೇನು? ಬರೋರು ಬರುತ್ತಿದ್ದರು ಹೋಗೋರು ಹೋಗುತ್ತಿದ್ದರು. ಬೀಗರ ಮನೆಗಿಂತಲೂ; ತವರು ಮನೆಗಿಂತಲೂ ಅಷ್ಟೆ ಏಕೆ ಒಂದು ದೇವಾಲಯಕ್ಕಿಂತಲೂ ಹೆಚ್ಚು ಆತ್ಮೀಯವಾಗಿದ್ದ ಜೈಲಿನಲ್ಲಿ ನಾನೊಂದು ಆತ್ಮಕಥೆ ಬರೆಯುತ್ತಿದ್ದೆ. ವರ್ಗಾವಣೆ ಕಾಲದಲ್ಲಿ ಅದು ಅಲ್ಲೆಲ್ಲೋ ಮಿಸ್‌ಪ್ಲೇಸ್ ಆಯ್ತು. ಬೇಕಾದರೆ ನೀನು ಹೋಗಿ ಹುಡುಕಿಕೋ… +ಚಟಗಳ ಬಗ್ಗೆ ಹೇಳುತ್ತಿದ್ದೆನಲ್ಲ? ಜೈಲಿನಲ್ಲಿ ನಮ್ಮ ಶಾಮ ದುಶ್ಚಟಗಳಿಂದ ಮುಕ್ತನಾಗಬಹುದೆಂದು‌ಊ, ಹೆಚ್ಚು ಆರೋಗ್ಯದ ಕಾಂತಿಯಿಂದ ಹೊಳೆಯುತ್ತ ಮೈಕೈ ತುಂಬಿಕೊಂಡಿರಬಹುದೆಂದೂ ನೀನು ಈಗಾಗಲೇ ಆಲೋಚಿಸಿದ್ದಿರಬಹುದು. ಹಾಗೆ ಅಲೋಚಿಸಿದರೆ ನಿನ್ನಂಥ ಮೂರ್ಖ ಬೇರೆ ಯಾರೂ ಇರಲಿಕ್ಕಿರಲಿಲ್ಲವೆಂದು ಹೇಳುವೆ. ಜೈಲೆಂದರೆ ಅದೇನು ನಿರ್ವಾತ ಪ್ರದೇಶ ಅಂದುಕೊಂದಿರುವಿಯಾ! ಆಧ್ಯಾತ್ಮವಾದಿಗಳಿಗೆ, ಸನಾತನಿಗಳಿಗೆ ಬೇಕಾದ ಆಧ್ಯಾತ್ಮಿಕ ಪರಿಕರಗಳು ಸಿಗುವ ವ್ಯವಸ್ಥೆ ಅಲ್ಲಿರುವುದೆಂದ ಮೇಲೆ ದುಶ್ಚಟಗಳ ತೀಟೆ ಪೂರೈಸುವ ವಸ್ತುಗಳು ಸಿಗದೆ ಇರಲಿಕ್ಕೆ ಸಾಧ್ಯ್?ವೇ? ಅಲ್ಲಿರೋ ಪೋಲೀಸರೂ ಅವರೆಲ್ಲ ಎಷ್ಟು ಒಳ್ಳೆಯವರೆಂದರೆ ಅವರ ಖಾಕಿ ದಿರಿಸುಗಳ ಒಳ ಜೋಬುಗಳಲ್ಲಿ ಸಿಗರೇಟು, ಬೀಡಿ, ಗಾಂಜಾ, ಬ್ರಾಂದಿ, ವಿಸ್ಕಿ ಸಾರಾಯಿ ಎಲ್ಲ ಇರುತ್ತಿದ್ದವು ನೋಡು. ಅಲ್ಲದೆ ಖೈದಿಗಳು ನನ್ನ ಮೇಲೆ ಬಿದ್ದು ಸಾಯುತ್ತಿದ್ದುದಕ್ಕೆ ನಾನು ಚಟಗಳ ದಾಸನಾಗಿದ್ದುದು ಕೂಡ ಒಂದು ಕಾರಣ. ಎಲ್ಲವನ್ನೂ ನಾವು ಹಂಚಿಕೊಂಡು ಸುಖಿಸುತ್ತಿದ್ದೆವು. ಅಲ್ಲದೆ ನನ್ನ ಜೇಬಿನಲ್ಲಿ ಇನ್ನೊಂದು ಹತ್ತು ಮಂದಿಗೆ ಸಪಲ್ಯಾ ಮಾಡುವಷ್ಟು ಚಟಾತೀರಿಸೋ ಸಾಮಾನುಗಳಿರುತ್ತಿದ್ದವು. ಆಗಾಗ್ಗೆ ಮಾತಾಡಿಸಲೆಂದೋ, ಹೊರಗಿನ ಪ್ರಪಂಚ ಸೇಡು ತೀರಿಸಿಕೊಳ್ಳಲು ಶಾಮನ ಬಿಡುಗಡೆಯ ದಿನಕ್ಕಾಗಿ ಎದುರು ನೋಡುತ್ತಿದೆ ಎಂದು ಹೇಳಲಿಕ್ಕೆ ಬರುತ್ತಿದ್ದ ರಾಖೇಶ್ ನನ್ನಿಂದ ಅಂಥ ಕೆಲವು ವಸ್ತುಗಳನ್ನು ಗುಟ್ಟಾಗಿ ಪಡೆದುಕೊಂಡು ಹೋಗುತ್ತಿದ್ದ, ಕೊಟ್ಟದ್ದು ಪರರಿಗೆ, ಬಚ್ಚಿಟ್ಟಿದ್ದು ಪರರಿಗೆ ಪರರಿಗೆ ಕೊಟ್ಟದ್ದು ಕೆಟ್ಟದ್ದು ಎನಬೇಡ! – ಎಂಥ ಅದ್ಭುತವಾದ ಮಾತು, ಯಾವ ಕಾರ್ಲ್‌ಮಾರ್ಕ್ಸ್‌ಗೂ ಇಷ್ಟು ಸಿಂಪಲ್ಲಾಗಿ ಮೀನಿಂಗ್‌ಫುಲ್ಲಾಗಿ ಹೇಳಲು ಸಾಧ್ಯವಿಲ್ಲ!… +ನಾನು ಒಳಗಿದ್ದಾಗ ನನ್ನನ್ನು ನೋಡಿಕೊಂಡು ತಾಯಿ ಮತ್ತು ಹೆಂಡತಿ ಎಳೆಯಮಕ್ಕಳೊಂದಿಗೆ ಬಂದು ಹೋಗಿದ್ದು ಉಂಟು. ಅವರು ಬರುತ್ತಿದ್ದುದು ಕೆಲವು ಶಾಸ್ತ್ರಕರ್ಮಗಳಿಗೆ ಅಂತ ಆಮೇಲೆ ಅರ್ಥವಾಯಿತು. “ಜೈಲಿನಲ್ಲಾದ್ರು ಸಂಧ್ಯಾವಂದನೆ, ಧ್ಯಾನ, ಉಪಾಸನೆ ಮಾಡಿ ಸದ್ಗತಿ ಕುರಿತು ಆಲೋಚಿಸು” ಎಂದು ಬುದ್ಧಿ ಹೇಳುತ್ತಿದ್ದ ಆ ವೃದ್ಧೆಗೇನು ಗೊತ್ತು ಜೈಲಿನೊಳಗೆ ಉದಯಾಸ್ತ ಮಾನಗಳಿರುವುದಿಲ್ಲ ಅಂತ? ಈ ನೆಪದಿಂದಲಾದರೂ ನಾನು ಅನಸೂಯಳಿಂದ ದೂರವಿದ್ದುದರ ಬಗೆ ಅವರು ಒಳಗೊಳಗೆ ಸಂತೋಷಪಡುತ್ತಿದ್ದರು. ಅನಸೂಯ ತಿಂಗಳಿಗೊಮ್ಮೆಯಾದರೂ ಬಂದು ಏನೆಲ್ಲ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತಿದ್ದ ಆಕೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿರಲಿಲ್ಲ. ತಾನು ಸಂಪಾದಿಸಿಟ್ಟಿದ್ದೆಲ್ಲವನ್ನೂ ಬ್ಯಾಂಕಿಗೆ ಕಟ್ಟಲೆಂದೋ; ಕೋರ್ಟು ಕಛೇರಿಗೆಂದೋ ಖರ್ಚು ಮಾಡಿ ಬಿಟ್ಟಿದ್ದಳು. ಕೊನೆಗೆ ಉಳಿದಿರೋದೊಂದು ದೇಹವನ್ನೇ ನಗದಾಗಿ ಪರಿವರ್ತಿಸಿ ಪೋಲೀಸ್ ಅಧಿಕಾರಿಗಳ ಬಳಿ; ಬ್ಯಾಂಕ್ ಅಧಿಕಾರಿಗಳ ಬಳಿ; ವಕೀಲರ ಬಳಿ, ಶಿರಸ್ತೇದಾರರ ಬಳಿ ದಟ್ಟಂಡಿ ದಾರಂಡಿ ಅಲೆದಾಡಿ , ಅದನ್ನೇ ಫೀಜಿನ ರೂಪದಲ್ಲಿ ಕಟ್ಟುತ್ತ ನನ್ನ ಬಿಡುಗಡೆಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದಳು. ಇದು ಯಾವ ಗರತಿಯೂ ತನ್ನ ಗಂಡನ ಕ್ಷೇಮಕ್ಕಾಗಿ ಮಾಡಲು ಸಾಧ್ಯವಿಲ್ಲದ ಕೆಲಸ. ಅನಸೂಯ ತನ್ನ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಳು ಕೂಡ, ಆದರೆ ಆಕೆಯ ಪ್ರಯತ್ನ ನನಗೆ ಬೇಸರ ತರಿಸಿತ್ತು. ಜೈಲಿನ ತತ್ವ ಶುದ್ಧ ವಾತಾವರಣದಲ್ಲಿಯೇ ಕೊನೆ ಉಸಿರು ಬಿಡಲು ನಿರ್ಧರಿಸಿದ್ದ ನಾನು ಆಕೆ ಬಂದಾಗಲೆಲ್ಲ ಬೇಡಾಂದ್ರೆ ಬೇಡ ಎಂದು ಖಡಾಖಂಡಿತವಾಗಿ ಹೇಳದೆ ಇರುತ್ತಿರಲಿಲ್ಲ ನಾನು. ನನ್ನ ವಿಧೇಯತೆಗೆ ಮೆಚ್ಚಿ ಜೈಲಿನ ವಾತಾವರಣ ಎರಡು ಅತ್ಯುತ್ತಮ ಬಹುಮಾನಗಳನ್ನು – ದಯಪಾಲಿಸಿತ್ತು. ಒಂದೆ ಎಂದರೆ ಹೊಟ್ಟೆ ಹುಣ್ಣು, ಎರಡು ಅಂದರೆ ಕ್ಷಯ, ಇಂಗ್ಲೀಷಿನಲ್ಲಿ ಟೀಬಿ ಅಂತಾರಲ್ಲ ಅದು. ಇವೆರಡಕ್ಕೂ ದೇಹ ಮೇಯಲು ಎಲ್ಲ ಅವಕಾಶ ಮಾಡಿಕೊಟ್ಟು ನನ್ನ ದೇಹವೆಂಬ ಆಡುಂಬೊಲ ನೋಡುತ್ತ ನಾನು ದೂರದಲ್ಲಿ ಕೂತಿದ್ದು ಬಿಡುತ್ತಿದ್ದೆ. ಅವು ಮೇಯ್ದು ದಷ್ಟಪುಷ್ಟವಾಗುತ್ತಿದ್ದುದರ ಸುಳಿವನ್ನು ನಾನು ಯಾರಿಗೂ ಕೊಡಲಿಲ್ಲ. ಕೊನೆಗೂ ಯರವಾಡ ಜೈಲಿನಲ್ಲಿ ಕೆಲಕಾಲ ಇದ್ದು ಕೆಲ ಕಾಲದನಂತರ ಅನಸೂಯ ನನ್ನನ್ನು ವಕೀಲರ ಮೂಲಕ ಬಿಡುಗಡೆ ಮಾಡಿಸಿಕೊಂಡು ಕೊತ್ತಲಗಿಗೆ ಕರೆದೊಯ್ದಳು. ನನ್ನ ಬಿಡುಗಡೆಯಿಂದಾಗಲೀ; ಆಗಮನದಿಂದಾಗಲೀ ಕೊತ್ತಲಗಿಯ ಮಂದಿ ಸಂಭ್ರಮಿಸಲಿಲ್ಲ. ಶವವನ್ನು ಹೂತಿಡಲ್ಪಟ್ಟಂಥ ಗುದ್ದಿನ ಕಡೆ ನೋಡುವಂತೆ ನನ್ನ ಕಡೆ ನೋಡುತ್ತಿದ್ದರು. ಅನಸೂಯ ನನ್ನ ದೇಹ ಕೃಶಿಸುತ್ತಿರುವುದನ್ನು ತಡೆಯಲು ದೊಡ್ಡ ದೊಡ್ಡ ಊರುಗಳಿಗೆ ಕರೆದುಕೊಂದೊಯ್ದು ಇಲಾಜು ಮಾಡಿಸುವ ಪ್ರಯತ್ನ ಮಾಡಿಸಿದಳು. ರೋಗಿಯೇ ಸಹಕಾರ ಕೊಡಲಿಲ್ಲವೆಂದ ಮೇಲೆ ವೈದ್ಯರಾದರೂ ಏನು ಮಾಡುವರು? ಅವರು ಕುಡಿಯುವುದು ಬೇಡವೆಂದು ಹೇಳಿದ ನಂತರವೇ ನಾನು ಹೆಚ್ಚು ಹೆಚ್ಚು ಕುಡಿಯಲಾರಂಭಿಸಿದ್ದು. ಅನಸೂಯಾ ಯಾವ ಅಂಗಡಿಯಿಂದ ಔಷಧಿ ಕೊಡಿಸುತ್ತಿದ್ದಳೋ ಅದೇ ಔಷದಿಯನ್ನು ಆಕೆಯ ಕಣ್ಣು ತಪ್ಪಿಸಿ ಅದೇ ಅಂಗಡಿಯವರಿಗೆ ಕಡಿಮೆ ದರಕ್ಕೆ ಮಾರಿ ಅದರಿಂದ ಬಂದ ಹಣದಿಂದ ಎರಡು ಪಾಕೆಟ್ಟಾದರೂ ಸಾರಾಯಿ ಕೊಂಡು ಕುಡಿಯುತ್ತಿದ್ದೆ.‘ನೀನು ನನಗಾಗಿ ಬದುಕಬೇಕೋ ಶಾಮಾ’ ಎಂದು ಆಕೆಯೂ!, ನಾನು ನಿನಗಾಗಿ ಸತ್ತು ಬದುಕುವೆನೆಂದು ನಾನೂ ಜಗಳ ಆಡುತ್ತಿದ್ದೆವು. ಬದುಕಿಸುವಳೆಂಬ ಭಯದಿಂದ ನಾನು ರಾಖೇಶನ ಆಸರೆ ತಪ್ಪಿಸಿಕೊಂಡು ಹೋಗಿ ಗ್ರಾಮದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆನು. ಕೆಲವರು “ಸಂಗ್ಯಾ ಬಂದ, ಸಂಗ್ಯಾ” ಎಂದು ತಮಾಷೆ ಮಾಡುತ್ತಿದ್ದರು. ಇನ್ನು ಕೆಲವರು “ಏನ್ರೀ ಶಾಮಾಶಾಸ್ತ್ರಿಗಳೇ ತಮ್ಮ ಆಗಮನ ಈ ಕಡೆ ಬರೋಣವಾಯ್ತು” ಎಂದು ವ್ಯಂಗವಾಗಿ ಸಂಭೋದಿಸುತ್ತಿದ್ದರು. ನನ್ನ ಮೇಲೆ ಆ ಥರದ, ಈ ಥರದ ಯಾವ ಮಾತುಗಳೂ ಪರಿಣಾಮವನ್ನುಂಟು ಮಾಡುತ್ತಿರಲಿಲ್ಲ. ಅವರೆಲ್ಲ ಅಂದುಕೊಂಡಿದ್ದಕ್ಕಿಂತ ನಾನು ನನ್ನ ಊರುಗೋಲಾದ ರಾಖೇಶನ ಸಹಾಯದಿಂದ ಒಂದು ಹೆಜ್ಜೆ ಮುಂದೆಹೋಗುತ್ತಿದ್ದೆ. ಮೇಲ್ಜಾತಿಯವರು ರೂಪಾಯಿಗೆ ಹದಿರಾಣೆಯಷ್ಟು ನನ್ನನ್ನು ತಿರಸ್ಕರಿಸಿದ್ದರಿಂದ ನಾನು ಸಹಜವಾಗಿ ಕಾಟಗರ, ಕಪ್ಪು ಪ್ರೀತಿಗೆ ಪಾತ್ರನಾದೆ. ಅವರ ದೃಷ್ಟಿಯಲ್ಲಿ ನಾನು ಶಾಮಾ ಶಾಸ್ತ್ರಿಯಾಗಿರಲಿಲ್ಲ. ಕೇವಲ ಶಾಮನಾಗಿದ್ದೆ; ಶಾಮಣ್ಣನಾಗಿದ್ದೆ. ತಮ್ಮ ಕೇರಿಗಳಲ್ಲಿ ನಾಮಕರಣದಿಂದ ಹಿಡಿದು ಮರಣದವರೆಗೆ ಯಾವುದೇ ಮಂಗಳ, ಸೂತಕ ಕಾರ್ಯಕ್ರಮಗಳಿರಲಿ ನನ್ನ ಬಿಟ್ಟು ಮಾಡುತ್ತಿರಲಿಲ್ಲ. ವೇದಶಾಸ್ತ್ರ ಪಾರಾಯಣನೋರ್ವ ತಮ್ಮ ಸಹ ಬಾಂಧವನೆಂಬಂತೆ ಅವರು ನನ್ನನ್ನು ಗೌರವಿಸುತ್ತಿದ್ದರು. ಅವರು ತಮ್ಮ ಕಷ್ಟ ಸುಖಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ನಾನದಕ್ಕೆ ಏನೋ ಹೇಳುತ್ತಿದ್ದೆ. ಕಾಕತಾಳೀಯವಾಗಿ ಒಮ್ಮೊಮ್ಮೆ ಅದು ನಿಜವಾಗಿ ಬಿಡುತ್ತಿತ್ತು. ಆಗ ಅವರು ಯಾವುದೋ ಒಂದು ದೈವಿಕ ಶಕ್ತಿ ನನ್ನ ನಾಲಿಗೆ ಮೇಲೆ ನೆಲೆಸಿ ಹೇಳಿಸಿತೆಂದು ಭಾವಿಸುತ್ತಿದ್ದರು. +ಕನ್ನಕೊರೆಯುವುದರಲ್ಲಿ ನಿಸ್ಸೀಮನಾದ ಬಿತ್ತನಳ್ಳಿ ರಾಮನಾಗಲೀ; ಎಂಥ ಬೀಗವನ್ನೂ ಸಲೀಸಾಗಿ ತೆಗೆಯಬಲ್ಲ ಕೊರಚರಟ್ಟಿ ಉಜ್ಜನಾಗಲೀ; ಹಲ್ಲಿಯಂತೆ ತೊಲೆ ಜಂತಿಗುಂಟ ಸಾಗಿ ತಿಜೋರಿ ಇರುವ ಜಾಗವನ್ನು ಸಲೀಸಾಗಿ ತಲುಪುವಲ್ಲಿ ನಿಷ್ಣಾತನಾಗಿರುವ ಜೋಗೇರ ಚೌಡನಾಗಲೀ; ಮಿಂಚಿನಂತೆ ಜೇಬುಕತ್ತರಿಸುವ ಜಾತನಾಗಲೀ, ನನ್ನ ಆಶೀರ್ವಾದ ಪಡೆಯದೆ ಕಾರ್ಯಪ್ರವೃತ್ತರಾಗುತ್ತಿರಲಿಲ. ಅಷ್ಟೇ ಅಲ್ಲ ಕುಸ್ತಿ ಆಡಲಿಕ್ಕೆ ಹೋಗುವ ಗೋಣಿ, ಕೋಲ, ಸಾಂತರಂಥವರೂ, ಗುಂಡು ಎತ್ತಲಿಕ್ಕೆಂದು ಊರೂರಲೆಯುವ ಮುಕುಡಿ, ಸೊಚ್ಚ ಮೈಲಿಗ ಮುಂತಾದವರೂ… ಅಷ್ಟೇ ಅಲ್ಲದೆ ಚೊಚ್ಚಲು ಹೆರಿಗೆಗೆಂದು ನೋವು ತಿನ್ನುವವರು, ಅನಧಿಕೃತ ಕಳ್ಳ ಬಸಿರಾದವರು ಇತ್ಯಾದಿ ಎಲ್ಲರೂ… ಅವರ ಸಮಸ್ಯೆಗಳಿಗೆಲ್ಲ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಸ್ಪಷ್ಟವಾಗಿ ನಾಡು ನುಡಿಯುತ್ತಿದ್ದುದೇ ಅವರಿಗೆ ವರದಾನವಾಗಿ ಪ್ರಿಣಮಿಸತೊಡಗಿತು. ನುಣುಚಿಕೊಳ್ಳಬೇಕೆಂದು ನಾನು ಮತ್ತಷ್ಟು ಅಸ್ಪಷ್ಟವಾಗಿ ಸಾಂಕೇತಿಕವಾಗಿ ಮಾತಾಡತೊಡಗಿದೆ. ಉದಾಹರಣೆಗೆ ಒಬ್ಬ ತಾತಾ… “ಓಪನ್ನಾವುದು ಬರ್‍ತದೆ ಓಪನ್ನಾವುದು ಬರ್‍ತದೆ” (ನಲವತ್ತು ದಾಟಿದ್ದ ನಾನವರ ಪಾಲಿಗಾಗಲೇ ತಾತ, ಅಜ್ಜಿ ಆಗಿಬಿಟ್ತಿದ್ದೆ. ಶಾಮಣ್ತಾತೋ; ಶಾಮಣೆಜ್ಜೋ ಎಂದು ಕೂಗುತ್ತಿದ್ದರು. ಇದೊಂದು ರೀತಿ ಗೌರವ ಮೊತ್ತದ ಸಂಭೋಧನೆಯಾಗಿ) ಎಂದು ಕೇಳಿದರೆಂದಿಟ್ಟುಕೋ! ಆಗ ನಾನು “ನಾಕ್ನಾಕ್ಸಾಲಿಗೆ ನವಣೆ ಬಿತ್ತು ಎಂಟೆಂಟು ಸಾಲಿಗೆ ತೊಗರಿ ಬಿತ್ತು ಅಂತಲೋ ನಾಕೆಮ್ಮಿ ತಪ್ಪಿಸ್ಕಂಡ್ವು ಐದೆಮ್ಮೆ ಮನೀಗೆ ಬಂದ್ವು ಅಂತಲೋ; ಅರು ಹಡದೋಕಿ ಮುಂದೆ ಮೂರು ಹಡ್ದಾಕಿ ಗೆಬರಾಡಿ ಹೇಳ್ತಿದ್ಲಂತೆ ಎಂದೋ ಒಗಟು ರೀತಿಯಲ್ಲಿ ಹೇಳಿಬಿಡುತ್ತಿದ್ದೆ. ಅದಕ್ಕವರು ಕಾಣಿಕೆ ರೂಪದಲ್ಲಿ ತಂಬಾಕನ್ನೋ; ಪಾಕೆಟ್ಟನ್ನೋ, ಗಾಂಜಾವನ್ನೋ ಮುಂದಿಟ್ಟು “ಅಜ್ಜೋ… ನಿನ್ ಬಲ ಜಗ ಬಲ… ಆಶರವಾದಿರ್ಲಿ” ಎಂದು ನಮಸ್ಕಾರ ಮಾಡಿ ಹೋಗುತ್ತಿದ್ದರು. ಹೋದವರು ನನ್ನ ತರಾತಿಗಡಿ ಸಂಕೇತ ಭಾಷೆಯ ಶವ ಪರೀಕ್ಷೆ ನಡೆಸಿ ಜೂಜಾಡುತ್ತಿದ್ದರು. ಅವರ ಪೈಕಿ ಅನೇಕರು ಯಶಸ್ವಿಯಾಗುತ್ತಿರುವುದು ಕಂಡು ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. “ಲೋ ಶಾಮಾ! ನಿನ್ಗೆ ತಲೆ ಇದ್ರೆ ತಾನೆ ಅದ್ನ ಮರೆಸಿಕೊಳ್ಳೋದು” ಎಂದು ಕೂಗಾಡುತ್ತಿದ್ದ ರಾಖೇಶ ಮತ್ತೆ ನನ್ನನ್ನ ಸಾರ್ವಜನಿಕರ ಕಡೆ ಎಳೆದಾಡುತ್ತಿದ್ದ. ಅಷ್ಟೊತ್ತಿಗೆ ನನಗೆ ಸಾರ್ವಜನಿಕ ಬದುಕಿನಲ್ಲಿ ಗಾಡ್‌ಮನ್ ಅಂಥಾರಲ್ಲ… ಅಂಥದೊಂದು ಪಟ್ಟ ಲಭ್ಯವಾಗಿತ್ತು. ನನ್ನ ವಿಲಕ್ಷಣ ವರ್ತನೆ, ನಿರಭ್ರಮುಖಚಹರೆ, ಒಗಟಿನಂಥ ಮಾತುಕಥೆ; ಅಸಹಜವಾಗಿ ಊಟ ಪಾನ ಮಾಡುತ್ತಿದ್ದುದು ಈ ಎಲ್ಲ ಅಬ್ಸಿರ್ಡಿಟಿಯೇ ಜನರನ್ನು ಆಕರ್ಷಿಸುವ ಕೆಲಸ – ಜನರು ನನ್ನ ಬಗ್ಗೆ ಅಸಹ್ಯಪಟ್ಟುಕೊಳ್ಳಲೆಂದೇ ನಾನು ಈ ರೀತಿ ವರ್ತಿಸ ತೊಡಗಿದ್ದು. ಆದರೆ ಅಂಥ ಅಸಹಜ ನಡೆ ನುಡಿಯೇ ನನ್ನನ್ನು ಗೌರವಯುತ ಸ್ಥಾನದಲ್ಲಿ ಕುಳ್ಳಿರಿಸಿ ಬಿಟ್ಟಿತು. ನನ್ನ ಮೇಲೆ ಜನರಿಟ್ಟಿದ್ದ ಕುರುಡು ನಂಬಿಕೆಯಿಂದ ರಾಖೇಶ ಲಾಭ ಪಡೆಯ ತೊಡಗಿದ್ದ. ನನ್ನನ್ನೂ ಇನ್ನೂ ವಿಲಕ್ಷಣವಾಗಿ ವರ್ತಿಸುವಂತೆ ಪ್ರೇರೇಪಿಸ ತೊಡಗಿದ. ನೆಲದ ಮೇಲೆ ಊಟಮಾಡುವುದು; ಎಂಜಲನ್ನು ಜನರ ಮುಖಕ್ಕೆ ಎಸೆಯುವುದು. ಥೂ ಛೀ ಎಂದು ಉಗುಳುವುದು ಇತ್ಯಾದಿ… ಇದು ತಪ್ಪು ಹಾಗೂ ಶುದ್ಧ ಮೂರ್ಖತನದ್ದು ಎಂದು ನನಗೂ ಗೊತ್ತು. ಸಾರ್ವಜನಿಕ ಜೀವನದಿಂದ ಸಂಪುರ್ಣ ನಗಣ್ಯಗೊಳ್ಳುವ ಇರಾದೆ ಇಟ್ಟುಕೊಂಡೇ ನನು ಅಸಹ್ಯಾತಿ ಅಸಹ್ಯವಾಗಿ ವರ್ತಿಸತೊಡಗಿದೆ. ನಾನು ದೂರ ಹೋದಷ್ಟೂ ಜನ ಹತ್ತಿರ ಬರತೊಡಗಿದರು. ಮನಸಾಲಿ ಸಣ್ಣೀರಜ್ಜ ಎಂಬ ಧಣಿ ನನ್ನನ್ನುದ್ದೇಶಿಸಿ “ಲೇ ಮುದ್ಯಾ ನಾಳೀ ಹೊತ್ಗೆ ನಾನೆಲ್ಲಿರ್‍ತೀನೇಳು?” ಎಂದು ಕೇಳಿದ. ನನಗೇನು ಗೊತ್ತು ಆತ ತನ್ನ ಎಪ್ಪರಡನೇ ವಯಸ್ಸಿನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಹೊರಟಿರುವುದು! ಅದು ಅಲ್ಲದೆ ಆತ ನನ್ನ ಮೇಲೆ ವಿನಾ ಕಾರಣ ಹಗೆ ಸಾಧಿಸುತ್ತಿದ್ದ ಎಂದು ನಾನೂ ಗುಮಾನಿಸಿದ್ದೆ… ಅದಕ್ಕಿದ್ದು ನಾನು “ಇನ್ನೆಲ್ಲಿರ್‍ತೀ… ಕೆಂಪಾನು ಕೆಂಪು ಕುದುರೆ ಮೇಲೆ ಕೂತ್ಕೊಂಡು ಹಾರಿ ಹೋಗಿರ್‍ತಿ” ಅಂದು ಬಿಟ್ಟೆ. ನನ್ನಲ್ಲಿದ್ದ ಪೊಯಿಟ್ರಿ ಶ್ರಮ ಜ್ಞಾನ ಒಂದಲ್ಲಾ ಒಂದು ರೀತಿ ವ್ಯಕ್ತವಾಗುತ್ತಿತ್ತು. ಮರು ದಿನ ಚರಾಸ್ತಿ ಹಂಚಿಕೊಳ್ಳುವ ವಿಷಯದಲ್ಲಿ ಸದ್ಯ ಅಣ್ಣನ ಮಕ್ಕಳೈವರು ಜಗಳ ಆಡಿ ಚಿಕ್ಕಪ್ಪನಾದ ಆತನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಬಿಟ್ಟರು. ಈ ಘಟನೆ ನನಗೆ ಪವಾಡಪುರುಷನ ಸ್ಥಾನವನ್ನು ಕಟ್ಟಿತು… ನಾನು ಹೇಳದಿದ್ದರೂ ಹೇಳಿರುವನೆಂದು ಸುದ್ದಿ ಹಬ್ಬಿಸತೊಡಗಿದರು… ನನ್ನ ಬಗ್ಗೆ ಹತ್ತಾರು ದಂತ ಕಥೆಗಳನ್ನು ಕಟ್ಟಿ ಹೇಳಿಕೊಳ್ಳತೊಡಗಿದರು. ನಾನೊಂದು ಹಳೇ ಗೋಣೀತಟ್ಟನ್ನು ಬೀಸಿ ಆಕಾಶದ ಕಡೆ ಎಸೆದನೆಂದೂ; ಅದು ಅಕಾಶ ಸೇರಿ ನೂರಾರು ಮೈಲಗಲ ಬೆಳೆದು ಕಾರ್ಮೋಡವಾಯಿತೆಂದೂ; ಅದು ಹಾಗೆ ತೇಲುತ್ತಾ, ತೇಲುತ್ತಾ ಹೋಗಿ ನಡುಬಾನಳ್ಳಿ ತಲೆ ಮೇಲೆ ನಿಂತು ಧಾರಾಕಾರವಾಗಿ ಮಳೆ ಸುರಿಸಿತೆಂದೂ ಮಾತಾಡಿಕೊಂಡರೆಂದು ನನಗೆ ಗೊತ್ತಾಗಿದ್ದು ನಡಬಾನಹಳ್ಳಿ ಪಟೇಲ, ಗೌಡ, ಕುಲಕರ್ಣಿ ಮುಂತಾದ ಮುಖಂಡರು ಬಂದು ದಕ್ಷಿಣೆ ಇತ್ತು ಉದ್ದೋಕ ಅಡ್ಡ ಬಿದ್ದ ಮೇಲೆಯೇ! ಮುಂದೊಂದುದಿನ ಉಪ್ಪಲದಿನ್ನಿ ಎಂಬ ತಾಶೀಲ್ದಾರ “ಅಜ್ಜೋರೆ ಅಜ್ಜೊರೆ” ಅಂತ ಓಡಿ ಬಂದು, “ನೀವು ಇಹಲೋಕ ತ್ಯಜಿಸಕ್ಮುಂಚೆ ನನಗದ ತಿಥಿ ದಿನ ತಿಂಗಳು ತಿಳಿಸಬೇಕು”. ಎಂದ, ಯಾಕಪ್ಪ! ಎಂದು ಕೇಳಿದೆ”ಯಾಕೂ ಇಲ್ಲ.. ನಿಮ್ಗೊಂದು ಅಮೃತಶಿಲಾದ ಸಮಾಧಿ ಕಟ್ಟಿಸಿ ನಾಕು ಮಂದಿ ಭಕ್ತರು ಪೂಜೆ ಮಾಡೋಹಂಗ ಮಾಡ್ತೀನಂತ ಹರಕೆ ಹೊತ್ತೀನಿ!” ಎಂದ. ಇದನ್ನು ಕೇಳಿ ನಾನು ಹುಚ್ಚ ಎಂದು ಕಾಲಿನಿಂದ ಜಾಡಿಸಿದೆ. ಅದನ್ನು ಗಪ್ಪಂತ ಹಿಡಿದುಕೊಂಡು ಚುಂಬಿಸಿದ. ಹೌದು ಅಂತ ಹೇಳುವಂತೆ ಬಾಯಿ ತುಂಬ ಹುಣ್ಣಾಗಿ ಫೀಡಿಂಗ್ ಬಾಟಲಿನಿಂದ ಹಾಲು ಕುಡಿದಿದ್ದು ನಿಜ. ಕುಡಿದಾದ ಮೇಲೆ ಅದನ್ನು ತಿಪ್ಪೆಗೆ ಎಸೆದಿದ್ದೂ ನಿಜ. ಆದರೆ ರಾಖೇಶ್ ಅದನ್ನು ತೆಗೆದುಕೊಂಡು ಹೋಗಿ ಹದಿನೈದು ನೂರು ರುಪಾಯಿಗೆ ಹರಾಜು ಹಾಕಿದ್ದಾಗಲೀ, ಅದನ್ನು ಕೊಂಡೊಯ್ದು ಉಪ್ಪಲದಿನ್ನಿ ಸಾಹೇಬ ಗೊಡ್ಡಿ ಎಂದು ಹೆಸರಾಗಿದ್ದ ತನ್ನ ಹೆಂಡತಿ ರಾಜಮ್ಮಗೆ ‘ಇದರಲ್ಲಿ ಹಾಲು ತುಂಬಿಸಿಕೊಂಡು ಕುಡಿ ಮಕ್ಕಳಾಗ್ತವಂತೆ’ ಎಂದು ಹೇಳಿಕೊಟ್ಟದ್ದಾಗಲೀ; ಆಕೆ ಅದರಲ್ಲಿ ಮೇಕೆ ಹಾಲು ತುಂಬಿಸಿ ಕುಡಿದಿದ್ದಾಗಲೀ; ಆಕೆ ಮುಟ್ಟು ನಿಂತು ಬಸಿರಾದದ್ದಾಗಲೀ; ಇನ್ನೂರಾ ಎಂಬತ್ತೇಳನೇ ದಿನಕ್ಕೆ ಗಂಡು ಮಗುವಿನ ಜನ್ಮ ನೀಡಿದ್ದಾಗಳೀ ನನಗೆ ಗೊತ್ತೇ ಇರಲಿಲ್ಲ! +ನಾನಿಂಥ ದಿನವೇ ಸಾಯ್ತೀನಿ ಅಂತ ಹೇಗೆ ಹೇಳುವುದು? ರಾಖೇಶನೇ ಆತನ ಹೆಗಲ ಮೇಲೆ ಕೈ ಹಾಕಿ ಬಸ್‌ಸ್ಟಾಂಡ್ ಕಡೆ ಕರೆದೊಯ್ದು… ನೀವೆಂದು ಸಾಯ್ತೀರಿ? ಎಂದು ಆತ ಕೇಳಿದ ಪ್ರಶ್ನೆ ಮಾತ್ರ ನನ್ನಲ್ಲಿ ತಳಮಳವನ್ನು; ಅಪೂರ್ವವಾದ ತಿಳುವಳಿಕೆಯನ್ನು ಹುಟ್ಟಿಸಿತು. ಸಮಾಜದ ಈ ಆಸ್ತಿಕ ಮುಖವಾಡವೇ ಅಪಾಯಕಾರಿ ಎನ್ನಿಸಿತು. ನಾನು ಜನರ ಕಣ್ಣಿಗೆ ಕಾಣಿಸುತ್ತಿರುವುದರಿಂದಾಗಿಯೇ ಇಷ್ಟೆಲ್ಲ ಸಮಸ್ಯೆ! ನಾನ್ ಕಣ್ಮರೆಯಾಗಿ ಬಿಟ್ಟರೆ! ಎಂದು ಯೋಚಿಸಿದೆ. ಅನಸುಯಾ ನೆಮ್ಮದಿಯಿಂದ ಬದುಕುವಂತಾಗಲೆಂಬ ದೃಷ್ಟಿಯಿಂದಲೇ ನಾನು ಬೀದಿ ಬೀದಿ ಸುತ್ತ ತೊಡಗಿದ್ದು; ಮೇಲ್ವರ್ಗದ ಮಂದಿ ನನ್ನನ್ನು ಮತ್ತಷ್ಟು ನಿಕೃಷ್ಟವಾಗಿ ಕಾಣಬೇಕೆಂದೇ ನಾನು ಕೆಳಗೇರಿಯ ಮಂದಿ ಜೊತೆಗೆ ಇರಲಾರಂಭಿಸಿದ್ದು. ಅವರು ಅಸಹ್ಯಪಡಲೆಂದೇ ನಾನು ಶವದ ಶಿರದಕ್ಕಿಯನ್ನು ಭುಂಜಿಸಿದ್ದು. ನಡುಗುವ ಕೈ ಬೆರಳುಗಳಿಂದಾಗಿ ಚೌಪದಿಗೆ ಅರ್ಹವಾದ ಮಾತುಗಳನ್ನು ಅವರಿವರ ಬಳಿ ಹೇಳಿಕೊಂಡಿದ್ದು… ಆದರೆ ಇವೆಲ್ಲ ಸಮಾಜದ ಎಲ್ಲ ವರ್ಗದ ಮಂದಿಗೆ ಸಹ್ಯವಾಗಬಹುದೆಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. +ಸಮಾಜದ ಆಸ್ತಿಕ ಭಾವನೆಯೇ ನನ್ನ ಕೊರಳಿಗೆ ಉರುಳಾಗಿ ಪರಿಣಮಿಸಿಬಿಟ್ಟಾಗ ನನಗೆ ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದೆನಿಸಿತು. ಅಂಥ ಯೋಚನೆಯ ಪರಿಣಾಮವಾಗಿಯೇ ನಾನು ಅಲಬೂರು, ಕೋಗಳಿ, ಉಜ್ಜಿನಿ ಮೂಲಕ ನಡೆದುಕೊಂಡೇ ಹೋಗಿ ಕೊಟ್ಟೂರು ಪ್ರವೇಶಿಸಿದೆ. ತಾಯಿ, ಹೆಂಡತಿ-ಮಕ್ಕಳು… ನೆನಪಾದರು. ಅಮ್ಮನನ್ನು ಅಮ್ಮಾ… ನಾನು ನಿನ್ನ ಶಾಮಾ. ನೀನು ಸ್ನಾನ ಮಾಡುವಾಗ ಬೆನ್ನು ಉಜ್ಜಲೆಂದೇ ಬಂದಿದ್ದೇನೆ ಎಂದು ತಾಯಿಗೆ ಹೇಳಬೇಕೇಂದೆನಿಸಿ; ನಿನ್ನ ನಿರಿಕ್ಷೆಗಳನ್ನು ನಾನು ಹುಸಿಗೊಳ್ಳಿಸಿಲ್ಲವೆಂಬುದಕ್ಕೆ ನನ್ನ ದೇಹವೇ ಜೀವಂತ ಸಾಕ್ಷಿಯಾಗಿದೆ ನೋಡು ವರಲಕ್ಷ್ಮೀ… ಕೊನೆಯದಾಗಿ ನಿನ್ನಿಂದ ಒಂದು ಮುದ್ದು ಬಯಸಿ ಬಂದಿರುವೆನಮ್ಮಾ ಎಂದು ಹೆಂಡತಿಯನ್ನು ಕೇಳಬೇಕೆಂದೆನ್ನಿಸಿ ನಿಮ್ಮನ್ನು ಹೆತ್ತವರಾದ ನಾನು ಬಂದಿರುವೆ ಮಕ್ಕಳೇ… ಹಸಿದ ನನಗೆ ಒಂದೆರಡು ತುತ್ತು ಮೊಸರನ್ನ ಉಣ್ಣಿಸಿ ತಂದೆಯಾಗುವಿರಾ ಎಂದು ಮಕ್ಕಳನ್ನು ಅಭ್ಯರ್ಥಿಸಲು ಬಯಸಿ ನಾನು ಬೀದಿಗುಂಟ ನಡೆಯತೊಡಗಿದೆ. ಎಷ್ಟೊಂದು ಬದಲಾಗಿದೆ ನನ್ನ ಕೊಟ್ಟೂರು… ನನ್ನ ಅಸಂಖ್ಯಾತ ಪಾದಮುದ್ರೆಗಳ ಪೈಕಿ ಒಂದೂ ಕಾಣಿಸುತ್ತಿಲ್ಲವಲ್ಲ… ಇಷ್ಟೊಂದು ರಸ್ತೆಗಳು ಕ್ರೂರವಾಗಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ರಸ್ತೆಗಳೆ ಹಾಗೆ, ನಪಾಸಾದ ಹಳೆ ವಿದ್ಯಾರ್ಥಿಗಳಂತೆ… ಹೋಗುವವರಿಗೆ ತಮ್ಮಂದಿರು ಬರುವವರಿಗೆ ಅಣ್ಣಂದಿರು, ದೇವರು ದೊಡ್ಡವನು, ಯಾರೂ ಗುರುತಿಸದಹ್ಟು ನನ್ನನ್ನು ದೈಹಿಕವಾಗಿ ಬದಲಾಯಿಸಿದ್ದಾನೆ. ಕಾಮಕೋಟಿನಿಲಯೇ… ಎಂಬ ದೀಕ್ಷಿತರ ಕೃತಿ ಕತ್ತು ಹಿಚುಕಿ ಎದೆಯೊಳಗೆ ಅದರ ಕಳೇಬರವನ್ನು ಬಚ್ಚಿಟ್ಟಿದ್ದಾನೆ… ನಿಜವಾಗಿಯೂ ದೇವರು ದಯಾಮಯ, ಅವನ ಮಹಿಮೆ ಅನಂತ, ಅಪಾರ… ಅದಕ್ಕಾಗಿ ಸಾಕ್ಷಿಯಾಗಿ ನಾನು ಅಪರಿಚಿತನಂತೆ ಚಿರಪರಿಚಿತ ಚಿರಬಾಂಧವ್ಯದ ದಿಕ್ಕಿನ ಕಡೆಗೆ ನಡೆಯುತ್ತಿರುವೆ… ಈ ನಲವತ್ತೂ ಚಿಲ್ಲರೆ ವಯಸ್ಸಿನಲ್ಲಿ‌ಎಷ್ಟೊಂದು ಅವಸ್ಥಾಂತರಗಳನ್ನು ಸೃಷ್ಟಿಸಿದ, ಅನುಭವಿಸುವಂತೆ ಮಾಡಿದ. ಚಿರಬಾಂಧವ್ಯ ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು, ರಾಖೇಶನೆಂಬಧೂತ ದುತ್ತನೆ ವಕ್ಕರಿಸುವ ಮೊದಲು; ಕಳ್ಳ ನಮ್ಮನ್ನೆಲ್ಲ ಬಿಟ್ಟುಕೊಟ್ಟು ಚಿರಬಾಂಧವ್ಯದ ಉಳವಿಯ ಜಾರ್‍ಗಲ್ಲಿನ ಪೊಟರೆಯೊಳಗೆ ಅವಿತುಕೊಳ್ಳಲೆಂದು ದಾಪುಗಾಲು ಹಾಕುತ್ತಿದ್ದೀಯಾ? ನೀನು ನಿನ್ನ ಮರೆ ಮಾಚಿಕೊಂಡರೆ ಯಾವ ಇಕ್ಕಳದಿಂದ ಚಿಮುಟಿಗೆಯಿಂದ ಹೊರತೆಗೆಯುವುದು ಸಾಧ್ಯವಿಲ್ಲವೆಂದು ಅಟಕಾಯಿಸಿ ಎಳೆದೊಯ್ಯುವ ಮೊದಲು ನನ್ನವರು ತನ್ನವರನ್ನು ತಲುಪಲೇಬೇಕು. ಅಂತೂ ಇಂತೂ ನಾನು, ನಾನು ಉಂಡಾಡಿ ಬೆಳೆದ ಮನೆಯ ಸನಿಹ ಸೇರಿದೆ. “ಶಾಮೂ… ಪುರುಷಸೂಕ್ತದ ಗೋಪ್ಯವನ್ನು ಹೇಳ್ಕೊಡ್ತೀನಿ ಬಾರೋ” ಎಂದು ತಾತನವರು ಕೂಗುತ್ತಿರುವಂತೆ ಭಾಸವಾಯಿತು. ಶ್ರೀ ಶಂಕರರ ನೇರ ಶಿಷ್ಯರಾದ ಪದ್ಮಪಾದರು ವಿರಚಿತ ಪಂಚ ಪಾದಿಕ ಕೃತಿ ಕುರಿತು ವಿವರಿಸುತ್ತೇನೆ ಬಾರೋ ಶಾಮಾ ಎಂದು ಕೂಗುತ್ತಿರುವರೆಂದುಕೊಂಡೆ. ಅದು ಬೇಡಿ ತಾತ ವಿದ್ಯಾರಣ್ಯರ ಜೀವನ್ಮುಕ್ತಿ ವಿವೇಕದ ಬಗ್ಗೆ ಪಾಠಮಾಡಿ ಎಂದು ಕೂಗಿಹೇಳಬೇಕೆನ್ನಿಸಿತು. ಪ್ರೇಕ್ಷಕ ಸ್ಥಾನದಲ್ಲಿರುವ ಬ್ರಹ್ಮನ ಬಗ್ಗೆ; ಪ್ರೇಕ್ಷಿತ ಸ್ತಾನದಲ್ಲಿರುವ ಮಾಯೆಯ ಬಗ್ಗೆ ತಾತನವರ ಬಾಯಿಯಿಂದ ತಿಳಿದುಕೊಳ್ಳಬೇಕೆಂಬ ತಹತಹಿಕೆ ಹುಟ್ತಿತು. ನಾಸತೋ ವಿದ್ಯತೇ ಭಾವಃ! ನಾಭಾವೋ ವಿದ್ಯತೇ ಸತಃ… ಅಹ್ಹಾ! ಗೀತಾಚಾರ್ಯನೇ ನಿನಗೆ ನಮೋಮಮಃ ಎಂದು ಕೈ ಎತ್ತಿ ಮುಗಿದ ನನ್ನೆದುರಿಗೆ… ಅಕ್ಷೋಹಿಣಿ, ಅಕ್ಷೋಹಿಣಿ, ಭಾವನೆಗಳನ್ನು ಮುಖಾಮುಖಿಯಾಗಿ ಅವರ ಕಣ್ಣುಗಳಿಂದ ನೀರಾಗಿ ಹರಿದವು. ಸನ್ಯಾಸ ಸ್ವೀಕರಿಸಿದ ಓರ್ವನು ಯಾವ ರೀತಿ ತಾನು, ತನ್ನದನ್ನು ನಿಭಾಯಿಸುವನೋ ಹಾಗೆಯೇ ಆ ಸಂದರ್ಭವನ್ನು ನಾನು ನಿಭಾಯಿಸಿದೆನು. ಗತಕಾಲದ ಸ್ಮೃತಿಗಳನ್ನು ಕಿತ್ತು ಕಿತ್ತು ಮೆತ್ತಿ ನನ್ನ ವಸ್ತು ಸ್ಥಿತಿಯನ್ನು ವಿರೂಪಗೊಳಿಸತೊಡಗಿದರು. ಅಪರಕರ್ಮ, ಶ್ರದ್ಧಾಕರ್ಮಗಳಿಗೆ ಅಗತ್ಯವಾದ ಪರಿಕರಗಳನ್ನು ಅಷ್ಟೊತ್ತಿಗಾಗಲೇ ಜೋಡಿಸಿಕೊಂಡಿರುವವರಂತೆ ಗೋಚರಿಸಿದರು. ತಾಯಿ ನನ್ನಲ್ಲಿ ತನ್ನ ಮಗನನ್ನು ಗುರುತಿಸಲಿಲ್ಲ, ನಾನೂ ಆಕೆಯಲ್ಲಿ ತಾಯ್ತನವನ್ನು ಗುರುತಿಸಲಿಲ್ಲ. ಹೆಂಡತಿ ನನ್ನಲ್ಲಿ ತನ್ನ ಗಂಡನನ್ನು ಗುರುತಿಸಲಿಲ್ಲ. ನಾನೂ ಆಕೆಯಲ್ಲಿ ನನ್ನ ಹೆಂಡತಿಯನ್ನು ಗುರುತಿಸಲಿಲ್ಲ. ಮಕ್ಕಳು ನನ್ನಲ್ಲಿ ತಮ್ಮ ತಂದೆಯನ್ನು ಗುರುತಿಸಲಿಲ್ಲ, ನಾನೂ ಅವರಲ್ಲಿ ನನ್ನ ಮಕ್ಕಳನ್ನು ಗುರುತಿಸಲಿಲ್ಲ… ನಾನು ಮನೆಯೊಳಗೆಲ್ಲ ಹುಚ್ಚುಹಿಡಿದವನಂತೆ ಅಡ್ಡಾಡುತ್ತಿರುವಾಗ ಏನಾದರೂ ಲಪಟಾಯಿಸಲು ಹಡುಕುದ್ದಿದ್ದಾನೆಂದೇ ಭಾವಿಸಿದರು. ಆರೋಹಣ ಹಂತದಲ್ಲಿದ್ದ ನಾನು ಏನು ಮುಟ್ಟುವುದು ಸಾಧ್ಯ?… ನಾನು ಒಯ್ಯಬಹುದಾದ; ಆರೋಹಕ ಸ್ಥಿತಿಗೆ ಪೂರಕವಾದ ವಸ್ತು ಅಲ್ಲಿದ್ದರೆ ತಾನೆ! ಸ್ಥಿತಿಸ್ಥಾಪಕ ಶಕ್ತಿ ಕಳೆದುಕೊಂಡ ಉರಗವೊಂದು ಹುತ್ತ ಪ್ರವೇಶಿಸಿ ಹೊರಬಂದಂತೆ ನಾನು ಆ ಮನೆಯನ್ನು ಪ್ರವೇಶಿಸಿ ಹೊರಬಂದು ಬೀದಿ ಗುಂಟ ನಡೆಯತೊಡಗಿದೆ. ಎಷ್ಟು ಪ್ರಯತ್ನಿಸಿದರೂ ನನ್ನ ಕೈಲಿ ಸಭ್ಯ ವ್ಯಕ್ತಿ ಥರ ನಡೆಯಲಿಕ್ಕಾಗಲ್ಲಿಲ್ಲ. ನನ್ನ ಬಗ್ಗೆ ಮಾತಾಡಿ ಸಾಕು ಮಾಡಿಕೊಂಡಿದ್ದ ಜನರಲ್ಲಿ ನನ್ನ ಬಗ್ಗೆ ಯಾವುದೇ ರೀತಿಯ ಕುತೋಹಲವಾಗಲೀ; ರೋಮಾಂಚನವಾಗಲೀ ಇರಲಿಲ್ಲ. ಅವರ ಪಟ್ಟಿಯಲ್ಲಿ ನನ್ನ ಹೆಸರು ಅಷ್ಟುಹೊತ್ತಿಗಾಗಲೇ ಮಾಸಲಾಗಿತ್ತು. ‘ದೇವರು ದೊಡ್ಡವನು… ಅವನಿನ್ನೂ ಬದುಕಿದ್ದಾನೆ’ ಎಂದು ಮಾತ್ರ ಅಂದುಕೊಳ್ಳುತ್ತಿರಬೇಕೆಂದುಕೊಂಡೆ… ಒಂದು ವಿಚಿತ್ರ, ಆದರೂ ಪ್ರಸ್ತಾಪಿಸಲೇ ಬೇಕಾದ ಸಂಗತಿ ಎಂದರೆ ಕೊಟ್ಟುರಿನಲ್ಲಿ ಮತ್ತು ಕೊತ್ತಲಿಗಿಯಲ್ಲಿ ಅಥವಾ ಆಸುಪಾಸಿನಲ್ಲಿ ಯಾವುದಾದರೊಂದು ಅನಾಥ ಶವ ಕಂಡುಬಂದರೆ ಅದು ನನ್ನದೇ ಇರಬೇಕೆಂದು ಮುಗಿಬಿದ್ದು ನೋಡುತ್ತಿದ್ದರು… ಆ ರೀತಿಯ ಕಳೇಬರಗಳ ಮತ್ತು ನನ್ನ ಮುಖಚಹರೆ ಒಂದೇ ಆಗಿರುತ್ತಿದ್ದುದರಿಂದ ಇಂಥ ಪರಪಾಟು ಅನುಭವಿಸುವುದು ಅವರಿಗೆ ಅನಿವಾರ್ಯವಾಗಿತ್ತು. +ಉದಾಹರಣೆ ಎಂದರೆ ನೀನೂ ಅಂಥ ಕುತೋಹಲಿಗಳಲ್ಲಿ ಒಬ್ಬನಾಗಿದ್ದಿ. ಕೊತ್ತಲಗಿ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಅನಾಥ ಕಳೇಬರ ನನ್ನದೆಂದೇ ನೀನು ಭಾವಿಸಿದಿ, ಎದುರಾದ ನನ್ನನ್ನು ನೀನು ಗುರುತಿಸಿದಿ. ಆದರೆ ಮಾತಾಡಿಸಲಿಲ್ಲ… ಯಾಕೆಂದರೆ ನೀನು ಸಭ್ಯ ನಾಗರಿಕನ ಮುಖವಾಡ ಧರಿಸಿದ್ದಿ. ಅಲ್ಲವೆ? ಇರಲಿ! ಅಲ್ಲಿಂದ ಹೊರಟ ನಾನು ಕೊಟೂರಿನ ಹಲವು ಮುಖ್ಯ ಬೀದಿಗಳಲ್ಲಿ ವಿಳಾಸ ರಹಿತ ವ್ಯಕ್ತಿ ಥರ ತಿರುಗಾಡಿ ಕೊನೆಗೆ ಬಸ್‌ನಿಲ್ದಾಣ ಸೇರಿ ಬಸ್ ಹತ್ತಿ ಕೂತುಕೊಂಡೆ. ನನಗೆ ಕೂಡ್ರಲು ಜಾಗ ಕೊಟ್ಟ ವ್ಯಕ್ತಿ ನನ್ನ ಮಗ್ಗುಲು ಕೂಡ್ರಲು ಅಸಹ್ಯಪಟ್ಟು ಎದ್ದು ನಿಂತುಕೊಂಡು ‘ಪರವಾ ಇಲ್ಲ’ ಎಂದ, ಕೊತ್ತಲಗಿ ಸಮೀಪಿಸುತ್ತಿದ್ದಂತೆ ಕೆಲವು ಪ್ರಯಾಣಿಕರು “ಶಾಮಣ್ತಾತ… ಶಾಮಣ್ಣಜ್ಜ” ಎಂದು ಗುರುತಿಸಿದರು. ನಲವತ್ತಕ್ಕೆ ಎಂಭತ್ತು ವರ್ಷದ ಹಣ್ಣು ಹಣ್ಣು ಮುದುಕನಂತೆ ಕಾಣಿಸುತ್ತಿದ್ದ ನಾನು ಅಂಥ ಮಾತುಗಳಿಮ್ದ ಬೇಸರಿಸಿಕೊಳುತ್ತಿರಲಿಲ್ಲ. ಅಲ್ಲದೆ ನನ್ನ ದೇಹದ ಸಂದುಗೊಂದುಗಳಿಂದ ಸುಖವ್ಯಾಧಿಗಳ ಪರಿಮಳದೊಂದಿಗೆ ದೈವೀಶಕ್ತಿಯ ಕಮರು ವಾಸನೆಕೂಡ ಬರುತ್ತಿತ್ತು. ಇಂಥ ವಾಸನೆಗಳಿಗೊಂದು ಸುಂದ ಸಮಾಧಿಕಟ್ಟಿಸಲೆಂದು ಹರಕೆ ಹೊತ್ತಿರುವ ಉಪ್ಪಲದಿನ್ನಿಯ ನೆನಪಾಯಿತು. ಅವನು ಹುಟ್ಟಿರುವ ಪುಟ್ಟಮಗುವಿಗೆ ಈಗಾಗಲೆ ‘ಶಾಮಣ್ಣ’ ಶಾಮಸುಂದರ… ಎಂದು ನಾಮಕರಣ ಮಾಡಿರಬಹುದೆಂಬ ಭಯ ಆವರಿಸಿತು. ತನ್ನ ಬದುಕಿನ ಪ್ರಮುಖ ಸರಕೇ ತಲೆ ಮರೆಸಿಕೊಂಡಿರುವುದಲ್ಲಾ ಎಂಬ ಖೇದದಿಂದ ತಿರುಗಾಡುತ್ತಿರುವ ರಾಖೇಶ ಎಂಬ ಅದ್ಭುತ ಮಾನವನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು ಎಂದುಕೊಂಡೆ. +ಇದು ನನ್ನ ಬದುಕಿನ ಅತ್ಯಂತ ಕ್ರೂರ ಸಂದರ್ಭ ಮಿತ್ರಾ… ಯಾವುದೇ ಶತ್ರು ಅನುಭವಿಸಬಾರದ ವರ್ತಮಾನವನ್ನು ನಮ್ಮ ಶಾಮ ಅನುಭವಿಸುತ್ತಿದ್ದನಲ್ಲಾ ಎಂದು ನೀನು ಅಂದುಕೊಳ್ಳಬಹುದು. ಅಂಥ ಅನುಕಂಪದ ಅಗತ್ಯ ನನಗಿಲ್ಲ. ನನಗೆ ತೊಂದರೆ, ತೊಂದರೆಯಾಗಿರಲಿಲ್ಲ. ನಾನು ಅವುಗಳ ಅರ್ಥವನ್ನೇ ಬದಲಾಯಿಸಿದೆ. ಅವುಗಳಿಗೆ ಹೊಸ ವ್ಯಾಖ್ಯಾನ ಬರೆದೆ. ಇನ್ನೂ ಕೆಲ ಕಾಲ ಬದುಕಿದ್ದರೆ ಮಾನವ ಪ್ರಪಂಚದ ರೂಢಿ ಮೂಲ ಭಾಷೆಯನ್ನೇ ಬದಲಾಯಿಸಿ ಬಿಡುತ್ತಿದ್ದೆ. ಕರ್ತೃ, ಕರ್ಮ, ಕ್ರಿಯಾ ಪದಗಳನ್ನೇ ಬದಲಿಸಿ ನನ್ನದೇ ಆದಂಥ ಒಂದು ಹೊಚ್ಚಹೊಸ ನಿಘಂಟನ್ನೇ ತಯಾರಿಸಬೇಕೆಂದಿದ್ದೆ. ಉದಾಹರ್ಣೆಗೆ ನಿದ್ದೆ ಎಂಬ ಪದಕ್ಕೆ ಉಣ್ಣು ಎಂದೋ; ಉಣ್ಣು ಎಂಬ ಪದಕ್ಕೆ ಆಡು ಎಂದೋ, ಕೂತುಕೋ ಎಂಬ ಪದಕ್ಕೆ ಕುಡಿದುಕೋ ಎಂದೋ… ಹೀಗೆ… ಇಂಥ ನಿಘಂಟಿನ ಕಲ್ಪನೆಯನ್ನು ನೆನೆಸಿಕೊಂಡರೆ ಈಗಲೂ ಮೈಜುಮ್ಮೆನ್ನುತ್ತದೆ ಮಾರಾಯಾ… ಆದಿ ಮಾನವನ ಕಲ್ಪನೆಯ ಮುಂದುವರಿದ ಭಾಗ ಮಾತ್ರ ಆಧುನಿಕ ಮನುಷ್ಯನ ವರ್ತಮಾನದ ಬದುಕು. ಆ ಸವಕಲನ್ನೇ ನಾವು ಎಲ್ಲಿಯವರೆಗೆ ಮುಂದುವರಿಸುವುದು? ನಮ್ಮದು ಬರೀ ತೇಪೆ ಹಚ್ಚುವ ಕೆಲಸವೇ ಆಯಿತಲ್ಲ. ನಮ್ಮ ಸ್ವಂತದ್ದೆನ್ನುವ ಬದುಕನ್ನು ಬದುಕುತ್ತಿರುವೆವೇನು? ಬದುಕು ಒಂದು ಪಳೆಯುಳಿಕೆ, ಒಂದು ಸವಕಲು ಬಳುವಳಿ… ಅಂಥ ಸವಕಲನ್ನು, ಪಳೆಯುಳಿಕೆಯನ್ನು ನನ್ನ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದೇ ನನ್ನ ಭಾವನೆ. ಅದನ್ನು ಉಲ್ಲಂಘಿಸುವ ಕೆಲಸನ್ನು ಅಂತಃಕರಣದಿಂದ, ಮುತುವರ್ಜಿಯಿಂದ ಮಾಡಿದೆ. ಒಡಲ ಲೋಳೆಯನ್ನು, ಪಾಕವನ್ನು ಬಾಯಿ ಮೂಲಕ ಸ್ರವಿಸಿ ನನ್ನ ಸುತ್ತ ನಾನೇ ಒಂದು ಬಲಿಷ್ಟವಾದ, ನನ್ನಿಂದಲೂ ಭೇದಿಸಲಿಕ್ಕಾಗದ ಗೂಡನ್ನು ನಿರ್ಮಿಸಿಕೊಂಡೆ. ಅಸಹಾಯಕತೆಯ ಕೋಡಿ ಬಿದ್ದಾಗ ನನಗೆ ಅರಿವಾಯಿತು ಅಂತ್ಯ ಸಂಸ್ಕಾರದ ಜಟಿಲತೆ. ನಿಸ್ಸಹಾಯಕತೆಯ ಮುಖಮುದ್ರೆಯಿಂದ ಕನಸು ಕಾಣತೊಡಗಿದೆ… “ಮಣಿಕರ್ಣಿಕಾ ಚಕ್ರಪುಷ್ಕರಣಿ…” ಎಂದು ಮುಂದೇನೂ ಹೇಳಲಾಗದೆ ಶಾಮಣ್ಣ ಪಾತ್ರವು ದೀರ್ಘವಾದ ಉಸಿರು ಚೆಲ್ಲಿತು. +ಅದರ ಮುಖದ ತುಂಬ ರಾಚಿದಂಥ ವಿಷಾದ, ನಿರಾಸೆ, ನಿಸ್ಪೃಹತೆಗಳು ನನಗೆ ಹೊಸತೆಂಬಂತೆ ಕಂಡವು. ಅವನು ಅಸ್ವಾಭಾವಿಕವಾಗಿ ಬದುಕಿದ ಎಂಬ ಸಂಗತಿಯನ್ನು ಮಾತ್ರ ನಾನು ಶೋದಿಸಿದ್ದೆ. ಆ ಸ್ವಾಭಾವಿಕತೆಯ ಒಳಗೆ ಸಾರ್ವಜನಿಕರು ಅತೀಂದ್ರಿಯ ಶಕ್ತಿಯನ್ನೋ ದೈವೀಶಕ್ತಿಯನ್ನೋ ಗುರುತಿಸಿ ಗೌರವಿಸುತ್ತಿದ್ದರು ಎಂಬ ಸಂಗತಿಮಾತ್ರ ತಿಳಿದು ಬಂದಿರಲಿಲ್ಲ. ಹಿಂದೊಮ್ಮೆ ನಾನೂ, ಅವನೂ ಅಬ್ರಹಾಂ ಕೋವೂರರ ಭಾಷಣ ಕೇಳಲಿಕ್ಕೆ ಹೊಸಪೇಟೆಗೆ ಓಡಿ ಹೋಗಿದ್ದವರೇ. ಅಲ್ಲಿಂದ ಬಂದ ಮೇಲೆ ನಮ್ಮ ಊರ ಸುತ್ತಮುತ್ತ ನಡೆಯುತ್ತಿದ್ದ ಸಣ್ಣಪುಟ್ಟ ಪವಾಡ ಪುರುಷರ ನೈಜ ಬಣ್ಣವನ್ನು ಹೊರಗೆಡಹಿದವರೇ; ಮೂಢ ನಂಬಿಕೆಗಳನ್ನು ಖಂಡಿಸಿದವರೇ; ಇವರ ವಿರುದ್ಧ ಹೋರಾಡಿ ತಕ್ಕಮಟ್ಟಿಗೆ ಯಶಸ್ವಿ ಆದೆವು ಎಂದುಕೊಂಡ ಬೆನ್ನ ಹಿಂದೆಯೇ ಪವಾಡಗಳ, ಮೂಢ ನಂಬಿಕೆಗಳ ಆಸರೆಯಿಂದ ಬದುಕುತ್ತಿದ್ದವರ ಬಗ್ಗೆ; ಮೂಢ ನಂಬಿಕೆಗಳನ್ನೇ ಬಂಡವಾಳವಾಗಿರಿಸಿಕೊಂಡು ಬದುಕುತ್ತಿದ್ದವರ ಬಗ್ಗೆ ಯೋಚಿಸಿ ನಿಟ್ಟುಸಿರು ಇಟ್ಟಿದ್ದೆವು. ಅವರ ದೇಹಕ್ಕೆ ಮನಸ್ಸಿಗೆ ಪುನರ್ವಸತಿ ಕಲ್ಪಿಸಲಾರದ ನಾವು ಎಲ್ಲಿವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತ ಹೋರಾಡುತ್ತ ಸಾಗುವುದು? ಹೀಗೆ ಯೋಚನೆಗೆ ಕಟ್ಟುಬಿದ್ದು ನಾನು ಹಿಂಜರಿದಿದ್ದರೂ ಶಾಮ ಮಾತ್ರ ಬಹಳ ಕಾಲದವರೆಗೆ ಹಿಂಜರಿರಿದಿರಲಿಲ್ಲ. ಅಂಥವನು ತನ್ನ ಬದುಕಿನ ತ್ರಯೋದಶ ವರ್ಷದಲ್ಲಿ ದೇವಮಾನವನೆಂದು ಪರಿಗಣಿಸಲ್ಪಟ್ಟ ಎಂದರೆ ನಂಬುವುದಾದರೂ ಹೇಗೆ?… ಅವನ ಮಾತುಗಳಲ್ಲಿ ಸತ್ಯಾಂಶ ಇಲ್ಲದಿಲ್ಲ. ಕುತೋಹಲಕಾರಕ ಸಂದಿಗ್ಧತೆಯನ್ನು ಎದುರಿಸಿರುವ ಶಾಮನನ್ನು ಅಭಿನಂದಿಸಬೇಕಾದ್ದೇ! ಸ್ಥಾವರವಾದ ಶಿಲೆಗಳೂ ಮನುಶ್ಯ ಸಾಮೀಪ್ಯದಲ್ಲಿ ಕ್ರಮೇಣ ಜೀವಂತವಾಗಿ ಸ್ಪಂದಿಸದೆ ಇರಲಾರವು ಎಂಬಂಥ ಒಂದು ಮಾತನ್ನು ವಾಲ್ಮೀಕಿ ಮಂಥರೆಯ ಬಾಯಿಯಿಂದ ಕೈಕೆಗೆ ಹೇಳಿಸುತ್ತಾನೆ… ರಾಖೇಶನ ಸಾಮೀಪ್ಯವೇ ಶಾಮಣ್ಣನ ಬದುಕಿನ ಪತನ ಹಾಡಿತು. ರಾಖೇಶನ ವ್ಯಕ್ತಿತ್ವದ ಕ್ಷುದ್ರತೆ ಕ್ರಮೇಣ ಶಾಮಣ್ಣನ ವ್ಯಕ್ತಿತ್ವವನ್ನು ಪ್ರವೇಶಿಸಿತು. ಏಕಮೇವ ಅದ್ವಿತೀಯಂ ಬ್ರಹ್ಮ ತತ್ವಕ್ಕೆ ಸಮೀಪದಲ್ಲಿದ್ದ ಶಾಮ, ರಾಖೇಶನ ಗೆಳೆತನದಿಂದಾಗಿ ಋಣಂ ಕೃತ್ವಾಘೃತಂ ಪಿಬೇತ್ ಎಂಬ ಪಾತಳಿಗೆ ಜಾರಿಬಿಟ್ಟ. ಕಿಣ್ವ ಎಂಬ ಬೀಜಗಳ ಸಾಯುಜ್ಯದಿಂದ ಎಂಥ ಪವಿತ್ರೋದಕವೂ ಸಾರಾಯಿಯಾಗಿ ಬಿಡುವುದೋ ಹಾಗೆಯೇ ರಾಖೇಶನ ಸಂಸರ್ಗದಿಂದ ಶಾಮ ಸಾರ್ವಜನಿಕ ಪಿಕದಾನಿಯಲ್ಲಿ ತಾಂಬೂಲದ ಉಂಡೆಯಾಗಿ ಬಿಟ್ಟ. +ಯಾಕಿಷ್ಟು ದುರ್ಬಲಗೊಂಡ ನಮ್ಮ ಶಾಮ! ಅವನು ಸಮಾಜದ ಯಾವ ನಂಬಿಕೆಗಳಿಗೂ ಬೆಲೆಕೊಡಲಿಲ್ಲ. ಪ್ರತಿಕ್ಷಣ ಪತನಗೊಳ್ಳುತ್ತಲೇ ಹೋದ ಬೇವಕೂಫ… ಅವನ್ಯಾಕೆ ಕೊಟ್ಟೂರಿಗೆ ಹೋಗಿ ತನ್ನ ಮನೆ ಬಾಗಿಲು ತಟ್ಟಬೇಕಿತ್ತು! ತನ್ನ ದೈನ್ಯಾವಸ್ಥೆಯನ್ನು ವೈಭವೀಕರಿಸಲೆಂದು ತಾನೆ! ಹೆತ್ತ ಹೊಟ್ಟೆಯೊಳಗೆ, ಅರ್ಧಾಂಗಿನಿಯ ದೇಹದೊಳಗೆ, ಮಕ್ಕಳ ಮಮತೆಯೊಳಗೆ ಕಿಚ್ಚು ಹಚ್ಚಲೆಂದು ತಾನೆ! ನೋಡ್ರೆ ನಿನ್ನ ಮಗ, ನಿನ್ನ ಗಂಡ, ನಿನ್ನ ಮಕ್ಕಳ ತಂದೆಯಾದ ನಾನು ಹೇಗಿದೀನಿ! ಎಂದು ತೋರಿಸುವುದರ ಮೂಲಕ ಜೋಬದ್ರ ಚಹರೆಯನ್ನು ಆಚಂದ್ರಾರ್ಕವಾಗಿ ಪ್ರತಿಷ್ಠಾಪಿಸಲೆಂದು ತಾನೆ! ಬದುಕಿರುವವರು ಸಾಯುವ ಕ್ಷಣದವರೆಗೆ ನರಳಿ ನರಳಿ ಸಾಯಬೇಕು… ಇಂಥವರು ತಾವು ಸ್ಥಿತಪ್ರಜ್ಞ, ನಿರ್ಮೋಹಿ ಎಂದು ಹೇಲಿಕೊಳ್ಳುವುದೂ ಒಂದೆ, ಕತ್ತೆ ಕಾಯುವುದೂ ಒಂದೆ; ಎಂಥ ಕೆಲಸ ಮಾಡಿದೆಯೋ ಪುಣ್ಯಾತ್ಮ ಎಂದು ಪ್ರತಿಕ್ರಿಯಿಸುವುದೂ ಕಷ್ಟ; ಅದಕ್ಕೂ ಲಂಗುಲಗಾಮಿಲ್ಲದ ವ್ಯಾಖ್ಯಾನ ಮಾಡಿ ಬಾಯಿಮುಚ್ಚಿಸಿ ಬಿಡುತ್ತಾನೆ… ಅಥವಾ ಬರಹಕ್ಕೆ ಕಲ್ಲು ಹಾಕುತ್ತಾನೆ… ಯಾಕಿದ್ದೀತು ಅಂತ ಸುಮ್ಮನೆ ಇದ್ದು ಬಿಟ್ಟೆ. +ನನ್ನ ಮುಖವನ್ನು ಅವನೂ, ಅವನ ಮುಖವನ್ನು ನಾನೂ ಮಿಕ ಮಿಕ ನೋಡುತ್ತ ಕಾಲ ಕಳೆದೆವು. ಬತ್ತಿಯೊಳಗಿನ ತೈಲವನ್ನೇ ಇಂಧನವಾಗಿ ಬಳಸಿಕೊಂಡು ಮಿಣಕೂ, ಮಿಣಕೂ ಅಂಥ ಕ್ಷೀಣವಾಗಿ ಉರಿಯುವ ಹಣತೆಯಂತಾಗಿ ಬಿಟ್ಟಿದ್ದ. ಒಂದು ಸಾಲು ಹೇಳುವಷ್ಟು ಕಸುವೂ ತನ್ನಲ್ಲಿ‌ಉಳಿದಿಲ್ಲ ಎಂದು ಬೆನ್ನು ಮಾಡಿಬಿಟ್ಟರೆ ಏನು ಮಾಡುವುದೆಂಬ ಚಿಂತೆ ಆವರಿಸಿತು. +ಕೊಟ್ಟೂರಿಂದ ಮರಳಿ ಬಂದಮೇಲೆ ನಾಯಿಗೆರೆ ಕಾಲಿನ ರಾಖೇಶನ ಕೈಗೆ ಸಿಕ್ಕನೇ? +ತಹಶೀಲ್ದಾರ ಉಪ್ಪಲದಿನ್ನಿಹೊತ್ತಿರುವ ಹರಕೆಸಲುವಾಗಿಯಾದರೂ ಬೇಗನೆ ಸಾಯಬೇಕೆಂದು ನಿರ್ದರಿಸಿದನೆ! +ಅವನು ಸಾಯುವ ದಿಸೆಯಲ್ಲಿ ಮಾಡಿದ ಪ್ರಯತ್ನಗಳಾವುವು? +ಅವನನ್ನು ಉಳಿಸಿಕೊಳ್ಳಲು ಅನಸೂಯಾ ಮಾಡಿದ ಪ್ರಯತ್ನಗಳಾವುವು? +ಹೀಗೆ ಅಣಬೆಯಂತೆ ಹುಟ್ಟಿಕೊಳ್ಳುವ ಸಮಸ್ಯೆಗಳಿಗೆ ಉತ್ತರಿಸಿ ಮುಂದೆ ಹೆಜ್ಜೆ ಇಡು ಎಂದು ಓದುಗರು ನನ್ನ ಕೊರಳುಪಟ್ಟಿ ಹಿಡಿದು ಜಗ್ಗಿದರೆ ನಾನೇನು ಹೇಳುವುದು! +“ಶಾಮಾ…” ಅಂದೆ, ಮುಂದೇನೋ ಹೇಳಬೇಕೆಂದಿದ್ದೆ. ಆದರೆ ಮಾತುಗಳು ಹೊರಡಲಿಲ್ಲ. +ಅವನು ನನ್ನ ಮನದಾಳದ ಇಂಗಿತವನ್ನು; ತುಮುಲವನ್ನು ಅರ್ಥ ಮಾಡಿಕೊಂಡಂತೆ ಕಂಡಿತು. +“ಕುಂವೀ… ಯಾಕೋ ನನ್ನಿಂದ ಮುಂದಿನದನ್ನು ಹೇಳ್ಲಿಕ್ಕೆ ಆಗ್ತಿಲ್ಲ ಕಣೋ! ಆ ದಿನಗಳೆಲ್ಲ ಮಂಜೊಳಗೆ ಮರೆಯಾಗಿ ಬಿಟ್ಟಿವೆ… ಬಿಳಿ ತೆರೆಸರಿಸಿ ನೋಡಲಿಕ್ಕಾಗ್ತಿಲ್ಲ. ಆಕಡೆ ಪ್ರವೇಶಿಸಲಿಕ್ಕೆ ಆಗ್ತಾ ಇಲ್ಲ… ನೀನೆ ನಿನಗೆ ತೋಚಿದ ಹಾಗೆ ಬರೆದು ಮುಗಿಸಿಬಿಡು. ನೀನು ಏನೆ ಬರೆದ್ರೂ… ಅದ್ಕೆ ನನ್ನ ಅಭ್ಯಂತರವಿಲ್ಲಪ್ಪಾ… ದಯವಿಟ್ಟು ಒತ್ತಾಯಿಸಬೇಡ…” ಎಂದು ಮೊದಮೊದಲು ಹಿಂದೇಟು ಹಾಕಿದ್ದ ಶಾಮಣ್ಣ ತನ್ನ ಪರ್ಯವಸಾನವನ್ನು ಸಂಕ್ಷಿಪ್ತವಾಗಿ ಹೇಳಲು ಕೊನೆಗೂ ಒಪ್ಪಿಕೊಂಡ… +ಎಷ್ಟೋ ಸಂಗತಿಗಳನ್ನು ಮರೆಮಾಚಿದ್ದ ಶಾಮಣ್ಣ ಮುಂದಿನ ಪರಮನಿರ್ವಾಣ ಪ್ರಹಸನದಲ್ಲಿ ಮತ್ತೆಷ್ಟು ಸಂಗತಿಗಳನ್ನು ಮರೆಮಾಚಲಿರುವನೋ… ಅವನು ಹೇಳೊದನ್ನಷ್ಟೆ ಬರೆದು ಕೊಂಡರಾಯಿತು. ಇದರಲ್ಲಿ ನನ್ನ ಗಂಟೇನು ಹೋಗುವುದು!. +* +* +* +ಹೌದು ಕಣಪ್ಪಾ… ನೀನು ಹೇಳ್ತಿರೋದು ನಿಜ. ನನ್ನ ಗೈರು ಹಾಜರಿಯಲ್ಲಿ ರಾಖೇಶನಿಗೆ ಹುಚ್ಚೇ ಹಿಡಿದುಬಿಟ್ಟಿತ್ತು ನೋಡು. ನನ್ನ ಬಗ್ಗೆ ಭ್ರಮೆಗಳನ್ನು ಸೃಷ್ಟಿಸಿ ಜನರನ್ನು ಬಾನಾಮತಿ ಅಂತಾರಲ್ಲ… ಅಂಥದೊಂದು ಮಂಪರಿನಲ್ಲಿಟ್ಟು ತಾನೋರ್ವ ಪಾಖಂಡೀ ಪ್ರಪಂಚದ ವಾರಸುದಾರ ಎಂದೇ ತಿಳಿದುಕೊಂಡಿದ್ದ. ಅವನ ಕಣ್ಣಿಗೆ ಬಿದ್ದರೆ ಉಪ್ಪಲದಿನ್ನಿಯ ಆಶಯ ನೆರವೇರುವುದಿಲ್ಲವೆಂದು ಭಾವಿಸಿದೆ. ಕೊತ್ತಲಗಿ ಗ್ರಾಮದ ಗತಿಸಿದ ಹಿರಿಯರ ಆತ್ಮಗಳೊಂದಿಗೆ ಮಾತಾಡಲು ನಾನು ನನ್ನ ದೇಹ ಸಹಿತ ನರಕ ಸ್ವರ್ಗ ಸುತ್ತು ಹಾಕಿಕೊಂಡು ಬರಲು ಹೋಗಿರುವುದಾಗಿ ಸುದ್ದಿ ಹಬ್ಬಿಸಿದ್ದ. ನಾನೇನಾದರೂ ಅವನ ಮಾತು ಕಟ್ಟಿಕೊಂಡು ತಲೆಯ ಮತ್ತು ಮುಖದ ಕೂದಲುಗಳನ್ನು ಬೋಳಿಸಿಕೊಂಡಿದ್ದರೆ ದೊದ್ದದೊಂದು ಅಚಾತುರ್ಯ ಸಂಭವಿಸುತಿತ್ತು. ನನ್ನ ಕೂದಲುಗಳುಳ್ಳ ಸಾವಿರಾರು ತಾಯಿತಗಳನ್ನು ನಿರ್ಮಿಸಿ ಸಂತೆಗಳಲ್ಲಿ ಜಾತ್ರೆಗಳಲ್ಲಿ ವಿಘ್ನನಿವಾರಕ ಯಂತ್ರಗಳೆಂದು ಕೂಗಿ ಮಾರಿ ಸಾವಿರಾರು ರುಪಾಯಿ ಸಂಗ್ರಹಿಸಲು ಹಿಂಜರಿಯದವನಾಗಿದ್ದ. ಆದ್ದರಿಂದ ನಾನು ಬಸ್ಸಿನಿಂದ ಇಳಿದಾಕ್ಷಣ ನಿರ್ಮಾನುಷ ಜಾಗ ಕುರಿತು ಯೋಚಿಸಿದೆ. ಸದರೀ ಗ್ರಾಮದ ಮಸಣವೇ ಅಂಥದೊಂದು ನಿರ್ಮಾನುಷ ಸ್ಥಳವೆಂದು ಹೊಳೆಯಿತು. ತೊಟ್ಟಿದ್ದ ಸಪ್ತವರ್ಣದ ಲುಂಗಿಯನ್ನೇ ತಲೆತುಂಬ ಹೊದ್ದುಕೊಂಡು ಕಳ್ಳಹಾದಿ ಗುಂಟ ಸುರಸುಂದರವಾದ ಮಸಣವನು ತಲುಪಿದೆನು. ದೈತಾದ್ವೈತ ವಿಶಿಷ್ತಾದ್ವೈತಗಳೆಲ್ಲವೂ ಮುಪ್ಪರಿಗೊಂಡು ನಿರ್ಮಿತವಾದಂತಿರುವ ರುದ್ರಭೂಮಿಯದು. ನರಪಾಲ, ಭೂಪಾಲರಿಗೆ ಶವದ ಶಿರದಕ್ಕಿಯನ್ನು ತಿನ್ನಿಸಿ ಅವರನ್ನು ಲೋಕೋತ್ತರ ನಾಯಕರನ್ನಾಗಿ ಮಾಡಿದಂಥ ರುದ್ರಭೂಮಿ ಇದು. ವಿವಿಧಾಕಾರದ ಸುಂದರ ಸಮಾಧಿಗಳಡಿ ನೆಮ್ಮದಿಯಿಂದ ಮಲಗಿ ನಿದ್ದೆ ಹೋಗಿರುವವರಿಗೆ ಅರಿಷಡ್ವರ್ಗಗಳ ಕಾಟವಿಲ್ಲ. ಇಂಥ ಸೌಖ್ಯಪೂರ್ಣ ವಿಷಾದದ ತವರೆನಿಸಿರುವ ಈ ಸದರೀ ಜಾಗವೇ ತಲೆ ಮರೆಸಿಕೊಳ್ಳಲು ಸೂಕ್ತವೆಂದು ಬಗೆದೆ. ಎದುರಾಳಿಯ ನಾಡಿ ಹಿಡಿದು ದೌರ್ಬಲ್ಯ ಗುರುತಿಸಿ ಅದನ್ನೇ ಮೂಲ ಬಂಡವಾಳವನ್ನಾಗಿ; ಗಾಳವನ್ನಾಗಿ ಮಾಡಿಕೊಂಡು… ನಿರಂತರವಾಗಿ ಆಟ ಆಡಿಸಿ ವೈಯಕ್ತಿಕ ಬದುಕನ್ನು ಹಸನು ಮಾಡಿಕೊಂಡು ಉತ್ತರಾಯಣ ಪರ್ವಕಾಲದಲ್ಲಿ ಸತ್ತ ವೆಂಕಟಗಿರಿ ರೆದ್ದಿಯವರ ಸಮಾಧಿ ರಾಜನಂತಿತ್ತು. ಕೈಬೀಸಿ ಕರೆಯಿತು.. ಹೋಗಿ ಅದರ ಮೇಲೆ ಉದ್ದೋಕ ಮೈಚಲ್ಲಿ ಮಲಗಿಕೊಂಡೆ. +ನಾನು ಅಲ್ಲಿ ಹಾಗೆ ಸುಖ ನಿದ್ರೆ ಸವಿಯುತ್ತಿರುವುದನ್ನು ರಾಖೇಶ ತನ್ನ ಖಾಸಗೀ ಪತ್ತೆದಾರರ ಮೂಲಕ ಹೇಗೋ ತಿಳಿದುಕೊಂಡ. ಅವನೆಂಥ ವ್ಯಾವಹಾ‌ಇಕ ನಿಪುಣನೆಂದರೆ ಅವನು ಸರ ಸರ ಹೆಜ್ಜೆ ಹಾಕುತ್ತ ನಡೆದದ್ದು ಎರಡನೇ ವಾರ್ಡಿನಲ್ಲಿರುವ ಇಪ್ಪತ್ತೆಂಟನೆ ಸಂಖ್ಯೆಯ ‘ಅನುಗ್ರಹ’ ಎಂಬ ಹೆಸರಿನ ಮನೆಗೆ (ಎರಡನೇ ವಾರ್ಡ್ ಎಂದರೆ ಬೆಂಗಳೂರಿನ ಡಾಲರ್ಸ್ ಕಾಲನಿ ಇದ್ದಂತೆ) ಹೋದ. ಅಲ್ಲಿ ದಿ.ವೆಂ.ಗಿ. ರೆಡ್ಡಿಯ ಹೆಂಡತಿ, ಮಕ್ಕಳು ಸೊಸೆಯಂದಿರನ್ನೆಲ್ಲ ಕರೆದು ‘ಶಾಮಣ್ತಾತೋರು ನಿಮ್ ಯಜಮಾನ್ರೊಂದಿಗೆ ಗುಟ್ಟಾಗಿ ಮಾತಾಡಿ ವಿಷಯ ಸಂಗ್ರಹಿಸುತ್ತಿರುರೆಂದು ಹೇಳಿ ಆತಂಕ ಹೆಚ್ಚಿಸಿದ. ದಿ.ವೆಂ.ಗಿ. ರೆಡ್ಡಿಯವರು ಜಾರಿಗೊಳಿಸಿದ್ದ ನೀತಿ ಸಂಹಿತೆಯನ್ನು ಆತನ ಕುಟುಂಬ ಸದಸ್ಯರು ಧೂಳೀಪಟ ಮಾಡಿದ್ದರು. ಅದೂ ಅಲ್ಲದೆ ಗಂಗಾಜಲ ಹಾಕಿದ ಎಷ್ಟೋ ಹೊತ್ತಿಗೆ ಅವರು ಪ್ರಾಣಬಿಟ್ಟಿದ್ದು. ಬಾಯಿಗೆ, ಕೈ ಕಾಲುಗಳಿಗೆ ಲಕ್ವ ಹೊಡೆದಿದ್ದರಿಂದ ಅವರು ಎಷ್ಟೋ ವಿಷಯಗಳನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ ಪ್ರಾಣ ಬಿಟ್ಟಿದ್ದರು. ಅವುಗಳನ್ನು ಅವರು ಈಗಾಗಲೇ ಪವಿತ್ರ ಜೀವವಾದ ಶಾಮಣ್ತಾತಗೆ ಹೇಳಿರಬಹುದೆಂದು ಬಗೆದರು. ಅಲ್ಲದೆ ದೂರದ ಅಲಹಾಬಾದಿನಿಂದ ಸಕಾಲಕ್ಕೆ ಬಂದು ತಂದೆಯವರ ಬಾಯಿಗೆ ಎರಡು ಚಮಚ ಗಂಗಾಜಲವನ್ನು ಹಾಕುವುದರಿಂದ ವಂಚಿತಳಾಗಿದ್ದ ಸುಲೋಚನಾಳಂತೂ ಅಂತೂ ಈ ಮೂಲಕ ನೀರು ಬಿಡುವುದು ಸಾಧ್ಯವಾದರೆ ಎಂದು ಪುಲಕಿತಳಾದಳು… ಅವರದೇ ಆದ ಗುಂಪು ಕಟ್ಟಿಕೊಂಡು ರಾಖೇಶ ಮಸಣ ತಲುಪಿದನು. ಕಳೆದ ವಾರವಷ್ಟೆ ನೀಟಾಗಿ ಕಟ್ಟಿಸಿರುವ ಸಮಾಧಿಯನ್ನು ಗುರುತಿಸುವುದು ಅವರಿಗೆ ಕಷ್ತವಾಗಲಿಲ್ಲ. ಅದರ ಮೇಲೆ ಗ್ರಾನೈಟ್ ಶಿಲಾಫಲಕದಲ್ಲಿ ರೆಡ್ಡಿಯವರ ಜನನ ಮರಣದ ವಿವರಗಳಿದ್ದು ಅವರ ದಾರಿ ತೋರಿದವು. +ನಾನು ಶತಮಾನದ ನಿದ್ದೆಯನ್ನೇ ಯೋಗ ಮಾಡಿಕೊಂಡು ಹೊಡೆಯುತ್ತಿದ್ದ ಗೊರಕೆಯನ್ನೆ ಅವರು ಶವದೊಂದಿಗೆ ಸಂವಾದಿಸುತ್ತಿರುವ ಸಾಂಕೇತಿಕ ಭಾಷೆ ಎಂದು ಪರಿಗಣಿಸಿದರು. ಅವರು ನಮಸ್ಕರಿಸಿದ್ದಾಗಲೀ, ದೂರ ನಿಂತು ಗಮನಿಸುತ್ತಿದ್ದುದಾಗಲೀ ನನ್ನ ಗಮನಕ್ಕೆ ಬರಲಿಲ್ಲ. ಕೊನೆಗೆ ರೋಸಿ ರಾಖೇಹನೇ ದಪದಪ ಬೆನ್ನಿಗೆ ಬಡಿದು ಎಚ್ಚರಿಸಿದ. ಎದ್ದು ಕಣ್ಣುಬಿಟ್ಟು ಅವರನ್ನೆಲ್ಲ ನೋಡಿ ನನಗೆ ಏನ್ರಪ್ಪಾ… ಯಾಕ್ರಪ್ಪಾ ಎಂಬಂತೆ ಅವರ ಕಡೆ ನೋಡಿದೆ. +“ನಮ್ಮಪ್ಪ ಏನು ಹೇಳ್ದ ತಾತಾ” ಎಂದು ಮಕ್ಕಳೂ +“ನನ್ನ ಗಂಡ ಏನು ಹೇಳ್ದ ತಾತಾ” ಎಂದು ಹೆಂಡತಿಯೂ, +“ನಮ್ಮ ಮಾವ ಏನು ಹೇಳ್ದ ತಾತಾ” ಎಂದು ಸೊಸೆಯಂದಿರೂ, +“ನಮ್ಮ ಅಜ್ಜ ಏನು ಹೇಳ್ದ ತಾತಾ” ಎಂದು ಮೊಮ್ಮಕ್ಕಳು… +ಅವರ ಮಾತುಕಥೆಯೊಂದೂ ನನಗೆ ಅರ್ಥವಾಗಲಿಲ್ಲ… ಅವರ ಯಾವ ಪ್ರಯತ್ನಕ್ಕೂ ನಾನು ಮೌನದ ಸಮಾಧಿಯಿಂದ ಎದ್ದು ಬರಲಿಲ್ಲ… ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲವಲ್ಲ ಎಂಬ ಖೇದದಿಂದ ರಾಖೇಶ ಎಲ್ಲರಿಗಿಂತ ಮುಂದೆ ಜಿಗಿದು ನಿಂತು – +“ಲೇ ಶಾಸ್ತ್ರೀ… ನಿನೆ ಬಡಿವಾರಾನ ನನ್ ಹತ್ರ ತೋರಿಸಬ್ಯಾಡ… ಮರ್ಯಾದೆಯಿಂದ ಸಾಹ್ಕಾರ್ರು ನಿನ್ನತ್ರ ಏನೇನು ಹೇಳಿದ್ರು ಅಂತ ಹೇಳಿಬಿಡು. ಇಲ್ಲಾಂದ್ರ ನಾನು ಸುಮ್ಕಿರೋಲ್ಲ್…” ಎಂದು ಹತಾಶೆಯಿಂದ ಕೂಗಾಡ ತೊಡಗಿದ… ಅದೇ ಹೊತ್ತಿಗೆ ಆ ಕಡೆಯಿಂದ ಕೆಲವರು ಬಂದು “ಸತ್ತಿರೋ ನಮ್ಮವರತ್ರಾನು ಮಾತಾಡಿ ಪುಣ್ಯಕಟ್ಕೋ ತಾತ” ಎಂದು ಮುಗಿ ಬಿದ್ದರು . ಅವರ ಅಂಥ ಒತ್ತಡಗಳಿಂದ ನಾನು ಒಂಚೂರೂ ವಿಚಲಿತನಾಗದೆ ಕೇವಲ ಪಿಳಿಪಿಳಿಕಣ್ಣು ಬಿಟ್ಟು ನೋಡುತ್ತಿದ್ದೆನು. ಆ ಸಮಯಕ್ಕೆ ಸರಿಯಾಗಿ ಉಪ್ಪಲದಿನ್ನಿ ಒಂದು ಕಾಲು ಹಿಡಿದುಕೊಂಡು “ಒಳ್ಳೆ ಅಮೃತ ಶಿಲೆಗೆ ಆರ್ಡರ್ ಕೊಟ್ಟಿದ್ದೀನಿ… ತಾತ… ನಾಡಿದ್ದು ಗುಡ್ಸಿಗೆ ಬರಬೌದು…” ಎಂದು ಏನೇನೋ ಬಡಬಡಿಸ ತೊಡಗಿದನು. +ಆತ್ಮನ್ನ್ಯೆವರ್ತನಾ ತುಷ್ಯಃ ಸ್ಥಿತ ಪ್ರಜ್ಞಸ್ತದೋಚ್ಯತೇ… ಎಂಬಂಥ ಸ್ತಿಥ ಪ್ರಜ್ಞಸ್ಥ ಸ್ಥಿತಿ ತಲುಪಿದ್ದ ನನ್ನ ಮೌನ ಭೇದಿಸಲು ಅವರು ನಿರಂತರ ಪ್ರಯತ್ನ ಮಾಡತೊಡಗಿದರು. ಅದಕ್ಕೆ ಸರಿಯಾಗಿ ನನ್ನಲ್ಲಿ ವಾಸನೆ ಎಂಬುದು ಕ್ಷಯಿಸಲ್ಪಟ್ಟಿತ್ತು. ಮನೋನಾಕವಾಗಿತ್ತು. ಐಂದ್ರಿಕ ವಾಂಛೆಗಳನ್ನೆಲ್ಲ ನಾಯಿ ಗದುಮುವಂತೆ ಗದುಮಿ ಓಡಿಸಿಬಿಟ್ಟಿದ್ದೆ. ನಾನು ಸತ್ತಿರುವೆನೋ, ಬದುಕಿರುವೆನೋ ಎಂದು ಯೋಚಿಸುತ್ತ ಅವರೆಲ್ಲರು ಗೊಂದಲಕ್ಕೆ ಬಿದ್ದರು. ನನ್ನ ಮೌನ ಅವರಿಗೆ ಅರ್ಥವಾಗದ ಕಗ್ಗಂಟಾಗಿತ್ತು. ಶ್ರವಣೇಂದ್ರಿಯದಿಂದ ಎಲ್ಲ ತಂತುಗಳು ಲಾಕ್‌ಔಟ್ ಘೋಷಿಸಿದ್ದುದರಿಂದ ಅವರ ಯಾವ ಮಾತುಗಳೂ ನನಗೆ ತಲುಪುತ್ತಿರಲಿಲ್ಲ… ಅವರ ರೂಪಗಳು ಅರ್ಧ ದಾರಿಗೆ ಬಂದು ಅಂತರ್ಧಾನವಾಗುತ್ತಿದ್ದವು… ಬದುಕಿರುವ ಲಕ್ಷಣಗಳಾಗಲೀ, ಸತ್ತಿರುವ ಲಕ್ಷಣಗಳಾಗಲೀ ನನ್ನ ದೇಹದಿಂದ ಪ್ರಕಟವಾಗುತ್ತಿರಲಿಲ್ಲ. +ವರ್ತಮಾನ ಡೋಲಾಯಮಾನಗೊಂಡಿದ್ದಂಥ ಸಂದರ್ಭದಲ್ಲಿ ಅನಸೂಯಾ… ಶಾಮಾ… ನನ್ನ ಶಾಮ… ಎಂದು ಅಬ್ಬರಿಸುತ್ತ ಬಂದಳು. ಅವರೋಧಕ, ನಿರೋಧಕ, ಪ್ರತಿರೋದಕಗಳೊಂದೂ ಇಲ್ಲದೆ ಕೂತಿದ್ದ ನನ್ನನ್ನು ತಬ್ಬಿಕೊಂಡಳು. ಇದ್ದಕ್ಕಿದ್ದಂತೆ ಆಕೆಯ ಮೈಯಲ್ಲಿ ಅದಾವ ಶಕ್ತಿ ತುಂಬಿಕೊಂಡಿತೋ… ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡು ರಾಖೇಶನ ಜುಟ್ಟು ಹಿಡಿದು “ಲೋ ಭಾಡ್ಕಾವ್… ಸಾಡೇ ಸಾತ್ ಸಣಿಹಂಗ ನಂ ಶಾಮನ ಜೀವ ತಿಂಬ್ತಿದೀಯಲ್ಲೋ” ಎಂದು ರಪ್ಪರಪ್ಪ ಭಾರಿಸತೊಡಗಿದಳು… ತಾನು ತಾಶೀಲ್ದಾರ ಎಂಬ ಅಹಮ್ಮಿನಿಂದ ನಿಂತಿದ್ದ ಉಪ್ಪಲ ದಿನ್ನಿಯನ್ನೂ ಬಾರಿಸದೆ ಬಿಡಲಿಲ್ಲ. ಅವರೆಲ್ಲ ಈ ಪ್ರಕಾರವಾಗಿ ಅಂಡಾರವ ಆದಮೇಲೆ ಆಕೆ ನನ್ನನ್ನು ತಾಯಿಯಂತೆ ಎತ್ತಿಕೊಂಡು ಮನೆಗೆ ಒಯ್ದಳು. +ಆಕೆ ನನಗೆ ಸ್ನಾನ ಮಾಡಿಸಿದ್ದಾಗಲೀ ಮಡಿ ಉಡುಪು ಉಡಿಸಿದಾಗಲೀ, ಗೋದಿಗಂಜಿ ಕುಡಿಸಿದ್ದಾಗಲೀ, ಮಂಚದಮೇಲೆ ಮಲಗಿಸಿದ್ದಾಗಲೀನನಗೆ ನೆನಪಿರುವುದೆಂದರೆ ಇರುವುದು ಇಲ್ಲವೆಂದರೆ ಇಲ್ಲ… ಒಂದು ವಸ್ತುವಿಗಿರಬೇಕಾದ ಪ್ರತ್ಯೇಕ ಗುಣಗಳೆಲ್ಲವನ್ನು ಕಳೆದುಕೊಂಡಿದ್ದ ನನಗೆ ಅವೆಲ್ಲ ನೆನಪಿರುವುದು ಹೇಗೆ ಸಾಧ್ಯ? ನಿರ್ವಾಣೊನ್ಮುಖ ಸ್ಥಿತಿಯಲ್ಲಿದ್ದೂ ಅನಿರ್ವಚನೀಯ ಆನಂದ ಮತ್ತು ಸ್ಥಿತಿಯನ್ನು ಅನುಭವಿಸುತ್ತಿದ್ದ ನನಗೆ ಅವೆಲ್ಲ ನೆನಪಿಲ್ಲದೆ ಇರುವುದು ಹೇಗೆ ಸಾಧ್ಯ? ಗ್ರಹಣ ಮತ್ತು ನಿಗ್ರಹಣ ಸ್ಥಿತಿಯ ದ್ವಂದ್ವಗಳನ್ನು ಮಾತಿನ ಮೂಲಕ ಹೇಳುವುದು ನಿರ್ವಾಣ ಸ್ಥಿತಿಗೆ ಅವಮಾನ ಮಾಡಿದಂತೆಯೇ ಎಂದು ನನ್ನ ಅನಿಸಿಕೆ… ರಕ್ತ, ಶುಕ್ಲ, ಕೃಷ್ಣವರ್ಣಗಳ, ಜಗತ್ತಿನ ನಾಮರೂಪ?ಅಳು ಪ್ರಕೃತಿ, ಪುರುಷ, ವಿವೇಕಗಳ, ಪ್ರಶ್ನೋಪನಿಷತ್ತಿನಲ್ಲಿ ವರ್ಣಿಸಲ್ಪಟ್ಟ ಪುರುಷ ಸಂಬಂಧೀ ಹದಿನಾರು ಕಲೆಗಳ… ಎಲ್ಲವನ್ನೂ ಒಂದೊಂದಾಗಿ ತ್ಯಜಿಸುತ್ತ ಅರೋಹಣದ ಕೊನೆ ಮೆಟ್ಟಲಲ್ಲಿ ಪಾದ ಊರಿದ್ದ ನಾನು ಕೇಳುತ್ತಿದ್ದೆ ಆದರೆ ಕೇಳುತ್ತಿರಲಿಲ್ಲ. ನೋಡುತ್ತಿದ್ದೆ ಆದರೆ ನೋಡುತ್ತಿರಲಿಲ್ಲ, ಮಾತಾಡುತ್ತಿದ್ದೆ ಆದರೆ ಮಾತಾಡುತ್ತಿರಲಿಲ್ಲ. ಚಲುಸುತ್ತಿದ್ದೆ, ಆದರೆ ಚಲಿಸುತ್ತಿರಲಿಲ್ಲ… ಯಾಕೆಂದರೆ ನಾನು ನನ್ನ ದೇಹದಿಂದ ಎರಡು ಮಾರು ದೂರ ನಿಂತು ನನ್ನ ದೇಹ ಸಂಬಂಧೀ ವಿದ್ಯಮಾನಗಳನ್ನು ಕ್ಲುಪ್ತವಾಗಿ ಗಮನಿಸುತ್ತಿದ್ದೆ. ನಾನು ನನ್ನ ದೇಹದ ಆಂಗಿಕ ಚಲನೆಗಳಿಗೆ ಪೂರ್ಣ ವಿರಾಮ ಕೊಡುವ ಪ್ರಯತ್ನ ನಡೆಸತೊಡಗಿದೆ. ನನ್ನ ದೇಹ ನಿಶ್ಚಲವಾಗುವ ಪವಿತ್ರ ಮತ್ತು ಆನಂದ ದಾಯಕ ಕ್ಷಣದಲ್ಲಿ ಪಾಲ್ಗೊಂಡಿದ್ದವರು… ಅಬ್ಬಾ! ಎಷ್ಟೊಂದು ಮಂದಿ… ಎಷ್ಟೊಂದು ಐಶ್ವರ್ಯಾರ್ಥಿಗಳು? ಎಷ್ಟೊಂದು ಕೈವಲ್ಯಾರ್ಥಿಗಳು! ಅವರೆಲ್ಲರ ಮುಖಗಳಲ್ಲಿ ವಾತ್ಸಲ್ಯಾಸಕ್ತಿ! ಅವರೆಲ್ಲರ ಮುಖಗಳಲ್ಲಿ ಆತ್ಮ ನಿವೇದನಾಸಕ್ತಿ; ಅವರೆಲ್ಲರ ಮುಖಗಳಲ್ಲಿ ತನ್ಮಯತೆ! ಅವರೆಲ್ಲರು ಸ್ವರೂಪ, ನಿರೂಪಕ ಧರ್ಮಗಳ ಪ್ರತಿನಿಧಿಗಳು; ಅವರೆಲ್ಲರಲ್ಲಿ ನಿರೂಪಿತ ಸ್ವರೂಪ ವಿಷೇಶಣಗಳು. +ಅಬ್ಬಾ… ಅದೊಂದು ಅದ್ಭುತವಾದ ಅನುಭವ! ಒಂದೊಂದು ನೋಟಕ್ಕೆ ಒಂದೊಂದು ಥರ, ಒಂದೊಂದು ಕೋನದಿಂದ ಒಂದೊಂದು ಥರ ಕಾಣಿಸುತ್ತಿರುವ ನನ್ನ ದೇಹದಿಂದ ನನ್ನ ಹೇಗಪ್ಪ ಬೇರ್ಪಡಿಸುವುದೆಂಬ ಚಿಂತೆ ಕಾಡತೊಡಗಿತು. ಅಷ್ಟೊಂದು ಪಂಚೇಂದ್ರಿಯಗಳು! ಹೃದಯಗಳು ಮಿಡಿಯದಿದ್ದಲ್ಲಿ ನಾನು ನನ್ನ ದೇಹ ಕುರಿತು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರಾಣೋತ್ಕ್ರಮಣ ಸಂದರ್ಭದಲ್ಲಿಯೇ ಪ್ರತಿಯೊಬ್ಬರಿಗೂ ತಮ್ಮ ತಮ್ಮ ದೇಹಗಳ ಬಗ್ಗೆ ಮೋಹಪರವಶರಾಗುತ್ತಾರೆಂದು ನನ್ನ ಭಾವನೆ. ಪಂಚೇಂದ್ರಿಯಗಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿಯೇ ಪ್ರತಿಯೊಬ್ಬ ಅನುಭಾವಿಯಂತೆ, ಅವಧೂತನಂತೆ, ಪಾಪ ನಿವೇದಕನಂತೆ ಮಾತಾಡಲು ಶುರು ಮಾಡುತ್ತಾನೆಂದೇ ನನ್ನ ಭಾವನೆ. ಆ ಸಂದರ್ಭದಲ್ಲಿ ನನ್ನದೂ ಹಾಗೇ ಆಗಿತ್ತು. ಶ್ರೋತ್ರಿಗಳ ವಂಶದಲ್ಲಿ ಎಷ್ಟೊಂದು ಅದ್ಭುತವಾಗಿ ಜನಿಸಿದವನಾದ ನಾನು, ಪರಮಪೂಜ್ಯ ಕಂಚಿಕಾಮಕೋಟಿಶ್ರೀಗಳ ಅಮೃತಹಸ್ತದಿಂದ ಶಿಕ್ಷಣಕ್ಕೆ ಶ್ರೀಕಾರ ಹಾಕಿಸಿಕೊಂಡವನಾದ ನಾನು; ವೇದೋಪನಿಷತ್ತುಗಾ ಪೈಕಿ ಮುಖ್ಯವಾಗಿ ಪ್ರಶ್ನೋಪನಿಷತ್ತನ್ನು ಆಳವಾಗಿ ಅಭ್ಯಾಸ್ಸ ಮಾಡಿದವನಾದ ನಾನು, ಕುಟುಂಬದ ಉತ್ತಮ ಸದಸ್ಯನಾಗಬೇಕಿದ್ದ ನಾನು, ಒಂದೊಂದು ಕ್ಷಣ ಲಕ್ಷ್ಮಣ ರೇಖೆಗಳನ್ನು ಉಲ್ಲಂಘಿಸುತ್ತ ಬಂದವನಾದ ನಾನು; ಅನೇಕ ರೋಗಗಳಿಗೆ ದೇಹದಲ್ಲಿ ಆಶ್ರಯಕೊಟ್ಟವನಾದ ನಾನು; ಸಮಾಜದ ತಿರಸ್ಕಾರ, ಅವಹೇಳನಗಳಿಗೆ ಗುರಿಯಾದವ ನಾನು, ಸಮಾಜಿಕರಲ್ಲಿ ಕೆಲವು ಭ್ರಮೆಗಳನ್ನು ಸೃಷ್ಟಿಸಿದವನಾದ ನಾನು; ನನ್ನ ದೇಹದಿಂದ ಹೊರಬರಲು ಎಷ್ಟೊಂದು ಒದ್ದಾಡಿದೆ ಗೊತ್ತೆ? ಇಂತಿಷ್ಟು ವರ್ಶಾಂತ ವಾಸಿಸಲಿಕ್ಕೆ ಬಾಡಿಗೆ ಪಡೆದಿರುವ ದೇಹ ಎಂದೂ ಅದರೊಳಗೆ ವಾಸಿಸುವನ ಚರಾಸ್ತಿಯಾಗಲೀ ಸ್ಥಿರಾಸ್ತಿಯಾಗಲೀ ಆಗಲಾರದು, ಎರಡು ದೇಹಗಳ ತೀಟೆಯಿಂದಾಗಿ ಒಂದು ರೂಪದಲ್ಲಿ, ವಿನ್ಯಾಸ ಅರಳುವ ಬೆಳೆಯುವ ಅದು ಸ್ವಾಯಾರ್ಜಿತವೂ ಅಲ್ಲ… ಅದರ ಮಾಲಿಕ ಬಿಡು ಅಂದಾಗ ಬಿಡಬೇಕು… ಇಲ್ಲವೆ ಗಡುವು ಪಡೆದಾದರೂ ಬಿಡಬೇಕು ಅಷ್ಟೆ… ಇದರಲ್ಲಿ ಹೇಳುವುದಾಗಲೀ ಕೇಳುವುದಾಗಲೀ ಏನೂ ಇರುವುದಿಲ್ಲ… ಕೆಲವು ಮನೆಗಳಂತೂ ವಾಸಕ್ಕಿರುವ ಮೇಲೆ ದೊಪ್ಪನೆ ಬಿದ್ದು ಲೆಕ್ಕ ಚುಕ್ತಾಮಾಡಿಕೊಲ್ಲುತ್ತವೆ. ಅಂಥ ಮನೆಗಳ ಪೈಕಿ ನನ್ನ ದೇಹವೂ ಒಂದಾಗಿತ್ತು. ನನ್ನ ಕುತ್ತಿಗೆ ಹಿಡಿದು ತಳ್ಳಲು ಸಜ್ಜಾಗಿ ಅದಾಗಲೇ ಏದುಸಿರು ಬಿಡತೊಡಗಿತ್ತು. +ಡಾಕ್ಟರ್ ಸೋಮಣ್ಣ ಎರಡು ಗಳಿಗೆಗೊಮ್ಮೆ ನನ್ನ ದೇಹದ ಎದೆ ಮೆಲೆ ಸ್ಟೆತಾಸ್ಕೋಪು ಹರಿದಾಡಿಸುತ್ತಿದ್ದ; ಮುಂಗೈ ಹಿಡಿದು ನಾಡಿ ಬಡಿತ ಪರೀಕ್ಷಿಸುತ್ತಿದ್ದ, ಅನಸೂಯಾ ಒತ್ತಾಸೆಗೆ ಬಣ್ಣದ ಸೂಜಿ ಮಾಡುತ್ತಿದ್ದ… ನಾನು ಆಗೊಮ್ಮೆ, ಈಗೊಮ್ಮೆ, ಕೆಳಗಣ್ಣು, ಮೇಲ್ಗಣ್ಣು ಮಾಡಿ ಆತಂಕ ಹುಟ್ಟಿಸುತ್ತಿದ್ದೆ, ನನ್ನ ಬಾಯೊಳಗೆ ನಾಲಿಗೆ ಬಾಲ ಕಳೆದುಕೊಂಡಂತ ಹಲ್ಲಿಯಂತೆ ಹಿಂದಕೂ, ಮುಂದಕೂ ಮಿಸುಕಾಡಿಸುತ್ತಿತ್ತು. ತಲೆದಿಂಬಿಗೆ ಕೂತು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದ ಅನಸೂಯ ಚಮಚದಿಂದ ನೀರು ಹಾಕುತ್ತಿದ್ದಳು. ನೀರು ಅನ್ನನಾಳಕ್ಕೆ ಬಲು ಪ್ರಯಾಸ ಪಟ್ಟು ಹೋಗುವಾಗ ಗೊರಗೊರ ಸದ್ದು ಮಾಡುತ್ತಿತ್ತು. “ಅವ್ರು ಬಂದ್ರಾ… ಇನ್ನೂ ಬರ್‍ಲಿಲ್ಲಿಲ್ಲಾ ಶಿವ್ನೇ” ಎಂದು ಗೊಣಗುತ್ತ ಆಕೆ ಅಳುತ್ತಿದ್ದುದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಷ್ಟು ದೂರದಲ್ಲಿದ್ದ ಗುಂಪು ನನ್ನ ಶವ ಸಂಸ್ಕಾರ ಕುರಿತಂತೆ ಚರ್ಚಿಸುತ್ತಿತ್ತು… ನಾನು ಅವರೆಲ್ಲರ ನಿರೀಕ್ಷೆಯಂತೆ ಪ್ರಾಣೊತ್ಕ್ರಮಣ ಮಾಡದೆ ಸತಾಯಿಸುತ್ತಲೇ ಇದ್ದೆ. ರಾಖೇಶ ಎಲ್ಲಿಂದಲೋ ಬಂದವನೆ ಇನ್ನೂ ಪ್ರಾಣ ಬಿಟ್ಟಿಲ್ಲೇನು… ಹಿಂಗ್ಯಾಕ ಮಿಜಿ ಮಾಡ್ತಾನಂತೀನಿ” ಎಂದು ಒಂದೇ ಸಮನೆ ರೇಗಾಡತೊಡಗಿದ! ‘ಅದೂ ಕಾಲ ಕೂಡಿ ಬರ್ಬೇಕಪ್ಪ… ಸಾಯೋದಂದ್ರೆ ಅದೇನು ಕಡ್ಲೇನ ಬಾಯ್ಗೆ ಹೊಕ್ಕೊಂಡಂಗೇನು!’ ಎಂದೊಬ್ಬರೂ “ಹಾಗಂದ್ರೆಂಗಪ್ಪಾ… ಮೂರ್‍ನಾಕು ದಿನಾದ್ವು… ಬಾಯಾಗೊಂದ್ಕಾಳು ನೀರಾಕ್ಕೊಂಡಿಲ್ಲ… ವದಕನ ಹಂಗ ಬಿದ್ದವೆ…” ಎಂದು ಇನ್ನೊಬ್ಬರೂ; “ಈತ್ನೇನು ನಂ ನಿಮ್ಮಂಗೆ ದಡ್ಮೂಳಲ್ಲ… ವೇದಾಗೀದಾ ಓದ್ಕೊಂಡಾತ… ಯಾವಾಗ ಪಿರಾಣ ಬಿಡ್ಬೇಕು… ಯಾವಾಗ ಬಿಡಬಾರ್ದೂಂತ ಗೊತ್ತು. ಅದ್ಕ ಆ ವ್ಯಾಳ್ಳೇಕ್ಕ ಕಾಯ್ತಿಂದ್ದಂಗದಾನ…” ಎಂದು ಮಗದೊಬ್ಬರು ಮಾತಾಡಿಕೊಳ್ಳುತ್ತಿರುವುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೊನೆ ಉಸಿರು ಬಿಡದಂತೆ ನಾನು ಬಿಗಿ ಹಿಡಿದುಕೊಂಡಿದ್ದರೂ ಪಂಚರಂಧ್ರಗಳು ಒಂದೊಂದಾಗಿ ಮುಚ್ಚಿಕೊಳ್ಳತೊಡಗಿದ್ದವು… ಪಂಚ ಪ್ರಾಣಗಳ ಪೈಕಿ ಮುಕ್ಕಾಲುವಾಸಿ ಒಂದೊಂದು ರಂಧ್ರದ ಮೂಲಕ ಹೊರ ಹೋಗಿಯಾಗಿತ್ತು. ಉಳಿದಿದ್ದ ಇನ್ನೊಂದೆರಡನ್ನು ಹಾಗೆ ಗಟ್ಟಿಯಾಗಿ ಹಿಡಿದುಕೊಂಡು ಹೆತ್ತ ತಾಯಿಯ ಆಗಮನಕ್ಕಾಗಿ; ಧರ್ಮಪತ್ನಿಯ ಆಗಮನಕ್ಕಾಗಿ; ರಿಣದ ಬಿಂದಿಗೆ ಹೊತ್ತು ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿದ್ದ ಮಕ್ಕಳಾದ ಅಶ್ವತ್ಥ, ಶಿವರಾಮರಿಗಾಗಿ ನಾನು ಎದುರು ನೋಡುತ್ತಿದ್ದೆ… ಇನ್ನು ನನ್ನಿಂದ ಬದುಕಲು ಸಾಧ್ಯವಿಲ್ಲವೆಂದುಕೊಂಡೆ. +ಹೊರಗಡೆ ಅಂಗಳದಲ್ಲಿ ಗುಂಪೊಂದು ‘ಹೋಗುತಿಹುದೋ ಕಾಯ ವ್ಯರ್ಥ” ಎಂದೂ… +‘ದೇಹದೊಳಗನುದಿನವಿದ್ದು…” ಎಂದೂ ಒಂದರ ಮೇಲೊಂದಂತೆ ಭಜನೆ ಮಾಡತೊಡಗಿದ್ದುದು ಸ್ಪಷ್ಟವಾಗಿ ಕೇಳಿ ಬರುತ್ತಿತ್ತು. ಗುಂಪಿನಲ್ಲಿ ದಿಮ್ಮಡಿ ಡಕ್ಕಿ ಭಾರಿಸುತ್ತಿದ್ದ ರಾಖೇಶ ಬಿರುಗಾಳಿಯಂತೆ ನನ್ನ ದೇಹವಿದ್ದ ಕಟ್ಟೆ ಕಡೆ ಬಂದವನೆ, “ಏಯ್ ಶಾಮಾ… ಮರುವಾದಿಯಿಂದ ಪಿರಾಣ ಬಿಡ್ತೀಯೋ ಇಲ್ಲ… ಆಟು ಹೇಳು… ಇಲ್ಲಾಂದ್ರೆ ಕುತ್ತಿಗೆ ಹಿಚುಗಿ ಕೊಂದು ಬಿಡ್ತೀನಿ… ಬಂದ ಪಾಪ ಬರ್‍ಲಿ ನೀನೇನೋ ದೊಡಮನುಸ್ಯಾ ಅಂದ್ಕಂಡಿದ್ದೆ…” ಎಂದು ಕೂಗಾಡ ತೊಡಾಗಿದ. “ಅಯ್ಯೋ…ಹ್ಹಾ..ಹ್ಹಾ… ನನ್ನ ಪ್ರಾಣ ಮಿತ್ರನೇ … ಇನ್ನೊಂದೈದು ನಿಮಿಷ ಬದುಕಲಿಕ್ಕೆ ಅವಕಾಶ ಕೊಡಲಾರೆ ಏನೋ?” ಎಂದು ಅರ್ಥ ಬರುವಂತೆ ಕಣ್ಣಾಲಿಗಳು ಹಿಂದಕ್ಕೂ, ಮುಂದಕ್ಕೂ ಸರಿದಾಡಿದವು… ಕಣ್ಣಲ್ಲಿ ಕಣ್ಣಿಟ್ಟು … “ಶಾಮಾ ನೀನೀಟೊಂದು ಅಂಜುಪುರಕಾ ಅಂತ ಮೊದ್ಲೇ ಗೊತ್ತಿದ್ದಿದ್ರೆ ನಾನು ಬಾಳ್ಯಾನ ಪಾರುಟೇ ಮಾಡ್ತಿರ್‍ಲಿಲ್ಲ ನೋಡು… ಸಾವೆಂಗಿರ್ತೈತಿ ಅಂಬೋದು ಬದುಕಿದ್ರೆ ಹೆಂಗೊ ತಿಳೀತೈತಿ… ಸಾಯೋ ಹಂಗಿದ್ರೀ ನಾಕು ಮಂದಿ ಸೈ ಸೈ ಅನ್ನಂಗೆ ಗಪ್ಪಂತ ಸತ್ತು ಬಿಡಬೇಕಪ್ಪಾ… ಇಲ್ಲಾಂದ್ರೆ ಎದ್ದು ಬಂದು ಬಿಡು… ಹಂಗೆ ಅಡ್ಡಾಡ್ಕೊಂಡು ಬರಾಣು…” ಎಂದು ಚೀರಾಡತೊಡಗಿದ… “ಬದುಕು ಹೇಗಿರ್‍ತದೆ ಎಂಬುದನ್ನು ಬದುಕಿ ನೋಡಿದ್ದಾಯ್ತು… ಇನ್ನು ಸತ್ತು ಸಾವಿನ ರುಚಿ ನೋಡೋದು ಬೇಡವೇನು!”… “ಆಗ್ಲಿ ಮಾರಾಯಾ… ನಿನ್ನ ಇಷ್ಟದಂತೇ ಆಗ್ಲಿ…” ಎಲ್ಲಿದ್ದಾಳೆ ನನ್ನ ಅನಸೂಯಾ… ನನ್ನ ಕಣ್ಣುಗಳು ಸುತ್ತ ಹರಿದಾಡಿದವು… ಅರೆ ಪಕ್ಕದಲ್ಲೇ ಇದ್ದಾಳಲ್ಲ… ಗರಬಡಿದವಳಂತೆ… ದುಃಖದ ಬೆಟ್ಟ ಹೊತ್ತು ಕಂಪಿಸುತ್ತಿರುವಳಲಲ್ಲಾ… ನನ್ನ ದೇಹದ ಸಮಸ್ತ ಶಕ್ತಿಯನ್ನು ಕ್ರೋಡೀಕರಿಸಿ ಮೆಲ್ಲಗೆ ಚಲಿಸತೊಡಗಿದೆ… ಹಾಗೆ ಚಲಿಸಿ ತಲೆಯನ್ನು ಆಕೆಯ ತೊಡೆ ಮೇಲಿರಿಸಿದೆ… ನಿಧಾನವಾಗಿ ಕೈಗಳನ್ನು ಮೇಲೆತ್ತಿ ಆಕೆಯ ಮುಖವನ್ನು ಸವರಿದೆ… ಆಕೆಯ ದುಃಖದ ಕೆರೆಯ ವಡ್ಡಿನಲ್ಲಿ ಬಿರುಕು ಕಾಣಿಸಿಕೊಂಡಿತು. ಅದು ಛಿದ್ರವಾಗುವ ಮೊದಲೆ ನಶ್ವರ ದೇಹವನ್ನು ತ್ಯಜಿಸಬೇಕೆಂದು ನಿರ್ಧರಿಸಿದೆ. ನಿರ್ಧರಿಸಿದ ಅರೆಗಳಿಗೆಯಲ್ಲಿ ಕೊನೆ ಉಸಿರನ್ನು ಬಿಟ್ಟುಬಿಟ್ಟೆ! ನಲವತ್ತಾರು ವರ್ಹಗಳ ಕಾಲ ನನ್ನ ಜೀವಾತ್ಮನಿಗೆ ಆಶ್ರಯ ನೀಡಿದ್ದ ದೇಹವನ್ನು ಶಾಶ್ವತವಾಗಿ ತ್ಯಜಿಸಿ ಬಿಟ್ಟೆ…” ತನ್ನ ಸಾವಿನ ಬಗ್ಗೆ ತಾನೇ ವೇದಾಂತಿಯಂತೆ ಮಾತಾಡುವುದನ್ನು ಮಾತಾಡಿದ ನಂತರ ಶಾಮಣ್ಣ ಪಾತ್ರವು ‘ಇಂಥದೊಂದು ಸಾರ್ಥಕ ಸಾವು ಸಾಯುವುದು ತನ್ನಿಂದ ಮಾತ್ರ ಸಾಧ್ಯವಾಯಿತು’ ಎಂಬಂತೆ ಮುಖ ಮಾಡಿತು. +ಶಾಮ ತನ್ನ ಸಾವನ್ನು ಕುರಿತು ಸೋಜಿಗದ ರೀತಿಯಲ್ಲಿ ಮಾತಾಡಿದ… ತನ್ನ ಮಾತಿನ ನಡುವೆ ಯಾವು ಯಾವುವೋ ಶ್ಲೋಕದ ಸಾಲನ್ನು ಉದ್ಧರಿಸಿದ… ರಸಾಯನಿಕ ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಪ್ರಯೋಗ ಮಾಡಿದಾಗ ಎಷ್ಟು ಸಂತೋಷವಾಗುವುದೋ ಅಷ್ಟೇ ಸಂತೋಷವಾಯಿತು ಅವನ ಮಾತು ಕೇಳಿ… ಇದರಲ್ಲಿ ಎಷ್ಟು ಸುಳ್ಳೋ? ಎಷ್ಟು ನಿಜವೋ?… ಆದರೆ ಕೆಲವು ಮುಖ್ಯ ಸಂಗತಿಗಳು ನೇಪಥ್ಯದಲ್ಲಿ ಉಳಿದುಕೊಂಡು ಬಿಟ್ಟವು. ಶ್ರೋತ್ರಿವಂಶೋದ್ಭವನಾದವನ ಶವ ಸಂಸ್ಕಾರದ ಪ್ರಶ್ನೆ! ಇದನ್ನು ಅನಸೂಯಮ್ಮ ಎಷ್ಟರ ಮಟ್ಟಿಗೆ ಪರಿಹರಿಸಿದಳು! ತಾಯಿ ಅಲುಮೇಲಮ್ಮಾಗಲೀ; ಹೆಂಡತಿ ವರಲಕ್ಷ್ಮಿಯಾಗಲೀ ಮಕ್ಕಳಾದ ಅಶ್ವತ್ಥೂ, ಶಿವರಾಮನಾಗಲೀ… ಇವರೆಲ್ಲರ ಪೈಕಿ ಒಂದಂಶವಾಗಲೀ; ಒಟ್ಟಿಗಾಗಲೀ ಬಂದು ನಾಲ್ಕು ಹನಿ ಕಣ್ಣೀರುದುರಿಸಿ, ತಲಾ ಒಂದೊಂದು ಚಮಚ ಗಂಗಾಜಲ (ಗಂಗಾಜಲ ಎಲ್ಲಿ ಬಂತು ಮಣ್ಣು! ಹುಲುಲಿ ಹಳ್ಳಕ್ಕಂಟಿಕೊಂಡಂತೆ ಶಿವಪೂಜೆ ಕೊಟ್ರಗೌಡರು ಶವಸಂಸ್ಕಾರಾರ್ಥಿಗಳ ಆಯಾಸ ಪರಿಹಾರಾರ್ಥವಾಗಿ ಕಟ್ಟಿಸಿರುವ ಬಾವಿಯ ಶಾಮಲ ವರ್ಣದ ಮತ್ತು ಹೆಚ್ಚು ಲವಣಾಂಶವಿರುವ ಉದಕವನ್ನು) ಬಿಡಬಹುದಿತ್ತು. ಶಾಸ್ತ್ರೋಕ್ತವಾಗಿ ಸಂಸ್ಕಾರವನ್ನು ನಡೆಸಿಕೊಡಲಿಕ್ಕ್ನು ಕೊತ್ತಲಗಿಯಲ್ಲಿ ಬ್ರಾಹ್ಹಣರಿಗೆ ಬರವಿಲ್ಲ… ಮಕ್ಕಳಿಂದ ತಂದೆಯ ಚಿತೆ ಸ್ಪರ್ಶ ಮಾಡಿಸಿದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ. ಅಂತೂ ಆ ಮುದ್ದಾದ ಮಕ್ಕಳೀರ್ವರು ಬದುಕಿನುದ್ದಕ್ಕೂ ಪಿತೃ‌ಋಣದಲ್ಲೆ ನವೆಯಬೇಕಾಗಿರುವುದೊಂದು ದೊಡ್ಡ ಕರ್ಮ. ಎಷ್ಟೇ ಕರ್ಮಠರಿದ್ದರೂ ಹೀಗೆ ವರ್ತಿಸಲಾರರು… ಇದರ ಬಗ್ಗೆ ಸರಿಯಾದ ವಿವರ ಕೊಡದಿದ್ದರೆ ಶಾಮಣ್ಣ ಆತ್ಮ ವಂಚನೆ ಮಾಡಿಕೊಂಡನೆಂದೇ ಓದುಗರು ಭಾವಿಸುತ್ತಾರೆ! ಅದೂ ಅಲ್ಲದೆ ಕಾದಂಬರಿಯೂ ಅಪೂರ್ಣವಾಗಿ ಉಳಿಯುತ್ತದೆ… ಮುಂದಿನಂದೋ ಚೂರನ್ನು ಶಾಮನೇ ಹೇಳಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ – +“ಶಾಮಾ… ನಾನು ಕೃತಜ್ಞತೆಗಳನ್ನು ಹೇಳುತ್ತಿರುವೆ. ಹಾಗೆಯೇ ಈ ಕಾದಂಬರಿ ಪರವಾಗಿ ಕಾದಂಬರಿಯ ಓದುಗರ ಪರವಾಗಿ; ತೆಗಳುವವರ ಪರವಾಗಿ, ಸಹೃದಯರ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತಿರುವೆ. ದಯವಿಟ್ಟು ಸ್ವಲ್ಪ ಸಹಕರಿಸು. ಕುಕುಲಾರ್ಕನುಮಸ್ತಮೆಯ್ದಿದರ್ ಎಂದು ರನ್ನ ದುರ್ಯೋಧನನ ಪರ್ಯಾವಸಾನವನ್ನು ವರ್ಣಿಸಿದ್ದು ನೆನಪಾಯಿತು. ಎಷ್ಟು ಅದ್ಭುತವಾಗಿ ನೀನು ನಿನ್ನ ದೇಹದಿಂದ ನಿರ್ಗಮಿಸಿದೆಯಲ್ಲ… ಆಗಮನ ಅಚಾನಕ್, ನಿರ್ಗಮನ ಖತರ್ನಾಕ್ ಎಂದು ಹೇಳಬಹುದೇನೋ? ನಿನ್ನ ಹಾಗೆ ಸಾವಿನಲ್ಲಿ ಥ್ರಿಲ್ ಅನುಭವಿಸುವವರು ಶತಮಾನಕ್ಕೊಬ್ಬರು… ನಿನ್ನ ಬದುಕು ಮತ್ತು ಸಾವು ಅಕ್ಷರಗ್ರಹಿಕೆಗೆ ದಕ್ಕುವುದು ಸುಲಭ ಆಧ್ಯವಿಲ್ಲ. ಒಂದು ರೀತಿಯ ಗೋಜಲು ಗೋಜಲು… ಅದಿರಲಿ… ಬದುಕಿನ ಅಂತಿಮ ಕ್ಷಣದವರೆಗೆ ಸುಶ್ರಾವ್ಯವಾಗಿ ವರ್‍ಣನ ಮಾಡಿದಿ… ಪತ್ತೆದಾರಿಕೆಯ ತರದೂದಿನ ಮೂಲಕ ನಾನು ಸಂಗ್ರಹಿಸಿರುವ ಮಾಹಿತಿಗೂ, ನಿನ್ನ ಹೇಳಿಕೆಗೂ ತಾಳೆ ಆಗ್ತಾ ಇಲ್ಲ. ರಾಖೇಶನ ನಡುವಳಿಕೆ ಬಗ್ಗೆ ಉತ್ಪ್ರೇಕ್ಷೆ ಮಾಡಿ ಹೇಳಿರುವಿ ಎಂದು ಭಾವಿಸುವೆ… ಅನಸೂಯಳೊಂದಿಗೆ ನೀನು ಲೈಂಗಿಕ ಸಂಬಂಧಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೆ ಎಂದು ತಿಳಿಯಿತು. ಡಾ.ಶೋಭಾ ಎಂಬುವರಲ್ಲಿಗೆ ರಾಖೇಶ ನಿನ್ನನ್ನು ಕರೆದುಕೊಂಡು ಹೋಗಿ ನೀನು ನರಳುತ್ತಿದ್ದ ಗೊನೇರಿಯಾಕ್ಕೆ ಇಲಾಜು ಮಾಡಿಸಲು ಪ್ರಯತ್ನಿಸಿದನೆಂದು ಮಾಹಿತಿ ದೊರಕಿತ್ತೇ ಹೊರತು ಉಳಿದ ವ್ಯಾಧಿಗಳ ಇಲಾಜಿಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಗಿದ್ದ ಎಂಬ ಮಾಹಿತಿ ಮಾತ್ರ ದೊರಕಲಿಲ್ಲ. ಕೊತ್ತಲಗಿಗೂ ಮತ್ತು ಏಯ್ಡ್ಸ್‌ಗೂ ನಡುವೆ ಮಾತುಕತೆ ನಡೆಸಿ ರಾಜಿ ಮಾಡಿಸಿದಿ ಎಂದೂ; ನೀನೇ ಆ ರೋಗದ ಬೋಣಿಗಿ ಮಾಡಿದಿ ಎಂದೂ ಇತ್ತೀಚೆಗೆ ಆ ಗ್ರಾಮಕ್ಕೆ ಸರಕಾರದಿಂದ ನೇಮಕಗೊಂಡಿರುವ ಆದರ್ಶ ವೈದ್ಯ ಡಾ.ಎಲ್ಲಪ್ಪ ಆಕಾಶವಾಣಿಗೆ ಕಳೆದವಾರ ನೀಡಿದ ಸಂದರ್ಶನದಲ್ಲಿ ಪ್ರಕಟಿಸಿದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. +ಅವರು ನಿನ್ನ ದೇಹದಿಂದ ಐದಾರು ಸೀಸಿ ರಕ್ತವನ್ನು ಸಿರಂಜಿ ಮೂಲಕ ಯಾವಾಗ ಪಡೆದುಕೊಂಡರೆಂಬುದೇ ನಿಘೂಡ ಸಂಗತಿ. ಯಾವತ್ತಾದರೂ ನೀನು ಯಾರಿಗಾದರೂ ರಕ್ತದಾನ ಮಾಡಿದ್ದುಂಟಾ ಎಂಬುದೂ ನಿಘೂಢವೇ. ನೀನು ಹಲವು ರೋಗಗಳ ಹರಿಕಾರನಾಗಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀ… ಅದನ್ನು ನೀನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿರುವಿ. ಆದರೆ ಏಯ್ಡ್ಸ್ ಬಗ್ಗೆ ಮಾತ್ರ ಮುಚ್ಚಿಟ್ಟುಕೊಂಡಿರುವಿ. ಮುಂಬೈ ಪ್ರಾಂತದ ಕಾಮಾಟಿಪುರಂ ಮೇಲೆ ಪೋಲೀಸರು ಕಾರ್ಯಾಚರಣೆ ನಡೆಸಿ ಬಿಡುಗಡೆಗೊಳಿಸ್ದ ನೂರೆಂಟು ಮಂದಿ ಕರ್ನಾಟಕದ ವೇಶ್ಯೆರ ಪೈಕಿ ಚವುಡವ್ವ ಅಲಿಯಾಸ್ ರಂಜಿತಾ ಎಂಬ ತರುಣಿ ಕೊತ್ತಲಗಿ ಬಂದೊಡನೆ ರಾಖೇಶನ ಮೂಲಕ ಪರಿಟಯ ಮಾಡಿಕೊಂಡು ಮಲಗಿದ್ದು ನೆನಪಿದೆ ತಾನೆ? ಆ ಬಗ್ಗೆ ನೀನು ಪ್ರಸ್ತಾಪಿಸಲಿಲ್ಲ… ಇಂಥ ಎಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಳ್ಳುತ್ತಿವೆ. ಈ ಬಗ್ಗೆ ನೀನೇನದರು ಹೇಳುವುದುಂಟಾ! ಎಂದು ನಾನು ಯಾವ ಮುಲಾಜಿಲ್ಲದೆ ಕೇಳಿದೆನು. +ಅದಕ್ಕೆ ಶಾಮಣ್ಣ ಪಾತ್ರವು ಬದ್ಧಭ್ರುಕುಟಿಯಾಯಿತು. +“ಎಲವೋ ದುಷ್ಟಾ… ನೀನು ನನ್ನನ್ನು ಏನು ಮಾಡಬೇಕೆಂದು ಮಾಡಿರುವಿಯಲೋ? ಮಸ್ಕಾ ಹಚ್ಚಿಕೊಂಡು ಕೇಳೋದನ್ನೆಲ್ಲ ಕೇಳಿ ಕೊನೆಗೆ ಇಂಥಾ ಆಪಾದನೆ ಮಾಡುತ್ತಿರುವಿಯಾ… ನಿನಗೂ ನಿನ್ನ ಕಾದಂಬರಿಗೂ ಬೆಂಕಿ ಹಾಕ್ಲಿ… ಪಾಪ ಎಳೆನಿಂಬೆಕಾಯಿಯಂಥ ಹುಡುಗಿ ಚವುಡಿಗೆ ಅಂಥ ಭಯಾನಕ ರೋಗ ಇತ್ತೂ ಅಂತ ಹೇಳ್ತೀದ್ದೀಯಲ್ಲೋ ಬೇಕೂಫಾ… ನಿನ್ನಂಥೋನ ಕೈಗೆ ಸಿಕ್ಕೊಂಡೆ ನೋಡು… ನನ್ಗೆ ನಾನೇ ಎಕ್ಕಡದಿಂದ ಹೊಡ್ಕೋಬೇಕು ಅಷ್ಟೆ. ನಿನ್ನ ಸಹವಾಸ ಸಾಕು… ನಾನು ಒಂದು ಕ್ಷಣ ನಿನ್ನ ಹಸ್ತಪ್ರತಿಯಲ್ಲಿ ವಾಸಿಸಲಾರೆ… ಹೊರಟು ಹೋಗ್ತೀನಿ” ಎಂದು ಶಾಮಣ್ಣ ಪಾತ್ರವು ದಡಬಡಾ ಎದ್ದು ಹೋಗ ತೊಡಗಿತು. +ಅದರ ಆ ವರ್ತನೆ ನೋಡಿ ನನಗೆ ಹೆಗಲುಮುಟ್ಟಿ ನೋಡಿಕೊಳ್ಳುವ ಕುಂಬಳಕಾಯಿ ಕಳ್ಳ ನೆನಪಾದ. ನಾನು ಅವನ ಕೈಹಿಡಿದು ಕ್ಷಮೆ ಕೇಳಿ ತಡೆದು ಕೂಡ್ರಿಸಿದೆ.. ಅವನ ವರ್ತನೆ ತುಸು ಕಠಿಣ ಎನ್ನಿಸಿದರೂ ಅವನ ಹೃದಯ ಮಾತ್ರ ಬೆಣ್ಣೆಗಿಂತ ಮೃದು ಎಂಬುದು ನನಗೆ ಗೊತ್ತು. +“ಕ್ಷಮಿಸು ಮಹಾರಾಯ… ನೀನೇ ಹೀಗೆ ಕೋಪಿಸಿಕೊಂಡು ಹೊರಟು ಹೋದರೆ ನನ್ನ ಕಾದಂಬರಿಯ ಗತಿ ಏನಾಗಬೇಕು! ನಿನ್ನ ಮರಣೋತ್ತರ ಘಟನೆಗಳ ಬಗ್ಗೆ ಹೇಳಿ ಉಪಸಂಹಾರದ ಚರಮ ಗೀತೆ ಹಾಡು. ದಯವಿಟ್ಟು…” ಎಂದು ಅಂಗಲಾಚಿದೆ. +ಯಾವನಾದಾರಂಭ ದೆಸೆಯಲ್ಲಿ ಎಷ್ಟೋ ಕನಸುಗಳನ್ನು ಕಾಣುತ್ತಿದ್ದ ಮತ್ತು ಕಂಡದ್ದನ್ನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದ ಆ ಶಾಮಾಶಾಸ್ತ್ರಿ ಇವನೇ ಏನು?! ಎಂಬ ಅನುಮಾನ ಬಂತು. +ಅವನು ಕನಸುಗಳಲ್ಲಿ ಸಾರ್ವಜನಿಕವಾಗಿ ಮಲವಿಸರ್ಜಿಸುತ್ತಿದ್ದನಂತೆ. ಮಲದೊಡನೆ ಆಟ ಆಡುತ್ತಿದ್ದನಂತೆ, ಎಲ್ಲಿ ನೋಡಿದರಲ್ಲಿ ಮಲಕುಪ್ಪೆ ಕುಪ್ಪೆಯಾಗಿ ಕಾಣಿಸುತ್ತಿತ್ತಂತೆ ಅವನಿಗೆ ಅಂಥ ಕನಸುಗಾರನೋರ್ವನಿಗೆ ಕೋಪ ಬಂದರೆ ವಸ್ತು ಸ್ಥಿತಿ ಏರುಪೇರಾಗದೆ ಇರಲು ಹೇಗೆ ಸಾಧ್ಯ? +“ನಿನಗೆ ನಾಚಿಕೆ ಎಂಬುದಿಲ್ಲ… ಸತ್ತು ಹೋದೆ ಅಂತ ಹೇಳ್ತಿದೀನಿ… ಸತ್ತನಂತ ಮುಂದೇನಾಯ್ತು ಅಂತ ಕೇಳ್ತಿದ್ದೀಯಾ… ನಿನ್ನ ಮೂರ್ಖತ್ವಕ್ಕೆ ಏನು ಹೇಳಲಿ?… ಅದ್ನೆಲ್ಲ ನಾನೇ ಹೇಳೊದು ಅಷ್ಟು ಸರಿಯಲ್ಲ… ನನ್ನ ಬಿಟ್ಟು ಬಿಡು… ಮಹರಾಯಾ… ಬಿಟ್ಟು ಬಿಡು” ಎಂದು ಶಾಮಂಣ ಪಾತ್ರವು ಪರಿಪರಿಯಾಗಿ ಬೇಡಿಕೊಂಡಿತು. +ಅದು ಹೇಳೋದು ಸರಿಯೆಂದು ಕಂಡು ಬಂದಿತು. ಹೌದು! ಸತ್ತಿರುವ ವ್ಯಕ್ತಿ ತನ್ನ ಮರಣೋತ್ತರ ಬದುಕಿಗೆ ವ್ಯಾಖ್ಯಾನಕ್ಕೆ ಸರಿಯಾದ ನ್ಯಾಯ ಒದಗಿಸಲಾರ… ಹಾಗೆ ಪೀಡಿಸುವುದೂ ಸರಿಯಲ್ಲ… ಈ ಬಗ್ಗೆ ಯಾರಿಂದ ವಿವರ ಪಡೆಯುವುದು!… +ನಾನು ಪರ ಪರ ತಲೆ ಕೆದರುಕೊಳ್ಳುತ್ತಿರುವುದನ್ನು ನೋಡಲಾರದೆ ಶಾಮಣ್ಣ ಪಾತ್ರವೇ ಅನಸೂಯ ಎಂಬ ಪೋಶಕ ಪಾತ್ರಕ್ಕೆ – +“ಅನಸೂಯಾ… ಏನ್ಮಾಡ್ತಿದ್ದೀಯೇ… ಎದ್ದೇಳೇ ಎದ್ದೇಳು… ನಾನು ಸತ್ತ ಮೇಲೆ ಏನಾಯ್ತೂಂತ ಕಾದಂಬರಿಖೋರ ತಲೆಕೆಡೆಸಿಕೊಂಡಿದ್ದಾನೆ… ನೀನೇ ಮುಂದಿನದೆಲ್ಲ ಹೇಳಿ ಸರಿದೂಗಿಸು… ನನ್ನೋರು ತನ್ನೋರೆಂಬುವರ ಕೈಲಿ ಅಕ್ಷತೆಯನ್ನು ಬಾಯಿಗೆ ಹಾಕಿಸುಕೊಳ್ಳದೆ ಸತ್ತಿರೋ ನನಗೆ ಮರಣೊತ್ತರವಾಗಿ ಏನಾದರು ಬರೆದು ಮಸಿ ಬಳಿದಾನು. ನೀನೇ ವಿವರಿಸಿ ಮನಸ್ಸು ಹಗುರ ಮಾಡಿಕೋ” ಎಂದು ವಶೀಲಿ ಮಾಡಿದನು. +ಅದನ್ನು ಕೇಳಿ ಅನಸೂಯಮ್ಮ ಎಂಬ ಪಾತ್ರ ಶಿವ ಶಿವಾ ಎಂದು ಕೈಯಿಂದ ಕಿವಿ ಮುಚ್ಚಿಕೊಂಡಿತು. “ಅಯ್ಯೋ ವಿಧಿ ವಿಲಾಸವೇ… ನಿನ್ನ ಮಹಿಮೆಯು ಅಪರಂಪಾರವೆಂದು ಸನಕಾದಿ ಸಜ್ಜನರು ಹೇಳಿವುರುವುದು ಮಿಥ್ಯೆಯಲ್ಲವು…” ಎಂದು ಗೊಣಗುತ್ತ ಕ್ರಮೇಣ ಒಂದು ತಹಬಂದಿಗೆ ಬಂದು “ಯಪ್ಯೋ ನಾನೇನು ಕರುಮಾ ಮಾಡಿದ್ನೋ… ಯಪ್ಪಾ… ಅದ್ನೆಲ್ಲ ಗ್ನಪ್ತೀಕ ತಂದ್ಕಂಡ್ರೆ ಎದ್ಯಾಗ ಉರಿ ಬಿದ್ದಂಗಾಗತೈತೋ… ವ್ಯೋನು ಕರುಮಾ ಮಾಡಿದ್ಯೋ ಶಾಮಾ… ಹಂಗ ಸಾಯಲಕ… ಒಂದೊಳ್ಳೇದು ಉಂಬ್ಲಿಲ್ಲ… ಒಂದೊಳ್ಳೇದು ಉಡಲಿಲ್ಲ… ನೀಚಿ ನೀಚಿ ಸತ್ತೆಲ್ಲೋ… ನನ್ನೋರೆಂಬರು ಕಯ್ಯಲ್ಲಿ ಬಿಡಿಸ್ಗಂಬ್ಲಿಲ್ಲ… ತನ್ನೋರೆಂಬರು ಕಯ್ಯಲಿ ಬಾಯಾಗ ಅಕ್ಕಿಕಾಳು ಹಾಕಿಸ್ಕಂಬ್ಲಿಲ್ಲ… ಬದುಕಬೇಕಂಬ್ಲಿಲ್ಲ… ಬಾಳುವೆ ಮಾಡಬೇಕಂಬ್ಲಿಲ್ಲ… ನಿಸೂರಾಗ ಮಲಿಕ್ಕೊಂಡು ನಿಸೂರಾಗೇ ಹೊಂಟು ಹ್ವಾದಿ… ಸೊನ್ನೀಗೆ ಸೊನ್ನಿಕೂಡ್ದಿ… ಸೊನ್ಯಾಗ ಸೊನ್ನಿ ಕಳ್ದು ನಾಕುಮಂದಿ ಕೂಡಿ ಅವುದು ಅನ್ನಿಸ್ಕಂಬದೆ; ಅಲ್ಲಾ ಅನ್ನಿಸ್ಕಂಬದೆ ನಲವತ್ತಕ್ಕೆ ಮುದುಕನಂಗೆ ಬದುಕಿದಿ… ಮುದುಕನಂಗೆ ಸತ್ತಿ… ನೀನುಂಡ ಸಾವನ್ನೆಂಗ ವರಣನ ಮಾಡ್ಲೋ… ಶಿವ… ಶಿವಾ … ಹೇಳಕ ಮದ್ಲೆ ನಾಲಗ್ಯಾರ ಬಿದ್ದು ಹೋಗಬಾರ್ದೇನು?” ಎಂದು ಕೆಳಗಿನ ವಾಕ್ಯಕು ಮೇಲಿನ ವಾಕ್ಯಕು ಬಡಿ ಬಡಿದತ್ತು ಹೇಳತೊಡಗಿ ಅನಸೂಯಮ್ಮ ಪಾತ್ರವು ತಲೆ ಚಿಟ್ಟು ಮಾಡಿತು. +ನನಗಿಂತ ಮುಖ್ಯವಾಗಿ ಶಾಮನ ಪಾತ್ರವು… ಆ ಸ್ತ್ರೀ ಪಾತ್ರದ ಮುಖವನ್ನು ಎದೆಗವುಚಿಕೊಂಡು ಪರಿಪರಿಯಾಗಿ ರಮಿಸತೊಡಗಿತು. +“ಅನೂ… ಅನುಸೂವಿ… ನೀನತ್ರೆ ನನ್ ಎದೆ ಹೊಡ್ದು ಹೋಗ್ತದೇ… ನೀನೆಷ್ಟು ಅತ್ರೇನುಪಯೋಗ… ನಾನೇನು ಬದುಕಿ ಬಂದೇನ… ನನ್ ಸಂತಿ ಅವತ್ತಿಗೆ ಮುಗೀತು… ಮುಗಿಸಿಕೊಂಡು ಹೊಂಟು ಹೋಗಿ ಬಿಟ್ಟೆ ಅಷ್ಟೆ… ಅದಕ್ಕೆ ನೀನ್ಯಾಕೆ ಇಷ್ಟೊಂದು ದುಃಖಮಾಡ್ತೀ… ನಾನು ಬದುಕಿರೋವರ್ಗೂ ನಿನಗೆ ದುಃಖ ಕೊಟ್ಟೆನೇ ಹೊರತು ಸುಖವನ್ನು ಕೊಡಲಿಲ್ಲ… ಎಷ್ಟೋ ಸಾರಿ ನಿನ್ನನ್ನೇ ಹಿರ್ಕೊಂಡು ತಿಂದು ಬದುಕಿದೆ… ಆ ಹುಡುಗಿ ಕಂಚನಾಳಿಗಾಗ್ಯಾದರೂ ನೀನು ಬದುಕಿರಬೇಕು… ನೀನೂ ಸಂತೋಷವಾಗಿರಬೇಕು… ಎಲ್ರೂನೂ ಸಂತೋಷವಾಗಿಡಬೇಕು…” ಎಂದು ಅದು ಸಮಾಧಾನದ ಮಾತುಗಳನ್ನು ಆಡಿತು. +ನಾನೂ ಆ ಸ್ತ್ರೀ ಪಾತ್ರವನ್ನು ಸಂತೈಸಿದೆ. ಕ್ರಮೇಣ ಅದು ಒದ್ದೆಗಣ್ಣು ಒರೆಸಿಕೊಂಡುಸಹಜ ಸ್ಥಿತ್ಗೆ ಮರಳಿತು. ಬಿಕ್ಕುತ್ತಿತ್ತು. +“ಹೇಳಮ್ಮಾ… ನಿನ್ನ ಮನಸ್ಸಿಗೆ ಆಗಿರೋ ಗಾಯ ನನಗೆ ಅರ್ಥವಾಗುತ್ತದೆ. ಆದರೆ ಅದನ್ನು ಗುಣಪಡಿಸುವ ಶಕ್ತಿ ನನಗಿಲ್ಲ… ಯಾರಿಗೂ ಇಲ್ಲ… ಇಂಥ ಉದಾತ್ತಗುಣದ ಮಹಿಳೆಯರು ಇದ್ದಾರೆಯೇ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು. ಹಾಗೆ ಹೇಳಮ್ಮಾ… ಎಂದು ಉತ್ಸಾಹ ತುಂಬಿದೆ. +ಮಧ್ಯೆ ಮಧ್ಯೆ ಬಾಯಿ ಹಾಕಿ ತೊಂದರೆ ಕೊಡುವ ಛಾನ್ಸ್ ಇರ್‍ತದೇ ಅಂತ ತಾತ್ಕಾಲಿಕವಾಗಿಜಾಗ ಖಾಲಿ ಮಾಡಲು ಶಾಮಣ್ಣ ಪಾತ್ರಕ್ಕೆ ಸೂಚಿಸಿದೆ. ಪಾಪ ಅದು ಒಂದೇ ಮಾತಿಗೆ ಅಲ್ಲಿಂದ ಹೊರಟು ಹೋಗಿ ಕಥೆಯೊಳಗೆ ನಾನು ಸೃಷ್ಟಿಸಿದ ಅಶ್ವಥ್‌ಕಟ್ಟೆಯ ಮೇಲೆ ಕಾಲು ಚಾಚಿ… ಆರ್ ಏ ಬ್ರಾಂಡಿನ ಖಾಲಿ ಕವರುಗಳನ್ನು ಹಿಡಿದು ಆಡತೊಡಗಿದ ಮಕ್ಕಳನ್ನು ನೋಡುತ್ತ ಕೂತುಕೊಂಡಿತು. ನಾವು ಅದಕ್ಕೆ ಕಾಣಿಸುತ್ತಿದ್ದೆವೇ ಹೊರತು ನಮ್ಮ ಯಾವ ಮಾತೂ ಅದಕ್ಕೆ ಕೇಳಿಸುವಂತಿರಲಿಲ್ಲ. ಆತನ ಮತ್ತು ನಮ್ಮ ನಡುವೆ ಭಾಷೆ ಬೇಯುತ್ತಿರುವ ಕಿಮುಟು ವಾಸನೆ ಮಾತ್ರ ತಾನೇ ತಾನಾಗಿ ಸುಳಿದಾಡುತ್ತಿತ್ತು. +ಅನಸೂಯಮ್ಮ ಪಾತ್ರವು ಹೇಳತೊಡಗಿತು. ಅದರ ಮೌಖಿಕ ಭಾಷೆಯನ್ನು ಸಂಸ್ಕರಿಸಿ ಬರೆಯತೊಡಗಿದೆ. +* +* +* +ನಾನು ಎಂಥೆಂಥೋರ ಸಹವಾಸ ಮಾಡಿದ್ದೀನಿ… ಆದರೆ ಶಾಮಾ ಶಾಸ್ತ್ರಿಯಂಥವರ ಸಹವಾಸ ಮಾಡಿರಲಿಲ್ಲ… ನಾನು ಅವನಲ್ಲಿ ಏನು ಕಂಡು ಮೋಹಿಸಿದೆನೋ ದೇವರಿಗೇ ಗೊತ್ತು. ಅವನೇನು ಅಂಥ ರೂಪಸ್ಥನಲ್ಲ, ಧನವಂತನಲ್ಲ… ಲೈಂಗಿಕ ಸುಖದ ಪರಾಕಾಷ್ಟೆ ತಲುಪಿಸುವಂಥ ಕುಶಲಕಲೆಗಾರನೂ ಅಲ್ಲ… ಅವನ ಮತ್ತು ನನ್ನ ನಡುವೆ ಸಂಬಂಧ ಕುದುರಿಸಲು ರಮಾಬಾಯಿ ‘ಅನೇಕರೀತಿಯಲ್ಲಿ ಪ್ರಯತ್ನಿಸಿದಳು ಮುಕುಳಿಯಲ್ಲಿ ಅರೆಪಾವಿ ಮಾಂವುಸವಿಲ್ಲದ ಅವನ ಸಂಗಾಟ ಹೆಂಗ ಮಲಿಕ್ಕೊಳ್ಳಿ ಹೋಗಬೇ’ ಎಂದು ನಾನು ಗದರಿಸುತ್ತಿದ್ದುದೂ ಉಂಟು. ನನ್ನನ್ನು ಯಾಕೆ ಅವನೊಂದಿಗೆ ಹೊಂದಿಕೆ ಮಾಡಲು ಪ್ರಯತ್ನಿಸುವುದೆಂಬ ಖಬರು ಸ್ವತಃ ತನಗೂ ಇರಲಿಲ್ಲ… ಇದರ ಬಗ್ಗೆ ಶಾಮನಿಗೂ ನಿರ್ದಿಷ್ಟವಾದ ಖಚಿತವಾದ ಯೋಜನೆಯೂ ಇರಲಿಲ್ಲ… ಅವನ ವ್ಯಕ್ತಿತ್ವಕ್ಕೆ ಸಂಬಂಧಸಿದಂತಾಗಲೀ ನಾನ್ನ ವ್ಯಕ್ತಿತ್ವಕ್ಕೆ ಸಂಬಂಧಸಿದಂತಾಗಲೀ ಪರಸ್ಪರ ಆಕರ್ಷಿಸತಕ್ಕಂಥ ವದಂತಿಗಳು ಇರಲಿಲ್ಲ… ಅವನ ಬಗ್ಗೆ ನಾನು ಅಲ್ಲಲ್ಲಿ ಕೇಳಿ ತಿಳಿದುಕೊಂಡಿದ್ದೆ. ಅದರಂತೆ ಕುಕ್ಕುಟ ಸ್ವಭಾವದ ಅವನೂ ಕೇಳಿ ತಿಳಿದುಕೊಂಡಿದ್ದ. ಯಾರ ಆದರೂ ಗುಟ್ಟಾಗಿ ಏಕಮುಖವಾಗಿ ಪ್ರೀತಿಸುವ ಸ್ವಭಾವದವನಾಗಿದ್ದ ಅವನು ನನ್ನನ್ನೂ ಒಳಗೊಳಗೆ ಪ್ರೀತಿಸಿದ್ದಿರಬಹುದು. ಸಂಗ್ಯಾ ಬಾಳ್ಯಾ ನಾಟಕ ಆಡದಿದ್ದಲ್ಲಿ ನಾವ್ಯಾರೂ ಪರಸ್ಪರ ಕೈಗಳಿಗೆ ಎಟಕುತ್ತಲೇ ಇರಲಿಲ್ಲ… ಬಾಳ್ಯಾ ಸೂತ್ರಧಾರಿ ರಾಖೇಶನೆಂಬ ಸಿದುಗನ ಸಹವಾಸ ಒದಗದಿದ್ದಲ್ಲಿ ನಮ್ಮ ಶಾಮನೂ ಕೊತ್ತಲಗಿಯ ಎರಡನೇ ವಾರ್ಡಿನಲ್ಲಿ ವಾಸಿಸುತ್ತಿರುವವರ ಸಜ್ಜನರ ಪೈಕಿ ತಾನೂ ಒಬ್ಬನಾಗಿ ಏನು ಸುಖಿಯೋ ತಾನು ಹುಟ್ಟಿನಲ್ಲಿ ಕಲಿಕೆಯಲ್ಲಿ ಎಂಬಂತೆ ಇದ್ದುಬಿಡುತ್ತಿದ್ದ. ನಮ್ಮ ನಿಮ್ಮೆಲ್ಲರಂತೆ ವಯಸ್ಸಿನ ಅವಸ್ಥೆಗಳನ್ನು ದಾಟಿ ವೃದ್ಧಾಪ್ಯ ತಲುಪಿ ಭಗವನ್ನಾಮಸ್ಮರಣೆ ಮಾಡುತ್ತ ಸತ್ತು ನಾಲ್ಕು ಮಂದಿ ಕೂಡ ಸೈ ಅನ್ನಿಸಿಕೊಳ್ಳುತ್ತಿದ್ದನೇನೋ! ಆದರೆ ಅವನು ಹಾಗೆ ಬದುಕಲಿಲ್ಲ… ಅಜ್ಜ ನೆಟ್ಟಾಲದ ಮರಕ್ಕೆ ನೇಣು ಹಾಕಿಕೊಳ್ಳದವನಾಗಿದ್ದ… ಅಂಥವರ ವಿರುದ್ಧ ಮಾತಾಡಬಲ್ಲವನಾಗಿದ್ದ. ಸನಾತನಿಗಳನ್ನು ಬೆಚ್ಚಿ ಬೀಳಿಸಲು ಯಾವ ರೇಖೆಗಳನ್ನಾದರೂ ಉಲ್ಲಂಘಿಸಬಲ್ಲವನಾಗಿದ್ದ. ಬಹುಶಹಃ ಅವನಲ್ಲಿದ್ದ ಈ ಗುಣಗಳನ್ನೇ ನಾನು ಗಾಢವಾಗಿ ಮೆಚ್ಚಿದ್ದು ಎಂದುಕೊಳ್ಳುತ್ತೇನೆ. ಅವನು ಅಪರೂಪಕ್ಕೊಮ್ಮೆ ಬರುತ್ತಿದ್ದುದುಂತು ಹೋಗುತ್ತಿದ್ದುದುಂಟು. ನಾನು ಅನ್ಯರೊಂದಿಗೆ ಮಲಗಿದ್ದಾಗ ಅವನು ಬಂದು ನನಗಾಗಿ ಕಾದು ಕಾದು ಹೋಗಿರುವ ಉದಾಹರಣೆಗಳುಂಟು. +ಒಮ್ಮೊಮ್ಮೆ ಯಾರೊಂದಿಗೋ ಮಲಗಿರುತ್ತಿದ್ದ ಅವನನ್ನು ನಾನೇ ಹುಡುಕಿ ಕರೆಸಿಕೊಂಡು ಅವನಿಗೆ ಗೊತ್ತಿರದ ಅನೇಕ ಪಟ್ಟುಗಳನ್ನು ಕಲಿಸುತ್ತಿದೆ. ಆ ಪಟ್ಟುಗಳ ಪ್ರಯೋಗಕ್ಕೆ ಗುರಿಯಾಗಿ ನಾನು ಸುಖವಾಗಿ ನರಳುತ್ತಿದ್ದೆ. ಅವನ ಬಗ್ಗೆ ನಾನಾಗಲೀ, ನನ್ನ ಬಗ್ಗೆ ಅವನಾಗಲೀ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಅವನ ನೌಕರಿಯನ್ನು ಅದೊಂದು ನೌಕರಿ ಎಂದು ಹೇಗೆ ತಿಳಿದುಕೊಂಡಿದ್ದನೋ ಅವನೂ ಅಷ್ಟೆ. ನಾನು ನಟಿಸುತ್ತಿದ್ದುದನ್ನು, ವಿಟರೊಂದಿಗೆ ಮಲಗುತ್ತಿದ್ದುದನ್ನು ಒಂದು ನೌಕರಿ ಎಂದೇ ಭಾವಿಸಿದ್ದ, ಗೌರವಿಸುತ್ತಿದ್ದ. ನನ್ನೊಂದಿಗೆ ಮಲಗಿದವರಿಗೂ ಗೌರವಕೊಡುತ್ತಿದ್ದ. ಕಂಚಿಯ ದೇವಾಲಯದಲ್ಲಿದ್ದ ಚಿನ್ನದ ಹುಲಿಯನ್ನು ನೋಡಿಬಂದವರನ್ನು ನೋಡುವುದರ ಮೂಲಕ ಹಲ್ಲಿ ಸ್ಪರ್ಶದ ದೋಷವನ್ನು ಪರಿಹರಿಸಿಕೊಳ್ಳುತ್ತಾರಲ್ಲ ಹಾಗೆ! ಅವನಲ್ಲಿದ್ದ ಈ ಗುಣವನ್ನ ನಾನು ಇಷ್ಟಪಟ್ಟಿದ್ದು. ಅವನನ್ನು ನಾನು ಘಾಡವಾಗಿ ಹಚ್ಚಿಕೊಂಡಿದ್ದಕ್ಕೆ ಅವನ ಹೆಂಡತಿ ವರಲಕ್ಷ್ಮಿಯ ಕಂದಾಚಾರದ ಹಠಮಾರಿತನವೂ ಕಾರಣವೇ. ಅಂಥ ಗೃಹಿಣಿಯರ ಪಾತಿವ್ರತ್ಯ ಕಂಡರೆ ನನಗೆ ಮೈಪರಚಿಕೊಳ್ಳುವಷ್ಟು ಸಿಟ್ಟು ಬರುತ್ತದೆ. ಅದೊಂದು ರೀತಿ ಸೋಗು ಎಂದೇ ನನ್ನ ಭಾವನೆ. ಗಂಡನ ಪಕ್ಕದಲ್ಲಿ ಮಲಗುವಾಗ ವೇಶ್ಯೆ ಥರ ವರ್ತಿಸದ ಪಾತಿವ್ರತ್ಯಕ್ಕೆ ಬೆಂಕಿ ಹಾಕಬೇಕು. ಗಂಡನಿಗೆ ಊಟ ಬಡಿಸುವಾಗ ತಾಯಿಯಂತೆ ವರ್ತಿಸದ ಪಾತಿವ್ರತ್ಯಕ್ಕೆ ಕಿಚ್ಚಿಡಬೇಕು. ಗಂಡನಿಗೆ ಕ್ಲಿಷ್ಟ ಸಂದರ್ಭದಲ್ಲಿ ಸಮಯೋಚಿತವಾಗಿ ಕಾರ್ಯದರ್ಶಿಯಂತೆ ಸಲಹೆ ನೀಡದ ಪಾತಿವ್ರತ್ಯದ ಬೇರಿಗೆ ಬಿಸಿನೀರುಕಾಯಿಸಬೇಕು… ಯಾವ ಹೆಂಡಂದಿರು ತಮ್ಮ ಗಂಡಂದಿರಿಗೆ ಮಾಡದ ಕೆಲಸವನ್ನು; ತೋರಿರದ ಉತ್ಕಟೆಯನ್ನು ನಾವು ನಮ್ಮ ಜೊತೆ ಮಲಗುವ ವಿಟರಿಗೆ ತೋರಿಸುತ್ತೇವೆ. ನಮ್ಮ ಸಲಹೆಯಿಂದ ಎಷ್ಟೋ ಮಂದಿ ಪರಸ್ತ್ರೀ ವ್ಯಾಮೋಹಿಗಳು ಉತ್ತಮ ಗಂಡಂದಿರಾಗಿದ್ದಾರೆ. ಅದಕ್ಕೆಲ್ಲ ವಿವರವಾಗಿ ಹೇಳಬೇಕೆಂದರೆ ಸಂಕೋಚ ಅಡ್ಡಿಬರುತ್ತದೆ. ವರಲಕ್ಷ್ಮಿಯ ಕಠೋರ ಪಾತಿವ್ರತ್ಯ ನೋಡಿ ಅಸಹ್ಯ ಪಟ್ಟುಕೊಂಡೇ ನಾನು ಶಾಮನೊಂದಿಗೆ ಮಲಗಿದ್ದು ಎಲ್ಲ. ನಾನು ಎಷ್ಟು ಪ್ರಯತ್ನಿಸಿದರೂ ಆಕೆ ಅವನನ್ನು ಪ್ರೀತಿಸಲಿಲ್ಲ, ಗೌರವಿಸಲಿಲ್ಲ. ಹೀಗಾಗಿ ಅವನು ಸಾರ್ವಜನಿಕರೆದುರು ಪತನಗೊಂಡ. ಅಪಮೌಲ್ಯಗೊಂಡ. ತಿರಸ್ಕಾರಕ್ಕೆ ಮತ್ತೊಂದು ಅತ್ಯುತ್ತಮ ಮಾದರಿ ಎನ್ನಿಸಿಕೊಂಡ. ಅಷ್ಟೊಂದು ರೂಪಸಿಯಾಗಿರದಿದ್ದ ನಾನು ಅವನನ್ನು ಪತಿತ ಸ್ಥಾನದಿಂದ ಮೇಲೆತ್ತುವ ಕೆಲಸ ಮಾಡಲೇ ಇಲ್ಲ… ಅವನು ಆಗೊಮ್ಮೆ, ಈಗೊಮ್ಮೆ ಬಂದು ತನ್ನ ಅಪ್ಯಾಯಮಾನವಾದ ವರ್ತನೆಯಿಂದ ನನ್ನ ಹೃದಯ ಕಲಕಿ ಬಿಡುಟ್ಟಿದ್ದ. ಅವನು ಪ್ರತಿಯೊಂದು ಮಾತುಕಥೆ ನಡೆನುಡಿ ಅತ್ಯಂತ ಸಹಜವಾಗಿರುತ್ತಿದ್ದವು. ಕೃತಕತೆ ಎಂಬುದಿರುತ್ತಿರಲಿಲ್ಲ. ಅವನು ಬದುಕಿರುವಷ್ಟು ಕಾಲ ಬದುಕಿರುತ್ತಾನೆ ಎಂದು ಭಾವಿಸಿದ್ದೆ. ಹಾಗೆ ನನ್ನನ್ನು ದೀರ್ಘಾಯುಷಿ ಅವನಲ್ಲವೆಂದುಕೊಂಡೆ. ಅವನನ್ನು ಯಾರಾದರೂ ಸುಲಭವಾಗಿ ಮೋಸ ಮಾಡಬಹುದಿತ್ತೇ ಹೊರತು ದ್ವೇಷಿಸುವುದಂತು ಸಾಧ್ಯವಿರಲಿಲ್ಲ. ಆದ್ದರಿಂದ ಅವನಿಗೆ ಮೋಸ ಮಾಡಿ ಪಶುಪತಿ ಸಾಲ ಪಡೆಯುವುದು ಸುಲಭವಾಯಿತು. ಇಂಥ ಎಷ್ಟೋ ಬೆಸ್ತು ಬಿದ್ದ ಘಟನೆಗಳಿವೆ. +ಅವನು ಸಸ್ಪೆಂಡಾದಾಗ ಸಹಾಯ ಯಾಚಿಸಿ ನನ್ನ ಬಳಿಗೆ ಬರಲೇ ಇಲ್ಲ.. ನನ್ನ ಕಣ್ಣು ತಪ್ಪಿಸಿ ಅಡ್ಡಾಡತೊಡಗಿದಂತೆ ಅವನ ಬಗ್ಗೆ ನನ್ನಲ್ಲಿ ವಾತ್ಸಲ್ಯ ಬೆಳೆಯಿತು. ಒಮ್ಮೊಮ್ಮೆ ನಾನೇ ಅವನನ್ನು ಹುಡುಕಿ ಕರೆತಂದು ಎಲ್ಲತನವನ್ನು ನಾನೇ ಪ್ರಕಟಿಸಿ ಅತ್ಮತೃಪ್ತಿಪಡುತ್ತಿದ್ದೆ. ಆರೋಪದಿಂದ ಅವನನ್ನು ಮುಕ್ತ ಮಾಡಲು ನಾನು ಪಟ್ಟ ಶ್ರಮ ಹೇಳತೀರದು! ಅದಕ್ಕಾಗಿ ನಗ ನಾಣ್ಯ ಎಲ್ಲವನ್ನೂ ಕಳೆದುಕೊಂಡೆ… ದೈಹಿಕವಾಗಿಯೂ ಪೌರುಷದ ಶೋಶಣೆಗೆ ಒಳಗಾದೆ… ಏನೆಲ್ಲ ಮಾಡಿದರೂ ನನ್ನ ಶಾಮನೈಗೆ ಜೈಲುಶಿಕ್ಷೆ ಆಯಿತು. ಅವನಿಗೆ ವಿಧಿಸಿದ ಶಿಕ್ಷೆ ಕಡಿಮೆ ಮಾಡುವ ಸಲುವಾಗಿ ಸ್ವಯಾರ್ಜಿತ ಆಸ್ತಿಯನ್ನೆಲ್ಲ ಕಳೆದುಕೊಡೆ… ಅಂತು ಬಿಡುಗಡೆಯಾದ. ಜಠರದ ಹುಣ್ಣು ಮತ್ತು ಕ್ಷಯ ರೋಗಗಳಿಂದ ಅವನು ನರಳುತ್ತಿದ್ದುದು ನನಗೆ ಕೂಡಲೆ ತಿಳಿಯಲಿಲ್ಲ. ಹೆಂಡತಿಯೊಂದಿಗೆ ಜಗಳ ಆಡಿದಂತೆ ತಾನೆಂದೂ ರೋಗಗಳೊಂದಿಗೆ ಜಗಳಾಡಲಿಲ್ಲ. ವಿರೋಧಿಸಲಿಲ್ಲ… ಅವುಗಳನ್ನು ದೇಹದಿಂದ ಮೂಲೋತ್ಛಾಟನೆ ಮಾಡಲೇ ಇಲ್ಲ… ನಾನು ಕರೆದೊಯ್ದು ತೋರಿಸಿದ ಡಾಕ್ಟರುಗಳಿಗೆಲ್ಲ ಒಗಟಾದ. ಬಳ್ಳಾರಿಯ ದೊಡ್ಡಮಲ್ಲಪ್ಪ ಎಂಬ ಡಾಕ್ಟರ್ “ನೀನವನನ್ನು ಅವನ ಪಾಡಿಗೆ ಸಾಯ್ಲಿಕ್ಕೆ ಬಿಡುವುದೇ ಒಳ್ಳೆಯದು” ಎಂದು ಹೇಳಿದರು. ನನ್ನ ಕಣ್ತಪ್ಪಿಸಿ ದೂರ ದೂರ ಹೋಗಿನಿಡುತ್ತಿದ್ದ ಅವನನ್ನು ಹಿಡಿದು ಏಕರಿಕೆ ದೇಖರಿಕೆ ಮಾಡುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಅವನನ್ನು ಅಂಥ ದುರ್ಭರ ಸ್ಥಿತಿಯಲ್ಲಿ ಕೊಟ್ಟೂರಿಗೆ ಹೋಗಲು ಬಿಡುತ್ತಿರಲಿಲ್ಲ. ಹೋದ… ಅವನೇ ಅವಮಾನ ಮಾಡಿದನೋ! ಅವರೇ ಮಾಡಿದರೋ! ನನಗೊಂದೂ ತಿಳಿಯದು, ದೇಹತ್ಯಾಗ ಮಾಡುವುದಕ್ಕೆ ಗೋಕರ್ಣಕ್ಕೆ ಹೋಗುವುದಾಗಿ ಅವನೇ ಸುದ್ದಿ ಹಬ್ಬಿಸಿದನೋ ಅಥವಾ ಅವನ ಪರವಾಗಿ ರಾಖೇಶನೇ ಹಬ್ಬಿಸಿದನೋ ನನಗೊಂದೂ ತಿಳಿಯದು. ಶಾಮಣ್ತಾತನವ್ರು ಮಹಾಬಲೇಶ್ವರನ ದರ್ಶನ ಮಾಡಿಕೊಂಡು ಬರಲು ಗೋಕರ್ನಕ್ಕೆ ಹೋಗುತ್ತಿರುವರೆಂದೂ; ಅಲ್ಲಿಂದ ಚತುರ್ದಶಿಯಂದು ಮರಳಿದ ನಂತರ ಅವರು ಕೊತ್ತಲಗಿಯ ಪವಿತ್ರ ಕಡದರಳ್ಳದ ದಂಡೆಯಲ್ಲಿ ಸಜೀವ ಸಮಾಧಿ ಹೋಗುವರೆಂದೂ ಸುದ್ದಿ ಹಬ್ಬಿಸಿ ಹಣ ಸಂಗ್ರಹಿಸತೊಡಗಿದ್ದ ಅದೇ ರಾಖೇಶ ಯಾವ ಮಾದಿಯಿಂದಲೋ ಕೊಟ್ಟೂರಿಗೆ ಹೋಗಿ ಶಾಮ ಗೋಮಾಂಸಭಕ್ಷಣೆ ಮಾಡುತ್ತಿರುವನೆಂಬ ಸುದ್ದಿಯನ್ನು ಅವರ ಮನೆಯಲ್ಲಿ ಹೇಳಿ ಬಂದಿದ್ದನು ಆ ಸಂದರ್ಭದಲ್ಲಿ ಸರ್ವೋದಯ ನೇತಾರ ವಿನೋಬಾಜಿಯವರು ಗೋಹತ್ಯೆ ವಿರುದ್ಧ ಚಳುವಳಿ ನಡೆಸಿದ್ದರು. ಇನ್ನೊಂದು ಕಡೆ ವಿಚಾರವಾದಿಗಳು ಗೋಮಾಂಸ ಭಕ್ಷಿಸುವುದರ ಮೂಲಕ ಮೂಲಕ ಪ್ರತಿಭಟಣಾ ಚಳುವಳಿಯನ್ನು ಆರಂಭಿಸಿದ್ದರು. ಸನಾತನಿಗಳ ಎದೆಯಲ್ಲಿ ಇದರಿಂದ ಆತಂಕ ಹುಟ್ಟಿತು. ರಾಖೇಶನ ಈ ತೆರೆಮರೆಯ ಕೃತ್ಯವನ್ನು ಬಹಿರಂಗವಾಗಿ ಖಂಡಿಸುವುದು ನನ್ನಿಂದಾಗಲಿಲ್ಲ. ಅವನೊಂದು ಅಪಾಯಕಾರಿ ಶಕ್ತಿಯಾಗಿ ಬೆಳೆದುಬಿಟ್ಟಿದ್ದ. ಮನುಷ್ಯನೊಳಗಿನ ನಾಗರಿಕ, ಸಜ್ಜನಿತವಾದ, ಸಾತ್ವಿಕವಾದ ಭಾವನೆಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದ. ಸೋಮವಾರಪೇಟೆಗೆ ಕೆಟ್ಟ ಹೆಸರು ಬಂದುದು ಅವನಿಂದಲೇ. ಆದರೆ ಅವನು ನಮ್ಮ ಪೇಟೆಗೆಲ್ಲ ಅನಿವಾರ್ಯವಾಗಿದ್ದ. ಅಂಥವನನ್ನು ಎದುರು ಹಾಕಿಕೊಳ್ಳುವುದು ಒಂದು ಕಲ್ಲಿನೊಡನೆ ಗುದ್ದಾಡುವುದು ಒಂದೇ ಆಗಿತ್ತು. +ಶಾಮಣ್ಣನನ್ನು ಹುಡುಕಿಕೊಂಡು ನಾನು ಗೋಕರ್ಣಕ್ಕೆ ಹೋಗಲು ಆಗಲೇ ಸಜ್ಜಾಗಿದ್ದೆ. ಅದಕ್ಕೆಂದು ರುದ್ರಮುನಿ ಎಂಬ ಮಧ್ಯವಯಸ್ಕ ಸಾಹುಕಾರನೋರ್ವನನ್ನೂ ಗೊತ್ತು ಮಡಿಟ್ಟುಕೊಂಡಿದ್ದೆ. ಅಷ್ಟರಲ್ಲಿ ಶಾಮಾಶಾಸ್ತ್ರಿ ವೆಂಕಟಗಿರಿರೆದ್ದಿಯ ಹಾಲುಗಲ್ಲಿನ ಸಮಾಧಿ ಮೇಲೆ ಮಲಗಿ ಕಳೇಬರದೊಂದಿಗೆ ಸಂಭಾಷಿಸುತ್ತಿರುವನೆಂಬ ಸುದ್ದಿ ತಿಳಿದು ಬಂತು. ಅದೇ ತಾನೆ ನಾನು ಸೌಚ ಸ್ನಾನ ಮುಗಿಸಿ ಊಟ ಮಾಡಲಿಕ್ಕೆಂದು ಅಡುಗೆ ಮನೆ ಪ್ರವೇಶಿಸಿ ತಟ್ಟೆ ಮುಂದೆ ಕೂತುಕೊಳ್ಳುತ್ತಿದ್ದೆ. ಸುದ್ದಿ ಕಿವಿಗೆ ಬಿದ್ದೊಡನೆ ಮಸಣದ ಕಡೆ ಓಡಿದೆ. ಅದೇ ದಿನ ಋತುಮತಿಯಾಗಿದ್ದ ಕಾಂಚನಾ ಅರ್ಧ ದಾರಿಗೆ ಬಂದು ದಾರಿ ಪರಪಾಟಾಗಿ ಹಿಂದಕ್ಕೆ ಹೋದಳು. ಥಳಥಳ ಹೊಳೆಯುತ್ತಿದ್ದ ಸಮಾಧಿ ಮೇಲೆ ವೇಷ ಮರೆಸಿಕೊಂಡೋರ್ವ ಅನಾಥ ರಾಜ್ಯದ ರಾಜಕುಮಾರನಂತೆ ಪಿಳಿಪಿಳಿ ಕಣ್ಣು ಬಿಡುತ ಕೂತಿದ್ದ ಶಾಮನನ್ನು ನೋಡಿದೊಡನೆ ನನ್ನ ಕರುಳು ಕತ್ತರಿಸಿಹೋಯಿತು. ಅವರೆಲ್ಲ ಬೆದರಿಸಿ ಓಡಿಸಿ ಅವನನ್ನು ಎತ್ತಿಕೊಂಡು ಮನೆಗೆ ಕರೆ ತಂದೆ. ಅವನನ್ನು ಶಾಶ್ವತವಾಗಿ ಬದುಕಿಸಿಕೊಳ್ಳುವ ಬಯಕೆ ಹೆಮ್ಮರವಾಗಿ ಬೆಳೆಯಿತು. ಊರಲ್ಲಿನ ಎಲ್ಲಾ ಹಿರಿಕಿರಿಯ ಡಾಕ್ಟರುಗಳನ್ನೆಲ್ಲ ಕರೆದುಕೊಂಡು ಬಂದು ತೋರಿಸಿದೆ. ಅವರೆಲ್ಲರೂ ಹೇಳುತ್ತಿದ್ದುದು ಒಂದೇ ಮಾತು – ಶಾಮನಿಗೆ ಯಾವ ಖಾಯಿಲೆಯೂ ಇಲ್ಲ, ಇದ್ರೂ ಅವನ ದೇಹ ಸರಿಯಾಗಿ ಪ್ರಕಟಿಸ್ತಾ ಇಲ್ಲ… ನಾಡಿ ಬಡಿತ ಕ್ಷೀಣಿಸ್ತಾ ಇದೆ… ಬದುಕಿದ್ರೆ ಒಂದೋ ಎರಡೋ ದಿನ ಬದುಕಿರಬೌದು… ಮೂರನೆದಿನ ಖಂಡಿತ ಬದುಕಿರಲಾರ… ಅವನ ನೆಂಟರಿಷ್ಟರು ಯಾರಾದರೂ ಇದ್ದರೆ ಹೇಳಿ ಕಳಿಸೋದು ಒಳ್ಳೆಯದು… ಎಂದು ಮುಂತಾಗಿ ಸಲಹೆ ನೀಡುತ್ತಿದ್ದರು. ಅವರ ಮಾತು ಕೇಳಿ ಬಂಡೆಗಲ್ಲಡಿ ಸಿಲುಕಿದ ಮೊಲದಂತೆ ಒದ್ದಾಡಿದೆ. ಅವನನ್ನು ದೈವಿಕ ಶಕ್ತಿಗಳಿಂದಲಾದರೂ ಬದುಕಿಸಿಕೊಳ್ಳಬೇಕೆಂದು ನಿರ್ಧರಿಸಿ ಗೊತ್ತಿರುವ ಎಲ್ಲಾ ದೇವಾನು ದೇವತೆಗಳಿಗೆ ಹರಕೆ ಹೊತ್ತೆ. ಕಾರು ಮಾಡಿಕೊಂಡು ಅವನನ್ನು ಕೊಟ್ಟುರಿಗೆ ಕರೆದುಕೊಂಡು ಹೋಗದೆ ಇರುತ್ತಿರಲಿಲ್ಲ ನಾನು. ಅದಕ್ಕೂ ಮೊದಲು ಅವನು ಹಾಗೆ ಮಾಡಬಾರದೆಂದೂ… ನಿನ್ನ ಮನೆಯಲ್ಲೇ ಕೊನೆಯುಸಿರು ಬಿಡುವುದಕ್ಕೆ ಅವಕಾಶಕೊಡು ಎಂದು ಕೇಳಿಕೊಂಡಿದ್ದ. ಆದ್ದರಿಂದ ಅವನ ತಾಯಿ, ಹೆಂಡತಿ, ಮಕ್ಕಳನ್ನು ಕರೆತರಲೆಂದು ನಾನು ಹಿರಿಯರಾದ ಒಂಟೆಮಲ್ಲಯ್ಯ ಎಂಬುವರನ್ನು ಕೊಟ್ಟೂರಿಗೆ ಕಳುಹಿಸಿದೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬಂದರು. ನಂತರ ಬ್ರಾಹ್ಮಣರು ಬ್ರಾಹ್ಮಣರ ಮಾತಿಗೆ ಬೆಲೆಕೊಟ್ಟು ಬರಬಹುದೆಂದು ನಿವೃತ್ತ ಸಮಾಜ ಶಿಕ್ಷಕರಾದ ಹುಲಿಕುಂಟೇರಾಯರನ್ನು ಕಳುಹಿಸಿಕೊಟ್ಟೆ. ಅವರು ಕೂಡ ಅವಮಾನಿತರಾಗಿ ಬಂದರು. ಇನ್ನು ಹೋಗಿ ಕಾಡಿ ಬೇಡಿ ಕರತರಬೇಕೆಂದು ನಿರ್ಧರಿಸಿದ ನಾನು ಎಂದೆಂದೂ ಮಕ್ಕಳಾಗದ ಗೊಡ್ಡಿ. ನಮ್ಮ ಹಿರಿಯರು ಜರಿಮಲೆಯ ಪಾಳ್ಳೇಗಾರರಾಗಿದ್ದ ಕಾಲದಿಂದಲೂ ಮಕ್ಕಳಿಗಾಗಿ ಹಲುಬುವ ಪರಿಪಾಟ ಬಳುವಳಿಯಾಗಿ ಬಂದಿದೆ. ಬ್ರಿಟೀಷರು ಈ ದೇಶವನ್ನು ಬಿಟ್ಟು ಹೋಗುವ ಮೊದಲೇ ನಮ್ಮ ಪಾಳೇಗಾರಿಕೆ ಚೂರುಚೂರುಗೊಂಡು ಹಾಳಾಗಿ ಹೋಗಿತ್ತು. ಹರಪನಹಳ್ಳಿ ಪಾಳ್ಳೇಗಾರರ ವಿರುದ್ಧ ಕತ್ತಿ ಹಿರಿದು ಪರಾಕ್ರಮದಿಂದ ಹೋರಾಡಿ ನೂರಾರು ಶತ್ರುಗಳ ರುಂಡಗಳನ್ನು ಧರೆಗುರುಳಿಸುತ್ತಿದ್ದ ನಮ್ಮವರು ತರಗೆಲೆಗಳಂತಾಗಿ ಬಿಸಿ ಉಸಿರಿಗೇ ಚದುರಿ ಬಿಡತೊಡಗಿದರು. ವರ್ಷಕ್ಕೆ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದ ನಮ್ಮ ರಾಜರು ಶ್ರಾದ್ಧಾಕೂಳು ಹುಡುಕಿಕೊಂಡು ನಿಂತಲ್ಲಿ ನಿಲ್ಲದೆ ಊರುಂದೂರಿಗೆ ಅಲೆದಾಡತೊಡಗಿದರು. ಪರನಾರಿ ಸೋದರರೆಂದು ಬಿರುದು ಧರಿಸಿದಂಥ ನಮ್ಮ ರಾಜರು ತಂತಮ್ಮ ಅಂತಃಪುರದ ಹೆಂಗಸರ ಶೀಲ ಕಾಪಾಡದಾದರು… ಈಗಲೂ ನೀವು ಜರಿಮಲೆಯ ಸುತ್ತ ಮುತ್ತ ಹೋಗಿ ಹುಡುಕಿದರೆ ಎರಡು ಮೂರು ರುಪಾಯಿಗೆ ಕೂಲಿನಾಲಿ ಮಾಡಿ ದಿನನೂಕುವ ರಾಜರು, ದೊರೆಗಳು ದೊರಕುತ್ತಾರೆ… ಯಾವ ಪಾಪ ಮಾಡಿದ್ದಕ್ಕೆ ಅಂಥ ರಾಜ ವಂಶದಿಂದ ಬಂದಿರುವ ನನ್ನಂಥವರು ಮೈಮಾರಿ ಜೀವನ ನಡೆಸುತ್ತಿದ್ದೇವೆ? ಶಾಮನಂಥ ಸತ್ಕುಲ ಪ್ರಸೂತರದೂ ಇದೇ ಗತಿಯಾದರೆ ಲೋಕ ಉಳಿದೀತೆ? ಛೇ… ಛೇ… ಅಂತಿಮ ಕ್ಷಣದಲಾದರೂ ಗಂಡ ಹೆಂಡತಿ, ತಾಯಿ ಮಕ್ಕಳನ್ನು ಒಂದು ಮಾಡಿ ಪುಣ್ಯ ಭಾಜನಕ್ಕೆ ಪಾತ್ರಳಾಗಬೇಕೆಂದು ನಿರ್ಧರಿಸಿದೆನು… ಗೋಕರ್ಣಕ್ಕೆ ಹೋಗಲೆಂದು ಗೊತ್ತು ಮಾಡಿದ್ದ ಕಾರು ಕೊಟ್ಟು ರುದ್ರಮುನಿ ನನ್ನನ್ನು ಕಳುಹಿಸಿದನು. +ನಾನು ಹೋಗಿ ಅವರ ಮನೆ ಮುಂದೆ ನಿಂತಿದ್ದೇ ಒಂದು ತಪ್ಪಾಯಿತು ನೋಡಿ… ಅವರಾರು ನನ್ನನ್ನು ಕೂಡ್ರು ಅನ್ನಲಿಲ್ಲ, ನಿಲ್ಲು ಅನ್ನಲಿಲ್ಲ… ಅತ್ತೆ ಸೊಸೆಯರಿಬರೂ ಕೂಡಿಕೊಂಡು ಚಿನಾಲಿ, ಮುಂಡೆ, ಬೋಸೂಡಿ, ಕತ್ತೆ ಸೂಳೆ ಅಂತ ಬಾಯಿಗೆ ಬಂದಂಗೆ ಮಾತಾಡಿದರು… ಛೇ ಛೇ… ಹೇಳಲಿಕ್ಕೆ, ಕೇಳಲಿಕ್ಕೆ ಅವು ಒಂದು ಮಾತಲ್ಲ… ಒಂದು ಕಥೆಯಲ್ಲ. “ನೋಡ್ರಮ್ಮಾ… ನೀವು ಯಾವ ಶಿಕ್ಷೆ ಕೊಟ್ರೂ ಅನುಭೊಸ್ತೀನಿ… ಕುತ್ತಿಗೆ ಹಿಚುಕಿ ಸಾಯಿಸ್ರಿ ಅದ್ಕೂ ಸಿದ್ದಳಿದ್ದೇನೆ… ಆದ್ರೆ ನಿಮಗಾಗಿ ಒಂದು ಗುಟುಕು ಜೀವ ಹಿಡ್ಕೊಂಡಿರೋ ಶಾಮಾಶಾಸ್ತ್ರಿಯವರ ಬಾಯಿಗೆ ಗಂಗಾಜಲ ಹಾಕಿ ಬಿಡ್ರಿ… ನೆಮ್ಮದಿಯಿಂದ ಪ್ರಾಣ ಬಿಡ್ತಾರೆ…. ನೀವು ನಿಂತಿದ್ದು ಶವಸಂಸ್ಕಾರ ನಡೆಸಿ ಪುಣ್ಯ ಕಕೋಳ್ರಮ್ಮಾ” ಎಂದು ಬಗೆಬಗೆಯಾಗಿ ಬೇಡಿಕೊಂಡೆ… ಅವರ ಕಾಲಿಗೂ ಬಿದ್ದೆ… ಆದರೆ ಅವರ ಹೃದಯ ಒಂಚೂರು ಕರಗಲಿಲ್ಲ. ಓಣಿ ಜನರ ಪೈಕಿ ಕೆಲವರು ಅವರ ಪರ ನಿಂತು, ಕೆಲವರು ನನ್ನ ಪರನಿಂತು ವಾದ ಮಾಡಿದರೂ ಪ್ರಯೋಜನವಾಗಲಿಲ್ಲ. ಬೆಂಕಿ ಹಚ್ಚಲಿಕ್ಕೆ ಅವರ ಮಗನನ್ನಾದ್ರು ಕಳಿಸಿಕೊಡ್ರಿ ಅಂತ ಬೇಡಿಕೊಂಡಿದ್ದೂ ಪ್ರಯೊಜನವಾಗಲಿಲ್ಲ. ಅವರ ಕ್ರೂರ ವರ್ತನೆಯಿಂದ ನಾನು ನನ್ನ ಮನಸ್ಸನ್ನು ಕಲ್ಲು ಮಾಡಿಕೊಂಡು ಬಿಟ್ಟೆ. ನಿಮ್ಮಂಥ ಕರ್ಮಠರ ಹೊಟ್ಟೆಯಲ್ಲಿ ಹುಟ್ಟುವುದಕ್ಕಿಂಥ ನಮ್ಮಂಥ ಸೂಳೆಯರ ಶಾಮ ಹುಟ್ಟಿದ್ದರೆ ಅವನೆಷ್ಟೋ ಸುಖವಾಗಿ ಬಾಳುತ್ತಿದ್ದ., ಬದುಕುತ್ತಿದ್ದ… ಈ ಅವಸ್ಠೆಯಲ್ಲಿ ಅವನನ್ನು ಕ್ರೂರಾತಿ ಕ್ರೂರವಾಗಿ ದೂರ ಮಾಡುತ್ತಿರುವ ನಿಮ್ಮನ್ನೆಂದೂ ಆ ದೇವರು ಸುಖವಾಗಿಡುವುದಿಲ್ಲ… ಎಂದು ಗೊಣಗುತ್ತ ನಾನು ವಾಪಸಾದೆನು. +ನನ್ನ ಪುಣ್ಯಕ್ಕೆ ಶಾಮ ಇನ್ನೂ ಪ್ರಾಣ ಬಿಟ್ಟಿರಲಿಲ್ಲ. ಹೋಗಬೇಡಾಂದರೂ ಹೋಗಿ ಅನುಭವಿಸಬಾರದ್ದನ್ನು ಅನುಭವಿಸಿದಿಯಲ್ಲಾ… ಎಂಬಂತೆ ಮುಖ ಮಾಡಿ ನೋಡಿದ ನನ್ನತ್ತ. “ನನ್ನನ್ನೇ ನಿನ್ನ ಹೆಂಡತಿ ಅಂತ ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಕೇಳಿಕೊಂಡೆ… “ನನ್ನನ್ನೇ ನಿನ್ನ ಹೆತ್ತ ತಾಯಿ ಅಂತ ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಕೇಳಿಕೊಂಡೆ… “ನಮ್ಮನ್ನೇಲ್ಲ ನಿನ್ನ ನೆಂಟರಿಷ್ಟರೆಂದು ತಿಳ್ಕೊಂಡು ನೆಮ್ಮದಿಯಿಂದ ಪ್ರಾಣ ಬಿಡೋ” ಅಂತ ಪರಿಪರಿಯಾಗಿ ಕೇಳಿಕೊಂಡೆ… ಹೂವಿನ ಪಕಳೆ ಉದುರುವಾಗ ಕಂಪಿಸುತ್ತದಲ್ಲಾ… ಹಾಗೆ ಅವನ ಕೆಳದುಟಿ ಕಂಪಿಸಿತು. ಜನ ಹೋ ಎನ್ನುತ್ತಿದ್ದರು… ಮನೆ +ಒಳಗೆ ಹೊರಗೆ ಕಿಕ್ಕಿರಿದು ಸೇರಿದ್ದ ನೂರಾರು ಮಂದಿ “ನಮ್ಮ ಶಾಮಾ… ನಮ್ಮ ಶಾಮಾ…” ಎಂದು ಗದ್ಗರಿಸುತ್ತಿದ್ದರು. +ನಾಟ್ಯಗಾತಿಯ ಕಾಲಿನಿಂದ ಗೆಜ್ಜೆ ಕಳಚಿದಂತೆ, ಕುಪ್ಪುಸದ ಗುಂಡಿ ಹರಿದುದುರಿದಂತೆ ನಮ್ಮ ಶಾಮ ದೀರ್ಘವಾಗಿ ಕೊನೆಯುಸಿರೆಳೆದು ಪ್ರಾಣ ಬಿಟ್ಟುಬಿಟ್ಟ… “ಹೋ ನಮ್ಮ ಶಾಮಣ್ಣ ಸತ್ತ, ಜೀವ ಹೋಯ್ತು…” ಎಂದು ಜನ ಕೂಗಿದರು. ದುಃಖದ ಪರಿಚಯವಿಲ್ಲದವರೂ ದುಃಖಿಸತೊಡಗಿದರು. ಅತ್ತು ಕರೆದು ಗೊತ್ತಿಲ್ಲದವರು ಗೊಳೋ ಎಂದು ಅಳತೊಡಗಿದರು. ಅವನು ಬದುಕಿದ್ದಾಗ, ಬಯ್ದವರು ತಿರಸ್ಕರಿಸಿದವರೆಲ್ಲ ಬಂದು ಬಂದು ಅಶ್ರುತರ್ಪಣ ಮಾಡಿ ಹೋಗತೊಡಗಿದರು. ತಾನು ಸತ್ತ ಮೇಲೆ ಜನ ಹೀಗೆ ವರ್ತಿಸಬಹುದೆಂದವನಿಗೆ ಮೊದಲೇ ಗೊತ್ತಿದ್ದಲ್ಲಿ ಶಾಮ ಖಂಡಿತ ಅಷ್ಟು ಬೇಗ ಸಾಯುತ್ತಿರಲಿಲ್ಲ… ನಾವೆಲ್ಲ ಬದುಕಿ ಸತ್ತಿದ್ದೆವು… ಶಾಮ ಸತ್ತು ಬದುಕಿದ್ದ. +ನಾವೇನು ಹೇಳಿಕಳಿಸದಿದ್ದರೂ ಅಕ್ಕಾಪುರದಿಂದ ಪೆಟ್ಟಿಗೆ ಮಾಸ್ತರ ಕಾಳಪ್ಪ ಕಾಳಿ ಹಿಡಿಯುವವರ ದಂಡಿನೊಂದಿಗೆ ಬಂದು “ಲೋ ಸಂಗ್ಯಾ ನೀನು ನಿಜವಾಗ್ಲು ಸತ್ತುಬಿಟ್ಟೆಯಲ್ಲೋ… ಇನ್ನು ಸಂಗ್ಯಾ ಬಾಳ್ಯಾ ಡಪ್ಪಿನಾಟ ಅನಾಥವಾಯಿತೆ”ಂದು ದುಃಖಿಸಿದ. ಕಾಳಾಪುರದಿಂದ ಡೊಳ್ಳಿನವರು ಬಂದರು. +ಉತ್ತಂಗಿಯಿಂದ ಸಮಾಳದವರು ಬಂದರು, ಕೊಟ್ಟೂರಿನಿಂದ ಹಲಗೆಯವರು ಬಂದರು, ಕೊತ್ತಲಗಿಯ ಕೆಳಗೇರಿಯಿಂದ ತಮ್ಮಟೆಯವರು ಬಂದರು. ಹ್ಯಾಳ್ಯಾದಿಂದ ಸೋನಯಿಯವರು ಬಂದರು… ಎಲ್ಲರೂ ಬಂದರು… ಬರದೇ ಇದ್ದವರೇ ಪಾಪಿಗಳೆನ್ನಬಹುದು. ನಿಲುವಂಜಿ ನಿಂಗವ್ವ ತನ್ನ ನೂರುಮಂದಿ ಸಂಗಡಿಗರೊಂದಿಗೆ ಬಂದು ಕೂತು ಸದರೀ ಸನ್ನಿವೇಶವನ್ನೇ ಹಾಡು ಮಾಡಿ ಹಾಡತೊಡಗಿದಳು. ಶಾಮ ಬದುಕಿದ್ದಾಗ ಇಷ್ಟೊಂದು ಜನರ ಪ್ರೀತಿ, ಕಕ್ಕುಲಾತಿ +ಸೂರೆಹೊಡೆದಿದ್ದಿರಬಹುದೆಂದು ಕನಸು ಮನಸಲ್ಲೂ ಯೋಚಿಸಿರದಿದ್ದ ನಾನು ಹೆಮ್ಮೆಪಟ್ಟೆ, ದುಃಖಿಸಿದೆ, ಅತ್ತು ಕರೆದೆ. +“ಹೇಣಾನ ಮುಂದಿಟ್ಕೊಂಡು ಅಲ್ಲಿವರ್ಗೂ ಹಿಂಗ ಅತ್ತಗಂತ ಕೂಡ್ರುವುದೇ ಅನಸೂವಿ… ಅದಕ್ಕೊಂದು ಗತಿ ಕಾಣಿಸಲಕೇನಾದರೊಂದು ಏರುಪಾಡು ಮಾಡಬಾರದೇ ನಮ್ಮವ್ವಾ..” ಎಂದು ಜಾಲಗಾರ ಅಂಬವ್ವ ಹೇಳಿದ ಮೆಲೆಯೇ ನನಗೆ ವಸ್ತುಸ್ಥಿತಿಯ ಅರಿವಾದದ್ದು. ಆಗಲೇ ಹೆಣದಿಂದ ಒಂದು ನಮೂನೆಯ ವಾಸನೆ ಬರತೊಡಗಿತ್ತು. ಅದರೊಳಗೆ ಸಾವಿರ ಸಾವಿರ ಹುಳಗಳು ಮರುಹುಟ್ಟುಪಡೆಯುವುದಕ್ಕೂ ಮೊದಲೇ ಸಂಸ್ಕಾರದ ಗತಿ ಕಾಣಿಸಬೆಕೆಂದು ನಿರ್ಧರಿಸಿದೆ. ನಮ್ಮಂಥ ಬಿಕನಾಸಿ ಶೂದ್ರರ ಹೆಣವಾಗಿದ್ದರೆ ತಗೊಂಡು ಒಯ್ದು ಮಣ್ಣಲ್ಲಿಟ್ಟು ಬರಬಹುದು… ಆದರೆ ಶಾಮ ಬ್ರಾಹ್ಮಣರ ಕುಲದಲ್ಲಿ ಹುಟ್ಟಿರುವಾತ, ಸ್ಮಾರ್ತರವನೋ, ಮಾಧ್ವರವನೋ ನಮಗೊಂದೂ ತಿಳಿಯದು! ಯಾರಾದರೊಬ್ಬ ಬ್ರಾಹ್ಮಣರನ್ನು ಕರೆತರಲು ರುದ್ರಮುನಿ, ಇಕಬಾಲು, ಮೊದಲಾದವರು ಬ್ರಾಹ್ಮಣರೋಣಿಗೆ ಹೋಗಿ ವಸ್ತು ಸ್ಥಿತಿ ವಿವರಿಸಿ ಬಯ್ಯಿಸಿಕೊಂಡು ಬಂದರು. ಅವರಾರೂ ಸೋಮವಾರಪೇಟೆ ಕಡೆ ಮುಖ ಮಾಡುವುದೂ ಸಾಧ್ಯವಿರಲಿಲ್ಲ. +ಶಾಮಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿರಬಹುದು… ಆದರೆ ಅವನು ಬ್ರಾಹ್ಮಣರ ಥರ ಬದುಕಿದನೇ! ಬಾಳಿದನೇ! ಶೂದ್ರಾತಿ ಶೂದ್ರರಿಗಿಂತ ಕಡೆಯಾಗಿ ಮದ್ಯ ಮಾಂಸ ಭಕ್ಷಿಸಿ ಬದುಕು ನವೆದ. ಇಂಥವನ ಶವ ಸಂಸ್ಕಾರಕ್ಕೆ ಬ್ರಾಹ್ಮಣರನ್ನು ಹುಡುಕುತ್ತ ಕೂಡ್ರುವುದು ಎಷ್ಟರ ಮಟ್ಟಿಗೆ ಸರಿ?… ಎಂಬ ತರ್ಕ, ವ್ಯಾಖ್ಯೆ ಶುರುವಾಯಿತು. +ನಮ್ಮವನಾಗಿ ಬದುಕಿದವನು ನಮ್ಮವನಾಗಿ ಸತ್ತವನು, ನಮ್ಮವರಂತೆಯೇ ಶವಸಂಸ್ಕಾರ ಮಾಡಿಸಿಕೊಳ್ಳಬಾರದೇಕೆ! +ಮಾದಿಗರು ತಮ್ಮಷ್ಟಕ್ಕೆ ತಾವೆ ಮಸಣಕ್ಕೆ ಹೋಗಿ ಇಷ್ಟುದ್ದ ಅಷ್ಟಗಲದ ಗೋರಿ ತೋಡಿ ಬಂದರು. ಯಾರೋ ಕಟ್ಟಿ ಸಿಂಗರಿಸಿದರು. ಯಾರೋ ಕಳೇಬರಕ್ಕೆ ಸ್ನಾನ ಮಾಡಿಸಿ, ಯಾರೋ ತಂದಿದ್ದ ಮಸಲೈಜು ದೊತರ ಉಡಿಸಿದರು. ನೋಡು ನೋಡುವಷ್ಟರಲ್ಲಿ ನಮ್ಮ ಶಾಮಣ್ಣ ಹೂಮಾಲೆಯಲ್ಲಿ ಹುದುಗಿಕೊಂಡುಬಿಟ್ಟ. ಹಿಡಿ ಹಿಡಿ ಊದುಬತ್ತಿ ಹೊಗೆ ಕಳೆಬರವನ್ನು ಮರೆಮಾಚತೊಡಗಿತು… ಆದರೆ ಅದು ಸಂಸ್ಕಾರದ ಅದ್ವೈರ್ಯಿಯ ಸಮಸ್ಯೆಯನ್ನು ಮರೆಮಾಚಲಾಗಲಿಲ್ಲ. ಯಾರನ್ನು ಕೇಳಿದರೂ! ನಾನು ಒಲ್ಲೆ ನಾನು ಒಲ್ಲೆ ಎಂಬುವವರೇ! ಅವರೆಲ್ಲರಿಗೆ ಅವರವೇ ಆದ ಸಮಸ್ಯೆಗಳಿದ್ದವು. ಒಂದು ರೀತಿಯ ಧರ್ಮ ಸಂಕಟವನ್ನು ಅವರೆಲ್ಲರು ಅನುಭವಿಸುತ್ತಿದ್ದರು. ಆದ್ದರಿಂದ ಯಾರ ಮೇಲೂ ಒತ್ತಡ ಹೇರುವಂತಿರಲಿಲ್ಲ. ಇದರ ಬಗ್ಗೆ ಹೀಗೆ ಯೋಚಿಸುತ್ತ ಕಾಲ ತಳ್ಳುವಂತಿರಲಿಲ್ಲ. ಒಳ್ಳೆಯ ಬದುಕನ್ನೂ ಪಡೆದು ಬಂದವನಲ್ಲ ಶಾಮ, ಒಳ್ಳೆಯ ಸಂಸ್ಕಾರವನ್ನೂ ಪಡೆದು ಬಂದವನಲ್ಲ… ಅವನ ಹಣೆಯಲ್ಲಿ ಬರೆದಂತೆ ಆಗುತ್ತದೆ… ಎಲ್ಲ ಪರಿಣಾಮವನ್ನು ದೇವರ ಮೆಲೆ ಹಾಕಿ ಒಂದು ಇತ್ತು ಒಂದು ಇಲ್ಲ ಎನ್ನುವಂತೆ ಸಂಸ್ಕಾರ ಮುಗಿಸಿ ಬಿಟ್ಟರಾಯಿತು ಎಂದು ಎಲ್ಲರು ನಿರ್ಧರಿಸುತ್ತಿರುವಂತೆ ವಾದ್ಯ ಸಮೂಹವು ಅಶುಭ ಸೂಚಕವಾದ ರಾಗಾಲಾಪನೆ ಮಾಡಲಾರಂಭಿಸಿತು. +ಯಾರು ಕೈಬಿಟ್ಟರೂ ದೇವರು ಕೈಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಬ್ರಾಹ್ಮಣ ಮುದುಕನೋರ್ವ ಲಗುಬಗೆಯಿಂದ ಬಂದ. ತಾನು ಕೊಟ್ಟೂರಿನ ಅಗ್ರಹಾರ ವರದಾಚಾರ್ಯನೆಂದೂ ಕೀ.ಶೇ. ಪರಮೇಶ್ವರ ಶಾಸ್ತ್ರಿಗಳಿಗೂ ಅವರ ಮೊಮ್ಮಗ ಶಾಮಾಶಾಸ್ತ್ರಿಗೂ ತುಂಬ ಬೇಕಾದವನೆಂದೂ ಹೇಳಿ ನಮ್ಮನ್ನೆಲ್ಲ ಅಚ್ಚರಿ ಪಡಿಸಿದ. ರುಗ್ಣ ಶಯ್ಯೆ ಮೇಲೆ ಮೇಲೆ ಮಲಗಿದ್ದ ಆತ ಶಾಮ ತೀರಿಕೊಂಡ ಸುದ್ದಿ ತಿಳಿಯುತ್ತಲೆ ಎದ್ದು ಹೊರಟು ಬಂದಿದ್ದ. ನಾಳೆಯೋ ನಾಡಿದ್ದೋ ಸಾಯಲಿರುವ ತಾನು ಶುಭಾಶುಭಗಳ ಬಗ್ಗೆ ಯಾಕೆ ಯೋಚಿಸಬೇಕು! ಸಂಸ್ಕಾರ ಮಾಡೋದರಿಂದ ಬರುವ ಪುಣ್ಯ ದೊಡ್ಡದು ಎಂದು ಭಾವಿಸಿ ಬಂದಿದ್ದನಾತ… ಆತ ನಮ್ಮನ್ನೆಲ್ಲೆ ಸ್ವಲ್ಪ ದೂರ ಕಳಿಸಿದ. ಉತ್ತರೀಯವನ್ನು ತೊಂಕಕ್ಕೆ ಬಿಗಿದ. ಧರ್ಮ ಪತ್ನಿ ಯಾರಾದ್ರು ಆಗಬೇಕಲ್ಲ ಎಂದು ಕೇಳಿದ. ಆಗ ನಾನು ನಾನಾಗ್ತೀನಿ ಎಂದು ಮುಂದೆ ಬಂದೆ… ‘ಮಗ ಯಾರಾದ್ರು ಆಗಬೇಕಲ್ಲ’ ಎಂದು ಆತ ಕೇಳಿದಾಗಲೇ ನಿಜವಾದ ಸಮಸ್ಯೆ ಹುಟ್ಟಿಕೊಂಡಿತು. “ನಿನ್ನಿಂದ ಒಂದು ಮಗು ಆಗಬೇಕೋ ಶಾಮಾ” ಎಂದು ನಾನು ಅವನಿಗೆ ಗೊಗರೆದಿದ್ದೆಲ್ಲ ವ್ಯರ್ಥವಾಗಿತ್ತು. ಅವನಿಂದ ನನ್ನ ಹೊಟ್ಟೆಯಲ್ಲೊಂದು ಮಗ ಹುಟ್ಟಿದ್ದಿದ್ರೆ ಚಿತೆಗೆ ಅಗ್ನಿಸ್ಪರ್ಶ ಮಾಡಿಸಬಹುದಿತ್ತು. ಹಾಳಾದೋನು ಅದಕ್ಕೆ ಶಿಸ್ತಿನಿಂದ ವರ್ತಿಸಲೇ ಇಲ್ಲ. ಈಗ ನಿಜವಾದ ಆ ಸಮಸ್ಯೆಯ ನಿಜವಾದ ಬಣ್ಣ ಈಗ ಕೋರೈಸುತ್ತಿರುವುದು. +ಯಾರು ಮಗ ಆಗಲಿಕ್ಕೆ ಸಾಧ್ಯ! ಎಲ್ಲರೂ ಪರಸ್ಪರ ಮುಖ ನೋಡಿಕೊಳ್ಳ ತೊದಗಿದರು… ಅಷ್ಟರಲ್ಲಿ ಕಂಠಪೂರ್ತಿ ಕುಡಿದು ನಿಟಾರನೆ ನಿಂತಿದ್ದ ರಾಖೇಶ ಅದ್ಭುತವಾಗಿ ನಡೆದು ಬಂದು ಆಚಾರ್ಯರ ಮುಂದೆ ನಿಂತ. ಮಂತ್ರೋಚ್ಚರಣೆ ಮಾಡುತ್ತಿದ್ದ ಅವರು ಆತನನ್ನು ನಖಶಿಖಾಂತ ನೋಡಿದರು. ಆದಿಶಂಕರರಿಗೆ ಎದುರಾದ ಚಂಡಾಲನ ಅವತಾರವೇ ಇವನೆಂದುಕೊಂಡರು. +“ಯಾಕ್ಸಾಮೀ… ನಾನವ್ನ ಮಗನ್ಗಿಂತ ಯಾತರಾಗ ಕಡ್ಮೆ ಅದೀನ್ರಪ್ಪೋ… ನಿಮ್ಮಂಥೋರಿಂದ ಏನೇನು ಬೋಧ ಕೊಡ್ಲಿಕ್ಕೆ ಸಾಧ್ಯ ಇಲ್ವೋ ಅದ್ನೆಲ್ಲ ಬೋಧ ಕೊಟ್ಟೋನು ನಾನೆ ಕಣ್ರಪ್ಪೋ… ಹಂಗಿದ್ದೋನ್ನ ಹಿಂಗ ಮಾಡ್ದೋನು; ಹಿಂಗಿದ್ದೋನ್ನ ಹಂಗ ಮಾಡಿದ್ದು ಎಲ್ಲಾವು ನಾನೆ… ಅವನೆಂಜ್ಲು ನಾನುಂಡೀನಿ… ನನ್ನೆಂಜ್ಲು ಅವನುಂಡಾನ… ನಾನವ್ನೀಗೆ ತಂದೆಯಾಗಿದ್ದೆ… ಅವ್ನು ನಂಗೆ ಮಗನಂಗಿದ್ದ… ನಾನವ್ನೊಗೆ ಮಗನಂಗಿದ್ದೆ… ಅವ್ನು ನಂಗೆ ತಂದಿಯಾಗಿದ್ದ… ತಂದಿಗೆ ಮಗ ಅಂದ್ರೂ ಒಂದೆ… ಮಗ್ನೀಗೆ ತಂದೆ ಆದ್ರೂ ಒಂದೆ… ತಂದಿ ಮಗ ಅಂಭೋವೆಲ್ಲ ದೇಹದ ಎರಡಂಸ ತಾನೆ! ನನ್ಗೂ ಶಾಮಂಗೂ, ವ್ಯತ್ವಾಸಾನೆ ಇಲ್ಲ… ಸ್ವಾಮಿ… ನನ್ನೇ ಅವ್ನ ಮಗ ಅಂದ್ಕೊಂಡು ಮುಂದಿನ ಕಾರ್‍ಯೇವ್ನ ನಡೆಸ್ಕೊಟ್ಟು ಬುಡ್ರಿಯಪ್ಪಾ…” ಎಂದು ಅವರ ಕಾಲುಹಿಡಿದುಕೊಂಡು ಬಿಟ್ಟ. +ತಾನು ಶಾಮಾನ ಮಗನಿಗಿಂತ ಯಾವುದರಲ್ಲಿ ಕಡಿಮೆ ಏನಿಲ್ಲ ಎಂಬ ಭಾವನೆ ಬಂದದ್ದೇ ಚಿಕ್ಕ ಮಗುವಿನಂತೆ ಉರುಳಾಡತೊಡಗಿದ. ತಪ್ಪು ಒಪ್ಪುಗಳನ್ನೆಲ್ಲ ಇಡೀ ಒಂದು ತಾಸು ನಿವೇದಿಸಿಕೊಂಡು ಕ್ರಮೇಣ ಹಗುರಾದ. +ವರದಾಚಾರ್ಯರು ಅವನಿಗೆ ಮಂತ್ರೋಚ್ಚರಣೆ ಸಹಿತ ಅವನಿಗೆ ಕೇಶ ಮುಂಡನ ಮಾಡಿಸಿ ಜುಟ್ಟು ಬಿಡಿಸಿದರು. ಸ್ನಾನ ಮಾಡಿ ಹೊಸಬಟ್ಟೆ ತೊಡಿಸಿದರು. ಒಂದು ದಾರವನ್ನು ಮಂತ್ರಿಸಿ ಯಜ್ಞೋಪವೀತವನ್ನಾಗಿ ಪರಿವರ್ತಿಸಿ ಅವನ ಕೊರಳಿಗೆ ಹಾಕಿದರು. ನೋಡು ನೋಡುವಷ್ಟರಲ್ಲಿ ಶೂದ್ರಾತಿ ಶೂದ್ರನಾಗಿದ್ದ ರಾಖೇಶ ಬ್ರಾಹ್ಮಣ ವಟುವಿನಂತಾಗಿ ಬಿಟ್ಟ. ಅವನಿಗೆ ಶಿವರಾಮಶಾಸ್ತ್ರೀ ಎಂದು ಪುನರ್‍ನಾಮಕರಣ ಮಾಡಿದರು. ಶಿವರಾಮಶಾಸ್ತ್ರಿ ಎಂದು ಅವರು ಕೂಗಿದೊಡನೆ ಅವನು ‘ಪುಜ್ಯರೇ’ ಎಂದು ಪ್ರತಿಕ್ರಿಯಿಸತೊಡಗಿದನು… ಅವನ ದೇಹದ ಅಣು ಅಣುವು ಶಾಮನ ಉತ್ತರಾಧಿಕಾರತ್ವದ ಪ್ರತಿಧ್ವನಿಸತೊಡಗಿತು. +ಚಟ್ಟದ ಮೆಲೆ ಶಾಮನ ಕಳೇಬರ ಮಲಗಿಸಿದೊಡನೆ ಜನಸ್ತೋಮವು ‘ಚಾಂಗು ಭಲರೇ… ಚಾಂಗು ಚಾಂಗು ಚಾಂಗು ಭಲರೇ’ ಎಂದು ಕೂಗಿತು. ನೂರಾರು ಜನರ ನಡುವೆ ಶವ ಯಾತ್ರೆ ಸಾಗಿತು. ಮುಂದೆ ಒಂದು ಕೈಯಿಂದ ಹೆಗಲ ಮೆಲಿದ್ದ ರಿಣದ ಬಿಂದಿಗೆಯನ್ನೂ ಇನ್ನೊಂದು ಕೈಯಲ್ಲಿ ಬೆಂಕಿಯ ಕುಂಡವನ್ನೂ ಹಿಡಿದುಕೊಂದಿದ್ದ ರಾಖೇಶ ಅಲಿಯಾಸ್ ಶಿವರಾಮ ಶಾಸ್ತ್ರಿ ನದೆಯುತ್ತಿದ್ದನು… ಗ್ರಾಮದ ಮಂದಿ ಸಾಲು ಗಟ್ಟಿ ಈ ಸೋಜಿಗವನ್ನು ನೋಡಿ ಗದ್ಗಿದಿತ ವಾಯಿತು. +ವಿಧವೆಯ ಸ್ಥಾನವನ್ನಲಂಕರಿಸಿದ್ದ ನನಗೆ ಅಲ್ಲಿಗೆ ಹೋಗಲು ಆಗಲೇ ಇಲ್ಲ. ಕಡದರಹಳ್ಳದ ಪಕ್ಕ ಶಾಸ್ತ್ರೋಕ್ತವಾಗಿ ಶಾಮನ ದಹನ ಸಂಸ್ಕಾರವನ್ನು ಮಾಡಲಾಯಿತು…. ಶವ ಸಂಸ್ಕಾರದ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಮನೆಗೆ ಬಂದು ಹೆಣಮಲಗಿಸಿದ ಬಳಿಕ ಜಾಗದಲ್ಲಿ ಮಣ್ಣಿನ ಪಾತ್ರೆಯಲ್ಲಿಟ್ಟಿದ್ದ ನೀರಿನಲ್ಲಿ ತಂತಮ್ಮ ಎಡಪಾದದ ಹೆಬ್ಬೆರಳನ್ನು ಅದ್ದಿ ತಂತಮ್ಮ ಮನೆಗೆ ಹೊರಟು ಹೋದರು. +ಮುಂದೊಂದು ದಿನ ಶಿವರಾಮ ಶಾಸ್ತ್ರಿಯ ಸ್ಥಾನದಲ್ಲಿದ್ದ ರಾಖೆಶನು ಶಾಮನ ದೇಹದ ಅಸ್ಥಿಗಳನ್ನು ಆಯ್ದು ಚೀಲದಲ್ಲಿ ತುಂಬಿಕೊಂಡು ಬಂದು “ಅಮ್ಮಾ… ಅಪ್ಪಾಜಿಯ ದೇಹದ ಅಸ್ಥಿಗಲನ್ನು ಚಿತಾಭಸ್ಮವನ್ನು ಎಲ್ಲಿಡಲಿ ತಾಯೇ” ಎಂದು ಕೇಳಿದ. ಓಹ್… ಕಾಖೇಶ್… ನನ್ನ ಮಗ! ಅವನನ್ನು ಅಪ್ಪಿಕೊಂಡೆ.. ಅತ್ತೆ ಅವನೂ ಅತ್ತ… +ಶಾಮನ ಶ್ರಾದ್ಧ ನಿಗದಿತ ಸಮಯದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಯಾರೋ ಮಾಡಿದರು… ನೂರಾರು ಜನ ಊಟ ಮಾಡಿದರು…. +ಅಸ್ಥಿಮಜ್ಜನ ಮಾಡಲೆಂದು ಇಂಥ ದಿನ ಬರುವುದಾಗಿ ಹೇಳಿ ಹೋದ ವರದಾಚಾರ್ಯರು ಆ ದಿನ ಬರಲೇ ಇಲ್ಲ. ಆ ದಿನ ಬಂದದ್ದು ಅವರ ಮರಣದ ವಾರ್ತೆ… ವರದಾ ಚಾರ್ಯರಂಥ ವ್ಯಕ್ತಿ ಮತ್ತೆ ಹುಟ್ಟಿ ಬರಬಹುದೇ!? +ಶಾಮ ಹೇಳುತ್ತಲೇ ಇದ್ದ ಕಾಶೀಕ್ಷೇತ್ರದ ಬಗ್ಗೆ; ಗಂಗಾನದಿಯ ಬಗ್ಗೆ; ಮಣಿಕರ್ಣಿಕಾ ಪುಷ್ಕರಿಣಿ ಬಗ್ಗೆ… ಅದು ಬಹುಶಃ ತನ್ನ ಕಾಲಾ ನಂತರ ತನ್ನ ಅಸ್ಥಿ ಮತ್ತು ಚಿತಾಭಸ್ಮದ ನಿಮಜ್ಜಕಾರ್ಯವನ್ನು ಅಲ್ಲಿಯೇ ಮಾಡಬೇಕು. ಎಂದಾಗಿರಬಹುದೆಂದುಕೊಂಡೆ. ವಿಧಿಯ ಆಟ ಎಷ್ಟೊಂದು ಕೌಶಲಪೂರ್ಣವೆಂದರೆ ಅವನ ತಾತಂದಿರಾದ ಪರಮೇಶ್ವರ ಶಾಸ್ತ್ರಿಗಳ ದೇಹದ ಅಸ್ಥಿಯ ಮೂಟೆ ಮಣಿಕರ್ಣಿಕಾ ಸಂಯೊಗಕ್ಕಾಗಿ ಅಲ್ಲಿ ಅವರ ಮನೆಯಲ್ಲಿ… ಅವರೊಂದಿಗೆ ಇನ್ನೂ ಕಾಯುತ್ತಲೇ ಇರುವುದು…” ಹೇಳು ಹೇಳುತ್ತಿದ್ದಂತೆ ಅನಸೂಯಮ್ಮಳ ಪಾತ್ರವು ಕಂಠಕಟ್ಟಿ ಬಾಯಿ ಮೇಲೆ ನಾರುಮಡಿಯ ಸೆರಗು ಇಟ್ಟುಕೊಂಡು ಬಿಕ್ಕಿಬಿಕ್ಕಿ ಬಿಕ್ಕಳಿಸತೊಡಗಿದಳು. +ಆ ವೃತ್ತಾಂತವನ್ನೆಲ್ಲ ಕೇಳಿ ನಾನೂ ಗದ್ಗಿತನಾದೆ. ನಾನು ಕಂದಿದ್ದಾಗ ರಾಖೇಶ ತಾನು ಶಿವರಾಮ ಶಾಸ್ತ್ರಿಯಾಗಿದ್ದಾಗಲೀ, ಪುತ್ರ ಸ್ಥಾನದಲ್ಲಿ ನಿಂತು ಶಾಮನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾಗಲೀ ಹೇಳಲೇ ಇಲ್ಲ… ಅಷ್ಟೊತ್ತಿಗಾಗಲೇ ಅವನು ಶಾಸ್ತ್ರಿಯ ವೇಶ ಕಳಚಿಟ್ಟು ತನ್ನ ಮೂಲ ಬದುಕಿಗೆ, ಮೂಲ ವೇಶಕ್ಕೆ ಮರಳಿದ್ದಿದಬೇಕು. +ಊಹೆಗೂ ನಿಲಕದ ಸಂಗತಿಗಳನ್ನು ಕೇಳಿ ನಾನು ದಿಗ್ಭ್ರಮೆಗೊಂಡೆ. ಬೆರಗುಗೊಂಡೆ. ಹೀಗೂ ನಡೆಯುವುದುಂಟಾ ಎಂದು ಆಶ್ಚರ್ಯಪಟ್ಟೆ. +“ಅಮ್ಮಾ… ನೀನು ನನ್ನ ಗೆಳೆಯನ ಕಳೇಬರಕ್ಕೆ ಸಂಸ್ಕಾರದ ಸದ್ಗತಿ ಒದಗಿಸಿದ ಆದಿಶಕ್ತಿ… ಅವನ ಪರವಾಗಿ ನಾನು ನಿನಗೆ ಕೃತಜ್ಞತೆಗಳನ್ನು ಅರ್ಪಿಸಿತ್ತಿದ್ದೇನೆ. ಅವನ ಧರ್ಮ ಪತ್ನಿ ವರಲಕ್ಷ್ಮೀ, ತಾಯಿ ಅಲುಮೇಲಮ್ಮ ಇವರೆಲ್ಲ ಬಂದು ಹೋಗಲಿಲ್ಲ ಎಂಬ ಕೊರತೆಯನ್ನು ನೀನು ತುಂಬಿದಿ… ಅವರೆಲ್ಲ ಶಾಮನ ನೆನಪಿನಿಂದ ಶಾಶ್ವತವಾಗಿ ದೂರ ಉಳಿಯದಿದ್ದುದೇ ಒಂದು ಸೋಜಿಗದ ಸಂಗತಿ ನೋಡಿ” ಎಂದು ಕೇಳಿದೆ. +ಅನಸೂಯಮ್ಮ ಪಾತ್ರವು ನಿಟುಸಿರು ಬಿಟ್ಟು ಹೇಳಿತು – +“ಅದಾದ ಮ್ಯಾಲ… ನಾನು ಅನುಭೋಗಿಸಿದ್ದು ಒಂದಲ್ಲಾ… ಎರಡಲ್ಲಾ… ನೂರಾರು ಕಷ್ಟಕೋಟಳೆ ಅನುಭೋಗಿಸಿದೆ. ಈಗಲೂ ಶಾಮ ಸತ್ತ ದಿನ ನಾನು ರಂಡೆಮುಂಡೆ ಆಗ್ತೀನಿ… ಎಲ್ಲಿದ್ರು ಓಡಿಬಂದು ರಾಖೇಶ ಶಿವರಾಮ ಶಾಸ್ತ್ರಿ ಆಗ್ತಾನೆ… ನಂದು ಎಷ್ಟೇ ತಾಪತ್ರಯ ಇದ್ರೂ ಶಮನ ತಿಥೀನ ಮಾತ್ರ ಶಾಸ್ತ್ರೋಕ್ತವಾಗಿ ಮಾಡ್ತಾ ಬಂದೀವಿ… ಈ ಘಟ ಬದುಕಿರೋವರ್‍ಗೂ ಮಾಡ್ತೀವಿ… ಆಮೇಲೆ…” +ಅಂಥದೊಂದು ದಿನ ಶಾಮನ ತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ನಿರ್ಧರಿಸಿದೆ. +“ಅಮ್ಮಾ… ವರಲಕ್ಷ್ಮೀ ಮತ್ತವರ ಅತ್ತೆ ಕಡೆಯಿಂದ ಏನಾದರೂ ?…” ಎಂದು ಸಂದೇಹ ವ್ಯಕ್ತಪಡಿಸುತ್ತಿದ್ದಂತೆಯೇ ಅನಸೂಯಮ್ಮ ಪಾತ್ರವು ನಡುವೆ ಬಾಯಿ ಹಾಕಿತು…. +“ಅಯ್ಯೋ… ಅಂಥವ್ರೂ ಈ ಭೂಮಿ ಮ್ಯಾಲ ಅದಾರಂದ್ರ ನಂಬಲಿಕ ಶಕ್ಯವಿಲ್ಲ ನೋಡ್ರಿ… ವಾರಕ್ಕೊಮ್ಮೆ, ಪಕ್ಷಕ್ಕೊಮ್ಮೆ ಅವರೋ ಅವರ ಪೈಕಿ ಇನ್ನಾರೋ ಬರೋದು… ಬಾಕಲ ಮುಂದೆ ನಿಂತ್ಗಂಡು ಏನೋ ಭೋಸೂಡಿ… ನಮ್ಮ ಶಾಮಾ ಶಾಸ್ತ್ರೀನ ನುಂಗಿ ನೀರು ಕುಡಿದ್ಯಾ… ಈಗ ಅವ್ನ ಆಸ್ತೀನ ಮನೇಲಿ ಬಚ್ಚಿಟ್ಕೊಂಡು ತೇದ್ಕೊಂಡು ಕುಡೀತಿದ್ದಿ ಏನೇ? ಥೂ ನಿನ್ನ ಬಾಳುವೆಗೆ ಬೆಂಕಿ ಹಾಕಾ…” ಎಂದಿತ್ಯಾದಿ ಸಾಪಳಿಸಿ ಹೋಗುತ್ತಿದ್ದರು… ಆಗ ನಾನು ಬಾಯಿ ಮುಚ್ಕೊಂಡು ತೆಪ್ಪಗಿದ್ದು ಬೈಸಿಕೊಂಡು ಬಿಡುತ್ತಿದ್ದೆ. ಇಂಥದೊಂದು ತಾಳ್ಮೆಯನ್ನು ಶಾಮ ನನಗೆ, ನಮ್ಮೆಲ್ಲರಿಗೆ ಕಲಿಸಿ ಕೊಟ್ಟಿದ್ದ. ಅದೇ ನಮ್ಮನ್ನು ಈಗಲೂ ಕಾಪಾಡುತ್ತಿರುವುದು” ಎಂದು ಹೇಳಿದಳು. +ವರಲಕ್ಷ್ಮಿಯಾಗಲೀ, ಅವರ ಅತ್ತೆ ಅಲಮೇಲಮ್ಮ ಆಗಲೀ ಹೀಗೆ ಮಾತಾಡಿರಬಹುದೆಂದೂ, ವರ್ತಿಸಿರಬಹುದೆಂದೂ ನಂಬಲಿಕ್ಕೆ ಆಗಲಿಲ್ಲ… ಆದರೆ ನಂಬುವುದೀಗ ಅನಿವಾರ್ಯ, ಅದಕ್ಕೆ ಸಾಕಷ್ಟು ಪುರಾವೆಗಳನ್ನು ಅನಸೂಯಮ್ಮ ನನಗೆ ನೀಡಿದ್ದಾಳೆ. ಆದ್ದರಿಂದ ನಂಬದೆ ಹೇಗೆ ಇರುವುದು? +ಇದರ ಬಗ್ಗೆ ಒಂಚೂರು ಹೇಳಲಿಕ್ಕೆ ಸಾಧ್ಯವೇನಮ್ಮಾ ಎಂದು ಕೇಳಿದೆ… ಆಕೆ ಅದಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಳು… +* +* +* +ಅಂಥ ಅನುವಾದ ವ್ಯಕ್ತಿಯನ್ನೇ ಕಳೆದುಕೊಂಡು ಬದುಕುತ್ತಿರುವವಳು ನಾನು… ಏನೂ ಇರದಿದ್ದ ಅಥವಾ ಎಲ್ಲವೂ ಇದ್ದ ಅನನಗೆ ಏನು ಕೊಟ್ಟಿರಲು ಸಾಧ್ಯ!… ಅವನು ನನ್ನಲ್ಲಿ ತನ್ನ ನೆನಪುಗಳನ್ನು ರಾಶಿರಾಶಿಯಾಗಿ ಬಿಟ್ಟುಕೊಟ್ಟಿದ್ದ. ಅವನು ಸತ್ತ ಕ್ಷಣವೇ ನನ್ನಿಂದ ಎಲ್ಲ ಸುಖ ವೈಭೋಗ, ಸೌಭಾಗ್ಯಗಳನ್ನೆಲ್ಲ ಕಿತ್ತುಕೊಂಡು ಬಿಟ್ಟಿದ್ದ. ನಾನು ಆ ಕ್ಷಣದಿಂದ ನನ್ನ ಕಸುನಿನಿಂದ ದೂರ ಸರಿದು ಬಿಟ್ಟೆ. ಎಷ್ಟೇ ಕೊಡುತ್ತೇವೆಂದರೂ ಬರುತ್ತಿದ್ದವರು ನನ್ನ ವಿಷಣ್ಣಾವಸ್ಠೆಯನ್ನು ನೋಡಿದೊಡನೆ ಮುಖ ಸಪ್ಪಗೆ ಮಾಡಿಕೊಂಡು ಹೋಗಿಬಿಡುತ್ತಿದ್ದರು… ಅವರಲ್ಲಿ ಕಾಮಾಸಕ್ತಿಯನ್ನು ಹುಟ್ಟಿಸುವಂಥ ಲಕ್ಷಣವಾಗಲೀ, ಸ್ಪಂದನವಾಗಲೀ ನನ್ನಲ್ಲಿರಲಿಲ್ಲ… ಇದ್ದರೂ ನಾನು ಪ್ರಕಟಿಸುತ್ತಿರಲಿಲ್ಲ. ಅರ್ಥವಾಗದ ವೈರಾಗ್ಯ; ನಿರಾಸಕ್ತಿ ನನ್ನನ್ನು ಆವರಿಸಿಬಿಟ್ಟಿತ್ತು. “ಹಿಂಗಿದ್ರೆ ಹೆಂಗಕ್ಕಾ… ಮನೀ ಮಂದ್ಯೆಲ್ಲಾ ಉಪಾಸ ವನ್ವಾಸ ಅನುಭೋಗಿಸಬೇಕಾಗತೈತೆ. ಅಷ್ಟೆ…” ’ಆದದಾಯ್ತು… ಏನು ಮಾಡಿದ್ರು… ಆ ಸತ್ತೋನು ಎದ್ದು ಬಂದಾನ…? ಅವನು ಬದುಕಿದ್ದಗಿಲ್ಲದ ವೈರಾಗ್ಯ ಅವನು ಸತ್ತ ಮ್ಯಾಲೆ ಬರಬೇಕಂತೀನಿ… ಕೊಪ್ಪಳದ ಕಡ್ಯೋರು ಸಂಗ್ಯಾ ಬಾಳ್ಯಾ ಆಡ್ತಾರಂತೆ… ಅದ್ರಲ್ಲಿ ನೀನು ಗಂಗೀ ಪಾರ್‍ಟು ಮಾಡ್ಬೇಕಂತೆ… ಸುಮ್ನೆ ಒಪ್ಕೊಂಡು ಅಡ್ವಾನ್ಸು ತಗಂಬಿಡು” ಎಂದು ರಾಖೇಶ ಪರಿಪರಿಯಾಗಿ ಹೇಳಿದ… ನನ್ನ ನಿಜವಾದ ಸಂಗ್ಯಾನೇ ಹೊರಟು ಹೋಗಿರುವಾಗ ಇನ್ನೊಬ್ಬ ಪಾತ್ರಧಾರಿಯನ್ನು ಸಂಗ್ಯಾ ಎಂದು ಹೇಗೆ ಒಪ್ಪಿಕೊಳ್ಳುವುದು? ಸಂಗ್ಯಾನ ಕೊಲೆ ಆದ ಮೆಲೆ ಗಂಗಿಯ ಬದುಕು ಒಂದು ಬದುಕೇ! ನಾನು ಯಾರು ಎಷ್ಟು ಹೇಳಿದರೂ ಒಪ್ಪಿಕೊಳ್ಳುತ್ತಿರಲಿಲ್ಲ… ನಮ್ಮ ಮುದುಕಿಯೂ ನನ್ನನ್ನೂ; ನನ್ನ ವೈಧವ್ಯವನ್ನು ಗೌರವಿಸುವಂಥ ಸಾಹುಕಾರ ವ್ಯಕ್ತಿಯನ್ನು ನೋಡಿರುವುದಾಗಿಯೂ; ಅವನೊಂದಿಗೆ ಸುಖವಾಗಿರು ಎಂದೂ ಪೀಡಿಸತೊಡಗಿತು. ಅದರ ಮಾತಿಗೂ ಸೊಪ್ಪು ಹಾಕದೆ ಇದ್ದುಬಿಟ್ಟೆ, ಎರಡು ಮನೆಗಳ ಬಾಡಿಗೆ ಬರುತ್ತಿದ್ದರಿಂದ ಎರಡು ಹೊತ್ತಿನ ಊಟಕ್ಕೆ ತೊಂದರೆ ಇರಲಿಲ್ಲ. ಬೇಸರವಾದಾಗಲೆಲ್ಲ ಯಾವುದೋ ಒಂದು ಪುಸ್ತಕ ಇಟ್ಟುಕೊಂಡು ಒಂಟಿಯಾಗಿ ಕೂತು ಬಿಡುವುದನ್ನು ಅಭ್ಯಾಸ ಮಾಡಿಕೊಂಡೆ ಆದರೆ ನನ್ನ ಧ್ಯಾನ ಸ್ಥಿತಿಗೆ ಭಂಗ ಬರುತ್ತಿದ್ದುದು ಶಾಮನ ಸಂಬಂಧೀಕರಿಂದ. ನಾನಿರುವ ಮನೆ ಮತ್ತು ಬಾಡಿಗೆ ಕೊಟ್ಟಿರುವ ಮನೆಗಳು ಶಾಮನಿಗೆ ಸೇರಿದವು ಎಂದು ಗಲಾಟೆ ಮಾಡುತ್ತಿದ್ದವರು ನಿಜಾಂಶ ತಿಳಿದು ಅದನ್ನು ಬಿಟ್ಟುಬಿಟ್ಟರು. ಒಮ್ಮೆ ನಗಗಳನ್ನು ಕುರಿತಂತೆ, ಇನ್ನೊಮ್ಮೆ ನಾಣ್ಯಗಳನ್ನು ಕುರಿತಂತೆ ಬಂದು ಏರುದನಿಯಲ್ಲಿ ಮಾತಾಡಿ ತಲೆ ತಿಂದು ಹೋಗುತ್ತಿದ್ದರು. ನಾನು ಅವರ ಯಾವ ಮಾತಿಗೂ ಕಿಮಕ್ ಎನ್ನುವಂತಿರಲಿಲ್ಲ. ನಾನು ಒಂದು ಮಾತು ಹೇಳಿದರೆ ಅವರೆಲ್ಲ ಬಾಯಿಗಳನ್ನು ಶಾಶ್ವತವಾಗಿ ಮುಚ್ಚಿಸಬಲ್ಲವಂಥವರು ನನ್ನ ಆಸುಪಾಸಿನಲ್ಲಿದ್ದರು. ಅವರ ಸಹಾಯದಿಂದ ನಾನು ಅನೇಕ ಹೇಮಾಹೇಮಿಗಳ ಬಾಯಿ ಮುಚ್ಚಿಸಿರುವ ಉದಾಹರಣೆಗಳುಂಟು. ಆದರೆ ಆ ದಿನದಿಂದ ಅವರನ್ನು ನಾನು ದೂರ ಇಟ್ಟಿದ್ದೆ. ಅವರ ಚುಟುಚುಟುಗುಟ್ಟುತ್ತಿದ್ದ ಕೈಗಳಿಗೆ ಆಹಾರ ಒದಗಿಸುವುದು ನನ್ನಿಂದ ಶಕ್ಯವಿರಲಿಲ್ಲ. ಇಂಥವರಿಗೆ ಅಂಥವರನ್ನು ಆಹಾರವಾಗಿ ಕೊಡಲಿಕ್ಕೆ ಹೇಗೆ ಸಾಧ್ಯ? ಎಷ್ಟೇ ಬಯ್ದರೂ; ಎಷ್ಟೇ ಅವಮಾನಿಸಿದರೂ ಅವರ ಬಗ್ಗೆ ನನಗೆ ಎಳ್ಳಷ್ಟು ಬೇಸರವಾಗಲೀ, ಕೋಪವಾಗಲೀ ಇರಲಿಲ್ಲ. ಎಲ್ಲ ಗಂಡಂದಿರಂತೆ ಶಾಮನೂ ತನ್ನವರೊಂದಿಗಿದ್ದಿದ್ದಲ್ಲಿ ಅವರ ಕಾಲಾನುಕಾಲದ ಅಗತ್ಯಗಳನ್ನು ಪೂರೈಸಿದ್ದಲ್ಲಿ ಅವರ್‍ಯಾಕೆ ಅವನ ಮರಣೋತ್ತರವಾಗಿ ನನ್ನ ಮೇಲೆ ಹರಿಹಾಯುತ್ತಿದ್ದರು! ಇರೋದೊಂದು ಮನೆ ಬಿಟ್ಟರೆ ಬೇರೆ ಆಸ್ತಿಯಾದರೂ ಏನಿದೆ? ವರಲಕ್ಷ್ಮಿಯು ನನ್ನಂತೆ ನಿರುಮ್ಮಳತೆಯಿಂದ ಬದುಕಲು, ತನ್ನವರನ್ನು ಬದುಕಿಸಲು ಹೇಗೆ ಸಾಧ್ಯ? ಗಂಡ ಶಾಮ ಸತ್ತ ಕ್ಷಣವೇ ಶೃಂಗೇರಿಗೆ ಹೋಗಿ ಕೇಶ ಮುಂಡನ ಮಾಡಿಸಿಕೊಂಡು ನಾರುಮಡಿಯುತ್ತು ವಿಧವಾ ಪಟ್ಟ ಕಟ್ಟಿಸಿಕೊಂಡು ಬಂದು ಬಿಟ್ಟಳಂತೆ. ವೈಧವ್ಯದಲ್ಲೂ ಪಾತಿವ್ರತ್ಯದ ವಾಸನೆ ಘಮ್ಮಂತ ಹರಡುತ್ತಿರಬೇಕು ಎಂಬ ಗುಣದ ಹೆಣ್ಣು. ಅಂಥ ಕರ್ಮಠ ಮಹಿಳೆ ತನ್ನನ್ನು ನಂಬಿಕೊಂಡಿರುವ ವೃದ್ಧ ಅತ್ತೆಯನ್ನಾಗಲೀ, ಎಳೆಯ ಮಕ್ಕಳನ್ನು ಹೇಗೆ ಪಾಲನೆ, ಪೋಷಣೆ ಮಾಡಿಯಾಳು! ತಾನಾದರೆ ಪಾತಿವ್ರತ್ಯವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ ರಾಜಾರೋಷವಾಗಿ ಬದುಕಬಹುದು. ಆದರೆ ಅದು ಆಕೆಗೆ ಸಾಧ್ಯವಿಲ್ಲ! ಆರ್ಥಿಕ ಅಸಹಾಯಕತೆಯಿಂದಾಗಿಯೇ ಆಕೆ ನನ್ನಂಥವರ ಮೇಲೆ ಹರಿಹಾಯುತ್ತಿರುವುದು. ತಾಯ್ತನದ ಹಕ್ಕಿನ ಒಂದು ಅಂಶವನ್ನು ನನಗೆ ಕೊಟ್ಟರೆ ಈಗಿರುವ ಎರಡು ಮನೆಗಳನ್ನು ಮಾರಿ ಆ ಮಕ್ಕಳ ಹೆಸರಿನಲ್ಲಿ ಠೇವಣಿ ಇದಬಹುದು! ಆದರೆ ಅವರು ಆ ಎಳೆಯ ಮಕ್ಕಳ ಸುತ್ತ ಏಳು ಸುತ್ತಿನ ಕೋಟೆಯಂತೆ ನಿಂತಿರುವರಲ್ಲ! ಅವರನ್ನು ಭೇದಿಸಿಕೊಂಡು ಮಕ್ಕಳನ್ನು ತಲುಪುವುದು ಅಷ್ಟು ಸುಲಭ ಸಂಗತಿಯಾಗಿರಲಿಲ್ಲ. ಆದ್ದರಿಂದ ಆ ಯೋಚನೆಯನ್ನು ಅಲ್ಲಿಗೆ ಬಿಟ್ಟುಕೊಟ್ಟಿದ್ದೆ. +ಆದರೆ ಮುಂದೊಂದು ದಿನ ಪವಾಡ ರೀತಿಯ ಒಂದು ಘಟನೆ ನಡೆಯಿತು. ಶಾಮ ಎಷ್ಟೊಂದು ಮೂರ್ಖನಿದ್ದ; ಹುಚ್ಚನಿದ್ದ ಎಂಬುದನ್ನು ಈ ಘಟನೆಯಿಂದ ಸಾಬೀತಾಯಿತು. ಅವನು ಹೀಗೆ ಮಾಡಿರಬಹುದೆಂದು ನಾನೆಂದೂ ಊಹಿಸಿರಲಿಲ್ಲ… ಅದೆಂದರೆ ಅವನು ತನ್ನ ಸೇವಾ ಸೌಲಭ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಭಾಗಗಳಲ್ಲಿ ನನ್ನ ಹೆಸರನ್ನು ನಾಮ ನಿರ್ದೇಶನ ಮಾಡಿಬಿಟ್ಟಿದ್ದ. ಪಿಂಚಣಿ ಕೂಡ. ಬ್ಯಾಂಕಿನ ಅಧಿಕಾರಿಗಳು ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಸಹಿ ಮಾಡಿಸಿಕೊಂಡು ಚೆಕ್ ಕೊಟ್ಟರು. ಅದರಲ್ಲಿದ್ದ ಒಂದು ಲಕ್ಷದಾ ಮೂವತ್ತು ಸಾವಿರ ರೂಪಾಯಿಯ ಮೊತ್ತ ನೋಡಿ ನನಗೆ ಗಾಬರಿಯಾಯಿತು. ಶಾಮನ ಹೃದಯ ವೈಶಾಲ್ಯಕ್ಕೆ ಮಾರು ಹೋಗಿ, ತತ್ತರಿಸಿ ಗಳಗಳನೆ ಅತ್ತುಬಿಟೆ. ಲಗುನಗೆಯಿಂದ ಬ್ಯಾಂಕಿನಲ್ಲಿ ಮುರಿಸಿ ಹಂಡೇ ಚೀಲದಲ್ಲಿ ಅದನ್ನೆಲ್ಲ ತುಂಬಿಕೊಂಡು ಹೊರಬಿದ್ದೆ. ಇದೆಲ್ಲ ಗೊತ್ತಾಗಿ ಮುದುಕಿ, ರಾಖೇಶ ಧಾವಿಸಿ ನನ್ನೆದುರಿಗೆ ಬಂದರು. ನಾನು ಅದನ್ನೆಲ್ಲ ತೆಗೆದುಕೊಂಡು ಕೊಟ್ಟೂರಿಗೆ ಹೊರಟಿದ್ದ ಬಸ್ಸು ಹತ್ತುತ್ತಿರಿರುವದು ಕಂಡು ಗಾಬರಿಯಾದರು, ತಡೆಯಲೆತ್ನಿಸಿದರು. ಆದರೆ ಅವರ ಮಾತುಗಳನ್ನು ನಾನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೇಗಾದರೂ ಮಾಡಿ ಶಾಮ ಮಾಡಿರುವ ತಪ್ಪನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂಬುದೇ ನನ್ನ ಅಚಲ ನಿಲುವಾಗಿತ್ತು. +ನಾನು ಹೊರಟಿರುವುದು ತಲುಪಲಿರುವುದು ಅವರಿಗೆ ಹೇಗೆ ಮುಂಚಿತವಾಗಿ ತಿಳಿಯಿತೋ ಏನೋ! ದೇವರಿಗೇ ಗೊತ್ತು! ನಾನು ಅಲ್ಲಿಗೆ ಸಮೀಪಿಸುತ್ತಿರುವ ಹೊಟ್ಟಿಗಾಲೇ ಹತ್ತಾರು ಮಂದಿ ಗುಂಪುಗೂಡಿ ಉರಿವ ಕಣ್ಣುಗಳನ್ನು ಬಿಡುತ್ತ ನನಗೆ ಸ್ವಾಗತ ಕೋರಿದರು. +“ಏನೇ… ಕತ್ತೆ ಸೂಳೆ… ನನ್ನ ಮಗನನ್ನು ಬಲಿತೆಗೆದುಕೊಂಡವಳಾದ ನೀನು ಇಲ್ಲಿಗೆ ಬರಲಿಕ್ಕೆ ಎಷ್ಟು ಧೈರ್ಯವೇ! ಈ ಭೂಮಿ ಮೇಲೆ ನೀನಿರಬೇಕೊಂದು, ಇಲ್ಲ ನಾವಿರಬೇಕು ಒಂದು… ಬಂದ ಪಾಪ ಬರಲಿ…” ಎಂದು ಅಲುಮೇಲಮ್ಮ ತಾನು ವೃದ್ಧೆ ಎಂಬುದನ್ನು ಮರೆತು ಕೈಲಿದ್ದ ಕೋಲನ್ನು ಝಳಪಿಸಿತು. +“ಅಯ್ಯಯ್ಯೋ ನನ್ನ ಸೌಭಾಗ್ಯವನ್ನು ಕಸಿದುಕೊಂಡವಳೇ ಇಲ್ಲಿಗೆ ಬಂದ್‌ಬಿಟ್ಟಳಲ್ಲ. ಹೆಣ್ಣೋ! ಪೂತನಿಯೋ ಇಲ್ಲಾ… ಇಲ್ಲಾ… ನಿನ್ನನ್ನು ಬಲಿತೆಗೆದುಕೊಂಡು ನನ್ನ ಗಂಡನ ಆತ್ಮಕ್ಕೆ ಶಾಂತಿ ಒದಗಿಸದೇ ಬಿಡುವುದಿಲ್ಲ… ನನ್ನ ಮಕ್ಕಳೂ ಅನಾಥವಾದರೂ ಚಿಂತೆ ಇಲ್ಲ…” ಎಂದು +ವರಲಕ್ಷ್ಮಿಯು ಯಾವುದೋ ಒಂದು ಬಡಿಗೆಯನ್ನು ಕೈಯಲ್ಲಿ ಹಿಡಿದುಕೊಂದು ಕುಪ್ಪಳಿಸಿ ನಿಂತಳು. +ಎಡಗಡೆ ವೃದ್ಧೆ ಅಲುಮೇಲಮ್ಮನೂ +ಬಲಗಡೆ ವಿಧವೆ ವರಲಕ್ಷ್ಮಿಯೂ +ತಲೆಬಾಗಿಲ ಬಳಿ ಹೋ ಎಂದು ಅಳುತ್ತಿರುವ ಎಳೆಕಂದಮ್ಮಗಳು… +ಅವುಗಳನ್ನು ನೋಡಿ ನನ್ನ ಕಂಠ ಕಟ್ಟಿಬಿಟ್ತಿತು. +ನಾನು ಏನೋ ಮಾತಾಡಲೆಂದು ಬಾಯಿ ತೆರೆಯುವಷ್ಟರಲ್ಲಿ ಗುಂಪಿನಲ್ಲಿ ಇದ್ದ ಒಬ್ಬ – +“ನಾಚ್ಕೆ, ಹೇಸಿಗೆ, ಭಯ ಭೀತಿ… ಒಂದೂ ಇದ್ದಂಗಿಲ್ಲ ಬಿಡವ್ವ ನಿಂಗೆ… ಸಂಸಾರಸ್ಥರೋಣಿಯೊಳಗೆ ಬರೋಕೆ ನಿನಗೆಷ್ಟು ಧೈರ್ಯಭೇ… ನಿನ್ನೌವ್ನ… ಇನ್ನೊಂದು ಸ್ವಲ್ಪ ಹೊತ್ನಲ್ಲಿ ನಿನ್ಗೆ ಬುದ್ಧಿ ಕಲಿಸ್ತೀವಿ ತಡಿ… ಗತಿ ಗಣಪತಿ ಆಗತೈತಿ” ಎಂದು ಹಲ್ಲು ಕಡಿದ… +ಬೀಡಿ ಸೇದುತ್ತಿದ್ದ ಇನ್ನೊಬ್ಬ – +“ಅದಕೇನ್ನಂಗೆ ಬುದ್ಧಿ ಹೇಳ್ತಿ ಮಾವಾ… ಸೊಂಟದಾಕಿಟ್ಟುಕೊಂಡಿರೋದ್ನ ತಗೊಂಡು ಒಂದೇ ಏಟಿಗೆ ಕಚಕ್ಕನ್ನಂಗೆ ಹಾಕಿ ಬಿಡು…. ಪೋಲಿಸರ್ನ ನಾನು ಸರಿ ಮಾಡ್ತೀನಿ…” ಎಂದು ಬುಸುಬುಸು ಹೊಗೆ ಬಿಡತೊಡಗಿದ್. +ಕಟ್ಟಿಗೆ ಕೊಡಲಿ ಮಸೆಯುತ್ತಿದ್ದ ಮತ್ತೊಬ್ಬ – +” ಆ ಕತ್ತೆ ಲೌಡಿ… ಚೀಲದಾಗೇನೋ ಬಾಂಬು ಗೀಂಬು ಇಟ್ಕೊಂಡು ಬಂದಂಗದಾಳ ಕಣ್ರಣ್ಣೋ ಹುಷಾರಿ… ನೀವು ಮುಂದಿಂದ ಬಂದು ಹಾಕ್ರಿ… ನಾನು ಹಿಂದಿನಿಂದ ಬಂದು ಹಾಕ್ತೀನಿ ಏನ್ರಮ್ಮೋ…ನೀವು ಒಳಾಕ ನಡೀರಿ… ರಕ್ತ ನೋಡೀದ್ರೆ ಒಬ್ಬೊಬ್ಬ್ರಿಗೆ ಹೆದರಿಕೆ ಆಗತೈತಿ” ಎಂದು ಕೂಗಿ ಮೊನಚು ಪರೀಕ್ಷಿಸಿದ. +ಅಷ್ಟೊತ್ತಿಗಾಗಲೆ ನನ್ನ ಕೊಲೆ ಬೃಂದಾವನದ ಕಟ್ಟೆ ಬಳಿ ನಡೆಯಲಿರುವುದನ್ನು ಕಣ್ತುಂಬ ನೋಡಿ ಆನಂದಿಸಲು ಹೊರಗಡೆ ಕಟ್ಟೆ ಮೇಲೆ, ಕಿಟಕಿ, ಬಾಗಿಲುಗಳಲ್ಲಿ ಮಾಳಿಗೆ ಮೇಲೆ ಎಲ್ಲಿ ಬೇಕೆಂದರಲ್ಲಿ ಜನ ಸೇರಿ ನಿಂತಿದ್ದರು.. +ಒಬ್ಬ ಚೂರಿ ಹಿಡಿದುಕೊಂಡು ತೋರಿಸುತ್ತ, ಝಳಪಿಸುತ್ತ ಹಾತ್ತಿರ ಬಂದು – +“ಏಯ್… ಆ ಚೀಲದಾಗ ಏನಿಟ್ಕಂಡೀ… ಬಾಂಬು ಗೀಂಬು ಇಟ್ಕೊಂಡಿದ್ರೆ ಮರ್ಯಾದೆಯಿಂದ ತೋರಿಸಿಬಿಡು. ಇಲ್ಲಾಂದ್ರೆ ಕಚಕ್ ಅಂತ ಕೊಲೆ ಮಾಡ್ಬಿದ್ತೀನಿ” ಎಂದು ಗದರಿಸಿದ… +ಜನ ಹೌದೂ… ಹೌದೂ… ಎಂದು ಕೂಗಿದರು. +ವರಲಕ್ಷ್ಮೀ… ಅಲುಮೆಲಮ್ಮ ಕೂಡ ಹಾಕೂ… ಹಾಕೂ… ಅಂದರು. +ಅವರೆಲ್ಲರ ವರ್ತನೆ ನೋಡಿ ನಾನು ರೋಸಿಬಿಟ್ಟೆ. ತಡೆದುಕೊಳ್ಳಲಾಗಲಿಲ್ಲ. ಕೋಪ ಹೊಕ್ಕಳು ದಾರದಿಂದ ಪುಟಿದು ಬಂತು… +“ಏನಲೋ ಭಡ್ಕಾವ್… ಏನೋ ತಲೆಕೆಟ್ಟೋವಂತ ಸುಮ್ಕಿದ್ರೆ ಬಾಯೀಗ್ ಬಂದಂಗ ಮಾತಾಡ್ತೀರಾ… ಭಾಡ್ಯಾರ… ನೀವೊಂದು ಗಂಡಸ್ರು… ನನ್ನೇನು ಕೈಲಾಗದೋಳಂದ್ಕಿಂಡೀರೇನು? ಐದಾರು ಖೂನಿ ಮಾಡಿ ದಕ್ಕಿಸಿಕೊಂಡಾಕಿ ನಾನು… ನನಗ್ಯಾರು ಹಿಂದಿಲ್ಲ ಮುಂದಿಲ್ಲ ಅಂದ್ಕೊಂಡಿರೇನು? ನಿಮ್ಮನ್ನೆಲ್ಲ ಕಡಿಸಿ ಪುಟ್ಟಿಗೆ ತುಂಕೊಂಡು ಹೋಗಿ ಕರಗಲ್ಲಿಗೆ ಹೆಡೆ ಹಿಡ್ದೇನು ಹುಷಾರ್…” ಎಂದು ನಾನು ಕತ್ತಿಗೆ ಕೈಹಚ್ಚಿ ತಳ್ಳಲು ಅವನು ಅಯ್ಯಾಯ್ಯೋ ಎಂದರಚುತ್ತ ಅಷ್ಟು ದೂರ ಹೋಗಿ ಬಿದ್ದನು. +ಈಕೇನು ಮನುಸ್ಯೋಳೋ ರಾಕ್ಷಸಿಯೋ ಎಂದು ಉಳಿದವರು ಹೆದರಿ ಹಿಂದೆ ಸರಿದರು. ಅತ್ತೆ ಸೊಸೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಗದಗದ ನಡುಗತೊಡಗಿದರು. +ಅವರ ಸ್ಥಿತಿ ಕಂಡು ನನ್ನ ಕರುಳು ಕರಗಿತು. +“ಏನವ್ವೋ… ನನ್ ಸವತಿ… ಬಾ ಇಲ್ಲಿ” ಎಂದು ಕರೆದೆ. +“ಏನೇ ಹಾದಗಿತ್ತಿ… ನನ್ಗೇ ಸವತಿ ಅಂತೀ‌ಏನೆ? ಎಂದು ಅಲ್ಲಿಂದಲೇ ಪ್ರತಿಭಟಿಸಿದಳು. +“ನಿನ್ನ ಸವತಿ ಅಂದೆ ಮತ್ತೇನು ಕರಿಲಭೇ… ನಿನ್ನಂಗ ನಾನೂ ಶಾಮನ ಕೂಡೆ ಬಾಳುವೆ ಮಾಡಿದಾಕಿ ಅದೀನಿ… ನೀನು ನಂಗೆ ತಂಗಿ ಆಗಬೇಕೋ; ಅಕ್ಕ ಆಗಬೇಕೋ ನಂಗೊತ್ತಿಲ್ಲ… ಕಷ್ಟದ ಕಾಲ್ದಾಗ ನೀನು ನಿನ್ನ ಗಂಡನ್ನ ನೋಡ್ಕೊಲಿಲ್ಲಬೇ… ಅವ್ನಲ್ಲಿ ಉಪಾಸ ವನ್ವಾಸ ಮಾಡ್ತಿದ್ದಾಗ ನೀನಿಲ್ಲಿ ಕೈಲಿ ತಾಳಿ ಬೊಟ್ಟೆಡಕೊಂಡು ಸತ್ನಾರಾಣನ ಪೂಜೆ ಮಾಡ್ತಿದ್ದೀ…” ಎಂದು ನಾನು ಹೇಳುತ್ತಿದ್ದಾಗ ಅಲುಮೇಲಮ್ಮ ಒಂದು ಕೈಯನ್ನು ಸೊಂಟದ ಮೇಲಿಟ್ಟುಕೊಂಡು ಇನ್ನೊಂದು ಕೈಯನ್ನು ಗಾಳಿಯಲ್ಲಿ ಎತ್ತಿ ತಿರುವುತ್ತ ಬಂದು ಅಡ್ಡ ಬಾಯಿ ಹಾಕಿತು. +“ಏನೇ ಶೂದ್ರ ಮುಂಡೇದೆ… ನನ್ ಸೊಸೀನ ಬಾಯಿಗೆ ಬಂದಂಗ ಅನ್ತಾ ಇದ್ದೀ. ನಿನ್ನ ನಾಲಿಗೆ ತುಂಬ ಉದ್ದ ಆಗಿದೆಯಲ್ಲಾ…” +“ಬೇ ಮುದ್ಯೇದೇ.,.. ನಮ್ಮ ಅನಸೂವಕ್ಕನ ಬಾಯಿಗೆ ಬಂದಂಗ ಅಂದ್ರ ನಾಲಗೇನ ಕಿತ್ತು ಕೈಯಾಗ ಕೊಡ್ತೀವಿ ನೋಡು… ಶಾಮನ್ನ ಕಳ್ಕೊಂಡು ನಾವು ಅನುಭವಿಸ್ತಿರೋದು ಆ ಪರಮಾತ್ಮನಿಗೇ ಗೊಟ್ತು… ನೀವು ತಾಯಾಗಿ, ಹೆಂಡ್ತಿಯಾಗಿ ಅದ್ರೊಂಚೂರು ದುಕ್ಕನಾದ್ರು ಅನುಭೋಗಿಸ್ತಿದ್ದೀರಾ? ನಿಮ್ಗೆ ನಿಮ್ ಜಾತೀನೆ ಹೆಚ್ಚಯ್ತು ಹೊರ್ತು ಅವನು ಹೆಚ್ಚಗ್ಲಿಲ್ಲ… ಹೆಂಗದೀರಿ ನೋಡ್ರಿ ಒಬ್ಬೊಬ್ಬ್ರು…” ಎಂದು ತಾನೆ ಗುಂಪು ಕಟ್ಟಿಕೊಂಡು ಬಂದ ರಾಖೇಶ್ ಅಸಲೀ ಮಾತಾಡಿದ. +ನಾನು ಅವನ ಕಡೆ ದುರುಗುಟ್ಟಿ ನೋಡುತ್ತ – +“ಲೋ ನಾವತ್ತೆಸೊಸ್ತ್ರು ಹೆಂಗಾರ ಜಗಳ ಆಡ್ಕೊಂತೀವಿ… ನಿನ್ಯಾವೊನೋ ಅಡ್ಡ ಬಂದು ಹೇಳ್ಲಾಕ…” ಎಂದೆ. +ಅದಕ್ಕಿದ್ದು ಅವನು – +“ನನ್ನೆ ಯಾರು ಅಂತಿ ಏನಭೇ ಯವಾ… ಶಾಮನ ಹೆಣಕೆ ಬೆಂಕಿ ಹಚ್ಚೋನಾಗ್ಲೆ ಮರ್ತುಬಿಟ್ರೇನು… ನಾನು ಶಾಮನ ಮಗ ಶಿವರಾಮ ಶಾಸ್ತ್ರಿ… ನೋಡು ಇನ್ನೂ ಮೈಮೆಲೆ ಉಳಕೊಂಡವೆ” ಎಂದು ಜುಟ್ಟವನ್ನು; ಅಂಗಿ ಎತ್ತಿ ಜನಿವಾರವನ್ನು ತೋರಿಸಿದ. +ಶಾಮನ ಪ್ರಥಮ ಪುಣ್ಯ ತಿಥಿ ಮಾಡಿ ಎರಡೇ ದಿನಗಳಾಗಿದ್ದರಿಂದ ಇನ್ನು ಅವೆಲ್ಲ ಮೈಮೇಲೆ ಉಳಿದುಕೊಂದಿದ್ದವು. +ರಾಖೇಶ ತೋರಿಸುತ್ತಲೆ ಎಲ್ಲರು ಗೊಳ್ಳನೆ ನಗಾಡಿದರು… +ಓಹ್… ಶಾಮಾಶಾಸ್ತ್ರಿ ಮಗ ತಂದೆಗಿಂತ್ಲೂ ದೊಡ್ಡೋನದಾನೆ… ದೊಡ್ಡ ವಯಸ್ಸಿನ ಮಗ್ನೀಗೆ ಚಿಕ್ಕ ವಯಸ್ಸಿನ ತಂದೆ… ವಂಡರ್ಫುಲ್… ಜನ ಗಟ್ಟಿಯಾಗಿ ಗೊಣಗಿಕೊಂಡರು. +“ಓಹೋಹೋ… ಅವನೊಬ್ಬ ಮಗ್ನಂತೆ! ಇವಳೊಬ್ಬ ಗರತಿಯಂತೆ… “ಮುಂಗೈ ತಿರುವುತ್ತ ಮುಂದೆ ಬಂದು ಅಲುಮೇಲಮ್ಮ ಮುಂದುವರಿದು ಹೇಳಿದಳು – “ಪತಿವ್ರತೆ ಅಂದ್ರೆ ಸಾಮಾನ್ಯ ಮನುಷ್ಯಳಲ್ಲಿ ಕಣೇ… ಕನಸು ಮನಸಿನಲ್ಲೂ ಪಂಚೇಂದ್ರಿಯಗಳಲ್ಲೂ ಪತಿ ಪರಮಾತ್ಮನನ್ನು ಇಟ್ಟುಕೊಂಡು ಅವನ ನೆನಪಿನಲ್ಲಿ ದೇಹ ಸವೆಸೋಳು. ಇದೆಲ್ಲ ನಿನ್ನಂಥ ಶೂದ್ರಳಿಗೆ ಹ್ಯಾಂಗ ಗೊತ್ತಾಗಬೇಕು?” +ಆ ಸನ್ನಿವೇಶ ಕೋರ್ಟಿನಂತಾಗಿ ಬಿಟ್ಟಿತ್ತು. ಪಾತಿವ್ರತ್ಯವನ್ನೇ ಕಟಕಟೆಯಲ್ಲಿ ನಿಲ್ಲಿಸಿ, ಅದರ ಪರ ತನ್ನ ಮೂಗಿನ ನೇರಕ್ಕೆ ವಾದ ಮಂಡಿಸುತ್ತಿರುವ ಆ ಮುದುಕಿಯನ್ನು ನೋಡಿ ನನ್ನ ಮನಸ್ಸಿಗೆ ಅಯ್ಯೋ ಎನ್ನಿಸಿತು. +“ಅತ್ತೇ… ಚಲೋ ಮಾತಾಡ್ತೀಯಮ್ಮಾ… ಗಂಡೆಂಭೋನು ಸಾಯುವಾಗ ಬಂದು ಅವನ ಬಾಯಾಗ ಒಂದ್ ಚಮಚೆ ನೀರು ಹಾಕಲಾಗ್ಲಿಲ್ಲಲ್ವಲ್ಲ ಈ ನಿಮ್ಮ ಸೊಸೆ; ಅವನು ಬದುಕಿದ್ದಾಗ ಜಾತಿ, ಕುಲ, ಮತ ಅಂತ ಉರಿಸಿಕೊಂಡು ತಿಂದ್ಲಲ್ಲಾ ಈ ನಿಮ್ ಸೊಸೆ; ಅವನು ಸತ್ತಮ್ಯಾಕೆ ಸುಂಗೇರಿಗೆ ಹೋಗಿ ತಲೆ ಬೋಳಿಸಿಕೊಂಡು ಬಂದಿದ್ದಾಳಲ್ಲ ಈ ನಿಂ ಸೊಸೆ, ಈಕೆ ಮಾತ್ರ ಪತಿವ್ರತೆ ನಾವೆಲ್ಲ ಸೂಳೇರೇನು! ಈಕೆ ತನ್ನ ಗಂಡನ್ನ ಸರಿಯಾಗಿ ಪ್ರೀತಿಸಿದ್ದಿದ್ರೆ ಅವನ್ಯಾಕೆ ನಮ್ಮಂಥ ಸೂಳೆರ ಸೆರಗಿಗೆ ಬೀಳ್ತಿದ್ದ… ನಿಮ್ ಪಾತಿವ್ರತ್ಯಾನ ಒಯ್ದು ಬಟ್ಟೆ ಅಂಗಡಿ ಮುಂದೆ ಗೊಂಬಿ ಮಾಡಿ ನಿಲ್ಲಿಸ್ರೀ…” ಎಂದು ಮುಂತಾಗಿ ಸಿಟ್ಟು ತಾಳಲಾರದೆ ಅಂದುಬಿಟ್ಟೆ. +ಆಗ ನಿಂಗಮ್ಮಜ್ಜಿ ಎಂಬ ಮುದುಕಿ (ಆಕಿ ನಿಮ್ಮ ಖಾಸಾ ಅಜ್ಜಿ ಅಂತ ಆಮೇಲೆ ನನಗೆ ಗೊತ್ತಾಯಿತು) ಮುಂದೆ ಕುಪ್ಪಳಿಸಿ ನಿಂತು – +“ಸರ್ಯಾಗಿ ಹೇಳ್ದೇ ನಮ್ಮವ್ವಾ… ಶಬ್ಬಾಷ್… ನೀನು ಇವ್ರಿಗೆ ಬಲು ಬಲು ಹೇಳ್ದೆ… ಅವನಾಗ್ಲೆ ನಮ್ ಪಾಲಿಗೆ ಸತ್ತಾನೆ ಹೋಗ ಬೇ ಅಂದು ಬಿಟ್ರು… ಆಗಿದ್ದಾಗಿ ಹೋಯ್ತು… ಅವರವ್ರು ಅವರವ್ರ ಕರುಮಾನ ಅನುಭೋಗಿಸ್ತಾರೆ ಬಿಡು… ಅದಿರ್ಲಿ ನೀನು ಬಂದ ಕಾರಣ ಏನೆಂಬುದ್ನ ಬಿಡಿಸಿ ಹೇಳಿ ಬಿಡವ್ವಾ…” ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿತು. +ಸುತ್ತಮುತ್ತ ನಿಂತಿದ್ದವರೂ, ಕೈಯಲ್ಲಿ ತಲಾ ಒಂದೊಂದು ಮಾರಕಾಯುಧಗಳನ್ನು ಹಿಡಿದುಕೊಂಡಿದ್ದವರೆಲ್ಲರೂ ಮುಂದೆ ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಎಂಬಂಥ ಮಾತುಗಳನ್ನೇ ಆಡಿದರು. +“ಆಯ್ತುರವ್ವಾ… ಆಯ್ತು… ನಾನೇನು ಇದ್ರ ಕುಟಾಗೆ ಕಾಲು ಕೆದ್ರಿ ಜಗಳಾಡಲಕೆ ಬಂದಿಲ್ಲ…” ಎಂದು ಹೇಳಿ ವರಲಕ್ಷ್ಮಿ ಕಡೆ ತಿರುಗಿ “ಏನವ್ವಾ ತಂಗಿ ವರಲಕ್ಷ್ಮೀ?… ಮಾಡಿದ ಪಾಪ, ಕರುಮಕ್ಕೆ ಮನವೇ ಸಾಕ್ಷೀ… ತೋಡಿದ ಬಾವಿಗೆ ಜಲವೇ ಸಾಕ್ಷೀ ಅಂತ ಹಿರೇರು ಹೇಳ್ಯಾರು… ನೀನೇ ಮಾ ಪತಿವ್ರತೆ ಆಗಿರು… ಅದ್ಕೆ ನಂದೇನು ತಕರಾರಿಲ್ಲ… ಮನಸ್ನ ಕಂಟ್ರೋಲು ಮಾಡ್ಕೊಂಡು ರವ್ವೋಟು ಮುಂದಕ ಬಾ…” ಎಂದು ಕರೆದೆ. +ಮುದುಕಿ ಸೊಸೆ ಕಡೆ ತಿರುಗಿ – +“ಏಯ್… ವರಲಕ್ಷ್ಮೀ… ಇವತ್ತು ಮಾರ್ಗಶಿರ ಶುದ್ಧ ಚತುರ್ದಶಿ ಮಂಗಳವಾರ, ಪುಷ್ಯ ನಕ್ಷತ್ರ ಎಂಬುದನ್ನು ಮರೆತು ಮುಂದಕ ಹೋಗಬೇಡ… ಇವತ್ತು ನಿನ್ನ ಜಾತಕದಲ್ಲಿ ಮರಣಯೋಗ ಅದೆ… ಆ ಶೂದ್ರ ಹೆಂಗಸು ಕುತ್ತಿಗಿ ಹಿಚುಕಿ ಕೊಂದ್ರೂ, ಕೊಂದಾಳು…” ಎಂದು ವಿಚಿತ್ರವಾಗಿ ಮಾತಾಡಿತು. +ಅದರ ಮಾತಿಗೆ ನಗಬೇಕೋ ಅಳಬೇಕೋ… ಒಂದೂ ನನಗೆ ಅರ್ಥವಾಗಲಿಲ್ಲ. +“ಏಯ್… ಅತ್ತೆಮ್ಮ… ನಾನೇನ್ ನಿನ್ ಸೊಸೀನ ಕೊಲ್ಲಾಕೆ ಬಂದಿಲ್ಲವ್ವೋ… ಬಿಡುಬಿಡು” ಅಂದೆ ಒಳ್ಳೆ ಮಾತಿನಿಂದ ಹೇಳ್ತಿದೀನಿ ನೋಡು… ನಮ್ಮ ಆತೆಯವರ್‍ನ ನೀನತ್ತೆ ಅಂದ್ರೆ ನಾನು ಸುಮ್ನಿರಾಕಿಲ್ಲ… ಅವರ್‍ನ ನುಂಗಿ ನೀರು ಕುಡ್ದು ನಮ್ಮನ್ನೆಲ್ಲ ಕಣ್ಣೀರಲ್ಲಿ ಕೈತೊಳೆದು ಬದುಕುವಂತೆ ಮಾಡಿರುವಿ. ಇದು ಸಾಲದೆ… ಈಗ ಮನೆ ಮುಂದೆ ನಿಂತ್ಕೊಂಡು ವಂಶದ ಗೌರವ ಕಳೀತಾ ಇದ್ದೀ… ಇಲ್ಲಿಂದ ಹೊರಟುಹೋಗಿ ಬಿಡು… ನಮ್ಮ ನಿಟ್ಟುಸಿರು ತಾಕಿದ್ರೆ ನಿಂಗೆ ಒಳ್ಳೇದಾಗೋದಿಲ್ಲ…” ಎಂದು ನಿಂತಲ್ಲಿಂದಲೇ ವರಲಕ್ಷ್ಮಿ ಮಾತಾಡಿದಳು. +ಮುಂದಕ್ಕೆ ಬಾ ಅಂತ ನಾನು; ಬರೋದಿಲ್ಲ ಅಂತ ಆಕೆಯೂ ಸ್ವಲ್ಪ ಹೊತ್ತು ವಾದ ಮಾಡಿದೆವು… ಹಾವು ಸಾಯದು… ಕೋಲು ಮುರಿಯದು… ಎಂಬಂಥ ಲೆಕ್ಕಾಚಾರ ಮುಂದುವರಿಯಿತು. +ನಿಂಗಮ್ಮಜ್ಜಿ ಮಧ್ಯಸ್ತಿಕೆ ವಹಿಸದಿದ್ದಲ್ಲಿ ನಮ್ಮ ವಾದ ಹಾಗೇ ಮುಂದುವರೆಯುತ್ತಿತ್ತೊ ಏನೋ! +“ನಿಮ್ಮ ಮಡಿಗಿಷ್ಟು ಬೆಂಕಿ ಹಾಕ್ತು… ಬಾರಬೇ ಬಾ… ಆಕಿ ಏನು ಮಾಡ್ತಾಳೊ ನಾನು ನೋಡ್ತೀನಿ” ಎಂದು ನಿಂಗಮ್ಮಜ್ಜಿ ಮುನ್ನುಗ್ಗಿ ವರಲಕ್ಷ್ಮಿಯನ್ನು ನನ್ನ ಮುಂದಕ್ಕೆ ಎಳೆದುಕೊಂಡು ತಂದಿತು. +“ನನ್ ಸೊಸೆಯನ್ನು ಕಾಪಾಡ್ರಿ ಯಾರಾದ್ರು?… ನನ್ ಮೊಮ್ಮಕ್ಕಳ ಗತಿ ಹೇಗೆ?” ಎಂದು ಮುದುಕಿ ಅಲುಮೇಲಮ್ಮ ಬಾಯಿ ಬಡಿದು ಅಬ್ಬರಿಸತೊಡಗಿದಳು. +ಮಕ್ಕಳು ಕಿಟಾರನೆ ಕಿರುಚಿ ಅಳತೊಡಗಿದವು. +ಮುಂದೆ ನಿಂತು ಜಲಜಲ ಬೆವೆಯತೊಡಗಿದ ವರಲಕ್ಷ್ಮಿಯ ಮೈತುಂಬ ಅಲಂಕರಿಸಿಕೊಂಡಿದ್ದ ವೈಧವ್ಯವನ್ನು ನೋಡಿ ನನ್ನ ಕರುಳು ಕಿತ್ತು ಬಂತು. “ತಂಗೀ” ಎಂದು ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ತಡೆಯಲಾರದೆ ಕಣ್ಣೀರು ಸುರಿಸಿದೆ. ಜನ ಹೋ ಎಂದು ಕೂಗಿದರು. +“ನನ್ನ ಸೊಸೇನ ಕೊಲೆ ಮಾಡ್ತಿದಾಳೆ ಇವ್ಳೂ…” ಮುದುಕಿ ಬಾಯಿ ಬಡಿದುಕೊಂಡಿತು. +ಒಂದು ವಿಚಿತ್ರವೆಂದರೆ, ವರಲಕ್ಷ್ಮಿಯ ಕಣ್ಣೀರಿಂದ ನನ್ನ ವಕ್ಷಸ್ಥಳ ಒದ್ದೆ ಆಯಿತು. +ಆಮೇಲೆ ತೆಕ್ಕೆ ಸಡಲಿಸಿ ಎರಡು ರಟ್ಟೆಗಳನ್ನು ಹಿಡಿದುಕೊಂಡು – +“ವರಲಕ್ಷ್ಮೀ ನೀವೆಲ್ರು ತಿಳಿಕೊಂಡಿರಂಗೆ ನಾನೇನು ರಾಕ್ಷಸಿ ಅಲ್ಲ… ನಿನ್ನ ಸಂಕಟ ನಂಗೂ… ಅರ್ಥಾಗ್ತದೆ… ಅದರಂಗೆ ನನ್ ಸಂಕಟಾನು ನಿಮ್ಗೆ ಅರ್ಥಾಗಬೇಕು… ಅರ್ಥ ಆಗದಿದ್ರೂ ಅಷ್ಟೇ ಹೋಯ್ತು… ಅದರ ಬಗ್ಗೆ ನಂಗೇನು ಚಿಂತೆ ಇಲ್ಲ, ನೀನು ನಿನ್ನತ್ತೆ, ಮಕ್ಕಳನ್ನ ಕಟ್ಕೊಂಡು ಮುಂದೆ ಸುಖವಾಗಿರಬೇಕಂತಾನೆ ನಾನಿಲ್ಲಿಗೆ ಬಂದಿರೋದು… ತಗಾ..” ಎಂದು ಆಕೆಗೆ ಹಂಡೆ ಚೀಲವನ್ನು ಕೊಡಲು ಪ್ರತ್ನಿಸಿದೆ. +ಇದು ಯಾರಿಗೂ ಗೊತ್ತಗಬಾರದೆಂಬ ಕಾರಣದಿಂದಲೇ ನಾನು ಹಾಗೆ ಗುಟ್ಟು ‘ಹೊಡೆಬಡಿಯದೆ’ ಗುಟ್ಟಾಗಿ ಕೊಡುವ ಪ್ರಯತ್ನ ಮಾಡಿದ್ದು. ಅದರಲ್ಲಿ ಅಪಾಯಕಾರಿಯಾದ ವಸ್ತುಗಳಿವೆ ಎಂದು ತಪ್ಪಾಗಿ ಭಾವಿಸಿ ಆಕೆಯಾಗಲೀ, ಆಕೆಯ ಅತ್ತೆಯಾಗಲೀ ಸನಿಹಕ್ಕೆ ಬಾರದೆ ದೂರ ಸರಿದು ನಿಂತರು. ನಿಂಗಮ್ಮಜ್ಜಿ ಎಷ್ಟು ಹೇಳಿದರೂ ಅವರು ಅದನ್ನು ಮುಟ್ಟಲಿಲ್ಲ… +ಆಗ ನಾನು… ಹಂಡೇ ಚೀಲವನ್ನು ಬಕಬೋರಲು ಮಾಡಿ ಸುರಿದೆ… ನೆಲದ ಮೇಲೆ ಪುತುಪುತು ಅಂತ ಕಂತೆ ಕಂತೆ ನೋಟುಗಳು ಬೀಳುತ್ತಲೆ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಆ ಹೊತ್ತಿಗಾಗಲೇ ಬದುಕಲು ಕೆಲವು ಗೌರವಾನ್ವಿತ ಉಪಕಸುಬುಗಳ ಹುಡುಕಾಟದಲ್ಲಿದ್ದ ಅವರಿಗೆ ಆ ಅಪಾರ ಹಣ ನೋಡಿ ಆಶ್ಚರ್ಯವಾಯಿತಾದರೂ ಅದನ್ನು ತೆಗೆದುಕೊಳ್ಳಲು ಹಿಂಜರಿದರು. ಇದು ನನ್ನ ಸ್ವಂತದ್ದಲ್ಲವೆಂದೂ, ನಿನ್ನ ಗಂಡನ ಗಳಿಕೆ ಎಂದೂ ಪರಿಪರಿಯಾಗಿ ಹೇಳಿದರೂ ಅವರು ಮುಟ್ಟಲಿಲ್ಲ. ತಮಗಿದರ ಅಗತ್ಯವಿಲ್ಲವೆಂದೂ ತಾವು ಸುಖವಾಗಿರುವೆವೆಂದೂ… ನೀನೇ ತೆಗೆದುಕೊಂಡು ಹೋಗಿ ತಿಂದುಂಡು ಸುಖವಾಗಿರು ಎಂದೂ ಅವರ ವಾದಿಸತೊಡಗಿದರು. ಅವರ ಈ ವರ್ತನೆಯಿಂದ ಬೇಸತ್ತು ರಾಖೇಶ “ಏಯ್ ಅವರಿಗೆ ಬೇಡಂದ್ಮೇಲೆ ಯಾಕ ಕೊಡ್ತೀ… ತಗಂಡು ಬಂದುಬಿಡು… ಅದೇ ರೊಕ್ಕದಾಗ ಶಾಮನ ಹೆಸರಿನಲ್ಲಿ ಸಾಲಿಗುಡಿ ಕಟ್ಟಿಸಿದ್ರಾಯ್ತು” ಎಂದು ಅಡ್ಡಬಾಯಿ ಹಾಕಿದ. +ಅವನದೂ ಒಳ್ಳೆ ಆಲೋಚನೆಯೇ. ಆದರೆ ಹಾಗೆ ವೆಚ್ಚ ಮಾಡಲು ನನಗ್ಯಾವ ಹಕ್ಕಿದೆ ಎಂದು ಯೋಚಿಸಿದೆ. ಯಾವ ನೆಲೆ ಇಲ್ಲದೆ ಶಾಮನ ತಾಯಿ, ಹೆಂಡತಿ, ಮಕ್ಕಳು ಮರಿ ಮುಂದೆ ಜೀವನ ಸಾಗಿಸುವುದಾದರೂ ಹೇಗೆ? +ಆಗಲೆ ತುಸು ಕರಗಿದ್ದ ವರಲಕ್ಷ್ಮಿಗೆ – +“ನೋಡಮ್ಮ ತಂಗಿ… ನನ್ನ ಮಾತು ಕೇಳಿ ಸುಮ್ಮನೆ ತಗೋ… ನಾನು ನೀನಂದ್ಕೊಂಡಂಥೋಳಾಗಿದ್ರೆ ನಾನಿದ್ನೆಲ್ಲ ತಗಂಡಿಲ್ಲಿಗೆ ಯಾಕ ಬರ್‍ತಿದ್ದೆ ಹೇಳು… ನನ್ಗೆ ಬದುಕೋಕೆ ನೂರೆಂಟು ಹಾದಿಗಳು ಗೊತ್ತದಾವೆ… ನಾನು ಹೇಳಿ ಕೇಳಿ ವೇಶ್ಯೆ…ಯಾರತ್ರಾರ ಮಲಿಕ್ಕೊಂಡ್ರೆ ಸಾಕು ಸಾವ್ರಾರ್ರುಪಾ‌ಐ ಪಾದದ ಬುಡಕೆ ಬಂದು ಬೀಳ್ತಾವೆ… ಆದರೆ ನೀನಾಗಲೀ, ನಿನ್ನ ಬದುಕಾಗ್ಲಿ ಹಾಗಲ್ಲ… ನೀನು ಹೇಳಿ ಕೇಳಿ ವಿಧವೆ… ಪರಪುರುಷನ ಕಡೆ ನೋಡಿದ್ರೆ ಪಾಪ ಬರ್ತದೆ ಎಂದು ತಿಳಿದುಕೊಂಡು ಬದುಕುತ್ತಿರುವಾಕಿ… ಇಂಥ ನೀನು ಈ ದುಬಾರಿ ಪ್ರಪಂಚದಾಗ ಸಂಸಾರಾನ ಹೆಂಗೆ ನಿಭಾಯಿಸ್ತಿ ಹೇಳು?… ಅದ್ಕೆ ಹೇಳ್ತಿದೀನಿ ತಗೋ… ಈ ರೊಕ್ಕದ ಮೇಲೆ ನನಗ್ಯಾವ ಹಕ್ಕು ಅಧಿಕಾರ ಇಲ್ಲ… ಅವನ ಕೈಯಿಂದ ತಾಳಿ ಕಟ್ಟಿಸಿಕೊಂಡು ಒಂದು ಇತ್ತು ಒಂದು ಇಲ್ಲವೆಂಬಂತೆ ಬದುಕಿದ ನಿನಗೇ ಇದರ ಹಕ್ಕು ಇರುವುದು… ಎಂದು ಆಕೆಗಷ್ಟೆ ಕೇಳಿಸುವಂತೆ ಪಿಸುಪಿಸು ಮಾತಾಡಿದೆ. +ಆಷ್ಟೊತ್ತಿಗಾಗಲೇ ಪಾತಾಳಕ್ಕಿಳಿದು ಕರಗಿ ಹೋಗಿದ್ದ ಓಣಿ ಮಂದಿ ಮೂಕರಾಗಿಬಿಟ್ಟಿದ್ದರು. ನನ್ನ ಕಡೆ ಮೆಚ್ಚುಗೆ ಅಭಿಮಾನ ಹೆಮ್ಮೆಯಿಂದ ನೋಡುತ್ತಿದ್ದರು. +ನಿಂಗಮ್ಮಜ್ಜಿ ಕಣ್ಣೀರು ಒರೆಸಿಕೊಳ್ಳುತ್ತ ತೆಗೆದುಕೊಂಡು ಒಳ್ಗೆ ಹೋಗುವಂತೆ ಒತ್ತಾಯಿಸಿತು. ಆತ್ತೆ ಸೊಸೆಯರಿಬ್ಬರು ಹಣವನ್ನು ತಂತಮ್ಮ ಸೆರಗಿನಲ್ಲಿ ತುಂಬಿಕೊಳ್ಳುತ್ತಿರುವಾಗ ನಾನು ಓಡಿಹೋಗಿ ಮಕ್ಕಳಿಬ್ಬರನ್ನು ಅಪ್ಪಿಕೊಂಡೆ… ಕೊಸರುತ್ತಿದ್ದ ಅವಕ್ಕೆ ಮುದ್ದು ಕೊಟ್ಟೆ… ಎತ್ತಿಕೊಂಡೆ… ಹೆಣ್ಣಿನ ಸ್ವಭಾವ ಒಮ್ಮೊಮ್ಮೆ ಎಷ್ಟೊಂದು ಕಠೋರವಾಗಿ ವರ್ತಿಸುತ್ತದೆ ಎಂಬುದಕ್ಕೆ ನಿದರ್ಶನವಾಗಿ ಅವರು ನನ್ನಿಂದ ಮಕ್ಕಳನ್ನು ಕಸಿದುಕೊಂಡು ಒಳಗೆ ಹೊರಟುಹೋದರು. ಆವರಿಂದ ಯಾವುದೇ ಸತ್ಕಾರ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. +ಮೂಕ ವಿಸ್ಮಿತರಾಗಿ ನೋಡುತ್ತಿದ್ದ ಓಣಿ ಜನರ ಕಡೆ ಕೈಮುಗಿದು ಅಲ್ಲಿಂದ ಹೊರಟೆ. +ಮಾಜಿ ಕೌನ್ಸಿಲರ್ ನಿಂಗಮ್ಮಜ್ಜಿ ನಮ್ಮನ್ನೆಲ್ಲ ಮನೆಗೆ ಕರೆದುಕೊಂಡು ಹೋಗಿ ನವಣಕ್ಕಿ ಅನ್ನ, ಕಡ್ಲೆ ಬಜ್ಜಿ, ಕಟಂಬ್ಲಿ, ಮಜ್ಜಿಗೆ, ಕರಿದ ಮೆಣಸಿನಕಾಯಿ… ಎಲ್ಲವನ್ನು ಊಟಕ್ಕಿಟ್ಟು ಸಂತೋಷಪಟ್ಟಿತು. +ನಾನು ಅಲ್ಲಿಂದ ಕೊತ್ತಲಗಿಗೆ ಮರಳಿ ಬಂದೆ… ಯಥಾ ರೀತಿ ಜೀವನ ನಡೆಸುತ್ತಿರುವ ಆಗೊಮ್ಮೆ, ಈಗೊಮ್ಮೆ ಮಕ್ಕಳನ್ನು ನೋಡಲೋಸುಗ ಅನಂತಪುರಕ್ಕೆ ಹೋಗುತ್ತಿರುತ್ತೇನೆ… ಅಷ್ಟೆ… ಅವರ ಕೊಟ್ಟೂರಿನ ಮನೆಯನ್ನು ನಾನೇ ಕೊಳ್ಳಬೇಕೆಂದು ಪ್ರಯತ್ನಿಸಿದೆ… ಅಷ್ಟರಲ್ಲಿ ನಿಮ್ಮ ತಂದೆಯೇ ಕೊಂಡರೆಂದು ತಿಳಿಯಿತು. +ಹೀಗೆ ಹೇಳ್ತಾ ಹೋದ್ರೆ ರಾಮಾಯಣ ಆಗ್ತದೆ…. ಎಂದು ಗದ್ಗದಿತಗೊಂಡು ಆ ಸ್ತ್ರೀಪಾತ್ರವು ಮ್ಲಾನವದನವಾಯಿತು. ಅದು ಹೇಳಿದ್ದು ಕೇಳಿ ನಾನು ಮೂತ್ರದಲ್ಲಿ ಮೀನು ಹುಡುಕುವಂಥವರೇ ತುಂಬಿಕೊಂಡಿರುವ ಸದ್ಯದ ಪ್ರಪಂಚದಲ್ಲಿ ಇಂಥವರು ಇರುವುದು ಅಪರೂಪ ಅಂದುಕೊಂಡೆ. ಲೇಖಕನಾಗಿ ನನ್ನಲ್ಲಿ ಅನಸೂಯಮ್ಮನ ಬಗ್ಗೆ ತುಂಬ ಗೌರವ ಮೂಡಿತು. +“ಮೇಷ್ಟ್ರೇ… ನಾನಿನ್ನು ಹೋಗ್ಲಾ… ಇನ್ನು ಮೇಲಾದ್ರು ಬಣ್ಣ ಹಚ್ಚಿಕೊಂಡು ಜನರ ಮುಂದೆ ಕಾಣಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೀನಿ… ಎಲ್ಲಿವರ್ಗೂ ನಾನಿಂಗ ಶಾಮನ ಫೋಟೋನ ಎದುರಿಟ್ಟುಕೊಂಡು ಕೂಡ್ರಲಿ? ಫೋಟೋ ಏನು ಸುಮ್ಮನೆ ಮಂದಿಗೆಲ್ಲ ಅನ್ನ ಕೊಟ್ತೀತಾ; ಬಟ್ಟೆ ಕೊಟ್ತೀತಾ… ಇರೋರೆಲ್ಲ ಸುಖವಾಗಿದ್ದಾರೆ… ನಾವು ಮಾತ್ರ ಒಂದಕ್ಕಿದ್ರೆ ಒಂದಕ್ಕಿಲ್ಲೆಂಬಂತಿರೋದು. ಈ ಕಾದಂಬರಿ ಓದಿದ ಮೇಲೂ ಮಂದಿ ಈಕೆ ಏನು ಘನಸ್ಥಳು ಎಂದಾಡಿಕೊಳ್ದಿರಾರ… ಅಷ್ಟೊಂದು ಇಡಿಗಂಟ್ನ ತಗಂಡ ಆ ಅಲುಮೇಲಮ್ಮ, ವರಲಕ್ಷ್ಮಿಯವರು ಅರ್ಧ ತಿಂದು ಅರ್ಧ ತಂದ್ಕೊಟ್ಟಾಳಂತ ಬಾಯಿಗೆ ಬಂದಂಗ ಮಾತಾಡಿದ್ರು… ಇನ್ನು ಉಳಿದವರ ಪಾಡೇನಂತೀನಿ! ಇಂಥ ಅಪವಾದಗಳು ಇಂದಿಗೂ ತಪ್ಪಿಲ್ರೀ… ಅಂಥ ಸೀತೆ ದ್ರೋಪದಿಯಂಥೋರೆ ಜನ್ರ ಬಾಯಾಗ ಬಿದ್ದು ವಿಲವಿಲಾಂತ ಒದ್ದಾಡಿದ್ರು… ಇನ್ನು ನಮ್ಮಂಥೋರ ಪಾಡೇನ್ರಿ… ಒಂದೊಂದು ನಾಟಕದಾ ಒಂದೊಂದು ಪಾರ್ಟು ಮಾಡಿ ನಾವು ಸುಖವಾಗಿರ್‍ತೀವಿ ಬಿಡ್ರಿ… ಆದರೆ ಸದಾ ಕಾಲ ಮಹಾಪತಿವ್ರತೆ ಥರ ಇದ್ಕೊಂಡೆ ರಂಡೆಮುಂಡೆ ಪಾತ್ರ ಮಾಡ್ತಿರಬೇಕಲ್ಲ ಆ ವರಲಕ್ಷ್ಮಿ… ಅಂಥೋರ ಗತಿ ಏನ್ರಿ? ಮೊನ್ನಂದಿನ ನಾನು ಹೋದಾಗ ವರಲಕ್ಷ್ಮಿಯೂ ಶ್ರೀವಲ್ಲಭನ ಹೆಂಡತಿಯೂ ಜಗಳ ಆಡ್ತಿದ್ರು… ಅದ್ನ ಕೇಳಿ ನಾನಂಗೇ ಅನಂತಪುರದಿಂದ ಬಂದುಬಿಟ್ಟೆ. ಅದೆಂಗ ಯೌವನದ ಕಿಚ್ಚನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು ಅನ್ಯರ ಮನೇಲಿ ಕಾಲ ಹಾಕ್ತಿದ್ದಾಳೊ ದೇವ್ರೀಗೆ ಗೊತ್ತು? ಇರ್‍ಲಿ ಬಿಡ್ರಿ… ಹುಳ್ಳ ಬೆಳ್ಳಕಿದ್ದೋರು ಏನು ಮಾಡಿದ್ರು ಸಮಾಜ ರೈಟ್ ಅಂತ ಟಿಕ್ ಹಾಕ್ತದೆ… ನಮ್ಮಂಥೋರ ಮನೇಲಿ ಇಲಿ ಹೋದ್ರೆ ಹುಲಿ ಅಂತೈತೀ ಪ್ರಪಂಚ. ನಿಮ್ಗೆ ಹೇಳೋದು ಹೇಳಿದ್ಮೇಲೆ ಮನಸ್ಸಿಗೆಷ್ಟೋ ಹಗುರಾಯಿತ್ರೀ… ಮುಂದೇನಾದ್ರು ಕೊತ್ಲಿಗೀಗೆ ಬಂದ್ರೆ ಮನೀಗೆ ಬಂದು ಚಾಪಾನ ಮಾಡ್ಕೊಂಡೋಗ್ರಿ… ನಮ್ಮ ಕಾಂಚನಾಳ ಮದುವಿ ಲಗ್ನಪತ್ರಿಕೆ ಕಳುಸ್ತೀನಿ… +ಬರಬೇಕ್ರ ಮತ್ತ… ತಪ್ಪಿಸ್ಕೋಬಾರ್‍ದು…” ಎಂದು ಆಪ್ಯಾಯಮಾನವಾಗಿ ಮಾತಾಡಿ ಅನಸೂಯಮ್ಮನ ಪಾತ್ರವು ಅಲ್ಲಿಂದ ಹೊರಟುಹೋಯಿತು. +ಇನ್ನೇನು ಸಧ್ಯಕ್ಕೆ ಕಥೆ ಮುಗಿದಹಾಗಾಯ್ತು ಎಂದುಕೊಂಡೆ. ಮದುವೆ ಮುಗಿದೊಡನೆ ಬೀಗರು ಬಿಜ್ಜರು ಎಲ್ಲರೂ ತಂತಮ್ಮ ಊರಿಗೆ ಹೊರಟು ಹೋಗಲು ಮನೆ ಹೇಗೆ ಒಣ ಒಣ ಭಣ ಭಣ ಅಂತಿರ್‍ತದೋ ಹಾಗೆ ನೂರಾರು ಪಾತ್ರಗಳು ಹೇಳೋದನ್ನು ಹೇಳಿ, ಕೇಳೋದನ್ನು ಕೇಳಿ ಅಲ್ಲಿಂದ ಹೊರಟು ಹೋಗುತ್ತಲೆ ನನ್ನ ಮನದ ಶಾಮಿಯಾನ ಬಿಕೋ ಎನ್ನತೊಡಗಿತು. ಪ್ರತಿಯೊಂದು ಪಾತ್ರವು ನನ್ನ ಕುರಿತೇ ಮಾತಾಡಿತು ಎಂಬ ಅನುಮಾನ ಬಂತು. ಹಾಗೆಯೇ ನನ್ನ ಮನದ ಒಂದೊಂದು ಭಾವನೆಯೂ ಒಂದೊಂದು ವೇಷ ತೊಟ್ಟು ಹತ್ತಾರು ನಮೂನಿ ಬಣ್ಣ ಹಚ್ಚಿಕೊಂಡು ಒಂದೊಂದು ಪಾತ್ರದ ರೂಪ ಧರಿಸಿ ಮಾತಾಡಿದವೆಂಬ ಅನುಮಾನವೂ ಬಂತು. ನಾನು ಹೋಗುತ್ತಿದ್ದ ಒಂದೊಂದು ಊರಲ್ಲಿ… ಮಾತಾಡುತ್ತಿದ್ದ; ಗಮನಿಸುತ್ತಿದ್ದ್ದ ಪ್ರತಿಯೊಬ್ಬರಲ್ಲಿ ಶಾಮನ್ನ ದುತ್ತನೆ ಕಾಣಿಸಿಕೊಳ್ಳುತ್ತಿದ್ದ. ನನ್ನ ಹೃದಯ ಕನ್ನಡಿಯಲ್ಲಿ ಮುಖ ನೋಡುಕೊಳುತ್ತಿದ್ದ, ಮೇಕಪ್ ಮಾಡಿಲೊಳ್ಳುತ್ತಿದ್ದ: ಕ್ರಾಪು ತೀಡಿಕೊಳ್ಳುತ್ತಿದ್ದ. ಆಧುನಿಕ ಕ್ರಾಪೊಳಗೆ ಸನಾತನತೆಯ ಸಂಕೇತವನ್ನು ಮರೆಮಾಚಿಕೊಳ್ಳುತ್ತಿದ್ದ. ದೇಶಾವರಿ ನಗೆಯನ್ನು ಅಪಾಯಕಾರಿಯಾಗಿ ಪ್ರಯೋಗಿಸುತ್ತಿದ್ದ.. ನಮ್ಮ ಶಾಮನೇ ಅಂಥವನು… ತನಗೆ ತಾನೆ ಮಿತ್ರನಾದವನು, ತನಗೆ ತಾನೆ ಶತ್ರುವಾದವನು. ನಾನು “ನಿಮ್ಮೆಲ್ಲರೊಳಗಿದ್ದೀನಯ್ಯಾ” ಎಂದು ರಾಜಾರೊಷವಾಗಿ ಹೇಳುತ್ತಿದ್ದವನು. ಅವನಿಗೆ ಎಲ್ಲರ ಪರಿಚಯ ಉಂಟು, ಎಲ್ಲರ ಪರಿಚಯ ಅವನಿಗೂ ಉಂಟು. ಮೆಲ್ಲಗೆ ಓಳಹೊಕ್ಕು ಅರಿಷಡ್ವರ್ಗ, ಮಮಕಾರಗಳಿತ್ಯಾದಿ ತೃಣಮೂಲಗಳನ್ನು ಮೀಟಿ ಆಟವಾಡಿಸುತ್ತಿದ್ದಂಥ ಮಹಾನುಭಾವ… ಅವನು ಗೋಳ್ಹೊಯ್ದುಕೊಳ್ಳದ ಜನರೇ ಇಲ್ಲ… ಅವನನ್ನು ಗೋಳ್ಹೊಯ್ದುಕೊಳ್ಳದ ಜನರೇ ಇಲ್ಲ… ಮಾನವ ಸಹಜ ನೂರೊಂದು ಭಾವನೆಗಳ ಮೇಲೋಗರವಾಗಿದ್ದ ಶಾಮಣ್ಣನನ್ನು ನಾನು ತೀರ ನಿಕಟವಾಗಿ ಗುರುತಿಸಿದ್ದು ಕಾಶಿಯಲ್ಲಿ. ನಾನು ಇಳಿದುಕೊಂಡಿದ್ದ ಲಕ್ಸಾ ರಸ್ತೆಯಲ್ಲಿರುವ ಶಿವಾಶ್ರಮದ ಲಾಡ್ಗಿನ ಇನ್ನೂರಾ ಇಪ್ಪತ್ತೆರಡನೆಯ ರೂಮಿನಲ್ಲಿ… ಆರು ರುಪಾಯಿಗೆ ಎರಡು ತಂಬಿಗೆ ಬಿಸಿ ನೀರಿನೊಡನೆ ಬಂದ ಸೇವಕನೊಡನೆ ಆತ ಇದ್ದ. ತಾನುಶಾಮಾಶಾಸ್ತ್ರಿ ಚತುರ್ವೇದಿ ಎಂದು ಪರಿಚಯಿಸಿಕೊಂಡ. ವೇದೋಪನಿಷತ್ಪುರಾಣ ಕಾಲದ ಕಾಶೀ ಕ್ಷೇತ್ರವನ್ನು ಶ್ಲೋಕಗಳನ್ನು ನಿರರ್ಗಳವಾಗಿ ಉದ್ಧರಿಸುತ್ತ ಪರಿಚಯಿಸಿದ. ದಕ್ಷಿಣ ಭಾರತದ ಕರ್ನಾಟಕದ ಕಡೆಯಿಂದ ಪಂಡಿತ ಶಾಮಾಶಾಸ್ತ್ರಿಗಳ ಕಳೇಬರ ಅಂಬಾಸ್ಯಡರ್ ಕಾರಿನಲ್ಲಿ ಮೊನ್ನೆಯೇ ಹೊರಟಿರುವುದೆಂದೂ, ಅದರ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ಎಂದು ಕೇಳಿದ. ಬರಲಿರುವುದು ಮತ್ತು ಅದಕ್ಕಾಗಿ ಕಾಯುತ್ತಿರುವವನೂ ಒಂದೇ ಹೆಸರಿನವರು. +ಆ ಒಂದು ಕ್ಷಣ ಹತ್ತಾರು ಮಂದಿ ಶಾಮ, ಶಾಮಣ್ಣ, ಶಾಮಾಶಾಸ್ತ್ರಿ ಎಂಬುವರನ್ನು ನೆನಪಿಸಿಕೊಂಡೆ. ನಾನು ಕಂಡಂತೆ ಅವರಾರಿಗೂ ಸಾಯುವ ವಯಸ್ಸಂತೂ ಖಂಡಿತ ಆಗಿರದಿದ್ದರೂ ಶಾಮಸುಂದರ ಶಾಸ್ತ್ರೀ ಎಂಬುವರು ಮಾತ್ರ ಮೂವತ್ತೈದಕ್ಕೆ ಪ್ರೌಢರಂತೆ ಕಾಣುತ್ತಿದ್ದುದನ್ನು ನೆನಪಿಸಿಕೊಂಡೆ. ಅವರೇನು ನನಗಷ್ಟು ಪರಿಚಯವಿಲ್ಲದಿದ್ದರೂ ಬೆಂಗಳೂರಿನ ಪಂಪಮಹಾಕವಿ ರಸ್ತೆಯ ಕೊನೆ ತುದಿಯಲ್ಲಿ ಕಂಡು ‘ನಾನ್ಯಾರೂಂತ ಗುರುತಿಸಿ’ ಎಂದು ಇದ್ದಕ್ಕಿದ್ದಂತೆ ಕೇಳಿದರು. ಅವರ್‍ಯಾರೂಂತ ಗುರುತಿಸಲಿ? ಅವರನ್ನು ಗುರುತಿಸುವುದರಿಂದ ನನಗೇನು ಲಾಭ? ತನ್ನ ಪಾಡಿಗೆ ತಾನು ಹೋಗುವುದು ಬಿಟ್ಟು, ನನ್ನ ಅಪರಿಚಿತನನ್ನು ತರುಬಿ ಇಂಥ ಪ್ರಶ್ನೆ ಕೇಳುವುದು ಹುಚ್ಚರು ಮತ್ತು ಮೂರ್ಖರಿಗೆ ಮಾತ್ರ ಸಾಧ್ಯ? ನಾನು ಕೆಳಗು, ಮೇಲು ನೋಡಿದೆ. ಯಾವುದೀ ಒಂದು ತಿಳಿಗೆಂಪು ಮಿಶ್ರಿತ ಕೈಮಗ್ಗದ ಲುಂಗಿ; ಬಿಳಿ ಬಣ್ಣದ ಮೊಂಡು ತೋಳಿನ ಅಂಗಿ, ತೊಟ್ಟಿದ್ದ ಆಧುನಿಕವಾಗಿ ತಲೆಕೂದಲು ಬಿಟ್ಟೆದ್ದ… ಹಿಂದೆಲೆಯ ಸುಳಿಯಲ್ಲಿದ್ದ ಜುಟ್ಟಿಗೆ ಐದಾರು ಗಂಟುಗಳನ್ನು ಹಾಕಿದ್ದ. ದಟ್ಟಗೂದಲುಗಳ ನಡುವೀದ್ದು ಕಾಣದಿದ್ದರೂ ನಡೆವಾಗ ಒಂದೊಂದು ಹೆಜ್ಜೆಗೆ ಅದು ಎದ್ದೆದ್ದು ಬೀಳುತ್ತಿದ್ದುದು ಸೋಜಿಗವಾಗಿತ್ತು. ಹಣೆ ಮೇಲೆ ವಿಭೂತಿ ಪಟ್ತೆಗಳೊಂದಿಗೆ ಕುಮ್ಕುಮಬೊಟ್ಟನ್ನೂ ಇಟ್ಟಿದ್ದ. ಒಂದೇ ಅಳತೆಯ ಗಡ್ಡ ಮೀಸೆ ಅಂಗಲವಾಗಿ ಬಿಟ್ತಿದ್ದ. ಕೈಯಲ್ಲಿ ನೃಸಿಂಹತಾಪಾನೀಯ ಭಾಷ್ಯ ಗ್ರಂಥದೊಂದಿಗೆ ‘ಸಿವಿಲ್‌ವಾರ್ ಎಗೆನೆಸ್ಟ್ ಫ್ಯೂಡಲಿಜಂ’ ಎಂಬ ಗ್ರಂಥವನ್ನು ಜಂಟಿಯಾಗಿ ಹಿಡಿದುಕೊಂಡಿದ್ದ. +ನಾನು ಎಷ್ಟು ಪ್ರಯತ್ನಿಸಿದರೂ ಆತ ಇಂಥವನೇ ಎಂದು ಗುರುತಿಸಲು ನನ್ನಿಂದಾಗಲಿಲ್ಲ. ಆ ಥರದ ಗೆಳೆಯರಾರೂ ನನಗೆ ಇರಲಿಲ್ಲ. ಆ ರೀತಿ ಕಾಣಿಸುತ್ತಿದ್ದ ವ್ಯಕ್ತಿ ಎಂದರೆ ಪೂರ್ವಾಶ್ರಮದಲ್ಲಿ ಮಲ್ಲೇಪುರಂ ವೆಂಕಟೇಶ್ ಮಾತ್ರ. ಆತ ನನಗೆ ಗುರುತಿಸಲಿಕ್ಕೆ ಸಹಕಾರಿಯಾಗಲು ಕೆಲವುಕ್ಲೂ ಕೊಡುವುದಾಗಿ ಹೇಳಿ ಒಂದು ಗ್ಲಾಸ್ ಬಿಯರ್ ಕುಡಿಸಿದ. ತಾನೂ ಕುಡಿದ. ಆತ ಕೊಡತೊಡಗಿದ ಒಂದೊಂದು ಕ್ಲು ನನ್ನಲ್ಲಿ ಒಂದೊಂದು ಆತಂಕ ಹುಟ್ಟಿಸಿದವು. ಯಾಕೆಂದರೆ ಅವೆಲ್ಲ ನನ್ನ ಬಾಲ್ಯಕ್ಕೆ ಸಂಬಂಧಿಸಿದುವುಗಳಾಗಿದ್ದವು. ಅಷ್ಟಾದರೂ ನನಗೆ ಅವನನ್ನು ಗುರುತಿಸಲಾಗಲೇ ಇಲ್ಲ. ಕೊನೆಗೆ ತಾನೇ ಹೇಳಿಬಿಟ್ಟ, ಪಂಡಿತ ಓಂಕಾರನಾಥ ಶಾಸ್ತ್ರಿಗಳ ಮೊಮ್ಮಗನೆಂದು. ಅದನ್ನು ಕೇಳಿದೊಡನೆ ಪಾತಾಳಕ್ಕಿಳಿದು ಬಿಟ್ಟು ಇಡೀ ಬಾಲ್ಯವೇ ಒಂದು ಮೂಲೆಯಿಂದ ಮರುಕಳಿಸಿಬಿಟ್ಟಿತು. ಆತನ ಪರಿಚಯ ಘಾಡವಾಯಿತು. ಆತ ಬೆಂಗಳೂರಿನ ವಿಚ್ಟೋರಿಯ ಅಪಾರ್ಟ್‌ಮೆಂಟ್ನಲ್ಲಿ ಆಫೀಸಿಟ್ಟಿದ್ದ. ಬೆಂಗಳೂರಿನ ಪ್ರತಿಷ್ಟಿತರಲ್ಲಿ ಆಧುನಿಕರಲ್ಲಿ ಒಳ್ಳೆಯ ಡಿಜೈನರನೆಂದೂ; ಇಂಟೀರಿಯರ್ ಮತ್ತು ಎಕ್ಸ್‌ಟ್ರೀರಿಯರ್ ಡೆಕೋರೇಟರ್ ಎಂದು ಹೆಸರಾಗಿದ್ದ. ಒಳ್ಳೆ ವಿಸ್ಕಿ ಕುಡಿಯುತ್ತಿದ್ದ. ಒಳ್ಳೆ ಚಿಕನ್ ಐಟಂಸ್ ತಿನ್ನುತ್ತಿದ್ದ. ಮಾಡರ್‍ನ್ ಹುಡುಗಿಯರೊಂದಿಗೆ ಮಲಗುತ್ತಿದ್ದ… ಸಂಸ್ಕೃತ ಮತ್ತು ಇಂಗ್ಲೀಷಿನಲ್ಲಿ ಪರಿಣಿತಿ ಪಡೆದಿದ್ದ… ಆದರೆ ಅವನು ಜನ್ಮದಿನದಂದು ಕ್ಷೌರ ಮಾಡಿಸುತ್ತಿರಲಿಲ್ಲ. ಅಮೃತಗಳಿಗೆ ವಿಷಗಳಿಗೆ ನೋಡಿಕೊಂಡೇ ಕೆಲಸ ಮಾಡುತ್ತಿದ್ದ. ಗ್ರಹಣ ಸಮಯದಂದು ಹರಿದ ನೀರಿನಲ್ಲಿ ಮೂಗು ಮುಚ್ಚಿಕೊಂಡು ಮುಳುಗು ಹಾಕುತ್ತಿದ್ದ… ಹೊರಗಡೆ, ಸಮಾಜದಲ್ಲಿ ಅತ್ಯುತ್ತಮ ಡಿಜೈನರ್, ಡೆಕೋರೇಟರ್ ಎಂದು ಪ್ರಸಿದ್ಧನಾಗಿದ್ದ ಆತ ತನ್ನ ದೇಹದ ಒಳ ಹೊರಗೆ ಕರ್ಮಠ ಸನಾತನಿಯಾಗಿದ್ದ. ಮುಂದೊಂದಿನ ಅವನು ಹದಿನಾರು ಮೊಳ ಸೀರೆ ಉಡುವ ಸದಾ ಅವನತ ಮುಖಿಯಾಗಿ ಅಡ್ಡಾಡುವ ಸುಂದರ ಮಹಿಳೆಯೋರ್ವಳನ್ನು ಮದುವೆಯಾದ. ಇಂಥ ಅವನನ್ನು ನಾನು ಬಹಳ ದಿನಗಳಿಂದ ನೋಡಲಾಗಲಿಲ್ಲ… ಅವನೇನಾದರೂ ಆಗಿರಬಹುದೆ ಎಂಬ ಸಂದೇಹ ಕಾಡತೊಡಾಗಿತು. ಶಾ.ಶಾ. ಚತುರ್ವೇದಿ ಎಂಥ ಸೂಕ್ಷ್ಮ ಮತ್ತು ಅಪಾಯಕಾರಿಯಾದ ಪಂಡಾ ಎಂದರೆ ಮುಖ ನೋಡಿ, ನಾಲ್ಕು ಮಾತಾಡಿ ಎದುಗಿರುವ ವ್ಯಕ್ತಿಯ ದೌರ್ಬಲ್ಯವನ್ನು ಪತ್ತೆ ಹಚ್ಚಿ ಗಪ್ ಅಂತ ಹಿಡಿದುಕೊಂಡು ಬಿಡುತ್ತಿದ್ದ. ನಿರರ್ಗಳವಾಗಿ ಸ್ವಪ್ನಸ್ಖಲನ, ಶೀಗ್ರಸ್ಖಲನ, ಗತಿಸಿದ ಯಾವ ಯಾವ ಹಿರಿಯರು ಆಕಾಶದ ಯಾವ ಯಾವ ಮಾರ್ಗದಲ್ಲಿ, ಯಾವ? ಯಾವ? ಶೋಕದ ರಾಗಗಳನ್ನು ಹಾಡುತ್ತಿದ್ದರೆಂದೂ ಹೇಳಿ ಗಲಿಬಿಲಿ ಹುಟ್ಟಿಸಿಬಿಡುತ್ತಿದ್ದ. ಕಾಶಿಯಲ್ಲಿ ನಾನಿದ್ದ ಐದು ದಿನಗಳವರೆಗೆ ಮಿತ್ರನಂತೆ, ಶನಿಯಂತೆ, ಬಂಧುವಿನಂತೆ ಕಾಡಿದ. ಅವನ ವಾಗ್ ನೈಪುಣ್ಯಕ್ಕೆ ಹೆದರಿಯೇ ಎರಡು ದಿನ ಮುಂಚಿತವಾಗಿ ಕಾಶಿ ಖಾಲಿ ಮಾಡಿಕೊಂಡು ಅಲಹಾಬಾದಿಗೆ ಹೊರಟು ಬಂದುಬಿಟ್ಟಿದ್ದೆನು. +ಶಾಮವೆಂಬುದು ಒಂದು ವರ್ಣವಾಗಿ, ಶಾಮ ಎಂಬುದು ಒಂದು ನಾಮಪದವಾಗಿ; ಶಾಮವೆಂಬುದು ಒಂದು ಕ್ರಿಯಾಪದವಾಗಿ, ಶಾಮ ಎಂಬುದು ಒಂದು ಕರ್ತೃವಾಗಿ ಶಾಮ ಎಂಬುದು ಒಂದು ಅಂತರಂಗವಾಗಿ, ಶಾಮ ಎಂಬುದು ಒಂದು ಬಹಿರಂಗವಾಗಿ, ಶಾಮ ಎಂಬುದು ಒಂದು ವಾತಾವರಣವಾಗಿ ಕಾಡತೊಡಗಿತು. ಅದೊಂದು ಅವರ್ಣೀಯವಾದ ತಲ್ಲಣ. ಹೇಗಪ್ಪಾ ಈ ತಲ್ಲಣಕ್ಕೆ ಅಭಿವ್ಯಕ್ತಿ ಕೊಡಬೇಕೆಂದು ಯೋಚಿಸುತ್ತಿದ್ದರೆ, ದೊಡ್ಡ ಬಾರೆ ಹಣ್ಣಿನ ಮರದ ಮನೆಯ ಬಾಲ್ಯ ಸಖನೋರ್ವ ನೆನಪಾದ. ಅವನು ಥೇಟ್ ನೂರು ಮಂದಿ ಶಾಮಣ್ಣರಿಗಿಂದ ಮಾಡಲ್ಪಟ್ಟಂತಿದ್ದ. ಇವನು ನನ್ನ ಮೇಲೆ ಕಥೆ ಬರೆಯುತ್ತಾನೆಂದು ಅವನೇ ಊಹಿಸಿಕೊಂಡ. ಆ ಕುರಿತು ಒಂದು ದಿನ ಕೇಳಿಯೇಬಿಟ್ಟ. ಕಥೆ ಬರೆಯಿಸಿಕೊಳ್ಳುವಂಥ ವಿಶೇಷವೇನಾದ್ರು ನಿನ್ನ ಬದುಕಿನಲ್ಲಿದ್ರೆ ಕಥೆ ಬರೆಯಬೌದೆಂದೆ. ನನ್ನ ಮಾತು ಅವನ ಮೇಲೆ ಅಷ್ಟು ಪರಿಣಾಮ ಬೀರಿರಬಹುದೆಂದು ನಾನು ಊಹಿಸಿರಲಿಲ್ಲ. ಹ್ಯಾಪ್ ಮೋರೆಯ ಮತ್ತು ಬದುಕಿನ ವ್ಯಕ್ತಿಯಾದ ಅವನು ನಿರ್ವಿರಾಮವಾಗಿ ನನ್ನ ಬದುಕಿನ ಮೇಲೆ ಮುರುಕಟ್ಟಿನಲ್ಲಿ ಯಾವ ಯಾವ ವಿಶೇಷಗಳು ಎಷ್ಟೆಷ್ಟು ಧೂಳು ಹಿಡಿದು ಕೂತಿವೆ? ಎಂದು ಹೂಡುಕಿಕೊಂಡ. ವಿಚಿತ್ರವೆಂದರೆ ಒಂದೇ ಒಂದು ಪುಟ್ಟ ವಿಷೇಶವು ಅವನಿಗೆ ದೊರಕಲಿಲ್ಲ. ಆದ್ದರಿಂದ ಅವನು ನಿರಾಶನಾಗಲಿಲ್ಲ. ವಿಶೇಷಗಳನ್ನವಲಂಬಿಸಿ ಕಥೇನ ಎಲ್ರೂ ಬರೀತಾರೆ… ಆದ್ರೆ ವಿಶೇಷಗಳೇ ಇಲ್ಲದ ನನ್ನಂಥೋರ ಬಗ್ಗೆ ಕಥೆ ಬರೆದಾಗಲೇ ಶಹಬ್ಬಾಷ ಎನ್ನಬಹುದೆಂದು ಮುಖಕ್ಕೆ ಬಡಿದಂತೆ ಕೇಳಿಯೇಬಿಟ್ಟ. ಅವನು ಕೇಳಿದ್ದು ಹೇಳಿದ್ದು ನನಗೆ ಸರಿ ಎನ್ನಿಸಿತು. ಅವನನ್ನು ಎದುರಿಗೆ ಕೂಡ್ರಿಸಿಕೊಂಡು ಇಡೀ ಎರಡು ಹಗಲು ನೂರಾರು ಪ್ರಶ್ನೆಗಳನ್ನು ಹಾಕಿದೆ. ಕಥೆಗೆ ಪೂರಕವಾಗುವಂಥ ಒಂದೇ ಒಂದು ಎಳೆಯೂ ದೊರಕಲಿಲ್ಲ. ನಿನ್ನನ್ನು ನೀನು ಸುಳ್ಳು ತಾರಾತಿಗಡಿಗಳಿಂದ ಮರೆಮಾಚಿಕೊಂಡಾದರೂ ಹೇಳು ಎಂದೆ. ಅವನು ಬಿಲ್ಕುಲ್ ಇಲ್ಲ ಅಂದ… ನನ್ನ ಒದ್ದಾಟ ನೋಡಲಾರದೆ… “ನನ್ನಲ್ಲಿ ಯಾರಲ್ಲೂ ಇಲ್ಲದ ಒಂದು ಗುಣ ಇದೆ” ಎಂದು ಹೇಳಿದ. ಅದು ಯಾವುದು ಎಂದು ಕೇಳಿದೆ ಅವನು ಹೇಳಿದುವುಗಳನು ಹೀಗೆ ಪಟ್ಟಿ ಮಾಡಬಹುದು. +೧. ಯಾರೂ ಮಾಡಿರದ ಕೆಟ್ಟ ಕೆಲಸವನ್ನು ಮಾಡಬೇಕೆಂದಾಸೆ. +೨. ತಾಯಿಯ ಜೊತೆ ಬತ್ತಲೆಯಾಗಿ ಮಲಗಬೇಕೆಂಬಾಸೆ. +೩. ಯಾರನಾದರೂ ತಾನು; ತನ್ನನ್ನು ಯಾರಾದರೂ ರೇಪ್ ಮಾಡಬಾರದೆ ಎಂಬ ನಿರೀಕ್ಷೆ. +೪. ಯಾರನಾದರು ಯಾಕೆ? ತನ್ನನ್ನು ತಾನು ಸದಾ ಗುಮಾನಿಯಿಂದ ನೋಡಿಕೊಳ್ಳುವುದು. +೫. ಹಿರಿಯರು ಯಾವುದು ಮಾಡಕೂಡದು ಎಂದು ಹೇಳುವರೋ ಅದನ್ನು ತಾನು ಗುಟ್ಟಾಗಿ ಉಲ್ಲಂಘಿಸುವುದು ಮಾಡುವುದು. +೬. ಅಪರಿಚಿತ ಸ್ಥಳಕ್ಕೆ ಹೋಗಿ ಗೆಳೆಯರ ಹೆಸರಿಟ್ಟುಕೊಂಡು ಅವರ ಹೆಸರನ್ನು ಬದ್ನಾಂ ಮಾಡಬೇಕೆಂಬಾಸೆ. +೭. ರಸ್ತೆಗಳಿರದ ಕಡೆ ರಸ್ತೆ ಮಾಡಿಕೊಂಡು ತಿರುಗಾಡುವ ಆಸೆ. +೮. ಕೆಟ್ಟದಾಗಿ ಬದುಕಬೇಕೆಂಬ ಮತ್ತು ಕೆಟ್ಟದಾಗಿ ಸಾಯಬೇಕೆಂಬಾಸೆ. +೯. ತನ್ನ ಹೆಂಡತಿಯನ್ನು ಪರಪುರುಷರು ಮೋಹಿಸುವಂಥ ಸಂಚು ಹೂಡಬೇಕೆಂದಾಸೆ +ಹೀಗೆ ಪಟ್ಟಿ ಮಾಡುತ್ತ ಹೊದರೆ ಅದು ಆಂಜನೇಯನ ಬಾಲದಂತೆ ಬೆಳೆಯುತ್ತದೆ. ವಿಚಾರಣೆಯಿಂದ ತಿಳಿದಿದ್ದೇನೆಂದರೆ ಅವುಗಳ ಪೈಕಿ ಒಂದನ್ನೂ ಅವನು ಆಚರಣೆಗೆ ತಂದಿರಲಿಲ್ಲ ಎಂಬುದು… ಅಂಥ ಪ್ರಯತ್ನ ಮಾಡಿ ಮುಖಭಂಗ ಅನುಭವಿಸಿರುವನಂತೆ… ತಾನು ಅಂದುಕೊಂಡಂತೆ ಬದುಕುತ್ತಿಲ್ಲವೆಂಬ ಖೇದ ಅವನನ್ನಾವರಿಸಿರುವುದು ಸ್ಪಷ್ಟವಾಯಿತು. ಆದರೆ ಅವನು ಛಲದಂಕ ಮಲ್ಲನಂತೆ ಹಾಗೆ ಬದುಕುತ್ತ ಸಮಾಜದ ಅವಕೃಪೆಗೆ ಪಾತ್ರನಾಗಿರುವನು. +ಅವನೊಂದಿಗೆ ನಡೆದ ಮಾತುಕಥೆ ನನ್ನನ್ನು ಬೇತಾಳದಂತೆ ಬೆಂಬತ್ತಿ ಕಾಡತೊಡಗಿತು. ಕೆಲ ದಿನಗಳ ನಂತರ ಅದಕ್ಕೆ ತದ್ವಿರುದ್ಧವಾಗಿ ಬದುಕುತ್ತಿರುವ ವ್ಯಕ್ತಿಯೊಂದು ಸಾಹಿತ್ಯದ ನೆಪದಿಂದ ಪರಿಚಯವಾಯಿತು. ಆ ವ್ಯಕ್ತಿ ಪ್ರತಿಭಾವಂತ ಓದುಗ, ಬರಹಗಾರ, ಚಿಂತಕ ಮತ್ತೆಲ್ಲ. ಅದರ ಕೆಲಸವೇನೆಂದರೆ ಸಜ್ಜನರಂತೆ ಬದುಕುವುವರನ್ನು ಕಂಡರೆ ಸಿಡಿಮಿಡಿಗುಟ್ಟುವುದು. ಸಂಭಾವಿತರನ್ನು ಗುಟ್ಟಾಗಿ ಸೂಳೇಯರ ಮನೆಗೆ ಕರೆದೊಯ್ದುಬಿಡುವುದು… ಮನಸ್ಸಿನ ಭ್ರಮೆಯಿಂದ ರೋಗಗಳು ಅಂಟುವುವೇ ಹೊರತು ಸಂಸರ್ಗದಿಂದಲ್ಲ ಎಂದು ವಾದಿಸುವುದು… ಕುಡಿ, ಸೇದು, ಮಜಾ ಮಾಡು… ಎಂದು ಒತ್ತಡ ಹೇರುವುದು… ಇತ್ಯಾದಿ ಪ್ರಚಂಡ ಗುಣ ಶೇಖರ ಆತನಾಗಿದ್ದ. ಇಂಥ ಎಷ್ಟೋ ಪಾತ್ರಗಳನ್ನು ಮಡಗಿಕೊಂಡು ಉದ್ದೇಶವೈಲ್ಲದೆ, ಯಾವುದೇ ಒಂದು ಪರಂಪರಾಗತ ಚೌಕಟ್ಟು ಇಲ್ಲದೆ… ಕಾದಂಬರಿ ಬರೆಯಬೇಕೆಂದು ಕೂತೊಡನೆ ಒಂದೊಂದು ವ್ಯಕ್ತಿ ಒಂದೊಂದು ಪಾತ್ರವಾಗಿ ನುಗ್ಗಿ ಬಂದು ನಾನು ಹೀಗೆ… ಹಾಗೆ ಎಂದು ಪೀಡಿಸತೊಡಗಿದವು… ಹೌದು ಅಂದರೆ ಹೌದು! ಇಲ್ಲ ಎಂದರೆ ಇಲ್ಲ ಎಂಬಂಥ ಸಮಷ್ಟಿ ಬದುಕು ಒಡಮೂಡತೊಡಗಿತು… ನನ್ನನ್ನು ಅನ್ವೇಶಣೆಗೆ, ವಿಶ್ಲೇಷಣೆಗೆ ಹಚ್ಚಿತು… ಕಾದಂಬರಿ ಒಂದು ಹಂತಕ್ಕೆ ಬರುತ್ತಿದ್ದಂತೆ ನಾನು ಸ್ವಕಲ್ಪಿತವೆಂದೋ, ಕಪೋಲಲಲ್ಪಿತವೆಂದೋ ಭಾವಿಸಿದ್ದ ಪಾತ್ರಗಳು ನಾವಿಂಥಿಂಥ ಕಡೆ ಜೀವಂತವಾಗಿದ್ದೇವೆ ಕಣಯ್ಯಾ… ಎಂದು ತಂತಮ್ಮ ವಿಳಾಸ ನೀಡತೊಡಗಿದವು… ಅದರ ಬಗ್ಗೆ ಇದು ಚಾಡಿ ಹೇಳುವುದು; ಇದರಬಗ್ಗೆ ಅದು ಚಾಡಿ ಹೇಳುವುದು… ಮುಂದುವರಿದಂತೆ ಅವೆಲ್ಲ ನನ್ನ ವಿರುದ್ಧವೇ ಮಸಲತ್ತು ಮಾಡತೊಡಗಿದ್ದು ಸ್ಪಷ್ಟವಾಯಿತು. ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಆಯಾ ಘಟನೆಗಳನ್ನು; ಆಯಾ ಘಟನೆಗಳಿಗೆ ಸಂಬಂಧಿಸಿದಂತೆ ಆಯಾ ಊರುಗಳನ್ನು; ಆಯಾ ಊರುಗಳಿಗೆ ಸಂಬಂಧಿಸಿದಂತೆ ಆಯಾ ಕೇರಿಗಳನ್ನು ವಿನಾ ಕಾರಣವೋ, ಸಕಾರಣವೋ ಹುಡುಕಿಕೊಂಡು ಅಲೆದಾಡತೊಡಗಿದೆ… ಅಲ್ಲೆಲ್ಲ ಜೀವಂತವಿದ್ದ ಅವರೆಲ್ಲ ಖುದ್ದ ಗುರುತಿಸಿ ಬೆಟ್ಟಿಯಾಗಿ ಅಭಿವ್ಯಕ್ತಿ ಕ್ರಮದೊಳಗೆ ತಾವು ಎಲ್ಲೆಲ್ಲಿಗೆ ಬಂದಿದ್ದೇವಯ್ಯಾ ಎಂದು ಕೇಳತೊಡಗಿದರು. ಅರೆ! ಅವರು ಇವರಾಗಿ ಇಲ್ಲೆಲ್ಲ ಇದ್ದಾರಲ್ಲ ಎಂದು ಅಚ್ಚರಿಗೊಂಡೆ… ಆಯಾ ಪಾತ್ರ ಹೇಳುವುದನ್ನು ಕೇಳಿಯಾಯಿತು… ಬರೆದಿಟ್ಟಾಯಿತು. ಇನ್ನು ಮುಗಿಯಿತು ಎಂದು ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ… ಬರೆಯೋದು ಬರೆಯಿಸಿಕೊಂಡು ಒಟ್ಟಂದದಿಂದ ನೇಪಥ್ಯಕ್ಕೆ ಸರಿದಿದ್ದ ಕೆಲ ಪಾತ್ರಗಳು ಬಂದು ಇಡೀ ಕಾದಂಬರಿಯ ರಿಕಾಲ್ ಮಾಡತೊಡಾಗಿದವು. ಉದಾಹರಣೆಗೆ ಪವಿತ್ರ ಕಾಶೀ ಕ್ಷೇತ್ರದಲ್ಲಿ ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ವೃದ್ಧೆ ಅಲುಮೇಲಮ್ಮ ತನ್ನ ಮಗ ಶಾಮನ ಚಿತಾಭಸ್ಮ ಹೊತ್ತ ಕರಂಡಕವಿನ್ನೂ ಮಣಿಕರ್ಣಿಕ ತಲುಪಲಿಲ್ಲವೆಂದು ಪರಿತಪಿಸುತಿದ್ದುದು… ಆ ಹಾದರಗಿತ್ತಿ… ಶೂದ್ರ ಮುಂಡೆ ಅನಸೂಯ ಹೇಳಿದ್ದೆಲ್ಲ ಸುಳ್ಳು ಕಣಪ್ಪಾ… ಆಕೆಯನ್ನು ಪುನರ್ ವಿಚಾರಣೆಗೊಳಪಡಿಸು… ನನ್ಗೂ ಆಕೆಯನ್ನು ಪಾಟಿಸವಾಲಿಗೊಳಪಡಿಸಲು ಅವಕಾಶಕೊಡು” ಎಂದು ಪೀಡಿಸತೊಡಗಿದ್ದು ಹಸ್ತಪ್ರತಿಯೊಳಗಿಂದ ತಲೆಮೇಲೆ ಸೆರಗು ಸರಿಪಡಿಸಿಕೊಳ್ಳುತ್ತ ಬಂದ ವರಲಕ್ಷ್ಮಿಯದೂ ಅದೇ ಹಾಡು… +ರಾಖೇಶ ಕಾದಂಬರಿಕಾರನಾದ ನಿನ್ನನ್ನು ಸ್ವಲ್ಪ ವಿಚಾರಿಸಿಕೊಳ್ಳಬೇಕಿತ್ತು ಸ್ವಲ್ಪ ಕೊತ್ತಲಗಿಯ ಸೋಮವಾರಪೇಟೆ ಕಡೆ ಬರ್ತೀಯಾ… ಎಂದು ಕೇಳಲು ಹಿಂಜರಿಯಲಿಲ್ಲ…. ಬೆಂಗಳೂರಲ್ಲಿ ವೈಭವೋಪೇತ ಬಂಗಲೆಯಲ್ಲಿ ನೆಲೆಸಿರುವ ಮಾತು ಈ ಐತಿಹಾಸಿಕ ಚುನಾವಣೆ ನಂತರ ಲೋಕಸಭೆಗೆ ನಾಮಕರಣ ಆಗಲಿರುವ ಶ್ರೀಮತಿ ಅನಸೂಯಾ ರಘುರಾಂ ಆಮೇಲೆ ನಿನ್ನ ವಿಚಾರಿಸಿಕೊಳ್ಳುವುದಾಗಿ ತಂತಿ ಸಂದೇಶ ಕೊಟ್ಟಿದ್ದಳೆ… ಕಾರ್ಲ್‌ಮಾರ್ಕ್ಸ್‌ಗಿಂತ ಏರು ದನಿಯಲ್ಲಿ ಮಾತಾಡುತ್ತಿರುವ ಬಾಳಠಾಕ್ರೆ ಎಷ್ಟೋ ಮೇಲು ಅಂತಲೂ… ತಾನು ತಲುಪಿಸಿದ್ದ ಹಣವನ್ನು ರಾಖೇಶ ಮಂಗಮಾಯ ಮಾಡಿರುವನೆಂದೂ ಪಶುಪತಿ ಮುಂಬಯಿಯಿಂದ ಬರೆದಿದ್ದ ಇನ್‌ಲ್ಯಾಂಡ್ ಲೆಟರಿನಲ್ಲಿ ವಿವರಿಸಿರುವನು. ಹೀಗೆ ಪ್ರತಿಯೋಂದು ಪಾತ್ರವು ಮೌಖಿಕವಾಗಿ ಖಟ್ಲೆ ಹೂಡುತ್ತಿರುವುದು. ಈ ಗೊಂದಲದಲ್ಲಿ ತಪ್ಪು ಒಪ್ಪುಗಳ ತುಲನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲ ಪಾತ್ರಗಳ ತರಲೆಯೊಂದಿಗೆ ಎರಂಗ್ಳಿ ಶಿವಣ್ಣನವರು ಬೇರೆ ‘ನಾಟ್ಕ ಬರೆದಿರಾ’… ಅಜ್ಜೋರು ಕಾಯ್ತಿದ್ದಾರೆ… ನಿಮ್ಮ ಕೈಯಿಂದ್ಲೇ ಶಾಮಣ್ಣನ ಪಾತ್ರ ಮಾಡಿಸ್ಲಿಕ್ಕೆ ಅವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ… ಎಷ್ಟೇ ಕೆಲಸವಿದ್ದರೂ ನಾಟಕದ ಸ್ಕ್ರಿಪ್ಟ್ ತಗೊಂಡು ಹುಬ್ಳಿ ಪ್ಯಾಸೆಂಜರ್ ಗಾಡಿ ಹತ್ತಿ ಗದಗು ಸ್ಟೇಷನ್ನಿನಲ್ಲಿ ಇಳಿದುಬಿಡಿ. ವೀರೇಶ್ವರ ಪುಣ್ಯಾಶ್ರಮದ ಪತಾದ ಬಗ್ಗೆ ಅಲ್ಲಿ ಯಾರ್ನು ಕೇಳಿದ್ರೂ ಹೇಳ್ತಾರೆ… ಜಟಕಾದೋರ್‍ಗೆ ಮೂರೋ ನಾಲ್ಕೋ ಕೊಟ್ರೆ ಸೀದ ತಂದು ತಲುಪಿಸ್ತಾರೆ… ಮುಖ್ಯ ಎಚ್ಚರಿಕೆ ಎಂದರೆ ಯಾವ ಕಾರಣಕ್ಕೂ ನಿಮ್ಮ ಪತ್ನಿಯವರಿಗೆ ಮಾತ್ರ ಹೇಳಬೇಡಿ … ಅನಸೂಯಮ್ಮನ ಪಾತ್ರದ ಬಗ್ಗೆ ನಾನೂ; ವರಲಕ್ಷ್ಮಿ ಪಾತ್ರದ ಬಗ್ಗೆ ಮಠಪತಯ್ಯನವರೂ ಅಂದಾಜಿನ ಮೇಲೆ ತಾಲೀಮು ನಡೆಸಿದ್ದೇವೆ… ಆದರೆ ಅಲುಮೇಲಮ್ಮಜ್ಜಿಯ ಪಾತ್ರ ವಹಿಸಲಿರುವ ಬೂದಯ್ಯನವರು ಬಿ. ಆರ್. ಪೋಲೀಸ್ ಪಾಟೀಲರ ಒತ್ತಾಯದ ಮೇರೆಗೆ ಸನ್ಮಾನ ಮಾಡಿಸಿಕೊಳ್ಲಲು ನಿನ್ನೆ ತಾನೆ ಬನಹಟ್ಟಿಗೆ ಹೋಗಿದ್ದರೆ. ಅಲ್ಲಿ ಅವರು ನಾಳೆ ಸಂಜೆಗೆ ಏಡ್ಸ್ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ನಾಡಿದ್ದು ಎಷ್ಟು ಹೊತ್ತಿದ್ದರೂ ಗದಗಿಗೆ ವಾಪಸಾಗುತ್ತಾರೆ… ನಮ್ಮ ಯಾರ ಬಗೆಗೂ ನೀವು ಆಲೋಚಿಸದೆ ಎಲ್ಲ ಬಿಟ್ಟು ಹೊರಟು ಬರುವುದು… ತಿಳಿಯಿರಿ… ಎಂದು ವಿವರವಾಗಿ ಪತ್ರ ಬರೆದಿರುವರು… ನನ್ನ ಪುಣ್ಯಕ್ಕೆ ಆ ಪತ್ರ ಹೆಂಡತಿ ಅನ್ನಪೂರ್ಣಳ ಕೈಯಲ್ಲಿ ಸಿಕ್ಕಲಿಲ್ಲ… ಆದರೆ ಆಕೆ ಬೆಳಗಿನಿಂದ ಯಾವ್ದೋ ಒಂದು ಪತ್ರ ಬಂದಂಗಾಯ್ತಲ್ಲ… ಯಾರಿಂದ ಬಂತು ಏನ್ಕಥೆ! ಎಂದು ಹುಡುಕಾಡುತ್ತಿರುವಳು. ಅದನ್ನು ನಾನಾಗಲೇ ಹಳೆಬಟ್ಟೆ ಗಂಟೊಳಗೆ ತೂರಿಸಿಬಿಟ್ಟಿರುವೆನು… +ಆಕೆಯ ಧ್ಯಾನವನ್ನು ಬೇರೆ ಕಡೆಗೆ ತಿರುಗಸಲೋಸುಗ – +“ಅನ್ನಪೂರ್ಣಾ… ಅಂತೂ ಕದಂಬರಿ ಬರೆಯೋದು ಮುಗಿದು ಬಿಟ್ತು ಕಣೆ… ಹಾಳಾದ್ದು ನನ್ನ ದೇಹದ ಅರ್ಧಭಾಗವನ್ನು ತಿಂದುಬಿಡ್ತು… ನೀನೊಮ್ಮೆ ಇದ್ರ ಮೇಲೆ ಕಣ್ಣಾಡಿಸಿ ಬಿಟ್ಟಿ ಅಂದ್ರೆ ತಗೊಂಡೊಯ್ದು ಮಿತ್ರ ಚನ್ನಬಸವಣ್ಣಗೆ ಮುಟ್ಟಿಸಿ ಬಂದುಬಿಡ್ತೀನಿ…” ಎಂದು ಕುರ್ಚಿಯ ಹಿಂದಕ್ಕೆ ಬಾಗಿ ಮೈಮುರಿದು ಆಕಳಿಸಿದೆ… +“ಓಹೋಹೋ… ಬರೆದೀರಿ ಬರೆದೀರಿ… ನೀವೇನು ಬರೆದೀರಂತ ನಂಗೆ ಚೆನ್ನಾಗಿ ಗೊತ್ತು ಕಣ್ರೀ. ವ್ಯಭಿಚಾರವನ್ನು ಹೈಲೈಟ್ ಮಾಡಿದ್ದೀರಿ ತಾನೆ?… ಆ ಸಾಧ್ವಿ ವರಲಕ್ಷ್ಮಿಗಿಂತ ಆ ಹಾದ್ರಗಿತ್ತಿ ಅನಸೂಯಮ್ಮ ಅಂಥೋಳು? ಇಂಥೋಳಂಥ ಕೊಂಡಾಡಿದ್ದೀರಿ ತಾನೆ…” ಎಂದು ಕೃತಕ ಮುನಿಸು ಪ್ರಕಟಿಸಿದಳು… +“ನಾನ್ಯಾಕೆ ಸುಳ್ಳು ಬರೀಲಿ ಕಣೇ?… ಅಯಾ ಪಾತ್ರಗಳು ಏನೇನು ಹೇಳಿದ್ವೋ ಅದ್ರಂತೆ ಬರಿದೀನಿ ಕಣಮ್ಮಾ… ಇದ್ರಲ್ಲಿ ನನ್ನ ಕೈವಾಡ ಒಂಚೂರು ಇಲ್ಲ… ಬೇಕಿದ್ರೆ ನೀನೆ ಓದಿ ನೋಡು… ನಿಂಗೇ ತಿಳಿಯುತ್ತೆ” ಎಂದು ಮಹಾಮಳ್ಳಿಗನಂತೆ ಹೇಳಿದೆ. +ಆಕೆ ತನ್ನ ಕಣ್ಣಿನ ಕ್ಷಕಿರಣಗಳನ್ನು ಬಿಟ್ಟು ನನ್ನ ಕಡೆ ನೋಡಿದಳು. ಕುಂಬಳಕಾಯಿ ಕಳ್ಳನಂತೆ ನಾನು ಅಲ್ಲಾಡಿ ಹೋದೆ… “ಓಹೋ! ಹಾಗೋ” ಎಂದು ಸೂಚ್ಯವಾಗಿ ಉದ್ಗರಿಸಿದಳು. +“ನಾನೋದೋವರ್‍ಗೂ ತಗೊಂಡೊಯ್ದು ಪ್ರಕಾಶಕರಿಗೆ ಕೊಡಬಾರ್‍ದು ಮತ್ತೆ… ಸುಣ್ಣ ಹಚ್ಚಿ ನೆಲ ಸಾರಿಸಿ ಅಂಗಳದಲ್ಲಿ ರಂಗೋಲಿ ಹಾಕಿ ಕಸಮುಸುರಿ ಮುಗಿಸಿ ಓದ್ಲಿಕ್ಕೆ ತಗೋತೀನಿ… ಹಸ್ತ ಪ್ರತೀನ ನನ್ ಕೈಗೆ ಎಟಕುವಂತಿಡಿ” ಎಂದು ಸುಣ್ಣದ ಕಲ್ಲುಗಳಿಂದ ಗಡಿಗೆಗೆ ಒಂದು ತಪ್ಪಲೆ ಬಿಸಿನೀರು ಸುರಿದಳು… +“ಹಾಗಂದ್ರೆ ಹೆಂಗೆ ಕಣೇ… ಈಗ್ಲೆ ಹಸ್ತ ಪ್ರತಿ ತಲಿಪಿಸೋದು ಸಾಕಷ್ಟು ಲೇಟಾಗಿದೆ… ಇನ್ನು ಎರಡು ಮೂರುದಿನ ಲೇಟು ಮಾಡಿದ್ರೆ ಹೇಗೆ? ಈ ಕೆಲಸಾನೆಲ್ಲ ಆಮೇಲೆ ಮಾಡ್ಕೊಡ್ರಾಯ್ತು. ಮೊದ್ಲು ಇದ್ನ ಓದಿ ಮುಗಿಸಿ ಬಿಡೆ ಪುಣ್ಯ ಬರುತ್ತೆ” ಎಂದು ರಮಿಸುವ ಮಾತುಗಳನ್ನಾಡಿದೆ. +“ನಾನದರ ಪ್ರಥಮ ವಾಚಕಿ ಆಗಬೇಕೆಂಭೋದು ನಿಮಗಿಷ್ಟವಿದ್ರೆ ಒಂದೆರಡು ದಿನ ಕಾಯ್ರಿ ಅಷ್ಟೆ… ಇಲ್ಲಾಂದ್ರೆ ತಗೊಂಡೊಯ್ದು ಬಿಸಾಕಿ ಬನ್ನಿ…” ಎಂದು ಸಿಟ್ಟು ಮಾಡಿದಳು. +ನನ್ನ ಪ್ರತಿಯೊಂದು ಬರಹದ ಪ್ರಥಮ ವಾಚಕಿಯಾಗಿರುವ ಆಕೆಯ ಮಾತನ್ನು ತಿರಸ್ಕರಿಸಲು ನನಗೆ ಮನಸ್ಸು ಬರಲಿಲ್ಲ. ಅಂದೇ ರಾತ್ರಿ ಓದಿ ಮುಗಿಸುವಂತೆ ಹೇಳಿ ಒಪ್ಪಿಸುವಲ್ಲಿ ಸಫಲೀಕೃತನಾದೆ. +ರಾತ್ರಿ ಎಲ್ಲ ಕೆಲಸ ಮುಗಿಸಿದ ಮೇಲೆ ಆಕೆ ಸ್ಟೈಲಾಗಿ ಕುರ್ಚಿಯನ್ನಲಂಕರಿಸಿ ಟೇಬಲ್ ಲ್ಯಾಂಪ್ ಬೆಳಕಿನಲ್ಲಿ ಹಸ್ತಪ್ರತಿ ಹರಡಿಕೊಂಡು ಓದತೊಡಗಿದಳು… ಬ್ರಹ್ಮನು ನರನ ಹಣೆಬರಹವನ್ನು ಓದುವಂತೆ. ನಾನು ಎದುರಿಗೆ ಕುರ್ಚಿ ಮೇಲೆ ಅಪಾದಿತನಂತೆ ಕೂತು ಆಕೆಯ ಮುಖದ ಭಾವನೆಗಳ ಏರಿಳಿತವನ್ನು ಗಮನಿಸತೊಡಗಿದೆ… ತೀರ್ಪನ್ನು ಓದುತ್ತಿರುವ ನ್ಯಾಯಾಧೀಶರನ್ನು ನೋಡುತ್ತಿರುವ, ಕೇಳುತ್ತಿರುವ ಅಪರಾಧಿಯಂತೆ ಕೂತುಕೊಂಡೆ. ಹಾಗೆ ಕೂಡ್ರುವುದರಲ್ಲೆ ಒಂದು ರೀತಿಯ ಸಂತೋಷ. +ನನ್ನ ಹಸ್ತಾಕ್ಷರಗಳನ್ನು ಬಿಟ್ಟರೆ ಬೇರೆ ಯಾರ ಹಸ್ತಾಕ್ಷರವನ್ನು ಆಕೆ ಸರಾಗವಾಗಿ ಓದಲಾರಳು. ನಾನು ಅಕ್ಷರಗಳನ್ನು ದುಂಡಗೆ ಬರೆಯಲು ಕಲಿತಿದ್ದೆ ಆಕೆಗೆ ಪ್ರೇಮಪತ್ರಗಳನ್ನು ಬರೆಯುವುದರ ಮೂಲಕ. ನನ್ನ ಅಂಕುಡೊಂಕುಗಳನ್ನು (ಇರದಿದ್ದರೆ ಸೃಷ್ಟಿಸಿಕೊಂಡು ) ತಿದ್ದುವ ಸಂಪೂರ್ಣ ಹಕ್ಕು ಕೊಟ್ಟಿರುವೆನು. +ಆಕೆ ಓದತೊಡಗಿದಂತೆ, ಪುಟ ಮಗುಚ ತೊಡಗಿದಂತೆ; ಆಗಾಗ್ಗೆ ತಲೆ ಎತ್ತಿ ದುರುಗುಟ್ಟಿ ನನ್ನ ಕಡೆ ನೋಡತೊಡಗಿದಂತೆ; ಓಹೋ… ಹ್ಹಾ…ಹ್ಹಾ… ಎಂದು ಬಿಗುಮಾನದಿಂದ ಉದ್ಗರಿಸತೊಡಗಿದಂತೆ… ನನ್ನ ಎದೆ ಡವಗುಟ್ಟಿ ಬಡಿದುಕೊಳ್ಳತೊಡಗಿತು. ನನ್ನ ಬಾಯಿ ಒಣಗತೊಡಾಗಿತು, ನನ್ನ ಕಣ್ಣಿನ ಕಾಂತಿ ಮಂಕಾಗತೊಡಗಿತು. +ಅಂತೂ ಇಂತೂ ಆಕೆ ಓದಿ ಮುಗಿಸುವ ಹೊತ್ತಿಗೆ ಗಂಟೆ ಹನ್ನೆರಡೂ ಕಾಲಾಯಿತು. ಅಶುಭ ಸೂಚಕವಾಗಿ ದೂರದಲ್ಲೆಲ್ಲೋ ನರಿಗಳು ಊಳಿಡುತ್ತಿರುವುದು ಕೇಳಿಸಿತು. +ನ್ನ ಕಡೆ ನೋಡಿದಳು. ಆಕೆಯ ಒಂದೊಂದು ಕಣ್ಣು ಸಾವಿರ ಕ್ಯಾಂಡಲ್ ಬಲ್ಬು ಎಂದರೂ ಸರಿಯೇ. +“ಏನ್ರೀ… ನಾನಂದುಕೊಂಡಿದ್ದಂತೆಯೇ ಬರೆದುಬಿಟ್ಟಿರುವಿರಿ… ಹಠ ಅಂದ್ರೆ ಹೀಗಿರಬೇಕು ನೋಡ್ರಿ… ಅಪಾಪೋಲೀನ, ದುಷ್ಟನ್ನ, ಕುಡುಕನ್ನ, ಕೆಡುಕನ್ನ ದೊಡ್ ಮನುಷ್ಯ ಎಂಬಂತೆ ಚಿತ್ರಿಸಿದ್ದೀರಲ್ರೀ… ವೈದವ್ಯಾನ ಸರ್‍ಯಾಗಿ ಪಾಲಿಸ್ಕೊಂಡು ಹೋಗ್ತಿರೋ ವರಲಕ್ಷ್ನಿ ನಿಮ್ಮ ಕಣ್ಣಿಗೆ ಆದರ್ಶ ಮಹಿಳೆ, ಗರತಿ ಆಗಿ ಕಾಣಿಸ್ಲಿಲ್ಲ… ಆದ್ರೆ ಆ ಯಕಃಶ್ಚಿತ್ ಹೆಂಗಸು ಅನಸೂಯಾ ಉದಾತ್ತ ಮಹಿಳೆ ಥರ ಕಂಡ್ಳು… ಸರಿಯಾಗಿದೆ ನಿಮ್ಮ ಲೆಕ್ಕಾಚಾರ… ನೀವು ಶಾಮಣ್ಣಂಥೋರ ಕಡೆ, ರಾಖೇಶನಂಥೋರ ಕಡೆ. ಶಾಮಣ್ಣನಂಥ ಲಫಂಗರ ಪರ; ರಾಖೇಶನಂಥ (ಹ್ಹಾ… ಹ್ಹಾ… ನೀವಿಟ್ಟಿರುವ ಮುದ್ದಾದ ಹೆಸರೇ) ತಲೆ ಹಿಡುಕನ ಪರ, ಅನಸೂಯಳಂಥ (ಹ್ಹಾ… ಹ್ಹಾ… ಎಂಥ ಪತಿವ್ರತೆಯ ಹೆಸರಿಟ್ಟುಕೊಂಡಿದ್ದೀಯಲ್ಲೇ! ಅಥವಾ ಇವರೇ ಇಟ್ಟಿರಬಹುದೇ) ಹಾದರಗಿತ್ತಿ ಪರ ನೀವು ವಾದಿಸ್ತಿರೋದನ್ನ ನೋಡಿದ್ರೆ, ಬರೆದಿರೋದ್ನ ನೋಡಿದ್ರೆ ನನಗ್ಯಾಕೋ ಅನುಮಾನ ಶುರುವಾಗುತ್ತೆ… ಅದೂ ಅಲ್ದೆ ಇತ್ತೀಚೆಗೆ ನಿಮ್ಮ ನಡುವಳಿಕೇನೂ ಛೇಂಜಾಗಿದೆ. ನಾನೂ ನಿಮ್ಮನ್ನು ಗಮನಿಸ್ತಾನೇ ಇದ್ದೀನಿ… ನಡೆಸ್ರೀ… ಎಷ್ಟು ದಿನ ನಡೆಸ್ತೀರೋ ನಡೆಸ್ರೀ…” ಎಂದು ಮುಖ ಬಿಗಿದು ರೋಪು ಹಾಕತೊಡಗಿದಳು. +ಆಕೆಯ ಮಾತುಗಳನ್ನು ಕೇಳಿ ನಾನು ಪಾತಾಳಕ್ಕಿಳಿದು ಹೋದೆ. +“ಏನ್ ಅನ್ನೂ… ನೀನೇ ಹಿಂಗ ಮಾತಾಡ್ತಿದ್ರೆ ನನ್ ಗತಿ ಹೆಂಗೇ? ಕಾದಂಬರಿ ಓದಿದ ಮಾತ್ರಕ್ಕೆ ನಾನವ್ರಂತೆ ಅಂತ ಅಪಾರ್ಥ ಮಾಡ್ಕೋಬೇಡ ಕಣೇ” ಎಂದು ಅಂಗಲಾಚಿದೆ. +ಆಕೆ ಹಸ್ತಪ್ರತಿಯನ್ನು ತಳ್ಳುತ್ತ “ತಗೊಂಡೊಯ್ದು ನಿಮ್ಮ ಪ್ರಕಾಶಕ ಮಿತ್ರಗೆ ಕೊಡ್ರಿ… ನಾಳೆ ನಾನು ತಗೊಳ್ಳಲಿರೋ ಕ್ಲಾಸಿಗೆ ಅಟೆಂಡ್‌ಮಾಡಿ… ನೀವೂ ಅವ್ರ ಜಾಡಿನಲ್ಲಿದ್ದೀರಿ ಎಂಬುದರ ಬಗ್ಗೆ ಕೆಲವು ಪುರಾವೆಗಳನ್ನು ಸಂಗ್ರಹಿಸಿಟ್ಟಿದ್ದೀನಿ… ಹುಷಾರಾಗಿರ್ರಿ…” ಎಂದು ಉಚ್ಚರಿಸಿದಳು. +ಆ ರಾತ್ರಿ ಪಾಪ ಪ್ರಜ್ಞೆಯಿಂದ ನನಗೆ ನಿದ್ದೆಯೇ ಬರಲಿಲ್ಲ. ಆಕೆಯ ಕಠೋರ ಪ್ರತಿಕ್ರಿಯೆಯಿಂದಾಗಿ ನನ್ನ ಕಾದಂಬರಿಯ ಹಸ್ತಪ್ರತಿ ಪುಟ್ಟ ಕಳೇಬರದಂತಾಗಿ ಬಿಟ್ಟಿತ್ತು. +ಮರುದಿನ ಎದ್ದು ಪ್ರತಃವಿಧಿಗಳನ್ನು ತೀರಿಸಿಕೊಂಡು ಹಸ್ತಪ್ರತಿಯೊಡನೆ ಬಳ್ಳಾರಿಗೆ ಹೊರಟೆ… ಆಕೆ ‘ಹೋಗ್ರೀ… ಹೋಗ್ರೀ… ಬಂದ ಮೇಲೆ ನಿಮ್ಮ ಕಥಿ ಇದ್ದೇ ಇದೆ’ ಎಂದು ಬೀಳ್ಕೊಟ್ಟಳು… +ಇರುವ ನನ್ನ ಕಥೆಯಾದರೂ ಯಾವುದು? +ಶಾಮಣ್ಣಗೆ ತಾಳೆ ಆಗುವಂಥ ಯಾವ ಯಾವ ಪುರಾವೆಗಳನ್ನು ಸಂಗ್ರಹಿಸಿಟ್ತಿರುವಳೋ; ನನ್ನ ದೇವರೇ ಕಾಪಾಡಬೇಕು… ಎಂದು ಒಳಗೊಳಗೆ ಕುಲುಕುಲು ನಗತೊಡಗಿದೆ. +ಆ ನಗೆ ಶಾಮಣ್ಣನ ಆತ್ಮಕಷ್ಟೇ ಕೇಳಿಸಿತು… ಎಂಬಲ್ಲಿಗೆ ಕುಂ.ವೀ> ಎಂಬ ನರ ಮಾನವನು ಬರೆಯುತ್ತಿದ್ದ ಶಾಮಣ್ಣ ಕಥಾನಕವು ಸಮಾಪ್ತಿಯಾದುದು. +ಜಯಮಂಗಳಂ ನಿತ್ಯ ಶುಭಮಂಗಳಂ +***** +ಮುಗಿಯಿತು +ಕೀಲಿಕರಣ: ಎಂ ಎನ್ ಎಸ್ ರಾವ್ +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +ನೆನಕೆಗಳು… ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ – ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_302.txt b/Kannada Sahitya/article_302.txt new file mode 100644 index 0000000000000000000000000000000000000000..a9a52ea7f304f0c4c873f94edc9232dd992cd45b --- /dev/null +++ b/Kannada Sahitya/article_302.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬರಬಾರದು ಹೀಗೆ ನೀವು +ನಮ್ಮೊಳಗೆ, +ನವಿಲ ಗರಿಯೊಳಗೆ ಬಂದ +ನೀಲಿ ಕಣ್ಣಂತೆ. +ಮಾತನಾಡಲಿಲ್ಲ ನಾವು +ಎಂದೂ +ಹತ್ತಿರ ಕೂತು ಹೊತ್ತು ಕಳೆದಿಲ್ಲ +ಆದರೂ ಕೇಳುತ್ತದೆ ಎದೆಬಡಿತ +ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. +ಮೋಹಕ್ಕೆ ಸಾವಿರ ಕಣ್ಣು +ಬೆಂಕಿ ನಾಲಗೆ ಅದಕೆ +ಯಾಕೆ ಹೀಗೆ ಕಾಡುತ್ತದೆ +ಸುಮ್ಮ ಸುಮ್ಮನೆ ಸುಳಿದು +ನಮ್ಮ ನಡುವೆ. +ನಾಡಿಯಲ್ಲೆಲ್ಲಾ ಬೆಂಕಿ ಇಳಿದು +ನಡುಗುವುದು ಮೈ ನಖ ಶಿಖಾಂತ +ನಕ್ಷತ್ರ ಗುಛ್ಚ ಹೊತ್ತು ಉರಿದಂತೆ. +ಮಾತನಾಡುವುದೇ ಬೇಡ +ಸುಮ್ಮನೆ ಕರಗಿ ಬಿಡಬೇಕು +ನಿಮ್ಮಲ್ಲಿ +ಕಣಿವೆ ಕಂದರ ಹೊದ್ದ +ದಟ್ಟ ಹಸಿರಂತೆ +ಕಡಲ ನೀರಲ್ಲಿ ನೀಲಿ ಬೆರೆತಂತೆ…. +ಕೂಸು ಕೈ ಹಿಡಿದು ಜಗ್ಗುತ್ತದೆ +ಕೆಲವು ಸಾರಿ ಹೀಗೇ! +***** +ಸಮುದ್ರ ಸೀಳಿ ಲಾಗ ಹೊಡೆಯುವತಿಮಿಂಗಲಆಕಾಶವನ್ನೇ ಹರಿದು ಸುರಿಯುವಮಳೆಚಂದ್ರ ತಾರೆಗಳನ್ನೆ ನುಂಗಿಬಿಡುವಮೋಡಭೂಮಿಯೊಳಗಿಂದ ಹಟಾತ್ತನೆ ಸಿಡಿದುನಡುಗಿಸುವ ಕಂಪನ; ನುಡಿಸಿದರೆ ರಾಗ,ಹೀಗಿರಬೇಕು! ರೋಮ ರೋಮಕ್ಕೂ ಲಗ್ಗೆ ಇಟ್ಟುಕೊಲ್ಲುವ ಹಾಗೆ! ಕೀಲಿಕರಣ: ಕಿಶೋರ್‍ ಚಂದ್ರ +ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. ***** +ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_303.txt b/Kannada Sahitya/article_303.txt new file mode 100644 index 0000000000000000000000000000000000000000..ad03313e1d150cd84cf0b7d2420e05a359e50480 --- /dev/null +++ b/Kannada Sahitya/article_303.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀರಿನ ತುಂಬ ಮೋಡ +ಮೋಡದ ಮೇಲೆಲ್ಲ ಅಲೆ ಅಲೆಯಾಗಿ +ಹರಿವ ಮೀನು +ಮೋಡದೊಳಗೆ ಗುಡುಗು, ನೀರಲ್ಲಿ +ಸುಳಿ ಮಿಂಚು +ನದಿಯ ತಳದಲ್ಲೊಂದು ಕಥೆ +ನದಿಯ ಮುಖದಲ್ಲಿ ನಗುವ ತರಂಗಗಳು. +***** +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು ಬಿಡಿಸಲಾಗದ ಒಗಟು; ಆ ಗೂಢತಮ ತಮೋ ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ? ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ ಭವ್ಯತೆಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_304.txt b/Kannada Sahitya/article_304.txt new file mode 100644 index 0000000000000000000000000000000000000000..0f4e1bfb209933f9361f8262564fba7f837ecb15 --- /dev/null +++ b/Kannada Sahitya/article_304.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ! ದಾರಿಯಲ್ಲಿ ಕಾರಿ ನಿಧಾನ ಮಾಡಿದಾಗ ಕಂಡದ್ದು: ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ ಅಂಗಡಿ. ಅಂಗಡಿಯಲ್ಲಿ ಒಬ್ಬಳು ತೋರವಾದ ಹೆಂಗಸು. ತೊಡೆ ಮೇಲೊಂದು ಮಗು. ನೇತುಹಾಕಿದ ಎರಡು ಬಾಳೆಹಣ್ಣಿನ ಗೊನೆಗಳು. ಕತ್ತದ ತುದಿಯಲ್ಲಿನ ಬೆಂಕಿಯಿಂದ ಒಬ್ಬ ಮುದುಕ ಬೀಡಿ ಹಚ್ಚಿಕೊಳ್ಳುತ್ತಿದ್ದ. +ಅಥವಾ ಕೆರೆಯಲ್ಲಿ ಹಸಿರಾದ ಎಲೆಯ ಈ ಸಸ್ಯ ಹಬ್ಬುತ್ತ ಹಬ್ಬುತ್ತ ಹೋಗೋದು. ಬಲಕ್ಕೆ ಇದ್ದ ಬೆಟ್ಟದಿಂದ ಕಾರೊಂದು ಬೆಳಕು ಚೆಲ್ಲುತ್ತ ಈಗ ಕಾಣಿಸುತ್ತ ಮತ್ತೆ ಮರೆಯಾಗುತ್ತ ಬಳಸುದಾರಿಯಲ್ಲಿ ಇಳಿಯುತ್ತಿರೋದು. ಬೆಳದಿಂಗಳಲ್ಲಿ ಕೂಗುವ ಪಕ್ಷಿ-ಇದರ ಹೆಸರೇನೊ? -ಏರಿಕೆಯ ಸ್ವರದಲ್ಲಿ ಕೂಗತ್ತೆ. ಕೆರೆಯಿಂದ ತಂಪಾದ ಗಾಳಿ ಬೀಸತ್ತೆ. ಹೀಗೇ ಕೂತಿದ್ದರೆ ಕಾಣಿಸತ್ತೆ. ಕೇಳಿಸತ್ತೆ. ನಾಳೆ ಬೆಳಗಾಗತ್ತೆ. ಎದುರು ಸೂರ್ಯ ಹುಟ್ಟುತ್ತಾನೆ. ಸತ್ತರೆ ಇಲ್ಲ. +ಕಟುವಾದ ವಾಸನೆ ಎಲೆಯ ಈ ಪೊದೆಯಾಚೆ ಇನ್ನೊಂದು ಪೊದೆಯಿದೆ. ಅದರೆ ಮರೆಯಲ್ಲಿ ಇನ್ನೊಂದು ವ್ಯಕ್ತಿ ಕೂತಿರಬಹುದು. ಮೊದಲೇ ಬಂದವನಿರಬೇಕು. ಗಂಡಸಿರಬೇಕು. ಅಥವಾ ತನ್ನಂತೆ ಇನ್ನೊಬ್ಬ ಅತಿ ಆಧುನಿಕ ಹೆಣ್ಣಿರಬೇಕು. ತನ್ನ ನಂತರ ಬಂದಿದ್ದರೆ ಹೆಜ್ಜೆ ಸಪ್ಪಳ ಕೇಳಿಸಿರುತ್ತಿತ್ತು. ಈಗ ಅಲ್ಲಿಂದ ಸಿಗರೇಟಿನ ವಾಸನೆ ಬರುತ್ತಿದೆ. +ಬೆನ್ನ ಮೇಲೆ ಚೆಲ್ಲಿದ ಕಪ್ಪುಕೂದಲನ್ನು ಒಟ್ಟುಮಾಡಿ ಸಡಿಲವಾದ ಗಂಟು ಹಾಕಿದಳು. ನೀರಲ್ಲಿ ಮುಳುಗಿ ಸತ್ತ ಹೆಣದ ಮುಖ ಬಾತಿರುತ್ತೆ. ಚೆಕ್ಕವಳಿದ್ದಾಗ ಎಲ್ಲರಿಗೂ ಪ್ರಿಯವಾಗಿದ್ದ ಎಡಗೆನ್ನೆಯ ಮೇಲಿನ ಮಚ್ಚೆ ಬಾತ ಮುಖದಲ್ಲಿ ಕಾಣಿಸಲ್ಲ. ಬೋರಲಾಗಿ ತೇಲತ್ತೆ. ನೀರಿನ ಮೇಲೆ ಕಪ್ಪುಕೂದಲು ಹರಡಿರತ್ತೆ. ತೊಂಡು ಮೇಯಲು ಬಂದ ಯಾವುದೋ ದನ, ದನಗಳು ನೋಡುವ ಹಾಗೆ ಅಸ್ಪಷ್ಟವಾಗಿ ಎತ್ತಲೋ ನೋಡುತ್ತ, ಮೆಲಕು ಹಾಕುತ್ತಿರತ್ತೆ. ನಗ್ನವಾದಾಗ ಗಂಡೋ ಹೆಣ್ಣೋ ಅಷ್ಟು ಸುಲಭವಾಗಿ ತಿಳಿಯಲಾರದು. ಆದರೂ ಚೆಡ್ಡಿಯ ಮೇಲೊಂದು ಚಡ್ಡಿ ಹಾಕಿಕೊಂಡು ಬಂದಿದ್ದಾಳೆ-ಕಪ್ಪು ಬಣ್ಣದ ಚಡ್ಡಿ. +ನಿಶ್ಚಯ ಮಾಡಿದ ಘಳಿಗೆ ಸುಲಭವಾಗಿ ನೆನಪಾಗಲ್ಲ. ಯಾವತ್ತೋ ನಡೆದದ್ದು ಎನ್ನುವಂತೆ, ಅಥವಾ ನಿರಂತರ ಎನ್ನಿಸುವಂತೆ. ಗಂಡ ಕೆನ್ನೆಯ ಮೇಲೆ ಹೊಡೆದದ್ದು ಅಷ್ಟು ದೊಡ್ಡ ವಿಷಯವಲ್ಲ. ಪ್ರೀತಿಯಲ್ಲೂ ಹೊಡೆಯಬಹುದು. ಸಾಯಿ, ಸಾಯಿ, ಸಾಯಿ-ಎಂದು ಅವನು ವಿಚಿತ್ರವಾದ ಸ್ವರದಲ್ಲಿ ಕೂಗಿದ. ಅದು ತನ್ನ ಒಳಗಿಂದಲೇ ಹುಟ್ಟಿದ ಕಿರುಚು ಎನ್ನಿಸಿತಲ್ಲವೆ? ಕೊಲ್ಲವ ಕ್ರೌರ್ಯದಲ್ಲಿ ಅವನ ಕಣ್ಣುಗಳು ದುರುಗುಟ್ಟಿದವು. ಹೊಡೆದವನು ನೆಲದ ಮೇಲೆ ಕುಸಿದು ಕೂತ. ಮುಖ ಹೆಣದಂತೆ ಬಿಳಿಚಿತ್ತು. ಕಿವಿಯಲ್ಲಿ ಕುಟ್ಟುವ ಶಬ್ದ. ಹೆಂಗಸರಿಗೆ ಈಗಲೂ ಮೋಹಕವಾಗಿದ್ದ ಅವನ ಮೀಸೆ, ದಟ್ಟವಾದ ಬಾಗಿದ ಹುಬ್ಬು, ಪೊದೆಗೂದಲು ಹಾಸ್ಯಾಸ್ಪದವಾಗಿ ಕಂಡವು. ಸದ್ದಿಲ್ಲದೆ ವಿಕಟವಾದ ನಗು ಎದ್ದು ಮಾಯವಾಯಿತು. ಮಗ? ಮಗ ಊಟಿಯ ಸ್ಕೂಲಲ್ಲಿ ಬೆಳೆಯುತ್ತಿದ್ದಾನೆ. ಒಂದು ಕಾಲದಲ್ಲಿ ಟೆನಿಸ್ ಚಾಂಪಿಯನ್ ಆಗಿದ್ದ ಅಪ್ಪನೆಂದರೆ ಅವನಿಗೆ ಪ್ರೀತಿಯಿದೆ. ಹೇಗೋ ಬೆಳೆದು ದೊಡ್ಡವನಾಗುತ್ತಾನೆ. ಎಲ್ಲ ನಿಧಾನವಾಗಿ ಮರೆತುಹೋಗತ್ತೆ. +ಇದರ ಹಿಂದಿನ ಕಾರಣಗಳು? ಗೊತ್ತಾಗಲ್ಲ. ಯಾರ ತಪ್ಪು? ಅವನು ತನ್ನನ್ನು ಪ್ರೀತಿಸಿದ್ದಿಲ್ಲವೆ? ತಂದೆಯ ಜೊತೆ ಜಗಳವಾಡಿ ಮದುವೆಯಾದ. ಅರ್ಧ ಆಸ್ತಿ ಮಾರಿ ಅಮೇರಿಕಾಕ್ಕೆ ಕರಕೊಂಡು ಹೋಗಿ ಡ್ರಾಮಾ ಸ್ಕೂಲಲ್ಲಿ ಆಕ್ಟಿಂಗ್ ಕಲಿಸಿದ. ಮೊದಲು ತಪ್ಪು ಮಾಡಿದ್ದು ಯಾರು? ಈ ಬಗ್ಗೆ ನೂರಾರು ಸಾರಿ ಜಗಳವಾಡಿದ್ದಾಗಿದೆ. ಒಂದಕ್ಕೊಂದು ಹೆಣೆದುಕೊಳ್ಳುವ ತಪ್ಪುಗಳು-ಹದಿನೈದು ವರ್ಷಗಳ ಕಾಲ ಇಬ್ಬರೂ ಕೂಡಿ ಹೆಣೆದೆವು. ತಾನು ಇಲ್ಲದಾಗ ಈಗಲೂ ಅವನು ಹೇಗೆ ಗಟ್ಟಿಯಾಗಿ ನಗುತ್ತಾನೆ. ಅವನ ಅರೋಗ್ಯವಾದ ಗಟ್ಟಿಯಾದ ಹಲ್ಲುಗಳು ಕಪ್ಪು ಮೀಸೆ, ಕೆಳಗೆ ಹೊಳೆಯುತ್ತಿವೆ. ಇಬ್ಬರಿಗೂ ಪರಿಚಯವಿದ್ದ ಹೆಂಗಸರು ತನ್ನನ್ನೇ ದೂರುವುದು. +ಅವಳಿಗೆ ಬೆರಗಾಯಿತು; ಪ್ರೀತಿಯಷ್ಟೇ ಈ ದ್ವೇಷವೂ ವಿಸ್ಮಯ ಹುಟ್ಟಿಸುವಷ್ಟು ಸ್ಫುಟವಾದ ಶುದ್ಧವಾದ ಭಾವನೆ. ವಜ್ರದಂತೆ. +ಕೂದಲನ್ನು ಬಿಚ್ಚಿ ಬೆನ್ನಿನ ಮೇಲೆ ಬಿಟ್ಟಳು. ಅವಳ ಕಣ್ಣುಗಳು ಬೆಳದಿಂಗಳಲ್ಲಿ ಕಾಂತಿಯಿಂದ ಹೊಳೆದವು. ಕಣ್ಣಿನ ಸುತ್ತ ಗೆರೆಗಳಿವೆ. ಮುವ್ವತ್ತೈದು ವರ್ಷಗಳಾಗಿವೆ. ಸುಮಾರು ಎರಡು ವರ್ಷಗಳಿಂದ ಈ ದೇಹವನ್ನು ನಾನು ಮುಟ್ಟಿಲ್ಲ. ಇನ್ನೂ ಬಿಗಿಯಾಗಿ ಉಳಿದ ಮಾಟವಾದ ದೇಹ. ಕ್ರೂರವಾದ ದ್ವೇಷದಲ್ಲಿ ಅದು ಇನ್ನೊಂದು ಬಗೆಯ ಚಲುವನ್ನು ಪಡೆದೆದೆ. ಪರರ ಕಣ್ಣುಗಳು ಅದನ್ನು ಗುರುತಿಸುವುದನ್ನು ಅವಳು ಗಮನಿಸಿದ್ದಳೆ. ತಿರಸ್ಕಾರದಲ್ಲಿ ಅದನ್ನು ಅವಳು ತೆರೆದುಕೊಟ್ಟಿರುವುದೂ ಉಂಟು. ಆಗ ಪಡೆದದ್ದು ಸೊಕ್ಕಿನ ಸುಖ. ಗಂಡನಿಗೆ ತನ್ನನ್ನು ಕೊಲ್ಲಬೇಕೆನಿಸಿದ್ದು. +ಇನ್ನೊಂದು ಪೊದೆಯ ಮರೆಯಲ್ಲಿ ಕೂತವನು ಸೇದಿದ ಸಿಗರೇಟನ್ನು ಆರಿಸದೆ ಎಸೆದ. ಬೆಳದಿಂಗಳಲ್ಲಿ ತುಂಡು ಹೊಗೆಯಾಡುತ್ತಿರಬಹುದು. ಅವಳು ವ್ಯಾನಿಟಿ ಬ್ಯಾಗಿನಿಂದ ಪ್ಯಾಕನ್ನು ತೆರೆದಳು. ಆದರೆ ಬೆಂಕಿಪಟ್ಟಣ ತಂದಿರಲಿಲ್ಲ. +ಕೈಗಳು ತೊಡೆಯ ಮೇಲೆ ನಿದ್ದೆ ಮಾಡುವ ಹಕ್ಕಿಗಳಂತೆ ನಿಶ್ಚಲವಾದವು. ಪೊದೆಯಾಚೆ ಕೂತವನ ಹತ್ತಿರ ಬೆಂಕಿಪಟ್ಟಣ ಕೇಳುವುದು ಸರಿಯೆ? ಸಾಯುವುದು ಅಪ್ರಸ್ತುತ ಎಂದು ಇದ್ದಕ್ಕಿದ್ದಂತೆ ಅನ್ನಿಸಿತು. ಆದರೆ ಇದು ಈಗ ಅನ್ನಿಸಿದಲ್ಲ ನಿರಂತರವಾಗಿ ಅನ್ನಿಸುತ್ತ ಬಂದದ್ದು ಎಂದುಕೊಂಡಳು. ಆಶ್ಚರ್ಯಪಡುತ್ತ ನಿಶ್ಚಲವಾಗಿ ಹಾಗೇ ಕೂತಳು. ಇನ್ನೊಂದು ಕಾರು ಬೆಟ್ಟ ಹತ್ತಿ ಹೋಗುತ್ತಿದೆ. ಹಕ್ಕಿ ಮತ್ತೆ ಕೂಗುತ್ತಿದೆ. ಕೆರೆಯ ನೀರು ಬೆಳದಿಂಗಳಿನಲ್ಲಿ ಸೂಕ್ಷ್ಮವಾಗಿ ಕಂಪಿಸುತ್ತಿದೆ. ಮುದುಕ ಬೀಡಿ ಹಚ್ಚುತ್ತ ನಿಂತಿರುವುದು ನೆನಪಾಗತ್ತೆ. ಮತ್ತು ತಾನು ಹುಡುಗಿಯಾಗಿದ್ದಾಗ ಬೇಲಿಯಲ್ಲಿ ಬೆಳೆದ ಗಿಡವೊಂದರ ಎಲೆಯನ್ನು ಚಿವುಟಿ ಮೂಸಿದ್ದು. ನಿರ್ಭಾವದಲ್ಲಿ ಚಿತ್ರಗಳು ಹಾಯ್ದು ಹೋಗುತ್ತವೆ. ಬದುಕುವುದಾಗಲೀ, ಸಾಯುವುದಾಗಲೀ ಎರಡೂ ಅಪ್ರಸ್ತುತ. ತಾನು ಇದ್ದೇನೆ ಎಂದು ತಿಳಿದರೆ ಮಾತ್ರ ಈಗ ಇದ್ದೇನೆ, ಅಲ್ಲವೇ ಎಂದು ಬೆರಗಾಯಿತು. +ಮತ್ತೆ ಅಪರಿಚಿತನಿಂದ ಬೆಂಕಿಪಟ್ಟಣ ಪಡೆದು ಸಿಗರೇಟ್ ಹಚ್ಚಬೇಕೆನ್ನಿಸಿತು. ಆದರೆ ಅಷ್ಟೇನೂ ತೀವ್ರವಾಗಿ ಅನ್ನಿಸದ್ದರಿಂದ ಹಾಗೆಯೇ ತೊಡೆಗಳ ಮೇಲೆ ಕೈಗಳನ್ನಿಟ್ಟು, ಸ್ವಲ್ಪ ತಲೆಬಾಗಿ, ಬೆಳದಿಂಗಳಲ್ಲಿ ಮೃದುವಾದ ಕಪ್ಪಿನ ಕೂದಲನ್ನು ಬೆನ್ನಿನ ಮೇಲೆ ಚೆಲ್ಲಿ ಸುಮ್ಮನೇ ಕೂತಳು. ಎಡಗಾಲಿನ ಹೆಬ್ಬೆರಳು ನೆಲದಲ್ಲಿ ಅರ್ಧ ಹೂತ ಸವೆದ ಕಲ್ಲಿನ ಉಂಡೆಯೊಂದನ್ನು ಮಣ್ಣಿಂದ ಎತ್ತಿ ಅದರ ರೂಪವನ್ನು ಗ್ರಹಿಸಲು ಎತ್ನಿಸುತ್ತ ಸುತ್ತಿಸಿತು. ಕಲ್ಲು ಜಾರಿದಾಗ ಬಲಗಾಲಿನ ಬೆರಳು ಆ ಉರುಟು ಕಲ್ಲನ್ನು ಇಕ್ಕಳದಂತೆ ಹಿಡಿಯಲು, ಮಣ್ಣನ್ನು ಉಜ್ಜಿ ತೆಗೆಯಲು ಎಡಗಾಲಿನ ಬೆರಳಿಗೆ ಸಹಾಯ ಮಾಡಿತು. +ಹತ್ತು ವರ್ಷದ ಹುಡುಗಿ. ಎರಡು ಪುಟ್ಟ ಜಡೆಗಳು. ಕೆಂಪು ರಿಬ್ಬನ್‌ಗಳಿಗೆ ಒಪ್ಪುವ ಕೆಂಪು ಪ್ರಾಕು, ಕೆಂಪು ಬೂಟುಗಳು. ಎಲ್ಲರಿಗೂ ಪ್ರಿಯವೆನ್ನಿಸುತ್ತಿದ್ದ ತನ್ನ ಸ್ಠಿತಿಯ ನೆನಪಾಗುತ್ತಿರೋದು, ಈಗ, ಆಶ್ಚರ್ಯ, ಪುಟ್ಟ ಮಚ್ಚೆ ಕಾಣುವ ತುಂಬು ಕೆನ್ನೆಯನ್ನು ಎಲ್ಲರೂ ಚಿವುಟುತ್ತಿದ್ದರು. ಆದರೆ ಆಗ ಕೂಡ ಯಾರಿಗೂ ಹೇಳಲಾರದ ನಾಚಿಕೆಗಳು ದಿಗಿಲುಗಳು, ಅವಮಾನಗಳು ತನಗಿದ್ದವು. ತಾನಿರುವುದು ನಿಜವೇ, ಇದು ತನ್ನ ಹೆಸರೇ, ಆಗುತ್ತಿರುವುದು ನಿಜವಾಗಿಯೂ ತನಗೋ-ಇತ್ಯಾದಿ ದಿಗ್ಭ್ರಮೆಗಳನ್ನು ಆಗಲೂ ಅನುಭವಿಸಿದ್ದಿದೆ. ಈಗಿನಂತೆ ಆಗಲೂ ಹಠಮಾರಿ ಕೂಡ. +ಅಪ್ಪನ ಜೊತೆ ಜಯಂಟ್ ವೀಲಿನಲ್ಲಿ ಕೂತಿದ್ದೆ. ಅಪ್ಪ ಸಿಲ್ಕ್ ಜುಬ್ಬ ಹಾಕಿ ಕಚ್ಚೆಪಂಚೆಯುಟ್ಟಿದ್ದರು. ಹಬ್ಬದ ದಿನಗಳಲ್ಲಿ ಅವರು ಹಾಕುತ್ತಿದ್ದ ಡ್ರೆಸ್ ಅದು. ಗಂಧದ ಉಂಡೆಯಿಟ್ಟ ಪೆಟ್ಟಿಗೆಯಿಂದ ತೆಗೆದ ಘಮಘಮಿಸುವ ಸಿಲ್ಕ್ ಜುಬ್ಬ. ತನಗೆ ಕುತೂಹಲ, ಭಯ. ಮೊದಲನೇ ಸಾರಿ ಜಯಂಟ್ ವೀಲಿನಲ್ಲಿ ಕೂತದ್ದು. ತನ್ನ ಘನತೆ ಮರೆತು ಅಪ್ಪನೂ ತನಗಾಗಿ ಕೂತಿದ್ದರು. ಮೇಲಕ್ಕೇರುತ್ತಿದ್ದಂತೆ ಭಯ ಮಗ್ಗಿಯ ಹಾಗೆ ಏರುತ್ತ ಹೋಯಿತು. ತುದಿಗೆ ಏರಿ ಏರಿ ತಲುಪಿ ಆ ತುಟ್ಟ ತುದಿಯಿಂದ ಕೆಳಕ್ಕೆ ವೃತ್ತಾಕಾರದಲ್ಲಿ ರಭಸವಾಗಿ ಇಳಿಯುತ್ತಿದ್ದಂತೆ ತಾನು ಸತ್ತುಹೋಗುತ್ತಿದ್ದೇನೆ ಎನ್ನಿಸಿ ಅಪ್ಪನನ್ನು ಬಲವಾಗಿ ಹಿಡಿದಳು. ಇಳಿಸು, ಇಳಿಸು ಎಂದು ಕಿರುಚಿದಳು. ಅಪ್ಪ ತಿರುಗುವ ಚಕ್ರವನ್ನು ನಿಲ್ಲಿಸಲಿಲ್ಲ. ಏನನ್ನಾದರೂ ಮಾಡಬಲ್ಲನೆಂದು ತಾನು ತಿಳಿದ ಅಪ್ಪ ಚಕ್ರವನ್ನು ನಿಲ್ಲಿಸಲಾರದೆ ಕೂತಿದ್ದ. ಪ್ರಾಯಶಃ ನಗುತ್ತಿದ್ದ. ಗಟ್ಟಿಯಾಗಿ ಹಿಡಕೊಂಡ. ಲಂಗದಲ್ಲಿ ಗಾಳಿ ತುಂಬಿ ತೊಡೆಯ ಸಂದಿಯಲ್ಲಿ ಚಳಿಯಾಯಿತು. ಉಚ್ಚೆ ಹೊಯ್ದುಕೊಂಡರೆ ಆಮೇಲೆ ತಾಯಿ ಬಯ್ಯುತ್ತಾಳೆ. ಅಪ್ಪನಿಗೂ ಜೋರು ಮಾಡುತ್ತಾಳೆ. ಆದರೂ ಉಚ್ಚೆ ಹೊಯ್ದುಬಿದಬಹುದು ಎನ್ನಿಸುತ್ತಿತ್ತು. ಹೊಯ್ಯದಂತೆ ಕೂತಿರಲು ಪ್ರಯತ್ನಿಸುವುದರಲ್ಲೆ ಕ್ರಮೇಣ ತನ್ನ ಭಯ ಕಡಿಮೆಯಾಗಿದ್ದಿರಬಹುದು. +ಅವಳು ಮತ್ತೆ ಆಶ್ಚರ್ಯಪಟ್ಟಳು. ಅಂಗೈಗಳನ್ನು ಬೆವರಿಸುವ ಈ ಹಿಂದಿನ ಘಟನೆ ಈ ಮನಸ್ಥಿತಿಯಲ್ಲಿ ತನಗೇಕೆ ನೆನಪಾಗಬೇಕು. ನಿರ್ಭಾವದ ತನ್ನ ಹಿಂದಿನ ಸ್ಥಿತಿಯನ್ನು ಮತ್ತೆ ಮುಟ್ಟಲು ಯತ್ನಿಸಿದಳು. ಈಗ ಅಪ್ಪ ಮುದುಕರು. ತನ್ನನ್ನು ಅವರು ಪ್ರೀತಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಅಪ್ರಸ್ತುತವೆನ್ನಿಸುವಷ್ಟು ಅವರ ಮನಸ್ಸು ಈಗ ಜಳ್ಳಾಗಿದೆ. ಪ್ರತಿವಾರ ತಾನು ಬರೆಯುವ ಕಾಗದ ನಿಂತರೆ ಮಗ ಮಿಸ್ ಮಾಡಬಹುದು-ಅಷ್ಟೆ. ಬೊಂಬಾಯಲ್ಲಿರುವ ತಂಗಿಯ ಮಗಳಿಗೆ ಹುಟ್ಟಿದ ಹಬ್ಬದ ಪ್ರೆಸೆಂಟಾಗಿ ಪ್ಯಾಕ್ ಮಾಡಿಟ್ಟ ಬೆಳ್ಳಿಯ ಗೆಜ್ಜೆಗಳ ಚೈನು ಮೇಜಿನ ಮೇಲಿದೆ. ಉತ್ತರಿಸಬೇಕಾದ ಕಾಗದಗಳಿವೆ. ಫ್ಯಾಮಿಲಿ ಪ್ಲಾನಿಂಗ್ ಕಮಿಟಿ, ಮರಗಳನ್ನು ಬೆಳೆಸುವ ಕಮಿಟಿ, ಕುದುರೆ ಸವಾರರ ಕ್ಲಬ್ಬು-ಇತ್ಯಾದಿಗಳಿಗೆ ಆಹ್ವಾನಗಳು. ಆದರೆ ಎಲ್ಲ ಎಷ್ಟು ಅಪ್ರಸ್ತುತ. +ಬೆಂಕಿಪೊಟ್ಟಣ ಕೇಳುವುದೆಂದು ಎದ್ದುನಿಂತಳು. ಅವನು ಯಾರೋ? ಸಿಗರೇಟು ಸೇದುವ ಹೆಂಗಸಿನ ಬಗ್ಗೆ ಏನೆಂದುಕೊಳ್ಳುತ್ತಾನೋ ಎಂದು ಸಂಕೋಚ ಪಡುತ್ತ ಅವನತ್ತ ನಡೆದಳು. +* +* +* +ಅವಳ ಸಂಕೋಚ ಅವನು ಗಮನಿಸಿರಬೇಕು. ತಾನೇ ಕಡ್ಡಿಗೀರಿ ಆಕೆಯ ಸಿಗರೇಟು ಹಚ್ಚುತ್ತ ಕೇಳಿದ: +“ನಿಮ್ಮನ್ನು ನಾನು ನೋಡಿದೀನಿ-ಬೆಳಿಗ್ಗೆ ನೀವು ಕುದುರೆ ಸವಾರಿ ಮಾಡ್ತೀರಿ ಅಲ್ಲ? ಇಂಗ್ಲಿಷ್ ನಾಟಕಗಳಲ್ಲಿ ನೀವು ಆಕ್ಟ್ ಮಾಡೋದನ್ನು ನೋಡಿದೀನಿ…” +ಒಂಟಿಯಾಗಿ ಒಬ್ಬ ಹೆಂಗಸು ಈ ಕೆರೆಯ ದಂಡೆಯ ಮೇಲೆ ನಿರ್ಜನ ಪ್ರದೇಶದಲ್ಲಿ ಊರಿಗೆ ದೂರವಾಗಿ ಇರೋದು ಸಹಜವೆಂಬಂತೆ ಆತ ವರ್ತಿಸಿದ್ದ. ಅವಳು ಥ್ಯಾಂಕ್ಸ್ ಎಂದು ಅವನ ಪಕ್ಕ ಕೂತಳು. ಆಕೆ ಸುಖವಾಗಿ ಕೂರಲೆಂದು ಅವನು ಸ್ವಲ್ಪ ಸರಿದ. ಮಾತು ಬೆಳೆಸುವ ಒತ್ತಾಯ ಅವನು ತೋರಿಸಲಿಲ್ಲ. ಯಾವ ವಿವರಣೆಯನ್ನೂ ಬಯಸದ ಸ್ನೇಹದಿಂದ ಇರಬಲ್ಲ ಸಹಜವಾದ ಮೌನ ಅವನಲ್ಲಿರುವಂತೆ ಕಂಡಿತು. ಪರಿಚಯ ಹೇಳಿಕೊಳ್ಳದೆ ತನ್ನನ್ನು ಅವನು ಗುರುತಿಸಿ ಹಗುರವಾಗುವಂತೆ ಮಾಡಿದನೆಂದು ಅವಳಿಗೆ ಸಮಾಧಾನವಾಯಿತು. ಜೊತೆಗೇ ತನ್ನ ಅನಾಮಧೇಯತೆ ಕಳೆಯಿತೆಂದು ವ್ಯಸನವಾಯಿತು. ಹಿಂದೆ ಲಭ್ಯವಾಗಿದ್ದ ಮನಸ್ಥಿತಿಗೆ ತಿರುಗಿ ಮರಳಲು ಯತ್ನಿಸಿ ವಿಫಲಳಾಗಿ ಸೌಜನ್ಯದಿಂದ ಅವಳೇ ಮೌನ ಮುರಿದಳು: +“ಇದು ಸಣ್ಣ ಪ್ರಪಂಚ” +ಬಹಳ ಹಿಂದಿನ ಪರಿಚಯದವನಂತೆ ಅವನು ಸಹಜವಾಗಿ ಅದಕ್ಕೆ ನಕ್ಕು ಸುಮ್ಮನಾದ. ತನಗೆ ಮೌನ ಬೇಕಾಗಿರುವುದನ್ನು ಗ್ರಹಿಸಿದವನಂತೆ ಕಂಡ. ತಾನು ಇಲ್ಲಿಗೆ ಸಾಯಲು ಬಂದದ್ದು ಎಂಬುದನ್ನು ಆತನಿಗೆ ಸರಳವಾಗಿ ಹೇಳಿಕೊಂಡು ಬಿಡುವುದು ಸಾಧ್ಯವೆಂದು ಅವಳಿಗೆ ಅನ್ನಿಸಿತು. ಆದರೆ ಹೇಳಿದರೂ ಒಂದೆ, ಬಿಟ್ಟರೂ ಒಂದೆ ಎಂದು ಅವಳು ಸಿಗರೇಟು ಸೇದುತ್ತ ಕೂತಳು. ಆಗ ಬೆಳದಿಂಗಳಿನ ಹಕ್ಕಿ ಆರ್ತವಾದ ಏರಿಕೆಯಲ್ಲಿ ಕೂಗಿ ಇಬ್ಬರನ್ನೂ ಬೆರಗುಗೊಳಿಸಿತು. ಒಟ್ಟಿಗೇ ಮುಖವೆತ್ತಿ ಒಬ್ಬರನ್ನೊಬ್ಬರು ನೋಡಿದರು. +“ಮಿಸೆಸ್….” +ಅವನು ವಿಸ್ಮಯಪಟ್ಟವನಂತೆ ತನ್ನನ್ನು ನೋಡುತ್ತ, ತನಗೆ ಮಾತು ಬೇಡದೇ ಇರಬಹುದೆಂದು ಭಾವಿಸಿದವನಂತೆ ಅರ್ಧಕ್ಕೇ ನಿಲ್ಲಿಸಿದ. ಮತೆ ಅವನು ಹಿಂದಿರುಗದ ಮೌನಕ್ಕಿಳಿದು ಬಿಡಬಹುದೆಂದು ಅವಳಿಗೆ ಅನ್ನಿಸಿತು. ತನಗೆ ಅವನ ಮಾತು ಬೇಕಿರಬಹುದೆಂದು ಗುರುತಿಸಿಕೊಳ್ಳುತ್ತ, +“ನನ್ನನ್ನ ಶೈಲೀಂತ ಕರೆಯಿರಿ” ಎಂದಳು. +ಕಾದಳು. ತನ್ನ ಕೂದಲಿನ ರಾಶಿಯನ್ನು ಮುಂಗೈಯಿಂದ ಎತ್ತಿ ಭುಜದ ಮೇಲೆ ಇಳಿಬಿಟ್ಟು ಮುಖ ಓರೆ ಮಾಡಿ ಸರಳವಾಗಿ ನಕ್ಕಳು. ಗಂಡನ ಜೊತೆ ಕೂತು ಹೀಗೆ ಸರಳವಾಗಿ ನಕ್ಕು ಎಷ್ಟು ವರ್ಷಗಳಾಗಿ ಬಿಟ್ಟಿತೊ! ಬೆಳದಿಂಗಳಲ್ಲಿ ಮೃದುವಾಗಿ ಕಾಣುವ ನೀಳವಾದ ಅವನ ಮುಖದಲ್ಲಿ ಕಣ್ಣುಗಳು ಅಸ್ಪಷ್ಟವಾಗಿ ಆಡಿದವು! +“ಶೈಲಿ. ನನ್ನ ಹೆಂಡತಿ ಸತ್ತಿರಬಹುದು.” +ತನ್ನಿಂದ ಅವನು ಉತ್ತರ ಬಯಸಿರಲಿಲ್ಲ. ಆಡಿದ ಮಾತಿನಲ್ಲಿ ಸಹಾನುಭೂತಿ ಯಾಚಿಸುವ ಧಾಟಿಯೂ ಇರಲಿಲ್ಲ. ಅವಳು ಬೆಚ್ಚಿ ಬಿದ್ದಳು. ಸುಮ್ಮನೇ ಕೂತು ಕೇಳಿಸಿಕೊಂಡಳು. +“ವಿಚಾರಣೆಗೆ ಬಂದಾಗ ಪೋಲೀಸರಿಗೆ ಏನು ಹೇಳ್ತೀನಿ ಅಂತ ಯೋಚಿಸ್ತ ಇದ್ದೆ. ಹೌದು-ಆಮೇಲೆ ಮೊದಲಿದ್ದ ಪ್ರೀತಿ ಮಾಯವಾಗ್ತ ಹೋಯಿತು. ಯಾರ ತಪ್ಪು ಅನ್ನೋದು ಅಪ್ರಕೃತ. ಹೇಳೋಕೂ ಆಗಲ್ಲ. ಪ್ರೀತಿ ಮಾಯವಾಗತ್ತೆ-ಅದೇನೋ ಕಾಣಿಸತ್ತ ಇರುತ್ತಲ್ಲ. ಒಂದು ಬಗೆ ಮಾಂತ್ರಿಕತೆ, ಅದು ಕಾಣಿಸೋದು ನಿಂತುಹೋಗುತ್ತೆ. ಆಗ ಈ ಕೆರೆ, ಈ ಬೆಟ್ಟ, ಈ ಆಕಾಶ ಎಲ್ಲ ಸಾಯ್ತಾವೆ. ತಮಾಷೆಯಾಗಿ ನಿಮಗೆ ಕಾಣಬಹುದು ಶೈಲಿ-ಆ ಹಕ್ಕಿ ಕೂಗಿದಾಗ ನಾನು ಬೆರಗಾದೆ. ನೀವೂ ಆದಿರಿ. ವಂಡರ್‍ಫುಲ್ ಅಲ್ಲ? ಕೂದಲನ್ನ ಎತ್ತಿ ನೀವು ಭುಜದ ಮೇಲೆ ಹಾಕ್ಕೊಂಡು ನಕ್ಕಾಗ, ನನ್ನ ಹೆಂಡತಿಗೂ ಈಚೆಗೆ ಯಾಕೆ ಹಾಗೆ ನಗೋಕೆ ಬರಲ್ಲ ಅಂತ ನನಗೆ ಆಶ್ಚರ್ಯವಾಗಿಬಿಟ್ಟಿತು. ಹೀಗೆಲ್ಲ ಆಶ್ಚರ್ಯ ಆಗೋದು ಕೂಡ ಈಚೆಗೆ ನಿಂತು ಹೋಗ್ತಿದೆ. ಇಲ್ಲದೇ ಇದ್ದಿದ್ರೆ ನಾನು ಪ್ರಾಯಶಃ ಪೈಂಟರ್ ಆಗಿ ಬದುಕೋ ಧೈರ್ಯ ಮಾಡ್ತಿದ್ದೆ. ನನಗೆ ಧೈರ್ಯ ಇದ್ದಿದ್ರೆ ಅವಳು ಅಡ್ಡಿ ಬರ್‍ತ ಇರ್ತಿರ್‍ಲಿಲ್ಲ ಅಂತ ನನಗೆ ಗೊತ್ತಿದೆ. ಮದುವೆಯಾದಾಗ ಕಲ್ಲಾದ ಪುಟ್ಟ ಹಾಸಿಗೆ ಮೇಲೆ ಇಬ್ಬರೂ ಮಲಗಿ ನಿದ್ದೆ ಮಾಡ್ತಿದ್ದೆವು. ಆಗ ನಾನು ಬಡವ. ತಲೆ ತುಂಬ ಕನಸು ತುಂಬಿತ್ತು, ಆದರೆ ಎಲ್ಲ ಹೋಯ್ತು. ಹೇಗೆ ಹೋಯ್ತು, ಯಾಕೆ ಹೋಯ್ತು ಗೊತ್ತಿಲ್ಲ ನೋಡಿ. ಆಗಿನ ಅವಮಾನಗಳು ಹೋದವು. ಹೊಟ್ಟೆಕಿಚ್ಚು ಹೋಯ್ತು. ಭಯ ಹೋಯ್ತು. ಜೊತೆಗೇ ನಿಷ್ಕಾರಣವಾಗಿ ಖುಷಿಯಾಗೋದು ಹೋಯ್ತು. ಎಷ್ಟು ಕೂಡಿಸಿದರೂ ಇನ್ನೂ ಬೇಕೂಂತ ಅವಳು ಈಗ ಪರದಾಡ್ತಾಳೆ. ನಾನೂ ಆಸೆ ಬುರುಕ ಆಗಿಲ್ಲಾಂತ್ಲೂ ಅಲ್ಲ….. +ನಾನೇ ನನ್ನ ಹೆಂಡ್ತೀನ್ನ ಇವತ್ತು ಕೊಂದು ಬಿಡಬಹುದಿತ್ತು. ಜಗಳ ಯಾಕೆ ಶುರುವಾಯ್ತು ಅನ್ನೋದು ಕೂಡ ಮರೆತು ಹೋಗಿದೆ. ಟೆರಿಬಲ್ ಅಲ್ಲ? ಪ್ರಾಣ ಕಳಕೊಳ್ತೀನಿ ಎಂದಳು. ಕಳಕೋ ಎಂದು ಅವಳನ್ನು ಒರಟಾಗಿ ನೂಕಿದೆ. ಸಾಯಿ, ಸಾಯಿ ಎಂದು ಕೂಗಿದೆ. ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು. ನನಗೇನೂ ಯಾಕೆ ಅನ್ನಿಸ್ತ ಇಲ್ಲ ಅಂತ ವಿಸ್ಮಯವಾಯ್ತು. ಬಾಗಿಲಿನ ಸಂದೀಂದ ಹೆಣಿಕಿ ನಾನು ನೋಡ್ತ ಇರೋದನ್ನ ಕುರ್ಚಿ ಹತ್ತಿ ಛಾವಣಿಗೆ ಹಗ್ಗ ಬಿಗಿಯುತ್ತ ಇದ್ದ ಇವಳೂ ನೋಡಿದಳು. ಅಥ್ವಾ ನೋಡಲಿಲ್ಲವೋ ಏನೋ! ಅಂತೂ ಬಾಗಿಲು ಕಡೇನೇ ನೋಡ್ತ ಇದ್ದಳು. ಆಟಕ್ಕೆ ಹೋಗಿದ್ದ ಮಕ್ಕಳು-ನಮಗೆ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು-ಹಿಂದಕ್ಕೆ ಬಂದಾಗ ಅವರಿಗೇನು ಅನ್ನುಸಬಹುದೂಂತ ನನಗೆ ಸಂಕಟವಾಯ್ತು. ಅವಳಿಗೆ ಅಂಥ ಸಂಕಟ ಆಗ್ತ ಇಲ್ವಲ್ಲ ಅಂತ ಆಶ್ಚರ್ಯಾನೂ ಆಯ್ತು. ಮಕ್ಕಳು ಅಂದ್ರೆ, ಮನೆ ಅಂದ್ರೆ ಅವಳಿಗೆ ತುಂಬ ಅಕ್ಕರೆ. ಅವಳಿಗೆ ಸಾಯಬೇಕೂಂತ ಅನ್ನಿಸೊ ಹಾಗೆ ಆಗಿದೇಂತ ಗೊತ್ತಾಗಿದ್ದು ನನ್ನ ಪ್ರಪಂಚಾನೇ ಬದಲಾಯಿಸಿಬಿಟ್ಟಿತು. ಸೀದಾ ನಡೆದು ಬಂದು ಇಲ್ಲಿ ಕೂತೆ. ಎರಡು ಗಂಟೆಯಾದರೂ ನಡೆದಿರಬೇಕು. ನಡೆಯುತ್ತ ಬರುವಾಗ ಇದು ನಾನಲ್ಲ-ಇನ್ನು ಯಾರೋ ಅಂತ ಅನ್ನಿಸಿಬಿಟ್ಟಿತು. +ಈಗ ಅವಳ ಹೆಣ ಹಗ್ಗದಿಂದ ಜೋತುಬಿದ್ದಿರಬಹುದು. ಮಕ್ಕಳು ಅಳುತ್ತಿರಬಹುದು. ಪೋಲೀಸಿನವರು ನೋಟ್ ಮಾಡ್ತ ಇರಬಹುದು. ಮೊಹಲ್ಲಾದ ಜನವೆಲ್ಲ ಮನೆ ಮುಂದೆ ಕಿಕ್ಕಿರಿದಿರಬಹುದು. ಆದರೆ ಇವೆಲ್ಲ ಇನ್ನು ಯಾರಿಗೋ ಆಗ್ತಿರೋದು ಅನ್ನಿಸತ್ತೆ…. +ಮದುವೆಗೆ ಮುಂಚಿನ ಕಥೆ ಕೇಳಿ. ಅವಳಿಗೆ ಹದಿನೆಂಟು ವರ್ಷ. ಅವರ ಹಳ್ಳಿಗೆ ಹೋಗಿ ನಾಲ್ಕೈದು ದಿನ ಇದ್ದೆ. ಕಾಡಿನಲ್ಲಿ ಅದೊಂದೇ ಮನೆ. ಸುತ್ತ ರಬ್ಬರ್ ತೋಟ. ಹಿಂದೆ ಮುಂದೆ ಬೆಟ್ಟಗಳು. ಒಟ್ಟಿಗೆ ಹೋಗಿ ಸೌದೆ ತರ್‍ತ ಇದ್ದೆವು. ಅವಳು ನೀರು ಸೇದೋದು, ತರಕಾರಿ ಹೆಚ್ಚೋದು, ಬಟ್ಟೇನ ಕುಕ್ಕಿ ಒಗೆಯೋದು, ಹಾರಿ ಅದನ್ನು ಹಗ್ಗದ ಮೇಲೆ ಒಣಗಿ ಹಾಕೋದು-ಎಲ್ಲ ನೃತ್ಯದಂತೆ ನನಗೆ ಕಾಣಿಸ್ತ ಇದ್ದವು. ಸುಮ್ಮ ಸುಮ್ಮನೆ ನಗ್ತಿದ್ದೆವು. ತಾಯಿ ಜೊತೆ ಅವಳು ಅಡಿಗೆ ಮಾಡುವಾಗ ನನಗೇನು ಇಷ್ಟ ಇಲ್ಲ ಮಾತಾಡೋದು, ನನಗೆ ಕಾಯಿಸಿದ ನೀರನ್ನ ಸ್ನಾನಕ್ಕೆ ಹವಣ ಮಾಡಿ ಕೊಡೋದು, ತಾಯಿಗೆ ಗೊತ್ತಾಗ್ದೆ ಇದ್ದಂತೆ ಸ್ನಾನ ಮಾಡುವಾಗ ಏನೋ ನೆವದಿಂದ ಬಂದು ಬೆನ್ನನ್ನು ಉಜ್ಜೋದು, ರಾತ್ರೆ ನಾನು ಒಂದಕ್ಕೇಂತ ಎದ್ದಾಗ ಅವಳೂ ತಾನು ಎದ್ದಿದೀನಿ ಅನ್ನೋದನ್ನ ಕೆಮ್ಮಿಂದ ಸೂಚಿಸೋದು. ಕತ್ತಲಲ್ಲಿ ಕೊಟ್ಟಿಗೆಗೆ ಹೋಗೋ ನೆವದಲ್ಲಿ ನನ್ನನ್ನೂ ಕರಕೊಂಡು‌ಉ ಹೋಗಿ ಮೈಗೆ ಮೈ ತಾಗಿಸಿ ಸುಮ್ಮನೇ ನಿಂತಿರೋದು-ಇವನ್ನೆಲ್ಲ ಮಾಡ್ತ ಇದ್ದೋಳು ಅವಳಲ್ಲ ಅನ್ನಿಸತ್ತೆ. +ಅವಳಿಗೊಬ್ಬ ಅಜ್ಜ ಇದ್ದ. ಕಾಡು ಕಡಿದು ರಬ್ಬರ್ ತೋಟ ಮಾಡಿದವ. ಅವನು ಸತ್ತು ಐದು ವರ್ಷಗಳಾಗಿದ್ದರೂ ಎಲ್ಲರೂ ಅವನ ವಿಷಯ ನಿತ್ಯ ಮಾತಾಡ್ತ ಇದ್ದರು. ಶುದ್ಧ ಪೋಲಿಯಂತೆ. ಪುಂಡ ಕೂಡ. ಅವನು ಪ್ರೇಮ ಪತ್ರಗಳನ್ನು ಬರೆಯೋದರಲ್ಲಿ ನಿಸ್ಸೀಮ. ಹುಡುಗನಾಗಿದ್ದಾಗ ಶುರುವಾದ ಈ ಹವ್ಯಾಸಾನ್ನ ಅವನು ಸಾಯೋ ತನಕ ಮುಂದುವರಿಸಿದ್ದ. ಬರೆಯೋದು ಮಾತ್ರವಲ್ಲ. ಬರೆದದ್ದನ್ನು ತನ್ನ ದಾಖಲೆಗೆಂದು ಕಾಪಿ ತೆಗೆದು ಇಡುತ್ತಿದ್ದ. ಈ ಪತ್ರಗಳ ತುಂಬ ಪೋಲಿ ಮಾತುಗಳು. ಪ್ರೇಯಸಿಯನ್ನು ಸಂಧಿಸಿದಾಗ ಅವರು ಕೂಡು ಮಾಡಿದ್ದೆಲ್ಲದ್ದರ ವಿವರ ಸಹಿತವಾದ ವರ್ಣನೆ, ಅದನ್ನು ಮತ್ತೆ ಮಾಡಬೇಕೆನ್ನುವ ಆಹ್ವಾನಗಳಾಗುತ್ತಿದ್ದವು. ಬರೀ ಹೃದಯ, ಹೂವು, ಚಿಟ್ಟೆ, ಬಿಳಿ ಬಟ್ಟೆಯುಟ್ಟ ಅಪ್ಸರೆಯ ಚಿತ್ರ ತುಂಬಿದ ಪತ್ರಗಳೂ ಇದ್ದವು. +ಅವಳು ಅಟ್ಟಹತ್ತಿ ಹಳೆಕಾಲದ ಪೆಟ್ಟಿಗೆಯೊಂದರಿಂದ ಈ ಕಾಗದಗಳನ್ನೆಲ್ಲ ತಂದು ನನ್ನ ಜೊತೆ ಕೂತು ಓದಿ ನಕ್ಕಿದ್ದಳು. ಅವಳಿಗೊಬ್ಬಳು ಅಜ್ಜಿ-ಈ ಅಜ್ಜನ ಖಾಸ ಹೆಂಡತಿ-ನಮ್ಮ ಬಗ್ಗೆ ಮಹಾ ಕುತೂಹಲದಿಂದ ಸ್ಪೈ ಮಾಡುತ್ತಿದ್ದ ಮುದುಕಿ-ನಾವು ಈ ಕಾಗದಗಳನ್ನು ಓದುತ್ತಿರುವಾಗ ಅವಳು ಒಮ್ಮೆ ಬಂದಳು. ಗಂಡ ತನ್ನ ಬೆನ್ನಿನ ಮೇಲೆ ಹಾಕಿದ ಬರೆಯನ್ನ ಜಂಬದಿಂದ ತೋರಿಸಿದಳು. ಅವನ ಪೋಲಿ ವಿದ್ಯೆಗಳನ್ನ, ಮಾಟ ಮಂತ್ರಗಳಲ್ಲಿನ ಆಸಕ್ತಿಯನ್ನ, ಹಠಮಾರಿತನವನ್ನ, ಅವೆಲ್ಲವನ್ನೂ ತಾನು ಸಹಿಸಿಕೊಂಡು ಅವನನ್ನು ಪಳಗಿಸಿದ್ದನ್ನ ಉತ್ಸಾಹದಿಂದ ಬಣ್ಣಿಸಿ ನಮ್ಮನ್ನ ನಗಿಸಿದಳು. ಶೈಲಿ, ನಿಮ್ಮ ಮುಖ ನೋಡ್ತಿದ್ದಂತೆ ಇವೆಲ್ಲ ಯಾಕೆ ನೆನಪಾಗ್ತಾವೆ ಗೊತ್ತಾಗ್ತ ಇಲ್ಲ. ನನ್ನ ಹೆಂಡತಿ ನಿಮ್ಮ ಹಾಗೆ ಅಲ್ಲ. ಮನೆಯೇ ಅವಳ ಪ್ರಪಂಚ. ಚೆನ್ನಾಗಿ ಹಾಡುತ್ತಿದ್ದಳು. ಈಗ ಅದನ್ನೂ ಬಿಟ್ಟಿದ್ದಾಳೆ. +ಅವರ ಮನೇಲಿ ಒಂದು ಆಡು ಇತ್ತು. ಸಿಕ್ಕಿದ್ದನ್ನೆಲ್ಲ ತಿನ್ನುವ ಆಡು. ಕಟ್ಟಿ ಹಾಕಿದ ಕತ್ತದ ಹುರಿಯನ್ನೆ ತಿಂದು ಬಿಡುವ ಆಡು ಅದು. ಒಂದು ಸಾರಿ ಅವಳು ಒಗೆದು ಹಾಕಿದ ನನ್ನ ಕಾಚವನ್ನ ಆಡು ತಿಂದುಹಾಕಿಬಿಟ್ಟಿತ್ತು. ಇದರಿಂದ ಹೊಟ್ಟೆ ಹುಣ್ಣಾಗುವಂತೆ ಅವಳು ನಕ್ಕಳು. ನಗದ ನನ್ನ ಮುಖ ನೋಡಿ ಇನ್ನಷ್ಟು ನಕ್ಕಳು. ನಾನೂ ನಕ್ಕೆ. ನಗು ಅರ್ಥವಾಗದೆ ನಕ್ಕೆ. ಕ್ಷುಲ್ಲಕ ವಿಷಯ. ಸುಮಾರು ಎರಡು ಮೂರು ವರ್ಷ ಈ ವಿಷಯ ನೆನಸಿಕೊಂಡು ನಾವು ನಕ್ಕಿರಬಹುದು. +ಈಗ ನಾನು ನಿಮ್ಮ ಹತ್ತಿರ ಕೂತು ಮಾತಾಡ್ತ ಇದೇನಲ್ಲ-ಹೀಗೆ ನಾನು ಮಾತಾಡಬಹುದು, ಯೋಚಿಸಬಹುದು ಅಂತ ಕೂಡ ಅವಳಿಗೆ ಗೊತ್ತಿಲ್ಲ. ಬೆಳೀತಾ ಹೋಗಿದ್ದ ರೋಷದಲ್ಲಿ ಈತನಕ-ನಿಮ್ಮನ್ನ ಇಲ್ಲಿ ನೋಡೋ ವರೆಗೆ-ನನಗೇ ಗೊತ್ತಿರಲಿಲ್ಲ.” +ಒಂದೇ ಸಮನೆ ಮಾತಾಡಿ ಅವನು ಸುಮ್ಮಗಾದ. +ಅವಳೂ ಸುಮ್ಮನೆ ಕೂತಳು. ಅವನ ಕೈ ಮೇಲೆ ಕೈಯಿಟ್ಟಳು. ಅವಳು ಮತ್ತೆ ಬೆರಗಾಗಿದ್ದಳು. ತೊಯ್ದ ತೆಳು ಮೋಡಗಳು ಚಂದ್ರನನ್ನು ಹಾದು ಹೋದವು. ಗಾಳಿ ಬೀಸಿತು. +“ಬನ್ನಿ ಹೋಗೋಣ” ಎಂದಳು. ಅವನು ಅವಳ ಹಿಂದೆ ಹೋದ. ಕಾರಲ್ಲಿ ಕೂತು ಅವನ ಮನೆ ವಿಳಾಸ ಕೇಳಿ ತಿಳಕೊಂಡಳು. ಹಿಂದಿನ ಸೀಟಿನಲ್ಲಿದ್ದ ವ್ಹಿಸ್ಕಿಯ ಫ್ಲಾಸ್ಕನ್ನು ಎತ್ತು ಅವನಿಗೆ ಕೊಟ್ಟು “ಬೇಕಾ?” ಎಂದಳು. ಅವನು ಒಂದು ಗುಟುಕು ಕುಡಿದು “ಥ್ಯಾಂಕ್ಸ್” ಎಂದು ಫ್ಲಾಸ್ಕನ್ನು ಅವಳಿಗೆ ಹಿಡಿದ. ಅವಳು ಅದರ ಮುಚ್ಚಳ ಹಾಕಿ ಪಕ್ಕದಲ್ಲಿಟ್ಟು “ಬೇಕಾದರೆ ಮತ್ತೆ ತಗೊಳ್ಳಿ” ಎಂದು ಕಾರನ್ನು ಸ್ಟಾರ್‍ಟ್ ಮಾಡಿದಳು. ಡ್ರೈವ್ ಮಾಡುವಾಗ ಹೇಳಿದಳು. +“ನಿಮ್ಮ ಹೆಂಡತಿ ಸತ್ತಿರಲಿಕ್ಕಿಲ್ಲ.” +“ಆದರೆ ಏನೂ ಬದಲಾಗಿರಲ್ಲ” ಎಂದು ಅವನು ಮೃದುವಾಗಿ ಹೇಳಿದ. “ಹೌದು ಪ್ರಾಯಶಃ ಆಗಲ್ಲ” ಎಂದು ತನ್ನ ಬಗ್ಗೆಯೂ ಮನಸ್ಸಿನಲ್ಲಿ ಹೇಳಿಕೊಳ್ಳಬೇಕೆಂದಿದ್ದ ಅವಳು ಅವನ ಸೌಮ್ಯವಾದ ನೀಳವಾದ ಮುಖದಲ್ಲಿ ಬಿಗಿದ ತೆಳು ತುಟಿಗಳನ್ನು ಕಂಡು ಸುಮ್ಮನಾದಳು. ಅವನ ಮನೆ ಎದುರು ಕಾರು ನಿಲ್ಲಿಸಿದಳು. ಮಗ ಶಾಂತವಾಗಿ ಹೋಂವರ್ಕ್ ಮಾಡುತ್ತ ಕೂತಿರೋದು ಕಾಣಿಸಿತು. ಅವಳ ಕೈಯನ್ನು ಅವನೂ ಒತ್ತಿದ. ಅವಳೂ ಅವನ ಕೈಯನ್ನ ಒತ್ತಿ “ಗುಡ್ ಬೈ” ಎಂದಳು. +***** +ಮೈಸೂರು +೨೧ ಆಗಸ್ಟ್ ೧೯೭೬ +ಕೀಲಿಕರಣ: ಚೀನಿ (ಶ್ರೀನಿವಾಸ್.ಚಂ) ಮತ್ತು ಪಚ್ಚಿ (ಗುರುಪ್ರಸಾದ್.ಸು) +ಕಣ್ಣು ಮುಟ್ಟುವವರೆಗೂ ನೋಡಿದರೆ ಬೆಂಗಳೂರಿನ ರೋಡಿನಲ್ಲಿ ದಿನಾಲೂ ಟ್ರಾಫಿಕ್ ಜಾಮನ್ನೇ ಕಾಣುವ ಎಸ್.ವಿನಾಯಕ ದಂಪತಿಗಳಿಗೆ ಈ ಭರತಪುರ ದಾಟಿದ ನಂತರ ರೋಡ್ ಮೇಲೆ ಸಿಕ್ಕ ಹೊಂಡದಿಂದ ಹಂಡೆಯ ಒಳಗಿನ ಇಲಿಯ ಸ್ಥಿತಿ ಆಗಿದೆ. ಅವರಿದ್ದ […] +ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ […] +ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_305.txt b/Kannada Sahitya/article_305.txt new file mode 100644 index 0000000000000000000000000000000000000000..661ed48493d7dd1cbb4bbe87681a3eaabaf28bd5 --- /dev/null +++ b/Kannada Sahitya/article_305.txt @@ -0,0 +1,84 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಹೇಳಿ ಕೇಳಿ ಕುಚೇಲನಲ್ಲವೆ ನಾನು? +ಅವಳಿಗಿವೆ ಎರಡು ಜಡೆ +ತೊಡುತಾಳವಳು ಮಸ್ಲಿನ್ +ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ +ಅವರು ಹಾಗೆ +ಇವರು ಹೀಗೆ +ಸರಿಯೆ, ನಮಗೇಕೆ, ಅದು? +ತಿಂಗಳ ಮೊದಲದಿನವೇ ಏಕೆ ಹಗರಣ? +ತಗೊ, ದುಡ್ಡೆಲ್ಲ ನೀನೆ. +ಹಾಲಿನವನಿಗೆ, +ಮೊಸರಿನವನಿಗೆ, +ಅಗಸನಿಗೆ- +ಇನ್ನೂ ಬರುವವರಿಗೆ ನೀನೆ ಉತ್ತರಿಸು. +ಸಂಬಳವೇನು ಅಲ್ಲಾವುದ್ದೀನನದ್ಭುತ ದೀಪವೇ? +ಉಂಗುರವನೇಕೆ ಮಿಕಿಮಿಕಿ ನೋಡುತ್ತಿ, +ಬೆಪ್ಪೇ, +ನಿಮ್ಮಪ್ಪ ಕೊಟ್ಟುದಿದು, +ಮಂತ್ರದುಂಗುರವಲ್ಲ. +ನಾಳೆಯಿಂದಲೆ ನಕ್ಷತ್ರಕರ ಪರಿವಾರ ವಕ್ಕರಿಸಲಿದೆ, +ಇಗೋ ಕೈಮುಗಿದೆ, ನಿನಗೆ; +ನೀನೇ ಆಗು ಮನೆಗೆ ಯಜಮಾನಿ. +೨ +ಸುಂಟರಗಾಳಿಯೇಕೆ ಎಬ್ಬಿಸುವೆ +ಮನೆಯೊಳಗೆ ಹೊರಗೆ? +ಹುಬ್ಬ ಕತ್ತಿವರಸೆ ಬೇಡ +ಕಣ್ಣ ಚಾವಟಿಯೇಟು ನಿಲ್ಲಿಸು. +ಸತ್ತ ವಾತಾವರಣ ಇದು ಬೇಡ +ನಾನೇನು ಶತ್ರುವೇ? +ಮನೆಯಾಗುವುದು ಬೇಡ ಕುರುಕ್ಷೇತ್ರ. +೩ +ಬೇಸರಿಯ ಮುತ್ತು ಬೆಂಡೋಲೆ ಉಂಗುರಕೆಲ್ಲ +ಮಾತು ಕಲಿಸಿದ್ದೀಯೆ. +ನನ್ನೊಡನಿವರ ರಾಯಭಾರವೆ? +ಬೇಡ, ನೀನೆ ಮಾತಾಡು. +ಕೈ ಹಿಡಿದವಳೆ, ಮನಮುರಿಯದಿರು, ಮಾತಾಡು. +ಕೂದಲು ಕೆದರಿದೆ +ಹಣೆ ಬಿಕೋ ಎನ್ನುತಿದೆ +(ನಾ ಬದುಕಿಲ್ಲವೇನು?) +ಹೂವ ಹೊಸಕಿರುವೆ +( ನಾ ಕೈಗೆ ಸಿಕ್ಕಿದ್ದರೆ?) +ಅಡಿಕೆ ಚೆಲ್ಲಿದೆ ಯಾಕೆ? +ಗಾರೆ ನೆಲದಲ್ಲಡಿಕೆ ಮೊಳೆಯುವುದಿಲ್ಲ. +ವೀಳ್ಯದೆಲೆ ಇವ ಕೋಣೆಯೊಳಗೆಲ್ಲ +ಏಕೆ ಹಾಸಿದ್ದೀಯೆ? +ಅಡುಗೆಮನೆ ತಟ್ಟೆ +ನಡುಮನೆಯಲ್ಲಿ ವಿಷ್ಣುಚಕ್ರವಾಗಿದೆ. +ಇನ್ನು ಆ ಲೋಟ ಚಮಚಗಳ ಪಾಡು ದೇವರಿಗೆ ಪ್ರೀತಿ. +ಸಭ್ಯತೆಯ ವೇಷ ಈ ಮೌನ. +ಆಡು, ಮಾತಾಡು +ಬೇಡ ಈ ಮೌನದ ಯುದ್ಧ. +ಒಲವೆಲ್ಲವನು ಹೂತು ಗೋರಿ ಕಟ್ಟಿರುವೆ ನಗೆಗೆ +ಒಲವ ಹೆಣ ಮಾಡದಿರು. +ಈ ಕೋಣೆ-ಮನೆಯಲ್ಲಿ ಕೋಪಗೃಹ ಸಾಧ್ಯವೆ? +ಆಡು, ಮಾತಾಡು +ನಾನು ದಶರಥನಲ್ಲ, +ಬೇದವೇ ಕೈಮುಗಿವೆ ರಾಮಾಯಣ. +ಅವಳಿಗಾದರೂ ಇತ್ತು ಮಗನ, ರಾಜ್ಯದ ಲೋಭ. +ಸಣ್ಣ ಬಯಕೆಗೆ ನೀನು ಕೈಕೆಯಾಗುವುದೆ? +(ಇದ್ದುದರಲ್ಲಿ ಸರಿ, ಬದುಕೋಣ) +ಬೇಡವೇ, ಕೈಮುಗಿವೆ, +ರಾಮಾಯಣ. +***** +(ಚಿತ್ರ-ವಿಚಿತ್ರ ೧೯೬೯) +ಜಾನಪದ ಜೀವನದ ಸಂಗೀತಕೆದೆಯೋತು ಹೂವು ಹೂವಿನ ಜೇನು ತೊಳೆಯ ಬಿಡಿಸಿ ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ ಸುಗ್ಗಿ ಮಾಡಿದಿರಂದು ನಾಡನಲಿಸಿ! ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು ಆಡಿಹವು ನಿಮೂರ ನವಿಲಹೆಜ್ಜೆ! ಕಾಳರಾತ್ರಿಯು ಬೆಳಗು ಬೈಗುಗಳು […] +– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […] +೧ ನೀಲ ನೀಲ ನಿರ್ವಿಕಾರ ನಿರುತ ಬಾನಲಿ ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. ಒಳಿತು ಕೆಡಕು ಮನದ ಮಿಡುಕು ಮೇರೆ ಮೀರಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_306.txt b/Kannada Sahitya/article_306.txt new file mode 100644 index 0000000000000000000000000000000000000000..190cf1749605151a1ba392a8f97e1faffe80d288 --- /dev/null +++ b/Kannada Sahitya/article_306.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕರ ಕರ ಕರ ಕೊರೆವ ಚಳಿ +ಕೋಳೀಮರಿ ಕುಯ್ದ ಹಾಗೆ; +ಮರ ಮರ ಮರ ಮರವಟ್ಟಿತು +ಥರ ಥರ ಥರ ಧರೆ ನಡುಗಿತು +ಇರುಳು ಕೆರಳಿ ಹೊಡಮರಳಿತು! +ತಾರೆಯೊಂದು ತಿರೆಗುರುಳಿತು. +ಏನಾಯಿತು! ಏಕಾಯಿತು? +ಎನುತಿರ ಓ ರೈಲು ಬಂತು! +ಗಡ ಗಡ ಗಡ ಮೈ ನಡುಗಿಸಿ +ಕಂದರದಲಿ ಕಣ್ಣು ಮುಚ್ಚಿ +ಕಂಬಿ ತಪ್ಪಿ ಉರುಳಿತು, +ಮೂರು ಸಾರೆ ಹೂರಳಿತು! +ಅಬ್ಬಾ, ಅಯ್ಯಯ್ಯೊ ಎಂದು +ನಿಂತ ನಾಲ್ಕು ಜನರು ನಾವು +ಗಾಡಿಯನ್ನು ಮೇಲಕೆತ್ತಿ +ಹಳಿಯ ಮೇಲೆ ಬಿಟ್ಟೆವು. +ಜನರಿಲ್ಲದ ಮಾಲುಗಾಡಿ +ಕೈಬಿಟ್ಟೊಡೆ ಕೈಕೊಟ್ಟಿತು +ಎಲ್ಲಿ ಎಲ್ಲಿ, ನಿಲ್ಲು ನಿಲ್ಲು +ಎನಲು ನಮ್ಮ ಗುಲ್ಲು, +ಹಲ್ಲು ಮಸೆದು ಹೊಟ್ಟೆ ಹೊಸೆದು +ಓಡಿತಯ್ಯ ರೈಲು! +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ ನಿದ್ರಿಸಿದಾಗ ತಲೆದಿಂಬು ಅವು […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_307.txt b/Kannada Sahitya/article_307.txt new file mode 100644 index 0000000000000000000000000000000000000000..1cba14a5977cf8b1cf257ff3a8b27e4eb7df2c5f --- /dev/null +++ b/Kannada Sahitya/article_307.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, ಟಿವಿಯನ್ನು ಒಂದೇ ಸಮನೆ ನೋಡಬಾರದು ಎಂದು. ಇಷ್ಟನ್ನೂ ಒಂದೇ ಕಣ್ಣಲ್ಲಿ ಮಾಡಬೇಕು, ಇನ್ನೊಂದು ಕಣ್ಣು ಪ್ರಯೋಜನವಿಲ್ಲ. ನೀವಿದ್ದಾಗಲೇ ನನಗೆ ಒಂದು ಕಣ್ಣು ಸರಿ ಕಾತ್ತಿರಲಿಲ್ಲವಲ್ಲ. ಈಗೀಗಲಂತೂ ಏನೂ ಕಾಣುತ್ತಿರಲಿಲ್ಲ. ಕಂಡಷ್ಟಾಯಿತು ಅಂತ ಟಿವಿ ಮುಂದೆ ಕೂತಿರುತ್ತಿದ್ದೆ. ಪೇಪರೊ, ಕಥೆಯೋ ಓದೋದು ಎಂದೋ ಬಿಟ್ಟುಹೋಗಿದೆ. ಮನೆಗೆ ಯಾರು ಬಂದ್ರು ತೀರ ಹತ್ತಿರದಿಂದ ನೋಡಿದ್ರೆ ಮಾತ್ರ ಕಾಣೋದು. ಹೀಗಾಗಿ ತುಂಬಾ ಬೇಜಾರಾಗುತ್ತಿತ್ತು. ಕೈ-ಕಾಲು ಗಟ್ಟಿಯಾಗಿದ್ದು, ಕಣ್ಣು-ಕಿವಿ ಸರಿಯಾಗಿದ್ದರೆ ನಾವು ಬದುಕಬೇಕು. ಇಲ್ಲ ಹೇಳಿದ್ರೆ ಎಷ್ಟು ಕಷ್ಟ. ನೋಡಲು ಕಾಣೋದಿಲ್ಲ, ಮಾತಾಡೋಕೆ ಯಾರೂ ಇಲ್ಲ. ನಾನು ಹೇಗೆ ಬದುಕಬೇಕು ಹೇಳಿ? ಸಮಯ ಹೇಗೆ ಕಳೀತೀರಿ? ಒಂದುಸಲ ಕಣ್ಣು ಪರೀಕ್ಷೆ ಮಾಡಿಸಬೇಕು ಅಂತ ಅನುರಾಗನ (ನಮ್ಮ ಮುದ್ದಿನ ಕೊನೇ ಮಗ-ನಿಮ್ಮ ಅನು) ಹತ್ರ ಹೇಳಿದೆ. ಅನುರಾಗ ಕೂಡಲೇ ನನ್ನ ಕಣ್ಣುಡಾಕ್ಟ್ರ ಹತ್ರ ಕರೆದುಕೊಂಡು ಹೋದ. ಸುಮಾರು ಐವತ್ತು ವರ್ಷಗಳ ಹಿಂದೆ ನೀವು, ನಾನೆಲ್ಲ ಕಣ್ಣು ಪರೀಕ್ಷೆ ಮಾಡಿಸಿಕೊಂಡಿದ್ದೆವಲ್ಲ ಕಣ್ಣು ಡಾಕ್ಟ್ರು ಸಿದ್ದಪ್ಪ, ಅವರ ಮೊಮ್ಮಗ ಸುರೇಶನೂ ಈಗ ಕಣ್ಣು ಡಾಕ್ಟ್ರು. ಅವನೇ ಕಣ್ಣು ಪರೀಕ್ಷಿಸಿ ಬೆಂಗಳೂರಿಗೇ ಹೋಗಿ ಕನ್ನಡಕ ತರಬೇಕೆಂದು ಹೇಳಿದ. ಅನು ನನ್ನ ಬೆಂಗಳೂರಿಗೆ ಕರೆದುಕೊಂಡು ಹೋದ. ಅಭಿಜಿತ (ನಮ್ಮ ಎರಡನೇ ಮಗ ಅಭಿ) ಈಗ ಬೆಂಗಳೂರಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಅವನಿಗೆ ಅಲ್ಲಿ ಸ್ವಂತ ಮನೆ, ಕಾರು ಎಲ್ಲಾ ಇವೆ. ಜೇಬಲ್ಲಿ ಇಟ್ಟುಕೊಳ್ಳುವ ಫೋನೂ ಅವನ್ಹತ್ರ ಉಂಟು! ಅವನು ನಮ್ಮನ್ನು ಕಾರಲ್ಲೆ ಕರೆದುಕೊಂಡು ಹೋದ ಕನ್ನಡಕ ತೆಗೆಯಲು. ನಮ್ಮ ಇಬ್ಬರು ಮಕ್ಕಳು ಸೇರಿ ಬಹಳ ಕ್ರಯದ ಕನ್ನಡಕ ತೆಗೆದುಕೊಟ್ಟಿದ್ದಾರೆ. ಈ ಕನ್ನಡಕದಿಂದ ಎಷ್ಟು ಒಳ್ಳೇದಾಯ್ತೂ ಅಂತ! ಒಂದೇ ಕಣ್ಣಾದರೂ ಎಲ್ಲರ ಮುಖ ಸ್ಪಷ್ಟವಾಗಿ ಕಾಣುತ್ತೆ. ಟಿವಿ ನೋಡ್ತೇನೆ. ಅಷ್ಟೊ-ಇಷ್ಟೊ ಪೇಪರು, ಕಥೆ-ಕಾದಂಬರಿ ಓದುತ್ತೇನೆ. +ಹೊಸ ಕನ್ನಡಕ ತೆಗೆದುಕೊಳ್ಳುವಾಗ ನನಗೆ ಅನು ಮತ್ತು ಅವನ ಹೆಂಡತಿ (ನಮ್ಮ ಸೊಸೆ) ಸಂತೋಷಿ ಸ್ವಲ್ಪ ಒತ್ತಾಯ ಮಾಡಿ ಕರೆದುಕೊಂಡು ಹೋಗಲಿ ಅಂತ ಆಸೆಯಿತ್ತು. ಆದರೆ ಈ ಸಲ ಒತ್ತಾಯ ಮಾಡಿಸಿಕೊಳ್ಳಲು ಸ್ವಲ್ಪ ಹೆದರಿಕೆಯೂ ಆಯಿತೆನ್ನಿ. ಹಲ್ಲಿನ ಕಥೆಯಂತಾದರೆ ಅಂತ ಸುಮ್ಮನಾದೆ. ನಾಲ್ಕು ತಿಂಗಳ ಹಿಂದೆ ಬೇರೆ ಹಲ್ಲು ಸೆಟ್ಟು ಹಾಕಿಸಿಕೊ ಅಂತ ಡಿಲ್ಲಿಯಿಂದ ಗಂಡ, ಮಕ್ಕಳೊಡನೆ ಇಲ್ಲಿಗೆ ಬಂದಿದ್ದ ಮಾಲವಿಕಾ (ನಿಮ್ಮ ಮುದ್ದಿನ ಮಗಳು -ಬಣ್ಣದ ಕೊಂಬಿನ ಪುಟಾಣಿ ಜಿಂಕೆ) ಹೇಳಿದಳು. ಈ ಸೆಟ್ಟು ಹಾಕಿಸಿ ಹದಿನೈದು ವರ್ಷಗಳಾಗಿದ್ದವು. ನನಗೀಗ ಎಪ್ಪತ್ತಾರು ಅಲ್ವ. ಒಸಡು ಸುಗ್ಗಿಹೋಗಿ ಸೆಟ್ಟು ಬಾಯಲ್ಲಿ ಸರಿಯಾಗಿ ಕೂರುವುದೇ ಇಲ್ಲ. ನನಗೆ ಬಹಳ ಪ್ರಿಯವಾದ ಅಕ್ಕಿರೊಟ್ಟಿ ಹೋಗಲಿ ಮೆತ್ತಗೆ ಬೇಯಿಸಿದ ಅನ್ನವನ್ನು ತಿನ್ನುವಾಗಲೂ ಮೇಲಿನ ಸೆಟ್ಟು ಜಾರಿಹೋಗುತ್ತೆ. ಕೆಳಗಿನ ಸೆಟ್ಟು ಕುಣಿಯುತ್ತೆ. ಒಸಡಿನ ಈಗಿನ ಅಳತೆಗೇ ಹಲ್ಲು ಕಟ್ಟಿಸಿದರಾಯಿತು. ಏಳೆಂಟು ಸಾವಿರ ಆಗಬಹುದು. ಹೆಚ್ಚೇನು ಖರ್ಚು ಬೀಳುವುದಿಲ್ಲ ಅಂತ ಅನು ಹೇಳಿದ. ಸಂತೋಷಿ, ಮಾಲವಿಕಾ ಸ್ವಲ್ಪ ಒತ್ತಾಯ ಮಾಡಿ ನನ್ನ ಹಲ್ಲು ಡಾಕ್ಟ್ರ ಹತ್ರ ಕರಕೊಂಡು ಹೋಗಲಿ ಅನ್ನೋ ಆಸೆಯಿಂದ ನನಗೆಲ್ಲಾ ಇನ್ಯಾಕೆ ಹಲ್ಲು ಸೆಟ್ಟು ಅಂತ ಸ್ವಲ್ಪ ಮೊಂಡು ಹಿಡಿದು ಹೇಳಿದೆ. ಅವರೆಲ್ಲ ಸುಮ್ಮನಾದರು. ಈಗ ಸೆಟ್ಟು ಬೀಳಿಸಿಕೊಳ್ಳುತ್ತ ಊಟ ತಿಂಡಿ ಮಾಡುತ್ತೇನೆ. ಹೀಗೆ ಒತ್ತಾಯ ಮಾಡಿಸಿಕೊಳ್ಳಲು ಹೋಗಿ ಕನ್ನಡಕವೂ ಇಲ್ಲವಾದರೆ ಅನ್ನೋ ಹೆದರಿಕೆಯಿಂದ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ಕೂಡಲೇ ರೆಡಿಯಾದೆ. +ಸರಿಯಪ್ಪ, ಹೊಸ ಕನ್ನಡಕ ಬಂತು. ಪೇಪರು ಕಥೆ ಓದುತ್ತೀಯ, ಟಿವಿ ನೋಡ್ತೀಯ. ಆದ್ರೆ ನನಗೆ ಕಾಗ್ದ ಬರೀಬೇಕು ಅಂತ ಹೇಗೆ ಹೊಳೆಯಿತು ಅಂತ ನೀವು ಕೇಳ್ತಿದ್ದೀರಾ! ಅದೇ ನನಗೂ ಆಶ್ಚರ್ಯ. ನಮ್ಮ ಹಿರಿ ಮಗಳು ಸಾಬ (ಸಾವಿತ್ರಿ-ಈಗ ಪಾಂಡವಪುರದಲ್ಲಿದ್ದಾಳೆ) ನನ್ನ ನೋಡಲಿಕ್ಕೆ ಅಂತ ಬಂದಿದ್ದಳು. ನಿಮಗೆ ಅವಳನ್ನ ಕಂಡರೆ ಬಹಳ ಪ್ರೀತಿಯಲ್ವಾ? ಒಂದು ದಿನ ನಾನು ಮನೆ ಹೊರಗೆ ಜಗುಲಿ ಕಟ್ಟೆಯಲ್ಲಿ ಒಬ್ಬಳೇ ಕುಳಿತ್ತಿದ್ದೆ. ಅವಳು ಹತ್ತಿರ ಬಂದು ಅಮ್ಮ, ನಿನಗೆ ಒಂಟಿತನ ಕಾಡುತ್ತಾ? ಕೇಳಿದಳು. ಹಾಗಂದ್ರೆ? ಪ್ರಶ್ನಿಸಿದೆ. ಹಾಗೆ ಹೇಳಿದ್ರೆ- ನನಗೆ ಯಾರೂ ಇಲ್ಲ, ನನ್ನ ಮಾತಾಡಿಸೋರು ಯಾರೂ ಇಲ್ಲ ಹೀಗೆ ಬೇಜಾರಾಗ್ತಾಯಿರೋದು ಅಂತ ವಿವರಿಸಿದಳು. ಅವಳನ್ನೇ ನೋಡಿದೆ. ಅವಳಿಗೀಗ ಐವತ್ತೆಂಟು. ಮೊನ್ನೆಯಷ್ಟೆ ರಿಟೈರ್‍ಡ್ ಆಗಿದ್ದಾಳೆ. ತಲೆಯಲ್ಲಿ ಬೆಳ್ಳಿ ಕೂದಲು ಮಿರುಗುತ್ತಿದೆ. ಅವಳಿಗೂ ಈಗ ನಾಲ್ಕು ಜನ ಮೊಮ್ಮಕ್ಕಳು. ಅವಳ ಮ್ಕಕ್ಕಳು (ನಿಮ್ಮ ಬಹಳ ಮುದ್ದಿನ ಮೊಮ್ಮಕ್ಕಳು ಸುಮಲತಾ, ಅವಳ ತಂಗಿ ಸ್ವರ್ಣಲತಾ) ಇಬ್ಬರೂ ಈಗ ಅಮೆರಿಕಾದಲ್ಲಿದ್ದಾರೆ ಗೊತ್ತಾ? ಅವಕ್ಕೂ ಈಗ ಮಕ್ಕಳು. ಕಾಲ ಹೇಗೆ ನಮ್ಮ ಸರದೀನ ಗಬಕ್ಕನೆ ಕಿತ್ತುಕೊಂಡು ಬೇರೆಯವರಿಗೆ ಪಾಸ್ ಮಾಡುತ್ತಾ ಓಡಿಬಿಡುತ್ತೆ. ನನ್ನ ತಲೇಲಿ ಬೆಳ್ಳಿ ಕೂದಲು ಕಾಣಿಸಿಕೊಂಡಾಗ ನಾನು ಮುದುಕಿಯಾದೇಂತ ನೀವು ಛೇಡಿಸಿದ್ದು ನೆನಪಿದೆಯಾ ನಿಮಗೆ? ಈಗ ನಿಮ್ಮ ಮಗಳ ತಲೆ ತುಂಬಾ ಬೆಳ್ಳಿಕೂದಲಿದೆಯಲ್ಲ! ಇರ್‍ಲಿ, ಹಳೆ ವಿಷಯಕ್ಕೆ ಬರುತ್ತೇನೆ. ಸಾಬನಿಗೆ ನಾನು ಹೇಳಿದೆ, ಹುಂ, ನೀನು ಹೇಳೋ ರೀತಿಯಲ್ಲಿ ನನಗೆ ಬೇಜಾರು ಆಗುತ್ತಿರುತ್ತೆ. ನಾನು ಮಾತಾಡಿದಾಗ ಯಾರೂ ಒತ್ತರ ಕೊಡದಿದ್ರೆ, ನಾನು ಹೋದಾಗ ಆಡ್ತರೋ ಮಾತನ್ನ ನಿಲ್ಲಿಸಿದ್ರೆ ಬೇಜಾರಾಗುತ್ತೆ. ಆಗೆಲ್ಲ ನನ್ನ ಕೇಳೋರೇ ಯಾರಿಲ್ಲ ಅನಿಸುತ್ತೆ ಅನು ಮಗ ಹೇಮಂತನ (ಅವನಿಗೀಗ ಎಂಟು ವರ್ಷ) ಜೊತೆ ಆಡ್ತಾ ಕಳೀತೇನೆ ಹೇಳಿದೆ. ಈ ಥರದ ಬೇಜಾರನ್ನ ನೀವೇ ನನಗೆ ಕೊಟ್ಟದ್ದು. ನಾನು ಏನೇ ಮಾತಾಡಿದ್ರು ಹಾಂ ಹುಂ ಅಂತಾದ್ರು ಉತ್ತರಿಸುತಿದ್ರಿ. ಯಾರನ್ನ ಬೈಯಲಿ, ತೆಗಳಲಿ ಸಣ್ಣಗೆ ನಕ್ಕುಬಿಡುತಿದ್ರಿ. ಈಗೆಲ್ಲ ಹೀಗೆಲ್ಲ ಯಾರೂ ಕೇಳೋದಿಲ್ಲ. ನಾನು ಮಾತಾಡಲು ಬಾಯಿಬಿಟ್ಟೆ ಅಂದ್ರೆ ಒಬ್ಬೊಬ್ಬರೆ ಜಾಗ ಖಾಲಿ ಮಾಡ್ತಾರೆ. ಎಷ್ಟು ಬೇಜಾರಾಗುತ್ತೇಂತ. ಇದೇನು ಕಾಗ್ದದಲ್ಲೂ ನಿಂದು ಪಿರಿ-ಪಿರಿ ಅಂತ ಅನಿಸುತ್ತ ನಿಮಗೆ? ಅನಿಸಲಿ ಬಿಡಿ, ಮೂವತ್ತು ವರ್ಷವೇ ಕಳೆದಿದೆ ನಿಮ್ಮ ಹತ್ರ ಮಾತಾಡದೆ. +ಸಾಬ ನನ್ನೇ ನೋಡುತ್ತಿದ್ದಳು. ಮಾತಾಡಲಿಲ್ಲ. ನಾನೇ ಹೇಳಿದೆ,: ಸಾಬ ಕಣ್ಣು ಸರಿ ಕಾಣೋದಿಲ್ಲ. ಕಿವಿ ಸ್ವಲ್ಪ ವಾಸಿ. ಬಾಯಿ ತುಂಬಾ ಮಾತಾಡೋದು ಬಿಟ್ರೆ ನಂಗೇನುಂಟು ಹೇಳು? ಯಾರಾದ್ರು ಮಾತಿಗೆ ಸಿಕ್ಕಿದ್ರೆ ನಂಗೆ ತುಂಬಾ ಸಂತೋಷವಾಗುತ್ತೆ. ಈಗಿನ ಜನಕ್ಕೆ ಮಾತು ಬೇಡ. ಯಾವಾಗ ನೋಡಿದ್ರು ಕೆಲಸಬಿಜಿ‌ಅಂತ ಹೇಳ್ತಿರ್‍ತಾರೆ ಅಮ್ಮಾ, ನೀನು ದಾಸರ ಕೀರ್ತನೆ, ಹಸೆ ಹಾಡು ರಾಗಿಬೀಸೋ ಹಾಡುಗಳನ್ನೆಲ್ಲ ಈಗಲೂ ಚೆನ್ನಾಗಿ ಹಾಡ್ತೀಯ. ನಿನ್ನ ಧ್ವನಿ ಕೇಳಿದ್ರೆ ಯಾರೂ ನಿನಗೆ ಎಪ್ಪತ್ತಾರು ಆಗಿದೆ ಹೇಳೋದಿಲ್ಲ. ಬೇಜಾರಾದಾಗಲೆಲ್ಲಾ ಹಾಡು ಹೇಳು ಹೇಳಿದಳು. ಈ ವಯಸ್ಸಲ್ಲಿ ಹಾಡಬೇಕಂತೆ! ಪ್ರೀತಿಯಿಂದ ಅವಳನ್ನು ಗದರಿದೆ. ಬೇಜಾರಾದಾಗ ಅವಳು ಹೇಳಿದಂತೆ ಹಾಡನ್ನ ಗುಣುಗುಣಿಸತೊಡಗಿದೆ. ನಿಜಕ್ಕೂ ಬೇಜಾರು ಕಡಿಮೆಯಾಯಿತು. ಎಷ್ಟು ಸಂತೋಷವಾಯಿತು ಗೊತ್ತಾ! +ನಮ್ಮ ಅನು ಹೆಂಡತಿ ಸಂತೋಷಿ ಒಂದು ಮಾತಾಡಿದ್ರೆ ಹತ್ತು ಸಲ ನಗ್ತಾಳೆ. ಅವಳಿಗಿಟ್ಟ ಹೆಸರು ಸರಿಯಾಗಿದೆ. ಈಗ ಸ್ವಲ್ಪ ದಿನದ ಹಿಂದೆ ಹೇಮು ನನ್ನ ಹತ್ರ ಬಂದು ಅಜ್ಜಿ, ಇದು ನನಗೆ ಬೇಡ. ಕಸದ ಬುಟ್ಟಿಗೆ ಎಸಿ ಅಂತ ನೋಟುಪುಸ್ತಕವನ್ನ ತಂದುಕೊಟ್ಟ. ಅಪ್ಪ ಹೋಂವರ್ಕ್ ಮಾಡಿಸ್ತಾರೇಂತ ಹೀಗೆ ಮಾಡಿದ್ದ. ನಾನು ಸೆರಗಲ್ಲಿ ಅದನ್ನ ಅಡಗಿಸಿಟ್ಟುಕೊಂಡು ನನ್ನ ಕೋಣೆ ಮೇಜಿನಲ್ಲಿಟ್ಟೆ. ಮರುದಿನ ಬೆಳಿಗ್ಗೆ ನೋಟು ಪುಸ್ತಕ ಬಿಡಿಸಿ ನೋಡ್ತೇನೆ ಎಲ್ಲಾ ಖಾಲಿ ಹಾಳೆಗಳು. ಮೇಜಿನ ಮೇಲೆ ಯಾವತ್ತೂ ಒಂದು ಪೆನ್ನು ಇಟ್ಟುಕೊಂಡಿರ್‍ತೇನೆ. ಅನುಗೆ ನಾನು ಈ ನೋಟು ಪುಸ್ತಕ ಕೊಡಲು ಹೊರಟವಳು ಎರಡು ಹೆಜ್ಜೆ ಹಿಂದೆ ಸರಿದು ಮತ್ತೆ ಮೇಜಿನ ಮೇಲಿಟ್ಟೆ. ನಿಮಗೆ ಇದರಲ್ಲಿ ಕಾಗ್ದ ಬರಿವಾ ಅಂತ ಅನಿಸಿತು. ಈಗ ಗೊತ್ತಾಯ್ತ ನಾನು ಯಾಕೆ ನಿಮಗೆ ಕಾಗ್ದ ಬರೀಲಿಕ್ಕೆ ಹೊರಟೇಂತ! ಕಾಗ್ದ ಹೇಗೆ ಶುರು ಮಾಡಲೀಂತ ಬಹಳ ಯೋಚನೆಗಿಟ್ಟುಕೊಂಡಿತು. ನೀವಿದ್ದಾಗ ನಾನು ನಿಮಗೆ ಒಂದೇ‌ಒಂದು ಕಾಗ್ದ ಬರೆದವಳಲ್ಲ. ನೀವೂ ನನಗೆ ಬರೆಯಲಿಲ್ಲ. ಆ ಮೀಟಿಂಗು, ಈ ಮೀಟಿಂಗು ಅಂತ ತಿಂಗಳು, ಹದಿನೈದು ದಿನಾಂತ ಯಾವ್ದು ಯಾವ್ದೋ ಊರಿಗೆ ಹೋಗುತ್ತಿದ್ದವರು ನಮ್ಮ ಪ್ರದೀಪನಿಗೆ (ಹಿರಿ ಮಗ) ಬರೀತಿದ್ರಿ. ಕಾಗ್ದ ಬರೆದು ಗೊತ್ತಿಲ್ಲದ ನಾನು ನಿಮಗೆ ಕಾಗದ ಬರೀತಿದ್ದೇನೆ. ಕೈ ಚುರುಕಿಲ್ಲ, ಅಕ್ಷರ ಉರುಟಿಲ್ಲ. ನಿಮ್ಮ ಕಣ್ಣಿನ ಶಕ್ತಿ ಹೇಗಿದೆಯೋ? ನಿಮಗೀಗ ಎಂಬತ್ತಾರು ಅಲ್ವಾ? ನನ್ನ ಕಾಗ್ದಾನ ನಿಧಾನಕ್ಕೆ ಓದಿ. ನಾನು ನಿಮ್ಮನ್ನ ಯಾವತ್ತೂ ಇಲ್ಲಿ ನೋಡಿ ಅಂತಾನೆ ಕರೀತಿದ್ದೆ. ಕಾಗ್ದ ಹೇಗೆ ಆರಂಭಿಸಲಿ? ಪ್ರೀತಿಯ ಇಲ್ಲಿ ನೋಡಿ ಅಂತಲೇ? ಇದು ಸರಿಯಾಗೋದಿಲ್ಲ. ಕಾಗ್ದ ಬರೆದು ಮುಗಿಸಿದ ಮೇಲೆ ಇದನ್ನ ಯೋಚಿಸಿದ್ರಾಯಿತು. ಇದಕ್ಕಾಗಿ ಒಂದಿಷ್ಟು ಜಾಗ ಬಿಟ್ಟಿರ್‍ತೇನೆ. ಇದು ನಾನು ನಿಮಗೆ ಬರೀತಿರುವ ಕಾಗ್ದ. (ನನ್ನ ಪ್ರೀತಿಯ ಇಲ್ಲಿ ನೋಡಿಗೆ ತಿಳೀತಲ್ಲ? ನಿಮ್ಮ ಸರೂ (ನೀವು ನನ್ನ ಸರೋಜಾ ಅಂತ ಪೂರ್ಣ ಹೆಸರಲ್ಲಿ ಎಂದೂ ಕರೆದವರಲ್ಲವಲ್ಲ) ನಿಮಗೆ ಬರೀತಿರುವ ಕಾಗ್ದ! +ನಮ್ಮ ಅನೂನ ಸಂತೋಷಿ ಹೇಗೆ ಕರೀತಾಳೆ ಗೊತ್ತ? ನೀವಲ್ಲವ ಅವನಿಗೆ ಪ್ರೀತಿಯಿಂದ ಇಟ್ಟ ಹೆಸರು ಅನುರಾಗ. ಅನೂ ಅಂತ ನೀವು ರಾಗ ಎಳೆದು ಕರೆದಾಗ ಅವನು ಹೇಗೆ ಪುಟು-ಪುಟು ಹೆಜ್ಜೆಯಿಟ್ಕೊಂಡು ನಿಮ್ಮನ್ನ ಬಂದು ತಬ್ಬಿಕೊಳ್ತಿದ್ದ! ಈ ಚಿತ್ರ ಈಗಲೂ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತೆ. ಸಂತೋಷಿ ಅವನನ್ನ ಕುಯ್ ಅಂತ ಕರೀತಾಳೆ. ಕುಯ್, ಊಟಕ್ಕೇಳಿಕುಯ್, ಸಂತೆಗೆ ಹೋಗಿ. ಹೀಗೆ. ಮಾಲವಿಕಾ ಬಂದಿದ್ದಾಗ ನಾನು ಅವಳಲ್ಲಿ ಇದನ್ನ ಹೇಳಿ ಗೊಣಗಿದೆ. ಅವಳು ಅವಳ ಗಂಡನ್ನ ಹೇಗಾದ್ರು ಕರೆದುಕೊಳ್ಳಲಿ, ನೀನ್ಯಾಕೆ ಚರೆಚರೆ ಮಾಡ್ತೀಯ? ಗದರಿದಳು. ನಿನ್ನ ಗಂಡ ನಿನ್ನ ಒಯ್ ಅಂತ ಕರೆದ್ರೆ ನಿಂಗೆ ಸಂತೋಷವಾಗುತ್ತ? ಕೇಳಿದೆ. ಅವಳು ಏನು ಹೇಳಿದಳು ಗೊತ್ತ? ಅವನೆಲ್ಲಿ ನನ್ನ ಹಾಗೆಲ್ಲ ಕರೀತಾನೆ. ಅವನು ನನ್ನ ಹನಿ ಅಂತಾನೇ ಕರಿಯೋದು ಅಂದಳು. ಏನು ಕುಯ್ಯೋ, ಏನು ಹನಿಯೋ? ಈ ಮಕ್ಕಳಿಗೆ ಏನು ಕರೆದ್ರೂ ಚೆಂದವೇ. +ನಿಮಗೆ ಕಾಗ್ದ ಬರೀವಾಗ ವಾರ, ತಾರೀಖು, ಸಮಯ ಒಂದೂ ಹಾಕೋದಿಲ್ಲ. ದಿನಕ್ಕೆ ಒಂದೇ ಒಂದು ಪ್ಯಾರಾ. ನನಗೇನೆಲ್ಲಾ ನೆನಪಾಗುತ್ತೊ ಅದನ್ನೆಲ್ಲಾ ಬರ್‍ಕೊಂಡು ಹೋಗ್ತೇನೆ. ಈ ಒಕ್ಕಣ್ಣಲ್ಲಿ ಅಷ್ಟೇ ಮಾಡೋಕೆ ಸಾಧ್ಯ! ಫೋನ್ ರಿಂಗ್ ಆಗ್ತಾಯಿದೆ. ಬಂದೆ ಈಗ. ಏನು, ನೀನೆ ಫೋನ್ ಎತ್ತಿಕೊಂಡೆಯಾ ಅಂತ ಕೇಳ್ತಿದ್ದೀರಾ? ಹೌದು. ನಾನೇ ಫೋನ್ ಎತ್ತಿಕೊಂಡೆ. ನಮ್ಮ ಮದ್ದುಬೈಲು ಕೋಮಲಾ ಮಾಡಿದ್ದು. ಅವಳೂ ಈಗ ಅಜ್ಜಿಯೆ. (ಆದ್ರೆ ನನ್ನಷ್ಟಲ್ಲ). ಅದೂ-ಇದೂ ಅಂತ ಅರ್ಧ ಗಂಟೆ ಮಾತಾಡಿದೆ. ಪರಿಚಯದವರು ಫೋನ್ ಮಾಡಿದ್ರೆ ನಾನು ಒಂದೆರಡು ಮಾತಾಡಿ ಫೋನ್ ಇಡೋದಿಲ್ಲ. ತುಂಬಾ ಮಾತಾಡ್ತೇನೆ. ಅವರು ಫೋನ್ ಇಡ್ತೇನೆ ಅಂತ ಹೇಳೋವರೆಗೂ ಮಾತಾಡ್ತೇನೆ. ನಿಮಗೆ ನಾನು ಇಷ್ಟೆಲ್ಲ ಹೇಗೆ ಕಲಿತೆ ಅಂತ ಆಶ್ಚರ್ಯ ಆಗುತ್ತಾ? ಈಗ ಇಲ್ಲಿ ಎಲ್ಲರ ಮನೆಗಳಲ್ಲೂ ಫೋನ್! ಫೋನ್ ರಿಂಗ್ ಆಗೋ ಶಬ್ಧ ಒಂದಲ್ಲ ಒಂದು ಮನೆಯಿಂದ ಕೇಳುತ್ತಲೇ ಇರುತ್ತೆ. ಮೊದಲು ಸಾಬ ಫೋನ್ ಹಾಕಿಸಿಕೊಂಡಳು. ಮಕ್ಕಳು ಅಮೆರಿಕಾದಲ್ಲಿದ್ದಾರಲ್ಲ ಅದಕ್ಕೆ. ಆಮೇಲೆ ನಮ್ಮ ಎರಡನೇ ಮಗಳು ಶುಭಾ ( ಮುಂಬೈನಲ್ಲಿದ್ದಾಳೆ) ಹಾಕಿಸಿಕೊಂಡಳು. ಅವಳ ಮಗ ಸಂಜಯ್ (ಹುಟ್ಟಿದ ದಿನವೇ ಅವನನ್ನ ನೋಡಿ ಮಂಗನ ಮರಿ ಹಾಗೆ ಕಾಣುತ್ತೆ. ಈ ಮಗೂನ ದೊಡ್ಡ ಮಾಡೋದು ಹೇಗೇಂತ ಕೇಳಿದ್ರಲ್ಲ) ಈಗ ಜರ್ಮನಿಯಲ್ಲಿದ್ದಾನೆ. ಅವನೊಡನೆ ದಿನಾ ಮಾತಾಡೋಕೆ ಬೇಕು ಅಂತ ಫೋನ್ ಹಾಕಿಸಿಕೊಂಡಳು. ಮೈಸೂರಲ್ಲಿದ್ದ ಪ್ರದೀಪ (ಅವನಿಗೆ ನಾನು ಅಂದ್ರೆ ಬಹಳ ಪ್ರೀತಿಯಲ್ವ) ಅಮ್ಮನ ಜತೆ ಮಾತಾಡೋಕೆ ಬೇಕು ಅಂತ ತಾನೂ ಫೋನ್ ಹಾಕಿಸಿಕೊಂಡು ಇಲ್ಲಿ ನಮಗೂ ಹಾಕಿಸಿಕೊಟ್ಟ. ಹಾಗಾಗಿ ಈಗ ಯಾರೂ ಕಾಗ್ದ ಬರೆಯೋದೆ ಇಲ್ಲ. ಎಲ್ಲರೂ ಫೋನ್‌ನಲ್ಲಿ ಒಂದೆರಡು ನಿಮಿಷ ಮಾತಾಡಿಬಿಡ್ತಾರೆ. +ನೀವು ಭಾನುವಾರ ಒಂದು ದಿನ ಬಿಟ್ಟು ಉಳಿದೆಲ್ಲಾ ದಿನ ಗೇಟ್ ಹತ್ರ ನಿಂತ್ಕೊಂಡು ಪೋಸ್ಟ್‌ಮ್ಯಾನ್‌ಗೆ ಕಾಯ್ತಿರ್‍ತಿದ್ರಲ್ಲ. ದಿನವೂ ಏನಾದ್ರೊಂದು ಕಾಗ್ದ ಇರೋದು. ನೀವೋ ಕಾರ್ಡು, ಇನ್‌ಲ್ಯಾಂಡು, ಕವರು ಅಂತ ರಾಶಿ ತಂದಿಟ್ಟುಕೊಳ್ತಿದ್ರಿ. ಈಗ ಅವೆಲ್ಲ ಏನೂ ಇಲ್ಲ. ಪೋಸ್ಟಮ್ಯಾನ್ ಕೂಡ ದಿನವೂ ನಮ್ಮ ರಸ್ತೆಯಲ್ಲಿ ಹೋಗೋದಿಲ್ಲ. ವಾರಕ್ಕೊಮ್ಮೆ ದಾಟಿದ್ರೆ ಹೆಚ್ಚು. ದಿನವೂ ಗೇಟ್ ತೆಗೆದು ಈಗ ಬರೋನು ನ್ಯೂಸ್‌ಪೇಪರ್ ಹುಡುಗ ಮಾತ್ರ! +ನಾನು ಮೊದಲ ಸಲ ಫೋನ್ ಮಾಡಿದ್ದು ನೆನಪಾಯಿತ ನಿಮಗೆ? ಸುಮಾರು ನಲವತ್ಯ್ತದು ವರ್ಷ ಆಗಿರಬೇಕಲ್ಲ? ನಾವಿಬ್ಬರು ನಮ್ಮ ಪ್ರದೀಪನ ಉಪನಯನಕ್ಕೆ ಕಾಫಿ ಪ್ಲಾಂಟರ್ ಶಿವಶಂಕರ ಅವರನ್ನು ಕರೆಯಲು ಹೋಗಿದ್ದೆವಲ್ಲ. ನಾವಿದ್ದಾಗಲೇ ಅಲ್ಲಿಗೆ ನನ್ನ ಅಣ್ಣ ಕಾಫಿಬೋರ್ಡಲ್ಲಿ ಅಧಿಕಾರಿಯಾಗಿದ್ದ ಸುಬ್ಬರಾಯಪ್ಪ (ಈಗ ಹಣ್ಣು-ಹಣ್ಣು ಮುದುಕ) ಫೋನ್ ಮಾಡಿದ್ದನಲ್ಲ. ಶಿವಶಂಕರ್ ಅವನೊಡನೆ ಮಾತಾಡಿ ನೀವೂ ಮಾತಾಡೀಂತ ನಿಮ್ಮ ಕೈಗೆ ಫೋನ್ ಕೊಟ್ಟರಲ್ಲ. ನೀವು ಎರಡು ಮಾತಾಡಿ ಅವನು ಹೇಳಿದಾಂತ ನನ್ನ ಕೈಗೆ ಫೋನ್ ಕೊಟ್ಟು ಮಾತಾಡಲು ಹೇಳಿದ್ರಿ. ನಾನು ಅದೇ ಫೋನ್ ನೋಡಿದ್ದಾಗಿತ್ತು. ನಿಮಗೆ ನೆನಪಾಗುತ್ತಾ ನನ್ನ ಕೈ ನಡುಗಿ ಕೈಯಿಂದ ಫೋನ್ ಜಾರಿದ್ದು, ಅದನ್ನು ಎತ್ತಿಕೊಂಡು ಕಿವಿ ಕಡೆ ಹಿಡಿದುಕೊಳ್ಳುವುದನ್ನು ಬಾಯಿಕಡೆಗೆ ಹಿಡಿದುಕೊಂಡಾಗ ನೀವು ಸಣ್ಣಗೆ ರೇಗಿ ಸರಿ ಹಿಡಿದುಕೊಟ್ಟದ್ದು, ಅಣ್ಣನ ಧ್ವನಿಯನ್ನ ಅದರೊಳಗಿಂದ ಕೇಳಿ ಬೆವತು ಹೋದದ್ದು, ನಾನು ಮಾತಾಡಿದರೆ ನನ್ನ ಧ್ವನಿ ಅದರೊಳಗೆ ಸಿಕ್ಕಿ ಹಾಕಿಕೊಂಡರೇಂತ ಗಾಬರಿಯಾದದ್ದು, ಅವನಿಗೆ ತಡವರಿಸಿ ತಡವರಿಸಿ ಉತ್ತರಿಸಿದ್ದು. ಅವತ್ತು ಎಷ್ಟು ಅವಾಂತರ ಮಾಡಿಕೊಂಡೆ. ಅವತ್ತು ಮನೆ ತಲುಪುವ ವರೆಗೂ ನೀವು ನನ್ನ ಮಂಕುದಿಣ್ಣೆ ಅಂತ ಬೈಯುತ್ತಲೇ ಇದ್ದದ್ದು ಎಲ್ಲಾ ನೆನಪಾಗುತ್ತ ನಿಮಗೆ? ಈಗ ಕೇಳಿ- ಫೋನ್ ಬಂದಾಗ ಹತ್ತಿರದಲ್ಲಿ ನಾನೇ ಇದ್ದರೆ ರಸೀವರ್ ಎತ್ತಿಕೊಂಡು ಹಲೋ ಎನ್ನುತ್ತೇನೆ. ಹೊಸ ಕನ್ನಡಕ ಬಂದಮೇಲೆ ನಾನೇ ಡಯಲ್ ಮಾಡ್ತೇನೆ. ನಿಮಗೂ ಫೋನ್ ಮಾಡೋಕೆ ಆಸೆ. ಆದ್ರೆ ಎಲ್ಲೀಗೇಂತ ಮಾಡಲಿ? ಫೋನ್ ಅಂತ ಹೇಳಿದಾಗ ಇನ್ನೊಂದು ವಿಷಯ ನೆನಪಾಯಿತು. ಅದನ್ನ ಹೇಳಿಬಿಡ್ತೇನೆ. +ಒಂದೆರಡು ತಿಂಗಳ ಹಿಂದೆ ವಿರಾಜಪೇಟೆಯಿಂದ ಡಾ. ನರಸಿಂಹಪ್ಪನವರ ಹೆಂಡತಿ ಪಾರ್ವತಮ್ಮ ಬಂದಿದ್ದರು. ಮನೇಲಿ ಒಬ್ಬರಿಗೇ ಬೇಜಾರಾಗುತ್ತಿತ್ತಂತೆ. ನಾಲ್ಕು ದಿನ ನನ್ನೊಡನೆ ಇದ್ದು ಹೋಗಲು ಬಂದಿದ್ದರು. ಅವರು ನನಗಿಂತ ಗಟ್ಟಿಯಾಗಿದ್ದಾರೆ. ಒಬ್ಬರೇ ಬಸ್ಸ್ಲ್ಸ್ಲೂ ಪ್ರಯಾಣ ಮಾಡ್ತಾರೆ. ಅವರನ್ನ ನೋಡಿ ನನಗೋ ಸ್ವರ್ಗಕ್ಕೆ ಮೂರೇ ಗೇಣು ಇದ್ದಹಾಗನಿಸಿತು. ಅಷ್ಟೊಂದು ಕುಷಿಯಾಯಿತು. ಅವರನ್ನ ಕರಕೊಂಡು ಒಂದು ದಿನ ಎದುರು ಮನೆ ಸುಮಿತ್ರಾ (ನಿಮ್ಮ ಸೋದರತ್ತಿಗೆ ಕೆಳಹಿತ್ಲು ಸುಬ್ಬಕ್ಕನ ಮೊಮ್ಮಗಳು) ಮನೆಗೆ, ಅಲ್ಲೆ ಪಕ್ಕದಲ್ಲೆ ಇರುವ ಗೋಪಾಲಕೃಷ್ಣ (ನಾರಾಯಣ ಪುರೋಹಿತರ ಮಗ) ಮನೆಗೆ ಹೋದೆ. ಮಧ್ಯಾಹ್ನ ಎರಡು ಗಂಟೆಗೆ ನಾವಿಬ್ಬರು ಮನೆಬಿಟ್ಟವರು ವಾಪಸು ಬಂದಾಗ ರಾತ್ರಿ ಎಂಟಾಗಿತ್ತು. ಎರಡೂ ಮನೆಗಳಲ್ಲಿ ಪಟ್ಟಾಂಗ ಹೊಡೆದದ್ದೇ ಹೊಡೆದದ್ದು! ಇನ್ನು ಏನುಂಟು ಹೇಳಿ ನಮಗೆ? ನಮ್ಮ ಆಸೆ, ಕನಸು ಎಲ್ಲಾ ಮಾತಲ್ಲೇ ಪೂರೈಸುವುದು ತಾನೆ! ಅವತ್ತೆ ಮೈಸೂರಿನಿಂದ ಪ್ರದೀಪನ ಹೆಂಡತಿ ರಮಾ ನನ್ನ ನೋಡಿಹೋಗಲೆಂದು ಬಂದಿದ್ದಳು. ಮರುದಿನ ಬೆಳಿಗ್ಗೆಯೇ ಅವಳಿಗೆ ಹೋಗಬೇಕಿತ್ತು. ನಾನು ಪಾರ್ವತಮ್ಮನನ್ನು ಕರೆದುಕೊಂಡು ಮನೆಯೊಳಗೆ ನುಗ್ಗಿದ್ದೆ. ಅವಳು ಇದೇನು ಅತ್ತೆ, ನಾನು ನಿಮ್ಮನ್ನು ನೋಡೋಕೆ ಬಂದ್ರೆ, ನೀವು ಇನ್ಯಾರದೋ ಮನೆಯಲ್ಲಿ ಹರಟೆಹೊಡ್ಕೊಂಡು ಕೂತಿರ್‍ತೀರಿ ಆಕ್ಷೇಪಿಸಿದಳು. ಏನೋ ಅಪರೂಪಕ್ಕೆ ಹೋದದ್ದು. ನೀನು ಬರೋದು ಗೊತ್ತಾಗಿದ್ರೆ ಹೋಗ್ತಿರಲಿಲ್ಲ. ದಿನಾ ಯಾರು ಹೋಗ್ತಾರೆ ಹೇಳು? ಅಪರೂಪಕ್ಕೆ ಹೋದದ್ದು. ಅದು-ಇದು ಮಾತಾಡುವಾಗ ಇಷ್ಟು ಹೊತ್ತಾಯ್ತು ಹೇಳಿದೆ. ಸಂತೋಷಿ ಹೇಳಿದಳು: ಈಗ ಯಾರೂ ಇನ್ನೊಬ್ಬರ ಮನೆಗಳಿಗೆ ಹೋಗಿ ಗಂಟೆಗಟ್ಟಲೆ ಮಾತಾಡೋದಿಲ್ಲ. ಅವರಿಗೂ ಟಿವಿಯಲ್ಲಿ ಸೀರಿಯಲ್ ನೋಡೋಕೆ ಇರೋದಿಲ್ವ? ನೀವು ಹೋದವರನ್ನ ದಾಕ್ಷಣ್ಯಕ್ಕೆ ಕೂರಿಸಿಕೊಂಡು ಮಾತಾಡಿದ್ದಾರೆ ಅಷ್ಟೆ ಅಮ್ಮಾ, ಕತ್ತಲಲ್ಲಿ ನಡೆಯುವಾಗ ಕಲ್ಲೆಡವಿ ಬಿದ್ದು ಕಾಲಿಗೇನಾದರು ಆದರೆ ನೀನೆ ನರಳಬೇಕು. ಮನೆಗೆ ಬಂದವರನ್ನು ಮಾತಾಡಿಸಿಕೊಂಡು ಕೂತಿರು. ನೀನಾಗಿ ಇನ್ನೊಬ್ಬರ ಮನೆಗೆ ಹೋಗಬೇಡ ಅನು ಸ್ವಲ್ಪ ಒರಟಾಗಿ ಹೇಳಿದ. ಅಷ್ಟಕ್ಕೂ ನಾನು ಮಾಡಿದ್ದು ರಸ್ತೆ ದಾಟಿ ಎದುರು ಮನೆಗೆ ಹೋಗಿ ಮಾತಾಡಿದ್ದು. ಮಕ್ಕಳಿಗೆ ಇದು ತಪ್ಪು. ನನಿಗೋ ಬಹಳ ಬೇಜಾರಾಯಿತು. ಪಾರ್ವತಮ್ಮನಿಗೆ ಇವರಾಡಿದ್ದೆಲ್ಲ ಕೇಳಿದರೆ ಏನಂದುಕೊಳ್ಳುತ್ತಾರೊ ಎಂಬ ಅಳುಕು ಬೇರೆ. ಪುಣ್ಯಕ್ಕೆ ಅವರಿಗೆ ಕಿವಿ ಸ್ವಲ್ಪ ಮಂದ! ಸುಮಿತ್ರಾನ ಮನೆಯಲ್ಲಿ ಹೊಸ ಗ್ರೈಂಡರ್ ತಂದಿದ್ದರು. ರಾತ್ರಿ ಊಟಕ್ಕೆ ಕೂತಾಗ ಆ ಗ್ರೈಂಡರ್ ಕಲ್ಲುಗಳು ಹೇಗಿವೆ ಎಂದೆಲ್ಲಾ ವಿವರಿಸಿದೆ. ಯಾರೊಬ್ಬರೂ ಒಂದು ಹುಂಗುಟ್ಟಲಿಲ್ಲ. ನಾನು ಮಾತಾಡೋದೇ ಸರಿಯಿಲ್ಲವೇನೋ ಅಂದುಕೊಂಡು ಸುಮ್ಮನಾದೆ. ಇದನ್ನ ಬರೀವಾಗ್ಲೂ ಸಂಕಟ ಆಗ್ತಿದೆ. +ಹರಟೆ ಹೊಡೆಯುವುದು ತಪ್ಪ? ನಮ್ಮ ಬಾಲ್ಯದ ದಿನಗಳು, ನೀವಿದ್ದಾಗ ನಾವೆಲ್ಲ ಕಳೆದ ದಿನಗಳು, ಮಕ್ಕಳನ್ನ ದೊಡ್ಡ ಮಾಡಲು ಪಟ್ಟ ಕಷ್ಟ ಇವೆಲ್ಲ ನೆನಪಾಗುತ್ತಲ್ವ. ಈಗ ಎಲ್ಲರೂ ಒಳ್ಳೆ ಸ್ಥಿತಿಯಲ್ಲಿರುವಾಗ ಹಿಂದಿನ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳೋಕೆ ಹೆಮ್ಮೆ ಅನಿಸುತ್ತಲ್ಲವಾ? ಇವೇ ನನ್ನ ಮಾತು. ನನ್ನ ಪ್ರಪಂಚ! ಇವೆಲ್ಲ ಹರಟೆಯಾಗುವಾಗ ತುಂಬಾ ಸಂತೋಷವಾಗುತ್ತೆ. ಅದ್ರೆ ನಮ್ಮ ಮಕ್ಕಳಿಗೆ ಇದು ಕೇವಲ ಹರಟೆಯಾಗುತ್ತಲ್ಲ, ಹೇಳಿ? ಊಟವಾದ ಮೇಲೆ ಸಂತೋಷಿ ಕೋಣೆಯಲ್ಲಿ ರಮಾನಿಗೆ ಹೇಳುತ್ತಿರೋದು ನನ್ನ ಕಿವಿಗೆ ಬಿತ್ತು. ಅತ್ತೆಗೆ ಅಲ್ಲಿ-ಇಲ್ಲಿ ಸುತ್ತೋದು ಬಹಳ ಆಸೆ. ಬೇಡದ ಹರಟೆಗೆ ಕೂತರೆ ಊಟ, ತಿಂಡಿ, ನಿದ್ರೆಯೂ ಬೇಡ ಅವರಿಗೆ. ಹೇಳಿದ್ರೆ ಬಹಳ ಸಿಟ್ಟುಮಾಡಿಕೊಳ್ತಾರೆ. ಮೊನ್ನೆ ಪಾರ್ವತಮ್ಮನ ಹತ್ರ ಸುಣ್ಣದ ಗೋವಿಂದಪ್ಪನ ಮಗಳು ಅನಸೂಯಾ ರಾಮಕೃಷ್ಣ ಭಟ್ಟರ ಮಗನೊಡನೆ ಎಲ್ಲಿಗೋ ಓಡಿಹೋಗಿ ಮದುವೆಯಾದಳುಬ್ಯಾಂಕಿನ ಸುಜಾತ ಹೊಟ್ಟೆನೋವೂಂತ ಆತ್ಮಹತ್ಯೆ ಮಾಡಿಕೊಂಡದ್ದಲ್ಲ. ಅವಳಿಗೆ ಹೊಟ್ಟೆನೋವೇ ಇರಲಿಲ್ಲ. ಬೇರೆ ಏನೋ ಕಾರಣವಿತ್ತಂತೆ.. ಹೀಗೆಲ್ಲ ಹೇಳುತ್ತಿದ್ರು. ಪಾರ್ವತಮ್ಮನಿಗೆ ಅವರು ಯಾರೂಂತ ಗೊತ್ತಿಲ್ಲದಿದ್ದರೂ ಕುತೂಹಲದಿಂದ ಕೇಳುತ್ತಿದ್ರು ಸಂತೋಷಿ ಮಾತು ಕೇಳಿ ನನಗೆ ಸಿಟ್ಟು, ಬೇಜಾರು ಆಗುತ್ತಿತ್ತು. ಆದ್ರೆ ಏನ್ಮಾಡಲಿ ಹೇಳು. ಈ ವಯಸ್ಸಲ್ಲಿ ಜಗಳ ಆಡೋದು ಸರಿನಾ? ಅದಕ್ಕೆ ಸುಮ್ಮನಾದೆ. ಈ ವಿಷಯಗಳನ್ನೆಲ್ಲ ಪಕ್ಕದ ಮನೆ ಶಾಂತಾ ನನಗೆ ಫೋನ್‌ನಲ್ಲಿ ತಿಳಿಸಿದ್ದನ್ನ ನಾನು ಪಾರ್ವತಮ್ಮನಿಗೆ ಹೇಳಿದ್ದೆ ಅಷ್ಟೆ. ನಾವು ಮಾತಾಡಿಕೊಳ್ಳೋದು ಮನೆಯೊಳಗೆ ತಾನೆ. ದೂರಿದ್ರು ಮನೆಯೊಳಗೆ ತಾನೆ. ಅವರಿಗೆಲ್ಲ ಇದನ್ನ ಯಾರೂ ಹೋಗಿ ಹೇಳೋದಿಲ್ಲ. ಹಾಗಿದ್ರೆ ಮಾತಾಡೋದು ಏನು ತಪ್ಪು ಹೇಳಿ? ವಿಷಯ ಎಲ್ಲೆಲ್ಲಿಗೋ ಹೋಯ್ತಲ್ವ? ಪಾರ್ವತಮ್ಮ ವಿರಾಜಪೇಟೆಗೆ ಹೋದಮೇಲೆ ನನಗೆ ಫೋನ್ ಮಾಡಿದ್ರು. ಸುಮಿತ್ರಾ, ಗೋಪಾಲಕೃಷ್ಣನ್ನ ವಿಚಾರಿಸಿಕೊಂಡರು. ಸುಮಿತ್ರಾ ವಿಷಯ ಬಂತಲ್ಲ. ನಾನು ಪಾರ್ವತಮ್ಮನಿಗೆ ಸುಮಿತ್ರಾ ಮನೆಗೆ ಅವಳ ಅಕ್ಕ ಪೂನಾದಿಂದ ಬಂದದ್ದು, ಅಕ್ಕನಿಗೇಂತ ಶ್ಯಾವಿಗೆ ಮಾಡಲು ಅಕ್ಕಿ ರುಬ್ಬಿದ್ದು, ಮಗಚುವಾಗ ಹದ ಸಾಲದೆ ಶ್ಯಾವಿಗೆ ಒರಳು ಮಣೆಗೆ ಅಂಟಿಕೊಂಡು ಮುದ್ದೆ-ಮುದ್ದೆಯಾದದ್ದು ಎಲ್ಲಾ ಹೇಳಿ ನಕ್ಕೆ. ಪಾರ್ವತಮ್ಮನೂ ಹೊಟ್ಟೆತುಂಬಾ ನಕ್ಕರು. ಇದನ್ನೆಲ್ಲ ಕೇಳುತ್ತಿದ್ದ ಅನು, ಅಮ್ಮ, ಫೋನಲ್ಲಿ ಇದನ್ನೆಲ್ಲ ಯಾಕೆ ಹೇಳ್ತೀಯ? ಸುಮಿತ್ರಾ ಶ್ಯಾವಿಗೆ ಯಾದ್ರು ಮಾಡಲಿ ಬಿಡಲಿ ನಿನಗ್ಯಾಕೆ ಅದೆಲ್ಲ ಉಸಾಬರಿ? ಗದರಿದ. ಪಾರ್ವತಮ್ಮ ಏನು ತಿಳ್ಕೊಂಡುಬಿಡ್ತಾರೊ ಅಂತ ಏನೂ ಹೇಳದೆ ಫೋನ್ ಇಟ್ಟುಬಿಟ್ಟೆ. ಅವರು ಏನು ತಿಳ್ಕೊಂಡರೊ? +ಮನೇಲಿ ಕರೆಂಟು ಇದ್ದಾಗಲೆಲ್ಲ ಟಿವಿಯೇ ನನ್ನ ಸಂಗಾತಿ. ಶುಭಾ ಮನೆಗೆ ಬಂದವಳು ನಾನು ಟಿವಿ ಮುಂಗೆ ಕೂತೇ ಇರೋದು ನೋಡಿ, ಅಮ್ಮಾ, ಅಷ್ಟೊಂದು ಟಿವಿ ನೋಡಬೇಡ. ಕಣ್ಣಿಗೆ ಒಳ್ಳೇದಲ್ಲ. ನಿನ್ನ ದೃಷ್ಟೀನೂ ಸರಿಯಿಲ್ಲ. ನೋಡಿದ್ದೆಲ್ಲ ಅರ್ಥವಾಗುತ್ತಾ? ಕೇಳಿದ್ದಳು. ನಾನು ಹೇಗೆ ಹೊತ್ತು ಕಳೆಯಲಿ ಹೇಳಿ. ಮಾತಾಡಿದ್ರೆ ತಪ್ಪು, ಟಿವಿ ನೋಡಿದ್ರೆ ತಪ್ಪುಹಿಂದೆ ಕೆಲಸ ಮಾಡುವಾಗಲೂ ರೇಡಿಯೋ ಹಾಕೊಂಡೇ ಇರುತ್ತಿದ್ದಾಗ ನೀವು ಗೇಲಿ ಮಾಡ್ತಿದ್ರಿ ಅಲ್ವಾ? ಈಗ ರೇಡಿಯೋ ಕೇಳೋದು ಅಷ್ಟರಲ್ಲೇ ಇದೆ. ಎಲ್ರೂ ಟಿವಿ ನೋಡ್ತಾರೆ. +ನನಗೆ ನಿಮ್ಮ ಮೇಲೆ ಬಹಳ ಸಿಟ್ಟು ಬರುತ್ತೆ. ಯಾಕೆ ಹೇಳಿ? ನೀವು ನನಗೆ ಬಹಳ ನೋವು ಕೊಟ್ರಿ. ನೀವು ಹೋದಾಗ ಸಾಬ, ಶುಭಾರ ಮದುವೆಯಾಗಿ ಮೊಮ್ಮಕ್ಕಳು ಆಗಿದ್ದವು. ಪ್ರದೀಪ ಅಭಿ, ಸುಲಕ್ಷಣಾ, ಮಾಲವಿಕಾ, ಅನು ಅವರನ್ನೆಲ್ಲಾ ಓದಿಸಿ ಒಂದು ಹಂತಕ್ಕೆ ತರಲಿಕ್ಕೆ ನಾನೇ ಕಷ್ಟಪಡಬೇಕಾಯಿತಲ್ಲ, ಮಕ್ಕಳು ಜಾಣರಿದ್ರು ಕಲಿಯೋದರಲ್ಲಿ ಆಗಿಹೋಯ್ತು. ಸುಲಕ್ಷಣಾ, ಮಾಲವಿಕಾ, ಪ್ರದೀಪ ಅವರಿಗಿಷ್ಟವಾದವರನ್ನೇ ಮದುವೆಯಾದ್ರು. ಅವರ ಜಾತಿ-ಗೀತೀನೂ ನಾನು ಕೇಳಿಲ್ಲ. ಮಕ್ಕಳನ್ನ ಆ ಹಂತಕ್ಕೆ ತರೋದ್ರಲ್ಲೇ ಹಣ್ಣಾಗಿದ್ದೆ. ಅವರೆಲ್ಲ ಚೆನ್ನಾಗಿರೋದು ಮುಖ್ಯ. ಜಾತಿ ಕಟ್ಟಿಕೊಂಡು ಏನ್ಮಾಡ್ಲಿ? ಹೆಚ್ಚು ವಿದ್ಯೆಯಿಲ್ಲದ ನಾನು ನಿಮಗಿಂತ ನೋವು ತಿಂದ್ನಲ್ಲ ಹೇಳಿ! ನೀವು ಹೋದ ನೋವು ಈಗಲೂ ಮಾಸಿಲ್ಲ. ಪ್ರದೀಪ ಹಾರ್ಟ್ ಅಟೇಕ್ ಆಗಿ ಇದ್ದಕ್ಕಿದ್ದ ಹಾಗೆ ಹೋಗಿಬಿಟ್ಟ. ಸುಲಕ್ಷಣಾ ನೆಪಕ್ಕೆ ಜ್ವರ ಬಂದು ಕಣ್ಣುಮುಚ್ಚಿಕೊಂಡಳು. ಈ ನೋವೆಲ್ಲ ನಿಮಗೆ ಅರ್ಥವಾಗುತ್ತಾ, ಹೇಳಿ? ಬಡತನ ಬರಲಿ, ಕಷ್ಟ ಬರಲಿ ನಾನು ಹೇಗೂ ನಿಭಾಯಿಸಿಬಿಡ್ತೇನೆ. ಆದ್ರೆ ಸಾವು ಅಂದ್ರೆ ಎಲ್ಲವನ್ನ ಕಳ್ಕೊಂಡ ಹಾಗೆ. ಅವರ ಇರುವೇ ಇಲ್ಲ ಅಂದ್ರೆ ಎಷ್ಟೊಂದು ಸಂಕಟ ಆಗುತ್ತೆ. ನಿಮ್ದೆಲ್ಲ ಬದುಕು ಪೂರ್ತಿಯಾಯ್ತು. ಹೊರಟುಹೋದ್ರಿ. ಇರಲಿ ಬಿಡಿ, ನನ್ನ ನೋವನ್ನ ನಿಮ್ಮಲ್ಲಿ ಹೇಳಿಕೊಂಡೆ. +ಸ್ವಲ್ಪ ದಿನ ಬರೆಯದೆ ಯಾಕೆ ನಿಲ್ಲಿಸಿದ್ದೇನೆ ಅಂತ ಕೇಳ್ತಿದ್ದೀರಾ? ಊಟ ಮಾಡ್ತಿದ್ದಾಗ ನಾನು ಇದ್ದಕ್ಕಿದ್ದ ಹಾಗೆ ಬಿದ್ದುಹೋದೆ. ಎಚ್ಚರವೇ ಇರಲಿಲ್ಲ. ಸಂತೋಷಿ ಅತ್ತೆಗೆ ಏನೋ ಆಗಿದೆ ಅಂತ ಕಿರುಚಿಕೊಂಡಳಂತೆ. ಆಫೀಸಲ್ಲಿದ್ದ ಅನು ಡಾಕ್ಟ್ರನ್ನ ಕರ್‍ಕೊಂಡು ಮನೆಗೆ ಬಂದ. ನನಗೆ ಎಚ್ಚರವಾದಾಗ ಅನು ತಲೆಬುದದಲ್ಲಿ ಕೂತಿದ್ದ. ಸಂತೋಷಿ ಕಣ್ಣೊರೆಸಿಕೊಳ್ಳುತ್ತಿದ್ದಳು. ಅಮ್ಮಾ, ಏನಾಗ್ತುಂಟು? ಅನು ಕೇಳಿದ. ಏನಿಲ್ಲ. ನಂಗೇನಾಗಿತ್ತು? ಅವನನ್ನೇ ಕೇಳಿದೆ. ಏನಿಲ್ಲ, ಸ್ವಲ್ಪ ಆಯಾಸ ಆಗಿತ್ತಂತೆ ನಿನಗೆ. ರೆಸ್ಟ್ ತಗೋಬೇಕಂತೆ, ಡಾಕ್ಟ್ರು ಹೇಳಿದ್ದಾರೆ ಹೇಳಿದ. ನನಗೋ ನಗು ಬಂತು. ಯಾವತ್ತೂ ರೆಸ್ಟ್ಲ್ಟ್ಲಿರೋ ನನಗೇನು ಬಂತು ರೆಸ್ಟ್ ಅಂದುಕೊಂಡೆ. ಮರು ದಿನ ಸಂಜೆಗೆ ಮನೆ ತುಂಬಾ ಜನ. ಮಕ್ಕಳೆಲ್ಲ ಬಂದಿದ್ರು. ಅಭಿಜಿತ ಜೇಬಲ್ಲಿಟ್ಟುಕೊಳ್ತಾನಲ್ಲ ಫೋನನ್ನ ನನ್ನ ಬಾಯಿಗಿಟ್ಟು ಅಮ್ಮಾ, ಅಮೇರಿಕಾದಿಂದ ಸುಮಲತಾ ಮಾತಾಡ್ತಾಳೆ ಮಾತಾಡು ಹೇಳಿದ. ಸಂಜೆಗಾಗುವಾಗ ಮೊಮ್ಮಕ್ಕಳೆಲ್ಲಾ ನನ್ನ ವಿಚಾರಿಸಿಕೊಂಡದ್ದೇ ಕೊಂಡದ್ದು. ಮಕ್ಕಳು, ಸೊಸೆಯರದೆಲ್ಲ ಉಪಚಾರ. ಆದ್ರೆ ಅನು ಮಂಕಾಗಿಯೇ ಇದ್ದ. ಅವನ ಕಣ್ಣು ಆಗಾಗ ತುಂಬಿಕೊಳ್ತಿತ್ತು. +ಅತ್ತೆ ಈಗ ಟಿವಿವೆಲ್ಲ ಸರಿಯಾಗಿ ನೋಡೋದೆಯಿಲ್ಲ. ಕೋಣೆ ಬಾಗಿಲು ಹಾಕೊಂಡು ಕೂತಿರ್‍ತಾರೆ ಸಂತೋಷಿ ಹೇಳುತ್ತಿದ್ದಳು. ಅಮ್ಮ, ಈಗ ನಿನ್ನ ಒಂದು ಕಣ್ಣಿಗೆ ತೊಂದರೆಯಿಲ್ವಲ್ಲ. ಓವಿ ನೋಡು ಸಾಬ ಹೇಳಿದಳು. ನಾನು ಕೋಣೆ ಬಾಗಿಲು ಹಾಕೊಂಡು ನಿಮಗೆ ಕಾಗದ ಬರಿತೇನೇಂತ ಹೇಗೆ ಹೇಳಲಿ? ಕೋಟಿ ರಾಮನಾಮ ಬರೆಯೋ ಆಸೆ. ಬರೀತಾ ಕೂತಿರ್‍ತೇನೆ ಹೇಳಿದೆ. ಈ ವಯಸ್ಸಲ್ಲೂ, ಇಂಥ ಪರಿಸ್ಥಿತಿಯಲ್ಲೂ ಸುಳ್ಳಾ ಅಂತ ಕೇಳ್ತೀರಾ? ಹೌದು, ಮಕ್ಕಳು ಎಲ್ಲಾ ಸೇರಿಕೊಂಡು ಅಮ್ಮನಿಗೆ ಈಗ ಅಪ್ಪನಿಗೆ ಲವ್ ಲೆಟರ್ ಬರಿಯೋ ಆಸೆ ಅಂತ ನಕ್ಕರೆ‌ಅದಕ್ಕೆ ಸುಳ್ಳು ಹೇಳಿದೆ. ಇಲ್ಲದಿದ್ರು ಈ ನೋಟು ಪುಸ್ತಕಾನ್ನ ಅವರೆಲ್ಲಿ ತೆಗೆದು ನೋಡ್ತಾರೊ ಅಂತ ಮೇಜಿನ ಕವರ್ ಅಡಿಯಲ್ಲಿ ಅಡಗಿಸಿಟ್ಟುಕೊಳ್ಳುತ್ತೇನೆ. ನಿನ್ನೆ ಸಂಜೆ ಮೇಜಿನ ಮೇಲೆ ಎರಡು ನೋಟುಬುಕ್‌ಗಳು. ಅನು ಕೋಟಿರಾಮನಾಮ ಬರೀಲಿಕ್ಕೆ ಅಂತ ನನಗೆ ತಂದಿಟ್ಟಿದ್ದಾನೆ. ಮಕ್ಕಳ ಪ್ರೀತಿ ನೋಡಿ. ನನಗೆ ವಯಸ್ಸಾದದ್ದೇ ಮರೆತ. +ನೋಡಿ, ಎಷ್ಟೊಂದು ತಿಂಗಳುಗಳು ಉರುಳಿದ್ವು. ನಿಮಗೆ ಕಾಗ್ದ ಬರಿಯೋಕೆ ಹೊರಟ ಮೇಲೆ ಹೊತ್ತು ಹೋಗೋದೆ ಗೊತ್ತಾಗೋದಿಲ್ಲ. ಈಗ ನೀವು ದಿನಾ ನನ್ನ ಹತ್ರವೇ ಇರ್‍ತೀರಲ್ಲ. ನಿಮ್ಮ ಜತೆ ಮಾತು, ಹರಟೆ ದಿನಾ ನಡೀತಿದೆಯಲ್ಲ. ನಿಮಗೆ ಇನ್ನೆರಡು ನೋಟುಪುಸ್ತಕ ತುಂಬಾ ಪತ್ರ ಬರೆಯೋದಿದೆ. ಸದ್ಯ ಇದನ್ನ ನಿಲ್ಲಿಸಲಾ? ಇದು ಅಂತ್ಯ ಆಗ್ತಿದೆ ಅಂದ್ರೆ ಮತ್ತೊಂದು ಶುರುವಾಗುತ್ತೆ ಅನ್ನೋದನ್ನ ಮರೀಬೇಡಿ. ಏನು ಹೇಳಲಿ ನನ್ನ ಪ್ರೀತಿಯ ಇಲ್ಲಿ ನೋಡಿ? ಈಗ ನೀವೆ ನನ್ನ ಕುಯ್, ಹನಿ. ಎಲ್ಲಾ. +***** +ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, […] +ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […] +ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_308.txt b/Kannada Sahitya/article_308.txt new file mode 100644 index 0000000000000000000000000000000000000000..addf604c268f3f3ebceed0ade501337e23e281e2 --- /dev/null +++ b/Kannada Sahitya/article_308.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪ್ರೇಮ ವಸಂತೋತ್ಸವದ ಮಂದ ಆಗಮನ +ಧೂಳಿನ ಬಟ್ಟಲಾಯಿತು ನಂದನವನ +ಎಲ್ಲೆಡೆಗೆ ದೇವಲೋಕದ ಧ್ವನಿ ಹಬ್ಬಿತು +ಆತ್ಮದ ಹಕ್ಕಿ ಚಡಪಡಿಸಿ ದಿಗಂತಕ್ಕೆ ಹಾರಿತು +ಮುತ್ತುಗಳಿಂದ ಕಿಕ್ಕಿರಿಯಿತು ಕಡಲು +ಕೌಥರ್‌ನ ಜಲದಷ್ಟು ಸಿಹಿಯಾಯಿತು ಉಪ್ಪಿನ ಬಯಲು +ಬೀದಿ ಬದಿಯ ಕಲ್ಲು ಆದೀತು ಕನಕ +ಒಡಲೇ ಆತ್ಮವಾಗುವ ತವಕ +ಪ್ರೇಮಿಗಳ ಕಣ್ಣು ಆತ್ಮಗಳ ಧೋ ಧೋ ಮಳೆಯ ಸೆಳೆತ +ಒಡಲ ಮೋಡದೊಳಗೆ ಹೃದಯ ಮಿಂಚಾಗಿ ಸಿಡಿತ +ಪ್ರೇಮದ ಮುಗಿಲಾದವೇಕೆ ನಲ್ಲ ನಲ್ಲೆಯರ ನಯನ +ಮೇಘದ ಮರೆಯಲಿ ಮಿಂಚುವುದೇ ಚಂದ್ರನ ಸ್ಥಾನ +ಇದು ಚೆಂದದ, ಭೋರ್ಗರೆವ ಸಂತೋಷದ ಗಳಿಗೆ, ದೊರೆ +ಎಂಥಾ ಆನಂದದ ತೊರೆ, ಮಿಂಚುಗಳ ಮಹಾ ನಗೆಯ ಮೊರೆ +ಬೀಳದು ನೆಲಕ್ಕೆ ಶತ ಸಾವಿರ ಕೋಟಿ ಹನಿಗಳಲ್ಲಿ ಒಂದರ ನೆರಳು +ಬಿದ್ದದ್ದಾದರೆ ಇಡೀ ಭೂಮಿಯೆ ಹಾಳು +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_309.txt b/Kannada Sahitya/article_309.txt new file mode 100644 index 0000000000000000000000000000000000000000..8114813e355504b29ebab106a08af9af2cc80dd5 --- /dev/null +++ b/Kannada Sahitya/article_309.txt @@ -0,0 +1,17 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿ +ಪಾಪ ತೊಳೆಯುವ ಚಪಲ- +ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವ +ಕಾಯಕದ ಹಾಗೆ ಅಸಫಲ. +ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. ***** +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_31.txt b/Kannada Sahitya/article_31.txt new file mode 100644 index 0000000000000000000000000000000000000000..a500f40f085f61852716c2f70d65eba503eeac69 --- /dev/null +++ b/Kannada Sahitya/article_31.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯಾಕೆ ಬಂದಿರಿ ನೀವು +ನಾವಿಲ್ಲದೂರಿಗೆ +ನಮ್ಮ ನಸರಸುತ್ತಾ ಕೇರಿ ಕೇರಿ. +ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ +ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. +ನಾವಿಲ್ಲದೂರಲ್ಲಿ +ನೀವೆ ನಿಮ್ಮನು ಕೂಗಿ +ತಿರುವಿ ನೋಡುವಿರಲ್ಲ +ನಾವು ಕರೆದಂತೆ! +ನಿಮ್ಮ ಮಾತನೆ ಆಡಿ, ನಮ್ಮ ಮಾತೆನ್ನುವಿರಿ +ನಿಮ್ಮ ಹಾಡಿಗೆ ನೀವೇ ಮೋಡಿ ಹೋಗುವಿರಿ +ಹಿಡದ ಹಸಿರಲ್ಲಿ +ಕೊಳದ ನೀರಲ್ಲಿ +ಎದೆಯ ಉಸಿರಲ್ಲಿ +ಬಾನ ಅಂಗಳದಲ್ಲಿ +ಹುಡುಕುವಿರಿ ನಮ್ಮ ಸುಳಿವು +ಕೂಗಿ ಕರೆಯುವುವಿರಿ ನಮ್ಮನ್ನು ಮತ್ತೆ ಮತ್ತೆ. +ಗಾಳಿಯಲಿ ನಿಮ್ಮದನಿ ತೂರಿಬಿಟ್ಟಿರಿ, +ಅದು ಬೆಟ್ಟಕ್ಕೆ ಡಿಕ್ಕಿ ಹೊಡೆದು; +ತಿರುಗಿ ಬಂದರೆ ಮತ್ತೆ ನಮ್ಮ ಹಾಡೆನ್ನುವಿರಿ +ನಿಮ್ಮ ಹಾಡಿಯಲ್ಲೆಲ್ಲೂ ನಾವು ಇಲ್ಲ. +ನಮ್ಮ ಹೆಸರೇನೆಂದು +ಇನ್ನೂ ತಿಳಿಯದ ನೀವು +ನಿಮ್ಮ ಹೆಸರನ್ನೇ ನಮಗಿಟ್ಟಿರಿ. +ನಮ್ಮನ್ನು ಕಾಣುವಿರಿ ನಿಮ್ಮ ಬಿಂಬದ ಒಳಗೆ +ನಂಬುವಿರಿ ನಿಮ್ಮಾಸೆ ಕಾಣಬಯಸಿದ್ದು. +ನಾವು ಬಂದರೆ ಮರಳಿ +ಮರೆತ ಊರಿನ ಕಡೆಗೆ +ಕಾಣುವುದು ಎಲ್ಲೆಲ್ಲೂ ನಿಮ್ಮ ಛಾಪು. +ಈಗ ಇದು ನಿಮ್ಮೂರು(?) +ಊರ ಮುಂಬಾಗಿಲಿಗೇ +ಬರೆದು ಇಟ್ಟಿದ್ದೀರಿ ನಿಮ್ಮ ಹೆಸರು(!) +ಇಲ್ಲಂತೂ ಗಾಳಿಯಲೂ, ನೀರಲ್ಲೂ, ಹಾಡಲ್ಲೂ +ಎಲ್ಲೆಲ್ಲೂ ನಿಮ್ಮ ಉಸಿರೇ. +ನಿಮ್ಮ ಕನ್ನಡಿಯಲ್ಲಿ ನಮ್ಮ ಬಿಂಬವು ಕೂಡ +ಕಾಣುವುದು ಥೇಟು ನಿಮ್ಮ ಹಾಗೇ. +ನಮ್ಮನ್ನು ಅರಸುತ್ತಾ +ಅರಸು-ಆಟವನಾಡಿ +ಹೂಡಿಬಿಟ್ಟಿರಿ ಇಲ್ಲೂ ನಿಮ್ಮ ಸಾಮ್ರಾಜ್ಯ. +ಮರಳಿ ಬಾರೆವು ಇಲ್ಲಿ, ಈ ಊರು ನಮ್ಮದಲ್ಲ; +ನಾವು ನಿಮ್ಮಂತಿಲ್ಲ, ನಿಮಗೇಕೆ ತಿಳಿದಿಲ್ಲ. +***** +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […] +ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_310.txt b/Kannada Sahitya/article_310.txt new file mode 100644 index 0000000000000000000000000000000000000000..af8e728c3bd8c2ddf06eca0c623146b8ace86ad6 --- /dev/null +++ b/Kannada Sahitya/article_310.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂದರ್ಶಕರು ಎನ್. ಮನು ಚಕ್ರವರ್ತಿ (ಅನುವಾದ ಎಲ್.ಜಿ.ಮೀರಾ) +ಪು.ತಿ.ನ. ಅವರಿಗೆ ಕಾವ್ಯವೆಂಬುದು ಒಂದು ಜೀವನವಿಧಾನವೇ ಆಗಿತ್ತು. ದ.ರಾ.ಬೇಂದ್ರೆ ಮತ್ತು ಕುವೆಂಪು ಅವರ ಸಾಲಿಗೆ ಸೇರುವ ಪು.ತಿ.ನರಸಿಂಹಾಚಾರ್ ನವೋದಯ ಪಂಥದ ದಿಗ್ಗಜರಲ್ಲಿ ಒಬ್ಬರು. +ಅರ್ಧ ಶತಮಾನಕ್ಕೂ ಹೆಚ್ಚಿರುವ ತಮ್ಮ ಸಾಹಿತ್ಯ ಜೀವನದಲ್ಲಿ ಪು.ತಿ.ನ. ಹತ್ತು ಕವನ ಸಂಕಲನಗಳನ್ನು ಬರೆದರು. ’ಹರಿಚರಿತೆ’ ಎಂಬ ಮಹಾಕಾವ್ಯವನ್ನು ಬರೆದರು. ಜತೆಗೆ ೧೮ ಓಪೆರಾಗಳು (ಗೀತನಾಟಕಗಳು), ಪ್ರಬಂಧಗಳು ಮತ್ತು ಅನುವಾದಗಳು; ಗಯಟೆಯ ಫೌಸ್ಟ್ ಕೂಡ ಇದರಲ್ಲಿ ಸೇರಿದೆ. +ಪೌರೋಹಿತ್ಯದ ವೃತ್ತಿಗೆ ಬೆನ್ನು ತಿರುಗಿಸಿದ ಪು.ತಿ.ನ. ಅವರು ಸ್ವಾತಂತ್ರ್ಯ ಬರುವ ಮುನ್ನ ಗೋರಕ್ಷಕ ಸಮಿತಿ ಹಾಗೂ ಭೂಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ನಂತರ ಸರ್ಕಾರಿ ಕೆಲಸಕ್ಕೆ ಸೇರಿದರು. ಮೈಸೂರು ವಿಶ್ವವಿದ್ಯಾಲಯವು ಹೊರತಂದ ನಿಘಂಟಿನ (ಇಂಗ್ಲಿಷ್-ಕನ್ನಡ) ಸಂಪಾದಕ ಮಂಡಳಿಯಲ್ಲಿ ಇವರೂ ಒಬ್ಬರಾಗಿದ್ದರು. +ಪು.ತಿ.ನ. ಮುಖ್ಯವಾಗಿ ಬರೆದದ್ದು ದೇವರು, ಪ್ರಕೃತಿ ಮತ್ತು ದೈವ ಸೃಷ್ಟಿಯ ಬಗೆಗೆ. ಇವರು ಉಪಯೋಗಿಸಿದ ಭಾಷೆಯಲ್ಲಿ ಸಂಸ್ಕೃತ, ಹಳಗನ್ನಡ ಮತ್ತು ಆಡು ಭಾಷೆಗಳು ವಿಲಕ್ಷಣ ರೀತಿಯಲ್ಲಿ ಸಮ್ಮಿಳಿತವಾಗಿದ್ದವು. ಅವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರಾದರೂ ರೂಢಿಗೆ ಕಟ್ಟುಬಿದ್ದವರಲ್ಲ. ವಾಸ್ತವವಾಗಿ, ಸೌಂದರ್ಯವನ್ನು ಆಸ್ವಾದಿಸಲು ಸ್ವಲ್ಪ ಮಟ್ಟಿಗಿನ ಭಕ್ತಿರಾಹಿತ್ಯ ಅಗತ್ಯವೆಂದು ಅವರ ನಂಬಿಕೆಯಾಗಿತ್ತು. +ವರ್ಷಗಳ ಕಾಲ ನಡೆಸಿದ ಧ್ಯಾನಶೀಲಚಿಂತನೆಯು, ಮೇಲುಕೋಟೆಯ ಈ ವ್ಯಕ್ತಿಯನ್ನು ಜೀವನದ ಎಲ್ಲ ವಿಷಯಗಳ ಬಗ್ಗೆಯೂ ದೃಢವಾದ ನಿಲುವುಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಅವರು ವ್ಯಾಖ್ಯಾನಿಸುವ ಪ್ರಕಾರ ಕವಿಯೊಬ್ಬನಿಗೆ ತನ್ನದೆಂಬುದು ಏನೂ ಇರಬಾರದು. ಹಾಗೂ ಅವನಿಗೆ ಯಾವುದನ್ನೂ ನಿರಾಕರಿಸುವ ಹಕ್ಕಿಲ್ಲ. ಅವರ ಎಂಬತ್ತೇಳನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಪು.ತಿ.ನ. ಸತ್ಯಂ ಶಿವಂ ಸುಂದರಂಗಳ ಕಡೆಗಿನ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ. +ಪ್ರಶ್ನೆ: ಒಬ್ಬ ಕವಿಯಾಗಿ ನೀವು ನಿಮ್ಮ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಗಾಢವಾಗಿ ಪ್ರಭಾವಿತರಾಗಿದ್ದೀರಿ. ನಿಮ್ಮ ಕವಿತೆಗಳು ಪರಂಪರೆ ಮತ್ತು ಧರ್ಮದ ಪ್ರಭಾವವನ್ನು ವ್ಯಾಪಕವಾಗಿ ಪ್ರತಿಬಿಂಬಿಸುತ್ತವೆ. ಧಾರ್ಮಿಕ ಕಾವ್ಯದ ಬಗ್ಗೆ ಸಾಮಾನ್ಯವಾಗಿ ಇರುವ ಅಭಿಪ್ರಾಯವೆಂದರೆ ಅದು ದೇವರನ್ನು ಮತ್ತು ದೈವಸೃಷ್ಟಿಯನ್ನು ವೈಭವೀಕರಿಸುತ್ತದೆ ಮತ್ತು ಅವುಗಳ ಬಗ್ಗೆ ಸಂಭ್ರಮ ಪಡುತ್ತದೆ. ಆದಾಗ್ಯೂ ಹಾಪ್‌ಕಿನ್ಸ್‌ನಂಥ ಕವಿ ಇಂತಹ ಸುಲಭ ವಿಭಾಗೀಕರಣವನ್ನು ವಿರೋಧಿಸುತ್ತಾನೆ. ಏಕೆಂದರೆ ಅವನ ಕಾವ್ಯದಲ್ಲಿ ಒಂದು ಸಂಘರ್ಷವಿದೆ. ಧಾರ್ಮಿಕ ವ್ಯಕ್ತಿತ್ವಕ್ಕೂ ವೈಯಕ್ತಿಕ ಸೃಜನಶೀಲ ವ್ಯಕ್ತಿತ್ವಕ್ಕೂ ತಿಕ್ಕಾಟವುಂಟಾದಾಗ ಅವನ ಕಾವ್ಯದಲ್ಲಿ ಮೂಡುವ ಕರ್ಷಣವನ್ನು ಯಾರಾದರೂ ಗುರುತಿಸಬಹುದು. ಇದು ನಮ್ಮನ್ನು ’ಧಾರ್ಮಿಕ’ ಎಂಬ ಪದವನ್ನು ಸೃಜನಶೀಲ ಮನಸ್ಸೊಂದರ ಅನುಭವದಿಂದ ಅರ್ಥಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ. ಇದರ ಬೆಳಕಿನಲ್ಲಿ ನೀವು ನಿಮ್ಮ ಸೃಜನಶೀಲತೆಗೂ ಧಾರ್ಮಿಕ ಅನುಭವಕ್ಕೂ ಉಂಟಾಗುವ ಅನುಸಂಧಾನವನ್ನು ಹೇಗೆ ವಿವರಿಸುತ್ತೀರಿ? +ಪು.ತಿ.ನ. – ಬಹುಶಃ ಹೀಗೆ ಪ್ರಾರಂಭಿಸಬಹುದು ಅನ್ನಿಸುತ್ತದೆ. ಒಂದು ಸ್ಥಿತಿ ಇದೆ. ಅದರಲ್ಲಿದ್ದಾಗ ವ್ಯಕ್ತಿ ಒಳಗೂ ಇರುತ್ತಾನೆ ಹೊರಗೂ ಇರುತ್ತಾನೆ. ಒಬ್ಬ ಸೃಜನಶೀಲ ವ್ಯಕ್ತಿಗೆ ಒಂದು ಸ್ಥಿತಿಯ ’ಒಳಗೆ’ ಇದ್ದರೂ ಸಹ ಅವನ ವ್ಯಕ್ತಿತ್ವವನ್ನು ಆ ಸ್ಥಿತಿಯಿಂದ ಹೊರಗೆ ಎಳೆದುಕೊಳ್ಳಲು ಸಾಧ್ಯವಿದೆ. ಸೃಜನಶೀಲ ವ್ಯಕ್ತಿಯೊಬ್ಬ ಒಂದು ಧಾರ್ಮಿಕ ಅನುಭವದ ಜತೆ ಇಲ್ಲವೇ ಒಂದು ಚಿಂತನಾಪ್ರಕ್ರಿಯೆಯ ಜತೆ ತನ್ನ ವ್ಯಕ್ತಿತ್ವವನ್ನು ಮಿಳಿತಗೊಳಿಸಿಯೂ ಸ್ವಲ್ಪವೂ ವಿರೂಪಗೊಳ್ಳದಂತೆ ಅದನ್ನು ಹಿಂದೆ ಪಡೆಯಬಲ್ಲ. ಒಂದು ಅನುಭವಕ್ಕೆ ತನ್ನನ್ನು ತಾನು ಕೊಟ್ಟುಕೊಂಡಾಗಲೂ ತನ್ನ ವ್ಯಕ್ತಿತ್ವವನ್ನು ಅವನು ಕಳೆದುಕೊಳ್ಳುವುದಿಲ್ಲ. +ಈ ಅರ್ಥದಲ್ಲಿ ನಾನೊಬ್ಬ ಧಾರ್ಮಿಕ ವ್ಯಕ್ತಿ ಅಲ್ಲವೇ ಅಲ್ಲ ಅನ್ನಬೇಕು. ಬೇರ್ಯಾವುದೇ ಕವಿ ಹೊರಪ್ರಪಂಚದಲ್ಲಿ ತನಗುಂಟಾದ ಅನುಭವದಿಂದ ಕಾವ್ಯದ್ರವ್ಯವನ್ನು ಪಡೆದುಕೊಳ್ಳುವಂತೆ ನಾನು ಧರ್ಮದಿಂದ ಪಡೆದುಕೊಳ್ಳುತ್ತೇನೆ. ಒಬ್ಬ ಭಕ್ತ ಭಕ್ತಿಯಲ್ಲಿ ಕಳೆದುಹೋಗುತ್ತಾನೆ. ಆದರೆ ಕವಿಯೊಬ್ಬ ಸೃಜನಶೀಲನಾಗಿದ್ದಾಗ ತನ್ನ ಭಕ್ತಿಯನ್ನೂ ಕೂಡ ವಸ್ತುನಿಷ್ಠವಾಗಿ ನೋಡುತ್ತಾನೆ. ಇಂತಹ ಕವಿಗೆ ದೇವಾಲಯ ಮತ್ತು ಮೂರ್ತಿಗಳು ಪ್ರಪಂಚದಲ್ಲಿರುವ ಇತರ ಯವುದೇ ವಸ್ತುಗಳಂತೆ, ಕೇವಲ ವಸ್ತುಗಳು ಅಷ್ಟೆ. ಅವುಗಳನ್ನೇ ಅವನು ಒಂದು ಸೌಂದರ್ಯಾತ್ಮಕ ಅನುಭವವಾಗಿ ಪರಿವರ್ತಿಸಿಕೊಳ್ಳುತ್ತಾನೆ. ಅವು ಇಲ್ಲಿ ಕೇವಲ ಒಂದು ಪಂಥಕ್ಕೆ ಮಾತ್ರ ಲಭ್ಯವಾಗುವ ನಿರ್ದಿಷ್ಟ ಅನುಭವವಲ್ಲ ಅಥವಾ ಯಾವುದೋ ಒಂದು ನಿರ್ದಿಷ್ಟ ದೇವರ ಗುಣಗಾನವಲ್ಲ. +ಸೃಜನಶೀಲ ಪ್ರಕ್ರಿಯೆಯೊಂದು ಪ್ರಾರಂಭವಾಗುವುದು ಅನುಭವದಿಂದ ವ್ಯಕ್ತುಯು ಹೊರಬಂದು ಮರುಜನ್ಮಿಸಿದಾಗ ಮಾತ್ರ. ನನಗೆ ಯಾವತ್ತೂ ಧರ್ಮದಲ್ಲಿ ಮುಳುಗಿ ನನ್ನನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದಕ್ಕಾಗಿಯೇ ಯಾವ ಸಂಪ್ರದಾಯಿಕ ವ್ಯಕ್ತಿಗೂ ನನ್ನನ್ನು ಒಬ್ಬ ಸಾಂಪ್ರದಾಯಿಕ ವ್ಯಕ್ತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. +ದೇವಾಲಯದಲ್ಲಿ ವಾಸ್ತುಶಿಲ್ಪ, ಶಿಲ್ಪ ಕಲೆ, ಸಂಗೀತ ಮತ್ತು ಅಲ್ಲಿರುವ ಸಹಸ್ಪಂದನ ನನ್ನ ಮಟ್ಟಿಗೆ ಅನೇಕ ಕಲೆಗಳ ಸಂಗಮವನ್ನು ಸೂಚಿಸುತ್ತದೆ. ನಾನು ಇವೆಲ್ಲವುಗಳ ಜತೆ ಒಂದಾಗುತ್ತೇನೆ, ಮಿಳಿತಗೊಳ್ಳುತ್ತೇನೆ, ನಂತರ, ಅಂತಿಮವಾಗಿ ನನ್ನ ತುಣುಕುಗಳನ್ನು ಒಟ್ಟಾಗಿಸಿಕೊಂಡು, ನನ್ನೆಲ್ಲ ಭಾವನೆಗಳಿಗೆ ಒಬ್ಬ ಸೃಜನಶೀಲ ವ್ಯಕ್ತಿಯಾಗಿ ಅಭಿವ್ಯಕ್ತಿ ನೀಡುತ್ತೇನೆ. +ನಿಜವಾದ ಕವಿಯೊಬ್ಬ ಏನನ್ನೂ ನಿರಾಕರಿಸುವುದಿಲ್ಲ, ಜತೆಗೆ ಯಾವುದರಲ್ಲೂ ತನ್ನದೇನೂ ಉಳಿಯದಂತೆ ’ಸೇರಿ’ ಹೋಗುವುದಿಲ್ಲ. ನಿಜವಾದ ಕವಿಯೊಬ್ಬನಿಗೆ ನಿರಾಕರಣೆಯೂ ಇಲ್ಲ, ನಂಟುಗಳೂ ಇಲ್ಲ. ಒಂದು ನಿಲುವಿಗೆ ವ್ಯಕ್ತಿಯೊಬ್ಬ ’ಬದ್ಧ’ನಾದ ತಕ್ಷಣ ಅವನು ಮೂಲಭೂತವಾದಿಯಾಗಿ ಬಿಡುತ್ತಾನೆ. ನಾನೆಂದೂ ಮೂಲಭೂತವಾದಿಯಾಗಲಾರೆ. ಮಹಾನ್ ಕವಿಯೊಬ್ಬನಲ್ಲಿ ನಾವು ನಿರಾಕರಣೆ ಮತ್ತು ನಂಟುಗಳು ಸಾಧ್ಯವಾಗುವಂತಹ ನಾಜೂಕಿನ ಸಮತೋಲನವನ್ನು ಕಾಣುತ್ತೇನೆ. ಈ ನಾಜೂಕು ಸಮತೋಲನವೇ ಒಬ್ಬ ಕವಿಯನ್ನು ಒಬ್ಬ ಮೂಲಭೂತವಾದಿಯಿಂದ ಬೇರೆ ನಿಲ್ಲಿಸುತ್ತದೆ. +ಒಬ್ಬ ಕವಿ ಯಾವಾಗಲೂ ಯಾವುದಕ್ಕೂ ’ಅಂಟಿ’ಕೊಳ್ಳದೆ ’ಶುದ್ಧವಾದ ಮನಸ್ಸಿ’ನಿಂದ ಕೆಲಸ ಮಾಡಬೇಕು. ಯಾವುದೋ ಒಂದು ನಿಲುವಿಗೆ ಮನಸ್ಸು ’ಅಂಟಿ’ ಕೊಂಡ ತಕ್ಷಣ ಅದು ಆ ನಿಲುವನ್ನು ಎತ್ತಿ ಹಿಡಿಯಲು ಶುರು ಮಾಡಿಬಿಡುತ್ತದೆ. ಕವಿಯೊಬ್ಬನು ಈ ವಿಶ್ವದಲ್ಲಿ ಯಾವುದರ ಬಗೆಗೂ ಖಚಿತ ನಿಲುವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವನೇನಿದ್ದರೂ ನಿರೀಶ್ವರವಾದಿಯಾಗಿರಬಹುದು ಅಷ್ಟೆ. ಕವಿಯೊಬ್ಬನ ಮಟ್ಟಿಗೆ ’ಒಳ್ಳೆಯದು ಮತ್ತು ಕೆಟ್ಟದ್ದು’ ಎಂಬ ವ್ಯತ್ಯಾಸವೂ ಮರೆಯಾಗಿಬಿಡುತ್ತದೆ. +ಪ್ರಶ್ನೆ: ಬ್ಲೇಕ್‌ನಂಥ ಋಷಿಯೊಬ್ಬ ಪ್ರಕೃತಿಯಲ್ಲಿನ ಪೂರ್ಣತೆಯನ್ನು ಅದರಲ್ಲಿರುವ ಒಂದು ಅವಿಭಾಜ್ಯ ದ್ವಂದ್ವದ ಮೂಲಕ ಗ್ರಹಿಸುತ್ತಾನೆ. ಅವನದನ್ನು ವೈರುಧ್ಯ ಅನ್ನುತ್ತಾನೆ. ಅವನ ಕವಿತೆಗಳು ಮುಗ್ಧ ಮತ್ತು ಎಳೆಯ ಸಂಗತಿಗಳನ್ನು ಬರ್ಬರ ಮತ್ತು ಕ್ರೂರವಾಗಿರುವುದರ ಜತೆ ಮುಖಾಮುಖಿಯಾಗಿಸುತ್ತವೆ. ಇಂತಹ ಅಂತರಂಗೀಯ ದ್ವಂದ್ವವು ವಿಶ್ವದ ವ್ಯವಸ್ಥೆಯಲ್ಲೇ ಇರುವುದನ್ನು ನೀವು ಪರಿಭಾವಿಸಿದ್ದೀರಾ? ಅದು ಎಂದಾದರೂ ಒಂದು ಕಾವ್ಯದರ್ಶನವನ್ನು ರೂಪಿಸುವಷ್ಟರ ಮಟ್ಟಿಗೆ ನಿಮ್ಮನ್ನು ಕಾಡಿದ್ದಿದೆಯೇ? +ಪು.ತಿ.ನ. – ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದರ ಬಗ್ಗೆ ನಾವು ಏನನ್ನೂ ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ವೈಯಕ್ತಿಕ ದೃಷ್ಟಿಕೋನದಿಂದ ನೋಡಿದಾಗ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳಿರಬಹುದು. ಆದರೆ ಪೂರ್ಣತೆಯ (ಇಡಿತನ) ನೆಲೆಯಿಂದ ಅರ್ಥೈಸಿದಾಗ ನಾವು ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ಅಷ್ಟು ಸುಲಭವಾಗಿ ವ್ಯತ್ಯಾಸ ಮಾಡಲಾಗುವುದಿಲ್ಲ. ನನ್ನ ವೈಯಕ್ತಿಕ ನೀತಿ ಏನೆಂದರೆ, ನಾವು ಯಾವುದನ್ನು ದ್ವಂದ್ವ (ಇಬ್ಬಗೆಯದು) ಎಂದು ಗುರುತಿಸುತ್ತೇವೋ ಅದರಿಂದ ಪ್ರಕೃತಿಯು ಒಂದು ನಾಜೂಕಾದ ಸಮತೋಲವನ್ನು ಕಾಯ್ದುಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ನಾನು ಪ್ರಕೃತಿಯಲ್ಲಿ ಗಮನಿಸಿದಾಗ, ಬೇಟೆಗೆ ಬಲಿಯಾಗುವ ಪ್ರಾಣಿಗಳ ಸಂಖ್ಯೆಯು ಬೇಟೆಯಾಡುವ ಪ್ರಾಣಿಗಳ ಸಂಖ್ಯೆಗಿಂತ ಹೆಚ್ಚಿರುವುದನ್ನು ಗುರುತಿಸಿದ್ದೇನೆ. +ಉದಾಹರಣೆಗೆ ಕಾಡನ್ನು ತೆಗೆದುಕೊಳ್ಳಿ. ಕಾಡು ವೈವಿಧ್ಯಮಯ ಜೀವರಾಶಿಗಳಿಗೆ ಬದುಕುವ ಅವಕಾಶ ನೀಡಿಯೂ ಅವುಗಳ ನಡುವೆ ಒಂದು ಸಮತೋಲನವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದೆ. ನಾವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸುಲಭ ವ್ಯತ್ಯಾಸಗಳನ್ನು ಮಾಡುವುದು ಕೇವಲ ಭಾವಾತಿರೇಕದ ದೃಷ್ಟಿಕೋನದಿಂದ ಅಂತ ಅನ್ನಿಸುತ್ತದೆ. ಹುಲಿಯು ಮತ್ತು ಕುರಿಮರಿಯು ಮುಗ್ಧತೆಗೆ ಸಂಕೇತ ಎಂದು ನೋಡುವುದಾದರೆ ಇವೆರಡರ ನಡುವಿನ ವಿರೋಧವನ್ನು ಪ್ರಕೃತಿಸಹಜ ಎಂದು ತಿಳಿಯಬೇಕಾಗುತ್ತದೆ. ಈ ಅಸ್ತಿತ್ವದ ಅಸಂಖ್ಯರೂಪಗಳಲ್ಲೇ ಪ್ರಪಂಚದ ವಿಸ್ಮಯ ಅಡಗಿದೆ. +ನನ್ನ ಕಾಳಜಿಯ ಕೇಂದ್ರದಲ್ಲಿ ಯಾವಾಗಲೂ ಜೀವನದ ವೈರುಧ್ಯಗಳನ್ನು ದಾಟಲು ಹೋರಾಡುತ್ತಿರುವ ಮನುಷ್ಯನಿದ್ದಾನೆ. ನನ್ನ ಮಟ್ಟಿಗೆ ಹೇಳುವುದಾದರೆ ಶಿವನೂ ಸಹ ಒಳ್ಳೆಯ ಮತ್ತು ಕೆಟ್ಟದರ ಆಚೆಗೆ ಇದ್ದಾನೆ. ಶಿವ, ಒಂದು ಸಂಕೇತವಾಗಿ ದ್ವಂದ್ವದ ನಡುವೆ ಮತ್ತು ದ್ವಂದ್ವದ ಆಚೆ ಗಮಿಸುವ ಚೈತನ್ಯವನ್ನು ಪ್ರಕಟಿಸುತ್ತದೆ. ಬ್ಲೇಕ್ ಕೂಡ ಇದನ್ನು ಒಂದು ವಿಸ್ಮಯದಿಂದಷ್ಟೇ ನೋಡುತ್ತಾನೆ. ಭಾಸವಾಗುವ ಈ ದ್ವಂದ್ವದ ಬಗ್ಗೆ ಬ್ಲೇಕ್‌ನಲ್ಲಿ ನಾವು ಯಾವುದೇ ನೈತಿಕ ತೀರ್ಮಾನಗಳನ್ನು ಕಾಣಲು ಸಾಧ್ಯವಿಲ್ಲ. +ಪ್ರಶ್ನೆ: ನಿಮ್ಮ ಕಾವ್ಯ ಮತ್ತು ಸೌಂದರ್ಯ ಪ್ರಬಂಧದಲ್ಲಿ ನೀವು ಹೇಳಿದ್ದೀರಿ – ಸೌಂದರ್ಯ ಅನ್ನುವುದು ಮೂಲತಃ ಒಂದು ಮೌಲ್ಯ ಮತ್ತು ಬುದ್ಧಿಯು ನಿರ್ದೇಶಿಸುವ ಒಂದು ಅನುಭವ ಎಂದು. ಇದು ರಮ್ಯ ದೃಷ್ಟಿಕೋನವನ್ನು ವಿರೋಧಿಸುವ ತಾತ್ವಿಕ ನಿಲುವೋ (ಸಾಮಾನ್ಯ ಅರ್ಥದಲ್ಲಿ) ಅಥವಾ ಅದು, ನಿರ್ದಿಷ್ಟವಾಗಿ, ನಿಮ್ಮ ಕಾವ್ಯ ಪರಿಕಲ್ಪನೆ ರಮ್ಯವಾದುದು ಎಂಬ ದೃಷ್ಟಿಕೋನಕ್ಕೆ ಸವಾಲು ಹಾಕುತ್ತಿದೆಯೋ? +ಪು.ತಿ.ನ. – ಹೌದು ಸವಾಲು ಸಹ ಹಾಕುತ್ತಿದೆ. ಸೌಂದರ್ಯ ಎಂಬುದು ಮನುಷ್ಯನ ಮನಸ್ಸಿಗೆ ಮಾತ್ರ ಒದಗಿಬರುವ ಮೌಲ್ಯ. ಉದಾಹರಣೆಗೆ, ಒಂದು ಹಕ್ಕಿಯ ಬಣ್ಣ ಮತ್ತು ರೆಕ್ಕೆಗಳು ಅವುಗಳ ಮಟ್ಟಿಗೆ ಒಂದು ಕ್ರಿಯಾರೂಪಿಯಾದ ಪಾತ್ರವನ್ನು ಮಾತ್ರ ವಹಿಸಿರುತ್ತವೆ. ಅವುಗಳನ್ನು ಕುರಿತು ಮನುಷ್ಯನ ಮನಸ್ಸು ಪ್ರತಿಕ್ರಿಯೆ ತೋರಿಸಿದಾಗ ಮಾತ್ರ ಅವು ಒಂದು ಸೌಂದರ್ಯಾತ್ಮಕ ಆಯಾಮವನ್ನು ಪಡೆದುಕೊಳ್ಳುತ್ತವೆ. +ನಾನು ಇಲ್ಲಿ ಇನ್ನೂ ಒಂದು ಮಾತನ್ನು ಸೇರಿಸಬೇಕು. ದುರಾಸೆ ಮತ್ತು ಭಕ್ತಿಯಲ್ಲಿ ಸಹ ಈ ಅದ್ಭುತ ವೈಯಕ್ತಿಕ ಸೌಂದರ್ಯಾನುಭವವು ಕಳೆದುಹೋಗುತ್ತದೆ. ಒಂದು ಸೌಂದರ್ಯಾತ್ಮಕ ಗ್ರಹಿಕೆಗೆ – ಸ್ವಾಮಿತ್ವ ಮತ್ತು ಸ್ವಲ್ಪ ಮಟ್ಟಿಗಿನ ಭಕ್ತಿರಾಹಿತ್ಯ ಅನಿವಾರ್ಯವಾಗಿರುತ್ತದೆ. ಭಕ್ತಿ ಏನಾದರೂ ಮೂಡುವುದಿದ್ದರೆ ಆ ಸುಂದರ ವಸ್ತುವಿನಿಂದಲೇ ಮೂಡಬೇಕು. ದೇವರ ಒಂದು ಸುಂದರವಾದ ಬಿಂಬ ಕೂಡ, ನೋಡುಗನ ಅನುಸಂಧಾನ ಬರೀ ಭಕ್ತಿಯ ನೆಲೆಯಲ್ಲಿದ್ದರೆ ತನ್ನ ಸೌಂದರ್ಯ ಗುಣವನ್ನು ಕಳೆದುಕೊಂಡು ಬಿಡುತ್ತದೆ. +ಈ ರಮ್ಯ ಮನೋನೆಲೆಯ ತುಂಬ ಉತ್ಪ್ರೇಕ್ಷೆಯೇ ತುಂಬಿದೆ. ಆದಾಗ್ಯೂ, ’ಶುದ್ಧ’ವಾದ ಮನಸ್ಸೊಂದು – ಅದು ಉಪಯೋಗವಾದಿಯೂ ಆಗಿರಬಾರದು, ರಮ್ಯವೂ ಆಗಿರಬಾರದು – ಯಾವುದೇ ಸಂಗತಿಯಲ್ಲಾದರೂ ಸೌಂದರ್ಯವನ್ನು ಕಾಣಬಲ್ಲದು. ಸೂಕ್ಷ್ಮವಾದ ಮನಸ್ಸೊಂದರ ಮಟ್ಟಿಗೆ ದೈನಿಕ ಸಂಗತಿಗಳೂ ಅಪರೂಪದ ಸೌಂದರ್ಯದಿಂದ ಅನುರಣಿಸುತ್ತವೆ. ’ಶುದ್ಧ’ವಾದ ಮನಸ್ಸೊಂದು ಇಂತಹ ಸೌಂದರ್ಯಕ್ಕೆ ಯಾವುದೇ ಉತ್ಪ್ರೇಕ್ಷಾಭಾವವಿಲ್ಲದೆ ಪ್ರತಿಕ್ರಿಯಿಸುತ್ತದೆ. ನಾನು ಯಾವಾಗಲೂ ಸೈದ್ಧಾಂತಿಕವಾಗಿ ಮತ್ತು ನನ್ನ ಕಾವ್ಯಾಭ್ಯಾಸದಲ್ಲಿ ಈ ತತ್ವದಿಂದಲೇ ಮುಂದೆ ಸಾಗಿದ್ದೇನೆ. +ಪ್ರಶ್ನೆ: ನಿಮ್ಮ ನಾನು ಮತ್ತು ನನ್ನ ಸಾಹಿತ್ಯ ಪ್ರಬಂಧದಲ್ಲಿ ನೀವು ಕಾವ್ಯದ ಆಕೃತಿ ಮತ್ತು ತಂತ್ರದ ಬಗ್ಗೆ ಮಾತಾಡಿದ್ದೀರಿ. ಇಲ್ಲಿ ನಿಮ್ಮ ನಿಲುವುಗಳು (ವೀಕ್ಷಣೆಗಳು) ಸಾಂಪ್ರದಾಯಿಕವೂ ಆಗಿಲ್ಲ, ರಮ್ಯವೂ ಆಗಿಲ್ಲ. ವಸ್ತವವಾಗಿ, ಶಬ್ದ ಮತ್ತು ಅರ್ಥಗಳ ಬಗೆಗಿನ ನಿಮ್ಮ ಕಾಳಜಿ ಹಾಗೂ ಶಬ್ದದ ಬಗೆಗಿನ ಅತೃಪ್ತಿ, ಅದು ಅನುರಣಿಸುವ ಅರ್ಥ – ಇವೆಲ್ಲ ನವ್ಯರಿಗಿಂತ ಭಿನ್ನವಲ್ಲ ಎಂದೂ ಸಹ ಹೇಳಿದ್ದೀರಿ. ಆದರೂ ನಿಮ್ಮ ಕಾವ್ಯ ನವ್ಯಕಾವ್ಯವಲ್ಲ. ಆಕೃತಿ ಮತ್ತು ವಸ್ತುವಿಗೆ ಸಂಬಂಧಿಸಿದಂತೆ ನಿಮ್ಮ ಕಾವ್ಯಕ್ಕೂ ನವ್ಯ ಕಾವ್ಯಕ್ಕೂ ಇರುವ ದಿಕ್‌ಪಲ್ಲಟ ಮತ್ತು ವ್ಯತ್ಯಾಸಗಳ ಬಗ್ಗೆ ಏನು ಹೇಳಬಯಸುತ್ತೀರಿ? +ಪು.ತಿ.ನ. – ನಾನು ಬೆಳೆದಿದ್ದು ಸಾಂಪ್ರದಾಯಿಕವಾದ ಸಂಸ್ಕೃತದ ವಿಧಾನದಲ್ಲಿ. ಮೂರು ಪರಿಕಲ್ಪನೆಗಳು ನನ್ನ ಆಲೋಚನೆಯ ಕೇಂದ್ರದಲ್ಲಿದ್ದವು. ಸ್ಪಷ್ಟತೆ, ಸಂಕ್ಷಿಪ್ತತೆ ಮತ್ತು ಅಭಿವ್ಯಕ್ತಿ. ಈ ಮೂರನ್ನು ಸಾಂಪ್ರದಾಯಿಕ ಪಂಥವು ಅತ್ಯುತ್ತಮ ಗುಣಗಳೆಂದು ಎತ್ತಿ ಹಿಡಿಯುತ್ತಿತ್ತು. ನನ್ನ ಕಾವ್ಯದ ಆಕೃತಿಯ ಬಗ್ಗೆ ನಾನೂ ಯಾವಾಗಲೂ ಎಚ್ಚರವಾಗಿದ್ದೆ. ನಾನು ಯಾವುದನ್ನೂ ಲಾಕ್ಷಣಿಕ ಸ್ಫೂರ್ತಿಯಿಂದ ಬರೆದಿಲ್ಲ. ಅನುಭವಕ್ಕೆ ಮೂಲದ್ರವ್ಯವಾದ ಇಂದ್ರಿಯ ಗ್ರಹಿಕೆಗಳು ಅ-ಸಾಮಾನ್ಯ ಮತ್ತು ಲಾಕ್ಷಣಿಕವಾದರೂ, ನನ್ನ ಕಾವ್ಯಗಳಲ್ಲಿನ ಅಭಿವ್ಯಕ್ತಿ ಯಾವಾಗಲೂ ಪ್ರಜ್ಞಾಪೂರ್ವಕವಾದದ್ದು. +ನಿಜವಾಗಿಯೂ ನವ್ಯ ಕಾವ್ಯವೆಂದರೆ ಏನೆಂದು ನನಗೆ ಗೊತ್ತಿಲ್ಲ. ಅಡಿಗ ಮತ್ತು ಶಿವಪ್ರಕಾಶ್‌ರ ಕಾವ್ಯವನ್ನು ನಾನು ತುಂಬ ಖುಶಿಯಿಂದ ಓದುತ್ತೇನೆ. ನನ್ನ ರೀತಿಯ ಕಾವ್ಯಕ್ಕಿಂತ ಅವರ ಕಾವ್ಯ ಭಿನ್ನವಾಗಿದೆ. ಆದರೆ ಅಂತಿಮವಾಗಿ, ಎಲ್ಲ ಕಾವ್ಯವೂ ಒಂದು ’ಇರುವಿಕೆ’ಯನ್ನು ಸೃಷ್ಟಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ನಾವು ಬೇರೆ ಬೇರೆ ಕಾವ್ಯಗಳ ನಡುವೆ ಏಕೆ ವ್ಯತ್ಯಾಸ ಮಾಡುತ್ತೇವೋ ನನಗೆ ತಿಳಿಯುವುದಿಲ್ಲ. ಎಲ್ಲ ಕಾಲದ ಎಲ್ಲ ನಿಜವಾದ ಕವಿಗಳೂ ಸಮಕಾಲೀನರು ಎಂದು ನನಗೆ ಒಪ್ಪಿಗೆಯಾಗಿಬಿಟ್ಟಿದೆ. +ಪ್ರಶ್ನೆ: ನಿಮ್ಮ ಕಾವ್ಯಕ್ಕೂ, ನವ್ಯ ಕಾವ್ಯಕ್ಕೂ ವ್ಯತ್ಯಾಸವನ್ನು ಗುರುತಿಸಲಾಗಿದ್ದರೂ, ನಿಮ್ಮ ಕಾವ್ಯದಲ್ಲಿನ ಆಧುನಿಕ ಅಂಶಗಳನ್ನು ಈಗ ಗುರುತಿಸಲಾಗುತ್ತಿದೆ. ತಮ್ಮ ಅತ್ಯುತ್ತಮ ಪ್ರಬಂಧವೊಂದರಲ್ಲಿ ಡಾ. ಡಿ.ಆರ್.ನಾಗರಾಜ್ ನಿಮ್ಮ ಕಾವ್ಯದ ಸಂಕೀರ್ಣತೆಯನ್ನು ಎತ್ತಿ ತೋರಿದ್ದಾರೆ; ಹಾಗೂ ನವ್ಯ ಪಂಥದಿಂದ ಬೆಳೆಯಲ್ಪಟ್ಟ ಗದ್ಯಲಯವೂ ನಿಮ್ಮ ಪ್ರಯೋಗಗಳನ್ನು ಹಾಗೂ ನಿಮ್ಮ ಕಾವ್ಯದ ವ್ಯಾಪ್ತಿ ಮತ್ತು ಆಳಗಳನ್ನು ಮಸುಕುಗೊಳಿಸಿದ್ದು ದುರದೃಷ್ಟಕರ ಎಂದಿದ್ದಾರೆ. ಆದರೆ ಪರಿಕಲ್ಪನೆಯಲ್ಲಿನ ನಿಮ್ಮ ಈ ಆಧುನಿಕತೆಗೆ ಸಾಟಿಯೆನಿಸುವ ಆಧುನಿಕ ಪದಪ್ರಯೋಗ ಮತ್ತು ಸಮಕಾಲೀನ ನುಡಿಗಟ್ಟುಗಳು ನಿಮ್ಮ ಕಾವ್ಯದಲ್ಲಿ ಏಕಿಲ್ಲ? +ಪು.ತಿ.ನ. – ನವ್ಯರಲ್ಲಿನ ಆಕೃತಿಯಲ್ಲಿನ ಆಧುನಿಕತೆ ಅನ್ನುವುದು ಪಾಶ್ಚಾತ್ಯ ಅನುಭವದಿಂದ ಬಂದದ್ದು. ನಾನು ಈ ವಿಷಯದಲ್ಲಿ ಅನನುಭವಿ. ನಾನೂ ಅನೇಕ ಪಾಶ್ಚಾತ್ಯ ಲೇಖಕರನ್ನು ಓದಿಕೊಂಡಿದ್ದೇನೆ. ಆದರೆ ಅವರ ನಕಲು ಮಾಡಿಲ್ಲ. ನಾನು ನನ್ನ ಶಕ್ತಿಯನ್ನು ಸಂಸ್ಕೃತ ಪರಂಪರೆಯಿಂದ ಪಡೆದುಕೊಳ್ಳುತ್ತೇನೆ. ದುರದೃಷ್ಟವಶಾತ್ ನಮ್ಮ ಜನರು ಸಂಸ್ಕೃತವೃತ್ತಗಳ ಸೌಂದರ್ಯವನ್ನು ಕಾಣುವುದರಲ್ಲಿ ವಿಫಲರಾಗಿದ್ದಾರೆ. +ನನ್ನ ಅಭಿವ್ಯಕ್ತಿಯು ಆದಷ್ಟೂ ಸುಂದರವಾಗಿರಬೇಕೆಂಬುದು ನನ್ನ ಇಚ್ಛೆಯಾಗಿದೆ. ಈ ಸೌಂದರ್ಯ ನನಗೆ ನನ್ನದೇ ಪರಂಪರೆಯಿಂದ ಪ್ರಾಪ್ತವಾಗುತ್ತದೆ. ಸಂಸ್ಕೃತ ವೃತ್ತಗಳ ಸೌಂದರ್ಯವು ಬತ್ತದ ನದಿಯಂತೆ. +ಇದೇ ಸಮಯದಲ್ಲಿ ನಾವು ರಾಘವಾಂಕ ಮತ್ತು ಕುಮಾರವ್ಯಾಸರ ಕಾವ್ಯಭಾಷಾ ಸೌಂದರ್ಯವನ್ನು ನಿರ್ಲಕ್ಷಿಸಬಾರದು ಎಂದು ನನಗನ್ನಿಸುತ್ತದೆ. ಕನ್ನಡ ಭಾಷೆಗೆ ಒಂದು ಅದ್ಭುತವಾದ ಜೀವಚೈತನ್ಯವಿದೆ ಹಾಗೂ ಅದು ಸಂರಕ್ಷಣೆಗೆ ಯೋಗ್ಯವಾಗಿದೆ. ಅದು ಕಾಲಕ್ಕೆ ತಕ್ಕಂತೆ ಬದಲಾಗಬಲ್ಲ ಸ್ಥಿತಿಸ್ಥಾಪಕ ಗುಣವನ್ನೂ ಹೊಂದಿದೆ. ಇದನ್ನೆಲ್ಲಾ ನಿರ್ಲಕ್ಷಿಸುವುದು ತೀರಾ ಶೋಚನೀಯ – ನನ್ನ ಕಾವ್ಯದಲ್ಲಿ ನಾನು ಇದನ್ನೆಲ್ಲ ಒಟ್ಟುಗೂಡಿಸಲು ಪ್ರಯತ್ನಿಸಿದ್ದೇನೆ. +’ನವ್ಯ’ರ ಭಾಷೆ ಈಗಾಗಲೇ ಮಸುಕಾಗಲು ಶುರುವಾಗಿದೆ. ಅವರ ಶೈಲಿಗೆ ಈಗ ಮೊದಲ ಕಸುವಿಲ್ಲ. ಆದರೆ ಅಡಿಗರ ವಿಷಯದಲ್ಲಿ ಇದು ಭಿನ್ನವಾಗುತ್ತದೆ. ಏಕೆಂದರೆ ಅವರೂ ತಮ್ಮ ಶಕ್ತಿಗಳನ್ನು ಪರಂಪರೆಯ ಚೌಕಟ್ಟಿನಿಂದಲೇ ಪಡೆದುಕೊಳ್ಳುತ್ತಾರೆ. ನಾನು ನನ್ನ ಪರಂಪರೆಯಲ್ಲಿ ಲಭ್ಯವಾಗುವ ಶ್ರೀಮಂತ ಮತ್ತು ವೈವಿಧ್ಯಮಯ ವಿನ್ಯಾಸಗಳಿಂದ ಶಕ್ತಿ ಸಂಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಲ್ಲಿನ ಮಹತ್ವದ ಪ್ರಶ್ನೆಯೇನೆಂದರೆ, ಈ ಎಲ್ಲದರಿಂದ ತಿಳಿದು ಬರುವ ಸಂಗತಿ ಏನು? ನನ್ನ ಪ್ರಕಾರ ಕವಿಯೊಬ್ಬ ಓದುಗನಿಗೆ ಹೊಸತೊಂದು ಆಯಾಮಾವನ್ನು ತೋರಿಸಬೇಕು, ಒಂದು ಹೊಸ ಜೀವನ ದರ್ಶನವನ್ನು ನೀಡಬೇಕು. ಆಕೃತಿಯನ್ನು ಕುರಿತಾಗಿ, ಭಾಷೆಯ ಆಯ್ಕೆಯನ್ನು ಕುರಿತು ಮಾಡಲಾಗುವಂಥ ವ್ಯತ್ಯಾಸಗಳು ನನಗೇನೂ ತೀರಾ ಮುಖ್ಯ ಅನ್ನಿಸುವುದಿಲ್ಲ. +ಪ್ರಶ್ನೆ: ನಿಮ್ಮ ಕಾವ್ಯವು ಭಾರತೀಯ ಸಂಪ್ರದಾಯದಿಂದ ಅದರಲ್ಲೂ ವೈಷ್ಣವ ಪರಂಪರೆಯಿಂದ ಸಾಕಷ್ಟನ್ನು ಪಡೆದುಕೊಂಡಿದೆ. ರಾಮನುಜ, ಯದುಗಿರಿ ಮತ್ತು ಆಳ್ವಾರರು ನಿಮ್ಮ ಕೇಂದ್ರ ಆಶಯಗಳಾಗಿದ್ದಾರೆ. ನಿಮ್ಮ ಕವನಗಳಲ್ಲಿ ಪ್ರಾದೇಶಿಕ ವಿವರಗಳೂ ವ್ಯಾಪಕವಾಗಿ ಬಳಕೆಯಾಗಿವೆ. ಆದರೆ ನೀವು ಮೇಲುಕೋಟೆ ದೇವಸ್ಥಾನದ ಬೀಬಿ ನಾಚಿಯಾರ್‌ಳನ್ನು ಒಂದು ಮಹತ್ವದ ಇರುವಿಕೆಯಾಗಿ, ಒಂದು ಕೇಂದ್ರ ಕಾವ್ಯಸಂಕೇತವಾಗಿ ಏಕೆ ಪರಿವರ್ತಿಸಲಿಲ್ಲ? ಹೀಗೆ ಮಾಡಿದ್ದರೆ ಅದು ಧರ್ಮಗಳ ಸಂಗಮವಾಗುತ್ತಿತ್ತು. ಅಷ್ಟೇ ಅಲ್ಲ ರಾಮಾನುಜರ ವ್ಯಕ್ತಿತ್ವದ ಕ್ರಾಂತಿಕಾರಕ ಆಯಾಮದೆಡೆಗೂ ಗಮನ ಸೆಳೆಯುತ್ತಿತ್ತಲ್ಲವೇ? +ಪು.ತಿ.ನ. – ನಾನು ಯಾವತ್ತೂ ವೈಷ್ಣವ ಪಂಥಕ್ಕೆ ಸಂಪೂರ್ಣವಾಗಿ ಸೇರಿರಲಿಲ್ಲ. ನಾನು ನನ್ನನ್ನು ಒಬ್ಬ ಶೈವಪಂಥೀಯನೆಂದೂ ದೃಢವಾಗಿ ಪರಿಗಣಿಸುತ್ತೇನೆ. ನಾನು ಯಾವತ್ತೂ ಒಂದು ನಿರ್ದಿಷ್ಟ ಪರಂಪರೆಯಿಂದೇನೂ ವಸ್ತು, ಸತ್ವಗಳನ್ನು ಪಡೆದುಕೊಂಡಿಲ್ಲ. ವಾಸ್ತವವಗಿ ವಿಷ್ಣುವಿಗಿಂತ ಹೆಚ್ಚಾಗಿ ಶಿವನೇ ನನ್ನಲ್ಲಿ ರೋಮಾಂಚನವನ್ನುಂಟು ಮಾಡುತ್ತಾನೆ. ಶಿವನು ಹೆಗೆಲ್ ಹೇಳುವ ದ್ವಿಮುಖ ವಿರೋಧಿ ಸತ್ಯಗಳನ್ನೇ ಸಂಕೇತಿಸುತ್ತಾನೆ ಎಂದು ನನಗನ್ನಿಸುತ್ತದೆ. ದೇವರ ಪರಿಕಲ್ಪನೆ ಕೂಡಾ ನನ್ನ ಮಟ್ಟಿಗೆ ಸತತವಾಗಿ ವಿಕಸಗೊಳ್ಳುವ ಪರಿಕಲ್ಪನೆಯಾಗಿದೆ. ಜೀನ್ ಪಾಲ್ ಸಾರ್ತ್ರೆಯ ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. +ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ಹಾಗೆ ನೋಡಿದರೆ, ನಾನು ’ಹಿಂದುತ್ವ’ದ ಪರಿಕಲ್ಪನೆಯೊಡನೆಯೂ ಸಹ ನನ್ನನ್ನು ಸಂಪೂರ್ಣವಾಗಿ ಗುರುತಿಸಿಕೊಳ್ಳಲಾರೆ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ (ನೋಡಿ : ಮಲೆ ದೇಗುಲ). ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆ ಗೈಯಬೇಕು ಎಂದು ನನಗನ್ನಿಸುತ್ತದೆ. ನಾನು ಯಾವುದೇ ಮೂಲಭೂತವಾದೀ ನಿಲುವುಗಳೊಂದಿಗೆ ಸಹಭಾಗಿಯಾಗಲಾರೆ. ನಾನು ಶ್ರೀವೈಷ್ಣವ ಪಂಥದೊಡನೆಯೂ ಸಂಪೂರ್ಣವಾಗಿ ಗುರುತಿಸಿಕೊಳ್ಳಲಾರೆ. +ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನ ಮನಸ್ಸಿನಲ್ಲಿರುವ ದೇವರು ರಾಮ ಅಥವಾ ಕೃಷ್ಣ ಅಥವಾ ಅಲ್ಲಾ ಕೂಡ ಆಗಬಹುದು. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತವೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬಂದಿರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ. ನನ್ನ ಪ್ರಜ್ಞೆಯ ವ್ಯಾಪ್ತಿಯೊಳಗೆ ಬರದೇ ಇರುವ ಏನನ್ನೂ ನಾನು ಸ್ವೀಕರಿಸುವುದಿಲ್ಲ. ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ, ಅಷ್ಟೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ಆ ಕೇಂದ್ರದಲ್ಲಿ ನನ್ನ ಸೃಜನಶೀಲ ಪ್ರಕ್ರಿಯೆ ಮತ್ತು ಧಾರ್ಮಿಕ ಕಾಳಜಿಗಳು ಒಂದಾಗುತ್ತವೆ. ಅಲ್ಲಿಂದ ಸತ್ಯ, ಶಿವ ಮತ್ತು ಸುಂದರಗಳ ಕಡೆಗಿನ ನನ್ನ ಪ್ರಯಾಣ ಪ್ರಾರಂಭವಾಗುತ್ತದೆ. +ಪ್ರಶ್ನೆ: ನಿಮ್ಮ ಪ್ರಬಂಧವೊಂದರಲ್ಲಿ ಭಾರತದ ವಸಾಹತುಶಾಹಿ ಅನುಭವದ ಬಗ್ಗೆ ವಿಚಾರ ಮಾಡುತ್ತಾ ನೀವು, ಅದು (ವಸಾಹತುಶಾಹಿ ಅನುಭವ) ಭಾರತೀಯ ಬೌದ್ಧಿಕತೆ ಮತ್ತು ಸಂಕಲ್ಪ ಶಕ್ತಿಗಳನ್ನು ನಾಶ ಮಾಡಿತು ಎಂದು ಬರೆದಿದ್ದೀರಿ. ಆದಾಗ್ಯೂ, ನೀವು ಪಾಶ್ಚಾತ್ಯ ಸಂಸ್ಕೃತಿಗೆ ಅದರಲ್ಲೂ ಇಂಗ್ಲಿಷ್‌ಗೆ ತೆರೆದುಕೊಂಡಿದ್ದರಿಂದ ನಿಮ್ಮಲ್ಲಿ ವಿಮರ್ಶಾತ್ಮಕ ಪ್ರಜ್ಞೆ ಮೂಡಿತು; ಅದು ನಿಮ್ಮ ಸಂಪ್ರದಾಯವನ್ನು ಒಬ್ಬ ಒಳಗಿನ ವಿಮರ್ಶಕನಾಗಿ ಪರೀಕ್ಷಿಸುವ ಅವಕಾಶವನ್ನು ನೀಡಿತು ಎಂದು ಒಪ್ಪಿಕೊಳ್ಳುತ್ತೀರಿ. ವಿಶಾಲವಾದ ಸಂಸ್ಕೃತಿ ಪರಿಭಾಷೆಯಲ್ಲಿ ಪಾಶ್ಚಾತ್ಯ ಪ್ರಪಂಚದೊಂದಿಗೆ ಭಾರತದ ಅನುಸಂಧಾನದ ಬಗ್ಗೆ ಏನು ವಿವರಣೆ ನೀಡಬಯಸುತ್ತೀರಿ? +ಪು.ತಿ.ನ. – ಪಾಶ್ಚಾತ್ಯ ಪ್ರಪಂಚ ಅದರಲ್ಲೂ ಇಂಗ್ಲಿಷ್ ನನಗೆ ಸ್ವಾತಂತ್ರ್ಯವನ್ನು ನೀಡಿತು ಎಂದು ನಾನು ಒಪ್ಪಿಕೊಳ್ಳಲೇಬೇಕು. ನನ್ನ ಸಂಪ್ರದಾಯವನ್ನು ವಿಮರ್ಶಾತ್ಮಕವಾಗಿ ನೋಡಲು ನಾನು ಕಲಿತಿದ್ದೇನೆ. ನಾನು ಅದಕ್ಕೆ ಸೇರಿದ್ದೇನೆ, ಆದರೆ ಶರಣಾಗಿಲ್ಲ. ಇದನ್ನು ಸ್ವಲ್ಪ ವಿವರಿಸುತ್ತೇನೆ. ಉದಾಹರಣೆಗೆ, ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರನಾಗಿದೆ. ಸಾಂಪ್ರದಯಿಕ ಜನರು ರಾಮಯಣವನ್ನು ಒಂದು ಪವಿತ್ರ ಗ್ರಂಥವಾಗಿ ಪರಿವರ್ತಿಸಿಬಿಡುತ್ತಾರೆ. ನಮ್ಮ ಅಲಂಕಾರಿಕರೂ ಸಹ ರಾಮಾಯಣದಿಂದ (ಲಕ್ಷಣ) ಪದ್ಯಗಳನ್ನು ಉಲ್ಲೇಖಿಸುವುದಿಲ್ಲ. ಸೌಂದರ್ಯಶಾಸ್ತ್ರದ ಬಗೆಗಿನ ತಮ್ಮ ಸಿದ್ಧಾಂತಗಳನ್ನು ಸಮರ್ಥಿಸಲು ಅವರು ಕಾಳಿದಾಸನಿಂದ ಉದಾಹರಣೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ರಾಮಾಯಣವನ್ನು ಮಾತ್ರ ಉಪಯೋಗಿಸುವುದಿಲ್ಲ. ಹಾಗೆ ಹೇಳುವುದಾದರೆ ಅವರು ಭಗವದ್ಗೀತೆಯಿಂದ (ಅದರ ಅತ್ಯುತ್ತಮ ಕಾವ್ಯಭಾಗಗಳಿಂದಲೂ), ಭಾಗವತದಿಂದಲೂ ಉದಾಹರಣೆಗಳನ್ನು ತೆಗೆದುಕೊಳ್ಳುವುದಿಲ್ಲ. +ರಾಮಾಯಣ ಮತ್ತು ಭಗವದ್ಗೀತೆಗಳು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಈ ಅದ್ಭುತ ಕೃತಿಗಳನ್ನು ಅವುಗಳ ಅಪ್ರತಿಮ ಸೌಂದರ್ಯಕ್ಕಾಗಿ ನಾನು ಮೆಚ್ಚುತ್ತೇನೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್‌ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಕವಿಯ ಮಹಾನ್ ಕಾವ್ಯ; ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ. +ಒಬ್ಬ ಕವಿಯಾಗಿ ನಾನು ಒಂದು ’ದೂರ’ದ ಪ್ರಜ್ಞೆಯನ್ನು, ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನ್ಶೆತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶ ಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ. +ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ (ಮೇಲೆ ಹೇಳಿದ) ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕ್ತಿಯ, ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಛಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ಏಕೆಂದರೆ ಅವನ ಹೋರಾಟವು ಇವತ್ತು ಯಾವುದೇ ಒಬ್ಬ ಸೂಕ್ಷ್ಮ ಮನಸ್ಸಿನ ವ್ಯಕ್ತಿಯು ಅಸ್ತಿತ್ವದ ದಾಟುವಿಕೆಗಾಗಿ ಮಾಡುವ ಹೋರಾಟವನ್ನೇ ನೆನಪಿಸುತ್ತದೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ. +ಇರಲಿ, ಭಾರತೀಯ ಅನುಭವದ ಬಗ್ಗೆ ಹೋಳುವುದಾದರೆ ಅದು ತುಂಬ ದುಃಖದಾಯಕವಾಗಿದೆ. ಪಶ್ಚಿಮದ ಜತೆಗಿನ ಭಾರತದ ಅನುಸಂಧಾನವು ಭಾರತದ ಪರಂಪರಾನುಗತ ಮನಸ್ಸನ್ನು ನಾಶಮಾಡಿದೆ. ನಮ್ಮ ಪರಂಪರೆಯ ಅತ್ಯುತ್ತಮ ಭಾಗವೆಂದರೆ ಪ್ರಶ್ನಾಮನೋಭಾವದ ಪಾರಭೌತಿಕ (ಆಧ್ಯಾತ್ಮಿಕ) ಪರಂಪರೆ. ಇದು ಹೆಚ್ಚು ಕಡಿಮೆ ಸಂಪೂರ್ಣವಾಗಿ ನಾಶವಾಗಿದೆ. +ನಾನು ಪಶ್ಚಿಮದಿಂದ ಸಾಕಷ್ಟನ್ನು ತೆಗೆದುಕೊಂಡಿದ್ದರೂ ವಿಮರ್ಶೆಯ ಪರಂಪರಾನುಗತ ಜೀವಧಾರೆಯ ಕಡೆಗೆ ಕುರುಡಾಗಿಲ್ಲ. ವಾಸ್ತವವಾಗಿ ಈ ಪಾರಂಪರಿಕ ಶಕ್ತಿ ಮತ್ತು ಪ್ರಾದೇಶಿಕ ವಿವೇಕಗಳೇ ನನ್ನನ್ನು ಪಶ್ಚಿಮದ ಆಕ್ರಮಣಶೀಲತೆಯಿಂದ ಪಾರು ಮಾಡಿವೆ. ನಾನು ಪಶ್ಚಿಮದಿಂದ ಪ್ರಭಾವಿತನಾಗಿದ್ದೇನೆ ಎಂಬುದರ ಅರ್ಥ ಎಂದಿಗೂ ನಾನು ಯಾವುದೇ ತಕರಾರಿಲ್ಲದೆ ಪಶ್ಚಿಮವನ್ನು ಸ್ವೀಕರಿಸುತ್ತೇನೆ ಎಂದಲ್ಲವೇ ಅಲ್ಲ. ನಿಜ. ನಾನು ಪಶ್ಚಿಮಕ್ಕೆ ಋಣಿಯಾಗಿದ್ದೇನೆ. ಆದರೆ ಪಶ್ಚಿಮವನ್ನು ಸಾರಾಸಗಟಾಗಿ ಒಪ್ಪಿಕೊಂಡದ್ದರಿಂದ ಭಾರತೀಯ ಪರಂಪರಾನುಗತ ಸೃಜನಶೀಲತೆಯು ನಾಶವಾಗಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದಂತೆ ಹೇಳಲಿಚ್ಛಿಸುತ್ತೇನೆ. +ಪ್ರಶ್ನೆ: ನೀವು ವಿಮರ್ಶಾ ಪ್ರಜ್ಞೆಯನ್ನು ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ಪರಂಪರೆಗಳಿಂದ ಕಲಿತಿದ್ದೀರಿ. ಹೀಗಿರುವಾಗ ಒಬ್ಬ ಪ್ರಜ್ಞಾವಂತ ಚಿಂತಕರಾಗಿ ನಿಮಗೆಂದೂ ಪರಂಪರಾನುಗತ ಚೌಕಟ್ಟಿನೊಳಗಡೆ ಇರುವ ಕ್ರೌರ್ಯ ಮತ್ತು ಅಮಾನವೀಯ ಅಂಶಗಳನ್ನು ಕುರಿತು ಚಿಂತಿಸಬೇಕು ಎಂದು ಅನ್ನಿಸಲಿಲ್ಲವೆ? ಒಬ್ಬ ವ್ಯಕ್ತಿಯಾಗಿ ಮತ್ತು ಸತ್ಯ, ಶಿವ ಮತ್ತು ಸುಂದರಗಳನ್ನು ಶೋಧಿಸುತ್ತಿರುವ ಒಬ್ಬ ಕವಿಯಾಗಿ ನಿಮ್ಮನ್ನು ನಿಮ್ಮದೇ ಪರಂಪರೆಯ ವಿನ್ಯಾಸಗಳಲ್ಲಿರುವ ಅಮಾನವೀಯ ಅಂಶಗಳು ತೀವ್ರವಾಗಿ ಕಾಡಲಿಲ್ಲವೇ? ಅವುಗಳನ್ನು ಪ್ರಶ್ನೆ ಮಾಡಬೇಕು ಎಂಬ ಒತ್ತಡ ಮೂಡಿಸಲಿಲ್ಲವೇ? ನಿಮ್ಮ ಸಂಸ್ಕೃತಿಯೊಳಗಡೆಯೇ ಅಂತರ್ಗತವಾಗಿರುವ ಕ್ರೌರ್ಯದ ಜತೆಗಿನ ತೀವ್ರ ಮುಖಾಮುಖಿಯು ನಿಮ್ಮ ವೈಯಕ್ತಿಕ ಹುಡುಕಾಟದ ಕೇಂದ್ರದಲ್ಲಿದೆ ಅಲ್ಲವೇ? +ಪು.ತಿ.ನ. – ಒಬ್ಬ ಕವಿಯಾಗಿ ನಾನು ಭಾರತೀಯ ಪರಂಪರೆಯಿಂದ ಪಡೆದಿರುವುದು ಬೌದ್ಧಿಕ ಅಂಶಗಳನ್ನು ಮಾತ್ರ. ಈ ದೃಷ್ಟಿಯಿಂದ ನಾನು ಭಾರತೀಯ ಪ್ರಂಪರೆಯ ಜತೆಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ಸಾಂಸ್ಕೃತಿಕ ಚೌಕಟ್ಟಿನೊಳಗಿರುವ ಅನೇಕ ಅಂಶಗಳು ನನ್ನನ್ನು ವಿಚಲಿತಗೊಳಿಸುತ್ತವೆ ಮತ್ತು ತುಂಬ ಹಿಂಸೆ ಮಾಡುತ್ತವೆ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು. ಅದರೆ ಈ ಅಂಶಗಳು ಜನ್ಮ ತಾಳುವುದು ಪರಂಪರೆಯೊಳಗಿನ ಮೂಲಭೂತವಾದಿ ನಿಲುವುಗಳಿಂದ. ಈ ನಿಲುವುಗಳನ್ನು ಮೂಲಭೂತವಾದಿಗಳು ಮುನ್ನೆಲೆಗೆ ತರುತ್ತಾರೆ. ಯಾವುದೇ ರೀತಿಯ ಮೂಲಭೂತವಾದವಾಗಲೀ ಅದು ಮೂಲತಃ ಅ-ಸೂಕ್ಷ್ಮವಾಗಿರುತ್ತದೆ. ಅಸಹನೆ ಹೊಂದಿರುತ್ತದೆ, ಅಮಾನವೀಯವಾಗಿರುತ್ತದೆ ಮತ್ತು ಕ್ರೂರವಾಗಿರುತ್ತದೆ. +ಉದಾಹರಣೆಗೆ ಮದುವೆಯ ಸಂದರ್ಭದಲ್ಲಿ ಸ್ತ್ರೀಯೊಬ್ಬಳು ನೀಡುವ ಭಾಷೆಯನ್ನು ತೆಗೆದುಕೊಳ್ಳಿ. ಅಲ್ಲಿ ಅವಳು ತಾನು ಎಂದಿಗೂ ಈ ಗಂಡಸನ್ನು ಬಿಟ್ಟು ಇನ್ನೊಬ್ಬ ಗಂಡನ್ನು ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ಜೀವನವೆಲ್ಲಾ ಈ ಭಾಷೆಯನ್ನು ಪಾಲಿಸಬೇಕು ಎಂಬ ನಿರ್ದೇಶನವನ್ನು ಪರಂಪರೆ ಅವಳಿಗೆ ನೀಡುತ್ತದೆ. ಆದರೆ, ಆ ಮಹಿಳೆಯ ಜೀವನಾನುಭವದಲ್ಲಿ ಮದುವೆಯಿಂದಾಗಿ ಕೇವಲ ಶೋಷಣೆ ಮತ್ತು ನೋವನ್ನನುಭವಿಸುವುದೇ ಲಭ್ಯವಾದರೆ, ’ಗಂಡ ಹೇಗಿದ್ದರೂ ಅವನನ್ನು ತೊರೆಯಬೇಡ’ ಎಂದು ಹೇಳುವ ಸಂಪ್ರದಾಯವನ್ನು ಅವಳು ತಿರಸ್ಕರಿಸಲೇಬೇಕಾಗುತ್ತದೆ. +ಸ್ತ್ರೀ ವಿಮೋಚನೆಯ ದೃಷ್ಟಿಕೋನದಿಂದ ನೋಡಿದಾಗ ನಾವು ಈ ಸಾಂಪ್ರದಾಯಿಕ ಚೌಕಟ್ಟನ್ನು ಅನುಮೋದಿಸಲು ಸಾಧ್ಯವಾಗುವುದಿಲ್ಲ. ನಾವು ಹಾಗೇನಾದರೂ ಅನುಮೋದಿಸಿದರೆ ಪರಂಪರೆಯನ್ನು ಕುರಿತಾದ ಮೂಲಭೂತವಾದೀ ನಿಲುವನ್ನು ತೆಗೆದುಕೊಂಡ ಹಾಗಾಗುತ್ತದೆ. ತುಂಬ ಒರಟಾದ ಮತ್ತು ಕ್ರೂರವಾದ ನಿಲುವು ಅದು. ನಾನು ನನ್ನ ಮೊದಮೊದಲ ಪದ್ಯಗಳಲ್ಲಿ ಇದೆಲ್ಲದರ ಬಗ್ಗೆಯೂ ಚಿಂತಿಸಿದ್ದೇನೆ. +ನಾನು ಒಬ್ಬ ಕವಿಯಾಗಿ, ನನ್ನ ಲೌಕಿಕ ಮನಸ್ಸಿಗೆ ಅವ್ಶೆಜ್ಞಾನಿಕ ಮತ್ತು ಅಮಾನವೀಯ ಅನ್ನಿಸಿದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಅನುಭವಗಳನ್ನು ತಿರಸ್ಕರಿಸಿದ್ದೇನೆ. ನಾನು ನಿಜವಾಗಿಯೂ ಕೆಲಸ ಮಾಡಿರುವುದು ತರ್ಕದ ಮೂಲಕವೇ. ಪರಂಪರೆಯಲ್ಲಿನ ಕ್ರೌರ್ಯವನ್ನು ನಾನು ವೈಚಾರಿಕ ಪ್ರಕ್ರಿಯೆಯಿಂದಲೇ ನಿರ್ವಹಿಸಿದ್ದೇನೆ. ನನ್ನ ಕವನದ ಚೌಕಟ್ಟಿನೊಳಗಡೆ ಬಂದಾಗ ತರ್ಕವೇ ಪರಿವರ್ತನೆಗೊಳಗಾಗುತ್ತದೆ ಅನ್ನುವುದು ಬೇರೆ ಮಾತು. +ಉದಾಹರಣೆಗೆ ಶಿವನ ಮೂರನೇ ಕಣ್ಣಿನ ಕಲ್ಪನೆಯು ನನ್ನ ಕವನದ ಸಂದರ್ಭವೊಂದರಲ್ಲಿ ಐನ್‌ಸ್ಟೈನ್‌ನ ಏಕೀಕೃತ ಕ್ಷೇತ್ರ ಸಿದ್ಧಾಂತದೊಂದಿಗೆ ಸಮೀಕರಿಸಲ್ಪಟ್ಟಿದೆ. ಸಂಕುಚಿತವಾದ ಸಾಂಪ್ರದಾಯಿಕ ಮನಸ್ಸೊಂದಕ್ಕೆ ಇಂತಹ ಸಂಯೋಜನೆ ಸಾಧ್ಯವಾಗುವುದಿಲ್ಲ. ಉದ್ದಕ್ಕೂ ನಾನು ನನ್ನ ಪರಂಪರೆಯಿಂದ ಯಾವ ರೀತಿಯಲ್ಲಿ ಸ್ವೀಕಾರ ಮಾಡಿದ್ದೇನೆ ಅಂದರೆ ಅದರ ಒರಟಾದ ಮತ್ತು ಕ್ರೂರವಾದ ಅಂಶಗಳನ್ನು ನಿರ್ಲಕ್ಷಿಸಲು ಮತ್ತು ತಿರಸ್ಕರಿಸಲು ಸಾಧ್ಯವಾಗುವ ಹಾಗೆ. ನನ್ನ ಕವನವೊಂದರಲ್ಲಿ ಜರಾಸಂಧನ ಕಥೆಯನ್ನು ಹೇಳುವಾಗ, ಅನುವಂಶಿಕತೆಯ ಶಾಸ್ತ್ರದ ಗ್ರಹಿಕೆಯಿಂದ ನನಗೆ ಸಿಕ್ಕಿದ ರೂಪಕಗಳು ಮತ್ತು ಪ್ರತಿಮೆಗಳನ್ನು (ಚಿತ್ರಗಳನ್ನು) ಉಪಯೋಗಿಸಿದ್ದೇನೆ. ನಾನು – ಹಾಗೆ ನೋಡಿದರೆ ಯಾವುದೇ ಕವಿ – ಪರಂಪರೆಯ ಅವೈಜ್ಞಾನಿಕ ವ್ಯಾಖ್ಯಾನವನ್ನು ನೀಡುವುದಿಲ್ಲ. +ಪರಂಪರೆಯ ಬಗೆಗಿನ ನಮ್ಮ ರೂಢಿಗತ ನಿಲುವು ತುಂಬ ದುರ್ಬಲವಾಗಿದೆ ಮತ್ತು ಕ್ಷುದ್ರವಾಗಿದೆ. ಒಬ್ಬ ಕವಿಯಾಗಿ ಇದು ನನ್ನನ್ನು ಮುಟ್ಟುವುದಿಲ್ಲ. ನಾನು ವೇದಗಳಿಂದ, ಉಪನಿಷತ್‌ಗಳಿಂದ ಮತ್ತು ಕಾಳಿದಾಸನಿಂದ ಪಡೆದಿದ್ದೇನೆ. ನಾನು ನನ್ನ ಪರಂಪರೆಯಿಂದ ಏನನ್ನು ಪಡೆದಿದ್ದೇನೆ ಎಂಬುದನ್ನು ತೋರಿಸಲು ಕಾಳಿದಾಸನ ಉಕ್ತಿಯೊಂದನ್ನು ಉಲ್ಲೇಖಿಸಬಯಸುತ್ತೇನೆ. ಕಾಳಿದಾಸನ ಕೃತಿಯೊಂದರಲ್ಲಿ ಉತ್ಸರ್ಪಿಣೀ ಖಲು ಮಹತಾಂ ಪ್ರಾರ್ಥನಾ ಎಂಬ ಸಾಲೊಂದು ಬರುತ್ತದೆ. ಇದರ ಅರ್ಥವೇನೆಂದರೆ ಮಹಾನ್ ವ್ಯಕ್ತಿಗಳ ಆಕಾಂಕ್ಷೆಗಳು (ಹಂಬಲಗಳು) ಅನಂತ ಮತ್ತು ಮಿತಿರಹಿತ. ಅವರ ಶೋಧಕ್ಕೆ ಕೊನೆಯೇ ಇಲ್ಲ. ಇದು ನಮ್ಮ ಪರಂಪರೆಯ ಅತ್ಯುತ್ತಮ ಸಂಗತಿಗಳನ್ನು ಸಾರಾಂಶೀಕರಿಸಿದೆ. ನಾನು ಪಡೆದುಕೊಂಡಿರುವುದು ಇದರಿಂದ ಮಾತ್ರ. ಇದನ್ನು ಬಿಟ್ಟು ಇನ್ನುಳಿದ ವ್ಯಾಖ್ಯಾನಗಳೆಲ್ಲಾ ಕ್ಷುದ್ರ ಹಾಗೂ ನಗಣ್ಯ. +ನಾನು ದೊಡ್ಡದೆಂದು ಭಾವಿಸುವ ಮತ್ತು ಇಷ್ಟಪಡುವ ಪರಂಪರೆಗೆ ನಚಿಕೇತ ಮತ್ತು ಅವನ ಹುಡುಕಾಟಗಳು ಸೇರುತ್ತವೆ. ನಮ್ಮದೇ ಸಮಯದಲ್ಲಿ ಮಹಾತ್ಮ ಗಾಂಧಿ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ನಮ್ಮ ಕಾಲದ ಏಕೈಕ ಆಧ್ಯಾತ್ಮಿಕ ವ್ಯಕ್ತಿ ಅಂದರೆ ಅವರು – ನಾನು ಒಬ್ಬ ವೈಚಾರಿಕ ವ್ಯಕ್ತಿಯಾಗಿ ಮತ್ತು ಕವಿಯಾಗಿ ಎಲ್ಲ ಸಂಕುಚಿತ ಮೂಲಭೂತವಾದಿ ಸಂಪ್ರದಾಯಿಕ ನಿಲುವುಗಳನ್ನು ತಿರಸ್ಕರಿಸಿದ್ದೇನೆ. +***** +ಸಂದರ್ಶನ: ಕಿರಣ್ ಎಂ, ಅವಿನಾಶ್ ಜಿ ಹೆಗ್ಗೋಡು ೧. ಮಲೆನಾಡಿನವರಾದ ನಿಮಗೆ ’ಇಗರ್ಜಿ..’ ಯಲ್ಲಿ ಉತ್ತರಕನ್ನಡ ದ ಭಾಷೆಯನ್ನು ಬಳಸಲು ಹೇಗೆ ಸಾಧ್ಯವಾಯಿತು? ಉತ್ತರ: ನಮ್ಮ ತಂದೆ ಮುರ್ಡೇಶ್ವರದವರು..ನಮ್ಮ ನೆಂಟರೆಲ್ಲ ಹೊನ್ನಾವರ ಭಟ್ಕಳದವರು..ಆವಾಗಾವಾಗ ನಾನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_311.txt b/Kannada Sahitya/article_311.txt new file mode 100644 index 0000000000000000000000000000000000000000..8acffa98761ead3c697b0267e14424720a0f5b40 --- /dev/null +++ b/Kannada Sahitya/article_311.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪುಸ್ತಕಕ್ಕೆ ಮುನ್ನುಡಿ +ಹೊಸ ಮನೆಗೆ ಬೆರ್ಚಪ್ಪನಂತೆ: +ವಿಮರ್ಶಕರ ದುರ್ವಾಕ್ಯಗಳ +ಪಿಶಾಚ ಪೀಡೆಯ ಪರಿಹಾರಕ್ಕೆ +ಅದೊಂದು ಪೂರ್ವಭಾವೀ +ರಕ್ಷಾ ತಾಯಿತಿಯ ಪ್ರಯತ್ನ. +***** +ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. ***** +ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ ***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_312.txt b/Kannada Sahitya/article_312.txt new file mode 100644 index 0000000000000000000000000000000000000000..08661e5cc6c94cb2d112a0f347be070cc801573f --- /dev/null +++ b/Kannada Sahitya/article_312.txt @@ -0,0 +1,637 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಗೀತ ಕಲಿಸಿದವನು. +ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ- +ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕ +ಇಂಥ ಕಚಡ ಸಂಗೀತಕ್ಕೆ ಗುರುವಾ ನೀನು? +ನಾಳೆ ಪಶ್ಚಿಮದಿಂದ ಬರುವ ಕಲಿಯುಗಕ್ಕೆ +ತಕ್ಕಡಿಯಲ್ಲಿ ತೂಗಿ ಈ ಸಂಗೀತ +ಮಾರಿಕೊ! +ಅಗೋ ಅಗೋ ಅಲ್ಲೊಂದು ಕೋತಿ ಕುಂತಿದೆ +ನೋಡಿರಯ್ಯಾ. +ಆಹಾಹಾ ಗೊಲ್ಲ ಕುಲದ ಜ್ಯಾತಿಯ +ನೋಡಿರಯ್ಯಾ. +ಅರೆರೇ ನಿಮ್ಮ ಹಟ್ಟಿಯ ಕೀರ್ತಿ ಶಿಖರವ +ನೋಡಿರಯ್ಯಾ. +-ಎಂದು ಚಂದಮುತ್ತನ್ನ ತೋರಿಸಿ ಅವನಿದ್ದಲ್ಲಿಗೆ ಗುಡುಗುಡುನೆ ಓಡಿಬಂದಳು. ಚಂದಮುತ್ತ ಎದ್ದು ನಿಂತು ಗಡಗಡ ನಡುಗುತ್ತಿದ್ದ. ಆ ಮುದಿ ಸೇಡುಮಾರಿ ನೊರೆನೊರೆನೆ ಹಲ್ಲು ಕಡಿದು ಕೈತಿರುವಿ ಕೇಳಿದಳು: +ಹೆಚ್ಚಳ ಪಡಬೇಡವೊ ಏ ಕಡಿಮೆಯವನೇ +ನಿನ್ನ ಸತ್ಯ ನನಗೆ ಚೆನ್ನಂಗೊತ್ತು. +ಸತ್ಯ ಇದ್ದರೆ ಹೀಗೆ ನುಡಿಸಬಲ್ಲೆಯಾ? +-ಎಂದು ಚಿಂದಿ ಸೀರೆ ತೆಗೆದು ಹಚ್ಚೆ ಹಾಕಿಕೊಂಡು ಬಗಲಲ್ಲಿದ್ದ ಚೌಡಿಕೆ ಮುರಿದು ಅದರ ಕೋಲು ಹಿರಿದು ಅದನ್ನೇ ಕೊಳಲಿನಂತೆ ತುಟಿಗಿಟ್ಟು ನುಡಿಸಿದರೆ- ಶಿವ ಶಿವಾ! ಸರ್ವಲೋಕ ಸಮಸ್ತ ಜನ ಇರಿವೆಂಬತ್ತು ಕೋಟಿ ಜೀವರಾಶಿಗಲೆಲ್ಲ ಭಾವಪರವಶರಾಗಿ, ಮೂಕವಿಸ್ಮಿತರಾಗಿ ಕೊಳಲ ಸಂಗೀತದ ಬೆಳ್ದಿಂಗಳಲ್ಲಿ ಅದ್ದಿ ಹೋದರು! ಏಸೋ ಜನ್ಮದ ಸುಖದ ನೋವು ನೆನಪಾದವು. ಗಾಳಿ ದೇಹದ ದೈವಂಗಳನು ನಾದದಲ್ಲಿ ಸುಳಿವುದೋರಿಸಿ ಹಾಡಿನ ರೂಪ ಕೊಟ್ಟು ಸಾಕ್ಷಾತ್ಕಾರ ಮಾಡಿ ತೋರಿಸಿದಳು. ಜನ ಧನ್ಯರಾಗಿ, ತನ್ಮಯರಾಗಿ ಮೈಮರೆತು ಮಾತು ಮರೆತಿರುವಾಗಲೇ ಗಕ್ಕನೆ ಕೊಳಲುಲಿ ನಿಲ್ಲಿಸಿ ದುಡುದುಡುನೆ ಓಡಿಬಂದು ಚಂದಮುತ್ತನ ಕೈಕೊಳಲನ್ನು ಕಸಿದು ಲಟ್ಟನೆ ಮುರಿದು ಅವನ ಮುಖದ ಮ್ಯಾಲೆಸೆದು ಏನೆಂದು ಯಾಕೆಂದು ಹ್ಯಾಗೆಂದು ಜನ ತಿಳಿಯುವ ಮುನ್ನವೇ ಕಾಡಿನಲ್ಲಿ ಕಣ್ಮರೆಯಾದಳು, ಯಾರು? ಆ ಮುದಿಜೋಗ್ತಿ! +೧೩. ಚಂದ್ರ ಅಲ್ಲಿಂದೆರಡು ಮಾರು +ನೊರೆ ನೊರೆ ಹಾಲಲ್ಲಿ ಹುಳಿಯ ಹಿಂಡಿದರ್‍ಯಾರು? +ಬೆಳ್ದಿಂಗಳ ಹೆಪ್ಪುಗಟ್ಟಿ +ಶಿವಾಪುರದ ಬಯಲಿನ ತುಂಬ ಭರಿತವಾಯ್ತು. +ಮುಕ್ತಾಯವಾಯಿತು ಅಸ್ತವ್ಯಸ್ತ ಪರಿಸೆ. +ಜೋಗ್ತಿಯ ಹಾಡಿನ ಅಮಲಿನಲ್ಲಿ +ಅದ್ದಿಹೋಯಿತು ನಾಡು ನರಲೋಕ. +ತೇಲುಗಣ್ಣಲ್ಲಿ ತೇಲಿ ಮಾಯದ ನಿದ್ದೆಯಲ್ಲಿ +ಮಲಗಿಬಿಟ್ಟಿತು, ಹಟ್ಟಿ. +ತನ್ನ ಹಾಡುಗಳ ತನಗಿಂತ ಚಂದ ನುಡಿಸಿ ತನ್ನ ತಪ್ಪುಗಳ ಕಿವಿಗಪ್ಪಳಿಸುವಂತೆ ಮಾಡಿದ ಚಂದಮುತ್ತನ ಮ್ಯಾಲೆ ಚಿನ್ನಮುತ್ತನಿಗೆ ರವರವ ರುದ್ರಗೋಪ ಬಂದಿತ್ತು. ತನ್ನ ಪರ ವಹಿಸಿ ಜೋಗ್ತಿಯೇ ಆ ಸೇಡು ಚುಕ್ತ ಮಾಡಿದ್ದಳಾಗಿ ಚಿನ್ನಮುತ್ತ ಆನಂದದ ಅಮಲೇರಿ ನಿದ್ರಿಸಲಿಲ್ಲ. +ಜೋಗ್ತಿಯ ಸಂಗೀತದ ಅನುಭವವನ್ನು ಮೆಲುಕು ಹಾಕುತ್ತ ಶಿವಸುಖದ ಅಮಲೇರಿ ಕುಲಗುರು ನಿದ್ರಿಸಲಿಲ್ಲ. +ಜೋಗ್ತಿಯ ಪಾದ ಹಿಡಕೊಂಡು ಸಂಗೀತ ವಿದ್ಯವ ಕಲಿಯಬೇಕೆಂಬ ದಿವ್ಯೋತ್ಸಾಹದಲ್ಲಿ ಚಂದಮುತ್ತ ನಿದ್ರಿಸಲಿಲ್ಲ. ಜೋಗ್ತಿಯ ದರ್ಶನಕ್ಕೆ ಈಗಲೇ ಹೋಗಬೇಕೆಂದು ನಿಶ್ಚಯವ ಮಾಡಿ ಹೆತ್ತಯ್ಯ ಮುತ್ತಯ್ಯರ ನೆನೆದು ಶಿವಧೋ ಎಂದು ಶಿವದೇವರ ಸ್ಮರಣೆ ಮಾಡಿ ಹೆಗಲಿಗೆ ಕಂಬಳಿ ಕೈಗೆ ಬೆತ್ತ ತಗೊಂಡು ಅಬ್ಬೆಯ ಪಾದ ಪಡಕೊಳ್ಳಲು ಹೊರಟ. +ಅಂಗಳದಲ್ಲಿ ಅಬ್ಬೆ ಕಲ್ಲುಬಂಡೆಗೊರಗಿ ಕುಂತಿದ್ದಳು. +ಮುಂದೊಂದು ಹರಿವಾಣವಿತ್ತು. +ನೀರಿನಲ್ಲಿ ಮೂಡಿ ಚೆಲ್ಲಾಟವಾಡುತ್ತಿದ್ದ ಚಂದ್ರ. +ಚಂದಮುತ್ತ ಸದ್ದಿಲ್ಲದೆ ಹೋಗಿ +ಅಬ್ಬೆಯ ಬಳಿ ಕುಂತ. +ಮೂಡಿದ್ದ ಚಂದ್ರ +ಅಬ್ಬೆಯ ಜೊತೆ ಮಾತಾಡಿದಂತಿತ್ತು. +ಅಬ್ಬೆ ಕದ್ದು ನುಡಿದಾಡಿ +ಚಂದ್ರನಿಗೆ ಚಾಡಿ ಹೇಳಿದಂತಿತ್ತು. +ಆ ಭಾಷೆ ತನಗೆ ತಿಳಿಯದಾಗಿತ್ತು. +ಅಬ್ಬೆ ಇಂತೆಂದಳು: +ನೆನಪಿದೆಯ ಕಂದ? +ಚಿಕ್ಕಂದು +ಮಡುವಿನಲ್ಲಿ ಮೂಡಿ ಮುರಿದಾಡುವ ಚಂದ್ರನ ನೋಡಿ +ಅದು ಬೇಕೆಂದು ಕಾಡಿ ಬೇಡಿ ನೀನಿತ್ತೆ. +ಹಟಮಾಡಿ +ಆಭರಣ ಕಿತ್ತೆಸೆದೆ, ಹಸ್ತ ಕಡಗವ ಎಸೆದೆ +ಅನ್ನೋದಕ ಬಿಟ್ಟು ಹಾಸಿಗೆಗೆ ಬೆನ್ನು ಹಚ್ಚದೆ +ಹಾಗೇ ಕೂತೆ. +ಭೀತ ಬೆರಗಿನ ಅಬ್ಬೆ ನಾನು- +ಚಂದ್ರ ತನ್ನ ಕಥೆಯ ಮರಿಮೀನುಗಳಿಗೆ +ಅಭಿನಯಿಸಿ ತೋರುತ್ತಾನೆ. +ನೋಡು ಕಂದಾ- ಎಂದೆ. +ನೀನು ಮಾಡಿದ್ದೇನು? +ಹರಿವಾಣದಲ್ಲಿ ನೀರಿಟ್ಟು, ಮೂಡಿದ ಚಂದ್ರನಿಗೆ +ನನಗೂ ಕಥೆ ಹೇಳೆಂದು ಅಳುತ್ತ ಕೂತೆ. +ಅತ್ತು ಅತ್ತು ನನ್ನ ಮಡಿಲಲ್ಲಿ ಮಲಗಿ ನಿದ್ದೆ ಹೋದೆ. +ನಿನ್ನ ಮುಂಗುರುಳಲ್ಲಿ ಆಟವಾಡುತ್ತ +ಚಂದ್ರ ನಿದ್ದೆ ಹೋದ. +ಬೆಳಿಗ್ಗೆ +ಹಿತ್ತಲಲ್ಲಿ ಅರಳಿದ್ದ ಮಲ್ಲಿಗೆಯ ತೋರಿಸಿ +ನೋಡು ನೋಡಬ್ಬೇ +ಹಗಲ ಚಂದ್ರನಿಗೆ ಅಣಕಿಸುತ್ತಾವೆ +ನಮ್ಮ ಹಿತ್ತಲ ಮಲ್ಲಿಗೆ +ಮಗನ ನುಡಿ ಕೇಳಿ ಸಕ್ಕರೆ ಮುಕ್ಕಿಧಂಗಾಗಿ ಅಬ್ಬೆಯ ಹೃದಯ ಅಕ್ಕರೆಯಿಂದ ಅರಳಿ ವಿಸ್ತಾರವಾಯಿತು, ಹಾಡಿದಳು; +ಬೆಳ್ಳಿ ಬೆಟ್ಟದ ಮ್ಯಾಲೆ ಕಾಡು ಹೂಗಳ ತೇರು +ಹಾಲು ಹೊಳೆ ತುಂಬಿ ಹರಿದಾವು | ನೋಡಿದರ +ಚಂದ್ರ ಅಲ್ಲಿಂದೆರಡು ಮಾರು || +ಕದ ಮುಚ್ಚಿರೆ ಬ್ಯಾಗ ಕನ್ನ ಹಾಕುತ್ತಾಳೆ +ಚಂದ್ರಲೋಕದ ಯಕ್ಷಿ ಬಂದು| ಕಂದನ್ನ +ಕಿನ್ನರ ಲೋಕಕೊಯ್ದಾಳು || +ತನ್ನ ಬಿಟ್ಟನ್ಯರನು ನೀನು ನೋಡದ ಹಾಂಗ +ಮಾಡುವಳು ಮಾಯಕಾರ್ತಿ ಯಕ್ಷಿ ಬಂದು| ನನ ಕಂದ +ಕಣ್ಣ ತೆರಿಬ್ಯಾಡ ಮೈಮರತು. +ಅಬ್ಬೆಯ ಅಕ್ಕರೆಯ ಅಮಲಿನಲ್ಲಿ ಚಂದಮುತ್ತನಿಗೆ ಯಾವಾಗ ನಿದ್ದೆ ಹತ್ತಿತೊ, ಎಚ್ಚರವಾದಾಗ ಅಂಗಳದಲ್ಲಿ ಅಬ್ಬೆಯ ತೊಡೆಯ ಮ್ಯಾಲೆಯೇ ಮಲಗಿದ್ದ. ಚಂದ್ರ ಬೆಳ್ಳಿಯ ಬೆಳಕನ್ನ ಸುರಿಯುತ್ತಲೇ ಇದ್ದ. ಈ ದಿನ ಅಬ್ಬೆ ಕುಡಿಸಿದ ಚಂದ್ರ ಕಾರಣವಾಗಿಯೋ ಏನೋ- ಬೆಳಕಿನ ಹಸಿವಾಗಿ ಥಟ್ಟನೆ ಎದ್ದು ಕೂತ. ಅಬ್ಬೆ ಬಂಡೆಗೊರಗಿ ನಿದ್ರಿಸುತ್ತಿದ್ದಳು. ಪಾದಮುಟ್ಟಿ ಧೂಳನ್ನು ತಲೆಗೊರೆಸಿಕೊಂಡು ಸಪ್ಪಳಾಗದ ಹಾಗೆ ಹೆಗಲ ಕಂಬಳಿ ಕೈಬೆತ್ತದ ಕೋಲು ತಗೊಂಡು ಜೋಗ್ತಿಯ ಹುಡುಕಿಕೊಂಡು ಹೊರಟ. ಅಬ್ಬೆ ಕನವರಿಸುತ್ತಿದ್ದಳು: +ಚಂದ್ರಲೋಕದ ಯಕ್ಷಿ ಬಂದು +ಬೊಗಸೆಯಲ್ಲಿ ಬೆಳ್ದಿಂಗಳ ತುಂಬಿಕೊಂಡು +ಚೆಲ್ಲಾಡಿದಳು +ಕೇರಿದಳು ಎಸೆದಳು +ಮುಖಕ್ಕೆ ಮೆತ್ತಿಕೊಂಡು +ತಿಂದಳು ಕುಡಿದಳು ತೇಗಿದಳು +ಈಜಿದಳು ಮ್ಯಾಲೆ ಹಾರಾಡಿದಳು +ಕಣ್ಣಲ್ಲಿ ಎದೆಯಲ್ಲಿ ತುಂಬಿಕೊಂಡಳು +ಒದ್ದೆಹಸಿರಿನ ಮ್ಯಾಲೆ ಹಾಡನ್ನ ಮಲಗಿಸಿ +ತಾನೂ ಮಲಗಿದಳು. +೧೪. ಪರಿಶೋಧನೆ ಮಾಡಿದ +ತುಂಬಿದ ಸೋಮವಾರ, ಸಪ್ಪಟ ಸರಿರಾತ್ರಿ ಶಿವನೇ ಎಂದು ಚಂದಮುತ್ತ ಹೊರಟ. ಜೋಗ್ತಿ ಕಣ್ಮರೆಗೊಂಡ ದಿಕ್ಕನ್ನ ಅಂದಾಜು ಮಾಡಿ ಅದೇ ದಿಕ್ಕಿಗೆ ಅಕ್ಕಪಕ್ಕ ನೋಡುತ್ತಾ ಗುಡ್ಡಗ್ವಾರಣ್ಯ ಬೆಟ್ಟ ಕಾಡು ಅಲೆದಾಡಿ ಹುಡುಕುತ್ತ ನಡೆದ. ದಾರಿಯಲ್ಲಿ ಸಿಕ್ಕ ಖಗಮೃಗಾದಿಗಳ ನೋಡುತ್ತ ಬೆಳ್ದಿಂಗಳಲ್ಲಿ ದಟ್ಟ ನೆರಳು ಚೆಲ್ಲಿದ್ದ ಬಂಡೆಗಳ ಬುಡದಲ್ಲಿ ಮರಗಳಲ್ಲಿ ತುದಿಯಲ್ಲಿ ಅವಿತಿರುವಳೋ ಎಂದು ಕಣ್ಣಿಂದ ಕೆದಕಿ ಬೆದಕಿ ನೋಡುತ್ತ ನಡೆದ. ಬೆಳ್ಳಂಬೆಳಕಾಗಿ ಚಿಲಿಪಿಲಿ ಜಗತ್ತು ಎಚ್ಚರವಾಗಿ ಮೂಡುಮಲೆಯಲ್ಲಿ ಸೂರ್ಯನಾರಾಯಣ ದೇವರು ಉದಯವಾಗಿ “ಅಯ್ಯೋ ಯಕ್ಷಿಯ ನಿತ್ಯದ ಪೂಜೆ ತಪ್ಪಿತಲ್ಲೋ ಶಿವನೆ!’ ಎಂದು ಅರಿವಾಗಿ ತಲೆಯಮ್ಯಾಲೆ ಕೈಹೊತ್ತು ಕುಂತ. ನಂಬಿಗೆಯಿಟ್ಟು ದೈವವ ತನಗೊಪ್ಪಿಸಿದ ಕುಲಗುರುವಿಂಗೆ, ಹಟ್ಟಿಯ ಸಮಸ್ತ ದೈವಕ್ಕೆ, ಬೂತಾಯ ಸಮ ಅಬ್ಬೆಗೆ, ಮ್ಯಾಲೆ ಯಕ್ಷಿಗೆ ದ್ರೋಹ ಮಾಡಿದೆನೆಂದು ಕೋಲಿನಿಂದ ತಲೆ ತಲೆ ಹೊಡೆದುಕೊಂಡು ಕುಂತ. ಈ ಹಿಂಗೆ ಪರಿಪರಿ ರೀತಿಯಲಿ ಪಶ್ಚಾತ್ತಾಪ ಪಡುವಲ್ಲಿ ಗಿಣಿಮರಿಯೊಂದು ತಲೆತಟ್ಟಿ ಹಾರಿಹೋಯಿತು. ತಕ್ಷಣವೆ ಜೋಗ್ತಿಯ ಹಾಡಿನ ನೆನಪು ಕೆರಳಿ ಹಾಡು ಕಲಿಯದಿದ್ದಲ್ಲಿ ಈ ಬಡ್ಡೀ ಜಲ್ಮ ಯಾಕಿರಬೇಕೆಂದು ದೃಡ ನಿಶ್ಚಯವ ಮಾಡಿ ಹೊರಟ. +‘ಹಾಡಿನ ಮುದುಕೀ’ ಎಂದು ಕೂಗು ಹೊಡೆದು ಹುಡುಕಿದ. ‘ಹಾಡಿನ ಜೋಗ್ತೀ’ ಎಂದು ಕಾಕು ಹೊಡೆದು ಹುಡುಕಿದ. ಬೆಟ್ಟ ಏರಿ ಬೆಟ್ಟ ಇಳಿದು ದಟ್ಟ ಕಾಡು ಬೆಟ್ಟ ಬಯಲುಗಳಲ್ಲಿ ಜೋಗ್ತಿಯ ಪರಿಶೋಧನೆ ಮಾಡಿದ. ಆಸರು ಬ್ಯಾಸರೆನ್ನದೆ, ಹಸಿವೆ ನಿದ್ದೆ ನೀರಡಿಕೆ ಎನ್ನದೆ ಮೂಡುಮಲೆ, ಪಡುಮಲೆ, ತೆಂಕುಬಡಗುಮಲೆ, ಹಿಲಿಮಲೆ, ಆನೆಮಲೆಗಳಲ್ಲಿ ಅಲೆದಾಡಿ ಹುಡುಕಿದ. ಸುತ್ತೂ ಸೀಮೆಯ ಹಟ್ಟಿ ಹಾಡಿ ಗೂಡುಗಳಲ್ಲಿದ್ದವರ ನಿಲ್ಲಿಸಿ ಮುದಿ ಜೋಗ್ತಿಯ ಗುರುತು ಹೇಳಿ, ಕಂಡಿರಾ? ಅಂದ. ಬೇಟೆಗಾರ ಗುಡ್ಡ ಗೊರವ ದಾಸಯ್ಯ ಜೋಗಯ್ಯಗಳ ಕೇಳಿದ. ನರಮಾನವರ ಮತ್ತೂ ಅವರಂಥವರ ಅಂಗಲಾಚಿ ಕಂಡಿರಾ? ಅಂದ. ಎಲ್ಲರೂ- +ಕಾಡು ಹುಟ್ಟಿದಾಗಳಿಂದ +ಗೂಡು ಕಟ್ಟಿದಾಗಳಿಂದ +ಇಂತೆಂಬ ಜೋಗ್ತಿಯ ಕಂಡಿಲ್ಲವಲ್ಲೋ ಶಿವನೆ! ಎಂದರು. +ನಡೆದು ನಡೆದು ಎಡಗಾಲಿಗೆ ಎಗ್ಗಾಲಮುಳ್ಳು, ಬಲಗಾಲಿಗೆ ಬಗ್ಗಾಲಮುಳ್ಳು ಚುಚ್ಚಿ ಬಾಲಕನ ಎಳೆಪಾದ ನಲುಗಿದವು. ಕಾಲೆಲ್ಲ ಕಲ್ಲಪ್ಪಳಿಸಿ ಉಪ್ಪಳಿಕೆ ಆದವು. ಧರಣಿಯ ಮ್ಯಾಲೆ ಬಿದ್ದೂ ಕೆಡೆದೂ ಒದ್ದಾಡಿಕೊಂಡು ಮುಂದೆ ಸಾಗಲಾರದೆ ಶಿವಧೋ ಎಂದು ತೆವಳುತ್ತ ಬೆಟ್ಟದಡಿಯ ಬಂಡೆಯ ಕೆಳಗೆ ಸುಸ್ತಾಗಿ ಉಸ್ಸೆಂದು ಮೈ ಚೆಲ್ಲಿದ. ಹೊತ್ತು ಬಹಳ ಹೀಗೇ ಮಲಗಿ ಎಚ್ಚರಾದಾಗ ಹಾಯೆನಿಸಿ ಜೋಗ್ತಿಯ ಹಾಡು ಗುನುಗಿದ. ಹಾಡು ಬರಲಿಲ್ಲ. ದನಿ ಏಳಲಿಲ್ಲ. ಒಳಗಿನ ಶೃತಿಪೆಟ್ಟಿಗೆ ಒಡೆದ ಹಾಗಿತ್ತು. ಶಿವನೇ ತನ್ನ ಹಾಡೆಲ್ಲಿ ಹೋಯಿತೆಂದ. ಸೊಂಟದಲ್ಲಿ ಗಣೆಯಿರಲಿಲ್ಲವಾಗಿ ಇಟ್ಟು ಮರೆತವರಂತೆ ಕೈ ಮೈ ತಟ್ಟಿ ನೋಡಿಕೊಂಡ. ಹಿಂದೆ ಮುಂದೆ ಆಸು ಪಾಸು ನೋಡಿಕೊಂಡ. ಆಮ್ಯಾಕೆ ನೆನಪಾಗಿ ಗಣೆ ಮುರಿದಳೋ ಗೋನು ಮುರಿದಳೋ! ತನ್ನ ಹಾಡು ಕಳವಾಗಿ ಹೋಯಿತೆಂದು ಉಮ್ಮಳಿಸಿ ತಳ್ಳಂಕಗೊಂಡ. +ಮಣ್ಣಲಾಡುವ ಸಣ್ಣ ಬಾಲಕನ ಹಿಗ್ಗಿ ಹಿಗ್ಗಲಿಸಿದ ಹಾಡೇ, +ಬಿಸಿಲ ಬರಗಾಲದಲಿ, ಬೆಳ್ಳಿ ಬೆಳ್ದಿಂಗಳಲಿ +ಕರುಕುರಿಗಳೊಂದಿಗೆ ಬಾಲಕನ ಮೀಯಿಸಿ ನಲಿದ ಹಾಡೇ, +ಕ್ಷಿತಿಜದಾಚೆಯ ಮಾಯದ ಜಹಜುಗಳ ತೇಲಿಸಿ ತರುತ್ತಿದ್ದ +ಮಾದಕದ ಹಾಡೇ +ಎಲ್ಲಿ ಹೋದೆ? +ಕಾಲರಾಯನ ಗಾಳಿ ಹಾರಿಸಿಕೊಂಡು ಹೋದ ಹಾಡು +ಮತ್ತೆ ಸಿಕ್ಕೋದಿಲ್ಲವೋ ಬಾಲಕಾ. +ಒಮ್ಮೆ ಹೋದರೆ ಇನ್ನೊಮ್ಮೆ-ಹಾಗೆಂದು +ಮತ್ತೆ ಅದೇ ಹಾಡು ಕಲಿಯಲಾದೀತೇ? +ಕಲಿತುಕೋಬೇಕಪ್ಪ ಖಾಲಿಯಾಗುವುದನ್ನ. +ಹಾಗೆಯೇ ಬೇರೊಂದು ಬೆಳಕು ನುಗ್ಗಿದಾಗ +ತುಂಬಿಕೊಳ್ಳೋದನ್ನ. +ಆದರೂ +ಎಳೆಯ ಕತ್ತಿನ ಮ್ಯಾಲೆ ಎಂಥ ಭಾರದ +ಅರಿವನಿಟ್ಟೆ ಶಿವನೆ! +ಇದೇ ಚಿಂತೆಯಲ್ಲಿ ಚಂದಮುತ್ತ ಮತ್ತೆ ಕಣ್ಣು ಮುಚ್ಚಿದ. ಎಚ್ಚರಾಗಿ ಕಣ್ಣು ತೆರೆದಾಗ ಎದುರಿಗೆ ಎಂಥಾ ಹೊಯ್ಕಿದೆ ಶಿವನೆ! ಎಳೆಯ ಮಿಡಿ ನಾಗರ ಜಡೆಗಳ ಸುತ್ತಿಕೊಂಡು ಹೆಣ್ಣು ಶಿವನ ಹಾಗೆ ಕಣ್ಣು ಮುಚ್ಚಿಕೊಂಡು ಎದುರಿಗೇ ಕುಂತಿದ್ದಾಳೆ; ಯಾರು? ಆ ಮುದಿ ಜೋಗ್ತಿ! ‘ಜೋಗ್ತೀ’ ಎಂದು ಕಿರಿಚಿ ಚಂದಮುತ್ತ ಹಾರಿ ಅವಳಿದ್ದಲ್ಲಿಗೆ ಹೋಗುವಷ್ಟರಲ್ಲಿ ಇವನ ಗುರುತು ಹಿಡಿದು ಅಪಾಯವನರಿದು ಪಾರಾಗುವ ಉಪಾಯವ ನಿಶ್ಚಯಿಸಿಕೊಂಡೇ +ಗವಿಯ ಬಾಗಿಲ ಬಳಿ ನಿಂತು ಬಾಯಿಭಾಷೆ ತಾಳಮೇಳದಲ್ಲಿ | +ಕೈಸನ್ನೆ ಕಣ್ಣು ಸನ್ನೆಯ ಮಾಡಿ ಕರೆದಳು | +ಕರೆದದ್ದೇ ಚಂದಮುತ್ತ ಓಡೋಡಿ ಬಂದು- +“ನನಗೆ ನಿನ್ನ ಹಾಡು ಕಲಿಸಿಕೊಡು ಜೋಗ್ತೀ”- ಎಂದು ಕೈಮುಗಿದು ಮುಂದೆ ನಿಂತರೆ ತನ್ನ ಕೋಲಾಡಿಸಿ ಅವನ ದೂರ ನಿಲ್ಲಿಸಿ- +“ಎಲವೆಲವೋ ಗೊಲ್ಲ ಗೋಕುಲರ ಪಿಳ್ಳೆ, ಯಾವ ಹಾಡು? +ಯಾರು ನೀನು? ನಡೆ ನಡೆ” ಎಂದು ಗದರಿದಳು. +ಕುಲದೂಷಣೆ ಮಾಡಿದಳಲ್ಲಾ ಹಾಳು ಮುದುಕಿ ಎಂದು ಉಕ್ಕುವ ಕೋಪವ ನಿಯಂತ್ರಿಸಿ +“ನನ್ನ ಗಣೆ ಮುರಿಯಲಿಲ್ಲವೆ ನೀನು?” ಎಂದ. +“ಗಣೆ ಬೇಕಾಗಿ ಬಂದೆಯಾ? ಹಾಗಿದ್ದರಿಗೊ ಬಾ”- ಎಂದು ಹಾಡಾಡುತ್ತ ನಿರಾಶೆಗೊಂಡ ಚಂದಮುತ್ತನ ಆಳವಾದ ಕಂದಕದ ಬಳಿಗೊಯ್ದು ಕೆಳಗೆ ನೋಡೆಂದಳು. +ನೋಡಿದ. +“ಏನು ಕಂಡೆ?” +“ಆಳವಾದ ಕೊಳ್ಳ ಕಂಡೆ.” +ಅದು ನಿನ್ನ ಪೂರ್ವಜರ ಲೋಕ. ಅಲ್ಲಿದೆ ನಿನ್ನ ಗಣಿ ಹೋಗೆಂದು ಕೊಳ್ಳಕೆ ಅವನ ತಳ್ಳಿ ನಿರುಮ್ಮಳದಿಂದ ಮಾಯವಾದಳು ನೋಡು, ಯಾರು? ಆ ಮಾಯಕಾರ್ತಿ ಮುದಿಜೋಗ್ತಿ! +ಪುಣ್ಯ ಚೆನ್ನಾಗಿತ್ತು ಬಿದ್ದ ಮ್ಯಾಲೆ ಬೋಧೆತಪ್ಪಿ ಜೀವಂತವಿದ್ದ. ಎಚ್ಚರಾದ ಮ್ಯಾಲೆ ತಾನು ಕೆಸರ ನೀರಲ್ಲಿದ್ದುದು ಅರಿವಿಗೆ ಬಂತು. ಸುತ್ತ ಮಾಯದ ಕಗ್ಗತ್ತಲು. ಮೈತುಂಬ ನೋವು, ಸಂದು ಕೀಲುಗಳಲ್ಲಿ ನೋವು ಗಾಯಗಳಾಗಿ ‘ಎವ್ವಾಬೇ’ ಎಂದು ನರಳಿದ. ಆಸುಪಾಸು ಮಾನವರಿರಲಿ, ಒಂದು ಮೃಗ ಜಾತಿ ಒಂದು ಕೀಟ ಜಾತಿಯ ಸುಳಿವೂ ಕೇಳಿಸಲಿಲ್ಲ. ಎಲ್ಲ ಸಹಿಸ್ಕೊಂಡೇ ಕಷ್ಟಪಟ್ಟು ತೆವಳಿಕೊಂಡು ದಂಡೆಗೆ ಬಂದುಬಿದ್ದ. ಯಾರಾದರೂ ಬಂದು ಎತ್ತಿ ಉದ್ಧಾರ ಮಾಡ್ಯಾರೆಂದು ಜೋರಾಗಿ ನರಳಿದ. ಯಾರೂ ಬಾರದ್ದಕ್ಕೆ ಮಾಯದಲ್ಲಿ ಬೆಳೆಸಿದ ಅಬ್ಬೆಯ ನೆನೆದು ಗಳಗಳನೆ ಅತ್ತ. +ಕಣ್ಣಮುಂದೆ ನೆನಪಿನಲ್ಲಿ ಮುದಿಜೋಗ್ತಿ ಸುಳಿದಳಾಗಿ ಕಣ್ಣಿಗೆ ಕಾರ ಎರಚಿದಂತಾಯ್ತು, ಅದೇ ಘನವಾದ ಕಗ್ಗತ್ತಲು ಕರಗದೆ ಹಾಗೇ ಇದೆ. ಎಲಾ ಕೃತಕಿ ಮುದಿರಂಡೆ ನೆನಪಿಗೆ ಸುಳಿದಳಲ್ಲಾ ಎಂದು ರವರುದ್ರಕೋಪಗೊಂಡ. +ಜೋಗ್ತಿ ಘಾತಿಸಿದ ಕತಿ +ಹ್ಯಾಂಗೆ ಹೇಳಲೋ ಶಿವನೇ, +ಆ ಕಪಟಿಯ ಉಪಟಳದಲ್ಲಿ +ನನ್ನ ದುನಿಯಾ ಧೂಳಿಪಟವಾಯ್ತು. +ಗಣೆ ಮುರಿದು ಹಾಡು ಕಸಿದುಕೊಂಡಳಲ್ಲೋ ಬೋಳೇಶಂಕರಾ. +ಎಂದು ಹುಚ್ಚು ಕೋಪದಲ್ಲಿ ಕೊತಕೊತ ಕುದ್ದು +ನೊರನೊರನೆ ಹಲ್ಲು ಕಡಕೊಂಡ. +ಆದರೆ ಮಾರನೆ ಕ್ಷಣವೆ +ಮನವಿಡೀ ಮುತ್ತಿತು ಅವಳ ಹಾಡಿನ ನೆನಪು. +ಹಾವಿನ ವಿಷದಂತೆ ನಿನ್ನ ಹಾಡು ಮುದಿಜೋಗ್ತಿ. +ಕಚ್ಚಿದಲ್ಲಿಂದ ಮ್ಯಾಲೇರುತ್ತದೆ. +ತನುವಿನ ಮನದ ಉದ್ದಗಲಕ್ಕು ವ್ಯಾಪಿಸಿ +ನಿದ್ದೆಯ ಬರಿಸಿ ನನ್ನ ಕೊಲ್ಲುತ್ತದೆ. +ಕಳೆದುಕೊಂಡಿದೆ ನನ್ನ ಕನಸು. +ಈಗ ಉಳಿದಿರೋದು: +ಅದು ತಪ್ಪಿಸಿಕೊಂಡ ದಾರಿ +ಹತಾಶೆಯ ಕಗ್ಗತ್ತಲು +ಹಾದಿ ನೋಡುವ ಎರಡು ಕಣ್ಣು. +-ಎಂದು ಆರುಮೂರೆಂಬತ್ತು ಚಿಂತಿಸಿ ಧಾರಾವತಿ ಕಣ್ಣೀರು ಸುರಿಸಿದ. +ಕಾಲವೆಷ್ಟೋ ಸಂದಾಯವಾದರೂ ಕಗ್ಗತ್ತಲು ಸರಿಯಲಿಲ್ಲ. ಇದ್ಯಾವುದೋ ನಾಯಿ ನರಕವಿರಬೇಕು. ತಮಂಧಘನ ಘನಾಂದಾರಿಕಗ್ಗತ್ತಲು. ಕೈಗೆ ತಾಗುವ ಕತ್ತಲು. ಮೈಗೆ ಮೆತ್ತುವ ಕತ್ತಲು, ಕತ್ತಲೆಗೆ ನಕ್ಷತ್ರಗಳೂ ನಂದಿಹೋಗಿವೆ. ಜಗತ್ತು ಸುಟ್ಟು ಕರಕಾಗಿ ಬಿದ್ದಿದೆ. ಮನೆಸ್ವಾಮಿ ಚಂದಪ್ಪನ ನೆನೆದ. ನೆನೆದೊಡನೆ ಮನಸ್ಸಿನಲ್ಲಿ ಬೆಳ್ಲಗೆ ಮೂಡಿದನಲ್ಲ, ಕ್ಷಣಮಾತ್ರದಲ್ಲಿ ಮನಸ್ಸಿಗೂ ಕತ್ತಲಾವರಿಸಿ ಚಂದಪ್ಪನೂ ಇದ್ದಿಲಾದ. ಹತಾಶನಾಗಿ ಚಂದಮುತ್ತ ಕಣ್ಣೆಂಬ ನಿರಿಂದ್ರಿಯ ಮುಚ್ಚಿಕೊಂಡು ಬಿದ್ದ. ಮುಚ್ಚಿಕೊಂಡರೆ ಒಳಗೂ ಕತ್ತಲು. ತಾನೆಂಬ ಸಣ್ಣ ಹಂಕಾರವಿನಾ ಬೇರೇನೂ ಉಳಿಯದೆ, ಇಷ್ಟಾದ ಮ್ಯಾಕೆ ಅದಿನ್ಯಾಕೆಂದು ಅದನ್ನೂ ಶಿವನಡಿಗೆ ಅರ್ಪಿತ ಮಾಡಬೇಕೆಂದು ಸುತ್ತ ಕೈಯಾಡಿಸಿದ. ಮಾರುದ್ದ ಕೋಲು ಸಿಕ್ಕಿತು. ಮಸೆದ ಹಾಗೆ ತುದಿ ಚೂಪಾಗಿತ್ತು. ಸಾಕೆಂದು ಚುಚ್ಚಿಕೊಳ್ಲಲು ಉದರಕ್ಕೆ ಗುರಿ ಹಿಡಿದು ತಂದೆ ತಾಯಿಯ ನೆನೆದ, ಬಂಧು ಬಳಗವ ನೆನೆದ, ಜಾತಿ ಕುಲದವರ ನೆನೆದ, ವಾರಿಗೆಯವರ ನೆನೆದ, ಸತ್ತ ಮುದು ಹಸು ಪುಣ್ಯಕೋಟಿಯ ನೆನೆದ, ಕಾಳ್ನಾಯಿ ಬಿಳಿನಾಯಿಗಳ ನೆನೆದು ನಮ್ಮ ಋಣ ಇಂದಿಗೆ ಸಂದಾಯವಾಯಿತೆಂದು ಮನೆಸ್ವಾಮಿ ಚಂದಪ್ಪನ ನೆನೆದು ರಭಸದಿಂದ ಇರಿದುಕೊಳ್ಳುವಷ್ಟರಲ್ಲಿ, “ತಡಿ ತಡಿ ಯಾಕವಸರ?” ಎಂದು ಘನವಾದ ಮೌನವ ಸೀಳಿದ ದನಿ ಕೇಳಿಸಿತು. ಜೊತೆಗೇ ಗಲಿರು ಗಲಿರು ಅಂತ ಜಂಗಿನ ಸದ್ದು ಕೇಳಿ ಬಂತು. ನೋಡಿದರೆ ಕತ್ತಲೆಗೆ ಕಣ್ಣು ಮೂಡುವಂತೆ ಎದುರಿಗೆರಡು ಹಸಿರು ಜ್ಯೋತಿ ನಡೆದು ಬರುವಂತೆ ಕಂಡವು. ಅವು ಸಮೀಪ ಬಂದ ಬಂದ ಹಾಗೆ ತನಗೇ ಕಣ್ಣು ಬಂದಂತೆ ಬೆಳಗಾಯಿತು. ನೋಡಿದರೆ ಎದುರಿಗೆಮೂಜಗದ ಸೋಜಿಗ ಮೂರು ಕಾಲಿನ ಪ್ರಾಣಿಯಿದೆ! ಮುಖದಲ್ಲೆರಡು ಕಣ್ಣು ಬಿಟ್ಟರೆ ಉಳಿದೆಲ್ಲ ಮೂಳೆಮೂಳೆಯಾದ, ಮೂಳೆಯಿಂದ ರೇಖೆಗಳಿಂದ ಅಸ್ಥಿಪಂಜರ ರೂಪಿಯಾದ ಈ ಪ್ರಾಣಿ ಅಥವಾ ಗೋರಿಯಿಂದೀಗಷ್ಟೇ ಎದ್ದುಬಂದಂಥ ಅಲೌಕಿಕ ಜೀವ ಎದುರು ನಿಂತಿದೆ! ಚಂದಮುತ್ತನ ಹೃದಯ ಎದೆಗೆ ಡಬ ಡಬ ಹೊಡೆಯಿತು. ತುಟಿಗಳಿಲ್ಲವಾಗಿ ಸದಾ ನಗುವಂತಿದ್ದ ಅದರ ಮಾತು ಕೇಳಿಯೇ ಜೀವ ಬಂತು. +“ನಿನ್ನ ಕೈಲಿರೋದು ಏನಂದುಕೊಂಡೆ?” +-ಎಂದಿತು ಪ್ರಾಣಿ. ತಕ್ಷಣ ನೋಡಿಕೊಂಡ. ಕೈಯಲ್ಲಿ ದೀರ್ಘವಾದ ನೀಳವಾದ ಕೊಂಬಿದೆ. +“ಅದು ಯಾರ ಕೊಂಬೆಂದು ಬಲ್ಲೆ?” +“ಗೊತ್ತಿಲ್ಲ ಶಿವಪಾದವೆ” +“ಅದು ನಿನ್ನ ಸತ್ತ ಪುಣ್ಯಕೋಟಿಯ ಕೊಂಬು. +ತಿಂಗಳ ರಾಗ ನುಡಿಸಲು ಅದಕ್ಕಿಂತ ಉತ್ತಮ ಗಣೆ ಬೇಕೇನೋ ಬಾಲಕ?” +೧೫. ಎಂಥಾ ಲೋಕವಯ್ಯಾ! +ಪತನಗೊಂಡ ಚಂದಮುತ್ತನಿಗೆ +ಬೋಧೆ ಬಂದು ಸ್ಮೃತಿಯಾಗಿ ಕಣ್ಣು ತೆರೆದರೆ +ಶಿವ ಶಿವಾ ಎದುರಿಗೆ ಎಂಥಾ ಲೋಕವಯ್ಯಾ! +ಮ್ಯಾಲೆ ಸೂರ್ಯನಾರಾಯಣಸ್ವಾಮಿಯಿಲ್ಲ +ಮನೆದೇವರು ಚಂದಪ್ಪನಿಲ್ಲ +ಹೇಳ ಕೇಳುವುದಕ್ಕೆ ಯಾರೂ ಇಲ್ಲ. +ಬಯಲ ಬಸಿರಲ್ಲಿ ನೆಲೆಗೊಂಡ ಸಾವಿನಂಥ +ಘನಾಂದಾರಿ ಮೌನದ ಲೋಕವಯ್ಯಾ! +ಹಗಲೆಂದರೆ ಹಗಲಲ್ಲ ರಾತ್ರಿಯೆಂದರೆ ರಾತ್ರಿಯಲ್ಲ +ಹಸಿರು ಹಸಿರಂತಿಲ್ಲ, ಮರವು ಮರದಂತಿಲ್ಲ, +ಬೀಸದ ಗಾಳಿಯಿದೆ, ಹರಿಯದ ನೀರಿದೆ. +ಕದಡಿದ ಕನಸಿನ ಹಾಗೆ ಮ್ಯಾಲೆ ಆಕಾಶವಿದೆ +ಲೋಕದ ಶಾಪಂಗಳು ಆಕಾರಗೊಂಡು +ವಿಕಾರಗೊಂಡು ಕೆಳಗೆ ಬಂದೈದಾವೆ. +ಹರ್ಷಂಗಳು ಇದ್ದಿಲಾಗಿವೆ. +ಆನಂದಗಳು ಭಸ್ಮವಾಗಿವೆ. +ಮೂಲೆ ಮೂಲೆಗೆ ಕಾಮನ ಬಿಲ್ಲು ಮುರಿದು +ಒಟ್ಟಿದ ಗೊಬ್ಬರ ಹಾಂಗೇ ಇದೆ. +ಕಣ್ಣು ತೆರೆದರೆ ಕಣ್ಣಿಗೊತ್ತುವ ಲೋಕ +ಮುಚ್ಚಿದರೆ ಎದೆಗಡರಿ ನೋಯಿಸುವ ಲೋಕ +ಬಂದ ದಾರಿ ಯಾವುದು ಶಿವನೇ +ಹೋಗುವ ದಾರಿ ಯಾವುದೆಂದು +ಎಲ್ಲಿಂದೆಲ್ಲಿಗೆ ಬಂದೆನೆಂದು +ಇದ್ಯಾವ ದೇಶ ಯಾವ ಲೋಕ ಯಾವ ನರಕವೆಂದು +ಹಿಂಡನಗಲಿದ ಕರುವಿನಂತೆ ಚಂದಮುತ್ತ +ಗಾಬರಿಯಲ್ಲಿ ಅತ್ತಿತ್ತ ಓಡಾಡಿದ. +ಅಡರಿದ ಭಯದಲ್ಲಿ ನಿಂತಲ್ಲಿ ನಿಲ್ಲಲಾರದೆ ಕೂತಲ್ಲಿ +ಕೂರಲಾರದೆ ಗೊತ್ತು ಗುರಿ ಗೊತ್ತಾಗದೆ ನಡೆಯಲಾರದೆ +ಬದುಕಿರುವೆನೋ ಸತ್ತಿರುವೆನೋ ಎಂದು +ತನ್ನ ತಾನು ಗುದ್ದಿ ನೋಡಿಕೊಂಡ. +ತನ್ನ ತಾನು ಚಿವುಟಿ ನೋಡಿಕೊಂಡ. +ಸತ್ಯುಳ್ಳ ಸದಾ ಶಿವಲಿಂಗದೇವಾ ಎಂದು +ಕರುಳು ಕಿತ್ತು ಬಾಯಿಗೆ ಬರುವಂತೆ ಕಿರಿಚಿದ. +ಕಿರಿಚಿದ್ದು ತನಗೇ ಕೇಳಿಸದೆ, ತಾನು ಸತ್ತಿರುವೆನೆಂದು ಖಾತ್ರಿಯಾಗಿ +ಭೂಮಿ ಆಕಾಶ ಅದಲು ಬದಲಾದ +ಯಮಧರ್ಮರಾಯನ ಲೋಕವಿದೆಂದು +ಹತಾಶನಾಗಿ ಬಿದ್ದ. +ಶಿವನ ದಯೆ, ತಂಗಾಳಿ ಬೀಸಿ ನಿರ್ಜೀವ ಲೋಕದಲ್ಲಿ ಜೀವ ಸಂಚಾರವಾದಂತೆ ದೂರದಿಂದ ಯಾರೋ ಹಾಡುತ್ತಿದ್ದುದು ಕೇಳಿಸಿತು. ಎಳೆ‌ಎಳೆಯಾಗಿ ಬರುತ್ತಿದ್ದ ದನಿಯ ಸುಳಿ ಹಿಡಿದು ಚಂದಮುತ್ತ ಹೊರಟ. +ಕ್ಷಿತಿಜದೀಚೆ ಎತ್ತರದ ಬೆಟ್ಟಕ್ಕಂಟಿ ಸಾವಿರದೆಂಟು ಕಂಬಗಳ ಶಿವದೇವಾಲಯ. ಕಂಬಗಳ ಮ್ಯಾಲೆ ಛಾವಣಿಗೆಯಾಗಿ ನೀಲಿಮ ಆಕಾಶವನ್ನೇ ಹೇರಿದ್ದಾರೆ. ಒಮ್ಮೆ ಒಳಹೊಕ್ಕರಾಯ್ತು ಎತ್ತ ನೋದಿದತ್ತ ಎತ್ತರವಾದ, ಆಕಾಶವ ಹೊತ್ತ ಕಂಬಗಳೇ ಕಾಣಿಸುತ್ತಿದ್ದಾವೆ. ಗರ್ಭಗುಡಿಯ ಗುಂಭದಲ್ಲಿ ಕತ್ತಲೆ ವಿನಾ ಮತ್ತೇನು ಕಾಣುತ್ತಿಲ್ಲ. ಅದರ ಮುಂದೆ ಶಾಂತಚಿತ್ತ ನಂದಿ ಮಾತ್ರ ಮೆಲುಕಾಡಿಸುತ್ತ ಮಲಗಿದೆ. ಅದರೀಚೆ ಡೊಳ್ಳುಹೊಟ್ಟೆಯ ದಡಿಯನೊಬ್ಬ ಹಾಡಿನೆಳೆಯ ಹಿಡಿದೆಳೆಯುತ್ತ ಶಾವಿಗೆಯೆಳೆಯಂತೆ ಸಣ್ಣದಾಗಿ ಹೊಸೆಯುತ್ತ ಬಹಳ ಎಚ್ಚಳದಿಂದ ಕುಂತಿದ್ದಾನೆ. ಈಚಲ ಮರದಂತೆ ತಲೆಕೆದರಿ ಕಾದ ಕಬ್ಬಿಣದ ಉಂಡೆಗಾತ್ರದ ಕಣ್ಣು, ಮುಖವು ತುಸು ಅಲುಗಿದರೂ ಕಳಚಿ ಬೀಳುವಂತಿದ್ದಾವೆ. ಎಲಡಿಕೆ ಸೀರ್ಪನಿಯಲ್ಲಿ ದನಿ ಒದ್ದೆಯಾಗಿ ಒಡೆದು ಬರುತ್ತ ಇದೆ. ಮೈಮ್ಯಾಲೆ ಸೊಂಟ ವಿನಾ ಚಿಂದಿ ಬಟ್ಟೆಯಿಲ್ಲ. ಹಾಡಿನೆಳೆ ಅವನ ನಾಭಿಕುಹರದ ಆಳದಲ್ಲಿ ಅಡಗಿದ್ದುದು ಸಿಕ್ಕದೆ ಚಿತ್ತವ ಏಕೀಭವಿಸಿ ಒಳಗೆ ಹೆಕ್ಕಿ ಹೆಕ್ಕಿ ಹುಡುಕುತ್ತಿದ್ದಾನೆ. ಇಡೀ ಶಿವಾಲಯದ ಗುಂಭ ತಂಬೂರಿಯ ಮಿಡಿದಂತೆ ಆಧಾರಶೃತಿಯ ಮಿಡಿಯುತ್ತಾ ಇದೆ. +ಇಂತೀಪರಿ ಸಂಗೀತದ ತಯಾರಿ ನಡೆದಿರುವಲ್ಲಿ ಕಂಬ ಕಂಬಗಳ ಸಂದಿಯಲ್ಲಿ ಬಚ್ಚಿಡಲಾಗದ ತಪ್ಪುಗಳಂಥ ಬಗೆ ಬಗೆ ಜೀವಂಗಳು, ಅವಯವಗಳು ಅದಲು ಬದಲಾಗಿ ವಿಕಾರಗೊಂಡ ಜೀವಂಗಳು, ನೀರುಗುಳ್ಳೆಯಂಥ ಕಣ್ಣು ಪಿಳಿ ಪಿಳಿ ಬಿಡುತ್ತಿದ್ದ ಅಸಹಾಯ ಜೀವಂಗಳು ಮಹಾನುಭಾವನ ಸಂಗೀತಕ್ಕಾಗಿ ಕಾಯುತ್ತಾ ಇವೆ. ಯಾವುದೋ ದೇವತೆಗೆ ಶರಣಾಗಿ ಮಂತ್ರಭಾವಿತದಿಂದ ಕರೆದು, ಬಾರದ ಹಾಡಿಗೆ ಬಂದೊದಗೆಂದು ಅಂಗಲಾಚುವಂತೆ, ಒಲಿದು ಬಂದು ಅನುಗ್ರಹಿಸಬೇಕೆಂದು ವಿನಂತಿಸುವಂತೆ ಆಲಾಪವ ಸುರುಮಾಡಿದ. ಚಂದಮುತ್ತ ಮೆಲ್ಲಗೆ ಶಿವಾಲಯವ ಪ್ರವೇಶಿಸುತ್ತಲೂ ಅಲ್ಲಿದ್ದ ವಿಕಾರ ಜೀವರಾಶಿ ಹುಬ್ಬೇರಿಸಿ ಏರಿದ ಹುಬ್ಬು ಏರಿದ ಹಾಗೇ ಕಿರುಗಣ್ಣಲ್ಲಿ ಅರೆಗಣ್ ಬಿಟ್ಟು ಇವನನ್ನೇ ಕಣ್ಣಿಂದಿರಿಯತೊಡಗಿದವು. ಕದ್ದವನಲ್ಲ, ಕನ್ನ ಹಾಕಿದವನಲ್ಲ ಶಿವ ಶಿವಾ ಇವ್ಯಾಕೆ ತನ್ನ ಹಿಂಗೆ ನೋಡುತ್ತಾವೆಂದು ಚಂದಮುತ್ತನ ಜೀವ ಜಲ್ಲೆಂದವು. ಕಂಪಿತನಾಗಿ ಮುದುಡಿ ಕಂಬವೊಂದರ ಮರೆಯಲ್ಲಿ ಹುದುಗಿದ. +ಮಹಾನುಭಾವನ ಧ್ವನಿ ಆಗಲೇ ಹದಕ್ಕೆ ಬಂದು ಪರಿಚಿತ ಸೀಮೆಗಳಲ್ಲಿ ಸಹಜವಾಗಿ ಸಂಚರಿಸುತ್ತ ಆನಂದಲೋಕಂಗಳ ಸೃಷ್ಟಿ ಮಾಡತೊಡಗಿತು. ಈ ಹೊಸ ಸೃಷ್ಟಿಗೆ ಕ್ಷಿತಿಜದಾಚೆಗಿನ ಯಾವುದೋ ಶಕ್ತಿಕೇಂದ್ರವಿದೆಯೆಂದು ಹಾಡು ಕೇಳಿದವರಿಗೆ ತಿಳಿಯುವಂತಿತ್ತು. ಹಾಡುಗಾರಿಕೆಗೆ ತೀವ್ರವಾದಂತೆ ಶಿವ ಶಿವಾ, ಶಿವಾಲಯದ ಕಂಬಗಳು ಬಗೆ ಬಗೆ ವಾದ್ಯಗಳ ದನಿಮಾಡಿ ಹಾಡಿಗೆ ಸ್ವರ ಮೇಳ ಒದಗಿಸಿದವು. +ಇಂತೀಪರಿ ಹಾಳುಲೋಕ ಕೈಲಾಸವಾಗುತ್ತಿರುವಲ್ಲಿ ಚಂದಮುತ್ತ ಮೈಯೆಲ್ಲ ಕಿವಿಕಣ್ಣಾಗಿರಲು ಮಹಾನುಭಾವ ಥಟ್ಟನೆ ಹಾಡು ನಿಲ್ಲಿಸಿ, +“ಆ ಕಂಬಕ್ಕೇನು ಧಾಡಿಯಾಗಿದೆ? ಅದ್ಯಾಕೆ ದನಿಗೂಡುತ್ತಿಲ್ಲ?” -ಎಂದು ರವರುದ್ರಗೋಪದಲ್ಲಿ ಕಿರಿಚಿ ಚಂದಮುತ್ತ ಮರೆನಿಂತ ಕಂಬವ ಗುರಿಮಾಡಿ ಕಣ್ಣಿಂದಿರಿದ. ಹಾಡು ಹರಿಗಡಿದು ಇಡೀ ಶಿವಲೋಕ ನಿಶ್ಯಬ್ದವಾಗಿ ಕಟ್ಟಿದ್ದ ಕೈಲಾಸ ಕುಸಿದು ಮತ್ತೆ ಹಾಳು ಲೋಕವಾಯಿತು. +“ನರಮಾನವನೊಬ್ಬ ಮುಟ್ಟಿ ಆ ಕಂಬ ಮೈಲಿಗೆಯಾಗಿದೆಯಾಗಿ ಅದು ಮಹಾ ಸಂಗೀತದಲ್ಲಿ ಭಾಗಿಯಾಗುತ್ತಿಲ್ಲ ಶಿವಪಾದವೇ” +-ಎಂದು ಯಾರೋ ದನಿಯೆತ್ತಿದರು. +“ಯಾರು ಆ ಪಾಪಿ?” +ಅಲ್ಲಿದ್ದ ಜೀವರಾಶಿಗಳ ನೀರುಗುಳ್ಳೆ ಕಣ್ಣುಗಳೆಲ್ಲ ಈಗ ಚಂದಮುತ್ತನ್ನ ಇರಿಯತೊಡಗಿದವು. ಹುಡುಗ ಗಾಬರಿಯಲ್ಲಿ ಕರುವಿನಂತೆ ಥರಥರಗುಡುತ್ತ ಸದರಿ ಕಂಬದ ಮರೆಯಿಂದ ಹೊರಬಂದು ಕರುವಿಗಿರುವಂಥ ದೊಡ್ಡ ಕಣ್ಣು ತೆರೆದು ಶಿರಬಾಗಿ ಕರಮುಗಿದು ಹ್ಯಾಗೋ ಕಾಲೂರಿ ನಿಂತ. ಮಹಾನುಭಾವ ಉರಿದುರಿದು ಇನ್ನೇನು ಸಿಡಿಯಲಿದ್ದ ಕಣ್ಣುಗಳಿಂದ ಇವನ ನೋಡಿದ. ಹೊತ್ತಿಕೊಂಡ ಹುಬ್ಬು ಹೊಗೆಯಾಡುತ್ತಿದ್ದವು. ಗುಡುಗಿದ; +“ಯಾರು ನೀನು?” +“ದಯವಾಗು ಶಿವಪಾದವೇ. ಕುಲದಲ್ಲಿ ಗೊಲ್ಲ, ಜಾತಿಯಲ್ಲಿ ಹಾಲುಮತ. ಶಿವಾಪುರ ಅನ್ನತಕ್ಕ ಘನವಾದ ಹಟ್ಟಿಯ ಚಂದಮುತ್ತ ನಾನು.”-ಎಂದು ನಿಂತಲ್ಲೇ ಧರಣಿಗೆ ಬಿದ್ದು ಸಾಷ್ಟಾಂಗ ಬಿನ್ನಪ ಎರಗಿದ. +“ಥೂ ಚಂಡಾಲ ನನ್ನ ಒಂದು ವರ್ಷದ ತಪವ ಹಾಳು ಮಾಡಿದೆ.” ಎಂದು ನಿಂದಕದ ನುಡಿಯಾಡುತ್ತ ತೊಪಕ್ಕೆಂದು ಚಂದಮುತ್ತನ ಮ್ಯಾಲೆ ಉಗಿದು ಅದೂ ಸಾಲದೆಂದು ತಿರಸ್ಕಾರದಿಂದ ನೋಡುತ್ತ ಗರ್ಭಗುಡಿಯ ಕರಿಘನಲಿಂಗದಂಥ ಕಗ್ಗತ್ತಲಲ್ಲಿ ಮಾಯವಾದ. ಶಿವಾಲಯ ವಿನಾ ಉಳಿದೆಲ್ಲ ವಿಕಾರ ಜೀವಲೋಕ ಅವನೊಂದಿಗೇ- ನಿಂತ ನಿಂತಲ್ಲೇ ಮಾಯವಾಯಿತು. +೧೬. ವಿಕಾರ ರಾಗಂಗಳು +ಚಂದಮುತ್ತ ಒಳಗೆ ಹೋಗಲು ಧೈರ್ಯಸಾಲದೆ ಮಹಾನುಭಾವ ಹೊರಗೆ ಬಂದಾನೆಂದು, ಬಾರದಿರನೆಂದು, ಬಂದೇ ಬರುವನೆಂದು, ಯಾವಾಗ ಬರುವನೋ ಮಹಾರಾಯನೆಂದು, ಬಂದಾಗ ಬರಲೆಂದು ಗರ್ಭಗುಡಿಯ ದ್ವಾರಬಾಗಿಲು ಕಣ್ಣಾಗಿ ಕಾಯುತ್ತಾ ಕೂತ. ಬರುವಂತೆ ಮಾಡಲೆಂದು ಶಿವನಾಮವ ನಾಲಿಗೆಯ ಮ್ಯಾಲೆ ತೇಯುತ್ತ ಸಮಯದ ಪರಿವೆ ಮರೆತು ಕೂತ. ಹೆಗಲ ಕಂಬಳಿ ಕೈಯ ಕೋಲು ಹಿಡಿದ ಹಾಗೇ ಕುಳಿತು ಕಣ್ಣು ಮುಚ್ಚಿದ. ಕಂಬಳಿ ವಾಸನೆಗೆ ಕಣ್ಣಲ್ಲಿ +ಸ್ವಪ್ನವಾಗಿ- +ಓಡೋಡಿ ಬಂದೆವು +ಕುರಿಮಂದೆ, ದನಕರು ಅಟ್ಟಿಸಿಕೊಂಡವರಂತೆ. +ಚಂದಮುತ್ತ ಗಕ್ಕನೆ ಎಳೆಹುಲ್ಲು ಬೆಳೆದ ಗೋಮಾಳವಾಗಿ +ಅಲುಗದೆ ಮಲಗಿದ. +ಓಡೋಡಿ ಬಂದೆವು ಏಳೇಳು ಹಿಂಡು ಕುರಿ +ಏಳೇಳು ಹಿಂಡು ದನ. +ಕೆಂದಾಕಳು ಕಪಿಲೆ +ಹಣಿಚಿಕ್ಕಿ ಹೋರಿ ನಂದಿ +ಕಾಳೆಮ್ಮೆ ಜಕ್ಕಿ +ಕಂದು ನಾಯಿ ಕರಿಬಿಳಿ ನಾಯಿ +ತನ್ನ ಮ್ಯಾಲೆ ಬೆಳೆದಿದ್ದ ಗರಿಗರಿ ಗರಿಕೆಯ ತುಳಿಯುತ್ತ +ಮಿರುಮಿರುಗುವ ಇಬ್ಬನಿಯ ನೆಕ್ಕುತ್ತ +ಬಂದೆವು. +ಹಿಂದಿನಿಂದ ತಾಯಿ ಜಗಳವಾಡುತ್ತಾ +ಶಿವನಿಗೆ ಶಾಪ ಹಾಕುತ್ತ ಕಳೆದ ಕರುವಿನ ಈದ ಹಸುವಿನಂತೆ ಬರುತ್ತಿದ್ದರೆ, +ಅವಳಿಗೂ ಹಿಂದೆ ಮುದಿಜೋಗ್ತಿ +ಬೆಂಕಿ ಹತ್ತಿದ ಕಾಡಿನಂತೆ +ಸುಡುತ್ತಾ, ಸುತ್ತ ಬೆಳಗುತ್ತಾ +ಬರುತ್ತಿರುವಲ್ಲಿ +ಅವಳ ಬೆಂಕಿಯಲ್ಲಿ ಮಹಾನುಭವ +ಕೀಡೆಯಂತೆ ಹುರುಪಳಿಸುತ್ತಾ ಕಿರುಚುತ್ತಾ +ಹೊರಳಾಡುತ್ತಿರುವುದ ಕಂಡು +ಸ್ಮೃತಿಗೆ ಬಂದ. +ಸ್ಮೃತಿಗೆ ಬಂದು ನೋಡಿದರೆ ಗರ್ಭಗುಡಿಯ ಒಳಗಡೆಯಿಂದ ಮಹಾನುಭಾವ ನಿಜವಾಗಿ ಕಿರಿಚುತ್ತಿದ್ದಾನೆ! “ಕಾಪಾಡಿರೋ” ಎಂದು, “ಶಿವಧೋ” ಎಂದು ಗೋಳು ಗೋಳೆಂದು ದುಃಖವ ಮಾಡುತ್ತಿದ್ದಾನೆ! ಅವನ ಆರ್ತಧ್ವನಿಗೆ ಪ್ರತಿಧ್ವನಿಸಿ ಇಡೀ ಸ್ವಾಲಯದ ಅಷ್ಟೂ ಕಂಬಗಳು ಸಾವಿರ ಪಟ್ಟು ಜೋರಾಗಿ ಕಿರಿಚಿ ಮ್ಯಾಲೆ ಕೆಳಗಿನ ಏಳೇಳು ಒಟ್ಟು ಹದಿನಾಕು ಲೋಕಂಗಳು ನಡುಗುತ್ತಾ ಇವೆ. ಒಳಗೆ ಈಗ ಕತ್ತಲೆ ಬದಲು ಬೆಂಕಿಹತ್ತಿ ಉರಿಯುತ್ತಾ ಇದೆ. ಅಯ್ಯೋ ಮಹಾನುಭಾವನಿಗೇನೋ ಬರಬಾರದ ಕಷ್ಟ ಒದಗಿ ಬಂದಿದೆಯೆಂದು ವೇದ್ಯವಾಗಿ ಹಿಂದೆಮುಂದೆ ನೋಡದೆ ಚಂದಮುತ್ತ +ಒಳಗೆ ಹೊಕ್ಕ. ನೋಡಿದರೆ ಶಿವ ಶಿವಾ,- +ಜಗ ಜಗ ಬೆಂಕಿಯ ಜ್ವಾಲೆಯ ಚಿಲುಮೆ +ಎತ್ತರೆತ್ತರ ಚಿಮ್ಮುತ್ತಾ ಇವೆ. +ಸ್ಥಾಪನೆಗೊಂಡ ಶಿವಲಿಂಗದ ಪಕ್ಕದಲ್ಲಿ ಮಹಾನುಭಾವ +ಅಂಗಾತಾಗಿ ಅಸಹಾಯನಾಗಿ ಆಕಾಶದ ಕಡೆ ನೋಡುತ್ತಾ +ಶಿವದುಃಖ ಶೋಕವ ಮಾಡುತ್ತಾ ಒದ್ದಾಡುತ್ತಿದ್ದಾನೆ. +ಅವನ ಬೊಜ್ಜಿನ ಮ್ಯಾಲೆ +ಹಿಂದೆ ಕಂಡ ವಿಕಾರ ಜೀವಂಗಳು, ಪಿಶಾಚಿ ಗಣಂಗಳು +ನಿರ್ದಯವಾಗಿ ತುಳಿಯುತ್ತಾ, +ಕಾಡುಪ್ರಾಣಿಗಳಂತೆ ಕೇಕೆ ಹಾಕುತ್ತಾ, ಕುಣಿಯುತ್ತಾ ಇವೆ! +ಅವನು ನೋವಿನಿಂದ ನೊಂದು +ಬೆಂಕಿಯಲ್ಲಿ ಬೆದ ಬೆದ ಬೆಂದು +ಎಷ್ಟೆಷ್ಟು ಕಿರಿಚಿದರೆ ಅಷ್ಟಷ್ಟೂ ಉತ್ತೇಜನಗೊಂಡು +ಕುಣಿಯುತ್ತಾ ಇವೆ! +ತಕ್ಷಣ ಚಂದಮುತ್ತ ಮಹಾನುಭಾವನ ಮುಖದ ಬಳಿ ಹೋಗಿ ಮೊಣಕಾಲೂರಿ ಕುಂತು, +“ಶಿವಪಾದವೇ ನಾನೇನು ಮಾಡಲಿ?” +ಅಂದ. ಇವನ ಕಡೆ ನೋಡಲೂ ಸಾಧ್ಯಾವಗದೆ ಮಹಾನುಭಾವ +“ಹಾಡು ಹಾಡು,ಬರುತ್ತಿದ್ದರೆ ಬೇಗ ಹಾಡು” +ಎಂದು ನೋವು ತಾಳದೆ ಒದ್ದಾಡಿದ. ಚಂದಮುತ್ತ ಇನ್ನೊಂದು ಚಿಂತಿಸದೆ ಸೊಂಟದ ಕೊಳಲು ತೆಗೆದುತಾನ್ ಬಲ್ಲ ರಾಗಂಗಾಳ ಬಲ್ಲಂತೆ ನುಡಿಸತೊಡಗಿದ. ತುಳಿಯುತ್ತಿದ್ದ ಪಿಶಾಚಿಯ ಕಣ್ಣುಗಳಲ್ಲಿಯ ಕ್ರೌರ್ಯದ ರಭಸ ನಿಧಾನವಾಗಿ ಕಮ್ಮಿಯಾಯಿತು. ಉನ್ಮಾದವಿಳಿದು ಬಂತು. ಪರಸ್ಪರ ನೋಡಿಕೊಂಡು ತಮ್ಮ ಮದೋನ್ಮತ್ತ ಅವಸ್ಥೆಯ ಬಗ್ಗೆ ತಮಗೇ ನಾಚಿಕೆಯಾಗಿ ಮೆಲ್ಲಗೆ ಮಹಾನುಭಾವನ ಬೊಜ್ಜು ಬಿಟ್ಟು ಕೆಳಕ್ಕಿಳಿದು ಬೆಂಕಿಯಾಚೆಯ ಕಗ್ಗತ್ತಲಲ್ಲಿ ಮಾಯವಾದವು. +ಮಹಾನುಭಾವ ಇನ್ನೂ ನರಳುತ್ತಿದ್ದ. ಚಂದಮುತ್ತನ ಕೊಳಲುಲಿಯ ಮಾಯೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಎದ್ದಾಗ ಪಾದದ ಕಡೆ ಚಂದಮುತ್ತ ಕೈಮುಗಿದು ಕುಂತಿದ್ದ. ಪ್ರೀತಿಯಿಂದ ಬಾಲಕನ ತಲೆ ನೇವರಿಸಿದ. “ನಿನಗೆ ಅಕ್ಷಯವಾಗ್ಲಿ ನನ್ನಪ್ಪ” ಎಂದು ಹೇಳುತ್ತ ಗದ್ದ ಕೆನ್ನೆ ತೀಡಿ, ಬೆವರ ಜಲ ಒರೆಸಿ “ವಯಸ್ಸೆಷ್ಟಾಯ್ತು?” ಅಂದ. +“ಸಾಲದು ಸಾಲದು. ನೀನಿನ್ನೂ ಹಾಲು ಹೂವಿನಂಥ ಮಗ. ಇಷ್ಟು ಸಣ್ಣ ವಯಸ್ಸಿಗಾಗಲೇ ಮುದುಜೋಗ್ತಿಯ ಗಾಳಿಗೆ ಒಳಗಾದೆಯಾ ಕಂದ?” ಎಂದು ಕಾವಿ ಬಣ್ಣದಲ್ಲಿ ಮಿಂಚುವ ಹಲ್ಲು ತೋರಿಸುತ್ತ ಜೊಲ್ಲು ಸುರಿಸುತ್ತ ಕೇಳಿದ. ಮುದಿಜೋಗ್ತಿಯ ವಿಷಯ ಕೇಳಿದ್ದೇ ಚಂದಮುತ್ತ ರೋಮಾಂಚಿತನಾಗಿ +“ಶಿವಪಾದವೇ ಅವಳಿರುವ ಠಿಕಾಣಿ ಹೇಳಿ ಕಾಪಾಡು”- ಎಂದು ಮಹಾನುಭಾವನ ಪಾದ ಗಟ್ಟಿಯಾಗಿ ಹಿಡಿದುಕೊಂಡ. ಮಹಾನುಭಾವ ಬಾಲಕನನ್ನ ಒಂದು ಬಾರಿ ಇಡಿಯಾಗಿ ನೋಡಿ ಕರುಣೆಯಿಂದ ಹೇಳಿದ: +“ಎಳೆತನದಿಂದ ಈಗಷ್ಟೇ ಕದ್ದು ತಪ್ಪಿಸಿಕೊಂಡು ಬಂದಿದ್ದೀಯಾ, ತುಸು ನಿಧಾನವಾಗಿ ನಡಿಯೋ ಹುಡುಗಾ. ನೀನು ಕೇಳಿದ ಮಾತ್ರಕ್ಕೆ ಸಿಕ್ಕೋದಕ್ಕೆ ಅವಳು ಲೌಕ ಲೌಕಿಕದ ಪುಡುಗೋಶಿ ವಸ್ತು ಅಂದುಕೊಂಡೆಯಾ? ತಪಸ್ಸು ಮಾಡಿದವರಿಗೇ ಸಿಕ್ಕದವಳು ನಿನ್ನಂಥ ಬಾಲಕನಿಗೆ ಸಿಗುತ್ತಾಳೇನೋ? ಆಯಿತಾಯಿತು. ಅಷ್ಟೋ ಇಷ್ಟೋ ಕಲಿತಿದ್ದೀಯಾ, ಬೆಳೆಸಿಕೊ. ನೀನೂ ಬೆಳಿ. ಆವಾಗ ಪ್ರಯತ್ನಮಾಡು. ಸಿಕ್ಕರೆ ಶಿಕಾರಿ! ಸಿಗದಿದ್ದರೆ ಬಿಕಾರಿಯಾಗು- ನನ್ನ ಹಾಗೆ” +“ನನಗೆ ಮುದಿಜೋಗ್ತಿಯ ದರ್ಶನವಾಗಿದೆಯಂತ ನಿನಗೆ ಹ್ಯಾಗೆ ತಿಳಿಯಿತು ಶಿವನೆ?” +“ನೀನು ನುಡಿಸಿದ ರಾಗದಲ್ಲಿ ಮುದಿಜೋಗ್ತಿಯ ಹಾಡಿನ ಛಾಯೆಯಿತ್ತು. ಅದನ್ನು ಅನುಕರಿಸೋದು ಅವರಿವರಿಂದ ಶಕ್ಯವಿಲ್ಲ. ಆದರೆ ನಿನ್ನ ಶಕ್ತಿಯೂ ಸಾಲದು. ಆಕೆಯ ಹಾಡು ಹಿಂಗಿತ್ತೇ?”- ಎಂದು ಮುದಿಜೋಗ್ತಿಯ ಹಾಡನ್ನು ಹಾಡಿ ತೋರಿಸಿದ. ಚಂದಮುತ್ತನಿಗೆ ರೋಮಾಂಚನವಾಗಿ ಕರಮುಗಿದು ಶಿರಬಾಗಿ “ಹೌದು ಶಿವನೆ!” ಅಂದ. “ಹಾಂಗಲ್ಲ ಹಿಂಗಿತ್ತೆ ನೋಡು”- ಎಂದು ಅದೇ ರಾಗವನ್ನು ಬೇರೆ ರೀತಿ ಹಾಡಿ ತೋರಿಸಿದ. ಚಂದಮುತ್ತ “ಹೌದು ಶಿವನೇ”- ಅಂದ. “ಹಾಂಗಲ್ಲ ಹಿಂಗೆತ್ತೆ ನೋಡು”- ಎಂದು ಆ ರಾಗವನ್ನು ಇನ್ನೊಂದು ರೀತಿ ಹೇಳಿದ. ಚಂದಮುತ್ತ ಅದಕ್ಕೂ “ಹೌಂದು ಶಿವನೇ” ಅಂದ. +“ಮೂರೂ ಮುದಿಜೋಗ್ತಿಯ ಹಾಡುಗಳೇನೊ ಕಂದಾ?” +ಅಲ್ಲ. ಮೊದಲನೇದ್ದು ಅವಳ ಹಾಡು. ನಂತರದ ಎರಡು ನಿನ್ನ ಅನುಕರಣೆ” ಅಂದ. +ಬಾಲಕನ ಮಾತು ಕೇಳಿ ಮಹಾನುಭಾವನಿಗೆ ಮೆಚ್ಚುಗೆ, ಅಸೂಯೆ ಎರಡೂ ಆದವು. ಚಂದಮುತ್ತನ್ನ ತಬ್ಬಿ, ಎದೆಗವಚಿಕೊಂಡು ನೆತ್ತಿಯ ಮೂಸಿ ತಲೆ ಬೆನ್ನು ತೀಡಿ ಹೃತ್ಪೂರ್ವಕ ಹರಸಿ “ಬರೋಬ್ಬರಿ ಹೇಳಿದೆ ಕಂದ” ಎಂದ. +“ಪಿಶಾಚಿಗಳ್ಯಾಕೆ ನಿನ್ನ ಬೊಜ್ಜಿನ ಮ್ಯಾಲೆ ಕುಣಿದವು ಶಿವನೆ?” +“ಅದೊಂದು ದೊಡ್ಡ ಕಥೆ ಕಂದಾ. ಚಿಕ್ಕಂದು ನಾನು ಅಷ್ಟೋ ಇಷ್ಟೋ ಹಾಡುತ್ತಿದ್ದೆ. ನಾನು ಹಾಡುತ್ತಿದ್ದ ಸಭೆಗೆ ನುಗ್ಗಿ ಮುದಿಜೋಗ್ತಿ ಆಗಲೆ ನೀನು ನುಡಿಸಿದೆಯಲ್ಲ ಆ ಹಾಡನ್ನ ಹಾಡಿ ನನಗೆ ಅಣಗಿಸಿ ಮಾಯವಾದಳು. ಅಂದಿನಿಂದ ಅವಳ ಕಂಡು ಅವಳಿಂದ ಹೆಚ್ಚಿನ ವಿದ್ಯವ ಕಲಿವ ಹುಚ್ಚು ಹತ್ತಿತು. ಬೇಕಾದಷ್ಟು ಅಲೆದಾಡಿದೆ. ಈ ಮಧ್ಯೆ ಅಭ್ಯಾಸವಾಗಿ ತುಸು ಹಾಡುತ್ತಿದ್ದೆ. ಅಷ್ಟಕ್ಕೇ ರಾಜಮನ್ನಣೆ, ವಿದ್ವನ್ಮನ್ನಣೆ ದೊರೆತು ಅದರ ಅಮಲಿನಲ್ಲಿ ಮುದಿಜೋಗ್ತಿಯ ಹುಚ್ಚನ್ನೇ ಮರೆತುಬಿಟ್ಟೆ. +ಮನ್ನಣೆಗಳ ಅಹಂಕಾರ ತಲೆಗೇರಿ ಕೀರ್ತಿಯ ಕಾಮನೆಗಳಿಂದ ಖಾಯಿಲೆ ಬಿದ್ದೆ. ನಾನು ಹಾಡಿದ್ದೇ ರಾಗ ಹೇಳಿದ್ದೇ ವಿದ್ಯೆಯಾಗಿ ಅನೇಕ ರಾಗಂಗಳ ಕೆಡಿಸಿ ಹಾಡಿದೆ. ಅವೆಲ್ಲ ವಿಕಾರಗೊಂಡು ಪಿಶಾಚಿ ಗಣಂಗಳಾಗಿ ಈಹಿಂಗೆ ಅಲೆದಾಡುತ್ತವೆ. ಪ್ರತಿ ಅಮಾವಾಸ್ಯೆಯಂದು ನನ್ನ ಬೊಜ್ಜಿನ ಮ್ಯಾಲೆ ಕುಣಿದು ಹಿಂಸೆ ಕೊಡುತ್ತವೆ”. +“ಇವುಗಳಿಂದ ನಿನಗೆ ಮುಕ್ತಿ ಇಲ್ಲವೆ ಶಿವನೆ?” +“ಇದೆ. ಅವುಗಳನ್ನು ಶುದ್ಧ ರೂಪದಲ್ಲಿ ಹಾಡಿದರೆ ಅವುಗಳಿಗೆ ಮುನ್ನಿನ ರೂಪ ಬಂದು ನನ್ನನ್ನು ಬಿಡುಗಡೆಗೊಳಿಸುತ್ತವೆ” +“ಶುದ್ಧ ರೂಪ ಸಿದ್ಧಿಸಿದ್ದು ಹೆಂಗೆ ತಿಳಿಯುತ್ತದೆ?” +“ಭೃಂಗಿ ಬಂದು ಕುಣಿಯಬೇಕು” +“ಅವನ್ಯಾರು ಶಿವನೆ?” +“ಶಿವನ ಖಾಸಾ ಶಿಷ್ಯ, ಮೂಳೆರೂಪದ ಭಕ್ತ, ನೋಡಿದಾಗ ನಿನಗೇ ತಿಳಿಯುತ್ತದೆ. ಹಾಡು ಕೇಳಿ ಆನಂದವಾಗಿ ಅವನು ಬಂದು ಕುಣಿದ ಅಂದರೆ ವಿಕಾರ ರಾಗಂಗಳಿಗೆ ಅವುಗಳ ಮೂಲರೂಪ ಬರುತ್ತದೆ, ಆಗಲೇ ನಾನು ಮುಕ್ತ”. +“ಅಯ್ಯೋ ನಾನೇ ನಿನ್ನ ಮುಕ್ತಿಗೆ ಅಡ್ಡಿಯಾದೆನಲ್ಲ ಶಿವನೆ!” +“ಇಲ್ಲ. ತಪ್ಪುಗಳ ಸರಿಪಡಿಸಲು ನನ್ನೊಬ್ಬನಿಂದಲೇ ಆಗದೆಂದು ನನಗೆ ಗೊತ್ತಾಯಿತು. ನನ್ನ ಮುಕ್ತಿ ಮುಖ್ಯವಲ್ಲ. ರಾಗಂಗಳಿಗೆ ಶುದ್ಧರೂಪ ಬರಬೇಕು. ಈಗ ನನ್ನೊಂದಿಗೆ ನೀನೂ ಇದ್ದೀಯಲ್ಲ. ಇಬ್ಬರೂ ಪ್ರಯತ್ನಿಸುವ ಬಾ”. +೧ ೭. ಕಣ್ಣು ತೆರಿ ಶಿವನೇ +ಮೂರೂ ಕಣ್ಣು ಮುಕ್ಕಣ್ಣು ಮುಚ್ಚಿಕೊಂಡು +ಮುಖದ ಮ್ಯಾಲೆ ಜುಟ್ಟುಜಡೆ ಚೆಲ್ಲಿಕೊಂಡು +ಜಪತಪವ ಮಾಡುವ ಶಿವನೇ, +ಒಂದಾರು ಕಣ್ಣು ತೆರೆದು +ಕೆಳಗೆ ದಿಟ್ಟಿಸಿ ನೋಡು, +ಶಿವಾಪುರದ ಕಾಡಿನಲ್ಲಿ ಏನೇನು ನಡೆಯುತ್ತಿದೆ? +ಈದ ಹಸು ಪುಣ್ಯಕೋಟಿ +ಕರು ಕಳೆದುಕೊಂಡು +ಅನ್ನಾಹಾರ ಬಿಟ್ಟು ನಿದ್ರೆ ನೀರು ಬಿಟ್ಟು +ಅಂಬಾ ಎಂದು ಹಂಬಲಿಸುತ್ತ +ಧಾರಾವತಿ ಕಣ್ಣಿರು ಜಲವ ಸುರಿಸುತ್ತ +ಕರುಳು ಬಾಯಿಗೆ ಬರುವಂತೆ +ಬಾಯಿ ಬಾಯಿ ಬಿಡುತೈದಾಳೆ ತಾಯಿ: +ರೂಪುರೇಖೆ ಸದ್ದುಳ್ಳ ಸುಳಿಯ ನನ +ಹಾಲು ಹಸುಳೆ ಕರುವೇ +ನೇರ ಹಾರಿದೆಯ ಹುಲಿಯ ಬಾಯಿಗೇ +ಗಾಳಿ ತುಂಬಿ ಕಿವಿಗೆ | +ಬೇಲಿ ಹಾರಿ ಹೌಹಾರಿ ಧುಮುಕಿದೆಯೊ +ನೀರಿನ ತಿರುಗಣಿಗೆ || +-ಎಂದು, +ಬರಿದಾದ ನನ್ನ ಭಾಗ್ಯವ ಹಿಂದಿರುಗಿ +ಕೊಡು ಶಿವನೇ ಎಂದು, +ಕೊಡದಿದ್ದ ಪಕ್ಷದಲ್ಲಿ +ನಾಲಗೆ ಹಿರಿದು ಪ್ರಾಣ ಬಿಡುವೆನೆಂದು, +ಪ್ರಾಣ ಬಿಟ್ಟ ಪಕ್ಷದಲ್ಲಿ +ನಿನಗ್ಯಾರೂ ಕಾಸಿನ ದೀಪ ಹಚ್ಚದಿರಲೆಂದು +ಕೈಯೆತ್ತಿ ಕರ ಮುಗಿಯದಿರಲೆಂದು +ಶಪಿಸುತ್ತ +ಗೋಳು ಗೋಳೆಂದು ಗೋಳಾಡುತಾಳೆ ತಾಯಿ +ಬಾನು ಕರಗುವಂತೆ +ಬನ ಮರಗುವಂತೆ. +ಕಣ್ಣು ತೆರೆದು ನೋಡು ಶಿವನೇ. +೧೮. ಕೈಲಾಸದ ಅವತಾರ +ಸತ್ಯದ ಶಿವಲಿಂಗಸ್ವಾಮಿಯ ಚಿತ್ತದಲ್ಲಿ ಸ್ಮರಿಸಿ +ಮುಂದೇನಾಯಿತೆಂದು ಹೇಳಬೇಕೆಂದರೆ- +ಮಹಾನುಭಾವನ ದರ್ಶನದಿಂದ +ಚಂದಮುತ್ತನ ಅಮಾವಾಸ್ಯೆಗೆ +ಚಂದ್ರನ ಕನಸಾಯಿತು. +ಕತ್ತಲ ಕಗ್ಗಂಟು ಸಡಿಲಿ, +ಬಿಡಿವಜ್ರ ಬೆಳ್ಳಿ ಮೂಡಿ +ಉದಯಗಿರಿ ಬಿರಿದು ಉದಯವಾದರು +ಸೂರ್ಯನಾರಾಯಣ ಸ್ವಾಮಿ. +ಹೊಸಬೆಳಕಿನ ಮಹಾಪೂರ ನುಗ್ಗಿ ಬಂತು ನೋಡು, +ಕೊಚ್ಚಿಹೋದವು ಇದ್ದಬಿದ್ದ ಅನುಮಾನಗಳು. +ಮೂಡುಬೆಟ್ಟ ಬಂಗಾರವಾಗಿ +ನಮ್ಮೀ ಧರೆಯ ಮ್ಯಾಗಿನ ಗಿಡಮರಗಳಲ್ಲಿ +ಚಿನ್ನದ ಚಿಗುರೆಲೆ ಹೊಳೆದವು. +ಮಹಾನುಭಾವ ಹಾಲು ಹಸುಳೆ ಚಂದಮುತ್ತನ್ನ ತನ್ನ ನಿರ್ಜನ ಆಶ್ರಮಕ್ಕೆ ಕರೆದೊಯ್ದು, ಇಬ್ಬರೂ ಗುರಿಶಿಷ್ಯರಾಗಿ, ಇಲೆ ಹೂಡಿ ಹೊಸಜೀವನ ಆರಂಭಿಸಿದರು. ಹೊಸಬೆಳಕಿನ ಮಳೆಯಾಗಿತ್ತಲ್ಲ. ಹೊಸನೀರು +ನುಗ್ಗಿತ್ತು ಮಡುಗಳಲ್ಲಿ. ಮಾಹಾನುಭಾವ ತಂದೆಗಿಂತ ನೂರು ಮಡಿ ಹೆಚ್ಚಿನ ಗುರುವಾಗಿ ತನ್ನಲ್ಲಿದ್ದ ವಿದ್ಯೆಗಳ ಚಂದಮುತ್ತನ ಸತ್ಪಾತ್ರಕ್ಕೆ ಧಾರೆಯೆರೆದನು. ಚಂದಮುತ್ತ ಶಿಷ್ಯನಾಗಿ ತನ್ನೆಲ್ಲವ ಗುರುವುಗರ್ಪಿತ ಮಾಡಿ ಗುರುಕರುಣೆ ಪಡೆದನು. ಗುರುವು ಶಿಷ್ಯನಿಗೆ ದಿನಕ್ಕೊಂದರಂತೆ ನೂರೊಂದು ರಾಗಂಗಳ ಕಲಿಸಿದನು. ಎದ್ದಾಗೊಂದು ರಾಗ, ನಿಂತುಕುಂತಾಗೊಂದು ರಾಗ, ಬಿಸಿಲು ಆಶ್ರಮದ ಹೊಸಿಲಿಗೆ ಬಂದಾಗೊಂದು ರಾಗ, ಕತ್ತಲೆಗೆ ಕಾವೇರಿ ತಡಮಾಡಿ ಬಂದ ತಿಂಗಳಲ್ಲಿ ಬೆಟ್ಟದ ತುದಿಗೆರೆ ಬೆಳಕಾಡಿದರೆ ಒಂದು ರಾಗ, ಬೆಳ್ಳಿ ಮೂಡಿದಾಗೊಂದು ರಾಗ, ಉದಯ ರಾಗ, ಬೆಳೆ ಬರಿಸುವ ರಾಗ, ಹಸಿರು ಚಿಗುರುವ ರಾಗ, ಹಾಳು ಸುರಿವ ರಾಗ, ಗೋಳು ಗೋಳಿನ ರಾಗ ಇಂತೆಂಬ ನೂರಾರು ರಾಗಂಗಳ ಕಲಿಸಿ, ತಿಂಗಳ ರಾಗವೊಂದನ್ನು ಕಲಿಸದೆ “ಅದು ನಾನರಿಯದ ರಾಗ” ವೆಂದು ಸೋತು ಮಾತಾಡಿದ. +“ತಿಂಗಳ ರಾಗ ನನಗೆಲ್ಲಿ ಸ್ಕ್ಕೀತು ಗುರುಪಾದವೇ?” ಎಂದು ಚಂದಮುತ್ತ ಕೇಳಿದಾಗ “ಅದನ್ನು ಹೇಳಬಲ್ಲವನು ಭೃಂಗೀಶ ಮಾತ್ರ”-ಎಂದು ಸುಮ್ಮನಾದ. ಮಾಸಗಳುರುಳಿ ಮತ್ತೊಂದು ಮಹಾಶಿವರಾತ್ರಿ ಬಂತು.ಜೊತೆಯಲ್ಲಿ ಚಂದಮುತ್ತನಿರುವುದರಿಂದ ತನ್ನ ಬಿಡುಗಡೆ ಖಚಿತವೆಂದು ಮಹಾನುಭಾವನಿಗೆ ವಿಶ್ವಾಸವಾಗಿತ್ತು. +ಗುರುಶಿಷ್ಯರು ಮಹಾಶಿವರಾತ್ರಿಯ ಮುನ್ನಾದಿನದ ಬೆಳ್ಳಿಯ ಬೆಳಕಿನಲ್ಲೆದ್ದರು. ಪಡುಬದಿಗೆ ಮೋರೆ ಮಾಡಿ ನೆತ್ತಿಯಲ್ಲಿ ಚಂದ್ರಾಸ್ವಾಮಿಯಿರುವ ಸತ್ಯದ ಸಾವಳಗಿ ಶಿವಲಿಂಗದೇವರೆ ನೆನೆದರು. ಸುತ್ತಲಿನ ದೇವ ದೈವಂಗಳ ನೆನೆದರು. ಹಿಡಿಸೂಡಿ ಹಿಡಿದು ಶಿವಾಲಯದ ಅಂಗಳ ಗುಡಿಸಿ ಹಸಿರು ಸೆಗಣಿ ಸಾರಿಸಿ ರಂಗೋಲಿ ಬರೆದರು. ಮಡುವಿನಲ್ಲಿ ಮಿಂದು ಮೈಲಿಗೆ ಕಳೆದು, ಮಡಿಯುಟ್ಟು ಓರೆಯಾಗಿ ಜುಟ್ಟುಕಟ್ಟಿಕೊಂಡರು. ಗಂಧದ ನೀರಿನಲ್ಲಿ ಗುಡುಯ ತೊಳೆದರು. ಹಿಡಿಗಂಧ ತೇದರು.ಪಂಚದರ್ಭೆಯ ಕಡ್ಡಿ ತಂದರು. ಬುಟ್ಟಿ ತುಂಬ ತುಂಬೆಯ ಹೂ, ಬಿಲ್ವ ಪತ್ರೆ ತಂದರು. ಪರಿಮಳದ ಹೂ ಹಿಂಗಾರುಗಳಲ್ಲಿ ಶಿವಲಿಂಗವ ಸಿಂಗರಿಸಿ ಪರಿಮಳ ಮ್ಯಾಲೇಳು ಲೋಕ, ಕೀಳೇಳು ಲೋಕಂಗಳಿಗೆ ಪಸರಿಸುವಂತೆ ಮಾಡಿದರು. ನಂದಾದೀಪ ಏರಿಸಿ ಶಿವಲಿಂಗದ ಬಳಿ ಕರಿ ಬಿಳಿ ಸುಣ್ಣ ಬಣ್ಣ ಕುಂಕುಮ ಅರಿಶಿಣಗಳಲ್ಲಿ ಮಂಡಳ ಬರೆದರು. ಅವರ ಮಧ್ಯೆ ಬಾಳೆಲೆ ಹಾಸಿ, ಅದರ ಮ್ಯಾಲೆ ವೀಳ್ಯೆದೆಲೆ ಯಿಟ್ಟು ಒಂದಡಿಕೆಯ ಐದು ಹೋಳು ಮಾಡಿ ಕರವೆತ್ತಿ ಶರಣೆಂದು ಕುಣಿವ ಭೃಂಗೀಶನ ಬಹಿರೂಪ ಬರೆದರು. ಹಸಿರುಗಣ್ಣಿನ ನೂರು ಕಾಲಿನ ಆ ಮೂಳೆರೂಪವ ನೋಡಿ ಚಂದಮುತ್ತ ಗಾಬರಿಯಾದ. ‘ಇದ್ಯಾರ ರೂಪ ಗುರುವೇ?’ ಎಂದ. +“ಭೃಂಗೀಶ” +ಹಿಂದೆ ತನ್ನ ಗಣೆಗೆ ಕೊಂಬು ದಯಪಾಲಿಸಿದ್ದು ಇದೇ ರೂಪವಲ್ಲವೆ? ಎಂದು ನೆನೆದು ಸಳ ಸಳ ಪುಳಕವೇರಿ, ಬೆವರಿ ಅಂಗಜಲದಲ್ಲಿ ಅದ್ದಿಹೋದ. ತನಗೆ ದರ್ಶನವಾದ ಭೃಂಗೀಶನ ಕಥೆಯ ಗುರುವಿಗೆ ಹೇಳಬೇಕು; ಇದಲ್ಲ ಕಾಲವೆಂದು ಸುಮ್ಮನಾದ. ಭೃಂಗೀಶನ ನೆತ್ತಿಯ ಮ್ಯಾಲೆ ಮುಗಿದ ಕೈ ಮುಟ್ಟುವಲ್ಲಿ ಧರ್ಮಪತ್ನಿ ಪಾರ್ವತೀದೇವಿ ಸಮೇತ ಸತ್ಯ ಶಿವದೇವರ ಶ್ರೀಪಾದಂಗಳ ಸ್ಥಾಪನೆ ಮಾಡಿದರು. ಯಂತ್ರ ಮಂತ್ರ ತಂತ್ರಗಳಿಂದ ಅಷ್ಟೂ ದೇವದೈವಂಗಳ ಆವಾಹಿಸಿ ಅವರವರ ಸ್ಥಳದಲ್ಲಿ ಬಂಧಿಸಿ ಬಂದೋಬಸ್ತ ಮಾಡಿ ಮೈಹಾಸಿ ಅಡ್ಡಬಿದ್ದಲ್ಲಿ ತಯಾರಿಗಳು ಮುಗಿದು ಭೂಮಿತಾಯಿ ತುರುಬು ಬಿಚ್ಚಿ ಬೆನ್ನಮ್ಯಾಲೆ ಕೂದಲು ಚೆಲ್ಲಿಕೊಂಡಂತೆ ರಾತ್ರೆ ಬಂತು. +ಕುಡಿ ಅಲ್ಲಾಡದ ನಂದಾದೀಪ ಉರಿವಷ್ಟು ಜಾಗಬಿಟ್ಟು ಸುತ್ತೂಕಡೆ ಕಗ್ಗತ್ತಲು ಹೆಪ್ಪುಗಟ್ಟಿತ್ತು. ಗುರುವು ಶೃತಿ ಎತ್ತಿದಂತೆ ವಿಕಾರ ರಾಗಂಗಳು ಒಂದೊಂದೇ ಬಂದು ಮೂಲೆ ಮೂಲೆಗಂಟಿ ಆತಂಕದ ಕಣ್ಣುಗಳ ಅಗಲವಾಗಿ ತೆರೆದು ತಮ್ಮ ದೈವದ ಸದ್ಗತಿಗಾಗಿ ಕಾಯುತ್ತ, ಕೃಪೆಗಾಗಿ ಅಂಗಲಾಚುವ ದೃಷ್ಟಿಗಳಿಂದ ಶಿವಲಿಂಗವ ತೀಡುತ್ತ, ತೊಳೆಯುತ್ತ ನಿಂತವು. ಮಂಡಳದ ಮುಂದೆ ಮಹಾನುಭಾವ ಹಾಡುವುದಕ್ಕೆ ಸಿದ್ಧನಾದಾಗ ಚಂದಮುತ್ತ ಕೊಳಲು ತಗೊಂಡು ಸಾಥಿಗೆ ನಿಂತ. +ಶೃತಿಗಳ ಕೂಡಿಸಿ ನಾಭಿಕುಹರದಿಂದ ಹದವಾದ ನಾದಂಗಳ ತೆಗೆದು ಆಲಾಪವ ಮಾಡಿದರು. ಇಡೀ ಶಿವಾಲಯ ಓಂಕಾರದ ಆಧಾರ ಶೃತಿ ಕೊಡುವಂತೆ ಮರುನುಡಿಯಿತು. ರಾಗಂಗಳ ಕರುಳು ಮಿಡಿದು ಬಳುಕಾಡಿದವು. ಈಗ ಗುರುಶಿಷ್ಯರು ಹೊಂದಾಣಿಕೆಯಿಂದ ಒಂದೊಂದೇ ರಾಗ ರಚನೆ ಹುಟ್ಟಿಸಿ, ಕ್ರಮದಲ್ಲಿ ಕಟ್ಟಿ ವಿಸ್ತರಿಸಿ, ಕೌಶಲದಿಂದ ವಿವರಗಳ ಬಿಡಿಸಿ, ಕಾಳಜಿಯಿಂದ ಜೀವ ತುಂಬಿ ಆತ್ಮಪ್ರತಿಷ್ಟಾಪನೆಗೈದು ವಿಜೃಂಭಿಸಿದರು. ಮೊದಮೊದಲಲ್ಲಿ ಭಾರವಾಗಿದ್ದ ಈ ಕ್ರಿಯೆ ಬರಬರುತ್ತ ಉಸಿರಾಟದಂತೆ ಸಹಜವಾಗಿ, ಸರಳವಾಗಿ, ನಿರರ್ಗಳವಾಗಿ ಸಾಗಿ ಇಬ್ಬರೂ ದಿವ್ಯೋನ್ಮಾದದಲ್ಲಿ ತೇಲುಗಣ್ಣಾದರು. ಹೆಪ್ಪುಗಟ್ಟಿದ್ದ ಕತ್ತಲೆಯ ಗೂಢಗಳು ತಂತಾವೆ ಡೀಕೋಡಿಸಿಕೊಂಡು ಬೆಳಕಿನ ಪುಂಜಗಳಾಗಿ, ಕಿರಣಂಗಳಾಗಿ ಮಾರ್ಪಾಟಾದವು. ವಿಕಾರ ರಾಗಂಗಳಲ್ಲಿ ವಿದ್ಯುತ್ ಸರಬರಾಜಾಗಿ ವಿರೂಪಂಗಳು ಕಳಚಿ ಒಳಗಡೆಯ ಚೇತನಂಗಳು ಸ್ವಸ್ವರೂಪ ಪಡೆಯಲು ಹವಣಿಸಿದವು. ಶಿವಾಲಯದ ಕಂಬಗಳಲ್ಲಿ ಜೀವಸಂಚಾರವಾಗಿ ನಾದವಾದ್ಯಗಳ ಧ್ವನಿಮಾಡಿ ನುಡಿಸುತ್ತ ಗುರುಶಿಷ್ಯರ ಸಂಗೀತಕ್ಕೆ ಸ್ವರಮೇಳವೊದಗಿಸಿದವು. +ಈಗ ಮಂಡಳದಲ್ಲಿದ್ದಬೃಂಗೀಶನ ಬಹಿರೂಪಕ್ಕೆ ಜೀವತುಂಬಿ ಚಿತ್ರದ ಕಂಗಳಲ್ಲಿ ಬೆಳಕಾಡಿತು. ಅಸ್ಥಿಪಂಜರ ರೂಪದ ಅವನ ಕೈಕಾಲುಗಳಲ್ಲಿ ಚೈತನ್ಯ ಹರಿದು ಥೈಥೈ ಕುಣಿಯತೊಡಗಿದವು! ಚಿತ್ರದ ಭೃಂಗೀಶನೇ ಜೀವಗೊಂಡು ಕುಣಿಯಬೇಕಾದರೆ ಶಿವಶಿವಾ- ಶಿವಾಲಯದ ಕಂಬಗಳು ಉನ್ಮಾದಗೊಂಡು ಸ್ವರಮೇಳವ ತಾರಕಕ್ಕೇರಿಸಿ, ಇಡೀ ಶಿವಾಲಯವ ಹೊತ್ತುಕೊಂಡೇ ಕುಣಿಯತೊಡಗಿದವು! ವಿಕಾರ ರಾಗಂಗಳಿಗೆ ಸ್ವಸ್ವರೂಪವೊದಗಿ ಸಡಗರದಲ್ಲಿ ಹುಚ್ಚೆದ್ದು ಕುಣಿದವು. ಎಲ್ಲರ ಕಣ್ಣುಗಳಲ್ಲಿ ಶಿವರಾತ್ರಿಯ ನಂದಾದೀಪಗಳು ಬೆಳಗಿ ಶಿವಾಲಯದಲ್ಲಿ ದೀಪಾವಳಿ ವಿಜೃಂಭಿಸಿತು. ಮಂಡಲದಲ್ಲಿದ್ದ ಲೋಕಂಗಳ ತಂದೆ, ತಾಯಿ ಶಿವಪಾರ್ವತಿಯರ ಕಾಲು ಚಡಪಡಿಸಿದವು. ಭೃಂಗೀಶನ ಭಕ್ತಿಯ ಕುಣಿತ , ಶಿವಾಲಯದ ಕಂಬಗಳ ಹುರುಪೇರಿದ ಕುಣಿತ, ವಿಕಾರರಾಗಂಗಳ ಸಡಗರದ ಕುಣಿತ, ಮೌನದ ಗುಂಭಕ್ಕೆ ಬಾಯಿ ಬಂದಂತಿದ್ದ ಸಂಗೀತ- ಇವೆಲ್ಲವುಗಳ ಸಮ್ಮೇಳನದಿಂದ ಲೌಕಿಕದಲ್ಲಿ ಅಲೌಕಿಕದ ಅವತಾರವಾಗಿ ಕೈಲಾಸ ಸಾಕ್ಷಾತ್ಕಾರವಾಗುತ್ತಿರುವಲ್ಲಿ- +ತಾರಕಕ್ಕೇರಿದ ಸಂಗೀತವ ಆಧಾರದ ಷಡ್ಜಕ್ಕಿಳಿಸುತ್ತ ಚಂದಮುತ್ತ ಕಣ್ಣುತೆರೆದನು. ನಿಜರೂಪವ ಮೆರೆದು ಮತ್ತೆ ಮಂತ್ರಭಾವಿತ ಬಣ್ಣದ ಚಿತ್ರವಾಗಲು ಭೃಂಗೀಶ ಮಂಡಳಕ್ಕೆ ಸದ್ದಿಲ್ಲದೆ ಸಂಚರಿಸುತ್ತಿರಲು ಅವನ ಎಲುಬಿನ ಕಾಲುಗಳನ್ನ ಥಟ್ಟನೆ ಗಟ್ಟಿಯಾಗಿ ತಬ್ಬಿಕೊಂಡು “ದಯವಾಗು ಶಿವಪಾದವೇ” ಅಂದ. ಒಂದು ಸಾರಿ ಬಾಲಕನ ಇಡಿಯಾಗಿ ನೋಡಿ ಭೃಂಗೀಶನ ಹರುಷ ಉತ್ತೇಜಿತವಾಯಿತು. +“ಹೌದಯ್ಯ ಕಂದಾ, ಚಿತ್ತ ಸಂಶಯ ಬ್ಯಾಡ, ನಿನ್ನ ಸಂಗೀತಕ್ಕೆ ಮೆಚ್ಚಿದೆ. ಸತ್ಯವ ಬೇಡು, ನಿತ್ಯವ ಬೇಡು, ಬೇಕಾದ್ದನ್ನು ಬೇಡು, ಬೇಡಿದ್ದನ್ನ ಕೊಡುವೆ”- ಎಂದು ಮೆಚ್ಚು ನುಡಿದ. +“ನನ್ನ ಗುರುವಿನ ಭಂಗವ ಹಿಂಗಿಸಿ ಮುಕ್ತಿ ಕೊಡು ಶಿವಪಾದವೇ” ಚಂದಮುತ್ತನ ಗುರುಭಕ್ತಿ ಭೃಂಗೀಶನಿಗೆ ಚನ್ನಂಗೊಪ್ಪಿಗೆಯಾಯಿತು. ಮಹಾನುಭಾವನ ಕಡೆ ನೋಡಿ. +“ಅಯ್ಯಾ ಮಹಾನುಭಾವ ಹಾಡುವಾಗ ಏನೇನು ಕಂಡೆ?”- ಎಂದ. ಮಹಾನುಭಾವ ತಕ್ಷಣ ಮೈಚೆಲ್ಲಿ ಸಾಷ್ಟಾಂಗವೆರಗಿ ಹೇಳಿದ: +ಕುಣಿವ ನಿನ್ನ ಶ್ರೀಪಾದಂಗಳ ಕಂಡೆ. +ಶಿವಾಲಯದ ಕಂಬಗಳು ಕುಣಿದುದ ಕಂಡೆ. +ರಾಗಂಗಳ ವಿಕಾರ ಕಳೆದು +ಮೂಲರೂಪದಲ್ಲಿ ಹೊಳೆದುದ ಕಂಡೆ. +“ನಿನಗೆ ಈಗಲೇ ಮುಕ್ತಿ ಸಿಕ್ಕಿತು ಹೋಗು”- ಎಂದು ಕರವೆತ್ತಿ ಆಶೀರ್ವದಿಸಿ ಚಂದಮುತ್ತನಕಡೆ ಕೃಪಾದೃಷ್ಟಿ ಬೀರಿ, “ಕಂದಾ ತಿಂಗಳುರಾಗವ ನೀನು ನುಡಿಸಲಿಲ್ಲ. ಅದನ್ನು ತಿಳಿದವಳು ಫಲಬೀರುವ ಹದವಂತಿ, ಮುದಿಜೋಗ್ತಿ. ಅವಳಲ್ಲಿಗೆ ಹೋಗು, ಚಂದ್ರಸಮೇತ ಮಂಗಳಮೂರ್ತಿ ಶಿವದೇವರ ದರ್ಶನವಾದಾಗಲೇ ನಿನಗೆ ಮುಕ್ತಿ.”- ಎಂದು ಚಂದಮುತ್ತನ ಸಂತವಿಸಿ ಭೃಂಗೀಶ ಮಂಡಳದಲ್ಲಿ ಐಕ್ಯವಾದ. +ಗುರುಶಿಷ್ಯರು ಶಿವರಾತ್ರಿಯ ಸತ್ಪಲದಿಂದ ಸಂತೃಪ್ತರಾಗಿ ಕಡ್ಡಿಕರ್ಪೂರ ಬೆಳಗಿ ಮಂಗಳಾರ್‍ತಿ ಮಾಡಿದರು. ಸ್ವಸ್ವರೂಪ ಪಡೆದು ಆನಂದನಗೆಯವರಾದ ಸರ್ವರಾಗಂಗಳಿಗೆ ನಮಸ್ಕಾರವ ಮಾಡಿ ಆಶೀರ್ವಾದ ಪಡೆದರು. +೧೯. ದೊಡ್ಡಾಲದ ಮರ +ಆಕಾಶದಂಗಳದಲ್ಲಿ ಬೆಳ್ಳಿಮೂಡುವ ಮುನ್ನವೇ ಗುರುಶಿಷ್ಯರಿಬ್ಬರೂ ಎದ್ದರು. ಕಗ್ಗತ್ತಲಲ್ಲಿ ಸುತ್ತ. ಶಬ್ದಸೂತಕ ಮಾಡದೆ ಶುಚಿಯಾಗಿ ದೇವಾಲಯಕ್ಕೆ ಹೋದರು. ಮಹಾನುಭಾವ ಮಂತ್ರ ತಂತ್ರಾದಿಗಳಿಂದ ಶಿವಲಿಂಗದ ಅಕ್ಕಪಕ್ಕದ ಭೂತಪಿಶಾಚಿಗಳ ಓಡಿಸಿದ. ಇಬ್ಬರೂ ಶಿವಭಕ್ತಿ ಶಿವಾಚಾರ ಮಾಡಿದ ಮ್ಯಾಲೆ ಮಹಾನುಭಾವ ಸುಮುಹೂರ್ತ ನೋಡಿ ಶಿಷ್ಯನ ನೆತ್ತಿಯ ಜುಟ್ಟು ಹಿಡಿದು ಶಿವಲಿಂಗಕ್ಕೆ ಹಣೆ ತಾಗಿಸಿ ಅವನ ಕಿವಿಯಲ್ಲಿ ಮಂತ್ರೋಪದೇಶವ ಮಾಡಿದ. ರಾಗಮಂಡಳ ಬರೆವ ವಿಧಾನಗಳ ಹೇಳಿಕೊಟ್ಟ. ಮಂಡಳಕ್ಕೆ ಮುದಿಜೋಗ್ತಿಯ ಆವಾಹಿಸುವ, ಆವಾಹಿಸಿ ಬಂಧಿಸುವ ಅವಳ ಹುಸಿಗಳ ಸುಲಿದು ನಿಜದಲ್ಲಿ ಸಾಕ್ಷಾತ್ಕಾರ ಮಾಡಿಕೊಂಬ ರಾಗ ರಚನೆ ಮಂತ್ರಗಳ ಹೇಳಿ ‘ಅವಳಿಂದ ತಿಂಗಳ ರಾಗ ಪಡೆವ ಗುಟ್ಟು ಮಾತ್ರ ನೀನೇ ಬಲ್ಲೆ’ ಎಂದು ಶಾಸ್ತ ಮುಗಿಸಿದ. ಈಗ ಕಾಡುಕೋಳಿ ಕೂಗಿ, ಗಂಡುಹಕ್ಕಿ ಚಿಲಿಪಿಲಿ ಸ್ವರಗೈದು, ಹೆಣ್ಣುಹಕ್ಕಿ ರೆಕ್ಕೆ ಬಡಿದು, ಮೂಡಲು ಹರಿದು ಮುಂಬೆಳಕಾಡುವಲ್ಲಿ, +“ಯೋಗ ಲಕ್ಷಣ ಒದಗಿ ಬಂತು ಇನ್ನು ಹೊರಡು” +-ಎಂದು ಶಿಷ್ಯನಿಗೆ ಹೇಳಿದ. ಚಂದಮುತ್ತ ಗುರುವಿನ ಪಾದಪಡಕೊಂಡು ಹಾಗೇ ಅವನ ಕಾಲು ತಬ್ಬಿಕೊಂಡು ಕುಂತ. ಪಾದಂಗಳ ಮ್ಯಾಲೆ ಕಣ್ಣಿರು ಬಿದ್ದುದನ್ನು ನೋಡಿ ಮಹಾನುಭಾವ ಅವನನ್ನ ಮ್ಯಾಲೆಬ್ಬಿಸಿದ. ಗುರುವಿನ ಕಣ್ಣಲ್ಲೂ ಸಳಸಳ ಜಲಬಿಂದು ಜಗುಳಿದವು; ನಿವಾರಿಸಿಕೊಂಡು, +“ಜಯವುಳ್ಳ ಮುದಿಜೋಗ್ತಿಯ ಕಂಡು ಬಾ. ಶಿವ ನಿನಗೆ ದಯವಾಗ್ಲಿ ಅಂತ ಶಿವಲಿಂಗಕ್ಕೆ ದಿನಾ ಒಂದು ಪ್ರತಿ ಎಲೆ ಹಾಕುತ್ತೇನೆ. ನಿನ್ನ ಕಾಮಿತ ಫಲಿಸಲಿ ನನ್ನಪ್ಪಾ. ಎಲ್ಲ ಹೇಳಿದ ಮ್ಯಾಲೆ ಇನ್ನೊಂದುಳಿಯಿತು.ಅಗಲುವ ಮುನ್ನ ಅದನ್ನೂ ಹೇಳಿಬಿಡುತ್ತೇನೆ. ಕೊಂಚದವಳಲ್ಲ ಮುದಿಜೋಗ್ತಿ. ಅಂತಿಂಥವರಿಗೆ ದಕ್ಕುವಂಥದ್ದಲ್ಲ ಅವಳ ನಿಜ. ಯಾರಿಗಾದರೂ ಒಳಗೊಳಗೇ ಪ್ರೇರಕಳು. ಹೊರಗೆ ತೋರುವುದಿಲ್ಲ ತನ್ನ ನಿಜವ. ಚೆನ್ನಾಗಿ ತಿಳಿದಿರಲಣ್ಣ, ಒತ್ತಾಯವಿಲ್ಲದೆ ಒಲಿಯುವವಳಲ್ಲ ಅವಳು.” +-ಎಂದು ಚಂದಮುತ್ತನ್ನ ತಬ್ಬಿ, ತಲೆ ಸವರಿ ನೆತ್ತಿಯ ಮೂಸಿ ಆಶೀರ್ವಾದ ಮಾಡಿದ. ಮತ್ತೆ ಮತ್ತೆ ಗುರುಪಾದ ಮಡಕೊಂಡು ಹೆತ್ತಯ್ಯ ಮುತ್ತಯ್ಯರ ನೆನೆದು ತಾಯಿಯ ನೆನೆದು ಬೆಟ್ಟದ ಮಾಯಿಯ ನೆನೆದು ಚಂದಮುತ್ತ ಏಕಾಂಗಿ ಹೊರಟ. +ಕಾಡು ಜಂಗಲ್ ತಿರುಗುತ್ತ ಕಷ್ಟವೃತ್ತಿಯನಾಚರಿಸುತ್ತ ಮನದಲ್ಲಿ ದಾಖಲಾಗಿ ಅರಿಯದ ಸೀಮೆಗೆ ಸರಿದವಳ, ಆತ್ಮದ ಮ್ಯಾಲೆ ಅತ್ಯಾಚಾರ ಮಾಡಿದವಳ ಹುಡುಕುತ್ತ ನಡೆದ. ಕಾಡು ನೆಲ ಅನ್ನದೆ, ನೀರು ನಿಡಿ ಅನ್ನದೆ, ಕಲ್ಲುಮುಳ್ಳೆನ್ನದೆ, ಗೊದ್ದು ಗೋಸುಂಬೆ ಅನ್ನದೆ, ಹಾವು ಹುಲಿ ಅಂಬೋದು ಕಾಣದೆ, ಎಲ್ಲಿ ಸಿಕ್ಕಾಳು ಮುದಿಜೋಗ್ತಿ ಎಂದು, ಯಾವಾಗ ಸಿಕ್ಕಾಳು ಮುದಿಜೋಗ್ತಿ ಎಂದು ಕಾತರಿಸಿ ನಡೆದ. ಗುಡ್ಡಬೆಟ್ಟ ಏರಿ ಇಳಿದು ಗಾವುದ ಗಾವುದ ಹದಿಮೂರು ಹಗಲು ಹದಿಮೂರು ರಾತ್ರಿ ನಡೆದ. ಕಾಲುಪ್ಪಳಿಕೆಯಿಂದ ಮುಂದೆ ನಡೆಯಲಾಗದೆ ತುಸುಹೊತ್ತು ಹಾಗೇ ಇದ್ದು ಎತ್ತರೆತ್ತರ ಬೆಟ್ಟದೆತ್ತರ ದೊಡ್ಡಾಲದ ಮರದಡಿ ಕೂತ. +ದಣಿವಾರಿಸಿಕೊಳ್ಳುತ್ತ ಕುಂತಿರಬೇಕಾದರೆ ಮ್ಯಾಲಿಂದ, ಮರದ ತುದಿಯಿಂದ ಮುದಿಜೋಗ್ತಿಯ ಹಾಡು ಕೇಳಿಸಿ ವಿಸ್ಮಯಂಬಟ್ಟ. ಆ ಮುದಿಜೋಗ್ತಿ ಅಲ್ಲಿ ವಾಸವಾಗಿರುವ ಹಾಂಗಿದೆಯಲ್ಲ ಶಿವನೇ! ಆಗಲಾಗಲಿ, ಅಲ್ಲಾದರೂ ಸಿಕ್ಕಾಳೆಂದು ಆಲದ ಮರವ ಹತ್ತಿದ. ಹತ್ತಿದಂತೆ ಮರ ಆಕಾಶಕ್ಕೆ ಬೆಳೆಯುತ್ತ ಹೋಗಿ ಮುಗಿಲಿಗೆ ಮೂರು ಗೇಣು ಕಮ್ಮಿ ಉಳಿಯುವಂತೆ ಬೆಳೆಯಿತು. ಆರುಮೂರು ತಾಸು ಮರ ಹತ್ತಿ ಸಂಜೆ ಸಾಯಂಕಾಲವಾದೇಟ್ಗೆ ತುದಿ ಸಿಕ್ಕಿತು. +ನೋಡಿದರೆ- ಅರಿಯದ ಸೀಮೆ ಆಕಾಶದಂಗಳದ ಮೋಡಗಳ ರಾಜ್ಯದಲ್ಲಿ ತಾನಿರುವುದು ಅರಿವಿಗೆ ಬಂತು. ಎದ್ದು ನಿಂತ ಬೆಳಕಿನ ಲೋಕ! ಕ್ಷಿತಿಜ ಮತ್ತು ಅದರಾಚೆ ಈಚೆಗಳು ಅಲ್ಲಿ ಇಲ್ಲಿಗಳಿಲ್ಲದ ಅಖಂಡಲೋಕ! ತಾನ್ಯಾರು ಎಂತೆಂಬುದು ಮರೆತು, ಯಾಕಾಗಿ, ಏನು ಗುರಿಯಾಗಿ ಬಂದೆನೆಂಬುದ ಮರೆತು ಗಾಳಿಯಂತೆ ಹಗುರವಾಗಿ ಸಂಚರಿಸಿದ. ನೀಲಿಮ ಆಕಾಶ ಹಿನ್ನೆಲೆಗಿದ್ದು ಮೋಡಗಳಲ್ಲಿ +ಎಷ್ಟೊಂದು ಬಣ್ಣಗಳು +ಅಷ್ಟೊಂದು ಹೂವುಗಳು | +ಎಷ್ಟೊಂದು ಹೂಬಣ್ಣ ಬೆಳಕುಗಳು +ಅಷ್ಟೊಂದು ಹೂಬಣ್ಣ ಬೆಳಕುಗಳ ಹಾಡುತ್ತ +ತೇಲುವವು ರಾಗದಲಿ ಮುಗಿಲುಗಳು || +ಅಷ್ಟರಲ್ಲಿ ಮತ್ತೆ ಮಧುರವಾದ ರಾಗ ರಚನೆ ಕೇಳಿಸಿ ಮುದಿಜೋಗ್ತಿಯ ನೆನಪಾಗಿ “ಎಂಥಾ ಮರವೆ ಶಿವನೇ” ಎಂದು ತಿಳಿವಿಗೆ ಬಂದ. ನಿಂತರೆ ನಾದ, ಕುಂತರೆ ನಾದ, ತಿರುಗಿದರೆ ಮಧುರ ನಾದ, ನಡೆದರೆ ಮಾದಕದ ನಾದ- ಕಿವಿಯ ಬಳಿ ಸುಳಿವ ನಾದ, ಅಂಗಾಂಗಗಳಿಗೆ ಸ್ಪರ್ಶ ಸುಖ ಲೇಪಿಸುವ ನಾದ,- ಆಹಾ ಇದು ಎಲ್ಲ ನಾದಂಗಳು ಇಂಗುವ ಸ್ಥಳ, ಎಲ್ಲ ನಾದಂಗಳು ಹೊರಚೆಲ್ಲುವ, ಎಲ್ಲ ನಾದಂಗಳ ಒಳಗೊಳ್ಳುವ ಸ್ಥಳ- ನಾದಂಗಳ ಈ ನಾದಬ್ರಹ್ಮಲೋಕದಲ್ಲಿ ಮುದಿಜೋಗ್ತಿ ಇರಲೇಬೇಕೆಂದು- +ಮ್ಯಾಲೂ ನೋಡುತ ಕೆಳಗೂ ನೋಡುತ +ಹಿಂದೂ ನೋಡುತ ಮುಂದೂ ನೋಡುತ +ಆಸುಪಾಸು ಅಕ್ಕಪಕ್ಕ ನೋಡುತ್ತ ನಡೆದ. +ಅಲ್ಲೊಂದು ಮುತ್ತಿನರಮನೆ. ಹವಳದ ಚೌಕಟ್ಟಿನಲ್ಲಿ ವಜ್ರದ ಬಾಗಿಲು ಹಾಕಿತ್ತು. ತಳ್ಳಿ ನೋಡಿದ, ತೆರೆಯಲಿಲ್ಲ. ಒತ್ತಿ ಯತ್ನವ ಮಾಡಿದ, ತೆರೆಯಲಿಲ್ಲ. ಹೆತ್ತಯ್ಯ ಮುತ್ತಯ್ಯರ ನೆನೆದು ಇದು ತೆರೆದರೆ ಪಂಜಿನ ಸೇವೆ ನಿಮಗೆಂದು ನೂಕಿದ. ಯಾವ ಹರಕೆಗೂ ವಜ್ರದ ಬಾಗಿಲು ತೆರೆಯಲಿಲ್ಲ. ಆಸುಪಾಸು, ಯಾರದರೂ ಸಹಾಯ ಮಾಡುವಂಥವರು ಇದ್ದಾರೆಯೇ ಎಂದು ಕರೆದು ನೋಡಿದ. ಕೂಗು ಹೊಡೆದು ನೋಡಿದ. ಯಾರೂ ಬರಲಿಲ್ಲ. ಕೊನೆಗೆ ತಾಯಿ ಪಾರ್ವತೀ ಸಮೇತ ಸತ್ಯಶಿವನ ಶ್ರೀಪಾದಂಗಳ ನೆನೆದು- “ಶಿವನೇ ನಾನು ಗೊಲ್ಲಮತದ ಗೋಕುಲ ಕುಲದ ತಂದೆ ಮಾಚನಾಯ್ಕನ ವೀರ್ಯಕ್ಕೆ ಸಿರಿಲಕ್ಕವ್ವೆಯ ಗರ್ಭದಲ್ಲಿ ಹುಟ್ಟಿದ್ದೇ ಹೌಂದಾದರೆ ಹೂವು ತೆರೆದಂತೆ ಬಾಗಿಲು ತೆಗಿ, ಇಲ್ಲವಾದಲ್ಲಿ ಪ್ರಾಣ ತೆಗಿ”-ಎಂದು ಹಿಂದೆ ಸರಿದು ಗುಡುಗುಡುನೆ ಓಡೋಡಿ ಬಂದು ಮಸ್ತಕದಿಂದ ವಜ್ರದ ಬಾಗಿಲಿಗೆ ಹಾದ ನೋಡು; ಠಳಾರನೆ ದ್ವಾರಬಾಗಿಲು ತೆರೆಯಿತು ಶಿವನೆ! +ಎದುರಿಗೆ ಕರಿಘನ ಮೋಡದ ಪರದೆ ಕಂಡಿತು. ಒಳಗೆ ಇಣುಕಿ ನೋಡಿದರೆ ಶಿವ ಶಿವಾ- ಹೂವಿನ ವಿನ್ಯಾಸದ ಚಾಪೆ ಮ್ಯಾಲೆ ಪದ್ಮಾಸನದ ಸಿಂಬಿ ಸುತ್ತಿಕೊಂಡು, ಮ್ಯಾಗಡೆ ಶಿಖರದಲ್ಲಿ ಹೆಡೆಯಂತೆ ಮುಖ ಮಾಡಿಕೊಂಡು, ಕೈಯಲ್ಲಿಯ ಬಿದಿರು ಕೊಳಲನ್ನೇ ಕೊಳಲು ಮಾಡಿಕೊಂಡು ಕಣ್ಣು ಮುಚ್ಚಿಕೊಂಡು ನುಡಿಸುತ್ತ ಬಹಳ ಹೆಚ್ಚಳದಿಂದ ಕುಂತಿದ್ದಾಳೆ ನೋಡು, ಯಾರು? ಆ ಮುದಿಜೋಗ್ತಿ! ಕೈಕಾಲು ನೋಡಿದರೆ ಒಂದು ಕರಡಿಯ ಅವತಾರ, ಮೋತಿ ನೋಡಿದರೆ, ಕೆದರಿದ ಜಡೆ ನೋಡಿದರೆ- ಶಿವ ಶಿವಾ ಪುಟ್ಟ ಪುಟ್ಟ ಹೆಡೆ ತೆರೆದುಕೊಂಡು ಕುಡಿವರಿದು ಹೆಣೆದಾಡುವ ಮಿಡಿನಾಗರಗಳ ಅವತಾರ. ಇವಳೇನು ಮುದಿಜೋಗ್ತಿಯೋ? ಚಂದ್ರನಿಲ್ಲದ ಹೆಣ್ಣು ಶಿವನೋ? ಎಣಿಸಿ ಚಂದಮುತ್ತನ ಮೈಮನ ನಡುಗಿದವು. +ಮೈಮ್ಯಾಲಿನ ಚಿಂದಿಬಟ್ಟೆಗಳಲ್ಲಿ ಕಾಮನ ಬಿಲ್ಲು ಸೃಷ್ಟಿಯಾಗಿ ರಂಗುರಂಗಿನ ಬೆಳಕಿನ ತರಂಗಗಳು ಎಲೆ ಎಲೆ ವಲಯಂಗಳಾಗಿ ಸುಳಿಯುತೈದಾವೆ! ಮಾದಕದ ನಾದಂಗಳು ಇದಿರಿನಿಂದ ಹೊರಡುತ್ತಿವೆಯೊ ಕಾಮನಬಿಲ್ಲಿನ ಬೆಳಕಿನಿಂದ ಹೊರಡುತ್ತಿವೆಯೊ? ಬೆಳಕಿನ ತರಂಗಗಳು ನಾದ ತರಂಗಗಳಾಗಿ, ಬೆಳಕು ನಾದ ಎರಡೊಂದಾಗಿ ಕೇಳ ಕೇಳುತ್ತ ಕೇಳಿಸಿಕೊಂಬಾತ ತಾನಲ್ಲವೆಂದು ತನ್ನನ್ನು ಯಾರೋ ನುಡಿಸುತ್ತಿರುವರೆಂದು ಕೇಳುತ್ತಿದ್ದ ನಾದ ತನ್ನಿಂದಲೇ ಹೊರಟಿದೆಯೆನ್ನಿಸಿ ಭಾವಪರವಶ ತರುಣ ತೇಲುಗಣ್ಣಾಗಿ- +“ದಯವಾದಿಯ ಜೋಗ್ತಿ? ಇಂದಿಗೆ, ನನ್ನ ಕರ್ಮ ಹರಿಯಿತು +ನನಗೆ ನಿನ್ನ ಹಾಡಿನ ವಿದ್ಯೆ ಕೊಡು +-ಎನ್ನುತ್ತ ಕರವೆತ್ತಿ ಕೈಮುಗಿದು ಅವಳ ಪಾದದ ಮ್ಯಾಲೆ ದೊಪ್ಪನೆ ಮೈಚೆಲ್ಲಿದ. ಹೆಡೆಯೆತ್ತಿದ ಮುದಿಜೋಗ್ತಿ ಫಳಾರನೆ ಕಣ್ಣು ತೆರೆದು ಕಣ್ಣ ಬೆಳಕಿನ ಕಿರಣ ಶಲಾಕೆಗಳಿಂದ ಚಂದಮುತ್ತನ ಮೈ ಪರಚಿದಳು. ಕ್ಷಣ ಹೊತ್ತು ಚಂದಮುತ್ತನ ಹಾಂಗೆ ನೋಡಿ ಛಂಗನೆ ನೆಗೆದು ಕೋಪದಲ್ಲಿ ಕೊತ ಕೊತ ಕುದ್ದು, +“ಯಾರು ನೀನು? ಇಲ್ಲಿಗ್ಯಾಕೆ ಬಂದೆ?” +-ಎಂದು ಕೆರಳಿ ಕೆಂಡವಾಗಿ ಕೋಲಿನಿಂದ ಚಂದಮುತ್ತನ ಮಸಡಿಗೆ ತಿವಿದು +‘ತೊಲಗಿಲ್ಲಿಂದ’ ಎಂದು ಸದ್ದು ಗದ್ದಲ ಗೌಜು ಗಡಿಬಿಡಿಯ ಮಾಡುತ್ತ ದೂರ ಸರಿದು ನೆಗೆದಳು. +ನಿಂತ್ಕೊಂಡ ನೆಲೆ ಕುಸಿದಂಗಾಯ್ತು ಚಂದಮುತ್ತನಿಗೆ. ಚೇಷ್ಟೆಯಾಡುವಳೋ ಎಂದು, ಸುಳ್ಳು ಹೇಳಿ ಕಪಟವೊಡ್ಡುವಳೋ ಎಂದು ಹಿಂದೆ ಮುಂದೆ ತಿಳಿಯದೆ- +” ರಾತ್ರಿಗೆ ಚಂದ್ರನ ಪರಿಚಯವಿರುವಂತೆ ನೀನು ನನಗೆ ಪರಿಚಿತಳು. ಗುರುತಿಲ್ಲದ ಹಗಣ ಮಾಡಬೇಡ ಮುದುಕೀ.” +-ಎಂದು ಅವಳ ಮುಂದೆ ಹೋಗಿ ದಾರಿಗಡ್ಡ ನಿಂತ. +” ಎಲ ಎಲಾ ಅಮಾಸ್ಯೆಯಲ್ಲಿ ಹುಟ್ಟಿದವನೆ, ಕಣ್ಣು ಕಾಣಿಸುವುದಿಲ್ಲವೇ? ಮೈಗೆ ಅಡರ್‍ತಿಯಲ್ಲೋ ಬಡ್ಡೀ ಮಗನೆ” +-ಎಂದು ನಂಜಿನ ಮಾತು ಸುರಿದು ತಾರಾಮಾರು ಹಾರಾಡಿ ಮೀರಿ ಹಾರಿ ಹೊಂಟಳು. +ತಕ್ಷಣ ಚಂದಮುತ್ತ ಕೈಮಾರು ಅಡ್ಡ ಹಾಕಿ ದಾರಿಕಟ್ಟಿ, +“ಎಲಗೆಲಗೆ +ಏನೇನು ಒಳಗೊಂಡು ಹೊರಗೇನೋ ತೋರುವ ಜೋಗ್ತೀ, +ನಿನ್ನ ನುಡಿ ಚೋದ್ಯ, ನಡೆ ಚೋದ್ಯ. +ನನ್ನ ತಿಳಿ ಬದುಕನ್ನ ಕದಡಿ ಓಡಿ ಬಂದಿರುವಿ. +ಕೈ ಮುಗಿತೀನಿ ಕೃತಕ ಮಾಡಬ್ಯಾಡ, +ಮುಳ್ಳಿರುವ ಮಾತಾಡಿ ಆನಂದಗೆಡಿಸಬ್ಯಾಡ.” +-ಎಂದು ಕೈಮುಗಿದು ಪರಿಪರಿ ಬೇಡಿದ. ಮುದಿಜೋಗ್ತಿಗೆ ಏಳೇಳು ಲೋಕದ ಕೋಪ ನೆತ್ತಿಗಡರಿತು. +” ಎಲವೆಲವೋ ಭ್ರಾಮಕನೇ, +ನೀನ್ಯಾರು? ನಾನ್ಯಾರು? +ಇಬ್ಬರ ಮಧ್ಯದ ಹಾಡಿನ ವಿದ್ಯೆ ಧಾವುದು? +ಆಡಬಾರದ ನುಡಿಯ ಅವಗಡಿಸಿ ನುಡಿವವನೇ, +ಈಗೇನು ಹೋಗುತ್ತೀಯೊ? ಇಲ್ಲಾ +ಹಿಡಿ ಹಿಡಿ ಅಂತ ಹಿಡಿ ಶಾಪ ಹಾಕಲೊ?” +-ಎಂದು ಕೈ ಮೈ ಬಾಯಿ ತಿರುವುತ್ತ ಕೈಸನ್ನೆ, ಬಾಯಿಸನ್ನೆ, ಕಣ್ಸನ್ನೆ ಮಾಡುತ್ತ ಬೀದಿರಂಪ ಮಾಡತೊಡಗಿದಳು, ಯಾರು? ಆ ಮುದೀ ಮುದಿ ಜೋಗ್ತಿ! +ಇವಳನ್ನ ಹ್ಯಾಂಗೆ ಹಾದಿಗೆ ತರಬೇಕೆಂಬುದೇ ಹೊಳೆಯದಾಯಿತು. ಒತ್ತಾಯವಿಲ್ಲದೆ ಒಲಿಯಲಾರಳೆಂಬ ಗುರುವಿನ ನುಡಿ ನೆನಪಾಗಿ ಹಟಹಿಡಿದು ಗಟ್ಟಿಯಾಗಿ ನಿಂತು ಸೊಂಟದ ಕೊಳಲು ಹಿರಿದು ಮುದಿಜೋಗ್ತಿ ಹಿಂದೆ ನುಡಿಸಿದ್ದ ಹಾಡನ್ನ ನುಡಿಸಿದ. ಪರವಶ ಜೋಗ್ತಿ ಬೆದೆಯ ಹಸು ಸಾಧುವಾದಂತೆ ಹೊಯ್ಕಿನಿಂದ ತೆಪ್ಪಗೆ ನಿಂತಳು. ಚಂದಮುತ್ತ ತಕ್ಷಣ ಹವಣರಿತು ಹದವಾದ ನಾದ ಹೊರಡಿಸಿ ರಾಗಮಂಡಳ ಬರೆದು ಮಂಡಳಕ್ಕೆ ಅವಳ ಆವಾಹಿಸುವ ರಾಗರಚನೆ ಮಾಡಿದ. ಜೋಗ್ತಿ ಕಿಟಾರನೆ ಕಿರಿಚಿ ಓಡಬೇಕೆಂಬಲ್ಲಿ ಕೈಮಾರು ಹಾಕಿ ದಾರಿಗಡ್ಡ ಕಟ್ಟಿದ. ಕೈಮೀರಿ ಹಾರಬೇಕೆಂದವಳ ಹಿಡಿಯಲು ಕೈ ಹಾಕಿದರೆ ಉಟ್ಟ ಚಿಂದಿ ಸೀರೆ ಕೈಗೆ ಬಂತು! ಬತ್ತಲಾದರೂ ಇನ್ನೂ ಉನ್ಮಾದದಲ್ಲಿ ಗುದಮುರಿಗೆ ಹಾಕುತ್ತಾಳಲ್ಲಾ ಎಂದು ಜುಟ್ಟು ಹಿಡಿದೆಳೆದರೆ ಜುಟ್ಟು ಕೈಗೇ ಬಂದು ಮುದಿಚರ್ಮ ಮುದುಡಿ ಮುದ್ದೆಯಾದಂತಾಗಿ ಒಳಗಡೆಯಿಂದ ಚಿಲ್ಲನೆ ಮೋಡದ ಒಡಲಲ್ಲಿ ಮಿಂಚು ಮಿಡುಕಿದ ಹಾಗೆ ಬೆಳಕಿನ ಚಿಲುಮೆ ಚಿಮ್ಮಿದವು! ಇದೇನೆಂದು +ಹಿಡಿದೆಳೆದರೆ ಶಿವ ಶಿವಾ- ಅವಳುಟ್ಟ ಮುದಿಚರ್ಮ ಕೈಗೇ ಬಂದು ಮುದಿಚರ್ಮದ ಒಳಗೆಬ್ಬ ಜಗಜಗ ಬೆಳಗುವ ದಿವ್ಯ ಸುಂದರಿ, ಮೈತುಂಬ ಪರಿಮಳ ನಾರುವ ದಿಗಂಬರಿ, ಹಸಿರುಗಣ್ಣಿನ ಚಕೋರಿ ಎಂಬ ಯಕ್ಷಿ ನಾಂಚಿ ನಾಣುದಾಣಗಳ ಮುಚ್ಚಿಕೊಂಡು ನಿಂತಿದ್ದಾಳೆ! +ನೋಟ ನೋಟವ ಮೆಚ್ಚಿ ಮೈ ಬೆಚ್ಚಗಾದವು. +ಯಾರ್‍ಯಾರಿಲ್ಲದ ಸಮಯ ಸಾಧಿಸಿ +ಮಣ್ಣಿನ ಮಾನವ ಹೀಗೆ +ಏಕಾ‌ಏಕಿ ಏಕಾಂತಕ್ಕೆ ನುಗ್ಗಿ, +ತೋರಿಕೆಗಳ ಸೆಳೆದು +ಬತ್ತಲೆಗೊಳಿಸಿದರೆ ಏನಾಗಬೇಡ ದೈವದ ಬೆಳಕಿಗೆ? +ಬಿರುಗಾಳಿಗೆ ಹೊಯ್ದಾಡಿತೆ? +ಇಲ್ಲವೆ ಸೋಲಾಯಿತೆ ಅಲೌಕಿಕದ ಬಲಕ್ಕೆ? +ಮಣ್ಣಿನ ಕಣ್ಣಾಡಿದಂತೆ +ಬೆಳಕಿನ ಕುಡಿಗೆ +ತನುಮೂಡಿ ತನುವೆಂಜಲಾಗಿ +ಮನ ಮೂಡಿ ಮನವೆಂಜಲಾಗಿ +ಕಾತರಿಸಿ ಮನದಗಲ ತನುವಿನ ಉದ್ದಗಲ +ಥರಥರನೆ ನಡುಗಿದಳು ನೋಡು! +ಅವಳ ಕಂಡನೇ, +ಮೈಯಲಿ ಮಿಂಚಿನ ಹೊಳೆ ಹರಿದವು +ಚಂದಮುತ್ತನಿಗೆ. +ಬೆಳಕು ಉರಿದಾಡಿತ್ತು ಕಣ್ಣಿನೊಳಗೆ. +ಧಾರಾವತಿ ಸುರಿದವು ಅಂಗಜಲ ಕೆಳಗೆ. +ನೇತ್ರಸುಖದಲ್ಲಿ ತಬ್ಬಿಬ್ಬಾದ. +ಚಂದ್ರಮುತ್ತ ಅವಳನ್ನ ರಾಗಮಂಡಳದೊಳಕ್ಕೆ ಆವಾಹಿಸಿ ಬಂಧಿಸಿ ಒಲಿಸೊಕೊಳ್ಳುವ ರಾಗ ನುಡಿಸುವ ಮೊದಲೇ ತಾನೇ ಮಂಡಳದೊಳಕ್ಕೆ ಒಲಿದು ಬಂದು ಕತ್ತಿನಲ್ಲಿಯ ಅಮೃತವಲ್ಲಿಯ ಸರವ ತೋರಿಸಿದಳು. ಆಘಾತವಾಯ್ತು ಚಂದಮುತ್ತನಿಗೆ. ಶಿವ ಶಿವಾ! ಇದು ತಾನು ಯಕ್ಷಿಯ ಶಿಲಾಪ್ರತಿಮೆಗೆ ಮದುವೆ ಆಟದಲ್ಲಿ ಕಟ್ಟಿದ ತಾಳಿಯಲ್ಲವೆ? ಬಾಡದೆ ಇನ್ನೂ ಹಾಂಗೇ ಇದೆ! +ಎಲ್ಲಿದ್ದನೋ ಮಾರಾಯ ಮಾರ, ಸಕ್ಕರೆ ಬಿಲ್ಲಿನ ಹದೆಯ ಶಕ್ತಿಂದ ಕರ್ಣಕ್ಕೆ ತಂದು ಹೂ ಬಾಣ ಬಿಟ್ಟ ನೋಡು: +ಸ್ಮರ ಗಾಳಿ ಬೀಸ್ಯಾವು ಕರಣ ಕಳವಳಿಸ್ಯಾವು +ಪರಿಮಳದ ಪವನ ಸುಳಿದಾವು +ಸ್ತನ ವದನ ಯೌವನಕೆ ಬಾಯ್ಬಿಡುವ ಹುಡುಗನಿಗೆ +ಅತಿಕಾಮವಂತೆ ಒಲಿದಾಳು. +ಮೊದಲಿವಗೆ ಕಲಿಸುವೆನು ಮದನ ವಿದ್ಯೆಯನೆಂದು +ಹಾಕಿದಳು ಲೆಕ್ಕ ಒಳಗೊಳಗೆ +ಹುಲ್ಲೆಗಂಗಳ ನೋಟ ಹೃದಯದಲಿ ನೆಟ್ಟಾಳು +ಕನ್ನ ಹಾಕಿದಳವನ ಎದೆಗೆ. +ಬಿಗಿದ ಹೆದೆ ಅವಳ ಎದೆ ಹುರಿಗೊಂಡ ಚೆಲುವಿಕಿ +ಕುಚದಲ್ಲಿ ಎದ್ದಾವು ನವಿರು. +ಬೆದೆಯಿಂದ ಕುದಿವ ಮೈ ರುಚಿಯ ತೋರುವೆನೆಂದು +ಮಾಯಕಾರ್ತಿ ಯಕ್ಷಿ ಅಂದಾಳು. +ಆತುರ ತೀವ್ರ ಕಾಮಾತುರ ತಾಳದೆ +ಚಂದಮುತ್ತನ್ನ ಆಕ್ರಮಿಸಿ +ಬಾಹುಮಂಡಳದಲ್ಲಿ ಕಟ್ಟಿ ಮುದ್ದಾಡಿದಳು +ಕುಂಭ ಕುಚದಿಂದವನ ಗುಮ್ಮಿ. +ಹೆಪ್ಪು ಹಾಕಿದ ಹಾಗೆ ಜನಿಗಿ$ಯ ಹಾಲಿಗೆ +ಒಪ್ಪುಗೊಂಡರು ಅಪ್ಪುಗೆಯಲಿ +ಜೀವರಸ ಚಿಮ್ಮಿಸುವ ಸೊಗಸುಗಳ ಸುಖಿಸಿದರು +ಗಳರವ ಸಂಗೀತದಲ್ಲಿ. +ಎಳೆತಗಳ ಸೆಳೆತಗಳ ಬಲಗೊಳಿಸಿ ಸುಖಿಸಿದಳು +ಜಘನ ಗದ್ಗದಿಸ್ಯಾವು ಬೆವರಿ +ಮಾನ$ವ ಶಕ್ತಿಗಳ ಚಪ್ಪರಿಸಿ ಸವಿದಳು +ತೃಪ್ತಿಯ ನಗಿಗಳ ಸೂಸಿ. +ಇಂತೀಪರಿ ನಿರನುಭವಿ ಗೊಲ್ಲಗೋಕುಲರ ಹೈದನ ಪಳಗಿಸಿ ಸುಖಿಸಿ ಸುರತದ ಸಿದ್ಧಗಿರಿಶಿಖರದಿಂದ ಜಗುಳಿ ಚಕೋರಿ ಎಂಬ ಯಕ್ಷಿ ಚಂಚಮುತ್ತನ ಚಂದಮುಖದ ಮುತ್ತು ಬೆವರೊರೆಸಿ ಚಿಗುರು ಬೆರಳಿಂದವನ ಮುಂಗುರುಳು ನ್ಯಾವರಿಸಿ ಮುದ್ದಾಡಿದಳು. ಆಮೇಲಾಮೇಲೆ ಸದರಿ ಯಕ್ಷಿ ಪರಿ ಪರಿ ರೀತಿಯಲಿ ಹೇಳಿದ ಸಂಗೀತ ವಿದ್ಯವನು ಸರಿ ಸರಿ ಎನ್ನುತ್ತ ಚಂದಮುತ್ತನ ಪಡಕೊಂಡನೆಂಬಲ್ಲಿಗೆ ಗಿರಿಜಾರಮಣ ಶಿವಶಿವಾ ಸದರಿ ಸಂಧಿ ಮುಗಿದವು. +೨೦. ಕಲಿತ ವಿದ್ಯನ ಮಾಡಿದಳು +ಮಾತೆಲ್ಲ ಸಂಗೀತ, ನಡೆಯೆಲ್ಲ ನರ್ತನವಾದ ಚಕೋರಿ ಎಂಬ ಯಕ್ಷಿ ಕೊಟ್ಟರೆ ಕೊಡಬೇಕು ಇವಗೆ ವಿದ್ಯೆಯನೆಂದು ಚಂದಮುತ್ತನ ದಡ್ಡತನಗಳ ಪಳಗಿಸಿ ಮಹಾನುಭಾವನಿಗಿಂತ ನೂರು ಮಡಿ ನಿಷ್ಠುರವಾಗಿ ಕಠಿಣ ವ್ರತಗಳ ಮಾಡಿಸಿ ರಾಗ ರಾಗಿಣಿಯರ ನಿಯಮಂಗಳ ಬೋಧೆ ಮಾಡಿದಳು. ಬೋಧೆ ಮಾಡುವಾಗ ಅವಳೆಂದೂ ತುಟಿ ತೆರೆದಾಡಲಿಲ್ಲ. ಮುಗುಳು ನಗೆಗೂಡಿ ಮೌನದಲ್ಲಿ ಕುಂತರೆ ಸಾಕು, ಆಕಾಶಗುಂಭದ ಒಳಗಿಂದ ಗುಂಗು ಗುಂಗಿನ ನಾದ, ದುಂಬಿಯ ನಾದ, ತಂಬೂರಿ ತಂತಿಯ ಆಧಾರಶೃತಿ ನಾದ ಸುನಾದಂಗಳು ಅಲೆಯಲೆಯಾಗಿ ಒದಗಿಬರುತ್ತಿರುವಲ್ಲಿ- ಚಕೋರಿ ಎಂಬ ಯಕ್ಷಿ ಮೂರು ಚಂದ್ರರ ಕಾಲ ರಾಗ ರಾಗಿಣಿಯರ ಗುಟ್ಟುಗಳ ಒಳಗಿವಿಗೆ ತಾಗುವಂತೆ ಬೋಧೆ ಮಾಡಿದಳು. ಒಳಗಿವಿಗೆ ತಾಗಿದ್ದು ಹಾಡಾಗಿ, ಹಾಡಿನಲಿ ಹುರಿಗೊಂಡ ನಿಜವಾಗಿ ಹೊರಬರುವಂತೆ ಮಾಡುವ ಹವಣು ಹೇಳಿಕೊಟ್ಟಳು. ಆಮ್ಯಾಲೆ ಮಾರನೇ ಚಂದ್ರನಲ್ಲಿ ಆಕಾಶ ಸೂಕ್ಷ್ಮದಲಿ ಕರಗಿದ್ದ ರಾಗಂಗಳ ಸ್ಥೂಲದಲ್ಲಿ ಕರೆದು ತೋರಿಸಿ, ಅವರ ನಡೆವಳಿಕೆ, ಅಭಿಮಾನಿದೇವತೆಗಳ ಕೊಡುಕೊಳುವ ರೀತಿರಿವಾಜುಗಳ ಬೋಧಿಸಿದಳು. ಕೆಲವು ದೈವಂಗಳು ತಾವಾಗಿ ಮೆಚ್ಚಿಬಂದು ಸ್ವಪ್ನದಲ್ಲಿ ಕಾಣಿಸಿಕೊಂಡು ತಮ್ಮನ್ನು ನುಡಿಸುವ ಗುಟ್ಟುಗಳ ಬಿಟ್ಟುಕೊಟ್ಟವು. ಕೆಲವು ಮೈಮ್ಯಾಲೆ ಆವೇಶವಾಗಿ ರಾಗರಚನೆ ಕಟ್ಟಿ ತಮ್ಮ ತಾವು ನುಡಿಸಿಕೊಂಡವು. ಮಹಾಶಿವರಾತ್ರಿಯಂದು ಮಹಾನುಭಾವನೊಂದಿಗೆ ಕಂಡ ರಾಗಂಗಳು ಇವನು ಕೊಳಲು ತುಟಿಗಿಟ್ಟುದೇ ತಡ ಪ್ರಸನ್ನವಾಗಿ ಆಶೀರ್ವದಿಸಿ ಸರಿದವು. ಇಂತೀಪರಿ ಚಂದಮುತ್ತ ಒಂದರ ಮ್ಯಾಲೊಂದು ಮತ್ತೊಂದು ಮಗದೊಂದು ರಾಗವ ಕಲಿತು ಕಲಿತವಿದ್ಯನಾದನು. +ಆಮೇಲಾಮೇಲೆ ಒಂದು ದಿನ ತುಂಬಿದ ಸೋಮವಾರ ಹುಣ್ಣಿವೆ ದಿನ ಸಪ್ಪಟು ಸರಿರಾತ್ರಿ ಒಳ್ಳೆಯ ಗಳಿಗೆ ಮಂಗಳ ಮಹೂರ್ತವ ನೋಡಿ ತಿಂಗಳ ರಾಗ ರಚನೆಯ ಪೂರ್ವಾಪರ ಹೇಳಿ ಈಗ ನುಡಿಸು ಎಂದಳು. ಚಂದಮುತ್ತ ಕೊಳಲು ನುಡಿಸಿದ. ಸಾಲದೆಂದಳು. ಮತ್ತೆ ನುಡಿಸಿದ. ಮತ್ತೂ ಸಾಲದೆಂದಳು. ಈ ಹಿಂಗೆ ಎಷ್ಟು ಬಾರಿ ನುಡಿಸಿದರೆ ಅಷ್ಟೂ ಬಾರಿ ಸಾಲದು ಸಾಲದೆಂದಾಗ ಚಂದಮುತ್ತ ಚಿತ್ತ ಸಂಶಯದಿಂದ ಕೇಳಿದ: +“ಒಂದು ರಾಗ ನೀ ತೋರಿದ ಸೀಮೆಗಳ ತುಂಬಿ ಸಂಪೂರ್ಣವಾದುದಕ್ಕೆ ಕುರುಹೇನು ದೇವಿ?” +ರಾಗದ ಅಭಿಮಾನಿದೇವತೆ ಬಹಿರೂಪ ಕಳಚಿ ಶುದ್ಧ ಆನಂದ ರೂಪುವಡೆದು ಆಕಾಶದಂಗಳದಲ್ಲಿ ತೇಲುವುದೆ ಕುರುಹೆಂದಳು. ದೇವತೆ ಒಲಿದರೆ ನನಗೇನು ಲಾಭವೆಂದರೆ ಆ ದೇವತೆ ಬೇರೆ ಯಾರೂ ಅಲ್ಲ, ನಿನ್ನದೆ ಬಿಂಬ, ನಿನ್ನ ನಿಜವ ನೀನೇ ಕಾಂಬ ಆನಂದಿಸುವ ಲಾಭವೆಂದಳು. +ಚಂದಮುತ್ತ : ನೀನ್ಯಾಕೆ ನುಡಿಸಿ ತೋರಿಸುವುದಿಲ್ಲ ದೇವೀ? +ಚಕೋರಿ : ಗುರುವಲ್ಲ, ನಿನ್ನ ಇಚ್ಛಾಧೀನ +ನಾವು ಹಂಗಿಗರಯ್ಯ ನಿನ್ನ ಕೊಳಲುಲಿಗೆ. +ಬೆಂಕಿ ಪ್ರಕಟವಾಗುವುದಕ್ಕೆ +ಬೇಕು ಮರದ ಆಸರೆ +ಅಂತೆಯೇ ಬೇಕಯ್ಯ ನೀನು ನಮಗೆ. +ಚಂದಮುತ್ತ : ಬಹಿರೂಪದಲ್ಲಿ ನನ್ನೆದುರು ಕುಂತಿರುವೆಯಲ್ಲ ದೇವೀ? +ಚಕೋರಿ : ನಿನ್ನ ಕಾಮನೆಯಿಂದಾಗಿ +ಸ್ಥೂಲದಲ್ಲಿ ಚಕೋರಿ ಎಂಬ ಯಕ್ಷಿ +ಸೂಕ್ಷ್ಮದಲ್ಲಿ ತಿಂಗಳ ಬೆಳಕಂಡು +ಬದುಕುವ ಚಕೋರ ಪಕ್ಷಿ; +ತಿಂಗಳು ರಾಗದ ಅಭಿಮಾನಿ ದೇವತೆ. +ತಿಂಗಳು ರಾಗ ಕಾರಣವಾಗಿ +ಯಕ್ಷಿಯ ಬಹುರೂಪ ಕರಗಿ +ಪಕ್ಷಿಯಾಗುವುದು ನಮ್ಮ ಧರ್ಮ. +ಕಲಾವಿದನಂತೆ ಕಲೆಯೂ ಹುಡುಕುತ್ತದೆ +ತಕ್ಕವನನ್ನ. +ಹಾಗೆ ಪರಸ್ಪರ ಹುಡುಕಿ ಪಡಕೊಂಡವರು +ನಾವು ನಿನ್ನನ್ನ. +ನೀನು ನಮ್ಮನ್ನ. +ಇಷ್ಟು ಕೇಳಿದ್ದೇ ಚಂದಮುತ್ತ ಥರಾಥರ್‍ನೆ ನಡುಗಿ ಹತ್ತೂ ಬೆರಳು ಕೂಡಿಸಿ ಮುಗಿದು: +ಭಯವಾಗುತ್ತದೆ ದೇವೀ, +ಶಕ್ಯವೆ ಒಗೆತನ ನಿಮ್ಮೊಂದಿಗೆ? +ಲೋಕ ಲೌಕಿಕದವನು ನಾನು +ಮುಗಿಲ ತುದಿಗಿರುವವರು ನೀವು. +ನಿಮ್ಮ ಕಟ್ಟಳೆ ರೀತಿರಿವಾಜು ನನಗರಿದು. +ನರಲೋಕದ ನಡಾವಳಿ ನಿಮಗರಿದು. +ನಿಮ್ಮೊಂದಿಗೆ ವ್ಯವಹರಿಸಲು +ನನ್ನ ಜಾಣ್ಮೆ ಸಾಲದೇ ಬರಬಹುದು. +ನನ್ನ ದಡ್ಡತನ ಸಮೇತ ಎಲ್ಲ ನಿನ್ನದು ದೇವೀ. +-ಎಂದು ಮೈಹಾಸಿ ಅವಳ ಪಾದದ ಮ್ಯಾಲೆ ಅಡ್ಡಬಿದ್ದ. ಅವನ ಮುಗ್ದ ನಡೆ ನೋಡಿ ನುಡಿ ಕೇಳಿ ಹವಳದುಟಿ ಯಕ್ಷಿ ಚಂದಮುತ್ತನ್ನ ಹಿರಿದು ಮೆಚ್ಚಿದಳು. +೨೧. ಕನ್ನಡಿಯಾದರು ಒಬ್ಬರಿಗೊಬ್ಬರು +ಆಮೇಲಾಮೇಲೆ ಚಕೋರಿ ಎಂಬ ಯಕ್ಷಿ ಚಂದಮುತ್ತನ ದೃಡವ ಪರೀಕ್ಷಿಸಿ, ಇನ್ನಷ್ಟು ಕಠಿಣ ವ್ರತ ನಿಷ್ಠೆಗಳ ಮಾಡಿಸಿ ತಿಂಗಳು ರಾಗ ಬೋಧಿಸುವ ದೊಡ್ಡ ಮನಸ್ಸು ಮಾಡಿದಳು. ಒಂದು ದಿನ ತುಂಬಿದ ಸೋಮವಾರ ಅಮಾವಾಸ್ಯೆಯಂದು ಸೋಮವಾರದ ಒಡೆಯ ನಾದಪ್ರಿಯ ಶಿವಲಿಂಗಸ್ವಾಮಿಗೆ ಚಂದಮುತ್ತನಿಂದ ಮುಂಜಾನೆಯ ಹನಿ ಪೂಜೆ, ಮಧ್ಯಾಹ್ನದ ಮಹಾಪೂಜೆ ಮಾಡಿಸಿದಳು. ಸಂಜೆಯ ಶಾಂತಿ ಪೂಜೆಯಾದೇಟ್ಗೆ ಸಾಲು ಸಾಲು ಸೊಡರುರಿದಂತೆ ತಾರಾನಕ್ಷತ್ರ ಬೆಳಗಿ ರಾತ್ರಿಯಾಯಿತು. ಪಡುವಲ ಮುಖವಾಗಿ ತಿಂಗಳು ರಾಗದ ಮಂಡಳ ಬರೆದು, ಮಂಡಳದಲ್ಲಿ ಸತ್ಯಸಿವಲಿಂಗದೇವರ ಸ್ಥಾಪನೆ ಮಾಡಿ ನೆತ್ತಿಯ ಮ್ಯಾಲೆ ಮಿಡಿನಾಗರ ಜಡೆ ಬರೆದಳು. ಜಡೆಯಲ್ಲಿ ಸುಣ್ಣದ ಗೆರೆಯೆಳೆದು ಎಳೆಯ ಚಂದ್ರನ ಬರೆದು ಮಂಡಳದ ಸುತ್ತೂ ಕಡೆ ಮಂತ್ರಭಾವಿತ ರಕ್ಷೆಗಳ ರಚಿಸಿ ರಕ್ಷಿಸೆಂದು ಭೃಂಗೀಶನ ಪ್ರಾರ್ಥಿಸಿಕೊಂಡಳು. ಇಷ್ಟೊತ್ತಿಗೆ ಸಪ್ಪಟು ಸರಿರಾತ್ರಿ ಕಲ್ಲೂ ನೀರೂ ಕರಗುವ ಸಮಯವಾಗಿರಲು ಸಾವಿರ ಶಿವಗಣಂಗಳ ಕರೆದು ಜೀವಬೋಧೆಯ ಮಾಡಿ ಕಾವಲಿರಿಸಿದಳು. ಆಮ್ಯಾಲೆ ಒಳ್ಳೆಯ ನಾದ ಸುನಾದವ ಅನುಗ್ರಹಿಸಿ ಸಾರಾಂಶನುಡಿ ಹೇಳಿದಳು : +ಅಯ್ಯಾ ಹೆಚ್ಚಿನವನೇ +ಮೆಚ್ಚಿ ಅರ್ಪಿಸಿಕೊಂಡಿದ್ದೇನೆ +ಹೆಚ್ಚು ಕಡಿಮೆ ನುಡಿಸಬ್ಯಾಡ +ಎಚ್ಚವಿರಲಿ ರಾಗದ ಮ್ಯಾಲೆ +ನನ್ನ ಜೀವದ ಮ್ಯಾಲೆ +ಕಣ್ಣಿರಲಿ ಮಂಡಳದ ಚಂದ್ರನ ಮ್ಯಾಲೆ +ಇನ್ನು ನುಡಿಸೆಂದಳು +ಚಂದಮುತ್ತ ಕೊಳಲ ನುಡಿಸಿದ. ಈಗ ಹಬ್ಬಿತು ನೋಡು ರಾಗದ ಮಾಯೆ ಸುತ್ತ ಕ್ಷಿತಿಜದ ತನಕ ಮ್ಯಾಲುರಿವ ಸೊಡರು ನಕ್ಷತ್ರಗಳ ತನಕ! “ಮಂಡಳದಲ್ಲಿ ಏನು ಕಂಡೆ?” ಎಂದಳು. +“ಸಾವಳಗಿ ಶಿವಲಿಂಗವ ಕಂಡೆ +ಬದಿಯಲ್ಲಿ ಮಡುವ ಕಂಡೆ” +ಸಾಲದು ಸಾಲದೆಂದು ಚಂದಮುತ್ತನ ಎಡಗಾಲ ಹೆಬ್ಬೆರಳ ಮ್ಯಾಲೆ ತನ್ನ ಬಲಗಾಲ ಹೆಬ್ಬೆರಳೂರಿ, ಬಾಹುಸರ್ಪಂಗಳಿಂದವನ ಗಟ್ಟಿಯಾಗಿ ಕಟ್ಟಿ ಮುಖಕ್ಕೆ ಮುಖ ಕೊಟ್ಟು ಕಣ್ಣಲ್ಲಿ ಕಣ್ಣಿಟ್ಟು ಈಗ ನೋಡು ನೋಡೆಂದಳು. ಏಕಾ‌ಏಕೀ ನಡೆದ ಈ ಆಕ್ರಮಣವ ಎದುರಿಸಲಾರದೆ ಚಂದಮುತ್ತ ಚಡಪಡಿಸುತ್ತ ಯಕ್ಷಿಯ ಕುರಂಗಾಕ್ಷಿಗಳಲ್ಲಿ ನೋಡಿದ. +ಚಕೋರಿ: ಹೇಳು ನನ್ನ ಕಣ್ಣಲ್ಲಿ ಏನೇನು ಕಂಡೆ? +ನನ್ನ ಮುಖದ ಕಾಂತಿಯ ಕಂಡೆಯಾ? +ನಿನ್ನ ಹಾಡಿನ ಬೆಳಕನ್ನ ಕಂಡೆಯಾ? +ಚಂದಮುತ್ತ : ಮಂಡಳದ ಶಿವನ ಜಡೆ +ಪಡುವಲ ಗಿರಿಯಾದುದ ಕಂಡೆ, +ಪಡುವಲ ಗಿರಿ ಬಿರಿದು ಗೆರೆಗಾತ್ರದ ಚಂದ್ರ +ಉದಯವಾದುದ ಕಂಡೆ. +ಗೆರೆಗಾತ್ರದ ಚಂದ್ರ ಚೊಗಚಿಯ ಹೂಗಾತ್ರದ +ಚಂದ್ರನಾದ. +ಎಳೆಯ ಚಂದ್ರ ಬೆಳೆದ ಚಂದ್ರನಾದ. +ಚಂದ್ರಾಮಸ್ವಾಮಿಯ ಬೆಳಕು +ಮೋಡಮೋಡದ ಮ್ಯಾಲೆ +ಕಾಲೂರಿ ಇಳಿವುದ ಕಂಡೆ. +ಇಳಿದ ಬೆಳಕಿನಲ್ಲಿ +ನೋಡಿದರೆ ಶಿವಶಿವಾ, +ಶಿವಾಪುರದ ಮಾಯದ ಕೆರೆ ಕೆಳಗಿದೆ. +ಬೆಳಕಿನ ಕೆನೆಗಟ್ಟಿದ ಚಂದ್ರ ಮ್ಯಾಲಿದ್ದಾನೆ. +ಚಂದ್ರಾಮನ ಹೃದಯದಲ್ಲಿ ಮೇಯುವ ಜಿಂಕೆ ಮರಿಯಿದೆ. +ಕೆರೆನೀರಿನ ಹೃದಯದಲ್ಲಿ +ಚಂದ್ರಾಮನ ಕನಸು ತೇಲಾಡಿದೆ…. +ಆವಾಗ ನೋಡು ಶಿವಾ, ನೋಡನೋಡುತ್ತಿರುವಂತೆ ಏನಾಯಿತೆಂದರೆ, +ಆಕಾಶ ನೀಲಿಮದ ಚಂದ್ರನೊಳಗಿಂದ +ಚಂಗನೆ ಹೊರಕ್ಕೆ ನೆಗೆಯಿತು ಜಿಂಕೆಮರಿ. +ಎಳೆಯ ಜಿಂಕೆಮರಿ ಹೊಳೆವ ಜಿಂಕೆಮರಿಯಾಗಿ +ಕೆಳಕ್ಕಿಳಿದು ನೇರ ಕೆರೆಗೇ ಬಂತು ಬಾಯಾರಿಕೆಗೆ. +ಬಾಯಿ ಹಾಕಿದ್ದೇ +ನೀರಲ್ಲಿ ಕಂಡಿತು ಇನ್ನೊಂದು ಜಿಂಕೆಮರಿ. +ಗುರುತಿಲ್ಲದ ಮರಿಯೆಂದು ಸ್ನೇಹದಲಿ ಮೂಸಿ +ಮುದ್ದಾಡಿ ಕೊಂಬಿನಲಿ ತಿವಿದಾಡಿದಾಗ +ಕದಡಿದ ಕೆರೆನೀರು +ತೆರೆತೆರೆ ಬೆಳಕಿನ ಹೆಡೆಯಾಡಿಸಿತು. +ನೀರು ತಿಳಿಯಾಗಿ ಮತ್ತೆ ಕನ್ನಡಿಯಾಗಿ ನೋಡಿದರೆ +ಎದುರುಬದುರಾಗಿವೆ ರವರುದ್ರಗೋಪದಲಿ +ಎರಡೂ ಮರಿ! +ಹಗೆಹಗೆ ಹೊಗೆಯಾಡುವ ಉಸಿರು ಬಿಡುತ್ತ +ಉರಿವ ನೋಟಗಳಿಂದ ಪರಸ್ಪರ ಇರಿಯುತ್ತ +ಕೊಂಬಿನ ಹರಿತ ಶಕ್ತಿಗಳ +ಪ್ರಯೋಗಿಸಲು ಹೊಂಚಿ ನಿಂತಿವೆ +ಕಾದುವ ಹಮ್ಮಿನಲ್ಲಿ! +ಒಂದರ ಕಣ್ಣಲ್ಲಿ ಇನ್ನೊಂದು ಬೆಳೆಯುತ್ತಿದೆ +ರಾಕ್ಷಸಾಕಾರ. +ಅನಬಹುದೆ ಶಕ್ತಿಯುಕ್ತಿಗಳಲ್ಲಿ +ಅದು ಹೆಚ್ಚು ಇದು ಕಮ್ಮಿ ಅಂತ? ಮುಖ್ಯ +ಎರಡರ ಪ್ರಳಯವೂ ಸನ್ನಿಹಿತ. +ಎರಡರ ಕಾಮಿತ ಒಂದಾದರೆ +ನಿಭಾಯಿಸಬಹುದು, ಆ ಮಾತು ಬೇರೆ. +ಅದರಲ್ಲಿ +ಒಂದಕ್ಕೆ ನೀರಿನ ಬಾಯಾರಿಕೆ. +ಇನ್ನೊಂದಕ್ಕೆ ಬೆಳಕಿನ ಬಯಕೆ. +ಎರಡರ ಉಸಿರಿನ ಜ್ವಾಲೆ +ಸುಡು ಸುಡು ಸುಡುತ್ತದೆ ಕಾಡನ್ನ, ಕೆರೆಯನ್ನ. +ತಕ್ಷಣ ಚಂದಮುತ್ತ ಮಧ್ಯೆ ಬಂದು, +“ಕೆರೆನೀರಲ್ಲಿ ಕುದಿಯುತ್ತಿರುವ ಚಂದ್ರಾಮಸ್ವಾಮಿ +ನೀವಿಬ್ಬರೂ ಬಿಂಬ ಪ್ರತಿಬಿಂಬಗಳೆಂದು +ನೀತಿ ನುಡಿ ಹೇಳಿ +ಬಗೆಹರಿಸಬಾರದೆ ಮರಿಗಳ ಜಗಳ?” +-ಎಂದು ಹೇಳಿದ. ತೀಕ್ಷ್ಣ ಕಣ್ಣಿಂದ ಚಂದಮುತ್ತನ್ನ ನೋಡಿ ಜಗಳ ಮರೆತು ಇವನ ಕಡೆಗೇ ಬಂತು ಜಿಂಕೆಮರಿ. +“ಬೆಳಕಿನ ಸುಗ್ಗಿ ಒಕ್ಕೋಣ ಹತ್ತುಬಾರೋ ಹುಡುಗ” ಎಂದಿತು. ಹತ್ತು ಎಂದು ಜಯವುಳ್ಳ ಯಕ್ಷಿಯ ದನಿ ಕೇಳಿಸಿತು. ಚಂದಮುತ್ತ ಹೋಗಿ ಬೆಳ್ಳಿಯಂತೆ ಮಿರು ಮಿರುಗುವ ಜಿಂಕೆಮರಿಯ ಬೆನ್ನೇರಿ ಗಟ್ಟಿಯಾಗಿ ಕತ್ತು ತಬ್ಬಿಕೊಂಡ. ಹುಯ್ಯಲಿಟ್ಟಂತೆ ಸುಂಟರಗಾಳಿ ಬೀಸಿ ಭೂಮಿ ಗಿರ್ರನೆ ತಿರುಗಿ ನಾಕು ಲೋಕ ಏಕಾವಾಗುವಂತೆನಿಸಿ ಚಂಗನೆ ನೆಗೆಯಿತು ಜಿಂಕೆ ಮೇಲುಮೇಲಕ್ಕೆ ಮ್ಯಾಲಿನ ಮಿರಿಲೋಕಕ್ಕೆ. ಈಗ ನೋಡಿದರೆ ಸಾವಳಗಿ ಶಿವ ಶಿವಾ, ಯಕ್ಷಿ ಬೇರೆಯಲ್ಲ, ಜಿಂಕೆ ಬೇರೆಯಲ್ಲ ಯಕ್ಷಿ ಜಿಂಕೆ ಎರಡೊಂದಾಗಿ ತನ್ನಯ ಪ್ರತಿಬಿಂಬವಾಗಿ ಕ್ಷಿತಿಜದಾಚೆಗೆ ಸೇರಿಕೊಂಬ ರಸ್ತೆಯ ರಚಿಸಿ ತೇಲಾಡಿ ದಾಟಿದರು ಸುಲಭದಲ್ಲಿ. +ಒಬ್ಬರಿಗೊಬ್ಬರು ಕನ್ನಡಿಯಾದರು +ಬೇಲಿಯಿಲ್ಲದ ಬಯಲಿನಲ್ಲಿ +ಒಬ್ಬರನ್ನೊಬ್ಬರು ಒಳಗೊಂಡರಿಬ್ಬರು +ಸುರಿವ ಎಳೆಬೆಳದಿಂಗುಳಲ್ಲಿ. +ಇಂತೀಪರಿ ಬೆಳ್ಳಿಲೋಕದ ಅಂಚಿನತನಕ ಚಂದಮುತ್ತನ್ನ ಕರೆದೊಯ್ದು ಇನ್ನು ಹಿಂತಿರುಗೆಂದಳು. ಚಂದಮುತ್ತ ತಿರುಗಿ ಬಂದು ಯಕ್ಷಿಯ ನಕ್ಷತ್ರ ಕಣ್ಣಿಂದ ದೃಷ್ಟಿಯ ಕಿತ್ತ. +ನೆಪ್ಪಿರಲಿ ಗೆಳೆಯಾ, ಬೆಳ್ಳಿಲೋಕದಲ್ಲಿ ತೇಲುವಾಗ +ಅಪಸ್ವರವುಂಟಾದರೆ ಇಬ್ಬರಿಗೂ ತಪ್ಪದ ಹಾನಿ. +ಎಂದಳು ಹಸಿರುಗಣ್ಣಿನ ಯಕ್ಷಿ. +ತಿಂಗಳ ಸುಖವಿತ್ತು +ಮುದವಿತ್ತು ಮುಖದಲ್ಲಿ +ಬೆಳ್ದಿಂಗಳು ಸುರಿದಿತ್ತು ಅವಳ ಮೈಯಿಂದ | +ಬೆವರಜಲ ಸುರಿದಿತ್ತು ಇವನ ಮೈಯಿಂದ || +೨೨. ಮಗನೇ ನೀ ಬೇಗನೆ ಬಾ +ಮ್ಯಾಲಿನ ಲೋಕದಲ್ಲಿ ಈ ಹಿಂಗೆ ನಡೆಯುತ್ತಿರಬೇಕಾದರೆ ಕೆಳಗಿನ ಲೋಕ ಗೋಳುಬೀಸುವ ಗಿರಣಿ ನಮ್ಮೀ ಧರಣಿಯ ಮ್ಯಾಲೆ ಏನು ನಡೆಯುತ್ತಿತ್ತೆಂದರೆ : +ಹೇಳಿ ಹೋದ ಸೋನೆ ಮಳೆ ಬರಲಿಲ್ಲವಾಗಿ +ಶಿವಾಪುರದ ಜೀವಜಿಂದಗಾನಿ ಅಸ್ತವ್ಯಸ್ತವಾಗಿವೆ. +ಮ್ಯಾಲಿನ ಲೋಕದ ಮಳೆ ತಪ್ಪಿ +ಕೆಳಗಿನ ಲೋಕದಲ್ಲಿ ಬೆಳೆಯಿಲ್ಲದೆ +ನಾಡು ನರಲೋಕ ನರಕವಾಗಿದೆ. +ಹುಲ್ಲು ಹಸಿರಿಲ್ಲದೆ ಹಟ್ಟಿಯೊಕ್ಕಲು ಮಂದಿ +ಕಟ್ಟಿ ಮೇಯಿಸುವ ದನ, ಬಿಟ್ಟು ಮೇಯಿಸುವ ಕುರಿಗಳ +ಹೊಡೆದುಕೊಂಡು ಮೇವಿರುವ ನಾಡಿಗೆ ಗಿಳೆ ಹೋಗಿದ್ದಾರೆ. +ಅಡವಿಯಲ್ಲಿ ಜೇನು ಸಿಗದೆ, +ಕಾಡುಬಾಳೆ ಗೆಡ್ಡೆಗೆಣಸು ಸಿಗದೆ +ತಿಂದೇನೆಂದರೆ ಸೊಪ್ಪು ಸದೆ ಸಿಕ್ಕದೆ, ಪ್ರಾಯದವರು ಗುಳೆ ಹೋಗಿ +ಉಳಿದವರು ಬಿದಿರಕ್ಕೆ ಬಿದಿರ ಕಳಲೆಯ ತಿಂದು +ಬದುಕಿದ್ದಾರೆ, +ಹದ್ದುಗೈಯಿಟಗೊಂಡು ಮಳೆ ಹಾದಿಯ ನೋಡುತ್ತ, +ಮಳೆ ಕಳಿಸು ಶಿವನೇ ಎಂದು +ಕರುಳು ಬಾಯಿಗೆ ಬರುವಂತೆ ಮೊರೆಯಿಡುತ್ತ. +ನೀಲಿಮ ಆಕಾಶದಲ್ಲಿ +ಉರಿಯುವ ಮೋಡ ಹಾರ್‍ಯಾಡುತಾವೆ. +ಚಂದ್ರ ಹೊತ್ತಿ ಬೆಳ್ದಿಂಗಳ ಬೂದಿ ಬಿದ್ದು +ನೀರು ನೆರೆಳಿಲ್ಲದ ಕಾಡು ಉರಿವುಸಿರ ಹಾಕುತ್ತಿದೆ. +ಹಕ್ಕಿಪಕ್ಕಿ ಬೆವೆತು ಬೆಂಡಾಗಿ ಸೀಮೆದಷ್ಟಿವೆ. +ಮಳೆ ಕಳಿಸು ಶಿವನೇ +ನಮ್ಮ ಕಾಡಿಗೆ ಮತ್ತೆ ಯೌವ್ವನ ಬರಲಿ. +ಹಸಿರು ಹಬ್ಬಿ ಹಂದರವಾಗಲಿ. +ಹೂಮುಡಿದು ಶೃಂಗಾರವಾಗಲಿ +ಹಾಡುವ ಹಕ್ಕಿಗಳಿಂದ, ತುಂಟ ಪ್ರಾಣಿಗಳಿಂದ +ಮೆಲುಕಾಡಿಸುವ ನಮ್ಮ ದನಕರುಗಳು ಕುರಿಗಳಿಂದ +ಕಾಡು ತುಂಬಲಿ. +ಪುಣ್ಯಕೋಟಿ ಹಸು ಲಕ್ಕಬ್ಬೆ ಕಣ್ಣು ಹೊತ್ತಿಸಿಕೊಂಡು ಮಗ ಇಂದು ಬಂದಾನು ಈಗ ಬಂದಾನೆಂದು ಹಾದಿಗುಂಟ ನೆದರು ಹಾಸಿ ಕಾದಳು. ಸುತ್ತಿನ ದೇವದೈವಂಗಳ ಮಗನ ಕಳಿಸಲೆಂದು ಬಿದಿರುಬತ್ತ ಕುಟ್ಟುತ್ತಾ, ರಾಗ ಎಳೆಯುತ್ತಾ, ಪದ ಹಾಡುತ್ತಾ ಬೇಡಿಕೊಂಡಳು. ಬಿಕ್ಕಳಿಕೆ ಜಾಸ್ತಿಯಾದರೆ ಮಗ ನೆನೆದನೆಂದು ಚಿಂತೆ ಮಾಡಿದಳು. ಚಂದಮುತ್ತನ ಚಿಕ್ಕಂದಿನ ಆಟಿಗೆಗಳ: ನಾರಿನ ಹಗ್ಗ, ಹೂವಿನ ಮುಖವಾಡದ ಮಣ್ಣಿನ ಬಸವ, ದುಂಡುಮಲ್ಲಿಗೆ ಹಸು, ಇರಿದಾಡಲು ನಿಂತ ಮರದ ಟಗರು, ಪಿಳ್ಳಂಗೋವಿ, ಕುಣಿಯೋ ನವಿಲು, ಬಂಡಿ ಎಳೆಯುವ ಗಿಣಿ, ಮೇಯುವ ಕುರಿಗಳ ಜೋಪಾನವಾಗಿ ಕೂಡಿಟ್ಟು ಅವುಗಳೊಂದಿಗೆ ಮಗನ ಆಟ ಕಲ್ಪಿಸಿ ಆನಂದಪಡುತ್ತ ಮುದುಕಿ ತಂತಾನೆ ಆಡಿಕೊಂಡಳು: +ಚಿಕ್ಕಂದು ನೀ ಆಡಿದ ಆಟಿಗೆಗಳನ್ನ +ಇಂದಿಗೂ ಕಾದಿಟ್ಟಿದ್ದೇನೆ ಕಂದಾ. +ಹಿತ್ತಲಲ್ಲಿ ನೀ ಮಾಡಿದ ಪುಟ್ಟ ಮಲ್ಲಿಗೆ ತೋಟ, +ಯಾತದ ಬಾವಿ, ಮ್ಯಾಲೊಂದು ಮರ, +ಮರದಲ್ಲೊಂದು ಗಿಣಿಮರಿ +ಬಿದಿರಿನ ಪುಟ್ಟ ಕೊಳಲು, ಕೊಳಲುಲಿಗೆ ಮೈಮರೆತ +ಮಣ್ಣಿನ ಕುರಿ ಮಂದೆ, ದನಕರು, +ಕರುವಿಗಾಗಿ ಕಾಡಿನಲ್ಲಿ ಕಾದು ನಿಂತ +ಮರದ ಹುಲಿ, ಬೊಗಳುವ ನಾಯಿ… +ನಿನ್ನೆ +ಕಾಲನ ಧೂಳು ಸರಿಸಿ ನೋಡಿದಾಗ +ನಿನ್ನ ತೋಟ ಹಾಗೇ ಇದ್ದುದ ಕಂಡೆ. +ತಪ್ಪಿಸಿಕೊಂಡ ಕರುವೊಂದ ತಂದು +ಹಿಂಡಿನಲ್ಲಿ ಬಿಡಬೇಕೆಂದಾಗ +ಸಾಲುಹಲ್ಲಿನ ಮರದ ನಾಯಿ ಮೈಮ್ಯಾಲೇರಿ ಬಂದು +ಎದೆ ಕಚ್ಚಿ ಬೊಗಳಿತು ಮಗನೇ. +ನೀ ನೆಟ್ಟ ಮಲ್ಲಿಗೆ ಬಳ್ಳಿ ಮೊಗ್ಗು ಬಿಟ್ಟಿವೆ. +ಹೂವಾಗುವ ಸಮಯ, ಮಳೆಯಿಲ್ಲ; ನೀರುಣಿಸಬೇಕು +ಯಾರಾದರೊಬ್ಬರು. +ಮುಖಕ್ಕೆ ಸೀಮೆ ಸುಣ್ಣವ ಬಳಿದು +ಹುಣ್ಣಿಮೆ ಚಂದ್ರಾಮನಾಗಿದ್ದ ಬಾಲಕನೊಬ್ಬ +ಬಳ್ಳಿಯ ಬಳಿ ನಿಂತಿದ್ದ. +ನನ್ನ ಕಂಡೊಡನೆ ಒಡೋಡಿ ಬಂದು +ತೆಕ್ಕೆ ಹಾದು ಕತ್ತಿಗೆ ನೇತು ಬಿದ್ದ. +ಯಾರೋ ನೀನು? ಅಂದರೆ, +ನಿನ್ನ ಮಗ ಚಂದ್ರಾಮನೆಂದ. +ಅಲ್ಲೇ ಕಂದಿ ಮುಳುಗಲಾರದೆ ನಿಂತಿದ್ದ +ನೀ ಬರೆದ ಸೀಮೆಸುಣ್ಣದ ಚಂದ್ರ. +ದೂರದಲ್ಲಿ ಹೊಂಚಿದ್ದ ಧೂಮಕೇತು. +ಆತನ ಬೆಂಕಿ ಹೂಗಳ ಮ್ಯಾಲೆ ಸುರಿದು +ಗುಡಿ ಗೂಡು ಕೊಳಲು ಬೂದಿಯಾದರೆ +ಜನ ದನ ಶಿವನೇ ಎಂದರೆ +ಸುಟ್ಟುಳಿದು ನಿನ್ನ ಹಾಡಿನ ಇದ್ದಿಲು ಚೆಲ್ಲಾಪಿಲ್ಲಿ ಬಿದ್ದರೆ…. +ಇದನ್ನೆಲ್ಲ ಮಕ್ಕಳಾಟ ಎನ್ನಲಾದೀತೆ? +ಹಾಗಾದಲ್ಲಿ ನಾ ನೀನು ತಾಯಿ ಮಗ ಆದದ್ದೂ +ಆಟವಾಗದೆ ಕಂದ? +ಮುಂದುವರೆಯುವುದು +೧. ಪ್ರಾರ್ಥನೆ ಓಂ ಪ್ರಥಮದಲ್ಲಿಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದುನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ. ನಾವು ಕನಸುಗಳು,ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,ಆದಿಮ ಕಾಲದಿಂದ […] +ಪೀಠಿಕಾ ಸಂಧಿಶ್ರೀ ವನಿತೆಯರಸನೆವಿಮಲ ರಾಜೀವ ಪೀಠನ ಪಿತನೆ ಜಗತಿಪಾವನನೆ ಸನಕಾದಿ ಸಜ್ಜನಿಕರ ದಾತಾರರಾವಣಾಸುರ ಮಥನ ಶ್ರವಣ ಸುಧಾ ವಿನೂತನ ಜನದ ಗದುಗಿನ ವೀರನಾರಾಯಣ ೧ ಶರಣ ಸಂಗವ್ಯಸನ ಭುಜಗಾಭರಣನಮರ ಕಿರೀಟ ಪಂಡಿತಚರಣ ಚಾರುಚರಿತ್ರ ನಿರುಪಮ […] +ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_313.txt b/Kannada Sahitya/article_313.txt new file mode 100644 index 0000000000000000000000000000000000000000..fefbd4aa7a306a7ec9fcf856c0a190bb1160da01 --- /dev/null +++ b/Kannada Sahitya/article_313.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ +ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ +ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು +ಕಟುಕ ಮಗ ಜಾರ್ಜನಿಗೆ ನಾನು ಬೇಡ. +ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ +ಗುಲಾಬಿ ಗಿಡದಲ್ಲಿ ಹೂವಿದ್ದಂತೆ ಎನ್ನುತ್ತಾನೆ, +ಅಜ್ಜಿ ಬಳಿ ಸುಳಿದಾಡಿದರೆ +ಹುಳ ಹಿಡಿವರಂತೆ. +ಆಹಾ ! ಏನಿವನ ಕಲ್ಪನೆ ! +ಮಕ್ಕಳು ಹೂವುಗಳು, ಇವನರ್ಧಾಂಗಿ ನಳನಳಿಸುವ ಸಸಿ +ಇವನೇನು ನೆಲವೆ ? ಸುತ್ತಲಿನ ಗಾಳಿಯೆ ? +ಅಥವಾ ಈ ದಾಂಪತ್ಯ ಕೊಂಬೆಯೆ ? +ಮಕ್ಕಳಿಗೆ ಹುಳ ಹಿಡಿಯಲಿಕ್ಕೆ ನಾನೇನು ಕೀಟಗರ್ಭಿಣಿಯೆ ? +ನಗು ಬರಿಸುತ್ತದೆ ಇವನ ಕಲ್ಪನೆ +ನನ್ನ ಮಗನಿಷ್ಟು ಅಲ್ಪನೆ ? +ಕಾಣದ ಬೇರುಗಳ ಕಂಡು ಕನಸಾಗುವ ಹೂವುಗಳು +ಅನಾದಿ ವೃಕ್ಷಕ್ಕೆ ಕಾಣದ ಬಡ್ಡೆ, +ನಾನು ಈ ವೃಕ್ಷಕ್ಕೆ ಸಂಕುಚಿತ ರೂಪ. +ಜಾರ್ಜನ ಬೆಂಕಿಗೆ +ಕ್ಯಾರೊಲಿನ್ ಪೆಟ್ರೋಲು. +ತಪ್ಪು ಅವಳದ್ದಲ್ಲ. +ಜಾರ್ಜು ಜನಿಸುವ ಮುಂಚೆ ಸ್ಕರ್ಟೆತ್ತಿ ಕುಣಿಯುವ ನನಗೆ +ಮುದುಕರ ನೆರಳು ಕೂಡಾ ತಾಗಬಾರದು ಎಂದು ಎಚ್ಚರಿಕೆ. +ನಮಗೆ ಯಾರೂ ಬೇಡ, ಸ್ವಾತಂತ್ರ್ಯ ಸಾಕೆಂದು +ಸುಖದ ಹುಡುಕಾಟ, ಸಂವಿಧಾನವೆ ಕೊಟ್ಟ +ಪ್ರತಿ ಪ್ರಜೆಯ ಹಕ್ಕೆಂದು +ಅಮೆರಿಕದ ನಂಬಿಕೆ. ಈಗಲೂ ಮಾದಕವಸ್ತು ಮೊರೆಹೋಗಿ +ವಾಸ್ತವವೆ ಭ್ರಮೆಯಾಗಿ +ಎಚ್ಚತ್ತಾಗ ಕತ್ತಲಿನ ಭೀತಿ. +ಮೊಮ್ಮಕ್ಕಳನ್ನು ಕ್ಯಾರೊಲಿನ್ ಕಸಿದಿಲ್ಲ +ನಾನೇ ಅವರನ್ನು ಕಳೆದುಕೊಂಡೆ : +ನನ್ನಂತೆ ಅವಳೂ ಕೂಡ ಕಳೆದುಕೊಳ್ಳುತ್ತಾಳೆ. +ಪ್ರತಿಯೊಬ್ಬ ಅಮೆರಿಕನ್ನನಿಗೂ +ವೃದ್ಧಾಪ್ಯ ಶಾಪ. +ಮೊಮ್ಮಕ್ಕಳ ಸಾಮೀಪ್ಯವಿಲ್ಲದೆಯೆ +ಸಾವು ಹುಟ್ಟಿನ ವೃತ್ತ ಸಂಪೂರ್ಣವಾಗದೆಯೆ +ವೃದ್ಧಾಪ್ಯ ಕತ್ತೆ ಬಾಲದ ಡಬ್ಬ. +ಇನ್ನೊಂದು ಕತ್ತೆಯ ಮುಂದೆ +ಅಸಹಾಯಕತೆಯನ್ನು ತೋಡಿಕೊಳ್ಳುವುದಷ್ಟೆ ನಮ್ಮ ಬದುಕು. +***** +ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! ಬಂದದ್ದು ಹಂಜಿಯ ಮಾಡಿ ರಾಟ […] +ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […] +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_314.txt b/Kannada Sahitya/article_314.txt new file mode 100644 index 0000000000000000000000000000000000000000..c34187c17cedb0a6b801620219b8e5eaf2247535 --- /dev/null +++ b/Kannada Sahitya/article_314.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ +ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು +ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ +ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? +ನೊರೆಯುಕ್ಕಿ ಹರಿದಿತ್ತು ಮದ್ಯ, ಮತಿ ಎಲ್ಲ ವಿಕಳವಾಗಿತ್ತು +ನನ್ನ ಸ್ಥೂಲ ಸೂಕ್ಷ್ಮಗಳು, ಹೂವು ಮುಳ್ಳು ಹಂಬಲಿಸಿ ಕಂಪಿಸಿತ್ತು +ಮಧುಪಾತ್ರೆಗಳ ಸಂಘಟ್ಟಣೆಯ ಸದ್ದು ಸ್ವರ್ಗಕ್ಕೆ ಕೇಳಿಸಿತ್ತು +ಕೈಯಲ್ಲಿ ಮಧು, ಮಿದುಳಲ್ಲಿ ಮಹಾ ಬಿರುಗಾಳಿ ಭೋರ್ಗರೆದಿತ್ತು +ಆಕಾಶದಲ್ಲಿ ಅಲ್ಲೋಲ ಕಲ್ಲೋಲವೆದ್ದಿತ್ತು +ಮೂರು ಲಕ್ಷ ಜನ ಪರ್ಶಿಯಾದ ದೊರೆಗಳು ಶರಣಾಗಿ +ಹೊರಳಾಡಿದರು +ಆ ರಾತ್ರಿಯಲ್ಲಿ ಅದೃಷ್ಟ ದಿಗ್ವಿಜಯಗಳ ಸಂಗಮವಾಗಿತ್ತು +ಕಗ್ಗತ್ತಲ ಒಡಲಿಂದ ಸೂಫಿ ಸಂತರಿಗಾಗಿ ಹಗಲು ಚಿಮ್ಮಿತ್ತು +ಕಡಲು ಅಲೆಗಳಾಗಿ ಒಡೆಯಿತು, ಸ್ವರ್ಗಕ್ಕೆ ಈ ರಾತ್ರಿಯ ತುಣುಕು +ಸಿಕ್ಕಿ, ಹೆಮ್ಮೆಯಿಂದ ಮುಖ ತಲೆಗಳ ಮೇಲೆ ಮೆರೆಸಿತು +ಕಾಳ ರಾತ್ರಿಯಲ್ಲಿ ಮುಳುಗಿದ್ದರೂ ಮನುಕುಲ +ದಿವ್ಯ ಕರುಣೆಯ ಹೊಂಬಿಸಿಲು ಹೊರಗೆ ಚಿಮ್ಮಿತ್ತು +ಈ ರಾಗದಿಂದ ವಿಚಲಿತವಾಗದೆ ಹೇಗೆ +ಚರಾಚರ ರೂಪು ಉಳಿದಾವು? +ಆ ಆಶಾಪೂರ್ಣ ವ್ಯಕ್ತಿ ಹೇಗೆ ಜಡವಾದಾನು? +ಬಂಧುಗಳೇ, ಪ್ರಾರಂಭಿಸಿ ಮತ್ತೆ ಹೊಸಜೀವನ +ನಲ್ಲನಿಂದಾಗಿ ನಿರಾಕಾರವಾಗಿದೆ ಆಕಾರ +ನಲ್ಮೆಗೊದಗಿದೆ ನ್ಯಾಯದ ಮಹಾಪೂರ +ನನ್ನ ದೊರೆಯಿಂದಾಗಿ ಪತಿತರೂ ಪಾವನವಾದರು +ಅವನೇ ಸಾಖಿಯಾದಾಗ ಜನ ಜಾರದೆ ಹೇಗೆ ಉಳಿದಾರು? +ಕೊಚ್ಚಿದೆ ಆತ್ಮ ಪ್ರಯತ್ನವನು ಕಡಲು +ಚೂರಾಗಿದೆ ಶ್ರದ್ಧೆಯ ಕಾರ್ಯ +ನನ್ನ ದೊರೆಯ ಈ ಕೃಪಾರೂಪ +ಈಜಿಪ್ಟಿನ ಪ್ರಭುವೆ ಕೊಂಡ ಜೋಸೆಫ್‌ನ ರೂಪ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ ವಿರಹದ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_315.txt b/Kannada Sahitya/article_315.txt new file mode 100644 index 0000000000000000000000000000000000000000..fa7e1f1389e600d8d91207b1d6af3a401de070a9 --- /dev/null +++ b/Kannada Sahitya/article_315.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಮ್ಮ ಕನಸನು ಬಿಟ್ಟು +ಆಚೆ ಬಾರೆವು ನಾವು +ಹೀಗೆ ತಡೆದರೆ ನೀವು ತಬ್ಬಿ ಹಿಡಿದು, +ನಿಮ್ಮ ಪ್ರೀತಿಯ ನಮಗೆ +ಒಂದಂಗುಲದ ಜಾಗ +ಕನಸಿನಂತಃಪುರದ ತೋಟದೊಳಗೆ. +ಇಲ್ಲಂತು ತನು-ಮನಕೆ +ಏಳು ಮಲ್ಲಿಗೆ ತೂಕ +ಹೂವ ಎಸಳೇ ಭಾರ, ಹೊರಲಾಗದು. +ನಮ್ಮ ನಡು ಬಳ್ಳಿ, +ನಿಮ್ಮ ಬಾಹುಗಳಲ್ಲಿ +ಸಿಂಗರದ ಅರಮನೆಯ ತೋಟದಲ್ಲಿ +ನಿಮ್ಮ ಬೆರಳಿನ ಸ್ಪರ್ಷ +ನೆಟ್ಟಲ್ಲಿ ಮಲ್ಲಿಗೆ ಸುರಿದು +ತಾಗಿದರೆ ಮೈಯೊಳಗೆ ಮಿಂಚು ಹೊಡೆದು, +ಹುಣ್ಣಿಮೆಯ ಚಂದಿರನ ಸುತ್ತ ತಾರೆಯ ಸಂತೆ +ಬೆಳದಿಂಗಳೇ ಧಗೆ! +ಧಗೆ, ನೀವಿರದ ರಾತ್ರಿಗಳು. +ಕನಸು ನಿಮ್ಮದು, ಅಲ್ಲಿ +ರಾಗ ನುಡಿಸಲು ನಾವು(?) +ಮುದ್ದಿಸಲು, ಮೋಹಿಸಲು; +ಅರಸು ನೀವು(?) +ಸಿಂಗರದ ಅರಮನೆಯ +ಅಂತಃಪುರದ ಸುಖ +ಅರಸಿ ಕಂಡದ್ದೆಲ್ಲ ಅಂಕುಡೊಂಕು. +ನಮಗೂ ಬೀಳುತ್ತವೆ +ರಂಗು ರಂಗಿನ ಕನಸು +ನಮ್ಮ ಮನೆಯಂಗಳದಿ ಪುಟ್ಟ ತೋಟ. +ಬೆಲಿ ಕಟ್ಟೆವು ನಾವು +ಹಬ್ಬುವುದು ಹರಡುವುದು +ಹುಚ್ಚು ಕಾಡಿನ ಹಾಗೆ ದೂರ ದೂರ +ನಿಮಗೂ ತಿಳಿದಿದೆ ನಮ್ಮ ಪಾರಿಜಾತದ ಪ್ರೀತಿ +ಬೆಳಕ ಬೆನ್ನಿಗೆ ಇರುವ ಏಳು ಬಣ್ಣ +ನಿಮ್ಮ ಕನಸನು ಬಿಟ್ಟು ಆಚೆ ಬಂದಿದ್ದೇವೆ +ತಡೆಯಲಾರಿರಿ ಇನ್ನು ಅಡ್ಡಗಟ್ಟಿ. +***** +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […] +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_316.txt b/Kannada Sahitya/article_316.txt new file mode 100644 index 0000000000000000000000000000000000000000..e5738eb0bb5f1ee757cbdd9581e6f1448a49e3b7 --- /dev/null +++ b/Kannada Sahitya/article_316.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ +ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು +ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- +ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ +ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು +ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ +ಚಿಮ್ಮಿ ಬರುವನ್ನೆವರ; ಮಳೆಬಿದ್ದು ಹೊರಪಾಗಿ +ತೊಳೆದ ಬಾನಿನ ಮೊಗದಿ ಹಗಲುಗಣ್ಣೆವೆದೆರೆದು +ನೋಡುತಿರೆ ಸೃಷ್ಟಿ ಮಹಿಮಾಪೂರ್‍ಣಮಾದಂತೆ +ಋತಚಿತ್ತಿನಲಿ ವ್ಯೋಮ ಭೂಮ ಪುರುಷಾಕಾರ +ನೆಲೆಗೊಂಡು, ಕ್ಷಾಂತಿ ಶಾಂತಿಯು ಎದೆಯನಪ್ಪುವರ +ಉರುಳುರುಳು ತರಳು ಕಂಬನಿವೊನಲೆ ಓರಂತೆ! +ಸದ್ದಿರದೆ ಸಾಗುವದೆ ಜೀವನದಿ ತೀರ್‍ಥಯಾತ್ರೆ +ಕಡೆಮುಟ್ಟಿ ಪಡೆವ ಸುಖಕೀ ದುಃಖ ಪಾನಪಾತ್ರೆ. +***** +ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […] +ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […] +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_317.txt b/Kannada Sahitya/article_317.txt new file mode 100644 index 0000000000000000000000000000000000000000..666d925f5a294b839ce5fd88100346264e8aa2d7 --- /dev/null +++ b/Kannada Sahitya/article_317.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹರ ಹರ ಮಹಾದೇವ! +ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. +ಕಂಠದ ವಿಷ ನರ ನಾಡಿಗಳಲ್ಲಿ- +ಕಹಿ ಮನಸ್ಸಿನ ಮೈಯೆಲ್ಲ ನೀಲಿ; +ಆಕಾಶದುದ್ದಗಲಕ್ಕೂ ಹರಡಿ ನೀಲಿ +ಸಮುದ್ರದಾಳದ ಹವಳ ಮುತ್ತುಗಳೆಲ್ಲ +ನೀಲಿ ನೀಲಿ. +ಸಾವ ತೊಟ್ಟಿಲಿನಲ್ಲಿ ಇಟ್ಟು ತೂಗುವಹೊತ್ತು +ಹಾಯಿ ಹಾಯಿ, ಜೋ ಜೋ ಜೋಕೆ ಕಂದ! +ರಕ್ತ ಮಾಂಸದ ಮಡುವಿನಲ್ಲೇ +ಹೊಳೆಯುತ್ತದೆ ಕಸಾಯಿಯ ಖಡ್ಗ. +ನಾಭಿಯಿಂದೆರಡಿಂಚು ಕೆಳಗೆ.. +ಥಳ ಥಳಿಸುವ ಮೊನಚು, +ಸರ್ರಂತ ಸಿಗಿದು… +ಅಯ್ಯೋ!! +ಅನ್ನುವುದಕ್ಕೆ ಮೊದಲೇ +ಪುರುಷಾರ್ಥ ಸಿದ್ಧಿ. +ಮೊಲೆಗೂ, ಯೋನಿಗೂ, ಮೊಲೆ ಹಾಲಿಗೂ, +ತಡೆ ಹಿಡಿದ ರಕ್ತ ಸ್ರಾವಕ್ಕೂ; +ಬೇರೆ ಬೇರೆಯೇ ಅರ್ಥ +ಧರ್ಮಕಾರಣದಲ್ಲಿ. +ಕೈ ಕಾಲು ರುಂಡ ಮುಂಡಗಳ ಜೊತೆ +ಪ್ರೀತಿ, ಪ್ರೇಮ, ದುಗುಡ, ದುಮ್ಮಾನಗಳೂ +ರಕ್ತ ಸಿಕ್ತ! +ನೋವಿಗೊಂದಷ್ಟು ನಿದ್ದೆ +ದ್ವೇಷದ ಬದಲು ಕೊಂಚ ಕಣ್ಣೀರು +ಹೃದಯದಲ್ಲಿ ಒಂದು ಚೂರು ಕರುಣೆ, +ಇರುವುದು ಧರ್ಮ! +ಇಲ್ಲದಿದ್ದರೆ ಎಲ್ಲವೂ ಅಧರ್ಮ +***** +ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು […] +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_318.txt b/Kannada Sahitya/article_318.txt new file mode 100644 index 0000000000000000000000000000000000000000..0ecd25f57e3c0b99dd5d28ddeb76e06fa9ae46a7 --- /dev/null +++ b/Kannada Sahitya/article_318.txt @@ -0,0 +1,175 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” +“ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” +“ಹ್ಞೂಂ ಬಾ, ಹುಲಿಗಿಲಿ ಬಂತು ಅಂದ್ರೆ ಸಹಾಯಕ್ಕೆ ನಾ ಬರೋವ್ನಲ್ಲ…. ತಿಳಿತಾ?” +“ಹುಲಿಯಾ? ನೀವೇ ದೊಡ್ ಹುಲಿ…. ಬೇರೊಂದು ಬರೋದುಂಟಾ?” +ಅವಳು ಕಿಲಕಿಲನೆ ನಕ್ಕಾಗ ಗಣಪಯ್ಯ ಕೈಚಾಚಿದ. ಅವಳು ವಾಲಿಕೊಂಡಳು, ಸಂಜೆಗತ್ತಲಲ್ಲಿ ಅವರು ವೇಗವಾಗಿಯೇ ಹೆಜ್ಜೆ ಹಾಕಿದರು. +ಸೀತಾಪರ್ವತದ ಮೇಲೆ ನಿಂತು ನೋಡಿದರೆ ಸುತ್ತಮುತ್ತಲಿನ ಮೂರು – ನಾಲ್ಕು ಮೈಲಿಯ ಪ್ರದೇಶವೆಲ್ಲ ಕಾಣುತ್ತಿತ್ತು. ಒಂದು ಬದಿಯಲ್ಲಿ ಈಗ ಶರಾವತಿ ನದಿಯು ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿತ್ತು. ಮೂರು ನಾಲ್ಕು ಗುಡ್ಡಗಳನ್ನು ತೆಕ್ಕೆಯಲ್ಲಿ ಹಿಡಿದುಕೊಂಡಂತೆ ಲಿಂಗನಮಕ್ಕಿ ಅಣೆಕಟ್ಟು ಎದ್ದುನಿಂತಿತ್ತು. ಈ ಅಣೇಕಟ್ಟಿಗೆ ಆತುಕೊಂಡೇ ಭಾರಿ ಜಲರಾಶಿಯೊಂದು ಕಾಡು – ಕಣಿವೆಯಲ್ಲಿ ಸಾಗರೋದೋಪಾದಿಯಲ್ಲಿ ಮಲಗಿತ್ತು. ಈ ಜಲರಾಶಿಯ ಒಂದು ಅಂಚು ತಾವು ನಿಂತ ಗುಡ್ಡದ ಪಾದದವರೆಗೂ ಮೈ ಚಾಚಿತ್ತು. ಇನ್ನೊಂದೆಡೆಯಲ್ಲಿ ಕಾಡು, ಗುಡ್ಡಗಳು, ದೂರದ ಯಾವುದೋ ಮಿಣುಕು ದೀಪ. ಇನ್ನೆಲ್ಲೋ ಹತ್ತಿಕೊಂಡ ಬೆಂಕಿ, ಹೊಗೆ. ಅತ್ತ ಮರೆಯಾದ ಸೂರ್ಯನ ಅಳಿದುಳಿದ ಕೆಂಬಣ್ಣ ಬೆಳ್ಳೀ ಎಂದು ಕೂಗುತ್ತ ನಾಗವೇಣಿ ಸೀತಾರಾಮರ ಮಂಚದ ಮೇಲೆ ಮೈ ಚಾಚಿದಾಗ ಗಣಪಯ್ಯ ಅವಳ ಜೊತೆಗೇನೆ ಮೈಯೊರಗಿಸಿ ಅವಳ ತುಟಿಗಳಿಗೆ ತನ್ನ ತುಟಿಗಳನ್ನೊತ್ತಿದ. ನಾಗವೇಣಿ ಬೆಳ್ಳೀ ಎಂದು ಕೂಗಿದ್ದು ಗುಹೆಯ ಹಿಂಬದಿಯಲ್ಲಿದ್ದ ಹಸುವಿನ ಕಿವಿಗೆ ಬಿದ್ದಿತೇನೋ ಅದು ಒಡತಿಯ ದನಿಯನ್ನು ಗುರುತಿಸಿ, ಬಂಡೆಗಳ ಮರೆಯಲ್ಲಿ ದಾರಿ ಹುಡುಕಿಕೊಂಡು ಬಂದು ಗುಹೆಯ ಎದುರು ನಿಂತು ಎರಡನೆ ಬಾರಿ ಅಂಬಾ ಎಂದಾಗ, ನಾಗವೇಣಿಯ ಬಿಗಿ ಅಪ್ಪುಗೆಯಲ್ಲಿದ್ದ ಗಣಪಯ್ಯ ಥಟ್ಟನೆ ಎದ್ದು, ಬಗ್ಗಿ ಕಲ್ಲೆತ್ತಿಕೊಂಡು ಹಸುವಿನತ್ತ ಅದನ್ನು ರಾಚಿ- +“…ಥು! ಹಡಬೆ ದನವೆ… ನಡೀ ಮನೆಗೆ” ಎಂದಾಗ ಬೆಳ್ಳಿ ಮನೆಯತ್ತ ಹೊರಟಿತು. +ನಾಗವೇಣಿ ಸೆಟೆದುಕೊಂಡಂತಾಗಿದ್ದ ಮೈಯನ್ನು ಸಡಿಲಮಾಡಿಕೊಂಡು, ಸೆರಗನ್ನು ಹೆಗಲಿಗೇರಿಸಿ, ಎದ್ದೆದ್ದು ಬೀಳುತ್ತಿದ್ದ ಎದೆಯನ್ನೊತ್ತಿಕೊಂಡು, ನಿಧಾನವಾಗಿ ಎದ್ದು ಕುಳಿತಳು. ದೂರದಲ್ಲಿ ಹತ್ತಿಕೊಂಡ ಬೆಂಕಿ ಆರಿಹೋಗಿ ನೀಲಿ ಹೊಗೆ ಅಲ್ಲೆಲ್ಲಾ ಕವಿದಿತ್ತು. ಬರಿದಾದ ಗುಹೆಯ ತೆರೆದ ಬಾಯಿ ವಿಕಾರವಾಗಿ ಕಾಣುತ್ತಿತ್ತು. ಸೀತಾರಾಮರಮಂಚದ ಬಿಸಿ ಆರಿರಲಿಲ್ಲ. ನಾಗವೇಣಿ ಎದ್ದು ಅಷ್ಟು ದೂರ ಹೋಗಿ ಬೆನ್ನು ಹಾಕಿನಿಂತ ಗಂಡನ ಹಿಂದೆ ನಡೆದಳು. ಗಣಪಯ್ಯ ಏನೊಂದು ಮಾತನಾಡದೆ ಮುಂದೆ ನಡೆದಾಗ ಹತ್ತಿರದಲ್ಲಿಯೇ ಕಾಡುಕೋಳಿಯೊಂದು ಒಂದೇ ಸಮನೆ ಕೂಗಿಕೊಳ್ಳುತ್ತಿತ್ತು. +* +* +* +ಮುದುಕ ಚಪ್ಪರದ ಹೊರಗೇನೇ ಕೂತಿದ್ದ. ತೋಟದಿಂದ ಮೇಲೆಬಂದ ಆಳುಗಳು – ಒಡೆಯಾ ನಾವು ಬರೂದ – ಎಂದು ಕೇಳಿ ಅರಲಗೋಡಿಗೆ ಹೊರಟು ಹೋದರು. ಸೊಸೆ ಬೆಳ್ಳಿ ಹಸು ಬರಲಿಲ್ಲವೆಂದು ಗೊಣಗುತ್ತ ತೋಟದತ್ತ ಹೋದಳು. ಆ ನಂತರ ಯಾರ ಸುಳಿವೂ ಇಲ್ಲ. ಮಗ – ಸೊಸೆ ಹಸುವನ್ನು ಹುಡುಕಿಕೊಂಡು ಹೋದರೋ ಏನೋ! ಹೋದವರು ಬೇಗ ಬರಬಾರದೇ? ಕತ್ತಲಾಯಿತಲ್ಲ, ಎಲ್ಲಿಗೆ ಹೋದರು? +ಮುದುಕ ಎದ್ದು ಕೋಲೂರಿಕೊಂಡು ಅಷ್ಟು ದೂರ ಹೋದ. ಕಾಲುಗಳು ಕಂಪಿಸಲಾರಂಭಿಸಿದವು. ಹೆಜ್ಜೆ ಎತ್ತಿ ಇಡುವುದು ಪ್ರಯಾಸದ ಕೆಲಸವೆನಿಸಿತು. ಮತ್ತೆ ತಿರುಗಿ ಬಂದು ಚಪ್ಪರದ ಬಾಗಿಲಲ್ಲಿ ಕುಳಿತ. +ಒಂದು ಕಾಲದಲ್ಲಿ ಹೊಸಮನೆಹಳ್ಳಿಯನ್ನೆಲ್ಲ ಒಂದಲ್ಲ ಸಾವಿರ ಸಲ ಸುತ್ತಿದವ ತಾನು. ತನ್ನ ತಂದೆ ಈ ತೋಟ ಮಾಡಲಾರಂಭಿಸಿದಾಗ ತಾನಿನ್ನು ಹುಡುಗ. ಆದರೂ ತನ್ನ ತಂದೆ – ತಾಯಿಯ ಜೊತೆಗೆ ಕೆಲಸ ಮಾಡಿದ್ದೆ ಅಡಕೆಸಸಿ ನೆಟ್ಟು, ಬಾಳೆ ಸಸಿ ಹಾಕಿ, ಹಾಳೆ ಕಡಿದು, ಕಳೆ ಕಿತ್ತು, ಅಡಕೆಗೊನೆಗೆ ಹಾಳೆ ಕಟ್ಟಿ, ಕೊನೆಗೆ ಮರ ಹತ್ತಿ ಅಡಕೆ ಕಿತ್ತು, ಸುಲಿದು ರಾಶಿಹಾಕುವವರೆಗೂ ಕೆಲಸಮಾಡಿದ್ದೆ. ತನ್ನ ತಂದೆ ತನ್ನ ಮೇಲೆ ಕೈ ಹಾಕಿ- +“ಈ ಮಾಣಿ ಇದ್ರೆ ನೂರು ಜನ ಇದ್ದ ಹಾಗೆ” +ಎನ್ನುತ್ತಿದ್ದ. ಈಗಲೂ ಹೊಸಮನೆಯಲ್ಲಿ ಅಷ್ಟೊಂದು ಜನ ಇರಲಿಲ್ಲ. ಹೇರಂಬಹೆಗಡೆಯ ಮನೆಯೊಂದು, ಹಸಲರ ಬೈರನ ಮನೆಯೊಂದು, ಪ್ರಮೇಶ್ವರಪ್ಪನ ಮನೆಯೊಂದು, ತನ್ನದೊಂದು ನಾಲ್ಕೆ, ಪರಮೇಶ್ವರಪ್ಪ ಆಗಿನ್ನೂ ಆಳನ್ನು ಇಟ್ಟುಕೊಳ್ಳುವಂತಹ ಶ್ರೀಮಂತನಾಗಿರಲಿಲ್ಲ. ಇವರೆಲ್ಲ ಆಗಿನ್ನೂ ಚಿಕ್ಕವರು. ಗಣಪಯ್ಯನಿಗಿಂತ ಎಂಟು ಹತ್ತು ವರ್ಷ ದೊಡ್ಡವರಿರಬಹುದಷ್ಟೆ. ಹೇರಂಬನ ಅಪ್ಪ ಸುಬ್ರಾಯ ಹಾಗೂ ತನ್ನ ತಂದೆ ಇಬ್ಬರೇ ಹಳಬರು. +ನನ್ನ ತಂದೆ ಬೇಗನೆ ಸತ್ತ. ಸುಬ್ರಾಯ ಬಹಳ ವರ್ಷ ಬದುಕಿದ್ದ. ಈ ಮುದುಕನಿಗೆ ಸಾವೇ ಇಲ್ಲವೆಂದು ಎಲ್ಲ ಜನ ಮಾತಿನಾಡಿಕೊಳ್ಳುವವರೆಗೂ ಬದುಕಿದ್ದ ಸುಬ್ರಾಯ. ಸತ್ತದ್ದು ಇತ್ತೀಚೆಗೆ. ಅವನು ಸತ್ತಾಗ ನೂರು ವರ್ಷ ಆಗಿರಬಹುದು ಅವನಿಗೆ. +ತನಗೀಗ ಎಷ್ಟೋ…. ಅರವತ್ತರ ಗಡಿ ದಾಟಿರಬಹುದು. ಆದರೆ ತಾನೀಗ ಮುದುಕ. ಖಾಯಿಲೆಯಿಂದ ಜೀರ್ಣನಾಗಿರುವವ. ತಾನು ಈಗೀಗ ಮಗ ಸಾಗರದಿಂದ ಅದೇನೋ ಮಾತ್ರೆ ತಂದುಕೊಡುತ್ತಾನೆಂದು ದಮ್ಮು, ಕೆಮ್ಮು ಕಡಮೆಯಾಗಿದೆ. ಮಳೆಗಾಲ ಬಂತೆಂದರೆ ತಾನು ಮತ್ತೆ ಹಾಸಿಗೆಯ ಪಾಲು. ಈ ಖಾಯಿಲೆ ಪ್ರಾರಂಭವಾಗಿ ಹತ್ತು – ಹದಿನೈದು ವರ್ಷಗಳೇ ಆದವು. ಏನೇನೋ ಮದ್ದು ಮಾಡಿಯಾಯಿತು. ಖಾಯಿಲೆ ಜಗ್ಗಲಿಲ್ಲ. +ಮುದುಕ ಒಂದು ಕ್ಷಣ ನೀರವವಾಗಿ ಕುಳಿತ. ತೋಟದತ್ತನಿಂದ ತಂಗಾಳಿ ಬೀಸುತ್ತಿತ್ತು. ಹಿಂಬದಿಯ ಗುಡ್ಡ ಮನೆ – ತೋಟದ ಮೇಲೆ ಕಪ್ಪು ಕಾರುತ್ತ ನಿಂತಿತ್ತು. ಹಕ್ಕಿಗಳ ಸದ್ದು ಅಡಗಿತ್ತು. ಕತ್ತಲು ಆವರಿಸುತ್ತಿದ್ದ ಆಕಾಶದಲ್ಲಿ ತುಂಡು ಮೋಡಗಳು ತೇಲುತ್ತಿದ್ದವು. ತೋಟದ ಹಳ್ಳದಲ್ಲಿ ನೀರು ಹರಿಯುತ್ತಿತ್ತು. ಮುದುಕ ಸುತ್ತಲೂ ನೋಡಿದ. ಹೇರಂಬನ ತೋಟ ಕಂಡಿತು. ಮನೆಯ ಗೋಡೆಗಳು ಕಂಡವು. ಅಲ್ಲೆಲ್ಲ ಕವಿದ ಮೌನದಿಂದಾಗಿ ಜೀವ ಬೆದರಿತು. +ಹಳ್ಳಿಗೆ ಎಂತಹಾ ಗತಿ ಬಂದಿತು ಎಂದು ಮುದುಕ ವಿಡುಕಾಡಿದ. ನಾಲ್ಕೈದು ಕುಟುಂಬಗಳು, ಒಂದಿಷ್ಟು ಜನ. ಅವರೆಲ್ಲರ ನೋವು ನಲಿವುಗಳು, ಎಲ್ಲವೂ ಇತ್ತು ಇಲ್ಲಿ. ಈಗ ಮಾತ್ರ ಎಲ್ಲವೂ ಬರಿದು. ತಾಳಗುಪ್ಪದ ಪೇಟೆಬೀದಿಯ ಹಾಗೇನು ಇಲ್ಲಿ ಜನ ಗದ್ದಲ ಮಾಡುತ್ತ ಓಡಿಯಾಡುತ್ತಿರಲಿಲ್ಲ. ಯಾವಾಗಲು ಹಳ್ಳಿ ಹೀಗೆಯೇ, ಈಗಿನಂತೆಯೇ ಜನರ ಓಡಾಟ ಗದ್ದಲವಿಲ್ಲದೆ ಶಾಂತವಾಗಿರುತ್ತಿತ್ತು. ಆದರೆ ಮನಸ್ಸಿನಲ್ಲಿ ಅಕ್ಕಪಕ್ಕದಲ್ಲಿ ಜನರಿದ್ದಾರೆ ಅನ್ನುವ ಒಂದು ಧೈರ್ಯವಿರುತ್ತಿತ್ತು. ಕೂಗಿದರೆ ಹೇರಂಬ ಬರುತ್ತಾನೆ. ಇಲ್ಲವೇ ಪರಮೇಶ್ವರಪ್ಪ ಬರುತ್ತಾನೆ ಎನ್ನುವ ನಂಬಿಕೆ. ಹಸಲರ ಹಾಲ. ಬೈರ ಇಲ್ಲಿಯೇ ಇದ್ದಾರೆ ಎನ್ನುವ ದೈರ್ಯ. ಈಗ ಯಾರನ್ನು ಕೂಗುವುದು? ಯಾರನ್ನು ಕರೆಯುವುದು? ಇಲ್ಲಿ ಕೂ ಎಂದು ಕೂಗಿದರೆ ಈ ಕೂ ಕೂಗು ಅರಲಗೂಡಿಗೋ ಭೀಮೇಶ್ವರಕ್ಕೋ ಕೇಳಿಸಿ ಅಲ್ಲಿಂದ ಜನ ಬರುವುದುಂಟೆ? +ಈಗಲೇ ಈ ಪರಿಸ್ಥಿತಿ. ಮುಂದೆ? ಮಳೆಗಾಲ ಆರಂಭವಾಗಿ, ಇಲ್ಲೆಲ್ಲ ನೀರು ತುಂಬಿಕೊಂಡಾಗ? ತೋಟ-ಹೊಲದ ಕೆಲಸಕ್ಕೆ ಹೊರಗಿನ ಜನರೂ ಸಿಗಲಾರರು.ಮನೆಯ ಜನ ಎಷ್ಟೊಂದು ಮಾಡಿಯಾರು? ಮಳೆಗಾಲ ಪ್ರಾರಂಭವಾಗುವ ಮುನ್ನ ಯಾರಾದರೂ ಜನ ಸಿಗುತ್ತಾರೋ ನೋಡೆಂದು ಮಗನಿಗೆ ಹೇಳಬೇಕು. ಈ ವರ್ಷ ಇಲ್ಲಿಯೇ ಇರುವುದೆಂದು ನಿರ್ಧರಿಸಿ ಆಗಿದೆ. ಸುಖವೋ- ಕಷ್ಟವೋ, ಸರಿಯೋ-ತಪ್ಪೋ ಈ ವರ್ಷ ಇಲ್ಲೇ ಕಳೆಯುವುದು. ಆದರೆ ಮುಂದೆ ಹೇಗೋ ಏನೋ ಎಂಬ ದಿಗಿಲು ಇದ್ದೇ ಇದೆ. +ಬೆಳ್ಳಿ ಗುಡ್ಡದ ಮೇಲಿನಿಂದ ಇಳಿದು ಮನೆಯ ಹಿಂಬದಿಯ ದಾರಿ ಹಿಡಿಯಿತು. +“ದನ ಬಂತು….ಇವೆರೆಲ್ಲಿಗೆ ಹೋದರು?” +ಎಂದು ಮುದುಕ ಕಣ್ಣು ಚುರುಕುಗೊಳಿಸಿ ನೋಡುತ್ತಿರಲು ಮಗ ಬಂದ. ಅವನ ಹಿಂದೆ ಸೊಸೆ. +ಮುದುಕ ಸೊಸೆಯತ್ತ ತಿರುಗಿ- +“ಕೂಸೆ, ಬೆಳ್ಳಿ ಬಂತು ನೋಡು” ಎಂದ. ಸೊಸೆ ಹಾಂ ಹೂಂ ಎನ್ನಲಿಲ್ಲ. ದಪ ದಪ ಕಾಲು ಹಾಕುತ್ತ ಅವಳು ಒಳಗೆ ಹೋದಳು. +ಗಣಪಯ್ಯ ತಂದೆಯತ್ತ ಬರುತ್ತ ಬೆಳ್ಲಿಗುಡ್ಡದ ಮೇಲೆ ಹೋದುದನ್ನೂ ತಾನು ನಾಗವೇಣಿ ಹೋಗಿ ಹುಡುಕಿಕೊಂಡು ಬಂದುದನ್ನೂ ಹೇಳತೊಡಗಿದಾಗ ಕತ್ತಲೆ ದಟ್ತವಾಯಿತು. ನಾಗವೇಣಿ ಚಿಮುಣಿ ದೀಪ ಹೊತ್ತಿಸಿ ತಂದು ಜಗುಲಿಯ ಮೇಲಿಟ್ಟು ಹೋದಳು. +ಊಟಕ್ಕೆ ಕುಳಿತಾಗ ಮಾತಿನ ಮಧ್ಯೆ ಯಾರಾದರೂ ಕೆಲಸದಾಳುಗಳು ಸಿಕ್ಕರಾಗುತ್ತಿತ್ತು ಎಂಬ ಮಾತೂ ಬಂತು. ಹೇರಂಬಹೆಗಡೆ ದೀವ್ರನಾಯ್ಕರು ಸಿಕ್ಕರೆ ಇಟ್ಟುಕೋ ಎಂದು ಹೇಳಿಹೋಗಿದ್ದ. ಎಂದಿನಂತೆ ದಿನಗೂಲಿಯ ಮೆಲೆ ಬರುವ ಅರಲಗೋಡಿನ ಜನ ಯಾರೂ ಖಾಯಂ ಆಗಿ ಹೊಸಮನೆಯಲ್ಲೇ ಉಳಿಯಲು ಒಪ್ಪಲಿಲ್ಲ. ಹೀಗೆ ಉಳಿದರೆ ಬಹಳಷ್ಟು ಕೆಲಸ ಬೀಳುತ್ತದೆ ಅನ್ನುವುದು ಒಂದು ಕಾರಣವಾದರೆ ಮಳೆಗಾಲದಲ್ಲಿ ಈ ಹಳ್ಳಿಯ ಗತಿ ಏನಾಗುತ್ತದೋ ಅನ್ನುವ ಅಂಜಿಕೆ ಬೇರೆ. ಈಗ ಗಣಪಯ್ಯನ ಹೊಲ-ತೋಟದ ಜೊತೆಗೆ ಹೇರಂಬನ ಹೊಲ-ತೋತಗಳೂ ಸೇರಿಕೊಂಡಿವೆ. ಗುಡ್ಡದ ಸುತ್ತ ನೀರು ನಿಂತರೆ ಬೇರೆ ಕೂಲಿಯಾಳುಗಳೂ ಯಾರೂ ಸಿಗಲಾರರು. ಗಣಪಯ್ಯ ಒಬ್ಬರನ್ನೋ ಇಬ್ಬರನ್ನೋ ಕೆಲಸಕ್ಕೆ ಇತ್ತುಕೊಂಡಾನು ಹೊಲದಲ್ಲಿ ಸಸಿನೆಡಲು, ಅಡಿಕೆಗೆ ಖೊಟ್ಟೆ ಕಟ್ಟಲು ಜನ ಸಾಕೇ? ಗಣಪಯ್ಯ ಅವನ ಹೆಂಡತಿ ಕೆಲಸಕ್ಕೆ ಇಳಿದರೂ ಇದು ಮೂರು -ನಾಲ್ಕು ಜನರ ಕೈಯಲ್ಲಿ ಆಗದ ಕೆಲ್ಲಸ ಎಂದೆಲ್ಲ ಯೋಚಿಸಿದ ಕೂಲಿಯಾಳುಗಳು ನಕಾರದ ಉತ್ತರ ನೀಡಿದ್ದರು. ತಂದೆ ಊಟ ಮಾಡುತ್ತ ಸದ್ಯಕ್ಕೆ ಒಂದು ಹೆಣ್ಣಾಳು ಸಿಕ್ಕರೆ ಸಾಕು, ಮುಂದೆ ಜನ ಸಿಗುತ್ತಾರೆ ಎಂದಾಗ ಗಣಪಯ್ಯ ಒಂದು ಹಸಲರ ಇಲ್ಲವೆ ದೀವ್ರ ಕುಟುಂಬವನ್ನೇ ಏಕೆ ಕರೆತರಬಾರದು ಎಂದು ಯೋಚಿಸಿದ. ಊಟ ವಸತಿ ಬಟ್ಟೆಯ ಅನುಕೂಲ ಮಾಡಿಕೂಟ್ಟರೆ ಇನ್ನೊದು ಐದು ತಿಂಗಳು ಇಲ್ಲಿರಲಾರರೆ ಅವರು? ತಾವು ಬಿಡಾರಕಿತ್ತು ಹೊರಟಾಗ ಅವರೂ ತಮ್ಮ ದಾರಿ ಹಿಡಿಯಲಿ. ತಂದೆಯತ್ತ ತಿರುಗಿ ಅವನಂದ- +“ನಾನು ನಾಳೆ ತಾಳಗುಪ್ಪಕ್ಕೆ ಹೋಗಿಬರ್ತೇನೆ, ನೋಡುವ….” +ಮುದುಕ ಊಟ ಮುಗಿಸಿ ಎದ್ದು ಹೋದಮೇಲೆ ನಾಗವೇಣಿ ಗಂಡನಿಗೆ ಆಸೆ ಬಡಿಸುತ್ತ- +“ಹೌದಾ. ನಾಳೆ ತಾಳಗುಪ್ಪಕ್ಕೆ ಹೋಗೋವ್ರ ನೀವು?” ಎಂದು ಕೇಳಿದಳು. +“ಹೌದು, ಯಾಕೆ?” +“ಅಲ್ಲ..ಅಮ್ಮನ್ನ ನೋಡಿ ತುಂಬಾ ದಿನ ಆತಲ್ಲ… ಮಳೆ ಹಿಡಿದ್ರೆ ಮತ್ತೆ ಯಾವಾಗ್ಲೋ ಹೋಗೋದು…? +ನಾಗವೇಣಿಯ ತಾಯಿಯ ಮನೆ ತಾಳಗುಪ್ಪದ ಹತ್ತಿರ. ಬೆಳ್ಳಾಣೆಯ ಜಾತ್ರೇ ಸಮಯದಲ್ಲಿ ಹೋಗಿದ್ದಳವಳು. ಅನಂತರ ಅತ್ತ ಹೋಗಿರಲಿಲ್ಲ. ಅಲ್ಲಿಂದ ಮೂರು ನಾಲ್ಕು ಬಾರಿ ಆದರೆ ಬಂದು ಹೋಗುವಂತೆ ಹೇಳಿಕಳುಹಿಸಿದ್ದರು. ಗಂಡ ಹೋಗು ಅಂದರಲ್ಲವೇ ಹೊರಡುವುದು. +“ಅಪ್ಪಯ್ಯ ಒಬ್ರೇ ಇರ್ತಾರಲ್ಲ ಮನೆಯಲ್ಲಿ” +ಇದೊಂದು ಸಮಸ್ಯೆ. ಕಾಯಿಲೆ ಮುದುಕನನ್ನು ಬಿಟ್ಟು ಹೋಗುವುದುಂಟೆ. ಏನುಮಾಡುವುದು ಎಂದು ಗಂಡನ ಮುಖ ನೋಡಿದಾಗ ಅವನೆಂದ- +“ಹತ್ ಗಂಟೆ ಗಜಾನನಕ್ಕೆ ಹೋಗಿ ಬೇಗ ಬಂದುಬಿಡುವ…. ಅಪ್ಪಯ್ಯ ಹ್ಞು ಅಂದಾನು” +ನಾಗವೇಣಿ ತಲೆಯಾಡಿಸಿದಳು ಸಂತಸದಿಂದ. +ಹೊಸಮನೆಯಿಂದ ತಾಳಗುಪ್ಪಕ್ಕೆ ಹಿಂದೆ ಆರೇ ಮೈಲಿ. ಹೊಸಮನೆ ಅಲ್ಲಿಂದ ಹಿರೇಮನೆ.ಅನಂತರ ತಾಳಗುಪ್ಪ. ಶರಾವತಿ ದಾತಿದರಾಯಿತು. ಆದರೆ ಈಗ ಇಪ್ಪತ್ತು ಮೈಲಿ. ಹಿಂದಿನ ರಸ್ತೆ ಮುಳುಗಿ ಹೋಗಿದ್ದರಿಂದ ಈಗ ಅರಲಗೋಡಿಗೆ ಬಂದು ಅಲ್ಲಿಂದ ಕಾರ್ಗಲ್ಲಿಗೆ ಬಂದು ತಾಳಗುಪ್ಪಕ್ಕೆ ಹೋಗಬೇಕು. ಹಿಂದೆ ಎಂಟಾಣೆ ಕೊಡುವಲ್ಲಿ ಈಗ ಒಂದೂವರೆ. ಅರ್ಧಗಂಟೆಯ ದಾರಿಯ ಬದಲು ಈಗಿನ ಒಂದೂವರೆ ಗಂಟೆಯ ದಾರಿ. +ಮಗ ಸೊಸೆ ಹೊರಡುವ ವಿಷಯ ಹೇಳಿದಾಗ ಮುದುಕ ಹೋಗಿಬನ್ನಿ ಎಂದ. ಬಂದ ಕೆಲಸದಾಳುಗಳಿಗೆ ಅಡಕೆಮರಕ್ಕೆ ಕೊಟ್ಟೇ ಕಟ್ಟುವ ಕೆಲಸ ವಹಿಸಿಕೊಟ್ಟ. ಊಟ ಮುಗಿಸಿ ಗಣಪಯ್ಯ ಹೊರಟಾಗ ತಂದೆ ಮಳೆಗಾಲ ಬಂತಲ್ಲ ಮೆಣಸಿನಕಾಯಿ, ಬೇಳೆ ಇತ್ಯಾದಿ ತಂದುಬಿಡು ಎಂದು ಹೇಳಲು, ತರುತ್ತೇನೆ ಎಂದು ಉತ್ತರಿಸಿ ನಾಗವೇಣಿಯನ್ನು ಕರೆದುಕೊಂಡು ಹೊರಟ. +ಸೀತಾಪರ್ವತದತ್ತ ಬೆನ್ನುಹಾಕಿ ಹೊರಟಾಗ ನಾಗವೇಣಿ- +“ನೀರು ಇಲ್ಲಿಗೂ ಬರಬಹುದಾ?” +ಎಂದು ಕೇಳಿದಳು. +ಅದು ಹೊಸಮನೆಯಿಂದ ಅರಲಗೋಡಿಗೆ ಹೋಗುವ ಕಾಲುಹಾದಿ. ಗಾಡಿರಸ್ತೆಯೂ ಅದೇ. ಅದು ಎತ್ತರವಾದ ಪ್ರದೇಶದಲ್ಲಿಯೇ ಇತ್ತಾದರೂ ನೀರು ಅಲ್ಲಿಗೂ ಬರುತ್ತದೆಂದು ಕೆಂಪು ಕಲ್ಲುಗಳನ್ನು ಅಲ್ಲೂ ನೆಟ್ಟಿದ್ದರು. +“ಈ ವರ್ಷ ಬರಲಾರದು,” +ಎಂದು ಗಣಪಯ್ಯ. ಬಾರದಿದ್ದರೆ ನಮಗೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ. ಹೂರಗಿನ ಜನ ಹೊಸಮನೆಗೆ ಬರಬಹುದು. ಇಲ್ಲಿಯವರು ಹೊರ ಹೋಗಬಹುದು ಬೇರೇನೂ ತೊಂದರೆ ಇರುವುದಿಲ್ಲ. ಆದರೆ ನೀರು ಬರುವುದೇ‌ಇಲ್ಲ‌ಎಂದು ಖಚಿತವಾಗಿ ಹೇಳುವುದು ಹೇಗೆ, ಸರಕಾರದ ಮಾತು ಯಾವ ಖಾತರಿ. ನೀರು ಬಂದರೆ ಮಾತ್ರ ಕೊಂಚ ತೊಂದರೆ, ನೀರು ಇಳಿಯುವ ತನಕ ನಾವು ಅಲ್ಲೇ – ಎಂದ. +ತಾಯಿಯ ಮನೆಗೆ ಹೋಗುತ್ತೇನೆಂಬ ಸಂತಸದಲ್ಲಿ ನಾಗವೇಣಿ ಸಂತಸದಿಂದ ಇದ್ದಳು. ಉತ್ಸಾಹ ಹುರುಪಿನಿಂದ ನಡಿಗೆ. ಗೆಲುವಾದ ಮಾತು. ಮುಖದ ಮೇಲೆ ನಗೆ. ಗಣಪಯ್ಯ ಹುಡುಗಿ ಪಸಂದಾಗಿದ್ದಾಳೆಂದು ಅವಳನ್ನು ನೋಡಿ ನೋಡಿ ಖುಷಿ ಪಟ್ಟ. +ಸಂಪ ದಾಟಿ ಐತುಮನೆ ದಾಟಿ ಅರಲಗೋಡಿಗೆ ಬರುವುದಕ್ಕೂ ಸರಿಹೋಯಿತು. ಮೊದಲೇ ಹಳೆಯ ಬಸ್ಸು. ಚಿಕ್ಕದು ಬೇರೆ. ಒಳಗೆ ಉಪ್ಪಿನಕಾಯಿ ಹಾಕಿದಂತೆ ತುಂಬಿದ ಜನ. ಎಷ್ಟೇ ಜನ ಬರಲಿ, ಯಾರನ್ನೂ ಬಿಟ್ಟು ಹೋಗಬಾರದೆಂದು ಪಣತೊಟ್ಟ ಕಂಡೆಕ್ಟರು. ಗಣಪಯ್ಯ ನಾಗವೇಣಿಯರೂ ಹತ್ತಿದರು. +ಬಸ್ಸು ಹೊರಟಿತು. ಕಾರ್ಗಲ್ಲು, ಇಡವಾಣಿ, ಬಚಗಾರು, ತಲವಾಟ, ಹಿರೇಮನೆ, ಎಂದು ಬೋರ್ಡುಗಲ್ಲುಗಳ ಹತ್ತಿರವೆಲ್ಲ ನಿಂತು, ಇಳಿಯುವವರನ್ನು ಇಳಿಸಿ, ಹತ್ತುವವರನ್ನು ಹತ್ತಿಸಿಕೊಂಡು, ಬಸ್ಸು ತಾಳಗುಪ್ಪಕ್ಕೆ ಬಂದಾಗ ಮೋಡ ಕವಿದು ಗಾಳಿಬೀಸುತ್ತಿತ್ತು. ನಾಗವೇಣಿಯನ್ನು ಯಾರ ಜೊತೆಗೆ ಅವಳ ತಾಯಿಯ ಮನೆಗೆ ಸಾಗಹಾಕುವುದೆಂದು ಬಸ್ಸಿಳಿದು ಗಣಪಯ್ಯ ಸುತ್ತಲೂ ದೃಷ್ಟಿ ಹಾಯಿಸುತ್ತಿರುವಾಗ ನಾಗವೇಣಿ ಕೂಗಿಕೊಂಡಳು. +“ಹೌದಾ…. ಅದು ಕೃಷ್ಣಯ್ಯ ಅಲ್ಲ?” ಕೃಷ್ಣಯ್ಯ ಅಲ್ಲಿಂದ ಓಡಿಬಂದ. +“ಬಾವ. ಈಗ ಬಂದ್ರಾ…. ನಾಗು ಏನು ಚೆನ್ನಾಗಿದಿಯಲ್ಲ?” +ಎಂದು ಕೇಳಿದ. +“ನಾಗು, ನೀನು ಐದ್ ಗಂಟೆಗೆ ಬಂದ್‌ಬಿಡು. ನಾನು ಇಲ್ಲೇ ಕಾಯ್ತಿರ್ತೀನಿ. ಆತ….” +ಎಂದ ಗಣಪಯ್ಯ ನಾಗವೇಣಿಯತ್ತ ತಿರುಗಿ. ನಾಗವೇಣಿ ತಲೆಯಾಡಿಸಿದಳು. ಕೃಷ್ಣಯ್ಯ ಗಣಪಯ್ಯನನ್ನೂ ಬರುವಂತೆ ಕರೆದಾಗ ಆತ ಕೆಲಸವಿದೆ ಎಂದು ಹೇಳಿ ಭಟ್ಟರ ಅಂಗಡಿಯತ್ತ ನಡೆದ. +ನಾಗವೇಣಿ, ಕೃಷ್ಣಯ್ಯ ರೈಲು ಹಾದಿ ದಾಟಿಕೊಂಡು ಊರಿನತ್ತ ತಿರುಗಿದಾಗ ಗಾಳಿ ಬೀಸತೊಡಗಿತು. ಮೋಡದ ಮರೆಯಲ್ಲಿದ್ದ ಮಿಂಚಿ ಝಳಪಿಸಿತು. ರಪರಪನೆ ಮಳೆ ಬೀಲಲಾರಂಭಿಸಿತು. ಕೃಷ್ಣಯ್ಯ ಕೊಡೆ ಸೂಡಿ ನಾಗವೇಣಿಯತ್ತ ಹಿಡಿದಾಗ, ಅವನ ಬಳಿ ಸಾರಲು ಅವಳು ಎರಡು ಕ್ಷಣ ಯೋಚಿಸಿದಳು. ಅನಂತರ ಅವನ ಮಗ್ಗುಲಿಗೆ ಬಂದು ಮೈ ಮುದುಡಿಕೊಂಡಳು. ಮಳೆ ನಿಲ್ಲಲಿಲ್ಲ. +ಕೃಷ್ಣಯ್ಯ ಮನೆಯಲ್ಲೇ ಬೆಳೆದವ. ನಾಗವೇಣಿಗಿಂತ ಹತ್ತು ವರ್ಷ ದೊಡ್ಡವನು. ನಾಗವೇಣಿಯ ತಂದೆ ಮನೆಗೆಲಸಕ್ಕೆಂದು ಇಟ್ಟುಕೊಂಡ ಹುಡುಗ ಅಲ್ಲಿಯೇ ಬೆಳೆದ ಮನೆಯ ಒಬ್ಬನಾಗಿದ್ದ. ನಾಗವೇಣಿಗೆ ಆದ ಕೃಷ್ಣಯ್ಯ. ನಾಗವೇಣಿಯ ಗಂಡ ಕೃಷ್ಣಯ್ಯನಿಗೆ ಭಾವ. +ಕೃಷ್ಣಯ್ಯ ಕೆಂಪಗೆ ಎತ್ತರಕ್ಕೆ ಬಿರುಸು ಬಿರುಸಾಗಿ ಬೆಳೆದಿದ್ದ. ಅವನ ಅಗಲ ಮುಖದ ಮೇಲೆ ಸುರುಳಿ ಸುತ್ತಿದಂತಿದ್ದ ಕಡು ಕಪ್ಪು ಮೀಸೆ ಬೇರೆ. ತೋಳು – ತೊಡೆಗಳ ಸ್ನಾಯುಗಳಲ್ಲಿ ರಕ್ತದ ಕೋಡಿ. ಮಾತಿನಲ್ಲೂ ಕೃಷ್ಣಯ್ಯ ಚೂಟಿ. ಅವನ ನಗೆ ಮನೆಗೆಲ್ಲಾ ಪರಿಚಿತ. ಕೆಲಸದಲ್ಲೂ ಅಷ್ಟೆ. ಹತ್ತು ಜನರ ಕೆಲಸ ಒಬ್ಬನೇ ಮಾಡಿ ಮುಗಿಸಿಬಿಡುವ ಹುಮ್ಮಸ್ಸು. +ನಾಗವೇಣಿಗೆ ಹಿಂದಿನಿಂದಲೂ ಕೃಷ್ಣಯ್ಯನೆಂದರೆ ಅಕ್ಕರೆ – ಆಕರ್ಷಣೆ. ಅವನು ಎದುರೆ ಇದ್ದರೆ, ಅವನ ಮಾತು ಕೇಳುತ್ತಿದ್ದರೆ, ಅವನನ್ನು ನೋಡುತ್ತಿದ್ದರೆ ಅದೇನೋ ಸಂತಸ ತೃಪ್ತಿ. ಅವನಿಗೂ ಅಷ್ಟೆ. ನಾಗವೇಣಿಯ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ. +ನಾಗವೇಣಿ ಮದುವೆಯಾಗಿ ಗಂಡನೊಡನೆ ಹೊರಟಾಗ ತುಂಬಾ ಅತ್ತವನೆಂದರೆ ಕೃಷ್ಣಯ್ಯ. ಮೂರು ದಿನ ಊಟ ಬಿಟ್ಟು ಕುಳಿತಿದ್ದನಂತೆ ಕೃಷ್ಣಯ್ಯ. ನಾಗವೇಣಿಗೂ ಆದ ನೋವು ಕಡಿಮೆಯದಲ್ಲ. ಗಂಡನ ಹಿಂದೆ ಹೊರಟಾಗ ತಾಳಗುಪ್ಪದವರೆಗೂ ಬಂದಿದ್ದ ಕೃಷ್ಣಯ್ಯ- +“ನಾಗು, ನಾನು ನಿಲ್ತೀನಿ. ಹೋಗಿ ಬಾ….” +ಎಂದಾಗ ಆ ವರೆಗೂ ತಡೆಹಿಡಿದ ಅಳು ನುಗ್ಗಿ ಬಂದಿತ್ತು. ಇನ್ನು ಅತ್ತುದೆಲ್ಲ ಅವನಿಗಾಗಿ ಎಂಬುದು ಗೊತ್ತಿದ್ದುದು ಅವನಿಗೆ ಮಾತ್ರ, ಉಳಿದವರೆಲ್ಲ ಹುಡುಗಿ ತಾಯಿಯ ಮನೆಯನ್ನು ತೊರೆಯಲಾರದೇ ಹೀಗೆ ಅಳುತ್ತಿದ್ದಾಳೆಂದು ಅಂದುಕೊಂಡಿರಬಹುದು ತಾನು ಈ ಕಾರಣಕ್ಕಾಗಿಯೂ ಅತ್ತನೆಂಬುದು ನಿಜ. ಆದರೆ ತನ್ನೆದೆಯ ನೋವು ಹೋಗಬೇಕಲ್ಲ ಎಂಬ ಕಾರಣಕ್ಕಾಗಿ. +ಮಳೆ ಇನ್ನೂ ಜೋರಾಗಿ ಬೀಳಲಾರಂಭಿಸಿತು. ನಾಗವೇಣಿ ಒಂದು ಕಡೆಯಿಂದ ನೆನೆದರೆ ಕೃಷ್ಣಯ್ಯ ಇನ್ನೊಂದು ಬದಿಯಲ್ಲಿ ಒದ್ದೆಮುದ್ದೆಯಾದ, ಒಂದು ಕೊಡೆಯಲ್ಲಿ ಅದು ಹೇಗೋ ಅವರು ಮನೆಗೆ ಬಂದು ತಲುಪಿದರು. +ನಾಗವೇಣಿ, ತಂಗಿ ತಾಯಿ, ತಂದೆ ತಮ್ಮಂದಿರನ್ನು ಮಾತನಾಡಿಸಿ, ಹೊರಡುವೆನೆಂದಾಗ ತಾಯಿ- +“ಇದ್ದು ಹೋಗೇ” +ಎಂದಳು, ನಾಗವೇಣಿ- +“ಇಲ್ಲಮ್ಮ ಅವ್ರು ಸಾಯಂಕಾಲಾನೆ ತಿರುಗಿ ಹೋಗಬೇಕು ಅಂದಿದಾರೆ….” +ಎಂದು ಹೊರಟೇಬಿಟ್ಟಳು. ಕೃಷ್ಣಯ್ಯ ಮತ್ತೆ ಅವಳ ಹಿಂದೆ ಹೊರಟ. +ಇದೀಗ ಇಳಿ ಬಿಸಿಲು. ಗಿಡಗಳಲ್ಲಿ ಹೊಸ ಚೇತನ. ತೊಳೆದ ನೀಲಿ ಆಕಾಶ. ಒದ್ದೆ ನೆಲದಲ್ಲಿ ನಿಂತ ನೀರು, ಹೊಲಗಳಲ್ಲಿ ಎದ್ದುನಿಂತ ಭತ್ತದ ಸಸಿಗಳ ಎಳೆಹಸಿರು. +“ದೂರ ಹೋಗ್ತೀಯ ನಾಗು….” +“ಈಗಲ್ಲ, ಮಳೆಗಾಲ ಮುಗಿದ ಮೇಲೆ. ನಮ್ಮ ಹಳ್ಳೀಲಿದ್ದ ಎಲ್ರಿಗೂ ಜಮೀನು ಹಣ ಕೊಟ್ರು, ನಂಗೆ ಮಾತ್ರ ಕೊಟ್ಟಿಲ್ಲ, ಈಗ ಹೊಸ ಮನೇಲಿ ನಾವು ಮಾತ್ರ ಇರೋದು….” +ಕೃಷ್ಣಯ್ಯ ಹೌದೆ ಎಂದ. +“ಹೌದು, ಯಾರಾದ್ರು ಆಳುಗಳು ಸಿಗ್ತಾರೋ ನೋಡ್ತೀನಿ ಅಂತಿದ್ರು ಇವ್ರು. ಹೊಲ, ತೋಟದ ಕೆಲಸ ಮಾಡೋಕೆ ಬೇಕಲ್ಲ” +“ನಾನು ಬರಲೇನೂ?” +“ಬಾ” +“ಈಗ್ಲೆ ಹೊರಟೆ, ಎರಡು ಊಟ ಹಾಕಿ ಸಾಕು, ಹತ್ ಜನ ಮಾಡೋ ಕೆಲಸ ಮಾಡಿ ಹಾಕ್ತೀನಿ” +ನಾಗವೇಣಿ ಕೃಷ್ಣಯ್ಯನ ಮುಖ ನೋಡಿ ನಕ್ಕಳು. +ಗಣಪಯ್ಯ ಕಾಯುತ್ತಿದ್ದ ಬಸ್ಸು ಬಂದ ಮೇಲೆ ಕೃಷ್ಣಯ್ಯನೇ ಮೆಣಸಿನಕಾಯಿ ಇತ್ಯಾದಿ ತಂದು – ಚೀಲವನ್ನು ಬಸ್ಸಿನ ಮೇಲೆ ಹಾಕಿದ. ಬಸ್ಸು ಹೊರಟಾಗ ನಾಗವೇಣಿಯ ಮುಖ ಚಿಕ್ಕದಾಯಿತು. ಕೃಷ್ಣಯ್ಯ ಹಿಂದೆ ಸರಿದು ಕೈ ಬೀಸಿದ. +ಅರಲಗೋಡಿನಲ್ಲಿ, ಚೀಲ ಹೊರಿಸಿಕೊಂಡು ಹಳ್ಳಿಯತ್ತ ತಿರುಗಿದಾಗ ನಾಗವೇಣಿ ಕೇಳಿದಳು. +“ಆಳುಗಳು ಸಿಕ್ರ ಯಾರಾದ್ರು” +“ಯಾರೂ ಸಿಗೋ ಹಾಗೆ ಕಾಣೆ, ತಾಳಗುಪ್ಪ, ಮನಮನೆ ಮರ್ತೂರಿನಲ್ಲೆಲ್ಲ ಕೇಳಿಬಂದೆ. ಎಲ್ರು ಇಲ್ಲ ಅಂತಾರೆ…. ಏನು ಮಾಡೋದು…. ಮಳೆಗಾಲದಲ್ಲಿ ಬೇರೆ ಯಾರಾದ್ರು ಇದ್ರೆ ಆಗ್ತಿತ್ತು. ನಾವು ನಾವೇ ಇರೋದು ಹ್ಯಾಗೇ?” +ನಾಗವೇಣಿ ಅಷ್ಟು ದೂರ ನಡೆದು ಗಂಡನತ್ತ ತಿರುಗಿದಳು. +“ನಮ್ ಕೃಷ್ಣಯ್ಯನ ಬಾ ಅಂದ್ರೆ ಬರ್ತಿದ್ನೋ ಏನೋ….” +“ಕೃಷ್ಣಯ್ಯ….? ಬಂದ್ರೆ ಆಗ್ತಿತ್ತು. ಆದ್ರೆ ಅಲ್ಲಿ ಯಾರಿದಾರೆ ಕೆಲಸಕ್ಕೆ?” +“ಅಲ್ಲಿ ಯಾರಾದ್ರು ಸಿಗ್ತಾರೆ, ದೀವ್ರ ಆಳುಗಳಿದಾರಲ್ಲ. ಕೃಷ್ಣಯ್ಯನಿಗೆ ನಾಳೆ ನಾಡಿದ್ದು ಯಾರ ಕೈಲಾದ್ರು ಹೇಳಿ ಕಳಿಸಿ, ಬರಲಿ ಆತ.” +“ಹಾಗೇ ಮಾಡೋಣ” +ಐತುಮನೆ, ಸಂಪ ಹಿಂದಾಯಿತು. ಮಸಕು ಮಸಕಾಗಿ ಕತ್ತಲೆ ಕವಿದಿತ್ತು. ಮಳೆ ಇಲ್ಲೆಲ್ಲಾ ಸುರಿದಿತ್ತು. ಎಲ್ಲೆಲ್ಲೂ ನೀರು. ಇನ್ನು ಮಳೆಗಾಲ ಆರಂಭವಾದ ಹಾಗೆ, ರೋಹಿಣಿ ಈ ನಾಲ್ಕು ದಿನಗಳಿಂದ ಆಗಾಗ್ಗೆ ಬೀಳುತ್ತಿದೆ. ಒಂದು ಹದ ಬಿದ್ದು ಹೊಲದಲ್ಲಿ ಬೀಜ ಬಿತ್ತು ಸಸಿಗಳು ಎದ್ದು ನಿಂತಿವೆ. ಬಿಸಿಲಿಗೆ ಒಣಗಿದ ಹೊಲ ಹಸಿಯಾಗಿದೆ. ಇದೀಗ ಹಲವರು ಉತ್ತಲು – ಬಿತ್ತಲು ಆರಂಭಿಸಿದ್ದಾರೆ. ಗಾಳಿ, ಸಿಡಿಲು, ಗುಡುಗು, ಮಳೆಗಾಲದ ಮುನ್ಸೂಚನೆ. ಈಗ ಬಿಟ್ಟು ಬಿಟ್ಟು ಹೊಡೆಯುವ ಮಳೆ ಆರಂಭವಾದರೆ ಮಾತ್ರ ನಿಲ್ಲುವುದು ನಾಲ್ಕು ತಿಂಗಳ ನಂತರವೆ. ಮಳೆ ಆರಂಭವಾಗುವಷ್ಟರಲ್ಲಿ ಮನೆಗೆ ಸಾಮಾನು ತಂದು ಹಾಕಬೇಕು. ಇನ್ನೂ ಒಂದಿಷ್ಟು ಸೌದೆ ಮಾಡಬೇಕು. ತೋಟದ ಮನೆ ರಿಪೇರಿ ಮಾಡಬೇಕು. ಕೆಲಸ ಬಹಳಷ್ಟಿದೆ. ನಾಳೆಯೇ ಕೃಷ್ಣಯ್ಯನಿಗೆ ಹೇಳಿ ಕಳುಹಿಸಬೇಕು. +ಮನೆಯ ಜಗುಲಿಯಮೇಲೆ ಬೆಳಕು ಕಂಡಿತು. ಮುದುಕ ಎದ್ದು ದೀಪ ಹತ್ತಿಸಿದ್ದಾನೆ, ಪಾಪ ಎಂದುಕೊಂಡ ಗಣಪಯ್ಯ. ಮನೆ ಹತ್ತಿರ ಬಂದಾಗ ಮಾಣೀ ಎಂದು ತಂದೆ ಕರೆದುದು ಕೇಳಿಸಿತು. ಬಂದ್ವಿ ಎಂದು ಉತ್ತರಿಸಿ ಚಪ್ಪರದಲ್ಲಿ ಕಾಲಿರಿಸಿದರು. +ಮೃಗಶಿರಾ +ವಿರುಗಿ ಮಳ ಹಬ್ಬವೆಂದು ಆಳುಗಳು ಯಾರೂ ಬರಲಿಲ್ಲ. ತೋಟದಲ್ಲಿಯ ಕೆಲಸವೆಲ್ಲ ಮುಗಿದಿತ್ತು. ತೋಟದಮನೆಗೆ ಅಲ್ಲಲ್ಲಿ ಒಂದಿಷ್ಟು ಹುಲ್ಲು ಹೊದಿಸಿದರೆ ಎಲ್ಲ ಮುಗಿದಹಾಗೆ. ಈ ಕೆಲಸ ಮುಗಿಸೋಣವೆಂದರೆ ಆಳುಗಳು ಯಾರೂ ಬರಲಿಲ್ಲ ಹಿಡಿದ ಮಳೆ ಎಂಟುದಿನಗಳಿಂದ ಬಿಟ್ಟಿರಲಿಲ್ಲ. ಕವಿದ ಮೋಡ ಕದಲಿರಲಿಲ್ಲ. ರಪರಪ ಎಂದು ಬೀಳುತ್ತಿದ್ದ ಮಳೆಯಲ್ಲದೆ ಬೇರೇನೂ ಕಾಣುತ್ತಿರಲಿಲ್ಲ ಒಂದು ಕ್ಷಣದ ಬಿಡುವುಕೊಡದೆ ಹೊಯುತ್ತಿತ್ತು ಮಳೆ. ಈ ಮಳೆಯ ರಭಸಕ್ಕೆ ತೋಟದ ಮನೆಯ ಮಾಡು ತೂರಿಕೊಂಡು ಹೋಗಿತ್ತು. ಆಳುಗಳು ಅದು ಹೇಗೆ ಹುಲ್ಲುಹೊದೆಸಿದ್ದರೋ ನೀರು ಮನೆಯೊಳಗೆಲ್ಲ ನುಗ್ಗಿತ್ತು. +ಮಳೆಯ ರಭಸ ಹಿಂದಿನ ರಾತ್ರಿ ಕೊಂಚ ಕಡಿಮೆಯಾಗಿ ಬೆಳಗ್ಗೆಯಿಂದ ಮಳೆ ನಿಂತಿತ್ತು. ಮೋಡ ತಲೆಯಮೇಲೆ ತೂಗುತ್ತಿದ್ದರೂ ಹನಿ ಇರಲಿಲ್ಲ. ಈ ಸಮಯದಲ್ಲೇ ತೋಟದ ಮನೆಯ ಮಾಡಿಗೆ ಹುಲ್ಲು ಹೊದೆಸೋಣವೆಂದರೆ ಆಳುಗಳಿಲ್ಲ. ಅವರಿಗೆ ಮಿರಗಿ ಹಬ್ಬ. ಡೋಳಿನಸದ್ದು ಹಿಂದಿನ ರಾತ್ರಿಯಿಂದ ಕೇಳಿಬರುತ್ತಿದೆ. ಒಬ್ಬನೇ ತೋಟದತ್ತ ಹೋಗೋಣ ಎಂದು ಹೊರಟ. ತೋಟದತ್ತ ಇಳಿಯುವಾಗ ಶರಾವತಿ ಕಂಡಿತು. ಈವರೆಗೂ ನದಿ ಹರಿದು ಮುಂದೆ ಹೋಗುತ್ತಿತ್ತು. ಡ್ಯಾಮು ಕಟ್ಟುವ ಮುನ್ನ ಜಲಪಾತದತ್ತ ಹೋಗುತ್ತಿತ್ತು ನದಿ. ಈಗ ಡ್ಯಾಮು ಕಟ್ಟಿದ ಮೇಲೆ ನದಿ ನಿಂತುಬಿಟ್ಟಿದೆ. ನೀರು ಕಾಣಿಸುತ್ತದೆಯೇ ಹೊರತು ಮುಂದೆ ಹರಿಯುವುದಿಲ್ಲ. ಹಿಂದೆ ಹಿಂದೆ ನೂರಾರು ಅಲೆಗಳನ್ನುರುಳಿಸುತ್ತ ಬಳುಕಾಡುತ್ತದೆ. ಎಂಟು ದಿನಗಳಹಿಂದೆ ಕಲ್ಲುಬಂಡೆಗಳೆಲ್ಲ ಕಾಣುತ್ತಿದ್ದವು. ನದಿ ಪಾತ್ರ ಬಿಟ್ಟು ಮೇಲೇರಿರಲಿಲ್ಲ. ಈಗ ನೀರು ದಡದಿಂದ ಮೇಲುಕ್ಕಿ ಹರಿಯುತ್ತಿದೆ. ನದಿಯ ಪಾತ್ರ ವಿಸ್ತಾರವಾಗಿದೆ. ಗರ್ಭಿಣಿ ಸ್ತ್ರೀಯಂತೆ ಶರಾವತಿ ಬೀಗಿ ನಿಂತಿದ್ದಾಳೆ. +ಹಿಂದಿನದಿನ ಬಂದ ಆಳುಗಳು ನೀರು ಗುಡ್ಡದ ಮತ್ತೊಂದು ಪಾರ್ಶ್ವದತ್ತ ಹೊರಳಿನಿಂತಿದೆ ಎಂದು ಹೇಳಿದ್ದರು. ಹೀಗೆಯೇ ದಿನಗಳುರುಳಿದರೆ, ನೀರು ಏರಿದಹಾಗೆ ನೀರು ಗುಡ್ಡವನ್ನು ಬಳಸಿಕೊಳ್ಳುವುದು ಖಚಿತ. ಆನಂತರ ಇಲ್ಲಿಗೆ ಹೊರಗಿನಿಂದ ಯಾರೂ ಬರಲಾರರು. ಕೃಷ್ಣಯ್ಯ ಬರುವುದಾಗಿ ಹೇಳಿಕಳುಹಿಸಿ ಎಂಟು ದಿನಗಳಾದವು. ನಾಗವೇಣಿ ಪ್ರತಿದಿನ ಅವನ ದಾರಿ ಕಾಯುತ್ತಿದ್ದಾಳೆ. ಏಕೆ ಬರಲಿಲ್ಲ ಆತ? ಹೊಸ ಮನೆ ನಡುಗಡ್ಡೆಯಾಗುವ ಮುನ್ನ ಆತ ಬಂದಿದ್ದರಾಗುತ್ತಿತ್ತು. ನಿಂಬೆ ಗಿಡವೊಂದು ಬುಡಸಹಿತ ಕಿತ್ತು ಬಿದ್ದಿತ್ತು. ಒಂದೆರಡು ಬಾಳೇಗಿಡಗಳ ಪಾಡೂ ಇದೆ. ಹಳ್ಳದ ನೀರು ತೋಟದ ಒಂದು ಬದಿಯ ನೆಲವನ್ನು ತೆರೆದುಕೊಂಡು ಹೋಗಿದ್ದರಿಂದ ಒಂದು ಅಡಕೆಮರಕ್ಕೇ ಅಪಾಯ ಒದಗಿತ್ತು. ಸಂಕ ದಾಟಿ ತೋಟದಮನೆಯತ್ತ ತಿರುಗಿದಾಗ ಅದು ಯಾರೋ ದರೆಯ ಮೇಲಿನಿಂದ ಕೂಗಿದಂತಾಯಿತು. ತಿರುಗಿ ನೋಡಿದರೆ ಕೃಷ್ಣಯ್ಯ. +“ಬಾರಯ್ಯಾ….ಬಾ….” +ಕೃಷ್ಣಯ್ಯ ನೆಗೆನೆಗೆಯುತ್ತ ತೋಟಕ್ಕೆ ಇಳಿದ. ಅವನ ಭಾರಕ್ಕೆ ಸಂಕ ತುಳುಕಾಡಿತು. ಎದುರು ಬಂದು ನಿಂತ- +“ಬಾವಯ್ಯ ನಾನು ಬರೋದಿಲ್ಲ ಅಂತ ತಿಳ್ಕೊಂಡಿದ್ರೋ ಹೇಗೆ ನೀವು?” +ಎಂದು ಕೇಳಿದ. ನುಣ್ಣಗೆ ಬೋಳಿಸಿಕೊಂಡ, ಅವನ ಕೆಂಪು ಮುಖಕ್ಕೆ ಸೊಗಸಾಗಿ ಕಾಣುತ್ತಿದ್ದ ಮೀಸೆಯನ್ನು ನೋಡುತ್ತ ಅವನ ಬಗ್ಗೆ ಅಸೂಯೆ ಎನಿಸಿತು. +“ಹೌದಯ್ಯ ಬರ್ತೀನಿ ಅಂತ ನೀನು ಹೇಳಿಕಳಿಸಿದ್ದು ಯಾವಾಗ. ಈಗ ಬಂದಿದ್ದು ಯಾವಾಗ?” +ಏನ್ ಮಾಡ್ಲಿ ಬಾವ, ಎಂಟ್ ದಿನದ ಹಿಂದೇನೆ ಹೊರಟಿದ್ದೆ, ಆದ್ರೆ ಯಜಮಾನ್ರು ಸಾಗರಕ್ಕೆ ಹೋಗಿ ಬರೋ ಕೆಲಸ ಅಂಟಿಸಿದ್ರು. ಎರಡು ದಿನಗಳಲ್ಲಿ ಆದೀತು ಅಂತ ಹೋದ್ರೆ ಎಂಟು ದಿನ ಆಯ್ತು, ನಾನು ಈವತ್ತೇ ಬಂದಿದ್ದು ಒಳ್ಳೆದಾಯ್ತು ಅನ್ನಿ. ಇಲ್ಲಾ ಅಂದಿದ್ರೆ ನಿಮ್ಮಳ್ಳಿಗೆ ಸಂಪದಿಂದ ಈಜ್ಕೊಂಡು ಬರಬೇಕಾಗ್ತಿತ್ತು.” +“ಯಾಕೆ?” +“ನಿಮಗೆ ಗೊತ್ತಿಲ್ವ? ಶರಾವತಿ ನಿಮ್ ಹಳ್ಳೀನ ಎರಡೂ ಕಡೆಯಿಂದ ಸುತ್ತು ಹಾಕಿಕೊಂಡು ಬರ್ತಿದಾಳೆ. ಇನ್ನು ನಾಲ್ಕುದಿನ ಹೋದ್ರೆ ಹೊಸಮನೆಹಳ್ಳಿ ಒಂದು ದ್ವೀಪ.” +“ಹೌದೆ! ಗುಡ್ಡದ ಹಿಂಬದಿಗೆ ನೀರು ಬಂದಿದೆ ಏನು?” +“ಹೌದು ಬಾವ, ಎರಡೂ ಕಡೆಯಿಂದ ನೀರು ಏರಿದೆ. ಕಾಲುದಾರಿ ಸ್ವಲ್ಪ ದಿಣ್ಣೆ ಮೇಲಿರೋದ್ರಿಂದ ನೀರು ಅಲ್ಲೀತನಕ ಬಂದಿಲ್ಲ. ನೀರು ಹೀಗೇನೆ ಏರಿದ್ರೆ ಈ ದಾರೀನೇ ಮುಳುಗಿ ಹೋಗುತ್ತೆ,” +“ಹುಂ… ಅಂದುಕೊಂದ ಹಾಗೇ ಆಯ್ತು, ನೀನೀಗ ಮನೆಗೆ ಹೋಗಿ ಬಂದ್ಯ?” +“ಎಲ್ಲಿ ಮನೆ ಬಾವ, ದೂರದಿಂದ ನೀವು ತೋಟಕ್ಕೆ ಬಂದಿದ್ದು ನೋಡ್ದೆ, ಇಲ್ಲಿಗೆ ಓಡಿ ಬಂದೆ” +“ನಡಿ ಮನೆಗೆ ಹೋಗೋಣ, ಅವಳು ಎಂಟ್ ದಿನದಿಂದ ಕಾಯ್ತಿದಾಳೆ ನಿನ್ನ” +ಗಣಪಯ್ಯ ಕೃಷ್ಣಯ್ಯನೊಡನೆ ದರೆಯನ್ನೇರಿದ. ದಟ್ಟೈಯಿಸಿದ ಮೋಡಗಳ ಮರೆಯಿಂದ ಬಿಸಿಲು ಅಲ್ಲೆಲ್ಲ ಮೈಚಾಚಿತು. +“ಅಕ್ಕಿ ಆರಿಸುತ್ತ ಕುಳಿತ ನಾಗವೇಣಿ ಕಲ್ಲು-ಭತ್ತವನ್ನು ಹೆಕ್ಕಿ ಎಸೆಯುವುದರ ಬದಲಿಗೆ ಅಕ್ಕಿಯನ್ನೇ ಆರಿಸಿ ಎಸೆಯುತ್ತಿದ್ದಳು. ಈ ಕಾರ್ಯ ಐದು ನಿಮಿಷ ನಡೆದು, ಕರಿಯ ನೆಲದಮೇಲೆ ಬಿಳಿ ಅಕ್ಕಿಯ ಕಾಳು ಬಿದ್ದುದ್ದನ್ನು ಗಮನಿಸಿ, ‘ಹೌದಾ….ನನಗೇನು ಬಂತು ಕೇಡು’ ಎಂದು ತುಟಿ ಕಚ್ಚಿಕೊಂಡು, ಕೈಗೆಟುಕುವಷ್ಟು ದೂರ ಬಿದ್ದಿದ್ದ ಅಕ್ಕಿಯನ್ನು ಆರಿಸಿ ಮೊರಕ್ಕೆ ಆಕಿಕೊಂಡು ತನ್ನ ಕೆಲಸವನ್ನು ಮುಂದುವರಿಸಿದಳು. +ಈಗೀಗ ಹೊಸಮನೆ ಎಂದರೆ ಬೇಸರ. ಮನೆಯಲ್ಲಿ ಮಾವ ಇರುವುದರಿಂದ ಕಾಲ ಕಳೆದು ಹೋಗುತ್ತದೆ. ಇಲ್ಲದಿದ್ದರೆ ಮನೆಯೂ ಬೇಸರವಾಗುತ್ತಿತ್ತು. ತೋಟ-ಹೊಲದಲ್ಲಿ ಕೆಲಸ ಮಾಡುವುದೆಂದರೂ ಅಷ್ಟೆ. ಅಲ್ಲಿ ಒಂಟಿ ಗೂಬೆಯಾಗಿ ದುಡಿಯಬೇಕು. ಸಂಗಡ ಅವರಿರುತ್ತಾರೆ. ಆಗೊಂದು ಈಗೊಂದು ಮಾತನಾಡಬಹುದು. ಆದರೂ ಏಕಾಕಿತನ ಅನುಭವ. ಅವರದು ಖಯಾಲಿ ಸ್ವಭಾವ. ಮನಸ್ಸು ಬಂದರೆ ಮಾತನಾಡಿದರು, ಇಲ್ಲವೆಂದರೆ ಇಲ್ಲ, ಮಾತಿನಲ್ಲೂ ಆತ್ಮಿಯತೆ ಕಡಿಮೆ. ತನ್ನ ಬಗ್ಗೆ ಅದೇನು ಅನಾದರವೋ ಇಲ್ಲ ತಿರಸ್ಕಾರವೋ ಅರಿಯದು. +ಹಿಂದೆಲ್ಲಾ ಮನೆಗೆ ಒಬ್ಬರೆಂದರೆ ಒಬ್ಬರು ಬರುತ್ತಿದ್ದರು. ಹೇರಂಬನ ಹೆಂಡತಿ, ಇಲ್ಲವೆ ಪರಮೇಶ್ವರನ ಹೆಂಡತಿ ಬಂದು ಅದೂ‌ಇದೂ; ಹಸಲರ ಹೆಣ್ಣಾಳುಗಳು ಬಂದು ಹಿತ್ತಿಲಲ್ಲಿ ನಿಂತೋ, ಹೊರಗಿನ ಚಪ್ಪರದ ಬಳಿ ನಿಂತೋ, ಕ್ಷೇಮಸಮಾಚಾರ ಹೇಳಿ ಹೋಗುತ್ತಿದ್ದರು. ಈಗ ಅವರೆಲ್ಲ ದೂರ ಹೋಗಿದ್ದಾರೆ. ಅರಲಗೋಡಿನ ದೀವ್ರ ಹೆಂಗಸರೂ ಇತ್ತ ಸುಳಿಯುವುದಿಲ್ಲ. ಅವರಾದರೂ ಬಂದರೆ ಹತ್ತಿರ ಜನರಿದ್ದಾರೆ ಎಂದಾದರೂ ಮನಸ್ಸಿಗೆ ಸಮಾಧಾನವಾಗುತ್ತಿತ್ತು. ಆದರೆ ಈ ಒಂಟಿತನ ಸಹಿಸಲಸಾಧ್ಯವಾಗಿದೆ. +ಕೃಷ್ಣಯ್ಯ ಬರುವುದಾಗಿ ಹೇಳಿ ಕಳುಹಿಸಿ ಎಂಟು ದಿನಗಳಾಗಿದ್ದವು. ಆದರೆ ಅವನಿನ್ನೂ ಬಂದಿಲ್ಲ. ಇಂದು ಬಂದಾನು ಎಂದು ಕಾದೆ. ಅವನು ಬಂದರೆ ಮನೆಯ ಸುದ್ದಿ ತಿಳಿಯಬಹುದಲ್ಲ ಅನ್ನುವಕಾತರ. ಅವನು ಬಂದರೆ ತನ್ನ ಬೇಸರ ದೂರವಾದೀತೇ ಎನ್ನುವ ಹಂಬಲ. ಕೃಷ್ಣಯ್ಯ ಹತ್ತಿರದವನು. ಅವನ ಒಡನಾಟದಲ್ಲಿಯೇ ಬೆಳೆದವಳು ಅಲ್ಲವೆ ತಾನು? ಅವನು ಬಂದರೆ ಈ ಹುಚ್ಚು ಹಿಡಿಸುವಂತಹಾ ಬೇಸರ ಖಂಡಿತಕ್ಕೂ ದೂರವಾಗುತ್ತಿತ್ತು. +ಅಕ್ಕಿ ಆರಿಸಿ ಮುಗಿಯಿತು. ಎದ್ದು ಮೊರವನ್ನು ಒಳಗಿರಿಸಿ ಬಂದು ಬಚ್ಚಲತ್ತ ನಡೆದಳು. ಜುಳುಜುಳು ನಾದಮಾಡುತ್ತ ನೀರು ಅಡಿಕೆ ದಬ್ಬೆಯಿಂದ ಬಾನಿಗೆ ಬೀಳುತ್ತಿತ್ತು. ಚೆಂಬಿನಲ್ಲಿ ನೀರು ಮೊಗೆದುಕೊಂಡು ಸೀರೆ ಮೇಲೆತ್ತಿ ಕಾಲಮೇಲೆ ನೀರು ಸುರಿದುಕೊಂಡು ಒಳಬಂದಳು. ಹೊರಗಿನಿಂದ ಮಾವ ಕರೆದಂತೆನಿಸಿ, ಬಂದೇ ಎಂದು ಹೇಳುತ್ತ ಹೊರನಡೆದಾಗ ಜಗುಲಿಯ ಮೇಲೆ ಕುಳಿತು ಮಾವನವರು, +“ಕೂಸೇ….ಯಾರೆ ಅದು ಮಾತಾಡ್ತಿರೋದು?” ಎಂದು ಕೇಳಿದರು. +ಅವರ ಕಣ್ಣು, ಕಿವಿ ಚುರುಕು. ಹಿಂದಾದರೆ ಜನರ ದನಿ ಕೇಳಿ ಹೀಗೆಲ್ಲ ಪ್ರಶ್ನಿಸುವ ವಿಚಾರ ಬರುತ್ತಿರಲಿಲ್ಲ. ಹಳ್ಳಿಯೆಂದ ಮೇಲೆ ಜನ ಬರುತ್ತಾರೆ ಹೋಗುತ್ತಾರೆ. ಶರಾವತಿ ನದಿಯನ್ನು ದಾಟಿ ಹೋಗುವವರು ಈ ಮನೆ ಎದುರಿನಿಂದಲೇ ಹಾದು ಹೋಗುತ್ತಿದ್ದರು. ಅರಲಗೋಡಿನವರು ಕೂಡ ಹೀಗೇ ಓಡಿಯಾಡುವುದಿತ್ತು. ಈಗ ಮಾತ್ರ ಇತ್ತ ಯಾರಾದರೂ ಸುಳಿದರೆ ಹೆದರಿಕೆಯಾಗುತ್ತದೆ. ಯಾರು? ಏಕೆ ಎಂದೆಲ್ಲ ಪ್ರಶ್ನೆಗಳು ತಲೆ ಎತ್ತುತ್ತವೆ. +ಚಪ್ಪರದ ಬಾಗಿಲಿಗೆ ಬಂದು ನಿಂತು ತಾನೂ ಮಾತು ತೇಲಿ ಬರುತಿದ್ದ ದಿಕ್ಕಿನತ್ತ ಕಿವಿಕೊಟ್ಟಾಗ ತನ್ನವರ ದನಿಗಿಂತ ಮೊದಲು ತನ್ನ ಕಿವಿ ನಿಮಿರಿದ್ದು ಕೃಶ್ಣಯ್ಯನ ದೊಡ್ಡ ಗಂಟಲು ಕೇಳಿ. +“ಹೌದಾ…ಕೃಷ್ಣಯ್ಯ ಬಂದ ಅಂತ ಕಾಣುತ್ತೆ” +ಎಂದು ಕೂಗಿದ ತಾನು, ಬಂದುದು ಅವನೇ ಸೈ ಎಂದು ಖಚಿತಪಡಿಸಿಕೊಂಡು. ತೋಟದ ಸಂಕ ದಾಟಿ ದರೆಯ ಮೇಲೆ ಬರುವ ದಾರಿ ಚಪ್ಪರದಿಂದ ನಾಲ್ಕು ಹೆಜ್ಜೆ ಮುಂದಿಟ್ಟರೆ ಕಾಣುತ್ತಿದ್ದುದರಿಂದ, ತಾನು ಮುಂದೆಸರಿದು ನಿಂತೆ, ಕೃಷ್ಣಯ್ಯ ಅಲ್ಲಿಂದಲೇ ತನ್ನನ್ನು ಕಂಡು ಕೈಬೀಸಿದ. ಅಡಕೆಯ ಮರದಮೆಲೆ ಹಬ್ಬಿದ ಬಳ್ಳಿಯ ಚಿಗುರೆಲೆ ತಿಳಿಗಾಳಿಗೆ ವಯ್ಯಾರದಿಂದ ಲಾಸ್ಯವಾಡಿತು. +“ನೀ ಬರುದೆ ಇಲ್ಲ ಅಂತ ಮಾಡಿದ್ದೆ…ಊರಲ್ಲಿ ಎಲ್ರೂ ಚನ್ನಾಗಿದಾರ?” +“ಓ! ಎಲ್ರೂ ಚೆನ್ನಾಗಿದಾರೆ…ನನ್ನ ಗ್ರಹಗತಿ ಮಾತ್ರ ಕೆಟ್ಟಿದೆ.” +ದೊಡ್ಡ ದನಿಯಲ್ಲಿ ಮಾತನಾಡುತ್ತ, ನಗುತ್ತ, ಕೈಲಿದ್ದ ಚೀಲವನ್ನು ಜಗುಲಿಯ ಮೇಲಿರಿಸಿ, ಮುದುಕನತ್ತ ತಿರುಗಿ ಕೈಮುಗಿದ ಕೃಷ್ಣಯ್ಯ. +“ತಾತ, ಹ್ಯಾಗಿದೀರ? ಈಗ ಆರೋಗ್ಯ ಹೇಗೆ?” ಎಂದೂ ಕೇಳಿದ. +“ಇದೀನಿ, ಆರೋಗ್ಯ ಮಾತ್ರ ಸುಧಾರಣೆ ಇಲ್ಲ. ಮಳೆಗಾಲ ಬಂತು ಎಂದರೆ ಏನೋ ದಿಗಿಲು. ಊರಕಡೆ ಎಲ್ರೂ ಚೆನಾಗಿದಾರ? +“ಹೌದು…ಯಜಮಾನ್ರು ನಿಮ್ಮನ್ನ ವಿಚಾರಿಸಿದರೆ…ಸಾಗರಕ್ಕೊ ತಾಳ ಗುಪ್ಪಕ್ಕೋ ಕರಕೊಂಡು ಹೋಗಿ ಮದ್ದು ಮಾಡಿದರೆ ಆಗುತ್ತಿತ್ತು ಅಂತಾನೂ ಹೇಳಿದ್ರು…” +“ಮದ್ದೆ? ಭ್ರಮೆ. ಸುರುಬು ಹತ್ತಿರೋ ಮರಕ್ಕೆ ಎಣ್ಣೆ ಬಳಿದ ಹಾಗೆ ಇದು…ಹೋದ ಆಯಸ್ಸು ತಿರುಗಿ ಬರುತ್ಯೆ…ಹುಂ…ಕೂಸೇ ನೀರು ತಂದುಕೊಡು…ಮಾತಾಡ್ತಾ ನಿಂತುಬಿಟ್ಟೆಯಲ್ಲ” +ಎಂದ ಮುದುಕ ಮುಖ ಅಗಲ ಮಾಡಿಕೊಂಡು ಕೃಷ್ಣಯ್ಯನನ್ನೇ ನೋಡುತ್ತ ನಿಂತ ಸೊಸೆಯತ್ತ ತಿರುಗಿ. +ನಾಗವೇಣಿ ನೀರು ತಂದು ಕೊಟ್ಟಳು. ಗಣಪಯ್ಯ ಒಳಗಿನಿಂದ ಬಂದವ- +“ಕೃಷ್ಣಯ್ಯ ಸ್ನಾನ ಮಾಡಿ ಬಿಡು” +ಎಂದ. ಕೃಷ್ಣಯ್ಯ ಚೀಲದಿಂದ ಪಂಚೆ ತೆಗೆದುಕೊಂಡು ಒಳಗೆ ನಡೆದ. ಬಚ್ಚಲು ಮನೆಯತ್ತ ತಿರುಗಿ ಅವನನ್ನು ಅಡಿಗೆ ಮನೆ ಬಾಗಿಲಲ್ಲಿ ನಿಂತ ನಾಗವೇಣಿಯೇ ತಡೆದು ನಿಲ್ಲಿಸಿದಳು- +“ಕೃಷ್ಣಯ್ಯ ಅಮ್ಮನ ಸೊಂಟ ನೋವು ಹ್ಯಾಗಿದೆ?” +“ಈಗ ಕಡಿಮೆ ಅಂತಿದ್ಲು. ತಾಳಗುಪ್ಪೆ ಪಂಡಿತರು ಅದೇನೋ ಎಣ್ಣೆ ಕೊಟ್ಟಿದ್ರು. ಅದರಿಂದ ಕಡಿಮೆಯಾಗಿರೋ ಹಾಗಿದೆ.” +ಹಿಂದಿನ ಬಾರಿ ಹೋದಾಗ ತಾಯಿ ಸೊಂಟ ಹಿಡಿದು ಕೊಂಡಂತಾಗಿದೆ ಎಂದು ಹೇಳಿದ್ದುದು ನಾಗವೇಣಿ ಮರೆತಿರಲಿಲ್ಲ, +“ನಾಗರಾಜ ಊರಿಗೆ ಬಂದಿದ್ನಾ?” +ನಾಗರಾಜ ತಮ್ಮ. ಸಾಗರದಲ್ಲಿ ಹೈಸ್ಕೂಲು ಓದುತ್ತಿದ್ದಾನೆ. ಅವನು ಆಗಾಗ್ಗೆ ಊರಿಗೆ ಬಂದು ಹೋಗುತ್ತಿರುತ್ತಾನೆ. ಕೃಷ್ಣಯ್ಯ ಬಚ್ಚಲು ಒಳಗಿನಿಂದ ಕೂಗಿ ಹೇಳಿದ- +“ಇಲ್ಲ…ಮುಂದಿನ ವಾರ ಬರಬಹುದು…” +ಮೈಮೇಲೆ ನೀರು ಸುರಿದುಕೊಳ್ಳುತ್ತಿರುವ ಸದ್ದಾಗಲು ನಾಗವೇಣಿ ಹೊಗೆ ಏಳುತ್ತಿದ್ದ ಒಲೆಯತ್ತ ತಿರುಗಿದಳು. ಹಿಂದಿನಿಂದ ಗಣಪಯ್ಯ- +“ಆಯ್ತ ಅಡಿಗೆ?” +ಎನ್ನುತ್ತ ಒಳಬಂದ. +“ಆಸೆಯಾಗಿದೆ ಅನ್ನ ಮಾಡಬೇಕು. ತೋಟದಿಂದ ಬರುವಾಗ ನಾಲ್ಕು ಎಲೆ ತಂದ್ರೆ ಆಗ್ತಿರಲಿಲ್ವ ಊಟಕ್ಕೆ ಎಲೆ ಇಲ್ಲ ಈಗ.” +“ನೀ ಹೇಳಿದ್ಯ ಹಾಗಂತ….ಹಾಗಂತ ನನಗೇನು ಸ್ವಪ್ನ ಬೀಳಬೇಕು ಎಲೆ ಇಲ್ಲ ಅಂತ.” +“ಈಗ ಏನಾಯ್ತು ಹೋಗಿ ತರಬಹುದಲ್ಲ…” +“ಹೌದು…. ಹೋಗಿ ತರಬಹುದು….ಇವಳಪ್ಪನ ಮನೆ ಜವಾನ ಹೋಗಿ ತರೋದಕ್ಕೆ…” +ಒಲೆಯಲ್ಲಿ ಬೆಂಕಿ ಭಗ್ ಎಂದು ಹತ್ತಿಕೊಳ್ಳಲು ಹಿಂದೆ ಸರಿದು ಗಂಡನ ಮುಖ ನೋಡಿದಳು. ಆತ ತಮಾಷೆಗೆ ಹೇಳಿರಲಿಲ್ಲ. ಈ ಮಾತನ್ನು ಕೋಪದಿಂದಲೇ ಹೇಳಿದ್ದ. +“ಹುಂ…ಕೃಷ್ಣಯ್ಯ ತರ್ತಾನೆ ಬಿಡಿ.” +ಎಂದು ಎದ್ದಳು. ಹಸಿದು ಬಂದ ಗಣಪಯ್ಯ ಕ್ರೋಧದಿಂದಲೇ ಹೊರನಡೆದ. +ಬಿಸಿಲು ಮರೆಯಾಗಿ ಮೋಡ ಕವಿದರೂ ಮಳೆ ಬೀಳಲಿಲ್ಲ. ಗಾಳಿ ಬಲವಾಗಿತ್ತು. ದೂರದಲ್ಲೆಲ್ಲೋ ಗುಡುಗುತ್ತಿತ್ತು. ಮಳೆ ಇನ್ನೇನು ಆರಂಭವಾಗುತ್ತದೆನ್ನುವಂತೆ ಮೋಡಗಳು ಕೆಳಗೇನೇ ತೂಗಾಡುತ್ತಿದ್ದವು. ಊಟ ಮುಗಿಸಿ ಗಣಪಯ್ಯ ಕೃಷ್ಣಯ್ಯನನ್ನು ಕರೆದುಕೊಂಡು ಮನೆಯಿಂದ ಹೊರಬಿದ್ದ. ನೀರು ಹಳ್ಳಿಯ ಸುತ್ತ ತುಂಬಿಕೊಳ್ಳುತ್ತಿದೆ, ಎಂದು ಕೃಷ್ಣಯ್ಯ ಹೇಳಿದ ಮಾತನ್ನು ಆತ ಮರೆತಿರಲಿಲ್ಲ. ಅರಲಗೋಡಿಗೆ ಹೋಗುವ ಕಾಲು ದಾರಿಯವರೆಗೂ ನೀರು ಏರಲಾರದೆಂಬ ಭರವಸೆ ಇತ್ತು, ಈ ಕಾಲುದಾರಿಯೂ ಮುಳುಗಿ ಹೋದರೆ ಏನು ಗತಿ ಎಂದಾತ ಬೆದರಿದ. ಹೊಲದಲ್ಲಿ ಇನ್ನು ಮುಂದೆ ಕೆಲಸ ಆರಂಭವಾಗಬೇಕು. ತೋಟದ ಕೆಲಸವೂ ಅಷ್ಟೆ. ಹೊರಗಿನಿಂದ ಕೂಲಿಯಾಳುಗಳೇ ಬಾರದೇ ಹೋದರೆ ಮಾಡುವುದೇನನ್ನು? +ಗಣಪಯ್ಯ ಅರಗೋಡಿನ ಕಾಲುದಾರಿಯತ್ತ ಹೊರಳಿದ. ಗುಡ್ಡದ ಒಂದು ಪಾರ್ಶ್ವವನ್ನು ಹತ್ತಿ ಇಳಿದು ಆ ಬದಿಯತ್ತ ಹೋಗಿ ನಿಂತಾಗ ನೀರಿನ ದರ್ಶನವಾಯಿತು. ಗುಡ್ಡದ ಈ ಬದಿಗೆ ನೀರು ಎಂದೂ ಬಂದಿರಲಿಲ್ಲ. ಶರಾವತಿ ಇಲ್ಲಿ ಗುಡ್ಡಕ್ಕೆ ತಗುಲಿಕೊಂಡಂತೆ ಹರಿಯುತ್ತಿದ್ದಳಾದರೂ, ಈವರೆಗೂ ಮುಂದೆ ಹರಿದು ಹೋಗುತ್ತಿದ್ದ ಆಕೆ ತನ್ನ ದಾರಿ ಬಿಟ್ಟು ಅಕ್ಕಪಕ್ಕಗಳಿಗೆ ಹೊರಳಿರಲಿಲ್ಲ. ಈಗ ಮುಂದೆ ಹರಿಯದೆ ನಿಂತ ಶರಾವತಿ ಕ್ರಮೇಣ ಅಕ್ಕಪಕ್ಕದ ಕಾಡು-ಕಣಿವೆಗಳನ್ನೆಲ್ಲ ಆಕ್ರಮಿಸಿಕೊಳ್ಳಲಾರಂಭಿಸಿದ್ದಳು. ಗುಡ್ಡದ ಈ ಬದಿಯಲ್ಲಿ ಕಾಡು, ಪೊದೆ, ಬಿದಿರ ಮಳೆಗಳೆಲ್ಲ ನೀರಿನಲ್ಲಿ ನಿಂತಿದ್ದವು. ಕೆಂಪು ನೀರು ಶಾಂತವಾಗಿ, ಸ್ತಬ್ಧವಾಗಿ ನಿಂತಿತ್ತು. +ಗಣಪಯ್ಯ ಕೃಷ್ಣಯ್ಯನ ಮುಖ ನೋಡಿದ. ಈ ಮೂರು ದಿನಗಳಲ್ಲಿ ನೀರು ಇಷ್ಟು ಮುಂದುವರಿದಿದೆ. ಇನ್ನೂ ಮೂರು ದಿನಗಳುರುಳಿದರೆ ನೀರು ಮತ್ತೂ ಏರಿ ಸೀತಾಪರ್ವತ ದ್ವೀಪವಾಗುವುದರಲ್ಲಿ ಸಂದೇಹವಿಲ್ಲ. ಅನಂತರ ತಮ್ಮ ಪಾಡು? +“ಬಾವಯ್ಯ ನೀವು ಹೆದರೋದು ಬೇಡ…ಈ ಹೊಲ-ತೋಟದ ಕೆಲಸ ನನಗಿರಲಿ…ನೀವು ಯಾವುದಕ್ಕೂ ಗಾಬ್ರಿಯಾಗೋದು ಬೇಡ…” +ಎಂದ ಕೃಷ್ಣಯ್ಯ. +“ಸರಕಾರ ನಮ್ಮನ್ನ ಈ ಸ್ಥಿತಿಗೆ ತಂದು ಹಾಕುತ್ತೆ ಅಂತ ಯಾರಯ್ಯ ಊಹಿಸಿದ್ದರು….ಈ ಹಳ್ಳಿಲಿರೋ ಎಲ್ರಿಗೂಪರಿಹಾರ ಕೊಟ್ಟು ಸರಕಾರದವರು ಬೇರೆಕಡೆ ಕಳುಹಿಸಿದರು. ನಮ್ಮ ವಿಷಯದಲ್ಲಿ ಮಾತ್ರ ಸರಕಾರ ಏನೂ ಮಾಡಲಿಲ್ಲ…ಈಗ ನಮ್ಮ ಕಷ್ಟಾನ ಯಾರ ಹತ್ತಿರ ಹೋಗಿ ಹೇಳಿಕೊಳ್ಳೋದು?” +ಗಣಪಯ್ಯ ಗೊಣಗಿಕೊಂಡ. +“ಬನ್ನಿ ಬಾವಯ್ಯ…ಮಳೆ ಬರುತ್ತೆ ಈಗ” +ಎಂದು ಕೃಷ್ಣಯ್ಯ ಗಣಪಯ್ಯನನ್ನು ಕರೆದುಕೊಂಡು ಮನೆಯತ್ತ ಹೊರಟ. ಇಬ್ಬರು ಚಪ್ಪರದ ಒಳಗೆ ಕಾಲಿಡುತ್ತಿರುವ ಹಾಗೆ ಹಿಂದಿನಿಂದ ಮಳೆ ಬಂದೇ ಬಂತು. +ರಾತ್ರಿ ಹಿಡಿದ ಮಳೆ ಎಂಟು ದಿನಗಳವರೆಗೂ ಸುರಿಯಿತು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಅಧ್ಯಾಯ ೧೫ – ೧ – ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು […] +‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […] +ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_319.txt b/Kannada Sahitya/article_319.txt new file mode 100644 index 0000000000000000000000000000000000000000..6a2cddeb871d48e8159e1543df059edefb2e547f --- /dev/null +++ b/Kannada Sahitya/article_319.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ +ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ +ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – +ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. +– ೨ – +ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, +ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, +ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ – +ನಿತ್ಯೋತ್ಸವ, ತಾಯಿ, ನಿತ್ಯೋತ್ಸವ….. +– ೩ – +ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, +ಸದ್ವಿಹಾಸಶೀಲ ನುಡಿಯ ಲೋಕಾವೃತ ಸೀಮೆಯೆ, +ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ – +ನಿತ್ಯೋತ್ಸವ, ತಾಯಿ, ನಿತ್ಯೋತ್ಸವ….. +***** +ಕೀಲಿಕರಣ: ಶ್ರೀನಿವಾಸ +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […] +ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_32.txt b/Kannada Sahitya/article_32.txt new file mode 100644 index 0000000000000000000000000000000000000000..d194eb960ffbbc81a212d119b6cfa4df81f1cd0b --- /dev/null +++ b/Kannada Sahitya/article_32.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಿನೀ +ಮೋಹ +ವಿಲಾ +ಮೋಹ +ದಷ್ಟೆ +ದಿಗ್ಗೇಡಿ. +***** +ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. ***** +ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ ***** +ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_320.txt b/Kannada Sahitya/article_320.txt new file mode 100644 index 0000000000000000000000000000000000000000..37d3aae64010f204dd8c46c2d6f47a84d6f155ab --- /dev/null +++ b/Kannada Sahitya/article_320.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ನೊಮ್ ಚಾಮ್ಸ್‌ಕಿ +(ಕನ್ನಡಕ್ಕೆ ಪ್ರೀತಿ ನಾಗರಾಜ್) +ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ ನ್ಯಾಯ, ನೀತಿ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿ ಇರುವವರದ್ದು ಮಾತ್ರ ಎಂದೇನಲ್ಲ. +ಯುದ್ಧದ ಪರಿಣಾಮವಾಗಿ ಈಗ ನಮ್ಮ ಮುಂದಿರುವ ಕೆಲಸ ಮಾತ್ರ ಬಹಳ ದೊಡ್ಡದು. ಅತೀ ಶೀಘ್ರವಾಗಿ ಮಾಡಬೇಕಾಗಿರುವಂಥಾದ್ದು. ಆದರೆ, ಈ ಕೆಲಸ ಎಷ್ಟು ಬೃಹತ್ತಾದ್ದು ಅನ್ನುವ ಬಗ್ಗೆ ಯಾರಿಗೂ ಅಂದಾಜು ಇರುವಂತಿಲ್ಲ. ನಮ್ಮ ಅತೀ ಜಾಣ “ಇಂಟೆಲಿಜೆನ್ಸ್” ಏಜೆನ್ಸಿಗಳಾದ “ಸೀ ಐ ಎ” ಅಥವಾ “ಪೆಂಟಗನ್” ಗೂ ಕೂಡ. +ದೈಹಿಕ ಮತ್ತು ಮಾನಸಿಕ ದುರಂತ ಮನುಷ್ಯರ ಮೇಲಾಗುವ ಯುದ್ಧದ ದುರ್ಭರ ಮತ್ತು ಅತಿಘೋರ ಪರಿಣಾಮ. ಇರಾಕಿನಲ್ಲಿ ಕೆಲಸ ಶುರು ಹಚ್ಚಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳೇ ಹೇಳುವಂತೆ ಯುದ್ಧದಲ್ಲಿ ಅಥವಾ ಯುದ್ಧದ ಪರಿಣಾಮವಾಗಿ ಚೂರೂ ಗಾಯಗೊಳ್ಳದೇ ಇರುವವನೂ ಕೂಡ ಅವನಿಗೆ ತನ್ನನ್ನು ಮತ್ತು ತನ್ನ ಜನರನ್ನು ಈ ದುಷ್ಕೃತ್ಯದಲ್ಲಿ ಭಾಗಿಯನ್ನಾಗಿ ಮಾಡಿಕೊಂಡ ಸ್ವಾರ್ಥಿಗಳ ಮೇಲಿನ ದ್ವೇಷವೇನೂ ಕಡಿಮೆ ಇರಲಿಕ್ಕೆ ಸಾಧ್ಯವಿಲ್ಲ. +ಯುದ್ಧದ ಸೋಲು ಗೆಲುವಿನ ಬಗ್ಗೆ ಯಾವುದೇ ರೀತಿಯ ನಿರ್ಣಾಯಕ ಮಾತುಗಳನ್ನು ಹೇಳಲು ಇನ್ನೂ ಬಹಳ ಸಮಯ ಬೇಕಾದೀತೇನೋ. ಯುದ್ಧದ ಘೋರ ಪರಿಣಾಮ ಮತ್ತು ಅದರಿಂದ ಮತ್ತೆ ಹುಟ್ಟುವ ಹಿಂಸೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಯತ್ನಿಸಬೇಕು, ಇದು ನಮ್ಮ – ಸಾಮಾನ್ಯ ಜನಗಳ – ಕೈಲಿ ಸಾಧ್ಯವಾಗುವಂಥ ಕೆಲಸ. +ಕಣ್ಣಿಗೆ ಕಾಣುವಂತೆ ಅಮೇರಿಕ ಇರಾಕಿನ ಮೇಳೆ ರಣಕಹಳೆ ಊದಿದ್ದು ನಿನ್ನೆ-ಮೊನ್ನೆಯಾದರೂ, ಅಸಲು ಯುದ್ಧ ಶುರುವಾಗಿ ಒಂದು ದಶಕದ ಮೇಲಾಯಿತು. +ಅದಕ್ಕಾಗಿಯೇ, ಈಗಿನ ಗಾಯಾಳುಗಳ ಶುಶ್ರೂಷೆಯಿಂದ ಮೊದಲು ಮಾಡಿ ವಾಷಿಂಗ್ಟನ್ನಿನ ವಿನಾಶಕಾರೀ ವ್ಯಾಪಾರ ನಿಷೇಧಾಜ್ಝೆಗಳಿಗೆ ಹತ್ತು ವರ್ಷಗಳಿಂದ ಬಲಿಯಾದವರ ಹಿತವನ್ನೂ ನಾವು ಕಾಪಾಡಬೇಕಿದೆ. +ಈ ನಿಷೇಧಾಜ್ಝೆಗಳ ಪರಿಣಾಮವಾಗಿ ಇರಾಕಿನ ಸಾಮಾಜಿಕ ವ್ಯವಸ್ಥೆ ಕುಸಿದುಬಿತ್ತು, ಆಳುತ್ತಿದ್ದವನನ್ನು ರಾಕ್ಷಸ ರೂಪಕ್ಕೆ ತಂದಿಟ್ಟು, ಅಲ್ಲಿನ ಜನರಿಗೆಲ್ಲ ಅವನನ್ನು ಬಿಟ್ಟರೆ ಬೇರೆ ಗತಿಯಿಲ್ಲವೆಂಬ ಸಂದರ್ಭ ಸೃಷ್ಟಿಯಾಯಿತು. ಸದ್ದಾಂ ಹುಸೇನನ ಶ್ರೇಣಿಯಲ್ಲೇ ಬರುವ ಇತರೆ ಕೊಲೆಪಾತಕ ಆಡಳಿತಗಾರರಷ್ಟು ಇವನು ಅಮಾನವೀಯವಾಗಿ ನಡೆದುಕೊಳ್ಳಲಾರ ಎಂದು ಜನ ತಿಳಿದದ್ದು ಹುಸಿಯಾಯಿತು. +ರೋಮೇನಿಯ ಕಂಡ ಘೋರ ಆಡಳಿತಗಾರ ನಿಕೋಲ್ ಚೂಶೆಸ್ಕೂನನ್ನು ಕೆಲ ದೇಶಗಳು ಬೆಂಬಲಿಸಿ ಬೆಳೆಸಿದ ಮಾದರಿಯಲ್ಲೇ ವಾಷಿಂಗ್ಟನ್ನಿನ ಪಾತಕಿಗಳು ಸದ್ದಾಮನನ್ನೂ ಗದ್ದುಗೆಗೆ ತಂದರು. +ಅಮೇರಿಕ, ಸ್ವಲ್ಪವಾದರೂ ಮಾನವಂತ ದೇಶವಾಗಿ ಮಾಡಬಹುದಾದ ಕೆಲಸವೇನೆಂದರೆ, ಇರಾಕ್ ಕಳಕೊಂಡಿದ್ದರಲ್ಲಿ, ಕಳಕೊಳ್ಳುತ್ತಿರುವುದರಲ್ಲಿ ಸ್ವಲ್ಪವನ್ನಾದರೂ ಮತ್ತೆ ಕಟ್ಟಲು, ಮೇಲೇಳಲು ಸಾಧ್ಯವಾಗುವಷ್ಟು ನಾನಾ ರೀತಿಯ ಸಂಪನ್ಮೂಲಗಳನ್ನು ಒದಗಿಸುವುದು. ಧನ ಸಹಾಯ ಮೊದಲಾಗಬೇಕು. ಅದಕ್ಕೂ ಮಿಗಿಲಾಗಿ, ಇರಾಕಿನ ಜನ ತಮ್ಮ ಸಮಾಜವನ್ನು, ದೇಶವನ್ನು, ಬದುಕನ್ನು ತಮಗೆ ಹಿತವೆನ್ನಿಸಿದ ರೀತಿಯಲ್ಲಿ ಕಟ್ಟಲು ಸಾಧ್ಯವಾಗಬೇಕು. ವಾಷಿಂಗ್ಟನ್ನು, ಕ್ರಾಫ಼ರ್ಡುಗಳಲ್ಲಿ ಕೂತು “ಅಧಿಕಾರ ಹುಟ್ಟುವುದು ಬಂದೂಕಿನ ನಳಿಕೆಯಿಂದ” ಎಂದು ನಂಬಿದವರು ಬಯಸುವಂತೆ ಅಲ್ಲ. +ಆದರೆ, ಇಲ್ಲಿ ಮೂಲಭೂತವಾಗಿರುವ ಸಮಸ್ಯೆಗಳ ಉತ್ತರ ಅಷ್ಟು ಸರಳವಾಗಿಲ್ಲ. ಇರಾಕ್ ಮೇಲಿನ ದಾಳಿಗೆ ಎದುರಾದ ಪ್ರತಿರೋಧ ಯಾವ ಚರಿತ್ರೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹುಟ್ಟಿದ್ದಲ್ಲ. ಅದಕ್ಕಾಗಿಯೇ ಅಮೇರಿಕ ಅಧ್ಯಕ್ಷ ಬುಷ್ ತನ್ನಿಬ್ಬರು ದೋಸ್ತುಗಳನ್ನು ದೂರದ ಮಿಲಿಟರಿ ದ್ವೀಪದಲ್ಲಿ ಗುಪ್ತವಾಗಿ ಭೇಟಿ ಮಾಡಬೇಕಾಗಿ ಬಂದದ್ದು. ಸಾಮಾನ್ಯ ಜನರ ಕ್ಷುಲ್ಲಕ “ಯುದ್ಧ ಬೇಡ, ಯುದ್ಧ ಬೇದ..” ಎಂಬ ಕರೆಕರೆ ಕೇಳಿಸದೇ ಇರಲಿ ಅಂತ. +ಅಮೆರಿಕೆಯ ವಿರುದ್ಧ ಭುಗಿಲೆದ್ದಿರುವ ಪ್ರತಿರೋಧವನ್ನು ಸ್ಥೂಲವಾಗಿ ಇರಾಕ್ ಮೇಲಿನ ದಾಳಿಯನ್ನು ಖಂಡಿಸುತ್ತಿರುವ ದನಿ ಎಂದು ಹೇಳಬಹುದಾದರೂ, ಅದರ ಹಿಂದಿರುವ ಕಾಳಜಿ ಅದಕ್ಕಿಂತ ಹೆಚ್ಚಿನದ್ದು ಎಂಬುದನ್ನು ಮನಗಾಣಬೇಕು. ದಿನೇದಿನೇ ಹೆಚ್ಚುತ್ತಿರುವ ಅಮೇರಿಕೆಯ ನಿರಂಕುಶ ಅಧಿಕಾರಶಾಹಿ ಮನೋಭಾವ ವಿಶ್ವ ಶಾಂತಿಗೆ ಒಡ್ಡಿದ ಭಾರೀ ಬೆದರಿಕೆಯಾಗಿ ರೂಪುಗೊಂಡಿದೆ. ವಿನಾಶಕ್ಕಾಗಿ ಅತ್ಯುನ್ನತ ತಂತ್ರಜ್ಝಾನವನ್ನು ಕೈಯಳತೆಯಲ್ಲೇ ಇಟ್ಟುಕೊಂಡಿರುವ ಅಮೇರಿಕ ದಿನಬೆಳಗಾದರೆ ಒಂದಲ್ಲ ಒಂದು ರೀತಿಯಲ್ಲಿ ವಿಶ್ವ ಶಾಂತಿ ಹಾಳುಗೆಡವಿ ಬದುಕಿಗೇ ಸಂಚಕಾರ ತಂದಿಡಲು ಸದಾ ಸಿದ್ಧವಾಗಿದೆ. +ಯಾವುದೇ ದೇಶದ ಮೇಲೆ ದಾಳಿ ಅಥವಾ ಆಕ್ರಮಣ ಮಾಡಬಲ್ಲಂಥ ಶಕ್ತಿ ಅಮೇರಿಕಕ್ಕಿದೆ ಎನ್ನುವುದೊಂದೇ ಈ ವ್ಯಾಪಕವಾಗಿ ಅಮೇರಿಕೆಯ ಭಯ ಹುಟ್ಟಿರುವುದಕ್ಕೆ ಕಾರಣವಲ್ಲ. ಖುಲ್ಲಂಖುಲ್ಲಾ ಆಗಿ, ಬರೀ ಬಲಪ್ರಯೋಗದಿಂದ ಜಗತ್ತನ್ನೇ ಮಣಿಸಹೊರಟು, ಅದನ್ನು ವಿರೋಧಿಸುವ ಶಕ್ತಿಗಳನ್ನೇ ಇಲ್ಲದಂತಾಗಿಸ ಹೊರಟಿರುವ ಅದರ ಜನಗಳ ಅಧಿಕಾರ ದಾಹ. +ಮುಂದೆ ನಿಂತಿರುವ ಪ್ರತ್ಯಕ್ಷ ವಿನಾಶವನ್ನು ತಡೆಗಟ್ಟಲು ಹೊಡೆದಾಡಬೇಕಾದ್ದು ಸರಿಯೆನ್ನಬಹುದೇನೊ, ಆದರೆ, ಪ್ರತ್ಯಕ್ಷವಾಗಿ ಕಾಣದೇ ಇರುವುದನ್ನು ಊಹಿಸಿಕೊಂಡು ಯುದ್ಧಕ್ಕೆ ಹೊರಟರೆ ಅದನ್ನು ಸಮರ್ಥಿಸಿಕೊಳ್ಳುವುದದ್ರೂ ಹೇಗೆ? +ಕಂಡ ಸಾಕ್ಶಿಯ ಬೆನ್ನು ಹತ್ತಿಯೋ ಇಲ್ಲ ಕಲ್ಪಿಸಿಕೊಂಡು ಬಂದೂಕು ತಿರುಗಿಸಿರುವ ಹಿನ್ನೆಲೆಯಲ್ಲಿ, ಅದಕ್ಕೆ ಅಮೇರಿಕ ಕೊಡುವ ಕಾರಣಗಳೇನಾದರೂ ಇರಲಿ, ಅಸಲೀ ಯುದ್ಧದಲ್ಲಿ ಆಗುವುದಕ್ಕಿಂತ ಕಡಿಮೆ ಜೀವ ನಷ್ಟ ಆಗುತ್ತದೇನು? +“ಈ ಯುದ್ಧದ ಗುರಿ ನಮ್ಮ ದೇಶ, ಅಧಿಕಾರ ಮತ್ತು ಸ್ಥಾನಗಳಿಗೆ ಚ್ಯುತಿ ಬಾರದಂತೆ ಮಾಡುವುದು” ಎಂಬುದು ಯುದ್ಧ ಶುರುವಾಗುವ ಮುನ್ನ ಅಮೇರಿಕ ಮಾಡಿದ ಉದ್ಘೋಷಣೆ. ಹಾಗೇನಾದರೂ ಚ್ಯುತಿ ಬಂದಲ್ಲಿ, ಬರುವಂಥಾ ಸೂಚನೆ ಸಿಕ್ಕಿದಲ್ಲಿ, ಸಿಕ್ಕಿದ ಯಾವುದೇ ಸೂಚನೆಯನ್ನು ತನಗೆ ತೋಚಿದಂತೆ ತಿರುಚಿ, ಇನ್ನೊಂದು ಯುದ್ಧ ಮಾಡಲು ಜಗತ್ತಿನ ಹಿಂಸೆಯ ಲೋಕದಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿರುವ ಈ ಬಲಿಷ್ಠ ರಾಷ್ಟ್ರದ ನಾಯಕರು ಬಳಸಿಕೊಳ್ಳುತ್ತಾರೆ. +ನಾನು ಹೇಳುತ್ತಿರುವುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಈ ಮಾತುಗಳು ಡಿಕ್ ಚೆನೆ ಅಥವಾ ಡೋನಾಲ್ಡ್ ರಮ್ಸ್‌ಫ಼ೀಲ್ಡ್ ಅಥ್ವಾ ಈಗ ಅಧಿಕಾರ ವಹಿಸಿಕೊಂಡಿರುವ ಇನ್ಯಾವುದೇ ರ್‍ಯಾಡಿಕಲ್ ಸ್ಟಾಟಿಸ್ಟ್ ಎಕ್ಸ್‌ಟ್ರಿಮಿಸ್ಟುಗಳದ್ದಲ್ಲ ಅನ್ನುವುದು ನಿಮಗೆ ಅರ್ಥವಾದೀತು. +ಹೀಗೆ ಹೇಳಿದ್ದು, ನಮ್ಮಲ್ಲಿ ಬಹಳ ಗೌರವಿಸಲ್ಪಡುವಂಥಾ ಹಿರಿಯರಾದ ಡೀನ್ ಆಚೆಸನ್ (ಅಕಿಸನ್?). ನಲವತ್ತು ವರ್ಷಗಳ ಹಿಂದೆ, ಅವರು ಕೆನಡಿ ಆಡಳಿತದಲ್ಲಿ ಹಿರಿಯ ಸಹಲಗಾರಗಿ ಸೇವೆ ಸಲ್ಲಿಸುತ್ತಿದ್ದಾಗ ಅಮೇರಿಕ ಕ್ಯೂಬಾದ ಮೇಲೆ ಮಾಡಿದ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. ಆ ಅಂತರಾಷ್ಟ್ರೀಯ ಭಯೋತ್ಪಾದಕರ ದಂಡಿನ ದಾಳಿ ಬರೀ ಅಮೇರಿಕ-ಕ್ಯೂಬಾಕ್ಕೆ ಸೀ‌ಎಮಿತವಾಗಿರದೇ, ಅಮೇರಿಕ ಹೇಳಿಕೊಮ್ಡಮ್ಟೆ ಆಳುವ ಕೂಟದ ಬದಲಾವಣೆಯ ಉದ್ದೇಶವನ್ನೂ ಮೀರಿ ಹೋಗಿ, ಇಡೀ ಜಗತ್ತೇ ನ್ಯೂಕ್ಲಿಯರ್ ಯುದ್ಧವನ್ನು ಎದುರು ನೋಡುತ್ತಾ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು ಎಂದು ಸ್ಪಷ್ಟವಾಗಿ ತಿಳಿದಿದ್ದಾಗಲೂ ಕೂಡ! +ಇಷ್ಟಾದ ಮೇಲೆ ಹಿರಿಯ ಅಚಿಸನ್ “ಅಮೇರಿಕನ್ ಸೊಸೈಟಿ ಆಫ಼್ ಇಂಟರ್‌ನ್ಯಾಷನಲ್ ಲಾ” ಕ್ಕೆ ನಿರ್ದೇಶಿಸಿದಂತೆ, ಅಮೇರಿಕದ +“ನೆಲ, ಅಧಿಕಾರ ಮತ್ತು ಸ್ಥಾನಗಳಿಗೆ ಚ್ಯುತಿ ಬಾರದಂತೆ ಮಾಡಲು ತೆಗೆದುಕೊಂಡ ಕ್ರಮ ಯಾವುದೇ ರೀತಿಯಲ್ಲಿ ಕಾನೂನಿಗೆ ಒಳಪಡಲಾರದು,” ಈ ಸಮರ್ಥನೆಯಲ್ಲಿ ಕ್ಯೂಬಾದ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಕ್ರಮ ಕೂಡ ಸೇರಿತ್ತು. +ಇದನ್ನೆಲ್ಲ ನಿಮ್ಮ ಸ್ಮರಣೆಗೆ ತಂದದ್ದು ಯುದ್ಧದಿಂದ ಉದ್ಭವಿಸುವ ಸಮಸ್ಯೆಗಳ ಮತ್ತು ಮಾತುಗಳ ಬೇರು ಬಹಳ ಆಳಕ್ಕಿಳಿದಿರುತ್ತದೆ ಎಂದು ಹೇಳಲು. ಪ್ರಸ್ತುತ ಆಡಳಿತವು ಅತಿರೇಕದ ತುತ್ತತುದಿಯಲ್ಲಿ ಕೂತು ವಿಸ್ತೃತ ನೀತಿನಿರೂಪಣೆಯಲ್ಲಿ ತೊಡಗಿರುವುದರಿಂದ. ಈ ಪಡೆಯ ರಕ್ತದಾಹ ತಣಿಸಲಾರದಷ್ಟಿದೆ. ಈಗಿನ ಪಡೆಯ ವಿಸ್ತಾರ ಅಷ್ಟೇನೂ ದೊಡ್ಡದಿಲ್ಲ, ಆದರೆ ಆಳವಾಗಿ ಬೇರೂರಿರುವ ಈ ಸಮಸ್ಯೆಗಳನ್ನು, ಗಮನಿಸಿ, ಬಗೆಹರಿಸದ ಹೊರತು ಈಗಿರುವುದಕ್ಕಿಂತಾ ಹಿಂಸಾಪ್ರಿಯ ಪಡೆಯೊಂದು ಉದ್ಭವಗೊಳ್ಳುವುದು ನಿಶ್ಚಿತ. +ಈಗ ಕಾಣುವಂತೆ, ಈಗಿನ ಆಡಳಿತದ “ಮಹಾನ್ ಉದ್ದೇಶ” ತನ್ನ ದೇಶದಲ್ಲಿನ ಬಹುಪಾಲು ಜನರನ್ನೂ ಸೇರಿಸಿದಂತೆ ವಿಶ್ವದಾದ್ಯಂತ ವಿರೋಧ, ಹೆದರಿಕೆಯನ್ನು ಕೆರಳಿಸಿದೆ. ಹೆಚ್ಚಾಗಿ ಈ ಭಾವನೆಗಳು ಹೆಪ್ಪುಗಟ್ಟಿಗೊಂಡಷ್ಟು ತೀವ್ರವಾಗಿ ವ್ಯಕ್ತವಾಗಿರುವುದು ಹಿಂದೆ ಅಮೇರಿಕೆಯ ಕೃತ್ಯಗಳಿಗೆ ಬಲಿಬಿದ್ದು ಈಗ ಸಾವರಿಸಿಕೊಳ್ಳುತ್ತಿರುವ ದೇಶಗಳಲ್ಲಿ. +ಆ ದೇಶಗಳ ಚರಿತ್ರೆಯಲ್ಲಿ ಆಳವಾಗಿ ನಿಂತ ಆಕ್ರಮಣಗಳು ಅದರ ಹಿಂದಿದ್ದ ಸತ್ಯಗಳು ಸುಲಭಾವ್ಗಿ ಗೋಚರವಾದ್ದವಲ್ಲ. ಅದಕ್ಕೆ ದುಬಾರಿ ಬೆಲೆ ತೆತ್ತಿವೆ. ಅದಕ್ಕೇ ಅವು ಉನ್ನತ ಮಟ್ಟದ ಬುದ್ಧಿವಂತ ಮಾತುಗಳಿಂದ ಮರುಳಾಗುವುದಿಲ್ಲ. ಆ ರಾಷ್ಟ್ರಗಳು “ನಾಗರೀಕತೆ” ಎಂಬ ಕ್ಲಬ್ಬಿನ ಸೋಗಿನ ಸದಸ್ಯರ ತಂತ್ರಕ್ಕೆ ಬಲಿಯಾಗಿ ವಿಛ್ಹಿದ್ರಗೊಂಡು ಸಾವರಿಸಿಕೊಳ್ಳಲು ಹೆಣಗುತ್ತಿರುವವು. +ಕೆಲದಿನಗಳ ಹಿಂದೆ, ವಿಶ್ವದ ಬಹುಪಾಲು ರಾಷ್ಟ್ರಗಳ ಪ್ರತಿನಿಧಿಗಳು ಸೇರಿವಿರುವ ಆಲಿಪ್ತ ಚಳುವಳಿಯ ಮುಖ್ಯಸ್ಥ ಬುಷ್ ಸರಕಾರವನ್ನು ಹಿಟ್ಲರ್ ಆಡಳಿತಕ್ಕಿಂತಾ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ವ್ಯಾಖ್ಯಾನಿಸಿದ. +ಆತ ವಾಸ್ತವಾಗಿ ಅಮೇರಿಕದ ಪರ ವಹಿಸಿ, ವಾಷಿಂಗ್ಟನ್ನಿನ ಅಂತರಾಷ್ಟ್ರೀಯ ಪ್ರಾಜೆಕ್ಟುಗಳಲ್ಲಿ ಮುಖ್ಯ ಪಾತ್ರವಹಿಸಿರುವವನು. ಅಂಥವನಿಂದ ಈ ಮಾತುಗಳು ಬರುತ್ತವೆಂದರೆ, ಅವನು ಮಾತಾಡಿದ್ದು ಸಾಮ್ಪ್ರದಾಯಿಕ ಬಲಿಪಶುಗಳ ಪರ ಮತ್ತು ಆ ಕೆಲಸವನ್ನು ಮಾಡುವುದನ್ನೇ ರೂಢಿಸಿಕೊಂಡಿರುವ ಆಕ್ರಮಣಕಾರರ ವಿರುದ್ಧವಾಗಿ ಈನುವುದರ ಬಗ್ಗೆ ಹೆಚ್ಚಿನ ಸಂಶಯವಿಲ್ಲ. +ಹೀಗೇ ಮಾತಾಡುತ್ತಾ ಹೋಗುವುದು ಬಹಳ ಸಲೀಸು. ಆದರೆ, ಈ ಅಂಶಗಳನ್ನು ಗಮನಿಸಿ, ಅತೀವ ಕಾಳಜಿಯಿಮ್ದ ತೂಗಿ ನೋಡುವುದೂ ಮುಖ್ಯ. +ಬುಷ್ ಆಡಳಿತ ಜಗತ್ತನ್ನು ಹೆದರಿಸುವ ಮುನ್ನ ಇಂಟೆಲಿಜೆನ್ಸ್ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ತಜ್ಝರು ವಾಷಿಂಗ್ಟನ್ನಿನ ನೀತಿಗಳು ಸೇಡಿಗಾಗಿ ಇಲ್ಲವೇ ವಿರೋಧ ಕಂಡಲ್ಲಿ, ಭಯೋತ್ಪಾದನೆ ಹುಟ್ಟುಹಾಕಲು ಸಮೂಹನಾಶಕ ಆಯುಧಗಳ ಉತ್ಪಾದನೆಯನ್ನು ದಿಢೀರನೆ ಏರಿಸುವಲ್ಲಿ ತೊಡಗಿವೆ ಎಂದು ಹೇಳುತ್ತಿದ್ದರು. +ತನ್ನ ವಿರುದ್ಧದ ಸಮಸ್ಯೆಗಳನ್ನು ನಿವಾರಿಸಲು ಅಮೇರಿಕಕ್ಕೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು, ತನ್ನ ಮೇಲಿನ ದೂರುಗಳನ್ನು ತಾಳ್ಮೆಯಿಂದ ಆಲಿಸಿ ಮಾನವಂತ ರಾಷ್ಟ್ರವಾಗಿ ಕಾಣಿಸಿಕೊಳ್ಳಲು ಆಗಬೇಕಾದ ಸರ್ವ ರೀತಿಯ ಬದಲಾವಣೆಗಳನ್ನು ತನ್ನೊಳಗೆ ತಂದುಕೊಳ್ಳುವುದು. ಇದು ತಪ್ಪಿದಲ್ಲಿ, ಬೇರೆ ದೇಶಗಳಿಗಿಂತ ಪ್ರಬಲವಾದ, ವಿನಾಶಕಾರೀ ಮೆಷೀನುಗಳನ್ನು ತಯಾರಿಸಿ, ಸಿಕ್ಕಸಿಕ್ಕ ಕಡೆ, ಬೇರೆ ದೇಶಗಳಿಂದ ಸಿಕ್ಕ ಯಾವುದೇ ಸೂಚನೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಾ, ಭಸ್ಮಾಸುರನಾಗಿ ಮೆರೆಯುವುದು. +ಎರಡನೇ ದಾರಿಯನ್ನು ಸಧ್ಯಕ್ಕೆ ಅಮೇರಿಕ ಆಯ್ದುಕೊಂಡಿದೆ ಎನ್ನುವುದರಲ್ಲಿ ಸಮ್ಶಯವೇ ಇಲ್ಲ. ಹೀಗೇ ಮುಂದುವರೆದಲ್ಲಿ ಮನುಕುಲವೇ ನಾಶವಾಗಬಹುದು ಎಂದರೆ ಅತಿಶಯೋಕ್ತಿಯೇನಲ್ಲ. +ನಮ್ಮ ಮನಸ್ಸಿನಲ್ಲಿ ಈ ವಿಷಯಗಳು ಹಸಿಯಾಗಿರುವಾಗಲೇ ಇನ್ನೊಂದು ಮಾತು ಹೇಳಬೇಕು. ಬರ್ಬರ ಅಣು ಯುದ್ಧ ಅಕಿಸನ್‌ರ ಭಾಷಣಕ್ಕೆ ಮುನ್ನ ಪವಾಡವೊಂದರಿಂದಲೇ ತಪ್ಪಿತೆನ್ನಬಹುದು. +ಈಗ ಹಾಗಿಲ್ಲ. ರಕ್ತಪಾತದ ಸೂಚನೆಗಳು ದಿನೇ-ದಿನೇ ದಟ್ಟವಾಗುತ್ತಿವೆ. ವಾಷಿಂಗ್ಟನ್ನಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಭಯ, ಆತಂಕಗಳ ಸೆರೆಯಲ್ಲಿ ಜಗತ್ತು ಕಾದು ನೋಡಬೇಕಿದೆ. +ನಮ್ಮ ಆತಂಕಗಳಿಗೆ, ಭಯಕ್ಕೆ ಸಾಂತ್ವನದ ಉತ್ತರ ನೀಡಬಲ್ಲವರು, ಶಾಂತಿ ತುಂಬಿದ ಹೊಸ ಜಗತ್ತಿಗೆ ನಾಂದಿ ಹಾಡಬಲ್ಲವರೆಂದರೆ ಅಮೇರಿಕದ ಪ್ರಜೆಗಳು ಮಾತ್ರ. +ಇಷ್ಟೆಲ್ಲ ವಿಷಯಗಳನ್ನು ಗಮನದಲ್ಲಿಟ್ಟು, ದುರ್ಬಲ ಗುಬ್ಬಿಯ ಮೇಲೆ ಅತ್ಯುನ್ನತ ಬ್ರಹ್ಮಾಸ್ತ್ರ ಪ್ರಯೋಗಿಸುವುದನ್ನು ಇಪ್ಪತ್ತು ವರ್ಷಗಳಿಂದ ರೂಢಿಮಾಡಿಕೊಂಡ ಅಮೇರಿಕ ಪರಿಯನ್ನು ನಾವು ನೋಡಬೇಕಿದೆ. +***** +‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ […] +ಸುಳ್ಯದ ಸ್ವಂತಿಕಾ ಪ್ರಕಾಶನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರು ಸಂಯುಕ್ತವಾಗಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಮಾರೋಪ ಭಾಷಣದ ಮೂಲಕ ನನ್ನ ಕೆಲವು ಆಲೋಚನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು […] +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_321.txt b/Kannada Sahitya/article_321.txt new file mode 100644 index 0000000000000000000000000000000000000000..a1da9576ecc92c7fce53392300bb4ef691122ef8 --- /dev/null +++ b/Kannada Sahitya/article_321.txt @@ -0,0 +1,100 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಮದುವೆಗೆ ಮುಂಚೆ +ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ +ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು +ಅವಳು ಹಾಗೆ ಅವಳು ಹೀಗೆ +ಆಕೆಗಿಂತ ವಾಸಿ ಕಾಗೆ +ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ +ಒಬ್ಬಾಕೆ ಲಂಕಿಣಿ +ಇನ್ನೊಬ್ಬಾಕೆ ಜಿರಾಫಿಣಿ +ಒಬ್ಬಳು ನಿಂತರೆ ಬೆದರು ಬೊಂಬೆಯ ತರಹ +ಇನ್ನೊಬ್ಬಳ ಹಲ್ಲು ಮಕ್ಕಳ ಬರಹ +ಎಂದೆಲ್ಲರಿಗೂ ಹಚ್ಚಿ ಬಿರುದು +ಬಹಳ ದಿನ ಅವಿವಾಹಿತನಾಗಿಯೇ ಉಳಿದೆ; +ಅಮ್ಮನನ್ನು ಮನಸಾರೆ ಹಳಿದೆ. +ಅಮ್ಮ ಕಟ್ಟಾ ಸಂಪ್ರದಾಯಸ್ಥೆ +ಖುರಾನು ನಮಾಜು ರಂಜಾನಿನ ಉಪವಾಸ +ಧಾರ್ಮಿಕಾಚಾರಗಳಲ್ಲಿ ಹೇಳತೀರದ ಆಸೆ. +ಬುರ್ಖಾ ತೊಡದೆ ಬೀದಿಯಲಿ ಹಾದು ಹೋಗುವ ನಮ್ಮವರ +ಹೆಣ್ಣುಗಳ ಕಂಡು ಕಿಡಿಕಿಡಿಯಾಗಿ- +ಹೆಚ್ಚು ಕಲಿತ ಬಜಾರಿಗಳ ಹಣೆಬರಹವೇ ಇಷ್ಟು +ದೇವರು ಧರ್ಮಗಳ ಭಯವಿರದೆ ಎಳ್ಳಷ್ಟೂ +ಗಂಡಸರೆದುರು ಮೈ ಪ್ರದರ್ಶಿಸುವ ಗಂಡು +ಬೀರಿಗಳು ಗಂದಂದಿರ ಜೊತೆ ಬಾಳಿಯಾರೇ? +ಇಂಥವರನ್ನ ನನ್ನ ಮಗನಿಗೆಂದೂ ತಾರೆ +ನೆಂದು ಪ್ರತಿಜ್ಞಿ- +ಸದಾ ಬುರ್ಖಾ ತೊಡುವ ಕರಡಿಯನ್ನ +ಆಧುನಿಕ ವಿದ್ಯಮಾನಗಳ ಕಂಡರಿಯದ ಕುರುಡಿಯನ್ನ +ಹಳ್ಳಿ ಮೊದ್ದನ್ನ ಮೆಚ್ಚಿ +ನನ್ನ ಕೇಳಿದಾಗ , ನಾನೋ ಬೆಚ್ಚಿ +ಖುದ್ದಾಗಿ ನೋಡಿ ಒಪ್ಪಿದ ವಿದ್ಯಾವಂತೆಯ +ಕೈ ಹಿಡಿವೆನೆಂದಾಗ +“ಓದಿದವರು ಹಾಳಾಗ +ನಾನೇನು ಓದಿದ್ದೆನೊ ಪೆದ್ದ? +ಮದುವೆಗೆ ಮುಂಚೆ ಹುಡುಗ +ಹೆಣ್ಣ ನೋಡುವುದು ಧರ್ಮ ನಿಷಿದ್ಧ +ನಾವೆಲ್ಲ ಕಣ್ಣು ಮುಚ್ಚಿ ಹೆಣ್ಣ ಮೆಚ್ಚಿ ಗಂಟು ಹಾಕುವೆವೆ?” +ಎಂದು ಬಾಯಿ ಮುಚ್ಚಿಸಿದಳು. +ಅಪ್ಪ ಉದಾರಿ +“ಮಗ ತಾನೇ ಆರಿಸಿಕೊಳ್ಳಲಿ ಭವಿಷ್ಯದ ದಾರಿ +ಹೆತ್ತವರು ನಾವೇಕೆ ಆಗುವುದು ತಡೆ +ಆ ಯೋಚನೆಯ ಬಿಟ್ಟುಬಿಡೆ” +ಎಂದು ಎಚ್ಚರಿಸಿದಾಗ +ಅಮ್ಮ ಅನ್ನ ನೀರು ಬಿಟ್ಟು ಗಳ ಗಳ ಅತ್ತು +ಉರಲು ಬೆಂಕಿ ಬಾವಿಗಳ ಉಚ್ಚರಿಸಿದಾಗ +ತೆಪ್ಪಗಾದೆ. +ಅಪ್ಪ ಲೋಕ ಕಂಡವರು-ಹಾಗೇ ಅಮ್ಮನ +ಕೋಪ ಹಟ ಕಂಡವರು +ವಿಪರೀತಕ್ಕೆ ಬಂತು ತಗಾದೆ +ಎನಿಸಿ ಮುಂದೆನೂ ತೋಚದೆ “ನಿನ್ನಿಷ್ಟ”ವೆಂದರು, +ರಾತ್ರಿಯೆಲ್ಲ ಕೋಣೆಯ ದೀಪವುರಿಸಿ ಸಿಗರೇಟು ಹಚ್ಚಿ +ಶತಪಥಿಸಿ ಒಳಗೊಳಗೇ ನೊಂದರು. +ಒಂದು ದಿನ ಅಮ್ಮನಿಗೆ ಜ್ಞಾನೋದಯ +ವಾಯಿತೆಂದೆನ್ನಿಸಿ, ಊಟಕ್ಕೆ ಕುಳಿತಿದ್ದಾಗ +“ನಿನ್ನಿಷ್ಟದಂತೆ ಓದಿದವಳನೇ ಮದುವೆಯಾಗಪ್ಪ” +ಎಂದಾಗ ಅಪನಂಬಿಕೆಯೊಂದಿಗೆ ಅಚ್ಚರಿ +ಯೊಂದಿಗೆ ಖುಷಿಯೊಂದಿಗೆ ಭಯ +ಬೆಳೆದು ಕೈತೊಳೆದು ಎದ್ದೆ ಬೇಗ. +ಆ ಡಬಲ್ ಪದವೀಧರೆಯ ಭಾವಚಿತ್ರವನ್ನ +ಇಡೀ ದಿನ ನೆಟ್ಟು ಕಣ್ಣ +ತೂಗಿ ಅಳೆದು +ವಿಳಾಸ ತಿಳಿದು ಹತ್ತಿರದಲ್ಲೇ ಕಂಡು ಮೆಚ್ಚಿ +ನಿಶ್ಚಿತಾರ್ಥ ಶಾಸ್ತ್ರ ಮದುವೆ ಎಲ್ಲ ಮುಗಿಯಿತು; +ಮನಸ್ಸು ಅಮ್ಮನಿಗೆ ಮೌನದಲ್ಲೇ ಕೈ ಮುಗಿಯಿತು. +ಮೊದಲ ಸಲ ತಿರುಗಾಡಲು ಹೊರಟಾಗ +ನನ್ನಾಕೆ ತೋಳಿಲ್ಲದ ರವಿಕೆಯುಟ್ಟು +ಭಾರೀ ಸೀರೆಯನ್ನ ಸೊಂಟದ ಕೆಳಗೆ ನಾಜೂಕಾಗಿ ಕಟ್ಟಿ +ಕಾಲಿಗೆ ಹೈಹೀಲ್ಡು ಕೆರ +ಕೊರಳಿಗೆ ಚಿನ್ನದ ಸರ +ಕಿವಿಗೆ ಬೆರಳಿಗೆ ಉಂಗುರ ತೊಟ್ಟು +ಲಿಪ್‌ಸ್ಟಿಕ್ಕು ಪೌಡರು ರೂಜು ಬಳಿದು ದೃಷ್ಟಿ ಬೊಟ್ಟಿಟ್ಟು +ಹೆರಳ ಗೋಪುರದಲ್ಲಿ ಕೂದಲು ಬಿಗಿದು +ಎಡ ಬೈತೆಲೆ ತೆಗೆದು +ಇವೆಲ್ಲವನ್ನೂ ಮೀರಿಸುವ ಮುಗುಳ್ನಗೆ ತೀಡಿ +ಹೊಸಿಲ ಇನ್ನೇನು ದಾಟಬೇಕು-ಆಗ +“ಬಂದೆ ತಡೆಯಿರಿ”-ಎಂದು ಒಳಗೋಡಿ +ಬಂದು”ನಡೆಯಿರಿ”ಎಂದಾಗ +ತಲೆ ಸುತ್ತಿ ನಾಲಿಗೆ ಬತ್ತಿ ನಾನಾದೆ ಮೂಕ; +ನೋಡಿದರೆ +ಉಟ್ಟಿದ್ದಳು ನಮ್ಮಮ್ಮನ ಬುರ್ಖಾ. +***** +(ಸಂಜೆ ಐದರ ಮಳೆ-೧೯೭೦) +– ೧ – ಸದಾ ಇವರು ಹೀಗೆಯೇ- ಇಲ್ಲೆ, ಗಾಂಧಿಬಜಾರಿನ ಹಿರಿ ಚೌಕದೆದುರಲ್ಲೇ, ಸಿಗರೇಟು ಸೇದುತ್ತಲೊ ಪತ್ರಿಕೆಯನೋದುತ್ತಲೊ ಹರಟುತ್ತಲೊ ಇದ್ದಾಗ ಎದುರಾಗುವರು ಇದ್ದಕಿದ್ದಂತೆ ನಿರ್ದಿಷ್ಟ ಸಮಯದಂತೆ. ವಯಸು ಅನುಭವ ಹೂಡಿ ಸುಖದುಃಖ ಬೆಳೆದ ಮುಖ, […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_322.txt b/Kannada Sahitya/article_322.txt new file mode 100644 index 0000000000000000000000000000000000000000..7582d48423ecd8eaf2bf20bee127e1419adf9181 --- /dev/null +++ b/Kannada Sahitya/article_322.txt @@ -0,0 +1,794 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವು +ಹಗುರವಾಗಿ ನಿಧಾನವಾಗಿ +ಲೋಕಾಂತರಕೆ ಸಂಯಮಿಸಿದಂತಾಗಿ +ಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿ +ತೇಲುತ್ತಿರುವಂತೆ,- +ಹಾಡಿನಿಂದಿಡೀ ಬಯಲು ಭರಿತವಾಗಿ +ಭರಿತವಾದದ್ದು ಬಿರಿತು +ತೂಬು ತೆಗೆದ ಕೆರೆಯಂತೆ +ಹಾಡಿನ ಮಹಾಪೂರ ನುಗ್ಗಿತು ನೋಡು +ಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇ +ತೇಲುವವರು ನಾವಲ್ಲ +ಚಕೋರಿ ಎಂಬ ಯಕ್ಷಿ! +ಬಿಳಿಯ ಮೋಡದ ಹಾಗೆ ಹಗುರಾಗಿ +ಕಣ್ಣೆದುರು ಅವಳು ಬಿಳಿಯ ಪಕ್ಷಿಯಾಗಿ +ತೇಲುತ್ತಿದ್ದಾಳೆ! ಸಾವಳಗಿ ಶಿವ ಶಿವಾ,- +ಬೆಳಕಿನ ನಿಲುಮೆಗೆ ಗಾಳಿಯ ಸೆಲೆ ಸೇರಿ +ಶಾಶ್ವತ ಆಕಾಶ ನೀಲಿಮದಲ್ಲಿ +ತೂಗುವ ಚಂದ್ರನ ಕೆಳಗೆ +ನೆಲದ ತೇಜೋಮಯವೆ +ಮ್ಯಾಲೇರಿ ಹೊಳೆಹೊಳೆದು ಸುಳಿದಾಡಿದಂತೆ, +ಹಾಡಿನ ಕಾಮಿತದಿಂದ ಸಂಗೀತವೆ +ಕಾರಣ ಕಾಯವ ಧರಿಸಿ ಕೊಳಲ ಮೂಲಕ +ತಂತಾನು ನುಡಿಸಿಕೊಂಬಂತೆ, +ಸೂತ್ರ ಮಾತ್ರ ನೆಲಕ್ಕಂಟಿ +ಮ್ಯಾಲೆ ತೇಲುವ ಗಾಳಿ ಪಟದಂತೆ. +ಕಾಲವೆಷ್ಟು ಸಂದಾಯವಾಯಿತೊ ಹೀಗೆ +ಏಕ್‌ದಂ ನಮ್ಮ ಕಿವಿಗ್ಯಾರೊ ಸೀಸುಹುಯ್ದರು ಶಿವನೆ, ಕೊಳಲು ಕಿರಿಚಿ +ಫಕ್ಕನೆಚ್ಚರವಾಯ್ತು- +ಕೊಳಲು ಕಿರಿಚಿ +ಹೆಪ್ಪೊಡೆದ ಹಾಲು ಬೆಳ್ದಿಂಗಳು +ಮೋಡಗಳಲ್ಲಿ ಕೆಸರಾಗಿ ನಿಂತುಕೊಂಡಿತು +ಮಂತ್ರಭಿನ್ನವಾಗಿ +ಹುರಿಗೊಂಡ ಹಾಡು ತುಂಡು ತುಂಡಾಗಿ +ಹಾರುವ ಹಕ್ಕಿಯ ರೆಕ್ಕೆಗೆ ಶಕ್ತಿ ಸಾಲದೆ +ಮುರಿದ ರೆಕ್ಕೆಗಳ ಎತ್ತಿ ಬೀಸಲಾಗದೆ +ಬಾನಲ್ಲಿ ತೇಲಲಾಗದೆ +ಹಾ ಎಂದು ಕಿರಿಚಿ +ಆಕಾಶದುಲ್ಕೆ ಫಳ್ಳನೆ ಹೊಳೆದು +ಪತನವಾಗತೊಡಗಿತು. +ನಮ್ಮ ಕಣ್ಣಿಗೆ ಬೆಂಕಿ ಎರಚಿದಂತಾಗಿ ಶಿವ ಶಿವಾ +ಕಿಟಾರನೆ ಕಿರಿಚಿದೆವು. +ಇಗೊ ಇಗೋ ನಾವೇ ಬಿದ್ದೆವೆಂದು ಹೆದರಿ +ಬಿಗಿಯಾಗಿ ಎದೆ ಹಿಡಿದು, ಉಗುರಿನಿಂದ +ಹೃದಯ್ ಪರಚಿಕೊಂಡೆವು. +ಕರುಣಿ ಶಿವನಿಗಾದರು ಕೇಳಿಸಿ ಕಾಪಾಡಲೆಂದು +ಬಾಯಿ ಬಾಯಿ ಬಡಕೊಂಡತ್ತೆವು. +ಹಕ್ಕಿಯ ಹಿಡಿದಿಡಲಾರದ ಆಕಾಶದಂಗಳ ಕಂದಿ ಕರ್ರಗಾಯ್ತು. +ಚಂದ್ರ ಇದ್ದಿಲಾದ ಬೆಳ್ದಿಂಗಳು ಬೂದಿಯಾಯ್ತು. +ಹಾಡಿನ ಅಮಲಿನಲ್ಲಿ ತೇಲುತ್ತಿದ್ದ ಕಾಡು +ತಬ್ಬಿಬ್ಬಾಗಿ ಕಿರಿಚಿದ್ದಕ್ಕೆ ಗಾಬರಿಯಾಗಿ +ಗರಹೊಡೆದಂತೆ ಕಣ್‌ಕಣ್ಬಿಟ್ಟಿತು. +ಹಕ್ಕಿಯ ರೆಕ್ಕೆಗಳಿಗ್ಯಾರೊ ಆಯುಧ ಚುಚ್ಚಿದರೆ? +ಹನಿ ರಕ್ತ ಸುರಿವುದ ಕಂಡೆವು. +ಹಕ್ಕಿಯ ಬೀಸುವ ರೆಕ್ಕೆ ಕತ್ತಿನ ಕಳಸ ಮುರಿದು +ಶಿವಶಿವಾ ಚಂದಮುತ್ತನ ಆತ್ಮಪಕ್ಷಿ +ಚಕೋರಿ ಎಂಬ ಯಕ್ಷಿ +ಮುರಿದ ಮಹಿಮಳಾಗಿ ಬೀಳು ಬೀಳುತ್ತಿರುವಂತೆ +ಯಕ್ಷಿಯ ಮೂಲರೂಪ ಮೂಡಿ +ಧೊಪ್ಪನೆ ಬಿದ್ದಳು. +೩೮. ಬಳ್ಳಿಗೆ ನ್ಯಾಯ ಒದಗಿಸು ಶಿವನೆ +ನೆತ್ತಿಯಲ್ಲಿ ಚಂದ್ರನ ಮಡಗಿಕೊಂಡ +ಪಂಚಮುಖದ ಪರಮಾತ್ಮನ್ನ +ಕಿಂಚಿತ್ ಭಕ್ತಿಯಿಂದ ನೆನೆದು +ಇನ್ನು ಮುಂದಿನ ಕಥೆಯ ಹೇಳಬೇಕೆಂದರೆ : +ಗುಡಿ ಮುಂದೆ ನಳನಳಿಸಿ ಬೆಳೆದ +ಎಳೆಮಲ್ಲಿಗೆ ಬಳ್ಳಿಯ ಮ್ಯಾಲ್ಯಾರೋ ಅತ್ಯಾಚಾರ ಮಾಡಿ +ಬಾಸುಳು ಮೂಡುವಂತೆ +ಹಿಡಿದು ಎಳೆದಾಡಿದ್ದಾರೆ. +ಹಿಸುಕಿ ಘಾಸಿಮಾಡಿ +ಎಸೆದಿದ್ದಾರೆ ಮೂಲೆಗೆ +ಹ್ಯಾಗೆ ಬಿದ್ದಿದೆ ನೋಡು ಶಿವನೆ, +ಕಣ್ಣುಳ್ಳವರು ಮರುಗುವಂತೆ +ಕರುಳು ಕರಗುವಂತೆ. +ಸಾಕ್ಷಿಗಿದ್ದ ಚಂದ್ರ ಮೋಡಗಳಲ್ಲಿ +ಮುಖ ಮರೆಸಿಕೊಂಡಿದ್ದಾನೆ. +ಬೆದರಿವೆ ಹಕ್ಕಿ ಪಕ್ಕಿ +ಉಸಿರುಗಟ್ಟಿದೆ ಗಾಳಿ. +ಹಗಲು ರಾತ್ರಿ ಏಕಾ‌ಏಕಿ ಬದಲಾಗಿ +ಪಲ್ಲಟವಾಗಿದೆ ಬದುಕು. +ದೇವತೆಗಳ್ಯಾರೂ ಒದಗಿಲ್ಲ ಸಹಾಯಕ್ಕೆ +ಕುಲದೇವರು ಕೃಪೆಯಿಂದ ಹೊರಗಿಟ್ಟಿದ್ದಾರೆ. +ಸಾವಳಗಿ ಶಿವನೇ, +ನೀನಾದರೂ ಈ ಕಡೆ ನೋಡು. +ನಿನ್ನ ಬದಲು ಒಂದು ಗುಂಡಕಲ್ಲು ಬಳ್ಳಿಯ ನೋಡಿದ್ದರೆ +ಅದಾಗಲೇ ಹರಿಯುತ್ತಿತ್ತು ಕರಗಿ ನೀರಾಗಿ, +ನೀನಿನ್ನೂ ಸುಮ್ಮನಿದ್ದೀಯಲ್ಲಾ ಸ್ವಾಮಿ! +ಲೋಕಲೌಕಿಕದಲ್ಲಿ ಮಲ್ಲಿಗೆ ಬಳ್ಳಿಯಾಗಲಿ ಬಾಳು ಎಂದು, +ಅರಳಿದ ಮಲ್ಲಿಗೆ ನೋಡಿ ಚಂದ್ರನ ನೆನಪಾಗಲೆಂದು, +ಚಂದ್ರನ ಹೆಸರಿನಲ್ಲಿ ನಾವು ಮಾಡುವುದಿಷ್ಟೇ ಅಂತ +ಚಂದ್ರನಿಗೆ ತಿಳಿದಿರಲೆಂದು, +ನಾವು ಹಾರೈಸಿದ್ದು ಹುಸಿಯಾಯ್ತೆ ಶಿವನೆ! +ನಿನ್ನ ನೆನಪಿನಲ್ಲಿ ಈ ಬಳ್ಳಿ ದಾಖಲಾಗಿಲ್ಲವೆ? +ದಾಖಲಾದರು ಚಿಗುರಿಲ್ಲವೆ? +ಚಿಗುರಿದರು ಹೂವಾಗಿ ಅರಳಿಲ್ಲವೆ? +ಬಳ್ಳಿಗೆ ನ್ಯಾಯ ಒದಗಿಸಿ +ನೀನಿನ್ನೂ ಬದುಕಿದ್ದೀ ಅಂತ +ಪ್ರಮಾಣ ತೋರಿಸು ಶಿವನೇ! +೩೯. ನವಿಲೇ ನವಿಲೇ +ಲಕ್ಕಬ್ಬೆಯ ಕನಸಿನಲ್ಲಿ +ನಂದೀ ಕಳಸ ಧಗ ಧಗ ಉರಿದಂತಾಗಿ +ಆ ಉರಿಯ ನವಿಲುಗರಿಯ ಮ್ಯಾಲ್ಯಾರೋ ಸುರಿದು +ತುದಿಯಿಂದ ಬುಡತನಕ ಉರಿಯುತ್ತಿದೆ ಗರಿ. +ಅರೆ ಅರೇ +ಗರಿಯ ಬುಡದಲ್ಲಿ ನವಿಲಿದ್ದುದ +ಯಾರೂ ಅರಿಯರಲ್ಲಾ! +ನವಿಲಿಗೂ ಬೆಂಕಿ ತಗಲಿ +ನವಿಲೇ ನವಿಲೇ ಎಂದು ಒದರುತ್ತಗರ್ಭವ ಗಟ್ಟಿಯಾಗಿ ಹಿಡಿದುಕೊಂಡೇ +ಎದ್ದಳು ಮುದುಕಿ. +ಗಕ್ಕನೆ ನಿಂತು, ದಿಕ್ಕು ದಿಕ್ಕೆಲ್ಲ ನೋಡಿದರೆ +ನಖಶಿಖಾಂತ ಉರಿಯುತ್ತಿದೆ ಲೋಕ. +ಎಷ್ಟೊಂದು ಬೆಂಕಿ ಶಿವನೆ! +ಚಿಕ್ಕೆ ತಾರೆಗೆ ಬೆಂಕಿ, ಮುಗಿಲ ನೀಲಿಗೆ ಬೆಂಕಿ, +ಕನಸಿಗೂ ಬೆಂಕಿ! +ತಕ್ಷಣ ಮಗನ ನೆನಪಾಗಿ ಕುಲಗುರುವಿನ ಗೂಡಿಗೋಡಿದಳು ಅಬ್ಬೆ. +೪೦. ಅಬ್ಬೆಯ ಸಂತವಿಸಿದ +ಸಪ್ಪಟ ಸರಿರಾತ್ರಿ ಕಲ್ಲೂ ನೀರೂ ಕರಗುವಂಥ ಹೊತ್ತಿನಲ್ಲಿ ಚಂದಮುತ್ತನ ಕೊಳಲು ಅಪಸ್ವರ ಕಿರಿಚಿ ಸುಮ್ಮನಾದುದ ಕೇಳಿ ಕುಲಗುರು ವಿಸ್ಮಯಂಬಟ್ಟ. ಆಮೇಲಾಮೇಲೆ ಏನೋ ಅನಾಹುತ ಆಗಿರಬೇಕೆಂದು ಚಿತ್ತಸಂಶಯ ತಾಳಿ ನಾಲ್ಕಾರು ಬಾಲಕರ ಕರಕೊಂಡು ಆತಂಕದಿಂದ ಮಾತು ಮಾತಿಗೆ ಮಾದೇವನ ನೆನೆಯುತ್ತ ಯಕ್ಷಿಯ ಗುಡಿಗೋಡಿ ಹೋಗಿ ನೋಡಿದರೆ-ಚಂದಮುತ್ತ ಮೂರ್ಛಾಗತನಾಗಿ ಬಿದ್ದಿದ್ದಾನೆ! ಅವನನ್ನೆತ್ತಿಕೊಂಬಂದು ಗೂಡಿನಲ್ಲಿ ಮಲಗಿಸಿ ಮದ್ದರೆದು ಕುಡಿಸುವಲ್ಲಿ ನವಿಲೇ ನವಿಲೇ ಎಂದಳುತ್ತ ಬೀಳುತ್ತೇಳುತ್ತ ಬಂದ ಲಕ್ಕಬ್ಬೆಯ ಸಂತವಿಸಿದ. +೪೧. ಭಕ್ತಿ ಮಾಡಿದ್ದಕ್ಕೆ ನೀ ಕೊಟ್ಟ ಬದುಕು +ಆರುಮೂರೊಂಬತ್ತು ದಿನ ಬಾಯಿ ಬರಲೇ ಇಲ್ಲ ಚಂದಮುತ್ತನಿಗೆ. ಕಣ್ಣು ಪಿಳುಕಿಸದೆ ಶೂನ್ಯ ಹೃದಯನಾಗಿ ಬಿದ್ದಿರುತ್ತಿದ್ದ. ತಾಯಿ ಬಂದು ಪಕ್ಕದಲ್ಲಿ ಕುಂತರೂ ಗಮನಿಸುತ್ತಿರಲಿಲ್ಲ. ಪೆಟ್ಟು ಮಗನಿಗಾದರೆ ನೋವು ತಾಯಿಗಲ್ಲವೆ? ಏನಾಗಿದೆ ಮಗಂಗೆ? ದಿನಾ ಬೆಳೆಯುತ್ತಿದೆ ಗಂಟಲು ಹುಣ್ಣು. ಕತ್ತು ಕೆಂಪಗಿದೆ. ರಾಕ್ಷಸರ್‍ಯಾರಾದರು ಬಂದು ಹಿಸುಕಿದರೆ? ಮಗ ಮಾತಾಡಲಾರ. ಕುಲಗುರು ಹೇಳಲಾರ. ಮಗನಿಗೆ ಕೇಡು ಮಾಡಿದವರು ನಾಲಗೆ ಹಿರಿದು ಸಾಯಲೆಂದು ಶಪಿಸಿ, ಸತ್ಯ ಶಿವದೇವರ ನೆನೆದು- +ನನ್ನ ದೀವಟಿಗೆಗೆ +ಎಣ್ಣೆ ಎರೆಯೋ ಶಿವನೇ +-ಎಂದು ಬೇಡಿಕೊಂಡತ್ತಳು. +ಕುಲಗುರು ದಿನಾ ಮದ್ದರೆದು ಕುಡಿಸುತ್ತಿದ್ದ. ಆದರೆ ಕತ್ತಿನ ಹುಣ್ಣು ಯಾಕಾಯಿತೆಂದು, ಹೇಗಾಯಿತೆಂದು, ಆ ದಿನ ಕಾಡಿನಲ್ಲಿ ನಡೆದದ್ದೇನೆಂದು ಯಾರಿಗೂ ತಿಳಿಯಲಿಲ್ಲ. +ಶಿವ ಶಿವಾ, ಇಂತೀ ಪ್ರಕಾರವಾಗಿ ಚಂದಮುತ್ತನಂಥ ಸಂಪನ್ನನ ಕಥೆಯ ನಾವು ಹೇಳುವಂಥ ಪ್ರಸ್ತಾವದಲ್ಲಿ ಆ ದಿನ ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ನಟ್ಟಿರುಳು ನಡುರಾತ್ರಿ ಕಾಡಿನಲ್ಲಿ ಏನು ನಡೆಯಿತೆಂದು ನಾವಾದರೂ ಹ್ಯಾಂಗೆ ಹೇಳೋಣ? ನಿಮಗೂ ತಿಳಿದಿರುವಂತೆ ಯಕ್ಷಿಯ ಗುಡಿಯಾಚೆ ದೂರದ ಮರಗಳ ಅಡರಿ ಕುಂತಿದ್ದೆವಾಗಿ ನಮಗೂ ತಿಳಿಯದು. ಆದರೆ ಶಿವನ ಜಡೆಯಂಥ ಶಿವರಾತ್ರಿಯಲ್ಲಿ ನಾವಿನ್ನೂ ಸಾವಿರ ವರ್ಷ ಚಂದಮುತ್ತನ ಕಥೆಯ ಹೇಳಬೇಕೆಂದಿರುವುದರಿಂದ ಈ ಕಥಾಕೊಂಡಿಯ ಪತ್ತೆ ಹಚ್ಚಲೇಬೇಕಲ್ಲವೆ? ಇಂತಪ್ಪ ಕಷ್ಟ ನಿಷ್ಟೂರದಲ್ಲಿ ಸಿಕ್ಕಿಕೊಂಡು ನಾವು ಸಾವಳಗಿ ಶಿವ ಶಿವಾ ಎಂದು ಕೈ ಹೊತ್ತು ಕುಂತಿರಬೇಕಾದರೆ- ಸುಳಿವು ಸಿಕ್ಕಿತು ಶಿವನೆ! +ಒಂಬತ್ತು ಹಗಲು ಒಂಬತ್ತು ರಾತ್ರಿ ಕಳೆದ ಮ್ಯಾಕೆ ಚಂದಮುತ್ತ ಬೋಧೆಗೊಂಡು ಕೂಸಿನ ಕನವರಿಕೆಯಂತೆ ಮಾತಾಡಿದ. ರಾತ್ರಿಯೆಲ್ಲಾ ಎವೆ ಮುಚ್ಚದೆ ಅಡ್ಡಗೋಡೆಯ ನೆಮ್ಮಿ ಮಗನ ಕಾಯುತ್ತಿದ್ದ ಲಕ್ಕಬ್ಬೆಯ ಕಣ್ಣಲ್ಲಿ ಬೆಳಕಾಡಿತು. ಆದರೆ ಆ ಬೆಳಕು ಬಹಳ ಹೊತ್ತು ಉಳಿಯಲಿಲ್ಲ. ಯಾಕೆಂದರೆ ಚಂದಮುತ್ತನಿಗೆ ಬಾಯಿ ಬಂತು, ಗ್ಯಾನ ಬರಲಿಲ್ಲ. ಏನೊ ಧ್ಯಾನಿಸಿದ. ದೂರದಿಂದಲಿ ಯಾರೊ ಕೂಗಿ ಕರೆಧಂಗೆ ಓ ಎಂದು ಎದ್ದ. ಯಾರೊಂದಿಗೋ ಮಾತಾಡಿದ. ನಾಯಿ ಬೊಗುಳಿದರೆ ಹೆದರಿ ಥರಾಥರ್‍ನೆ ನಡುಗಿದ. ಅಬ್ಬೆ ಹೇಳಿದಳು : +ಎಲೆ ಮಗಾ, +ಎದುರಿಗಿರೋಳು ನಿನ್ನ ಅಬ್ಬೆ. +ಇನ್ಯಾರದೋ ಎದುರಿಗಿದ್ದಂತೆ ನುಡಿದಾಡುವಿಯಲ್ಲಪ್ಪ. +ಗಾಳಿಯಲ್ಲಿ ಯಾರೋ ಕದ್ದು ನಿಂತವರಂತೆ +ಆ ಕಡೆ ನೋಡುವಿಯಲ್ಲ, +ಯಾರಿದ್ದಾರೆ ಅಲ್ಲಿ? +ಗಾಬರಿಯೆ? +ನಿನ್ನ ಹೆದರಿಸುವಂಥವರು ಯಾರಿದ್ದಾರೆ ಅಲ್ಲಿ? +ನಾನಿಲ್ಲವೆ ನಿನ್ನ ಜೊತೆಗೆ? +ನಾಯಿ ಬೊಗುಳಿದರ್‍ಯಾಕೆ ಬೆಚ್ಚಿ ಬೀಳುವಿಯಪ್ಪ? +ಅದು ನಿನ್ನದೆ ಅಲ್ಲವೆ ನಾಯಿ? +ನಾನಾಡಿದ್ದು ಕೇಳಿಸೋದಿಲ್ಲವೆ? +ಯಾಕೆ ಮಾತಾಡುವುದಿಲ್ಲ? ಗುರುತಿಲ್ಲದವರ +ಹಾಂಗೆ ನನ್ನ ಕಡೆ ನೋಡಿದರೆ ನನಗೆ +ಹೆದರಿಕೆಯಾಗೋದಿಲ್ಲವೆ? +ಇಲ್ಲಿದ್ದೂ ಇನ್ಯಾವ ಲೋಕದಲ್ಲಿರುವೆ? +ಯಾವ ಲೋಕದ ಮಾತು ಹೇಳುತ್ತಿರುವೆ ಕಂದಾ? +ಅಬ್ಬೆಯ ನೋಡುತ್ತ ಬಹಳ ಹೊತ್ತು ಕಣ್ಣೀರು ಸುರಿಸಿದ ಚಂದಮುತ್ತ. ಮಗನ ಕಂಡಷ್ಟೂ ಅಬ್ಬೆಯ ಕಡುದುಃಖ ಹೆಚ್ಚಾದವು. ಕಣ್ಣೀರು ಒರೆಸಿ, ಮಡಿಲಿನಲ್ಲಿ ಮಲಗಿಸಿಕೊಂಡಳು. ಮಗನ ಕಾದ ಮೈ ಸ್ಪರ್ಶವಾದದ್ದೇ ಹಡೆದೊಡಲಿಗೆ ಕೆಂಡ ಸುರಿದಂತಾಗಿ ಗರ್ಭವ ಹಿಡಿದುಕೊಂಡಳು ತಾಯಿ; ಶಿವನಿಗೆ ಹೇಳಿದಳು: +ಭಕ್ತಿ ಮಾಡಿದ್ದಕ್ಕೆ ನೀ ಕೊಟ್ಟ ಫಲ ಈ ಬದುಕು. +ಅದು ಕಣ್ಣೀರಲ್ಲಿ ಕರಗುತ್ತಿದೆ. +ಭೋಂ ಬೋಳೇಶಂಕರಾ +ತನ್ನೊಳಗೆ ತಾನೇ ಹರಾ- ಅಂತ +ಮಸಣದಲ್ಲಿ ಮೈಮರೆತು ಕುಂತರಾಯ್ತೆ ಶಿವನೆ? +ಹದಿನಾಕು ಲೋಕ ಎದೆಗವಚಿಕೊಂಡವನಿಗೆ +ನನ್ನ ಮಗನೊಂದು ಭಾರವೆ? +ಭಕ್ತರ ಜೀವಕ್ಕೆ ನೀನಲ್ಲವೆ ಜಾಮೀನು? +ನಿನ್ನ ಹೆಸರುಗೊಂಡ ಮ್ಯಾಕೆ +ಇನ್ಯಾರು ಸಲಿವ್ಯಾರು ಬಂದು? +ಹೋಗಲಿ, ಸಾಯುವ ಕಂದನ ನೋಡಿ ತೃಪ್ತಿಯಾಯಿತೆ ನಿನಗೆ? +ಅದನಾದರೂ ಹೇಳು ಹೇಳೆನುತ, +ಕಣ್ಣುಮುಚ್ಚಿ ಅರೆನಿದ್ದೆಗೆ ಸಂದಳು ಅಬ್ಬೆ. ಇಂತಪ್ಪ ವ್ಯಾಳ್ಯಾದಲ್ಲಿ ಮಂಚದ ಕಾಲಿನ ಗೊಂಬೆಗಳೆರಡು ಮುಂದೆ ಬಂದು ಮಾತಾಡಿಕೊಂಡವು ಶಿವಾ : +ಗೊಂಬೆ ೧: ಹಿಂಗಾದರೆ ಹೆಂಗಕ್ಕಾ? +ಹಗಲೊಂಬತ್ತು ಇರುಳೊಂಬತ್ತಾದರೂ +ಚಂದಮುತ್ತನ ಗಂಟಲ ಗಾಯ ಮಾಯಲಿಲ್ಲ. +ದಮ್ಮಯ್ಯಾ ದಕ್ಕಯ್ಯಾ ಎಂದು +ದಿನಾ ಹೊಸ ಹೊಸ ಕಣ್ಣೀರನಳುತ್ತಿದ್ದಾಳೆ ತಾಯಿ. +ಹಾಲು ಹೂವಿನಂಥಾ ಹುಡುಗನ್ನ ಕಂಡು +ನಮಗೇ ಹಿಂಗಾದರೆ +ಹೆತ್ತ ಕರುಳಿಗೆ ಹೆಂಗಾಗಬೇಡ! +ಚಂದಮುತ್ತನ್ನ ಗುಣಪಡಿಸಲು +ಉಪಾಯವೇನೂ ಇಲ್ಲೇನಕ್ಕಾ? +ಗೊಂಬೆ ೨ : ಇದೆ ತಂಗೀ; ಯಕ್ಷೀಗುಡಿಯ ಎಡಗಡೆ +ನಾತಿದೂರ ನಾತಿ ಸಮೀಪ ನೇರಳೆ ಮರದಡಿ +ಗೇಣುದ್ದದ ಗೊಂಬೆ ಬಿದ್ದಿದೆ. +ಗೊಂಬೆಯ ಕತ್ತಿನಲ್ಲಿ +ಕರಿಕೂದಲು ಪೋಣಿಸಿದ ಸೂಜಿಯಿದೆ. +ಅದನ್ನ ಕಿತ್ತೆಸೆದರೆ +ಚಂದಮುತ್ತನ ಗಾಯ ಮಾಯುತ್ತದೆ. +ಗೊಂಬೆ೧: ಗೊಂಬೆಗೂ ಚಂದಮುತ್ತನಿಗೂ ಏನಕ್ಕ ಸಂಬಂಧ? +ಗೊಂಬೆ೨: ಅಗೊ ಅಗೊ ಲಕ್ಕಬ್ಬೆಗೆ ಎಚ್ಚರವಾಯ್ತು! +ಎನ್ನುತ್ತ ಗೊಂಬೆಗಳೆರಡೂ ಹಿಂದೆ ಸರಿದವು. ಲಕ್ಕಬ್ಬೆ ಕನಸಿನಲ್ಲೆಂಬಂತೆ ಗೊಂಬೆಗಳ ಮಾತು ಕೇಳಿಸಿಕೊಂಡಿದ್ದವಳು ಅವಸರದಿಂದ ಎಚ್ಚತ್ತಳು. ಬೆಳ್ಳಿ ಮೂಡಿದ್ದೇ ತಡ ಯಕ್ಷಿಯ ಗುಡಿಗೋಡಿ ನೇರಳೆ ಮರದಡಿ ಹುಡುಕಿದಳು. ಗೊಂಬೆ ಸಿಕ್ಕಿತಿ! ನೋಡಿದರೆ ಗೊಂಬೆಯ ಕೈಯಲ್ಲಿ ಕೊಳಲಿದೆ! ತಲೆಯಲ್ಲಿ ನವಿಲುಗರಿಯಿದೆ! ಗೊಂಡೆಯ ಲಂಗೋಟಿ, ಹೆಗಲಿಗೆ ಕಂಬಳಿಯಿದೆ. ಕರುವಿಗಿರುವಂಥ ತೆರೆದ ಕಣ್ಣಲ್ಲಿ ನಿಚ್ಚಳ ಬೆಳಕಿದೆ! ಕರಿಕೂದಲು ಪೋಣಿಸಿದ ಸೂಜಿಯನ್ನ ಕತ್ತಿನಲ್ಲಿ ಚಿಚ್ಚಿದಿದೆ! +ಶಿವ ಶಿವಾ ಎಂದು ವಿಸ್ಮಯಂಬಡುವಲ್ಲಿ ಅಬ್ಬೆಗೆ ನಿಚ್ಚಳವಾಗಿ ಏನಪ್ಪಾ ಗೊತ್ತಾಯಿತು ಅಂದರೆ: ಇದ್ಯಾರೋ ನವತಂತ್ರಿ ನರಸಯ್ಯ ಮಾಡಿದ ಚಂದಮುತ್ತನ ಗೊಂಬೆ. ಮದ್ದು ಮಾಟ ಮಾಡಿದ್ದಾನೆ ಮಗಂಗೆ! +-ಎಂದು ಕೊತ ಕೊತ ಕುದಿವ ಕೋಪದಿಂದ ಗೊಂಬೆಯ ಕತ್ತಿನಲ್ಲಿ ನೆಟ್ಟ ಸೂಜಿಯ ಕಿತ್ತು ಥೂ ಎಂದುಗಿದು ದೂರಕ್ಕೆಸೆದರೆ ಅಲ್ಲಿ- +೪೨. ಹಾಂಗಿದ್ದರಿದು ಹಂಗಲ್ಲ ನಿಲ್ಲು +-ಇಲ್ಲಿ ಗೂಡಿನಲ್ಲಿ ಮಲಗಿದ್ದ ಚಂದಮುತ್ತನ ಕತ್ತಿನ ನೋವು ಹಗುರವಾಗಿ ಬಿಗಿಯಾದ ಗಾಯ ಸಡಿಲಗೊಂಡವು. +ಆಮೇಲಾಮೇಲೆ ಚಂದಮುತ್ತನಿಗೆ ಗುಣವಾಯಿತು ಶಿವನೇ! +ಒಂದು ದಿನ ಅಬ್ಬೆ ಕಾಡಿನ ಕಡೆಗೆ ಹೋಗಿದ್ದಾಗ ಕುಲಗುರು ಒಬ್ಬನೇ ಚಂದಮುತ್ತನ ನಾಡಿ ನುಡಿತವ ಆಲಿಸುತ್ತಿದ್ದಾಗ ಶಿಷ್ಯ ಹೇಳಿದ: +“ನಿನ್ನೊಂದಿಗೆ ಏಕಾಂತವ ನುಡಿದಾಡುವುದಿದೆ ಶಿವನೇ” +“ಹೇಳು ಮಗನೆ. ಈಗ ಯಾರೂ ಇಲ್ಲವಲ್ಲ’ +“ಹುಣ್ಣಿವೆ ದಿನ ನನ್ನ ಕೊಳಲು ಆಲಿಸಿದೆಯ ತಂದೆ?” +“ಆಲಿಸಿದೆನಪ್ಪ, ಅಮೋಘವಾಗಿತ್ತು. ಇಂತಪ್ಪ ಸಂಗೀತವ ನಾನು ಜನ್ಮಾಪಿ ಕೇಳಿರಲಿಲ್ಲ.” +ಚಂದಮುತ್ತ ತಕ್ಷಣ ಗುರುವುನ ಕಾಲುಮುಟ್ಟಿ, +“ಅದೆಲ್ಲ ನಿನ್ನ ದಯೆ ಶಿವಪಾದವೇ” +-ಎಂದು ನಮಸ್ಕರಿಸಿದ. +“ನನ್ನ ದಯೆ ಹೌದೋ ಅಲ್ಲವೋ, ನಿನ್ನ ಭಕ್ತಿಯಿಂದ ಸಂತೋಷವಂತೂ ಆಯಿತಪ್ಪ. ಅದು ಯಾವ ರಾಗ ಮಗನೆ?” +“ಅದು ತಿಂಗಳ ರಾಗ ಶಿವನೆ! ವ್ರತಾಚರಣೆ ಮಾಡಿ ಕಲಿತೆ” +“ನಿನ್ನ ವ್ರತಾಚರಣೆಗೆ ಭಂಗವಾಗದಿದ್ದರೆ ಹೇಳು: ಆ ರಾಗದ ಅಂತಿಮದಲ್ಲಿ ನಿಂತಿರುವ ಸಿದ್ಧಿ ಯಾವುದು ಕಂದ?” +“ಶಿವ ಪಾದವೇ, ತಿಂಗಳು ರಾಗವ ಭಕ್ತಿಯಿಂದ ನುಡಿಸುತ್ತಿದ್ದರೆ ಯಕ್ಷಿಗೆ ರೆಕ್ಕೆ ಮೂಡಿ ಪಕ್ಷಿಯಾಗಿ ಆಕಾಶದಲ್ಲಿ ಹಾರಾಡುತ್ತಾಳೆ. ಅದೇ ಸಿದ್ಧಿ ಶಿವನೆ” +“ಇದಿಷ್ಟೇ ಆದಲ್ಲಿ ಅದೊಂದು ಕ್ಷುದ್ರ ಕೀರ್ತಿಯ ವ್ಯಸನವಲ್ಲವೆ ಕಂದಾ?” +“ಅದು ಆಕಾಶದಂತುಪಾರವನರಿವ ಹವಣಿಕೆ ತಂದೆ! ಬೆಳ್ದಿಂಗಳಲ್ಲಿ ಈಜುತ್ತೀಜುತ್ತ ಚಂದ್ರನೆಂಬ ಕನ್ನಡಿಯ ಮೂಲಕ ಶಿವನ ನೋಡುವುದೆ ಅಂತಿಮ ಗುರಿ-ಗುರುಪಾದವೇ” +ಕುಲಗುರುವಿನ ಹೃದಯ ಆನಂದದಿಂದ ಭಗ್ಗನೆ ಹೊತ್ತಿಕೊಂಡಿತು. ತಕ್ಷಣ ಅಭಿಮಾನದಿಂದ ಚಂದಮುತ್ತನ್ನ ಬಾಚಿ ತಬ್ಬಿಕೊಂಡು “ಭೇಶ್ ಭೇಶ್! ನಿನಗೆ ಅಕ್ಷಯವಾಗ್ಲಿ ನನ್ನಪ್ಪ. ಅಂಥ ಅನುಭವದ ಹೊಸ್ತಿಲಲ್ಲಿ ನಿಂತ ಹಂಗಾಯ್ತು ಆ ದಿನ ನನಗೆ. ಆದರೆ ಹಾಡಿನಲ್ಲಿ ಏನೋ ಕೊರತೆ ಕಂಡು ಬಂತಲ್ಲವೆ?” +“ಹೌದು ಶಿವನೆ, ಸಕಾಲದಲ್ಲಿ ಓಂಕಾರದ ಅಂಕುರವಾಗಬೇಕಿತ್ತು. ಅದು ನನ್ನ ಮೊದಲ ಯತ್ನವಾದ್ದರಿಂದ ಹಂತ ಹಂತವಾಗಿ ನುಡಿಸುತ್ತ ಮತ್ತು ಅರಿಯುತ್ತ ಇರುವಾಗ ಯಾರೋ ನನ್ನ ಕತ್ತಿಗೆ ಸೂಜಿ ಚುಚ್ಚಿ ಸೊಲ್ಲಡಗಿಸಿದರು ಶಿವನೆ…..” +“ಯಾರು?” +“ಚುಚ್ಚುವ ಹಸ್ತ ಮತ್ತು ವ್ಯಕ್ತಿ ಎರಡೂ ಅದೃಶ್ಯವಾಗಿದ್ದವು ತಂದೇ” +“ಅಧೆಂಗಾದೀತು ಮಗ? ವ್ರತಾಚರಣೆಗೆ ಕೂತಾಗ ನಿನ್ನ ಸುತ್ತ ರಾಗದಿಂದ ಮಂತ್ರಮಂಡಳ ಕೊರೆಯಲಿಲ್ಲವೆ?” +“ಕೊರೆದೆ ಶಿವನೆ!” +“ಕಾಯುವ ದೇವರನ್ನ ಅವರವರ ದಿಕ್ಕಿನಲ್ಲಿ ಪ್ರತಿಷ್ಥಾಪಿಸಿ ಬಂದೋಬಸ್ತ್ ಮಾಡಲಿಲ್ಲವೆ?” +“ಮಾಡಿದ್ದೆ ಶಿವನೆ, ಅಲ್ಲೇ ಏನೋ ಊನವಾದ ನೆನಪು.” +“ಹಾಂಗೆ ಸೈ. ಯಕ್ಷಿಯ ಪಕ್ಷಿಯ ಮಾಡಿ ಹಾರಿಸುವ ತಿಂಗಳು ರಾಗದ ತಂತ್ರ ಇನ್ಯಾರಿಗೋ ಬೇಕಾಗಿದೆ . ಅದಕ್ಕೇ ಅವರು ನೀ ಮಾಡಿದ ತಪ್ಪಿನೊಳಗೆ ತೂರಿ, ಮಂತ್ರ ತಂತ್ರದ ಗೊಂಬೆಯ ಮಾಡಿ, ನಿನ್ನ ಹಾಡು ನಿಲ್ಲಿಸಿ, ಹಾರುವ ಯಕ್ಷಿಯ ಕೆಳಕ್ಕೆ ಬೀಳಿಸಿ ವಶವರ್ತಿ ಮಾಡಿಕೊಂಡು ಹೋಗಿದ್ದಾರೆ. ಇಗೋ ಇಲ್ಲಿದೆ ನಿನ್ನ ಗೊಂಬೆ.” +-ಎಂದು ಅಬ್ಬೆ ಕೊಟ್ಟ ಗೊಂಬೆಯ ತೋರಿಸಿದ. ಚಂದಮುತ್ತನಿಗೆ ನಿಚ್ಚಳವಾಗಿ ಕಾರ್‍ಯಕಾರಣ ಹೊಳೆದವು. ಆದರೆ ಇಂತಪ್ಪ ಗೊಂಬೆಯನ್ಯಾರು ಮಾಡಿರಬಹುದೆಂದು ಇಬ್ಬರಿಗೂ ಬಗೆಹರಿಯಲಿಲ್ಲ. +೪೩. ದಾರಿಯಿದೆ ಶಿವನೆ +ಚಂದಮುತ್ತನ ಕತ್ತಿನ ನೋವು ಕಮ್ಮಿಯಾಗಿ +ಅಧಿಕವಾದವು ಯಕ್ಷಿಯ ವಿರಹದ ನೋವು. +ಅವಳ ಗ್ಯಾನದಲ್ಲಿ ನೂರೊಂದು ನೆನೆದ, +ನೂರೊಂದು ಪರಿತಪಿಸಿದ. +ಯಕ್ಷಿ ವಿರಹಿತ ಲೋಕ ನಾಯಿ ನರಕವೆಂದು +ಕಣ್ಣೀರುಗರೆದ. +ಹಾಳು ಸುರಿವ ಯಕ್ಷಿಯ ಗುಡಿಯ ನೋಡಿ +‘ನನ್ನ ಯಕ್ಷಿಗೇನಾಯಿತು ಶಿವನೆ?’ ಎಂದು ಯಾರಿಲ್ಲದಾಗ +ಕರುಳು ಬಾಯಿಗೆ ಬರುವಂತೆ +ಬಾಯಿ ಬಡಕೊಂಡತ್ತ, ತಲೆ ಹೊಡಕೊಂಡತ್ತ. +ಕಾಡು ನೆನಪಿನ ಸ್ಮಶಾನವಾಗಿ, ಬೆಳ್ದಿಂಗಳು ಬೂದಿಯಾಗಿ +ತೇಲುವ ಹೆಣ ಚಂದ್ರನ ಕಂಡು ಕರುಳು ಹಿಂಡಿಕೊಂಡತ್ತ +ನಿದ್ದೆ ನೀರಡಿಕೆ ಇಲ್ಲದೆ +ಹಾರಿತೆಲ್ಲಿಗೆ ನನ್ನ ಬೆಳ್ಳಾನೆ ಬಿಳಿ ಹಕ್ಕಿ ಎಂದು +ಹಾಡಿಕೊಂಡತ್ತ. +ಕೊನೆಗೆ ಅವಳಿಲ್ಲದೆ ಈ ನಾಯಿಜಲ್ಮ ಯಾಕಿರಬೇಕೆಂದು +ದುಃಖಶೋಕವ ಮಾಡುತ್ತ +ಅಬ್ಬೆಗೂ ಕುಲಗುರುವಿಗೂ ಹೇಳದೆ ಕೇಳದೆ +ಹಟ್ಟಿಯ ಬಿಟ್ಟು ಏಕಾಂಗಿ ಹೊರಟ. +ಅಡವೀಲಿ ನಡೆದು ಬಂಡೆ ಹತ್ತ್ಳಿದು +ಕಲ್ಲುನೆಲ ತುಳಿದ. +ಹಗಲು ರಾತ್ರಿ ಅನ್ನದೆ, ಹಾವು ಹುಲಿ ಮೃಗ ಜಾತಿ ಅನ್ನದೆ +ಕಾಲಿಗೆ ಮುಳ್ಳು ಚುಚ್ಚಿ ರಕ್ತ ಸುರಿಸುತ್ತಾ +ಕಾಲೆಳೆಯುತ್ತಾ, ಕೈ ಊರುತ್ತಾ +ಬೀಳುತ್ತಾ, ಏಳುತ್ತಾ, ನೀರೂ ನೆರಳೂ ಇಲ್ಲದಲ್ಲಿ ನಡೆದ. +ಇದ್ದಲ್ಲಿ ನಡೆದ. +ಹಕ್ಕಿ ಪಕ್ಷಿ ಇಲ್ಲದಲ್ಲಿ ನಡೆದ, ಇದ್ದಲ್ಲಿ ನಡೆದ. +ಯಕ್ಷಿಯ ಕೂಗಿ ಹುಡುಕಿದ, ಕಾಕು ಹೊಡೆದು ಹುಡುಕಿದ. +ಮ್ಯಾಲೂ ನೋಡಿದ, ಕೆಳಗೂ ನೋಡಿದ, +ಅಕ್ಕಪಕ್ಕ ಆಸುಪಾಸು ನೋಡುತ +ಯಕ್ಷಿ ಯಕ್ಷೀ ಎಂದು +ಬಿದ್ದೂ ಕೆಡೆದೂ ಒದ್ದಾಡಿಕೊಂಡು ನಡೆದ. +ದಾರಿಯಲ್ಲಿ ಹಿರಿಯ ಜಾಲಿ, ಕಿರಿಯ ಜಾಲಿ +ಮರಕ್ಕೆ ಮರ ಕೂಡಿಕೊಂಡು ಚಂದಮುತ್ತನ +ಜಡೆ ಗಡ್ಡ ಕಿತ್ತವು. ಆ ಮರಕ್ಕೂ ತಾಗಿ +ಈ ಮರಕ್ಕೂ ತಾಗಿ ಮೂರ್ಛೆ ಬಿದ್ದಿರುವಲ್ಲಿ- +ಮರದಲ್ಲಿದ್ದ ಮರಿ ಹಕ್ಕಿ ತಾಯಿಗೆ ಹೇಳಿತು: +ಯಾರವ್ವಾ ಇವನು? +ಇವನ ಕಂಡರೆ ಮರಮರ ಮರುಗುತ್ತಾವೆ ತರುಮರ. +ಎಲೆಗಳ ಉದುರಿಸುತಾವೆ, +ಹೂ ಹೂ ಬಾಡಿ ಕತ್ತು ಚೆಲ್ಲುತ್ತಾವೆ. +ಹರಿವ ತೊರೆ ಗೋಗರೆಯುತಾವೆ. +ಕೊಳಲು ನುಡಿಸಿ ಮಳೆ ತರಿಸಿದ ಮಹಾರಾಯ ಇವನಲ್ಲವೆ? +ಎಷ್ಟೊಂದು ಹಾಡು ಕಲಿತೆವು ಇವನಿಂದ. +ಇವನಿಲ್ಲದೆ ಹಾಡುಂಟೆ? +ನಾವೆಷ್ಟು ಹಾಡಬೇಕೆಂದರೂ ಅತ್ತಹಾಗಿದೆಯಲ್ಲ ಇವತ್ತು! +ನೀನ್ಯಾಕೆ ಅಳುತಿರುವೆ ತಾಯಿ? +ಬಹಳ ಹೊತ್ತಾಗಿ ತಂಗಾಳಿಗೆಚ್ಚೆತ್ತು ಕಿರಿಗಣ್ ತೆರೆದಾಗ ಎದುರಿಗೆ ಬ್ರಹ್ಮರಾಕ್ಷಸ ಕಳಚಿಬೀಳುವಂತೆ ಕಣ್ ತೆರೆದುಕೊಂಡು, ಅಡಿಯಿಂದ ಮುಡಿತನಕ ಇಡಿಯಾಗಿ ನುಂಗುವಂತೆ ನೋಡುತ್ತ ಕುಂತಿತ್ತು! ‘ಸತ್ತನೋ ಶಿವನೇ’ ಎಂದು ಗಾಬರಿಯಿಂದೇಳಬೇಕೆಂಬಲ್ಲಿ ಗಪ್ಪನೆ ಅವನ ಕಾಲು ಬಿಗಿಯಾಗಿ ಹಿಡಿದು “ಗುರುತಾಗಲಿಲ್ಲೇನೋ ನನ್ನಪ್ಪಾ?” ಎಂದಿತು. ಹೊಯ್ಕಿನಿಂದರ್ಧಾ ನೋಡಿದ. ಮೈಮುಖದ ತುಂಬ ಹೆಂಗೆಂದರೆ ಹಂಗೆ ಹುಲುಸು ಬೆಳೆದ ಕೂದಲು ಜಡೆಗಟ್ಟಿ ಅಂಗಾಂಗ ಸಾಂಗೋಪಾಂಗ ಯಾವುದೆಂದು ತಿಳಿಯದಂತಿತ್ತು. ಕಳಚಿಬೀಳುವಂತಿದ್ದು ಕೆಂಡಗಣ್ಣು. +ಕೋರೆಹಲ್ಲಿಳಿದು ತುಟಿಯ ಹೊರಗೆ ಕಾಣುತ್ತಿದ್ದವಾಗಿ ಸದಾ ಕೋಪಗೊಂಡ ರಾಕ್ಷಸನ ಹಾಗೆ ಕಾಣುತ್ತಿದ್ದ. ಸೊಂಟದಲ್ಲಿ ಮನುಷ್ಯರು ನೇಯ್ದ ಬಟ್ಟೆಯಿದ್ದುದರಿಂದ ದೈರ್ಯ ಬಂತು. ಅಷ್ಟರಲ್ಲಿ ಮತ್ತದೇ ಹೇಳಿತು. “ನಿನ್ನ ಪಾಪಿಗುರು ಮಹಾನುಭಾವನ ಮರೆತೆಯೇನಪ್ಪ?” ಗುರುತಾಯಿತು. ಆದರೆ ತನ್ನ ಗುರುಪಾದವೆಲ್ಲಿ? ಈ ವಿಕಾರವೆಲ್ಲಿ? ಎಂದು ಆಶ್ಚರ್ಯದಿಂದ ನೋಡುತ್ತಿರುವಂತೆ ಮಹಾನುಭಾವ “ಕಾಪಾಡೊ ನನ್ನಪ್ಪಾ” ಎಂದು ಚಂದಮುತ್ತನ ಪಾದಂಗಳ ಹಣೆಗೆ ಗಿಟ್ಟಿಸಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದ. “ಅಯ್ಯಾಯ್ಯೋ ಶಿವಪಾದವೇ”- ಎನ್ನುತ್ತ ಕಾಲು ಬಿಡಿಸಿಕೊಂಡು ಚಂದಮುತ್ತ ಗುರುವಿನ ಪಾದ ಹಿಡಿಯಲು ಹೋದಾಗ ಅವನೊಪ್ಪದೆ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡರು. “ಇದೇನು ಗುರುಪಾದವೇ?” ಅಂದ ಚಂದಮುತ್ತ. ಮಹಾನುಭಾವ ಪಶ್ಚಾತ್ತಾಪದಲ್ಲಿ ಬೆದ ಬೆದ ಬೆಂದುಹೋಗಿದ್ದ; +“ನಿನ್ನ ಘಾತಿಸಿದ ಕಥೆ ಹ್ಯಾಗೆ ಹೇಳಲಿ? ಆದರೂ ನೀನು ಈ ಕಪಟವಿದ್ಯನ ತೆಪ್ಪು ಹೊಟ್ಟೆಗೆ ಹಾಕಿಕೊಳ್ಳುತ್ತೀ ಅಂತಾದರೆ ಮಾತ್ರ ಹೇಳುತ್ತೇನಪ್ಪ” +“ನಾತಿ ವಿಸ್ತಾರ ನಾತಿ ಹೃಸ್ವ ಅದೇನು ಹೇಳು ಶಿವಪಾದವೇ” +ಆಮೇಲೆ ದಮ್ಮಯ್ಯಾ ದಕ್ಕಯ್ಯಾ ಎಂದು ಸತ್ಯಸಂಗತಿಯನ್ನೊಪ್ಪಿಕ್ಪ್ಳ್ಳುತ್ತಾ ಮಹಾನುಭಾವ ಹೀಂಗಂದ: +ನೀನು ಕೊಳಲು ನುಡಿಸಿ ಮಳೆ ತರಿಸಿದ್ದೇ ಆಯ್ತು ನೋಡು +ಸಮೂಹ ಸನ್ನಿಯಂತೆ ನಿನ್ನ ಕೀರ್ತಿ +ನಾಕು ರಾಜ್ಯ ಎಂಟು ದಿಕ್ಕಿಗೆ ಹಬ್ಬುವದ ನೋಡಿ ಕೇಳಿ +ಅಸೂಯೆ ಅಧಿಕವಾಗಿ +ಹೊಟ್ಟೆಯ ಕಿಚ್ಚು ತಳಮಳಿಸಿತು. +ಮಳೆರಾಯನ ಪಳಗಿಸಿದೆಯೆಂದು, ಶಿವನ ಒಲಿಸಿದೆಯೆಂದು +ದಿನಾ ಬಂದ ಥರಾವರಿ ಕತೆ ಪುರಾಣ ಕೇಳಿ ಕೇಳಿ +ತಾಮಸಕ್ಕೊಳಗಾದೆ. +ನಿಜ ಹೇಳುತ್ತೇನೆ ಮಾರಾಯ: ಆಮೇಲಾಮೇಲೆ +ಲೋಕ ಲೌಕಿಕದಲ್ಲಿ ನಾನು ಬದುಕಲೇ ಇಲ್ಲ. +ನೋವನ್ನ ಹ್ಯಾಗೆ ಸಹಿಸಿದೆನೆಂದು ಕೇಳಬೇಡ- +ಇದ್ದಲ್ಲಿ ಇರಲಾಗದೆ, ಬಿದ್ದಲ್ಲಿ ಬಿದ್ದಿರಲಾಗದೆ +ಕೊನೆಗೆ ನಿನ್ನ ಹಟ್ಟಿಗೆ ಬಂದೆ, ನಿನ್ನ ನೋಡುವುದಕ್ಕೆ. +ಸೇಡಿನ ಸೆರೆಮನೆಯಲ್ಲಿ ಸಿಕ್ಕ ಹಂಗಾಯ್ತು. +ಕೆಟ್ಟ ಪಿಶಾಚಿ ಚಿನ್ನಮುತ್ತ ಬಂದ ನನ್ನ ಸಹಾಯಕ್ಕೆ, +ಅಥವಾ ನಾನು ಅವನ ಸಹಾಯಕ್ಕೆ. +ಅವನ ದೇಹಂತ ದೇಹ ಸೇಡಿನಿಂದ ಕೊಳೆಯುತ್ತಿತ್ತು. +ನಿನ್ನ ದುರ್ಗುಣಗಳ ಸಾವಿರ ಬಾರಿ ಜಪಿಸಿದ. +ನಿನ್ನ ಗುಣಗಳ ನೇತಿಗಳೆದು ಮಾತಾಡಿದ. +ಸುಳ್ಳು ಹೇಳಿ ಕಪಟವೊಡ್ಡಿದ. +ಶಿಷ್ಯನಾಗುವೆನೆಂದ. ತನ್ನ ಗುರುಭಕ್ತಿಗೆ +ಶಿವನೇ ಜಾಮೀನು ಎಂದ. +ಸುಖ ಸವಲತ್ತುಗಳ ಆಮಿಷ ತೋರಿದ. +ಕಾಲಾನುಕಾಲದಲಿ ಇದಕೂ ಬೆಲೆ ತೆರಬೇಕೆಂದು +ತಿಳಿದಿದ್ದರೂ ನಾನ್ಯಾಕೆ ಅವನ ಮೋಡಿಗೆ ಸೋತೆನೋ, +ಶಿವನನ್ನ ಕಡೆಗಣಿಸಿ ಒಪ್ಪಿಕೊಂಡೆ. +ನಿನ್ನ ದನಗಳಿಗೆ ಹಸಿರು ವಿದ್ಯೆ ಗಿಡಮೂಲಿಕೆ ಮಾಡಿದೆವು. +ತೊಣಚಿರೋಗ ತಂದಿಕ್ಕಿದೆವು. +ನಿನ್ನ ಹಟ್ಟಿ ಬಾಯಲಾಗುವಂತೆ ಮಾಟ ಮಾಡಿದೆವು; +ನಮ್ಮ ಆಟ ನಡೆಯಲಿಲ್ಲ. +ಆಮೇಲೆ ತಿಳಿಯಿತು: ಯಕ್ಷಿಯ ರಕ್ಷೆಯಿದೆಯೆಂದು. +ನಿನ್ನ ಹಾಡು ಕದಿಯುವುದು ಸಾಧ್ಯವಿರಲಿಲ್ಲ. +ಯಕ್ಷಿಯ ಕದ್ದು ವಶವರ್ತಿ ಮಾಡಿಕೊ ಶಿವನೇ, +ಹಂಗಾದಲ್ಲಿ ಚಂದಮುತ್ತನ ಕೀರ್ತಿ ಕುಂದಿ +ನಿನ್ನ ಕೀರ್ತಿ ಹಬ್ಬುವುದೆಂದು ಪ್ರಚೋದನೆ ಕೊಟ್ಟ. +ಅಂದೇ ನವತಂತ್ರಿ ನರಸಯ್ಯನ ಮೊರೆಹೊಕ್ಕೆವು. +ಯಂತ್ರ ತಂತ್ರ ಮಂತ್ರಾದಿಗಳ ಕರಿವಿದ್ಯೆ ಮಾಡಿ +ಹಸುವಿನ ಕರುವಿನ ಬಲಿ ಕೊಟ್ಟೆವು. +ಬಲಿ ಕೊಟ್ಟ ಕರು +ಮನುಷ್ಯರ ಥರ ಒದರಿ ಸತ್ತಿತಪ್ಪ! +ಭೈರವನೆದುರಿಟ್ಟ ನಮ್ಮ ನೈವೇದ್ಯ +ಕಪ್ಪೇರಿ ನೋಡ ನೋಡುವುದರೊಳಗೆ +ನರಿ ನಾಯಿಗಳ ಪಾಲಾಯಿತು. ಆದರೂ ನಾವು ಹಿಂದಿರುಗುವ ಸ್ಥಿತಿಯಲ್ಲಿರಲಿಲ್ಲ, +ಆಗಲೇ ಕತ್ತಿನ ತನಕ ಮುಳುಗಿದ್ದೆವು. +ನವ ತಂತ್ರಿ ನರಸಯ್ಯನಿಂದ ಕರಿವಿದ್ಯೆಯಲ್ಲಿ +ನಿನ್ನ ಗೊಂಬೆಯ ಮಾಡಿಸಿ +ಗೊಂಬೆಗೆ ಮಲೆಯಾಳ ಮಾಟವ ಮಾಡಿಸಿ ತಂದೆ. +ಆ ದಿನ ನಿನ್ನ ಹಾಡಿಗೆ ಒಲಿದು ಹಾರಾಡುವ ಯಕ್ಷಿಯ ಕಂಡು +ಚಿತ್ತ ವಿಭ್ರಮವಾಯಿತಯ್ಯಾ – +ಮಾಡಬಾರದ್ದನ್ನು ಮಾಡಿಬಿಟ್ಟೆ – +ನಿನ್ನ ಹಾಡು ನಿಂತಿತು ನೋಡು: ಸುಖನಿದ್ದೆಯಲ್ಲಿ ಯಾ +ಕನಸಿನಲ್ಲಿದ್ದ ಚಿಲಿಪಿಲಿ ಜಗತ್ತು +ಒಮ್ಮಿಗಿಲೆ ಎಚ್ಚೆತ್ತು, ಕಿಟಾರನೆ ಕಿರಿಚಿ +ಸದ್ದು ಗದ್ದಲ ಮಾಡಿದುವು ಬಹಳ. +ಆಕಾಶದಿಂದ ಕಳಚಿ ಬೀಳುವ ಮುನ್ನ +ಯಕ್ಷಿಯ ಹೊತ್ತುಕೊಂಡೋಡಿ ಬಂದೆ. +ಆಗ ಮೂರ್ಛೆ ಹೋದವಳಿಗೆ ಇನ್ನೂ ಗ್ಯಾನ ಬಂದಿಲ್ಲ. +ಇಂತೆಂಬ ನುಡಿಕೇಳಿ ಏಳೇಳು ಲೋಕದ ರವರುದ್ರಗೋಪ ತಾಳಿದ ಚಂದಮುತ್ತ ತಂತಾನೇ ವಿವೇಕಿಸಿಕೊಂಡು ಹೀಗೆಂದು ಕೇಳಿದ: +“ನಿನ್ನಂಥವರು ಇಂತಪ್ಪ ಕಾರ್‍ಯವನೆಸಗಬಹುದೇ?” +“ನೀನೇನು ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ, ದಯವಾಗು ನನ್ನಪ್ಪಾ. ಅಸಹಾಯಕ ಯಕ್ಷಿಯ ದಿನಾ ನೋಡಿಕೊಂಡು ಬಿದ್ದಿರೋದೇ ಘನವಾದ ಶಿಕ್ಷೆ. ಉಪಚರಿಸೋಣವೆಂದರೆ ಆಕೆಯ ಸಮೀಪ ಸುಳಿಯುವುದಕ್ಕೆ ಖಗಮೃಗಜಾತಿ ಬಿಡುವುದಿಲ್ಲ. ಬಿಗಿದ ಮುಷ್ಠಿಯ ದೈವಂಗಳೆಷ್ಟೋ ನನ್ನ ಕತ್ತಿನ ಕಡೆಗೆ ಕ್ರೂರ ದೃಷ್ಟಿ ಬೀರುತ್ತಿದ್ದಾವೆ. ಮನುಷ್ಯರಿಗೆ ಬರುವ ಭಯಂಕರ ರೋಗಗಳು ನನ್ನನ್ನಾಗಲೇ ಆಕ್ರಮಿಸಿಕೊಂಡಿವೆ. ಕಣ್ಣುಮುಚ್ಚಿದರೆ ಒಳಗೆ ಹಿಂಸೆ, ತೆರೆದರೆ ಹೊರಗೆ ಹಿಂಸೆ. ಬ್ರಹ್ಮರಾಕ್ಷಸನೆಂದು ನನ್ನ ಬಳಿಗ್ಯಾರೂ ಸುಳಿಯುತ್ತಿಲ್ಲ. ಬದುಕಿದ್ದಾಗಲೇ ಬ್ರಹ್ಮರಾಕ್ಷಸನಾಗೋದೆಂದರೆ ಅದೊಂದು ಸಿದ್ಧಿಯೇ ನನ್ನಪ್ಪ? +ಪಾಪಿ ಎನ್ನು, ನೀಚ ಎನ್ನು, ಗಂಜಳ ತಿಂದು ಬದುಕುವವ ಅನ್ನು. ನಿರ್ಲಜ್ಜನೆನ್ನು, ಅಧಮನೆನ್ನು. ಮನಸಾರೆ ಬೈದು ನನ್ನ ಆತ್ಮಕ್ಕೆ ತುಸು ಶಾಂತಿ ಕೊಡಪ್ಪಾ. +ಗಂಟೆ ಮತ್ತು ಅದರ ನಾಲಗೆಯಲ್ಲಿ ಅಡಗಿ ಕುಂತ ನಾದದ ಹಾಂಗಿರುವ ಶಿವನ ನೆನೆದು ಚಕೋರಿ ಎಂಬ ನಮ್ಮ ಕಥಾನಾಯಕಿಯ ಧರ್ಮಸೆರೆ ಬಿಡಿಸುತ್ತೇವೆ ಮಲಗಿದವರು ಎಚ್ಚರವಾಗಿರಯ್ಯಾ, +ಇದು ಜಗದ ಖಾಲಿಗಳನ್ನು ಹಾಡುಗಳಿಂದ +ತುಂಬಿದವನ ಕಥೆ, +ಸ್ಮಶಾನದಲ್ಲಿ ಮೈಮರೆತು ಕುಂತಿದ್ದ ಶಿವ +ಮರೆತ ಹೆಜ್ಜೆಯ ಹಾಕಿ ಮತ್ತೆ ಕುಣಿಯುವಂತೆ +ಮಾಡಿದವನ ಕಥೆ, +ಕಿವಿಗಳ ಕಿಲುಬು ತೊಳೆದು +ಹೃದಯದ ಕೊಳೆ ಕಳೆದು +ಕಥೆಯ ಕೇಳುವುದಕ್ಕೆ ಸಿದ್ಧವಾಗಿರಯ್ಯಾ. +ಹೃದಯದ ಯಾವುದಾದರೂ ಮೂಲೆಯಲ್ಲಿ +ಒಂದೆರಡು ಕನಸು ಮಲಗಿದ್ದರೆ ಎಚ್ಚರಿಸಿರಯ್ಯಾ +ನಮ್ಮ ಹಾಡು ಕೇಳುವುದಕ್ಕೆ. +ಸ್ವಯಂ ಸಾವಳಗಿ ಶಿವಲಿಂಗ ಸ್ವಾಮಿ +ಪ್ರತ್ಯಕ್ಷ ಕಿವಿ ತೆರೆದುಕೊಂಡು ಕುಂತಿದ್ದಾರೆ, +ಶರಣೆಂದು ಬಾಗಿ ಮುಂದಿನ ಕಥಾ ಸಾರಾಂಶವ +ಹೇಳಬೇಕೆಂದರೆ – +ನೆರಳಿನ ಜೊತೆ ಎಂದಾದರೂ ಗುದ್ದಾಡಿದ್ದೀರಾ ಶಿವ? +ಬಲು ಬಲು ಸುಲಭ. +ಬೆಳಕಿನ ಬಳಿ ನೀವು ನಿಂತುಕೊಂಡು +ಗೋಡೆಯ ಕಡೆಗೊಮ್ಮೆ ನೋಡಿರಿ. +ನೋಡಿದಿರಾ; ಅಕೋ ಮೂಡಿದ್ದಾನೆ ನಿಮ್ಮ ಶ್ರೀ ನೆರಳು! +ಎರಡೂ ಹಸ್ತಗಳನ್ನು ಕಿವಿಮ್ಯಾಲಿಟಗೊಂಡು ಬಾಯಿ ತೆರೆಯಿರಿ. +ತೆರೆದಿರಾ?: ಅಗೋ ಕೊಂಬು ಕೋರೆಹಲ್ಲಿನ ಬ್ರಹ್ಮರಾಕ್ಷಸ! +ನೀವು ಗುದ್ದಿದರೆ ತಿರುಗಾ ಗುದ್ದಿ +ನೆಗೆದರೆ ನೆಗೆದು +ಕುಣಿದರೆ ಕುಣಿದಾಡಿ ಕುಪ್ಪಳಿಸುವನಲ್ಲವೆ? +ಅನುಮಾನ ಬಂತಾ? +ನಿಮ್ಮಿಬ್ಬರಲ್ಲಿ ಯಾರು ನಿಜ ಅಂತ? +ಅದೇನೇ ಇರಲಿ ಶಿವನೆ, +ಗೋಡೆಯ ಮ್ಯಾಲೆ ಮೂಡಿದಷ್ಟು ಕತ್ತಲೆಗೆ +ಯಜಮಾನರು ನೀವೆ! +ಇಷ್ಟಕ್ಕೆಲ್ಲ ಬೆರಗಾಗಬೇಡಿರಯ್ಯಾ +ಅಮಾವಾಸ್ಯೆಯ ಅಂಧಂತಮಸ್ಸಿಗೆಶಿವನು ಯಜಮಾನನಾದಂತೆ +ಈ ಸಣ್ಣ ಕತ್ತಲೆಗೆ ನಾವು ನೀವು! +ನೋಡಿದಿರಲ್ಲ ಮಹಾನುಭಾವನ? +ಕನ್ನಡಿಯಲ್ಲಿ ಮೂಡಿದ ಅವನ ಬ್ರಹ್ಮರಾಕ್ಷಸನ? +ಇನ್ನು ಮ್ಯಾಲೆ ನಮ್ಮ ಕಥಾನಾಯಕ ಚಂದಮುತ್ತ +ಚಂದ್ರನೆಂಬ ಕನ್ನಡಿಯಲ್ಲಿ ನೋಡಿಕೊಂಡಾಗ +ಏನು ಕಂಡಿತೆಂದು ಕೇಳಿರಯ್ಯಾ- +ಶಿವಶವಾ, ಈ ಪ್ರಕಾರವಾಗಿ ಚಂದಮುತ್ತ ತನ್ನ ವಿದ್ಯಾಗುರುವಾದಂಥ ಮಹಾನುಭಾವನ ಶ್ರೀಪಾದಂಗಳ ಹಿಡಿದು, +“ಈಗ ಆ ಯಕ್ಷಿದೇವತೆ ಎಲ್ಲಿರುವಳು ಗುರುಪಾದವೆ?” +ಎಂದು ಕೇಳುವ ಪ್ರಸ್ತಾವದಲ್ಲಿ ಮಹಾನುಭಾವ ‘ಬಾ’ ಎಂದು ಚಂದಮುತ್ತನ್ನ ಕಾಡುಜಂಗಲ್‌ದಲ್ಲಿದ್ದಂಥಾ ಒಂದು ಹಾಳು ಗುಡಿಗೆ ಕರೆದು ತಂದ. ಗರ್ಭಗುಡಿ ವಿನಾ ಹೊರಗೆಲ್ಲ ಹಾಳು ಬಿದ್ದಿತ್ತು. ಒಳಗೆಲ್ಲ ಅಂಧತಮಸ್ಸು ಕಗ್ಗತ್ತಲಿತ್ತು. ತೋರಿಸಿದನೇ ವಿನಾ ಮಹಾನುಭಾವ ಒಳಕ್ಕೆ ಬರಲಿಲ್ಲ. ಚಂದಮುತ್ತ ಕಾಲಿನೆಕ್ಕಡ ಕಳಚಿ ಕಗ್ಗತ್ತಲಲ್ಲಿ ಕಾಲಾಡಿಸುತ್ತ ಒಳಕ್ಕೆ ನಡೆದ. ತುಸು ಹೊತ್ತಿನಲ್ಲಿ ತಡಕಾಡುವ ಕಾಲಿಗೆ ಯಕ್ಷಿಯ ಕಾಲುತಾಗಿ ‘ದೇವೀ’ ಅಂದ. ಮಲಗಿದ್ದ ಚಕೋರಿ ಎಂಬ ಯಕ್ಷಿ ಮೆಲ್ಲಗೆ ಕಣ್ಣು ತೆರೆದಳು. ಎಳೆಹಸಿರು ಬಣ್ಣದ ಜ್ಯೋತಿಗಳೆರಡು ಸಣ್ಣಗೆ ಹೊತ್ತಿಕೊಂಡವು. ಕಣ್ಣಿಗೆ ಪ್ರಿಯವೂ ಹಿತಕರವೂ ಆಗಿತ್ತು ಬೆಳಕು. ಆ ಬೆಳಕಿನಲ್ಲಿ ನೋಡಿದಾಗ ಕರುಳು ಕಿತ್ತು ಕಣ್ಣಿಗೆ ಬಂತು. ದೇವಿಯ ಕಣ್ಣು ವಿನಾ ಉಳಿದೆಲ್ಲ ದೇಹ ಸೆಟೆದುಕೊಂಡಿತ್ತು. ಧೂಳು ಕೆಸರಂಟಿ ಕೊಳೆಯಾಗಿದ್ದವು ಬಿಳಿರೆಕ್ಕೆ, ಅಲುಗಾಡುತ್ತಿರಲಿಲ್ಲ ಕೈಕಾಲು. ಇವನ ನೋಡಿ ಮೂಗಿನ ಪವನ ಬಿರುಸಾದವು. ನಿಟ್ಟುಸಿರ ಹೊಯ್ಲಿನಿಂದ ತುಟಿ ಒಣಗಿದ್ದವು. ಮಾತಾಡಲು ಯತ್ನಿಸಿದಳು. ಬಾಯಿ ಬರಲಿಲ್ಲ. ಪಣತಿಯ ಕೊನೆಯಿಂದ ತೈಲ ಸೋರುವ ಹಾಗೆ ಧಾರಾವತಿ ಕಣ್ಣೀರು ಜಲ ತುಳುಕಿದಳು ಯಕ್ಷಿ. ನೋಡಲಾರದೆ “ಗೋನು ಕುಯ್ದೆಯೋ ಶಿವನೇ” ಎಂದು ತನ್ನಿಂದಾಗಿ ಈ ಅವಸ್ಥೆಗೆ ಬಂದ ಯಕ್ಷಿ ಸಾಯುವ ಮುನ್ನ ತಾನು ಸಾಯುವುದೆ ಮೇಲೆಂದು ಕುಂತಿರಲಾರದೆ ಎದ್ದು ಹೊರಬಂದ. +ಗುಡಿಯ ಹೊರಗೆ ತಪ್ಪಿತಸ್ಥ ಮಹಾನುಭಾವ ನಿಂತಿದ್ದ. ಇವನ ಕಂಡು ಇನ್ನೇನೋ ಅನಾಹುತವಾಯಿತೆಂದು ಹೌಹಾರಿದ. ಚಂದಮುತ್ತ ನೇರ ಇವನ ಬಳಿಗೆ ಹೋಗಿ +“ದೇವಿಯ ಉಳಿಸುವ ಉಪಾಯ ಯಾವುದೂ ಇಲ್ಲವೇ ಗುರುಪಾದವೇ?”-ಅಂದ. +“ಇದೆ ಆದರೆ ಹೇಳಲಾರೆನಪ್ಪ, ಪಾಪಿ ನಾನು. ಈ ಬಗ್ಗೆ ಒತ್ತಾಯ ಮಾಡಬೇಡ”ಎಂದ ಅಳುತ್ತ. +“ಅದೇನಿದ್ದರೂ ಹೇಳು ಗುರುಪಾದವೇ” +-ಎಂದು ಕಾಲು ಹಿಡಿದು ಕೇಳಿದ ಚಂದಮುತ್ತ. +“ಹ್ಯಾಗೆ ಹೇಳಲಿ ನನ್ನಪ್ಪಾ; ತಪ್ಪು ಮಾಡಿದವ ನಾನು. ಜೀವಾ ಕೊಟ್ಟರೂ ಕಡಿಮೆ. ಆದರೆ ನನ್ನ ಜೀವದಿಂದ ಅವಳು ಉಳಿಯಲಾರಳು. ನನ್ನ ತಪ್ಪಿಗಾಗಿ ಇನ್ನೊಬ್ಬರ ಬಲಿ ಹ್ಯಾಗೆ ಕೊಡಲಿ?” +“ಅದೇನಿದ್ದರೂ ಹೇಳು ಗುರುಪಾದವೇ.” +“ಕರ್ತವ್ಯವೆಂದು ಹೇಳುತ್ತೇನೆ ಕೇಳು. ಶಿವರಾತ್ರಿಯ ದಿನ ಮಹಾನ್ ಕಲಾವಿದನೊಬ್ಬ ತಿಂಗಳು ರಾಗ ಹಾಡಬೇಕು ಇಲ್ಲವೆ ನುಡಿಸಬೇಕು. ತಿಂಗಳು ರಾಗಕ್ಕೆ ಶಿವ ಒಲಿಯಬೇಕು. ಶಿವ ಒಲಿದಿದ್ದರ ಗುರುತೆಂದರೆ ಅಮಾವಾಸ್ಯೆಯ ದನ ಚಂದ್ರ ಕಾಣಿಸಬೇಕು. ಆವಾಗ ಇವಳಿಗೆ ಮೂಲ ದೈವತ್ವ ಒದಗಿ ಬಂದು ಹಾರುತ್ತಾಳೆ. ಆದರೆ ತಿಂಗಳು ರಾಗ ಬಲ್ಲವರು ಯಾರಿದ್ದಾರೆ, ಎಲ್ಲಿದ್ದಾರೆ?” +“ನಾನಿದ್ದೇನೆ ಹೇಳು ಗುರುಪಾದವೇ” +“ಹಾಗಿದ್ದರೆ ಮುಂದಿನ ಮಾತು ಹೇಳಲಾರೆ” +-ಎಂದು ಹೇಳಿ ಮಹಾನುಭಾವ ಸಾವನ್ನ ಕಂಡವರಂತೆ ಓಡತೊಡಗಿದ. ತಕ್ಷಣ ಚಂದಮುತ್ತನೂ ಬೆಂಬತ್ತಿ ಓಡಿ ಹೋಗಿ ಮತ್ತೆ ಕಾಲು ಹಿಡಿದು, “ಹೇಳದಿದ್ದರೆ ಶಿವನಾಣೆ ನಿನಗೆ” ಎಂದ. +ಮಹಾನುಭಾವ ಹತಾಶನಾಗಿ ಕುಸಿದು – +“ಎಷ್ಟಂತ ಪಾಪ ಮಾಡಲಿ? ಈಗ ಮಾಡಿದ್ದು ಸಾಲದೆ ನನ್ನಪ್ಪ?” +“ಹೇಳುವುದನ್ನು ಪೂರ್ತಿ ಮಾಡು ಶಿವನೇ” +“ತಿಂಗಳು ರಾಗ ಹಾಡಿದವನು ಅವಳಿಗೆ ದೈವತ್ವ ಒದಗಿ ಹಾರಿದೊಡನೆ ಶಿಲೆಯಾಗುತ್ತಾನೆ ನನ್ನಪ್ಪ” +ಆನಂದದಿಂದ ಚಂದಮುತ್ತನ ಕಣ್ಣು ಭಗ್ಗನೆ ಹೊತ್ತಿಕೊಂಡವು. +“ಇದು ನಿಜವೆ ಶಿವಪಾದವೆ? ನಿನಗಿದನ್ನ ಯಾರು ಹೇಳಿದರು?” +“ಮಾತು ತಪ್ಪಿದರೆ ನನ್ನ ಕಿವಿ ಹರಿದು ಕಿರಿಬೆರಳಿಗೆ ಉಂಗುರ ಮಾಡಿಕೊ ನನ್ನಪ್ಪ. ಇಂಥಾ ಪ್ರಸ್ತಾವದಲ್ಲಿ ಶ್ರೋತೃಸುಖ ನುಡಿಯಲಾರೆ, ಇದು ನಿಜ.” +ಅವಳ ಸಖಿಯರಿಬ್ಬರು ಮಾತಾಡಿಕೊಂಡುದನ್ನ ನಾನು ಕದ್ದು ಕೇಳಿಸಿಕೊಂಡೆ. ಇಲ್ಲಿಯವರೆಗೆ ಸತ್ತಿದ್ದೆನೆಂದು ಭಾವಿಸಿದ್ದೆ. ಈಗ ಬದುಕೋ ಸಮಯ ಬಂದಿದೆ ಅಂದ್ಕೊತೇನೆ. ದಯಮಾಡಿ ಕ್ಷಮಿಸು ನನ್ನಪ್ಪ.” +-ಎಂದ ಮಹಾನುಭಾವ. +“ಉಪಕಾರವಾಯ್ತು ಶಿವನೆ, ಯಕ್ಷಿಯ ಬಿಡುಗಡೆ ಮಾಡದಿದ್ದರೆ ಚಂದಮುತ್ತನೆಂಬೋ ಛಲ ನನಗ್ಯಾಕೆ?” +-ಎಂದು ಮಹಾನುಭಾವನ ಕಾಲುಮುಟ್ಟಿ ನಮಸ್ಕರಿಸಿ ಮತ್ತೆ ಗುಡಿಯೊಳಗೋಡಿದ ಚಂದಮುತ್ತ. ಹೆಗಲ ಕಂಬಳಿ ಹಾಸಿ ಅದರಲ್ಲಿ ಯಕ್ಷಿಯ ಮಲಗಿಸಿ ಕೂಸಿನ ಹಾಗೆ ಸುತ್ತಿ ಘಾಸಿ ಮಾಡದ ಹಾಗೆ ಎತ್ತಿಕೊಂಡು ತನ್ನ ಹಟ್ಟಿಗೆ ನಡೆದ. +ಭಾರ ಇಳಿವಿದ ಹಾಗೆ ಹಗುರವಾದ ಮಹಾನುಭಾವ. +ಯಕ್ಷಿಯ ಪಾದ ಬಿದ್ದಲ್ಲಿಯ ಧೂಳನ್ನ +ತಲೆಗೆ ಹಚ್ಚಿಕೊಳ್ಳಬೇಕೆಂದು +ಹಾಳು ಗುಡಿಯೊಳಕ್ಕೆ ಹೋದ. +೪೪. ಬಿಸಿಲಗುದುರೆಯನೇರಿ ಹೋದಾ +ಇದ್ದಕ್ಕಿದ್ದಂತೆ ಹೇಳಕೇಳದೆ ದಿಕ್ಕು ದೇಶಾಂತರ ಹೋದ ಮಗನ ಬೇಲಿಯಿಲ್ಲದ ಬದುಕಿನ ಬಗ್ಗೆ ಶಿವನಲ್ಲಿ ಬೇಕಾದಷ್ಟು +ತಕರಾರೆತ್ತಿದಳು ಅಬ್ಬೆ. +ಪಳಗಿಸಲಾರೆ ಮಗನ್ನ, +ಅವನಿಗಮರಿಯ ವ್ಯಸನ +ಮ್ಯಾಲೆ ಚಂದ್ರನ ಗ್ಯಾನ. +ನೀವಾದರೂ ಹಿಂದಿರುಗಿ ಕಳುಸಿರೇ ಮಗನ್ನ +ಎಂದು ಅಬ್ಬೆ ಸುತ್ತಿನ ದೇವರಿಗೆ ಸೆರಗೊಡ್ಡಿ ಹಾಡಿ ಬೇಡಿಕೊಂಡಳು: +ಬಿಸಿಲುಗುದುರೆಯನೇರಿ ಹೋದಾ +ಕೈಮೀರಿದ ಚಂದಿರನ ಬೇಟೆಗೆ ಹೋದಾ || ಪ || +ಬೆಳ್ಳಿಯ ಮೀನಾಗಿ +ಬೆಳದಿಂಗುಳಲೀಜುವ +ಚಂದ್ರನ ಹಿಡಿಯುವೆನೆಂದಾ | ಅಪ | +ಹಾರುವ ಧ್ವಜದಂಥಾ ಪೊಗರಿನ ಬಾಲಕ +ಮುಗಿಲಿಗೆ ಎರಗುವೆನೆಂದಾ | +ಆಕಾಶದಂಗಳಕೆ ನುಗ್ಗಿ ಲಗ್ಗೆಯ ಹಾಕಿ +ಸೂರೆ ಮಾಡುವೆ ಸಿರಿಯನೆಂದಾ | +ಕಣ್ಣಿಗೆ ಬಣ್ಣವ ಮೆತ್ತುವ ಕನಸಿನಲಿ +ನಿಮ್ಮ ಮುಳುಗಿಸುತೇನೆ ಅಂದಾ || ಹೋದಾ || +ಅಂಬಾರದಾಚೆಯ ರಂಭೇರ ನಾಡಿಂದ +ಬಾಡದ ನಗೆ ತರುವೆನೆಂದಾ | +ಚಕ್ಕಂದವಾಡುವ ಚಿಕ್ಕೆ ತಾರೆಗಳನ್ನ +ಉಡಿತುಂಬ ತರುತೇನೆ ಅಂದ | +ಸೊಕ್ಕಿದ ಚಂದ್ರನ ಸಭ್ಯನ ಮಾಡುವೆ +ಪಳಗಿಸುವೆ ದೇವರನೆಂದಾ || ಹೋದಾ || +ಹೋದವ ಬಾರದೆ ಕಾತರ ತಾಳದೆ +ಕಣ್ಣ ಹಡದಿಯ ಹಾಸಿ ಕಾದೆ | +ಬಂದೇ ಬರುತಾನಂತ ಆಕಾಶದಂಗಳದ +ಒಂದಾರೆ ಹೂ ತರುತಾನಂತ | ಭ್ರಾಂತ +ಯಾವೇರುಪೇರಿನಲಿ ದಾರಿ ತಪ್ಪಿದನೇನೋ +ಕಂಡರೆ ಕಳಿಸಿರಿ ತಿರುಗಿ | ಆ ಬಾಲನ || +ಹಾಡುತ್ತ ಹಾಡುತ್ತಾ ದನದ ಶಕುನವ ಕೇಳಬೇಕೆನಿಸಿತು ಅಬ್ಬೆಗೆ. ಅವಸರದಿಂದ ಕೊಟ್ಟಿಗೆಗೆ ಹೋಗಿ ಕಪಿಲೆಯ ಮುಂದೆ ಕುಂತಳು. +“ದಿಕ್ಕು ದೇಶಾಂತರ ಹೋದ ಮಗ ಮತ್ತೆ ಬರುತಾನೆಂದರೆ ಬಲಗಾಲೆತ್ತು ಇಲ್ಲದಿದ್ದಲ್ಲಿ ಎಡಗಾಲೆತ್ತು”-ಎಂದಳು. +ಕಪಿಲೆ ಬಲಗಾಲೆತ್ತಿತು. ಅಬ್ಬೆಯ ಪ್ರೋತ್ಸಾಹ ಉಕ್ಕಿ ಬಂತು. +“ಈ ವಾರ ಬರುತಾನೆಂದರೆ ಬಲಗಾಲೆತ್ತು. ಇಲ್ಲದಿದ್ದಲ್ಲಿ ಎಡಗಾಲೆತ್ತು”ಎಂದಳು. +ಕಪಿಲೆ ಬಲಗಾಲೆತ್ತಿತು. ಆನಂದದ ಅಮಲೇರಿತು ಮುದುಕಿಗೆ. +“ಇವತ್ತೇ ಬರುತ್ತಾನೆಂದರೆ ಬಲಗಾಲೆತ್ತು; ಇಲ್ಲದಿದ್ದರೆ ಎಡಗಾಲೆತ್ತು”-ಎಂದಳು. +ಕಪಿಲೆ ಈಗಲೂ ಬಲಗಾಲೆತ್ತಿದ್ದೇ- ಅಬ್ಬೆಗೆ ಮುದದ ಹುಚ್ಚಡರಿ ಮಕ್ಕಳ ಹಾಗೆ ನಲಿದಾಡಿದಳು. ಕೊಟ್ಟಿಗೆಯಲ್ಲಿ ಕಾಲೂರಲೊಲ್ಲಳು. ಕರುಮರಿಗಳಿಗೆ ಕಲ್ಗಚ್ಚು ಬೆರೆಸಿ ನೀರು ಕುಡಿಸಿ ದನ ಹಿಂಡಿಕೊಂಡಳು. ಗೂಡಿನ ಮೂಲೆಮೂಲೆ ಗುಡಿಸಿ ಸೆಗಣಿ ಸಾರಣೆ ಮಾಡಿ ಅಂಗಳದಲ್ಲಿ ಬಣ್ಣದ ರಂಗೋಲಿ ಹುಯ್ದಳು. ಮೊಸರು ಕಡೆದು ಬೆಣ್ಣೆ ಮಾಡಿ ದೈವದ ಮುಂದೆ ತುಪ್ಪದಲ್ಲಿ ಜಗ ಜಗ ಬೆಳಕಿಟ್ಟಳು. ಪರಿಮಳ ನಾರುವ ಬಗೆ ಬಗೆ ಭಕ್ಷ್ಯಗಳ ಮಾಡಿ ಹೊಟ್ಟೆಗೆ ಬೊಗಸೆ ನೀರು ಕೂಡಾ ಕುಡಿಯದೆ ಮುಖದ ಮುತ್ತು ಬೆವರೊರೆಸಿಕೊಂಡು ಮಗನ ದಾರಿ ಕಾಯುತ್ತ ಕುಂತಳು. ಸೂರ್ಯನಾರಾಯಣ ದೇವರು ಅಸ್ತಂಗತನಾಗಿ ಕತ್ತಲಾದರೂ ಮಗ ಬರಲಿಲ್ಲ. ಬರುವನೆಂಬ ನಂಬಿಕೆ ಕಂದಲಿಲ್ಲ. ಕಾಯುತ್ತ ಕುಂತವಳು ಹಾಗೇ ಸಪನಿದ್ದೆಗೆ ಸಂದಳು. ಸ್ವಪ್ನದಲ್ಲಿ – +ಯಾರೋ ಗೂಡಿನ ಮುಂದೆ ಓಡಿ ಬಂಧಂಗಾಯ್ತು. +ಕದ ಬ್ಯಾಗ ತೇಗೀರೆಂದು ಕೂಗಿಧಂಗಾಯ್ತು. +ಅಬ್ಬೆ ಕದ ತೆರೆದರೆ +ಕದ ತಳ್ಳಿ ಒಳನುಗ್ಗಿ +ಬೆನ್ನ ಹಿಂದಿಲೆ ಕದಮುಚ್ಚಿ ನಿಟ್ಟುಸಿರಿಟ್ಟ, +ಗುರುತಿಲ್ಲ ಯಾರೋ ಪರ ಊರಿನವ. +ಬೆಂದ ಹೂವಿನ ಹಾಗೆ ಎಳೆಯ ಮುಖ ಬಾಡಿತ್ತು. +ಮೈಮುಖ ಧೂಳಿನಲಿ ಉರುಳಾಡಿಧಂಗಿತ್ತು. +ಓರೆಗೂದಲು ಕಟ್ಟಿ ನವಿಲುಗರಿ ಸಿಗಿಸಿದ್ದ. +ಮುರಿದ ಕೈದುಗಳ ಕೈಯಲ್ಲಿ ಹಿಡಿದಿದ್ದ. +ಮೊನಚಾದ ನಕ್ಷತ್ರ ಎದೆಯೊಳಗೆ ನಾಟಿತ್ತು +ಹನಿ ಹನಿ ನೆತ್ತರು ನೆಲಕೆ ಸೋರಿತ್ತು. +ಬೇಟೆಯಲಿ ನೊಂದ ಮಿಗ ನರಳಿಧಂಗಿತ್ತು. +ಹಿಂದಿನಿಂದ್ಯಾರೊ ಬಂದಾರೆಂಬ ಭಯವಿತ್ತು. +ಕದಕೆ ಅಗಳಿಯ ಹಾಕಿ +ಹಡೆದವ್ವಾ ರಕ್ಷಿಸೆಂದ. +ಒಳಗಿದ್ದ ಕತ್ತಲ ಕಂಡು ಬದುಕಿದೆನೆಂದ. +ಅಂಬೆಗಾಲಿಡುತ ಅಬ್ಬೆಯ ಬಳಿ ಬಂದ. +ಬೆಂಬತ್ತಿ ಬರುವವರು ಯಾರು ಕಂದಾ? +ಎಂದಳು ಅಬ್ಬೆ. ಅವನಂದ : +ಚಂದ್ರ ಬರುತ್ತಿದ್ದಾನೆ ಹಿಂದಿನಿಂದ! +ಯಾ ರೂಪದಿಂದಲೋ ಯಾ ಮಾಯೆಯಿಂದಲೋ +ಬೇಟೆಯಾಡುತ ಚಂದ್ರ ಬಂದೇ ಬರುವ, +ಈ ನಿನ್ನ ಕಂದನ್ನ ಕಾಪಾಡೆ ಎವ್ವ. +ಅವ್ವಾ ಅಂದನೆ ಕಂದ, ಅಬ್ಬೆಯ ಮೊಲೆ ತುಂಬಿ +ಚಿಲ್ಲಂತ ಚಿಮ್ಮಿದವು ಹಾಲು. +ಹಾಲು ಕಂಡದ್ದೇ ಹೋ ಹಾಲು ಬೆಳ್ದಿಂಗಳೆಂದು, +ಚಂದ್ರ ಬಂದನು ಎಂದು ಸೆಟೆದು ಬಿದ್ದ! +ಫಕ್ಕನೆಚ್ಚರವಾಯ್ತು ಲಕ್ಕಬ್ಬೆಗೆ. ಜಲಜಲ ಬೆವರಿ ಕುಂತ ನೆಲ ಒದ್ದೆಯಾದವು. ಅಷ್ಟರಲ್ಲಿ ಕದ ಬಡಿದ ಸದ್ದು ಕೇಳಿಸಿ, ಮೈ ಕೊಡಹಿ ಎದ್ದು ಬೀಳುತೇಳುತ ಪಣತಿ ಸಮೇತ ಬಂದು ಕದ ತೆಗೆದು- ಹೊರಗಿಣಿಕಿದರೆ ನಿಂತಿದ್ದಾನೆ ಮಗರಾಯ! ಯಕ್ಷಿಯ ಹೊತ್ತುಕೊಂಬಂದ ಚಂದಮುತ್ತ ಅಬ್ಬೆಯ ಕಿವಿಯಲ್ಲಿ ‘ಯಕ್ಷಿ’ ಎಂದುಸುರಿದ. ಮಗನಿಗಿಂತ ಮುಂಚೆ ಮಂಚದ ಬಳಿಗೋಡಿ ಕಂಬಳಿ ಹಾಸಿ, ದಿಂಬಿಟ್ಟು ಅದರ ಮ್ಯಾಲೆ ಯಕ್ಷಿಯ ಮಲಗಿಸಲು ನೆರವಾದಳು. ಇವಳೂ ನವತಂತ್ರಿ ನರಸಯ್ಯನ ಮಾಟಕ್ಕೆ ಬಲಿಯಾದಳೆಂಬುದು ಕೂಡಲೇ ಹೊಳೆದುಬಿಟ್ಟಿತು ಅಬ್ಬೆಗೆ. ಮೆಲ್ಲಗೆ ಕಂಬಳಿ ಓಸರಿಸಿ ನೋಡಿದಳು : ಸವೆದ ಶಕ್ತಿಯಿಂದ ಸೀದ ಚೆಲುವಿನ ಆಕಾಶ ದೇವತೆಯ ಅಸಹಾಯಕ ಸ್ಥಿತಿಗೆ ಆಘಾತವಾಯಿತು. ನರಮಾನವರಿಗೆ ವರಕೊಡುವ ಖೇಚರಿ ಈಗ ಭೂಚರರ ಕರುಣೆಯ ಕೈಗೂಸಾಗಿ ಬಿದ್ದುಕೊಂಡಿದ್ದಾಳೆ! ನೋಡಿದ್ದೇ ಮೊಟ್ಟೆಯಂತೆ ಅಖಂಡವಾಗಿದ್ದ ಅಬ್ಬೆಯ ಬ್ರಹ್ಮಾಂಡದಲ್ಲಿ ಬಿರುಕುಂಟಾಯಿತು. ದೇವರು, ಜಗತ್ತು ಮತ್ತು ನರಮಾನವರ ಸಂಬಂಧದ ಸಮತೋಲ ತಪ್ಪಿ ಏನೇನೋ ಧ್ಯಾನಿಸಿದಳು. +೪೫. ಹೇಳಬೇಕಾದ್ದನ್ನು ಹೇಳಿದೆನು ಮಗನೆ +ಬೆಳಗಿನ ಕನಸಿನಲ್ಲಿ ಮಗ ಬರುವ ಸೂಚನೆ ಕೊಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ಅಬ್ಬೆಯ ಆತ್ಮಶಕ್ತಿ ನಮಗೇ ಗೊತ್ತಿಲ್ಲದೆ ಕಾಲ ಮೀರಿದ ಮಾನವ ಕುಲದ ಭಯಾನಕ ಸತ್ಯಗಳನ್ನು ಅಭಿನಯಿಸುವಂತೆ ನಿರ್ದೇಶನ ನೀಡಿತು. ಕನಸಿನಲ್ಲಿ ಬಂದವನು ಚಂದಮುತ್ತನಲ್ಲವೇ?- ಎಂದೆನಿಸಿ ಪ್ರಶ್ನೆಯ ಎದುರಿಸಲಾರದೆ ದೂರದಿಂದ ಯಾರೋ ಕರೆದಂತೆನಿಸಿ ಓ ಎಂದು ಒಲೆಯ ಬಳಿಗೋಡಿದಳು. ಅಬ್ಬೆಯ ಸಮಯ ನೋಡಿಕೊಂಡು ಚಂದಮುತ್ತ ಅಲ್ಲಿಗೇ ಬಂದು ಹೇಳಿದ : +“ನಾನು ಇಷ್ಟು ದಿನ ಅಗಲಿದ್ದಕ್ಕೆ ತುಂಬ ನೊಂದಿರುವೆ ಅಬ್ಬೆ” +“ಇಲ್ಲವಲ್ಲ. ನೀನು ಸದಾ ನನ್ನ ಹೃದಯದಲ್ಲಿ ಬೆರಳು ಸೀಪುತ್ತ ಚಂದ್ರನ ಕನಸು ಕಾಣುತ್ತ ಮಲಗಿದ್ದೆ” +-ಎಂದಳು. ಸೂತ್ರ ಹರಿದ ಅಬ್ಬೆಯ ಮಾತಿಗೆ ಬೆರಗಾದ. +“ಅಬ್ಬೆ ನಿನ್ನೊಂದಿಗೆ ಹೇಳಬೇಕಾದ ಸಂಗತಿಗಳಿವೆ”- ಎಂದು ಚಂದಮುತ್ತ ಹೇಳಿದಾಗ ಮಗ ಯಾವುದೋ ಅಪಾಯಕ್ಕೆ ಆಶೀರ್ವಾದ ಕೇಳುವನೆಂದು ಖಾತ್ರಿಯಾಗಿಬಿಟ್ಟಿತು ಮುದುಕಿಗೆ. ಈಗ ರಕ್ಷಿಸಿಕೊಳ್ಳಬೇಕು ಮಗನನ್ನ ಮತ್ತು ತನ್ನನ್ನ- +ನನಗೆ ವಯಸ್ಸಾಯ್ತು. +ಸೋಜಿಗಗಳೆಲ್ಲ ಸತ್ತಿವೆ ನನ್ನಪ್ಪ. +ಈಗೊ ಇನ್ಯಾವಗೊ ಶಿವನ ಕರೆ ಬಂದರೆ +ಮುಗಿಯಿತು ನನ್ನ ಆಟ, +ಬದುಕಿನ ಆಟಿಗೆ ಚೆಲ್ಲಿ ಹೊರಡೋದೇ. +ಆಮ್ಯಾಕೆ ಬಿದ್ದಿರುತಾವೆ ಆಟಿಗೆ,- +ಈ ಗೂಡು, ಈ ಹಟ್ಟಿ, ದನ ಕರ ಈ ಕಾಡು +ಬೆಳುದಿಂಗಳು, ನೀನು ಕೂಡ. +ಅಬ್ಬೆಯ ಗಲಿಬಿಲಿ ನೋಟ ಮತ್ತು ಮಾತುಗಳಿಂದ ಗೊಂದಲಗೊಂಡ ಚಂದಮುತ್ತ ಉಪಾಯವಾಗಿ ಹೇಳಿದ : +“ಅಬ್ಬೆ ಹಸಿವಾಗಿದೆ.” +“ಅಯ್ಯೋ ನನ್ನಪ್ಪಾ” +-ಎಂದು ಮುದುಕಿ ನಿನ್ನೆ ಮಾಡಿಟ್ಟ ಅನ್ನ ಅಂಬಲಿಯನ್ನೇ ಹರಿವಾಣಕ್ಕೆ ಬಡಿಸಿ ತುತ್ತು ಮಾಡಿ ಮಗನ ಬಾಯಿಗಿಡುತ್ತ ಕೇಳಿದಳು: +“ನಿನ್ನ ಯಕ್ಷಿ ನಮ್ಮ ಕೂಳು ತಿನ್ನುವಳೇನಪ್ಪ?” +“ಇಲ್ಲ ಅಬ್ಬೆ. ಆಕೆ ಉಂಬುವುದು ಬೆಳ್ದಿಂಗಳು ಮಾತ್ರ.” +“ಈ ದುರವಸ್ಥೆಯಿಂದ ಅವಳಿಗೆ ಯಾವಾಗ ಮುಕ್ತಿ ನನ್ನಪ್ಪ?” +“ಶಿವರಾತ್ರಿಯ ದನ ತಿಂಗಳು ರಾಗ ನುಡಿಸಬೇಕು. +ತಿಂಗಳು ರಾಗಕ್ಕೆ ಕೆರಳಿ, +ಚಂದ್ರಾಮಸ್ವಾಮಿ ಉದಯವಾಗಿ +ಅವಳ ಮೈಗೆ ಬೆಳ್ದಿಂಗಳು ತಾಗಿದಲ್ಲಿ +ದೈವತ್ವ ಒದಗಿ ಮುಕ್ತಿಯಾಗಬೇಕು.” +ಶಿವರಾತ್ರಿಯ ಅಮಾವಾಸ್ಯೆಯ ದಿನ ಚಂದ್ರಾಮಸ್ವಾಮಿ ಉದಯವಾಗಬೇಕೆ? ಶಿವ ಶಿವಾ! ಎಂದು ಹೊಯ್ಕಿನಿಂದ ಅಬ್ಬೆ ಕುಂತಳು. ಆದರೆ ಚಂದಮುತ್ತ ಯಕ್ಷಿಗೆ ದೈವತ್ವ ಒದಗಿದಾಗ ತಾನು ಶಿಲೆಯಾಗಲಿರುವ ವಿಚಾರ ಹೇಳಲಿಲ್ಲವಾಗಿ ಇದರಲ್ಲಿ ಅಪಾಯವಿಲ್ಲೆಂದು ಅಬ್ಬೆ ಅರಿತಳು. ಆದರೂ ಕನಸಿನ ನೆನಪಾಗಿ, +“ಹೇಳಬೇಕಾದ್ದನ್ನು ಹೇಳಿದೆನು ಮಗನೆ. +ಹಿತಕರದ ಮಾತಲ್ಲವೆಂದು ತೋರಿತೆ? +ಅದುಬಿಟ್ಟು ಹಿಡಿ ನಿನ್ನ ದಾರಿ. +ನಿನ್ನ ಬೆನ್ನಿನ ಹಿಂದೆ ನಾನಂತು ಇದ್ದೇನೆ.” +-ಎಂದಳು. +೪೬. ಇಷ್ಟೇ ತಾಯಿ ನನ್ನ ಭಕ್ತಿ +ರಾತ್ರಿ ಆಕಾಶ ಮಂಡಲದ ಉಲ್ಕೆಯೊಂದು ಉರಿದುರಿದು ಯಕ್ಷಿಯ ಗುಡಿಯ ಮ್ಯಾಲೆ ಉದುರಿದ ಹಾಗೆ ಕನಸಾಗಿತ್ತು. ಭೀತನಾಗಿದ್ದ ಕುಲಗುರು ಕರಿಕಂಬಳಿಯ ಗದ್ದಿಗೆಯ ಮ್ಯಾಲೆ ಕುಂತು ಕವಡೆ ಶಾಸ್ತ ಗುಣಿಸುತ್ತಿರಬೇಕಾದರೆ ಮುಗಿದ ಕೈ ಹೊತ್ತು ದಯವಾಗು ಶಿವನೇ ಎಂದು ಚಂದಮುತ್ತ ಬಂದು ಮೈ ಹಾಸಿ ಅಡ್ಡಬಿದ್ದ. ಕುಲಗುರು ಬಗಲ ಚೀಲದಿಂದ ಬಂಡಾರವ ತೆಗೆದು ಹಣೆ ತುಂಬ ಹಚ್ಚಿ ಜಯದಿಂದ ಬದುಕು ನನ್ನಪ್ಪಾ ಎಂದು ಬಾಗಿದ ಚಂದಮುತ್ತನ ನೆತ್ತಿಯ ಮ್ಯಾಲೆ ಎರಡೂ ಕೈಯಿಟ್ಟು ಆಶೀರ್ವದಿಸಿದ. ಚಂದಮುತ್ತ ಮಹಾನುಭಾವನ ಭೇಟಿಯಿಂದ ಹಿಡಿದು ಮುರಿದ ಮಹಿಮೆಯ ಯಕ್ಷಿ ಪುನಃ ತನಗೆ ದೊರೆತವರೆಗಿನ ಕಥಂತರವ ನಿರೂಪಿಸಿ, ಅವಳ ಧರ್ಮಸೆರೆ ಬಿಡಿಸಿ ಪುನಃ ಹಾರಾಡುವಂತೆ ಮಾಡಬೇಕಾದರೆ ಯಾವ್ಯಾವ ವ್ರತ ನಿಯಮ ಉಪಾಯಂಗಳ ಪಾಲಿಸಬೇಕೆಂದು ತಿಳಿಸಿ, ತಾನು ಶಿಲೆಯಾಗಲಿರುವ ಅನಿವಾರ್ಯವ ಹೇಳಿ, ಅಬ್ಬೆಯ ಕಾಪಾಡಿ ನನ್ನ ಸತ್ಯಕ್ಕೆ ಒದಗು ಶಿವಪಾದವೇ ಎಂದು ಕಾಲು ಹಿಡಿದ. ಕುಲಗುರುವಿಗೆ ತನ್ನ ಕನಸಿನ ಸತ್ಯ ನಿಚ್ಚಳವಾಗಿ ಹೊಳೆದು ಅಯ್ಯೋ ನನ್ನಪ್ಪ ಎಂದು ಗಾಬರಿಯಾಗಿ ಗಪ್ಪನೆ ಶಿಷ್ಯನ ತಬ್ಬಿಕೊಂಡ. ಮಳೆಗಾಲದ ಗುಡುಗಿನಂತೆ ಬಡಕೊಂಬ ಎದೆಯ ಗಟ್ಟಿಯಾಗಿ ಶಿಷ್ಯನ ತಲೆಗೊತ್ತಿ ಹಿಡಿದವನು ಗಳಿಗೆ ಹೊತ್ತಾದರೂ ಬಿಡಲಿಲ್ಲ. ಹೊತ್ತು ಬಹಳ ಹಿಂಗೇ ಕುಂತಿರುವಲ್ಲಿ ತನ್ನ ಮೈಮ್ಯಾಲೆ ಗುರುವಿನ ಕೆಂಡದಂಥ ಕಣ್ಣೀರು ಬಿದ್ದ ಅರಿವಾಗಿ ತಲೆ ಬಿಡಿಸಿಕೊಂಡು ಚಂದಮುತ್ತ ಮ್ಯಾಲೆ ನೋಡಿದ. +ಕುಲಗುರು ಕಣ್ಣೀರು ಜಲವ ಸುರಿಸುತ್ತ ಕೇಳಿದ,- +“ಯಕ್ಷಿಯ ಧರ್ಮಸೆರೆ ಬಿಡಿಸೋದಕ್ಕೆ ಬೇರೆ ದಾರಿ ಇಲ್ಲವೆ ನನ್ನಪ್ಪ?” +“ಇಲ್ಲ ಶಿವನೆ” +ಯಕ್ಷಿಯ ಬಿಡುಗಡೆ ಇಲ್ಲವೆಂದಾದರೆ ಲೋಕಕ್ಕೆ ಸಂಗೀತವಿಲ್ಲ. ಬಿಡುಗಡೆ ಇದೆಯೆಂದಾದರೆ ಅಬ್ಬೆಗೆ ಮಗನಿಲ್ಲ, ನನಗೆ ಶಿಷ್ಯನಿಲ್ಲ, ಹಟ್ಟಿಗೆ ಚಂದಮುತ್ತನಿಲ್ಲ. ಅಯ್ಯೋ ನರಮಾನವನ ನಶೀಬವೇ ಎಂದು ಮಂಡೆಯ ಮ್ಯಾಲೆ ಕೈ ಹೊತ್ತು ಕುಂತ. +-ಅದನ್ನು ನೋಡಲಾರದೆ ಚಂದಮುತ್ತ ಯಾವಾಗಲೋ ಹೋಗಿಬಿಟ್ಟಿದ್ದ, ಗುರುಪಾದಕ್ಕೆ ಅರಿಕೆ ಮಾಡದೆ. ಚಂದಮುತ್ತ ಹೋದ ಕಡೆಗೆ ಆಶೀರ್ವದಿಸುವ ಎರಡೂ ಕೈ ಎತ್ತಿ ಕುಲಗುರು ಹೇಳಿದ : +ನಮ್ಮ ಕುಲದೈವಂಗಳು, ನಮ್ಮ ಸುತ್ತಿನ ದೇವತೆಗಳೆಲ್ಲಾ +ನಿನ್ನ ಬೆಂಗಾವಲಿಗಿರಲಿ, +ದುಷ್ಟರ ಕೆಟ್ಟ ಕಣ್ಣು ಮತ್ತು ಕೈ +ನಿನ್ನ ಮುಟ್ಟದಿರಲಿ, +ಜಡೆಯಲ್ಲಿ ಪರಂಜ್ಯೋತಿ ಚಂದ್ರಾಮನ ಇಟ್ಟುಕೊಂಡ ಶಿವ +ನಿನ್ನ ಮರೆಯದಿರಲಿ ನನ್ನಪ್ಪಾ. +ಚಂದಮುತ್ತ ಹೋದದ್ದೇ ಆಯ್ತು ಆ ಗಳಿಗೆಯೇ ಮುದುಕನ ಎದೆ ಆರಿತು. ಕನಸುಗಳಾದ ನಮಗೆ ಮುದುಕರನ್ನ ಕಂಡರಾಗುವುದಿಲ್ಲ. ಆದರೆ ಈ ದಿನ ಕುಲಗುರುವಿನ ನೋಡಿ ಹಳಹಳಿಯಾಯಿತು ಬಹಳ. ಅಂದೇ ಇಳಿಹೊತ್ತಿನಲ್ಲಿ ಅಬ್ಬೆಯ ಗೂಡಿಗೆ ಹೊರಟ. ಶಕ್ತಿಯಿರಲ್ಲಿಲ್ಲ ಕಾಲಲ್ಲಿ. ಕೋಲೂರುತ್ತ ಮೆಲ್ಲಗೆ ನಡೆದ. +ಎಂದಿನಂತೆ ಲಕ್ಕಬ್ಬೆ ಧೂಳಿಗೆ ನೀರು ಕೊಡಲಿಲ್ಲ. ಬಾಯಾಸರೆಗೆ ಜೇನು ಹಾಲು ಕೊಡಲಿಲ್ಲ. ಅವಳಿಗಾಗಲೇ ತಿಳಿದು ಹೋಗಿದೆಯಾ? ತಿಳಿದರೆ ಒಳ್ಳೆಯದೇ ಆಯಿತು, ಬಾಯಿ ಬಿಟ್ಟು ಹೇಳುವ ಸೂತಕ ತಪ್ಪಿತು,- ಎಂದು ನೇರ ಮಂಚದ ಬಳಿಗೆ ಹೋದ. ಅಸಹಾಯಕ ಯಕ್ಷಿ ಯಃಕಶ್ಚಿತ್ ನರಮಾನವರ ಹಾಗೆ ಮಲಗಿದ್ದುದ ನೋಡಿ, ತೊಡೆಯ ಶಕ್ತಿ ಉಡುಗಿ ಶಿವನೇ ಎಂದು ಕುಸಿದ. ನೆರವಿಗೆ ಬಂದಾಳೆಂದು ಲಕ್ಕಬ್ಬೆಯ ನೋಡಿದ. ಅವಳು ಬಾರದೆ ನೆಲಕ್ಕೆ ಕುಕ್ಕರಿಸಿದ. ಯಕ್ಷಿಯ ಕರುಣಾಜನಕ ಚಿತ್ರ ಕಣ್ಣಿಗೆ ಭಾರವಾಗುವಂತೆ ಅಚ್ಚೊತ್ತಿಬಿಟ್ಟಿತು. +ಯಕ್ಷಿ ವಿಕಾರವಾಗಿ ನರಳಿದಳು. ಭಯದಿಂದ ಮುದುಕ ಅಯ್ಯೋ ಶಿವನೇ ಎಂದು ಕೋಲೂರಿ ಎದ್ದ. ಸಂಗೀತ ದೇವತೆ ಅಪಸ್ವರದಲ್ಲಿ ನರಳಬೇಕಾದರೆ ಎಷ್ಟೊಂದು ಕಷ್ಟವಾಗಿರಬೇಕು ಶಿವನೆ, ಎಂದು ಮರಮರ ಮರುಗಿದ. ತನ್ನಿಂದೇನೂ ಆಗದೆಂದು ಪರಿತಪಿಸಿ, ಮಾನವ ಜಲ್ಮವ ಶಪಿಸಿ, ಬೆಟ್ಟದ ಮಾಯಿಯ ನೆನೆದು ಬಗಲ ಚೀಲದ ಬಂಡಾರ ತೆಗೆದು ನಡುಗುವ ಕೈಗಳಿಂದ ಯಕ್ಷಿಯ ಪಾದಕ್ಕಂಟಿಸಿ “ಇಷ್ಟೇ ತಾಯೀ ನನ್ನ ಭಕ್ತಿ” ಎಂದು ಕೈಮುಗಿದು ಅಲ್ಲಿ ನಿಲ್ಲದೆ ಹೊರಟ. +೪೭. ಮಹಾ ಶಿವರಾತ್ರಿ +ಬೆಳ್ಳಿ ಮೂಡಿ ನಾವೆದ್ದು ಒಡಮುರಿದೇಳುವಷ್ಟರಲ್ಲಿ +ಮುಂಗೋಳಿ ಕೂಗಿ ಮೂಡು ಕೆಂಪಾಗಿ +ತುಂಬಿದ ಸೋಮವಾರ ಮಹಾ ಶಿವರಾತ್ರಿಯ +ಹಗಲು ಸೂರ್ಯ ಉದಯವಾದರು. +ಲಕ್ಕಬ್ಬೆ ಶಿವನೇ ಎಂದು ಎದ್ದು +ಮಲೆಯ ಮ್ಯಾಲಿರೋ ಕೈಲಾಸದ ಕಡೆ ಮುಖ ಮಾಡಿ +ಕೈಮುಗಿದು ಗಲ್ಲ ಗಲ್ಲ ಬಡಿದುಕೊಂಡಳು. +ಅಷ್ಟರಲ್ಲಿ, ಮರೆವಿನ ತೆರೆ ಹರಿದು +ಎದುರೆದುರು ಬಂದುಬಿಟ್ಟ +ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕ. +ಅವನ ಮರೆಯುವುದಕ್ಕಾಗಿ +ನೆಲ ಒಲೆ ಸಾರಿಸಿ ರಂಗೋಲಿ ಹುಯ್ದು +ಮಡುವಿನಲ್ಲಿ ಮಿಂದು ಬಂದಳು. +ಶಿವನಾಮವ ನಾಲಿಗೆಯ ಮ್ಯಾಲೆ ತೇಯುತ್ತ +ಬುಟ್ಟಿತುಂಬ ದವನದ ಹೂ ಮಲ್ಲಿಗೆ ಮರುಗ +ಬಿಲ್ವಪತ್ರಿಯ ತಂದು +ಬಿಲದಲ್ಲಿಯ ದೇವರ ಮ್ಯಾಲೆ ಸುರಿದಳು. +ಯಾರೂ ಸಾರದಿದ್ದರೂ ಈ ದಿನ ಆಕಾಶದಲ್ಲಿ ಈದಿನ ಯಕ್ಷಿಯ ಸಂಚರಣೆಯಿದೆಯೆಂದು, ಚಂದಮುತ್ತನ ಕೊಳಲ ಸಂಗೀತವಿದೆಯೆಂದು ಪಶುಪಕ್ಷಿ ತರುಮರಾದಿ ಜೀವರಾಶಿಗೆ ತಿಳಿದುಬಿಟ್ಟಿತ್ತು. +ಅವೆಲ್ಲ ತನ್ನನ್ನು ಕದ್ದು ನೋಡುತ್ತಿವೆಯೆನ್ನಿಸಿ ಅಬ್ಬೆಯ ಅಂತರಂಗಕ್ಕೆ ಜ್ವರ ಬಂದವು. ಮುರಿದ ಮಾತುಗಳಲ್ಲಿ ಏನೇನೋ ಕನವರಿಸಿ ಕೊನೆಗೆ ತನ್ನ ಕಂಕುಳದ ಕೂಸನ್ನು ಶಿವ ಕಸಿದನೆಂದು ಶಪಿಸಿ ಜಲ ಜಲ ಕಣ್ಣಿರು ಸುರಿಸಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲಿದಳು ತಾಯಿ. +ಅದಕ್ಕೇ ಅಬ್ಬೆಗೆ ವಿಸ್ಮೃತಿ ಮಾಡುವುದೆಂದು ನಾವು ಆಲೋಚಿಸುತ್ತಿದ್ದೆವು. ಯಾಕಂತೀರೊ? ಒದಗಲಿರುವ ಘೋರದ ಅರಿವಾಗಿ ಚಂದಮುತ್ತನ್ನ ಹೊರಗೆ ಹೋಗಗೊಟ್ಟಾಳೆಂಬ ಬಗ್ಗೆಯೇ ನಮಗೆ ಅನುಮಾನವಿತ್ತು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಮರೆಯಲೆಂದು ರಾತ್ರಿಯಿಡೀ ಅಬ್ಬೆಯ ಕಣ್ಣಿಗೆ ಹಿತಕರವಾದ ಹಳವಂಡಗಳ ತೋರಿದೆವು. +ಯಕ್ಷಿಯ ಗುಡಿಮ್ಯಾಲೆ ಚಂದಮುತ್ತ +ಚಂದ್ರಮಂಡಳದಷ್ಟು ಎತ್ತರವಾದ ಧ್ವಜ ಹಾರಿಸಿದಂತೆ, +ಕಲ್ಲಿನ ರಥವೇರಿ +ಕೈಲಾಸಕ್ಕೆ ಲಗ್ಗೆಯಿಟ್ಟಂತೆ, +ಚಂದ್ರನೊಳಗಿನ ಜಿಂಕೆಯ ಬೆನ್ನೇರಿ +ಬೆಳಕಿನ ಮಿರಿಲೋಕದಲ್ಲಿ ತೇಲಾಡಿದಂತೆ…. +ಹೀಗೆ ಒಂದಾದ ಮೇಲೊಂದು ಅರೆಬೆಂದ ಹಳವಂಡಗಳ ತೋರಿದರೂ ಅಬ್ಬೆಯ ಹೃದಯ ತಂಪಾಗಲಿಲ್ಲ. ನೆನಪಿನ ಕುಣಿಕೆ ಮತ್ತೆ ಮತ್ತೆ ಬಿಗಿದು ಎದೆಯಲ್ಲಿ ಮೂಡಿದ ಕನಸಿನ ಬಾಲಕನ ಚಿತ್ರವ ಮರೆಯಲಾಗಲೇ ಇಲ್ಲ. +ಬೆಳಗಾನೆದ್ದು ಅಬ್ಬೆ ಮಗನನ್ನ ಎಬ್ಬಿಸುವುದು ರೂಢಿ. ಆಕೆ ಬರಲಿಲ್ಲವಾಗಿ ಚಂದಮುತ್ತನೇ ಎದ್ದು ಮಡುವಿನಲ್ಲಿ ಮಿಂದೇಳಬೇಕೆಂಬಲ್ಲಿ ಕಾಡು ಮರ ನಡೆದು ಬಂದ ಹಾಗೆ ಅಲ್ಲಿಗೇ ಬಂದಳು ಅಬ್ಬೆ. ಮಾತಿಲ್ಲದ ದಂಡೆಯ ಕೊಂಬುಗಲ್ಲಿನ ಮ್ಯಾಲೆ ಮಗನ ಕೂರಿಸಿ ಹಿಡಿ ಕಲ್ಲು ತಗೊಂಡು ಚೆನ್ನಾಗಿ ಬೆನ್ನುಜ್ಜಿದಳು. ಅನ್ಯೋನ್ಯ ಮಾತಾಡಿ ಅಬ್ಬೆಯ ಸಂತವಿಸಬೇಕೆಂಬಲ್ಲಿ ಬೆನ್ನಿನ ಮ್ಯಾಲೆ ಬಿಸಿ ಹನಿ ಬಿದ್ದ ಅರಿವಾಗಿ “ಯಾಕಬ್ಬೆ?” ಎಂದು ಮ್ಯಾಲೆ ನೋಡಿದ. ಒಡಲೊಳಗಿನ ನುಡಿಯ ಹೊರಕ್ಕೆ ಹಾಕುವುದಕ್ಕೆ ಹೊತ್ತು ಹಿಡಿಯಿತು ಬಹಳ- +“ಎಷ್ಟು ಅತ್ತರೂ ನನ್ನ ಕಣ್ಣೇರು ಕೈಲಾಸಕ್ಕೆ +ಅರಿವಾಗಲಿಲ್ಲ ಬಿಡಪ್ಪ” +-ಎಂದುಸುರಿ ಯಕ್ಷಿಯ ಬಳಿಗೆ ಹೋದಳು. +ಆಮೇಲೆ ಚಂದಮುತ್ತ ಶಿವಪೂಜೆ ಶಿವಗ್ಯಾನವ ಮಾಡಿ ಕೊಟ್ಟಿಗೆಗೆ ಹೋಗಿ ಕರುಗಳ ಬಿಟ್ಟ. ಒಂದು ಕರುವೂ ತಾಯ ಮೊಲೆಗಂಟಲಿಲ್ಲ. ದನಕರುಗಳೆಲ್ಲ ಚಂದಮುತ್ತನ ಸುತ್ತಾಮುತ್ತಾ. ಗೇರಾಯಿಸ್ಕೊಂಡು ಮೌನವಾಗಿ ಅವನನ್ನೇ ನೋಡುತ್ತಾ ನಿಂತವು. ಕಪಿಲೆ ಕಡೆಗಣ್ಣಲ್ಲಿ ಕಣ್ಣೀರು ಕೆಡಿಕ್ಕಂಡು ಚಂದಮುತ್ತನ ಭುಜದ ಮ್ಯಾಲೆ ಗದ್ದ ಊರಿ ನಿಂತಿತು. +ಈ ಕಡೆ ಅಬ್ಬೆ ಚಿತ್ರಚರಿತ್ರಳಾದ ಯಕ್ಷಿಯ ಬಾಡಿದ ಲಲಿತವದನ ನೋಡಿದ್ದೇ ಕರುಳು ಹಿಂಡಿ ಬಂತು. ಉಟ್ಟ ದಟ್ಟಿಯ ಸೆರಗು ಒದ್ದೆ ಮಾಡಿಕೊಂಬಂದು ಕೊಳೆಯಾಗಿದ್ದ ಯಕ್ಷಿಯ ಮುಖ ಒರೆಸಿ, ಮೈಯಂತ ಮೈಯೆಲ್ಲ ಉಜ್ಜಿ ತೊಳೆದಳು. ಜಡೆಗಟ್ಟಿದ ಇರುಳಿನ ಹಾಗಿದ್ದ ಕಾಳನೀಳವಾದ ಸುರುಳಿಗೂದಲನ್ನು ಕಾಳಜಿಯಿಂದ ಇರೆಸಿ ತೊಳೆದು ಮೆಲ್ಲಗೆ ಬಾಚಿ ಹೆರಳು ಹೆಣೆದಳು. ಒಂದೆರಡು ಮಲ್ಲಿಗೆ ತಂದು ತುರುಬಿ, ಹಣೆಗೆ ಕುಂಕುಮವಿಟ್ಟು, ದಟ್ಟಿಯ ಸರಿಪಡಿಸಿ ಗಾಳಿ ಬೀಸಿದಳು. ಯಕ್ಷಿಯ ಅಂತಃಕರಣ ಕರಗಿ ಕಣ್ಣೀರು ಜಲವುಕ್ಕಿ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಅಬ್ಬೆಯ ನೋಡಿದಳು. ಅಬ್ಬೆಯೂ ಅತ್ತಳು. +ಈ ಮಧ್ಯೆ ಹಟ್ಟಿಗೊಂದು ಭಯಾನಕ ಸುದ್ದಿ ಬಂತು. ಯಕ್ಷಿಯ ಹುಡುಕಿಕೊಂಡು ಹೋದ ಚಿನ್ನಮುತ್ತ ಮಹಾನುಭಾವನ ಕಂಡದ್ದೇ ಯಕ್ಷಿಯೆಲ್ಲಿ ಎಂದು ಪೀಡಿಸಿದನಂತೆ. ಎಷ್ಟು ಒತ್ತಾಯ ಮಾಡಿದರೂ ಇವನು ಹೇಳಲಿಲ್ಲವಾಗಿ ಹೆದರಿಸಲು ಕಕ್ಕೆ ದೊಣ್ಣೆಯಿಂದ ಒಂದೇಟು ಹಾಕಿದರೆ ಅಷ್ಟಕ್ಕೇ ಮಹಾನುಭಾವನ ಒಂದು ಕಣ್ಣುದುರಿ ನೆಲಕ್ಕೆ ಬಿದ್ದಾಗ ಅದನ್ನು ನೋಡಲಾಗದೆ- ಕಾಡಿನಲ್ಲಿ ಓಡಿದ ಚಿನ್ನಮುತ್ತ ಕಮರಿಗೆ ಬಿದ್ದು ಸತ್ತನೆಂದು ತಿಳಿಯಿತು. ಪಾಪ, ಒಬ್ಬನೇ ಮಗನ ವಿಯೋಗ ಸಹಿಸದೆ ಸೂರ್ಯಮುತ್ತನೆಂಬ ದೊಡ್ಡ ಹೆಗಡೆ ನಿನ್ನೆಯಷ್ಟೇ ಬೆಳ್ಳಿಬೆತ್ತವ ಸಿರಿಲಕ್ಕಿಗೆ ಕೊಡಲು ಹೇಳಿ ಕಾಡಿನಲ್ಲಿ ಕಣ್ಮರೆಯಾದನಂತೆ. ಈ ಘಟನೆಗಳು ಹಟ್ಟಿಯ ಮೇಲೆ ಪರಿಣಾಮ ಬೀರಿದವು. ಜನ ಹೆಗಡೆ ಮನೆಯಲ್ಲಿ ಗುಂಪುಗೂಡಿದ್ದರಿಂದ ಈ ಕಡೆ ಬರಲಿಲ್ಲ. ಚಂದಮುತ್ತ, ಅಬ್ಬೆಯರಿಗೆ ಈ ಸುದ್ದಿ ನಾವು ಹೇಳಲೂ ಇಲ್ಲ. ಕುಲಗುರು ಹೇಳುತ್ತಿದ್ದನೇನೋ ಯಕ್ಷಿಯ ಸ್ಥಿತಿ ನೋಡಿ, ಇದಲ್ಲ ಸಂದರ್ಭವೆಂದು ಬಾಯಿ ಬಿಡಲಿಲ್ಲ. +೪೮. ನಿನಗೆ ಜಯವಾಗ್ಲಿ ನನ್ನಪ್ಪ +ಮಗ ಯಕ್ಷಿಯ ಬೆನ್ನು ಬಿದ್ದಾಗಿಂದ ಶಿವಗೋಳು ತಪ್ಪಿರಲಿಲ್ಲ ಲಕ್ಕಬ್ಬೆಗೆ. ಆಗಲೇ ಅವಳಿಗೆ ಕೈಖಾಲಿ, ಉಡಿ ಖಾಲಿ, ಗರ್ಭ ಖಾಲಿಯಾದಂತೆನಿಸಿತ್ತು. ಆಮೇಲಾಮೇಲಿನ ಮಗನ ನಡಾವಳಿಯಿಂದ ಆಶೆಯ ಬೇರು ಕಿತ್ತು ಹೋಗಿ, +ಮಗನ ಹಾಡು ಹೂವಾಗಿ ಅರಳಲೆಂದು +ಅರಳಿ ಪರಿಮಳವಾಗಿ ಹರಡಲೆಂದು +ಮಲ್ಲಿಗೆ ಬಳ್ಳಿಯ ನೆಟ್ಟು ಕಾದನೊ ಶಿವನೆ. +ಸುಳಿದು ಬರಲೇ ಇಲ್ಲ ನಿನ್ನ ಗಾಳಿ +ಎಲೆ ಉದುರಿ ನಿಂತಾವು ಬರಲುಬಳ್ಳಿ. +-ಎಂದು ಅವಳೇ ರಾಗಿ ಬೀಸುತ್ತಾ ಕಾಳು ಕುಟ್ಟುತ್ತಾ ಹಾಡಿಕೊಂಡಂತಿದ್ದಳು. ಈಚೀಚೆಗಂತೂ, +ನಾವಿಕನಿಲ್ಲದ ಗಾಳಿ ಒಯ್ದತ್ತ ಹೋಗುವ +ಹರಿಗೋಲು ನನ್ನ ಬಾಳು, ಸೋರುತ್ತಿದೆ. +ಮುಳುಗುವುದಿನ್ನು ಹೆಚ್ಚು ವ್ಯಾಳ್ಯ +ತಕ್ಕೊಳ್ಳಲಾರದು ಶಿವನೇ- +ಎಂದು ಶಿವದುಃಖ ಮಾಡುತ್ತಿದ್ದಳು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಕಂಡಾಗಿಂದ ಹೊತ್ತಿಕೊಂಡುರಿದಳು ತಾಯಿ ಪಂಜಿನಂತೆ. ಕಥೆಗೆ ಹ್ಯಾಗೋ ಹಾಗೆ ಅವಳ ಆರೋಗ್ಯಕ್ಕೂ ಅಗತ್ಯವೆನ್ನಿಸಿ ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಬದಲು ಚಂದಮುತ್ತನ್ನ ತೋರಿಸಿದೆವು. ಅಬ್ಬೆ ಅರೆಗಳಿಗೆಯಲ್ಲಿ- ನೀರು ತುಂಬಿದ ಕಣ್ಣಿಗೆ ತಾನಿದ್ದ ಗೂಡು ಸರಿಯಾಗಿ ಕಾಣದೆ ವಿಸ್ಮೃತಿಗೆ ಸಂದಳು. ಏನೇನೋ ಆಡಿಕೊಂಡಳು. ಯಾರೊಂದಿಗೋ ವಾದಿಸಿದಳು.ತಂತಾನೇ ಸಮಾಧಾನ ಮಾಡಿಕೊಂದುದನ್ನು ನೋಡಿ ನಮಗೆ ನೆಮ್ಮದಿಯಾಗಿ ಮುಂದಿನ ಕಥೆ ಸುರು ಮಾಡಿದೆವು. +ವಿಸ್ಮೃತಿಯ ಪರಿಣಾಮ ನಮಗೆ ಆಗಲೇ ಗೋಚರಿಸಿಬಿಟ್ಟಿತು. ದುಃಖ ದುಗುಡಂಗಳ ಮರೆತು ಹೊರಗೆ ಬಂದು ಪುನಃ ನೆಲ ಸಾರಿಸಿದಳು. ಅಂಗಳ ಗುಡಿಸಿ ಸೆಗಣಿ ಸಾರಣೆ ಮಾಡಿದಳು. ಇವತ್ತು ಶಿವರಾತ್ರಿ ಅಮಾವಾಸ್ಯೆಯೆಂದು ಗೊತ್ತಿದ್ದರೂ ತಿಂಗಳ ಮಾವನ ಪೂಜೆಯಲ್ಲಿ ಮಾಡುವಂತೆ ಸೀಮೆಸುಣ್ಣದಲ್ಲಿ ಅಂಗಳದ ತುಂಬ ಚಂದಪ್ಪನ ಹುಯ್ದಳು. ಅವನ ಸುತ್ತ ಚಿಕ್ಕೆಯ ಬಳಗವ ಹುಯ್ದು ಚಂದವಾಯಿತೇ ಎಂದು ನಿಂತುನೋಡಿ ತೃಪ್ತಿಯಾದ ಮ್ಯಾಲೆ ಒಳಕ್ಕೆ ಹೋದಳು. ಒಲೆ ಸಾರಿಸಿ ರಂಗೋಲಿ ಹುಯ್ದಳು. ಮನೆದೇವರು ಚಂದಪ್ಪನ ಬಿಲದ ಸುತ್ತ ಸುಣ್ಣದಲ್ಲಿ ಬಳ್ಳಿ ಎಲೆ ಹೂ ಬರೆದಳು. ಆಮ್ಯಾಲೆ ರಾಗಿ ಹಿಟ್ಟಿನ ಆಧಾರದಲ್ಲಿ ಕಪಿಲೆಯ ಹಾಲು ಸೇರಿಸಿ ಮನೆದೇವರ ಬಿಲದ ಮ್ಯಾಲೆ ಚಂದ್ರನ ಆಕಾರದ ಬೆರಣಿಯ ತಟ್ಟಿದಳು. ಅದರ ಮುಂದೆ ಕೋಲು ದೀಪ ಇಟ್ಟು ಪೂಜೆ ಮಾಡಿ ಮೈ ಹಾಸಿ ನಮಸ್ಕಾರ ಮಾಡಿದಳು. +ಸಂಜೆ ಸಾಯಂಕಾಲವಾದೇಟಿಗೆ ಚಂದಮುತ್ತ ಓರೆಯಾಗಿ ಜುಟ್ಟು ಕಟ್ಟಿಕೊಂಡು, ನವಿಲುಗರಿ ಸಿಕ್ಕಿಸಿಕೊಂಡು ಸೊಂಟದ ಲಂಗೋಟಿಯಲ್ಲಿ ಗೆಜ್ಜೆ ಕೊಳಲು ಸಿಕ್ಕಿಸಿಕೊಂಡು, ಹೆಗಲ ಮ್ಯಾಲೆ ಕರಿಕಂಬಳಿ ಹಾಕಿಕೊಂಡು ಎದ್ದ. ಹೆತ್ತಯ್ಯ ಮುತ್ತಯ್ಯರ ನೆನೆದು ಕುಲದೇವರು ಮನೆದೇವರ ನೆನೆದು ಸತ್ಯದ ಸಾವಳಗಿ ಶಿವನ ನೆನೆದು ಆಶೀರ್ವಾದ ಪಡೆಯಲು ಅಬ್ಬೆಯ ಬಳಿಗೆ ಬಂದಾಗ, ಅಬ್ಬೆ ವಿಸ್ಮೃತಿಗೆ ಸಂದಿದ್ದಳಾಗಿ ತೊಂದರೆ ಎಂಬುದಾಗಲಿಲ್ಲ. ಮಗ ಕಾಲಿಗೆ ಹಣೆ ತಾಗಿಸಿದಾಗ ತಲೆ ಹಿಡಿದೆತ್ತಿ ನೆತ್ತಿಯ ಮೂಸಿ ಕರುವನಪ್ಪಿಕೊಳ್ಳುವಂತೆ ಹಿಡಿದುಕೊಂಡು ಹೇಳಿದಳು: +ನಿಜವಾದ ಗೊಲ್ಲ ನೀನು +ಕೊಳಲಿನಿಂದ ಗೆದ್ದಿರುವೆ ದನಕರು ಮಾನವರ ಹೃದಯ, +ಬೆಟ್ಟದ ಮಾಯಿಯ ಹಸಿರು ಸೀಮೆಯ. +ಈ ಕಾಡಿನ ಚರಾಚರಕೆ +ನಿನ್ನ ಹಾಡಿನ ನೆಪ್ಪಿದೆಯಣ್ಣ. +ಈಗ ಸೀಮೋಲ್ಲಂಘಿಸಿ +ಬೆಲೆ ಬಾಳುವ ಬೆಳ್ದಿಂಗಳ ಸೀಮೆಗಳಲ್ಲಿ +ಹಾಡುಗಳ ಬಿತ್ತುವುದಕ್ಕೆ +ನೀಲಿಮದ ಚಂದ್ರನ್ನ ಕೇಳುತ್ತೀ ನೀನು. +ಚಂದ್ರನ್ನ ಹಿಡಿದುಕೋ ಎಂದು +ನಿನ್ನನ್ನ ಆಕಾಶಕ್ಕೆ ಹಾರಿಸಿ ತೋಳು ತೆರೆದು ಕಾಯುವುದು +ನೀ ಬಂದು ನನ್ನ ಮಡಿಲಿಗೆ ಬೀಳುವುದು. +ಮತ್ತೆ ಹಾರಿಸುವುದು ಮತ್ತೆ ಬೀಳುವುದು- +ಎಷ್ಟೆಷ್ಟು ಎತ್ತರ ಹಾರಿದರೆ ಅಷ್ಟಷ್ಟು ಭಾರ +ಬಂದು ಬೀಳುತ್ತೀ ಮಡಿಲಿಗೆ, ನನ್ನ ಒಡಲಿಗೆ. +ಈಗ ಸಿದ್ಧಳಾಗಿದ್ದೇನೆ +ಆಕಾಶಕ್ಕೆ ನಿನ್ನ ತೂರುವುದಕ್ಕೆ. +ನೆಪ್ಪಿರಲಿ ಕಂದಾ, +ನೀನು ಬಿತ್ತಲಿರುವ ಹಾಡುಗಳಿಗಾಗಿ +ಕಾದವಳು ನಾನು ಹಾರೈಸಿದವಳು, +ಹಿಂಗ್ಯಾಕೆಂದರೆ ಉತ್ತರ ಗೊತ್ತಿರದವಳು +ಮತ್ತು ಈಗಲೂ ನಿನ್ನ ತಾಯಾದವಳು. +ತಗೋ ನನ್ನ ಹರಕೆಯ, ಶಿವನ ಕೃಪೆಯ, +ನಿನಗೆ ಜಯವಾಗ್ಲಿ ನನ್ನಪ್ಪ, ಶುಭಮಕ್ಕೆ ಶುಭವಾಗಲೆಂದಳು. +ಅಬ್ಬೆಯ ಅನುಗ್ರಹದ ಶುಭ ವಾಕ್ಯ ಕೇಳಿ ಆಘಾತವಾಯಿತು ಮಗನಿಗೆ! ತಲೆಯೆತ್ತಿ ನೋಡಿದ, ಅವಳ ನೀಲಾಂಜನದಂಥ ಕಣ್ಣಲ್ಲಿ ಅಪರಿಚಿತವಾದ ಆದಿಮ ಬೆಳಕಿದ್ದುದು ನೋಡಿ ಚಕಿತನಾದೆ. ತಾಯಿಗೆ ಇನ್ನೊಮ್ಮೆ ನಮಿಸಿ ಹೊರಟ. +ಪೂಜೆಯ ಸಾಮಾನು ತಗೊಂಡು ಜೋಕೆಯಿಂದ ಯಕ್ಷಿಯ ಎತ್ತಿಕೊಂಡು ಸುತ್ತಿನ ದೇವರಿಗೆ ನಮಿಸಿ ಕೊಟ್ಟಿಗೆಗೆ ಹೋದರೆ ಇಡೀ ದಿನ ಒಂದು ದನಕರುವೂ ನೀರು ಕುಡಿದಿರಲಿಲ್ಲ., ಮೇವು ಮುಟ್ಟಿರಲಿಲ್ಲ. ಇವನ ಕಂಡದ್ದೇ ನಂದಿನಿ ಓಡಿ ಬಂದು ಚಂದಮುತ್ತನ ತೆಕ್ಕೆಯಲ್ಲಿ ಮುಖ ಹುದುಗಿ ನಿಂತುಕೊಂಡಿತು. ಕಣ್ಣು ಕೆಂಪಗಾಗಿ ಗುಟ್ಟಾಗಿ ಅತ್ತಹಾಂಗಿತ್ತು. ತಿಂಗಳು ಮಡುಗಟ್ಟಿದ ಹಾಗೆ ಕಣ್ಣು ತುಂಬಿ ಕಣ್ಣೀರು ತುಳುಕಿತು. ಗಂಗೆ ಗೌರಿಗೆ ಚೆಂಡುಹೂ ದುಂಡುಮಲ್ಲಿಗೆಗೆ ಅಬ್ಬೆಯ ನೋಡಿಕೊಳ್ಳಿರೆಂದು ಹೇಳಿ ಹೊರಡುತ್ತಲೂ ಒಂದೊಂದೇ ಕರು ಬಂದು ಚಂದಮುತ್ತನ ಸುತ್ತ ಘೇರಾಯಿಸ್ಕೊಂಡು ತುಂತುರು ಹನಿಯುವ ಕಣ್ಣುಗಳಿಂದ ನೋಡುತ್ತ ಹೋಗಬ್ಯಾಡಯ್ಯಾ ಎಂದು ಮೂಕವಾಗಿ ಮೊರೆಯಿಡುತ್ತ ನಿಂತವು. ಲಂಗೋಟಿಯ ತುದಿಯಿಂದ ಅವುಗಳ ಕಣ್ಣೀರೊರೆಸಿ ಹೊರಡುವುದಕ್ಕೆ ಸಾಕುಬೇಕಾಯಿತು. ಕೊಟ್ಟಿಗೆಯ ಕಪಿಲೆಗೆ ಅಬ್ಬೆಯ ನೋಡಿಕೋ ಎಂದು ಹೇಳಿ ಹೊರಟ. ಕಂಬದ ಗೌಳಿ ಬೆಸ ನುಡಿದವು. ಕಾಳ್ನಾಯಿ ಬೆಳ್ನಾಯಿ ಪಟ ಪಟ ಕಿವಿ ಬಡಿದು ಬೆಂಬತ್ತಿದವು. ಚಿತ್ತ ಮಿಡಿದು ಕಣ್ಣಿರು ಬಂತು. ತೆಕ್ಕೆಯಲ್ಲಿ ಯಕ್ಷಿಯ ನೆನಪಾಗಿ ನಿರ್ಧಾರದಿಂದ ನಡೆದ. +ಮುಂದೆ ನಡೆದಾಗ ದಾರಿಯ ಅಕ್ಕಪಕ್ಕ ಇಬ್ಬರು ಸೇಡುಮಾರಿ ಬಡ್ಡಿಯರು ನಿಂತುಕೊಂಡಿದ್ದಾರೆ ಶಿವನೆ! ಮುಖದ ತುಂಬ ಅಂಗೈ ಗಾತ್ರದ ಕೊಳೆ ಮೆತ್ತಿಕೊಂಡಿದೆ. ಮೂಗಿನ ತುಂಬ ಮುಸುರೆ, ಕಣ್ಣುಗಳು ಇಂಗಿ ಹೋಗಿ ಮೈಯಂತ ಮೈಯೆಲ್ಲ ಕಜ್ಜಿ ಹುರುಕಾಗಿ ಗೊಮ್ಮಂತ ಗೊಬ್ಬು ನಾತ ಹೊಡೆವುತ್ತಿದೆ ಇಬ್ಬರಿಗೂ. ಇಬ್ಬರೂ ಮಾತಾಡಿಕೊಳ್ಳುತ್ತಿದ್ದಾರೆ ಏನಂತ? +ಸೇಡುಮಾರಿ ೧ : ಅಕಾ ಬಂದ ನೋಡು. +ಸೇಡುಮಾರ್ ೨ : ಹಾಂಗೆಲ್ಲ ಹೆದರಿಸಬೇಡ, ಬಾಯಿ ಮುಚ್ಚಿಕೊ. +ಸೇಡುಮಾರಿ ೧ : ಅವನಾಗಲೇ ಹೆದರಿದ್ದಾನೆ. ಆಗಲೇ ಕಣೆಗಣ್ಣಲ್ಲಿ ಕಣ್ಣಿರುದುರಿಸಿದ. +ನೋಡಲಿಲ್ಲವೆ? ತೆಕ್ಕೆಯಲ್ಲಿ ಯಕ್ಷಿ ಇಲ್ಲದಿದ್ದಲ್ಲಿ ಓಡಿ ಹೋಗುತ್ತಿದ್ದ. +ತನ್ನ ಒಡಲೊಳಗಿನ ನುಡಿಯಾಡುವ ಇವರ್‍ಯಾರೆಂದು ದಿಗಿಲಾಯಿತು; ಚಂದಮುತ್ತನಿಗೆ +“ಯಾರು ನೀವು?” ಅಂದ. +ಇಬ್ಬರೂ: ಸೇಡುಮಾರಿಯರು. +ಚಂದಮುತ್ತ : ಇಲ್ಲಿ ಯಾಕೆ ನಿಂತಿದ್ದೀರಿ? +ಇಬ್ಬರೂ : ಸೂರ್ಯ ಮುಳುಗಲಿ ಅಂತ. +ಚಂದಮುತ್ತ : ಯಾಕೆ? +ಇಬ್ಬರೂ : ಸೂರ್ಯ ಮುಳುಗಿದ ಮ್ಯಾಲೆ ಪಡುಬಟ್ಟದಲ್ಲಿ ಚಂದ್ರ ಮೂಡುತ್ತಾನಲ್ಲಾ, ಅವನೊಳಗಿನ ಜಿಂಕೆ ತಿನ್ನೋಣ ಅಂತ. +ಚಂದಮುತ್ತ : ಇವತ್ತು ಮಹಾಶಿವರಾತ್ರಿ ಅಮವಾಸ್ಯೆ. ಚಂದ್ರ ಮೂಡುವುದಿಲ್ಲ +ಅಂತ ಗೊತ್ತಿಲ್ಲವೆ? +ಸೇಡುಮಾರಿ ೧ : ನಿನಗೂ ಗೊತ್ತಿಲ್ಲವೆ? ಯಾವ ಧೈರ್ಯದ ಮ್ಯಾಲೆ ಯಕ್ಷಿಗೆ ದೈವತ್ವ +ಕೊಡ್ತೀಯಪ್ಪ, ಚಂದ್ರನೇ ಮೂಡದಿದ್ದರೆ? +ಸೇಡುಮಾರಿ ೨ : ಇರು ಇರು. ನೀನು ಕೊಳಲು ನುಡಿಸುವಾಗ ಚಂದ್ರ ಮೂಡುವವ ನಿದ್ದಾನೆ. ನಿನ್ನ ಅಬ್ಬೆಯಾಗಲೇ ಚಂದ್ರನ ಹೆರಲು ಬೇನೆ ತಿನ್ನುತ್ತಿದ್ದಾಳೆ! ಹೋ ಹೋ ….. +-ಎಂದು ಎರಡೂ ಕೈ ತಟ್ಟಿ ನಗಾಡುತ್ತ ಓಡಿ ಹೋದವು! +೪೯ ಶಿವರಾತ್ರಿಯ ಶಿವಾನಂದ +ಇತ್ತ ಚಂದಮುತ್ತ ಗುಡಿಯಲ್ಲಿ ಯಕ್ಷಿಯ ಜೋಪಾನ ಮಲಗಿಸಿ ಗುಡಿ ಮುಂದಿನ ಅಂಗಲ ಸಾರಿಸಿ, ಸಾರಣೆ ಮಾಡಿ, ರಂಗೋಲಿ ಎಳೆದು ಮರುಗ ಮಲ್ಲಿಗೆ ಪತ್ರಿ‌ಎಲೆ ತಂದು ಸಂಜೆಯ ಶಾತಿ ಪೂಜೆ ಮಾಡಿದೇಟ್ಗೆ ಹಗಲ ಬೆಲಕಾರಿ ಕತ್ತಲಾದವು. ಪಂಜು ಹೊತ್ತಿಸಿ ಕರಿ ಬಿಳಿ ಸುಣ್ನ ಬಣ್ಣ ಅರಿಷಿಣ ಕುಂಕುಮಗಳಲ್ಲಿ ಮಂಡಳ ಬರೆದು ಮಂಡಳದ ಎಡಬದಿಯಲ್ಲಿ ಮೂರುಕಾಲಿನ ಮೂಳೆ ರೂಪದ ಭೃಂಗೀಶನ ವಿರಚಿಸಿದ. ಅವನ ಮುಗಿದ ಕೈ ತಲುಪುವಲ್ಲಿ ಸತ್ಯಶಿವನ ಶ್ರೀಪಾದಂಗಳ ಸ್ಥಾಪನೆ ಮಾಡಿ ಮಂಡಲ ಮಧ್ಯೆ ಬೂದಿಬಡಕ ಶಿವನ ಮತ್ತವನ ತಲೆಯಲ್ಲಿ ಮಿಡಿನಾಗರ ಜಡೆಯ ಬರೆದು ಜಡೆಯಲ್ಲಿ ಚಂದ್ರನ ಬರೆವುದನ್ನ ಮರೆತ. ಯಂತ್ರ ಮಂತ್ರ ತಂತ್ರಂಗಳ ಸುತ್ತೂ ಬರೆದು ಮಂತ್ರಭಾವಿತ ರಚನೆಗಳೊಂದಿಗೆ ಸಾವಿರದೊಂದು ಗಣಂಗಳ ಆವಾಹಿಸಿ ರಕ್ಷಣೆಗಿಟ್ಟ. ಮಂಡಳದ ಕೆಳಭಾಗದ ಆಯಕಟ್ಟಿನ ಸ್ಥಳದಲ್ಲಿ ಇನ್ನೊಂದು ಮಂಡಳ ಬರೆದು ಗುಡಿಯಲ್ಲಿಯ ಯಕ್ಷಿಯ ಅದರೊಳಗಿಟ್ಟು ಸುತ್ತ ರಕ್ಷೆಯ ರಚಿಸಿ ದೈವಂಗಳ ಆವಾಹಿಸಿ ಕಾವಲಿಗಿಟ್ಟು ಬಂದೋಬಸ್ತ್ ಮಾಡಿದ. ಇಷ್ಟೆಲ್ಲಾ ಆಗಿ ಏನೊಂದೂ ಊನವಾಗಿಲ್ಲವೆಂದು ಭಾವಿಸಿ ತುಟಿಗಿಡುವಲ್ಲಿ ನಟ್ಟಿರುಳು ನಡುರಾತ್ರಿಯಾಗಿ ಸರ್ವರೂ : +ಸುವ್ವಿ ಸಾವಿರ ಬಾರಿ, ಸುವ್ವಾಲಿ ಸಾವಿರ ಬಾರಿ +ಪಾರ್ವತೀಸಮೇತ ಪರಮೇಶ್ವರನಿಗೆ ಸಾವಿರದೆಂಟು ಬಾರಿ ಶರಣೆಂದೆವು. +ನಾವಿಂತು ಸಾಂಬಶಿವನ ನೆನೆಯುತ್ತಿರಬೇಕಾದರೆ ಚಂದಮುತ್ತ ನಾಭಿಕುಹರದ ಉಸಿರಿನಿಂದ ಹದವಾದ ನಾದಂಗಳ ತೆಗೆದು ಆಲಾಪವ ಸುರು ಮಾಡಿದ. ಸುತ್ತಲಿನ ಸಚರಾಚರದಲ್ಲಿ ಜೀವಸಂಚಾರವಾಗಿ ಮಹಾಶಿವರಾತ್ರಿಯ ಮಹಾಪೂಜೆಯಲ್ಲಿ ಭಾಗಿಯಾಗಲು ಚಡಪಡಿಸಿದವು. ಮಧುರಾಲಾಪವ ಮಾಡಿ ಮಂಡಳದ ಸುತ್ತಲಿನ ಮಲ್ಲಿಗೆ ಬಳ್ಳಿ ಅರಳಿ ನಲುಗುವ ಹಾಗೆ ಮಾಡಿದ. ಆನಂದ ನಾದವ ಹೊರಡಿಸಿ ಗಾಳಿ ಪರಿಮಳವಾಗಿ ಸುಳಿದು ಮಂಡಳದ ಒಳಹೊರಗಿನ ದೇವತೆಗಳೆಲ್ಲ ಪ್ರಸನ್ನರಾಗುವಂತೆ ನುಡಿಸಿದ. ಸುತ್ತಲಿನ ಚರಾಚರವು ಮಹಾಶಿವರಾತ್ರಿಯ ಶಿವಾನಂದವ ಸವಿವ ಕಿವಿಯಾಗುವಂತೆ ನುಡಿಸಿದ. +ಇದಾದ ಮ್ಯಾಲೆ ಭೃಂಗೀಶನ ಶ್ರೀಪಾದಂಗಳ ನುತಿಸುವ ರಾಗರ ಚನೆಯ ಪದಕಟ್ಟಿ ಅಮೋಘವಾಗಿ ನುಡಿಸಿ ಸೂಕ್ಷ್ಮ ಲೋಕದ ದೇವರು ಸ್ಥೂಲಕ್ಕೆ ಬರಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದ. ಮಂಡಲದ ಆಸುಪಾಸು ಸಾವಿರದೆಂಟು ಜಂಗುಜಂಗಿನ ಅನಾಹತನಾದ ವಿಜೃಂಭಿಸಿ ಭೃಂಗೀಶನ ಅವತಾರದ ಮುನ್ಸೂಚನೆಯಾಯಿತು. ಅವನ ಕರೆತಂದು ಸೂಕ್ಷ್ಮ ಮತ್ತು ಸ್ಥೂಲಗಳ ನಡುವಿನ ಹೊಸ್ತಿಲಲ್ಲಿ ನಿಲ್ಲಿಸಿ ಶಿವಗನದ ರೀತಿರಿವಾಜಿನಲ್ಲಿ ಶಿವಾಚಾರ ಶಿವಭಕ್ತಿಯ ಅರ್ಪಿತ ಮಾಡಿ, ತೃಪ್ತಿಗೊಳಿಸಿ ತಿಂಗಳು ರಾಗವ ಸುರುಮಾಡಿದ ಚಂದಮುತ್ತ. +ಕನಸುಗಳಾದ ನಮಗಿನ್ನೂ ಏಕಾಗ್ರತೆ ಬಂದಿರಲಿಲ್ಲ. ಅದು ಇದು ನುಡಿದಾಡುತ್ತಿದ್ದಾಗ ಚಂದಮುತ್ತ ಹೊತ್ತಿಸಿದ ಇದ್ದೊಂದು ಪಂಜು ಆರಿ ಕಗ್ಗತ್ತಲಾವರಿಸಿತು. ಇದ್ದಕ್ಕಿದ್ದಂತೆ ಹಾಳುಗುಡಿಯ ಕರೀ ಶಿವಲಿಂಗ ಎದ್ದು ಬಂದು ನಮ್ಮನ್ನು ಗದರಿದಂತಾಯ್ತು. ಏನೆಂದು ನೋಡಿದರೆ ಶಿವ ಶಿವಾ!- +ಚಂದಮುತ್ತನ ತಿಂಗಳು ರಾಗದ ಮಾಯೆ ಹಬ್ಬಿಬಿಟ್ಟಿದೆ! +ಮಹಾಶಿವರಾತ್ರಿಯ ಕಗ್ಗತ್ತಲೆಯ ಆವರಿಸಿಬಿಟ್ಟಿದೆ ಅಂಧಂತಮಸ್ಸನ್ನು +ಮೀರಿ ಬೆಲೆಯುತ್ತಿದೆ +ಮ್ಯಾಲಿನ ಮಿರಿಲೋಕದ ತಾರಾಲೋಕದವರೆಗೆ; +ನಾವ್ಯಾರೆಂದು, ಎಲ್ಲಿದ್ದೇವೆಂದು, +ಏನಾಯಿತೆಂದು, ಯಾಕಾಯಿತೆಂದು ತಿಳಿಯದೆ +ನಮ್ಮ ನಾಮರೂಪ ಕ್ರಿಯೆಗಳೆಲ್ಲ ಕರಗಿ, +ಸುತ್ತಲಿನ ಸಚರಾಚರದ ಎಲ್ಲ ಎಲ್ಲವುಗಳಲ್ಲಿ +ಶಿವವು ಎಚ್ಚರವಾಗಿ +ತನ್ನ ತಾನು ಕಂಡುಕೊಂಬ ಸಡಗರದಲ್ಲಿದೆ. +ನಮ್ಮ ದೇಹಂತ ದೇಹ ಪುಳಕಗೊಂಡು ವಿವಶರಾಗಿ +ಹೊತ್ತು ಬಹಳ ಹಾಗೇ ಇದ್ದೆವು. +ಇಂತೀಪರಿ ಚಂದಮುತ್ತನ ಕೊಳಲ ಸಂಗೀತ ನಡೆದಿರಲಾಗಿ ಎಲ್ಲೋ ಏನೋ ಸೂತ್ರ ತಪ್ಪಿದೆಯೆನಿಸಿ ನೋಡಿದರೆ- +ಹೆಂಗಿತ್ತೊ ಹಂಗೆ ಇದೆ ಸರ್ವ ಲೋಕ! +ಕರ್ಮಂಗಳು ನಡೆಯದೆ +ಘಟಿತಂಗಳು ಘಟಿಸದೆ +ಎಲ್ಲೆಂದರಲ್ಲಿ ಹೆಂಗೆಂದರೆ ಹಂಗೆ +ಕಿಂಚಿತ್ತೂ ವ್ಯತ್ಯಾಸವಾಗದೆ +ನಮ್ಮ ಕಥೆ ಇದ್ದಲ್ಲೇ ಇದೆ. +ಏನೋ ಆಗಬಾರದ ಅನಾಹುತ +ಆಗಿ ಹೋಗಿದೆಯೆನಿಸಿ ಮುಂದೆ +ಹ್ಯಾಂಗ ಮಾಡುವುದೆಂಬ ಮಾತಿಗೆ ಈ ಹೀಂಗೆ ಹೊಳೆಯಿತು: +ಚಂದಮುತ್ತ ನುಡಿಸುತ್ತಿರುವುದು ತಿಂಗಳ ರಾಗ. ಹುಣ್ಣಿಮೆಯ ರಾತ್ರಿ ಅದನ್ನು ನುಡಿಸಬೇಕಾದ್ದು ನಿಯಮ. ಆದರೆ ಶಿವರಾತ್ರಿಯ ಅಮಾವಾಸ್ಯೆ ಚಂದ್ರಾಮಸ್ವಾಮಿ ಮೂಡುವುದಿಲ್ಲವೆಂಬುದು ನಮಗೆ ಅರಿದಿಲ್ಲ. ಆದರೆ ಚಂದಮುತ್ತನ ತಿಂಗಳು ರಾಗ ಕಾರಣವಾಗಿ ಪವಾಡ ಜರುಗಿ ಚಂದ್ರಾಮನ ಅವತಾರವಾಗಿ ಬೆಳದಿಂಗಳು ಸುರಿಯಬಹುದೆಂದು; ಆ ಬೆಳಕಿನಲ್ಲಿ ಸತ್ಯಶಿವದೇವರು ಭೃಂಗೀಶನೇ ಮುಂತಾದ ಗಣಂಗಳ ಸಮೇತ ದರ್ಶನ ಕೊಟ್ಟು, ಯಕ್ಷಿಗೆ ದೈವತ್ವ ಅನುಗ್ರಹಿಸಿ, ಚಂದಮುತ್ತನ ಉದ್ಧರಿಸುವರೆಂದು ನಮ್ಮ ನಂಬಿಕೆಯಾಗಿತ್ತು. ಆದರೆ ಅದ್ಯಾವುದೂ ನಡೆಯದೆ ಚಂದಮುತ್ತನ ಕೊಳಲು ಮತ್ತು ನಮ್ಮ ಕಥೆ ಎಡವಿದಲ್ಲೇ ಎಡವುತ್ತ ನಿಂತವು. ಮುಂದೇನು ಮಾಡುವುದೆಂಬ ಗೊಂದಲದಲ್ಲಿ ನಾವೆಲ್ಲ ಮುಳುಗಿರುವ ಪ್ರಸ್ತಾವದಲ್ಲಿ ಚಂದಮುತ್ತನೇನು ಮಾಡಿದ?- +ಅವನಿಗೂ ಏನೂ ಹೊಳೆಯದೆ ಗಾಬರಿಯಾಗಿ, ಆದರೂ ಧೈರ್ಯ ಕಳಕೊಳ್ಳದೆ ರಾಗರಚನೆಯಲ್ಲಿ ಓಂಕಾರವಂಕುರಿಸುವಂತೆ ಮಾಡಿ ಈಗ ಕಾಪಾಡಿದರೆ ಅವನೇ ಸೈ ಎಂದು ತಾರಕದಲ್ಲಿ ಭೃಂಗೀಶನ ಪ್ರಾರ್ಥನೆಯ ನುಡಿಸುತ್ತ- ಪ್ರಸನ್ನವಾಗು ಶಿವಪಾದವೇ ಎಂದು ಹಾರೈಸುತ್ತಿದ್ದರೆ ಇಲ್ಲಿ- +ಅಲ್ಲಿ ಆ ಕಡೆ ಶಿವಾಪುರವೆಂಬ ಘನವಾದ ಹಟ್ಟಿಯ ಲಕ್ಕಬ್ಬೆಯ ಗೂಡಿನಲ್ಲಿ ಏನು ನಡೆಯಿತೆಂದರೆ: +ಭೃಂಗೀಶನಿಗೆ ಚಂದಮುತ್ತ ಮರವೆಯಿಂದ ಮಂಡಳದ ಶಿವನ ಜಡೆಯಲ್ಲಿ ಚಂದ್ರನ ಬರೆದಿಲ್ಲವೆಂಬ ಸಂಕಟದ ಅರಿವಾಗಿ, ಬಾಲಕನ ಕಾಪಾಡಲೇಬೇಕೆಂದು ನಿಶ್ಚಯವ ಮಾಡಿ , ಸ್ಥೂಲದ ಹೊಸ್ತಿಲಲ್ಲಿ ನಿಂತಿದ್ದ ಭೃಂಗೀಶ ದೇವರು ಠಳಾರನೆ ಸ್ಥೂಲದ ಬಾಗಿಲನ್ನೊದ್ದು ಬೆಳಕಿನ ರೇಖೆಯಾಗಿ, ಮುಂಗಾರಿನ ಮುಕ್ಕೋಟಿ ಮಿರಿಮಿಂಚು ಮಿಂಚಿಧಂಗೆ ಲಕ್ಕಬ್ಬೆಯ ಗೂಡಿನಲ್ಲಿ ಪ್ರತ್ಯಕ್ಷರಾದರು! +ಇದೇನು ಹೊಯ್ಕೆಂದು, ಇದೆಲ್ಲಿಯ ಜಂಗಿನ ಗೌಜು ಗದ್ದಲವೆಂದು, ಗೂಡಿನ ದನಕರು, ಲಕ್ಕಬ್ಬೆ ದೇಹಾಂತ ದೇಹವೆಲ್ಲ ಗಾಬರಿ ಪುಳಕಂಗಳಲ್ಲಿ ನೋಡುತ್ತಿರಲು ಮಿಂಚಿನ ಮೂಳೆರೂಪದ ಭೃಂಗೀಶ ದೇವರು ಮೂರು ಕಾಲಿನ ಆರುಮೂರೊಂಬತ್ತು ಪೆಟ್ಟಿನ ಬೆಸಸಂಖ್ಯೆಯ ತಾಳಲಯದಲ್ಲಿ ಗಲಿರು ಗಲಿರು ಅಂತ ಜಂಗು ನುಡಿಸುತ್ತ ಕುಣಿಯುತೈದಾರೆ! ಮುಂದಲ ಕಾಲಿಗೆ ಮುನ್ನೂರು ಜಂಗ, ಹಿಂದಲ ಕಾಲಿಗೆ ಆರುನೂರು ಜಂಗ, ಮೂರನೇ ಕಾಲಿಗೆ ನೂರೆಂಟು ಜಂಗುಗಳ ಪುಟ್ಟ ಪುಟ್ಟ ಪಾದಂಗಳ ಜಂಗೀನ ಶಬುದಕ್ಕೆ ಕಗ್ಗತ್ತಲ ರಾತ್ರಿ ಮಾತಾಡುವಂತೆ ಹೆಜ್ಜೆಯ ಹಾಕಿ ನಾಂಟ್ಯವಾಡುತೈದಾರೆ! ಆವಾಗ ನೋಡು ಶಿವಾ, ಎಲ್ಲೆಲ್ಲಿದ್ದರೋ ಹಿಂಡು ಹಿಂಡು ಶಿವಗಣಂಗಳು ಹುಡುಹುಡು ಎಂದು ಗುಡುಗುಡುನೋಡಿ ಬಂದು ಗೂಡಿನ ಮೂಲೆ ಮೂಲೆಯಲ್ಲಿ ಪ್ರತ್ಯಕ್ಷರಾಗಿ, ಕೆಲವರು ತಲೆಮ್ಯಾಲೆ ಮುಗಿದ ಕೈ ಹೊತ್ತುಕೊಂಡು ಬಗೆಬಗೆಯ ನಾದ ಶಬ್ದಂಗಳ ಮಾಡುತ್ತ, ಕೆಲವರು ತಾವು ಕಲ್ಪಿಸಿದ ಹುಯಿಲ್ಗೊಂಬು, ಹುಯಿಲ್‌ತಮ್ಟೆ, ಹುಯಿಲ್‌ತಾಳ ವಾದ್ಯಂಗಳ ಮಂತ್ರ ಭಾವಿತದಿಂದ ಸೃಷ್ಟಿಸಿಕೊಂಡು ಬಾರಿಸುತ್ತ, ಶಿವಾನಂದದ ಅವೇಶವಡರಿ ಕಣ್ಣರಳಿ, ಮುಖ ಹಿಗ್ಗಿ, ಕಿವಿಗಳತನಕ ನಗುತ್ತ ಮೈಮರೆತು ಕುಣಿಯತೊಡಗಿದರು! ಇಂತೀರೀತಿ ಹೆಜ್ಜೆ ಹೆಜ್ಜೆಯ ಜಂಗಿನ ಶಬ್ದ ಗೂಡು ತುಂಬಿರಲು, ದನಕರು ಕಣ್ಣಗಲ ತೆರೆದು ಬರೆದ ಚಿತ್ರವಾಗಿರಲು ನೋಡುನೋಡುತ್ತಿರುವಂತೆ ಬೆಳಗಿನ ಸಮಯ ಲಕ್ಕಬ್ಬೆ ರಾಗಿಹಿಟ್ಟಿನಲ್ಲಿ ಮಾಡಿ ಬೆರಣಿ ತಟ್ಟಿದ್ದ ಮನೆದೇವರು ಚಂದಪ್ಪನಲ್ಲಿ ಸಾಕ್ಷಾತ್ ಚಂದ್ರಾಮಸ್ವಾಮಿ ಅವತಾರ ಆವೇಶವಾಗಿ ಹುಣ್ಣಿವೆ ಚಂದ್ರನಂತೆ ಫಳಫಳ ಹೊಳೆಯತೊಡಗಿತು! ತಡಮಾಡದೆ ಭ್ರುಂಗೀಶದೇವರು ದೂರದಿಂದಲೆ ಲಕ್ಕಬ್ಬೆಗೆ ನಮಸ್ಕರಿಸಿ ಸತ್ಯದೇವರಿದ್ದಲ್ಲಿಗೆ ಸಾಗಲಿ ಮೆರವಣಿಗೆಯೆಂದು ಮುಂದೆ ಮುಂದೆ ನಡೆದರೆ ಬೆರಣಿಯ ಚಂದ್ರಾಮಸ್ವಾಮಿ ಹಿಂಡು ಹಿಂಡು ಶಿವಗಣಂಗಳೊಡನೆ ಹಿಂದೆ ಹಿಂದೆ ತೇಲುತ್ತ ನಡೆದರು. ಭೃಂಗೀಶನ ಜಂಗಿನ ಗಲಿರು ಗಲಿರು ನಾದ, ತಮ್ಮಟೆ ವಾದ್ಯಗಳ ಒರಟು ನಾದಗಳಲ್ಲಿ ಕಂಚು ಕಹಳೆಗಳ ಮೊಳಗಿನಲ್ಲಿ ಕಗ್ಗತ್ತಲ ಕಾಡು ಗೀಳಿಟ್ಟು ಪ್ರತಿಧ್ವನಿಸಿ ನಿನದಿಸಿತು. ಇಂತೀಪರಿ ಹೊಸ ಬೆರಣಿಯ ಚಂದ್ರನ ಉದಯವಾಗಿ ಭಯಾಂಕರ ಸದ್ದು ಸಡಗರದಲ್ಲಿ ನಡೆದ ಮೆರವಣಿಗೆಯ ಕಂಡು ಮ್ಯಾಲಿನ ಚಿಕ್ಕೆ ಬಳಗ ಗಾಬರಿಯಾಗಿ ಕಣ್ಣು ಪಿಳಕಿಸದೆ ನಿಂತಲ್ಲಿ ನಿಂತುಕೊಂಡರೆ ಗಲಾಟೆಗೆ ಹಟ್ಟಿಯ ಜನ ಎಚ್ಚರಾದರೂ ಅಮಾವಾಸ್ಯೆಯ ದಿನ ಹುಣ್ಣಿವೆ ಬೆಳಕು ಮೂಡಿದ್ದಕ್ಕೆ ಬೆದರಿ ಗಾಬರಿಯಾಗಿ ಬಾಗಿಲು ಭದ್ರ ಮಾಡಿಕೊಂಡು ನಡುಗುತ್ತ ಒಳಗೇ ಕುಂತರು. ಮೆರವಣಿಗೆ ಯಕ್ಷಿ ಗುಡಿಗೆ ಬಂದು ಮಂಡಳದ ಶ್ವನ ನೋಡಿದ್ದೇ ತೇಲುತ್ತ ಹೋಗಿ ಶಿವನ ಜಡೆಯಲ್ಲಿ ಬೆರಣಿಯ ಚಂದಪ್ಪಸ್ವಾಮಿ ಸ್ಥಾಪನೆಗೊಂಡರು. +ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳು +ಅರಳಿ ಅರಲಿ ಸುರಿಯಿತು! +ಉಕ್ಕುವ ನೊರೆ ಹಾಲಿನಂತೆ +ತುಂಬಿ ಸುರಿವ ತಿಂಗಳು! +ತುಂಬಿ ಬಂದ ಚಂದ್ರನ ಕೊಡ +ತುಳುಕಿತು ಬೆಳ್ದಿಂಗಳು! +ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳಿಗೆ ಬಲಿತ ಕತ್ತಲ ರಾಜ್ಯ ಕರಗಿ ಹೋಯಿತೆಂಬಲ್ಲಿ ಲೋಕದ ಮೈಲಿಗೆ ತೊಳೆದು ಬೆಳಕು ಮೂಡಿಸಿದ ಚಂದ್ರಶೇಖರ ಸ್ವಾಮಿಯ ನೆನೆನೆನೆದು ಮುಂದಿನ ಪದ ನುಡಿಯುತ್ತೇವೆ ಕೇಳುವಂಥವರಾಗಬೇಕು. +ಭ್ರುಂಗೀಶದೇವರ ಆವೇಶದ ನರ್ತನ ನೋಡಿ ಪ್ರೋತ್ಸಾಹವುಂಟಾಗಿ ಆರುಮೂರು ಪೆಟ್ಟಿನ ಹೆಜ್ಜೆಯ ಹಾಕಲಾರದೆ ಕರುಬಿ ಸುಮ್ಮನೆ ನಿಂತ ಚಂದ್ರಶೇಖರ ಸ್ವಾಮಿಯ ಶ್ರೀಪಾದಂಗಳಿಗೆ ಚಂದಮುತ್ತನ ಹಂಬಲದ ಅರಿವಾಗಿ ಅನುಗ್ರಹದ ಕೈ ಮಿಡುಕಿತು. ಹಾಗಂದೇಟ್ಗೆ ಯಕ್ಷಿಗೆ ದೈವತ್ವದ ಆವೇಶವಾಗತೊಡಗಿತು ನೋಡು,- +ಮುಖವು ಕಳೆಕಳೆಯಾಗಿ +ನೀಲಾಂಜನದಂತೆ ಹೊತ್ತಿಕೊಂಡವು ಕಣ್ಣು. +ಹೊರಡುವ ಸಮಯದ ಅರಿವಾಗಿ +ಬಟ್ಟೆಯ ಸರಿಪಡಿಸಿಕೊಂಡಳು. +ಮನಸ್ಸು ಹಗುರವಾಯಿತು. ಅದಕ್ಕೂ ಮುನ್ನ ದೇಹವೂ ಕೂಡ. ಮೆಲ್ಲಗೆ ಎದ್ದು ಕುಂತು, ಅಂಗೈಯ ಕನ್ನಡಿ ಮಾಡಿ ನೋಡುತ್ತ ಕುರುಳು ಸರಿಸಿ ಕುಂಕುಮದ ಬೊಟ್ಟು ತಿದ್ದಿಕೊಂಡಳು. +ಆಮ್ಯಾಲೆ ಮೆಲ್ಲಗೆ ಎದ್ದು +ಶಕ್ತಿ ಸಾಲದೆ ಎರಡೂ ಕಡೆಗೊಲಿದು +ಸಮತೋಲ ಸರಿಪಡಿಸಿಕೊಂಡು +ಬೀಳದಿರುವಂತೆ ಕೈ ಚಾಚಿದಾಗ +ಚಂದಮುತ್ತನ ಹಾಡಿಗೇ ರೆಕ್ಕೆ ಮೂಡಿದಂತೆ +ಕೈಗಳು ರೆಕ್ಕೆಗಳಾಗಿ +ಮೆಲ್ಲಮೆಲ್ಲನೆ ಗಾಳಿಪಟದಂತೆ ತೇಲಿ ನಲಿದಳು. +ತಿಂಗಳು ರಾಗದ ಮಹಾಪೂರ ಬಂದು ಬಯಲು ತುಂಬಿತು ನೋಡು; +ರಾಗದ ಲಹರಿ ಲಹರಿಗಳಲ್ಲಿ ಈಜುತ್ತ +ಕಣ್ಣುಗಳಲ್ಲಿ ಚಂದ್ರನ ಸೆರೆಹಿಡಿದುಕೊಂಡಳು. +ತನ್ನ ತೇಜಸ್ಸನ್ನು ತಾನೆ ಹೊರಚೆಲ್ಲುತ್ತ +ಚಿಮ್ಮುವ ಬೆಳಕಿನ ಸೆಲೆಯಂತೆ ಕಂಡಳು, ಚಕೋರಿ ಎಂಬ ಯಕ್ಷಿ. +ರಾಗಕ್ಕೆ ಕಾವೇರಿದಂತೆ +ಆಕಾಶಕ್ಕೆ ಬೆಳೆವ ಶಿವನಿಗೆ ಶಿರಬಾಗಿ +ಭೃಂಗೀಶನ ಜಂಗು ಜಂಗಿನ ಮೂಳೆ ಪಾದಂಗಳಿಗೆ ವಂದಿಸಿ, +ಗಣಂಗಳ ನೆನೆದು +ಪ್ರೀತಿ ಮತ್ತು ಅಭಿಮಾನದ ಕಡೆಗಣ್ಣು ಕುಡಿನೋಟದಲ್ಲಿ +ಚಂದಮುತ್ತನ ನೋಡಿ, +ಮೋಹದಲಿ ಅವನ ಹಾಡಿಗೆ ತಾಳ ಬಾರಿಸಿದಂತೆ +ರೆಕ್ಕೆ ಬಡಿಯುತ್ತ +ಎಳೆಯ ಬೆಳ್ದಿಂಗಳಲ್ಲಿ ಮೇಲುಮೇಲಕ್ಕೆ ಈಗುತ್ತ +ಹಾರಿದಳು. +ಕೊಳಲು ನುಡಿಸುತ್ತ ಚಂದಮುತ್ತ ದಿವ್ಯೋನ್ಮಾದದಲ್ಲಿ- ಚಂದ್ರಶೇಖರಸ್ವಾಮಿಯ ಶ್ರೀಪಾದಂಗಳ ಕಡೆ ನೋಡಿದ: +ಶಿವಪಾದದಲ್ಲೊಂದು ಕೆರೆಯ ಕಂಡೆ +ಕೆರೆಯಲ್ಲಿ ಮೂರೆಸಳಿನ ತಾವರೆಯ ಕುಸುಮವ ಕಂಡೆ! +ಕುಸುಮದಲ್ಲಿ ಧಗಧಗನೆ ಉರಿವ +ಉರಿಯ ಗದ್ದುಗೆ ಮ್ಯಾಲೆ ನಿಂತ್ಕೊಂಡು +ಧ್ಯಾನವ ಮಾಡುವ ಶಿವದೇವರ ಕಂಡ! +ಸ್ವಾಮಿ ರೂಪಾಂತರಚರಿಸಿ ಲೋಕಾಂತರ ಬೆಳೆದುದ ಕಂಡ! +ನಿಂತ ಹೆಜ್ಜೆ ಭೂಲೋಕದ ಸೀಮೆ ತುಂಬಿದವು. +ಬೆರಣಿ ಚಂದ್ರನ್ನ ಜಡೆಯಲ್ಲಿ ಧರಿಸಿದ ಮುಖವು- +ಆಹಾ ತೇಜೋಮಯವು +ಮ್ಯಾಲೆ ಮಿರಿಲೋಕದೀಚೆಯ +ಅವಕಾಶ ತುಂಬಿದುದ ಕಂಡ! +ಈ ನಡುವೆ ದೇವದೈವ ಭೂತ ಪಿಶಾಚಿ +ರಾಹು ರಕ್ಷಸ ಇರಿವೆಂಬತ್ತು ಕೋಟಿ ಜೀವರಾಶಿ +ಸ್ವಾಮಿಯಲ್ಲಿ ಅಡಕಗೊಂಡುದ ಕಂಡ! +ಘನವೇ ಶರಣು +ಗಂಭಿರವೇ ಶರಣು +ಸಾವಳಗಿ ಶಿವಲಿಂಗವೇ ಶರಣು ಶರಣು +ತಂದೇ ಧನ್ಯನಾದೆನೆಂದು. +ಅಂದುಕೊಳ್ಳುತ್ತಿರುವಂತೆ ಕಾಲುಗಳಿಗೆ ಛಳಿ ತಾಗಿ ನೋಡಿಕೊಂಡಾಗ ತಾನು ಶಿಲೆಯಾಗುತ್ತಿರುವ ತಿಳುವಳಿಕೆ ಬಂತು. ಕಷ್ಟಪಟ್ಟು ರಾಗಕ್ಕೆ ಮುಕ್ತಾಯ ಕೊಡಲು ಪ್ರಯತ್ನಿಸತೊಡಗಿದ. ತಕ್ಷಣ ಇದು ಹಾರುತ್ತಿರುವ ಯಕ್ಷಿಗೆ ತಿಳಿದು ಎದೆ ಧಸ್ಸೆಂದಿತು. “ಅಯ್ಯೋ ನನ್ನ ಚಂದಮುತ್ತಾ” ಎಂದು ಕುಸಿದು ಮತ್ತೆ ಎಚ್ಚರವಾಗಿ ಸಾವರಿಸಿಕೊಂಡಳು. ಕಳಕಳೆಯಯಾಗಿದ್ದ ಮುಖ ಕತ್ತಲಂತೆ ಕಪ್ಪಿಟ್ಟಿತು. ಭಯ ಮತ್ತು ಅಂಗಲಾಚುವ ಆರ್ದ್ರ ನೋಟಗಳಿಂದ ಶಿವನ ಕಡೆ ನೋಡಿದಳು. ತನ್ನ ಪ್ರಾಣ ತಗೊಂಡಾದರೂ ತನ್ನ ಚಂದಮುತ್ತನ ಜೀವ ಉಳಿಸೆಂಬ ಭಾವದಲ್ಲಿ ಶಿವನ ಶ್ರೀಪಾದಂಗಳ ಕಣ್ಣಿಂದ ತೊಳೆದಳು. ಹತಾಶಳಾಗಿ ದುರ್ಬಲ ದೃಷ್ಟಿಗಳಿಂದ ಹೃದಯ ಪರಚಿಕೊಂಡಳು. ಚಂದಮುತ್ತನಿಗಾಗಿ ಶಿವನಲ್ಲಿ ಮೊರೆಯಿಟ್ಟಳು: +ಶಿವ ಶಿವಾ, +ನಂಬಿ ಕರೆದರೆ ಓ ಎಂಬ ಶಿವನೇ +ಮೃತ್ಯುಂಜಯನೇ, +ಮಾರ್ಕಂಡೇಯನ ಪೊರೆದವನೇ, +ಕಿಡಿಗಣ್ಣ ಬೀರು ತಂದೇ, +ಚಂದಮುತ್ತನ ನುಂಗುವ ಶಿಲೆಯ ಮ್ಯಾಲೆ. +ಒದಗಿ ಬಾ ಶಿವನೇ +ನಮ್ಮ ಸತ್ಯಕ್ಕೆ ನಮ್ಮ ಪ್ರೀತಿಗೆ +ನಮ್ಮ ಭಕ್ತಿಗೆ. +ಕರುಣಾಳು ಭೃಂಗೀಶ ದೇವರೇ, +ಶಿಲೆಯಿಂದ ರಕ್ಷಿಸಿರಯ್ಯಾ ಚಂದಮುತ್ತನ್ನ. +ನನಗಾಗಿ, ಲೋಕಕ್ಕಾಗಿ, +ಜೀವತ್ಯಾಗ ಮಾಡುವವನ, +ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯಾ +ಆಕಾಶದೇವರಲ್ಲಿ ಸಿಡಿಲಿಲ್ಲವೆ? +ಸುತ್ತಲಿನ ದೇವರಲ್ಲಿ ನ್ಯಾಯವಿಲ್ಲವೆ? +ಶಿವನೆ, ನನ್ನನ್ನೂ ಅವನೊಂದಿಗೆ ಶಿಲೆಯಾಗಿಸು ತಂದೇ, +-ಎಂದು ಅಂಗಲಾಚುತ್ತ ನೀವಾದರೂ ಸ್ವಾಮಿಗೆ ಹೇಳಿರಯ್ಯಾ ಎಂದು ನಮಗೆ ಮೊರೆಯಿಟ್ಟಳು. ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯಾ ಎಂದು ಅಂಗಲಾಚುತ್ತ ಮೈಮರೆಸಿ ತನ್ನ ಜೀವವ ಅಪಹರಿಸುತ್ತಿದ್ದೀರಿ- ಎಂದು ಎಲ್ಲರ ನೋಡಿದಳು. ಇವಳ ಕಣ್ಣಿರ ಪ್ರವಾಹದಲ್ಲಿ ಎದುರೀಜುವುದು ಯಾರಿಗೂ ಸಾಧ್ಯವಾಗದೆ ಕಲ್ಲಿನಂತೆ ಸುಮ್ಮನೆ ನಿಂತಿರಲು ಕೆಳಗಿಳಿದು ಬಂದಳು. ಚಂದಮುತ್ತನ ಮುಖ ವಿನಾ ಉಳಿದೆಲ್ಲ ದೇಹ ಆಗಲೇ ಶಿಲೆಯಾಗಿತ್ತು. +ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಏನಿತ್ತು? +ಕಣ್ಣು ಕನ್ನಡಿಯ ಹಾಂಗಿತ್ತು. +ಆಕಾಶವೆಂಬ ಕನ್ನಡಿಯಲ್ಲಿ ತನ್ನ ತಾ +ನೋಡಿಕೊಂಬ ಬಯಲು ಮೂಡಿತ್ತು. +ನಾವೆಲ್ಲ ದುಃಖ ಭಾವೈಕ್ಯರಾಗಿ ನಿಂತಿರಬೇಕಾದರೆ ಯಕ್ಷಿ ಕೃತಜ್ಞತೆಯಿಂದ ಅಥವಾ ಕೊನೆಯ ಬಾರಿ ಎಂಬಂತೆ ಚಂದಮುತ್ತನ ತುಟಿಗಳ ಮ್ಯಾಲೆ ತುಟಿ ಊರಿ ಬಹಳ ಹೊತ್ತಿನ ತನಕ ಮುದ್ದಿಸಿದಳು. ನಿಜ ಹೇಳಬೇಕೆಂದರೆ ಸ್ಮಶಾನವಾಸಿ ಶಿವನಂಥ ಕಣ್ಣಲ್ಲೂ ಕಣ್ಣೀರುಕ್ಕಿತು. ಅವರೂ ಕೈ ಕೈ ಹಿಸುಕಿಕೊಂಡು ಸುಮ್ಮನಿದ್ದರು. ಚಂದಮುತ್ತನ ತುಟಿ ಶಿಲೆಯಾದುದು ಅವಳ ತುಟಿಗರಿವಾಗಿ ಒತ್ತಾಯದಿಂದ ಬಿಟ್ಟಳು. ಈಗ ಅವನಾತ್ಮವ ಪೂರ್ತಿ ಹೀರಿಕೊಂಡ ತೃಪ್ತಿ ಅವಳ ಮುಖದಲ್ಲಿತ್ತು. ಮಂದಹಾಸದಿಂದ ಆಕಾಶವ ಕುರಿತು ಮ್ಯಾಲೆ ಹಾರತೊಡಗಿದಳು. ಹಾರ ಹಾರುತ್ತ ಆ ಯಕ್ಷಿ ಚಕೋರ ಪಕ್ಷಿಯಾಗಿ ಆನಂದಗಳು ಬೆಳೆವ ಸೀಮೆ ಶಿವನ ಜಡೆಯ ಚಂದ್ರನ ಗುರಿಯಾಗಿ ಹರಿದಳು. ಈಗ ಚಕೋರಿಯ ಮ್ಯಾಲೆ ಚಂದ್ರ ಮಾತ್ರ ಹೊಳೆಯುತ್ತಿದ್ದ. +ಚಂದ್ರನ ಸಮೀಪಿಸಿ ಕನ್ನಡಿಯಂತೆ ಅವನ ನೋಡಿದಾಗ +ಚಂದ್ರನೇ ಹಾರುತ್ತಿದ್ದ +ತನ್ನ ಬೆಳ್ದಿಂಗಳಲ್ಲಿ ತಾನೇ ಈಜುತ್ತಿದ್ದ. +ಚಕೋರಿ ಚಂದ್ರನ ನುಂಗಿ +ಚಂದ್ರ ಚಕೋರಿ ಎರಡೂ ಬಯಲು ನಿರ್ವಯಲಾಗಿ +ಬೆಳಗಾಯಿತು. +ತಿಂಗಳು ರಾಗದಿಂದ ಚಂದಮುತ್ತ ಕಟ್ಟಿದ್ದ ಶಿವಲೋಕ ಮಂಡಳದಲ್ಲಿ ಮಾಯವಾಯಿತು. ಬೆರಣಿ ಚಂದ್ರ ಭಸ್ಮವಾಗಿದ್ದ. +ಎಲ್ಲ ಮುಗಿಯಿತೆಂದಾಗ ಮಲ್ಲಿಗೆ ಬಳ್ಳಿಯ ಬುಡದಲ್ಲಿ ತೂಕಡಿಸುವ ಕರಡಿ ಕಂಡಿತು. ತಲೆಯಲ್ಲಿ ಬೆಳ್ಳಿ ಕೂದಲು ಬೋಳು ಬಾಯಿ, ಕೋಲು ಕೈಕಾಲು, ಕಣ್ಣು ಗುಳಿ ಸೇರಿ ಚರ್ಮ ಜೋತಾಡಿ, ಹೊಳೆಯ ಮಹಾಪೂರ ಹಾದು ವಾಲಿದ ಮರದಂತೆ ಮ್ಯಾಲೆ ಮುಖ ಮಾಡಿ ಕುಂತಿದ್ದಳು. ಅದ್ಯಾರಪ್ಪ ಅಂದರೆ ಲಕ್ಕಬ್ಬೆ! ಅಬ್ಬೆ ಇನ್ನೂ ವಿಸ್ಮೃತಿಯಲ್ಲಿದ್ದಾಳೆ. ಹಾಗೇ ಇರಲೆಂದು, ಮಗ ಶಿಲೆಯಾದ ವಿಚಾರ ಅವಳಿಗೆ ತಿಳಿಯದಿರಲೆಂದು ನಾವು ಮಂಗಳ ಹಾಡುವ ಅವಸರದಲ್ಲಿದ್ದಾಗ ನಮ್ಮಲ್ಲೊಬ್ಬ ಕೇಳಿಯೇ ಬಿಟ್ಟ- +ಅಬ್ಬೆ ಅಬ್ಬೆ, +ಮಡಿಲೊಳಗೆ ಬಚ್ಚಿಟ್ಟುಕೊಂಡಿದ್ದಿಯಲ್ಲ +ನಿನ್ನ ಹಕ್ಕಿಯ, +ಪುಟ್ಟ ಕಾಲು ಇಷ್ಟೆ ಕೊಕ್ಕು +ಬಣ್ಣ ಎಲ್ಲ ಚೆನ್ನು. +ಸವಿಗೊರಳಿನ ಬಿಳಿ ಹಕ್ಕಿಯ +ದನಿಯೆಂದರೆ ಜೇನು. +ಅದೆಲ್ಲಿದೆ ಈಗ? +-ಇದಕ್ಕೆ ಅಬ್ಬೆ ಹೀಗೆಂದಳು : +ಹೌದು ನನ್ನಪ್ಪ +ನನ್ನ ಒಡಲಿಗೆ +ನನ್ನ ಮಡಿಲಿಗೆ +ಅದನ್ನು ಹೊಂದುವ ಭಾಗ್ಯವಿರಲಿಲ್ಲ. +ಆ ದಿನ +ಹಸಿವೆಗೆ ಹಾಲೂಡೆಂದು ಹಟ ಮಾಡಿತು +ಜೋತ ಮೊಲೆಯಲ್ಲೇನು ಹಾಲೊಡೆದೀತು ಕಂದಾ?-ಎಂದೆ, +ಚಂದ್ರಾಮನೆಂಬೂವ ಬೆಳ್ಳಿಗಿಂಡಿಯೊಳಗ +ಹೆಪ್ಪು ಹಾಕಿದ ಅಮೃತ ಕುಡಿವೆನೆಂದ +ಆಕಾಶವೆನ್ಬೂವ ಅರಿಯಬಾರದ ಬಯಲು +ಅದರಂತುಪಾರವನು ಅರಿವೆನೆಂದು +ಭರ್ರನೆ ಹಾರಿ ಹೋಯಿತು ಹಕ್ಕಿ +ನನ್ನ ಮತ್ತು ಕಾಲನ ಮೈ ಪರಚಿ. +ಹಕ್ಕಿಯ ಭಾರವಿನ್ನೂ ಹಂಗೇ ಇದೆ +ಒಡಲಿನ ಮ್ಯಾಲೆ. +ಇನ್ನೇನು ಜೋಗುಳ ಹಾಡುತ್ತದೆ +ನನ್ನ ಮಲಗಿಸಲಿಕ್ಕೆ. +ಮಗುವೇ ಜೋಗುಳ ಪಾಡಿ +ತಾಯಿಯ ಮಲಗಿಸಿದ್ದನ್ನ +ಎಲ್ಲಾದರೂ ಕೇಳಿದ್ದೀರೇನ್ರಪ? +ಜೋ ಜೋ ಎನ್ನ +ಬೆಳ್ಳಾನೆ ಹಕ್ಕಿ ಜೋ ಜೋ ……. +ಚಂದ್ರಾಮನೆಂಬೂವ ಕನ್ನಡಿ ಮಾಡಿ +ನನ್ನ ಕನ್ನಡಿ ಮಾಡಿ ಅದರ ಎದುರಿಟ್ಟಿ +ಪ್ರತಿಬಿಂಬ ನೆರೆದಾವು ಬಿಂಬದ ಜೋಡಿ ||ಬಯಲು|| +ಬಯಲಾಗ ಸೇರ್‍ಯಾವು ನಿರ್ವಯಲಾಗಿ +ಜೋ ಜೋ ಎನ್ನ ಜ್ಯೋತಿಯ ಕಂದಾ ಜೋ ಜೋ || +-ಎಂದು ಹೇಳಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲುವ ತಾಯಿಯ ಕಂಡು ನಮ್ಮ ಕರುಳು ಕಿತ್ತು ಕಣ್ಣಿಗೆ ಬಂದಂತಾಗಿ ಅತ್ತೆವು. ಅವಳು ವಿಸ್ಮೃತಿಯಲ್ಲಿದ್ದರೇ ಒಳ್ಳೆಯದೆಂದು ಮಂಗಳ ಹಾಡಲು ಸಿದ್ಧರಾದೆವು. +ಚಂದಮುತ್ತನ ದೇಹ ಈಗ ಪೂರಾ ಶಿಲೆಯಾಗಿ, +ಕಲ್ಲುಗಳಲ್ಲಿ ಕಲ್ಲಾಗಿ ಬಿದ್ದಿದೆ. +ಕಣ್ಣು ಮಾತ್ರ ಗಾಜಿನ ಕಣ್ಣಿನಂತೆ ಕಾಣುತ್ತಿದ್ದವು. +ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಚಂದ್ರನಿದ್ದ, +ಎರಡೂ ಕಣ್ಣಲ್ಲಿ ಸೋರಿದ್ದ ಕಣ್ಣಿರು ಮಾತ್ರ +ಹಾಗೇ ನೀರು ನೀರಾಗೇ ಇತ್ತು. +ಬೆಳಕಿನ ಅವಧೂತ, ಚಂದಮುತ್ತ +ಸತ್ತನೆನಬ್ಯಾಡಿರಯ್ಯಾ +ಅವನ ತುಟಿಯ ಮ್ಯಾಲಿನ ಹಾಡನ್ನ +ಹಕ್ಕಿಗಳಿಗೆ ಕೊಡಿರಯ್ಯಾ. +ಕಣ್ಣಂಚಿನಲ್ಲಿರೋ ಕನ್ನೀರನ್ನ +ತರುಮರಗಳ ಬೇರಿಗೆ ಹನಿಸಿರಯ್ಯಾ. +ಆತ್ಮದ ತುಂಬ ಚಂದಮುತ್ತನ ಬೆಳ್ದಿಂಗಳ +ತುಂಬಿಕೊಂಡು ಹೋಗಿರಯ್ಯಾ. +ಬೆಚ್ಚಗಿನ ಬೆಳಕಿನ ಭರವಸೆ ಕೊಡುತ್ತ +ಮುಂಗೋಳಿ ಕೂಗಿದೆ. +ಮಂಡಳದಲ್ಲಿ ಬೆರಣಿ ಚಂದ್ರನ ಬೂದಿ ಬಿದ್ದಿದೆ +ಭಕ್ತಿಗೆ ಭಸ್ಮ ಧರಿಸಿಕೊಂಡು ಹೋಗಿರಯ್ಯಾ. +ಇಲ್ಲೀಗಿ ಹರಹರ +ಇಲ್ಲೀಗಿ ಶಿವಶಿವ +ಇಲ್ಲೀಗಿ ನಮ್ಮ ಹಾಡು ಮಂಗಳವಯ್ಯಾ | +ಮುಗಿಯಿತು +೧. ಪ್ರಾರ್ಥನೆ ಓಂ ಪ್ರಥಮದಲ್ಲಿಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದುನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ. ನಾವು ಕನಸುಗಳು,ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,ಆದಿಮ ಕಾಲದಿಂದ […] +ಸಂಗೀತ ಕಲಿಸಿದವನು.ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ-ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕಇಂಥ ಕಚಡ […] +ಅದಕ್ಕೇ ಹೇಳಿದೆ: ಯಾರಾದರೊಬ್ಬರುಕಾಯಬೇಕಿದೆ ನಿನ್ನ ತೋಟವ. ಅದಕ್ಕೇಎಲ್ಲಿದ್ದರೆ ಅಲ್ಲಿಂದಮಗನೇ ನೀ ಬೇಗನೆ ಬಾ–ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು. ದಿನಾ ಕಣ್ಣಲ್ಲಿ ಕಂಬನಿಯಾಯ್ತು.ಎಷ್ಟು ದಿನ ಕಾದರೂ ಮಗ ಬಾರದೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_323.txt b/Kannada Sahitya/article_323.txt new file mode 100644 index 0000000000000000000000000000000000000000..d756d54b2459ffc6c1af07f5a83d2be283d557e1 --- /dev/null +++ b/Kannada Sahitya/article_323.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು ಬುದ್ಧಿಯ ವರ್ಗೀಕರಣ ಮಾಡಬಾರದು. ಕಥೆ ನಡೆಯುವುದಕ್ಕೆ ಒಂದು ಬೌಗೋಳಿಕ ಜಾಗ ಬೇಕು. ನಾನು ಈ ಜಾಗವನ್ನು ಆಯ್ದುಕೊಂಡಿರುವ ಕಾರಣ, ನನಗೆ ಅದು ಹೆಚ್ಚು ಪರಿಚಿತವಾಗಿರುವುದು ಮಾತ್ರ. ನನ್ನ ‘ಧರ್ಮಶ್ರೀ’ ಯಲ್ಲಿ ನಾಯಕನ ಬಾಲ್ಯ ಮತ್ತು ತಂದೆತಾಯಿಗಳ ವಿಷಯ ತುಂಬ ಸಂಕ್ಷಿಪ್ತವಾಗಿ ಬರುತ್ತದೆ. ಆ ಕಾದಂಬರಿಗೆ ಅಷ್ಟು ವಿವರ ಸಾಕಾಗಿತ್ತು. ಕಲ್ಪನೆಯಲ್ಲಿ ಕಾಡುತ್ತಿದ್ದ ಆ ವಿವರವು ಕಳೆದ ಎಂಟು ವರ್ಷಗಳಲ್ಲಿ ಹಿಮ್ಮುಖವಾಗಿ ಬೆಳೆದು ಈ ರೂಪವನ್ನು ತಳೆದುನಿಂತಿತು. ಆದರೆ ಇದಕ್ಕೂ ‘ಧರ್ಮಶ್ರೀ’ ಗೂ ಯಾವ ಸಂಬಂಧವೂ ಇಲ್ಲ. ಇವೆರಡೂ ಸಂಪೂರ್ಣ ಪ್ರತ್ಯೇಕ ಕಾದಂಬರಿಗಳು. ಈ ಕಾದಂಬರಿ ನಿಮ್ಮನ್ನು ನಾಗಾಲೋಟ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ, ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತದೆಂಬುದು ನನಗೆ ಗೊತ್ತಿದೆ. ನಡೆಯುವವನು ತನ್ನ ಸುತ್ತನ್ನು ನೋಡುವಷ್ಟು ಸ್ಪಷ್ಟವಾಗಿ ಓಟಹೊಡೆಯುವವನು ನೋಡಲಾರ. ಇದಕ್ಕೆ ಇಟ್ಟಿರುವ ಹೆಸರು ಸಮರ್ಪಕವಾಗಿಲ್ಲ. ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದುಬಿಡುತ್ತದೆ. ಮತ್ತೆ ಕೆಲವುಬಾರಿ ಬರೆದು ಎರಡುವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ “ಯಾವುದಾದರೇನು? ಹೆಸರೇ ಬೇಡ. ‘ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮’ ಎಂದು ಯಾಕೆ ಇಡಬಾರದು?”-ಎಂಬ ವಿಚಾರ ಹುಟ್ಟಿತ್ತು. ವಸ್ತು, ಕೃತಿ, ಸ್ಥಳ, ವ್ಯಕ್ತಿ, ವಿಚಾರ, ಭಾವ, ಮೊದಲಾದುವನ್ನು ಸಂಕೇತಿಸುವುದೇ ಹೆಸರಿನ ಕೆಲಸ. ಆದುದರಿಂದ ಯಾವ ಹೆಸರಾದರೇನು ಎಂಬ ಉಪೇಕ್ಷೆಯೂ ಬಂದಿತ್ತು. ಅದರ ನಿಜವಾದ ಗುಣ ಚೈತನ್ಯಗಳು ಗೊತ್ತಿಲ್ಲದೆ, ಭವಿಷ್ಯದಲ್ಲಿ ತಿಳಿಯಬೇಕಾದ ಅನ್ವರ್ಥತೆಯನ್ನು ಸ್ವಲ್ಪವೂ ಲೆಕ್ಕಿಸದೆ ಮಗುವಿಗೆ ನಾಮಕರಣಮಾಡಿ ಪಾರಾಗುತ್ತೇವೆ. ಆದರೆ ಸಾಹಿತ್ಯಕೃತಿಗೆ ಹೆಸರಿಡುವಾಗ ಒಂದು ತಪ್ಪು-ಕೈಮರದ ನಿರ್ಮಾಣವಾಗುವ ಸಂಭವವುಂಟು: ಇಲ್ಲಿ ಹೆಸರು ಒಂದು ಪ್ರತೀಕವಾಗುತ್ತದೆ. ಇಡೀ ಕೃತಿಯ ಕ್ರಿಯೆ ಮತ್ತು ಮೌಲ್ಯಾರ್ಥಗಳನ್ನು ವಾಚಕರು ಈ ಪ್ರತೀಕದ ಕೇಂದ್ರ ದೃಷ್ಟಿಯಿಂದ ಗ್ರಹಿಸುತ್ತಾರೆ. ಕೃತಿಯನ್ನು ಅನುಭವಿಸುವ ದೃಷ್ಟಿಯನ್ನು ಹೆಸರು ನಿರ್ಧರಿಸಿಬಿಡುವ ಸಂಭವವಿರುತ್ತದೆ. ಕಥೆಯ ವಸ್ತುವು ಒಂದು ಪ್ರತೀಕದಲ್ಲಿ ಸಂಕೇತಿಸುವಷ್ಟು ಹಿಡಿತದಲ್ಲಿದ್ದಾಗ ವಸ್ತುವಿನ ಅರ್ಥದ ತೀವ್ರತೆಯನ್ನು ಸೂಚಿಸಲು ಹೆಸರು ಪ್ರತೀಕರೂಪದಲ್ಲಿ ನೆರವಾಗುತ್ತದೆ. ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ. ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, ‘ಗೃಹಭಂಗ’ ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ. +ಎಸ್.ಎಲ್. ಭೈರಪ್ಪ +ದಿಲ್ಲಿ +೧೯೭೦, ಮೇ ೧೫ +***** +ಕೀಲಿಕರಣ: ಸೀತಾಶೇಖರ್ +“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು. ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು. “ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ. “ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, […] +ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […] +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_324.txt b/Kannada Sahitya/article_324.txt new file mode 100644 index 0000000000000000000000000000000000000000..62a46398a628d4673ec696b22414aa06088d2c12 --- /dev/null +++ b/Kannada Sahitya/article_324.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು ಕರೆಯುತ್ತಾರೆ. ದ್ವಿಭಾಷಿತ್ವದಲ್ಲಿ ಮೇಲಿನದು ಮತ್ತು ಕೆಳಗಿನದು ಎನ್ನುವ ಕನಿಷ್ಠ ಎರಡು ಸ್ತರಗಳಿರುತ್ತವೆ. ಮೇಲಿನ ಸ್ತರ ಬರವಣಿಗೆಗೆ, ಆಢಳಿತಕ್ಕೆ ಮತ್ತು ಆಧ್ಯಾತ್ಮಕ್ಕೆ ಮೀಸಲಾಗಿದ್ದು ಕೆಳಗಿನ ಸ್ತರ ಸಾಮಾನ್ಯ ಜೀವನಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇವೆರಡೂ ಒಂದೇ ಭಾಷೆಯ ಎರಡು ರೀತಿಗಳಾಗಿದ್ದೂ ಒಂದಕ್ಕೊಂದು ಅರ್ಥವಾಗದ ತರ ಇರುವುದು ವಿಚಿತ್ರವಾದ ಸಂಗತಿ. ದ್ವಿಭಾಷಿತ್ವ ಮಿತಿ ಮೀರಿದಾಗ ಮೇಲಿನ ಸ್ತರ ಜೀವನ ಸಂಪರ್ಕ ಕಳೆದುಕೊಂಡು ಕೇವಲ ಮ್ಯೂಸಿಯಂ ಭಾಷೆಯಾಗಿ ಉಳಿಯುವ ಸಂಭವವಿದೆ. ಇದು ಯಾವ ಭಾಷೆಗೂ ಒಳ್ಳೆಯದಲ್ಲ. ಬಹುಷಃ ಸಂಸ್ಕೃತಕ್ಕೆ ಇದೇ ಗತಿಯಾಯಿತು. ಸಂಸ್ಕೃತವೆನ್ನುವ ಪದವೇ ಅದರ ಗತಿಯನ್ನು ಸೂಚಿಸುವಂತಿದೆ: ಸಂಸ್ಕೃತವೆಂದರೆ ಪರಿಷ್ಕರಿಸಿದ್ದು ಎಂದರ್ಥ. ಬಹುಷಃ ಪ್ರಾಕೃತ, ಪಾಳಿ ಮುಂತಾದ ಉಪಭಾಷೆಗಳಿಂದ ಪರಿಷ್ಕೃತವಾಗಿ ಸಂಸ್ಕೃತವಾಗಿರಬೇಕು. ಆದರೆ ಅತಿಯಾದ ಪರಿಷ್ಕಾರಕ್ಕೆ ಒಳಗಾದ ಸಂಸ್ಕೃತ ಒಂದು ಕಾಲಘಟ್ಟದಲ್ಲಿ ಅತ್ಯಂತ ಶ್ರೇಷ್ಠವಾದ ಹಲವು ಸಾಹಿತ್ಯ ಕೃತಿಗಳನ್ನು ಜಗತ್ತಿಗೆ ನೀಡಿದ್ದರೂ ಆಮೇಲೆ ಈ ‘ಅತಿ ಸಂಸ್ಕರಣ’ದಿಂದಾಗಿಯೇ ಸಾಮಾನ್ಯ ಜನರಿಂದ ದೂರ ಉಳಿಯಿತು. +ಒಂದು ಭಾಷೆ ಬೆಳೆಯಬೇಕಾದರೆ ಅದು ಹಲವು ಸ್ತರಗಳಲ್ಲಿ ಹಲವು ರೀತಿಗಳಲ್ಲಿ ಉಪಯೋಗವಾಗಬೇಕು–ಮುಖ್ಯವಾಗಿ ಜನಜೀವನದ ಎಲ್ಲ ಕ್ಷೇತ್ರಗಳಲ್ಲೂ ಅದು ಸಲ್ಲಬೇಕು. ಹಲವು ಕಾಲದ ಇತಿಹಾಸವಿರುವ ಜನತೆಗೆ ಸಂಬಂಧಿಸಿದಂತೆ ಜನಜೀವನವೆನ್ನುವುದು ಯಾವತ್ತೂ ಸರಳವಾಗಿರುವುದಿಲ್ಲ–ಅದಕ್ಕೂ ಹಲವು ಹಂತಗಳು, ಹಲವು ಕೋನಗಳು, ಹಲವು ದಿಕ್ಕುಗತಿಗಳು ಇರುತ್ತವೆ. ಆದ್ದರಿಂದಲೇ ಇಂಥ ಯಾವ ಭಾಷೆಯೂ ಅಖಂಡವಾಗಿಯೂ ತೆಳುವಾಗಿಯೂ ಇರಲಾರದು. ಎಂದರೆ, ಜೀವಂತ ಭಾಷೆಯಲ್ಲಿ ಹಲವು ರೀತಿಯ ಉಪಭಾಷೆಗಳಿರುತ್ತವೆ. ಇದ ಜೀವಂತಿಕೆಯ ಸ್ವಾರಸ್ಯ ಕೂಡಾ. ಈ ಉಪಭಾಷೆಗಳೆಲ್ಲವೂ ಬರೆಯುವ ಭಾಷೆಗೆ ಜೀವ ಸತ್ವ ಒದಗಿಸುವಂಥವು. ಆದರೂ ಬರೆಯುವ ಭಾಷೆ ಈ ಉಪಭಾಷೆಗಳನ್ನು ಕೀಳಾಗಿಯೇ ಕಾಣುವ ಅಹಮ್ಮನ್ನು–ಎಂದರೆ, ಸಾಂಸ್ಕೃತಿಕ ಯಜಮಾನಿಕೆಯನ್ನು–ಬೆಳೆಸಿಕೊಂಡಿರುವುದು ದುರದೃಷ್ಟಕರ. ಯಾಕೆಂದರೆ ಎಲ್ಲಾ ಕಡೆಯೂ ಬರೆಯುವ ಭಾಷೆ ಯಜಮಾನರದೇ ಆಗಿರೋದು ಇದಕ್ಕೆ ಕಾರಣ. ಕನ್ನಡದ ಮಟ್ಟಿಗೂ ಈ ಮಾತು ಸತ್ಯ: ಮೈಸೂರು ಹಾಗೂ ಬೆಂಗಳೂರು ಕಡೆಯ ಮೇಲ್ತರದ ಬರೆಯುವ ಕನ್ನಡವೇ ನಿಜವಾದ ಕನ್ನಡ ಹಾಗೂ ಉಳಿದದ್ದೆಲ್ಲ ಅಪಭ್ರಂಶವೆನ್ನುವ ಕಲ್ಪನೆಯೊಂದು ಕೆಲವರ ಮನಸ್ಸಿನಲ್ಲಿದೆ. ದ್ವಿಭಾಷಿತ್ವಕ್ಕೆ ಬಾಗಿಲು ತೆರೆಯುವ ಈ ಪ್ರವೃತ್ತಿ ಬರೆಯುವ ಭಾಷೆಗೆ ಮಾರಕವಾಗುತ್ತದೆ ಅನ್ನುವ ಚರಿತ್ರೆಯ ಪಾಠವನ್ನು ನಾವು ನೆನಪಿಡಬೇಕು; ಅದಲ್ಲದಿದ್ದರೆ ಕನ್ನಡವನ್ನು ಮ್ಯೂಸಿಯಂ ಭಾಷೆಯಾಗಿ ಮಾರ್ಪಡಿಸಿದಂತಾಗುತ್ತದೆ. +ಭಾಷೆಯೆನ್ನುವ ವಿದ್ಯಮಾನ ಬಹಳ ವಿಚಿತ್ರವಾದ್ದು. ಪರಸ್ವರ ವಿರುದ್ಧವೆನಿಸುವ ಬೇಡಿಕೆಗಳನ್ನದು ನಮ್ಮ ಮುಂದಿಡುತ್ತದೆ. ಉದಾಹರಣೆಗೆ, ಭಾಷೆಯ ಬೆಳವಣಿಗೆಗೆ ಪ್ರಮಾಣೀಕರಣ (ಸಂಸ್ಕರಣ) ಅಗತ್ಯ. ಎಂದರೆ, ಯಾವುದು ಸರಿ, ಯಾವುದು ತಪ್ಪು ಎನ್ನುವ ನಿಯಮ. ವಾಸ್ತವದಲ್ಲಿ ಭಾಷೆಯ ಉಪಯೋಗದಲ್ಲಿ ಸರಿ ತಪ್ಪುಗಳೆನ್ನುವುದು ಇಲ್ಲವೇ ಇಲ್ಲ ಎಂದು ನಾವು ವಾದಿಸಬಹುದೇನೋ ನಿಜ. ಆದರೂ ಪ್ರಬುದ್ಧವಾದ ಎಲ್ಲಾ ಭಾಷೆಗಳಲ್ಲೂ ಇಂತಹ ಪ್ರಜ್ಞೆಯೊಂದು ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಅದನ್ನು ವಿದ್ಯಾಭ್ಯಾಸ, ಆಢಳಿತ, ಕಾನೂನು, ತರ್ಕ ಮುಂತಾದ ಹತ್ತು ಹಲವು ಕೆಲಸಗಳಿಗೆ ಉಪಯೋಗಿಸುವುದು ಸಾಧ್ಯವಿಲ್ಲ. ಯಾಕೆಂದರೆ ಭಾಷೆ ಸಮೂಹದ ಸೊತ್ತಲ್ಲದೆ ವ್ಯಕ್ತಿಯೊಬ್ಬನದ್ದಲ್ಲ. ಆದ್ದರಿಂದ ಸಮೂಹ ಆಯಾ ಕಾಲದಲ್ಲಿ ಒಪ್ಪಿಕೊಂಡಿರುವ ಉಪಯೋಗ ಸೂತ್ರಗಳನ್ನು ಪ್ರತಿಯೊಬ್ಬನೂ ಪಾಲಿಸುವುದು ಅಗತ್ಯವಾಗುತ್ತದೆ. ಒಂದು ವೇಳೆ ಯಾವನೇ ಒಬ್ಬ ಈ ಸೂತ್ರಗಳನ್ನು ಮೀರಿದನೆಂದಾದರೆ ಅದರಿಂದ ಬೇರೆ ಬೇರೆ ಪರಿಣಾಮಗಳು ಉಂಟಾಗಬಹುದು. ಈ ಪರಿಣಾಮ ಕೂಡಾ ಭಾಷಾಸೂತ್ರದ ಇರವಿಗೆ ಸಾಕ್ಷಿ. ಕನ್ನಡದಲ್ಲಿ ನೃಪತುಂಗ, ಕೇಶಿರಾಜ ಮುಂತಾದ ವಿದ್ವಾಂಸರು ಕ್ರೋಢೀಕರಿಸಿದ್ದು ಇಂಥ ಉಪಯೋಗ ಸೂತ್ರಗಳನ್ನೇ. ವೈಯಾಕರಣಿಗಳು ಎಷ್ಟೇ ಯತ್ನಿಸಿದರೂ ಯಾವ ಭಾಷೆಯೂ ಇದ್ದಂತೇ ಇರುವುದಿಲ್ಲ, ಮಾರ್ಪಡುತ್ತಲೇ ಇರುತ್ತದೆ ಎನ್ನುವುದು ಬೇರೆ ಮಾತು. ನಿಜವಾಗಿ ಹೇಳುವುದಿದ್ದರೆ ವೈಯಾಕರಣಿಗಳು ಭಾಷೆಯ ಮೇಲೆ ಸೂತ್ರಗಳನ್ನು ಹೇರುವುದಿಲ್ಲ, ಹೊರತು ತಂತಮ್ಮ ಕಾಲದ ಭಾಷೆಯ ಉಪಯೋಗವನ್ನು ಅವರು ವರ್ಣಿಸುತ್ತಾರೆ. ಇದನ್ನೇ ನಾವು ಸ್ಥಿರಸೂತ್ರಗಳೆಂದು ತಪ್ಪಾಗಿ ತಿಳಿದುಬಿಡುತ್ತೇವೆ. ಹಾಗೂ ಬೆಳೆಯುವ ಭಾಷೆಯೊಂದರಲ್ಲಿ ಇಂಥ ವ್ಯಾಕರಣ ಗ್ರಂಥಗಳು ಪ್ರಮಾಣಮೂಲಗಳೆಂದು ಅನಿಸಿದರೆ ಅದು ಕೂಡಾ ಸಹಜವೇ. ಯಾಕೆಂದರೆ, ಭಾಷೆಯ ಪ್ರಮಾಣೀಕರಣದಲ್ಲಿ ವ್ಯಾಕರಣ ಗ್ರಂಥಗಳು, ನಿಘಂಟುಗಳು, ಕೈಪಿಡಿಗಳು, ಅನುವಾದ ಕಾರ್ಯಗಳು, ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳು, ಪತ್ರಿಕೆಗಳು, ಸಾಹಿತ್ಯ ಮತ್ತು ಸಿದ್ಧಾಂತ ಕೃತಿಗಳು, ಸುದ್ದಿ ಮತ್ತು ಸಂಸ್ಕೃತಿ ಮಾಧ್ಯಮಗಳು, ಸಂಶೋಧನೆ, ಪುಸ್ತಕಪ್ರಕಟಣೆ ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತವೆ. ಇದೊಂದು ರೀತಿಯ ಕ್ರೋಢೀಕರಣ. ಒಂದು ರೀತಿಯ ಬಿಗಿ. ಒಂದು ರೀತಿಯ ಗುಣಮಟ್ಟ ಕಾಪಾಡಿಕೊಳ್ಳುವಿಕೆ. +ಹದಿನೆಂಟನೇ ಶತಮಾನದಲ್ಲಿ ಡಾಕ್ಟರ್ ಜಾನ್ಸನ್ ಏಕಾಕಿಯಾಗಿ ಸಂಪಾದಿಸಿದ ನಿಘಂಟು ಇಂಗ್ಲಿಷ್ ಭಾಷೆಯ ಪ್ರಮಾಣೀಕರಣಕ್ಕೆ ಉತ್ಸಾಹಪೂರ್ಣ ತಳಹದಿಯನ್ನು ಹಾಕಿಕೊಟ್ಟಿತು. ಆ ನಂತರ ಇಪ್ಪತ್ತನೆ ಶತಮಾನದಲ್ಲಿ ಹಲವು ವಿದ್ವಾಂಸರು ಸೇರಿ ಸಂಪಾದಿಸಿದ ಆಕ್ಸ್‌ಫರ್ಡ್ ಇಂಗ್ಸಿಷ್ ಡಿಕ್ಷನರಿ ಈ ಕೆಲಸವನ್ನು ಅಂದಿನಿಂದಲೂ ಮಾಡುತ್ತಿದೆ. ಅದೇ ರೀತಿ ಬಿ.ಬಿ.ಸಿ. ದೊಡ್ಡ ಪ್ರಮಾಣದಲ್ಲಿ ಈ ಭಾಷೆಯ ಮೇಲ್‌ಸ್ತರದ ಗುಣಮಟ್ಟವನ್ನು ಕಾಪಾಡಿಕೊಂಡು ಬರುವುದಕ್ಕೆ ಕಾರಣವಾಗಿಯಿತು. ಹಾಗೂ ಈ ನಿಟ್ಟಿನಲ್ಲಿ ಹಲವಾರು ವ್ಯಾಕರಣ ಗ್ರಂಥಗಳು, ವಿಶ್ವವಿದ್ಯಾಲಯಗಳು, ಪತ್ರಿಕೆಗಳು, ಸಾಹಿತ್ಯ ಕೃತಿಗಳು, ಪ್ರಕಟಣಾಲಯಗಳು ತಂತಮ್ಮ ಕೊಡುಗೆಯನ್ನು ನೀಡುತ್ತ ಬಂದಿವೆ. ಡಾಕ್ಟರ್ ಜಾನ್ಸನ್‌ಗಿಂತಲೂ ಎರಡು ಶತಮಾನದಷ್ಟು ಹಿಂದೆ ಜರ್ಮನ್ ಭಾಷೆಗೆ ಪ್ರಮಾಣ ಬದ್ಧವಾದೊಂದು ಮಾದರಿಯೇ ಇರಲಿಲ್ಲ. ಜರ್ಮನ್ ಭಾಷೆಯೆನ್ನುವುದು ಹಲವಾರು ಉಪಭಾಷೆಗಳದೊಂದು ಗುಂಪಾಗಿದ್ದಿತು. ಸರಕಾರೀ ಭಾಷೆಯೆಂಬುದೊಂದು ಇದ್ದಿತಾದರೂ ಜನರದನ್ನು ಒಂದು ಸಾಂಸ್ಕೃತಿಕ ಮಾದರಿಯೆಂದನೂ ಸ್ವೀಕರಿಸಿರಲಿಲ್ಲ. ಮಾರ್ಟಿನ್ ಲೂಥರ್ ಹದಿನಾರನೆ ಶತಮಾನದ ಮಧ್ಯದಲ್ಲಿ ಮಾಡಿದ ಬೈಬಲ್ ಭಾಷಾಂತರವೇ ಈಗಿನ ಪ್ರಮಾಣ ಬದ್ಧ ಜರ್ಮನ್ ಭಾಷೆಗೆ ಅಡಿಪಾಯ. ಈ ಬೈಬಲ್ ಭಾಷಾಂತರವನ್ನು ಎಲ್ಲರೂ ಕೂಡಲೇ ಒಪ್ಪಿಕೊಳ್ಳದೆ ಇದ್ದರೂ ಜನ ತಮ್ಮ ಭಾಷೆಯನ್ನು ನೋಡುವ ವಿಧಾನವನ್ನಿದು ಬದಲಾಯಿಸಿತು. ಅದು ವರೆಗೆ ಹರಿಹಂಚಾಗಿದ್ದ ಜರ್ಮನ್ ಭಾಷೆಗೆ ಕೇಂದ್ರಶಕ್ತಿಯೊಂದನ್ನು ನೀಡಿದುದು ಲೂಥರ್‌ನ ಬೈಬಲ್ ಎನ್ನಬಹುದು. ಹದಿನಾರನೆ ಶತಮಾನದಲ್ಲಿ ಫ್ರಾನ್ಸಿನ ವಿವಾದಾತ್ಮಕ ಮುಖ್ಯಮಂತ್ರಿ ಕಾರ್ಡಿನಲ್ ರಿಚ್ಲ್ಯೂ ಸ್ಥಾಪಿಸಿದ ಫ್ರೆಂಚ್ ಅಕಾಡೆಮಿಯೂ ಫ್ರೆಂಚ್ ಭಾಷೆಗೆ ಸಂಬಂಧಿಸಿದಂತೆ ಇಂಥದೇ ಉದ್ದೇಶವನ್ನು ಹೊಂದಿಕೊಂಡಿತ್ತು. ೧೬೩೫ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿದ್ವತ್ ಸಂಘ ಅರ್ಥಾತ್ ಫ್ರೆಂಚ್ ಅಕಾಡೆಮಿ ನಿಘಂಟು, ವ್ಯಾಕರಣ, ಅಲಂಕಾರ ಶಾಸ್ತ್ರ, ಛಂದಸ್ಸೇ ಮೊದಲಾದ ವಿಷಯಗಳಲ್ಲಿ ಸರ್ವಮಾನ್ಯವಾದ ಪ್ರಮಾಣಬದ್ಧ ಕೃತಿಗಳನ್ನು ಹೊರತರುವ ಯೋಜನೆಯನ್ನು ಹಾಕಿಕೊಂಡಿತು. ಇವುಗಳಲ್ಲಿ ಕೇವಲ ನಿಘಂಟುವೊಂದನ್ನೇ ಅದಕ್ಕೆ ಸಾಧ್ಯವಾಯಿತಾದರೂ ಈ ಅಕಾಡೆಮಿ ಫ್ರೆಂಚ್ ಭಾಷೆಗೆ ಸಂಬಂಧಿಸಿದಂತೆ ಈಗಲೂ ಅತ್ಯುನ್ನತ ನಿರ್ಣಾಯಕ ಸ್ಥಾನದಲ್ಲಿದೆ. ಕನ್ನಡದ ಕುರಿತಾಗಿ ಹೇಳುವುದಿದ್ದರೆ, ರೆವರೆಂಡ್ ಫಾದರ್ ಕಿಟ್ಟೆಲ್‌ರವರು ತಮ್ಮ ಜೀವನದ ಬಹುಪಾಲನ್ನು ಮುಡಿಪಾಗಿರಿಸಿ ಭಾಷಾಸೇವೆಯೂ ಜನಸೇವೆಯೇ ಎಂಬ ನಂಬಿಕೆಯಿಂದೆಂಬಂತೆ ಸಂಪಾದಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಹತ್ತೊಂಬತ್ತನೇ ಶತಮಾನದ ಎರಡನೆ ಭಾಗದಲ್ಲಿ ಕನ್ನಡ ಭಾಷೆಯ ಪ್ರಮಾಮಿಣೀಕರಣಕ್ಕೆ ಚಾಲನೆಯನ್ನು ನೀಡಿತೆನ್ನಬಹುದು. +ಇಂಗ್ಲಿಷ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಧುನಿಕ ಕನ್ನಡ ಒಂದು ಪ್ರಮಾಣೀಕರಣ ಘಟ್ಟವನ್ನು ತಲುಪಿದೆಯೆಂದು ಹೇಳುವಂತಿಲ್ಲ. ಕನ್ನಡ ಬಹಳ ಪ್ರಾಚೀನವಾದ ಸಾಹಿತ್ಯವೆನ್ನುವುದು ನಿಜ; ಕನ್ನಡದ ಸಾಹಿತ್ಯದ ಪ್ರಮಾಣವೂ ಸಾಕಷ್ಟು ದೊಡ್ಡದು. ಹೀಗಿದ್ದೂ ಇಂದಿನ ಕನ್ನಡ ಮೂಲವಿಜ್ಞಾನಕ್ಕೆ, ಸಾಮಾಜಿಕ ವಿಜ್ಞಾನಕ್ಕೆ, ತತ್ವಜ್ಞಾನ, ಭಾಷಾವಿಜ್ಞಾನವೇ ಮುಂತಾದ ಹತ್ತು ಹಲವಾರು ಶಿಸ್ತುಗಳಿಗೆ ಮಾಧ್ಯಮವಾಗುವುದಕ್ಕೆ ಸಾಧ್ಯವಾಗಿದೆಯೇ? ಸಾಧ್ಯವಾಗಬೇಕಾದರೆ ಏನಾಗಬೇಕು? ಇಂಥ ಪ್ರಶ್ನೆಗಳನ್ನು ನಾವು ಕೈಗೆತ್ತಿಕೊಂಡಾಗ ಅನಿಸುವುದು–ಕನ್ನಡದ ಆಧುನೀಕರಣ ಇನ್ನೂ ಆಗಬೇಕಾಗಿದೆ ಎಂದು. ಪ್ರಪಂಚದ ಯಾವುದೇ ವಿಷಯದ ಕುರಿತೂ ಕನ್ನಡದಲ್ಲಿ ವಿವೇಚಿಸುವುದು ನಮಗೆ ಸಾಧ್ಯವಾಗಬೇಕು. ಅದಕ್ಕೆ ಕನ್ನಡದ ಪದಸಂಪತ್ತು, ವಾಕ್ಯಸಂಪತ್ತು ಬೆಳೆಯುವುದರ ಜತೆಯಲ್ಲೇ ಪ್ರಮಾಣೀಕರಣವೂ ಆಗಬೇಕು. ಎಂದರೆ, ನಿಖರವಾಗಿ ಮಾತಾಡುವುದು, ಬರೆಯುವುದು, ಅರ್ಥ ಮಾಡುವುದು ನಡೆಯಬೇಕು. ಇದೆಲ್ಲ ಜತೆ ಜತೆಯಾಗಿ ಆಗಬೇಕಾದ ಕೆಲಸ: ವಿಚಾರ ಸಾಹಿತ್ಯದ ರಚನೆಯಿಂದಲೇ ಇಂಥ ಭಾಷೆಯೂ ಅಸ್ತಿತ್ವಕ್ಕೆ ಬರುವುದು. ಮೊದಲು ಭಾಷೆ ಅಸ್ತಿತ್ವಕ್ಕೆ ಬರಲಿ, ಆಮೇಲೆ ನೋಡೋಣ ಎಂಬಂತಿಲ್ಲ. +ಈ ಹಿಂದೆಯೇ ಹೇಳಿದಂತೆ, ಭಾಷೆ ಪ್ರಮಾಣೀಕರಣಕ್ಕೆ ಒಳಗಾಗುತ್ತಿದ್ದಂತೆಯೇ ಆಡುಮಾತಿನಿಂದ ದೂರವಾಗುವ ಸಂಭವವೂ ಇದೆ. ಬಿ.ಬಿ.ಸಿ. ಈ ಅಪಾಯವನ್ನು ಮನಗಂಡೇ ಎಪ್ಪತ್ತು ಎಂಬತ್ತರ ದಶಕಗಳಲ್ಲಿದ್ದ ಬಿಗುವನ್ನು ಆಮೇಲೆ ಸಡಿಲಿಸತೊಡಗಿದ್ದು. ಇನ್ನೂ ಅಷ್ಟೊಂದು ಬಿಗುವಿಗೆ ಒಳಗಾಗದಿರುವ ಕನ್ನಡ ಈ ಅಪಾಯದಿಂದ ದೂರವಿರುವುದಕ್ಕೆ ಬಹುಶಃ ಕಲಿತುಕೊಳ್ಳುವಂಥದೇನಿಲ್ಲ. ಆದರೂ ಅರಿತುಕೊಳ್ಳಬೇಕಾದ್ದು ಸಾಕಷ್ಟಿದೆ. ಕನ್ನಡದ ಸಮಾಜ ಜಾರಿತ್ರಿಕವಾಗಿ ಹಲವು ‘ಜಾತಿ’ಗಳಾಗಿ ಹರಿಹಂಚಾಗಿರುತ್ತ, ಇಲ್ಲಿ ಹೇಳಬೇಕಾದ ಮಾತೆಂದರೆ, ಕನ್ನಡಕ್ಕೆ ಹೇಗೆ ಎಲ್ಲಾ ಉಪಭಾಷೆಗಳ ಸತ್ವ ಬೇಕಾಗಿದೆಯೋ ಅದೇ ರೀತಿ ಅದಕ್ಕೆ ಜಾಗತಿಕವಾದ ಶೈಲಿಯೂ ಅಗತ್ಯ. ಅಥವಾ ಇದನ್ನೇ ತಿರುಗಿಸಿ ಹೇಳುವುದಾದರೆ, ಕನ್ನಡಕ್ಕೆ ಪಂಡಿತರೂ ವಿವಿಧ ಕಳಾಮಂಡಿತರೂ ಕೇಳತಕ್ಕ ಭಾಷಾವಿಧಾನ ಎಷ್ಟು ಬೇಕೋ ಅಷ್ಟೇ ಕಂಡವರು ಕೇಳುವ ಬೀದಿ ಮಾತೂ ಅಗತ್ಯ. ಅದು ಬೇಡ, ಇದು ಸಾಕು ಎನ್ನುವುದಕ್ಕಿಂತ ಅದೂ ಬೇಕು, ಇದೂ ಬೇಕು ಎನ್ನುವುದೇ ವಿವೇಕಪೂರ್ಣವಾದ ನಿಲುವು. ಯಾವ ಭಾಷೆ ಹಲವು ಸ್ತರಗಳನ್ನು ಒಟ್ಟಿಗೇ ಒಳಗೊಂಡಿರುತ್ತದೋ ಅದೇ ಹೆಚ್ಚು ಸತ್ವಪೂರ್ಣವಾಗಿರುವುದು. ಬದಲಿಗೆ, ಯಾವಾಗ ಅದು ಏಕಸ್ತರವಾಗುತ್ತದೋ ಆವಾಗ ಮುಖ್ಯವಾದ ಏನನ್ನೋ ಕಳಕೊಳ್ಳುತ್ತದೆ: ಒಂದೋ ಅದು ಪೂರ್ತಿ ಅತಿಭೌತಿಕವಾಗುತ್ತದೆ, ಇಲ್ಲವೇ ಕೇವಲ ಭೌತಿಕವಾಗುತ್ತದೆ. ಪಾರಮಾರ್ಥಿಕವನ್ನೂ ಆರ್ಥಿಕವನ್ನೂ, ಸ್ವರ್ಗವನ್ನೂ ಮರ್ತ್ಯವನ್ನೂ ಒಟ್ಟಿಗೇ ಸಂಧಿಸಲು ಸಾಧ್ಯವಾಗಿಸುವ ಕನ್ನಡ ನಮಗೆ ಬೇಕಾದ್ದು. +***** +ಧನ್ಯತೆಯ ಧ್ಯಾಸ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ […] +ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು […] +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_325.txt b/Kannada Sahitya/article_325.txt new file mode 100644 index 0000000000000000000000000000000000000000..297d716eef050d1825c87039d314163afa7a711c --- /dev/null +++ b/Kannada Sahitya/article_325.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಳಿಗಾಲದಲ್ಲಿ ಒಬ್ಬನೇ ಬೆಚ್ಚಗೆ ಹೊದ್ದು ಕುಳಿತಾಗ +ಮುಪ್ಪು ಮಾತಾಡಿಸಿತು,ತೀರ ಹತ್ತಿರಕೆ ಬಂದು : +“ಏನಪಾ, ಎಲ್ಲ ಸೌಖ್ಯವೆ? ಇತ್ತೀಚೆ ಮತ್ತೆ ಬರವಣಿಗೆ? +ಷಷ್ಟ್ಯಬ್ದಿಗೂ ನಾನು ಬಂದಿದ್ದೆನಲ್ಲ, ನೆನಪಿರಬಹುದು. +ವಿಶ್ರಾಂತ ಜೀವನದಲ್ಲು ಬಿಡುವಿಲ್ಲವೆಂದರೆ ಹೇಗೆ? +ಮಾತಾಡು, ಭಾಷಣ ಬಿಟ್ಟು ಬೇರೆ ವಿಷಯ: +ಮಕ್ಕಳೆಲ್ಲರು ದೂರ, ಮನೆಯಲ್ಲಿ ಇಬ್ಬರೇ ರಾಜಕಾರಣಿಯರು- +ತಮಾಷೆಗೆಂದೆ ಮಾರಾಯ, ಕುಡಿದಿಲ್ಲವೆ ನಾನೂ ಕಷಾಯ? +ವಸಂತದ ಚಿಗುರು, ಮೊಗ್ಗುಗಳ ಹಿಗ್ಗು ಯಾರಿಗೆ ಬೇಡ? +ಅಂಬೆಗಾಲು, ಅಚ್ಚರಿಗಣ್ಣು, ತೊದಲು ಮಾತು; +ನೋಡು ನೋಡುವಷ್ಟರಲ್ಲಿ ಕರಗಿ ಹೋಗಿತ್ತು ಪೆಪ್ಪರಮಿಂಟು- +ಬಿದ್ದ ಹಲ್ಲಿನ ಜಾಗದಲ್ಲಿ ನಾಲಗೆಯ ನಂಟು. +ವೈಶಾಖಕ್ಕೆ ಯೌವನದ ಸೊಕ್ಕು, ಬಿಸಿಲೂ ಪ್ರಖರ- +ಮುಂಗಾರಿನೊಡಲ ಮಿಂಚು, ಮಳೆಯ ರಭಸ; +ಬೇಗೆಯಿಲ್ಲದ ಬಿಸಿಲ ಹದ ಈಗ, ಉದ್ವೇಗವಿಲ್ಲದ ನಡಿಗೆ +ಮುಗಿದ ಸುಗ್ಗಿಯ ಕೊಡುಗೆ: ನಕ್ಷತ್ರಗಳ ಮಂದಹಾಸ. +ಹಂಪುಗಾಲಕ್ಕೆ ಹಣ್ಣಿಗೆ ಬೇರೆ ಬಣ್ಣ, ರುಚಿಯೂ ಅಷ್ಟೆ +ಮಾಗಿದನುಭವದ ಕಳೆ ಮುಖದ ಮೇಲೆ: +ಬದುಕಿನಿತಿಮಿತಿಯನರಿತ ಸಂತೃಪ್ತಿ, ನಿಶ್ಚಿಂತ ನಿಲುವು +ಹೊಸ ಚೆಲುವಿನಾವಿಷ್ಕಾರ, ಸುಕುಮಾರಲೀಲೆ. +ಹಿರಿಯನೆಂದೆನಿಸಿಕೊಳ್ಳುವದು ನಿನ್ನಂಥವಗೆ ಸ್ವಲ್ಪ ಕಿರಿಕಿರಿಯೆ +ಅದಕಾಗಿ ಸಲಿಗೆ ಮೊಮ್ಮಗಳಿಗೆ ಅಜ್ಜನೊಡನೆ: +ಶಿಶಿರದ ಬಸಿರಿನಲ್ಲೆ ಚೈತ್ರ ಕಣ್‌ತೆರೆವ ಜೀವದ ಕುಸುರು +ಒಣಗಿರಿವ ಕೊಂಬೆದುದುಯಲ್ಲಿ ಹಕ್ಕಿಯಾಲಾಪನೆ. +ಸಂಜೆಗೆಂಪಿನ ಮುಂದೆ ಬದುಕಿನ ಗುಟ್ಟು ಬಿಚ್ಚಿಡುವಂತೆ +ಬೆಟ್ಟ, ಸ್ತಬ್ಧ ಗಿಡಮರ, ನಿಶ್ಯಬ್ದ ಹಕ್ಕಿ-ಸಾಲು: +ಕಾಡಿನಂಚಿಗೆ ಕಣ್ಣು ಮುಚ್ಚಾಲೆ ಮಿಂಚು-ಹುಳು +ಹುಬ್ಬುಗೈಹಚ್ಚಿ ನೋಡುವ ಚಂದ್ರ, ಹಿಡಿದು ಲಾಂದ್ರ. +ಬೆಳಗಿನ ವಿಹಾರದಲಿ ಮೈಕೊರೆವ ಚಳಿ, ಮೂಡ ಗಾಳಿಯ ಮೊರೆತ- +ನಗುನಗುತ ಹಣ್ಣೆಲೆಗಳುದುರಿ ಚದುರುವಾಟ: +ಜೀವನಲಯದ ಸ್ವೀಕಾರದಲ್ಲಿದೆ ಸೊಗಸು; ಇದೆಲ್ಲಿಯ ತರಲೆ +ಎನಬೇಡ, ನಾನಿನ್ನು ಬರಲೆ? ಗೊತ್ತಲ್ಲ ನಾ ಸ್ವಲ್ಪ ಒರಟ”. +ಚಹವ ಗುಟಕರಿಸುತ್ತ ಮೇಲೆದ್ದ ಬಾಲ್ಯದ ಗೆಳೆಯ +ನಕ್ಕು, ಕೈಕುಲುಕಿ ದಟ್ಟಮಂಜಿನಲಿ ಕರಗಿಹೋದ. +***** +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು ಹಲ್ಲು ಮೊಲೆ ಮೂಗು ಕೈಕಾಲುಗಳಿಗು. ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ. ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ ಮೈಕಡಿದರೆ ಅದಕ್ಕೊಂದು ಕ್ರೀಮು, […] +ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_326.txt b/Kannada Sahitya/article_326.txt new file mode 100644 index 0000000000000000000000000000000000000000..f141bf3c1f4cd767f19d30eaf036c701fd9f70b6 --- /dev/null +++ b/Kannada Sahitya/article_326.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ ವಿಶ್ವಾಸ ಇಪ್ಪತ್ತು ವರ್ಷಗಳದ್ದು. ಅವರು ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆಂಬುದು ನನಗೆ ಆಶ್ಚರ್ಯದ ವಿಷಯವೇ ಆಗಿ ಉಳಿದಿದೆ. ಅಡಿಗರಿಗೆ ಸರ್ವಮಾನ್ಯರಾಗುವುದು ಕಷ್ಟದ ಸಂಗತಿ. ಅವರಿನ್ನೂ ಜೀವಂತ ವ್ಯಕ್ತಿಯಾದ್ದರಿಂದ ಎಲ್ಲರಿಂದ ಸೈ ಎನಿಸಿಕೊಳ್ಳಬೇಕೆಂಬ ವ್ಯಾಮೋಹ ಅವರಿಗಿಲ್ಲ. ಅಧಿಕಾರದಲ್ಲಿರುವ ಜನರಿಗೆ ಅಡಿಗರು ಯಾವತ್ತೂ ಮುಜುಗರ ಹುಟ್ಟಿಸುವ ವ್ಯಕ್ತಿಯಾಗಿ ಉಳಿದಿದ್ದಾರೆ. ಸಂಸ್ಥೆಗಳಲ್ಲಿ ಅವರು ಸುಲಭವಾಗಿ ಸಲ್ಲುವವರಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನು ಅವರು ಎತ್ತಿ ಹಿಡಿಯುತ್ತಿದ್ದ ಕಾಲದಲ್ಲಿ ಅವರು ಪ್ರಿನ್ಸಿಪಾಲರಾಗಿದ್ದ ಕಾಲೇಜಿನ ಒಬ್ಬ ಜವಾನನ ಪರವಾಗಿ ದೊಡ್ಡ ವರ್ತಕನೊಬ್ಬನ ಜೊತೆ ಅವರು ಜಗಳವಾಡಿದ್ದು ನನಗೆ ಗೊತ್ತಿದೆ. ಎರಡು ಕಾಲೇಜುಗಳ ಪ್ರಿನ್ಸಿಪಾಲ್ ಹುದ್ದೆಯನ್ನು , ನ್ಯಾಷನಲ್ ಬುಕ್ ಟ್ರಸ್ಟಿನ ದೊಡ್ಡ ಕೆಲಸವನ್ನು ಇವರು ಎಷ್ಟು ಸುಲಭವಾಗಿ ಮುಂದಾಲೋಚನೆಯಿಲ್ಲದೆ ಬಿಟ್ಟುಕೊಟ್ಟರೆಂಬುದನ್ನು ಕಂಡು ನಾನು ಚಕಿತನಾಗಿದ್ದೇನೆ. ಜೇಬಿನಿಂದ ಕೊನೆಯ ರೂಪಾಯಿ ಖರ್ಚಾಗುವ ತನಕ ಅಡಿಗರು ಎಷ್ಟು ಧಾರಾಳಿಗಳು ಎಂಬುದು ಗತಿಸಿದ ನನ್ನ ಗೆಳೆಯ ಸದಾಶಿವನಿಗೆ ಮತ್ತು ನನಗೆ ಗೊತ್ತು. ಸದಾ ಹಸಿದಿರುತ್ತಿದ್ದ ನಮ್ಮ ಹೋಟೆಲ್ ಬಿಲ್ಲುಗಳನ್ನು ಸಾಮಾನ್ಯವಾಗಿ ಅಡಿಗರೇ ಎತ್ತಿಕೊಳ್ಳುತ್ತಿದ್ದುದು. +uಟಿಜeಜಿiಟಿeಜ‌ಅವರದು ಮಗುವಿನಂಥ ನಿಷ್ಕಪಟ ಮನಸ್ಸೆಂದೂ ನನಗೆ ಗೊತ್ತು. ಪ್ರೀತಿ, ದ್ವೇಷ ಎರಡೂ ಅವರಲ್ಲಿ ಉತ್ಕಟ. ಹುಟ್ಟಿನಿಂದಲೇ ಕೆಲವು ಮನುಷ್ಯರು ರಾಕ್ಷಸರಾಗಿರುತ್ತಾರೆ ಎಂದು ತಿಳಿಯುವ ಅಡಿಗರಿಗೆ ವಿವರಣೆಗೆ ಸಿಕ್ಕದ ಈವಿಲ್ ಜೀವನದ ಒಂದಂಶವಾಗಿ ಇದೆ. ನಂಬಿ ಮೋಸ ಹೋದೆನೆಂದು ನಮಗೆಲ್ಲರಿಗೂ ಒಮ್ದಲ್ಲ ಒಂದು ಕಾಲದಲ್ಲಿ ಅನ್ನಿಸುವ ಭಾವನೆ ಅಡಿಗರ ಕಾವ್ಯದಲ್ಲಿ ತೀವ್ರವೂ ಗಾಢವೂ ಆದ ಚಿಂತನೆಯನ್ನು ನಿರ್ವಹಿಸುವ ನೋವಾಗಿ ಬರುತ್ತದೆ. ’ಗೊಂದಲಪುರ’, ’ಭೂಮಿಗೀತ’, ’ಕೂಪ ಮಂಡೂಕ’ ಈ ಎಲ್ಲ ಕವನಗಳ ಮೂಲದಲ್ಲಿರುವುದು ಮುಗ್ದನೊಬ್ಬ ನಂಬಿ ಮೋಸ ಹೋದ ಭಾವನೆ. +“ಕ್ರೌಂಚ ವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು.” ಹಸಿಯಾದ ಮೈಯ ಮೃದುವಾದ ಹುಳ ರೇಷ್ಮೆಯ ಗಟ್ಟಿಯಾದ ನೂಲನ್ನು ಉತ್ಪನ್ನ ಮಾಡುತ್ತದೆ. ಅದರ ಮೈ ನೋಯಬಲ್ಲ ಬತ್ತಲೆಯದಾದ್ದರಿಂದ ಈ ಗಟ್ಟಿ ರೇಷ್ಮೆ ಅದಕ್ಕೆ ಸಾಧ್ಯ ಎಂಬುದಿಲ್ಲಿ ಮುಖ್ಯ. ಜೀವನದ ಮೂಲದಲ್ಲಿರುವ ಈ ನೋವನ್ನು ಅಡಿಗರು ಅಹೇತುಕವಾದ್ದೆಂದು ತಿಳಿದಿರಬಹುದು. ಮೇಲೆ ನಾನು ಉದ್ಧರಿಸಿದ ಅಡಿಗರ ಸಾಲು ಅವರ ಕಾವ್ಯದ ಪ್ರಕ್ರಿಯೆಯನ್ನು ಸಾರದಲ್ಲಿ ತಿಳಿಸುತ್ತದೆ ಎಂದು ನನಗೆ ಅನೇಕ ಸಾರಿ ಅನ್ನಿಸಿದೆ. ಅಡಿಗರ ಎಲ್ಲ ಮುಖ್ಯ ಕವನಗಳ ಕೇಂದ್ರದಲ್ಲಿ ಇಂಥ ಒಂದು ಬತ್ತಲೆಯ ನೋಯಬಲ್ಲ, ಅನುಭವದ ಆಘಾತಕ್ಕೆ ಒಡ್ಡಿಕೊಂಡ, ತನ್ನ ಗಟ್ಟಿತನವನ್ನೂ ಪಡೆದ ವ್ಯಕ್ತಿತ್ವವಿದೆ ಎನ್ನಬಹುದು. +ಅಡಿಗರ ಕಾವ್ಯದಲ್ಲಿ ಗಾಢವಾದ ತಾತ್ವಿಕ ಚಿಂತನೆ ರಾಜಕೀಯ ಸಾಮಾಜಿಕ ಚಿಂತನೆಯ ಜೊತೆ ಜೊತೆಗೆ ಸಾಗುತ್ತದೆ. ಅವರ ಕಾವ್ಯವನ್ನು ಸಾಮಾಜಿಕ/ ವೈಯಕ್ತಿಕ ಅಥವಾ ಅಂತರ್ಮುಖ/ಬಹಿರ್ಮುಖ ಎಂದು ವಿಭಾಗಿಸುವುದರ ಬದಲು ಅದರ ಒಟ್ಟು ದಿಕ್ಕು ಸಾಂಸ್ಕೃತಿಕ ಎನ್ನುವುದೇ ಹೆಚ್ಚು ಸರಿ ಎಂದು ಈಚೆಗೆ ನನಗೆ ಅನ್ನಿಸುತ್ತಿದೆ. ರಾಜಕೀಯ ವಿಡಂಬನೆಗಳನ್ನು ಅವರು ಬರೆದಿಲ್ಲವೆಂದಲ್ಲ. ’ಭೂಮಿಗೀತ’ದಂಥ ಪದ್ಯದಲ್ಲಿ ನಮ್ಮ ಪ್ರಸ್ತುತ ಸಾಮಾಜಿಕ ಸಮಸ್ಯೆಗಳು ಇಣುಕುವುದಿಲ್ಲವೆನ್ನುವುದೂ ನಿಜ. ಆದರೆ ಅವರ ’ಭೂತ’, ’ರಾಮನವಮಿಯ ದಿವಸ’, ’ವರ್ಧಮಾನ’ಗಳಂತಹ ಮುಖ್ಯ ಕವನಗಳಲ್ಲಿ ಅವರ ಮೂಲ ಕಾಳಜಿ ಸಾಂಸ್ಕೃತಿಕ ಎನ್ನಬಹುದು. ಮನುಷ್ಯನ ಬುದ್ಧಿ ಮತ್ತು ಭಾವನೆಗಳು ಎಚ್ಚರದಲ್ಲಿ ಸೃಷ್ಟಿಸುವ ಮೌಲ್ಯಗಳು ಒಂದು ಸಂಸ್ಕೃತಿಯನ್ನು ಕಟ್ಟುತ್ತವೆ. ವ್ಯಕ್ತಿ, ಸಮಾಜ ಮತ್ತು ಮಾನವೇತರ ಜಗತ್ತು- ಈ ಮೂರರ ನಡುವೆ ಸಂಬಂಧಗಳನ್ನು ಸೃಷ್ಟಿಸುವುದು, ಅದನ್ನು ನಮ್ಮ ನಡೆ ನುಡಿಗಳಲ್ಲಿ ರೂಢಿಸುವುದು ಸಂಸ್ಕೃತಿಯ ಕೆಲಸ. ಸಂಸ್ಕೃತಿಯ ಚೌಕಟ್ಟಿನಲ್ಲಿ ಶಿಸ್ತು, ಸಂಯಮ, ವ್ರತಗಳ ಮೂಲಕ ಮನುಷ್ಯ ಪರಿಪಕ್ವನಾಗಿ ತನ್ನ ಖಾಸಗಿತನಕ್ಕೂ ತಾನಿರುವ ಸಮಷ್ಟಿಗೂ, ತನ್ನಿಂದ ಹೊರತಾದ ಜಗತ್ತಿಗೂ ಘರ್ಷಣೆಯಾಗದಂತ ಬದುಕಬೇಕು. ಇದು ಕಷ್ಟದ ವಿಷಯ. ಪರಮ ಸ್ವಾರ್ಥದಲ್ಲಿ ವ್ಯಕ್ತಿ ರಾಕ್ಷಸನಾದಾನು. ರಾಜಕೀಯ ವಿಚಾರಗಳಲ್ಲಿ ಸಮಾಜ ವ್ಯಕ್ತಿಯನ್ನು ನುಂಗಬಹುದು. ಆತ್ಮರತನಾದ ಮನುಷ್ಯ ಈ ಜಗತ್ತಿನಲ್ಲಿ ತಾನೊಬ್ಬ ಅತಿಥಿ ಎಂಬುದನ್ನು ಮರೆಯಬಹುದು. ಈ ಮೂರರ ಸೆಲೆಯಲ್ಲಿರುವ ಶಕ್ತಿಗಳೂ ವ್ಯಯವಾಗದಂತೆ, ಒಂದು ಇನ್ನೊಂದನ್ನು ನಾಶ ಮಾಡದಂತೆ ಜೀವಿಸುವುದನ್ನು ಮನುಷ್ಯನಿಗೆ ಕಲಿಸುವುದು ಸಂಸ್ಕೃತಿ. ಒಂದು ಜೀವಂತ ಸಂಸ್ಕೃತಿ ವರ್ತಮಾನಕ್ಕೆ ಸ್ಪಂದಿಸಬೇಕು; ಅದರ ಬೇರುಗಳು ಭೂತದಲ್ಲಿರಬೇಕು. ಈ ಜಗತ್ತಿನಲ್ಲಿ ಹಿಂದೆ ಇದ್ದವರು ಈಗಿನ ನಮಗೆ ಕಲಿಸುವುದು ಸಾಧ್ಯವಾಗುವುದು ಸಂಸ್ಕೃತಿಯ ಮೂಲಕ. ಇಂಥ ವಿಚಾರಗಳ ಹಿನ್ನೆಲೆ ಅಡಿಗರ ಮುಖ್ಯ ಕವನಗಳಿಗಿವೆ ಎಂದು ಅನ್ನಬಹುದು. ಹೀಗೆ ನೋಡಿದಾಗ ಅಡಿಗರ ’ರಾಮನವಮಿಯ ದಿವಸ’ ಕನ್ನಡದ ಅತ್ಯಂತ ಮುಖ್ಯ ಕವನಗಳಲ್ಲಿ ಒಂದು ಎಂದು ಹೇಳಬಹುದು. +ಸಂಸ್ಕೃತಿಯ ಪಕ್ವತೆಗೆ ಅಡ್ಡ ಬರುವ ಪ್ರವೃತ್ತಿಗಳನ್ನೆಲ್ಲ ಅಡಿಗರು ಉಗ್ರವಾಗಿ ವಿರೋಧಿಸುತ್ತಾರೆ. ನೆಹರೂ ಯುಗದ ಆದರ್ಶಪ್ರಿಯತೆಯಿಂದ ಹುಟ್ಟಿದ ಹಿಪೋಕ್ರಸಿ , ವ್ಯಕ್ತಿ ಪ್ರಜ್ಞೆ ಸ್ವಯಂ ಭೂ ಎಂದು ಭಾವಿಸುವ ವೇದಾಂತಿಗಳ ಅಮೂರ್ತ ತತ್ವಗಳು, ಈ ಮಣ್ಣು ಮೈಗಳ ಮಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಮನುಷ್ಯನನ್ನು ದೇವನೆಂದು ಭಾವಿಸುವ ರೊಮಾಂಟಿಕ್ ಧೋರಣೆಗಳು, ಸಮಷ್ಟಿಯ ಹಿತದ ಸೋಗಿನಲ್ಲಿ ವ್ಯಕ್ತಿಯ ಖಾಸಗಿತನವನ್ನು ಮೆಟ್ಟುವ ಸರ್ವಾಧಿಕಾರೀ ರಾಜಕೀಯ ವಿಚಾರಗಳು- ಈ ಎಲ್ಲವೂ ಅಡಿಗರಿಗೆ ದೊಡ್ಡ ಅಪಾಯಗಳು; ನಾವು ಬೆಳೆಯತೊಡಗದಂತೆ ಕಾಡುವ ಕಂಟಕಗಳು. +ಕೊನೆಯದಾಗಿ ಹಠಾತ್ತಾಗಿ, ಒಂದು ಮಾತನ್ನು ಹೇಳಲೇಬೇಕು ಎನ್ನಿಸುತ್ತದೆ. ಎಮರ್ಜನ್ಸಿ ಕಾಲದಲ್ಲಿ ಅಡಿಗರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಿದ್ದರೆ? ಮಹಾರಾಷ್ಟ್ರದ ಶ್ರೀಮತಿ ದುರ್ಗಾ ಭಾಗವತರಂತೆ ಅಡಿಗರೂ ಕನ್ನಡ ಜನದ ಮಾನವನ್ನು ಖಂಡಿತ ಉಳಿಸುತ್ತಿದ್ದರು. ಯಾವ ವಿಧದ ದಬ್ಬಾಳಿಕೆಯನ್ನೂ ಸಹಿಸದ ಅಡಿಗರು ಈ ದೃಷ್ಟಿಯಿಂದ ಸ್ವಾತಂತ್ರ್ಯವನ್ನು ನಿಜವಾಗಿ ಪ್ರೇಮಿಸುವವರು. ಯಾರೂ ಇವರನ್ನು ಕಟ್ಟಿ ಹಾಕಲಾರರು. +***** +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_327.txt b/Kannada Sahitya/article_327.txt new file mode 100644 index 0000000000000000000000000000000000000000..cfb52775d19af2322ffbabdc027b69dd658b4f2c --- /dev/null +++ b/Kannada Sahitya/article_327.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ +‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; +ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ +ತೆಂಗು ಗರಿಗಳ ನಡುವೆ ನುಸುಳುತಿತ್ತು. +ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ +ಹೂ ಮುಡಿದು ಮದುಮಗಳ ಹೋಲುತಿತ್ತು; +ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ +ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು. +ಹುಲ್ಲೆಸಳು, ಹೂ ಪಕಳೆ, ಮುತ್ತು-ಹನಿಗಳ ಮಿಂಚು +ಸೊಡರಿನಲಿ ಆರತಿಯ ಬೆಳಗುತಿತ್ತು; +ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ +‘ಶುಭಮಸ್ತು’ ‘ಶುಭಮಸ್ತು’ – ಎನ್ನುತಿತ್ತು. +ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ +ದುಂಬಿಗಳ ಓಂಕಾರ ಹೊಮ್ಮುತಿತ್ತು; +ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ +ಚಿಟ್ಟೆ ರಿಂಗಣಗುಣಿತ ಹಾಕುತಿತ್ತು. +ಉಷೆಯ ನುಣ್ಗದಪಿನಲಿ ಹರ್‍ಷ ಬಾಷ್ಪಗಳಂತೆ +ಮರದ ಹನಿ ತಟಪಟನೆ ಉದುರುತಿತ್ತು; +ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ +ಮುಂಬಾಳ ಸವಿಗನಸ ನೆನೆಯುತಿತ್ತು. +***** +ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […] +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_328.txt b/Kannada Sahitya/article_328.txt new file mode 100644 index 0000000000000000000000000000000000000000..2fe16f24cea5b4c9c80e6b3e8bf382bc50456643 --- /dev/null +++ b/Kannada Sahitya/article_328.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಫುಟ್‌ಪಾತಿನ ಮೇಲಿನ ಮರ +ರಸ್ತೆಗಿಳಿದ ತೆರದಿ +ಹೆಂಗಳುಡುಪು ಮರ್ಯಾದೆಯ +ಗಡಿ ಮೀರಿದೆ ಭರದಿ. +***** +ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. ***** +ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. ***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_329.txt b/Kannada Sahitya/article_329.txt new file mode 100644 index 0000000000000000000000000000000000000000..f728738fb9add04b9db63b4f8a27f8c4e2d15406 --- /dev/null +++ b/Kannada Sahitya/article_329.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? +ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ +ಸೋದರತೆ ಮಾನವ ದಾನವತೆಯಂ ಕೂಡ +ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? +ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ +ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ +ಧುಮುಕಲಿದೆ ಬಿಸಿರಕುತ ಜಯ ಜಯವೆನ್ನಿ ಪಾಡಿ. +ನಲುಮೆ ನಮ್ಮದಿ ತುಷ್ಟಿ ಕುಟ್ಟಿಮದ ಪೀಠದಲಿ +ಸ್ನೇಹ ಸೌಹಾರ್ದತೆ ವಿಶ್ವಬಂಧುತ್ವದಿಂದ +ಪೂಜಿಸಿರಿ ಮಾತೆಯನು, ನವಜಗವಿಧಾತೆಯನು +ಚಂಡಿ ಚಾಮುಂಡಿಯನು, ಭೈರವಿ ಭಾರತಿಯನು. +ಎದ್ದೇಳಿ ಯುವ ಜನವೆ ಗೂಡು ಬೀಡುಗಳಿಂದ +ಜನುಮ ಜನುಮದ ದಾಸ್ಯ ಹರಿತರಿಯುವನ್ನೆಗಂ +ಶಿರವರಿದು ಪೋದೊಡಂ ಹೋರು ಬೀಳ್ವನ್ನೆಗಂ. +***** +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ […] +ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_33.txt b/Kannada Sahitya/article_33.txt new file mode 100644 index 0000000000000000000000000000000000000000..4c8acb9dfa9ca2d10c82443b06b43a4a6939060f --- /dev/null +++ b/Kannada Sahitya/article_33.txt @@ -0,0 +1,73 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧. ಶಿಲೆಯೊಳಗಣ ಪಾವಕನಂತೆ +ಉದಕದೊಳಗಣ ಪ್ರತಿಬಿಂಬದಂತೆ +ಬೀಜದೊಳಗಣ ವೃಕ್ಷದಂತೆ +ಶಬ್ದದೊಳಗಣ ನಿಶ್ಯಬ್ದದಂತೆ +ಗುಹೇಶ್ವರ ನಿಮ್ಮ ಶರಣ ಸಂಬಂಧ +೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ +ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ +ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ +ನಿಮ್ಮ ನಿಲವನನುಭವ ಸುಖಿ ಬಲ್ಲ +೩ ಜಲದೊಳಗಣ ಕಿಚ್ಚು +ಜಲವ ಸುಡದೆ ಜಲವು ತಾನಾಗಿದ್ದಿತು ನೋಡಾ +ನೆಲೆಯನಱಿದು ನೋಡಿಹೆನೆಂದಡೆ +ಅದು ಜಲವು ತಾನಲ್ಲ +ಕುಲದೊಳಗಿದ್ದು ಕುಲವ ಬೆರೆಸದೆ +ನೆಲೆಗೆಟ್ಟು ನಿಂದುದನಾರು ಬಲ್ಲರು +ಹೊಱಗೊಳಗೆ ತಾನಾಗಿದ್ದು ಮತ್ತೆ +ತಲೆದೋಱದಿಪ್ಪುದು ಗುಹೇಶ್ವರ ನಿಮ್ಮ ನಿಲವು ನೋಡಾ +೪ ನೆಲದ ಮಱೆಯ ನಿಧಾನದಂತೆ +ಮುಗಿಲ ಮಱೆಯಲಡಗಿದ ಮಿಂಚಿನಂತೆ +ಬಯಲ ಮಱೆಯಲಡಗಿದ ಮರೀಚಿಯಂತೆ +ಕಂಗಳ ಮಱೆಯಲಡಗಿದ ಬೆಳಗಿನಂತೆ +ಗುಹೇಶ್ವರ ನಿಮ್ಮ ನಿಲವು +ಒಟ್ಟಾಗಿ ನೋಡಿದರೆ ಈ ನಾಲ್ಕು ವಚನಗಳು ಅಲ್ಲಮನ ಚಿಂತನೆಗೆ ಒಂದು ಚೌಕಟ್ಟನ್ನು ಒದಗಿಸುವಂತೆ ಕಾಣುತ್ತವೆ. ಈ ನಾಲ್ಕೂ ವಚನಗಳಲ್ಲಿ ಸುಮಾರಾಗಿ ಒಂದೇ ಬಗೆಯ ಹೋಲಿಕೆಗಳು ಬಳಕೆಯಾಗಿವೆ. ಅದಕ್ಕಿಂತ ಹೆಚ್ಚಾಗಿ ಒಂದೇ ಬಗೆಯ ಅರ್ಥ ಸೂಚನೆಯನ್ನು ಹೊಂದಿರುವ ‘ಒಳಗೆ,’ ‘ಮಱೆ,’ ಮತ್ತು ‘ಅಡಗು’ ಪದಗಳು ಹೋಲಿಕೆಯ ಸಂಬಂಧ ಸೂಚನೆಗೆ ಬಳಕೆಯಾಗಿವೆ. +ಕಾಣುವ ಕಾಣದ್ದರ ಸಾಂಬಂಧ +ಈ ವಚನಗಳಲ್ಲಿ ಗೋಚರ ಮತ್ತು ಅಗೋಚರಗಳಿಗಿರುವ ಸಂಬಂಧದ ರಹಸ್ಯಮಯತೆ/ ನಿಗೂಢತೆಯನ್ನು ಖಚಿತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ‘ಗೋಚರ’ವು ‘ಅಗೋಚರ’ವನ್ನು ‘ಒಳಗೊಂಡಿದೆ’ ಯಾದ್ದರಿಂದಲೇ ಅಗೋಚರವು ಕಣ್ಣಿಗೆ ಕಾಣದಂತಿದೆ. ಗೋಚರ ಮತ್ತು ಅಗೋಚರಗಳೆರಡೂ ಪರಸ್ಪರ ‘ಶರಣಾ’ಗಿವೆ. ಇವುಗಳ ಸಂಬಂಧ ಅರಿವಿಗೆ ಬರುತ್ತಿದ್ದರೂ ಕಾಣುತ್ತಿಲ್ಲ. ಆದ್ದರಿಂದಲೇ ಈ ವಚನ ‘ಶೂನ್ಯ’ದ ವ್ಯಾಖ್ಯೆಯೂ ಹೌದು. ಮನುಷ್ಯನ ಗ್ರಹಿಕೆಯ ಮಿತಿಗಳನ್ನು ಸೂಚಿಸುವಂಥದೂ ಹೌದು. ಕಾಣುವುದು ಶಿಲೆಯೇ ಹೊರತು ಅದರೊಳಗಣ ಬೆಂಕಿಯಲ್ಲ. ಆದರೆ ಕಾಣದ ಬೆಂಕಿಗೂ ಅಸ್ತಿತ್ವವಿದೆ. ಅದೂ ಸತ್ಯವೇ ಹೌದು. ಹೆಚ್ಚೆಂದರೆ ನಮ್ಮ ಗ್ರಹಿಕೆಗೆ ಒದಗುವುದು ಕಾಣುವ ಮತ್ತು ಕಾಣದ್ದರೆ ಸಂಬಂಧ ಮಾತ್ರ. ಈ ಸಂಬಂಧವಾದರೂ ಪರಸ್ಪರಾವಲಂಬಿಯಾದದ್ದು. ಆದ್ದರಿಂದಲೇ ಈ ವಚನದ ಪದಗಳನ್ನು ಸ್ಥಳಾಂತರಿಸಿಯೂ ಓದಿಕೊಳ್ಳಬಹುದು-ವೃಕ್ಷದೊಳಗಣ ಬೀಜದಂತೆ, ಇತ್ಯಾದಿ. ಹೀಗಾಗಿ ಈ ವಚನದಲ್ಲಿನ ‘ಅಂತೆ’ಗಳು ಕೇವಲ ಉಪಮಾವಾಚಕಗಳಲ್ಲ. ನೀರೊಳಗಿನ ಪ್ರತಿಬಿಂಬದ ‘ಹಾಗೆಯೇ’ ಎಂಬಂಥ ಅವಧಾರಣೆಯನ್ನು ಸೂಚಿಸುವ ಪದಗಳು ಹೌದು. ಉಪಮೆಗಳು ಎಂದು ಈ ಚಿತ್ರಗಳನ್ನು ನೋಡಿದರೆ ಈಗ ಈ ವಚನ ಆಶ್ವರ್ಯದ ಭಾವ ತುಂಬಿದ ವಚನವಾಗಿ ಕಾಣುತ್ತದೆ. ಅವಧಾರಣೆ ಎಂದರೆ ರಹಸ್ಯವನ್ನು ಅರಿತವನೊಬ್ಬ ‘ನಿಮಗೆ’ ಎಂದು ಓದುಗರಾದ ನಮ್ಮೆಲ್ಲರನ್ನೂ ಸಂಬೋಧಿಸಿ ಹೇಳುವ ಮಾತಾಗುತ್ತದೆ. ಹಾಗಾಗಿ ಈ ವಚನದಮಟ್ಟಿಗೆ ಗುಹೇಶ್ವರ ಎಂಬುದು ಕೇವಲ ಅಂಕಿತಮಾತ್ರವಾಗುವುದಿಲ್ಲ. ಗುಹೆ ಮತ್ತು ಈಶ್ವರ ಸಂಬಂಧ ಸೂಚಕವೂ ಆಗುತ್ತದೆ. ಕಲ್ಲು-ಬೆಂಕಿ, ನೀರು-ಪ್ರತಿಬಿಂಬ, ಬೀಜ-ಮರ, ಶಬ್ದ-ನಿಶ್ಯಬ್ದಗಳ ಸಂಬಂಧದ ಹಾಗೆಯೇ ಈ ಸಂಬಂಧವೂ ಕೂಡ. ಇಡೀ ವಚನದ ಎಲ್ಲ ಚಿತ್ರಗಳಿಗೂ ಶಬ್ದ-ನಿಶ್ಯಬ್ದಗಳ ಸಂಬಂಧವೇ ತಳಹದಿಯಾಗಿದೆ. ಈ ವಚನದ ಬೆಂಕಿ, ಪ್ರತಿಬಿಂಬ, ಮರಗಳೆಲ್ಲವೂ ಅಗೋಚರ. ಅಗೋಚರವಾದ್ದರಿಂದಲೇ ನಿಶ್ಯಬ್ದ ಆಗಿರುವಂಥವು. ನಿಶ್ಯಬ್ದವಾದರೂ ಆದಿಮ ನಿಶ್ಯಬ್ದ. ಅಷ್ಟೆ ಅಲ್ಲ, ಅದು ಶಬ್ದ ಸಂಬಂಧಿಯೂ ಹೌದು. ಕಲ್ಲು, ನೀರು, ಬೆಂಕಿ ಹೀಗೆ ಪಂಚಭೂತಗಳ ಕಲ್ಪನೆ ಇರುವಂತೆ ಮೇಲು ನೋಟಕ್ಕೆ ತೋರುತ್ತದೆ. ಸ್ವಾರಸ್ಯವೆಂದರೆ ಶಬ್ದವನ್ನೂ ಒಂದು ಇರುವಿಕೆ, , ಎಂಬಂತೆ ಗ್ರಹಿಸಿರುವುದು. +ವಿಂಗಡಣೆ +ಸಾಂಪ್ರದಾಯಿಕವಾಗಿ ಈ ವಚನಗಳನ್ನು ಪಿಂಡಸ್ಥಲದ ವಚನಗಳೆಂದು ವಿಂಗಡಿಸಿರುವುದುಂಟು. ಆದರೆ ಇವು ಐಕ್ಯಸ್ಥಿತಿಯನ್ನು ವರ್ಣಿಸುವ ವಚನಗಳೂ ಆಗಿವೆ. ತಾಯ ಬಸುರಿನೊಳಗಣ ಪಿಂಡಕ್ಕೂ ತಾಯಿಗೂ ಇರುವ ಪರಸ್ಪರ ಐಕ್ಯ ಸಂಬಂಧದಂತೆಯೇ ಮನುಷ್ಯನಿಗೂ ವಿಶ್ವದ ಪಿಂಡಕ್ಕೂ ಇರುವ ಸಂಬಂಧ. ಇದನ್ನು ಅರಿಯುವುದು ಹೇಗೆ, ಅರಿತು ನಿಜಮಾಡಿಕೊಳ್ಳುವುದು ಹೇಗೆ? ನಿಸರ್ಗ, ನಿಸರ್ಗಾಂತರ್ಗತ ಮನುಷ್ಯ, ಮನುಷ್ಯ ವಿಶಿಷ್ಟವಾದ ‘ಶಬ್ದ’ ಮತ್ತು ಇವೆಲ್ಲದರ ಅರಿವಿಗೂ ತಳಹದಿಯಾದ ನಿಶ್ಯಬ್ದದ ವಿವೇಚನೆ ಇಲ್ಲಿದೆ. ಭಾಷೆಯು ನಮ್ಮದಾದಮೇಲೆ ನಮ್ಮ ಭಾಷಾಪೂರ್ವ ಸ್ಥಿತಿಯನ್ನು ಕಲ್ಪಿಸಿಕೊಳ್ಳುವ ಪ್ರಯತ್ನದ ಹಾಗೆಯೇ ಇದೂ ಕೂಡ. ಪಾವಕ, ಪ್ರತಿಬಿಂಬ, ವೃಕ್ಷ ಎಲ್ಲಕ್ಕೂ ಉಲಿಯುವಿಕೆ ಇದ್ದರೂ (ಎರಡನೆಯ ವಚನವನ್ನು ನೋಡಿ) ಆ ಉಲಿ ಅವ್ಯಕ್ತ. ಅದು ತಿಳಿಯುವುದು ಕೂಡ ಶಬ್ದದ ಮುಖಾಂತರವೇ. +ಗುಹೇಶ್ವರ ಮತ್ತು ಶರಣ ಇವರ್ತಿಬ್ಬರ ಸಂಬಂಧವನ್ನು ಈ ವಚನಗಳಲ್ಲಿ ಒಳಗು-ಹೊರಗು, ತಾನು-ಅನ್ಯ ಎಂಬ ಭೇದವಿಲ್ಲದ ಸಂಬಂಧವಾಗಿ ಹೇಳಲಾಗಿದೆ. ಸಂಬಂಧವನ್ನು ಅರಿಯುವುದು ಮಾತ್ರ ಮನುಷ್ಯನಿಗೆ ಸಾಧ್ಯ. ನಿಲವು ಏನಿದ್ದರೂ ಗುಹೇಶ್ವರನದ್ದು. ಅವನ ನಿಲವು ಸತ್ಯವೇ ಆದರೂ ಅದು ವ್ಯಕ್ತಿ/ ಗೋಚರ/ ಇಂದ್ರಿಯಗಮ್ಯ ಅಲ್ಲ. ಕಲ್ಲಿನೊಳಗೆ ಕಿಚ್ಚು ಇದೆ. ಆದರೆ ಆ ಸ್ಥಿತಿಯಲ್ಲಿ ಉಲಿಯಲಾರದು. ‘ಉರಿ’ ಮತ್ತು ‘ಉಲಿ’ ಎರಡೂ ಗೋಚರವಾಗಬಲ್ಲ ವಸ್ತುಗಳು. ತೋರದ, ಆದರೆ ‘ಇರು’ವ, ಇನ್ನೂ ವಸ್ತುರೂಪ ತಾಳದೆ ‘ತಾನೇ’ ಆಗಿ ಇರುವ ಗುಹೇಶ್ವರನ ನಿಲವನ್ನು ಶರಣ ಮಾತ್ರ ಬಲ್ಲ-ತನ್ನೊಳಗಿನ ಬೆಂಕಿಯನ್ನು ಕಲ್ಲು ಮಾತ್ರ ಬಲ್ಲಂತೆ, ತನ್ನೊಳಗಿನ ಮರದ ಉಲಿಯನ್ನು ಬೀಜ ಮಾತ್ರ ಬಲ್ಲಂತೆ. +ನಿಲವು-ಸ್ಥಿರತೆ +ನೀರಿನೊಳಗಿನ ಬೆಂಕಿ ಅದು ಬೆಂಕಿಯೇ ಆಗಿದ್ದರೂ ನೀರನ್ನು ಸುಡದೆ ಇರುತ್ತದೆ. ಬೆಂಕಿಯ ‘ಕುಲ’ಬೇರೆ, ನೀರಿನ ‘ಕುಲ’ಬೇರೆ. ನೀರಿನಲ್ಲಿರುವ ಬೆಂಕಿ ನೆಲೆಗಟ್ಟು ನಿಂತಿದೆ. ಇಲ್ಲಿ ಒಳಗೆ ಮತ್ತು ಹೊರಗೆ ಎಂಬ ಭೇದವಿಲ್ಲ. ತಾನು ತಾನೇ ಆಗಿರುವಾಗ ಅದಕ್ಕೆ ಬೇರೆ ಗುರುತಾದರೂ ಏಕೆ ಬೇಕು? ಪಿಂಡದೊಳಗಿನ ಮಗುವಿಗೆ ಯಾವ ಚಹರೆ? ವೃಕ್ಷವಾದಾಗ ಮಾತ್ರ ತಾನೆ ಬೇರೆ ಬೇರೆ ಎಂದು ಗುರುತಿಸುವ ಅಗತ್ಯ ಬರುವುದು? +ಆದರೂ ಮನುಷ್ಯನಿಗೆ ತಾನು ಮತ್ತು ಪರ ಎಂಬ ತಿಳವಳಿಕೆಯನ್ನು ದಾಟಲು ಕಷ್ಟವಾಗುತ್ತದೆ. ಪರ ಎಂದು ತಿಳಿಯಲಾಗುವ ಗುಹೇಶ್ವರನೂ ತನ್ನೊಳಗೇ ಇರುವವನು ಎಂಬುದನ್ನು ತಿಳಿವಳಿಕೆಯಾಗಿ ಅಲ್ಲ. ಮಾಹಿತಿಯಾಗಿ ಅಲ್ಲ. ಸ್ವ-ಅನುಭವವಾಗಿ ಪಡೆಯಬೇಕೆಂಬ ಹಂಬಲ, ಹುಡುಕಾಟ ಅಲ್ಲಮನ ವಚನಗಳಲ್ಲಿದೆ. +ನಿಲವು ಎಂಬ ಮಾತು ಒಂದು ಬಗೆಯ ಸ್ಥಿರತೆಯನ್ನು ಸೂಚಿಸುತ್ತದೆ. ಆದರೆ ಇಲ್ಲಿ ಗುಹೇಶ್ವರನ ‘ನಿಲವು’ ಸ್ಥಿರವೂ ಅಲ್ಲ, ಜಡವೂ ಅಲ್ಲ. ಯಾಕೆಂದರೆ ಅವನ ನಿಲವು ಮುಗಿಲ ಮರೆಯ ಮಿಂಚಿನಂತೆ. ಬಯಲ ಮರೆಯ ಬಿಸಿಲ್ಗುದುರೆಯಂತೆ ಚಲನಶೀಲವಾದದ್ದು. ‘ಕಂಗಳ ಮಱೆಯಲಡಗಿದ ಬೆಳಗಿನಂತೆ’ ಎಂಬ ಸಾಲು ಗುಹೇಶ್ವರನು ಕಣ್ಣಿನ ಮರೆಯಲ್ಲಿರುವ ಬೆಳಕೇ ಆಗಿದ್ದಾನೆ ಎನ್ನುತ್ತಾ ಅವನನ್ನು ಅರಿಯುವುದೆಂದರೆ ತನ್ನನ್ನೆ ಅರಿಯುವುದು ಎಂದು ಸೂಚಿಸುತ್ತದೆ. ನೆಲದ ಮರೆಯ ನಿಧಾನವನ್ನು ಪಡೆಯಲು ನೆಲವನ್ನೆ ಬಗೆಯಬೇಕಲ್ಲವೆ? ‘ನೆಲ’ ಎಂಬುದು ಅರಿಯಲು ಬಯಸುವ ಮನುಷ್ಯ ವ್ಯಕ್ತಿಯೇ ಆಗಿದ್ದಾನೆ. +ಈ ವಚನಗಳಲ್ಲಿನ ಮುಖ್ಯ ಪದಗಳಾದ ಶಿಲೆ, ಉದಕ, ಬೀಜ, ಶಬ್ದ, ನೆಲ, ಮುಗಿಲು, ಬಯಲು ಮತ್ತು ಕಣ್ಣು ಶರಣನಿಗೂ; ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಯಬ್ದ, ನಿಧಾನ, ಮಿಂಚು, ಮರೀಚಿ ಮತ್ತು ಬೆಳಗು ಗುಹೇಶ್ವರನಿಗೂ ಅನ್ವಯವಾಗುತ್ತವೆಂಬಂತೆ ತೋರುತ್ತದೆ. ನಿಜ. ಆದರೆ ಈ ಕ್ರಮವನ್ನು ಪಲ್ಲಟಿಸಿಯೂ ಓದಬಹುದು. ಆಗ ಗುಹೇಶ್ವರನನ್ನು ಅರಿಯುವ ಶೋಧ ತನ್ನನ್ನೆ ಅರಿಯುವ ಶೋಧವಾಗಿ, ಆ ಶೋಧದುದ್ದಕ್ಕೂ ಬದಲಾಗುವ ಪಲ್ಲಟಗೊಳ್ಳುವ ನಿಲವುಗಳ ಚರಿತ್ರೆ ಅಲ್ಲಮನ ವಚನಗಳಲ್ಲಿ ಮೈದೋರತೊಡಗುತ್ತದೆ. ಗೊಚರ/ಅಗೋಚರ, ಶಬ್ದ/ನಿಶ್ಯಬ್ದ, ತಾನು/ಪರ ಇವು ಅಲ್ಲಮನ ಚಿಂತನೆಯ ಮುಖ್ಯ ಪರಿಭಾಷೆಯಾಗಿರುವುದು ಹೊಳೆಯುತ್ತದೆ. +೫ ಆದಿಯಾಧಾರವಿಲ್ಲದಂದು +ಹಮ್ಮು ಬಿಮ್ಮುಗಳಿಲ್ಲದಂದು +ಸುರಾಳ ನಿರಾಳವಿಲ್ಲದಂದು +ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರ +ನಿಮ್ಮ ಶರಣನುದಯಿಸಿದನಂದು +೬ ನಿನ್ನ ನಾನಱಿಯದಂದು ಮುನ್ನ ನೀನೇನಾಗಿದ್ದೆ ಹೇಳಾ +ಮುನ್ನ ನೀ ಬಾಯ ಮುಚ್ಚಿಕೊಂಡಿದ್ದೆಯೆಂಬುದ +ನಾ ನಿನ್ನ ಕಣ್ಣಿಂದ ಕಂಡೆನು +ಎನ್ನ ನಾನಱಿದ ಬಳಿಕ +ಇನ್ನು ನೀ ಬಾಯ್ದೆಱೆದು ಮಾತನಾಡಿದರೆ +ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ +ಎನ್ನ ಕಾಬ ನಿನಗೆ +ನಿನ್ನ ಕಾಬ ನನಗೆ ಸಂಚದ ನೋಟ ಒಂದೇ ನೋಡಾ +ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವನಱಿದೆ ನೋಡಾ +ತಾನು ಮತ್ತು ಪರ ಹಾಗೂ ಇವೆರಡರ ನಡುವೆ ಸಂಬಂಧವನ್ನು ಸ್ಥಾಪಿಸುವ ಭಾಷಿಕ ವ್ಯವಹಾರ ಇವರಡು ವಚನಗಳ ಮುಖ್ಯಾಂಶವಾಗಿದೆ. ಐದನೆಯ ವಚನವು ಒಂದು ಸ್ವಗತವಾಗಿದೆ. ಇಲ್ಲಿ ‘ಆದಿ’ಗೂ ಹಿಂದಿನ ಸ್ಥಿತಿಯ ವರ್ಣನೆ ಇದೆ. ಅದು ನಿಶ್ಚಲವಾದ, ನಿಶ್ಯಬ್ದವಾದ ಸ್ಥಿತಿ. ಅಲ್ಲಿ ಆದಿಯೂ ಇಲ್ಲ. ಆಧಾರವೂ ಇಲ್ಲ, ಆದಿಯ ಆಧಾರವೂ ಇಲ್ಲ. ನಾನು ಎಂಬ ಕಲ್ಪನೆಯಾಗಲೀ ಅಂಥ ಕಲ್ಪನೆಗೆ ಆಧಾರವಾಗುವ ವಿಚಾರವಾಗಲೀ ಇಲ್ಲ. ಇಂಥ ಸ್ಥಿತಿಯಲ್ಲಿ ಕಾಲದ ಕಲ್ಪನೆಯೂ ಇಲ್ಲ. ಹಾಗಾಗಿ ಇದು ಕಾಲ ಗಣನೆಯನ್ನೆ ಆಧರಿಸಿದ ಚರಿತ್ರೆಗೆ ಆಚಿನ ಸ್ಥಿತಿ. ಅಲ್ಲಿ ಗುಹೇಶ್ವರ ಎಂದು ಕರೆಯುವ. ತನ್ನಿಂದ ಬೇರೆ ಎಂಬಂತೆ ತೋರುವ ‘ನೀನು’ ಮಾತ್ರ ಇದೆ. ಹೀಗೆ ಹೇಳುವುದೂ ಕಷ್ಟ. ಏಕೆಂದರೆ ನೀನು ಎಂಬ ಕಲ್ಪನೆಗೆ ಅರ್ಥ ಬರುವುದೇ ‘ನಾನು’ ಇದ್ದಾಗ. ಹಾಗಾಗಿ ಇಲ್ಲಿ ಹೇಳುತ್ತಿರುವುದು ಗುಹೇಶ್ವರನ ಶರಣನ ಉದಯವನ್ನು ಕುರಿತು. ಈ ಉದಯವೇ ನಿಶ್ಚಲ ಸ್ಥಿತಿಯಲ್ಲಿನ ಒಂದು ಪ್ರಥಮ ಚಾಲನೆ. ಸಚರ (ಚಲನೆ) ಮತ್ತು ಅಚರ (ನಿಶ್ಚಲ) ಏನೂ ಇಲ್ಲದ ಸ್ಥಿತಿಯಲ್ಲಿ ‘ನಾನು’ ಹುಟ್ಟಿದ ಬಗೆಗಿನ ಸ್ವಗತ ಇಲ್ಲಿದೆ. ಇದೇ ವಿಚಾರವು ಮುಂದಿನ ವಚನದಲ್ಲಿ ಇನ್ನಷ್ಟು ವಿವರವಾಗಿ ಪರಿಶೀಲನೆಗೊಂಡಿದೆ. +ಸಂವಾದದ ಬೆಡಗು-ಬೆರಗು +ಆರನೆಯ ವಚನದಲ್ಲಿ ಸ್ವಗತದ ಬದಲಾಗಿ ಸಂವಾದವಿದೆ. ಸಂವಾದದ ಬೆಡಗು-ಬೆರಗುಗಳನ್ನು ಅರಿಯುವ ಪ್ರಯತ್ನವಿದೆ. ಹಾಗೆ ಇಲ್ಲಿ ಎರಡು ಬಗೆಯ ಸಂವಾದಗಳಿವೆ. ಒಂದು ಭಾಷಿಕವಾದ ಸಂವಾದ, ಇನ್ನೊಂದು ಭಾಷೆಯ ಹಂಗಿಲ್ಲದ ನೊಟ ಮಾತ್ರವಿರುವ ಶುದ್ಧ ಅರಿವಿನ ಸಂವಾದ. ಸಂವಾದ ಅಗತ್ಯವಾಗುವುದಾದರೂ ನಾನು ಬೇರೆ ನೀನು ಬೇರೆ ಎಂಬ ಅರಿವು ಮೂಡಿದ ಮೇಲಷ್ಟೆ? ಮೊದಲು ಹುಟ್ಟಿದ್ದು ‘ನಾನು’. ನಾನು ನಾನಾಗುವವರೆಗೆ ‘ನೀನು’ ಎಂಬುದಕ್ಕೆ ಅರ್ಥವೇ ಇಲ್ಲ. ನಾನು ಮತ್ತು ನೀನು ಎಂಬ ಭಿನ್ನತೆಯೇ ಇಲ್ಲದಿರುವಾಗ ಮಾತಿನ ಅಗರ್ಯವಿಲ್ಲ. ನಾನೂ ಮೌನ, ನೀನೂ ಮೌನ. ನಿನ್ನ ಮೌನವನ್ನು ನಾನು ನಿನ್ನ ಕಣ್ಣಿನಿಂದಲೇ ನೋಡಿದೆ. ಆದರೆ ನಾನು ಎಂಬ ಅರಿವು ನನ್ನಲ್ಲಿ ಮೂಡಿದ ಕ್ಷಣದಿಂದ ನೀನು ಮಾತನಾಡಬೇಕಾಯಿತು. ನೀನು ಬಾಯ್ದೆರೆದು ಮಾತನಾಡುವಂತೆ ಮಾದಿದ್ದು ನಾನು ಅಥವ ನಾನು ನಾನೇ ಎಂಬ ನನ್ನ ಅರಿವು. ಆಗ ಸರ್ವನಾಮಗಳು ಬೇಕಾದವು, ಸಂಬೋಧನೆಗಳು ಬೇಕಾದವು. ಮಾತು ನಾಚಿಕೆಯನ್ನು ಹುಟ್ಟಿಸಿತು. ನೋಟಕ್ಕೆ ನಾಚಿಕೆ ಇಲ್ಲ, ಮಾತಿಗೆ ನಾಚಿಕೆ ಇದೆ. ನಾನು ಮತ್ತು ನೀನು ಬೇರೆ ಬೇರೆ ಎಂಬ ಅರಿವು ಮೂಡಿದ ಮೇಲೂ ನನ್ನನ್ನು ‘ಕಾಬ’-ಕಾಣುವ/ಕಾಪಾಡುವ ನನಗೆ ಮತ್ತು ನಿನಗೆ ನೋಟದ ರಹಸ್ಯ ಮಾತ್ರ ಒಂದೇ ಆಗಿದೆ. ನಿನಗೆ ಮತ್ತು ನಿನ್ನನ್ನು ಕಾಣುವ/ಕಾಪಾಡುವ ನನಗೆ ನೋಟ ಒಂದೇ, ಆದರೆ ನನ್ನ ಮಾತು ಬೇರೆ ನಿನ್ನ ಮಾತು ಬೇರೆ. ಇದು ಬೆಡಗು, ಇದು ಬೆರಗು, ಇದನ್ನು ನಾನು ನಾನೇ ಆದಮೇಲೆ ಅರಿತದ್ದು. +ಕೇವಲ ನೋಟ ಮಾತ್ರವಿರುವ, ನಾನು ಮತ್ತು ನೀನು ಎಂಬ ಭೇದವಿರದ ಸ್ಥಿತಿ ನಿಜವಾಗಿ ಅ-ಗಮ್ಯವಾದದ್ದು. ನಾವಿಬ್ಬರೂ ಬೇರೆ ಮತ್ತು ನಮ್ಮಿಬ್ಬರ ನಡುವೆ ಸಂವಾದ ಮಾತ್ರ ಸಾಧ್ಯ ಎಂಬ ಬೆರಗು ಮಾತ್ರ ಗಮ್ಯವಾಗಿರುವಂಥದ್ದು. ಸಾಮಾನ್ಯವಾಗಿರುವ ನೋಟ ಮತ್ತು ವ್ಯಕ್ತಿ ವಿಶಿಷ್ಟವಾಗಿರುವ ಭಾಷೆ ಹಾಗೂ ಇವೆರಡಕ್ಕೂ ತಳಹದಿಯಾಗಿರುವ ನಾನು ಮತ್ತು ನೀನು ಎಂಬ ಭೇದದ ವಿವೇಚನೆ ಇಲ್ಲಿ ಮುಖ್ಯವಾಗಿದೆ. +***** +ಕೀಲಿಕರಣ: ಶ್ರೀನಿವಾಸ (ಚೀನಿ) ಓದಿದವರು ಗುರುಪ್ರಸಾದ್.ಎಸ್ (ಪಚ್ಚಿ) +ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […] +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_330.txt b/Kannada Sahitya/article_330.txt new file mode 100644 index 0000000000000000000000000000000000000000..a0bd49627e24f15f0f26695e2f90d924d32d8d30 --- /dev/null +++ b/Kannada Sahitya/article_330.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ +ಸಂಕಲ್ಪವೊಂದೇ ಮೋಡ; ಶಾಖ ಮರೆ, +ಬರೆದರೆ ಬರೀ ಅಕ್ಷರಗಳ ಹೊರೆ; +ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. +ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ +ಒರಗಿದರೆ ಬರೆಯಿಸುವ ಅದೃಢತೆ; +ಹೊರಗಾಗುವುದು ಕವಿತೆ. +ಒಮ್ಮೊಮ್ಮೆ ಏನೆಲ್ಲಾ ಹೊಳೆಯುವುದು +ಬೆಳೆಯುವುದು ನನ್ನ ಬೀಜಗೊಳಿಸಿ ಅಳಿಸಿ +ಬಿಳಲನ್ನೊತ್ತಿ ಪದ್ಯ; +ಆಗ ಋತುಗಳ ನಡುವಿನ ನದಿಯ ವೈವಿಧ್ಯ. +ಕೂತರೆ ಅಲ್ಲಾಡಿಸದ ಬರೀ ಭಾವಗಳ ಅವಶತೆ; +ನೀರೆರೆದುಕೊಂಡು ಸೀರೆಯುಡುವುದು ಕವಿತೆ. +ಬರೆಯುವುದೇ ಬೇಡವೆನ್ನಿಸುವ ಅತೃಪ್ತತೆಯ +ಬೇಸರಿನ ಒಂದೇತನದ ತಂತಿಯ ಮಧ್ಯೆ +ಆಗೀಗ ದೀಪಗಂಬದ ಬೆಳಕ ಏಕಾಗ್ರ ಕ್ಶಣ. +ಮೌನವನೆ ಮುತ್ತಿಕ್ಕಿ ಲಜ್ಜೆಗೆಂಪಾದ ಮಾತು +ಔಚಿತ್ಯ ಸೂಚ್ಯತೆ- +ಹುಣ್ಣಿಮೆಯ ಅಸ್ಪಷ್ಟತೆಯಲ್ಲಿ ತಾನಾಗಿ +ನಗ್ನ ನಿಲುವುದು ಕವಿತೆ. +***** +ಕೀಲಿಕರಣ: ಶ್ರೀನಿವಾಸ +ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! ***** +ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […] +ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_331.txt b/Kannada Sahitya/article_331.txt new file mode 100644 index 0000000000000000000000000000000000000000..cb90c85f5defaa05885a20f3a0f31b0c35b3b5c8 --- /dev/null +++ b/Kannada Sahitya/article_331.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ ಬದುಕನ್ನು ತಿದ್ದುತ್ತಿರುವ ರೀತಿ ಇತ್ಯಾದಿಗಳೆಲ್ಲ ಕಥೆಗಳ ಲೋಕಕ್ಕೆ ಸೇರಿಕೊಂಡು ಕನ್ನಡದ ಸಣ್ಣ ಕಥೆಗಳು ಶ್ರೀಮಂತವಾಗಿವೆ. ಇಂದು ಕನ್ನಡದಲ್ಲಿ ಬರೆಯುತ್ತಿರುವ ಕಥೆಗಾರರು ಸಮಾನ್ಯವಾಗಿ ಉತ್ತರ ಕರ್ನಾಟಕದ ಪ್ರದೇಶದವರು. ಹಿಂದುಳಿದ ಪ್ರದೇಶಗಳು ಎಂದು ಗುರುತಿಸಲಾಗುವ ಜಿಲ್ಲೆಗಳಿಂದ ಬಂದವರು. ಇಂಗಿಲ್ಷ್ ಭಾಷೆಯ ನಿಕಟ ಪರಿಚಯವಿಲ್ಲದೆ, ತಮ್ಮ ಬದುಕಿನ ವಲಯದಿಂದಲೇ ಸ್ಪೂರ್ತಿ, ವಸ್ತು, ಕಥೆಗಾರಿಕೆಯ ಕಲೆಯನ್ನೂ ಕಂಡುಕೊಂಡವರು. ಹಿಂದುಳಿದ ಜಾತಿ ವರ್ಗ ಎಂದು ಗುರುತಿಸಲಾಗುವ ಸಮುದಾಯಕ್ಕೆ ಸೇರಿದವರು. ಹಾಗಾಗಿ ಇಂದಿನ ಕಥೆಗಾರರುಹೊಸ ಹೊಸ ಬಗೆಯ ನಿರೂಪಣೆಯ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಸಣ್ಣಕಥೆಯ ಕಲಾತ್ಮಕತೆಯ ಹೊಸ ಆಯಾಮಗಳನ್ನು ಪರೀಕ್ಷಿಸುತ್ತಿದ್ದಾರೆ. ಅತ್ಯಂತ ಕುತೂಹಲಕರವಾದ ಕನ್ನಡ ಕಥೆಗಳ ಸನ್ನಿವೇಶವನ್ನು ಗಮನಿಸಿದರೆ ಯಾವ ಸಾಹಿತ್ಯಿಕ ಚಳುವಳಿಯೂ ಇಲ್ಲವಲ್ಲ ಎಂಬ ಹಳಹಳಿಕೆ ಎಷ್ಟು ವ್ಯರ್ಥ ಎನ್ನಿಸುತ್ತದೆ. +‘ಭಳಾರೆ ವಿಚಿತ್ರಂ’ ಇತ್ತೀಚಿಗೆ ಪ್ರಕಟವಾಗಿರುವ, ಓದುಗರು ಮತ್ತು ಇತರ ಕಸುಬುದಾರ ಕಥೆಗಾರರು ಈ ಇಬ್ಬರ ದೃಷ್ಟಿಗಳಿಂದಲೂ ಮುಖ್ಯವಾದ ಉತ್ತಮ ಕಥಾಸಂಕಲನ. ಓದುಗರಿಗಾಗಿ ಅಪೂರ್ವವಾದ ಅನುಭವದ ಲೋಕ ಇಲ್ಲಿನ ಕಥೆಗಳಲ್ಲಿ ಕಾದಿದೆ. ಈ ಸಂಕಲನದ ಮುಖ್ಯವಾದ ಕಥೆಗಳು “ಇವನ್ನು ಓದಿದ್ದು ಸಾರ್ಥಕ” ಎಂಬ ಭಾವವನ್ನು ಮೂಡಿಸುತ್ತವೆ. ಇತರ ಕಸುಬುದಾರ ಕಥೆಗಾರರು ನಿರೂಪಣೆಯ, ಕಥೆಕಟ್ಟುವ, ಕಥೆ ಹೇಳುವ ಇಲ್ಲಿನ ಪ್ರಯೋಗಗಳನ್ನು ಗಮನಿಸಿ ಇನ್ನಷ್ಟು ಬಗೆಯ ಕಥೆಗಾರಿಕೆಯ ಕಲೆಯನ್ನು ಬೆಳೆಸಬಹುದು. ನಮ್ಮಂತೆಯೇ ಕಥೆ ಓದಿ ಸಂತೋಷಪಡುವ ಗೆಳೆಯರಿಗೆ ಈ ಸಂಕಲನದ ಕಥೆಗಳನ್ನು ಓದಿ ಎಂದು ನಿಸ್ಸಂಕೋಚವಾಗಿ ಒತ್ತಾಯಿಸಿ ಹೇಳಬಹುದು. +ಕುಂ.ವಿ. ‘ಹೇಳುವುದು’ ಎಂಬ ಮಾತಿನ ಎಲ್ಲ ಅರ್ಥದಲ್ಲಿ ಕಥೆ ‘ಹೇಳುತ್ತಾರೆ’ ಇಲ್ಲಿನ ಕಥೆಗಳನ್ನು ಜೋರಾಗಿ ಬಾಯಿ ತುಂಬಾ ಹೇಳಿಕೊಳ್ಳಬಹುದು. ಗಟ್ಟಿಯಾಗಿ ಓದಿಸಿಕೊಳ್ಳುವ ಗುಣ ಇವೆ ಅವಕ್ಕೆ. ದನಿ ಎತ್ತರಿಸಿ, ಕುಗ್ಗಿಸಿ, ತಗ್ಗಿಸಿ, ಪಿಸುಗುಟ್ಟಿ, ಎಳೆದು, ದನಿಯ ಜೋರಿನೊಡನೆ ವೇಗವನ್ನು ಬೆರೆಸಿ, ಕಥೆಗಳನ್ನೆಲ್ಲಾ ವಾಚಿಕಾಭಿನಯ ಮಾಡಿಬಿಡಬಹುದು. ಈ ಕಥೆಗಳಲ್ಲಿ, ಪ್ರದರ್ಶಕ ಕಥೆಗಾರ ಎಲ್ಲೂ ಮರೆಯಾಗುವುದೇ ಇಲ್ಲ. ಹೇಳುವುದೇ ತೋತಿಸುವ ಕ್ರಮವೂ ಆಗಿದೆ ಇಲ್ಲಿನ ಕಥೆಗಳಲ್ಲಿ. ಇದು ಕನ್ನಡದ ಕಥೆಗಾರಿಕೆ ಪಡೆದುಕೊಂಡಿರುವ ಒಂದು ಹೊಸ ಶಕ್ತಿ. +ಇಲ್ಲಿನ ಕಥೆಗಳಲ್ಲಿ ವಾಸ್ತವ ಮತ್ತು ಅವಾಸ್ತವಗಳು ಸಂದು ಕಾಣದಂತೆ ಬೆರೆತುಬಿಡುತ್ತವೆ. ‘ಇವು ಕಥೆಗಳು ಮಾತ್ರ’ ಎಂಬ ಎಚ್ಚರ ಇಟ್ಟುಕೊಂಡೇ ಇರುವ ಈ ಕಥೆಗಳು ವಾಸ್ತವವನ್ನೇ ತೋರಬೇಕು ಎಂಬ ಹಠ ತೊಟ್ಟು ಹೇಳುವ ಕಥೆಗಳಿಗಿಂತ ಹೆಚ್ಚು ತೀಕ್ಷ್ಣವಾಗಿ ವಾಸ್ತವವನ್ನು ನಮಗೆ ಹೇಳುತ್ತವೆ. ದಿನ ನಿತ್ಯ ನೀವು ನಾನು ಮಾತಾಡಿದಂಥ ಅವಾಸ್ತವ ಭಾಷೆಯಲ್ಲಿಯೇ ದಿನನಿತ್ಯದ ವಾಸ್ತವದ ಕ್ರೌರ್ಯಗಳನ್ನು ಹೇಳಬಲ್ಲ ಬಗೆಯೊಂದನ್ನು ಈ ಕಥೆಗಳು ಸಾಧಿಸಿವೆ ಎನ್ನಿಸುತ್ತದೆ. +ಕಥೆಗಳಲ್ಲಿ ಬರುವ ವರ್ಣನೆಯ ಅಂಶವನ್ನೂ ಕಥೆಯ ಅಂಶವನ್ನೂ ಬೇರೆ ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ. ಹಾಗೆ ಮಾಡುವುದೆಂದರೆ ಬಣ್ಣವನ್ನೂ ಚಿತ್ರವನ್ನೂ ಬೇರೆ ಮಾಡುವ ವ್ಯರ್ಥ ಪ್ರಯತ್ನದಂತಾಗುತ್ತದೆ. ಕಥೆಯೇ ವರ್ಣನೆಯೋ ಅಥವಾ ವರ್ಣನೆಯೇ ಕಥೆಯೋ ಆಗಿಬಿಡುವ ಆಟ ಇಲ್ಲಿ ಕಾಣಸಿಗುತ್ತದೆ. ಪುಟ್ಟ ಮಗು ದೊಡ್ದವರ ಅಂಗಿಯನ್ನು ಹಾಕಿಕೊಂಡು ಅಡ್ಡಾಡುವಾಗ ಏಕಕಾಲದಲ್ಲಿ ಮಗುವೂ ಅಂಗಿಯನ್ನು ಹಾಕಿಕೊಳ್ಳುತ್ತಿದ್ದ ದೊಡ್ಡವನೂ ಬೇರೆಯದೇ ರೀತಿಯಲ್ಲಿ ಮನಸ್ಸಿಗೆ ಬರುವಂತೆ ಅಸಮಂಜಸವೆನ್ನಿಸುವ ಭಾಷೆ ಏಕಕಾಲದಲ್ಲಿ ನಮ್ಮ ಗಮನವನ್ನು ಬಳಕೆಯಾಗಿರುವ ಭಾಷೆಯ ಕಡೆಗೂ ಅದು ವರ್ಣಿಸುತ್ತಿರುವ ವಾಸ್ತವದೆಡೆಗೂ ಸೆಳೆದುಬಿಡುತ್ತದೆ. +ಕನ್ನಡದ ಕಥೆಗಳ ಕಾಮನಬಿಲ್ಲಿನಲ್ಲಿ ಈ ಬಗೆಯ ಕಥೆಗಳೇ ಒಂದು ಪ್ರತ್ಯೇಕ ಬಣ್ಣ. ಜಾನಪದ ಪಡಸಾಲೆಯಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಜನ ಇಲ್ಲಿದ್ದಾರೆ. ಸರಕಾರೀ ಮತ್ತು ನಾಗರಿಕ ಸವಲತ್ತುಗಳಿಂದ ದೂರವಿದ್ದು ದ್ವೀಪದಂತಿರುವ ಹಳ್ಳಿಗಳು ವರ್ತಮಾನಕ್ಕೆ ಭೀಕರ ಭಾಷ್ಯ ಬರೆಯುತ್ತ ಬದುಕಿರುವ ಕುಗ್ರಾಮಗಳಲ್ಲಿ ಕಥೆಯೊಳಗೊಂದು ಕಥೆ ಹುಡುಕುತ್ತಾ ತಮ್ಮ ಮೂಗಿನ ನೇರಕ್ಕೆ ಇತಿಹಾಸ ತಿರುಚುತ್ತ ತಮ್ಮ ಧೋತರದೊಳಗೆ ಸೊಂಡಿಲಿ ಹೊಕ್ಕಂತಾಗುತ್ತಿರುವ ಜನಗಳು ಇಲ್ಲಿದ್ದಾರೆ. ಈ ಬರವಣಿಗೆ ಚರಿತ್ರೆ-ವಾಸ್ತವದ ಹೊಸವ್ಯಾಖ್ಯಾನ ಮಾಡುವಂತಿದೆ. ಕಥೆಗಾ‌ಅರನಿಗೆ ವಾಸ್ತವವನ್ನು ಕಟ್ಟಿಕೊಡುವುದಕ್ಕಿಂತ ವಾಸ್ತವವನ್ನು ನೋಡುವ, ನೋಡಿದ್ದನ್ನು ಕಥೆ ಮಾಡುವ ಕುತೂಹಲ ಮುಖ್ಯವಾಗಿದೆ. ಹಾಗಾಗಿ ಕನ್ನಡ ಕಥೆಗಳ ಕಾಮನಬಿಲ್ಲಿನ ಒಂದು ತುದಿಯಲ್ಲಿ ತೇಜಸ್ವಿ, ದೇವನೂರು ಮಹಾದೇವರ ಕಥೆಗಳ ಬಣ್ಣವಿದ್ದರೆ ಇನ್ನೊಂದು ತುದಿಯಲ್ಲಿ ಕುಂವೀ ಬರವಣಿಗೆಯ ಬಣ್ಣ ಕಾಣುತ್ತದೆ. +* +* +* +ಈ ಬಗೆಯ ಬರೆವಣಿಗೆ ‘ಅಪಾಯಕಾರಿ’ ಬರೆವಣಿಗೆ. ನಮಗೆ ವಾಸ್ತವ ಗೊತ್ತಿಲ್ಲ. ವಾಸ್ತವದ ಬಗ್ಗೆ ಕೇವಲ ಅಭಿಪ್ರಾಯಗಳಿವೆ. ನಮಗೆ ವಾಸ್ತವವನ್ನು ನೋಡುವ ಆಸಕ್ತಿಯೂ ಇಲ್ಲ. ಯಾಕೆಂದರೆ ನಮಗೆಲ್ಲ ಸುರಕ್ಷಿತವಾಗಿ, ಸುಭದ್ರವಾಗಿರುವ ಆಸೆಯೇ ಮುಖ್ಯವಾಗಿದೆ. ವಾಸ್ತವವನ್ನು ನೋಡುವುದಕ್ಕಿಂತ ಅದರ ಬಗ್ಗೆ ಅಭಿಪ್ರಾಯಗಳನ್ನು ಇಟ್ಟುಕೊಂಡಿರುವುದು ಸುಲಭ ಮತ್ತು ಸುರಕ್ಷಿತ. ಸುರಕ್ಷಿತವಾಗಿ ಬದುಕು ಸಾಗಿಸುವುದೇ ಗುರಿಯಾಗಿರುವ ನನ್ನ, ನಿಮ್ಮಂಥ ಸುರಕ್ಷಿತ ಓದುಗರೂ ತಮ್ಮ ತಮ್ಮ ಸುಭದ್ರತೆಯ ಭಾವವನ್ನು ತಟ್ಟನೆ ಕಳಚಿಕೊಂಡು ಕೇವಲ ವ್ಯಕ್ತಿಗಳಾಗಿ ಅಪಾಯಕಾರಿ ವಾಸ್ತವವನ್ನು ಕಾಣುವಂತೆ ಮಾಡುವಂತೆ ಇಲ್ಲಿನ ಕಥೆಗಳು. ಇದು ಕಥೆಗಾರ ಬೆಳೆದ ರೀತಿಯೂ ಹೌದೆನ್ನಿಸುತ್ತದೆ. ಈ ಲೇಖಕರ ಮೊದಲ ಕಥೆಗಳಲ್ಲಿ ವಾಸ್ತವವನ್ನು ಕುರಿತ ಅಭಿಪ್ರಾಯಗಳು ಮುಖ್ಯವಾಗಿದ್ದವು. ಈಗ ನೋಡುವ ರೀತಿ, ಕಾಣಿಸುವ ರೀತಿ ಮುಖ್ಯವಾಗಿವೆ. ಇವರ ಆರಂಭದ ಬರವಣಿಗೆಯಲ್ಲಿ ಒಳ್ಳೆಯವರು, ಕೆಟ್ಟವರು ಇದ್ದರು. ಸರಿ ಮತ್ತು ತಪ್ಪುಗಳಿದ್ದವು. ವಾಸ್ತವವನ್ನು ಕುರಿತ ಖಚಿತ ಅಭಿಪ್ರಾಯವಿತ್ತು. ವಾಸ್ತವವನ್ನು ಬದಲಾಯಿಸುವ ಹಟವಿತ್ತು. ಈ ಸಂಕಲನ ಬರವಣಿಗೆಯಲ್ಲಿ ಕೆಟ್ಟವರು, ಕ್ರೂರಿಗಳು, ದುಷ್ಟರು ಇಲ್ಲ. ಕೆಟ್ಟತನ, ಕ್ರೌರ್ಯ, ದುಷ್ಟತನಗಳು ಇವೆ. ಅವೆಲ್ಲವನ್ನೂ ಅವು ಇರುವಂತೆಯೇ ನೋಡುವ ಪ್ರೀತಿ ಮತ್ತು ಧೈರ್ಯ ಇದೆ. ಮೌಲ್ಯವೆನ್ನುವುದು ನಿರ್ಧಾರಿತವಾದದ್ದಾಗದೆ ಕಥೆಯೊಳಗೇ ಮೂಡುವಂತಹದಾಗಿದೆ. +ಈ ಸಂಕಲನದ ಕಥೆಗಳಲ್ಲಿ ಅತ್ಯಂತ ಸಶಕ್ತವೆಂದು ನನಗೆ ಅನ್ನಿಸಿದ ರಚನೆಗಳೆಂದರೆ ‘ಹತ್ಯೆ’ ‘ಕುಬಸ’ ಮತ್ತು ‘ಕಥೆ ಹೇಳೋ ಕರಿಯಜ್ಜ’ ‘ಹತ್ಯೆ’ಯ ಕಥೆಯನ್ನು ಸಾರಾಂಶ ರೂಪದಲ್ಲಿ ಹೇಳಿದರೆ ಅದು ನವೋದಯ ಕಾಲದ ಅತಿ ಸಾಮಾನ್ಯವಾದ ದುಷ್ಟನೊಬ್ಬನ ಮನಃಪರಿವರ್ತನೆಯ ಕಥೆ ಅನ್ನಿಸಿಬಿಡಬಹುದು. ಆದರೆ ಅದೊಂದು ಅಸಾಮಾನ್ಯ ಕಥೆಯಾಗಿ ಇಲ್ಲಿ ರೂಪ ತಳೆದಿದೆ. ಬಹಳ ಸುಲಭವಾಗಿ ಭಾವುಕವಾಗಿಬಿಡಬಹುದಾದ ವಸ್ತುವನ್ನು ಭಾಷೆಯ ಸೂಕ್ಷ್ಮವೂ ಹರಿತವೂ ಆದ ಬಳಕೆಯಿಂದ ಕ್ರೌರ್ಯ ಮತ್ತು ಮಾನವೀಯತೆಯ ಇನ್ನೊಂದು ಹೆಸರಾದ ಪ್ರೀತಿ ಭಾವಗಳ ವಿವಿಧ ಮಗ್ಗುಲುಗಳ ಶೋಧವಾಗುವಂತೆ ಕಟ್ಟಿರುವುದು ಒಂದು ಅಂಶ. ಅತ್ಯುತ್ತಮ ಕಥೆಯಲ್ಲಿ ಕಾಣುವ ಭಾಷೆಯ ರೂಪಕ ಗುಣ ಮತ್ತು ಅದರಿಂದ ಅನಾವರಣಗೊಳ್ಳುವ ಪರಸ್ಪರ ವಿರುದ್ಧಾರ್ಥಗಳ ಮಂಡನೆ ಇನ್ನೊಂದು ಅಂಶ. ಕಥೆಯ ಹೆಸರಾದ ‘ಹತ್ಯೆ’ ಎಂಬುದು ಬಲರಾಮನ ಕಸುಬು, ಮತ್ತು ಬಲರಾಮನೊಳಗಿರುವ ಕ್ರೌರ್ಯದ ಹತ್ಯೆ ಎರಡನ್ನೂ ಸೂಚಿಸುತ್ತದೆ. ‘ಕೆಂಪು ರಟ್ಟಿನ ಪುಸ್ತಕ’ ಓದುತ್ತ ಕುಳಿತಿರಬಹುದಾದ ದುಡಿಯುವವರ ಶೋಷಿತರ ಆಶೋತ್ತರವಾಗಿರುವ’ ಭಾಷೆಗೆ ಆಯುಧದ ಸ್ವರೂಪ ಕೊಡುತ್ತಿರಬಹುದಾದ ಚಂದ್ರಣ್ಣನ ಮನೆಯ ಹೆಣ್ಣುಗಳು ಜಮೀನ್ದಾರ ನಾಯ್ಡು ತಾನು ಮಾಡಬೇಕಾದ ಹತ್ಯೆಗಳ ‘ಆಯುಧ’ವನ್ನಾಗಿ ರೂಪಿಸಿರುವ ಬಲರಾಮನ ವ್ಯಕ್ತಿತ್ವವೇ ಆಗಿಬಿಟ್ಟಿರುವ ಕ್ರೌರ್ಯವನ್ನು ಹತ್ಯೆ ಮಾಡಿ ಮಾನವೀಯತೆಯ ಹುಟ್ಟಿಗೆ ಕಾರಣವಾದದ್ದನ್ನೂ ಸೂಚಿಸುತ್ತದೆ. ಹತ್ಯೆಯ ಆಯುಧವೇ ಆಗಿರುವ ಬಲರಾಮನೂ ಕೂಸಿನ ಹೆರಿಗೆಗೆ ಸೂಲಗಿತ್ತಿಯನ್ನು ಕರೆತರುವ, ಅವನ ಹತ್ಯೆಯ ಉಪಕರಣವೂ ಜನಿಸಿದ ಕೂಸಿನ ಹೊಕ್ಕುಳ ಬಳ್ಳಿ ಕತ್ತರಿಸುವ ಮಾನವೀಯತೆಯ ಹುಟ್ಟಿನ ಕಾರಣಗಳಾಗುವ ಅಚ್ಚರಿಯನ್ನೂ ಸೂಚಿಸುತ್ತದೆ. ಕಥೆಯ ಮಧ್ಯೆ ಬರುವ ‘ಹಣತೆಯೊಂದು ಇಡೀ ಸೂರ್ಯನನ್ನು’ ನುಂಗುತ್ತಿರುವಂತೆ ಭಾಸವಾಯಿತು’ ಎಂಬ ವಾಕ್ಯ ಇಡೀ ಕಥೆಯಲ್ಲಿ ಕತ್ತಲೆ ಮತ್ತು ಬೆಳಕು ಕ್ರೌರ್ಯ ಮತ್ತು ಪ್ರೀತಿಗಳ ರೂಪಕ ಮಾಲೆಯತ್ತ ಗಮನ ಸೆಳೆಯುತ್ತದೆ. ಕಥೆಯ ಕೊನೆಗೆ ಕಾಣಿಸಿಕೊಳ್ಳುವ, ಹತ್ಯೆಯಾಗಬೇಕಾಗಿದ್ದ ಮನುಷ್ಯ ಚಂದ್ರಣ್ಣ, ಅವನ ಮನೆತನದ ಹೆಸರು ಕಂದೀಲು, ಅವನ ಮನೆ ಕಪ್ಪು, ಕಥೆಯ ಮುಖ್ಯ ಭಾಗ ನಡೆಯುವುದು ಕತ್ತಲಲ್ಲಿ. ಕಥೆಯಿಂದ ಬಲರಾಮನ ಮನಸ್ಸಿನಲ್ಲಿ ಮೂಡುವುದು ಬೆಳಕು. ಕ್ರೌರ್ಯ, ಹಿಂಸೆ, ಕೊಲೆ, ಹತ್ಯೆ ಇತ್ಯಾದಿಗಳದ್ದೆಲ್ಲ ಅಪರಿಮಿತ ಕತ್ತಲ ಲೋಕದ ವಾಸ್ತವ. ಈ ಗಂಡು ಲೀಕದ ಪರಿವೆಯೇ ಇಲ್ಲದಂತೆ ಹುಚ್ಚು ಹಿಡಿದಂತಿರುವ ತಮ್ಮನಿಗಾಗಿ ಹಂಬಲಿಸುವ, ತಾಯ್ತನದ ಬೆಳಕನ್ನು ಜೋಪಾನವಾಗಿಟ್ಟುಕೊಂಡಿರುವ ಗೌರಮ್ಮ ಪುರುಷ ವಾಸ್ತವದಲ್ಲಿ ನಗಣ್ಯವಾಗಿರುವ ಪ್ರೀತಿಯ ಬೆಳಕನ್ನು ಬಲರಾಮನ ಮನಸ್ಸಿನಲ್ಲಿ ಮೂಡಿಸುವವಳು. “ಕಸ ಎಲ್ಲಿರುತ್ತದೇ ಅಲ್ಲಿ ಪೊರಕೆಯೂ ಇರುತ್ತದೆ” ಇಡೀ ಕಥೆಯಲ್ಲಿ ಬರುವ ಎಲ್ಲ ಹೆಣ್ಣುಗಳು, ಹೆಳವಳಾದ ಸೂಲಗಿತ್ತಿಯೂ ಸೇರಿ, ಬಲರಾಮನ ಮನಸ್ಸಿನಲ್ಲಿ ಅವಿತಿರುವ ತಾಯಿಯ ಕಲ್ಪನೆಯೂ ಸೇರಿ, ಹತ್ಯೆಯನ್ನು ಗುಡಿಸಿಹಾಕುವ, ಬೆಳಕನ್ನು ತರುವ ಪ್ರಬಲರಾಗಿ ಕಾಣುತ್ತಾರೆ. ವಾಸ್ತವದಲ್ಲಿ ಜಮೀನ್ದಾರನೂ, ಬಲರಾಮನ ಮನಸ್ಸಿನ ಒಡೆಯನೂ ಅವನನ್ನು ಆಯುಧದಂತೆ ಬಳಸಿಕೊಳ್ಳುವ ನಾಯ್ಡುವೂ ಅವನ ಅಧಿಕಾರವೂ ತೊಳೆದುಹೋಗಬೇಕಾದ ಕಸಗಳು, ಕಳೆದುಹೋಗಬೇಕಾದ ಕತ್ತಲು. ಇದನ್ನು ಕಥೆಗಾರ ಬಾಯಿ ಬಿಟ್ಟು ಹೇಳುವುದಿಲ್ಲ. ಕಥೆ ಓದುತ್ತ ನಮಗೆ ಅನ್ನಿಸುವ ಹಾಗೆ ಮಾಡುತ್ತಾರೆ. ಹತ್ಯೆಯ ಆಯುಧಕ್ಕೂ ಬಲರಾಮನಿಗೂ ಇರುವ ತಾದಾತ್ಮ್ಯ ಸಂಬಂಧವನ್ನು ಶಿವನ ಮತ್ತು ಶಿವನ ಪಿನಾಕಕ್ಕೆ ಲಗತ್ತಿಸುತ್ತಾ ಬಲರಾಮನೂ ಶಿವಣ್ಣನಾಗುವುದರ ವಿಚಿತ್ರವನ್ನು ಗಮನಿಸಿ ಅವಧೂತನಂತೆ, ಕಲಾವಿದನಂತೆ, ವೇದಾಂತಿಯಂತೆ, ಇರುವ ಬಲರಾಮ ನಿಜವೂ ತಮ್ಮನಾಗುವ ಅಕ್ಕನ ಅಕ್ಕರೆಯ ಮೂಲಕ ತಾಯಿಯ ಪ್ರೀತಿಯನ್ನು ತನ್ನೊಳಗೆ ಮೊಳೆಯಿಸಿಕೊಂಡು ಹುಟ್ಟಲಿರುವ ಮಗುವಿಗೆ ಜನನ ಸಹಾಯಕನಾಗುವ ಶಿವಣ್ಣ ನಿಜವೋ? ಕಥೆಯ ಕೊನೆ ಏನು ಹೇಳುತ್ತದೆ? ಊರಿನ ಹೆಸರು ಗುಣಸಾಗರ. ಬೆಳಕು ಕೊಡುವ ಕಂದೀಲು ಚಂದ್ರಣ್ಣ. ಕೊಲೆಯ ಮತ್ತು ತಣ್ಣನೆಯ ಬಲದ ಬಲರಾಮ. ಶಿವ, ಪಿನಾಕ, ಶಿವಣ್ಣ. ಚೂರಿಯ ಮೇಲೆ ಇರುವ ಹಣ್ಣಿನ ಪೊಟ್ಟಣಗಳು ಇಂಥ ವಿವರಗಳಿಂದ ಈ ಕಥೆಯನ್ನು ಒಳಿತು ಕೆಡಕುಗಳ, ಕತ್ತಲೆ, ಬೆಳಕಿನ, ಕ್ರೌರ್ಯ ಮತ್ತು ಪ್ರೀತಿಯ ಅನ್ಯೋಕ್ತಿಯಾಗಿ ಅಲಿಗರಿಯಾಗಿಸಬೇಕೆಂಬ ಹಂಬಲ ಕಥೆಗಾರನಿಗೆ ಇರುವುದು ತಿಳಿಯುತ್ತದೆ. ಪೂರ್ವ ನಿರ್ಧಾರಿತ ಧೋರಣೆಗಳನ್ನೇ ಕಥೆಯಾಗಿಸುವ ಧಾವಂತ ಇಂದಿನ ಬರಹಗಾಗರಲ್ಲಿ ಕಾಣಿಸುತ್ತಿರುವಾಗ ಭಾವಲೋಕದ ಅಲಿಗರಿಯನ್ನು ಸಮರ್ಥವಾಗಿ ಮೂಡಿಸುವ ಈ ಕಥೆ ಅಪರೂಪದ್ದಾಗಿ ಕಾಣುತ್ತದೆ. +‘ಹತ್ಯೆ’ಗಿಂತ ಬಹಳ ಬೇರೆ ರೀತಿಯದು ‘ಕಥೆ ಹೇಳೋ ಕರಿಯಜ್ಜ’ ನಾವು ಯಾವುದನ್ನು ವಾಸ್ತವ ಅನ್ನುತ್ತೇವೋ ಅದನ್ನು ಕಥೆಗೊಳಿಸಿಕೊಳ್ಳದೆ ಅರ್ಥಮಾಡಿಕೊಳ್ಳುವುದೇ ಅಸಾಧ್ಯವೋ ಏನೋ. ಇದು ಕಥೆಯನ್ನು ಹೇಳು ಎಂದು ಕಥೆಗಾರರನ್ನು ಆರ್ತವಾಗಿ ಬೇಡಿಕೊಳ್ಳುವ ಕಥೆಯೂ ಹೌದು. ‘ಹೇಳಿವ’ ಕಥೆಗಾರನ ವರ್ಣನೆ ಮತ್ತು ಕಥೆಯೂ ಹೌದು. ಕಥೆಗೂ ಕಥೆಗಾರನಿಗೂ ಅವನು ಹುಟ್ಟಿ ಬೆಳೆದ ವಾಸ್ತವ ಸಮಾಜಕ್ಕೂ, ಕಥೆಗಾರನಿಗೂ ಅವನ ನಿಕಟವರ್ತಿಗಳಿಗೂ ಇರುವ, ಇರಬಾರದ, ಇರಬೇಕಾದ ಸಂಬಂಧಗಳನ್ನು ಈ ಕಥೆ ಕೆದಕಿ ನೋಡುತ್ತದೆ. ಕಥೆಯ ಮೇಲೆ ಕಥೆಗಾರನಿಗೆ “ಅಧಿಕಾರ” ಇದೆಯೇ? ಕಥೆ ಮತ್ತು ಕಥೆಗಾರನ ಮೇಲೆ ಸಂಪತ್ತಿನ ಒಡೆಯರಿಗೆ “ಅಧಿಕಾರ” ಇದೆಯೇ? ಅಥವ ಕಥೆ ಮತ್ತು ಕಥೆಗಾರ ಗಾಳಿ, ನೀರು, ಬೆಳಕಿನಂತೆ ಯಾರ ಸ್ವತ್ತೂ ಆಗದೆ ಎಲ್ಲರಿಗೂ ಲಭ್ಯವಿರುವ, ಲಭ್ಯವಿರಬೇಕಾದ ವಾಸ್ತವವೋ? ಕಥೆಗಾರ ಕರಿಯಜ್ಜ ವಿಕಲಾಂಗ ಆದರೆ ವಾಸ್ತವವನ್ನು ಕಥೆ ಮಾಡಿ ಹೇಳಿ ಜನಕ್ಕೆ ವಾಸ್ತವ ಅರ್ಥವಾಗುವಂತೆ ಮಾಡಬಲ್ಲ. ಕೆಳಗೇರಿಯ ಜನ ಅವನ ಮಹತ್ವ ಬಲ್ಲವರು. ತಮ್ಮಲ್ಲಿ ಬದುಕುವ ಉತ್ಸಾಹ ತುಂಬಬಲ್ಲ ಕರಿಯಜ್ಜನನ್ನು ಅವರಾರೂ ಬಿಟ್ಟುಕೊಟ್ಟಿರಲಿಲ್ಲ. ತಾವು ಉಂಡರೆ ಉಣ್ಣು, ಉಪವಾಸ ಇದ್ದರೆ ಇರು. ಇಡೀ ಊರಿಗೆ ಒಂದು ಹೊಟ್ಟೆ ಭಾರವಾದೀತೇನು ಎಂದು ಅವನನ್ನು ಸಲಹುವರು. ಕರಿಯ ಹೇಳುವ ಕಥೆಗಳು ಊರಿನ ಜನ ತಮ್ಮ ಎಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಿಕೊಳ್ಳಲು ಸಹಾಯ ಮಾಡುವ ಬೆಳಕು. ಅಷ್ಟೇ ಅಲ್ಲ ತನ್ನ ಹೆಂಡತಿಗೆ ‘ಸಂಭೋಗಕ್ಕಧಿಕವಾದ’ ಸುಖವನ್ನು ಕಥೆಗಳ ಮೂಲಕವೇ ನೀಡುತ್ತಿದ್ದ. ಕಥೆಗಳೇ ಅವನ ಮಕ್ಕಲು. ‘ಕಥೆಗಳನ್ನು ಮನದ ಕೊಟ್ಟಿಗೆಯ ಗೂಟಕ್ಕೆ ಕಟ್ಟಿ ಮೇವು ಹಾಕಿ ಬೆಳೆಸದ ದೊಡ್ಡ ಮನಸ್ಸಿನವನು’ ಅವನು. ಬೀದಿಯಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳಂತೆಯೇ ಅವನು ಹೇಳುವ ಕಥೆಗಳು ಊರ ಜನರ ಮನಸ್ಸಿನಲ್ಲಿ, ಬಾಯಲ್ಲಿ ಪರಿಪರಿಯಾಗಿ ಬೆಳೆದು ದೊಡ್ಡವಾಗುವುದನ್ನು ನೋಡಿ ಸಂತೋಷಿಸುವವನು. ಜನರ ಮನಸ್ಸಿನಲ್ಲಿ ತಾನೇ ಲೋಕಾಂತರ ಸಂಚಾರ ಮಾದುವ ಪಕ್ಷಿ,ಚತುಷ್ಟಾದಿ, ರಾಕ್ಷಸ ಇತ್ಯಾದಿ ಕಥೆಯಾದವನು. ಅವನೇ ಒಂದು ದಂತಕಥೆ. ಅವನೇ ಒಂದು ಇತಿಹಾಸ. ಇಂಥವನನ್ನು ಶಿವಪೂಜೆ ರುದ್ರೇಗೌಡ ಮಗನೆಂಬ ಸಂಬಂಧದ ಸರಪಳಿಯಲ್ಲಿ ಬಂಧಿಸಿ ತನ್ನ ಅಧೀನದಲ್ಲಿ ಇಟ್ಟುಕೊಂಡರೇನಾಗುತ್ತದೆ? ಕೆಳಗೇರಿಯ ಕರಿಯ ತನ್ನ ಕಥೆಗಳಿಂದಲೇ ಮೇಲು ಜಾತಿಯ ಅವನ ಅಧೀನನಾಗಿ, ಕಥೆಗಳ ಒಡೆತನ ಪಡೆದು ರುದ್ರೇಗೌಡ ಪೊಗದಿ ವಸೂಲಿಗೆ ತೊದಗಿ, ಜನಕ್ಕೆ ಕಥೆ ಸಿಗದೆ ಕರಿಯ ಕಥೆ ಹೇಳಲಾಗದೆ, ಕಥೆಗಳಿಗೆ ಹೊರದಾರಿ ಇರದೆ ಅಸಹನೀಯ ಮೌನದ ಕತ್ತಲು ದಂಗೆ ಏಳುತ್ತವೆ. ಸ್ವಾತಂತ್ರ್ಯ ಯಾರಿಗೆ ಬೇಕು ಕಥೆಗೋ ಕಥೆಗಾರನಿಗೋ? ಕಥೆಗಾರರನ್ನು ಕೊಂದು ಕಥೆ ಉಳಿದೀತೆ? ಕಥೆಗಾರನಿಲ್ಲದೆ ಸಮುದಾಯ ಇದ್ದೀತೆ? ಇತಿಹಾಸವೇ ಆಗಿರುವ ಕರಿಯಜ್ಜ ಸತ್ತು ಇತಿಹಾಸವೇ ಇಲ್ಲವಾಗುತ್ತದೆಯೋ? ಕಥೆಗಾರ ಕರಿಯಜ್ಜನ ಚಿತ್ರಣದಲ್ಲಿ ಕಥೆಗಳ ಬಂಡಾಯದ ಚಿತ್ರಣದಲ್ಲಿ ಅಪೂರ್ವನೆನಿಸುವ ಕಲ್ಪನಾವಿಲಾಸ ಕಾಣುತ್ತದೆ. ವಾಸ್ತವ ಮತ್ತು ಅವಾಸ್ತವಗಳ ನಡುವಿನ ಗಡಿರೇಖೆ ಅಳಿಸಿ ಹೋಗುತ್ತದೆ. ನಮ್ಮ ವಿಮರ್ಶೆಯೂ ಬದುಕಿನ ಧೋರಣೆಗಳೂ ಕೃತುಗಿಂತ ವ್ಯಕ್ತಿ ಮುಖ್ಯ ಎಂಬುದೇ ಆಗಿರುವಾಗ ಈ ಕಥೆ ಕಥೆಗಾರನಿಗಿಂತ ಕಥೆ ದೊಡ್ಡದು. ಮುಖ್ಯ ಅನ್ನುವುದು ಗಟ್ಟಿಯಾಗಿ ಹೇಳುತ್ತದೆ ಇಂಗ್ಲಿಷ್ ಭಾಷೆಯ ಆಥರ್ (ಲೇಖಕ) ಎಂಬ ಪದಕ್ಕೂ ಅಥಾರಿಟಿ (ಸ್ವಾಮಿತ್ವ) ಎಂಬ ಪದಕ್ಕೂ ನಿಕಟ ಸಂಬಂಧವಿದೆ. ಅಧುನಿಕ ಪೂರ್ವ ಕಾಲದಲ್ಲಿ ಬಹುಶ ಕೃತಿ ಮುಖ್ಯವಾಗಿತ್ತೇ ಹೊರತು ಕೃತಿಕಾರ ಮತ್ತು ಅವನ ಮೂಲಕ ಮೂಡಿದ ಕೃತಿಯ ಮೇಲಿನ ಅವನ ಅಧಿಕಾರ ಅಲ್ಲ. ರುದ್ರೇಗೌಡನ ಬದಲು ಇಂದಿನ ಸಮಾಜ ವ್ಯವಸ್ಥೆ ಪ್ರಶಸ್ತಿ, ಗೌರವಗಳ ಮೂಲಕ ಆಥರ್‌ನನ್ನು ಮುಖ್ಯವೆಂದು ಭಾವಿಸಿ ಕೃತಿಗಳ ಕತ್ತು ಹಿಸುಕುತ್ತದಲ್ಲವೆ? ಉತ್ತಮ ಕಥೆಗಾರನೊಬ್ಬನ ಆತ್ಮಕಥೆಯಂತಿದೆ ಇದು. ಕಥೆಗಾರ ಕರಿಯಜ್ಜ ಬದುಕುತ್ತಾನೋ ಇಲ್ಲವೋ, ಕಥೆಗಳು ಸ್ವತಂತ್ರ್ಯವಾಗುತ್ತವೋ ಇಲ್ಲವೋ, ಸಂದಿಗ್ಧದಲ್ಲೇ ಕಥೆ ಮುಗಿಯುತ್ತದೆ. +ಬಹು ದೊಡ್ಡದಾದ ಸಾದ್ಯಂತ ಸಂದಿಗ್ಧವಿರುವ ಕಥೆ ‘ಕುಬಸ’ ಬೆಳವಣಿಗೆ, ಪ್ರಗತಿ ಮತ್ತು ನಾಗರಿಕತೆಗಳು ಬದುಕಿನ ಎರಡು ಪರಸ್ಪರ ಹೊಂದಲಾರದ ವಿಭಿನ್ನ ಲಯಗಳ ನಡುವೆ ಘರ್ಷಣೆಗೆ, ಮತ್ತು ತೀವ್ರ ವೇದನೆಗೆ ಕಾರಣವಾಗುತ್ತದೆಂಬುದನ್ನು ನಾಟಕೀಯವಾಗಿ, ತೀವ್ರವಾಗಿ ಹೇಳುವ ಕಥೆ. ಯಾವ ಕಥೆ ಹೆಚ್ಚು ಯಾವ ಕಥೆ ಕಡಿಮೆ ಎಂಬಂತೆ ಎರಡು ಕಥೆಗಳನ್ನು ಹೋಲಿಸುವುದು ಸರಿಯಲ್ಲ. ಆದರೆ ನಾಗರಿಕತೆ ಮತ್ತು ಬೆಳವಣಿಗೆಯ ಕಲ್ಪನೆಗಳು ತಮ್ಮ ತಮ್ಮ ಪ್ರದೇಶಗಳ ಬದುಕಿನಲ್ಲಿ ತರುವ ಪಲ್ಲಟಗಳನ್ನು ವ್ಯಕ್ತಿಗಳ ಮನೋಲೋಕದಲ್ಲಿ ಆಗುವ ನೋವಿನ ಪದರಗಳನ್ನು ಹಿಡಿದಿಡುವ ಅನೇಕ ಕಥೆಗಳು ಕನ್ನಡದಲ್ಲಿ ಬಂದಿವೆ. ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಮೊದಲಾದವರೆಲ್ಲ ಈ ವಸ್ತುವನ್ನು ಕುರಿತು ಕಥೆಗಳನ್ನು ಬರೆದಿದ್ದಾರೆ. ಆಧುನಿಕತೆಯ ಆರಾಧನೆ ಸ್ವೀಕಾರ, ಅಥವಾ ಹಳೆಯ ಬದುಕಿನ ಕ್ರಮದ ಬಗ್ಗೆ ಮೆಚ್ಚುಗೆ ಮತ್ತು ಅದು ಮತ್ತೆ ಮುಂದುವರಿಯುತ್ತಲೇ ಇರಲಿ ಎಂಬ ಹಂಬಲ ಇವುಗಳಲ್ಲಿ ಯಾವುದಾದರೊಂದು ನಿಲುವನ್ನು ನೆಚ್ಚಿಕೊಂಡರೆ ಕಥೆ ತೀರ ತೆಳುವಾಗುತ್ತದೆ. ಕನ್ನಡದ ಮುಖ್ಯ ಕಥೆಗಳು ಆಧುನಿಕತೆಯನ್ನು ಪ್ರಶ್ನಿಸಿದ್ದರೂ ಅದು ಅನಿವಾರ್ಯವೆಂದು ಒಪ್ಪಿಕೊಳ್ಳುವಂತೆ ಹಳತಿನ ಬಗ್ಗೆ ಮೆಚ್ಚುಗೆ ಇದ್ದರೂ ಅದು ನಾಶವಾಗಲೇಬೇಕಾದದ್ದು ಎಂಬಂತೆ ಚಿತ್ರಿಸುವುದುಂಟು. ಕುಂ. ವೀ. ಕಥೆ ಬೇರೊಂದು ಪರ್ಯಾಯವನ್ನು ಸೂಚಿಸುವಂತಿದೆ. ನನಗೆ ನೆನಪಿರುವ ಮಟ್ಟಿಗೆ ಕನ್ನಡದ ಲೇಖಕರು ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಆಧುನಿಕತೆಯ ಪ್ರಶ್ನೆಯನ್ನು ಕಥೆಗಳಲ್ಲಿ ನಿರ್ವಹಿಸಿದಂತಿಲ್ಲ. ಕಥೆಯ ಕುಬಸ ಸೂರ್ಯನ ಕುದುರೆಯಂಥದೇ ಒಂದು ರೂಪಕವಾಗಿ ಬೆಳೆಯುತ್ತದೆ. ಅದಕ್ಕೆ ಪ್ರತಿಯಾದ ರೂಪಕವಾಗಿ ಟ್ರೌಜರು ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲೂ ಶಿಲಾಯುಗದ ಕಾಲದ ಎಲ್ಲ ಲಕ್ಷಣ ಸ್ವಭಾವಗಳನ್ನು ಉಳಿಸಿಕೊಂಡೇ ಬಂದಿರುವ ವಡ್ಡಟ್ಟೆ, ದುಸರಾ ಪ್ರಪಂಚವನ್ನೇ ನೋಡಿರದ ಅಕ್ಷರ ಕಂಡರೆ ನಡುಗಿ ಮಾರು ದೂರ ನಿಲ್ಲುವವ. ಭೂತಕಾಲದ ಉಕ್ಕಿನ ಸೆರೆ ಸೀಳಿಕೊಂಡು ವರ್ತಮಾನದ ಜಗಜಗಿಸುವ ರಂಗಭೂಮಿಯತ್ತ ಇಣುಕಿಯೂ ನೋಡದ ಜನರಲ್ಲಿ ಒಬ್ಬಳಾದ ಬಂಡೆವ್ವಜ್ಜಿ ಮತ್ತು ಅಂಥವರಲ್ಲೇ ಒಬ್ಬನಾದ ನೆಟ್ಟಕಲ್ಲ ಅಕ್ಷರ ಕಲಿತು ಹಿಂಗಾಲ ಕಸುವು, ಮುಂಗಾಲ ಕಸುವು, ಕಡಿಮೆಯಾಗಿ ಗೋರುಮೆಂಟು ನೋಕರಿ ಸೇರಿ, ಹೆಸರು, ಜೀವನ ಶೈಲಿ ಆರಾಧಿಸುವ ದೇವರನ್ನು ಬದಲಾಯಿಸಿಕೊಂಡು, ಹೆಂಡತಿ ಕಮಲಳ ವಶವರ್ತಿಯಾಗಿ, ತನ್ನಜ್ಜಿಯನ್ನು ನಗರದಲ್ಲಿ ಉಳಿಸಿಕೊಂಡು ತನ್ನಂತೆ ಮಾಡಲಾರದೆ ಮತ್ತೆ ವಡ್ಡಟ್ಟಿಗೇ ಬಿಟ್ಟುಬರುವುದು ಕಥೆ. ಏಕಕಾಲದಲ್ಲಿ ನೆಟ್ಟಕಲ್ಲ ವಡವಟ್ ಮತ್ತು ಬಂಡೆವ್ವರ ಕಥೆಯಾಗಿಯೂ, ಪ್ರಚೀನ ಮತ್ತು ಆಧುನಿಕ ನಾಗರೀಕತೆಯ ಕಥೆಯಾಗಿಯೂ ಬೆಳೆದಿದೆ. ಕಥೆಗಾರರು ಆಧುನಿಕ ಮತ್ತು ಪ್ರಾಚೀನತೆಗಳೆರಡನ್ನೂ ಸಮಾನ ಲೇವಡಿ- ವಿಮರ್ಶೆಗೆ ಒಳಪಡಿಸುತ್ತಾರೆ. ಉತ್ಪ್ರೇಕ್ಷಿತ ವಿಡಂಬನೆಯ ಹಿಂದೆ ಸೂಕ್ಷ್ಮವಾದ ಮೆಲುದನಿಯ ಬದುಕಿನ ವಿಭಿನ್ನ ಲಯಗಳು ತಮ್ಮಷ್ಟಕ್ಕೆ ತಾವು ಇರಬಲ್ಲಂಥ ವ್ಯವಸ್ಥೆಯೊಂದರ ಹಂಬಲ ಕಾಣುತ್ತದೆ. ಆದರೆ ವರ್ತಮಾನದ ವಾಸ್ತವದಲ್ಲಿ ಅದು ಅಸಾಧ್ಯ. ಬಂಡೆವ್ವ ತನ್ನೂರಿಗೆ ಹಿಂದಿರುಗಿದರೂ ಆ ಊರು ಕೂಡ ನಗರದಂತೆಯೇ ಆಗುವ ಸನ್ನಾಹದಲ್ಲಿದೆ. ಇರುವ ಒಂದು ಸಾಧ್ಯತೆಯೆಂದರೆ ನೆಟ್ಟಕಲ್ಲನಂಥವರು ವಡವಟ್‌ರಂತೆ ಆದರೂ ಬಂಡೆವ್ವನಂಥವರನ್ನು ಅರ್ಥಮಾಡಿಕೊಂಡು ಗೌರವಿಸಿವ ಸಹಾನುಭೂತಿಯನ್ನು ಪಡೆದುಕೊಳ್ಳುವುದು. ಗತಕಾಲ ತನ್ನ ಪುರಾಣಕ್ಕೆ ಕಲ್ಪನೆಗಳ ಉಕ್ಕಿನ ತೆರೆಯ ಹಿಂದೆ ಉಳಿದಿದ್ದರೆ ಕಮಲ, ವಡವಟ್ ಮತ್ತು ನಗರದ ಕುಬಸ ತೊಡುವ ಮುದುಕಿಯರು ಆಧುನಿಕತೆ ಬೆಳೆಸಿರುವ ಪುರಾಣಗಳ ಕಲ್ಪನೆಗಳ ಉಕ್ಕಿನ ತೆರೆಯ ಹಿಂದೆ ನರಳುತ್ತಿರುವವರೇ ಅಲ್ಲವೇ? ಕಥೆ ಬಳಸಿಕೊಂಡಿರುವ ಉತ್ಪ್ರೇಕ್ಷೆಯ ಲಘುಧಾಟಿಯಿಂದ ಮೋಸ ಹೋಗದಿದ್ದರೆ ಅಕ್ಷರ, ಆಧುನಿಕತೆ, ಪರಿವರ್ತನೆ ತರುವ ವೈಯಕ್ತಿಕ ನೋವು ಇವುಗಳೆಲ್ಲ ಮನಸ್ಸನ್ನು ಗಾಢವಾಗಿ ತಟ್ಟುತ್ತವೆ. +ಇದುವರೆಗೆ ಚರ್ಚಿಸಿದ ಮೂರು ಕಥೆಗಳು ಸಮಕಾಲೀನ ಕನ್ನಡ ಕಥಾಲೋಕದ ಪ್ರಮುಖ ಕಥೆಗಳು ಎಂಬ ಬಗ್ಗೆ ನನಗೆ ಅನುಮಾನವಿಲ್ಲ. ಕಥೆಗಳ ಪಾತ್ರದ ಹೆಸರು, ಊರಿನ ಹೆಸರು, ಅವುಗಳ ವರ್ಣನೆಗೆ ಬಳಸುವ ಮಡಿಗಟ್ಟುಗಳನ್ನು ಗಮನಿಸಿದರೆ ಕಥೆಗಾರರು ಮನುಷ್ಯ ವ್ಯಕ್ತಿತ್ವದ ಕೆಲವು ಮಾದರಿಗಳನ್ನು ರೂಪಿಸುವಲ್ಲಿ ತೊಡಗಿರುವಂತೆ ಕಾಣುತ್ತದೆ. ಯುವಕರು ಇಲ್ಲಿನ ಕಥಾಲೋಕದ ಹಿನ್ನೆಲೆಗೆ ಸರಿದಿದ್ದಾರೆ. ಮಧ್ಯವಯಸ್ಕರು ಅಥವಾ ಮುದುಕ ಮುದುಕಿಯರ ಲೋಕ ಇದು. ಆದರೆ ಇವರನ್ನೆಲ್ಲ ಕಂಡು ಕಥೆ ಮಾಡಿ ಹೇಳುವ ಕಥೆಗಾರ ಹರೆಯದ ಹುಮ್ಮಸ್ಸನ್ನು, ವೀಕ್ಷಣೆಯ ಕುತೂಹಲವನ್ನು, ಕಂಡದ್ದನ್ನು ಕಥೆ ಮಾಡಿ ಹೇಳಬೇಕೆಂಬ ಉತ್ಸಾಹವನ್ನು ಉಳಿಸಿಕೊಂಡಿರುವ ನಿರೂಪಕ. ಕಲೆಗಾರ, ಕಥೆಗಾರರು ತಮ್ಮ ಭಾಷಾ ಶೈಲಿಯಲ್ಲಿ ಹೊಸತೇ ಒಂದು ಪಾಠವನ್ನು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅವರು ಬೆಳೆಸಿಕೊಳ್ಳುತ್ತಿರುವ ನಿರೂಪಣೆಯ ಭಾಷಾಶೈಲಿ ಸವಾರನ ಹತೋಟಿಗೆ ಸಿಗದ, ತನ್ನಿಚ್ಛೆ ಬಂದಂತೆ ವರ್ತಿಸುವ ಎಂದೂ ಪಳಗಲೊಲ್ಲದ ಅರಾಣ್ಯಾಶ್ವವಾಗದೆ ಕಥೆಗಾರರನ್ನೂ ಓದುಗರನ್ನೂ ಏಳುಸಮುದ್ರದಾಚೆಗೆ ದಿಗಂತದಾಚೆಗೆ ಒಯ್ಯಬಲ್ಲ ಕೀಲಿರುವ ಮಾಯಾ ಕುದುರೆಯಾಗಲಿ ಎಂದಷ್ಟೇ ಹಾರೈಸಬಹುದು. +***** +ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […] +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_332.txt b/Kannada Sahitya/article_332.txt new file mode 100644 index 0000000000000000000000000000000000000000..fb4bc98af5fa7023c1a8492012897ef8fcd7e217 --- /dev/null +++ b/Kannada Sahitya/article_332.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಈಗ ತಾನೆ +ಬಂದಿತೇನೆ +ಮಧುರ ಕಂಠ ಕೋಗಿಲೇ? +ಜಗದ ಬಿನದ +ನಿನ್ನ ಮುದದ +ಗಾನವಾಯ್ತೆ ಒಮ್ಮೆಲೇ! +೨ +ಕೆಂಪು ತಳಿರು +ಕಂಪಿನಲರು +ಸೂಸುತಿಹುದು ಮಾಮರಾ +ಅಲ್ಲಿ ಕುಳಿತು +ಎಲ್ಲ ಮರೆತು +ಉಲಿಯುತಿರುವೆ ಸುಮಧುರಾ +೩ +ಗಾನ ಕೇಳಿ +ಮೌನ ತಾಳಿ +ಮೂಕವಾಯ್ತು ಭಾವನಾ +ಮನುಜಲೋಕ +ದಿವಿಜನಾಕ +ಗೈದ ಕುಹೂ ಕೂಜನಾ +೪ +ಎದೆಯು ಮಿಡಿದು +ತಾಳ ಹಿಡಿದು +ಕುಣಿಯುತಿಹುದು ಈ ಚಣಾ; +ರಸದ ಕಡಲು +ಹಿಗ್ಗಿನೊಡಲು +ತರತರಂಗ ಬಾಜನಾ. +೫ +ರಸದ ಚಿಲುಮೆ +ಹರಿಸಿ, ಒಲುಮೆ +ಸುಧೆಯ ನೀಡು ಕೋಗಿಲೇ +ಮೌನ ಧ್ಯಾನ +ನಿನಗೆ ಊನ +ಕುಕಿಲು ಜಾಣ ಕೋಗಿಲೆ. +***** +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […] +‘ಸೋ’ ಎಂದು ಸುರಿವ ಮಳೆ ಉನ್ಮಾದಗೊಂಡ ಇಳೆ! ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ. ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ, ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ, ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ. […] +ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_333.txt b/Kannada Sahitya/article_333.txt new file mode 100644 index 0000000000000000000000000000000000000000..d4f249774609a1ec896cdfe748dc10d496190122 --- /dev/null +++ b/Kannada Sahitya/article_333.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ ಸಾಹಿತ್ಯ ಪ್ರೇಮಿಯೆಂದು ಆ ದಿನಗಳಲ್ಲಿ ನನಗೆ ಗೌರವ. ಮುಂದೆ ಐವತ್ತರ ದಶಕದ ಪ್ರಾರಂಭದಲ್ಲಿ ಇಂಗ್ಲಿಷ್ ಆನರ್‍ಸ್ ಓದಲು ನಾನು ಮೈಸೂರಿಗೆ ಬಂದಾಗ, ಸುಬ್ಬಣ್ಣ ಕನ್ನಡ ಆನರ್‍ಸಿನ ವಿದ್ಯಾರ್ಥಿ. ನಾನು ಮೊದಲು ಸೊನೆಗಾರರ ಬೀದಿಯಲ್ಲಿ, ಆನಂತರ ಸುಣ್ಣದ ಕೇರಿಯಲ್ಲಿ , ಕೊನೆಗೆ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸ್ವತಃ ಅಡುಗೆ ಮಾಡಿಕೊಂಡೋ ಅಥವಾ ಉಚಿತ ವಿದ್ಯಾರ್ಥಿ ನಿಲಯದಲ್ಲೋ ಕಾಲ ಹಾಕುತ್ತಿದ್ದ ದಿನಗಳಲ್ಲಿ ನನಗೆ ಸುಬ್ಬಣ್ಣ ಹೆಚ್ಚು ಹೆಚ್ಚು ಆತ್ಮೀಯನಾಗುತ್ತ ಹೋದ. ಆ ದಿನಗಳಲ್ಲಿ ಸುಬ್ಬಣ್ಣ, ದುಡ್ಡು ಕಾಸಿನ ವಿಷಯದಲ್ಲಿ ನನಗಿಂತ ಹೆಚ್ಚು ಭಾಗ್ಯಶಾಲಿಯಾಗಿದ್ದ. ಪ್ರತಿ ಭಾನುವಾರ ಹಾಸ್ಟೆಲಿನಲ್ಲಿ ಸ್ಪೆಶಲ್ ಊಟ ಇರುತ್ತಿತ್ತು ನನಗೆ, ಸುಬ್ಬಣ್ಣನ ಅತಿಥಿಯಾಗಿ. ಮಧ್ಯಾಹ್ನ ತಿಂಡಿ ಕೂಡ ಅವನೊಂದಿಗೆ. ಅಲ್ಲದೆ ಕ್ಲಾಸಿದ್ದಾಗ ಚಕ್ಕರ್ ಹೊಡೆದೋ, ಇಲ್ಲದಿದ್ದಾಗ ಅವನ ರೂಮಿನಲ್ಲಿ ಕೂತೋ ಗಂಟೆಗಟ್ಟಲೆ ಕಾಲ ಸಾಹಿತ್ಯದ ಕುರಿತು ನಾವು ಮಾತನಾಡುತ್ತಿದ್ದೆವು. ಸಮಾಜವಾದಿ ರಾಜಕೀಯ ಚಿಂತನೆಯಿಂದ ಸಾಹಿತ್ಯ ಚಿಂತನೆಗೆ ತೊಡಗುವುದು ನನಗೆ ಒಂದೇ ವಿಷಯದ ಎರಡು ಹಂತಗಳಾಗಿ ಬಿಟ್ಟಿದ್ದವು. ಸುಬ್ಬಣ್ಣನಿಗೆ ನಾನು ಗಾರ್ಕಿಯ ಕಥೆಗಳ ಹುಚ್ಚು ಹಿಡಿಸಿದೆ. ಶೆಲ್ಲಿಯನ್ನು ಓದಿಸಿದೆ. ಸುಬ್ಬಣ್ಣ ನನಗೆ ಸತತವಾಗಿ ಪಂಪನನ್ನು, ಕುಮಾರವ್ಯಾಸನನ್ನು , ರತ್ನಾಕರವರ್ಣಿಯನ್ನು ಓದಿ ಹೇಳುತ್ತಿದ್ದ. ನಾವಿಬ್ಬರೂ ಹೀಗೆ ಒಂದು ಬಗೆಯ ಗುಂಗಿನಲ್ಲಿ ಇರುತ್ತಿದ್ದುದರಿಂದ ನನಗೆ ಆಗ ವಿದ್ಯಾರ್ಥಿ ಜೀವನ ಸಾಗಿಸುವ ಕಷ್ಟದ ಪರಿವೆಯೇ ಇರಲಿಲ್ಲ. ಫೀಸು ಕೊಡಲು ಹಣವಿಲ್ಲದಿದ್ದರೆ ಶಾಂತವೇರಿ ಗೋಪಾಲಗೌಡರಿಂದ ಪಡೆಯುತ್ತಿದ್ದೆ ಅಥವಾ ಶಿವಮೊಗ್ಗದ ಅಣ್ಣಯ್ಯನಿಂದ ಅಥವಾ ಸುಬ್ಬಣ್ಣನಿಂದ ಅಥವಾ ಆ ದಿನಗಳ ನನ್ನ ಇನ್ನೊಬ್ಬ ಗೆಳೆಯ ಶಂಕರನಾರಾಯಣ ಭಟ್ಟನಿಂದ. ಸಮಾಜವಾದದಲ್ಲಿ ಆ ದಿನಗಳಲ್ಲಿ ನನಗಿದ ದ ಭರವಸೆ ಎಷ್ಟೆಂದರೆ ಸದ್ಯದ ಕಷ್ಟಗಳೆಲ್ಲವೂ ತೃಣ ಸಮಾನವೆನ್ನಿಸುವಷ್ಟು ! ನನ್ನ ಎಲ್ಲ ಸ್ನೇಹ ಸಂಬಂಧವೂ ಒಂದು ಸಮಾಜವಾದಿ ಕುಟುಂಬವನ್ನು ಸದ್ಯದ ಸ್ಥಿತಿಯಲ್ಲೇ ನನಗೆ ಸೃಷ್ಟಿಸಿ ಕೊಟ್ಟಿತ್ತು. ಈಗಲೂ ಒಂದು ಘಟನೆ ನೆನಪಿದೆ; ಒಮ್ಮೆ ನನಗೆ ಅತ್ಯಗತ್ಯವಾಗಿ ಬೇಕಾಗಿದ್ದ ಹತ್ತು ರೂಪಾಯಿಗಳಿಗಾಗಿ ಮೈಸೂರಿನಲ್ಲಿದ್ದ ನಮ್ಮೂರಿನ ಒಬ್ಬ ಹಿರಿಯರ ಬಳಿ ಹೋಗಿದ್ದೆ. ಅವರು ಸಣ್ಣ ಮಾತಾಡಿ ಆ ಹಣ ಕೊಟ್ಟರು. ಅದನ್ನು ಮುಷ್ಟಿಯಲ್ಲಿ ಹಿಡಿದು ಸುಣ್ಣದ ಕೇರಿಗೆ ನಾನು ಬರುವಷ್ಟರಲ್ಲಿ ಆ ಹಣ ನನ್ನ ಅರಿವಿಗೆ ಬಾರದಂತೆ ಸಿಟ್ಟಿನ ಮುಷ್ಟಿಯಲ್ಲಿ ಚೂರು ಚೂರಾಗಿತ್ತು. ಅಂದರೆ ಗೆಳೆಯ ಸುಬ್ಬಣ್ಣನ ಬಳಿ ಹಣವಿಲ್ಲದ ದಿನ ಅದಾಗಿರಬೇಕು. ಸುಬ್ಬಣ್ಣನಿಗೆ ನಾಟಕದ ಹುಚ್ಚು ಎಷ್ಟೆಂದರೆ ಯಾವ ಕಂಪೆನಿ ಮೈಸೂರಿಗೆ ಬಂದರೂ ಗೆಳೆಯರನ್ನೆಲ್ಲ ಕಟ್ಟಿಕೊಂಡು ನಾಟಕ ನೋಡಲು ಅವನು ಹಾಜರು. ಇಂತಹ ಶೋಕಿಗಳಿಗಾಗಿ ಹಣ ಕಡಿಮೆಯಾದಾಗ ಅವನೂ ನಾನೂ ಇನ್ನೊಬ್ಬ ಆತ್ಮೀಯ ಗಂಗಾಧರನೂ ನೂರಡಿ ರಸ್ತೆಯ ಗಿರಿಯಪ್ಪನ ಅಂಗಡಿಯಲ್ಲಿ ನಮ್ಮ ರಿಸ್ಟ್ ವಾಚುಗಳನ್ನು ಗಿರವಿಯಿಟ್ಟು ಹಣ ಪಡೆಯುತ್ತಿದ್ದೆವು. ನಮ್ಮ ಹಲವು ಜೋಕುಗಳು ಇದರ ಸುತ್ತಲೇ. ಅವನಿಗೆ ಹಣ ಹಿಂದಿರುಗಿಸಿ ನಮ್ಮ ವಾಚು ಪಡೆಯುವುದು ತಡವಾದರೆ ನೂರಡಿ ರಸ್ತೆಯ ಸಂಚಾರದ ಸ್ವಾತಂತ್ರ್ಯವನ್ನೇ ನಾವು ಕಳೆದುಕೊಳ್ಳುತ್ತಿದ್ದೆವು. ಒಮ್ಮೆ ಎಲ್ಲೋ ನಡೆದು ಹೋಗುವಾಗ ಸುಬ್ಬಣ್ಣನನ್ನು ಹೆದರಿಸಲು ‘ಏ ಗಿರಿಯಪ್ಪ ಬರುತ್ತಿದ್ದಾನೆ, ನೋಡು’ ಎಂದೆ. ಕೂಡಲೇ ಸುಬ್ಬಣ್ಣ ನಡೆಯುವ ಭಂಗಿ ಬದಲಾಯಿಸಿ ಒಂದು ಕಾಲಿನಲ್ಲಿ ಕುಂಟನಾಗಿ ನನ್ನ ಜೊತೆಗೆ ನಡೆಯತೊಡಗಿದ ಬಹಳ ಗಂಭೀರವಾಗಿ. ಇವತ್ತಿಗೂ ಆ ಘಟನೆ ನೆನೆದರೆ ನನಗೆ ನಗು ಬರುತ್ತದೆ. ಬಾಲ್ಯದ ಆತ್ಮೀಯ ಗೆಳೆತನದಲ್ಲಿ ಹುಟ್ಟುವ ಈ ಕ್ಷುಲ್ಲಕ ಸಂತೋಷಗಳು ಅತ್ಯಮೂಲ್ಯವಾದುವು. ನನ್ನ ಜೀವನದುದ್ದಕ್ಕೂ ಸುಬ್ಬಣ್ಣನ ಜೊತೆಗಿನ ಸಹವಾಸದ ಇಂಥ ನೆನಪುಗಳು ಹಲವಾರು ಇವೆ. +ನನ್ನ ನೆನಪಿನಲ್ಲಿ ಆ ದಿನಗಳಲ್ಲಿ ಸುಬ್ಬಣ್ಣ ಪರಮ ರಸಿಕನಾಗಿದ್ದ. ಏನನ್ನೇ ಓದಲಿ, ಏನನ್ನೇ ನೋಡಲಿ, ಅದನ್ನು ಅತ್ಯಂತ ಉತ್ಕಟವಾಗಿ ಅನುಭವಿಸುತ್ತಿದ್ದ. ನಾನು ಆ ದಿನಗಳಲ್ಲಿ ಓದಿದ ಕಾರಂತರ ಎಲ್ಲ ಕಾದಂಬರಿಗಳನ್ನೂ ಅವನ ಉತ್ಕಟ ದೃಷ್ಟಿಯಿಂದಲೇ ಕಂಡದ್ದು, ಅನುಭವಿಸಿದ್ದು. ನಿಜವೆಂದರೆ ಆ ದಿನಗಳಲ್ಲಿ ಸುಬ್ಬಣ್ಣ ಸಾಹಿತ್ಯದ ಬಗ್ಗೆ ನನಗಿಂತಲೂ ಹೆಚ್ಚು ಖಚಿತವಾದ ತಿಳಿವಳಿಕೆಯನ್ನು ಪಡೆದಿದ್ದನೆಂದೇ ನನ್ನ ನೆನಪು. ನಾನು ಅವನನ್ನು ಒಬ್ಬ ಮಾರ್ಗದರ್ಶಿಯೆಂದೇ ತಿಳಿದು ಅನುಸರಿಸಿದ್ದೆ. ಆನರ್‍ಸ್ ಓದುತ್ತಿದ್ದ ಆ ದಿನಗಳಲ್ಲೂ ಕೂಡ ಸುಬ್ಬಣ್ಣನಿಗೆ ನಾಲ್ಕು ಜನರನ್ನು ಕೂಡಿಸಿಕೊಂಡು ಕೆಲಸ ಮಾಡುವ ಕೌಶಲ ಸಾಧಿಸಿತ್ತು. ಮಹಾರಾಜ ಕಾಲೇಜಿನ ‘ಮಿತ್ರಮೇಳ’ ಎಂಬ ನಾಟಕ ಬಳಗದ ಸಕ್ರಿಯ ಸದಸ್ಯ ಅವನಾಗಿದ್ದ. ನಾನಾದರೂ ಅದರ ಅಂಚಿನಲ್ಲಿ ಇದ್ದವನು. ಪ್ರೊ.ರಂಗಣ್ಣನವರಿಗಾಗಿ ‘ಬಾಗಿನ’ ಎಂಬ ಅಭಿನಂದನ ಗ್ರಂಥವನ್ನು ಅವನು ಹಾ.ಮಾ. ನಾಯಕರೊಂದಿಗೆ ಸೇರಿ ಹೊರತಂದಿದ್ದ. ಈಗಲೂ ನನಗೆ ತುಂಬ ಸುಂದರ ಎನ್ನಿಸುವ ಸಭೆಯಲ್ಲಿ ಈ ಗ್ರಂಥ ಬಿಡುಗಡೆಯಾಗಿತ್ತು. ಸಾಹಿತ್ಯ ಮಾತ್ರವಲ್ಲದೆ ಅಡಿಕೆ ಬೆಳೆಗಾರರ ಪರವಾಗಿಯೂ ಸುಬ್ಬಣ್ಣ ಹಲವು ಲೇಖನಗಳನ್ನು ಬರೆದಿದ್ದ. ನಾನು ಅವನನ್ನು ತಮಾಷೆ ಮಾಡುತ್ತಿದ್ದೆ; “ಏನೋ, ಒಂದೇ ಲೇಖನವನ್ನು ‘ನೀವು ತಿನ್ನುವ ಅಡಿಕೆ’, ‘ತಾವು ತಿನ್ನುವ ಅಡಿಕೆ’, ‘ನಾವು ತಿನ್ನುವ ಅಡಿಕೆ’ಯೆಂದು ನೀನು ಪ್ರಕಟಿಸುತ್ತಿದ್ದೀಯಾ.” ನಾವು ಪರಸ್ಪರ ಗೌರವ, ಪ್ರೀತಿ ವ್ಯಕ್ತ ಪಡಿಸುತ್ತಿದ್ದುದು ಈ ರೀತಿಯ ಲೇವಡಿಯಿಂದಲೇ. ಆನರ್‍ಸ್ ಮುಗಿಸಿ ನಾನು ಅಧ್ಯಾಪಕ ವೃತ್ತಿಗೆ ಇಳಿದು ಹಲವು ಸಂಕೋಚಗಳ ನಡುವೆಯೇ ನನ್ನ ಮಾನಸಿಕ ಸಾಹಸಗಳನ್ನು ಕೈಗೊಂಡರೆ ಸುಬ್ಬಣ್ಣ ಸಂಬಳದ ಹಂಗಿಲ್ಲದ ಜೀವನಕ್ಕೇ ಇಳಿದುಬಿಟ್ಟ . ಅವನ ಆಗಿನ ರಸೈಕ ದೃಷ್ಟಿ ಎಂದು ನನ್ನ ಅರ್ಧ ಕುಶಾಲಿನ, ಅರ್ಧ ಗಂಭೀರದ ಟೀಕೆಗೆ ಒಳಗಾಗಿದ್ದ ಅವನ ಜೀವನಕ್ರಮ ಈ ಆಯ್ಕೆಯಿಂದಾಗಿಯೇ ಹಲವು ಸವಾಲುಗಳನ್ನು ಎದುರಿಸಿ ಪಕ್ವವಾಗುತ್ತ ಹೋಯಿತು. ಆಗಿನ ಅವನ ಕವನ ಸಂಕಲನ ಹೂ ಚೆಲ್ಲಿದ ಹಾದಿಯಲ್ಲಿ ಎಂಬುದು ಸೌಂದರ್ಯದ ಉದ್ದೇಶಪೂರ್ವಕ ಹುಡುಕಾಟವೆಂದು ನನಗೆ ಅತೃಪ್ತಿ ತಂದಿತ್ತು. ಆದರೆ ಆ ದಿನಗಳಲ್ಲೇ ‘ದಶರೂಪಕ’ವನ್ನು ಅವನು ಕನ್ನಡಕ್ಕೆ ತಂದದ್ದು ಅವನ ವಯಸ್ಸಿಗೆ ಮೀರಿದ ಒಂದು ಪ್ರೌಢ ಕೆಲಸವೂ ಆಗಿತ್ತು. ಸುಬ್ಬಣ್ಣನ ಚೇತನ ಎಷ್ಟು ವೇಗವಾಗಿ ತನ್ನ ನೆಲೆಯನ್ನು ಕಂಡುಕೊಂಡು ಬೆಳೆಯಿತೆಂಬುದು ಆಶ್ಚರ್ಯದ ಸಂಗತಿ. ಊರಿಗೆ ಮರಳಿದವನೇ ಒಂದು ಸೊಗಸಾದ ಮನೆ ಕಟ್ಟಿದ. ಅದು ತಾನಿರಲು ಮಾತ್ರವೇ ಕಟ್ಟಿದ ಮನೆಯಲ್ಲ. ತನ್ನ ಅಪಾರ ಗೆಳೆಯರನ್ನು ಮನೆಗೆ ಕರೆದು ಸಂತೋಷಪಡಿಸಲು ತಕ್ಕ ವೈಶಾಲ್ಯದಲ್ಲಿ ಅದನ್ನು ಅವನು ಕಟ್ಟಿದ್ದು. ನಮಗೆಲ್ಲರಿಗೂ ತೀರ್ಥಹಳ್ಳಿ ಯಲ್ಲಿ ಪೂಜ್ಯ ಗುರುಗಳಾಗಿದ್ದ ಸ್ವತಃ ಕವಿಗಳೂ ಆಗಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳ ಮಗಳಾದ ಶೈಲಜಾಳನ್ನು ಅವನು ಮದುವೆಯಾದದ್ದು ಅವನು ಆಯ್ದ ಬದುಕಿನ ಕ್ರಮಕ್ಕೆ ಹೆಚ್ಚಿನ ಅರ್ಥವನ್ನೂ ಸಹಜತೆಯನ್ನೂ ತಂದು, ಸುಬ್ಬಣ್ಣನ ಕಲಾಸಾಹಸಗಳು ಗೃಹಸ್ಥ ಧರ್ಮದ ಒಂದು ಅಂಶವೆನ್ನುವಂತೆ ಮಾಡಿತು. ಹೆಂಡತಿ ಸಂಗೀತಗಾರಳಾದರೆ ತಾಯಿ ಪ್ರಕಟನೆ ಬಯಸದ ಧ್ಯಾನಶೀಲೆ ಸಾಹಿತಿ. ಈಗ ಅವನ ಮಗ ಅಕ್ಷರನೂ ಒಬ್ಬ ಪ್ರತಿಭಾಶಾಲಿ ಬರಹಗಾರ. ತನ್ನೂರಿಗೆ ಮರಳಿದ ಮೇಲೆ ಸುಬ್ಬಣ್ಣ ಮೊದಲು ತನ್ನ ಅಡಿಕೆ ತೋಟವನ್ನು ಚೆನ್ನಾಗಿ ಬೆಳೆಸಿ ನಿಜವಾದ ಅರ್ಥದಲ್ಲಿ ಈಚೆಗೆ ಅಪರೂಪವೆನ್ನಿಸುವ ಶ್ರೀಮಂತನಾದ. ತನಗೆ ಇಷ್ಟವಾ ದುದರಲ್ಲಿ ನಿರತನಾಗುವ ಸ್ವಾತಂತ್ರ್ಯವನ್ನು ಹೀಗೆ ಪಡೆದು ತನ್ನ ಸುತ್ತಮುತ್ತಲಿನ ರಸಿಕರನ್ನು ಕೂಡಿಕೊಂಡು ನಾಟಕ ಆಡುವುದರಲ್ಲಿ , ಆಡಿಸುವುದರಲ್ಲಿ ತೊಡಗಿದ. ಹೀಗೆ ‘ ನೀಲಕಂಠ ನಾಟ್ಯಸೇವಾ ಸಂಘ’ ಬೆಳೆಯತೊಡಗಿತು – ಏಶ್ಯಾದಲ್ಲೇ ಒಂದು ಮಾದರಿ ಸಂಸ್ಥೆಯಂತೆ. +ನಮ್ಮ ಗೆಳೆತನವೂ ಗಾಢವಾಗುತ್ತ ಹೋಯಿತು. ಉಂಡು, ತಿಂದು ಸುಖವಾದ ನಿದ್ರೆ ಮಾಡಿ ಕಾಡಿನ ದಾರಿಗಳನ್ನು ಅಲೆದು, ಯಕ್ಷಗಾನ ನೋಡಲು ಮತ್ತು ಹಳ್ಳಿಯ ಹಾಡುಗಳನ್ನು ಕೇಳಿಸಿಕೊಳ್ಳಲು ಆಸೆಯಾದಾಗಲೆಲ್ಲ ನಾನು ಹೋಗುತ್ತಿದ್ದುದು ಸುಬ್ಬಣ್ಣನ ಸದಾ ತೆರೆದ ಬಾಗಿಲಿನ ಮನೆಗೆ. ಅಲ್ಲಿ ಸುಬ್ಬಣ್ಣ , ಅವನ ಹೆಂಡತಿ ಶೈಲಜಾ, ಅವನ ತಾಯಿ ಮತ್ತು ಮಗ ಅಕ್ಷರ ಬೆಳೆಯುತ್ತಾ ಹೋದುದನ್ನು ಕಂಡು ನಾನು ಸಂತೋಷ ಪಟ್ಟಿದ್ದೇನೆ. ನನಗೆ ಮಾತ್ರ ವಲ್ಲ, ನನ್ನ ಸಂಸಾರಕ್ಕೂ ಸಾಹಿತ್ಯದ ಗೆಳೆಯರಿಗೂ ರಾಜಕೀಯ ಮಿತ್ರರಿಗೂ ಸುಬ್ಬಣ್ಣನದು ಸ್ವಂತ ಮನೆಯಾಗಿ ಬಿಟ್ಟಿತು. ಮುಂದಿನದು ಕನ್ನಡದ ಸಾಂಸ್ಕೃತಿಕ ಇತಿಹಾಸಕ್ಕೆ ಸೇರಿದ ಸಂಗತಿಯಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ರಾಜಕೀಯ ಕ್ಷೇತ್ರದಲ್ಲಿ ವಿಫಲವಾಯಿತು ಎನ್ನಿಸುವ ಆದರ್ಶಗಳೆಲ್ಲವೂ ಸುಬ್ಬಣ್ಣನ ಊರಿನಲ್ಲಿ ಒಂದು ದೀಪದಂತೆ ಸಜೀವವಾಗಿ ಉಳಿದು ಬೆಳೆದಿವೆ. ಸುಬ್ಬಣ್ಣ ಕೇವಲ ಒಬ್ಬ ಉತ್ಕಟನಾದ ರಸಿಕ ಮಾತ್ರವಲ್ಲ , ಅವನ ರಸಿಕತೆ ತನ್ನ ಜೀರ್ಣಶಕಿ ತಯನ್ನು ಅಪಾರವಾಗಿ ಬೆಳೆಸಿಕೊಂಡು ಒಂದು ಹಳ್ಳಿಯ ಪರಿಸರದಲ್ಲಿ ಪ್ರಪಂಚದಲ್ಲಿ ಅತ್ಯುತ್ತಮವಾದುದನ್ನು ಮೈದಾಳುವಂತೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಇಲ್ಲಿಯೇ ಹೇಳಬೇಕಾದ ಸಂಗತಿ ಒಂದಿದೆ: ಕೆಲವರು ಅತ್ಯುತ್ತಮ ಸಂಸ್ಥೆ ಕಟ್ಟಬಲ್ಲರು. ಆದರೆ ತಾವೇ ಉತ್ತಮ ಸೃಜನಶೀಲ ಲೇಖಕರಾಗಿರಬೇಕಿಲ್ಲ. ಸೃಜನಶೀಲ ಲೇಖಕರಂತೂ ಯಾವ ಸಂಸ್ಥೆಯನ್ನಾದರೂ ಹಾಳು ಮಾಡಬಲ್ಲ ಉದ್ರೇಕದ ವಿಶಿಷ್ಟತೆ ಪಡೆದವರಾಗಿ ರುವುದೇ ಹೆಚ್ಚು. ಆದರೆ ಸುಬ್ಬಣ್ಣ ಸ್ವತಃ ಎಷ್ಟು ಒಳ್ಳೆಯ ಬರಹಗಾರನೆಂದರೆ ಸಾಹಿತ್ಯ ಮತ್ತು ಸಿನಿಮಾ ಕುರಿತ ಅವನ ವಿಮರ್ಶೆಗಳಲ್ಲಿ ಕೆಲವು ನಮ್ಮ ಕಾಲದ ಉತ್ತಮ ಬರಹಗ ಳಾಗಿವೆ. ‘ರೋಶಮಾನ್’ ಬಗ್ಗೆ ಸುಬ್ಬಣ್ಣ ಬರೆದಿದ್ದು ಮತ್ತು ‘ಲೋಕ ಶಾಕುಂತಲಾ’ದ ಬಗೆಗಿನ ಅವನ ಲೇಖನ ಯಾವ ಭಾಷೆಯಲ್ಲೇ ಆಗಲಿ ಉತ್ತಮ ಕೃತಿಗಳೆಂದು ನನಗನ್ನಿಸಿದೆ. +(ಕೆ. ವಿ. ಸುಬ್ಬಣ್ಣ ಅಭಿನಂದನ ಗ್ರಂಥ ‘ರಂಗಧಾಮ’ದಲ್ಲಿ ಈಗಾಗಲೇ ಪ್ರಕಟವಾಗಿರುವ ಲೇಖನದ ಆಯ್ದ ಭಾಗ ಇದು.) +(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_334.txt b/Kannada Sahitya/article_334.txt new file mode 100644 index 0000000000000000000000000000000000000000..4bb167ab20d5306456353aa2ab598adf83da8690 --- /dev/null +++ b/Kannada Sahitya/article_334.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? +ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? +ನೀ ನೋಡುತಿರುವೆಯ ನನ್ನ? +ಇಲ್ಲವೆ| ನಾ ನೋಡುತಿರುವೆನೆ ನಿನ್ನ? +ನಾ ನಿನ್ನ ಬಿನ್ಬವೋ? ನೆರಳೊ? +ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? +ನಾನಿರದೆ ನೀನಿಲ್ಲ ಹೌದೆ? +ಇಲ್ಲವೆ|ನೀನಿರದೆ ನಾನಿಲ್ಲ ಹೌದೆ? +ಇರಬಹುದು ಇಬ್ಬರು ಬೆರೆ +ಆದರೆ| ಒಳಗಿಳಿದ ಮರದ ಬೇರೊಂದೆ. +ಇಬ್ಬರ ನಡುವಿದೆ ಗಾಜು +ಒಡೆದರೆ| ನಾವಿಬ್ಬರೊಂದೆ ಎರಡಿಳಿದು. +ಎರಡಿಳಿದರೊಂದಾಗಬಹುದೆ? +ಇಲ್ಲವೆ|ಒಂಟಿಯಾಗುವೆವಂತೆ ಹೌದೆ? +ಕರಗಿದರೆ ಒಬ್ಬರೊಬ್ಬರಲಿ +ಉಳಿವೆವೆ| ಗಾಜು ಇಲ್ಲವೆ ನೆನಪಿನಲ್ಲಿ? +ಕೇಳಿರುವ ಮಾತು ಈತನಕ +ನೀ ಹೇಳು| ಸಂವಾದವೋ ಅಥವಾ ಸ್ವಗತ? +(ಸಿರಿಸಂಪಿಗೆ-ನಾಟಕ) +***** +(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […] +“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […] +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_335.txt b/Kannada Sahitya/article_335.txt new file mode 100644 index 0000000000000000000000000000000000000000..7f5bac693b85e01c33c92df8111b48e208438500 --- /dev/null +++ b/Kannada Sahitya/article_335.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ರೇಗುಪ್ತಿ ತಾಳ — ಅಟ್ಟ +ಕುಲ ಕುಲ ಕುಲವೆನ್ನುತಿಹರೊ | +ಕುಲವಾವುದು ಸತ್ಯ ಸುಜನರಿಗೆ ||ಪ|| +ಕೆಸರೊಳು ತಾವರೆ ಪುಟ್ಟಲು ಅದ ತಂದು | +ಕುಸುಮನಾಭನಿಗೆ ಅರ್ಪಿಸರೇನಯ್ಯ? || +ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ | +ವಸುಧೆಯೊಳಗೆ ಭೂಸುರರುಣ್ಣರೇನಯ್ಯ ||೧|| +ಆ ಶೌಂಡಲ್ಯ ಪರಾಶರ ಎನಿಪನು | +ವೇಶೆಯಪುತ್ರ ವಶಿಷ್ಠ ಮುನಿ || +ದಾಸಿಯ ನಂದನ ನಾರದ ಎನಿಪನು | +ಕಾಶ್ಯಪ ಪೌತ್ರನ ಕುಲ ಹೇಳಿರಯ್ಯ ||೨|| +ಆತ್ಮನಾವ ಕುಲ ಜೀವನಾವ ಕುಲ | +ತತ್ವೇಂದ್ರಿಯಗಳ ಕುಲ ಪೇಳಿರಯ್ಯ || +ಆತ್ಮನು ಕಾಗಿನೆಲೆಯಾದಿ ಕೇಶವನೊಲಿದ | +ಭಕ್ತರಿಗೆ ಕುಲವಾವುದು ಹೇಳಿರಯ್ಯ ||೩|| +ಶಂಕರಾಭರಣ ಚಾಪು ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯ್ತಾನಂತನ ಪ ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಅ ನಾಗಲ್ಕದ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣಿ ಪಿಡಿದುಕೊಂಡು ಬೇಗನೆ […] +ಆದಿ ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ ಪ ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ೧ ಬಾಲಕನೆ ಕೆನೆ ಹಾಲು ಮೊಸರನೀವೆ ಲೇಲೆಯಿಂದಲಿ ಎನ್ನ ತೊಳ ಮೇಲ್ಮಲೆಗೆಂದು ೨ ಮುಗುಳು […] +ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_336.txt b/Kannada Sahitya/article_336.txt new file mode 100644 index 0000000000000000000000000000000000000000..570528e4f261582de9dff4971cb80aa218ff2543 --- /dev/null +++ b/Kannada Sahitya/article_336.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾ +ರಾತ್ರೆ +ತಲೆ ತಿರುಗಿ +ಬಿದ್ದ ನಕ್ಷತ್ರ +ಹೆಕ್ಕುವೆ ತಿಳಿ +ಬೆಳಕು ಗುಡಿಸುವೆ +ಹಸನು ಹಸನು +ಮಾಡುವೆ ಒಳ ಕತ್ತಲೆ +***** +ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. ***** +History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. ***** +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_337.txt b/Kannada Sahitya/article_337.txt new file mode 100644 index 0000000000000000000000000000000000000000..cf270bf09277fb9f055013654b809e7ffd0ac2c7 --- /dev/null +++ b/Kannada Sahitya/article_337.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, +ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- +ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! +ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, +ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ +ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ +ಗೂಡು ಕಟ್ಟಿಹ ಹಕ್ಕಿ ರಣಗುಡುವ ಬಿಸಿಲಿನಲಿ +ಗತಕಾಲವನು ಕುರಿತು ಬಿಕ್ಕಿ ಬಡಬಡಿಸುತಿವೆ! +ಕಾರ್ಮೋಡದೊಲು ನುಗ್ಗಿ ಬೇಟೆಯಾಡಿದ ವೈರಿ +ಸೈನ್ಯದಲಿ ಮುಂಗಾರ ಮಿಂಚಿನೊಲು ರಣತೇಜಿ- +ಯನ್ನೇರಿ, ಕಾವೇರಿ, ಆಮಮ! ಚೆನ್ನಮ್ಮಾಜಿ +ತುಡುಕುತಿರಲರರೆ! ಏನಾಯಿತಾಯಿತು ಪಿತೂರಿ! +ಪುಟ್ಟದಿರಲಿನ್ನುಮೀ ನಾಡಿನಲಿ ವಂಚಕ‌ರ್, +ನರಕುನ್ನಿ ಪಾತಕರ್‌, ವಿಶ್ವಾಸ ಘಾತಕ‌ರ್! +***** +ತಾಯ ಶ್ರೀಮುಖ ಕಂಡು ಮನವು ನೆಮ್ಮದಿಗೊಂಡು ಎದೆ ಹಿಗ್ಗಿ ಸಂತಸದಿ ಹಾಡುತಿಹುದು; ಅವಳ ಕರುಣೆಯ ಕೊಂಡು ವಾತ್ಸಲ್ಯ ಸವಿಯುಂಡು ಮಮತೆಯಲಿ ಅದನಿದನು ಬೇಡುತಿಹುದು. ಇಲ್ಲಿ ಎದಗುದಿಯಿಲ್ಲ ಕವಡುಗಂಟಕವಿಲ್ಲ ಭಾವ ಪಾವನ, ಲಾಲಿ ಹಾಲಿನೊಡಲು; ಅಕ್ಕರದಿ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_338.txt b/Kannada Sahitya/article_338.txt new file mode 100644 index 0000000000000000000000000000000000000000..dcbd5f607189c99b1b901764ab3cc11277e8521e --- /dev/null +++ b/Kannada Sahitya/article_338.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಈ ಚೆಲುವ ಜೀವ ಬದಲಾಗಿ ಸರಿಯಾಗಿ ಮೂರು ದಿನ +ಸಕ್ಕರೆ ಎಂದೂ ಕಹಿಯಲ್ಲ. ಇಂದೇಕೆ ಸಿಹಿಯೂ ಹುಳಿ? +ಮಧುಪಾತ್ರೆ ಜೀವ ಜಲವಿದ್ದ ಚಿಲುಮೆಯಲ್ಲಿಟ್ಟೆ +ನೀರು ಪೂರಾ ರಕ್ತ ಸಿಕ್ತವಾದದ್ದ ಕಣ್ಣಾರೆ ಕಂಡೆ +ಎರಡು ಲಕ್ಷ ಗುಲಾಬಿ ಬೆಳೆವ ನಂದನವನ +ಹಣ್ಣು ಹೂ ಚಿಗುರುಗಳ ಬದಲಿಗೆ ಬರೀ ಕಲ್ಲು ಮುಳ್ಳು ಮರುಭೂಮಿ +ಭೂತ ವೈದ್ಯನುದ್ಯೋಗವೇ ಮಂತ್ರ ಪಠನ +ಭೂತ ಮುಖಕ್ಕೆ ಯಂತ್ರಜಾಲ ನಿರ್ಮಾಣ +ಲಕ್ಷ ಮಂತ್ರ ಪಠಿಸಿದರೂ ವ್ಯರ್ಥವಾಯಿತಲ್ಲ +ಭೂತಗಣ ದಿಗ್ಧಂಧನಕ್ಕೆ ಬಾರಲೇ ಇಲ್ಲ. +ಭೂತದ ಹುಬ್ಬಲ್ಲಿ ಯಾವುದೋ ಪ್ರಾಚೀನ ರೋಷ +ಲೈಲಳ ಗಂಟಿಕ್ಕಿದ ಹುಬ್ಬು ಮಜನೂವಿನ ಸರ್ವನಾಶ +ಬಾ, ಬಾ, ನೀನಿಲ್ಲದ ನಾನು ಜೀವ ಹೀನ +ನೋಡು, ನೋಡು ನೀನಿಲ್ಲದ ನನ್ನ ಕಣ್ಗಳ ರಕ್ತಯಾನ +ನಿನ್ನ ಚಂದ್ರಮುಖ ಜ್ಯೋತಿಸ್ಪರ್ಶ, ಕಣ್ಣಿಗೆ ಹೊಸ ಕಾಂತಿ +ಮನುಕುಲಕ್ಕೆ ಮೀರಿದ ನನ್ನೆಲ್ಲ ಪಾಪಮುಕ್ತಿ +ಹೃದಯ ತಿರುತಿರುಗಿ ಕೇಳಿತು : ನನ್ನ ಪಾಪ ಸ್ವರೂಪವೇನು? +ಪ್ರತಿ ಕಾರಣದ ಜತೆಗುಂಟು ಅದರ ಪರಿಣಾಮ +ಕಟ್ಟ ಕಡೆಯ ದಂಡಾಧಿಕಾರಿಯ ಧ್ವನಿ ಕೇಳಿಸಿತು +“ಆತ್ಮ ಶೋಧನೆ ಬೇಡ, ಅಪರಾಧ ಈಗಿನದಲ್ಲ” +ಕೊಡುಗೆಯೂ ದೇವನದೆ, ಕೊಳ್ಳೆಯೂ ದೇವನದೆ +ತಂದವನೂ ಆತನೆ, ತೆಗೆವನೂ ಆತನೆ, ಎಲ್ಲ ತರ್ಕಹೀನ +ಬಾ, ಬಾ, ಈಗಲಾದರೂ ಇದು ಅವನ ಕೃಪೆ +ಗೊಣಗದೆ ತೆಗೆದ ಸ್ವರ್ಗದ ಬಾಗಿಲು +ಮುಳ್ಳುಗಳಾಚೆಗಿನ ಹೂವು, ಕಲ್ಲ ಕಠಿಣದಾಚಿಗಿನ ಕಾರುಣ್ಯ +ಈ ದಿವ್ಯ ಕೃಪೆ ಅನಂತ, ಇರುವಿಕೆಯ ಹಡಗಿಗೆ ಸಾವಿರ ಕೀಲಿ ಕೈ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಲೋಕದ ತುಂಬ ಮುಳ್ಳಿದ್ದರೂ ಸರಿ ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ ಸ್ವರ್ಗದಗಿರಣಿ ಸದಾ ಸೋಮಾರಿ ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ ಮುಳುಗಲಿ ಉಳಿದವರು ದುಃಖದಲ್ಲಿ ಹಾರಾಡಲಿ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_339.txt b/Kannada Sahitya/article_339.txt new file mode 100644 index 0000000000000000000000000000000000000000..73c5785ca22ef1f2868bbaa5d1c4d7b9378bf48c --- /dev/null +++ b/Kannada Sahitya/article_339.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ +ಮುಂಜಾವದಲಿ ಬೇಲಿತುಂಬ ನೀಲಿಯ ಹೂವು +ಜೀವನೋತ್ಸಾಹದಲಿ ಎದೆದುಂಬಿಸುವ ರೂಹು! +ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ +ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ +ತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು! +(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) +ಎಲ್ಲ ಒಂದೇ ಅದಕೆ-ತೋಟ ಬೇಲಿಯಕಳ್ಳಿ +ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ +ಮುಖವ ಸಣ್ಣದು ಮಾಡಿ ಮುದುಡಿಕೊಂಡಿರೆ ಜೀವ +ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ +ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್‍ಧನ್ಯ! +ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ +ಅದೊ ಅಲ್ಲಿ ಇದೊ ಇಲ್ಲಿ ಪ್ರತ್ಯಕ್ಷ ಸುಮಸಾಕ್ಷಿ! +ಕೀಲಿಕರಣ: ಎಂ ಎನ್ ಎಸ್ ರಾವ್ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ +“Judge not that ye be not judged” -Jesus Christ ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ […] +ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […] +ಅವರು ಹೀಗಿರುವುದು ನಮ್ಮ ಅದೃಷ್ಟ, ಹೀಗಿರದೇ ಹಾಗೆ – ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! ಬೇಕಾದ್ದು ಮಾಡಬಹುದು ಎಂದೂ ಏನೂ ಅಂದಿಲ್ಲ. ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, ಪುರಸೊತ್ತ೦ತು ಮೊದಲೇ ಇಲ್ಲ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_34.txt b/Kannada Sahitya/article_34.txt new file mode 100644 index 0000000000000000000000000000000000000000..70a9f17ec4d18eb9d588e2a17ed7212b9a324226 --- /dev/null +++ b/Kannada Sahitya/article_34.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. +“ಏನಾ! ಏನಾರೂ ಗಂಟ್ ಗಿಂಟ್ ಸಿಕ್ತ ಯಂತ ಕತೆ?” +“ಗ್ಯಂಟ್ ಸಿಕ್ರ್ ನಾನ್ಯಲ್ ಇವತ್ತ್ ಕೆಲ್ಸಕ್ ಬತ್ತಿದಿ?” – ಮರುಸವಾಲು ಹೊಡೆದಳು ಚಿಕ್ಕ. ಮತ್ತೇನಾಯಿತು ಹಾಗಾದರೆ ಮುಖ ಚೂರು ಹೊಳವಾಗಿದೆಯಲ್ಲ. +ಚಿಕ್ಕ ಗಸಗಸ ಪಾತ್ರೆ ತಿಕ್ಕುತ್ತ ಉಸಿರಿನ ನಡುವೆಯೇ ಹೇಳಿದಳು. ತನ್ನ ಮನೆ ಮುಂದಿನ ಜಾಗವನ್ನ, ಅಷ್ಟು ವರ್ಷದಿಂದ ಖಾಲಿ ಬಿದ್ದಿತ್ತಲ್ಲ, ಯಾರೋ ದೂರದೂರಿನವರು ಕೊಂಡುಕೊಂಡಿದ್ದಾರೆ. ಅವರು ಮನೆ ಕಟ್ಟಲು ಸುರುಮಾಡಿದಾಗಲೇ ತನಗದು ತಿಳಿದದ್ದು. “ಯಂತಾ ದ್ವಡ್ ಬೂತ್ ಮನಿ ಅಂತ್ರಿ! ಯ್ಯೇನ್, ಯೆಸ್ಟ್ ಲಕ್ಸೊ ಬೇಕೋ ದೇವ್ರೆ!” – ಎಂದವಳು ಸ್ವಗತದಂತೆ +“ನಾವೂ ಇತ್ತಲೆ! ತಲೆಮಾರಿಂದ, ಮನಿ ಅಂತೆಳಿ. ಎಲ್ಲರೂ ಊರ್ಜಿತ ಆತೊ. ಮನಿ ಕಟ್ತೊ. ನಂಗಿನ್ನೂ ಅಂಗೈ‌ಅಗ್ತೊ ಜಾಗನ್ನ ಅಲ್ಲಾಡ್ಸುಕ್ ಆಯಿಲ್ಲೆ. ಅದ್ವಂದ್ ಮನಿಯ? ನಾವಿತ್ತ್ ಅಂತೆಳಿ ಮನಿ. ನಾವೀಗ್ ಎದ್ರೆ ಮಶಾವೊ”- +ಅದೇನೋ ಅಪ್ಪ, ದೇವರಿಗೆ ತಾವು ಮಾತ್ರ ಕಾಣುವುದಿಲ್ಲ. ಇನ್ನೆಲ್ಲರೂ ಕಾಣಿಸುತ್ತಾರೆ ಎಂದು ಒಳ ಚರ್ಚಿಸುತ್ತ ದೇವರಿಗಾದರೂ ಕಷ್ಟವೇ ಎನ್ನುವಳು. “ಒಂದ್ ಮೀನಿನ್ ಸಾರ್ ಊಣ್ದೆ ಸ್ವಲ್ಪ್ ಕಾಲೊ ಆಯ್ತೇ?”-ಎಂದು ಸಾರಿನ ನೆನಪಲ್ಲಿ ಕ್ಷಣ ಕಣ್ಣರಳಿಸಿ ನಿಂತಲ್ಲೇ ನಿಲ್ಲುವವಳಿಗೆ ಈಗ ಮನೆಯೆದುರೇ ಏಳುತ್ತಿರುವ ದೊಡ್ಡ ಮನೆಯ ಹಂದರವನ್ನು ನಿತ್ಯಾ ನೋಡುವ ಖುಶಿಯಲ್ಲಿ ನಿತ್ಯದ ಕುದಿತಗಳೆಲ್ಲ ತುಸು ಅಡಿ ಹೋಗಿವೆ. ಕೆಲಸ ಮುಗಿದಿದ್ದೇ ಹೋಗಿ ಮನೆ ಮುಂದೆ ನಿಲ್ಲುವುದು, ನೋಡುವುದು, ಸುವರ್ಣಮ್ಮನ ಹತ್ತಿರ ಬಣ್ಣನೆ ಮಾಡುವುದು. ಕಟ್ಟುವುದನ್ನ ನೋಡುವುದೇ ಒಂದು ಖುಶಿ ಅಲ್ಲವ ಅಮ್ಮ? ಹೊಸ ಮನೆ ಸಾಮಾನ್ಯದ್ದಲ್ಲ. ದುಡ್ಡು ಕೈಯಲ್ಲಿ ಇದ್ದು ಕಟ್ಟುವವರ ಮನೆ. ಇವತ್ತು ಕಟ್ಟಿದ ಆಯ ಸರಿಯಿಲ್ಲವಂತ ಕಂಡಿತೇ, ನಾಳೆ ಅದನ್ನು ಅಳಿದಾಯಿತು, ಹೊಸದಾಗಿ ಕಲ್ಲು ಕಟ್ಟಿಯಾಯಿತು. “ಯಪ್ಪ. ಅವ್ರ್ ಕಟ್ಟಿ ಅಳ್ಸು ದುಡ್ಡೊಳ್ಗೆ ಸುಮಾರಿನ್ ಒಂದ್ ಮನಿಯೇ ಆತಿದಿತ್.” +ಚಿಕ್ಕನ ಮುಖ ಗೆಲುವಿರುವ ಕಾರಣ ಇನ್ನೂ ಇದೆ. ಅಷ್ಟು ದೊಡ್ದ ಮನೆಯಲ್ಲಿ ಇರಲು ಬರುವವರಿಗೆ ಆಳುಕಾಳು ಇಲ್ಲದೆ ನಡೆಯುವಂತೆಯೇ ಇಲ್ಲ. ತನಗೆ ಹೇಗೋ ದುಡ್ದು ಎಷ್ಟಿದ್ದರೂ ಬೇಕು. ಅಲ್ಲೆ, ಆಚೆಗೇ, ಇದ್ದೇನೆ. ಚಿಕ್ಕ ಅಂತ ಪೂರ್ತಿ ಕರೆಯುವುದೂ ಬೇಡ. ಚಿ ಅಂದರೆ ಸಾಕು, ಆ ಎಂಬೆ. ಇಷ್ಟು ಸುಲಭದಲ್ಲಿ ತನ್ನಂತಹ ಘನಾಜನ ಸಿಕ್ಕಿದರೆ ಅವರು ಬಿಡುತ್ತಾರೆಯೆ? ಆ ಹಿತ್ತಲಲ್ಲಿ ಕಡಿಮೆ ಪಕ್ಷ ಹದಿನೈದು ತೆಂಗಿನ ಸಸಿ ನೆಡಬಹುದೆ? ನೆಟ್ತವರು ನೀರು ಹಾಕಲೇಬೇಕೇ? ಪಂಪ್‌ಸೆಟ್ ಈಗಾಗಲೇ ಹಾಕಿದ್ದಾರೆ. ಪೈಪನ್ನು ಗಿಡದ ಬುಡಕ್ಕೆ ಹೀಗೆ ಹಿಡಿದರೆ ಸರಿ. ಏನಾಗಬೇಕು?…. ಅಂದಹಾಗೆ ಪೈಪು ಹಿಡಿದು ಕಡೆಕಡೆಗೆ ರಟ್ಟೆ ಸಿಡಿಸಿಡಿಯೆನ್ನುತ್ತದಂತೆ ಹೌದೆ ಅಮ್ಮ? ಒಂದು ವೇಳೆ ಹಾಗಾದರೆ, ಮಗಳಿದ್ದಾಳೆ, ಮಗನಿದ್ದಾನೆ. ದೇವರು ಅಷ್ಟರೊಳಗೆ ಅವನಿಗೊಂಚೂರು ಬುದ್ಧಿ ಕೊಡಲಿ. ಗಂಡ ಏನು, ಮನೆಯಲ್ಲೇ ಕುಂಡೆ ಒರಕಿಕೊಂಡು ಇರುವವರು. ಹೋಗಿ ಹಿತ್ತಲಿಗೆ ನೀರನ್ನಾದರೂ ಬಿಡಿ ಎನ್ನುತ್ತೇನೆ. ಕೂಳು ಬೇಕಾದರೆ ಹೋಗಬೇಕಪ್ಪ. ಕಾಲುಬುಡದಲ್ಲೇ ಇದೆ. ಏನು ದೂರ ಹೋಗಬೇಕಾ? “ಆದ್ರೂ, ನಿಮ್ಮನಿ ಬಿಡೂದಿಲ್ಯೆ. ಸಾವಲ್ತೊಟ್ ಬಿಡೂದಿಲ್ಲೆ.” +ಹಸಿದವರು ಗಬಗಬನೆ ಉಣ್ಣುವ ಹಾಗೆ ಲಗುಬಗನೆ ಒಂದಷ್ಟು ಕನಸು ಹೆಣೆಹೆಣೆದು ಹಾಕಿದಳು ಚಿಕ್ಕ. “ಒಳ್ಳೆ ಕಾಲೊ ಬಾರ್ದೆ ಎಲ್ಲಿಗ್ ಹ್ವಾತ್ತ್? ಕಲ್‌ಬಂಡೆಗಾರೂ ದಿನ ಬತ್ತತ್ ಅಂತ್ರಲೆ!” ಚಿಕ್ಕನ ಮಾತು ಆಲೈಸುತ್ತ ಅಲ್ಲೇ ನಿಂತಿದ್ದಾಳೆ ಮಗಳು. ತುಟಿ ಕುಡಿಯಲ್ಲೊಂದು ನಗೆ ಮಿಂಚುತ್ತಿದೆ. “ಬಂದಿತ್ತಲೆ ಈಗ ಕಲ್‌ಬಂಡೆಗೂ ಪಾರಿನ್ನಿಗ್ ಹೋಪ್ ಯೋಗೊ. ಇನ್ ನಮ್ಗ್ ಕಾಲೊ ಬಾರ್ದೆ ಹೊಕ್ಕಾ?” – ಎಂದು ಕಿಲಕಿಲನೆ ನಕ್ಕವಳು, “ಹ್ಯಾಂಗಿತ್ ಇಂಜಿಶನ್! ಅಬ್ಬಿಗ್ ಇಂಜಿಶನ್ ಕೊಡೊಕೆ ನಾನೇ ಆಯ್ಕ್ ಅಲ್ದೆ?” +ಈ ಎಡೆಯಲ್ಲಿ ಚಿಕ್ಕ ಖಾಲಿ ಸಿಮೆಂಟುಚೀಲ ನಾಕು ಒಟ್ಟು ಹಾಕಿದಳು. ಈ ತಿಂಗಳು ಕಬ್ಬಿಣಗಿಬ್ಬಣ ಹೆಕ್ಕಿ ಮಾರಿಯೇ ಇಂತಿಷ್ಟು ದುಡ್ಡಾಯಿತು ಎಂದು ಚೂರುಪಾರು ಕಬ್ಬಿಣ ಕದ್ದ ರೋಮಾಂಚನ ಹೇಳಿಕೊಂಡಳು. ಮನೆ ಕಟ್ತಲು ಹಿಡಿದಲಾಗಾಯ್ತು ಏನೇ ಆಗಲಿ, ತನಗೆ ಒಲೆ ಉರಿಗೊಂದು ತತ್ವಾರವಿಲ್ಲ. ಕೀಸುಳಿಪುಡಿ ತೆಗೆಯುವವಳು ತಾನು ಮಾತ್ರ ಅಲ್ಲಪ್ಪ. ಆಸುಪಾಸಿನವೆಲ್ಲ ತೆಗೆಯುವವೇ. ನಿಮಗೆ ಕಸುಬಿಲ್ಲವೆ? ಎಲ್ಲರೂ ಕಳ್ಳರೇ. ಸಾಚಾ ಯಾ….ರಿಲ್ಲ ಎಂದು ಮೆಲ್ಲಗೆ ನಗುವಳು. +‘ಹೌದ್, ಇಷ್ಟ್ ದ್ವಡ್ ಮನಿ ಕಟ್ಕಂತ್ರ್ ಅಂಬ್ರ್, ನಮ್ಮಂಥ ಪಾಪ್‌ದವ್ ಒಂಚೂರ್ ಕೀಸುಳಿ ಪೊಡಿ ಕಬ್ಣದ್ ಚೂರು ಹೆಕ್ಕಿರೆ ಅವ್ರೇನ್ ಬಳ್ಕ ಹೋಪ್ರ?”-ಎಂದು ತರ್ಕ ಹೂಡಿಕೊಳ್ಳುವಳು. ಅಂತೂ ಚಿಕ್ಕನ ಬಾಯಿಗೆ ಬಿಡುವಿಲ್ಲ. ತಲೆಗೂ. ತನ್ನ ದಿನದ ಮನೆವಾರ್ತೆ ತುಸು ಹಗುರಾದ ಸುಖ. ಹೇಗೆ ಹೇಗೋ ಅಂತೂ ಗಂಡು ಗಂಡಸಿನಂತೆ ನಿಭಾಯಿಸುತ್ತಿದ್ದೇನೆಂಬ ಲಘು ಜಂಭ. ಗೋಡೆಗೆ ನೀರು ಸೋಕುವ ಕೆಲಸಕ್ಕಾದರೂ ತನ್ನನ್ನು ಕರೆಯುವಂತೆ ಆಚಾರರು ಮೇಸ್ತ್ರಿಗೆ ಶಿಫಾರಸು ಮಾಡುವರಂತೆ. “ಅದ್ಯೆಲ್ಲ ಎಷ್ಟ್ ಸುಲ್ಬ ಅಂತ್ರಿ! ಹೀಂಗ್ ನಿಂತ್ರ ಸೈ ಹೀಂಗ್ ಚ್ವೊಗ್‌ದ್ರ್ ಸೈ”-ಎಂದು ಡೊಂಕು ಕಾಲು ಮಾಡಿ ನಿಂತು ಬರಿಗೈಯಲ್ಲಿ ನೀರು ಬೀಸಿ ಚೊಗೆದ ಪಾರ್ಸು ಮಾಡಿದಳು. ಅತ್ತ ತನಗೇ ಅರಿಯದಂತೆ ತಾಯಿಯ ಹಾವಭಾವ ಕೈಕಾಲು ಬೀಸುಗಳನ್ನು ಸಣ್ಣಗೆ ಅನುಕರಿಸುತ್ತ ನಿಂತಿರುವ ಮಗಳ ತುಟಿಬದಿಯ ನಗೆ ಇವತ್ತು ಪೂರ್ತಿ ಹರಡಿದೆ. “ಈ ಅಬ್ಬಿಗ್ ಯ್ಯೇನಾತ್ ಕಾತೆ!”-ಎಂದು ಉದ್ಗರಿಸುತ್ತ ಕುಟುಕುಟು ನಗುತ್ತಾ ಇದ್ದಾಳೆ. +ಇಂಥದ್ದೆಲ್ಲ ಸಾಮಾನ್ಯವಾಗಿ ಹೀಗೆ ಹೀಗೆ ಮುಂದುವರಿಯುತ್ತದೆ ಅಂತ ಯಾರಿಗೂ ಗೊತ್ತೇ ಇರುತ್ತದೆ. ಹಾಗೇ ಆಯಿತು ಕೂಡ! +ಕಟ್ಟಡ ನೋಡಿಕೊಳ್ಳಲು, ಆ ಮನೆಯದೇ ಜನವಂತೆ, ಬಂದು ನಿಂತಿತು. ಅದು ಬಂದು ನಿಂತದ್ದೇ ನಿಂತದ್ದು ಒಂದು ಸಿಮೆಂಟುಚೀಲ ಅತ್ತಿತ್ತಾಗಲಿಲ್ಲ. ಕೀಸುಳಿ ಪುಡಿಯ ಒಂದು ಎಳೆಯೂ ಗಾಳಿಗೆ ಹಾರಲಿಲ್ಲ. ಎಲ್ಲಾ ಆಟೋದಲ್ಲಿ ಬಾಯ್ಮುಚ್ಚಿ ಸಾಗಿ ಹೋದವು. “ಎಲ್ಲಿಗೊ. ಯಾರ್ ಕಂಡಿದ.ಯಾರನ್ ಸುಡುಕೊ.”-ಈಚೆಗೆ ಬಂದರೆ ಕಾಲು ಮುರಿಯುತ್ತೇನೆ ಎಂದಿತಂತೆ ಉಸ್ತುವಾರಿ ಜನ. ಆಯಿತೇ? ನೀರು ಸೋಕಲು ಕೂಡ ಮೇಸ್ತ್ರಿಯ ಆಳೇ ಬಂತು. “ಹಪ್ ಹಿಡ್ದವು.”-ಎಂದು ವ್ಯಥೆ ಕೊಡಕಿಕೊಂಡಳು ಚಿಕ್ಕ. ಹೊರತು ಏಳುವ ಮನೆಯನ್ನು ನೋಡುತ್ತಾ ನಿಲ್ಲುವ ಚತ ಬಿಡಲಿಲ್ಲ. +ಈ ಹಬ್ಬೀಗ್ ಪಿರಾಯೊ ಯಾಕಾಯ್ತ್ ಹೇಳಿನಿ. ಬೈಯಗ್ ಮನಿ ಮುಂದ್ ನಿಂತ್ಕಂಡ್ ಸೂಮ್ನೆ ಕಾತ ಇರ್ತಾಳ್. ಈಗ ಇತ್ ಅಲ್ಲಿ ಸೀಮಿಟ್ಟಿನ್ ಧೂಳ್. ಧೂಳ್ ತಿಂದ್..ತಿಂದ್.. ಕಡೀಕೆ ಅಪ್ಪ್‌ನ್ ಹಾಂಗ್ ಇವ್ಳೂ ಕಾಯ್ಲಿ ಹಿಡ್ಕಂಡ್ ಕೂರ್ಮಂಡೆ ಹಾಕಿರ್ ಆಯ್ತಲೆ. ಅಜ್ಜಿ ಅಬ್ಬಿ ಅಪ್ಪೊ ಅಂತೆಳಿ ಚಾಕ್ರಿ ಮಾಡ್ಯೇ ಪೂರೈಸ.”- ಎನ್ನುವ ಮಗಳಿಗೆ ಎದುರಾಗಿ “ನಾವಾರೂ ಅಷ್ಟೆ ಅಲ್ದೆ? ಯಾರಿಗಾರೂ ಪುಗ್ಸಟೆ ತಿಂಬುಕ್ ಬಿಡ್‌ತ್ವಾ ಕಾಂ….ಬ!”- ಎಂದು ಮನೆ ಕಟ್ಟುವವರ ಪರವಾಗಿ ನಿಲ್ಲುವಳು ಚಿಕ್ಕ. +ಅದೆಲ್ಲ ಸಮನೇ. ಆದರೆ ಅಮ್ಮ ಗಾಳಿ ಮಾತ್ರ ಬಂದ್. ಅಷ್ಟೇ ಸೈಯಾ? ಕಗ್ಗತ್ಲೆ! ಎಲ್ಲಿ? ತನ್ನ ಮನೆಯಲ್ಲಿ! ಹೇಗಿದೆ ಹೊಡೆತ! ಈ ಮನೆ ಎದ್ದು ತನ್ನ ಮನೆಯಲ್ಲಿ ಗಾಳಿ ಬಂದಾಗುತ್ತದೆ, ಕತ್ತಲೆ ಕವಿಯುತ್ತದೆ ಅಂತ ತನ್ನ ತಲೆಗೇ ಬರಲಿಲ್ಲವಲ್ಲ. ಇನ್ನೆಂಥಾ ಹೆಡ್ಡೆ ಇರಬಹುದು ತಾನು! ಒಂದು ವೇಳೆ ತಲೆಗೆ ಬಂದರೂ ಹೇಳುವುದು ಯಾರ ಹತ್ತಿರ ಬೊಬ್ಬರ್ಯನ ಹತ್ತಿರವ? ಒಟ್ಟಾರಮೇಲೆ ಕಥೆ ತನ್ನದು. ದೇವರು ಹುಡುಕೀ ಹುಡುಕೀ ತನಗೇ ಕೊಡುತ್ತಾನಲ್ಲ ಇದೆಲ್ಲ….ಸ್ವಾಮೀ ದೇವರೇ, ಆಗಲಿ, ನಿನ್ನಿಚ್ಛೆಯಂತೆಯೇ ಆಗಲಿ. ಗಾಳಿ ಬೆಳಕು ಇಲ್ಲದಿದ್ದರೆ ಅಷ್ಟೇ ಹೋಯಿತು. ಮನೆಯವರು ಕೆಲಸಕ್ಕೆ ಕರೆಯಲಿ. ಅಷ್ಟಾದರೂ ಮಾಡು…. +* * * +ಮನೆ ಸಿದ್ಧವಾಗಿದೆ. ಕಲ್ಲುಗುಂಡಿನ ಹಾಗಿನ ಮನೆ. ಉಪ್ಪರಿಗೆ, ಸುತ್ತಲೂ ಪಾಗಾರ. ಭರ್ಜರಿ ಗೇಟು. ಕಟ್ಟಿದರೆ ಹೀಗೆ ಕತ್ಟಬೇಕು ಎಂಬ ಹಾಗೆ. ಇವತ್ತು ಮನೆ ಒಕ್ಕಲು. ಇಡೀ ಮನೆಗೆ ಲೈಟು ಹಾಕಿದ್ದಾರೆ. ತಾವು ದೀಪ ಹಚ್ಚುವುದೇ ಬೇಡ ಇವತ್ತು. ಬೆಳದಿಂಗಳು ಮನೆ ಒಳಗೇ ಬಿದ್ದ ಹಾಗಿದೆ. ಮತ್ತೆ ಅಮ್ಮ, ಗೊತ್ತುಂಟ? ಮನೆ ಒಕ್ಕಲಿನ ಸಿನಿಮಾ ತೆಗೆಯುತ್ತಾರಂತೆ. ಬಂದವರು ಹೋದವರು ಇದ್ದವರದೆಲ್ಲ….ತಾನು ಪಾತ್ರೆ ತಿಕ್ಕುವಾಗ ಸಿನಿಮಾ ತೆಗೆದರೆ! ಇಸಿ! ತನ್ನ ಸೊಡ್ಡು ಬೇಡುವವರ ಸೊಡ್ಡಿನ ಹಾಗಿದೆ. ಹೇಗೆ ಬರುತ್ತದೇ, ಸುರುಪ, ಮುಂಚೆ ಸಾಪಾಗಿದ್ದಾಗ ಒಂದು ಪಟ ತೆಗೆದವರಿಲ್ಲ….. +ಮಗಳ ಮುಖದಲ್ಲಿಯೂ ಸಿನೆಮಾ ತೆಗೆಯುತ್ತಾರೆಂಬ ಕಲಮಲವಿದೆ. ಸಿನೆಮಾ ತೆಗೆಯುವಾಗ ತಾನಂತೂ ಪಾತ್ರೆ ತಿಕ್ಕುವುದಿಲ್ಲ ಎನ್ನುತ್ತಿದ್ದಾಳೆ. +ಮನೆ ಒಕ್ಕಲು ಮುಗಿಯಿತು. ದಿನ ಮಗುಚಿತು. +ಬೆಳಿಗ್ಗೆ ಕೆಲಸಕ್ಕೆ ಬಂದ ಚಿಕ್ಕನ ಮುಖ ಯಾಕೆ ಸತ್ತು ಮರಗಟ್ತಿದ ಹಾಗಿದೆ! “ಏನ, ಮನೆವಕ್ಲು ಗಡ್ದ?” +“ಹ್ಞುಂ”-ಹೊತ್ತು ಹಾಕಿದಂತೆ ಹೂಗುಟ್ಟಿ ಬರಬರಬರ ಧೂಳು ಕಲ್ಲು ಎಲ್ಲ ಒಟ್ಟಿಗೆ ಹಾರಬೇಕು ಹಾಗೆ ಅಂಗಳ ಗುಡಿಸಿದಳು ಚಿಕ್ಕ. +“ಹಣೇ, ಅಬ್ಬಿ ಯಾಕ್, ಮಾತಾಡತಿಲ್ಯಲೆ!”-ಎಂದರೆ ಮಗಳ ಗಲ್ಲ ಕತ್ತಿನ ನರಗಳೆಲ್ಲ ದುಃಖ ಬಚ್ಚಿಟ್ಟಂತೆ ಕಂಪಿಸಿದವು. ಚಿಕ್ಕ ಹಿಡಿಕಟ್ಟು ಅಲ್ಲೇ ಬೀಸಿ ಬಿಸಾಕಿ ಜಗಲಿಗೆ ಬಂದು-ಅಮ್ಮ, ಅವಕ್ಕೆ ಹಿಡಿಕಟ್ಟಿನ ಮುಂಡಿನಿಂದ ಹಾಕಬೇಕ ಬೇಡವ. ಊಟ ಆಗಿದ್ದೇ, ಎಂಜಲೆಲೆಯನ್ನು ತೆಗೆತೆಗೆದು ಹಿಂದೆ ನಮ್ಮನೆ ಕಡೆ ಬಿಸಾಡಿದ್ದೆ ಹಾಗಾದರೆ! ಎಲ್ಲ ಸೀದಾ ಮನೆ ಮೆಟ್ಟಿಲಿನ ಮೇಲೆ, ಬಾಗಿಲೊಳಗೇ. ಸೈರಣೆ ಕಳೆಯದೆ ಮುನ್ಸಿಪಾಲಿಟಿ ತೊಟ್ಟಿ ಅಲ್ಲೇ ಇದೆ ಅಂತ ತೋರಿಸಿದರೂ ಕಿವಿ ಮೇಲೇ ಇಲ್ಲ. ಮನೆಯವರೇ ಹೇಳಿ ಮಾಡಿಸಿದ್ದಾರೆ. ಇಲ್ಲವಾದರೆ ಕೆಲಸವಕ್ಕೆ ಅಷ್ಟು ದೈರ್ಯ ಎಲ್ಲಿಂದ? +ಚಿಕ್ಕನ ಮುಖದ ನಗೆಯ ಪುರಾತನ ಕಲೆಗಳೂ ಅಳಿಸಿ ಹೋದಹಾಗಿತ್ತು. ಆಸುಪಾಸಿನಲ್ಲಿ ಅವಳಿಗೆ ಬೇಕಾದವರು- ಈಗ ಒಂದು ಶಬ್ದ ಮಾತಾಡಬೇಡ. ಬಾಯಿ ಮೇಲೆ ಕೈ ಇಟ್ಟುಕೊ. ಅವು ಏನು ಮಾಡಲಿಕ್ಕೂ ಹೇಸದವು. ಕೋಳಿಮರಿ ಎತ್ತಿದಂತೆ ನಿನ್ನನ್ನು ಎತ್ತಿ ಬಿಸಾಕಿಯಾವು. ನಿನ್ನ ಮನೆಯನ್ನು ಎಲ್ಲರ ಸಮೇತ ಮುದ್ದೆ ಮಾಡಿ ನೀನು ತೋರಿಸಿದ ಮುನ್ಸಿಪಾಲಿಟಿ ತೊಟ್ಟಿಗೇ ಒಗೆದಾರು. ಇಷ್ಟಕ್ಕೂ ಅಷ್ಟಪ್ಪ ಎಲ್ಲಾ ಖರ್ಚು ಮಾಡಿ ಅಂಥಾ ವೈಭೋಗದ ಮನೆ ಕಟ್ಟಿದ್ದಾರೆ; ಪಕ್ಕದಲ್ಲಿಯೇ ನಿನ್ನ ಹರಕಲು ಮನೆಯ ದೃಷ್ಟಿಬೊಟ್ಟು ಬೇಕಾಗಿದೆಯ ಅವರಿಗೆ? ಏನಂತೆ ತಿಳಕೊಂಡೆ ನೀನು ಯೋಚನೆ ಮಾಡು-ಎಂದರಂತೆ. ಮಗಳಿಗೆ ಕಣ್ಣಿರು ಗಗನಕ್ಕೆ ಹಾರಿ ಹೋದಷ್ಟು ಕಂಗಾಲು ಕವುಚಿತ್ತು. ರಾತ್ರಿ ಆ ಎಲೆರಾಶಿಯನ್ನೆಲ್ಲ ಒಟ್ಟು ಮಾಡಿ ಎತ್ತಿ ತೊಟ್ಟಿಗೆ ಹಾಕಿ ಮನೆ ಸಾರಿಸಿಯೇ ಮಲಗಿದ ತನ್ನ ನಿದ್ದೆಗೆ ಕಿಚ್ಚಿಡಿ-ಎಂದಳು ಚಿಕ್ಕ. +ಎಂಜಲು ಕಸ ಮುಸುರೆ ಗಲೀಜನ್ನು ಬಿಸಾಡುವುದು ನಾಳೆಗೂ ನಿಲ್ಲಲಿಲ್ಲ. ನಾಡಿದಿಗೂ. ತೋಟದ ಮಾಲಿಯೂ ಅದೇ ಅಭ್ಯಾಸ ಮಾಡಿಕೊಂಡ. ಅಡುಗೆಯವರೂ ಅಳಿದಬಳಿದ ಎಲ್ಲವನ್ನೂ ಗೋಚಿ ಸಮಯಾಸಮಯದ ಗೊಡವೆಯೇ ಇಲ್ಲದೆ ಚಿಕ್ಕನ ಮನೆಯ ಕಡೆ ಬೀಸಿ ಬಿಸಾಡುವುದೊಂದೇ ಹೊಡೆತ. ಮೆಟ್ಟಿಲಿನ ಮೇಲೂ ಒಳಗೂ ಎಲ್ಲೆಂದರಲ್ಲಿ ಕಾಲು ಹಾಕಲು ಸಾಧ್ಯವಿಲ್ಲದಂತೆ. ತನ್ನ ಗಂಡನೋ, ಮಾತಿದ್ದೂ ಮೂಕ. ಅಬ್ಬೆ, ಹಾಸಿಗೆ ಬಿಟ್ಟು ಹಂದದವಳು. ಮಗನ ಬೊಜ್ಜವನ್ನು ಹೋದ ಜನ್ಮದಲ್ಲಿಯೇ ಮಾಡಿ ಮುಗಿಸಿದೆನಲ್ಲ. ಇನ್ನು ಯಾರು? ಆ ಹಿರೇಕುದ್ರು ಭಾಸ್ಕರ ಒಬ್ಬ ಇದ್ದ. ಏನು ಕಷ್ಟ ಬಂದರೂ ತಾನಿದ್ದೇನೆ ಎಂಬವ. ತಮ್ಮ ಓಟೆಲ್ಲ ಅವ ಹೇಳಿದವರಿಗೇ ಅಲ್ಲವೆ? ನಿತ್ಯಕ್ಕೆ ಎಲ್ಲಿ ಕಂಡರೂ ಸಿಗುವವ ಕಷ್ಟ ಬಂದಾಗ ಎಲ್ಲಿ ಹುಡುಕಿದರೂ ಇಲ್ಲ. ಮೂರು ಮೂರು ಸಲ ಹೋಗಿ ಬಂದೆ. ಊರಲ್ಲೇ ಇಲ್ಲವಂತೆ! ಎಲ್ಲಿ ಸತ್ತಿದ್ದಾನೋ. ಇದೊಂದು ಉಂಟಲ್ಲ ಈ ಮಗಳು! ಅಕಲು ಉಂಟೇ ಅಮ್ಮ ಇದಕ್ಕೆ? ತಾನು ಬೇಡ ಬೇದ ಅಂತ ತಡೆಯುತ್ತಿದ್ದ ಹಾಗೇ ನೆನ್ನೆ ಅವು ಈಚೆಗೆ ಹಾಕಿದಷ್ಟನ್ನೂ ಇವಳು ಬಾಚಿ ಆಚೆಗೆ ಬೀಸಿ ಬಿಸಾಡಿ ಅದು ಅವರ ಮನೆ ಗೋಡೆ ಕಿಟಕಿ, ಕಿಟಕಿ ದಾಟಿ ಕೋಣೆಯೊಳಗೂ ಬಿದ್ದು ಅಲ್ಲಿಂದೊಬ್ಬ ಗಂದಸು ಎದ್ದು ಬಂದು….ತನಗೂ ತಡೆಯದೆ ಕೂಗಾಡಿದೆ…. ಅದಕ್ಕೆ ಆತ ಸೀದಾ ಒಳಗೆ ಹೋಗಿ ಕೋವಿ ತರುವುದೆ! ಕೋವಿ ತೋರಿಸಿ “ಗುಂಡ್ ಹೊಡ್ದ್ ಒಂದೇ ಪೆಟ್ಟಿಗ್ ಹುಟ್ಯೇ ಇಲ್ಲೆ ಮಾಡ್‌ಸ್ವೆ. ನಸ್ರಾಣಿಗ್ಳ್. ಆಗ್ದಿರೆ ಜಾಗ ಬಿಟ್ ಎದ್ದ್ ನಡೀನಿ.” ಅಂತ ಒಂದ್ ಸ್ವರ ತೆಗೆದದ್ದೆಂದರೆ! +ಚಿಕ್ಕನ ಜಬ್ಬು ಗಲ್ಲ ನಡುಗುತ್ತಿತ್ತು. ಹದ್ದಿನ ಹಾಗಿನವು. ಅಯ್ಯಬ್ಬ. ಅವನ ಅವತಾರ ಕಂಡದ್ದೇ ತಾನು ಬೆಪ್ಪುಗಟ್ಟಿ ಅಲ್ಲೇ ನಿಂತ ಮಗಳ ಒಳರೆಟ್ಟೆ ರೊಯ್ಯ ಚಿಮುಟ ನಿವಾಳಿಸು ಒಳಗೆ ಅಂತ ದೂಡಿದ್ದಲ್ಲವೆ! +ಈಗ ಮಾತ್ರ ಮಗಳಿಗೆ ತಡೆಯದ ನಗೆ. ಅವನ್ನ ಕಂದದ್ದೇ ತನಗೆ ಚಿಮುಟಿದಳಲ್ಲ ಇ ಅಬ್ಬೆ ಯಾವ ಕರ್ಮಕ್ಕೆ ಎಂದು ನೆನೆನೆನೆದು ನಗೆ. ಕಣ್ಣಂಚಲ್ಲಿ ನೀರಿನ ಗೀಟು ಮೂಡುವ ಹಾಗೆ. ದುಹ್ಖದ ಸೇಂಕಿನ ಎಡೆಯಲ್ಲಿ ಹಣ್ಣುಮುಖವನ್ನು ಸೆರಗೊತ್ತಿ ಒರೆಸಿಕೊಂಡಳು ಚಿಕ್ಕ. ಮಗಳ ಮಾತಿಗೆ ಸಣ್ಣ ನಗೆ ಹೊಳೆಸುತ್ತ “ಹೋಂಕಿಲ್ಲದ ರಂಡೆ.” +ಪ್ರತಿದಿನದ ಗೋಳಾಯಿತಲ್ಲ ಇದು. ಅವಕ್ಕೆ ಮತ್ತೇನಲ್ಲ ಅಮ್ಮ, ಇಷ್ಟು ಒಳ್ಳೆಯ ಜಾಗದಲ್ಲಿ ಕುಳಿತಿದ್ದಾವಲ್ಲ ಇವು ಅಂತ ಹೊಟ್ಟೆಕಿಚ್ಚು. ತಾವು ಕುಳಿತುಕೊಂಡ ಕಾಲಕ್ಕೆ ಮೂರು ಪಾವಾಣೆಗೆ ಕೇಳುವವರಿಲ್ಲ ಇದನ್ನು. ಈಗ ಕ್ರಯ ಬಂದರೆ ತಮ್ಮ ತಪ್ಪಾ? ಅವರು ಇವತ್ತು ಬಂದವರು. ತಾವು ಆದಿಕಾಲದಿಂದಲೂ ಇಲ್ಲೇ ಸುತ್ತಿಕೊಂಡಿದ್ದವರು. “ಲಕ್ಸೊ ಅಲ್ಲ, ಕ್ವೋಟಿ ಕೊಟ್ರೂ ನಾ ಯೇಳ.” +“ಕ್ವೋಟಿ ಗೀಟಿ ಬ್ಯೇಡಪ್ಪ ಲಕ್ಸೊ ಕೊಟ್ರ್ ಸಾಕ್, ಯೇಳ್ವಲೆ. ಅದ್ಕೇನ್. ಅರೆ ಅವು ಕೊಡ್ಕ? ಕೊಡ್ತೊ ಗ್ವಯ್ಟ್.” ಎಂದಳು ಮಗಳು ಮುಂಗೈಯನ್ನು ಗೊರಟಿನಂತೆ ಮುರಿಯುತ್ತ. “ಕೊಡೊದಿದ್ರೆ ಸೀದ ಮಾತಿಗ್ ಬತ್ತಿದೊ.” +-ಕೋರ್ಟಿಗೆ ಹೋಗಲು ತನ್ನ ಹತ್ತಿರ ಮೂರು ಕಾಸಿಲ್ಲ. ಫಿರ್ಯಾದಿ ಮಾಡಲಿಕ್ಕಾದರೂ ಜನ ಬೇಕಲ್ಲ. ಅವಕ್ಕೆ ಗೊತ್ತು ಅದೆಲ್ಲ. ಅದಕ್ಕೇ ಈ ಹುನ್ನಾರ. ಗಂಡನಿಗೆ ಉಸಿರುಕಟ್ಟುತ್ತಿದೆ. ಹಾಸಿಗೆಯಲ್ಲೇ ಎಲ್ಲಾ ಆಗುವ ಅಬ್ಬೆ. ಗಾಳಿಯಿಲ್ಲದೆ ಮನೆಯಿಡೀ ನಾರುತ್ತಿದೆ….ಅಯ್ಯೋ…. +“ಅಯ್ಯೋ….ನಾವಿಪ್ದೇ ಇವ್ರ್ ಮನಿ ಗಲೀಜ್ ಹೆಕ್ಕಿ ಹಾಕೂಕೆ ಅಂತಾಯ್ತಲೇ….ನಂ ಕಂಡ್ರೇ ಅವ್ರ್ ಮನೀ ಹೆಂಗಸ್ರಿಗ್ ಸಮೇತ ಅಸಯ್ಯ ಅಂಬ್ರ್. ನನ ಗಂಡ ಕೆಮ್ಮಿರ್ ಅಸಯ್ಯ ಅಂಬ್ರ್. ನನ್ನ ಮಗ ಕುಡ್ಕಂಡ್ ಬಂದ್ರ್ ಅಸಯ್ಯ ಅಂಬ್ರ್….ದ್ವಡ್ ಕುಡ್ರೆ ಅಸಯ್ಯ ಇಲ್ಯ ಅಮ್ಮ, ಅವ್ರ್ ಹಾಂಗೆ ಹ್ಞಂ? ಇಚಿತ್ರೊ…..ನಾವ್ ಆಚೀಗ್ ಹೋಪೂಕಿಲ್ಲೆ ಈಚೀಗ್ ಹೋಪೂಕಿಲ್ಲೆ ಅಸಯ್ಯ ಥೂ ಅಸಯ್ಯ ಥೂ ಅಂತೆಳಿ ಉಗೀತೊ. ನಮ್ಮನ್ ಎಬ್ಸುಕ್ ಮಾಡೂ ಹಿಕ್ಡಿ ಇದೆಲ್ಲ. ಸಮಾ ಇಪ್ಪ್ ಮನ್‌ಸ್ರಾರೆ ಸರಾಸರಿ ಎಂದ್ರ್ ಬಂದ, ರಾಜಾರೋಷ ಮಾತಾಡ್ದ….ಇದ್ ಹಾಂಗಲ್ಲ. ಅಡ್ಡದಾರಿ, ಕಾತಿ. ನಾನೂ ಕಾತಿ. ಬಾಯಗ್ ಒಂದ್ ಶಬ್ದೊ ಆಡ್ದೆ, ಯೆಂಜ್ಲ್ ಕಸೊ ಅದ್ಯೇನೇನ್ ಬಿಸಾಕ್‌ತ್ವೊ ಯಲ್ಲ ಯೆತ್ಯೆತ್ತಿ ಮುನ್ಸಿಪಾಲ್ಟಿ ತೊಟ್ಟಿಗ್ ಬಿಸಾಕ್ತಿ. ಹಾಕ್ದ್ ಹಾಂಗೂ ಬಿಸಾಕ್ತಿ. ಹಾಕ್ದಾಂಗೂ….ನನ್ ಕೊಡೆ ಎಷ್ಟ್ ದಿವ್ಸೊ ತಡೂಕತ್ತೊ ಅಷ್ಟ್ ದಿವ್ಸೊ…..” ಚಿಕ್ಕನ ಇಡೀ ದೇಹ ನಡುಗತೊಡಗಿತು. ಒಡಲ ದುಹ್ಖ ಮೈಮೇಲೆ ಅಮರಿಕೊಳ್ಳತೊಡಗಿತು. ದನಿ ಏರುತ್ತಾ ಹೋಯಿತು. ಸ್ಪೋಟವಾಗುವಂತಿದ್ದಳು ಚಿಕ್ಕ. “ಅಯ್ಯೋ, ಹೊರಗಾರೂ ಮಲ್ಕಮ್ನೇ, ರಾತ್ರಿಯಂತೂ ಕಾಣ್ದೆ ಯಷ್ಟೊತ್ತಿಗ್ ಯೇನ್ ಹ್ಯಾಂಗ್ ಬಂದ್ ಬೀಳತ್ ಅಂತೆಳಿ ಹೇಳೂಕ್ ಯಡ್ವ? ನಾಯಿಹೇಲಂತೂ ಕಾಣ್ದೆ ಬಿಸಾಡ್ವಲೇ, ನಾನೆಲ್ಲಿಗ್ ಹ್ವಾಪ್ದ್! ನನ್ನ್ ಬದ್ಕೇ ಬರಿ ಹಗ್ಲ್‌ವೇಸೊ ಆಯ್ತಲಬ್ಯೇ….” +-ಬೆಂಕಿಯುಂಡೆಯಂತಹ ಮಗಳು ಸೊಂಟಕ್ಕೆ ಕೈಕೊಟ್ಟು ದಿಗ್ಭ್ರಮೆಯಿಂದ ಅವಳನ್ನು ನೋಡುತ್ತಿದ್ದಂತೆ, ಚಿಕ್ಕನ ರೋದನ ಸ್ವಯ ಮರೆತು ತಾರಕಕ್ಕೇರುತ್ತಿದ್ದಂತೆ ಸುವರ್ಣಮ್ಮ ಸಟ್ತೆಂತ ಎದ್ದರು. ಎದ್ದು ಒಳಹೋಗಲು ತಿರುಗುತ್ತ “ನೀ ಹೀಂಗ್ ಹುಯ್ಲೆಬ್ಸ್ ಬೇಡ; ಯಾರೋ ಸತ್ರಂಬಂಗೆ, ಆಚಿಂದ್ ಕೇಂಬವ್ರಿಗೆ ನಾವೇ ಯಂತದೋ ಮಾಡ್ದೊ ಅಂಬಂಗ್ ಕಾಂಬು. ಸಾಕ್ ಬೊಬ್ಬಿ ಹೊಡದ್. ಅಬ್ಬಿ ಮಗ್ಳ್ ಕೆಲ್ಸ ಕಾಣಿ”-ಎಂದು- +ಬಾಗಿಲು ಹಾಕಿಕೊಂಡರು.* +* +* +* +‘ಚಿಕ್ಕನ ಸತ್ಯಾಗ್ರಹ’ ಇತ್ಯಾದಿಯನ್ನು ಕಥೆಯಾಗಿ ಹೇಳಲು ಹೊರಟವಳು ಇಲ್ಲಿಗೆ ಬಂದು ತಲುಪಿದ್ದು ಹೇಗೆ? ಇನ್ನು ಮುಂದರಿಯಲಾರದೆ ನಿಂತದ್ದು ಹೇಗೆ? +ಒಳಗೆ ಸುವರ್ಣಮ್ಮ ನಿಶ್ಚಿಂತೆಯಿಂದ ಪೇಪರು ಓದುತ್ತಿರುವುದು ಕಾಣುತ್ತಿದೆ. ಪಕ್ಕದಲ್ಲೇ ಪೇರಿಸಿಟ್ಟ ಪೇಪರುಗಳ ಅಟ್ಟಿ ಇದೆ. +ಬಾಗಿಲು +….ಮುಚ್ಚಿದೆ. +***** +“ಟ್ರಿನ್… ಟ್ರಿನ್…” ರಿಂಗಣಿಸಿದ ದೂರವಾಣಿ ಕರೆಗೆ ಸ್ಪಂದಿಸಿದ ಪ್ರಸಿದ್ಧ ರೋಬೊ ತಜ್ಞ ಪ್ರೊ. ರಂಗ ಪ್ರಸಾದ. “ಪ್ರೊ. ರಂಗಪ್ರಸಾದ ಹಿಯರ್…! ” “ಗುಡ್ ಮಾರ್ನಿಂಗ್. ಪ್ರೊಫೇಸರ್…” ಸಿಟಿಯಿಂದ ನಾಲ್ವತ್ತು ಕೀ.ಮಿ.ದೂರದಲ್ಲಿರೊ ಎಸ್ಟೆಟ್‌ನಿಂದ ಮ್ಯಾಗಿಯ ಧ್ವನಿ […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_340.txt b/Kannada Sahitya/article_340.txt new file mode 100644 index 0000000000000000000000000000000000000000..16a3bbdb52f6f68df067a1ab694e19bd1e945ec1 --- /dev/null +++ b/Kannada Sahitya/article_340.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? +ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. +*********** +ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ ಸಂಬಂಧ ಏನಿರಬಹುದೂಂತ ಕಲ್ಪಿಸಲಾರಂಭಿಸುವುದು.. ಬಹುಶ: ಎಲ್ಲರಂತೆ. ಅವನನ್ನು ನೋಡಿದ್ರ್‍ಏ ಗೊತ್ತಾಗುತ್ತೆ.. ಅವನು ಸಾಫ್ಟ್‍ವೇರ್ ಇಂಜಿನಿಯರ್ ಅಂತ. ಅವನು ತೊಟ್ಟಿರೊ ಜುಬ್ಬ ಬಹುಶ: ದೇಸಿ ಅಂಗಡಿಯಿಂದ ನೆನ್ನೆ ಸಂಜೆ ಕೊಂಡದ್ದಿರಬೇಕು.. ಜೇನಿನ ಬಣ್ಣದ ಸೀರೆಯ ಹುಡುಗಿ ಅದ್ಭುತವಾಗಿದ್ದಾಳೆ.. ಅವನನ್ನ ನೋಡಿದ್ರೆ ಹೊರದೇಶದಲ್ಲಿ ಕೆಲಸ ಮಾಡೋ ಹಾಗೆ ಕಾಣ್ಸುತ್ತೆ. ಇವಳಿಗೆ ಮದುವೆಯಾಗಿಲ್ಲ.. ಕಾಲುಂಗುರ, ತಾಳಿಯಿಲ್ಲವಲ್ಲ..? ಹೆಣ್ಣನ್ನ ನೋಡಿದ್ರೆ ಅಷ್ಟು ಡೀಟೇಲ್ ಆಗಿ ನೋಡಬೇಕು.. ಇಲ್ಲಾಂದ್ರೆ ಸುಮ್ಮನಿದ್ದು ಬಿಡಬೇಕು.. +********** +ಹೋಟೆಲ್ ಅಶೋಕ. ಕೆಫೆಯಲ್ಲಿ ಕೂತಿದ್ದೇನೆ. ತುಂಬಾ ಹೊತ್ತಿನಿಂದ ಯಾರಿಗೋ ಕಾಯ್ತಿದ್ದೇನೆ ಈಗ ಬರಬಹುದಾ.. ಆಗ ಬರಬಹುದಾಂತ.. ಸುಳಿವೇ ಇಲ್ಲ. ಬೇರೆ ಯಾರೇ ಆಗಿದ್ರೂ ಹೊರಟು ಬಿಡ್ತಿದ್ದೆ. ನಾನು ಕಾಯ್ತಿರೋದು ನನ್ನ ಹುಡುಗಿಗೆ.. ಆದ್ದರಿಂದಲೇ ಕೂತಿದ್ದೇನೆ. ಹೋಟೆಲ್ ಅಶೋಕಾದ ಊಟದ ಕೋಣೆಯ ಸಂಭ್ರಮವನ್ನು ನೀವೊಮ್ಮೆ ನೋಡಬೇಕು. ಅದನ್ನ ಬಫೆ ಅಂತಾರೆ. ಶ್ರ್‍ಈಮಂತ ವರ್ಗದ ದಂಪತಿಗಳು, ಪ್ರೇಮಿಗಳು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಎತ್ತರದ ಸ್ಥಾನದಲ್ಲಿರುವ ಅಧಿಕಾರಿಗಳು, ವಿದೇಶೀಯರು ತಮ್ಮವರೊಂದಿಗೆ ಮಾತನಾಡುತ್ತಾ ತಮಗೆ ಬೇಕೆನಿಸಿದ್ದನ್ನ ತಾವೇ ಹೊಗಿ ಅಚ್ಚುಕಟ್ಟಾಗಿ ಜೋಡಿಸಿರೋ ಆಹಾರ ಪದಾರ್ಥಗಳನ್ನು ತಾವೇ ಬಡಿಸಿಕೊಂಡು ತಿಂತಾರೆ.. ಬೆರಳುಗಳನ್ನು ಚೀಪುತ್ತಾ.. +********** +ಆಗಲೇ ಈ ಜೋಡಿ ನನ್ನ ಕಣ್ಣಿಗೆ ಬಿದ್ದದ್ದು.. ತುಂಬಾ ಒಳ್ಳೆ ಜೋಡಿ ಆಗ್ತಾರೇಂತ ಅನ್ನಿಸ್ತು.. ಈಡು-ಜೋಡು. ಮನಸ್ಸುಗಳ ಹೊಂದಾಣಿಕೆಯ ಬಗ್ಗೆ.. ಗೊತ್ತಿಲ್ಲ.. ಏನೋ ಗಹನವಾಗಿ ಮಾತಾಡ್ತಿದ್ದಾರೆ. ಬಹುಶ: ಯಾವುದೋ ಇಂಟರ್‌ನೆಟ್ ಪೌರೋಹಿತ್ಯದ ಗಂಡು-ಹೆಣ್ಣುಗಳಿರಬೇಕು. ನಾನು ಅವರನ್ನು ಗಮನಿಸ್ತಿರೋದು ಅವರಿಗೆ ಗೊತ್ತಾಗಿ ಹೋಯಿತೇನೋ.. ಅದನ್ನು ಅವನು ಅವಳಿಗೆ ಹೇಳುತ್ತಾನೆ.. ಅವಳು ನನ್ನನ್ನೊಮ್ಮೆ ನೋಡ್ತಾಳೆ. ಸೌಂದರ್ಯದ ಖನಿ ಅವಳು.. ಇಂಥಾ ಚೆಲುವೆಗೆ ಭಾರತದಲ್ಲಿನ ನನ್ನಂಥ ಗಂಡು ಬೇಡವಾ ಅನ್ನಿಸ್ತು.. ನನ್ನ ಹುಡುಗಿಗೆ ಇದನ್ನ ಹೇಳಬೇಕೂ ಅಂದ್ಕೊಂಡೆ. ನಾನು ಮತ್ತೆ ಅವರ ಕಡೆ ನೋಡಬಾರದೂಂತಾನೂ ಅಂದ್ಕೊಂಡೆ. ಹಾಗೆ ಅವರಿಗೆ ಮುಜುಗರವಾಗೋ ಹಾಗೆ ನೋಡೋದು.. ಡೀಸೆನ್ಸಿಯಲ್ಲ. ಎದುರಿಗೆ ಕುಳಿತಿದ್ದ ಸ್ವಲ್ಪ ಮಾಡ್ ಆಗಿದ್ದ ಹುಡುಗಿಯ ಕಡೆ ದೃಷ್ಟಿ ಹೊರಳಿಸಿದೆ. ಅವಳ ದೇಹದ ಆ ಭಾಗವನ್ನು ನೋಡಿದ್ದಕ್ಕೋ ಏನೋ ಅಮ್ಮ ನೆನೆಪಾದಳು. ನನ್ನ ಹುಡುಗಿ ಇನ್ನೂ ಬಂದಿಲ್ಲ. ಫೋನ್ ಮಾಡೋಣವೆಂದು ಕೊಂಡು ಫೋನ್ ಕೈಗೆತ್ತಿಕೊಂಡೆ.. ಆಗ ಬಂತು ನನ್ನ ಹುಡುಗಿಯ ಮೆಸೇಜು.. +********** +ನಾನು ಇಲ್ಲೇ ಇದ್ದೇನೆ.. ತುಂಬಾ ಹಿಂದೆಯೇ ಬಂದೆ.. ನಿನ್ನನ್ನ ಗಮನಿಸ್ತಿದ್ದೇನೆ.. ಅದೇನು ಆ ಇಬ್ಬರನ್ನ ಅಷ್ಟುಹೊತ್ತಿನಿಂದ ಹಾಗೆ ಕೆಕ್ಕರಿಸಿಕೊಂಡು ನೋಡ್ತಿದ್ದೀ.. ನಾನು ಎಲ್ಲಿದ್ದೇನೆ ಹೇಳು.. ಏನಾದರಿರಲಿ.. ತುಂಬಾ ಚೆನ್ನಾಗಿ ಕಾಣ್ತಿದೀ.. ನನ್‍ಮಗನೇ.. +********** +ನನಗೆ ನಗು ಬಂತು.. ಇವಳು ಯಾವಾಗ ಬಂದ್ಳು.. ಕಣ್ಣು ಹತ್ತೂ ದಿಕ್ಕುಗಳಲ್ಲಿ ಹುಡುಕಲಾರಂಭಿಸಿತು.. ನನ್ನ ಹುಡುಗಿ ಇಂಥಾ ಆಟಗಳನ್ನು ತುಂಬಾ ಚೆನ್ನಾಗಿ ಆಡ್ತಾಳೆ. ಅದಕ್ಕೆ ಅವಳನ್ನ ಕಂಡ್ರೆ ನಂಗೆ ತುಂಬಾ ಇಷ್ಟ.. ಮತ್ತೊಂದು ಮೆಸೇಜು ನನ್ನ ಹುಡುಗಿಯಿಂದ.. +********** +ದೇವರ ಥರಾ ಕೂತುಬಿಟ್ರೆ.. ದೇವತೆ ಸಿಕ್ತಾಳಾ.. ಎದ್ದೇಳು ಮಂಜುನಾಥಾ.. ಒಂದು ಎಕರೆ ಜಾಗಾನೂ ಇಲ್ಲ.. ಇರೋದು ನಲವತ್ತು ಟೇಬಲ್ ಮತ್ತು ಸ್ವಿಮ್ಮಿಂಗ್ ಪೂಲ್ ಸುತ್ತಮುತ್ತಲಿನ ಜಾಗ.. ಹುಡುಕು.. ಹುಡುಕಿದರೆ ವರ್ಲ್ಡ್‍ಕಪ್ ಕೊಡ್ತೀನಿ.. ಓಕೇನಾ..? +********** +ಅವನು ತಂದಿಟ್ಟ ಕಲ್ಲಂಗಡಿ ಜ್ಯೂಸನ್ನು ಕೈಲಿ ಹಿಡಿದುಕೊಂಡು +ಒಂದೊಂದೇ ಟೇಬಲ್‍ಗಳನ್ನು ಹಾದು ನನ್ನ ಹುಡುಗಿಯನ್ನು ಹುಡುಕಲಾರಂಭಿಸಿದೆ. ಅಲ್ಲೊಂದಿಷ್ಟು ಕನ್ನಡಿಗಳಿವೆ. ಬಹುಶ: ನನ್ನ ಹುಡುಗಿ ನನ್ನನ್ನು ಕನ್ನಡಿಯ ಮೂಲಕ ನೋಡುತ್ತಿರಬೇಕು.. ಅವಳು ಹಾಗಾದರೆ ಈ ಕೋಣೆಯಲ್ಲೇ ಇರಬೇಕೂಂತ ಏನೂ ಇಲ್ಲ.. ಇಲ್ಲೇ ಎಲ್ಲೋ ಮರೆಯಾಗಿ ನಿಂತು ನನ್ನನ್ನು ಗಮನಿಸ್ತಿರಬಹುದು.. ನಾನು ಯೋಚಿಸುತ್ತಲೇ ಜುಬ್ಬ-ಜೇನು ಸೀರೆ ಜೋಡಿಯ ಟೇಬಲ್ ಹಾದು ಹೋದೆ. ಅಕಾರಣವಾಗಿ ಅವಳನ್ನೊಮ್ಮೆ ನೋಡಿದೆ.. ಏನು ಚೆಲುವೇನಪ್ಪಾ.. ಅಂತ ಅನ್ನಿಸ್ತು ಮನಸ್ಸಿಗೆ.. ನೀವು ನಂಬ್ತೀರಾ ಅವಳು ಅದನ್ನು ಗಮನಿಸದಳೋ ಎಂಬಂತೆ ನನ್ನನ್ನು ನೋಡಿ ಅದ್ಭುತವಾಗಿ ನಕ್ಕಳು..! ನನ್ನ ಕೆಳ ಹೊಟ್ಟೆಯಲ್ಲೆಲ್ಲಾ.. ಮುಂಗಾರು ಮಳೆ.. +********** +ನೋಡೇ ನನ್ನ ಹುಡುಗೀ.. ನಿಮ್ಮಪ್ಪ ಬಲವಂತ ಮಾಡಿ ಬಂದ ಗಂಡುಗಳ ಜೊತೆ ಅಶೋಕ ಹೋಟೆಲ್‍ನಲ್ಲಿ ಇಂಟರ್‌ವ್ಯೂ ಫಿಕ್ಸ್ ಮಾಡೋದು.. ನಾನು ಬಂದು ನಿನ್ನ ಹುಡುಕೋ ನಾಟಕ ಆಡೋದು.. ಅವನು ಎದ್ದು ಹೋದ ಮೇಲೆ ಇಬ್ರೂ ಕೂತು ನಿಮ್ಮಪ್ಪನ ಕಾಸಲ್ಲಿ ಊಟ ಮಾಡೋದು ನಂಗೆ ಸಾಕಾಗಿ ಹೋಗಿದೆ.. ಅವನ್ನ ಎಬ್ಬಿಸಿ ಕಳಿಸು.. ನಂಗೆ ನಿನ್ನ ಗಂಡು ಇಷ್ಟ ಆಗ್ಲಿಲ್ಲ.. ಅವನ ಹೆಸರು ಏನಂದೆ.. ಶರತ್ ಅಂತ ಅಲ್ವೇ..? ಹೆಸರಲ್ಲೇ ಶರತ್ ಇದೆ.. ಇನ್ನು ಗಂಡ ಆದ್ಮೇಲೆ ಇನ್ನೇನ್ನೇನು ಶರತ್ ಹಾಕ್ತಾನೋ.. ಏನೋ..? ನನ್ನ ಜಾಗಕ್ಕೆ ಬಂದು ಕೂತು ಮೆಸೇಜ್ ಕಳಿಸಿದೆ. +********** +ಸಾರಿ ಕಣೋ.. ನನ್ನ ಜಾಣ.. ಇನ್ನು ಐದೇ ನಿಮಿಷ.. ಇವನನ್ನ ಹೊರಡಿಸುತ್ತೀನಿ.. ಮೊದಮೊದಲು ಈ ನಾಟಕ ನಂಗೆ ತುಂಬಾ ಚೆನ್ನಾಗಿದೆ ಅನ್ನಿಸ್ತಿತ್ತು.. ಈಗ ಬೋರಾಗಿ ಹೋಗಿದೆ.. ಅದಕ್ಕೆ ನಾನು ಈಗ ಏನು ಮಾಡ್ತೀನಂದ್ರೆ.. +********** +’ರೀ.. ಮಿಸ್ಟರ್..ಒಂದ್ನಿಮಿಷ.. ಬನ್ನಿ.. ಇಲ್ಲಿ..’ ಕೂಗೇ ಬಿಟ್ಟಳು ನನ್ನ ಹುಡುಗಿ.. ನನಗಿಷ್ಟಾಂತ ಜೇನು ತುಪ್ಪದ ಸೀರೆ ಉಟ್ಟು ಬಂದವಳು.. +ಇಂಥದ್ದೇನೋ ಮಾಡ್ತಾಳೇಂತ ನನಗೆ ಅನ್ನಿಸಿತ್ತು.. ಅವಳ ಟೇಬಲ್ ಕಡೆ ನಡೆದೆ.. ಜೇನು ಸುಂದರಿ ಎದ್ದು ನಿಂತು ಇವರು ಶರತ್ ಅಂತ.. ನನ್ನನ್ನು ಮದುವೆಯಾಗಲಿಕ್ಕೆ ಬಂದಿದ್ದಾರೆ.. ನಾನು ಅವರಿಗೆ ಇವತ್ತು ಮಾತಾಡಿದ ಅರ್ಧ ಗಂಟೆಯಲ್ಲೇ ತುಂಬಾ ಹಿಡಿಸಿದ್ದೀನಂತೆ.. ಅವರನ್ನು ಮದುವೆಯಾಗಲಾ.. ನೀವು ಹೇಳಿ.. ನೀವು ’ಎಸ್’ ಅಂದ್ರೆ.. ಇವರನ್ನ ಮದುವೆ ಆಗಿ ಬಿಡ್ತೀನಿ..’ +ಮದುವೆ ಗಂಡು ನನಗಿಂತ ತಬ್ಬಿಬ್ಬು.. +********** +’ಅಲ್ಲಾ.. ನೀನು ಹಾಗೆ ಮಾಡಬಾರದಿತ್ತೇನೋ.. ಪಾಪ.. ಆತ ನೊಂದಿರ್‍ತಾನೆ..’ +’ಸುಮ್ನಿರೀ ಸಾಕು.. ಅವನ ಮುಂದೆ ಇಷ್ಟೆಲ್ಲಾ ಡ್ರಾಮಾ ನಡೀತಿದ್ರೂ ಗಮನಿಸಲಾರದ ಅವನು ಪ್ರೇಮದ ಆನಂದವನ್ನು ಹೇಗೆ ಅನುಭವಿಸಬಲ್ಲ.. ಮದುವೆಯಾದ ಎರಡು ವರ್ಷದಲ್ಲೇ ಅವನಿಗೆ ನನ್ನ ಮೇಲೆ ಆಸಕ್ತಿ ಹೊಗಿಬಿಡುತ್ತೆ.. ಪ್ರತಿ ದಿನವೂ ಒಂದು ಹೊಸ ಡ್ರಾಮಾದಲ್ಲಿ ತೊಡಗಿ ಕೊಳ್ಳದ ಪ್ರೇಮಿಗಳು ಪ್ರೇಮಿಗಳೇ ಅಲ್ಲ.. ಆ ತುಂಟತನ ಸತ್ತ ದಿನ ಅವರು ಏಕತಾನತೆಯಲ್ಲಿ ಬಾಳಲಾರಂಭಿಸುತ್ತಾರೆ.. ಜೀವನ ಬೋರಾಗಿ ಬಿಡುತ್ತದೆ.. ಬಹಳಷ್ಟು ಗಂಡಹೆಂಡತಿಯರಲ್ಲಿ ಆಗ್ತಿರೋದೇ ಅದು.. ಕಣ್ಣಾಮುಚ್ಚಾಲೆಯ ಕೊರತೆ.. ತಮ್ಮ ತಮ್ಮಲ್ಲೇ.. ಅದಕ್ಕೆ ಬೇರೆಯವರ ಜೊತೆ ಆಡ್ಕೋತಾರೆ..’ +********** +ಅವಳನ್ನೇ ದಿಟ್ಟಿಸಿ ನೋಡ್ತಿದ್ದೆ ನಾನು.. ಗೆಲುವಿನ ಸಂಭ್ರಮದಲ್ಲಿ.. ಅವಳು ಕೇಳಿದ್ದಂತೇ ನಾನು ನನ್ನ ಹುಡುಗಿಯನ್ನು ಹುಡುಕಿದ್ದೆ.. ಅಷ್ಟೂ ಜನರ ಮಧ್ಯದಲ್ಲಿ.. ಅವಳು ವರ್ಲ್ಡ್‍ಕಪ್ ಯಾವ ರೂಯ್ಪದಲ್ಲಿ ಕೊಡ್ತಾಳೋ ನೋಡಬೇಕು.. +********** +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_341.txt b/Kannada Sahitya/article_341.txt new file mode 100644 index 0000000000000000000000000000000000000000..e408cab52fa01d59ef7efeb16e79f393ab300ec2 --- /dev/null +++ b/Kannada Sahitya/article_341.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಂಡೆ ಹಾಲಿಗೆ ತೊಟ್ಟು ಹುಳಿ; +ಬಂಡೆಗೆ ಉಳಿ; +ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, +ಅಂಕುಶದೆದುರು ಜೀತದಾಳು ಸಲಗ. +ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ +ಪರಮಾಣು ಕಣದಲ್ಲಿ; +ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, +ಆಂತರಿಕ ಗುಣದಲ್ಲಿ. +***** +ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. ***** +ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. ***** +ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_342.txt b/Kannada Sahitya/article_342.txt new file mode 100644 index 0000000000000000000000000000000000000000..21a4cbb9ff7c07473c48a7f2683480a1fd347b42 --- /dev/null +++ b/Kannada Sahitya/article_342.txt @@ -0,0 +1,76 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ ಈವೆರೆಗೆ ಯಾರ ಕಿವಿಗೂ ಬಿದ್ದಿರಲಿಲ್ಲ. ಹಾಗಾಗಿ ಪರಿಚಯದ ಜನ ಅವನನ್ನು ಸರ್ವೋತ್ತಮನೆಂದು ಬಾಯಿ ತುಂಬುವ ಹೆಸರಿನಿಂದಲೇ ಸಂಬೋಧಿಸುತ್ತಿದ್ದರು. ಅವನ ಹಾಗೆಯೇ ಈಗಿನ ಕೋಣೆಯಲ್ಲಿ ‘ಪೀಜೀ’ ಆಗಿದ್ದ ಇತರ ಮೂವರಿಗೆ ಅವನ ಬಗ್ಗೆ ಅಕ್ಕರೆ ಉಕ್ಕಿ ಬಂದಾಗ ಸರ್ವೋ ಎಂದು ಕರೆಯುತ್ತಿದ್ದದ್ದೂ ಉಂಟು. ಆದರೆ ಅದು ಕ್ವಚಿತ್ತಾಗಿ. +ಹೀಗಿರುವಾಗ, ಇವತ್ತು ನಸುಕಿನಲ್ಲೇ ಬಂದು ಕೋಣೆಯ ಕದ ತಟ್ಟಿದ ತಾರ್‍ಮನ್, “ಇಲ್ಲಿ ‘ತಮ್ಮನ್ನಾ’ ಹೆಸರಿನವರು ಯಾರು ?” ಎಂದು ಕೀಳಿದಾಗ ಕೋಣೆಯಲ್ಲಿ ಮೊದಲು ನಗುವಿನ ಸಣ್ಣ ಅಲೆಯೆದ್ದಿತು. ಮರುಕ್ಷಣ, ಕಣ್ಣೆದುರು ನಿಂತವನು ತಾರ್‍ಮನ್‌ನೆಂದು ಅರಿವು ಮೂಡಿದ್ದೇ ಎಲ್ಲರಿಗೂ ಕಳವಳವುಂಟಾಯಿತು. ಸರ್ವೋತ್ತಮ ಇತರ ಮೂವರನ್ನೂ ಬದಿಗೆ ಸರಿಸಿ, “ತಮ್ಮನ್ನಾ ಅಲ್ಲ, ತಮ್ಮಣ್ಣ, ಅದು ನಾನು, ಇತ್ತ ಕೊಡಿ” ಎಂದು ಹೇಳಿ ತಾರನ್ನು, ಅದನ್ನು ಹಿಡಿದು ನಿಂತವನಿಂದ ಹೆಚ್ಚು ಕಡಿಮೆ ಕಸಿದುಕೊಂಡು ನಡುಗುವ ಕೈಯಿಂದ ತೆರೆದಾಗ ತುಂಬಾ ದುಃಖದಾಯಕ ಸುದ್ದಿ ಕಣ್ಣಿಗೆ ಬಡಿಯಿತು. “ಅಪ್ಪ ತೀರಿಕೊಂಡ. ಕೂಡಲೇ ಹೊರಟು ಬಾ.” +ಎರಡು ದಿನಗಳ ಹಿಂದಷ್ಟೇ ಅಪ್ಪನ ಪತ್ರ ಬಂದಿತ್ತು. ಈಗ ಹೀಗೇಕಾಯಿತು ? ಎಂದುಕೊಳ್ಳುತ್ತ ತಮ್ಮಣ್ಣ ಕುರ್ಚಿಯೊಂದರಲ್ಲಿ ಕುಸಿದು ಕುಳಿತ. +ಆವತ್ತು- +ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ, ತಮ್ಮಣ್ಣನ ಅಜ್ಜ ಸತ್ತಾಗ, ಅವನ ಅಪ್ಪನಿಗೂ ಇಂಥದ್ದೇ ತಾರು ಬಂದಿತ್ತು. ಕುಮಟೆಯಿಂದ ತಮ್ಮಣ್ಣನ ಸೋದರಮಾವ ಕೊಟ್ಟ ತಾರು ಆಗಿತ್ತದು : “ಅಪ್ಪ ತೀರಿಕೊಂಡ. ಅಕ್ಕನೊಂದಿಗೆ ಕೂಡಲೇ ಹೊರಟು ಬಾ.” ಅವನಿಗಾಗ ಹದಿಮೂರು ವರ್ಷ. ಇಂಗ್ಲಿಷ್ ಮೂರನೇ ಇಯತ್ತೆಯಲ್ಲಿ ಓದುತ್ತಿದ್ದ. ತಾರು ಬಂದಾಗ ಅವನಿನ್ನೂ ಸಾಲೆಯಲ್ಲಿದ್ದ. ಗಂಜೀ ಊಟಕ್ಕೆಂದು ಮನೆಗೆ ಬಂದಿದ್ದಾಗ ಮಗ್ಗುಲ ಹಿತ್ತಲ ಮನೆಯ ಉಪೇಂದ್ರ ಬಾಪ್ಪಾನಿಂದ ಸಮಾಚಾರ ತಿಳಿಯಿತು-ಅಪ್ಪ ತಾನೂ ಹೋಗಲಾರೆ, ಅಮ್ಮನನ್ನೂ ಕಳಿಸಲಾರೆ ಎನ್ನುತ್ತ ಜಮದಗ್ನಿಯ ಅವತಾರ ನಾಗಿ ಅಂಗಳಕ್ಕೆ ಹಾಕಿದ ಚಪ್ಪರ ಅದರುವ ಹಾಗೆ ತುಳಸೀಕಟ್ಟೆಯ ಸುತ್ತ ಬಯಲಾಟದ ಧಿಮಿಕಿಟ ಕುಣಿದನಂತೆ. ಅಪ್ಪನ ಸಿಟ್ಟು ಅವನಿಗೆ ಹೊಸತಾಗಿರಲಿಲ್ಲ. ಜಮದಗ್ನಿ ಎಂದರೆ ಯಾರೆಂದು ಗೊತ್ತಿಲ್ಲದೆಯೂ ಅಪ್ಪನು ಕುಣಿಯುತ್ತಿದ್ದ ವೇಷಕ್ಕೆ ಒಪ್ಪುವ ಹೆಸರೆಂದು ಅವನಿಗೂ ಅನ್ನಿಸಿತ್ತು. ಸಿಟ್ಟು ಬಂದಾಗಲೆಲ್ಲ ಮೈಮೇಲಿನ ಭಾನ ಕಳಕೊಂಡವನ ಹಾಗೆ ಆಡಿಕೊಳ್ಳುತ್ತಿದ್ದುದು ಅಮ್ಮನನ್ನಾದರೂ, ಅವನ ಸಿಟ್ಟುಕೆಂಪಗೆ ಕಣ್ಣು ಕಿಸಿಯುತ್ತಿದ್ದುದು ಅಮ್ಮನ ಅಪ್ಪನ ಮೇಲಾಗಿತ್ತೆನ್ನುವುದು ಅವನಿಗೆ ಗೊತ್ತಿತ್ತು. ಅಪ್ಪನಿಗೆ ಅಜ್ಜನ ಹೆಸರೆಂದರೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರಕರಣ ವಿಕೋಪಕ್ಕೆ ಹೋದಂತಿತ್ತು. ಉಪೇಂದ್ರ ಬಾಪ್ಪಾನಂಥ ಥಂಡ ಸ್ವಭಾವದವನು ಕೂಡ ಅಪ್ಪನ ತಲೆತಿರುಕತನದಿಂದ ಜಿಗುಪ್ಸೆ ಪಟ್ಟುಕೊಂಡಿದ್ದ. ಸಾಲೆಯಿಂದ ಅದೇ ಹಿಂದಿರುಗಿ ಬರುತ್ತಿದ್ದ ಅವನನ್ನೂ ಹಿತ್ತಲ ದಣಪೆಯಲ್ಲೇ ಸಂಧಿಸಿ ಅವನ ಅಪ್ಪನನ್ನು ಹೀನಾಮಾನ ತರಾಟೆಗೆ ತೆಗೆದುಕೊಂಡ- +“ಎಂಥಾ ಮನುಷ್ಯನಪ್ಪಾ ನಿಮ್ಮಪ್ಪಾ ! ಹಡೆದ ತಂದೆಯನ್ನು ಕಳಕೊಂಡು ಕಂಗೆಟ್ಟವಳನ್ನು ಸಂತೈಸುವುದನ್ನು ಬಿಟ್ಟು ಸತ್ತುಹೋದವನನ್ನು ಅವಳೆದುರೇ ಬೈದುಬಿಟ್ಟನಲ್ಲ ! ದ್ವೇಷಕ್ಕೂ ಒಂದು ಮಿತಿಯಿಲ್ಲವೇ ? ಹೊತ್ತು ಗೊತ್ತು ಇರಬೇಡವೇ ! ಇವನಿಗೆ ಇಲ್ಲಿ ಅದೇನು ಗುಡ್ಡ ಕಡಿಯುವ ಕೆಲಸವೇ ! ತನಗೆ ಪುರುಸೊತ್ತು ಇಲ್ಲದಿದ್ದರೆ ಇಲ್ಲ, ಹೆಂಡತಿಯನ್ನಾದರೂ ಕಳಿಸಬಹುದಿತ್ತು. ನೀನೀಗ ಅಲ್ಲಿಗೆ ಹೋಗಿ ಏನು ಹರ್ದಿನಾ ಮಾಡ್ತೀಯೆ ? ನೀನು ಮುಟ್ಟುವಷ್ಟರಲ್ಲಿ ಅವನು ಸುಟ್ಟು ಬೂದಿಯಾಗಿರುತ್ತಾನೆ ಎಂದು ಹಾರಾಡಿದನಲ್ಲ-ರೀತಿರಿವಾಜು ಗೊತ್ತಿಲ್ಲದ ಈ ಮುಠ್ಠಾಳ ! ನನ್ನಿಂದ ತಡೆದುಕೊಳ್ಳುವುದಾಗಲಿಲ್ಲ ; ಚೆನ್ನಾಗಿ ಬೈದುಬಿಟ್ಟೆ. ಈಗ ಎಲ್ಲಿ ಅದೃಶ್ಯನಾದನೋ, ನೀನೇ ಅಮ್ಮನನ್ನು ಕರಕೊಂಡು ಕೂಡಲೇ ಕುಮಟೆಗೆ ಹೊರಡು. ನಿನ್ನ ಮಾಮಾ ಕಾರು ಕಳಿಸಿದ್ದಾನೆ. ಇಲ್ಲಿಯವರೆಗೆ ಬರಲು ರಸ್ತೆ ಸರಿಯಿಲ್ಲದ್ದರಿಂದ ಡ್ರಾಯ್‌ವರ್ ಕಾರನ್ನು ಮಾದನ ಚಟ್ಟೆಯಲ್ಲೇ ನಿಲ್ಲಿಸಿ ನಿಮ್ಮ ಹಾದಿ ಕಾಯುತ್ತಿದ್ದಾನೆ. ಕೂಡಲೇ ಹೊರಟರೆ ಅಗ್ನಿಸಂಸ್ಕಾರಕ್ಕೆ ಮೊದಲು ಮುಖದರ್ಶನವಾದರೂ ಆದೀತು. ಅಪ್ಪ ಸೋದರತ್ತೆಯರ ಕಾಳಜಿ ಬೇಡ. ನಾನು ಪಾರ್ವತಿ ನೋಡಿಕೊಳ್ಳುತ್ತೇವೆ. ಎರಡು ದಿನಗಳಲ್ಲಿ ಬಂದುಬಿಡಿ. ಅಂತ್ಯಸಂಸ್ಕಾರಕ್ಕೂ ಹೋಗಲು ಬಿಡದವನು ವೈಕುಂಠ ಸಮಾರಾಧನೆಗೆ ಕಳಿಸುತ್ತಾನೋ ಇಲ್ಲವೋ, ಸಂಬಂಧಿಗಳ ಜೊತೆಯಲ್ಲಿ ಅತ್ತರೆ ನಿಮ್ಮಮ್ಮನಿಗೆ ಮನಸ್ಸು ಅಷ್ಟೇ ಹಗುರವಾದೀತು.” +ಉಪೇಂದ್ರ ಬಾಪ್ಪಾ ಅವನೆದುರು ಇಷ್ಟೆಲ್ಲ ಆಡಿರಲಾರ. ಮತ್ತೆ ಯಾರಿಗೆ ಗೊತ್ತು, ಆಡಿರಲೂಬಹುದು….. ಈ ಮನಸ್ಸೆಂಬುದರ ಕಿತಾಪತಿಯ ಬಗ್ಗೆ ಏನೂ ಹೇಳುವುದು ಶಕ್ಯವಿಲ್ಲ. ಯಾರು ಹೇಳಿದ್ದು ? ಯಾವಾಗ ಹೇಳಿದ್ದು ? ಯಾಕೆ ಹೇಳಿದ್ದು ? ಮೊದಮೊದಲಲ್ಲಿ ಎಲ್ಲವೂ ಕಲಸುಮೇಲೋಗರವಾಗಿರುವಾಗಲೂ ಕೊನೆಯಲ್ಲಿ ಮಾತ್ರ ಪ್ರತಿಯೊಂದೂ ಸ್ವಚ್ಛ, ನಿಚ್ಛಳ. ಅಂದಿನ ದುರ್ಧರ ಪ್ರಸಂಗವನ್ನು ನೆನೆಯುವಾಗ ತಮ್ಮಣ್ಣನಿಗೆ ಈಗಲೂ ಗೊಂದಲಕ್ಕೆ ಎಡೆಯಾಗದಂತೆ ನೆನಪಾಗುತ್ತದೆ : ಮಾವ ಕಳುಹಿಸಿದ ಕಾರಿನಲ್ಲಿ ಕುಳಿತು ಕುಮಟೆಯ ಕಡೆಗೆ ಸಾಗುತ್ತಿದ್ದಾಗ ನಡುವೆಯೇ ಒಂದೆಡೆಯಲ್ಲಿ-ಬಹುಶಃ ಸಾಣೀಕಟ್ಟೆಯ ಧಕ್ಕೆಯನ್ನು ದಾಟುತ್ತಿರುವಾಗ ಇರಬೇಕು-ಸರಕ್ಕನೆಂಬಂತೆ ತನ್ನ ಅಪ್ಪನ ಬಗ್ಗೆ ಭಯಾನಕ ತೀರ್ಮಾನಕ್ಕೆ ಬಂದುಬಿಟ್ಟಿದ್ದ-ಮನುಷ್ಯನಲ್ಲ ಈ ದುಷ್ಟ, ರಾಕ್ಷಸ ! +ಮನೆಯ ಅಂಗಳ ತಲುಪಿ ಜಗಲಿಯ ಮೆಟ್ಟಿಲು ಹತ್ತುತ್ತಿದ್ದಂತೆ, ಸಂಧಿವಾತದಿಂದ ಕೈಕಾಲುಗಳ ಗಂಟುಗಳೆಲ್ಲ ಊದಿಕೊಂಡು ಹಾಸಿಗೆಯಲ್ಲೇ ಬಿದ್ದಿರುತ್ತಿದ್ದ ಅವನ ಸೋದರತ್ತೆ ಹೊರ ಜಗಲಿಗೆ ಬಂದು ಕಂಚಿನ ಬಟ್ಟಲಲ್ಲಿ ಗಂಜಿ ಬಡಿಸಿ ಇವನ ಹಾದಿ ಕಾಯುತ್ತಿದ್ದದ್ದು ಕಂಡಿತು- +“ಒಳಗೆ ಅಮ್ಮ ಅಳುತ್ತಿದ್ದಾಳೆ. ಅತ್ತುಕೊಳ್ಳಲಿ, ದುಃಖ ಶಮನವಾದೀತು. ಸಾಲೆಯ ಚೀಲ ಜಾಗದಲ್ಲಿಟ್ಟು ಕೈಕಾಲು ತೊಳೆದುಕೊಂಡು ಬಾ. ಇಲ್ಲೇ ಉಣ್ಣುವಿಯಂತೆ. ನಿನ್ನಪ್ಪ ಒಳ್ಳೆಯ ಕೆಲಸ ಮಾಡಲಿಲ್ಲ. ಅವನ ಮನಸ್ಸೇ ಇತ್ತಿತ್ತ ಸರಿಯಿಲ್ಲ. ಎಂಥ ಕಷ್ಟದಲ್ಲಿದ್ದಾನೋ. ಅಮ್ಮನನ್ನು ನೀನೇ ಕುಮಟೆಗೆ ಕರೆದುಕೊಂಡು ಹೋಗು. ಉಪೇಂದ್ರ ಹೇಳಿರಬೇಕು. ದಣಪೆಯಲ್ಲಿ ಮಾತನಾಡಿಸಿದವನು ಅವನೇ ಅಲ್ಲವೆ ? ಅವನು ಹೇಳಿದ ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಕೆಂದಿಲ್ಲ.” +ಅರ್ಧ ಗಂಟೆಯ ನಂತರ ಕುಮಟೆಗೆ ಹೋಗುವ ದಾರಿಯಲ್ಲಿ ಅವನು ಅಪ್ಪನ ಬಗ್ಗೆ ತಲುಪಿದ ನಿಷ್ಠುರ ತೀರ್ಮಾನವನ್ನು ತಡೆಯುವ ತಾಕತ್ತು ಈ ಮಾತುಗಳಿಗಿರಲಿಲ್ಲ. +ಸೋದರಮಾವ ಕಳುಹಿಸಿದ ಕಾರು ಅವನದಲ್ಲವಾಗಿತ್ತು. ಮನೆಯಲ್ಲಿ ಕಾರು ಇಟ್ಟುಕೊಳ್ಳುವುದಕ್ಕೆ ಅಜ್ಜನ ಸಕತ್ ಮನಾಯಿಯಿತ್ತು. ಕುಮಟೆಯಲ್ಲಿ ಕಾರು ಇದ್ದವರು ಇಬ್ಬರು ಮಾತ್ರ-ಫಾರೆಸ್ಟ್ ಕಾಂಟ್ರ್ಯಾಕ್ಟರ್ ಮಣ್ಣೌಯಾನೆ ಮಂಜುನಾಥ ಬಾಳ್ಗಿ ಹಾಗೂ ದೊಡ್ಡ ವಖಾರಿಯ ಬೋಂಡ್ಗಾಯಿ ವೆಂಕಟೇಶ. ಈಗ ತಂದದ್ದು ಬಹುಶಃ ಬೋಂಡ್ಗಾಯಿಯದಿರಬೇಕು. ಅದನ್ನು ಚಲಾಯಿಸಿ ತಂದವನು ಉಪೇಂದ್ರ ಬಾಪ್ಪಾ ತಿಳಿದ ಹಾಗೆ ಡ್ರಾಯ್‌ವರ್‍ನಾಗಿರದೇ ಸೋದರಮಾವನ ದಾಯಾದಿ ಸಂಬಂಧಿ ನಾಗೇಶಮಾಮನಾಗಿದ್ದ. ಚಿಕ್ಕ ಪ್ರಾಯದ ನಾಗೇಶಮಾಮ ತೆಳ್ಳಗೆ ಬೆಳ್ಳಗೆ ಉದ್ದನಿದ್ದು ಸಪೂರ ಮೀಸೆ ಇಟ್ಟುಕೊಂಡಿದ್ದ. ಸಾದಾ ಪಾಯಜಾಮ ಅಂಗಿ ತೊಟ್ಟಿದ್ದ ನಾಗೇಶಮಾಮ ನೋಡಿದ ಕೂಡಲೇ ಮೆಚ್ಚುಗೆಯಾದ. ಮುಂದಿನ ಸೀಟಿನ ಮೇಲೆ ಅವನ ಮಗ್ಗುಲಲ್ಲಿ ಕುಳಿತಲ್ಲೇ ಆಗಿನಿಂದಲೂ ಬಿಗಿಗೊಂಡಿದ್ದ ತಮ್ಮಣ್ಣ ಮೆಲ್ಲನೆ ಸಡಿಲಿದ. ಅಮ್ಮ ಒಬ್ಬಳೇ ಹಿಂದಿನ ಸೀಟಿನ ಮೇಲೆ ಕುಳಿತಿದ್ದಳು- +“ಇದೆಲ್ಲ ಹೇಗೆ ಆಯಿತು ? ಯಾವಾಗ ಆಯಿತು ?” +ಆಗಿನಿಂದಲೂ ಅತ್ತು ಅತ್ತು ಜರ್ಝರಿತಳಾಗಿದ್ದ ಅಮ್ಮ ಈಗ ಬಾಯಿ ತೆರೆದಳು. ದನಿಯಲ್ಲಿನ್ನೂ ಅಳುವಿತ್ತು. +ಕುಮಟೆ ಹಾಗೆ ದೊಡ್ಡ ಊರೇನಲ್ಲ. ಅಲ್ಲಿ ಎಲ್ಲವೂ ಬಹುಬೇಗ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಮೇಲಾಗಿ ಅವನ ಅಜ್ಜ ಕುಮಟೆಯಲ್ಲಂತೂ ಆಯಿತೇ. ಇಡೀ ಜಿಲ್ಲೆಯಲ್ಲೂ ಬಹು ದೊಡ್ಡ ವರ್ಚಸ್ಸುಳ್ಳ ಜನವಾಗಿದ್ದರು. ವಖಾರಿಯ ಮರ್ತು ನಾಯಕರೆಂದರೆ ಹೆಸರು ಕೇಳಿಯೇ ಆದರದಿಂದ ತಲೆ ತಗ್ಗಿಸಬೇಕು-ಅಂಥ ವ್ಯಕ್ತಿತ್ವ ಅವರದಾಗಿತ್ತು. ಹಾಗೆ ತಲೆ ತಗ್ಗಿಸಿದ್ದನ್ನು ತಮ್ಮಣ್ಣ ಖುದ್ದು ಕಣ್ಣುಗಳಿಂದ ನೋಡಿದ್ದ ! +ಅಜ್ಜನ ಮನೆಯ ಆವರಣ ದೊಡ್ಡ ಕೋಟೆಯ ಹಾಗಿತ್ತು. ಊರಿನ ಪ್ರಖ್ಯಾತ ಮಠದ ಎದುರಿಗಿದ್ದ ಮಾರುತಿ ದೇವಸ್ಥಾನದ ಹಿಂಬದಿಯ ಕಂಪೌಂಡಿನಲ್ಲಿ ಒಂದಕ್ಕೊಂದು ಲಂಬವಾಗಿ ಕಟ್ಟಿಸಿದ ಮೂರು ದೊಡ್ಡ ಮನೆಗಳ ಗುಂಪಿನಲ್ಲಿ ನಡುವಿನ ಮನೆ ಅಜ್ಜನದಾಗಿತ್ತು. ಉಳಿದೆರಡು ಮನೆಗಳು ಅಜ್ಜನ ದಾಯಾದಿಗಳಿಗೆ ಸೇರಿದುವಾಗಿದ್ದವು. ಆ ಮನೆಗಳು ದೊಡ್ಡದೊಂದು ಚಚ್ಚೌಕು ಅಂಗಳದ ಮೂರು ಬದಿಗಳಾಗುವಂತೆ ಒಂದಕ್ಕೊಂದು ಒತ್ತಿ ನಿಂತಿದ್ದವು. ಅಂಗಳದ ನಾಲ್ಕನೇ ಬದಿಯೇ ಈ ಚೌಕಕ್ಕೆ ಕೋಟೆಯ ಆಕಾರ ಕೊಟ್ಟಿದ್ದ-ಬೇರೆ ಕಲ್ಲಿನಲ್ಲಿ ಕಟ್ಟಿಸಿದ ಎರಡು ಆಳು ಎತ್ತರದ-ಗೋಡೆಯಾಗಿತ್ತು. ಗೋಡೆಯಲ್ಲಿ ಅಗಸೆ ಬಾಗಿಲನ್ನು ಹೋಲುವ ಮರದ ಭವ್ಯ ಬಾಗಿಲು, ಬಾಗಿಲ ತಲೆಯ ಮೇಲೆ ದೊಡ್ಡ ಟೋಪಿಯಂಥ ನಾಡುಹೆಂಚು ಹೊದಿಸಿದ ಚಿಕ್ಕ ಮಾಡು. ಬೀದಿ ನಾಯಿಗಳು, ಹಣಬೆ ದನ ಚೌಕಕ್ಕೆ ನುಗ್ಗದ ಹಾಗೆ ತಡೆಯಲು ಬಾಗಿಲಿಗೆ ಜೋಡಿಸಿದ ‘ಉ’ ಆಕಾರದ ಕಬ್ಬಿಣದ ಕಟಕಟೆ, ಚೌಕದ ನಡುನಡುವೆ ಮೂರೂ ಮನೆಗಳಿಗೆ ಸೇರಿದ ತುಳಸೀಕಟ್ಟೆ. +ಈ ಮನೆಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಲ್ಲಿ ತಮ್ಮಣ್ಣನ ಅಜ್ಜನೇ ಎಲ್ಲರಿಗಿಂತ ಹಿರಿಯರು. ಎಲ್ಲರ ಭಯಭಕ್ತಿಗಳಿಗೆ ಪಾತ್ರರಾಗಿದ್ದವರು. ಆಗಿನ ಕಾಲದಲ್ಲಿ ಈ ಮನೆಗಳಲ್ಲಿ ದೊಡ್ಡವರು ಸಣ್ನವರು ಕೂಡಿ ಹದಿನೈದು ಇಪ್ಪತ್ತು ಮಂದಿಯಾದರೂ ವಾಸಿಸುತ್ತಿದ್ದಿರಬೇಕು. ಹೀಗಿದ್ದೂ ಬೆಳಗಿನ ಹೊತ್ತಿಗೆ, ಅಜ್ಜ ವಖಾರಿಗೆ ಹೊರಟುಹೋಗುವವರೆಗೂ ಮೂರೂ ಮನೆಗಳಲ್ಲಿ ನೀರವ ನಿಶ್ಯಬ್ದ. ಹೊರಜಗಲಿಯ ಮೇಲಾಗಲೀ ಅಂಗಳದಲ್ಲಾಗಲೀ, ಗದ್ದಲ ಮಾಡಬಹುದಾಗಿದ್ದ ಮಕ್ಕಳ ಸುಳುವಿಲ್ಲ. ಅಜ್ಜ ಅಗಸೆ ಬಾಗಿಲನ್ನು ದಾಟಿದ ಕೂಡಲೇ ಬಿಲಗಳಲ್ಲಿ ಅಡಗಿ ಕುಳಿತಿದ್ದ ಇಲಿಗಳ ಹಾಗೆ ಮಕ್ಕಳೆಲ್ಲ ದುಬುದುಬು ಅಂಗಳಕ್ಕೆ ಬರುತ್ತಿದ್ದವು. +ಅಜ್ಜನ ಮನೆಯೆಂದಕೂದಲೇ ಈಗಲೂ ಈ ಮನೆಯ ಆವರಣದ ಭೌತಿಕ ವಿವರಗಳ ಜೊತೆಗೆ-ತಲೆಯಿಂದ ಪಾದದವರೆಗೂ ಶುಭ್ರ ಬಿಳಿಯ ಉಡುಪು ಧರಿಸಿ ವಖಾರಿಗೆ ಹೊರಟ-ಅಜ್ಜನ ಆರು ಫೂಟು ಎತ್ತರದ ಗೌರವರ್ಣದ ಭವ್ಯ ಆಕೃತಿಯೂ ಕಣ್ಣೆದುರು ನಿಲ್ಲುತ್ತಿತ್ತು. ನೋಡುತ್ತಿದ್ದಂತೆ ಎದುರು ನಿಂತದ್ದು ಯಾವ ಲೋಕಕ್ಕೆ ಸೇರಿದ್ದೆನ್ನುವ ಬಗೆಗೇ ದಿಗ್ಭ್ರಮೆಯಾಗುತ್ತಿತ್ತು. ಈ ದೃಶ್ಯಕ್ಕೇ ತೆಕ್ಕೆಹಾಕಿಕೊಂಡಂತಿದ್ದ ಒಂದು ಚಿಕ್ಕ ಘಟನೆಯೂ ಆಗೀಗ ನೆನಪಿಗೆ ಬರುತ್ತಿದ್ದುದುಂಟು-ವಖಾರಿಗೆ ಹೊರಟ ಅಜ್ಜ ಆ ದಿನ ಅಗಸೆ ಬಾಗಿಲವರೆಗೂ ಹೋಗಿ ಏನೋ ನೆನಪಾದವರ ಹಾಗೆ ಮನೆಗೆ ವಾಪಸ್ಸಾಗಿದ್ದರು. ಹೀಗೆ ಎಂದೂ ವಾಪಸ್ಸು ಬಂದವರಲ್ಲವಂತೆ. ಅಜ್ಜಿ ಕೇಳಿದಾಗ, “ಬೆತ್ತ ಮರೆತೆ” ಎಂದರು. ಅಜ್ಜಿ ತುಂಬಾ ಕಳವಳಪಟ್ಟು, “ಇಷ್ಟಕ್ಕೇ ಹಿಂತಿರುಗಿ ಬರಬೇಕಾಗಿತ್ತೇ ? ತುಸು ಹೊತ್ತು ಕುಳಿತುಕೊಂಡು ಇಷ್ಟು ನೀರು ಕುಡಿದು ಹೋಗಿ” ಎಂದು ಪುಸಲಾಯಿಸಿ ಕುಳ್ಳಿರಿಸಿಕೊಂಡು ನೀರು ತರಲು ದುಡುದುಡು ಒಳಗೆ ಹೋಗಿದ್ದಳು. ಇದೀಗ, ಅಮ್ಮ ನಾಗೇಶಮಾಮನಿಗೆ ಹಾಕಿದ ಪ್ರಶ್ನೆ ಕೇಳುತ್ತಿದ್ದಂತೆ ನೆನಪಿನ ಅಂಗಳದಲ್ಲಿ ಚೇತರಿಸಿಕೊಂಡಿದ್ದು ಇದೇ ಘಟನೆಯಾಗಿತ್ತು. +“ದೊಡ್ಡಪ್ಪ ನಿನ್ನೆಯವರೆಗೂ ಆರಾಮವಾಗಿಯೇ ಇದ್ದರು,” ಅಮ್ಮ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಹೊರಟಿದ್ದ ನಾಗೇಶಮಾಮ- +“ವಖಾರಿಯಿಂದ ದಿನಾಲು ಬರುವ ಹೊತ್ತಿಗೇ ವಾಪಸ್ಸಾಗಿದ್ದರು. ಕೈಕಾಲು ತೊಳೆದುಕೊಂಡು ಉಡುಪು ಬದಲಾಯಿಸಿ, ದೇವರ ಕೋಣೆಗೆ ಹೋಗಿ ಕೈಮುಗಿದು ಬಂದು ಮುಂದಿನ ಜಗಲಿಯಲ್ಲಿದ್ದ ದೊಡ್ಡಮ್ಮನ ಎದುರು ಕುಳಿತು, “ಇವತ್ತೇಕೋ ಅನಸೂಯಾಳ ನೆನಪು ಮತ್ತೆಮತ್ತೆ ಬರತೊಡಗಿದೆ, ಮಗು ಹೆದರುವಳೋ, ಹೀಗೇ ‘ನೋಡುವ ಮನಸ್ಸಾಗಿದೆ. ನಾಲ್ಕು ದಿನಗಳ ಮಾತಿಗೆ ಕಳಿಸಿಕೊಡು’ ಎಂದರೆ ಕಳಿಸುತ್ತಾನೋ ಇಲ್ಲವೋ, ನನಗೆ ಮೈಯಲ್ಲಿ ಎಳ್ಳಷ್ಟೂ ಸರಿಯಿಲ್ಲ ಎಂದು ತಾರು ಕೊಟ್ಟರೆ ಹೇಗೆ ?’ ಎಂದು ಕೇಳಿದರಂತೆ. ಅಜ್ಜಿ ಗಾಬರಿಗೊಂಡು, ‘ಬಿಡ್ತು, ಬಿಡ್ತು ! ದೀಪ ಹಚ್ಚುವ ಹೊತ್ತಿಗೆ ಇಂಥ ಅಭದ್ರ ಸಬೂಬು ಯಾತಕ್ಕೆ ? ಒಂದು ಪತ್ರ ಬರೆದು ಹಾಕಿ. ಇಲ್ಲವೇ ವಖಾರಿಯ ಜನದೊಡನೆ ಚೀಟಿ ಬರೆದು ಕಳಿಸಿಕೊಡಿ’ ಎಂದು ಸೂಚಿಸಿದಳು. ‘ರಾತ್ರಿಯ ಊಟಕ್ಕೆ ಪತ್ರೋಡೆ ಮಾಡುವುದು ಸಾಧ್ಯವೋ ?’ ಎಂದು ಕೇಳಿದರಂತೆ. ‘ಈಗ ಹೇಗೆ ಸಾಧ್ಯ ? ನಾಳೆ ಬೆಳಿಗ್ಗೆ ಮಾಡೋಣ. ಇಲ್ಲವಾದರೆ ನಿಮ್ಮ ಮುದ್ದಿನ ಮಗಳು ಬಂದಾಗ ಮಾಡೋಣ. ಅವಳಿಗೂ ಪತ್ರೋಡೆ ಎಂದರೆ ಪ್ರೀತಿಯಲ್ಲವೆ ?’ ಎಂದು ಕೇಳಿ ದೊಡ್ಡಮ್ಮ ನಕ್ಕಾಗ ತಾವೂ ನಕ್ಕರು. ‘ಪತ್ರ ಬರೆದರೆ ಅಳಿಯರಾಯ ಕಳಿಸಬಹುದೆ ? ತುಂಬಾ ಸ್ವಾಭಿಮಾನಿ ಮನುಷ್ಯನಾತ. ಕೊನೆಗೂ ನನ್ನ ಕೈಯಿಂದಾದ ತಪ್ಪನ್ನು ಮಾಫ್ ಮಾಡಲೇ ಇಲ್ಲ’ ಎಂದು ಪರಿತಪಿಸಿದರಂತೆ. ‘ನೀನು ಹೇಳಿದ ಹಾಗೆ ಈಗಲೇ ಸಣ್ಣ ಚೀಟಿ ಬರೆಯುತ್ತೇನೆ. ನಾಳೆ ಗಣಪೂನ ಜೊತೆಗೆ ಕಳಿಸಿದರಾಯಿತು. ಊಟಕ್ಕೆ ಸಿದ್ಧವಾದ ಮೇಲೆ ಕರೆ. ಮೊಮ್ಮಕ್ಕಳ ಜೊತೆಗೇ ಊಟ ಮಾಡುತ್ತೇನೆ’ ಎಂದರು. ಸಾಮಾನ್ಯವಾಗಿ ಮಗ ಅಂಗಡಿಯನ್ನು ಮುಚ್ಚಿ ಬಂದಮೇಲೆ ಮಗನ ಜೊತೆಗೇ ಊಟ ಮಾಡುವುದು ವಾಡಿಕೆ. ಸೊಸೆ ವಿಚಾರಿಸಿದಾಗ ತಾನು ಚೆನ್ನಾಗಿದ್ದೇನೆ, ಮಲಗುವುದಕ್ಕೆ ಮೊದಲು ಒಂದು ಪತ್ರ ಬರೆಯಬೇಕಾಗಿದೆಯೆಂದರಂತೆ. ದನಿ ಸರಿಯಾಗಿತ್ತು. ಊಟವಾದ ಕೂಡಲೇ ಮಲಗುವ ಕೋಣೆಗೆ ನಡೆದರು. ದೊಡ್ಡಮ್ಮ ತನ್ನ ಊಟವೂ ಮುಗಿದ ಮೇಲೆ ಒಳಗಿನ ಕೆಲಸ ತೀರಿಸಿ ಕೋಣೆಗೆ ಬರುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಅಳಿಯನಿಗೆ ಬರೆದ ತೆರೆದ ಚೀಟಿಯೊಂದು ಮಂಚದ ಮೇಲೆ ಇದ್ದಿತಂತೆ.” +ಆಗಿನಿಂದಲೂ ತನ್ನನ್ನು ಸಾವರಿಸಿಕೊಂಡಿದ್ದ ಅಮ್ಮ ಈಗ ಮತ್ತೆ ಬಿಕ್ಕಳಿಸಹತ್ತಿದಳು. ತಮ್ಮಣ್ಣನಿಗೆ ಈ ಸನ್ನಿವೇಶ ಹೊಸತು. ಇಂಥ ಮಾತೂ ಹೊಸತು. ಸಾವಿನ ಬಗ್ಗೆ, ಸತ್ತವರ ಬಗ್ಗೆ ಕೇಳಿ ಗೊತ್ತಿತ್ತು. ಹತ್ತಿರದಿಂದ ನೋಡಿರಲಿಲ್ಲ. ಇನ್ನೆರಡು ತಾಸುಗಳಲ್ಲಿ ನೋಡಲಿದ್ದ. ತನಗೆ ಭಯವಾಗಿದೆಯೆ ? ದುಃಖವಾಗಿದೆಯೆ ? ಸಿಟ್ಟು ಬಂದಿದೆಯೆ ? ಬಹುಶಃ ಎಲ್ಲವೂ ಕೂಡಿಯೇ ಆಗುತ್ತಿದ್ದುದಕ್ಕೋ ಏನೋ ತನ್ನ ಭಾವನೆಯ ಪರಿಚಯ ತನಗೇ ಇರಲಿಲ್ಲ, ತಮ್ಮಣ್ಣನಿಗೆ. ಕಾರು ಮುಂದೆ ಓಡುತ್ತಿದ್ದಂತೆ ಹಿಂದಕ್ಕೆ ಸರಿಯುತ್ತಿದ್ದ ಗಿಡಗಂಟೆಗಳಲ್ಲಿ ಅದನ್ನು ಅರಸುವವನ ಹಾಗೆ ಅವುಗಳ ಮೇಲೆ ದೃಷ್ಟಿಯೂರಿ ಕುಳಿತ. ಮುಂದಿನ ಸೀಟಿಗೆ ಬಡಿಯುತ್ತಿದ್ದ ಕಾದ ಬಿಸಿಲಲ್ಲೂ ಮೈಯಲ್ಲಿ ಚಳಿ ಹೊಕ್ಕಂತಾಗಿ ಕೂತಲ್ಲೇ ಇನ್ನಷ್ಟು ಮುದುಡಿಕೊಂಡ. +ಆಶ್ಚರ್ಯದ ಸಂಗತಿಯೆಂದರೆ ಕುಮಟೆ ತಲುಪಿ ಅಜ್ಜನ ಹೆಣವನ್ನು ನೋಡಿದ್ದೇ ಈ ಭಯ ತಂತಾನೆ ದೂರವಾದದ್ದು ; ಬರಿ ನೆಲಕ್ಕೆ ಹಾಸಿದ ದರ್ಭೆಗಳ ಮೇಲೆ ಅಂಗಾತ ಮಲಗಿಸಿದ ಅಜ್ಜನ ನಿಶ್ಚೇಷ್ಟ ದೇಹವನ್ನು ಬೆರಗು ತುಂಬಿದ ತಟಸ್ಥ ಭಾವನೆಯಿಂದ ನೋಡಲು ಸಾಧ್ಯವಾದದ್ದು. +ಅಗ್ನಿಸಂಸ್ಕಾರ ಮುಗಿದ ಮೂರನೆಯ ದಿನವೇ ಅಮ್ಮನ ಜೊತೆಗೆ ಅವನು ಊರಿಗೆ ವಾಪಸ್ಸು ಹೊರಟಿದ್ದ. ಗೋಕರ್ಣದವರೆಗೆ ಹೋಗುವ ಬಸ್ಸೊಂದು ನೆಲ್ಲಿಕೇರಿಯ ಬಸ್‌ಸ್ಟ್ಯಾಂಡಿನಿಂದ ಬೆಳಗಿಗೇ ಹೊರಡುತ್ತಿತ್ತು. ಅವರನ್ನು ಬಸ್‌ಸ್ಟ್ಯಾಂಡಿನವರೆಗೆ ಮುಟ್ಟಿಸಲು ಅವನ ಸೋದರಮಾವ ತ್ರಿವಿಕ್ರಮ-ಅವನ ತಿರಿಮಾಮ-ಬಂದಿದ್ದ. “ಭಾವನಿಗೆ ನೀನೇ ಇನ್ನೊಮ್ಮೆ ಹೇಳಿನೋಡು. ಕಬೂಲಾದರ ವೈಕುಂಠ ಸಮಾರಾಧನೆಗೆ ನೀವೆಲ್ಲ ಕೂಡಿ ಬನ್ನಿ. ಅಪ್ಪ ಬರೆದಿಟ್ಟ ಚೀಟಿ ಕೊಡಲು ಮರೆಯಬೇಡ. ಲಿಖಿತರೂಪದಲ್ಲಿ ಕ್ಷೇಮ ಕೇಳಿದ್ದಾನೆ. ಇದಕ್ಕಿಂತ ಬೇರೆ ಏನು ಮಾಡಬಹುದಿತ್ತು ?” ಇಲ್ಲಿಗೆ ಬಂದಲಾಗಾಯ್ತು ಕಣ್ಣುಗಳನ್ನು ಕೆಂಪುಮಾಡಿಕೊಂಡೇ ಇರುತ್ತಿದ್ದ ಅಮ್ಮ ಒಮ್ಮೆ ಬಿಕ್ಕಳಿಸಿದಳು ಅಷ್ಟೇ. ಗೋಕರ್ಣ ತಲುಪುವವರೆಗೂ ಮತ್ತೆ ಚಕಾರವೆತ್ತಲಿಲ್ಲ. ಬಸ್ಸಿನ ಕಿಟಕಿಯಲ್ಲಿ ಮೋರೆ ಹಾಕಿ ಹೊರಗೆ ನೋಡುತ್ತಿದ್ದ ತಮ್ಮಣ್ಣನೂ ತಾಯಿಯನ್ನು ಮಾತನಾಡಿಸಲು ಹೋಗಲಿಲ್ಲ. ನಿಜ ಸಂಗತಿಯೆಂದರೆ ಕುಮಟೆಗೆ ಬಂದಲಾಗಾಯ್ತು ತನ್ನ ಸರೀಕರ ಮಧ್ಯದಲ್ಲೇ ಇರುತ್ತಿದ್ದ ಅವನು ಅಮ್ಮನೊಂದಿಗೆ ಮಾತನಾಡಿಯೇ ಇರಲಿಲ್ಲ. +ಬಸ್ಸು ನೆಲ್ಲಿಕೇರಿಯನ್ನುಬಿಟ್ಟು ಒಂದು ತಾಸಿನೊಳಗೆ ರಸ್ತೆಯ ಎಡದ ಕಣಿವೆಯಲ್ಲಿ ರಾರಾಜಿಸುತ್ತಿದ್ದ ಹಸಿರ ಸಮೃದ್ಧಿ ಕಾಣಿಸತೊಡಗಿತು. ದೂರ, ಈ ಹಸಿರನ್ನು ಸೀಳಿ ಹರಿಯುತ್ತಿದ್ದ ಅಘನಾಶಿನಿಯ ಎರಡೂ ದಡಗಳಲ್ಲಿ ಒತ್ತಾಗಿ ಬೆಳೆದ ತೆಂಗು ಅಡಿಕೆ ಮರಗಳು ಬೆಳಗಿನ ಸಂತ ಬೆಳಕಿನಲ್ಲಿ ಓಲಾಡುತ್ತಿದ್ದ ಪರಿಯನ್ನು ನೋಡುತ್ತಿದ್ದಂತೆ ತಮ್ಮಣ್ಣನಿಗೆ ಅದೇನಾಯಿತೋ-ಅಜ್ಜನ ಮನೆಯಲ್ಲಿ ತಾನು ಕಂಡದ್ದು, ಕೇಳಿದ್ದು ಈವರೆಗೂ ಲಕ್ಷ್ಯಕ್ಕೇ ಬಂದಿರದ ವಿವರಗಳಲ್ಲಿ ಜೀವ ಪಡೆಯತೊಡಗಿದಾಗ ದಿಗಿಲುಗೊಂಡ : ತನ್ನ ಅಜ್ಜ ಮನೆಯಲ್ಲಿ ಇದ್ದಾಗ ಶಾಂತವಾಗಿರುತ್ತಿದ್ದ ಮನೆಗಳ ಅಂಗಳ ಎಂದು ಎಷ್ಟೆಲ್ಲ ಬಗೆಯ ಚಟುವಟಿಕೆಗಳ ಗದ್ದಲದಿಂದ ದುಮುಗುಡುತ್ತಿತ್ತು. ಈ ಎಲ್ಲ ಗೊಂದಲದ ನಡುವೆಯೇ ಅಜ್ಜನ ಮೃತದೇಹ ಉಳಿದೆಲ್ಲ ವಿವರಗಳಿಂದ ಬೇರೆಯಾಗಿ ನಿಂತಿತು. ಅಜ್ಜನ ಕಣ್ಣುಗಳು ಗಟ್ಟಿಯಾಗಿ ಮುಚ್ಚಿದ್ದವು. ಎರಡೂ ಹಸ್ತಗಳು ನಮಸ್ಕಾರದ ರೂಪದಲ್ಲಿ ಬರಿ ಎದೆಯ ಮೇಲೆ ಒಂದಾಗಿದ್ದವು. ಅಂಗುಷ್ಠಗಳು ಧರ್ಬೆಯ ಹುಲ್ಲಿನಿಂದ ಒಂದಕ್ಕೊಂದು ಕಟ್ಟಲ್ಪಟ್ಟಿದ್ದುವು. ನೋಡುತ್ತಿದ್ದಂತೆ ತಮ್ಮಣ್ಣನ ಮುಷ್ಠಿ ದೊಡ್ಡ ನಿರ್ಧಾರಕ್ಕೆ ಬರುತ್ತಿದ್ದ ಧರ್ತಿಯಲ್ಲಿ ಬಿಗಿಗೊಂಡಿತು-ಹನೇಹಳ್ಳಿ ತಲುಪಿದಮೇಲೆ ಅಪ್ಪನನ್ನು ಮಾತನಾಡಿಸುತ್ತೇನೆ. ಇದು ನಿಶ್ಚಿತ ! ಅಜ್ಜ ಮಾಡಿದ ಅಪರಾಧ ಎಷ್ಟೇ ದೊಡ್ಡದಿರಲಿ ಅಜ್ಜನಷ್ಟು ‘ದೊಡ್ಡ’ ವ್ಯಕ್ತಿ ಅಪ್ಪನಂಥ ‘ಸಣ್ಣ’ವನಲ್ಲಿ ಕ್ಷಮೆ ಕೇಳುವ ವಿಚಾರವೇ ಅವನಿಗೆ ಬಿಲ್ಕುಲ್ ಸೇರಿ‌ಅಲಿಲ್ಲ. ಅಮ್ಮ ಆ ಚೀಟಿಯನ್ನು ಅಪ್ಪನಿಗೆ ಕೊಡಲೇಕೂಡದು. ಬದಲಾಗಿ ತಾನೇ ಅಪ್ಪನ ಎದುರು ನಿಂತು ಅವನು ತನ್ನ ದಿರ್ನಡತೆಯ ಬಗ್ಗೆ ತಾನೇಖಜೀಲುಗೊಳ್ಳುವ ಹಾಗೆ ಏನಾದರೂ ಹೇಳಬೇಕು ! ತಮ್ಮಣ್ಣನಿಗೆ ತೊಂದರೆ ಅದುರಾದದ್ದೇ ಇಲ್ಲಿ ; ಏನು ಹೇಳಬೇಕು ? ಹೇಗೆ ಹೇಳಬೇಕು ? ಎಂಥ ಮಾತು ಅಪ್ಪನ ದುಷ್ಟತನಕ್ಕೆ ತಕ್ಕ ಶಾಸ್ತಿಯಾದೀತು ? ಅವನು ನಿಶ್ಚಯಿಸದಾದ. ಒಂದು ವಾಕ್ಯ ಸರಣಿ ರೂಪುಗೊಳ್ಳುವಷ್ಟರಲ್ಲಿ ಅದಕ್ಕೆ ಕಾರಣವಾದ ಮನಸ್ಸಿನೊಳಗಿನ ಚಿತ್ರ ಬೇರೆಯಾಗಿ ಬೇರೆಯೇ ಒಂದು ವಾಕ್ಯ ಹುಟ್ಟಿಕೊಳ್ಳುತ್ತಿತ್ತು. ನೂರಾರು ಚಿತ್ರಗಳು, ನೂರಾರು ವಾಕ್ಯಗಳು,ತಮ್ಮಣ್ಣ ಕುಳಿತಲ್ಲೇ ದಣಿದ. ಏನಿಲ್ಲದಿದ್ದರೂ ಅಪ್ಪನೆದುರು ನೀತು ದೊಡ್ಡಕ್ಕೆ ಬೈದುಬಿಡಬೇಕು : ತೆಂಗಿನ ಮರದಷ್ಟು ಎತ್ತರದ ಅಜ್ಜನೆಲ್ಲಿ ? ಬಿಂಬಲಿ ಮರದಷ್ಟು ಕುಳ್ಳ ನೀನೆಲ್ಲಿ ? ಅಪ್ಪನೆದುರು ಇಷ್ಟನ್ನು ಆಡುವ ಛಾತಿ ತನಗಿಲ್ಲ ಎನ್ನುವುದನ್ನು ಅರಿಯದವನಲ್ಲ ತಮ್ಮಣ್ಣ ! ಆಡುವುದಿರಲಿ, ಅಪ್ಪನೆದುರು ನೆಟ್ಟಗೆ ನಿಲ್ಲುವ ನೀರೂ ಅವನಲ್ಲಿರಲಿಲ್ಲ. ಥತ್ ! ಅನ್ನಿಸಿತು. +ಗೋಕರ್ಣ ಹತ್ತಿರವಾಗುತ್ತಿದ್ದಂತೆ ಕಿಟಕಿಗೆ ತಲೆ ಆನಿಸಿದಲ್ಲೇ ತಮ್ಮಣ್ಣನಿಗೆ ಜೊಂಪು ಹತ್ತಿರಬೇಕು. ಗೋಕರ್ಣದ ಬಸ್‌ಸ್ಟ್ಯಾಂಡು ತಲುಪುತ್ತಲೇ ಅಮ್ಮ ಎಬ್ಬಿಸಿದಾಗ ತಾನು ಎಲ್ಲಿದ್ದೇನೆ ಎನ್ನುವುದೇ ಅವನಿಗೆ ಗೊತ್ತಾಗಲಿಲ್ಲ. ಗೋಕರ್ಣದಿಂದ ಹನೇಹಳ್ಳಿ ಕಾಲ್ನಡಿಗೆಯಲ್ಲಿ ಮುಕ್ಕಾಲು ಗಂಟೆಯ ಹಾದಿ. ಸೂರ್ಯ ಆಗಲೇ ನೆತ್ತಿಗೆ ಬಂದಿದ್ದ. ಕಾಲಡಿಯಲ್ಲಿ ಹೆಜ್ಜೆಗೊಮ್ಮೆ ಭುಸ್ ಎಂದು ಸಿಡಿಯುತ್ತಿದ್ದ ಕೆಂಪು ಧೂಳಿ ಬಿಸಿಯಾಗಿತ್ತು. ಹನ್ನಳ್ಳಿ ಘಾಟೆ ಹತ್ತಿ ಇಳಿದು ಇಗರ್ಜಿ ದಾಟಿ, ಮಾಸ್ತಿಕಟ್ಟೆಯ ಬಳಿಯ ಸಂಕಕ್ಕೆ ಬರುತ್ತಲೇ, “ಇಲ್ಲಿ ಕೆಲ ಹೊತ್ತು ಕುಳಿತುಕೊಳ್ಳೋಣ” ಎಂದಳು ಅಮ್ಮ. ಇಬ್ಬರೂ ಸಂಕದ ಮೇಲಿನ ಸಿಮೆಂಟು ಸೀಟಿನ ಮೇಲೆ ಕುಳಿತುಕೊಂಡರು. ಹೀಗೆ ಕುಳಿತದ್ದು ಕೇವಲ ದಣಿವಾರಿಸಿಕೊಳ್ಳಲು ಅಲ್ಲವೆಂದು ಅವನಿಗೆ ಗೊತ್ತಿತ್ತು. +“ಅಪ್ಪನ ಮೇಲೆ ಸಿಟ್ಟಾಗಬೇಡ ಮಗಾ ! ನೀವೆಲ್ಲ ತಿಳಕೊಂಡ ಹಾಗೆ ದುಷ್ಟರಲ್ಲ ಅವರು. ಬಹಳ ವರ್ಷಗಳ ಹಿಂದೆ ನಿನ್ನ ಅಜ್ಜನ ಮನೆಯಲ್ಲಿ ನಿನ್ನ ಅಪ್ಪನ ಮನಸ್ಸನ್ನು ನೋಯಿಸುವಂಥದ್ದೇನೋ ನಡೆಯಿತು. ನಡೆದದ್ದಕ್ಕೆ ನಿನ್ನಜ್ಜ ಸಂಪೂರ್ಣವಾಗಿ ಜವಾಬ್ದಾರನಲ್ಲ, ಬಲ್ಲೆ. ಆದರೆ ಅಪರಾಧ ಎಂದರೆ ಅಪರಾಧವೇ. ಹೊಟ್ಟೆಯ ಮಗಳಾದ ನನ್ನನ್ನು ಕೂಡ ನೋಯಿಸಿತ್ತೆಂದರೆ ನೋಡು. ನಿನ್ನಪ್ಪ ಇದನ್ನು ಹೇಗೆ ತನಗೆ ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನವೆಂದು ತಿಳಿದರು. ತಳಿದದ್ದು ತಪ್ಪಲ್ಲ. ಆದರೆ ಇಷ್ಟು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಂಡಾರೆಂದು ಲೆಕ್ಕಿಸಿರಲಿಲ್ಲ.” +ತಮ್ಮಣ್ಣ ಸುಮ್ಮನೆ ಕೇಳಿಸಿಕೊಂಡ. ಅಪ್ಪ ತನಗೆ ಕೊಡುತ್ತಿದ್ದ ಹಿಂಸೆಯನ್ನು ಇಷ್ಟೊಂದು ತಾಳ್ಮೆಯಿಂದ ಸಹಿಸುತ್ತ ಬಂದಿದ್ದ ಅಮ್ಮ ಹೀಗೆ ಸುತ್ತುಬಳಸಾಗಿ ಹೇಳುವ ಬದಲು ನೇರವಾಗಿ ನಡೆದದ್ದನ್ನೇ ಹೇಳಬಹುದಾಗಿತ್ತು. ಹೇಳಬಹುದೆಂದು ಎಣಿಸುತ್ತಿರುವಾಗಲೇ ಇನ್ನಷ್ಟು ಒಗಟಾದಳು-“ಒಂದು ದಿನ ನಿನಗೆ ದಕ್ಷಬ್ರಹ್ಮನ ಯಜ್ಞದ ಕಥೆ ಹೇಳುತ್ತೇನೆ” ಎಂದಳು. ಅಮ್ಮ ಯಾವಾಗಲೂ ಹೀಗೆಯೇ. ಅಪ್ಪನ ಬಗ್ಗೆ ಮಾತುಗಳು ಬಂದಾಗಲೆಲ್ಲ ಪುರಾಣಕಥೆಗಳ ಉಲ್ಲೇಖವನ್ನು ಮಾಡುತ್ತಿದ್ದಳು. ಕಥೆಯನ್ನು ಮಾತ್ರ ಕೊನೆಗೂ ಹೇಳುತ್ತಿರಲಿಲ್ಲ. ಹೇಳೆಂದು ಒತ್ತಾಯ ಮಾಡಿದರೆ ‘ಹುಸ್’ ಎಂದು ನಿಶ್ವಾಸ ಬಿಟ್ಟು, “ಇನ್ನು ಯಾವಾಗಲಾದರೂ” ಎಂದು ತಳ್ಳಿಬಿಡುತ್ತಿದ್ದಳು. ಅಪ್ಪನ ಸಿಟ್ಟಿಗೆ ಜಮದಗ್ನಿಯ ಅವತಾರವೆಂದು ಹೆಸರಿಟ್ಟವರು ಯಾರೂ ಈ ಜನದಗ್ನಿಯು ಯಾರೆಂದು ತಿಳಿಸುವ ಕೃಪೆ ಮಾಡಿರಲಿಲ್ಲ. ಈಗ ಈ ದಕ್ಷಬ್ರಹ್ಮ ! ಈ ಕಿರಾತ ಮತ್ತೆ ಯಾರಿಗೆ ಉದಾಹರಣೆಯೋ ! ಬಹುಶಃ ಅಳಿಯನನ್ನು ಅವಮಾನಗೊಳಿಸಿದ ಮಾವಮಹಾಶಯನೇ ಇರಬೇಕು, ಈತ ! +ಈ ಪುರಾಣಪುರುಷರ ಉಲ್ಲೇಖ ಅಪ್ಪನ ಬಗೆಗಿನ ಅವನ ಧೋರಣೆಯನ್ನು ಬದಲಿಸಲಿಲ್ಲ. ಬದಲಾಗಿ ನಾಳೆ ಅಪ್ಪನ ಎದುರು ಆಡಬೇಕು ಎಂದುಕೊಂಡ ಮಾತೂ ಈಗ ನಿಚ್ಚಳವಾಯಿತು. ಆಡುವ ನಿರ್ಧಾರವೂ ಗಟ್ಟಿಯಾಯಿತು. ಅವನು ಅಮ್ಮನಿಗೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಯಾವ ಅಶ್ವಾಸನೆಯನ್ನೂ ಕೊಡಲಿಲ್ಲ. “ಹೊರಡೋಣ” ಎಂದದ್ದೇ ಇಬ್ಬರೂ ಕುಳಿತಲ್ಲಿಂದ ಎದ್ದು ಮನೆಯ ಹಾದಿ ಹಿಡಿದರು. ಅವರ ಮನೆ ಅಲ್ಲಿಂದ ಹತ್ತೇ ಮಿನಿಟಿನ ಹಾದಿ, ಮಾದನಚೆಟ್ಟೆ ದಾಟುತ್ತಲೇ ಇಬ್ಬದಿಯ ಬೇಲಿಗಳ ಹರತರೀತ ಜೀವಂತಿಕೆಯ ವಾಸನೆ ಮೂಗಿಗೆ ಬದಿದಾಗ ಸೂತಕದ ಮನೆ ಹಿಂದಿ ಬಿದ್ದಿತ್ತು. +ಮನೆಯಲ್ಲಂದು ಯಾರೂ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ಪರಸ್ಪರ ಹೆದರಿಕೊಂಡಂತೆ ಕಂಡರು. ಸ್ವತಃ ತಮ್ಮಣ್ಣನೊಳಗಿನ ಬಂಡುಗಾರನು ಕೂಡ ಕುಂಡೆಯಲ್ಲಿ ಬಾಲ ಹೊಕ್ಕಿಸಿದ್ದ. ಅಪ್ಪನನ್ನು ಮಾತನಾಡಿಸುವುದಿರಲಿ, ಅಪ್ಪನ ಕಡೆಗೆ ಕಣ್ಣು ತಿರುವಿಸುವ ಧೈರ್ಯವೂ ಅವನಿಗಾಗಲಿಲ್ಲ. +ಮರುದಿನ ಬೆಳಿಗ್ಗೆ ಹೊತ್ತಿಗೆ ಸರಿಯಾಗಿ ಅವನು ಸಾಲೆಗೆ ಹೊರಟ. ಮನೆ ಯೆದುರಿನ ಓಣಿಯ ಕೊನೆಯಲ್ಲಿ ಬಂಕೀಕೋಡ್ಲಕ್ಕೆ ಹೋಗುವ ಮುಖ್ಯ ರಸ್ತೆಗೆ ಹೊರಳಿದ್ದೇ ಎಡಕ್ಕೆ ಅಪ್ಪನ ಅಂಗಡಿ ಹತ್ತುತ್ತದೆ. ಅಪ್ಪನು ಅಂಗಡಿಯಲ್ಲಿ ಕೂರಲು ಇನ್ನೂ ಒಂದು ಗಂಟೆಯಾದರೂ ಇದೆ. ಸಾಲೆಗೆ ಹೋಗುವಾಗಲಂತೂ ಅಪ್ಪನ ಕಣ್ಣಿಗೆ ಬೀಳುವುದು ಶಕ್ಯವಿರಲಿಲ್ಲ. ಆದರೆ ಗಂಜೀ ಊಟಕ್ಕೆ ಮನೆಗೆ ಮರಳುವಾಗ ತನ್ನನ್ನು ಮಾತನಾಡಿಸದೇ ಇರಲಾರ. ಇಂದು ಬೆಳಗಿಗೇ ಮನೆಯಲ್ಲಿ ಅಂಥ ಲಕ್ಷಣಗಳು ಕಂಡಿದ್ದವು. ಅಜ್ಜ ಬರೆದ ಚೀಟಿ ಅವನ ಕೈಸೇರಿದೆ. ನಿಸ್ಸಂಶಯ. ತನ್ನ ಈಗಿನ ಸ್ಥಿತಿಯ ಬಗೆಗೆ ತನಗೇ ಕನಿಕರವೆನ್ನಿಸಿತು, ತಮ್ಮಣ್ಣನಿಗೆ. ಯಾಕಾದರೂ ಅಪ್ಪನನ್ನು ಎದುರುಹಾಕಿಕೊಳ್ಳುತ್ತೇನೆಂದು ಜಂಭ ಕೊಚ್ಚಿಕೊಡೆನೋ ಎಂದುಕೊಳ್ಳುವಂತಾಯಿತು. +ತಮ್ಮಣ್ಣನ ಎಣಿಕೆ ಸುಳ್ಳಾಗಲಿಲ್ಲ. ಪುಸ್ತಕಗಳ ಚೀಲವನ್ನು ಹೆಗಲಿಗೆ ತೂಗಿಸಿ, ಗೋಣು ಬಗ್ಗಿಸಿ ನೆಲದ ಮೇಲೇ ದೃಷ್ಟಿಯೂರಿ ನಡೆಯುತ್ತಿದ್ದವನನ್ನು, ಅವನು ಅಂಗಡಿಯನ್ನು ದಾಟುತ್ತಿದ್ದ ಆಯತ ಘಳಿಗೆಯಲ್ಲಿ ಅಪ್ಪ, “ತಮ್ಮಣ್ಣಾ” ಎಂದು ಕರೆದ. ಅಪ್ಪನ ದನಿ ತುಂಬಾ ಮೆತ್ತಗೆ ಆಗಿತ್ತು.ಅಪ್ಪನ ದನಿ ಇಷ್ಟೊಂದು ಮೆತ್ತಗೆ ಆದದ್ದನ್ನು ಅವನು ಈ ಜನ್ಮದಲ್ಲಿ ಕೇಳಿರಲಿಲ್ಲ. ಅಪ್ಪ ತನಗೆ ‘ಮಸ್ಕಾಬಾಜಿ’ ಮಾಡುತ್ತಿರುವ ಅನುಮಾನವಾಯಿತು. ಮೂರು ದಿನಗಳ ಹಿಂದಷ್ಟೇ ಚಪ್ಪರ ಹಾರಿಹೋಗುವ ಹಾಗೆ ಬಯಲಾಟದ ಕುಳಿತ ಕುಣಿದದ್ದೇ ಸುಳ್ಳೆನಿಸಿತು. ಅಂಗಡಿಯಲ್ಲಿ ಆ ಹೊತ್ತಿಗೆ ಗಿರಾಕಿಗಳು ಯಾರೂ ಇರಲಿಲ್ಲ. ತಮ್ಮಣ್ಣ ಅಳುಕುತ್ತ ಅಂಗಡಿಯ ಕೆಳಜಗಲಿಯ ಮೇಲೆ ಹೋಗಿ ನಿಂತ. ಅಪ್ಪ ಗಲ್ಲೆಯನ್ನು ಬಿಟ್ಟು ಮೇಲ್ಜಗಲಿಯ ಅಂಚಿನವರೆಗೆ ಸರಿದು ಕುಳಿತ. ಅವನ ಭುಜ ತಟ್ಟುತ್ತ, “ಅಜ್ಜನ ಮನೆಯಲ್ಲಿ ಎಲ್ಲ ಸರಿಯಾಗಿ ನಡೆಯಿತಲ್ಲವೆ ?” ಎಂದು ಕೇಳಿದ. ಅಪ್ಪ ಕೇಳಲಿಚ್ಛಿಸಿದ್ದು ಇದಾಗಿರಲಿಲ್ಲವೇನೋ. ಒಂದು ಕ್ಷಣ ತಡೆದು, “ನಿಮ್ಮ ಜೊತೆಗೆ ನನಗೆ ಬರಲಾಗದ್ದಕ್ಕೆ ಯಾರದರೂ ಏನಾದರೂ ಅಂದರೆ ?” ಎಂದು ಕೇಳಿದ. ಅಜ್ಜನಂಥ ಮಹಾನುಭಾವ ಮಾವ ಅಳಿಯನಲ್ಲಿ ಕ್ಷಂಎ ಕೇಳಿಯಾದಮೇಲೆ ಆಡಿದ ಇಂಥ ಮಾತುಗಳಿಗೆ ಏನು ಬೆಲೆ ? ತಮ್ಮಣ್ಣ ಈಗಲೂ ಬಾಯಿ ಬಿಡಲಿಲ್ಲ. ಅಪ್ಪನನ್ನು ಕ್ಷಮಿಸಲು ಅವನಿನ್ನೂ ಸಿಧ್ಧನಿರಲಿಲ್ಲ. “ಅಜ್ಜನಿಗೆ ಏನಾಗಿತ್ತಂತೆ ?” ಅಮ್ಮನನ್ನು ಕೇಳಲಿಲ್ಲವೆ ? ಎಂದು ಕೇಳಬೇಕು, ಅನ್ನಿಸಿತ್ತು. ಆದರೆ ಕೇಳಲಿಲ್ಲ. ಕೇಳುವ ಧೈರ್ಯವಾಗಲಿಲ್ಲವೋ, ಅಪ್ಪನ ಬಗ್ಗೆ ಇನ್ನೂ ಸಾಕಷ್ಟು ಸಿಟ್ಟು ಬಂದಿರಲಿಲ್ಲವೋ. ಆದರೆ ಒಮ್ಮೆ ಬಾಯಿ ತೆರೆದ ಮೇಲೆ ಸಿಟ್ಟು ಬಂದಿತಷ್ಟೇ ಅಲ್ಲ. ಬಂದದ್ದು ಹೆಚ್ಚುತ್ತಲೇ ಹೋಯಿತು : “ಅಜ್ಜ ಅಂದು ದಿನಕ್ಕಿಂತ ಬೇಗ ಊಟ ಮ್,ಆಡಿದರಂತೆ. ಅಜ್ಜಿಯ ಎದುರು ಅಮ್ಮನನ್ನು ಕಾಣುವ ಆಸೆ ಪ್ರಕಟಿಸಿದರಂತೆ. ಮಗು ತಮ್ಮಿಂದಾಗಿ ಅದೆಂಥ ಕಷ್ಟದಲ್ಲಿ ಇರುವಳೋ ಏನೋ, ತಮ್ಮ ಕೈಯಿಂದಾದ ಸಣ್ಣ ತಪ್ಪನ್ನು ಅಳಿಯ ಕೊನೆಗೂ ಕ್ಷಮಿಸಲೇ ಇಲ್ಲವೆಂದು ಹಲುಬಿದರಂತೆ. ಎಂದೋ ಮಾಡಬೇಕಾಗಿತ್ತು, ಈಗಲಾದರೂ ಮಾಡುತ್ತೇನೆ-ಅಳಿಯನಲ್ಲಿ ಕ್ಷಮೆ ಕೇಲುತ್ತೇನೆ. ಕ್ಷಮಿಸಿದನೇ ಸರಿ, ಇಲ್ಲವಾದರೆ ನಾನು ಸತ್ತಮೇಲಾದರೂ ಮೇಲಿನಿಂದಲೇ ನನ್ನ ಮಗುವನ್ನು ರಕ್ಷಿಸುತ್ತೇನೆ. ಅವಳನ್ನು ಪೀಡಿಸಿದವರನ್ನು ಸುಮ್ಮನೆ ಬಿಡಲಾರೆನೆಂದು ಆಣೆಮಾಡಿದರಂತೆ. ಆಮೇಲೆ ಏನಾಯಿತು ? ಯಾರಿಗೂ ತಿಳಿಯಲೇ ಇಲ್ಲ. ಸಾಯುವ ಮೊದಲು ನಿಮಗೆ ಬರೆದ ಚೀಟಿ ಮಾತ್ರ ಹಾಸಿಗೆಯ ಮೇಲೆ ಸಿಕ್ಕಿತಂತೆ,” +“ಅಮ್ಮ ಆ ಚೀಟಿಯನ್ನು ತಂದಿರುವಳೆ ?” +ಈಗ ಮಾತ್ರ ತಮ್ಮಣ್ಣನಿಗೆ ತನಗೆ ಬಂದ ಸಿಟ್ಟನ್ನು ತಡೆಯುವುದಾಗಲಿಲ್ಲ. ಅಪ್ಪನಿಂದ ಇಂಥ ನಟನೆಯನ್ನು ನಿರೀಕ್ಷಿಸಿರಲಿಲ್ಲ. ಅಮ್ಮ ಆ ಪತ್ರವನ್ನು ಅಪ್ಪನಿಗಿನ್ನೂ ಕೊಟ್ಟಿಲ್ಲ. ಅಪ್ಪ ಅದನ್ನಿನ್ನೂ ಓದಿಲ್ಲ, ಎಂದರೇನು ?-ನಂಬುವ ಮಾತೆ ? +“ಅಮ್ಮನನ್ನೇ ಕೇಳಿ, ಅಜ್ಜ ನಿಮಗೊಂದು ಚೀಟಿಯನ್ನು ಬರೆದದ್ದಂತೂ ನಿಜ. ಅಷ್ಟು ದೊಡ್ಡ ಹಿರಿಯರು ಸಾಯುವ ಮೊದಲು ಅಳಿಯನ ಕಾಲು ಹಿಡಿಯುವಂತೆ ಆದದ್ದು ಅಲ್ಲಿ ಯಾರಿಗೂ ಸೇರಲಿಲ್ಲ. ಎಲ್ಲರೂ ಅದರ ಬಗ್ಗೆ ಆಡಿಕೊಂಡದ್ದೇ ಆಡಿಕೊಂಡದ್ದು.” +ಧೈರ್ಯ ಕುಸಿಯುವ ಮೊದಲೇ ಓಣಿ ಸೇರಿ ಅಪ್ಪನ ದೃಷ್ಟಿಯಿಂದ ಮರೆಯಾಗುವ ಅವಸರದಲ್ಲಿ ತಮ್ಮಣ್ಣ ಅಲ್ಲಿಂದ ಕಾಲು ಕಿತ್ತ. +ಓಣಿ ಸೇರಿದಮೇಲೇ, ಅಪ್ಪನ ಎದುರು ನಿಂತು ಕೊನೆಗೂ ಮಾತನಾಡುವ ಧೈರ್ಯ ಮಾಡಿದಾಗ ತಾನು ಎಂದಿನ ತಮ್ಮಣ್ಣನಾಗಿ ಇರಲಿಲ್ಲವೆಂದು ಸ್ವತಃ ತಮ್ಮಣ್ಣನಿಗೇ ಅನ್ನಿಸಿತು. ಅಪ್ಪನಿಗೆ ತಕ್ಕ ಶಾಸ್ತಿ ಮಾಡಬೇಕು ಎನ್ನುವ ಆತುರದಲ್ಲಿ ಎರಡು ದೊಡ್ಡ ಸುಳ್ಳುಗಳನ್ನು ಹುಟ್ಟಿಸಿ ಹೇಳಿದ್ದ. ಈ ಸುಳ್ಳುಗಳನ್ನು ಹೇಳುವ ನಿರ್ಧಾರವನ್ನವನು ಹನ್ನಳ್ಳಿ ಸಂಕದ ಮೇಲೆ ವಿರಮಿಸಿದಾಗಲೇ ತೆಗೆದುಕೊಂಡಿದ್ದ-ಸತ್ತಮೇಲೆ ಅಮ್ಮನನ್ನು ಮೇಲಿನಿಂದಲೇ ರಕ್ಷಿಸುತ್ತೇನೆ ಎಂಬಂಥ ಮಾತು ಅಜ್ಜ ಯಾರ ಎದುರೂ ಹೇಳಿರಲಿಲ್ಲ. ಅದು ಸಂಪೂರ್ಣವಾಗಿ ಅವನದೇ ಕಲ್ಪನೆಯಾಗಿತ್ತು. ಹಾಗೇನೇ, ಸಾಯುವ ಮೊದಲು ಅಜ್ಜ ಅಳಿಯನ ಕಾಲು ಹಿಡಿಯುವಂತಾಯಿತು ಎನ್ನುವ ಮಾತೂ ಕೂಡ. ಈ ಮಾತುಗಳು ಅಪ್ಪನ ಮೇಲೆ ಪರಿಣಾಮ ಮಾಡದೇ ಇರಲಾರವು ಎನ್ನುವ ಬಗ್ಗೆ ಅವನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಆದರೆ ಮನೆಯ ಜಗಲಿಯ ಮೆಟ್ಟಿಲು ಹತ್ತುತ್ತಿದ್ದಂತೆ ಅಮ್ಮ ಕೇಳಿದ ಪ್ರಶ್ನೆಗೆ ಅವನು ದಂಗಾದ : “ನಿನ್ನ ಮೋರೆ ಹಾಗೇಕಾಗಿದೆ ಮಗು ? ಮೈಯಲ್ಲಿ ಸರಿಯಿಲ್ಲವೆ ? ಎರಡು ದಿನ ಸಾಲೆಗೆ ಹೋಗಲಿಲ್ಲ. ಮಾಸ್ತರರು ಏನಾದರೂ ಅಂದರೆ ?” +ಮುಂದಿನ ಕೆಲವು ದಿನಗಳವರೆಗೆ ಅಪ್ಪ-ಮಗ ಇಬ್ಬರೂ ಪರಸ್ಪರ ಒಂದು ನಮೂನೆಯಾದರು. ಅಜ್ಜನ ಸಾವು ಮೊಮ್ಮಗನ ಮೇಲೆ ವಿಪರೀತ ಪರಿಣಾಮ ಮಾಡಿದೆಯೆಂದು ಅಪ್ಪ-ಅಮ್ಮರಿಗೆ ಆತಂಕವಾಯಿತು. ಅವನನ್ನು ಕುಮಟೆಗೆ ಕಳಿಸಲೇಬಾರದಿತ್ತು. ಅಲ್ಲಿ ಕಂಡಿದ್ದೇನೋ ಮಗುವನ್ನು ಹೆದರಿಸಿದೆಯೆಂದು ಅಪ್ಪ ತಿಳಿದರೆ, ತಾನು ಹುಟ್ಟಿಸಿ ಹೇಳಿದ್ದು ಅಪ್ಪನನ್ನು ಕಾಡದೇ ಇಲ್ಲವೆಂದು ಮಗ ತಿಳಿದ. ಈ ತಪ್ಪು ತಿಳುವಳಿಕೆಗೆ ಕೊನೆ ಬಂದದ್ದು ಯಾವುದೋ ಕೆಲಸಕ್ಕೆಂದು ಅಪ್ಪನ ಕೋಣೆಗೆ ಹೋಗಿದ್ದಾಗ ಅಜ್ಜ ಅಪ್ಪನಿಗೆ ಬರೆದ ಚೀಟಿಯಿದ್ದ ಲಿಫಾಫೆ ಅವನ ಕೈಗೆ ಬಂದಾಗ, ಲಿಫಾಫೆ ಇನ್ನೂ ತೆರೆದೇ ಇರಲಿಲ್ಲ. ಅವನು ತಬ್ಬಿಬ್ಬುಗೊಂಡು ಅರಳಿಸಿದ ಕಣ್ಣುಗಳನ್ನು ಕೂಡಲೇ ಕಿರಿದುಗೊಳಿಸದಾದ. ಅಮ್ಮ ಅಪ್ಪನಿಗೆ ಈ ಚೀಟಿಯನ್ನು ಕೊಟ್ಟಿಯೇ ಇಲ್ಲ ಹಾಗಾದರೆ. ಅಮ್ಮ ಒಳ್ಳೆಯದನ್ನು ಮಾಡಲಿಲ್ಲ. ಅವನು ಅಮ್ಮನನ್ನು ತರಾಟೆಗೆ ತೆಗೆದುಕೊಂಡ- +“ಬಂದ ದಿವಸವೇ ಕೊಡಲಿಲ್ಲ. ಮಾರನೇ ದಿನ ರಾತ್ರಿ ಅವರು ಅಂಗಡಿಯಿಂದ ಬಂದ ಬಳಿಕ ಕೊಡಲು ಮುಂದಾದಾಗ, ‘ಅದರಲ್ಲಿ ಏನು ಇದೆ ಎಂದು ನನಗೆ ಗೊತ್ತಿದೆ. ಅದನ್ನು ಬರೆದವರೇ ಈಗ ಇಲ್ಲವೆಂದ ಮೇಲೆ ಓದಿ ಏನು ಪ್ರಯೋಜನ ?’ ಎಂದವರು ಅದಕ್ಕೆ ಕೈಯೇ ಹಚ್ಚಲಿಲ್ಲ. ಕುಮಟೆಯಿಂದ ಬಂದವರರೋ ಅವರನ್ನು ಅಂಗಡಿಯಲ್ಲೇ ಕಂಡು, ವಯಸ್ಸಾದ ಮಾವ ಅಳಿಯನ ಕಾಲು ಹಿಡಿದು ಅವನಲ್ಲಿ ಕ್ಷಮೆ ಯಾಚಿಸಿ ಬರೆದ ಚೀಟಿಯನ್ನು ನಾನು ತಂದಿರುವ ಸುದ್ದಿ ಕೊಟ್ಟು ಹೋದರಂತೆ. ಇಷ್ಟೇ ಅಲ್ಲ, ತಾನು ಸತ್ತ ಮೇಲೆ ನಿನ್ನ ಅಮ್ಮನನ್ನು ಪೀಡಿಸಿದವರನ್ನು ಭೂತವಾಗಿ ಕಾಡುತ್ತೇನೆಂದು ಧಮಕಿ ಇತ್ತಿದ್ದನ್ನೂ ತಿಳಿಸಿದರಂತೆ. ಪಾಪ ! ಇದನ್ನು ಕೇಳಿದಂದಿನಿಂದ ನಿನ್ನಪ್ಪ ಮೊದಲಿನ ಹಾಗೆ ಇಲ್ಲವೇ ಇಲ್ಲ-ನೀನೂ ನೋಡಿರಬೇಕು.ಈ ಜಗತ್ತಿನಲ್ಲಿ ಎಂಥೆಂಥ ಜನರಿರುತ್ತಾರೆ ನೋಡು !” ಎಂದಳು ಅಮ್ಮ. +ಅಮ್ಮ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿದ್ದಾಳೆಂದು ತಿಳಿಯದಷ್ಟು ಸಣ್ಣವನಲ್ಲ ತಮ್ಮಣ್ಣ. ಆದರೂ ತುಂಬಾ ಸಣ್ಣವನ ಹಾಗೆ ತಾಯ ಸೆರಗು ಹಿಡಿದು ಬಿಕ್ಕಳಿಸಹತ್ತಿದ. ತಾಯಿ ಸಂತೈಸಿದಳು- +“ನಾನು ಆ ಚೀಟಿಯನ್ನು ಓದಿಲ್ಲ ಮಗೂ ! ಅದು ಕನ್ನಡದಲ್ಲಿದೆ. ಅದನ್ನು ಓದಿದ ನಿನ್ನ ತಿರಿಮಾಮಾ ಮಜಕೂರು ತಿಳಿಸಿದ್ದ. ಅವನೇ ಅದನ್ನು ಲಕೋಟೆಯಲ್ಲಿಟ್ಟು ಬಾಯಿ ಮುಚ್ಚಿದ್ದು. ಆಮೇಲೆ ನೀನು ತೆರೆದು ಓದುವಿಯಂತೆ. ನಾವು ಕುಮಟೆಯಿಂದ ಹಿಂದಿರುಗಿ ಬಂದ ರಾತ್ರಿ, ಆ ಚೀಟಿ ನನ್ನ ಬಳಿಯಿದೆಯೆಂದು ಗೊತ್ತಾಗುವ ಮೊದಲೇ, ತಮ್ಮ ಆ ದಿನದ ವರ್ತನೆಯ ಬಗ್ಗೆ ಆಡಿಕೊಂಡು ನಿನ್ನಪ್ಪ ಹಳಹಳಿಸಿದ್ದಕ್ಕೆ ಲೆಕ್ಕವಿಲ್ಲ. ಅವರ ಆಗಿನ ಸ್ಥಿತಿ ನೋಡಿ ನನಗೇ ಪಾಪ ಅನ್ನಿಸಿತು. ನಾವು ಕುಮಟೆಗೆ ಹೊರಟುಹೋದ ದಿವಸ ಊಟ ಕೂಡ ಮಾಡಲಿಲ್ಲವಂತೆ. ಅತ್ತೆ ಹೇಳಿದಳು. ಇಷ್ಟಕ್ಕೂ ಇದಾವುದರಲ್ಲಿ ನಿನ್ನಪ್ಪನ ತಪ್ಪು ಇಲ್ಲ. ಹೇಳಲು ಹೋದರೆ ಈಗ ಇಷ್ಟೇನೆ, ಅನ್ನಿಸಬಹುದು. ಆದರೆ ಆಗ ಹಾಗೆ ಅನ್ನಿಸಲಿಲ್ಲ. ನಿನ್ನ ಅಜ್ಜನ ಮನೆಯ ಒಂದು ಮದುವೆಯ ಹೊತ್ತಿಗೆ ಮದುವೇ ಹಂದರದಲ್ಲೇ ನಿನ್ನ ಅಪ್ಪನಿಗೆ ಅವಮಾನವಾಯಿತು. ಯಾವ ಅಳಿಯನೇ ಸಹಿಸಲಾರದ ಅನಾದರವಾಗಿತ್ತದು. ಬಹಳ ಸ್ವಾಭಿಮಾನಿಯಾದ ನಿನ್ನಪ್ಪನೂ ಸಹಿಸಲಿಲ್ಲ. ನಿಜ ಸಂಗತಿ ಇಲ್ಲಿಯ ಯಾರಿಗೂ ಗೊತ್ತಿಲ್ಲ-ನಿನ್ನ ಅತ್ತೆಗೂ, ಮನೆಯಲ್ಲಿ ನಿನ್ನ ಅಜ್ಜನ ಹೆಸರು ಎತ್ತಿದರೇ ಉರಿದು ಬೀಳುತ್ತಿದ್ದ ಅಪ್ಪನನ್ನು ನಿನ್ನ ಅಣ್ಣಂದಿರು ಕೂಡ ತಪ್ಪು ತಿಳಿದಾಗ ನಾನೇ ಒಂದು ದಿನ ನಡೆದದ್ದನ್ನ ತಿಳಿಸಿದೆ. ಕೇಳಿದಮೇಲೆ ಇಬ್ಬರೂ ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ಕುಮಟೆಯೊಡನೆಯ ಸಂಬಂಧವನ್ನೂ ಕಡಿದುಕೊಂಡರು. ಕುಮಟೆಯಲ್ಲಿ ಒಳ್ಳೇ ಹೈಸ್ಕೂಲು ಇದ್ದಾಗಲೂ ಇಬ್ಬರೂ ಕಲಿಯಲಿಕ್ಕೆ ಧಾರವಾಡಕ್ಕೆ ಹೋದದ್ದು ಈ ಕಾರಣಕ್ಕೆ. ಇವತ್ತು ನಿನಗೆ ಹೇಳುತ್ತೇನೆ. ನೀನು ಏನು ಮಾಡುತ್ತೀಯೋ ನೋಡು.” +ಅಮ್ಮ ಅಂದು ಮದುವೆಯ ಚಪ್ಪರದಲ್ಲಿ ಅಪ್ಪನಿಗಾದ ಅವಮಾನದ ಹಕೀಕತ್ತನ್ನು ಹೇಳಿದಳು : +ಸೋದರತ್ತೆ ಯಜ್ಞಮಂಟಪದಲ್ಲಿ ದಕ್ಷ-ಬ್ರಹ್ಮನಿಂದ ಅಳಿಯನಾದ ಶಿವನಿಗೆ ಅಪಮಾನವಾದಾಗ ಕನಲಿದ ದಾಕ್ಷಾಯಿಣಿ ಯಜ್ಞಕುಂದದಲ್ಲಿ ಹಾರಿ ಜೀವ ತೆಗೆದುಕೊಂಡ ಪುರಾಣ ಹೇಳಿದಳು. ಎರಡನ್ನೂ ಕೇಳಿಯಾದಮೇಲೆ ಚಿಕ್ಕ ಪ್ರಾಯದ ತಮ್ಮಣ್ಣನಿಗೆ ವಿಚಿತ್ರ ಭ್ರಮೆಯಾಯಿತು. ಅಂದು ಶಿವನಿಗೆ ಅಪಮಾನವಾಗದಿದ್ದರೆ ಇಂದು ತನ್ನ ಅಪ್ಪನಿಗೂ ಅಪಮಾನವಾಗುತ್ತಿರಲಿಲ್ಲವೇನೋ ! ಅಂದು ದಾಕ್ಷಾಯಿಣಿ ಯಜ್ಞಕುಂಡದಲ್ಲಿ ಹಾರಿರದಿದ್ದರೆ ಇಂದು ತನ್ನ ಅಮ್ಮನೂ ಹೀಗೆ ಮತ್ತೆಮತ್ತೆ ಅಪ್ಪನ ಸಿಟ್ಟಿಗೆ ತುತ್ತಾಗುತ್ತಿರಲಿಲ್ಲವೇನೋ ! ಇಷ್ಟಕ್ಕೂ ಅಪ್ಪನಿಗಾದಮಾನಭಂಗಕ್ಕೆ ಅಜ್ಜ ನೇರವಾಗಿ ಕಾರಣನಾಗಿರಲಿಲ್ಲವಂತೆ. ಕಾರಣರಾದವರು ಬೇರೆಯವರೇ ಆಗಿದ್ದರು. +ಅಪ್ಪನಿಗೆ ಹೆಣ್ಣುಗಳು ಹೇಳಿ ಬರತೊಡಗಿದಾಗ ಅಣ್ಣ ಜಾತಕ ಕೊಟ್ಟಿದ್ದು ಅಮ್ಮನದಾಗಿರಲಿಲ್ಲ. ಅಮ್ಮನ ಅಕ್ಕನದಾಗಿತ್ತು. ಈ ಅಕ್ಕ ಈಗ ಬದುಕಿಲ್ಲ, ಅವಳು, ಪಾಪ !-ಅಮ್ಮನಿಗಿಂತ ಸುಂದರಳಂತೆ. ಅಸಾಧ್ಯ ಹಠದವಳಂತೆ. ಹೆಣ್ಣು ನೋಡಲು ಹೋದ ಅಪ್ಪ ಕಾಣಲು ಅಷ್ಟು ಸುಂದರಳಲ್ಲದ ಆದರೆ ಸೌಮ್ಯ ಸ್ವಭಾವದ ಅಮ್ಮನನ್ನು ಪಸಂದು ಮಾಡಿ ಬಂದ. ಅಪ್ಪನ ಮನೆಯವರು ಹಿರಿಯ ಮಗಳ ಮದುವೆಯಾಗುವತನಕ ಕಾಯಲು ಸಿದ್ಧರಿದ್ದರು. ಅವಳೇ ಬೇಡವೆಂದಳಂತೆ. ಅಪ್ಪ ಕಾಣಲು ಚೆಂದ. ಆದರೂ ಅವನಂಥ ‘ಚಿಲ್ಲರೆ ಕಿರಾಣಿ ದುಕಾನ್‌ದಾರ’ ತನ್ನನ್ನು ಪಾಸು ಮಾಡದೇ ಇದ್ದದ್ದು ತನ್ನ ಸುದೈವ ಎಂದಳಂತೆ ! ಹೊರಗೆ ಹಾಗೆ ತೋರಿಸಿಕೊಂಡರೂ ಒಳಗೊಳಗೇ ಅಪ್ಪ ತನ್ನನ್ನು ತಿರಸ್ಕರಿಸಿದ್ದನ್ನು ಅಪಮಾನವೆಂದು ಬಗೆದು ಕ್ರುದ್ಧಳಾದ ಈ ಅಕ್ಕ ತನ್ನ ಮದುವೆ ಹೊತ್ತಿಗೆ ತಂಗಿಯ ಮೇಲೆ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಮನೆಯ ಮೊದಲ ಅಳಿಯನಾದ ಅಪ್ಪನಿಗೆ ಸಲ್ಲಬೇಕಾದ ಸತ್ಕಾರಕ್ಕೆ ಅಡ್ಡಬಂದಳಂತೆ. ಈ ಮನೆಯ ಮೊದಲ ಅಳಿಯನಾಗಬೇಕಾದವನು ತನ್ನ ಗಂಡನು ಹೊರತು ಇವನಲ್ಲವೆಂದು ವಾದಿಸಿ ಅಜ್ಜಿಯ ಎದುರು ಅಮ್ಮನನ್ನು ಅಪ್ಪನನ್ನು ಬಾಯಿಗೆ ಬಂದಂತೆ ಬೈದಳಂತೆ. ಸತ್ಕಾರ ಮಾಡಿದ್ದೇ ಆದಲ್ಲಿ ತಾನು ಮದುವೆಯ ಮಂಟಪದಿಂದ ಓಡಿಹೋಗುವ ಧಮಕಿ ಹಾಕಿದಳಂತೆ. ಅಜ್ಜನಿಗೆ ಇದರ ಸುಳಿವೂ ಹತ್ತಲಿಲ್ಲ. ಅಜ್ಜಿಯೂ ಮಗಳ ಧಮಕಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೂ ಸತ್ಕಾರ ಸಮಾರಂಭದ ಘಳಿಗೆ ಸನ್ನಿಹಿತವಾಗುತ್ತಲೇ ಪುರೋಹಿತ ಭಟ್ಟರು ದೊಡ್ಡ ದನಿಯಲ್ಲಿ, “ಓ ಯಜಮಾನರೂ ! ನಿಮ್ಮ ಹಿರಿಯ ಅಳಿಯನನ್ನು ಕರೆಯಿರಿ. ನೀವು ಅವನ ಕಾಲುಗಳನ್ನು ಮೊದಲು ತೊಳೆದು, ಉಡುಗೊರೆ ಕೊಟ್ಟು ಅವನಿಗೇ ಸನ್ಮಾನ ಮಾಡಬೇಕು” ಎಂದು ಸಾರಿದರು. ಈ ಕ್ಷಣಕ್ಕೆ ಕಾದು ಕುಳಿತಂತಿದ್ದ ಈ ಅಕ್ಕ ಅಷ್ಟೇ ಎತ್ತರದ ದನಿಯಲ್ಲೆ, “ಭಟ್ಟರೇ ! ಪರಿಸ್ಥಿತಿಯ ಜ್ಞಾನ ಇಲ್ಲದವರ ಹಾಗೆ ಮಾತಾಡುತ್ತೀರಲ್ಲ ಈ ಮನೆಯ ಹಿರಿಯ ಅಳಿಯ ನನ್ನ ಗಂಡ; ಹಿರಿಯ ಮಗಳು ನಾನಲ್ಲವೇ ? ಮೊದಲು ಸತ್ಕಾರವಾಗಬೇಕಾಗಿದ್ದು ಇವರಿಗೇ. ಇದು ಸಾಧ್ಯವಿಲ್ಲದಿದ್ದರೆ ಈ ಸತ್ಕಾರ-ಗಿತ್ಕಾರದ ಹಗರಣ ಇಲ್ಲಿಗೇ ನಿಲ್ಲಿಸಿಬಿಡಿ” ಎಂದು ಒದರಿ ಹೇಳಿದಳು. ಸತ್ಕಾರ ಸಮಾರಂಭ ಅಲ್ಲಿಗೇ ನಿಂತೇಹೋಯಿತು. ಚಪ್ಪರಕ್ಕೆ ಚಪ್ಪರವೇ ತಲ್ಲಣಗೊಂಡು ಸ್ತಬ್ಧವಾಯಿತು. ಆಮೇಲೆ ಎಲ್ಲೆಲ್ಲೂ ಗುಜುಗುಜು ತುಂಬಿತು. ಅಪ್ಪ, ಪಾಪ ! ಈ ಮದುವೆಗೆ ತುಂಬಾ ಉಮೇದಿನಲ್ಲಿ ಬಂದಿದ್ದ. ಮದುವೆಗಾಗಿಯೇ ಹುಬ್ಬಳ್ಳಿಗೆ ಹೋಗಿ ಹೊಸ ಕೋಟು, ಹೊಸ ಅಂಗಿ ಹೊಲಿಸಿದ್ದ. ಹೊಸ ಧೋತರ ಕೊಂಡಿದ್ದ. ಕಾಲಲ್ಲಿಯ ಮೆಟ್ಟುಗಳು ಕೂಡಾ ಹೊಸವಾಗಿದ್ದವು. ಈ ಅನಪೇಕ್ಷಿತ ರಂಪದಿಂದ ತುಂಬಾ ನೊಂದುಕೊಂಡಿರಬೇಕು-ಹೊರಗೆ ಹಾಗೆ ತೋರಿಸಿಕೊಳ್ಳದಿದ್ದರೂ. ಅಪ್ಪನಿಗೆ ಅಜ್ಜನ ಬಗ್ಗೆ ಬಹಳ ಗೌರವವಿತ್ತು. ಅವರಾದರೂ ನಾಕು ಸಾಂತ್ವನದ ನುಡಿ ಆಡಬಹುದಿತ್ತು. ಅವರಿಗೂ ಈ ಗೊಂದಲದಲ್ಲಿ ಹೊಳೆಯಲಿಲ್ಲವೇನೋ. ಹೊಳೆಯುವ ಹೊತ್ತಿಗೆ ತೀರಾ ತಡವಾಗಿತ್ತು. ಅಪ್ಪ ಮತ್ತೆ ಅಜ್ಜನ ಅಂಗಳದಲ್ಲಿ ಕಾಲಿರಿಸಲಿಲ್ಲ, ಅಮ್ಮನಿಗೂ ಅಲ್ಲಿಗೆ ಸುಲಭವಾಗಿ ಹೋಗಗೊಡಲಿಲ್ಲ. +* +* +* +ಮುಂದೊಂದು ದಿನ ತಮ್ಮಣ್ಣ, ಅಜ್ಜನೂ ಅಪ್ಪನಿಗೆ ಬರೆದ ಚೀಟಿಯನ್ನು ಗುಟ್ಟಿನಲ್ಲಿ ಓದಿದ. +“ನೀನು ನಮ್ಮ ಮುದ್ದಿನ ಅಳಿಯನಲ್ಲವೆ ? ಮಗನ ಹಾಗೇ ನಿನ್ನನ್ನು ಅಪಮಾನಗೊಳಿಸುವ ಮನಸ್ಸು ನಮಗೆ ಹೇಗಾದರೂ ಆದೀತು; ಆದರೂ ಅಂಥ ಅಚಾತುರ್ಯ ನನ್ನ ಕೈಯಿಂದ ನಡೆದುಹೋದದ್ದು ನಿಜ. ಆದರೂ ಕ್ಷಮಿಸಿಬಿಡು. ಅನಸೂಯಳನ್ನು ನೋಡಲು ಮನಸ್ಸು ತಡಪಡಿಸುತ್ತದೆ. ನಾಕು ದಿನಗಳ ಮಾತಿಗೆ ಕಳಿಸಲಾಗುತ್ತದೆಯೋ ನೋಡು.” +ಈಗ- +ಎರಡು ದಿನಗಳ ಹಿಂದೆ ತಮ್ಮಣ್ಣನಿಗೆ ಅವನ ಅಪ್ಪನಿಂದ ಬಂದ ಪತ್ರದ ಒಕ್ಕಣಿಕೆ ಕೂಡ ಇಂಥದೇ ಆಗಿತ್ತು- +“ನಿನ್ನನ್ನು ಕಾಣಬೇಕು. ನಿನ್ನಲ್ಲಿ ಹಾರ್ದಿಕವಾಗಿ ಕ್ಷಮೆ ಕೋರಬೇಕು ಎಂದು ಮನಸ್ಸು ಹಾತೊರೆಯುತ್ತದೆ. ಯಾತಕ್ಕಾಗಿ ಕ್ಷಮೆ ಕೋರಬೇಕು ? ನನಗೆ ಗೊತ್ತಿಲ್ಲ. ಎರಡು ದಿನಗಳ ಮಾತಿಗೆ ಬಂದುಹೋಗಲು ಆಗುತ್ತದೆಯೋ ನೋಡು.” +ಈಗ ಅಣ್ಣ ಊರಿನಿಂದ ಕೊಟ್ಟ ಈ ತಾರು ! +ಅಪ್ಪನ ಪತ್ರ ಬಂದದಿನ ಅದನ್ನು ಓದುತ್ತಿದ್ದ ಘಳಿಗೆಯಲ್ಲೇ ಈ ತಾರನ್ನೂ ಮುಂಗಂಡವನ ಹಾಗೆ ತಮ್ಮಣ್ಣ ಅಧೀರನಾಗಿದ್ದ. ಘಟನೆಗಳ ಆವರ್ತಕ್ಕೆ ಅವನು ದಂಗುಬಡಿದ. ನಮ್ಮ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡಬೇಕಾದ ಹಾಗೆ ಬದುಕುವುದು ಶಕ್ಯವೇ ಇಲ್ಲವೇನೋ, ಅನ್ನಿಸಿತು. ಪಶ್ಚಾತ್ತಾಪ ನಮ್ಮ ಜೀವನ ಕ್ರಮದ ಅನಿವಾರ್ಯ ಪ್ರಾಪ್ತಿಯಾಗಿರಬಹುದೆಂದೂ ತೋರಿತು. ಸಾವು-ಪಶ್ಚಾತ್ತಾಪ ಒಂದೇ ನಾಣ್ಯದ ಎರಡು ಬದಿಗಳಾಗಿರಬಹುದೆ ? ಇಲ್ಲವಾದರೆ ಸಾಯುವ ಘಳಿಗೆ ಹತ್ತಿರವಾದಾಗಲೇ ಕ್ಷಮೆ ಕೋರುವ ಔದಾರ್ಯ ಯಾಕೆ ಹುಟ್ಟಬೇಕು. +ತಮ್ಮಣ್ಣ ಸ್ಥಿತಿ ನೋಡಿ ಅವನ ಸಾಥಿಗಳು ನೋಡಿ ಕಳವಳಪಟ್ಟರು- +“ನೀನು ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ಎಲ್ಲವೂ ಮುಗಿದಿರುತ್ತದೆ. ಹೇಗೂ ಸದ್ಯ ನಿನ್ನ ಅಣ್ಣಂದಿರಿದ್ದಾರೆ, ಅಲ್ಲಿಯ ಪರಿಸ್ಥಿತಿಯನ್ನು ಸಂಭಾಳಿಸಲು. ಇನ್ನೆರಡು ದಿನಗಳಲ್ಲಿ ನೀನು ಆತುರದಿಂದ ಕಾದಿದ್ದ ಇಂಟರ್ವ್ಯೂ ಇದೆ. ದೊಡ್ಡ ಕಂಪನಿ, ಒಳ್ಳೆಯ ಹುದ್ದೆ. ಇಂಟರ್ವ್ಯೂ ಮುಗಿಸಿಯೇ ಹೊರಡು. ನಾಳೆ ಪಶ್ಚಾತ್ತಾಪ ಆಗುವುದು ಬೇಡ” ಎಂದು ಪುಸಲಾಯಿಸಿದರು. +“ನಾನು ಕೂಡಲೇ ಹೊರಡದಿದ್ದರೂ ನಾಳೆ ಪಶ್ಚಾತ್ತಾಪ ಆಗಿಯೇ ಆಗುತ್ತದೆ. ಮೊದಲನೆಯದನ್ನು ನಾನು ನಿಭಾಯಿಸಬಲ್ಲೆ. ಎರಡನೆಯದನ್ನಲ್ಲ” ಎಂದವನೇ ತಮ್ಮಣ್ಣ ಊರಿಗೆ ಹೊರಡುವ ಸಿದ್ಧತೆಗೆ ತೊಡಗಿದ. +***** +ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ […] +ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು […] +ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_343.txt b/Kannada Sahitya/article_343.txt new file mode 100644 index 0000000000000000000000000000000000000000..55a7aea1c1da0af4138133df974cbdd8d7d653ea --- /dev/null +++ b/Kannada Sahitya/article_343.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +`ಗುರುವೇ, +ಜೀವನದಲ್ಲಿ ನಾನು +ಹಿಡಿಯಬೇಕಾದದ್ದು ಯಾವ ದಾರಿ?’ +‘ಜವಾಬು +ದಾರಿ’ +***** +ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. ***** +ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ ***** +ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_344.txt b/Kannada Sahitya/article_344.txt new file mode 100644 index 0000000000000000000000000000000000000000..8c31614cffefc963e9f050152eda666cfe551834 --- /dev/null +++ b/Kannada Sahitya/article_344.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಾತು +ಬಲವರೆಲ್ಲ +ಮೇಧಾವಿ +ಗಳಲ್ಲ; +ಮೌನ +ತಳೆದವರೆಲ್ಲ +ಮೂದೇವಿ +ಗಳಲ್ಲ. +***** +ನಿಮ್ಮ ಬಿಡುವಿನ ವೇಳೆಯಲ್ಲಿ ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ. ಇದರಿಂದ ಹೆಚ್ಚು ಕನ್ನಡ ಬರಹಗಳು ಡಿಜಿಟಲೈಸ್ ಆಗುತ್ತವೆ. ವಿವರಗಳಿಗೆ ಸಂಪರ್‍ಕಿಸಿ: kannadasahithya1 at gmail.com 9441063342 +ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_345.txt b/Kannada Sahitya/article_345.txt new file mode 100644 index 0000000000000000000000000000000000000000..7b47aa236595b57f7c99f134ef470667c86dceed --- /dev/null +++ b/Kannada Sahitya/article_345.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ +ನಿನ್ನೆದುರು ಬೆಳೆಯುತ್ತ ಬಂದಿದೆ +ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? +ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? +ಬರೀ ಒಂದು ತಲೆಗಾಗಿ, ನಿನ್ನ ಕೈ ಬಿಡಲು ಸಾಧ್ಯವೇ? +ನಿನ್ನ ಸುಗಂಧದಿಂದ ಮತ್ತೇರಿ ಆತ್ಮ ಹಾರಿತೆ ನಿನ್ನೆಡೆಗೆ? +ಆತ್ಮಕ್ಕೆ ಖಂಡಿತ ಗೊತ್ತು, ನಲ್ಲರ ಮೈಯ ಸುಗಂಧ ಗೊತ್ತು +ವಾಕರಿಕೆ ಮೆದುಳಿಂದ ಮರೆಯಾದದ್ದೆ ತಡ +ತಲೆ ನೂರು ಬಾರಿ ಚೀರಿತು. ಕೂದಲೆಲ್ಲ ಕೊರಗಿದವು +ನಾನು ಮನೆ ಖಾಲಿ ಮಾಡಿದೆ, ನಿನ್ನ ಪೀಠವಾಗಲಿ ನಾನು +ನಾನು ಕರಗುತ್ತಿದ್ದೇನೆ, ನಿನ್ನ ಪ್ರೀತಿ ಭೋರ್ಗರೆದು ಉಕ್ಕಲಿ +ನನ್ನ ಆತ್ಮ, ಶಂಸ್, ಅತ್ತಿತ್ತ ಹೊಯ್ದಾಡಿದೆ +ಕಡಲಲ್ಲಿ ಕಾಲಿರದೆ ಹಡಗಿನ ಹಾಗೆ ತೊಯ್ದಾಡಿದೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_346.txt b/Kannada Sahitya/article_346.txt new file mode 100644 index 0000000000000000000000000000000000000000..c9188c740b35e3c758c46ef629e5512dc14f1e90 --- /dev/null +++ b/Kannada Sahitya/article_346.txt @@ -0,0 +1,581 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೪- +ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. +ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ ಬರುವುದಿಲ್ಲ ಅಂದುಕೊಂಡ ಜನ ಕ್ರಮೇಣ ಅವರ ಉಗ್ರರೂಪವನ್ನು ಕಂಡರು. +ಭಾನುವಾರಗಳಂದು ಇಗರ್ಜಿಯ ಎರಡನೇ ಗಂಟೆ ಆಗುತ್ತಿದೆ ಅನ್ನುವಾಗ ಬಿಳಿ ನಿಲುವಂಗಿ ಧರಿಸಿ, ಗರ್ಡಲ್ ಕಟ್ಟಿಕೊಂಡು ಕುತ್ತಿಗೆಯಲ್ಲಿ ಗೇಣುದ್ದದ ಕರಿ ಮರದ ಶಿಲುಬೆ ಧರಿಸಿ ಅವರು ಕೊಪೆಲನಿಂದ ಹೊರ ಬೀಳುತ್ತಿದ್ದರು. ಅವರ ಕೈಯಲ್ಲಿ ಅತ್ತಿತ್ತ ಬಳಕಾಡುವ ನಾಗರಬೆತ್ತವಿರುತ್ತಿತ್ತು. +ಯಾರು ಕೊಪೆಲಿಗೆ ತಾವಾಗಿ ಬರುವುದಿಲ್ಲವೋ ಅವರನ್ನು ಕೊಪೆಲಗೆ ಎಳೆದು ತರುವ ಕೆಲಸ ತಮ್ಮದು ಎಂದು ಅವರು ಹೇಳಿ ಬಿಟ್ಟಿದ್ದರು. ಸಿಮೋನ, ಪಾಸ್ಕೋಲ, ವೈಜೀಣ್ ಕತ್ರೀನ ಇನ್ನೂ ಕೆಲವರು ತಾವಾಗಿ ಕೊಪೆಲಗೆ ಪೂಜೆ ಕೇಳಲು ಬರುತ್ತಿದ್ದರು. ಉಳಿದ ಮನೆಗಳ ಮುಂದೆ ಪಾದರಿಗಳು ಕಾಣಿಸಿಕೊಳ್ಳುತ್ತಿದ್ದರು. +ಹೀಗಾಗಿ ಭಾನುವಾರಗಳಂದು ಎಲ್ಲ ಕ್ರೀಸುವರ ಮನೆಗಳಲ್ಲೂ ಗಡಿಬಿಡಿ ಗದ್ದಲ. ಈವರೆಗೆ ಯಾವುದೇ ಚಿಂತೆ ಇಲ್ಲದೆ ತಮ್ಮ ಪಾಡಿಗೆ ತಾವು ಮಲಗಿಕೊಂಡಿರುತ್ತಿದ್ದವರು ಈಗ ಶನಿವಾರದಿಂದಲೇ ಈ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. +ಶನಿವಾರ ಸ್ನಾನ. ಇರುವ ಬಟ್ಟೆಗಳಲ್ಲಿ ಒಳ್ಳೆಯದನ್ನು ಒಗೆದು ಒಣಗಿಸಿಕೊಳ್ಳುವುದು. ಸಂಜೆ ಪಾಪ ನಿವೇದನೆ. +“ನಾಳೆ ಮೀಸಗೆ ಹೋಗಬೇಕಲ್ಲ ಅದ್ಕೆ” +“ಭಾನುವಾರದ ಪೂಜೆ ತಪ್ಪ್ಸಿಕೊಳ್ಳಬಾರದಲ್ಲ” +“ಪಾದರಿಗಳು ಬಂದು ಕರೆಯೋದಕ್ಕಿಂತ ನಾವೇ ಹೋಗೋದು ಒಳ್ಳೆದಲ್ವೆ?“ಎಂಬ ಮಾತುಗಳು ಕೇಳಿ ಬರುತ್ತವೆ. +ಆದರೂ ಎಮ್ಮೆ ಮರಿಯ ಧಡಬಡಿಸಿ ಏಳುತ್ತಾಳೆ. +ಏಳು ಎಮ್ಮೆಗಳಿಗೆ ಹಾಲು ಕರೆದು, ಹಾಲನ್ನು ಮಕ್ಕಳ ಮೂಲಕ ವರ್ತನೆ ಮನೆಗಳಿಗೆ ಕಳುಹಿಸಿ, ಎಮ್ಮೆಗಳಿಗೆ ಹುಲ್ಲು ಮತ್ತೊಂದು ಹಾಕಿ ಕೊಟ್ಟಿಗೆಯಿಂದ ಅವುಗಳನ್ನು ಹೊರ ಹಾಕಿ ತಲೆಗೂದಲು ಬಾಚಿಕೊಂಡು ಹೊಸ ಸೀರೆಯುಟ್ಟು ಅವಳು ಕೊಪೆಲಿಗೆ ಹೋಗದಿದ್ದರೆ ಪಾದರಿ ಮನೆಬಾಗಿಲಲ್ಲಿ ಕಾಣಿಸಿಕೊಳ್ಳುತ್ತಾರಲ್ಲ! +ಕಾಯ್ಕಿಣಿಯಲ್ಲಿ ನಿಶ್ಚಿಂತೆಯಿಂದ ಇದ್ದೆವು ತಾವು, ಅಂದುಕೊಳ್ಳುತ್ತಾಳೆ. ಗಂಡ ಸಂತಿಯಾಗ ಇಬ್ಬರು ಮಕ್ಕಳು ಒಡೆಯರ ತೆಂಗಿನ ತೋಟದ ಅಂಚಿನಲ್ಲಿ ಸೋಗೆ ಗುಡಿಸಲು ಕಟ್ಟಿಕೊಂಡು ತೋಟ ನೋಡಿಕೊಂಡಿದ್ದರು. ಜೊತೆಗೆ ಗಂಡ ಕಲ್ಲು ಕಟ್ಟಲು ಭಟ್ಕಳ, ಮುರುಡೇಶ್ವರ ಎಂದೆಲ್ಲ ಹೋಗುತ್ತಿದ್ದ. ಕೈ ತುಂಬ ಕೂಲಿ ದೊರೆಯುತ್ತಿತ್ತು. ಗಂಡನಿಗೆ ಮನೆ ಕಟ್ಟಿಸಿದವರು “ಘರ ಉಗ್ತಾವಣೆ“ದಿವಸ ಪಂಚೆ, ಅಂಗಿ ಬಟ್ಟೆ ತೆಂಗಿನ ಕಾಯಿ ಎಲೆ ಹತ್ತು ರೂಪಾಯಿ ಇನಾಮೂ ಕೊಡುತ್ತಿದ್ದರು. ಭಟ್ಕಳದ ಕೊಲಂಬೋ ಸಾಹೇಬರು ಗಂಡನಿಗೆ ಅವರ ಬಂಗಲೆ ಕಟ್ಟಿದ್ದಕ್ಕೆ ಬಂಗಾರದ ಉಂಗುರ ಕೊಟ್ಟಿದ್ದರು. +ಆಗ ಕೆಲವರು ಕಲ್ಲಿನ ಕೆಲಸ ಮಾಡಲು ಘಟ್ಟದ ಮೇಲೆಹೋಗಲಾರಂಭಿಸಿದರು. ಇವರೆಲ್ಲ ಮಳೆಗಾಲ ಮುಗಿಯಿತು ಅನ್ನುವಾಗ ತಿರುಗಿ ಬರುತ್ತಿದ್ದರು. ಬರುವಾಗ ಮಕ್ಕಳಿಗೆ ಬಟ್ಟೆ, ಹೆಂಡತಿಗೆ ಸೀರೆ, ಬಂಗಾರ, ಹಣ ತರುತ್ತಿದ್ದರು. ಆಗಾಗ್ಗೆ ಅಲ್ಲಿಂದ ಬರುವವರ ಸಂಗಡ ಹಣ ಕಳುಹಿಸುವುದೂ ಇತ್ತು. ಗಂಡ ಏಕೋ ಈ ಬಗ್ಗೆ ಯೋಚಿಸಲಿಲ್ಲವೇ ಎಂದು ಮರಿಯ ವಿಚಾರ ಮಾಡುತ್ತಿರಬೇಕಾದರೇನೆ ಒಂದು ದಿನ ಗಂಡ ಮನೆಗೆ ಬಂದವನೇ- +“ಮರಿಯಾ..“ಎಂದ +“ಏನು? ” +“ಸಿಮೋನ ಘಟ್ಟದ ಮೇಲಕ್ಕೆ ಕರಿತಿದ್ದಾನೆ” +“ಸುಮಾರು ಜನ ಇಲ್ಲಿಂದ ಹೋಗಿದಾರೆ, ಅಲ್ವ?” +“ಹೌದು ಭಟ್ಕಳ, ಮುರುಡೇಶ್ವರದಿಂದ ಹೋಗಿದ್ದಾರೆ..ಸಿಮೋನ ಅಲ್ಲಿ ಇಮಾರತಗಳನ್ನು ಕಟ್ಟಸ್ತಾನೆ…ಇಲ್ಲಿಂದ ಹೋದವರಿಗೆಲ್ಲ ವಾರಕ್ಕೆ ಒಂದು ದಿನ ಬಟವಾಡೆಯಾಗುತ್ತೆ..” +ಕೊಂಚ ತಡೆದು ಸಂತಿಯಾಗ +“ಇಲ್ಲಿ ನಮ್ಮದು ಅಂತ ಏನಿದೆ ಮರಿಯಾ..ಒಡೆಯನ ತೋಟ ನೋಡಿಕೊಳ್ಳಲಿಕ್ಕೆ ನಾವು ಇಲ್ಲಿರೋದು..ಒಡೆಯ ಇಲ್ಲಿಂದ ಹೊರಡು ಅಂದರೆ ಹೊರಡಬೇಕು..ನಾವೂನು ಇಲ್ಲೊಂದು ಮನೆಗಿನೆ ಅಂತ ಮಾಡಿಕೊಳ್ಳದಿದ್ದರೆ ಹ್ಯಾಗೆ..” +ಗಂಡ ಏನೇನೋ ಕನಸುಗಳನ್ನು ಕಟ್ಟಿದ. ಒಡೆಯನ ತೋಟ ನೋಡಿಕೊಂಡು, ಬೀಳುವ ಮಡಲು ಬೊಂಡೆ ಆರಿಸಿಕೊಂಡು ಎಷ್ಟು ದಿನ ಇರುವುದು ಎಂದು ಕೇಳಿದ. ಇಲ್ಲಿ ಸಿಗುವ ಕೂಲಿ ಅಲ್ಲಿಗಲ್ಲಿಗೆ ಆಗುತ್ತದೆ. ನಾಲ್ಕು ಕಾಸು ಹೆಚ್ಚು ಸಿಗಬೇಕೆಂದರೆ ಘಟ್ಟದ ಮೇಲಕ್ಕೇನೆ ಹೋಗಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ. +“ಹೋಗಿ ಬನ್ನಿ….ನಾನಿಲ್ಲಿ ನೋಡ್ಕೋತೀನಿ“ಎಂದಳು ಮರಿಯ. +ಮರಿಯ ಗಟ್ಟಿ ಹೆಂಗಸು. ಹಸಿ ಮಡಲು ಹೆಣೆದು ಮಾರಿ ಹಣ ಮಾಡುತ್ತಾಳೆ. ಕತ್ತದ ಹುರಿ ಮಾಡುತ್ತಾಳೆ. ಅವರಿವರ ಗದ್ದೆಗಳಿಗೆ ನಾಟಿಗೆ ಕೊಯಿಲಿಗೆ ಹೋಗುತ್ತಾಳೆ. ಇಬ್ಬರು ಮಕ್ಕಳನ್ನು ನೋಡಿಕೊಂಡು ಅವಳು ಇಲ್ಲಿರುತ್ತಾಳೆ. ತಾನು ಘಟ್ಟದ ಮೇಲಿನಿಂದ ದುಡಿದು ತರುವುದು ಎಂದು ಸಂತಿಯಾಗ ನಿರ್ಧರಿಸಿದ. ಮತ್ತೊಂದು ಚಳಿಗಾಲ ಬಂತು ಎನ್ನುವಾಗ ಆತ ಸಿಮೋನನ ಜೊತೆ ಘಟ್ಟ ಏರಿದ. +ಸಿಮೋನ ತನ್ನ ಜೊತೆಯಲ್ಲಿ ಏಳೆಂಟು ಜನರನ್ನು ಕರೆ ತಂದಿದ್ದ. ಸಾನಬಾವಿ ಪೆದ್ರು, ಪಾಸ್ಕೊಲ, ಗುಂಡುಬಾಳೆ ಗ್ಯಾಬ್ರೆಲ್, ಮುರುಡೇಶ್ವರದ ಇಂತ್ರು, ಜೂರ್ನಿ, ಅಂಡೆಮರಿಯಾಣ, ಡೊಂಕೆಬಸ್ತು, ಬಾಳ ಅನ್ನುವ ಓರ್ವ ಹುಡುಗ. ಈ ಬಾಳ ಉಳಿದವರಿಗೆಲ್ಲ ಅಡಿಗೆ ಮಾಡಿ ಹಾಕುತ್ತಿದ್ದ. +ಶಿವಸಾಗರದ ಹಳ್ಳಿಗೆ ಅನತಿ ದೂರದಲ್ಲಿ ಒಂದು ಬಿಡಾರ ಕಟ್ಟಿಕೊಂಡು ಇವರಿದ್ದರು. +ಸಿಮೋನ ಶಿವಸಾಗರದಕೆರೆಯ ಹತ್ತಿರವೇ‌ಒಂದು ದೊಡ್ಡ ಇಮಾರತಿನ ಕಟ್ಟೋಣದಲ್ಲಿ ತೊಡಗಿದ್ದ. ಊರ ಹೊರಗಿನಿಂದ ಕಲ್ಲು ತೆಗೆದು ಇಲ್ಲಿ ತಂದು ಕಟ್ಟಬೇಕಿತ್ತು. ಕಲ್ಲು ತೆಗೆಯುವ, ತೆಗೆದ ಕಲ್ಲನ್ನು ಕೆತ್ತುವ, ಕೆತ್ತಿದ ಕಲ್ಲನ್ನು ಕಟ್ಟುವ ಮೊದಲಾದ ಕೆಲಸಗಳಿಗೆ ತುಂಬಾ ಜನ ಬೇಕಾಗುತ್ತಿತ್ತು. ಊರಿನಿಂದ ಕರೆತಂದವರ ಜೊತೆಗೆ ಸ್ಥಳಿಯರು ಕೆಲವರನ್ನು ಸಿಮೋನ ನೇಮಿಸಿಕೊಂಡಿದ್ದ. ನೀರು ತಂದು ಹಾಕಲು, ಕಲಿಸಿದ ಮಣ್ಣು, ಗಾರೆ ತಂದು ಕೊಡಲು ಹೆಂಗಸರಿದ್ದರು. ಇಮಾರತನ್ನು ಕಟ್ಟಿಸುತ್ತಿದ್ದ ಹೆಗಡೆ ವಾರಕ್ಕೊಮ್ಮೆ ಸಿಮೋನನಿಗೆ ಹಣಕೊಡುತ್ತಿದ್ದ. ಸಂತೆಯ ದಿನ ಸಿಮೋನ ಕೆಲಸಗಾರರಿಗೆ ಬಟವಾಡೆ ಮಾಡುತ್ತಿದ್ದ. +ಬಾಳ ಬೆಳಿಗ್ಗೆ ಎದ್ದು ಕುಸುಬಲಕ್ಕಿ ಗಂಜಿಮಾಡುತ್ತಿದ್ದ. ಜೊತೆಗೆ ಒಣಗಿದ ಬಂಗಡೆ ಮೀನು. ಒಲೆಗೆ ಹಾಕಿ ಸುಟ್ಟರೆ ಅದರ ಪರಿಮಳ ಹತ್ತು ಮನೆಗಳ ಆಚೆಗೆ ಹೋಗುತ್ತಿತ್ತು. “ಸಮುದ್ರಕ್ಕೆ ಬೆಂಕಿ ಬಿದ್ದಿದೆ“ಎಂದು ಎಲ್ಲರೂ ಮಾತನಾಡಿಕೊಂಡು ನಗುತ್ತಿದ್ದರು. ಗಂಜಿ ಊಟ ಮುಗಿಸಿಕೊಂಡು ಕಲ್ಲು ತೆಗೆಯುವವರು ಕ್ವಾರಿಗೆ, ಕಲ್ಲು ಕೆತ್ತುವವರು, ಕಟ್ಟುವವರು ಇಮಾರತಿಗೆ ಹೋಗುತ್ತಿದ್ದರು. ಹುಡುಗ ಬಾಳ ಹನ್ನೆರಡು ಗಂಟೆಗೆ ಅಂಬಲಿ ತೆಗೆದುಕೊಂಡು ಹೋಗುತ್ತಿದ್ದ. ಎರಡು ಮೂರು ಗಿಳಾಸು ಅಂಬಲಿ ಕುಡಿದು, ಕವಳ ತಿಂದು ಎಲ್ಲರೂ ಕೆಲಸಕ್ಕೆ ತೊಡಗಿಕೊಳ್ಳುತ್ತಿದ್ದರು. ಸಂಜೆ ಮನೆಯಲ್ಲಿ ಮತ್ತೆ ಊಟ ಬಂಗಡೆ ಮೀನು. +ಮನೆಗೆ ಬಂದ ತಕ್ಷಣ ಸ್ನಾನ. +ಸಿಮೋನ ಒಬ್ಬನೇ, ಕಿಟಕಿಯ ಬಳಿ ಒಂದು ಶಿಲುಬೆ ಇರಿಸಿ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದ ಇವನ ಜತೆ ಸೇರಿಕೊಳ್ಳುವವರು ಕಡಿಮೆ. +ಎಂಟು ತಿಂಗಳು ಶಿವಸಾಗರದಲ್ಲಿ ಕೆಲಸ. ಮಳೆಗಾಲ ಬಂತು ಅನ್ನುವಾಗ ಊರಿಗೆ. +ಹೀಗೇ ಐದಾರು ವರ್ಷ ನಡೆಯಿತು. +ಸಿಮೋನ ಇಲ್ಲೊಂದು ಮನೆ ಕಟ್ಟಿದ, ಅವನ ಹೆಂಡತಿ ಮಕ್ಕಳು ತಾಯಿ ಇಲ್ಲಿಗೆ ಬಂದರು. ಸಾನಬಾವಿ ಪೆದ್ರು, ಸಾಸ್ಕೋಲ ಕೂಡ ಮನೆ ಮಾಡಿದರು. +ಸಂತಿಯಾಗ ಊರಿಗೆ ಹೋದವ +“ಮರಿಯ..“ಎಂದ +“ಏನು?” +“ನಾನೂ ಮನೆ ಮಾಡತೇನೆ ನೀನೂ ಬಂದು ಬೀಡು ಮಕ್ಕಳ ಜೊತೆ” +“ಹೌದಾ” +ಅವಳ ಮುಖ ಅರಳಿತು. +ಇಲ್ಲಿ ಮಕ್ಕಳನ್ನು ಇರಿಸಿಕೊಂಡು ಬದುಕು ಮಾಡುವುದು ಅವಳಿಗೆ ಕಷ್ಟಕರವೆನಿಸಿತ್ತು. ಸಂತಿಯಾಗ ಶಿವಸಾಗರಕ್ಕೆ ಹೋಗಿ ಬರಲು ಪ್ರಾರಂಭಿಸಿದ ನಂತರ ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವಾಗಿತ್ತು. ಇಬ್ಬರ ಬದಲು ಈಗ ಮೂವರು ಮನೆಯಲ್ಲಿ ಅಧಿಕವಾಗಿದ್ದರು. ಸಂತಿಯಾಗ ಆಗಾಗ್ಗೆ ಅವರಿವರ ಹತ್ತಿರ ಹಣ ಕಳುಹಿಸುತ್ತಿದ್ದ. ಬರುವಾಗ ಹಣ ತರುತ್ತಿದ್ದ. ಇದರಲ್ಲಿ ಏನನ್ನೂ ಉಳಿಸಲು ಆಗಿರಲಿಲ್ಲ. ಇಲ್ಲಿ ತಮ್ಮದಾದ ಒಂದು ಮನೆಯನ್ನು ಮಾಡುವ ಕನಸು ಕನಸಾಗಿಯೇ ಉಳಿದಿತ್ತು. +“ಮಾಡಿ..ನಾವೂ ಬರತೇವೆ“ಎಂದಳು ಮರಿಯ. +ಸಂತಿಯಾಗ ನಗರಸಭೆಗೊಂದು ಅರ್ಜಿ ಹಾಕಿ ಸಿಮೋನನ ಮನೆ ಪಕ್ಕದಲ್ಲಿಯೇ ಒಂದು ನಿವೇಶನ ಕೊಂಡ. ಸಣ್ಣದೊಂದು ಬಿಡಾರ ಕಟ್ಟಿದ. ಮಣ್ಣಿನಗೋಡೆ ಬಿದಿರ ಮಾಡು ಮೇಲೆ ಸೋಗೆ ಹೋದಿಸಿದ. ತಗಡಿನ ಬಾಗಿಲು, ಬೇರೆ ಮನೆಗಳು ಕೂಡ ಹೀಗೆಯೇ ಇದ್ದವಲ್ಲ. +ಗೇರಸೊಪ್ಪೆಯವರೆಗೆ ಡೋಣಿ ಅಲ್ಲಿಂದ ಎತ್ತಿನಗಾಡಿ. ಅವರು ಶಿವಸಾಗರಕ್ಕೆ ಬಂದಾಗ ಮರಿಯಾಗೆ ಅವಳ ಮಕ್ಕಳಿಗೆ ಸಂತೋಷವಾಯಿತು. ಶಿವಸಾಗರ ಏನೆಂದರೂ ಪೇಟೆ. ಇಲ್ಲಿಯ ಜನರ ರೀತಿ ನೀತಿ ಬೇರೆಯಾಗಿತ್ತು. ಸಾಲು ಸಾಲಾಗಿದ್ದ ಅಂಗಡಿಗಳ ಪೇಟೆ ಆಕರ್ಷಕವಾಗಿತ್ತು. ಅಲ್ಲದೇ ಇಲ್ಲಿ ತಾವು ಮಾತ್ರ, ತಮ್ಮವರು ಬೇರೆ ಯಾರೂ ಇಲ್ಲ ಎಂಬ ಕೊರತೆ ಅವರಿಗೆ ಕಾಣಲಿಲ್ಲ. ಏಕೆಂದರೆ ಹಳ್ಳಿಯ ಹತ್ತಿರವೇ ಮತ್ತೂ ಮೂರು ನಾಲ್ಕು ಮನೆಗಳು ಇದ್ದವು. ಸಿಮೋನ, ಸಾನಬಾವಿ ಪೆದ್ರು. ಪಾಸ್ಕೊಲರ ಬಿಡಾರಗಳಿದ್ದವು. ಇದರಿಂದ ಇವರಿಗೆ ಅನುಕೂಲವೂ ಆಯಿತು. +ಒಂದು ಕೊರತೆ ಎಂದರೆ ಶಿವಸಾಗರದಲ್ಲಿ ಇಗರ್ಜಿ ಇರಲಿಲ್ಲ. ಭಾನುವಾರದ ಪೂಜೆಗೆ ದಿವ್ಯ ಪ್ರಸಾದ ಸ್ವೀಕಾರಕ್ಕೆ ಅವಕಾಶವಿರಲಿಲ್ಲ. ಇದೊಂದು ದೊಡ್ಡ ಕೊರತೆ ಎನಿಸಿತು. +ಇದನ್ನು ತುಂಬಿಕೊಳ್ಳಲು ಮನೆಯಲ್ಲಿಯೇ ಪ್ರಾರ್ಥನೆ ತೇರ್ಸ ಮಾಡುವುದನ್ನು ರೂಢಿಗೆ ತಂದರೂ ಇದು ಬಹಳ ದಿನ ನಡೆಯಲಿಲ್ಲ. +ಸಿಮೋನ ಶೆಟ್ಟಿಹಳ್ಳಿ ಶ್ರೀಮಂತರ ಮಹಡಿ ಮನೆ ಕಟ್ಟಿಸುತ್ತಿದ್ದ. ಎಂದಿನಂತೆ ಸಂತಿಯಾಗ ಅರವತ್ತು ಅಡಿ ಎತ್ತರದ ಗೋಡೆಯ ಮೇಲೆ ನಿಂತು ಕಲ್ಲು ಕಟ್ಟುತ್ತಿದ್ದ. ಅದೇನಾಯಿತೋ ತಲೆಗೆ ಕತ್ತಲೆ ಬರುತ್ತಿದೆ ಎಂದು ಕೆಳಗಿನಿಂದ ಕಲ್ಲು ಕೊಡುತ್ತಿದ್ದವನಿಗೆ ಹೇಳುತ್ತಲೆ, ಅಲ್ಲಿಂದ ಕೆಳಗೆ ಬಿದ್ದ. ಬಿದ್ದವನು ಕೂಡಲೇ ತಲೆಯೊಡೆದು ಸತ್ತ. ಅವನ ಶವವನ್ನು ಮನೆಗೆ ಹೊತ್ತು ತಂದರು. +ಶಿವಸಾಗರದಲ್ಲಿ ಸತ್ತ ಕ್ರೀಸುವರನ್ನು ಮಣ್ಣು ಮಾಡಲು ಸಿಮಿತ್ರಿ ಇಲ್ಲ. ಈ ಕೆಲಸ ನಿರ್ವಹಿಸಲು ಪಾದರಿ ಇಲ್ಲ. +ಏನು ಮಾಡಬೇಕು? +ಕ್ರಿಸ್ತುವನೊಬ್ಬನಿಗೆ ಯಾವುದೇ ಸಂಸ್ಕಾರ ನೀಡದೆ ಎಲ್ಲೋ ಒಂದು ಕಡೆ ಹುಗಿಯುವುದೆ? +ಸಿಮೋನ ಬಂದು ದಾರಿ ತೋರಿಸಿದ. +ಅವನು ಅದೇ ಹೊಸದಾಗಿ ಗಾಡಿ ಕೊಂಡಿದ್ದ. ಆತನ ಎತ್ತುಗಳು ಬಲವಾಗಿದ್ದವು. ಮಂಜಣ್ಣ ಅನ್ನುವವ ಈ ಗಾಡಿ ಎತ್ತುಗಳನ್ನು ನೋಡಿಕೊಳ್ಳುತ್ತಿದ್ದ. +ಗಂಡನ ಶವವನ್ನು ಗಾಡಿಯಲ್ಲಿ ಹಾಕಿಕೊಂಡು ತಾನು ಊರಿಗೆ ಹಿಂತಿರುಗಿದೆ. ಮಕ್ಕಳೂ ಜೊತೆಗಿದ್ದರು. ಮುರುಡೇಶ್ವರ ಇಂತ್ರು ಜೊತೆಗೆ ಬಂದ. +ಊರಿನಲ್ಲಿ ಬಂಧುಗಳೆಲ್ಲ ಓಡಿ ಬಂದರು. ಪಾದರಿಗಳೂ ಸಿಕ್ಕರು. ಸಿಮಿತ್ರಿಯಲ್ಲಿ ಹೊಂಡ ತೆಗೆಯಲಾಯಿತು. ಗಂಡನಿಗೆ ಒಳ್ಳೆಯ ಮರಣ ಪ್ರಾಪ್ತವಾಯಿತು. ಬಂಧು ಬಳಗದವರು, ಪಾದರಿ ಕೂಡ ಸಂತಿಯಾಗನ ಶವವನ್ನಿ ಇಷ್ಟು ದೂರ ತಂದದ್ದು ಒಳ್ಳೆಯದಾಯಿತು ಎಂದರು. ಗಂಡನ ಹೆಸರಿನಲ್ಲಿ ಮೂರು ದಿನ , ಹನ್ನೊಂದು ದಿನ, ತಿಂಗಳ ಪೂಜೆ ಮಾಡಿಸಿದೆ. +ಮುಂದೆ? +ಸಂತಿಯಾಗ ಕಟ್ಟಿದ ಮನೆ ಶಿವಸಾಗರದಲ್ಲಿತ್ತು. ಕಾಯ್ಕಿಣಿಯಲ್ಲಿ ತನ್ನದು ಅನ್ನುವುದು ಎನೂ ಇರಲಿಲ್ಲ. ತೆಂಗಿನ ತೋಟವನ್ನು ಕೂಡ ಒಡೆಯರು ನೋಡಿಕೊಳ್ಳಲು ಬೇರೆ ಯಾರಿಗೋ ವಹಿಸಿದ್ದರು. ಬಂಧು ಬಳಗದವರು ತಿಂಗಳ ಪೂಜೆಗೆ ಬಂದವರು ಊಟ ಮಾಡಿ ತಿರುಗಿ ಹೋದರು. ಸಂತಿಯಾಗನ ಚಿಕ್ಕಪ್ಪ ಜೇಮ್ಸ- +“..ನೀನು ಮುಂದೇನು ಮಾಡುವಾಕೆ?’ ಎಂದು ಕೇಳಿದರು. +ಇವಳು ಎಲ್ಲಿ ಅಲ್ಲಿಯೇ ಉಳಿದುಬಿಡುತ್ತಾಳೋ ಎಂಬ ಅಂಜಿಕೆ ಅವರಿಗೆ. +“ನಾನು ಘಟ್ಟದ ಮೇಲೆ ಹೋಗತೀನಿ”. ಎಂದಳು. +ಮರಿಯ ಗೇರುಸೊಪ್ಪೆಗೆ ಬಂದ ಗಾಡಿಯೊಂದನ್ನೇರಿ ಅವಳು ತಿರುಗಿ ಶಿವಸಾಗರಕ್ಕೆ ಬಂದಳು. +ಅವಳು ಊರಿಗೆ ಬಂದ ಎರಡನೇ ದಿನ ಶೆಟ್ಟಿಹಳ್ಳಿ ಸಾಹುಕಾರರಂತೆ , ಅವರು ಕಮಾನು ಗಾಡಿಯಲ್ಲಿ ಕುಳಿತು ಅವಳ ಮನೆಗೆ ಬಂದರು. +“…ಹೀಗೆ ಆಗಬಾರದಿತ್ತು“ಎಂದರು +“ಮನೆ ತುಂಬ ಮಕ್ಕಳು ಎಂದು ಕೇಳಿದೆ. ಮುಂದೆ ಏನು ಮಾಡತೀಯ?“ಎಂದು ಪ್ರಶ್ನಿಸಿದರು. +ಹೋಗುವಾಗ ತನ್ನ ಕೈಗೆ ನೂರು ರೂಪಾಯಿ ಕೊಟ್ಟು ಹೋದರು. +ತಾನು ಬದುಕಲು ಒಂದು ದಾರಿ ಕಂಡುಕೊಳ್ಳಬೇಕಿತ್ತು. +ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ತನ್ನ ಕಷ್ಟ ಸಂಕಟಗಳಿಗೆ ನೆರವಾಗುತ್ತಿದ್ದವಳು- +“ಮರಿಯಮ್ಮ….ಮನೆಯಾಗೆ ಒಂದೆರಡು ಎಮ್ಮೆ ಕಟ್ಟು. ನಿನ್ನ ಕುಟುಂಬಕ್ಕೊಂದು ದಾರಿ ಆಗತೈತೆ“ಎಂದಳು. +ತಾನು ಎರಡು ಎಮ್ಮೆ ಕೊಂಡೆ. ಅವುಗಳ ಚಾಕರಿಗೆ ತೊಡಗಿದೆ. ಹಾಲು ಮಾರಾಟ ಪ್ರಾರಂಭಿಸಿದೆ. +ಸಂತಿಯಾಗ ಕೊನೆಯದಾಗಿ ತನಗೊಂದು ಉಪಕಾರ ಮಾಡಿ ಹೋಗಿದ್ದ. ಅವನು ತೀರಿಕೊಂಡ ಆರು ತಿಂಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದೆ. +ಆಗ ಕೂಡ ತನಗೆ ನೆರವಾದವಳು ರುದ್ರಮ್ಮ +“ಈ ದರಿದ್ರದ್ದು ಯಾಕೆ ಹುಟ್ಟಿತು“ಎಂದಾಗ ರುದ್ರಮ್ಮ- +“…ಚಲೋದಾಯ್ತು ಬಿಡು..ನಿನ್ನ ಮನೆಗೊಂದು ಹೆಣ್ಣು ಬೇಕಿತ್ತು….ಮಾಲಕ್ಷ್ಮೀ ಬಂದಾಳೆ..ಅಪದ್ಧ ನುಡಿಬ್ಯಾಡ”. +ಎಂದು ಮಗುವನ್ನು ಎತ್ತಿಕೊಂಡು ಮುತ್ತಿಟ್ಟಳು. +ರುದ್ರಮ್ಮ ತನಗೆ ಮಾಡಿದ ಉಪಕಾರವನ್ನು ಎಂದೂ ಮರೆಯದಾದಳು ಮರಿಯ. ಜಾತಿಯವಳಲ್ಲ. ರಕ್ತ ಸಂಬಂಧ ಮೊದಲೇ ಅಲ್ಲ. ಆದರೆ ತನಗೆ ನೋವು ಕಾಣಿಸಿಕೊಂಡ ಕ್ಷಣದಿಂದ ಮಗುವನ್ನು ಹೆರುವ ತನಕ ತನ್ನ ಮಗ್ಗುಲನ್ನು ಬಿಟ್ಟು ಏಳಲಿಲ್ಲ ಈ ಮುದುಕಿ. ನಂತರ ಕೂಡ ತನಗೆ ಸ್ನಾನ ಮಗುವಿಗೆ ಸ್ನಾನ ಎಂದು ಮನೆಯಲ್ಲಿಯೇ ಉಳಿದಳು. ಹುಡುಗರು ಹಾಲು ಕರೆಯುವುದು, ಒಯ್ದು ಕೊಡುವುದು ಎಂದೆಲ್ಲ ಮಾಡಿದರು. ಮೂರು ತಿಂಗಳಿಗೇನೆ ತಾನು ಎದ್ದು ಕೆಲಸಕ್ಕೆ ತೊಡಗಿದಾಗ ರುದ್ರಮ್ಮ- +“ಹಸಿಮೈ….ಮಲಕ್ಕೋ ನೀನು“ಎಂದಳು. +ಒಂದು ವರ್ಷದವರೆಗೆ ಮಗಳ ಜ್ಞಾನಸ್ನಾನ ಮಾಡಿಸಲಾಗಲಿಲ್ಲ. ಗಂಡನ ವರ್ಷದ ಪೂಜೆಗೆ ಊರಿಗೆ ಹೋದಾಗ ಅಲ್ಲಿ ಮಗಳಿಗೆ ಫ಼ಿಲೋಮೆನಾ ಎಂದು ಹೆಸರಿಡಲಾಯಿತು. ಊರಿಗೆ ಬಂದದ್ದೆ ರುದ್ರಮ್ಮ- +“ಮಗೂಗೆ ಏನು ಹೆಸರಿಟ್ಟೆ ಮರಿಯಮ್ಮ?“ಎಂದು ಕೇಳಿದಳು. +“ಫ಼ಿಲೋಮೆನಾ ಅಂತ“ಎಂದೆ ತಾನು. +ಈ ಹೆಸರು ಮಾತ್ರ ರುದ್ರಮ್ಮನ ಬಾಯಲ್ಲಿ ಪಿಲ್ಲಮ್ಮ ಎಂದಾಯಿತು. +ಸಿಮೋನ ಹೊಸದಾಗಿ ಗಾಡಿ ಕೊಂಡು, ಗಾಡಿಗೆಂದು ಎರಡು ಎತ್ತು ತಂದಾಗ ಅವುಗಳನ್ನು ನೋಡಿಕೊಳ್ಳಲು ಗಾಡಿ ಹೊಡೆಯಲು ಯಾರನ್ನಾದರೂ ಇರಿಸಿಕೊಳ್ಳುವುದು ಅವನಿಗೆ ಅನಿವಾರ್ಯವಾಯಿತು. ಆಗ ಅವನಿಗೆ ಸಿಕ್ಕವ ಮಂಜ. ಮಂಜ ಹತ್ತಿರದ ಬರದೊಳ್ಳಿಯವ. ಅಲ್ಲಿ ಕೂಲಿನಾಲಿ ಮಾಡಿಕೊಂಡಿದ್ದವ. ಎತ್ತು ಸಾಕುವುದು. ಗಾಡಿ ಹೊಡೆಯುವುದು ಅವನಿಗೆ ಗೊತ್ತಿತ್ತು. +“ಆ ಕೆಲಸ ನನಗೆ ಬುಡಿ..“ಎಂದ ಆತ. +ಸಿಮೋನ ಅವನನ್ನು ಈ ಕೆಲಸಕ್ಕೆ ನೇಮಿಸಿಕೊಂಡ. ಕಾಮಗಾರಿ ನಡೆಯುವ ಸ್ಥಳಕ್ಕೆ ಕಲ್ಲು, ಮಣ್ಣು, ಮರಳು ಸಾಗಿಸಲು ಅವನಿಗೆ ಗಾಡಿ ಬೇಕಾಗುತ್ತಿತ್ತು. ಯಾವುದೇ ತಕರಾರು ಇಲ್ಲದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಮಂಜ. +“..ಸಾಹುಕಾರ್ರೆ ದಿನಾ ಹಳ್ಳಿಯಿಂದ ಬರಬೇಕು…ನನಗೆ ಇಲ್ಲೇ ಎಲ್ಲಾರ ಒಂದ ಮನೆ ಕೊಡ್ಸಿ ಬುಡಿ“ಎಂದು ದುಂಬಾಲು ಬಿದ್ದ. +ಸಿಮೋನನ ಮನೆ ಹಿಂಬದಿಯಲ್ಲಿಯ ಒಂದು ಜಾಗವನ್ನು ಸಿಮೋನ ಮೊನ್ನೆ ಮೊನ್ನೆ ಯಾರಿಂದಲೋ ಕೊಂಡಿದ್ದು ಅಲ್ಲಿ ಒಂದು ಹುಲ್ಲಿನ ಗುಡಿಸಲನ್ನು ಆತ ಕಟ್ಟಿದ್ದ. +“ಅಲ್ಲಿ ಇರು ನೋಡುವ“ಎಂದ ಸಿಮೋನ. +ಮಂಜನಿಗೆ ಸಂತಸವಾಯಿತು. ಅವನು ತನ್ನ ಹೆಂಡತಿ ಮಕ್ಕಳು ತಾಯಿಯ ಜತೆ ಈ ಮನೆಗೆ ಬಂದದ್ದೂ ಆಯಿತು. ರುದ್ರಮ್ಮ ಮಂಜನ ತಾಯಿ. ನಡು ವಯಸ್ಸು ಗಟ್ಟಿ ಮುಟ್ಟಾಗಿದ್ದಳು. ಕಣ್ಣು ಕಿವಿ ಎಲ್ಲ ಚುರುಕು. ಎಲೆ ಅಡಿಕೆ ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೊರಟರೆ, ಐದಾರು ಮನೆಗಳನ್ನು ಸುತ್ತಿ, ಅಲ್ಲಿರುವವರನ್ನೆಲ್ಲ ಮಾತನಾಡಿಸಿ, ಅವರಿವರ ಕೆಲಸ ಮಾಡಿಕೊಟ್ಟು ಮಕ್ಕಳನ್ನು ಆಡಿಸಿ ಮನೆಗೆ ಬರುತ್ತಿದ್ದಳು. +ಯಾರಾದರೂ ಅಯ್ಯೋ ಎಂದರೆ ರುದ್ರಮ್ಮ ಅಲ್ಲಿ ಹಾಜರ್. +ಅವಳಿಗೆ ಆ ಜಾತಿ ಈ ಜಾತಿ ಎಂದು ಏನಿಲ್ಲ. ಅವರ ಮನೆಗೆ ಹೋಗಬಾರದು, ಇವರ ಮನೆಯಲ್ಲಿ ತಿನ್ನಬಾರದು ಎಂದಿಲ್ಲ. +“ತೆಗಿ ಅತ್ಲಾಗೆ ಎಲ್ರು ಮನುಷ್ಯರೇಯ“ಎಂದು ಮಾತು ಮಾತಿಗೆ ಹೇಳುತ್ತಾಳೆ. +ಸಿಮೋನನ ಅಕ್ಕ ಪಕ್ಕದ ಮನೆಗಳಲ್ಲಿರುವ ಕಿರಿಸ್ತಾನರ ಹೆಂಗಸರ ಪಾಲಿಗೆ ರುದ್ರಮ್ಮ ಸದಾ ನೆರವಾಗುತ್ತಾಳೆ. +ಏನು ಆಗಬೇಕು ಎಂದು ಅವಳು ಯಾವತ್ತೂ ಕೇಳುವುದಿಲ್ಲ. ನೇರವಾಗಿ ಹೋಗಿ ಕೆಲಸಕ್ಕೆ ಕೈ ಹಾಕುತ್ತಾಳೆ. +ಬಾಣಂತಿ ಗರ್ಭಿಣಿ ಅಂದರಂತೂ ಇವಳ ಹೃದಯ ಕರಗಿ ನೀರಾಗುತ್ತದೆ. ಮಕ್ಕಳೆಂದರೆ ಪ್ರಾಣ ಬಿಡುತ್ತಾಳೆ. +ಮರಿಯಮ್ಮನಿಗೆ ಬಂದ ಕಷ್ಟ ನೋಡಿ ತುಂಬಾ ನೊಂದವಳು ರುದ್ರಮ್ಮ. +“ಆ ದೇವ್ರು ಹಿಂಗೆ ಮಾಡೋದ?“ಎಂದು ದೇವರನ್ನೇ ಬೈಯ್ದಳು. ಮರಿಯಳ ಬೆಂಬಲಕ್ಕೆ ನಿಂತಳು. ಅವಳಿಗೆ ಎಮ್ಮೆ ಕೊಡಿಸಿದಳು. ಮನೆಯ ಹಿಂದೆ ಕೊಟ್ಟಿಗೆ ಕಟ್ಟಿಸಲು ನೆರವಾದಳು. +“…..ಆ ಯಮರಾಯ ಬರೋಗಂಟ ಬದುಕಾಕೇ ಬೇಕು…ಸೋತು ಸುಣ್ಣ ಆಗಬಾರದು“ಎಂದು ಅವಳಲ್ಲಿ ಧೈರ್ಯ ತುಂಬಿದಳು. +ಮರಿಯಳ ಗಂಡ ಸತ್ತ ನಂತರ ಅವಳಿಗೆ ಹುಟ್ಟಿದ ಮಗುವನ್ನು ಇವಳೇ ನೋಡಿಕೊಂಡಳು. ಮಗು ರಚ್ಚು ಹಿಡಿದರೆ ದೃಷ್ಠಿ ತೆಗೆದಳು. +ಮಗುವಿಗೆ ಸಿಡುಬಾದರೆ ಊರ ಮಾರಮ್ಮನಿಗೆ ಹರಕೆ ಹೊತ್ತು ಇವಳೇ ಹೋಗಿ ಹಣ್ಣು ಕಾಯಿ ಮಾಡಿಸಿಕೊಂಡು ಬಂದು ಮಗುವಿನ ಮೈಗೆ ಭಂಡಾರ ಪೂಸಿದಳು. +ಮಗು ನಿದ್ದೆಯಲ್ಲಿ ಎದ್ದು ಕಿರುಚಿಕೊಂಡರೆ ಧೂಪದ ಮರದ ಭೂತಕ್ಕೆ ತೆಂಗಿನ ಕಾಯಿ ಸುಲಿದು ಇಟ್ಟಳು. +ಮಗು ಬಿಳಿಚಿಕೊಂಡು ಸಣ್ಣಗಾಗಿದೆ ಎಂದು ಕೋಣನ ಕಟ್ಟೆ ತಾಯಿತ ತಂದು ಮಗುವಿನ ಸೊಂಟಕ್ಕೆ ಕಟ್ಟಿದಳು. +ಇದನ್ನೆಲ್ಲ ನೋಡುತ್ತಿದ್ದ ಮರಿಯ ಬೇಡ ಅನ್ನಲಿಲ್ಲ. ಮಗುವಿಗೆ ಒಳಿತಾದರೆ ಸಾಕು ಎಂದು ನಂಬಿದಳು. ರುದ್ರಮ್ಮನ ಈ ಆಚರಣೆ ಇತರೆಯವರಿಗೂಸರಿ ಎನಿಸಿತು. ಮರಿಯಳ ಮನೆ ಅಕ್ಕ ಪಕ್ಕದವರೂ ಹೀಗೆಯೇ ಮಾಡಿದರು. +ಮರಿಯಳ ಮನೆಯಲ್ಲಿಯ ಎಮ್ಮೆಗಳ ಸಂಖ್ಯೆ ಅಧಿಕವಾಯಿತು. ಹಾಲು ಕರೆದು, ಎಮ್ಮೆ ತೊಳೆದು ಅವುಗಳಿಗೆ ಹಿಂಡಿ ಹುಲ್ಲು ಹಾಕಿ ನೋಡಿಕೊಳ್ಳುವುದೇ ಒಂದು ಕೆಲಸವಾಯಿತು. ಇದರ ಜೊತೆಗೆ ಮಕ್ಕಳನ್ನು ಸಂಬಾಳಿಸಿಕೊಂಡು ಹೋಗುವುದು. ಏನೇನೋ ಕಷ್ಟ ತಾಪತ್ರಯಗಳು. +ಊರಿನಲ್ಲಿ ಸಿಮೋನ ಕೊಪೆಲ ಕಟ್ಟಿದ್ದ. ಅಲ್ಲಿ ಜಪ ತೇರ್ಸ ನಡೆಯಿತು.ಮನೆಯಲ್ಲೂ ಜಪಪ್ರಾರ್ಥನೆ ಮಾಡುತ್ತಿದ್ದಳು. ಕ್ರಮೇಣ ಇದೆಲ್ಲ ದೂರವಾಯಿತು. ತನ್ನ ಕುತ್ತಿಗೆಯಲ್ಲಿಯ ಶಿಲುಬೆಯೊಂದನ್ನು ಬಿಟ್ಟರೆ ತಾನು ತನ್ನ ಮಕ್ಕಳು ಎಲ್ಲವನ್ನೂ ಕೈ ಬಿಟ್ಟೆವು. +ಆದರೆ ಈಗ ಊರಿಗೆ ಪಾದರಿ ಬಂದನಂತರ ಮತ್ತೆ ಅದೆಲ್ಲ ನೆನಪಾಗುತ್ತಿದೆ. +ಹೌದು ಎಂತಹಾ ತಪ್ಪು ಮಾಡಿದೆ. ಕ್ರಿಸ್ತ ಪ್ರಭುವನ್ನು ಮೇರಿ ಮಾತೆಯನ್ನು ಮರೆತೆನೆ? ಈಗ ಮನಸ್ಸು ಭೀತಿಯಿಂದ ಕಂಪಿಸುತ್ತಿದೆ. ಪಾದರಿಗಳ ಕೆಂಗಣ್ಣು ದೇಹದ ರೋಮ ರೋಮಗಳನ್ನು ದಹಿಸುತ್ತಿದೆ. +ಈಗಾಗಲೇ ಪಾದರಿ ಏಳೆಂಟು ಜನ ಹುಡುಗರನ್ನು ಪೂಜೆಗೆ ಬರಲಿಲ್ಲ, ಜ್ಞಾನೋಪದೇಶಕ್ಕೆ ಬರಲಿಲ್ಲ ಅನ್ನುವ ಕಾರಣಕ್ಕೆ ಹೊಡೆದಿದ್ದಾರೆ. ಸಣ್ಣ ಹೆಡೆ ಇರುವ ಮಾರುದ್ಧದ ನಾಗರಬೆತ್ತ ಅವರ ಕೈಲಿರುತ್ತದೆ. ಒಂದು ತುದಿ ಬಿರುಸು ಇನ್ನೊಂದು ತುದಿ ಸಪೂರ. ಅದನ್ನು ಹಿಡಿದು ಚಾಟಿಯಂತೆ ಪಾದರಿ ಬೀಸುತ್ತಾರೆ. +ಪಾಸ್ಕೋಲನ ಮಗ ಆಂತೋನಿ, ಸುತಾರಿ ಇನಾಸನ ಮಗ ಪಾಸ್ಕು, ಇಂತ್ರು ಮಗ ಸಿರೀಲ, ಕೈತಾನನ ಮಗ ದುಮಿಂಗ ಎಲ್ಲರೂ ಏಟು ತಿಂದಿದ್ದಾರೆ. ಕಾಲ ಮೀನ ಖಂಡದ ಮೇಲೆ ಬೆತ್ತ ಕೆಂಪಗೆ ಬೆರಳಷ್ಟು ದಪ್ಪಗೆ ಮೂಡಿದೆ. +“ಅಯ್ಯಯ್ಯೋ ಸತ್ತೆ….ಸತ್ತೆ“ಎಂದವರು ಬೊಬ್ಬೆ ಹೊಡೆದಿದ್ದಾರೆ. ಅಜ್ಜಿಯರು ಬಾವಿಗೆ ಕೊಬ್ಬರಿ ಎಣ್ಣೆ ಸವರಿದ್ದಾರೆ. +ಯಾರೂ ತುಟಿ ಎರಡು ಮಾಡಿಲ್ಲ. +ಪಾದರಿಗಳ ವಿರುದ್ಧ ಮಾತನಾಡುವುದಂಟೆ? +ಪಾದರಿ ಗೋನಸಾಲ್ವಿಸ್ ದೊಡ್ಡವರನ್ನೂ ಬಿಟ್ಟಿಲ್ಲ. +ಭಾನುವಾರ ಬಾಚಿ ಹೇಗಲೇರಿಸಿಕೊಂಡು ಕೆಲಸಕ್ಕೆ ಹೊರಟವರನ್ನು ಅಡ್ಡಗಟ್ಟಿದ್ದಾರೆ. ಅವರ ಕೈಯಿಂದ ಬಾಚಿ ಕಸಿದುಕೊಂಡಿದ್ದಾರೆ. ಹೊಡೆದೇ ಬಿಡುವ ಹಾಗೆ ಬೆತ್ತ ಬೀಸಿ ಕುಣಿದಾಡಿದ್ದಾರೆ. +“ನಿಮಗೆ ದೇವರು ಅಂತ ಒಬ್ಬ ಇದ್ದಾನೆ. ನಿಮಗೆ ಹೊಟ್ಟೆ ಮುಖ್ಯ ಆಯ್ತೇ? ನೀವೆಲ್ಲ ಅನುಭವಾಡ್ತಿಗಳ? ಭಾನುವಾರವನ್ನು ಪವಿತ್ರ ದಿನವೆಂದು ತಿಳಿದು ಆಚರಿಸಬೇಕು ಅನ್ನೋದು ನಿಮಗೆ ಗೊತ್ತಿಲ್ಲವೇ? ನೀವು ದೇವರ ಆಜ್ಞೆಯನ್ನು ಇಗರ್ಜಿ ಮಾತೆಯ ಕಟ್ಟಳೆಯನ್ನು ಮುರಿಯುವುದೇ? ನಿಮಗೆಲ್ಲ ಶಾಶ್ವತವಾದ ನರಕವಲ್ಲದೆ ಬೇರೇನೂ ದೊರೆಯುವುದಿಲ್ಲ…“ಎಂದೆಲ್ಲ ಕೂಗಾಡಿದ್ದಾರೆ ಪಾದರಿ ಗೋನಸಾಲ್ವಿಸ್. +ಕೆಲವೇ ದಿನಗಳಲ್ಲಿ ಶಿವಸಾಗರ ಕ್ರೀಸುವರಿಗೆ ಅದು ಹೇಗೋ ಮರೆತು ಹೋದ ಎಲ್ಲ ವಿಷಯಗಳೂ ನೆನಪಿಗೆ ಬಂದಿವೆ. ಶಿಲುಬೆಯ ವಂದನೆಯಿಂದ ತೇರ್ಸ, ಪ್ರಾರ್ಥನೆ, ಊಟಕ್ಕೆ ಮುನ್ನ ಅರ್ಪಿಸುವ ಕೃತಜ್ಞತೆ. ಮಲಗುವ ಮುನ್ನ ಹೇಳುವ ಪ್ರಾರ್ಥನೆ. ಪಾಪ ನಿವೇದನಾ ಕ್ರಮ. ದಿವ್ಯ ಪ್ರಸಾದವನ್ನು ಸ್ವೀಕರಿಸುವ ಭಕ್ತಿ ಎಲ್ಲವೂ ಅವರ ನೆನಪಿಗೆ ಬಂದಿದೆ. ಇಲ್ಲವೆ ಮರೆತು ಹೋದುದನ್ನು ಅವರು ಮತ್ತೆ ಸ್ಮರಿಸಿ ಕೊಂಡಿದ್ದಾರೆ. ನೆನಪಿಗೆ ತಂದುಕೊಂಡಿದ್ದಾರೆ. ದೇವರು ಧರ್ಮದ ಗೊಡವೆ ಇಲ್ಲದೆ ಬದುಕಿದ್ದವರು ದೇವರತ್ತ ತಿರುಗಿಕೊಂಡಿದ್ದಾರೆ. ಪಾದರಿ ಗೋನಸಾಲ್ವಿಸ್ ಕೈಯಲ್ಲಿಯನಾಗರಬೆತ್ತವನ್ನು ಝಳಪಿಸುತ್ತಾರೆ. ಅದರ ಎರಡೂ ತುದಿಗಳನ್ನು ಹಿಡಿದು ಕಮಾನಿನಂತೆ ಬಗ್ಗಿಸಿ ಆಟವಾಡುತ್ತಾರೆ. +ಈಗ ಭಾನುವಾರಗಳಂದು ಕೊಪೆಲನ ಹೊರಗೂ ಜನ ನಿಲ್ಲುತ್ತಾರೆ. ಎರಡನೆ ಗಂಟೆ ಆಯಿತು ಅನ್ನುವಾಗ ಅವಸರ ಅವಸರದಲ್ಲಿ ಸೀರೆ ಸುತ್ತಿಕೊಂಡು ತಲೆಯ ಮೇಲೆ ಸೆರಗು ಎಳೆದುಕೊಳ್ಳುತ್ತ- ಹುಡುಗಿಯರು ವೇಲ್ ಧರಿಸುತ್ತ ಕೊಪೆಲನತ್ತ ಓಡುತ್ತಾರೆ. ಹುಡುಗರು ಅರ್ಧ ಗಂಟೆಯಮೊದಲೇ ಬರಬೇಕೆಂದು ಪಾದರಿ ಹೇಳಿದ್ದಾರೆ. ಕೊಪೆಲಗೆ ಯಾರು ಬಂದಿದ್ದಾರೆ? ಯಾರು ಬಂದಿಲ್ಲ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಎರಡನೇ ಗಂಟೆಯಾದ ನಂತರ ಕೈಯಲ್ಲಿ ಬೆತ್ತ ಹಿಡಿದು ಕ್ರೀಸುವರ ಮನೆಗಳ ಸುತ್ತ ಒಂದು ಸುತ್ತು ಬರುವುದನ್ನು ಅವರು ನಿಲ್ಲಿಸಿಲ್ಲ. +ಹೀಗಾಗಿ ಮರಿಯ ಗಡಿಬಿಡಿ ಮಾಡಿ ಮನೆಗೆಲಸ ಮುಗಿಸಿ ಹೊರಡುತ್ತಾಳೆ. ಉಳಿದ ಮನೆಗಳಲ್ಲೂ ಈ ಅವಸರ ಕಾಣಿಸಿಕೊಳ್ಳುತ್ತದೆ. ಬೇಗನೆ ಏಳದ ಮಕ್ಕಳನ್ನು‌ಎಚ್ಚರಿಸುವ- +“ಊಟ್ರೆ..ಇಗರ್ಜಿಕ ಓಸ್ರೆ..“(ಏಳೋ ಇಗರ್ಜಿಗೆ ಹೋಗೋ) ಎಂಬ ಮಾತು ಎಲ್ಲ ಮನೆಗಳಲ್ಲಿ ಕೇಳಿ ಬರುತ್ತದೆ. +ಈ ಪರಿವರ್ತನೆ ಕಂಡು ಸಿಮೋನ ಅಚ್ಚರಿ ಪಡುತ್ತಾನೆ. +“ಪದ್ರಬಾ ಇದೊಂದು ಪವಾಡ“ಅನ್ನುತ್ತಾನೆ ಆತ. +* +* +* +ಶಿವಸಾಗರದಲ್ಲಿ ಕ್ರೀಸುವರ ಸಂಖ್ಯೆ ಕಡಿಮೆ ಇದ್ದರೂ ಅವರಲ್ಲಿ ದೈವಭಕ್ತಿ ದೈವಭೀತಿ ಇರಬೇಕೆಂದು ಬಯಸಿದವ ಆತ. ಮೊದಲಿನಿಂದಲೂ ಅವನು ದೈವಭಕ್ತ. ಅವನ ಮನೆಯಲ್ಲಿ ದಿನದಲ್ಲಿ ಮೂರು ಬಾರಿ ಪ್ರಾರ್ಥನೆ ತಪ್ಪಿದ್ದಲ್ಲ. ಭಾನುವಾರಗಳಂದು ಪೂಜೆಗೆ ತಪ್ಪಿಸಿಕೊಂಡೇ ಅವನಿಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ನಂತರ ಇದೇ ಒಂದು ವ್ಯಥೆಯಾಗಿತ್ತು. ಬರುವಾಗ ಜೊತೆಯಲ್ಲಿ ಒಂದು ದೇವರ ಪ್ರತಿಮೆಯನ್ನು ಆತ ತಂದಿದ್ದ. ತಾನಿರುವ ಬಿಡಾರದಲ್ಲಿಯೇ ಅದನ್ನು ಇರಿಸಿ ಮೇಣದ ಬತ್ತಿ ಹಚ್ಚಿ ಇತರೆ ಕೆಲಸಗಾರರ ಸಂಗಡ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆದರೆ ಉಳಿದವರಿಗೂ ತನ್ನಷ್ಟೇ ಶೃದ್ಧೆ ಆಸಕ್ತಿ ಇರಲು ಸಾಧ್ಯವೆ? ಕೆಲವರು ಎನೋ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. +ಊರಿನಲ್ಲಿ ಕ್ರೀಸುವರ ಸಂಖ್ಯೆ ಹೆಚ್ಚಿತು. ಮೂರು ನಾಲ್ಕು ಮನೆಗಳಾದವು. ಘಟ್ಟದ ಕೆಳಗಿನಿಂದ ಕೆಲಸಕ್ಕೆಂದು ಬಂದವರ ಸಂಖ್ಯೆಯೂ ಅಧಿಕವಾಗಿತ್ತು. ತನ್ನ ಜನ ಕ್ರಿಸ್ತನ ಮೇಲಿನ ವಿಶ್ವಾಸದಿಂದ ದೂರವಾಗಿ ಅವಿಶ್ವಾಸಿಗಳ ದೇವರುಗಳನ್ನು ನಂಬತೊಡಗಿದಾಗ ಈ ಜನರನ್ನು ಒಂದೆಡೆ ಕೂಡಿಸಿ ಇಡಬೇಕು ಅನಿಸಿತು ತನಗೆ. ಆಗಲೇ ಕೇರಿಯ ನಡುವೆ ಒಂದು ಕೊಪೆಲ ಕಟ್ಟುವ ವಿಚಾರ ಮನಸ್ಸಿನಲ್ಲಿ ಸುಳಿಯಿತು. ಕೂಡಲೇ ತಾನು ಕಾರ್ಯೋನ್ಮುಖನಾದೆ. ಶಾನುಭೋಗರಿಗೆ ನಾಲ್ಕು ವಿಳೇದೆಲೆ, ಅಡಕೆ, ಎಂಟಾಣೆ ಪಾವಲಿ ಒಯ್ದು ಕೊಟ್ಟು ಒಂದು ಅರ್ಜಿ ಬರೆಸಿದೆ. +ಒಂದು ದಿನ ಈ ಅರ್ಜಿ ಹಿಡಿದು ಪುರಸಭೆಗೆ ಹೋದೆ. +“ಏನು ಮೇಸ್ತ್ರಿ ಬಂದಿ?“ಎಂದು ಕೇಳಿದರು, ಪುರಸಭೆ ಪ್ರೆಸಿಡೆಂಟರು. +“ಒಡೆಯ ನಮಗೊಂದು ಜಾಗ ಕೊಟ್ಟರೆ ಸಣ್ಣದೊಂದು ಗುಡಿ ಕಟ್ಟತಿದ್ವಿ?” +“ಆಯ್ತು ಕೊಡೋಣ” +ಜಾಗ ಮಂಜೂರಾಯಿತು. +ತಾವೆಲ್ಲ ಕಟ್ಟಡದ ಕೆಲಸ ಮಾಡುವವರೇ ಇದ್ದುದರಿಂದ ಕೊಪೆಲ ಏಳುವುದು ತಡವಾಗಲಿಲ್ಲ. ವಾರಕ್ಕೊಂದು ದಿನ ಎಲ್ಲ ಕೆಲಸಗಾರರೂ ಕೈಹಾಕಿ ಕೊಪೆಲ ಸಿದ್ಧಪಡಿಸಿದ್ದಾಯ್ತು. ಸುತಾರಿ ಇನಾಸ ಕೊಪೆಲಗೆ ಮುಂದಿನ ಬಾಗಿಲು ಮಾಡಿಕೊಟ್ಟ. ಕಿಟಕಿ ಕೂರಿಸಿದ. ಬಿದಿರು ಬೊಂಬು ಬಳಸಿ ಮಾಡು ಏರಿಸಿ ಹುಲ್ಲು ಹೊದೆಸಿದ್ದಾಯಿತು. ತಾಂಬಟಗಾರ ಮೊಯಿದ್ದಿನ ಸಾಬಿ ಕೊಪೆಲಗೆಂದು ಒಂದು ಗಂಟೆ ನೀಡಿದ. ಊರಿಗೆ ಹೋದಾಗ ಇಗರ್ಜಿ ಪಾದರಿಗೆ ಕೊಪೆಲ ವಿಷಯ ಹೇಳಿದೆ. ನೀವೆಲ್ಲ ಕಾರ್ಮಿಕರು. ನಿಮ್ಮ ಹಾಗೆಯೇ ಸುತಾರಿ ಕೆಲಸ ಮಾಡಿಕೊಂಡು ದೈವಭಕ್ತಿಯಿಂದಬದುಕು ಸಾಗಿಸಿದ ಸಂತ ಜೋಸೆಫ಼ರೇ ನಿಮ್ಮ ಪಾತ್ರೋನ ಆಗಿರಲಿ. ಅವರ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಅವರೇ ಸಂತ ಜೋಸೆಫ಼ರ ವಿಗ್ರಹವನ್ನು ಪವಿತ್ರೀಕರಿಸಿ ನೀಡಿದರು. ಪ್ರತಿಮೆಯನ್ನು ತಂದು ವೈಭವದಿಂದ ಪ್ರತಿಷ್ಠಾಪಿಸಿದೆವು. +ಊರಿಗೊಂದು ಕೊಪೆಲ ಆಯಿತು. ಗಂಟೆ ಬಂದಿತು. ಪಾತ್ರೋನನ ಪ್ರತಿಮೆ ಪ್ರತಿಷ್ಠಾಪನೆಯೂ ಆಯಿತು. ಆದರೆ ಜನ ಬರಬೇಕಲ್ಲ. ಪ್ರತಿ ಭಾನುವಾರ ತಾನು, ತನ್ನ ಹೆಂಡತಿ, ತಾಯಿ, ಈ ಕೊಪೆಲಗೆ ಹೋಗುತ್ತಿದ್ದೆವು. ಹಿಂದಿನ ದಿನ ಹೆಂಡತಿ ಹೋಗಿ ಕೊಪೆಲಿನ ಬಾಗಿಲು ತೆಗೆದು, ಶಗಣಿ ಸಾರಿಸಿ ಬರುತ್ತಿದ್ದಳು. ಭಾನುವಾರ ದೇವರ ಮುಂದೆ ಮೇಣದ ಬತ್ತಿ ಹಚ್ಚಿ, ದೇವರಿಗೆ ಹೂವೇರಿಸಿ ತಾವೆಲ್ಲ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ತಮ್ಮ ಜತೆ ಪಾಸ್ಕೋಲ, ಕೈತಾನ್, ಸಲ್ವಾದೋರ್ ಎಂದೆಲ್ಲ ಇತರೆ ಮನೆಗಳವರೂ ಬರುತ್ತಿದ್ದರು.ಕ್ರಮೇಣ ಈ ಸಂಖ್ಯೆ ಕಡಿಮೆಯಾಗತೊಡಗಿತು. ಕೊಪೆಲಗೆ ಬನ್ನಿ ಒಟ್ಟಿಗೇ ಎಲ್ಲರೂ ಪ್ರಾರ್ಥನೆ ಮಾಡೋಣ ಎಂದು ತಾನು ಜನರಿಗೆ ಹೇಳಿದೆ, ಹೀಗೆ ಎಷ್ಟು ದಿನ ಹೇಳಲು ಸಾಧ್ಯ? ಅಲ್ಲದೆ ಹೀಗೆ ಹೇಳಲು ತನಗೆ ಅಧಿಕಾರವಾದರೂ ಏನಿದೆ? ಜನ ತನ್ನ ಮಾತಿನ ಬಗ್ಗೆ ಅನಾದಾರ ತೋರಿದರು. ಕೊಪೆಲ್ ಕಟ್ಟಿದೆನೆಂಬ ಸಂತೋಷವೂ ಬಹಳ ದಿನ ಉಳಿಯಲಿಲ್ಲ. ಊರಿನಲ್ಲಿಯ ಕ್ರೈಸ್ತರು ಕೊಪೆಲಗೆ ಬರುವುದಿರಲಿ ಮನೆಯಲ್ಲಿ ಕೂಡ ಅಮೋರಿ, ತೇರ್ಸ ಮಾಡದೆ ಅಕ್ರೈಸ್ತರಾಗಿ ಬಾಳ ತೊಡಗಿದರು. +ಆದರೆ ಈಗ ಪಾದರಿ ಗೋನಸಾಲ್ವಿಸ್ ಬಂದದ್ದೆ ಎಂತಹ ಬದಲಾವಣೆಯಾಯಿತಲ್ಲ. ಸಿಮೋನನಿಗೆ ಸಂತೋಷವಾಯಿತು. ತನ್ನ ಸಂತೋಷವನ್ನು ಪಾದರಿಗಳ ಜತೆ ಹಂಚಿಕೊಂಡ ಕೂಡ. +* +* +* +ಒಂದು ಭಾನುವಾರ ಕೊಪೆಲ ತುಂಬಿಕೊಂಡ ಜನ ಹೊರಗೆ ಕಟ್ಟಿದ ಚಪ್ಪರದಲ್ಲೂ ನಿಂತು ಪೂಜೆ ಆಲಿಸಿದರು. ಈ ದೃಶ್ಯ ಕಂಡು ಪಾದರಿ ಗೋನಸಾಲ್ವಿಸ್ ತುಂಬಾ ಸಂತಸಪಟ್ಟರು. ಸಿಮೋನನಿಗೂ ಇದು ಸಂತಸದ ವಿಷಯವಾಗಿತ್ತು. +“ಪದ್ರಬಾ..ದೇವರು ನಮ್ಮ ಕಡೆ ಇದಾನೆ“ಎಂದ ಸಿಮೋನ ತನ್ನ ಕನಸು ನನಸಾಯಿತೇನೋ ಎಂಬಂತೆ. +ಆದರೆ ಅವನ ಮನಸ್ಸಿನಲ್ಲಿ ಒಂದು ವಿಷಯವಿತ್ತು. +ಕ್ರೀಸುವರ ಪಾಲಿಗೆ ಅಷ್ಟೇನೂ ಹಿತಕರವಲ್ಲದ ವಿಷಯ. +ಈ ವಿಷಯವನ್ನು ಯಾವುದಾದರೂ ರೀತಿಯಲ್ಲಿ ಪಾದರಿಗಳ ಗಮನಕ್ಕೆ ತರಬೇಕೆಂದು ಸಿಮೋನ ಬಯಸಿದ್ದೂ ಇತ್ತು. ಆದರೆ ಈ ವಿಷಯವನ್ನು ಅವರಿಗೆ ನೇರವಾಗಿ ಹೇಳುವುದು ಹೇಗೆ ಎಂಬ ಚಿಂತೆಯಲ್ಲಿ ಅವನಿರಬೇಕಾದರೇನೆ ಪಾದರಿ ಗೋನಸಾಲ್ವಿಸ್ ತಾವೇ ಖುದ್ದಾಗಿ ಈ ಸಂಗತಿಯನ್ನು ಗಮನಿಸಿಬಿಟ್ಟರು. +ಕೊಪೆಲನಿಂದ ಕ್ರೀಸುವರ ಮನೆಗಳಿಗೆ ಬರುವವರು ಒಂದು ಕಾಲು ದಾರಿಯನ್ನು ಬಳಸುತ್ತಿದ್ದರು. ಕೊಪೆಲನ ಮಗ್ಗುಲಲ್ಲಿ ಕಾಣಿಸಿಕೊಂಡ ಈ ದಾರಿ ಹಲವು ಪೊದೆ ಮರಗಳ ನಡುವೆ ಹಾದು ಸಿಮೋನನ ಮನೆಗೆ ಬಂದು ತಲುಪುತ್ತಿತ್ತು. ಇದು ಹಿಂದೆ ಸಿಮೋನ ಕೊಪೆಲಿಗೆ ಬರಲು ಮಾಡಿಕೊಂಡ ದಾರಿ. ಪಾದರಿಗಳು ಬಂದ ನಂತರ ಕೊಪೆಲಿಗೆ ಬರುವವರು ಕೊಪೆಲಿನಿಂದ ಕೇರಿಗೆ ಹೋಗುವವರು ಇದೇ ದಾರಿಯನ್ನು ಬಳಸತೊಡಗಿದ್ದರು. ಪಾದರಿ ಗೋನಸಾಲ್ವಿಸ್ ಕೂಡ ಸಿಮೋನನ ಮನೆಗೆ ಹೋಗಲು, ಉಳಿದ ಕ್ರೀಸುವರ ಮನೆಗಳತ್ತ ಹೋಗಲು ಇದೇ ದಾರಿಯನ್ನು ಬಳಸುತ್ತ ಬಂದಿದ್ದರು. ಅಡಿಗೆಯಾಳು ಬೋನ ಪಾದರಿಗಳಿಗೆ ಬೇಕಾದ ಊಟ, ತಿಂಡಿ ಮಾಡಿಕೊಂಡು ಈ ದಾರಿಯಲ್ಲಿಯೇ ಬರುತ್ತಿದ್ದುದರಿಂದ ಈ ದಾರಿ ಸಾಕಷ್ಟು ಸವೆದಿತ್ತು. +ಸಿಮೋನನ ಮನೆಯಿಂದ ಕೊಪೆಲಿನತ್ತ ಹೊರಳಿಕೊಂಡ ಈ ದಾರಿ ಕೊಂಚ ದೂರ ಹೋದ ಕೂಡಲೇ ಮತ್ತೊಂದು ಟಿಸಿಲಾಗಿ ಒಡೆದುಕೊಂಡಿತ್ತು. +ಈ ಟಿಸಿಲು ಕೆಲ ಗಿಡ ಪೊದೆಗಳ ನಡುವೆ ಮಾಯವಾಗಿತ್ತು. ಆ ದಾರಿ ಕೂಡ ಜನ ತಿರುಗಾಡಿದ್ದರಿಂದಲೋ ಏನೋ ಸಾಕಷ್ಟು ಸವೆದಿತ್ತು. +ಕೊಪೆಲಿನತ್ತ ಹೋಗುವ ಒಂದು ಕಾಲು ದಾರಿ ನಡುವೆ ಕವಲು ಒಡೆದುಕೊಂಡದ್ದು ಏಕೋ ಪಾದರಿ ಗೋನಸಾಲ್ವಿಸ್ ರಿಗೆ ಸರಿ ಎನಿಸಲಿಲ್ಲ. ಈ ದಾರಿ ಎಲ್ಲಿಗೆ ಹೋಗುತ್ತದೆ ಎಂಬ ಕುತೂಹಲ ಅವರನ್ನು ಕಾಡಿತು. +ಒಂದು ದಿನ ಸಿಮೋನನ ಮನೆಯಿಂದಕೊಪೆಲಿಗೆ ಹೊರಟ ಇವರು ಈ ಕೂಡು ದಾರಿಯ ಬಳಿ ನಿಂತರು. ಕೊಪೆಲಿನ ದಾರಿ ಬಿಟ್ಟು ಎರಡನೇ ದಾರಿ ಹಿಡಿದರು. ಗೇರು, ಮಾವು, ಹಲಸು, ಧೂಪ, ನೇರಳೆ ನಂದಿ ಮರಗಳನ್ನು ದಾಟಿ, ಬಿದಿರ ಮೆಳೆ ಲಾಂಟಾನು ಪೊದೆಗಳನ್ನು ತಳ್ಳಿಕೊಂಡು ಗೂಢವಾಗುತ್ತ ಗುಪ್ತವಾಗುತ್ತ ಹೋದ ಹಿಂಡಿಲುಗಳ ನಡುವೆ ಅವರು ನುಗ್ಗಿ ತೆರೆದುಕೊಂಡ ಅಷ್ಟಗಲ ಜಾಗಕ್ಕೆ ಬಂದು ನಿಂತರು. ಅಲ್ಲಿ ಒಂದು ಕಲ್ಲಿನ ಚೌಕಾಕಾರ. ನಡುವೆ ಎರಡು ಎರಡೂವರೆ ಅಡಿ ಎತ್ತರದ ಒಂದು ಕಲ್ಲಿನ ವಿಗ್ರಹ. ಅದರ ತುಂಬಾ ಕುಂಕುಮ ಹೂವು ಬಾಳೆ ಸಿಂಗಾರ ಇತ್ಯಾದಿ. ಊದಿನ ಕಡ್ಡಿಯ ಪರಿಮಳ ಎಣ್ಣೆಯ ಜಿಡ್ಡು. +ಛೇ ಎಂದು ಪೇಚಾಡಿಕೊಂಡರು ಪಾದರಿ. +ಇದು ಕ್ರೀಸುವರ ನಡುವೆ, ಕೊಪೆಲಗೆ ಸನಿಹದಲ್ಲಿ ಇರಬೇಕಿತ್ತೆ? ನಿಜ ದೇವನನ್ನು ನಂಬುವ ಜನ ಪಾದರಿಯ ಅಂಕೆ ಇಲ್ಲದ್ದರಿಂದ ಈ ದೇವರನ್ನು ನಂಬುತ್ತಿರಬಹುದೆ? +ಕೊಪೆಲಗೆ ಬಂದ ಅವರು ಸಂಜೆ ಸಿಮೋನನಿಗೆ +“ಸಿಮೋನ ಅದೇನು ಕತೆ?“ಎಂದು ಕೇಳಿದರು. +ಸಿಮೋನ ಅಂಜುತ್ತ ಅಳುಕುತ್ತ ಹೇಳತೊಡಗಿದ. +ಮೊದ ಮೊದಲು ಕ್ರೀಸುವರು ಯಾರೂ ಈ ದೇವರಿಗೆ ನಡೆದುಕೊಳ್ಳುತ್ತಿರಲಿಲ್ಲ. ಆದರೆ ಕ್ರಮೇಣ ಕ್ರೈಸ್ತ ಧರ್ಮದ ಪ್ರಭಾವ ಅವರಿಂದ ದೂರವಾಗಿ ಸುತ್ತಲಿನ ಜನರ ನಂಬಿಕೆ, ಆಚರಣೆಗಳು ಅವರ ಗಮನಕ್ಕೆ ಬಂದಾಗ ಅವರು ಅರೆ ಮನಸ್ಸಿನಿಂದ ಅಲ್ಲಿಗೆ ಹೋಗತೊಡಗಿದರು. ಮಕ್ಕಳಿಗೆ ಬಂದ ತೀವ್ರವಾದ ಕಾಯಿಲೆ. ದೊಡ್ಡವರ ಕಷ್ಟ ಸಂಕಟಗಳು. ಮನೆಗೆ ಬಂದ ಆಪತ್ತು ಅವರನ್ನು ಚೌಡಿಯಲ್ಲಿಗೆ ಕರೆದೊಯ್ದವು. ಊರಿನಲ್ಲಿ ತಮ್ಮ ದೇವರ ಆಲಯ ಇಲ್ಲದಿದ್ದುದು, ಪಾದರಿ ಇಲ್ಲದಿದ್ದುದು ಇದಕ್ಕೆ ಕಾರಣವಾಯಿತು. ಕೊಪೆಲ ಕಟ್ಟಿದ ನಂತರವೂ ಜನರಿಗೆ ಚೌಡಿವನವೇ ಪವಿತ್ರ ತಾಣವಾಗಿ ಉಳಿಯಿತು. +ಎಲ್ಲ ಕ್ರೀಸುವರ ಮನಸ್ಸಿನಲ್ಲೂ ಒಂದು ಅಳುಕಿತ್ತು. ಹಿಂಜರಿಕೆ ಇತ್ತು. ತಾವು ಮಾಡುತ್ತಿರುವುದು ತಪ್ಪು ಎಂಬ ಆತಂಕವಿತ್ತು. ಆದರೂ ಅವರು ಅತ್ತ ಹೋದರು. ಅವರಿಗೆ ಬೇರೆ ದಾರಿ ತಾನೆ ಎನಿತ್ತು? +ತಾನು ಎಷ್ಟೋ ಬಾರಿ +“ಬಿಡಿ ಈ ಸೈತಾನನ ಕೆಲಸ“ಎಂದೆ. +ಬೈಯ್ದೆ..ಬಾಯಿ ಮಾಡಿದೆ. +ಆದರೂ ಜನ ಕದ್ದು ಮುಚ್ಚಿ ಹೋಗುತ್ತಿದ್ದರು. ಕೆಲವರಿಗೆ ಇದರಿಂದ ಒಳ್ಳೆಯದೂ ಆಯಿತು. +ಚೌಡಮ್ಮನ ವಿಷಯ ಹೇಳ ಹೊರಟ ಆತನಿಗೆ ತಟ್ಟನೆ ಹಲವಾರು ಘಟನೆಗಳು ನೆನಪಾದವು. ಆತ ಕ್ರೈಸ್ತ ಧರ್ಮವನ್ನು ಬಿಟ್ಟು ಒಂದಿಷ್ಟೂ ಅತ್ತ ಕದಲಿದವನಲ್ಲ. ಮುರುಡೇಶ್ವರದಲ್ಲಿ ಅವನ ಮನೆಯ ಹತ್ತಿರವೇ ನಾಗಬನವಿತ್ತು. ಭೂತರಾಯನ ಕಟ್ಟೆ ಇತ್ತು. ಹತ್ತಿರದ ಗುಡಿಗೆ ನಿಮಿತ್ತ ನೋಡಲು, ಪ್ರಶ್ನೆ ಕೇಳಲು ಜನ ಹೋಗುತ್ತಿದ್ದರು. ಕ್ರೀಸುವರು ಕೂಡ ಅವರಿವರ ಮೂಲಕ ತೆಂಗಿನಕಾಯಿ ಕಳುಹಿಸುವುದು, ಕೋಳಿ ಕೊಡಿಸುವುದು ಮಾಡುತ್ತಿದ್ದರು. ಆದರೆ ಇಂತಹ ವ್ಯವಹಾರಗಳಲ್ಲಿ ಸಿಮೋನನಿಗೆ ಆಸಕ್ತಿ ಇರಲಿಲ್ಲ. ನಂಬಿಕೆಯೂ ಇರಲಿಲ್ಲ. ಹೀಗಾಗಿ ಅವುಗಳಿಂದ ಆತ ದೂರವಿದ್ದ. +ಇಲ್ಲಿ ಕೂಡ ಜನರ ವರ್ತನೆ ಅವನನ್ನು ಕಸಿವಿಸಿಗೆ ಕೋಪಕ್ಕೆ ಒಳಪಡಿಸುತ್ತಿತ್ತು. ಆದರೆ ತನ್ನ ಅಸಹಾಯಕತೆ ಅವನಿಗೆ ಗೊತ್ತಿತ್ತು. ಕ್ರೀಸುವರ ನಡುವೆ ದೇವರಿರಲಿ ಎಂದೇ ಆತ ಕೊಪೆಲ ಕಟ್ಟಿದ್ದು. ಅದೂ ಪ್ರಯೋಜನವಾಗಲಿಲ್ಲ. ಕ್ರೀಸುವರೇ ಚೌಡಿಯನ್ನೋ ಕಲ್ಲು ಕುಟಿಗನನ್ನೋ ನಂಬಿ ಬದುಕುತ್ತಿರುವುದು ಅವನಿಗೆ ಗೊತ್ತಿತ್ತು. ಈ ಶಕ್ತಿಗಳಿಂದ ಕೆಲವರಿಗೆ ಒಳ್ಳೆಯದೂ ಆಗಿದೆಯೇ ಎಂದು ಆತ ವಿಚಾರ ಮಾಡುವುದೂ ಇತ್ತು. ಏಕೆಂದರೆ ಅಂಕೋಲೆ ಕೈತಾನ ಒಂದು ಉದಾಹರಣೆಯಾಗಿ ಅವನ ಮುಂದೆ ಸದಾ ಇರುತ್ತಿದ್ದ. +ಅಂಕೋಲೆ ಕೈತಾನನಿಗೆ ತುಂಬಾ ಅನ್ಯಾಯವಾಗಿತ್ತು. +ಅಂತೋಲದ ಕೆಳ ಹಿತ್ತಲಿನಲ್ಲಿ ಮುನ್ನೂರು ತೆಂಗಿನ ಮರಗಳ ಒಡೆಯ. ಅವನ ತಂದೆ ತೊದಲು ಬಸ್ತಿಯಾಂವ. ಅವನು ಮಾತನಾಡುವಾಗ ತೊದಲುತ್ತಿದ್ದುದರಿಂದ ಅವನಿಗೆ ಈ ಅಡ್ಡ ಹೆಸರು. ಕೈತಾನ ಬಸ್ತಿಯಾಂವಗೆ ಓರ್ವನೆ ಮಗ. ಆದರೆ ಮಗಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಅವನ ತಂದೆ ಆಸ್ತಿ ಹೆಂಗಸೊಬ್ಬಳ ಪಾಲಾಗಿತ್ತು. ಬಸ್ತಿಯಾಂವ ಕುಡಿಯುವುದು ಅತಿಯಾಗಿ ಕಡಲಕಿನಾರೆಯ ಹೆಂಡದಂಗಡಿಸೇರಿದ್ದ. ಅಲ್ಲೇ ಕುಡಿದು ಅಲ್ಲೆ ಬಿದ್ದುಕೊಂಡಿರುವುದು. ಆ ಹೆಂಗಸು ಇಷ್ಟಕ್ಕೇ ಅನುಕೂಲ ಮಾಡಿಕೊಟ್ಟಿದ್ದಳು. +ಆ ಹೆಂಗಸು ಅವಳ ಕಡೆಯವರೂ ಸೇರಿ ಬಸ್ತಿಯಾಂವನನ್ನು ಹೆಂಡದದಾಸನನ್ನಾಗಿ ಮಾಡುವುದರ ಜೊತೆಗೆ ಕೈತಾನನನ್ನು ಅನಾಥನನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಇಗರ್ಜಿ ಪಾದರಿ ಊರಿನ ಗುರ್ಕಾರ, ಮಿರೋಣ ಎನೇನೋ ಯತ್ನ ಮಾಡಿದರು. ಅಂಕೊಲದ ಸಂತನಿಗೆ ಮೇಣದ ಬತ್ತಿ ಹಚ್ಚಿ ಕೈತಾನ ಬೇಡಿಕೊಂಡ ಕೂಡ. ಕೊನೆಗೆ ಅವರಿವರ ಮನೆ ಜಗಲಿಯ ಮೇಲಿದ್ದುಕೊಂಡು ಕಲ್ಲು ಕೆತ್ತುವ ಚಾಕರಿ ಮಾಡತೊಡಗಿದ ಕೈತಾನ. ಕೆಲಸ ಚೆನ್ನಾಗಿ ಕಲಿತ. ಒಂದು ಸ್ಥಿತಿಗೆ ಬಂದಾಗ ಊರವರು ಸೇರಿ ಅವನಿಗೊಂದು ಮದುವೆ ಮಾಡಿದರು. ಹೆಂಡತಿ ಬಂದ ನಂತರ ಊರಿನಲ್ಲಿಯೇ ಮನೆ ಮಾಡಿದ. +ಆದರೆ ಅಂಕೊಲೆಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಅಲ್ಲಿಯ ಜನ ಮಾತ್ರವಲ್ಲ, ತೆಂಗು ಮಾವಿನ ಮರಗಳು ಕೊನೆಗೆ ತೆಂಗಿನ ತೋಟದ ನೆಲಬಾವಿಯ ನೀರೆತ್ತುವ ಏತಗಳು ಮನೆ ಮನೆಗಳಲ್ಲಿದ್ದ ಗಾಣಗಳು ತನ್ನನ್ನು ನೋಡಿ ನಗುತ್ತಿರುವಂತೆ ಭಾಸವಾಯಿತು. +“ಇವನನ್ನು ಕಾಣಿ ಮಾರಾಯ್ರೆ..ಕೆಳಹಿತ್ತಲಿನ ಒಡೆಯ ಅಲ್ದ ಇವನು? ಕಾಣಿ ಕಾಣಿ ಬಾಚಿತಗಂಡು ಮುಕುಳಿ ಮ್ಯಾಲ ಮಾಡಿ ಕಲ್ಲು ಕೆತ್ತೋದ ಕಾಣಿ“ಎಂದು ಎಲ್ಲರೂ ಮಾತನಾಡಿಕೊಳ್ಳುವುದು ಕಿವಿಗೆ ಬಿದ್ದಿತು. ಈ ಬಗೆಯ ಮಾತು ಕೇಳಲಾಗದೆ ಕೊರಗುವಾಗ ಪಾಸ್ಕೋಲ ಮೇಸ್ತ್ರಿ ಘಟ್ಟದ ಮೇಲೆ ಬರುವಿಯಾ ಅಂದ. ಈತ ಶಿವಸಾಗರಕ್ಕೆ ಬಂದ. ಒಂದೆರಡು ವರ್ಷ ಹೆಂಡತಿಯನ್ನು ಅಂಕೋಲೆಯಲ್ಲಿಯೇ ಇರಿಸಿದ. ಇದೂ ಬೇಸರವೆನಿಸಿತು. +“ಕಾಸಿಲ್ವ..ನಡಿ ಹೋಗೋಣ” +ಎಂದು ಅವಳನ್ನು ಕರೆದುಕೊಂಡು ಶಿವಸಾಗರಕ್ಕೆ ಬಂದ. ಬಂದದ್ದು ಒಳ್ಳೆದಾಯ್ತು. ಕೈತುಂಬಾ ಹಣ ಮಾಡಿದ. ಮನೆಕಟ್ಟಿದ, ಮಕ್ಕಳಾದರು. +“ಕಾಸಿಲ್ಡ ಇನ್ನೂ ನಾನು ಆ ಕಡೆ ತಲೆ ಇಟ್ಟು ಮಲಗೋದಿಲ್ಲ..“ಎಂದ ಇಲ್ಲಿಗೆ ಬಂದ ಮೇಲೆ ಕೇವಲ ಹೆಣ್ಣುಗಳಾದವು. ಮೇರಿ, ಅಪ್ಪಿ ಕೊಸೆಸಾಂವ, ಸಿಲ್ವಿಯ, ಪ್ರೆಸಿಲ್ವ ಆದರೆ ಅವನಿಗೆ ಗಂಡು ಬೇಕಿತ್ತು. ಈ ಕಾರಣದಿಂದಲೆ ಆತ ಸಿಡುಕನಾದ. ಅಪಾರ ಸಿಟ್ಟು ಬರತೊಡಗಿತು. ಕಲ್ಲು ಕೆತ್ತಿ ಕೆತ್ತಿ ತೋಳು ಬಲಿಷ್ಠವಾಗಿತ್ತು. ಕೈಗಳು ಒರಟಾಗಿದ್ದವು. ರಪ್ಪನೆ ಕೈ ಎತ್ತಿ ಹೊಡೆಯುತ್ತಿದ್ದ. +“ಏನೇ ಇದು ಶನಿ ಸಂತಾನ“ಎಂದು ಹೆಂಡತಿಯನ್ನು ಬೈದ. ಸಂಜೆ ಕುಡಿದು ಬಂದು ಹೊಡೆದ. +ಅವಳು ಯಾವ ಯಾವ ದೇವರಿಗೋ ಹರಕೆ ಹೊತ್ತಳು. ಗಂಡಾಗಲಿಲ್ಲ. ಮಂಜನ ತಾಯಿ ರುದ್ರಮ್ಮ ಒಮ್ಮೆಬಂದಳು- +“ಕಾಸಿಬಾಯಿ..ಯಾಕೆ ಮಕ್ಕಳಿಗೆ ಹೊಡೆಯೋದು?“ಎಂದು ಕೆಳಿದಳು. +“ಹೊಡೆಯೋದಲ್ಲಮನೆ ಹಿಂದೆ ತಗ್ಗು ತೋಡಿ ಹುಗಿಬೇಕು“ಎಂದಳು ಕಾಸಿಲ್ಡಾ. ವಿವರವಾಗಿ ತನ್ನ ಗೋಳು ತೋಡಿ ಕೊಂಡಳು. ಗಂಡನ ಸಿಟ್ಟಿಗೆ ಕಾರಣ ಹೇಳಿದಳು. +“ಒಂದು ಕೆಲಸ ಮಾಡು ಕಾಸಿಬಾಯಿ” +“ಎನು ಹೇಳು ರುದ್ರಮ್ಮ” +“ಪ್ರತಿ ಶನಿವಾರ ಚೌಡಮ್ಮನಿಗೆ ಹಾಲು ಎರೀರಿ ತೆಂಗಿನಕಾಯಿ ಒಡೀರಿ..” +“ನಾವು ಅದೆಲ್ಲ ಮಾಡೋ ಹಂಗಿಲ್ಲ” +“ಸರಿಬಿಡು..ಆ ಬಾಲ್ತಿದಾರ..ಮಿಂಗೇಲಪ್ಪ ಎಮ್ಮೆ ಮರಿಯ ಎಲ್ರು ಕಿರಸ್ತಾನರೇ ಅಲ್ವ?“ದಾರಿಗೆ ಬಂದಳು ಕಾಸಿಲ್ಡ. +ಪ್ರತಿ ಶನಿವಾರ ರುದ್ರಮ್ಮ ಚೌಡಿಗೆ ಹಾಲು ಎರೆದು ಬಂದಳು. ಕಾಯಿ ಒಡೆದು ಬಂದಳು. ಮೂರು ನಾಲ್ಕು ಬಾರಿ ಅತ್ತಿತ್ತ ನೋಡಿ ಅಲ್ಲಿಗೆ ಕಾಸಿಲ್ಡ ಹೋಗಿಯೂ ಬಂದಳು. ಆದರೂ ಅವಳಿಗೊಂದು ಅಳುಕು. ಅಂಕೋಲದ ಇಗರ್ಜಿಯಲ್ಲಿ ಅವಳ ತಂದೆ ಮಿರೋಣ ಆಗಿದ್ದ. ಮನೆಯಲ್ಲಿ ಪ್ರಾರ್ಥನೆ ಜಪ ಹೆಚ್ಚು. ದೈವ ಭಕ್ತಿ ಅಧಿಕ. ಇಲ್ಲಿಗೆ ಬಂದ ನಂತರವೂ ಮನೆಯಲ್ಲಿ ಮೋರಿ ಮಾಡುತ್ತಾಳೆ. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಾಳೆ. +ತಾನು ಹೀಗೆ ಮಾಡುವುದೆ ಎಂದು ಚಿಂತಿಸಿದಳು. ಆದರೂ ಈ ದೇವರಿಂದ ತನಗೆ ಗಂಡು ಮಗುವಾಗಬಹುದು ಎಂಬ ಆಸೆ. ಚಂದಾವರ ಮೇಲ್ಕೋಡಿನ ದೇವರಿಗೆ ಹರಕೆ ಮಾಡಿಕೊಂಡರೂ ಆದದ್ದು ಹೆಣ್ಣೆ. ಆ ದೇವರು ಕೊಡದಿರುವುದನ್ನು ಈ ದೇವರು ಕೊಡದಿದ್ದೀತೆ ಎಂದು ಮುಗ್ಧಳಾಗಿ ಯೋಚಿಸಿದಳು. +ಎಂಟು ತಿಂಗಳಾಗಿದ್ದಾಗ ಒಂದು ದಿನ ಮನೆಗೆ ಬಂದ ರುದ್ರಮ್ಮ ಇವಳನ್ನು ದಿಟ್ಟಿಸಿ ನೋಡಿದಳು. +“ಹೊಟ್ಟೆಯಾಗೆ ಮಗ ಅವ್ನೆ“ಎಂದಳು. +“ನಿನಗೆ ಹೇಗೆ ಗೊತ್ತು..” +“ಹೊಟ್ಟೆ ದೊಡ್ಡದಾಗೈತೆ..ಮುಖ ಕೆಂಪಗಾಗೈತೆ…ದೇಹ ಬಾಡಿ ಸೊರಗೈತೆ. ಇದೆಲ್ಲ ಗಂಡಾಗೋ ಲಕ್ಷಣ ಎಂದಳವಳು. +ಹಾಗೆಯೇ ಆಗಲಿ ಅಂದುಕೊಂಡಳು ಕಾಸಿಲ್ಡ. +ನಡು ರಾತ್ರಿಯಲ್ಲಿ ನೋವು ಕಂಡು ಬಂದು ಗಂಡ ಹೋಗಿ ಕತ್ರಿನಳನ್ನು ಕರೆ ತಂದ. ಅವಳು ಬಂದವಳೇ ಪರೀಕ್ಷೆ ಮಾಡಿ. +“ಕೈತಾನ ಎಲೆ‌ಅಡಿಕೆ ತರಿಸು..ಹೆರಿಗೆ ಆಗಲಿಕ್ಕೆ ತಡ ಇದೆ.“ಎಂದು ಹೇಳಿ ಗೂಡನ್ನೇರಿ ಕುಳಿತಳು. +ಅವಳು ಹೇಳಿದಂತೆಯೇ ಕೊಂಚ ಹೊತ್ತಿನಲ್ಲಿ ಕಾಸಿಲ್ಡಳ ಹೆರಿಗೆಯೂ ಆಯಿತು. +ಹುಟ್ಟಿದ್ದು ಗಂಡು ಮಗು. +“ಗಂಡು ಮಗ ಹುಟ್ಟಿದಾನೆ..ಗಂಡು ಮಗ“ಎಂದು ಅಲ್ಲಿ ನೆರೆದ ಹೆಂಗಸರೆಲ್ಲ ಬೊಬ್ಬೆ ಹೊಡೆದರು. ಅದೆಲ್ಲೋ ಗಂಟು ಮುಖ ಹಾಕಿಕೊಂಡು ಕುಳಿತ ಕೈತಾನ ಓಡಿಬಂದ. ಅವನು ಪ್ರಾರಂಭದಲ್ಲಿ ಈ ಮಾತನ್ನೇ ನಂಬಲಿಲ್ಲ. ಅವನಿಗೆ ತುಂಬಾ ಸಂತೋಷವಾಗಿತ್ತು. ದೇವರಿಗೆ ಕೃತಜ್ಞತೆ ಹೇಳಬೇಕೆಂಬ ವಿಚಾರ ಮನದಲ್ಲಿ ಹೊಳೆದಾಗ ಮಂಜನ ತಾಯಿ ರುದ್ರಮ್ಮ ಓಡಿ ಬಂದಳು. +“ಚೌಡಮ್ಮ ಕೈ ಬಿಡಾಕಿಲ್ಲ ಅನ್ನೊದು ನಂಗೆ ಗೊತ್ತಿತ್ತು..ಅವಳ ಅನುಗ್ರಹ ಇದು..“ಎಂದು ಅವಳು ಎಳೆ ಹುಡುಗಿಯಂತೆ ಸಂಭ್ರಮಿಸಿದಳು. +ಅವಳು ಹೇಳಿದ ಈ ಮಾತು ಅಲ್ಲಿದ್ದವರಿಗೆಲ್ಲ ಕೇಳಿಸಿತು. ಇದ್ದರೂ ಇರಬಹುದು ಅಂದುಕೊಂಡರು ಅವರು. ಏಕೆಂದರೆ ಈ ಹಿಂದೆ ಗಂಡು ಕೊಡು ಎಂದು ಕಾಸಿಲ್ಡ ಕೈತಾನ ಈರ್ವರು ಯವು ಯವುದೋ ದೇವರಿಗೆ ಹರಕೆ ಹೊತ್ತಿದ್ದರು. ಗೋವಾ, ಚಂದಾವರ, ಮಲ್ಕೋಡ ಎಂದು ಹಲವರಿಗೆ ಕೇಳಿಕೊಂಡಿದ್ದರು. ಅವರು ಯಾರೂ ಅವರಿಗೆ ಗಂಡನ್ನು ಕೊಟ್ಟಿರಲಿಲ್ಲ. ಆದರೆ ಈ ಬಾರಿ ಕಾಸಿಲ್ಡ ಕೈತಾನರ ಹರಕೆ ಸತ್ಯವಾಗಿತ್ತಲ್ಲ. +ಹೆರಿಗೆ ನಂತರ ತಾಯಿ ಮನೆಗೆ ಹೋದ ಕಾಸಿಲ್ಡ ಮಗನಿಗೆ ದುಮಿಂಗ ಎಂಬ ಹೆಸರನ್ನಿಡಲು ಹೆಳಿದಳು. ಇದಕ್ಕೆ ಕೈತಾನನ ಒಪ್ಪಿಗೆಯೂ ಇತ್ತು. ವಿಚಿತ್ರವೆಂದರೆ ಹುಡುಗ ಊರಿಗೆ ತಿರುಗಿ ಬಂದ ನಂತರ ಮಾತ್ರ್ ಅವನ ಹೆಸರು ಚೌಡಪ್ಪ ಎಂದಾಯಿತು. ಒಳಗೊಳಗೆ ಮಾತನಾಡಿಕೊಂಡ ಜನ ಹೀಗೇ ಕರೆಯತೊಡಗಿದರು. ಕೈತಾನನ ಮಗನಿಗೆ ಹೊರಗೊಂದು ಹೆಸರು ಒಳಗೊಂದು ಹೆಸರು ಬಳಕೆಗೆ ಬಂದಿತು. +ಹೆಸರು ಏನೇ ಆಗಲಿ ಅವನ ಕುಟುಂಬ ಸಂತಸದಲ್ಲಿತ್ತು. ತಪ್ಪದೆ ದೇವಿಗೆ ಹಣ್ಣು ಕಾಯಿ ನೀಡುವುದು ಮಗುವಿಗೆ ಎನೇ ಆದರೂ ದೇವಿಯ ಬಂಡಾರ ತಂದು ಬಳಿಯುವುದು ಮುಂದುವರೆಯಿತು. +ಪಾದರಿಗಳು ಊರಿಗೆ ಬಂದ ನಂತರ ಕಾಸಿಲ್ಡಾ ಕೈತಾನರಿಗೆ ತುಸು ಅಳುಕು ಕಾಡಲಾರಂಭವಾಯಿತು. ಮನೆಯಲ್ಲಿ ದೇವರ ಪ್ರತಿಮೆ ಇರಿಸಿದರು. ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸತೊದಗಿದರು. ಪೂಜೆ ಪಾಪ ನಿವೇದನೆ ಆರಂಭವಾಯಿತು. +ಆದರೆ ಅಂತರಂಗದಲ್ಲಿ ದೇವಿಯ ಮೇಲಿನ ಭಕ್ತಿ ಗೌರವ ಕಡಿಮೆಯಾಗಲಿಲ್ಲ. +“ಹುಡುಗನಿಗೆ ನಮ್ಮ ಹೆಸರಿನಿಂದಾನೇ ಕರೀರಿ..ದುಮಿಂಗ ಅಂತ ಅವನಿಗೆ ನಾವು ಹೆಸರು ಇಟ್ಟಿದೀವಿ ಅಲ್ವ? +ಎಂದು ಗಂಡ ಹೆಂಡತಿ ಎಲ್ಲರಿಗೂ ಹೇಳಿದರು. +* +* +* +ಇಂತಹ ಹಲವಾರು ಪ್ರಕರಣಗಳು ಈ ಹಿಂದೆ ಆಗಿವೆ. ಕೊಪೆಲ ಹಿಂದಿನ ಕಾಡಿನಲ್ಲಿಯ ದೇವತೆ ಈ ಕೇರಿಯ ಜನರಿಗೆ ಒಳಿತನ್ನು ಮಾಡಿದ್ದಾಳೆ. ಅದನ್ನು ಅವರು ಮರೆಯಲಾರರು. +“ಮರೆಯೋದು ಕಷ್ಟ ಪದ್ರಾಬ“ಎಂದ ಸಿಮೋನ ಪಾದರಿಗಳಿಗೆ ಇರುವ ವಿಷಯ ತಿಳಿಸಿ. +“ನೋಡುವ“ಎಂದರು ಪಾದರಿ ಗೋನಸಾಲ್ವಿಸ್. +ಔಡಲಮರದ ಚೌಡಮ್ಮನ ಹಾಗೆಯೇ ಅವರನ್ನು ಬಹಳವಾಗಿ ಕಾಡುತ್ತಿದ್ದ ಬೇರೊಂದು ದೇವರು ಕೂಡ ಶಿವಸಾಗರದ ಕ್ರೀಸುವರ ನಡುವೆ ಇತ್ತು. +ಸುತಾರಿ ಇನಾಸನ ಮನೆ ಮುಂದಿನ ಕಲ್ಲು ಕುಟಿಗ ಅವರ ಕಣ್ಣು ಕುಕ್ಕುತ್ತ ಬಂದಿದ್ದ. ಒಂದು ಭಾನುವಾರ ಎಂದಿನಂತೆ ನಿಲುವಂಗಿ ಧರಿಸಿ ಅವರು ಕೈಯಲ್ಲಿ ನಾಗರಬೆತ್ತ ಹಿಡಿದು ಕೇರಿಯತ್ತ ಹೊರಟರು. ಕ್ರೀಸ್ತುವರು ಭಾನುವಾರಗಳಂದೋ ಕೆಲಸಕ್ಕೋ ಮತ್ತೆಲ್ಲಿಗೋ ಹೋಗದೆ ಬೆಳಿಗ್ಗೆ ಪೂಜೆಗೆ ಬರುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೂ ಈ ಅಭ್ಯಾಸ ಜನರಿಂದ ಹೊರಟು ಹೋಗಬಾರದು. ಇನ್ನು ಪಾದರಿ ತಮ್ಮ ಮನೆಗಳ ಬಳಿ ಬರುವುದಿಲ್ಲ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿ ಮೂಡಬಾರದು ಎಂಬ ಕಾರಣಕ್ಕೆ ಭಾನುವಾರದ ತಮ್ಮ ಭೇಟಿಯನ್ನು ಅವರು ನಿಲ್ಲಿಸಿರಲಿಲ್ಲ. ಮನೆ ಮನೆಗೆ ಹೋಗಿ- +“ಕೋಣ್ರೆ..ಮಿಸಾಕ್ ಏಯಾ“(ಯಾರೋ ಪೂಜೆಗೆ ಬನ್ನಿ) ಎಂದು ಮನೆಯ ಒಳಗಿದ್ದವರಿಗೆ ಕೇಳಿಸುವಂತೆ ಹೇಳಿ ಮುಂದೆ ಸಾಗುತ್ತಿದ್ದರು. +ಅಂದು ಸಿಮೋನನ ಮನೆ ದಾಟಿ ಸುತಾರಿ ಇನಾಸನ ಮನೆಗೆ ಬರಬೇಕು ಅನ್ನುವಾಗ ಸ್ನಾನ ಮುಗಿಸಿ ಶುಭ್ರ ಬಟ್ಟೆ ಧರಿಸಿ ಇನಾಸ ಅವನ ಮನೆ ಅಂಗಳದಲ್ಲಿ ನಿಂತಿದ್ದ. ಆದರೆ ಅವನು ಪಾದರಿ ಗೋನಸಾಲ್ವಿಸ್ ರಿಗೆ ವಿಚಿತ್ರವಾಗಿ ಕಾಣುವ ಒಂದು ಭಂಗಿಯಲ್ಲಿ ನಿಂತಿದ್ದ. ಅವನ ಮುಗಿದ ಕೈಬೆರಳುಗಳ ನಡುವೆ ಒಂದು ಉರಿಯುವ ಊದಿನಕಡ್ಡಿ ಇತ್ತು. ಅವನ ಮನೆಯ ಅಂಗಳದಲ್ಲಿನ ಕಲ್ಲು ಕುಟಿಗನಿಗೆ ಆತ ಕೈಮುಗಿದು ಪ್ರಣಾಮ ಸಲ್ಲಿಸುತಲಿದ್ದ. +* +* +* +ಸುತಾರಿ ಇನಾಸ ಘಟ್ಟದ ಕೆಳಗಿನ ಮೂಡ್ಕಣಿಯಿಂದ ಶಿವಸಾಗರಕ್ಕೆ ಬಂದು ಈಗ ಕೆಲ ವರುಷಗಳು ಉರುಳಿವೆ. ಸಿಮೋನ ಇಲ್ಲಿಗೆ ಬಂದ ಕೆಲವೇ ತಿಂಗಳುಗಳ ನಂತರ ಇವನೂ ಬಂದಿದ್ದ. +ಇನಾಸನ ತಂದೆ ಲುವಿಸ್ ಮೂಡ್ಕಣಿಯ ಕಾಮತರ ತೆಂಗಿನ ತೋಟ ನೋಡಿಕೊಂಡಿದ್ದ. ಇನಾಸನ ತಂದೆಯ ಜತೆ ಕೆಲಸ ಮಾಡುವುದರ ಬದಲು ಆಚಾರಿ ನಾರಾಯಣನ ಹತ್ತಿರ ಬಡಗಿಯ ಕೆಲಸ ಕಲಿಯಲೆಂದು ಹೋದ. +“ಸಂತ ಜೋಸೆಫ಼ರೂ ಬಡಗಿಗಳಾಗಿದ್ದರು..ಅವರ ಕೆಲಸವನ್ನೇ ನೀನೂ ಕಲಿತ ಹಾಗೆ ಆಯಿತು ಬಿಡು“ಎಂದು ಊರಿನ ಕ್ರೀಸ್ತುವರು ಇನಾಸನ ಬೆನ್ನು ತಟ್ಟಿದರು. +ಕೆಲಸ ಸಂತ ಜೋಸೆಫ಼ರದಾದರೂ ಇವನ ಹೊಟ್ಟೆ ತುಂಬುವುದು ಕಷ್ಟವಾಯಿತು. ಅಲ್ಲಿ ಇಲ್ಲಿ ದೋಣಿ ಕಟ್ಟಲೆಂದು ಹೋದ. ಭಟ್ಕಳ-ಶಿರಾಲಿ, ಕಾಯ್ಕಿಣಿಗಳಲ್ಲಿ ತಿರುಗಾಡಿದ. ಮಳೆಗಾಲದಲ್ಲಿ ಕೆಲಸವಿಲ್ಲದೆ ಕುಳಿತು ತಂದೆಯಿಂದ ಬೈಸಿಕೊಂಡ. ಒಂದು ದಿನ ಗೆರುಸೊಪ್ಪೆ ವಿಟ್ಠಲ ಶೆಟ್ಟರ ಮನೆ ಕೆಲಸಕ್ಕೆಂದು ದೋಣಿ ಹತ್ತಿ ಹೊರಟಾಗ ದೋಣಿಯಲ್ಲಿ ಸಿಮೋನ ಕಂಡ. ಇನಾಸನ ಕುತ್ತಿಗೆಯಲ್ಲಿಯ ಶಿಲುಬೆ ಕಂಡ ಸಿಮೋನ- +“ತುಕಾ ಖೈಂ ಜಾಲ್ಲೆಂ?“(ನಿಂಗೆ ಎಲ್ಲಿ ಆಯಿತು) ಎಂದು ಕೇಳಿದ. +ಇನಾಸ ಊರಿನ ಹೆಸರು ಹೇಳಿದ. ಕೆಲಸವಿಲ್ಲದೆ ತಾನಿಲ್ಲಿ ಪರದಾಡುವ ವಿಷಯವನ್ನೂ ತಿಳಿಸಿದ ಇನಾಸ. ಸಿಮೋನನಿಗೂ ಘಟ್ಟದ ಮೇಲೆ ಬಂದು ಕೆಲಸ ಮಾಡುವ ಬಡಗಿಗಳ ಅವಶ್ಯಕತೆ ಇತ್ತು. ಅವನು- +“ಘಟ್ಟದ ಮೇಲೆ ಬಂದು ಬಿಡು..ಅಲ್ಲಿ ಮಸ್ತ ಕೆಲಸ ಇದೆ..“ಎಂದ. ಇನಾಸ ತನ್ನ ಗರಗಸ ಉಳಿ ಕೊಡತಿ ಹಿಡಿದುಕೊಂಡು ಘಟ್ಟ ಹತ್ತಿದ. ಸಿಮೋನ ಅವನಿಗೆ ಕೆಲಸ ನೀಡಿದ. ಸಾಂತಾಮೋರಿ ಮನೆಯಲ್ಲಿ ಒಂದೆರಡು ವರ್ಷ ಊಟ ಮಾಡಿದ. ಒಮ್ಮೆ ಊರಿಗೆ ಹೋದಾಗ ಅವನ ತಾಯಿ ಇವನ ಸೋದರ ಮಾವ ಮುಂದೆ ನಿಂತು ಹಡಿನಬಾಳದ ತೊನ್ನು ಬಡಕ ಪೆದ್ರುವಿನ ಮಗಳನ್ನು ತಂದು ಇವನಿಗೆ ಮುದುವೆ ಮಾಡಿ- +“..ಇನ್ನು ನೀನಿದ್ದೀಯ..ನಿನ್ನ ಹೆಂಡತಿ ಇದಾಳೆ..ಏನು ಬೇಕಾದರೂ ಮಾಡಿಕೊಳ್ಳಿ..“ಎಂದು ಕೈಬಿಟ್ಟ. ಇವನ ಹೆಂಡತಿ ಮಾತ್ರ ಮೂಕಿ. +ಈಗ ಸಾಂತಾ ಮೋರಿ ಮನೆ ಬಿಡಲೇ ಬೇಕಾಯಿತು. ಶಿವಸಾಗರದಲ್ಲಿ ಕೈತುಂಬಾ ಕೆಲಸವಿತ್ತು. ಕಾಡಿನಲ್ಲಿ ಭರ್ಜರಿ ಮರ ಸಿಗುತ್ತಿದ್ದುದರಿಂದ ಮನೆ ತುಂಬಾ ಕಂಬಗಳು, ತೊಲೆಗಳು ಬಾಗಿಲು ಮರದ ಪಣತ, ಪೆಟ್ಟಿಗೆ ಸ್ನಾನದ ಬಾನಿ, ಗಾಡಿ ಎಂದೆಲ್ಲ ಮಾಡಿಸುತ್ತಿದ್ದರು ಜನ. ಕೈ ತುಂಬಾ ಕಾಸು ಓಡಾಡುತ್ತಿತ್ತು. ಆಗ ಇನಾಸ ಬೇರೊಂದು ಮನೆ ಮಾಡಲು ಹೊರಟ. +“ಇನಾಸಣ್ಣ..ನಮ್ಮ ಮನೆ ಆದೀತೋ ನೋಡು..ನಾನು ಕೊಡತೇನೆ“ಎಂದ ರುದ್ರ. +ರುದ್ರ ಸಾಗರದಲ್ಲಿ ಸುಣ್ಣದ ವ್ಯಾಪಾರ ಮಾಡುತ್ತಿದ್ದ. ಹೊನ್ನಾಳಿಯಿಂದ ಸುಣ್ಣ ತಂದು ಇಲ್ಲಿ ಮಾರುತ್ತಿದ್ದ. ಕೆಲ ಸಾಬರು ಕೂಡ ಈ ವ್ಯಾಪಾರ ಪ್ರಾರಂಭಿಸಿದ್ದರಿಂದ ರುದ್ರನಿಗೆ ಅಷ್ಟೊಂದು ವ್ಯಾಪಾರವಿರಲಿಲ್ಲ. ಕಾರಣ ಆತ ತನ್ನ ಊರಾದ ಹೊನ್ನಾಳಿಗೇನೆ ತಿರುಗಿ ಹೋಗುವ ವಿಚಾರದಲ್ಲಿದ್ದ. +ಇನಾಸ ಹೋಗಿ ರುದ್ರನ ಮನೆ ನೋಡಿದ. ಸಿಮೋನನ ಮನೆಯ ಹತ್ತಿರವೇ ಒಂದು ಹುಲ್ಲಿನ ಗುಡಿಸಲು. ಅಂಗಳದಲ್ಲಿ ಕುಂಕುಮ ಬಳಿದ ಒಂದು ಕಲ್ಲು. +ಮನೆ ಇನಾಸನ ಮನಸ್ಸಿಗೆ ಬಂದಿತು. ಆತ ಆ ಮನೆಯನ್ನು ಕೊಂಡು ಕೊಂಡ. +“ಅಣ್ಣಾ..ಈ ಕಲ್ಲು ಕುಟಿಗನನ್ನು ಮಾತ್ರ ತೆಗಿಬೇಡ..ದಿನಾ ಒಂದು ಊದಿನ ಕಡ್ಡಿ ಹಚ್ಚಿ ಕೈಮುಗಿ. ನಿನಗೆ ಒಳ್ಳೆದಾಗುತ್ತೆ“ಎಂದ ರುದ್ರ. +ಇನಾಸ ತಲೆದೂಗಿದ. ಅವನಿಗೆ ತಟ್ಟನೆ ಊರಿನಲ್ಲಿಯ ನಾಗಬನದ ನೆನಪಾಯಿತು. ಹೊಸ ಮನೆಗೆ ಹೆಂಡತಿಯನ್ನು ಕರೆತಂದ. ಬಾಯಿ ಬಾರದ ಆಕೆ ಬುದ್ದಿವಂತೆ. ತುಂಬಾ ಚಾಲೂಕು. ನೋಡಲು ಸುಂದರಿ. ಕೈಸನ್ನೆ ಬಾಯಿಸನ್ನೆಯಲ್ಲಿಯೇ ಊರನ್ನು ಒಂದು ಮಾಡಿ ಬರುತ್ತಿದ್ದಳು. +ಇನಾಸ ಕಲ್ಲು ಕುಟಿಗನಿಗೆ ಕೈ ಮುಗಿಯುವುದು ಬಿಡಲಿಲ್ಲ. ಅವನಿಗಂತೂ ಒಳ್ಳೆಯದಾಯಿತು. ಮದುವೆಯಾದ ಹತ್ತು ಹನ್ನೆರಡು ವರ್ಷಗಳಲ್ಲಿ ಮೊನ್ನೆ(ಮೂಕಿ) ಹೆಂಡತಿ ಅವನಿಗೆ ಇಬ್ಬರು ಗಂಡು ಮಕ್ಕಳನ್ನು ಮೂವರು ಹೆಣ್ಣು ಮಕ್ಕಳನ್ನು ನೀಡಿದಳು. ಈಗಲೂ ಅವಳು ಕಳಕಳಿಯಾಗಿದ್ದಾಳೆ. ಸಂಜೆ ಕೆಲಸ ಮುಗಿಸಿ ಬರುವ ಗಂಡನ ಬೆನ್ನಿಗೆ ಬಿಸಿ ಬಿಸಿ ನೀರು ಸುರುವಿ ತಿಕ್ಕುತ್ತಾಳೆ. +* +* +* +ಶಿವಸಾಗರಕ್ಕೆ ಬಂದ ಬಹಳ ದಿನಗಳವರೆಗೆ ಇನಾಸನ ಕುತ್ತಿಗೆಯಲ್ಲಿ ಶಿಲುಬೆಯಿತ್ತು. ಎರಡು ಮೂರು ವರ್ಷಕ್ಕೊಮ್ಮೆ ಊರಿಗೆ ಹೋದಾಗ ಮನೆಯಲ್ಲಿ ಆಮೋರಿ ಮಾಡುತ್ತಿದ್ದ. ಇಗರ್ಜಿಗೆ ಹೋಗುತ್ತಿದ್ದ. ಕ್ರಮೇಣ ಇದು ದೂರವಾಯಿತು. ಶಿಲುಬೆಯ ದಾರ ಲಡ್ಡಾಗಿ ಶಿಲುಬೆ ಬಿದ್ದು ಹೋಯಿತು. ಮದುವೆ ನಿಗದಿಯಾದಾಗ ಊರಿನಲ್ಲಿ ಪಾದರಿ ಪರಲೋಕ ಮಂತ್ರ ನಮೋರಾಣಿ ಮಂತ್ರ ಮಾತ್ರ ಬರುತ್ತೆ ಅಲ್ವ? ಎಂದು ಕೇಳಿದ್ದ. +“ನೀವು ಊರು ಬುಟ್ಟು ಹೋದವರು ಎಲ್ಲ ಮರೀತಿರಾ“ಎಂದು ಬೇರೆ ಕಟುಕಿದ್ದ. +ಮದುವೆಯಾಗಿ ಬರುವವರೆಗೂ ಸಾಂತಮೋರಿ ಮನೆಯಲ್ಲಿಯ ದೇವರ ಪೀಠದ ಮುಂದೆ ಉರಿಯುತ್ತಿರುವ ಮೇಣದ ಬತ್ತಿ ಕಂಡು ನಿಂತಲ್ಲಿಯೇ ಒಂದು ಕ್ಷಣ ಶಿಲುಬೆಯ ಗುರುತು ಮಾಡಿ ಕೈಬೆರಳ ತುದಿಗೆ ಮುತ್ತಿಡುತ್ತಿದ್ದ. ಹೊಸ ಮನೆಗೆ ಬಂದ ನಂತರ ಈ ಅಭ್ಯಾಸ ಕಡಿಮೆಯಾಯಿತು. ಹೆಂಡತಿ ಆಗಾಗ್ಗೆ ಹೆರಿಗೆಗೆಂದು ತಾಯಿಯ ಮನೆಗೆ ಹೋಗುತ್ತಿದ್ದಳು. ದೇವರ ಗೂಡಿನೆದುರು ಮೇಣದ ಬತ್ತಿ ಹಚ್ಚಲು ನೆನಪಾಗುತ್ತಿರಲಿಲ್ಲ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಕೈ ಕಾಲು ಮುಖ ತೊಳೆದು ಕಲ್ಲು ಕುಟಿಗನಿಗೆ ಕೈ ಮುಗಿಯುವುದನ್ನು ಈತ ಮರೆಯಲಿಲ್ಲ. +ಒಂದೊಂದೇ ಮಗುವನ್ನು ಹೊತ್ತು ತಂದ ಮೊನ್ನೆ ಕೂಡ ಪ್ರಾರಂಭದಲ್ಲಿ ಜಪ ಮಾಡುತ್ತಿದ್ದವಳು ಕ್ರಮೇಣ ಅವಳೂ ನಿಲ್ಲಿಸಿದಳು. ತಮ್ಮ ಕುಟುಂಬವನ್ನು ಅಂಗಳದಲ್ಲಿಯೇ ಇರುವ ಈ ದೇವರು ಹ್ಯಾಗೂ ಕಾಪಾಡುತ್ತಿದ್ದಾನೆ ಎಂದು ಅವರು ತಿಳಿದುಕೊಂಡರೋ ಎನೋ ಅಂತು ಹೊಸಮನೆ ಕೊಂಡಾಗ ಇರಲಿ ಎಂದು ಇನಾಸ ಮಾಡಿದ ದೇವರ ಗೂಡಿನಲ್ಲಿಯ ಹಳೆಯ ಇಮಾಜ ಎಂದೋ ಬಿದ್ದು ಒಡೆದು ಹೋಗಿತ್ತು. ಬೇರೆಯದನ್ನು ತರಬೇಕು ತರಬೇಕು ಅಂದರೆ ಆಗಿರಲಿಲ್ಲ. ಈಗ ಪಾದರಿ ಗೋನಸಾಲ್ವಿಸ್ ಬಂದ ನಂತರ ಅವರೇ ತಂದು ಇರಿಸಿದ ಸಂತ ಅಂತೋನಿಯ ವಿಗ್ರಹ ಅಲ್ಲಿದೆ. ಪಾದರಿ ಬಂದ ನಂತರ ಅಮೋರಿ, ತೇರ್ಸ ಪ್ರಾರಂಭವಾಗಿದೆ. ಹೀಗೆಂದು ಕಲ್ಲು ಕುಟಿಗನನ್ನು ಮರೆಯಲು ಉಂಟೆ? +ಪಾದರಿ ಸಣ್ಣಗೆ ಕೆಮ್ಮಿದರು. +ಇನಾಸ ಧಡ ಬಡಿಸಿ ಊದಿನ ಕಡ್ದಿ ದೇವರ ಮುಂದೆ ಹಚ್ಚಿ- +“ಬೆಸಾಂವಂ ದಿಯಾ ಪದ್ರಬಾ“ಎಂದು ಪಾದರಿಗೆ ಕೈ ಮುಗಿದ. +“ಪೂಜೆಗೆ ಬರೋದಿಲ್ವೆ?” +“ಬಂದೇ ಪದ್ರಬಾ ಹೊರಟಿದ್ದೆ“ಎಂದ ಆತ. +* +* +* +ಅಂದು ಪಾದರಿ ಗೋನಸಾಲ್ವಿಸ್ ಪ್ರವಚನ ನೀಡಿದ್ದು ದೇವರ ಹತ್ತು ಕಟ್ಟಳೆಗಳ ಬಗ್ಗೆ. ಸಿನಾಯ ಪರ್ವತದ ಮೇಲೆ ಮೋಸೆಸನ ಕೈಗೆ ದೇವರು ಬರೆಸಿ ನೀಡಿದ ಎರಡು ಕಲ್ಲಿನ ಫಲಕಗಳಲ್ಲಿಯ ಕಟ್ಟಳೆಗಳಲ್ಲಿ ಮೊದಲನೆಯದು- +“ದೇವರೊಬ್ಬರನ್ನೆ ಆರಾಧಿಸಿ. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಗೌರವಿಸಿ“ಎಂಬುದು. +ಯಾವ ಕಾರಣಕ್ಕೂ ಈ ಕಟ್ಟಲೆಯನ್ನು ಕ್ರೀಸ್ತುವರು ಮೀರಬಾರದು. ಒಬ್ಬ ಮನುಷ್ಯ ಇಬ್ಬರು ಯಜಮಾನರನ್ನು ಸೇವಿಸಲಾರ. ಅಂತೆಯೇ ಒಬ್ಬನಿಗೆ ಇಬ್ಬರು ದೇವರು ಇರುವುದೂ ಸಾಧ್ಯವಿಲ್ಲ. ದೇವರು ಒಬ್ಬನೆ. ಅದು ಏಸು ಪ್ರಭು ಹೇಳಿದ ದೇವರು. ಅವನನ್ನು ನಾವು ಆರಾಧಿಸಬೇಕು. ಗೌರವಿಸಬೇಕು. ಸ್ತುತಿಸಬೇಕು. ತಲೆಬಾಗಬೇಕು. ನಮಗೆ ಬೇರೊಬ್ಬ ದೇವರಿಲ್ಲ. ಸುಳ್ಳು ದೇವರುಗಳನ್ನು ನಂಬುವವರು, ನರಕದ ಅಗ್ನಿಗೆ ಬೀಳುವರು. +ಈ ಮಾತುಗಳನ್ನು ಹೇಳುವಾಗ ಪಾದರಿ ಗೋನಸಾಲ್ವಿಸ್ ರ ಮನಸ್ಸಿನಲ್ಲಿ ಇದ್ದುದು ರುದ್ರನ ಮನೆಯ ಕಲ್ಲು ಕುಟಿಗ ಹಾಗೂ ಔಡಲಮರದ ಚೌಡಮ್ಮ. ಅವಕಾಶ ಸಿಕ್ಕಾಗ ಈ ಎರಡನ್ನೂ ಕ್ರೀಸ್ತುವರ ಮನಸ್ಸಿನಿಂದ ದೂರ ಮಾಡಬೇಕು ಎಂದು ಅವರು ಮತ್ತೊಮ್ಮೆ ಅಂದುಕೊಂಡರು. +-೫- +ಪಾದರಿ ಗೋನಸಾಲ್ವಿಸ್ ಊರಿಗೆ ಬಂದ ನಂತರ ಮಾಡಿದ ಕೆಲಸಗಳಲ್ಲಿ ಇನ್ನೂ ಒಂದು ಎಂದರೆ ಸಾನಬಾವಿ ಪೆದ್ರು ಮನೆಯಲ್ಲಿ ತಂದಿರಿಸಿಕೊಂಡ ಹೆಂಗಸನ್ನು ಕ್ರಿಶ್ಚಿಯನ್ ಮಾಡಿದ್ದು. +ಪೆದ್ರು ಶಿರಾಲಿ ಹತ್ತಿರದ ಸಾನಬಾವಿಯವನು. ಅವನನ್ನು ಶಿವಸಾಗರಕ್ಕೆ ಕರೆತಂದಾತ ಸಿಮೋನ. ಕಲ್ಲು ಕೆತ್ತುವುದರಲ್ಲಿ ಪೆದ್ರು ನಿಸ್ಸೀಮ. ಕಾಲುಗಳ ನಡುವೆ ಕಲ್ಲನ್ನು ನಿಲ್ಲಿಸಿಕೊಂಡು ಬಾಗಿ ನಿಂತು ಬಾಚಿಯಿಂದ ಚಕಚಕನೆ ಅವನು ಕಲ್ಲನ್ನು ಕೆತ್ತುವುದೇ ನೋಡಲು ಒಂದು ಚೆಂದ. ಅವನು ಕೆತ್ತಿ ಇರಿಸಿದ ಕಲ್ಲುಗಳ ಮೇಲೆ ಕೈ‌ಇರಿಸಿದರೆ ಕೈ ಜಾರುತ್ತಿತ್ತು. ಅಷ್ಟು ನಯಸ್. +ಶಿವಸಾಗರಕ್ಕೆ ಬಂದ ಮೂರುನಾಲ್ಕು ವರ್ಷ ಇವನು ಸರಿಯಾಗಿದ್ದ. ಕ್ರಮೇಣ ಇವನ ತುಟಿಯ ಮೇಲೆ ಮೀಸೆ ಕಾಣಿಸಿಕೊಂಡಿತು. ತೋಳು ಎದೆ ಹಿಗ್ಗಿ ಬಲಿಷ್ಠವಾಯಿತು. ಕೆಲಸ ನಡೆಯುವಲ್ಲಿ ನೀರು ತಂದು ಹಾಕುವ, ಮಣ್ಣು ಕಲಿಸುವ ಹೆಂಗಸರನ್ನು ಕುತೂಹಲ ಆಕರ್ಷಣೆಯಿಂದ ನೋಡತೊಡಗಿದ. ಅವರ ಮುಖ ಮೈ ಕುಲುಕಾಟದಲ್ಲಿ ಇವನಿಗೆ ಏನೋ ಆಕರ್ಷಣೆ ಕಂಡಿತು. ಅವರ ಜತೆ ಮಾತನಾಡುವುದು, ಅವರನ್ನು ರೇಗಿಸುವುದು ಮಾಡತೊಡಗಿದ. ಅವನ ಈ ಪ್ರವೃತ್ತಿ ಅಧಿಕವಾದಾಗಲೇ ರಂಗಿ ಎಂಬ ಯುವತಿಯೋರ್ವಳು ಅವನ ಕಣ್ಣಿಗೆ ಬಿದ್ದಳು. +ಆರು ಏಳನೇ ವಯಸ್ಸಿಗೆಲ್ಲ ರಂಗಿಗೆ ಮದುವೆಯಾಗಿತ್ತು. ಅವಳ ಸೋದರ ಮಾವನನ್ನೇ ಕೊಟ್ಟು ಮದುವೆ ಮಾಡಿದ್ದರು. ಗಂಡ ಮದುವೆ ಅಂದರೆ ಏನು ಎಂಬುದು ತಿಳಿಯದೆ ಆಟವಾಡಿಕೊಂಡೇ ದೊಡ್ಡವಳಾಗಿದ್ದಳು ರಂಗಿ. ಅವಳು ಮೈ ನೆರೆದ ನಂತರ ಗಂಡನ ಮನೆಗೆ ಬಂದದ್ದೂ ಆಯಿತು. ಶಿವಸಾಗರದ ಟೋಲನಾಕಾದ ಬಳಿ ಅವಳ ಗಂಡನ ಮನೆ. ಗಾಡಿಯಲ್ಲಿ ಮಣ್ಣು ಹೊಡೆಯುವ ಕೆಲಸ ಅವಳ ಗಂಡನದು. ಮನೆಕಟ್ಟಲು ಬೇಕಾದ ಕೆಂಪುಮಣ್ಣನ್ನು ಅಲ್ಲಲ್ಲಿ ಗುಡ್ಡಗಳಿಂದ ಕಡಿದು ಗಾಡಿಯಲ್ಲಿ ತುಂಬಿ ತಂದು ಮನೆ ಕಟ್ಟುವಲ್ಲಿ ಸುರಿದರೆ ಗಾಡಿಗಿಷ್ಟು ಎಂದು ಹಣ ಸಿಗುತ್ತಿತ್ತು. ಅವನ ಕೆಲಸಕ್ಕೇನೂ ತೊಂದರೆ ಇರಲಿಲ್ಲ. ಎಲ್ಲೆಲ್ಲೂ ಮನೆಗಳು ಆಗುತ್ತಿದ್ದುದರಿಂದ- +“ಹನುಮಂತ..ಮಣ್ಣು ಬೇಕಲ್ಲ..“ಎಂದು ಜನ ಮನೆ ಬಾಗಿಲಿಗೆ ಬರುತ್ತಿದ್ದರು. +ಮಣ್ಣನ್ನು ಕೊಂಚ ದೂರದಿಂದ ತರಬೇಕು ಅನ್ನುವುದೇ ಒಂದು ಕೊರತೆ. +ಆದರೂ ಆತ ಮಣ್ಣು ಸರಬರಾಜು ಮಾಡುತ್ತಿದ್ದ. ಮನೆಗೆ ಹೆಂಡತಿ ಬಂದ ಮೇಲಂತೂ ಹನುಮ ಇನ್ನೂ ಹುರುಪಿನಲ್ಲಿದ್ದ. ಪೆದ್ರು ಸಣ್ಣದೊಂದು ಕೆಲಸವನ್ನು ಗುತ್ತಿಗೆಗೆ ಹಿಡಿದಿದ್ದ. ಮೀನು ಸಾಹೇಬರ ಮನೆ ಕೆಲಸ. ಕಲ್ಲಿಗೆ ಒಬ್ಬರಿಗೆ ಹೇಳಿ ಮಣ್ಣಿಗೆ ಹನುಮಂತನಿಗೆ ಹೇಳಿದ್ದ. ಮನೆ ಕಟ್ಟುವಲ್ಲಿ ಕಲ್ಲು ಬಂದು ಬಿದ್ದು ಅದನ್ನು ಕೆತ್ತಿ ಜೋಡಿಸಿ ಇರಿಸಲಾಗಿತ್ತು. ಪಾಯತೋಡಿ ಮುಗಿದಿತ್ತು. ಕಲ್ಲು ಕಟ್ಟುವವರಿಗೆ ’ಈ ಸೋಮವಾರದಿಂದ ಬರಲು ಹೇಳಿ ಆಗಿತ್ತು. ಆದರೆ ಶನಿವಾರವಾದರೂ ಮಣ್ಣು ಬಂದು ಬೀಳಲಿಲ್ಲ.’ +ಪೆದ್ರು ಟೋಲನಾಕಾದ ಹನುಮಂತನ ಮನೆಗೇನೆ ಹೋದ. ಹನುಮಂತ ಇರಲಿಲ್ಲ. ಅವನ ಹೆಂಡತಿ ರಂಗಿ ತೆಂಗಿನ ಮರದಡಿಯಲ್ಲಿ ತೆಂಗಿನ ಸೋಗೆಯ ಮರೆಯಲ್ಲಿ ತುಂಡು ಸೀರೆ ಸುತ್ತಿಕೊಂಡು ಸ್ನಾನ ಮಾಡುತ್ತಿದ್ದಳು. ಅವಳ ಎದೆ ತೊಡೆಗಳನ್ನು ಮುಚ್ಚುವುದರ ಬದಲು ತೆರೆದು ತೋರಿಸುತ್ತ ಒದ್ದೆಯಾದ ಬಿಳಿ ವಸ್ತ್ರ ಅವಳ ಮೈಗೆ ಅಂಟಿಕೊಂಡಿತ್ತು. ಸೋಗೆಯ ಮರೆಯಿಂದ ತಲೆಯನ್ನು ಮಾತ್ರ ಅವಳು ಹೊರಹಾಕಿ, +“ಅವರಿಲ್ಲ“ಎಂದಳು. +ಹರಿದು ಅಲ್ಲಲ್ಲಿ ಕಿಂಡಿಯಾಗಿದ್ದ ಸೋಗೆಯ ಮರೆಯಿಂದ ಅವಳ ದೇಹದ ದರ್ಶನವಾಗಿ ಪೆದ್ರು ನೆಲಕ್ಕೆ ಕಾಲು ಅಂಟಿಕೊಂಡಂತಾಗಿ ನಿಂತಲ್ಲಿಯೇ ನಿಂತ. +“ಮಣ್ಣು ಹೇಳಿದ್ದೆ..ಹೇಳಿ ಎಂಟು ದಿನ ಆಯ್ತು“ಎಂದು ರಾಗ ಎಳೆದ ಪೆದ್ರು. +“ಮರೆತಿರಬಹುದು ಬೈದು ನಾ ಹೇಳತೇನೆ“ಎಂದಳವಳು ಹಿಂದಿನಂತೆಯೇ ತಂಗಾಳಿಗೆ ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತು. +“ನಾಳೆ ಸಂಜಿಯೊಳಗೆ ಎರಡು ಗಾಡಿ ಮಣ್ಣು ಬೇಕು ಅಂತ ಹೇಳು..“ಎಂದು ಹೇಳಿ ಪೆದ್ರು ಅಲ್ಲಿಂದ ಕದಲಿದ. +“ಅಲ್ಲಾ..“ದನಿ ಅವನನ್ನು ಹಿಡಿದು ನಿಲ್ಲಿಸಿತು. +“ಯಾರು ಬಂದಿದ್ರು ಅಂದ್ರೆ..” +“ಪೆದ್ರು…ಅಂತ ಹೇಳು. ಸಾನಬಾವಿ ಪೆದ್ರು..ಮೀನು ಸಾಹೇಬರ ಮನೆ ಕಟ್ಟಲಿಕ್ಕೆ ಅಂತ ಹೇಳು..” +ಇಷ್ಟನ್ನು ಮಾತನಾಡುತ್ತ ಮತ್ತೊಮ್ಮೆ ಹರಿದು ಚಿಂದಿಯಾದ ಮಡಲಿನೊಳಗೆ ದೂರದಿಂದ ಇಣುಕಿದ ಪೆದ್ರು. +“ಆತು…ಹೇಳತೇನೆ“ಎಂದಳವಳು. +ಹನುಮಂತನಿಗೆ ಅವಳು ಹೇಳಿದಳೇನೋ ಭಾನುವಾರ ಕತ್ತಲಾಗುವಷ್ಟರಲ್ಲಿ ಎರಡು ಗಾಡಿ ಕೆಂಪು ಮಣ್ಣು ಬಂದು ಮೀನು ಸಾಹೇಬರು ಮನೆ ಕಟ್ಟುವಲ್ಲಿ ರಾಶಿ ಬಿದ್ದಿತು. +ಪೆದ್ರು ಮೀನು ಸಾಹೇಬರ ಮನೆ ಕೆಲಸವನ್ನೇನೋ ಪ್ರಾರಂಭಿಸಿದ. ಮನೆ ತಳಪಾಯ ಮೀರಿ ಮೇಲೆದ್ದಿತು. ಗೋಡೆಗಳು ತಲೆ ಎತ್ತಿನಿಂತವು. ಬಡಗಿಗಳು ಮಾಡು ಏರಿಸಲೆಂದು ಶುಭದಿನ ನೋಡಬೇಕೆಂದರು. ಮುಂದಿನ ಬಟವಾಡೆಯ ದಿನಮಣ್ಣಿನ ಬಾಬ್ತು ಹಣ ಕೊಡುವುದಾಗಿ ಪೆದ್ರು ಹನುಮಂತನಿಗೆ ಹೇಳಿದ. ಬುಧವಾರ ಸಂಜೆ ಅದಾರೋ ಒಂದು ಸುದ್ದಿ ತಂದರು. ಮಂಕಾಳೆ ಗುಡ್ಡಕ್ಕೆ ಮಣ್ಣು ಕಡಿಯಲು ಹೋದ ಹನುಮಂತ ಗುಡ್ಡ ಕಡಿದು ಅದರ ಅಡಿಗೆ ಸಿಕ್ಕಿದ್ದ. ಶಿವಸಾಗರದಿಂದ ಹನುಮಂತನನ್ನು ಬಲ್ಲವರೆಲ್ಲ ಮಂಕಾಳೆಗೆ ಧಾವಿಸಿ ಹೋಗಿದ್ದರು. ಆದರೆ ಹನುಮಂತನ ಶವ ದೊರೆತದ್ದು ಮಾತ್ರ ಎರಡು ದಿನಗಳ ನಂತರವೆ. ಗುಡ್ಡ ಕುಸಿದು ಬಿದ್ದೆಡೆಯಲ್ಲಿ ಹನುಮಂತನ ಹೆಂಡತಿ ರಂಗಿ, ಅವಳ ತಾಯಿ ತಂದೆ ಗೋಳಾಡುತ್ತಲಿದ್ದುದೇ ಎಲ್ಲರ ಕಣ್ಣುಗಳಲ್ಲೂ ನೀರು ತರಿಸುವ ವಿಷಯವಾಯಿತು. +ಪೆದ್ರು ಮಣ್ಣಿನ ಬಾಬ್ತು ಹನುಮಂತನಿಗೆ ಕೊಡಬೇಕಾಗಿರುವ ಹಣ ಕೊಡಲು ಒಂದು ತಿಂಗಳ ನಂತರ ಟೋಲನಾಕಾದ ಮನೆಗೆ ಹೋದಾಗ ರಂಗಿ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅವಳ ಮೈ ಬಾಡಿತು. ಕಣ್ಣುಗಳು ಆಳದಲ್ಲೆಲ್ಲೋ ಮಂಕಾಗಿ ಉರಿಯುತ್ತಿತ್ತು. +ರಂಗಿ ಪೆದ್ರು ಕೊಟ್ಟ ಹಣವನ್ನು ಜಗುಲಿಯ ಮೇಲಿರಿಸಿ ಮುಸುಮುಸು ಅತ್ತಳು. ಪೆದ್ರು ಮನಸ್ಸು ಹಿಂಡಿದಂತಾಗಿ ಅಲ್ಲಿಂದ ತಿರುಗಿ ಬಂದ. ಆದರೆ ರಂಗಿಯನ್ನು ಮರೆಯಲು ಅವನಿಂದ ಆಗಲಿಲ್ಲ. ಆಗಾಗ್ಗೆ ಅವಳು ಕಣ್ಣಿಗೆ ಬೀಳುವುದೂ ಇತ್ತು. ಹೀಗೆ ಅವಳನ್ನು ನೋಡಿದಾಗಲೆಲ್ಲ ಪೆದ್ರು ಒಂದು ಬಗೆಯ ಗೊಂದಲಕ್ಕೆ ಈಡಾಗುತ್ತಿದ್ದ. ತಟ್ಟನೆ ಅವನ ಮೈ ಬಿಸಿ ಏರುತ್ತಿತ್ತು. ನಡಿಗೆಯ ವಿಧಾನದಲ್ಲಿ ಏರು ಪೇರಾಗುತ್ತಿತ್ತು. ಅವಳ ದುಂಡು ಮುಖ, ಕುಲುಕಾಡುವ ಕುಚಗಳು ಇವನನ್ನು ಕೆಣಕುತ್ತಿದ್ದವು. ಮೈ ನರಗಳು ಬಿಗಿಯಾಗಿ ಎಳೆದು ಕಟ್ಟಿ ಮೀಟಿದ ಹಾಗೆ ಆತ ತಡಬಡಿಸುತ್ತಿದ್ದ. ಜೊತೆಗೆ ಮದುವೆಯಾದ ಹೊಸದರಲ್ಲಿಯೇ ಇವಳಿಗೆ ಹೀಗೆ ಆಗಬೇಕೆ ಎಂಬ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಎಲ್ಲ ಭಾವನೆಗಳಿಗೆ ಬಲಿಯಾಗಿ ಅವಳನ್ನು ಅದೊಂದು ರೀತಿಯಲ್ಲಿ ನೋಡುತ್ತಿದ್ದ. ಮಾತನಾಡಿಸುತ್ತಿದ್ದ. +ಕೆಲವೇ ದಿನಗಳಲ್ಲಿ ರಂಗಿ- +“ಅಣ್ಣಾ“ಎಂದು ಅವನ ಬಳಿಗೇನೆ ಬಂದಳು. +“ನನಪಾಡು ಹಂಗಾಯ್ತು ಹೊಟ್ಟೆ ಒಂದೈತೆ ಏನಾರ ಕೆಲಸ ಕೊಡಿ“ಎಂದು ಅವನ ಎದುರು ನಿಂತು ಅಂಗಲಾಚಿದಳು. +ಅವನು ಅವಳಿಗೆ ನೀಡಬಹುದಾಗಿದ್ದ ಕೆಲಸವೆಂದರೆ ಮಣ್ಣು ಕಲಿಸಲು ನೀರು ತರುವುದು. ಮಣ್ಣು ಕಲಿಸುವುದು. ಹಿಂದೆಲ್ಲ ಈ ಕೆಲಸ ಮಾಡಿದವಳೆ ರಂಗಿ. ಗಂಡನ ಜೊತೆಗೂ ಹೋಗಿ ಕೆಲಸ ಮಾಡುತ್ತಿದ್ದಳು ಆದರೆ ಆಗೆಲ್ಲ ಜೊತೆಗೆ ಗಂಡ ಇರುತ್ತಿದ್ದ ಈಗ? +’ನಾಳೆಯಿಂದ ಬಾ’ ಎಂದ ಪೆದ್ರು. +ಅವನಿಗೆ ಕೈತುಂಬ ಕೆಲಸವಿತ್ತು. ಮೀನು ಸಾಹೇಬರ ಮನೆ ಕೆಲಸದ ಕಟ್ಟೋಣ ಮುಗಿದು, ಬ್ರಾಹ್ಮಣರ ಕೇರಿಯಲ್ಲಿ ಒಂದು ಮಹಡಿ ಮನೆ ಕಟ್ಟಲು ಆತ ಆರಂಭಿಸಿದ್ದ. ತನ್ನಲ್ಲಿ ಕೆಲಸ ಮಾಡಲೆಂದು ಕೊನೆ ಮನೆ ಬಿಕಾರೋ ಅವನ ಮಗ ಸಂತಿಯಾಗನನ್ನು ಕರೆಸಿಕೊಂಡಿದ್ದ. ಇತರೆ ಕೆಲಸಗಳಿಗೆ ರಂಗಿ ಬಂದಳು. ಪೆದ್ರು ಕೂಡ ಗೋಡೆಯನ್ನೇರಿ ಕಲ್ಲು ಕಟ್ಟುತ್ತಿದ್ದ. +“ರಂಗಿ ಮಣ್ಣು ತಾ ಮಣ್ಣು..“ಎಂದು ಮೇಲೆ ನಿಂತು ಕೂಗುತ್ತಿದ್ದ. +ರಂಗಿ ಬಳುಕುವ ಏಣಿ ಹಿಡಿದು ತಲೆಯ ಮೇಲೆ ಮಣ್ಣು ತುಂಬಿದ ಬಾಂಡಲಿ ಇರಿಸಿಕೊಂಡು ಮೇಲೆ ಹತ್ತುತ್ತಿದ್ದಳು. ಅರೆ ಕಟ್ಟಿ ಮುಗಿದ ಗೋಡೆಯ ಮೇಲೆನಿಂತ ಪೆದ್ರು ಬಗ್ಗಿ ಅವಳ ತಲೆಯ ಮೇಲಿನ ಬಾಂಡಲಿ ತೆಗೆದುಕೊಂಡು ಆಗಲೇ ಬರಿದಾದ ಇನ್ನೊಂದು ಬಾಂಡಲಿಯನ್ನು ಅವಳ ಕೈಗೆ ನೀಡುತ್ತಿದ್ದ. ಈ ಕೆಲಸ ನಿರಂತರವಾಗಿ ಮುಂದುವರೆಯುತ್ತಿತ್ತು. ನಡುವೆ ದಣಿವಾರಿಸಿಕೊಳ್ಳಲು ಪೆದ್ರು ಕೆಳಗೆ ಇಳಿದು ಬರುತ್ತಿದ್ದ. ಕೆತ್ತಬೇಕಾದ ಕಲ್ಲುಗಳ ಮೇಲೆ ಕುಳಿತು ಅದೆಲ್ಲೋ ಇರಿಸಿದ ಎಲೆ ಅಡಿಕೆ ಚಂಚಿ ತೆಗೆದು ತಂಬಾಕು ಅಡಿಕೆಯನ್ನು ಬಾಯಿಗೆಸೆದುಕೊಂಡು, ಚಿಪ್ಪಿನ ಸುಣ್ಣವನ್ನು ಸುಣ್ಣದ ಕಾಯಿಂದ ತೆಗೆದು ಎಲೆಗೆ ಬಳಿಯುತ್ತ ಇರಬೇಕಾದರೆ ರಂಗಿ ಅವನ ಬಳಿ ಬರುತ್ತಿದ್ದಳು. ಅವಳು ಕೇಳದಿದ್ದರೂ ಅವಳಿಗೆ ಒಂದು ಎಲೆ ಅರ್ಧ ಅಡಿಕೆ ಕೊಟ್ಟು- ಇಕಾ- ಎಂದು ಸುಣ್ಣದ ಕಾಯನ್ನು ಅವಳತ್ತ ಚಾಚುತ್ತಿದ್ದ. ಅಷ್ಟು ದೂರ ನಿಂತ ಅವಳು ಎಲೆ ಅಡಿಕೆ ಹಾಕಿಕೊಳ್ಳುತ್ತಿರಲು ಇವನು ಅವಳನ್ನೇ ನೋಡುತ್ತಿದ್ದ. +ಬ್ರಾಹ್ಮಣರ ಮನೆ ಕೆಲಸ ಮುಗಿಯಿತು. ಪೆದ್ರು ಬೇರೊಂದು ಕಡೆ ಕೆಲಸ ಹಿಡಿದ. ರಂಗಿ ಅಲ್ಲಿಗೂ ಬಂದಳು. ಅಷ್ಟು ಹೊತ್ತಿಗೆ ರಂಗಿ ಪೆದ್ರು ಹತ್ತಿರ ಹತ್ತಿರ ಬಂದಿದ್ದರು. +“ಮನೆಯಾಗೆ ಇರೋದು ಕಷ್ಟ ಆಗೈತೆ“ಎಂದಳು ರಂಗಿ ಒಂದು ದಿನ ಎಲೆ ಅಡಿಕೆ ಜಗಿಯುತ್ತ ಕುಳಿತ ಪೆದ್ರುಗೆ. +“..ಏನಾಯ್ತು?” +“ಅವರ ದೂರದ ಸಂಬಂಧಿಯೊಬ್ಬ ತುಂಬಾ ಕಾಟ ಕೊಡತಿದಾನೆ“ಎಂದಳು ರಂಗಿ. +ಒಂಟಿ ಹೆಣ್ಣು! ಗಂಡನನ್ನು ಕಳೆದುಕೊಂಡಾಕೆ. ಯಾವ ಗೂಳಿಯೂ ಬಾಯಿ ಹಾಕಿ ಮೇಯದಿರುವುದರಿಂದ ಸೊಂಪಾಗಿ ಬೆಳೆದು ನಿಂತಿದ್ದಾಳೆ. ಹನುಮಂತನ ದೂರದ ನೆಂಟ ವೀರಭದ್ರ ಒಂದಲ್ಲಾ ಒಂದು ನೆಪ ಮಾಡಿಕೊಂಡು ಮನೆಗೆ ಬರುತ್ತಾನೆ. ಇವಳನ್ನು ಮಾತಿಗೆ ಎಳೆಯುತ್ತಾನೆ. ಅವನು ನೋಡುವ ರೀತಿಯೇ ಮೈಮೇಲೆ ಮುಳ್ಳು ಏಳಿಸುತ್ತದೆ. ಈ ಹಿಂಸೆಯಿಂದ ತೊಳಲಾಡುವ ರಂಗಿ ಒಂದೆರಡು ಬಾರಿ ಪೆದ್ರುವಿನೆದುರು ತನ್ನ ಗೋಳು ತೋಡಿಕೊಂಡಳು. ಅವನು ತಾನೆ ಏನು ಮಾಡಿಯಾನು? ಹೌದಾ..ಎಂದಷ್ಟೇ ಕೇಳಿದ. ಬೇರೆನಾದರೂ ಮಾಡಲು ಒಂದು ಅವಕಾಶ ಬೇಕಲ್ಲ. +ಒಂದು ರಾತ್ರಿ ಪೆದ್ರು ಊಟ ಮುಗಿಸಿ ಮಲಗಿದ್ದ. ಊಟ ಎಂದರೆ ಅವನೇ ಬೇಯಿಸಿಕೊಳ್ಳುವ ಕುಸುಬಲಕ್ಕಿಯ ಗಂಜಿ ಜೊತೆಗೆ ಸುಟ್ಟುಕೊಂಡ ಬಂಗಡೆ ಮೀನು.. ಘಟ್ಟ ಹತ್ತಿ ಮೇಲೆ ಬಂದ ಆತ ಕೆಲ ದಿನ ಊಟದ ಮನೆ ಮರಿಯಳಲ್ಲಿ ಊಟಮಾಡುವುದಿತ್ತು. ಮರಿಯ ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಮಾಡುವುದು ಇವನ ಗಮನಕ್ಕೆ ಬಂದಿತು. ಕಂತ್ರಾಟುದಾರ ಎಂದು ಹೆಸರು ಪಡೆದ ಸಿಮೋನನಿಗೆ ಬಿಸಿ ಬಿಸಿ ಬಂಗಡೆ ಮೀನಿನ ಸಾರನ್ನು ಬಡಿಸುವ ಈಕೆ ತನಗೆ ತನ್ನಂತಹ ಇತರೆ ಕೆಲಸಗಾರರಿಗೆ ಹಿಂದಿನ ರಾತ್ರಿ ಉಳಿದ ತರ್‍ಲೆ ಮೀನಿನ ಹಳಸಿದ ಸಾರನ್ನು ಬಡಿಸುತ್ತಿದ್ದಳು. ಇದೇ ಕಾರಣಕ್ಕೆ ತನಗೂ ಅವಳಿಗೂ ಜಗಳವಾಗಿ ತಾನು ಅವಳ ಮನೆ ಬಿಟ್ಟೆ. ಸಿಮೋನನ ಮನೆ ಸಾಲಲ್ಲಿ ಕೊನೆಯದಾಗಿ ಉಳಿದ ಜಾಗದಲ್ಲಿ ಈತ ಮನೆ ಕಟ್ಟಿದ. ಹುಲ್ಲು ಹೊದೆಸಿ ಮಣ್ಣಿನ ಗೋಡೆ ಏರಿಸಿ ಅದಕ್ಕೆ ಮನೆ ಎಂದು ಕರೆದು ಅಲ್ಲಿ ಸೇರಿಕೊಂಡಿದ್ದ. ಅಲ್ಲಿಯೇ ಗಂಜಿ ಬೇಯಿಸಿಕೊಂಡು ಇರತೊಡಗಿದ. ಮರಿಯಾನ ಮನೆಬಿಟ್ಟ ನಂತರ ಈತ ಸಿಮೋನನ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ. ತಾನು ಸ್ವತಂತ್ರವಾಗಿ ಕೆಲಸ ಹಿಡಿಯತೊಡಗಿದ. ಅಲ್ಲಿ ಇಲ್ಲಿ ಕೆಲಸ ಹಿಡಿದು ಕೈಯಲ್ಲಿ ನಾಲ್ಕು ಕಾಸು ಓಡಾಡ ತೊಡಗಿದಾಗಲೇ ರಂಗಿ ಬಂದು ಮನೆ ಸೇರಿಕೊಂಡಳು. +ಆ ರಾತ್ರಿ ಗಂಜಿ ಉಂಡು ಮಲಗಿದಾತನಿಗೆ ಯಾರೋ ಬಾಗಿಲು ತಟ್ಟಿ ಎಬ್ಬಿಸಿದ ಹಾಗಾಯಿತು. +ಬಾಗಿಲ ಹಲಗೆಗೆ ಒಳಗಿನಿಂದ ಕಟ್ಟಿದ ಹಗ್ಗ ಬಿಚ್ಚಿ ಯಾರು ಎಂದು ಬಗ್ಗಿಸಿ ನೋಡಿದ. ರಂಗಿ ಥರಗುಟ್ಟಿ ನಡಗುತ್ತ ಒಳ ಬಂದು ಬಾಗಿಲು ಹಾಕಿಕೊಂಡಳು. +ಪೆದ್ರು ಚಿಮಣಿಗೆ ಬೆಂಕಿ ಕಡ್ಡಿ ಗೀರಿ ಹಚ್ಚಿದ ಮಸಕು ಬೆಳಕಿನಲ್ಲಿ ರಂಗಿ ಹೋಗಿ ಮೂಲೆಯಲ್ಲಿ ಮುದುಡಿ ಕುಳಿತಿದ್ದಳು. +“ಏನಾತು?” +“ಆ ದುಸ್ಮಾನ ನನ್ನ ಬೆನ್ನು ಹತ್ತಾನೆ“ಎಂದು ಕಣ್ಣಲ್ಲಿ ನೀರು ತಂದು ಕೊಂಡಳು ರಂಗಿ. ಪೆದ್ರೂ ಏನೂ ಮಾತನಾಡಲಿಲ್ಲ. ಎದ್ದು ಹೋಗಿ ಬಾಗಿಲ ಹಲಗೆಗೆ ದಾರ ಕಟ್ಟಿ ಬಂದನಷ್ಟೆ. +* +* +* +ರಂಗಿ ಕಿರಸ್ತಾನದವನ ಮನೆ ಸೇರಿಕೊಂಡಿರುವ ವಿಷಯ ಅವಳ ಜಾತಿಯವರಿಗೆಲ್ಲ ತಿಳಿದು ಹೋಯಿತು. ವೀರಭದ್ರ ಯಾವತ್ತೋ ಪೆದ್ರುವನ್ನು ಹೀಗೆಂದೇ ನಿಲ್ಲಿಸಿಕೊಂಡು ಬೈಯ್ದು ಪೆದ್ರುವಿನಿಂದ ಏಟು ತಿಂದ. +ರಂಗಿಯನ್ನು ಮತ್ತೆ ಯಾರೋ ತಡೆದು ನಿಲ್ಲಿಸಿ ಏನೇ ರಂಗಿ ಹಿಂಗ ಮಾಡಬುಟ್ಟಿ ಅಂದಾಗ ಅವಳು ಬಾಲ ತುಳಿಸಿಕೊಂಡ ಬೆಕ್ಕಿನ ಹಾಗೆ ಕಿಸ್ಸನೆ ತಿರುಗಿ ಬಿದ್ದಳು- +“ಆ ವೀರಭದ್ರನ ಸೂಳೆ ಆಗಾಕಿಂತ..ಇದು ಚಲೋ ಅಲ್ವ?“ ಎಂದವಳು ಕೇಳಿದಳು. +ಕ್ರಿಶ್ಚಿಯನ್ನರ ನಡುವೆಯೂ ಈ ಮಾತು ಕೇಳಿ ಬಂದಿತು. ಘಟ್ಟ ಇಳಿದು ಸಾನಬಾವಿಗೆ ಹೋದ ಯಾರೋ ಅವನ ಮನೆಗೂ ವಿಷಯ ತಿಳಿಸಿದರು. ಇಲ್ಲಿ ಕೂಡ ಸಿಮೋನ ಮತ್ತಿತರರು ಛಿ! ಛಿ! ಎಂದರು. +“ಆದದ್ದು ಆಯ್ತು..ಅವಳನ್ನು ನಮ್ಮ ಜಾತಿಗೆ ಸೇರ್ಸಿಬಿಡು“ಎಂದು ಪರಿಹಾರ ಸೂಚಿಸಿದರು. +ಸಿಮೋನ ಮುರುಡೇಶ್ವರಕ್ಕೆ ಹೋದಾಗ ಅಲ್ಲಿ ಶಿರಾಲಿಯ ಪಾದರಿಗೂ ಈ ವಿಷಯ ತಿಳಿಸಿ ಆ ಹೆಂಗಸನ್ನು ಜಾತಿಗೆ ಸೇರಿಸಿಕೊಳ್ಳಲು ನೋಡಿದ. ಆದರೆ ಪೆದ್ರು ತಪ್ಪಿಸಿಕೊಂಡು ತಿರುಗಾಡುತ್ತಿದ್ದ. +ಆದರೆ ಈಗ ಊರಿಗೆ ಪಾದರಿ ಬಂದ ನಂತರ ಪೆದ್ರು ಸಿಕ್ಕಿಬಿದ್ದ. ಭಾನುವಾರ ಬೆಳಿಗ್ಗೆ ಹೆಗಲ ಮೇಲೆ ಬಾಚಿ ಹೇರಿ ಸಿಕೊಂಡು ದನದ ಆಸ್ಪತ್ರೆ ಕಟ್ಟಲು ಹೊರಟ ಪೆದ್ರುವನ್ನು ಪಾದರಿ ಗೋನಸಾಲ್ವಿಸ್ ಕೊತ್ವಾಲ ಕಟ್ಟೆಯ ದೂಪರ ಮರದ ಬಳಿ ಹಿಡಿದು ಬಿಟ್ಟರು. ಎಲೆ ಅಡಿಕೆ ಜಗಿದು ಬಾಯಲ್ಲಿಯ ತಾಂಬುಲವನ್ನು ಪೊದೆಯೊಂದರ ಬಳಿ ಪಿಚಕಾರಿಯಂತೆ ತೂಪಿ ಇನ್ನೇನು ಮುಂದಿನ ತಿರುವಿನಲ್ಲಿ ಮಾಯವಾಗಬೇಕು ಅನ್ನುವಾಗ ಬೇರೊಂದು ದಿಕ್ಕಿನಿಂದ ಬಂದ ಪಾದರಿ- +“ಕೋಣ್ರೇ ತೋ..”(ಯರೋ ಅದು) ಎಂದು ಕೇಳಿ ಓಡುವ ಹಸುವಿನ ಹಗ್ಗಕ್ಕೆ ಕುಣಿಕೆ ಹಾಕಿ ಹಗ್ಗ ಎಳೆದು ನಿಲ್ಲಿಸಿಬಿಟ್ಟರು. +ಕೆಂಪಗಿದ್ದರು ಪಾದರಿ ಗೋನಸಾಲ್ವಿಸ್. ಬಿಳಿ ನಿಲುವಂಗಿಯೊಳಗೆ ಧಗಧಗನೆ ಉರಿಯುವ ಬೆಂಕಿಯಂತೆ ನಿಂತಿದ್ದರು. ಅವರ ಕೈಲಿದ್ದ ನಾಗರ ಬೆತ್ತ ಕೂಡ ಬೆಂಕಿಯ ಈಟಿಯಂತೆ ಕಂಡಿತು. ಕಣ್ಣುಗಳಲ್ಲಿ ಕೆಂಡದ ಮಳೆ. +ಅವರು ನೇರವಾಗಿ ಬಂದವರೇ ಇವನ ಹೆಗಲ ಮೇಲಿನ ಬಾಚಿಗೆ ಕೈ ಹಾಕಿದರು. ತಾನು ತುಂಬಾ ಬಲಾಢ್ಯ ಅಂದುಕೊಂಡಿದ್ದ ಪೆದ್ರು ಪಾದರಿ ಕೈ ಹಾಕಿ ಬಾಚಿ ಕಿತ್ತುಕೊಂಡ ರಭಸಕ್ಕೆ ಹಿಂದೆ ಮುಂದೆ ಮುಗ್ಗರಿಸಿ ನಿಂತ. +“ಭಾನುವಾರವೂ ನಿನಗೆ ಹೊಟ್ಟೆಯ ಚಿಂತೆಯೆ?“ಅವರು ಗುಡುಗಿದರು. +“ನೀನು ದೇವರ ಧ್ಯಾನ ಮಾಡುವುದು ಯಾವಾಗ? ಭಾನುವಾರಗಳನ್ನು ದೇವರ ಧ್ಯಾನ ಸ್ಮರಣೆಗಾಗಿ ಮೀಸಲಾಗಿಡಬೇಕೆಂಬ ವಿಷಯವನ್ನು ಮರೆತು ಬಿಟ್ಟೆಯೋ ಹೇಗೆ? ಈವರೆಗೆ ನೀವೆಲ್ಲ ಅನಬಾವಾಡ್ತಿಗಳಾಗಿ ಬದುಕಿದ್ರ..ಇನ್ನು ನೀವು ಹಾಗೆ ಇರೋದಕ್ಕೆ ನಾನುಬಿಡೋದಿಲ್ಲ”. +ಇಗರ್ಜಿಯಲ್ಲಿನ ಪುಲಪತ್ರಿಯನ್ನೇರಿನಿಂತ ಪಾದರಿಯಂತೆ ಅವರು ಅಲ್ಲಿ ದೊಡ್ಡ ದನಿಯಲ್ಲಿ ಮಾತನಾಡತೊಡಗಿದಾಗ ಪೆದ್ರುವಿನ ಕೈಕಾಲುಗಳೆಲ್ಲ ತಣ್ಣಗಾದವು. +“ಚೂಕ್ ಜಾಲಿ ಪದ್ರಾಬ..ಚೂಕ್ ಜಾಲಿ“ತಪ್ಪಾಯಿತು ಪಾದರಿಗಳೆ ತಪ್ಪಾಯಿತು ಎಂದು ಆತ ತೊದಲಿದ. +“ಈವತ್ತು ಕೆಲಸ ಬೇಡ ನಡಿ ಇಗರ್ಜಿಗೆ“ಎಂದರು ಪಾದರಿ. +ಒಡೆಯನ ಆದೇಶ ಕಿವಿಗೆ ಬಿದ್ದ ನಾಯಿ ತನ್ನ ಬಾಲವನ್ನು ತೊಡೆ ಸಂದಿಗೆ ಸಿಕ್ಕಿಸಿಕೊಂಡು ತಿರುಗಿ ಹೋದ ಹಾಗೆ ಪೆದ್ರು ಪಾದರಿ ಕೈಯಿಂದ ಬಾಚಿ ತೆಗೆದು ಕೊಂಡು ಮನೆಯತ್ತ ತಿರುಗಿದ. ಕೈ ಕಾಲಿಗೆ ಮುಖಕ್ಕೆ ನೀರು ತಗುಲಿಸಿ ಇದ್ದುದರಲ್ಲಿ ತುಸು ಬೆಳ್ಳಗಿದ್ದ ಪಂಚೆ ಪೈರಾಣಗಳನ್ನು ತೊಟ್ಟು ಇಗರ್ಜಿಗೆ ಹೊರಟನು. +ಈ ಇಗರ್ಜಿಗೆ ಹೋಗುವುದು ಊರು ಬಿಟ್ಟು ಬಂದ ನಂತರ ನಿಂತು ಹೋಗಿತ್ತು. ಮಳೆಗಾಲದಲ್ಲಿ ಊರಿಗೆ ಹೋದಾಗ ಹಬ್ಬ ಮದುವೆ ಎಂದು ಘಟ್ಟ ಇಳಿದಾಗ ಇಗರ್ಜಿಗೆ ಹೋಗಬೇಕಾಗುತ್ತಿತ್ತು. ಒಂದು ವೇಳೆ ಇಗರ್ಜಿಗೆ ಹೋಗದೇನೆ ಅಂಗಳ ಜಗಲಿಯ ಮೇಲೆ ಕುಳಿತರೆ ಇಗರ್ಜಿಗೆ ಹೊರಟವರು ನೇರವಾಗಿಯೇ “ಏನೋ ಇಗರ್ಜಿಗೆ ಬರೋದಿಲ್ವ?“ಎಂದು ಕೇಳುತ್ತಿದ್ದರು. ಪಾದರಿ ಗಮನವಿರಿಸಿ ನೋಡಿ ಇಗರ್ಜಿಗೆ ಬಾರದವರನ್ನು ವಿಚಾರಿಸಿಕೊಳ್ಳುತ್ತಿದ್ದ. ಆದಿತ್ಯವಾರವನ್ನು ದೈವ ಭಕ್ತಿಯಿಂದ ಆಚರಿಸಲಿಲ್ಲ ಅನ್ನುವುದು ಒಂದು ಪಾಪವಾಗಿ ಮನಸ್ಸನ್ನು ಕಾಡುತ್ತಿತ್ತು. ಹೀಗೆಂದೇ ಆತ ಇಗರ್ಜಿಗೆ ಹೋಗಿ ಬರುವುದನ್ನು ಒಂದು ಪದ್ದತಿಯನ್ನಾಗಿ ಮಾಡಿಕೊಂಡು ಆಚರಿಸಿಕೊಂಡು ಬಂದಿದ್ದ. +ಆದರೆ ಕೆಲಸದ ಬೆನ್ನು ಹತ್ತಿ ಇಲ್ಲಿಗೆ ಬಂದ ಮೇಲೆ ಈ ಒಂದು ವಿಧಿ ಇರಲಿಲ್ಲ. ಸಿಮೋನ ಕೊಪೆಲ ಕಟ್ಟೋಣ ಎಂದಾಗ ನಾನೂ ಹೋಗಿ ಕೆಲಸಕ್ಕೆ ಕೈ ಹಾಕಿದ್ದುಂಟು. ಇಲ್ಲಿ ಪಾದರಿಯ ಹುಡುಕುಗಣ್ಣು ತನ್ನ ಮೇಲೆ ಇಲ್ಲದ್ದರಿಂದ ಈತ ಪೂಜೆ ಮರೆತಿದ್ದ. ಆದರೆ ಈಗ ಮತ್ತೆ ಅದು ಪ್ರಾರಂಭವಾದಂತಿತ್ತು. ಇಗರ್ಜಿಗೆ ಹೋಗುವ ಸಮಯದಲ್ಲಿಯೇ ತೊಟ್ಟು ನಂತರ ತೆಗೆದಿರಿಸುತ್ತಿದ್ದ ಕೋಟು, ಶರಟು, ಪಂಚೆ ಊರಿನಲ್ಲಿ ನುಸಿಗುಳಿಗೆ ಇರಿಸಿದ ಟ್ರಂಕಿನಲ್ಲಿ ಸುರಕ್ಷಿತವಾಗಿದೆ. ಇಲ್ಲಿ ಒಂದು ಪಂಚೆ ಪೈರಾಣ- ಸಾಕಷ್ಟು ಚೆನ್ನಾಗಿರುವುದು ತೊಟ್ಟು ಆತ ಹೊರಟ. +ರಂಗಿ ಇವನು ತಿರುಗಿ ಬಂದದ್ದು, ಬೇರೆ ಉಡುಪು ಧರಿಸಿ ಹೊರಟಿದ್ದು ನೋಡಿ ಅಚ್ಚರಿಪಟ್ಟಳು. ಹಿಂದಿನ ರಾತ್ರಿ ತೆಗೆದಿರಿಸಿದ ಮೂರು ಮಡಿಕೆ ಕುಡಿಕೀರಡು ಸಿಲವಾರದ ತಟ್ಟೆಗಳನ್ನು ಹೊರ ತರುತ್ತಿದ್ದ ಅವಳು ಕುತೂಹಲದಿಂದ ಕೇಳಿದಳು. +“ಅಲ್ಲಾ..ಎಲ್ಲಿಗೆ?” +ಅಣ್ಣಾ ಎನ್ನುವುದನ್ನು ಅವಳು ಯಾವತ್ತೋ ಬಿಟ್ಟಿದ್ದಳು. ವೀರಭದ್ರನ ಆಕ್ರಮಣದಿಂದ ತಪ್ಪಿಸಿಕೊಂಡು ಬಂದು ಪೆದ್ರುವಿನ ಮನೆ ಸೇರಿಕೊಂಡ ಆಕೆ ಒಂದೆರಡು ದಿನಗಳಲ್ಲಿ ಅವನ ತೋಳುಗಳೊಳಗೆ ಸೇರಿಕೊಂಡು ಅವನ ಉದ್ರೇಕ ಹಸಿವಿಗೆ ತನ್ನನ್ನು ತಾನು ತೆರೆದು ಕೊಟ್ಟು ತನ್ನ ದೇಹದ ಮಿಡಿತದ ಜೊತೆಗೆ ಸುಖವಾಗಿ ನರಳಿದ್ದಳು. ಅನಂತರ ಪೆದ್ರುವನ್ನು ಹಿಂದಿನಂತೆ ಕರೆಯಲು ಅವಳ ಮನಸ್ಸೂ ಒಪ್ಪಲಿಲ್ಲ. +ಪೆದ್ರು ಕಿರಸ್ತಾನರವನು ಎಂಬುದು ಅವಳಿಗೆ ಗೊತ್ತಿತ್ತು. ಆದರೆ ಈ ಮನೆ ಸೇರಿಕೊಂಡು ಅವನ ತೋಳುಗಳಲ್ಲಿ ಕರಗಿ ಒಂದಾಗಿ ಹೋದ ನಂತರ ಅವಳಿಗೆ ಈ ವಿಷಯ ನೆನಪಿಗೇನೆ ಬರಲಿಲ್ಲ. ಏಕೆಂದರೆ ಅವನ ಮಾತು ವರ್ತನೆ ಉಡಿಗೆ‌ಅವನು ತನ್ನನ್ನು ಬಳಸಿಕೊಳ್ಳುವ ರೀತಿ ಪ್ರೀತಿ ಮಾಡುವ ಪರಿ ಈ ಯಾವುದರಲ್ಲೂ ಬೇರೊಂದು ರೀತಿ ಇದೆ ಎಂದು ಅವಳಿಗೆ ಅನ್ನಿಸಲಿಲ್ಲ. +ಪೆದ್ರುವಿನ ಜತೆ ಬಾಳುವೆ ಮಾಡುವಾಗಲೇ ಸಿಮೋನನ ಹೆಂಡತಿ ಬೇರೆ ಕೆಲ ಕಿರಸ್ತಾನರ ಹೆಂಗಸರು- ನೀನು ನಮ್ಮವಳಲ್ಲ ಎಂಬ ಅರ್ಥ ಬರುವ ಹಾಗೆ ಮಾತನಾಡುತ್ತಿದ್ದುದು ಉಂಟು. ಆದರೆ ಇದರ ತಲೆಬುಡ ಅವಳಿಗೆ ತಿಳಿಯುತ್ತಿರಲಿಲ್ಲ. +ಇತ್ತೀಚೆಗೆ ಊರಿಗೆ ಒಬ್ಬ ಪಾದರಿಗಳು ಬಂದಿದ್ದರು. ಅಲ್ಲೊಂದು ಮನೆಯಿಂದ ಗಂಟೆಯ ಶಬ್ದ ಕೇಳಿಸುತ್ತಿತ್ತು. ಕಿರಸ್ತಾನರೆಲ್ಲ ಅಲ್ಲಿಗೆ ಹೋಗುತ್ತಿದ್ದರು. ಆ ಪಾದರಿಗಳೂ ತನ್ನ ಮನೆಗೆ ಬಂದು-ಪೆದ್ರು ಇಲ್ಲವೇ ಎಂದು ಕೇಳಿ ಹೋಗಿದ್ದರು. ತನ್ನ ಮನೆಯ ತುಂಬ ಯಾವುದನ್ನೋ ಅವರು ಹುಡುಕಾಡಿದ್ದರು. ಆದರೂ ತನಗೇನೂ ತೊಂದರೆಯಾಗಲಿಲ್ಲ. ಟೋಲನಾಕಾದ ಆ ಮನೆಯಲ್ಲಿದ್ದಾಗ ಹಬ್ಬ ಜಾತ್ರೆ ಮಾಡುತ್ತಿದ್ದೆ. ಇಲ್ಲಿ ಅದು ನಿಂತು ಹೋಯಿತು. ಆದರೆ ಈ ಮನೆಗೆ ಅನತಿ ದೂರದಲ್ಲಿಯ ಚೌಡಿಗೆ ಕೈ ಮುಗಿದು ಕುಂಕುಮ ಹಣೆಗೆ ಹಚ್ಚಿಕೊಂಡು ಬರುವ ಪದ್ದತಿ ನಡೆದಿದೆ. ಆ ಚೌಡಮ್ಮ ಈವರೆಗೆ ಕಾಪಾಡಿದ್ದಾಳೆ. ಮುಂದೂ ಕಾಪಾಡಿದರೆ ಸಾಕು ಎಂದು ನಿಶ್ಚಿಂತೆಯಿಂದ ಇದ್ದಳು ರಂಗಿ. +ಆಗಲೇ ಅವಳು ಪೆದ್ರು ಇಗರ್ಜಿಗೆ ಹೋದುದನ್ನು ಕಂಡಳು. ಒಂದೆರಡು ದಿನಗಳ ನಂತರ ಆ ಪಾದರಿಗಳು ಮನೆಗೆ ಬಂದರು. ಅವರು ಬರುವ ಮುನ್ನವೇ ಪೆದ್ರು ದೇವರದೊಂದು ಪ್ರತಿಮೆ ತಂದು ಗೋಡೆ ಗೂಡಿನಲ್ಲಿ ಇರಿಸಿದ್ದ. ಗೋಡೆಗೆ ಒಂದೆರಡು ದೇವರ ಪಟಗಳು ತೂಗಿ ಬಿದ್ದವು. ಪೆದ್ರು ತನ್ನ ಕುತ್ತಿಗೆಯಲ್ಲಿ ಒಂದು ಪದಕ ತೂಗು ಹಾಕಿಕೊಂಡ. ಸಂಜೆ ಕೆಲಸ ಮುಗಿಸಿಕೊಂಡು ಬಂದವನು ಗೋಡೆ ಗೂಡಿನ ಮುಂದೆ ಮೇಣದ ಬತ್ತಿ ಹಚ್ಚಿದ. ಮೊಣಕಾಲೂರಿ ಹಣೆ, ಭುಜ, ಎದೆ ಮುಟ್ಟಿಕೊಂಡು ಎನೋ ಪ್ರಾರ್ಥನೆ ಮಾಡಿದ. +“ಏನು?“ಎಂದು ಕೇಳಿದಳು ರಂಗಿ. ಇದೆಲ್ಲ ಏನು ಎಂಬ ಅರ್ಥದಲ್ಲಿ. +“ನಮ್ಮ ಊರಾಗೆ ನಾನು ಇದ್ನೆಲ್ಲ ಮಾಡತಿದ್ದೆ…ಇನ್ನು ಇದನ್ನ ಇಲ್ಲೂ ಮಾಡಬೇಕು..ಪಾದರಿಗಳು ಬಂದ ಮೇಲೂ ನಾವು ಇದನ್ನೆಲ್ಲ ಮಾಡದಿದ್ರೆ ತಪ್ಪಾಗುತ್ತೆ..” +ತುಸು ತಡೆದು ಅವನು ರಂಗಿಗೆ ಹೇಳಿದ- +“..ನೀನೂ ಇದ್ನೆಲ್ಲ ಕಲೀಬೇಕು..”ತಲೆ ದೂಗಿದಳು ರಂಗಿ. ಪೆದ್ರು ಏನು ಹೇಳಿದರೂ ಮಾಡಲು ಅವಳು ಸಿದ್ಧಳಾಗಿದ್ದಳು. ಪೆದ್ರು ತಾನು ಘಟ್ಟ ಹತ್ತಿ ಬಂದ ಕೂಡಲೆ ಇದನ್ನೆಲ್ಲ ಏಕೆ ಬಿಡಬೇಕಾಯಿತು ಎಂದು ವಿಚಾರ ಮಾಡಿದ. ಈ ಒಂದೆರಡು ವಾರಗಳಲ್ಲಿ ಪಾದರಿ ಇಗರ್ಜಿಯಲ್ಲಿ ಮಾಡಿದ ಪ್ರವಚನ ಅವನ ಮೇಲೆ ಪರಿಣಾಮವನ್ನುಂಟು ಮಾಡಿತ್ತು. ಹಿಂದೆ ಅವನಲ್ಲಿ ನೆಲಸಿ, ಗುಪ್ತವಾಗಿದ್ದ ಸಂಸ್ಕಾರ ಜಾಗ್ರತವಾಗಿತ್ತು. ಪಾದರಿ ಗೋನಸಾಲ್ವಿಸ್ ರ ಮಾತು ಕೂಡ ಅವನನ್ನು ಸರಿದಾರಿಗೆ ತಂದಿತ್ತು. ಅವರ ಕೈಲಿದ್ದ ನಾಗರ ಬೆತ್ತ ಈಗಾಗಲೇ ಕೆಲವರ ತೊಡೆ ಬೆನ್ನುಗಳನ್ನು ಮೂಸಿನೆಕ್ಕಿ ನೋಡಿತ್ತು. ಅದು ತನ್ನತ್ತ ಬಳುಕಿ ಬರುವುದು ಅವನಿಗೆ ಬೇಕಾಗಿರಲಿಲ್ಲ. ಊರಿಗೆ ಪಾದರಿ ಬಂದ ನಂತರ ಪೆದ್ರು ಮತ್ತೆ ದೈವಭಕ್ತನಾದ. +ಆದರೆ ಪಾದರಿ ಗೋನಸಾಲ್ವಿಸ್ ಮತ್ತೂ ಒಂದು ಮಾತನ್ನು ಅವನಿಗೆ ಹೇಳಿದ್ದರು. +“ನಿನ್ನ ಮನೆಯಲ್ಲಿರೋ ಹೆಂಗಸು ನಮ್ಮ ಧರ್ಮಕ್ಕೆ ಬರಬೇಕು ಅಂದರೆ ಮಾತ್ರ ನಿನ್ನನ್ನ ನಮ್ಮ ಸಮೋಡ್ತಿಯಲ್ಲಿ ನಾವು ಇರಿಸಿಕೊಳ್ಳುತ್ತೇವೆ. ಇಲ್ಲಾ ಅಂದರೆ ನಿನ್ನನ್ನ ಸಮೋಡ್ತಿಯಿಂದ ಹೊರ ಹಾಕಬೇಕಾಗುತ್ತೆ..” +ಗೋನಸಾಲ್ವಿಸ್ ರಂಗಿಯ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿದ್ದರು. ಸಿಮೋನ ಮತ್ತು ಉಳಿದವರು ಹೀಗೆ ಹೀಗೆ ಎಂದು ಅವರಿಗೆ ಹೇಳಿದ್ದರು. ಊರಿಗೆ ಬಂದ ಹೊಸದರಲ್ಲಿ ಪೆದ್ರು ಮನೆಗೆ ಹೋದಾಗ ಆ ಮನೆಯಲ್ಲಿ ಸಾಮಾನ್ಯವಾಗಿ ಕ್ರೀಸ್ತುವರ ಮನೆಯಲ್ಲಿ ಕಾಣಬರುವ ಸಂಕೇತಗಳೂ ಇರಲಿಲ್ಲ. ಪೆದ್ರು ಕೂಡ ಈ ಮಾತಿಗೆ ಪೂರಕವಾಗಿದ್ದ. ರಂಗಿಗೆ ಕ್ರೈಸ್ತನ ಸರ್ವ ಶ್ರೇಷ್ಠ ಮತದ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ಕುಟುಂಬವನ್ನು ಹೀಗೆಯೇ ಬಿಟ್ಟರೆ ಕ್ರೈಸ್ತ ಸಮುದಾಯಕ್ಕೇನೆ ನಷ್ಟವಾಗುತ್ತದೆಂಬುದು ಪಾದರಿಗಳಿಗೆ ಖಚಿತವಾಯಿತು. ನಾಶವಾಗುತ್ತಿರುವ ಕ್ರೈಸ್ತತನವನ್ನು ಉಳಿಸಲು ಅವರು ಪಣತೊಟ್ಟರು. ಪೆದ್ರು ಇಗರ್ಜಿಗೆ ಬರುವಂತಾದ. ಮುಂದಿನದಾಗಿ ರಂಗಿಯನ್ನು ಅವರು ಕ್ರೀಸ್ತುವಳನ್ನಾಗಿಸುವ ಕಾರ್ಯಕ್ಕೆ ತೊಡಗಿದರು. +ಸಹಜವಾಗಿ ಎಂಬಂತೆ ಪೆದ್ರುವಿನ ಮನೆಗೆ ಹೋದಾಗ ಆತ ಇರಲಿಲ್ಲ. ಆ ಹೆಂಗಸು ಅಡಕೆ ಹಾಳೆಯ ತುಂಡನ್ನು ಕೈಯಲ್ಲಿ ಹಿಡಿದುಕೊಂಡು ಸೀರೆಯನ್ನು ಮೊಣ ಕಾಲವರೆಗೆ ಎತ್ತಿಕಟ್ಟಿ ಅಂಗಳಕ್ಕೆ ಶಗಣಿ ಸಾರಿಸುತ್ತಿದ್ದವಳು, ಸೀರೆ ಬಿಟ್ಟು ಕೈತೊಳೆದುಕೊಂಡು- +“ಬನ್ನಿ ಪದ್ರಬಾ..“ಎಂದಳು. +ಅವಳಲ್ಲಿಯ ವಿನಯ, ಭಕ್ತಿ, ಭೀತೆ ಇವರಿಗೆ ಸಂತಸವನ್ನು ತಂದುಕೊಟ್ಟಿತು. ಹಸಿ ಹಸಿಯಾಗಿದ್ದ ಶಗಣೆ ತುಳಿದುಕೊಂಡು ಜಗಲಿಯನ್ನೇರಿ, ಕೋಳಿಗೂಡಿನ ಮೇಲೆ ಕುಳಿತರು. +“..ಪೆದ್ರು..ಕೆಲಸಕ್ಕೆ ಹೋಗಿದ್ದಾನಾ?” +“ಹೌದು ಪದ್ರಬಾ..ಮುಂಗರವಳ್ಳಿ ಗೌಡರ ಮನೆಕೆಲಸ..“ಎಂದಳವಳು ಜಗಲಿಯ ಅಂಚಿಗೆ ಮೈ ಮುದುರಿ ನಿಂತು. +“……..ಹುಂ…”ಪಾದರಿ ನಿಧಾನವಾಗಿ ಬೂಟ್ಸು ಕಳಚಿದರು. ಕಾಲುಚೀಲ ತೆಗೆದರು. +“ನಾನೊಂದು ಪ್ರಾರ್ಥನೆ ಮಾಡಬೇಕು“ಎಂದು ಎದ್ದರು. +ರಂಗಿ ಧಡಬಡಿಸಿ ಒಳ ಹೋದಳು. ಒಲೆಯ ಬಳಿ ಬೆಂಕಿ ಪೊಟ್ಟಣವಿರಲಿಲ್ಲ. ಹಾಗೆಯೇ ಪಕ್ಕದ ಮನೆಗೆ ಧಾವಿಸಿದಳು. ಇನಾಸನ ಹೆಂಡತಿ ಭತ್ತ ಕುಟ್ಟುತ್ತಿದ್ದಳು. ಅವಳಿಗೆ ಸಂಜ್ಞೆಯ ಮೂಲಕ ಬೆಂಕಿಪೆಟ್ಟಿಗೆ ಬೇಕು ಎಂದಳು. ಮೊದಲು ಅವಳಿಗೆ ಅರ್ಥವಾಗಲಿಲ್ಲ. ಇವಳಿಗೆ ಅರ್ಥವಾಗುವ ಹಾಗೆಹೇಳಲು ಅವಳಿಗೆ ಬರಲಿಲ್ಲ. ಅವಸರ ಬೇರೆ. ಕೊನೆಗೆ ಅವಳೇ ಊಹಿಸಿಕೊಂಡು ಬೆಂಕಿಪೊಟ್ಟಣ ತಂದುಕೊಟ್ಟಳು. ಮತ್ತೆ ಮನೆಗೆ ಓಟ. ಪಾದರಿ ದೇವರ ಪೀಠದ ಮುಂದೆ ನಿಂತಿರಲು ರಂಗಿ ಮೇಣದ ಬತ್ತಿಯ ತುದಿಗೆ ಬೆಂಕಿ ಮುಟ್ಟಿಸಿದಳು. +“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಅಮೇನ.“ಎಂದು ಶಿಲುಬೆಯ ಗುರುತು ಮಾಡಿ ಪಾದರಿ ದೊಡ್ಡ ದನಿಯಲ್ಲಿ +“ನಮ್ಮ ಪ್ರಭುವೆ…ನಮ್ಮ ಪ್ರಭುವೆ..ಈ ಮನೆಯ ಮೇಲೆ ನಿಮ್ಮ ಕೃಪಾಕಟಾಕ್ಷವಿರಲಿ..“ಎಂದು ಬೇಡಿಕೊಂಡು ಪರಲೋಕ ಮಂತ್ರವನ್ನು ಹೇಳತೊಡಗಿದರು. ರಂಗಿ ಬಾಗಿಲ ಬಳಿ ಕೇಳುತ್ತ ನಿಂತಳು. +ಕೆಲ ಹೊತ್ತು ಪ್ರಾರ್ಥನೆಯಲ್ಲಿ ಕಳೆದು ಹೋಯಿತು. +ಪ್ರಾರ್ಥನೆಯ ಅಂತ್ಯದಲ್ಲಿ ಮತ್ತೊಮ್ಮೆ ಶಿಲುಬೆಯ ಗುರುತು ಮಾಡಿ ಪಾದರಿ ಗೋನಸಾಲ್ವಿಸ್ ಮನೆಯ ಹೊರಬಂದರು. ಜಗಲಿಯ ಮೇಲೆ ಕುಳಿತುಕೊಳ್ಳುತ್ತ ಬಾಗಿಲಲ್ಲಿ ನಿಂತ ರಂಗಿಯತ್ತ ಅವರು ತಿರುಗಿದರು. +“…ಈ ಮನೇಲಿ ನೀನು ಹೀಗೆಯೇ ಎಷ್ಟು ದಿನ ಅಂತ ಇರತೀಯ?”ಆಕೆ ತಬ್ಬಿಬ್ಬಾದಳು. +“ನಮ್ಮ ಧರ್ಮದ ರೀತ್ಯಾ ನೀನು ಅಕ್ರೈಸ್ತಳಾಗಿ ಈ ಮನೇಲಿ ಇರಬಾರದು..ಇದರಿಂದ ಪೆದ್ರುಗೂ ತೊಂದರೆ ನಿನಗೂ ಕಷ್ಟ…ನೀನು ನಮ್ಮ ಧರ್ಮಕ್ಕೇನೆ ಸೇರಿಕೊಂಡರೆ..ನಿನಗೂ ಗೌರವ..ನಾಳೆ ಹುಟ್ಟುವ ಮಕ್ಕಳಿಗೂ ಅನುಕೂಲ. ಮುಖ್ಯವಾಗಿ ನೀವು ಗೌರವದಿಂದ ಬದುಕಲಿಕ್ಕೆ ಕಾರಣವಾಗುತ್ತೆ..” +ರಂಗಿಯ ಮನಸ್ಸಿನಲ್ಲಿ ಈ ವಿಷಯ ಬಂದಿರಲಿಲ್ಲ ಎಂದಲ್ಲ. ಹನುಮಂತನ ಸಾವಿನ ನಂತರ ಅವಳು ನಿಜಕ್ಕೂ ಅನಾಥಳಾಗಿದ್ದಳು. ರಸ್ತೆಯ ಮೇಲೆ ಬಿದ್ದ ವಸ್ತುವಿನಂತೆ ಅವಳನ್ನು ನೋಡತೊಡಗಿದ್ದರು ಜನ. ಪೆದ್ರು ಅವಳಿಗೆ ರಕ್ಷಣೆ ಕೊಟ್ಟರೂ ಊರಿನಲ್ಲಿ ಆ ಕೇರಿಯಲ್ಲಿ ಅಂತಹ ಗೌರವ ಅವಳಿಗೆ ಲಭ್ಯವಾಗಿರಲಿಲ್ಲ. ಕಿರಸ್ತಾನರ ಗಂಡಸಿನ ಜತೆ ಇರುವವಳು ಎಂಬ ಕಾರಣಕ್ಕೆ ಅವಳ ಜನ ಅವಳನ್ನು ಹೀನಾಯವಾಗಿ ಕಂಡರೆ ಹಿಂದು ಹೆಂಗಸನ್ನು ಇಟ್ಟುಕೊಂಡವನು ಎಂದು ಪೆದ್ರುವನ್ನು ಅವರವರೇ ದೂರ ಮಾಡಿದ್ದರು. +ಇಷ್ಟಾದರೂ ಈ ಪಾದರಿ ಪೆದ್ರುವನ್ನು ಕೈ ಬಿಡಲಿಲ್ಲ. ಈ ಪಾದರಿ ಬಂದ ನಂತರ ಈ ಮನೆಯಲ್ಲಿ ದೇವರದೊಂದು ಪ್ರತಿಮೆ ಬಂದಿತು. ಪೆದ್ರು ಭಾನುವಾರಗಳಂದು ಕೊಪೆಲಿಗೆ ಹೋಗಿ ಬರತೊಡಗಿದ. ಈ ಬದಲಾವಣೆ ಅವನ ಸಂತೋಷ ನೆಮ್ಮದಿಯನ್ನು ಹೆಚ್ಚಿಸಿತು. ಇಷ್ಟಾದರೂ ತಾನು ಅವನಿಂದ ಈ ಮನೆಯಿಂದ ಅವನ ದೇವರು ಧರ್ಮ ಪ್ರಾರ್ಥನೆಯಿಂದ ದೂರ ಉಳಿದಂತೆ ಭಾಸವಾಗುತ್ತಿದೆ. ಆತ ರಂಗಿ ಎಂದು ಕರಿದಾಗಲೆಲ್ಲ ತನಗೆ ಕಸಿವಿಸಿಯಾಗುತ್ತದೆ. ಏಕೆಂದರೆ ಯಾವ ಕ್ರೀಸ್ತುವರ ಮನೆಯ ಹೆಂಗಸರಿಗೂ ಇಂತಹ ಹೆಸರಿಲ್ಲ. +ಕೇರಿಯಲ್ಲಿರುವ ಕತ್ರೀನ ಬಾಯಿ, ರೆಮೇಂದಿ, ಫ಼ಿಲೊಮೆನಾ, ತೆರೆಜಾ, ರೋಜಿ, ಜಿಲ್ಲಿ ಮೊದಲಾದವರೆಲ್ಲ ಈಗ ಭಾನುವಾರ ಬೆಳಿಗ್ಗೆ ತಲೆಯ ಮೇಲೆ ಸಿಂಗರಿಸಿಕೊಂಡು ಕೊಪೆಲಗೆ ಹೋಗುವುದು ಹತ್ತಿರದಿಂದ ನೋಡುತ್ತಿದ್ದೇನೆ. ತಾನು ಮನೆಯಲ್ಲಿ ಉಳಿದು ಇದನ್ನು ದೂರದಿಂದ ನೋಡುವುದು ಬೇರೆ ತನ್ನ ಒಂಟಿತನವನ್ನು ಎತ್ತಿ ತೋರಿಸುತ್ತದೆ. ಈ ಹಿಂಸೆಯಿಂದ ದೂರವಾಗಬೇಕು. +“ನಾನು ಏನು ಮಾಡಲಿ ಪದ್ರಾಬ..?“ +“ಏಸು ಪ್ರಭು ಎಲ್ಲರಿಗೂ ಒಂದು ದಾರಿ ತೋರಿಸಿದ್ದಾರೆ..ನೀನು ಆ ದಾರಿಯನ್ನು ಸ್ವೀಕರಿಸಲಿಕ್ಕೆ ಸಿದ್ಧಳಾಗು.“ಎಂದು ಹುರುಪಿನಿಂದ ಎದ್ದರು ಪಾದರಿ. +ಸಿಮೋನನ ಹಿರಿಯ ಮಗಳು ಫ಼ಿಲೋಮೆನಾ ನಿತ್ಯ ಒಂದು ಗಂಟೆ ರಂಗಿಗೆ ಶಿಲುಬೆಯ ವಂದನೆಯ ಮೊದಲಾದ ಮಂತ್ರಗಳನ್ನು, ಅವುಗಳ ಅರ್ಥ, ಮಹತ್ವವನ್ನು ಹೇಳಿಕೊಡತೊಡಗಿದಳು. ಮೊಣಕಾಲೂರಿ ಪ್ರಾರ್ಥನೆ ಮಾಡುವುದು, ಜಪಸರ ಪ್ರಾರ್ಥನೆ ಎದ್ದಾಗ, ಊಟಕ್ಕೆ ಕುಳಿತಾಗ, ಮಲುಗುವಾಗ ಮಾಡಬೇಕಾದ ಪ್ರಾರ್ಥನೆ ಎಲ್ಲವನ್ನು ರಂಗಿ ಬಹಳ ಬೇಗನೆ ಕಲಿತಳು. +ಈ ಎಲ್ಲ ಬಗೆಗಳಲ್ಲಿ ದೇವರೊಡನೆ ಸಂಪರ್ಕವಿರಿಸಿಕೊಳ್ಳಬಹುದೆಂಬ ಕಲ್ಪನೆಯೇ ಅವಳಲ್ಲಿ ಇರಲಿಲ್ಲ. ಔಡಲ ಮರದ ಚೌಡಮ್ಮನಿಗೆ ಅವಳು ಕೈಮುಗಿಯುತ್ತಿದ್ದಳು. ಇನಾಸನ ಮನೆಯ ಕಲ್ಲು ಕುಟಿಗನಿಗೆ ಹೂವಿನ ಕಡ್ಡಿ ಹಚ್ಚುತ್ತಿದ್ದಳು. ಕಾಪಾಡು, ಒಳ್ಳೆಯದನ್ನು ಮಾಡು ಎಂದು ಕೇಳಿಕೊಳ್ಳುತ್ತಿದ್ದಳು. ಆದರೆ ಪ್ರತಿಯೊಂದು ವಿಧಾನಕ್ಕೂ ಒಂದು ರೀತಿ, ಪ್ರಾರ್ಥನೆ ಇದೆ ಎಂಬುದು ಇದೀಗ ತಿಳಿದು ಬಂದು ಅವಳು ರೋಮಾಂಚನಗೊಂಡಳು. +ಶಿವಸಾಗರದ ಕ್ರೀಸುವರ ಮನೆಗಳಲ್ಲಿ ಸಾಯಂಕಾಲದ ಜಪಸರ ಪ್ರಾರ್ಥನೆಯ ಕಾಲದಲ್ಲಿ ಇಂಪಾದ ಕೀರ್ತನೆಗಳು ಕೇಳಿ ಬರತೊಡಗಿದ್ದವು. ಕೊಪೆಲಿನಲ್ಲಿ ಸಂಜೆಯ ಪ್ರಾರ್ಥನೆಯ ಗಂಟೆಯಾದ ಸ್ವಲ್ಪ ಹೊತ್ತಿಗೆಲ್ಲ ಮನೆಗಳಲ್ಲಿ ಗಡಿಬಿಡಿ ಗದ್ದಲ. ತಾಯಿ ಮಕ್ಕಳನ್ನು ಕರೆಯುವುದು, ಮೇಣದ ಬತ್ತಿ ಹಚ್ಚಿ ಅನ್ನುವುದು. ಸಾಮೂಹಿಕವಾಗಿ ಮೊಣಕಾಲೂರಿ ಪ್ರಾರ್ಥನೆ ಮಾಡುವುದು. ರಾಗವಾಗಿ ಕೀರ್ತನೆ ಹಾಡುವುದು, ಪ್ರಾರ್ಥನೆಯ ನಂತರ ಕಿರಿಯರೆಲ್ಲ ಹಿರಿಯರ ಎದುರು ನಿಂತು- +“ಮಾಂಯಂ ಬೆಸಾಂವಂದೀ” +“ಬಾಬಾ ಬೆಸಾಂವಂದೀ” +“ದಾದಾ ಬೆಸಾಂವಂದೀ“ಎಂದು ತಾಯಿ , ತಂದೆ ಅಣ್ಣ, ದೊಡ್ಡಮ್ಮ ಎಲ್ಲರ ಹತ್ತಿರ ದೇವರ ಆಶೀರ್ವಾದ ಕೇಳುವುದು. ಅದೊಂದು ರೀತಿಯಲ್ಲಿ ಚನ್ನಾಗಿ ಕಾಣುತ್ತಿತ್ತು ಆಕೆಗೆ. +ಈ ಎಲ್ಲ ಕಾರಣಗಳಿಂದಾಗಿ ರಂಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮಾನಸಿಕವಾಗಿಯೂ ಸಿದ್ಧಳಾದಳು. +ಪಾದರಿ ಗೋನಸಾಲ್ವಿಸರಿಗೆ ಸಂತಸವಾಯಿತು. ಹಿಂದೊಮ್ಮೆ ಬೋನನನ್ನು ಕ್ರಿಸ್ತನ ಆಶ್ರಯಕ್ಕೆ ಬರಮಾಡಿಕೊಂಡ ಅವರು ಈಗ ಈ ರಂಗಿಯನ್ನು ಕೊಪೆಲಿನೊಳಗೆ ಕರೆಸಿಕೊಳ್ಳಲು ಉತ್ಸುಕರಾದರು. +ಇವಳಿಗೆ ಜ್ಞಾನ ಸ್ನಾನದೊಡನೆ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮುಂತಾದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಪೆದ್ರುವಿನ ಜೊತೆಗೆ ಮದುವೆ ಮಾಡುವ ಕಾರ್ಯವನ್ನು ಕೈಗೊಳ್ಳಲು ಅವರು ಮುಂದಾದರು. ಕ್ರಿಸ್ತ ಪ್ರಭು ಸ್ಥಾಪಿಸಿದ ಜ್ಞಾನ ವಿವಾಹಗಳು ಇದ್ದುದರಿಂದ ಇವುಗಳನ್ನು ಪಡೆಯದೆ ಯಾರು ಕೂಡ ನಿಜ ಕ್ರೀಸರಾಗುತ್ತಿರಲಿಲ್ಲ. +ರಂಗಿಗಾಗಿ ಪಾದರಿ ಗೋನಸಾಲ್ವಿಸ್ ಫ಼್ಲೋರಿನಾ ಎಂಬ ಸುಂದರ ಹೆಸರನ್ನು ಆಯ್ಕೆ ಮಾಡಿದರು. ಜ್ಞಾನಸ್ನಾನದ ಸಂದರ್ಭದಲ್ಲಿ ದೇವ ಪಿತ ದೇವ ಮಾತೆಯಾಗಿ ಇರಲು ಸುತಾರಿ ಇನಾಸ, ಅವನ ಹೆಂಡತಿ ಮುಂದೆ ಬಂದರು. ಉಳಿದ ದಿವ್ಯ ಸಂಸ್ಕಾರಗಳು ಕೂಡ ಇದೆ ಸಂದರ್ಭದಲ್ಲಿ ಅವಳಿಗೆ ನೀಡಲಾಯಿತು. ಈ ವರೆಗೆ ಪೆದ್ರು ಇಟ್ಟುಕೊಂಡ ಹೆಂಗಸಾಗಿದ್ದ ರಂಗಿ ಅಂದಿನಿಂದ ಅವನ ಹೆಂಡತಿಯಾದಳು. ಈ ಮಾತಿಗೆ ಊರು ಕೇರಿ ಮುಖ್ಯವಾಗಿ ಏಸು ಪ್ರಭುವಿನ ಒಪ್ಪಿಗೆ ದೊರಕಿತ್ತು. ಏನೋ ಒಂದು ಬಗೆಯ ಅಳುಕು ಆತಂಕದಲ್ಲಿಯೇ ಈ ವರೆಗೆ ಬದುಕಿದ್ದ ರಂಗಿ, ಪೆದ್ರು ಇಬ್ಬರ ಹೃದಯಗಳೂ ಹಗುರವಾದವು. +-೬- +ಸಾನಬಾನಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದದ್ದು ಸಿಮೋನನಿಗೆ ಸಂತೋಷವನ್ನುಂಟುಮಾಡಿತು. ಈ ಕಾರ್ಯ ನಡೆಯುವಾಗ ಊರ ಕ್ರೀಸುವರೆಲ್ಲ ಕೊಪೆಲಿನಲ್ಲಿದ್ದರು. ಈಗ ಕೊಪೆಲಿಗೆ ಹೋಗುವವರ ಸಂಖ್ಯೆ ಅಧಿಕವಾಗಿತ್ತು. ಭಾನುವಾರ ಬಂತು ಎಂದರೆ ಜನ ಬೇರೆಲ್ಲ ಕೆಲಸ ಮರೆತು ಅತ್ತ ಹೋಗುತ್ತಿದ್ದರು. ದಿವ್ಯ ಪ್ರಸಾದ ಸ್ವೀಕರಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಪಾದರಿ ಗೋನಸಾಲ್ವಿಸರು ಕ್ರೀಸುವವರಲ್ಲಿ ಮತ್ತೆ ಕ್ರೈಸ್ತ ಪ್ರೆಮವನ್ನು, ದೈವ ಭಕ್ತಿಯನ್ನು ಜಾಗೃತಗೊಳಿಸಿದ್ದರು. ಜೊತೆಗೆ ರಂಗಿಯಂತಹ ಅಕ್ರೈಸ್ತ ಹೆಣ್ಣು ಮಗಳನ್ನು ಕ್ರಿಸ್ತನ ಮಡಿಲಿಗೆ ಹಾಕಿದರು. ಸಿಮೋನನಿಗೆ ತಾನು ಕೂಡ ಇಂತಹ ಒಂದು ಪ್ರಯತ್ನ ಮಾಡಿದ್ದು ನೆನಪಿಗೆ ಬಂತು. +ತಾನು ಶಿವಸಾಗರಕ್ಕೆ ಪ್ರತಿ ಮಳೆಗಾಲ ಮುಗಿದ ನಂತರ ಘಟ್ಟವೇರಿ ಬರುತ್ತಿದ್ದ ಪ್ರಾರಂಭವಾದ ದಿನಗಳು ಇಲ್ಲಿ ಕೆಲಸ ಮಾಡಲೆಂದು ಸಾನಬಾವಿ ಪೆದ್ರು, ಪಾಸ್ಕೋಲ, ಗಾಬ್ರಿಯೆಲ, ಇಂತ್ರು ಮುಂತಾದವರನ್ನು ತನ್ನ ಜೊತೆ ಕರೆಯುತ್ತಿದ್ದೆ. ಹೀಗೆ ಬರುವಾಗ ಹೊನ್ನಾವರದಲ್ಲಿ ಬಾಳ ಎಂಬ ಹುಡುಗ ಸಿಕ್ಕ. ಬಂದರಿನಲ್ಲಿ ಅಳುತ್ತ ಕುಳಿತಿದ್ದ. +“ಅಣ್ಣಾ ನಾನೂ ಬತ್ತೆ..“ಎಂದು ಬೆನ್ನು ಹತ್ತಿದ. ಅಲ್ಲಿಯೇ ಇದ್ದ ಕತ್ತದ ಹುರಿ ಸಾಬಿ- +“ಸಿಮೋನ ಅವನ್ನ ಕರೆದುಕೊಂಡೋಗು ಮಾರಾಯ ಅವನ ಮಲತಾಯಿ ಕೈಯಿಂದ ಅವನನ್ನು ಬಿಡಿಸು“ಎಂದ. +ಹುಡುಗ ತೀರ ಚಿಕ್ಕವನೇನಲ್ಲ..ಹದಿನೈದು ಹದಿನಾರು ವರ್ಷ. ಏಳೆಂಟು ಜನ ತನ್ನ ಜೊತೆ ಬರುತ್ತಾರೆ. ಅವರ ಅಡಿಗೆ ಊಟ ಸ್ನಾನದ ವ್ಯವಸ್ಥೆ ತಾನೆ ಮಾಡಬೇಕು. ಆಗಿನ್ನೂ ಸಾಂತಾಮೋರಿ ಶಿವಸಾಗರಕ್ಕೆ ಬಂದಿರಲಿಲ್ಲ. ಹುಡುಗ ಇರಲಿ ಅಂದುಕೊಂಡ. +“..ತಮ್ಮ..ಬತ್ತೀಯ ಬಾ..“ಎಂದು ಅವನನ್ನು ದೋಣಿಗೇರಿಸಿಕೊಂಡಿದ್ದ. ಹುಡುಗ ಶಿವಸಾಗರಕ್ಕೆ ಬಂದ ಪಳ್ಳಿಯ ಬಳಿ ತಾವು ಮಾಡಿಕೊಂಡಿದ್ದ ಬಿಡಾರದಲ್ಲಿ ಉಳಿದು ಮನೆಗೆಲಸ ಮಾಡಿಕೊಂಡು ಇರತೊಡಗಿದ. +ಬೆಳಿಗ್ಗೆ ಗಂಜಿ, ಮಧ್ಯಾಹ್ನದ ಊಟ, ರಾತ್ರಿಯ ಊಟ, ಸಂಜೆ ನೀರು ಕಾಯಿಸಿಡುವುದು ಹೀಗೆ ಏಳೆಂಟು ಜನರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ತನ್ನ ಜೊತೆಯಲ್ಲಿದ್ದ. ಮಳೆಗಾಲ ಪ್ರಾರಂಭವಾಗಿ ಊರಿಗೆ ಹೋದರೆ ಈ ಹುಡುಗ ತನ್ನ ಮನೆಗೂ ಬಂದ. ಮನೆಯಲ್ಲಿ ಅವನ ತಂದೆ ಎರಡನೆ ಮದುವೆಯಾಗಿದ್ದು ಇವನು ಮನೆ ಬಿಡಲು ಕಾರಣವಾಗಿತ್ತು. ಮನೆಗೆ ಹೋಗು, ಮತ್ತೆ ಘಟ್ಟಕ್ಕೆ ಹೋಗುವಾಗ ಬರುವಿಯಂತೆ ಎಂದರೂ ಈತ ಒಪ್ಪಿಕೊಳ್ಳುತ್ತಿರಲಿಲ್ಲ. +ಹೀಗೆ ಒಂದು ವರ್ಷ ತನ್ನ ಜೊತೆಗಿದ್ದ. +ಆಗ ತನ್ನ ಮನಸ್ಸಿಗೊಂದು ಆಸೆ ಚಿಗುರಿತು. ಬಾಳ ಕೊಂಕಣಿ ಮಾತನಾಡುತ್ತಾನೆ. ಸೊನಗಾರರ ಹುಡುಗ. ಇಂದಲ್ಲ ನಾಳೆ ಅವನಿಗೆ ತನ್ನ ಕೆಲಸ ಕಲಿಸಬೇಕು. ತಾನೇ ಮುಂದೆ ನಿಂತು ಮದುವೆ ಮಾಡಬೇಕು. ಅವನ ಕಡೆಯವರು ಎಂದು ಯಾರೂ ಬಂದಿಲ್ಲ. ಬರುವ ಸೂಚನೆಗಳೂ ಕಾಣುತ್ತಿಲ್ಲ. ಅವನನ್ನು ಏಕೆ ತನ್ನ ಧರ್ಮಕ್ಕೆ ಸೇರಿಸಿಕೊಳ್ಳಬಾರದೆಂದು ಸಿಮೋನ ವಿಚಾರ ಮಾಡಿದ. ಒಂದು ಆತ್ಮವನ್ನು ಕ್ರಿಸ್ತನಿಗಾಗಿ ಗೆದ್ದುಕೊಳ್ಳುವುದು ಪವಿತ್ರ ಕೆಲಸವೇ ಅಲ್ಲವೇ? ಅವಿಶ್ವಾಸಿಗಳನ್ನು ನಿಜ ದೇವರತ್ತ ಕರೆತನ್ನಿರಿ ಎಂದು ಕ್ರಿಸ್ತನೇ ಹೇಳಿಲ್ಲವೇ? +ಸಿಮೋನ ತನ್ನ ಕೆಲಸ ಆರಂಭಿಸಿದ. ಬಾಳನಿಗೆ ಶಿಲುಬೆಯ ಗುರುತು ತೆಗೆಯುವುದರಿಂದ ಹಿಡಿದು ಉಳಿದೆಲ್ಲಾ ಜಪ, ಪ್ರಾರ್ಥನೆಗಳನ್ನು ಹೇಳಿಕೊಟ್ಟ. ಇವುಗಳನ್ನು ಕಲಿಯುವುದರಲ್ಲಿ ಏಕೋ ಅವನು ಅಷ್ಟೊಂದು ಆಸಕ್ತಿ ತೊರುತ್ತಿರಲಿಲ್ಲ. ಆದರೂ ಸಿಮೋನ ತಾನು ಪ್ರಾರ್ಥನೆ ಮಾಡುವಾಗ ತನ್ನ ಮಗ್ಗುಲಲ್ಲಿ ಮೊಣಕಾಲು ಹಾಕುವ ಹಾಗೆ ಹೇಳಿ ಅವನಿಗೆ ಎಲ್ಲವನ್ನು ಹೇಳಿಕೊಟ್ಟ. ಊರಿಗೆ ಹೋದಾಗ ಐದಾರು ಬಾರಿ ಇಗರ್ಜಿಗೂ ಕರೆದೊಯ್ದು ಪಾದರಿ ಬಳಿ ಹೋಗಿ “ಹೀಗೆ ಹೀಗೆ ಇವನಿಗೊಂದು ಜ್ಞಾನ ಸ್ನಾನ ಮಾಡಬೇಕು ಫ಼ಾದರ್“ಎಂದು ಹೇಳಿದ. +ಜ್ಞಾನಸ್ನಾನದ ದಿನ ಕೂಡ ನಿಗದಿಯಾಯ್ತು. ದೇವ ಪಿತ ದೇವ ಮಾತೆಯರಾಗಲು ಸಿಮೋನನ ಹೆಂಡತಿಯ ತಮ್ಮ ಅವನ ಹೆಂಡತಿ ಮುಂದೆ ಬಂದರು. ನಾಳೆ ಜ್ಞಾನಸ್ನಾನವೆಂದರೆ ಇಂದು ರಾತ್ರಿ ಬಾಳ ಮನೆಯಿಂದ ಕಾಣೆಯಾದ. ರಾತ್ರಿ ಕಡಲ ಕಿನಾರೆಗೆ ಹೋದವ ತಿರುಗಿ ಬರಲಿಲ್ಲ. +ಮುರುಡೇಶ್ವರದ ಪಾದರಿ- +“ಸಿಮೋನ ಮೇಸ್ತ್ರಿ..ಎಲ್ಲಿ ನಿಮ್ಮ ಹುಡುಗ?“ಎಂದು ಐದಾರು ಬಾರಿ ಕೇಳಿದ. ಆದರೆ ಕಾಣೆಯಾದ ಬಾಳ ಮಾತ್ರ ಮತ್ತೆ ಕಾಣಿಸಿಕೊಳ್ಳಲಿಲ್ಲ. ಹೊನ್ನಾವರ, ಮುರುಡೇಶ್ವರ, ಶಿರಾಲಿಗಳಲ್ಲೆಲ್ಲ ಸಿಮೋನ ಬಾಳನಿಗಾಗಿ ಹುಡುಕಾಡಿದ. +ಅವನನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೆ. ಕೂಲಿ ಕೊಡುತ್ತಿದ್ದೆ. ಊಟ ಬಟ್ಟೆಗೆ ಕಡಿಮೆ ಮಾಡಿರಲಿಲ್ಲ. ಅವನನ್ನು ನಿಜ ದೇವನ ಕೃಪೆಗೆ ಪಾತ್ರನನ್ನಾಗಿ ಮಾಡಲು ಹೊರಟಾಗ ಆತ ಹೊರಟು ಹೋದದ್ದು ಮಾತ್ರ ವಿಚಿತ್ರವೆನಿಸಿತು. ಅವನು ಹೀಗೆ ಏಕೆ ಮಾಡಿದ ಎಂಬುದು ಈ ವರೆಗೂ ತನಗೆ ಅರ್ಥವಾಗಲಿಲ್ಲ. ಆದರೆ ರಂಗಿ ಸಹಜವಾಗಿ ಫ಼್ಲೋರಿನಾ ಆದಳು. ಬಾಳ ಅಂದು ತನ್ನ ಮಾತಿಗೆ ಒಪ್ಪಿಕೊಂಡು ಜೊಸೇಫ಼ನೋ, ಆಂತೋನಿಯೊ ಆಗಿದ್ದಿದ್ದರೆ ಇಂದು ಮದುವೆಯಾಗಿ ತನ್ನದೇ ಆದ ಕುಟುಂಬ, ಮನೆ ಮಾಡಿಕೊಂಡು ಇರುತ್ತಿದ್ದ. ಈಗ ಎಲ್ಲಿದ್ದಾನೋ? ಎನು ಮಾಡುತ್ತಿದ್ದಾನೋ? ಎಂದು ನಿಡುಸುಯ್ದ ಸಿಮೋನ. +ರಂಗಿ ಫ಼್ಲೋರಿನಾ ಆದಳು. ಅಗಲಿ ಹೋದ ಕ್ರೀಸುವರೆಲ್ಲ ಒಂದೆಡೆ ಸೇರಲಾರಂಭಿಸಿದರು. ಪಾದರಿ ಗೋನಸಾಲ್ವಿಸನ ಕಾರವಾರದಿಂದ ಕೊಪೆಲಗೆ ದೊಡ್ಡ ದುಂಡು ಗಂಟೆ ತರಿಸಿದರು. ಈ ಗಂಟೆಯನ್ನು ತೂಗು ಹಾಕಲು ಒಂದು ಗಂಟೆ ಗೋಪುರವನ್ನು ಕಟ್ಟಬೇಕೆಂಬ ವಿಚಾರ ಬಂದಿತು. ಸಣ್ಣ ಪ್ರಮಾಣದ ಕೊಪೆಲ ಎದುರು ದೊಡ್ಡ ರೀತಿಯಲ್ಲಿ ಗಂಟೆ ಗೋಪುರ ರಚಿಸುವುದು ಚೆನ್ನಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯ ಬಂದಾಗ – +“ಹಾಗಾದರೆ ದೊಡ್ಡ ಇಗರ್ಜಿಯನ್ನೇ ಕಟ್ಟೋಣ“ಎಂದರು ಜನ. +“ಊರಿನಲ್ಲಿ ಇಪ್ಪತ್ತು ಮನೆಗಳಿವೆ..ಕಲ್ಲು ಕೆತ್ತುವವರು, ಕಟ್ಟುವವರು, ಗಾರೆ ಕೆಲಸದವರು. ಬಡಗಿಗಳು ಇಲ್ಲಿದ್ದೀರಿ. ಹೆಂಗಸರು ಹೆಣ್ಣಾಳುಗಳ ಕೆಲಸ ಮಾಡಲಿ..ನಾನು ಹಣದ ವ್ಯವಸ್ಥೆ ಮಾಡುತ್ತೇನೆ. ನೀವು ಕೆಲಸಕ್ಕೆ ಕೈ ಹಾಕಿ..ಇಗರ್ಜಿ ಕಟ್ಟಿ ಬಿಡೋಣ ಅದರ ಜೊತೆಗೇನೆ ಗಂಟೆ ಗೋಪುರವನ್ನು ಕೂಡ“ಎಂದು ಪಾದರಿ ಹುರಿದುಂಬಿಸಿದರು. +ಈ ಮಾತು ಒಂದು ಆಕೃತಿಯನ್ನು ಪಡೆಯುತ್ತಿದೆ ಅನ್ನುವಾಗ ಪಾದರಿ ಗೋನಸಾಲ್ವಿಸರು ಊರಿನ ಪುರಸಭೆಗೆ ತಿರುಗಾಡತೊಡಗಿದರು. +ಹಿಂದೆ ಪುರಸಭೆಯವರು ಊರಿನ ಕ್ರೈಸ್ತ ಸಮುದಾಯಕ್ಕೆಂದು ಮಸೀದಿಯಿಂದ ಸಾಕಷ್ಟು ದೂರದಲ್ಲಿ ಸಣ್ಣದೊಂದು ನಿವೇಶನ ಕೊಟ್ಟಿದ್ದರು. ಅಲ್ಲಿ ಈಗ ಕೊಪೆಲ ಎದ್ದು ನಿಂತಿದೆ. ಆದರೆ ನಾಳೆ ಇಲ್ಲಿ ದೊಡ್ಡ ಪ್ರಮಾಣದ ಇಗರ್ಜಿಯನ್ನು ಕಟ್ಟುವ ವಿಚಾರವಿದೆ. ಇಗರ್ಜಿಗೆ ಈ ಸ್ಥಳ ಸಾಲದು. ಹಾಗೆಯೇ ಇಲ್ಲಿ ಶಾಲೆ, ಪಾದರಿ ಬಂಗಲೆ ಇತ್ಯಾದಿಗಳು ಆಗಬೇಕು. ಕ್ರೀಸ್ತುವವರಿಗಾಗಿ ಸಣ್ಣ ಪ್ರಮಾಣದ ಸಿಮಿಟ್ರಿಯು ಈಗ ಕೊಪೆಲ ಬಳಿಯೇ ತಲೆ ಎತ್ತಿದೆ. ಈ ಸಿಮಿಟ್ರಿಗೂ ಜಾಗ ಬೇಕು. ಕಾರಣ ಈಗ ಕೊಪೆಲನ ಸುತ್ತ‌ಏನು ಏಳೆಂಟು ಎಕರೆ ಜಾಗವಿದೆ ಅದನ್ನು ಕ್ರೈಸ್ತ ಸಮುದಾಯಕ್ಕೇನೆ ನೀಡಿ ಎಂದು ಒಂದು ಅರ್ಜಿ ಬರೆದುಕೊಂಡು ಪಾದರಿ ಗೋನಸಾಲ್ವಿಸರು ಪುರಸಭೆ ಅಧ್ಯಕ್ಷರು ಸದಸ್ಯರು ಮುಖ್ಯಾಧಿಕಾರಿಗಳು ಎಂದು ಎಲ್ಲರನ್ನೂ ಕಂಡರು. +ಗಾಜು ಗಣ್ಣಿನ, ಕೆಂಪು ಮುಖದ ಕಪ್ಪು ಚೂಪು ಗಡ್ಡದ ಒಂದು ವ್ಯಕ್ತಿ ತಮ್ಮ ಎದುರು ಬಂದು ಕುಳಿತು ಇಂಗ್ಲೀಷಿನಲ್ಲಿ ಮಾತನಾಡುತ್ತ ನಡು ನಡುವೆ ವಿಚಿತ್ರವಾದ ಧಾಟಿಯಲ್ಲಿ ಕನ್ನಡ ಶಬ್ದಗಳನ್ನು ಉಚ್ಚರಿಸುತ್ತ- +“..ಜಾಗ..ನಮಗೆ ಕೊಡಿ..“ಎಂದು ಹೇಳುವುದು ಅಧ್ಯಕ್ಷರು ಸದಸ್ಯರ ಮನಸ್ಸಿನಲ್ಲಿ ಕರುಣೆ ಪ್ರೀತಿಯನ್ನು ಹುಟ್ಟಿಸಿತು. +ಈ ಮನುಷ್ಯ ಯಾವುದೋ ದೇಶದವನು. ಇಲ್ಲಿ ಬಂದಿದ್ದಾನೆ. ಇಲ್ಲಿಯ ಜನರಿಗಾಗಿ ಏನೇನೋ ಮಾಡುತ್ತಿದ್ದಾನೆ. ದೇವಸ್ಥಾನ ಕಟ್ಟಲು, ಹೆಣ ಹುಗಿಯಲು, ಶಾಲೆ ನಿರ್ಮಿಸಲು ಜಾಗ ಕೇಳುತ್ತಿದ್ದಾನೆ. ನಿತ್ಯ ಬರುತ್ತಾನೆ. ವಿನಯದಿಂದ ನಿಲ್ಲುತ್ತಾನೆ. ನಮಸ್ಕಾರ ಎಂದು ಕೈ ಮುಗಿಯುತ್ತಾನೆ. ಚೆನ್ನಾಗಿದ್ದೀರಾ ಎಂದು ಕೇಳುತ್ತಾನೆ. ಕೈ ಹಿಡಿದು ಕುಲುಕುತ್ತಾನೆ. ಬೇಸರಪಟ್ಟುಕೊಳ್ಳುವುದಿಲ್ಲ. ಗೊಣಗುವುದಿಲ್ಲ. ಇವನಿಗೆ ಸಿಟ್ಟು ಬರುವುದಿಲ್ಲ. ಶಾಂತಿಯಿಂದ ತಾಳ್ಮೆಯಿಂದ ಕಾಯುತ್ತಾನೆ. ಕೊಡಿ ಕೊಡಿ ಎಂದು ಬೇಡಿಕೊಳ್ಳುತ್ತಾನೆ. +ಪುರಸಭೆ ಅಧಿಕಾರಿ ನೌಕರರು ಈ ಅರ್ಜಿಯ ಮೇಲೆ ಷರಾ ಬರೆಯುತ್ತಾರೆ. ಅಧ್ಯಕ್ಷರು ಸದಸ್ಯರು ಒಪ್ಪಿಗೆ ನೀಡುತ್ತಾರೆ. ಅರ್ಜಿ ಜಿಲ್ಲಾಧಿಕಾರಿಗಳಿಗೆಹೋಗುತ್ತದೆ. ಅಲ್ಲಿ ಕುಳಿತಿರುವ ಮೆಗ್ಗಾನ ಸಾಹೇಬ “ತಾನು ಬಂದು ನಿವೇಶನ ನೋಡುವುದಾಗಿ“ತಿಳಿಸುತ್ತಾನೆ. +ಒಂದು ದಿನ ಮೆಗ್ಗಾನ ಸಾಹೇಬ ಕುದುರೆ ಸಾರೋಟಿನಲ್ಲಿ ಕೂತು ಬರುತ್ತಾನೆ. ಕೊಪೆಲನ ಎದುರು ನಿಂತು ಹ್ಯಾಟ್ ತೆಗೆದು ಕಂಕುಳಲ್ಲಿ ಇರಿಸಿಕೊಂಡು ದೇವರತ್ತ ತಿರುಗಿ ಶಿಲುಬೆಯ ವಂದನೆ ಮಾಡುತ್ತಾನೆ. ಅಲ್ಲಿ ನೆರೆದ ಕ್ರೀಸ್ತುವರು ತಮ್ಮವನೇ ಆದ ಮೆಗ್ಗಾನ ಸಾಹೇಬನ ಬಣ್ಣ, ದಿರಿಸು, ಮಾತು ಅವನ ಠಾಕುಠೀಕಿನ ನಡಿಗೆಗೆ ಬೆರಗಾಗುತ್ತಾರೆ. +ಕೊಪೆಲ ಹೊರಗೆ ಹಾಕಿರುವ ಚಪ್ಪರಕ್ಕೆ ಹಸಿರು ಹೊದೆಸಿ ಅಲ್ಲಿ ಒಂದು ಮೇಜು, ನಾಲ್ಕು ಕುರ್ಚಿ ಇರಿಸಿ ಮೆಗ್ಗಾನ ಸಾಹೇಬರಿಗೆ ಕೂಡಿಸಿ ಕ್ರೀಸ್ತುವರು ಹಾರ ಹಾಕುತ್ತಾರೆ. ಪಾದರಿ ಗೋನಸಾಲ್ವಿಸ್ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಮೆಗ್ಗಾನ ಸಾಹೇಬ ಕೂಡ ಇಂಗ್ಲೀಷಿನಲ್ಲಿಯೇ ಉಚ್ಚರಿಸುತ್ತಾನೆ. ಈ ಇಬ್ಬರ ಇಂಗ್ಲೀಷ್ ಅಲ್ಲಿ ನೆರೆದ ಕ್ರೀಸ್ತುವರಿಗೂ, ಪುರಸಭೆ ಅಧ್ಯಕ್ಷ ಸದಸ್ಯರಿಗೂ ಊರಿನ ಬಹುತೇಕ ಜನರಿಗೂ ಅರ್ಥವಾಗುವುದಿಲ್ಲ. ಆದರೆ ಅವರೆಲ್ಲ ಇಂಗ್ಲೀಷ ಭಾಷೆಯ ವೇಗ, ಧಾಟಿ, ಮಾತಿನ ರೀತಿ ಆ ಶಬ್ದಗಳ ಉಚ್ಚಾರ, ತುಟಿಯ ಚಲನೆ, ಕಣ್ಣಿನ ಹೊರಳುವಿಕೆ ಇತ್ಯಾದಿಗಳಿಗೆ ಮರುಳಾಗಿ ಚಪ್ಪಾಳೆ ತಟ್ಟುತ್ತಾರೆ. +“ಗುಡ್..ಗುಡ್“ಎಂದು ತಲೆದೂಗಿ ಮೆಗ್ಗಾನ ಸಾಹೇಬ ಹೊರಡುತ್ತಾನೆ. +ಶಿವಸಾಗರದ ಕ್ರೀಸ್ತುವರು ಮೊದಲ ಬಾರಿಗೆ ಹೆಮ್ಮೆ ಅಹಂಕಾರದಿಂದ ಬೀಗುತ್ತಾರೆ. ಪಾದರಿ ಗೋನಸಾಲ್ವಿಸ್ ನಿಜಕ್ಕೂ ದೊಡ್ಡವರು ಅನಿಸುತ್ತದೆ ಅವರಿಗೆ. ಅವರು ಇಲ್ಲಿಗೆ ಬಂದದ್ದರಿಂದ ಅಲ್ಲವೇ ಈ ಸಾಹೇಬ ಇಲ್ಲಿಯವರೆಗೆ ಆಗಮಿಸಿದ್ದು. ತಮ್ಮ ಮಾತು ಕೇಳಿದ್ದು. ತಮ್ಮ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿರುವುದು. ಸರಕಾರವೇ ತಮ್ಮವರದ್ದು ಎಂಬುದು ಈಗ ಖಚಿತವಾಯಿತಲ್ಲ. ಆ ಸಾಹೇಬನ ಹಾಗೆ ಮಾತನಾಡಲು ಈ ಊರಿನಲ್ಲಿ ಬೇರೆ ಯಾರಿಗಾದರೂ ಸಾಧ್ಯವೇ, ತಮ್ಮ ಪಾದರಿಗಳನ್ನು ಬಿಟ್ಟು! ಅದೇನು ಮಾತು ಠೀವಿ! +ಜನ-ಕ್ರೀಸುವರು- ನಾಲ್ಕು ದಿನ ಇದೇ ಮಾತನಾಡಿಕೊಂಡರು. ಕೆಲವೇ ದಿನಗಳಲ್ಲಿ ಇವರು ಕೇಳಿದಷ್ಟೂ ಜಾಗ ಇವರದ್ದಾಯಿತು. ಜೊತೆಗೆ ಕೊಪೆಲ ಮುಂದಿನ ಬಯಲು. ಕೊಪೆಲ ಪಾರ್ಶ್ವದ ಜಾಗ ಕೂಡ ಕ್ರೈಸ್ತ ಸಮುದಾಯಕ್ಕೆ ನೀಡಬೇಕೆಂದೂ ಈ ಪ್ರದೇಶದಲ್ಲಿಯೇ ಕ್ರೀಸುವರಿಗಾಗಿ ಮನೆ ನಿವೇಶನಗಳನ್ನು ಕೊಡಬೇಕೆಂದೂ ಇದನ್ನು ಕ್ರಿಶ್ಚಿಯನ್ ಕೇರಿ ಎಂದು ಅಧಿಕೃತವಾಗಿ ಕರೆದು, ಈ ಕೇರಿಯಲ್ಲಿ ಕುಡಿಯುವ ನೀರಿನ ಬಾವಿ, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕೆಂದೂ ಸರಕಾರಿ ಆದೇಶ ಜಿಲ್ಲಾಧಿಕಾರಿಗಳ ಮೂಲಕ ಜಾರಿಯಾಯಿತು. ಪಾದರಿ ಗೋನಸಾಲ್ವಿಸ್ ಈ ಸುದ್ದಿಯನ್ನು ಇಗರ್ಜಿಯಲ್ಲಿ ಸ್ವಲ್ಪದರಲ್ಲಿ ತಿಳಿಸಿ- +“..ಮೊಗಾಚ ಕ್ರಿಸ್ತಾವನೂಂ( ಪ್ರೀತಿಯ ಕ್ರೀಸ್ತುವರೆ) ನಿಮ್ಮ ದೈವ ಭಕ್ತಿ, ಪ್ರಾರ್ಥನೆ, ಬೇಡಿಕೆ ದೇವರ ಕಿವಿಗೆ ಬಿದ್ದಿದೆ ಅನ್ನುವುದಕ್ಕೆ ಬೇರೆ ನಿದರ್ಶನ ಬೇಕೆ?“ಎಂದು ಕೇಳಿದರು. +ಅಂದು ಶಿವಸಾಗರದ ಕ್ರೀಸ್ತುವರು ಮತ್ತೊಮ್ಮೆ ಹೆಮ್ಮೆ ಪಟ್ಟುಕೊಂಡರು. ದೇವರು ತಮ್ಮ ಪರವಾಗಿದ್ದಾನೆ ಎಂಬುದು ಅವರಿಗೆ ಖಚಿತವಾಯಿತು. +* +* +* +ಕೊಪೆಲ ಸುತ್ತಲಿನ ಜಾಗ ತಮ್ಮದಾದ ಕೂಡಲೇ ಪಾದರಿ ಗೋನಸಾಲ್ವಿಸ ಮಾಡಿದ ಮೊದಲ ಕೆಲಸವೆಂದರೆ ಈ ಜಾಗವನ್ನು ಗುರುತಿಸಿ ಬೇಲಿ ಹಾಕಿದ್ದು. ಒಂದು ಭಾನುವಾರ ಕ್ರೀಸ್ತುವರೆಲ್ಲ ಈ ಕೆಲಸ ಮಾಡಬೇಕು ಎಂಬ ಕರೆ ಕೊಟ್ಟರು ಪಾದರಿ. +“ಭಾನುವಾರಗಳಂದು ಎಲ್ಲರೂ ವಿಶ್ರಾಂತಿ ಪಡೆಯಬೇಕು. ಬೇರೇನೂ ಕೆಲಸ ಮಾಡಬಾರದು ಎಂಬ ನಿಯಮವಿದೆಯಾದರೂ..ಇದು ದೇವರ ಕೆಲಸ ಇಗರ್ಜಿ ಕೆಲಸ..ಪುರಸಭೆಯವರು ಇಗರ್ಜಿಗೆಂದು ನೀಡಿರುವ ಈ ಜಾಗದ ಸುತ್ತ ನಾವು ಬೇಲಿ ಹಾಕಿ ಅದನ್ನು ನಮ್ಮದಾಗಿ ಮಾಡಿಕೊಳ್ಳದಿದ್ದರೆ ಯಾರೂ ಬಂದು ಅಲ್ಲಿ ಮನೆ ಕಟ್ಟಬಹುದು..ಕಾರಣ ದೇವರ ಕೆಲಸ ಮಡಲು ಯಾವುದೇ ನಿರ್ಬಂಧವಿಲ್ಲ..ಎಲ್ಲ ದೊಡ್ಡವರು, ಯುವಕರು, ಹೆಂಗಸರು ಕೂಡ ಬಂದು ಈ ಕೆಲಸ ಮುಗಿಸಿ“ಎಂದರು ಪಾದರಿ. +ಜನ ಭಾನುವಾರದ ಪೂಜೆ ಮುಗಿಸಿಕೊಂಡು ಮನೆಗಳಿಗೆ ಹೋಗಿ ಗಂಜಿ ತಿಂಡಿ, ಕಾಫ಼ಿ ಮುಗಿಸಿ ಮತ್ತೆ ಕೊಪೆಲ್ ಬಳಿ ಬಂದಾಗ ಪಾದರಿ ಗೋನಸಾಲ್ವಿಸ್ ನಿಲುವಂಗಿಯನ್ನು ಎತ್ತಿಕಟ್ಟಿ ಕೈಯಲ್ಲಿ ಕತ್ತಿ ಹಿಡಿದು ಕೆಲಸಕ್ಕೆ ಕೈಹಾಕಿ ಆಗಿತ್ತು. ಈ ಹಿಂದೆಯೇ ತಂದು ಹಾಕಿದ ಬೇಲಿ ಗೂಟ, ಬೊಂಬು, ಬಳ್ಳಿಗಳ ರಾಶಿ ಕೊಪೆಲನ ಹಿಂಬದಿಯಲ್ಲಿ ಬಿದ್ದಿತ್ತು. +ಎರಡು ಮೂರು ಭಾನುವಾರಗಳು ಕಳೆಯುವಷ್ಟರಲ್ಲಿ ಕೊಪೆಲ ಸುತ್ತ ಭದ್ರವಾದ ಬೇಲಿ ಎದ್ದು ನಿಂತಿತು. ಬೇಲಿಯ ಆ ಬದಿಗೆ ಒಂದು ಖಂದಕ ತೋಡಿ, ದನಕರುಗಳು ಒಳಗೆ ನುಗ್ಗದ ಹಾಗೆ ಮಾಡಿದ್ದೂ ಆಯಿತು. ಈವರೆಗೆ ಯಾವ ಕಡೆಯೆಂದರೆ ಆ ಕಡೆಯಿಂದ ಮರಗಿಡ ಬಳಸಿಕೊಂಡು ಪೊದೆಗಳ ನಡುವಿನಿಂದ ನಡೆದು ಇಗರ್ಜಿಗೆ ಬರುತ್ತಿದ್ದವರೆಲ್ಲ ಈಗ ಕೊಪೆಲ ಸುತ್ತಲಿನ ಬೇಲಿಯನ್ನು ಸುತ್ತಿಕೊಂಡು ಮುಂಬದಿಯಿಂದಲೇ ಬರಬೇಕಾಯಿತು. ಮುಂಬದಿಯಲ್ಲಿ ಕೂಡ ಗಳಹಾಕಿ ದಣಪೆಯನ್ನು ನಿರ್ಮಿಸಿದರು. +“ಪದ್ರಾಬಾ…ಈಗ ನಮಗೆ ದೂರ ಆಯ್ತು“ಎಂದು ಸಾಂತಾಮೋರಿ, ಪಾಸ್ಕೋಲ ಮೇಸ್ತ, ಬಲಗಾಲುದ್ದ, ಬಳ್ಕೂರಕಾರ, ಕೈತಾನ ಮೊದಲಾದವರು ನುಡಿದಾಗ ಪಾದರಿ ಗೋನಸ್ವಲಿಸ್- +“ಹೌದು ಸ್ವರ್ಗದ ದಾರಿ ದೂರ..ಸುತ್ತು ಬಳಸಿನದು..ನರಕದ ದಾರಿ ಹತ್ತಿರದ್ದು..“ಎಂದು ನಕ್ಕರು. ಒಂದು ಕಾರಣಕ್ಕೆ ಅವರಿಗೆ ಸಂತಸವಾಗಿತ್ತು. +ಕ್ರೀಸ್ತುವರು ಯಾರೂ ಈಗ ಔಡಲ ಮರದ ಚೌಡಮ್ಮನಲ್ಲಿಗೆ ಹೋಗುವಂತಿರಲಿಲ್ಲ. ಹೋದರೂ ಅವರು ಇಗರ್ಜಿ ಮುಂದಿನಿಂದ, ಕೊಪೆಲನಲ್ಲಿರುವ ಪಾದರಿ ಕಣ್ಣಿಗೆ ಬೀಳದೆ ಹೋಗಲಾಗುತ್ತಿರಲಿಲ್ಲ. +ಕೊಪೆಲ ಸುತ್ತ ಬೇಲಿ ಎದ್ದು ನಿಂತ ನಂತರ, ಕ್ರೀಸುವರ ಮನಸ್ಸಿನಲ್ಲಿ ಕೂಡ ಕೆಲ ಬದಲಾವಣೆಗಳಾದವು. ಬಹಳ ವರ್ಷಗಳಿಂದ ಕಷ್ಟ ಬಂದಾಗ, ಕಾಯಿಲೆಯಾದಾಗ, ಮನೆಯತ್ತ ಏನಾದರೂ ತೊಡಕು ಆತಂಕ ಬಂದಾಗ ಅವರು ಸಹಜವಾಗಿ ಔಡಲ ಮರದಲ್ಲಿಗೆ ಓಡುತ್ತಿದ್ದರು. ಹಾಲು ಎರೆಯುವ, ತೆಂಗಿನಕಾಯಿ ಒಡೆಯುವ, ಊದಿನ ಕಡ್ಡಿ ಅರ್ಪಿಸುವ, ಅಲ್ಲಿಯ ಪ್ರಸಾದ ತಂದು ಹಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದರು. ಈಗ ಅವರ ಈ ಅಭ್ಯಾಸಕ್ಕೆ ತಡೆಯೊದಗಿತು. ತಾವು ನೇರವಾಗಿ ಕೊಪೆಲನ ಸಂತ ಜೋಸೆಫ಼ರನ್ನು ನಂಬುವುದೇ ಸೂಕ್ತ ಎಂಬ ನಿರ್ಧಾರಕ್ಕೂ ಅವರು ಬಂದರು. ಪಾದರಿ ಗೋನಸಾಲ್ವಿಸ್ ಹೀಗಾಯಿತಲ್ಲ ಎಂದು ಸಂತಸಪಟ್ಟರು. +ಕೊಪೆಲ ಇರುವ ಜಾಗದಲ್ಲಿ ದೊಡ್ಡ ಪ್ರಮಾಣದ ಇಗರ್ಜಿ ಕಟ್ಟುವ ಕೆಲಸವನ್ನೂ ಅವರು ಯಾವಾಗಲೋ ಆರಂಭಿಸಿದ್ದರು. +ಪಣಜಿಯ ಒಂದು ಆರ್ಕಿಟೆಕ್ಟಿನವರಿಗೆ ಬರೆದು ಅಲ್ಲಿಯ ಬಾಲ ಏಸುವಿನ ಇಗರ್ಜಿಯ ನಕ್ಷೆ ಕಳುಹಿಸಲು ತಿಳಿಸಿದ್ದರು. ಅಷ್ಟು ದೊಡ್ಡದಲ್ಲವಾದರೂ ಸುಮಾರು ಐನೂರು ಜನ ಕುಳಿತುಕೊಳ್ಳಬಹುದಾದ ಕಟ್ಟಡ. ಶಿಲುಬೆಯಾಕಾರದಲ್ಲಿ ಅದು ಇರಬೇಕು. ನಟ್ಟ ನಡುವೆ ಅಲ್ತಾರ. ಉಳಿದ ಮೂರು ಕಡೆಗಳಲ್ಲಿ ಜನರಿಗೆ ಪ್ರಾರ್ಥನಾ ಸ್ಥಳ. ಹಿಂಬದಿಯಲ್ಲಿ ಪಾದರಿಯ ಕೊಠಡಿ. ಅಲ್ತಾರಿನ ಅಕ್ಕ ಪಕ್ಕದಲ್ಲಿ ಎರಡು ಬಾಗಿಲುಗಳು. ಅಲ್ತಾರಿನ ಮುಂದೆ ಮೂರು ಕಡೆಗಳಲ್ಲಿ ವೃತ್ತಾಕಾರದ ದಿವ್ಯ ಪ್ರಸಾದ ಸ್ವೀಕರಿಸುವ ಕಟಕಟೆ. ಇದನ್ನು ಅಲ್ತಾರನ್ನು ಒಳಮಾಡಿಕೊಂಡು ಒಂದು ಕಮಾನು ಈ ಕಮಾನು ಮೂರು ಕಡೆಗಳಲ್ಲಿ ಇರಬೇಕು. ಇಗರ್ಜಿಯ ಮುಂದಿನ ಗೋಡೆ ತ್ರಿಕೋಣಾ ಕೃತಿಯಲ್ಲಿ ಮೇಲೆ ಹೋಗಬೇಕು. ಇಂತಹ ಮೂರು ತ್ರಿಕೋನಗಳಲ್ಲಿ ನಡುವಿನದು ಹೆಚ್ಚು ಎತ್ತರ. ಇದರ ಮೇಲೆ ಒಂದು ಶಿಲುಬೆ. ಈ ಇಗರ್ಜಿಯ ಮಗ್ಗಲಲ್ಲಿಯೇ ಗಂಟೆ ಗೋಪುರ ನಡುವಿನ ತ್ರಿಕೋನಕ್ಕಿಂತ ತುಸು ಸಣ್ಣದು. +ಈ ನಕ್ಷೆಯನ್ನು ತರಿಸಿಕೊಳ್ಳುವುದರ ಜೊತೆಗೆ ಅವರು ಹಣದ ಬಗ್ಗೆಯೂ ಕೆಲಸ ಮಾಡತೊಡಗಿದ್ದರು. ಗೋವಾದ ಪ್ರಾವಿನ್ಶಿಯಲ್ ರಿಗೆ ತಮ್ಮ ಯೋಜನೆಯ ಬಗ್ಗೆ ಬರೆದಿದ್ದರು. ಪಣಜಿಯ ಶ್ರೀಮಂತರಿಗೆ, ಕಾರ್ಖಾನೆ ಮಾಲೀಕರಿಗೆ, ಹಡಗು ಕಂಪನಿ ಮಾಲಿಕರಿಗೆ, ಬ್ರೆಡ್ಡು, ಬಿಸ್ಕೇಟ್ ಫ಼್ಯಾಕ್ಟ್ರಿಯವರಿಗೆ, ಪಾನೀಯಗಳ ಅಂಗಡಿ, ಉತ್ಪಾದಕರಿಗೆ, ಹೋಟೆಲುಗಳವರಿಗೆ, ಅಲ್ಲಿರುವ ಎಲ್ಲರಿಗೂ ವಿವರವಾಗಿ ಬರೆದಿದ್ದರು. +ಇಲ್ಲಿಯ ಕ್ರೀಸುವರ ಪರಿಚಯ, ಅವರ್ ಸ್ಥಿತಿಗತಿ ಅವರು ಇದೀಗ ಎಚ್ಚೆತ್ತುಕೊಂಡಿರುವುದು ಶಿವಸಾಗರವನ್ನು ನಾಳೆ ಪ್ರಬಲವಾದ ಒಂದು ಕ್ರೈಸ್ತ ಕೇಂದ್ರವನ್ನಾಗಿ ರೂಪಿಸಬೇಕೆಂಬ ತಮ್ಮ ಇರಾದೆ, ಹೀಗೆ ಮಾಡಬೇಕೆಂದರೆ ಇಲ್ಲಿ ಒಂದು ಇಗರ್ಜಿ ಕಟ್ಟಬೇಕೆಂಬ ತಮ್ಮ ಆಸೆ ಎಲ್ಲದರ ಬಗ್ಗೆ ಬರೆದು- +“ಕ್ರಿಸ್ತೇಸುವಿನ ಧರ್ಮವನ್ನು ಮಲೆನಾಡಿನ ಈ ಒಳ ಪ್ರದೇಶದಲ್ಲಿ ನೆಲೆಯೂರಿಸಲು ಸಹಕರಿಸಿ“ಎಂದು ಕೋರಿದ್ದರು. +ಪಣಜಿಯ ಹತ್ತು ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ತಮ್ಮಿಂದ ಯಾರೆಲ್ಲ ಅನುಕೂಲ ಪಡೆದಿದ್ದರೋ, ನಾಮಕರಣ, ಮದುವೆ ಎಂದು ತಾನು ಯಾರಿಗೆಲ್ಲ ಸಹಾಯ ಮಾಡಿದ್ದೇನೋ, ಯಾವ ಜನರಿಗೆ ತಾನು ಸೆರಮಾಂವಂ ನೀಡುವುದರ ಮೂಲಕ ಪೂಜೆ ಮಾಡುವುದರ ಮೂಲಕ ಆಶೀರ್ವಾದದ ಮೂಲಕ ಶುಭ ಕೋರಿದ್ದೆನೋ, ದೇವರ ಕೃಪೆ ದೊರಕಿಸಿ ಕೊಟ್ಟಿದ್ದೆನೋ ಅವರಿಗೆಲ್ಲ ಬರೆದರು. ಹಾಗೆಯೇ ಕಾರವಾರ, ಹೊನ್ನಾವರಗಳಲ್ಲಿದ್ದವರನ್ನೂ ಮರೆಯಲಿಲ್ಲ. ಅಲ್ಲಿಂದ ಒಳ್ಳೆಯ ಪ್ರತಿಕ್ರಿಯೆಯೂ ಇತ್ತು. +ಇಷ್ಟಾದರೂ ಒಂದು ವಿಷಯದ ಬಗ್ಗೆ ಪಾದರಿ ಗೋನಸಾಲ್ವಿಸರಿಗೆ ನಿರಾಶೆ ಇತ್ತು. ಶಿವಸಾಗರದಲ್ಲಿಯ ಎಲ್ಲ ಕ್ರೀಸ್ತುವರನ್ನೂ ಕಂಡು ಅವರು ಮಾತನಾಡುತ್ತಿದ್ದರು. ಇಗರ್ಜಿಗೆ ಬಾರದವರೆಲ್ಲ ಬರಲು ಆರಂಭಿಸಿದ್ದರು. ಊರಿನ ಕ್ರೀಸ್ತುವರ ಮುಖಗಳೆಲ್ಲ ಅವರಿಗೆ ಚಿರಪರಿಚಿತವಾಗಿದ್ದವು. ಪ್ರತಿ ಮನೆಯಲ್ಲಿಯ ಹೆಂಗಸರು ಮಕ್ಕಳನ್ನು ಅವರು ನೆನಪಿನಲ್ಲಿಟ್ಟುಕೊಂಡಿದ್ದರು. +ಯಾರೇ ಆಗಲಿ ಕಂಡ ಕೂಡಲೆ- +“ಕೋಣ್ರೆ…ಇಂತ್ರು?” +“ಕೋಣ್ರೆ..ಪಾಸ್ಕೋಲ?” +“ಕೋಣ್ರೆ..ಸಲಾದೋರ್?“ಎಂದು ಕೇಳುತ್ತಿದ್ದರು. ಯಾರು ಇಂತ್ರುವೇ? ಯಾರು ಪಾಸ್ಕೋಲನೇ? ಯಾರು ಸಲ್ವಾದೋರನೆ ಎಂದು ಕೇಳಿ ಕಂಡಾತನ ಹೆಸರನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಹೆಂಗಸರು ಮಕ್ಕಳನ್ನು ಕೂಡ ಹೀಗೆಯೇ ಹೆಸರು ಹಿಡಿದು ಕೂಗುತ್ತಿದ್ದರು. ಮಾತನಾಡಿಸುತ್ತಿದ್ದರು. ಅವರ ಈ ಸ್ವಭಾವದಿಂದಾಗಿ ಶಿವಸಾಗರದ ಕ್ರೀಸ್ತುವರೆಲ್ಲ ಅವರಿಗೆ ಪ್ರಿಯವಾಗಿದ್ದರು. ಆತ್ಮೀಯರಾಗಿದ್ದರು. +ಆದರೆ ಶಿರಾಲಿಯ ಜೂಜೆ ಒಬ್ಬನೇ ಅವರ ಕೈಗೆ ಸಿಕ್ಕಿರಲಿಲ್ಲ. +ಈ ಜೂಜೆಯ ಬಗ್ಗೆ ಸಿಮೋನ ಹಿಂದೆಯೇ ಹೇಳಿದ್ದ. +ಶಿರಾಲಿಯ ತಾರಿ ಬಾಗಿಲಿನ ಜೂಜ ಶಿವಸಾಗರಕ್ಕೆ ಬಂದು ಬಹಳ ವರ್ಷಗಳಾಗಿದ್ದವು. ಈತ ಇಲ್ಲಿಗೆ ಬರಲೂ ಕೂಡ ಸಿಮೋನನೆ ಕಾರಣ. ಆರಂಭದಲ್ಲಿ ಈತ ಸಿಮೋನನ ಜೊತೆಗೆನೆ ಇದ್ದ. ಅನಂತರ ಹಳ್ಳಿಗಳಲ್ಲಿ ತಾನೇ ಕೆಲಸ ಹುಡುಕಿಕೊಂಡು ಅಲ್ಲಿ ಹೋಗಿ ಉಳಿದ. ಹೆಗ್ಗೋಡು, ಭೀಮನಕೋಣೆ, ಪುರಪ್ಪೆಮನೆ, ಸಿರವಂತೆ, ಹೊಸಮನೆ, ಅಂಬಳಿಕೊಪ್ಪ ಎಂದೆಲ್ಲ ಹಳ್ಳಿ ಹಳ್ಳಿ ತಿರುಗತೊಡಗಿದ. ಜೂಜನಿಗೂ ಉಳಿದವರಿಗೂ ಇದ್ದ ಸಂಪರ್ಕ ತಪ್ಪಿ ಹೋಯಿತು. ಶಿರಾಲಿಯ ತಾರಿಬಾಗಿಲಿನಲ್ಲಿ ಜೂಜೆಯ ತಾಯಿಯೊಬ್ಬಳೇ ಇದ್ದಳು. +“ನನ್ನ ಮಗನ್ನ ನೀನು ಅದೆಲ್ಲಿಗೋ ಕರಕೊಂಡು ಹೋದೆ..ಅವನು ನಮ್ಮನ್ನೆಲ್ಲ ಮರೆತು ಬಿಟ್ಟ.“ಎಂದು ಜೂಜನ ತಾಯಿ ಸಿಮೋನ ಅವಳ ಕೈಗೆ ಒಂದೆರಡು ನೋಟು ತುರುಕಿ- +“..ಮಾಯಿ ನನಗೇನೆ ಅವನು ಸಿಗೋದಿಲ್ಲ..ಯಾವುದೋ ಹಳ್ಳೀಲಿ ಇದ್ದಾನಂತೆ..ಈ ಬಾರಿ ಅವನಿಗೆ ಹೇಳತೇನೆ..“ಅನ್ನುತ್ತಿದ್ದ. +ಘಟ್ಟವೇರಿ ಹೋದ ನಂತರ ಅವನು ಸಿಗುತ್ತಿರಲಿಲ್ಲ. ಅವನ ಕೆಲಸದಲ್ಲಿ ಅವನು ಇವನ ಕೆಲಸದಲ್ಲಿ ಇವನು ತೊಡಗಿಕೊಂಡು ಈ ವಿಷಯ ಮರೆತು ಹೋಗುತ್ತಿತ್ತು. +ಪಾದರಿಗಳು ಈ ಊರಿಗೆ ಬರುತ್ತಿದ್ದಂತೆಯೇ ತಿಳಿದು ಬಂದ ವಿಷಯವೆಂದರೆ ಶಿರಾಲಿ ಜೂಜ ಶಿವಸಾಗರದಲ್ಲಿಯೇ ಇದ್ದುಕೊಂಡು ಹಳ್ಳಿ ಕೆಲಸಗಳಿಗೆ ಹೋಗಿ ಬರುತ್ತಿದ್ದಾನೆ ಎಂಬುದು. ಸಿಮೋನ ಮತ್ತೂ ವಿವರವಾಗಿ ಈ ವಿಷಯವನ್ನು ಪರಿಶೀಲಿಸಿದಾಗ ಅವನಿಗೆ ತಿಳಿದುಬಂದ ವಿಷಯವೆಂದರೆ ಜೂಜ ಬೇರೊಂದು ಜಾತಿಯ ಹೆಂಗಸನ್ನು ಇರಿಸಿಕೊಂಡು ತನ್ನ ಊರು, ಧರ್ಮ, ಜಾತಿಯನ್ನು ಸಂಪೂರ್ಣವಾಗಿ ಮರೆತಿರುವುದು. +ಶಿರಾಲಿಯಲ್ಲಿ ಆತನ ತಾಯಿ ಸತ್ತು ಹೋಗಿ ಕೆಲ ವರುಷಗಳು ಆಗಿದ್ದವು. ಜೂಜ ಮತ್ತೆಂದೂ ಸಿಮೋನನನ್ನು ಹುಡುಕಿಕೊಂಡು ಬಂದಿರಲಿಲ್ಲ. ಇಷ್ಟು ಹೊತ್ತಿಗೆ ತಾನು ಓರ್ವ ಕ್ರೈಸ್ತ ಎಂಬುದನ್ನೂ ಆತ ಮರೆತಿರಬಹುದು. ಹೀಗೆಂದು ಅವನನ್ನು ಅವನ ಪಾಡಿಗೆ ಬಿಡಲುಂಟೆ? +ಪಾದರಿ ಗೋನಸಾಲ್ವಿಸರು ಊರಿನಲ್ಲಿ ಮತ್ತೆ ಕ್ರೈಸ್ತ ಪರಿಸರವನ್ನು ನಿರ್ಮಾಣ ಮಾಡುತ್ತಿರಲು ಸಿಮೋನನಿಗೆ ತಟ್ಟನೆ ಜೂಜನ ನೆನಪಾಯಿತು. ಸಾನಬಾವಿ ಪೆದ್ರುವನ್ನು ಪಾದರಿ ಗೋನಸಾಲ್ವಿಸ್ ರು ಕ್ರಿಸ್ತನ ಪ್ರಭಾವಲಯದೊಳಗೆ ಕರೆ ತಂದಂತೆ ಜೂಜನನ್ನು ತರಬಹುದು ಎಂದು ಆಶಿಸಿ ಸಿಮೋನ ಪಾದರಿಗಳಲ್ಲಿ ಜೂಜೆಯ ಬಗ್ಗೆ ಪ್ರಸ್ತಾಪಿಸಿದನು. +“ಒಬ್ಬ ಮಾತ್ರ ನಮ್ಮ ಕೈತಪ್ಪಿ ಹೋದಂತಿದೆ ಪದ್ರಾಬ..“ಎಂದ ಒಂದು ದಿನ ಸಿಮೋನ. +“ಯಾರು? ಯಾರದು?“ಎಂದು ಕೇಳಿದರು ಗೋನಸಾಲ್ವಿಸ್. +“ಜೂಜ ಅಂತ ಶಿರಾಲಿಯವ..ಈಗ ಐದಾರು ವರ್ಷಗಳಿಂದ ಅವನು ನಮ್ಮಿಂದ ದೂರ ಆಗಿದ್ದಾನೆ.” +“ಅವನೀಗ ಎಲ್ಲಿದ್ದಾನೆ?” +“ಅರಮನೆ ಕೊಪ್ಪ ಅಂತ ಊರ ಹೊರಗೆ ಒಂದು ಕೇರಿ..ಅಲ್ಲಿದ್ದಾನೆ ಅಂತ ಕೇಳಿದೆ. ಮನೆಕಟ್ಟಿಕೊಂಡಿದಾನಂತೆ..ಗಿರಿಜಾ ಶೆಡ್ತಿ ಅಂತ ಒಂದು ಹೆಂಗಸು ಅವನ ಜತೆ ಇದಾಳಂತೆ..ನಾನೂ ಒಂದೆರಡು ಸಾರಿ ಅವನನ್ನ ನೋಡಿ ಬರಲಿಕ್ಕೆ ಪ್ರಯತ್ನ ಮಾಡಿದೆ. ಅವನು ಸಿಗಲಿಲ್ಲ..“ಎಂದು ಸಿಮೋನ ಜೂಜಿನ ಬಗ್ಗೆ ವಿವರವಾಗಿಯೇ ಹೇಳಿದ. +“ಹೌದಾ..ನೋಡೋಣ ಹಾಗಾದರೆ“ಎಂದರು ಪಾದರಿ ಗೋನಸಾಲ್ವಿಸ್. +ಇಂತಹ ವಿಷಯಗಳಲ್ಲಿ ಅವರು ನಿರಾಸಕ್ತಿ ತೋರಿಸುವವರಲ್ಲ. ನಿತ್ಯದ ತಮ್ಮ ಪ್ರಾರ್ಥನೆಯಲ್ಲಿ ಹಿಂಡನ್ನು ಅಗಲಿ ಹೋದ ಜೂಜನ ಪುನರ್ ಸೇರ್ಪಡೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರಗಳನ್ನು ದೇವರಿಗೆ ಸಲ್ಲಿಸಿ ಮೂರನೇ ದಿನದಿಂದ ಅವರು ಕಾರ್ಯೋನ್ಮುಖರಾದರು. ಬೋನನನ್ನು ಜತೆಗೆ ಕರೆದುಕೊಂಡು ಅವರು ಅರಮನೆ ಕೊಪ್ಪಕ್ಕೂ ಹೋದರು. ಜೂಜನ ಮನೆಯನ್ನೂ ಹುಡುಕಿ ತೆಗೆದರು. ಆ ಹೆಂಗಸು ಮನೆಯೊಳಗಿನಿಂದ ಬಗ್ಗಿ ನೋಡಿ- +“ಅವರು ಇಲ್ಲ..“ಎಂದು ನುಡಿದು ಬಾಗಿಲು ಹಾಕಿಕೊಂಡಳು. ಎಲ್ಲಿ ಹೋಗಿದ್ದಾನೆ. ಎಷ್ಟು ಹೊತ್ತಿಗೆ ಬರುತ್ತಾನೆ? ಎಂಬ ಪ್ರಶ್ನೆಗೆ ಅವಳು ಉತ್ತರ ಕೊಡುವ ಗೋಜಿಗೇನೆ ಹೋಗಲಿಲ್ಲ. +“ನನಗೆ ಗೊತ್ತಿಲ್ಲ“ಎಂದಷ್ಟೇ ಹೇಳಿ ಅವಳು ಮತ್ತೊಮ್ಮೆ ಮರೆಯಾದಳು. +ಇಂದಲ್ಲ ನಾಳೆ ಜೂಜನನ್ನು ಕಂಡು ಮಾತನಾಡಬೇಕು ಅನ್ನುವಾಗ ಐದಾರು ವರ್ಷಗಳ ನಂತರ ಊರಿನಲ್ಲಿ ಪ್ಲೇಗು ಕಾಣಿಸಿಕೊಂಡಿತು. +ಮನೆ ಮನೆಗಳಲ್ಲಿ ಇಲಿಗಳು ಬೀಳತೊಡಗಿದವು. ಊರಲ್ಲಿದ್ದ ಇಲಿಗಳು ಕಾಡಿಗೆ ಓಡಿ ಹೋಗುವ ದೃಶ್ಯ ಸಾಮಾನ್ಯವಾಯಿತು. ಹೀಗೆ ಓಡಿ ಹೋಗುವ ಇಲಿಗಳನ್ನು ಮಕ್ಕಳು ಅಟ್ಟಿಸಿಕೊಂಡು ಹೋಗಿ ಚಚ್ಚಿದರು. ಹಿಂದೆಯೇ ಅಗ್ರಹಾರದಲ್ಲಿ ಒಬ್ಬರು. ಸಾಬರ ಕೇರಿಯಲ್ಲಿ ಇಬ್ಬರು. ಚಮಗಾರ ಕೇರಿಯಲ್ಲಿ ಒಬ್ಬರು, ಬೋವೇರ ಕೇರಿಯಲ್ಲಿ ಒಬ್ಬರು ತೊಡೆ ಸಂದಿಯಲ್ಲಿ ಕಂಕುಳ ಸಂದಿಯಲ್ಲಿ ಗಂಟು ಕಾಣಿಸಿಕೊಂಡು ನರಳುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತು. +ಶಿವಸಾಗರಕ್ಕೆ ಪ್ಲೇಗು ಹೊಸದಾಗಿರಲಿಲ್ಲ. ಮೂರು ನಾಲ್ಕು ವರ್ಷಗಳಿಗೊಮ್ಮೆ ಈ ರೋಗ ತಪ್ಪದೆ ಬರುತ್ತಿತ್ತು. ಇಲಿಯ ಮೇಲಿನ ಒಂದು ಜಾತಿಯ ಚಿಗಟದಿಂದ ಬರುವ ಈ ರೋಗವನ್ನು ಪ್ಲೇಗು ಮಾರಿ ಎಂದೇ ಜನ ಕರೆಯುತ್ತಿದ್ದರು. ಮೈಯಲ್ಲಿ ಗೆಡ್ಡೆ ಕಾಣಿಸಿಕೊಂಡು, ವಿಪರೀತನೋವು ಜ್ವರ ಬಂದು ಕೆಲದಿನ ನರಳಿ ಜನ ಸಾಯುತ್ತಿದ್ದರು. ಹಿಂದೆ ಸಣ್ಣದಾಗಿದ್ದ ಊರನ್ನು ಬಿಟ್ಟು ಊರ ಹೊರಗಿನ ಬಯಲಿನಲ್ಲಿ ಗುಡಿಸಲು ಹಾಕಿಸಿಕೊಂಡು ಜನ ವಾಸಿಸುತ್ತಿದ್ದರು. ಈಗ ಊರು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರಿಂದ ಹೀಗೆ ಊರು ಬಿಡುವುದು ಸಾಧ್ಯವಿರಲಿಲ್ಲ. ಹೀಗಾಗಿ ಜನ ಮನೆಗಳಲ್ಲಿಯೇ ಇದ್ದು ಔಷಧೋಪಚಾರಗಳಿಗೆ ಒಳಗಾಗುತ್ತಿದ್ದರು. ಸರಕಾರ ಕೂಡ ಸೂಜಿಮದ್ದು ಗುಳಿಗೆ ಔಷಧಿ ಎಂದು ರೋಗವನ್ನು ತಹಬಂದಿಗೆ ತರುವ ಯತ್ನ ಮಾಡುತ್ತಿತ್ತು. +ಈ ಬಾರಿ ರೋಗ ಕಾಣಿಸಿಕೊಂಡಿದೆ ಎಂದ ಕೂಡಲೆ ಪುರಸಭೆಯವರು ಕಾರ್ಯತತ್ಪರರಾದರು. ಮನೆ ಮನೆಗೆ ಸೈನೋಗ್ಯಾಸ ಹೊಡೆಯುವ, ಶಾಲಾ ಮಕ್ಕಳಿಗೆ ಸೂಜಿ ಮದ್ದು ನೀಡುವ ಕೆಲಸ ಪ್ರಾರಂಭವಾಯಿತು. ಊರ ನಡುವಣ ಮಾರಿ ಗುಡಿಗೆ ಭಕ್ತರ ಸಂಖ್ಯೆ ಅಧಿಕವಾಯಿತು. ಪ್ಲೇಗು ಮಾರಿ ಊರಿಗೆ ಬಂದಿದೆ ಅಂದ ಕೂಡಲೇ ಕೆಲ ಭಕ್ತರು ಮಾರಮ್ಮನದೊಂದು ಜಾತ್ರೆ ಮಾಡಿಸಬೇಕೆಂಬ ಠರಾವು ಮಾಡಿ ಅದಕ್ಕಾಗಿ ಸಿದ್ಧತೆಗೆ ತೊಡಗಿದರು. ಕುರಿ, ಕೋಣ, ಕೋಳಿಗಳ ಬಲಿಯಿಂದ ಮಾರಿ ಸಂಪ್ರೀತಳಾಗುತ್ತಾಳೆಂದು ಜನ ಕೋಳಿ ಬಲಿ ಕೊಡುವ ಹರಕೆ ಹೊತ್ತರು. ಮಾರಮ್ಮನ ಗದ್ದುಗೆಗೆ ಬಂದು ನಿತ್ಯ ಪೂಜೆ ಮಾಡಿಸಿಕೊಂಡು ಹೋಗುವವರು ಹೆಚ್ಚಾದರು. +“ಶ್ರೀಪಾದ ಜೋಯಿಸರಿಗೆ ಪ್ಲೇಗಂತೆ..” +“ರಹಮಾನ ಸಾಹೇಬರ ತೊಡೆ ಸಂದಿಯಲ್ಲಿ ಬಾವು ಎದ್ದಿದೆಯಂತೆ..” +“ತಿಮ್ಮಾ ಬೋವಿ ಆಗಲೋ ಈಗಲೋ ಕೊನೆ ಉಸಿರು ಬಿಡೋ ಹಾಗೆ ಆಗಿದಾನೆ..” +“ರಾಮುಲು ಜ್ವರ ಅಂತ ಮಲಗಿದ್ದಾನೆ”. +ಎಂಬ ಸುದ್ದಿಗಳು ಅಲ್ಲಲ್ಲಿ ಹರಡಿ ಜನ ಭೀತಿಗೊಂಡರು. ಆಗಲೇ ಮಾಸೂರು ಶೆಟ್ಟರ ಮನೆ ಕಟ್ಟಿಸುತ್ತಿದ್ದ ಸಿಮೋನನ ಕಿವಿಗೂ ಒಂದು ಸುದ್ದಿ ಬಿದ್ದಿತು. +“ಅರಮನೆ ಕೊಪ್ಪದ ಜೂಜಪ್ಪನಿಗೆ ಮಾರಿಬೇನೆ ಅಂತೆ..” +ಸಿಮೋನ ಗಾಬರಿಗೊಂಡ. ಊರಿಗೆ ಪ್ಲೇಗು ಕಾಣಿಸಿಕೊಂಡಿದೆ ಅಂದಾಗಲೇ ಆತ ಆತಂಕಗೊಂಡಿದ್ದ. ಹಿಂದೆಲ್ಲ ಒಂದೆರಡು ಬಾರಿ ಪ್ಲೇಗು ಬಂದಾಗ ರಾತ್ರೋ ರಾತ್ರಿ ಆತ ಘಟ್ಟ ಇಳಿದು ಹೋಗಿದ್ದ. ಅವನ ಸಂಗಡ ಇತರರು ಕೂಡ ಗಾಡಿಗಳನ್ನೇರಿದ್ದರು. ಸಾಂತಾಮೋರಿಯ ಊಟದ ಮನೆ ಬರಿದಾಗಿತ್ತು. ಸಾಮಾನ್ಯವಾಗಿ ಬೇಸಿಗೆಯ ಅಂತ್ಯ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆಯ ಪ್ರಖರತೆ ಒಂದೆರಡು ಮಳೆ ಬೀಳುತ್ತಿದೆ ಅನ್ನುವಾಗ ಕಡಿಮೆಯಾಗುತ್ತಿತ್ತು. ಹೇಗೂ ಮಳೆಗಾಲದಲ್ಲಿ ತಾವು ಊರಿಗೆ ಹೋಗಬೇಕು, ಈಗಲೇ ಏಕೆ ಹೋಗಬಾರದು ಎಂದು ಘಟ್ಟದ ಮೇಲೆ ಬಂದವರು ಯೋಚಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದರು. +ಆದರೆ ಈಗ ಹಾಗೆ ಮಾಡುವಂತಿಲ್ಲ. +ಇಲ್ಲಿ ಮನೆ ಕಟ್ಟಿದ್ದೇವೆ. ಹೆಂಡತಿ ಮಕ್ಕಳು ಇಲ್ಲಿದ್ದಾರೆ. ಎತ್ತು ದನಕರ ಸಾಕಿದ್ದೇವೆ. ಎಲ್ಲವನ್ನೂ ಬಿಟ್ಟು ಹೋಗುವಂತಿಲ್ಲ. ದೇವರು ನಡೆಸಿದಂತೆ ಆಗುತ್ತದೆ ಎಂದು ಜನ ಉಳಿದರು. ಆದರೆ ಪ್ಲೇಗು ಮನೆಯ ಸುತ್ತ ಕೇರಿಯಲ್ಲಿ ಊರಿನಲ್ಲಿ ಕರಿಯ ಉಡುಪು ಧರಿಸಿ ತಿರುಗಾಡುತ್ತಲಿತ್ತು. +ತಮ್ಮವನೇ ಆದ ಜೂಜ ಪ್ಲೇಗಿಗೆ ಬಲಿಯಾಗಿದ್ದಾನೆ ಎಂದಾಗ ಸಿಮೋನ ಪಾದರಿಗಳ ಬಳಿ ಓಡಿ ಬಂದ. +“ಪದ್ರಾಬಾ..ಜೂಜನಿಗೆ ಪ್ಲೇಗಂತೆ..“ಎಂದ. +“ದೇವರೇ..” +ಅವರೂ ಗಡಿಬಿಡಿಗೊಂಡರು. ಈ ಕಾಯಿಲೆಯ ತೀವ್ರತೆ ಅವರಿಗೂ ಗೊತ್ತಿತ್ತು. +ಕಾಯಿಲೆ ಮಲಗಿದವರನ್ನು ಹೋಗಿ ನೋಡಬೇಕು ಎಂಬುದು ಇಗರ್ಜಿ ಮಾತೆ ಕಲಿಸುವ ಒಂದು ಪಾಠ. ರೋಗಿಷ್ಠರ ಸೇವೆ ಮಾಡಬೇಕೆಂಬುದು ಕ್ರಿಸ್ತ ಪ್ರಭು ಹೇಳಿದ ಮಾತು ಕೂಡ. ರೋಗದಿಂದ ನರಳುವವರ, ನೊಂದವರ, ಬೆಂದವರ ಸೇವೆಯನ್ನು ನೀವು ಮಾಡಿದರೆ ಅದು ನನ್ನ ಸೇವೆ ಮಾಡಿದ ಹಾಗೆ ಎಂದು ಏಸು ಹೇಳಿರುವಾಗ ಜೂಜನನ್ನು ಹೋಗಿ ನೋಡುವುದುತಮ್ಮ ಕರ್ತವ್ಯ ಅಂದುಕೊಂಡರು ಗೋನಸಾಲ್ವಿಸ್. ಅಲ್ಲದೇ ಆತನನ್ನು ಹೋಗಿ ನೋಡಲು, ಅವನನ್ನು ಮತ್ತೆ ಕ್ರಿಸ್ತಪ್ರಭುವಿನ ತೆಕ್ಕೆಗೆ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಕೂಡ. ಹೀಗೆಂದೇ ಅವರು ಸಿಮೋನನಿಗೆ- +“ನಾನು ನೋಡಿ ಬರತೀನಿ“ಎಂದರು. +ಮಾತಿನಂತೆಯೇ ಬೋನನನ್ನು ಕರೆದುಕೊಂಡು ಅವರು ಜೂಜೆಯ ಮನೆಗೆ ಹೋದರು ಕೂಡ. +ಅರಮನೆ ಕೊಪ್ಪದ ಆ ಮನೆಯ ಬಾಗಿಲು ತೆರೆದಿತ್ತು. ಮನೆಯೊಳಗೆ ಗಾಳಿ ಬೆಳಕು ಸುಳಿಯುತ್ತಿರಲಿಲ್ಲ. ಮೂಲೆ ಮೂಲೆಯಲ್ಲಿ ಯಾವುದೋ ನಿಟ್ಟುಸಿರು, ನರಳಾಟ ಗುಪ್ಪೆಯಾಗಿ ಬಿದ್ದಂತೆ ತೋರುತ್ತಿತ್ತು. ಒಳಹೋಗಿ ನಿಂತ ಒಂದೆರಡು ನಿಮಿಷಕ್ಕೆ ಅಲ್ಲಿಯದೆಲ್ಲವೂ ನಿಚ್ಚಳವಾಗಿ ಹಾಸಿದ ಈಚಲ ಚಾಪೆಯ ಮೇಲೆ ಒಂದು ವ್ಯಕ್ತಿ ಕಂಡು ಬಂದಿತು. ದೇವಾ, ಮಾರಿಯ, ಬಾಬಾ ಎಂದು ದೇವರನ್ನು ತಾಯಿಯನ್ನು ತಂದೆಯನ್ನು ಕ್ಷೀಣ ದನಿಯಲ್ಲಿ ಕರೆಯುತ್ತಿತ್ತು. ಆ ವ್ಯಕ್ತಿ ಈ ಕ್ಷೀಣ ದನಿ ಬಿಟ್ಟರೆ ಆತನಲ್ಲಿ ಬೇರೆ ಚಟುವಟಿಕೆಗಳು ಇರಲಿಲ್ಲ. +“ಜೂಜ..“ಎಂದರು ಗೋನಸಾಲ್ವಿಸ್ ಅವನತ್ತ ಬಗ್ಗಿ. +ಬಾವಿಯ ತಳದಲ್ಲೆಲ್ಲೋ ನೀರು ತುಳುಕಾಡಿದಂತೆ ಅವನ ಕಣ್ಣುಗಳು ತೆರೆದುಕೊಂಡವು. ಗೊರ ಗೊರ ಸದ್ದು ಮಾಡಿ ಆತ ಯಾರು ಎಂದು ಕೇಳಿದ ಗಿರಿಜಾ ಗಿರಿಜಾ ಎಂದು ಕರೆದು ಅತ್ತಿತ್ತ ನೋಡಿದ. ಚಾಪೆ ಹೊಲಸಾಗಿತ್ತು. ದುರ್ಗಂಧ ಅವನ ಸುತ್ತ ಅಮರಿಕೊಂಡಿತ್ತು. ಕೈಯೊಂದನ್ನು ತೊಡೆಯ ಸಂದಿಗೆ ಒತ್ತಿಕೊಂಡು ಅವನು ಅಮ್ಮಾ ಎಂದು ನರಳಿದ. +“ಜೂಜ..ದೇವರಿದ್ದಾನೆ ನಿನಗೆ ಏನೂ ಆಗೋಲ್ಲ” +ಎಂದು ಗೋನಸಾಲ್ವಿಸ್ ಅವನ ಕೈಹಿಡಿದುಕೊಂಡರು. ಆತ ಆ ನೋವು ಯಾತನೆಯ ನಡುವೆಯೂ ತನ್ನ ಮೇಲೆ ಬಗ್ಗಿಕೊಂಡ ಆ ಮುಖವನ್ನು ನೋಡಿದ. ಅವರ ಕುತ್ತಿಗೆಯಲ್ಲಿಯ ಶಿಲುಬೆ ಅರೆ ಬರೆ ಬೆಳಕಿನಲ್ಲಿ ಮಿಂಚಿತು. +ಬೋನ ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದ. +ಜೂಜನ ಜತೆಯಲ್ಲಿದ್ದ ಆ ಗಿರಿಜಾ ಶೆಡ್ತಿ ಎಂಬ ಹೆಂಗಸು ಬಟ್ಟೆಯ ಗಂಟೊಂದನ್ನು ಎದೆಗವಚಿಕೊಂಡು ಹೊರಟು ಹೋಗಿ ನಾಲ್ಕು ದಿನಗಳಾಗಿದ್ದವು. ಒಂದು ದಿನ ಹೊರಬಂದು ಜಗಲಿಯ ಮೇಲೆ ಕುಳಿತಿದ್ದ ಜೂಜ ಮತ್ತೆ ಹೊರಬಂದಿರಲಿಲ್ಲ. ಆ ಮನೆಯೊಳಗೆ ಬೇರೆ ಯಾರೂ ಪ್ರವೇಶಿಸಿರಲಿಲ್ಲ. ಹೊರ ಬಂದು ಕುಳಿತಾಗ ಆತ ತೊಡೆಸಂದಿಯಲ್ಲಿ ಎದ್ದಿರುವ ಬಾವಿನ ಬಗ್ಗೆ ಅವರಿವರಿಗೆ ಹೇಳಿದ್ದ. ಇದೇ ಮೂಲ ಕಾರಣವಾಗಿ ಜನ ಆ ಮನೆಯತ್ತ ಬರುವುದನ್ನು ನಿಲ್ಲಿಸಿದ್ದರು. ಇನ್ನೂ ಒಂದೆರಡು ದಿನ ನೋಡಿ ಆ ಮನೆಗೆ ಬೆಂಕಿ ಹಚ್ಚಿಬಿಡಬೇಕು ಎಂದೂ ಮಾತನಾಡಿಕೊಂಡಿದ್ದರು. ಏಕೆಂದರೆ ಪ್ಲೇಗು ಮಾರಿ ಬಂದವರು ಯಾರೂ ಬದುಕುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. +“ಈವಾಗ ನೀವಾರ ಏನ ಮಾಡತೀರ..ಆ ರೋಗ ನಿಮಗೂ ಬರತದೆ..ಅದಕ್ಕೆ ಔಷಧಿ ಗಿವಸದಿ ಮಾಡಿದ್ರೆ ಅಮ್ಮನಿಗೆ ಕೋಪಬತ್ತದೆ..ನಿಮ್ಮ ಪಾಡಿಗೆ ನೀವು ಹೋಗ್ರಿ..“ಎಂದರು ಜನ. +ಆದರೆ ಗೋನಸಾಲ್ವಿಸ್ ಬೋನ ಹೋಗಲಿಲ್ಲ. +ಗೋನಸಾಲ್ವಿಸರು ಮನೆಯ ಗೋಡೆ ಗೂಡಿನಲ್ಲಿ ಒಂದು ಶಿಲುಬೆ ಇರಿಸಿ ಅದರ ಮುಂದೆ ಮೇಣದ ಬತ್ತಿ ಉರಿಸಿದರು. ಅಲ್ಲಿ ಮೊಣಕಾಲೂರಿ ದೊಡ್ಡ ದನಿಯಲ್ಲಿ ದೇವರ ಪ್ರಾರ್ಥನೆ ಮಾಡಿದರು. ಈವರೆಗೆ ನಿನ್ನನ್ನು ಅಗಲಿ ದೂರ ಉಳಿದ ಈ ಸಹೋದರ ಈಗ ನಿನ್ನ ಮಡಿಲಿಗೆ ಮತ್ತೆ ಬಂದು ಬಿದ್ದಿದ್ದಾನೆ. ಇವನ ಸಂಕಟವನ್ನು ಸಹಿಸುವ ಶಕ್ತಿ ಇವನಿಗೆ ನೀಡು ಈತನನ್ನು ಗುಣಪಡಿಸು. ಹಲವು ರೋಗಗಳಿಂದ ನರಳುತ್ತಿದ್ದವರನ್ನು ನೀನು ಗುಣಪಡಿಸಿದ ಹಾಗೆ ಈತನನ್ನೂ ರೋಗದಿಂದ ಮುಕ್ತಿಗೊಳಿಸು ಎಂದು ಏಸು ಪ್ರಭುವಿನಲ್ಲಿ ಬೇಡಿಕೊಂಡರು. ಇವರು ಆರಂಭಿಸಿದ ಪರಲೋಕ, ನಮೋರಾಣಿ ಮಂತ್ರಗಳನ್ನು ಬೋನಾ ಮುಗಿಸಿದ. +ದೇಹದ ನರನರಗಳನ್ನು ಕೊಯ್ಯುತ್ತಿದ್ದ ನೋವಿನ ನಡುವೆಯೂ ಜೂಜ ಗೂಡಿನಲ್ಲಿಯ ಶಿಲುಬೆಯನ್ನು ನೋಡಿದ. ಉರಿಯುವ ಮೇಣದ ಬತ್ತಿಯ ಕುಡಿಯನ್ನು ದಿಟ್ಟಿಸಿದ. +“ದೇವಾ..“ಎಂದು ಅತ್ತ. +ಬೋನ ಬಿಸಿ ನೀರಿನಿಂದ ಅವನ ಮೈ ಒರೆಸಿದ. +ತಿಳಿಗಂಜಿ ಮಾಡಿ ಕುಡಿಸಿದ. +ಪಾದರಿ ತಂದ ಮದ್ದನ್ನು ಮಾಡಿದ. +ಮನೆಯನ್ನು ಶುಚಿ ಮಾಡಿದ. +ಸಂಜೆ ಸಿಮೋನ ಅಲ್ಲಿಗೆ ಬಂದ. ಅವನ ಹಿಂದೆಯೇ ಪಾಸ್ಕೋಲ, ಇಂತ್ರು, ಕೈತಾನರೂ ಬಂದರು. ಸಿಮೋನನ ತಾಯಿಯೂ ಬಂದಳು.ಗುಸ್ತಿನನ ತಾಯಿಯೂ ಬಂದಳು.ಹೀಗೆ ಬಂದವರೆಲ್ಲ ಶಿಲುಬೆಯ ಮುಂದೆ ಮೊಣಕಾಲೂರಿ ಬೇಡಿಕೊಂಡರು. ಇವರೆಲ್ಲರಿಗೂ ಪ್ಲೇಗೂ ಮಾರಿಯ ಬಗ್ಗೆ ಭೀತಿ ಇತ್ತಾದರೂ ಇವರು ಪಾದರಿ ಗೋನಸಾಲ್ವಿಸ್ ರ ಮಾತಿಗೆ ಬೆಲೆ ಕೊಟ್ಟರು. +ಊರಿನಲ್ಲಿ ಹೊಸದಾಗಿ ಕೆಲವರಲ್ಲಿ ಕಾಯಿಲೆ ಕಾಣಿಸಿಕೊಂಡಿತು. ಇಲಿಗಳು ಬೀಳುವುದು ಕಡಿಮೆಯಾಗಲಿಲ್ಲ. ಶಾಲೆಗಳಿಗೆ ರಜೆ ಕೊಡಲಾಯಿತು. ಊರಿನಲ್ಲಿ ಮಾರಿಯಮ್ಮನ ಜಾತ್ರೆ ಮಾಡಲು ತರಾತುರಿಯ ಸಿದ್ಧತೆ ನಡೆಯಿತು. ಅಂಗಡಿಗಳನ್ನು ಹಾಕಲು ಸರ್ಕಾರ ಅನುಮತಿ ಕೊಡದೇ ಹೋದಾಗ ಜನ ಮಾರಮ್ಮನಿಗೆ ಹಣ್ಣು ಕಾಯಿ ಒಪ್ಪಿಸಲು ಮುಂದಾದರು. ಕೋಳಿ ಕುರಿ ಕೊಡುವ ಹರಕೆ ಹೇಳಿಕೊಳ್ಳಲು ಕೂಡ ಮುಂದಾದರು. +ಈ ಸಂದರ್ಭದಲ್ಲಿಯೇ ಒಂದು ವಿಷಯ ಪಾದರಿ ಗೋನಸಾಲ್ವಿಸರ ಗಮನಕ್ಕೆ ಬಂದಿತು. ಕ್ರೀಸುವರಲ್ಲಿ ಕೆಲವರು ಮಾರಿ ಗುಡಿಯತ್ತ ಹೋಗಿ ಬರುತ್ತಿರುವ ಸುದ್ದಿ ಅವರ ಕಿವಿಗೆ ಬಿದ್ದಿತು. ಊರಿನಲ್ಲಿ ಪ್ಲೇಗು ಕಾಣಿಸಿಕೊಂಡು ಒಂದಿಬ್ಬರು ಸತ್ತಿದ್ದರು. ಹಲವರು ಹೊಸದಾಗಿ ಈ ರೋಗದಿಂದ ಪೀಡಿತರಾಗಿ ನರಳುತ್ತಿದ್ದರು. ಊರ ಮೇಲೆಯೇ ಪ್ಲೇಗು ಮಾರಿ ಎಂಬ ಕರಿಮೋಡ ಕವಿದುಕೊಂಡು ಊರು ಪಾರ್ಶ್ವ ರೋಗಕ್ಕೆ ಬಲಿಯಾದಂತೆ ಬಳಲತೊಡಗಿತ್ತು. ಈ ಪರಿಸ್ಥಿತಿಯಿಂದ ಊರಿನ ಕ್ರೀಸ್ತುವರನ್ನು ಪಾದರಿ ಗೋನಸಾಲ್ವಿಸ್ ರಕ್ಷಿಸಬೇಕಿತ್ತು. +ಭಾನುವಾರವೇ ಗೋನಸಾಲ್ವಿಸ್ ಶೆರಮಾಂವಂ ನಡುವೆ ಒಂದು ಪ್ರಕಟಣೆಯನ್ನು ನೀಡಿದರು. +ಊರಿನಲ್ಲಿ ಮಾರಕ ಕಾಯಿಲೆ ಹರಡುತ್ತಿದೆ. ಈ ಕಾಯಿಲೆ ಹರಡದ ಹಾಗೆ ಒಂದು ನವೇನ ಆರಂಭಿಸುತ್ತಿದ್ದೇನೆ.ಈ ಸೋಮವಾರದಿಂದ ಮುಂದಿನ ಮಂಗಳವಾರದವರೆಗೆ ಒಂಬತ್ತು ದಿನ ಈ ನವೇನ ನಡೆಯುತ್ತದೆ. ಪ್ರತಿದಿನ ಸಾಯಂಕಾಲ ಐದುವರೆಗೆ ಇಗರ್ಜಿಯಿಂದ ಸಂತ ಸಬಸ್ತಿಯಾನರ ಪ್ರತಿಮೆಯ ಮೆರವಣಿಗೆ ಇಗರ್ಜಿ ಕೇರಿಯಲ್ಲಿ ಆಸುಪಾಸಿನ ರಸ್ತೆಗಳಲ್ಲಿ ನಡೆಯುತ್ತದೆ. ನಂತರ ಇಗರ್ಜಿಯಲ್ಲಿ ವಿಶೇಷ ಪ್ರಾರ್ಥನೆ. ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಲ್ಲ ಶಕ್ತಿ ಇರುವ ಸಂತನ ಕೃಪೆಯಿಂದ ಊರಿಗೆ ಆತಂಕವನ್ನು ಒಡ್ಡಿರುವ ಈ ರೋಗ ಕಡಿಮೆಯಾಗುತ್ತದೆ.” +ಪಾದರಿಗಳ ಈ ಪ್ರಕಟಣೆ ಕ್ರೀಸ್ತುವರು ಮನಸ್ಸಿನಲ್ಲಿ ಒಂದು ವಿಶ್ವಾಸವನ್ನು, ನಂಬಿಕೆಯನ್ನು ಹುಟ್ಟಿಸಿತು. +ಮಾರನೇ ದಿನದಿಂದಲೇ ಸಂತ ಸಬಸ್ತಿಯಾನನ ಪ್ರತಿಮೆ ಇರುವ ಚರೇಲನ್ನು ಹಿಡಿದುಕ್ರೀಸ್ತುವರು ಮೆರವಣಿಗೆ ಮಾಡಿದರು. ಮೆರವಣಿಗೆ ಕ್ರೀಸುವರ ಕೇರಿಯಿಂದ ಅಕ್ಕ ಪಕ್ಕದ ಒಂದೆರಡು ರಸ್ತೆಗಳಿಗೂ ಹೊರಳಿ ಕೊಪೆಲಗೆ ಹಿಂತಿರುಗಿತು. ಹೆಂಗಸರು, ಗಂಡಸರು, ಮಕ್ಕಳು ಭಯ ಭಕ್ತಿಯಿಂದ ಈ ಪುರುಶಾಂವ್ಂ ನಲ್ಲಿ ಭಾಗವಹಿಸಿದರು. ಉದ್ದಕ್ಕೂ ಜಪ ಮಾಡುತ್ತ ನಡುವೆ ಕೀರ್ತನೆ ಹಾಡುತ್ತ ಹೊರಟ ಚರೇಲನ ದೇವರಿಗೆ ಹಿಂದುಗಳು ಮೇಣದ ಬತ್ತಿಯನ್ನು ಹೂವಿನಹಾರವನ್ನು ಸಲ್ಲಿಸಿದರು. ಕೊಪೆಲನಲ್ಲಿ ನಂತರ ಸಾಮೂಹಿಕ ಪ್ರಾರ್ಥನೆ ಕೂಡ ನಡೆಯಿತು. +ಒಂಬತ್ತು ದಿನಗಳ ಈ ನವೇನ ಮುಗಿಯುವಾಗ ಹೊಸದಾಗಿ ಪ್ಲೇಗು ರೋಗ ಊರಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಸರಕಾರ ಪುರಸಭೆಯವರು ಶ್ರಮಿಸಿ ರೋಗವನ್ನು ಹತೋಟಿಗೆ ತಂದರು. ಆದರೆ ಒಂದು ಕಾರಣಕ್ಕೆ ಪಾದರಿ ಗೋನಸಾಲ್ವಿಸ್ ರಿಗೆ ನಿರಾಶೆಯಾಯಿತು. ದುಖಃ ಕೂಡ ಆಯಿತು. +ಏಳೆಂಟು ದಿನ ನರಳಿದ ಜೂಜ ಕೊನೆಗೊಂದು ದಿನ ಪಾದರಿಗಳ ಕೈ ಹಿಡಿದುಕೊಂಡ. +“ಪದ್ರಬಾ ನಾನು ತಪ್ಪು ಮಾಡಿದೆ..“ಎಂದ. ಒಂದು ಅರ್ಥದಲ್ಲಿ ಆತ ಪಾಪ ನಿವೇದನೆ ಮಾಡಿಕೊಳ್ಳಲು ಬಂದವನಂತೆ ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ತೋಡಿಕೊಂಡ. ಊರು ಬಿಟ್ಟಿದ್ದು.. ತಾಯಿಯನ್ನು ನೋಡಲು ಹೋಗದಿದ್ದುದು, ದೇವರು, ಇಗರ್ಜಿ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಸಂಸ್ಕಾರಗಳಿಂದ ದೂರ ಉಳಿದದ್ದು. ಬೇರೊಂದು ಜಾತಿಯ ಹೆಂಗಸನ್ನು ಇರಿಸಿಕೊಂಡದ್ದು. ಕೊನೆಗೆ ಅವಳು ಓಡಿ ಹೋದದ್ದು ಎಲ್ಲ ಹೇಳಿ ಅತ್ತ. +“..ನೀನು ಮಾಡಿರುವ ತಪ್ಪುಗಳಿಗಾಗಿ ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದಲ್ಲಿ ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ನಾನು ಅವುಗಳನ್ನು ಕ್ಷಮಿಸಿದ್ದೇನೆ. ನಿನ್ನಲ್ಲಿ ದೇವರ ಕೃಪೆಯು ಸದಾ ಪ್ರಜ್ವಲಿಸುತ್ತಿರಲಿ..“ಎಂದು ಆಶೀರ್ವದಿಸಿದರು. +ಹಾಗೆಯೇ ಅವನಿಗೆ ದಿವ್ಯಪ್ರಸಾದವನ್ನು ನೀಡಿ ಅವನ ಅಂತ್ಯಾಭ್ಯಂಜನವನ್ನು ಕೂಡ ಮುಗಿಸಿದರು. ಜೂಜೆ ಕೊನೆಗಾಲ ಬರುತ್ತಿದೆ ಅನ್ನುವಾಗ ಮತ್ತೆ ಕ್ರಿಸ್ತನ ಕೃಪೆಗೆ ಒಳಗಾದದ್ದು ಅವರಿಗೆ ಸಂತಸವನ್ನು ತಂದಿತು. ನಾನು ದೈವ ಭಕ್ತರನ್ನಲ್ಲಾ ಪಾಪಿಗಳನ್ನು ಕರೆಯಲು ಬಂದಿದ್ದೇನೆ ಎಂದು ಏಸು ಪ್ರಭು ಹೇಳಿದ ಮಾತು ಅವರ ನೆನಪಿಗೆ ಬಂದಿತು. +ಅವರು ಅಂದುಕೊಂಡಂತೆಯೇ ಜೂಜೆ ಮಾರನೇ ದಿನ ಬೆಳಿಗ್ಗೆ ಇರಲಿಲ್ಲ. ಕೊಪೆಲನ ಮರಣದ ಗಂಟೆ ಕೇರಿಗೆಲ್ಲ ಈ ವಿಷಯ ತಿಳಿಸಿತು. +ಶಿರಾಲಿಯ ಜೂಜನ ಶವ ಸಂಸ್ಕಾರವನ್ನು ಕೊಪೆಲನ ಮಗ್ಗುಲಲ್ಲಿ ಮೀಸಲಾಗಿರಿಸಿದ ಸಿಮಿತ್ರಿಯಲ್ಲಿ ಮಾಡಲಾಯಿತು. +ಅವನ ಶವವನ್ನು ಮಣ್ಣಿಗೆ ಇಳಿಸುವ ಮುನ್ನ ಪಾದರಿ ಗೋನಸಾಲ್ವಿಸ್- +“ಪ್ರೀತಿಯ ಕ್ರೀಸ್ತುವರೆ….ಯಾರು ಪ್ರಭು ಏಸುವಿನತ್ತ ತಿರುಗಿಕೊಳ್ಳುತ್ತಾರೋ..ಅವರಿಗೆ ಒಳ್ಳೆಯ ಮರಣ ಲಭ್ಯವಾಗುತ್ತದೆ ಅನ್ನುವುದಕ್ಕೆ ಸಹೋದರ ಜೂಜೆಯ ಮರಣ ಒಂದು ಉದಾಹರಣೆ..ಇಲ್ಲದಿದ್ದಲ್ಲಿ ಅವನ ಶವ ಸಂಸ್ಕಾರ ಹೇಗೆ ಆಗುತ್ತಿತ್ತು ಎಂಬುದನ್ನು ನೀವು ಬಲ್ಲಿರಿ“ಎಂದು ಹೇಳಿದ ಮಾತಿಗೆ ಜನ ತಲೆದೂಗಿದರು. +-೭- +ಕೊಪೆಲನ್ನು ತಾತ್ಕಾಲಿಕವಾಗಿ ಹಾಗೆಯೇ ಇರಿಸಿಕೊಂಡು ಅದರ ಪಕ್ಕದಲ್ಲಿ ದೊಡ್ಡ ಪ್ರಮಾಣದ ಇಗರ್ಜಿ ಕಟ್ಟುವ ಕೆಲಸ ಅರಂಭವಾಯಿತು. ಪಣಜಿಯಿಂದ ಬಂದ ನಕ್ಷೆಯನ್ನು ಎದುರು ಇರಿಸಿಕೊಂಡು ಆ ಪ್ರಕಾರವೇ ಕಟ್ಟಡದ ಕೆಲಸವನ್ನು ಶುರುಮಾಡಲಾಯಿತಾದರೂ ಇಗರ್ಜಿ ಕೆಲಸಕ್ಕೆ ಬೇಕಾದಷ್ಟು ಕೆಲಸಗಾರರ ಕೊರತೆ ಎದ್ದು ಕಂಡಿತು. ಶಿವಸಾಗರದಲ್ಲಿ ಹಾಲಿ ನಡೆಯುತ್ತಿದ್ದ ಕಾಮಗಾರಿಗಳು ಹೇರಳವಾಗಿದ್ದವು. ಊರಿನಲ್ಲಿ ಇದ್ದವರು ಈ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಲು ಒಪ್ಪಿಕೊಂಡಿದ್ದರು. ಸಿಮೋನನ ಕೈಯಲ್ಲೂ ಕೆಲ ಕೆಲಸಗಳಿದ್ದರೂ ಅವನು ಇಗರ್ಜಿ ಕೆಲಸ ಮಾಡಿಸಲು ಮುಂದಾಗಿದ್ದ. ಅವನಿಗೂ ಕೆಲಸಗಾರರ ಕೊರತೆ ಇರುವುದು ಕಂಡಿತು. +“ಪದ್ರಾಬಾ ನಾನು ಊರಿಗೆ ಹೋಗಿ ಜನರನ್ನ ಕರೆ ತರತೇನೆ“ಎಂದ ಆತ ಪಾದರಿ ಗೋನಸಾಲ್ವಿಸರ ಬಳಿ. +“ಹಾಗೆ ಮಾಡಿ..“ಎಂದರವರು. +ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೆಲಸ ಮಾಡುವಂತಿರಲಿಲ್ಲ. ಉಳಿದ ಎಂಟು ತಿಂಗಳುಗಳಲ್ಲಿ ತ್ವರಿತವಾಗಿ ಯಾವುದೇ ಕೆಲಸವನ್ನು ಮಾಡಿ ಮುಗಿಸಬೇಕಾಗುತ್ತಿತ್ತು. ಇಗರ್ಜಿ ಕಟ್ಟಡ ಕಟ್ಟಲು ಕಡಿಮೆ ಎಂದರೆ ಹತ್ತು ಹದಿನೈದು ಜನ ಬೇಕು. ಬಡಗಿಗಳೂ ಬೇಕು. ಇವರಲ್ಲಿ ಕೆಲವರನ್ನಾದರೂ ಕರೆತರಲು ಸಿಮೋನ ಮುರುಡೇಶ್ವರ, ಭಟ್ಕಳಗಳಿಗೆ ಹೋಗಿ ಬಂದ. +ಘಟ್ಟದ ಮೇಲೆ ಬಂದು ಕೆಲಸಮಾಡಿ ಹಣ ಸಂಪಾದಿಸುವ ಆಕರ್ಷಣೆ ಕಡಿಮೆ ಏನೂ ಆಗಿರಲಿಲ್ಲ. ಸಾಂತಾಮೋರಿ ಮನೆಯಲ್ಲಿ ಈಗಲೂ ಹತ್ತು ಹದಿನೈದು ಜನ ಇದ್ದರು. ಹಳಬರು ಶಿವಸಾಗರದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರಲು ಹೊಸಬರು ಘಟ್ಟದ ಕೆಳಗಿನಿಂದ ಬರುತ್ತಿದ್ದರು. ಹಣ ಮಾಡಿಕೊಂಡ ಕೆಲವರು ಊರನ್ನು ಬಿಟ್ಟು ಬರಲು ಮನಸ್ಸಿಲ್ಲದೆ ಅಲ್ಲಿಯೇ ಉಳಿಯುತ್ತಿದ್ದರು. ವರ್ಷಗಳು ಉರುಳಿದ ಹಾಗೆ ಅಲ್ಲಿಂದ ಇಲ್ಲಿಗೆ ಬಂದು ನೆಲಸುವವರ ಸಂಖ್ಯೆ ಹೆಚ್ಚಾಗುತಲಿತ್ತು. ಸಾಂತಾಮೋರಿಗಂತೂ ಯಾವುದೇ ರೀತಿಯಲ್ಲಿ ಸಂಪಾದನೆ ಕಡಿಮೆ ಆಗಿರಲಿಲ್ಲ. ಇಲ್ಲಿ ಇಗರ್ಜಿ ಕೆಲಸ ಆರಂಭವಾಗುತ್ತಿದ್ದಂತೆಯೆ ಸಿಮೋನ ಊರಿನಿಂದ ಇನ್ನೂ ಕೆಲವರನ್ನು ಕರೆತಂದ. +ಹಸಿ ಮದಲು ಪತ್ರೋಲ, ದೇಡ ಮಂಡೆ ಸಂಜಾಂವ, ಶಿರಾಲಿಯ ಲಿಂಯಾಂವ, ಭಟ್ಕಳದ ಸಾನಪುತ್ತು, ಮುರುಡೇಶ್ವರ ಮಠದ ಹಿತ್ತಲಿನ ಬಿಕಾರಿ, ಚಂದ್ರ ಹಿತ್ತಲಿನ ಸಂತಿಯಾಗ, ಪೇಟೆ ಹೊಂಡದ ಸಾನಪ್ಪ ಎಂದೆಲ್ಲ ಹತ್ತು ಹನ್ನೆರಡು ಜನ ಈ ವರುಷ ಶಿವಸಾಗರಕ್ಕೆ ಬಂದರು. ಸುತಾರಿ ಜಾನಿ, ಸುತಾರಿ ಫರಾಸ್ಕರೂ ಬಂದರು. ಇವರೆಲ್ಲರಿಗೂ ಶಿವಸಾಗರದಲ್ಲಿ ನೆಂಟರಿದ್ದರು. ಗುರುತು ಪರಿಚಯದವರಿದ್ದರು. ಸಿಮೋನ ಕೇರಿಯಲ್ಲಿ ಒಂದು ಮನೆಯನ್ನೂ ಗೊತ್ತು ಮಾಡಿಕೊಟ್ಟ. ಇಗರ್ಜಿಯ ತಳಪಾಯ ತೋಡುವ ಕೆಲಸ ಪ್ರಾರಂಭವಾಗುತ್ತಿದ್ದಂತೆಯೇ ಪಾದರಿ ಗೋನಸಾಲ್ವಿಸ್ ಪ್ರಾರ್ಥನೆ ಸಲ್ಲಿಸಿದರು. ಕ್ರೀಸ್ತುವರೆಲ್ಲ ಅಂದು ಅಲ್ಲಿ ಸೇರಿದ್ದರು. ಸಮೋಡ್ತಿಯ ಪ್ರಮುಖರೂ ಹಾಜರಿದ್ದರು. +ಪಾದರಿ ಗೋನಸಾಲ್ವಿಸ್ ಇಗರ್ಜಿ ಕಟ್ಟುವುದರತ್ತ ಗಮನ ಹರಿಸಿದ ಹಾಗೆಯೇ ಶಿವಸಾಗರದ ಕ್ರೈಸ್ತ ಸಮೋಡ್ತಿಯನ್ನು ವ್ಯವಸ್ಥಿತವಾಗಿ ರೂಪಿಸಲು ಕ್ರಮ ಕೈಗೊಂಡಿದ್ದರು. ಗೋವೆ, ಕಾರವಾರ, ಹೊನ್ನಾವರಗಳಲ್ಲಿ ಕ್ರೈಸ್ತ ಸಮುದಾಯದ ಒಳಿತಿಗಾಗಿ ದುಡಿಯುವ ಕೆಲ ವ್ಯಕ್ತಿಗಳನ್ನು ಕಾಣಬಹುದಿತ್ತು. ಗುರ್ಕಾರ, ಮಿರೋಣ, ಫ಼ಿರ್ಜಂತ್, ಚಾಮಾದೋರ್ ಎಂದೆಲ್ಲ ಸಮಾಜ ಸೇವಕರು ಇದ್ದರು. ಶಿವಸಾಗರದಲ್ಲಿಯೂ ಈ ವ್ಯವಸ್ಥೆ ಮಾಡಬೇಕಿತ್ತು. ಊರಿಗೊಬ್ಬ ಪಾದರಿ ಇರುತ್ತಾನಾದರು +ಅವನೇ ಎಲ್ಲವನ್ನೂ ಮಾಡಲಾರ. ಜನರ ಆಧ್ಯಾತ್ಮಿಕ ವಿಷಯಗಳನ್ನು ಆತ ಗಮನಿಸಬಹುದು ಲೌಕಿಕ ತಾಪತ್ರಯಗಳನ್ನಲ್ಲ. ಹಾಗೆಯೇ ಜನರ ನಡುವಿನಿಂದ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ಕೊಟ್ಟರೆ ಜನರಿಗೂ ಸಂತಸವಾಗುತ್ತದೆ. ಹೀಗೆಂದೇ ಸಿಮೋನ ಹಾಗೂ ಬೋನನನ್ನು ಮುಂದಿರಿಸಿಕೊಂಡು ಅವರು ಈ ಕೆಲಸ ಮಾಡಿದರು. +ಸಿಮೋನನಿಗೆ ಊರಿನಲ್ಲಿ ಹೆಚ್ಚು ಗೌರವವಿತ್ತು. ಕೇರಿಯ ಜನ ಅವನ ಮಾತಿಗೆ ಬೆಲೆಕೊಡುತ್ತಿದ್ದರು. ಅವನ ಬಗ್ಗೆ ಗೌರವವಿರಿಸಿಕೊಂಡಿದ್ದರು. ಬಹಳ ವರ್ಷಗಳಿಂದ ಆತ ಶಿವಸಾಗರದಲ್ಲಿ ಇದ್ದುದರಿಂದ ಅವನಿಗೆ ಅಲ್ಲಿಯ ಎಲ್ಲ ಕ್ರೀಸ್ತುವರ ಪರಿಚಯವೂ ಇತ್ತು. ಇಗರ್ಜಿ ದೇವರು, ಧರ್ಮ, ಪಾದರಿಗಳ ಬಗ್ಗೆಯೂ ಅಪಾರವಾದ ಮಮತೆ, ಭಕ್ತಿ ಇರಿಸಿಕೊಂಡಿದ್ದ ಆತ. ಊರ ಕ್ರೀಸುವರು ಅವನನ್ನು ಆಗಲೇ ಹಿರಿಯನೆಂದು ಒಪ್ಪಿಕೊಂಡಿದ್ದರು. ಅವನನ್ನೇ ಗುರ್ಕಾರ ಎಂದು ಕರೆಯಲು ಪಾದರಿ ಬಯಸಿದರು. +“ಇಲ್ಲಿ ಕೊಪೆಲ ಆಗಲಿಕ್ಕೆ ನಿಮ್ಮ ಪ್ರಯತ್ನ ಕಾರಣ. ಮುಂದೆ ಕೂಡ ನೀವೇ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ದೇವರ, ಇಗರ್ಜಿಯ ಸೇವೆ ಮಾಡಬೇಕು.”ಎಂದು ಪಾದರಿ ನುಡಿದಾಗ ಸಿಮೋನ ಮರು ಮಾತನಾಡದೆ ಒಪ್ಪಿಕೊಂಡ. ಪಾದರಿ ಗೋನಸಾಲ್ವಿಸ್ ಸುಳ್ಳನ್ನೇನು ಹೇಳಲಿಲ್ಲ ಅಂದುಕೊಂಡ ಆತ. ಈ ಊರಿಗೆ ದೊಡ್ಡ ಪ್ರಮಾಣದಲ್ಲಿ ಕ್ರೀಸ್ತುವರು ಬರಲು ಇಲ್ಲಿ ಕೊಪೆಲ ಆಗಲು, ಪಾದರಿ ಬರಲು ಕೊಪೆಲಗೊಂದು ನಿವೇಶನ ಸಿಗಲು ತಾನು ಕಾರಣ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮುಂದು ಕೂಡ ತನ್ನಿಂದ ಆಗಬೇಕಾದ್ದು ಬಹಳವಿದೆ. ಪಾದರಿಗಳು ತನ್ನನ್ನು ಗುರ್ಕಾರ್ ಪದವಿಗೆ ಆಯ್ಕೆ ಮಾಡಿ ಒಳಿತನ್ನೇ ಮಾಡಿದ್ದಾರೆ ಎಂಬುದು ಅವನ ಅಭಿಪ್ರಾಯವಾಗಿತ್ತು. +ಗುರ್ಕಾರ ನಂತರ ಮಿರೋಣನ ನೇಮಕವಾಗಬೇಕಿದೆ ಎಂದರವರು. ಸಾಮಾನ್ಯವಾಗಿ ಈ ಸ್ಥಾನಕ್ಕೆ ಜನ ತಾವಾಗಿ ಬರುತ್ತಾರೆ. ಇಗರ್ಜಿಯ ಎಲ್ಲ ಚಟುವಟಿಕೆಗಳಿಗೆ ಅಲ್ಲಿ ಹೇಳುವ ಕೀರ್ತನೆಗಳಿಗೆ ಆರಾಧನೆಯ ಸಂದರ್ಭದ ಎಲ್ಲ ಕ್ರಿಯೆಗಳಿಗೆ ಈ ಮಿರೋಣ್ ಪೂರಕನಾಗಿರುತ್ತಾನೆ. ಯಾವ ಸಂದರ್ಭದಲ್ಲಿ ಯಾವ ಕೀರ್ತನೆ ಹೇಳಬೇಕು. ಪಾದರಿಯ ಯಾವ ಮಾತಿಗೆ ಏನು ಉತ್ತರ ಹೇಳಬೇಕು. ಯಾವಾಗ ಮೊಣಕಾಲೂರಬೇಕು. ಯಾವಾಗ ಎದ್ದು ನಿಲ್ಲಬೇಕು ಎಂಬಿತ್ಯಾದಿಗಳ ಸೂಚನೆಯನ್ನು ಈತ ನೀಡುತ್ತಾನೆ. ಮಿರೋಣ್ ವಿದ್ಯಾವಂತನಾಗಿರಬೇಕು. ಇಗರ್ಜಿಯಲ್ಲಿ ಹೇಳುವ ಕೀರ್ತನೆಗಳ ಪರಿಚಯ ಅವನಿಗಿರಬೇಕು. ಜಪ, ಮಂತ್ರ, ಪ್ರಾರ್ಥನೆ ಹೇಳಿ ಕೊಡಬೇಕು. ಇಗರ್ಜಿಗೆ ಬರುವ ಅಷ್ಟೂ ಜನರನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವ ಜಾಣ್ಮೆ ಅವನಿಗಿರಬೇಕು. ಇಂತಹ ಜನ ಯಾರಿದ್ದಾರೆ ಎಂದು ಪಾದರಿ ಸಿಮೋನನನ್ನು ಕೇಳಿದರು. ಬಹಳ ಊರುಗಳಲ್ಲಿ ಈ ಎಲ್ಲ ವಿಷಯಗಳಲ್ಲಿ ಅರಿವು ಇರುವಾತ ತಾನಾಗಿ ಮಿರೋಣ ಆಗುತ್ತಾನೆ. ಜನ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಇಲ್ಲಿ ಇದೇ ತಾನೆ ಊರಿನ ಕ್ರೈಸ್ತ ಸಮುದಾಯ ಚಿಗುರಿಕೊಳ್ಳುತ್ತಿದೆ. ಪಾದರಿಗಳು ಊರಿಗೆ ಹೊಸದಾಗಿ ಬಂದಿದ್ದಾರೆ. ಎಲ್ಲವೂ ಈಗ ಆಗಬೇಕಾಗಿದೆ. ಅಂದರೆ ಮಿರೋಣ್ ಯಾರು? +“ಅಂತಹಾ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಪದ್ರಾಬ“ಎಂದ ಸಿಮೋನ ಮಾತನ್ನು ಅಲ್ಲಿಗೆ ನಿಲ್ಲಿಸದೆ ಆತ ಮುಂದುವರೆಸಿದ.- +“ಆದರೆ ನಿಮ್ಮ ಕುಜ್ನೇರ ಬೋನ ಈ ಕೆಲಸ ಮಾಡಬಹುದು “ಎಂದ ಸಿಮೋನ. +ಪಾದರಿ ಗೋನಸಾಲ್ವಿಸರಿಗೆ ಸಿಮೋನನ ಮಾತು ಸೂಕ್ತವೆನಿಸಿತು. ಈ ಹಿಂದೆ ಗೋವಾ, ಕಾರವಾರ, ಹೊನ್ನಾವರಗಳ ಇಗರ್ಜಿಯಲ್ಲಿ ಪಿಟೀಲು ಇಲ್ಲವೇ ಪಿಯಾನೋ ಬಾರಿಸುವವರೇ ಕೀರ್ತನೆಗಳನ್ನು ಹಾಡುವ, ಜಪ ಹೇಳಿಕೊಡುವ ಕೆಲಸ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಬೋನ ಈ ಕೆಲಸಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಿರಲಿಲ್ಲ. +ಆದರೆ ಆತ ಇಲ್ಲಿಗೆ ಬಂದ ನಂತರ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದ್ದರಿಂದ ಗೋನಸಾಲ್ವಿಸ್ ಅವನಿಗೆ ಕೀರ್ತನೆ ಹಾಡುವ ಮಂತ್ರಗಳನ್ನು ಪುನರುಚ್ಚರಿಸುವ ಕೆಲಸ ಮಾಡಲು ತಿಳಿಸಿದ್ದರು. ಆತ ಶೃದ್ಧೆ ಭಕ್ತಿಯಿಂದ ಈ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದ ಕೂಡ. ಆದರೆ ಅವನ ಕೆಲಸ ಬೇರೆಯಾಗಿತ್ತು. ಕುಜ್ನೇರನನ್ನು ಎಲ್ಲಿಯೂ ಯಾರೂ ಮಿರೋಣ ಎಂದು ಕರೆಯುತ್ತಿರಲಿಲ್ಲ. ಈಗ ಕರೆಯಬೇಕೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. +ಮತ್ತೋರ್ವ ಮಿರೋಣ ಎಲ್ಲ ತಿಳಿದವ ಬರುವ ತನಕ ಬೋನಾ ಆ ಕೆಲಸ ಮಾಡಲಿ ಎಂದವರು ವಿಚಾರ ಮಾಡಿದರು. +ಸಿಮೋನ ಬೋನನ ಹೆಸರು ಹೇಳಿದಾಗ- +“ಆಗಲಿ ಎಷ್ಟು ದಿನ ಸಾಧ್ಯವೋ ಅಷ್ಟುದಿನ ಅವನು ಕೆಲಸ ಮಾಡಲಿ“ಎಂದರು. +ಗೋವಾದಲ್ಲಿ ಲಾವೋದ ಎಂಬ ಮತ್ತೊಂದು ಹುದ್ದೆಯಿತ್ತು. ಹಣಕಾಸಿನ ಜವಾಬ್ದಾರಿ ಹೊತ್ತುಕೊಳ್ಳುವವನೂ ಓರ್ವ ಇದ್ದ. ಈ ಹುದ್ದೆಗಳು ಇಲ್ಲಿ ಬೇಡ ಅಂದು ಕೊಂಡರು ಪಾದರಿ. ಆದರೂ ಶಿವಸಾಗರದ ಕ್ರೀಸ್ತುವರ ನಡುವೆ ಸಿಮೋನನ ನಂತರ ಬಲಾಢ್ಯನಾಗಿದ್ದ ಪಾಸ್ಕೋಲ ಮೇಸ್ತ್ರಿಗೆ ಏನಾದರೊಂದು ಪದವಿಕೊಡಬೇಕಿತ್ತು. +“ಪಾಸ್ಕೋಲ ಮೇಸ್ತ್ರಿಯನ್ನ ಈ ಬಾರಿ ಫ಼ಿರ್ಜಂತ ಎಂದು ನೇಮಿಸೋಣ“ಎಂದರು ಗೋನಸಾಲ್ವಿಸ್. +ಇನ್ನು ಮುಂದೆ ವರ್ಷಕ್ಕೊಮ್ಮೆ ಇಗರ್ಜಿ ಹಬ್ಬವನ್ನು ಆಚರಿಸಬೇಕು. ಈ ಹಬ್ಬ ಈ ಫ಼ಿರ್ಜಂತನ ಅಧ್ಯಕ್ಷತೆಯಲ್ಲಿ ನಡೆಯತಕ್ಕದ್ದು. ಮೆರವಣಿಗೆಯಲ್ಲಿ ಅವನನ್ನು ಕರೆತಂದು ಅವನ ಸಮ್ಮುಖದಲ್ಲಿ ಪೂಜೆ ಮತ್ತೊಂದು ನಡೆಯುತ್ತದೆ. ವರ್ಷವೆಲ್ಲ ಅವನಿಗೆ ಗೌರವ ಲಭ್ಯವಾಗುತ್ತದೆ. ಬೇಕೆಂದರೆ ಮುಂದಿನ ವರ್ಷಕ್ಕೆ ಪಿರ್ಜಂತನನ್ನು ಬದಲಾಯಿಸಬಹುದು. ಬೇಡವೆಂದರೆ ಒಬ್ಬನೇ ಮುಂದುವರಿಯಬಹುದು ಎಂದು ಪಾದರಿ ವಿವರಣೆ ನೀಡಿದರು. +ಸಿಮೋನ ಒಂದು ರೀತಿಯಲ್ಲಿ ಗೊಂದಲಕ್ಕೆ ಬಿದ್ದ. ಗುರ್ಕಾರ ದೊಡ್ಡವನೋ ಫ಼ಿರ್ಜಂತ ದೊಡ್ಡವನೋ ತಟ್ಟನೆ ತೀರ್ಮಾನಿಸಲು ಆಗಲಿಲ್ಲ. ತನ್ನ ಊರಿನಲ್ಲಿ ಈ ಎಲ್ಲ ಪದವಿ ಗೌರವಗಳು ಇದ್ದರೂ ಅವುಗಳ ಸ್ಥಾನಮಾನದ ಬಗ್ಗೆ ಅವನಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಇವನು ಅಲ್ಲಿ ಇದ್ದುದೆ ಕಡಿಮೆಯಾದರೆ, ಇವುಗಳ ಬಗ್ಗೆ ಆಸಕ್ತಿಯೂ ಅವನಿಗೆ ಇರಲಿಲ್ಲ. ಯಾರೋ ಗುರ್ಕಾರ್ ಆಗಿ ಯಾರೋ ಫ಼ಿರ್ಜಂತ್ ಆಗಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿದ್ದರು. ಈಗ ಈ ಪದವಿ, ಗೌರವ ತನಗೇನೆ ಲಭ್ಯವಾದಾಗ ಆತ ಯೋಚಿಸಬೇಕಾಯಿತು. ಮಾತಿನ ನಡುವೆಯೇ ಫ಼ಿರ್ಜಂತಿಗಿಂತ ಗುರ್ಕಾರನ ಹುದ್ದೆಗೆ ಗೌರವ ಹೆಚ್ಚು ಎಂಬುದನ್ನು ಆತ ಕಂಡುಕೊಂಡ. +ಕೊನೆಯದಾಗಿ +“ಚಾಮಾದೋರ್ ಯಾರು?“ಎಂದು ಪಾದರಿ ಸಿಮೋನನ ಮುಖ ನೋಡಿದರು. +ಈತ ತಳವಾರ ಇದ್ದ ಹಾಗೆ. ಇಗರ್ಜಿಗೆ ಸಂಬಂಧಪಟ್ಟ ಸುದ್ದಿಗಳನ್ನು ಜನರಿಗೆ ತಿಳಿಸುವಾತ: ಮರಣದ ಸುದ್ದಿ, ಎಷ್ಟು ಹೊತ್ತಿಗೆ ಶವವನ್ನು ಮಣ್ಣು ಮಾಡಲಾಗುತ್ತದೆ, ಎಂಬ ಸುದ್ದಿ, ಮದುವೆಯ ಕರೆ ನೀಡುವುದು. ಜೂಂತ ಇದ್ದಾಗ ಜನರನ್ನು ಅದಕ್ಕೆ ಕರೆತರುವುದು ಇವನ ಕೆಲಸ. ಈತ ಚೂಟಿಯಾಗಿರಬೇಕು, ವಿಧೇಯನಾಗಿರಬೇಕು. ನಮ್ರನಾಗಿರಬೇಕು. ಹೀಗಿರುವವರು ಯಾರಿದ್ದಾರೆ? +ಈತ ಸೇವಕನಾಗಿರುವುದರಿಂದ ಶ್ರೀಮಂತನೂ ಆಗಿರಬಾರದು. ಇಂತಹ ಕೆಲಸ ಮಾಡಲು ಹಿಂಜರಿಯುವವ, ನಾಚಿಕೊಳ್ಳುವವ ಆಗಿರಬಾರದು. ಈ ಕೆಲಸ ಮಾಡಿದ್ದಕ್ಕೆ ಸಂಬಂಧಪಟ್ಟವರು ಹಣ ಕೊಡುತ್ತಾರೆ. ಇಗರ್ಜಿಯಿಂದಲೂ ಹಣ ಸಂದಾಯವಾಗುತ್ತದೆ. ಆದರೆ ಕೆಲಸಮಾಡುವವರು ಬೇಕಲ್ಲ. +“ಬಾವಿ ಕಟ್ಟೆ ಇಂತ್ರು ಆಗಬಹುದೇನೋ“ಎಂದ ಸಿಮೋನ. +ಕೊಪೆಲನ ಒಂದು ಪಾರ್ಶ್ವದ ಸಾಲು ಮನೆಗಳಲ್ಲಿ ಮೊದಲನೆಯ ಮನೆ ಸಿಮೋನನದಾದರೆ ಇನ್ನೊಂದು ಪಾರ್ಶ್ವದ ಮೊದಲ ಮನೆ ಇಂತ್ರುವಿನದು. ಈ ಇಂತ್ರು ಶಿವಸಾಗರಕ್ಕೆ ಬರಲು ಕೂಡ ಸಿಮೋನ ಕಾರಣ. ಇಂತ್ರು ಒಳ್ಳೆಯ ಕೆಲಸಗಾರ. ಸ್ನೇಹ ಜೀವಿ. ಆದರೆ ತುಂಬಾ ಭೋಳೆ ಸ್ವಭಾವದವ. ಇವನ ಅಣ್ಣ ಇವನ ಪಾಲಿನ ಆಸ್ತಿಯನ್ನೆಲ್ಲ ತನ್ನದನ್ನಾಗಿ ಮಾಡಿಕೊಂಡು ಇವನಿಗೆ ಏನೂ ಇಲ್ಲ ಎಂದು ಮಾಡಿದಾಗ ಈತ ಸಿಮೋನನ ಜತೆ ಘಟ್ಟ ಹತ್ತಿದ. ಹೀಗೆ ಬಂದವ ಮತ್ತೆ ಊರಿಗೆ ಹೋಗಲಿಲ್ಲ. +“ಊರಿಗೆ ಬರತಿಯೇನೋ ಇಂತ್ರು “ಎಂದು ಕೇಳಿದರೆ- +“..ಇಲ್ಲ ಯಾಕೆ ಬರಲಿ?“ಎಂದು ಕೇಳುತ್ತಿದ್ದ. +ಸಿಮೋನ ಒಂದು ದಿನ ಕೂರಿಸಿಕೊಂಡು +“ಇಂತ್ರು ನಿನ್ನ ಅಣ್ಣ ನಿನಗೆ ಮೋಸ ಮಾಡಿದ. ಅವನ ಮೇಲೆ ಒಂದು ಖಟ್ಲೆ ಹಾಕು..ಕೋರ್ಟಿಗೆ ಎಳಿ“ಎಂದರೂ ಇಂತ್ರ ತಣ್ಣಗೆ +“ದೇವರಿದಾನೆ ಬಿಡಿ ಸಿಮೋನ ಮಾಮಾ, ಕೋರ್ಟು ಖಟ್ಲೆಯಾಕೆ?“ಎಂದು ಮರು ಪ್ರಶ್ನೆ ಮಾಡಿದ್ದ. +ಇಂತ್ರು ಕೆಲಸ ಮಾಡುವುದರಲ್ಲಿ ಪ್ರಾಮಾಣಿಕ. ಇದು ಮಾಡು ಅಂದರೆ ಅದನ್ನು ಮಾಡುತ್ತಾನೆ. ಕೆಲಸ ನಡೆಯುವಲ್ಲಿ ಕಲ್ಲು ಕಟ್ಟುತ್ತಾನೆ. ಕಲ್ಲು ಹೋರುತ್ತಾನೆ. ಮಣ್ಣು ಕಲಿಸುತ್ತಾನೆ. ಮಣ್ಣು ತಂದುಕೊಡುತ್ತಾನೆ. ನೀರು ಸೇದುತ್ತಾನೆ. ಗಾರೆ ಅರೆಯಲು ಎತ್ತು ಹೂಡಿದರೆ ಎತ್ತುಗಳನ್ನು ಹೊಡೆಯುತ್ತಾನೆ. ಕೊನೆಗೆ ಹೊಸದಾಗಿ ಮಾಡಿದ ಸಿಮಿತ್ರಿಯಲ್ಲಿ ಯಾರನ್ನಾದರೂ ಹುಗಿಯಬೇಕೆಂದರೆ ಹೊಂಡ ತೋಡಲು ಓಡುತ್ತಾನೆ. ಸತ್ತವರ ಶವ ಸಂಸ್ಕಾರವಾಗುವ ತನಕ ಇದ್ದು ಎಲ್ಲ ರೀತಿಯಲ್ಲಿ ನೆರವಾಗುತ್ತಾನೆ. +“ಆಯ್ತು..“ಎಂದರು ಪಾದರಿ ಗೋನಸಾಲ್ವಿಸ್. +* +* +* +ಮುಂದಿನ ಭಾನುವಾರವೇ ಕೊಪೆಲನಲ್ಲಿ ಹೊಸ ಪ್ರಕಟಣೆ ಕೂಡ ಆಯಿತು. ಇನ್ನು ಮುಂದೆ ಕ್ರೈಸ್ತ ಸಮುದಾಯದ ಏಕತೆ, ಅಭಿವೃದ್ದಿಗಾಗಿ ಕೆಲವರನ್ನು ಆಯ್ಕೆ ಮಾಡಲಾಗಿದೆ. ಸಮಸ್ತ ಜನ ಅವರೊಂದಿಗೆ ಸಹಕರಿಸಬೇಕು ಎಂದು ಪಾದರಿ ವಿನಂತಿ ಮಾಡಿಕೊಂಡರು. ಗುರ್ಕಾರ, ಫ಼ಿರ್ಜಂತ, ಚಮಾದೋರ, ಮಿರೋಣ ಮುಂತಾದ ಹೆಸರು ಹುದ್ದೆಗಳು ಜನರಿಗೆ ಪರಿಚಿತವಾಗಿದ್ದವು. ಮುರುಡೇಶ್ವರ, ಹೊನ್ನಾವರ, ಅಂಕೋಲ ಮತ್ತಿತರ ಊರುಗಳಲ್ಲಿ ಇವರೆಲ್ಲ ಇದ್ದರು. ಇವರ ಕಾರ್ಯಕ್ಷೇತ್ರಗಳ ಪರಿಚಯವೂ ಜನರಿಗಿತ್ತು.ಆದರೆ ಇಲ್ಲಿ ಇವರಾರೂ ಇರಲಿಲ್ಲ. ಈವರೆಗೆ ಶಿವಸಾಗರದ ಕ್ರೈಸ್ತ ಸಮುದಾಯ ನಿಜಕ್ಕೂ ಯಾರ ಗಣನೆಗೂ ಬಂದಿರಲಿಲ್ಲ. ನಾವೆಲ್ಲ ಒಂದು ಎಂಬ ಭಾವನೆಯೂ ಜನರಲ್ಲಿ ಮೂಡಿರಲಿಲ್ಲ. ಘಟ್ಟದ ಕೆಳಗಿನಿಂದ ಬಂದು ನಾಲ್ಕು ದಿನ ಇದ್ದು ನಾಲ್ಕು ಕಾಸು ಸಂಪಾದಿಸಿಕೊಂಡು ಹೋಗುವುದು ಎಂಬ ಲೆಕ್ಕದಲ್ಲಿಯೇ ಜನ ಇದ್ದರು. ನಾನು ಭಟ್ಕಳದವ, ನಾನು ಶಿರಾಲಿಯವ, ನಾನು ಅಂಕೋಲದವ ಎಂದು ಬೇರೆ ಊರುಗಳ ಹೆಸರನ್ನು ಹೇಳುತ್ತಿದ್ದರಲ್ಲದೆ ನಾವು ಶಿವಸಾಗರದವರು ಎಂಬ ಮಾತು ಬಾಯಲ್ಲಿ ಬರುತ್ತಿರಲಿಲ್ಲ. ಇಲ್ಲಿ ಬಂದು ಮನೆ ಮಾಡಿದ ನಂತರವೂ ಬೆಕ್ಕಿನ ಬಿಡಾರ ಬೇರೆ ಅನ್ನುವ ಹಾಗೆ ಎಲ್ಲ ಇದ್ದರು. ಆದರೆ ಈಗ ಈ ಅಭಿಪ್ರಾಯ ಬದಲಾಯಿತು. +ಸಿಮೋನನನ್ನು ಗುರ್ಕಾರ ಎಂದು ಎಲ್ಲರೂ ಒಪ್ಪಿಕೊಂಡರು. +“ಊರಿನ ಹಿರಿಯ…ಅವರಲ್ಲದೆ ಬೇರೆ ಯಾರು ಆಗಲಿಕ್ಕೆ ಸಾಧ್ಯ?“ಎಂದು ತಲೆದೂಗಿದರು. +ಬೋನ ಈಗ ಮಿರೋಣ ಎಂದಾಗಲೂ ಯಾರೂ ತಕರಾರು ಮಾಡಲಿಲ್ಲ. ಈಗಾಗಲೇ ಅವನು ಇಲ್ಲಿ ’ಲಾನ ಪದ್ರಬಾ’(ಸಣ್ಣ ಪಾದರಿ) ಎಂಬ ಹೆಸರು ಪಡೆದಿದ್ದ. ಚಮಾದೋರನ ಕೆಲಸವನ್ನು ಇಂತ್ರು ಮಾಡುತ್ತಾನೆ ಎಂದಾಗ. +“ಹಂ…ಸರಿಯಾಗಿ ಹುಡುಕಿದಾರೆ ಇವನನ್ನು“ಎಂದರು. +ಆದರೆ ಪಾಸ್ಕೋಲ ಮೇಸ್ತ್ರಿ ಫ಼ಿರ್ಜಂತ ಎಂದಾಗ ಕೆಲವರ ಮುಖದ ಮೇಲೆ ಗಂಟುಗಳು ಬಿದ್ದವು. ಹಣೆಯಲ್ಲಿ ಗೆರೆಗಳು ಮೂಡಿದವು. +“ಯಾಕೆ ಕೈತಾನ ಇದಾನೆ, ಬಾಲ್ತಿದಾರ ಇದಾನೆ..ಇನಾಸ ಇದಾನೆ..“ಎಂದು ಅಪಸ್ವರವೆತ್ತಿದರು. +“ಒಂದು ವರ್ಷ ಅಲ್ವ..ಈ ಬಾರಿ ಹಬ್ಬ ಆದರೆ..ಬೇರೆ ಫ಼ಿರ್ಜಂತ..ಇದೇನು ಶಾಶ್ವತ ಅಲ್ಲ ಬಿಡಿ..“ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡರು. +ಆದರೆ ಸಿಮೋನನನ್ನು ಗುರ್ಕಾರನನ್ನಾಗಿ ಮಾಡಿದ್ದು ಪಾಸ್ಕೋಲನಿಗೆ ಹಿಡಿಸಲಿಲ್ಲ. +“ಅವನಿಗೆ ಅದೇನು ಗೊತ್ತಿದೆ ಅಂತ ಈ ಪದವಿ?..ಅವನು ಇಗರ್ಜಿಗೆ ಏನು ಮಾಡಿದನಂತೆ..” +ಎಂದೆಲ್ಲ ಆತ ಮನೆ ಜಗಲಿಯ ಮೇಲೆ ನಿಂತು ಗೊಣಗಿದ. ಅವನ ಹೆಂಡತಿ ರೀತಾ- +“ಹೋಗಲಿ ಬಿಡಿ..ಪಾದರಿಗಳ ಮಾತಿಗೆ ಹೀಗೆಲ್ಲ ಅಡ್ಡ ಹೇಳಬಾರದು.ಊರೇ ಒಪ್ಪಿಕೊಂಡಿರುವಾಗ ನಮ್ಮದೇನು?“ಎಂದಳು. +ಪಾಸ್ಕೋಲ ಸುಮ್ಮನಾದ. ಹೇಗೂ ಅವನಿಗೂ ಒಂದು ಗೌರವದ ಸ್ಥಾನ ದೊರಕಿತ್ತಲ್ಲ. +* +* +* +ಜಂಬಿಟ್ಟಿಗೆ ಕಲ್ಲಿನ ಗೋಡೆಗಳು, ಕಂಬ, ಕಮಾನುಗಳು ಏಳುತ್ತಿರಲು ಈ ಮಳೆಗಾಲ ಬರುವಷ್ಟರಲ್ಲಿ ತೊಲೆ ಏರಿಸಿ, ಪಟ್ಟಿ ಹೊಡೆದು ಹಂಚು ಹೊದೆಸಿ ಬಿಡಬೇಕೆಂದು ಸುತಾರಿಗಳು ಕೆಲಸ ಮಾಡತೊಡಗಿದರು. ಗೋನಸಾಲ್ವಿಸರ ಪ್ರಯತ್ನದಿಂದ ಹಣ ಯಥೇಚ್ಚವಾಗಿ ಹರಿದು ಬಂದಿತು. ಕಲ್ಲು, ಮರ, ಸುಣ್ಣ, ಮರಳು ಎಂದು ಬೇಕಾದ ಸಾಮಾನು ಬಂದು ರಾಶಿ ಬಿದ್ದಿತು. ಕೂಲಿಯವರು ಮೈಬಗ್ಗಿಸಿ ದುಡಿದರು. ಪಾದರಿ ನಿಲುವಂಗಿ ಮೇಲೆತ್ತಿ ಕಟ್ಟಿಕೊಂಡು ಅಲ್ಲಿಯೇ ನಿಂತರು. ಸಿಮೋನ ಬೇರೆ ಕೆಲಸಗಳನ್ನು ನೋಡಿಕೊಳ್ಳಲು ತನ್ನ ಮಗ ವಿಕ್ಟರಗೆ ಹೇಳಿ ಇಗರ್ಜಿಯ ಬಳಿಯೇ ಉಳಿದುಬಿಟ್ಟ. +ಈ ನಡುವೆ ಎರಡು ಘಟನೆಗಳು ಅಲ್ಲಿ ನಡೆದವು. ಒಂದು ಸುತಾರಿ ಇನಾಸನ ಮನೆಯ ಮುಂದೆ ದೇವರ ಶಿಲುಬೆ ನಿಲ್ಲಿಸಿದ್ದು. ಎರಡನೆಯದು ಸಾಂತಾ ಮೊರಿ ಮಗಳನ್ನು ಜಾತಿಕಟ್ ಮಾಡಿದ್ದು. +ಇಗರ್ಜಿ ಜಾಗದಲ್ಲಿ ಬೇಲಿ ಹಾಕಿ ಕಂದಕ ತೋಡಿ ಜನ ಒಳಗೆ ಬಾರದಂತೆ ಮಾಡಿದ್ದು ಫಲಕಾರಿಯಾಯಿತು. ಕ್ರೀಸ್ತುವರು ಔಡಲ ಮರದ ಚೌಡಿಯನ್ನು ನಿಧಾನವಾಗಿ ಮರೆತರು. ಚೌಡಿ ಬನಕ್ಕೆ ಹೋಗಬೇಕೆಂದರೆ ಕೊಪೆಲ ಮುಂಬದಿಯಿಂದಲೇ ಹೋಗಬೇಕಾದ್ದು ಅನಿವಾರ್ಯವಾಗಿ ಜನ ಈ ಧೈರ್ಯ ಮಾಡಲಿಲ್ಲ. ಪ್ರತಿ ಭಾನುವಾರ ಪಾದರಿ ಕೊಪೆಲನಲ್ಲಿ ಏಕ ಮಾತ್ರ ನಿಜ ದೇವರನ್ನು ನಂಬಿರಿ ಎಂದು ದೇವರ ಹತ್ತು ಕಟ್ಟಳೆಗಳಲ್ಲಿ ಮೊದಲನೆಯದರ ಬಗ್ಗೆ ಹೇಳಿ ಹೇಳಿ ಜನ ಬೇರೊಂದು ದೇವರನ್ನು ಮರೆತರು. +ಬೇಲಿ ಹಾಕುವಾಗ ಪಾದರಿಗಳಿಗೆ ಒಂದು ಭಯವಿತ್ತು. ಚೌಡಿಯನ್ನು ನಂಬುವ , ಪೂಜಿಸುವ ಇತರೇ ಜನ ಈ ಬೇಲಿಗೆ ತಕರಾರು ಮಾಡಬಹುದೇ? ಏಕೆಂದರೆ ಈ ದೇವರನ್ನು ಸ್ಥಾಪಿಸಿಕೊಂಡದ್ದೇ ಆ ಜನ. ಅವರ ನಂಬಿಕೆ ಆರಾಧನೆಗೆ ತೊಂದರೆಯಾಗಿ ಅವರು ಇವರ ಕ್ರಮದ ವಿರುದ್ಧ ಪ್ರತಿಭಟಿಸಿದರೆ? ಆದರೆ ಅಲ್ಲಿ ಬೇಲಿ ಎದ್ದು ನಿಂತ ನಂತರ ಯಾರೂ ತೊಂದರೆ ಮಾಡಲಿಲ್ಲ. ಜಿಲ್ಲೆಯಿಂದ ಮೆಗ್ಗಾನ ಸಾಹೇಬರು ಸ್ವತಃ ಇಗರ್ಜಿಗೆ ಬಂದದ್ದು. ಆ ಜಾಗವನ್ನು ಮಂಜೂರು ಮಾಡಿದ್ದು. ಸರಕಾರವೇ ಆಗಿರುವ ಮೆಗ್ಗಾನ ಸಾಹೇಬರು ಇಗರ್ಜಿಯ ಪರ ಇರುವುದು ಈ ಸಾಮಾನ್ಯ ಜನರಿಗೆ ಭೀತಿಯನ್ನುಂಟು ಮಾಡಿತ್ತು. ಆದರೂ ಪಾದರಿ ಗೋನಸಾಲ್ವಿಸರು ಎಂದಿಗೂ ಮರೆಯಲಾರದಂತಹ ಒಂದು ಘಟನೆ ಮಾತ್ರ ನಡೆಯಿತು. +ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಯಾವತ್ತಿನಿಂದಲೂ ಗೋನಸಾಲ್ವಿಸರ ಗಮನ ಸೆಳೆದಿದ್ದಳು. ಕ್ರೀಸ್ತುವರ ಮನೆಗಳಲ್ಲಿ ತಿರುಗಾಡಿಕೊಂಡಿದ್ದ ಈ ಹೆಂಗಸನ್ನು ಕೂಡ ತಮ್ಮವಳೇ ಅಂದುಕೊಂಡಿದ್ದರು ಪಾದರಿ. ಒಂದು ಬಾರಿ ಕುತೂಹಲ ತಡೆಯಲಾರದೆ- +“ಸಿಮೋನ….ಈಕೆಗೆ ಯಾರ ಮನೆಯಾಯಿತು?“ಎಂದು ಕೆಳಿದ್ದರು. +ಈಕೆ ಬಾಲ್ತಿದಾರನ ಇಲ್ಲವೇ ಕೈತಾನನ ತಾಯಿ ಇರಬೇಕು ಎಂಬುದು ಅವರ ವಾದ. ಅವರ ಪ್ರಶ್ನೆಗೆ ಸಿಮೋನ- +“ಇವಳು ನಮ್ಮ ಗಾಡಿ ಮಂಜನ ತಾಯಿ ರುದ್ರಮ್ಮ..“ಎಂದಾಗ ಅವರು- +“ಹೌದಾ..“ಎಂದು ಸುಮ್ಮನಾಗಿದ್ದರು. +ಆದರೂ ಅವಳ ವರ್ತನೆ, ಮನೋಭಾವ ಅವರನ್ನು ಆಕರ್ಷಿಸಿತ್ತು. ಕೇರಿಯಲ್ಲಿ ಯಾರಿಗೆ ಏನೇ ಆಗಲಿ ಅದು ತನಗೇ ಆದಂತೆ ಆತಂಕಪಡುತ್ತಿದ್ದಳು ಈಕೆ. +ಇಗರ್ಜಿಯ ಸುತ್ತ ಬೇಲಿ ಎದ್ದು ನಿಂತು ಎಂಟು ದಿನಗಳಾಗಿದ್ದವು. ಪಾದರಿ ಮುಂದಿನ ದಣಪೆಗೆ ಕಂಬ ಹುಗಿದು ದನಕರು ಒಳಗೆ ಬಾರದಂತೆ ವ್ಯವಸ್ಥೆ ಮಾಡುತ್ತಿದ್ದರು. ಕೇರಿಯ ಒಂದಿಬ್ಬರು ಹುಡುಗರು ಜತೆಗಿದ್ದರು. +ಆಗ ರುದ್ರಮ್ಮ ಕೊಪೆಲನ ಎದುರು ಕಾಣಿಸಿಕೊಂಡಳು. +ಎಂದಿನಂತೆ ಗೋನಸಾಲ್ವಿಸರತ್ತ ತಿರುಗಿ- +“ನಮಸ್ಕಾರ ಬುದ್ಧಿ“ಎಂದವಳು ಕೈ ಮುಗಿದಳು. +ಎಲೆ ಅಡಿಕೆ ತಿಂದು ಕಪ್ಪು ವರ್ಣಕ್ಕೆ ತಿರಗಿದ ಅವಳ ಹಲ್ಲುಗಳನ್ನೇ ನೋಡುತ್ತ ಪಾದರಿ ಗೋನಸಾಲ್ವಿಸ್. +“ಹಂ…ಹಂ..“ಎಂದು ನಮಸ್ಕಾರಕ್ಕೆ ಪ್ರತಿಯಾಗಿ ಕೈ ಎತ್ತಿದರು. +ಅವರು ರುದ್ರಮ್ಮನ ಕೈಯಲ್ಲಿ ಒಂದು ತೆಂಗಿನಕಾಯಿ ಊದಿನಕಡ್ಡಿ ಇರುವುದನ್ನು ಕಂಡರು. ಒಂದು ಕ್ಷಣ ಅವರಿಗೆ ದಿಗಿಲಾಯಿತು. ಹೀಗೆಂದೇ ಅವರು- +“..ಏನು ಏನು ರುದ್ರಮ್ಮ?” ಎಂದು ಕೇಳಿದರು. +ನಮ್ಮ ಮಂಜನ ಮಗ ರಾತ್ರಿ ಎಲ್ಲ ಕಿರಿಕಿರಿ ಮಾಡತಿದೆ..ನಿದ್ದೆ ಮಾಡಲ್ಲ..ಊಟ ಮಾಡಲ್ಲ..ಏನಾರ ಗಾಳಿಗೀಳಿ ತಾಗೈತೇನೋ..” +ತನ್ನ ಪಾಡಿಗೆ ತಾನೇ ಮಾತನಾಡಿಕೊಳ್ಳುವಂತೆ ನುಡಿಯುತ್ತ ಅವಳು ದಣಪೆ ದಾಟಿದಳು. +ಆಗ ಪಾದರಿ ಗೋನಸ್ವಾಲಿಸರಿಗೆ ಒಂದು ವಿಷಯ ಖಚಿತವಾಗಿ ಹೋಯಿತು. ಈಕೆ ತೆಂಗಿನಕಾಯಿ ಊದಿನಕಡ್ಡಿ ಹಿಡಿದು ಚೌಡಿ ಬನಕ್ಕೇನೆ ಹೋಗುತ್ತಿದ್ದಾಳೆ. ದಣಪೆ ಹಾದು ಕೊಪೆಲ ಮುಂದಿನಿಂದ ಇವಳು ಅಲ್ಲಿಗೆ ಹೋಗಿ ದೇವರಿಗೆ ಊದಿನ ಕಡ್ಡಿ ಹಚ್ಚಿ ತೆಂಗಿನಕಾಯಿ ಒಡೆದು ಕೈ ಮುಗಿದು ಬರುತ್ತಾಳೆ. ಎಂದರೆ ಉಳಿದ ಜನರೂ ಇವಳನ್ನು ಅನುಸರಿಸಿ ಬಿಟ್ಟರೆ! ಬೇಲಿ ಕಟ್ಟಿ ತಾನು ಮುಚ್ಚಿದ ದಾರಿ ಇಲ್ಲಿ ತೆರೆದುಕೊಂಡರೆ? ಅವರು ಗಾಬರಿಗೊಂಡರು. ತಮ್ಮ ಪ್ರಯತ್ನವೆಲ್ಲ ಅಸಫಲವಾಯಿತಲ್ಲ ಎಂದು ಪೇಚಾಡಿಕೊಂಡರು. +ದಣಪೆ ದಾಟಿ ಕೊಪೆಲಿನತ್ತ ಹೊರಟ ಆ ಹೆಂಗಸನ್ನು ತಡೆಯಲು ಕೂಡ ಅವರಿಂದ ಆಗಲಿಲ್ಲ. ಹೇಗೆ ತಡೆಯುವುದು? ಏನೆಂದು ತಡೆಯುವುದು? ಅವರು ದಿಕ್ಕುಗಾಣದೆ ಯೋಚಿಸುತ್ತ ನಿಂತಿರಲು ರುದ್ರಮ್ಮ ಕೊಪೆಲ ಬಾಗಿಲ ಬಳಿ ಒಂದು ಕ್ಷಣ ನಿಂತಳು. ಹೀಗೆ ನಿಂತವಳು ಅದನ್ನು ದಾಟಿ ಮುಂದೆ ನಾಲ್ಕು ಹೆಜ್ಜೆ ಇರಿಸಿದಳು. ಮತ್ತೆ ನಿಂತಳು. +ಪಾದರಿ ಗೋನಸ್ವಾಲಿಸ್ ನೋಡುತ್ತಿರಲು ರುದ್ರಮ್ಮ ಕೊಪೆಲನ ಒಳಗೆ ಕಾಲಿರಿಸಿದಳು. +ಪಾದರಿ ಗೋನಸ್ವಾಲಿಸ್ ಮತ್ತೂ ಗೊಂದಲಕ್ಕೆ ಒಳಗಾದರು. ದಣಪೆಯ ಬಳಿಯಿಂದ ಅವರು ಕೊಪೆಲಿನತ್ತ ಹೆಜ್ಜೆ ಹಾಕಿದರು. +ರುದ್ರಮ್ಮ ದೇವರ ಪೀಠದತ್ತ ತಿರುಗಿ ಕೈ ಮುಗಿದಳು. ಅಲ್ಲಿಯೇ ಉರಿಯುತ್ತಿದ್ದ ಮೇಣದ ಬತ್ತಿಯಿಂದ ಊದಿನ ಕಡ್ಡಿ ಹೊತ್ತಿಸಿದಳು. ಅದನ್ನು ಕೈಯಲ್ಲಿ ಹಿಡಿದು ಮತ್ತೆ ಕೈ ಮುಗಿದಳು. ತೆಂಗಿನಕಾಯನ್ನು ಸಂತ ಜೋಸೆಫ಼ರ ಪ್ರತಿಮೆಯ ಮುಂದೆ ಇಟ್ಟು ಊದಿನ ಕಡ್ಡಿಯನ್ನು ಗೋಡೆಗೆ ಸಿಕ್ಕಿಸಿದಳು. +ಮೊಣಕಾಲೂರಿ ಹಣೆಯನ್ನು ನೆಲಕ್ಕೆ ಹಚ್ಚಿ ಮತ್ತೆ ನಮಸ್ಕರಿಸಿದಳು. +ನಿಂತು ಕೆನ್ನೆ ತಟ್ಟಿಕೊಂಡಳು. +ಅವಳ ತುಟಿಗಳು ಅಲುಗಾಡಿದವು. +ಭಯ ಭಕ್ತಿಯಿಂದ ಕೊಪೆಲನ ಹೊರ ಬಂದಳು. ಪಾದರಿ ಗೋನಸ್ವಾಲಿಸರು ಕೊಪೆಲ ಮುಂದಿನ ಚಪ್ಪರದ ಅಡಿಯಲ್ಲಿ ನಿಂತಿರಲು ಪಾದರಿಗಳತ್ತ ತಿರುಗಿ- +“..ಎಲ್ಲ ದೇವ್ರು ಒಂದೇ ಅಲ್ವಾ..?” ಎಂದು ಹೇಳುತ್ತ ಅವಳು ದಣಪೆಯತ್ತ ನಡೆದಳು. +ಅವಳು ಹಚ್ಚಿದ ಊದಿನಕಡ್ಡಿಯ ಪರಿಮಳ ಕೊಪೆಲನ ಒಳಗಿನಿಂದ ಬಂದು ಚಪ್ಪರದಲ್ಲಿ ನಿಂತ ಪಾದರಿ ಗೋನಸ್ವಾಲಿಸ್ ರನ್ನು ತಲುಪಿತು. +ಅವಳ ಮಾತುಗಳನ್ನೇ ಮೆಲುಕು ಹಾಕುತ್ತ ಬಹಳ ಹೊತ್ತಿನವರೆಗೂ ಪಾದರಿ ಅಲ್ಲಿ ನಿಂತಿದ್ದರು. +ಇಷ್ಟಾದರೂ ಇನಾಸನ ಮನೆಯ ಅಂಗಳದಲ್ಲಿಯ ಕಲ್ಲು ಕುಟಿಗನನ್ನು ಮರೆಯಲು ಅವರಿಂದ ಆಗಲಿಲ್ಲ. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಮೀರಾ ಗಣಪತಿ +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ಅಧ್ಯಾಯ ೬ – ೧ – ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_347.txt b/Kannada Sahitya/article_347.txt new file mode 100644 index 0000000000000000000000000000000000000000..318d8096ec90ad2e2cf1130ad81c214b6ba2f99a --- /dev/null +++ b/Kannada Sahitya/article_347.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ +ಗಂಧಲೇಪನವ್ಯಾತಕೆ! ಈ ದೇಹಕೆ|| +ಮಂದಮಾರುತ ಮೈಗೆ ಬಿಸಿಯಾದವೇ ತಾಯಿ +ಬೆಳದಿಂಗಳೂ ಉರಿವ ಬಿಸಿಲಾಯಿತೇ ನನಗೆ +ಹೂಜಾಜಿ ಸೂಜಿಯ ಹಾಗೆ| ಚುಚ್ಚುತಲಿವೆ|| +ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ +ಉಸಿರಿನ ಬಿಸಿ ಅವಗೆ ತಾಗದೆ ಹುಸಿಹೋಯ್ತೆ +ಚೆಲುವ ಬಾರದಿರೇನು ಫಲವೆ| ಈ ಚೆಲುವಿಗೆ|| +ಕಾಮನ ಬಾಣಾ ಹತ್ತ್ಯಾವ ಬೆನ್ನಾ +ಆತುರ ತೀವ್ರ ಕಾಮಾತುರಾ ತಾಳೆನಾ +ಆರ್ತಳಿಗೆ ಆಶ್ರಯವಿರದೆ|ಒದ್ದಾಡುವೆ|| +ಅನ್ಯಪುರುಷನು ಮಾರ ಅಂಗನೆಯನೆಳೆದಾರೆ +ಕೈಹಿಡಿದ ಸರಿಪುರುಷ ಸುಮ್ಮನಿರತಾರೇನೆ +ಕರುಣೆಯ ತೋರುವರ್‍ಯಾರೇ| ಸಣ್ಣವಳಿಗೆ|| +***** +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […] +೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_348.txt b/Kannada Sahitya/article_348.txt new file mode 100644 index 0000000000000000000000000000000000000000..9355365fa31d21f3bfa4a8e308f15ea9a8aff544 --- /dev/null +++ b/Kannada Sahitya/article_348.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. ‘ಕಲ್ಲು ಮಣ್ಣು ಹಾಕಿ ಗಟ್ಟ್ಯಾಗಿ ತುಳೀರಿ. ಎದ್ದ ಬಂದಾನು.’ ಅಂತ. ಯಾರ ಬಾಯಿಂದಲೂ ಒಂದು ಒಳ್ಳೇ ಮಾತು ಬರಲಿಲ್ಲ. ‘ಶರಣ ಸಾವು ಮರಣದಲ್ಲಿ’ ಅನ್ನಲು ಅವನು ಶರಣನೂ ಅಲ್ಲ. ಸಭೆ ಸೇರಲಿಲ್ಲ. ಭಾಷಣ ನಡೆಯಲಿಲ್ಲ. ಅವನು ಧುರೀಣನೂ ಅಲ್ಲ. ಹುಟ್ಟಿ ಬಂದ. ಬಾಳಿದ. ಸತ್ತುಹೋದ. ನಾಗಪ್ಪ ಮಾವ ಹೇಗಿದ್ದ್ದ? ಏನು ಮಾಡಿದ? ಕುತೂಹಲವಿದೆಯೆ ನಿಮಗೆ? ಬನ್ನಿ ನಮ್ಮ ಜೊತೆ ಅವನ ಹಳ್ಳಿಯ ಮನೆಗೆ ಹೋಗೋಣ. ಒಬ್ಬೊಬ್ಬರಾಗಿ ಮಗ. ಮಗಳು. ಹೆಂಡತಿ ಎಲ್ಲರನ್ನೂ ಮಾತಾಡಿಸೋಣ. +ಬಸವರಾಜ: ನಮ್ಮಪ್ಪಗ. ನಾ ಒಬ್ಬನಽ ಗಂಡು ಮಗಾ. ಅದೂ ‘ಗಂಡು ಹುಟ್ಟಿತಽ ಬಂಗಾರ ಗುಂಡು ಹುಟ್ಟಿತಽ’ ಅನ್ನೂ ಹಾಂಗ ಇಬ್ರು ಹೆಣಮಕ್ಕಳ ಮ್ಯಾಲೆ ಹುಟ್ಟಿದಂವಾ. ಆಮ್ಯಾಲೆ ನಮ್ಮವ್ವ ಹಡೀಲೆ ಇಲ್ಲ. ಅಪ್ಪ ಪ್ರಪಂಚಾ ಸುತ್ತಿದಂವಾ. ಕಾಯಿದೆ ಕಾನೂನು ಗೊತ್ತಿದ್ದಂವಾ ಏನಾರ ಮಾಡಿದ್ದಾನು. ಒಬ್ಬನ ಮಗಾ ಅಂತ ಅಂವೇನ ಒಂದಿನಾನೂ ತೊಡಿ ಮ್ಯಾಲೆ ಕುಂದ್ರಿಸಿಕೊಂಡ ಕಿರೀಟಾ ಹಾಕಲಿಲ್ಲ. ‘ಲೇ. ಮಗನ ಹಲ್‌ಕಟ್ ಸೂಳಿ ಮಗನಽ ಬಾರಲೇ ಇಲ್ಲಿ. ಇನ್ನೊಮ್ಮೆ ಹಿಂಗ ಮಾಡಿದಿ ಅಂದರ ಕಾಲ್ಮರಿಲೆ ಹೊಡೀತೀನಿ ನಿನ್ನ’ ಅಂತ ಎದ್ದರ ಕುಂತರ ಸಿಟ್ಟಿಗೇಳಾಂವಾ. +ನನಗಂತೂ ದುಡದ ದುಡದ ಸಾಕಾಗಿ ವಾರಿಗೀ ಗೆಳೆಯಾರ್‍ನ ನೋಡಿ ಹೊಟ್ಟೀಕಿಚ್ಚಾಗಿ ಮನೀ ಬಿಟ್ಟು ಎಲ್ಲ್ಯರೇ ಓಡಿ ಹೋಗಲ್ಯಾ ಅಂತಿದ್ದೆ. +ಒಂದೆರಡ ಸಾರ ಪ್ಲ್ಯಾನೂ ಹಾಕಿದ್ದೆ. ನಮ್ಮವ್ವ ಅಳೂದು ಕರಿಯೂದು ನೋಡಲಾರದೆ ಸುಮ್ಮಕಾದೆ. ಅವ್ವ ಕಾದು ಮುಚ್ಚಿ ನೂರಾರು ರೂಪಾಯಿ ಕೈಯ್ಯಾಗ ತುತುಕಿ ಹೋಗ ಬೆಳಗಾಂವ್ಯಾಗ ಸಿನೇಮ. ಚಾದಂಗಡಿ ತಿರಗ್ಯಾಡಿ ತಿರಗ್ಯಾಡಿ ಬಾ ಅಂತ ಕಳಸತಿದ್ಲು. ಒಂದಿನಾನು ಆಕಿ ನನಗ ತಿನ್ನಾಕ ಉಣ್ಣಾಕ ಕಡಿಮಿ ಮಾಡಲಿಲ್ಲಾ. ನನ್ನ ಒಬ್ಬನ್ನ ಉಣ್ಣಾಕ ಕುಂದರಿಸಿ ಹಾಲು ಬೆಲ್ಲ ತುಪ್ಪ ಮಸರು ಮಜ್ಜಿಗಿ ಕೈ ಜಲ್ಲ ಬಿಟ್ಟ ಬೀಡತಿದ್ಲು. ಗರಡೀ ಮನೀಗಿ ಹೋಗಿ ಬಾ ಅಂತಿದ್ಲು. ಅದಕ್ಕಽ ನಾನೂ ಅಪ್ಪನಾಂಗ ಧಾಂಡಿಗ್ಯಾ ಆಗಿ ಮಸ್ತಾಗಿ ಬೆಳೆದೆ. ಅಪ್ಪನ ಸಿಟ್ಟಿಗೆ ಹೆದರಿ ನಾ ದುಡಿಯಾಕ ಕಲಿತೆ. ಹೊಲಾ ಕೊಂಡ್ವಿ. ಆಸ್ತಿ ಬೆಳೀತು. ಒಂದು ವ್ಯಾಳೆ ಅಚ್ಚಾ ಮಾಡಿದ್ದರ ನಾನೂ ರಮ್ಯಾ, ಎಂಕ್ಯಾ, ಸಿದ್ಯಾರ ಹಾಂಗ ಗುಟಕಾ ತಿನಕೊಂತ ಸೆರೇದ ಅಂಗಡಿ ಮುಂದ ಬಿದ್ದಿರತಿದ್ದೆ. +ಅಪ್ಪನೂ ಯಾರಿಗೂ ತಿಳೀಲಾರದಂಗ ಕುಡೀತಿದ್ದಾ. ಅದು ಒಂದ ಅಳತ್ಯಾಗ. ಕುಡದರೂ ಯಾರಿಗೂ ಗೋತ್ತ ಆಗತಿದ್ದಿಲ್ಲಾ ಅವ್ವನ್ನ ಬಿಟ್ಟು. ಯಾಕಂದರ ಅಂವಗ ಅವರ ಹೆದರಿಕಿ ಇತ್ತಲ್ಲ. ಯಾರರೆ ತೆಪ್ಪ ಮಾಡಿದರ ಬಾರಿಗೀಲೆ ಝಾಡಿಸಿ ಬಿಡತಿದ್ಲು ಗಂಗವ್ವಾಯಿ. ಅಪ್ಪ ಮೂಬೆರಕಿ. ಆಕಿಗೆ ಗೊತ್ತ ಆಗದಾಂಗ ಕಳವು. ಹಾದರ. ಕುಡತಾ ಎಲ್ಲಾ ಮಾಡತಿದ್ದಾ. ಚೆಂಜಿ ಆದ ಕೂಡಲೆ ಮಕಾ ತೊಳಕೊಂಡ. ಮೂರಬಟ್ಟ ಈಬೂತಿ ಪಟ್ಟಾ ಬಡಕೊಂಡ. ಈರಭದ್ರ ದೇವರ ಮುಂದ ಊದಬತ್ತಿ ಹಚ್ಚಿ ಅವ್ವನ ಕಾಲ ಬೀಳತಿದ್ದಾ. ಆಯಿಗೆ ಖುಷೀನ ಖುಷಿ. ಮನಸ ತುಂಬಿ ಹರಕೀ ಕೊಡತಿದ್ಲು. ಅಪ್ಪಗ ಅವ್ವ ಅಂದರ ದೇವ್ರು. ಆಕೀ ಮಾತು ಹಸೀಗ್ವಾಡ್ಯಾಗಿನ ಹಳ್ಳು. ಬಿದಿಕಿ ಇರೂತನಾ ಆಕೀದ ರಾಜ್ಯ ನಮ್ಮನ್ಯಾಗ. ನಮ್ಮ ಅವ್ವನ್ನೂ ನಾ ಹಾಂಗಽ ಇಟಗೋತೀನಿ ಅಂತಿದ್ದೆ. ಆದರ ನಮ್ಮಪ್ಪನ ಮುಂದ ನಂದೇನೂ ಆಟ ನಡೀತಿದ್ದಿಲ್ಲ. ಗೆಳೆಯರೆಲ್ಲಾ ‘ಹುಲೀ ಹೊಟ್ಟ್ಯಾಗ ಒಂದು ಇಲೀ ಹುಟ್ಟೈತಿ’ ಅಂತ ನಗಚಾಟಕಿ ಮಾಡತಿದ್ರು. ‘ಅಗಸರ ಕತ್ತೀ ಹಾಂಗ ದುಡಿಯೂದ ಒಂದಽ ಗೊತ್ತೈತಿ ನಿನಗ ತಲ್ಯಾಗ ಬಿದ್ಧೀನ ಇಲ್ಲಾ ಮಣ್ಣ ತುಂಬೈತಿ’ ಅಂತ ಪಿರೀತೀಲೆ ಬಯ್ಯತಿದ್ದರು. ಅಪ್ಪ ನನ ಮದುವೀ ಮಾಡತೀನಿ ಅಂತ ಓಡ್ಯಾಡಾಕ ಹತ್ತಿದಾ. ಒಂದಿನಾ ಅವ್ವನ ಕೈ ಹಿಡಕೊಂಡ ಹಿತ್ತಲದಾಗ ಅತ್ತೆ. ‘ಅಪ್ಪ ನಿನ್ನ ಇಷ್ಟ ದ್ವೇಷಾ ಮಾಡತಾನ. ನೀ ಅದೀ ಅಂತ ಬದಿಕೇನಿ. ನನ್ನ ಯಾಕ ಹುಟ್ಟಿಸಿದೆಬೆ’ ಅಂತ ಗೋಳಾಡಿದೆ. +‘ಹುಚ್ಚ ನನ ಮಗನ. ಅವರ ಗುಣಾ ನಿನಗ ಗೊತ್ತಿಲ್ಲ. ನಿನ್ನ ಭಾಳ ಪಿರೀತಿ ಮಾಡತಾರೊ. ಹೊಲದ್ಯಾಗ ಮನ್ಯಾಗ ನನ ಮಗಾ ಇಷ್ಟ ದುಡೀತೈತಿ. ಅದಕ್ಕ ಹೊಟ್ಟಿಗಿ ಏನೂ ಕಡಿಮಿ ಮಾಡಬ್ಯಾಡಾ ಅಂತಾರ. ನಾ ನಿನಗ ಕೊಡೂದು ಅವರ್‍ದಽ ರೊಕ್ಕ ನನ ಹಂತ್ಯಾಕ ಒಂದ ದಮಡೀ ಇಲ್ಲಾ. ಎಲ್ಲಾ ಅವರ ಹೇಳದಾಂಗ ಮಾಡತೀನಿ’ ಅಂದು ನನ್ನ ಬೆನ್ನ ಮ್ಯಾಲೆ ಕೈಯಾಡಿಸಿ ಸಮಾಧಾನ ಹೇಳಿದ್ಲು. ನನಗ ನಂಬಾಕ ಆಗಲಿಲ್ಲ. ಏನ ವಿಚಿತ್ರ ಇದು ಅಂದಕೊಂಡೆ. ಅಂವಾ ಏನ ಮಾಡಿದ್ರೂ ನನ್ನ ಹಿತಕ್ಕ ಮಾಡತಾನ ಅಂದು ಅಂವನ್ನಽ ನಂಬಿದೆ. ಈಗ ಇಂದಾ ಅಪ್ಪನ್ನ ಕಳಕೊಂಡೆ. ನನ್ನ ಕಣ್ಣ ಮುಂದ ಕತ್ತಲಽ ಐತಿ. ಅಯ್ಯೋ ಯಪ್ಪಾಽ, ನಮ್ಮಪ್ಪಾಽ… +ಬಸವರಾಜನ ಅಳು ನಿಲ್ಲುವ ಮೊದಲೆ- +ಗಿರಿಜವ್ವ: ಅಪ್ಪನ ದೊಡ್ಡ ಮಗಳು ನಾನು. ಚೊಚ್ಚಲ ಹೆಣ್ಣ ಹುಟ್ಟಿತಂತ ಅಪ್ಪಗ ಸಿಟ್ಟ ಬಂದಿತ್ತಂತ. ‘ಮನೀ ಹೆಣ್ಣಮಗಳ ಅಂದರ ಲಗಸ್ಮೀ ಇದ್ದಾಂಗ. ಹುಟ್ಟಿದ ಮನೀಗೆ ಕೊಟ್ಟ ಮನೀಗೆ ಹೆಸರ ತರತಾಳ. ಮುಂದಿಂದು ಗಂಡಽ ಆಕ್ಕೈತೇಳ. ಈಗೇನ ಮುದುಕ ಆಗಿ ಹ್ವಾದೇನ’ ಅಂತ ಆಯಿ ಮೂತಿಗೆ ತಿವಿದ ಮ್ಯಾಲೆ ಕೂಸಿನ ನೋಡಾಕ ಬಂದನಂತ. ತಿಂಗಳ ಕೂಸಿನ್ನ ಕೈಯಾಗ ತೊಗೊಂಡು ಸಂಸ್ಕೃತದಾಗ ಮಂತ್ರಾ ಅಂದು ಆಸೀರ್ವಾದಾ ಮಾಡಿ ‘ಬಣ್ಣ ಕಡಿಮಿ ಇದ್ದರೂ ಕಣ್ಣು ಮೂಗಿಲೆ ನಿನ್ನಾಂಗ ಚೆಲುವಿ ಅದಾಳ ನಿನ ಮಗಳು’ ಅಂದನಂತ. ಅವ್ವ ಹಿಗ್ಗಿ ಹಿರೀಕಾಯಾಗಿ ಅವತ್ತ್ನಿಂದ ಕಣ್ಣೀರ ಹಾಕೂದ ಬಿಟ್ಟಳಂತ. +ನನ್ನ ಬೆನ್ನ ಮ್ಯಾಲೆ ತಂಗಿ ಸುಮ್ಮಿ ಹುಟ್ಟಿದಾಗ ಮಾತ್ರ ಬಾಣಂತೀನ ಹಿಡದು ಎಳದು ಹೊಡ್ಯಾಕ ಹೋಗಿದ್ದನಂತ. ಗಂಗವ್ವಾಯಿ ಸೊಸಿ ಸತ್ತಗಿತ್ತಾಳಂತ ಅಪ್ಪನ್ನ ನುಗಿಸಿ ‘ಈ ಸುಂದ್ರಿ ಮುಂದಿಂದು ಗಂಡ ಹಡೀದಿದ್ರ ಇಕೀನ್ನ ಬಿಟ್ಟ ಬ್ಯಾರೆ ಮದವೀ ಮಾಡ್ತೀನಿ ಬಾ ಮಗನ’ ಅಂತ ಸಮಾಧಾನ ಮಾಡಿ ಬಿಡಿಸಿದಳಂತ. ಅವ್ವ ಹೆದರಿ ಕಂಗಾಲಾಗಿ ಹೊಟ್ಟಿಗಿ ತಿನ್ನದ ಕೂಸಿಗಿ ಮಲೀ ಕುಡಸದ ಅತಗೊಂತ ಮಲಗಿದ್ಲು. ಅಪ್ಪ ಗುಡಾರ ಸರಿಸಿ ಬಂದು ‘ಸುಮ್ಮಿ ಸತ್ತಗಿತ್ತೀತು ಎದ್ದು ಮಲೀ ಕುಡಸಽ ಸುಂದ್ರಿ’ ಅಂತೇಳಿ ಅವ್ವನ ಬಾಯಾಗ ಎರಡು ಪೇಡೆ ಹಾಕಿದ್ದು ಕತ್ತಲ ಮೂಲ್ಯಾಗ ಕುಂತಾಕಿ ನಾನಽ ನೋಡಿ ಪಿಳಿ ಪಿಳಿ ಕಣ್ಣ ಬಿಟ್ಟಿದ್ದೆ. ಆಯೀ ಮುಂದ ಹೇಳಬ್ಯಾಡ ಅಂತ ಅವ್ವ ನನಗೂ ಪೇಡೆ ಕೊಟ್ಟಿದ್ಲು. +ನಾ ನೆರತ ಎರಡ ವರ್ಷದ ಮ್ಯಾಲೆ ಐದ ತೊಲಿ ಬಂಗಾರ ಹಾಕಿ ದುಮ್ಮಿಹಳ ನಿಂಗಪ್ಪಗ ನನ್ನ ಮದುವೀ ಮಾಡಿ ಕೊಟ್ಟಾ. ಒಟ್ಟ ಕುಟುಂಬಾ. ಮನೀ ತುಂಬ ಮಂದಿ. ದಿನಾ ನಾಲ್ವತ್ತು ರೊಟ್ಟೀ ಬಡೀತಿದ್ದೆ. ಹೊಲಕ್ಕೂ ಹೋಗತಿದ್ದೆ. ನನ್ನ ಗಂಡನ ಒಂದೀಟ ಹೊರ ಚಾಳಿ ಇತ್ತ. ನನಗ ಸುಳವ ಬಡದ ಕೂಡಲೆ ‘ಅಪ್ಪನ ಮುಂದ ಹೇಳ್ತೀನಿ ನೋಡ್ರಿ ನಿಮ್ಮನ್ನ ಆಕೀನ್ನ ಕೂಡೇ ಕಾಲ್ಮರೀಲೆ ಬಡೀತಾನ ನಮ್ಮಪ್ಪ ಭಾಳ ಸಿಟ್ಟಿನಾಂವ.’ ಅಂತ ತಾಕೀತ ಮಾಡಿದೆ. +‘ಹೋಗಲೇ ಏನ್ಹೇಳ್ತೀ ನಿಮ್ಮಪ್ಪಂದು. ಬಾಳ ಶುದ್ದ ಮನಿಶ್ಯಾ. ಊರಿಗೊಂದ ಹೆಂಗಸನ್ನ ಇಟ್ಟಾನಂವ. ಊರಾಗ ಸಾಜೂಗ ಆಗಿ ಮಂತ್ರೀ ಕೊಟ್ಟಾರ. ಎಮ್ಮೆಲ್ಲೆ ಕೊಟ್ಟಾರ. ಅಂತ ತಾನಽ ಕೊಡಿಸಿದ ಶಾಲ ಹೊತಕೊಂಡ ದಿಮಾಕಿಲೆ ಅಡ್ಡ್ಯಾತಾನ. ನಿಮ್ಮಪ್ಪನ ಐದೇಶಿ ಬಲ್ಲೆ ನಾನು’ ಅಂತ ತಿರಿಗಿ ತದಕಿದಾಗ ಗಪ್ಪಗಾರಾದೆ. +ಚೊಚ್ಚಲ ಹಡ್ಯಾಕ ತವರ್ಮನೀಗ ಬಂದೆ. ಮೊಮ್ಮಗಾ ಹುಟ್ಟಿದ ಸಂತೋಸಾ ಅಪ್ಪಗ ಭಾಳಾ ದಿನಾ ಉಳೀಲಿಲ್ಲಾ. ಒಂದಿನಾ ಬೆಳಗಾಂವಿಗಿ ಹೋಗೂ ಮುಂದ ಟ್ರಕ್ ಎಕ್ಸಿಡೆಂಟ ಆಗಿ ಅಪ್ಪನ ಕೈ ಕಾಲು ಮುರದ್ವು. ಮೂರ ತಿಂಗಳ ಬೆಳಗಾಂವಿ ದೊಡ್ಡ ದವಾಖಾನ್ಯಾಗ ಇದ್ದಾ. ಕರ್ಚ ಬಾಳಾತು. ಮನ್ಯಾಗಿನ ಬಂಗಾರಾ ಒತ್ತೀ ಇಟ್ಟಾ. ಅದರಾಗ ನಂದೂ ಕೂಡಿತ್ತು. ಗಂಡನ ಮನೀಯವರು ದಯಾಮಾಯಾ ಇಲ್ಲದ ಬಂಗಾರ ತಂದರ ಮನ್ಯಾಗ ಕಾಲಿಡು ಅಂದ ಬಿಟ್ಟರು. ತೊಟ್ಟಿಲ ನಿಬ್ಬಣ ಹೋಗಲೇ ಇಲ್ಲಾ. ನಾ ಮಗನ್ನ ಕಟಗೊಂಡ ಇಲ್ಲೇ ಉಳದ ಬಿಟ್ಟೆ. ಗಂಡಮಗನ ಜೋಡಿ ಹೊಲದಾಗ ಮನ್ಯಾಗ ದುಡಿಯಾಕ ಒಂದ ಆಳಾತ ಅಂತ ಅಪ್ಪನೂ ಸುಮ್ಮನಾಗಿಬಿಟ್ಟಾ. ಹಾಸಿಗೀ ಹಿಡಿದ ಗಂಗವ್ವಾಯಿ ಹೇಲು ಉಚ್ಚಿ ಬೊಳದೆ. ಸಾಯೂತನಾ ಸೇವಾ ಮಾಡಿದೆ. ನನಗೇನು ಗಂಡನ ಗರಜು ಇದ್ದಿದ್ದಿಲ್ಲಾ. +ಮೊಮ್ಮಗಾ ಎದೀ ಉದ್ದಽ ಬೆಳದಾ. ಅಪ್ಪನ ಜೀವ ಕುಟು ಕುಟು ಅಂತಿತ್ತೋ ಏನೋ. ದುಮ್ಮೀ ಹಾಳದವರ ಮ್ಯಾಲೆ ಮೊಮ್ಮಗನ ಪಾಲಿಗೆ ಕೋರ್ಟ ಕೇಸ ಹಾಕಿದಾ. ಬೆಳಗಾಂವಿಗೆ ಓಡ್ಯಾಡಿ, ಅವರ ಇವರ ಕೈಕಾಲ ಹಿದಕೊಂಡು ಕೇಸ ಗೆಲ್ಲಿಸಿದಾ. ರಿಜಿಸ್ಟ್ರಿ ಕಾಗದಾ ನನ ಕೈಯಾಗ ಕೊಟ್ಟು ‘ಹೋಗ ನನ ಮಗಳ ಮಗನ್ನ ಕರಕೊಂಡ ನಿನ ಮನ್ಯಾಗ ಇರಹೋಗ’ ಅಂದಾ. ನನ್ನ ಸಲುವಾಗಿ ಆಕೀ ಬಾಳೇ ಹಾಳಾತು ಅಂತ ಕಣ್ಣೀರ ಹಾಕಿದ್ನಂತ. ಅವ್ವ ಹೇಳಿದ್ಲು. ನೋಡಾಕ ಹೊರಗ ನಮ್ಮಪ್ಪ ಕಲ್ಲುಬಂಡಿ ಆದ್ರೂ ಒಳಗ ನೀರ ಸೆಲಿ ಇತ್ತು. ಹಂತಾ ಅಪ್ಪನ ಕಳಕೊಂಡ ನಾ ಪರದೇಶಿ ಆಗೀನ್ರೇಽ ಅಯ್ಯಯ್ಯೋ ನಮ್ಮಪ್ಪ ನಮ್ಮನ್ನ ಬಿಟ್ಟ ಹ್ವಾದಾನ್ರೇ… +ಗಿರಿಜವ್ವನ ಕಣ್ಣೀರು ಆರುವ ಮೊದಲೇ… +ಸುಮಿತ್ರಾ: ನಾ ನಮ್ಮಪ್ಪನ ಎರಡ್ನೇ ಮಗಳು ಅನ್ನೂದಕ್ಕಿಂತ ಅವ್ವನ ಮಗಳು ಅನ್ನೂದಽ ಖರೇ. ಕ್ಯಾದಿಗಿ ಬಣ್ಣ. ನೆಟ್ಟನ್ನ ಮೂಗು. ದೊಡ್ಡ ಕಣ್ಣು. ತುಂಬಿದ ಗಲ್ಲ. ಕಪ್ಪನ ದಟ್ಟ ಕೂದಲಾ ಎಲ್ಲಾ ಥೇಟ ಸುಂದ್ರವ್ವನ ಹಾಂಗಽ ಅಂತಿದ್ರು ಮಂದಿ. ಆದರ ಚಂದ್ರಗ ಒಂದು ಕಪ್ಪು ಕಲಿ ಇದ್ದಾಂಗ ನನ್ನ ಹಣೀ ಮ್ಯಾಲೆ ಬಲಕ್ಕ ಒಂದು ಕಲೀ ಐತಿ. ನಮ್ಮನೀ ತಲಿಬಾಗಲಾ ದಾಟಿದ ಮ್ಯಾಲೆ ಬಲಕ್ಕ ಗ್ವಾದಲಿ. ನಾಕೇತ್ತು. ಎರಡೆಮ್ಮಿ ಆಕಳಾ. ಉಚ್ಚಿ-ಶಗಣೀ ನಾತಾ – ಎಡಕ್ಕ ನಾಕೈದ ಪಾವಟಗಿ ಏರಿದ ಮ್ಯಾಲೆ ಸಾಲ ಆರ ಕಂಬದ ಪಡಸಾಲಿ. ಅಪ್ಪ ಚಾಪೀ ಮ್ಯಾಲೆ ಗ್ವಾಡಿಗೆ ಆಕೆ ಕುಂತ ಬಂದ ಮಂದೀ ಕೂಡ ಮಾತಾಡಿಕೊಂತ ತನ್ನ ದರಬಾರಾ ನಡಸೂ ಜಾಗಾ ಅದು. ನನಗಿನ್ನೂ ಚೂರ ಚೂರ ನೆನಪೈತಿ. ನನಗ ತಿನ್ನಾಕ ಉಂಡೀ ಕೊಟ್ಟ ಆಯೀ ಅವ್ವ ಕೂಡಿ ಬಸ್ಸೂನ್ನ ಎರ್‍ಯಾಕ ಹೋಗಿದ್ರು. ನನ ಕೈಯಾಗಿನ ಉಂಡಿ ಪಡಸಾಲೀ ಕಟ್ಟೀ ಕೆಳಗ ಬಿತ್ತು. ಅದನ್ನ ತಗೊಳ್ಳಾಕ ಹೋಗಿ ನಾನೂ ಕೆಳಗೆ ಬಿದ್ದೆ. ಫರಸಿ ಹಣೀಗೆ ಬಡದು ರಕ್ತ ಪುಟಿಯಾಕ ಹತ್ತ್ಯು. ಮುಂದಿನ ಮನೀ ಸತೀಶ ಓಡಿ ಬಂದು ಎಬ್ಬಿಸಿದಾ. ಅಪ್ಪ ಓಡಿ ಬಂದ ದೋತರಲೆ ನನ ಮಾರೀ ಮ್ಯಲಿನ ರಕ್ತಾ ಒರಿಸಿ ಎತ್ತಗೊಂಡ ಡಾಕ್ಟರ ಕಡೆ ಒಯ್ದಾ. ನಾ ಹುಟ್ಟಿದ ಮ್ಯಾಲೆ ಅದಽ ಮೊದಲನೇ ಸಾರೆ ಅಂವ ನನ್ನ ಎತ್ತಿದ್ದು. ಅದಕ್ಕಽ ನೆನಪೈತಿ ನನಗ. +ದೊಡ್ಡಾಕಿ ಆದಂಗ ಸತೀಶನ ಕಣ್ಣು ಯಾವಾಗ ನೋಡಿದರೂ ನನ್ನ ಮ್ಯಾಲೆ ಇರತಾವ ಅನ್ನೂದ ತಿಳಿಯಾಕ ಹತ್ತಿತು. +‘ಸುಮೀ. ಹಿಡೀ ಈ ಕೆಂಪ ಗುಲಾಬಿ. ನಿನ್ನ ಜಡ್ಯಾಗ ಛಂದ ಕಾಣತೈತಿ’ ಅಂವಾ ಅಂದಾಗ ನಾನು ಅತ್ತಾಗ ಇತ್ತಾಗ ನೋಡಿ ‘ನೀನಽ ಮುಡಸು’ ಅನ್ನೂ ಹಾಂಗ ತಲಿ ತೋರಿಸಿ ತಿರಿಗಿ ನಿಲ್ಲತಿದ್ದೆ. ಅವನ ಬೆರಳು ಕುತ್ತಿಗಿ ಸುತ್ತ ಆಡಿದಾಗ ಕಚಗುಳಿ ಆಗಿ ಮೈ ಜುಂ ಅಂತಿತ್ತು. ಅವನ ಕಣ್ಣಾಗಿನ ಪ್ರೀತಿ. ತುಂಟಾಟ ನನಗ ಭಾಳ ಸೇರತಿತ್ತು. +ಎಲ್ಲಾರ ಕಣ್ಣ ತಪ್ಪಿಸಿ ಜಡೀ ಜಗ್ಗೂದು. ಮೈ ಮುಟ್ಟೂದು. ಗಲ್ಲಾ ಹಿಂಡೂದು ಮಾಡಿದಾಗ ನನ್ನ ಮೈ ಬಿಸಿ ಆಗಿ ಅವಂಗ ಅಲ್ಲೇ ಅಂಟಿಕೊಂಡ ಬಿಡಬೇಕ ಅನಸ್ತಿತ್ತು. ಗಿರಿಜಕ್ಕ. ಗಂಗವ್ವಾಯಿ ಕಣ್ಣ ತಪ್ಪಿಸಿ ಸಿನಿಮಾದಾಗ ನೋಡಿದಾಗ ಪ್ರೀತಿ ಆಟಾ ಆಡೂದಂದರ ಹುರುಪ ತುಂಬತಿತ್ತು. ಸತೀಶನ್ನಽ ಮದುವಿ ಆಗಬೇಕು ಅಂತ ಭಾಳ ಆಸೇ ಮಾಡಿದ್ದೆ. ಅವನೂ ಮುದ್ದು ಕೊಟ್ಟ ಕೊಟ್ಟ ಹಾಂಗಽ ಹೇಳಿದ್ದ. +ಹಳ್ಳ್ಯಾಗ ನಮ್ಮಪ್ಪ ಮಾಡೂ ಕಿತಾಪತಿ ಏನ ತುಸಾ ಅಲ್ಲ. ಸತೀಶನ ಅಪ್ಪ ಸದಾಶಿವಪ್ಪನ ಹೊಲದ ಬಾಂದಕಲ್ಲ ರಾತ್ರೋರಾತ್ರಿ ಕತ್ತಿ ಒಳಾಗ ಸರಿಸಿಬಿಟ್ಟಾ. ತೊಗೋ ಇಬ್ಬರಿಗೂ ಜಗಳ ಆತು. ಹೊಡೆದಾಟಕ್ಕ ಸದಾಶಿವಪ್ಪ ಆಳಲ್ಲ. ಸೂಕ್ಷ್ಮ ಮನಿಶ್ಯಾ. ಮಕ್ಕಳ್ನ ಕಲಸೂ ನೆವ ಮಾಡಿ ಊರಽ ಬಿಟ್ಟ ಹೋಗಿ ಬಿಟ್ಟಾ. ನಾ ಹುಚ್ಚೀ ಹಾಂಗ ಸತೀಶನ ದಾರೀ ನೋಡೇ ನೋಡ್ದೆ. ಕಾದೂ ಕಾದೂ ಮೈ ಮನಸು ಎಲ್ಲಾ ಸೋತ ಹ್ವಾದು. ದಿನಕ್ಕ ದಿನಾ ಸತೀಶ ಮಸಕ ಮಸಕ ಅಕ್ಕೋತ ಹ್ವಾದಾ. ಮಾಯ ಆಗಿಬಿಟ್ಟಾ… +ಅಪ್ಪ ನನ್ನ ಮದುವೀ ಮಾಡಾಕ ತಯಾರಾದಾ. ಬಂದವರ ಮುಂದ ಗೊಂಬೀ ಹಾಂಗ ಸಿಂಗಾರಾಗಿ ಕೂತೆ. ಎದ್ದೆ. ಯಾರಾರೋ ಹುಂ ಅಂದ್ರು. ಯಾರೋ ಒಲ್ಲೆ ಅಂದರು. ನಾ ವಿಚಾರಾ ಮಾಡಾಕ ಹೋಗಲಿಲ್ಲಾ. ಕುಡಗೋಲು ಕುಂಬಳಕಾಯಿ ಅಪ್ಪನ ಕೈಯಾಗ ಕೊಟ್ಟು ಕುಂತ ಬಿಟ್ಟೆ. ನೀ ಏನಂತೀ ಅಂತ ಅಪ್ಪ ಎಂದೂ ಕೇಳಲಿಲ್ಲ. ಸಾಲೀನೂ ಮುಗದಿತ್ತು. ಜೋಡಿಯವರೆಲ್ಲಾ ಮದಿವ್ಯಾಗಿ ಹೋಗಿದ್ರು. ಶೇಂಗಾ ಹರ್‍ಯಾಕ. ಕಸ ತಗ್ಯಾಕ ಅಕ್ಕ. ತಮ್ಮನ ಕೂಡ ಹೊಲಕ್ಕೆ ಹೋಗಿ ಮುಂಜಾವಿನಿಂದ ಸಂಜೀತನಾ ಇದ್ದ ಬರತಿದ್ದೆ. +ಬದುಕು ಯಂತ್ರದಾಂದ ಹ್ಯಾಂಗ ನಡೀತದ. ಎಷ್ಟ ದಿನಾ? ಉಪ್ಪು, ಹುಳಿ ಉಂಡ ದೇಹಾ ಏನೇನೋ ಬೇಕ ಅನಿಸತಿತ್ತು. ‘ಸುಮಿತ್ರಾಽ’ ಯಾರೋ ಕಿವಿ ಹತ್ತರ ಕರದರು. ಸಟ್ಟನ ತಿರುಗಿ ನೋಡಿದೆ. ಹುರಕಡ್ಲಿ ಶಂಬೂ ಹೆಗಲಿನ ಹತ್ತರ ನಿಂತಿದ್ದಾ. ಅವನ ಉಸರು ನನ್ನ ಗಲ್ಲಕ್ಕ ಬಡೀತಿತ್ತು. ಮೈಯಾಗ ಒಂಥರಾ ಆಗಿ ಮೈ ತುಂಬ ಹರಿದಾಡಿದಾಂಗ ಆತು. ಅಂವೇನ ನನಗ ಅರೇದಂವ ಅಲ್ಲ. ದಿನಾ ನಮ ಜೋಡಿ ಹೊಲ ಕೆಲಸಕ್ಕ ಬರತಿದ್ದ. ಕಪ್ಪ ಇದ್ದರೂ ಕಳಾ ಇದ್ದ. ಕಣ್ಣಾಗ ಕಣ್ಣಿಟ್ಟು ನೋಡಿದಾ. ಕಣ್ಣಿಗೆ ಕತ್ತಲಿ ಬಂದಂಗಾತು. +‘ಗಿರಿಜಕ್ಕಾ ಬಂದಿಲ್ಲಾ’ ಅಂದ. ನನ ಗಂಟಲು ಒಣಗಿತ್ತು. ಕೈಹಿಚಿಕಿ ಕಿವ್ಯಾಗ ಪಿಸಿ ಪಿಸಿ ಅಂದಾ. ಯಂತ್ರದಾಂಗ ಗೋಣು ಹಾಕಿದೆ. +ಅಂದ ಮನೀ ಮುಟ್ಟೂದರಾಗ ದೀಪ ಹತ್ತಿತ್ತು. ಅವ್ವ ಹೊರಗಽ ಇದ್ಲು. ‘ನಿಮ್ಮಪ್ಪ ಇನ್ನೂ ಮನೀಗೆ ಬಂದಿಲ್ಲ. ಸಪ್ಪಳಾ ಮಾಡದಾಂಗ ಹಿತ್ತಲ ಬಾಗಲದಾಗ ಬಾ. ಯಾರರೆ ಕೇಳಿದರ ಹಣುಮಪ್ಪನ ಗುಡೀಗ ಹೋಗಿದ್ದೆ ಅಂತ್ಹೇಳೆ. ಹಾದರದ ಜೋಡಿ ಸುಳ್ಳ ಹೇಳಾಕೂ ಕಲಿಸಿದ್ಲು ನಮ್ಮವ್ವ. ಹಾಂಗಽ ಮತ್ತ ಮತ್ತ ಗುಡೀಗೆ ಹೋಗಿ ಬಂದೆ. ಮುಟ್ಟ ನಿಂತು ಹೊಟ್ಟಿ ಮುಂದ ಬಂತು. ಶಂಭ್ಯಾ ನಮ್ಮ ಜಾತಿ ಅಲ್ಲ. ಅಪ್ಪಗ ಹೆದರಿ ಮಾರೀ ತಪ್ಪಸಾಕ ಹತ್ತಿದಾ. ಅಪ್ಪಗ ಗೊತ್ತಾದರ ಹೊಡದ ಕೊಂದಬಿಟ್ಟಾನ ಮಗಳ್ನ ಅಂತ ಚಿಂತೀ ಮಾಡಿ ಅವ್ವ ಮುಚ್ಚಿ ಮುಚ್ಚಿ ಇಟ್ಲು. ಸುದ್ದಿ ಗೊತ್ತ ಆದ ದಿನಾ ‘ಖಾತಾ ಮಾಡಿದ್ಯಽ ರಂಡೀ’ ಅಂತ ಚೀರ್‍ಯಾಡಿ ಕ್ವಾಣಿ ಬಾಗಲೂ ಹಾಕಿ ಹೊಡದಾ. ಹೊಡದಷ್ಟು ಹೊಡೀಲಿ ಹೊಟ್ಟ್ಯಾಗಿಂದು ಸತ್ತ ಹೋಗಲಿ ಅಂತ ನಾನೂ ಹಲ್ಲ ದವಡೀ ಕಚ್ಚಿ ಹೊಡಿಸಿಕೊಂಡೆ. ಅಷ್ಟಕ್ಕೆ ಅವನ ಸಿಟ್ಟು ಇಳೀಲಿಲ್ಲ. ನೀರೊಲಿ ಕೊಳ್ಳೀ ತಂದು ಬರೀ ಕೊಡಾಕ ಬಂದಾಗ ಮಾತ್ರ ಅವ್ವನ ಜೀವ ತಡೀಲಿಲ್ಲ. ಓಡಿಬಂದು ನನ್ನ ಅಪ್ಪಿಕೊಂಡು. ಬಾಳೇಕ ಬಂದ ಮ್ಯಾಲೆ ಮದಲ ಸಾರೆ ಅಪ್ಪಗ ತಿರಿಗಿ ನಿಂತ್ಲು. +“ಇಟ್ಟ ವಯಸ್ ಆದರೂ ಮನೀ ಹೆಂಡ್ತಿ ಒಬ್ಬಾ‌ಅಕಿ ಸಾಲೂದಿಲ್ಲ ನಿನಗ. ನಾಯೀ ಹಾಂಗ ತಿಪ್ಪೀ ಮೂಸಾಕ ಹೋಗ್ತಿ. ಅದು ಹರೇದ ಹುಡುಗಿ. ನೀನು ನಿಂತ ಮದುವೀ ಮಾಡಿಕೊಟ್ಟಿದ್ದರ ಗಂಡನ ಮನ್ಯಾಗ ಸುಖದಿಂದ ಇರತಿದ್ಲು. ತಿಳೀಲಾರದ ತೆಪ್ಪ ಮಾಡಿದರೆ ಜೀವಾನ ತಗೀತಿ ಏನು? ಅಕೀಕಿಂತ ಮದಲ ನನಗ ಬರೀ ಕೊಡು. ಈ ಹೆಣ್ಣ ಹಡದೀನಂತ.” +ಅವ್ವನ್ನ ದುರು ದುರು ನೋಡಿ ಅಪ್ಪ ಉರಕೊಂತ ಹೊರಗ ಹೋದಾ. ಬೆಳತನಕ ಅವ್ವ ಎಣ್ಣೀ ಹಚ್ಚಿ ನನ್ನ ಮೈ ತೀಡಿ ನೀರಿನ ಕಾವು ಕೊಟ್ಲು. ಮರದಿನಾ ಹೊಡತಕ್ಕ. ಜ್ವರಕ್ಕ ನನ್ನ ಮೈ ಇಳಿದು ಹೋಗಿತ್ತು. ಡಾಕ್ಟರ ಕಡೇಂದ ಔಷಧ. ಗುಳಿಗಿ ತಂದ ಅಪ್ಪ ಮಗಳಿಗೆ ಕಜ್ಜಿನ ಜ್ವರಾ ಅಂತ ದೊಡ್ಡ ದನ್ಯಾಗ ದೇಳಕೊಂತ ಬಂದಿದ್ದ. ನೆಲಕ್ಕ ಬಿದ್ದರೂ ಮೀಸಿ ಮಣ್ಣ ಆಗಲಿಲ್ಲಾ ಅನ್ನೂವಂಗಾ ಅಪ್ಪ. +ಮುಂದ ಆರ ತಿಂಗಳದಾಗ ಅಪ್ಪ ನನ್ನ ಮದುವೀ ಮಾಡಿ ಕೈ ತೊಳಕೊಂಡ. ಬೆಳಗಾಂವ್ಯಾಗ ಸಣ್ಣ ರೆಡಿಮೇಡ ಅಂಗಡೀ ಇಟಕೊಂಡ ಅದಾನ ರಾಜಶೇಖರ. ಶುಭಕಾರೇಕ ಊರವರ ಯಾರರೇ ಕಲ್ಲ ಹಾಕ್ಯಾರಂತ ಬೆಳಗಾಂವಿ ಗುಡ್ಯಾಗ ಮದುವೀ ಮಾಡಿ ಕೊಟ್ಟಾ. ನನ್ನ ಗಂಡ ಭಾಳಾ ಪ್ರೀತಿಯಿಂದ ನೋಡಿಕೊಂತಾನ. ನಾನೂ ಹಿಂದೆಂದೆಲ್ಲಾ ಮರತು ಸಿಕ್ಕಿದ್ದ ಶಿವಾ ಅಂತ ಬಾಳೇ ಮಾಡತೇನಿ. ಮಗನಿಗೆ ಅಪ್ಪನ ಹೆಸರು ನಾಗಭೂಷಣ ಅಂತ ಇಟ್ಟೇನಿ. +ಎಂದೂ ಕಣ್ಣೀರ ಹಾಕದ ಅಪ್ಪ ನಾ ತೊಟ್ಟಿಲ ನಿಬ್ಬಣದ ಜೋಡಿ ಬೆಳಗಾಂವಿಗಿ ಬರೂ ಮುಂದ ದೋತರಾ ಮರೀ ಮಾಡಿ ಅತ್ತಾ. ಮನಸ್ಸಿಗಿ ಹಳಿಹಳಿ ಆತು. ಇದ್ಯಾಕೋ ಅಪಶಕುನ. ಅಪ್ಪನಂಥಾ ಗಂಡಸು ಅಳಬಾರ್‍ದು. ಇನ್ನೊಮ್ಮೆ ಅಪ್ಪನ್ನ ನೋಡ್ತೀನೋ ಇಲ್ಲೊ ಅನ್ನಿಸ್ತು. ಹಾಂಗ ಆರು. ನಮ್ಮಪ್ಪನ್ನ ಕಳಕೊಂಡ ದಿಕ್ಕೇಡಿ ಆದೆ. ಅಯ್ಯೋ ಅಪ್ಪಾ… ನಮ್ಮಪ್ಪಾ… ಹೋಗಿಬಿಟ್ಯಲ್ಲೊ… ನಮ್ಮ ಕೈ ಬಿಟ್ಟೂ… +ಸುಂದರವ್ವ: ಸುಂದ್ರವ್ವಾಽ ಏಽ ಏಳಽ ಸುಂದ್ರೀ. ಏಳಽ ಮೂಳಾ. ಏಟೊತ್ತ ಗಂಡನ ಮಗ್ಗಲಾಗ ಬಿದ್ದಕೋತಿ. ಹೆಣಮಕ್ಕಳ ಸೂರ್‍ಜಾ ಮಾಡೂತನಾ ಮಲಗಬಾರ್‍ದ ಏಳ. ಅರಿಷ್ಟತನಾ. ಮನಾರ ಹ್ವಾಕೀ ಕುಂತೇತಿ. ಏಳಽ ಸುಂದ್ರೀ ಚುಚುಂದ್ರೀ. +ನಮ್ಮತ್ತಿ ಗಂಗವ್ವಾಯಿ ನಾ ನಡ್ಯಾಕ ಬಂದಾಗಿಂದ ಹಿಡಿದು ಆಕೀ ಸತ್ತು ಬಾಯಿ ಬಂದ ಆಗಿ ಗ್ವಾಡಿಗೆ ಕುಂಡ್ರೂ ತನ ದಿನಾ ಹಾಡಿದ ರಾಗ ಇದು. ಈ ಮನಿಗೀ ಬಂದಾಗ ಹನ್ನೆಡ್ಡು ವರ್ಸದ ಹುಡುಗಿ ನಾನು. ಅದಽ ವರ್ಸ ನೆರತಿದ್ದೆ. ರಾತ್ರೆಲ್ಲಾ ಗಂಡನ ಕಾಟಾ. ಬೆಳಗಾದರ ಅತ್ತೀ ಕಾಟಾ. ಮಾರೀ ತೊಳ್ಕೊಂಡು ನೀರೊಲಿಗೆ ಹರೀ ಹಾಕಿ ಜ್ವಾಳ ಬೀಸಾಕ ಕುಂದ್ರತಿದ್ದೆ. ಹಿತ್ತಲಕ ಹೋಗಾಕೂ ಹೆದರಿಕಿ ಕತ್ತಲ ಗವ್ ಅಂತಿತ್ತು. +ಮನೀ ಕೆಲಸ ಮುಗದ ಮ್ಯಾಲೆ ಚೆಂದುಳ್ಳಿ ಚೆಲುವಿ ಸೊಸಿನ್ನ ಮುಂದ ಹಾಕ್ಕೊಂಡ ಹೊಲಕ್ಕ ಒಯ್ಯಾಕಿ. ದುಡದ ದುಡದ ಸಾಕಾಗಿ ತವರ್ಮನಿ ನೆನಿಸಿ ಕಣ್ಣೀರ ತೆಗದರ. ಸ್ವಾಟಿಗೆ ತಿವೀತಿದ್ಲು. +‘ಹೊಯ್ಮಾಲೀ ಹುಲಿಯಂಥಾ ಅತ್ತಿ ಅದೀನಿ. ಬಾಳೆ ಮಾಡಾಕ ಗಂಡ ಅದಾನ. ಗಂಡ ಸತ್ತ ರಂಡಿ ನಾನು. ಮಗನ್ನ ಹೊಟ್ಟ್ಯಾಗ ಇಟಗೊಂಡ ಕೂಲೀ ಮಾಡಿ ಇಟ್ಟೆಲ್ಲಾ ಬದುಕ ಮಾಡೀನಿ. ನಿನಗ ಏನಾಗೇದ ಮೂಳಾ. ಯಾಕ ಅಳತೀ ಬಾಯ್ತುಂಬ ಹಲ್ಲ ಇಟಗೊಂಡ’ ಮಗನ ಕಿವಿ ಚುಚ್ಚಿದರ ಸಾಕು ಅವನೂ ಬಂದು ದಬಾ ದಬಾ ನಾಕೇಟು ಹಾಕವನ. +***** +ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […] +ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ […] +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_349.txt b/Kannada Sahitya/article_349.txt new file mode 100644 index 0000000000000000000000000000000000000000..3f687ea4f25794cd5ffc5bdf0ea27af43d5bfd2f --- /dev/null +++ b/Kannada Sahitya/article_349.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು +ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! +ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ +ಬಿಟ್ಟು ಬಿಡಿ ಅವರವರ ಪಾಡಿಗಿನ್ನು – +ಯುವ ಜನಾಂಗವೆ ಬನ್ನಿ ನವರಂಗಕೆ +ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; +ಮೂಲೆಯಲ್ಲವಿತವಗೆ ಬರಿ ಕತ್ತಲು +ಸತ್ಯತಮ ಸಾಹಸಕೆ ಯಶವೆತ್ತಲು! +ಹೊಸ ಮಳೆಯ ಧಾರೆಯಲಿ ಇಂದಿನೀ ಜೀವನಕೆ +ಬಂದಿದೆ ಮಹಾಪೂರ, ಬತ್ತದಿನ್ನು! +ಹಳೆ ಕೊಳೆಯ ತತ್ತ್ವಗಳು ಸಂಕುಚಿತ ಭಾವಗಳು +ಕೊಚ್ಚಿ ಹೋಗಿವೆ, ತಿರುಗಿ ಬಾರವಿನ್ನು – +ಮುಂಬಾಳ ಮುಂಜಾವು ನಗೆಯ ಬೀರಿ +ಕೊರಳೆತ್ತಿ ಹಾಡುತಿದೆ ಜಯವ ಕೋರಿ; +ಮರೆತು ಬಿಡಿ ಹಿಂಗತೆಯ ಹೀನತೆಯನು +ಕೊಟ್ಟು ಬಿಡಿ ಆ ವ್ಯಥೆಗೆ ತರ್ಪಣವನು! +ಎಂದಿನಿಂದಲೊ ನಿಮ್ಮ ಎದೆಗಳಲಿ ಹುದುಗಿಹುದು +ಹೊಸ ಸಮಾಜದ ರೂಪ-ರೇಷೆ ಬಯಕೆ; +ನಿಮ್ಮ ಹೊಂಗನಸುಗಳ ಕಂಡರಿಸಲೆಂದೀಗ +ಹದಗಾಲ ಬಂದಿರಲು ಮುದುರಲೇಕೆ? +ಬಾಳವೃಕ್ಷದ ಜೀರ್ಣ ಪರ್ಣಂಗಳುದುರಿ +ಹೋಗುತಿವೆ ಚಿಗುರಲೆಗೆ ಹೊಗರು ಬೀರಿ, +ಜೋಲು ಮೊಗ ಯುವಕರಿಗೆ ಸಲ್ಲ ಹೊಲ್ಲ; +ನಗುತ ಮುಂಬರಿಯುತಿರೆ ಬಹುದು ಗೆಲ್ಲ! +ಬಡವ ಬಲ್ಲಿದರೆಂಬ ಜಾತಿಗೀತಿಗಳೆಂಬ +ವಿಷಮತೆಯ ನಂಟೇಕೆ ಹೊಸ ಬಾಳಿಗೆ? +ಹೆಣ್ಣೆಂದು ಹೀಗಳೆವ ಕುನ್ನಿತನವಿನ್ನೇಕೆ? +ಕಸವೇಕೆ ನಳನಳಿಪ ಹುಲುಸು ಬೆಳೆಗೆ? +ಒಡಕು ಬಾಳಿನಲಿಲ್ಲ ಚೆಲುವು ಮೋದ +ಒಡಕು ತಂಬೂರಿಯಲಿ ಒಡಕು ನಾದ; +ಮಣ್ಣು ಮಣ್ಣೇ ಹೊನ್ನ ಬೆಳೆಯಬಹುದು +ನಮ್ಮ ದೃಢ ಮುಷ್ಟಿಯಲಿ ಸಗ್ಗವಿಹುದು. +ಮುಗಿದು ಹೋಯಿತು ಬಾಲ್ಯ, ಮುಂದೆ ಬಾರದು ಹರೆಯ +ಚಣಚಣಕು ಆಯುಷ್ಯ ಸವೆಯುತಿಹುದು; +ಕಾಲಗತಿಯೊಡನೆ ಸಮರಸವಾಗಿ ಸಾಗುವದೆ +ಜೀವನ ಪ್ರವಾಹಕ್ಕೆ ದೊರೆತ ಗುರಿಯು. +ನಮ್ಮ ಅನುಭವಗಳೇ ನಮ್ಮ ಗಳಿಕೆ, +ಕಾಲದೂರೆಗಲ್ಲಿನಲಿ ನಿಂತ ಬಾಳ್ಕೆ; +ನೊರೆಗೆ ಮರುಳಾಗುವದೆ ಹೇಡಿ ಬದುಕು +ಮುತ್ತು ಪಡೆವರೆ ಆಳ ಮುಳುಗಬೇಕು. +ನಿಮ್ಮೆದೆಯೊಳಿದೆ ಛಲವು, ನಿಮ್ಮ ಕೈಗಿದೆ ಬಲವು +ಆದರೇತಕೊ ಹಿಂದೆ ಸರಿಯುತಿಹಿರಿ- +ಅವ್ಯಕ್ತ ತೇಜಗಳೆ, ಅಮೃತಪುತ್ರರು ನೀವು +ಪ್ರತಿಗಾಮಿ ಶಕ್ತಿಗಳ ಸದೆಬಡಿಯಿರಿ. +ಜ್ಞಾನವೃದ್ಧರು ತಿಳಿವನೆರೆಯುತಿರಲಿ +ಬೇಡವೆಂದವರಾರು- ಅವರು ಬರಲಿ; +ಹುಮ್ಮಸಕೆ ತಣ್ಣೀರನೆರಚದಿರಲಿ +ಹೊಸ ಸಮಾಜದ ಗುರಿಯು ನೇರವಿರಲಿ. +ಹೊಸ ಜಗವು ರೂಪುಗೊಂಡಿಹುದೀಗ, ಹೊಸ ಬಾಳು +ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! +ಹಳೆಯ ಕಾಲದ ರೂಢಿ ಜಡಮತೀಯರನೆಲ್ಲ +ಬಿಟ್ಟು ಬಿಡಿ ಅವರವರ ಪಾಡಿಗಿನ್ನು! +ಹೊಸ ಬಾಳು ರಸಬಾಳನಪ್ಪುತಿಹುದು +ಸಮತೆ-ಸಾಮಾನ್ಯತೆಗೆ ಒಪ್ಪುತಿಹುದು; +ಹೊಸ ಗಂಧ ತಂದಿಹನು ಮಂದಾನಿಲಂ +ಹೊಸ ಕಾಲದುದಯ ರವಿ-ಸುಸ್ವಾಗತಂ. +***** +೧ ಏಸುಕ್ರಿಸ್ತ ಏಸು ಬುದ್ಧ ಏಸು ಬಸವ ಬಂದರೂ, ತಮ್ಮ ಅಂತರಂಗವನ್ನೆ ಲೋಕದೆದುರು ತೆರೆದರೂ ನಶ್ವರದಲಿ ಈಶ್ವರನನು ಕಂಡು ಜಗದ ಕಲ್ಯಾಣಕೆ ಎದೆಯ ಪ್ರಣತಿ ಜ್ಯೋತಿಯಲ್ಲಿ ದಯೆಯ ತೈಲವೆರೆದರೂ, ಪುಣ್ಯ ಪುರುಷ ಗಾಂಧಿ ತಂದೆ […] +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_35.txt b/Kannada Sahitya/article_35.txt new file mode 100644 index 0000000000000000000000000000000000000000..74a664ba8450523e00341959f783f3a1bbe391a6 --- /dev/null +++ b/Kannada Sahitya/article_35.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ತುಂಟಾಗಿ ನಾಚಿ +ಮೊಣಕಾಲು ಮಡಿಸಿ, ಗಲ್ಲ ಊರಿ +ಮುನಿದ೦ತೆ ನಟಿಸಿ +ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ +ಒಡಲುಗೊಳ್ಳುವ ಅವಳ ನಿರೀಕ್ಷೆ: +ಅವನ ಧಾರಾಳ ಅವಕಾಶ +ಮತ್ತು ಆಗ್ರಹ +೨ +ಸುಮ್ಮಗೆ ಅರಳಲು ಕಾದಿರುವ +ಕಟುವಾಸನೆಯ ಕೆಂಡಸಂಪಿಗೆ +ಅವಳು +ಅವನ ಅವಸರದ ಬೆದೆಗೆ +೩ +ಅವಳ ಮುಖದ ಮಮತೆಯಲ್ಲಿ ತುಡು ಉಣ್ಣಿಸಿದ +ಮಾತೆಯ ಭಾವ; +ಅವನ ತುಡುಗು ಮೈಯಲ್ಲಿ ಜ್ವರ ಕಳೆದು ಲಘುವಾದ +ಬೆವರ ಹನಿ +೪ +ಅಗ್ನಿಯಲ್ಲಿ ತೊಳೆದ ಶುಭ್ರ ಪುತ್ಥಳಿಯಾಗಿ +ಕೇವಲ ಹೆಣ್ಣೂ ಆಗಿ +ಅನನ್ಯಳಾಗಿ, ಅನ್ಯಳೂ ಆಗಿ +ದೇವಿಯಾಗಿ ಸೂಳೆಯೂ ಆಗಿ +ಇನ್ನೆಷ್ಟು ಅರಳಿದರು ಇನ್ನೂ ಅರಳಬೇಕೆಂದು +ಕತ್ತಲಿನ ಚಂಚಲೆಯಾಗಿ, +ಏಕೈಕಳಾಗಿ ಅವನಿಗೆ ಸಲ್ಲಲೆಂದು +ಏಕಾಕಿ +ಅವಳು ಸತತ ಕಾಯುವುದು +೫ +ಮುದ್ದಾಮಾದ ಅವಳ ಬೇಟವೆ ತನ್ನದೇ ಪಾಡೂ ಆಗಿ +ಅಟ್ಟುವ ಅಡಗುವ ಅನ್ನೋನ್ಯದಲ್ಲಿ ಪರವಶವಾಗಿ +ಸೊಕ್ಕುವ ರಮಣನಾಗಿ +ಉಕ್ಕುವ ಬಿಕ್ಕುವ ಮಿಂಡನಾಗಿ +ಏಕೈಕನಾಗಿ +ಅವಳಿಗೆ ಒದಗಲೆಂದು +ಏಕಾಕಿ +ಅವನು ಸತತ ಕಾಯುವುದು. +***** +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_350.txt b/Kannada Sahitya/article_350.txt new file mode 100644 index 0000000000000000000000000000000000000000..d45e1c76c301ef3ac3e450ab65f761a72ff100bb --- /dev/null +++ b/Kannada Sahitya/article_350.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವನಮ್ಮ ಅವನನ್ನು ಬೆಳೆಸಿದ್ದೇ ಹಾಗೆ, ದುಡುಂ ದುಡುಂ ಧುಮುಕುವ, ಸ್ವಲ್ಪ ಹೊತ್ತು ಈಜುವ ಸಾಹಸ ಮಾಡಿದಂತೆ ಮಾಡಿ, ಓಡುವ ಪ್ರವೃತ್ತಿಯನ್ನು ಅವ ಇನ್ನೆಲ್ಲಿಯಿಂದಾದರೂ ಕಲಿಯಬೇಕಿತ್ತು? ಯಾಕೋ ಏನೋ ಯಾವುದರಲ್ಲಿಯೂ ನೆಲೆ ನಿಲ್ಲದವ, ಎಲ್ಲವನ್ನೂ ತನ್ನದು ಎಂದು ಅವಲತ್ತುಕೊಂಡಷ್ಟೇ ವೇಗವಾಗಿ, ಅವುಗಳಿಂದ ವಿಮುಕ್ತನಾಗ ಬಯಸುವ ದ್ವಂದ್ವದವ. ಹುಟ್ಟಿಸಿದ ಅಪ್ಪ ಎಂದಿನಿಂದ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡನೋ, ಅಂದಿನಿಂದ ಇವನಿಗೆ ಹೇಳುವವರು ಕೇಳುವವರೂ ಇಲ್ಲದೆ, ಸುತ್ತಲಿನದರಲ್ಲಿ ’ಎಲ್ಲವೂ ಸರಿ’ ಎಂದು ಒಪ್ಪಿಕೊಳ್ಳುವ ಹುಟ್ಟುಬುದ್ಧಿ ಇವನನ್ನು ಗತ್ತಿನಿಂದ ಹಿಡಿದುಕೊಂಡಿತ್ತು. ಅದಿಲ್ಲವೆಂದಾಗಿದ್ದರೆ ಮದುವೆಯ ಮನೆಯಲ್ಲಿ ಬಾಳೆ ಎಲೆಯಲ್ಲಿ ಪಾಯಸ ಉಂಡವನಿಗೆ ಬಿಸಿ ಪಾಯಸ ಎಲೆಯ ಮಧ್ಯದಲ್ಲಿ ಕಂದಿದಂತೆ ಮಾಡಿ, ಇವ “ಅಮ್ಮಾ, ಬಾಳೆ‌ಎಲೇಲಿ ಹೃದಯಾ ಬಿದ್ದಿತ್ತು!” ಎಂದು ಕೂಗಿಕೊಂಡು ಬಂದು ವರದಿ ಒಪ್ಪಿಸುತ್ತಿದ್ದನೇ? ಇವನಮ್ಮ “ಅದೆಂತದಲೇ ಹೃದಯ ಬಿದ್ದಿದ್ದು?” ಎಂದರೆ “ಅದೇ ಅಮ್ಮಾ, ಬಾಳೆ ಎಲೆ ಮಧ್ಯ ಸಣ್ಣಗೆ ಕಪ್ಪಾಗಿತ್ತಲ್ಲ?” ಎಂದುದನ್ನು ನೆನಸಿಕೊಂಡು ಇವನಮ್ಮ ಇವತ್ತಿಗೂ ತನ್ನೆಲ್ಲಾ ಕಪ್ಪು ಹಲ್ಲು ಪ್ರದರ್ಶಿಸಿ ನಗುತ್ತಾಳೆ. “ಭೇಕೂಫ ನನ್ಮಗ, ಎಲೆ ಮಧ್ಯ ಬಿಸಿ ಪಾಯಸದಿಂದ ಸೀದು ಹೋದರೆ, ಅದನ್ನೇ ಹೃದಯಾ ಬಿತ್ತು ಅಂತ ಗೋಗರಿಯುವವ” ಎಂದು ಛೇಡಿಸುತ್ತಾಳೆ. ಹಂಗಂತ ಇವನಮ್ಮನೇನು ಕಡಿಮೆಯಿಲ್ಲ – ಅವಳು ಪುಡಿ ಅವಲಕ್ಕಿಯನ್ನು ಇವತ್ತಿಗೂ ಯಾವ ಗಂಡು ಮಕ್ಕಳಿಗೂ ಕೊಡುವುದಿಲ್ಲ, ಹಂಗೆ ಕೊಡೋದರಿಂದ ಪುಡಿ ಅವಲಕ್ಕಿ ಅಥವಾ ಅದರಲ್ಲಿನ ಕಲ್ಲು ಕಿಡ್ನಿಯಲ್ಲಿ ಗಂಡು ಮಕ್ಕಳಿಗೆ ಸಿಕಿಕೊಳ್ತದೆ ಎಂಬುದು ಅವಳ ಭ್ರಾಂತಿ. ಇವನೂ ಇಂತವುಗಳನ್ನು ಆಡಿಕೊಳ್ತಾನೆ. ಕೆಲವೊಮ್ಮೆ ಇವನವ್ವ “ಯಾವ್ದುನ್ನಾದ್ರು ತಡಿಬೈದು, ಕಿವಿ ಪಕ್ಕ ಗುಯ್ ಗುಡೋ ಈ ಹಾಳು ಸೊಳ್ಳೆಕಾಟ ತಡೀಲಾರ್‍ನೆ, ಅದ್ಯಾಕಲೇ ಈ ಸೊಳ್ಳಿಗಳು ನಮ್ ಕಿವಿತಾಕ್ಕೆ ಬಂದು ಗುಯ್ ಅನ್ನದು?” ಅಂತ ಜಿಜ್ಞಾಸೆಯಲ್ಲಿ ತೊಡಗಿದ್ದರೆ, ಇವ ಅದಕ್ಕೆ “ಅವ್ವ, ಗುಯ್ ಅನ್ನೋ ಸಬ್ದ ಅದ್ರ ರೆಕ್ಕಿನಿಂದ ಬರ್‍ತತಿ, ಅದು ನಿನ್ ಕಿವಿ ಹತಾಕ್ ಬಂದಾಗೆಲ್ಲಾ ಕೇಳ್ತತಿ” ಎಂದು ತನ್ನ ವಿದ್ವತ್ ಪ್ರದರ್ಶನ ಮಾಡುವವ. ಅದ್ಯಾವುದೋ ಸಿನಿಮಾದಲ್ಲಿ ಲಕ್ಷ್ಮಿ ಯಾರಿಗೋ ತನ್ನ ಕಿಡ್ನಿ ದಾನ ಮಾಡಿದ್ದನ್ನು ನೋಡಿದ ಇವನವ್ವ ಅದು ಅರ್ಥವಾಗದೇ “ಅದೆಂಗಲೇ, ಹೆಂಗಸರು ಕಿಡ್ನಿ ಕೊಡಕಾದೀತು?” ಅಂತ ಇವನೆಡೆ ನೋಡಿ ವಿಶೇಷವಾಗಿ ನಕ್ಕಿದ್ದಕ್ಕೆ “ಅವ್ವಾಲೇ, ಕಿಡ್ನಿ ಎಂಬ ಅಂಗ ಎಲ್ಲರತಾವನೂ ಇರತೈತಬೇ” ಎಂದು ಹೈಸ್ಕೂಲು ಮೆಟ್ಟಿದ ತಾನೇ ಮಹಾಶಾಣ್ಯಾನ ಹಾಗೆ ಏನೂ ಓದದ ತನ್ನಮ್ಮನನ್ನೇ ಆಡಿಕೊಂಡು ಹಲ್ಲುಕಿರಿಯುವುದು ಸರಿಯಾ? +ಇವನಪ್ಪನ ಶುದ್ಧ ಕುಡುಕ, ಸೊಂಬೇರಿ. ಸದಾ ಅತ್ತಿಂದಿತ್ತ ಅಂಡಲಿಯುವ ಬುದ್ಧಿಗೇಡಿ. ಎಲ್ಲೋ ಕೆಲಸಕ್ಕೆಂದು ಹೋಗಿ, ವಾರದ ಕೆಲಸ ಮುಗಿದು ಇನ್ನೂ ಬಟವಾಡೆ ಆಗೋದರಲ್ಲೇ ಇವನ ಕೈ ಎಲ್ಲವೂ ಖಾಲಿ, ಕೆಲವೊಮ್ಮೆ ಇನ್ನೂ ಕೈಲಿ ಕಾಸು ಬರುವ ಮೊದಲೇ ಸಾಲಗಾರರ ಜೊತೆ ಅಡ್ಜಸ್ಟ್ ಮಾಡಿಕೊಂಡ ಕಾರಣದಿಂದ ಮನೆಗೆ ಕಾಸು ಹರಿದು ಬರುತ್ತದೆಯೆನ್ನುವುದಕ್ಕಿಂತಲೂ ಮನೆಯಿಂದ ಹೊರಗೆ ಹರಿದು ಹೋಗುವುದೇ ಹೆಚ್ಚು. “ನನ ಸಿವನೇ, ಇಂತಾ ಕುಡುಕನ ಸವಾಸದಿಂದ ಉಪಾಸ ಇರಹಂಗಾತಲ್ಲ” ಅಂತ ಇವನಮ್ಮ ಎಷ್ಟೋ ಸತಿ ತಲೆ ಚಚ್ಚಿಕೊಂಡಿದ್ದನ್ನು ಇವ ನಡುಮನೆ ಕಂಬದ ತರ ಸಾಕ್ಷಿಗಾಗಿ ಎಂಬಂತೆ ನೋಡಿ ನಿಡುಸುಯ್ದಿದ್ದಾನೆ. ಇವನಪ್ಪ ಇವನಮ್ಮನ್ನ ಕೂದಲಿಡಿದು ಹೊಡೆಯೋ ದೃಶ್ಯವೂ, ಅವಳು ಅತ್ತು-ಕರೆದು ಊರು ಒಂದಾದ ಚಿತ್ರಣವೂ ಇವನ ಕನಸಿನಲ್ಲಿ ಹಲವಾರು ಬಾರಿ ಬಂದಿದ್ದಿದೆ. ಇವ ಇವನಮ್ಮನ ಎಂದೂ ತೊಟ್ಟಾಕ್ಕಂಡೇ ಮಲಗೋದು, ಆದರೆ ಬೆಳಗ ಮುಂಜಾನೆ ಇವ ಕಣ್ಣು ಬಿಡೋದು ಅವನಮ್ಮನ ಅಡಿಗೆ ಮನೆ ಪಾತ್ರೆಗಳ ಸದ್ದಿಗೇ. ಮಧ್ಯೆ ಏನಾದೀತೋ ಯಾರು ಬಲ್ಲರು? ಇವನ ನಿದ್ದೆಯಲ್ಲಿ ಆಗುವ-ಹೋಗುವ ವಿಷಯಗಳತ್ತ ಇವನ ಗಮನ ಅಷ್ಟಕಷ್ಟೇ. +“ಲೇ, ಜೋಕುಮಾರ! ನಡೀಲೆ ಒಳಕೆ, ಬಂದಾ ಇಲ್ಲಿ ಬಿಟಗಂಡು ದೊಡ್ಡದಾಗಿ!” ಅಂತಾ ಬೈಸಿಕೊಳ್ಳುವವರೆಗೂ ಇವ ಚಡ್ಡಿ ಹಾಕಿಕೊಂಡಾ ಆಸಾಮೀನೇ ಅಲ್ಲ. ಅದು ಒಂದು ಮಜವೇ ಇದ್ದಿರ ಬಹುದು – ಯಾರಿಗುಂಟು ಯಾರಿಗಿಲ್ಲ! ಅಷ್ಟೇ ಅಲ್ಲ, ಇವನಮ್ಮ ಇವನಿಗೆ ಕನಸು ಕಾಣುವುದನ್ನೂ ಹೇಳಿಕೂಟ್ಟಿದ್ದಾಳೋ, ಬಿಟ್ಟಿದ್ದಾಳೋ – ಕನಸು ಕಾಣುವುದರಲ್ಲಿ ಇವ ಮಹಾ ಮುಂದೆ. “ಬರೀ ಕರಿಂಡಿ ತಿನಬ್ಯಾಡಾ ಅಂತಾ ಎಸ್ಟ್ ಸತಿ ಹೇಳ್ಳಿಲ್ಲಾ, ಮೊಸರು ಹಾಕಿ ಕಲಸೋ ಮುಂಡೇದೇ” ಅಂತಾ ತಲೇಮೇಲೆ ಇವನಮ್ಮ ತಿವಿಯುವತನಕವೂ ಇವ ರೊಟ್ಟಿ ಒಂದು ಕಡೆ ತಾನು ಒಂದು ಕಡೆ ಎಂದು ಮುಗಿಸಿ ಏಳುವವ. ಅದು ಎಂತೆಂಥ ಕನಸು ಅಂದ್ರೆ – ದೊಡ್ಡ ಗವಾಸ್ಕರ್ ಆಗೋ ಕನಸು – ಸದಾ ಗೋಲಿಚೀಲ ಚಡ್ಡಿ ಜೇಬಲ್ಲಿ ಇಟ್ಟುಕೊಂಡು ತಿರುಗಿದ ಮಾತ್ರಕ್ಕೆ, ತನ್ನೆಲ್ಲ ಏಕಾಗ್ರತೆಯನ್ನು ಹಿಡಿದು ಗುರಿಯಿಟ್ಟು ಗೋಲಿ ಹೊಡೆದ ಮಾತ್ರಕ್ಕೆ ಕ್ರಿಕೆಟ್ಟಿನಲ್ಲಿ ಅದ್ಹೇಗೆ ಮುಂದೇ ಬಂದಾನು? ಅದು ಯಾರ್‍ಯಾರೋ ಕಿವಿಗೆ ರೇಡಿಯೋ ಆನಿಸಿಕೊಂಡು ಕಾಮೆಂಟ್ರಿ ಕೇಳೋರ್ ಹತ್ರ ಇವನದ್ದ್ಯಾವಾಗಲೂ ಒಂದೇ ಅಹವಾಲು: “ಆ ಗವಾಸ್ಕರ್ ಎಷ್ಟು ಹೊಡೆದ?” ಎಂದು. ತನ್ನ ತಂಡದವರೊಂದಿಗೆ ಹಾನಗಲ್ ತಂಕಾ ಸೈಕಲ್ ಮೇಲೆ ಹೋಗಿ ಇವ ಅಲ್ಲಿನವರ ಮೇಲೆ ಪಂದ್ಯ ಆಡಿ ಸೋತು ಬಂದದ್ದಿದೆ, ಯಾರು ಏನೇ ಹೇಳ್ಲಿ, “ಆ ಎರಡನೇ ಬ್ಯಾಟಿಂಗ್ ಮಾಡಿದ ಹುಡುಗ, ಭಾಳ ಛೊಲೋ ಆಡ್ತಾನ…”, ಅಂತ ಎಲ್ಲರಿಂದಲೂ ಅನ್ನಿಸಿಕೊಂಡಿದ್ದಿದೆ. ಇವ ಸೈಕಲ್ ನೀಕಿ ತುಳದೂ-ತುಳದೂ ಪ್ಯಾಂಟಿನ ಮುಕಳಿ ಹರಕೊಂಡು ಬಂದಿದ್ದು ಇರಲಿ, ರಾತ್ರೀಯೆಲ್ಲಾ ಕೈಗೆ ಕ್ರಿಕೆಟ್ಟಾಡೋ ಗ್ಲೌಸು ಹಾಕ್ಕೊಂಡು ಕನವರಿಸಿ-ಕನಸುಕಂಡು ಮಲಗಿ, ಬೆಳಕರಿಯೋತ್ಲು ದಡಕ್ಕನೆ ಎದ್ದು, ಮುಖಕ್ಕೆ ನೀರು ಹಾಕಿ ಇಪ್ಪತ್ತು ಮೈಲಿ ಸೈಕಲ್ ತುಳಕೊಂಡು ಹೋಗೋ ಇವನ ಪರಿ ಇವನಮ್ಮನಿಗೆ ಸೋಜಿಗ ಮೂಡಿಸಿದೆ. ಇವನಮ್ಮ ಇವನಿಗೆ ಹೈಸ್ಕೂಲು ವಿದ್ಯೆಯೇ ನೈವೇದ್ಯೆಯಾಗೋದನ್ನು ಕಂಡೂ-ಕಂಡೂ, “ನನಮಗನೇನಾದರೂ ಮುಂದೆ ಓದಿದ್ರೆ ಡೆಪ್ಟಿ ಕಲೆಟ್ರು ಆಗೋದಂತೂ ಗ್ಯಾರಂಟಿ” ಅಂತ ಪಕ್ಕದ ಮನೆ ಸರಸವ್ವನ ತಾವ ಹೇಳೋದನ್ನ ಇವ ಕೇಳದೇ ಇದ್ದರೂ ಕನಸು ಕಾಣುವ ಮಂಗ್ಯಾನಿಗೆ, ಗಾವಸ್ಕರ್ ಆಗಬಯಸುವವನಿಗೆ ಡೆಪ್ಟಿ ಕಲೆಟ್ರು ಆಗಲಾರನೆಂದು ಹೇಳೋರು ಯಾರು? ಹಂಗಂತ ಇವನಮ್ಮ ಬಿಟ್ಟಾಳೇ? ತೊಗರ್ಸಿ ಮಲ್ಲ್‌ಕಾರ್ಜುನನಿಗೆ ಮುಡಿಪು ಕಟ್ಟುವಳು, ದನದ ಆಸ್ಪತ್ರೆ ಹತ್ರದ ಚೌಡಮ್ಮನಿಗೆ ಕೋಳಿಯನ್ನೂ ಬಿಡುವಳು. ಆದರೆ ಈ ದರಬೇಸಿ ಹಾಳು ತಿರುಗುವುದನ್ನು ಇನ್ನೂ ಬಿಟ್ಟಿಲ್ಲ. +ಇವನಮ್ಮನಿಗೆ ಇವನ ಕಂಡರೆ ಅಗ್ದೀ ಜೋಪಾನ – “ಮಗಾ ಹೊಳೀ, ಕೆರೀ ಕಡಿಗಿ ಮಾತ್ರ ಹೋಗಬ್ಯಾಡಾ, ಅಲ್ಲಿ ಬಳ್ಳಿ ಕಾಲಿಗಿ ಕಟಗಂತಾವ, ಕೆಸರಿನೊಳ್ಗೆ ನೀ ಹೂತು ಹೋಗಿ, ಆ ಕುಂದಾಪುರದ ಸೇಸಯ್ಯ ಸತ್ತಂಗಾದೀ ಮತ್ತ” ಅಂತ ಯಾವುದೋ ಅವ್ಯಕ್ತ ಭಯವನ್ನು ಹೊರ ಹಾಕುವಳು. ಇವನು ಅಮ್ಮನ ಮಾತಿನ ಭಕ್ತ; ಹಂಗಂತ ಇವ ಎಲ್ಲೂ ಹೋಗಲ್ಲ, ಇವ ಎಲ್ಲೇ ಹೋಗೋದಿದ್ದರೂ ಅಮ್ಮನಿಗೆ ಹೇಳೇ ಹೋಗೋದೂ ಅಂತ ಏನೂ ಇಲ್ಲ! ಅಷ್ಟೂ ಅಲ್ಲದೇ ಇವ ಎಲ್ಲಾದರೂ ಹೊಕ್ಕಾನು – ಕರ್ನಾಟ್ಕ ಮಿಲ್ಲಿಗೆ ಹೋಗಿ, ಅಲ್ಲಿ ಇಮಾಮನ ಕಣ್ಣು ತಪ್ಪಿಸಿ, ಚಕ್ರಗಳೆಲ್ಲ ನಿಂತಿದ್ದು ಖಾತ್ರಿ ಮಾಡಿಕೊಂಡು ಸೇಂಗಾ ಸಿಪ್ಪೆ ತೆಗೆಯೋ ಮಿಷನ್ನಿಗೆ ಮೊಣಕೈ ಮುಣುಗೋ ತಂಕ ಕೈ ಹಾಕಿ, ಅಂಗಿ-ಚಡ್ಡಿ ಜೋಬುಗಳೆಲ್ಲವೂ ತುಂಬುವಷ್ಟು ಸೇಂಗಾ ತುಂಬಿಸಿಕೊಂಡು ಬರುವವ. ಇಲ್ಲಾ ಆ ಹಾಳು ಇಮಾಮ ಅಥವಾ ಅವನ ಜೊತೆಯ ಮಜೀದ ಇಬ್ಬರೊಲ್ಲೊಬ್ಬರಿದ್ದರೆಂದರೆ ಇವ ಸೀದಾ ಅವಲ್ಲಕ್ಕಿ ಮಾಡೋ ಶಿವಾನಂದಣ್ಣನ ಬಳಿಯೋ, ಅಕ್ಕಿ ಮಾಡೋ ಕೇಶವನ ಬಳಿಯೋ ಹೋಗಿ ನಿಂತು, ಇವನ ದರಬೇಸಿಯ ಪೋಸ್ ಕೊಟ್ಟು, ಒಂದ್ ಹಾಡ್ ಹೇಳಲೇ ಅನ್ನೋದೇ ಕಾಯ್ಕೊಂಡು “ಲವ್ ಮೀ ಆರ್ ಹೇಟ್ ಮೀ, ಕಿಸ್ ಮೀ ಆರ್ ಕಿಲ್ ಮೀ, ಓ ಡಾರ್ಲಿಂಗ್ ಪ್ಲೀಜ್ ಡೂ ಸಮ್‌ಥಿಂಗ್ ಟು ಮಿ! ಡುರ್‌ರ್‌ರ್ ಡುರ್‌ರ್‌ರ್ ಡುರ್‌ಓ” ಎಂದೋ ಅಥವಾ “ಚಿನ್ನಾ ಬಾಳಲ್ಲಿ ಈ ರಾತ್ರಿ ಬರದೂ ಇನ್ನೆಂದೂ ಕನಸೆಲ್ಲಾ ನನಸಾಗಿದೆ…” ಅಂದೋ, ಇನ್ಯಾವುದೋ ರಾಜ್‌ಕುಮಾರ್ ಹಾಡು ಹೇಳಿದನೆಂದರೆ ತೀರಿತು. ಇವನಿಗೆ ಮುಷ್ಟಿಗಟ್ಟಲೆ ತಾಜಾ ಅವಲಕ್ಕಿ ಸಿಕ್ಕೀತು. ಇವ ಹಿಟ್ಟು ಹಾಕಿಸಿಕೊಂಡು ಬರೋ ಮುಂದೆ ಆವಾಗಾವಗ ಸುಧಾ ಹೋಟ್ಲು ಕೋಟಿ ಸಿಕ್ತಾನೆ, ಅವ ತರೋದು ಏನು ಎಂದು ಇವನಿಗೆ ಮೊದಲೇ ಗೊತ್ತು – ಅವ ಒಳ್ಳೆ ಪುಟಾಣಿ ತರ್‍ತಾನೆ, ಎಲ್ಲರಿಗೂ ಅವನ ಚೀಲದ ಮೇಲೆ ಕಣ್ಣೇ, ’ಎಲ್ಲರೂ ಒಂದೊಂದು ಮುಷ್ಟಿ ತಗಂಡ್ರೂ ಕೋಟಿ ಏನು ಅನ್ನಲ್ಲ’ ಅನ್ನೊಷ್ಟರ ಮಟ್ಟಿಗೆ ಪಾಪದವ, ಅದರಲ್ಲೊಂದಿಷ್ಟು ಇವ ತಿಂದರೆ ಅವನಿಗೇನು ಕಮ್ಮಿ? ಪುಟಾಣಿ ತಿನ್ನಲು ಮುಂದೆ ಬರುವ ಜನ, ಅದೇ ಪುಟಾಣಿ ಹಿಟ್ಟು ಆದಮೇಲೆ ಹಿಟ್ಟನ್ಯಾಕೆ ಮುಕ್ಕಲಾರರು ಎಂಬುದು ಇವನಿಗೆ ಗೊತ್ತಾಗದ ವಿಚಾರ! +ಕಟ್ಟುಮಸ್ತಾಗಿ ಬೆಳೆದ ಇವನಮ್ಮನ ಮೇಲೆ ಊರಿನೋರೆಲ್ಲ ಕಣ್ಣ ಹಾಕೋದನ್ನು ಇವನು ಸಹಿಸಲಾರದ ಮಟ್ಟಿಗೆ ಬೆಳೆದಿದ್ದಾನೆ. ಈ ಹರಕಲು ನನ್ನ ಮಕ್ಕಳು ನಮ್ಮವ್ವನಿಗೆ ಏನೂ ಮಾಡಾಲಾರರು ಎಂದು ಇವನ ಗಟ್ಟಿ ನಂಬಿಕೆ. ಇಲ್ಲಾಂದ್ರೆ ಇವನಮ್ಮ ಮಂಜೂ-ಅಪ್ಪನಿಗೆ ಚಾಕೂ ಹಾಕೋಕ್ ಹೋದ ವಿಷಯ ಇಡೀ ಊರಿಗೆಲ್ಲ ತಿಳಿಯುತ್ತಿರಲಿಲ್ಲ. ಆದರೂ ಮೆಯಿನ್ ರೋಡಿನ ಹತ್ತಿರವೇ ಇರುವ ಇವನ ಮನೇ ಮುಂದೆ ತುಡುಗು ನಾಯಿಗಳಿಗೇನೂ ಕಡಿಮೆ ಇಲ್ಲ. ಹಂಗಂತಲೇ ಇವನಿಗೆ ಬಸ್ಸಿನ-ಲಾರಿಯ ಡ್ರೈವರ್ ಕಂಡಕ್ಟರ್‌ಗಳು ಗೊತ್ತು, ಮಿಲ್ಲಿನವರು ಗೊತ್ತು, ಮೇಷ್ಟ್ರುಗಳೂ ಗೊತ್ತು! ಈ ಊರಿನ ಕಚ್ಚೆಹರುಕ ನನ್-ಮಕ್ಕಳೆಲ್ಲರೂ ಒಂದು ರೀತಿಯಲ್ಲಿ ಇವನನ್ನು ಕಂಡು ಹಲ್ಲು ಗಿಂಜುವವರೇ. ಆದರೂ ಈ ಕಂಡ-ಕಂಡವರು ತರುವ ಸೀ-ಕಾರ ತಿಂಡಿಗೆ ಬಗ್ಗದ ಇವ ಅವರು ತಂದು ನಿಲ್ಲಿಸುವ ಸೈಕಲ್ಲಿಗೆ ಸಲಾಮು ಹೊಡೆದಿದ್ದಿದೆ. “ಏ, ಬೀಳ್ಸ್‌ಬ್ಯಾಡಲೇ”, ಅನ್ನೋದನ್ನೂ ಕೇಳದೇ ಇವ ಆಗಲೇ ಅದನ್ನು ಚಲಾಯಿಸಿ ಆಯ್ತು! ಇವನಪ್ಪ ಹೊಂಟೇ ಹೋದ, ಅತ್ಲಾಗ ನೆಗದುಬಿದ್ದಾದರೂ ಹೋಗಿದ್ರೆ ಇವನಮ್ಮ ಯಾರನ್ನಾದ್ರೂ ಸೀರುಡಿಕೆಯನ್ನಾದರೂ ಮಾಡಕಬಹುದಿತ್ತು. ಅವ ಎತ್ಲಗೋ ದೇಶಾಂತರ ಹೋಗವನೆ – ಒಂದಿನ “ಕಾಪಿ ಸೀಮಿಗಿ ಗುಳೆ ಹೋಬತ್ತೀನಮ್ಮಿ” ಅಂದವ, ಇನ್ನೂ ಬಂದಿಲ್ಲ ಎಂದು ಇವನಮ್ಮ ಬಿಕ್ಕುವುದನ್ನು ಇವನು ಎಷ್ಟೋ ಬಾರಿ ಕೇಳಿದ್ದಾನೆ. ಇವನದ್ದು ಯಾವಾಗಲೂ ಪಿಚ್ಚೆನಿಸುವ ಮುಖ – ಅನಾಥನಲ್ಲದಿದ್ದರೂ ’ನಾನು ಬೇವರಸಿ’ ಎಂದು ಹಣೆಮೇಲೆ ಬರೆಸಿಕೊಂಡಂತೆ ದರಿದ್ರ ಮುಖ ಹೊತ್ತು ಎಲ್ಲೆಲ್ಲೂ ತಿರುಗುತ್ತಾನೆ. ಒಂದು ಅರ್ಥದಲ್ಲಿ ಇವನು-ಇವನಮ್ಮನಿಗೆ ಯಾರೂ ಇಲ್ಲದಿದ್ದರೂ – ಕೆಲವೊಮ್ಮೆ ಎಲ್ಲರೂ ಇರುವಂತೆ ಭಾಸವಾಗೋದು – ಇವನಿಗೂ ಸಾಕಷ್ಟು ಗೊಂದಲ ಹುಟ್ಟಿಸಿದೆ. “ನಮ್ಮವ್ವ ಹೇಳೇತಿ, ಸಂತಿಗೆ ಹತ್ತು ರೂಪಾಯಿ ಕೊಡಬೇಕಂತೆ” ಅಂತ ಇವನೇನಾದರೂ ಯಾರಲ್ಲಿಯಾದರೂ ಇವನ ಪಿಚ್ಚು ಮುಖ ಹೊತ್ತು ಅಂದಿದ್ದೇ ಆದರೆ “ತಕಾ” ಎಂದು ಹತ್ತು ರೂಪಾಯಿ ಬಿದ್ದಂತೆಯೇ, ಇವ ಅದನ್ನು ದುರುಪಯೋಗ ಮಾಡದೇ ಅಮ್ಮನಿಗೆ ಬಂದು ಕೊಡುವವ, ಅವನಮ್ಮ ಇವನಿಗೆ “ಇಕಾ, ಹಿಂದ್ ಕೊಟ್ಟ್ ಬಾ” ಎಂದು ಯಾವತ್ತು ಹೇಳಿದ ನೆನಪಿಲ್ಲ. ಇಂತವೆಲ್ಲದರ ಸಲುವಾಗಿಯೇ ಇವನು ಇನ್ನೂ ಬಲವಾದ ಹಗಲುಗನಸುಗಳನ್ನು ಕಾಣುವುದು. ತಾನು ಗೋಲಿಯಾಟದಲ್ಲಿ ನೂರು ರೂಪಾಯಿ ಗೆದ್ದಂತೆ, ಅವ್ವನಿಗೆ ಕೊಟ್ಟಂತೆ, ಇತ್ಯಾದಿ. ಕೆಲವೊಮ್ಮೆ ರಾತ್ರಿ ಮಲಗಿರುವಾಗ ಅವ್ವ ದುಡ್ಡಿಲ್ಲದೆ ಇಲ್ಲಾ ಎಂದು ಹೇಳಿದ ಲೇಖಕ್ ನೋಟ್ ಬುಕ್‌ಗಳೂ ಗುಡ್ಡೆಯಾಗಿ ಬೀಳುವುದನ್ನು ನೆನೆಸಿ ಇವ ನಿದ್ದೆಯಲ್ಲಿ ನಕ್ಕಿದ್ದಿದೆ. +ಮಾತಿಗಿಳಿದರೆ ಇವನಮ್ಮ ಜೋರೆ: “ಒಳ್ಳೇ ಬಂಗಾರದಂತ ಕೋಳಿ ಹುಂಜಾ ತೆಗೆದೆಯೆಲ್ಲೋ, ನಿನಮನೆ ಕಾಯೋಗ” ಅಂತಾ ಲಾರಿಯವರ ಹತ್ತಿರ ಗಲಾಟೆ ಮಾಡಿ ಇಪ್ಪತ್ತೈದು ರೂಪಾಯಿ, ಕೋಳಿ ಸಮೇತ ತಂದವಳೇ! ತೋಟ ಕಾಯೋ ಹುಡುಗನ್ನೇ “ನಿನ್ನ ಅಡಿಕೆಮರ ತಿನ್ನಾಕೆ ಬಂದಿಲ್ಲೋ, ಒಂದಿಷ್ಟು ಅಡಿಕಿ ಹಾಳಿ ತಗೊಂಡರ ನಿನ್ನ ಮನೀದೇನು ಹೋತು ಅಂತೀನಿ” ಅಂದು ಒಂದು ಗಟ್ಟಿ ಹೊರೆ ಅಡಿಕೆ ಹಾಳೆ ತೆಗೆದು ಕುಬಟೂರು ಕೆರಿಗೆ ಬಟ್ಟಿ ಒಗೆಯಾಕೆ ಹೋದಾಗೆಲ್ಲ ಇವನ ತಲೀಮೇಲೆ ಹೊರಿಸಿ ಕಳಿಸವಳೆ. “ಎಲ್ಲಾರ ಮಿಕ-ಗಿಕ ಹೊಡದ್ರ ಒಂತುಂಡು ತಂದುಕೊಡೋ” ಎಂದು ಕೊರಚರ ನಾಗ್ಯಾನ ಜಾಡಿಸಿದವಳೇ. “ಎಲ್ಲಾರ ಹತ್ತ್‌ಮೀನು ಹೊಡದ್ರ, ಇತ್ಲಾಗೊಂದು ತಂದು ಹಾಕು ಎಂದು ಕೂಣಿ ಹೋರುವ ಮೈಲಾರಿಯನ್ನು ಅವಾಗಾವಾಗ ತಡಕುತ್ತಾಳೆ. ಜಗಳಕ್ಕಿಳಿದರಂತೂ ಎಲ್ಲರೂ ಹೆದರುವಂತೆ ಗುರ್ರ್ ಅನ್ನೋದನ್ನ ಕೇಳಿ “ನನ್ನಮ್ಮನಾ ಇವಳು!” ಎಂದು ಇವನು ಕುಮಟಿ ಹಾರಿದ್ದಿದೆ…ಇವಳ ಪರಾಕ್ರಮಗಳು ಇನ್ನೇನೇನೋ. ಇವಕ್ಕೆಲ್ಲ ತದ್ವಿರುದ್ಧವಾಗಿ ಇವ ಜೋಬದ್ರನಾಗಿ ಯಾರು ಏನೇ ಹೇಳಿದರೂ ತಲೆ ಆಡಿಸುವವ, ಇನ್ನೂ ಜೋರಾಗಿ ಮಾತಾಡಿದ್ರ ಕಣ್ಣಾಗ ನೀರು ಹಾಕುವ ಸೋಗಲಾಡಿಯಾಗಿ ಹುಡುಗಿಯ ಮನಸ್ಸಿನ ಹುಡುಗನಾಗಿ ಬೆಳೆದವ. +ಯಾವತ್ತೋ ಸ್ಕೂಲಿಗೆ ಹೋಗುವ ಇವನನ್ನ ಗೋಳು ಹೋಯ್ಕೊಳ್ಳೋರು ಯಾರು? ಇವನ ಗೋಳು ಹೊಯ್ಕೊಂಡವರಿಗೂ ಇವನು ಕಣ್ಣೀರು ಸುರಿಸಬಲ್ಲ ಪ್ರವೀಣ ಎಂದು ಗೊತ್ತಾಗಿಯೋ ಏನೋ ಹಾರಿ ಕುಣಿದಾಡುವ ಹುಡುಗರಿಗೆಲ್ಲಾ ಇವನೆಂದರೆ ಒಂದು ರೀತಿಯ ದೂರ. ಇನ್ನು ಇವನ ಮನೆ ಕೆಂಪು-ಬಿಳಿ ಹುಂಜವ ಕೂಡಿ ಐದಾರು ಕೋಳಿ ಮರಿಗಳು, ಯಾವಾಗ ನೋಡಿದರೂ ಇವನಂತೆಯೇ ಬಾಲವಾಡಿಸೋ ಒಂದು ನಾಯಿ, ಇವನ ಮನೆ, ಇವನ ಗೋಲಿಗಳು, ಕೊಳೆಯಾದ ಪಾಟಿ-ಪುಸ್ಕದ ಚೀಲ, ಮತ್ತೆ ಇವನಮ್ಮ ಇಷ್ಟನ್ನು ಬಿಟ್ಟರೆ ಇವನಿಗ್ಯಾರೂ ಇಲ್ಲ. ಗಾವಾಸ್ಕರ್ ಆಗೋ ಕನಸೇನಾದರೂ ಹೊತ್ತು ಇವ ದಿನವಿಡೀ ಕ್ರಿಕೆಟ್ ಅಂತಾ ನಿಂತನೋ “ಸಿಕ್ಕ-ಸಿಕ್ಕ ಹುಡ್ರು ಜೋಡಿ ಕ್ರಿಕೆಟ್ ಆಡಿ ಬಿಸಿಲಿನಲ್ಲಿ ಸಾಯ್‌ಬ್ಯಾಡಾ ಅಂತ ಎಷ್ಟ್ ಸತಿ ಹೇಳಿಲ್ಲಾ?” ಎಂದು ಅಪರೂಪಕ್ಕೊಮ್ಮೆ ಇವನಮ್ಮನ ಕೈಯಿಂದ ಇವ ಹೊಡೆತದ ರುಚಿ ನೋಡಿದ್ದೂ ಇದೆ! ಒಂದು ದಿನ ಜ್ಯೋತಿ ಮೇಷ್ಟ್ರು ಮತ್ತೆ ಯಲ್ಲಪ್ಪನಿಗೆ ಆದ ಸಂಭಾಷಣೆ ಇವನನ್ನು ಹೊಸ ಗುಂಗಿನಲ್ಲಿ ನಿಲ್ಲಿಸಿದೆ – “ನಿನ್ನೆ ಯಾಕೋ ರಾತ್ರಿ ಬರೆದಿಲ್ಲ?” ಅಂತಾ ಕೇಳಿದ ಪ್ರಶ್ನೆಗೆ “ಇನ್ನೊಂದ್ ಸರ್ತಿ ಸಿನಿಮಾಕ್ಕೆ ಹೋಗಿದ್ದೆ, ಸಾ…” ಎಂಬ ಎಲ್ಲಪ್ಪನ ದಿಟ್ಟ ಉತ್ತರಕ್ಕೆ, “ಅದರಾಗೆ ಏನ್ ನೋಡಾಕೆ ಹೋಗಿದ್ಯಪಾ, ಪದೇ-ಪದೇ ನೋಡಂತದ್ದೇನೇತಿ?” ಅಂದ್ರೆ “ಸಿಲ್ಕ್ ಸ್ಮಿತಾ ಮಲಿ ನೋಡಾಕ್ ಹೋಕವಿ!” ಎಂದಂದು ಕಿಸಕ್ಕನೆ ನಕ್ಕು ಅವನೇನೋ ಕಪಾಳ ಮೋಕ್ಷ ಮಾಡಿಸಿಕೊಂಡ, ಜೊತಿ ಹುಡುಗರೆಲ್ಲಾ “ಭಾಳ್ ಧೈರ್‍ಯಾಲೇ, ನಿಂಗ” ಅಂತ ಏನೋ ಅವನ್ನ ಹೊಗಳಿದರು, ಆದರೆ ಅಂದಿನಿಂದ ಇವನಿಗೂ ಏನೋ ತನ್ನೊಳಗೆ ಕಸಿವಿಸಿ ನಡೆಯುತ್ತಿದೆಯೆನಿಸಿ, ’ಯಲ್ಲಪ್ಪ ಏನಂದ’, ’ಯಾಕಾದ್ರೂ ಹಂಗಂದ’, ’ಅದರಗೇನೈತಿ’, ಅಂತ ಗಂಟೆಗಟ್ಟಲೆ ವಿವೇಚನೆ ಮಾಡಿದ್ದಿದೆ. ಹಿಂಗೇ ಒಂದ್ ಸತಿ ಅದ್ಯಾವುದೋ ಮಲಯಾಳೀ ಸಿನಿಮಾ ಸೆಕೆಂಡ್ ಶಿವುಗೆ ಇವ್ನೂ, ಯಲ್ಲಪ್ಪನೂ, ಶ್ರೀಕಾಂತನೂ ಹೋಗಿ, ಇವರು ನೆಲದಾಗ ಕುಂತು, ಅಲ್ಲಿಂದಲೇ ಕುರಚಿ ಸಾಲಿನಾಗ ಕುಂತ ಸೇಕರಪ್ಪ ಮೇಷ್ಟ್ರು, ಗುಬ್ಬಿ ಮೇಷ್ಟ್ರು ಕಂಡು, ನಾವು ಅವರಿಗೆಲ್ಲಿ ಕಂಡೇವೋ, ನಮ್ಮವ್ವಗೆಲ್ಲಿ ಹೇಳ್ತಾರೋ ಅಂತ ಎಷ್ಟೋ ಸತಿ ಬೆಚ್ಚಿ ಬಿದ್ದು, ಇನ್ಯಾವತ್ತೂ ಈ ನನ್ ಮಕ್ಳ ಸವಾಸ ಮಾಡಲ್ಲಪ ಅಂತ ಗಟ್ಟಿಯಾಗಿ ಹೇಳಿಕೊಂಡಿದ್ದೂ ಇದೆ. ಹಂಗೂ-ಹಿಂಗೂ ನಿಧಾನವಾಗಿ ಕೂದಲು ಮೂಡೋ ವಯಸ್ಸಿನಲ್ಲಿ ಬೆನ್ನು ಹುರಿಯಲ್ಲಿ ಮಿಣ್ಣಗೆ ಸುಖದ ಚಳಿಯ ಅನುಭವ ಅಪರೂಪಕ್ಕೆ ಆಗಿದ್ದೂ ಇದೆ. +ಈ ನನ ಮಗನ ಕಣ್ಣು ಛೊಲೋ ಇಲ್ಲ, ಇವನಮ್ಮ ಬಾಳ್ ಒಳ್ಳೇಕಿ, ಅಕಿ ಇವನ ಮುಂದೆ ಬಟ್ಟಿ ಬದಲಾಯಿಸಿದ್ರು, ಈ ನನಮಗ ಜೋಬದ್ರಗೇಡಿ ಹಿಂಗೆಲ್ಲಾ ಯೋಚಿಸ್ತಾನ ಅಂತ ಅಕಿಗ್ಹೆಂಗರ ಗೊತ್ತಾಗಬೇಕು? ಅಕಿನೂ ಶುದ್ಧ ಮನಸ್ಸಿನವಳೇ, ಸಿವನೇ ಅನ್ನುವವಳೇ. ಯಾಕೋ ನನಮಗ ಒಂದೇ ಸುಮ್ಕೆ ಕೂರ್‍ತದೆ ಅಂತಾ ಏನೂ ಮಾಡೋ ಮನಸ್ಸಿಲ್ಲಾಂತಲ್ಲ ಅಕಿಗೆ. ಅಕಿ ಕಷ್ಟ ಅಕಿಗೆ – ಬೆಳಗ್ಗಿಂದ ಸಂಜೀತನ ಕಳಿ ತೆಗೆದು, ರೊಕ್ಕ ತಂದು ಮನೀ ಕೆಲಸ ಮುಗುಸುದರಾಗ ಅಕಿಗೂ ಸಾಕಾಗಿ ಹೋಗಿರತದ, ಇನ್ನು ಅಕಿಗೆ ಈ ಚಿಗುರು ಮೀಸಿ ಮೂಡೋ ಜೋಬದ್ರಗೇಡಿದೆಲ್ಲಿ ಚಿಂತಿ? ಅಕಿ ಎರಡು ತುತ್ತು ತಿಂದು ಇವನಿಗೆರಡು ತುತ್ತು ಹಾಕಿ ಎಲ್ಲಾ ಒಪ್ಪಾ ಮಾಡಿ, ಉಸ್ಸಪ್ಪಾ ಅಂದು ಕಣ್ಣುಮುಚ್ಚೋದೊರೊಳಗ ಮತ್ತ ನಾಳಿನ ಚಿಂತೆ ಹತ್ತೋದು ಅಲ್ದ ಕೋಳಿ ಹುಂಜ ಕೂಗೋದೂ ತಡ ಇಲ್ದಂಗಾಗಿ ಮತ್ತ ಓಡಾಟ ತಪ್ಪಿದ್ದಲ್ಲಾ. +* +* +* +“ನಿಮ್ಮವ್ವ ಕುಬಟ್ರು ಕೆರಿ ತವ ಸತ್ತ್ ಬಿದ್ದತಿ…ಜನ ಎಲ್ಲ ಸೇರ್‍ಯಾರೇ, ಲೊಗು ಬಾ” ಎಂದು ಯಲ್ಲಪ್ಪ ಬಂದು ಕರೆದಾಗ ಇವನಿಗೆ ದಿಕ್ಕೇ ತಪ್ಪಿದಂತಾಯಿತು. ಹೋಗಿ ನೋಡುವುದರೊಳಗೆ ಎಲ್ಲ ಮುಗಿದು ಹೋಗಿತ್ತು, ಪೋಲೀಸಿನವರು ಬಂದು ಕೆಲ್ಸ ಶುರು ಹಚ್ಚಿಕೊಂಡಿದ್ದರು, ಸಂಗಣ್ಣನೋ ಇನ್ಯಾರೋ ಇವನನ್ನು “ಸಣ್ಣ ಹುಡುಗ್ ರೀ, ಗರ ಬಡದಾನು” ಅಂತ ಹತ್ತಿರವೂ ಬಿಡಲಿಲ್ಲ. ಮೊದಲೇ ಗೊಲ್ಲಿ ಈಗಂತೂ ಹಡದಾಳ ಎಂಬಂತೆ ಮೊದಲೇ ಮೌನಿಯಾದ ಇವ ಈಗ ಮಹಾಮೌನಿಯಾದ, ಅವ್ವ ಹಿಂಗೇಕೆ ಆದಳು ಎಂಬುದು ತಿಳಿಯಲಾರದ ನಿಗೂಢತೆಯಾಗಿ, ಯೋಚಿಸಿದಂತೆಲ್ಲ ಆಳವಾಗತೊಡಗಿತು. ಜನ ಮಾತಾಡಿಕೊಳ್ಳುವಂತೆ ಇವನ ಕಿವಿಗೆ ಬಿದ್ದಿದ್ದು ಇಷ್ಟು – “ಯಾರೋ ಬಡ್ದು ಹಾಕಿರಬೇಕು”, “ಇಲ್ಲಾದ್ದು ಮಾಡಬಾರ್‍ದ ಮಾಡಿ ಅಕಿನೇ ಜೀವ ಕಳಕಂಡಿರಬೇಕು, ನಮಗ್ಯಾಕೆ ಯಾರ್‍ದೋ ವಿಷಯ?…” ಎಂದೋ, ಇನ್ನೂ ಏನೇನೇನೋ. ಊರವರೆಲ್ಲ ಬಂದರು, ಇವನನ್ನು ಬೋನಿನ್ಯಾಗಿರೋ ಕರಡೀನ ನೋಡಿದಂತೆ ನೋಡಿದರು, “ಪಾಪ, ಛೇ” ಎಂದರು, “ಹುಡುಗ ಸಣ್ಣವನಾದರೂ, ಭಾಳಾ ಶ್ಯಾಣ್ಯಾ ರೀ” ಎಂದು ಹೊಗಳಿ ಕಕ್ಕುಲಾತಿ ತೋರಿಸಿದರು. ಎಲ್ಲಿದ್ದಳೋ ಇಷ್ಟು ದಿನ, ಚಿಗವ್ವ ತನ್ನ ಪರಿವಾರದೊಂದಿಗೆ ಬಂದು ಇವನನ್ನು ಕೂಡಿಕೊಂಡಳು. ಈಗ ಇವನಿಗೆ ತನ್ನವ್ವ ಬಿಟ್ಟು ಹೋದ ಜೋಪಡಿಯೊಂದಿಗೆ ಚಿಗವ್ವನ ಸಂಸಾರದ ಜೊತೆಯೂ ತಗ್ಗಿ-ಬಗ್ಗಿ ನಡೆಯುವಂತಾಯಿತು. +* +* +* +ಇವನಪ್ಪ ಕಾಣೆಯಾಗಿ ಇಂದಿಗೆ ಎಷ್ಟೋ ವರುಷವೋ ಕಳೆದಿರಬಹುದು, ಅದು ಇವನಿಗೆ ಗೊತ್ತಿಲ್ಲ, ಆದರೆ ಇವನಮ್ಮ ಇಲ್ಲವಾದಾಗಿನಿಂದ ಇದು ನಾಲ್ಕನೇ ಸಲ ಊರಿನ ಜಾತ್ರೆ ಸೇರುತ್ತಿರುವುದುಂಬುದು ಇವನಿಗೆ ನಿಕ್ಕಿ ಜ್ಞಾಪಕಕ್ಕಿದೆ. “ವರುಸ ಇಪ್ಪತ್ತಾದರೂ, ಇದ್ಯಾಕಲೇ ಮಂಕನಂಗಿದ್ದೀಯಾ” ಎಂದು ಯಾರೋ ಹೇಳುವುದನ್ನು “ದಿಕ್ಕಿಲ್ಲದ ಹುಡುಗ ಬಿಡು” ಎನ್ನುವ ಅನುಕಂಪದ ನೆಲೆಯಲ್ಲಿ ಇವ ಕೇಳಿಸಿಕೊಳ್ಳುವುದೂ ಇಲ್ಲ. “ಒಂದು ಮದುವಿ ಮಾಡ್ರಿ, ಎಲ್ಲ ಸರಿ ಹೋಕಾನ” ಅಂತಾ ಯಾರೋ ಅಂದ್ರು ಅಂತ “ಮದುವಿಗೆ ನಾವೇ ಎಲ್ಲ ಸೇರಿಸಿ ಮಾಡುತೀವಿ, ಏನಾದರೂ ಹೇಳೋ” ಎಂಬ ಚಿಗವ್ವನ ಮಾತಿಗೆ ಇವ ಒಂದೇ ಸುಮ್ಕಿರುತ್ತಾನೆ, ಇಲ್ಲಾ ಅಲ್ಲಿಂದ ಕಾಲ್ತೆಗೆಯುತ್ತಾನೆ. ತನ್ನವ್ವನ ತೊಟ್ಟಾಕಿಕೊಂಡು ಮಲಗುತ್ತಿದ್ದ ದಿನಗಳು ಎಷ್ಟೊಂದು ಚಂದಿತ್ತು ಅಂತ ಈಗಲೂ ಹನಿಗಣ್ಣು ಮಾಡ್ಕ್ಯತಾನೆ. ಬಿಳಿ-ಕೆಂಪು ಹುಂಜ ಈಗ ಮುದಿಯಾಗಿದೆ – ಅದರ ಮರಿಗಳೂ ಅದರಷ್ಟೇ ಎತ್ತರ-ದೊಡ್ಡದಾಗಿವೆ, ಇವನ ಗೋಲಿ-ಬುಗರಿಗಳನ್ನು ಯಾರೋ ಕಂಡವರ ಮಕ್ಕಳು ಆಡಿಕೊಳ್ಳೋದು ಇವನಿಗೇನು ಕಿರಿ-ಕಿರಿ ಮಾಡಲ್ಲ. ಇವನ ಹರಕು ಪಾಟೀ-ಚೀಲ ಇವ ಯಾವ ಗೂಟಕ್ಕೆ ನೇತು ಹಾಕಿದ್ದನೋ ಅಲ್ಲಂತೂ ಇಲ್ಲ. ಇವ ಗುಡಿತಾವ ಇರೋ ಹಳ್ಳದ ದಂಡೇಲಿ ಸುಮ್ಕೆ ಕುಂತಾಗ ಅಲ್ಲಿ ಬಂದ ಶಂಕ್ರ “ನಿನ ಕೈಲಿ ಬರೀ ಚಿಂತಿ ಮಾಡಕ ಬರತ್ತ ನೋಡು, ಅದನ್ನೇನಾರ ಚಿಂತನೆ ಅಂತ ತಪ್ಪು ತಿಳಕೊಂಡಿ ಮತ್ತ” ಅಂತ ಕಿಚಾಯಿಸಿ ನಗುತ್ತಾನೆ, ಅವನ ನಗು ತಿಳಿನೀರಲಿ ಕಲ್ಲು ಬಿದ್ದು ಏಳಿಸಿದ ಅಲೆ ಮುಂದೆ ಹರಿದು ಮಂದ ಆಗುವಂತೆ ಮಾಯವಾಗುತ್ತದೆ. ಇವ ಗುಡಿಕಡೆ ಒಮ್ಮೆ ನೋಡಿ, ಇನ್ನೂ ಕತ್ತಲಾದರೆ ಚಿಗವ್ವ ಬೈತಾಳೆ, ಅಂತ ಕೈಲಿದ್ದ ಕೊನೇ ಕಲ್ಲನ್ನು ನೀರಿಗೆ ಎಸೆದು, ಅದರಿಂದೆದ್ದ ಅಲೆಗಳನ್ನು ನೋಡುತ್ತ ಮನೆಕಡೆಗೆ ಮುಖ ತಿರುಗಿಸುತ್ತಾನೆ. +***** +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_351.txt b/Kannada Sahitya/article_351.txt new file mode 100644 index 0000000000000000000000000000000000000000..3f96f40b85d93210b7bbaf35a1523d8267135881 --- /dev/null +++ b/Kannada Sahitya/article_351.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ +ಗುಬ್ಬಿ ಗೂಡು ಕಟ್ಟಿದೆ. +ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. +ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ +ಬರೀ ಎರಡು ರೆಕ್ಕೆ +ಅಡಿಗೆಯ ಮನೆಗೂ ಬಂದು ಕುಟುಕುತ್ತದೆ +ಅನ್ನದ ಅಗಳು- +ಬರ್ರನೆ ಹೊರಗೆ ಹಾರಿ, ಆರಿಸಿ ಹುಲ್ಲಿನ ಹುಳು +(ಈ ಶಾಕಾಹಾರಿ) +ಸರ್ರನೆ ಬರುತ್ತದೆ ಮರಳಿ, ಮರ-ಮರಳಿ +ಕಿಟಕಿಯ ಸರಳಿಗೆ ಕುಳಿತು, ಚಕಮಕ ಹೊರಳಿ +ತೂರಿಬಂದು, ಚಿಂವ್ ಚಿಂವ್ ಮರಿಗೆ ಗುಟುಕಿಟ್ಟು +ಹಾರಿ ಹೋಗುತ್ತದೆ, ಹೀಗೆ ಎಷ್ಟೋ ಬಾರಿ. +ಗುಬ್ಬಿಯ ಪುಟ್ಟ ಆಕೃತಿ +ಮರೆಯಾಗಿ +ತಾಯಿಯ ವಿಶಾಲ ಹೃದಯದಲ್ಲಿ +ಕರಗಿ +ಹೋಗುತ್ತೇನೆ ನಾನು ಜೀವಂತವಾಗಿ. +***** +೧೯೭೪ +ಹವೆ ಹೊತ್ತಿಸುವ ಬಿಸಿ ಬಿಸಿಲು ಬೆಂಕಿ ಬೇಸಗೆ ಧಗೆ ಅಲವರಿಕೆಯಲ್ಲಿ ತಣ್ಣನೆ ಒರೆದಂಗಳಕ್ಕೆ ಮೈ ಚಾಚುವ ಹಿಗ್ಗು ಗಡಚಿಕ್ಕುವ ಧೋಮಳೆ ನಡುಕ ಒದ್ದೆ ಮುದ್ದೆಯ ನಡುವೆ ಒಳಕೋಣೆಯ ಬೆಚ್ಚನೆ ಮೂಲೆ ಲಾಟೀನ ಕೆಳಗೆ ಮಗ್ಗಿ […] +ಚನ್ನವೀರ ಕಣವಿ ಕೊಡೆ ಹಿಡಿಯುತ್ತೇವೆ: ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು ಸಿಡಿಸುವ ಕೊಳೆಗೆ, ಆಗದವರು ಎದುರಿಗೆ ಬಂದಾಗ ಮರೆಗೆ- ಹೊತ್ತು ಬಂದಂತೆ. ಮತ್ತೊಬ್ಬರ ತಲೆಗೆ ನೆರಳು ಮಾಡುವ ಉಸಾಬರಿಗೆ ಹೋಗಿ ಚುಚ್ಚುತ್ತೇವೆ; ಮೆಚ್ಚುತ್ತೇವೆ: ಹೆಣ್ಣು […] +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_352.txt b/Kannada Sahitya/article_352.txt new file mode 100644 index 0000000000000000000000000000000000000000..358a76d70913b963725583d36d8966986bc3f468 --- /dev/null +++ b/Kannada Sahitya/article_352.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ +ಬಡಬಡಿಸಿ ಅಟ್ಟುಂಡುದೇನು ಜೀವ? +ದಿನಬೆಳಗು ಅವರಿವರ ಬಾಯಮಾತಿನ ಕಂತೆ +ಮೋಡಿಯಲಿ ಕಳೆದರೇನೆದೆಯ ನೋವ? +ತಲೆಗೊಂದು ನುಡಿಯುವರು, ಪಂಥವನೆ ಹೂಡುವರು +ತಾವೆ ಅತಿರಥರೆಂತದು ಸಾರುತಿಹರು; +ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ +ತಥ್ಯವಿಲ್ಲದ ಹೊಟ್ಟ ತೂರುತಿಹರು. +ಗಂಭೀರ ಗಿರಿಯೆದುರು ಬಿರುಗಾಳಿ ಗುಲ್ಲು. +ತುಂಬಿದಂಬರದಲ್ಲು ಶಾಂತಮಯ ಸೊಲ್ಲು. +ಮೌನ-ಗಾನ-ಧ್ಯಾನ ತವಸಿಯಂತಾಗು +ಬಾಳಿನುಯ್ಯಾಲೆಯನು ತಾಳ್ಮೆಯಲ್ಲಿ ತೂಗು. +***** +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […] +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_353.txt b/Kannada Sahitya/article_353.txt new file mode 100644 index 0000000000000000000000000000000000000000..e209f74807a410def204f445c47f26505b7f5abe --- /dev/null +++ b/Kannada Sahitya/article_353.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕವಿತೆ ಬರೆಯುತ್ತೇನೆಯೆ ನಾನು? +ಇಲ್ಲ ಬಿಡು +ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ +ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ +ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ +ನೀನೇನೋ ಅಂದುಕೊಂಡಿದ್ದೀಯ +ಎಂದು ಅವರಂತಾಗಲು +ವ್ಯಕ್ತಿತ್ವ ಸ್ಖಲಿಸಿಕೊಂಡು +ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ. +ತಪ್ಪಿಸಿಕೊಳ್ಳುತ್ತ +ಹಗುರು ನೆವಗಳ ಕೊರತೆ +ಹಗಲೆಲ್ಲ ನಾನಾಗಿ ಹೊದ್ದುಕೊಳ್ಳುತ್ತೆ +ಹಾಲು ಮಗುವಿನ ಹಿತ ಭೇದಿಯಲ್ಲಿ +ಬಾಲಿಶಬಾಲ್ಯ ಮುತ್ತಿಕ್ಕಿ ಅದ್ದಿಕೊಳ್ಳುತ್ತೆ +ಜತೆಗೆ ಹಿಂದಿನ ಗೋಲಿಗಳೆಲ್ಲ +ಇಂದಿನ ನೀನಾಗಿ ಹರಡಿಕೊಳ್ಳುತ್ತೆ +ಯಾವುದಕ್ಕೂ ಬೇಕು ನೋಡು ಒಂದು ಇತಿಹಾಸ +ಒಪ್ಪಿಕೊಳ್ಳಲಿ ಬಿಡಲಿ +ನಾನೀಗಲು ಮಗುವಾಗಲಾರೆ +ಅವಾಸ್ತವ ನಗುವೂ ಆಗಲಾರೆ +ಆದಷ್ಟು ಯತ್ನಿಸುತ್ತೇನೆ ನೋಡು +ನೀನಾಗಲು +ತಪ್ಪಿದರೆ ನಿನ್ನ ಬಗೆಗಿನ ನನ್ನ ಕವಿತೆಯಾಗಲು. +***** +ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ ನೋಟ ನಿಬ್ಬೆರಗಿನಲಿ, ನೀರವದಲಿ; ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_354.txt b/Kannada Sahitya/article_354.txt new file mode 100644 index 0000000000000000000000000000000000000000..0bdc0ba0a53c5be14af2e96a24cb2907d7c15d96 --- /dev/null +++ b/Kannada Sahitya/article_354.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಣ್ಣು ಮುಟ್ಟುವವರೆಗೂ ನೋಡಿದರೆ ಬೆಂಗಳೂರಿನ ರೋಡಿನಲ್ಲಿ ದಿನಾಲೂ ಟ್ರಾಫಿಕ್ ಜಾಮನ್ನೇ ಕಾಣುವ ಎಸ್.ವಿನಾಯಕ ದಂಪತಿಗಳಿಗೆ ಈ ಭರತಪುರ ದಾಟಿದ ನಂತರ ರೋಡ್ ಮೇಲೆ ಸಿಕ್ಕ ಹೊಂಡದಿಂದ ಹಂಡೆಯ ಒಳಗಿನ ಇಲಿಯ ಸ್ಥಿತಿ ಆಗಿದೆ. ಅವರಿದ್ದ ಕಾರು ಒಂದೇ ಸಮನೆ ಅವರನ್ನು ಎತ್ತಿ ಹಾಕುತ್ತಿದೆ. ಹೊಟ್ಟೆ ಪಕ್ಕೆಲಬುಗಳು ನೋಯಲಾರಂಭಿಸಿವೆ. ಅಸಾಹಯಕತೆಯಿಂದ ತೀರ ಚಿಕ್ಕದಾದ ಸಿಟ್ಟು ಬಂದಿದೆ. ಕಣ್ಣು ಮುಟ್ಟುವವರೆಗೂ ಆ ರಸ್ತೆ ನೋಡಿದರೆ ದೊಡ್ಡ ದೊಡ್ಡ ಉಬ್ಬು ಹೊಂಡಗಳು ಸಮುದ್ರದ ಅಲೆಗಳಂತೆ ವಿಶಾಲವಾಗಿ ಕಂಡಿವೆ. ೩ನೇ ತರಗತಿ ಇತಿಹಾಸದಲ್ಲಿ ಭರತಪುರದ ರಾಷ್ಟ್ರೀಯ ಉದ್ಯಾನದ ಬಗ್ಗೆ ಓದುವಾಗ ಈ ಶ್ರೇಷ್ಠ ರಸ್ತೆಗಳ ಬಗ್ಗೆ ನಾವ್ಯಾಕೆ ಓದಿಲ್ಲ?, ನಮ್ಮ ಊರಿನ ಮೇಲೆ ಹಾದು ಹೋಗುವ ಈ ರಾಜಸ್ಥಾನದ ಟ್ರಕ್ಕುಗಳಿಗೆ ಈ ರಸ್ತೆಯಲ್ಲಿ ಎಷ್ಟು ಕಷ್ಟ ಆಗಿರಲಿಕ್ಕೆ ಸಾಕು ಎಂದುಕೊಂಡ ವಿನಾಯಕ. ವಿನಾಯಕ ದಂಪತಿಗಳು ಮದುವೆಯಾಗಿ ಕೇವಲ ೨ ವರ್ಷಗಳಾದವು. ಕಳೆದ ನಿನ್ನೆಯೆ ಅವರ ಮದುವೆಯ ೨ನೇಯ ವಾರ್ಷಿಕ ದಿನ. ಇದರ ನೆನಪಿಗಾಗಿಯೇ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದು. ಬಣ್ಣದ ಜೈಪುರಿ ನೋಡಿ ಈಗ ಅವರು ಫತೇಪುರ ಸಿಕ್ರಿಯ ಕಡೆಗೆ ಹೊರಟಿದ್ದಾರೆ. +ಮೂಲತ: ವಿನಾಯಕ ೧೭ನೇ ಹೆದ್ದಾರಿಯಲ್ಲಿ ಸಿಗುವ ಹೊನ್ನಾವರದ ಹತ್ತಿರದ ರಾಮತೀರ್ಥದವರು. ಎಷ್ಟೋ ಬಾರಿ ಊರಿನ ಜನ ಎಸ್. ವಿನಾಯಕ ಅಂದರೆ ಸಿದ್ದಿ ವಿನಾಯಕನೇ ಎಂದು ಕೇಳಿದ್ದುಂಟು. ಈ ಮೀಸಲಾತಿ, ಬ್ರಾಹ್ಮಣರ ಕಷ್ಟ, ಅರಿತ ತಂದೆ ಮಹಾಬಲೇಶ್ವರ ಶಾಸ್ತ್ರಿಗಳು, ಶಾಸ್ತ್ರಿ ಎಂಬ ಪದ ಮಗನ ಹೆಸರಿನಲ್ಲಿ ಗೊತ್ತಾಗದಂತೆ ಎಸ್.ಎಂಬ ಪದ ಮೊದಲೇ ಸೇರಿಸಿದ್ದಾರಂತೆ. ಕೆಲವರು ಊರಿಗೆ ಪತ್ರ ಹಾಕುವವರು ಎಸ್.ವಿನಾಯಕ ಶಾಸ್ತ್ರಿ ಎಂದೂ ಹಾಕುವುದುಂಟು. ಹೆದ್ದಾರಿ ಸರಿ ಮಾಡಲೆಂದು ಜೆಲ್ಲಿ ಕಲ್ಲು ಹಾಕಿದಾಗಲೆಲ್ಲಾ ಬಚ್ಚಲು ಮನೆ ಗಟ್ಟಿಮಾಡಿಕೊಳ್ಳುವ ವಿದ್ವಾನ್ ಶಾಸ್ತ್ರಿಗಳು ಹತ್ತಿರದ ಕಡತೋಕದ ಸಂಸ್ಕೃತ ಪಾಠಶಾಲೆಯಲ್ಲಿ ಮಾಸ್ತರುರಾಗಿ ನಿವೃತ್ತರಾದವರು. ಮಗ ವಿನಾಯಕ ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ತನ್ನ ಬರವಣಿಗೆಯನ್ನು ಜನ ಗಮನಿಸಬೇಕೆಂದು ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಮಲ್ಯರ ಚುನಾವಣಾ ಪ್ರಚಾರ, ಅಶ್ವಥ್ಥರ ಕನ್ನಡವೇ ಸತ್ಯ ಕಾರ್ಯಕ್ರಮ, ಮೊನ್ನೆಯ ೧೫ ವರ್ಷಕ್ಕೆ ಹುಡುಗಿಯರು ಮದುವೆಯಾಗ ಬಹುದು ಎಂಬ ಸುದ್ದಿ ಪ್ರಕಟಿಸಿದವರು ಇವರೇ. +ರಸ್ತೆಯ ಹಂಪುಗಳ ಮಹಾಪುರ ಮುಗಿಯುತ್ತಿದ್ದಂತೆ ಟಿನ್ ಟಿನ್ ಎಂಬ ಎಸ್.ಎಮ್.ಎಸ್. ಶಬ್ದಗಳಿಂದ ಎಲ್ಲರ ಮೊಬೈಲ್ ಪೋನು ಬೆಳಕಿನಿಂದ ಬೆಳ್ಳಗಾಯಿತು. ಕಾರು ಓಡಿಸುತ್ತಿದ್ದ ಪಿ.ಕೆ.ಮೇಹ್ತ, “ಸರ್, ನಾನು ಹೆಚ್ಚಾಗಿ ಡೆಲ್ಲಿಯಲ್ಲಿ ಬಾಡಿಗೆ ಕಾರು ಓಡಿಸುತ್ತೇನೆ. ಪ್ರತಿ ೪೦ ಕಿ.ಮೀ.ಗೂ ಒಂದು ರಾಜ್ಯ ಬರುತ್ತದೆ. ಅಲ್ಲಿ ದಿನ ನಾನು ೩ ರಾಜ್ಯಗಳಿಗೆ ಹೊಕ್ಕುತ್ತೇನೆ ಹೊರಬರುತ್ತೇನೆ. ಪ್ರತೀ ಸಾರಿ ಈ ನನ್ನ ಮೊಬೈಲ್ ‘ವೆಲ್ ಕಂ ಟು ಉತ್ತರಪ್ರದೇಶ್’, ‘ವೆಲ್ ಕಂ ಟು ಹರಿಯಾಣ’ ಎಂದು ಹೇಳುತ್ತಿರುತ್ತದೆ. ನನಗಂತೂ ತಲೆ ಚಿಟ್ಟು ಹಿಡಿದು ಹೋಗಿದೆ. ಸರ್ ಇದನ್ನು ಬಂದು ಮಾಡುವ ಸೆಟ್ಟಿಂಗ್ ಗೊತ್ತಾ” ಎಂದ. “ಮೊಬೈಲ್ ಕಂಪನಿಯವರಾದರೂ ನಿನಗೆ ಪ್ರೀತಿಯಿಂದ ಪ್ರತಿ: ಸಾರಿ ಸ್ವಾಗತಿಸುತ್ತಾರಲ್ಲಾ, ಅವರಿಗಾದರೂ ನೀವು ಧನ್ಯವಾದ ಹೇಳಬೇಕು” ಎಂದು ವಿನಾಯಕ ಶಾಸ್ತ್ರಿ ಹೇಳುತ್ತಿದ್ದಂತೆ ಸ್ವಲ್ವ ಜೋರಾಗಿ ಹೋಗುತ್ತಿದ್ದ ಕಾರಿಗೆ ಒಂದಿಬ್ಬರು ಅಡ್ಡ ಕಟ್ಟಿದಂತೆ, ಕೈಯಲ್ಲಿ ಜೋರಾಗಿ ಬಡಿದಂತೆ ಆಯಿತು. ಗಾಬರಿಯಿಂದ ವಿನಾಯಕ ಪಕ್ಕಕ್ಕೆ ನೋಡುವುದರ ಒಳಗೆ ಡ್ರೈವರ್ ಪಿ.ಕೆ. ರವರು “ಗೈಡ್‌ಗಳು ಸಾರ್. ಫತೇಪುರ ಸಿಕ್ರಿ ತೋರಿಸುವವರು. ೨-೩ ಕಿ.ಮೀ ಕ್ಕಿಂತ ಮುಂಚೆ ಬರುವ ಕಾರುಗಳಿಗೆಲ್ಲ ಅಡ್ಡ ಕಟ್ಟಿ ನಾನು ಗೈಡಾಗಿ ಬರುತ್ತೇನೆಂದು ಒತ್ತಾಯದಿಂದ ಕಾರು ಮುಂದೆ ಹೋಗಲು ಕೋಡುವುದಿಲ್ಲ” ಎನ್ನತ್ತಿದ್ದಂತೆ ಫತೇಪುರ ಸಮೀಪಿಸಿತು. ದೊಡ್ಡ ದೊಡ್ಡ ಬಿಳಿಕೊಡೆ ಹೊತ್ತ ಮಹಾಧಾಕಾರದ ಗ್ಲಾಸಿನ ಬಾಕ್ಸಗಳಂತೆ ಕಾಣುವ ಬೆಂಗಳೂರು ಐ.ಟಿ. ಬಿಲ್ಡಿಂಗ್ ಕಂಡು ಬೇಸರ ಬಂದಿದ್ದ ವಿನಾಯಕ ದಂಪತಿಗಳಿಗೆ ಸ್ವಾಭಾವಿಕವಾಗಿ ಊರಿಗೆ ಊರೇ ಅಗಸದೆತ್ತರಕ್ಕೆ ಎದ್ದು ನಿಂತಂತೆ ಕಂಡು ದಸಕ್ ಆಯಿತು. ಇಬ್ಬರ ಕಣ್ಣು ಗುಡ್ಡೆಗಳು ಪೂರಾ ಫತೇಪುರವನ್ನು ಅವರಿಸಲು ತವಕಿಸಿದವು. ಖುಷಿ ಪ್ರೀತಿಯಿಂದ ವಿನಾಯಕ “ಅಲ್ಲಿ ನೋಡು ಅಲ್ಲಿ ನೋಡು” ಎನ್ನುತ್ತಲೇ ಹೆಂಡತಿಯ ತಲೆ ನೇವರಿಸುತ್ತಾ ತನ್ನ ಭುಜದ ಮೇಲೆ ಒರಗಿಸಿಕೊಂಡ, ಅವಳು ತಲೆಯನ್ನು ಒರಗಿಸಿಕೊಂಡೇ ಪೂರಾ ಊರನ್ನೆಲ್ಲಾ ದಿಟ್ಟಿಸತೊಡಗಿದಳು. +ಕಾರು ಕೋಟೆಯೊಳಗೆ ಹೊಕ್ಕುತ್ತಿದ್ದಂತೆ ಇನ್ನೊಂದು ಗುಂಪು ಅಡ್ಡಕಟ್ಟಿತು. ಕಾರಿಗೆ ಇದ್ದ ಎಲ್ಲಾ ಕಿಟಕಿಯಲ್ಲೂ ಒಬ್ಬೊಬ್ಬರು ಅವರವರ ಐಡೆಂಟಿಟಿಕಾರ್ಡ್ ತೋರಿಸಿ ನೂರು ರೂ.ದಿಂದ ಐವತ್ತು ರೂ.ಗೆ ಇಳಿದು “ಮೇಲೆ ಎಲ್ಲಾ ಕಡೆ ಪಾರ್ಕಿಂಗ್ ಫ್ರೀ ಮಾಡಿಸುತ್ತೇವೆ ಸಾರ್. ಕೆಲಸ ನೋಡಿ ನಂತರ ದುಡ್ಡು ಕೊಡಿ, ನೋಡಿ ಇದು ನನ್ನ ಐ.ಡಿ. ಕಾರ್ಡ್, ನಾವು ಸುಳ್ಳು ಹೇಳುವುದಿಲ್ಲ ನಮ್ಮೆಲ್ಲರ ಅಧಿಕೃತ ನೇಮಕಾತಿ ಆಗಿದೆ” ಎನ್ನುತ್ತಿದ್ದಂತೆ ಅವರಲ್ಲೇ ಒಬ್ಬ ನನಗೆ ಎಂ.ಎ. ಆಗಿದೆ. ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳು ನನ್ನ ಆಸಕ್ತಿ ಎಂದ, ಸೋತ ತಲೆಯನ್ನು ಭುಜದ ಮೇಲೆ ಒರಗಿಸಿ ಮುಖವನ್ನು ಸ್ವಲ್ವ ಎಳೆದುಕೊಂಡು ಸಮತೋಲನ ತಪ್ಪಿದ್ದಂತೆ ಮಾತನಾಡುವ ಆತನ ಕಡೆಗೆ ವಿನಾಯಕನ ಗಮನ ಹೋಯಿತು. ಈತ ನಮಗೆ ಈ ಸ್ಥಿತಿಯಲ್ಲಿ ಪೂರಾ ಫತೇಪುರ ತೋರಿಸಬಹುದೇ? ಎಂಬ ಸಂಶಯದಿದ್ದರೂ ಈತನ ಪ್ರೋಫೈಲ್ ವಿನಾಯಕ ದಂಪತಿಗಳಿಗೆ ಇಷ್ಟವಾಯಿತು. ಸರ್ ನನ್ನ ಹೆಸರು ಮೊಹಮ್ಮದ್ ನಾನು ಬರುತ್ತೇನೆ ಎನ್ನುತ್ತಿದ್ದಂತೆ ಈತನನ್ನೇ ಕರೆದುಕೊಂಡು ಹೊರಟರು. +ಅಕ್ಬರ್‌ನ ರಾಜಧಾನಿಯಾದ ಫತೇಪುರ್ ಸಿಕ್ರಿ ೧೫೭೨ ರಲ್ಲಿ ಕಟ್ಟಲು ಪ್ರಾರಂಭಿಸಿದರು. ಇಲ್ಲಿ ರಾಜಧಾನಿ ಮಾಡಿಕೊಂಡ ಮೇಲೆ ಆತ ತನ್ನ ಖಡ್ಗವನ್ನು ಗೋಡೆಯ ಮೇಲೆ ಒರಗಿಸಲೇ ಇಲ್ಲ. ಈ ಸಮಯದಲ್ಲಿ ಗುಜರಾತ್, ಬೆಂಗಾಲ್, ಬಿಹಾರ್, ಒರಿಸ್ಸಾ, ಕಶ್ಮೀರ ದಿಂದ ಲಾಹೋರ್‌ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. “ಸೋಲೇ ಕಾಣದ ಲಕ್ಕಿ ಜಾಗ್ ಸರ್ ಅದು” ಎಂದು ಗೈಡ್ ಹೇಳಿದ. ಈ ಮೇಲಿನ ಗೋಪುರಗಳು ಕಾಣುತ್ತಿವೆಯಲ್ಲ. ಅವುಗಳಲ್ಲಿ ರಾತ್ರಿ ದೀಪ ಹಚ್ಚುತ್ತಿದ್ದರು ಇಲ್ಲಿ ನೋಡಿ ಎಡಕ್ಕೆ ಅಕ್ಬರನ ವಂಶಸ್ಥರ ಗೋರಿಗಳು, ಹೆಂಗಸರನ್ನೆಲ್ಲ ಒಳಗೆ, ಗಂಡಸರನ್ನೆಲ್ಲ ಹೊರಗೆ, ಸಮಾಧಿ ಮಾಡಿದ್ದಾರೆ ಎನ್ನುತ್ತಿದ್ದಂತೆ ಬದುಕಿದ್ದಾಗಂತೂ ಹೊರಗೆ ಕಾಣದ ಹೆಂಗಸರನ್ನು, ಸತ್ತ ಮೇಲೂ ಒಳಗೆ ಶಾಶ್ವತವಾಗಿ ಮಲಗಿಸಿದ್ದನ್ನು ನೋಡಿ ವಿನಾಯಕನಿಗೆ ದು:ಖವಾಯಿತು. +ಈ ಸುರಂಗ ನೋಡಿದಿರಾ, ಇದೇ ಸುರಂಗದಿಂದ ಸರ್ ಫತೇಪುರ ದಿಂದ ಲಾಹೋರ್ ಗೆ ಹೋಗಬಹುದು. ಇದು ಅಗ್ರಾವನ್ನೂ ಜೋಡಿಸುತ್ತದೆ. ಅನಾರ್‌ಕಲೀಯನ್ನು ಇದರಲ್ಲೇ ಸಾಗಿಸಿದ್ದು ಎಂದ. ಥಟ್ಟಂತ ವಿನಾಯಕನ ಹೆಂಡತಿ “ಈಗ ಅದು ಓಪನ್ ಇದೆಯಾ? ಈಗ ಸರ್ಕಾರದ ಪ್ರಣಾಳಿಕೆಯಲ್ಲಿರುವ ಇರಾನ್ ನಿಂದ ಭಾರತಕ್ಕೆ ಎಳೆಯುವ ಇಂಧನದ ಪೈಪನ್ನು ಇದರ ಮೂಲಕವೇ ಹಾಕಬಹುದಲ್ಲ! ” ಎಂದು ಹೇಳಿದಳು. +ಒಂದಾದ ಮೇಲೋಂದು ಮೂರು ಮಕ್ಕಳನ್ನು ಕಳಕೊಂಡ ಅಕ್ಬರ್‌ನಿಗೆ ಎಷ್ಟು ರಾಜ್ಯವನ್ನು ಗೆದ್ದರೂ ಎಲ್ಲವೂ ಶೂನ್ಯವಾಗಿ ಕಂಡಿತು. ರಣತಂಬೂರು ಗೆದ್ದು ನೇರವಾಗಿ ಸಿಕ್ರಿಯಲ್ಲಿರುವ ಸೂಫಿ ಸಂತ ಸಲೀಂ ಕ್ರಿಸ್ತಿಯಲ್ಲಿ ಮಕ್ಕಳನ್ನು ಕರುಣಿಸು ಎಂದು ಅಶೀರ್ವಾದ ಬೇಡಲು ಹೋದ. ಸಂತ ಕ್ರಿಸ್ತಿಯ ಅಶೀರ್ವಾದದಿಂದ ಒಂದಲ್ಲ ಮೂರು ಮಕ್ಕಳಾದವು. ಅಕ್ಬರ್‌ನ ಖುಷಿಗೆ ಪಾರವೇ ಇರಲಿಲ್ಲ. ಕೃತಜ್ಞ ಭಾವದಿಂದ ಅಲ್ಲಿ ಒಂದು ದೊಡ್ಡ ಮಸೀದಿ ಕಟ್ಟಲು ಪ್ರಾರಂಭಿಸಿದ. ೧೫೭೨ರಲ್ಲಿ ಸಂತ ಕ್ರಿಸ್ತಿ ದೈವಾಧೀನರಾದ ಮೇಲೆ ಅವರ ಸಮಾಧಿಯನ್ನು ಈ ಮಸೀದಿಯ ಅಂಗಣದಲ್ಲೇ ಕಟ್ಟಲಾಯಿತು. “ನೋಡಿ ಗಂಡಸರು, ಹೆಂಗಸರು, ಆ ಕಿಟಕಿಯ ಕಿಂಡಿಗೆ ದಾರವನ್ನು ಕಟ್ಟುತ್ತಿದ್ದಾರೆ. ಮಕ್ಕಳಿಲ್ಲದವರು ಈ ಕಿಟಕಿ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥವು ಪೂರೈಸುತ್ತದಂತೆ. ಸರ್ ನೀವೂ ಹೋಗಿ ದಾರ ಕಟ್ಟಿ ಬನ್ನಿ, ನಾನು ಇಲ್ಲೇ ಹೊರಗೆ ನಿಲ್ಲುತ್ತೇನೆ” ಎಂದ ಗೈಡ್. ವಿನಾಯಕ ದಂಪತಿಗಳಿಗೆ ಕಣ್ಣು ತುಂಬಿ ಬಂತು. ಸಮಾಧಿಯ ಸುತ್ತಲಿನ ಕಿಟಕಿಗಳಲ್ಲಿನ ಸಾವಿರಾರು ರಂಧ್ರಗಳು ಸಾವಿರಾರು ಕನ್ನಡಿಗಳಂತೆ ಕಂಡವು. ಒಂದೊಂದು ಕನ್ನಡಿಯೂ ಒಂದೊಂದು ಮನೋಕಾಮನೆಗಳನ್ನು ಹೇಳತೊಡಗಿತು. ತಾನಸೇನ ಕೂಡುವ ಜಾಗದಲ್ಲೇ ಕುಂತ ಸೂಫಿ ಹಾಡುಗಾರರು ‘ಕೃಪಾಕರೋ ಮಹಾರಾಜ’ ಹಾಡುತ್ತಾ ಸಮಾಧಿಯ ಎದುರು ಕುಂತಿದ್ದರು. ಒರಗಿದ ತಲೆ ಎಳೆದುಕೊಳ್ಳವ ಮುಖ ಸಮತೋಲನ ತಪ್ಪಿದಂತೆಯೇ ನಡೆಯುತ್ತಾ ಬಹಳಷ್ಟು ಸಮಯದಿಂದ ವಿವರವಾಗಿ ಫತೇಪುರ್ ಸಿಕ್ರಿಯ ಬಗ್ಗೆ ಹೇಳುತ್ತಿರುವ ಗೈಡ್ ಹತ್ತಿರ ವಿನಾಯಕನ ಹೆಂಡತಿಗೆ ಏನೋ ಕೇಳಬೇಕೆಂದೆನಿಸಿತು. ಪಾಪ ಬೇಸರ ಆಗಬಹುದೇನೋ ಎಂದು ಕೊಳ್ಳತ್ತಲೇ “ಮೊಹಮ್ಮದ್ ನೀನು ಆ ಕಿಟಕಿಗೆ ದಾರ ಕಟ್ಟಿಲ್ಲವೇ? ನಿನ್ನ ಈ ತೊಂದರೆಗೆ ದೇವರು ಕಿವಿಗೊಡಲಿಲ್ಲವೇ” ಎಂದು ಸಣ್ಣ ಧ್ವನಿಯಲ್ಲೇ ಕೇಳಿದಳು. “ನನಗೆ ಮೊದಲಿನಿಂದಲೂ ಈ ಜಾಗವೆಂದರೆ ಬಹಷ ಇಷ್ಟ. ನಾನು ಸಣ್ಣವನಿದ್ದಾಗ ಇದೇ ಮೆಟ್ಟಿಲ ಮೇಲೆ ಫತೇಪುರ ಸಿಕ್ರಿ ಗ್ರೀಟಿಂಗ ಕಾರ್ಡ್, ಕ್ಯಾಲೆಂಡರ್ ಮಾರುತ್ತಿದ್ದೆ. ಸಂದರ್ಶಕರನ್ನು ಹಿಂಬಾಲಿಸುತ್ತಾ ಅವರ ಕೈ ಜೋಲುತ್ತಿದ್ದೆ. ಶಾಲೆ ತಪ್ಪಿಸುತ್ತಿರಲಿಲ್ಲ. ಮಧ್ಯಾಹ್ನದ ಶಾಲೆ ಗ್ಯಾಪ್‌ನಲ್ಲಿ ಇಲ್ಲಿ ಬಂದು ಬಿಡುತ್ತಿದ್ದೆ. ನಾನು ಕಾಲೇಜಿನಲ್ಲಿರಬೇಕಾದರೆ ಈ ತೊಂದರೆ ಕಾಣಿಸಿಕೊಂಡಿತು. ನಮ್ಮೂರ ಡಾಕ್ಟರ್ ನಿನಗೆ ಸ್ಟ್ರೋಕ್ ಆಗಿದೆ ಅಂದೇ ಸುಮಾರು ವರ್ಷ ಕಳೆದರು. ಹಿಂದಿನ ವರ್ಷ ಒಬ್ಬ ಜರ್ಮನ್ ಸಂದರ್ಶಕ ಬಂದಿದ್ದ. ಆತ ಡಾಕ್ಟರ್ ಅಂತೆ, ಅವನನ್ನು ನಾನೇ ತೋರಿಸಲು ಕರೆದುಕೊಂಡು ಹೋಗಿದ್ದೆ. ಆತನೇ ನಿನಗೆ ಸ್ಟೋಕ್ ಅಲ್ಲ, ಅದು ಪಾರ್ಕಿನ್ ಸನ್ ಕಾಯಿಲೆ ಅಂದ. ನಮ್ಮೂರ ಡಾಕ್ಟರ್ ಹತ್ತಿರ ಮತ್ಯಾಕೆ ತಲೆ ಜಪ್ಪಿಸಿಕೊಳ್ಳಲಿ, ಎಂದು ಊರ ಗ್ರ್ರಂಥಾಲಯ, ಇಂಟರ್‌ನೆಟ್ ಮೂಲಕ ಸ್ವಲ್ಪ ಮಾಹಿತಿ ತಿಳಿದುಕೊಂಡೆ, ನನ್ನ ದೇಹದಲ್ಲಿ ‘ಡೋಪೋಮೈನ್’ ಎಂಬ ಕೆಮಿಕಲ್ ಕಡಿಮೆ ತಯಾರಾಗುತ್ತದಂತೆ. ಇದೇ ನಮ್ಮ ದೇಹದ ಮೂಮೆಂಟುಗಳನ್ನು ಸ್ಮೂತ್ ಮಾಡೋದು. ಇಲ್ಲದಿದ್ದರೆ ಇಡೀ ಜಗತ್ತಿನ ಎಲ್ಲಾ ಜೀವಿಗಳು ರೋಬೋಟ್ ಗಳ ತರಹ ನಡೆಯಬೇಕಿತ್ತು. ಚಿಕ್ಕ ಮಗು ಸುಮ್ಮನೆ ಬಂದು ಹಿಂದಿನಿಂದ ತಾಯಿಯನ್ನು ಹಿಡಿದುಕೊಳ್ಳುವುದು, ಮಲಗಿದವರ ಕಿವಿಗೆ ಮೆಲ್ಲಗೆ ಗರಿ ತಾಗಿಸುವುದು, ಮೆಲ್ಲಗೆ ಹೋಗಿ ಕಳ್ಳತನ ಮಾಡುವುದು ಆಗುತ್ತಿರಲಿಲ್ಲವೇನೋ. ನನಗೆ ಸಮಾಧಾನ ಎಲ್ಲಿದೆ ಅನ್ನುತ್ತೀರಿ. ಇದೇ ಕಾಯಿಲೆ ನನ್ನದೇ ಹೆಸರಿನ ಇನ್ನೊಬ್ಬನಿಗಿದೆ. ಆತ ವಿಶ್ವದ ಶ್ರೇಷ್ಠ ಬಾಕ್ಸಿಂಗ್ ಪಟು ಮೊಮಹ್ಮದ್ ಆಲಿ, ಅದು ಬಿಡಿ ನಮ್ಮ ಪೋಪು, ಹಿಟ್ಲರ್, ಡಾಲಿ, ಎಲ್ಲರಿಗೂ ಇತ್ತು. ಈ ಕಾಯಿಲೆ ಇದ್ದೂ ಬಹಳ ಸಾಧಿಸಬಹುದೆಂಬ ವಿಶ್ವಾಸ ಅವರೇ ತೋರಿಸಿಕೊಟ್ಟಿದ್ದಾರೆ. ಇದೆಲ್ಲ ಅದ ಮೇಲೆ ನಮ್ಮ ತಾಯಿ ನನ್ನನ್ನು ದೂರ ಕಳುಹಿಸಲು ಹೆದರಿದರು. ಅದಕ್ಕಾಗಿ ನಾನು ಇಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಜಗತ್ತಿನಲ್ಲಿ ‘ಡೊಪಮೈನ್’ ತುಂಬಿಕೊಂಡ ದೇಹಗಳೇ ಪಾರ್ಕಿನಸನ್ ಕಾಯಿಲೆ ಬಂದಂತೇ ಆಡುತ್ತವೆ ಅನ್ನುವುದೇ ನನಗೆ ಬೇಸರ. ನನ್ನ ವೈಯುಕ್ತಿಕ ವಿಚಾರ ಕೇಳಿ ಬೇಸರ ಬಂತೇನೋ. ಹೋಗಲಿ, ಆ ವಿಚಾರ ಬಿಡಿ, ನೀವು ಶಾರೂಖ್ ಖಾನ್, ಮಹಿಮಾ ಚೌಧರಿ ಚಿತ್ರ ಪರದೇಶ್ ನೋಡಿದ್ದೀರಾ, ಆ ಚಿತ್ರದ ಶೂಟಿಂಗ್ ಇಲ್ಲೇ ಆಗಿತ್ತು. ಆ ಚಿತ್ರದ ಚಿತ್ರೀಕರಣಕ್ಕೆ ಇಲ್ಲಿ ಎತ್ತರದ ಸ್ಟೇಜ್ ಕಟ್ಟಲಾಗಿತ್ತು. ನೋಡಿ ಹುಡುಗ, ಹುಡುಗಿಯರಲ್ಲ ಆ ಜಾಗದಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ” ಅನ್ನುತ್ತಾ ನಡೆದು ಬರುತ್ತಿದ್ದಂತೆ ಮಹಾದಾಕೃತಿಯ ದ್ವಾರ ಎದುರಾಯಿತು. ಕಂದಕವನ್ನು ಈ ಮಹಾ ಎತ್ತರದ ದ್ವಾರಕ್ಕೆ ಜೋಡಿಸುವ ಎತ್ತರದ ಮೆಟ್ಟಿಲುಗಳು ಒಂದು ಕಡೆ, ಅತೀ ಎತ್ತರದ ದ್ವಾರ ಇನ್ನೊಂದು ಕಡೆ, ತ್ರಿಶಂಕು ಸ್ಥಳದಿಂದ ಎರಡನ್ನೂ ವೀಕ್ಷಿಸುತ್ತಿರುವ ವಿನಾಯಕ ದಂಪತಿಗಳಿಗೆ ಒಮ್ಮಿಂದೊಮ್ಮೆ ಉಸಿರು ಕಟ್ಟಿದಂತಾಯಿತು. ಮಾತು ನಿಂತಂತಾಗಿ ಇಬ್ಬರೂ ಒಂದು ಸಾರಿ ಕಣ್ಣು ಮುಚ್ಚಿಕೊಂಡರು. ಚಲಿಸುವ ಮೋಡಗಳು, ಆ ದ್ವಾರವೇ ಚಲಿಸುತ್ತಿವೆ. ಈಗ ನಮ್ಮ ಮೈಮೇಲೆ ಬರಬಹುದೆಂಬ ಭ್ರಮೆ ಹುಟ್ಟಿಸುತ್ತಿದ್ದವು. ಪಕ್ಕದಲ್ಲಿದ್ದ ಗೈಡ್ “ಇದೇ ಬುಲಂದ್ ದರವಾಜಾ, ಅತೀ ಎತ್ತರದ ಹೆದರಿಕೆ ಹುಟ್ಟಿಸುವ ಮಹಾದ್ವಾರ, ಗುಜರಾತಿನ, ಶ್ರೀಮಂತ ಬಂದರುಗಳನ್ನು ಕಬಳಿಸಿದ ಖುಷಿಗೆ ಅಕ್ಬರ್ ಕಟ್ಟಿಸಿದ್ದು, ‘ಜಯದ ನಗರ’ ಫತೇಪುರ್ ಸಿಕ್ರಿ ಎಂದು ನಾಮಕರಣ ಮಾಡಿದ್ದು ಆಗಲೇ. ಸರ್ ನೀವು ಇಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವಾಗ ಹುಷಾರು ಅನ್ನುತ್ತಾ ಪಕ್ಕದ ಕೆರೆ ತೋರಿಸಿ ನೂರು ರೂ.ಕೊಟ್ಟರೆ ಒಬ್ಬ ಮೇಲಿನ ಗೋಪುರದಿಂದ ಕೆರೆಗೆ ಹಾರುತ್ತಿದ್ದ ಈಗ ಇಲ್ಲ. ಆತ ಹಿಂದಿನ ವರುಷ ತೀರಿಕೊಂಡ” ಎಂದ. ವಿನಾಯಕನ ಹೆಂಡತಿ ಸುಮ್ಮನಾಗದೇ “ಅದನ್ನು ಅವರ ಮಕ್ಕಳು ಯಾರೂ ಮುಂದುವರೆಸಿಕೊಂಡು ಹೋಗುತ್ತಿಲ್ಲವಾ? ” ಎಂದು ಅಧಿಕ ಪ್ರಸಂಗ ಮಾಡಿದಳು. +ಸುಮ್ಮನೆ ಇದ್ದ ವಿನಾಯಕ ಶಾಸ್ತ್ರಿ ಒಮ್ಮಿಂದೊಮ್ಮೆ ಮೊಹಮ್ಮದನಿಗೆ ಮುಖ ಮಾಡಿ, “ಇದೆಲ್ಲ ಸುಳ್ಳಂತೆ ಅಲ್ವಾ? ” ಎಂದ, ವಿನಾಯಕನ ಹೆಂಡತಿಗೆ ಏನೂ ಅರ್ಥವಾಗದೇ ಇಬ್ಬರನ್ನೂ ಆಶ್ಚರ್ಯದಿಂದ ದಿಟ್ಟಿಸಿತೊಡಗಿದಳು. ಗಂಭೀರದ ಧ್ವನಿಯಲ್ಲೇ “ಹೌದು ಸಾರ್, ನಿಮಗೆ ಗೊತ್ತಲ್ಲ ಸುಳ್ಳು ಅಂತ, ಹಾಗಾದರೆ ನೀವ್ಯಾಕೆ ಇಲ್ಲಿ ಬಂದಿದ್ದೀರಿ? ಸರ್ ನನಗೂ ಎಂ.ಎ. ಆಗಿದೆ, ನಾನು ಈ ಜಾಗದ ಬಗ್ಗೆ ಬಹಳ ಅಭ್ಯಸಿಸಿದ್ದೇನೆ. ಇಂತಹ ಆಧ್ಬುತ ಸ್ಥಳವನ್ನು ಶಾರೂಖ್ ಖಾನನ್ ಶೂಟಿಂಗ್ ಉದಾಹರಣೆಗೆ ತೆಗೆದುಕೊಂಡು ತಿಳಿಸಿ ಹೇಳಲು ನನಗೂ ನಾಚಿಕೆಯಾಗುತ್ತದೆ, ಏನು ಮಾಡಲೀ ಕೆಲವು ಸಾರಿ ಸತ್ತ ಗುಂಪುಗಳಾಗಿ ನನ್ನನ್ನು ಕೇಳಿಸಿಕೊಳ್ಳತ್ತಿರುತ್ತವೆ. ಶಾರೂಖ್ ಖಾನ್‌ನ ಸುದ್ದಿ ಹೇಳಿದ ಮೇಲೆ ಒಮ್ಮಿಂದೊಮ್ಮೆ ಜನರೆಲ್ಲ ಅಲ್ಲಿ ಪೋಟೋ ತೆಗಿಸಿಕೊಳ್ಳಲು ಶುರು ಹಚ್ಚಿಕೊಳ್ಳುತ್ತಾರೆ. ‘ಅಕ್ಬರ್ ಈ ಫತೇಪುರ ಸಿಕ್ರಿಯನ್ನು ದೇವಸ್ಥಾನ ಅಡಿಮಾಡಿ ಕಟ್ಟಿದ್ದಾನೆ. ನಮಗೆ ಒಂದು ಸರಸ್ವತಿಮೂರ್ತಿ ಕೂಡಾ ಸಿಕ್ಕಿದೆ’ ಎಂದು ಅರ್ಕಿಯಾಲಜಿ ಇಲಾಖೆ ಹೇಳಿ ‘ನಮಗೆ ನಿಮ್ಮ ನಂಬಿಕೆಯನ್ನು ಹಾಳುಮಾಡಬೇಕೆಂಬುದಲ್ಲ. ಅದರೆ ಸತ್ಯ ತಿಳಿಸಬೇಕೆಂಬ ಆಸೆ’ ಎಂದಿತು. ಎಲ್ಲಾ ಧರ್ಮವನ್ನು ಒಟ್ಟು ಮಾಡಿ ಸಮಾನತೆ ಸಾಧಿಸಬೇಕೆಂತಲೇ ಬೇರೆ ಧರ್ಮಗಳ ಸ್ತ್ರೀಯರನ್ನು ಮುದುವೆಯಾದ ಅಕ್ಬರ್ ಆತನ ಮಗನ ಪ್ರೀತಿಯಾದ ಅನಾರ ಕಲಿಯನ್ನು ತಿರಸ್ಕರಿಸುತ್ತಾನೆಯೇ? ತಾನಸೇನನ ಸಂಗೀತದಿಂದ ಮಳೆ ದೀಪ ಆಗುತ್ತಿದ್ದರೆ ನೀರಿಲ್ಲದೇ ಬರಗಾಲದಿಂದ ಈ ಸ್ಥಳ ತತ್ತರಿಸಿ ೧೫ ವರ್ಷಗಳಲ್ಲೇ ಅಕ್ಬರ್ ರಾಜಧಾನಿಯನ್ನು ಲಾಹೋರಕ್ಕೆ ಸಾಗಿಸಬೇಕಿತ್ತೇ? ಎನ್ನುವ ಪ್ರಶ್ನೆಗಳು ನನಗೂ ಹುಟ್ಟುತ್ತವೆ. ಎಲ್ಲರೂ ಎಕೆ-೪೭ ತಯಾರಿಸಿದ ಕಲಾಶ್ನಿಕೋವಾನನ್ನು ಹಿಡಿದು ಬೈಯುತ್ತಾರೆ, ಆದರೆ, ಈ ಕಥೆಗಾರರನ್ನೇಕೆ ಹಿಡಿದು ಬೈಯುವುದಿಲ್ಲ? ತಮ್ಮ ಕಲ್ಪಿತ ವ್ಯಕ್ತಿಗಳನ್ನು ತೆಗೆದುಕೊಂಡು ನಿಜವಾದ ಇತಿಹಾಸ ಸ್ಥಳ ಮತ್ತು ವ್ಯಕ್ತಿಗಳೊಡನೆ ಹೆಣೆಯುತ್ತಾರಲ್ಲ? ಅದು ಮುಂದೊಂದು ದಿನ ನಂಬಿಕೆಯನ್ನೂ ಮೀರಿ ಗಂಡಾಂತರಕ್ಕೆ ಒಳಗಾಗುತ್ತವೆ ಎಂದು ಗೊತ್ತಿಲ್ಲವೇ, ಕಲ್ಪಿತ ವ್ಯಕ್ತಿಯು ನೂರು ವರ್ಷಗಳ ನಂತರ ನಿಜ ವ್ಯಕ್ತಿಗಳೊಡನೆ ಸೇರಿ ರಾಜ್ಯಭಾರವನ್ನೂ ಮಾಡಬಹುದು. ಪ್ರೀತಿಯನ್ನೂ ಮಾಡಬಹುದು, ಯುದ್ದವನ್ನೂ ಮಾಡಬಹುದು! ಪಾಪ ಶತಮಾನದ ನಂತರದ ಜನಾಂಗ ಈ ಕಲ್ಪಿತ ಕಥೆಯನ್ನು ಇತಿಹಾಸ ಎಂದು ತಿಳಿದು ಚಲನಚಿತ್ರವನ್ನೂ ಮಾಡಬಹುದು. ಅಮೇರಿಕದ ಬ್ರಾಡ್‌ವೇಯಲ್ಲಿ ಗೀತ ನಾಟಕವನ್ನೂ ಮಾಡಬಹುದು. ಅದಕ್ಕೆ ಫಿಲಂಫೇರ್, ಅಸ್ಕರ್ ಸಿಗಬಹುದು. ನೋಡಿದಿರಾ, ಇತಿಹಾಸದ ಮೇಲೊಂದು ಇತಿಹಾಸ, ನಮ್ಮ ಮೊಗಲ್-ಇ-ಆಝಂ, ಇಲ್ವಾ? ಬುಲಂದ್ ದರವಾಜಾದ ಮೇಲೆ ಅಂಟಿಸಿದ ವಜ್ರದ ಹರಳುಗಳು, ತಾಜಮಹಲ್‌ನ ತುದಿ ಗೋಪುರವನ್ನು ಬದಲಿಸಿದ್ದರಿಂದ ಹಿಡಿದು. ಇಡೀ ದೇಶವನ್ನೇ ಲೂಟಿ ಮಾಡಿ ಹೋದ ಅದೇ ಇಂಗ್ಲೀಷರು ಇಂದು ಇಲ್ಲಿಗೆ ಬಂದು ಇವನ್ನೆಲ್ಲಾ ನೋಡಿಕೊಂಡು ಹೋಗಿ ‘ಆಕ್ಬರ್‌ನಿಗೆ ಆ ಹೆಸರಿನ ಹೆಂಡತಿಯೇ ಇರಲಿಲ್ಲ, ಅನಾರ್‌ಕಲಿ ಅಕ್ಬರ್‌ನ ಹೆಂಡತಿ ಅದಕ್ಕಾಗೆ ಆತನ ಮಗ ಪ್ರೀತಿಸಿದ್ದಕ್ಕೆ ಸಿಟ್ಟಾಗಿದ್ದು, ಲಾಹೋರ್‌ನ್ನು ಜೋಡಿಸುವ ಸುರಂಗ ಇಲ್ಲವೇ ಇಲ್ಲ. ಇವೆಲ್ಲಾ ಬುಲ್‌ಶಿಟ್’ ಎಂದು ಬರೆಯುತ್ತಾರೆ. ಆದರೆ ೨೨೧ಬಿ, ಬೇಕರ್ ಸ್ಟ್ರೀಟ್ ನಲ್ಲಿರುವ ಕಲ್ಪಿತ ವ್ಯಕ್ತಿ ಶೆರ್ಲಾಕ್ ಹೋಂಮ್ಸ್‌ನ ಸ್ಮಾರಕಕ್ಕೆ ೧೦ ಪೌಂಡ್ ಕೊಟ್ಟು ನಿಜವೇ ಎಂಬಂತೆ ಕಣ್ಣು ತುಂಬಿಸಿಕೊಂಡು ಕ್ಯಾಮರಾವನ್ನ ತುಂಬಿಸಿಕೊಂಡು ಬರುವರಲ್ಲಾ? ನಮಗೆ ಹಿಂದಿನ ಗಂಡಾಂತರಕ್ಕಿಂತ ಈಗಿನ ಸೌಹಾರ್ದ ಮುಖ್ಯ. ಕೆಲವು ಸಾರಿ ಬೇಸರ ಆಗುತ್ತದೆ. ನಾನು ದಿನಾಲೂ ಸಾವಿರ ಜನರಿಗೆ ಸುಳ್ಳು ಹೇಳುತ್ತಿದ್ದೇನಲ್ಲಾ ಎಂದು, ನನ್ನದೇನು ಬಂತು, ಇಡೀ ದೇಶದ ತಂದೆ ತಾಯಿಗಳು ಮಕ್ಕಳನ್ನು ಕೂಡ್ರಿಸಿ ಇದೇ ಸುಳ್ಳನ್ನೇ ಹೇಳುತ್ತಾರಲ್ಲ. ನಿಮ್ಮ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ದಿನಾಲೂ ರಾತ್ರಿ ಕೃಷ್ಣ ಗೋಪಿಕಾ ಸ್ತ್ರೀಯರೊಡನೆ ನೃತ್ಯ ಮಾಡುತ್ತಾನೆ ಎಂದು ಒಂದು ಸುದ್ದಿ ಹಬ್ಬಿಸಿ; ನಾಳೆಯೇ ನೀವು ಅದರ ಎಂಟ್ರಿ ಫೀ ಹತ್ತು ಪಟ್ಟು ಹೆಚ್ಚಿಸಬಹುದು. ಅದಕ್ಕೇ ಹೇಳುವುದು ನಂಬಿಕೆ ಎಂದು, ಸ್ಪಲ್ಪ ಎತ್ತರದಿಂದ ಬಿದ್ದ ಅಬ್ಬಿಗೆ ರಾಮತೀರ್ಥ, ಲಕ್ಷ್ಮಣ ತೀರ್ಥ ಎಂದು ಕರೆದಿಲ್ಲವೆ? ಸ್ವಲ್ಪ ದೊಡ್ಡ ಹೊಂಡವಿದ್ದರೆ ಇಲ್ಲಿ ಭೀಮ ಗಧೆ ಊರಿದ್ದು ಎಂದು ಪೂಜಿಸಿಲ್ಲವೆ? ಇವೆಲ್ಲ ನಾವು ನಂಬಿಲ್ಲವೇ? ಅದರಂತೆ ನಾವು ತಾನಸೇನ್, ಅನಾರ್ ಕಲಿ, ಸುರಂಗವನ್ನೇಕೆ ನಂಬಬಾರದು. ಇವ್ಯಾಕೆ ನಮ್ಮ ಸುಂದರ ಸತ್ಯ ನೆನಪುಗಳಾಗಬರದು, ಸರ್ ನಮ್ಮದು ನಂಬಿಕೆಯ ಬದುಕು, ನಮ್ಮ ಸುತ್ತ ಎಷ್ಟು ಕಥಗಳಿವೆಯಲ್ಲ. ಸರ್ ನೀವೇ ಹೇಳಿ ನಮ್ಮ ಬದುಕು ವಾಸ್ತವವೋ, ಕಥೆಯೋ, ” ಎನ್ನುತ್ತಿದ್ದಂತೆ ಪೂರ್ತಿ ಕೇಳಿಸಿಕೊಂಡ ವಿನಾಯಕನ ಹೆಂಡತಿಗೆ ಮನತುಂಬಿ ಬಂತು, ಕಡತೋಕ ಸಂಸ್ಕೃತ ಪಾಠಶಾಲೆಯಲ್ಲಿ ಕಲಿಯುತ್ತಿದ್ದ ತನ್ನ, ಅಂಗವಿಕಲ ತಮ್ಮನ ನೆನಪಾಯಿತು. ಆತನದ್ದೇ ಕಣ್ಣು, ಮಾತನಾಡುವಾಗ ಕೈಮಾಡುವುದು, ಎಲ್ಲವೂ ಅವನದ್ದೇ, ಎಂದುಕೊಂಡಳು. “ಮಹಮ್ಮದ ನೀವೂ ದಾರಕಟ್ಟಿ ನಿಮ್ಮ ಸಂಗಡ ನಾವೂ ಬರುತ್ತೇವೆ” ಎನ್ನುತ್ತಿದ್ದಂತೇ. ಮಕ್ಕಳ ಗುಂಪೊಂದು ಬಂದು ಕ್ಯಾಲೆಂಡರ್, ಪೋಟೋ, ತಗೋಳ್ಳಿ, ಕೇವಲ ೧೦ ರೂ ಎಂದು ವಿನಾಯಕ ದಂಪತಿಗಳನ್ನು ಆವರಿಸಿತು. ಅದರಲ್ಲೇ ಒಬ್ಬ ಹುಡುಗ ‘ಮೈ ಏಕ್ ಶೇರ್ ಸುನಾವು’ ಎಂದ, “ಅವರು ತೆಗೆದುಕೊಳ್ಳವುದಿಲ್ಲ ಎಂದರಲ್ಲ ಅವರಿಗೆ ಲೇಟಾಯ್ತು, ದಾರಿ ಬಿಡಿ, ದಾರಿ ಬಿಡಿ” ಎಂದು ಗೈಡ್ ಮಹಮ್ಮದ್, ಸಲೀಂ ಕ್ರಿಸ್ಟಿಯು ಸಮಾಧಿಯ ಕಡೆ ಹೊರಟ ವಿನಾಯಕ ದಂಪತಿಗಳನ್ನು ಹಿಂಬಾಲಿಸಿದ. +***** +ವಿಷ್ಣುನಾಯ್ಕರ ಪ್ರಕಾಶನ ಹಾಗು ‘ಕಥನ’ ಕನ್ನಡ ಜಾಗತಿಕ ಕೂಟದವರು ಏರ್ಪಡಿಸಿದ್ದ ಯುಗಾದಿ ಸಣ್ಣಕತೆಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ. +ಅವನಮ್ಮ ಅವನನ್ನು ಬೆಳೆಸಿದ್ದೇ ಹಾಗೆ, ದುಡುಂ ದುಡುಂ ಧುಮುಕುವ, ಸ್ವಲ್ಪ ಹೊತ್ತು ಈಜುವ ಸಾಹಸ ಮಾಡಿದಂತೆ ಮಾಡಿ, ಓಡುವ ಪ್ರವೃತ್ತಿಯನ್ನು ಅವ ಇನ್ನೆಲ್ಲಿಯಿಂದಾದರೂ ಕಲಿಯಬೇಕಿತ್ತು? ಯಾಕೋ ಏನೋ ಯಾವುದರಲ್ಲಿಯೂ ನೆಲೆ ನಿಲ್ಲದವ, ಎಲ್ಲವನ್ನೂ ತನ್ನದು […] +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_355.txt b/Kannada Sahitya/article_355.txt new file mode 100644 index 0000000000000000000000000000000000000000..4642f6bfe1311a172e29bd2a6b0ce7de571f8b3d --- /dev/null +++ b/Kannada Sahitya/article_355.txt @@ -0,0 +1,277 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೧ +– ೧- +ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು ಚೆನ್ನಿಗರಾಯ, ಅಪ್ಪಣ್ಣಯ್ಯ. ರಾಮಣ್ಣನವರು ಫೌತಿಯಾಗಿ ಆಗಲೇ ಆರು ವರ್ಷವಾಯಿತು. ಎಂದರೆ ವಿಶ್ವೇಶ್ವರಯ್ಯನವರು ದಿವಾನ್ ಬಹುದ್ದೂರರಾದ ವರ್ಷ ಅವರು ಈ ಲೋಕ ಬಿಟ್ಟರು. ಆಗ ಅವರ ಹೆಂಡತಿ ಗಂಗಮ್ಮನಿಗೆ ಇಪ್ಪತೈದರ ವಯಸ್ಸು. ಜ್ಯೇಷ್ಠಪುತ್ರ ಚೆನ್ನಿಗರಾಯ ಒಂಬತ್ತು ವರ್ಷದವನು. ಎರಡನೆಯ ಅಪ್ಪಣ್ಣಯ್ಯನಿಗೆ ಏಳು. ರಾಮಣ್ಣನವರು ಸತ್ತಾಗಿನಿಂದ ಅವರ ವಂಶಪಾರಂಪರ್ಯವಾದ ಶ್ಯಾನುಭೋಗಿಕೆಯನ್ನು ಗ್ರಾಮದ ಪಟೇಲ್ ಶಿವಗೌಡನ ಭಾವಮೈದ ಶಿವಲಿಂಗೇಗೌಡ ನೋಡುತ್ತಿದ್ದಾನೆ. ಇನ್ನು ಮೂರು ವರ್ಷಕ್ಕೆ ಹದಿನೆಂಟನ್ನು ಮುಟ್ಟಿ ‘ಮೆಜಾಲ್ಟಿಗೆ’ ಗೆ ಬರುವ ಚೆನ್ನಿಗರಾಯ ತಂದೆಯ ಅಧಿಕಾರ ವಹಿಸಿಕೊಳ್ಳಬೇಕು. ಶ್ಯಾನುಭೋಗಿಕೆ ಮಾಡುವುದೆಂದರೆ ಕಡಿಮೆ ಕೆಲಸವೆ? ಅದಕ್ಕೆ ತಕ್ಕ ವಿದ್ಯೆ ಬೇಕು. ಜೈಮಿನಿಯನ್ನಾದರೂ ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಬಂದರೆ ಖಾತೆ ಖಿರ್ದಿ ಪಹಣಿ ಖಾನೀಶುಮಾರಿ ಲೆಕ್ಕಗಳು ತಿಳಿದಾವು. ಗ್ರಾಮದ ಕೂಲಿಮಠದ ಮೇಷ್ಟರು ಚಾತಾಳಿಗರ ಚೆನ್ನಕೇಶವಯ್ಯನವರ ಹತ್ತಿರ ಚೆನ್ನಿಗರಾಯನ ವಿದ್ಯಾಭ್ಯಾಸವಾಗುತ್ತಿದೆ. +ಹದುಮೂರು ವರ್ಷವಾದರೂ ಎರಡನೆಯ ಅಪ್ಪಣ್ಣಯ್ಯ ಮಠಕ್ಕೆ ಹೋಗಿಲ್ಲ. ಮರಳ ಮೇಲೆ ಶ್ರೀ ಓಂ ನಾಮ ತಿದ್ದಿಲ್ಲ. ಇನ್ನೂ ಮುಂಜಿಯೂ ಆಗಿಲ್ಲ. ‘ಅಪ್ಪಣ್ಣ, ಮಠಕ್ಕೆ ಹೋಗ್ತಿಯೋ ಇಲ್ವೋ?’-ತಾಯಿ ಸಿಟ್ಟು ಮಾಡಿಕೊಂಡು ಕೇಳಿದಳು. +‘ಹೋಗ್ದೇ ಇದ್ರೆ ನಿಂಗೇನಾಗುತ್ಯೇ ಕತ್ತೆಮುಂಡೆ?’-ಮಗ ನೆವರುದ. +‘ನನ್ನ ಮುಂಡೆ ಅಂತೀಯೇನೋ? ನಿನ್ನ ವಂಶ ನಿರ್ವಂಶವಾಗುತ್ತೆ ನೋಡ್ತಿರು ಸೂಳೇ ಮಗನೆ’-ತಾಯಿ ಎಂದಳು. +‘ನಿನ್ನ ವಂಶವೇ ನಿರ್ವಂಶವಾಗುತ್ತೆ ಕಣೇ’-ಎಂದು ಮಗ ಹೇಳುತ್ತಿರುವಾಗ ಹೊರಗಿನಿಂದ ನೀರುಗಂಟೆಯ ಮುದ್ದ ಬಂದ. ‘ನನ್ನ ಕತ್ತೆಮುಂಡೆ ಅಂತಾನೆ. ಈ ಮುಂಡೇಮಗನ್ನ ಹಿಡ್‌ಕಂಡ್ ಹೋಗಿ ಚೆನ್ನಕೇಶವಯ್ಯನೋರ ತವ ಕೂರಿಸ್ ಬಾರೋ ಮುದ್ದ’-ಎಂದು ಗಂಗಮ್ಮ ಹುಕುಂ ಮಾಡಿದಳು. ಅಪ್ಪಣ್ಣಯ್ಯ ಅದನ್ನು ಕೇಳಿದ ತಕ್ಷಣ ಹೊರಕ್ಕೆ ಓಟ ಹೊಡೆದ. ಆದರೆ ಮುದ್ದ ದೊಡ್ಡ ಆಳು. ಹತ್ತೇ ದಾಪಿಗೆ ಹೋಗಿ ಅವನ ಜುಟ್ಟು ಹಿಡಿದು, ಕುಯ್ಯಯ್ಯೋ ಎಂದರೂ ಬಿಡದೆ ಗಂಗಮ್‌ನೋರ ಮುಂದೆ ತಂದು ನಿಲ್ಲಿಸಿದ. ‘ಈ ಸೂಳೇಮಗನಿಗೆ ಎರಡು ವದ್ದು ತಗಂಡ್‌ಹೋಗು’-ಅವಳು ಅಪ್ಪಣೆ ಮಾಡಿದಳು. ಆದರೆ ಬ್ರಾಹ್ಮಣ ಹುಡುಗನಿಗೆ ಮುದ್ದ ಒದೆಯುವುದು ಹೇಗೆ? ಹಾಗೆ ಮಾಡಿದರೆ ಕಾಲಿನಲ್ಲಿ ಹುಳು ಸುರಿಯುತ್ತದೆಂದು ಅವನಿಗೆ ಗೊತ್ತಿಲ್ಲವೆ? ತೋಳು ಹಿಡಿದು ಎಳೆದುಕೊಂಡು ಹೋದ. +ಕಿರಿಯವನು ಹೋದಮೇಲೆ ಗಂಗಮ್ಮನ ದೃಷ್ಟಿ ಮನೆಯಲ್ಲಿಯೇ ಇದ್ದ ಹಿರಿಯನ ಮೇಲೆ ತಿರುಗಿತು: ‘ಎಲಾ ಚನ್ನಿಗಾ, ನಿನ್‌ಕುಟ್ ಎಷ್ಟು ಅಂತ ಬಡ್‌ಕಾಬೇಕೋ, ಹೊನ್ನವಳ್ಳಿಗ್ ಹೋಗಿ ಶೀತಾರಾಮಯ್‌ನೋರ ತವ ಲ್ಯಕ್ಕ ಕಲುತ್‌ಕಂಡ್ ಬಾ ಅಂತ? ನಾಳೆ ಬ್ಯಳಿಗ್‌ನಾಗ ಹೋಗ್ತಿಯೋ ನಿಂಗ್ ದಡಿ ತಗಂಡ್ ಎರಡು ಮುಟ್ಟುಸ್‌ಬೇಕೋ?’ +‘ಹಾಗಂತ ನನ್ ತಂಟಿಗ್ ಬಾ, ಹಾಜಾಮ್ ರುದ್ರನ್ನ ಕರ್‌ದು ನಿನ್ನ ತಲೆ ಬೋಳುಸುಸ್ತೀನಿ’-ಕಂಬದ ಹತ್ತಿರದಿಂದಲೇ ಹಿರಿಯ ಮಗ ಗುರ್ ಎಂದ. +‘ನಿಮ್ಮಪ್ಪ ಸತ್ಹೋದಾಗ್ಲೇ ನನ್ ತಲೆ ಬೋಳುಸ್ತು. ಹೆತ್ ಅವ್ವುನ್ನ ಹಾಗಂದ್ರೆ ನಿನ್ನ ನಾಲಗೇಲಿ ಹುಳು ಸುರಿಯುತ್ತೆ ಮುಂಡೇಮಗನೆ.’ +ಹೊನ್ನವಳ್ಳಿ ರಾಮಸಂದ್ರಕ್ಕೆ ಹದಿನೆಂಟು ಮೈಲಿಯ ಗ್ರಾಮ. ಎರಡು ಒಂದೇ ತಾಲ್ಲೂಕಿಗೆ ಸೇರಿದ್ದರೂ ಹೋಬಳಿಗಳು ಬೇರೆ ಬೇರೆ. ರಾಮಸಂದ್ರ ಕಂಬನಕೆರೆ ಹೋಬಳಿಗೆ ಸೇರಿದ್ದರೆ, ಹೊನ್ನವಳ್ಳಿ ಹೋಬಳಿಯ ಮುಖ್ಯ ಸ್ಥಳ, ಹಿಂದೆ ತಾಲ್ಲೂಕು ಸ್ಥಳವೂ ಆಗಿದ್ದ ಊರು. ತಿಪಟೂರು ಬಲಕಾಯಿಸಿದಮೇಲೆ ಹಿಂದೆ ಬಿತ್ತು; ತಾಲ್ಲೂಕು ಕಛೇರಿಯೂ ತಿಪಟೂರಿಗೆ ಹೋಯಿತು-ಚಿಕ್ಕಮಗಳೂರು ಕಡೂರನ್ನು ಬಡಕಲು ಮಾಡಿದ ಹಾಗೆ. ಹೊನ್ನವಳ್ಳಿ ತಾಲ್ಲೂಕು ಸ್ಥಳವಾದಾಗಿನಿಂದ ಸೀತಾರಾಮಯ್ಯನವರು ಕಸ್‌ಬಾ ಶ್ಯಾನುಭೋಗರು. ಲೆಕ್ಕದಲ್ಲಿ ಗಟ್ಟಿಗರು ಮಾತ್ರವಲ್ಲ, ಅಮಲ್ದಾರರುಗಳನ್ನೇ ಅಳ್ಳಾಡಿಸುತ್ತಿದ್ದ ಕುಳ. ಅವರ ಹತ್ತಿರ ಲೆಕ್ಕ ಕಲಿತ ಯಾರಾದರೂ ಕಷ್ಟವಿಲ್ಲದೆ ಶ್ಯಾನುಭೋಗಿಕೆ ನಿಭಾಯಿಸಬಹುದು. ಹಾಗೆಂದು ಅರಸೀಕೆರೆ, ಗಂಡಸಿ, ಜಾವಗಲ್ಲುಗಳ ಕಡೆಯ ಪಟೇಲ ಶ್ಯಾನುಭೋಗರುಗಳು ಸಹ ಹೇಳುತ್ತಿದ್ದರು. ಆದರೆ ಸೀತಾರಾಮಯ್ಯನವರ ಕೈಕೆಳಗೆ ನುರುಯುವುದೆಂದರೆ ಸಾಮಾನ್ಯವಲ್ಲ. ಖಾತೆಗೆ ಹೆಡಿಂಗ್ ಕಟ್ಟಿ ಕೆಂಪು ಶಾಯಿಯ ರೂಲು ಹಾಕುವುದು ಕಲಿಯಬೇಕಾದರೇ ಅವರ ರೂಲುದೊಣ್ಣೆಯಲ್ಲಿ ನೂರಿನ್ನೂರು ಏಟು ತಿನ್ನಬೇಕಾಗಿತ್ತು. ಸಾವಿರ ಉಳಿ ಪೆಟ್ಟು ಬೀಳದೆ ವಿಗ್ರಹ ಹ್ಯಾಗಾಗುತ್ತೆ?-ಎಂದು ಕೂಲಿಮಠಗಳ ಓಚಯ್ಯಗಳಂತೆ ಅವರೂ ಹೇಳುತ್ತಾರೆ. +ಮಕ್ಕಳಿಬ್ಬರ ವರ್ತನೆ ಕಂಡು ಗಂಗಮ್ಮನಿಗೆ ರೇಗಿತು; ಅಳು ಬಂದ ಹಾಗೆ ಆಗಿ ಕಣ್ಣಿನಲ್ಲಿ ನೀರು ಬರಿಸಿಕೊಂಡಳು. ಉಳಿದೋರ ಮನೆ ಮಕ್ಕಳು ತಾಯಿ ಅಂದ್ರೆ ಹ್ಯಾಗೆ ಹೆದರ್‌ಕಂಡು ನಡಿತಾರೆ. ಈ ಮುಂಡೆವಕ್ಕೆ ಏನು ಬಂದಿದೆ ಬರಬಾರ್ದ ರ್ವಾಗ! ನನ್ನ ಹಣೇಬರಾ ಇದು-ಎಂದು ಒಂದು ಸಲ ಅತ್ತಳು. ಎದ್ದು ನೇರವಾಗಿ ಅಡುಗೆಯ ಕೋಣೆಗೆ ಹೋಗಿ ಮಗುಚುವಕಾಯಿಯನ್ನು ಒಲೆಯ ಒಳಗೆ ಇಟ್ಟಳು. ಮದ್ಯಾನ್ಹ ಕಳೆದು ಮೂರು ಗಂಟೆಯಾಗಿದ್ದುದರಿಂದ ಒಲೆಯಲ್ಲಿ ಕೆಂಡವಿರಲಿಲ್ಲ. ಉರಿದು ಹೋದ ಕೊಬ್ಬರಿಯ ಮೊಟ್ಟೆ ಮತ್ತು ಹೆಡೆದಿಬ್ಬಿಗಳ ನವಿರುಗೆಂಡ ಬೂದಿಯಾಗುವ ಸ್ಥಿತಿಗೆ ಬಂದಿತ್ತು. ಅಮ್ಮ ತನಗೆ ಬರೆ ಹಾಕುವುದಕ್ಕೆ ಮಗುಚುವಕಾಯಿ ಕಾಯಿಸುತ್ತಿದ್ದಾಳೆಂಬುದು ಹದಿನೈದು ವರ್ಷದ, ಜೈಮಿನಿ ಓದಿದ ಮಗನಿಗೆ ತಿಳಿಯಿತು. ಅವನು ಒಂದು ಸಲ, ‘ಕತ್ತೆಮುಂಡೆ, ಬೋಳಿಮುಂಡೆ, ಸೂಳೆಮುಡೆ, ಹೊಲೆಮುಂಡೆ, ಹೊಲೇರಮುಂಡೆ’ ಎಂದು ಒಂದೇ ಉಸುರಿಗೆ ಕೂಗಿಕೊಂಡು ಮನೆಯಿಂದ ಓಟಹೊಡೆದ. ಇನ್ನು ಅವನನ್ನು ಹಿಡಿಯುವುದು ಸಾಧ್ಯವಿಲ್ಲೆಂದು ಗಂಗಮ್ಮನಿಗೆ ಗೊತ್ತು. ಆದರೆ ಅವಳು ತನ್ನ ಸೋಲನ್ನು ಒಪ್ಪಿಕೊಳ್ಳಲಾರಳು. ಈ ಮುಂಡೇ ಮಕ್‌ಳನ್ನ ಹತೋಟಿಗೆ ತರೂದು ಹ್ಯಾಗೆ ಎಂದು ಯೋಚಿಸುತ್ತಾ ಹಾಗೆಯೇ ಕೂತಿದ್ದಳು. ಮಗುಚುವಕಾಯಿಗೆ ಹುಸಿಗೆಂಡದಲ್ಲಿಯೇ ಸ್ವಲ್ಪಸ್ವಲ್ಪವಾಗಿ ಕಾವೇರುತ್ತಿತ್ತು. +ಮದುವೆಯಾಗಿ ಈ ಮನೆಗೆ ಬಂದಾಗ ಗಂಗಮ್ಮ ಹದಿಮೂರು ವರ್ಷದ ಹುಡುಗಿ. ಯಜಮಾನರಿಗೆ ನಲವತ್ತೈದರ ಪ್ರಾಯ. ಮೊದಲ ಹೆಂಡತಿಗೆ ಎರಡು ಮಕ್ಕಳಾಗಿ ಸತ್ತಿದ್ದವು. ಕೊನೆಗೆ ಅವಳೂ ಸತ್ತಿದ್ದಳು. ಮೊದಲ ಹೆಂಡತಿ ಗಂಗಮ್ಮನ ಕಡೆಯ ಹೆಣ್ಣೇ-ಎಂದರೆ ಜಾವಗಲ್ಲಿನವಳು. ಆ ಸಂಬಂಧದಿಂದಲೇ ರಾಮಣ್ಣನವರಿಗೆ ಗಂಗಮ್ಮನನ್ನು ಕೊಟ್ಟದ್ದು. ರಾಮಸಂದ್ರವೂ ಸೇರಿ ಮೂರು ಊರಿನ ಶ್ಯಾನುಭೋಗಿಕೆ. ಆರು ಎಕರೆ ಗದ್ದೆ, ಎಂಟು ಎಕರೆ ಹೊಲ, ಮುನ್ನೂರು ತೆಂಗಿನ ಮರ, ಮನೆಯಲ್ಲಿ ಪಾತ್ರೆ ಪರಟಿ, ಬೆಳ್ಳಿ ಬಂಗಾರಗಳಿರುವ ಅವರಿಗೆ ಯಾರು ತಾನೇ ಹೆಣ್ಣು ಕೊಡುತ್ತಿರಲಿಲ್ಲ? ರಾಮಣ್ಣನವರು ಮೊದಲಿನಿಂದ ಸಾಧು ಮನುಷ್ಯರೆಂದು ಊರಿನವರೆಲ್ಲ ಹೇಳುತ್ತಾರೆ. ಸಾಧು ಅಂದರೆ ಹಸುವಿನ ಹಾಗೆ, ಎಳೆಗರುವಿನ ಹಾಗೆ; ಗಂಗಮ್ಮ ಮಾತ್ರ ಹೆಣ್ಣು ಹುಲಿ-ಎಂದು ಜನ ಹೇಳುವುದುಂಟು. ಅದು ಕಿವಿಗೆ ಬಿದ್ದಾಗ, ‘ಈ ಜನದ ಬಾಯಿಗೆ ನನ್ ಯಡಗಾಲ ಎಕ್ಕಡ ತುರುಕ, ಸೂಳೇಮಕ್‌ಳನ್ ತಂದು’ ಎಂದು ಅವಳು ಅಂದುಕೊಳ್ಳುತ್ತಿದ್ದುದೂ ಉಂಟು. ಗಂದು ಮಕ್ಕಳು ಬುದ್ಧಿವಂತರಾಗಿ ಮಾತು ಕೇಳುತ್ತಿದ್ದರೆ ಅವಳನ್ನು ಹಿಡಿಯುವವರಿರುತ್ತಿರಲಿಲ್ಲ; ಜನದ ಬಾಯಿಗೆ ಎಕ್ಕಡವನ್ನೇ ತುರುಕಿಸುತ್ತಿದ್ದಳು. ಆದರೆ ಈ ಮುಂಡ್ಹೆತ್ತೋವು ಹೀಗಾಗ್ಬಿಟ್ವು. ಇವುಕ್ ಬುದ್ಧಿಕಲುಸ್‌ಬೇಕ್. ಕಲುಸ್‌ದೇ ಇದ್ರೆ ನಾನ್ ಜಾವಗಲ್ಲಿನ ಹೆಣ್ಣೇ ಅಲ್ಲ. ಈ ಮಗುಚೂಕಾಯಿ ಇಲ್ಲೇ ಇದ್ದು ಕಾಯ್ತಾ ಇರ್ಲಿ. ಸಾಯಂಕಾಲ ಪಿಂಡ ತಿನ್ನಕ್ ಹ್ಯಾಗೂ ಬತ್ತೂವಲ್ಲ, ಆಗ ಕಾಲಿನ ಮೇಲೆ ಎರಡೆರಡು ಬರೆ ಎಳೀತೀನಿ ಹೋರೀಕರೂಗೆ ಯಳ್ದ ಹಾಗೆ. ಹೋರೀಕರೂಗೆ ಬರೆ ಹಾಕ್‌ದೇ ಇದ್ರೆ ಎಲ್ಲಿ ಹೇಳಿದ್ ಮಾತು ಕೇಳುತ್ವೆ? ಕುರುಬರ ಹಟ್ಟಿ ಬೇಲೂರ ಹೇಳ್ತಿರ್ತಾನೆ: ದನುಕ್ ಬರೆ ಎಳೀದೇ ಇದ್ರೆ ಚಪ್ಪೆರ್ವಾಗ ಬರುತ್ತಂತೆ. ಅದೆಲ್ಲ ಸುಳ್ಳು. ಹೇಳಿದ್ ಮಾತು ಕೇಳ್ಲಿ ಅಂತ ಅಲ್ವೇನೋ ಬರೆ ಹಾಕೋದು-ಎಂದುಕೊಂಡು, ಕಾಯ್ದ ಮಗುಚುವಕಾಯಿಯ ಹಿಡಿಯ ಭಾಗವನ್ನು ತನ್ನ ಕೆಂಪು ಸೆರಗಿನಿಂದ ಹಿಡಿದು ಒಂದು ಸಲ ತಿರುಗಿಸಿ, ಮತ್ತೆ ಹುಸಿಗೆಂಡದೊಳಕ್ಕೆ ನೂಕಿದಳು. +ಅಷ್ಟರಲ್ಲಿ ಮನೆಯ ಹೆಂಚಿನ ಮೇಲೆ ಯಾರೋ ಕಳ್ಳ ಹೆಜ್ಜೆ ಇಡುತ್ತಾ ನಡೆದಂತೆ ಆಯಿತು. ಈ ಹಾಡಾಹಗಲಿನಲ್ಲಿ ಕಳ್ಳ ಸೂಳೆಮಕ್ಳು ಯಾಕ್ ಬತ್ತಾರೆ! ಕೋತಿತಿಮ್ಮಣ್ಣ ಬಂದಿರ್‌ಭೌದು. ತ್ವಾಟದ ಎಳ್‌ನೀರ್ ಬಿಟ್ಟು ಊರೊಳಕ್ಕೆ ಬರೋ ಧೈರ್ಯ ಬಂತಲ್ಲ ಈ ಮುಂಡೇವುಕ್ಕೆ-ಎಂದು ಯೋಚಿಸುತ್ತಿರುವಾಗ ಅವು ಅವಳ ನೆತ್ತಿಯಮೇಲೆ ಸರಿಯಾಗಿ ಬಂದಂತೆ ಆಯಿತು. ‘ನಿಮ್ ಮನೆತನ ಹಾಳಾಗ’-ಎಂದು ಧ್ವನಿ ಎತ್ತಿದವಳು, ‘ಅಯ್ಯೋ, ಆಂಜನೇಯ ದೇವರ ಸ್ವರೂಪವಂತೆ. ಕೆಟ್ಟ ಮಾತಾಡಿದ್ರೆ ಶಾಪ ಕೊಡ್ತೂವಂತೆ’ ಎಂದು ತಕ್ಷಣ ನಾಲಿಗೆ ಬಿಗಿಹಿಡಿದು ತಲೆಯೆತ್ತಿ ಮೇಲೆ ನೋಡಿದಳು. ಮೇಲಿನಿಂದ ಯಾರೋ ಒಟ್ಟಿಗೆ ಹೆಂಚಿನ ಮೇಲೆ ಎರಡು ದಡಿಗಳಿಂದ ಬಡಿದಂತೆ ಆಯಿತು. ಹದಿನೈದು ಇಪ್ಪತ್ತು ಹೆಂಚುಗಳು ಒಡೆದು ಚೂರು ಚೂರುಗಳಾಗಿ, ಅವಳ ಮಡಿಯಾದ ತಲೆ ಮತ್ತು ಎತ್ತಿದ ಮುಖದ ಮೇಲೆ ಉದುರಿದವು. ‘ಇವ್ ಮನೆತನ ಹಾಳಾಗ’ -ಎಂದು ಅವಳು ಕೂಗಿಕೊಳ್ಳುವುದೇ ತಡ, ‘ಅಲ್ಲೇ ಇದಾಳೆ, ಇನ್ನೊಂದ್ ನಾಕ್ ಸಲಿ ಹಾಕಿ ಚಚ್ಚೋ ಅಪ್ಪಣ್ಣಯ್ಯ ಎಂದು ಚೆನ್ನಿಗರಾಯ ಮೇಲಿನಿಂದ ಹೇಳಿದುದು ಕೇಳಿಸಿತು. ಅಣ್ಣ ತಮ್ಮಂದಿರಿಬ್ಬರೂ ಕೈಲಿದ್ದ ಒನಕೆಗಳಿಂದ ಅವಳ ನೆತ್ತಿಯ ಭಾಗದ ಹೆಂಚುಗಳ ಮೇಲೆ ಭುಜಬಲ ಪರಾಕ್ರಮ ಮೆರೆಸಿದರು. ‘ಸೂಳೇಮಕ್ಳಾ, ಪಟೇಲ ಶಿವೇಗೌಡನ ಕೈಲಿ ಹೇಳಿ ನಿಮ್ಮುನ್ ನೇಣಿಗಟ್ಟುಸ್ತೀನಿ ತಾಳಿ’ ಎಂದು ಕೂಗುತ್ತಾ ತಾಯಿ ಮನೆಯಿಂದ ಹೊರಗೆ ಓಡಿದಳು. +‘ಶಿವೇಗೌಡ್ರುನ್ನ ಕರ್ಕಂಬತ್ತಾಳೆ ಕಣೋ ಚನ್ನಯ್ಯ’-ಎಂದು ಅಪ್ಪಣ್ಣಯ್ಯ ಅಣ್ಣನಿಗೆ ಎಚ್ಚರವಿತ್ತ. ಇಬ್ಬರೂ ಒನಕೆಗಳನ್ನು ಅಲ್ಲಿಯೇ ಬಿಟ್ಟು ಹೆಂಚಿನ ಮೇಲೆ ಹಿಂಭಾಗದ ಸೂರಿನತನಕ ಓಡಿಹೋಗಿ ಅಲ್ಲಿಂದ ಚರಂಡಿಯ ಆಚೆಗೆ ನೆಗೆದು ಓಟಕಿತ್ತರು. +– ೨ – +ರಾಮಸಂದ್ರ ಹಿಂದೆ ಐನೂರು ಮನೆಯ ಗ್ರಾಮವಂತೆ. ಈಗ ಶ್ಯಾನುಭೋಗರ ಖಾನೀಷುಮಾರಿ ಲೆಕ್ಕದಲ್ಲಿರುವುದೇ ನೂರ ನಲವತ್ತೇಳು ಒಕ್ಕಲು. ಊರನ್ನು ಎರಡು ಭಾಗ ಸುತ್ತಿರುವ ಕೆರೆಯ ನೀರು, ಹಾಳುಬಿದ್ದು ವರ್ಷವರ್ಷಕ್ಕೆ ಮಣ್ಣು ಸೇರುತ್ತಿರುವ ಕೋಟೆಯ ಗೋಡೆಗಳನ್ನು ಒದೆಯುತ್ತದೆ. ದಕ್ಷಿಣ ಭಾಗದಲ್ಲಿರುವ ಚೋಳೇಶ್ವರ ಗುಡಿಯ ಮೂಲಲಿಂಗ ಕೆರೆ ಏರಿಯ ಮೇಲಿನ ಗುಡಿಯಲ್ಲಿದೆ. ಊರೊಳಗಿನ ಗುಡಿಯ ಮುಂದಿನ ಬೀದಿಯ ಕೊನೆಯಲ್ಲಿ ಬ್ರಹ್ಮದೇವರ ಮಂಟಪ. ಅದರ ಹತ್ತಿರವೇ ಹನುಮಂತರಾಯನ ಗುಡಿ. ಗ್ರಾಮದ ಹೊರಗೆ ತೋಪಿನ ಹತ್ತಿರ ಗ್ರಾಮದೇವತೆ ಕಾಳಮ್ಮನ ಗುಡಿ. ಬಣಜಿಗ, ನೊಣಬ, ಮಗ್ಗ, ಗಾಣಿಗ, ಕುರುಬ, ಮೊದಲಾಗಿ ಒಂದೊಂದು ಜಾತಿಯದೇ ಒಂದೊಂದು ಸಂದಿ, ಗೊಂದಿ. ಒಂದು ಜಾತಿಯ ಸಂದಿಯಲ್ಲಿ ಮತ್ತೊಂದು ಜಾತಿಯವರು ಯಾರೂ ಇಲ್ಲವೆಂದೇನೂ ಇಲ್ಲ. ಆದರೆ ಮಾಂಸ ಮಡ್ಡಿ ತಿನ್ನುವ ಜಾತಿಯವರ ನಡುವೆ ಬ್ರಾಹ್ಮಣ, ಲಿಂಗಾಯಿತ, ಚಾತಾಳಿ ಮೊದಲಾದವರು ಇರುತ್ತಿದ್ದುದು ತುಂಬ ಅಪರೂಪ. +ಪಟೇಲ ಶಿವೇಗೌಡನ ಮನೆಗೂ ಫೌತಿ ಶ್ಯಾನುಭೋಗ ರಾಮಣ್ಣನವರ ಮನೆಗೂ ಎರಡು ಓಣಿಯ ದೂರ. ಅಂದರೆ ಸುಮಾರು ಇಪ್ಪತ್ತು ಮನೆಗಳ ಆಚೆ. +ಗೌಡ ಮನೆಯಲ್ಲೇ ಇದ್ದ. ಗಂಗಮ್ಮ ನೇರವಾಗಿ ಒಳಗೆ ಹೋಗಿ ಹೇಳಿದಳು: ‘ಬ್ಯಾಗ ಎದ್ದು ನೋಡು ಬಾ ಶಿವೇಗೌಡ. ನಮ್ಮ ಚೆನ್ನಿಗನೂವೆ ಅಪ್ಪಣ್ಣನೂವೆ ಮನೆ ಮ್ಯಾಲುಕ್ ಹತ್ತಿ ಒನಕೆ ತಗಂಡು ಹಂಚು ಬಡೀತಿದೂವೆ. ನೋಡು, ನನ್ನ ತಲೇಮ್ಯಾಲೆಲ್ಲ ಬಿದ್ದು ರಕ್ತ ಬಂದಿದೆ.’ +‘ಅಧ್ಯಾಕೆ?’ +‘ಮಠಕ್ ಹೋಗು ಅಂದೆ. ಅದುಕ್ಕೇ ನಾ ವಲ್ಲೆ ಅಂತ ಹೀಗ್ ಮಾಡ್ತಿವೆ.’ +ಗೌಡನ ಹೆಂಡತಿ ಗೌರಮ್ಮ-‘ಅವ್ ಎಚ್‌ಕಂಬುಟ್ಟವೆ. ಹೋಗಿ ಎಲ್ಡು ಇಡಿಮಿ ಬಲ್ಲಿ’ ಎಂದು ಗಂಡನಿಗೆ ಹೇಳಿದಳು. ಗೌಡ ತನ್ನ ದೊಡ್ಡ ಹೊಟ್ಟೆಯನ್ನು ಹೊತ್ತು ಕಾಲಿಗೆ ಜೋಡು ಮೆಟ್ಟಿ ಗಜಗಂಭೀರ ನಡಿಗೆಯಲ್ಲಿ ಇವರ ಮನೆಗೆ ಹೊರಟ. ಬಂದು ನೋಡಿದರೆ ಅಣ್ಣತಮ್ಮಂದಿರಿಬ್ಬರೂ ಪರಾರಿಯಾಗಿದ್ದರು. ಅಷ್ಟರಲ್ಲಿ ಮನೆಯ ಮುಂದೆ ಗುಡಿಯ ಮಾದೇವಯ್ಯನವರು, ಇನ್ನೂ ಹತ್ತು ಹದಿನೈದು ಜನ ಬಂದು ನಿಂತಿದ್ದರು. ಅಡಿಗೆಯ ಸಾಲೆಯಿಂದ ಹಿಂದಿನ ಸೂರಿನ ತನಕ ಮನೆಯ ಹೆಂಚುಗಳು ಪುಡಿಗುಟ್ಟಿಹೋಗಿದ್ದವು. ಅಲ್ಲಿ ಸೇರಿದ್ದವರ ಪೈಕಿ ನಾಲ್ಕು ಜನಕ್ಕೆ ಶಿವೇಗೌಡ-‘ಲೇ ಹೋಗ್ರುಲಾ, ಅವ ಉಡುಕ್ಕಂಡ್ ಬಲ್ಲಿ’ ಎಂದ. +ಅಡಿಗೆಯ ಮನೆ ನೋಡಿ ಗಂಗಮ್ಮನ ಕಣ್ಣಿನಲ್ಲಿ ನೀರು ಬಂತು. ‘ಶಿವೇಗೌಡ, ಆ ಸೂಳೇಮಕ್ಳುನ್ನ ಹಿಡಕಂದ್ ಬಂದು ಕಾಲು ಮುರ್ದು ಕೂರುಸ್ಬೇಕು’ -ಎಂದಳು. +ಹುಡುಗರು ಎಲ್ಲಿಯೂ ಸಿಕ್ಕಲಿಲ್ಲ. ರಾತ್ರಿಯಾಗಿ ಕತ್ತಲಾದರೂ ಅವುಗಳ ಸುಳಿವಿಲ್ಲ. ಇವ್ ಮನತಾನ ಹಾಳಾಗ, ಎಲ್ಲಿ ಹೋದ್‌ವೋ-ಎಂದು ಗಂಗಮ್ಮ ಹತ್ತು ಬಾರಿ ಅಂದುಕೊಂಡಳು. ಮನೆಯಲ್ಲಿ ಅವಳು ಒಬ್ಬಳೇ. ಹಿಂಭಾಗದ ಹೆಂಚುಗಳೆಲ್ಲ ಪುಡಿಯಾಗಿ ಹೋಗಿವೆ. ಒಬ್ಬಳೇ ಇರಲು ಭಯವೇನಿಲ್ಲ. ‘ನಾನಿದ್ದ ಕಡೆ ದೆವ್ವವೂ ಸುಳಿಯಲ್ಲ’-ಎಂದು ಅವಳೇ ಹೇಳುತ್ತಾಳೆ. ಆದರೆ ಈ ಮುಂಡೇವು ಎಲ್ಲಿ ಹೋದವೋ? ಅವುಗಳ ಜೀವದ ಬಗೆಗೆ ಅವಳಿಗೆ ಯಾವ ಯೋಚನೆಯೂ ಇಲ್ಲ. ಎಲ್ಲೋ ಅವಿತುಕೂತಿವೆ. ರಾತ್ರಿ ಹೊಟ್ಟೆಗೆ ಏನು ಮಾಡ್ತುವೋ? ತ್ವಾಟದಾಗೆ ಎಳಗಿಳನೀರು ಹಾಕ್ಕಂಡ್ ಕುಡ್ದು ಬಂಬ್ಲು ಗಿಂಬ್ಲು ತಿಂದಿರಬೌದು. ಗದ್ದೇ ಕಡೀಗ್ ಹೋಗಿದ್ರೆ ಕಬ್ಬಿನ್ ಜಲ್ಲೆ ಅಗಿದಿರಬೌದು. ಆದ್ರೆ ತೀರುಹತ್‌ದೋವು ಮನಿಗ್ ಬರಬ್ಯಾಡವಾ? ನಾಳೆ ಬ್ಯಳಿಗ್ಗೆ ರೊಟ್ಟಿಗೆ ಅಂತ ಬರ್ಲಿ, ಮಾಡ್ತೀನಿ. +ಅವರ ಮನೆಯ ಎದುರಿಗೇ ಚೋಳೇಶ್ವರನ ಗುಡಿ. ಗುಡಿಯ ಬಾಗಿಲು ಉತ್ತರಕ್ಕೆ, ಇವರ ಮನೆಯದು ಪೂರ್ವಕ್ಕೆ. ಎಂದರೆ ಗುಡಿಯ ಎಡಭಾಗ ಇವರ ಮನೆಯ ಮುಂದಿದೆ. ಗುಡಿಗೂ ಮನೆಗೂ ಮಧ್ಯ ಒಂದು ಸಣ್ಣ ಪಾಳು. ಹಿಂದೆ ಅದು ಗುಡಿಯ ಪೌಳಿಯಾಗಿದ್ದುದಕ್ಕೆ ಈಗಲೂ ಗುರುತಿದೆ. ಗುಡಿಯಲ್ಲಿ ಮಾದೇವಯ್ಯನವರು ಒಬ್ಬರೇ ಕೂತು ಬಲಗೈಲಿ ಏಕತಾರಿ ಮೀಟಿಕೊಂಡು, ಎಡಗೈಲಿ ಚಿಟಿಕಿ ಹಾಕುತ್ತಾ-‘ಹರಹರ ಎನುತಲಿ ರುದ್ರಾಕ್ಷಿ, ಧರಿಸಲು ಹರಿವುದು ಭವಗಳ ಪರಮ ಧರಿಸಿದ ರುದ್ರಾಕ್ಷಿ…..’-ಎಂದು ಭಜನೆ ಮಾಡಿಕೊಳ್ಳುತ್ತಿದ್ದರು. ಅವರು ದಿನವೂ ಅಷ್ಟೇ. ನಡುರಾತ್ರಿಯವರೆಗೂ ಭಜನೆ ಮಾಡುತ್ತಾರೆ. ಬೆಳಿಗ್ಗೆ ಕೋಳಿ ಕೂಗುವ ಮೊದಲೇ ಎದ್ದು ಕೂತು ಮತ್ತೆ ಪ್ರಾರಂಭಿಸುತ್ತಾರೆ. ಅವರದು ಯಾವ ಊರೋ ಯಾವ ದೇಶವೋ ಯಾರಿಗೂ ಗೊತ್ತಿಲ್ಲ. ಈ ಊರಿಗೆ ಬಂದು ಆಗಲೇ ಇಪ್ಪತ್ತು ವರ್ಷದ ಮೇಲಾಯಿತಂತೆ. ಗಂಗಮ್ಮ ಮದುವೆಯಾಗಿ ಬರುವ ಸ್ವಲ್ಪ ಮುಂಚೆಯೇ ಇಲ್ಲಿಗೆ ಬಂದಿದ್ದರಂತೆ. ಚೋಳೇಶ್ವರನ ಗುಡಿಯಲ್ಲಿ ವಾಸ, ಭಜನೆ, ಕಂತೆಭಿಕ್ಷೆ ಮಾಡಿ ಊಟ. ಎತ್ತರವಾದ, ದುಂಡುಮುಖದ ಆಳು. ಹಣೆಯ ಮೇಲೆ ದೊಡ್ಡದಾದ ಮೂರು ಪಟ್ಟೆ ವಿಭೂತಿ. ಹುಬ್ಬಿನ ನಡುವೆಯಲ್ಲದೆ ಕಿವಿಯ ಹತ್ತಿರವೂ ವಿಭೂತಿಯ ಕೊಟ್ಟು. ಪೂರ್ತಿ ಕ್ಷೌರ ಮಾಡಿಸಿದ ತಲೆ. ಕಾವಿಯ ಪಂಚೆ ಉಟ್ಟು ಅದೇ ಬಣ್ಣದ ಅಂಗಿ ಹಾಕುತ್ತಾರೆ. +ಮಲಗಿದರೆ ಗಂಗಮ್ಮನಿಗೆ ನಿದ್ದೆ ಬರಲಿಲ್ಲ. ಹುಡುಗರು ಇನ್ನೂ ಮನೆಗೆ ಬಂದಿಲ್ಲ. ಆಗಲೇ ಮಾದೇವಯ್ಯನವರು ಭಜನೆ ಮುಗಿಸುವ ಹೊತ್ತು. ‘ಮಂಗಳಾರತಿ ಎತ್ತಿ ಅಂಗನೇಯರೆಲಾ ಸಂಗಯ್ಯ ಬಸವಣ್ಣನಿಗೇ…..’ ಹೇಳಲು ಶುರು ಮಾಡಿದ್ದರು. ಗಂಗಮ್ಮ ಎದ್ದು ಬರೀ ಬಾಗಿಲು ಹಾಕಿಕೊಂಡು ಅಲ್ಲಿಗೆ ಹೋದಳು. ಗುಡಿಯ ಮುಂಭಾಗವು, ಬಾಗಿಲಿಲ್ಲದ ದೊಡ್ಡ ಮಂಟಪದಂತಿತ್ತು. ಅಯ್ಯನವರು ಕೂತು ಭಜನೆ ಮಾಡುತ್ತಿದ್ದುದು ಅಲ್ಲಿಯೇ. ಸಂಜೆಯ ಹೊತ್ತು ಭಜನೆ ಕೇಳಲು, ಊರಿನ ಕೆಲವರು ಬಂದು ಕೂರುತ್ತಿದ್ದರು. +ಈಗ ಆಗಲೇ ಮಧ್ಯರಾತ್ರಿಯಾಗಿದೆ. ಗುಡಿಯಲ್ಲಿ ಮತ್ತೆ ಯಾರೂ ಇಲ್ಲ. ಗಂಗಮ್ಮ ಬಂದು ಅಯ್ಯನವರ ಎದುರಿನ ಕಂಬದ ಹತ್ತಿರ ಕೂತಳು. ಅವರು ಕೊನೆಯ ನುಡಿ ಹೇಳಿ ಮುಗಿಸಿ ಏಕತಾರಿ ಚಿಟಿಕೆಗಳನ್ನು ನಿಲ್ಲಿಸಿದ ಮೇಲೆ ಅವಳೇ ಕೇಳಿದಳು: ‘ ಈ ಸೂಳೆಮಕ್ಳಿಗ್ ಬುಧಿ ಬರಾದು ಯಾವತ್ತು ಮಾದೇವಯ್ನೋರೆ?’ +‘ಗಂಗವ್ವಾ, ಬುದ್ಧಿ ನಿಧಾನವಾಗಿ ಬತ್ತೈತೆ. ನೀವು ಒಳ್ಳೇ ಮಾತಾಡಾದು ಮೊದ್ಲು ಕಲೀರಿ.’ +‘ನಾನೇನ್ ಕ್ಯಟ್ ಮಾತಂದದ್ದು?’ +‘ಈ ಸೂಳೇಮಕ್ಳಿಗೆ ಅಂತ ಯಾಕಂತೀರಾ? ನಮ್ ಹುಡುಗ್ರೀಗೆ ಅನ್ನಿ.’ +ತನ್ನ ಮಾತನ್ನು ತಿದ್ದಿಕೊಳ್ಳಲು ಮಾದೇವಯ್ಯನವರು ಗಂಗಮ್ಮನಿಗೆ ಹೇಳುತ್ತಿರುವುದು ಇದು ಮೊದಲ ಸಲವಲ್ಲ. ಅವಳನ್ನು ತಿದ್ದಲು ಯಾರಿಗೂ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಅವರು ಇಂತಹ ಸಂದರ್ಭ ಬಂದರೆ ಹೇಳುತ್ತಲೇ ಇರುತ್ತಾರೆ. ಮಕ್ಕಳು ಇನ್ನೂ ಮನೆಗೆ ಬಂದಿಲ್ಲದೆ ಇರುವುದನ್ನು ಅವಳು ಹೇಳಿದಳು. +‘ಗಂಗವಾ, ನೀವು ಅವುನ್ನ ಶಿಕ್ಷೆ ಮಾಡಬೇಕಾದ್ರೆ ಪಟೇಲ್‌ರನ್ನ ಯಾಕ್ ಕರ್ಕಂಡ್ ಬರಾಕೆ ಹೋಗಿದ್ರಿ?’ +‘ಅವು ನನ್ ಕೈಗೆ ಸಿಕ್ಕಿದ್ರೆ ಹ್ಯೇಳ್ರಿ.’ +‘ತಪ್ಪು ನಿಮ್ದೇ’-ಎಂದು ಅಯ್ಯನವರು ಮತ್ತೆ ಹೇಳಿದರು. ‘ಮನೆಯ ಯಜಮಾಂತಿ, ತಾಯಿ ತಿದ್ದಿಕೊಳ್ಳದೆ ಮಕ್‌ಳನ್ನ ತಿದ್ದೂದು ಹ್ಯಂಗೆ?’-ಎಂಬ ಅವರ ಹಳೆಯ ಮಾತಿನಿಂದ ಅವಳಿಗೆ ಕಸಿವಿಸಿಯಾಯಿತು. +‘ಮಠಕ್ಕೆ ಕಳಿಸಿದ್ರಲ್ಲ ಅಪ್ಪಣ್ಣಯ್ಯನ್ನ, ಅಲ್ಲಿ ಅವ್ನು ಓಚಯ್ಯನೋರನ್ನೇ ಸೂಳೇಮಗನೆ ಅಂತ ಬೈದು ಓಡಿಬಂದನಂತೆ. ಈ ಮಾತು ಅವ್ನು ಎಲ್ಲಿ ಕಲ್ತ್‌ಕಂಡ?’ +‘ನನ್ ಹಣೇಬರ ಕಣ್ರೀ, ಅದೇ ಅವನ ಬಾಯಲ್ಲಿ ಹೀಗ್ ಆಡ್ಸುತ್ತೆ. ಆಮ್ಯಾಲೆ ಆ ಸೂಳೇಮಗುನ್ನ ಓಚಯ್ಯನೋರು ಸುಮ್ನೆ ಬಿಟ್ರಾ?’ +‘ಅಲ್ಲಿಂದ ಓಡಿಬಂದ ಮೇಲೇ ಅಲ್ವಾ ಅಣ್ಣ ತಮ್ಮಂದಿರು ಹಂಚು ಬಡ್‌ದುದ್ದು?’ +‘ಈ ಮುಂಡೇಮಕ್ಳ ಮನೆತನ ಹಾಳಾಗ. ಯಲ್ಲಾತಕ್ಕೂ ಹೊಸ ಹೆಂಚು ಹಾಕ್ಸುಕ್ಕೆ ನಾನೆಲ್ಲಿಂದ ಅಂತ ತರಲಿ?’ +‘ಮತ್ತೆ ಕ್ಯಟ್ ಮಾತು ಆಡ್ತೀರಲಾ ಗಂಗವ್ವಾ…..?’- ಅಯ್ಯನೋರು ಇನ್ನೂ ಏನೋ ಹೇಳುತ್ತಿದ್ದರು. ಅಷ್ಟರಲ್ಲಿ ಹೊರಗೆ ಬೀದಿಯಲ್ಲಿ ಹತ್ತಾರು ಜನಗಳು ಓಡಿಯಾಡುವ ಶಬ್ದ ಕೇಳಿಸಿತು. ಕೆಲವರು- ‘ಕಬ್ಬಿನ ಗದ್ದೀಗ್ ಬೆಂಕಿ ಹತ್ಯತೆ, ಓಡ್‌ಬಲ್ಲಿ ಓಡ್‌ಬಲ್ಲಿ’ ಎಂದು ಕೂಗಿಕೊಂಡರು. ಇವರಿಬ್ಬರೂ ಗುಡಿಯ ಹೊರಗೆಬಂದು ನೋಡುತ್ತಾರೆ: ಕೆರೆಯ ಹಿಂದಿನ ಬಯಲಿನಲ್ಲಿ ಬೆಂಕಿಯ ಉರಿ ರಾಚುತ್ತಿದೆ. ಅದರ ಬೆಳಕಿನಲ್ಲಿ ಹೊಗೆಯೂ ಕಾಣುತ್ತಿದೆ. +‘ಅಯ್ಯೋ ನಮ್‌ದೂ ಕಬ್ಬಿತ್ತಲ್ಲಪ್ಪಾ, ಇದ್ಯಾವ ಮನೆಹಾಳ ಮುಂಡೇಮಕ್ಳು ಹೀಗ್ ಮಾಡಿದ್ರೋ?’ -ಎಂದುಕೊಂಡು ಗಂಗಮ್ಮ ಮನೆಗೆ ಹೋಗಿ ಬಾಗಿಲಿಗೆ ಒಂದು ಬೀಗ ಸಿಕ್ಕಿಸಿಕೊಂಡುಜನಗಳ ಜೊತೆಯಲ್ಲಿ ಕೆರೆ ಏರಿಯ ಕಡೆಗೆ ಓಡಿದಳು. +ಊರ ಮುಂದೆಯೇ ಕೆರೆ. ಊರನ್ನು ಎರಡು ಕಡೆಯೂ ಸುತ್ತಿ ನಿಂತಿರುವ ಕೆರೆಯ ಏರಿಗೆ ಗ್ರಾಮದ ಮುಂಭಾಗದಿಂದ ಸುತ್ತಿ ಹೋಗಬೇಕು. ಈಗ ಊರಿಗೆ ಊರೇ ಓಡಿ ಬಂದು ಏರಿಯಮೇಲೆ ಅಲ್ಲಲ್ಲೇ ನಿಂತಿತು. ಇಡೀ ಬಯಲಿನ ಅರ್ಧ ಭಾಗಕ್ಕೂ ಮೀರಿ ಕಬ್ಬು ಹಾಕಿತ್ತು. ಪಡುವಲ ದಿಶೆಯ ತೂಬಿನ ಕಡೆಯಲ್ಲಿ ಎರಡು ಆಲೆ ಅರೆಯುತ್ತಿತ್ತು. ಮೂಡಣದಲ್ಲಿ ಹೊತ್ತಿ ಉರಿಯುತ್ತಿದ್ದ ಕಬ್ಬಿನ ಗದ್ದೆಯ ಬೆಂಕಿ ನಿಧಾನವಾಗಿ ಪಡುವಣ ಬಡಗಣಕ್ಕೂ ಹರಡುತ್ತಿತ್ತು. ಎಲ್ಲ ಕಬ್ಬು ಕಟಾವಿಗೆ ಬಂದು ಬುಡದ ಗರಿಗಳು ಒಣಗಿ ತರಗಾಗಿದ್ದುದರಿಂದ ಬೆಂಕಿ ಹಬ್ಬಲು ಅನುಕೂಲವಾಗಿತ್ತು. ಗಾಳಿ ಇಲ್ಲದಿದ್ದರೆ ಉರಿಯ ಬಿರುಸು ನಿಧಾನವಾಗುತ್ತಿತ್ತು. ಆದರೆ ಗಾಳಿ ದಿಕ್ಕು ತಪ್ಪಿದಂತೆ ಒಮ್ಮೆ ಪಡುವಲಿಗೆ ಇನ್ನೊಮ್ಮೆ ತೆಂಕಲಿಗೆ ಬೀಸುತ್ತಿದ್ದುದರಿಂದ ಉರಿ ಬಲು ಬೇಗ ಹರಡುತ್ತಿತ್ತು. ಪಡುವಣ ಕಡೆಯ ಎರಡೂ ಆಲೆಯವರೂ ಕಣೆಯ ಕೋಣಗಳನ್ನು ಬಿಚ್ಚಿ ಏರಿಯ ಕಡೆಗೆ ಓಡಿಸಿದರು. ಆಳುಗಳು ಬೆಲ್ಲದ ಮೂಟೆಗಳನ್ನು ಹೊತ್ತು ಸಾಗಿಸಲು ಮೊದಲುಮಾಡಿದರು. ಅಚ್ಚಿನ ಮಣೆಗಳನ್ನು ಇಬ್ಬಿಬ್ಬರು ಜೊತೆಯಾಗಿ ಹೊತ್ತು ಏರಿಯಮೇಲೆ ತಂದು ಹಾಕುತ್ತಿದ್ದರು. ಬಿದಿರಿನ ಗಳು, ತೆಂಗಿನ ಸೋಗೆ, ಮತ್ತು ಕಬ್ಬಿನ ತರಗುಗಳಿಂದ ಕಟ್ಟಿದ ಆಲೆಮನೆಗೆ ಇನ್ನು ಐದೇ ನಿಮಿಷದಲ್ಲಿ ಜ್ವಾಲೆ ಮುಟ್ಟಿ ಅದು ಆಕಾಶದ ಎತ್ತರಕ್ಕೂ ಉರಿದು ಬೀಳುವುದು ನಿಶ್ಚಯವಾಗಿತ್ತು. +ತಮ್ಮ ತಮ್ಮ ಗದ್ದೆಗೆ ಉರಿ ವ್ಯಾಪಿಸಿದಾಗಲೂ ಗದ್ದೆಯ ಮಾಲೀಕರು, ಅವರ ಮನೆಯ ಇತರರು, ತಮ್ಮ ಶರೀರಕ್ಕೆ ಬೆಂಕಿ ಮುಟ್ಟಿದಂತೆ ಹಾ ಹಾ ಎನ್ನುತ್ತಿದ್ದರು. ಬೆಂಕಿ ಹೇಗೆ ಹೊತ್ತಿತು, ಯಾರು ಹೊತ್ತಿಸಿದರು ಎಂಬ ಬಗೆಗೆ ಜನರಲ್ಲಿಯೇ ತರ್ಕ ವಿತರ್ಕಗಳು ನಡೆಯುತ್ತಿದ್ದವು. +ಆಲೆಯ ಹತ್ತಿರವೇ ಗಂಗಮ್ಮನ ಪುಟ್ಟ ತೋಟವಿದೆ. ನಲವತ್ತೇ ತೆಂಗಿನ ಮರಗಳಿದ್ದ ಅದು ಒಂದು ಎಕರೆ ವಿಸ್ತೀರ್ಣದ್ದು. ಅವಳ ಉಳಿದ ತೋಟ ಬೇರೆ ಕಡೆ ಹೊಲಕ್ಕೆ ಲಗತ್ತಾಗಿತ್ತು. ಈಗ ಬೆಂಕಿ ತೋಟದ ನಾಲ್ಕೂ ಸುತ್ತನ್ನು ಆಕ್ರಮಿಸುತ್ತಾ ಬಂದು ತೋಟದ ಪಕ್ಕದಲ್ಲಿಯೇ ಇದ್ದ ಆಲೆಯ ಮನೆಗಳು ಹೊತ್ತಿ, ಅದರ ಉರಿ ಮತ್ತು ಹೊಗೆ ಸೊಸಿಮರದಿಂದ ಎಷ್ಟೋ ಮೇಲಕ್ಕೆ ಏರಿದುವು. ತೋಟದ ಮಧ್ಯದಿಂದ ಯಾರೋ-‘ಅಯ್ಯಯ್ಯಪ್ಪಾ, ಬಿಡಿಸ್ರೋ. ನಾ ಸತ್ಹೋಕ್ತೀನಿ ಬಿಡಿಸ್ರೋ’ ಎಂದು ಗಟ್ಟಿಯಾಗಿ ಕಿರಿಚಿಕೊಂಡು ಲಬಲಬನೆ ಬಾಯಿ ಬಡಿದುಕೊಂಡುದು ಬೆಂಕಿಯ ಚಿಟಿಚಿಟಿಯ ಮಧ್ಯೆ ಸ್ಪಷ್ಟವಾಗಿ ಕೇಳಿಸಿತು. ಜನರೆಲ್ಲ ಗಾಬರಿಯಿಂದಲೂ ಕೌತುಕದಿಂದಲೂ ಆ ಕಡೆ ನೋಡುತ್ತಿರುವಂತೆಯೇ ಗಂಗಮ್ಮ-‘ನಮ್ ಚೆನ್ನಿಗರಾಯನ ದನಿ. ಮುಂಡೇದು ಇಷ್ಟು ಹೊತ್ತಿನಾಗೆ ತ್ವಾಟದಲ್ಯಾಕ್ ಕೂತ್‌ಕಂಡಿತ್ತೋ! ನಿಮ್ಮ ದಮ್ಮಯ್ಯ ಅಂತೀನಿ. ಗಂಡುಸ್ರು ಯಾರಾರೂ ಹೋಗಿ ಕರ್‌ಕಂಡ್ ಬನ್ರೋ’ ಎಂದು ಕೂಗಿಕೊಂಡಳು. +ಆದರೆ ಸುತ್ತ ಬೆಂಕಿ ಹಬ್ಬಿ ಪಕ್ಕದ ಅಲೆಗಳು ಎದ್ದು ಉರಿಯುತ್ತಿರುವಾಗ ತೋಟದೊಳಕ್ಕೆ ಯಾರು ಹೋಗಬೇಕು? ತೋಟದ ಬೇಲಿಗೆ ಬೆಂಕಿ ಹೊತ್ತಿದೆ. ತೋಟದೊಳಗೆ ಸೋಗೆ ಹೆಡೆದಿಬ್ಬಿಗಳ ಒಟ್ಟಲು ಬೇರೆ ಇದೆ. ಅದಕ್ಕೆ ಉರಿ ತಗಲಬಹುದು. ಯಾವ ಗಂಡಸೂ ಧೈರ್ಯ ಮಾಡಲಿಲ್ಲ. ಗುಡಿಯ ಮಾದೇವಯ್ಯನವರು ಮಾತ್ರ-‘ತ್ವಾಟದೊಳಿಕ್ ಬೆಂಕಿ ಬರಾಕಿಲ್ಲ, ಬನ್ರಿ ಬನ್ರಿ’ ಎಂದು ಹೇಳುತ್ತಾ ಏರಿಯನ್ನು ಜಾರಿದಷ್ಟು ಭರದಿಂದ ಇಳಿದು, ಉರಿಯುವ ಗದ್ದೆಯ ನಡುವೆ ಹೋಗುವ ನೀರು ಕಾಲುವೆಯಲ್ಲಿ ಹಾಯ್ದು ತೋಟ ಮುಟ್ಟಿದರು. +‘ಇನ್ಯಾರೂ ಗಂಡಸರಿಗೆ ಹುಟ್ಟಿದ ಸೂಳೇಮಕ್ಳು ಇಲ್ವೇನ್ರೋ! ಹೆಣ್ಣು ಹೆಂಗಸು ನಾನು ಹೋಗ್ತೀನಿ’-ಎಂದು ಕೂಗುತ್ತಾ ಗಂಗಮ್ಮನೂ ಏರಿಯನ್ನು ಇಳಿದಳು. ಬೆಸ್ತರ ಮುದ್ದ, ಹೊಲೇರ ಬೇಲೂರ, ಭಜನೆಗೆ ಬರುತ್ತಿದ್ದ ತೋಟಮರಿ ಮೊದಲಾಗಿ ಏಳು ಎಂಟು ಜನ ಅವಳ ಹಿಂದೆ ಇಳಿದು ಆಮೇಲೆ ಅವಳಿಗಿಂತ ಮುಂದೆ ಓಡಿದರು. +ತೋಟದಲ್ಲಿ ಚೆನ್ನಿಗರಾಯ ಒಂದು ಸೊಸಿ ತಂಗಿನಮರದ ದಸಿಮೊಟ್ಟೆಯ ಮೇಲೆ ಕೂತು ಇನ್ನೂ ‘ಅಯ್ಯಯ್ಯಪ್ಪೋ’ ಎನ್ನುತ್ತಿದ್ದ. ಮಾದೇವಯ್ಯನವರು-‘ತ್ವಾಟದೊಳಗೆ ಬೆಂಕಿ ಬಂದಿಲ್ಲ. ಬ್ಯಾಗ ಇಳಿದು ಬಾ ಚೆನ್ನಯ್ಯಾ’ ಎಂದು ಕೂಗಿಕೊಂಡರು. ಆದರೆ ಇಳಿಯಲು ಅವನಿಗೆ ಭಯ. ‘ನಂಗ್ ಹೆದ್ರಿಕೆಯಾಗುತ್ತೆ ಕಣ್ರೀ ಅಯ್ನೋರೇ’-ಎಂದು ಪ್ರಲಾಪಿಸುತ್ತಿದ್ದ. ಅಷ್ಟರಲ್ಲಿ ಮುದ್ದ, ಬೇಲೂರ, ತೋಟಮರಿ ಎಲ್ಲರೂ ಓಡಿಬಂದರು. ಹಿಂದಿನಿಂದ ಗಂಗಮ್ಮನೂ ಏದುಸಿರಿಡುತ್ತಾ ತಲುಪಿದಳು. ‘ಇಳಿಯೋ ನನ್ ಕಂದಾ, ಅಪ್ಪಣ್ಣೆಲ್ಲೋ?’- ಎಂದು ಅವಳು ಕೂಗಿಕೊಂಡಳು. ಸ್ವಲ್ಪ ಧೈರ್ಯ ಬಂದು ಅವನು ಕೋತಿತಿಮ್ಮಣ್ಣ ಇಳಿಯುವಷ್ಟೇ ಸರಾಗವಾಗಿ ದಸಿಯಿಂದ ಗೋಣಿಗೆ ಬಂದು ಮರವನ್ನು ಇಳಿದ. ಇನ್ನಿ ಅಲ್ಲಿ ನಿಂತರೆ ಬೆಂಕಿಯು ರಾಚಿ ಸೋಗೆ ಹೆಡೆದಿಬ್ಬಿಗಳ ಒಟ್ಟಲಿಗೆ ತಗಲುವ ಸಾಧ್ಯತೆ ಇದ್ದುದರಿಂದ ಅವನನ್ನು ಕರೆದುಕೊಂಡು ಎಲ್ಲರೂ ಹಿಂದಿರುಗಿದರು. ಅವರು ಬರುವ ಕಾಲುವೆಯ ಎರಡೂ ಕಡೆಯ ಕಬ್ಬಿನ ಉರಿ ಆರುತ್ತಿತ್ತು. ಆಲೆಮನೆಯ ಜ್ವಾಲೆ ಮಾತ್ರ ಇನ್ನೂ ಏರುತ್ತಿತ್ತು. ಈಗ ಅಲೆಯ ಹತ್ತಿರದಲ್ಲಿಯೇ ಹಾಕಿದ್ದ ಒಣಗಿದ ಸಿಪ್ಪೆಯ ದೊಡ್ಡರಾಶಿಗೆ ಉರಿ ತಗುಲಿತ್ತು. +ಎಲ್ಲರೂ ಏರಿಯನ್ನು ಹತ್ತಿದ ಮೇಲೆ ಮಾದೇವಯ್ಯನವರು ಚೆನ್ನಿಗರಾಯನನ್ನು ಕೇಳಿದರು: ‘ಇಷ್ಟು ಹೊತ್ನಾಗೆ ತೆಂಗಿನ ಮರ ಏರಿ ಯಾಕೆ ಕುಂತಿದ್ದೆ?’ +‘ಅಮ್ಮ ಶಿವೇಗೌಡುನ್ನ ಕರ್ಕಂಬತ್ತೀನಿ ಅಂತ ಹೋದ್ಲಲ್ಲ , ಅದುಕ್ಕೆ.’ +ಅಷ್ಟರಲ್ಲಿ ಎಲ್ಲರೂ ಅಲ್ಲಿ ಸುತ್ತುವರಿದರು. ಪಟೇಲ ಶಿವೇಗೌಡನೂ ಬಂದ. +‘ನೀವು ಅಣ್ಣತಂಮ್ಮಂದಿರು ಹಂಚು ಯಾಕೆ ಬಡಿದಿರಿ?’-ಮಾದೇವಯ್ಯನವರು ಕೇಳಿದರು. +‘ಅಯ್ಯೋ, ಹಂಚಿನ ಮನೆ ಹಾಳಾಯ್ತು. ಅಪ್ಪಣ್ಣ ಎಲ್ಹೋದ್ನೋ?’-ಗಂಗಮ್ಮ ಕಾತರಳಾಗಿ ಕೇಳಿದಳು. +‘ಲಿಂಗಾಪುರದ ಕಡಿಕ್ ಓಡಿಹೋದ. ಅವ್ನೇ ಕಬ್ಬಿನ ಗದ್ದೆಗೆ ಬೆಂಕಿ ಹಾಕ್‌ದೋನು.’ +‘ಅವ್ನು ಯಾಕೋ ಹಾಕ್ತಾನೆ?’ +‘ನಾವಿಬ್ರೂ ತೆಂಗಿನ ಮರದ ಮ್ಯಾಲೆ ಅವುತ್‌ಕಳಾಣ ಬಾರೋ ಅಂದೆ. ಅವ್ನಿಗೆ ನ್ಯಟ್ಟಗೆ ಮರ ಹತ್ತುಕ್ ಬತ್ತಿರ್ಲಿಲ್ಲ. ಕಬ್ಬಿನ್ ಗದ್ದೇಲಿರ್ತೀನಿ ಅಂದ. ಈ ಕಡೆ ಆದ್ರೆ ಆಲೆಮನೆಯೋರು ಕಾಣ್ತಾರೆ ಅಂತ ಆಚೆ ಕೋಡಿಕಡೆಗೆ ಹೋದ. ಬೀಡಿ ಶೇದುಕ್ಕೆ ಅಂತ ಬೆಂಕಿಕಡ್ಡಿ ಗೀರಿದ್‌ನಂತೆ. ಕಬ್ಬಿನ ತರಗು ಹತ್‌ಕಂಡ್‌ಬಿಡ್‌ತಂತೆ.’ +ಇದನ್ನು ಕೇಳಿದ ತಕ್ಷಣ ಪಟೇಲ ಶಿವೇಗೌಡ-ಅವ್ನುನ್ ಇಡ್ಕಂಡ್‌ಬಾ ಹೋಗ್ರುಲಾ’ ಎಂದು ಗರ್ಜಿಸಿದ. ಆದರೆ ಮಾದೇವಯ್ಯನವರು-‘ಇವನು ಹೇಳ್ತಾನೆ ಅಂತ ನಂಬಾಕ್ ಆಯ್ತದಾ? ಅವ್ನು ಬೀಡಿ ಸೇದುವಾಗ ಬೆಂಕಿ ಹೊತ್‌ತು ಅಂತ ನಿನಗೆ ಹ್ಯಾಂಗ್ ಗೊತ್ತು?’ ಎಂದು ಕೇಳಿದರು. +“ನಾನೇನ್ ಸುಳ್ಳು ಹ್ಯೇಳ್ತಿಲ್ಲ ಕಣ್ರೀ ಅಯ್ನೋರೇ. ದೇವರಾಣೆ ಬೇಕಾದ್ರೆ ಇಡ್ತೀನಿ. ಅವ್ನೇ ಇಲ್ಲೀತಂಕ ಓಡಿಬಂದು, ‘ಹೀಗಾಯ್ತು, ಪುರದಪ್ಪನ ಗದ್ದೀಗ್ ಬೆಂಕಿ ಹತ್ಕಂಡಿದೆ. ನೀನು ಯಾರ ಕೈಲೂ ಹೇಳ್‌ಬ್ಯಾಡ. ನಾನ್ ಲಿಂಗಾಪುರದ ಕಡೀಕ್ ಓಡಿಹೋಕ್ತೀನಿ. ನೀನೂ ಬಾ’ ಅಂತ ಕರ್ದ. ಬೆಂಕಿ ಹಾಕ್‌ದೋನು ನೀನು. ನಾನ್ಯಾಕ್ ಬರ್ಲಿ ಹೋಗು ಅಂದೆ. ಅವ್ನು ವಾಟಹ್ವಡ್‌ದ”-ಎಂದು ತನ್ನ ಮಾತನ್ನು ಸಾಧಿಸಿದ ಅವನ ಮಾತಿನ ಪೂರ್ತಿ ಪರಿಣಾಮ ಏನಾಗಬೇಕೆಂದು ಪಟೇಲ ಶಿವೇಗೌಡ ಮತ್ತು ಇತರ ಕೆಲವು ಮುಖ್ಯರಿಗೆ ಆಗಲೇ ಹೊಳೆದುಹೋಗಿತ್ತು. ಗಂಗಮ್ಮನಿಗೆ ಅದೇನೂ ತಿಳಿಯಲಿಲ್ಲ. ಮಾದೇವಯ್ಯನವರಿಗೆ ಎಲ್ಲವೂ ಅರ್ಥವಾಗಿ, ಏನಾದರೂ ಮಾಡಿ ತಪ್ಪಿಸಲು- ‘ಈ ಹುಡುಗನ ಮಾತು ಹಂಗ್ ನಂಬಾಕಾಗ್ತದೆ?’ ಎಂದರು. +‘ಅದ್ಯಾಕ್ ನ್ಯಂಬಾಕಾದು?-ಪಟೇಲ ದರ್ಪದಿಂದ ಕೇಳಿದ. +‘ಸತ್ಯವಾಗ್ಲೂ ಕಣ್ರೀ ಪಟೇಲ್ರೇ’-ಚೆನ್ನಿಗರಾಯ ಮತ್ತೆ ಒತ್ತಿಹೇಳಿ, ತನ್ನದೇನೂ ತಪ್ಪಿಲ್ಲವೆಂದು ಸೂಚಿಸಿದ. ಮನೆಯ ಹಿರೀಮಗನೇ ಮೂರ್ಖನಾಗಿ ಮಾತನಾಡುತ್ತಿರುವಾಗ ತಾವು ಬುದ್ಧಿವಂತಿಕೆ ಉಪಯೋಗಿಸಲು ಹೋದರೆ ಪಟೇಲರೂ ಊರಿನ ಇತರರೂ ತಮ್ಮ ಮೇಲೇ ತಿರುಗುತ್ತಾರೆಂದು ಯೋಚಿಸಿದ ಅಯ್ಯನವರು ಸುಮ್ಮನಾದರು. +– ೩ – +ಪಟೇಲರ ಅಪ್ಪಣೆಯಂತೆ ಕುಳುವಾಡಿ ತಳವಾರರು ಅಪ್ಪಣ್ಣಯ್ಯನನ್ನು ಹುಡುಕಲು ಹೋದರು. ರಾತ್ರಿಯ ಕತ್ತಲಿನಲ್ಲಿ ಅವನು ದೂರ ಹೋಗಿರಲಿಲ್ಲ. ಆಚೆ ಕೋಡಿ ಹತ್ತಿರದ ಬೂತಪ್ಪರಾಯನ ಮಂಟಪದಲ್ಲಿ ಕುಕ್ಕರಗಾಲಿನಲ್ಲಿ ಕೂತಿದ್ದ. ಅನುಮಾನ ಬಂದು ಬಸ್ತರ ಮುದ್ದ ಅದರೊಳಗೆ ಹೋದಾಗ ಸಿಕ್ಕಿ, ಹೆದರಿಕೆಯಿಂದ ಬರುವುದಿಲ್ಲವೆಂದು ಹಟಮಾಡಿದ. ಅಂಗಲಾಚಿದ ಕೊನೆಗೆ ಮೊಂಡುಬಿದ್ದ. ಆದರೆ ಮುದ್ದ ಮೊಂಡುಬಿದ್ದ ಅವನನ್ನು, ಕುರಿಯ ನಾಲ್ಕು ಕಾಲುಗಳನ್ನೂ ಹಿಡಿದು ಹೊರುವಂತೆ ಎತ್ತಿ ಹೆಗಲ ಮೇಲೆ ಹಾಕಿಕೊಂಡು ಹೊರಟುಬಿಟ್ಟ. +ಊರಿನವರೆಲ್ಲರೂ ಏರಿಯ ಮೇಲೆಯೇ ಇದ್ದರು. ಅಷ್ಟರಲ್ಲಿ ಆಲೆ ಉರಿದು ಬರಿ ಕೆಂಡ ಕಾಣುತ್ತಿತ್ತು. ಗದ್ದೆಗಳ ಕಬ್ಬು ಸುಟ್ಟು ಕರ್ರಗೆ ನಿಂತಿತ್ತು. ಆಕಾಶದಲ್ಲಿ ಬೆಳದಿಂಗಳಿಲ್ಲದಿದ್ದರೂ ಎಲ್ಲವೂ ಮಬ್ಬುಮಬ್ಬಾಗಿ ಕಾಣುತ್ತಿತ್ತು. ಅಪ್ಪಣ್ಣಯ್ಯನನ್ನು ಹೊತ್ತು ತಂದು ಎಲ್ಲರ ಸಮಕ್ಷಮ ಇಳಿಸಿದಾಗ ಅವನು ಹೆದರಿಕೆಯಿಂದ ನಡುಗುತ್ತಿದ್ದ. ಹಿಂಬಾಗದಲ್ಲಿ ಗಂಟು ಹಾಕಿಕೊಳ್ಳುವಂತೆ ಜುಟ್ಟು ಬಿಟ್ಟು, ಮುಂದುಗಡೆ ನುಣ್ಣಗೆ ಕ್ಷೌರ ಮಾಡಿಸಿಕೊಂಡಿದ್ದ ಅವನ ಬುರುಡೆಯ ಮೇಲೆ ಸಹ ಬೆವರುತ್ತಿತ್ತು. ಸದ್ಯ, ಮಗನ ಮುಖ ಕಂಡು ಗಂಗಮ್ಮ ನಿಟ್ಟುಸಿರೆಳೆದಳು. ಶಿವೇಗೌಡನಿಗೆ ಹೇಳಿ ಅವನಿಗೆ ನಾಲ್ಕು ಕೊಡಿಸಬೇಕೆಂದು ಮೊದಲೇ ನಿಶ್ಚಯಿಸಿಕೊಂಡಿದ್ದಳು. ಆದರೆ ಗೌಡನ ನಿಶ್ಚಯ ಬೇರೆಯದೇ ಆಗಿತ್ತು. +‘ಕಬ್ಬಿನ ಗದ್ದೆಗೆ ಯಾಕಲೇ ಬೆಂಕಿ ಹಾಕ್ದೆ?’-ಅವನು ಕೇಳಿದ. +ಹೆದರಿಕೆಯಿಂದ ಅಪ್ಪಣ್ಣಯ್ಯ ಮಾತನಾಡಲಿಲ್ಲ. ಇನ್ನೊಂದು ಸಲ ಗದ್ದರಿಸಿಕೊಂಡು ಕೇಳಿದಮೇಲೆ-‘ನಂಗೊತ್ತಿಲ್ಲ ಕಣ್ರೀ’ ಎಂದ. +‘ಓಹೋ, ಗೊತ್ತಿಲ್ಲ ಅಂತಾನೆ. ಬೀಡಿ ಸೇದುವಾಗ ಬೆಂಕಿ ಹತ್ಕಳ್ಳಿಲ್ವೇನೋ? ಹಾಗಂತ ನೀನೇ ಬಂದು ತೆಂಗಿನ ಮರದ ಮ್ಯಾಲಿದ್ದ ನನಗೆ ಹೇಳ್ಲಿಲ್ವೇನೋ?’-ಚೆನ್ನಿಗರಾಯ ಸ್ವಯಂ ಪ್ರೇರಿತನಾಗಿ ಸಾಕ್ಷಿ ನುಡಿದ. ಅಪ್ಪಣ್ಣಯ್ಯ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟ. ಅವನ ಕಾಲು ನಡುಗುತ್ತಿದ್ದುದು, ಅಳ್ಳಾಡುತ್ತಿದ್ದ ತುಂಡು ಪಂಚೆಯೊಳಗಿನಿಂದ ಕಾಣುತ್ತಿತ್ತು. ಗುಂಪಿನಲ್ಲಿಯೇ ಇದ್ದ ಅಯಾ ಶಾಸ್ತ್ರಿಗಳು-‘ಮೌನಂ ಸಮ್ಮತಿ ಸೂಚಕಂ. ಅಂದರೆ ಅವನೇ ಬೆಂಕಿ ಹೊತ್ತಿಸಿರೋದು ನಿಜ ಅಂದಹಾಗಾಯ್ತು. ಇನ್ನು ಮುಂದಿನ ಮಾತಾಡಿ’ ಎಂದರು. +ಗದ್ದೆಗಳವರೆಲ್ಲ ತಲಾತಟ್ಟಿ ಆಡಲು ಪ್ರಾರಂಭಿಸಿದರು. ‘ನನ್ನ ಚೇಣಿ ಕಬ್ಬು ಕಲ್ಲುಸಕ್ಕರೆಯಂತ ಬ್ಯಲ್ಲ ಮಾಡ್ತಿತ್ತು. ಆಣೆಗೆ ಎಲ್ಡು ಅಚ್ಚು ಅಂದ್ರೂ ಬ್ರೇಸ್ತಾರ ಸಂತೇಲಿ ಎಗರಿಸ್ಕಂಡ್ ಹೋಯ್ತಿದ್ರು. ಏನಿಲ್ಲ ಅಂದ್ರೂ ಮುನ್ನೂರು ರೂಪಾಯಿ ಲುಕ್ಸಾನಾಗೈತೆ’-ಎಂದು ಕುರುಬರ ಸಣ್ಣಯ್ಯ ಗೊಣಗಿದ. ಬಣಜಿಗರ ರೇವಣ್ಣಶೆಟ್ಟಿ, ‘ನಂದು ಆಲೆಯಾಗಿತ್ತು ನಿಜ. ಆದ್ರೂ ಕೂಳೆಕಬ್ಬು ಬೆಳೆದಿದ್ರೆ ನಾನೂರು ರೂಪಾಯಿ ಬತ್ತಿತ್ತು.’ ಎಂದ. ಪ್ರತಿಯೊಬ್ಬರೂ ಅವರವರ ನಷ್ಟವನ್ನು ಅಂದಾಜುಕಟ್ಟಿ ಹೇಳಿದರು. +ಅಯ್ಯಾಶಾಸ್ತ್ರಿಗಳಿಗೆ ಗದ್ದೆ ಇರಲಿಲ್ಲ. ಅವರೂ ತಮ್ಮ ನಷ್ಟ ಹೇಳಿದರು: ‘ನನಗೆ ಗದ್ದೆ ಇಲ್ಲ ನಿಜ. ಆದರೆ ಎಲ್ಲರದೂ ಆಲೆ ಅರೆಯುವಾಗ ಗಣಪತಿ ಪೂಜೆಗೆ ಅಂತ ಒಂದು ಅಡಿಗೆಗೆ ಒಂದು ಉಂಡೆ ಬೆಲ್ಲ ನಂಗೆ ಸಂದಾಯವಾಗಬೇಕಾಗಿತ್ತು. ಒಟ್ಟಿನ ಲೆಕ್ಕ ತಗುದ್ರೆ ಏನಿಲ್ಲ ಅಂದ್ರೂ ಐನೂರು ಉಂಡೆ ಬೆಲ್ಲ ನಂಗೆ ಬರಬೇಕಾಗಿತ್ತು. ಲೆಕ್ಕ ಹಾಕಿದ್ರೆ ಐವತ್ತು ರೂಪಾಯಿಯಾಯ್ತು. ಇದರ ಮೇಲೆ ಸಿಕ್ತಿದ್ದ ಕಬ್ಬಿನ ಹಾಲು, ಅಡಿಗೆ ತೆಗೆದಾಗ ಹೋಗಿದ್ದರೆ ಸಿಕ್ತಿದ್ದ ಬಿಸಿಬೆಲ್ಲ ಇವೆಲ್ಲ…..’ +‘ಶಾಸ್ತ್ರಿಗಳೇ, ನಿಮ್ಮ ಬಡ್ಡಿ ಲೆಕ್ಕ ಭಾಳಾ ವಜನ್ ಆಯ್ತು. ಏನೋ ಕಬ್ಬಿದ್ದೋರು ಲೆಕ್ಕಾ ಹಾಕಾದು ನ್ಯಾಯ. ಗಣಪ್ಪನ ಪೂಜೆ ಉಂಡೀಮ್ಯಾಲೆ ಲುಕ್ಸಾನು ಲೆಕ್ಕ ಮಾಡಬ್ಯಾಡ್‌ದು’-ಮಾದೇವಯ್ಯನವರು ನಡುವೆಯೇ ಹೇಳಿದರು: “ಕಬ್ಬೆಲ್ಲ ಅರ್‌ದಮ್ಯಾಲೆ ರೇವಣ್ಣಶೆಟ್ರು ಕೂಳೆಕಬ್ಬಿಗೆ ನಾನೂರು ರೂಪಾಯಿ ಲೆಕ್ಕ ತೆಗೀತಿದಾರೆ. ಅವರಿಗಿರಾದೆ ಒಂದೂವರೆ ಯಕ್ರೆ ಗದ್ದೆ. ಮದಲ ಬೆಳೆಗೇ ನೂರು ರೂಪಾಯಿ ಸಿಕ್ಕಿಲ್ಲ. ಇನ್ನು ನಾನ್ನೂರು ಹ್ಯಂಗ್ ಗಿಟ್‌ತದೆ? ‘ನಾನ್ ಕೂಳೆ ಬಿಡೂದಿಲ್ಲ, ಭೂಮಿ ಸಾಫ್ ಮಾಡ್ಸಿ ಮುಂದಿನ ಸಲೀಗೆ ಭತ್ತ ಹಾಕುಸ್ತೀನಿ, ಕಬ್ಬಿನಿಂದ ಭೂಮಿ ಕೆಟ್ಹೋಯ್ತುದೆ’ ಅಂತ ಅವ್ರು ನನ್ ಕುಟ್ಟೆ ಹೇಳಿದ್ರು.” +ಇನ್ನೂ ಎಷ್ಟು ಜನ ತಮ್ಮ ತಮ್ಮ ನಷ್ಟವನ್ನು ಹೆಚ್ಚುಮಾಡಿ ಹೇಳುತ್ತಿದ್ದರೋ! ಆದರೆ ಅಯ್ಯನವರ ಮಾತಿನಿಂದ ಅವರು, ನಾಲ್ಕು ಜನ ಒಪ್ಪುವಂತೆ ಯೋಚನೆ ಮಾಡಿ ಮಾತಾಡಬೇಕಾಯಿತು. ಅಯ್ಯನವರು ಮುಂದುವರಿಸಿದರು: ‘ಗಣಪ್ಪನ ಪೂಜೆಗೆ ಕಟ್ಟೋದು ಒಂದು ಪಿಡಚೇ ತ್ವಾರದ ಉಂಡಿ. ಅಂಥಾದು ಐನೂರು ಕೊತ್ರೆ ಐವತ್ತು ರೂಪಾಯಿ ಯಾರಪ್ಪ ಕೊಡ್ತಾನು? ಅಂದ್ರೆ ರೂಪಾಯಿಗೆ ಹತ್ತು ಉಂಡಿ ಆಯ್ತು. ರೂಪಾಯಿಗೆ ನಲವತ್ತರ ತನಕ ಅಚ್ಚೇ ಸಿಗ್ತಾವು. ಪಿಡಚೆ ತ್ವಾರದ ಉಂಡಿಗೆ ಒಂದೂವರಾಣೆ ಹ್ಯಂಗ್ ಕೊಡ್ತಾರು?’ +ಅಲ್ಲಿಗೆ ಅಯ್ಯಾಶಾಸ್ತ್ರಿಗಳ ಬಾಯಿ ಪೂರ್ತಿಯಾಗಿ ಕಟ್ಟಿಹೋಯಿತು. ಮಾದೇವಯ್ಯನವರು ಕೊನೆಯ ತೀರ್ಮಾನ ಹೇಳುವವರಂತೆ ಎದ್ದು ನಿಂತು ಅಂದರು: ಲುಕ್ಸಾನು ಲೆಕ್ಕಮಾಡಿದ್ರೆ ಯಾರಿಗೂ ಸಿಕ್ಕಾದಿಲ್ಲ. ಹುಡುಗ ಬೇಕು ಅಂತಲೇನು ಮಾಡ್ಲಿಲ್ಲ. ಈಟುದ್ದದ ಹುಡುಗ ಬೀಡಿ ಎಳೀತಾನೆ ಅಂದ್ರೆ ಬುದ್ಧಿಕಲಿಸ್‌ಬೇಕು. ಎಂಥಾದಾರಾ ಕೋಲು ತಗಂಡ್ ನಾಲ್ಕು ಬಾರಿಸಿ ಕಳಿಸಿ. ಇಲ್ದೆ ಇದ್ರೆ ಅವನ ಓಚಯ್‌ನೋರಿಗೆ ಏಳಿ ಕ್ವಾದಂಡ ಕಟ್ಸಿ.’ +‘ಇಲ್ಲ ಕಂಣ್ರಿ, ನನ್ನ ಕೋದಂದ ಕಟ್ಟಿಸ್‌ಬ್ಯಾಡಿ. ನಿಮ್ಮ ದಮ್ಮಯ್ಯ’- ಎಂದು ಅಪ್ಪಣ್ಣಯ್ಯ ಅಂಗಲಾಚಿದ. ‘ನಂದೇನೂ ತಪ್ಪಿಲ್ಲ. ಅವನಿಗೇ ಕಟ್ಸಿ’-ಎಂದು ಚೆನ್ನಿಗರಾಯ ವಿನಾಕಾರಣ ಮಾತನಾಡಿದ. +ಆದರೆ ಪಟೇಲ ಶಿವೇಗೌಡ ಬೇರೆಯ ರೀತಿಯಲ್ಲಿ ಮಾತನಾಡಿದ: ‘ಅಯ್ನೋರೇ, ನೀವು ಸನ್ಯಾಸಿ. ಮನೆಯಿಲ್ಲ ಮಟವಿಲ್ಲ; ಹ್ಯಂಡ್ರಿಲ್ಲ ಮಕ್ಳಿಲ್ಲ. ಹುಡ್ಗುನ್‌ಗೆ ಬುದ್ಧಿ ಕಲಿಸಾದು ಬ್ಯಾರೆ ಮಾತು. ಈಗ ಆಗಿರಾ ಲುಕ್ಸಾನು ಯಾರು ಕೊಡ್ತಾರೆ? ನಾನು ಊರ ಪಟೇಲ, ನ್ಯಾಯ ಹೇಳ್ಬಿಡ್ತೀನಿ. ಒಟ್ನಲ್ಲಿ ಇವ್ರು ಊರೊಟ್ಟಿಗೆ ಇಷ್ಟು ದಂಡ ಅಂತ ಕೊಡ್ಬೇಕು. ಅದ್ನ ಯಾರ್ಯಾರಿಗೆ ಲುಕ್ಸಾನಾಗಿದ್ಯೋ ಅವರಿಗೆ ಹಂಚಬೇಕು.’ +‘ನ್ಯಾಯ, ನ್ಯಾಯ’ -ಎಂದು ಅನೇಕರು ತಲೆ ಹಾಕಿದರು. ರೇವಣ್ಣಶೆಟ್ಟಿ ಮತ್ತು ಅಯ್ಯಾಸಾಸ್ತ್ರಿಗಳು ಗಟ್ಟಿಯಾಗಿಯೇ- ‘ಅದು ಅಪ್ಪಂಗೆ ಹುಟ್ಟಿದ ಮಾತು ಅಂದ್ರೆ’ ಎಂದರು. ಮಾದೇವಯ್ಯನವರನ್ನು ಛೇಡಿಸಲೆಂದೇ ಅವರು ಹಾಗೆಂದದ್ದು. ಅಯ್ಯನವರು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ವ್ಯವಹಾರ ಎತ್ತ ತಿರುಗುತ್ತಿದೆ ಎಂಬುದರ ಅರಿವು ಗಂಗಮ್ಮನಿಗೆ ಈಗ ಆಯಿತು. ಅವಳು ಕೈಮುಗಿಯುತ್ತಾ-‘ನಾನು ಗಂಡ ಸತ್ತ ಮುಂಡೆ. ಇವು ಬುದ್ದಿ ಇಲ್ದೆ ಏನೋ ಮಾಡಿಬಿಟ್ಟಿವೆ…..’ ಎಂದು ಮುಂದೆ ಹೇಳುವುದರಲ್ಲಿಯೇ ಚೆನ್ನಿಗರಾಯ ಬಾಯಿ ಹಾಕಿ, ‘ನಂದೇನೂ ತಪ್ಪಿಲ್ಲ ಕಣ್ಣಮ್ಮ. ಬರೀ ಅಪ್ಪಣ್ಣಯ್ಯ ಅನ್ನು’ ಎಂದ. ಗಂಗಮ್ಮ ಅದನ್ನು ಗಮನಿಸದೆ ಕೇಳಿಕೊಂಡಳು: ‘ತಪ್ಪು ಮಾಡಿದ್ದುಕ್ಕೆ ಅವನಿಗೆ ಕೋದಂಡ ಕಟ್ಸಿ. ದಂಡ ಪಂಡ ನನ್‌ಹತ್ರ ಇಲ್ಲ.’ +‘ನನ್ನ ಕೋದಂಡ ಕಟ್ಟಿಸ್‌ಬ್ಯಾಡಿ ಕಣ್ರಿ, ದಂಡಾನೇ ತಗಳ್ರಿ’-ಎಂದು ಅಪ್ಪಣ್ಣಯ್ಯ ಅಳುತ್ತಾ ಹೇಳಿದ. +ಮುಖ್ಯರಲ್ಲಿಯೇ ಮಾತುಕತೆಯಾಯಿತು. ಎಲ್ಲರಿಗೂ ಆಗಿರುವ ನಷ್ಟವನ್ನು ಲೆಕ್ಕಮಾಡಿದರು. ಪೂರ್ತಿಯಿಲ್ಲದಿದ್ದರೆ ಸ್ವಲ್ಪಸ್ವಲ್ಪ ಕಡಿಮೆಯಾಗಿಯಾದರೂ ಹಂಚುವಂತೆ, ಗಂಗಮ್ಮ ಎರಡು ಸಾವಿರ ರೂಪಾಯಿ ಕೊಡಬೇಕು. ಗಣಪತಿ ಉಂಡೆಗಳು ತಪ್ಪಿದುದಕ್ಕೆ ಅಯ್ಯಾಶಾಸ್ತ್ರಿಗಳಿಗೆ ಒಟ್ಟಿನಲ್ಲಿ ಹತ್ತು, ಕೂಳೆಕಬ್ಬಿನ ನಷ್ಟಕ್ಕೆ ರೇವಣ್ಣಶೆಟ್ಟಿಗೆ ಇಪ್ಪತ್ತೈದು ರೂಪಾಯಿ ಕೊಡುವುದೆಂದು ತೀರ್ಮಾನವಾಯಿತು. +ಗಂಗಮ್ಮ ಅಂಗಲಾಚಿದಳು, ಕೈ ಕೈ ಮುಗಿದಳು. ಆದರೆ ಯಾರೂ ಕೇಳಲಿಲ್ಲ. ಅವಳ ಪರವಾಗಿ ತಾವು ಮಾತನಾಡಿದರೂ ಪ್ರಯೋಜನವಿಲ್ಲವೆಂದು ಅರಿತ ಮಾದೇವಯ್ಯನವರೂ ಸುಮ್ಮನಾದರು. ತನ್ನ ಹತ್ತಿರ ಒಂದು ದಮಡಿಯೂ ಇಲ್ಲವೆಂದು ಗಂಗಮ್ಮ ಕೇಳಿದುದಕ್ಕೆ ಶಿವೇಗೌಡ ಪರಿಹಾರ ಹೇಳಿದ: ‘ನಿನ್ನ ಹ್ವಲ ಹದ್ದೆ, ತ್ವಾಟ ಮನೆ, ಯಲ್ಲಾನೂ ನಂಗೆ ಆದಾರ ಬರಿ. ನಾನು ಗಂಟು ಕೊಡ್ತೀನಿ. ನನ್ನ ಹಣ ತೀರ್ಸಿ ಆದಾರ ವಾಪಸ್ ಬರುಸ್ಕ.’ +ಗಂಗಮ್ಮನಿಗೆ ಏನೂ ತೋಚಲಿಲ್ಲ. ಅಯಾಶಾಸ್ತ್ರಿಗಳ ಮುಖ ನೋಡಿದಳು. ತಮಗೆ ಬರುವ ಹತ್ತು ರೂಪಾಯಿಗಳನ್ನು ಅವರ್ಯಾಕೆ ಕಳಕೊಂಡಾರು? ಅವರಿಂದ ಏನೂ ಪ್ರಯೋಜನವಾಗಲಿಲ್ಲ. ಗ್ರಾಮದಲ್ಲಿದ್ದ ಇನ್ನೊಬ್ಬ ಪುರೋಹಿತ ಅಣ್ಣಾಜೋಯಿಸರು ಅಯ್ಯಾಶಾಸ್ತ್ರಿಗಳ ಜ್ಞಾತಿ, ಎಂದರೆ ಅವರ ದೂರದ ಅಣ್ಣನ ಮಗ. ಚಿಕ್ಕಪ್ಪ ಹೇಳಿದುದರ ವಿರುದ್ಧ ವಿನಾಕಾರಣ ಅವರೂ ಮಾತನಾಡುವುದಿಲ್ಲ. ಗ್ರಾಮದ ದೊಡ್ದವರೆಲ್ಲ ಕೂಡಿ ಮಾಡಿರುವ ತೀರ್ಮಾನ. ಅವಳು ಒಪ್ಪಿಕೊಳ್ಳಲೇಬೇಕಾಯಿತು. +ದಂಡ ತಪ್ಪಿಸಲು ಮಾದೇವಯ್ಯನವರೇನೋ ಮೊದಲೇ ಪ್ರಯತ್ನ ಪಟ್ಟರು. ನಡೆಯಲಿಲ್ಲ. ಆದರೂ ಗಂಗಮ್ಮನಿಗೆ ಒಂದು ಬುದ್ಧಿಯ ಮಾತು ಹೇಳಿದರು: ‘ಜಮೀನು ಆಧಾರ ಮಾಡಿ ಸಾಲ ತಗಬ್ಯಾಡ್ರಿ. ನಿಮ್ಮ ಹತ್ರ ಬೆಳ್ಳಿ ಬಂಗಾರ ಏನಿದ್ರೂ ಮಾರಿಬಿಡ್ರಿ. ಸಾಲದ್ದಕ್ಕೆ ಮನೆಯಾಗಿರಾ ದಿನಸಿ ಧಾನ್ಯ ಕಾಯಿ ಕಸಿ ಕೊಟ್ಟು ಹಣ ತುಂಬಿಸಿ. ಸ್ಥಿರಾಸ್ತಿ ಮ್ಯಾಲೆ ಕಾಗದ ಪತ್ರ ಮಾಡ್‌ಬ್ಯಾಡಿ. ಸಾಲ ಅಂತ ಮಾಡಿದ್ರೆ ಅದರ ಬಡ್ಡಿ ಬಳೆಯಿತ್ತೆ. ಅದೆಲ್ಲ ನಿಭಾಯ್‌ಸಾಕೆ ನಿಮಗೆ ತಿಳಿವಳಿಕೆ ಇಲ್ಲ.’ +ಪಟೇಲ ಶಿವೇಗೌಡ ಬಾಯಿ ಹಾಕಿದ: ‘ಅದಕ್ಯಂತ ತಿಳಿವಳಿಕೆ ಬೇಕು? ನಾನೇನು ಅವರ್‌ತಾವ ಬಡ್ಡಿ ತಗಾತೀನಾ? ಮಾತಿಗೆ ಇರ್ಲಿ ಅಂತ ಆದಾರಾ ಬರೀತಾರೆ. ಮದುವೇದು, ಹೀರೇರು ಕೊಟ್ಟಿದ್ದೂ ವಡವೆ ವಸ್ತ್ರ ಕಳುದ್ರೆ ಮತ್ತೆ ಬತ್ತೈತಾ? ಸನ್ಯಾಸಿಗೆ ಚಿನ್ನ ಬೆಳ್ಳಿ ಬ್ಯಾಡ ಅಂದ್ರೆ ಸಂಸಾರಸ್ತರಿಗೆ ಬ್ಯಾಡ್‌ವಾ? ಏನ್ ಗಂಗಮ್‌ನೋರೇ, ಈ ಸನ್ಯಾಸಿ ಅಯ್ಯನ್ ಮಾತು ಕೇಳ್‌ತೀರೋ, ಗ್ರಾಮದ ಹತ್ತು ಜನ ತಿಳಿವಳಿಕೆ ಇರೋರ ಮಾತು ಕೇಳ್‌ತೀರೋ?’ +ಹತ್ತು ಜನರೂ ಪಟೇಲನ ಮಾತೇ ಸರಿ ಎಂದರು. ಪಟೇಲನ ಭಾವಮೈದ, ಸದ್ಯದಲ್ಲಿ ಶ್ಯಾನುಭೋಗಿಕೆ ನೋಡುತ್ತಿರುವ ಸಿವಲಿಂಗೇಗೌಡ-‘ಮದುವೇಲಿ ಕೊಟ್ಟ ಚಿನ್ನಾನ ಮಾರಾಕೆ ಗಂಡ ಸತ್ತಮ್ಯಾಲೆ ಹೆಂಗಸಿಗೆ ಕಾನೂನೇ ಇಲ್ಲ. ಜಮೀನು ಆದಾರ ಮಾಡ್‌ಬೈದು’ ಎಂದ. ಅಯ್ಯಾಶಾಸ್ತ್ರಿಗಳೂ ಅನುಮೋದಿಸಿದರು. ಇಷ್ಟೊಂದು ಜನರ ಅಭಿಪ್ರಾಯವನ್ನು ವಿರೋಧಿಸುವ ಕಾನೂನಿನ ಜ್ಞಾನ ಮಾದೇವಯ್ಯನವರಿಗಿರಲಿಲ್ಲ. ಇದ್ದರೂ ಈ ಪಂಚಾಯ್ತರ ಮಧ್ಯದಲ್ಲಿ ತಮ್ಮ ಅಭಿಪ್ರಾಯಕ್ಕೆ ಯಾವ ಬೆಲೆ? ತಮ್ಮ ಮಾತನ್ನು ಗಂಗಮ್ಮ ಕೇಳುತ್ತಾಳೆಂಬ ನಿಗದಿಯೂ ಇಲ್ಲ. ಅವರು ಸುಮ್ಮನಾದರು. +ಇನ್ನು ನ್ಯಾಯದ ವಿಷಯದಲ್ಲಿ ತಡಮಾಡುವಂತಿಲ್ಲ. ಆಗಲೇ ಎರಡು ಗಾಡಿ ಕಟ್ಟಿಸಿ, ಇಬ್ಬರು ಮಕ್ಕಳೋಡನೆ ಗಂಗಮ್ಮನನ್ನು ಕರೆದುಕೊಂಡು ಪಟೇಲ ಮತ್ತು ಉಳಿದ ಮುಖ್ಯರು ತಿಪಟೂರಿಗೆ ಹೊರಟರು. ಸಬ್‌ರಿಜಿಸ್ಟ್ರಾರರ ರೂಬು ರೂಬು ಶಿವೇಗೌಡ ಎರಡು ಸಾವಿರ ಕೊಟ್ಟ. ತನ್ನ ಸಂಸಾರ ತಾಪತ್ರಯಕ್ಕೆ ಎಂದು ಕಾರಣ ಬರೆದು ಅವಳ ಎಲ್ಲ ಆಸ್ತಿಯನ್ನೂ ಆಧಾರ ಬರೆದದ್ದಾಯಿತು. ಕಾಗದ ಬರೆದವನು ಶ್ಯಾನುಭೋಗ ಸಿವಲಿಂಗೇಗೌಡ. ಬಿಕಲಮ್‌ಗೆ ಕೊನೆಯ ಪಕ್ಷ ಇಪ್ಪತ್ತೈದು ರೂಪಾಯಿ ಕೊಡಬೇಕಾಗಿ ಅವನು ಹಟ ಹಿಡಿದ. ಈ ಸಲ ಬೆಳೆ ಬಂದಮೇಲೆ ಅವರೇಕಾಳು ಮಾರಿ ಕೊಡುವುದಾಗಿ ಗಂಗಮ್ಮ ಒಪ್ಪಿಕೊಂಡಳು. ತನ್ನ ಕಬ್ಬಿನ ಗದ್ದೆಯ ಲುಕ್ಸಾನು ಎಂದು ನಾಲ್ಕು ನೂರನ್ನು ಇಟ್ಟುಕೊಂಡು ಪಟೇಲ ಶಿವೇಗೌಡ ಉಳಿದುದನ್ನು ಇತರರಿಗೆ ಹಂಚಿದ. +ವಿಧವೆಯಾದ ಗಂಗಮ್ಮ ತಿಪಟೂರಿನ ಹೋಟೆಲಿನಲ್ಲಿ ಏನೂ ತಿನ್ನುವಂತಿಲ್ಲ. ಹುರಿಯಿವ ಮೊದಲು ನೀರು ಹಾಕಿರುವುದರಿಂದ ಪುರಿಯನ್ನೂ ಮುಟ್ಟುವ ಹಾಗಿಲ್ಲ. ಕೆರೆಯಲ್ಲಿ ಮೈ ತೊಳೆದುಕೊಂಡು, ಒದ್ದೆಸೀರೆಯಲ್ಲಿ ಎರಡು ಹಿಡಿ ಹುರಿಗಡಲೆ ಒಂದು ಮುರುಕು ಬೆಲ್ಲ ಅಗಿದು, ಮತ್ತೆ ಗಾಡಿಯಲ್ಲಿ ಕೂತಳು. ಹುಡುಗರಿಗೆ ಅವಳೇ ಆರಾಣೆ ಕೊಟ್ಟು ಬ್ರಾಹ್ಮಣರ ಓಟ್ಲಿನಲ್ಲಿ ಇಪ್ಪತ್ತನಾಲ್ಕು ದೋಸೆ, ಮೇಲೆ ಒಂದು ಮುದ್ದೆ ಚಟ್ನಿ ಕೊಡಿಸಿದಳು. +ಊರಿಗೆ ಬಂದು ನಾಲ್ಕು ದಿನ ಅವಳು ಅವಮಾನದಿಂದ ಎಲ್ಲೂ ಹೊರಗೆ ಹೋಗಲಿಲ್ಲ. ಮೂರು ಮೈಲಿ ದೂರದ ಸಣ್ಣೇನಹಳ್ಳಿಯ ಕುಂಬಾರರಿಗೆ ಹದಿನಾರು ರೂಪಾಯಿ ಕೊಟ್ಟು ಐನೂರು ಉಂಡೆ ಹೆಂಚು ತರಿಸಿ ಹಿಂದಿನ ಹಾರನ್ನು ಪೂರ್ತಿಯಾಗಿ ಕೈಯಾಡಿಸಿದಳು. +ಎಂಟು ದಿನವಾದ ಮೇಲೆ ಒಂದು ದಿನ ಅವಳೇ ಗುಡಿಯ ಮಾದೇವಯ್ಯನವರಿಗೆ ಹೇಳಿಕಳಿಸಿದಳು. ಕಷ್ಟ ಸುಖ ಹೇಳಿಕೊಂಡು, ಮುಂದೆ ಏನು ಮಾಡಬೇಕೆಂದು ಕೇಳಿದುದಕ್ಕೆ ಅವರು ಹೇಳಿದರು: “ಅಪ್ಪಣ್ಣಯ್ಯನ್ನ ಓಚಯ್‌ನೋರ ತಾವ ಸೇರಿಸಿ. ವಸಿ ವಿದ್ಯಾ ಬಂದ್ರೆ ಅವನು ನೆಟ್ಟಗಾಗ್ತಾನು. ಚೆನ್ನಿಗರಾಯನ್ನ ಹೊನ್ನವಳ್ಳಿಗೆ ಸೇರಿಸಿ. ನೀವೇ ಹೋಗಿ ಅವನನ್ನು ಅಲ್ಲಿ ಬಿಟ್ಟು, ‘ಮನೆತನದ ಶ್ಯಾನುಬಾಕಿ ಕಂಡೋರ ಕೈಲಿದೆ. ಇವನನ್ನ ಬುದ್ಧಿವಂತನ್ನ ಮಾಡಿ ವಿದ್ಯೆ ಕಲ್ಸಿ’ ಅಂತ ಕೇಳ್‌ಕಂಡ್ ಬನ್ರಿ. ಇನ್ ತಡ ಮಾಡಿದ್ರೆ ಸುಖಾ ಇಲ್ಲ. ಅವನಿಗಾಗಲೇ ಹದಿನೈದು ಆಯ್ತಲ.” +ಗಂಗಮ್ಮ ಒಪ್ಪಿದಳು. ಚೆನ್ನಿಗರಾಯನನ್ನು ಹೊನ್ನವಳ್ಳಿಯ ಸೀತಾರಾಮಯ್ಯ ಶ್ಯಾನುಭೋಗರ ಕೈ ಕೆಳಗೆ ಲೆಕ್ಕ ಕಲಿಯಲು ಬಿಡುವ ಸುದ್ಧಿ ಪಟೇಲ ಶಿವೇಗೌಡನಿಗೆ ತಿಳಿಯಿತು. ಅವನೇ ಬಂದು ಹೇಳಿದ: ‘ಆಟು ದೂರ ಯಾಕ್ ಕಳುಸ್ತೀಯಮ್ಮ, ನಮ್ ಸಿವಲಿಂಗನ್ ತಾವ ಸೇರ್ಸಿ. ಇಲ್ಲೇ ಮನೇಮುಂದೆ ಇದ್‌ಕಂಡ್ ಕಲ್ತ್ರೆ ಆಗಾಕಿಲ್ವಾ?’ +ಆದರೆ ಹೊನ್ನವಳ್ಳಿಯ ಸೀತಾರಾಮಯ್ಯನವರ ಕೈಕೆಳಗೆ ಕಲಿಯದೆ ವಿದ್ಯ ಬರುವುದಿಲ್ಲವೆಂಬುದು ಗಂಗಮ್ಮನ ದೃಢ ನಂಬಿಕೆಯೂ ಆಗಿತ್ತು. ಬಾಕಿಯವರು ಶ್ಯಾನುಭೋಗಿಕೆ ಮಾಡಬಹುದು. ಆದರೆ ಅದಕ್ಕೆ ಗುರುವಾಗುವ ಯೋಗ್ಯತೆ ಇರುವುದು ಈ ಸುತ್ತಿನಲ್ಲಿ ಹೊನ್ನವಳ್ಳಿಯವರಿಗೆ ಮಾತ್ರ. ಜಾವಗಲ್ಲು ಸುತ್ತಿನಲ್ಲಿ ಹಳೇಬೀಡಿನ ವೆಂಕಟೇಶಯ್ಯನವರಿಗೂ ಅಂಥದೇ ಯೋಗ್ಯತೆ ಇದೆ. ಆದರೆ ಅವರು ಈ ಸುತ್ತಿನವರಲ್ಲ. ಒಂದೊಂದು ಕಡೆಯ ಮರ್ಜಿ, ಜಾಯಮಾನ ಅಲ್ಲಲ್ಲಿಯವರಿಗೇ ಗೊತ್ತು. +ಅಂತೂ ಗಂಗಮ್ಮ ಕಮಾನುಗಾಡಿ ಹೂಡಿಸಿಕೊಂಡು ಇಬ್ಬರು ಮಕ್ಕಳೊಡನೆ ಹೊನ್ನವಳ್ಳಿಗೆ ಪಯಣ ಮಾಡಿದಳು. ಹೊರಡುವ ಎರಡು ದಿನ ಮೊದಲು ಚೆನ್ನಿಗರಾಯ ಭಂಡಾರಿ ರುದ್ರಣ್ಣನಿಗೆ ತಲೆಮಾಡಿಸಿಕೊಂಡು ನೆತ್ತಿಗೆ ಗಂಧದ ಪಟ್ಟು ಹಾಕಿಕೊಂಡ. ಅದರ ಮರುದಿನ ಎಣ್ಣೆ ನೀರು ಆಯಿತು. ಕೋಡುಬಳೆ ತಂಬಿಟ್ಟುಗಳ ಗಂಟು ತಯಾರಾಯಿತು. ಕೋಟು ಟೋಪಿ ಇಟ್ಟುಕೊಂಡು ಅವನು ಗಾಡಿ ಹತ್ತುವಾಗ ಮಾದೇವಯ್ಯನವರು ಹೇಳಿದರು: ‘ದೊಡ್ಡ ಕಡೆ ಹೋಗ್ತಾ ಇದೀಯಾ. ಇನ್ ಮ್ಯಾಲೆ ನಿನ್ನ ಬಾಯಲ್ಲಿ ಯಾವತ್ತೂ ಬೈಗಳದ ಮಾತು ಬರ್‌ಬ್ಯಾಡ್‌ದು. ಬುದ್ಧಿವಂತನಾಗಿ ವಾಪಸ್ ಬಾ.’ +ಹೊನ್ನವಳ್ಳಿಯವರು ಫೌತಿ ರಾಮಣ್ಣನವರನ್ನು ಬಲ್ಲವರು. ಗಂಗಮ್ಮನ ಕೋರಿಕೆ ಮನ್ನಿಸಿ ಚೆನ್ನಿಗರಾಯನನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಲೆಕ್ಕ ಕಲಿಸಲು ಒಪ್ಪಿದರು. ತಾಯಿ ಮತ್ತು ತಮ್ಮ ಮತ್ತೆ ಗಾಡಿ ಹತ್ತುವಾಗ ಚೆನ್ನಿಗರಾಯ ಅಳುತ್ತಾ ನಿಂತುಕೊಂಡ. ಕೊನೆಗೆ-‘ಯಾರ ಕೈಲಾದ್ರೂ ಇನ್ ಒಂದ್ ಸಲಿ ಕ್ವಾಡಬಳೆ, ತಂಬಿಟ್ಟು ಕೊಟ್‌ಕಳ್ಸು’ ಎಂದು ಹೇಳಿದ. +ಊರಿಗೆ ಹಿಂತಿರುಗಿದ ಮೇಲಿ ಅಪ್ಪಣ್ಣಯ್ಯನನ್ನು ಚಾತಾಳೀ ಚನ್ನಕೇಶವಯ್ಯನವರ ಕೂಲಿಮಠಕ್ಕೆ ಸೇರಿಸಿಯಾಯಿತು. ದಿನವೂ ಅವನನ್ನು ಮಠಕ್ಕೆ ಕಳಿಸಲು ಪಂಚೆಯ ಸೆರಗಿನ ತುಂಬ ಹುರಿಗಡಲೆ, ಬೆಲ್ಲ, ಅರ್ಧಹೋಳು ಕೊಬ್ಬರಿ ಕೊಡಬೇಕಾಗಿತ್ತು. +ಅಧ್ಯಾಯ ೨ +– ೧ – +ಚೆನ್ನಿಗರಾಯ ಹೊನ್ನವಳ್ಳಿಯಲ್ಲಿ ಒಟ್ಟು ಮೂರು ವರ್ಷ ಶಿಷ್ಯವೃತ್ತಿ ಮಾಡಿದ. ಈಗ ಅವನು ಸಲೀಸಾಗಿ ಎಡಗೈ ಬೆರಳಿನಿಂದ ರೂಲು ದೊಣ್ಣೆ ಉರುಳಿಸುತ್ತಾನೆ. ಬಲಗೈಲಿ ಸ್ಟೀಲುಮುಳ್ಳಿನಿಂದಾಗಲಿ, ಸೀಸದ ಕಡ್ಡಿಯಿಂದಾಗಲಿ ಗೆರೆ ಎಳೆಯುತ್ತಾನೆ. ಲೆಕ್ಕ ಪತ್ರಗಳಲ್ಲಿ ಎಡಗಡೆ ತಪ್ಪಿಲ್ಲದಂತೆ ಇಳಿಸುವುದು ಮಾತ್ರವಲ್ಲದೆ ಬಲಗಡೆಯದನ್ನು ಹೇಗೆ ಬರೆಯಬೇಕೆಂದು ತಿಳಿದುಕೊಂಡಿದ್ದಾನೆ. ಅವನ ವಿದ್ಯೆ ಪೂರ್ತಿಯಾಯಿತೋ ಇಲ್ಲವೋ ಹೇಳುವುದು ಕಷ್ಟ. ‘ನೀನು ರೂಪಾಯಯಲ್ಲಿ ನಾಲ್ಕಾಣೆಯೂ ಕಲಿತಿಲ್ಲ’-ಎಂದು ಗುರುಗಳಾದ ಶೀತಾರಾಮಯ್ಯನವರು ಹೇಳುತ್ತಾರೆ. ಅವರ ಎದುರಿಗೆ ಪ್ರತಿಹೇಳುವುದಿಲ್ಲವಾದರೂ ಚೆನ್ನಿಗರಾಯನಿಗೆ ಆ ಮಾತಿನಲ್ಲಿ ವಿಶ್ವಾಸವಿಲ್ಲ. ‘ಅವರ ಲೆಕ್ಕಾನೇ ಕೆರಕಂಡ್ ಇಲ್ಲೇ ಬಿದ್ದಿರ್ಲಿ ಅಂತ ಹಾಗಂತಾರೆ’-ಎಂದು ಅದಕ್ಕೆ ಅರ್ಥ ಮಾಡುತ್ತಾನೆ. +ಅವನು ಕಾಲ್‌ನಡಿಗೆಯಲ್ಲೇ ವರ್ಷಕ್ಕೆ ಎರಡು ಮೂರು ಸಲ ಊರಿಗೆ ಬಂದು ಹೋಗುತ್ತಿದ್ದ. ಈ ಸಲ ಬಂದವನು ತಾಯಿಗೆ ಹೇಳಿದ: ‘ಇನ್ನೆಷ್ಟ್ ದಿನ ಅಂತ ಅಲ್ಲಿರಾದು? ನಾನು ಊರಿಗ್ ಬಂದು ಶ್ಯಾನುಭೋಗಿಕೆ ಚಾರ್ಜ ತಗಾತೀನಿ.’ +‘ಲ್ಯಕ್ಕ ಚೆನ್ನಾಗಿ ಬಂತೇನೋ?’ +‘ಬರ್ದೇ ಏನು? ಕೇಳು ಬೇಕಾದ್ರೆ: ಒಂದನೇ ನಂಬ್ರು ಖಾತೆವಾರ್, ಎರಡನೇ ನಂಬ್ರು ಬಂಜರ್ ತಖ್ತೆ, ಮೂರನೇ ನಂಬ್ರು ಪಹಣಿ, ನಾಲ್ಕು ಖಾತೆ, ಐದು ರೆಂಟ್ ರೋಲ್, ಆರು ಕಮ್ಮಿ ಜಾಸ್ತಿ, ಏಳು ತಕರಾರ್ ತಖ್ತೆ, ಎಂಟು ಇನಾಂ ರಿಜಿಸ್ಟ್ರು, ಒಂಬತ್ತು ಜಮಾಬಂದಿ ಗೋಶ್ವಾರೆ, ಹತ್ತು ರೋಜ್‌ಖಿರ್ದಿ, ಹನ್ನೊಂದು ರಶೀತಿ ಪಟ್ಟಿ, ಹನ್ನೆರಡನೇ ನಂಬ್ರು ಖಾನೀಷುಮಾರಿ. ಇವು ಹನ್ನೆರಡು ಶಾನುಭೋಗಿಕೆ ಬಾರಾ ನಮೂನೆ ಲೆಕ್ಕಗಳು’-ಎಂದು ಪ್ರಭವ ವಿಭವ ಮೊದಲಾಗಿ ಅರವತ್ತು ಸಂವತ್ಸರಗಳ ಹೆಸರನ್ನು ಗಟ್ಟಿ ಮಾಡಿ ಒಪ್ಪಿಸಿದವನಂತೆ ಹೇಳಿದ. +ಮಗ ವಿದ್ಯಾಸಂಪನ್ನನಾದನೆಂದು ತಾಯಿಗೆ ನಂಬಿಕೆಯಾಯಿತು. ಅವನು ಹೇಳಿದ: ‘ನೀನೇನು ಸುಮ್ಮನೆ ಕೂತಿರ್ತಿಯೋ, ನಂಗೆ ಮದ್ವೆ ಗಿದ್ವೆ ಮಾಡ್ತೀಯೋ?’ +‘ಮಾಡ್ದೆ ಏನು ತಡಿಯೋ. ಶ್ಯಾನುಭೋಗ್‌ಕೆ ಕೈಯಿಗ್ ತಗ.’ +‘ಅದ್ ಬಂದೇ ಬರುತ್ತೆ. ನಂಗಾಗಲೇ ಹದಿನೆಂಟಾಗಲಿಲ್ವೆ? ಮೆಜಾರಿಟಿಗ್ ಬಂದಿದೀನಿ. ಬಾಕಿಯೋರೆಲ್ಲ ಹದಿನಾರು ವರ್ಷಕ್ಕೆ ಗಂಡು ಹುಡುಗ್‌ರಿಗ್ ಮದ್ವೆ ಮಾಡ್ತಾರೆ. ನಾವು ಹಾಗೆ ಇದ್ರೆ ಜನ ಏನಂತಾರೆ.’ +ಚೆನ್ನಿಗರಾಯನಿಗೆ ಆಗಲೇ ಹೆಣ್ಣು ಕೊಡಲು ಎಷ್ಟೋ ಜನ ಕೇಳಿದ್ದರು. ಗಂಗಮ್ಮನೇ ಇನ್ನೂ ಮನಸ್ಸು ಕೊಟ್ಟಿರಲಿಲ್ಲ. ಈಗ ಮಗನೇ ಕೇಳುತ್ತಿದ್ದಾನೆಂದಮೇಲೆ ಮಾಡಿಬಿಡಬೇಕು. ಆ ಬಗೆಗೆ ಮಾದೇವಯ್ಯನವರ ಸಲಹೆ ಕೇಳಿದರೆ ಅವರು- ‘ಅವ್ನು ಇನ್ನೂ ಒಂದೆಲ್ಡು ವರ್ಸ ಲೆಕ್ಕ ಕಲೀಲಿ. ಶ್ಯಾನುಬೋಗ್‌ಕೆ ತಗಂಡು ಆಮ್ಯಾಲೆ ಮದ್ವೆಗಿದ್ವೆ ಆಗ್ಲಿ’ ಎಂದರು. +ಚೆನ್ನಿಗರಾಯನಿಗೆ ಸಿಟ್ಟು ಬಂತು. ‘ಓಹೋ, ಹೋ ಹೋ, ಇನ್ನೂ ಎರಡು ವರ್ಷ ಕಾಯ್ಬೇಕಂತೆ. ನಿಮಗೇನು ತಿಳಿಯುತ್ತೆ. ಸುಮ್ಮನಿರ್ರೀ ಅಯ್ನೋರೇ’-ಎಂದ. ಹಿಂದೆ ಎಂದೂ ಅವರನ್ನು ಯಾವುದಕ್ಕೂ -‘ನಿಮಗೇನು ತಿಳಿಯಿತ್ತೆ ಸುಮ್ಮನಿರ್ರಿ’ ಅಂದಿರಲಿಲ್ಲ. ಅವರು ಸುಮ್ಮನಾದರು. +ಚೆನ್ನಿಗರಾಯ ಮತ್ತೆ ಹೊನ್ನವಳ್ಳಿಗೆ ಹೋಗಲಿಲ್ಲ. ಅವನೇ ಒಂದು ದಿನ ಹೋಗಿ ಸಿವಲಿಂಗೇಗೌಡನನ್ನು-‘ನನ್ನ ಕೆಲಸ ನಂಗೆ ಕೊಡು’ ಎಂದು ಕೇಳಿದರೆ ಅವನು, ‘ಕೊಡಾಣ ಮ್ಯಾಲ್ನಿಂದ ಬರ್ಲಿ’ ಎಂದ. ಮುಂದೆ ಏನು ಮಾಡಬೇಕೆಂಬುದು ಭಾವೀ ಶ್ಯಾನುಭೋಗನಿಗೆ ಖುದ್ದು ತಿಳಿಯಲಿಲ್ಲ. ಅಷ್ಟರಲ್ಲಿ ಮದುವೆ ನಿಶ್ಚಯವಾಗುವ ಮಾತುಕಥೆ ನಡೆಯುತ್ತಿದ್ದುದರಿಂದ ಅವನಿಗೆ ಶ್ಯಾನುಭೊಗಿಕೆಯ ಕಡೆ ಅಷ್ಟೊಂದು ಗಮನ ಹೋಗಲಿಲ್ಲ. +ಒಂದು ದಿನ ಇವರ ಮನೆಯ ಮುಂದೆ ಒಂದು ದೊಡ್ಡ ಬಿಳಿಯ ಕುದುರೆ ಬಂದು ನಿಂತಿತು. ಮಿನುಗುವ ಜೀನು ಕಡಿವಾಣಗಳನ್ನು ಹಾಕಿದ್ದ ಅದರ ಮೇಲಿಂದ ಬಿಳಿಯ ನಿಕ್ಕರು ಬಿಳಿಯ ಕೋಟು ಕಾಲಿಗೆ ಕಾಲುಚೀಲ ಬೂಟುಗಳನ್ನು ಹಾಕಿದ್ದ ಇಳಿಪ್ರಾಯದ ಒಬ್ಬ ಭಾರೀ ವ್ಯಕ್ತಿ ಇಳಿದರು. ಆ ದೊಡ್ಡ ಬಿಳಿ ಕುದುರೆ, ಅವರ ಆಳುತನ ನೋಡಿದರೆ ಡಿಸ್ಟಿಕಟ್ಟಿನ ದಣಿ ಡೆಪ್ಯೂಟಿ ಕಮಿಶನರೆಂದು ಯಾರಾದರೂ ಹೇಳಿಬಿಡಬೇಕಾಗಿತ್ತು. ಗಂಗಮ್ಮ ಹಾಗೆಂದೇ ತಿಳಿದು ಒಳಗೆ ಹೋಗಿ ಚೆನ್ನಿಗರಾಯನಿಗೆ ಹೇಳಿದಳು. ಅವನು ಹೊರಗೆ ಬಂದು ಭಯಭಕ್ತಿಗಳಿಂದ ಬಗ್ಗಿ ಕೈಮುಗಿದು-‘ಮಹಾಸ್ವಾಮಿಗಳು ದಯಮಾಡಿಸಬೇಕು’ ಎಂದು ತಲೆಬಾಗಿ ತೊದಲುತ್ತಾ ಹೇಳಿದ. ತನಗೆ ಶ್ಯಾನುಭೋಗಿಕೆ ಕೊಡಿಸಲು ಡಿಪ್ಟಿಕಮಿಶನರೇ ಖುದ್ದು ಬಂದಿದ್ದಾರೆಂದು ಅರ್ಥಮಾಡಿಕೊಂಡ. +‘ಶಿವಲಿಂಗೇಗೌಡನಿಗೆ ಹೇಳಿಕಳಿಸಲೇ?’-ಅವನು ಕೇಳಿದ. +‘ಯಾಕೆ?’ +‘ಹಾಲಿ ಶ್ಯಾನುಭೋಗಿಕೆ ಛಾರ್ಜು ಅವನ ತಾವಲೇ ಇದೆ. ಅವನಿಂದ ಮಹಾಸ್ವಾಮಿಗಳು ನನಗೆ ಕೊಡಿಸಬೇಕು. ಬರಾವರ್ದಾರ್ ರಾಮಣ್ಣನೋರ ಹಿರೀ ಮಗ ನಾನೇ-ಚೆನ್ನಿಗರಾಯ.’ +‘ಕೊಡಿಸೋಣ ಈಗ ಒಳಕ್ಕೆ ನಡೀರಿ.’ +ಅವರು ಒಳಕ್ಕೆ ಬಂದರು. ಮನೆಯಲ್ಲಿ ಕುರ್ಚಿ ಇರಲಿಲ್ಲ. ಅಣ್ಣಾಜೋಯಿಸರ ಮನೆಯಲ್ಲಿ ಇರುವ ಒಂದು ಕುರ್ಚಿಯನ್ನು ಬಿಟ್ಟರೆ ಈ ಊರಿನಲ್ಲಿ ಯಾರ ಮನೆಯಲ್ಲಿಯೂ ಇಲ್ಲ. ಬಂದವರು ಮಂದಲಿಗೆಯ ಮೇಲೆಯೇ ಕೂತರು. ಚೆನ್ನಿಗರಾಯ ಒಳಗಿನಿಂದ ಗಂಗೋದಕ ತಂದು ಮುಂದಿಟ್ಟರೆ ಅವರು-‘ನಾವು ಮೊದಲೇ ನೀರು ಕುಡಿಬಾರ್ದು’ ಎಂದರು. ಇವರಿಬ್ಬರಿಗೂ ವಿಷಯ ಅರ್ಥವಾಗಲಿಲ್ಲ. ಕೊನೆಗೆ ಅವರೇ ಹೇಳಿದರು: ‘ನಾಗಲಾಪುರ ಅಂತ ಕೇಳಿದೀರಲ್ಲ-ನಾವು ಅದರ ಸ್ಥಳಪುರೋಹಿತರು. ನನ್ನ ಹೆಸರು ಕಂಠೀಜೋಯಿಸ ಅಂತ. ನನ್ನ ಮಗಳು ನಂಜಮ್ಮ ಅಂತ ಹುಡುಗಿ ಹೆಸರು. ರೇವತೀ ನಕ್ಷತ್ರ ಎರಡನೇ ಪಾದ. ಹನ್ನೆರಡು ನಡಿತಾ ಇದೆ. ಜಾತಕ ತಂದಿದೀನಿ. ನಿಮ್ಮ ಹುಡುಗನ ಜಾತಕ ಇಲ್ಲಿ ಕೊಡಿ.’ +ಇವರು ಡಿಪ್ಟಿಕಮಿಶನರೆಂಬ ಭಾವನೆಯಿಂದ ನಾಗಲಾಪುರದ ಕಂಠೀಜೋಯಿಸರೆಂಬ ಕಲ್ಪನೆಗೆ ಬರಬೇಕಾದರೆ ಗಂಗಮ್ಮನಿಗೆ ಸ್ವಲ್ಪ ಹೊತ್ತೇ ಹಿಡಿಯಿತು. ಇವರು ತನ್ನ ಮಗನಿಗೆ ಹೆಣ್ಣು ಕೊಡಲು ಬಂದಿದ್ದಾರೆಂಬ ಅರಿವು ಅವಳಲ್ಲಿ ಆತ್ಮವಿಶ್ವಾಸವೂ ಮೂಡಿಸಿತು. ಆದರೂ ದೊಡ್ಡ ಕುದುರೆಯ ಮೇಲೆ ಬಂದಿರುವವರು. ಡಿಪ್ಟಿಕಮಿಶನರ ಹಾಗೆ ದಿರಿಸು ಮಾಡಿರುವವರು. ಅವಳು ಹೇಳಿದಳು: ‘ಶ್ಯಾನುಭೋಗ್‌ಕೆ ಛಾರ್ಜು ಕೈಗೆ ಬರೂತಂಕ ನಾನು ಇವನ ಮದುವೆ ಮಾಡುಲ್ಲ ಅಂತಿದೀನಿ.’ +‘ನಿಂಗೇನು ಗೊತ್ತಾಗುತ್ತೆ ಸುಮ್ನಿರಮ್ಮ. ಛಾರ್ಜು ಕೊಡುತ್ತೀನಿ ಅಂತ ಅವರು ಮೊದ್ಲೇ ಅನ್ಲಿಲ್ವೆ?’-ಚೆನ್ನಿಗರಾಯ ತಾಯಿಯ ಬಾಯಿ ಮುಚ್ಚಿಸಿದ. +‘ನನಗೆ ಅದೆಲ್ಲ ಗೊತ್ತಿದೆ. ನಿಮ್ಮ ಹಕ್ಕು ನಿಮಗೆ ಕೊಡ್ಸೋದು ಎಷ್ಟು ಹೊತ್ತು? ನಾನು ಅಮಲ್ದಾರ್‌ರಿಗೆ ಹೇಳ್ತೀನಿ. ಮೊದಲು ಮದುವೆಯಾಗಲಿ.’ +ಅಂತೂ ಗಂಗಮ್ಮ ಮಗನ ಜಾತಕ ಕೊಟ್ಟಳು. ಕಂಠೀಜೋಯಿಸರು ಎಷ್ಟಾದರೂ ಸ್ವತಃ ಜೋಯಿಸರೇ. ಅಲ್ಲಿಯೇ ಕೂತು ಗುಣಿಸಿ ನೋಡಿ-‘ದಿವ್ಯವಾಗಿ ಹೊಂದುತ್ತೆ. ಇನ್ನು ಮುಂದಿನ ಮಾತಾಡಿ’ ಎಂದರು. +– ೨ – +ನಾಗಲಾಪುರ ರಾಮಸಂದ್ರದ ಪಶ್ಚಿಮಕ್ಕೆ ಹನ್ನೆರಡು ಮೈಲಿ ದೂರದ ಗ್ರಾಮ. ಆ ಊರಿನ ಕಂಠೀಜೋಯಿಸರ ಕೀರ್ತಿಯನ್ನು ಕೇಳದವರೇ ಇಲ್ಲ. ರಾಮಸಂದ್ರ ತಿಪಟೂರು ತಾಲ್ಲೂಕು ತುಮಕೂರು ಡಿಸ್ಟಿಕಟ್ಟಿನಲ್ಲಿದ್ದು, ನಾಗಲಾಪುರ ಚೆನ್ನರಾಯ ಪಟ್ಟಣ ತಾಲ್ಲೂಕು ಹಾಸನ ಡಿಸ್ಟಿಕಟ್ಟಿಗೆ ಸೇರಿದುದರಿಂದ ಈ ಕಡೆಯವರಿಗೆ ಜೋಯಿಸರ ಹೆಸರು ಅಷ್ಟು ಪರಿಚಿತವಿಲ್ಲ. ಚೆನ್ನರಾಯ ಪಟ್ಟಣ ತಾಲ್ಲೂಕು, ಶಾಂತಿ ಗ್ರಾಮ, ಹಾಸನ, ಕೌಶಿಕ ಮೊದಲಾದ ಕಡೆ ಎಲ್ಲರಿಗೂ ಅವರ ಹೆಸರು ಗೊತ್ತು. +ಒಳ್ಳೆಯ ಎತ್ತರ, ಅಗಲವಾದ ಹಣೆ, ಮತ್ತು ಚುರುಕಾದ ಕಣ್ಣುಗಳ ಆಳು ಕಂಠೀಜೋಯಿಸರು. ಅವರ ಹದಿನಾರಕ್ಕೆ ಮದುವೆಯಾಯಿತು. ಇಪ್ಪತ್ತಕ್ಕೆ ಮನೆಗೆ ಹೆಂಡತಿ ಬಂದಳು. ಎರಡು ವರ್ಷಕ್ಕೆ ಒಬ್ಬ ಮಗ ಹುಟ್ಟಿದ. ಇನ್ನೆರಡು ವರ್ಷಕ್ಕೆ ಇನ್ನೊಂದು ಮಗು ಹುಟ್ಟಿ ತೀರಿಕೊಂಡಿತು. ಮತ್ತೆ ಎರಡು ಮಕ್ಕಳಾಗಿ ಅವೂ ಸತ್ತಮೇಲೆ ಕೊನೆಯ ಹೆರಿಗೆಯಲ್ಲಿ ಹೆಂಡತಿಯೇ ತೀರಿಹೋದಳು. ಉಳಿದ ಹೆಣ್ಣುಮಗುವನ್ನು ಕಂಠೀಜೋಯಿಸರ ತಾಯಿ ಸಾಕಿದಳು. ಜೋಯಿಸರು ಮತ್ತೆ ಮದುವೆಯಾಗಲಿಲ್ಲ. ಈಗ ಅವರಿಗೆ ಇರುವವರು ಇಬ್ಬರೇ ಮಕ್ಕಳು. ಹಿರಿಯ ಮಗ ಕಲ್ಲೇಶ ಪೋಲೀಸ್ ಕಾನ್‌ಸ್ಟೇಬಲ್ ಆಗಿ ಶ್ರವಣಬೆಳಗೊಳದಲ್ಲಿ ಕೆಲಸ ಮಾಡುತ್ತಿದ್ದಾನೆ. ತಾಯಿ ಸತ್ತಾಗ ಉಳಿದ ಮಗು ನಂಜಮ್ಮನನ್ನೇ ಈಗ ಚೆನ್ನಿಗರಾಯನಿಗೆ ಕೊಟ್ಟು ಮದುವೆ ಮಾಡುವುದು. +ಹುಟ್ಟಿದ ಮೇಲೆ ಯಾರಿಗಾದರೂ ಆಗಬಹುದಾದ ಇಷ್ಟರಿಂದಲೇ ಕಂಠೀಜೋಯಿಸರು ಪ್ರಸಿದ್ಧರಾಗಲಿಲ್ಲ. ಪ್ರಸಿದ್ಧಿಗೂ ಕೆಲವು ಸಿದ್ಧಿ ಬೇಕಲ್ಲ. ಒಳ್ಳೇ ಭೀಮನಂತಹ ಅವರ ಶರೀರವೂ ಒಂದು ಸಲ ನೋಡಿದರೆ ಯಾರಿಗಾದರೂ ನೆನಪನ್ನು ಉಳಿಸುತ್ತಿತ್ತು. ಮೊದಲಿನಿಂದ ನಾಟಕ, ಯಕ್ಷಗಾನಗಳಲ್ಲಿ ಮಾಡುತ್ತಿದ್ದ ಅವರ ಪಾರ್ಟನ್ನು ಒಂದು ಸಲ ನೋಡಿದರೆ ಯಾರೂ ಮರೆಯುತ್ತಿರಲಿಲ್ಲ. ಕಾಳಿದಾಸ ನಾಟಕದಲ್ಲಿ ಭೋಜರಾಜನ ಪಾರ್ಟು ಅವರಿಗಿಂತ ಹೆಚ್ಚು ಯಾರಿಗೂ ಹೊಂದುತ್ತಿರಲಿಲ್ಲ. ಮಹಾಭಾರತ ಕುಣಿತದಲ್ಲಿ ದುರ್ಯೋಧನನ ವೇಷ ಅವರಿಗೇ ಹೇಳಿಸಿದ್ದು. ಯಕ್ಷಗಾನದಲ್ಲಿ ವೀರವೇಷ ಹಾಕಿದಾಗ ಎರಡು ಹಲಗೆಗಳನ್ನು ಮುರಿದುಹಾಕದೆ ಕುಣಿಯುವುದನ್ನು ನಿಲ್ಲಿಸುತ್ತಿರಲಿಲ್ಲ. ತಾರದಲ್ಲಿ ಒಂದೇ ಉಸುರಿಗೆ ರಾಗವಾಗಿ ಎಳೆದು ಕಂದ ಪದ್ಯ ಹಾಡುತ್ತಿದ್ದರು. ಹಾರ್ಮೋನಿಯಂ ಬಾರಿಸುತ್ತಿದ್ದುದಲ್ಲದೆ ತಬಲಾ ಬಡಿಯುವುದನ್ನೂ ಬಲ್ಲರು. ಮಂಗಳ, ಅಮಂಗಳ, ಎರಡೂ ಬಗೆಯ ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯ, ಮಾಟ ಮದ್ದುಗಳೂ ಗೊತ್ತಿದ್ದವು. ಇದರ ಮೇಲೆ ಅಮಲ್ದಾರರ ಜೊತೆಗೂ ಇಂಗ್ಲೀಷ್ ಮಾತನಾಡುವ ಛಾತಿ; ಸಾಬರ ಕೂಡ ಉರ್ದೂ ಬಳಸುವ ಜ್ಞಾನ. +ಛಾತಿಯೇ ಅವರಿಗೆ ಪ್ರಸಿದ್ಧಿ ದೊರಕಿಸಿಕೊಟ್ಟಿತ್ತು. ಹಿಂದೆ ಯಾವುಯಾವುದೋ ಕೋರ್ಟು ಕೇಸುಗಳನ್ನು ಗೆದ್ದಿದ್ದ ಅವರು ಒಂದೆರಡು ಕೊಲೆ ಮಾಡಿ ಜಯಿಸಿಕೊಂಡಿದ್ದರೆಂದು ಜನ ಹೇಳುತ್ತಿದ್ದರು. ಅದು ಸುಳ್ಳೋ ದಿಟವೋ ಕಂಡವರಿಲ್ಲ. ಜೋಯಿಸರಂತೂ ಸುಳ್ಳು ಎನ್ನುತ್ತಾರೆ. ಯಾರ ಕೈಲಾದರೂ ಜಗಳವಾಡುವಾಗ ‘ನಿನ್ನ ಖೂನಿಮಾಡಿಬಿಡ್ತೀನಿ’ ಇತ್ಯಾದಿ ಮಾತುಗಳು ಬಾಯಲ್ಲಿ ಬರುತ್ತಿದ್ದ ಗತ್ತಿಗೆ, ಅವರು ಎಷ್ಟು ಖೂನಿ ಮಾಡಿದ್ದಾರೆ ಎಂಬ ಭಯ ಜನರ ಮನಸ್ಸಿನಲ್ಲಿ ಬಂದರೆ ಆಶ್ಚರ್ಯವಿಲ್ಲ. ಕತ್ತಲೆಗೆ ಸ್ವಲ್ಪವೂ ಹೆದರದ ಅವರು ನಿಶಾಚರರು. ಸೊಂಟಕ್ಕೆ ಒಂದು ಕೊನೆಗತ್ತಿ ಸಿಕ್ಕಿಸಿಕೊಂಡು ಹೊರಟರೆ ಬೆಳಕು ಹರಿಯುವುದರೊಳಗೆ ಒಬ್ಬರೇ ಬಳ್ಡಾಳುತಿಟ್ಟು ಹಾಯ್ದು ಇಪ್ಪತ್ತನಾಲ್ಕು ಮೈಲಿ ದೂರದ ಹಾಸನ ಮುಟ್ಟುತ್ತಿದ್ದರು. ಜೋಯಿಸರು ಹಗಲು ಹೊತ್ತು ನಡೆಯುತ್ತಿದ್ದುದೇ ಅಪರೂಪ. ಕೊಳ್ಳಿದೆವ್ವ ಮಾತ್ರವಲ್ಲದೆ ಜಡೆಮುನಿಗಳನ್ನು ಸಹ ಧೈರ್ಯವಾಗಿ ಎದುರಿಸಿ ಕಾಲಿಗೆ ಬುದ್ಧಿ ಹೇಳಿಸುವ ಇವರ ಕೀರ್ತಿ ಹಬ್ಬುವುದರಲ್ಲಿ ಆಶ್ಚರ್ಯವೇನು? +ಚೆನ್ನಿಗರಾಯನ ಮದುವೆಗೆ ರಾಮಸಂದ್ರದ ಬ್ರಾಹ್ಮಣರೆಲ್ಲ ಬಂದಿದ್ದುದಲ್ಲದೆ ಅವರ ಶ್ಯಾನುಭೋಗಿಕೆಯ ಗ್ರಾಮವಾದ ಕುರುಬರ ಹಳ್ಳಿಯ ಪಟೇಲ ಗುಂಡೇಗೌಡ ಮತ್ತು ಇತರ ಕೆಲವು ಮುಖ್ಯರೂ ಸೇರಿದ್ದರು. ಪಟೇಲ ಶಿವೇಗೌಡನಾಗಲಿ ಶ್ಯಾನುಭೋಗ ಶಿವಲಿಂಗನಾಗಲಿ ಹೋಗಲಿಲ್ಲ. ಗಂಡಿನ ಕಡೆಯವರೆಲ್ಲ ಒಟ್ಟು ನಾಲ್ಕು ಗಾಡಿ ಹೊಡೆಸಿಕೊಂಡು ಹೋಗಿದ್ದರು. ನಾಗಲಾಪುರದ ಕೆರೆಯ ಏರಿಯ ಹತ್ತಿರ ಕೊಂಬು ಕಹಳೆ ಊದಿಸಿ ಇವರನ್ನು ಇದಿರುಗೊಂಡ ಹೆಣ್ಣಿನ ಕಡೆಯವರು, ಗಂಡನ್ನು ಕೂರಿಸಿಕೊಂಡು ಹೋಗಲು ಕಂಠೀಜೋಯಿಸರ ಬಿಳಿ ಕುದುರೆಯನ್ನೇ ತಂದಿದ್ದರು. ಅದರ ಮೇಲೆ ಹತ್ತಿ ಕೂತುಕೊಳ್ಳಲು ಚೆನ್ನಿಗರಾಯ ಹೆದರಿ ಕಂಗಾಲಾದ. ಆದರೆ ಹತ್ತದೆ ಬಿಟ್ಟರೆ ಇಡೀ ರಾಮಸಂದ್ರಕ್ಕೆ ಅಪಮಾನ. ‘ಥೂ ಹೆಣ್ಣಿಗ್ ಸೂಳೆಮಗನೆ’-ಎಂದು ಗಂಗಮ್ಮ ಬೈದಮೇಲೆ ಅವನು ಜೀನಿನ ಮೇಲೆ ಹತ್ತಿ ಕುಳಿತ. ಕುದುರೆ ಶಿಂಡಾಡದೆ ಒಂದೇಸಮನೆ ಹೆಜ್ಜೆ ಹಾಕುವಂತೆ ಹುಡುಗಿಯ ಅಣ್ಣ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ಅದರ ಲಗಾಮನ್ನು ಕೈಲಿ ಹಿಡಿದು ಪಕ್ಕದಲ್ಲಿ ನಡೆದು ಬಂದ. +ಮದುವೆಗೆ ಬಂದಿದ್ದ ಗಂಡಿನ ಕಡೆಯವರಿಗೆಲ್ಲ ಕಂಠೀಜೋಯಿಸರ ವ್ಯಕ್ತಿತ್ವದ ಅನುಭವವಾಯಿತು. ತುಂಬ ಶ್ರೀಮಂತರಲ್ಲದಿದ್ದರೂ ತಕ್ಕಮಟ್ಟಿನ ಕುಳವಾದ ಅವರು ಊಟೋಪಚಾರಕ್ಕೆ ಅದ್ದೂರಿಯಾಗಿ ಮಾಡಿಸಿದ್ದರು. ಮದುವೆಗೆ ಹಾಸನದಿಂದ ಒಬ್ಬ ಲಾಯರು-ಅವರನ್ನು ಲಾಯರೆಂದು ಕಂಠೀಜೋಯಿಸರು ಹೇಳಿದರು-ಬಂದಿದ್ದರು. ಗಂಡಿನ ಪುರೋಹಿತರಾಗಿ ಅಯ್ಯಾ ಶಾಸ್ತ್ರಿಗಳು, ಅಣ್ಣಾಜೋಯಿಸರು, ಇಬ್ಬರೂ ಹೋಗಿದ್ದರು. ಅಯ್ಯಾಶಾಸ್ತ್ರಿಗಳಿಗೆ ಪ್ರಾತಿಮಾಸಿಕ ಶ್ರಾದ್ಧ, ಪುಣ್ಯಾಃ, ಗೌರಿ ಗಣೇಶ ವ್ರತಗಳನ್ನು ಬಿಟ್ಟರೆ ಉಳಿದ ಕರ್ಮಗಳ ಪೌರೋಹಿತ್ಯದ ಪಾಠವಾಗಿರಲಿಲ್ಲ. ಅಣ್ಣಾಜೋಯಿಸರು ವಯಸ್ಸಿನಲ್ಲಿ ಚಿಕ್ಕವರಾದರೂ ಶಿಂಧಘಟ್ಟದ ಸೂರಣ್ಣಜೋಯಿಸರ ಕೈಕೆಳಗೆ ಕ್ರಮವಾಗಿ ಅಧ್ಯಯನ ಮಾಡಿಕೊಂಡು ಬಂದು ಆ ಸುತ್ತಿಗೇ ಹೆಸರಾದವರು. ಇಷ್ಟು ಹೊತ್ತಿಗೆ ಲೆಕ್ಕವಿಲ್ಲದಷ್ಟು ಮದುವೆ ಮುಂಜಿ ಮಾಡಿಸಿ, ನೀರು ಕುಡಿದ ಹಾಗೆ ಮಂತ್ರ ಹೇಳುವ ಅಭ್ಯಾಸವಾಗಿದೆ. ಗಂಡಿನ ಬಿಡಾರದಲ್ಲಿ ಹೋಮ ಮಾಡಿಸುವಾಗ ಅಣ್ಣಾಜೋಯಿಸರು ಗಟ್ಟಿಯಾಗಿ ಹೇಳುತ್ತಿದ್ದರು: ‘ಓಂ ಭೂರಗ್ನಿಯೇ ಪ್ರಾಣಾಯ ಸ್ವಾಹ| ಇದಮಗ್ನಿಯೇ ಪ್ರಾಣಾಯ ಸ್ವಾಹಾ|….. +ವರನ ಬೀಡಾರ ಹೆಣ್ಣಿನ ಮನೆಯ ಪಕ್ಕದಲ್ಲಿಯೇ ಇತ್ತು. ಇವರ ಮಂತ್ರ ಹೆಣ್ಣಿನ ಮನೆಯವರಿಗೂ ಕೇಳುತ್ತಿತ್ತು. ಅದು ಕಿವಿಗೆ ಬಿದ್ದ ತಕ್ಷಣ ಕಂಠೀಜೋಯಿಸರು ಅಲ್ಲಿಗೆ ಬಂದು ಕೇಳಿದರು: ‘ಜೋಯಿಸರೇ , ಅಗ್ನಿಗೆ ಆಹುತಿ ಕೊಡೋ ಮಂತ್ರಾನ ಇನ್ನೊಂದು ಸಲ ಹೇಳಿ.’ +‘ಯಾಕೆ?’ +‘ಸ್ವಲ್ಪ ಕೇಳಬೇಕು ಹೇಳಿ.’ +‘ಹಾಗೆ ವೇದ ಮಂತ್ರಾನ ಮತ್ತೆ ಹೇಳಬಾರದು’-ಎಂದು ಅಯ್ಯಾಶಾಸ್ತ್ರಿಗಳು ಮುಖ ನೋಡಿದರು. +‘ಯಾಕೆ ಹೇಳಬಾರ್‌ದು? ನೀವು ತಪ್ಪು ಹೇಳ್‌ಬೌದೋ?’ +‘ನಾನು ಹೇಳೋದು ತಪ್ಪೇ? ಶಿಂಧಘಟ್ಟದ ಸೂರಣ್ಣ ಜೋಯಿಸರ ಪಾಠ ತಪ್ಪೆ? ಕೇಳಿ ಚಿಕ್ಕಪ್ಪ, ನಾನು ಈ ಮದುವೆ ಮಾಡಿಸಬೇಕೋ, ಬಿಟ್ಟು ಎದ್ದು ಹೋಗಬೇಕೋ?’-ಎಂದು ಜೋಯಿಸರು ಎದ್ದು ನಿಂತುಬಿಟ್ಟರು. +‘ನಿಮ್ಮ ಗುರುಗಳ ವಿಚಾರ ನನಗೆ ಗೊತ್ತಿದೆ. ಅವರಿಗೆ ನೆಟ್ಟಗೆ ಸಂಸ್ಕೃತ ಗೊತ್ತಿಲ್ಲ. ಭೂರಗ್ನಿಯೇ ಅನ್ನೊದು ತಪ್ಪು. ಭೂರಗ್ನಯೇ ಅಂತ ಇರಬೇಕು. ನೀವು ಹೇಳೋದು ವ್ಯಾಕರಣಶುದ್ಧವಲ್ಲ. ಗ್ರಂಥದಲ್ಲಿ ತೆಗೆದು ತೋರಿಸಲೇನು? ವೇದಮಂತ್ರ ತಪ್ಪು ನುಡಿದರೆ ತಲೆ ಸಹಸ್ರ ಸೀಳಾಗುತ್ತೆ.’ +ಅಲ್ಲಿಗೆ ಅಣ್ಣಾಜೋಯಿಸರು ಸುಮ್ಮನಾದರು. ಕಂಠೀಜೋಯಿಸರ ಮಂತ್ರಜ್ಞಾನದ ಬಗೆಗೆ ರಾಮಸಂದ್ರದವರೆಲ್ಲ ಬೆರಗಾದರು. ಮುಂದೆ ಧಾರೆಯಾಗುವಾಗ ಕನ್ಯಾದಾನ ಮಂತ್ರವನ್ನು ಅವರೇ ಏರಿದ ಕಂಠದಲ್ಲಿ ಹೇಳುತ್ತಿದ್ದುದನ್ನು ಇಡೀ ಮದುವೆಯ ಮನೆಯೇ ಗಂಭೀರವಾಗಿ ಕೇಳಿತು. ಮದುವೆ ಮುಗಿದು ಗಂಡಿನವರು ಹೊರಡುವಾಗ ಅಣ್ಣಾಜೋಯಿಸರು ಕಂಠೀಜೋಯಿಸರ ಹತ್ತಿರ ಬಂದು-‘ನನಗೆ ಬರೀ ಪಾಠವಾಗಿದೆ. ವ್ಯಾಕರಣ ಭಾಗ ಸ್ವಲ್ಪ ಹಿಂದೆಯೇ. ಪೂರ್ತಿ ಅಧ್ಯಯನವಾಗೋ ಮೊದಲೇ ತಂದೆ ತೀರಿ ಹೋಗಿದ್ದರಿಂದ ಅರ್ಧಕ್ಕೆ ಬಿಟ್ಟು ಬಂದು ಬಾಕೀದನ್ನು ಪುಸ್ತಕದಿಂದ ಅಭ್ಯಾಸ ಮಾಡಿದೆ. ತಪ್ಪದ್ದರೆ ಕ್ಷಮಿಸಬೇಕು’ ಎಂದು ಹೇಳಿದರು. +ಮದುವೆ ಚೆನ್ನಾಗಿ ನಡೆಯಿತು. ಹುಡುಗಿಗೆ ನಾಗರು, ಶೇವಂತಿಗೆ ಹೂವು, ಬಳೆ, ಬೆಳ್ಳಿಯ ಡಾಬು, ಮತ್ತು ಕಾಲಿಗೆ ರುಳಿಗಳನ್ನು ಹಾಕಿದ್ದರು. ಗಂಡಿನವರು ಕ್ರಮದಂತೆ ಮಾಂಗಲ್ಯ, ಓಲೆ ಮೂಗುಬಟ್ಟುಗಳನ್ನು ತಂದಿದ್ದರು. ತಂದೆಯಂತೆಯೇ ಎತ್ತರವಾದ ಮೈ ಕಟ್ಟು, ಅಗಲವಾದ ಹಣೆ, ಮತ್ತು ವಿಶಾಲವಾದ ಕಣ್ಣುಗಳುಳ್ಳ ವಧುವು ಲಕ್ಷಣವಾಗಿದ್ದಳು. ‘ನಮ್ ಚೆನ್ನಿಗರಾಯಂಗೆ ಇಂಥಾ ಹೆಣ್ಣು ಸಿಕ್ಕೋದು ಅಂದ್ರೆ ಪುಣ್ಯ ಮಾಡಿದ್ದ’-ಎಂದು ರಾಮಸಂದ್ರದವರೇ ಎಂದರು. ಈ ಮಾತು ಗಂಗಮ್ಮನಿಗೆ ಮಾತ್ರ ಸಹಿಸಲಿಲ್ಲ. ಚೆನ್ನಿಗರಾಯ ಭೂಮಕ್ಕೆ ಬಡಿಸಿದ್ದ ಭಕ್ಷ್ಯಭೋಜ್ಯಗಳನ್ನೆಲ್ಲ ಸ್ವಲ್ಪವೂ ಬಿಡದೆ ತಿಂದುಹಾಕಿದುದನ್ನು ನಾಗಲಾಪುರದವರು ಆಡಿಕೊಂಡರು. ಹಾಗೆ ತಿನ್ನಬಾರದಾಗಿತ್ತೆಂದು ರಾಮಸಂದ್ರದವರೂ ಆಮೇಲೆ ಅವನಿಗೆ ಹೇಳಿದರು. ‘ವಳ್ಳೇ ಗಮ್ ಅನ್ನೂ ಹಾಗೆ ಮಾಡಿದ್ದುನ್ನ ಅದ್‌ಹ್ಯಾಗೆ ಎಂಜಲು ಮಾಡಿ ಚೆಲ್ಲೂಕಾಗುತ್ಯೋ ಕಾಣೆ’-ಎಂದು ಅವನು, ತಾನು ಮಾಡಿದುದನ್ನೇ ಸಮರ್ಥಿಸಿಕೊಂಡ. +– ೩ – +ಚೆನ್ನಿಗರಾಯ ಎಷ್ಟು ಸಲ ಕೇಳಿದರೂ ಸಿವಲಿಂಗೇಗೌಡ ಶ್ಯಾನುಭೋಗಿಕೆ ಬಿಟ್ಟುಕೊಡಲಿಲ್ಲ. ಮೊದಲು ಕೆಲವು ದಿನ-‘ಕೊಡಾನ, ಕೊಡಾನಾ’ ಎನ್ನುತ್ತಿದ್ದ. ಅದರ ಅರ್ಥ ಸರಿಯಾಗಿ ತಿಳಿಯದ ಚೆನ್ನಿಗರಾಯ ಕೆಲವು ದಿನ ಕಾದು ನೋಡುತ್ತಿದ್ದ. ಮತ್ತೆ ಕೇಳಿದರೆ ಅದೇ ಮಾತು. ಒಂದು ದಿನ-‘ಸಾಲಾಖೈರಿನ ಲೆಕ್ಕ ಚುಕ್ತಾ ಆಗ್‌ಬೇಕು. ಆಮ್ಯಾಲೆ ನೋಡಾನ’ ಎಂದ. ಸಾಲಾಖೈರು ಎಂದರೆ ಏಪ್ರಿಲ್ ತಿಂಗಳ ಕೊನೆ. ಅಲ್ಲಿಗೆ ಇನ್ನೂ ಐದು ತಿಂಗಳು. ‘ಸಾಲಾ ಲ್ಯಕ್ಕ ಮುಗಿಸ್ದೆ ಕೊಟ್ರೆ ನಿಂಗೇನ್ ತಿಳೀತೈತೆ?’-ಎಂದು ಅವನು ಹೇಳಿದುದು ನಿಜವೆಂದು ಇವನೂ ಒಪ್ಪಿಕೊಂಡ. +ಮನೆಯಲ್ಲಿ ಬೇರೇನೂ ಕೆಲಸವಿಲ್ಲ. ಹೆಂಡತಿ ಇನ್ನೂ ಚಿಕ್ಕವಳಾಗಿದ್ದುದರಿಂದ ಪ್ರಸ್ತವಾಗಿರಲಿಲ್ಲ; ತೌರುಮನೆಯಲ್ಲೇ ಇದ್ದಳು. ಎರಡು ವರ್ಷ ಓಚಯ್ಯನವರ ಮಠಕ್ಕೆ ಹೋಗಿದ್ದರೂ ಅಪ್ಪಣ್ನಯ್ಯನಿಗೆ ಪೂರ್ವಜನ್ಮದ ಶೇಷವಿಲ್ಲದುದರಿಂದ ವಿದ್ಯೆ ಬರುವುದಿಲ್ಲವೆಂದು ನಿರ್ಣಯಿಸಿ ಓಚಯ್ಯನವರೇ ಅವನನ್ನು ಕೈಬಿಟ್ಟಿದ್ದರು. ಈಗ ಅವನು ತೋಟದ ಬೇಲಿಗಳಲ್ಲಿಕಟ್ಟುತ್ತಿದ್ದ ಜೇನು ಬಿಚ್ಚುವುದು, ಎಳನೀರು ಕೆಡವಿ ಕುಡಿಯುವುದರಲ್ಲಿ ಹೊತ್ತು ಕಳೆಯುತ್ತಿದ್ದ. ಮುಂದೆ ಶ್ಯಾನುಭೊಗನಾಗಬೇಕಾದ ಚೆನ್ನಿಗರಾಯ ಬೆಳಿಗ್ಗೆ ಎದ್ದುಸ್ನಾನ ಮಾಡಿದ ಮೇಲೆ, ತಲೆ ಸೂಲೆ ಬಂದವರು ಪಟ್ಟುಹಾಕಿಕೊಳ್ಳುವಷ್ಟು ದಪ್ಪನಾಗಿ ಹಣೆಗೆ ಕಲಸಿದ ವಿಭೂತಿ ಮೆತ್ತಿಕೊಂಡು ಒದ್ದೆ ಲಂಗೋಟಿಯಲ್ಲಿ ಕುಳಿತು ಸಂಧ್ಯಾವಂದನೆ ಮಾಡಿ ಜನಿವಾರದ ಬ್ರಹ್ಮಗಂಟನ್ನು ಕೈಲಿ ಹಿಡಿದು, ಓಂ ತತ್ಸತ್ ತ್ ತ್…..ಓಂ ತತ್ಸತ್ ತ್ ತ್ ಎಂದು ಏಕತಾನದಲ್ಲಿ ಕೇಳುವಂತೆ ಗಟ್ಟಿಯಾಗಿ ಸಾವಿರದೆಂಟು ಗಾಯಿತ್ರಿ ಹೇಳುತ್ತಿದ್ದ. +ಸಾಲಾಖೈರಿಗೆ ಹೋಗಿ ಕೇಳಿದಾಗ ಸಿವಲಿಂಗೇಗೌಡ ಹೇಳಿದ: ‘ಮ್ಯಾಲಿನ ಹುಕುಂ ಇಲ್ಲದೆ ನಿಂಗೆ ಶ್ಯಾನುಭೋಗಿಕೆ ಹ್ಯಂಗ್ ಕೊಡ್ಲಿ?’ +‘ನಂದು ನಂಗ್ ಕೊಡೊಕೆ ಮ್ಯಾಲಿಂದೇನು?’ +‘ಊಂ. ನಿಮ್ಮಪ್ಪಂದು ಅಂತ ಬರೆದಿಟ್ಟಿಲ್ಲ. ನಂಗೂ ಹತ್ತು ವರ್ಸ ಅನುಭೋಗ ಬಂತು. ಹ್ವಾಗು ನನ್ ತಾವ ಕಿತ್ಕಳೂವಂತೆ’ +ಚೆನ್ನಿಗರಾಯನಿಗೆ ಈ ಮಾತನ್ನು ಕೇಳಿ ಅಳು ಬಂದಹಾಗಾಯಿತು. ‘ಅಯ್ಯೋ ನಿನ್ನವ್ವುನಾ…..’ ಎಂದು ಅವನನ್ನು ಬೈಯಬೇಕೆಂದು ಬಾಯಿಗೆ ಬಂದರೂ ಧೈರ್ಯ ಸಾಲದೆ ಸುಮ್ಮನಾದ. ಸಿವಲಿಂಗೇಗೌಡನ ಭಾವ ಪಟೇಲ ಶಿವೇಗೌಡನ ಹತ್ತಿರಕ್ಕೆ ಹೋಗಿ ಕೇಳಿದರೆ ಅವನು, ‘ಲೇ ತಮ್ಮಯ್ಯ, ಶ್ಯಾನುಬಾಕಿ ಮಾಡಾಕ್ ನಿನ್ ಕೈಲಿ ಹರೀತದೇನ್ಲಾ? ಅದೇನ್ ಮಶ್‌ಗಿರಿ ಅಂತ ತಿಳಕಂಡ್ಯಾ?’ ಎಂದ. +ಚೆನ್ನಿಗರಾಯನಿಗೆ ಮುಂದೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಪಟೇಲರ ಎದುರು ಮಾತನಾಡುವ ಧೈರ್ಯ ಅವನಿಗೆ ಬರುವುದಾದರೂ ಹೇಗೆ? ಹುಡುಗನಾದಾಗಿನಿಂದ ಅವನನ್ನು ಹೆದರಿಸಲು ಗಂಗಮ್ಮ ಕೂಗುತ್ತಿದ್ದುದು ಆ ಪಟೇಲನನ್ನೇ ತಾನೇ! ಅವನು ಸೀದಾ ಅಮ್ಮನ ಹತ್ತಿರ ಬಂದು, ಸಿವಲಿಂಗ ಮತ್ತು ಪಟೇಲರ ಮಾತುಗಳನ್ನು ಹೇಳಿದ. ಗಂಗಮ್ಮ ಸುಮ್ಮನಿದ್ದಾಳೆಯೇ? ಪಟೇಲನ ಮನೆಯ ಬಾಗಿಲಿನ ಹತ್ತಿರ ಬೀದಿಯಲ್ಲಿ ನಿಂತು ಗಟ್ಟಿಯಾಗಿ ಕೇಳಿದಳು: ‘ಶಿವೇಗೌಡ, ಕಂಡೋರ ಹೆಂಡ್ತಿ ಹೇಲು ಎಷ್ಟು ದಿನ ತಿನ್‌ಬೇಕು ಅಂತ ಮಾಡಿದೀಯಾ? ನಿನ್ ಹೆಂಡ್ರ ಬಳೆ ಕುಕ್‌ಹೋಗಿ ನಿನ್ಮನೆ ತೊಳ್ದ್ ಹೋಗುತ್ತೆ ತಿಳ್ಕ.’ +ಈ ಮಾತನ್ನು ಕೇಳಿದ ಪಟೇಲನ ಹೆಂಡತಿ ಗೌರಮ್ಮನಿಗೆ ಭಯವಾಯಿತು. ಬ್ರಾಹ್ಮಣ ವಿಧವೆಯ ಶಾಪ ತಮಗೆ ತಟ್ಟಿದರೆ ಗತಿ ಏನು? ಅವಳು ಗಂಡನಿಗೆ ಹೇಳಿದಳು: ‘ಅವ್‌ರ ಚಟ್ಟದ ಕೋಲು ಮಡಿಕ್ಕಂಡ್ ನ್ಯಮ್‌ಗೇನಾಗ್ಬೇಕು? ಬಿಸಾಕು ಅಂತ ಸಿವಲಿಂಗಣ್ಣುಂಗ್ ಏಳು ಅತ್ಲಾಗೆ.’ +ಪಟೇಲ ತಾನೇ ಹೊರಗೆ ಬಂದು ಹೇಳಿದ: ‘ಗಂಗವ್ವಾ, ಹಿಂಗ್ ಕ್ಯಟ್ ಮಾತು ಯಾಕ್ ಆಡ್ತೀಯಾ? ಬಾ ಕುಂತ್ಕ. ಮಾತಾಡಾಣ.’ +ಗೌರಮ್ಮ ಜಗುಲಿಯ ಮೇಲೆ ಮಣೆ ಹಾಕಿಕೊಟ್ಟಳು. ಗಂಗಮ್ಮ ಅದರ ಮೇಲೆ ಕುಳಿತಮೇಲೆ ಪಟೇಲ ಒಂದು ದಿಂಬು ತರಿಸಿ ಹಾಕಿಕೊಂಡು ಒರಗಿ ಕುಳಿತ. ಭಾವೀ ಶ್ಯಾನುಭೋಗ ಚೆನ್ನಿಗರಾಯ ಸೂರುಕಟ್ಟಿನ ಕೆಳಗೆ ನಿಂತೇ ಇದ್ದ. ಪಟೇಲ ಹೇಳಿ ಕಳಿಸಿದಮೇಲೆ ಅಲ್ಲಿಗೆ ಬಂದ ಹಾಲಿ ಶ್ಯಾನುಭೊಗ ಸಿವಲಿಂಗ ಇನ್ನೊಂದು ಜಗುಲಿಯ ಮೇಲೆ ಕಾಲು ಹಾಕಿ ಕುಳಿತುಕೊಂಡ. ಪಟೇಲ ಹೇಳಿದ ‘ಸಿವಾ, ಚಾರ್ಜು ಕೊಡಾಕ್ ಯಾಕ್ ಆಗಾಕಿಲ್ಲ ಅಂತ ಇವಮ್‌ನೋರ್ಗೆ ವಸೀ ಸಮಜಾಯಿಶಿ ಮಾಡಿ ಹ್ಯೇಳು.’ +ಶಿವಲಿಂಗ ಗಂಗಮ್ಮನನ್ನು ಕೇಳಿದ: ‘ನಿಮ್ಮ ಮಗನ ವಯಸ್ಸು ಏಟು?’ +‘ಹತ್ತೊಂಬತ್ತು ನಡೀತಿದ್ಯಲಾ?’ +‘ಹಂಗಂತ ನೀವು ಅಂತೀರಾ. ಸರ್ಕಾರಿ ದಾಖ್‌ಲೇಲಿ ಇನ್ನೂ ಅದಿನಾರು ಅಂತಲೇ ಐತೆ. ಅವ್ನಿನ್ನೂ ಮೆಜಾಲ್ಟಿಗೇ ಬಂದಿಲ್ಲ. ಗೌರ್‌ಮೇಟು ಕೆಲ್ಸ ಹ್ಯಂಗ್ ಕೊಡಾಕಾಯ್ತದೆ?’ +‘ಇವ್ನು ಹುಟ್‌ದಾಗ ನಮ್ಮನೆಯೋರೇ ಶ್ಯಾನುಭೋಗ್‌ಕೆ ಮಾಡ್ತಿದ್ರು. ಅವ್ರೇನ್ ಸುಳ್ ಬರ್ದಿರ್ತಾರಾ? ನ್ಯಟ್ಟಗೆ ನೋಡು.’ +‘ಜನನ ಮರಣ ರಿಜೀಸ್ಟರು ನಮ್‌ತಾವ ಇರಾಕಿಲ್ಲ. ಅದ ನೋಡಾಕೆ ಸರ್ಕಾರುಕ್ ಫೀಜು ಕೊಡ್‌ಬೇಕು. ಮದ್ಲು ಐವತ್ತು ರೂಪಾಯಿ ಕೊಡಿ. ಆಮ್ಯಾಲೇ ತಿಪ್ಟೂರ್ಗೆ ಹ್ವಾಗಿ ನೋಡ್ಸುಸ್‌ತೀನಿ. +ಜನನ ಮರಣ ರಿಜಿಸ್ಟರು ಶ್ಯಾನುಭೋಗರ ಹತ್ತಿರ ಇರುತ್ತದೆಯೇ ಇಲ್ಲವೇ, ಅದನ್ನು ನೋಡಲು ಫೀಜು ಕೊಡಬೇಕೇ ಬೇಡವೇ, ಕೊಡಬೇಕಾಗಿದ್ದರೆ ಐವತ್ತು ರೂಪಾಯಿ ಆಗುತ್ತದೆಯೇ ಎಂಬ ಬಗೆಗೆ ಗಂಗಮ್ಮನಿಗೆ ಗೊತ್ತಿಲ್ಲ. ‘ಏನೋ ಚೆನ್ನಯ್ಯ, ಕೊಡಬೇಕೇನೋ ಲ್ಯಕ್ಕ ಕಲ್ತ್ ಕಂಡಿರಾನು ನೀನು ಹ್ಯೇಳೋ’-ಎಂದು ಮಗನನ್ನು ಕೇಳಿದರೆ ಸೂರುಕಟ್ಟಿನ ಕೆಳಗೆ ನಿಂತೇ ಇದ್ದ ಅವನು ಕಕರನಂತೆ ಮುಖ ನೋಡಿಕೊಂಡು ಯೋಚಿಸಲು ಮೊದಲು ಮಾಡಿದ, ‘ಅದೇನು ಹ್ಯೇಳೋ’-ಎಂದು ಇನ್ನೊಂದು ಸಲ ಕೇಳಿದಮೇಲೆ, ‘ನಂಗ್ ಗೊತ್ತಿಲ್ಲ ಕಣಮ್ಮ’ ಎಂದ. +‘ನಂಗ್ ಲ್ಯಕ್ಕವೆಲ್ಲ ಬರುತ್ತೆ ಅಂದ್ಯಲ್ಲೋ?’ +ಈಗ ಸಿವಲಿಂಗ ಎಂದ: ‘ಹೊನ್ನವಳ್ಳಿಯೋನ್‌ತಾವ ಹ್ವಾಗಿ ಕಲ್ತ್ಕಂಬಂದೆ ಅಂತಿದ್ದೆ. ಆ ಹ್ವನ್ನವಳ್ಳಿ ಪಾಪ್ರ್ ನನ್ ಮಗುಂಗೆ ಲ್ಯಕ್ಕ ಬತ್ತಿದ್ರೆ ನಿಂಗೆ ಹೇಳ್ಕೊಡ್ತಿದ್ದ. ಹೋಕ್ಕಳ್ಳಿ, ಈಗ್ಲೂ ಒಂದು ನಾಕ್ ವರ್ಸ ನಮ್ಮನೆ ಕಸದ ಮಂಕ್ರಿ ಹೊರು. ನಾನ್ ಕಲ್ಸ್‌ಕೊಡ್ತೀನಿ. +ಪಟೇಲ ಶಿವೇಗೌಡ ಹೇಳಿದ: ‘ಹೋಕ್ಕಳ್ಳಿ. ಗಂಗವ್ವಾ, ಐವತ್ತು ರೂಪಾಯಿ ತಂದು ಮಡಗಿ. ಇವ್ನ ವಯಸ್ಸು ಏಟು ಅಂತ ಮ್ಯಾಲುಕ್ ಬರ್ದ್ ಹ್ಯೇಳುಸ್ತೀವಿ.’ +‘ದುಡ್ಡ್ಯಾಕ್ ಕೊಡಬೇಕು ಶಿವೇಗೌಡ?’ +‘ಅದೇನ್ ಸರ್ಕಾರವಲ್ವಾ? ಮಶ್ಗಿರಿ ಮಾತ್ ಕ್ಯಟ್ಹೋಯ್ತಾ?’ +ಇನ್ನು ಗಂಗಮ್ಮನಿಗೆ ಬೇರೆ ಮಾರ್ಗ ಉಳಿಯಲಿಲ್ಲ. ಐವತ್ತು ರೂಪಾಯಿ ಕೊಡದೆ ಮಗನ ವಯಸ್ಸಿನ ಲೆಕ್ಕ ಸಿಕ್ಕುವುದಿಲ್ಲ. ಅದಿಲ್ಲದೆ ಶ್ಯಾನುಭೋಗಿಕೆ ಕೈಗೆ ಬರುವುದಿಲ್ಲ. ಆದರೆ ಮನೆಯಲ್ಲಿ ಅಷ್ಟೊಂದು ಕೈಲಿ ದುಡ್ಡಿಲ್ಲ. ಮನೆಗೆ ಹೋಗಿ ತನ್ನ ಪೆಟಾರಿಯಲ್ಲಿ ಹುಡುಕಿ ನೋಡಿದಳು. ಮೂವತ್ತು ರಾಣಿತಲೆ ರೂಪಾಯಿ ಇತ್ತು. ಜೊತೆಗೆ ಆರು ಪಲ್ಲ ರಾಗಿ ಸೇರಿಸಿ ಶಿವಲಿಂಗನಿಗೆ ಒಪ್ಪಿಸಿ-‘ಬ್ಯಾಗ ಇವನ ಲೆಕ್ಕ ತರಿಸಪ್ಪ. ನಮ್ಮ ಯಜಮಾನರ ಕಾಲದ ಶ್ಯಾನುಭೋಗ್‌ಕೆ. ಇವನು ಕೈಗೆ ತಗಂಡುದ್ದ ನಾನು ನೋಡಬೇಕು’ ಎಂದಳು. +ಮತ್ತೆ ಮೂರು ತಿಂಗಳಾದರೂ ಅದರ ಬಗೆಗೆ ಏನೂ ಆಗಲಿಲ್ಲ. ಗಂಗಮ್ಮನೇ ಹೋಗಿ ಕೇಳಿದುದಕ್ಕೆ ಶಿವಲಿಂಗ ಹೇಳಿದ: ‘ಸರ್ಕಾರೀ ಲ್ಯಕ್ಕ ಅಂದ್ರೆ ಈಟ್‌ಬ್ಯಾಗ ಬತ್ತೈತಾ? ಡಿಪ್ಟಿಕಮೀಶರಿಗೆ ಹ್ವಾಗಿ ಅಲ್ಲಿಂದ ದಿವಾನ್ ಮಿರ್ಜಾ ಸಾಹೇಬ್‌ರುನ್ನ ಮುಟ್ಟಿ ಬರಬೇಕು ನಿದಾನವಾಗಿ ಬತ್ತೈತೆ. ಅದ್ಯಾಕ್ ಚೊಣಚಿ ಹೊಕ್ಹಂಗ್ ಆಡ್ತೀರಾ, ವಸಿ ತಡ್‌ಕಳಿ.’ +ಗಂಗಮ್ಮ ನಿರುಪಾಯಳಾಗಿ ಮನೆಗೆ ಬಂದು ಮಗನಿಗೆ ಹೇಳಿದಳು: ‘ಚೆನ್ನಯ್ಯಾ ಇವ್ನು ಕೊಡೊದಿಲ್ಲ ಅಂತ ಕಾಣ್ಸುತ್ತೆ. ನೀನೇ ತಿಪಟೂರಿಗೆ ಹೋಗಿ ಅಮಲ್ದಾರ್ ದಣಿಗಳಿಗೆ ಅಡ್ಡಬಿದ್ದು ಹಾವಾಲ್ ಮಾಡ್ಕಂಡ್ ಬಾ ಹೋಗು.’ +ತಾನೊಬ್ಬನೇ ಹೋಗಿ ಅಮಲ್ದಾರರನ್ನು ಕಾಣಲು ಚೆನ್ನಿಗರಾಯನಿಗೆ ಭಯವಾಯಿತು. ಅವರು ತನ್ನ ಮೇಲೆ ರೇಗಿದರೆ ಏನು ಮಾಡುವುದು? ತನಗೆ ನಿಜವಾಗಿಯೂ ಹದಿನಾರೇ ವರ್ಷವಾಗಿರಬಹುದು. ತನ್ನ ಜಾತಕವೇ ತಪ್ಪಿರಬಹುದು. ‘ಅಮ್ಮಾ, ನಂಗೆ ಇನ್ನೂ ಹದಿನಾರು ವರ್ಷವೇ ಇರಭೌದು. ಇನ್ನೊಂದೆರ್‌ಡು ವರ್ಷ ತಡಿಯಾಣ ಕಣಮ್ಮ.’ +‘ಥೂ ಸುಳೇಮಗನೆ. ನಿನ್ ಹೆತ್ತೋಳು ಗಟ್ಟೀಮುಂಡೆಯಾಗಿ ಇಲ್ಲೇ ಇದೀನಿ. ನಂಗ್ ಗೊತ್ತಿಲ್ವೇನೋ ನಿನ್ ವಯಸ್ಸು? ಹತ್ತೊಂಬತ್ ತುಂಬ್ತಾ ಬಂತಲೋ. ಹೋಗಿ ಅಮಲ್ದಾರ್ ದಣಿಗಳಿಗೆ ಅಡ್ದ ಬೀಳೋ ಮುಂಡೆಮಗನೆ’-ಗಂಗಮ್ಮ ಸಿಟ್ಟು ಬಂದು ಹೇಳಿದಳು. +‘ನಂಗ್ ಹ್ಯದ್‌ರಿಕೆಯಾಗುತ್ತೆ ಕಣಮ್ಮ.’ +‘ನಾಚಿಕೆಯಾಗುಲ್ವೇನೋ ಹೆಣಿಗ್ ಸೂಳೇಮಗನೇ. ನಾನೂ ಬರ್ತೀನೋ ಜೊತೆಗೆ’- ಎಂದು ಗಂಗಮ್ಮ ಹೇಳಿದಳಾದರೂ ಸರ್ಕಾರಿ ಕೆಲಸಕ್ಕೆ ಹೆಂಗಸರು ಹೋಗಬಾರದೆಂಬ ನೆನಪಾಗಿ ಸುಮ್ಮನಾದಳು. ಹೆಂಗಸರು ಸರ್ಕಾರೀ ಲೆಕ್ಕವನ್ನು ಕೈಲಿ ಮುಟ್ಟಿದ್ದು ಗೊತ್ತಾದರೂ ಪೋಲೀಸಿಗೆ ಹಾಕ್ತಾರಂತೆ. ಇನ್ನು ತಾನೇ ಹೋಗಿ ಅಮಲ್ದಾರರ ಎದುರು ನಿಂತರೆ ಸುಮ್ಮನೆ ಬಿಡುತಾರೆಯೇ? +ಇನ್ನು ಬೇರೆ ಉಪಾಯವಿರಲಿಲ್ಲ. ಹೀಗೆಯೇ ಒಂದು ತಿಂಗಳು ಕಳೆದಮೇಲೆ ಗಂಗಮ್ಮನೇ ಹೇಳಿದಳು: ‘ಹ್ಯಾಗಾದ್ರಾಗಾಗ್ಲಿ, ಒಂದು ಹ್ಯಜ್ಜೆ ನಾಗಲಾಪುರುಕ್ ಹೋಗಿ ನಿಮ್ಮಾವ್‌ನೋರನ್ನ ಕೇಳು, ಅವ್ರೇನಾದ್ರೂ ಮಾಡುಸ್ತಾರೆ.’ +– ೪ – +ಚೆನ್ನಿಗರಾಯನ ಮದುವೆಯಾಗಿ ಒಂದೂವರೆ ವರ್ಷವಾಗಿದ್ದರೂ, ಅವನು ಒಂದು ಸಲವೂ ಮಾವನ ಮನೆಗೆ ಹೋಗಿರಲಿಲ್ಲ. ಹೋಗುವ ಆಶೆ ಇಲ್ಲದೆಯಲ್ಲ. ಆದರೆ ಯಾರೂ ಅವನನ್ನು ಬಂದು ಕರೆದಿರಲಿಲ್ಲ. ತಾನಾಗೇ ಹೋಗಲು ನಾಚಿಕೆಯೋ ಅಂಜಿಕೆಯೋ ಅವನಿಗೆ ತಿಳಿಯದು. ಈಗ ಶ್ಯಾನುಭೋಗಿಕೆಯ ಕೆಲಸಕ್ಕೆ ಅಲ್ಲಿಗೆ ಹೋಗಿ ಬರುವಂತೆ ಅಮ್ಮನೇ ಹೇಳಿದಾಗ ಅವನಿಗೆ ಸಂತೋಷವಾಯಿತು. ಒಂದು ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮೂರು ಆಚಮನಕ್ಕೇ ಸಂಧ್ಯಾವಂದನೆ ಮುಗಿಸಿ ಅವರೇಕಾಳಿನ ರೊಟ್ಟಿ ಕಾಯಿಚಟ್ನಿ ಮೊಸರು ತಿಂದು, ದಾರಿಗೆ ಇರಲಿ ಎಂದು ಮೂರು ರೊಟ್ಟಿ ಚಟ್ನಿ ಕಟ್ಟಿಕೊಂಡು ಮದುವೆಯ ಕೋಟು ಹಾಕಿ ಸಂಕಲಿಕೆಯ ಪಂಚೆಯುಟ್ಟು, ಎಕ್ಕಡ ಮೆಟ್ಟಿ ನಡೆಯುವ ಅಭ್ಯಾಸವಿಲ್ಲದುದರಿಂದ ಬರೀಕಾಲಿನಲ್ಲಿಯೇ ಹನ್ನೆರಡು ಮೈಲಿ ದೂರದ ನಾಗಲಾಪುರಕ್ಕೆ ಪಶ್ಚಿಮಾಭಿ ಮುಖವಾಗಿ ಹೊರಟ. +ರಾಮಸಂದ್ರದಿಂದ ಮೂರು ಮೈಲಿ ದೂರದಲ್ಲಿ ಒಂದು ಬೋರೆ ಹತ್ತಿ ಇಳಿದ ಮೇಲೆ ಚೋಳನಗುಡ್ಡ. ಕರೀಕಲ್ಲಿನ ಆ ಗುಡ್ಡದ ತಪ್ಪಲಿನಲ್ಲಿಯೇ ದೊಡ್ಡ ಮರಳಹಳ್ಳ. ಹಳ್ಳದ ಎರಡು ಕಡೆಗೂ ಅಲ್ಲದೆ ನಡುವೆಯೂ ಮುತ್ತಗದ ಗಿಡಗಳು ತುಂಬಿ ಬೆಳೆದಿವೆ. ದಾರಿಯ ಹಳ್ಳದಲ್ಲಿ ಸಿಕ್ಕುವ ಮರಳಿನ ಬಾವಿಯನ್ನು ಕಂಡ ಚೆನ್ನಿಗರಾಯ ಹತ್ತಿರ ಕೂತು ರೊಟ್ಟಿ ಚಟ್ನಿ ಮುಗಿಸಿ ಆರು ಸಲ ತುಂಬುಬೊಗಸೆ ನೀರು ಹೀರಿ ಮತ್ತೆ ಪ್ರಯಾಣ ಮುಂದುವರಿಸಿದ. ಚೋಳನ ಗುಡ್ದವನ್ನು ಬಲಕ್ಕೆ ಬಿಟ್ಟು ಏರು ಇಳಿದು ನಡೆದರೆ ಕೆಮ್ಮಣ್ಣು ಹಳ್ಳ. ಅದರ ಆಚೆಯದೇ ಕಟಿಗೇಹಳ್ಳಿ. ಅದಕ್ಕೆ ಸ್ವಲ್ಪ ಮುಂದೆ ಸಿಕ್ಕುವ ಹೂವಿನಹಳ್ಳಿ ನಾಗಲಾಪುರದ ಫಿರ್ಕಕ್ಕೆ ಸೇರಿದ್ದು. ಆ ಊರಿನಿಂದ ಮುಂದೆ ಒಂದು ಮೈಲಿಗೇ ನಾಗಲಾಪುರದ ದೊಡ್ಡ ಕೆರೆ ಕಾಣಿಸುತ್ತದೆಯಾದರೂ, ಅದರ ಹೊರಕೋಡಿ ಮುಟ್ಟುವುದಕ್ಕೆ ಕತ್ತಾಳೆ ಓಣಿ, ಕಣಿಗಲೆ ಹಳ್ಳಗಳಲ್ಲಿ ಸಾಗಿ ಮತ್ತೆ ಎರಡು ಮೈಲಿ ನಡೆಯಬೇಕು. ಕೆರೆ ಏರಿಯ ಮೇಲೆ ಒಂದು ಮೈಲಿ ನಡೆದು ಊರ ಕಡೆ ಕೋಡಿ ದಾಟಿದನಂತರ ಸಂತೆಯ ತೋಪಿನಲ್ಲಿ ಸಾಗಿದರೆ ಅದೇ ನಾಗಲಾಪುರ. +ಊರ ಕೆರೆಯ ಈಚೆ ಕಡೆಯ ಕೋಡಿ ಹತ್ತಿರ ಬಂದಾಗ ಅವನಿಗೆ ಒಂದು ತರದ ಅಂಜಿಕೆಯಾಯಿತು. ತನ್ನನ್ನು ಯಾರಾದರೂ ಗುರುತು ಹಿಡಿದರೆ? ಈಗ ಯಾಕೆ ಬಂದೆ ಅಂದರೆ? ಮಾವನವರೇ ಹಾಗೆ ಕೇಳಿದರೆ ಏನಂತ ಹೇಳುವುದು? ಈ ಇವಳು ಹ್ಯಾಗಿರ್ತಾಳೋ, ಅವಳೇನು ನನ್ನ ಮಾತಾಡುಸ್ತಾಳೋ ಇಲ್ಲವೋ? ಮಾತಾಡುಸ್ದೇ ಇರ್ಲಿ, ಕತ್ತೆ ಮುಂಡೆಗೆ ಮಾಡ್ತೀನಿ. ಅವ್ಳಿನ್ನೂ ಯಾವಾಗ್ಲೋ ನಮ್ಮೂರಿಗ್ ಬರೂದು! ಈಗ ಹದಿಮೂರು ತುಂಬಿದೆಯಂತೆ. ಇನ್ನು ಎಷ್ಟು ದಿನವೋ ದೊಡ್ಡೋಳಾಗೋದು-ಹೀಗೆಯೇ ಯೋಚಿಸಿಕೊಂಡು ಕೆರೆಯ ಏರಿಯ ಮೇಲೆ ನಡೆಯುತ್ತಾ ಊರಿನ ಕಡೆಯ ಕೋಡಿಯನ್ನು ಮುಟ್ಟಿದ. ಗ್ರಾಮ ಪ್ರವೇಶಮಾಡುವಾಗ ಮತ್ತೆ ಅಂಜಿಕೆ. ಮದುವೆಯಲ್ಲಿ ಮೆರವಣಿಗೆ ಹೋಗಿದ್ದ ಬೀದಿಯಲ್ಲೇ ಈಗ ಹೋಗುತ್ತಿದ್ದಾನೆ. ಯಾರಾದರೂ ಗುರುತು ಹಿಡಿದರೆ! +ಗುಂಪಾಗಿ ಕಟ್ಟಿದ್ದ ಮನೆಗಳ ಆ ಊರನ್ನು ಪ್ರವೇಶ ಮಾಡಿದ ತಕ್ಷಣ ಒಂದೇ ಒಂದು ಬೀದಿಯ ಹೆಸರೇ ಶ್ಯಾನುಭೋಗರ ಬೀದಿ ಎಂದು. ಊರ ಶ್ಯಾನುಭೋಗ ಶ್ಯಾಮಣ್ಣನವರು ದರ್ಪದ ಅಧಿಕಾರ ಮಾಡುತ್ತಾರಂತೆ. ಅದಕ್ಕೇ ಬೀದಿಗೆ ಆ ಹೆಸರು. ಅಲ್ಲಿಂದ ನಡೆದು ಹೋದರೆ ಚೆನ್ನಿಗರಾಯನ ಮಾವನವರ ಮನೆ ಇರುವುದು ಓರೆ ಕೋರೆ ಸಂದಿಯಲ್ಲಿ. ಇಡೀ ಊರಿನ ಮನೆಗಳೆಲ್ಲ ಇದ್ದುದೇ ಹಾಗೆ. ಆದರೆ ಕಂಠೀಜೋಯಿಸರದು ಇದ್ದುದರಲ್ಲಿ ದೊಡ್ಡಮನೆ. +ಡವಡವ ಎನ್ನುತ್ತಿದ್ದ ಎದೆಯನ್ನು ಹದಕ್ಕೆ ತಂದುಕೊಂಡು ಅವನು ಅರೆತೆದಿದ್ದ ಬಾಗಿಲನ್ನು ನೂಕಿ ಒಳಗೆ ಹೋದರೆ ಯಾವ ಶಬ್ದವೂ ಇರಲಿಲ್ಲ. ಒಂದು ನಿಮಿಷ ನಿಂತು ನೋಡಿ ಕೊನೆಗೆ ಧೈರ್ಯ ಮಾಡಿಕೊಂಡು ಗಟ್ಟಿಯಾಗಿ ಕೂಗಿದ: ‘ಯಾರೊಳಗೆ?’ +ಅಡಿಗೆಯ ಮನೆಯಿಂದ ಮುದುಕಿ ಕೇಳಿತು:‘ಅದ್ಯಾರಪ್ಪ? ಕಾಳೇಗೌಡನೆ?’ +‘ಅಲ್ಲ , ನಮ್‌ದು ರಾಮಸಂದ್ರ. ಫೌತಿ ರಾಮಣ್ಣನೋರ ಮಗ ಚೆನ್ನಿಗರಾಯ ಅಂತ.’ +‘ಬಾರಪ್ಪ, ಬಾ, ಬಾ,’ -ಎಂದು ಅಜ್ಜಿ ಒಳಗಿನಿಂದ ಓಡಿಬಂತು. ಒಂದು ಮಂದಲಿಗೆ ಹಾಕಿ-‘ಕೂತುಕೊ’ಎಂದು ಹೇಳಿ ಒಳಗಿನಿಂದ ಒಂದು ದೊಡ್ಡ ತಾಮ್ರದ ಪಂಚಪಾತ್ರೆಯ ತುಂಬ ಗಂಗೋದಕ ತಂದು ಮುಂದಿಟ್ಟು, ‘ಊರ್ನಲ್ಲಿ ಯಲ್ಲಾ ಚನ್ನಾಗಿದಾರಾ?’ ಎಂದು ಕೇಳುತ್ತಿರುವಾಗ ಹಿತ್ತಲ ಬಾಗಿಲಿನಿಂದ ಚೆನ್ನಿಗರಾಯನ ಹೆಂಡತಿ, ಒಗೆದು ಹಿಂಡಿದ ಒಂದು ಹಸಿರು ಸೀರೆ ಮತ್ತು ರೌಕೆಗಳನ್ನು ಕೈಲಿ ಹಿಡಿದುಕೊಂಡು, ಏನೂ ತಿಳಿಯದೆ ಒಳಗೆ ಬಂದು, ಒಳಗಿನ ಮಬ್ಬುಗತ್ತಲೆಯಲ್ಲಿ ಈ ಆಗಂತುಕನಿರುವುದು ತಿಳಿಯದೆ, ಹಿಂಡಿದ ಸೀರೆಯನ್ನು ಕೊಡವಲು ಅಲ್ಲಿಯೇ ನಿಂತುಕೊಂಡಳು. +‘ನಂಜ, ನಿನ್ನ ಗಂಡ ಬಂದಿದಾನೆ. ಅಲ್ಲಿ ಕೂತಿದಾನೆ, ಕತ್‌ಲೇಲಿ ಕಾಣ್‌ಲಿಲ್ವೆ?’-ಎಂದು ಅಜ್ಜಿ ಹೇಳಿದುದೇ ತಡ, ಕೊಡವುತ್ತಿದ್ದ ಸೀರೆ ಹೆಜ್ಜೆಗೆ ಸಿಕ್ಕಿ ತಾನು ತೊಡರಿ ಬೀಳುವುದನ್ನೂ ಲೆಕ್ಕಿಸದೆ ಅವಳು ಹಿತ್ತಲು ಬಾಗಿಲಿನಿಂದ ಓಡಿ ಹೋಗಿಬಿಟ್ಟಳು. +ಅಜ್ಜಿಯೇ ಮನೆಯ ಅಳಿಯನಿಗೆ ಕೈ ಕಾಲು ತೊಳೆದುಕೊಳ್ಳಲು ನೀರು ಕೊಟ್ಟು ಬಿಸಿಯಾಗಿ ಮಜ್ಜಿಗೆಪಳದ್ಯ, ಹಪ್ಪಳ, ಉಪ್ಪಿನಕಾಯಿ, ತುಪ್ಪ, ಮೊಸರಿನ ಊಟ ಬಡಿಸಿತು. ಅಜ್ಜಿ ಬೇಡವೆಂದರೂ ಚೆನ್ನಿಗರಾಯನೇ-‘ಪರವಾಗಿಲ್ಲ ಹಾಕಿ’ ಎಂದು ಹೇಳಿ ಒಂದೂವರೆ ಮುದ್ದೆ ಹಿಟ್ಟು ಬಡಿಸಿಕೊಂಡು ಊಟ ಮಾಡಿದ. +ಊಟವಾದ ಮೇಲೆ ತಿಳಿಯಿತು: ಮಾವನವರು ಸಾಮಾನ್ಯವಾಗಿ ಊರಿನಲ್ಲಿರುವುದೇ ಇಲ್ಲ. ಚೆನ್ನರಾಯಪಟ್ಟಣ, ನರಸೀಪುರ, ಹಾಸನ, ಹೀಗೆ ಕುದುರೆಯ ಮೇಲೆ ತಿರುಗುತ್ತಿರುತ್ತಾರೆ. ಈ ಸಲ ಹೋಗಿ ಇಪ್ಪತ್ತು ದಿನವಾಯಿತು. ಎರಡು ಮೂರು ದಿನಗದಲ್ಲಿ ಬರಬಹುದು. ಇನ್ನು ಇಲ್ಲಿಗೆ ಬಂದಮೇಲೆ ಅವರನ್ನು ಕಂಡು ತಾಜಾ ಕಲಂ ಮಾತನಾಡದೆ ಹೋಗುವಂತಿಲ್ಲ. ಅಜ್ಜಿಯೂ, ಇರುವಂತೆ ಬಲವಂತ ಮಾಡಿತು. ಚೆನ್ನಿಗರಾಯ ಇಳಿದ. ಅಕ್ಕಪಕ್ಕದ ಗಂಡಸರು ಬಂದು ಅವನನ್ನು ತಿರುಗಾಡಲು ಕರೆದೊಯ್ದು ಕಂಠೀಜೋಯಿಸರ ಹೊಲ ಗದ್ದೆಗಳನ್ನು ತೋರಿಸಿಕೊಂಡು ಬಂದರು. ಮರುದಿನ ಬೆಳಿಗ್ಗೆ ಅಜ್ಜಿಯೇ ಅವನಿಗೆ ಎಣ್ಣೆ ಒತ್ತಿ ನೀರು ಹಾಕಿತು. ಆದರೆ ನಂಜಮ್ಮ ಮಾತ್ರ ಕಾಣಿಸಿಕೊಳ್ಳುತ್ತಿರಲಿಲ್ಲ. ಮಬ್ಬುಗತ್ತಲಿನಲ್ಲಿ ಒಗೆದ ಸೀರೆ ಕೊಡವುತ್ತಿದ್ದಾಗ ಅವಳನ್ನು ನೋಡಿದುದೆಷ್ಟೋ ಅಷ್ಟೇ. ತಾನಾಗಿಯೇ ಅಕ್ಕಪಕ್ಕದ ಮನೆಗೆ ಹೋಗಲು ಅವನಿಗೆ ಅಂಜಿಕೆಯೋ ಅಥವಾ ಮುಖೇಡಿತನವೋ! ಹೊತ್ತು ಹೋಗುತ್ತಿರಲಿಲ್ಲ. ಊರಿನಲ್ಲಿಯಂತೆಯೇ ಅವನು ಇಲ್ಲಿಯೂ ಬೆಳಿಗ್ಗೆ ಸ್ನಾನ ಮಾಡಿ, ಹಣೆಗೆ ವಿಭೂತಿ ಪಟ್ಟು ಬಿಗಿದು, ಒದ್ದೆ ಲಂಗೋಟಿಯ ಬದಲು ಒದ್ದೆ ಚೌಕ‌ಉಟ್ಟು ಕೂತು, ಸಂಧ್ಯಾವಂದನೆಯ ಜೊತೆಗೆ ಸಾವಿರದೆಂಟು ಗಾಯಿತ್ರಿ ಮಾಡಿದ. ಇದನ್ನು ಕಂಡು ಅಜ್ಜಿಗೆ ಹಿಡಿಸಲಾರದಷ್ಟು ಹಿಗ್ಗು. +ನಾಲ್ಕನೆಯ ದಿನ ನಡುರಾತ್ರಿಯ ಸಮಯವಾಗಿತ್ತು. ಇದ್ದಕ್ಕಿದ್ದಹಾಗೆಯೇ ಬೀದಿಯ ನಾಯಿಗಳು ಬಗುಳತೊಡಗಿದವು. ಎಲ್ಲಿಂದಲೋ ಖಟಖಟ ಸದ್ದು ಕೇಳಿಸಿತು. ನಾಯಿಗಳ ಕೂಗು ಹೆಚ್ಚಾಯಿತು. ನಡುವೆಯೇ, ‘ತೇರಿ ಭಾನ್‌ಚೋತ್’ ಎಂಬ ಶಬ್ದ. ಖಟಖಟ ಸದ್ದು ಇವರ ಮನೆಯ ಹತ್ತಿರಕ್ಕೇ ಬಂದು, ಯಾರೋ ಮನೆಯ ಬಾಗಿಲನ್ನು ಬಡಿದಂತಾಯಿತು. ಜೊತೆಗೇ, ‘ನಂಜಾ ಬಾಗಿಲು ತೆಗಿ’ ಎಂದು ಕೂಗಿದ್ದು ಕೇಳಿಸಿತು. ಅವರೇ ಮಾವನವರು ಎಂದು ಧ್ವನಿಯಿಂದ ಚೆನ್ನಿಗರಾಯನಿಗೆ ತಿಳಿಯಿತು. ತಾನೇ ಎದ್ದು ಬಾಗಿಲು ತೆಗೆಯಲು ಒಂದು ರೀತಿಯ ಅಂಜಿಕೆ. ಸುಮ್ಮನೆ ಕಂಬಳಿ ಮುಸುಕು ಹಾಕಿಕೊಂಡು ಅದರೊಳಗೆ ಸಹ ಕಣ್ಣು ಮುಚ್ಚಿ ಮಲಗಿಬಿಟ್ಟ. +ಬಂದಿರುವವರು ತಂದೆ ಎಂಬುದು ಅಡಿಗೆಯ ಮನೆಯಲ್ಲಿ ಅಜ್ಜಿಯ ಜೊತೆಯಲ್ಲಿ ಮಲಗಿದ್ದ ನಂಜಮ್ಮನಿಗೆ ತಿಳಿಯಿತು. ಆದರೆ ಗಂಡ ಹೊರಗಿನ ಪಡಸಾಲೆಯಲ್ಲಿ ಮಲಗಿದ್ದುದರಿಂದ, ತಾನೇ ಹೋಗಿ ಬಾಗಿಲು ತೆಗೆಯಲು ನಾಚಿಕೆಯಾಗಿ ಅವಳು ಅಜ್ಜಿಯನ್ನು ತಿವಿದು ಎಬ್ಬಿಸಿದಳು. ಸೀಮೆ ಎಣ್ಣೆಯ ಬುಡ್ಡಿ ಹೊತ್ತಿಸಿ ಬಂದು ಅಜ್ಜಿ ಬಾಗಿಲು ತೆಗೆಯಿತು. ಕುದುರೆಯನ್ನು ಈ ಬಾಗಿಲಿನ ಒಳಗಿನಿಂದಲೇ ಹಿತ್ತಿಲು ಕಡೆಗೆ ಕರೆದುಕೊಂಡು ಹೋಗಿ ಕಟ್ಟಿ ಬಂದು ಕಂಠೀಜೋಯಿಸರು ಕೇಳಿದರು: ‘ಇದ್ಯಾರು ಮಲಗಿರೋದು?’ +‘ಚೆನ್ನಿಗರಾಯ ಬಂದಿದಾನೆ. ನಾಕು ದಿನವಾಯ್ತು. ನಿನ್ನೇ ಕಾಯ್ತಿದ್ದ.’ +‘ ಚೆನ್ನಿಗರಾಯಾ’-ಎಂದು ತಲೆಯ ಮೇಲೆ ಹೊಡೆದಂತಹ ಧ್ವನಿಯಲ್ಲಿ ಒಂದು ಸಲ ಜೋಯಿಸರು ಕೂಗಿದರು. ‘ನಿದ್ದೆ ಬಂದಿದೆ ಏನೋ, ಎಬ್ಬಿಸ್‌ಬ್ಯಾಡ’ ಎಂದು ಅಜ್ಜಿ ಹೇಳಿದ ಮೇಲೆ ಅವರು ಸುಮ್ಮನಾದರು. ಊಟವಾಗಿದ್ದುದರಿಂದ ತಿನ್ನಲು ಏನೂ ಬೇಡವೆಂದರು. ಒಂದು ಸಲ ಹೊಗೆಸೊಪ್ಪು ಹಾಕಿಕೊಂಡ ಮೇಲೆ, ಹಾಸಿಗೆ ಹಾಕಿಕೊಡಲು ಮಗಳನ್ನು ಎಬ್ಬಿಸದೆ ತಾವೇ ಪಡಸಾಲೆಯಲ್ಲಿ ಚೆನ್ನಿಗರಾಯ ಮಲಗಿದ್ದ ಪಕ್ಕದ ಅಂಕಣದಲ್ಲಿ ಜಾನ ಎಳೆದುಕೊಂಡು ತಮ್ಮ ಬೂಟ್ಸು, ಕೋಟು, ನಿಕ್ಕರುಗಳನ್ನು ತೆಗೆದು ಪಂಚೆಯುಟ್ಟು ಮಲಗಿದರು. +– ೫ – +ಬೆಳಿಗ್ಗೆ ಹತ್ತು ಗಂಟೆಗೆ ಎದ್ದ ಅವರು ಅಳಿಯನ ಸಮಾಚಾರ ವಿಚಾರಿಸಿದರು. ಎಲ್ಲವನ್ನೂ ತಿಳಿಸಿ, ಸಿವಲಿಂಗ ತಮ್ಮಿಂದ ಐವತ್ತು ರೂಪಾಯಿ ವಸೂಲು ಮಾಡಿಕೊಂಡದ್ದನ್ನೂ ಅವನು ಹೇಳಿದಾಗ ಕೇಳಿದರು: ‘ನಿನ್ನ ತಲೇಲಿ ಬುದ್ಧಿ ಇತ್ತೋ ಜೇಡಿಮಣ್ಣು ತುಂಬಿತ್ತೋ? ಶ್ಯಾನುಭೋಗಿಕೆ ರೂಲು ಗೊತ್ತಿಲ್‌ದೋನು ನೀನು ಏನು ಮಾಡ್ತೀಯಾ ಮಣ್ಣಾಗಟ್ಟಿ?’ +ಚೆನ್ನಿಗರಾಯ ಸೂಕ್ಷ್ಮವಾಗಿ ನಡುಗುತ್ತಾ ತಲೆ ತಗ್ಗಿಸಿ ಕುಳಿತುಬಿಟ್ಟ. ತಾನು ಅಲ್ಲಿಗೆ ಬಂದ ದಿನವೇ ವಿಷಯವನ್ನು ಹೇಳಿದ್ದ. ಅವನು ಈಗ ಅದನ್ನು ಮಾವನವರಿಗೆ ಹೇಳುವಾಗ ಅಜ್ಜಿ ಹತ್ತಿರವೇ ಇತ್ತು. ಅಳಿಯನನ್ನು ಹೀಗೆ ಅಂದದಕ್ಕೆ ಅಜ್ಜಿಯೇ ಬಾಯಿ ಹಾಕಿ, ‘ಇದೇನೋ ಕಂಟೀ, ಹೀಗಂತೀಯಾ? ಅವನು ಹುಡುಗ, ತಿಳೀಲಿಲ್ಲ. ನಿನ್ ಬಾಯ್ಲಿ ಯಾವಾಗ್ಲೂ ವರಟು ಮಾತೇಯಾ ಬರೂದು? ಹೋಗಿ ಅವನ ಹಕ್ಕು ಅವನಿಗೆ ಕೊಡಿಸಿ ಬಾ’ ಎಂದಿತು. +ಕಂಠೀಜೋಯಿಸರು ಮತ್ತೆ ಮಾತನಾಡಲಿಲ್ಲ. ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಯ ಮಂತ್ರ ಮುಗಿಸಿ, ಒಳಗೆ ನಂಜಮ್ಮ ಮಾಡಿ ಅಜ್ಜಿ ಹೊರಕ್ಕೆ ತಂದುಕೊಟ್ಟ ಅಕ್ಕಿ ತಾಲಿಪ್ಪಿಟ್ಟು ಬದನೆಕಾಯಿ ಎಣ್ಣೆಗಾಯಿಯನ್ನು ಅಳಿಯನೊಡನೆ ಕೂತು ತಿಂದು ಮುಗಿಸಿದರು. ಒಂದು ಸಲ ಹೊಗೆಸೊಪ್ಪು ಅಗೆದು ನಾಲ್ಕೈದು ಸಲ ಉಗುಳಿ ಬಂದಮೇಲೆ ರಾಮಸಂದ್ರದ ಸ್ಥಳವಿದ್ಯಮಾನದ ಬಗೆಗೆ ನಾಲ್ಕೈದು ಪ್ರಶ್ನೆ ಕೇಳಿದರು. ಚೆನ್ನಿಗರಾಯ ತನಗೆ ತಿಳಿದಂತೆ ಉತ್ತರ ಹೇಳಿದ. ಜೋಯಿಸರು, ಅವರ ಗದ್ದೆ ಹೊಡೆಯುತ್ತಿದ್ದ ಮೂಲೆಮನೆ ಹೊನ್ನನನ್ನು ಕರೆದು ಅವನ ಕೈಗೆ ಒಂದು ಚೀಟಿ ಬರೆದುಕೊಟ್ಟು, ತಕ್ಷಣ ಶ್ರವಣಬೆಳಗೊಳಕ್ಕೆ ಹೋಗಿ ಅವರ ಮಗ ಪೋಲೀಸು ಕಾನಿಸ್ಟೇಬಲ್ ಕಲ್ಲೇಶನಿಗೆ ಮುಟ್ಟಿಸಿ ಜವಾಬು ತರುವಂತೆ ಅಟ್ಟಿದರು. ಜೋಯಿಸರು ಅಳಿಯನ ಜೊತೆ ಮತ್ತೆ ಯಾವ ಮಾತನ್ನೂ ಆಡಲಿಲ್ಲ. ಅವರು ಊರಿಗೆ ಬರುವ ಸುದ್ಧಿ ತಿಳಿದು, ಮಾಟ ಮದ್ದುಗಳಿಗೆ ಕೇಳುವ, ದೆವ್ವ ಪಿಶಾಚಿಗಳಿಗೆ ಕಟ್ಟು ಮಾಡಿಸುವ ಕೆಲವರು ಬಂದು ಮನೆಗೆ ತುಂಬಿಕೊಂಡರು. ಅಳಿಯನಿಗೆ ಬೇಜಾರಾಗುತ್ತದೆಂದು ಅಜ್ಜಿ ಅವನನ್ನು ಅಡಿಗೆಯ ಮನೆಯ ಒಳಕ್ಕೇ ಕರೆದು ಕೂರಿಸಿಕೊಂಡಿತು. ನಂಜಮ್ಮ ಪೆಟ್ಟಿಯ ಮನೆಗೆ ಹೋದಳು. +ಹೊನ್ನ ಮಾರನೆಯ ಬೆಳಿಗ್ಗೆ ಹನ್ನೊಂದು ಗಂಟೆಗೆ ಶ್ರವಣಬೆಳಗೊಳದಿಂದ ಬಂದು ಜೋಯಿಸರಿಗೆ ಒಂದು ಕಾಗದ ಕೊಟ್ಟ. ಅವನು ಮನೆಗೆ ಹೋದಮೇಲೆ ಅವರು ತಮ್ಮ ತಾಯಿಗೆ ಹೇಳಿದರು: ‘ಅಕ್ಕಮ್ಮ, ನಾನು ಇವನು ರಾತ್ರಿ ರಾಮಸಂದ್ರಕ್ಕೆ ಹೋಗ್ತೀವಿ.’ +‘ಇದೇನೋ ಇವತ್ತೇ ಹೊರಟಿರಿ, ನಾನು ಏನೂ ತಿಂಡಿಗಿಂಡಿ ಮಾಡಿಲ್ಲ.’ +‘ಸಂಜೆ ಹೊತ್ತಿಗ್ ಮಾಡಿಬಿಡು. ರಾತ್ರಿ ಊಟಕ್ಕೆ ಪಾಯ್‌ಸ ಗೀಯ್‌ಸ ಮಾಡು.’ +‘ನೀನಂತೂ ಕೊಳ್ಳಿದೆವ್ವದ ಹಾಗೆ ರಾತ್ರಿ ಹೊತ್ತು ತಿರುಗ್ತೀಯಾ. ಅವನನ್ನ ಕತ್‌ಲೇಲಿ ಯಾಕೆ ಕರ್ಕಂಡ್ ಹೋಗ್ತೀಯಾ?” +‘ಅವನೇನು ಹೆಣ್ಣೆ? ಗಂಡು ಅಂತ ತಾನೆ ನನ್ನ ಮಗಳನ್ನ ಕೊಟ್ಟಿರೋದು!’ +ಕತ್ತಲೆಂದರೆ ಹೆಚ್ಚು ಭಯವಿಲ್ಲದಿದ್ದರೂ ಕತ್ತಲಿನಲ್ಲಿ ದೆವ್ವ ಪಿಶಾಚಿಗಳು ಸಂಚರಿಸುವ ನೆನಪಾಗಿ ಚೆನ್ನಿಗರಾಯನ ಎದೆ ಸಂಕುಚಿಸಿತು. ಅಲ್ಲದೆ ಚೋಳೇಶ್ವರನ ಗುಡ್ದದ ಹತ್ತಿರ ರಾತ್ರಿಯ ಹೊತ್ತು ಕಿರುಬಗಳು ಇರುತ್ತವಂತೆ. ಅದನ್ನು ಮಾವನವರಿಗೆ ಹೇಳಿದರೆ ತನ್ನನ್ನೇ ಬೈದಾರೆಂಬ ಹೆದರಿಕೆ. ಉಭಯ ಸಂಕಟದಲ್ಲಿ ಸಿಕ್ಕಿ ಅವನು ಸುಮ್ಮನಾದ. +ಅಜ್ಜಿ ಗಡಿಬಿಡಿಯಲ್ಲಿಯೇ ಕೋಡುಬಳೆ ಬೇಯಿಸಿತು. ನಂಜಮ್ಮ ನೆನ್ನೆಯೇ ಚಕ್ಕುಲಿ ಹಿಟ್ಟು ಬೀಸಿದ್ದಳು. ಅದನ್ನೂ ಕರಿದಾಯಿತು. ರಾತ್ರಿ ಪಾಯಸದ ಊಟವಾದಮೇಲೆ ಜೋಯಿಸರು ಕಾಲುಚೀಲ ಬೂಟು, ಬಿಳೀ ನಿಕ್ಕರು, ಕಾಖಿ ಕೋಟು ಹಾಕಿ ತಲೆಗೆ ಕಾಖಿ ಹ್ಯಾಟು ಇಟ್ಟುಕೊಂಡರು. ಅದೇ ದಿನ ಬೆಳಿಗ್ಗೆ ಹಜಾಮರವನು ತಿದ್ದಿ ಕತ್ತರಿಸಿದ್ದ ತುಂಬು ಮೀಸೆ ಮುಖದಲ್ಲಿ ಅಡರಿ ಕಾಣುತ್ತಿತ್ತು. ಕುದುರೆಗೆ ಜೀನು ಲಗಾಮುಗಳನ್ನು ಏರಿಸಿ, ಅವರ ಬಟ್ಟೆ ಬರೆಗಳನ್ನು ಹಸಿಬೆ ಚೀಲಕ್ಕೆ ಹಾಕಿ ಅದನ್ನು ಜೀನಿನ ಮುಂದೆ ಎರಡು ಕಡೆಗೂ ಇಳಿಬಿಟ್ಟರು. ಹೊರಡುವ ಮುನ್ನ ಚೆನ್ನಿಗರಾಯ ಅಜ್ಜಿಗೂ ಮಾವನವರಿಗೂ ನಮಸ್ಕರಿಸಿದ. ‘ನಂಜಾ, ನಿನ್ನ ಗಂಡನಿಗೆ ನಮಸ್ಕಾರ ಮಾಡು ಬಾ’- ಎಂದು ಅಜ್ಜಿ ಕೂಗಿತು. ಅವಳು ಬರಲಿಲ್ಲ. ಎರಡನೆಯ ಸಲ ಕಂಠಿಯೇ ಕೂಗಿದಮೇಲೆ ಬಂದು ದೂರದಿಂದ ನೆಲಮುಟ್ಟಿ ನಮಸ್ಕಾರ ಮಾಡಿ ಹೊರಟುಹೋದಳು. ಹೆಂಡತಿಯನ್ನು ನೋಡಬೇಕೆಂದು ಚೆನ್ನಿಗರಾಯ ಆಶೆಪಟ್ಟನಾದರೂ ಮಾವನವರು ಎದುರಿಗೇ ಇದ್ದುದರಿಂದ ಭಯಪಟ್ಟು ಕಣ್ಣುಗಳನ್ನು ಆ ಕಡೆ ಹೊರಳಿಸಲಿಲ್ಲ. +ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅವರು ಮನೆ ಬಿಟ್ಟರು. ಆ ದಿನವೇ ಅಮಾವಾಸ್ಯೆಯಾಗಿದ್ದುದರಿಂದ ಎಲ್ಲೆಲ್ಲಿಯೂ ಗಾಢ ಕತ್ತಲೆ ಕವಿದಿತ್ತು. ಊರಿನಿಂದ ಹೊರಗೆ ಬಂದ ಮೇಲೆ ಜೋಯಿಸರು ಅಳಿಯನಿಗೆ-‘ನೀನೂ ಕುದುರೆ ಹತ್ತು. ಇಬ್ಬರೂ ಕೂತ್ಕಳಾಣ’ ಎಂದರೆ ಅವನು, ‘ನಂಗೆ ಅಭ್ಯಾಸವಿಲ್ಲ. ಹೆದರಿಕೆಯಾಗುತ್ತೆ’ ಅಂದ. ‘ನಾನು ಹಿಡ್‌ಕಂಡಿರ್ತೀನಿ’ ಎಂದರೆ, ‘ಊಹೂಂ. ನೀವೇನಾರ ಅನ್ನಿ. ನನ್ ಕೈಲಿ ಆಗೂದೇ ಇಲ್ಲ’ ಎಂದು ಹಟ ಹಿಡಿದ. +‘ಆಯ್ತು, ನಡೆದೇ ಹೋಗಾಣ್ ಬಾ’-ಎಂದು ಅವರು, ಕಾಳಕತ್ತಲೆಯಲ್ಲೂ ಸ್ಪಷ್ಟವಾಗಿ ದಾರಿ ಕಾಣುತ್ತಿರುವಂತೆ ದಾಪುಗಾಲು ಹಾಕಿದರು. ಹಿಂದೆ ಕುದುರೆ ಬರುತ್ತಿತ್ತು. ಅದರ ಹಿಂದೆ ನಾಲ್ಕು ಮಾರು ದೂರದಲ್ಲಿ ಚೆನ್ನಿಗರಾಯ ಓಡಿ ಓಡಿ ಬರುತ್ತಿದ್ದ. ಮಾವನವರು ಮೌನವಾಗಿ ನಡೆಯುತ್ತಿದ್ದರು. ಅಳಿಯನಿಗೆ ಕಸಿವಿಸಿ ಮಾತ್ರವಲ್ಲ, ಹೆದರಿಕೆಯೂ ಆಗುತ್ತಿತ್ತು. ಕತ್ತಲೆಯಲ್ಲಿ ಸುತ್ತಲೂ ಬೀಸುತ್ತಿದ್ದ ಗಾಳಿ ಸುಂಯ್ ಎನ್ನುತ್ತಿತ್ತು. +– ೬ – +ಅವರು ಕೆರೆ ಏರಿ ದಾಟಿ ಹೂವಿನ ಹಳ್ಳಿ, ಕಟಿಗೆಹಳ್ಳಿಯನ್ನು ಹಿಂದೆ ಹಾಕಿ ಚೋಳೇಶ್ವರನ ಗುಡ್ಡದ ಪಶ್ಚಿಮದ ಕಿಬ್ಬಿಗೆ ಮೊದಲು ಸಿಕ್ಕುವ ಕೆಮ್ಮಣ್ಣುಹಳ್ಳವನ್ನೂ ದಾಟುತ್ತಿದ್ದರು. ಆಗಲೇ ಎಂಟು ಮೈಲಿಯ ದಾರಿ ಕಳೆದಿತ್ತು. +ಕಂಠೀಜೋಯಿಸರು ಮುಂದೆ ಮುಂದೆ ನಡೆಯುತ್ತಿದ್ದರು. ಅವರ ಹಿಂದೆ ಎತ್ತರವಾದ ಬಿಳೀ ಕುದುರೆ. ಹಿಂದೆ ಹಿಂದೆ ಸೋತ ಕಾಲಿನಲ್ಲಿ ಅರ್ಧ ಭಾಗ ಓಡುತ್ತಾ ಅರ್ಧ ಭಾಗ ನಡೆಯುತ್ತಾ ಬರುತ್ತಿದ್ದ ಚೆನ್ನಿಗರಾಯನಿಗೆ ಕುದುರೆಯ ಬಿಳೀ ಬಣ್ಣವು ಕತ್ತಲೆಯಲ್ಲೂ ಮಬ್ಬಾಗಿ ಕಾಣುತ್ತಿತ್ತು. ಮಾವನವರು ಇದ್ದಕ್ಕಿದ್ದಹಾಗೆಯೇ ನಿಂತರು. ಕುದುರೆಯೂ ನಿಂತಿತು. ಇನ್ನೇನು ಕುದುರೆಯ ಹಿಂಭಾಗಕ್ಕೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಅಳಿಯನೂ ನಿಂತ. ಸ್ವಲ್ಪ ದೂರ ಮುಂದೆ ಅವರ ದಾರಿಯ ಬಲಭಾಗದಲ್ಲಿ ಬೆಳಕು ಕಾಣಿಸುತ್ತಿತ್ತು. ‘ಸ್ವಲ್ಪ ಮುಂದೆ ಬಾ’- ಎಂದು ಮಾವ ಕರೆದರು. ಅವನು ಕುದುರೆಯನ್ನು ಬಳಸಿಕೊಂಡು ಅವರ ಹತ್ತಿರ ಹೋದ. ಬೆಳಕಿನ ಕಡೆಗೆ ಕೈ ತೋರಿಸಿ, ‘ಅಲ್ಲಿ ನೋಡು’ ಎಂದರು. ನೋಡಿದುದೇ ತಡ, ಅವನಿಗೆ ಮೈ ಬೆವೆತುಹೋಗಿ ಕೈ ಕಾಲು ನಡುಗಲು ಮೊದಲಾಯಿತು. +ಸುಮಾರು ಸೊಂಟದೆತ್ತರದ ಒಂದು ಕಾಳಿಯ ವಿಗ್ರಹ. ವೀರಮಂಡಿ ಹಾಕಿಕೊಂಡು ನಿಂತಿದೆ. ತೆರೆದ ಬಾಯಿಯಿಂದ ರಕ್ತರಂಜಿತವಾದ ಅದರ ನಾಲಿಗೆಯು ಹೊರಕ್ಕೆ ಇಳಿಬಿದ್ದು ರಕ್ತವನ್ನು ನೆಕ್ಕುತ್ತಿರುವಂತೆ ಇದೆ. ಕೊರಳಿಗೆ ಕೆಂಪು ಕಣಿಗಲೆ ಹೂವಿನ ದೊಡ್ಡ ಮಾಲೆ. ಎರಡು ಕಡೆಗೂ ಮಣ್ಣಿನ ಹಣತೆಯ ದೀಪಗಳು ಕಕ್ಕಡದಂತೆ ಉರಿಯುತ್ತಿವೆ. ಎದುರಿಗೆ ಮೂರು ಕೋಳಿಗಳು ತಲೆ ಕಡಿಯಲ್ಪಟ್ಟು ಬಿದ್ದಿವೆ. ಪಕ್ಕದಲ್ಲಿಯೇ, ಕತ್ತರಿಸಿದ ಬೂದುಗುಂಬಳಕಾಯಿಯ ಎರಡು ಹೋಳುಗಳು; ಮೂರು ಚಿಪ್ಪು ಬಾಳೆಯ ಹಣ್ಣುಗಳು. ಎಲ್ಲೆಲ್ಲಿಯೂ ಯಥೇಚ್ಛವಾಗಿ ಕುಂಕುಮವನ್ನು ಚೆಲ್ಲಾಡಿದೆ. ಅರಿಶಿನ ಕುಂಕುಮವು ಕಾಳಿಯ ಮೈ ಮೇಲೆಲ್ಲ ಸವರಲ್ಪಟ್ಟಿದೆ. ಹಸೀ ನೂಲು, ತಾಮ್ರದ ತಗಡು, ತಾಯಿತ, ಮನುಷ್ಯರದೋ ಅಥವಾ ಪ್ರಾಣಿಗಳದೋ ಎಲುಬು ಸುತ್ತಲೂ ಬಿದ್ದಿವೆ. +ಜಡವಾಗುತ್ತಿದ್ದ ಕತ್ತಲೆಯನ್ನು ಸೀಳಿ ನಿಂತ ಕೆಂಡದಂತೆ ಕಾಣುತ್ತಿತ್ತು ಅದು. +‘ನೋಡ್‌ದ್ಯಾ?’-ಮಾವನವರು ಕೇಳಿದರು. +‘ಹೂಂ’-ಎಂದು ಹೇಳುವುದಕ್ಕೂ ಅಳಿಯನ ನಾಲಗೆ ತೊದಲುತ್ತಿತ್ತು. +‘ನೋಡು, ಅಲ್ಲಿಗೆ ಹೋಗಿ ಆ ಬಾಳೆಹಣ್ಣಿನ ಚಿಪ್ಪುಗಳನ್ನು ತಗಂಡು ಬಾ. ಆ ವಿಗ್ರಹದ ಎದೆಗೆ ಒಂದು ಸಲ ಒದ್ದು ಕೆಡವು. ನಿನಗೆ ದುಡ್ಡು ಸಿಕ್ಕುತ್ತೆ.’ +ಈ ಮಾತನ್ನು ಕೇಳಿ ಅವನು ಥರಗುಟ್ಟಿದ. ‘ಬ್ಯಾಡಿ ಬ್ಯಾಡಿ’-ಎಂದು ತೊದಲುತ್ತಾ ಹೇಳಿದ. ‘ಹಾಗಾದ್ರೆ ನೀನು ಕುದುರೆ ಲಗಾಮು ಹಿಡ್‌ಕೊ’-ಎಂದು ಅವರು ಅದನ್ನು ಅವನ ಕೈಲಿ ಇಟ್ಟು ಮುಂದೆ ಹೋದರು. ನೇರವಾಗಿ ಹತ್ತಿರ ಹೋಗಿ ಬಾಳೆಹಣ್ಣಿನ ಚಿಪ್ಪುಗಳನ್ನು ಕೈಗೆ ತೆಗೆದುಕೊಂಡರು. ಎರಡು ನಿಮಿಷ ಪರೀಕ್ಷಿಸುವವರಂತೆ ವಿಗ್ರಹವನ್ನು ನೋಡಿ, ನಂತರ ಅದರ ಭುಜಗಳು, ನಾಲಗೆ, ತಲೆ, ವೀರಮಂಡಿಯ ಚಿಪ್ಪುಗಳ ಮೇಲೆಕೈಹಾಕಿ ಅದೇನೋ ತೆಗೆದುಕೊಂಡರು. ಬೆಳ್ಳಿಯ ರೂಪಾಯಿ ನಾಣ್ಯಗಳಿರಬೇಕು. ನಂತರ ತಮ್ಮ ಎಡಗಾಲಿನ ಬೂಟ್ಸಿನಿಂದ ಅದರ ಎದೆಗೆ ಒದೆದರು. ಅದು ಮುರಿದು ಬಿತ್ತು. ಬಿದ್ದ ಜಾಗದಲ್ಲಿಯೇ ಕೆಲವು ನಾಣ್ಯಗಳು ಉದುರಿದವು. ಅದರೊಡನೆಯೇ ಒಂದು ಚಿನ್ನದ ಕಾಸೋ ಎಂಥದೋ ಇದ್ದಂತೆ ತೋರಿತು. ಅವೆಲ್ಲವನ್ನೂ ಆರಿಸಿ ಜೇಬಿಗೆ ಹಾಕಿಕೊಂಡು ಹಿಂತಿರುಗಿ ಬಂದು ಕುದುರೆಯ ಲಗಾಮು ಹಿಡಿದುಕೊಂಡು, ‘ನಡಿ’ ಎಂದು ಹೇಳಿ ಮುಂದೆ ಹೊರಟರು. +ಈಗಲೂ ಕಠೀಜೋಯಿಸರು ಮುಂದೆ, ನಡುವೆ ಕುದುರೆ, ಚೆನ್ನಿಗರಾಯ ಹಿಂದೆ ಆದರು. ಮಾರಿಯ ವಿಗ್ರಹದ ಕಡೆಗೇ ಅವನು ಉಳಿದ. ಆ ಕಡೆಗೆ ಹಿಂತಿರುಗಿ ನೋಡಲು ಭಯ. ನೋಡದಿದ್ದರೆ ಅದು ತನ್ನನ್ನೇ ಹಿಂಬಾಲಿಸಿ ಬರುತ್ತಿದ್ದು ಬೆನ್ನಮೇಲೆ ಅಪ್ಪಳಿಸಿ ಕುತ್ತಿಗೆ ಹಿಡಿದೀತೆಂಬ ಹೆದರಿಕೆ. ಜೊತೆಗೆ ಮೌನವು ಮೊದಲಿನಂತೆಯೇ ಗುಂವ್‌ಗುಡುತ್ತಿತ್ತು. ಮಾವನವರು ಮಾತನಾಡದೆ ದೆವ್ವದಂತೆ ದುಡು ದುಡು ವೇಗದಲ್ಲಿ ನಡೆಯುತ್ತಿದ್ದಾರೆ. ಏನಾದರೂ ಮಾತನಾಡಿದರೆ ಭಯ ಕಡಿಮೆಯಾದೀತೆಂದು ಅವನು ಕೇಳಿದ: ‘ಅದ್ಯೆದ್ಯದ್ಯಂತದು?’ +‘ಇವತ್ತು ಅಮಾವಾಸ್ಯೆಯಲ್ವೆ?’ +‘ಅದದದುಕ್ಕೇನ್ ಮಾಮ್ಮಾಡಿದಾರೆ?’ +‘ಯಾರಿಗೋ ಮಾಟ ಮಾಡ್ಸಿದಾರೆ. ಕರೀಗೆರೆ ವೀರಾಚಾರಿ ಅಂತ ಇದಾನೆ. ಅವನೇ ಇಂಥಾದೆಲ್ಲಾ ಮಾಡೋನು. ಈಗ ಮಾಡ್ಸೋರ ಎದುರಿಗೆ ಹೀಗೆಲ್ಲ ಮಾಡ್ಸಿ ಅವರ ಜೊತೇಲೇ ಅವ್ನೂ ಹೋಗಿದಾನೆ. ಆಮ್ಯಾಲೆ ಬಂದು ವಿಗ್ರಹದೊಳಗೆ ನಾಲಿಗೆ ಮ್ಯಾಲೆ, ಭುಜದ ಮ್ಯಾಲೆ, ಇಟ್ಟ ದುಡ್ಡು ಬಾಳೆಹಣ್ಣು ಯಲ್ಲಾನೂ ತಗಂಡ್ ಹೋಗ್ತಾನೆ. ಇವತ್ತು ವಾಪಸ್ ಬಂದ್ ನೋಡ್ಲಿ, ಅವನಿಗೆ ಸಿಕ್ಕುತ್ತೆ ಮಣ್ಣಾಗಟ್ಟಿ.’ +‘ಆ ಆ ಅದುನ್ನ ಮುಟ್ಟಿ ತಗಂಡ್ರಲಾ, ನಿನಿನಿಮ್ಗೇನೂ ಆಗುಲ್ವೆ?’ +‘ಎದೆ ಮುಟ್ಟಿ ನೋಡ್ಕಾಬೇಕು. ಗಟ್ಟಿಯಾಗಿದ್ರೆ ಒಂದ್ ಕೂದ್ಲೂ ಕಿತ್ಕಳಾಕ್ ಆಗುಲ್ಲ. ಇಲ್ದೆ ರಕ್ತ ಕಾರ್ಕಂಡ್ ಬಿದ್‌ಸಾಯೂವಂಥ ಹೆಣ್ಣಿಗ್ ನನ್‌ಮಕ್ಳೂ ಇರ್ತಾರೆ.’ +ಕೊನೆಯ ಮಾತನ್ನು ಕೇಳಿ ಚೆನ್ನಿಗರಾಯನಿಗೆ ಹೆದರಿಕೆಯಾಯಿತು. ಅಷ್ಟರಲ್ಲಿ ಗುಡ್ಡದ ತಿಟ್ಟು ಕಳೆದು, ಮಾಟ ಮಾಡಿಸಿದ್ದ ಆ ಸ್ಥಳವು ಕಣ್ಣಿಗೆ ಕಾಣದಷ್ಟು ಹಿಂದೆ ಹೋಗಿತ್ತು. ಅವನು ಒಂದು ಸಲ ಧೈರ್ಯ ಮಾಡಿ ಹಿಂದಕ್ಕೆ ತಿರುಗಿ ನೋಡಿದ. ಕತ್ತಲಿನ ಕಪ್ಪು ವಿನಾ ಮತ್ತೆ ಏನೂ ಕಾಣುತ್ತಿರಲಿಲ್ಲ. ಆಗಲೇ ಗುಡ್ಡದ ಇಳಿವು ಪ್ರಾರಂಭವಾಗಿತ್ತು. ಮುತ್ತುಗದ ಮರಗಳ ಹಳ್ಳವೂ ಕಳೆಯುತ್ತಾ ಬಂದಿತ್ತು. ಇಡೀ ದಾರಿಯು ಚಿರಪರಿಚಿತವಾಗಿದ್ದಂತೆ ಮಾವನವರು ಧಡ ಧಡ ಧಡನೆ ನಡೆದು ಸಾಗುತ್ತಿದ್ದರು. +– ೭ – +ಇಬ್ಬರೂ ಮನೆ ಮುಟ್ಟುವ ವೇಳೆಗೆ ನಡುರಾತ್ರಿ ಕಳೆದು ಎರಡು ಗಂಟೆಯಾಗಿತ್ತು. ಕಂಠೀಜೋಯಿಸರ ಮಗ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ತನ್ನ ಜೊತೆಯ ಒಬ್ಬ ದಫೇದಾರನನ್ನು ಕರೆದುಕೊಂಡು ಗಂಗಮ್ಮನ ಮನೆಗೆ ಬಂದಿದ್ದ. ತಮ್ಮ ಬೀಗ ಕಲ್ಲೇಶನ ಗುರುತು ಗಂಗಮ್ಮನಿಗೂ ಅಪ್ಪಣ್ಣಯ್ಯನಿಗೂ ಹತ್ತಿತ್ತು. ಅವರಿಬ್ಬರೂ ಬಂದು ಅರ್ಧ ಗಂಟೆ ಮಾತ್ರ ಆಗಿತ್ತು. ಇಬ್ಬರೂ ಕಾಖಿ ದಿರಿಸು ಹಾಕಿ, ಕಾಲಿಗೆ ಬ್ಯಾಂಡೇಜು ಬಿಗಿದು, ಪೋಲೀಸು ಬೂಟು ಕಟ್ಟಿದ್ದರು. ಬೆನ್ನಿನ ಮೇಲಿಂದ ಇಳಿಯುವ ಉಣ್ಣೆಯ ಪೋಲೀಸ್ ಓವರ್‌ಕೋಟು ಹಾಕಿ ಕೈಲಿ ಹಂಟರ್‌ಕೇನ್ ಹಿಡಿದಿದ್ದರು. ಈ ಹೊತ್ತಿನಲ್ಲಿ ಇವರಿಬ್ಬರೂ ಬಂದ ಕಾರಣ ಗಂಗಮ್ಮನಿಗೆ ತಿಳಿಯಲಿಲ್ಲ, ಅವರೂ ಹೇಳಲಿಲ್ಲ. ಬಂದವರಿಗೆ ಬಿಸಿಯಾಗಿ ತಾಲೀಪಿಟ್ಟು ಮಾಡಿಕೊಟ್ಟಳು. ಅವಳಿಗೆ ಕಾಫಿ ಕಾಯಿಸಲೂ ಬರದು. ಅಷ್ಟು ಹೊತ್ತಿನಲ್ಲಿ ಹಾಲೂ ಇರಲಿಲ್ಲ. ತಾವೇ ತಂದಿದ್ದ ಕಾಫೀಪುಡಿ ಹಾಕಿ ಅವರು ಬೆಲ್ಲದ ಡಿಕಾಕ್ಷನ್ ಕುಡಿದರು. ಚೆನ್ನಿಗರಾಯ ಮಾವನವರೊಡನೆ ಇನ್ನೇನು ಮನೆಗೆ ಬರುತ್ತಾನೆಂದು ಅವರಿಂದಲೇ ತಿಳಿಯಿತು. +ತಮ್ಮ ಕುದುರೆ ಮತ್ತು ಅಳಿಯನ ಸಮೇತ ಬಂದ ಕಂಠೀಜೋಯಿಸರು ಮಗನಿಗೆ ಶ್ಯಾನುಭೋಗಿಕೆಯ ವಿಷಯ ವಿವರಿಸಿದರು. ‘ಈಗಲೇ ನಡಿ, ಛಾರ್ಜು ಕೊಡಿಸಿಬಿಡಾಮ’- ಎಂದು ಅವರು ಹೇಳಿದಾಗ ಕಲ್ಲೇಶನ ಜೊತೆ ಬಂದಿದ್ದ ದಫೇದಾರರು ಕೇಳಿದರು: ಹ್ಯಾಗೆ ಕೊಡಿಸೋದು?’ +‘ನೀವು ಸುಮ್ಮನೆ ನನ್ನ ಜೊತೆ ಬನ್ನಿ’-ಎಂದು ಕಠೀಜೋಯಿಸರು ಹೊರಗೆ ಬಂದು ಕುದುರೆ ಏರಿ ಅಳಿಯನಿಗೆ ಹೇಳಿದರು: ‘ನಡಿ, ಅವರ ಮನೆ ತೋರ್ಸು.’ +ಚೆನ್ನಿಗರಾಯನಿಗೆ ಏನೂ ತಿಳಿಯಲಿಲ್ಲ-ಒಂದು ರೀತಿಯ ಭಯವಾಯಿತು. ಏಕೆ ಎಂದು ಕೇಳಿದರೆ ಅವರು ಏನನ್ನುವರೋ ಎಂಬ ಮತ್ತೊಂದು ರೀತಿತಿಯ ಹೆದರಿಕೆ ಬೇರೆ. ಅವನು ಮುಂದೆ ಮುಂದೆ ನಡೆದ. ಹಿಂದೆ ಕುದುರೆಯ ಮೇಲೆ ಕಂಠೀಜೋಯಿಸರು. ಎರಡು ಪಕ್ಕಕ್ಕೂ ಇಬ್ಬರು ಪೋಲೀಸು ಆಸಾಮಿಗಳು. ಸಿವಲಿಂಗೇಗೌಡನ ಮನೆಯ ಮುಂದೆ ಬಂದು ನಿಂತಮೇಲೆ ಜೋಯಿಸರು, ‘ಬಾಗಿಲು ಬಡಿದು ಅವನನ್ನು ಎಬ್‌ಸು’ ಎಂದರು. +ಚೆನ್ನಿಗರಾಯ ಬಾಗಿಲು ಬಡಿದಾಗ ಒಳಗಿನಿಂದ ಸಿವಲಿಂಗನ ಹೆಂಡತಿ-‘ಯಾರೂ?’ ಎಂದು ಕೂಗಿದಳು. +‘ನಾನು ಕಣ್ ಶಿವಮ್ಮ, ಸಿವಲಿಂಗೇಗೌಡ್ರುನ್ನ ಎಬ್‌ಸು-ಎಂದು ಚೆನ್ನಿಗರಾಯ ಹೇಳುತ್ತಿರುವಷ್ಟರಲ್ಲಿ ಒಳಗಿನಿಂದ ಎಚ್ಚರವಾಗಿ ಅವನೇ ಬಂದು ಬಾಗಿಲು ತೆಗೆದು ನಿದ್ದೆಗಣ್ಣಿನಲ್ಲಿ, ‘ಇದೇನಯ್ಯಾ ಈಟ್ ಹೊತ್ನಲ್ಲಿ ನಿದ್ದೆ ಕೆಡುಸ್ತೀಯಾ, ನಿಂಗ್ಯಾರೂ ಏಳೋರ್ ಕೇಳೋರ್ ಇಲ್ವಾ?’ ಎನ್ನುತ್ತಿದ್ದವನೇ, ಭಾರೀ ಕುದುರೆಯ ಭೀಮಸವಾರರನ್ನೂ ಪೋಲೀಸರನ್ನೂ ಕಂಡ ತಕ್ಷಣ ಎದೆಯ ಹೊಡೆತ ಗಕ್ಕನೆ ನಿಂತಂತೆ ಆಗಿ ಮಾತನ್ನು ಅಲ್ಲಿಗೇ ನಿಲ್ಲಿಸಿದ. ಕುದುರೆಯ ಸವಾರರು-‘ದಫೇದಾರ್, ಇವನ್ನ ಹಿಡಿದು ಅರೆಸ್ಟ್ ಮಾಡಿ’ ಎಂದು ಗತ್ತಿನಿಂದ ಹೇಳಿದರು. ಪೋಲೀಸಿನವರಿಬ್ಬರೂ ಹೋಗಿ ಅವನ ತೋಳುಗಳನ್ನು ಹಿಡಿದುಕೊಂಡರು. ಒಳಬಾಗಿಲಿನಲ್ಲಿಯೇ ಇದ್ದ ಶಿವಮ್ಮ, ‘ಅಯ್ಯೋ, ಕೆಟ್ನಲ್ಲೋ ಶಿವನೇ, ನನ್ ಗಂಡ ಏನ್ ಮಾಡಿದ್ದ ತ್ಯಪ್ಪ’ ಎಂದು ಕೂಗಿಕೊಳ್ಳುವಷ್ಟರಲ್ಲೇ ಕಲ್ಲೇಶ, ‘ಬಾಯಿ ಬಿಟ್ರೆ ನಿನ್ನೂ ಹಿಡ್‌ಕಂಡು ಹೋಗಿ ಬೇಡಿ ಹಾಕ್ತೀವಿ. ಮುಚ್ಚು’ ಎಂದ. ಅವಳು ತನ್ನ ಎರಡು ಕೈಗಳನ್ನೂ ಎತ್ತಿ ಬಾಯಮೇಲೆ ಇಟ್ಟು ಅಮುಕಿಕೊಂಡಳು. +ಇವರು ಕುದುರೆಯಿಂದ ಇಳಿದು-‘ಒಳಗೆ ನಡೀರಿ’ಎಂದರು. ಸಿವಲಿಂಗನನ್ನು ದಬ್ಬಿಕೊಂಡು ಪೋಲೀಸಿನವರು ಒಳಗೆ ನಡೆದರು. ಚೆನ್ನಿಗರಾಯನೊಡನೆ ಬಂದ ಕುದುರೆ ಸವಾರರು ಒಳಗಿನಿಂದ ಬಾಗಿಲು ಮುಚ್ಚಿ ಸಿವಲಿಂಗನನ್ನು ಕೇಳಿದರು: ‘ಹುಟ್ಟಿದ ವರ್ಷದ ಲೆಕ್ಕ ತರುಸ್ತೀನಿ ಅಂತ ಐವತ್ತು ರೂಪಾಯಿ ತಿಂದಿದೀಯಾ. ನಮಗೆ ಕಂಪ್ಲೇಂಟು ಬಂದಿದೆ. ನಿನ್ನ ಫಾಶಿ ಹಾಕಿಸ್‌ಬಿಡ್ತೀವಿ ಬದ್ಮಾಷ ಬೋಳೀಮಗನೆ.’ +ಚೆನ್ನಿಗರಾಯ, ‘ಅ ಅ ಅದ್ ಹೋಕ್ಕಳ್ಳಿ ಬಿಡಿ’ ಎನ್ನುತ್ತಿದ್ದಂತೆಯೇ ಸವಾರರು ಅವನ ಕಡೆಗೆ ತಿರುಗಿ-‘ನೀನು ಬಾಯಿ ಮುಚ್ಚು’ಎಂದರು. ಅವನೂ ಶಿವಮ್ಮನಂತೆ ಕೈಗಳನ್ನು ಬಾಯಿಯ ಮೇಲೆ ಇಟ್ಟುಕೊಂಡ. ಅವರು ಸಿವಲಿಂಗನ ಕಡೆ ತಿರುಗಿ, ‘ಇದು ರಾಜಾ ಸರ್ಕಾರ. ದಿವಾನ್ ಮಿರ್ಜಾಸಾಹೇಬರ ಹುಕುಂ. ಗಾಂಚಾಲೀ ಚಲ್ತಾನೈ. ವಾರೇ ಬಾಂಚೋತ್ ಭಾಡ್‌ಕಾ ಭೋಸೂಡೀಮಗನೆ.’ ಸರ್ಕಾರದ ಹೆಸರು ಹೇಳಿ ತಿಂದಿದೀಯಾ. ನಿನ್ನ ಗಲ್ಲಿಗೇರಿಸ್ಬೇಕು ಅಂತ ಯುರೋಪಿಯನ್ ಇಂಗ್ಲೀಷ್ ದೊರೆಗಳಿಂದ ಆರ್ಡರ್ ಬಂದಿದೆ. ಇಸ್ಕೋ ಹಾಥ್ ಬೇಡಿ ಲಗಾವೋ’ ಎನ್ನುತ್ತಿದ್ದಂತೆ ಸಿವಲಿಂಗ ಥರಥರ ನಡುಗಿ ಹೋದ. ಅವನ ಹೆಂಡತಿ ಹಾಗೆಯೇ ನೆಲಕ್ಕೆ ಕುಸಿದು ಇವರಿಗೆ ಅಡ್ಡಬಿದ್ದಳು. ‘ಆ ಐವತ್ತು ಬೆಳ್ಳಿಯ ರೂಪಾಯ್ ತಗಂಡ್ ಬಾ’-ಎಂದು ಸವಾರರು ಹೇಳಿದರು. ಸಿವಲಿಂಗ-‘ಕ ಕ ಕಬ್ಬುಣದ್ ಪೆಟ್ಟಿಗೇಲೈತೆ, ಬಾ ಬಾ ಬಾ ಬಾಕುಲ್ ತಿಗ್‌ದು ಕೊಡೇ’ ಎಂದ.ಅವಳು ಹಾಸಿಗೆಯ ಕೆಳಗಿದ್ದ ಬೀಗದ ಕೈಯಿಂದ ಪೆಟ್ಟಿಗೆಯ ಬೀಗ ತೆಗೆದು ಐವತ್ತು ಬೆಳ್ಳಿಯ ರೂಪಾಯಿಗಳನ್ನು ಎಣಿಸಿ ತಂದು ಒಪ್ಪಿಸಿದಳು. ‘ಇನ್ಸ್‌ಪೆಕ್ಟರ್, ಈ ದುಡ್ದು ತಗಂಡು ಜೇಬಿನಲ್ಲಿ ಇಟ್ಕಳಿ. ನಾಳೆ ತ್ರೆಜರಿಗೆ ಕಟಬೇಕು’ ಎಂದು ಸವಾರರು ಹೇಳಿದ ತಕ್ಷಣ ದಫೇದಾರರು ಅದನ್ನು ಜೇಬಿಗೆ ಸೇರಿಸಿದರು. +ಸವಾರರು ಮುಂದಿನ ಪಾಯಿಂಟಿಗೆ ಬಂದರು: ‘ಬರಾವರ್ದಾರನಿಗೆ ಶ್ಯಾನುಭೋಗ್‌ಕೆ ಕೊಡಲ್ಲ ಅಂತ ತರ್ಲೆ ಮಾಡ್ತೀಯಾ ಯಾಕೋ ಬೇಕೂಫ್ ಬೋಸುಡಿ ಬಾನ್‌ಚೋತ್ ಭಾಡ್‌ಕೋವ್ ಬೋಳೀಮಗನೆ?’ +‘ಇ ಇ ಇಲ್ಲ……’ ಎಂದು ಸಿವಲಿಂಗ ತೊದಲಿದ. +‘ಅವನ ಕೈ ಬಿಡಿ’-ಸವಾರರು ಹುಕುಂ ಮಾಡಿದರು. ಪೋಲೀಸರು ಅವನ ತೋಳುಗಳನ್ನು ಬಿಟ್ಟಮೇಲೆ, ‘ಒಂದು ಗಜ ಕಾಗದ, ದೌತಿ ಸ್ಟೀಲು ತಗಂಡು ಕೂತುಕೊ’ ಎಂದರು. +ಸಿವಲಿಂಗ ಹಾಗೆಯೇ ಮಾಡಿದ ಮೇಲೆ ಒಂದು ಸಲ ಹುಲಿಯಂತೆ ಹೂಂಕರಿಸಿ ಹೇಳಿದರು: ‘ನಾನು ಹೇಳ್ದ ಹಾಗೆ ಬರೀಬೇಕು, ಬಾನ್‌ಚೋತ್. ಹೂಂ. ಸನ್ ಸಾವಿರದ ಒಂಬೈನೂರ……ರಲ್ಲು ಮೈಸೂರು ಸಂಸ್ಥಾನದ ಮಹಾರಾಜ ಸರ್ಕಾರದ ತುಮಕೂರು ಜಿಲ್ಲಾ ತಿಪಟೂರು ತಾಲ್ಕು ಕಂನ ಕೆರೆ ಹೋಬಳಿ ರಾಮಸಂದ್ರ ಗ್ರಾಮದ ಬರಾವರ್ದಾರ್ ಫೌತಿ ರಾಮಣ್ಣನವರ ಹಿರೀಮಗ ಹಕ್ಕುದಾರ ಶ್ಯಾನುಭೋಗ್ ಚೆನ್ನಿಗರಾಯರಿಗೆ ಸದರಿ ಜಿಲ್ಲಾ ಸದರಿ ಹೋಬಳಿ ಸದರಿ ಗ್ರಾಮದ, ಬದಲಿ ಶ್ಯಾನುಭೋಗನಾಗಿದ್ದ ಸಿವಲಿಂಗೇಗೌಡನಾದ ನಾನು ಬರೆದುಕೊಟ್ಟ ಛಾರ್ಜುಪಟ್ಟಿ ಏನೆಂದರೆ- ಈ ತಹಲ್‌ವರೆವಿಗೆ ನೋದಿದ ಫಿರ್ಕಾ ಶ್ಯಾನುಭೋಗಿಕೆ ನಿಮ್ಮದೇ ಆಗಿದ್ದು ನೀವು ಮೈನರ್ ಆಗಿದ್ದುದರಿಂದ ನಾನು ನೋಡುತ್ತಿದ್ದು ಈಗ ನೀವು ಮೆಜಾರ್ಟಿಗೆ ಬಂದು ಒಂದೂವರೆ ವರ್ಷವಾಗಿರುವುದರಿಂದ ಸದರಿ ಛಾರ್ಜನ್ನು ಈ ದಿನ ನಿಮಗೆ ಕೊಟ್ಟು, ದಾಖಲು ಲೆಕ್ಕಪತ್ರವೆಲ್ಲ ತಮಾಮ್ ನೀವು ಜಡ್ತಿಮಾಡಿಕೊಂಡ ಮೇರೆಗೆ ವಹಿಸಿಕೊಟ್ಟಿದ್ದೇನೆ ಎಂಬುದರಲ್ಲಿ ನನ್ನ ತಕರಾರು ಏನೂ ಇಲ್ಲ. ಅಷ್ಟೇ ಅಲ್ಲದೆ ನನಗೆ ಸಖತ್ ಖಾಯಿಲಾ ಆಗಿ ಸರ್ಕಾರಿಕೆಲಸ ನೋಡೋಕೆ ಸಾಧ್ಯವಿಲ್ಲವಾಗಿರುವುದರಿಂದ ಸರ್ಕಾರದಿಂದ ಮೇಲಿನ ಹುಕುಂ ಬರುವ ಮೊದಲೇ ನಿಮಗೆ ಎಲ್ಲಾ ವಹಿಸಿದೀನಿ. ನೀವು ಎಲ್ಲಾನೂ ನೋಡಿಕೊಳ್ಳೂದು-ಎಂದು ಬರೆದುಕೊಟ್ಟ ಛಾರ್ಜು ಪಟ್ಟಿ ವಿವರಗಳು: ಒಂದನೇ ನಂಬರ್ ಖಾತೇವಾರ್ ಪತ್ರಿಕೆ, ಎರಡನೇ ನಂಬರ್ ಬಂಜರ್‌ತಖ್ತೆ ಇತ್ಯಾದಿ ಬಾರಾ ನಮೂನೆ ಲೆಕ್ಕಪತ್ರಗಳು. ಬದಲಿ ಶ್ಯಾನುಭೋಗ್ ಸಿವಲಿಂಗೇಗೌಡನ ರುಜು.’ +ಛಾರ್ಜುಪಟ್ಟಿಯನ್ನು ತಮ್ಮ ಕೈಗೆ ತೆಗೆದುಕೊಂಡಮೇಲೆ ಅವರು ಹೇಳಿದರು: ‘ಲೆಕ್ಕದ ಪುಸ್ತಕ ಎಲ್ಲ ತಂದಿಡು.’ ಸಿವಲಿಂಗ ಪುಸ್ತಕಗಳ ಗಂಟನ್ನೆಲ್ಲ ತಂದು ಮುಂದೆ ಇಟ್ಟಮೇಲೆ ಹೇಳಿದರು: ‘ಇವುನ್ನ ನೀನು ನಿನ್ನ ಹೆಂಡತಿ ಹೊತ್ಕಂಡ್‌ಬಂದು ಇವರ ಮನೆಗೆ ಇಡಿ.’ +ಸಿವಲಿಂಗ, ಅವನ ಹೆಂಡತಿ, ಅಷ್ಟರಲ್ಲಿ ಎದ್ದು ಹೆದರಿ ನಡುಗುತ್ತಾ ನಿಂತಿದ್ದ ಅವನ ಮಕ್ಕಳು, ಎಲ್ಲರೂ ಲೆಕ್ಕದ ಕಟ್ಟುಗಳನ್ನು ಹೊತ್ತುತಂದು ಚೆನ್ನಿಗರಾಯನ ಮನೆಗೆ ಹಾಕಿದಮೇಲೆ-‘ಬಾಲ ಅಳ್ಳಾಡಿಸಿದ್ರೆ ನಿಕಾಲ್ ಮಾಡಿಬಿಡುತ್ತೇನೆ. ಎರಡೂ ಮುಚ್ಕಂಡು ಮನೆಗೆ ಹೋಗಿ ಮಲಕ್ಕೊ. ಪೋಲೀಸಿನೋರು ಇಲ್ಲೇ ಗಸ್ತು ಹೊಡೀತಾರೆ’ ಎಂದರು. +ಸಿವಲಿಂಗ ಹೆಂಡ್ತಿ ಮಕ್ಕಳೊಡನೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ. ಅನಿರೀಕ್ಷಿತವಾಗಿ ಹೀಗೆ ಸ್ವಪ್ನದಲ್ಲಿ ನಡೆದುಹೋದಂತೆ ಇಷ್ಟೆಲ್ಲ ಆದುದು ಅವನನ್ನು ನಡುಗಿಸಿಬಿಟ್ಟಿತ್ತು. ಆದರೆ ತಮಗೆ ಹೆಚ್ಚಿಗೆ ಯಾವ ತೊಂದರೆಯೂ ಆಗಲಿಲ್ಲವೆಂದು ಅವನ ಹೆಂಡತಿ ಸಮಾಧಾನಪಡಿಸಿದಳು. +ಪೋಲೀಸಿನವರಿಬ್ಬರೂ ಮಲಗಿ ನಿದ್ದೆ ಮಾಡಿದರು. ಗಂಗಮ್ಮ, ಅಪ್ಪಣ್ಣಯ್ಯ, ಚೆನ್ನಿಗರಾಯರು ಅಡಿಗೆಯ ಮನೆಯಲ್ಲಿ ಮಲಗಿದರು. ಚೆನ್ನಿಗರಾಯನಿಗೆ ನಿದ್ದೆ ಬರಲಿಲ್ಲ. ಏನೋ ಒಂದು ರೀತಿಯ ಗಾಬರಿಯಿಂದ ಜ್ವರ ಬಂದಂತೆ ಆಗಿತ್ತು. ಕಂಠೀಜೋಯಿಸರು ರಾತ್ರಿ ಮಲಗಿದರೋ ಇಲ್ಲವೋ ಯಾರೂ ನೋಡಲಿಲ್ಲ. ಅವರಿಗೆ ಹಸಿವಾಗಿದ್ದಿರಬಹುದು. ಬೆಳಿಗ್ಗೆ ಏಳುವ ವೇಳೆಗೆ ಅವರು, ರಾತ್ರಿ ಮಾಟದ ಚೌಡಿಯ ಹತ್ತಿರದಿಂದ ತಂದ ಬಾಳೆ ಹಣ್ಣಿನಲ್ಲಿ ಎರಡು ಚಿಪ್ಪನ್ನು ಸುಲಿದು ತಿಂದು ಸಿಪ್ಪೆಯನ್ನು ಕಂಬದ ಹತ್ತಿರ ಗುಡ್ಡೆಹಾಕಿದ್ದರು. ಬೆಳಿಗ್ಗೆ ಏಳು ಗಂಟೆಗೆ ಅಪ್ಪಣ್ಣಯ್ಯನನ್ನು ಕೂಗಿ, ಕುಳವಾಡಿಯನ್ನು ಕರೆದುಕೊಂಡು ಬರುವಂತೆ ಹೇಳಿದರು. ಅವನು ಬಂದ ತಕ್ಷಣ ಹುಕುಂ ಮಾಡಿದರು: ‘ತಮ್ಮಟಿ ತಗಂಡು ಊರಿನಲ್ಲೆಲ್ಲ, ಶ್ಯಾನುಭೋಗಿಕೇನ ಹಕ್ಕುದಾರ್ ಚೆನ್ನಿಗರಾಯನಿಗೆ ಕೊಟ್ಟೈತೆ. ಯಲ್ಲಾ ಅವರು ಹೇಳ್ದಂಗೆ ಕೇಳ್ಬೇಕು. ಇಲ್ದೆ ಇದ್ರೆ ತಕ್ಸೀರ್ ಆಗುತ್ತೆ ಅಂತ ಡಂಗುರ ಹಾಕು. ಪೋಲೀಸ್ನೋರು ಒಳಕ್ಕೆ ಮಲಕ್ಕಂಡಿದಾರೆ. ಅವರ ಟೋಪಿ ಕಂಬದ ತಾವ ಐತೆ, ಕಾಣ್ತದಾ?’ +ಕುಳವಾಡಿ ಬಾಗಿ ಕೈಮುಗಿದು ಹೊರಟು ಹೋದ. ಚೆನ್ನಿಗರಾಯರು ಶ್ಯಾನುಭೋಗರಾದುದು ಅರ್ಧ ಗಂಟೆಯಲ್ಲಿಯೇ ಊರಿನಲ್ಲೆಲ್ಲಾ ಡಂಗುರವಾಯಿತು. ಅದೇ ಫಿರ್ಕದ ಇತರ ಊರುಗಳಾದ ಕುರುಬರಹಳ್ಳಿ, ಲಿಂಗಾಪುರಗಳಿಗೂ ಸಾರಲು ಕುಳುವಾಡಿ ಹೋದ. +ಹನ್ನೊಂದು ಗಂಟೆಗೆ ಎದ್ದಮೇಲೆ ಪೋಲೀಸಿನವರಿಗೆ ಬಿಸಿನೀರಿನ ಸ್ನಾನ, ಹಾಲು ಬೆಲ್ಲದ ಕಾಫಿಗಳಾಗಿ ಊಟವೂ ಆಯಿತು. ಕಲ್ಲೇಶನ ಸಂಗಡ ಬಂದಿದ್ದ ದಫೇದಾರರಿಗೆ ಇಪ್ಪತ್ತೈದು ರೂಪಾಯಿ ಬಿಟ್ಟು ಉಳಿದ ಇಪ್ಪತ್ತೈದನ್ನು ಕೈಲಿ ತೆಗೆದುಕೊಂಡು ಕಂಠೀಜೋಯಿಸರು ಕುದುರೆ ಏರಿ, ಶೇಕ್‌ದಾರರನ್ನು ಕಂಡು ಶ್ಯಾನುಭೋಗಿಕೆ ಬದಲಿಯನ್ನು ಕ್ರಮಪಡಿಸಲು ಕಂಬನಕೆರೆಗೆ ಹೋದರು. ಊಟವಾದಮೇಲೆ ಕಲ್ಲೇಶ ಮತ್ತು ದಫೇದಾರರು ಶ್ರವಣಬೆಳಗೊಳಕ್ಕೆ ಪ್ರಯಾಣ ಮಾಡಿದರು. +ರಾತ್ರಿ ಹತ್ತುಗಂಟೆಯ ಹೊತ್ತಿಗೆ ಕಂಠೀಜೋಯಿಸರು ಕುದುರೆಯಮೇಲೆ ಹಿಂತಿರುಗಿ ಬಂದು ನೋಡುತ್ತಾರೆ: ಹೊಸ ಶ್ಯಾನುಭೋಗ ಚೆನ್ನಿಗರಾಯರಿಗೆ ಕೆಂಡಕ್ಕಿಂತ ಬಿಸಿಯಾಗಿ ಜ್ವರ ಬಂದಿದೆ. ಗಂಗಮ್ಮ ಮಗನ ತಲೆಗೆ ಪಟ್ಟು ಹಾಕಿ ಬಿಗಿಯಾಗಿ ಒಂದು ಅರಿವೆ ಬಳಲು ಕಟ್ಟಿದ್ದಾಳೆ. ಚೆನ್ನಿಗರಾಯರು ಒಂದೇ ಸಮನೆ ತೊದಲು ಮಾತಿನಲ್ಲಿ ಬಡಬಡಿಸುತ್ತಿದ್ದಾರೆ. ಆಯ್ಯಯ್ಯಯ್ಯೋ, ನಾನೇನು ಒದೀಲಿಲ್ಲ. ನನ್ನ ತಪ್ಪಾಯ್ತು ಕಣವ್ವಾ…..ಎಂಬ ಬಡಬಡಿಕೆ ಅವರಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ಒ‌ಅಲ್ಗೆ ಬಂದು ನೋಡಿದ ತಕ್ಷಣ ಕಂಠೀಜೋಯಿಸರಿಗೆ ಅದರ ಕಾರಣ ತಿಳಿಯಿತು. ಒಂದು ಓಲೆಗರಿ ತರಿಸಿ ಅದರ ಮೇಲೆ ಮಂಡಲ ಬರೆದು ಸುರುಳಿ ಮಾಡಿ, ಅರಿಶಿನದ ನೂಲು ಸುತ್ತಿ ಹೊಸೆದ ದಾರ ಬಿಗಿದು, ಒಂದು ತೆಂಗಿನಕಾಯಿ ಒಡೆದು ಅದರ ನೀರನ್ನು ಮೂರು ಸಲ ನೀವಾಳಿಸಿ ಫಳ್ ಎನ್ನುವಂತೆ ರೋಗಿಯ ಮುಖಕ್ಕೆ ಎರಚಿ, ಓಲೆಗರಿಯ ತಾಯತವನ್ನು ಅವರ ಕೊರಳಿಗೆ ಕಟ್ಟಿ ಈಚಲು ಪೊರಕೆಯಿಂದ ಮೂರು ಸುತ್ತು ನೀವಾಳಿಸಿ ತಲೆಯ ಮೇಲೆ ನಾಲ್ಕು ಬಡಿದರು. ಗಂಗಮ್ಮನಿಗೆ ಹೇಳಿ ಲವಂಗ ಮೆಣಸು ಶುಂಠಿಗಳ ಕಷಾಯ ಕುದಿಸಿಸಿ, ಕುಡಿಸಿದರು. ಶ್ಯಾನುಭೋಗರು ತೆಪ್ಪಗೆ ಮಲಗಿ ನಿದ್ರೆ ಮಾಡಿದರು. +ನಾಳೆ ಬೆಳಿಗ್ಗೆ ಏಳುವ ವೇಳೆಗೆ ಜ್ವರ ಬಿಟ್ಟು ಹೋಗಿತ್ತು. +ಅಧ್ಯಾಯ ೩ +– ೧ – +ನಂಜಮ್ಮ ದೊಡ್ಡವಳಾಗಿ, ಪ್ರಸ್ತವಾಗಿ ಮನೆಗೆ ಬಂದಳು. ಶ್ಯಾನುಭೋಗ ಚೆನ್ನಿಗರಾಯರಿಗೆ ಹೆಂಡತಿಯ ಮೇಲೆ ಆಶೆ. ಅವಳನ್ನು ಆಳಬೇಕೆಂಬ ಹುಮ್ಮಸ್ಸು ಸಹ. ಹೆಂಡತಿಯನ್ನು ಆಳುವುದೆಂದರೇನು? ಆಗಾಗ್ಗೆ ಹೊಡೆಯುವುದು. ಆದರೆ ಅದು ಅವರಿಗೆ ಆಗುವ ಕೆಲಸವಲ್ಲ. ಗಾಂಚಾಲಿ ಮಾಡುವ ಒಂದು ಹಸು ಅಥವಾ ಹೋರಿಕರುವನ್ನು ಸಹ ಹೊಡೆದು ಅವರಿಗೆ ಅಭ್ಯಾಸವಿಲ್ಲ. ಆದುದರಿಂದ ನಾಲಿಗೆಯಿಂದಲೇ ಹೆಂಡತಿಯ ಮೇಲೆ ಅಧಿಕಾರ ತೋರಿಸುತ್ತಿದ್ದರು. ತಮಗೆ ಸರಾಗವಾಗಿ ಬರುತ್ತಿದ್ದ ಮುಂಡೇ ಎಂಬ ಮಾತಿಗೇ, ಬೋಳೀ, ಸೂಳೆ, ಹೊಲೆ, ಮಾದಿಗ, ಮೊದಲಾಗಿ ಹಲವು ವಿಶೇಷಣಗಳನ್ನು ಸೇರಿಸಿ ಅಂದು ಸುಮ್ಮನಾಗುತ್ತಿದ್ದರು. ಅದಕ್ಕಿಂತ ಹೆಚ್ಚು ಭಾಷಾಸಾಮರ್ಥ್ಯ ಅವರಿಗೆ ಇರಲಿಲ್ಲವೆಂದಲ್ಲ. ಎಷ್ಟಾದರೂ ಗಂಗಮ್ಮನ ಮಗ. ಆದರೆ ಹೆಚ್ಚು ಬೈದರೆ ಮಾವನವರಿಗೆ ತಿಳಿದೀತೆಂಬ ಭಯವು ಪ್ರಜ್ಞೆಯಲ್ಲಿ ಸದಾ ಇತ್ತು. +ಸೊಸೆಯನ್ನು ಆಳುವ ಆಶೆಯಾಗಲಿ, ಬೈಗುಳದ ಭಾಷೆಯಾಗಲಿ ಗಂಗಮ್ಮನಿಗೆ ಕಡಿಮೆ ಇಲ್ಲ. ಅವಳಿಗೂ ಬೀಗರನ್ನು ಕಂಡರೆ ಅಷ್ಟೇ ಭಯ. ಆದುದರಿಂದ ಬರೀ ಗುರ್ ಎನ್ನುವುದರಲ್ಲಿಯೇ ತೃಪ್ತಳಾಗುತ್ತಿದ್ದಳು. +ಶ್ಯಾನುಭೋಗಿಕೆ ಕೈಗೆ ಬಂದ ಮೊದಲ ವರ್ಷ ಚೆನ್ನಿಗರಾಯರು ತಾವೇ ಲೆಕ್ಕಗಳನ್ನು ಬರೆದು ಜಮಾಬಂದಿಗೆ ತೆಗೆದುಕೊಂಡು ಹೋದರು. ಅದು ಬರೀ ತಾಲ್ಲೂಕು ಜಮಾಬಂದಿ ಹುಜೂರು ಜಮಾಬಂದಿಯೂ ಅಲ್ಲ. ಮಾಮೂಲು ಸಲ್ಲಿಕೆಯಾಗಿದ್ದರೂ ಸಹ ಹೆಡ್‌ಗುಮಾಸ್ತೆಯು ಅವರ ಲೆಕ್ಕದಲ್ಲಿ ನೂರ ಒಂದು ತಪ್ಪುಗಳನ್ನು ತೆಗೆದು ತೋರಿಸಿದ. ಸರಿ, ಅವರ ಜಮಾಬಂದಿಯಾಗಲಿಲ್ಲ. ‘ಥೂ ಇವರವ್ವನ…..’ಎಂದು ಅವರು ಮನಸ್ಸಿನಲ್ಲಿ ಅಂದುಕೊಂಡರೇ ವಿನಾ ಬಾಯಿಬಿಟ್ಟು ಯಾರನ್ನೂ ಬೈಯ್ಯುವಂತಿರಲಿಲ್ಲ. ಅವರ ಜಮಾಬಂದಿ ಮಾಡುವುದಿಲ್ಲವೆಂದೂ ಇನ್ನು ಎರಡು ತಿಂಗಳಿನೊಳಗೇ ಅವರೇ ತಿಪಟೂರಿಗೆ ಬಂದು ಸಾಹೇಬರ ರುಜು ಮಾಡಿಸಿಕೊಳ್ಳಬೇಕೆಂದೂ ಹೆಡ್‌ಗುಮಾಸ್ತೆಯೇ ಹೇಳಿದ. ಅವರಿಗೆ ಸಾಹೇಬರ ಮುಂದೆ ನಿಂತು ಬೈಸಿಕೊಳ್ಳುವ ಅನುಭವವಾಗಲಿಲ್ಲ. +ಅದೇ ಜಮಾಬಂದಿಗೆ ಬಂದಿದ್ದ ತಿಮ್ಲಾಪುರದ ಶ್ಯಾನುಭೋಗ ದ್ಯಾವರಸಯ್ಯನವರು ತಪ್ಪಿಲ್ಲದಂತೆ ಲೆಕ್ಕ ಬರೆಯುವವರೆಂದು ಹೆಸರಾಗಿದ್ದರು. ಶ್ಯಾನುಭೋಗಿಕೆಯ ವಿನಾ ಅವರಿಗೆ ಬೇರೆ ಜೀವನೋಪಾಯ ಇರಲಿಲ್ಲ. ಶ್ಯಾನುಭೋಗಿಕೆ ಎಂಬುದು ಊಟಕ್ಕೆ ರುಚಿ ಕೊಡುವ ಉಪ್ಪಿನಕಾಯಿಯೇ ಹೊರತು ಅದೊಂದರಿಂದಲೇ ಹೊಟ್ಟೆ ತುಂಬುವುದಿಲ್ಲವೆಂದು ಅವರೇ ಹೇಳುತ್ತಿದ್ದರು. ಚೆನ್ನಿಗರಾಯರು ದ್ಯಾವರಸಯ್ಯನವರ ಮರೆಹೊಕ್ಕರು. ಇದೊಂದೇ ಅಲ್ಲದೆ ಎಲ್ಲ ಲೆಕ್ಕವನ್ನೂ ಬರದುಕೊಡುವುದಾಗಿಯೂ, ಒಟ್ಟು ವರ್ಷಕ್ಕೆ ಐವತ್ತು ರೂಪಾಯಿ ಸಂಭಾವನೆ ಕೊಡಬೇಕೆಂದೂ ಅವರು ಕೇಳಿದರು. ಚೆನ್ನಿಗರಾಯರ ಮೂರು ಹಳ್ಳಿಯ ಫಿರ್ಕಾದ ಪೋಟಿಕೆ ನೂರಾ ಇಪ್ಪತ್ತೆರಡು ರೂಪಾಯಿ ಏಳಾಣ ಹನ್ನೊಂದು ಕಾಸು. ಅದರಲ್ಲಿ ಹಸುರು ನೋಟಿನ ಮೇಲಿನದು ಕಾಗದ ಶಾಯಿಗಳಿಗೆ ಹೋಗುತ್ತೆ. ಸಾಲಾಖೈರಿನಲ್ಲಿ ಖರ್ಚಿಗೆ ಪೋಟಿಕೆ ಹಾಕಿಸುವಾಗ ಶಿರಸ್ತೇದಾರರಿಗೆ ಹತ್ತು (ಅದರಲ್ಲಿ ಅಮಲ್ದಾರರಿಗೆ ಆರು, ಶಿರಸ್ತೇದಾರರಿಗೆ ನಾಲ್ಕು ಪಾಲಂತೆ), ಹೆಡ್‌ಗುಮಾಸ್ತರಿಗೆ ಎರಡು, ಹೋಬಳಿ ಗುಮಾಸ್ತರಿಗೆ ಎರಡು, ನಗದಿಗೆ ಒಂದು, ಜವಾನರಿಗೆ ತಲಾ ಎಂಟಾಣೆ: ಜುಮ್ಲಾ, ಹದಿನೇಳು ಹದಿನೆಂಟು ರೂಪಾಯಿ ಖರ್ಚೇ ಆಗುತ್ತೆ. ಅಲ್ಲದೆ ತಾಲ್ಲೂಕಿಗೆ ಬಂದಾಗ ಊಟ ತಿಂಡಿ, ಜಮಾಬಂದಿಯ ಖರ್ಚು. ಇಷ್ಟೆಲ್ಲ ಆದಮೇಲೆ ಚೆನ್ನಿಗರಾಯ ಲೆಕ್ಕ ಬರೆಸಲು ಐವತ್ತು ರೂಪಾಯಿ ಕೊಟ್ಟರೆ ಉಳಿಯುವುದೇನು? ವಸೂಲಿ ಮಾಡುವಾಗ ಮಾತ್ರ ಹತ್ತು ರೂಪಾಯಿಗಿಂತ ಮೇಲೆ ಕಂದಾಯ ಕೊಡುವ ರೈತರು ಒಂದು ರೂಪಾಯಿ, ಅದಕ್ಕೆ ಕಡಿಮೆಯವರು ಎಂಟಾಣಿ, ಎರಡು ರೂಪಾಯಿ ಕಂದಾಯದವರು ನಾಲ್ಕಾಣೆ ಮಸಿಕಾಣಿಕೆಯನ್ನು ಕೊಡುವುದೇನೋ ಇತ್ತು. ಆದರೆ ರಾಮಸಂದ್ರದ ಮಸಿಕಾಣಿಕೆಯನ್ನು ಪಟೇಲನೇ ತಿಂದು ಬಿಡುತ್ತಿದ್ದ. ಲಿಂಗಾಪುರದಿಂದಲೂ ಏನೂ ಬರುತ್ತಿರಲಿಲ್ಲ. ಕುರುಬರಹಳ್ಳಿಯದು ಮಾತ್ರ ಒಟ್ಟು ನಲವತ್ತು ರೂಪಾಯಿಯಷ್ಟು ಸಿಕ್ಕುತ್ತಿತ್ತು. ಇನ್ನು ಮೇಲು ಸಂಪಾದನೆ ಏನಿದರೂ ಆಯಾ ಸ್ಯಾನುಭೋಗರ ಶಕ್ತ್ಯಾನುಸಾರ. ಪಾಲುಪಟ್ಟಿ, ಖರೀದಿ, ಆಧಾರ, ತಕರಾರು ತಖ್ತೆ ದರಖಾಸ್ತು ಮೊದಲಾದವುಗಳಲ್ಲಿಯೇ ಸಂಪಾದನೆಯಾಗಬೇಕು. ಖಾತೆ ಖಿರ್ದಿ ಲೆಕ್ಕಗಳನ್ನೇ ನಿಭಾಯಿಸದ ಚೆನ್ನಿಗರಾಯರು ರಿಜಿಷ್ಟ್ರಿ ಕಾಗದಗಳನ್ನು ಎಷ್ಟು ಚೊಕ್ಕವಾಗಿ ಬರೆಯಬೇಡ! ಅವರಿಗೆ ಆ ಸಂಪಾದನೆಯೂ ಇಲ್ಲ. +ತಿಮ್ಲಾಪುರದ ದ್ಯಾವರಸಯ್ಯನವರು ರಾಮಸಂದ್ರಕ್ಕೆ ಬಂದು ಹದಿನೈದು ದಿನ ಬಿಡಾರ ಹಾಕಿದರು. ಅವರ ಊಟ ತಿಂಡಿ ಗಂಗಮ್ಮ ನಂಜಮ್ಮನವರು ನೋಡಿಕೊಂಡರು. ಉಪಚಾರ ಚೆನ್ನಿಗರಾಯರೇ ಮಾಡಿದರು. ಲೆಕ್ಕ ‘ಕಂಪ್ಲೀಟ್’ ಆಗಿ ಇವರನ್ನೂ ಸಂಗಡ ಕರೆದುಕೊಂಡು ಹೋಗಿ ಹೆಡ್‌ಗುಮಾಸ್ತೆಗೆ ಎರಡು ಶಿರಸ್ತೇದಾರರಿಗೆ ಐದು ರೂಪಾಯಿ ಮರ್ಯಾದೆ ಮಾಡಿಸಿ ದ್ಯಾವರಸಯ್ಯನವರೇ ಜಮಾಬಂದಿ ರುಜು ಮಾಡಿಸಿಸಿಕೊಟ್ಟರು. ಕೋಟು ಪೇಟ ಕಟ್ಟಿ, ಮೇಲೆ ಉತ್ತರೀಯ ಹೊದೆದು ಚೆನ್ನಿಗರಾಯರು ತಾಲ್ಲೂಕು ಕಛೇರಿಗೆ ಹೋಗಿ ಬಂದರು. ಸಾಹೇಬರು ರುಜುಮಾಡುವಾಗ ಇವರು ಕೈಮುಗಿದುಕೊಂಡು ನಿಂತಿದ್ದರೂ ಅದೃಷ್ಟಕ್ಕೆ ಅವರು ಇವರನ್ನು ಏನೂ ಕೇಳಲಿಲ್ಲ. ಹೆಡ್‌ಗುಮಾಸ್ತೆ ಹೇಳಿದ ಕಡೆಯಲ್ಲಿ ರುಜು ಎಳೆದರು. +ತಿಪಟೂರಿನಿಂದ ಗಾಡಿಯಲ್ಲಿ ಮೊದಲು ತಿಮ್ಲಾಪುರಕ್ಕೆ ಬಂದು ದ್ಯಾವರಸಯ್ಯನವರನ್ನು ಇಳಿಸಿ ಅಲ್ಲಿಂದ ಊರಿಗೆ ಬಂದ ಮದ್ಯಾಹ್ನವೇ ಚೆನ್ನಿಗರಾಯರು ಹೆಂಡತಿಯನ್ನು ಕರೆದರು: ‘ಲೇ ಮುಂಡೇ, ಜಮಾಬಂದಿ ಮಾಡ್‌ಕಂಡ್ ಬಂದು ನಂಗೆ ಮೈಯೆಲ್ಲಾ ನೋಯುತ್ತೆ. ಹರಳೆಣ್ಣೆ ತಗಂಡ್ ಬಂದು ನನ್‌ನೆತ್ತಿಗೆ ಹಾಕಿ ಮೈ ಕೈ ನೀವು ಬಾ.’ +ನಂಜಮ್ಮ ಒಳ್ಳೆಯ ಎತ್ತರದ, ತುಂಬಿದ ಕೈಕಟ್ಟಿನ ಶಕ್ತಿವಂತ ಹುಡುಗಿ. ಮನೆಯ ಹಿತ್ತಿಲಿನ ರಾಟೆ ಬಾವಿಯಲ್ಲಿ ಸೇದಿ ಹಂಡೆಗೆ ಹೆಡೆದಿಬ್ಬಿಯ ಉರಿ ಹಾಕಿ ನೀರು ಕಾಯಿಸಿದ್ದೂ ಕಾಯಿಸಿದ್ದೇ; ಪತಿದೇವರ ತಲೆಗೆ ತಿಕ್ಕಿ, ತಟ್ಟಿ ತಟ್ಟಿ ಮಾಡಿ, ಬೆನ್ನು ತೋಳು ಕಾಲು ಪಾದಗಳಿಗೆ ಎಣ್ಣೆ ತಿಕ್ಕಿ, ನೆನೆಸಿ, ಬಿಸಿಬಿಸಿ ನೀರು ಹಾಕಿ ನುಣ್ಣಗೆ ತಿರುವಿದ ಸೀಗೆಯಿಂದ ತಲೆ ಮೈ ಕೈಗಳನ್ನು ಉಜ್ಜಿ, ಅವರು ಮೈ ಒರೆಸಿಕೊಂಡ ಮೇಲೆ ಚೌಕ ಕಟ್ಟಿ, ಹಾಸಿಗೆ ಹಾಕಿ ಅವರನ್ನು ಮಲಗಿಸಿ, ದುಪ್ಪಟಿ ಕಂಬಳಿಗಳನ್ನು ಜೋಡಿಸಿ ಹೊದೆಸಿ ಪಕ್ಕದಲ್ಲಿ ಕೂತು, ಅವರು ಸಾಕು ಎನ್ನುವತನಕ ಮೈ ಕೈಕಾಲುಗಳನ್ನು ಹದವಾಗಿ ಹಿಸುಕಿದಳು. +– ೨ – +ಮಾಡಿದ್ದರೆ ಅಪ್ಪಣ್ಣಯ್ಯನಿಗೂ ಈಗ ಎರಡು ವರ್ಷಕ್ಕೆ ಮೊದಲೇ ಮದುವೆ ಮಾಡಬೇಕಾಗಿತ್ತು. ಆದರೆ ಅದೇ ತಾನೆ ಚೆನ್ನಿಗರಾಯರ ಮದುವೆಯಾಗಿತ್ತು. ಆಮೇಲೆ ಅವರು ಶ್ಯಾನುಭೋಗರಾಗುವ, ಆದಮೇಲೆ ಅದನ್ನು ನಿಭಾಯಿಸುವ ಕೆಲಸ ಕಾರ್ಯಗಳೇ ಹಿಡಿದವು. ಆದುದರಿಂದ ತಡವಾಗಿ, ವಿವಾಹಯೋಗವು ಈಗ ಒದಗಿಬಂತು. +ಅಪ್ಪಣ್ಣಯ್ಯ ಚೆನ್ನಕೇಶವಯ್ಯನವರ ಮಠಕ್ಕೆ ಎರಡು ವರ್ಷ ಹೋಗಿದ್ದನೇನೋ ನಿಜ. ಆದರೆ ವಿದ್ಯೆ ಅವನ ಹಣೆಯಲ್ಲಿ ಬರೆದಿಲ್ಲವೆಂದು ಓಚಯ್ಯನವರೇ ಹೇಳಿದರಲ್ಲ., ಅದು ಅವನ ತಪ್ಪು ಹೇಗಾಗಬೇಕು? ಮರಳಿನಲ್ಲಿ ತಿದ್ದಿದ ಅವನ ಬೆರಳ ಉಂಗುರ ಸವೆಯಿತು. ಆದರೆ ಅಕ್ಷರಗಳು ಮರಳಿನಲ್ಲಿಯೇ ಕಲಸಿಹೋದವು. ಅದಕ್ಕೆ ಯಾರಿಗೂ ವ್ಯಸನವಿಲ್ಲ. ಅವನನ್ನು ಮಠಕ್ಕೆ ಕಳಿಸುತ್ತಿದ್ದುದಾದರೂ ಯಾಕೆ, ಕಬ್ಬಿನ ಗದ್ದೆಗೆ ಹೋಗಿ ಬೀಡಿ ಸೇದಿ ಮತ್ತೆ ಬೆಂಕಿ ಹೊತ್ತಿಸದೇ ಇರಲಿ ಎಂದು ತಾನೆ? +ಅವನಿಗೆ ಹೆಣ್ಣು ಕೊಟ್ಟವರು ಕಡೂರು ಸೀಮೆಯ ನುಗ್ಗೀಕೆರೆ ಗ್ರಾಮದ ಶ್ಯಾಮಭಟ್ಟರೆಂಬ ಪುರೋಹಿತರು. ಗಂಗಮ್ಮನ ತೌರಾದ ಜಾವಗಲ್ಲಿನ ಮೂಲಕ ಅವರಿಗೆ ಈ ಗಂಡಿನ ವಿಷಯ ತಿಳಿದು ಅವರೇ ಬಂದು ನೋಡಿ ಮದುವೆ ನಿಷ್ಕರ್ಷಿಸಿದರು. ಇರುವವಳು ಒಬ್ಬಳೇ ಮಗಳು. ಗಂಡು ಮಕ್ಕಳಿಲ್ಲ. ಮಡಿಹಿಡಿಯ ಜೊತೆಗೆ ಹುಡುಗಿಗೆ ಕಸೂತಿಯಲ್ಲಿ ಆಲದೆಲೆಯ ಕೃಷ್ಣನನ್ನು ಹಾಕುವುದು ಸಹ ಬರುತ್ತಿತ್ತು. ಎಂದರೆ ತುಂಬ ‘ನಾಗರಿಕತೆ’ಯ ಹುಡುಗಿಯೇ. ಆದರೆ ಅದನ್ನು ಶ್ಯಾಮಭಟ್ಟರು ಗಂಗಮ್ಮನಿಗೆ ಹೇಳಲಿಲ್ಲ. ಹೇಳಿದ್ದರೆ ಅವಳು ಅಂಥಹ ಥಳುಕಿನ ಹುಡುಗಿ ತಂದುಕೊಳ್ಳಲು ಒಪ್ಪುತ್ತಿರಲಿಲ್ಲ. +ಒಂದು ಸೇರು ತೂಕದ ಬೆಳ್ಳಿಯ ಪಂಚಪಾತ್ರೆಯಿಂದ ಹಿಡಿದು ಮಕುಟ, ಸಂಕಲಿಕೆ ಪಂಚೆ, ಜರಿಪೇಟ ಮೊದಲಾಗಿ ಎಲ್ಲವನ್ನೂ ಕೊಟ್ಟು ಮದುವೆಯನ್ನು ಚೆನ್ನಾಗಿಯೇ ಮಾಡಿದರು. ಗಂಡಿನ ಮಾತಾಪಿತರ ಸ್ಥಾನದಲ್ಲಿ ಅತ್ತಿಗೆ ಅಣ್ಣರಾದ ನಂಜಮ್ಮ ಚೆನ್ನಿಗರಾಯರು ನಿಂತು ಧಾರೆ ಎರೆಸಿಕೊಂಡರು. ಮದುವೆಯಾದ ಆರು ತಿಂಗಳಿಗೇ ಸಾತಮ್ಮ ಮೈನೆರೆದು ಹದಿನಾರು ದಿನಕ್ಕೆ ಪ್ರಸ್ತವಾಗಿ ಮನೆಗೆ ಬಂದಳು. +ಹೆಂಡತಿಯನ್ನು ಹೇಗೆ ಆಳಬೇಕೆಂಬುದು ಅಪ್ಪಣ್ಣಯ್ಯನಿಗೂ ಹೊಸತರಲ್ಲಿ ಸಮಸ್ಯೆಯೇ. ಅಣ್ಣನು ಅತ್ತಿಗೆಯನ್ನು ಆಳುವ ರೀತಿಯಲ್ಲಿಯೇ ತಾನು ತನ್ನ ಹೆಂಡತಿಯನ್ನು ಆಳಬೇಕೆಂದು ಮೊದಲೇ ಅವನು ಸಂಕಲ್ಪಿಸಿಕೊಂಡಿದ್ದ. ಅವಳು ಬಂದ ಬೆಳಿಗ್ಗೆಯೇ ಕೂಗಿ ಹೇಳಿದ: ‘ಲೇ ಮುಂಡೇ, ನಂಗ್ ಎಣ್ಣೆ ತಿಕ್ಕು ಬಾ ಇಲ್ಲಿ.’ +ಈ ಮಾತನ್ನು ಯಾರನ್ನು ಉದ್ದೇಶಿಸಿದುದೆಂಬುದು ಸಾತಮ್ಮನಿಗೆ ತಿಳಿಯಲಿಲ್ಲ. ಅವಳು ತನ್ನ ಪಾಡಿಗೆ ತಾನು ಕಸ ಗುಡಿಸುತ್ತಿದ್ದಳು. ‘ಲೇ, ನಿಂಗ್ ಕಣೆ ಹೇಳಿದ್ದು, ಸಾತಿ ಮುಂಡೆ. ಕೇಳ್ಲಿಲ್ವೇನೇ? -ಎಂದು ಗಂಡ ನುಡಿದಾಗ ದಿಕ್ಕು ತೋಚದವಳಂತೆ ಅವನ ಕಡೆಗೆ ನೋಡಿದಳು. ‘ಅದೇನ್ ಹಾಗ್ ನೋಡ್ತೀಯೇ ಕತ್ತೆ ಮುಂಡೆ, ಹೇಳಿದ್ ಕೇಳ್ಲಿಲ್ವೇನೆ’ -ಅವನು ಮತ್ತೆ ಅಂದ. ಸಾತುವಿಗೆ ಅಳು ಬಂದುಬಿಟ್ಟಿತು. ಗುಡಿಸುತ್ತಿದ್ದ ಪೊರಕೆಯನ್ನು ಅಲ್ಲಿಯೇ ಹಾಕಿ ಅತ್ತೆಯ ಹತ್ತಿರಕ್ಕೆ ಹೋಗಿ ನಿಂತು ಹೇಳಿದಳು: ನಿಮ್ ಮಗನ ಮಾತು ಕೇಳಿದಿರಾ ಅಮ್ಮ? ಹೆಂಡ್ತೀನ ಇಂಥಾ ಮಾತು ಆದೂದು ಯಾರು ಕಲಿಸಿಕೊಟ್ರು ಅವ್ರಿಗೆ?’ +ಸೊಸೆಯಾದವಳು ಇಷ್ಟು ಧೈರ್ಯ ವಹಿಸುತ್ತಾಳೆಂದು ಗಂಗಮ್ಮ ಕಲ್ಪಿಸಿಕೊಂಡೂ ಇರಲಿಲ್ಲ. ಹಿರಿಯ ಸೊಸೆ ನಂಜಮ್ಮನನ್ನು ಚೆನ್ನಿಗರಾಯ ಹೀಗೆಯೇ ಕರೆಯುವುದಿಲ್ಲವೇ? ಅವಳು ಒಂದು ಮಾತೂ ಆಡದೆ ಸುಮ್ಮನಿರುತ್ತಾಳೆ. ಆದರೆ ಈ ತಾಟಗಿತ್ತಿ ತನ್ನ ಎದುರಿಗೇ ಬಂದು ಹೀಗೆ ಕೇಳುವುದೆ? +‘ಗಂಡ, ಹೆಂಡ್ತೀನ ಇನ್ನೇನನ್‌ಬೇಕೆ ಚಿನ್ನಾಲಿ ಲೌಡಿ?’ +‘ನಾನ್ಯಾಕೆ ಲೌಡಿಯಾದೇನು? ಹಾಗನ್ನೋರೇ ಆಗಿರ್‌ಭೌದು.’ +ಗಂಗಮ್ಮ ಈ ಮಾತು ಕೇಳಿ ಉರಿದುಬಿದ್ದಳು: ‘ಲೋ ಹೆಣ್ಣಿಗ ಸೂಳೇಮಗನೆ, ನಿನ್ನ ಹೆಂಡ್ತಿ ನಿನ್ನ ಹೆತ್ತವ್ವುನ್ನೇ ಏನಂದ್ಳು ಕೇಳಿದ್ಯೇನೋ? ನಾನು ಲೌಡಿ ಏನೋ? ನ್ಯಟ್ಟಗೆ ಹೆಂಡ್ತಿ ಆಳ್ತೀ ಏನೋ ಶಿಖಂಡಿ ಮುಂಡೇಮಗನೇ?’ +ಅಪ್ಪಣ್ಣಯ್ಯನ ಗಂಡಸುತನ ಎದ್ದುನಿಂತಿತು. ಹೋಗಿ ಅವಳ ಕುತ್ತಿಗೆಗೆ ಕೈಹಾಕಿ ಢಂ ಎಂದು ಎರಡು ಇಡಿದ. ಸಾತು ತಲೆ ಸುತ್ತು ಬಂದು ಬಿದ್ದುಬಿಟ್ಟಳು. ‘ಸಾಯಿಸಿ ಹಾಕ್‌ಬಿಡ್ತೀನಿ ಈ ಬೋಸೂಡಿ ಮುಂಡೇನ’ -ಎಂದು ಅವನು ಗರ್ಜಿಸುತ್ತಿರುವಷ್ಟರಲ್ಲಿ ಎಲ್ಲವನ್ನೂ ಕೇಳಿದ ನಂಜಮ್ಮ ಅಡಿಗೆ ಮನೆಯಿಂದ ಓಡಿ ಬಂದಳು. ಅವಳು ಇದುವರೆಗೂ ಅಪ್ಪಣ್ಣಯ್ಯನ ಎದುರಿಗೆ ನಿಂತು ಗಟ್ಟಿಯಾಗಿ ಮಾತನಾಡಿರಲಿಲ್ಲ. ಈಗ, ‘ಅಪ್ಪಣ್ಣಯ್ಯ, ಮನೆಗೆ ಬಂದ ಸೊಸೇರುನ್ನ ಹೀಗೆ ಗೋಳಾಡಿಸಿದ್ರೆ ನಿಮ್ಮ ಕೈ ಸೇದಿ ಹೋಗುತ್ತೆ. ನಿಮಗೇನು ಕೆಟ್ಟ ಬುದ್ಧಿ ಬಂದಿದೆ ಹೇಳಿ’ ಎಂದು ಒಳಗಿನಿಂದ ನೀರು ತಂದು ಸಾತುವಿನ ತಲೆಗೆ ತಟ್ಟಿದಳು. ಅಪ್ಪಣ್ಣಯ್ಯನ ನಾಲಿಗೆಯಲ್ಲಿ ಮುಂಡೆ ಎಂಬ ಮಾತು ಅತ್ತಿಗೆಯ ಮೇಲೂ ಬರುತ್ತಿತ್ತು. ಆದರೆ ಅದೇನೋ ಭಯದಿಂದ, ಪ್ರಾಯಶಃ ಅವಳ ತಂದೆ ಕಂಠೀಜೋಯಿಸರ ನೆನಪಿರಬಹುದು, ಸುಮ್ಮನಾದ. ಸಾತುವಿಗೆ ಪೂರ್ತಿಯಾಗಿ ಪ್ರಜ್ಝ್ನೆ ತಪ್ಪಿರಲಿಲ್ಲ. ಅವಳೇ ಎದ್ದು ಕೂತು ಹೇಳಿದಳು: ‘ಉತ್ತಮ ವಂಶದಲ್ಲಿ ಹುಟ್ಟಿದ್ರೆ ತಾನೇ ಇವರ ಬಾಯಲ್ಲಿ ಒಳ್ಳೇ ಮಾತು ಬರೋದು!’ +‘ಸಾತೂ, ನೀನು ಮಾತಾಡಬ್ಯಾಡ. ಸುಮ್ಮನೆ ಬಾ’ -ಎಂದು ನಂಜಮ್ಮ ಅವಳನ್ನು ಮೆಟ್ಟಿಲು ಹತ್ತಿಸಿ ಅಟ್ಟದ ಮೇಲಕ್ಕೆ ಕರೆದುಕೊಂಡು ಹೋದಳು. ‘ಇನ್ನು ಇವಳ ಕಿವಿ ಊದುಕ್ಕೆ ಕರ್ಕಂಡ್ ಹೋಗ್ತಿದಾಳೆ ಆ ದೊಡ್ಡ ತಾಟಗಿತ್ತಿ’ -ಎಂದು ಗಂಗಮ್ಮ ಅಂದುದು ಕೇಳಿದರೂ, ನಂಜಮ್ಮ ಅದು ಕೇಳಿಸದವಳಂತೆ ಹೋದಳು. +‘ಇಂಥಾ ಮಾತು ಬ್ರಾಹ್ಮಣರಾಗಿ ಇವರ ಬಾಯಲ್ಲಿ ಬರ್‌ಭೌದಾ? -ಅಟ್ಟದ ಮೇಲೆ ಒಂದು ಹಲಗೆಯ ಮೇಲೆ ಕುಳಿತ ಮೇಲೆ ಸಾತು ಕೇಳಿದಳು. +‘ನಿಮಗೆ ಇದು ಹೊಸದು. ಈ ಮನೆ ನಡವಳಿಕೆಯೇ ಹೀಗಿದೆ.’ +‘ಹಾಗಾದ್ರೆ ಭಾವ್‌ನೋರು ನಿಮ್ಮುನ್ನ ಹೀಗೇ ಅಂತಾರಾ?’ +‘ಇಲ್ಲಿಗೆ ಬಂದ ಎರಡು ವರ್ಷದಿಂದ ನನಗೆ ಅಭ್ಯಾಸವಾಗಿದೆ.’ +‘ನೀವ್ಯಾಕೆ ಕೇಳಿಕಂಡ್ ಸುಮ್ಮನಿದ್ರಿ? ಅದುಕ್ಕೆ ಇವ್ರಿಗೆ ಧೈರ್ಯ ಬಂದಿದೆ.’ +ಈ ಮಾತಿಗೆ ನಂಜಮ್ಮ ಉತ್ತರ ಹೇಳಲಿಲ್ಲ. ಅವಳು ತನ್ನಲ್ಲಿಯೇ ಏನೋ ಯೋಚಿಸತೊಡಗಿದಳು. ಸಾತು ಮತ್ತೆ ಕೇಳಿದಳು: ‘ನಿಮ್ಮ ತಂದೆ ನೋಡಿದ್ರೆ ಅಂಥಾ ದೊಡ್ಡ ಮನುಷ್ಯರು. ನನ್ನ ಮದುವೆಗೆ ಬಂದಿದ್ರಲಾ, ಆಗ ಮದುವೆ ಮನೇಲಿ ಎಲ್ರೂ ಅವ್ರುನ್ನ ಕಂಡ್ರೆ ಹೆದರ್‌ತಿದ್ರು. ಅವ್ರು ತುಂಬ ದೊಡ್ಡೋರು ಅಂತ ನಮ್ಮ ತಂದೆಯೂ ಹೇಳ್ತಿದ್ರು. ಭಾವ್‌ನೋರಿಗೆ ಶ್ಯಾನುಭೋಗ್‌ಕೆ ಕೊಡುಸ್ದೋರು ಅವ್ರೇಯಂತೆ. ಒಂದು ಸಲ ನಮ್ ತಂದೆ ಕೈಲಿ ಹೇಳ್ತೀನಿ ಅಂತ ಹೆದರಿಸಿ. ಇವ್ರು ಬಾಯಿ ಮುಚ್‌ಕಂಡ್ ಸುಮ್‌ನಾಗ್ತಾರೆ. ಇಲ್ದೆ ಇದ್ರೆ ಒಂದ್ ಸಲ ಅವ್ರಕೈಲಿ ನೀವೇ ಹೇಳಿ. ಇವ್ರಿಗೆ ಬುದ್ಧಿ ಕಲುಸ್ತಾರೆ.’ +‘ಸಾತೂ, ನಿನಗೆ ಚಿಕ್ಕ ವಯಸ್ಸು, ಇನ್ನೂ ಗೊತ್ತಿಲ್ಲ. ಗಂಡನಿಗೆ ಬುದ್ಧಿ ಕಲಿಸಿ ಅಂತ ಹೆಂಗಸು ಯಾವತ್ತೂ ತನ್ನ ಅಪ್ಪನಿಗೆ ಹೇಳಬಾರದು’ -ಎಂದು ಹೇಳಿದಳಾದರೂ, ತನ್ನ ತಂದೆಯ ಪೂರ್ತಿ ಸ್ವಭಾವವನ್ನು ನಂಜಮ್ಮ ಬಾಯಿ ಬಿಟ್ಟು ವಿವರಿಸಲಿಲ್ಲ. ಅವರಿಗೆ ಯಾರ ಮೇಲೆ ಸಿಟ್ಟು ಬಂದರೂ ಸರಿ, ಮೇಲೇರಿಹೋಗಿ ಜುಟ್ಟು ಹಿಡಿದು ದವಡೆಯ ಹಲ್ಲುಗಳನ್ನು ಅಳ್ಳಾಡುವಂತೆ ಬಾರಿಸಿ, ನಂತರ ಮುಂದಿನ ಮಾತಾಡುತ್ತಿದ್ದರೇ ಹೊರತು ಬೇರೆ ರೀತಿಯನ್ನು ಕಾಣರು. ಅಳಿಯನೆಂಬ ಘನತೆಯನ್ನು ತನ್ನ ಗಂಡನು ಮಾವನವರ ಎದುರಿಗೆ ಉಳಿಸಿಕೊಂಡಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ಧೈರ್ಯಶಾಲಿಯಲ್ಲದವರನ್ನು ಅವಳ ತಂದೆ ಎಂದೂ ಗೌರವಿಸುತ್ತಿರಲಿಲ್ಲ. ಅದು ಅವರ ಸ್ವಭಾವ. ಅಂದರೆ ಹೆಂಗಸಾದ ತಾನು ತನ್ನ ಗಂಡನ ಮಾನ ಕಾಯದಿದ್ದರೆ ಹೇಗೆ? +ಸಾತು ಹೇಳಿದಳು: ‘ಹಾಗಾದ್ರೆ ಇವರಿಗೆ ನೀವೇ ಬುದ್ಧಿ ಹೇಳಿ, ಇನ್‌ಮೇಲೆ ನನ್ನ ಹೀಗ್ ಮಾತಾಡದ ಹಾಗೆ ಮಾಡಿ.’ +ಅಷ್ಟರಲ್ಲಿ ಕೆಳಗಿನಿಂದ ಚೆನ್ನಿಗರಾಯರ ಧ್ವನಿ ಕೇಳಿಸಿತು: ‘ಎಲ್ಲಿ ಹೋದ್ಲೇ ಇವಳ ಮನೆತನ ಹಾಳಾಗ. ಇನ್ನೂ ರೊಟ್ಟಿ ಹಾಕಿ ಚಟ್ನಿ ತಿರುವಿಲ್ವೇನು??’ +‘ಕೇಳಿದೆಯಾ ನಿಮ್ಮ ಭಾವ್‌ನೋರ ಮಾತಾ? ನಾನು ಹೋಗಿ ರೊಟ್ಟಿ ಹಾಕ್ತೀನಿ. ನೀನು ಚಟ್ನಿ ಮಾಡು ಬಾ. ಇಲ್ದೆ ಇದ್ರೆ ನಿನ್ನ ಗಂಡನಿಗೆ ಎಣ್ಣೆ ಹಾಕು ಹೋಗು’-ಎಂದು ನಂಜಮ್ಮ ಮೇಲೆ ಎದ್ದಳು. +‘ನಾನು ಚಟ್ನಿ ತಿರುವ್‌ತೀನಿ. ಬೇಕಾದರೆ ಅವರಮ್ಮನ ಕೈಲಿ ಎಣ್ಣೆ ಹಾಕುಸ್‌ಕಳ್ಲಿ’-ಸಾತು ಮನಸ್ಸಿನಲ್ಲಿಯೇ ಎಂದುಕೊಂಡಳು. +***** +ಮುಂದುವರೆಯುವುದು +“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ […] +“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು. ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು. “ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ. “ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, […] +“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_356.txt b/Kannada Sahitya/article_356.txt new file mode 100644 index 0000000000000000000000000000000000000000..f920181750029aa972999d8ca8472daaeb8951f4 --- /dev/null +++ b/Kannada Sahitya/article_356.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು +ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ +ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ +ನಿದ್ರಿಸಿದಾಗ ತಲೆದಿಂಬು ಅವು ಚಂದ್ರ ಸೂರ್ಯರಿಗೆ +ನರಕ ಭಾಜನರೆ ಸ್ವರ್ಗದಾತರೆ ಪುನರುತ್ಥಾನದ ದಿನದ +ನಾಯಕರು, ಹರಿಸುವ ಶಕ್ತಿಯೇ ಇಲ್ಲದವರು +ಬೆಟ್ಟ ಸಾಲು ಗಾಳಿಯಲ್ಲಿ ನರ್ತಿಸಿ ತೇಲುತ್ತದೆ +ಕಹಿಯಾದ ಕಡಲೇ ಅತಿಮಧುರ ಸಿಹಿಯಾಗುತ್ತದೆ +ಶರೀರಗಳೆ ಆತ್ಮಗಳಾಗುತ್ತವೆ, ಆತ್ಮಗಳು ಅನಂತವಾಗುತ್ತವೆ +ಕಗ್ಗಲ್ಲಿನ ಬಂಡೆ ರತ್ನದ ಗಣಿಯಾಗುತ್ತದೆ, ಪಾಷಂಡಿಯೂ ಪವಿತ್ರ +ಎಲ್ಲ ಬಚ್ಚಿಟ್ಟ ಬಯಲು, ರಹಸ್ಯದೊಳಗಿನ ರಹಸ್ಯ +ಕಾಣಬೇಕೆಂಬ ಕ್ಷಣದಲ್ಲೆ ಎಲ್ಲ ಕಣ್ಣ ಮುಂದೆ! +ಮಾತಿಗೆ ಅವಕಾಶವಿದೆಯೆಂದಾದರೆ ನನ್ನ ನುಡಿ ಕೇಳಿ +ಸ್ವರ್ಗದ ಕಿನ್ನರ ಕಿಂಪುರುಷರಿಂದ ಚಪ್ಪಾಳೆಯ ಹೊಳೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ಜಪಮಣಿ ಕದ್ದು ಹಾಡು ಕೊಟ್ಟಿತು ಜತೆಗೆ ಕವಿತೆಯನ್ನು ಕೂಡಾ ‘ಶಕ್ತಿ ಇಲ್ಲ’ ಎಂದು ಚೀರಿದೆ ವ್ಯಾಕುಲನಾಗಿ ಗೋಗರೆದೆ ಹೃದಯಕ್ಕೆ ನನ್ನ ಮೊರೆ ಕೇಳಲೇ ಇಲ್ಲ. […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […] +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_357.txt b/Kannada Sahitya/article_357.txt new file mode 100644 index 0000000000000000000000000000000000000000..d84baef7560c2bbb8d21e7332c570883c69dd993 --- /dev/null +++ b/Kannada Sahitya/article_357.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ ಇದ್ದ. ಸ್ವಭಾವತಃ ಉತ್ಸಾಹಶಾಲಿಯಾದ ಕುಸುಮ, ತಮ್ಮ ವೈವಾಹಿಕ ವಾರ್ಷಿಕೋತ್ಸವವನ್ನು ಸರಳವಾಗಿ ಆದರೆ ಸಂಭ್ರಮದಿಂದ ಆಚರಿಸೋಣವೆಂದುಕೊಂಡಳು. ಪಾಕಶಾಸ್ತ್ರ ಪ್ರವೀಣೆಯಾದ ಅವಳು ಚುರುಕಾಗಿ ಹಬ್ಬದ ಅಡುಗೆಯನ್ನು ಮಾಡಿ ಮುಗಿಸಿದಳು. ಓರಣವಾಗಿ ಜೋಡಿಸಿ, ಅಡುಗೆ ಮನೆಯ ಹದರವನ್ನೆಲ್ಲಾ ಕ್ಲೀನ್ ಮಾಡಿ, ಕಿಟಕಿ ಬಾಗಿಲುಗಳನ್ನು ತೆಗೆದು, ಮನೆಯೊಳಗೆ ತಾಜಾ ಗಾಳಿ ಬರಲು ಅನುವು ಮಾಡಿದಳು. ಇನ್ನೇನು ಊಟಕ್ಕೆ ಕೂರಬೇಕು, ಅಷ್ಟರಲ್ಲಿ ರಾಜು ಬಟ್ಟೆ ಬದಲಾಯಿಸಿ ಕಾರಿನ ಕೀ ತೆಗೆದುಕೊಳ್ಳುತ್ತಿರುವಾಗ, ಕುಸುಮ ಕೇಳಿದಳು: “ಇದೇನ್ರೀ, ಈಗ ಊಟ ಮಾಡೋ ಹೊತ್ತಿನಲ್ಲಿ ಹೊರಟಿದ್ದೀರ? ನೀವು ಯಾವಾಗ್ಲೂ ಹೀಗೇನೆ! ನನ್ನ ಅಡಿಗೆ ಮುಗಿಯೋ ಹೊತ್ತಿಗೆ ನೀವು ಎಲ್ಲೋ ಇರ್ತೀರ! ನಾನು ಕಷ್ಟ ಪಟ್ಟು ಶ್ರದ್ಧೆಯಿಂದ ಮಾದಿದ ಅಡಿಗೆಯೆಲ್ಲಾ, ನೀವು ವಾಪಸ್ ಬರೋ ಹೊತ್ತಿಗೆ ತಣ್ಣಗಾಗಿರುತ್ತೆ.” ಅದಕ್ಕೆ ರಾಜು, “ಕುಸುಮ, ಬೇಜಾರು ಮಾಡಿಕೋಬೇಡ ಕಣೆ. ನೀನು ತಟ್ಟೆ ಇಡೋ ಅಷ್ಟರಲ್ಲಿ, ನಾನು ಹೋಗಿ ಲಕ್ಷ್ಮಿ ಬಜ಼ಾರ್ ನಿಂದ ’ಬಾ ನಲ್ಲೆ, ಮಧುಚಂದ್ರಕೆ’ ವೀಡಿಯೋ ತರ್ತೀನಿ. ಮರ್ಡರ್ ಮಿಸ್ಟರಿ ಮೂವಿ ಚೆನ್ನಾಗಿದೇಂತ ಕಿಶೋರ್ ಹೇಳ್ತಿದ್ದ. ಊಟ ಆದ ಮೇಲೆ, ಅರಾಮವಾಗಿ ಕೂತ್ಕೊಂಡು ನೋಡಬಹುದು”. ಎಂದು ಹೇಳಿ ಹೊರಟ. +ಅಂಗಡಿ ಮನೆಯಿಂದ ಕೇವಲ ೫ ಮೈಲಿ; ೨೮೦ ಫ಼್ರೀವೇ ಮೇಲೆ ಹೋದರಂತೂ ಎರಡೇ ಎಕ್ಸಿಟ್. ಅಲ್ಲಿ ತಲುಪಿ, ಕನ್ನಡ ಕ್ಯಾಸೆಟ್ ಇಟ್ಟಿರುವ ಕಡೆ ನೋಡಿದಾಗ, ಪುಣ್ಯಕ್ಕೆ ಅದು ಅಲ್ಲೇ ಇತ್ತು! ಅದನ್ನು ರೆಂಟ್ ಮಾಡಿಕೊಂಡು ಹೊರಬಂದಾಗ ವೇಳೆ ಸಂಜೆ ಆರೇ ಗಂಟೆಯಾಗಿದ್ದರೂ, ಸಾಕಷ್ಟು ಕತ್ತಲಾಗಿತ್ತು. ಇನ್ನೈದು ನಿಮಿಷಗಳಲ್ಲಿ ಸುಗ್ರಾಸ ಭೋಜನ ಮಾಡಬಹುದೆಂದುಕೊಂಡು, ಖುಷಿಯಾಗಿ ಸಿಳ್ಳೆ ಹಾಕಿಕೊಂಡು, ಫ಼್ರೀ ವೇ ಪ್ರವೇಶಿಸಿ, ೬೦ ಮೈಲಿ ವೇಗದಲ್ಲಿ ಹೋಗುತ್ತಿದ್ದ. ಕಾರ್ ಸ್ಟೀರಿಯೊದಿಂದ ಉಸ್ತಾದ್ ಅಮ್‌ಜದ್ ಅಲಿ ಖಾನರ ಸಾರೋದ್ ವಾದನ ಸುಮಧುರವಾಗಿ ಕೇಳಿ ಬರುತ್ತಿತ್ತು. ಫ಼್ರೀ ವೇ ಪಕ್ಕದಲ್ಲಿ ಲೈಟುಗಳಿಂದ ಝಗಝಗಿಸುತ್ತಿದ್ದ ಕಟ್ಟಡ ರಾಜುವನ್ನು ಆಕರ್ಷಿಸಿತು. ಒಂದೇ ಒಂದು ಕ್ಷಣ, ಕತ್ತನ್ನು ತಿರುಗಿಸಿ ನೋಡಿದಾಗ ’ಓಕ್ ವುಡ್ ಅಪಾರ್ಟಮೆಂಟ್ಸ್’ ಗೋಚರಿಸಿತು. ಈ ಜನ ಕ್ರಿಸ್ಮಸ್ ಸಮಯದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರಲ್ಲ ಎಂದುಕೊಂಡು, ಮತ್ತೆ ಮುಂದೆ ನೋಡಲಾರಂಭಿಸಿದಾಗ ಅವನಿಗೆ ಕಾಣಿಸಿತು: ಅತಿ ಪ್ರಖರವಾದ ಪ್ರಕಾಶ, ಮಿಂಚಿನಂತಹ ಏನೋ ಒಂದು ದೊಡ್ಡದು ಅವನ ಎದುರಿಗೇ ಬಂದು ಬಿಟ್ಟಿತು! ಸೂರ್ಯನಂತಹ ಝಳ, ಸಿಡಿಲಿನಂತಹ ಅಘಾತ, ಕಬ್ಬಿಣದ ಪೆಡಂಭೂತ ರಾಜುವನ್ನು ಅಪ್ಪಳಿಸಿತು. ಒಂದು ಕ್ಷಣದಲ್ಲಿ ಪ್ರಪಂಚವೇ ಅವಸಾನಗೊಂಡಂತಾಯಿತು. ಆದುದಾದರೂ ಇಷ್ಟೆ: ಎದುರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು, ನಿಯಂತ್ರಣ ತಪ್ಪಿ, ಪಕ್ಕಕ್ಕೆ ಹೊರಳಿ ನೇರವಾಗಿ ಬಂದು, ರಾಜುವಿನ ಕಾರಿಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ, ಆ ಎರಡು ಕಾರುಗಳೂ ಒಂದನ್ನೊಂದು ಅಪ್ಪಿಕೊಂಡು, ವಿಷ್ಣು ಚಕ್ರದಂತೆ ವೇಗವಾಗಿ ಸುತ್ತುತ್ತಿದ್ದಾಗ, ರಾಜುವಿನ ಹಿಂದುಗಡೆಯಿಂದ ಬರುತ್ತಿದ್ದ ಕಾರುಗಳು ತುರ್ತಾಗಿ ಬ್ರೇಕ್ ಹಾಕಿ ಅಪಘಾತಕ್ಕೀಡಾದ ಕಾರುಗಳನ್ನು ಮುಟ್ಟದಂತೆ ಎಲ್ಲೆಲ್ಲೋ ಸರಿದಾಗ ಕೇಳಿ ಬಂದ ಸಿಡಿತ; ಆ ಗರ್ಜನೆಯ ನಂತರ ಒಂದು ಕ್ಷಣ ಸ್ಮಶಾನ ಮೌನ. +ಆ ಆಸುಪಾಸಿನಲ್ಲಿ ನೋವಿನಿಂದ, ಹೆದರಿಕೆಯಿಂದ, ಅಸಹಾಯಕತೆಯಿಂದ ನರಳುತ್ತಿದ್ದ ಚೀತ್ಕಾರಗಳು, ಕಾರಿನ ಹಾರ್ನ್ ಶಬ್ದ, ದೂರದಲ್ಲೆಲ್ಲೋ ಕೇಳಬರುತ್ತಿದ್ದ ಸೈರನ್ – ಇವೆಲ್ಲಾ ಇದ್ದವು. ಮೊದಲು ನಿಧಾನವಾಗಿ, ನಂತರ ಬೇಗಬೇಗನೇ ಜನರು ತಮ್ಮ ತಮ್ಮ ಕಾರುಗಳಿಂದ ಇಳಿದು, ಅಪಘಾತವನ್ನು ನೋಡಲು ಹೋದರು. ಅಲ್ಲೇ ಒಂದಕ್ಕೊಂದು ಅಂಟಿಕೊಂಡು, ಅಪ್ಪಚ್ಚಿಯಾದ ಕಾರುಗಳನ್ನು ವೀಕ್ಷಿಸಿದರು. ಆ ಕಾರುಗಳಲ್ಲಿ ಇದ್ದವರಾರೂ ಬದುಕಿರಲು ಸಾದ್ಯವೇ ಇಲ್ಲ ಎಂದು ಜನರು ಅಂದುಕೊಳ್ಳುವಷ್ಟರಲ್ಲೇ, ಸೈರನ್ ಶಬ್ದ ತೀರಾ ಹತ್ತಿರ ಬಂದಂತಾಯಿತು. +ಆಷ್ಟರಲ್ಲಿ ಇಬ್ಬರು ಗಂಡಸರು ಅಪಘಾತಕ್ಕೀಡಾದ ಕಾರುಗಳ ಬಳಿ ಎಲ್ಲರಿಗಿಂತ ಮುಂಚೆ ಬಂದರು. ಎದುರಿನಿಂದ ನೇರವಾಗಿ ಬಂದ ಲಿಂಕನ್ ಕಾರು ರಾಜುವಿನ ಟೊಯೋಟಾ ಕಾರಿಗೆ ಡಿಕ್ಕಿ ಹೊಡೆದು, ಅದರೊಳಗೆ ಸೇರಿಕೊಂಡಿತ್ತು. ಎರಡು ಕಾರುಗಳು ಒಂದರೊಳಗೆ ಇನ್ನೊಂದು ಎಷ್ಟು ಚೆನ್ನಾಗಿ ಸೇರಿಕೊಂಡಿತ್ತೆಂದರೆ, ಬಣ್ಣದಿಂದ ಮಾತ್ರ ಅವನ್ನು ಗುರುತಿಸಬಹುದಾಗಿತ್ತು. ಕೆಂಪು ಟೊಯೋಟಾ ಕಾರಿನೊಳಗೆ ತುಂಬಾ ಕತ್ತಲೆಯಾಗಿ, ಒಳಗಡೆ ಏನಿದೆ ಎಂದು ನೋಡಲೂ ಅಸಾಧ್ಯವಾಗಿತ್ತು. ಬಂದವರಲ್ಲಿ ಒಬ್ಬ ಡಾಕ್ಟರ್ ಅಗಿದ್ದ; ಇನ್ನೊಬ್ಬನು ತಾನು ತಂದಿದ್ದ ಫ಼್ಲಾಷ್ ಲೈಟನ್ನು ಟೊಯೋಟಾ ಕಾರಿನೊಳಗೆ ಬಿಟ್ಟು ನೋಡಲಾಗಿ ಕಾಣಿಸಿತು: ಅವನ (ರಾಜುವಿನ) ತಲೆ ಮತ್ತು ಮುಖ ರಕ್ತ ಸಿಂಚನವಾಗಿತ್ತು. ಮೈ ಮೇಲೆ ಎಲ್ಲಾ ಕಡೆ ಘಾಯಗಳಾಗಿತ್ತು; ತಲೆಗೆ ಭಾರೀ ಪೆಟ್ಟಾಗಿರುವುದು ಡಾಕ್ಟರ್ ಗಮನಕ್ಕೆ ಬಂತು. ಒಡೆದು ಹೋದ ಕಿಟಕಿಯ ಮೂಲಕ ಕೈ ಹಾಕಿ ಅವನ ಕುತ್ತಿಗೆಯ ಬಳಿ ಮುಟ್ಟಿ ನೋಡಿದಾಗ, ತುಂಬಾ ದುರ್ಬಲವಾದ ನಾಡಿ ಸಿಕ್ಕಿತು. ಆದರೆ, ಮೂಗಿನ ಬಳಿ ಕೈ ಇಟ್ಟಾಗ, ಉಸಿರಾಟ ಆಡುತ್ತಿರುವುದು ಗೊತ್ತಾಗಲಿಲ್ಲ. ಅವನ ದೇಹ ಸ್ಟೀರಿಂಗ್ ವೀಲ್ ಮತ್ತು ಸೀಟಿನ ಮಧ್ಯೆ ವಿಕಾರವಾಗಿ ಸಿಕ್ಕಿ ಹಾಕಿಕೊಂಡಿದ್ದರಿಂದ, ಉಸಿರಾಟ ಅಕಸ್ಮಾತ್ ನಿಂತರೆ, ತಾನು ಡಾಕ್ಟರ್ ಆಗಿದ್ದರೂ ಏನೂ ಮಾಡುವ ಹಾಗಿರಲಿಲ್ಲ; ಅಸಹಾಯಕನಾಗಿ, ಅಂಬ್ಯುಲೆನ್ಸ್ ಬರುವುದನ್ನೇ ನಿರೀಕ್ಷಿಸತೊಡಗಿದ. +ಅಷ್ಟರಲ್ಲಿ ಅಂಬ್ಯುಲೆನ್ಸ್, ಎರಡು ಫ಼ೈರ್ ಇಂಜಿನ್ನುಗಳು ಮತ್ತು ಮೂರು ಪೋಲೀಸ್ ಕಾರುಗಳು ಅಲ್ಲಿಗೆ ಬಂದವು. ಪೋಲಿಸಿನವನು ವಾಹನ ಸಂಚಾರವನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದ. ಆಗ ಪೋಲೀಸ್ ಅಲ್ಲಿಗೆ ಬಂದು, “ಕ್ರೋ ಬಾರ್” ಅನ್ನು ಕಿಟಕಿಯ ಒಳಗೆ ತೂರಿಸಿ, ಲಾಕ್ ಆಗಿದ್ದ ಬಾಗಿಲನ್ನು ತೆಗೆದ. ಬ್ಲಾಂಕೆಟ್‌ಅನ್ನು ಉಪಯೋಗಿಸಿ, ಹುಷಾರಾಗಿ ಗಾಜಿನ ಚೂರುಗಳನ್ನು ತೆಗೆದು, ಇಬ್ಬರು ಅವನನ್ನು ಸ್ಟೀರಿಂಗ್ ವೀಲಿನ ಕೆಳಗಿನಿಂದ ತೆಗೆದರು. ನಂತರ ಅವನನ್ನು ಸ್ಟ್ರೆಚರ್ ಮೇಲೆ ಜಾಗರೂಕತೆಯಿಂದ ಮಲಗಿಸಿ, ಅಂಬ್ಯುಲನ್ಸ್ ನಿಲ್ಲಿಸಿದ್ದ ಕಡೆ ಎತ್ತಿಕೊಂಡು ಹೋದರು. ಪ್ರಥಮ ಚಿಕಿತ್ಸೆಯವರು ಆ ಸ್ಥಳಕ್ಕೆ ಆಗಮಿಸಿ, ಅವನಿಗೆ ಐ.ವಿ. ಕೊಡಲಾರಂಭಿಸಿದರು. ಅವನನ್ನು ಅಲ್ಲಿಯೇ ಹತ್ತಿರವಿದ್ದ, ಸಾಂಟಾ ಕ್ಲಾರಾ ಕೈಸರ್ ಆಸ್ಪತ್ರೆಗೆ ಕರೆದುಕೊಂಡು ಹೋದರು. +– ೨ – +ಇತ್ತ ಕಡೆ, ಎರಡು ಗಂಟೆಗಳಾದರೂ ತನ್ನ ಗಂಡ ವಾಪಸಾಗದೇ ಇದ್ದುದು ಸಹಜವಾಗಿಯೇ ಕುಸುಮಳನ್ನು ಚಿಂತೆಗೀಡುಮಾಡಿತ್ತು; ಒಂದು ಅಥವಾ ಒಂದೂವರೆ ಗಂಟೆ ತಡವಾಗಿದ್ದರೆ, ತನ್ನ ಮಾತಿನ ಮಲ್ಲ ಗಂಡ ಯಾರದೋ ಜೊತೆ ಹರಟೆ ಹೊಡೆಯುತ್ತಾ ಇರಬಹುದೆಂದು ಅಂದುಕೊಳ್ಳುತ್ತಿದ್ದಳು. ಹಬ್ಬದ ಅಡುಗೆ ಮಾಡಿಕೊಂದು ಅವನ ನಿರೀಕ್ಷೆಯಲ್ಲಿರುವ ತಮ್ಮನ್ನು ಕಾಯಿಸುತ್ತಿರುವನಲ್ಲಾ ಎಂದು ಸಿಟ್ಟು ಸಹ ಜಾಸ್ತಿಯಾಗುತ್ತಿತ್ತು. ಈ ಭಾವನಾ ರಹಿತ ಗಂಡಸರು ತಮ್ಮ ಹುಟ್ಟು ಹಬ್ಬದ ದಿನದಲ್ಲಾಗಲೀ, ಮದುವೆಯ ವಾರ್ಷಿಕೋತ್ಸವ ದಿನದಲ್ಲಾಗಲೀ, ಏನೂ ಹೆಚ್ಚಿನ ಮಹತ್ವ ತೋರಿಸದೆ ಇರುವುದು, ಅವಳ ದಿಗ್ಭ್ರಮೆ, ಅಸಮಾಧಾನ ಹಾಗೂ ಕ್ರೋಧಗಳಿಗೆ ಕಾರಣಗಳಾಗಿದ್ದವು. ಕಿಶೋರ್ ಹತ್ತಿರ ಮಾತನಾಡಿ, ತನ್ನೆಲ್ಲಾ ಭಾವಗಳನ್ನು ಹೊರ ಹಾಕಿದ್ದಳು. ಇದಾದ ಸ್ವಲ್ಪ ಹೊತ್ತಿನ ನಂತರ, ಹಸಿವೆ ಜಾಸ್ತಿಯಾಗಿ, ಯಾರಿಗೂ ಮಾತನಾಡಲು ಶಕ್ತಿ ಸಹ ಇರಲಿಲ್ಲ. ಆಷ್ಟರಲ್ಲಿ, ದೂರವಾಣಿ ನಿನಾದಿಸಿತು. ತಕ್ಷಣ ಕುಸುಮ ಎದ್ದು ಹೋಗಿ, ಫೊನನ್ನು ಎತ್ತಿಕೊಂದು, “ಹಲೋ” ಎಂದಳು. +“ನಾನು ಬಾಬ್, ಹೈವೇ ಪೆಟ್ರೋಲ್. ಇದು ರಾಜುವಿನ ಮನೆಯೆ?” +“ಹೌದು” ಕುಸುಮ ಭಯಭೀತಳಾಗಿ ಉತ್ತರಿಸಿದಳು. +“ರಾಜುಗೆ ಅಪಘಾತವಾಗಿ, ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲು ನಾನು ವಿಷಾದಿಸುತ್ತೇನೆ.” +“ಓ ಮೈ ಗಾಡ್!” ಎಂದು ಹೇಳಿ ಅವಳು ಹಾಗೇ ಕುಸಿದಳು. +“ಮ್ಯಾಡಂ, ಆರ್ ಯು ಆಲ್ ರೈಟ್? ಆವರನ್ನು ಸಾಂಟಾ ಕ್ಲಾರ ಕೈಸರ್ ಗೆ ಕರೆದುಕೊಂಡು ಹೋಗಿದ್ದಾರೆ. ನೀವು ಆದಷ್ಟು ಬೇಗ ಅಲ್ಲಿಗೆ ಹೋಗುವುದು ಒಳ್ಳೆಯದು.” ಎಂದು ಪೋಲೀಸ್ ಹೇಳಿದ. +ಕುಸುಮಳಿಗೆ ಮಾತೇ ಹೊರ ಬರಲಿಲ್ಲ. ಪೋಲಿಸನ ಮಾತುಗಳು ಕಿವಿಯ ಮೇಲೆ ಅಪ್ಪಳಿಸುತ್ತಿತ್ತೇ ವಿನಃ ಅರ್ಥವಾಗುತ್ತಿರಲಿಲ್ಲ. ಇವಳು ಕುಸಿದಿದ್ದನ್ನು ನೋಡಿ, ಕಿಶೋರ್ ದಿಗ್ಬ್ರಾಂತನಾದ. ಅವಳ ಹತ್ತಿರ ಹೋಗಿ ಕೇಳಿದ: “ಏನಾಯಿತು, ಕುಸುಮ?” ಆಕೆ ಒಂದು ನಿಮಿಷ ಉತ್ತರಿಸಲಿಲ್ಲ; ಆಕೆಯ ಕಣ್ಣುಗಳು ಶೂನ್ಯವನ್ನು ನೊಡುತ್ತಿದ್ದವು. “ರಾಜು ಹುಷಾರಾಗಿದ್ದಾನೆ ತಾನೆ?” ಎಂದು ಇನ್ನೊಮ್ಮೆ ಪ್ರಶ್ನಿಸಿದ. ಆದಕ್ಕವಳು “ಅವರಿಗೆ ಆಕ್ಸಿಡೆಂಟ್ ಆಗಿದೆಯಂತೆ. ಸಾಂಟ ಕ್ಲಾರಾ ಕೈಸರ್ ನಲ್ಲಿ…” ಇಷ್ಟೇ ಅವಳಿಗೆ ಹೇಳಕ್ಕೆ ಆಗಿದ್ದು. ಕಟ್ಟಿಕೊಂಡ ದುಃಖ ಪ್ರವಾಹದಂತೆ ಬಂತು; ಜೋರಾಗಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ರಾಜು ಅವಳ ಬೆನ್ನನ್ನು ಸವರಿ, “ಹೆದರಬೇಡ, ಕುಸುಮ. ರಾಜೂಗೆ ಏನೂ ಆಗಿರುವುದಿಲ್ಲ ಅಂತ ನನಗೆ ಭರವಸೆ ಇದೆ.” ಅವನಿಗೆಷ್ಟೇ ಆಘಾತವಾಗಿದ್ದರೂ, ಅವನ ವ್ಯಾವಹಾರಿಕ ಮನಸ್ಸು ಕಾರ್ಯಶೀಲವಾಗಿತ್ತು. “ನಡಿ ಕುಸುಮ, ಕೈಸರ್‌ಗೆ ಹೋಗೋಣ” ಎಂದು ಹೇಳಿ ಹೊರಡಿಸಿದ. ಓರಣವಾಗಿ ಜೋಡಿಸಿದ್ದ ಅಡುಗೆ ಆರಿ ತಣ್ಣಗಾಗಿತ್ತು, ಆದರೆ ಆಗ ಊಟ ಯಾರಿಗೆ ಬೇಕು? ಮನೆಗಾಗಲೇ ಪ್ರೇತಕಳೆಯ ಗರ ಬಡಿದಿತ್ತು! +ಹಿಂದೊಮ್ಮೆ ಇಲ್ಲಿಗೆ ಬಂದಾಗ ಕಿಶೋರ್ ಕೈಸರ್‌ಅನ್ನು ನೋಡಿದ್ದರಿಂದ, ಅವನೇ ಡ್ರೈವ್ ಮಾಡಿಕೊಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಬಂದ. ಇಬ್ಬರೂ ಅದರೊಳಗೆ ಹುಚ್ಚರಂತೆ ಓಡಿದರು. ಆ ಘಟಕ ಚಟುವಟಿಕೆಗಳಿಂದ ಜೀವಂತವಾಗಿತ್ತು. ಕಿಶೋರ್ ಸೀದ ಸ್ವಾಗತಕಾರಿಣಿಯ ಬಳಿ ಹೋಗಿ, ರಾಜುವಿನ ಬಗ್ಗೆ ವಿಚಾರಿಸಿದ. ಅದಕ್ಕವಳು, “ರಾಜುವಿನ ತಲೆಗೆ ತೀವ್ರವಾದ ಘಾಯ ಆಗಿದೆ. ನಮ್ಮ ನರಮಂಡಲ ತಜ್ಙರು ಈಗ ಅವನನ್ನು ಪರೀಕ್ಷಿಸುತ್ತಿದ್ದಾರೆ. ನೀವು ಅಲ್ಲಿ ಕುಳಿತಿರಿ, ನಿಮ್ಮನ್ನು ಅವರು ಸಂಪರ್ಕಿಸುತ್ತಾರೆ.” ಎಂದು ಹೇಳಿದಳು. +ಕುಸುಮಳಿಗೆ ಕೂಡಲೇ ಹೋಗಿ ರಾಜು ಯಾವ ಸ್ಥಿತಿಯಲಿದ್ದಾನೆಂದು ನೋಡುವ ಆತಂಕ, ತವಕ ಜಾಸ್ತಿಯಾಗುತ್ತಿತ್ತು; ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಕಿಶೋರ್ ಕೂಡ ಕುಸುಮಳಿಗೆ ಸಮಾಧಾನ ಮಾಡುವ ಮನಃಸ್ಥಿತಿ ಹೊಂದಿರಲಿಲ್ಲ. ಆದರೆ ಅವರುಗಳು ಈಗ ಕಾಯದೇ ವಿಧಿ ಇರಲಿಲ್ಲ. +ಹೀಗೆ ಎಷ್ಟು ಹೊತ್ತು ಕಳೆಯಿತೋ, ಅವರಾರಿಗೂ ತಿಳಿಯಲಿಲ್ಲ. ಆಷ್ಟರಲ್ಲಿ ಒಬ್ಬಳು ನರ್ಸ್ ಮತ್ತು ನ್ಯೂರೋ ಸರ್ಜನ್ ಅವರಲ್ಲಿಗೆ ಬಂದರು. “ಈಗ ನಾವು ರಾಜುವನ್ನು ನೋಡಬಹುದೆ?” ಎಂದು ಕಿಶೋರ್ ಅಸಹನೆಯಿಂದಲೇ ಪ್ರಶ್ನಿಸಿದ. ಆಗ ಅವರು, “ನಾವು ಮೊದಲು ರಾಜುವಿನ ಬಗ್ಗೆ ಅವನ ಹೆಂಡತಿಗೆ ವಿವರಿಸಬೇಕು” ಎಂದು ಹೇಳಿ ಕಾನ್ಫರನ್ಸ್ ರೂಮಿನ ಕಡೆ, ಹೆಜ್ಜೆ ಹಾಕಿದರು. ಇವರ ವಿವರಣೆ ಈಗ ಯಾರಿಗೆ ಬೇಕು, ಬೇಗ ನೋಡಲು ಬಿಡಬಾರದೆ? ಎಂದು ಇಬ್ಬರಿಗೂ ಅನಿಸದಿರಲಿಲ್ಲ. ಆದರೆ, ಈ ದೇಶದಲ್ಲಿ ಪ್ರತಿಯೊಂದಕ್ಕೂ ಕಾನೂನು, ಸಲೀಸಾಗಿ ಸಾಯಲೂ ಬಿಡುವುದಿಲ್ಲವಲ್ಲ? +ಮುಂದೆ ಬರಲಿರುವ ಯಾವುದೋ ಒಂದು ದುರ್ಘಟನೆಯನ್ನು ಸಾರಿ ಹೇಳುವಂತೆ, ಆ ಕಾನ್ಫರನ್ಸ್ ರೂಮು ಪ್ರೇತಕಳೆಯನ್ನು ಪ್ರತಿಬಿಂಬಿಸುತ್ತಿತ್ತು. ರೂಮಿನ ಮಧ್ಯದಲ್ಲಿದ್ದ ಓವಲ್ ಟೇಬಲ್ಲಿನ ಸುತ್ತ ಮೂರು ಜನ ಸರ್ಜಿಕಲ್ ಗೌನ್ ಮತ್ತು ಕ್ಯಾಪ್ ಧರಿಸಿ ಕುಳಿತಿದ್ದರು, ಅವರ ಮಾಸ್ಕ್‌ಗಳು ಕುತ್ತಿಗೆಯ ಕೆಳಗೆ ನೇತಾಡುತ್ತಿದ್ದವು. ಅವರಲ್ಲಿ ಒಬ್ಬರ ಗೌನ್ ರಕ್ತದಿಂದ ಕೆಂಪಾಗಿದ್ದುದನ್ನು ಕುಸುಮ ಗಮನಿಸಿ. ’ದೇವರೇ, ಅದು ತನ್ನ ಗಂಡನದಾಗಿರದಿರಲಿ!” ಎಂದು ಪ್ರಾರ್ಥಿಸಿದಳು. ಇನ್ನು ತದೆದುಕೊಳ್ಳಲಾರದೆ, ಕಿಶೋರ್, “ರಾಜು ಹೇಗಿದ್ದಾನೆ?” ಎಂದು ಕೇಳಿಯೇ ಬಿಟ್ಟ! ಆದರೆ, ಅದಕ್ಕೆ ಅವರು ನೀಡುವ ಉತ್ತರ ಪ್ರಶ್ನೆಯಷ್ಟು ಸರಳವಾಗಿರಲಿಲ್ಲ. +“ಶ್ರೀಮತಿ ರಾಜು, ಅವನಿನ್ನೂ ಬದುಕಿದ್ದಾನೆ. ರಾಜುವಿನ ತಲೆಗೆ ತುಂಬಾ ದೊಡ್ಡ ಘಾಯ ಹಾಗೂ ಆಘಾತ ಆಗಿದೆ. ರಾಜು ತುಂಬ ಧೀರನಾದ್ದರಿಂದ ಇನ್ನೂ ಬದುಕಿದ್ದಾನೆ, ಬೇರೆಯವರಾಗಿದ್ದರೆ ಇಷ್ತು ಹೊತ್ತಿಗೆ ಕೊನೆಯುಸಿರೆಳೆದಿರುತ್ತಿದ್ದರು! ಇದು ಒಂದು ಶುಭ ಸೂಚನೆ, ಆದರೂ ನಾವಿನ್ನೂ ತುಂಬ ದೂರ ಹೊಗಬೇಕಾಗಿದೆಯೆಂದು ಎಚ್ಚರಿಸಬೇಕಾಗಿದೆ!” +“ಮೂಲಭೂತವಾಗಿ ರಾಜುವಿಗೆ ಎರಡು ಬಗೆಯ ಘಾಯಗಳಾಗಿವೆ: ಮೊದಲನೆಯದು, ಅಪಘಾತವಾದಾಗ ಮಿದುಳು ತಲೆ ಬುರುಡೆಯೊಳಗೆ ಅಸ್ತವ್ಯಸ್ತವಾಗಿ, ನರ್ವ್ ಫ಼ೈಬರ್ಸ್ ಹಿಗ್ಗಿಸಲ್ಪಟ್ಟು, ರಕ್ತ ನಾಳಗಳು ಹರಿಯಲ್ಪಟ್ಟಿವೆ. ಇನ್ನು ಎರಡನೆಯ ಘಾಯ, ಆಪಘಾತವಾದ ಕೆಲವೇ ಕ್ಷಣಗಳ ನಂತರ, ಯಾವುದೋ ಒಂದು ಚೂಪಾದ ಉಕ್ಕಿನ ಚೂರು ಬುರುಡೆಯನ್ನು ಸೀಳಿಕೊಂಡು, ವಾತಾವರಣಕ್ಕೆ ಮಿದುಳನ್ನು ಬಹಿರಂಗ ಪಡಿಸಿದೆ. ಇದನ್ನು ನಾವು ’ಓಪನ್ ಊಂಡ್’ ಎಂದು ಕರೆಯುತ್ತೇವೆ.” +ಕುಸುಮಳಿಗೆ ಇನ್ನು ಮುಂದೆ ಕೇಳಲಾಗಲಿಲ್ಲ. ಕಣ್ಣು ಮುಚ್ಚಿ, ಪಕ್ಕದಲ್ಲಿ ಕುಳಿತಿದ್ದ ಕಿಶೋರನ ಕೈಯನ್ನು ಹಿಡಿದು ಭದ್ರವಾಗಿ ಅಮುಕಿದಳು. ತಾಂತ್ರಿಕ ವಿದ್ಯಾರ್ಥಿಯಾದ ಕಿಶೋರನಿಗೆ ಕೂಡ – ಇವರು ಎಷ್ಟೇ ಸ್ಪಷ್ಟವಾಗಿ ವೈದ್ಯಕೀಯ ವಿವರಗಳನ್ನು ನೀಡುತ್ತಿದ್ದರೂ – ಆಷ್ಟೊಂದು ಅರ್ಥವಾದಂತೆ ಅನ್ನಿಸಲಿಲ್ಲ. ತನ್ನ ಪ್ರಾಣ ಸ್ನೇಹಿತ ಮರಣ ಶಯ್ಯೆಯಲ್ಲಿರುವಾಗ, ಇವರ ಉಪನ್ಯಾಸವನ್ನು ಕೇಳುವ ದೌರ್ಭಾಗ್ಯ ಬಂದಿದೆಯೆಲ್ಲ ಎಂದು ಕಳವಳಿಸುತ್ತಿದ್ದ. +ಕಣ್ಣು ಮುಚ್ಚಿದ್ದನ್ನು ಕಂಡು, ಇವಳೇನಾದರೂ ಮೂರ್ಛೆ ಹೋದಳೇನೋ ಎಂದು ಆ ವೈದ್ಯ ಮಹಾಶಯರಿಗೆ ಆತಂಕವಾಯಿತು. ಕೂದಲೇ ಅವರು, “ಶ್ರೀಮತಿ ರಾಜು, ನೀವು ಸರಿಯಾಗಿದ್ದೀರಿ ತಾನೆ?” ಎಂದು ಪ್ರಶ್ನಿಸಿ, ಅವಳನ್ನೇ ಸೂಕ್ಷ್ಮವಾಗಿ ಅವಲೋಕಿಸತೊಡಗಿದರು. ಕುಸುಮ ನಿಧಾನವಾಗಿ ಕಣ್ಣು ಬಿಟ್ಟು ಹೌದೆಂದು ತಲೆಯಾಡಿಸಿದಳು. +ಈ ವಿವರಣೆಗಳನ್ನು ನೀಡುವುದು — ಅವರಿಗೆಷ್ಟು ಅಹಿತವಾದರೂ — ಅವನ ಆದ್ಯ ಕರ್ತವ್ಯವೆಂದು ಚೆನ್ನಾಗಿ ಗೊತ್ತಿತ್ತು: “ಬುರುಡೆ ಸೀಳಿದ್ದರಿಂದ, ರಾಜು ಸಾಕಷ್ಟು ರಕ್ತ ಕಳೆದುಕೊಂದು, ಅವನ ಬಿ.ಪಿ. ಕಡಿಮೆಯಾಗಿದೆ. ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗಿ, ಆಮ್ಲಜನಕದ ವಿತರಣೆ ಕುಂಠಿತವಾಗಿರುವುದರಿಂದ, ಅಲ್ಲಿ ಎಷ್ಟು ಹಾನಿ ಆಗಿದೆಯೆಂದು ಈಗಲೇ ಹೇಳಲು ಸಾಧ್ಯವಿಲ್ಲ.” +ಕುಸುಮ ಮಾತನಾಡುವ ಸ್ಥಿತಿಯಲ್ಲಿ ಖಂಡಿತ ಇಲ್ಲ ಎಂದು ಕಿಶೋರನಿಗೆ ಗೊತ್ತಿತ್ತು. ಇವರ ವೈಜ್ಙಾನಿಕ ವಿವರಣೆಗಳು ಯಾರಿಗೆ ಬೇಕು? ಬದುಕುತ್ತಾನೋ ಇಲ್ಲವೋ, ಅಷ್ಟು ಹೇಳಿದ್ದರೆ ಸಾಕಾಗಿತ್ತು. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಕೇಳಿಯೇ ಬಿಟ್ಟ: “ರಾಜುವನ್ನು ಉಳಿಸಿ ಕೊಡುವಿರಾ, ಡಾಕ್ಟರ್?” +ಸರ್ಜನ್ ಇವನ ಪ್ರಶ್ನೆಯಿಂದ ಉತ್ತೇಜಿತನಾಗಿ ಮುಂದುವರೆಸಿದ: “ಮೆದುಳಿನಲ್ಲೇನದರೂ ರಕ್ತ ಹೆಪ್ಪು ಗಟ್ಟಿದೆಯೆ ಅಥವಾ ಊದಿಕೊಂಡಿದೆಯೇ ಎಂದು ಶಸ್ತ್ರ ಚಿಕಿತ್ಸೆ ಮಾಡುವವರೆಗೆ ಗೊತ್ತಾಗುವುದಿಲ್ಲ; ಆದ್ದರಿಂದ ನಿಮ್ಮ ಪ್ರಶ್ನೆಗೆ ನೇರವಾಗಿ ಈಗ ಉತ್ತರ ಹೇಳಲು ಸಾಧ್ಯವಿಲ್ಲ. ಸ್ಥೂಲವಾಗಿ ಹೇಳುವುದಾದರೆ, ಈ ಮೂರು ಬಗೆಯ ಸಾಧ್ಯತೆಗಳಿವೆ: ಮೊದಲನೆಯದಾಗಿ, ಇವನು ಉಳಿಯದಿರಬಹುದು ಅಥವಾ ಉಳಿದರೂ ಶಾಶ್ವತವಾಗಿ ’ಕೋಮಾ’ ಸ್ಥಿತಿಯಲ್ಲಿರಬಹುದು. ಎರಡನೆಯದಾಗಿ, ಇವನು ಬದುಕಿ ಉಳಿದರೂ, ಚಾಲನೆ ಕುಂಠಿತಗೊಳ್ಳಬಹುದು, ವ್ಯಕ್ತಿತ್ವ ಬದಲಾಗಬಹುದು ಅಥವಾ ನೆನಪಿನ ಶಕ್ತಿ ಕಳೆದುಕೊಳ್ಳಬಹುದು. ಕೊನೆಯದಾಗಿ, ಅವನು ಯಾವುದೋ ಒಂದು ಪವಾಡದ ಬೆಂಬಲದಿಂದ ಬದುಕುಳಿದು, ಸಹಜವಾದ ಜೀವನವನ್ನು ಪುನರಾರಂಭಿಸಬಹುದು.” +ಡಾಕ್ಟರ್ ಹೇಳಿದ ಕೊನೇ ವಿವರಣೆ ಮಾತ್ರ ಇವರಿಬ್ಬರಿಗೂ ಅರ್ಥವಾದಂತಾಯಿತು. ಘೊರ ವಾಸ್ತವಿಕತೆಯನ್ನು ಎದುರಿಸಲು ಸಿದ್ಧನಾದಂತೆ ತೋರಿದ ಕಿಶೊರ್ ಕೇಳಿದ: “ನಾವು ಮುಂದೇನು ಮಾಡಬೇಕು ಹೇಳಿ, ಡಾಕ್ಟರ್?” +ಅದಕ್ಕವರು ಹೇಳಿದರು: ” ಈಗ ನಮಗೆ ಹೆಚ್ಚು ಸಮಯವಿಲ್ಲ. ಶ್ರೀಮತಿ ರಾಜು, ನೀವು ಈ ಪೇಪರ್ಸ್‌ಗೆ ಸೈನ್ ಮಾಡಿದರೆ, ನಾವು ಕೂಡಲೇ ಶಸ್ತ್ರ ಚಿಕಿತ್ಸೆಯನ್ನು ಆರಂಭಿಸುತ್ತೇವೆ.” +ಕಿಶೋರ್ ಸರ್ಜನ್ಸ್ ಸಿದ್ಧಪಡಿಸಿದ ಪೇಪರ್ಸನ್ನು ಶೀಘ್ರವಾಗಿ ಓದಿದ. ಅದರಲ್ಲಿನ ವಿವರಗಳು ಹೀಗಿತ್ತು: “ಅಪಘಾತಕ್ಕೊಳಗದ ರಾಜುವಿನ ನೈಜ ಸ್ಥಿತಿಯ ವಿವರಣೆ. ತಮ್ಮೆಲ್ಲಾ ಅನುಭವ, ಕೌಶಲ್ಯ ಹಾಗೂ ಜಾಣ್ಮೆಯನ್ನು ಉಪಯೊಗಿಸಿಕೊಂಡು ವೈದ್ಯರು ಶಸ್ತ್ರ ಚಿಕಿತ್ಸೆ ಯನ್ನು ಮಾಡುತ್ತಾರೆ. ದುರ್ದೈವವಶಾತ್ ಅವರು ತಮ್ಮ ಕ್ರಿಯೆಯಲ್ಲಿ ವಿಫಲರಾದರೆ, ಅವರು ಜವಾಬ್ದಾರರಲ್ಲ ಎಂಬುದು ಸಹ ನಮೂದಾಗಿತ್ತು. ಅವರಿಗೆ ಆಪರೇಷನ್ ಮಾಡುವ ಹಾಗೂ ಸಮಯೋಚಿತವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀದಲಾಗಿದೆ.” ಸಹಜವಾಗಿ ತಮ್ಮ ಹಿತರಕ್ಷಣೆಯನ್ನು ಕಾಪಾಡಿಕೊಳ್ಳುವುದಕ್ಕೆಂದೇ ಮೀಸಲಾಗಿದ್ದಂತೆ ತೊರಿತು, ಆ ಶಸ್ತ್ರ ಚಿಕಿತ್ಸಾ ಪರವಾನಗಿ ಪತ್ರ! +ಕಿಶೋರ್ ಸಹಿ ಮಾಡಬಹುದೆಂದ ಕೂದಲೇ, ಕುಸುಮ ಹಿಂದು ಮುಂದು ನೋಡದೆ ಸಹಿ ಮಾಡಿದಳು. ತನ್ನ ಗಂಡನನ್ನು ಈ ಗಂಡಾಂತರದಿಂದ ಪಾರು ಮಾಡಪ್ಪ ಎಂದು ದೇವರನ್ನು ಮನಸ್ಸಿನಲ್ಲಿ ಲಕ್ಷ ಬಾರಿ ಪ್ರಾರ್ಥಿಸಿದಳು. +“ರಾಜುವನ್ನು ಉಳಿಸಲು ನಾವು ಸಕಲ ಪ್ರಯತ್ನವನ್ನು ಮಾಡುತ್ತೇವೆಂದು ನಾನು ನಿಮಗೆ ವಚನ ನೀಡುತ್ತೇನೆ. ನಮ್ಮ ಈ ನ್ಯೂರೋ ಸರ್ಜಿಕಲ್ ಟೀಂ, ಈ ರಾಜ್ಯದಲ್ಲೇ ಅತ್ಯುತ್ತಮವಾದುದು.” ಎಂದು ಆತ್ಮವಿಶ್ವಾಸದಿಂದ ಬೀಗಿ ಹೇಳಿದ. “ಈಗ ನಾವು ರಾಜುವನ್ನು ನೋಡಬಹುದೆ?” ಎಂದು ಕಿಶೋರ್ ಕೇಳಿದ. ಅದಕ್ಕವರು, “ನೀವು ಬೇಕಾದರೆ ಅವನನ್ನೀಗ ನೋದಬಹುದು. ಆದರೆ ಅವನೀಗ ಪ್ರಜ್ಙಾ ಸ್ಥಿತಿಯಲ್ಲಿಲ್ಲ. ಅವನು ನಿಮಗೆ ತಾನಿರುವ ಸ್ಥಿತಿಗಿಂತ ಕೆಟ್ಟದಾಗಿ ಕಾಣಬಹುದು!” +ತೀವ್ರ ಶುಶ್ರೂಷಾ ಘಟಕದಲ್ಲಿ ಇಬ್ಬರು ಡಾಕ್ಟರು ಮತ್ತು ನರ್ಸ್‌ಗಳಿಂದ ಸುತ್ತುವರೆದ ರಾಜುವನ್ನು ನೋದಿದಾಗ, ಈ ಚೀಫ಼್ ಸರ್ಜನ್ ಹೇಳಿದ ಯಾವ ಮಾತುಗಳೂ ಸಹ ಅವರನ್ನು ಮಾನಸಿಕವಾಗಿ ಸಿದ್ಧ ಮಾಡಲಿಲ್ಲ ಎನಿಸಿತು. ಅವನ ಗಂಟಲಲ್ಲೊಂದು ಉಸಿರಾಟದ ನಳಿಕೆ, ಇನ್ನೊಂದು ಮೂಗಿನೊಳಗೆ, ರಕ್ತ ಒದಗಿಸುವ ಮತ್ತೊಂದು ನಳಿಕೆ ಬಲ ತೋಳಿಗೆ, ಐ.ವಿ. ಇನ್ನೊಂದು ತೊಳಿಗೆ ಅಂಟಿಸಲ್ಪಟ್ಟಿದವು. ಮಾನಿಟರ್‌ಗಳು ಅವನ ಸಕಲ ಜೈವಿಕ ಕ್ರಿಯೆಗಳನ್ನು ಚಾಚೂ ತಪ್ಪದೆ ಗಮನಿಸುತ್ತಿದ್ದವು. ಈ ಎಲ್ಲದರ ಮಧ್ಯೆ ರಾಜು ದೀರ್ಘ ನಿದ್ದೆಯಲ್ಲಿದ್ದ. ಅವನ ಮುಖ ಎಷ್ಟು ಕೊಚ್ಚಿ ಹೋಗಿತ್ತೆಂದರೆ, ಸ್ವತಃ ಕುಸುಮಳಿಗೇ ಗುರುತು ಸಿಗಲಿಲ್ಲ. ರಾಜುವಿನ ತಲೆಯ ಸುತ್ತ ರೋಗಾಣು ರಹಿತ ಸ್ವಚ್ಛ ಹೊದಿಕೆಯನ್ನು ಮುಚ್ಚಲಾಗಿತ್ತು. ಇನ್ನು ಸ್ವಲ್ಪ ಸಮಯದಲ್ಲೇ, ತಲೆಯ ಚಿಪ್ಪನ್ನು ಪೂರ ತೆಗೆದು, ಶಸ್ತ್ರ ಚಿಕಿತ್ಸೆಯನ್ನು ಮಾಡುವವರಿದ್ದರು. ಈ ಹೃದಯ ವಿದ್ರಾವಕ ದೃಶ್ಯ ನೋಡಿ, ಇಬ್ಬರೂ ದೀರ್ಘ ಅಶ್ರು ತರ್ಪಣ ಮಾಡಿ, ಡಾಕ್ಟರ್ ಸೂಚನೆಯ ಮೇರೆಗೆ ಹೊರ ಬಂದರು. +ಅಷ್ಟು ಹೊತ್ತಿಗಾಗಲೇ ರಾತ್ರಿ ಹತ್ತು ಗಂಟೆಯಾಗಿತ್ತು. ಇವರ್‍ಯಾರಿಗೂ ಊಟದ ಬಗ್ಗೆ ಕಾಳಜಿ ಇರಲಿಲ್ಲ. ಇಬ್ಬರೂ ಮಾತನಾಡದೆ, ಲಾಬಿಯ ಛಾವಣಿಯನ್ನೇ ಶೂನ್ಯ ದೃಷ್ಟಿಯಿಂದ ನೋಡುತ್ತಾ ಕುಳಿತರು. ಒಂದೊಂದು ನಿಮಿಷವೂ, ಒಂದೊಂದು ಯುಗದಷ್ಟು ದೀರ್ಘವಾಯಿತು. ಆಪರೇಷನ್ ಶುರುವಾಗಿ ಕೆಲವೇ ಗಂಟೆಗಳು ಕಳೆದಿರಬೇಕು. ಆಷ್ಟರಲ್ಲಿ ನರ್ಸ್ ಇವರಲ್ಲಿಗೆ ಬಂದು, ರಾಜುವಿಗೆ ಇನ್ನಷ್ಟು ರಕ್ತದ ಅವಶ್ಯಕತೆ ಇದೆಯೆಂದೂ, ಇವರಿಬ್ಬರಲ್ಲಿ ಯಾರಿಗಾದರೂ ರಕ್ತದಾನದ ಇಚ್ಛೆ ಇದೆಯೇ ಎಂದು ಕೇಳಿದಳು. ಕಿಶೋರ್ ಹಿಂದೆ ಮುಂದೆ ನೊಡದೆ, ರಕ್ತ ನೀಡಲು ಅವಳೊಡನೆ ತೆರಳಿದ. ಅದೃಷ್ಟವಶಾತ್, ಇಬ್ಬರದೂ ಒಂದೇ ರಕ್ತದ ಗುಂಪು ಆದ್ದರಿಂದ, ಹೋದ ಅರ್ಧ ಗಂಟೆಯೊಳಗೆ ರಕ್ತ ಕೊಟ್ಟು, ಕಿಶೋರ್ ಹೊರ ಬಂದ. +ಇದಾದ ಎರಡು ಗಂಟೆಗಳ ನಂತರ, ಚೀಫ಼್ ಸರ್ಜನ್ ಇವರಲ್ಲಿಗೆ ಬಂದು ವಿವರಿಸಲಾರಂಭಿಸಿದ: “ಶ್ರೀಮತಿ ರಾಜು, ಶಸ್ತ್ರ ಚಿಕಿತ್ಸೆಯನ್ನು ನಾವು ಯಶಸ್ವಿಯಾಗಿ ಮುಗಿಸಿದ್ದೇವೆ. ರಾಜುವಿನ ಸ್ಥಿತಿ ಈಗ ಸಮರ್ಪಕವಾಗಿದೆ. ಈಗ ಅವನನ್ನು ಆಪರೇಶನ್ ಥಿಯೇಟರ್‌ನಿಂದ ರಿಕವರಿ ರೂಂಗೆ ವರ್ಗಾಯಿಸಿದ್ದೇವೆ. ಇನ್ನು ಮುಂದಿನ ೪೮ ಗಂಟೆಗಳಲ್ಲಿ ಸರ್ಜರಿಯ ನಿಜವಾದ ಫಲಿತಾಂಶ ಹೊರ ಬೀಳುತ್ತದೆ. ನಾವೀಗಲೇ ಅವನು ಬದುಕ ಬಲ್ಲನೇ ಎಂದು ಹೆಳಲು ಕಷ್ಟವಾಗುತ್ತದೆ. ಇದುವರೆವಿಗಂತೂ ಎಲ್ಲವೂ ತೃಪ್ತಿಕರವಾಗಿದೆಯೆಂದು ಮಾತ್ರ ನಾವು ಹೇಳಬಹುದು. ಕಾದು ನೋಡೋಣ!” +ಇವರು ಅವನಿಗೆ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸಿದರು. ಆಷ್ತು ಹೊತ್ತಿಗಾಗಲೇ, ಬೆಳಕು ಹರಿದಿತ್ತು. ಪ್ರಾತಃರ್ವಿಧಿಗಳನ್ನು ಪೂರೈಸಿಕೊಂಡು ಬರೋಣವೆಂದು, ಕುಸುಮ ಮತ್ತು ಕಿಶೋರ್ ಮನೆಗೆ ತೆರಳಿದರು. +– ೩ – +ಪುನಃ ಅವರು ಆಸ್ಪತ್ರೆಗೆ ಮರಳಿದಾಗ ಬೆಳಿಗ್ಗೆ ೧೧ ಗಂಟೆಯಾಗಿತ್ತು. ಅಷ್ಟು ಹೊತ್ತಿಗೆ ರಾಜುವನ್ನು ರಿಕವರಿ ರೂಂನಿಂದ ತೀವ್ರ ಶುಶ್ರೂಷಾ ಘಟಕಕ್ಕೆ ಬದಲಾಯಿಸಿದ್ದರು. ಸ್ವಾಗತಾಧಿಕಾರಿಣಿಯಲ್ಲಿ ವಿಚಾರಿಸಿಕೊಂಡು ರಾಜುವಿದ್ದ ಕಡೆಗೆ ನಡೆದರು. ರಾಜುವಿಗಿನ್ನೂ ಪ್ರಜ್ಙೆ ಬಂದಿರಲಿಲ್ಲ. ಮುಖದ ಮೇಲಿನ ಗಾಯಗಳನ್ನು ಸ್ವಚ್ಛಗೊಳಿಸಲಾಗಿತ್ತು. ತಲೆಗೆ ದೊಡ್ಡ ಬ್ಯಾಂಡೇಜನ್ನು ಹಾಕಿದ್ದರು. ಮಿಕ್ಕೆಲ್ಲಾ ನಳಿಕೆಗಳು ಮತ್ತು ಮಾನಿಟರ್‌ಗಳು ಹಾಗೇ ಇದ್ದವು. ನರ್ಸ್ ಆಗಾಗ್ಗೆ ಬಂದು ಇವನನ್ನು ನೋಡಿಕೊಂದು ಹೋಗುತ್ತಿದ್ದುದಲ್ಲದೆ, ಇವನ ಮೂಲಭೂತ ಅಂಗಾಂಗಗಳ ಕಾರ್ಯವನ್ನು ತಾನಿರುವ ಕಡೆಯಿಂದಲೇ ಮಾನಿಟರ್ ಮುಖಾಂತರ ಅವಲೋಕಿಸುತ್ತಿದ್ದಳು. ಕುಸುಮ ಮತ್ತು ಕಿಶೋರ್ ಅವನ ಪಕ್ಕದಲ್ಲಿ ಮಾತಿಲ್ಲದೆ ಕೂತಿದ್ದು, ಸಾಕಷ್ಟು ಕಣ್ಣೀರು ಹರಿಸಿ, ಪರಿಸ್ಥಿತಿ ಅಸಹನೀಯವಾದಾಗ, ಲಾಂಜಿಗೈತಂದರು. +ಅದೇ ಸಮಯದಲ್ಲಿ, ಒಬ್ಬ ಪೋಲೀಸಿನವನು ಸ್ವಾಗತಾಧಿಕಾರಿಣಿಯ ಬಳಿ ನಿಂತಿದ್ದು ಕಾಣಿಸಿತು. ಕಿಶೋರನಿಗೆ ಏನೋ ಹೊಳೆದಂತಾಗಿ, ಕುಸುಮಳನ್ನು ಅವನಿರುವಲ್ಲಿಗೆ ಕರೆದುಕೊಂದು ಹೋಗಿ, ಅವನಿಗೆ ನಮಸ್ಕರಿಸಿ, ತಾನು ರಾಜುವಿನ ಅಪಘಾತದ ವರದಿಯನ್ನು ತಿಳಿಯಲು ಬಯಸುವುದಾಗಿ ತಿಳಿಸಿದ. ಅದೃಷ್ಟವಶಾತ್ ಆ ಪೋಲೀಸ್, ಹಿಂದಿನ ದಿನ ರಾಜುವನ್ನು ಆಸ್ಪತ್ರೆಗೆ ಸೇರಿಸಿದವನೇ ಆಗಿದ್ದರಿಂದ, ಅವನಿಗೆ ಅಪಘಾತದ ವಿವರಗಳೆಲ್ಲಾ ತಿಳಿದಿತ್ತು. ಕುಸುಮಳ ನಾಮಧೇಯವನ್ನು ಖಚಿತ ಪಡಿಸಿಕೊಂದ ನಂತರ, ಅಪಘಾತದ ವರದಿಯನ್ನು ಆಮೂಲಾಗ್ರವಾಗಿ ವಿವರಿಸಿದ. ಸಧ್ಯ, ಅಪಘಾತದಲ್ಲಿ ರಾಜುವಿನದೇನೂ ತಪ್ಪಿಲ್ಲವೆಂಬ ಅಂಶ ಕಿಶೋರನಿಗೆ ಸ್ವಲ್ಪ ಸಮಾಧಾನ ತಂದರೂ, ಬೇರೆ ಯಾರದೋ ತಪ್ಪಿಗೆ ತನ್ನ ಪ್ರಾಣ ಮಿತ್ರ ಜೀವ ತೆರಬೇಕಾಗಿ ಬರಬಹುದಲ್ಲ ಎಂದು ಯೋಚಿಸಿ ವಿಷಣ್ಣನಾದ. ಕುಸುಮಳಂತೂ ಜೀವಂತ ಶವವಾಗಿದ್ದಳು; ಸಧ್ಯ, ತನ್ನ ಗಂಡ ಬದುಕಿದರೆ ಸಾಕೆಂದು ಕ್ಷಣ ಕ್ಷಣಕ್ಕೂ ಭಗವಂತನನ್ನು ಪ್ರಾರ್ಥಿಸುತ್ತಿದ್ದಳು. ನಂತರ ಅವರು ಲಾಬಿಗೆ ಬಂದು ಕುಳಿತರು. +ಅಷ್ಟರಲ್ಲಿ ರಾಜುವಿನ ರಕ್ತದೊತ್ತಡ ಬೀಳುತ್ತಾ ಹೋಯಿತು. ಇದನ್ನೇ ಗಮನಿಸುತ್ತಿದ್ದ ನರ್ಸ್ ಕೂದಲೇ ರಾಜುವಿನ ಬಳಿಗೆ ಓಡಿ, ಅವನನ್ನು ತಪಾಸಣೆ ಮಾಡಿದಳು. ಪರಿಸ್ಥಿತಿ ವಿಕೋಪಕ್ಕೆ ಹೋದಂತೆ ಅವಳಿಗನ್ನಿಸಿತು. ಕೂಡಲೇ ಓಡಿ ಹೋಗಿ ವೈದ್ಯರುಗಳನ್ನು ಕರೆತಂದಳು. ಅವರೆಲ್ಲರೂ ಕೂಡಲೇ ಅವನನ್ನು ಸುತ್ತುವರೆದು, ಹೋಗುತ್ತಿರುವ ಪ್ರಾಣವನ್ನು ತಡೆಯಲು ಸರ್ವ ವಿಧದಲ್ಲೂ ಹೆಣಗಾಡಿದರು. ಬಿ.ಪಿ. ಸೊನ್ನೆಯಾಯಿತು, ಉಸಿರಾಟ ನಿಂತೇ ಹೊಯಿತು! ಕೂಡಲೇ ಉಸಿರಾಟವನ್ನು ಪುನರಾರಂಭ ಮಾಡುವ ಯಂತ್ರವನ್ನು ಎದೆಯ ಮೇಲಿಟ್ಟು, “ಧಡ್ ಧಡ್’ ಎಂದು ಆಘಾತ ಕೊಟ್ಟರು. ಅವರೆಷ್ಟು ಪ್ರಯತ್ನಿಸಿದರೂ, ರಾಜುವಿನ ಪ್ರಾಣ ಪಕ್ಷಿ ಹಿಂದಿರಗಲೇ ಇಲ್ಲ! +ಕೂದಲೆ, ಆ ವೈದ್ಯ ಮುಖ್ಯಸ್ಥರೆನಿಸಿದವರು, ಕುಸುಮ ಮತ್ತು ಕಿಶೋರ್ ಕುಳಿತಿರುವೆದೆಗೆ ಬಂದು, ನಿರ್ವಿಕಾರಚಿತ್ತರಾಗಿ ಹೇಳತೊಡಗಿದರು: “ಕೆಲವೇ ಕ್ಷಣಗಳ ಕೆಳಗೆ, ರಾಜುವಿನ ಸ್ಥಿತಿಯಲ್ಲಿ ಕಾಂಪ್ಲಿಕೇಶನ್ ಆಯಿತು. ಮೆದುಳಿನಲ್ಲಿ ತೀವ್ರವಾಗಿ ರಕ್ತ ಹೆಪ್ಪುಗಟ್ಟಿತು. ಮೆದುಳಿನ ’ಓಪನ್ ವೂಂಡ್’ ಸುತ್ತ ತುಂಬ ಊದಿಕೊಂಡುಬಿಟ್ಟಿತು. ಸರ್ಜರಿಯ ನಂತರ ಇದು ಆಗಿದೆ ಹಾಗೂ ರಾಜುವಿನ ದೇಹಸ್ಥಿತಿ ಸಮರ್ಪಕವಾಗಿ ಪ್ರತಿಕ್ರಿಯಿಸಲಿಲ್ಲ. ಇದರ ಪರಿಣಾಮವಾಗಿ – ನಾವೆಷ್ಟೇ ಪ್ರಯತ್ನಿಸಿದರೂ – ರಾಜುವನ್ನು ಉಳಿಸಿಕೊಳ್ಳಾಲಾಗಲಿಲ್ಲ ಎಂದು ತೀವ್ರ ವಿಷಾದಪೂರ್ವಕವಾಗಿ ನಿಮಗೆ ತಿಳಿಸುತ್ತಿದ್ದೇವೆ.” +ಕುಸುಮ ಎಚ್ಚರ ತಪ್ಪಿ ಕೆಳಗುರುಳಿದಳು, ಕಿಶೋರ್ ಸ್ಥಂಭೀಭೂತನಾದ. +***** +ಗ್ರಂಥ ಋಣ: ’ಹೃದಯ’ – ವಿಶ್ವನಾಥ್ ಹುಲಿಕಲ್, ಮನೋಹರ ಗಂಥ ಮಾಲಾ, ಧಾರವಾಡ, ಆಗಸ್ಟ್ ೧೫, ೨೦೦೩ +ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ […] +(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […] +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_358.txt b/Kannada Sahitya/article_358.txt new file mode 100644 index 0000000000000000000000000000000000000000..a49961e689e51c434f53a75fec9b1ffda06ec7a9 --- /dev/null +++ b/Kannada Sahitya/article_358.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ +ಆಡಿದ್ದು ಉಂಟು; +ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು +ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ +ಈ ವಿಶೇಷ +ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ +ಹಾರಿಸಿ +ಬಾಲಕನಂತೆ ಚಪ್ಪಾಳೆ ತಟ್ಟಿ +ಚಾಚಿದ ಮುಂಗೈ ಮೇಲೆ ಬಾಲ್ಯದಲ್ಲಿ ಕರಗತವಾದ ಕೌಶಲ್ಯದಲ್ಲಿ ಹಿಡಿದು +ಮುಂಗೈಯಿಂದ ಇನ್ನೂ ಮೇಲೆ ಎಸೆದು +ಸಾವಾಕಾಶದಲ್ಲಿ ಆಚೀಚೆ ಆಡಿಸಿ ತಡೆದು +ಮತ್ತೆ ಮುಂಗೈ ಮೇಲೆ ತಂಗಿಸಿಕೊಂಡು +ಇನ್ನೂ ಮೇಲೆ ಮೇಲೆ ಚಿಮ್ಮಿಸಿ ಮತ್ತೆ ಮತ್ತೆ ಪಡೆದು +ತೊಡೆ ತಟ್ಟಿ, ತಟ್ಟಿ, ಚಾಚಿ ಕಾಯುವ ಮುಂಗೈಗೆ ಮುದ ತಂದದ್ದನ್ನು +ಕ್ಷಣದಲ್ಲಿ ಹಾರಿಸಿ +ಮುಂಗೈ ಮುಷ್ಟಿಯಲ್ಲಿ ಈಗ ಅಧೀನವೆನ್ನಿಸುವ +ಅನ್ಯಕ್ಕೆ ಹಿಗ್ಗುವುದು +ತೆರೆದ ಅಂಗೈಮೇಲೆ ಹೊಳೆಯುವ ನಿಮಿತ್ಯದ ಪರವಸ್ತುವಿಗೇ +ಆಸೆ ಹುಟ್ಟಿಸುವಂತೆ ನೋನುತ್ತ +ಇಕೋ ದೇವರೇ ಎಂದು +ಆಕಾಶಕ್ಕೆ ಎಸೆದು +ಅವಸರದ ಬೆರಳುಗಳು ಹೊಂಚಿ ನರ್‍ತಿಸುವ ನಿರೀಕ್ಷೆಯಲ್ಲಿ +ಮಗುಚಿ ಬೀಳುವುದೆ ಸಹಜವಾದ ಪದಾರ್‍ಥ +ಅಂಗಾತ ಬಿದ್ದು ನಾಲ್ಕು ಕಣ್ಣುಗಳಾಗಿ ಒದಗಲೆಂದು +ಪ್ರಾಣವನ್ನೆ ಕಣ್ಣಲ್ಲಿ ತಂದು ಹಸಿಯುವುದು +ನಾನು ಆಡುವ ಮಾತು ನನ್ನನ್ನೇ ಕಾಣಬಲ್ಲವೆ? +ಕಷ್ಟ, ಸಂಕಲ್ಪ ಸಾಲದು; ಅದೃಷ್ಟ ಬೇಕು +***** +ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […] +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […] +ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_359.txt b/Kannada Sahitya/article_359.txt new file mode 100644 index 0000000000000000000000000000000000000000..f4a07d06e6d6ccd1fc9bc854add64d1ade1c410c --- /dev/null +++ b/Kannada Sahitya/article_359.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ +ಈ ಪಯಣದಲ್ಲಿ ಇದು ಅನಿವಾರ್ಯ +ನಿನ್ನದೊಂದು ದಾರಿ ನನ್ನದೊಂದು ಕವಲು +ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? +ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ +ಆ ತುದಿಯು ಈ ತುದಿಯು ಒಂದೇ ರೀತಿ +ನಡೆಯುವವರು ಜೊತೆಗಿಲ್ಲ ಆಗಾಗ ಬಿರುಗಾಳಿ +ಬಂದವರೋ ನಿನ್ನತರ ಆಗಾಗ ಕವಲುದಾರಿ. +ನೀನು ಸರಿಯೋ, ನಾನೋ? ಚಿಂತೆ ಬೇಡ ಗೆಳೆಯ +ಯಾವ ಮರದಲಿ ಗೂಡು ಎಂದರಿಯದ ಹಕ್ಕಿಗಳು +ಹೀಗೆ ಸರಿಯೋ ಹಾಗೋ ಎಂದರಿಯದ ಮೇಲೆ +ಹೀಗೂ ಸರಿ ಹಾಗೂ ಸರಿ ನಡೆಯುವ ತ್ರಾಣವಿರುವ ಮೇಲೆ. +ಒಂದಾಗಿ ನಡೆವವರ ಬೇರ್ಪಡಿಸಲು ಹಲವು +ಬಿರುಗಾಳಿ ಸುಳಿಗಾಳಿ ನೆಪ ಮಾತ್ರ +ಬಾಲ್ಯದುತ್ಸಾಹದಲಿ ಕಣ್ಣಮುಚ್ಚಾಲೆಯಾಟ +ಅಡಗುವವರು ಹಲವರು. ನೀನೋ ಹುಡುಕುವವ ಮಾತ್ರ. +ನಾನೋ, +ಹರೆಯದ ಮೂಟೆಯಲಿ ಕನಸುಗಳ ಸರಕು ಕಟ್ಟಿ ಹೊತ್ತು +ನಡೆದು ನಡೆದು ಬಳಲಿದ ಮೇಲೆ +ಸೂರ್ಯನಿಳಿದು ಬೆಳಕಿನ ಹುಳಗಳು ಪಿಳಪಿಳ ಮಿಂಚಿದ ಮೇಲೆ +ಮರದ ಕೊಂಬೆಯ ಮೇಲೆ ಕುಳಿತು +ಟುವ್ವಿ ಹಕ್ಕಿಯಂತೆ ಹಾಡಲು ಕಲಿತೆ +ಇಂಪೋ,ತಂಪೋ +ದೈನ್ಯತೆಯೋ ವಿಷಾದವೋ ಒಂದೂ ತಿಳಿಯದು +ಹಾಡು ಮರವನು ದಾಟಿ +ನಿಶ್ಯಬ್ದಕ್ಕೆ ಹೊರಳಿದ ರಸ್ತೆಯ ದಾಟಿ +ಪೊದೆ ಕುರುಚಲುಗಳ ಮೀರಿ +ಅಡಗಿರುವವರ ಮುಟ್ಟೀತೆ! ಒಂದೇ ಆಸೆ ನನಗೆ. +***** +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_36.txt b/Kannada Sahitya/article_36.txt new file mode 100644 index 0000000000000000000000000000000000000000..d13be93968831252debc3f6590ad5a3a48b17a70 --- /dev/null +++ b/Kannada Sahitya/article_36.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. +ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. ಅವರ ತಾಯಿಯವರು ಮಾತ್ರ ಈ ಹೆಜ್ಜೆಯನ್ನು ಅತಿ ‘ಖಟ್ಟಾ’ ರೀತಿಯಿಂದಲೇ ಪಾಲಿಸುತ್ತಿದ್ದರು. ಯಾವುದೇ ಸಣ್ಣ ದೊಡ್ಡ ಕಾರಣಗಳಿಂದ ಯಾವ ಕಾಲಕ್ಕೂ ಅವರಿಗೆ ‘ಶೀ, ಮೈಲಿಗೆಯಾಯಿತು’ ಎನಿಸಿದರೆ ಸಾಕು ; ಸೆಗಣಿ ನೀರಿನಿಂದ ಮೊದಲು ಸ್ನಾನಮಾಡಿ ಅನಂತರ ತಣ್ಣೀರ ಸ್ನಾನ ! ಅವರು ತಮ್ಮ ಜೀವನದಲ್ಲಿ ಸೆಗಣಿಗೆ ಅತ್ಯಂತ ಮಹತ್ವದ ಸ್ಥಾನ ಕೊಟ್ಟಿದ್ದರು. +ಒಮ್ಮೆ ಸಣ್ಣವರಿದ್ದಾಗ ಗುಂಡಾಭಟ್ಟರು ಕೈಯಲ್ಲೊಂದು ‘ಕಾಯಿಬಾಗ’ ಹಿಡಿದು ತಿನ್ನುತ್ತ ಹೊರಗೆ ಬಂದರಂತೆ. ಆ ಕೆಟ್ಟ ಕಾಗೆ ಎಲ್ಲಿಂದ ನೋಡುತ್ತಿತ್ತೋ, ಒಮ್ಮೆಲೇ ಅವರ ಕಾಯಿಬಾಗದ ಮೇಲೆ ಎರಗಿಬಿಟ್ಟಿತು. ಭಟ್ಟರು ಸಾಕಷ್ಟು ಗಟ್ಟಿಯಾಗಿಯೇ ಹಿಡಿದಿದ್ದರಿಂದ ಅದು ಕೈಯಿಂದ ಜಾರಲಿಲ್ಲ. ಇದನ್ನು ಅಡುಗೆಯ ಮನೆಯಿಂದಲೇ ಅವರ ಮಾತೋಶ್ರೀಯವರು ಕಂಡಿರಬೇಕು. “ಅಯ್ಯೋ ಮೈಲಿಗೆ ! ಕಾಗೆ ಮುಟ್ಟಿತಲ್ಲವೋ ಬೆಳಗ್ಗೆ ಎದ್ದಕೂಡಲೇ” ಎಂದು ಕೂಗುತ್ತ ಬಂದರು. “ಇಲ್ಲವ್ವ, ಅದು ನನಗೇನು ಮುಟ್ಟಲಿಲ್ಲ. ಬರೇ ಇದಕಷ್ಟೇ ಚುಂಚು ಬಡೆಯಿತು” ಎಂದರು ಭಟ್ಟರು. ಆದರೂ ಅವರು ಕೇಳಿದರಲ್ಲವೇ. ಕಣ್ಣಾರೆ ಕಂಡಬಳಿಕ ಉಪಾಯವುಂಟೇ ? ಮಗನಿಗೆ ದರ ದರ ಬಾವಿಯ ಮೇಲೆ ಎಳಕೊಂಡೇ ಹೋದರು. “ಚಲೋ ಕಾಯಿಬಾಗ. ಹೊರಗೆ ಹೋಗಬೇಡವೋ, ಒಳಗೆ ಕೂತು ಸಾಯೋ ಎಂದರೆ ಕೇಳ್ತಾನೆಲ್ಲಿ” ಎಂದು ಅದನ್ನೂ ಸೆಗಣಿ ನೀರಿನಿಂದ +ಪವಿತ್ರಗೊಳಿಸಿ, ಮಗನ ಕೈಯಲ್ಲಿ ಕೊಟ್ಟರು. ಮಗನು ಅತಿ ಭಕ್ತಿಯಿಂದಲೇ ಅದನ್ನು ಅವೀಕರಿಸಿದನೆಂದು ಬೇರೆ ಹೇಳಬೇಕಿಲ್ಲ. +ಕೋಳಿಯ ಪಿಷ್ಠವನ್ನು ಮೆಟ್ಟಿದರೆಂದು ಒಂದು ಸಲ, ನಾಯಿಯ ಬಾಲ ತಾಗಿದಂತಾಯಿತೆಂದು ಒಂದು ಸಲ, ಹಿತ್ತಲಲ್ಲಿ ಬಿದ್ದ ಹಳೇ ವಸ್ತ್ರದ ‘ಚಿಂದಿ’ ಮೆಟ್ಟಿದರೆಂದೊಂದು ಸಲ, +ಹೀಗೆ ಹಲವು ಸಲ ಸೆಗಣೀ ನೀರಿನ ಮೊರೆ ಹೋಗುವುದರಲ್ಲಿಯೇ ಅವರ ದಿನದ ಮುಕ್ಕಾಲು ಪಾಲು ವ್ಯಯವಾಗುತ್ತಿತ್ತು. +ಗುಂಡಾಭಟ್ಟರು ತಮ್ಮ ಮಡಿಯನ್ನು ಇಷ್ಟು ‘ಖಟ್ಟಾ’ ರೀತಿಯಿಂದ ಪಾಲಿಸುತ್ತಿರಲಿಲ್ಲ. ಅವರ ಮೈಲಿಗೆ ಕಳೆಯಲು ಬರೇ ತಣ್ಣೀರು ಜಳಕವೇ ಸಾಲುತ್ತಿತ್ತು. ಮೇಲಾಗಿ ಅವರ ಮೈಲಿಗೆಯಲ್ಲಿ ಎರಡು ಬಗೆಯಿದ್ದುವು : ಇದು ಆಗೇರ, ಚಮಗಾರರದೇ ಎಂದು ಪ್ರತ್ಯಕ್ಷ ಪುರಾವೆಗಳಿರದ ಹಳೇ ವಸ್ತ್ರದ ಚಿಂದಿಯನ್ನು ಮೆಟ್ಟಿದರೆ, ರಸ್ತೆ ಮೇಲೆ ಯಾರಾದರೂ ಉಗುಳಿದ ಕವಳದೆಂಜಲ ಮೆಟ್ಟಿದರೆ, ತಾನು ಮುಟ್ಟಿದ ಒಣ (ಹಸಿಯಿದ್ದರೆ ಪರಿವೆಯಿಲ್ಲ-ಅದು ಮೈಲಿಗೆ ವಾಹಕವಲ್ಲವೇನೋ !) ಕಟ್ಟಿಗೆಗೇ ಒಬ್ಬ ಹೊಲೆಯ ಮುಟ್ಟಿದರೆ ಬರೇ ತಣ್ಣೀರು ಜಳಕದಿಂದಲೇ ಅವರು ತಮ್ಮ ಮೈಲಿಗೆಯನ್ನು ಕಳೆಯುತ್ತಿದ್ದರು. ಆದರೆ ಪ್ರತ್ಯಕ್ಷ ಒಬ್ಬ ಅಗೇರ ಇಲ್ಲವೆ ಹೊಲೆಯನಿಗೆ ಕೈ ಸೋಂಕಿದರೆ, ಮುಟ್ಟಾದವರ ವಸ್ತ್ರಕ್ಕೆ ಕಾಲು ತಾಗಿದರೆ ಇಂತಹ ಘೋರ ಮೈಲಿಗೆಯನ್ನು ತಣ್ಣೀರ ಸ್ನಾನ, ಪಂಚಗವಾಕ್ಷ, ಗೋಮೂತ್ರ, ಕೊನೆಗೊಂದು ಹೊಸ ಜನಿವಾರ ಇಷ್ಟೆಲ್ಲ ಸಾಧನಗಳಿಂದಲೇ ನಿವಾರಿಸಬೇಕು. ಅವರ ಈ ಮಡಿ, ಮೈಲಿಗೆಗಳ ಮೇಲೆ ಅನೇಕ ಮನರಂಜಕವಾದ ಕತೆಗಳು ನಮ್ಮ ಹಳ್ಳಿಯಲ್ಲೆಲ್ಲ ಹಬ್ಬಿವೆ. ಆದರೆ ಅವೆಲ್ಲವುಗಳಲ್ಲಿ ಪ್ರಸ್ತುತ ಕತೆಯು ನನ್ನ ಮನ ಸೆಳೆದಿದೆ. +ಗುಂಡಾಭಟ್ಟರಿಗೆ ಪಿತ್ರಾರ್ಜಿತವಾಗಿ ಬಂದ ಮನೆ ಹುಲ್ಲಿನದು-ನಮ್ಮ ಮನೆಯ ಎಡಕ್ಕಿದ್ದ ಹಿತ್ತಲಲ್ಲಿತ್ತು. ಅವರ ಹಿತ್ತಲಿಗೆ ತಾಗಿಯೇ ಪಟೇಲ ದೊಡ್ತಮ್ಮನಾಯ್ಕರ ಗದ್ದೆಗಳು. ಮೊದಲು ಆ ಹೊಲಗಳನ್ನು ಆ ಮಾಸ್ತಿ ಹೊನ್ನಪ್ಪನೇ ಮಾಡುತ್ತಿದ್ದ. ಆದರೆ ಈ ಕೆಲವು ವರ್ಷಗಳಿಂದ ಅಗೇರ ಎಂಕು, ಮುರ್ಕುಂಡಿ ಅದನ್ನು ಮಾಡುತ್ತಿದ್ದಾರೆ. ದೊಡ್ತಮ್ಮ ನಾಯ್ಕ ಆ ಗದ್ದೆಯ ತಡಿಯಲ್ಲಿಯೇ ಅವರಿಗೆ ಗುಡಿಸಲುಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಆ ಗುಡಿಸಲುಗಳಿಗೂ ಇವರ ಹಿತ್ತಲಿಗೂ ನಡುವೆ ಹರಕು-ಮುರುಕಾದ ಬೇಲಿಯೊಂದಿದೆ. ಅಗೇರರ ಹೊಲಸು ಜೀವನ ನೋಡಿ ಊರೊಳಗಿನ ಮೈಲಿಗೆಯೆಲ್ಲ ತಮ್ಮ ನೆರೆಯಲ್ಲೇ ಬೀಡುಬಿಟ್ಟಿತೆಂದು ಭಾಸವಾಯಿತು ಭಟ್ಟರಿಗೆ. ಅವರ ತಾಯಿಯವರು ಈಗ ಬದುಕಿದ್ದರೆ ಏನು ಮಾಡುತ್ತಿದ್ದರೋ ! ಒಮ್ಮೊಮ್ಮೆ ತಮ್ಮ ತಾಯಿಯ ಪ್ರಖರ ಮಡಿಯ ಪ್ರಭಾವದ ಝಳಕ್ಕೆ ಬೆದರಿಯೇ ಅದು ಅಷ್ಟು ದಿನ ಅಲ್ಲಿ ಬರಲಿಲ್ಲವೇನೋ ಎಂದು ಅವರಿಗೆ ಅನಿಸಿದ್ದೂ ಉಂಟು. +ಅಂತೂ ನೋಡುನೋಡುತ್ತಿರುವಷ್ಟರಲ್ಲಿ ಅಗೇರರ ಕೋಳಿಯ ಹಿಂಡುಗಳು, ಗಂಜಿ, ಅಂಬಲಿ ಕುದಿಸುವ ಮಣ್ಣಿನ ಗಡಿಗೆಯ ತುಣುಕುಗಳು, ವಸ್ತ್ರದ ಚಿಂದಿಗಳು ಇವರ ಹಿತ್ತಲಿನ ಪವಿತ್ರತೆಯ ಮೇಲೆ ದಾಳಿ ಮಾಡಿಬಿಟ್ಟವು. ದಿನ ಹತ್ತೆಂಟು ಸಲ ಜಗಳದ ಕಿಡಿ ಹಾರಹತ್ತಿದುವು. ನಿರ್ಭಯದಿಂದ ಇವರ ಬೇಲಿಯೊಳಗಿನ ಕಟ್ಟಿಗೆಯೇ ಮಾಯವಾಗಹತ್ತಿತು. ಇನ್ನೇನು ಕೆಲವು ದಿನಗಳಲ್ಲಿ ಅವರ ಹಾವಳಿ ಇವರ ತೆಂಗಿನ ‘ಮಿಳ್ಳೆ’ಗಳಿಗೂ, ಬಿದ್ದ ಹೆಡೆಗಳಿಗೂ ಬರಹತ್ತಿತು. ಗುಂಡಾಭಟ್ಟರಿಗೆ ಅಲ್ಲಿ ಜೀವನವೇ ಕಷ್ಟವೆನಿಸಿತು. ಅಂತೆಯೇ ತಮ್ಮ ಹೊಸ ಹಂಚಿನ ಮನೆಯನ್ನು ನಮ್ಮ ಮನೆಯ ಬಲಕ್ಕಿರುವ ತಮ್ಮ ಸಣ್ಣ ಹಿತ್ತಲಿನ ಚೂರಿನಲ್ಲಿಯೇ ಕಟಿಸಿದರುಕಟ್ಟಿಸಿದರು. ಅಲ್ಲಿ ಅವರ ಮಡಿಗೂ ಸ್ವಲ್ಪ ಭದ್ರತೆ ಸಿಕ್ಕಂತಾಯಿತು-ಸುತ್ತಲೂ ಜಾತಿಯವರ ಮನೆಗಳೇ. +ಭಟ್ಟರು ಸ್ವತಃ ಅಲ್ಲಿರುವಾಗಲೇ ಮಾಯವಾಗಹತ್ತಿದ ಬೇಲಿ ಅವರು ಅಲ್ಲಿಂದ ತಳ ಕಿತ್ತ ಮೇಲೆ ಇರುವುದುಂಟೇ ? ಅವರ ಮಕ್ಕಳು ಧೈರ್ಯದಿಂದ ಅಲ್ಲಿ ‘ಚಿಣಿಫಣಿ’ ಆಡಹತ್ತಿದರು. ಭಟ್ಟರು ಹಾಳು ಸುರಿಯುವ ತಮ್ಮ ಹಿತ್ತಲಿಗೆ ದರುಶನವಿತ್ತ ಪ್ರತಿಯೊಂದು ಸಲ ತಣ್ಣೇರ ಜಳಕ ಮಾಡಬೇಕಾಗುತ್ತಿತ್ತು-ಅಷ್ಟೊಂದು ಹಾಳುಮಾಡಿಬಿಟ್ಟಿದ್ದರು ! +ಕ್ರಮೇಣ ಆ ಹಿತ್ತಲಿನ ಬಗ್ಗೆ ನಿರಾಶೆಗೊಂಡರೂ ಅಲ್ಲಿದ್ದ ಹತ್ತೆಂಟು ಮಾವಿನ ಮರ, ನಾಲ್ಕೈದು ಹಲಸಿನ ಗಿಡಗಳಿಂದ ಅವರು ಆ ಹಿತ್ತಲಿನ ಮೋಹ ಬಿಟ್ಟಿರಲಿಲ್ಲ. ಅವಕ್ಕೇನು ನೀರು ಬೇಕೇ, ಗೊಬ್ಬರ ಬೇಕೇ. ತಾವಾಗಿ ಬೆಳೆದು ನಿಂತಿವೆ. ಆದುದರಿಂದ ಮಾವಿನ ಕಾಯಿಯ ದಿನಗಳಲ್ಲಿ ತಮ್ಮ ಮೈಲಿಗೆಯ ಭಯವನ್ನೂ ಕೆಲ ದಿನ ಬದಿಗಿಟ್ಟು ಆ ಹಿತ್ತಲಿಗೆ ಆಗಾಗ ಹೋಗಿಬರುತ್ತಿದ್ದರು. ದೊಡ್ತಮ್ಮ ನಾಯ್ಕರಿಗೆ ಸ್ವಲ್ಪ ಹೇಳಿ ಆ ಅಗೇರ ಮಕ್ಕಳಿಗೆ ತಮ್ಮ ಹಿತ್ತಲಲ್ಲಿ ಕಾಲಿಡದಂತೆ ತಾಕೀತು ಮಾಡುತ್ತಿದ್ದರು. +ಆ ವರುಷ ಮಾವಿನ ಬೆಳೆಗೆ ಒಳ್ಳೇ ಸುಗ್ಗಿ ಬಂದಂತಾಗಿತ್ತು ನಮ್ಮ ಊರಲ್ಲಿ. ಭಟ್ಟರ ಹತ್ತೆಂಟು ಮರಗಳೂ ಕಾತಿದ್ದವು. ಆದರೆ ಅತ್ಯಂತ ಒಳ್ಳೇ ಕಾಯಿ ಮರವೇ ಅಗೇರರ ಗುಡಿಸಲ ಮೇಲೆ ಒಲಿದಿತ್ತು. ಅದರ ‘ಚಲೋ’ ಬೆಳೆದ ಕಾಯಿ, ತೆಂಗಿನಕಾಯಿಗಿಂತಲೂ ದೊಡ್ಡದಾದುದು. ಹಣ್ಣಿನಂತೆ ಕಾಯಿಗೂ ಒಂದು ಬಗೆಯ ರುಚಿ. ‘ಆಸೆಗೆ’ ಹಾಕಿದರಂತೂ ಒಳ್ಳೆಯ ಬೆಣ್ಣೆಯಂತಾಗುತ್ತಿತ್ತು ! ಆದರೆ ಆ ಮರವನ್ನು ಹತ್ತಲು ಜನ ಹೆದರುತ್ತಿದ್ದರು. ನಡುವೆಯೇ ಅದಕ್ಕೆ ‘ಕೆಡಕು’ ಬಂದಿದೆಯೆಂದೂ ಬಹಳೇ ಹಳೆಯದೆಂದೂ ಅದನ್ನು ಹತ್ತುವ ಧೈರ್ಯ ಆಗುತ್ತಿರಲಿಲ್ಲ. ತಮ್ಮ ಬಾಲ್ಯದಿಂದ ಒಮ್ಮೆಯೂ ಆ ಮರವನ್ನು ಯಾರೂ ಹತ್ತಿದ್ದು ಭಟ್ಟರು ನೋಡಿರಲಿಲ್ಲ. ಆದುದರಿಂದ ತಾವೂ ಯಾರನ್ನೂ ಹತ್ತಿಸುವ ಸಾಹಸಕ್ಕೆ ಬಿದ್ದಿರಲಿಲ್ಲ. ಮಂಗ ಬಂದು, ಇಲ್ಲವೇ ದೊಡ್ಡ ಗಾಳಿಗೆ ಬಿದ್ದ ಹಣ್ಣು-ಕಾಯಿಗಳಿಂದಲೇ ಅವರು ತೃಪ್ತಿಪಡಬೇಕಾಗುತ್ತಿತ್ತು. ಮಂಗಗಳ ಹಾವಳಿ ಹೆಚ್ಚಿ, ಬಹಳ ಕಾಯಿ ಬಿದ್ದರೆ ಪರಮೇಶ್ವರಿಯ ಕೈಯಲ್ಲಿ ಕೊಟ್ಟು ಮೂರು ರಸ್ತೆಯ ಬಳಿಯಲ್ಲಿ ಚಪ್ಪೀಕಲ್ಲು ಮಾರ ಬರುವ ಅಂಬೇರ ಹೆಂಗಸರಿಗೊ ಒಕ್ಕಲಗಿತ್ತಿಯರಿಗೊ ಬಿಲ್ಲಿಗೆ, ಎರಡು ಬಿಲ್ಲಿಗೆ ಐದರಂತೆ ಮಾರಿಸುವುದೂ ಉಂಟು. ಅವರು ಆ ಕಾಯಿಗಳನ್ನು ಹುಳಿಸೊಪ್ಪಿಗೂ ಮೀನ ಆಸೆಗೂ ಉಪಯೋಗಿಸುತ್ತಿದ್ದರು. ಆದರೂ ಬಹಳ ಕಾಯಿಗಳಿಂದ ತುಂಬಿದ ಹೆಗ್ಗೆಯೋ ಅಗೇರರ ಹಿತ್ತಲಲ್ಲಿ ಒಲಿದಿದ್ದರಿಂದ ಅವರು ಎಷ್ಟೋ ಸಲ ಕೊರಗುತ್ತಿದ್ದರು. +ದಿನವೂ ರಾತ್ರಿ ಒಮ್ಮೆ ಎದ್ದು ತಮ್ಮ ‘ಮಿಣಿ ಮಿಣಿ’ ಕಂದೀಲನ್ನು ಕೈಯಲ್ಲಿ ಹಿಡಿದು ಹಿತ್ತಲಲ್ಲಿ ಸುತ್ತಿಬರುವುದು ಭಟ್ಟರ ವಾಡಿಕೆ, ಗಾಳಿ-ಮಳೆಯ ಝಡಿಗೆ ಬಿದ್ದ ಹಣ್ಣು-ಕಾಯಿಗಳನ್ನು ಹೆಕ್ಕಿ ತರಲು. ಮೇಲಾಗಿ ಆ ಲಾಟೀನಿನ ಮಂದ ಬೆಳಕಿನಲ್ಲಿ ಅಲ್ಲಿನ ಚಿಂದಿ-ಗೊಂದಿಗಳೂ ಕಣ್ಣಿಗೆ ಬೀಳುತ್ತಿರಲಿಲ್ಲವಾದ್ದರಿಂದ ಮೈಲಿಗೆಯ ಭಯವೂ ಇರುತ್ತಿರಲಿಲ್ಲ. ಕಣ್ಣಿಗೆ ಬಿದ್ದರೆ ಮಾತ್ರ ಮೈಲಿಗೆ ತಾನೆ ! +ಅಂದು ಗಾಳಿಯೂ ಜೋರಾಗಿ ಬೀಸುತ್ತಿತ್ತು. “ಆ ಹಣ್ಣು ಸಾಯಲಿ, ಎಲ್ಲಾದ್ರೂ ಗಾಳಿಗೆ ಹೆಗ್ಗೆ ಮುರಿದುಬಿದ್ದೀತು” ಎಂದು ಹೆಂಡತಿ ಕೊಟ್ಟ ಎಚ್ಚರಿಕೆಯನ್ನೂ ಲೆಕ್ಕಿಸದೆ ಭಟ್ಟರು ಹೊರಗೆ ಬಿದ್ದರು. ಅವರು ಅಪೇಕ್ಷಿಸಿದಂತೆ ಲೆಕ್ಕವಿಲ್ಲದಷ್ಟು ಹಣ್ಣು ಕಾಯಿಗಳು ಉದುರಿದ್ದವು. ಇನ್ನೂ ಉದುರುತ್ತಲಿದ್ದವು. ಭಟ್ಟರು ತಮ್ಮ ಕೈಯಲ್ಲಿ ಒಯ್ದ ಬುಟ್ಟಿ ತುಂಬಿಹೋದುದರಿಂದ ಉಟ್ಟ ಪಂಚೆಯ ಸೆರಗಿನಲ್ಲಿಯೇ ತುಂಬ ಹತ್ತಿದರು. ಆ ಬದಿಯ ಹಿತ್ತಲಲ್ಲಿ ಅಗೇರರ ಮಕ್ಕಳೂ ಹೆಕ್ಕ ಬಂದಿದ್ದರು. ಆಗಾಗ ಭಟ್ಟರು ಅವರನ್ನು ಬಹಿರಂಗವಾಗಿ ಶಪಿಸುತ್ತ ತಮ್ಮ ಮರವೆಂಬ ಬೆದರಿಕೆ ತೋರಿಸಿ ಅವರು ಹೆಕ್ಕಿದ ಹಣ್ಣುಗಳಲ್ಲಿ ಕೆಲವನ್ನು ತಮಗೆ ಕೊಡಬೇಕೆಂದರು. ಆದರೂ ಅವರು ಕೇಳಿದರಲ್ಲವೇ. ತಾವೇ ಆ ಹಿತ್ತಲಲ್ಲಿ ಹೋದರೆ… ಎನಿಸಿತು ಒಮ್ಮೆ. ಆದರೆ ಅಲ್ಲಿಯ ಮೈಲಿಗೆಯ ನೆನಪಾಗಿ ಮೈ ಜುಮ್ಮೆನಿಸಿತು. ಅಷ್ಟರಲ್ಲಿ ‘ಢಬ್’ ಎಂದಿತು ಹಣ್ಣೊಂದು. ಭಟ್ಟರು ಆವಾಜಿನ ಮೇಲೇ ಅದರ ಆಕಾರವನ್ನು ಊಹಿಸಿದರು. ಕ್ಷೀಣ ಬೆಳದಿಂದಗಳಲ್ಲಿಬೆಳದಿಂಗಳಲ್ಲಿ ಹಣ್ಣು ಕಾಣಿಸದಿದ್ದರೂ ಆವಾಜಿನ ಮೇಲೆಯೇ ಅದರ ಜಾಗ ತರ್ಕಿಸಿದರು. ಹಣ್ಣು ಇವರ ಹಿತ್ತಲಿಗೆ ತಾಗಿಯೇ ಅಗೇರರ ಹಿತ್ತಲಲ್ಲಿ ಬಿದ್ದಿತ್ತು. ಭಟ್ಟರು ಬಿದ್ದ ಸದ್ದಿಗೇ ಮೋಹಿತರಾಗಿ ಅಗೇರರ ಹಿತ್ತಲೆಂಬುದನ್ನೂ ಮರೆತು ಅತ್ತ ಧಾವಿಸಿದರು. ಹಣ್ಣು ಇವರ ವಶವಾಯಿತು-ಉಬ್ಬಿಹೋದರು. ಕೈತುಂಬ ಹಣ್ಣು ! ಆದರೆ ಮರುಕ್ಷಣ ತಮ್ಮ ಕೈ ಆ ಅಗೇರ ಮುರ್ಕುಂಡಿಯ ‘ಕೋಸ’ನ ಕೈಲಿದ್ದುದನ್ನು ಕಂಡು ಬೆಚ್ಚಿಬಿದ್ದರು. “ಏನ್ರಾ ಭಟ್ಟರೆ, ಮುಟ್ಟಿಬಿಟ್ರಲ್ಲಾ ? ಅಯ್ಯೋ ಮೈಲಿಗೆಯಾಯ್ತು, ಹೋಗಿ ಮೀಯಬೇಕಾಯ್ತಲ್ಲ ? ಪಾಪ. ನಮ್ಮ ಹಿತ್ತಲಿಗೆ ಯಾಕೆ ಕಾಲಿಡಬೇಕೋ ?” ಎಂದ ಕೋಸ. ಅಲ್ಲಿಯೇ ಅವನ ಕುತ್ತಿಗೆ ಹಿಚುಕಿ ಕೊಂದುಬಿಡಲೇ ಎನ್ನುವಷ್ಟು ಸಿಟ್ಟು ಬಂದಿತ್ತು ಭಟ್ಟರಿಗೆ. ಆದರೂ ಈ ಅಪರಾತ್ರಿಯಲ್ಲಿ ಸ್ನಾನ ಮಾಡುವ ಹೊತ್ತು ಬಂತಲ್ಲ ಎಂಬ ಮಿಡುಕಿನಲ್ಲಿ ತಮ್ಮ ಸಿಟ್ಟನ್ನೆಲ್ಲ ಹೊಟ್ಟೆಯಲ್ಲಿ ಹಾಕಿ ಗೊಂಬೆಯಂತೆ ಸಿಕ್ಕಷ್ಟು ಹಣ್ಣಿನೊಡನೆ ಮನೆಯ ಹಾದಿ ಹಿಡಿದರು. ಸ್ನಾನ ಮಾಡಿದರೂ ಜನಿವಾರ ಬೇರೆ ಬೇಕು. ಈ ನಡುರಾತ್ರೆಯಲ್ಲಿ ಜನಿವಾರ ಎಲ್ಲಿಂದ ತರುವುದು ?… ವಿಚಾರದಲ್ಲಿ ಮಗ್ನರಾಗಿದ್ದಂತೆ ಭಟ್ಟರ ಕೈ ಕೈತುಂಬ ಪಸರಿಕೊಂಡ ಆ ದೊಡ್ಡ ಹಣ್ಣನ್ನು ತಿರುವಿ ಹಾಕಿತು. ಆದರೆ ಅದಕ್ಕೆ ತಳವೇ ಇರಲಿಲ್ಲ ! ಅಯ್ಯೋ ಈ ಹಾಳು ‘ಕೊರಕಲಿ’ನ ಸಲುವಾಗಿ ಮೈಲಿಗೆಯಾಯಿತಲ್ಲ ಎಂಬ ಸಿಟ್ಟಿನಲ್ಲಿ ಅದನ್ನು ‘ಢಪ್’ ಎಂದು ನೆಲಕ್ಕೆ ಒಗೆದರು. +ಮನೆ ಮುಟ್ಟಿದ ಕೂಡಲೇ ಹೊರ ಜಗುಲಿಯ ಮೇಲೆ ನಿಂತು ಭಟ್ಟರು ತಮ್ಮ ಪತ್ನಿಯನ್ನು ಕರೆದರು. ಗಾಢ ನಿದ್ರೆ ಸೇರಿದ ಅವಳಿಗೆ ಇವರ ಕೂಗು ಕೇಳಿಸಲಿಲ್ಲವೇನೋ. “ಹೋಯ್ ಕೇಳಿಸ್ತೇನೆ, ಸ್ವಲ್ಪ ಹೊರಗೆ ಬಾ ಎಂದೆ ; ಹೋಯ್” ಎಂದು ಒಂದೇ ಸವನೆ ಕರೆಯಹತ್ತಿದರು. ಪಾಪ, ಅವಳಿಗಾದರೂ ಏನು ತಿಳಿಯಬೇಕು. ದಿನವೂ ಇವರು ರಾತ್ರಿಯ ವೇಳೆಗೆ ಹೊರಗೆ ಹೋಗುತ್ತಿದ್ದರು. ಕೈಕಾಲು ತೊಳೆದು ಮತ್ತೆ ಮಲಗಿಕೊಳ್ಳುತ್ತಿದ್ದರು. ಅವಳು ಅರೆನಿದ್ದೆಯಿಂದ ಎಚ್ಚರಿಸಿದ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ಹೊರಗೆ ಬಂದಳು. +“ಇದ್ನೋಡೆ. ಒಂದು ಪಂಚಾಯ್ತಿ ಆಯ್ತಲ್ಲವೇ. ನನಗೆ ಆ ಬೋ…ಮಗ ಮುರ್ಕುಂಡೀ ಕೋಸಾ ಮುಟ್ಟಿಬಿಟ್ಟ. ಏನು ಸೊಕ್ಕ್ಯಾರೆ ಮಕ್ಕಳು. ಮೈಮೇಲೆ ಬಿದ್ದುಬಿಟ್ಟ. ಮೈಲಿಗೆ ಆಗಿಬಿಟ್ಟಿತಲ್ಲ” ಎಂದರು ಕೆಳದನಿಯಲ್ಲಿ. ಈ ಅಪರಾತ್ರಿಯಲ್ಲೆಲ್ಲಿ ಇವರಿಗೆ ನೀರು ಸೇದಿ ಕೊಡುವ ಪ್ರಸಂಗ ಬಂತೋ ಎಂದು ಬೇಸರದ ದನಿಯಲ್ಲಿ, “ಹೊರಗೆ ಕೆಟ್ಟ ಗಾಳಿ ಬಿಟ್ಟಿದೆ. ಈಗ ಹೇಗೆ ಝಳಕಾ ಮಾಡ್ತೀರಿ ? ಈಗ ಹಾಗೆಯೇ ಮಲ್ಕೊಳ್ಳಿ. ನಾಳೆ ಬೆಳಿಗ್ಗೇ ಹಾಸಿಗೆ ಒಗೀಲಿಕ್ಕೆ ಹಾಕಿ, ಝಳ್ಕಾ ಮಾಡಿದ್ರಾಯ್ತು” ಎಂದಳು ಅವರ ಧರ್ಮಪತ್ನಿ. ಭಟ್ಟರಿಗೂ ಈ ಮಾತು ಸಮಂಜಸ ತೋರಿತು, ಜನಿವಾರದ ತೊಂದರೆಯೂ ತುರ್ತು ತಪ್ಪಿತಲ್ಲ ಎಂದು. “ಹೌದು, ನೀ ಅಂದ ಹಾಗೆ ನಾಳೆ ಬೆಳಿಗ್ಗೇ ಝಳ್ಕಾ ಮಾಡಿದ್ರಾಯ್ತು. ಇಲ್ಲೇ ಹೊರಗೆ ಜಗಲಿಯ ಮೇಲೆ ಮಲ್ಕೊಳ್ತೆ. ನನಗೇನೂ ಬೇಡ. ಆ ಚಾಪೆ ಒಂದು ತಾ, ಮತ್ತೇನಾದ್ರೂ ಹೊದ್ದುಕೊಳ್ಳಲಿಕ್ಕೆ ಕೊಡು” ಎಂದರು. ಒಳಗಿನಿಂದ ಚಾಪೆಯೊಂದನ್ನು ತಂದುಕೊಡುತ್ತ “ಆ ದಟ್ಟವಾದ ದುಪ್ಪಟ ಒಗಿಯಲಿಕ್ಕೆ ಹಾಕಿದರೆ ಹಾಳಾಗಿಬಿಡ್ತದೆ. ಈಗ ರಾತ್ರೆ ಯಾರು ನೋಡಲಿಕ್ಕೆ ಬಂದಾರೆ. ನಸ್ಕೀಗೇ ಎದ್ರಾತು. ಇದನ್ನೇ ಹೊದ್ದುಕೊಳ್ಳಿ. ಹೇಗಾದರೂ ನಾಳೆ ತೊಳೆಯೋದೇ ಇತ್ತು” ಎಂದು ತನ್ನ ದಟ್ಟವಾದ ಸೀರೆಯೊಂದನ್ನು ತಂದುಕೊಟ್ಟಳು. ಭಟ್ಟರು ಅದನ್ನು ಹೊದ್ದು ಅಲ್ಲೇ ಜಗಲಿಯ ಮೇಲೆ ಒರಗಿಕೊಂಡರು. ಆದರೂ ಅವರಿಗೆ ನಿದ್ದೆ ಬೇಗ ಹತ್ತಲಿಲ್ಲ. ತಿರುಗಿ ತಿರುಗಿ ಏಕೊ ‘ಮೈಲಿಗೆ, ಮೈಲಿಗೆ’ ಎಂಬ ಭಾವನೆ ತಗಣಿ ಗುಂಗಾಡುಗಳಿಗಿಂತ ಹೆಚ್ಚಾಗಿ ಕಾಡಹತ್ತಿತು. ಜನಿವಾರ ಒಂದಕ್ಕೆ ಖಾರ ಬಂದಿತಲ್ಲಾ ಎಂದೂ ಮಿಡುಕಿದರು. +ರಾತ್ರೆ ಬಹಳ ಹೊತ್ತು ನಿದ್ದೆಗೆಟ್ಟಿದ್ದರಿಂದಲೋ ಏನೋ ಭಟ್ಟರಿಗೆ ರಾತ್ರೆಯ ಕೊನೆಯ ಜಾವದಲ್ಲಿ ಗಾಢ ನಿದ್ದೆ ಹತ್ತಿಬಿಟ್ಟಿತು. ಸೀರೆಯನ್ನು ಮೋರೆಯ ಮೇಲೆಲ್ಲ ಮುಸುಕೆಳೆದು ಅವರ ಆ ಗಿಡ್ಡ ದೇಹ ಗೊರಕೆ ಹೊಡೆಯಹತ್ತಿತು. +ಭಟ್ಟರ ಹೆಂಡತಿ ಎಂದಿನಂತೆ ನಸುಕಿನಲ್ಲಿಯೇ ಎದ್ದು ಹೊರಗೆ ಬಂದಳು. ಅವಳೊಡನೆ ಅವರ ಆರು ವರುಷದ ಚಿರಂಜೀವನೂ ಎದ್ದು ಬಂದ. ಆದರೆ ಅವನಿಗೆ ಸರಿಯಾಗಿ ಮೆಟ್ಟಿಲುಗಳಿಂದ ಅಂಗಳಕ್ಕೆ ಇಳಿಯುವ ಅಭ್ಯಾಸವೇ ಇಲ್ಲ: ಯಾವಾಗಲೂ ಸ್ವಲ್ಪ ಅಡ್ಡಹೋಗಿ ಜಗಲಿಯ ಮೇಲಿಂದ ಅಂಗಳಕ್ಕೆ ಜಿಗಿಯುವುದು ಅವನ ಪರಿಪಾಠ. ಅಂದೂ ಅವನು ಹಾಗೆಯೇ ಜಿಗಿಯಹೋದ. ಪಾಪ ! ನಸುಕಿನಲ್ಲಿ ಆ ಕಪ್ಪು ಸೀರೆ ಅವನಿಗೆ ಹೇಗೆ ಕಾಣಬೇಕು. ಒಮ್ಮೆಲೇ ಎಡವಿ “ಛೇ ! ಅವ್ವಾ ಇಲ್ಲಿ ಯಾರು ಮಲಗ್ಯಾರವ್ವ. ನಾನು ಬಿದ್ದುಹೋಗ್ತಿದ್ದೆ” ಎಂದ. ಅವಳಿಗೂ ಈಗ ನೆನಪಾಯಿತು, ತನ್ನ ಗಂಡ ಅಲ್ಲಿ ಮಲಗಿದ್ದು. “ಅಯ್ಯೋ ಮುಟ್ಟಿದಿಯೇನೋ ? ತಡೆ. ನನಗೆ ಮುಟ್ಟಬೇಡ. ಏ ತಡಿಯೋ, ಅಲ್ಲೇ ನಿಲ್ಲು. ದಿನಾ ಎಂಟು ಗಂಟೆಯಾದರೂ ಏಳದವ ಇಂದು ಯಾಕೆ ಸಾಯಲಿಕ್ಕೆ ಇಷ್ಟು ನಸ್ಕೀಗೆ ಎದ್ದುಬಂದೆಯೊ… ಹೋಯ್, ಸ್ವಲ್ಪ ಏಳಿ ಅಂದೆ. ಅದೇ ನಿಮ್ಮ ಮಗ ನಿಮಗೆ ಮುಟ್ಟಿಬಿಟ್ಟ, ಅವನ ಅಂಗಿ ಸ್ವಲ್ಪ ಕಳೀರಿ” ಎಂದಳು. ಭಟ್ಟರಿಗೂ ಈಗ ಸ್ವಲ್ಪ ಎಚ್ಚರಾಗಿತ್ತು. ತಾವು ಇದ್ದ ಸ್ಥಿತಿಯ ಅರಿವಾದ ಕೂಡಲೇ “ಇಲ್ಲಿ ಯಾಕೆ ಬಂದೆಯೋ ಜೀವಾ ಕೊಡಲಿಕ್ಕೆ ? ಅಂಗಳಕ್ಕೆ ಇಳಿಯಲು ಮೆಟ್ಟಿಲು ಇಲ್ಲವೇನೋ, ಥೋ ಇವ್ನಾ” ಎಂದು ಬಯ್ಯುತ್ತ ಅವನ ಅಂಗಿ ಕಳಿಯಹತ್ತಿದರು. ಅವನು ಹೆದರಿ ಒಮ್ಮೆಲೇ ಅಳಹತ್ತಿದ. ಅವನಿಗೆ ತನ್ನ ಹಿಂದಿನ ಯಾವುದೋ ಅನುಭವದ ನೆನಪಾಗಿ “ಅವ್ವಾ, ಅಪ್ಪನಿಗೆ ಯಾವ ‘ನಾಯಿ ಮುಟ್ಟಿ’ತವ್ವಾ?-ಅಪ್ಪ ಮುಟ್ಟೇನವ್ವಾ?” ಎಂದು ಕೇಳಿದ. ಆದರೆ ಆ ಸಣ್ಣ ಹುಡುಗನಿಗೆಲ್ಲ ಹೇಗೆ ಹೇಳಬೇಕು ? ಅವರು ಅವನಿಗೆ ಸರಿಯಾಗಿ ಉತ್ತರ ಕೊಡದೇ “ಹೋಗು ಹೋಗು ಸುಂನೆ ಹೋಗು” ಎಂದು ಬೆದರಿಸಿಬಿಟ್ಟರು. ತಂದೆಯೊಡನೆ ಮಗನಿಗೂ ತಣ್ಣೀರ ಝಳಕವಾಯಿತು. +ದಿನವೂ ಬೆಳಿಗ್ಗೆ ತನ್ನ ತಾಯಿಯೊಡನೆ ಅಶ್ವತ್ಥಕಟ್ಟೆಗೆ ಹೋಗಿ ಬರುವುದು ಆ ಹುಡುಗನ ಅಭ್ಯಾಸ. ಇಂದು ಈ ಸ್ನಾನದ ಗೊಂದಲದಲ್ಲಿ ಹೊತ್ತಾಗಿದ್ದರಿಂದ ಅವನ ತಾಯಿ ಅಶ್ವತ್ಥಕಟ್ಟೆಗೆ ಹೋಗಲೇ ಇಲ್ಲ. ಸಂಜೆ ಕಟ್ಟೆಯ ಬಳಿಯಲ್ಲಿಯ ಸರ್ವೋತ್ತಮನ ಚಾ ಅಂಗಡಿಗೆ ಇವನು ತಿರುಗಾಡ ಹೋದಾಗ “ಏಕೋ ಹುಡ್ಗಾ ಈ ಹೊತ್ತು ಕಟ್ಟೆಗೆ ಯಾಕೆ ಬರಲಿಲ್ಲೊ” ಎಂದು ಕೇಳುತ್ತ ಆಂಬೋದೆಯೊಂದನ್ನು ಕೈಯಲ್ಲಿತ್ತ, ಸರ್ವೋತ್ತಮ. +“ಈ ಹೊತ್ತು ಬೆಳಿಗ್ಗೆ ತಣ್ಣೀರು ಝಳ್ಕಾ ಮಾಡ್ಬೇಕಾಯ್ತು ಅಪ್ಪನ ಕೂಡ. ಅಪ್ಪ ನಿನ್ನೆ ರಾತ್ರೆ ಮುಟ್ಟಾಗಿ ಹೊರ್ಗೆ ಮಲಕೊಂಡಿದ್ದ. ನಾ ಅವನಿಗೆ ಮುಟ್ಟಿಬಿಟ್ಟೆ” ಎಂದ ಏನೂ ಅರಿಯದ ಹುಡುಗ. +ಆದರೆ ಸರ್ವೋತ್ತಮನ ‘ಬಾಯಲ್ಲಿ ಸಿಕ್ಕ’ ಬಳಿಕ ಕೇಳಬೇಕೇ ! ಮರುದಿನ ಕೇಳಿಯೇಬಿಟ್ಟ “ಏನ್ರಾ ಭಟ್ಟರೆ, ನಿಮ್ಮ ಮಗಾ ಏನೋ ಮಜಾ ಸುದ್ದಿ ಹೇಳ್ದಾ. ನೀವೇನೋ… ಏನ್ಕತೆರಾ ಅದು ?” ಎಂದು. ಭಟ್ಟರು ಆದ ಸಂಗತಿಯೆಲ್ಲ ಹೇಳಿದರು. ಮನೆಗೆ ಬಂದು ಮಗನಿಗೂ ನಾಲ್ಕು ಹೊಡೆತ ಹಾಕಿದರು. ಆದರೆ ಸರ್ವೋತ್ತಮ ಮಾತ್ರ ಈ ಕತೆಯನ್ನು ಒಳ್ಳೇ ಉಪ್ಪು-ಖಾರ ಹಚ್ಚಿ ಈಗಲೂ ಹೇಳುತ್ತಾನೆ ನಮ್ಮ ಊರಲ್ಲಿ ! +***** +[೧೯೫೧] +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ […] +ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು […] +ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_360.txt b/Kannada Sahitya/article_360.txt new file mode 100644 index 0000000000000000000000000000000000000000..081ce0513a61a618a69746786c2975c52adf535b --- /dev/null +++ b/Kannada Sahitya/article_360.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ ಅಭಿಪ್ರಾಯಗಳನ್ನು ಬದಿಗೊತ್ತಿ ವಿವೇಕ್ ಶಾನಭಾಗರ ‘ಇನ್ನೂ ಒಂದು’ ಕಾದಂಬರಿಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಕೃತಿಯ ಲೋಪಗಳನ್ನು ತೋರಿಸುವ ವಿಮರ್ಶಕ ಪ್ರವೃತ್ತಿ ನನ್ನದಲ್ಲ, ಓದುಗನಾಗಿ ಈ ಕಾದಂಬರಿ ಎತ್ತಿರುವ ಅನೇಕ ಮಹತ್ವದ ಪ್ರಶ್ನೆಗಳನ್ನು ಗುರುತಿಸುವ ಮೂಲಕ ಈ ಕೃತಿ ಒಡ್ದುವ ಸಂವಾದಕ್ಕೆ ಕನ್ನಡಸಾಹಿತ್ಯ.ಕಾಂ ತೆರೆದುಕೊಳ್ಳಲಿ ಎಂಬ ಸದುದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಅನಂತಮೂರ್ತಿಯವರ ‘ದಿವ್ಯ’ ದಂತೆಯೆ ಈ ಕಾದಂಬರಿಯನ್ನೂ ಸಂಕ್ಷಿಪ್ತಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಕೃತಿಯ ಇಡೀ ಪಠ್ಯವನ್ನು ನೀಡಿ ಮಾರಾಟಕ್ಕೆ ಧಕ್ಕೆ ತರಬಾರದೆಂಬದು ಎಂಬ ನಂಬಿಕೆಯನ್ನು ಪ್ರತಿಪಾದಿಸುತ್ತ ನೂರ ಹನ್ನೊಂದು ಪುಟದ ಈ ಕೃತಿಯನ್ನು ಪ್ರಕಟಣೆ: ಅಕ್ಷರ ಪ್ರಕಾಶನ, (ಸಾಗರ) ,ಕರ್ನಾಟಕ. ಬೆಲೆ ರೂ: ೫೦.೦೦. ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಿ ತಳಮಳಕ್ಕೀಡುಮಾಡಿಬಿಡುವ ಈ ಕೃತಿಯನ್ನು ಓದಿ ಪ್ರತಿಕ್ರಿಯಿಸಿದರೆ, ಉತ್ತಮ ಚರ್ಚೆಯೊಂದಕ್ಕೆ ದಾರಿಯಾಗುತ್ತದೆ ಎಂಬ ವಿಶ್ವಾಸವಿದೆ. +ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ […] +ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ […] +ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_361.txt b/Kannada Sahitya/article_361.txt new file mode 100644 index 0000000000000000000000000000000000000000..63bcf777881445c23fa5c05193606ea523d50510 --- /dev/null +++ b/Kannada Sahitya/article_361.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು +ಬಿಡಿಸಲಾಗದ ಒಗಟು; ಆ ಗೂಢತಮ ತಮೋ +ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ +ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ +ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ +ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ? +ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ +ಭವ್ಯತೆಗೆ ಗುಮ್ಮಟ ಕಿರೀಟವನೆ ತೊಡಿಸಿಹನು. +ಅಡಿಯಿಂದ ಮುಡಿಯನಿಟ್ಟಿಸೆ ಎದೆಯ ಮೇಲುರುಳಿ +ಬೀಳ್ವ, ತೆರ! ಹಮ್ಮು ಬಿಮ್ಮಿನ ಸೊಮ್ಮು ಹಮ್ಮದಂ- +ಬೋಗುತಿದೆ! ಇದರ ಗರ್‍ಭದಲ್ಲಿ ಪರಬೊಮ್ಮ ಗುರು +ಗುಮ್ಮ; ಬಯ್, ಹೊಗಳು, ನಗು, ಅಳು, ಹಾಡು, ಚೀರಾಡು +ಯಾವೆಲ್ಲವೇಳು ಸಲ ಪಡಿನುಡಿದು ಗುಪ್ತವನಿ- +ಸುವದಿರವು: ಇದು ಜಗದ ಬಗೆ, ದೃಷ್ಟಿಯೊಲು ಸೃಷ್ಟಿ. +***** +೧ ಇದು ಬಾಳಕೊರಡ ಮುಡಿ- ಮೇಲೆ ಕಾಣದ ಕೈಯ ಕರಗಸವು ರೌರವದಿ ಕೊರೆಯುತಿದೆ ಕೊರಡಿನೆದೆ ಬಿರಿಯುತಿದೆ ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ […] +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_362.txt b/Kannada Sahitya/article_362.txt new file mode 100644 index 0000000000000000000000000000000000000000..b93464d6c5d640f9a198356822cd95f9004798c2 --- /dev/null +++ b/Kannada Sahitya/article_362.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ +ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ +ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು +ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ +ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- +ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ +ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು +ನಿಲುಗಡೆಯ ತಿರುಗಣಿಯಲುರುಳಿ ಹೊರಳುತಿತ್ತು. +ನನ್ನೆದೆಯಂತರಾಳದಂತಃಕರಣವುಕ್ಕಿ +ಬಂಧನವ ಕಡಿದೊಗೆದು ಹೊರಚೆಲ್ಲಿ ಧುಮ್ಮಿಕ್ಕಿ +ಮುಂಬರಿದು, ಮುನ್ನೋಟ ಮುಂದೋಟಗಳ ಗುರಿಯ +ತೆಕ್ಕೆಯಲಿ ಮುನ್ನೀರಿನಾಗರವ ಸೇರಲಿಹ +ಸಹಜ ಜೀವನದಾದಿ ಮಧ್ಯದಂತರ್ದಾಹ +ತಣಿಸಿ ತೀರ್ಚಲಿಕಿದೋ: ಈ ಘಟಪ್ರವಾಹ. +***** +ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […] +ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […] +ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_363.txt b/Kannada Sahitya/article_363.txt new file mode 100644 index 0000000000000000000000000000000000000000..9254bb7d4fd9847ca372638d0ccb38dfe9fc6f85 --- /dev/null +++ b/Kannada Sahitya/article_363.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಕ್ಷರಗಳ ಹೊತ್ತುಕೊಂಡು +ಮಧ್ಯಾಹ್ನದ ರಣ ಬಿಸಿಲಿನಲ್ಲಿ +ಅಲೆಯುತ್ತಿದ್ದೆ. +ಕುದಿಯುವ ತಲೆ ಸೀಳಾಗಿ +ಶಬ್ದಗುಚ್ಛಗಳೆಲ್ಲ ತೇಲತೊಡಗಿದವು +ವರ್ತಮಾನದ ಒಳಗೆ +ಇವುಗಳ ಪದರುಗಳ +ಬಿಡಿಸಿ +ಚರ್ಮ ಒ೦ದೊ೦ದಾಗಿ ಕಳಚಿ +ತಂಪು ಕಾಯಲು ನಿಂತೆ +ಮೋಸಂಬಿ ತೊಳೆ ತೊಳೆ ಬಿಡಿಸಿ +ಒಳಗೊಳಗೇ ರೂಪುಗೊಂಡಿತು +ಥಣ್ಣಗಿನ ಭಾಷೆ +ಭಾವದ ನಕಾಶೆ +***** +ಹಾಗೆ ಪ್ರೀತಿಯ ಹುಡುಗ, ಏನೇನೋ ಮಾತುಗಳು – ಬೇಕಾಬಿಟ್ಟಿ. ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ ಅವನು ಹಾಗೇ! ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ ಏನೂ ಆಗದಹಾಗೆ […] +ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_364.txt b/Kannada Sahitya/article_364.txt new file mode 100644 index 0000000000000000000000000000000000000000..b7fb8cfd43a171714905db2d478cfaa35694ec91 --- /dev/null +++ b/Kannada Sahitya/article_364.txt @@ -0,0 +1,166 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆರಿದ್ರಾ +ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. ಹೇರಂಬನ ಹೊಲದಲ್ಲಿ ಸಸಿ ನೆಡಬೇಕಿತ್ತು. ಗಣಪಯ್ಯ ನಾಟಿಯ ರಗಳೆ ಬೇಡವೆಂದು ಹೊಲಗಳಲ್ಲಿ ಬಿತ್ತಿದ್ದನಾದರೂ ಅಲ ಗುಡಿಸುವ ಕೆಲಸ ಉಳಿದಿತ್ತು. ಅಡಕೆ ತೋಟದಲ್ಲಿ ಖೊಟ್ಟೆ ಕಟ್ಟುವ ಕೆಲಸ ಬೇರೆ. ಕೃಷ್ಣಯ್ಯ ಎಲ್ಲ ಕೆಲಸ ತಾನೇ ಮಾಡುತ್ತೇನೆಂದು ಮುಂದೆ ಬಂದನಾದರೂ ಗಣಪಯ್ಯ ಆಳುಗಳನ್ನು ಕರೆತರುವ ವಿಚಾರ ಮಾಡಿದ. +ಸೀತಾಪರ್ವತದ ಸುತ್ತ ಶರಾವತಿ ಆಗಲೆ ತುಂಬಿಕೊಳ್ಳಲಾರಂಬಿಸಿದ್ದಳಾದರೂ ಅರಲಗೋಡಿಗೆ ಹೋಗುವ ಕಾಲುದಾರಿ ಅಷ್ಟಗಲ ನೀರಿನಿಂದ ಮುಕ್ತವಾಗಿತ್ತು. ಗುಡ್ಡದ ಹಿಂಬದಿಯ ಒಂದು ಪಾರ್ಶ್ವ ಮೇಲೆ ಉಬ್ಬಿಕೊಂಡು ಅರಳಗೋಡಿನ ಗುಡ್ಡಕ್ಕೆ ತಗುಲಿಕೊಂಡಿದ್ದರಿಂದ ನೀರು ಇನ್ನೂ ಐದು- ಆರಡಿ ಮೇಲೆ ಏರಬೇಕಾಗಿತ್ತು. ಇದೀಗ ಆ ಕಾಲುದಾರಿಯೊಂದೇ ಘಟ್ಟಿ ನೆಲವಾಗಿ ಅದರ ಎರಡೂ ಬದಿಗಳಲ್ಲಿ ನೀರು ಮಡುಗಟ್ಟಿ ನಿಂತಿತ್ತು. ಗಣಪಯ್ಯ ಇದೇ ಸಮಯವೆಂದು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತಂದು ಹೊಲ-ತೋಟಗಳ ಕೆಲಸ ಮಾಡಿಕೊಂಡ. ಏರುತ್ತಿರುವ ನೀರಿಗೆ ಹೆದರಿ ಹೊಸಮನೆಗೆ ಬರಲೊಪ್ಪದ ಆಳುಗಳನ್ನು ಒಪ್ಪಿಸಬೇಕಾದರೆ ಗಣಪಯ್ಯನಿಗೆ ಸಾಕುಬೇಕಾಯಿತು. ಕೂಲಿಯನ್ನು ಎಂಟಾಣೆಯಷ್ಟು ಹಿಚಿಸಿದಮೇಲೆಯೇ ಆಳುಗಳು ಕೆಲಸಕ್ಕೆ ಬಂದುದು. +ಹೊಲದಲ್ಲಿ ಅಲಗುಡಿಸಿ ಆಗುತ್ತಿದೆ ಎನ್ನುವಾಗ ಮುದುಕ ಹಾಸಿಗೆ ಹಿಡಿದವನು ಏಳಲಿಲ್ಲ. ದಮ್ಮು ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಮುದುಕನಿಗೆ ಮೈ ಮೇಲೆ ಧಾತಿಲ್ಲ. ಆಗೊಮ್ಮೆ ಈಗೊಮ್ಮೆ ನರಳಿದ್ದಷ್ಟೇ ಕೇಳಿಸುತ್ತಿದೆ. ಪರಿಸ್ಠಿತಿ ವಿಷಮಿಸಿತು. ಕೃಷ್ಣಯ್ಯ ಅರಲಗೋಡಿಗೆ ಹೋಗಿ ಬಂದ. ಅಲ್ಲಿಯ ಪಂಡಿತರು ಕೊಟ್ಟ ಔಷಧಿ ಹಾಕಿ ನೋಡಿದರು. ಅದು ನಾಟಲಿಲ್ಲ. ಅರಿದ್ರಾ ಮಳೆಯ ಮೂರನೇ ಪಾದ ಸುರಿಯುತ್ತಾ ಇದ್ದಾಗ ಮುದುಕ ಕೊನೆಯುಸಿರೆಳೆದ. +ಸುದ್ದಿಯನ್ನು ಹೊರಗೆ ಹೇಳಿಕಳುಹಿಸಲೆಂದು ಜನ ಹುಡುಕಲು ಹೋದ ಕೃಷ್ಣಯ್ಯ ಅರ್ಧದಾರಿಗೆ ಹೋಗಿ ತಿರುಗಿ ಬಂದ. ಶರಾವತಿಯಲ್ಲಿ ನುಗ್ಗಿ ಬಂದ ಪ್ರವಾಹ ಸೀತಾಪರ್ವತದ ಸುತ್ತ ಘೇರಾಯಿಸಿಕೊಂಡು ನಿಂತಿತ್ತು. +ಮುದುಕನ ಅಂತ್ಯ ಕ್ರಿಯೆ ಸೀತಾಪರ್ವತದ ಗುಹೆಯ ಎದುರು ನಡೆಯಿತು. ಗಣಪಯ್ಯ ಹನಿ ಮಳೆಯಲ್ಲೇ ಚಿತೆಗೆ ಬೆಂಕಿ ಇಟ್ಟ. ಕೃಷ್ಣಯ್ಯ ಅಷ್ಟು ದೂರದಲ್ಲಿ ಕೈ ಕಟ್ಟಿಕೊಂಡು ನಿಂತಿದ್ದ. ಇವನ ಹಿಂದೆ ನಾಗವೇಣಿ. ಚಿತೆಗೆ ಬೆಂಕಿ ಹತ್ತಿಕೊಂಡಾಗ ಬಿಡುವುಕೊಟ್ಟ ಮಲೆ ಬೂದಿಯಾಗುವ ತನಕ ಬರಲಿಲ್ಲ. ಗುಹೆಯತ್ತ ಬೆನ್ನುಹಾಕಿ ಮೂವರೂ ಹೊರಟಾಗ ಮಳೆ ಮತ್ತೆ ಆರಂಭವಾಯಿತು. +ಮಲೆನಾಡಿಗೆ ಜಡತ್ವ ಕವಿದಂತಾಗಿತ್ತು. ಬೀಳುವ ಮಳೆ, ಬೀಸುವ ಗಾಳಿ, ಇವೆರಡೇ ಜೀವಂತವಾಗಿದ್ದು, ಉಳಿದುದೆಲ್ಲವೂ ಮೈ ಮುದುಡಿಕೊಂಡು, ಮಳೆಗಾಳಿಗೆ‌ಅಂಜಿ, ಸೀತಾಪರ್ವತದ ಮೇಲಿನ ಹೆಬ್ಬಂಡೆಗಳ ಹಾಗೆ ಬಿದ್ದಿತ್ತು. ಹೊಲಗಳಲ್ಲಿಯ ಸಸಿಗಳೆಲ್ಲ ನಿಂತ ನೀರಿನಲ್ಲಿ ಉಸಿರಾಡುತ್ತಿದ್ದವು. ನೀರು ಹೊಲದಿಂದ ಹೊಲಕ್ಕೆ ಹರಿದು ನದಿಗೆ ಸೇರುತ್ತಿತ್ತು. ಗೇಣುದ್ದ ಬೆಳೆದ ಸಸಿಗಳು ಗಾಳಿ-ನೀರಿನ ರಭಸಕ್ಕೆ ಥರಗುಟ್ಟಿ ನಡುಗುತ್ತಿದ್ದರೂ ಕೆಸರಿನಲ್ಲಿ ಹಸಿರು ಉಸಿರಾಡುತ್ತಿತ್ತು. +ಮಳೆಗಾಳಿಗೆ ಅಡಕೆತೋಟ ಪ್ರಥಮ ಬಲಿ. ಮಲೆಯ ಹನಿಗಳ ರಭಸವೆಲ್ಲ ಅಡಿಕೆ, ಬಾಳೇ ಗಿಡಗಳ ಮೇಲೆ. ಗಾಳಿ ಬೀಸಿದಾಗ ಮರಗಳು ತೊನೆದಾಡಿ ಹರಿದು ಬೀಳುವ ಗರಿಗಳು, ಮುರಿಯುವ ಮರಗಳು, ನೆಲವನ್ನಪ್ಪುವ ಎಲೆ, ಮೆಣಸಿನ ಬಳ್ಳಿಗಳು. ತೋಟದ ಹಳ್ಳಕ್ಕೆ ಹೊಸ ಹರೆಯ. ಬೇಸಿಗೆಯಲ್ಲಿ ನಿಟ್ಟುಸಿರಿಡುತ್ತಿದ್ದ ಹಳ್ಳ ಈಗ ಕೇಕೆ ಹಾಕುತ್ತಿದೆ. ರಾಶಿ ರಾಶಿ ನೀರನ್ನು ಒಯ್ದು ಶರಾವತಿಗೆ ಸುರಿಯುತ್ತಿದೆ ಹಳ್ಳ. +ಸೀತಾಪರ್ವತದ ಮೇಲಿನಿಂದಲೂ ನೀರು ಧಾರೆ ಧಾರೆಯಾಗಿ ಧುಮುಕುತ್ತಿದೆ, ಗಣಪಯ್ಯನ ಬಚ್ಚಲ ಮನೆಗೆ ಈಗ ಮನೆಯ ಹಂಚಿನ ನೀರೇ. ಗುಡ್ಡದ ಚಿಲುಮೆ ಈಗ ಸಣ್ಣ ಹಳ್ಳ. ಈ ಹಳ್ಳಕ್ಕೆ ಸೇರಿಕೊಂಡ ನೂರು ನೀರು ಧಾರೆಗಳು. ಈ ಎಲ್ಲ ನೀರು ನದಿಗೆ. +ಶರಾವತಿ ಕ್ಷಣ ಕ್ಷಣಕ್ಕೂ ಮೇಲೇರುತ್ತಿದೆ. ಹೊಳೆಯ ದಂಡೆಗೇನೆ ಅಂಟಿಕೊಂಡಿದ್ದ ಪರಮೇಶ್ವರಪ್ಪನ ಹೊಲ- ತೋಟಗಳಲ್ಲಿ ಈಗ ನೀರು ನಿಂತಿದೆ. ಹೇರಂಬನ ಹೊಲದಿಂದ ನೀರಿಗೆ ಹತ್ತು ಮಾರು ದೂರ. ನದಿ ಇನ್ನೂ ಏರಿದರೆ ಹೊಲದಲ್ಲಿಯ ನೀರು ಹೊಲದಲ್ಲೆ. ಇಲ್ಲಿಯ ನೀರೇ ಅತ್ತ ಹರಿಯುವುದರ ಬದಲು ಆ ನೀರೇ ಇಲ್ಲಿಗೆ ನುಗ್ಗಿದರೂ ನುಗ್ಗಿತೆ. +ಸೀತಾಪರ್ವತವನ್ನು ನೀರು ಆಕ್ರಮಿಸಿಕೊಂಡಿದೆ. ದೂರದಿಂದ ನೋಡಿದರೆ ಹೊಸಮನೆ ಒಂದು ನಡುಗಡ್ಡೆ. ಸಮುದ್ರದಲ್ಲಿಯ ಒಂದು ಚಿಕ್ಕ ಬಂಡೆ. ಹೊರಗಿನ ಯಾವ ಸಂಪರ್ಕವೂ ಇಲ್ಲದ ಜಲಾವೃತ ಪ್ರದೇಶ. +ಹೊಸ ಮನೆಯ ಪರಮೇಶ್ವರಯ್ಯನ ಹೊಲ ತೋಟಗಳು ಎಂದೋ ಪಾಳುಬಿದ್ದು ಈಗ ನೀರಪಾಲಾಗಿವೆ. ಪರಮೇಶ್ವರಯ್ಯ ಈತನ ಹುಟ್ಟಾಳು ಹಸಲರ ಹಾಲನ ಮನೆಗಳು ಮಳೆಯ ಆಘಾತಕ್ಕೆ ಕುಸಿದಿವೆ. ಹೇರಂಬನ ಮನೆಯೂ ಉಳಿದಿಲ್ಲ. ಹಸಲರ ಬೈರನ ಮನೆ ತೊಳೆದು ಹೋಗಿದೆ. ಅಲ್ಲಿ ಈಗ ಉಳಿದಿರುವುದೆಂದರೆ ಹೇರಂಬನ ಹೊಲ ತೋಟ. ಹಾಗು ಗಣಪಯ್ಯನ ಒಂದು ಮನೆ. +ಮನೆಯ ಹೊರಗಿನ ಒಂದು ಚಪ್ಪರ, ಒಂದು ಜಗುಲಿ, ಒಳಗೆ ಕಗ್ಗತ್ತಲ ಗವಿಯಂತಿರುವ ಎರಡು ಕೋಣೆಗಳು. ಒಂದು ಅಡಿಗೇಮನೆ. ಹಿಂಬದಿಯಲ್ಲಿರುವ ತೆರೆದ ಬಚ್ಚಲು ಕೊಟ್ಟಿಗೆ, ಸೌದೆಮನೆ. ಜಗುಲಿಯ ಮೇಲೆ ಗೋಡೆಗೆ ಒರಗಿ ಕುಳಿತ ಗಣಪಯ್ಯ. ಕಂಬಕ್ಕೆ ಮೈಯಾನಿಸಿ ಕುಳಿತಿರುವ ಕೃಷ್ಣಯ್ಯ. ಒಳ ಬರುತ್ತ ಹೊರ ಹೋಗುತ್ತ ಓಡಿಯಾಡುತ್ತಿರುವ ನಾಗವೇಣಿ. ಈ ಮೂವರೇ ಹೊಸಮನೆಯಲ್ಲಿ ಈಗ ಇರುವ ಜನ. +ಕೃಷ್ಣಯ್ಯ ಜಗುಲಿ ಬಿಟ್ಟು ಕೆಳಗಿಳಿದ. ಹಂಚಿನ ನೀರು ಮೈಮೇಲೆ ಬೀಳದಂತೆ ಜಗುಲಿಯ ಅಂಚಿನಲ್ಲೇ ನಡೆದು ಹೋಗಿ ಚಪ್ಪರದ ಆಚೆಗೆ ಬಾಯಲ್ಲಿಯ ತಾಂಬೂಲವನ್ನು ಪಿರ್ರನೆ ಉಗಿದ. ಅದು ನೀರಿನಲ್ಲಿ ಬೆರೆತು ಹರಿದು ಹೋಗುವುದನ್ನೇ ನೋಡಿ, ಕೆಳಗಿಳಿದ. ಮೌಂಚೆಯನ್ನು ಪಂಚೆಯ ಮೇಲೆಳೆದುಕೊಂಡು ಜಗುಲಿಯತ್ತ ಬಂದು ಮತ್ತೆ ಅದನ್ನೇರಿ, ಕಂಬಕ್ಕೆ ಬೆನ್ನುಹಚ್ಚಿ ಗಣಪಯ್ಯನತ್ತ ತಿರುಗಿದ. +“ಬಾವಯ್ಯ, ಹೊಸಮಳೆ ಯಾವಾಗ, ಈ ಭಾನುವಾರದಿಂದ ಅಲ್ವ” +“ಹೌದು ಆದ್ರೆ ಮಳೆ ಶುರುವಾಗಿ ಈವತ್ತಿಗೆ ಹನ್ನೊಂದು ದಿನ ಆಯ್ತಲ್ವ. ಈ ಭಾನುವಾರದಿಂದ ಪುನರ್ವಸು, ಅದೂ ಹೊಡೆಯುತ್ತೋ ಇಲ್ಲ ಬಿಡುತ್ತೋ ನೋಡಬೇಕು” +“ಅದು ಸ್ವಲ್ಪ ಬಿಡುವು ಕೊಡುತ್ತೋ ಏನೋಪ್ಪ, ಅಲ್ಲ ಹೀಗೆ ಮಳೆ ಹೊಡದ್ರೆ ಜನ ಬದುಕೋದು ಬೇಡ್ವ, ಹಗಲು, ರಾತ್ರಿ ಒಂದು ನಿಮಿಷ ಬಿಡುವು ಬೇಡ್ವ” +ಕೃಷ್ಣಯ್ಯ ಕಡ್ಡಿಯೊಂದನ್ನು ಬಾಯಿಗಿರಿಸಿ, ಹಲ್ಲುಗಳನ್ನು ಶುಚಿಮಾಡಿಕೊಳ್ತ ಅಂದ. +“ಮಳೆ ಇರಲಿ ಮಾರಾಯ, ಈಗ ನಿಂತಿರೊ ನೀರು ಇಳೀದಿದ್ರೆ ಏನು ಮಾಡೋದು ಹೇಳು. ನಾವೀಗ ಇಲ್ಲಿ ಸಿಕ್ಕಿ ಬಿದ್ದಿದ್ದೇವಲ್ಲ. ನಮಗೆ ಏನೋ ಆಯ್ತು, ಯಾರು ಗತಿ?” +“ನಮಗೆ ನಾವೇ ಗತಿ, ಒಂದು ದೋಣಿ ಮಾಡ್ಕೋಬೇಕು. ಇಲ್ಲ ಈಜಿಕೊಂಡು ಹೋಗಬೇಕು” +“ಏನು ಮಾಡೋದೋ” +ಗಣಪಯ್ಯ ತಲೆಯಮೇಲೆ ಕೈ ಹೊತ್ತು ಕುಳಿತ, ಆತ ತೀರ ಕಂಗಾಲಾಗಿದ್ದ. ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆಯಲ್ಲ ಎಂಬ ವಿಚಾರ ಮನಸ್ಸಿನಲ್ಲಿ ಸುಳಿದು ಹೋದಾಗಲೆಲ್ಲ ಜೀವ ನಡಗುತ್ತಿತ್ತು. ನದಿಯಲ್ಲಿ ಏರಿದ ನೀರು ಇಂದಲ್ಲಾ ನಾಳೆ ಇಳಿಯಲೇ ಬೇಕು. ಇನ್ನು ನಾಲ್ಕೈದು ತಿಂಗಳುಗಳವರೆಗೆ ಬೇಕಾಗುವ ಸಾಮಗ್ರಿಯಂತೂ ಮನೆಯಲ್ಲಿದೆ. ಹೊಲ ತೋಟದ ಕೆಲಸಗಳೂ ಮುಗಿದಿವೆ. ಮುಂದಿನ ಸಣ್ಣ ಪುಟ್ಟ ಕೆಲಸಗಳನ್ನು ತಾವೇ ಮಾಡಬಹುದು. ಹೆದರಿಕೆ ಈ ಯಾವ ವಿಷಯದ ಬಗ್ಗೆಯೂ ಅಲ್ಲ. ನೀರು ಸುತ್ತ ನಿಂತು ಹೀಗೆ ಆವರಿಸಿಕೊಂಡಿದೆಯಲ್ಲ ಎಂಬ ಅಂಜಿಕೆ. +ಕಾಡು ಕಣಿವೆಯಲ್ಲಿ ನೀರು ನಿಂತ ಹಾಗೆಲ್ಲ ಪ್ರಾಣಿಗಳು ಸೀತಾಪರ್ವತದತ್ತ ಧಾವಿಸಿ ಬಂದಿವೆ. ಆತ್ಮರಕ್ಷಣೆಗಾಗಿ, ಮನೆಯ ಹಿಂಬದಿಯಲ್ಲಿ ನರಿ, ಜಿಂಕೆ ಕಾಡುಕುರಿಗಳು ನಿರ್ಭೀತಿಯಿಂದ ಓಡಾಡುತ್ತಿವೆ ಸೌದೇ ಮನೆಯಲ್ಲಿ ಹೆಬ್ಬಾವು ಬಂದು ಮಲಗಿತ್ತು. ಚಪ್ಪರದಲ್ಲೆಲ್ಲ ಮೊಲಗಳು ಕುಪ್ಪಳಿಸುತ್ತಿದ್ದವು. ಮೊನ್ನೆ ಹಿಂದಿನದಿನ ಕೊಟ್ಟಿಗೆಯಲ್ಲಿಯ ದನಕರುಗಳು ಇದ್ದಕ್ಕಿದ್ದ ಹಾಗೆಯೇ ಗಡಬಡಿಸಿ ಕೂಗಿಕೊಂಡವು. ಬೆಳಕು ಹರಿಯುತ್ತಿರುವಾಗ ಹುಲಿ ಕೂಗಿದುದನ್ನು ತಾನು ಕೇಳಿದೆ ಎಂದು ನಾಗವೇಣಿ ಹೇಳುತ್ತಿದ್ದಾಳೆ. ದನಗಳು ಬೆದರಿದ್ದು ನೋಡಿದರೆ ನಾಗವೇಣಿ ಹೇಳುವುದು ನಿಜವೇನೋ ಅನ್ನಿಸುತ್ತಿದೆ. ಹುಲಿ, ಚಿರತೆ, ಕಾಡುಕೋಣ, ಕಾಡುಹಂದಿಗಳು ಈ ಕಾಡಿನಲ್ಲಿ ಇಲ್ಲವೆಂದಲ್ಲ, ಇವೆ. ಆದರೆ ಇವು ಸ್ವೇಚ್ಚೆಯಾಗಿ ತಿರುಗಾಡಿಕೊಂಡಿದ್ದವು. ಈಗ ಹೆದರಿ ಬಂದು ಇಲ್ಲಿ ಸೇರಿಕೊಂಡಿರಲೂ ಸಾಕು. ತುಂಬಿಕೊಂಡ ನೀರಿಗೆ ಹೆದರಿ ಓಡಿಬಂದಿರುವ ಈ ದುಷ್ಟ ಪ್ರಾಣಿಗಳಿಂದ ತಾನೂ ಹೆದರಿಕೊಳ್ಳುವಂತಾಗಿದೆ. +“ಏನು ಮಾಡೋದು” +ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತ ಗಣಪಯ್ಯನ ಮನಸ್ಸಿನಲ್ಲಿ ಹುಲಿ ಹೊಕ್ಕಿದ್ದರಿಂದ ಆತ ಕೃಷ್ಣಯ್ಯನತ್ತ ತಿರುಗಿದ- +“ಕೃಷ್ಣಯ್ಯ, ನಾಗು ಹುಲಿ ಕೂಗಿದ್ದನ್ನ ಕೇಳಿದ್ಲಂತೆ, ಗೊತ್ತಾ ನಿನಗೆ?” +“ಹೌದ? ಯಾವಾಗ” +“ಮುಂಜಾನೆ, ನಿನ್ನೆ ರಾತ್ರಿ ದನ ಕರು ಬೆದರಿ ಕೂಗಿಕೊಂಡಿದ್ದು ಹುಲೀನ ನೋಡಿಯೇ ಇರ ಬಹುದು” +“ಅದೇಕೋ ಹೊರಬಂದ ನಾಗವೇಣಿ ಹುಲಿ ಅಂದಾಕ್ಷಣ ನಿಂತಳು.” ಕೃಷ್ಣಯ್ಯನತ್ತ ತಿರುಗಿ ಅವಳೆಂದಳು, +“ಹೌದಾ ಕೃಷ್ಣಯ್ಯ, ಇಲ್ಲಿ ಒಂದು ಹುಲಿ ಇರುವುದಂತೂ ಖರೆ. ಬೆಳ್ಳಿಗೆ ನಾನು ಸ್ಪಷ್ಟವಾಗಿ ಕೇಳಿದೀನಿ” +“ಯಾವ ದಿಕ್ಕಿನಿಂದ ಬಂತು ಆ ಸದ್ದು” +“ಹಿಂಬದಿಯಿಂದ ಹಿಡಂಬಾವನದಲ್ಲಿ ಹುಲಿ ಇದೆಯಪ್ಪ. ಅರಲಗೋಡಿನ ಆಳುಗಳು ಅಲ್ಲೆಲ್ಲ ಒಂದು ಹುಲಿ ಓಡಾಡೋ ವಿಷಯ ಹೇಳಿದ್ರು, ಅದೇ ಹುಲಿ ಈಗ ನೀರು ತುಂಬಿಕೊಂಡ ಮೇಲೆ ಇಲ್ಲಿ ಬಂದು ಯಾಕೆ ಸೇರಿಕೊಂಡಿರಬಾರದು?” +“ಇರಬಹುದು ಬಾವಯ್ಯ, ನಾವು ಹುಷಾರಾಗಿರಬೇಕು. ನಮ್ ಕೊಟ್ಟಿಗೆಮೇಲೆ ಹುಲಿ ಕಣ್ಣು ಬಿದಿದೆ ಅಂದ್ರೆ, ಅಪಾಯ ಹತ್ತಿರದಲ್ಲೇ ಇದೆ ಅಂತ ಅರ್ಥ. ಈವತ್ತು ರಾತ್ರಿ ಕೊಟ್ಟಿಗೇ ಬಾಗಿಲನ್ನು ಭದ್ರವಾಗಿ ಹಾಕಬೇಕು” +“ಹೌದು” +“ಬಾವಯ್ಯ, ನಿಮ್ಮ ಹತ್ರ ಕೋವಿ ಇಲ್ವ?” +“ಇಲ್ಲ ಮಾರಾಯ, ಹೇರಂಬನತ್ರ ಇತ್ತು. ನಾನು ಇಟ್ಕೊಳ್ಳಲಿಲ್ಲ. ಈಗ ಅನ್ನಿಸ್ತಾ‌ಇದೆ, ಇದ್ರೆ ಆಗ್ತಿತ್ತು ಅಂತ” +“ಕೃಷ್ಣಯ್ಯ ನಿನಗೆ ಕೋವಿ ಹಾರಿಸಲಿಕ್ಕೆ ಬರುತ್ತ?” +ನಾಗವೇಣಿ ಪ್ರಶ್ನಿಸಿದಳು. ಹಿಂದೆಲ್ಲಾ ಕೃಷ್ಣಯ್ಯ ಕೋವಿ ಹಿಡುದುದನ್ನು ಅವಳು ಕಂಡಿರಲಿಲ್ಲ. ಇವನು ಈ ವಿದ್ಯೆಯನ್ನು ಯಾವಾಗ ಕಲಿತ? +“ನನಗಾ… ಮೊನ್ನೆ ಮೊನ್ನೆ ಕಲಿತೆ. ಪಡವಗೋಡ್ ಬಸಪ್ಪ ಕಲಿಸ್ದ. ಒಂದು ಹಂದೀನೂ ಹೊಡೆದುಕೊಟ್ಟೆ ಅವನಿಗೆ ಗುರುದಕ್ಷಿಣೆ ಅಂತ” +ನಾಗವೇಣಿ ನಕ್ಕಳು. +“ಕೋವಿ ಇದ್ದಿದ್ರೆ ನಾವು ಬಿಡ್ತಿರಲಿಲ್ಲ ಈ ಹುಲೀನ. ಆದ್ರು ನಾವು ಹುಷಾರಾಗಿ ಇರಬೇಕು.” +ಕೃಷ್ಣಯ್ಯ ಮತ್ತೂ ಒಂದು ಸಾರಿ ತನಗೇ ಎಂಬಂತೆ ಹೇಳಿಕೊಂಡ. +ರಾತ್ರಿ ಮಲಗುವಮುನ್ನ ಕೃಷ್ಣಯ್ಯನೇ ಹೋಗಿ ಕೊಟ್ಟಿಗೆಯ ಬಾಗಿಲು ಹಾಕಿ ಬಂದ. ಊಟ ಮುಗಿಸಿ ಗಣಪಯ್ಯ ಮಲಗಲು ಹೋಗಿ ಬಹಳ ಹೊತ್ತಾಗಿತ್ತು. ಚಿಮಣಿ ದೀಪ ಒಳಗೋಡೆಯ ಮೇಲೆ ಮಂಕಾಗಿ ಉರಿಯುತ್ತಿತ್ತು. ದೀಪದ ಕುಡಿಯ ಕಿರೀಟದಂತೆ ಕಪ್ಪು ಹೊಗೆ ಗಾಳಿಗೆ ಬಳುಕಾಡಿ ಕರಗಿ ಹೋಗುತ್ತಿತ್ತು. ದೀಪದ ಮೇಲಿನ ಗೋಡೆ ಅಷ್ಟುದ್ದಕ್ಕೂ ಕರ್ರಗಾಗಿ ನಿಂತಿತ್ತು. ಕೃಷ್ಣಯ್ಯ ಕಂಬಳಿ ಹಾಕಿಕೊಂಡು ಮಲಗುವ ಸಿದ್ದತೆ ಮಾಡುತ್ತಿದ್ದಾಗ ಒಳಗಿನ ಕೆಲಸ ಮುಗಿಸಿಕೊಂಡು ನಾಗವೇಣಿ ಹೊರಬಂದಳು. +“ಕೃಷ್ಣಯ್ಯ, ನಿದ್ದೆ ಬಂತೇನೋ?” ಎಂದು ಕೇಳಿದಳು. +“ಎಲ್ಲಿ ನಿದ್ದೆ ಬಿಡು…. ಕೆಲ್ಸೆಲ್ಲ ಆತ ನಿಂದು?” +“ಹೌದು…” +ಸೀರೆಯ ಸೆರಗಿಗೆ ಕೈಯೊರೆಸಿಕೊಂಡು ನಾಗವೇಣಿ ಒಳಗೆ ಬಂದಳು. ಗಂಡ ಗೊರಕೆ ಹೊಡೆಯುತ್ತಿದ್ದ. ಮತ್ತೆ ಹೊರಬಂದು ಹೊಸಲಮೇಲೆ ಕುಳಿತು ಎಲೆ ಅಡಕೆಯ ತಾಬಾಣ ಹತ್ತಿರ ಎಳೆದುಕೊಂಡಳು. +“ಕವಳ ಹಾಕಿಕೊಳ್ಳೋದಿಲ್ವ?” +“ಬೇಡ, ಕಣ್ಣು ಕೂರ್ತಿದೆ” +ಗೋಡೆಗೆ ಬೆನ್ನು ಹಚ್ಚಿಕುಳಿತ ಕೃಷ್ಣಯ್ಯ ಆಕಳಿಸಿದ. +ನಾಗವೇಣಿ ಅಡಕೆಯನ್ನು ಬಾಯೆಗೆಸೆದುಕೊಂಡು, ಎಲೆಯ ತೊಟ್ಟು ಮುರಿದು ಸುಣ್ಣ ಸವರುತ್ತ- +“ಈ ಮಳೆಗೇನು ರಾವು ಹಿಡಿದಿದೆ” +ಎಂದು ಉದ್ಗರಿಸಿದಳು. ಹೊರಗೆ ಮಳೆ ಜಿಯೋ ಎಂದು ಸುರಿಯುತ್ತಿತ್ತು. ಗಾಳಿಯೂ ಇತ್ತು ಜೊತೆಗೆ. ಆರಿದ್ರಾ ಮಳೆ ಬಿಡುವೇ ಕೊಟ್ಟಿರಲಿಲ್ಲ. ಮೃಗಶಿರಾ ಬಿದ್ದುದನ್ನು ನೋಡಿ ಆರಿದ್ರಾ ಬೀಳಲಾರದೆಂದು ಲೆಕ್ಕ ಹಾಕಿದ್ದಷ್ಟೇ ಆಯಿತು. ಆರಿದ್ರಾ ಮಾತ್ರ ಮೃಗಶಿರವನ್ನೂ ಮೀರಿಸುವಂತೆ ಬೀಳುತ್ತಿದೆ. +“ಮಳೆಗಾಲದಲ್ಲಿ ಮಳೆ ಬೀಳ್ದೆ ಇನ್ನೇನು ಬಿಸಿಲು ಬೀಳಬೇಕೆ….ಹೋಗ್ಲಿ ಬಿಡು ನೀರು ಇಲ್ಲಿವರೆಗೂ ಏರಿ ಹಳ್ಳಿ ಮುಳುಗದೇ ಇದ್ರೆ ಆಯ್ತು. +“ಏನಾಗುತ್ತೋ ಕೃಷ್ಣಯ್ಯ. ಸರಕಾರ ಜಮೀನು ಪರಿಹಾರ ಕೊಡದಿದ್ರೆ ಬೇಡ. ಮುಂದೆ ನೋಡಿಕೊಂಡರಾಯ್ತು. ಇಲ್ಲಿಂದ ಹೋಗಿಬಿಡೋಣ ಅಂದ್ರು ಇವರು ಕೇಳಲಿಲ್ಲ. ಮಾವ ಬೇರೆ ಹೊರಗೆಲ್ಲೂ ಹೋಗೋದು ಬೇಡ ಅಂದ್ರು. ನಾಲ್ಕು ತಿಂಗಳು ಹೋಗಿ ಊರಲ್ಲಿ ಇದ್ದಿದ್ರೆ ಅಪ್ಪ ಬೇಡ ಅಂತಿರಲಿಲ್ಲ. ಆಫಿಸಿಗೆ ಹೋಗಿ ಅವರಿವರನ್ನು ಕಂಡು ಜಮೀನು ಹಣ ಪಡೀಬಹುದಿತ್ತು. ಇವರದೇ ಹಠ ಇವರಿಗೆ. ಯಾರೋ ಈ ಹಳ್ಳಿ ಈ ವರ್ಷ ಮುಳುಗೋದಿಲ್ಲ ಅಂದರಂತೆ. ಇವರು ಇಲ್ಲೇ ಇರೋಣ ಅಂದ್ರು. ಮಾವ ಹಾಗೆ ಸತ್ರು. ಇನ್ನು ಏನೇನು ಕಾದಿದೆಯೋ? ಹುಲಿ, ನರಿ, ಹಾವು ಹಂದಿಗಳೆಲ್ಲ ಮನೆ ಹಿಂದೆ ಮುಂದೆ ಬಿಡಾರ ಹೂಡಿವೆ…” +ಕೃಷ್ಣಯ್ಯನಿಗೆ ಕೆಡುಕೆನಿಸಿತು. ನಾಗವೇಣಿ ಸಂತಾಪದಿಂದ ನುಡಿದಾಗ ಅವನು ಅಯ್ಯೋ ಎಂದು ಮಿಡುಕಾಡಿದ. ಗಣಪಯ್ಯ ಭಂಡ ಧೈರ್ಯದಿಂದ ಇಲ್ಲಿ ಉಳಿದುದು ನಿಜ. ನಾಲ್ಕು ತಿಂಗಳು ಮಾವನ ಮನೆಯ ಅನ್ನ ತಿಂದುಕೊಂಡಿರುವುದು ಅವನಿಗೆ ಸರಿ ಎನಿಸಲಿಲ್ಲ. ಹೀಗೆಂದು ತನ್ನಲ್ಲಿ ಹೇಳಿಕೊಂಡ. ಸರಕಾರದ ಹಣ ಜಮೀನು ಈ ನಾಲ್ಕು ತಿಂಗಳಲ್ಲಿ ಮಂಜೂರಾಗಿ ಬರುವುದರ ಬಗ್ಗೆಯೂ ಅವನಿಗೆ ನಂಬಿಕೆ ಇರಲಿಲ್ಲ. ಇಲ್ಲಿ ಬೆಳೆದುದನ್ನೆಲ್ಲ ಬಿಟ್ಟು ಅಲ್ಲಿ ಹೋಗಿ ಕುಳಿತರೆ ಮುಂದಿನ ಗತಿ ಏನು ಎಂದಾತ ಯೋಚಿಸಿದ. ಸರಕಾರ ಕೈಕೊಟ್ಟರೆ ವರುಷವೆಲ್ಲ ಮಾವನ ಮನೆ ಅನ್ನಕ್ಕೆ ಕೈಯೊಡ್ಡಿ ಕುಳಿತುಕೊಳ್ಳಬೇಕಾದೀತಲ್ಲ ಎಂದು ಅಂಜಿದ. ಆದರೆ ಇದೆಲ್ಲ ಈ ಹೆಂಗಸಿಗೆ ಅರ್ಥವಾಗುವುದಾದರೂ ಹೇಗೆ? ಕೃಷ್ಣಯ್ಯ ಕುಳಿತಲ್ಲಿಂದ ಎದ್ದು ಮುಂದೆ ಬಂದ. ನಾಗವೇಣಿ ಎಲೆ ಅಡಿಕೆಯ ತಾಂಬಾಣವನ್ನು ಮುಂದೆ ತಳ್ಳಿದಾಗ ಅದನ್ನು ಎಳೆದುಕೊಂಡು ಕುಳಿತ. +ಅಡಕೆಯನ್ನು ನುರಿಸುತ್ತ ಕೃಷ್ಣಯ್ಯನೆಂದ- +“ಈಗ ಗೋಳಾಡಿ ಏನು ಪ್ರಯೋಜನ ನಾಗು. ಬಾವಯ್ಯ ಕೈಗೆ ಬಂದಿರೋ ತುತ್ತನ್ನು ಎಸೆದು ಹೋಗೋದು ಬೇಡ ಅಂತ ಇಲ್ಲಿ ಉಳಕೊಂಡ. ಈಗೇನು ಮಾಡಲಿಕ್ಕೆ ತಾನೆ ಸಾಧ್ಯ. ಹಳ್ಳಿ ಸುತ್ತ ನೀರು ನಿಂತಿದೆ. ಈಗ ಇಲ್ಲಿಂದ ಹೋಗೋದಿಕ್ಕುಂಟೆ, ಇಲ್ಲೇ ಇರಬೇಕು ಬರೋದನ್ನ ಎದುರಿಸಬೇಕು. ನೀನು ಧೈರ್ಯ ಯಾಕೆ ಕಳ್ಕೋತೀಯಾ ಬಾವಯ್ಯ ಇದಾನೆ ನಾನಿದೀನಿ ನೀನು ಧೈರ್ಯವಾಗಿರು.” +“ನೀನೂ ಅವರಕಡೆ ಸೇರ್ಕೊಂಡು ಮಾತಾಡು ಹಗಲುರಾತ್ರೆ ನನ್ನೆದೆ ಥರಗುಟ್ಟಿ ನಡುಗ್ತಾ ಇರುತ್ತೆ. ಯಾವಾಗ ಏನಾಗುತ್ತೋ ಎಲ್ಲಿ ನೀರು ಮನೆಯೊಳಗೆ ನುಗ್ಗುತ್ತೋ ಹುಲಿಯೋ ಹಂದಿಯೋ ಬಂದು ಎಲ್ಲಿ ಯಾರನ್ನ ಹೊತ್ಕೊಂಡು ಹೋಗುತ್ತೋ ಅಂತ ಗಾಬ್ರಿಯಾಗುತ್ತೆ ನನಗೆ. ನೀನು ಬಂದೆ ಅಂತ ಸ್ವಲ್ಪ ಧೈರ್ಯ. ಇಲ್ಲ ಅಂದಿದ್ರೆ ನಾನಿಷ್ಟು ಹೊತ್ತಿಗೆ ಸತ್ತೇ ಹೋಗಿರುತ್ತಿದ್ದೆ.” +ಕೃಷ್ಣಯ್ಯ ಪೀಕದಾನಿಗೆ ಬಾಯಲ್ಲಿಯ ತುಂಬುಲ ಉಗಿದು ನಕ್ಕ. +“ಅಯ್ಯೋ ಹುಡುಗಿ, ಇಬ್ರು ಗಂಡಸರಿರುವಾಗ ಎಂದು ಹೆಣ್ಣನ್ನ ಹುಲಿ ಬಾಯಿಗೆ ಹಾಕ್ತೀವೇನೆ” +ಆತ ಮನದಣಿ ನಕ್ಕ. +ಕೆಂಪೇರಿದ ಅವನ ತುಟಿಗಳನ್ನೇ ನೋಡುತ್ತ, ಅವನು ನಕ್ಕಾಗ ಎದ್ದು ಬೀಳುತ್ತಿದ್ದ ಅವನ ಬಾಹು ಎದೆಯನ್ನೇ ನೋಡುತ್ತಾ ಕುಳಿತಳು ನಾಗವೇಣಿ. ಅವನ ಮಾತು ಕೇಳುತ್ತಿರುವಂತೆಯೇ ಮನಸ್ಸಿಗೆ ಸಮಾಧಾನವಾಯಿತು; ಹಿತವಾಯಿತು. ಸುಡು ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದುಬರುತ್ತಿರುವವರಿಗೆ ನೆರಳು ಸಿಕ್ಕಂತಾಯಿತು. ಕೃಷ್ಣಯ್ಯನ ಮಾತು, ಸಾಮಿಪ್ಯ ಎಷ್ಟೊಂದು ಹಿತಕರವಾಗಿ ಅಪ್ಯಾಯಮಾನವಾಗಿರುತ್ತದಲ್ಲ ಏಕೆ ಎಂದು ಯೋಚಿಸಿದಳು. ಕೃಷ್ಣಯ್ಯನನ್ನು ನೋಡಿದಷ್ಟೂ ನೋಡಬೇಕೆನಿಸುತ್ತದೆ. ಅವನ ಮಗ್ಗುಲಲ್ಲಿಯೇ ಕುಳಿತಿರಬೇಕೆನಿಸುತ್ತದೆ. ಏಕೆ ಎಂದು ಉತ್ತರ ಹುಡುಕುವ ಯತ್ನ ಮಾಡಿದಳು. ಕೃಷ್ಣಯ್ಯನನ್ನು ಕಂಡಾಕ್ಷಣ ಮೈಮನಸ್ಸು ಹುರುಪುಗೊಳ್ಳುತ್ತದಲ್ಲ ಕಾರಣವೇನಿರಬಹುದು ಎಂದು ಚಿಂತಿಸಿದಳು. +ಅಡಕೆ ಸೊಕ್ಕು ತಲೆಗೇರಿದ್ದರಿಂದಲೋ ಇಲ್ಲವೇ ಹೊಗೆಸೊಪ್ಪು ಹೆಚ್ಚಾಗಿದ್ದರಿಂದಲೋ ತಲೇ ಧಿಂ ಎಂದಿತು. ಕುಳಿತಲ್ಲಿಯೇ ಮೈಚೆಲ್ಲಬೇಕೆನಿಸಿತು. ಕೃಷ್ಣಯ್ಯ ತನ್ನ ಬಳಿ ಬಂದು ಕುಳಿತು ಅವನ ತೊಡೆಯಮೇಲೆ ತಲೆ ಇರಿಸಿಕೊಂಡು ನಿದ್ದೆ ಮಾಡುವ ಅವಕಾಶ ಸಿಕ್ಕರೆ ಹೇಗಿರುತ್ತದೆ ಎಂದು ಬಯಸಿದಳು. ಹಿಂದೆಲ್ಲ ಕೃಷ್ಣಯ್ಯನನ್ನು ತಾನು ಮುಟ್ಟುತ್ತಿದ್ದೆ ಹೊಡೆಯುತ್ತಿದ್ದೆ. ಹನ್ನೆರಡು-ಹದಿಮೂರನೇ ವಯಸ್ಸಿನವರೆಗೂ ಕೃಷ್ಣಯ್ಯನ ಮೈಗೆ ಮೈ ತಗುಲಿಸಿ ಓಡಿಯಾಡುತ್ತಿದ್ದೆ. ಆದರೆ ಮನೆಯಲ್ಲಿ ಅಮ್ಮ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಹೇಳಿದರು. ಮದುವೆಯಾದ ನಂತರ ಕೃಷ್ಣಯ್ಯ ದೂರವಾಗಿಬಿಟ್ಟ; ಬಹಳ ದೂರ. +ಮೈಯಲ್ಲಿ ಒಂದು ಬಗೆಯ ಆವೇಶ, ಉದ್ವೇಗ. ಕೃಷ್ಣಯ್ಯನ ಸಾಂತ್ವನದ ನುಡಿ ಮನಸ್ಸಿನಲ್ಲಿ ಏನೇನೋ ಭಾವನೆಗಳನ್ನು ಕೆರಳಿಸಿತು. ತಾನಿಲ್ಲಿ ಸುಖವಾಗಿಲ್ಲ. ಸಂತೋಷದಿಂದಿಲ್ಲ ಎಂದು ಹೇಳಬೇಕೆನಿಸಿತು. ನಿನ್ನ ಭಾವಯ್ಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅವರ ಸ್ವಭಾವವೇ ವಿಚಿತ್ರ. ನನ್ನ ಆಸೆ-ಆಕಾಂಕ್ಷೆಗಳೆಲ್ಲ ಅವರಿಂದ ನೆರವೇರುತ್ತಿಲ್ಲ ಎಂದು ಚೀರಿ ಹೇಳಬೇಕೆನಿಸಿತು. ಕೃಷ್ಣಯ್ಯನ ಎದೆಯಲ್ಲಿ ಮುಖವಿರಿಸಿ ಅತ್ತುಬಿಡಬೇಕು ಎನಿಸಿ ನಾಗವೇಣಿ ತಲೆ ಎತ್ತಿ ನೋಡಿದಳು… +“ನಡೀ ನಾಗು, ಮಲಗು.” +ಎಂದವನೇ ತನ್ನ ಹಾಸಿಗೆಯತ್ತ ನಡೆದು ಹಾಸಿಗೆಯ ಮೇಲುರುಳಿ ಕಂಬಳಿ ಎಳೆದುಕೊಂಡ. +ನಾಗವೇಣಿ ಮತ್ತೂ ಸ್ವಲ್ಪ ಹೊತ್ತು ಹೊಸಿಲಮೇಲೆಯೇ ಕುಳಿತಿದ್ದು ತನ್ನನ್ನು ತಾನೇ ಸಾವರಿಸಿಕೊಂಡು ಎದ್ದಳು. ಏನಾಗಿದೆ ತನಗೆ? ಏನೇನೋ ಹುಚ್ಚು ಆಸೆಗಳು ಮೈಯ್ಯಲ್ಲಿ ಹೊಕ್ಕು ಹರಿಯುತ್ತಿವೆ ಏಕೆ? ಕೃಷ್ಣಯ್ಯನನ್ನು ತಾನೇಕೆ ಇಷ್ಟೊಂದು ಹಚ್ಚಿಕೊಂಡಿದ್ದೇನೆ? ಗಂಡ ಒಳಗೆ ಮಲಗಿರುವುದನ್ನು ತಾನು ಮರೆತೆನೇಕೆ? +ದಡಬಡಿಸಿ ಎದ್ದು, ಗೋಡೆಯ ಮೇಲಿನ ಚಿಮಣಿಯನ್ನು ಕೈಗೆತ್ತಿಕೊಂಡು ನಾಗವೇಣಿ ಒಳಗೆ ಧಾವಿಸಿದಳು. ಕೋಣೆಯ ಬಾಗಿಲನ್ನು ಹಾಕಿ ಅಗುಳಿಯನ್ನು ಸರಿಸಿ ಗೋಡೆಯಮೇಲಿನ ಮೊಳೆಗೆ ಚಿಮಣಿಯನ್ನು ಸಿಗಿಸಿ, ಗಂಡನ ಹಾಸಿಗೆಯತ್ತ ತಿರುಗಿದಾಗ, ಅಗಲವಾಗಿ ತೆರೆದುಕೊಂಡ ಎರಡು ಕೆಂಪು ಕಣ್ಣುಗಳು ತನ್ನನ್ನು ದುರುಗುಟ್ಟಿ ನೋಡುತ್ತಿರುವುದರ ಅರಿವಾಗಿ, ಮೈಮೇಲೆ ಬೆಂಕಿ ಉಗ್ಗಿದಂತಾಯ್ತು. +“ಆಯ್ತೇನು ಮಾತು?” +ಕಟ್ಟಿ ಹಾಕಿದ ತುಂಟ ದನವನ್ನು ಬಾರಕೋಲಿನಿಂದ ಹೊಡೆದಂತೆ ತೀಕ್ಷ್ಣವಾಗಿ ತೂರಿಬಂತು ಪ್ರಶ್ನೆ. +“ಆಯ್ತು…ಯಾಕೆ?” +“ಅಲ್ಲ…ಕೇಳ್ದೆ, ಇನ್ನೂ ಮಾತಾಡಬಹುದಿತ್ತಲ್ಲ” +ಕೈ ಬಡಿದು ದೀಪ ಆರಿಸಿ ನಾಗವೇಣಿ ಹಾಸಿಗೆಯಮೇಲೆ ಉರುಳಿಕೊಂಡಳು. ಕಂಬಳಿಯನ್ನು ಎಳೆದುಕೊಂಡು ಮುಸುಕು ಬಿಗಿದುಕೊಂಡಾಗ ಗಣಪಯ್ಯ ಹೇಳಿದ್ದು ಕೇಳಿಸಿತು- +“ಈಗೀಗ ನೀನು ಮಿತಿಮೀನಿ ಹೋಗ್ತಿದಿಯಾ…” +ನಾಗವೇಣಿಗೆ ಮಾತು ಬೇಕೆನಿಸಲಿಲ್ಲ. ಅವಳು ತುಟಿಬಿಗಿದುಕೊಂಡು ಅತ್ತ ಹೊರಳಿಕೊಂಡಳು. ಮಂಚ ಕಿರುಗುಟ್ಟಿತು. ಪಣತದ ಮೇಲಿನ ಇಲಿಗಳು ಕೆಳಗಿಳಿದವು. ಗಣಪಯ್ಯ ಮುಷ್ಠಿ ಬಿಗಿದುಕೊಂಡು ಕತ್ತಲೆಯನ್ನು ಬಗಿದು ನೋಡಿದ. +ನಾಗವೇಣಿ ಒಳಬಂದು ಹೋದಾಗ ಅವನ ಒಂದು ನಿದ್ದೆ ಮುಗಿದಿತ್ತು. ಹೋದ ಹೆಂಡತಿ ದೀಪ ಹಿಡಿದು ಬರಬಹುದೆಂದು ಆತ ಕಾದ. ಅವಳು ಬರಲಿಲ್ಲ. ಹೊಸಿಲಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತ ಕೃಷ್ಣಯ್ಯನೊಡನೆ ಮಾತಿಗಾರಂಭಿಸಿದ್ದು ತಿಳಿಯಿತು. ಹೊರಗೆ ಬೀಳುತ್ತಿದ್ದ ಮಳೆಯಿಂದಾಗಿ ಅವರ ಮಾತು ಕೇಳದಿದ್ದರೂ ಈಗ ಇವಳಿಗೆ ಅದೇನು ಅವನೊಡನೆ ಮಾತನಾಡುವ ಆಸೆ ಎಂದು ಗಣಪಯ್ಯ ರೊಚ್ಚಿಗೆದ್ದ. +ಈಗ ಮಾತ್ರವಲ್ಲ; ಹಿಂದಿನಿಂದಲೂ ಅಷ್ಟೆ. ಕೃಷ್ಣಯ್ಯನ ಹೆಸರು ತೆಗೆದರೆ ಸಾಕು ಇವಳು ಕುಣಿದಾಡುತ್ತಾಳೆ. ಕೃಷ್ಣಯ್ಯ ಇಲ್ಲಿಗೆ ಬಂದ ನಂತರ ಇವಳ ಸಂಭ್ರಮ ಸಡಗರ ಹೆಚ್ಚಾಗಿದೆ. ಅವನೊಡನೆ ಅದೇನು ಮಾತು. ಅದೇನು ನಗೆ, ಏಕೆ? ಅವನೇನು ಇವಳ ಅಣ್ಣನೇ ತಮ್ಮನೇ? ಮನೆಯಲ್ಲಿ ಇವಳ ತಂದೆ ತಂದಿರಿಸಿಕೊಂಡು ಸಾಕಿದ ಅನಾಥ ಆತ, ಅವನೊಡನೆ ಅಷ್ಟೊಂದು ಆತ್ಮೀಯತೆ ಏಕೆ? +ಮಾತು ಮುಗಿಸಿ ಆಕೆ ಒಳಬಂದಾಗ ಎದ್ದು ಅವಳ ಕೆನ್ನೆ ನಾಲ್ಕೇಟು ಬಿಗಿಯಬೇಕೆಂದು ಮಾಡಿದ್ದ. ಆದರೆ ಕಷ್ಟಪಟ್ಟು ತಡೆದುಕೊಂಡ. ನಾಗವೇಣಿ ತನ್ನ ಹೆಂಡತಿ; ಅಷ್ಟು ಸುಲಭವಾಗಿ ಅವಲ ಬಗ್ಗೆ ಅನುಮಾನ ಪಡುವುದು ಉಚಿತವಲ್ಲ. ಇನ್ನೂ ಕಾದು ನೋಡೋಣ. ಹಾಗೆಂದೇ ಉಕ್ಕಿಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು ಈಗೀಗ ನೀನೌ ಮಿತಿಮೀರಿ ಹೋಗುತ್ತಿದ್ದೀಯ-ಎಂದು ಮಾತಿನ ಏಟು ಬಿಗಿದ. +ಪಕ್ಕಕ್ಕೆ ಹೊರಳಿದ. ನಾಗವೇಣಿ ಹತ್ತಿರವಿರಲಿಲ್ಲ. ಬೇಕೆಂದೇ ದೂರ ಸರಿದು ಮಲಗಿದ್ದಳು. ಇವಳಿಗೇ ಇಷ್ಟೊಂದು ಸೊಕ್ಕಿರುವಾಗ ನನಗೆಷ್ಟು ಇರಬೇಡ ಎಂದು ಗಣಪಯ್ಯ ಇನ್ನೊಂದು ಪಕ್ಕಕ್ಕೆ ಹೊರಳಿದ. ಮಳೆ, ಗಾಳಿಯ ಸದ್ದಲ್ಲದೆ ಬೇರೇನೂ ಕೇಳಿಸುತ್ತಿರಲಿಲ್ಲ. ಆ ಸೀತಾಪರ್ವತದ ಮೇಲಿನಿಂದ ಬೀಸಿಬಂದ ತಣ್ಣನೆಯ ಗಾಳಿ ಮಳೆಯಲ್ಲೆಲ್ಲ ಸುಳಿದಾಡುತ್ತಿತ್ತು. +ಪುನರ್ವಸು +ಶನಿವಾರ ಕಳೆದು ಭಾನುವಾರ ಬೆಳಕು ಹರಿಯುತ್ತಿರುವಾಗ ಹೊರಗೆಲ್ಲಾ ಬಿಸಿಲು ಮೂಡಿತು. ಬೆಳಗಿನ ಜಾವ ನಿಂತು ಹೋದ ಮಳೆಯ ಹಾರಾಟ, ಅಬ್ಬರ, ಗದ್ದಲವೆಲ್ಲ ಮಾಯವಾಗಿ ಆಕಾಶ ಗುಡಿಸಿದ ಅಂಗಳದಂತೆ ನಿರ್ಮಲವಾಯಿತು. ಅಲ್ಲಲ್ಲಿ ನಿಂತ ನೀರಿಲ್ಲದೇ ನೆಲದಮೇಲೆ, ಅಂಗಳದಲ್ಲಿ, ಹಿತ್ತಿಲಲ್ಲಿ, ಚಪ್ಪರದಲ್ಲಿ ನೆಲ ಒಣಗತೊಡಗಿತು. ಚುಮುಚುಮು ಬಿಸಿಲು ಬಿತ್ತೆಂದು ಹಕ್ಕಿಗಳು ಹಾರಿದವು. ಪೊದೆ- ಪೊಟರೆಗಳಲ್ಲಿ ಕೋಳಿ-ಮೊಲಗಳು ಓಡಿಯಾಡಿದವು. ಸೀತಾಪರ್ವತದ ಕಾಡಿನಲ್ಲಿ ಕೋಳಿಗಳ ಕಿಚ್‌ಕಿಚ್ ಸದ್ದು ಕೇಳಿಸಿತು. ಹಲವಾರು ದಿನಗಳಲ್ಲಿ ಕೊಟ್ಟಿಗೆಯಲ್ಲೇ ಇದ್ದ ದನ ಕರುಗಳು ಕೊಟ್ಟಿಗೆಯ ಬಾಗಿಲತ್ತ ತಿರುಗಿ ನಿಂತು ಬಿಸಿಲನ್ನು ದಿಟ್ಟಿಸಿ ನೋಡಿದವು. +ಹೊಸ ಮಳೆ ಎಂಟು ದಿನ ಬಿಡುವು ಕೊಡುತ್ತದೆಂಬುದು ಖಚಿತವಾಯಿತು. ಕೃಷ್ಣಯ್ಯ ಸೊಂಟಕ್ಕೆ ಒಡ್ಯಾಣ ಕಟ್ಟಿಕೊಂಡು, ಕತ್ತಿಯನ್ನು ಅದಕ್ಕೆ ಸಿಕ್ಕಿಸಿಕೊಂಡು ಹೊರಟ. ಗಣಪಯ್ಯ ಗುದ್ದಲಿಯನ್ನು ಹೆಗಲಮೇಲೆ ಹಾಕಿಕೊಂಡು ಹೊಲದತ್ತ ನಡೆದ. ನಾಗವೇಣಿ ಮೈಚಳಿ ಬಿಟ್ಟಂತೆ ಲವಲವಿಕೆಯಿಂದ ಓಡಿಯಾಡಿದಳು. +ಅಡಿಕೆ ತೋಟದಲ್ಲಿ ಅಂತಹಾ ಹಾನಿಯೇನೂ ಆಗಿರಲಿಲ್ಲ. ಹಳ್ಳಿ ತುಂಬಿ ಹರಿದು ಅಲ್ಲಲ್ಲಿ ತೋಟದ ನೆಲ ಕೊರೆದುಹೋಗಿತ್ತು. ಹಿಂದೆಯೇ ವಾಲಿಕೊಂಡಿದ್ದ ಅಡಕೆ ಮರವೊಂದು ಪೂರ್ಣವಾಗಿ ಬಿದ್ದಿತ್ತು. ಒಂದೆರಡು ಅಡಕೆ ಸಸಿಗಳು ಹಾಳಾಗಿದ್ದವು. ಬಾಳೆಗಿಡಗಳು ಉರುಳಿಕೊಂಡಿದ್ದವು. ಕೃಷ್ಣಯ್ಯ ತೋಟವನ್ನೆಲ್ಲ ಸುತ್ತಿಕೊಂಡು ಹೊಲದ ಬಳಿ ಬಂದಾಗ ಗಣಪಯ್ಯ ಬದುವಿನ ಮೇಲೆ ನಿಂತು ಹೊಲದ ತುಂಬ ದೃಷ್ಟಿ ಹಾಯಿಸಿದ್ದ. +ಇಲ್ಲೂ ಅಂತಹ ಅನಾಹುತವೇನೂ ಆಗಿರಲಿಲ್ಲ. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ನೀರು ಹರಿದುಹೋಗುತ್ತಲಿತ್ತು. ಸಸಿಗಳು ಅಚ್ಚ ಹಸಿರು ವರ್ಣಕ್ಕೆ ತಿರುಗಿ, ನಿಂತ ಕೆಸರ ನೀರಿನಲ್ಲಿ ಗಾಳಿಗೆ ಸೂ ಎಂದು ತೊನೆದಾಡುತ್ತಿದ್ದವು. ಗಾಳಿಗೆ ಅಲೆ ಸಸಿಗಳೊಡನೆ ಚಕ್ಕಂದವಾಡುವ ದೃಶ್ಯ ಸೊಗಸಾಗಿ ಕಾಣುತ್ತಿತ್ತು. ಎಳೆಬಿಸಿಲು ಹೊಲದುದ್ದಕ್ಕೂ ಪವಡಿಸಿತ್ತು. +“ತೋಟ ಹ್ಯಾಗಿದೆ?” +ಎಂದು ಕೇಳಿದ ಗಣಪಯ್ಯ. +“ಅಲ್ಲೇನೂ ಆಗಿಲ್ಲ ಭಾವ. ಸಂಕದ ಹತ್ತಿರ ಒಂದು ಅಡಿಕೆಮರ ಇತ್ತಲ್ಲ, ಅದು ಮಾತ್ರ ಬಿದ್ದಿದೆ.” +ಇಬ್ಬರೂ ಹೇರಂಬನ ತೋಟದತ್ತ ನಡೆದರು. ಹೇರಂಬನ ತೋಟದಲ್ಲಿ ಗಾಳಿ ಒಂದಿಷ್ಟು ದಾಂಧಲೆ ಮಾಡಿತ್ತು. ಕೆಲವಾರು ಮರಗಳು ಮುರಿದು ಬಿದ್ದಿದ್ದವು. ಹಳ್ಳದ ನೀರು ತೋಟದೊಳಗೆ ನುಗ್ಗಿ ಹಾಳೆಯನ್ನು ತೊಳೆದುಕೊಂಡುಹೋಗಿತ್ತು. +ಹೇರಂಬನ ತೋಟದಿಂದ ಹೊಲಗಳತ್ತ ಇಳಿದಾಗ ಗಣಪಯ್ಯ ಅಯ್ಯೋ ಎಂದು ಕೂಗಿಕೊಂಡ. ಶರಾವತಿ ಹೇರಂಬನ ಹೊಲದತ್ತ ನುಗ್ಗಿದಳು. ಶರಾವತಿ ನದಿಗೆ ಅಂಟಿಕೊಂಡಂತಿದ್ದ ನಾಲ್ಕು ಗೇಣಿನ ಒಂದು ಹೊಲ ಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಉಳಿದುದೆಲ್ಲ ಸುರಕ್ಷಿತವಾಗಿತ್ತು. +ಶರಾವತಿಯ ನೀರು ಮಂದ ಮಂದವಾಗಿ ಹರಿಯುತ್ತಿರುವುದನ್ನು ಕಂಡ ಕೃಷ್ಣಯ್ಯ- +“ಬಾವಯ್ಯ…ನೀರು ಮತ್ತೆ ಏರೋದಿಲ್ಲ” +ಎಂದು ಗಣಪಯ್ಯನ ಮುಖ ನೋಡಿ +“ಅದು ಹೇಗೆ ಗೊತ್ತಾಯ್ತು ನಿನಗೆ?” +ಎಂದು ಕೇಳಿದಾಗ, ಕೃಷ್ಣಯ್ಯ ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಸದ್ದನ್ನು ಆಲಿಸುವಂತೆ ಹೇಳಿದ. ಅದು ಡ್ಯಾಮಿನ ಮೇಲಿಂದ ನೀರು ಕೆಳಗೆ ಬೀಳುತ್ತಿರುವ ಸದ್ದಲ್ಲವೇ ಎಂದು ಕೇಳಿದ. ಡ್ಯಾಮು ತೊಂಬುತ್ತೋ-ನೂರೋ ಅಡಿ ಕಟ್ಟಿ ಮುಗಿದಿದೆ. ಅಲ್ಲಿಯವರೆಗೂ ನೀರು ನಿಂತು, ಆನಂತರ ಬಂದ ನೀರೆಲ್ಲ ಈಗ ಹೊರಟು ಹೋಗಲಾರಂಭಿಸಿದೆ ಎಂದು ಸಾರಿದ ಕೃಷ್ಣಯ್ಯ. +“ಬಾವಯ್ಯ…ಇನ್ನು ನಾವು ಗೆದ್ದ ಹಾಗೆ” +ಎಂದ. ಗಣಪಯ್ಯನಿಗೂ ಈ ಮಾತು ಹೌದೆನಿಸಿತು. ಶರಾವತಿ ಮಂದಗಮನೆಯಾಗಿ ಮುಂದೆ ಹರಿದು ಹೋಗುತ್ತಿದ್ದಾಳೆ. ಅಂದರೆ ಹರಿದು ಬಂದ ನೀರು ಮಡುಗಟ್ಟಿ ನಿಲ್ಲುವುದಿಲ್ಲ ಎಂದಾಯಿತು. ಎಲ್ಲಿ ಹಳ್ಳಿ ಮುಳುಗುತ್ತದೊ ಎಂಬ ಅಂಜಿಕೆ ದೂರವಾಯಿತು. +“ಹೌದು…ನೀ ಹೇಳೋದು ಸರಿ” +ಎಂದು ತಲೆದೂಗಿದ ಗಣಪಯ್ಯ. ಈ ಸಂತಸದಿಂದಲೇ ಅವರಿಬ್ಬರೂ ಮನೆಗೆ ಹಿಂದಿರುಗಿದರು. +ಚಪ್ಪರದೊಳಗೆ ಕಾಲಿಡುತ್ತಿರುವಾಗ ಜಗಲಿಯ ಮೇಲೆ ಬೆದರಿ ನಿಂತ ನಾಗವೇಣಿ ಅಳುಮೋರೆ ಮಾಡಿಕೊಂಡು ತೊದಲಿದಳು. +“ಕೃಷ್ಣಯ್ಯ… ಅಡಿಗೆ ಮನೆಯಲ್ಲಿ ಹಾವು..” +“ಏನು? ಹಾವೇ? ” +ಗಣಪಯ್ಯ ಹಿಮ್ಮೆಟ್ಟಿ ನಿಂತ, ಕೃಷ್ಣಯ್ಯ ಎಲ್ಲಿ ಎಂದು ಕೇಳುತ್ತಾ ಒಳಗೆ ನಡೆದ. +ಅಡಿಗೆ ಮನೆಯ ಹೊಸಿಲ ಹೊರಗೆ ಬಾಲ ಇರಿಸಿಕೊಂಡು ಆರಾಮಾಗಿ ಮಲಗಿತ್ತು. ನೀರ ಹಾವು. ಅದರ ಮೈ ಅಡಿಗೆಯ ಮನೆಯೊಳಗೆಲ್ಲೋ ಇತ್ತು. ಹ್ಗಣಪಯ್ಯ ಉದ್ದವಾದ ಕೋಲೊಂದನ್ನು ತಂದು ಕೃಷ್ಣಯ್ಯನತ್ತ ನೀಡಿ— +“ಕೃಷ್ಣಯ್ಯ.. ನಾಗರ ಹಾವಲ್ಲ, ನೀರ ಹಾವು, ಹೊಡೆದು ಬಿಡು.” +ಎಂದ ಕೃಷ್ಣಯ್ಯ ಗಣಪಯ್ಯನನ್ನು ಹಿಂದೆ ಸರಿಸಿ, ನಾಗವೇಣಿಯನ್ನು ದೂರ ಹೋಗುವಂತೆ ಸನ್ನೆ ಮಾಡಿ, ಹಾವಿನತ್ತ ಬಾಗಿ ಅದರ ಬಾಲವನ್ನು ಹಿಡಿದುಕೊಂಡ. ಕೈಮುಷ್ಥಿಯಲ್ಲಿ ಹಾವಿನ ಬಾಲವನ್ನು ಹಿಡಿದು, ಒಂದು ಸುತ್ತು ಸುತ್ತಿಕೊಂಡು, ಹಾವನ್ನು ಜಗ್ಗಿದ. ಅದು ಐದು ಅಡಿಯ ಹಾವಿನ ಮೈ ಮೆಲುಕಾಡುತ್ತ ಕೃಷ್ಣಯ್ಯನ ಕೈಯಲ್ಲಿ ಜೋತಾಡಿತು. ಕೃಷ್ಣಯ್ಯ ಅದನ್ನು ಮೇಲೆತ್ತಿ ಹಿಡಿದು ತಿರುಗಿಸುತ್ತ ಹಿತ್ತಲಿಗೆ ಓಡಿದ. ಹಾವು ಆಕಾಶದಲ್ಲಿ ಗಿರ್ರನೆ ನಾಲ್ಕು ಸುತ್ತು ಹೊಡೆದು ಫಳಾರನೆ ನೆಲಕ್ಕೆ ಅಪ್ಪಳಿಸಿತು. ಎರಡು ಕ್ಷಣ ಒದ್ದಾಡಿ ಹಾವು ಮೈ ಹೊರಳಿಸಿತು. ಕೃಷ್ಣಯ್ಯ ಮತ್ತೊಮ್ಮೆ ಹಾವಿನ ಬಾಲ ಹಿಡಿದು ಬೀಸಿ ಒಗೆದ. ಹಾವು ಬೇಲಿಯ ಆಚೆಗಿನ ಕುನ್ನೇರಳೇ ಪೊದೆಗಳತ್ತ ಹೋಗಿ ಬಿತ್ತು. ನಾಗವೇಣಿ ಕೃಷ್ಣಯ್ಯನತ್ತ ಮೆಚ್ಹ್ಚುಗೆಯ ನೋಟ ಬೀರಿ ಒಳಗೆ ನಡೆದಳು. +ಊಟ ಮುಗಿಸಿ ಕೃಷ್ಣಯ್ಯ ಮನೆಯಿಂದ ಹೊರಟ. ಮಳೆಯಿಂದಾಗಿ ಕಟ್ಟಿಹಾಕಿದಂತಾಗಿತ್ತು. ಬಿಸಿಲಲ್ಲಿ ಒಂದಿಷ್ಟು ತಿರುಗಾಡಿ ಬರೋಣವೆಂದೇ ಹೊಸಮನೆಯಿಂದ ಅರಲಗೋಡಿಗೆ ಹೋಗುವ ಕಾಲುದಾರಿ ಹಿಡಿದ. ಸೀತಾಪರ್ವತದ ಒಂದು ಪಾರ್ಶ್ವವನ್ನು ಹತ್ತಿದ. ಕಾಲು ಹಾದಿ ಜನರ ಓಡಾಟವಿಲ್ಲದೆ, ಹುಲ್ಲು ಬೆಳೆದು ಕಾಣೆಯಾಗಿತ್ತು. ಈ ಬದಿಯಿಂದ ಹತ್ತಿದವ ಅತ್ತ ಹೀಗಿ ಇಳಿದ. ಹತ್ತು ಹೆಜ್ಜೆ ಹಾಕಿದಾಗ ನೀರು ಕಂಡಿತು, ನಿಂತ. ಹೊಲದ ಬಳಿ ನಿಂತು ನೋಡಿದರೆ ಕಣ್ಣೆದುರು ಹೇಗೆ ಒಂದು ಜಲರಾಶಿ ಕಾಣುತ್ತದೋ ಅಂತಹುದೇ ದೃಶ್ಯ. ಎಡಕ್ಕೆ ತಿರುಗಿದರೂ ನೀರು. ಬಲಕ್ಕೆ ತಿರುಗಿದರೂ ನೀರು. ಎದುರು ದೃಷ್ಟಿ ಬೀರಿದರೆ ಸುಮಾರು ಒಂದು ಫರ್ಲಾಂಗಿನಷ್ಟು ದೂರದವರೆಗೂ ನೀರು. ಅನಂತರ ಅರಲಗೋಡಿನ ಹಸಿರು ಗುಡ್ಡ. ದೂರದ ಮನೆಗಳು-ಹೊಲಗಳು. ನಿಂತ ನೀರಿನಲ್ಲಿ ಮುಳುಗಿರುವ ಮರಗಳ ಮೇಲ್‌ಭಾಗವಷ್ಟೇ ಕಾಣಿಸುತ್ತಿತ್ತು. ಕಡಿಮೆ ಎಂದರೆ ಹತ್ತು ಅಡಿ ನೀರಾದರೂ ಇಲ್ಲಿ ನಿಂತಿರಬಹುದು. ಈ ನೀರು ಇಳಿಯುತ್ತದೆಯೇ? ಯಾವಾಗ? +ಕೃಷ್ಣಯ್ಯ ನೀರ ಪಕ್ಕದಲ್ಲೇ ನಡೆದು ಅಷ್ಟು ದೂರ ಹೋದ. ದಡದ ಮೇಲೆ ಅಲ್ಲಲ್ಲಿ ಕೊಳೆತ ಪ್ರಾಣಿಗಳು. ಮೊಲವೋ, ಕಾಡುಕೋಳಿಯೋ, ಜಿಂಕೆಯೋ, ಯಾವುದೋ ಒಂದು ಪ್ರಾಣಿ. ನೀರಿನಲ್ಲಿ ಮುಳುಗಿಯೋ, ಮಳೆಗಾಳಿಗೆ ಸಿಕ್ಕಿಯೋ ಸತ್ತಿರಬೇಕು. ಪ್ರಾಣಿ ಈಗ ಕೊಳೆತು ನಾರುತ್ತಿದೆ. ಮುಂದೆ ಹೋಗುವುದೇಕೆ ಎಂದು ತಿರುಗಿದ. ಮತ್ತೆ ಕಾಲುದಾರಿ ನೀರಿನತ್ತ ಇಳಿದು ಮಾಯವಾದಲ್ಲಿಗೆ ಬಂದು, ನೀರಿಗೆ ಬೆನ್ನುಹಾಕಿ ಹಳ್ಳಿಯತ್ತ ಹೆಜ್ಜೆ ಹಾಕತೊಡಗಿದ. +ಗಣಪಯ್ಯ ಹಳ್ಳಿಗೆ ಬರುವವಂತೆ ಹೇಳಿಕಳುಹಿಸಿದಾಗ ತಾನು ಇಲ್ಲಿಗೆ ಬರಬಾರದೆಂದಿದ್ದೆ. ಯಜಮಾನರು ಈ ಬಗ್ಗೆ ಏನೂ ಹೇಳದೆ ತಾನಾಗಿಯೇ ಇಲ್ಲಿಗೆ ಹೊರಟುಬರುವುದು ಒಳ್ಳೆಯದಲ್ಲ ಎಂದು ತಾನು ಸುಮ್ಮನೆ ಉಳಿದೆ. ಆದರೆ ಗಣಪಯ್ಯ ಯಜಮಾನರಿಗೂ ಹೇಳಿಕಳುಹಿಸಿದ್ದ. ಯಜಮಾನರು ತನ್ನನ್ನು ಕರೆದು- +“ಕೃಷ್ಣಾ…ಹುಡುಗಿ ಗಂಡ ಹೇಳಿಕಳ್ಸಿದಾನೆ, ನೀನು ಹೋಗಿ ನಾಲ್ಕು ತಿಂಗಳು ಇದ್ದು ಬಾ” +ಎಂದಿದ್ದರು. ಸಾಧ್ಯವಾದರೆ ಈ ಕೆಲಸ ತಪ್ಪಿ ಹೋಗಲಿ ಎಂದು ಯಾವುದೋ ಕೆಲಸದ ನೆಪ ಮಾಡಿಕೊಂಡು ಸಾಗರಕ್ಕೂ ಹೋದೆ. ಅಲ್ಲಿ ಎಂಟು ದಿನ ಉಳಿದು ತಿರುಗಿ ಬಂದಾಗ ಯಜಮಾನರು- +“ನೀನಿನ್ನು ಹೊರಡು” ಎಂದರು. +ಹೊರಟೆ. +ನಾಗವೇಣಿ ಯಜಮಾನರ ಮಗಳು. ತನಗಿಂತ ಹತ್ತು ವರ್ಷಕ್ಕೆ ಸಣ್ಣವಳು, ತಾನು ಎತ್ತಿ ಆಡಿಸಿ ದೊಡ್ಡವಳನ್ನಾಗಿ ಮಾಡಿದೆ. ಹಿಂದೆಲ್ಲಾ ಜೊತೆಯಲ್ಲಿ ಆಡಿ, ಉಂಡು ಕಾಲಕಳೆದಿದ್ದೆವು. ನಾಗವೇಣಿ ಬೆಳೆದ ಹಾಗೆ ಅವಳ ಬಗ್ಗೆ ಅದೇನೋ ಆಸಕ್ತಿ ಕುತೂಹಲ . ಝಂಪರಿನೊಳಗೆ ಉರುಟು ಉರುಟಾಗಿ ಬೆಳೆದ ಎದೆ, ದುಂಡಗೆ ರೂಪಗೊಂಡ ಅವಳ ತೋಳು, ಕೆಂಪೇರಿದ ಅವಳ ಗಲ್ಲ, ಕಿರಿದಾಗಿ, ಅಗಲವಾಗಿ, ಬಳಿಕಿ ಬಾಗುವ ಅವಳ ಸೊಂಟ ಇದೆಲ್ಲದರ ಬಗ್ಗೆ ಒಂದುರೀತಿಯ ತುಡಿತ. ಅವಳನ್ನು ಮತ್ತೆ ಮತ್ತೆ ನೋಡಬೇಕು, ಮಾತನಾಡಿಸಬೇಕು, ಮುಟ್ಟಬೇಕು, ನಗಿಸಬೇಕು, ಅಳಿಸಬೇಕು, ಸತಾಯಿಸಬೇಕು ಎನ್ನುವ ಆಸೆ, ಹಂಬಲ, ಹುಚ್ಚು, ಆತುರ. ಆದರೆ ಈ ಕಾರ್ಯಗಳಿಗೆ ಅಡ್ಡಿಯೊದಗಿದಂತೆ ಅಮ್ಮನ ಎಚ್ಚರಿಕೆ. ಹದ್ದುಗಣ್ಣು ಕಾವಲು. +“ಕೃಷ್ಣಾ, ಈಗ ನಾಗು ಬೆಳ್ದಿದಾಳೆ. ಹಿಂದಿನ ಹಾಗೆ ಅವಳನ್ನ ಆಟಕ್ಕೆ ಕರೀಬೇಡ ನೀನು” +ಇದು ತನಗೆ ಹೇಳಿದ ಮಾತು. ನಾಗೂಗೆ ಇದೇ ರೀತಿಯ ಮತ್ತೊಂದು ಎಚ್ಚರಿಕೆ. +ನಾಗು ಲಂಗ ಬಿಟ್ಟು ಸೀರೆ ಉಟ್ಟಳು. ಉರುಟು ಉರುಟಾಗಿ ರೂಪಗೊಂಡ ಎದೆಯ ಮೇಲೆ ಸೆರಗು ಬಂತು. ಯಜಮಾನರು ಮಗಳ ಮದುವೆ ಮಾಡಲು ಓಡಿಯಾಡಿದರು. ಬಾವಯ್ಯನೊಡನೆ ನಾಗವೇಣಿಯನ್ನು ಬೀಳ್ಕೊಡಲು ತಾಳಗುಪ್ಪೆಯ ಬಸ್‌ಸ್ಟ್ಯಾಂಡಿನವರೆಗೂ ಬಂದಿದ್ದೆ. ನಾಗವೇಣಿ ಅಂದು ಹೋಗಿಬರುವುದಾಗಿ ಹೇಳಿ ತುಂಬಾ ಅತ್ತಳು. ತಾನೂ ಅತ್ತೆ. ಮೂರು ದಿನ ಊಟ ಸಹಾ ಸೇರಿರಲಿಲ್ಲ ತನಗೆ. ಅಮ್ಮ ಅನಂತರ ಒಂದು ಬಾರಿ ಮನೆಗೆ ಬಂದ ನಾಗವೇಣಿಗೆ ಈ ವಿಷಯ ಹೇಳಿ ನಕ್ಕರು. +ನಾಗವೇಣಿ ಇಲ್ಲಿಗೆ ಬಂದ ಮೇಲೂ ತಾನು ಇಲ್ಲಿಗೆ ಬಂದು ಹೋಗುತ್ತಿದ್ದೆ. ಮೊದಲ ಬಾರಿಗೆ ಬಂದಾಗ ಸೀತಾಪರ್ವತದ ಗುಹೆಯವರೆಗೂ ಹೋಗಿ ಬಂದಿದ್ದೆವು. ಆದರೆ ಕ್ರಮೇಣ ನಾಗವೇಣಿಯನ್ನು ಮರೆಯುವ ಯತ್ನ ಮಾಡಿದೆ. ಅವಳು ಎಷ್ಟೆಂದರೂ ಯಜಮಾನರ ಮಗಳು. ಮದುವೆಯಾಗಿರುವಾಕೆ. ತಾನು ಅವಳಿಗಾಗಿ ಹಂಬಲಿಸಬಾರದು ಎಂದು ನಿರ್ಧರಿಸಿದೆ. +ಆದರೆ ಈಗ ಮತ್ತೆ ಬಂದು ಇಲ್ಲಿ ಸಿಕ್ಕಿ ಬಿದ್ದಿದ್ದೇನೆ. +ನಾಗವೇಣಿ ತನ್ನೊಡನೆ ಮಾತನಾಡುವಾಗ ಮೈಮರೆಯುತ್ತಾಳೆ. ಗಂಡ ಹತ್ತಿರವಿರುವುದನ್ನು ಮರೆಯುತ್ತಾಳೆ. ತಾನು ಅಲ್ಲಿದ್ದರೆ ಬೇರೇನೂ ಆಕೆಗೆ ಬೇಕಾಗುವುದಿಲ್ಲ. ಅಂತಹಾ ಪರವಶತೆ. ಆದರೆ ಇದರ ಪರಿಣಾಮ ಮುಂದೆ ಏನಾಗುತ್ತದೋ ಯಾರು ಬಲ್ಲರು? ಗಣಪಯ್ಯ ಇದನ್ನೆಲ್ಲ ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳುತ್ತಾನೋ. ಹೀಗೆ ವರ್ತಿಸಬೇಡವೆಂದು ನಾಗವೇಣಿಗೆ ಹೇಳಲೆ? ಇಲ್ಲಿ ತನ್ನ ಸ್ವಾರ್ಥ ಅಡ್ಡ ಬರುತ್ತದೆ. ನಾಗವೇಣಿ ಹಾಗೆ ವರ್ತಿಸುವುದು ತನಗೆ ಬೇಕು. ಅವಳು ತನ್ನೆದುರು ಹಾಗೆಲ್ಲ ಮಾತನಾಡಬೇಕು.ನಗಬೇಕು. ಗಂಡನನ್ನು ನಿರ್ಲಕ್ಷ್ಯದಿಂದ ಕಾಣಬೇಕು. ಅಂದರೆ ತನಗೆ ಸಂತೋಷ-ತೃಪ್ತಿ. ಹೀಗೂ ತಾನು ಬಯಸುತ್ತೇನೆ; ನಾಗವೇಣಿಯ ಬಾಳು ಹಾಳಾಗಬಾರದೆಂದೂ ಆಶಿಸುತ್ತೇನೆ. ಆದರೆ ಈ ಎರಡೂ ಆಗುವುದು ಸಾಧ್ಯವೆ? +ಊರಿಗೆ ಹಿಂತಿರುಗೋಣವೆಂದರೆ ಇಲ್ಲಿಂದ ಹೋಗುವುದು ಹೇಗೆ? ಸುತ್ತಲೂ ನಿಂತ ನೀರು. ನೀರಿನಲ್ಲಿ ಮುಳುಗಿ ನಿಂತ ಮರ ಬಳ್ಳಿಗಳು. ಇಲ್ಲಿ ನಾಲ್ಕು ತಿಂಗಳು ಇದ್ದು ಬರುವಂತೆ ಯಜಮಾನರು ಬೇರೆ ಹೇಳಿದ್ದಾರೆ. ಏನು ಮಾಡುವುದು ಎಂಬುದೇ ಪ್ರಶ್ನೆ. +ಪ್ರಶ್ನೆ ಬಗೆಹರಿಯಲಿಲ್ಲ. ಕೃಷ್ಣಯ್ಯ ಗುಡ್ಡ ಇಳಿದು ಮನೆಗೆ ಬಂದ. ಜಗುಲಿಯ ಮೇಲೆ ಒಡ್ಯಾಣ ಬಿಚ್ಚಿ ಇರಿಸಿ ಒಳ ನಡೆದ. ಕಣ್ಣಿಗೆ ಸೆರಗು ಹಚ್ಚಿಕೊಂಡ ನಾಗವೇಣಿ ಬಿಕ್ಕುತ್ತಾ ಅಡಿಗೆ ಮನೆಯಲ್ಲಿ ಮರೆಯಾದಳು. ಮುಖ ಬಿಗಿದುಕೊಂಡು ಹೊರಬಂದ ಗಣಪಯ್ಯ ಗಡುಸು ದನಿಯಲ್ಲೇ- +“ಎಲ್ಲಿಗಯ್ಯ ಹೋಗಿದ್ದೆ?” +ಎಂದು ಕೃಷ್ಣಯ್ಯನನ್ನು ಕೇಳಿದ. ಕೃಷ್ಣಯ್ಯ ಸ್ಸಂಕಟದಿಂದಲೇ ನುಡಿದ- +“ನೀರು ಇಳಿದಿದ್ರೆ ಊರಿಗೆ ಹಿಂದಿರುಗೋಣ ಅಂತ ಗುಡ್ಡ ಹತ್ತಿ ಇಳಿದು ನೋಡಿ ಬಂದೆ, ಕಾಲು ದಾರಿ ನೀರಿನಲ್ಲಿ ಮುಳುಗಿದೆ…ಈಜು ಹೊಡೆದುಕೊಂಡೇ ಆ ದಂಡೆಗೆ ಹೋಗಬೇಕು” +“ಹುಂ…ಅದೆಲ್ಲ ಈಗಬೇಡ, ದನಕರು ಬಂದಿದ್ರೆ ಕಟ್ಟಿ ಹಾಕು, ನೀರು ಇಳಿದ ಮೇಲೇನೇ ಊರಿಗೆ ಹೋಗುವಿಯಂತೆ” +ಗಣಪಯ್ಯ ಗಡುಸು ದನಿಯನ್ನು ಮೃದುಗೊಳಿಸಿ ನುಡಿದು, ನಕ್ಕ. ಅಡಿಗೆಮನೆಯಿಂದ ಕೇಳಿಬರುತ್ತಿದ್ದ ಬಿಕ್ಕಳಿಕೆಯನ್ನೇ ಆಲಿಸುತ್ತಿದ್ದ ಕೃಷ್ಣಯ್ಯ ನಗಲಿಲ್ಲ. ಕಾಲೆಳೆದುಕೊಂಡು ಕೊಟ್ಟಿಗೆಯತ್ತ ಸಾಗಿದ. +ಕೃಷ್ಣಯ್ಯ ಊಟ ಮುಗಿಸಿ ಹೊರಹೊರಟ ಸ್ವಲ್ಪ ಹೊತ್ತಿನಲ್ಲಿ ನಾಗವೇಣಿ ಸೀರೆಗೆ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದಳು. ಜಗುಲಿಯ ಮೇಲೆ ಕೃಷ್ಣಯ್ಯ ಇರಲಿಲ್ಲ. +“ಹೌದಾ…ಕೃಷ್ಣಯ್ಯ ಎಲ್ಲಿ?” +ಅವಳು ಎಂದಿನಂತೆ ಗಣಪಯ್ಯನನ್ನು ಕೇಳಿದಾಗ ಗಣಪಯ್ಯ ಹೊಟ್ಟಿನ ರಾಶಿಗೆ ಕಿಡಿ ತಗುಲಿದಂತೆ ಹೊತ್ತಿಕೊಂಡ. +“ಆ ಬೇವರ್ಸಿ ನಿನಗೆ ಯಾರೆ?” +ಎಂದು ಕೇಳಿದ. ಹೆಂಡತಿ ಉತ್ತರಿಸುವ ಮೊದಲೇ ಹಾರಿ ನಿಂತು, ಮತ್ತೊಮ್ಮೆ ಅವನ ಹೆಸರು ಎತ್ತಿದರೆ ಕಡಿದು ಹಾಕುವುದಾಗಿ ಬೊಬ್ಬೆ ಹಾಕಿದ. ಅವನ ಎದುರು ಓಡಿಯಾಡಿದರೆ ಕಾಲು ಕತ್ತರಿಸಿಹಾಕುವೆನೆಂದ. ಅವನ ಹತ್ತಿರ ಮಾತನಾಡಿದರೆ ನಾಲಿಗೆ ಸೀಳುವೆನೆಂದ್ದ. ಗಂಡ ಸಾಮಾನ್ಯ ವ್ಯಕ್ತಿಯಂತೆ ಹೊಲಸು ಮಾತನಾಡುತ್ತ, ಕುಣಿದಾಡುವುದನ್ನು ನೋಡಿ ಹೇಸಿಗೆಯೆನಿಸಿ, ತನ್ನ ಬಗ್ಗೆ ಅವನಾಡಿದ ಮಾತುಗಳಿಂದ ಕ್ರೋಧ ಉಕ್ಕಿ ನಾಗವೇಣಿ- +“ನೀವು ಅದೇನು ಮಾಡ್ತಿರೋ ಮಾಡಿ ಕೃಷ್ಣಯ್ಯ ನನ್ನ ಒಡಹುಟ್ಟಿದೋನು” +ಎಂದಾಗ ಗಣಪಯ್ಯ ಮತ್ತೂ ವ್ಯಗ್ರನಾದ. ಹೆಂದತಿಯನ್ನು ಒಳಗೆ ಎಳೆದುಕೊಂಡು ಹೋಗಿ ಕೈ ಸೋತು ಹೋಗುವವರೆಗೂ ಹೊಡೆದ. +ಆ ನಂತರ ಅವನಿಗೇ ಛೀ ಎನಿಸಿತು. ಸಾಯಿ ಎಂದು ಹೆಂಡತಿಯ ಕೈಬಿಟ್ಟು ಮಂಚದ ಮೇಲೊರಗಿದ. +ಕೃಷ್ಣಯ್ಯ ಹಿಂತಿರುಗಿ ಬಂದಾಗ ಗಣಪಯ್ಯನ ಒಂದು ನಿದ್ದೆ ಮುಗಿದಿತ್ತು. ನಾಗವೇಣಿ ಇನ್ನೂ ಬಿಕ್ಕಳಿಸುತ್ತಿದ್ದಳು. ಕೃಷ್ಣಯ್ಯನನ್ನು ನೋಡಿದಾಗ ಉಕ್ಕಿದ ಸಿಟ್ಟು ಅಲ್ಲೇ ಉಡುಗಿ ಗಣಪಯ್ಯ ಅದೇನೋ ಮಾತಾಡಿ ಹಗುರವಾಗಿ ನಕ್ಕ. ಇಷ್ಟೆಲ್ಲ ರಾದ್ದಾಂತ ಬೇಕಿರಲಿಲ್ಲವೆಂದು ಆತ ನಡೆದುಹೋದುದರ ಬಗ್ಗೆ ಪೇಚಾಡಿಕೊಂಡ. ಕೃಷ್ಣಯ್ಯ ಕೊಟ್ಟಿಗೆಗೆ ಹೋದಾಗ ಗಣಪಯ್ಯ ಕತ್ತಿ ತೆಗೆದುಕೊಂಡು ತೋಟದತ್ತ ಇಳಿದ. +ಕೊಟ್ಟಿಗೆಯ ಬಾಗಿಲು ತೆಗೆದಿರಿಸಿ, ಕೃಷ್ಣಯ್ಯ ಒಳಬಂದ. ಜಗುಲಿಯ ಮೇಲೆ ನಿಂತು ಗಣಪಯ್ಯ ಸಂಕದಾಟಿ ತೋಟದೊಳಗೆ ಮರೆಯಾದುದನ್ನು ಗಮನಿಸಿ ಒಳ ಬಾಗಿಲತ್ತ ತಿರುಗಿದ. +“ನಾಗೂ ಏನಾಯ್ತು?” +ನಾಗವೇಣಿ ಅಡಿಗೆ ಮನೆಯ ಬಾಗಿಲ ದಾರವಂದಕ್ಕೆ ಒರಗಿನಿಂತು ಕಣ್ಣೀರು ತೊಡೆದುಕೊಂಡಳು. ಬಿಚ್ಚಿ ಹೋದ ಮುಡಿ, ಒಡೆದ ಕೈಬಳೆ, ಊದಿಕೊಂಡ ಕಣ್ಣುಗಳು ಕೃಷ್ಣಯ್ಯನ ಪ್ರಶ್ನೆಗೆ ವತ್ತರಿಸಿ ಬಂದ ಅಳು. +“ಬಾವ ಹೊಡದ್ರೇನೆ?” +ಹಿಂದೆಲ್ಲ ಅಮ್ಮ ಹೊಡೆದಾಗ, ಅಪ್ಪ ಗದರಿಸಿದಾಗ ಹೀಗೆಯೇ ಕೇಳುತ್ತಿದ್ದ ಕೃಷ್ಣಯ್ಯ ಕೇಳಿ ಅಳುತ್ತಿದ್ದಾಕೆಯನ್ನು ಸಮಾಧಾನಪಡಿಸಿ, ಕಚಗುಳಿ ಇಟ್ಟು ನಗಿಸುತ್ತಿದ್ದ. ಈಗ? +“ಕಾರಣ ನನಗೆ ಗೊತ್ತು ನಾಗೂ…ಯಜಮಾನರ ಮಾತನ್ನು ಮೀರಲಾರದೆ ನಿಮಗೆ ಆಸರೆಯಾದೀತು ಅಂತ ನಾನು ಬಂದೆ. ಈಗ್ಲೂ ಹೋಗಲಿಕ್ಕೆ ನಾನು ಸಿದ್ದನಾಗಿದೀನಿ” +“ನಿಂದೇನೂ ತಪ್ಪಿಲ್ಲ ಕೃಷ್ಣಯ್ಯ…ನಿನಗೆ ದಮ್ಮಯ್ಯ ಅಂತೀನಿ. ಹಿಂತಿರುಗಿ ಹೋಗೋ ಮಾತಾಡಬೇಡ, ಅವರ ಸ್ವಭಾವವೇ ಹಾಗೆ. ಅವರು ಎಲ್ಲವನ್ನೂ ವಿಪರೀತವಾಗಿ ಅರ್ಥ ಮಾಡ್ಕೋತಾರೆ” +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +– ೪ – ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುರುಬರಹಳ್ಳಿಯಿಂದ ಎರಡು ಗಾಡಿ ಸೋಗೆಯ ಜೊತೆಗೆ ಇಬ್ಬರು ಗಂಡಾಳುಗಳು ಬಂದರು. ಅವರು ಈ ಬಿಟ್ಟ ಊರಿನೊಳಗೆ ಬರಲಿಲ್ಲ. ರಾಮಸಂದ್ರದ ಕುಳವಾಡಿ ಶ್ಯಾನುಭೋಗರ ಮನೆಯ ಮುಂದಿದ್ದ […] +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_365.txt b/Kannada Sahitya/article_365.txt new file mode 100644 index 0000000000000000000000000000000000000000..85cd0f9fd5e1b80de51edf67ada2a588a0f30d3b --- /dev/null +++ b/Kannada Sahitya/article_365.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ – ಪ್ರಚಂಡ ಕುಳ್ಳ ಎಂದು ಯಾರೂ ಕರೆಯದಿದ್ದಾಗ ದ್ವಾರಕೀಶ್ ಚಿತ್ರಕ್ಕೆ ಅಂತ ಹೆಸರಿಟ್ಟು ಜನಪ್ರಿಯರಾದರು. +ಆನಂತರ ಲಾಲ್‌ಬಾಗ್-ಕಬ್ಬನ್ ಪಾರ್ಕ್‌ಗೆ ‘ಗೋಲಿ ಮಾರೋ’ ಅಂದು ಬೊಂಬಾಯಿ, ಮದರಾಸ್, ಡೆಲ್ಲಿ ಮುಂತಾದ ಕಡೆಗೂ ಹೊರಾಂಗಣಕ್ಕೆಂದು ತೀರ್ಥಯಾತ್ರೆ ಹೊರಡುವುದು ಅಭ್ಯಾಸವಾಯಿತು. ಇಂದು ಚಿಕ್ಕಮಗಳೂರು ಚಿತ್ರರಂಗದ ‘ಪಾರ್ಟ್ ಅಂಡ್ ಪಾರ್ಸಲ್ ಆಫ್ ದಿ ಫಿಲಮ್ ಇಂಡಸ್ಟ್ರಿ’ ಎನಿಸಿದ್ದರೆ ಅದಕ್ಕೆ ಕಾರಣ ಕಣಗಾಲ್ ಪುಟ್ಟಣ್ಣ. +ಆದರೆ ರೀಮೇಕ್ ಸುಂಟರ ಗಾಳಿ ‘ಸೊಂಯ್’ ಎಂದು ಬೀಸತೊಡಗಿದಾಗ-ಕನ್ನಡ ಚಿತ್ರಗಳಲ್ಲಿ ಮಣ್ಣಿನ ವಾಸನೆ ಮಾಯವಾಗಿ ರಿಚ್‌ನೆಸ್ ನೆಪ ಮಾಡಿ ಫಾರಿನ್‌ಗೆ ಷೂಟಿಂಗ್‌ಗೆ ಹೋಗ ತೊಡಗಿದವರು ಲೆಕ್ಕವಿಲ್ಲ. ಅಂಥ ಆಸೆ ಹುಟ್ಟಿಸಿದ ಮಹಾ ಪ್ರಚಂಡ ರವಿಚಂದ್ರನ್, ರಾಕ್‌ಲೈನ್ ವೆಂಕಟೇಶ್, ಜೈ ಜಗದೀಶ್, ಸಾ.ರಾ.ಗೋವಿಂದು ಮುಂತಾದವರೆಲ್ಲ ಹಾಡಿಗಾಗಿ ಫಾರಿನ್‌ಗೆ ಹಾರಿದರೆ ನಾಗತಿಹಳ್ಳಿ ಪಾತ್ರಗಳಿಗೂ ಪುಷ್ಟಿ ನೀಡಿ ‘ಅಮೆರಿಕಾ ಅಮೆರಿಕಾ’ ತೆಗೆದು ಹೆಸರಾದರು. ಆನಂತರ ‘ಅಸ್ಸಾಂ’ನಲ್ಲಿ ಹೂ ಮಳೆ ಸುರಿಯಿತು. ಯೋಗೀಶ್ ಮೊದಲ ಬಾರಿ ರಾಜಾಸ್ತಾನಕ್ಕೆ ಹೋಗಿ ಬಂದರು ಉತ್ತರ ಧ್ರುವದಿಂದಾಗಿ. +ಕೋಟಿ ಕೋಟಿ ಸುರಿದೂ ಕನ್ನಡ ಚಿತ್ರ ಮಾಡಬಹುದು ಎಂದು ಹೊರಟಾಗ ಹಲವರ ಪಾಲಿಗದು ಸಿಹಿಮಳೆ, ಕೆಲವರ ಪಾಲಿಗೆ ಕಹಿಮಳೆ, ಕೆಲವರ ಪಾಲಿಗೆ ಕೆಂಡದ ಮಳೆಯೂ ಆಯಿತು. +ಫಾರಿನ್‌ಗೆ ಹೋಗಲಾರದ ಮಂದಿ ಲೋ ಬಜೆಟ್‌ನಲ್ಲಿ ಸಿನಿಮಾ ಮಾಡಬೇಕೆಂದಾಗ ‘ಲೌ ಇನ್ ನೇಪಾಳ್’ ಸುತ್ತಿ ಬಂದದ್ದು ಆಯಿತು ಅತಿ ಉತ್ಸಾಹಿಗಳು. +ಈಗಂತೂ ದಿನ ಸಿಕ್ಕಾಪಟ್ಟೆ ಬದಲಾಗಿದೆ. ಫಾರಿನ್‌ನಲ್ಲಿ ಷೂಟಿಂಗ್ ಇಲ್ಲ ಎಂದರೆ ಅಂಥ ಚಿತ್ರ ನಿರ್ಮಾಪಕರನ್ನು ಗಾಂಧೀನಗರ ‘ಬಡಮುತ್ತೈದೆ’ ಎಂಬಂತೆ ತಾತ್ಸಾರದಿಂದ ಕಾಣುತ್ತದೆ. ಎ ಹಾಗೂ ಉಪೇಂದ್ರ ನಂತರ ಉಪೇಂದ್ರರಿಗೆ ಸಿನಿಮಾ ಹೆಸರು ‘ಹಾಲಿವುಡ್’ ಎಂದು ಉಪ್ಪಿ ಎಂದದ್ದೇ ತಡ ಎಕೆ೪೭ ರಾಮು “ನೀವು ಕೇಳಿದಷ್ಟು ಹಣ ನಾನು ಸುರಿಯುತ್ತೇನೆ” ಎಂದು ಒಂದು ಅದ್ಭುತ ಬ್ರೋಷರ್‍ ಮಾಡಿ ಪರಾಕು ಪಂಪನ್ನೊತ್ತಿದ್ದಾರೆ. ಈಗ ಹಣದ ಹೊಳೆ ಹರಿಸಲು ಆಂಧ್ರದಿಂದ ರಾಮಾನಾಯಿಡು ಬಂದಿದ್ದಾರೆ. ಅವರು ಕನ್ನಡಕ್ಕೆ ಕಾಣಿಕೆಯಾಗಿ ನೀಡುವ ಜೆರಾಕ್ಸ್ ಕಾಪಿಗೆ ಇನ್ನೂ ಹೆಸರಿಟ್ಟಿಲ್ಲ. ಆ ಚಿತ್ರದ ಚಿತ್ರೀಕರಣಕ್ಕೆ ಶಿವರಾಜ್‌ಕುಮಾರ್‍ ಯೂರೋಪಿಗೆ ತೆರಳಲಿದ್ದಾರೆ. ಕುಮಾರಸ್ವಾಮಿ ಅವರು ‘ನನ್ನಯ ಸಮಾನರಾರಿಹರು?’ ಎಂದು ತೋರಲು ೪೦ ಮಂದಿಯೊಂದಿಗೆ ‘ಮಾರಿಷಸ್’ಗೆ ತೆರಳಲಿದ್ದಾರೆ. ಶಿವರಾಜ್‌ಕುಮಾರ್‍ ಈ ಚಿತ್ರದ ನಾಯಕ ಎಂಬುದು ನಿರ್ದೇಶಕ ಎಸ್.ನಾರಾಣ್‌ಗೆ ಹೆಮ್ಮೆ. +‘ಅಪ್ಪನ ಚಿತ್ರದ ನಂತರ ಈಗ ಮಗನ ಚಿತ್ರದ ನಿರ್ದೇಶನ ಯಾರಿಗುಂಟು ಯಾರಿಗಿಲ್ಲ?’ ಹೀಗೆ ಫಾರಿನ್‌ಗೆ ಷೂಟಿಂಗ್‌ಗೆ ಹೋಗುತ್ತೇನೆ ಎಂದು ಹೇಳಿ ಆಡಿದ ಮಾತಿನಂತೆ ನಡೆದುಕೊಳ್ಳುವ ನಿಯತ್ತಿನ ಮಂದಿಯೂ ಇದ್ದಾರೆ. ಫಾರಿನ್‌ಗೆ ಷೂಟಿಂಗ್‌ಗೆ ಹೋಗ್ತೀನಿ-ಆಗ ಎಲ್ಲ ಪತ್ರಕರ್ತರನ್ನೂ ಷೂಟಿಂಗ್ ನೋಡಲು ಕರಕೊಂಡು ಹೋಗ್ತೀನಿ ಎನ್ನುವ ಕೋಡ್ಲು ರಾಮಕೃಷ್ಣರಂತಹ ನಿರ್ದೇಶಕರೂ ಈ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳುತ್ತಿದ್ದ ನಮ್ಮ ಎಂಕ ಬ್ಯುಸಿ ಮಾಸ್ಟರ್‍ ಲಂಬೋದರ್‍ ಬಳಿ ಮೊನ್ನೆ. +ಅದಾದ ಒಂದು ವಾರದಲ್ಲೇ ಲಂಬೋದರ ಒಂದು ಪ್ರೆಸ್‌ಮೀಟ್ ಕರೆದ. ಹೊಸ ನಾಯಕ ನಾಯಕಿಯರನ್ನು ಪರಿಚಯಿಸಿದ. ಮುಂದಿನ ತಿಂಗಳು ‘ಫಾರಿನ್ ಟೂರ್‍’ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಇಂಗ್ಲೆಂಡ್-ಅಮೆರಿಕಾಗೆ ಹೋಗುವ ಅಂಶ ಹೇಳಿ “ಈ ಬಾರಿ ವಿಶೇಷವೆಂದರೆ ಪತ್ರಕರ್ತರನ್ನು ಷೂಟಿಂಗ್ ನೋಡಲು ಅಲ್ಲಿಗೇ ಕರೆದೊಯ್ಯುವೆ” ಎಂದ. ಪ್ರೆಸ್‌ಮೀಟ್‌ನಲ್ಲಿ ಮಿಂಚಿನ ಸಂಚಾರವಾಯಿತು. ಎಂಕ ಈ ಅನೌನ್ಸ್‌ಮೆಂಟ್ ಕೇಳಿ ಮೂರ್ಛೆ ಹೋಗುವುದೊಂದೇ ಬಾಕಿ ಉಳಿದಿತ್ತು. ಸೂರ್ಯಕಾಂತಿಯಂತೆ ಅರಳಿದ ಮುಖಗಳನ್ನು ಕಂಡು ಲಂಬೋದರ್‍ ಹೇಳಿದ “ಯಾರ್‍ಯಾರನ್ನು ಕರಕೊಂಡು ಹೋಗಬೇಕು ಎಂಬ ಹತ್ತು ಜನರ ಪಟ್ಟಿ ನೀವೇ ದಯಮಾಡಿ ನೀಡಿ” ಎಂದು ಹಿರಿಯ ಪತ್ರಕರ್ತರಾದ ಮಿಸ್ಟರ್‌ ರಾವ್ ಅವರನ್ನು ವಿನಂತಿಸಿದ. ಆನಂತರದ ‘ಮಜಾ’ ಕಾಣಲು ಮಿಸ್ಟರ್‍ ಎಂಕ ಮುಂದಾದ. ಹತ್ತು ಮಂದಿ ಅರ್ಹ ಪತ್ರಕರ್ತರ ಆಯ್ಕೆಗಾಗಿ ಅಲ್ಲೇ ಮೀಟಿಂಗ್ ಆರಂಭವಾಯಿತು ಊಟಕ್ಕೆ ಮುನ್ನ. ಆಗ ಚಲನಚಿತ್ರ ಪತ್ರಕರ್ತರ ಪರಿಷತ್ತು-ವೇದಿಕೆ ಮಾತು ಬಂತು ‘ಗೊರಕೆ ಹೊಡೆಯುತ್ತಿರುವ ಸಂಸ್ಥೆಗಳನ್ನು ಈಗ ಎಬ್ಬಿಸುವುದು ಬೇಡ’ ಎಂದರು ಒಬ್ಬರು. ‘ಒಂದೊಂದು ಪತ್ರಿಕೆಯಿಂದ ಒಬ್ಬರು ಮಾತ್ರ ಬರಬೇಕೆಂದರು’ ಮಗದೊಬ್ಬರು. +ಆ ಒಬ್ಬರು ಯಾರು ಎಂಬ ಬಗ್ಗೆ ಕೊಂಚ ಹೊತ್ತು ಕಚ್ಚಾಟವಾಯಿತು. +ಆಗಲೇ ದೊಡ್ಡ ಪತ್ರಿಕೆಗಳು ಸಣ್ಣ ಪತ್ರಿಕೆಗಳು ಎಂಬ ಬಗೆಗೂ ವಾಗ್ವಾದಗಳಾದವು. ಇದೀಗ ಕಣ್‌ಬಿಡುತ್ತಿರುವ ಸಿನಿ ಪತ್ರಕರ್ತರನ್ನು ಬದಿಗಿಡೋಣ. ಫಾರಿನ್‌ನಲ್ಲಿ ಷೂಟಿಂಗ್ ಎಂದ ಮೇಲೆ ತುಂಬ ತುಂಬಾ ಸೀನಿಯರ್‍ ಅಂತೀರಲ್ಲ ಅವರಿಗೆ ಯಾವ ಪೇಪರಿದೆ ಹೇಳಿ ಎಂದು ಕೂಗಾಡಿದ ಒಬ್ಬ. ಮಾತು ಜಗಳದ ಮಟ್ಟ ತಲುಪಿ ‘ಅವನೇನ್ಮಹಾ-ಇವಳೇನ್ಮಹಾ’ ಎನ್ನುವ ಧಾಟಿಗೆ ತಿರುಗಿತು. ಹೆಸರುಗಳ ಪಟ್ಟಿ ಬೆಳೆಯುತ್ತ ಹೋಯಿತು. ಮಾಸ ಪತ್ರಿಕೆ, ವಾರಪತ್ರಿಕೆ, ಪಕ್ಷ ಪತ್ರಿಕೆಗಳವರು ನಾವು ಫಾರಿನ್ ನೋಡೋದು ಬೇಡವೆ-ಏರೋಪ್ಲೇನ್‌ನಲ್ಲಿ ಹಾರೋದು ಬೇಡವೆ ಎಂದು ಹಲುಬಿದರು. ಮಿ.ರಾವ್ ಹತ್ತು ಜನರ ಪಟ್ಟಿ ಫೈನಲೈಸ್ ಮಾಡಲಾಗದೆ-ನಾಳೆ ಮತ್ತೆ ಮೀಟ್ ಮಾಡೋಣ ಎಂದರು. ಹತ್ತೇ ಹತ್ತು ಜನರ ಆಯ್ಕೆ ಮಿ.ರಾವ್‌ಗೆ ಭಾರಿ ಹಿಂಸೆಯೇ ಆಯಿತು. +ಮುಂದಿನ ಶುಕ್ರವಾರ ಎಲ್ಲ ಪತ್ರಿಕೆಗಳಲ್ಲಿ ಮಿ. ಲಂಬೋದರ್‍ ಯೋಜನೆ ಬಗ್ಗೆ ಕಲರ್‍ ಫೋಟೋ ಸಮೇತ ‘ಫಾರಿನ್ ಟೂರ್‍’ ಭಾರಿ ಸುದ್ದಿಯಾಯಿತು. ಆ ಪಬ್ಲಿಸಿಟಿ ಪ್ರಭಾವದಿಂದಾಗಿ ಆತನಿಗೊಬ್ಬ ಎನ್.ಆರ್‍.ಐ. ಪಾರ್ಟ್‌ನರ್‍ ಸಹಾ ಸಿಕ್ಕ. ಅದಾದ ಎಂಟುದಿನದ ನಂತರ ಮಿ. ಲಂಬೋದರ್‍-ಎಂಕನಿಗೆ ಸಿಕ್ಕಿ “ನಾಡಿದ್ದು ೮ ಜನ ಫಾರಿನ್‌ಗೆ ಹೋಗುತ್ತಿದ್ದೇವೆ ಷೂಟಿಂಗ್‌ಗೆ” ಎಂದ. +‘ಪ್ರೆಸ್‌ನವರನ್ನು ಕರ್‍ಕೊಂಡು ಹೋಗುವುದು ಏನಾಯಿತು’ ಎಂದು ಎಂಕ ಅಂದಾಗ ಆತ ಗಹಗಹಿಸಿ ನಕ್ಕು “ನಾನು ಮಾಡಿದ ಸ್ಟಂಟು ಅದು. ನೋಡಿ ಈ ಪತ್ರ” ಎಂದು ನೀಡಿದ. +ಪ್ರಿಯ ಲಂಬೋದರ್‍ ಅವರೆ, ಫಾರಿನ್‌ಗೆ ರಿಪೋರ್ಟಿಂಗ್ ಬರುವವರ ಹತ್ತು ಮಂದಿ ಅರ್ಹ ಪತ್ರಕರ್ತರ ಪಟ್ಟಿ ನೀಡುವ ಹೊಣೆ ನನಗೆ ನೀಡಿದಿರಿ. ನಾನೂ ಆ ಬಗ್ಗೆ ಒಂದಲ್ಲ ಎರಡು ಮೀಟಿಂಗ್ ಮಾಡಿದೆ. ಫಾರಿನ್ ಎಂದ ಕೂಡಲೆ ನಾ ಮುಂದು-ತಾ ಮುಂದು ಎಂದು ಬರುವವರು ಅತಿಯಾದರು. ಹಾಗೆ ನೋಡಿದರೆ ಪತ್ರಕರ್ತರಿಗೆ ಒಂದು ಫ್ಲೈಟೇ ಬುಕ್ ಮಾಡಬೇಕಾದೀತು. ಅದರಿಂದ ಪಟ್ಟಿ ನೀಡುವ ಯೋಚನೆ ನಾನು ಬಿಟ್ಟಿರುವೆ. ಗುಡ್‌ಲಕ್. ನೀವು ಹೋಗಿ ಬನ್ನಿ. +ತಮ್ಮ ವಿಶ್ವಾಸಿ +ಮಿ. ರಾವ್ +ಎಂಬ ಪತ್ರ ಓದಿ ಎಂಕ ಕಕ್ಕಾಬಿಕ್ಕಿಯಾದ. +ಆಗ ಲಂಬೋದರ್‍ ನಕ್ಕು ಹೇಳಿದ. +“ಈಗ ಯಾರೂ ಯಾಕೆ ಫಾರಿನ್‌ಗೆ ಕರ್‍ಕೊಂಡು ಹೋಗ್ತಿಲ್ಲ ಪ್ರೆಸ್‌ನವರನ್ನ ಅಂತ ಕೇಳೋ ಹಾಗಿಲ್ಲ ನನ್ನ. ಫಾರಿನ್ ಟೂರ್‌ಗೆ ಬರ್ತೀರಾ ಅಂತ ನಾ ಕೇಳಿದೆ. ನಿಮ್ಮಲ್ಲೇ ಒಮ್ಮತವಿಲ್ಲದಿದ್ರೆ ನಾನೇನೂ ಮಾಡ್ಲಿ ಅಂತ ಜಾರಿಕೋಬಹುದಲ್ವಾ?” ಎಂದ. +“ಲಂಬೋದರ್‍ ನೀನು ಮಹಾ ಛತ್ರಿ ಗುರೂ” ಎಂದ ಎಂಕ. +“ಈ ಕಾಲದಲ್ಲಿ ಬದುಕಬೇಕು ಅಂದ್ರೆ ಇಂತಹ ತಂತ್ರಗಳು ಮಾಡುತ್ಲೇ ಇರಬೇಕು. ಅದಕ್ಕೇ ಹತ್ತು ಜನ ಅರ್ಹ ಪತ್ರಕರ್ತರ ಪಟ್ಟಿ ನೀವೇ ಕೊಡಿ ಅಂದೆ ಮಿಸ್ಟರ್‍ ರಾವ್‌ನ. ಗೊತ್ತಿತ್ತು. ನಂಗೆ ಹೀಗೇ ಆಗುತ್ತೆ” ಎಂದು ಗಹಗಹಿಸಿ ನಕ್ಕಾಗ ಮಿಸ್ಟರ್‍ ಎಂಕ ಸುಸ್ತಾಗಿ ತಲೆಯ ಮೇಲೆ ಕೈಹೊತ್ತು ಕುಳಿತ. +ಅದಕ್ಕೆ ಈಗ ‘ಫಾರಿನ್‌ಗೆ ಷೂಟಿಂಗ್ ಕರ್‍ಕೊಂಡು ಹೋಗ್ತೀನಿ’ ಅಂತ ಯಾರಾದ್ರೂ ಅಂದ್ರೆ ಮುಂಚೆ ಮಿ. ಲಂಬೋದರ್‍ ಜ್ಞಾಪಕ ಬರ್‍ತಾರೆ. +***** +(೭-೪-೨೦೦೦) +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_366.txt b/Kannada Sahitya/article_366.txt new file mode 100644 index 0000000000000000000000000000000000000000..8bc103df08e167931c2c4909f9d8f9ec53af47e2 --- /dev/null +++ b/Kannada Sahitya/article_366.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. +ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ ಉಳಿದ ಯೂರೋಪಿಯನ್ ಭಾಷೆಗಳಾಗಲಿ, ಏಷಿಯನ್ ಭಾಷೆಗಳಾಗಲಿ – ಏನಾದರೂ ಇದ್ದರೆ ‘ಅದು ಬೇಕಾದ ತಂತ್ರಾಂಶಗಳನ್ನು ರೂಪಿಸುವ ದೊಡ್ಡ ಸಂಸ್ಥೆಗಳ ಕೃಪೆ’ ಎಂಬ ವಾದ ಆಗಾಗ್ಯೆ ಮಹಾತ್ಮಗಾಂಧಿ ರಸ್ತೆಯ ಕಾಫಿಹೌಸ್‌ನಲ್ಲಿ, ಬ್ರಿಗೇಡ್ ರಸ್ತೆಯ ಕಾಫಿ ಡೇ ಔಟ್‌ಲೆಟ್‌ನ ಪಾವಟಿಗೆಗಳ ಮೇಲೆ ಕೇಳಿಬರುತ್ತಿರುತ್ತದೆ. ತಂತ್ರಾಂಶಗಳನ್ನು ರಚಿಸಿ ಬಿಡುಗಡೆ ಮಾಡುವ ದೊಡ್ಡ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಇಂಗ್ಲಿಷೇತರ ಭಾಷೆಗಳು ತಮ್ಮ ಬಂಡವಾಳವನ್ನು ಅಥವ ಲಾಭವನ್ನು ಅಧಿಕ ಮಾಡಿಕೊಳ್ಳಲು ಒಂದು ವಾಹಕ ಮಾತ್ರ. ಎಲ್ಲರೂ ‘ಬರಹದ’ ಶೇಷಾದ್ರಿವಾಸುಗಳೆ? ಭಾಷೆಗೆ ಬಂಡವಾಳ ಹಾಗು ಲಾಭ ತರುವ ಚೈತನ್ಯವಿಲ್ಲದಿದ್ದರೆ ಆ ದೊಡ್ಡ ಸಂಸ್ಥೆಗಳು ಈಗ ಮಾಡುತ್ತಿರುವ ಪ್ರಯತ್ನಗಳನ್ನು ಮಾಡುತ್ತಿದ್ದವೆ ಎಂದು ತಾರ್ಕಿಕವಾಗಿ ಆಲೋಚಿಸಿದರೆ ನಮಗೆ ನಿರಾಶೆ ಖಂಡಿತ. +ಇಂಗ್ಲಿಷ್ ಭಾಷೆಯು ಪ್ರತಿ ಕ್ಷೇತ್ರಗಳಲ್ಲೂ ಪ್ರಗತಿಗೆ ನೀಡಿರುವ ಕಾಣಿಕೆಯನ್ನು ಅಲ್ಲಗಳೆಯುವ ಮೂರ್ಖತನಕ್ಕೆ ನಾವು ಹೋಗುವುದಿಲ್ಲ-ಅವರುಗಳ ಸಾಹಸ ಪ್ರವೃತ್ತಿಯನ್ನೂ ಅಲ್ಲಗಳೆಯುವುದಿಲ್ಲ , ಆದರೆ ಎಲ್ಲವನ್ನೂ ಕೇವಲ ಸ್ವಪ್ರಯೋಜನಕ್ಕೆ ಮಾತ್ರ ಸೀಮಿತಗೊಳಿಸಿಬಿಡುವ- ಆ ಮೂಲಕ ತಾನಷ್ಟೆ ಒಂದು ದೈತ್ಯ ಶಕ್ತಿಯಾಗಿ ಉಳಿದ್ದನ್ನೆಲ್ಲ ಉಪೇಕ್ಷಿಸುವ, ಆ ಉಳಿದದ್ದೆಲ್ಲ ಏನೂ ಅಲ್ಲ ಎಂದು ‘ಚಿಕ್ಕದನ್ನೋ-ದೊಡ್ಡದನ್ನೋ’ ಮಾಡುವ , ಸಹಿಸಲಾಗದಿದ್ದರೆ ದೊಡ್ಡ ಮೀನಿನಂತೆ ‘ ಮತ್ಸ್ಯ ನ್ಯಾಯ’ಕ್ಕಿಳಿಯುವ ಪ್ರವೃತ್ತಿಯ ಬಗೆಗಷ್ಟೆ ನಮ್ಮ ಸಿಟ್ಟು . ಜೊತೆಗೆ ಚೈತನ್ಯಶಾಲಿಯಾದದ್ದಷ್ಟೆ ಉಳಿಯುತ್ತದೆ ಎಂಬ ಅಸಹ್ಯಕರ ‘ಡಾರ್ವಿನ್ ಸೂತ್ರ’ ವನ್ನು ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಮುಂಚಾಚುವ ಭಂಡತನವೂ ಇಂಗ್ಲಿಷ್‌ಗೆ ಇದೆ. +ಸಿಟ್ಟಿನ ಮಧ್ಯೆ ಶೇಷಾದ್ರಿವಾಸು ರಂತಹವರು ಹುಟ್ಟಿಕೊಳ್ಳುತ್ತಾರೆ, ಕನ್ನಡಸಾಹಿತ್ಯ.ಕಾಂ ನಂತಹವು ಹುಟ್ಟಿಕೊಳ್ಳುತ್ತವೆ. ಶೇಷಾದ್ರಿವಾಸುರವರು ನನಗೆ ನೇರ ಪರಿಚಯವಿಲ್ಲದಿದ್ದರೂ ನಾನು ಅಂತರ್‌ಜಾಲದ ಸಂದರ್ಭದಲ್ಲಿ ‘ಬರಹ’ವನ್ನು ನೋಡುವಾಗ ವಾಸುರವರ ‘ಸಿಟ್ಟು’ ನೋಡುತ್ತೇನೆ. +ಮಾರ್ಚ್ ೨೯ ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ‘ಕನ್ನಡ ಸಾಹಿತ್ಯ.ಕಾಂ’ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಸಿಟ್ಟು-ಸಂಯಮ ಕೂಡಿದ ಒಂದು ಹೆಜ್ಜೆ ಇಟ್ಟೆವು. ಔಪಚಾರಿಕವಾಗಿ ಬಿಡುಗಡೆ ಮಾಡಿದ ವಾರ್ತಾಸಚಿವ ಬಿ.ಕೆ.ಚಂದ್ರಶೇಖರ್‌ರವರು , ನೆರೆದಿದ್ದವರನ್ನು ಉದ್ದೇಶಿಸಿ ‘ವಿನಯ ನೀತಿಯನ್ನು’ ‘ಕನ್ನಡದಲ್ಲಿ ಸ್ಪೆಲ್ ಚೆಕ್ ಸೌಲಭ್ಯ ಉಳ್ಳ ಅತ್ಯತ್ತಮ ತಂತ್ರಾಂಶ’ ರೂಪಿಸುವ ಕರೆ ನೀಡಿದ ಅನಂತಮೂರ್ತಿಯವರು, ಸಾಹಿತ್ಯವೊಂದಕ್ಕಷ್ಟೇ ‘ಕನ್ನಡ ಸಾಹಿತ್ಯ.ಕಾಂ ಸೀಮಿತಗೊಳ್ಳದೆ ಒಂದು ರೀತಿಯ ಇಂಟರ್ ಆಕ್ಟಿವಿಟಿಗೆ ಅವಕಾಶವಿರಲಿ’ ಎಂದು ಆಶಿಸಿದ ಗಿರೀಶ್ ಕಾಸರವಳ್ಳಿಯವರು, ಕಾರ್ಯಕ್ರಮ ನಿರ್ವಹಿಸಿದ ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಮಲ್ಲೇಪುರಂ ವೆಂಕಟೇಶ್ ಮುಂತಾದವರು ನಮ್ಮೊಡನೆ ಸಹ ಯಾತ್ರಿಗಳಾದರು. ಅನಂತಮೂರ್ತಿಯವರು ‘ತಮ್ಮ ತಲೆಮಾರಿನ ಲೇಖಕರು- ಮಿತ್ರವೃಂದದಲ್ಲಿ ದೊರಕುವ ಓದುಗ ಹಾಗು ಬಾಯಿಮಾತಿನಿಂದ ದಕ್ಕುವ ಓದುಗವೃಂದದ ’ ನಡುವೆ ಬೆಳೆದು ಬಂದವರು, ಇಂಟರ್‌ನೆಟ್‌ನಿಂದಲೇ ಲೇಖಕನಿಗೆ ಖ್ಯಾತಿಯಾಗಲಿ ,ಓದುಗನಾಗಲಿ ದಕ್ಕುತ್ತದೆ ಎಂದನ್ನಿಸುವುದಿಲ್ಲ – ಈ ವೆಬ್ ಸೈಟ್ ನಡೆಸುವವರಿಗೆ ಈ ವಿನಯವಿರಲಿ ’ ಎಂದು ಸಂದರ್ಭೋಚಿತವಾಗಿ, ಅರ್ಥಬದ್ಧವಾಗಿ ಹೇಳಿದ್ದನ್ನು ನಾವು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಪಠ್ಯಕ್ಕಾಗಿಯೇ ಇಂಟರ್‌ನೆಟ್. ಇಂಟರ್‌ನೆಟ್‌ಗಾಗಿ ಪಠ್ಯವಲ್ಲ. +ಹಿರಿಯರೇನೋ ಗಟ್ಟಿಯಾಗಿ ಹೆಜ್ಜೆ ಇಟ್ಟಿದ್ದಾರೆ, ನಾವು ಇಟ್ಟಿರುವ ಹೆಜ್ಜೆಗೆ ಅವರುಗಳು ಕಲಿಸಿದ ವಿನಯವಂತಿಕೆ ಹಾಗು ಸಿಟ್ಟು ಎರಡೂ ಕಾರಣ. ಪ್ರಾರಂಭದಲ್ಲಿ ಇದೆಲ್ಲ ಸ್ವಲ್ಪ ಅಮೆಚೂರಿಶ್ ಆಗಿ ಕಾಣಬಹುದು. ಆದರೂ ನಾವೂ ಸಹ ಅಂತರ್ಜಾಲದಲ್ಲಿ ಹೆಜ್ಜೆಯೂರುತ್ತಲೇ ನೆಲೆಗೊಳ್ಳುವ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ಎಲ್ಲರ ಬೆಂಬಲವಿರಲಿ ಎಂದೂ ಇಲ್ಲಿ ಪುನರ್‌ಮನವಿ ಮಾಡಿಕೊಳ್ಳುತ್ತಿದ್ದೇವೆ. +ಕಳೆದ ಸಂಚಿಕೆಯ ಬಗ್ಗೆ ಚಾರಣಿಗರ ಪ್ರತಿಕ್ರಿಯೆ +ನಿರೀಕ್ಷೆ ಮೀರಿದ ಉತ್ತೇಜನ ಚಾರಣಿಗರಿಂದ ಬಂದಿದ್ಡು ನಮ್ಮ ಈ ಅಮೆಚೂರಿಶ್ ಪ್ರಯತ್ನ ಸಾರ್ಥಕವಾಗುವ ಲಕ್ಷಣಗಳನ್ನು ತೋರಿಸುತ್ತಿವೆ. +ನಮ್ಮ ಲೇಖಕರ ಪಟ್ಟಿಗೆ ಹಿರಿಯರಾದ ಕೆ.ವಿ.ಸುಬ್ಬಣ್ಣ, ಸುಮತೀಂದ್ರ ನಾಡಿಗ್, ವೈದೇಹಿ, ಕನ್ನಡದಲ್ಲಿ ಪ್ರಬುದ್ಧ ಸಾಹಿತ್ಯ ಪರಂಪರೆಯನ್ನು ದಾಟದ ನಮ್ಮ ಪುಟಗಳಲ್ಲಿ ತಮ್ಮ ಸಾಹಿತ್ಯವನ್ನು ಬಳಸಿಕೊಳ್ಳಲು ಲಿಖಿತ ಅನುಮತಿ ನೀಡಿದ್ದಾರೆ. ವಿವೇಕ್‌ಶಾನಾಭಾಗ್, ಈ ಅಂಚೆಯ ಮೂಲಕ ಅನುಮತಿ ನೀಡಿದ್ದಾರೆ. ಅನಕೃರವರ ಸಂಧ್ಯಾರಾಗ ಬಳಸಬಹುದೆಂದು ಶ್ರೀ ಗೌತಂರವರು ಅನುಮತಿ ನೀಡಿದ್ದಾರೆ. +ಇಂಗ್ಲಿಷ್ ವಿಭಾಗಕ್ಕೆ ಕನ್ನಡ ಚಿತ್ರಗಳಿಗೆ ಗಂಭೀರ ವಿಮರ್ಶೆ ಬರೆದಿರುವ ಟಿ.ಜಿ.ವೈದ್ಯವಾಥನ್, ಬೆಂಗಳೂರಿನವರೇ ಆದ ಮುಕುಂದರಾವ್‌ರವರು ಹೊಸ ಸೇರ್ಪಡೆ. +ಇವರಿಗೆಲ್ಲ ಇಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. +ಇಂಗ್ಲಿಷ್ ಹಾಗು ಕನ್ನಡ ಎರಡೂ ಭಾಷೆಗಳಲ್ಲಿ ನಾವು ಸಾಹಿತ್ಯವನ್ನು ನೀಡಿದಾಗ ಇಂಗ್ಲಿಷ್‌ಗೆ ಸಿಕ್ಕುವ ಆದರಣೆ ಕನ್ನಡಕ್ಕೆ ಸಿಕ್ಕಲಾರದು ಎಂದಂದುಕೊಂಡಿದ್ದೆವು. ಆದರೆ ನಮ್ಮ ಅಂದಾಜನ್ನು ಮೀರಿ ಶೇಕಡ ೯೨ ಮಂದಿ ಕನ್ನಡವನ್ನು ನೋಡಿದ್ದಾರೆ ಹಾಗು ಅನೇಕ ರೀತಿಯ ಈಮೈಲ್‌ಗಳು ಬರುತ್ತಿವೆ. ಎಲ್ಲ ಈ ಮೈಲ್‌ಗಳಿಗೂ ನಾವು ನೇರವಾಗಿ ಉತ್ತರ ನೀಡುವುದು ಸಾಧ್ಯವಾಗದ್ದಕ್ಕಾಗಿ ಕ್ಷಮೆ ಕೋರುತ್ತಿದ್ದೇವೆ. ಕಾಲಾವಕಾಶ ನೋಡಿಕೊಂಡು ಉತ್ತರಿಸಲಾಗುವುದು. +ಅಡಿ ಟಿಪ್ಪಣಿ +ಮೈಕೋದವರು ಒಂದು ಪುಟವನ್ನು ಪ್ರಾಯೋಜಿಸುವಂತೆ ಮನ‌ಒಲಿಸಿದವರು ನನ್ನ ನೆರಮನೆಯವರಾದ ಶ್ರೀ ಎಂ.ವಿ.ನಾಯಕ್. ಅವರಿಗೆ ಹಾಗು ಮೈಕೋದವರಿಗೆ ನಮ್ಮ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ. ಈ ಪ್ರಾಯೋಜನೆಯಲ್ಲಿ ಬಂದದ್ದು ರೂ. ೫೦೦೦/= +ನನ್ನ ಸ್ನೇಹಿತ ವಿಶ್ವನಾಥನಿಗೂ ಸಾಹಿತ್ಯಕ್ಕೂ ಸಂಬಂಧವೇ ಇಲ್ಲ. ‘ಹಣ ಬರುತ್ತದೆಯೇ?’ – ಈ ಪ್ರಶ್ನೆಯನ್ನು ಅವನು ನನಗೆ ಪದೆ ಪದೆ ಹಾಕಿದ್ದಾನೆ. ‘ಇಲ್ಲ’ ವೆಂದು ಹೇಳಿ ಅವನಿಗೆ ನಮ ಉದ್ದೇಶಗಳನ್ನು ವಿವರಿಸಿದರೆ ಅದನ್ನು ಅರ್ಥಮಾಡಿಕೊಳ್ಳಲೂ ಅವನು ನಿರಾಕರಿಸಿಬಿಡುತ್ತಾನೆ. ‘ಪ್ರಯೋಜನವಿಲ್ಲದ ಕಾರ್ಯದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ’ ಎಂಬುದು ಅವನ ವಾದ. ಹಣ ಮಾಡುವುದೊಂದೇ ಗುರಿಯಾಗಿಟ್ಟುಕೊಂಡಿರುವ ಅವನು ‘ಸಾಹಿತ್ಯ-ಪಾಹಿತ್ಯ ’ ಎಂದು ವ್ಯಂಗ್ಯವಾಡದೆ ಇರುವುದಿಲ್ಲ. ಇಂತಹವನೂ ಒಮ್ಮೊಮ್ಮೆ ದಿಡೀರನೆ ಜಿ.ಪಿ ರಾಜರತ್ನಂರ ನಂಜಿ ಗೀತೆಗಳನ್ನು, ಬೇಂದ್ರೆಯವರ ಕವನಗಳ ಭಾಗಗಳನ್ನು ಭಾವ ಪೂರ್ವಕವಾಗಿ ಮಾತಿನ ಮಧ್ಯೆ ತುರುಕಿ ಅಚ್ಚರಿಗೊಳಿಸಿಬಿಡುತ್ತಾನೆ. +ನಮ್ಮ ಕೆಲಸ ಸುಗಮವಾಗಲು ಅವನು ಒಂದು ಸಣ್ಣ ಸ್ಕಾನರ್ ( ಏಸೆರ್- ಸ್ಕಾನ್‌ಪ್ರಿಸಾ ೬೪೦ ಪಿ) ಕೊಡಿಸಿದ್ದಾನೆ. ನನ್ನ ಕಾಟದಿಂದ ಅವನಿಗೆ ಬೇಸರವಂತೂ ಆಗಿಲ್ಲ ಎಂಬ ಖಾತ್ರಿಯೊಂದಿಗೆ ಅವನಿಗೂ ನಮ್ಮ ಧನ್ಯವಾದಗಳನ್ನು ಹೇಳುತ್ತಿದ್ದೇನೆ. +ಸಂತೋಷದ ಮಧ್ಯೆ ಸಣ್ಣ ಸಣ್ಣ ಕಿರಿಕಿರಿಗಳು +ನಮ್ಮ ಈ ಅಂತರ್ಜಾಲ ತಾಣ ಉದ್ಘಾಟನೆಯಾದಾಗ ಪತ್ರಿಕೆಯೊಂದರ ವರದಿಯಲ್ಲಿ ನಮ್ಮ ಪ್ರಯತ್ನವನ್ನು ಪ್ರಥಮ ಎಂದು ಹೇಳಲಾಗಿದ್ದು ಸ್ವಲ್ಪ ಕಿರಿಕಿರಿಯುಂಟು ಮಾಡಿತು. ನಮಗಿಂತ ಮುಂಚೆ ಶ್ರೀ ಪವನಜರವರು ವಿಶ್ವಕನ್ನಡ.ಕಾಂ ಎಂಬ ಪತ್ರಿಕೆಯನ್ನು ಮೊದಲು ಪ್ರಾರಂಭಿಸಿದರೆಂದು ದಾಖಲಿಸುತ್ತಿದ್ದೇವೆ. +ಅವರ ಪತ್ರಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೆಬ್ ಮಾಸ್ಟರ್‌ಗಳಿಗಾಗಿಯೇ ರಚಿಸಿಕೊಂಡಿರುವ ಅಂತರ್ಜಾಲತಾಣದಿಂದ ‘ಉತ್ತಮ ತಾಣ’ ವಿನ್ಯಾಸದ ಪ್ರಶಸ್ತಿ ದಕ್ಕಿದೆ. ಅಭಿನಂದನೆಗಳೊಂದಿಗೆ ಸಂತೋಷವನ್ನು ಸೂಚಿಸುತ್ತಿದ್ದೇನೆ. +ಕಂಪ್ಯೂಟರ್‌ಗಳು ಆಗಾಗ್ಯೆ ಕೈ ಕೊಡುವುದು, ಸಿಡಿಲು ಗುಡುಗುಗಳಿಂದ ಮೋಡಂಗಳು ಸುಟ್ಟು ಹೋಗುವುದು, ಟೆಲಿಫೋನ್ ಲೈನ್ ಕೆಟ್ಟು ವಾರಗಟ್ಟಳೆ ನಾವು ಅಪ್‌ಲೋಡ್ ಮಾಡಲಾಗದಂತೆ ಮೂಲೆಯಲ್ಲಿ ಕುಳಿತು ನಮ್ಮನ್ನು ಹಂಗಿಸುವುದು ಇತ್ಯಾದಿ ತಾಂತ್ರಿಕ ಅಡಚಣೆಗಳಿದ್ದಾಗ ಎಸ್.ಪಿ. ರಸ್ತೆಯ ಮೈಕ್ರೋಕಾಂಪ್‌ಹುಡುಗ, ಯುವ ಮಿತ್ರ ತ್ಯಾಗರಾಜ್ ನೆರವಿಗೆ ಬಂದಿದ್ದಾನೆ. ಅವನಿಗೂ ಇಲ್ಲಿ ಧನ್ಯವಾದಗಳು. ಇವನನ್ನು ಸಂಪರ್ಕಿಸಲು ನಾನು ಎಸ್.ಪಿ ರಸ್ತೆಗೆ ಹೋದಾಗಲೆಲ್ಲ ಅಲ್ಲಿನ ಸಣ್ಣಸಣ್ಣ ಹುಡುಗರ ವ್ಯಾಪರಿ ನೈಪುಣ್ಯತೆ, ಚಾಣಾಕ್ಷತನ, ದಗಲ್ಬಾಜಿತನ, ಬಡತನವನ್ನು ಮೀರಿ ಬೆಳೆಯಬೇಕೆಂಬ ಹಂಬಲ ಇತ್ಯಾದಿ ಸಂಗತಿಗಳು ಕಾಡಿದ್ದಿದೆ. ಬರೆಯ ಬೇಕೆಂದನ್ನಿಸಿದೆ. ಅವಕಾಶ ಸಿಕ್ಕಾಗ ನೋಡೋಣ. ಮೇಲಿನ ಎಲ್ಲ ಕಾರಣಗಳಿಗೆ ಈ ಸಂಚಿಕೆ ತಡವಾಗಿರುವುದನ್ನು ಚಾರಣಿಗರು ಅರ್ಥಮಾಡಿಕೊಳ್ಳಬಲ್ಲರು. +ಮುಂದಿನ ಸಂಚಿಕೆಯಲ್ಲಿ ಅನಕೃರವರ ಸಂಧ್ಯಾರಾಗ ಕಾದಂಬರಿ ಪ್ರಕಟವಾಗಲಿದೆ. +ನಿಮ್ಮ ಪ್ರತಿಕ್ರಿಯೆಗಳಿಗೆ , ಸಲಹೆಗಳಿಗೆ ಸದಾ ಸ್ವಾಗತ ಎಂದು ಹೇಳಿ ಮುಗಿಸುತ್ತಿದ್ದೇನೆ. +ಕೀಪ್ ಇನ್ ಟಚ್ ಅನ್ಡ್ ಕೆ ಎಲ್ ಒ ಎಲ್. (ಬೇಕೆಂದೇ ಟು ಪ್ರವೊಕ್ ಈ ಕೊನೆ ಸಾಲು-ಏನಂತೀರಿ?) +ಶೇಖರ್‌ಪೂರ್ಣ +***** +೧೯-೦೫-೨೦೦೧ +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […] +ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_367.txt b/Kannada Sahitya/article_367.txt new file mode 100644 index 0000000000000000000000000000000000000000..fbc2850b1829a1e49224ce0931b24fc86d84e255 --- /dev/null +++ b/Kannada Sahitya/article_367.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ ಧಾರಾವಾಹಿಗಳನ್ನು ಮಾಡಲು ಸಡಗರಿಸುತ್ತಿದ್ದಾರೆ. +ಕೋಟಿ-ಕೋಟಿ ವೆಚ್ಚಿಸುವ ಸಿನಿಮಾ ನಿರ್ಮಾಪಕರು ಒಂದು ಕಡೆ – ತುಂಬಾ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವೆ ಎನ್ನುವ ಪೂರ್‍ ಪ್ರೊಡ್ಯೂಸರ್‍ಸ್ ಒಂದು ಕಡೆ. ಈ ಪೈಪೋಟಿಯ ಟಗ್ ಆಫ್ ವಾರ್‌ನಲ್ಲಿ ಹಣದ ಝಣ ಝಣ ತಾಂಡವವಾಡಿ ಬ್ಲಾಕ್‌ಮನಿ ಇರುವವರು ಮಾತ್ರ ಬಚಾವಾಗುವ ದಿನ ಬಂದು-ಮಿಂಚು, ಗುಡುಗುಗಳಿಗಿಂತ ಬರಸಿಡಿಲೇ ಬ್ರಹ್ಮಾಂಡವಾಗಿ ಎಲ್ಲೆಲ್ಲೂ ಉಸಿರು ಕಟ್ಟುವ ವಾತಾವರಣ. +ನಟ-ನಟಿಯರು: ಖ್ಯಾತ ನಟರಿಗೆ ಲಕ್ಷೋಪಲಕ್ಷ ಸಂಭಾವನೆ. ಪರಭಾಷೆಯ ಬಣ್ಣದ ಬೆಡಗಿಯರಿಗೆ ಕೇಳಿದಷ್ಟು ಹಣದೊಂದಿಗೆ ಬಗೆ ಬಗೆಯ ಪರಾಕು ಪೊಂಪು – ಬಿಳಿ ತೊಗಲು ಮಾಸೀತೆಂದು ನೆಲಕ್ಕೆ ರೆಡ್ ಕಾರ್ಪೆಟ್. ನಮ್ಮಲ್ಲಿಯ ಹೊಸ ಪ್ರತಿಭೆಗಳಿಗೆ ಕ್ಯಾತೆ ಕಲಾವಿದರೆಂಬ ಹಣೆಪಟ್ಟಿ ಮತ್ತು ಚಿತ್ರಾನ್ನ. +‘ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋನೇ ಜಾಣ’ ‘ಸಿಕ್ಕಿದೋರಿಗೆ ಸೀರುಂಡೆ’ ಎಂಬಂತ ಗಾದೆಗಳು ಅದಕ್ಕೇ ಇಂದಿಗೂ ಚಿತ್ರರಂಗದಲ್ಲಿ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್‍’ ಎಂಬಂತೆ ಮಿರಿಮಿರಿ ಮಿಂಚುತ್ತಿರುವುದು. ಎಂಥ ಸೃಜನಶೀಲ ನಿರ್ದೇಶಕನೇ ಆಗಲಿ ತಾನೊಬ್ಬ ನಿರ್ದೇಶಕ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು, ನಿರ್ಮಾಪಕರನ್ನು ಬೆಕ್ಕಿನಂತೆ ಹೊಂಚು ಹಾಕಿ ಹಿಡಿಯುವುದರಲ್ಲೇ ತನ್ನ ‘ಎನರ್ಜಿ’ ಎಲ್ಲ ಕಳೆದುಕೊಂಡು ಸೋತು ಸಪ್ಪಗಾಗಿರುವ. +ಚಿತ್ರ ಹಾಗೂ ಹೀಗೂ ಮುಗಿಸಿದರೂ ಡಬ್ಬದಲ್ಲಿ ಅವಿತು ಕುಳಿತ ಸಿನಿಮಾ ರೀಲು ಈಚೆ ಬರುವುದೇ ಕಷ್ಟ ಎಷ್ಟೋ ಬಾರಿ. ಆದ್ದರಿಂದಲೇ ಅಂಥ ಸಿನಿಮಾಗಳನ್ನು ‘ಕ್ಯಾನ್ ಫೆಸ್ಟಿವಲ್’ಗೆ ಮೀಸಲಾದ ಸಿನಿಮಾ ಎಂದು ತಮಾಷೆ ಮಾಡುವುದೂ ಉಂಟು. +ಸಿನಿಮಾ ನಿರ್ದೇಶಕರು ಮತ್ತು ರನ್ನಿಂಗ್ ರೇಸ್: ಇಂಥ ಹಿಂಸೆಗಳಿಂದ ರೋಸಿ ಹೋದ ಸಿನಿಮಾ ನಿರ್ದೇಶಕರಿಗೂ ಹೆಂಡತಿ, ಮಕ್ಕಳಿರುವುದರಿಂದ, ಕಟ್ಟಿಕೊಂಡ ತಪ್ಪಿಗೆ ಅವರನ್ನು ಸಾಕಬೇಕಾದುದು ಇವರಿಗೆ ಅನಿವಾರ್ಯವಾಗುವುದರಿಂದ, ಟಿ.ವಿ.ಯಲ್ಲಿ ಮೆಗಾ ಧಾರಾವಾಹಿಗಳನ್ನು ಮಾಡುವುದೇ ವಿಹಿತವೆಂದು ಈ ರನ್ನಿಂಗ್ ರೇಸ್‌ನಲ್ಲಿ ಗೆಲ್ಲಲು ನಾ ಮುಂದು – ತಾ ಮುಂದು ಎಂದು ಪಿ.ಟಿ. ಉಷಾಗಿಂತ ಜೋರಾಗಿ ಓಡಲು ಸಿದ್ಧರಾಗಿದ್ದಾರೆ ೨೦೦೦ದಲ್ಲಿ. ಹೆಣ ಹೊರುವುದೇ ಉದ್ಯೋಗವಾದಾಗ ಹಿಂದಾದರೇನು-ಮುಂದಾದರೇನು? ‘ಬದುಕು ನಿಮಿತ್ತಂ ಬಹು ವಿಧ ಮೋಸಂ’ ಎನ್ನುತ್ತಾರೆ. ಆದರೆ ಮೆಗಾ ಧಾರಾವಾಹಿಗಳನ್ನು ಮಾಡುವುದು ಮೋಸವೇನಲ್ಲವಲ್ಲ. +‘ದೊಡ್ಡ ಸ್ಕ್ರೀನ್ ಆದರೇನು – ಚಿಕ್ಕಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ. ಆದರೆ ನನ್ನ ಪಾಲಿಗೆ ದೊಡ್ಡ ಸ್ಕ್ರೀನೇ ಇರಲಿ’ ಎಂದವರೆಲ್ಲ ಈಗ ಸಾಹಿತ್ಯ ಅದಲು-ಬದಲು ಮಾಡಿ ರಾಗರಾಗವಾಗಿ ‘ದೊಡ್ಡ ಸ್ಕ್ರೀನ್ ಆದರೇನು ಚಿಕ್ಕ ಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ. ಆದರೀಗ ನನ್ನ ಪಾಲಿಗೆ ಚಿಕ್ಕ ಸ್ಕ್ರೀನೇ’ ಇರಲಿ ಎಂದು ಪಾರ್ಸಿ ಕಂಪನಿಯ ಟ್ರಾನ್ಸ್‌ಫರ್‍ ಸೀನರಿಯಂತೆ ಸೀನೇ ಬದಲಿಸಿ ಸಂಭ್ರಮಿಸುತ್ತಿದ್ದಾರೆ. ಹೊಸ ಸಹಸ್ರಮಾನದ ಆರಂಭದಲ್ಲೇ ಈ ಅಪಸ್ವರದ ಅಡ್ಡಮಾತೇಕೆ ಎಂದು ಗೊಣಗುತ್ತಿರುವ ನಟ-ನಟಿಯರ ನಿರ್ದೇಶಕರ ಕಷ್ಟ ಅವರ ಬಾಯಿಂದಲೇ ಕೇಳಬೇಕು. +ಬೇಸತ್ತವರು: ‘ಬಣ್ಣ ಹಾಕಿ ವರ್ಷವಾಯಿತು’ ಎನ್ನುವವರು, ‘ಕಲಾವಿದರ ಸಂಘವಿದ್ದೂ ನಮಗೇನೂ ಉಪಕಾರವಾಗಿಲ್ಲ ಎಂದು ಉಪ್ಪು-ಖಾರ ಹಚ್ಚಿ ಬೈಯ್ಯುವವರು, ನಾಲ್ಕು ಅಕ್ಷರ ಕಲಿತಿದ್ರೆ ಎಲ್ಲಾರೂ ತಿಂಗಳ ಸಂಭಳಕ್ಕೆ ಸೇರಿ ಉಂಬಳಕ್ಕೆ ಒಂದು ದಾರಿ ಮಾಡಿಕೊಂಡಿರ್‍ತಿದ್ದೆ ಎಂದು ಹಲುಬುವವರೂ ಲೆಕ್ಕವಿಲ್ಲ. +‘ಪ್ರಭಾವ ಇದ್ದರೆ ಸಾಕು-ಪ್ರತಿಭೆ ಯಾರಿಗೆ ಬೇಕು’ ಎಂದು ಶಪಿಸುತ್ತ ಕಣ್ಣೀರು ಹಾಕುವವರಿಗೂ ಇಂದು ಬರವೇನಿಲ್ಲ. +ಅದರಿಂದಲೇ ಎರಡು ಸಾವಿರದಲ್ಲಿ ಎಲ್ಲ ಟಿ.ವಿಯತ್ತ ದೌಡಾಯಿಸುತ್ತಿದ್ದಾರೆ. +‘ಸುಳ್ಳು ಎಂದಿರಾ?’ +ಹಾಗಾದರೆ ಈ ಪಟ್ಟಿ ಗಮನಿಸಿ. +ಘಟಾನುಘಟಿಗಳು ಈಗೆಲ್ಲಿ? +* ಡಾ. ರಾಜಕುಮಾರ್‍ ಅವರ ಸಾಕಷ್ಟು ಚಿತ್ರಗಳನ್ನು ತೆರೆಗೆ ತಂದು-ಕಾದಂಬರಿಗಳನ್ನು ಸೆಲ್ಯುಲಾಯಿಡ್‌ಗೆ ಭಟ್ಟಿ ಇಳಿಸುವಲ್ಲಿ ‘ಏ ಒನ್’ ಎನಿಸಿದ್ದ ದೊರೆ-ಭಗವಾನ್ ಸಹ ‘ಆದರ್ಶ’ ಫಿಲಂ ಇನಸ್ಟಿಟ್ಯೂಟಿನ ಜತೆಗೆ ಟಿ.ವಿ. ಧಾರಾವಾಹಿಗಳು ತಮ್ಮ ಆದರ್ಶ ಮಾಡಿಕೊಂಡಿದ್ದಾರೆ ಈಗ. +* ‘ಅರುಣೋದಯ’ ಕ್ಲಿಕ್ ಆಗುತ್ತದೆ ಎಂದು ಕನಸಿದ ಪಿ.ಎಚ್. ವಿಶ್ವನಾಥ್ ಈ ಚಿತ್ರವೂ ‘ಅಂಡಮಾನ್-ನಿಕೋಬಾರ್‍’ಗೆ ಲಾಯಖ್ಖು ಎಂದಾದಾಗ ನಾರಾಯಣಸ್ವಾಮಿಯವರೊಂದಿಗೆ ಒಂದಾಗಿ ‘ಸಮಾಗಮ’ ಮಾಡಹೊರಟಿದ್ದಾರೆ. ‘ಜನುಮದಾತ’ ಜನ್ಮ ಜನ್ಮಾಂತರದ ಶಾಪವೇನೋ ಎಂದುಕೊಂಡ ಪ್ರಶಸ್ತಿ ವಿಜೇತ ನಿರ್ದೇಶಕ ನಾಗಾಭರಣ ಕಿರುತೆರೆಯತ್ತ ದೌಡಾಯಿಸಿ ‘ಸಂಕ್ರಾಂತಿ’ ಮೆಗಾ ಧಾರಾವಾಹಿ ಆರಂಭಿಸಿದರು. ಈಗ ಕಣಗಾಲ್ ಪುಟ್ಟಣ್ಣ ಪ್ರಶಸ್ತಿ ಚಿತ್ರರಂಗಕ್ಕೆ ಮತ್ತೆ ಕಾಲಿಡಲು ನಾಗಾಭರಣರಿಗೆ ಹುಮ್ಮಸ್ಸಿತ್ತಿದೆ. ಜೆತೆಗೆ ಡೆಲ್ಲಿ ಫಿಲಂ ಫೆಸ್ಟಿವಲ್ಲೂ ಬಂದಿರುವುದರಿಂದ ಕತೆ ಕದಿಯಬಲ್ಲ ಜಾಣರಿಗೆಲ್ಲ ಇದೊಂದು ಸದವಕಾಶ. +* ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ಗಿರೀಶ್ ಕಾರ್ನಾಡ್ ಸಹಾ ಕಾನೂರು ಹೆಗ್ಗಡತಿ ಟಿವಿ ಸೀರಿಯಲ್ ಮಾಡುವ ಸಂದರ್ಭವನ್ನು ಟು ಇನ್ ಒನ್ ಆಗಿ ಮಾರ್ಪಡಿಸಿ ಚಿತ್ರವನ್ನು ತೆರೆಗಿತ್ತು ಹೀಗೂ ಮಾಡಬಹುದಲ್ಲ ಎಲ್ಲರೂ ಎಂಬುದನ್ನು ಸ್ಪಷ್ಟವಾಗಿ ತೋರಿದ್ದಾರೆ. ಆನೆ ನಡೆದದ್ದೆ ಹೆದ್ದಾರಿ. ಬೇರೆಯವರೂ ಈ ನಿಟ್ಟಿನಲ್ಲಿ ಚಿಂತಿಸುತ್ತಿರಬೇಕು ಈಗಾಗಲೇ. +* ಭಾಮಾ-ಸತ್ಯಭಾಮ, ಸೂರ್ಯವಂಶ ತೆರೆಗಿತ್ತು ಹೆಸರಾದ ನಿರ್ದೇಶಕ ಎಸ್. ನಾರಾಯಣ್ ಇದೀಗ ಡಾ. ರಾಜ್ ಅವರ ‘ಶಬ್ದವೇಧಿ’ ನಿರ್ದೇಶಿಸುತ್ತಿದ್ದರೂ-ನಾಳೆಗಳ ಬಗ್ಗೆಯೂ ತುಂಬ ಚಿಂತಿಸಿ ‘ಪಾರ್ವತಿ’ ಧಾರಾವಾಹಿಯಲ್ಲಿ ಫೋಟೋ ಸಮೇತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. “ಚಿತ್ರ ಅಷ್ಟು ಚೆನ್ನಾಗಿ ಮಾಡ್ತಾರೆ-ಧಾರಾವಾಹಿ ಯಾಕೆ ಹೀಗಿದೆ? ಅಕಾರ ಹಕಾರ ದೋಷಗಳು ಯದ್ವಾ-ತದ್ವಾ ಇರ್‍ತವೆ ಎಂದು ಶಪಿಸುವವರೂ ಈಗ ಜಾಸ್ತಿಯಾಗುತ್ತಿದ್ದಾರೆ” ಎಂಬುದನ್ನೂ ಒಬ್ಬ ಜವಾಬ್ದಾರಿಯುತ ನಿರ್ದೇಶಕ ಗಮನಿಸುವುದು ಅಗತ್ಯ. ಮಾಸ್ ಮಿಡಿಯಾದಲ್ಲಿರುವ ಮಂದಿಗೆ ಜಾಣ ಕಿವುಡು-ಜಾಣ ಕುರುಡು ಬೆಳೆಯುವ ಲಕ್ಷಣವಾಗಲಾರದು. +* ‘ಗರಂ ಹವಾ’ ದಿಂದ ಕಾಂಟ್ರವರ್ಷಿಯಲ್ ಡೈರೆಕ್ಟರ್‍ ಎಂದು ಹೆಸರಾದ ಎಂ.ಎಸ್. ಸತ್ಯು ಈಗ ರಾವ್ ಬಹದ್ದೂರರ ‘ಗ್ರಾಮಾಯಣ’ ಮೆಗಾ ಧಾರಾವಾಹಿ ಮಾಡ ಹೊರಟಿದ್ದಾರೆ. +* ‘ಅಮೆರಿಕಾ ಅಮೆರಿಕಾ’ ಚಿತ್ರ ನಿರ್ದೇಶಿಸಿ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್‍ ಸಿನಿಮಾಕ್ಕಾಗಿ ಪ್ರೊಡ್ಯೂಸರ್‍ ‘ಹಂಟಿಂಗ್’ ಬೇಸರವೆನಿಸಿದಾಗ – ಸಿನಿಮಾಗೆ ಪರ್ಮನೆಂಟ್ ಬ್ರೇಕ್ ಹಾಕಿ ‘ಪ್ರತಿಬಿಂಬ’ ಮೆಗಾ ಧಾರಾವಾಹಿ ಮಾಡಹೊರಟು ಸಾಕಷ್ಟು ಕಿರಿಕಿರಿ ಅನುಭವಿಸಿ ಇದೀಗ ‘ಕಾವೇರಿ’ ಮೆಗಾ ಧಾರಾವಾಹಿಗೆ ಕೈ ಇಟ್ಟಿದ್ದಾರೆ. ಚಿತ್ರರಂಗದಷ್ಟು ಕೈ ಸುಡುವುದಿಲ್ಲ ಟೆಲಿ ಧಾರಾವಾಹಿ ಎಂಬುದೇ ಛೋಟಾಸ್ಕ್ರೀನ್‌ನ ಹೆಚ್ಚಳ. +* ಕನ್ನಡ ಚಿತ್ರರಂಗದ ಜನಪ್ರಿಯು ನಿರ್ದೇಶಕರೆಂದು ಹೆಸರಾದ ‘ಭಾರ್ಗವ’ ಕೂಡಾ ಈ ಕಾಲಕ್ಕಾಗುವಂತೆ ಚಿತ್ರರಂಗದಲ್ಲಿ ಹೊಂದಿಕೊಳ್ಳಲಾಗದೆ ‘ಚದುರಂಗ’ ಮೆಗಾ ಧಾರಾವಾಹಿಗೆ ಮೀಸಲಾಗಿದ್ದಾರೆ ಈಗ. ಈ ಮೆಗಾ ಧಾರಾವಾಹಿಗಳ ಹಣೇಬರಹವೇ ಅಷ್ಟು. ಇಲ್ಲಿ ಬಂದವರು ಒಂದು ರೀತಿ ಸುಳಿಯಲ್ಲಿ ಸಿಕ್ಕವಂತೆ. ಅಲ್ಲೇ ಗಿರ್‍ಕಿ ಹೊಡೆಯಬೇಕು. ‘ಫಣಿಕಟ್ಟೆ’ ಎಂದು ಕಂಠೀರವ ಸ್ಟುಡಿಯೋ ಜಗಲಿಗೆ ನಾಮಕರಣ ಮಾಡುವಷ್ಟು ಜನಪ್ರಿಯರಾಗಿದ್ದ ‘ಫಣಿ ರಾಮಚಂದ್ರ’ ಈಗ ‘ದೇವ್ರು ದೇವ್ರು’ ಮೆಗಾ ಧಾರಾವಾಹಿಯಲ್ಲಿ ಮಗ್ನರಾಗಿ ಚಿತ್ರರಂಗ ಸಂಪೂರ್ಣ ಮರೆತಿದ್ದಾರೆ ಎನ್ನಲೂಬಹುದು. ಇಲ್ಲವೇ ಚಿತ್ರರಂಗವೇ ಅವರನ್ನು ಸಂಪೂರ್ಣವಾಗಿ ಮರೆತಿದೆ ಎನ್ನಬಹುದು. +* ಚಿತ್ರರಂಗದ ಹಳೆಯ ಹುಲಿ ಎನಿಸಿದ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವೀ) ಈ ನಾಡು ಟಿವಿಗಾಗಿ ಧಾರಾವಾಹಿ ಮಾಡುತ್ತ ಜಿ.ವಿ ಅಯ್ಯರ್‍ ಅವರ ಶಾಂತಲಾ ಧಾರಾವಾಹಿಗೂ ದುಡಿಯುತ್ತಿದ್ದಾರೆ. +* ಚಿತ್ರ ನಿರ್ಮಾಪಕ-ನಿರ್ದೇಶಕರೂ ಸ್ಟುಡಿಯೋ ಮಾಲೀಕರೂ ಆದ ಬಿ.ಎಸ್. ರಂಗಾ ಅಂಥ ಹಿರಿಯರೂ ಮೆಗಾ ಧಾರಾವಾಹಿಗೆ ಸೆಲ್ಯೂಟ್ ಹೊಡೆದು ‘ಕಾಲಚಕ್ರ’ ಸರ ಸರ ಸುತ್ತುತ್ತಿದ್ದಾರೆ. +‘ಕಾಲಾಯ ತಸ್ಮೈ ನಮಃ’ ಎಂಬ ಸಾಲು ಈಗ ಸಿನಿಮಾ ಮಂದಿಗೆ ತುಂಬ ಪ್ರಿಯವಾಗಿದೆ. +* ಮಿನಿಮಮ್ ಗ್ಯಾರಂಟಿ ನಿರ್ದೇಶಕರೆಂದು ಹೆಸರಾಗಿದ್ದ ಜೊಸೈಮನ್, ವಸ್ತು ವೈವಿಧ್ಯಕ್ಕೆ ಹೆಸರಾಗಿದ್ದ ನಂಜುಂಡೇಗೌಡ, ಉಲ್ಟಾ-ಪಲ್ಟಾದಿಂದ ‘ಭೇಷ್’ ಎನಿಸಿಕೊಂಡ ಎನ್.ಎಸ್. ಶಂಕರ್‍, ‘ಕುಹೂ-ಕುಹೂ’ ಎಂದು ಕೋಗಿಲೆಯಂತೆ ಹಾಡಿ ಚಿತ್ರವಾರಂಭಿಸಿದ ಬಿ.ಸುರೇಶ್ ಮುಂತಾದವರೆಲ್ಲ ತಮ್ಮ ‘ಸಾಧನೆ’ ಟ.ವಿ.ಮೆಗಾ ಧಾರಾವಾಹಿಗೆ ಮೀಸಲು ಮಾಡಿದ್ದಾರೆ ಈಗ. +* ಚಿತ್ರರಂಗದಲ್ಲಿ ಹೆಸರಾಗಿದ್ದ ಆರ್‍.ಎನ್. ಜಯಗೋಪಾಲ್ ‘ಜನನಿ’ಯಿಂದ ಹೊರ ದೂಡಲ್ಪಟ್ಟರೂ ಮೆಗಾ ಧಾರಾವಾಹಿಯ ಆಸೆಗೆ ಮತ್ತೆ ಅವರೊಂದಿಗೆ ಕೈ ಜೋಡಿಸಿದರು. ಚಿತ್ರದಿಂದ ಕರೆಗಳು ಬರಲಿಲ್ಲ. ಆಗ ಹಿಂದೀ ಚಿತ್ರನಟ ‘ಜಿತೇಂದ್ರ’ ಇತಿಹಾಸ ಮೆಗಾ ಧಾರಾವಾಹಿ ನಿರ್ದೇಶಿಸುವಿರಾ ಎಂಬ ವಾಕ್ಯಪೂರ್ತಿ ಆಗುವುದರಲ್ಲಿ ದುಡು ದುಡು ಓಡಿ ಟಿ.ವಿ.ಗೆ ‘ಜಾಂ’ ಆಗಿಬಿಟ್ಟರು. +ಅದರಿಂದಲೇ ಈಗ ಮೆಗಾ ಧಾರಾವಾಹಿಗಳು ಸಿನಿಮಾ ನಟ-ನಟಿ-ನಿರ್ದೇಶಕರ ಬ್ರೆಡ್-ಬಟರ್‍-ಜಾಂ ಸಹಾ ಆಗಿದೆ. +* ‘ಊರ್ವಶಿ’ ಸಿನಿಮಾ ತೆಗೆದು ಪ್ರಶಸ್ತಿ ಗಳಿಸಿದ ಅಮರ್‍ ಸಿನಿಮಾರಂಗದಲ್ಲಿ ಅಡ್ರೆಸ್ ದಕ್ಕಲಿಲ್ಲವಾಗಿ ಧಾರಾವಾಹಿಗಳಿಗೆ ತಮ್ಮ ವಿಸಿಟಿಂಗ್ ಕಾರ್ಡ್ ಮಾರಿಕೊಂಡಿದ್ದಾರೆ. +* ಟಿ.ವಿ. ಸೀರಿಯಲ್‌ಗೆ ಮೀಸಲಾಗಿದ್ದ ವಾರ್ತಾ ಇಲಾಖೆಯ ಶಿವರುದ್ರಯ್ಯ ಈ ಬಾರಿ ಪ್ರಥಮ ಪ್ರಶಸ್ತಿ ಬಂದುದರಿಂದ ಸಿನಿಮಾಗೆ ಹಾರಬಹುದೆ ಎಂದು ಕನಸುತ್ತಿದ್ದರೂ – ನಿತ್ಯದೂಟವಾದ ಧಾರವಾಹಿಗಳನ್ನು ಕೈಬಿಟ್ಟಿಲ್ಲ. +* ಕಟ್ಟೆರಾಮಚಂದ್ರರನ್ನೂ ಸಿನಿಮಾ ರಂಗದಲ್ಲಿ ‘ಕ್ಯಾರೇ’ ಎನ್ನುವವರಿಲ್ಲ. ಅದರಿಂದ ಅವರೂ ಮೆಗಾ ಧಾರಾಗಾಹಿಗಳಿಗೆ ಕೈ ಚಾಚುತ್ತಿದ್ದಾರೆ. +* ಚಿತ್ರ ನಿರ್ದೇಶಕ ನಟ ಸಿ.ಆರ್‍. ಸಿಂಹ ಈ ನಾಟು ಟಿವಿಗಾಗಿ ಹೈದರಾಬಾದ್ ಷೂಟಿಂಗ್ ತೆರಳಿದ್ದಾರೆ. +-ಜನಪ್ರಿಯ ಧಾರಾವಾಹಿಗಳು ಈಗ ಚುಯಿಂಗಮ್ ಆಗುತ್ತಿವೆ. ಕಮರ್ಷಿಯಲ್ ಫಿಲಂ ಡೈರಕ್ಟರುಗಳೂ ತಾವು ಗೇಲಿ ಮಾಡುತ್ತಿದ್ದ ‘ಆರ್‍ಟ್ ಫಿಲಂ’ನ ನಿಧಾನಗತಿ ಮೆಚ್ಚಿ ಹಣದತ್ತ ವಾರೆಗಣ್ಣು ಬೀರುತ್ತಿದ್ದಾರೆ. +ಕತೆ ಬೆಳೆಸುವಾಗ ತರ್ಕಕ್ಕೆ ಎಳ್ಳು ನೀರು ಬಿಡುವುದು, ಪಾತ್ರಧಾರಿ ತಕರಾರು ಮಾಡಿದರೆ ಮುಂದಿನ ದೃಶ್ಯದಲ್ಲೇ ಆತನನ್ನು ಸಾಯಿಸಿ ಚೌಕಟ್ಟಿನಲ್ಲಿರುವ ಫೋಟೋ ಮಾಡುವುದು, ತಾಯಿ ಪಾತ್ರದವಳು ನಖರಾ ಮಾಡಿದರೆ-ಅವಳ ಬದಲಿಗೆ ಇನ್ನೊಬ್ಬಳನ್ನು ತಾಯಿ ಮಾಡುವ ಅಭಾಸ ಪರಂಪರೆ ನೀವೂ ನೋಡುತ್ತಿದ್ದೀರಿ. +ಈ ೨೦೦೦ದಲ್ಲಿ ಟಿ.ವಿ.ಯತ್ತ ಓಡುವ ಕುದುರೆಗಳು ಇನ್ನೂ ಹೆಚ್ಚಬಹುದು. ನೀವೇನಂತೀರಿ? +***** +(೧೪-೧-೨೦೦೦) +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […] +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_368.txt b/Kannada Sahitya/article_368.txt new file mode 100644 index 0000000000000000000000000000000000000000..f12b67339061df2d541a4dab0ae54dd9b07c801f --- /dev/null +++ b/Kannada Sahitya/article_368.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ ತಲೇನ ಬಲಗೈ ಮೇಲೆ ಇಟ್ಟು ಪಕ್ಕಕ್ಕೆ ಮಲಗಿ ಇನ್ನೊಂದು ಕ್ಷಣ ಎಡಗೈ ಮೇಲೆ ಮಲಗೋಕ್ಕೆ ಪ್ರಯತ್ನ ಮಾಡಿ ಮತ್ತೆ ನೇರ ಮಲಗಿ ಒದ್ದಾಡ್ತಾ: ಚಿಕ್ಕದು ಪಾಪ ನಿದ್ದೆ ಮಾಡಿರುತ್ತೆ, ದೊಡ್ಡದು ಗಣಕಯಂತ್ರದ ಮುಂದೆ ಕೂತು ’ಚ್ಯಾಟ್’ ಮಾಡುತ್ತ ಹೆಡ್‌ಫೋನ್ ಕಿವಿಗೆ ಸಿಕ್ಕಿಸ್ಕೊಂಡು ಯಾವುದೋ ಹಾಡು ಕೇಳುತ್ತ ಕೂತಿರುತ್ತೆ ಅಂತ ಅನ್ಕೊಂಡು ಮತ್ತೆ ಪಕ್ಕಕ್ಕೆ ತಿರುಗಿದರು. ಮೂವತ್ತು ವರ್ಷದ ಹಿಂದೆ ಯಾವಾಗಲೋ ಮೈಸೂರಿನಲ್ಲಿ ಸ್ನೇಹಿತ ಪಾಂಡು ಹೇಳಿದ್ದು ಜ್ಞಾಪಕ ಬಂದು ಉಸಿರು ಜೋರಾಗಿ ಎಳೆದು, ಗಾಳಿಯನ್ನ ಶ್ವಾಸಕೋಶದಲ್ಲಿ ಒಂದು ಹತ್ತು ಸೆಕೆಂಡು ನಿಲ್ಲಿಸಿ ಮತ್ತೆ ನಿಧಾನಕ್ಕೆ ಬಿಡೋದನ್ನ ಒಂದೆರಡು ನಿಮಿಷ ಮಾಡಿದರು. ಏನು ಉಪಯೋಗವಾಗಲಿಲ್ಲ. ನಿದ್ದೆ ಹತ್ತದೆ ಸಾಕಾಗಿ ನಿಟ್ಟುಸಿರು ಬಿಡುತ್ತಾ ಶ್ರೀರಾಮಚಂದ್ರ, ನಾರಾಯಣ ಅಂತ ಹೇಳುತ್ತಾ ದಿಂಬನ್ನ ಹೆಡ್‌ಬೋರ್ಡ್‌ಗೆ ಒರಗಿಸಿ ನಿಲ್ಲಿಸಿ, ಕೆಳಭಾಗವನ್ನು ಸ್ವಲ್ಪ ಮುಂದಕ್ಕೆ ಎಳೆದು ಬೆನ್ನು ಒರಗಿಸಿ, ಕಾಲು ಚಾಚಿ ಕೂತರು. ಅಗ್ರಹಾರದ ಮನೆಯಲ್ಲಿ ಚಿಕ್ಕವರಿದ್ದಾಗ ಮಲಗುವುದಕ್ಕೆ ಮುಂಚೆ ತಾಯಿ ಹಾಲು ಕೊಡುತ್ತಿದ್ದದ್ದು ನೆನಪಿಗೆ ಬಂತು. ಒಂದು ಕೈಯಲ್ಲಿ ಬಿಸಿಹಾಲು ತುಂಬಿದ ಪಾತ್ರೆ, ಇನ್ನೊಂದರಲ್ಲಿ ಲೋಟ. ಹಜಾರದಲ್ಲಿ ಸಾಲಾಗಿ ಮಲಗಿದ ಎಲ್ಲರಿಗು ಹೆಸರಿಡಿದು ಕರೆದು ಕೊಡೊ ರೂಢಿ. ಒಂದು ಕ್ಷಣ ಕಣ್ಣು ಮುಚ್ಚಿದರು. ತಾಯಿಯ ರೂಪ ಸ್ಪಷ್ಟವಾಗಿ ಮೂಡಿತ್ತು. ಕಪ್ಪಗಿದ್ದರೂ ಸುಂದರ ಮುಖ, ಮೂಗಿನಲ್ಲಿ ಹಳೆ ಮೂಗುತಿ, ಆಕರ್ಷಕವಾದ ಕಣ್ಣು, ಕಿವಿಯ ಪಕ್ಕದಲ್ಲಿ ಇನ್ನು ಅಳಿಸಿರದ ಅರಿಶಿನ, ಕೊರಳಲ್ಲಿ ಶ್ರೀವೈಷ್ಣವರ ಮಾಂಗಲ್ಯ, ಹಣೆಯಲ್ಲಿ ನೇರಳೆ ಬಣ್ಣದ ಕುಂಕುಮ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತ ಹಾಸಿಗೆಯಿಂದ ಇಳಿದು ಕಿಟಿಕಿಯ ಪರದೆಯನ್ನು ಸರಿಸಿ ಹೊರಗೆ ಇಣುಕಿದರು. ಎದುರಿನಲ್ಲಿದ್ದ ’ಡೆಲಿ’ ಇನ್ನು ಮುಚ್ಚಿರಲಿಲ್ಲ. ಯಾವನೋ ಕಾಫಿ ತೆಗೆದುಕೊಂಡು ಹೀರುತ್ತ ಹೋಗುತ್ತಿದ್ದ. ಅವನ ಹಿಂದೆ ಸ್ವಲ್ಪ ದೂರದಲ್ಲಿ ವಯಸ್ಸಾದ ಮುದುಕನೊಬ್ಬ ಐದೋ, ಆರೋ ಜೂಲು ನಾಯಿಗಳನ್ನ ಕರಕೊಂಡು ಹೋಗುತ್ತಿದ್ದ. ಅವಳು(ತಾಯಿ) ಸತ್ತು ಆಗಲೇ ಸುಮಾರು ವರ್ಷವಾಯಿತಲ್ಲವೆ….ಇವೆರಡು ಹುಟ್ಟೇ ಇರಲಿಲ್ಲ…ಒಂದು ನಾಯಿನಾದರು ಸಾಕಬೇಕು ಅಂದುಕೊಂಡರು ಅಯ್ಯಂಗಾರ್ರು… ಬಹಳ ಹಿಂದೆ ನಾನಿನ್ನು ಹೈಸ್ಕೂಲಿನಲ್ಲಿ ಓದ್ತಾ ಇದ್ದೆ ಅನಿಸುತ್ತೆ…. ಸಾಕಿದ್ದ ನಾಯಿ ಮ್ಯಾನಿಟೊಬ ಬೀದೀಲಿ ಏನೋ ಕಚ್ಚಿಕೊಂಡು ಬಂದಿತ್ತು. ತೆಗೆಯೋಕ್ಕೆ ಹೋದಾಗ ಗಟ್ಟಿಯಾಗಿ ಕಚ್ಚಿ ಹಿಡಿದಿದ್ದ ಕಾಗದದ ಉಂಡೆಯನ್ನ ಬಿಟ್ಟು ಗೊರ್ರ್ ಗೊರ್ರ್ ಅಂತ ಬೆರಳು ಹಿಡಿಯೋದರಲ್ಲಿ ಇತ್ತು. ಹೆದರಿ ಬೇಗನೆ ಕೈ ಹಿಂದಕ್ಕೆ ಎಳಕೊಂಡಿದ್ದರೂ, ಬೆರಳಮೇಲೆ ಹಲ್ಲಿನ ಪಡಿ ಮೂಡಿ ರಕ್ತ ಜಿನುಗಿತ್ತು. ಹದಿನಾಲ್ಕು ದಿನ ದೊಡ್ಡಾಸ್ಪತ್ರೆಗೆ ಬೆಳಗಾಗೆದ್ದು ಹೋಗಿ ಹೊಕ್ಕಳು ಸುತ್ತಾ ಇಂಜಕ್ಷನ್ ತೆಗೊಂಡಿದ್ದ ನೆನಪು. ಮನೆ ಎದುರಗಡೆ ಇದ್ದ ನರ್ಸಿಂಗ್‌ಹೋಮ್‌ಗೆ ದಿನಾ ಬರ್ತಿದ್ದ ಡಾಕ್ಟರ್ ಮನೆ ಸೇರಿತ್ತು ಮ್ಯಾನಿಟೊಬ!. ಓಡಾಡೋ ಕಾರುಗಳ ಶಬ್ದ, ದೂರದಲ್ಲೆಲ್ಲೋ ಪೋಲಿಸ್ ಕಾರಿನ ಸೈರನ್ನು, ಆಂಬ್ಯೂಲನ್ಸಿನ ಕೂಗು. ಎಷ್ಟೋ ವರ್ಷದಿಂದ ಇದೆ ಊರಲ್ಲಿ, ಇದೇ ಮನೆಯಲ್ಲಿ ವಾಸ ಮಾಡಿದ್ದ ಅಯ್ಯಂಗಾರ್ರ್‌ಗೆ ಹೊರಗಡೆ ಸದ್ದುಗಳು ಅಭ್ಯಾಸವಾಗಿ ಹೋಗಿತ್ತು. ಒಂದು ಕಪ್ ಬಿಸಿಯಾಗಿ ಹಾಲು ಕುಡಿದರೆ ನಿದ್ದೆ ಬರುತ್ತೇನೋ ಎಂದುಕೊಳ್ಳುತ್ತ ರೂಮಿನ ಮಧ್ಯಕ್ಕಿದ್ದ ಡ್ರೆಸ್ಸಿಂಗ್ ಟೇಬಲ್ ಪಕ್ಕದಲ್ಲಿ ಉರೀತಿದ್ದ ಚಿಕ್ಕ ಬ್ರಾಹ್ಮಣನ ಬೆಳಕಲ್ಲಿ ಹೊರ ನಡೆದರು. +ಚಿಕ್ಕವಳ ರೂಮಿನಲ್ಲಿ ಲೈಟ್ ಆಫ್ ಆಗಿತ್ತು. ದೊಡ್ಡವಳ ರೂಮಿನಲ್ಲಿ ಬೆಳಕು ಇನ್ನು ಉರೀತಿತ್ತು. ಅಪಾರ್ಟ್‌ಮೆಂಟ್ ಪೂರ್ತಿ ಮರದ ಫ್ಲೋರಿಂಗೂ; ಹೆಜ್ಜೆ ಇಟ್ಟರೆ ಸಾಕು ’ಕೀರ್ ಕೀರ್’ ಅನ್ನೊ ಶಬ್ದ. ಹಲ್ಲಲ್ಲಿ ಕೆಳಗಿನ ತುಟಿ ಕಚ್ಚಿ, ನಿಧಾನವಾಗಿ ಮೆಟ್ಟಿಲು ಇಳಿದು ಬಂದು, ರೆಫ್ರಿಜರೆಟರ್‌ನಲ್ಲಿ ’ಫ್ಯಾಟ್‌ಫ್ರೀ ಮಿಲ್ಕ್’ ಇಲ್ಲದೆ ಇದ್ದಿದ್ದಕ್ಕೆ ’ಹಾಳಾದ್ದು..’ ಅಂತ ಶಪಿಸುತ್ತ ಬಾಗಿಲು ಮುಚ್ಚಿ ನಿಂತು ಮತ್ತೆ ತೆಗೆದು ಏನಾದರು ಆಗಲಿ ಅಂತ ಗೊಣಗುತ್ತಾ ’ರೆಗ್ಯುಲರ್’ ಮಿಲ್ಕನ್ನೆ ಒಂದು ಕಪ್‌ಗೆ ಬಗ್ಗಿಸಿ, ಎರಡು ’ಈಕ್ವಲ್’ ಹಾಕಿ ಒಂದು ಕ್ಷಣ ಸುಮ್ಮನಿದ್ದು ಇನ್ನೊಂದ್ ’ಈಕ್ವಲ್’ ಎಸೆದು ’ಮೈಕ್ರೊವೇವ್ನಲ್ಲಿ’ ಬಿಸಿ ಮಾಡಿ ಮಹಡಿ ಹತ್ತಿ ಬಂದರು. ’ಮಲಕ್ಕೋ ಮಗು ಲೇಟಾಯ್ತು’ ಅಂತ ಹೇಳಬೇಕೆಂದು ಅನಿಸಿ ’ಟಕ್ ಟಕ್’ ಅಂತ ಬಾಗಿಲು ತಟ್ಟಿ ತೆಗೆಸಿದರು. ಹೆಡ್‌ಫೋನ್ ತೆಗೆಯುತ್ತ ’ವಾಟ್ ಇಸ್ ಇಟ್’ ಸ್ವಲ್ಪ ಜೋರಾಗೆ ಕೇಳಿದ್ಲು ಮಗಳು ? ಏನೂ ಇಲ್ಲ ಮಗು ಅನ್ನೋ ಹಾಗೆ ತಲೆ ಅಲ್ಲಾಡಿಸುತ್ತಾ ರೂಮಿಗೆ ಭಾರವಾದ ಹೆಜ್ಜೆಗಳನ್ನ ಹಾಕುತ್ತ ನಡೆದರು ಅಯ್ಯಂಗಾರ್ರು. +ದಿಂಬಿಗೆ ಒರಗಿ ಕೂರುತ್ತ ತಮ್ಮಷ್ಟಕ್ಕೆ ತಾವೆ ಇವಳಿಗೆ ಇನ್ನು ಮೂರು ವರ್ಷ ಇದ್ದಾಗಲೆ ಬಡಕೊಂಡೆ ’ನಡಿಯೇ ವೈದು ವಾಪಸ್ಸ್ ಮೈಸೂರಿಗೆ ಹೊರಟೋಗೋಣ; ಸಾಕಾಯ್ತು ಇಲ್ಲಿ ಜೀವನ’ ಅಂತ; ಆದಕ್ಕೆ, ’ನೀವು ಸಾಕು ಸುಮ್ಮನಿರಿ ಸಧ್ಯ. ಮೂರು ಮೂರು ದಿನಕ್ಕು ವಾಪಸ್ಸ್ ಹೋಗೋಣ, ವಾಪಸ್ಸ್ ಹೋಗೋಣ ಅಂತ ರಾಗಮಾಲಿಕೆ ತೆಗಿಬೇಡಿ. ನೀವು ಇಲ್ಲಿಗೆ ಬಂದು ಆಯ್ತು ಹದಿನೇಳು ವರ್ಷ. ನಾನು ಬಂದು ಈ ಆಗಸ್ಟ್‌ಗೆ ಇನ್ನು ಮೂರು ವರ್ಷ. ಮಧ್ಯದಲ್ಲಿ ಮಲಗಿದ್ದ ಮಗು ಕಡೆ ನೋಡುತ್ತ, ಇವಳು ಇನ್ನು ಹೊಟ್ಟೆಲೇ ಇದ್ದಳು. ಆಮೇಲೆ ಇವಳನ್ನ ಬೆಳೆಸೋದೇ ಆಯ್ತು. ನಾನು ಆಮೆರಿಕಾಗೆ ಬಂದಮೇಲೆ ಏನ್ಮಾಡಿದಿನಿ ಹೇಳಿ? ಇವಳು ಸ್ಕೂಲ್‌ಗೆ ಹೊಗೋ ವಯಸ್ಸಿಗಾದರು ಏನಾದರು ಮಾಡೋಣಾ ಅಂದರೆ, ಈಗ ತಿರುಗ ಪ್ರೇಗ್‌ನೆಂಟು. ಬೇರೆ ಏನಾದರು ಕೆಲಸ ಇದೆಯ ನಿಮಗೆ? ಮಲಗೋ ಟೈಮನಲ್ಲಿ ನನ್ನ ಕೆಣಕಬೇಡಿ. ಮೈಸೂರಂತೆ ಮೈಸೂರು ಸುಮ್ಮನೆ ಮಲಗಿ…’ ಅಂತ ಆ ಕಡೆ ತಿರುಗಿ ಮಲಗಿದ್ದರು ಶ್ರೀಮತಿಯವರು. ಹದಿನೈದು ವರ್ಷದ ಹಿಂದಿನ ಮಾತುಕತೆ ಅದು. ಅಯ್ಯಂಗಾರ್ರು ’ಅದೆಲ್ಲ ಸರಿ ಕಾಣೆ ಈಗ ಅನುಭವಸ್ತಾಯಿರೋದು ಯಾರು ನೋಡ್ತಿದೀಯಲ್ಲ’ ಗೊಣಗಿದರು… +ಬೆಡ್ ಪಕ್ಕಕ್ಕೆ ಇದ್ದ ’ಎಂಡ್’ ಟೇಬಲ್ಲಿನ ಮೇಲೆ ಲೋಟ ಇಟ್ಟು ಸ್ವಲ್ಪ ಹಿಂದಕ್ಕೆ ತಳ್ಳಿ, ದಿಂಬು ಕೆಳಗೆ ಎಳದು ಮಲಗಿದರು. ಅವರ ತುಟಿಗಳ ಮೇಲೆ ಸಣ್ಣ ನಗುವೊಂದು ಮೂಡಿತ್ತು. ಹದಿನೈದು ವರ್ಷದ ಹಿಂದಿನ ರಾತ್ರಿಯನ್ನೆ ಇನ್ನು ಮೆಲಕಾಕ್ತ ಇದ್ದರು. ಮುಖ ತಿರುಗಿಸಿ ಮಲಗಿದ ಶ್ರೀಮತಿಯವರಿಗೆ ಎರಡು ನಿಮಿಷದಲ್ಲಿ ಗಾಢವಾದ ನಿದ್ದೆ ಹತ್ತಿ ಗೊಟರ್, ಗೊಟರ್, ಗಟ್ರ, ಗಟ್ರಾಂತ ಗೊರಕೆ ಹೊಡೀತಿದ್ದರು. ಅಯ್ಯಂಗಾರ್ರು ಕಾಲಲ್ಲಿ ಒಂದು ಸತಿ ತಿವಿದರೆ ಎರಡು ಕ್ಷಣ ನಿಲ್ಲಿಸಿ ಮತ್ತೆ ಶುರುವಾಗೋದು ಗೊಟರ್, ಗೊಟರ್ ಶಬ್ಡ…ದಿಂಬಿನ ಅಂಚು ಎಳೆಯೋದು, ಬೆನ್ನಿಗೆ ಮೆತ್ತಗೆ ಕುಟ್ಟೋದು, ಸ್ವಲ್ಪ ಜೋರಾಗಿ ಕೆಮ್ಮೋದು ಹೀಗೆ ಮಾಡಿದಾಗಲೆಲ್ಲ ಶಬ್ದ ನಿಂತು, ಒಂದೆರಡು ನಿಮಿಷದಲ್ಲಿ ಮತ್ತೆ… ಗೊಟರ್, ಗೊಟರ್, ಗಟ್ರ, ಗಟ್ರ… ಅಯ್ಯಂಗಾರ್ರ್‌ಗೆ ಮಧ್ಯದಲ್ಲಿ ಮಲಗಿರೋ ಮಗು ಎಲ್ಲಿ ಎದ್ದು ರಾತ್ರಿಯೆಲ್ಲ ಜಾಗರಣೆಯಾಗುತ್ತೋ ಅನ್ನೋ ’ಟೆನ್‌ಶನ್’ ಬೇರೆ. ಹೆಂಡತಿಗೆ ಎಬ್ಬಿಸಿ ಹೇಳೋಣ ಅಂದರೆ ಐದು ತಿಂಗಳು ತುಂಬಿದ ಗರ್ಭಿಣಿ. ಪಾಪ ಮಲ್ಕೋಳ್ಲಿ ಅಂತ ಒಂದುಕಡೆ, ಇನ್ನೊಂದು ಕಡೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಬೇಕು; ಸ್ವಲ್ಪವು ನಿದ್ದೆ ಆಗದೆ ಇದ್ದರೆ ಕಾಲೇಜನಲ್ಲಿ ಪಾಠ ಏನು ಮಾಡೋದು ಅನ್ನೋ ಚಿಂತೆ. ನಿದ್ದೆ ಹತ್ತದೆ, ಹೇಳದೆ ಇರೋಕ್ಕು ಆಗದೆ ’ಡೀ ವೈದು ಕೊಂಚು ಪಕ್ಕ್‌ತ್ಕ್ ಪಡ್ತ್ಕೋಡಿ. ಉಸಿರಾಡೋಕ್ಕೆ ಅನುಕೂಲವಾಗುತ್ತೆ ಕಾಣೆ, ನೀನು ನೆಮ್ಮದಿಯಾಗಿ ಮಲಗಬಹುದು ಶಬ್ದ ಇರೋಲ್ಲ’ ಅಂತ ಹೇಳಿ ಜಲಭಾದೆ ಮುಗಿಸಿ ಬಾತ್‌ರೂಮಿಂದ ಬರೋಷ್ಟರಲ್ಲಿ ಶ್ರೀಮತಿಯವರಿಗೆ ಎಚ್ಚರವಾಗಿ ’ನಾನು ಮಲಗಿದ್ದರಲ್ಲವೆ ಗೊರಕೆ ಹೊಡೆಯೋಕ್ಕೆ, ಆ ಕಡೆ ತಿರುಕ್ಕೊಂಡು ನಿಮ್ಮ ಮನೆ ಟ್ರೇಡ್‌ಮಾರ್ಕ್ ಇದೆಯಲ್ಲ ತಲೆ ಕೆಳಗೊಂದು ದಿಂಬು ಮೇಲೊಂದು, ಇಟ್ಟ್ಕೊಂಡು ಮಲಗಿ. ಶಬ್ದವು ಕೇಳಿಸೋಲ್ಲ, ನಿದ್ದೇನೂ ಬರುತ್ತೆ’. ಪಕ್ಕದಲ್ಲಿದ್ದ ದಿಂಬನ್ನ ತಲೆ ಮೇಲೆ ಇಟ್ಟು ಮಲಗಿದ ಅಯ್ಯಂಗಾರ್ರ್‌ಗೆ ನಿದ್ದೆ ಹತ್ತಿದ್ದು ಗೊತ್ತಾಗಲಿಲ್ಲ. +ಸಾಧಾರಣವಾಗಿ ಬಾತ್ರೂಮಿನಲ್ಲಿ ಓಡುವ ಶವರಿನ ಸದ್ದಿಗೊ, ಯಾವುದೋ ರೂಮಿನ ಬಾಗಿಲು ದಢಾರನೆ ಮುಚ್ಚಿದ ಶಬ್ದಕ್ಕೋ, ಒಮ್ಮೆಲೆ ಜೋರಾಗಿ ಹೊಮ್ಮಿದ ’ರಾಕ್’ ಮ್ಯೂಸಿಕ್ಕಿನ ಕರ್ಕಶ ’ಸೌಂಡಿಗೊ’, ಕೆಳಗೆ ’ಲಿವಿಂಗ್’ ರೂಮಿನಲ್ಲಿ ಓಡಾಡೋ ರಭಸಕ್ಕೆ ಎದೆಮೇಲೆ ಯಾರೋ ನಡೆದಂತಾಗಿ ಎಚ್ಚರವಾಗೋ ಅಯ್ಯಂಗಾರ್ರ್‌ಗೆ ಅಂದು ಯಾಕೋ ಎಚ್ಚರವಾಗಿರಲಿಲ್ಲ. ಕಣ್ಣು ಬಿಟ್ಟಾಗ ತಲೆ ಸಣ್ಣದಾಗಿ ನೋಯುತಿತ್ತು. ದಿಂಬಿನ ಅಡಿಯಲ್ಲಿದ್ದ ವಾಚಲ್ಲಿ ಟೈಮ್ ನೋಡಿ, ಬಲಗಡೆ ತಿರುಗಿ ಒಂದು ಕ್ಷಣ ಹಾಗೆ ಮಲಗಿದ್ದರು. ಲೇಟಾಗಿತ್ತು. ಕಿಟಕಿ ಪಕ್ಕದಲ್ಲಿ ನೇತು ಬಿದ್ದಿದ್ದ ’ಪ್ಯಾರಿಸ್ಸಿನ’ ಫೋಟೋ ನೋಡಿ ನಕ್ಕರು. ದೊಡ್ಡಮಗಳು ಜಾಹ್ನವಿ ಮೂರು ವರ್ಷದವಳಿದ್ದಾಗ ’ನಿನಗೆ ಹದಿನಾರು ಆಗಲಿ ಚಿನ್ನ ನಿನ್ನ ಪ್ಯಾರಿಸ್, ಪ್ಯಾರಿಸ್ನಲ್ಲಿ ಡಿomಚಿಟಿಛಿe ಮಾಡ್ಸ್‌ತಿನಿ’ ಅಂತಂದು ಮುದ್ದು ಮಾಡುತ್ತಿದ್ದದ್ದು ಜ್ಞಾಪಕಕ್ಕೆ ಬಂದಿತ್ತು. ಎದ್ದು ಅಂಗೈಗಳನ್ನು ಉಜ್ಜುತ್ತ, ಬಿಡಿಸಿ ಒಮ್ಮೆ ನೋಡಿ, ಎರಡೂ ಕೈಯನ್ನು ಹಣೆಯಿಂದ ಕಣ್ಣು, ಮೂಗು, ಬಾಯ್ಮೇಲೆ ನೀವುತ್ತಾ ನಾರಾಯಣ ಶ್ರೀಹರಿ ಎಂದು ಹೇಳಿ ಮತ್ತೊಮ್ಮೆ ಅಂಗೈಯನ್ನು ನೋಡಿ, ದಿನವಿಧಿಗಳನ್ನು ಪೂರೈಸಲು ಹೋದರು. +ಮಹಡಿ ಇಳಿದು ಕೆಳಗೆ ಬರುತ್ತ ಏನೋ ಮರೆತನಲ್ಲ, ಏನು ಅಂತ ಯೋಚನೆ ಮಾಡ್ತಾನೆ ಬಂದ ಅಯ್ಯಂಗಾರ್ರು ಯಾಕೋ ತಲೆನೋವು ಬೇರೆ ಜಾಸ್ತಿ ಆಗಿದೆ ಅನ್ಕೋಂಡು, ರೆಡಿಯಾಗಿದ್ದ ಕಾಫಿ ಬಗ್ಗಿಸ್ಕೋಂಡು ಅಲ್ಲೇ ಅಡಿಗೆಮನೆಯಲ್ಲಿದ್ದ ಛೇರ್‌ಮೇಲೆ ಕೂತರು. ಕಾಫಿಯೊಂದು ಚೆನ್ನಾಗಿ ಮಾಡ್ತಾಳೆ ದೊಡ್ಡವಳು ಅಂತ ಒಂದು ಗುಟುಕು ಹೀರಿ, ಕಣ್ಣು ಮಿಟುಕಿಸದೆ ಟಿವಿ ನೋಡ್ತಿದ್ದ ಮಕ್ಕಳ ಕಡೆಯೊಮ್ಮೆ ನೋಡಿದರು. ಜನವರಿಗೆ ಹದಿನೆಂಟು ತುಂಬಿದ ಜಾಹ್ನವಿ, ಭುಜಕ್ಕಿಂತ ಸ್ವಲ್ಪ ಕೆಳಕ್ಕೆ ದಟ್ಟವಾಗಿ ಬೆಳೆದ ಕಪ್ಪು ಕೂದಲ ಕಟ್ಟದೆ ಹಾಗೆಯೆ ಬಿಟ್ಟು ಸುಂದರವಾಗಿ ಕಾಣುತ್ತಿದ್ದಳು. ಸಣಕಲ ಕಡ್ಡಿ ಜಮುನ ಚಿಕ್ಕವಳು. ಅವಳಿಗೂ ಈ ಸೆಪ್ಟಂಬರ್‌ಗೆ ಹದಿನೈದು ತುಂಬುತ್ತೆ. ಅದು ಕಾಫಿ ಕುಡಿಯೋಲ್ಲ. ತೆಳ್ಳಗೆ ಗಳುವಿನಾಗೆ ಅಕ್ಕನಿಗಿಂತಲೂ ಉದ್ದ ಬೆಳದು ನಿಂತವಳು, ಬೆನ್ನಲ್ಲಿ ಹದಿನೈದು ಕೇಜಿ ಭಾರದ ’ಬ್ಯಾಕ್-ಪ್ಯಾಕ್’ ಹೊತ್ತುಕೊಂಡೆ ಛೇರ್‌ಮೇಲೆ ಕೂತಿದ್ದಳು. ತಂದೆ ಬಂದಿದ್ದು ಗೊತ್ತಾದ್ರು ಟಿವಿ ನೋಡ್ತಾನೆ ಕೂತಿದ್ದವು. ’ಗುಡ್ ಮಾರ್ನಿಂಗ್’ ಅಂತಂದ ಅಯ್ಯಂಗಾರ್ರ್‌ಗೆ ಸಣ್ಣದಾಗಿ ತಲೆ ಸುತ್ತಿದಂತಾಗಿ ಕಣ್ಣು ಮುಚ್ಚಿ ಮಗು ಅಲ್ಲೆಲ್ಲೋ ಕನ್ನಡಕ ಇಟ್ಟಿದೀನಿ ನೋಡು ತೆಗೋ ತಿhಚಿಣ ಟಿoತಿ ? ಅಂದರು ಜಾನಕಿಗೆ. ತೆಗೋ….ಅಂದವಳಿಗೆ ಅರ್ಥವಾಗಿ ನಾನು ಬಿಜಿ ಡ್ಯಾಡ್ ಅಂತ ಟಿವಿ ನೋಡ್ತಾನೆ ಹೇಳಿದಳು. ತಾವೆ ಎದ್ದು ಲಿವಿಂಗ್ ರೂಮಿನ ’ಫೈಯರ್ ಪ್ಲೇಸ್’ ಪಕ್ಕದಲ್ಲಿದ್ದ ಬುಕ್‌ಶಲ್ಫ್ನಲ್ಲಿ ಕನ್ನಡಕ ತೆಗೊಂಡು ಬರೋಷ್ಟರಲ್ಲಿ ತಲೆ ಗಿರ್ರ್ ಅಂತ ಸ್ವಲ್ಪ ಜೋರಾಗೆ ಸುತ್ತಿದಂತಾಗಿ ಅಯ್ಯಂಗಾರ್ರು, ಇವತ್ತು ಯಾಕೆ ಹೀಗೆ? ಏನೋ ಮರೆತನಲ್ಲ ಏನು? ಅಂತ ಯೋಚನೆ ಮಾಡ್ತಾನೆ ಅಂದಿನ ಪೇಪರ್ ಕೈಯಲ್ಲಿ ಹಿಡಿದು ಕೂತರು. ಏನೋ ತಕ್ಷಣ ಹೊಳೆದಂತಾಗಿ, +ಜಾನು ಯೂನಿವರ್ಸಿಟಿಯಿಂದ ನಿನಗೆ ಲೆಟರ್ ಬಂತಾ ಮಗು ? +ಲಾಸ್ಟ್ ವೀಕೆ ಬಂತಲ್ಲಾ, ಮರೆತು ಬಿಟ್ಟಿದೀಯ ನೀನು. ಅಡ್ಮಿಶನ್ ಸಿಕ್ಕಿದೆ ಸಮ್ಮರ್‌ನಲ್ಲಿ ಹೋಗಬೇಕು. +ಹೌದಲ್ಲ ಮರೆತೆ ಹುಂ…. +ಯಾವುದೋ ’ಫ್ಯಾಶನ್ ಮ್ಯಾಗಜಿನ್’ ಪುಟಗಳನ್ನ ತಿರುವಿ ಹಾಕುತ್ತ, ಜುಲೈನಲ್ಲಿ ನಾನು ಪ್ಯಾರಿಸ್ನಲ್ಲಿ ಇರ್ತಿನಿ ಕಾಣೆ, ಅಂತ ತಂಗಿಗೆ ಹೇಳ್ತಿದ್ದಳು ಜಾಹ್ನವಿ. ಇಲ್ಲಿ ನೋಡು ಅಂತ ಯಾವುದೋ ಚಿತ್ರದ ಮೇಲೆ ಬೆರಳಿಟ್ಟು ತೋರಿಸುತ್ತಾ, +“ಇಲ್ಲೆ ಎಲ್ಲಾ ಮಾಡಲ್ಸು ಇರೊದು…” +ಜಮುನ ಕುತೂಹಲದಿಂದ “ನೀನು ಹೋಗೋದು ’ಮೊನಕೊ’ಗೆ ಅಂದಿದ್ದೆ ಮತ್ತೆ.” +ಅದು ’ವಿಂಟರ್’ನಲ್ಲಿ ಕಾಣೆ. ನಿನಗಂತೂ ಏನು ಗೊತ್ತಿಲ್ಲ. ಪ್ಯಾರಿಸ್‌ಗೆ ಸಮ್ಮರ್‌ನಲ್ಲಿ ಹೋಗಬೇಕು, ಇರಬೇಕು ಮಂಕೆ, ಪ್ರಪಂಚಕ್ಕೇ ಗೊತ್ತಿರೋ ವಿಷಯ ಅದು. +ತಲೆ ಎತ್ತದೆ, ಪೇಪರ್ ಓದ್ತಾನೆ ಅಯ್ಯಂಗಾರ್ರು “ನೀನು ಅಲ್ಲಿಗೆ ಹೋಗ್ತಾ ಇರೋದು ಓದೋಕ್ಕೆ. ಅವರಿವರ ಕೈಯಲ್ಲಿ ಫೋಟೋ ತೆಗಿಸ್ಕೊಳ್ಳೋದಕ್ಕಲ್ಲ.” +“ನನಗೆ ಗೊತ್ತು,I ಞಟಿoತಿ.” ಅನ್ನುತ್ತ ಮುಖ ದುರುಗುಟ್ಟ್ಕೊಂಡು ನೋಡಿ ಆ ಕಡೆ ತಿರುಗಿ, ಸಿಟ್ಟಿನಲ್ಲಿ ಏನೆನೋ ಗೊಣಗಕ್ಕೆ ಶುರು ಮಾಡ್‌ದ್ಲು ಜಾನು. +“ಹೇಳೊಕ್ಕೆ ಬೇರೇನು ಇಲ್ಲದೆ ಇದ್ದರೆ ಸುಮ್ಮನಿರಬೇಕು. ಒಳ್ಳೆsಣuಛಿಞ ಡಿeಛಿoಡಿಜ” ತರಹ ಯಾವಾಗಲು ಅದೇ.. ಕೇಳದೆ ಇರೋದು ಏನಾದರು ಹೇಳಿದರೆ ಅದೊಂದು, ಅದು ಬಿಟ್ಟು ಸುಮ್ಮನೆ….. ಮಾಡೋಕ್ಕೆ ಬೇರೆ ಕೆಲಸ ಇಲ್ಲದೆ ಇದ್ದರೆ…” +ಸಾಮಾನ್ಯವಾಗಿ ಸುಮ್ಮನಿರುತ್ತಿದ್ದ ಅಯ್ಯಂಗಾರ್ರ್‌ಗೆ ಅಂದು ಕೋಪ ನೆತ್ತಿಗೇರಿತ್ತು. ಕನ್ನಡಕ ತೆಗೆದಿಡುತ್ತಾ ನಿಂತು, ಬಲಗೈಯಲ್ಲಿ ಇದ್ದ ಪೇಪರನ್ನು ಬಿಸಾಕಿದಾಗ, ಟೇಬಲ್‌ಮೇಲೆ ಇದ್ದ ಕಾಫಿ ಕಪ್ಪಿಗೆ ಕೈ ತಾಕಿ ಉರುಳಿಬಿದ್ದು ಕಾಫಿ ಚೆಲ್ಲಿತ್ತು. ಹಲ್ಲು ಕಚ್ಚುತ್ತ “ನನ್ನ ಪ್ರಾಣ ತೆಗೆದು ಬಿಡ್ತೀರ ನೀವಿಬ್ಬರು ಅಪ್ಪ ಅನ್ನೋ ಮರ್ಯಾದೆನೆ ಇಲ್ಲ ನಿಮಗೆ” ಎಂದು ಜೋರಾಗಿ ಉಸಿರು ಬಿಡುತ್ತಾ ಎರಡು ಹೆಜ್ಜೆ ಮುಂದೆ ಹೋಗಿದ್ದ ಅಯ್ಯಂಗಾರ್ರು ತಲೆ ತಿರುಗಿ ಬಿದ್ದು ಬಿಟ್ಟರು. +ಅಷ್ಟ್ರಲ್ಲಿ ಆಗಲೇ ಕಣ್ಣಲ್ಲಿ ಎರಡು ಹನಿ ಜಿನುಗಿದ್ದ ಜಾಹ್ನವಿ “ಔh! mಥಿ goಜ..” ಅಂದಳು. ಚಿಕ್ಕದು ಕಣ್ಣು, ಬಾಯಿ ಬಿಡುತ್ತ ಅಪ್ಪನ ಭುಜ ಹಿಡಿಯೋಕ್ಕೆ ಮುಂದೆ ಬಗ್ಗಿ “ಂಡಿe ಥಿou oಞ, ಜಚಿಜ?.” ಎಂದು ಕೇಳಿತ್ತು. +ಭುಜದ ಮೇಲೆ ಬಿದ್ದ ಆಯ್ಯಂಗಾರ್ರ್‌ಗೆ ಒಂದು ಕ್ಷಣ ಏನು ತೋಚದೆ ಸುತ್ತಲು ಕತ್ತಲೆ ಕವಿದಂತೆನಿಸಿ ಹೆದರಿದ್ದರು. ಅಯ್ಯೋ ಮಕ್ಕಳ ಮುಂದೆ ಹೀಗಾಯ್ತಲ್ಲ ಎಂದಂದು ಕೊಳ್ಳುತ್ತಾ ಏಳೋದಕ್ಕೆ ಹೋದವರಿಗೆ ಆಗದೆ ತಲೆಯಿನ್ನೂ ಸುತ್ತುತ್ತಿರುವುದು ತಿಳಿದು ಹಾಗೆ ಅಲ್ಲಿಯೇ ಬಿದ್ದಿದ್ದರು. ಟೇಬಲ್ ಮೇಲಿಂದ ಕಾಫಿ ಪಾದದ ಮೇಲೆ ಹನಿ ಹನಿಯಾಗಿ ತೊಟಕುತಿತ್ತು. ಅಯ್ಯಂಗಾರ್ರು ಕಾಲನ್ನ ಹಿಂದಕ್ಕೆ ಎಳಕೊಳ್ಳಲಿಲ್ಲ. ಭುಜ ಹಿಡಿಯಲು ಬಂದ ಜಾನಕಿಯ ಕೈಯನ್ನು ನೋಡಿದವರೆ ಸಿಟ್ಟಿನಲ್ಲಿ ಅಭಯ ಹಸ್ತ ತೋರಿಸುತ್ತ ಬೇಡ, ಬೇಡ ಅಂದರು. ಜಾನಕಿ ಹೆದರಿ ಹಿಂದೆ ಸರಿದು ಅಕ್ಕನ ಮುಖ ನೋಡಿ, ಭುಜವನ್ನ ಮೇಲಕ್ಕೆತ್ತಿ ಎರಡು ಕೈಯನ್ನು ಏನು ಗೊತ್ತಿಲ್ಲವೆನ್ನುವಂತೆ ತಿರುಗಿಸಿದಳು. ಜಾಹ್ನವಿ ಬಿಪಿ ಟ್ಯಾಬ್ಲೇಟ್ ಬೆಳಿಗ್ಗೆ ತೆಗೊಂಡರ ಅಂತ ಪಿಸುಗುಟ್ಟಿದ್ದು ಆಯ್ಯಾಂಗಾರ್ರ್‌ಗೆ ಕೇಳಿಸಿತ್ತು. ಮರೆತಿದ್ದು ಆದನ್ನೇ ಅಂತ ತಕ್ಷಣ ಹೊಳೆದಿತ್ತು. ಜೋರಾಗಿ ಹೇಳೊಕ್ಕಾಗದೆ ಟ್ಯಾಬ್ಲೆಟ್ಟು, ಟ್ಯಾಬ್ಲೆಟ್ಟು ಮೇಲಿದೆ ಅಂತ ಹೇಳಿದರು. ಜಾನಕಿ ಓಡೋಗಿ ತಂದುಕೊಟ್ಟ ಗುಳಿಗೆ ನುಂಗಿ, ಛೇ ಹೀಗಾಯ್ತಲ್ಲ ಯಾವತ್ತು ಮಕ್ಕಳ ಮುಂದೆ ಹೀಗಾಗಿರಲಿಲ್ಲ; ದಿನಾ ಹಲ್ಲು ಉಜ್ಜಿದ ಕೂಡಲೆ ನುಂಗೊ ಮನುಷ್ಯ ಮರೆತನಲ್ಲ..ಆದಕ್ಕೆ ಹಾಳಾದ್ದು ಬೆಳಿಗ್ಗೆಯಿಂದಲೆ ತಲೆ ಗಿರ್ರ್ ಅಂತಿದ್ದಿದ್ದು..ಆಗಬಾರದಿತ್ತು ಆಗಬಾರದಿತ್ತು..ಪಾಪ ಹೆದರಿಬಿಟ್ಟಿವೆ ಅಂತ ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಮತ್ತೆ ಏಳೋದಕ್ಕೆ ಪ್ರಯತ್ನ ಮಾಡಿ ಆಗದೆ ಕೂತಲ್ಲೆ ಹಿಂದಕ್ಕೆ ಸರಿದು ಗೋಡೆಗೆ ಒರಗಿ, ಮಗು ಆ ಫೋನ್ ಕೊಡು ಅಂತ ನಿಧಾನವಾಗಿ ಹೇಳಿದರು. ಕಾಲೇಜಿಗೆ ಫೋನ್ ಮಾಡಿ ಸಿಕ್‌ಲೀವ್ ಹಾಕಿ ಇನ್ನು ಮಂಕಾಗಿ ನಿಂತ ಮಕ್ಕಳ ಕಡೆ ನೋಡಿ, ನನಗೆ ಏನು ಆಗಿಲ್ಲ ಯೋಚನೆ ಮಾಡಬೇಡಿ. ಬೆಳಿಗ್ಗೆ ಟ್ಯಾಬ್ಲೇಟ್ ತಗೊಳೋದು ಮರೆತು ಬಿಟ್ಟೆ ಅಷ್ಟೆ. ನೀವು ತಿಂಡಿ ತಿಂದಾಗಿದ್ದರೆ ಸ್ಕೂಲಿಗೆ ಹೋಗಿ ಅಂದರು. ದೊಡ್ಡವಳು ನಾನು ಬೇಕಾದರೆ ಮನೇಲಿ ಇರ್ತಿನಿ ಅಂತ ಅಂದಿದ್ದಕ್ಕೆ ಮನೇಲಿದ್ದು ಏನು ಮಾಡ್ತಿ? ಗೋ ಗೋ ಅಂತಂದರು ಅಯ್ಯಂಗಾರ್ರು. +ಮಕ್ಕಳಿಬ್ಬರು ಹೋದಮೇಲೆ ಮಾರ್ಚಿನ ಆ ಮಂದ ಬೆಳಕಲ್ಲಿ ಒಬ್ಬರೆ ಕೂತಿದ್ದ ಅಯ್ಯಂಗಾರ್ರ ಮನಸ್ಸಿಗೆ ಕ್ಲೇಶವಾಗಿತ್ತು. ಮಕ್ಕಳ ಮುಂದೆ ಬಿದ್ದು ಏನು ಮಾಡಲಾಗದಿದ್ದಕ್ಕೆ ಬಹಳ ಕಿರಿಕಿರಿಯಾಗಿ ಮನಸ್ಸು ಕಲಕಿ ಹೋಗಿತ್ತು. ಅವಗಳದ್ದು ಏನು ತಪ್ಪಿಲ್ಲ ಮರೆತಿದ್ದು ನಾನಲ್ಲವೇ. ಆದು ಅಲ್ಲದೇ ನಾನು ಕೋಪ ಮಾಡ್ಕೋಳೋ ಅಂತದ್ದು ಅವಳೇನು ಹೇಳಿರಲಿಲ್ಲ. ಇನ್ನು ಚಿಕ್ಕವು, ಮನಸ್ಸು ಬಹಳ ಸೂಕ್ಷ್ಮ. ಈಗಿನ್ನು ಗೂಡು ಬಿಟ್ಟು ಹೊರಬಂದ ಬಣ್ಣದ ಚಿಟ್ಟೆಗಳ ಹಾಗೆ. ಅವಳಿನ್ನು(ಹೆಂಡತಿ) ಬದುಕಿದ್ದರೆ ಇಷ್ಟೆಲ್ಲ ಆಗೋಕ್ಕೆ ಬಿಡ್ತಾನೇ ಇರಲಿಲ್ಲ: ’ಅವರ ಚಿಂತೆ ನಿಮಗೆ ಯಾಕೆ ? ನಾನು ಹೇಗೋ ನಿಭಾಯಿಸಿಕೊಂಡು ಹೋಗ್ತಿನಿ. ಸುಮ್ಮನೆ ನಿಮ್ಮಷ್ಟಕ್ಕೆ ನೀವು ಇರಿ. ನಿಮಗು ನೆಮ್ಮದಿ ಅವಕ್ಕು. ನಿಶ್ಶಬ್ದವನ್ನ ಅನುಭವಿಸಿ’ ಅನ್ನೋವಳು. ಅವಳು ಸತ್ತ ಎಂಟು ವರ್ಷದಲ್ಲಿ ನಾನು ಇನ್ಸ್ಟಂಟ್ ನೂಡಲ್ಸ್ ಮಾಡೊದನ್ನ ಕಲಿತೆ, ಜಮೈಕನ್ ಜಡೆ ಹೆಣೆಯೋದನ್ನ ಕಲಿತೆ, ನೂರಾರು ಪಾಪ್ ಸಿಂಗರ್ ಹೆಸರುಗಳನೆಲ್ಲಾ ಉರು ಹೊಡೆದೆ. ’ಓ ಥಿಟಿಛಿ’ ಹುಡುಗರ ಕೈ ಕುಲುಕಿರೋ ಮೊದಲನೆ ಗಣಿತದ ಮೇಷ್ಟ್ರು ನಾನೇ ಅನಿಸುತ್ತೆ. ಇಷ್ಟೆಲ್ಲ ಕಲಿತವನಿಗೆ ಇವರ ಅಲಕ್ಷ್ಯ, ಉದಾಸೀನ, ತಿರಸ್ಕಾರದ ದೃಷ್ಟಿ ಅರ್ಥ ಆಗೋಲ್ಲವೆ, ಆಗುತ್ತೆ. ಬೆಳಗಾಗೆದ್ದು ಕಾಫಿ ಕುಡೀತಾ ಜೊತೇಲಿ ಕೂತಾಗ, ಒಂದೇ ಒಂದು ಮಾತು ಆಡದೆ ಇದ್ದರೆ ನನಗೆ ಹೇಗಾಗಬೇಡ. ದಿನಾ ಇದೆ ರಾಮಾಯಣ. ನನ್ನ ಪಾಡಿಗೆ ನಾನು ಅವರ ಪಾಡಿಗೆ ಅವರು. ಏನಾದರು ಕೇಳಿದಕ್ಕೆ ನಾಕು ಮಾತು, ಇಲ್ಲದೇ ಇದ್ದರೆ ಆದು ಇಲ್ಲ. ಏನೋ ಒಂದು ಸ್ವಲ್ಪವು ಸರಿಯಿಲ್ಲ. ಹಾಲಿಲ್ಲದ ಹಸು ಮೊಲೆಗೆ ಕರು ಬಾಯಿಟ್ಟು ಕುಟ್ಟಿ ಗುಮ್ಮದ್ದಂಗೆ ಅನಿಸುತ್ತೆ. ಜೊತೇಗೆ ಈ ರೋಗಗಳು ಬೇರೆ. ಅವಳು ಸತ್ತಮೇಲೇ ಅಲ್ಲವೇ ನನಗೆ ಬಿಪಿ ಶುರುವಾಗಿದ್ದು. ನನ್ನ ಎದೆ ಬಡಿತವೆ ಸರಿ ಇಲ್ಲವೇನೋ ಅಂತ ಡಾಕ್ಟರ್ ಹತ್ತಿರ ಹೋದರೆ, ಏನು ಆಗಿಲ್ಲ ಹೋಗಿ ಅಂದ!. ಅವನಿಗೆ ಗೊತ್ತಿಲ್ಲ, ಆ ನಾಡಿಯ ಮಿಡಿತ ಕಳೆದು ಹೋಗುತ್ತಿರೋ ಸಮಯದ ಶಬ್ದ ಅಂತ. ಅದಾದ ಮೂರು ವರ್ಷಕ್ಕೆ ಸಕ್ಕರೆ ರೋಗವು ಬಂತಲ್ಲಾ. ಮರೆಯೋಕ್ಕೆ ಮುಂಚೆ ಇನ್ಸುಲಿನ್ ತೆಗೋಬೇಕು. ಇಲ್ಲ ವೈದು ಇಲ್ಲ; ನಿಶ್ಶಬ್ದವನ್ನ ಅನುಭವಿಸೋದು ನೀನೆಣಿಸಿದಷ್ಟು ಸುಲಭವಲ್ಲ. ಶಬ್ದವಿಲ್ಲದ ಕಣ್ಣಿನ ನಾಕಾರು ನೋಟಗಳೆ ಸಾಲದೆ? ನೀನು ಸತ್ತ ದಿನವು ಶಬ್ದವಿರಲಿಲ್ಲ. ಏನೋ ಎದೆ ನೋವು ೯೧೧ಗೆ ಫೋನ್ ಮಾಡಿ ಅಂದೆ. ಎಂದು ಯಾವುದಕ್ಕು ಡಾಕ್ಟರ್ ಸುದ್ದಿ ಎತ್ತದೆ ಇರೊ ನೀನು ೯೧೧ಗೆ ಫೋನ್ ಮಾಡು ಅಂದಾಗ ಸ್ವಲ್ಪ ಗಾಬರಿಯಾದರು, ಸುಮ್ಮನೆ ಏನಾದರು ತಮಾಶೆ ಮಾಡ್ತಿದಿಯೋ ಅಂತ ಒಂದು ಗಳಿಗೆ ನಿನ್ನ ಮುಖವನ್ನ ಇಲ್ಲ ಕಣ್ಣುಗಳನ್ನ ನೋಡೇ ಎಲ್ಲ ತಿಳಿದಿತ್ತಲ್ಲ ನನಗೆ. ಶಬ್ದವಿರಲಿಲ್ಲ ವೈದು ಶಬ್ದವಿರಲಿಲ್ಲ. ಎಮರ್ಜನ್ಸಿ ಮೆಡಿಕಲ್ ಹೆಲ್ಪ್ ಈ ಸಿಟಿ ಟ್ರಾಫಿಕ್ನಲ್ಲಿ ಬರೋದಕ್ಕೆ ಹತ್ತು ನಿಮಿಷ ತಡಮಾಡಿದ್ದರು. ಅಷ್ಟ್ರಲ್ಲೇ ನೀನು ಎಲ್ಲಾನು ಇಲ್ಲೇ ಮಾಡ್ಕೋಂಡ್ ಬಿಟ್ಟೆಯಲ್ಲ. ವ್ಯಾನಿಗೆ ನಿನ್ನ ಎತ್ತಿಕೊಂಡು ಹೋಗುವಾಗ ನೀನು ಬಹಳ ಹೆದರಿದ್ದೆ, ಹತ್ತೋದಕ್ಕೆ ಮುಂಚೆ ನೀನು ಬಿಟ್ಟ ಉಸಿರಿನ ಶಬ್ದವೊಂದೇ ನನಗೆ ಕೇಳಿಸಿದ್ದು. ಅದೇ ನಿನ್ನ ಕೊನೆಯ ಉಸಿರೆಂದೆನಿಸಿತ್ತು. ಆಮೇಲೆ ಆಸ್ಪತ್ರೆಯಲ್ಲಿ ಮುಕ್ಕಾಲು ಗಂಟೆ ಏನೆಲ್ಲಾ ಮಾಡಿದರು, ನೀನು ಮತ್ತೆ ಶಬ್ದ ಮಾಡಲೇ ಇಲ್ಲಾ, ಹಾರ್ಟ್‌ಫೈಲ್ ಆಗಿತ್ತು. ತಲೆಗೊಬ್ಬರು ಒಂದೊಂದು ಹೇಳಿದರು; ನ್ಯೂಯಾರ್ಕ್ ಸಿಟಿನ ಸೂ ಮಾಡಿ ಅಯ್ಯಂಗಾರ್ರೆ ಯಾಕೆ ಬಿಡಬೇಕು ಹೇಳಿ? ಇಟ್ ಈಸ್ ಡೆರೆಲೆಕ್ಶನ್ ಆಫ್ ಡ್ಯೂಟಿ; ಹತ್ತು ನಿಮಿಷ ಲೇಟ್ ಬರೋದು ಅಂದರೇನು? ನೋ ನೋ ಯು ಶುಡ್‌ನಾಟ್ ಲೆಟ್ ದೆಮ್ ಗೆಟ್‌ಅವೇ ವಿಥ್ ದಿಸ್. ಸುಮ್ಮನೆ ಬಿಡಬೇಡಿ ಅಂತ ನಮ್ಮ ಹಳೆ ಗೆಳೆಯ ನಾಗರಾಜ ರಾಯರು; ಸೂ ಮಾಡೋಲ್ಲ ಅಂದರೆ ಏನೋ ಅರ್ಥ? ಯು ಹ್ಯಾವ್ ಎ ಗ್ರೇಟ್ ಕೇಸ್ ಹಿಯರ್ ಅಂತ ಪಿಟ್ಸ್‌ಬರ್ಗಲ್ಲಿರೋ ನನ್ನ ಅಣ್ಣ. ನ್ಯೂಯಾರ್ಕ್ ಸಿಟಿ ಮೇಯರ್ ಆಫೀಸಿಗೆ ಒಂದು ಪತ್ರ ಬರದ್ಹಾಕಿ ಅದೇ ಪತ್ರವನ್ನ ನ್ಯೂಯಾರ್ಕ್ ಟೈಮ್ಸ್ ಎಡಿಟೋರಿಯಲ್ಲಿಗೂ ಕಳುಹಿಸಿದ್ದೆ. ಪೇಪರ್ರಿನವರು ಹಾಕಲಿಲ್ಲ. ಮೇಯರ್ ಆಫೀಸಿನವರು ಥಾಂಕ್ಯೂ ಲೆಟರ್ ಕಳುಹಿಸಿದ್ದರು. +ನೀನು ಸತ್ತು ಇನ್ನೂ ಒಂದು ತಿಂಗಳೂ ಆಗಿರಲಿಲ್ಲ, ನಿಮ್ಮಮ್ಮ ನಾನೆ ಒಂದು ಒಳ್ಳೆ ಹುಡುಗಿ ನೋಡ್ತೀನಿ ನೀವು ಇನ್ನೊಂದು ಮದುವೆ ಆಗಿ ಅಂತ ಹೇಳಿದ್ದರು. ನಿನಗೆ ಏನು ಮಹಾ ವಯಸ್ಸಾಗಿರೋದು ಇನ್ನೊಂದು ಮದುವೆ ಮಾಡ್ಕೋ ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೂ ಒಂದು ದಾರಿ ಆಗುತ್ತೆ ಅಂತ ನಮ್ಮಪ್ಪನಿಂದ ಹಿಡಿದು ಎಲ್ಲರೂ ಹೇಳಿದರು. ಹೇಸಿಗೆಯಾಗಿತ್ತು ನನಗೆ. ಇವರ ಒಳ್ಳೆ ಮಾತಿಗೆ ಬೆಂಕಿ ಹಾಕ ಅಂತ ಅಂದುಕೊಂಡಿದ್ದೆ. ಬಹಳ ಖಡಾ ಖಂಡಿತವಾಗಿ ಮುಖ ಮುರದಂಗೆ ಹೇಳಿದ್ದೆ ’ನೋಡಿ, ನನಗೆ ಒಬ್ಬಳೇ ಹೆಂಡತಿ. ಸತ್ತಳು ಮುಗೀತು. ಇನ್ನು ಯಾರೂ ಯಾವತ್ತೂ ಇನ್ನೊಂದು ಮದುವೆ ಬಗ್ಗೆ ಚಕಾರ ಎತ್ತಬೇಡಿ’ ಅಂತ. ನಿನ್ನ ಮೇಲಿದ್ದ ಪ್ರೀತಿಯೋ, ಒಬ್ಬನೇ ಎರಡು ಮಕ್ಕಳನ್ನ ಇವರ ಮೊಖಕ್ಕೆ ಹೊಡೆಯೋ ಹಾಗೆ ಬೆಳೆಸಿ ತೋರಿಸಬೇಕು ಅನ್ನೋ ಹಠವೋ ಅಂತು ಅಂದೇ ಕೊನೆ. ಇಲ್ಲಿವರೆಗೆ ಒಬ್ಬರು ಮತ್ತೆ ಮದುವೆ ಉಸಿರೆತ್ತಲಿಲ್ಲ. ಈಗ, ಚುಕ್ಕಾಣಿಯಿಲ್ಲದ ಹಡಗಿನ ಹಾಗೆ ದಿಕ್ಕು, ದೆಸೆಯಿಲ್ಲದಂತೆ ಅನಿಸುತ್ತಿದೆ. ಮುಂಗಾರಿನ ಭರ್ಜರಿ ಮಳೆಗೆ ತುಂಬಿ ಕೊಚ್ಚಿ ಹರಿಯುವ ನದಿಯ ನೀರಲ್ಲಿ ಸತ್ತ ಕರುವೊಂದು ಕೊಚ್ಚಿ ಹೋದಂಗೆ. ನೀರಿನ ರಭಸಕ್ಕೆ ಮುಂದೆ ಹೋಗುತ್ತ ಉಬ್ಬರವಿಳಿತಕ್ಕೆ ಮೇಲೆ ಕೆಳಗೆ ಮೇಲೆ ಕೆಳಗೆ ಬಂದು, ಕಂಡರೂ ಕಾಣದಂತೆ ಎಷ್ಟು ದಿನದ ಪಯಣವೋ? ಉಬ್ಬಿದ ಅದರ ದೇಹ ಹಾರಿ ಬರುವ ಹಕ್ಕಿಗಳು ಕೂರುವುದಕ್ಕೆ ಜಾಗವಾದೀತಷ್ಟೇ ವೈದು. ನಾನು ಮಕ್ಕಳ ರೆಕ್ಕೆ ಬಲಿಯೋವರೆಗೆ ಇರಬೇಕಷ್ಟೇ. ಕೊನೆಗೊಂದು ದಿನ ಬಿರುಗಾಳಿಗೆ ಉರುಳಿಬಿದ್ದ ಮರದ ಕೊಂಬೆಯೊಂದಕ್ಕೆ ಸಿಕ್ಕಿಬಿದ್ದು ಆ ಸತ್ತ ಕರುವಿನ ಯಾನವು ಮುಗಿದೀತು. +ನಿಧಾನವಾಗಿ ಗೋಡೆ ಹಿಡಿದೆದ್ದ ಅಯ್ಯಂಗಾರ್ರು ಒಂದು ಕ್ಷಣ ಹಾಗೆ ನಿಂತು, ಜೀವಕ್ಕೆ ಸ್ವಲ್ಪ ಸರಿಯೆನಿಸಿದ ನಂತರ ಟೇಬಲ್ಲಿನ ಮೇಲೆ, ಕೆಳಗೆ ಚೆಲ್ಲಿದ ಕಾಫಿ ಒರೆಸಿ ಕ್ಲೀನ್‌ಮಾಡಿ, ಛೇರಿನಲ್ಲಿ ಕೂತು ಇನ್ಸುಲಿನ್ ಇಂಜಕ್ಷನ್ ತೆಗೊಂಡು, ಕಿಚನ್‌ಗೆ ಹೋಗಿ ಒಂದೆರಡು ಬ್ರೆಡ್‌ಟೋಸ್ಟ್ ಮಾಡಿ ತಿಂದು, ಬಿಸಿ ಬಿಸಿಯಾಗಿ ಕಾಫಿ ಮಾಡಿ ಕುಡಿದು, ಲಿವಿಂಗ್ ರೂಮಿನಲ್ಲಿದ್ದ ರಾಕಿಂಗ್ ಛೇರ್ ಮೇಲೆ ಹೋಗಿ ಕೂತರು. ಎದುರಿಗೆ ಬಾಲ್ಕನಿಯ ಗಾಜಿನ ಬಾಗಿಲಿಂದಾಚೆ ನೋಡಿದರೆ ’ಸ್ಟಾಚು ಆಫ್ ಲಿಬರ್ಟಿ’, ಅದರ ಹಿಂದಕ್ಕೆ ಸಾಗರ, ದೂರದಲ್ಲಿ ’ವೆರಜ್ಜಾನೊ ಬ್ರಿಡ್ಜು’. ಎಷ್ಟೋ ವರ್ಷಗಳಿಂದ ನೋಡಿ ನೋಡಿ ಕಣ್ಣುಗಳಿಗೂ ಅಭ್ಯಾಸವಾಗಿ ಹೋಗಿರುವ ಸುಂದರ ನೋಟ. ಕಣ್ಣು ಮುಚ್ಚಿ ಕೂತಿದ್ದ ಅಯ್ಯಂಗಾರ್ರು ಹೆಬ್ಬೆಟ್ಟು, ಮತ್ತದರ ಪಕ್ಕದ ಬೆರಳಲ್ಲಿ ಕಣ್ಣು ಮೂಗು ಸೇರುವ ತುದಿಯನ್ನು ಒತ್ತಿ ಹಿಡಿದು, ಮತ್ತೆ ಚಿಂತೆ ಮಾಡುತ್ತ ತಮ್ಮಷ್ಟಕ್ಕೆ ತಾವೆ ಸ್ವಗತ ಮಾತಾಡ ಹತ್ತಿದರು. ಮಾಡೋದಕ್ಕೆ ಕೆಲಸ ಬೇಕಾದಷ್ಟು ಇದೆ ಆದರೆ ಮನಸ್ಸೇ ಇಲ್ಲವೆ. ಆಸಕ್ತಿನೇ ಇಲ್ಲ. ಹುಡುಗರ ಉತ್ತರ ಪತ್ರಿಕೆಗಳನ್ನ ಗ್ರೇಡ್ ಮಾಡಬೇಕು, ಮುಂದಿನ ತಿಂಗಳು ಪಬ್ಲಿಷ್ ಆಗಬೇಕಾಗಿದ್ದ ರಿಸರ್ಚ್ ಪೇಪರ್ರಿನ ಕೆಲಸ ಹಾಗೆ ಉಳಿದಿದೆ, ವಿಮರ್ಶೆ ಬರಿತೀನಿ ಅಂತ ಒಪ್ಕೊಂಡಮೇಲೆ ಬಂದ ಬುಕ್ಕೆಲ್ಲಾ ಹಾಗೆ ಬಿದ್ದಿವೆ. ಆದರೆ ನನಗೆ ಮೊದಲಿನಾಗೆ ಏಕಾಗ್ರತೆ ಇಲ್ಲ, ಮನಸ್ಸು ಒಂದು ಕಡೆ ನಿಲ್ಲೋಲ್ಲ, ಟೈಮ್‌ನ್ನ ಸರಿಯಾಗಿ ಬಳಸೊಕ್ಕೆ ಆಗ್ತಾ ಇಲ್ಲವೋ ಅಥವಾ ಸಮಯ ನನ್ನ ಬೆರಳಿನ ಸಂದಿಗಳಲ್ಲಿ ನೀರಿನ ಹಾಗೆ ಹರಿದು ಹೋಗುತ್ತಿದೆಯೋ. ಮೂವತ್ತು ವರ್ಷದ ಈ ನನ್ನ ನ್ಯೂಯಾರ್ಕಿನ ಬದುಕು ಎಂದೂ ನಿಜ ಅನ್ನಿಸಲೇ ಇಲ್ಲ; ಯಾವಾಗಲೂ ಶುದ್ದ, ಸ್ವಚ್ಛ, ಉಜ್ವಲ ಕಳೆತುಂಬಿದ ಬದುಕು; ಬುದ್ಧಿವಂತ ಫೋಟೋಗ್ರಾಫರ್ರು ಫೋಟೋ ಒಂದನ್ನ ಸುಂದರವಾಗಿ ರೀಟಚ್ ಮಾಡಿದಾಗೆ. ಛೇ, ಏನು ಜೀವನವೋ… ಈ ಮಕ್ಕಳು ಬೇರೆ ಹೀಗೆ.. +ಮಕ್ಕಳ ಹೆಸರನ್ನ ಗಾಳಿಯಲ್ಲಿ ಪಿಸುಗುಟ್ಟುತ್ತಾ ’ನನ್ನ ಮಾತು ಕೇಳಿ ಉದ್ಧಾರ ಆಗ್ತೀರಾ. ನಾನು ಹೇಳಿದ್ದನ್ನ ಅರ್ಥ ಮಾಡ್ಕೋಳಿ….. ಅರ್ಥ ಆಗದೆ ಇದ್ದರೇ ನನ್ನ ಕೇಳಿ, ಹಾಗೆ ಮುಖ ತಿರುಗಿಸಕೊಂಡು ಹೋಗಬೇಡಿ… ನಾನು ಜೀವನದಲ್ಲಿ ಮಾಡಿರೋ ಅರ್ಧದಷ್ಟು ಮಾಡಿದರೆ ಸಾಕು ನೀವು.. ನಿಮ್ಮ ವಯಸ್ಸಿನಲ್ಲಿ ನಾನು ನಿಮ್ಹಾಗೆ ಇರಲಿಲ್ಲ. ದೊಡ್ಡವನಾದಾಗ ಪ್ರಪಂಚದ ಆ ಕಡೆಗೆ ಹೋಗ್ತೀನಿ ಅಂತಿದ್ದೆ. ಕಷ್ಟಪಟ್ಟು ಓದಿದ್ದಕ್ಕೆ ಒಂದು ದಿನ ನನಗೂ ಕಾಲ ಬಂತು. ವೀಸಾ ಸಿಕ್ಕಿತ್ತು….’ +ಸಾವಿರದ ಒಂಬೈನೂರ ಎಪ್ಪತ್ತೆರಡರ ಛಳಿಗಾಲದಲ್ಲಿ ನನಗಿನ್ನೂ ಇಪ್ಪತ್ತೊಂದು, ಮೈಸೂರಿಂದ ನ್ಯೂಯಾರ್ಕ್ ಸಿಟಿಗೆ ಬಂದೆ; ಈಗಿನ ಹಾಗೆ ಗಲ್ಲಿಗೆ ನಾಕು ಜನ ಅಮೆರಿಕಾಗೆ ಆಗ ಬರ್ತಾ ಇರಲಿಲ್ಲ. ನಾನು ಬಂದ ವರ್ಷ ಮೈಸೂರಿಂದ ಬರೇ ನಾಕು ಮಂದಿ ಅಷ್ಟೆ: ಗಂಗೋತ್ರಿಯಿಂದ ನಾನು,ಓ..ಇ ಯಿಂದ ಮೂರು ಜನ ಹುಡುಗರು. ಕೊಲಂಬಿಯ ಯುನಿವರ್ಸಿಟಿಯಲ್ಲಿ ಅಡ್ಮಿಶನ್ನು, ಸ್ಕಾಲರ್‌ಶಿಪ್ಪು ಸಿಕ್ಕಿತ್ತು. ಅಗ್ರಹಾರದ ಅಯ್ಯಂಗಾರಿ ಪಿಳ್ಳೆ ಪ್ರಪಂಚದ ಅತಿ ದೊಡ್ಡ ನಗರಕ್ಕೆ ಬಂದಿಳಿದಿದ್ದೆ. ಆ ದಿನಗಳು ಮೋಸ, ಕಪಟಗಳ ನೇರ ಪರಿಚಯವಿಲ್ಲದ ಹುಡುಗನಾಗಿದ್ದೆ. ಮನುಷ್ಯನ ವಿಕೃತ ಮನಸ್ಸಿನ ಅರಿವಿಲ್ಲದ ವಿದ್ಯಾರ್ಥಿಯಾಗಿದ್ದೆ. ಆ ದಿನಗಳೇ ಬೇರೆ. ನನ್ನ ಹೆಣ್ಣು ಮಕ್ಕಳು ಟಿವಿ ಶೋಗಳಲ್ಲಿ ನೋಡೋ ಇವತ್ತಿನ ನ್ಯೂಯಾರ್ಕಿಗೂ ಅಂದಿನ ನ್ಯೂಯಾರ್ಕಿಗೂ ಬಹಳ ವ್ಯತ್ಯಾಸವಿದೆ. ಇಂದು ಹದಿಹರೆಯದ ಮಕ್ಕಳು ನಗುತ್ತ, ಗೇಲಿಮಾಡುತ್ತ ಬೀದ್ಬೀದಿ ತಿರುಗೋದು ಸಾಮಾನ್ಯ ನೋಟ. ನಾನು ಬಂದಾಗ ಚಾಕು, ಚೂರಿಗಳ ಉಪದ್ರವ ವಿಪರೀತವಾಗಿತ್ತು. ಜನ ಹೊರಗ್ಹೋಗೊಕ್ಕೆ ಹಿಂದು ಮುಂದು ನೋಡುತ್ತಿದ್ದ ಕಾಲ ಆದು. ಕತ್ತಲಾದಮೇಲೆ ಬೀದಿಗಳು ನಿರ್ಜನವಾಗುತ್ತಿತ್ತು. ಮುಸ್ಸಂಜೆಯ ಹೊತ್ತಿಗೆ ಅಂಗಡಿಗಳ ಗಾಜಿನ ಬಾಗಿಲಿಗೆ ಸ್ಪೆಶಲ್ಲಾಗಿ ಮಾಡಿಸಿದ ಶೆಟ್ಟರ್‌ಗಳು ಕೆಳಗಿಳಿಯೋವು; ನಾವು ಡಾರ್ಮೇಟ್ರಿಯ(ಹಾಸ್ಟಲ್) ರೂಮುಗಳಲ್ಲಿ ಭದ್ರವಾಗಿ ಚಿಲಕ ಹಾಕ್ಕೋಂಡು ಬಾಲ ಮುದುರಿಕೊಂಡು ಇರಬೇಕಾಗಿತ್ತು. ಒಂದು ದಿನ ಆ ಚಳೀಲೂ ಕಿಟಕಿಯಿಂದ ತಲೆ ಹೊರಗಾಕಿ ’ರಿವರ್-ಸೈಡ್ ಡ್ರೈವ್’ ಆಕಡೆ ಈಕಡೆ ಧೈರ್ಯಮಾಡಿ ನೋಡಿದ್ದೆ. ಒಂದು ನರಪಿಳ್ಳೆನಾದರೂ ಕಾಣಿಸುತ್ತಾನ ಬೀದೀಲಿ ಅಂತಾ ಕಣ್ಣುಗಳು ಹುಡುಕಿದ್ದವು. ಕಟ್ಟಡಗಳ ಮುಖದಲ್ಲಿ ಕಾರಾಗೃಹದ ಕಳೆ ಎದ್ದು ಕಾಣ್ತಿತ್ತು. ಜೈಲಿನಂತ ವಾತಾವರಣ. ಪ್ರಪಂಚದ ಅತಿ ದೊಡ್ಡ ನಗರ ಇದು. ಆದರೆ ಅದರ ಹನ್ನೆರೆಡೋ ಹದಿನೈದೋ ದಶಲಕ್ಷ ಜನ ನಾಕು ಗೋಡೆಗಳ ಒಳಗೆ ಖೈದಿಗಳಾಗಿದ್ದಾರೆ ಅನಿಸಿತ್ತು. ’ಹುಚ್ಚು ಹಿಡಿಯುತ್ತೆ ಇಲ್ಲ ಯಾವನೋ ಹುಚ್ಚ ಕಾರಣ ಇಲ್ಲದೆ ಚಾಕುನೋ, ಚೂರಿನೋ ಹಾಕಿ ಬೀದೀಲೇ ಕೊಲ್ತಾನೆ ಅನಿಸಿತ್ತು. ಯಾವ ಬುಲೆಟ್ಟಿನಲ್ಲಿ ಯಾರ ಹೆಸರು ಬರೆದಿದೆಯೋ ಯಾರಿಗ್ಗೊತ್ತು? ಯಾಕಾದರೂ ಈ ತರಹ ಬದುಕಬೇಕು, ಯಾರು ಬದುಕ್ತಾರೆ ಹೀಗೆ, ಯಾಕ್ಬೇಕು’ ಎಂದೆಲ್ಲ ಅನಿಸಿತ್ತು. ಆದರೆ… +ದುಡ್ಡು, ದುಡ್ಡಿನ ಅವಶ್ಯಕತೆಯಿತ್ತು ನನಗೆ. ಟ್ಯೂಶನ್ ಫೀ, ಬುಕ್ಕು, ರೂಮಿನ ಬಾಡಿಗೆ ಎಲ್ಲವನ್ನೂ ಯೂನಿವರ್ಸಿಟಿಯವರೆ ಕೊಟ್ಟರೂ, ಮೂರೊತ್ತಿನ ಊಟಕ್ಕೆ ಬೇಕಾದಷ್ಟು ಹಣ ನನ್ನ ಬಳಿಯಲ್ಲಿಯಿರಲಿಲ್ಲ. ದುಡ್ಡಿಗಾಗಿ ದುಡಿಯಬೇಕಿತ್ತು – ಬೇರೆ ವಿಧಿಯಿರಲಿಲ್ಲ. ಈಗಲೂ ನನಗೆ ವಿಚಿತ್ರವೆನ್ನಿಸೋದು ನಾನು ಮೈಸೂರಿನಲ್ಲಿ ಇದ್ದಾಗ ಎಂದೂ ದುಡ್ಡಿನ ಬಗ್ಗೆ ಚಿಂತೆಯಾಗಲಿ, ಯೋಚನೆಯಾಗಲಿ ಮಾಡದೆ ಇದ್ದಿದ್ದು. ಈ ದೇಶಕ್ಕೆ ಬಂದಾಗಿನಿಂದ ಪ್ರತಿದಿನ ನನಗೆ ಬೇಕೋ, ಬೇಡವೋ ಆದರ ಯೋಚನೆಯಂತೂ ಸದಾ ನನ್ನ ಬೆನ್ನ ಹತ್ತಿತ್ತು. ಆ ಮೊದಲನೆ ಛಳಿಗಾಲದಲ್ಲಿ ನನಗೆ ನೆನಪಿರುವಾಗೆ ಎಡೆಬಿಡದ ಮಳೆ. ಒಂದು ಛತ್ರಿ ಕೊಂಡುಕೊಳ್ಳೋಕ್ಕೆ ಆಗಿರಲಿಲ್ಲ ನನ್ನಿಂದ. ಇದ್ದ ಒಂದೆ ಒಂದು ಸೂಟನ್ನ ಪ್ರತಿದಿನ ಕ್ಲಾಸಿಗೆ ಹಾಕ್ಕೋಂಡು ಹೋಗ್ತಿದ್ದೆ. ಬೇರೆ ಹುಡುಗರು ನನ್ನನ್ನೇ ದುರುಗುಟ್ಟ್ಕೊಂಡು ನೋಡೋವರು. ನನಗೆ ಏನು ಅನಿಸುತ್ತಿರಲಿಲ್ಲ. ಆದರೆ ಕ್ಲಾಸಿನಲ್ಲಿ ಕೂತು ಹೊರಗೆ ಸ್ಟೈಲಾಗಿ ಜೀನ್ಸ್ ಪ್ಯಾಂಟು, ಬಿರುಸಾದ ಶರ್ಟು, ಮೇಲೋಂದು ಲೆದರ್ ಜಾಕೆಟ್ಟು ಹಾಕ್ಕೊಂಡು ಓಡಾಡೋ ಅಮೆರಿಕನ್ ಹುಡುಗರನ್ನ ನೋಡಿದಾಗಲೆಲ್ಲಾ ನನಗೂ ಆಸೆಯಾಗೋದು. ಆದರೆ ಕಾಸಿರಲಿಲ್ಲ. ಆ ದಿನಗಳು ಎಷ್ಟೋ ಬಾರಿ ಮೈಸೂರಿಗೆ ವಾಪಸ್ಸು ಹೊರಟ್ಹೋಗಬೇಕೆಂದು ಅನಿಸಿದ್ದು ಉಂಟು. ಆದರೆ ಆದಕ್ಕೂ ದುಡ್ಡಿನ ಅವಶ್ಯಕತೆಯಿತ್ತಲ್ಲ!. +ಉತ್ತರ ಅದಕ್ಕೂ ಹತ್ತಿರದಲ್ಲಿತ್ತು. ಇಂಟರ್‌ನ್ಯಾಶನಲ್ ಹೌಸ್ ಬುಲೆಟಿನ್ ಬೋರ್ಡಿನ ಕಾರ್ಡೊಂದರಲ್ಲಿ ಯಾರೋ ಗೀಚಿದ್ದರು – ’ಮೇಕ್ ಮನಿ ನವ್ ವಿಥ್‌ಔಟ್ ವೀಸ’; ಕಾಲ್ ಸಿಂಗ್. ಕೆಳಗಡೆ ಫೋನ್ ನಂಬರ್ ಇತ್ತು. +ಆರ್ ಯು ದೇಸಿ? ಯು ಆರ್ ಎ ಸ್ಟುಡೇಂಟ್? ಕಮ್ ಟು ಕೊಲಂಬಸ್ ಸರ್ಕಲ್ ಅಂಡ್ ಆಸ್ಕ್ ಫಾರ್ ’ನಿರ್ವಾಣ’ ನಿಯರ್ ದ ಪಾರ್ಕ್. ಫೋನ್ ಕುಕ್ಕಿದ್ದ. +ಸೆಂಟ್ರಲ್‌ಪಾರ್ಕಿನ ಎದುರಲ್ಲಿದ್ದ ’ನಿರ್ವಾಣ’ ನ್ಯೂಯಾರ್ಕಿನಲ್ಲಿ ಒಂದು ಪಾಪ್ಯುಲರ್ ಇಂಡಿಯನ್ ರೆಸ್ಟೊರಾಂಟೆಂದು ಅಂದೆ ಗೊತ್ತಾಗಿದ್ದು. ಇಪ್ಪತ್ತನೆ ಫ್ಲೋರಿನಲ್ಲಿದ್ದ ಆ ಹೋಟಲಿನಿಂದ ಪಾರ್ಕ್ ಸುಂದರವಾಗಿ ಕಾಣುತಿತ್ತು. ಕೈಯಲ್ಲಿ ತಲೆ ಕೂದಲ ಬಾಚಿಕೊಳ್ಳುತ್ತಾ ಹೊರಗೆ ಬಾಗಿಲ ಬಳಿಯಲ್ಲೇ ನಿಂತಿದ್ದೆ. ಬಹಳ ಆಶ್ಚರ್ಯವಾಗಿತ್ತು ನನಗೆ. ದೇಸಿಗಳು ಒಬ್ಬರು ಇರಲಿಲ್ಲ, ಬರಿ ಅಮೆರಿಕನ್ಸ್, ಬಿಳಿಯರು ಮತ್ತೆ ನೀಗ್ರೋಗಳು, ಅಲ್ಲಿ ಇಲ್ಲಿ ಒಂದಿಬ್ಬರು ಚೈನೀಸ್ ಮತ್ತೆ ಲ್ಯಾಟಿನೋಗಳು. ದೊಡ್ಡ ಅಮೇರಿಕನ್ ತಟ್ಟೆಗಳಲ್ಲಿ ಫೋರ್ಕು, ನೈಫು ಹಿಡಿದು ತಿನ್ನುತ್ತಾ ಆಗಾಗ ಪಕ್ಕದಲ್ಲಿದ್ದ ಕೋಕೋ ಇಲ್ಲ ಕಾಕ್‌ಟೈಲನ್ನೋ ಹೀರುತ್ತಿದ್ದವರ ನೋಡುತ್ತಾ ನಿಂತಿದ್ದೆ. ರೆಜಿಸ್ಟರ್ನಲ್ಲಿ ನಿಂತಿದ್ದ ಹೆಂಗಸು ನನ್ನ ನೋಡಿ ಓಳಗೋಗಿ ಬಂದಳು. ಸೂಟೂ, ಬೂಟೂ ಧರಿಸಿದ ಒಬ್ಬ ಡೊಳ್ಳೊಟ್ಟೆಯ ಪಂಜಾಬಿ ದಾಪು ಕಾಲುಗಳ ಹಾಕುತ್ತ ಬಂದ. ಅವನ ಸೂಟಿಂದ ಎಲ್ಲ ತರಹದ ವಾಸನೆಗಳು ಬರುತಿತ್ತು. ಸ್ಪೀಕ್ ಇಂಗ್ಲೀಷ್? ನಾಯಿ ಬೊಗಳಿದಂಗೆ ದಪ್ಪ ಪಂಜಾಬಿ ಶಬ್ದೋಚ್ಚಾರದಲ್ಲಿ ಕೇಳಿದ್ದ. +ಯೆಸ್. +ಲೆಕ್ಕ ಮಾಡೊಕ್ಕೆ ಬರುತ್ತಾ ಅಬಾಕಸ್ ಇಲ್ಲದೇ? +ಆಫ್ ಕೋರ್ಸ್. +ಓಕೆ. ಗೋ ಸ್ಟಾಂಡ್ ಇನ್ ದ ರೆಜಿಸ್ಟರ್. +ಅಂಕಲ್ ವಾಟ್ ವಿಲ್ಲ್ ಐ ಬಿ ಡುಯಿಂಗ್ ? ನಾನು ಹೆದರುತ್ತ ಕೇಳಿದ್ದೆ. +ರಿಂಗಿಂಗ್ ದ ಬಿಲ್, ಔರ್ ಕ್ಯಾ ಕರೇಗಾ ತೂ? ಮದ್ರಾಸಿ….ಎಂದು ಕೂಗಿದ್ದ. +ನಮಸ್ತೆ ಭಾಭೀ ಅಂದೆ ರೆಜಿಸ್ಟರ್‌ನಲ್ಲಿ ನಿಂತಾಕೆಯ ನೋಡಿ. +ನಮಸ್ತೆ ಪುತ್ತರ್ರ್…ಮದ್ರಾಸಿ ಹೋ ಅಂತ ಪ್ರೀತಿಯಿಂದ ಕೇಳಿದ್ದರು. +ಹಿಂದಿ ಬರದ ನಾನು ಮೈಸೂರ್, ಮೈಸೂರ್ ಅಂದಿದ್ದೆ! +ಸಂಜೆ ಐದರಿಂದ ರಾತ್ರಿ ಹನ್ನೋಂದರವರಗು ವಾರಕ್ಕೆ ಏಳು ದಿನ ರೆಜಸ್ಟರ್ನಲ್ಲಿ ನಿಂತು, ವೈಟರ್‌ಗಳು ಬಿಲ್ಲುಗಳನ್ನು ತಂದಾಗ ಅದನ್ನ ರಿಂಗ್ ಮಾಡೋ ಕೆಲಸ. ಕ್ರೆಡಿಟ್ ಕಾರ್ಡ್ಗಳನ್ನ ಚಾರ್ಜ್ ಮಾಡೊದು, ಸರ್ವಿಸ್ ಟ್ಯಾಕ್ಸ್ ಸರಿಯಾಗಿ ಸೇರಿಸೋದು, ರೆಜಸ್ಟರ್ನಲ್ಲಿ ಚಿಲ್ಲರೆ ಸರಿಯಾಗಿ ಜೋಡಿಸಿ ಇಟ್ಟುಕೊಳ್ಳೋದು, ಇದೆಲ್ಲವನ್ನು ಭಾಭೀ ಬೇಗನೆ ತೋರಿಸಿಕೊಟ್ಟಿದ್ದರು. ಒಂದು ವಾರ ನಾನು ಉತ್ಸಾಹದಿಂದಲೇ ಕೆಲಸ ಮಾಡಿದ್ದೆ, ಆದರೆ ಸಿಂಗ್ – ದುರ್ನಾತದ ಆ ಪಂಜಾಬಿನ ನೋಡಿದರೆ ಮೈ ಉರಿಯೋದು. ಮಾತು ಮಾತಿಗೂ ಎಲ್ಲರನ್ನು ಪಂಜಾಬಿಯಲ್ಲಿ ಸಿಡಕೋದು, ಬೈಯೋದು; ನನ್ನ ಹೆಸರಿಡಿದು ಕರೆದಿದ್ದೇ ಇಲ್ಲ, ಮದ್ರಾಸಿ ಆಗಿದ್ದೆ ನಾನು. ಮೊದ ಮೊದಲು ಅವನದೇ ಈ ಹೋಟೆಲ್ಲು ಎಂದು ತಿಳಿದಿದ್ದ ನನಗೆ ಮೊದಲನೇ ವಾರದ ಕೊನೆಯಲ್ಲಿ ಗೊತ್ತಾಗಿತ್ತು ಅವನು ನನ್ಹಾಗೆ ಕೆಲಸದಾಳು ಅಂತ. ಇಂಗ್ಲಿಷ್ ಮಾತನಾಡೊಕ್ಕೆ ಬರದ ಪಂಜಾಬಿಗಳಿಗೆ ಮ್ಯಾನೇಜರ್ ಆಗಿದ್ದ. ಆ ವಿಷಯ ತಿಳಿದು ನನಗೆ ಯಾಕೋ ಸಂತೋಷವಾಗಿತ್ತು. ವಾರದ ಕೊನೆಯಲ್ಲಿ ಎಲ್ಲರಿಗು ಕೊಟ್ಟಾಗ ನನಗೆ ಸಂಬಳ ಕೊಡಲಿಲ್ಲ. ಬಹಳ ದುಃಖವಾಗಿತ್ತು. ಇನ್ನೊಂದು ವಾರ ಮಾಡು, ಕೆಲಸ ನೋಡಿ ಒಟ್ಟಿಗೆ ಕೊಡ್ತೀನಿ ಅಂದಿದ್ದ ಸಿಂಗ್! +ರೂಮಿಗೆ ಬಂದು ಅಳೋದೊಂದು ಬಾಕಿ. ಸ್ನಾನ ಮಾಡ್ತಾ ಶವರ್‌ನಲ್ಲಿ ಭೀಮ್ ಹಾಡಿರೋ ’ಕರುಣಿಸೋ ರಂಗ ಕರುಣಿಸೋ’ ಬಹಳ ಎಮೋಶನ್ನಲ್ಲಾಗಿ ಹೇಳುತ್ತ ನಾಕು ಹನಿ ನಿಜವಾಗಲೂ ಕಣ್ಣಿಂದ ಬಂದಿತ್ತೋ, ಇಲ್ಲ ಮೇಲಿಂದ ಬಿದ್ದ ನೀರೋ ಸರಿಯಾಗಿ ನೆನಪಿಲ್ಲ. ನನ್ನ ರೂಮ್‌ಮೇಟ್ ’ಚನ್ ಲೂ’ ಖುಶಿ ಖುಷಿಯಾಗಿ ಬಂದಿದ್ದ – ಪೇಮೆಂಟ್ ಆಗಿತ್ತು. ನನ್ನ ಕಷ್ಟ ಎಲ್ಲಾ ತೋಡ್ಕೊಂಡೆ. ನನಗಿಂತ ಸೀನಿಯರ್ರು. ಇನ್ನೊಂದು ವಾರ ಚೆನ್ನಾಗಿ ಕೆಲಸ ಮಾಡು, ದುಡ್ಡು ತೆಗೊಂಡು ಕೆಲಸ ಬಿಟ್ಬಿಡು ಅಂದ. ನಾನು ಕೆಲಸ ಮಾಡೋ ರೆಸ್ಟೊರಾಂಟ್‌ನಲ್ಲಿ ಕೊಡಿಸ್ತೀನಿ ಅಂತ ಭರವಸೆ ಕೊಟ್ಟ. +ಇನ್ನೊಂದು ವಾರ ಸಿಂಗ್ ಹಾವಳಿ ತಡಕೊಂಡು ಕೆಲಸ ಮಾಡಿ, ಗಂಟೆಗೆ ಮೂರು ಡಾಲರ್ ಹಾಗೆ, ಇನ್ನೂರ ಐವತ್ತೆರಡು ಡಾಲರ್ ಎಣಿಸಿದಾಗ, ಬಹಳ ಸಂತೋಷವಾಗಿತ್ತು. ಮದ್ರಾಸಿ ’ಆಶ್ ಕರೋ’ ಎಂದು ನಗುತ್ತ ಕೊಟ್ಟಿದ್ದ ಸಿಂಗ್. ಈಗ ಅಂದಿನ ದುಡ್ಡು ನೋವಾಗುವಷ್ಟು ಕಡಿಮೆ, ಬಹಳ ಕಡಿಮೆ ಅನಿಸುತ್ತೆ. ಆದರೆ ಅಂದು ಆದೇ ನನ್ನ ಪಾಲಿಗೆ ಐಶ್ವರ್ಯವಾಗಿತ್ತು: ಒಂದು ವಿಂಟರ್ ಕೋಟಿಗೆ, ವುಲ್ಸ್‌ವರ್ಥ್‌ನಲ್ಲಿ ಒಂದು ಜೊತೆ ಬೂಟಿಗೆ ಬೇಕಾದಷ್ಟು. ಸಾಲ್ವೇಶನ್ ಆರ್ಮಿಲಿ ಐವತ್ತು ಸೆಂಟಿಗೊಂದು ಶರ್ಟಂತೆ ಆರು ಶರ್ಟ್ ತೆಗೊಂಡಿದ್ದೆ!. ಒಂದು ಲೀವೈಸ್ ಜೀನ್ಸ್ ತಗೋಳ್ಳಕ್ಕೆ ಮರೀಲಿಲ್ಲ. ಮಾರನೆ ದಿನ ಹೊಸ ಬಟ್ಟೆ ಹಾಕ್ಕೋಂಡು ಮೋಪಾಗಿ ಕಾಲೇಜಿಗೆ ಹೋದಾಗ ಯಾವ ನನ್ನ ಮಕ್ಕಳಿಗೂ ಕಡಿಮೆ ಇಲ್ಲಾ ಅನಿಸಿತ್ತು!. +’ಚೈನೀಸ್ ವೋಕ್’ ಮಿಡ್ಟೌನ್‌ನಲ್ಲೊಂದು ರೆಸ್ಟೊರಾಂಟು. ಬಿಜಿ ಕಾರ್ನರ್‌ನಲ್ಲಿದ್ದ ಆ ಹೋಟಲ್ಲಿನ ದೊಡ್ಡ ಕಪ್ಪು ಗಾಜಿನ ಕಿಟಕಿಗಳಲ್ಲಿ ಬೀದಿಯ ಬಿಂಬ ಕಾಣಿಸೋದು. ಚನ್ ನನ್ನ ಸೀದ ಒಳಗೆ ಕರಕೊಂಡ್ ಹೋಗಿ ’ಕ್ಯಾಂಟೊನೀಸ್’ ನಲ್ಲಿ ಏನೋ ಹೇಳಿದ್ದ. ಸಾಧಾರಣ ಎತ್ತರದ ಆ ಮನುಷ್ಯ ಧರಿಸಿದ್ದ ಬಿಳಿಯ ಜಾಕೆಟ್ ಮೇಲೆ ಯಾರೋ ವಾಂತಿ ಮಾಡಿದ್‌ಹಾಗಿತ್ತು. ದಪ್ಪವಾದ ಧ್ವನಿಯಲ್ಲಿ ಸ್ಪೀಕ್ ಇಂಗ್ಲೀಷ್ ಎಂದು ಕೇಳಿದ್ದ. +ಯೆಸ್. +ಲೆಕ್ಕ ಮಾಡೋಕ್ಕೆ ಬರುತ್ತಾ ಅಬಾಕಸ್ ಯೂಸ್ ಮಾಡದೆ ? +ಯಾಕೋ ತಿರುಗ ರೆಜಸ್ಟರ್ ಕೆಲಸಾನೆ ಸಿಗುತ್ತೇನೋ ಅನ್ನ್ಕೋಂಡು, ಆಫ್ ಕೋರ್ಸ್ ಅಂದೆ. +ಸೈಕಲ್ ಹೊಡೆಯೋಕ್ಕೆ ಬರುತ್ತಾ ? +ಮೈಸೂರು ಅಯ್ಯಂಗಾರಿಗೆ ಸೈಕಲ್ ಹೊಡೆಯೋಕ್ಕೆ ಬರುತ್ತಾ ಅಂತ ಕೇಳ್ತಾನಲ್ಲ. ಮೀನಿಗೆ ಈಜೋಕ್ಕೆ ಬರುತ್ತಾ ಅಂತ ಕೇಳ್ತಾರೇನೋ ಬೆಪ್ಪಮುಂಡೆದೆ, ತಕ್ಷಣ ನಗು ಬಂದಿದ್ದರೂ ತಡಕೊಂಡು, ಬರುತ್ತೆ ಅಂದೆ. +ಸೈಕಲ್ಲ್ ಬೇಸ್‌ಮೆಂಟ್‌ನಲ್ಲಿದೆ, ಮ್ಯಾಪ್ ಕೊಡ್ತೀನಿ ನಾಳೆಯಿಂದ ಶುರುಮಾಡು ಅಂದ. +ಏನನ್ನ ಅಂತಾ ಗೊತ್ತಾಗದೆ, ಅಂಕಲ್ ವಾಟ್ ವಿಲ್ ಐ ಬಿ ಡುಯಿಂಗ್? ಅಂದೆ +ಆಶ್ಚರ್ಯವಾಗಿ ನನ್ನ ಕಡೆ ನೋಡಿ ಮತ್ತೆ ಚನ್ ಕಡೆ ನೋಡಿ ಜೋರಾಗಿ ನಗುತ್ತ ಹೊರಟ್ಹೋದ. ಚನ್ ಎಲ್ಲ ವಿವರಿಸಿ ಮ್ಯಾಪ್ನಲ್ಲಿ ಸುತ್ತಾಮುತ್ತಾ ಇರೋ ಬೀದಿಗಳನೆಲ್ಲಾ ಸರಿಯಾಗಿ ನೋಡಿ ತಿಳಕೋ ಅಂತ ಒತ್ತಿ ಹೇಳಿದ್ದ. ಚೈನೀಸ್ ಫೂಡ್ ಡೆಲಿವರಿ ಬಾಯ್ ಆಗಿದ್ದೆ! +ಮೊದ ಮೊದಲು ಯಾವಾಗಲೂ ಹೆದರಿಕೆಯಾಗೋದು ನನಗೆ. ಮ್ಯಾಪ್ನ ಚೆನ್ನಾಗಿ ನೋಡಿ ಅಡ್ಡಬೀದಿಗಳ ಹೆಸರನ್ನೆಲ್ಲಾ ಉರು ಹೊಡೆದೆ. ಯಾವುದೇ ಕಾರಣಕ್ಕೂ ಎಲ್ಲೂ ನಿಲ್ಲಿಸ್ಲುಬಾರದು, ಯಾರನ್ನೂ ದಾರಿನೂ ಕೇಳಬಾರದು ಅಂತ ತೀರ್ಮಾನ ಮಾಡಿದ್ದೆ. ಸೈಕಲ್ಲನ್ನ ಲಾಕ್ ಮಾಡೋಕ್ಕಿದ್ದ ಭಾರವಾದ ಚೈನನ್ನ ನನ್ನ ಭುಜಕ್ಕೆ ಸುತ್ತಿಕೊಂಡೆ ಓಡಿಸುತ್ತಿದ್ದೆ. ಯಾವನಾದರು ಹಿಂದಿನಿಂದ ಕೈ ಹಾಕಿದರೆ ಅದರಲ್ಲೇ ತಿರುಗಿಸಿ ಬಿಡೋಣಾಂತ. ಚನ್ ಹೇಳಿದ್ದ ಯಾರಾದರು ’ಮಗ್ಗ್’ ಮಾಡೋಕ್ಕೆ ಬಂದರೆ ಏನಾದರು ಕೂಗುತ್ತಾ, ಕೈಗಳನ್ನ ಬೀಸುತ್ತಾ, ಕೋಪ ಬಂದವನಂತೆ ಮುಖ ಮಾಡಿ ಜೋರಾಗಿ ಕಿರುಚು ಸಾಮಾನ್ಯವಾಗಿ ಹೋರಟ್ಹೋಗ್ತಾರೆ ಅಂತ. ಇನ್ನೊಬ್ಬ ಡೆಲಿವರಿ ಬಾಯ್, ಬಿಳಿ ಕರ್ಚೀಫೊಂದನ್ನ ತಲೆಗೆ ಸುತ್ತೋದನ್ನ ತೋರಿಸಿಕೊಟ್ಟ. ಟಫ್ಫಾಗಿ ಕಾಣಿಸುತ್ತೆ ಯಾರು ನಿನ್ನ ತಂಟೆಗೆ ಬರೋಲ್ಲ ಅಂದಿದ್ದ. ಆದರೆ ನನ್ನ ಬಂಡವಾಳ ನನಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಅಪ್ಪರಾಣೆ ನಾನು ಯಾರೊಂದಿಗೂ ಫೈಟ್ ಮಾಡೋಲ್ಲ, ನನಗಾಗೋದು ಇಲ್ಲಾಂತ. ಪ್ರತಿಯೊಂದು ಡೆಲಿವರಿಗೆ ಹೋದಾಗಲೂ ಭಯ, ಹೆದರಿಕೆ, ನಡುಕ; ಎಲ್ಲಿ ಯಾವಾಗ ಏನಾಗಿ ಬಿಡುತ್ತೋ ಅನ್ನೋ ದಿಗಿಲು. ವಾಪಸ್ಸು ಬರೋವಾಗ ಕತ್ತಲೇ ಆಗಿದ್ದರಂತೂ ಆ ಟ್ರಕ್ಕು, ಹಳದಿ ಟ್ಯಾಕ್ಸಿಗಳ ಮಧ್ಯೆ ಬರೋಷ್ಟ್ರಲ್ಲಿ ಸಾಕಾಗೋದು. ಒಂದೊಂದು ಸತಿ ಹಿಂದೆ ದೆವ್ವ, ಪಿಶಾಚಿಗಳು ಅಟ್ಟಿಸಿಕೊಂಡು ಬರ್ತಾಯಿವೆ ಅನಿಸೋದು. ಆ ಛಳಿಲೂ ಬೆವತು, ಬೆವತು ಬಿಳಿ ಶರ್ಟಲ್ಲಿ ವಾಸನೆ ಜೊತೆಗೆ ಕಾಲರ್‌ಗಳಲ್ಲಿ ಒಂದು ಮೊಣ ಕೊಳೆ ಎದ್ದು ಕಾಣೋದು. ಬಟ್ಟೆಗಳನ್ನ ದಿನಾ ಒಗಿದಿದ್ದರೂ ವಾರಕ್ಕೆ ಎರಡು ಬಾರಿಯಾದರೂ ಒಗಿಬೇಕಾಗಿ ಬಂದಿದ್ದಷ್ಟೆ ನಿಜ. +ಒಂದು ತಿಂಗಳು ಹೀಗೆ ವಾರಕ್ಕೆ ಐದು ದಿನ ಕೆಲಸ ಮಾಡಿದ ಮೇಲೆ, ಸ್ಥಿತಿ ಸ್ವಲ್ಪ ಸುಧಾರಿಸಿ ಮನಸ್ಸಿಗೆ ನಿರಾಳವಾಗಿ, ಸೈಕಲ್‌ನಲ್ಲಿ ಹೋಗಬೇಕಾದರೆ ಸುತ್ತಾಮುತ್ತಾ ನೋಡ್ತಾ, ಅಕ್ಕಾಪಕ್ಕಾ ಬರೆದಿರೋ ಸೈನ್‌ಗಳನ್ನ ಓದೋದಕ್ಕೆ ಶುರು ಮಾಡಿದ್ದೆ. ’ಮಿಡ್‌ಟೌನ್ ಡೆಲಿ’, ’ಕೊಲಂಬಸ್ ಸರ್ಕಲ್’, ’ಸೆಂಟ್ರಲ್‌ಪಾರ್ಕ್ ವೆಸ್ಟ್’. ನ್ಯೂಯಾರ್ಕಿನ ಥಿಯೇಟರ್ ಡಿಸ್ಟ್ರಿಕ್ಟ್ ಗಲ್ಲಿಗಳು, ಸ್ಟೇಜ್ ಡೋರ್ ಇರೋ ಚಿಕ್ಕ ಬೀದಿಗಳು ಚಿರಪರಿಚಯವಾದವು. ಅಲ್ಲಿ ಕಪ್ಪು ಸೂಟು ಹಾಕ್ಕೋಂಡು, ನನ್ನ ಕೈಯ್ಯಿಂದ ಬ್ರೌನ್‌ಬ್ಯಾಗ್ ಕಿತ್ತ್ಕೊಂಡು, ಹದಿನೈದರ ಬಿಲ್ಲಿಗೆ ಹತ್ತರ ಎರಡು ನೋಟನ್ನೋ ಇಲ್ಲ ಹದಿಮೂರರ ಬಿಲ್ಲಿಗೆ ಹತ್ತರ ನೋಟೊಂದನ್ನೋ ತುರುಕಿ ಒಂದು ಕ್ಷಣದಲ್ಲಿ ಮಿಂಚಿನಂತೆ ಮಾಯವಾಗಿ ಹೋಗೋವರು. ಆ ಛಳಿಗೆ ಯಾವ ರೀತಿ ಬಟ್ಟೆ ಹಾಕೋಬೇಕು ಅಂತ ತಲೆ ಕೊರಿಯೋ ಮುದುಕೀರು, ಮುಖ ಸಿಂಡರಿಸಿಕೊಂಡು ಒಳಗೆ ಬಿಡೋ ವಾಚ್ಮನ್‌ಗಳು, ಒಂಟಿ ಜೀವನ ರೋಸಿದ್ದಕ್ಕೆ ಸಿಡುಕೋ ಹಣ್ಣಾದ ಮುದುಕರು ಹೀಗೆ ಎಲ್ಲಾ ಮಾದರಿಗಳನ್ನು ನೋಡಿದೆ. ಕೆಲಸ ಬಹಳ ಇಷ್ಟವಾಗಿತ್ತು. ಸಿಗುತ್ತಿದ್ದ ದುಡ್ಡು ಕಡಿಮೆ, ಆದರೆ ಆಗ ಬಹಳ ಜಾಸ್ತಿ ಎಂದನಿಸಿತ್ತು. ಮೂರೊತ್ತಿನ ಊಟದ ತೊಂದರೆ ಕಳೆದಿತ್ತು! ಸೈಕಲ್ಲಿನಲ್ಲಿ ನ್ಯೂಯಾರ್ಕಿನ ಆ ಗಲ್ಲಿಗಳಲ್ಲಿ ಸುತ್ತುವಾಗಲೆಲ್ಲ ಸಂತೋಷವಾಗಿರುತ್ತಿದ್ದೆ. ಚಿಂತೆಗಳಿರಲಿಲ್ಲ ಬದುಕು ಸರಳವಾಗಿತ್ತು, ಸುಂದರವಾಗಿತ್ತು. ಸೈಕಲ್ಲ್ ತುಳಿದ ದಣಿವಿಗೆ ರಾತ್ರಿ ಸೊಗಸಾಗಿ ನಿದ್ದೆ ಮಾಡ್ತಿದ್ದೆ. ಅದೊಂದು ಅದ್ಭುತ ಸಾಹಸವಾಗಿತ್ತು: ನ್ಯೂಯಾರ್ಕಿನ ಬೀದಿ ಬೀದಿಗಳಲ್ಲಿ ಒಬ್ಬನೆ ನಿರರ್ಗಳವಾಗಿ ಓಡಾಡ್ತಾ ಇದ್ದೆ, ಅವರಂತೆಯೆ ಮಾತಾಡ್ತ ಇದ್ದೆ, ಕೈಯಲ್ಲಿ ಕಾಸು ಓಡಾಡೋದು. ಒಂದು ಮಾತಲ್ಲಿ ಹೇಳಬೇಕಂದರೆ ಅಲ್ಲಿಯವನೆ ಆಗಿಬಿಟ್ಟಿದ್ದೆ. ತಿಚಿ ಚಿ ಓತಿ ಙಡಿಞಡಿ!. +ಅಂದು ನಾನು ಬದುಕಿದ್ದೆ, ಸಂತೋಷವಾಗಿದ್ದೆ. ರೀಟಚ್ ಮಾಡಿದ ಪೋಸ್ಟ್‌ಕಾರ್ಡ್ ಆಗಿರಲಿಲ್ಲ ನನ್ನ ಜೀವನ. +ಆಮೇಲೆ……ಕಾಲೇಜಿನಲ್ಲೆ ಕೆಲಸ ಸಿಕ್ಕಿತ್ತು, ಒಂದುವರೆ ವರ್ಷಕ್ಕೆ ಸ್ನಾತಕೋತ್ತರ ಪದವಿ. ಅದಾದ ಮೂರು ವರ್ಷಕ್ಕೆ ಡಾಕ್ಟರೇಟ್. ಇಂದಿಗೂ ನನ್ನ ಪಿ‌ಎಚ್‌ಡಿ ಥೀಸಿಸ್ ರೆಫರ್ ಮಾಡದೆ ಗ್ರಾಫ಼್ ಥಿಯೆರಿಯಲ್ಲಿ ಯಾರು ವರಿಜಿನಲ್ ಕೆಲಸ ಮಾಡೋಕ್ಕೆ ಆಗೋದೆ ಇಲ್ಲ….ಆಮೇಲೆ ಉದ್ಯೋಗ, ಮದುವೆ, ಮಕ್ಕಳು, ಸಾವು, ನೋವು, ನೋವು……….ಎನ್ನುತ್ತಾ ರಾಕಿಂಗ್ ಛೇರ್ ಮೇಲೆ ಹಾಗೆಯೇ ಮಲಗಿದ್ದ ಅಯ್ಯಂಗಾರ್ರ್‌ಗೆ ಗಾಢವಾಗಿ ನಿದ್ದೆ ಹತ್ತಿತ್ತು. ಗೊರಕೆಯ ಸದ್ದು ಆ ಮನೆಯ ನಿಶ್ಶಬ್ದವನ್ನ ಭೇದಿಸಿತ್ತು. +ಅಯ್ಯಂಗಾರ್ರ್‌ಗೆ ಎಚ್ಚರವಾದಾಗ ಕತ್ತಲೆಯಾಗಿತ್ತು. ಕತ್ತಲಿಗೆ ಕಣ್ಣುಗಳು ಒಗ್ಗಿದ ಮೇಲೆ ಎದ್ದು, ದೀಪ ಬೆಳಗಿ, ಬಿಸಿ ಬಿಸಿಯಾಗಿ ಸ್ನಾನ ಮಾಡಿ ಬಂದಾಗ ಹಿತವೆನಿಸಿತ್ತು. ಮಕ್ಕಳು ಬರೋ ಹೊತ್ತಾಯ್ತು ಏನಾದರು ಅಡಿಗೆ ಮಾಡಬೇಕೆಂದು ಅನಿಸಿ ಅಡಿಗೆ ಮನೆಗೆ ಬಂದವರು, ಬೇಡವೆಂದು ಮತ್ತೆ ಮಹಡಿ ಹತ್ತಿ, ಗಣಕಯಂತ್ರದ ಮುಂದೆ ಕೂತು, ಅಂತರಜಾಲದಲ್ಲಿ ಯಾವುದೋ ವಿಳಾಸ, ಫೋನ್ ನಂಬರ್ರುಗಳನ್ನ ಹುಡುಕಿ ಪ್ರಿಂಟ್ ಮಾಡಿ ಕೆಳಗೆ ಬಂದು ಮಕ್ಕಳಿಗೆ, ’ನಾನು ಒಂದೆರೆಡು ಗಂಟೆಯಲ್ಲಿ ಬರ್ತೀನಿ ನೀವೆ ಏನಾದರೂ ಮಾಡ್ಕೊಂಡು ತಿನ್ನಿ ಅಂತ ನೋಟ್ ಬರೆದು’, ಹೊರಗೆ ಹೋದರು. +ಮನೆಗೆ ಬಂದಾಗ ಮಕ್ಕಳಿಬ್ಬರೂ ಅವರವರ ರೂಮ್ ಸೇರಿದ್ದರು. ಬಹಳ ಸಂತೋಷವಾಗಿದ್ದ ಅಯ್ಯಂಗಾರ್ರು ಕೆಳಗೆ ನಿಂತೆ ಪ್ರೀತಿಯಿಂದ ಕೂಗಿದರು: “ಜಾನು, ಜಮುನ ಇಬ್ಬರು ಕೆಳಗಡೆ ಬನ್ನಿ “have a surprise!” +ಮೆಟ್ಟಲಿಳಿದು ಬಂದ ಜಾನು, ಬಿಟ್ಟ ಬಾಯ್ಮೇಲೆ ಕೈಯಿಟ್ಟು ’ಎಷ್ಟು ಮುದ್ದಾಗಿದೆ ಮರಿ’ ಅನ್ನುತ್ತ ದೊಡ್ಡ ಕಣ್ಣುಗಳನ್ನು ಬಿಡುತ್ತಾ ಕೆಳಗೆ ಬಂದಳು. ಜಮುನ “It is so cute, thats lovely let me hold it, hold it” ಎನ್ನುತ್ತ ಬಂದು, ತಂದೆ ಕಂಕುಳಲ್ಲಿ ಹಿಡಿದಿದ್ದ ಪುಟ್ಟ ನಾಯಿ ಮರಿಯನ್ನು ಎತ್ತಿಕೊಳ್ಳುತ್ತ, “ದಿಸ್ ಇಸ್ ಗ್ರೇಟ್ ಡ್ಯಾಡ್” ಅಂದಳು. +ತಂದೆ, ಮಕ್ಕಳಿಬ್ಬರು ಖುಷಿಯಾಗಿ ಸೋಫಾ ಮೇಲೆ ಕೂತಾಗ, ಅಯ್ಯಂಗಾರ್ರು ಏನಾದರು ಹೆಸರಿಡಿ ನೋಡೋಣ ಅಂದರು. ಜಮುನ ಓಕೆ ಎನ್ನುತ್ತಾ “ಬಿಂಗೊ, ಟಾಪಿ, ಸ್ನೊಯಿ…..” +“ನೀನು ಯಾವುದಾದರು ಹೇಳು ಜಾಹ್ನವಿ”, ಇಬ್ಬರ ಭುಜದಮೇಲೂ ಕೈಯಿಟ್ಟು ತಬ್ಬಿ ಹಿಡಿದಿದ್ದ ಅಯ್ಯಂಗಾರ್ರು ಮತ್ತೆ ಹೇಳಿದರು. +“ನನಗೆ ಈಗ ಯಾವದು ಹೊಳೀತಿಲ್ಲ, ಯೋಚಿಸಿ ನಾಳೆ ಬೇಕಾದರೆ ಹೇಳ್ತಿನಿ….ನೀನೆ ಯಾವದಾದರು ಹೇಳು” ಅಂದಳು ಅಪ್ಪನಿಗೆ. ಯೆಸ್, ಯೆಸ್ ಅಂದಿತ್ತು ಜಮುನ. +ಅಯ್ಯಂಗಾರ್ರು ಭಾವುಕರಾಗಿ ನಿಮ್ಮ ತಾಯಿಗೆ ನಾಯಿ ಅಂದರೆ ಬಹಳ ಇಷ್ಟ. ತೆಗೊಂಡರೆ ’ಚಿಂತು’ ಅಂತಾನೆ ಕರೆಯೋದು ಅನ್ನೋವಳು. ನಿಮ್ಮಿಬ್ಬರಿಗೂ ಚಿಂತು ಇಷ್ಟವಾದರೆ ಹಾಗೆ ಕರೀಬಹುದು. +ಒಂದು ನಿಮಿಷ ಸುಮ್ಮನಿದ್ದು ಇಬ್ಬರೂ ಒಟ್ಟಿಗೆ “Yes Chintu it is” ಎಂದು ಕೂಗಿದವು. +***** +೮-೧೨-೨೦೦೫ +ಆಫಿಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿನಿಂದ […] +ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […] +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_369.txt b/Kannada Sahitya/article_369.txt new file mode 100644 index 0000000000000000000000000000000000000000..3964b02b61deea9ffc84f98a741dcad2374c919f --- /dev/null +++ b/Kannada Sahitya/article_369.txt @@ -0,0 +1,108 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“Judge not that ye be not judged” +-Jesus Christ +ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ +ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ +ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ ಕಡಲು +ತೆರೆಯನಟ್ಟಿ ತೆರೆ ತೂರುತಿತ್ತು ಹುಡಿ ಚಿನ್ನದಂಥ ಮಳಲು. +ಕಡಲಿನಂಚಿನಲಿ ಸೂರ್ಯಬಿಂಬವಿನ್ನೇನು ಮುಳುಗುತಿತ್ತು +ಕಿರಣರಹಿತ ಕೆಂದಳಿರ ಹಾಸಿದೊಲು ನೀರು ಮಿರುಗುತಿತ್ತು +ಮಂದಗಾಮಿ ತಂಗಾಳಿ ರಯ್ಯನೊಯ್ಯಾರದಿಂದ ಬಂದು +ಮುಟ್ಟಿ ಮುಟ್ಟದೊಲು ತೀಡುತಿತ್ತು ತೆರೆ-ಚುಂಬನಕ್ಕೆ ಸಂದು. +ಯೇಸುಕ್ರಿಸ್ತ ಅಸ್ವಸ್ಥ ಮನದಿ ಕುಳಿತಿದ್ದ ಮಳಲ ತಡಿಗೆ +ಕನ್ನಗೈಯು ಅರೆದೆರೆದ ಕಣ್ಣು ನಸುಬಾಗು ಮೊಗದ ಬಗೆಗೆ; +ನೂರು ಯೋಚನೆಯ ಗಾಣದಲ್ಲಿ ಮನ ಸಿಕ್ಕು ಗಾಸಿಗೊಂಡು +ಲೋಕಹಿತದ ಚಿಂತನೆಗೆ ತೊಡಗೆ ತನ್ನಲ್ಲಿ ನಿಜವ ಕಂಡು: +ಮತದ ಮೌಢ್ಯ ಕಟ್ಟಳೆಯ ನಿಗಳ ದ್ವೇಷಗಳ ಕಳೆವುದಂತು +ಫರಿಸಾಯರವರ ದುರ್ನಡತೆ ನೀಗಿ ಜನ ನೇರಿತಾಗಲೆಂತು? +ಲೋಕದಿಚ್ಚೆ ನಾ ನುಡಿದು ಸತ್ಯ ಧ್ವಜವತ್ತಿ ಹಿಡಿಯಲೆಂತು? +ಒಬ್ಬರೊಬ್ಬರನು ಅರ್ಥ ಮಾಡಿಕೊಳ್ಳದಿರೆ ಏನು ಬಂತು? +ಇಂತು ಚಿಂತೆಯಲಿ ಮುಳುಗಿ ಯೇಸು ಪ್ರಾರ್ಥಿಸಿದನಾಗ ಮನದಿ: +“ತಂದೆ ತಂದೆಯೇ ಜನರಿಗೊಳ್ಳೆಯದ ತಿಳಿವ ಬುದ್ದಿ ಭರದಿ +ಬೆಳೆದು, ಸತ್ಯ ಧರ್ಮಾನುಚರಣೆ ಬೇರೂರಿ ಕರುಣೆಯಲ್ಲಿ +ಕೊನೆಗೆ ಎಲ್ಲ ಲಯ ಹೊಂದಲಲ್ಲಿ ವಿಶ್ವಾತ್ಮ ಪ್ರೇಮದಲ್ಲಿ”. +ಅದೇ ಸಮಯ ಫರಿಸಾಯರೇಸುಗವಮಾನ ಮಾಡಲೆಂದು +ಹೊತ್ತು ಕಾದು ನವಯುವತಿ ಮುಡಿಯ ನಿಡುಗೂದಲನ್ನು ಹಿಡಿದು +ಹುಲಿಯು ಚಿಗುರೆಯನು ಎಳೆವ ತೆರದಿ ದರದರನೆ ಎಳೆದು ತಂದು +ಕಲ್ಲು ಮುಳ್ಳಿನಲಿ ಹಾಸಿಬೀಸಿ ಯೇಸುವಿನ ಮುಂದೆ ಬರಲು +ಊರು ಮಗ್ದಲಾ, ಹೆಸರು ಮೇರಿ, ಏನಂಥ ರೂಪರಾಶಿ! +ಕಪಟರಹಿತೆ ದೀನಾಸ್ಯೆಯಾಗಿ ಪಾಷಂಡಿಗಳಿಗೆ ರೋಸಿ +ಚಿಂದಿ ಬಟ್ಟೆ, ಮೈಯಲ್ಲ ಘಾಯ, ಚೀರಿಡುವ ಗೋಳು ಕೇಳಿ +ಕರಗಲಿಲ್ಲ ಎದೆ ಮರುಗಲಿಲ್ಲ ಮನ ಅವರಿಗದುವೆ ಹೋಳಿ. +ಪ್ರಾಣಸಂಕಟದಿ ಕೆಡೆದು ಬಿದ್ದ ಮಗ್ದಲದ ಕುವರಿ ಮೇರಿ +ಹಿಂದೆಯೊಮ್ಮೆ ಕಂಡಿದ್ದಳವನ ಆ ಸ್ವಾಮಿ ಗುಡ್ಡವೇರಿ +ಜನರ ಗುಂಪಿಗುಪದೇಶಗೈವ ದಿನ ತಾನು ನಿಂತು ಕೇಳಿ +ತೃಪ್ತಿಹೊಂದಿ ಹೋಗಿದ್ದಳಂದು ಇಂದೂನು ಧೈರ್ಯ ತಾಳಿ, +ಇಂಥ ಸಮಯದಲಿ ಮತ್ತೆ ಅವನಿಗೆಯೆ ಶರಣು ಹೊಗುವೆನೆಂದು +ರಕ್ತಸಿಕ್ತ ದೇಹವನು ಎಳೆದು ಶ್ರೀಪಾದದಡೆಗೆ ಬಂದು +ತಲೆಯನಿರಿಸುತಿರೆ ಸುತ್ತು ನಿಂತ ಮತಿಗೆಟ್ಟ ಜನರ ಗುಂಪು: +ಮರುಳರಂತೆ ಹೋಯೆಂದು ನಕ್ಕು ಮೂದಲಿಸಿ ನುಡಿದರಿಂತು: +“ದೇವಸುತನು ನಾನೆಂದು ನುಡಿಯುತಿಹ ಎಲವೊ ಮೂರ್ಖ ಮರಿಯೆ +ನ್ಯಾಯ ಮತ್ತೆ ಅನ್ಯಾಯಗಳನು ಪರಿಕಿಸುವೆನೆಂಬ ಕುರಿಯೆ +ಸತ್ಯಪ್ರೇಮಗಳ ಬಿತ್ತಲಿಹೆಯ ಉನ್ಮತ್ತ ಮತಿಗಳೊಡೆಯ +ಈಗ ಹೇಳು ಈ ಯುವತಿ ನಡತೆಯಲಿ ಇಹುದು ಯಾವ ನ್ಯಾಯ? +“ಇವಳು ಪಾಪಿ ವ್ಯಭಿಚಾರಿಯೆಂದು ಇದೊ ನುಡಿವರೆಲ್ಲ ಸಾಕ್ಷಿ +ಕಣ್ಣಾರೆ ಕಂಡು ಆರೋಪ ಹೊರಿಸಿ ಎಳೆದಿಹರು ಇಲ್ಲಿ ನೂಕಿ +ಹೇಳು ನಿನ್ನ ತೀರ್ಪೇನು ಇಲ್ಲಿಯೇ ನಿಂತ ಕಾಲ ಮೇಲೆ +ಮೂರ್ಖ ಮಂದಿ ನೀನೊಬ್ಬ ಶ್ರೇಷ್ಠ ಗುರು ಎಂದು ಸಾರಲಿಲ್ಲೆ?” +ಚುಚ್ಚುಮಾತುಗಳನೆಸೆಯುತಿರಲು ಪುಂಖಾನುಪುಂಖವಾಗಿ +ಶಾಂತ ಚಿತ್ತದಲಿ ಸೌಮ್ಯಭಾವದಲಿ ಕೇಳುತಿದ್ದ ಯೋಗಿ +ತಲೆಯ ಬಾಗಿ ನಿಟ್ಟುಸಿರನಿಟ್ಟು ಸೈತಿಟ್ಟು ಕ್ರಿಸ್ತಸ್ವಾಮಿ +ತನ್ನ ಕಾಲಬಳಿ ಬಿದ್ದ ಮುಗ್ದೆಯನು ಕಂಡ ವಿಶ್ವಪ್ರೇಮಿ. +ಕತ್ತನೆತ್ತಿ ಯೇಸುವಿನ ಮೊಗವ ನೋಡಿದಳು ಮೇರಿ ತಣಿಯೆ +ಎದೆಯ ದೈನ್ಯ ಕಣ್ಣಿನಲಿ ಬಂದು ಕಂಬನಿಗಳಾಗಿ ಹರಿಯೆ +ತನ್ನ ದುಃಖವನು ತೋಡಿಕೊಳ್ಳುವರೆ ಮಾತು ಬಾರದಿತ್ತು +ಮೂಕಶೋಕದಲಿ ಒಡಲ ಭಾಂಡ ಒಳಗೊಳಗೆ ಕುದಿಯುತಿತ್ತು! +ಆದರವಳ ಜೀವಾತ್ಮ ಶೋಕ ಪರಮಾತ್ಮನದೆಯ ಸೇರಿ +ಮೌನವೀಣೆ ಮಿಡಿದಂತೆ ತಂತಿ ಸಿಡಿದಂತೆ ದನಿಯ ಬೀರಿ: +“ನನ್ನ ಸ್ವಾಮಿ ಓ ಯೇಸುಕ್ರಿಸ್ತ ಪ್ರಭು, ಕರುಣಿಸೆನ್ನ ತಂದೆ +ನಾನು ಮಾತ್ರ ಅರಿಯದೆಯೆ ಗೈದ ಅಪರಾಧ ಮನ್ನಿಸೆಂದೆ” +ಎಂದು ನೊಂದು ಪರಿತಪಿಸಿ ಆತ್ಮ ನೈವೇದ್ಯ ನೀಡಲಾಗಿ +ಅವನ ಕಣ್ಣಿನಲಿ ಕ್ಷಮೆಯು ರಮಿಸಿ ಬರೆ ಶಾಂತಚಿತ್ತಳಾಗಿ +ಮತ್ತೆ ಮತ್ತೆ ಆ ದಿವ್ಯ ಮೊಗದ ಸಂಪದವ ನೋಡಿ ನಂಬಿ +ಕಣ್ಣು ತುಂಬಿ ಎದೆ ತುಂಬಿ ತಲೆಯ ಬಾಗಿದಳು ಜೀವ ತುಂಬಿ, +ತಲೆಯನತ್ತಿ ಕಣ್ತೆರೆದು ಯೇಸು ನೋಡಿದನು ನೆರೆದ ಜನವ +ಧೈರ್ಯವಾಗಿ ಗಂಭೀರನಾಗಿ ಪ್ರಶ್ನಿಸಿದನವರ ಮನವ: +ನಿಮ್ಮ ಧರ್ಮಶಾಸ್ತ್ರದಲ್ಲಿ ಇದಕ್ಕೆ ಪ್ರತಿಶಿಕ್ಷೆಯಾವುದೆನಲು +ಕಲ್ಲು ಹೊಡೆದು ಸಾಯಿಸುವದೆಂಬ ಉತ್ತರವು ಕೇಳಿ ಬರಲು- +“ನಿಮ್ಮ ಧರ್ಮಶಾಸನಕೆ ನಾನು ಪ್ರತಿಮಾತನಾಡುತಿಲ್ಲ +ಹೆಣ್ಣಿನಂತೆ ಗಂಡಸಿಗು ಶಿಕ್ಷೆ ಕಟ್ಟಳೆಯದೇಕೆ ಇಲ್ಲ – +ಎಂಬ ಯೋಚನೆಯ ಮಾಡುತ್ತಿದ್ದೆ ಸರಿ; ನಿಮ್ಮ ಶಾಸ್ತ್ರಕೋತು +ನೀವು ನಡೆಯುತಿರ ನಿಮ್ಮ ಇಷ್ಟವದು, ಆದರೊಂದು ಮಾತು: +“ಇಲ್ಲಿ ನೆರೆದ ಜನರಲ್ಲಿ ಯಾರು ಈ ಮೊದಲು ಒಂದು ಕೂಡ +ಪಾಪಗೈಯದಿಹರವರು ಮೊದಲು ಕಲು ಹೊಡೆಯಬೇಕು ನೋಡ; +ದುಷ್ಟ ಕೃತಿಯ ಮುಚ್ಚಿಟ್ಟುಕೊಂಡು ಉತ್ತಮಿಕೆಯನ್ನು ನಟಿಸಿ +ಕೊಂದ ಪಾಪ ಅವರನ್ನೆ ತಿಂದು ತೇಗುವದು ಪೀಡೆಗೊಳಿಸಿ” +ಎಂದು ನುಡಿಯೆ ನೆರೆದಿದ್ದ ಜನತೆ ತಳಮಳಿಸಿ ತಮ್ಮತಮಗೆ +ಅವರು ಇವರ ಮುಖ ನೋಡಿ ಆತ್ಮವಂಚಕರು ತೆಪ್ಪಗಾಗೆ +ಒಬ್ಬರೊಬ್ಬರೂ ಕಲ್ಲನೆತ್ತಿ ಹೊಡೆಯಲಿಕ ಧೈರ್ಯವಿರದೆ +ಬಂದ ದಾರಿಯನು ಹಿಡಿದು ಸಾಗಿದರು ನಿಲ್ಲಲಿಷ್ಟ ಪಡದೆ. +ಮೇರಿ ಯೇಸುವಿನ ಚರಣ ತೊಳೆಯುತಿರೆ ಕಣ್ಣಧಾರೆಯಿಂದ +ಪಾದಪದ್ಮಗಳ ತಬ್ಬಿ ಹಿಡಿದು ತನ್ನೆರಡು ಕೈಗಳಿಂದ: +“ಪಾಪವೆಂಬ ತಿಳುವಳಿಕೆ ಆಗ ನನಗಾಗಲಿಲ್ಲ ತಂದೆ +ಇದಕೆ ಅವರು ಅಪರಾಧವೆನಲು ನಾನರಿಯದೇನೆ ಗೈದೆ. +“ನನ್ನ ಊರಿನಡೆ ಇನ್ನು ಹೋಗೆ ನನಗಾರು ಇಲ್ಲವಲ್ಲಿ +ನಿನ್ನ ಮಗಳು ನಾ ನಿನ್ನ ತಂಗಿ ತಾಯಿಯೊಲು ಇರುವೆನಿಲ್ಲಿ. +ಅನುಗ್ರಹಿಸು ಓ ಗುರುವೆ ನಿನ್ನ ಆಜನ್ಮ ಸೇವೆಯೊಂದು” +ಎಂದು ದುಃಖ ತಾಪದಲ್ಲಿ ಕರುಣಕಥೆ ತೋಡಿಕೊಂಡಳಂದು. +ಪವಿತ್ರಾತ್ಮ ಪರಮಾತ್ಮ ವರದ ಕರ ಚಾಚೆ ಕರುಣೆ ಹೊನಲು +ಹರಿದು ಘಾಯಗಳ ಸವರಿ ಮೆಲ್ಪಿನಲಿ ಯೇಸು ಸಂತವಿಡಲು +ಮೈಯನೋವಿನುರಿ ಮಾಯವಾಗಿ ತಂಪಾಗಿ ಸೌಖ್ಯವೊದಗಿ +ಆತ್ಮಶಾಂತಿಯಮೃತದಲಿ ತೇಲೆ ಆನಂದಲೋಲೆಯಾಗಿ. +ತಂಪು ಗಾಳಿ ನಿಷ್ಕಂಪಮಾದ ಸಾಗರದಿ ತೀಡುತ್ತಿರಲು +ಕ್ರಿಸ್ತನಮರಸಂದೇಶ ಪೊತ್ತು ಸಮತೆಯಲಿ ಹಂಚುತ್ತಿರಲು +ಅಮೃತ ಕಿರಣನುದಯಿಸಿದ ಇಳೆಯ ಬೆಳದಿಂಗಳಲ್ಲಿ ತೊಳೆದು +ತೇನೆ ಹಕ್ಕಿ ಮಂಗಲವ ಪಾಡಿ ಹಾರಿತ್ತು ನಭವನಳೆದು. +***** +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +ಭಗವತಿ ಇಸ್ತಾರುಸಕಲ ಸೃಷ್ಠಿಯ ಮಾತೃದೇವತೆಸಮರದ ದೇವತೆ, ಕಾಮದ ದೇವತೆ. ಜಗಭಂಡೆ.ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_37.txt b/Kannada Sahitya/article_37.txt new file mode 100644 index 0000000000000000000000000000000000000000..b3f95cf4b6cd1a49e7e2927e5bfc36067966acd7 --- /dev/null +++ b/Kannada Sahitya/article_37.txt @@ -0,0 +1,24 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾಯುವ ಮುನ್ನ ಶ್ರೀ ಪುಟ್ಟಣ್ಣ ಕಣಗಾಲ್ ತಮ್ಮ ಆದರ್ಶದ ಕಲೆಯ ಹೀರೋನಂತೆ ತಾವೇ ಕಾಣುತ್ತಿದ್ದೀರು. ಹಾಗೇ ಆಗಿದ್ದರು ಕೂಡ-ಅವರನ್ನು ಬಲ್ಲವರು ಹೇಳುವಂತೆ. ದುಃಖದ ಉತ್ಕಟತೆಯಲ್ಲಿ ಬದುಕು ಅರ್ಥಗರ್ಭಿತವಾಗುತ್ತದೆ ಎಂಬ ವಿಚಾರವನ್ನೆ ತನ್ನ ತಿರುಳಾಗಿ ಪಡೆದುಕೊಂಡ ರಮ್ಯ ಸಂಪ್ರದಾಯಕ್ಕೆ ಸೇರಿದ್ದ ಪುಟ್ಟಣ್ಣನವರ ಯಶಸ್ಸು ಮತ್ತು ಸಾವು- ಎರಡೂ ನಮ್ಮ ಮನಸ್ಸನ್ನು ಕಲಕುವಂತಿವೆ. ಮಧ್ಯಮವರ್ಗದ ಪ್ರೇಕ್ಷಕರ ನೀರಸ ಬದುಕಿಗೆ ಕೆಲವು ಕ್ಷಣಗಳ ಉತ್ಕಟತೆಯ ಭ್ರಮೆಯನ್ನು ಉಂಟುಮಾಡುವುದಕ್ಕಾಗಿ ಮಾತ್ರ ಪುಟ್ಟಣ್ಣನವರ ಕಲೆಗಾರಿಕೆ ವ್ಯಯವಾದದ್ದು ಒಂದು ದುರಂತ. ಆದರೆ ತೆರೆಯ ಮೇಲೆ ತಮ್ಮ ಭಾವುಕತೆಯಲ್ಲಿ ಅವರು ಕಾಣಿಸುತ್ತಿದ್ದ ಶೋಕರಸವನ್ನು ತಮ್ಮ ಸ್ವಂತ ಜೀವನದ ಆರ್ಥಿಕ ಸೋಲುಗಳಲ್ಲೂ, ಪ್ರೇಮದಲ್ಲೂ- ದುರಂತದಲ್ಲೂ, ಅದೂ ಕೂಡಾ, ಪ್ರೇಕ್ಷಕರಿಗೆ ಕಾಣುವಂತೆ ಮತ್ತು ಪ್ರೇಕ್ಷಣಿಯವೂ ಆಗುವಂತೆ ಬದುಕಿ ಸತ್ತ ಪುಟ್ಟಣ್ಣಕಣಗಾಲ್ ತಮ್ಮದೇ ಬಗೆಯಲ್ಲಿ ತಾವು ನಂಬಿದ್ದನ್ನು ಅಧಿಕೃತಗೊಳಿಸಿಬಿಟ್ಟರು. ಕಲೆಯ ಪ್ರಪಂಚದಲ್ಲಿ ಪುಟ್ಟಣ್ಣನಂಥವರು ಒಂದು ರೀತಿಯ ಸ್ವಪ್ರತಿಷ್ಠೆಯ ಭಾವುಕ ಹೀರೋಗಳಾದರೆ, ಕಲೆಯ ಪರಿಪೂರ್ಣತೆಗಾಗಿ ತನ್ನನ್ನು ತಾನು ಸಂಪೂರ್ಣ ಸವೆಸಿಕೊಂಡು ಬಿಡುವ ಫ್ರೆಂಚ್ ಕಲಾವಿದ ಫ್ಲಾಬೆ ಇನ್ನೊಂದು ಬಗೆಯವನು: ತನ್ನ ಕೃತಿ ಮಾತ್ರ ಬೆಳಗುವಂತೆ ತಾನು ಮರೆಯಲ್ಲಿ ನಿಲ್ಲುವವನು. +ದಾರುಣವಾದ ದುಃಖ ಪ್ರೇಕ್ಷಣಿಯವಾಗಬೇಕೆಂಬ ಹೊಂಚು ಇದ್ದಲ್ಲೆಲ್ಲಾ ನಮ್ಮನ್ನು ಅದು ಸತ್ಯದರ್ಶನದ ದಿಗ್ಭ್ರಮೆಯಲ್ಲಿ ತೊಳಲಿಸುವುದಿಲ್ಲ. ಬದಲಾಗಿ ಆಪ್ಯಾಮನವಾಗಿ ಬಿಡುತ್ತದೆ. ಪ್ರೇಮವಂಚಿತನೊಬ್ಬ ಕಲಾಕೃತಿಯಲ್ಲಿ ನಾವು ಪರಮಾದರದಿಂದ ಆರಾಧಿಸುವ ಹೀರೋ ಆಗಬಹುದು.ನಿಜ ಜೀವನದಲ್ಲಿ ಅವನು ಕೊಂಚ ಹಾಸ್ಯಸ್ಪದನಾಗುತ್ತಾನೆ. ಇಂಥ ಅರಿವಿನಿಂದಲೇ ಹುಟ್ಟುವ ಕಲೆ ನಮ್ಮ ಅರಿವನ್ನು ಏರಿಸಿ ಒಪ್ಪಿಸಿಕೊಳ್ಳುತ್ತದೆ; ಇಳಿಸಿ ಮೆಚ್ಚಿಗೆಯ ಸಹಾನುಭೂತಿ ಪಡೆಯಲು ಹವಣಿಸುವುದಿಲ್ಲ. ಓದುಗನನ್ನು ಏಕಾಂಗಿಯಾಗಿ ಪಡೆದುಕೊಂಡ ಅವನ ಜೊತೆ ಮಾತಾಡುವ ಸಾಹಿತ್ಯದಲ್ಲೇ ಈ ಬಗೆಯ ಅರಿವು ದುರ್ಲಭವಾಗಿರುವಾಗ, ಅವನನ್ನು ಸಮೂಹದಲ್ಲಿರುವ ಸಾಮಾಜಿಕನನ್ನಾಗಿ ಪಡೆಯುವ ದುಬಾರಿ ಸಿನಿಮಾದಲ್ಲಂತೂ ಅದು ಅಸಾಧ್ಯವೇನೋ ಎನ್ನಿಸುವಂಥ ಸವಾಲಾಗಿಬಿಟ್ಟಿದೆ. ಪುಟ್ಟಣ್ಣ ಕಣಗಾಲ್ ತಾವು ಹಾಕಿಕೊಂಡ ಹಾದಿಯನ್ನು ತುಳಿಯಬಲ್ಲ ಕನ್ನಡದ ಶ್ರೇಷ್ಠ ನಿರ್ದೇಶಕರಾಗಿದ್ದರಿಂದ, ಅವರು ಅಂಥ ಸವಾಲನ್ನು ಎದುರಿಸುವ ಮೊದಲೇ ಸತ್ತರೆಂಬುದು ದುಃಖದ ಸಂಗತಿ. +***** +ರುಜುವಾತು. ೨೬, ಏಪ್ರಿಲ್-ಜೂನ್-೮೫ +ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […] +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […] +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_370.txt b/Kannada Sahitya/article_370.txt new file mode 100644 index 0000000000000000000000000000000000000000..cfd6cf9f062a7c782a941befc2b8f19fa048abf5 --- /dev/null +++ b/Kannada Sahitya/article_370.txt @@ -0,0 +1,138 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ ಪ್ರಜ್ಞೆ ಕ್ರಿಯೆಗಳ ಏಕೋಸಾಕಾರವಾಗಿದ್ದ ಮಹಾತ್ಮನನ್ನು ಗುಂಡಿಟ್ಟು ಕೊಲೆ ಮಾಡಿದ್ದಾಗಲೀ ಕಡೆಗಣಿಸುವಷ್ಟು ನಮ್ಮ ಬಾಲಿಶ ಹುಮ್ಮಸ್ಸು ಪುಟಿದುಕೊಳ್ಳುತ್ತಿತ್ತು. +ಅದೇ ಸಮಯದಲ್ಲಿ ನಮ್ಮ ಜೋಗದ ವಿದ್ಯುತ್‌ಯೋಜನೆಯ ಎರಡನೆಯ ಹಂತ ಪ್ರಾರಂಭವಾಗುವುದಿತ್ತು. ಮಹಾತ್ಮಗಾಂಧಿ ವಿದ್ಯುತ್‌ಯೋಜನೆ ಕಿರಿದಾಯಿತಂತೆ ಅನ್ನುತ್ತಿದ್ದರು. ಅದಾಗಲೇ ಕಟ್ಟಿದ್ದ ಹಿರೇಭಾಸ್ಕರ ಅಣೆಕಟ್ಟು ಶಿಥಿಲವಾಗುತ್ತಿದೆಯಂತೆ ಅಂತೂ ಮಾತಾಡಿಕೊಳ್ಳುತ್ತಿದ್ದರು. ಅಂತೂ ಯಾವುದೋ ಕಾರಣಕ್ಕೆ ಎರಡನೆಯ ಹಂತದ ಲಿಂಗನಮಕ್ಕಿ ಯೋಜನೆಯ ಸರ್ವೇಕ್ಷಣೆ ನಡೆದಿತ್ತು. ಈ ಹೊಸ ಅಣೆಕಟ್ಟಿನಲ್ಲಿ ನಮ್ಮ ಊರು ಜಮೀನು ಮನೆ ಮುಳುಗಿ ಹೋಗುತ್ತದೆ ಅಂತ ಹಲವಾರು ವರ್ಷ ವದಂತಿಗಳು ಹರಡಿದ್ದವು. ಕಡೆಗೆ ನಮ್ಮ ಊರು ಮುಳುಗಲಿಲ್ಲ. ಜಲಾಶಯದ ಹಿನ್ನೀರು ನಮ್ಮಲ್ಲಿಂದ ಮೂರು ಮೈಲು ದೂರದತನಕವೂ ಬಂದು ಅಲ್ಲಿ ನಿಂತಿತ್ತು. ನಮ್ಮ ಹಿರಿಯರೆಲ್ಲ ಒಮ್ಮೆ ಉಸಿರು ಬಿಟ್ಟು ನೆಮ್ಮದಿಗೊಂಡರು. ನಾನು ಮತ್ತು ನಮ್ಮ ಓರಗೆಯವರು ಮಾತ್ರ ತೀವ್ರ ನಿರಾಶೆಯಲ್ಲಿ ಅದ್ದಿಹೋಗಿದ್ದೆವು. ಹೊಸ ಇಂಡಿಯಾವನ್ನು ನಿರ್ಮಿಸುತ್ತಾ ಇಲ್ಲಿ ಹೊಸಬಗೆಯ ಆಧುನಿಕ ದೇವಾಲಯಗಳನ್ನು ಕಟ್ಟಿ ನಿಲ್ಲಿಸುತ್ತೇನೆ ಅಂತ ಛಲ ತೊಟ್ಟು ಕೆಲಸಮಾಡುತ್ತಿದ್ದ ನಮ್ಮ ನಾಯಕ ನೆಹರೂಗೆ ನಮ್ಮ ಪುಟ್ಟದೊಂದು ಊರನ್ನು ಕಾಣಿಕೆಯಾಗಿ ಒಪ್ಪಿಸಲಿಕ್ಕಾಗದ ದುರ್ದೈವಿಗಳಾದೆವಲ್ಲಾ ಅನ್ನುವ ಖೇದದಲ್ಲಿ ನಾವು ಮುಳುಗಿಹೋದೆವು. +ಅದೆಲ್ಲಾ ಮುಗಿದು ಈಗ ಸುಮಾರು ಐವತ್ತು ವರ್ಷಗಳು ಕಳೆದಿವೆ. ಕಥೆಯು ಅಡ್ಡತಿಡ್ಡ, ತಗ್ಗು ಸಿಕ್ಕಲ್ಲಿ ಹಾಯ್ದುಕೊಳ್ಳುತ್ತಾ ಹರಿದುಕೊಳ್ಳುತ್ತಾ ನಮ್ಮೆಲ್ಲರನ್ನು ಮೀರಿ ನಡೆದಿದೆ. ಅದರ ವಿವರಗಳು ಹಲವು ಹತ್ತು ಬಗೆಯಲ್ಲಿ ಎಲ್ಲರಿಗೆ ತಟ್ಟಿವೆ, ಮನದಟ್ಟಾಗಿವೆ. ಒಂದು ಪುಟ್ಟ ಉದಾಹರಣೆಯನ್ನು ಮಾತ್ರ ಹೇಳುತ್ತೇನೆ. ಶರಾವತಿ ವಿದ್ಯುತ್ ಯೋಜನೆಯಲ್ಲಿ ಉತ್ಪಾದನೆಗಿರುವ ಯಂತ್ರಸ್ಥಾವರಗಳು ಒಟ್ಟೂ ಹತ್ತು. ಇವುಗಳಲ್ಲಿ ನಾದುರಸ್ತು ಮುಂತಾಗಿ ಬಿಟ್ಟು ಸರಾಸರಿ ಏಳೋ ಎಂಟೋ ಸತತ ಕೆಲಸ ಮಾಡುತ್ತವೆ. ಈ ಏಳೆಂಟರಲ್ಲಿ ಒಂದು ಸ್ಥಾವರವು ಉತ್ಪಾದಿಸುವ ಸಮಸ್ತ ವಿದ್ಯುತ್ತೂ ಕೇವಲ ಒಂದು ಅಲುಮಿನಮ್ ಕಾರ್ಖಾನೆಗೆ ಹರಿದು ಹೋಗುತ್ತಿರುತ್ತದೆ. ಪ್ರಾರಂಭದಿಂದ ಈ ತನಕವೂ ಈ ವ್ಯವಸ್ತೆಯು ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಉದ್ದಿಮೆ ಬೆಳೆಸಲು ಮುಂದಾಗಿ ಬಂದರಲ್ಲ ಎಂಬ ಕಾರಣಕ್ಕೆ ಪ್ರಾಯಶಃ, ಮಹಾರಾಷ್ಟ್ರದ ಒಂದು ಉದ್ಯಮ ಸಂಸ್ಥೆಗೆ ನಮ್ಮ ಸರಕಾರವು ಈ ಸವಲತ್ತನ್ನು ಒದಗಿಸಿತು. ಅಲ್ಲದೆ ಉಳಿದೆಲ್ಲಕ್ಕಿಂತ ಅಗ್ಗದ ದರದಲ್ಲಿ (ಪ್ರಾರಂಭದಲ್ಲಿ ಅದು, ಒಂದು ಯುನಿಟ್‌ಗೆ ನಾಲ್ಕು ಪೈಸೆಯಷ್ಟು ಅಗ್ಗವಿತ್ತು) ಸರಬರಾಜು ಮಾಡಿತು. ಆ ಸಂಸ್ಥೆಯವರು ತಮ್ಮ ಕಾರ್ಖಾನೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರೂ ತಾಂತ್ರಿಕ ಕಾರಣಗಳಿಗಾಗಿ ತಮ್ಮ ಮುಖ್ಯ ಕಛೇರಿಯನ್ನು ಕೊಲ್ಲಾಪುರದಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ನಮ್ಮ ಸರಕಾರದ ಅನುಮತಿಯನ್ನು ಪಡೆದುಕೊಂಡರು. ಈ ಒಂದು ‘ತಂತ್ರ’ದಿಂದ, ಮುಂದೆ ಈ ಉದ್ಯಮವು ಸಲ್ಲಿಸುವ ಮಾರಾಟತೆರಿಗೆಯ ಮೊತ್ತವು ಕರ್ನಾಟಕಕ್ಕಲ್ಲ, ಮಹಾರಾಷ್ಟ್ರಕ್ಕೆ ಸಂದಿತು. ಅದು ನಮಗೆ ಸ್ಪಷ್ಟವಾದದ್ದು ಎಷ್ಟೋ ತಡವಾಗಿ. ಉದ್ಯಮವೆನ್ನುವ ಈ ದೃಷ್ಟಿಗೆ ನಫೆಯೊಂದೇ ನಾಣ್ಯವಾಗಿ ಕಾಣುತ್ತದೆ. ಕಣ್ಕಟ್ಟು ಮೋಸ ವಂಚನೆಗಳೇ ಅದರ ನಡೆಯುವ ದಾರಿ. +ಅಣೆಕಟ್ಟುಗಳಲ್ಲಿ ನಮ್ಮಲ್ಲಿನ ನೆಲ ಕಾಡು ಹೊಳೆಗುಡ್ಡ ಹೊಲಮನೆಗಳೂ ಜನರ ಬದುಕೂ ನಾಶಗೊಂಡವು. ಮುಳುಗಡೆಯ ಪರಿಹಾರವನ್ನು ಪಡೆದ ಎಷ್ಟೋ ಜನ ಹೊಸ ಜಮೀನು ಹುಡುಕುತ್ತಾ ಪರಿಹಾರವಷ್ಟನ್ನೂ ತಿರುಗಾಟ ಹುಡುಕಾಟದಲ್ಲೇ ತೊಳೆದುಕೊಂಡು ಬರಿಗೈ ಭಿಕ್ಷುಕರಾಗಿ ಕೂತರು. ಹೀಗೇ ಅಪಾರ ನಾಶಮಾಡಿ ಉತ್ಪಾದನೆಗೊಂಡ ದೊಡ್ಡ ಮೊತ್ತದ ವಿದ್ಯುತ್ ಅಂತಿಮವಾಗಿ ಇಲ್ಲಿರುವ ಬಡತನ ಸಿರಿತನಗಳ ವೈಷಮ್ಯವನ್ನು ಬೇಗಬೇಗ ಬಡಾಯಿಸುತ್ತಾ ಹೋಗಲು ಬಳಕೆಯಾಯ್ತು. ಮಾರುಕಟ್ಟೆಯಲ್ಲಿನ ಬಕಾಸುರ ಗುಡಾಣಗಳಷ್ಟೇ ಬೆಳೆದವು. +ಇದೇ ಕಥೆಯು ಆಮೇಲೆ ಕರ್ನಾಟಕದ ತುಂಬ, ಇಂಡಿಯಾದ ತುಂಬ ವಿವಿಧ ರೂಪ ಬಂಧ ಆಕೃತಿ ಆವೃತ್ತಿಗಳಲ್ಲಿ ಪುನರಾವರ್ತನೆಗೊಂಡಿದೆ. ನಮ್ಮ ಪ್ರಕೃತಿ ಸಂಪತ್ತು ನಿಧಿನಿಕ್ಷೇಪಗಳು ಸ್ಥಳದಿಂದೆದ್ದು ಗುಳೆ ಹೊರಟಂತಾಗಿದೆ. ಕರಿಗಲ್ಲು ಬಂಡೆಗಳೂ ಕೂಡಾ ಈ ಕಡೆ ಜಪಾನಿನ ತನಕ, ಆ ಕಡೆ ಅಮೇರಿಕಾದ ತನಕ ಹೊಳೆಯಾಗಿ ಹರಿದಿವೆ. +ನಾವು ಹಲವು ಮಿತ್ರರು ಬಾಲ್ಯದಿಂದ ಮುಂದೆ, ನೀನಾಸಮ್ ಚಪ್ಪರಕ್ಕೆ ಹಬ್ಬಿ ಕುಡಿಯೊಡೆದುಕೊಳ್ಳಲು ಹವಣಿಸಿದೆವು. ಮೊದಲ ಹಂತದಲ್ಲಿ ನಾಲ್ಕಾರು ವರ್ಷ ನೀನಾಸಮ್ ಉಬ್ಬರಗಳು ಚಟುವಟಿಕೆಗಳು ಅತ್ಯುಬ್ಬರದಲ್ಲಿ ನಡೆದವು. ಎರಡನೇ ಹಂತದಲ್ಲಿ ನಮ್ಮ ಪೊಳ್ಳು ಉಮೇದಿನ ಉಬ್ಬರಗಳು ಠುಸ್ಸೆಂದು ನೀನಾಸಮ್ ಚಟುವಟಿಕೆಗಳೇ ಸ್ಥಗಿತಗೊಂಡವು. ಮೂರನೇ ಹಂತವಾಗಿ ಅರವತ್ತರ ದಶಕದಲ್ಲಿ ನಾವು ಹೊಸದಾಗಿ ಮರಳಿ ಪ್ರಾರಂಭಿಸಿದೆವು. ಆಗ ನಾವು ಮಕ್ಕಳ ಬಗ್ಗೆಯೇ ಹೆಚ್ಚು ಕೇಂದ್ರೀಕರಿಸಿದೆವು. ದೊಡ್ಡವರಾದರೆ, ಸತತವಾಗಿ ಬಂದು ಶಿಸ್ತಿನಿಂದ ಕೆಲಸ ಮಾಡುವುದು ಕಷ್ಟ ಎಂಬುದು ನಮಗೆ ಮನವರಿಕೆಯಾಗಿತ್ತು. ದೊಡ್ಡವರಿಗಿಂತ ಮಕ್ಕಳನ್ನು ನಿರ್ವಹಿಸುವುದು ಸುಲಭವಿತ್ತು. ಅಲ್ಲದೆ, ನಮ್ಮ ರಂಗ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಗ ನಟನಟಿಯರು ಸಿಕ್ಕುತ್ತಿರಲಿಲ್ಲ. ಆ ಕಾರಣಕ್ಕೆ ಕೂಡಾ ಮಕ್ಕಳಿಂದ ಪ್ರಾರಂಭಿಸುವುದು ಅಗತ್ಯವೆನಿಸಿತು. ಹೀಗೆ ಮುಂದಕ್ಕೆ ನಾವು ನಮ್ಮಲ್ಲೇ ನಟಿಯರನ್ನು ತಯಾರಿಸಿಕೊಳ್ಳಲು ಸಾಧ್ಯವಾಯ್ತು. +ಇದಾಗಿಯೂ ನಾವು ಸತತ ಅನುಭವಿಸಬೇಕಾಗಿ ಬಂದ ತೊಂದರೆಯೆಂದರೆ, ಮಕ್ಕಳು ದೊಡ್ಡವರಾಗಿ ಮುಂದೆ ಮುಂದೆ ಓದಲು ಊರು ಬಿಟ್ಟು ಹೋಗುತ್ತಿದ್ದುದು. ಓದಿ ಉತ್ತೀರ್ಣರಾದ ಬುದ್ಧಿವಂತರು ಊರನ್ನು ಪೂರ್ತಾಬಿಟ್ಟು ಉದ್ಯೋಗ ಹಿಡಿದು ದೂರದ ಯಾವುದೋ ದೊಡ್ಡ ಊರನ್ನು ಸೇರಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳಲ್ಲಿ ಮೊದಲಿದ್ದ ಸಮಸ್ಯೆ, ಅವರು ಮದುವೆಯಾಗಿ ದೂರಹೋಗುವುದು. ಅನಂತರ ಕ್ರಮೇಣ, ಅವರೂ ಉದ್ಯೋಗ ಹುಡುಕಿಕೊಂಡು ನಿಷ್ಕ್ರಮಿಸುವುದು ತೊಡಗಿತು. +ಈಚಿನ ಹತ್ತು ವರ್ಷ ಸುಮಾರಿನಲ್ಲಿ ನಾನು ಕರ್ನಾಟಕದ ಹಲವು ಹಳ್ಳಿ ಕಿರು ಪಟ್ಟಣಗಳನ್ನು ತಿರುಗಾಡಿ ಕಂಡಿದ್ದೇನೆ. ಸೋಮವಾರಪೇಟೆ, ಸುಳ್ಯ, ಉಜಿರೆ, ವಿಟ್ಲ, ಪುತ್ತೂರು, ಕಾರ್ಕಳ, ಬ್ರಹ್ಮಾವರ, ಬೈಂದೂರು, ಹೊನ್ನಾವರ, ಕುಮಟಾ, ಕರ್ಕಿ, ಇಡಗುಂಜಿ, ಅಂಕೋಲ,ಇಟಗಿ, ಇಳಕಲ್ಲು, ಕಿತ್ತೂರು, ಹನಗುಂದ, ಗದಗ, ಹೊಸಪೇಟೆ, ಮರಿಯಮ್ಮನಹಳ್ಳಿ, ಚಿಗಟೇರಿ, ಹಗರಿಬೊಮ್ಮನಹಳ್ಳಿ, ಅಜ್ಜಂಪುರ, ಜಯಪುರ, ಬಸರಿಕಟ್ಟೆ, ಚಿಕ್ಕಮಗಳೂರು, ಮೂಡಿಗೆರೆ, ಸಕಲೇಶಪುರ, ಚಾಮರಾಜನಗರ, ಸಿರ್ಸಿ, ಸಿದ್ದಾಪುರ, ಮಂಚಿಕೇರಿ, ತೀರ್ಥಹಳ್ಳಿ, ಬಸವಾನಿ, ಕೋಣಂದೂರು ಇತ್ಯಾದಿಯಾಗಿ ಹತ್ತೈವತ್ತು ಊರುಗಳು ಥಟ್ಟನೆ ನೆನಪಾಗುತ್ತವೆ. ಇಂಥಲ್ಲಿನ ಚಿಕ್ಕ ದೊಡ್ಡ ಸಮುದಾಯಗಳಲ್ಲಿ ಜನರನ್ನು ಕಂಡು ಆಪ್ತವಾಗಿ ಮಾತಾಡಿದ್ದೇನೆ. +ನಾವು ಕಂಡ ಸಮಸ್ಯೆಯು ಈ ಎಲ್ಲ ಕಡೆಗಳಲ್ಲೂ ಕಾಣಿಸಿಕೊಂಡಂಥದೇ. ಊರಲ್ಲಿರುವ ಬುದ್ಧಿವಂತ ಚುರುಕು ಮಕ್ಕಳು, ಕಸುಬು ಕಲಿತ ಕಲಿಯಬೇಕಾದ ಮಕ್ಕಳು ಊರು ಬಿಟ್ಟು ದೂರ ಹೋಗುತ್ತಾರೆ. ಸಮುದಾಯ ದುರ್ಬಲವಾಗುತ್ತದೆ, ದರಿದ್ರವಾಗುತ್ತದೆ. ಒಂದು ಕಡೆಯಿಂದ ನಮ್ಮ ಹೊಳೆಗುಡ್ಡ ಮರಮಣ್ಣು ನೀರು ಕಲ್ಲುಗಳೂ ಲೋಹನಿಧಿನಿಕ್ಷೇಪಗಳೂ ಹರಿದುಹೋಗುತ್ತಲಿವೆ. ಅದಕ್ಕಿಂತ ಗಂಭೀರವೆಂದರೆ, ನಮ್ಮ ಮಕ್ಕಳು ನಮ್ಮಿಂದ ದೂರಾಗಿ ಕಳೆದುಹೋಗುತ್ತಲಿದ್ದಾರೆ. +ಹೋದಲೆಲ್ಲ ಆಪ್ತಮಾತುಕತೆಗಳಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಿದ್ದುಂಟು. ‘ಹೌದು’ ಎಂದ ಜನ ಖಿನ್ನಗೊಳ್ಳುತ್ತಾರೆ, ಅಂತರ್ಮುಖಿಗಳಾಗುತ್ತಾರೆ. ಎರಡನೇ ಮಹಾಯುದ್ಧ ಮುಗಿಯುವ ಹೊತ್ತಿಗೆ ಯೂರೋಪ್‌ನಲ್ಲಿ ಹೀಗೆ ಆಗಿತ್ತಂತೆ. ಬಲಶಾಲಿ ತರುಣರೆಲ್ಲ ಯುದ್ಧಕ್ಕೆ ಆಹುತಿಯಾಗಿಹೋಗಿ ಊರು ತುಂಬಾ ಮಕ್ಕಳು ಮುದುಕರು ಹೆಂಗಸರು ಅಂಗವಿಕಲರು ಉಳಿದಿದ್ದರಂತೆ, ಹಾಗೆ. ಅಥವಾ, ಕಿಂದರಿಜೋಗಿ ಕಥೆಯಲ್ಲಿ ತುದಿಗೆ ಕಾಲಿಲ್ಲದ ಕುಂಟನೊಬ್ಬನೇ ಊರಲ್ಲಿ ಉಳಿದುಬಿಡುತ್ತಾನಲ್ಲ, ಸ್ಮೃತಿಯಾಗಿ, ಆ ಸ್ಮೃತಿಯನ್ನು ಗ್ರಹಿಸಲಿಕ್ಕೂ ಇನ್ನೊಂದು ಜೀವ ಬದಿಗಿಲ್ಲದ ಪಿಶಾಚಸ್ಮೃತಿಯಾಗಿ, ಆ ಥರ. ಸಂಜೆಯ ತುದಿಗೆ ಕಟ್ಟೆಯಂಚಿಗೆ ಕೂತು ಮುಳುಗುವ ಸೂರ್ಯನ ಕಡೆ ಮಂಜುಗಣ್ಣು ಹಾಯಿಸಿ ಈ ನಮ್ಮ ಹೊಸಪ್ರಾಯದ ಮಕ್ಕಳು, ಕಣ್ಣಿನ ಬೊಂಬೆಗಳು, ಕರುಳಿನ ಚಿಗುರುಗಳು, ಹೊಕ್ಕುಳಿನ ಮೊಗ್ಗೆಗಳು ಮಾಯಕದಲ್ಲಿ ಕಳೆದು ಹೋಗುತ್ತಿರುವುದನ್ನು ನೆನೆಯುತ್ತಾ ಸುಯ್ಯುವ ಮುದುಕರ ಸಾಲುಚಿತ್ರ ಕಣ್ಣು ಕಟ್ಟುತ್ತದೆ. +ಭೀತಿಗೊಂಡು ಗೊಂದಲಗೊಂಡು ಸರ್ಕಾರವನ್ನು ದೂರುತ್ತೇವೆ, ರಾಜಕಾರಣಿಗಳನ್ನು ದೂರುತ್ತೇವೆ, ವಿದ್ಯಾಭ್ಯಾಸವನ್ನು ದೂರುತ್ತೇವೆ. ಕಂಡದ್ದನ್ನೆಲ್ಲಾ ದೂರುತ್ತ ಕೈ ಹಿಸುಕಿಕೊಳ್ಳುತ್ತೇವೆ. ಆದರೆ ಇದಕ್ಕೆಲ್ಲ ನಿಜವಾದ ಬೀಜ ನೆಟ್ಟುಕೊಂಡವರು ನಾವೇ, ನಮ್ಮ ಪುಟ್ಟ ಮಕ್ಕಳು ಅದೇ ಹೊಸದಾಗಿ ಹೆಗಲಿಗೆ ಚೀಲ ನೇತುಹಾಕಿಕೊಂಡು ಅ‌ಆ ತರಗತಿಗೆ ಹೊರಡುತ್ತಿರುವಾಗಲೇ ಮನೆಯಲ್ಲಿ ವಾಗ್ವಾದ ಶುರುವಾಗುತ್ತದೆ, ಮುಂದೆ ಆ ಮಗುವನ್ನು ಡಾಕ್ಟರು ಮಾಡುವುದೋ ಎಂಜನಿಯರ್ ಮಾಡುವುದೋ ವಕೀಲಿಗೆ ಹಾಕುವುದೋ ಐ.ಎ.ಎಸ್.ಗೆ ಸೇರಿಸುವುದೋ ಅನ್ನುವ ಬಗ್ಗೆ. ಆಗಲೇ ನಾವು ಮಕ್ಕಳ ಮುಂದಣ ದಾರಿಯನ್ನು ಪ್ರಪಂಚದ ಭೂಪಟದಲ್ಲಿ ಇಂಗ್ಲೆಂಡ್ ಅಮೆರಿಕದ ಮಹಾನಗರಗಳ ಕಡೆ ಗೆರೆಯೆಳೆದು ಗುರುತಿಸತೊಡಗುತ್ತೇವೆ. +ಐವತ್ತು ವರ್ಷಗಳ ಹಿಂದಣ ನನ್ನ ಬಾಲ್ಯದಲ್ಲಿಯೇ ಈ ಡಾಕ್ಟರು ಎಂಜನೀರ್ ವಕೀಲಿ ಹುದ್ದೆಗಳ ಲಾಲಸೆ ಶುರುವಾಗಿತ್ತು ನಿಜ. ಆದರೆ, ಆ ಕಾಲವೇ ಬೇರೆ, ಲೋಕವೇ ಬೇರೆ, ಬದುಕೇ ಬೇರೆ. ನೆನಪಿಸಿಕೊಳ್ಳುವಾಗ, ಸ್ವಂತ ಕಂಡ ಉಂಡ ನನಗೇ ಈಗ ನಂಬಲಿಕ್ಕಾಗದಷ್ಟು, ಸುಳ್ಳೆನ್ನುವಷ್ಟು ಬೇರೆ. +‘ನಮ್ಮ ಕಡೆ ಊರೆಂದರೊಂದೆ ಮನೆ’ ಅನ್ನುತ್ತಾರಲ್ಲ ಕುವೆಂಪು? ತೀರ್ಥಹಳ್ಳಿಯ ಕಡೆ ಹಾಗೆ. ನಮ್ಮಲ್ಲಿ-ಆಗ, ಐವತ್ತು ವರ್ಷ ಹಿಂದೆ, ಈಗಲ್ಲ-ಊರೆಂದರೆ ಎರಡು, ಮೂರು ಅಥವಾ ಹತ್ತೆಂಟು ಮನೆಗಳು. ಅಡಕೆ ತೋಟವಿರುವಲ್ಲಿ ಎದುರುತೋಟ, ಹಿಂಬದಿಗೆ ಎತ್ತರದ ದರೆ, ದರೆಯಂಚಿನ ತನಕ ಬಂದು ಕವಿದುಕೊಂಡ ದಟ್ಟವಾದ ಕಾಡು. ಗದ್ದೆಯಿರುವಲ್ಲಿ, ಗದ್ದೆಯ ಭಾಗವಷ್ಟು ಅಂಗಳದ ಥರ ಬಲುಪುಟ್ಟ ಬಯಲು. ಅದರ ಸುತ್ತ ಕವಿದ ಕಾಡು. ಆರು ತಿಂಗಳ ಕಾಲ ಮಳೆ. ಅದರಲ್ಲಿ ಮೂರು ತಿಂಗಳು ಅಬ್ಬರದ ಏಕೋಧಾರೆ ಕಾರ್ಗಾಲ. ನಮಗೆ ಹತ್ತಿರದ ಪೇಟೆಯೆಂದರೆ ಸಾಗರ, ಹತ್ತು ಮೈಲು. ನಡೆದೇ ಹೋಗಬೇಕು. ಹೆಚ್ಚೆಂದರೆ ಎತ್ತಿನ ಗಾಡಿ. ಮಳೆಗಾಲ ನಾಲ್ಕೈದು ತಿಂಗಳು ಎತ್ತಿನ ಗಾಡಿಯೂ ಸಂಚರಿಸದು. +ಇಂಥಲ್ಲಿ ಜೇಷ್ಠ ಆಷಾಢ ಶ್ರಾವಣಗಳಲ್ಲಿ ಮುಖ್ಯವಾಗಿ ಆರ್ದ್ರೆ ಪುನರ್ವಸು ಪುಷ್ಯ ಈ ಮೂರು ಮಳೆಗಳ ಆರು ವಾರಗಳಲ್ಲಂತೂ ಊರೆಂದರೆ ಅದೇ ಒಂದು ಪ್ರತ್ಯೇಕ ಜಗತ್ತು. ಜಗುಲಿಯೇ ಒಂದು ಪ್ರತ್ಯೇಕ ಜಗತ್ತು. ರಾತ್ರಿವೇಳೆ ಬುಡ್ಡಿಯೋ ಲಾಟೀನೋ ಹಚ್ಚಿ ಅಥವಾ ಹೊಡಚಲು ಬೆಂಕಿಯೆದುರು ಒಬ್ಬನೇ ಕೂತರೆ, ಆ ಒಬ್ಬ ಒಂದು ಪ್ರತ್ಯೇಕ ಜಗತ್ತು. +ಇಂಥ ಆವರಣದಲ್ಲಿ, ಮಳೆಗಾಲದ ನಿಸ್ಸಂಪರ್ಕ ಜಗತ್ತಿನ ಏಕಾಂತರಾತ್ರಿಗಳಲ್ಲಿ ನನ್ನ ಅಮ್ಮ ಹೇಳುತ್ತಿದ್ದ ಎರಡು ಸಾಲುಗಳು ನನ್ನನ್ನು ಬಂದು ಆಕ್ರಮಿಸುತ್ತಿದ್ದವು. ಅದರಲ್ಲಿ ಒಂದು ಖೇದಕಥನ, ‘ಪುಟ್ಟ ನಾಗೀ’ ಇನ್ನೊಂದು ಸ್ಮೃತಿಗೀತೆ: +ಮಳೆಯು ನಾಡ ತೊಯ್ಯುತಿರೆ +ಮಿಂಚಿಗಿರುಳು ಬೆದರುತಿರೆ +ಗೂಡುಮುದ್ದಗೊಲ್ಲನೆಡೆಯೊಳೊಂದು ಹಣತೆ ಮಿನುಗಿತಿರೆ +ಮುದವದೊಂದು ಹೊಳೆವುದು +ಬಗೆಯ ಕಣ್ಣು ತೆರೆವುದು +ಎಂಬ ಮೊದಲ ಚರಣವಿರುವ ಗೋಕುಲಸ್ಮೃತಿ. ‘ಪುಟ್ಟನಾಗಿ’ಯೆಂಬುದು ನಮ್ಮ ಮಲೆನಾಡ ಕವಿ ಕೆ.ವಿ.ಪುಟ್ಟಪ್ಪನವರದ್ದು ಅಂತ ಗೊತ್ತಿತ್ತು. ಅದನ್ನು ಮುದ್ರಣದಲ್ಲಿಯೂ ಕಂಡಿದ್ದೆ. ಎರಡನೆಯದೂ-ಈ ಇಲ್ಲಿನ ಗುಡ್ಡ ಕಾಡು ನೆಲಮುಗಿಲು ಮಳೆಹೊಳೆ ಗುಡುಗು ಮಿಂಚು ಕಾಡುಪ್ರಾಣಿಗಳ ಆರ್ಭಟ…..ಈ ಅಬ್ಬರಗಳ ಅಲೆಯಲೆಗಳನ್ನು ಕ್ರಮೇಣ ಪೂರ್ತಾ ಹೀರಿ ಜೀರ್ಣಿಸಿಕೊಳ್ಳುವ ಘನ ಮೌನ ಇವುಗಳ ನಡುವೆಯೇ, ನಮ್ಮ ಕೊಟ್ಟಿಗೆಯಲ್ಲಿ ಕವಲು ಬಣ್ಣದ ಸಾಧು ಮುದಿದನವಿತ್ತಲ್ಲ ಅದರ ಹಾಗೆ, ಮನೆಯೆದುರು ನಿತ್ಯ ಹೂಬಿಡುತ್ತಿದ್ದ ದೊಡ್ಡ ಸಂಪಿಗೆ ಮರವಿತ್ತಲ್ಲ ಅದರ ಹಾಗೇ ಇಲ್ಲೇ ಹುಟ್ಟಿಕೊಂಡ ಹಾಡು ಅಂದುಕೊಂಡಿದ್ದೆ. ಮುಂದೆ ಹೈಸ್ಕೂಲಿನಲ್ಲಿ ಓದುವಾಗ, ಗುರುಗಳಾದ ಗೊರೂರು ನರಸಿಂಹಚಾರ್ಯರಿಂದ ಈ ನನ್ನ ಒಡನಾಡಿ ಹಾಡು ದೂರದ ಮೇಲುಕೋಟೆಯ ಪು.ತಿ.ನರಸಿಂಹಚಾರ್ ಎಂಬವರು ಬರೆದದ್ದು ಎಂದು ಗೊತ್ತಾಯಿತು. ಆಮೇಲೆ ಅದೇ ಕವಿ ಬರೆದ ‘ಗೋಕುಲ ನಿರ್ಗಮನ’ವೆಂಬ ಗೀತನಾಟಕವನ್ನು ನನ್ನ ಗುರುಗಳು ಓದಿ ಹೇಳಿದ್ದರು. +‘ಗೋಕುಲ ನಿರ್ಗಮನ’ವು ನನ್ನ ಒಡನಾಡಿ ಕಿರುನಾಡಿನ ಅನುಭವವನ್ನು ವ್ಯಾಪಕವಾಗಿ ನಾಟಕವಾಗಿ ಹೆಸರಿಸಿಕೊಟ್ಟಿತ್ತು. ಪುರಾಣಕ್ಕೆ ಬಣ್ಣದ ಚಿತ್ರ ರಚಿಸಿಕೊಡುತ್ತಿದ್ದ ನಮ್ಮ ಬಾಲ್ಯಕಾಲದ ಯಕ್ಷಗಾನ ಜಗತ್ತಿನಿಂದಾಗಿ ಈ ನಾಟಕ ಮನಸ್ಸಿನಲ್ಲಿ ಘನವಾಗಿ ಮೂಡಿಕೊಂಡಿತು. ಹೈಸ್ಕೂಲು ದಿನಗಳಾಗಿ ಸುಮಾರು ಹದಿನೈದು ವರ್ಷಕಾಲ, ಪ್ರತಿ ಮಳೆಗಾಲದ ಅಬ್ಬರದ ಮಧ್ಯೆ ಚಾತುರ್ಮಾಸದ ವ್ರತವೆನ್ನುವ ಥರದಲ್ಲಿ ನಾನು ‘ಗೋಕುಲ ನಿರ್ಗಮನ’ವನ್ನು ಪಾರಾಯಣ ಮಾಡಿಕೊಳ್ಳುತ್ತಿದ್ದೆ. ಮುಂದೆ ಅರುವತ್ತರ ದಶಕದಲ್ಲಿ ನವ್ಯಕಾವ್ಯದಲ್ಲಿ ನನ್ನ ಆಸಕ್ತಿ ತೊಡಗಿದ ಮೇಲೆ, ಬಲು ಕಡಿಮೆ ಓದುವ ನನ್ನ ಪ್ರವೃತ್ತಿಯಲ್ಲಿ, ನವೋದಯದ ಬರವಣಿಗೆಗಳನ್ನು ಮರಳಿ ಮರಳಿ ಓದಿಕೊಳ್ಳುವುದು ಕಡಿಮೆಯಾಯ್ತು. ಆಮೇಲೆ ‘ಗೋಕುಲ ನಿರ್ಗಮನ’ವನ್ನು ಓದಿದ್ದು ಕಡಿಮೆಯೇ. +ಈಚೆಗೊಮ್ಮೆ ಅದನ್ನೋದಿದ್ದು ಬಿರುಬಿಸಿಲಿನ ಮದ್ಯಾಹ್ನದಲ್ಲಿ . ಈ ಸಲದ ಓದು ಸದ್ಯದ ತಳಮಳದ ಹಿನ್ನೆಲೆಯಲ್ಲಿ ಹಿಂದಣ ಅನುಭವಗಳನ್ನೆಲ್ಲ ಒಗ್ಗೂಡಿಸಿಕೊಂಡು ಬೇರೆ ಬೇರೆ ಆಳಗಳಲ್ಲಿ, ನನ್ನನ್ನು ತಟ್ಟಿತು. +‘ಗೋಕುಲ ನಿರ್ಗಮನ’ದ ಇಡೀ ನಾಟಕವು ಆಧುನಿಕ ಕವಿಯೊಬ್ಬನಲ್ಲಿ ಆವಾಹಿತವಾಗುವ ‘ಸ್ಮೃತಿ’ಯಾಗಿ ರೂಪುಗೊಂಡಿದೆ. ಕವಿಯ ಸ್ವಂತದ ಹಾಡುಗಳೇ ನಾಟಕಕ್ಕೆ ನಾಂದಿ ಭರತ ವಾಕ್ಯಗಳಾಗಿವೆ. +ಕಥಾಪ್ರಸಂಗವು ಅದೇ ಭಾಗವತದ್ದು. ಗೋಕುಲವೆಂಬ ಗೊಲ್ಲರ ಪುಟ್ಟ ಸಮುದಾಯವೊಂದರಲ್ಲಿ ಸಾಹಸಿಗರಾದ ಬಲರಾಮಕೃಷ್ಣರು, ಅವರ ಜತೆಗೆ ಅವರ ಹಾಗೇ ಪ್ರಾಯಕ್ಕೆ ಬರುತ್ತಿರುವ ಗೋಪಾಲಕರು, ಗೋಪಿಕೆಯರು, ಊರ ಹಿರಿಯರು-ತಮ್ಮದೇ ಒಂದು ಜಗತ್ತಾಗಿ ಬದುಕುತ್ತಿದ್ದಾರೆ. ನಾಟಕ ನಡೆಯುವುದೆಲ್ಲಾ ಒಂದು ಸಂಜೆ ಮತ್ತು ಅದೇ ರಾತ್ರಿ. ಕೃಷ್ಣನು ಊರಾಚೆ ಬಯಲಲ್ಲಿ ನಿಂತು ಕೊಳಲೂದುತ್ತಾನೆ. ಹುಡುಗರು, ಹುಡುಗಿಯರು, ಹುಡುಗಿಯರಲ್ಲಿ ಮುಖ್ಯಳಾಗಿ ಕೃಷ್ಣನಿಂದ ಎಲ್ಲರಿಗಿಂತ ಹೆಚ್ಚು ಆಕರ್ಷಿತಳಾಗಿರುವ ರಾಧೆ, ಎಲ್ಲರೂ ಸೆಳೆತಗೊಂಡು ಆಕಡೆ ಧಾವಿಸುತ್ತಾರೆ. ಊರ ಹಿರಿಯರೂ ಕೊಳಲಿನಿಂದ ಆಕರ್ಷಿತವಾಗುವವರೇ. ಆದರೆ, ಹುಡುಗರ ಹುಡುಗಾಟ ಹುಚ್ಚಾಟಗಳು ಏನಾಗುತ್ತವೋ ಎಂದು ಅವರಿಗೆ ಆತಂಕ, ಕಿರಿಕಿರಿ. +ಆ ಸಂಜೆಯೇ ಮಧುರೆಯಿಂದ ರಾಜಾ ಕಂಸನ ಆಣತಿಯ ಪ್ರಕಾರ ಅಕ್ರೂರನು ಬಂದಿದ್ದಾನೆ. ಮರುದಿನ ಬೆಳಿಗ್ಗೆ ರಾಮಕೃಷ್ಣರನ್ನು ಬಿಲ್ಲಹಬ್ಬದ ವಿನೋದಕ್ಕೆಂದು ಮಧುರೆಗೆ ಕರೆದೊಯ್ಯಲಿಕ್ಕಾಗಿ. ಅಕ್ರೂರನ ಆಹ್ವಾನ, ಬಲರಾಮನ ಹಾರೈಕೆ, ಜತೆ ಹುಡುಗರ ಹಂಬಲಗಳಿಗೆ ಬಾಗಿದ ಕೃಷ್ಣನು ಮರುದಿನದ ನಿಷ್ಕ್ರಮಣಕ್ಕೆ ತಯಾರಾಗುತ್ತಾನೆ. ಕೊಳಲನ್ನು ನೆಲಕ್ಕೆ ಬಿಸುಡುತ್ತಾನೆ. ಇದನ್ನೆಲ್ಲ ಕಂಡು ಖಿನ್ನರಾದ ರಧೆಗೋಪಿಕೆಯರು, ನಿಷ್ಕ್ರಮಣಸಿದ್ಧನಾದ ಕೃಷ್ಣನಿಗೆ ಜಯ ಹಾರೈಸುತ್ತಾರೆ. ನೆಲಕ್ಕೆ ಬಿದ್ದ ಅವನ ಕೊಳಲನ್ನು ಎತ್ತಿ ಮರದ ಬುಡವೊಂದರಲ್ಲಿ ಗರುಕೆ ಚಿಗುರುವ ಎಡೆಯಲ್ಲಿ ಜೋಪಾನವಾಗಿ ಮುಚ್ಚಿಡುತ್ತಾರೆ. +ಪುತಿನ ಅವರು ಪ್ರಕಾಶಕ ಚಿದಂಬರಮ್ ಅವರಿಗೆ ಬರೆದ ಆತ್ಮೀಯ ಪತ್ರವೊಂದು ಮುನ್ನುಡಿಯಾಗಿ ಪ್ರಕಟಗೊಂಡಿದೆ. ‘ಮುಟ್ಟಲಾರೆ ಭಯ’ ಎಂದು ಎಳೆ ಹುಡುಗಿಯರು ಬೆದರುವ ಕುತೂಹಲಿಸುವ ಎಳೆ ಚಿಟ್ಟೆಗೆ ನಲುಗುವ ನವುರಾದ ರೆಕ್ಕೆಯಿರುತ್ತದಲ್ಲ, ಅಂಥದೇ ಗದ್ಯದಲ್ಲಿದೆ ಈ ಮುನ್ನುಡಿ. ಅದರಲ್ಲಿ ಅವರು ಹೇಳುತ್ತಾರೆ : ‘ಲೋಕಕೆ ಬೆಳೆವನ ಗೋಪೀಜನಮನ ಒಳಕೊಳ್ಳಲುಬಹುದೇ-ಎಂದು ಈ ರೂಪಕದಲ್ಲಿ ಗೋಪಿಯರು ಹೇಳಿಕೊಳ್ಳುವಂತೆ ಆ ರಾತ್ರಿ ನಂದಕುಮಾರ ವಾಸುದೇವನಾಗುವುದಕ್ಕಾಗಿ ಅಕ್ರೂರಪ್ರೇರಣೆಯಿಂದ ಗೋಕುಲ ಬಿಟ್ಟು ಮಧುರೆಗೆ ಹೊರಡಲು ಮನಸ್ಸು ಮಾಡುತ್ತಾನೆ. ಬೃಂದಾವನವನ್ನುಳಿದ ಮೇಲೆ ಕೃಷ್ಣನ ಕೊಳಲು ನಮಗೆ ತಿರುಗಿ ಕೇಳಿಬರುವುದಿಲ್ಲ, ಆತನ ಪಾಂಚಜನ್ಯಧ್ವನಿಯೂ ಚಕ್ರಸ್ವಿಷ್ಕಾರವೂ ನಾದ ತುಂಬ ಮೊಳಗಾಡುತ್ತಾ ಅಲೆಯುತ್ತವೆ. ಆತ ಇನ್ನೂ ಮುಗ್ಧಭಾವದಲ್ಲಿರುವಾಗಲೇ ಕೊಳಲು ಅವನ ಕೈಯಿಂದ ಜಾರಿ ಹಳ್ಳಿಯ ಹೊನಲಲ್ಲಿ ಬಿದ್ದುಹೋಯಿತು-ನನ್ನಂಥ ಮುಗ್ಧರ ಮನಸ್ಸಿನಲ್ಲಿ ಆಗಾಗ ಮೊಳಗಿಡುವುದಕ್ಕೆ’ +ಬೇಡವೋ ಅಂತ ಅನುಮಾನಿಸಿಕೊಂಡಿದ್ದ ಒಂದು ಸಂಗತಿಯನ್ನು ಇಲ್ಲಿ ಮಧ್ಯೆ ಹೇಳಿಬಿಡುತ್ತೇನೆ. +ಐವತ್ತರ ದಶಕದ ಪ್ರಾರಂಭದಲ್ಲಿ ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಅಲ್ಲಿ ಓದಲಿಕ್ಕಿದ್ದ ಸಾಗರದ ಕಡೆಯವರೆಂದರೆ ಮೂರೋ ನಾಲ್ಕೋ ಅಷ್ಟೇ. ಬೆಂಗಳೂರಿನಲ್ಲಿ ನಮ್ಮ ಕಡೆಯವರು ಆಗ ಇಪ್ಪತ್ತು ಇಪ್ಪತ್ತೈದು ಇದ್ದಿರಬಹುದು. ಈ ನಲವತ್ತೈವತ್ತು ವರ್ಷಗಳಲ್ಲಿ ತೀರಾ ಬದಲಾವಣೆಗಳಾಗಿವೆ. ಈಗ ಬೆಂಗಳುರಿನಲ್ಲಿ ನಮ್ಮ ಕಡೆಯವರು ಹಲವು ಸಾವಿರ ಮಂದಿ ಇರಬಹುದು. ನಮ್ಮ ಕಡೆಯ ಹೆಣ್ಣು ಮಕ್ಕಳೇ ಹತ್ತಿರ ಹತ್ತಿರ ಸಾವಿರವಿದ್ದಾರು. +ನನ್ನ ಮಿತ್ರರೊಬ್ಬರು ಬೆಂಗಳೂರಿನಲ್ಲಿ ಒಂದು ಉದ್ಯಮ ಸ್ಥಾಪಿಸಿದ್ದಾರೆ. ಅದೊಂದರಲ್ಲೇ ನಮ್ಮ ಕಡೆಯ ಹಲವು ನೂರು ಮಂದಿ ಹೆಣ್ಣುಮಕ್ಕಳಿಗೆ ಕೆಲಸಕೊಟ್ಟಿದ್ದೇನೆ ಎಂದು ಅವರು ಹೇಳಿದ್ದರು. ಅದೊಂದು ದಿನ ಸಂಜೆ, ಅವರ ಕಿರು ಕಾರ್ಖಾನೆಯನ್ನು ನೋಡಲು ನಾನೂ ಹೋಗಿದ್ದೆ. ಆಗ ಸುಮಾರು ಸಂಜೆ ಆರು ಗಂಟೆ. ಇಡಿಕಿರಿದ ನಗರ ಪ್ರದೇಶದಲ್ಲಿ, ಒಂದು ರಸ್ತೆಯ ಮರಿತಿರುವಿನಲ್ಲಿ, ಇನ್ನೆರಡು ಓಣಿಗಳು ಬಂದು ರಸ್ತೆಯನ್ನು ಕೂಡಿಕೊಳ್ಳುವ ಆಯಕಟ್ಟಿನಲ್ಲಿ ಅವರ ಕಾರ್ಯಾಗಾರ. ಎಲ್ಲೋ ಮುಳುಗುತ್ತಿರುವ ಸೂರ್ಯನ ಅಸ್ಪಷ್ಟ ಕೆಂಪು ಛಾಯೆ ಕತ್ತಲೊಳಗೆ ಕರಗುತ್ತಿದ್ದಿರಬೇಕು. ಬೀದಿದೀಪಗಳು ಗೊತ್ತಗದೆ ಹೊತ್ತಿಕೊಂಡವು. ಸರಿಯಾಗಿ ಅದೇ ಹೊತ್ತಿಗೆ ಕೆಲಸದ ಅವಧಿ ಮುಗಿದು ಐದಾರು ನೂರು ಮಂದಿ ಹೆಣ್ಣುಮಕ್ಕಳು ಎದುರು ಬಾಗಿಲಿನಿಂದ ಹೊರಬರತೊಡಗಿದರು. ನೋಡುತ್ತಾ ನಿಂತಿದ್ದ ನನಗೆ…..ಹೇಗೆ ಹೇಳಲಿ, ಅಷ್ಟು ಅರ್ಧಬೆಂದ ಹೆಣಗಳು ಈಗಷ್ಟೇ ಚಿತೆಯಿಂದ ಎದ್ದುಬರುತ್ತಿದ್ದ ಹಾಗೆ ಕಂಡವು. +ಇದೇ ಹೆಣ್ಣು ಮಕ್ಕಳನ್ನು ನಾನು ನಮ್ಮೂರುಗಳಲ್ಲಿ ಐವತ್ತು ವರ್ಷದಿಂದ ಕಂಡಿದ್ದೇನೆ. ದೊಡ್ಡದೊಂದು ಮನೆತನದಲ್ಲಿ ಮದುವೆಯೆಂದರೆ ಇಂಥ ಅನೇಕ ಮಂದಿ ಹುಡುಗಿಯರು ಕೂಡಿಕೊಳ್ಳುತ್ತಾರೆ. ನಾಲ್ಕು ದಿನ ಮೊದಲು ಬಂದು ಸಂಭ್ರಮಗೊಂಡು ಚುರುಕು ಚಲಿಸುತ್ತಾ ಕೆಲಸ ಮಾಡುತ್ತಾರೆ. ಮದುವೆಯ ದಿನ ಬೆಳಗಿನಜಾವ ಎದ್ದು ತಲೆ ಮೈಮುಖ ಸಿಂಗರಿಸಿಕೊಂಡು ಚಿಗರೆಗಳ ಹಾಗೆ ಉಲ್ಲಾಸದಿಂದ ಕುಣಿದು ಕೆಲಸಮಾಡುತ್ತಾರೆ. ಮೂರೋ ನಾಲ್ಕೋ ಪಂಕ್ತಿ ಊಟ ಬಡಿಸುತ್ತಾರೆ, ನೆಲ ಬಳಿದು ಸ್ವಚ್ಛಮಾಡುತ್ತಾರೆ. ಆ ನಡುವಿನಲ್ಲಿಯೇ ಆಗಾಗ ತಮ್ಮ ಸಿಂಗಾರವನ್ನು ಸಾವರಿಸಿ ಸರಿಗೊಳಿಸಿಕೊಳ್ಳುತ್ತಾರೆ. ಎಲ್ಲ ಮುಗಿದು ಸಂಜೆ ನಾಲ್ಕಕ್ಕೋ ಐದಕ್ಕೋ ಕಡೆಯಲ್ಲಿ ತಮ್ಮ ಊಟ ಮುಗಿಸಿ ಎಲೆಯಡಿಕೆ ಹಾಕಿಕೊಂಡು ಸಂಜೆಯ ಸೂರ್ಯನ ಎದುರು ತಮ್ಮ ತುಟಿ ಕೆಂಪನ್ನು ಮಿರುಗಿಸುತ್ತಾ ಉನ್ಮಕ್ತವಾಗಿ ನಗುತ್ತಿರುತ್ತಾರೆ, ಹರಟುತ್ತಿರುತ್ತಾರೆ. +ಭಾವುಕತೆಯಲ್ಲಿ ಅದ್ದುವುದು ನನ್ನ ಉದ್ದೇಶವಲ್ಲ. ಈ ನಾಲ್ಕೈದು ದಶಕಗಳಲ್ಲಿನ್ನಮ್ಮ ಜನಸಂಖ್ಯೆ ಮೂವತ್ತರಿಂದ ತೊಂಬತ್ತಕ್ಕೆ ಮೂರು ಪಟ್ಟು ಬೆಳೆದು ಸೋಟಿಸಿದೆ ಅನ್ನುವುದುನ್ತಿಳಿದ ಸಂಗತಿಯೇ. ಜನರ ಸಂಖ್ಯೆ ಬೆಳೆಯಿತೆಂದು ಊರು ನೆಲ ಮನೆ ಬೆಳೆಯುವುದಿಲ್ಲವಲ್ಲ? ಉದ್ಯೋಗದ ನೆಲೆ ಹುಡುಕಿ ವಲಸೆ ಹೋಗುವುದು ಕೆಲಮಟ್ಟಿಗೆ ಅನಿವಾರ್ಯವಾಗಿದ್ದೀತು. ಮತ್ತು, ಹೊಸ ಪಾಶ್ಚಾತ್ಯ ನಾಗರೀಕತೆಯು ಲಕಲಕನೆ ಹೊಳೆದು ಆಕರ್ಷಿಸುತ್ತಿರಲು ತರುಣರಿಗೆ ತಮ್ಮ ಸ್ಥಳೀಯ ಕಿರು ಸಮುದಾಯಯಗಳ ಜಡಕಟ್ಟಳೆಗಳು ಬಂಧನವೆನಿಸಿ ಅದರಿಂದ ಪಾರಾಗಿಕೊಳ್ಳುವ ಬಯಕೆ ಹುಟ್ಟಿ ವಲಸೆಯು ಬೇಕೆನ್ನಿಸಿರಬಹುದು. ಎಲ್ಲಕ್ಕಿಂತ ಮುಖ್ಯವೆಂದರೆ, ದಲಿತಜಾತಿಗಳವರಿಗೂ, ಸ್ತ್ರೀಯರಿಗೂ ಈ ಹಳೆಯ ವಿಷಮ ನಿಶ್ಚಲತೆಯನ್ನು ದಾಟಿಕೊಳ್ಳಬೇಕಾದ್ದು ನಿಜವಾಗಿಯೂ ಅತ್ಯಗತ್ಯವಾಗಿತ್ತು. ಹಳೆಯ ಸಮಾಜಗಳ ಅಮಾನವೀಯ ಅನ್ಯಾಗಳಿಂದಾಗಿ ಆ ಬಹುಸಂಖ್ಯರು ಯಾವುದರಿಂದ ವಂಚಿತರಾಗಿದ್ದರೋ ಅದನ್ನು ಅಥವಾ ಅದಕ್ಕೆ ಬದಲು ಇನ್ನೊಂದನ್ನು ಅವರು ಪಡೆದುಕೊಳ್ಳಬೇಕಾದ ತುರ್ತು ಒದಗಿತ್ತು, ಅದಕ್ಕೆ ನಗರ ವಲಸೆಯೇ ಮಾರ್ಗವಾಗಿತ್ತು. (ಡಾ. ಎಂ.ಎನ್. ಶ್ರೀನಿವಾಸರು ಹೇಳುವ ಆಧುನೀಕರಣ-ಸಂಸ್ಕೃತೀಕರಣದ ಜೋಡಿಪ್ರಕ್ರಿಯೆಯು ಹೀಗೆ ವಲಸೆಗಳಿಂದಲೇ ಪ್ರಾಯಃ ಮೊದಲಾಗಿ ವ್ಯಾಪಕಗೊಂಡಿತು.) +ನಮ್ಮ ಬಾಲ್ಯದಲ್ಲಿ, ಆಗಿನ ಸಮಾಜದ ಬಗ್ಗೆ ನಾವು ತೀವ್ರ ಅತೃಪ್ತಿಗೊಂಡವರೇ, ಕನಲಿದವರೇ ‘ಮಳೆಯು ನಾಡ ತೊಯ್ಯುತಿರೆ’ ಹಾಡಿನ ಜತೆ ಆಗ ನನ್ನನ್ನು ಆಕ್ರಮಿಸಿದ ಇನ್ನೊಂದು, ‘ಪುಟ್ಟನಾಗಿ’ ಕವಿತೆಯು ಮಲೆನಾಡಿನ ಹಸಿರುಗತ್ತಲು ಕಪ್ಪುಗತ್ತಲ ನಡುವೆ ಹೆಪ್ಪುಗಟ್ಟಿಕೊಂಡ ಸ್ವಾರ್ಥ ಕ್ರೌರ್ಯ ಹಗೆ ಹಿಂಸೆಗಳನ್ನು ಕಣ್ಣಿಗೆ ಮುಟ್ಟಿಸಿ ಕಾಣಿಸಿತ್ತು. +ಗೋಕುಲದ ಆ ಪುಟ್ಟ ಸಮುದಾಯವನ್ನೇ ಗಮನಿಸಿದರೆ, ಅಲ್ಲಿ ಜಾತಿ-ವರ್ಗ ವೈಷಮ್ಯಗಳು ಅಷ್ಟಾಗಿ ಕಾಡುತ್ತಿತ್ತೆಂದು ತೋರುವುದಿಲ್ಲ. ಹಾಗಿದ್ದರೂ ಆ ಗೋಪಬಾಲಕರಿಗೆ ನಿಶ್ಚಲವೆಂಬಂತಿದ್ದ ಅದೇ ಹಳೇ ಊರು, ಅವೇ ಅಮೋದ ಪ್ರಮೋದಗಳು, ಅವೇ ಆಟನೋಟ ಗೆಯ್ಮೆಗಳು ಸಾಕಷ್ಟು ಬೇಸರ ಹುಟ್ಟಿಸಿರಬೇಕು. +ಬನ್ನಿರೋ ನಾವೆಲ್ಲ ಮಧುರೆಗೆ ಬಿಲ್ಲಹಬ್ಬಕೆ ಹೋಗುವ +ಹಳುವ ಹಳ್ಳಿಯ ಬಿಡುತ ಸೊಗಸಿನ ಹೊಳಲ ಜಾತ್ರೆಗೆ ಹೋಗುವ +ಹೈ ಹಚಚ್ಚಾ ಎಂದು ತುರುಗಳ ಹಣ್ಣು ಮುದುಕರೆ ಕಾಯಲಿ +ಹಟ್ಟಿಯೊಳು ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ. +ಎಂದು ಮಧುರೆಗೆ ಹೋಗಲು ಉತ್ಸುಕರಾಗುತ್ತಾರೆ ಅವರು. “ಬಾಬಾ ಮಧುರೆಗೆ ಬಾ”ಎಂಬ ಅಕ್ರೂರನ ಕರೆಗೆ ದನಿಗೂಡಿಸಿ ಕೃಷ್ಣನನ್ನು ನಿಷ್ಕ್ರಮಣಕ್ಕೆ ತವಕಿಸುತ್ತಾರೆ. +ಏಸ್ಯಾದ ಬಗ್ಗೆ ಗಮನಿಸುತ್ತಾ, ಅನಂತರ ಇಂಡಿಯಾದ ವಿವರಗಳನ್ನು ಕಷ್ಟಪಟ್ಟು ಅಭ್ಯಸಿಸಿ ಕಾರ್ಲ್‌ಮಾರ್ಕ್ಸ್ ತನ್ನ ಹೇಳಿಕೆಯನ್ನು ನೀಡಿದ್ದಾನೆ: ಬರೆದಿಟ್ಟ ಚಿತ್ರದಂತೆ ಚಂದಕಾಣುವ ಈ ಗ್ರಾಮ ಸಮುದಾಯಗಳು ಮನುಷ್ಯರ ಮನಸ್ಸನ್ನು ಸಾಧ್ಯವಾದಷ್ಟೂ ಅತಿಸಂಕುಚಿತವಾಗಿ ಬಿಗಿವೃತ್ತದಲ್ಲಿ ಕಟ್ಟಿಕೆಡಹಿದಂಥವು; ಮನುಷ್ಯ ಚೇತನವು ಸಾಧ್ಯವುಳ್ಳ ಸಮಸ್ತ ವೈಭವಗಳಿಂದಲೂ ಇತಿಹಾಸ ಶಕ್ತಿಗಳಿಂದಲೂ ವಂಚಿತವಾಗುವ ಹಾಗೆ ಮಾಡುವಂಥವು…..ಹಾಗೆ ಆತ ಕನಿಕರಗೊಂಡಿದ್ದಾನೆ. ಅದಷ್ಟೇ ಉಜ್ವಲ ಬೆಳಗುತ್ತಿದ್ದ ಆಗಿನ ಐರೋಪ್ಯ ನಾಗರಿಕತೆಯ ಎತ್ತರದ ವೇದಿಕೆಯ ಮೇಲೆ ನಿಂತು ಅನೇಕರು ಹೀಗೆ ಕನಿಕರಿಸಿದ್ದಾರೆ. ತಮ್ಮ ಬೆಳಕೇ ತಮ್ಮ ಕಣ್ಣುಗಳನ್ನು ಕೋರೈಸುತ್ತಿರಲು ಅವರಿಗೆ ಅನ್ಯರನ್ನು ಭಿನ್ನರನ್ನು ಸ್ವಚ್ಛವಾಗಿ ಕಂಡು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ, ಇರಲಿ. ಅವರ ಮಾತುಗಳನ್ನು ಬಿಡೋಣ. ಆದರೆ, ಆ ಕಾಲಕ್ಕೆ ನಮ್ಮಲ್ಲಿಯೇ ಇಂಥ ಅನಿಸಿಕೆಗಳು ಹುಟ್ಟಿ ಚಲಾವಣೆಗೆ ಬಂದವು ಅನ್ನುವುದನ್ನು ಮರೆಯಬಾರದು. +ನಮ್ಮ ಊರಿನ ಉತ್ಸಾಹೀ ಹೆಣ್ಣುಮಕ್ಕಳ ಬಗ್ಗೆ ಹೇಳಿದೆನಲ್ಲ, ಆ ಅವರೇ, ಇಪ್ಪತ್ತರೊಳಗೆ ಮದುವೆಯಾಗಿ ಮಕ್ಕಳಾಗಿ ಬಲುಬೇಗ ಸುತ್ತು ತಿರುಗುವ ಗಾಣದ ಎತ್ತಾಗಿ ಆಮೇಲೆ ತುಟಿಕಚ್ಚಿ ತಮ್ಮ ಜೀವನವನ್ನೇ ತಾವು ನುಂಗಿಕೊಂಡು ಹಿರಿಯರಿಂದ ಬಾಯಿಪಾಠ ಮಾಡಿದ ವೇದಂತದ ನುಡಿಗಳಲ್ಲಿ ಹೆಗ್ಗಡಿಕೆಯನ್ನು ಬಡಬಡಿಸುತ್ತಾ ಮತ್ತಿಕುಂಟೆಯ ಹಾಗೆ ಉದ್ದ ಅರೆಬದುಕಿ ಉಸಿರಾಡಿಕೊಂಡಿರುವುದನ್ನೂ ಬೇಕಷ್ಟು ನೋಡಿದ್ದೇನೆ. +ಬೆಂಗಳೂರಿನಲ್ಲಿ ಉದ್ಯಮವನ್ನು ಸ್ಥಾಪಿಸಿದ ನನ್ನ ಮಿತ್ರರ ಪ್ರಾಮಾಣಿಕತೆಯನ್ನಾಗಲೀ ಸದಾಶಯವನ್ನಾಗಲೀ ನಾನು ಪ್ರಶ್ನಿಸುವುದಿಲ್ಲ. ಆದರೆ ಈ ಬೆಳವಣಿಗೆಗೂ ಇರುವ ಪ್ರತಿಮುಖವನ್ನು ಭಾವಿಸಿ ಕಳವಳಗೊಳ್ಳುತ್ತೇನೆ, ಕಲಕಿಹೋಗುತ್ತೇನೆ. ನಗರ ಸೇರಿರುವ ನಮ್ಮ ಹಲವುನೂರು ಮಂದಿ ಹೆಣ್ಣುಮಕ್ಕಳು ಹಳ್ಳಿಯಲ್ಲುಳಿದಿರುವ ಅವರಂಥವರಿಗಿಂತ ಕೊಂಚವೇ ಹೆಚ್ಚು, ಅಥವಾ ಅದೂ ಬೇಡ, ಅವರಷ್ಟೇ ಆದರೂ ಉತ್ಸಾಹಿಗಳಾಗಿ ಮಾನವಿಟ್ಟುಕೊಂಡು ಬದುಕಿಯಾರೇ? ಬೆಳಿಗ್ಗೆ ಆರಕ್ಕೆ ಎದ್ದು ಗಡಿಬಿಡಿಯಲ್ಲಿ ಹೇಗೋ ತಯಾರಾಗಿ ಪ್ಯಾಕ್ಟರಿಗೆ ಓಡಿದರೆ, ಸಂಜೆ ಗೂಡಿಗೆ ಮರಳಿಬಂದು ಉಸಾಬರಿಗಳನ್ನು ಮುಗಿಸಿ ಮಲಗುವುದು ರಾತ್ರಿ ಹತ್ತಕ್ಕೆ. ಬಿಡುವಿಲ್ಲದಷ್ಟು ಏಕಪ್ರಕಾರ ದುಡಿಮೆ. ಈ ದುಡಿಮೆಯಿಂದ ತಾವು ತಯಾರಿಸುವ ಅಲಂಕಾರವಸ್ತುವೋ ಮತ್ತೊಂದೋ ಎಲ್ಲಿರುವ ಯಾರಿಗೆ ಮುದಕೊಟ್ಟೀತು ಎಂಬ ಕಲ್ಪನೆಗೂ ತೃಪ್ತಿಗೂ ಅವಕಾಶವಿಲ್ಲದೆ ಯಾಂತ್ರಿಕ ದುಡಿಮೆ. ಸಂಬಳದ ಹಣಕ್ಕೆ ಒತ್ತೆಯಾದ ಹೆಣದುಡಿಮೆ. ಮೇಲಾಗಿ, ಗಳಿಸುವ ಹಣವು ನಗರದ ದುಬಾರಿಯಲ್ಲಿ ಮಾನವಂತರಾಗಿ ಬದುಕಲಿಕ್ಕೂ ಸಾಲದಶ್ಶ್ಟು. ಯಾವುದೋ ಛಲದಲ್ಲಿ ಊರುಬಿಟ್ಟು ಮತ್ತೆ ಊರಿಗೆ ಮರಳುವುದು ಆಗದ ಮಾತು. ಮಾತ್ರವಲ್ಲ, ಊರಿನ ಬಂಧು ಮಿತ್ರರಿಗೆ ನೆರೆಯವರಿಗೆ ತಾನು ನಗರದಲ್ಲಿ ಚೆನ್ನಾಗಿಯೇ ಬದುಕುತ್ತಿದ್ದೇನೆಂದು ಸಾಬೀತುಮಾಡಿಕೊಳ್ಳಬೇಕು ಕೂಡ. +ಹಳ್ಳಿಗಳಲ್ಲಿ ಇವತ್ತಿಗೂ ವ್ರತ ನೇಮ ಮದುವೆ ಹಬ್ಬ ಹಾಡು ಹಸೆ ಕೈಗೆಲಸ ಮುಂತಾದ ಕಟ್ಟಳೆಗಳು ಅವಶೇಷವಾಗಿಯಾದರೂ ಉಳಿದುಕೊಂಡಿವೆ. ಹಣವನ್ನು ಬಿಟ್ಟು ಇನ್ನಿರುವ ಬದುಕಿನ ಅಸಂಖ್ಯಾತ ಸಾಧ್ಯತೆಗಳನ್ನು ಇವು ಕೆಲಮಟ್ಟಿಗಾದರೂ ಕಾಣಿಸಬಹುದು. ನಗರ ಸೇರಿಕೊಂಡವರಿಗೆ ಅವೆಲ್ಲವೂ ನಷ್ಟವಾಗಿ ಹೋಗಿರುತ್ತವೆ. ಅಂಥವರಿಗೆ ಹುಚ್ಚು ಹಿಡಿಯದೆ ಉಳಿಯಲಿಕ್ಕೆ ಈಗ ದೊರಕುವ ಒಂದೇ ಸಾಧನವೆಂದರೆ ಪ್ರಾಯಃ ಟಿ.ವಿ.ಯಲ್ಲಿ ಕಡಕ್ಕೆ ಹಂಚುವ ಸುಳ್ಳು ಕನಸುಗಳು. ಅವು ಕೂಡ ಅದೆಷ್ಟು ದುಬಾರಿ. +ನಗರ ಬದುಕಿನ ದರೆಯಂಚಿನಲ್ಲಿ ಆ ಬಿಗಿತಸೆಡೆತಗಳಲ್ಲಿಯೂ ಹೇಗೋ ತೋಲ ಹಿಡಿದು ಬದುಕುತ್ತಿರುವ ಈ ನಮ್ಮ ಹೆಣ್ಣುಮಕ್ಕಳು ಯಾವ ಕ್ಷಣಕ್ಕೆ ಜೋಲಿ ತಪ್ಪಿದರೂ ತಪ್ಪಬಹುದು. ಅಲ್ಲಿಂದ ಕೆಡೆದು ಬೀಳುವುದು ಎಲ್ಲಿಗೆ? ನೆನೆದರೆ ನಡುಕ ಬರುತ್ತದೆ. +ಇವತ್ತು ಇಂಡಿಯಾದ ಎಲ್ಲ ಸಮಾಜಗಳೂ ಎದುರಿಸುತ್ತಿರುವ ಕಠಿನವಾದ ದಿವ್ಯ ಇದು. ಇದರಲ್ಲಿ ನಾವು ಪರಾಜಿತರಾಗುತ್ತೇವೆಯೇ? ನಾಶವಾಗಿ ಹೋಗುತ್ತೇವೆಯೇ? ಇಲ್ಲ ಅನ್ನುವುದಾದರೆ ಅದಾವ ಉಪಾಯದಿಂದ ಇದನ್ನು ಉತ್ತರಿಸಿ ಪರಿಹರಿಸಿಕೊಳ್ಳುತ್ತೇವೆ? +ಮಾರ್ಕ್ಸ್‌ನದೇ ಇನ್ನೊಂದು ಹೇಳಿಕೆಯು ನೆನಪಿಗೆ ಬರುತ್ತದೆ. ‘ಇಂಡಿಯಾದ ಸಮಾಜವು ಸಹಸ್ರಾರು ವರ್ಷ ಜಡವಾಗಿ ಬದುಕಿದ್ದ ಕಾರಣ ಅದಕ್ಕೆ ಚರಿತ್ರೆಯೆಂಬುದೇ ರೂಪುಗೊಳ್ಳಲಿಲ್ಲ. ಅಥವಾ ಕನಿಷ್ಠ, ಇಂಡಿಯಾಕ್ಕೆ ದಾಖಲಾದ ಚರಿತ್ರೆ ಇಲ್ಲವೇ ಇಲ್ಲ ಅಂತಲಾದರೂ ನಿಸ್ಸಂದೇಹವಾಗಿ ಹೇಳಬಹುದು’ ಅನ್ನುತ್ತಾನೆ ಮಾರ್ಕ್ಸ್, ಅದೇ ಪಾಪ ಅಂದುಕೊಳ್ಳುವ ಮರುಕದ ಧಾಟಿಯಲ್ಲಿ. ಮಾರ್ಕ್ಸ್ ಮಾತ್ರವಲ್ಲ, ಕಳೆದ ಇನ್ನೂರು ಮುನ್ನೂರು ವರ್ಷಗಳ ಪಾಶ್ಚಾತ್ಯ ಆಧುನಿಕ ನಾಗರಿಕತೆಯ ಅವಧಿಯಲ್ಲಿ ಬಂದ ಚಿಂತಕರೆಲ್ಲರೂ ಪಾಪ, ಚರಿತ್ರೆಯನ್ನು ಅಷ್ಟು ಗಾಢವಾಗಿ ನಂಬಿಕೊಂಡುಬಿಟ್ಟಿದ್ದರು. ಒಂದು ಜನಾಂಗದ ಭೂತಕಾಲದ ಬೇರುಗಳೆಲ್ಲವೂ ಚರಿತ್ರೆಯಲ್ಲಿ ಸಂಚಯನಗೊಂಡು ಬರುತ್ತದೆಂದು ಅವರು ದೃಢವಾಗಿ ವಿಶ್ವಾಸವಿಟ್ಟುಕೊಂಡಿದ್ದರು. ರೆನೆಸಾನ್ಸ್‌ಗೆ ಹಿಂದಿನ ಪಾಶ್ಚಾತ್ಯ ಸಮಾಜಗಳಲ್ಲಿ ಬಹುಶಃ ಇಂಥ ಗಾಢನಂಬಿಕೆ ಇದ್ದಿರಲಿಲ್ಲವೇನೋ. ಇಂಡಿಯಾಮಾತ್ರ ಯಾವತ್ತೂ ಚರಿತ್ರೆಯು ಅಷ್ಟು ಮುಖ್ಯವಾದದ್ದೆಂದು ಗಣಿಸಿರಲಿಲ್ಲ. +ಜೀವವಿರುವ ನಾವು ಮೃತವಾದ್ದನ್ನು ಪರಿಶೀಲಿಸಿ ಕಾಣುತ್ತಿದ್ದೇವೆ ಅನ್ನುವುದೇ ಚರಿತ್ರೆಯು ಕೊಡುವ ಪ್ರಧಾನವಾದ ಅನುಭವ. ಚರಿತ್ರೆಯು ಇಸವಿಗಳನ್ನೂ ಗುಡಿಸಿ ತರುತ್ತದೆ. ಸತ್ತದ್ದಕ್ಕೆಲ್ಲ ಒಳಗೆ ಹುಲ್ಲು ತುಂಬಿಸಿ ಎಚ್ಚರದಿಂದ ಕರಾರುವಕ್ಕಾಗಿ ಆಕಾರಗೊಳಿಸಿ ಕಣ್ಮುಂದೆ ನಿಲ್ಲಿಸುತ್ತದೆ. ಅದೇನಿದ್ದರೂ ನಮ್ಮ ದಿನ ನಿತ್ಯದ ವಾರ್ತಾಪತ್ರಿಕೆಗಳ ಹಾಗೆ. ಪತ್ರಿಕೆಗಳು ನಿತ್ಯದ ವಿವರಗಳನ್ನು ಯಥೇಚ್ಛ ಕೊಡುತ್ತವೆ. ನಮ್ಮ ಓಣಿಯಲ್ಲೇ ನಡೆದದ್ದನ್ನು ಮರುದಿನ ಆಕರ್ಷಕವಾದ ರಂಜಕವಾದ ಕಥೆಯಾಗಿ ನೆಯ್ದು ನಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತವೆ. ನಮ್ಮದೇ ಘಟನೆ ನಮ್ಮಿಂದ ದೂರವಾದ ಕಥೆಯಾಗಿ ಮಾರ್ಪಟ್ಟಿರುತ್ತದೆ. ಕಲಕಬೇಕಾದ ಸಂಗತಿ ನಮ್ಮನ್ನು ರಂಜಿಸುವ ಸರಕಾಗುತ್ತದೆ. ಚರಿತ್ರೆಯೂ ವಾರ್ತಾಪತ್ರಿಕೆಯ ಹಾಗೆಯೇ ನಮ್ಮನ್ನು ಭೂತಕಾಲದಿಂದ ಬಿಡಿಸಿಡುತ್ತದೆ, ಬೇರೆಯಾಗಿಸುತ್ತದೆ, ದೂರವಾಗಿಸುತ್ತದೆ. ಚರಿತ್ರೆಯು ನಮ್ಮ ಆಹಾರವಾಗಿ ಒಳಗಿಳಿದರು ರಕ್ತಗತವಾಗುವುದಿಲ್ಲ, ವಿಹಾರ ಸ್ಥಳವಾಗಿ ಹಾಸಿಕೊಳ್ಳುತ್ತದೆ. +ಪಾಶ್ಚಾತ್ಯ ಶಿಕ್ಷಣ ಪದ್ಧತಿಯ ಪ್ರಭಾವದಿಂದ ನಮ್ಮಲ್ಲಿ ಹೊಸದಾಗಿ ರೂಪುಗೊಂದ ಚರಿತ್ರೆಯು ಬಹುಶಃ ಮೂರು ವರ್ಗದ ಮುದ್ರೆಗಳನ್ನು ಸೃಷ್ಟಿಸಿತು. ಒಂದು-ಬ್ರಹ್ಮಸಮಾಜ ಕೇಶವ ಚಂದ್ರಸೇನ ಮುಂತಾದಲ್ಲಿ ಹುಟ್ಟಿ ಅಂತಿಮವಾಗಿ ನೀರದ ಚೌಧರಿಯಂಥವರಲ್ಲಿ ಫಲಗೊಂಡ ಭಾರತದ್ವೇಷ. ಎರಡು-ಪ್ರಾಯಃ, ಮಹಾರಾಷ್ಟ್ರದಲ್ಲಿ ಹುಟ್ಟಿ ಆಮೇಲೆ ಸನಾತನವಾದಿ ಹಿಂದು ಸಂಘಟನೆಗಳಲ್ಲಿ ಫಲಗೊಂಡ ಮತಾಂಧತೆ, ರಾಷ್ಟ್ರಾಂಧತೆ. ಮೂರು-ವಿಶ್ವವಿದ್ಯಾಲಯದಂಥ ಸಂಸ್ಥೆಗಳಲ್ಲಿ, ನಾಣ್ಯಶಾಸನ ತಾಮ್ರಪಟ ಪುಸ್ತಕಗಳ ಗೋರಿಯಲ್ಲಿ ಹುಗಿದುಕೊಂಡು ವಿದ್ವಾಂಸರೆನಿಸಿಕೊಂಡ ಅಪ್ರಸ್ತುತ ಕಲೇವರಗಳು ಉತ್ಪಾದಿಸಿದ ತಟಸ್ಥ ನಿರ್ಲಿಪ್ತ ನಿರುಪಯುಕ್ತ ಶಬ್ದಪಾಂಡಿತ್ಯ. +ಇಂಡಿಯಾದ ಸಮಾಜಗಳು ಹಿಂದಿನಿಂದ ಚರಿತ್ರೆಯನ್ನು ಅಷ್ಟಾಗಿ ಗಮನಿಸದೆ ‘ಸೃತಿ’ಯನ್ನು ಅವಲಂಬಿಸಿಕೊಂಡು ಬಂದಂಥವು. ಸೃತಿಯಲ್ಲಿ ಚರಿತ್ರೆಯ ವಿವರಗಳಿರುವುದಿಲ್ಲ. ಅದರ ಅರ್ಕವಿರುತ್ತದೆ. ಅದಕ್ಕಿಂತ ಮುಖ್ಯವಾಗಿ, ಸೃತಿಯೆನ್ನುವುದು ವೈರಸ್‌ನ ಥರ. ವೈರಸ್ ಮೂಲತಃ ಜಡವಸ್ತು, ಜೀವವುಳ್ಳದ್ದಲ್ಲ. ಆದರೆ ಬೇರೆ ಜೀವಕೋಶವೊಂದರಸಂಪರ್ಕವಾದಾಗ ತಟ್ಟನೆ ತಾನೂ ಜೀವಂತವಾಗಿ ಮಾರ್ಪಾಟುಗೊಂಡುಬಿಡುತ್ತದೆ. ಸೃತಿಯು ಚರಿತ್ರೆಯ ವಿವರಗಳ ಹಾಗೆ ಹೆಂಟೆಹೆಂಟೆಯಾಗಿ ಉಂಡುಂಡೆಯಾಗಿ ಎದುರು ಪೇರಿ ನಿಲ್ಲುವುದಿಲ್ಲ. ಒಳಗೆ ಜಿನುಗಿ ನಮ್ಮ ರಕ್ತಗತವಾಗುತ್ತದೆ. ನಮ್ಮ ಕಣ್ಣಿಗಿಳಿದು ನೋಡುವ ನೋಟದಲ್ಲಿ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತದೆ. +ಗಾಂಧೀಜಿ ದೊಡ್ಡ ಉದಾಹರಣೆ. ಈಶಾವಾಸ್ಯದಿಂದ, ರಾಮಾಯಣದಿಂದ, ಭಗವದ್ಗೀತೆಯಿಂದ, ತುಲಸೀದಾಸ ಕಬೀರರಿಂದ, ತನ್ನ ಕಾಥೇವಾಡದ ಹಿಂದು ಜೈನಮಿಶ್ರಣದ ಬನಿಯಾಸಮಾಜದ ತನಕ, ಭಾರತದ ಸಂಸ್ಕೃತಿಸಮಸ್ತವೂ ಆತನಲ್ಲಿ ಸೃತಿಯಾಗಿ ಅರಗಿಕೊಂಡಿತ್ತು. ರಾಮ ರಾಮ ಅಂತ ಬದುಕಿದ, ಗುಂಡು ಬಡಿದು ನೆತ್ತರು ಚಿಮ್ಮುವಾಗ ರಾಮ ಅಂತ ಸತ್ತ. ರಾಮನು ನಿಖರವಾಗಿ ಯಾವ ಸ್ಥಳದಲ್ಲಿ ಹುಟ್ಟಿದ, ಏನೇನು ಮಾಡಿದ ಇತ್ಯಾದಿ ಚರಿತ್ರೆಯ ವಿವರಗಳನ್ನು ಅತ ಎಲ್ಲಿಯೂ ಪ್ರಸ್ತಾಪಿಸಿದ್ದೇ ಇಲ್ಲ. ಅದರೆ, ಆಧುನಿಕ ಪಾಶ್ಚಾತ್ಯ ಮಾನವೀಯ ಉದಾರ ಭಾವನೆಗಳಲ್ಲಿ ಹುಟ್ಟಿದ ಡೆಮಾಕ್ರಸಿಯಂಥ ಕಲ್ಪನೆಗಳನ್ನು ಸ್ವದೇಶಿಗೊಳಿಸಿ ಅದನ್ನು ರಾಜಕಾರಣದ ಅದ್ಭುತ ಪಾಕವಾಗಿ ಸಿದ್ಧಗೊಳಿಸಿ ಅನಂತರ ಅದಕ್ಕೆ ‘ರಾಮರಾಜ್ಯ’ವೆಂಬ ಹೆಸರು ಕೊಟ್ಟ. ಆತ ‘ಪ್ರಜಾಪ್ರಭುತ್ವ’ವೆಂದು ಪ್ರಸ್ತಾಪಿಸಿದ್ದು ತೀರಾ ಕಡಿಮೆ. ಅದು ಆತನಿಗೆ ‘ರಾಮರಾಜ್ಯ’ವಾಗಿತ್ತು. ಭಗವದ್ಗೀತೆ ಆತನ ಸೋಹಂ ಉಸಿರು. ಆದರೆ ಮಹಾಭಾರತದ ಯುದ್ಧ ನಡೆಯಿತೆಂಬ ಚಾರಿತ್ರಿಕ ಅಂಶವನ್ನು ಆತ ನಂಬಲಿಲ್ಲ. +ಒಮ್ಮೆ ನೆನೆಸಿಕೊಂಡದ್ದಕ್ಕೆ ಮತ್ತೆ ಮಾರ್ಕ್ಸ್‌ನದೇ ನೆನಪಾಗುತ್ತದೆ. ಆತನ ಸಿದ್ಧಾಂತವು ಚರಿತ್ರೆಯ ವಿವರಗಳ ರಾಶಿರಾಶಿಗಳನ್ನವಲಂಬಿಸಿ ತಾರ್ಕಿಕ ಹಂತಗಳಲ್ಲಿ ಸಿದ್ಧಗೊಳ್ಳುತ್ತದೆ. ಒಟ್ಟಿನ ಪ್ರಾಮುಖ್ಯದಲ್ಲಿ ಆತನ ‘ಕ್ಯಾಪಿಟಲ್’ಗಿಂತ ಕಿಂಚಿತ್ತೂ ಕಡಿಮೆಯಲ್ಲವೇ ಅಲ್ಲದ ‘ಹಿಂದ್ ಸ್ವರಾಜ್’ನಲ್ಲಿ ಒಬ್ಬ ಪ್ರಶ್ನೆ ಕೇಳುತ್ತಾನೆ. ಈತ ಹೇಳುತ್ತಾ ಹೋಗುತ್ತಾನೆ. ಚರಿತ್ರೆ ತರ್ಕಗಳು ಅಲ್ಲಿ ಅಗತ್ಯವೆನಿಸುವುದೇ ಇಲ್ಲ. +ಗಾಂಧಿಯ ದೊಡ್ಡ ಉದಾಹರಣೆ ನಮಗೆ ದೊಡ್ಡ ಭರವಸೆಯನ್ನು ಕೊಡಬಹುದು. ಪಾಶ್ಚಾತ್ಯ ನಾಗರಿಕತೆಯು ತನ್ನ ಹೊಸ ಗಳಿಕೆಯ ಗರ್ವದಲ್ಲಿ ಯಾವುದನ್ನು ಹಿಂದಿಕ್ಕಿಕೊಂಡಿತೋ, ಅನೇಕ ಅನಭಿವೃದ್ಧಿ ರಾಷ್ಟ್ರಗಳು ಕೂಡಾ ಪಾಶ್ಚಾತ್ಯ ಅನುಕರಣೆಯ ಛಲದಲ್ಲಿ ಯಾವುದನ್ನು ಹತ್ತಿಕ್ಕಿಕೊಂಡವೋ ಅಂಥ ಸೃತಿಯು, ಬಹುಶಃ ಇಂಡಿಯಾದ ಅಖಂಡ ದೀರ್ಘ ಸಂಸ್ಕೃತಿ ಪ್ರವಹನಗಳಿಂದಾಗಿ ಇಲ್ಲಿ ಇವತ್ತಿಗೂ ಉಳಿದುಬಂದಿದೆ. ಮೊದಲು ಪ್ರಸ್ತಾಪಿಸಿದ ಇವತ್ತಿನ ನಮ್ಮ ತಲ್ಲಣದಿಂದ ಉತ್ತರಣಗೊಳ್ಳಿಸಿಕೊಳ್ಳಲು ಈ ಸೃತಿಯು ನೆರವಾಗಬಹುದೆ? +ಸೃತಿಯೆನ್ನುವುದು ಯಾಕೆ ಅಷ್ಟು ಮುಖ್ಯವಾಗುತ್ತದೆ? ಯಾತಕ್ಕೆ? +ಪಾಶ್ಚಾತ್ಯರು ಮತ್ತು ನಾವೂ ಕೂಡಾ ಈಚೆಗೆ ಸಾಮಾನ್ಯವಾಗಿ ಭಾವಿಸುತ್ತೇವಲ್ಲ, ಆ ಥರದಲ್ಲಿ ಮನುಷ್ಯಜೀವಿಯೆನ್ನುವವ ಒಂದು ಸ್ವತಂತ್ರ ಘಟಕವಲ್ಲ. ಅವನು ಒಂದು ಜೀವಂತ ಸಮೂಹದ ಅಂಗವಷ್ಟೆ. ಪರ್ಯಾಯವಾಗಿ, ಸಮೂಹಗಳು ಜೀವಂತ ಮಾನವಕುಲವೆಂಬ ಸಮಷ್ಟಿಯ ಅಂಗಗಳು. ಒಂದು ಸಮುದಾಯವೋ ಸಮಾಜವೋ ರಾಷ್ಟ್ರವೋ ದೊಡ್ಡದೊಂದು ಸಮಸ್ಯೆ ಬಂದಾಗ, ಧರ್ಮ ಸಂಕಟವು ಪ್ರಾಪ್ತವಾದಾಗ ಹೇಗೆ ಅದನ್ನು ಉತ್ತರಿಸಿ ಎದುರಿಸುತ್ತದೆ? ಪ್ರಸ್ತುತವೆನ್ನುವುದು ಈ ಮಾನವ ಕುಲದ ಬದುಕಿನ ಒಂದು ಬಲುಬಲು ಚಿಕ್ಕ ಚೂರು. ಇದಕ್ಕೆ ಬೆಸೆದುಕೊಂಡು ಅಜ್ಞಾತ ಅದೃಷ್ಟವಾಗಿರುವ ಒಂದು ಬಹು ದೀರ್ಘ, ಅನಾದಿ, ಭೂತಕಾಲ ಅದಕ್ಕಿದೆ. ಸೃತಿಗಳನ್ನು ಉದ್ಭೋಧಿಸಿಕೊಂಡು ಅದರಿಂದ ಸಂಪನ್ನನಾದ ಇವತ್ತಿನ ಮನುಷ್ಯನು ಇಡೀ ಮಾನವ ಕುಲದ ಮೊನೆಯಾಗುತ್ತಾನೆ, ತೆನೆಯಾಗುತ್ತಾನೆ. ಹಾಗಾದಾಗ ಇವತ್ತಿನ ಅವನ ನಿರ್ಣಯವು ಇಡೀ ಮಾನವಕುಲವು ಕೈಗೊಂಡ ನಿರ್ಣಯವಾಗುತ್ತದೆ. +ಇವತ್ತು ಇಲ್ಲಿ ಬದುಕುವ ಈ, ಅಣುವಿನೊಳಗಣ ಸಹಸ್ರಕೋಟಿಗಳಲ್ಲೊಂದು ಭಾಗದ ಪರಮಾಣುವಾದ ನಾನು ಇಡೀ ಮಾನವಕುಲದ, ವಿಶ್ವ ಸಮಸ್ತದ ಆಸ್ತಿಗಳಿಗೂ ಮತ್ತು ಜವಾಬ್ದಾರಿಗಳಿಗೂ ಹಕ್ಕುದಾರ, ಹೊಣೆಗಾರ. ಇತಿಹಾಸಪೂರ್ವಕ್ಕೂ ಪೂರ್ವದ ವೈದಿಕ ಋಷಿಯಿಂದ ಮೊದಲುಗೊಂಡು ಮೊನ್ನೆ ಬಂದ ಆಧುನಿಕ ಪರಮಾಣು ವಿಜ್ಞಾನಿಯ ವಿನೂತನ ಶೋಧದ ತನಕ, ಎಲ್ಲಕ್ಕೂ ನಾನು ವಾರಸುದಾರ. ಯಾವುದನ್ನೂ ನಿರಾಕರಿಸಲಾರೆ, ಕೊಡಹಿಕೊಳ್ಳಲಾರೆ. ಇವತ್ತಿನ ಎಲ್ಲವನ್ನೂ ಒಳಗೊಳ್ಳುತ್ತಾ, ಅನಂತರ ಸೃತಿಯ ಮೂಲಕ ಭೂತಕಾಲದ ಅಪಾರಸಮಸ್ತವನ್ನು ಒಳಗೊಂಡು, ನಾನು ಅದೆಲ್ಲದರ ಸೂಜಿ ಮೊನೆಯಾಗಿ ಕೈಗೊಳ್ಳುವ ನಿರ್ಣಯವೇ ಸಹಜವಾಗುತ್ತದೆ, ಸುಷ್ಠುವೂ ಸಾಧುವೂ ಆಗುತ್ತದೆ. ಈ ಕಾರಣದಿಂದಲೇ ಸೃತಿಯೆಂಬುದು ಅಷ್ಟು ಮುಖ್ಯವಾದ್ದು. +ನಮ್ಮ ಕವಿ ಪುತಿನ ಸೃತಿ ಸಂಗೋಪನ ಉದ್ಬೋಧನಗಳ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ‘ಮಳೆಯು ನಾಡ ತೊಯ್ಯುತಿರೆ’ ಎಂಬ ಕಿರು ಹಾಡಿನಿಂದ ಹಿಡಿದು ಇತ್ತೀಚಿಗಿನ ಮಹಾಕಾವ್ಯ ‘ಹರಿಚರಿತೆ’ಯ ತನಕ ಅವರ ಬರವಣಿಗೆಯೆಲ್ಲ ಸೃತ್ಯುದ್ಬೋಧದ ಪೌರೋಹಿತ್ಯ ವಹಿಸಿದೆ. +ಎಲ್ಲ ಕಾವ್ಯ ಕಲೆ ಸಂಸ್ಕೃತಿಗಳೂ ಪ್ರಾಯಶಃ, ಸೃತಿಯ ಸಂಗೋಪನ ಉದ್ಬೋಧಗಳಿಗಾಗಿ ದುಡಿಯುತ್ತವೆ. ಪ್ರಾಚೀನ ನಾಟಕಕಾರನಾದ ಭಾಸನನ್ನು ನೋಡಿ. ಅವನ ಕಿರುನಾಟಕಗಳೆಲ್ಲವುಗಳಲ್ಲೂ ರಕ್ತ ವಂಶ ಕುಲಕುಟುಂಬಗಳು ಕೀರ್ತಿತವಾಗುತ್ತವೆ. ಆದರೆ ಆತನ ಕಾಲದಲ್ಲಾಗಲೇ ಈ ಸಂಬಧಗಳೆಲ್ಲಾ ಎಷ್ಟೋಮಟ್ಟಿಗೆ ಕಳೆದುಹೋಗಿ, ಅದಕ್ಕೆ ಬದಲು ರಾಜಪ್ರಜರ ದಣಿ ಆಳುಗಳ ತರತಮವ್ಯವಸ್ಥೆಯ ಹೊಸ ಸಂಬಂಧಗಳು ರೂಪುಗೊಳ್ಳತೊಡಗಿದವು. ಅದಾಗಲೇ ಇಂಡಿಯಾದ ಬೃಹತ್‌ರಾಜ್ಯ ಸಾಮ್ರಾಜ್ಯಗಳ ನಿರ್ಮಾಣಪ್ರಯತ್ನಗಳು ನಡೆದಿದ್ದವು., ನಡೆಯುತ್ತಿದ್ದವು. ಆ ಘಟ್ಟದಲ್ಲಿ ಭಾಸನು ತನ್ನ ಹಿಂದಣ ಸಂಸ್ಕೃತಿಘಟ್ಟದ, ರಕ್ತಕುಟುಂಬಸಂಬಂಧಗಳ ಘಟ್ಟದ, ಸೃತಿಯನ್ನು ಬಲು ಶ್ರದ್ಧೆಯಿಂದ ಆವಾಹಿಸಿಕೊಳ್ಳುತ್ತಾನೆ. ಆತನ ಪ್ರತಿಜ್ಞಾ ನಾಟಕ ಸ್ವಪ್ನನಾಟಕಗಳಲ್ಲಿ ಸೃತಿ ಮತ್ತು ಪ್ರಸ್ತುತಗಳು ಮುಖಾಮುಖಿಯಾಗಿ ಬಹು ಪ್ರಬುದ್ಧವಾಗಿ ಒಂದು ಸಂವಾದವನ್ನು ಕಲ್ಪಿಸುತ್ತವೆ. ರಾಜಾ ಉದಯನನು ಹೆಣ್ಣುಗಂಡು ಸಂಬಂಧದಲ್ಲಿ ವೀಣೆಸಂಗೀತಗಳ ಸೃತಿಯಲ್ಲಿ ಮುಳುಗಿಹೋಗಿದ್ದಾನೆ. ಇದು ನಾಟಕದ ಒಂದು ಮುಖ. ಮಹಾಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ಮಂತ್ರಿ ಯೌಗಂಧರಾಯಣನ ಹಂಬಲ ಕರ್ತವ್ಯಗಳು, ಪ್ರಸ್ತುತದ ಕಾಳಜಿಗಳು ನಾಟಕದ ಮತ್ತೊಂದು ಮುಖ. ಉದಯನನ ಸೃತಿಪಟಲತೆಯನ್ನು ಪ್ರಸ್ತುತದ ರಾಜಕಾರಣಕ್ಕೆ ಹೇಗೋ ಹೊಂದಿಸಿ ಹತ್ಯಾರವಾಗಿ ಮಾರ್ಪಡಿಸಲಿಕ್ಕೆ ಯೌಗಂಧರಾಯಣನು ತನ್ನ ಚಾತುರ್ಯವನ್ನು ವ್ಯಯಿಸುತ್ತಾನೆ. ಈ ಎರಡರ ಮುಖಾಮುಖಿಯೇ ಸಂಭಾಷಣ ಸಂವಾದಗಳೇ ಒಟ್ಟೂ ನಾಟಕ. +ನಮ್ಮ ಭಾಗವತ ಗ್ರಂಥವೂ ಭಾಗವತ ಪಂಥವೂ ಬೋಧಿಸುವ ಸೃತಿಗಳು ಇವತ್ತು ನಮಗೆ ಪ್ರಾಯಶಃ, ಮತ್ತಷ್ಟು ಮುಖ್ಯವಾಗುತ್ತವೆ. ಜಾತಿಭೇದ ವರ್ಗಭೇದಗಳನ್ನು ಮೀರಿಸುವ ಶ್ರದ್ಧಾವಂತಪ್ರಯತ್ನವು ಅಲ್ಲಿ ನಡೆದಿದೆ. ಕೊಳಲು ಕೃಷ್ಣಗೋಕುಲಗಳು ಮಾರ್ಗದೇಸಿಯೆಂಬ ಭಿನತೆಯನ್ನು ಮುಸುಳಿಸಿ ನಿವಾಳಿಸುವ ಒಂದು ಉಪಾಯವನ್ನು ಕಾಣಿಸಿವೆ. ಗೋಕುಲದಂಥ ಪುಟ್ಟ ಗ್ರಾಮೀಣ ಭಾಗವತ ಸಮುದಾಯವು ತೀರಾ ಭಿನ್ನ ಸಂಸ್ಕೃತಿಯದಾಗಿದ್ದೂ ಮಾನವಂತವಾಗಿ ತಲೆಯೆತ್ತಿ ಬಾಳಿಕೊಂಡಿತು. ಮಾತ್ರವಲ್ಲ, ಅಂತಿಮವಾಗಿ ಅದು ತನ್ನನ್ನು ಅಖಿಲಭಾರತೀಯ ಏಕಚ್ಛತ್ರದಡಿಯ ಒಂದು ಸ್ವತಂತ್ರ ಸಮುದಾಯವೆಂದೂ ಗಣಿಸಿಕೊಂಡಿತು. +ಕೃಷ್ಣ ಕೊಳಲು ಗೋಕುಲಸೃತಿಯು ಕನ್ನಡದಲ್ಲಿ ಜೈನನಾದ ಪಂಪನಿಂದಲೇ ಶುರುವಾಗಿ ರುದ್ರಭಟ್ಟ ದಾಸರು ಕುಮಾರವ್ಯಾಸ ಚಿಕವೀರರಾಜ ಇತ್ಯಾದಿ ಪರಂಪರೆಯಲ್ಲಿ ಒಂದು ಕಡೆ, ಶಾಸನಗಳಲ್ಲಿ ಇನ್ನೊಂದು ಕಡೆ ವಾಙ್ಮಯ ಹರಿದು ಬಂದಿದೆ. ಆಧುನಿಕರಲ್ಲಿ, ಅಂಬಿಕಾತನಯದತ್ತ ಕುವೆಂಪು ನರಸಿಂಹಸ್ವಾಮಿ ಅಡಿಗ ಮುಂತಾದವರ ಹೆಸರು ತಟ್ಟನೆ ನೆನಪಾಗುತ್ತವೆ. +ಕೊಳಲನೂದಿದಾನೇನಾ-ಕೃಷ್ಣ +ಕೊಳಲನೂದಿದಾ….. +ಕೋಲು ಹಾಕಿದಂತೆ ಕಾಲ +ತಾಲದಲ್ಲಿ ಕುಣಿಯುತಿರಲು +ಮೂಲ ಹಿಡಿದು ಅಲ್ಲಾಡಿಸಿದ +ಬಳ್ಳಿಯಂತೆ ಬಳುಕಿತು ಜೀವ-ಕೊಳಲ… +ಮೈಗೆ ಮೈಗೆ ತುಟಿಯ ಸೋಂಕಿ +ಕೊಳಲ ಮೇಲೆ ಬೆರಳಾಡಿಸಿ +ಮಾತು ಮಾತು ತೂತು ಮಾಡಿ +ಅಂಬಿಕಾತನಯನ ತುಂಬಿ-ಕೊಳಲನೂದುವ +(ಅಂಬಿಕಾತನಯದತ್ತ) +ಬೃಂದಾವನಕೆ ಹಾಲನು ಮಾರಲು +ಹೋಗುವ ಬಾರೇ ಬೇಗ ಸಖಿ…. +ಚಿನ್ನವ ಕೊಡನು ರನ್ನವ ಕೊಡನು +ತನ್ನನೆ ಕೊಡುವನು ಬಾರೆ ಸಖಿ…. +(ಕುವೆಂಪು) +ಗಾಲಿ ಉರುಳಿದಂತೆ-ಕಾಡಿನ +ಗಳಿ ಹೊರಳಿದಂತೆ +ಬಾನ ದೇಗುಲದ +ಬೆಳ್ಳಿ ಗೋಪುರದ +ಘಂಟೆ ಮೊಳಗಿದಂತೆ +ಹಾಲು ಕಂಚಿನ +ಹೊನ್ನ ಮಿಂಚಿನ +ಘಂಟೆ ಮೊಳಗಿದಂತೆ +ಊರ ದಾರಿಯಲಿ +ಹೂವ ತೇರಿನಲಿ +ಕೃಷ್ಣ ಬರುವನಂತೆ….. +ಸೆರಗ ಸೆಳೆದರಿಯ ಬೆಣ್ಣೆ ಕದ್ದರಿಯ +ಚೆಲವ ಬಂದ ದಾರಿ +ಹಣೆಯ ಕತ್ತುರಿಯ ತಿಲಕದಚ್ಚರಿಯ +ಕಂದ ಬಂದ ದಾರಿ…. +ಕಿರು ತಾರೆ ಮುಡಿದೊಂದು ಮುಗಿಲು-ತನ್ನ +ಚೆಲುವಿಗೆ ಬೆರಗಾದ ಮುಗಿಲು. +ಕೊಳಲನು ತುಟಿಗಿಟ್ಟು ಮುಗಿಲು +ತುಟಿ ನನ್ನ ಕೊಳಲೆನುವ ಮುಗಿಲು…. +ಶ್ರೀಕೃಷ್ಣನಂತೊಂದು ಮುಗಿಲು +ರಾಧೆಯಂತಿನ್ನೊಂದು ಮುಗಿಲು +ಅಲ್ಲೊಂದು ಇಲ್ಲೊಂದು ಮುಗಿಲು +ಮುಗಿಲೆಲ್ಲಾಕೃಷ್ಣನ ಕೊಳಲು…. +(ನರಸಿಂಹಸ್ವಾಮಿ) +ಯಾವ ಮೋಹನ ಮುರಲಿಕರೆಯಿತು +ದೂರತೀರಕೆ ನಿನ್ನನು….. +ಯಾವ ಬೃಂದಾವನವು ಚಾಚಿತು +ತನ್ನ ಮಿಂಚಿನ ಕೈಯನು…. +(ಅಡಿಗ) +ಗೋಕುಲ ನಿರ್ಗಮನವು ಕನ್ನಡದ ಸಂವೃದ್ಧ ಪರಂಪರೆಯನ್ನು ಬೆನ್ನಿನಲ್ಲಿಟ್ಟುಕೊಂಡು ಗೋಕುಲದ ಘಟ್ಟದಿಂದ ಮಧುರೆಗೆ ಜಿಗಿದು ದಾಟಿಕೊಳ್ಳುವ (ಲೌಕಿಕ ಅಲೌಕಿಕ, ರಾಜಕೀಯ-ಧಾರ್ಮಿಕ, ಸಾಮಾಜಿಕ-ಆದ್ಯಾತ್ಮಿಕ ಎಲ್ಲವೂ ಒಗ್ಗೂಡಿದ) ಸಂಕ್ರಮಣ ಸಂಭ್ರಮವನ್ನು ಚಿಂತಿಸುತ್ತದೆ. +ಕೃಷ್ಣನ ಕೊಳಲಿನ ಕರೆ-ಆಲಿಸು…. +ಮುತ್ತಿನ ಕುಪ್ಪಸ ಹರಳೋಲೆ +ಮಲ್ಲಿಗೆ ಜಾಜಿ ಮುಡಿಮಾಲೆ +ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ +ಮರೆತೇ ಬಂದೆವೆ ಮನೆಯಲ್ಲೇ….ಆಲಿಸು…. +ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ +ಮಿಕ್ಕಾದ ನೆರೆಹೊರೆ ನಕ್ಕರೆ ನಗಲಿ….ಆಲಿಸು…. +ಅಂತ ಪ್ರಾರಂಭವಾದ್ದು, ಎಲ್ಲ ಬದಲಾಗಿ, +ಎಲ್ಲ ಬದಲಾದ ಮೇಲೂ ಅಂತಿಮವಾಗಿ, +ಇದ್ದದ್ದು ದಿಟ ಅವನೊಲಿದುದು ದಿಟ ನಾವು +ನಲಿದುದು ದಿಟ ಬಹ ನೆಚ್ಚು ದಿಟ +ಅನ್ನುವ ‘ಸೃತಿ-ವಾಸ್ತವಗಳ’, ‘ಋತು-ಸತ್ಯ’ಗಳ ಐಕ್ಯದಲಿ ಹೊಳೆದು ಮುಗಿಯುತ್ತದೆ. +ಮುಗ್ಗರಿಸುತ್ತ ನಡೆದ ಈ ಬರೆವಣಿಗೆಯನ್ನು ಕೊಂಚ ಮುಗ್ಗರಿಸಿಕೊಂಡೇ ಮುಗಿಸುತ್ತಿದ್ದೇನೆ. ಗೋಕುಲ ನಿರ್ಗಮನದಂಥ ಕೃತಿಗಳು ನನ್ನ ಊರಿಗೆ, ಕರ್ನಾಟಕದ ಸಮುದಾಯಕ್ಕೆ ಈಗ ಬಹು ಮುಖ್ಯ. ಅವು ನಮ್ಮನ್ನು ಸೃತಿದೀಪ್ತಗೊಳಿಸುತ್ತವೆ, ಸಂಪನ್ನವಾಗಿಸುತ್ತವೆ, ಅದಕ್ಕಾಗಿ. ಹಾಗೆ ಸಂಪನ್ನವಾದ ನಾವು ಪ್ರಾಯಶಃ, ಇವತ್ತಿನ ಜೀವ ತುಳ್ಕಾಡಿಸುವ ಎಲ್ಲ ತಲ್ಲಣಗಳ ಮಧ್ಯೆ, ಫ್ಯಾಕ್ಟರಿಯಿಂದ ಬೆಂದು ಹೊರಬರುವ ನಮ್ಮ ಎಳೆಯ ಹೆಣ್ಣುಮಕ್ಕಳು ನಗರ ರಸ್ತೆಯಲ್ಲಿ ದಿಕ್ಕುಗಾಣದೆ ಆಯುಷ್ಯ ತೇಯುತ್ತಿರುವ ನಮ್ಮ ನಮ್ಮ ಕೆಚ್ಚು ಕುಡಿ ಗಂಡುಗಳು ಬಿಕೋ ಅನ್ನುವ ಬೋಳುಹಳ್ಳಿಗಳು ಇತ್ಯಾದಿ ವಾಸ್ತವಗಳ ಮಧ್ಯೆ ಹತಪ್ರಧರಾಗದೆ ಸ್ಥಿರವಾಗಿ ನಿಲ್ಲಲು, ನಿಂತು ಸ್ಥಿರವಾಗಿ ಧೈರ್ಯದಿಂದ ಮುಂದಣ ಹೊಸ ದಾರಿಯನ್ನು ಶೋಧಿಸಿಕೊಳ್ಳಲು ಸಮರ್ಥರಾಗುತ್ತೇವೆ. +ಅನುವಾದ: ಶ್ರೀಧರ ಕಲ್ಲಾಳ ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ […] +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […] +ಧನ್ಯತೆಯ ಧ್ಯಾಸ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_371.txt b/Kannada Sahitya/article_371.txt new file mode 100644 index 0000000000000000000000000000000000000000..b39b33745b5d0fea39982b88b0ed35ff04b13d18 --- /dev/null +++ b/Kannada Sahitya/article_371.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಪೂರ್ವಿ +ತಾಳ — ಅಟ್ಟ +ಬಂದೆವಯ್ಯ ಗೋವಿಂದಶೆಟ್ಟಿ ||ಪ|| +ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಅ.ಪ|| +ಆಪ್ಪಾಲು ಅತಿರಸ ತುಪ್ಪ ಕಜ್ಜಾಯವು | +ಒಪ್ಪುವ ಯಾಲಕ್ಕಿ ಶುಂಠಿ ಮೆಣಸು || +ಅಪ್ಪರೂಪವಾದ ಕಜ್ಜಾಯರಾಶಿಗಳ | +ಛಪ್ಪನ್ನದೇಶಕೆ ಮಾರುವ ಶೆಟ್ಟಿ ||೧|| +ಒಡೆದ ಮಡಕೆಯನ್ನು ಇಡದೆ ನಾಮವ ಮಾಡಿ | +ಕೊಡುವೆ ನೀ ಕಾಸಿಗೆ ಒಂದೊಂದನು || +ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ | +ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||೨|| +ಶೇಷಗಿರಿಯ ಮೇಲೆ ಇಪ್ಪ ತಿಮ್ಮಶೆಟ್ಟಿ | +ದೇಶಕೆ ಪ್ರಸಾದವ ನಡಸುವ ಶೆಟ್ಟಿ || +ಆಶೆಯಿಂದ ಹಣ – ಕಾಸ ಗಳಿಸುವ ಆದಿ – | +ಕೇಶವನಾರಯಣನೆಂಬ ಶೆಟ್ಟಿ ||೩|| +ರಾಗ — ಕಾಂಬೋದಿ ತಾಳ — ಝಂಪೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ |ನೀ ದೇಹದೊಳಗೊ ನಿನ್ನೊಳು ದೇಹವೊ ||ಪ|| ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ |ಬಯಲು ಆಲಯವೆರಡು ನಯನದೊಳಗೊ ||ನಯನ ಬುದ್ಧಿಯ ಒಳಗೊ […] +ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] +ಅಮ್ಮಿ: ಮೊಲೆ ಹಾಲುಠಾವಿಲಿ- ಸ್ಥಳದಲ್ಲಿ, ಜಾಗದಲ್ಲಿಧರ್ಮವೇ ಜಯವೆಂಬ ದಿವ್ಯ ಮಂತ್ರಧರ್ಮವೇ ಜಯವೆಂಬ ದಿವ್ಯ ಮಂತ್ರ ಪ ಮರ್ಮವನರಿತು ಮಾಡಲಿಕೆ ಬೇಕು ತಂತ್ರ ಅವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕುದ್ವೇಷ ಮಾಡಿದವನ ಪೋಷಿಸಲಿಬೇಕುಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_372.txt b/Kannada Sahitya/article_372.txt new file mode 100644 index 0000000000000000000000000000000000000000..1973571a49694102ca505ed0dd1673c6f8b08531 --- /dev/null +++ b/Kannada Sahitya/article_372.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೂರ ದೂರದ ತನಕ +ದಾರಿ ಕಾಯುವ ಹುಡುಗಿ +ಏನು ಹೇಳೆ ನಿನ್ನ ಮನದ ಅಳಲು. +ಯಾವ ಊರಿನ ಅವನು! +ಯಾವ ಊರಿನ ಇವಳು! +ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು +ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ ಕೊರೆತ. +ಒಂದೂರಿನಲ್ಲಿ ಒಂದು ಸಂಜೆ….. +ಅವಳಿಗೂ ತಿಳಿದಿತ್ತು ಅವನ ಮಿಡಿತ. +ಅವನ ಉಸಿರಿನ ಬಿಸಿಯು +ಗಲ್ಲದಂಚಿನ ಮೇಲೆ +ತೋರುಬೆರಳಿನ ಸ್ಪರ್ಷ +ತೋಳುಗಳ ಮೇಲೆ +ಹಾಗೆ ಬೆಚ್ಚಗೆ ಕುಳಿತು ಕಾಡಬೇಕೆ? +ತಣ್ಣಗೆ ಸುಳಿದು, ಸಣ್ಣಗೆ ಸುಯ್‌ಗುಡುತ್ತಾ +ಎಲ್ಲರ ಮಲಗು ಕೋಣೆಯಲ್ಲೂ +ಹಣಕಿ ಹಾಯುತ್ತದೆ +ಲಜ್ಜೆಗೆಟ್ಟ ಗಾಳಿ. +ರಾತ್ರಿ ಕಣ್ಣಿನ ತುಂಬ +ಚುಕ್ಕಿ ಚಂದ್ರನ ತಂಪು +ಸುಳಿದಿತ್ತು ಗಾಳಿಯಲಿ ಜಾಜಿ ಕಂಪು. +ಉರಿವ ಸೂರ್ಯನ ಕೆಳಗೆ +ಜಾಜಿ ಹೂವಿನ ಪ್ರೀತಿ! +ಹರಿವ ನದಿಗೇಕೆ ಹೊತ್ತ ಚಿಂತೆ? +ಈಗ ಜಾಜಿಯ ಮಟ್ಟಿ +ಮೈಯ್ಯೆಲ್ಲ ಮುಳ್ಳು +ಹಸಿರು ತೊಟ್ಟಿನ ತುದಿಗೆ +ಕಪ್ಪು ಗೊಂಚಲ ಕಾಯಿ +ಒಳಗೆ ಕರಿ ಬೀಜ. +ಬಿತ್ತಿದರೆ ಹುಟ್ಟುವುದೆ ಮತ್ತೆ ಕನಸು? +ನವಿರು ಹಳದಿಯಹಾಗೆ, +ಅವನ ಸ್ಪರ್ಷದ ಹಾಗೆ +ಮಕರಂದ ಚೆಲ್ಲುವುದೆ ಗಾಳಿಯಲ್ಲಿ. +***** +ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […] +ನೆನಪಿನಾಳದಿಂದ ಘಂ ಎಂದಿತ್ತು ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ ಬಟ್ಟಲಲಿ ಕಾದ ಕೇಸರಿ ಹಾಲು….. ಹನಿ ಹನಿ ಮಳೆ ಬಿದ್ದು […] +ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_373.txt b/Kannada Sahitya/article_373.txt new file mode 100644 index 0000000000000000000000000000000000000000..a6b507d8ec38bd0f97345743744cd54db74008dd --- /dev/null +++ b/Kannada Sahitya/article_373.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾಳಿನ ಬೀಳಿದು, ಕೂಳಿನ ಗೋಳಿದು +ಸಾವಿನ ಸಂತೆಯು ನೆರೆಯುತಿದೆ; +ವೇದ ಪುರಾಣದ ವಾದಕೆ ಸಿಲುಕದ +ವೇದನೆಯೊಂದಿದು ಕೊರೆಯುತಿದೆ. +ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ +ಕಣ್ಣಿಗೆ ಕತ್ತಲೆಗಟ್ಟುತಿದೆ; +ಬಡತನ ಶಾಪಕೆ, ಒಡಲುರಿ ತಾಪಕೆ +ಮಸ್ತಕ ಚಿಣ್ ಚಿಟಲೆನ್ನುತಿದೆ. +ಚಿಂತೆಯ ಕಾಡಿನ ಎಲುವಿನ ಗೂಡಿನ +ಜೀವನ ಹಕ್ಕಿಯು ನರಳುತಿದೆ; +ಹಾರುತ ಹೋರುತ ಮೇಲಕ್ಕೇರುತ +ಪಕ್ಕ ಸೋತು ನೆಲಕುರುಳುತಿದೆ. +ಎಲುವಿನ ಹಂದರ ಜೀವನ ಮಂದಿರ +ಅದುರಿ ಮುದುರಿ ಕುಪ್ಪರಿಸುತಿದೆ; +ನಾಡಿಯು ಸತ್ತಿಹ ನೆತ್ತರು ಬತ್ತಿಹ +ತೊಗಲುದೇಹವಪ್ಪಳಿಸುತ್ತಿದೆ. +ತಾಳದೆ ಬಾಳದೆ ಬೀಳದೆ ಏಳದೆ +ತೆಕ್ಕಿಮುಕ್ಕಿ ಹೊರಳಾಡುತಿದೆ; +ಕಂಡೂ ಕಾಣದೆ, ಕಂಡರು ಕೇಳದೆ +ಬಿಕ್ಕಿ ಬಿಕ್ಕಿ ತೊಳಲಾಡುತ್ತಿದೆ. +ಚೀರಲು ಹಲುಬಲು ಬೊಬ್ಬೆಯ ಹೊಡೆಯಲು +ಕರುಳ ಸುರುಳಿ ಹೊಡಮರಳುತಿದೆ; +ಅಕ್ಕಟಕ್ಕಟಾ! ಪ್ರಾಣದ ಸಂಕಟ +ಧೀಂಕಿಟ ಧುಮುದುಮುಗುಟ್ಟುತಿದೆ. +***** +ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […] +(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […] +೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_374.txt b/Kannada Sahitya/article_374.txt new file mode 100644 index 0000000000000000000000000000000000000000..21dcb0b3e9bf4e02e8fe6445c22c62f5376da02e --- /dev/null +++ b/Kannada Sahitya/article_374.txt @@ -0,0 +1,24 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾವು +ನಮ್ಮ ನಮ್ಮ ದಿನಚರಿಯಲ್ಲಿ +ಎಂದಿನಂತೆ……… +ಒಬ್ಬರ ಮುಂದೊಬ್ಬರು +ಸುಮ್ಮನೆ ಹಾಗೆ +ಇರುತ್ತೇವೆ. +ಆಗಲೂ ಹಾಗೆ +ಈಗಲೂ ಹಾಗೆ +‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ +ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! +***** +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […] +ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_375.txt b/Kannada Sahitya/article_375.txt new file mode 100644 index 0000000000000000000000000000000000000000..c42fb01f0f394f403238da7eb4d20fe7428b58fb --- /dev/null +++ b/Kannada Sahitya/article_375.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧೯೯೭ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ನಡೆಸಬೇಕೆಂದಿರುವ ‘ಜಾಗತಿಕ ಸೌಂದರ್ಯ ಸ್ಪರ್ಧೆ’ಯನ್ನು ನಾವು ಎರಡು ನೆಲೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಮೊದಲನೆಯದಾಗಿ, ನಮ್ಮ ಸರ್ಕಾರವು ಈ ಕಾರ್ಯಕ್ರಮದ ಜೊತೆ ಶಾಮೀಲಾಗಿ ಅದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ದೊಡ್ದ ತಪ್ಪು; ಅದಕ್ಕಾಗಿ ಸರ್ಕಾರವನ್ನು ಖಂಡಿಸಿ ಮಣಿಸಬೇಕಾಗಿದೆ. ಎರಡನೆಯದಾಗಿ ‘ಸೌಂದರ್ಯ ಸ್ಪರ್ಧೆ’ಯೆಂಬ ಈ ವಿಶ್ವ – ವಾಣಿಜ್ಯ ಚಟುವಟಿಕೆಯು ಪ್ರಸ್ತುತದಲ್ಲಂತೂ ನಮಗೆ ಅಪಾಯಕಾರಿ; ಅದಕ್ಕಾಗಿ ನಾವು ನಮ್ಮಲ್ಲೇ ನಮ್ಮ ಅಂತರಂಗದಲ್ಲೇ ಇದ್ದಿರಬಹುದಾದ ಅಲ್ಪಚಪಲವನ್ನು ಸ್ವತಃ ಪ್ರತಿಭಟಿಸಿಕೊಂಡು ಗೆದ್ದುಕೊಳ್ಳಬೇಕಾಗಿದೆ. +ಖಾಸಗಿ ವಿಶ್ವವಾಣಿಜ್ಯಕೂಟವೊಂದು ವ್ಯಾಪಾರ ಪ್ರವರ್ತನೆಯ ಸಾಧನವಾಗಿ ಯೋಜಿಸಿರುವ ಈ ಸ್ಪರ್ಧೆಯನ್ನು ಭಾರತದಲ್ಲಿ ಅಂಥದೇ ಒಂದು ಖಾಸಗಿ ಸಂಸ್ಥೆಯು ಮೂವತ್ತು ಕೋಟಿ ರೂಪಾಯಿಗಳಿಗೆ ವ್ಯಾಪಾರ ಗುತ್ತಿಗೆ ಹಿಡಿದು ನಡೆಸಲಿದೆ. ಈ ಗುತ್ತಿಗೆದಾರರು ಅದರ ಪ್ರಚಾರಕ್ಕಾಗಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಬೇಕೆಂದಾಗ, ಸರ್ಕಾರಕ್ಕೆ ಅಥವಾ ಪ್ರಜಾಸಮುದಾಯಕ್ಕೆ ಯಾವುದೇ ನೇರ ಸಂಬಂಧವಿಲ್ಲದ ಈ ಚಿಲ್ಲರೆ ವ್ಯವಹಾರಕ್ಕೆ ರಾಜಧಾನಿಯ ರಾಜ್ಯ ಶಕ್ತಿಕೇಂದ್ರವೆಂಬಂತಿರುವ ವಿಧಾನಸೌಧದಲ್ಲಿ ಅವಕಾಶವನ್ನು ಒದಗಿಸಿಕೊಡಲಾಯಿತು. ಈ ಹಿಂದೆ ಯಾವತ್ತೂ ವಿಧಾನಸೌಧದ ಸಭಾಂಗಣವನ್ನು, ಇಂಥ ಖಾಸಗಿ ಅಪ್ರಸ್ತುತ ಕಾರ್ಯಕ್ರಮವಿರಲಿ, ಕನ್ನಡ ಸಾಹಿತ್ಯ ಪರಿಷತ್ತಿನಂಥ ನಮ್ಮದೇ ಒಂದು ಉನ್ನತ ಸಂಸ್ಥೆಯ ಕಾರ್ಯಕ್ರಮಕ್ಕೆ ಕೂಡಾ ಒದಗಿಸಿಕೊಟ್ಟಿದ್ದಿಲ್ಲ. ಇದರ ಮೇಲೆ, ನಮ್ಮ ರಾಜ್ಯಗೌರವದ ಪ್ರತಿನಿಧಿಗಳಾದ ಮುಖ್ಯಮಂತ್ರಿಗಳೇ ಆ ಪತ್ರಿಕಾಗೋಷ್ಠಿಯಲ್ಲಿ ಖುದ್ದಾಗಿ ಹಾಜರಿದ್ದು ಈ ಚಟುವಟಿಕೆಯನ್ನು ಬಾಯ್ತುಂಬಿ ತುಳುಕುವಷ್ಟು ಹೊಗಳಿ ಅದಕ್ಕೆ ಸರ್ಕಾರದ ಮುಕ್ತ ಸಹಾಯ ಸಹಕಾರಗಳನ್ನು ಘೋಷಿಸಿದರು. +ಎರಡು ವರ್ಷ ಮಿಕ್ಕು ಆಡಳಿತ ನಡೆಸಿರುವ ನಮ್ಮ ಈ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡ ಆಶ್ವಾಸನೆಗಳಲ್ಲಿ ಯಾವುದೊಂದನ್ನೂ, ಕಿಂಚಿತ್ತಾದರೂ ಸಾಧಿಸಲಿಕ್ಕೆ ಸಾಧ್ಯವಾಗದೆ ನಿಷ್ಕ್ರಿಯವಾಗಿದೆ. ನಮ್ಮ ರಾಜಕಾರಣದ ಬಹುಮೌಲಿಕ ಸಂಗತಿಯಾದ ಪಂಚಾಯತಿ ರಾಜ್ಯ ಪ್ರವರ್ತನೆಯ ಸಂಬಂಧದಲ್ಲಿ ಈ ಸರ್ಕಾರವೂ ಇನೂ ಸಮಿತಿ – ವರದಿ – ಸಲಹೆಗಳೆಂದು ತೊದಲುತ್ತ ದಿವ್ಯ ನಿರ್ಲಕ್ಷ್ಯದಲ್ಲಿ ದಿನ ಕಳೆಯುತ್ತಿದೆ. ತನ್ನದೇ ಪಕ್ಷದ ಸರ್ಕಾರವು ಹಿಂದೆ ಜಾರಿಗೆ ಕೊಟ್ಟು ಇಡೀ ರಾಷ್ಟ್ರದಲ್ಲೇ ಗಣ್ಯವೆನಿಸಿದ್ದ ಮತ್ತು ಕಾರ್ಯತಃ ಯಶಸ್ಸು ಕಂಡಿದ್ದ ಪಂಚಾಯತಿ ರಾಜ್ಯ ವ್ಯವಸ್ಥೆಯನ್ನು ಮುಂದೆ ಬಂದ ಸರ್ಕಾರವು ರದ್ದುಗೊಳಿಸಿತಷ್ಟೆ? ಈಗಿನ ಸರ್ಕಾರವು ಆ ಹಿಂದಿನ ವ್ಯವಸ್ಥೆಯನ್ನು ಇದ್ದುದಿದ್ದ ಹಾಗೆಯೇ ಆದರೂ ಪುನಃ ಜಾರಿಗೊಳಿಸುವಂತೆ ಒಂದು ಸುಲಭ ನಿರ್ಧಾರ ಕೈಗೊಂಡಿದ್ದರೂ ದೊಡ್ಡ ಕೆಲಸ ಮಾಡಿದಂತಾಗುತ್ತಿತ್ತು. ಅದನ್ನೂ ಮಾಡಲಿಲ್ಲ. ಇಂಥ ಸಂದರ್ಭದಲ್ಲಿ, ಅಪ್ರಸ್ತುತವೂ ಅಸಂಬದ್ಧವೂ ಮಾದ ‘ಸೌಂದರ್ಯ ಸ್ಪರ್ಧೆ’ಯಂಥ ಮೋಜಿನ ಕಾರ್ಯಕ್ರಮ ಕುರಿತು ಈ ಸರ್ಕಾರವು ಅಪರೂಪವಾದ ಉತ್ಸಾಹವನ್ನಿ ವಿಜೃಂಭಿಸತೊಡಗಿದರೆ ಜನರು ಏನೆಂದು ಭಾವಿಸಬೇಕು? ತನ್ನ ನಿಷ್ಕ್ರಿಯತೆಯನ್ನು ಮುಚ್ಚಿಹಾಕಿ, ಜನರ ಗಮನವನ್ನು ಮತ್ತಾವೊದೋ ಚಿಲ್ಲರೆ ಲೋಭದ ಕಡೆಗೆ ಸೆಳೆದು, ತನ್ನನ್ನು ತತ್ಕಾಲ ಬಚಾವು ಮಾಡಿಕೊಳ್ಳಲಿಕಾಗಿ ಸರ್ಕಾರವು ಈ ಕಚಗುಳಿ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದೇ ಜನರು ಭಾವಿಸುತ್ತಾರೆ. +ಕೊಜೆಂಟ್ರಿಕ್ಸ್ ಸ್ಥಾವರವೇ ಮುಂತಾದ ಹತ್ತಾರು ಮುಖ್ಯ ವಿಷಯಗಳಿಗೆ – ಜನರ ಬದುಕು ಸಾವಿನ ಪ್ರಶ್ನೆಗಳಿಗೆ – ಸಂಬಂಧಿಸಿ ವ್ಯಾಪಕ ಪ್ರತಿಭಟನೆಗಳು ನಡೆದವು. ಕೃಷ್ಣಾ ಅಣೆಕಟ್ಟು ವಿವಾದ, ಕಾವೇರಿ ನೀರಿನ ಪ್ರಶ್ನೆ ಮುಂತಾದವುಗಳಿಗೆ ಸಂಬಂಧಿಸಿ ಏನು ನಡೆದಿದೆಯೆನ್ನುವುದು ತಿಳಿಯದೆಯೇ ಜನರು ಕತ್ತಲಲ್ಲಿ ತಲ್ಲಣಿಸುತ್ತಿದ್ದಾರೆ. ಈ ಯಾವ ಸಂಗತಿಯ ಬಗ್ಗೆಯಾಗಲಿ, ಸರ್ಕಾರದ ವತಿಯಿಂದ ವಿವರಣೆ ಸಮಾಧಾನಗಳನ್ನು ಒದಗಿಸಬೇಕು ಎನ್ನುವ ಜವಾಬ್ದಾರಿಯು ನಮ್ಮ ಸರ್ಕಾರದ ಅರಿವಿಗೆ ಬರಲೇ ಇಲ್ಲ. ನಿಜವಾಗಿ, ಆ ಸಂಗತಿಗಳ ಬಗ್ಗೆ ನಮ್ಮ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಕರೆದು ಜನಕ್ಕೆ ಸೂಕ್ತ ವಿವರಣೆಗಳನ್ನು ನೀಡಬೇಕಿತ್ತು. ನಮ್ಮ ಸರ್ಕಾರವು ಒಂದು ಕಡೆ ಅಕರ್ತವ್ಯದ ದೋಷಕ್ಕೆ ಪಕ್ಕಾಗಿದೆ, ಇನ್ನೊಂದು ಕಡೆ ನಿಜ – ಕರ್ತವ್ಯದ ಲೋಪಕ್ಕೆ ಇಳಿದುಕೊಂಡಿದೆ. +ಜನಸರ್ಕಾರವು ಸದಾ ಪಾರದರ್ಶಕವಾಗಿ ಕಾಣಿಸಿಕೊಳ್ಳಬೇಕಾದ್ದು ಅಗತ್ಯವೆಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಸರ್ಕಾರವನ್ನು ಹೊಸದಾಗಿ ರಚಿಸಿರುವ ಜನತಾದಲ ಪಕ್ಷವು ಪಾರದರ್ಶಕ ಸರ್ಕಾರವನ್ನು ನೀಡುವುದನ್ನು ತಾನೇ ತನ್ನ ಪ್ರಣಾಳಿಕೆಯಲ್ಲಿ ಜನತೆಗೆ ವಚನಕೊಟ್ಟಿದೆ. ಈ ಸೌಂದರ್ಯಸ್ಪರ್ಧೆಯ ಸಂಬಂಧದಲ್ಲಿ ಸರ್ಕಾರವು ಪಾರದರ್ಶಕತೆಯೆಂಬ ಸಂಗತಿಯನ್ನೇ ಮರೆತುಬಿಟ್ಟಿದೆ. ಬದಲು, ಜನರಲ್ಲಿ ಅನೇಕ ಸಂದೇಹಗಳನ್ನೂ ತವಕವನ್ನೂ ಉಂಟುಮಾಡಿದೆ. ಸೌಂದರ್ಯಸ್ಪರ್ಧೆಯ ಇಲ್ಲಿನ ಪ್ರವರ್ತಕ ಸಂಸ್ಥೆಗೆ ಯಜಮಾನರಾದ ಅಮಿತಾಬ್ ಬಚ್ಚನ್ ಪಾರದರ್ಶಕ ವ್ಯಕ್ತಿತ್ವವುಳ್ಳವರಲ್ಲ. ಅವರ ಮತ್ತು ಅವರ ಸಹೋದರರ ಹೆಸರು ಬೊಫೋರ್ಸ್ ಹಗರಣದಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿತ್ತು. ಅದರಲ್ಲಿ ಸತ್ಯಾಸತ್ಯತೆಗಳೇನೆಂಬುದು ಇನ್ನೂ ತೀರ್ಮಾನವಾಗಿ ತಿಳಿದಿಲ್ಲ. ಇದೇ ಈಗ ಬೋಫೋರ್ಸ್ ರಹಸ್ಯ ದಾಖಲೆಗಳು ಭಾರತ ಸರ್ಕಾರಕ್ಕೆ ಲಭ್ಯವಾಗಲಿವೆ. ಆ ವಿವರಗಳು ಪ್ರಕಟವಾಗುವ ತನಕ ಅಮಿತಾಭರ ಹೆಸರಿನ ಸುತ್ತ ಸಂದೇಹಗಳಿದ್ದೇ ಇರುತ್ತವೆ. +ಇದಲ್ಲದೆ, ಬೆಂಗಳೂರು ಪತ್ರಿಕಾಗೋಷ್ಠಿಗೆ ಕೆಲವೇ ದಿನ ಮುಂಚೆ, ನಮ್ಮ ಪ್ರಧಾನಿಗಳು ಸ್ವತಃ ಹೋಗಿ ಅವರ ನಿವಾಸದಲ್ಲಿ ಭ್ಟ್ಟಿಯಾಗಿದ್ದರು, ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಅದೇ ಸಂದರ್ಭದಲ್ಲಿ ಮುಂಬೈನ ಶಿವಸೇನೆಯ ಮುಖ್ಯಸ್ಥ, ವಿವಾದಾಸ್ಪದ ವ್ಯಕ್ತಿ ಬಾಳಾಠಾಕರೆ ಕೂಡ ಹಾಜರಿದ್ದರು. ಈ ಸಮ್ಮಿಲನದ ಬಗ್ಗೆ ದೇಶಾದ್ಯಂತ ಬಹಳ ಸಂಶಯಗಳೆದ್ದಿದ್ದವು ಮತ್ತು ಆ ಬಗೆಗಿನ ಸಂದೇಹಗಳು ಸಂಪೂರ್ಣವಾಗಿ ನಿವಾರಣೆಯಾಗಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ, ಅನೇಕ ಸಂಶಯಗಳಿಗೆ ಮೂಲವಾಗಿರುವ ಅಮಿತಾಭರ ಜತೆ ನಮ್ಮ ಸರ್ಕಾರವು ಅದಾವ ಬಗೆಯ ಸಂಬಂಧವನ್ನು ಏರ್ಪಡಿಸಿಕೊಂಡಿತು ಅಂತ ಜನರು ಸಹಜವಾಗಿಯೇ ಶಂಕಿತರಾಗುತ್ತರೆ. ಸರ್ಕಾರಕ್ಕೆ ಪಾರದರ್ಶಕವಾಗಿರಬೇಕೆನ್ನುವ ಆಸ್ಥೆಯಿದ್ದರೆ ಅದು ಇಂಥ ಶಂಕಾಸ್ಪದ ವ್ಯವಹಾರಗಳಿಗೆ ಅವಕಾಶ ಕೊಡಬಾರದಿತ್ತು; ಅಮಿತಾಭರ ಪತ್ರಿಕಾಗೋಷ್ಠಿಯನ್ನಾಗಲೀ, ಸ್ಪರ್ಧಾ ಚಟುವಟಿಕೆಗಳಲ್ಲಾಗಲೀ ತಾನಂತೂ ಖಂಡಿತವಾಗಿ ಪಾಲುಗೊಳ್ಳದೆ ಉಳಿಯಬೇಕಿತ್ತು. +ಇಷ್ಟಾದಮೇಲೆ, ರಾಜ್ಯದ ಎಲ್ಲಾ ಕಡೆಗಳಿಂದ ಪ್ರತಿಭಟನೆಗಳು ವ್ಯಕ್ತವಾದಾಗ ನಮ್ಮ ಮುಖ್ಯಮಂತ್ರಿಗಳು ಜವಾಬ್ದಾರಿಯುತವಾಗಿ ಸಮಜಾಯಿಷಿ ಮತ್ತು ನಿಜವಿವರಗಳನ್ನು ಕೊಡುವ ಬದಲು ತಮಾಷೆಯಾಗಿ ವ್ಯಂಗ್ಯವಾಗಿ ಲೇವಡಿಯ ಮಾತುಗಳನ್ನಾಡಿದರು. ಜನಕ್ಕೆ ಜವಾಬ್ದಾರರಾಗಿರುವ, ಜನಸರ್ಕಾರದ ಮುಖ್ಯರು ಹೀಗೆ ಮಾಡಿದ್ದು ದೊಡ್ಡ ಪ್ರಮಾದ. ಅವರು ತಮ್ಮ ದೃಷ್ಟಿಕೋನವನ್ನು ಗಂಭೀರ ಮಾತುಗಳಲ್ಲಿ ವಿವರಿಸಿ ಹೇಳಬಹುದಿತ್ತು. ಆದರೆ, ಅಂತಿಮವಾಗಿ ಜನರ ಆದೇಶವನ್ನು ಶಿರಸಾ ಪಾಲಿಸಬೇಕಾದ್ದು ಅವರ ಅನಿವಾರ್ಯ ಕರ್ತವ್ಯ. ಇಷ್ಟರಮೇಲೆ, ಜನರ – ಅವಿದ್ಯೆ – ಅವಿವೇಕ – ಅಸಂಸ್ಕೃತಿಗಳೇ ಈ ಪ್ರತಿಭಟನೆಗೆ ಕಾರಣ ಅಂತ ಅವರು ಪ್ರಾಮಾಣಿಕವಾಗಿಯೇ ನಂಬುತ್ತಾರೆ ಎನ್ನೋಣ. ಆಗ ಏನು ಮಾಡಬೇಕು? ಆಗಲೂ ಅವರು ತಮ್ಮ ಅಭಿಪ್ರಾಯವನ್ನು ತಮ್ಮಲ್ಲಿ ಕಾಪಾಡಿಕೊಂಡು, ಜನರ ಆದೇಶಕ್ಕೆ ತಲೆಬಾಗಬೇಕು. ಜನರನ್ನು – ವಿದ್ಯಾವಂತ – ವಿವೇಕಿ – ಸುಸಂಸ್ಕೃತರನ್ನಾಗಿಸಲೇಬೇಕೆಂಬ ನಿಜವಾದ ಹಟವೇ ಇದ್ದರೆ, ಆಗ ಅವರು ತಮ್ಮ ಪಕ್ಷದ ವೇದಿಕೆಗಳ ಮೂಲಕವಾಗಿ ಅಂಥ ಜನಶಿಕ್ಷಣ ಕಾರ್ಯಕ್ರಮವನ್ನು ಕೈಗೊಳ್ಳಬಹುದು. ಮುಖ್ಯಮಂತ್ರಿಯಾಗಿ ಅವರು ಜನಾದೇಶಕ್ಕೆ ಬಾಗದೆ ಬೇರೆ ದಾರಿಯಿಲ್ಲ. ಅದನ್ನು ಬಿಟ್ಟು ಜನಾದೇಶವನ್ನು ಕಡೆಗಣಿಸುತ್ತೇನೆ ಮತ್ತು ಜನರಿಗೆ ಬುದ್ಧಿ ಹೇಳುತ್ತೇನೆ ಅಂತ ಹೊರಟರೆ ಅದು ಪ್ರಜಾಪ್ರಭುತ್ವದ ಧಿಕ್ಕರವಾಗುತ್ತದೆ; ಜನಧಿಕಾರವನ್ನು ಸ್ವಯಮಾಧಿಕಾರವಾಗಿ ಮಾರ್ಪಡಿಸಿಕೊಳ್ಳುವ ಮಹಾವಂಚನೆಯಾಗುತ್ತದೆ. +ಒಟ್ಟಿನಲ್ಲಿ, ನಮ್ಮ ಸರ್ಕಾರವು ಈ ಖಾಸಗಿ ಮತ್ತು ತನಗೆ ಅಸಂಗತವಾದ ಕಾರ್ಯಕ್ರಮದಲ್ಲಿ, ಯಾವುದೇ ಹಂತದಲ್ಲೂ ಎಷ್ಟೇ ಕಿಂಚಿತ್ತಾದರೂ ಪಾಲ್ಗೊಳ್ಳುವುದು ಪ್ರಮಾದವೇ. ಸರ್ಕಾರವು ಇಲ್ಲಿ ಸಾಮಾನ್ಯವಾಗಿ ತಟಸ್ಥವಾಗಿರಬೇಕು ಮತ್ತು ಜನತೆಯು ಈ ಕಾರ್ಯಕ್ರಮದ ವಿರುದ್ಧ ಅಹಿಸಾತ್ಮಕ ಸಾರ್ವಜನಿಕ ಪ್ರತಿಭಟನೆಯನ್ನು ನಡೆಸುತ್ತದೆಯೆಂದಾದರೆ, ಆಗ ಸರ್ಕಾರವು ಅಹಿಸಾತ್ಮಕ ಪ್ರತಿಭಟನಾಕಾರರ ಬಗ್ಗೆಯೇ ಸಹೃದಯತೆಯನ್ನು ತೋರಿಸಬೇಕು. ಇದು ಪ್ರಜಾಪ್ರಭುತ್ವದ ದಾರಿ. +ಇನ್ನು, ಎರಡನೆಯ ನೆಲೆಯಲ್ಲಿ ನಾವು ‘ಸೌಂದರ್ಯಸ್ಪರ್ಧೆ’ಯೆಂಬ ಈ ಕಲ್ಪನೆ – ಕಾರ್ಯಕ್ರಮವನ್ನೇ ಮೂಲತಃ ವಿರೋಧಿಸಬೇಕು. ಆ ಬಗ್ಗೆ ನಮ್ಮಲ್ಲೇ ಇರಬಹುದಾದ ದ್ವಂದ್ವ ಶಂಕೆಗಳನ್ನು ನಿವಾರಿಸಿಕೊಳ್ಳಬೇಕು. ಏಕೆಂದರೆ – ಮೊದಲನೆಯದಾಗಿ, ಇದು ಆರ್ಥಿಕ ಶೋಷಣೆಯ ಸಾಧನವಾಗಿದೆ; ಎರಡನೆಯದಾಗಿ ಇದು ಸಾಂಸ್ಕೃತಿಕ ವಿನಾಶಕ್ಕೆ ಕಾರಣವಾಗುತ್ತದೆ. +ಈ ‘ಜಾಗತಿಕ ಸೌಂದರ್ಯಸ್ಪರ್ಧೆ’ಯೆನ್ನುವುದು ಪ್ರಸ್ತುತದಲ್ಲಿ, ಅಂತರಾಷ್ಟ್ರೀಯ ವಾಣಿಜ್ಯ ವಂಚನೆಯ ಆಕ್ರಮಣ ರಾಜಕಾರಣದ ಕಡುಪಿನ ರೇಸಿಮೆಬಲೆಗಳಲ್ಲಿ ಒಂದಾಗಿದೆ. ಸುಮಾರು ನಲವತ್ತು ವರ್ಷಗಳ ಹಿಂದೆ ಇದು ಬಿಳಿಯರ ರಾಷ್ಟ್ರದಲ್ಲಿ ಒಂದು ಮೋಜಿನ ಚಟುವಟಿಕೆಯಾಗಿ ಪ್ರಾರಂಭವಾಯ್ತು. ಬಹುಕಾಲ ಇದು ಬಿಳಿಯರ ರಾಷ್ಟ್ರಗಳಲ್ಲೇ ವಿಸ್ತರಿಸಿಕೊಳ್ಳುತ್ತ ಅಲ್ಲೇ ಕೇಂದ್ರೀಕೃತವಾಗಿತ್ತು. ಈಚಿನ ಹತ್ತಾರು ವರ್ಷಗಳಲ್ಲಿ ಅದು ಇದ್ದಕ್ಕಿದ್ದಂತೆ ಬಣ್ಣವಂತ ರಾಷ್ಟ್ರಗಲ ಕಡೆಗೆ ಕೇಂದ್ರೀಕೃತವಾಗತೊಡಗಿದೆ. ನಡೆಸುವವರು ಅಲ್ಲಿನವರೇ, ನಡೆಯುವುದು ಈಚೆಗೆ ಹೆಚ್ಚಾಗಿ ಈ ದಕ್ಷಿಣ ಗೋಲದ ರಾಷ್ಟ್ರ ಕೇಂದರಗಳಲ್ಲಿ. ಮೊದಲು ಸೌಂದರ್ಯ ಪ್ರಶಸ್ತಿಯೆಂಬುದು ಕೇವಲ ಬಿಳಿಯರಿಗೆ ಮಾತ್ರ ಮೀಸಲೆಂಬಂತೆ ಸಲ್ಲಿತ್ತಿತ್ತು. ಈಚಿನ ವರ್ಷಗಳಲ್ಲಿ ಅದು ಹೆಚ್ಚಾಗಿ ಬಣ್ಣವಂತರಿಗೆ ಸಲ್ಲತೊಡಗಿದೆ. ಯಾಕೆ? ಈಚಿನ ವರ್ಷಗಳಲ್ಲಿ ದಕ್ಷಿಣಗೋಲದ ಬಡಬಣ್ಣವಂತ ಜನಾಂಗಗಳಲ್ಲೇ ವಿಶ್ವಸೌಂದರ್ಯದ ಅವಿರ್ಭಾವವಾಗುತ್ತಿದೆಯೆಂದು ತಿಳಿಯೋಣವೆ? ವಸ್ತುಸ್ಥಿತಿ ಅದಲ್ಲ, ಬೇರೆ. ಒಂದು ಅಂತಾರಾಷ್ಟ್ರೀಯ ತಜ್ಞ ಅಂದಾಜಿನಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ, ಈ ಬಡ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ವಿದೇಶಿ ಸೌಂದರ್ಯವರ್ಧಕ ಸರಕುಗಳ ಮಾರಾಟವು ಒಂದರಿಂದ ಮೂವತ್ತೆರಡು ಪಟ್ಟು ಹೆಚ್ಚಿದೆಯಂತೆ. ಇಂಥ ಮಾರಾಟದ ಉತ್ಕರ್ಷವನ್ನು ಸಾಧಿಸಿಕೊಳ್ಳಲಿಕ್ಕೆ ಸೌಂದರ್ಯಸ್ಪರ್ಧೆಯೆನ್ನುವುದು ಒಂದು ಸಾಧನವಾಗಿದೆ. ಅಂದರೆ, ಅನಗತ್ಯವಾದ ಸುಖಸರಕುಗಳನ್ನು ಇಲ್ಲಿಗೆ ಸಾಗಿಸಿ ಮಾರಾಟಮಾಡಿ ನಫೆಯನ್ನು ಕಮಾಯಿಸಿಕೊಳ್ಳಲು ಬಹುರಾಷ್ಟ್ರೀಯ ವಾಣಿಜ್ಯವು ಹಬ್ಬಿಸಿರುವ ಒಂದು ಮಾಯಾಜಾಲ ಇದು. ಇಂಥ ಸ್ಪರ್ಧೆಗಳಿಂದ ಬರುವ ಲಾಭಾಂಶದಲ್ಲಿ ದೊಡ್ಡಪಾಲನ್ನು ಜನಕಲ್ಯಾಣಕ್ಕೆ ದಾನ ಮಾಡುವುದೂ ಉಂಟು. ಇಂಥ ಕಾರುಣ್ಯದ ಕೊಕ್ಕೆಗಳೆಲ್ಲ ಅಂತಿಮವಾಗಿ ಲಾಭದ ಮೀನುಗಳನ್ನು ಸೆಳೆಯಲಿಕ್ಕೇ. +ನಮ್ಮ ಸರ್ಕಾರೀ ಆರ್ಥಿಕ ತಜ್ಞರು, ಯೋಜನಾ ಪರಿಣತರು ಉಪದೇಶ ಮಾಡುವ ಪ್ರಕಾರ, ವಿದೇಶಿ ಉದ್ಯಮ ಮತ್ತು ಬಂದವಾಳಗಳ ನೆರವಿಲ್ಲದಿದ್ದರೆ ನಮ್ಮಲ್ಲಿ ವಿದ್ಯುತ್ ಗಣಿಗಾರಿಕೆ ಮುಂತಾದ ಬೃಹತ್ ಉದ್ಯಮಗಳು ತುರ್ತಿನಲ್ಲಿ ಬೆಳೆಯುವುದಿಲ್ಲ; ಈ ಉದ್ಯಮಗಳು ತುರ್ತಿನಲ್ಲಿ ಬೆಳೆಯದೆ ಹೋದರೆ ನಮ್ಮ ದೇಶವು ಹಿಂದುಳಿಯುತ್ತ ಹಿಂದುಳಿಯುತ್ತ ನಾಶವಾಗಿ ಹೋಗುತ್ತದೆ. ಆಯ್ತು, ಇರಲಿ. ಬೃಹತ್ ಉದ್ಯಮಗಳೇ ಅಲ್ಲದೆ ವಿದೇಶಿ ಕೆಂಟುಕಿ ಚಿಕನ್, ಹಟ್ ಪಿಜ್ಜಾಗಳಿಗೂ ನಮ್ಮ ಸರ್ಕಾರಗಳು ಬಾಗಿಲು ತೆರೆದು ಸ್ವಾಗತಿಸಿ ಆನಂತರ ವಿಶೇಷ ರಕ್ಷಣೆಯನ್ನೊದಗಿಸಲು ಮುಂದಾಗುತ್ತವಲ, ಯಾಕೆ? ವಿದೇಶಿ ಚಿಕನ್ ಮತ್ತು ಪಿಜ್ಜಾಗಳಂತ ಅಲ್ಪಚಪಲಗಳಿಂದ ತೊಡಗದಿದ್ದರೆ ಜನರು ಸುಲಭಕ್ಕೆ ಸೋಲುವುದಿಲ್ಲ. ಮೊದಲು, ಗೊತ್ತಾಗದ ಹಾಗೆ ಸೂಜಿಮೊನೆಯಷ್ಟು ಎಡೆ ದೊರಕಿಸಿಕೊಳ್ಳಬೇಕು, ಆಮೇಲೆ ತಾನಾಗಿಯೇ ಸೋರಿನ ದಾರಿ ಸುಲಭವಾಗುತ್ತದೆ. ಇದನ್ನು ವಾಣಿಜ್ಯ ಲಾಭಕೋರರು ಬಲ್ಲರು. ನಮ್ಮ ಸರ್ಕಾರಗಳಿಗೂ ಅದನ್ನವರು ಮೊದಲಿಗೇ ಕಲಿಸಿಕೊಂಡಿರುತ್ತಾರೆ. +ಇನ್ನು ‘ಸಾಂಸ್ಕೃತಿಕ ವಿನಾಶ’ವೆಂಬ ಮಾತು. ಇದು ಕೊಂಚ ಸೂಕ್ಷ್ಮವಾದ ಅಮೂರ್ತವಾದ ಸಂಗತಿ. ನಾವೆಲ್ಲರೂ ಒಬ್ಬರಿಂದೊಬ್ಬರು ಭಿನ್ನರಾಗಿರುತ್ತೇವೆ. ಒಬ್ಬನಿದ್ದಂತೆ ಇನ್ನೊಬ್ಬನಿರುವುದಿಲ್ಲ. ದೇಹಾಕೃತಿ ಮಾತ್ರವಲ್ಲ, ಮನಸ್ಸು – ಭಾವ – ಬುದ್ಧಿ – ಚಿಂತನ ಇತ್ಯಾದಿ ಆಂತರಂಗಿಕ ಆಕೃತಿಗಳಲ್ಲೂ ನಾವು ಒಬ್ಬರಿಂದೊಬ್ಬರು ಭಿನ್ನರು, ಅನನ್ಯರು. ಹೀಗೆ ಒಂದೊಂದು ಸಮುದಾಯಕ್ಕೂ ಅದರದ್ದೇ ಆದ – ಅನನ್ಯವಾದ – ಬಹಿರಂಗ ಅಂತರಂಗ ಆಕೃತಿಗಳಿರುತ್ತವೆ. ಇದರಿಂದಲೇ ಒಬ್ಬೊಬ್ಬ ವ್ಯಕ್ತಿಯೂ ಅನಂತರ ಒಂದೊಂದು ಸ್ಥಳಸಮುದಾಯವೂ ರಾಜ್ಯ ರಾಷ್ಟ್ರ ಸಮುದಾಯಗಳೂ ವಿಶಿಷ್ಟವಾಗಿ ಅನನ್ಯವಾಗಿ ಕಾಣಿಸುತ್ತವೆ. ಈ ವಿಶಿಷ್ಟತೆಯೇ ನಮಗೆ – ವ್ಯಕ್ತಿಗಳಿಗೂ ಸಮುದಾಯಗಳಿಗೂ – ‘ನಾನು’ ಎಂಬ ಅಹಂತೆಯ ಅಭಿಜ್ಞಾನವನ್ನು, ಅನನ್ಯತೆಯ ವಿಶ್ವಾಸವನ್ನು ಮತ್ತು ಈ ಅಹಂ ಜ್ಞಾನಕ್ಕೆ ಹೊಂದಿ ಆತ್ಮಗೌರವವನ್ನೂ ಕೊಟ್ಟಿರುತ್ತದೆ. ಇಂಥ ‘ತನ್ನತನ’ ಮತ್ತು ಆತ್ಮಗೌರವದಿಂದಾಗಿ, ಯಾವುದೇ ವ್ಯಕ್ತಿ ಅಥವಾ ಸಮುದಾಯವು ತನ್ನಮೇಲೆ ಇನ್ನೊಂದು ವ್ಯಕ್ತಿ ಅಥವಾ ಸಮುದಾಯದ ಆಕ್ರಮಣವನ್ನು, ಆ ಮೂಲಕ ‘ತನ್ನತನ’ದ ವಿನಾಶವನ್ನು ಸಹಿಸಿಕೊಳ್ಳಲಾರದು. ಅದೇ ‘ಸ್ವಾತಂತ್ರ್ಯ’ವೆಂಬುದು. ಮತ್ತು ವಿವೇಕಿಯಾದವನು, ತನಗಿರುವ ವೈಶಿಷ್ಟ್ಯವೇ ಇನ್ನೊಬ್ಬನಿಗೂ ಇರುವುದನ್ನು ಪರಿಗಣಿಸಿಕೊಂಡು, ಆತನ ಸ್ವಾತಂತ್ರ್ಯ ಆತ್ಮಗೌರವಗಳನ್ನೂ ತನ್ನದರ ಹಾಗೇ ಗೌರವಿಸುತ್ತಾನೆ. ಇದೇ ‘ಸ್ವಾತಂತ್ರ್ಯ’ವೆಂಬುದಕ್ಕೆ ಅವಳಿಯಾಗಿರುವ ‘ಸಮಾನತೆ’ಯೆಂಬ ಕಲ್ಪನೆಯನ್ನು ಹುಟ್ಟಿಸಿಕೊಡುತ್ತದೆ. ಈ ಬಗೆಯ ‘ಸ್ವಾತಂತ್ರ್ಯ’ ಮತ್ತು ‘ಸಮಾನತೆ’ಗಳು ಹದಗೊಂಡಿರುವ ಸಮುದಾಯದಲ್ಲಿ ಜೀವನವು ‘ಸಮತ್ವ’ವುಳ್ಳದ್ದಾಗಿರುತ್ತದೆ. ಮೇಲೆ ಹೇಳಿದಂತೆ ವ್ಯಕ್ರಿಗೂ ಸಮುದಾಯಕ್ಕೂ ಇರುವ ಅನನ್ಯತೆಯಿಂದಾಗಿ, ಆದದ್ದು ರೂಪಿಸಿಕೊಳ್ಳುವ ಜೀವನಶೈಲಿಗಳೂ ವಿಶಿಷ್ಟವಾಗಿರುತ್ತವೆ. ಇಂಥ, ವಿಶಿಷ್ಟತೆಯಲ್ಲರಳಿದ ಅನನ್ಯ ಜೀವನಶೈಲಿಯನ್ನೇ ನಾವು ಸ್ಥೂಲವಾಗಿ ‘ಸಂಸ್ಕೃತಿ’ ಎನ್ನಬಹುದು. +ಒಬ್ಬನು ಇನ್ನೊಬ್ಬನ ಮೇಲೆ ಅಥವಾ ಒಂದು ಸಮುದಾಯವು ಇನ್ನೊಂದರ ಮೇಲೆ ಆಕ್ರಮಣ ಮಾಡಲು ಹೊರಟಾಗ ಅದಕ್ಕೆ ಪ್ರತಿಭಟನೆ ಬರುವುದು ಮೇಲೆ ಹೇಳಿದ ‘ಸ್ವಯಂಪ್ರಜ್ಞೆ’ ಮತ್ತು ‘ಆತ್ಮಗೌರವ’ (ಸ್ವಾತಂತ್ರ್ಯ)ಗಳಿಂದ. ನಾನು ವಿಶಿಷ್ಟ, ನನ್ನ ಸಮುದಾಯವು ವಿಶಿಷ್ಟ, ನನ್ನ ಸಂಸ್ಕೃತಿಯು ವಿಶಿಷ್ಟ ಎನ್ನುವಂಥ ನಂಬಿಕೆಯನ್ನು, ಅರ್ಥಾತ್ ಆತ್ಮಗೌರವ – ಸ್ವಾತಂತ್ರ್ಯದ ಪ್ರಜ್ಞೆಯನ್ನು ನಾಶಮಾಡಿದರೆ ಆಕ್ರಮಣಕ್ಕೆ ತಡೆಯೆಂಬುದಿರುವುದಿಲ್ಲ, ಆಕ್ರಮಣದ ದಾರಿ ಸುಗಮವಾಗುತ್ತದೆ. +ಜಡವಸ್ತುಗಳನ್ನು ಅಳೆದು ತೂಗಿ ಅದರ ಮೊತ್ತ ಮೊಬಲಗುಗಳನ್ನು ಕರಾರುವಕ್ಕಾಗಿ ಹೆಲಲು ಸಾಧ್ಯ ಅಂತ ನಾವು ತಿಳಿದಿದ್ದೇವೆ. ಅದೇ ರೀತಿ, ಮನುಷ್ಯನನ್ನೂ ಇಷ್ಟಿಷ್ಟು ರಕ್ತಮಾಂಸಮಜ್ಜೆ ಎಲುಬು ನರಚರ್ಮವೆಂದು ಮತ್ತು ಇಷ್ಟು ಅಂಕದ ಬುದ್ಧಿ (ಐ.ಕ್ಯು)ಯೆಂದು ಅಳೆದು ಹೇಳಬಹುದೆನ್ನುವ ನಂಬಿಕೆಯನ್ನು ನಾಟಿಸಲು ಸಾಧ್ಯವಾದರೆ ಮತ್ತು ಸತ್ಯ – ಶೌಚ – ಸೌಂದರ್ಯ ಇತ್ಯಾದಿ ಮೌಲ್ಯಗಳನ್ನು ಅಳೆಯಲಿಕ್ಕೆ ಬಾರದಂಥವು ‘ಸುಳ್ಳು’ ಎಂದೂ ವಿಶ್ವಾಸ ಹುಟ್ಟಿಸಲು ಸಾಧ್ಯವಾದರೆ, ಆಗ, ಅನನ್ಯತೆ – ಆತ್ಮಗೌರವ – ಸ್ವಾತಂತ್ರ್ಯಗಳೆಂಬುವಕ್ಕೆ ಅರ್ಥವಿರುವುದಿಲ್ಲ. ಆಕ್ರಮಣವಿರೋಧಿ ಶಕ್ತಿಗಳಾದ ಅವು ಮೂಲೋತ್ಪಾಟನಗೊಳ್ಳುತ್ತವೆ. +ಸತ್ಯ – ಶೌಚ – ಸೌಂದರ್ಯ ಇತ್ಯಾದಿಯಾಗಿ ಅನೇಕ ಮೌಲ್ಯಗಳನ್ನು ಹೇಳುತ್ತೇವಲ್ಲ, ಅವೆಲ್ಲವೂ ಸಂಸ್ಕೃತಿಯಲ್ಲಿಯ ಅಮೂರ್ತಗಳು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಬದುಕಿನ ಸಂದರ್ಭದಲ್ಲಿ, ನಮ್ಮ ನಮ್ಮ ವಿಶಿಷ್ಟತೆಯಲ್ಲಿ ವಿಶಿಷ್ಟವಾಗಿ ಅದನ್ನು ಮೂರ್ತಗೊಳಿಸಿಕೊಳ್ಳಲು ಪ್ರಯತ್ನಿಸಿಕೊಳ್ಳುತ್ತ ಇರುತ್ತೇವೆ. ಅವುಗಳ ಅಂತಿಮ ಸಾಕ್ಷಾತ್ಕಾರವೆಂಬುದಿಲ್ಲ. ಅವು ಯಾವತ್ತೂ ಸಾಧಕನ ಆದರ್ಶಗಳು, ಯಾವತ್ತು ಕೂಡ ಸಿದ್ಧಿಗೊಂಡು ಸ್ಥಗಿತವಾಗುವಂಥದಲ್ಲ. ಈ ಆದರ್ಶಗಳೇ ಸಂಸ್ಕೃತಿಯ ಚಾಲಕಶಕ್ತಿಗಳು. ಅವುಗಳನ್ನು ಮೂರ್ತವಾಗಿ ಗ್ರಹಿಸಿ ಮಾಪನಮಾಡಬಲ್ಲೆವು ಎಂಬ ಸೊಕ್ಕು ಬೆಳೆದುಬಿಟ್ಟರೆ ಮುಂದೆ ಸಂಸ್ಕೃತಿಗೆ ಚಾಲನೆಯಿಲ್ಲ. ಅದು ಸ್ಥಗಿತಗೊಳ್ಳುತ್ತದೆ. ಅದೇ ಸಂಸ್ಕೃತಿಯ ವಿನಾಶ ಮತ್ತು ಪರ್ಯಾಯವಾಗಿ, ಆಕ್ರಮಣವಿರೋಧಿ ಶಕ್ತಿಗಳ ವಿನಾಶ. +‘ಸೌಂದರ್ಯಸ್ಪರ್ಧೆ’ಯೆನ್ನುವುದು ಇದೇ ಕೆಲಸವನ್ನು ಮಾಡಬಲ್ಲುದು. ‘ಸೌಂದರ್ಯ’ವೆಂಬುದು ಹದಿಹರೆಯದ (ವಯೋಮಿತಿಯ) ಹೆಣ್ಣಿನ ಅಳತೆ ತೂಕಗಲಲ್ಲಿ, ನುಡಿ ನಗೆ ನವಿರುಗಳ ಕರಾರುವಾಕ್ಕು ಮಾಪನದಲ್ಲಿ ಕೈಗೆ ಸಿಗುವ ವಸ್ತು ಮತ್ತು ಇಂಥ ಮಾಪನದಿಂದ ಯಾವಳಲ್ಲಿ ವಿಶ್ವದಲ್ಲೇ ಗರಿಷ್ಠ ಬೇರೇಜು ಮೊಬಲಗಿನ ಸೌಂದರ್ಯವುಂಟೆಂಬುದನ್ನು ಕರಾರುವಕ್ಕಾಗಿ ತೀರ್ಮಾನಿಸಲು ಸಾಧ್ಯ ಎಂದು ಈ ಸ್ಪರ್ಧೆಯು ನಮ್ಮನ್ನು ನಂಬಿಸುತ್ತದೆ; ಅಮೂರ್ತ ಆದರ್ಶಗಳೆಲ್ಲವನ್ನೂ ನಮ್ಮ ಮನಸ್ಸಿನಿಂದ ಗುಡಿಸಿ ಹೊರಗಾಕಿ ತಲೆಯನ್ನು ತೊಳೆದಿಡುತ್ತದೆ. ನಮ್ಮನ್ನು ಸುಲಭ – ಆಕ್ರಮಣ – ಸಾಧ್ಯರನ್ನಾಗಿ ಮಾಡುತ್ತದೆ. +ಸದ್ಯದ ಜಗತ್ತಿನಲ್ಲಿ ಆಕ್ರಮಣವೆಂಬುದು ಮುಖ್ಯವಾಗಿ ಇಮ್ಮೊಗವುಳ್ಳದ್ದು, ಒಂದು, ಅಧಿಕಾರಗಳಿಕೆಗಾಗಿ ನಡೆಸುವ ರಾಜಕೀಯ ಆಕ್ರಮಣ; ಇನ್ನೊಂದು, ಅರ್ಥಲಾಭಕ್ಕಾಗಿ ನಡೆಸುವ ವಾಣಿಜ್ಯ ಆಕ್ರಮಣ. ಪರರ ಅನನ್ಯತೆ ಸ್ವಾಭಿಮಾನ ಇತ್ಯಾದಿಗಲನ್ನು ನಾಶಪಡಿಸಿ ಪರರನ್ನು ತನ್ನತನಕ್ಕೆ ಗುಲಾಮರನ್ನಾಗಿಸಿಕೊಳ್ಳುವ ಮತ್ತು ಹಾಗೆ ವಶವಾಗುವ ಜನಗಳ ಮೇಲೆ ಪ್ರಭಾವ ಚೆಲ್ಲಿ ವ್ಯಾಪಕವಾಣಿಜ್ಯ ಜಾಲದ ಮೂಲಕ ಶೋಷಿಸಿ ಲಾಭವನ್ನು ಕಮಾಯಿಸಿಕೊಳ್ಳುವ – ಈ ಎರಡೂ ಬಗೆಯ ಆಕ್ರಮಣಗಳೂ ತಮ್ಮ ಕಾರ್ಯಸಾಧನೆಗಾಗಿ ಮೊದಲಿಗೆ, ವಿಶಿಷ್ಟತೆಯೆಂಬುದನ್ನು ನಾಶಮಾಡಲು ತೊಡಗುತ್ತವೆ. ಆನಂತರ ಎಲ್ಲವಕ್ಕೂ ಒಂದು ‘ಸರ್ವತ್ರಮಾಪನಸೂತ್ರ’ವನ್ನು ತಯಾರಿಸುತ್ತದೆ. ವಾಣಿಜ್ಯ ಅಥವಾ ಆರ್ಥಿಕ ಆಕ್ರಮಣವು ಮುಂದುವರಿದು, ಈ ಸರ್ವತ್ರಮಾಪನವನ್ನು ಅರ್ಥಮಾಪನಕ್ಕೆ ಪರಿವರ್ತಿಸುತ್ತದೆ. ಅಂದರೆ, ಭೌತವಸ್ತುಗಳಿರಲಿ ಅಮೂರ್ತ ಭಾವನೆ – ಚಿಂತನೆ – ಕಲ್ಪನೆಗಳಿರಲಿ ಎಲ್ಲವನ್ನೂ, ಇಂಥಿಂಥದಕ್ಕೆ ಇಷ್ಟು ಬೆಲೆ ಎಂದು, ಡಾಲರ್ – ಪೌಂಡ್ ರೂಪಾಯಿಗಳಲ್ಲಿ, ಬೆಲೆ ಕಟ್ಟಿಡುತ್ತದೆ. ಚಿಂತನೆ – ಭಾವನೆ – ಕಲ್ಪನೆ – ಭೌತವಸ್ತುಗಳ ಥರದಲ್ಲೇ ಮಾರಬಲ್ಲ ಮತ್ತು ಕೊಳ್ಳಬಲ್ಲ ‘ಸರಕು’ಗಳಾಗುತ್ತವೆ. +‘ಸ್ಪರ್ಧೆ’ಯೆಂಬ ಕಲ್ಪನೆಯ ಬಗ್ಗೆಯೂ ಕೊಂಚ ಆಲೋಚಿಸಬೇಕು. ಪರಸ್ಪರ ‘ಸ್ಪರ್ಧೆ’, ಅದರಲ್ಲಿ ಗೆಲ್ಲುವುದು ಎನ್ನುವುದರಿಂದಲೇ ‘ಪ್ರಗತಿ’ಯುಂಟಾಗುತ್ತದೆ ಎನ್ನುವುದು ಬಹುಶಃ ಆಧುನಿಕ ಪಾಶ್ಚಿಮಾತ್ಯ ವೈಜ್ಞಾನಿಕ ನಾಗರಿಕತೆಯ ಪ್ರತಿಪಾದನೆ ಎಂಬ ಡಾರ್ವಿನ್ ಸೂತ್ರವೂ ಕೂಡ ಈ ಕಲ್ಪನೆ ಸಮರ್ಥನೆ ಕೊಟ್ಟಿರಬೇಕು. ಆದರೆ, ಇನ್ನಿತರ ಬೇರೆ ಬೇರೆ ಜನಾಂಗಗಳಲ್ಲಿ ಈ ಬಗೆ ಭಿನ್ನವಾದ ಕಲ್ಪನೆಗಳಿವೆ. ನಮ್ಮ ಭಾರತೀಯ ಸಮುದಾಯಗಳಲ್ಲಿ ಈ ಬಗ್ಗೆ ಇದ್ದ ಪಾರಪರಿಕ ಕಲ್ಪನೆಗಳನ್ನು ಆಧರಿಸಿ ಗಾಂಧೀಜಿ, ಸ್ಪರ್ಧೆ – ಪ್ರಗತಿಗಳೆಂಬುದಕ್ಕೆ ಬದಲಾಗಿ ‘ಸಹಕಾರ – ಸರ್ವೋದಯ’ಗಳ ಸೂತ್ರವನ್ನು ಎತ್ತಿ ಹೇಳಿದರು.ಪರಂಪರೆಯ ಮಾತಷ್ಟೇ ಅಲ್ಲ, ಇವತ್ತು ಇಲ್ಲಿ ನಾವು ರೂಢಿಸಿಕೊಳ್ಳಲು ಹೆಣಗುತ್ತಿರುವ ನಮ್ಮದೇ ಬಗೆಯ ಪ್ರಜಾಪ್ರಭುತ್ವ ಜೀವನಕ್ರಮವನ್ನು ರೂಪಿಸಿಕೊಳ್ಳಲಿಕ್ಕೆ ‘ಸಹಕಾರ – ಸರ್ವೋದಯ’ ಸೂತ್ರವೇ ಬೇಕು. ಸ್ಪರ್ಧೆ – ಪ್ರಗತಿಗಳೆಂಬ ಕಲ್ಪನೆಯು ನಮ್ಮ ಪ್ರಜಾಪ್ರಭುತ್ವ ಪ್ರಯತ್ನವನ್ನು ನಾಶಮಾಡುವಂಥದು ಮತ್ತು ‘ಸ್ಪರ್ಧೆ’ಯೆಂಬುದು ಮೂಲತಃ, ‘ಆಕ್ರಮಣ’ವೆನ್ನುವುದನ್ನು ಅಧಿಕೃತಗೊಳಿಸುವ, ನಾಯಾಯಬದ್ಧವೆನ್ನಿಸುವ ಅಪಾಯಕಾರಿ ಕಲ್ಪನೆ. ಆದ್ದರಿಂದ, ಈ ‘ಸ್ಪರ್ಧೆ’ಯೆಂಬ ಕಲ್ಪನೆಯನ್ನೇ ನಾವು ಕಿತ್ತೊಗೆಯಬೇಕಾಗಿದೆ. +ಒಟ್ಟೂ – ಈ ಸೌಂದರ್ಯಸ್ಪರ್ಧೆಯನ್ನು ಪ್ರತಿಭಟಿಸುವುದು, ಕೆಲವರು ತಪ್ಪು ತಿಳಿಯುವ ಹಾಗೆ ಸಂಕುಚಿತ ಮನಸ್ಕರಾಗಿಯಲ್ಲ. ಅದು ಮನುಷ್ಯರನ್ನೂ, ಸಮುದಾಯಗಳನ್ನೂ ರಾಷ್ಟ್ರವನ್ನೂ ಸಂಕೋಚಗೊಳಿಸಿಬಿಡುತ್ತದೆ, ಜನರನ್ನು ಕೇವಲ ಆಳ್ವಿಕೆಗೆ ಬಾಗಿಕೊಳ್ಳುವ ಆಳುಗಳನ್ನಾಗಿ, ವಾಣಿಜ್ಯ ತಲೆಗಳಿಗೆ ಲಾಭಕರೆಯುವ ಪಶುಗಳನ್ನಾಗಿಸುತ್ತದೆ; ನಾವು ಹಾಗಾಗುವುದಿಲ್ಲ ಎಂಬ ಛಲಕ್ಕಾಗಿ. +ಈ ಸೌಂದರ್ಯಸ್ಪರ್ಧೆಯು ಬೆಂಗಳೂರೆಂಬ ಮಹಾನಗರದಲ್ಲಿ ನಡೆಯುವ ಏನೋ ಒಂದು, ನಮಗೆ ಸಂಬಂಧವಿಲ್ಲದ ಮೋಜಿನ ಮೇಲಾಟ ಅಂತ ಕನ್ನಡದ ಜನತೆ ಭಾವಿಸಬಾರದು. ಕನ್ನಡದ ರಾಜ್ಯೋತ್ಸವದ ದಿನ ಉದ್ಘಾಟನೆಗೊಂಡು, ರಾಜ್ಯೋತ್ಸವದ ತಿಂಗಳಲ್ಲೇ, ನಮ್ಮ ಸಾಂಕೇತಿಕ ಅಧಿಕಾರಕೇಂದ್ರವಾದ ಕನ್ನಡ ರಾಜಧಾನಿಯಲ್ಲಿ, ನಮ್ಮ ಸರ್ಕಾರದ ರಕ್ಷೆಯಲ್ಲಿ ನಡೆಯಬೇಕೆಂದಿರುವ ಇದು ಕನ್ನಡ ಶ್ರೀಮಂತಿಕೆಯ ವಿನಾಶಕ್ಕೆ ಎತ್ತುವ ಮೊದಲ ವೀಳ್ಯ. ಈ ಸವಾಲನ್ನು ನಾವು +***** +ದೆಹಲಿಯೊಳಗೇ ಇದ್ದೂ ಇದು ದೆಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲಿ ಈ ಪುಟ್ಟ ಮಿತ್ರಕೂಟವನ್ನು ಏರ್ಪಡಿಸಿ ಓಂಪ್ರಕಾಶ್‌ಜಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಋಣಿ. ಯಾವ ಸಾಂಪ್ರದಾಯಿಕತೆಯಿಲ್ಲದೆ ಇಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_376.txt b/Kannada Sahitya/article_376.txt new file mode 100644 index 0000000000000000000000000000000000000000..00b81d1765d504552a5808bca9b0143e7a0db641 --- /dev/null +++ b/Kannada Sahitya/article_376.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡಸಾಹಿತ್ಯ.ಕಾಂ ನ ಚಾರಣಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. +ನಾನು ಸಿಟ್ಟಿನ ಭರದಲ್ಲಿ ಒಮ್ಮೆ ಈ ತಾಣವನ್ನು ನನ್ನ ಪ್ರತಿಭಟನೆಯ ಸಂಕೇತವಾಗಿ ಸ್ಥಗಿತಗೊಳಿಸಿದಾಗ, ಕನ್ನಡದಲ್ಲಿ ಆಸಕ್ತಿ ಇರುವ ವಿಮರ್ಶೆ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಓ ಎಲ್ ನಾಗಭೂಷಣಸ್ವಾಮಿಯವರು ಯು ಆರ್ ಅನಂತಮೂರ್ತಿಯವರಿಗೆ ‘ಜಾಗತೀಕರಣದ ಸಂದರ್ಭದಲ್ಲಿ ಕನ್ನಡಸಾಹಿತ್ಯ.ಕಾಂ ನಂತಹ ಪ್ರಯತ್ನ ಆಗದಿದ್ದರೆ ಕನ್ನಡ ಭಾಷೆ ಹಾಗು ಸಂಸ್ಕೃತಿ ಉಳಿಯದೆ ಹೋಗುವ ಅಪಾಯವಿದೆ, ನಿಮ್ಮ ಪ್ರಭಾವ ಬಳಸಿ ಕನ್ನಡಸಾಹಿತ್ಯ.ಕಾಂ ಪುನರಾಂಭಿಸುವಂತೆ ಮಾಡಿ’ ಎಂದು ಪತ್ರ ಬರೆದಿದ್ದರು. ಅವರ ಕಳಕಳಿಯ ದಿಕ್ಕನ್ನು ಹಿಡಿದು ಹೋದಾಗ ತಟಕ್ಕನೆ ಹೊಳೆಯುವ ನಿಜ ನಮ್ಮ ಸಂಭ್ರಮವೆಲ್ಲ ಎಷ್ಟು ಹುಸಿಯಾದುದು ಎಂದು ಮನವರಿಕೆಯಾಗುವುದು ಯಾರ ದುರಂತ ಎನ್ನುವುದನ್ನು ಹೇಳಬೇಕಾಗಿಲ್ಲ. ಕನ್ನಡದ ವಾತಾವರಣದಿಂದ ದೂರವಿರುವವರಿಗೆ ಈ ನಿಜ ಮತ್ತಷ್ಟು ಗಾಢವಾಗಿ ಹೊಳೆದಾತು. ದೂರವಿರುವುದು ಅನಿವಾರ್ಯ, ಅರೋಗ್ಯಕರ ಎಂಬ ವಾದವನ್ನೂ ಕೆಲವರು ಮುಂದಿಡದೆ ಇಲ್ಲ. ಅವರ ವಾದದಲ್ಲಿ ಯಾವುದೇ ಹುರುಳಿಲ್ಲವೆನ್ನುವುದು ಅವರಿಗೆ ತಿಳಿದಿರುತ್ತದೆಯಾದ್ದರಿಂದ ಇಲ್ಲಿ ಅದರ ಪ್ರಸ್ತಾಪ ಹೆಚ್ಚು ಬೇಕಿಲ್ಲ. ‘ಇಲ್ಲಿ ರಾತ್ರಿಯಾದಾಗ ಅಲ್ಲಿ ಬೆಳಕಾಗಿರುತ್ತದೆ ಆದರೆ ಅಲ್ಲಿ ರಾತ್ರಿಯಾದಾಗ ಇಲ್ಲಿ ಬೆಳಕಿರಬೇಕಲ್ಲವೇ, … ಅರೆ ತನಗೇನಾಗಿದೆ, ಹಾಗೆಯೇ ಅಲ್ಲವೇ ಇರುವುದು ಅನ್ನಿಸಿತು. ಇಲ್ಲಿ ಮೊದಲು ರಾತ್ರಿಯಾಗುತ್ತದೆ ಅನ್ನಿಸಿತು. ಹಗಲೂ ಇಲ್ಲೇ ಮೊದಲಲ್ಲವೇ…’ – ಈ ಸಂಚಿಕೆಗೆ ಕತೆಯೊಂದನ್ನು ಬರೆದಿರುವ ಗುರುಪ್ರಸಾದ್ ಕಾಗಿನೆಲೆಯವರ ಅಪ್ರಕಟಿತ ಕತೆಯೊಂದರ ಸಾಲುಗಳನ್ನು ಇಲ್ಲಿ ಹೇಳಿ ಕನ್ನಡಸಾಹಿತ್ಯ.ಕಾಂನ ಕೆಲಸ ಮುಂದುವರಿಸುತ್ತೇನೆ. ಯೋಗಣ್ಣನ ಕಾರ್ಡಿಯಾಲಜಿ.. ಓದಿ ನೋಡಿ ಪ್ರತಿಕ್ರಿಯಿಸಿ ಎಂದು ಎಲ್ಲರಲ್ಲೂ ಕೇಳಿಕೊಳ್ಳಬಲ್ಲೆ. +ಅನಮತಮೂರ್ತಿಯವರ ಅಧಿಕೃತ ಅಂತರ್ಜಾಲ ತಾಣವೆಂದು ನಾವು ಇದನ್ನು ಕರೆದಿದ್ದೆವು. ಅದರಿಂದಾಗಿ ತರ್ಕ-ಕುತರ್ಕಗಳೆಲ್ಲ ಆದದ್ದು ಒಂದು ರೀತಿಯ ನೋವಿನ ಸಂಗತಿ. ಇದರಿಂದಾಗಿ ಕೆಲವರು ಅವರ ವಿರುದ್ಧ – ಮತ್ತು ಅವರ ವಿರುದ್ಧದ ಕೆಲವರು ಕನ್ನಡಸಾಹಿತ್ಯ.ಕಾಂ ಬಗೆಗೆ ಕಲ್ಪಿಸಿದ ವಾತಾವರಣ ರೇಜಿಗೆಯದು. ನಮ್ಮನ್ನು ನಂಬಿ, ವಿಶ್ವಾಸವಿರಿಸಿ ತಮ್ಮ ಕೃತಿಗಳನ್ನೆಲ್ಲ ಎಕ್ಸ್‌ಕ್ಲೂಸಿವ್ ಆಗಿ ಬಳಸಿಕೊಳ್ಳಲು ಉಚಿತವಾಗಿ ಅನುಮತಿ ನೀಡಿದ ಅವರ ಹೃದಯ ವೈಶಾಲ್ಯವನ್ನು ನಾವು ಮರೆಯುವ ಹಾಗಿಲ್ಲ. ’ಕನ್ನಡಸಾಹಿತ್ಯ ನನಗಿಂತಲೂ ದೊಡ್ದದು. ಕನ್ನಡ ಸಾಹಿತ್ಯವನ್ನು ಅನಂತಮೂರ್ತಿ ಸಾಹಿತ್ಯಕ್ಕೆ ಸೀಮಿತಗೊಳಿಸಬೇಡ’ ಎಂದು ಅವರೇ ಹೇಳಿದ್ದನ್ನು ಮನ್ನಿಸಿ ಇದನ್ನು ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸುವ ತಾಣವಾಗಿ ಮಾಡುವಲ್ಲಿ ಎಲ್ಲ ಪ್ರಂiತ್ನಗಳನ್ನು ಮಾಡುತ್ತೇನೆ ಎಂಬ ಭರವಸೆ ನೀಡಬಲ್ಲೆ. ( ಒಮ್ಮೊಮ್ಮೆ, ಅಲ್ಲ, ಈ ಪ್ರಯತ್ನ ಎಂದಿಗೆ ಕಮ್ಮಿಯಾಗಿತ್ತು ಎಂದು ನಾನೇ ಯೋಚಿಸುವಂತಾಗುತ್ತದೆ) +ಕೊಟ್ರೇಶ ಉತ್ತಂಗಿಯವರಿಂದ ಆರಂಭಿಸಿ ಹರೀಶ್ ಕಡ್ಲಬಾಳುರವರನ್ನು ಸೇರಿಸಿದಂತೆ ಅನೇಕರು ಇಂದು ಕನ್ನಡಸಾಹಿತ್ಯ.ಕಾಂನ ಬೆಂಬಲಕ್ಕೆ/ನೆರವಿಗೆ ನಿಂತಿದ್ದಾರೆ. ಅವರಿಗೆಲ್ಲ ಧನ್ಯವಾದಗಳು. ದಯವಿಟ್ಟು ಪ್ರಕಟಿಸಿರುವ ಮನವಿಯನ್ನು ಓದಿ ಪ್ರತಿಕ್ರಿಯಿಸಬೇಕಾಗಿ ಮನವಿ. +ಶೇಖರ್‌ಪೂರ್ಣ +೧೩-೧೧-೨೦೦೧ +ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು […] +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_377.txt b/Kannada Sahitya/article_377.txt new file mode 100644 index 0000000000000000000000000000000000000000..f15210d20e3db17af08299fc326ab5afd1f028b2 --- /dev/null +++ b/Kannada Sahitya/article_377.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಬಿಚ್ಚು’ (ಲಾರೆನ್ಸ್) +‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್) +‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ (ಬ್ಲೇಕ್) +ಆದರೆ: +ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ ಅಪರಾಧವೆನ್ನಿಸಿತ್ತು; +ವಿನಾಶಕಾರಕ ಪ್ರವೃತ್ತಿಗಳನ್ನು ಪರವಶನೆಂಬಂತೆ ನೋಡಿದ್ದ ಕಾನ್ರಾಡ್ ಆ ದಿಗಿಲಿನಲ್ಲಿ ಎತ್ತಿ ಹಿಡಿದದ್ದು ವ್ಯವಸ್ಥೆಯನ್ನು, ನಾಗರಿಕತೆಯನ್ನು, ದಿನನಿತ್ಯದ ಅಚ್ಚುಕಟ್ಟುಗಳನ್ನು; +ಹೊಂದಾಣಿಕೆಗಳನ್ನು ತಿರಸ್ಕರಿಸಿದ ಬ್ಲೇಕ್ ಕೇವಲ ಮುಗ್ಧತೆಯೂ ಅಲ್ಲದ, ಕೇವಲ ವಿವೇಕವೂ ಅಲ್ಲದ ಸಮಗ್ರತೆಯನ್ನು ಮನುಷ್ಯ ತನ್ನ ಕಲ್ಪಕ ಶಕ್ತಿಯಲ್ಲಿ ಮರಳಿ ಹೊಂದುವುದರ ದ್ರಷ್ಟಾರನಾದ. +* +* +* +ಫಿಲೋಕ್ಟ್ರಿಕಸ್ ಒಬ್ಬ ಗ್ರೀಕ್ ಯೋಧ. ಅವನು ಗಾಯಗೊಂಡ. ಗಾಯ ಹುಣ್ಣಾಗಿ ಅಸಹ್ಯ ನಾರಲು ಶುರುವಾಯಿತು. ಎಷ್ಟೆಂದರೆ, ಅವನು ಜನರಿಂದ ದೂರವಾಗಿ ಒಬ್ಬಂಟಿ ಬದುಕಬೇಕಾಯಿತು. ಆದರೆ ಅವನ ಬಳಿ ಎಂದೂ ಗುರಿ ತಪ್ಪದ ಮಾಂತ್ರಿಕ ಶಕ್ತಿಯ ಒಂದು ಬಿಲ್ಲಿತ್ತು. ಅದರಿಂದಾಗಿ, ಆಪತ್ತಿನಲ್ಲಿ ಅವನ ದೇಶದ ಜನ ಅವನಲ್ಲಿ ಮೊರೆಹೋಗಬೇಕಾಗುತ್ತಿತ್ತು. +ನಾರುವ ಹುಣ್ಣನ್ನೂ ಮಾಂತ್ರಿಕ ಬಿಲ್ಲನ್ನೂ ಒಟ್ಟಿಗೇ ಪಡೆದಿದ್ದ ಫಿಲೋಕ್ಟಿಕಸ್ಸನ್ನು ಅಮೆರಿಕನ್ ಚಿಂತಕನೊಬ್ಬ ನಮ್ಮ ಕಾಲದ ರೋಗಗ್ರಸ್ತ ಕಲಾವಿದನಿಗೆ ಸಂಕೇತ ಮಾಡುತ್ತಾನೆ. ಅವನ ಹುಣ್ಣು ನಾರುವುದಕ್ಕೂ, ಸರ್ವಹಿತ ಕಾಯಬಲ್ಲ ಮಾಂತಿಕ ಬಿಲ್ಲು ಅವನ ಬಳಿಯಿರುವುದಕ್ಕೂ ಸಂಬಂಧವಿದೆಯಂದು ತಿಳಿದಾಗ, ತಮ್ಮ ವೇದನೆ ಮತ್ತು ವ್ಯಾಧಿಯಿಂದಲೇ ಲೋಕಕಲ್ಯಾಣ ಸಾಧಿಸಬಲ್ಲಂಥ ಸೃಜನಶೀಲರಾದ ದಾಸ್ತೊವಸ್ಕಿ, ಬಾದಿಲೇರ್‌ರವರ ವ್ಯಕ್ತಿತ್ವ ಒಗಟಾಗುತ್ತದೆ. +ಎಲ್ಲ ಮನೋರೋಗಿಗಳೂ ಸಾಹಿತಿಗಳಾಗುವುದಿಲ್ಲ. ಸಾಹಿತಿ ಗಟ್ಟಿಗ; ಹಿಸ್ಟೀರಿಯಾವನ್ನು ಅದುಮಿಕೊಳ್ಳಬಲ್ಲವ. ಬಿಚ್ಚುವುದು ಮಾತ್ರವಲ್ಲ, ಕಟ್ಟುವುದೂ ಅವನು ಅನುಭವಿಸುವ ಅನಿವಾರ್ಯ ಒತ್ತಡ. +ತನ್ನ ಹುಣ್ಣನ್ನು ಸಾರಿಕೊಳ್ಳುವ ಸ್ವಪ್ರದರ್ಶನರತಿಯಲ್ಲಿ ಸುಖ ಕಾಣಲು ತೊಡಗಿದವನು ತನ್ನ ಸೃಜನಶೀಲತೆಯನ್ನು ಬತ್ತಿಸಿಕೊಂಡಿದ್ದಾನೆ ಎಂದರ್ಥ. ನಾಗರಿಕತೆ ಮುಚ್ಚಿಡುವ ಘೋರ ಸತ್ಯಗಳನ್ನು ತೀವ್ರವಾಗಿ ಅನುಭವಿಸಲೆಂದು ತನ್ನನ್ನೇ ಗಿನಿಪಿಗ್ ಮಾಡಿಕೊಂಡ ಫ್ರೆಂಚ್ ಕವಿ ಬಾದಿಲೇರ್ ಪಾಪದ ರುಚಿಯನ್ನು ಕಾಣಿಸಿದ ರೀತಿಯೇ ಎಲಿಯಟ್‌ನಂಥ ಕವಿಯ ಧರ್ಮಶ್ರದ್ಧೆಗೆ ಆಳವನ್ನು ತಂದಿತು. ಕೇವಲ ಸ್ವಪ್ರದರ್ಶನರತಿ ಇದನ್ನು ಸಾಧಿಸಲಾರದು. +* +* +* +‘ರಸ ಪ್ರಜ್ಞೆ ಸ್ವಕೇಂದ್ರ ಮುಕ್ತಿಯಿಂದ ಮಾತ್ರ ಲಭಿಸತಕ್ಕ ಪ್ರಜ್ಞೆ’ ಎನ್ನುತ್ತಾರೆ ಕನ್ನಡದ ಹಿರಿಯ ಕವಿ ಪುತಿನ. ಅವರ ರಸಪ್ರಜ್ಞೆಯಲ್ಲಿ ಬರುವ ಈ ಮಾತುಗಳನ್ನು ಮೇಲಿನದರ ಹಿನ್ನೆಲೆಯಲ್ಲಿ ಚಿಂತಿಸಬೇಕು: +ಭವಸಾಗರದಲ್ಲಿ ಪುರುಷ ಸ್ವಭಾವಬದ್ಧ, ಜೀವಕಾಮ ನಿಯುಕ್ತ, ಯೋಗಕ್ಷೇಮ ಚಿಂತಾಮಗ್ನ, ರಾಗ – ದ್ವೇಷಾದಿಗಳಿಂದ ಛಿದ್ರಿತ, ಆಹಂಕಾರ ಮಮಕಾರಗಳಿಂದ ಸೀಮಿತ…. ರಸಸ್ತರದಲ್ಲಿ ಆತ ಸ್ವಭಾವ ಮುಕ್ತ, ಯೋಗಕ್ಷೇಮ ಕಾತರವಳಿದವನು. ಅರಿಷಡ್ವರ್ಗವನ್ನು ನಿಯಂತ್ರಿಸಬಲ್ಲ ಊರ್ಜಾವಂತ…. ಭವಸ್ತರಾದಲ್ಲಿ ಆತ ಪಕ್ಷವರ್ತಿ, ಪ್ರತಿಷ್ಠಾಕಾಮಿ; ರಸಸ್ತರದಲ್ಲಿ ಸಾಕ್ಷಿ, ಧರ್ಮದೃಕ್, ಪಕ್ಷಪಾತರಹಿತ, ನ್ಯಾಯಪರ, ವಿನಯಶೀಲ. ಭವಸ್ತರದಲ್ಲಿ ಶೀಘ್ರದುಃಖಿ, ರಸಸ್ತರದಲ್ಲಿ ಅಶುತೋಷಿ…. +ನಮ್ಮ ಕಾಲದಲ್ಲಿ ಲೇಖಕ ನಮಗೆ ಅಧಿಕೃತವೆನ್ನಿಸಲು ನರಕದ ಜ್ಞಾನವಿದ್ದೂ ಅವನು ಕಲ್ಯಾಣದ ಕಲ್ಪನೆಯುಳ್ಳವನೆನ್ನಿಸಬೇಕು; ಬೇಂದ್ರೆಯಂತೆ ತೀವ್ರ ಜೀವಕಾಮಿಯಾಗಿದ್ದೂ ಆತ್ಮಕಾಮಿಯೆನ್ನಿಸಬೇಕು. ಹೆದೆಯೇರಿಸಿದ ಬಿಲ್ಲು ಸುಲಭವಾಗಿ ಬಾಗುವಂಥದು ಎನ್ನಿಸಬಾರದು. ‘ಸ್ವ ಕೇಂದ್ರ ಮುಕ್ತಿ’ ತರಬಲ್ಲಂಥ ಸಾಹಿತ್ಯ, ವಿನಾಶಕಾರಕ ಶಕ್ತಿಗಳ ಜೊತೆ, ವ್ಯಾಧಿಯ ಜೊತೆ ವ್ಯವಹರಿಸಿ ಗೆದ್ದಿರುತ್ತದೆ; ನರಕ ದರ್ಶನ ಮಾಡಿಸಬಲ್ಲುದಾಗಿರುತ್ತದೆ. ಅಂದರೆ ಅದು ಜೀವನಾನುಭವದ ವಿವರಗಳಲ್ಲಿ, ಹಾದಿ ಬೀದಿಗಳಲ್ಲಿ ಒಡನಾಡುವ ಭಾಷೆಯಲ್ಲಿ ಮೈಛಳಿಬಿಟ್ಟು ವ್ಯವಹರಿಸಬಲ್ಲುದಾಗಿರುತ್ತದೆ. +ಐರೋಪ್ಯ ಸಂಸ್ಕೃತಿಯ ಧಾಳಿಯಲ್ಲಿ ಭಾರತೀಯ ಪಿತೃಪರಂಪರೆಯ ಜ್ಞಾನವನ್ನು ನಮ್ಮೆಲ್ಲರಿಗಾಗಿ ಉಳಿಯುವಂತೆ ಉರಿಸುತ್ತಿರುವ ಕವಿ ಪುತಿನರಿಗೆ ನಮಸ್ಕಾರ. ಅವರಿಗೆ ನಮಸ್ಕರಿಸಿ, ಪಿತೃಪರಂಪರೆ ನಮಗೆ ಹೇಗೆ ನಿತ್ಯ ಬಳಕೆಯ ವಸ್ತುವಾಗಬಲ್ಲುದೆಂದೂ, ಪಿತೃ ಋಣವನ್ನು ಸಲ್ಲಿಸುವುದರ ಜೊತೆಗೇ ಹೇಗೆ ನಮ್ಮ ನಾಡಿನ ದಲಿತ ಸ್ವಾಭಿಮಾನಿಯಾದ ಜೀವಿಯಾಗಬಲ್ಲನೆಂದೂ ನಮ್ಮ ಜನಾಂಗ ಹುಡುಕಿಕೊಳ್ಳಬೇಕಾಗಿದೆ. ಸಾಂಸ್ಕೃತಿಕವಾಗಿಯೂ ಇದು ಅನಿವಾರ್ಯ. ಸಂಸ್ಕೃತದ ರಾಜಮಾರ್ಗ ಭವ್ಯವಾಗಿದೆ. ಆದರೆ ಅಲ್ಲಿ ಓಡಾಡುವವರು ವಿರಳ. ದೇಸಿಯ ಒಳಮಾರ್ಗಗಳು ದುಡಿಯುವ ಜನರಿಂದ ಹಲವು ಭಾಷೆಗಳ ಗಿಜಿಬಿಜಿಯಲ್ಲಿ ಕಿಕ್ಕಿರಿದಿದೆ; ಅದರಲ್ಲಿ ಅನುಭವದ ಸಂಪತ್ತಿದೆ; ಮಣ್ಣು ಬೆವರುಗಳ ಗಂಧವಿದೆ. +* +* +* +ಈ ತಿಂಗಳು ನಡೆದ ಮೈಸೂರಿನ ದಸರಾ ಕವಿ ಸಮ್ಮೇಳನದಲ್ಲಿ ನಾನು ಕಂಡದ್ದು; ಬಂಡಾಯ ಆಂದೋಳನದಿಂದ ಪ್ರಭಾವಿತರಾದವರ ನಿರ್ಭಿಡೆಯಾದ ಸ್ವಭಾವೋಕ್ತಿಯ ಪ್ರದರ್ಶನ; ಸ್ವಭಾವೋಕ್ತಿ ಮತ್ತು ಮಾತಿನ ಲಯಗಳನ್ನು ಸಾಂಕೇತಿಕ ಅರ್ಥಗಳಿಗೆ ತಿರುಗಿಸುವ ನವ್ಯರ ಪ್ರಯತ್ನ; ಸ್ವಂತದ ಚಹರೆ ಛಾಪುಗಳಿಗೆ ಅವಕಾಶವೆ ಇಲ್ಲದಂತಿದ್ದರೂ ಮರುಳುಗೊಳಿಸಬಲ್ಲಂಥ (ದೇವೇಂದ್ರ ಕುಮಾರ ಹಕಾರಿಯವರ) ಅನುಭಾವ ಪದ; ನಿಯಮಬದ್ಧಶಿಲ್ಪದ ಇಬ್ಬರು ಹಿರಿಯ ಕವಿಗಳ ಪದ್ಯಗಳು. ಶ್ವರುದ್ರಪ್ಪನವರು ಛಂದೋಬದ್ಧವಾಗಿಯೇ ಬರೆಯ ಬೇಕಾದವರು ಎನ್ನಿಸಿತು. ನಿತ್ಯದ ಮಾತಿನಂತೆಯೇ ಆಕಾರ ಹೀನವಾದ ಸಪ್ಪೆ ಪದ್ಯಗಳ ನಡುವೆ, ಬಂಡಾಯದ ಉಬ್ಬರಗಳ ನಡುವೆ ಯುವಕವಿ ಪ್ರತಿಭಾರ ಪದ್ಯ ತನ್ನ ಚೆಲ್ಲು, ಚುರುಕು, ಉಲ್ಲಾಸಗಳಲ್ಲಿ ಮದುವೆ ಮನೆಗೆ ಕೆಂಪು ರೇಷ್ಮೆ ಸೀರೆಯುಟ್ಟು ಹೋದ ಹೆಣ್ಣೊಬ್ಬಳನ್ನು ಒಳಗಣ್ಣಿಂದ ಕಂಡಿತು. ಆದರೆ ಉಳಿದವರ ಸಲೀಸು ಮಾತಿನ ಪದ್ಯಗಳು ಕೇವಲ ಸಲೀಸು ಮಾತಿನಂತಿದ್ದವು; ಬೀದಿಯ ಬೈಗುಳವನ್ನು ವೇದಿಕೆಯ ಮೇಲಿಂದ ತಟಸ್ಥರಾಗಿ ಮತ್ತೆ ಕುರ್ಚಿಯಲ್ಲಿ ನಾವು ಕೇಳಿಸಿಕೊಂಡೆವೆಂಬುದಷ್ಟೇ ಅವುಗಳಲ್ಲಿದ್ದ ಹೊಸದು. ನವ್ಯರ ಮೂರ್ತತೆ ನೆಲಕ್ಕಂಟಿಕೊಂಡು, ಮಾತುಗಳಲ್ಲಿ ಉರುಳುತ್ತ, ಮೇಲೇರುವುದರಲ್ಲಿ ಸೋತಿತು. ಲಕ್ಷ್ಮೀನಾರಾಯಣ ಭಟ್ಟರ ಪದ್ಯ ವಾಸ್ತವದ ನೆಲದಲ್ಲೇ ಅರ್ಥಬಿಚ್ಚಿಕೊಳ್ಳುವಂತೆ ಕಾಣಿಸಿ, ಕೊನೆಯಲ್ಲಿ ದಿಕ್ಕು ತಪ್ಪಿಸಿತು. ರಮಜಾನ ದರ್ಗಾ, ಅಬ್ದುಲ್ ಮಜೀದ್ ಖಾನ್, ಜಯಂತ ಕಾಯ್ಕಿಣಿ ಚುರುಕಾಗಿ ಮಾತಾಡಿದರು. ವೆಂಕಟೇಶಮೂರ್ತಿ, ತಿರುಮಲೇಶರು ಪದ್ಯರಚನೆಯ ಕಲೆಗಾರಿಕೆಯನ್ನು ಕಡೆಗಣಿಸಲಿಲ್ಲೆಂದು ಖುಷಿಯಾಯಿತು. ಇನ್ನೊಂದು ಸಂದರ್ಭದಲ್ಲಾದರೆ ನನಗೆ ಅತೃಪ್ತಿಯಾಗುವಂತಿದ್ದ ಪುತಿನ ಮತ್ತು ಗೋಕಾಕರ ಪದ್ಯಗಳು ಚೊಕ್ಕವಾದ ಬಂಧದಲ್ಲಿ ಈ ಹಲವು ಮಾತುಗಾರರ ವೇದಿಕೆ ಮೇಲಿಂದ ಉಸಿರಾಡುತ್ತ ಹೊಳೆದವು. +* +* +* +‘ರಸ ಪ್ರಜ್ಞೆ ಸ್ವಕೇಂದ್ರ ಮುಕ್ತಿಯಿಂದ ಮಾತ್ರ ಲಭಿಸತಕ್ಕ ಪ್ರಜ್ಞೆ’ ಎಂಬುದರ ಸತ್ಯವನ್ನು ಕವಿ ತನ್ನ ಸ್ವಭಾವವನ್ನೂ ಜೀವನಾನುಭವವನ್ನೂ ಗಾಢವಾಗಿ ತೊಡಗಿಸಿಕೊಂಡೇ ಮತ್ತೆ ಹೊಸ ಬಗೆಯಲ್ಲಿ ಸಾಧಿಸಬೇಕಾಗಿದೆ ಎಂದು ಅನ್ನಿಸುತ್ತದೆ. ಇದಾಗದಿದ್ದಲ್ಲಿ ಕಾವ್ಯ ಅದೇ ಹಳೆಯ ಎರಕದಲ್ಲಿ ಹೊಯ್ದು ಸಾಲಭಂಜಿಕೆಗಳಂತಿರುತ್ತದೆ; ಅಥವಾ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತದೆ. +ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ‘ಕ್ರಾಂತಿ’ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು. ಅವನಿಗೆ ನಿಜವಾಗಿ ಕ್ರಾಂತಿ ಬೇಕಾಗಿಲ್ಲ; ಆದರೆ ತನ್ನ ರೋಷಾವೇಶಗಳನ್ನು ವ್ಯಕ್ತಪಡಿಸಲೊಂದು ನೆವಬೇಕು. ವ್ಯವಸ್ಥೆಯ ಅಗತ್ಯವನ್ನೂ ಬದಲಾವಣೆಯ ಅನಿವಾರ್ಯತೆಯನ್ನೂ ಏಕಕಾಲದಲ್ಲಿ ಅನುಭವಿಸುವಾತ ಮಾತ್ರ ಕ್ರಾಂತಿಕಾರಿಯಾಗಬಲ್ಲ. ಕ್ರಾಂತಿಯನ್ನು ಕುರಿತು ಚಿಂತಿಸಬಲ್ಲವರೆಲ್ಲರೂ ಕಾನ್ರಾಡ್‌ನ ‘ದಿ ಸೀಕ್ರೆಟ್ ಏಜೆಂಟ್’ ಓದಬೇಕು. ಅಲ್ಲೊಬ್ಬ ತನ್ನ ಮೈಯ ಮೇಲೆಲ್ಲ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ತನ್ನನ್ನೂ ತನ್ನ ಸುತ್ತಲಿನವರನ್ನೂ ಏಕಕಾಲದಲ್ಲಿ ಕೊಲ್ಲಬಲ್ಲ ಅರಾಜಕತಾನಾದದ ಉಗ್ರ, ತಪಸ್ವಿಯಿದ್ದಾನೆ. ಅರಾಜಕತಾವಾದಿಗಳ ಸಂಘಲಾಭದ ಮುಖೇನ ಜರ್ಮನರಿಗೆ ಗುಪ್ತಚಾರನಾದವನೊಬ್ಬನೂ ಬರುತ್ತಾನೆ. ಅವನ ಹೆಂಡತಿ ತನ್ನ ಮೂರ್ಖ ತಮ್ಮನೊಬ್ಬನನ್ನು ಅಕ್ಕರೆಯಿಂದ ಸಾಕುತ್ತಿರುವ ಸಂಸಾರಿ ಹೆಣ್ಣು. ದುರ್ಬಲ ಮನಸ್ಸಿನ ಈ ತಮ್ಮನನ್ನು ಅವನ ಕರುಣೆ ಮೀಟಿ, ಉನ್ಮಾದಕ್ಕೆ ಒಳಪಡಿಸಿ, ಅವಳ ಖದೀಮ ಗಂಡ ಬಾಂಬ್‌ಸ್ಪೋಟ್ ಒಂದರಲ್ಲಿ ಅವನನ್ನು ಬಳಸಿಕೊಂಡು ಸಾಯಿಸುತ್ತಾನೆ. ಹೆಂಡತಿ ಪೆದ್ದಳಾದರೂ ಇದನ್ನು ತಿಳಿದೊಡನೆಯೇ ಮಾಂಸ ಕೊಯ್ಯುವ ಅಡಿಗೆ ಮನೆ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಅಸ್ವಸ್ಥ ಪೋಲಂಡಿನ ಕಾನ್ರಾಡ್ ಅರಾಜಕ ಕ್ರಾಂತಿಕಾರತೆಯ ರುಚಿತಿಳಿದಿದ್ದ ಸಂಪ್ರದಾಯವಾದಿ. ಸುಖಜೀವಿಗಳಾದ ಉದಾರವಾದಿಗಳು ತಮ್ಮ ಪಾಪಪ್ರಜ್ಞೆಯಿಂದಾಗಿ ಕ್ರಾಂತಿಯ ಮಾತಾಡುವವರನ್ನು ಬೆಂಬಲಿಸುವುದು; ಮೊಡ್ಡು ಜನರ ಜೀವನಪ್ರೀತಿ ಸತ್ಯನಿಷ್ಠೆಗಳು; ಬಿರಿಕುಗಳನ್ನು ಉಪೇಕ್ಷಿಸುವ ವ್ಯವಸ್ಥೆಯ ದಡ್ಡತನ; ವಿನಾಶವನ್ನು ಪ್ರೀತಿಸುವ ಮನೋವ್ಯಾಧಿ ಗ್ರಸ್ತರು ಸಾಮಾಜಿಕ ಅನ್ಯಾಯಗಳನ್ನು ದುರುಪಯೋಗಪಡಿಸಿಕೊಂಡು ಹೇಗೆ ಕಿಚ್ಚೆಬ್ಬಿಸುವುದರಲ್ಲೇ ಆಸಕ್ತರಾಗಿರುತ್ತಾರೆಂಬ ದಿಗಿಲು – ಇವೆಲ್ಲವನ್ನೂ ರಕ್ತಕ್ರಾಂತಿ, ಕೊಲೆ, ಉತ್ಪಾತಗಳ ನಮ್ಮ ಕಾಲಕ್ಕೆ ಅನನ್ಯವೆಂಬಂತೆ ಕಾನ್ರಾಡ್ ಕಾಣಿಸಿದವನು. ವ್ಯವಸ್ಥೆಯ ಪ್ರೀತಿಯನ್ನೂ, ವಿನಾಶದ ಆಕರ್ಷಣೆಯನ್ನೂ ತನ್ನೊಳಗೇ ಕಂಡುಕೊಂಡವನು ಕಾನ್ರಾಡ್. ಆದ್ದರಿಂದಲೇ ಅವನು ಕೊಡುವ ‘ಸ್ವಕೇಂದ್ರ ಮುಕ್ತಿ’ಯ ರಸಪ್ರಜ್ಞೆ ನಮಗೆ ಗಾಢವಾದ ಅನುಭವವಾಗುತ್ತಾದೆ. +ಕ್ಲಾಸಿಕಲ್ ಕವಿಗಳು ಮಾತ್ರ ವ್ಯವಸ್ಥೆಯನ್ನೂ ಹೊಗಳಬಲ್ಲವರು. ಉದಾಹರಣೆಗೆ ಪಂಪ ಮತ್ತು ಕಾಳಿದಾಸ. ನಮ್ಮ ಕಾಲದ, ಪ್ರಾಯಶಃ ಅನಿವಾರ್ಯದ, ದುರಂತವೆಂದರೆ ಈ ಬದಲಾವಣೆಯ ಯುಗದಲ್ಲಿ ಹುಟ್ಟಿದ ಅತ್ಯುತ್ತಮ ಲೇಖಕರು ಬಿಚ್ಚುವುದರಲ್ಲಿ, ಕೊಳಕನ್ನು ನಾಶಮಾಡುವುದರಲ್ಲಿ, ಹರಿಯುವುದರಲ್ಲಿ ಎಷ್ಟು ಆಸಕ್ತರಾಗಿರುತ್ತಾರೋ, ಅಷ್ಟೇ ಹೊಸ ವ್ಯವಸ್ಥೆಯ ನಿರ್ಮಾಣದಲ್ಲಿ ಆಸಕ್ತರಾಗಿರುವುದಿಲ್ಲ. ತಮ್ಮ ಬರವಣಿಗೆಯ ತೀವ್ರತೆಗಾಗಿ ಅವರು ಈ ಬೆಲೆ ತೆತ್ತಿರುತ್ತಾರೆ. ರಷ್ಯನ್ ಕವಿ ಮಯಾಕೊವೆಸ್ಕಿ ಕ್ರಾಂತಿಪೂರ್ವ ಮತ್ತು ಕ್ರಾಂತಿ ಸಮಯದಲ್ಲಿ ಎಷ್ಟು ಲವಲವಿಕೆಯಿಂದ ದೇಶವನ್ನು ಬಿಗಿದಿದ್ದ ಸರಪಳಿಗಳನ್ನು ಕಡಿದು ಹಾಕಿದನೋ, ಅಷ್ಟೇ ತೀವ್ರವಾಗಿ ಹೊಸ ಉಕ್ಕಿನ ಕಾರ್ಖಾನೆಗಳನ್ನು ತೆರೆಯುವುದರ ಬಗ್ಗೆ, ಸೇತುವೆಗಳನ್ನು ಕಟ್ಟುವುದರ ಬಗ್ಗೆ, ಉತ್ಪಾದನೆ ಹೆಚ್ಚಿಸುವುದರ ಬಗ್ಗೆ ಕ್ರಾಂತ್ಯುತ್ತರ ರಷ್ಯದಲ್ಲಿ ಹಾಡಲಾರದೇ ಹೋದ. ಕೇವಲ ಪ್ರಚಾರವನ್ನು ಬರೆಯಲಾರದ ಅವನು, ತನ್ನ ಸೃಜನಶಕ್ತಿ ಬತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಐಸಾಕ್ ಡಾಯ್ಸಚರ್ ಹೇಳುತ್ತಾನೆ. ಇದು ನಿಜವಾದರೆ ನಾವು ಕಲಿಯಬೇಕಾದೊಂದು ಪಾಠ ಅಲ್ಲಿದೆ. ಸ್ವಭಾವದಲ್ಲಿನ ಸಿಟ್ಟು ದುಗುಡಗಳನ್ನು ಬಳಸಿಕೊಳ್ಳಬಲ್ಲಷ್ಟು ಸುಲಭವಾಗಿ ಕಲ್ಯಾಣ ದೃಷ್ಟಿಯನ್ನು ಈ ಕಾಲದಲ್ಲಿ ಸಾಹಿತ್ಯ ಬಳಸಿಕೊಳ್ಳಲಾರದೇ ಹೋಗಿದೆ. ಆದರೆ ಮಾರ್ಕ್ಸ್‌ವಾದದ ಕ್ರಾಂತಿ ಎರಡನ್ನೂ ಬೇಡುತ್ತದೆ. +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು […] +ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟೀಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಮ್ಮ ರಾಜಕೀಯ ವ್ಯವಸ್ಥೆ ಸೂತ್ರ ತಪ್ಪುತ್ತಿರುವ ಬಗೆಗಿನ ಕಳವಳವನ್ನು, ಸಮುದಾಯ ಪ್ರಜ್ಞೆ ಒಡೆದುಹೋಗುತ್ತಿರುವ ಬಗೆಗಿನ ತಬ್ಬಿಬ್ಬನ್ನೂ, ನಮ್ಮ ಸಂಸ್ಕೃತಿಯ ದ್ವಂದ್ವಗಳನ್ನು ಅರಗಿಸಿಕೊಳ್ಳಲಾಗದ ತಪ್ಪಿತಸ್ಥ ಮನೋಭಾವವನ್ನೂ ತೋರಿಸುತ್ತದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_378.txt b/Kannada Sahitya/article_378.txt new file mode 100644 index 0000000000000000000000000000000000000000..889de9b245f49aefe7fdab4425f73970e5caedb1 --- /dev/null +++ b/Kannada Sahitya/article_378.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿ +ಹುರಿನಿಂತ ಛಲದಲ್ಲಿ ದುರುಗುಟ್ಟಿತು, +ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿ +ಗೆದ್ದ ಭಮೆ ಕಲಕೊಂಡು ಕವಿಯಾಯ್ತು +ಅನ್ಯಕೆ ಎಡೆಯಿರುವ ವಿನಯವಾಯ್ತು +ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದ +ಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇ +ತನ್ನಷ್ಟೆ ತಾನಾಗಿ ಇರುವ ಬೆಕ್ಕಿನ ಸ್ವಾಸ್ಥ್ಯ +ಕವಿಯ ಅಸ್ವಸ್ಥತೆಯ ಪ್ರತಿಮೆಯಾಯ್ತು +ಬೆಕ್ಕು ಬೆಕ್ಕೇ ಆಗಿ ಉಳಿಯದಂತಾಯ್ತು +ಪ್ರತಿಮೆಯೂ ತಾಯೆಂದು, ಸಿಗಲೊಲ್ಲೆ ಏಕೆಂದು +ಬಿಕ್ಕಿ ಬಿಕ್ಕೀ ಅಳುವ ಪರಮಹಂಸರಿಗೊ +ತಾಯಿ ಸಾಕ್ಷಾತ್ಕರಿಸಿ ಕೆಂಪುನಾಲಗೆ ತೋಚಿ +ಸದ್ದಿರದೆ ಎದುರಾದ್ದು…ಬೆಕ್ಕೆ ಆಗಿ +ಬೆಕ್ಕು ಬೆಕ್ಕಾಗಿದ್ದೆ ಬಲು ಮುದ್ದು ತಾಯಿ. +೮-೧-೯೨ +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […] +೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_379.txt b/Kannada Sahitya/article_379.txt new file mode 100644 index 0000000000000000000000000000000000000000..12b32eccc24afb6cc91392a6115b0ee6ebb4270e --- /dev/null +++ b/Kannada Sahitya/article_379.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, ಲೇಖಕರ ಅನಿಸಿಕೆಗಳ ಬಗ್ಗೆ, ರಂಗಭೂಮಿ ಸ್ಥಿತಿಗತಿ ಬಗ್ಗೆ ಮೆಗಾ ಧಾರಾವಾಹಿಗಳ ಆಭಾಸಗಳ ಬಗ್ಗೆ, ಟೀಕೆ-ಟಿಪ್ಪಣಿಗಳಿದ್ದವು. ಅದು ಓದುಗರಿಗೂ ಪ್ರಿಯವಾದೀತೆಂದು ಈ ಬಾರಿ ಹಲವಾರನ್ನು ಟಿಪ್ಪಣಿಸಿರುವೆ. +* ಡಾ. ರಾಜ್‌ಕುಮಾರ್ ಅವರ ‘ಭಕ್ತ ಅಂಬರೀಶ’ಕ್ಕಾಗಿ ಹಾಡುಗಳ ಧ್ವನಿಮುದ್ರಣ ಅದ್ದೂರಿಯಾಗಿ ನಡೆಯಿತು. ನೃಪತುಂಗ, ಕರ್ಣ, ಗೌತಮಬುದ್ಧ ಮುಂತಾದ ಚಿತ್ರಗಳು ಅವರ ಮುಂದಿನ ಗುರಿ. +– ಸುದ್ದಿ +* ರೀಮೇಕ್ ಸಂಸ್ಕೃತಿ ಮತ್ತೆ ಬರಬೇಕೆಂದು ಅಂಬರೀಶ್, ಶಶಿಕುಮಾರ್ ಹಂಬಲಿಸಿ, ೧೦೦% ಟ್ಯಾಕ್ಸ್ ಫ್ರೀ ಸಿಗುವಂತೆ ಮಾಡಲು ನಾನಾ ಸರ್ಕಸ್ ಮಾಡುತ್ತಿರುವಾಗ ಡಾ. ರಾಜ್ ಕನ್ನಡಿಗರಿಗೆ ಪ್ರಿಯವಾಗುವ ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ತೋರ ಹೊರಟಿರುವುದು ಸ್ತುತ್ಯಾರ್ಹ. ಅವರ ಗುರಿ ಅವರ ಕಿರೀಟಕ್ಕೆ ‘ಗರಿ’ ಆಗಲಿ. +* ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ರಂಗಭೂಮಿಯಿಂದ ಸಿನಿಮಾಗೆ ಬಂದವರು. ಬಾಗಲಕೋಟೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ.ವೆಂ.ರಾಜಗೋಪಾಲ್ ಅವರ ಕೃತಿಗಳನ್ನು ವಿಶ್ಲೇಷಿಸುವ ಅತೀವ ಸಂಭ್ರಮದಲ್ಲಿ ಅನವಶ್ಯಕವಾಗಿ ರೇಡಿಯೋ ನಾಟಕಗಳನ್ನು ಎಳೆತಂದು “ರೇಡಿಯೋ ನಾಟಕ ನಾಟಕವೇ ಅಲ್ಲ ‘ಅಬ್ಬಬ್ಬ’ ಎಂದರೆ ಅರೆಬರೆ ನಾಟಕ ಎಂದಷ್ಟೇ ಕರೆಯಬಹುದು” ಎಂದರು. +– ಒಂದು ವರದಿ +* ಜಗತ್ತಿನಲ್ಲಿ ರೇಡಿಯೋ ನಾಟಕಗಳಿಗೊಂದು ಮಹತ್ವ ತಂದುಕೊಟ್ಟ ನಾರ್‍ಮನ್ ಕಾರ್‍ವಿನ್ ಹೆಸರು ಕೇಳಿಲ್ಲದವರು ಮಾತ್ರ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದು. ಎಸ್.ಎನ್. ಶಿವಸ್ವಾಮಿ, ಎನ್ಕೆ ಮುಂತಾದವರ ರೇಡಿಯೋ ನಾಟಕಗಳನ್ನು ಈಗಲಾದರೂ ಓದಿ ಕ.ವೆಂ. ರೇಡಿಯೋ ನಾಟಕಗಳು ನಾಟಕವೇ ಅಲ್ಲ ಎಂಬ ಉದ್ಧಟತನದ ಹೇಳಿಕೆ ‘ಅರೆಬರೆ ವಿಮರ್ಶಕ’ ಮಾತ್ರ ನೀಡಬಲ್ಲ. +* ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಈಗ ಚಲನಚಿತ್ರ ಮಾಡುವ ಸಂಭ್ರಮದಲ್ಲಿದ್ದಾರೆ ಡಿ. ರಾಜೇಂದ್ರಬಾಬು, ಗ್ರಾಮೀಣ ಸಂಸ್ಕೃತಿಯ ಸೊಗಡಿರುವ ಈ ಜಾನಪದ ಧಾಟಿಯ ನಾಟಕ ತುಂಬ ಯಶಸ್ವಿಯಾಗಿ ರಂಗಕ್ಕೆ ಬಂದಾಗ ಗಿರೀಶ್ ಕಾರ್ನಾಡ್, ಹೆಚ್.ಜಿ. ಸೋಮಶೇಖರರಾವ್ ಮುಂತಾದವರು ಅಭಿನಯಿಸಿದ್ದರು. ಈಗ ಡಿ.ರಾಜೇಂದ್ರ ಬಾಬು ಸಿನಿಮಾಟಿಕ್ ಟಚಸ್ ನೀಡಿ, ಹಿಂದೀ ಚಿತ್ರರಂಗದ ನಟೀಮಣಿಯರನ್ನು ಕರೆತರುವ ಯೋಚನೆಯಲ್ಲಿದ್ದಾರೆ. +– ಸುದ್ದಿ +* ರೀಮೇಕ್ ಚಿತ್ರಗಳನ್ನು ಯಶಸ್ವಿಯಾಗಿ ತೆರೆಗೆ ತಂದ ಡಿ. ರಾಜೇಂದ್ರಬಾಬು ಅವರಿಗೆ ‘ಕೃಷ್ಣಲೀಲೆ’ ಒಳ್ಳೆ ಹೆಸರು ತರಲಿಲ್ಲ. ಈಗ ಮತ್ತೆ ಸಾಹಿತ್ಯ ಕೃತಿಗಳತ್ತ ಇಣುಕುತ್ತಿರುವುದು ಶುಭ ಸೂಚನೆ. +‘ಜೋಕುಮಾರಸ್ವಾಮಿ’ ನಾಟಕದ ಸೂಕ್ಷ್ಮಗಳನ್ನೂ ಉಳಿಸಿಕೊಂಡು- ಬಾಬು ಒಳ್ಳೆ ಚಿತ್ರ ಮಾಡಲಿ. +* ರಂಗಭೂಮಿಯಿಂದ, ರಂಗಾಯಣದಿಂದ, ಅಭಿನಯ ತರಂಗದಿಂದ ಸಾಕಷ್ಟು ಮಂದಿ ಸಿನಿಮಾ ಹಾಗೂ ಟ.ವೀಗೂ ಹಾರಿದ್ದಾರೆ. ರವಿಚಂದ್ರನ್ ಅವರೊಂದಿಗೆ ಕಲಾ ನಿರ್ದೇಶಕರಾಗಿ ದುಡಿಯುತ್ತಿರುವ ‘ಅರುಣ್’ ಈಗ ಭಾರಿ ಹೆಸರು ಮಾಡಿದ್ದಾರೆ. ಕಲಾತ್ಮಕ ಸೆಟ್‌ಗಳು ಬೇಕೆಂದರೆ ಕೇಳಿಬರುವ ಇನ್ನೊಂದು ದೊಡ್ಡ ಹೆಸರು ಶಶಿಧರ್ ಅಡಪ, ಹೊಸದಾಗಿ ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಬಂದ ಕೆ.ಸಿ.ರಾಮಮೂರ್ತಿ ಹಾಗೂ ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರಿಗೆ ‘ರಂಗಭೂಮಿ ಕ್ರಿಯಾ ಸಮಿತಿ’ ತನ್ನ ಬೇಡಿಕೆಗಳನ್ನು ಸಲ್ಲಿಸಿದಂದು ರಂಗ ನಿರ್ದೇಶಕ ‘ಮಾಲತೇಶ್ ಬಡಿಗೇರ್’ ಸಚಿವೆಗೊಂದು ನೆನಪಿನ ಕೊಡುಗೆ ನೀಡುವಾಗ ಈಗ ಸಚಿವೆಗೆ ‘ಕಿರೀಟ ಧಾರಣೆ’ ಎಂದರು ನಿರೂಪಕರು. ಆಗ ಮಾಲತೇಶ್ ನೀಡಿದ್ದು ಒಂದು ಮುಖವಾಡ. +– ಸುದ್ದಿ +* ಸಚಿವೆ ರಾಣಿ ಸತೀಶ್ ‘ಮುಖವಾಡ’ ವೀಕ್ಷಿಸುತ್ತಿದ್ದಾಗ ಪ್ರೇಕ್ಷಕಾಂಗಣದಿಂದ ‘ಕಿರೀಟ ಧರಿಸಿ’ ಎಂಬ ಒತ್ತಾಯ ಬಂತು. ‘ಇದು ಕಿರೀಟವಲ್ಲ-ಮುಖವಾಡ’ ಎಂದರು ಸಚಿವೆ. ಪರವಾಗಿಲ್ಲ ಅದನ್ನೇ ಧರಿಸಿ ಎಂಬ ಬೇಡಿಕೆ ಮತ್ತೆ. ಆಗ ಸಚಿವೆ ಎದ್ದು “ನಾನು ಇದ್ದದ್ದು ಇದ್ದ ಹಾಗೆ ಹೇಳುವವಳು. ಮುಖವಾಡ ಹಾಕಿ ನನಗೆ ಅಭ್ಯಾಸವಿಲ್ಲ. ಅದರಿಂದ ಹಾಕಿಕೊಳ್ಳುವುದಿಲ್ಲ” ಎಂದರು. ಮಾಲತೇಶ್ ಬಡಿಗೇರ್ ಸಚಿವರಿಗೆ ‘ಮುಖವಾಡ’ ನೀಡುವ ಬದಲು-ಅದನ್ನೊಂದು ತೂಗಿ ಹಾಕುವ ಕಲಾತ್ಮಕ ವಸ್ತುವಾಗಿ ಮಾಡಿಕೊಡಬಹುದಿತ್ತು- ಅಲ್ವೇ ಮಾಲತೇಶ್? +* ‘ಉಪೇಂದ್ರ-ಮೊನಿಷಾ ಕೊಯಿರಾಲಾ-ಮುಂತಾದವರು ಅಭಿನಯಿಸಲಿರುವ ಎ.ಕೆ.೪೭ ರಾಮು ಅವರ ‘ಹಾಲಿವುಡ್’ ಚಿತ್ರದ ಮುಹೂರ್ತ ತುಂಬ ಭರ್ಜರಿಯಾಗಿ ಮಾಡಬೇಕೆಂದು- ಆ ಅದ್ದೂರಿ ಸಮಾರಂಭದಲ್ಲಿ ರಜನೀಕಾಂತ್, ನಾಗಾರ್ಜುನ, ಚಿರಂಜೀವಿ, ನಾಗೇಶ್ವರರಾವ್, ಅಮಿತಾ ಬಚನ್ ಹಾಗೂ ಜನಪ್ರಿಯ ಹಿಂದೀ ನಟ-ನಟಿಯರನ್ನೆಲ್ಲ ಆಹ್ವಾನಿಸುವ ಭರ್ಜರಿ ಕನಸು ರಾಮುಗಿದೆ. ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಹಿಂದೀ ಚಿತ್ರರಂಗದ ಖ್ಯಾತ ನಿರ್ಮಾಪಕ-ನಿರ್ದೇಶಕರಾದ ಕನ್ನಡಿಗ ಎಸ್. ರಾಮನಾಥನ್ ಅವರಿಗೆ ಮೇಲಿಂದ ಮೇಲೆ ಫೋನ್ ಕರೆಗಳು ಹೋಗಿವೆ ರಾಮು, ಮಾಲಾಶ್ರೀ, ಉಪೇಂದ್ರ ಮುಂತಾದ ಎಲ್ಲರಿಂದ. +* ರಾಮನಾಥನ್ ಭೇಟಿಯಲ್ಲಿ ತಿಳಿದ ಅಂಶ. +* ಮುಹೂರ್ತವನ್ನೇ ‘ನಭೂತೋ’ ಎನ್ನುವಂತೆ ಮಾಡಿಬಿಟ್ಟರೆ- ಚಿತ್ರದಲ್ಲಿ ಚಿತ್ರರಸಿಕರು ಮತ್ತೂ ಮಹತ್ವದ ‘ಕ್ಲೈಮ್ಯಾಕ್ಸ್’ಗಳನ್ನು ಬಯಸುತ್ತಾರೆ. ಉಪೇಂದ್ರ ಗಿಮಿಕ್ಕುಗಳ ಸರದಾರ. ರಾಮುಗೆ ಪ್ರಚಾರ ತಂತ್ರ ಕರತಲಾಮಲಕ. ಇವರಿಬ್ಬರ ‘ಜೋಡಿ’ ಇನ್ನು ಎಂತೆಂತಹ ಗಿಮಿಕ್ಕುಗಳನ್ನು ಹಾಲಿವುಡ್‌ನಲ್ಲಿ ಮಾಡಲಿದ್ದಾರೆ ಎಂಬುದು ನಿಜವಾದ ಸಸ್ಪೆನ್ಸ್. +* “ಮಕ್ಕಳ ಚಲನಚಿತ್ರಗಳಿಗೆ ಸಬ್ಸಿಡಿ ವಿಶೇಷವಾಗಿ ನೀಡಲಿದ್ದೇವೆ” ಎಂದಿದ್ದಾರೆ ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್. “ಮಕ್ಕಳ ರಂಗಭೂಮಿಗೆ ವಿಶೇಷ ನೆರವು ಅಗತ್ಯ” ಎಂದಿದ್ದಾರೆ ಸಚಿವೆ ರಾಣಿ ಸತೀಶ್. “ಮಕ್ಕಳ ಸಾಹಿತ್ಯ ತಾತ್ಸಾರಕೊಳಪಟ್ಟಿದೆ” ಎಂಬ ಮಾತು ಸಾಹಿತ್ಯ ಸಮ್ಮೇಳನದಲ್ಲೂ ಪ್ರತಿನಿಧಿಸಿದೆ. +– ಆಯ್ದ ಸುದ್ದಿಗಳು +* ಅಲ್ಲಿ ಸಾಹಿತ್ಯ ಸಮ್ಮೇಳನವಾಗುತ್ತಿದ್ದಾಗ ಉದಯ ಟಿ.ವಿ.ಯಲ್ಲಿ ಕವಿ ಹೆಚ್.ಎಸ್. ವೆಂಕಟೇಶಮೂರ್ತಿಯವರ ‘ಪರಿಚಯ’ ಕಾರ್ಯಕ್ರಮ ನೋಡುತ್ತಿದ್ದೆ ನಾನು. ‘ಮಕ್ಕಳ ರಂಗಭೂಮಿಯಲ್ಲೇನಾಗುತ್ತಿದೆ?’ ಎಂಬ ಶೈಲಜಾ ಅವರ ಪ್ರಶ್ನೆ ಹೆಚ್.ಎಸ್.ವಿ. ಜಾಣ್ಮೆಯಿಂದ ಜಾರಿಸಿ ಖ್ಯಾತ ನಿರ್ದೇಶಕರಿಗಾಗಿ ತಾವು ಬರೆದ ಮಕ್ಕಳ ನಾಟಕಗಳ ಪಟ್ಟಿ ಕೊಟ್ಟು ‘ಚಿನ್ನಾರಿ ಮುತ್ತ, ಜಂಬೂ ಸವಾರಿ’ ಮಕ್ಕಳ ಚಿತ್ರಗಳಿಗೆ ತಾವು ಹಾಡು ಬರೆದುದನ್ನು ಹೇಳಿದರು. ಮಕ್ಕಳ ರಂಗಭೂಮಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಂಸ್ಥೆಗಳು-ವ್ಯಕ್ತಿಗಳನ್ನೆಲ್ಲ ಅವರು ಬಲ್ಲರು. ಮಕ್ಕಳ ನಾಟಕ ಸ್ಪರ್ಧೆಗಳೂ ಅವರಿಗೆ ತಿಳಿದಿದೆ. +ಸಾರ್ವಜನಿಕವಾಗಿ ಮಾತನಾಡುವ ಅವಕಾಶ ಬಂದಾಗ ಹೆಚ್.ಎಸ್.ವಿ. ಅವರನ್ನು ಮರೆವು ಏಕೆ ಕಾಡುತ್ತದೆ ಎಂದು ನನಗಂತೂ ಅರ್ಥವಾಗಿಲ್ಲ. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […] +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_38.txt b/Kannada Sahitya/article_38.txt new file mode 100644 index 0000000000000000000000000000000000000000..9301ad06b6943d311aa9ef37fb1b0936a74610dd --- /dev/null +++ b/Kannada Sahitya/article_38.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು ಪ್ರೀತಿಸುತ್ತಿದ್ದುದೇ ಕಾರಣವಾಗಿರಬಹುದು. ಎಷ್ಟೋ ಸಲ ಜತೆಯಲ್ಲಿ ಬರುತ್ತಿದ್ದ ಗೆಳೆಯರು “ಆ ಬೀದಿ ಬೇಡಯ್ಯಾ, ಅಲ್ಲಿ ಅಸಾಧ್ಯ ಗಲಭೆ. ಜನಸಂದಣಿಗೆ ದೂರವಾದ ಬೇರೊಂದು ರಸ್ತೆಯನ್ನು ಹಿಡಿಯೋಣ” ಎಂದು ಹೇಳುತ್ತಿದ್ದರೂ ಅ ಎರಡು ದಿವಸಗಳು ಅವರ ಮಾತುಗಳು ನನ್ನ ಕಿವಿಯ ಮೇಲೆ ಬೀಳುತ್ತಿರಲಿಲ್ಲ. +uಟಿಜeಜಿiಟಿeಜ +ಇದಕ್ಕೆ ರುದ್ರಪ್ಪನೂ ಕಾರಣವಿರಬಹುದು. ರುದ್ರಪ್ಪನನ್ನು ಕಾಣದಿದ್ದವರು ವಿರಳ. ಆದರೆ ನನ್ನ ಹಾಗೆ ಯಾರೂ ಕಂಡಿರಲಿಲ್ಲವೆಂದು ಸಹಜ ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದು. ಅವನ ಅಂಗಡಿಯಲ್ಲಿ ಎಷ್ಟೋ ಜನ ವ್ಯಾಪಾರ ಮಾಡಿದ್ದರು, ಚೌಕಾಸಿ ಮಾಡಿ ಬಯ್ಯಿಸಿಕೊಂಡಿದ್ದರು, ಅಗ್ಗವಾಗಿ ಉತ್ತಮ ಪದಾರ್ಥ ದೊರೆಯಿತೆಂದು ಹಿಗ್ಗಿಯೂ ಇದ್ದರು. ಅವನೊಂದಿಗೆ ಬಗೆಬಗೆಯಾಗಿ ವ್ಯವಹರಿಸಿದ್ದರು. ಆದರೂ ರುದ್ರಪ್ಪನನ್ನು ಯಾರೂ ಕಂಡಿರಲಿಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ. +ವಾರದ ಐದು ದಿವಸ ಕುಟುಕು ಜೀವ ಧರಿಸುತ್ತಿದ್ದ ರುದ್ರಪ್ಪನ ‘ಏಲಂ ಅಂಗಡಿ’ಗೆ (ಆಕ್ಷನ್ ಷಾಪ್) ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಈ ಎರಡು ಹೊತ್ತು ಪೂರ್ಣಪ್ರಾಣ ಬಂದುಬಿಡುತ್ತಿತ್ತು. ಆದರೆ ಇದು ರುದ್ರಪ್ಪನಲ್ಲಿ ಯಾವ ವ್ಯತ್ಯಾಸವನ್ನೂ ಉಂಟುಮಾಡುತ್ತಿರಲಿಲ್ಲ. ಸಿರಿಬಂದಾಗ ಹಿಗ್ಗಿ ಬರಬಂದಾಗ ಕುಗ್ಗುವ ಸ್ವಭಾವ ತನ್ನದಲ್ಲವೆನ್ನುವ ಹಾಗೆ ರುದ್ರಪ್ಪನ ಏಲಂ ದಿವಸಗಳಲ್ಲಿ ಕೂಡ ತನ್ನ ಆರಾಮಾಸನ ಬಿಟ್ಟೇಳುತ್ತಿರಲಿಲ್ಲ. ಯಾವನೋ ಒಬ್ಬ ಮುಸಲ್ಮಾನ ಆ ದಿವಸಗಳು ಬಂದು ಸಾಮಾನುಗಳ ಹರಾಜು ಕೂಗಿ, ಮಾರಿ, ತನ್ನ ದಳ್ಳಾಳಿಯನ್ನು ಮುರಿದುಕೊಂಡು ಉಳಿದ ಹಣವನ್ನು ರುದ್ರಪ್ಪನಿಗೆ ಕೊಟ್ಟು ಹೋಗುತ್ತಿದ್ದ. +ರುದ್ರಪ್ಪನ ಅಂಗಡಿಯಲ್ಲಿ ಸಿಕ್ಕದಿದ್ದ ಸಾಮಾನೇ ಇರಲಿಲ್ಲವೆಂದರೂ ತಪ್ಪಲ್ಲ. ‘ಸೂಜಿಯಿಂದ ಮೋಟಾರು ಕಾರಿನವರೆಗೆ’ ಎಂದು ಸಾಮತಿ ಹೇಳಿದ ಹಾಗೆ ಕುರ್ಚಿ ಬೆಂಚು ಮೇಜು ಅಲ್ಮೀರಾಗಳು, ಕನ್ನಡಿಗಳು, ಬಗೆಬಗೆಯ ಮಂಚಗಳು, ಕಟ್ಟುಹಾಕಿದ ಪಟಮಠಗಳು, ಹಿತ್ತಾಳೆ ಕಂಚಿನ ಪಾತ್ರೆಗಳು, ವಿಗ್ರಹಗಳು, ದೀಪದ ಕಂಬಗಳು, ಆಟದ ಸಾಮಾನುಗಳು, ಮರಗೆಲಸಕ್ಕೆ ಬೇಕಾಗುವ ಕಬ್ಬಿಣದ ಸಾಮಾನುಗಳು, ಗಾಜಿನ ಸಾಮಾನುಗಳು ಮತ್ತು ಪುಸ್ತಕಗಳು ಎಲ್ಲಕ್ಕೂ ಅಲ್ಲಿ ಸ್ಥಾನವಿದ್ದೇ ಇತ್ತು. ಒಂದೊಂದುವಾರ ಒಂದೊಂದು ಹರಾಜಾಗುತ್ತಿರುವುದು ನನ್ನ ಕಣ್ಣಿಗೆ ಬೀಳುತ್ತಿದ್ದಿತಲ್ಲದೆ ಹರಾಜು ಕೂಗುವ ಮುಸಲ್ಮಾನ ಬದಲಾಗುತ್ತಿರಲಿಲ್ಲ; ರುದ್ರಪ್ಪ ತನ್ನ ಆರಾಮ ಕುರ್ಚಿಯಿಂದಿಳಿದು ಬರುತ್ತಿರಲಿಲ್ಲ. ಆದರೆ ಅವನು ಎಲ್ಲಿ ಕೂತಿರಲಿ ಎಲ್ಲಿ ನಿಂತಿರಲಿ ಒಮ್ಮೆ ನೋಡಿದವರು ಯಾರೂ ಮರೆಯುವ ಹಾಗಿರಲಿಲ್ಲ. ಕಾವ್ಯಗಳಲ್ಲಿ ವಿದೂಷಕನನ್ನು ಸೃಷ್ಟಿಮಾಡಿ ‘ಹಾಸ್ಯರಸ’ ಪ್ರತಿಪಾದನೆ ಮಾಡಿದೆವೆಂದು ಭುಜ ಚಪ್ಪರಿಸಿಕೊಳ್ಳುತ್ತಿದ್ದ ಕಾಳಿದಾಸ, ಭವಭೂತಿ, ಶ್ರೀಹರ್ಷಾದಿ ಕವಿಗಳು ರುದ್ರಪ್ಪನನ್ನು ನೋಡಿದ್ದರೆ ಖಂಡಿತವಾಗಿಯೂ ಕಾವ್ಯಗಳನ್ನು ತಿದ್ದುವ ಯೋಚನೆಯನ್ನು ಮಾಡದಿರುತ್ತಿರಲಿಲ್ಲ. ವಯಸ್ಸಿಗೆ ಮೀರಿ ಬೆಳೆದ ಹೊಟ್ಟೆ, ಅದನ್ನು ಹೊರಲಾರದೆ ಕುಂಬಳ ಬಳ್ಳಿಯಂತೆ ಜಗ್ಗುತ್ತಿದ್ದ ದೇಹ, ಇದಕ್ಕೆ ಒಪ್ಪವಿಟ್ಟಂತೆ ತ್ರಿವರ್ಣರಂಜಿತ ಗಡ್ಡ. ತನ್ನ ಕಾಲವನ್ನು ನಿರ್ಣಯಿಸಿಕೊಳ್ಳುತ್ತಿದ್ದಂತೆ ಸದಾ ಷರಾಯಿ ಕೋಟು ಬೂಟ್‌ಗಳನ್ನು ರುದ್ರಪ್ಪ ಧರಿಸಿರುತ್ತಿದ್ದ. ಮಣಕುಗಟ್ಟಿದ್ದ ಓಪನ್ ಕಾಲರ್ ಕೋಟಿನ ಒಳಗೆ ಬಿಳಿಯಿಂದ ಕೆಂಪಿಗೆ ತಿರುಗಿದ್ದ ಷರಟು – ಅದರ ಕುತ್ತಿಗೆಗೆ ಹರಕು ಸೀರೆಯ ತುಂಡಿನ ಹಾಗೆ ಕಾಣುತ್ತಿದ್ದ ನಕ್ಷತ್ರ ಕೆತ್ತಿದ ಕರಿಯ ಟೈ. ಕೋಟಿಗೆ ಷರಾಯಿ ಯಾವ ರೀತಿಯಲ್ಲಿ ಅಗೌರವವನ್ನುಂಟುಮಾಡುತ್ತಿರಲಿಲ್ಲ. ಮೊಣಕಾಲಿನ ಹತ್ತಿರವೂ ಅಕ್ಕಪಕ್ಕದಲ್ಲಿಯೂ ಬೇರೆ ಬೇರೆ ಬಣ್ಣಗಳ ತುಂಡು ಬಟ್ಟೆಗಳು ಷರಾಯಿಯನ್ನಲಂಕರಿಸಿದ್ದವು. ನೀರಿನ ಕೊಳವೆಗಳನ್ನು ಉದ್ದುದ್ದವಾಗಿ ನಿಲ್ಲಿಸಿ ರುದ್ರಪ್ಪ ಅವುಗಳೊಳಗೆ ಕಾಲುಗಳನ್ನು ಹಾಕಿದಂತಿದ್ದವು. ಇವೆಲ್ಲವನ್ನೂ ರುದ್ರಪ್ಪನ ಪಾದಭೂಷಣ ಮೀರಿಸಿಬಿಟ್ಟಿತ್ತು. ಒಂದು ಕಾಲಿಗೆ ಕರಿಯ ಕಾಲು ಚೀಲ, ಇನ್ನೊಂದು ಕಾಲಿಗೆ ಕೆಂಪು ಕಾಲುಚೀಲ ಎರಡು ಕಾಲಮೇಲೆ ನಿಲ್ಲಲಾರದೆ ಕುಸಿದು ಕಾಲಗೆಣ್ಣಿನ ತಲೆಯ ಮೇಲೆ ಬಂದು ಕುಳಿತಿರುತ್ತಿದ್ದವು. ಕೊಂಡಾಗ ಬಿಳಿಯ ಬಣ್ಣ ಧರಿಸಿದ್ದ ಮೋಜುಗಳು ತಮ್ಮ ಸ್ವರೂಪವನ್ನು ಮರೆತು ರುದ್ರಪ್ಪನ ಪಾದಗಳನ್ನು ಆಶ್ರಯಿಸಿದ್ದವು. ಬಲ ಮೋಜಿನಲ್ಲಿ ಹೆಬ್ಬೆರಳು ಇಣುಕಿ ನೋಡುತ್ತಿತ್ತು, ಎಡ ಮೋಜಿನಲ್ಲಿ ಕಿರಿಬೆರಳು ಇಣಿಕಿ ನೋಡುತ್ತಿತ್ತು. ತಲೆಯ ಮೇಲೆ ‘ಹಳೆಯ ಬಾಗಿನ ಕಂಬಿ’ಯನ್ನೇ ಎದುರು ನೋಡುತ್ತಿದ್ದ ಗುಲಾಬಿ ಬಣ್ಣದ ರುಮಾಲು. ಅದರ ಜರಿ ಕಪ್ಪು ಹಿಡಿದು ಎಳೆ‌ಎಳೆಯಾಗಿ ಕಿತ್ತು ಬರುತ್ತಿತ್ತು. ರುದ್ರಪ್ಪ ಧರಿಸುವಾಗ ಮುಖದ ಮೇಲೆ ನೇರವಾಗಿ ಕೂರುತ್ತಿದ್ದ ರುಮಾಲು ಕ್ರಮ ಕ್ರಮೇಣ ಕಿವಿಯ ಮೇಲೆ ಬಂದು ಬಿಡುತ್ತಿತ್ತು. ಹಾಗೆಯೇ ಇರಲೆಂದು ರುದ್ರಪ್ಪ ನಿರಾತಂಕವಾಗಿರುತ್ತಿದ್ದ. ಆದರೆ ಒಟ್ಟಿನಲ್ಲಿ ರುದ್ರಪ್ಪನ ವೇಷ ಭೂಷಣ ಎಲ್ಲಿಯೂ ರಸಾಭಾಸವನ್ನು ಸೂಚಿಸದೆ ತನ್ನದೇ ಆದ ಮೈತ್ರಿ ಸಮರಸಗಳಿಂದ ಅವನನ್ನು ಕೂಡಿಕೊಂಡಿತ್ತು. ಈ ರುದ್ರಪ್ಪ ಯಾರು? ಈ ಸ್ವಾರಸ್ಯವಾದ ವ್ಯಾಪಾರವನ್ನು ಹೇಗೆ ಆರಂಭಿಸಿದ? ಇವನಿಗೆ ಮನೆ ಮಠ, ಹೆಂಡತಿ ಮಕ್ಕಳು ಇದ್ದಾರೆಯೇ? ಇದ್ದರೆ ಇದೇನು ಇವನ ಅವತಾರ? ಏನು ಈ ಸ್ನಾನ ಕ್ಷೌರ ಕಾಣದ ರೂಪ! ಎಂಬಿವೇ ಪ್ರಶ್ನೆಗಳು ಲೋಕಾಭಿರಾಮವಾಗಿ ನನ್ನಲ್ಲಿ ಜನಿಸುತ್ತಿದ್ದರೂ ರುದ್ರಪ್ಪನನ್ನು ಕೇಳಿ ಆ ಪ್ರಶ್ನೆಗಳಿಗೆ ಸಮಾಧಾನ ಹೊಂದುವುದು ಸಾಧ್ಯವಾಗುತ್ತಿರಲಿಲ್ಲ. ರುದ್ರಪ್ಪನ ಮುಖದ ಗಂಭೀರ ಭಾವನೆ ಕುತೂಹಲವನ್ನು ಎದುರಿಸಿ ಮುರಿದು ಬಿಡುತ್ತಿತ್ತು. +ನನಗೂ ರುದ್ರಪ್ಪನಿಗೂ ಸ್ವಲ್ಪ ಪರಿಚಯವಾಗಿತ್ತು. ಒಂದೆರಡು ಸಲ ಅವನ ಅಂಗಡಿಯಲ್ಲಿ ಅತ್ಯಲ್ಪ ಬೆಲೆಗೆ ನನಗೆ ಕೆಲವು ಉತ್ತಮ ಗ್ರಂಥಗಳು ದೊರೆತಿದ್ದವು. ಹೆಂಡದ ಅಮಲಿನ ರುಚಿಗಂಡ ಕುಡುಕ ಮತ್ತೆ ಮತ್ತೆ ಪಡಖಾನೆ ಹುಡುಕಿಕೊಂಡು ಹೋಗುವಂತೆ ನಾನು ಮತ್ತೆ ಮತ್ತೆ ಹೋಗಿ ರುದ್ರಪ್ಪನ ಅಂಗಡಿಯ ಸಂಬಂಧವನ್ನು ನಿಕಟವಾಗಿ ಬೆಳೆಸಿದ್ದೆ. ಪುಸ್ತಕಗಳು ದೊರೆಯದಿದ್ದ ದಿವಸ ಕೂಡಾ ನನಗೆ ಆಶಾಭಂಗವಾಗುತ್ತಿರಲಿಲ್ಲ. ರುದ್ರಪ್ಪನ ಮುಖದಲ್ಲಿ ತೇಲುತ್ತಿದ್ದ ಕನಿಕರ ನನ್ನ ನಿರಾಶೆಯನ್ನು ಮರೆಸುತ್ತಿತ್ತು. +ಒಂದು ದಿವಸ ನನ್ನಷ್ಟಕ್ಕೆ ನಾನು ಬೀದಿಯಲ್ಲಿ ಹೋಗುತ್ತಿರಲು ರುದ್ರಪ್ಪನ ಅಂಗಡಿಯ ಕಡೆಯಿಂದ ಕೂಗು ಕೇಳಿಬಂತು. ರುದ್ರಪ್ಪನ ವೇಷಭೂಷಣ, ಅವನು ನನ್ನನ್ನು ಕರೆಯುತ್ತಿದ್ದ ಉದ್ವೇಗ ತುಂಬಾ ನಗೆ ಬರೆಸಿದವು. ಒಳಗೆ ಹೋಗುತ್ತಲೆ ರುದ್ರಪ್ಪ ನನ್ನ ಕೈಗೆ ಕಣ್ಣು ಕೋರಯಿಸುವಂತಹ ಒಂದು ಗ್ರಂಥವನ್ನಿತ್ತ ‘ಷೆಲ್ಲಿ ಮಹಾಕವಿಯ ಪೂರ್ಣ ಕಾವ್ಯ ಸಂಗ್ರಹ’ ಉದ್ಗ್ರಂಥ; ಅದಕ್ಕೊಪ್ಪುವ ಸುರಮ್ಯ ಬಾಹ್ಯರೂಪ. ಗ್ರಂಥವನ್ನು ನಾನು ನುಂಗುವಂತೆ ನೋಡುತ್ತಿರಲು ರುದ್ರಪ್ಪ, +“ನಿಮಗೆಂದೇ ಈ ಪುಸ್ತಕ ತೆಗೆದಿಟ್ಟಿದ್ದೇ. ಯಾರು ಯಾರೋ ಕೇಳಿದರು ಆದರೆ ಕೊಡಲಿಲ್ಲ.” +ಆ ಮಾತಿನಲ್ಲಿ ಕೃತ್ರಿಮತೆಯಿರಲಿಲ್ಲ. ವ್ಯಾಪಾರಗಾರ ತನ್ನ ಮಾಲನ್ನು ಹಾಡಿ ಹೊಗಳಿಕೊಳ್ಳಲು ಬಂದವನಿಂದ ಹೆಚ್ಚು ಹಣ ಕಸಿಯುವ ವ್ಯಾಪಾರ ಸೂಕ್ಷ್ಮ ಅಡಕವಾಗಿರಲಿಲ್ಲ. ನನ್ನ ವಿಚಾರದಲ್ಲಿ ಒಂದು ಬಗೆಯ ಪ್ರೀತಿಯನ್ನೂ ಗೌರವವನ್ನೂ ವ್ಯಕ್ತಪಡಿಸಿದಂತಿತ್ತು. +“ಇದಕ್ಕೆ ಎಷ್ಟು ಕೊಡಬೇಕು ರುದ್ರಪ್ಪನವರೇ.” +“ನಿಮ್ಮ ಸಂತೋಷ ಸ್ವಾಮಿ. ಅವಕ್ಕೆಲ್ಲಾ ಬೆಲೆಯಿಲ್ಲ. ತಿಳಿದವರಿಗೆ ಗೊತ್ತು ಬೆಲೆ.” +ಬೆಲೆಯ ಮೇಲೆ ಅವನು ಒತ್ತಿ ಆಡಿದ ಮಾತು ನನ್ನ ಮೊದಲಿನ ನಂಬಿಕೆಯನ್ನು ಸ್ವಲ್ಪ ಅಳ್ಳಾಡಿಸಿತು. “ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ; ಹೆಚ್ಚು ದುಡ್ಡು ಕೊಟ್ಟರೇ ಇದೇ ಅವನಿಗೆ ಉತ್ತಮ ಪದಾರ್ಥ” ಎಂದುಕೊಂಡೆ. ಆದರೆ ಗ್ರಂಥವನ್ನು ಬಿಡುವುದಕ್ಕೆ ಮನಸ್ಸಿಲ್ಲ. +“ಹೇಳಿ ರುದ್ರಪ್ಪನವರೇ. ಬೆಲೆ ಹೇಳದಿದ್ದರೆ ನಾನು ಗ್ರಂಥವನ್ನು ಕೊಳ್ಳುವುದು ಹೇಗೆ?” +“ನಿಮ್ಮ ಸಂತೋಷ ಎಂದು ಹೇಳಿದೆನಲ್ಲಾ ಸ್ವಾಮಿ ನಿಮಗೇನು ತೋರುತ್ತೋ ಅದನ್ನು ಕೊಡಿ.” +ಅವನ ಕೈಗೆ ಒಂದು ರೂಪಾಯಿಯನ್ನಿತ್ತೆ. ಅದನ್ನೇ ಸಂತೋಷವಾಗಿ ಕಿಸೆ ಸೇರಿಸಿದ. +“ಕಡಿಮೆಯಾಯಿತೇ ರುದ್ರಪ್ಪನವರೇ.” +“ಏನೂ ಇಲ್ಲ ಸ್ವಾಮಿ.” +“ಸಂಕೋಚಪಟ್ಟುಕೊಳ್ಳದೇ ಹೇಳಿ. ಈಗ ನನ್ನ ಹತ್ತಿರ ಇರುವುದಿಷ್ಟೇ. ನಾಳೆ ಈ ಕಡೆ ಹೋಗುವಾಗ ಮಿಕ್ಕದ್ದನ್ನು ತಂದುಕೊಡುತ್ತೇನೆ.” +“ಸರಿ ಸರಿ ಬಿಡಿ ಸ್ವಾಮಿ. ಇದಕ್ಕೆಲ್ಲಾ ಏನು? ನಾಳೆ ಭಾನುವಾರ ಕೆಲವು ಹಳೆಗನ್ನಡ ಪುಸ್ತಕಗಳೂ, ಇನ್ನೂ ಕೆಲವು ಕಾವ್ಯ ಸಂಗ್ರಹಗಳೂ ಬರುತ್ತವೆ… ನಿಮಗೆ ಬೇಕೇನು?” +“ಅಯ್ಯೋ! ಏನು ಹೀಗೆ ಹೇಳುತ್ತೀರಲ್ಲಾ. ಅವಶ್ಯಕವಾಗಿ ಬೇಕಪ್ಪಾ.” +“ಹಾಗಾದರೆ ಹರಾಜು ಮುಗಿಯುವ ಹೊತ್ತಿಗೆ.. ಸುಮಾರು ೧೨ ಘಂಟೆಗೆ ಬನ್ನಿ. ನಾನು ತೆಗೆದಿಟ್ಟಿರುತ್ತೇನೆ. ನೀವು ಬೇಕಾದ್ದು ತೆಗೆದುಕೊಂಡು ಹೋಗಬಹುದು.” +“ಹಾಗೇ ಆಗಲಿ, ಬಹಳ ಉಪಕಾರವಾಯಿತು ರುದ್ರಪ್ಪನವರೇ – ನಮಸ್ಕಾರ.” +ನನ್ನ ‘ನಮಸ್ಕಾರ’ಕ್ಕೆ ರುದ್ರಪ್ಪನ ‘ಗುಡ್‌ಮಾರ್ನಿಂಗ್’ ದೊರೆತದ್ದು ಸ್ವಲ್ಪ ನಗೆಯನ್ನುಂಟುಮಾಡಿತು. ರುದ್ರಪ್ಪನಿಗೆ ಸ್ವಲ್ಪ ಇಂಗ್ಲೀಷೂ ಬರುತ್ತೆ ಎಂದು ನಿರ್ಧಾರವಾದಹಾಗಾಯಿತು. +uಟಿಜeಜಿiಟಿeಜ +೨ +ಭಾನುವಾರ ೧೨ ಘಂಟೆಯಾದರೂ ‘ಹರಾಜು’ ಮುಗಿದಿರಲಿಲ್ಲ. ಒಂದಾಗುತ್ತಲೊಂದು ಸಾಮಾನುಗಳು “ಒಂದನೆಯ ಸಾರಿ – ಎರಡನೆಯ ಸಾರಿ – ಮೂರನೆಯ ಸಾರಿ” ಹೇಳಿಸಿಕೊಂಡು ಮಾಯವಾಗುತ್ತಿದ್ದುವಲ್ಲದೆ ಹರಾಜು ಮುಗಿಯುವ ಸಂಭವವೇ ಕಾಣಲಿಲ್ಲ. ಸಾಮಾನುಗಳನ್ನು ಕೂಗಿ ಕೂಗಿ ಮುಸಲ್ಮಾನ ಸಾಹೇಬನಿಗೆ ಬಾಯಿ ಒಣಗುತ್ತ ಬಂದಿತ್ತು. ಅವನೂ ಅವಸರದಲ್ಲಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಹರಾಜು ಹಾಕುತ್ತಿದ್ದಂತಿತ್ತು. ಈ ಅವಸರದಲ್ಲಿ ಕೈಗೆ ಸಿಕ್ಕಿದ ಸಾಮಾನುಗಳನ್ನು ಹರಾಜು ಹಾಕುತ್ತಿದ್ದಂತಿತ್ತು. ಈ ಅವಸರದಲ್ಲಿ ನಕ್ಕಿ ಕೆಲಸ ಮಾಡಿದ ಮುಖದಲ್ಲಿನ ಹಂಸದ ಚಿತ್ರಪಠವೊಂದು ಸಾಹೇಬನ ಕೈ ಬಾಯಿಗೆ ಬಿದ್ದಿತ್ತು. ಅದಕ್ಕೂ “ಮೊದಲನೆಯ ಸಾರಿ – ಎರಡನೆಯ ಸಾರಿ” ಕೂಗುತ್ತಿದ್ದಂತೆ ರುದ್ರಪ್ಪ ಮಿಂಚಿನ ಹಾಗೆ ಎದ್ದುಬಂದು ಪಠವನ್ನು ಕಿತ್ತುಕೊಂಡ. ಬೆಕ್ಕಸಬೆರಗಾಗಿ ನೋಡುತ್ತಿದ್ದ ಸಾಹೇಬನನ್ನು ಗದ್ದರಿಸಿ “ಕ್ಯಾಜಿ, ತುಮ್ಕು ಅಖ್ಖಲ್ ನೈ” ಎಂದು ಬಯ್ದು ಹರಾಜನ್ನು ಸಾಕು ಮಾಡಿಬಿಟ್ಟ. +ನನಗೆ ರುದ್ರಪ್ಪನ ನಡತೆ ಪರಮಾಶ್ಚರ್ಯವನ್ನುಂಟುಮಾಡಿತು. ಎಂದೂ ಯಾವ ಸಾಮಾನನ್ನು ಮೋಹಿಸದಿದ್ದ ರುದ್ರಪ್ಪ ಈ ಹಳೆಯ ಪಠವನ್ನು ಇಷ್ಟು ಜೋಪಾನದಿಂದ ಸಂಗ್ರಹಿಸಲು ಕಾರಣವೇನು? ಈ ಚಿತ್ರಕ್ಕೂ ರುದ್ರಪ್ಪನ ಜೀವನಕ್ಕೂ ಏನಾದರೂ ಸಂಬಂಧವಿರಬಹುದೇ? ಎಂದೆನಿಸಿತು. ಆ ಹೊತ್ತಿಗೆ ರುದ್ರಪ್ಪ ಒಳಕ್ಕೆ ಕರೆಯಲು ದಿದ್ರಿಕ್ಷೆಯನ್ನು ಸಾಕುಮಾಡಿ ಒಳಗೆ ಹೋಗಿ ಕುಳಿತೆ. ರುದ್ರಪ್ಪ ನನ್ನ ಮುಂದೆ ಪುಸ್ತಕದ ಒಂದು ಕಟ್ಟನ್ನು ಹಾಕಿ ಸಾಹೇಬನೊಂದಿಗೆ ಲೆಕ್ಕಾಚಾರಕ್ಕೆ ಕುಳಿತ. +ಕಟ್ಟು ಬಿಚ್ಚಿ ನೋಡಿದೆ. ನನಗೆ ಬ್ರಹ್ಮಾನಂದವಾಗಿ ಹೋಯಿತು. “ರನ್ನನ ಗದಾಯುದ್ಧ – ಜನ್ನನ ಯಶೋಧರ ಚರಿತ್ರೆ – ಮುದ್ದಣ್ಣನ ರಾಮಾಶ್ವಮೇಧ – ಅಜ್ಞಾತಕವಿಯ ಕನ್ನಡ ಉತ್ತರ ರಾಮ ಚರಿತ್ರೆ – ಹರಿಹರನ ಗಿರಿಜಾಕಲ್ಯಾಣ – ಬಸವಣ್ಣನವರ ವಚನಗಳು – ಸರ್ವಜ್ಞನ ತ್ರಿಪದಿಗಳು – ದುರ್ಗಸಿಂಹನ ಪಂಚತಂತ್ರ – ಹೊನ್ನಮ್ಮನ ಹದಿಬದೆಯ ಧರ್ಮ – ನಾಗರಸನ ಭಗವದ್ಗೀತೆ – ಕೆಲವು ಆಧುನಿಕ ಕಥಾ ಕವಿತಾ ಗ್ರಂಥಗಳು” ಒಟ್ಟು ೨೦-೨೪ ಪುಸ್ತಕಗಳ ಮೇಲಿದ್ದವು. ರುದ್ರಪ್ಪನ ಕಡೆ ತಿರುಗಿ ನೋಡಿದೆ. ಸಾಹೇಬನ ಲೆಕ್ಕ ಮುಗಿದಿತ್ತು, ಅವನು ಹೊರಟಿದ್ದ. +“ಇವುಗಳಿಗೆಲ್ಲಾ ಎಷ್ಟು ಕೊಡಲಿ ರುದ್ರಪ್ಪನವರೇ.” +“ನಾನು ಐದು ರೂಪಾಯ ಕೊಟ್ಟೆ ಸ್ವಾಮಿ. ಅದರ ಮೇಲೆ ತಾವು ಎಷ್ಟು ಕೊಟ್ಟರೂ ಸಂತೋಷ.” +ರುದ್ರಪ್ಪನ ಕೈಗೆ ಆರು ರೂಪಾಯಿಗಳನ್ನಿತ್ತೆ. ಅವನ ಮುಖ ಪ್ರಫುಲ್ಲವಾಯಿತು. ನನ್ನ ವ್ಯಾಪಾರ ಯಾವ ಬಗೆಯ ಅಸಂತುಷ್ಟಿಯನ್ನೂ ಉಂಟುಮಾಡಿಲ್ಲವೆಂದು ತಿಳಿದೂ ನನಗೂ ಸಂತೋಷವಾಯಿತು. ರುದ್ರಪ್ಪನನ್ನು ಕೆಣಕಲು ಇದೇ ಉತ್ತಮ ಸಮಯವೆಂದು ನೆನೆದೆ. +“ಈ ಸಂಪಾದನೆಯನ್ನೆಲ್ಲಾ ಏನು ಮಾಡುತ್ತೀರಿ ರುದ್ರಪ್ಪನವರೇ.” +“ಏನು ಸಂಪಾದನೆ ಸ್ವಾಮಿ. ಅಲ್ಲಿಗಲ್ಲಿಗೆ ಸರಿಹೋಗುತ್ತೆ.” +“ಸಂಸಾರಕ್ಕೆ!” +“ಸಂಸಾರ ಎಲ್ಲಿಂದ ಬಂತು ಸ್ವಾಮಿ. ನಾನೇ ನನ್ನ ಸಂಸಾರ. ಈ ಹಳೆಯ ಸಾಮಾನುಗಳೇ ನನ್ನ ಹೆಂಡತಿ ಮಕ್ಕಳು, ಬಂಧು ಮಿತ್ರರು, ಬಳಗ – ಬಂಡವಾಲ.” +“ನಿಮ್ಮ ಹೆಂಡತಿ ಮಕ್ಕಳು….” +“ನನಗೆ ಮದುವೆಯೇ ಆಗಿರಲಿಲ್ಲ ಸ್ವಾಮಿ.” +“ಹಾಗಾದರೆ… ಹೀಗೆಲ್ಲಾ ಕೇಳುತ್ತಿದ್ದೀನೆಂದು ಮನಸ್ಸಿಗೆ ಏನೂ ತಿಳಿದುಕೊಳ್ಳಬೇಡಿ ರುದ್ರಪ್ಪನವರೇ. ಯಾವ ದುರುದ್ದೇಶವೂ ಇಲ್ಲ. ನೀವು ನನ್ನ ವಿಚಾರದಲ್ಲಿ ತೋರಿಸಿದ ವಿಶ್ವಾಸದಿಂದ ನನಗೂ ಒಂದು ಬಗೆಯ ವಿಶ್ವಾಸ ಹುಟ್ಟಿತು… ಆದ್ದರಿಂದ…” +“ನನ್ನದೇನು ವಿಶ್ವಾಸ ಬಿಡಿ ಸ್ವಾಮಿ. ನಿಮ್ಮ ದುಡ್ಡಿಗೆ ಪುಸ್ತಕ ಕೊಟ್ಟೆ. ಸುಮ್ಮನೆ ಕೊಟ್ಟೆನೆ?” +“ಹಾಗಲ್ಲ ಆದರೂ… ಮದುವೆ ಮಾಡಿಕೊಳ್ಳದೆಯೇ ಜೀವನವನ್ನೆಲ್ಲ ಸವೆಯಿಸಿರುವಿರಾ?” +“ಹೂ! ಹಾಗೆಂದೇ ಹೇಳಬೇಕು.” +“ಆ ಕಸೂತಿಪಠ ಯಾರದು?” +ನಾನು ಈ ಪ್ರಶ್ನೆಯನ್ನು ಹೆದರಿ ಹೆದರಿಯೇ ಕೇಳಿದೆ. ಕೇಳಬಾರದಾಗಿತ್ತೇನೋ ಎಂದೆನಿಸಿತು. ರುದ್ರಪ್ಪನ ಕಣ್ಣುಗಳಲ್ಲಿ ತೊಟತೊಟನೆ ಹನಿಗಳುದುರಿದವು. ಕೆಂಪುಗೊಂಡ ಮುಖ, ಅದುರಲಾರಂಭಿಸಿದ ತುಟಿಗಳು ಅವನ ಮನಸ್ಸಿನ ಉಮ್ಮಳವನ್ನು ಎತ್ತಿ ತೋರಿಸುತ್ತಿದ್ದವು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು. +“ಅದು ದೊಡ್ಡ ಕಥೆ ಸ್ವಾಮಿ ಕೇಳುತ್ತೀರೇನು?” +“ಆಗಲಿ” +ಈಗಲೇ ಹೊತ್ತು ಬಹಳವಾಗಿ ಆಗಿದೆಯಲ್ಲಾ. ಒಂದು ಘಂಟೆ ಸಮಯ. ನಿಮಗೆ ಊಟಕ್ಕೆ ಹೊತ್ತಾಗುವುದಿಲ್ಲವೇ? +“ಚಿಂತೆಯಿಲ್ಲ ಹೇಳಿ ರುದ್ರಪ್ಪನವರೇ. ಈ ಹಬ್ಬದೂಟದಿಂದ(ಗ್ರಂಥಗಳ) ನನಗೆ ನಿಬ್ಬರಬರಿಸಿರುವಿರಿ. ಹಸಿವಿನ ಕಾಟ ಹರಿಸಿರುವಿರಿ.” +“ಬಹಳ ಹಿಂದಿನ ಮಾತು. ಇಪ್ಪತ್ತು ವರ್ಷದ ಹಿಂದಿನ ಮಾತು. ನಮ್ಮ ತಂದೆಗೆ ನಾನು ಒಬ್ಬನೇ ಮಗ. ತಕ್ಕಮಟ್ಟಿಗೆ ಅನುಕೂಲವಾಗಿಯೇ ಇದ್ದರು. ನನ್ನನ್ನು ಬಹಳ ಮುದ್ದಿನಿಂದ ಬೆಳೆಸಿದರು. ತಾಯಿಯಿಲ್ಲದ ಮಗುವೆಂದು ನನ್ನನ್ನು ಯಾವುದಕ್ಕೂ ಆಕ್ಷೇಪಿಸುತ್ತಿರಲಿಲ್ಲ, ಯಾವುದಕ್ಕೂ ಕೊರತೆಯನ್ನುಂಟುಮಾಡುತ್ತಿರಲಿಲ್ಲ. ನಾನಾಗ ಓದುತ್ತಿದ್ದೆ. ನಾಲ್ಕನೆಯ ಫಾರಂ. ನಮ್ಮ ಮನೆಯಲ್ಲಿ ಅಷ್ಟು ಓದಿದವರು ಯಾರೂ ಇರಲಿಲ್ಲ. ಅದೇ ನಮ್ಮ ತಂದೆಗೆ ದೊಡ್ಡ ಹೆಮ್ಮೆಯಾಗಿತ್ತು.” +“ನ್ಯಾಯವೇ ಆಮೇಲೆ…” +“ನಮ್ಮ ಮನೆಯ ಪಕ್ಕದಲ್ಲಿ ತಾಯಿಮಕ್ಕಳಿಬ್ಬರಿದ್ದರು. ನಮ್ಮ ಜಾತಿ. ಅವರಿಗೆ ಸ್ವಲ್ಪ ಭತ್ತ, ರಾಗಿ ಬರುತ್ತಿತ್ತು. ಅದರಲ್ಲಿಯೇ ಜೀವನ ಮಾಡಿಕೊಂಡು ಮರ್ಯಾದೆಯಾಗಿದ್ದರು. ನಮ್ಮ ಮನೆಗೆ ಬಂದು ಹೋಗುವುದೂ ರೂಢಿಯಲ್ಲಿತ್ತು. ನನಗೆ ೨೦-೨೨ ವಯಸ್ಸು. ಆ ಹುಡುಗೀಗೆ ಸುಮಾರು ೧೫-೧೬. ಮೊದಲಿನಿಂದಲೂ ನಮ್ಮನಮ್ಮಲ್ಲಿ ವಿಶ್ವಾಸವಿದ್ದೇ ಇತ್ತು. ನಾನು ನಾಲ್ಕನೆಯ ಫಾರಂ ಪರೀಕ್ಷೆ ಪಾಸಾದ ವರ್ಷ ಅದು ಉಲ್ಬಣಾವಸ್ಥೆಗೆ ಬಂತು. ಚೆನ್ನನಿಗೆ ಮದುವೆ ಏರ್ಪಾಟು ಆರಂಭವಾಯಿತು. ಅವಳ ಸೋದರ ಮಾವನ ಮಗ ವೀರಪ್ಪನಿಗೆ ನಿಶ್ಚಯವಾಯಿತು. +ಒಂದು ದಿನ ಸಾಯಂಕಾಲ ನಾನು ಆಟ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ದಾರಿಯಲ್ಲಿ ಒಂದು ಮರದ ಹಿಂದೆ ನಿಂತು ಚೆನ್ನ ಕರೆದಳು ‘ಮಾತನಾಡಬೇಕಾಗಿದೆ ಅಪ್ಪಾಜಿ, ಕೆರೆಯ ದಂಡೆಗೆ ಬಾ’ ಎಂದು ಹೇಳಿ ಮಾಯವಾದಳು. ನಾನು ನೇರವಾಗಿ ಕೆರೆಯ ದಂಡೆಗೆ ಹೋದರೆ ಅಲ್ಲಿ ಚೆನ್ನ ಮದುವೆ ಏರ್ಪಾಟಿನ ಕಥೆಯನ್ನೆಲ್ಲಾ ಹೇಳಿ ವೀರಪ್ಪನನ್ನು ಕೂಡಿ ಬಾಳಲು ತನಗೆ ಸ್ವಲ್ಪವೂ ಇಷ್ಟವಿಲ್ಲವೆಂದು ತಿಳಿಸಿದಳು. +ಅದು ಹೇಳುತ್ತ ಅವಳ ಕಣ್ಣಲ್ಲಿ ಗಂಗಾಪ್ರವಾಹವೇ ಹೊರಟಿತು. ನನ್ನ ಕುತ್ತಿಗೆ ತಬ್ಬಿಕೊಂಡು ‘ನಿನ್ನೇ ನಾನು ಪ್ರೀತಿಸಿದ್ದು ಅಪ್ಪಾಜಿ. ನನಗೆ ಯಾವಾಗಲೂ ನೀನೇ ಗಂಡ… ಬಲವಂತ ಮಾಡಿ ಜನಾ ವೀರಪ್ಪನಿಗೆ ನನ್ನನ್ನು ಕಟ್ಟಿದರೆ ಇದೇ ಕೆರೆಯಲ್ಲಿಯೇ ಬಿದ್ದು ಪ್ರಾಣ ಬಿಡುತ್ತೇನೆ’ ಎಂದು ಶಪಥ ಮಾಡಿದಳು. +ನಾನು ಸಮಾಧಾನ ಮಾಡುತ್ತಾ “ಹಾಗಲ್ಲಾ ಚೆನ್ನಾ. ತಾಯಿ ಮಾತು ಮೀರಬಾರದು. ನನಗೇನು ನಿನ್ನ ಮೇಲೆ ಪ್ರೀತಿಯಿಲ್ಲ ಎಂದು ತಿಳಿದಿದ್ದೀಯಾ. ನಿಮ್ಮಪ್ಪ ನಮ್ಮಪ್ಪ ವ್ಯಾಜ್ಯ ಕಾಯದಿದ್ದರೆ ಈ ಕಷ್ಟ ಇಬ್ಬರಿಗೂ ಏತಕ್ಕೆ ಬರುತ್ತಿತ್ತು?” +“ನೀನು ನನ್ನ ಪ್ರೀತಿಸುವುದು ನಿಜವೇ ಅಪ್ಪಾಜಿ” +“ಗಂಗಾತಾಯಿ ಆಣೆಗೂ ನಿಜ ಚೆನ್ನಾ.” +“ಹಾಗಾದರೆ ನಡಿ ಇಬ್ಬರೂ ಹೊರಟು ಹೋಗೋಣ. ಎಲ್ಲಿಯಾದರೂ ಜೀವನ ಮಾಡಿಕೊಂಡು ಸುಖವಾಗಿರೋಣ. ನನ್ನ ಮೇಲೆ ಸ್ವಲ್ಪ ಒಡವೆ ಇದೆ. ಅದು ಮುಗಿಯುವ ಹೊತ್ತಿಗೆ ನೀನು ಏನಾದರೂ ಕೆಲಸ ಸಂಪಾದಿಸು.” +“ಇಷ್ಟು ಅವಸರ ಏಕೆ. ನನಗೆ ಸ್ವಲ್ಪ ಯೋಚನೆಗೆ ಅವಕಾಶಕೊಡು. ನಾಳೆ ಜವಾಬು ಹೇಳುತ್ತೇನೆ.” +ಮಾರನೆಯ ದಿವಸ ಅವಳಿಗೆ ನಾನು ಹೇಳಿದ ಜವಾಬೆಂದರೆ ಬುಧವಾರ ಮದರಾಸಿಗೆ ಹೋಗುವುದೆಂದು! ಇಬ್ಬರೂ ಕೆಲವು ತಿಂಗಳು ಸುಖವಾಗಿದ್ದೆವು. ಸ್ವರ್ಗಸುಖವನ್ನೇ ಅನುಭವಿಸಿದೆವು. ಅಷ್ಟು ಹೊತ್ತಿಗೆ ಇದ್ದದ್ದು ಕರಗುತ್ತಾ ಬಂದಿತ್ತು. ನಾನು ಕಷ್ಟಪಟ್ಟು ಒಂದು ಕೆಲಸವನ್ನು ಸಂಪಾದಿಸಿಕೊಂಡು ತಿಂಗಳಿಗೆ ೩೦ ರೂಪಾಯಿಯಸ್ಟು ಗಳಿಸುತ್ತಿದ್ದೆ. ಅದರಲ್ಲಿಯೇ ಮಿತವಾಗಿ ಸುಖವಾಗಿ ಜೀವನ ಮಾಡಿಕೊಂಡಿದ್ದೆವು. +ಆದರೆ ನನ್ನ ಚಪಲಬುದ್ಧಿ ಕಪಿಯಂತೆ ಆಡತೊಡಗಿತು. ಸ್ವಲ್ಪ ಕಷ್ಟವಾದರೂ ಚೆನ್ನನ ಮೇಲೆ ಹಾಕಲಾರಂಭಿಸಿದೆ. ಹಿಂಸೆಗೆ ಮೊದಲು ಮಾಡಿದೆ. ಅಹನ್ಯಹನಿ ಜಿವನದ ಕಷ್ಟಕಾರ್ಪಣ್ಯ ಮರೆಯಲು ದುಷ್ಟ ಚಟಗಳಿಗೆ ಬೀಳತೊಡಗಿದೆ. ಆದರೆ ಚೆನ್ನಾ… ಎಲ್ಲವನ್ನೂ ಸಹಿಸಿದಳು; ಎಲ್ಲವನ್ನೂ ಉಪಭೋಗಿಸಿದಳು. ಊಟವಿಲ್ಲದೆ ಮಲಗುವ ದಿನಗಳಲ್ಲಿ “ಏನಂತೆ, ಇದ್ದಾಗ ಮೂರು ಹೊತ್ತು ಉಣಲಿಲ್ಲವೇ. ಒಪ್ಪತ್ತು ಅನ್ನವಿಲ್ಲವೆಂದು ಈಗೇಕೆ ಅಳಬೇಕು” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಳು. ಒಂದೊಂದು ಸಲ ನನ್ನ ನಡತೆಯನ್ನು ಕಂಡು ಮುನಿಯುವಳು. ರೋಷದಲ್ಲಿ ಒಂದೊಂದು ಮಾತು ಬಾಯಿಮೀಟಿ ಬಂದುಬಿಡುತ್ತಿತ್ತು. ಆ ಮರುಕ್ಷಣವೇ ನನ್ನ ಕಾಲು ಹಿಡಿದು “ಕ್ಷಮಿಸು ಅಪ್ಪಾಜಿ. ನಾನು ಹುಚ್ಚಿ; ಬುದ್ಧಿಯಿಲ್ಲದ ಹಳ್ಳಿ ಮುಕ್ಕ” ಎಂದು ನೋಯುತ್ತಿದ್ದಳು. +ಕೊನೆಕೊನೆಗೆ ದಾರಿದ್ರ್ಯದ ಹಾವಳಿ ಹೆಚ್ಚಾಯಿತು. ನಮ್ಮ ತಂದೆಯವರು ತೀರಿಹೋದ ಸುದ್ದಿ ಗೊತ್ತಾಯಿತು. ಅವರು ಕೋಪದಲ್ಲಿ ಇದ್ದ ಆಸ್ತಿಯನ್ನೆಲ್ಲಾ ದೇವಸ್ಥಾನಕ್ಕೆ ಬರೆದುಬಿಟ್ಟಿದ್ದರು. ಆ ದುಃಖವೂ ನನ್ನ ಮನಸ್ಸಿನಲ್ಲಿ ಮನೆಮಾಡಿತು. ಈಯೆಲ್ಲ ಅನರ್ಥಗಳಿಗೂ ‘ಇವಳೇ’ ಕಾರಣ ಎಂಬ ಭಾವನೆ ದೃಢವಾಗಿ ಮನಸ್ಸಿನಲ್ಲಿ ನೆಡುತ್ತಾ ಬಂದಿತು. +ಒಂದು ದಿನ… ಗೌರಿಹಬ್ಬವೆಂದು ತಿರಿದು ತಂದು ಪಾಯಿಸದ ಅಡಿಗೆ ಮಾಡಿದ್ದಳು. ಊಟಮಾಡಿ “ಎರಡು ಮೂರು ದಿವಸಗಳಲ್ಲಿ ಬರುವೆ. ಆಫೀಸಿನ ಕೆಲಸದ ಮೇಲೆ ಕಾಟಪಾಡಿ ತನಕ ಹೋಗಿಬರಬೇಕಾಗಿದೆ ಎಂದು ನಂಬಿಸಿ ಹೊರಟೆ. ಅವಳಿಗೊಂದು ಕಾಗದ, ಅವಳ ತಾಯಿಗೊಂದು ಟೆಲಿಗ್ರಾಂ ದಾರಿಯಲ್ಲಿ ಸಿಕ್ಕಿದ ಪೋಸ್ಟ್ ಆಫೀಸಿನಲ್ಲಿ ಕೊಟ್ಟು ನಾನು ಅಲ್ಲಿಂದ ಮುಂಬಯಿಗೆ ಹೊರಟುಬಿಟ್ಟೆ.” +ರುದ್ರಪ್ಪನ ಗಂಟಲು ಬಿಗಿಯುತ್ತ ಬಂತು. ತಲೆಯಮೇಲೆ ಕೈಹೊತ್ತು ಸ್ವಲ್ಪ ಕಾಲ ಹಾಗೆಯೇ ಕುಳಿತುಬಿಟ್ಟ. ನಾನು ಧೈರ್ಯಮಾಡಿಕೊಂಡು, +“ಚೆನ್ನನ ಗತಿ?” +ಅವರ ತಾಯಿ ಬಂದು ಕರೆದುಕೊಂಡು ಹೋದರು. ಆದರೆ ಮತ್ತೆ ನನಗೆ ಅವಳ ದರ್ಶನ ಸಿಗಲಿಲ್ಲ. ಆರು ತಿಂಗಳ ಕಾಲ ತಲೆಹುಳುಕ ನಾಯಿಯ ಹಾಗೆ ಅಲೆದು ಚೆನ್ನನಿಗೆ ನಾನು ಮಾಡಿದ್ದ ದ್ರೋಹವನ್ನು ನೆನೆದು ಊರಿಗೆ ಹೋದೆ. ನಮ್ಮ ಮನೆಯಿದ್ದ ಜಾಗದಲ್ಲಿ ಹುಡುಗರ ಶಾಲೆ ಬಂದುಬಿಟ್ಟಿತ್ತು. ಚೆನ್ನನ ಮನೆಗೆ ಹೋದೆ. ಅವಳ ತಾಯಿಯೇ ಬಂದರು. ನನ್ನನ್ನು ಒಳಕ್ಕೆ ಕರೆದುಕೊಂಡು ಹೋಗಿ ಉಪಚರಿಸಿದರು. ನಾನು ತಬ್ಬಲಿಯಂತೆ ಅವರ ಕಡೆ ನೋಡಿ, +“ಚೆನ್ನಾ ಎಲ್ಲಿ?” +ಎಂದೆ. ನನ್ನನ್ನು ನೋಡಿ ಗೊಳೋ ಎಂದು ಅತ್ತರು. ಅಂದಿಗೆ ಚೆನ್ನಾ ಮಣ್ಣಿನೊಂದಿಗೆ ಒಂದಾಗಿ ನಾಲ್ಕು ತಿಂಗಳಾಗಿತ್ತು. ತೌರುಮನೆಗೆ ಬಂದ ಮೇಲೆ ಹಾಗೂ ಹೀಗೂ ಒಂದೆರಡು ತಿಂಗಳು ಬದುಕಿ ಶಿವಾಧೀನವಾದಳಂತೆ. ಕೊನೆಯಲ್ಲಿ… ನನ್ನ ಹೆಸರು ಹೇಳಿ… ಈ ಪಟವನ್ನು ನಾನು ಸಿಕ್ಕಿದರೆ ಕೊಡಹೇಳಿ… ಮಾತು ನಿಲ್ಲಿಸಿದಳಂತೆ….” +ರುದ್ರಪ್ಪನವರ ಮಾತೂ ನಿಂತುಹೋಯಿತು. ಕತ್ತು ತಗ್ಗಿಸಿ ನೋಡಿದೆ. ನನ್ನ ರನ್ನ ಮುದ್ದಣ್ಣರಿಗೆ ಕಣ್ಣೀರಿನ ಅಭಿಷೇಕವಾಗುತ್ತಿದ್ದುದನ್ನು ಕಂಡೆ. ರುದ್ರಪ್ಪನವರೊಂದಿಗೆ ಆಡಲು ಮಾತುಗಳನ್ನು ಹುಡುಕುವಂತಾಗಿತ್ತು. ಮೆಲ್ಲನೆ ರುದ್ರಪ್ಪನವರ ಬಳಿ ಸಾರಿ ಅವರ ಕೈಗಳನ್ನು ಹಿಡಿದು, ಮನಸ್ಸು ಹೇಳಬೇಕೆಂದಿದ್ದುದನ್ನು ಸೂಚಿಸಿದೆ. +ಆ ವೇಳೆಗೆ ‘ಟಿಫನ್ ಕ್ಯಾರಿಯರ್’ನಲ್ಲಿ ಒಬ್ಬ ಹುಡುಗ ರುದ್ರಪ್ಪನವರ ಊಟವನ್ನು ತಂದು ಒಂದು ಮೂಲೆಯಲ್ಲಿಟ್ಟ. ರುದ್ರಪ್ಪನವರು ನನ್ನನ್ನು ನೋಡಿ ತಮ್ಮ ದುಃಖ ಅಣಗಿಸಿಕೊಂಡು, +“ನನ್ನ ಶಿವಪೂಜೆ ಬಂತು ನಿಮ್ಮ ಶಿವಪೂಜೆ….” +“ಈಗ ಹೊರಡುತ್ತೇನೆ ರುದ್ರಪ್ಪನವರೇ.” +ಎಂದು ಪುಸ್ತಕದ ಗಂಟನ್ನೆತ್ತಿಕೊಂಡು ಹೊರಟೆ. ಯಾವುದೋ ಶಕ್ತಿ ಒಳಕ್ಕೇ ಎಳೆಯುವಂತಿತ್ತು. ರುದ್ರಪ್ಪ ನನ್ನನ್ನು ನೋಡಿ ನಗು ನಗುತ್ತಲೇ, +“ಮತ್ತೆ ಬರಬೇಕು ಸ್ವಾಮಿ. ಹೊತ್ತು ಬಹಳವಾಯಿತು. ಕ್ಷಮಿಸಬೇಕು… ಗುಡ್ ಮಾರ್ನಿಂಗ್.” +“ಗುಡ್ ಮಾರ್ನಿಂಗ್” +ಎಂದು ನಾನೂ ಹೇಳಿ ಹೊರಟೆ. ಆದರೆ ಈ ಸಲ ರುದ್ರಪ್ಪನ ‘ಗುಡ್ ಮಾರ್ನಿಂಗ್’ ನನಗೆ ನಗೆಯನ್ನುಂಟುಮಾಡಲಿಲ್ಲ. +***** +“ಟ್ರಿನ್… ಟ್ರಿನ್…” ರಿಂಗಣಿಸಿದ ದೂರವಾಣಿ ಕರೆಗೆ ಸ್ಪಂದಿಸಿದ ಪ್ರಸಿದ್ಧ ರೋಬೊ ತಜ್ಞ ಪ್ರೊ. ರಂಗ ಪ್ರಸಾದ. “ಪ್ರೊ. ರಂಗಪ್ರಸಾದ ಹಿಯರ್…! ” “ಗುಡ್ ಮಾರ್ನಿಂಗ್. ಪ್ರೊಫೇಸರ್…” ಸಿಟಿಯಿಂದ ನಾಲ್ವತ್ತು ಕೀ.ಮಿ.ದೂರದಲ್ಲಿರೊ ಎಸ್ಟೆಟ್‌ನಿಂದ ಮ್ಯಾಗಿಯ ಧ್ವನಿ […] +ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು […] +ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_380.txt b/Kannada Sahitya/article_380.txt new file mode 100644 index 0000000000000000000000000000000000000000..04cd5bcf085afdee16bcfd2e7c7713b1969c82d2 --- /dev/null +++ b/Kannada Sahitya/article_380.txt @@ -0,0 +1,536 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಋತುಮಾನದ ಹಕ್ಕಿ +[ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು] +ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ ನಿನಗಾ || ಉಟ್ಟ ಸೀರೀ ಸೆರಗಿಂದ ಗುಡಿಸೇನ ನಿನ್ನ ಅಂಗಳಾ|| ಹೊರಗ ಬಂದ ನೋಡವ್ವ ತಾಯಿ ನಿಂತೇನ ಬರಿಯುಡಿದೊಡ್ಡಿ || +ಶಾರಿ: ಅವಯ್ಯಾ? ಸೂಳಿ ಮನಿ ಅಂಗಳ ಗುಡಿಸುವಂಥಾಕಿ ಈಕಿ ಯಾರಿರ ಬೇಕ? ಯಾರವ್ವ ಎಲೆ ಗೆಳತಿ ಯಾಕವ್ವ ಬಂದಿ ಅಂಗಳ ಗುಡಿಸುತ್ತಿ || ದೊಡ್ಡ ಮನೆತನದಾಕಿ ಏ ಗುಣವಂತಿ ಕಾತಿ ಮಹಾಗರತಿ || ಕೀಳಾ ಸೂಳಿಯ ಮನಿಗಿ ಯಾಕವ್ವ ಬಂದಿ ಕಾಣತಿ ಮಹಾಗರತಿ || ಅವ್ವಾ, ನೋಡೋದಕ್ಕ ಮಹಾಗರತಿ, ಲಕ್ಷಣದಾಕಿ, ನೀ ಯಾರು? ಹೇಳುವಂಥವಳಾಗು. +ಗೌಡ್ತಿ: ತಾಯಿ- +ಶಾರಿ: ಈ ಸೂಳಿಗಿ ನಾಯೀ ಅಂತ ಕರಿಯೋದ ಬಿಟ್ಟು ತಾಯಿ ಅಂತಿ ಯಾರವಾ ನೀನು? +ಗೌಡ್ತಿ: ನಾನು ನಿನ್ಹಾಂಗ ಒಂದ ಹೆಣ್ಣಂತ ತಿಳಿ, ಸಾಕು. +ಶಾರಿ: ಹಾಂಗ ಹತ್ತಬರೆ ತಿಳಿದೇನು. ಅಕ್ಕಾ ಅಂದೇನು, ತಂಗೀ ಅಂದೇನು, ಏನಂದರೇನು? ನೋಡಿದರೆ ಪತಿವರತಿ ಕಾಣತಿ, ಹೆಸರ ಹೇಳು. +ಗೌಡ್ತಿ: ಋತುಮಾನದ ಹಕ್ಕಿ ಒಂದ ನಿನ್ನ ಮನ್ಯಾಗ ಕುಂತೈತಿ. ಅದನ್ನ ಕೊಟ್ಟರ ಹೆಸರ ಹೇಳೇನ್ನೋಡು. +ಶಾರಿ: ಯಾಕವ್ವ ಒಡಪಿನಾಗಿಡ್ತಿ? ಹೆಸರ ಹೇಳದ ಎಷ್ಟೊಂದು ಓಡ್ಯಾದಸ್ತಿ? ಋತುಮಾನದ ಹಕ್ಕಿ ಯಾವುದು; ಎಲ್ಲೈತಿ? +ಗೌಡ್ತಿ: ಮನ್ಯಾಗಿಟ್ಟುಕೊಂಡ ಎಲ್ಲೆಂದರ ಏನ ಹೇಳ್ಲಿ? +ಶಾರಿ: ಒಡಪ ಹೇಳಿ ಯಾಕ ಕೊಲ್ಲತಿ? ನಿನ್ನಿಂದ ನನ್ನ ಮನಿ ಧಗೇತಿ, ಹೆಸರ್‍ಹೇಳು. ಬಂದ ಕಾರಣ ಹೇಳು. +ಗೌಡ್ತಿ: ಅಮ್ಮಾ ನಿನ್ನ ಮನ್ಯಾಗಿನ ಜೋಕುಮಾರಸ್ವಾಮೀನ್ನ ಕೊಟ್ಟರ ಹೆಸರ ಹೇಳೇನ್ನೋಡು. +ಶಾರಿ: [ಕೋಪದಿಂದ] ಯಾವ ಸವತೀನ ನೀನು? ಯಾವ ಜೋಗತೀನ ನೀನು? ನನಗ ಸಾಯಂದೇನ? ಗೋರಿಗಿ ಹೋಗಂದೇನ? ಒಂದ ಒಂದ ಗಿರಾಕಿಲ್ಲ ಕೂಳಿಲ್ಲ ನೀರಿಲ್ಲ ಕೂತೇನು. ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? ಜೋಕುಮಾರಸ್ವಾಮಿ ಪಲ್ಲೆ ಮಾಡಿ ಊರ ಗಂಡಸರಿಗೆಲ್ಲ ನೀಡಿ ನನ್ನ ಸೆರಗಿನಾಗ ಹೇಡಮುರಿ ಕಟ್ಟಿ, ನನ್ನ ಬಾಗಲಾಗ ಬಿದ್ದಿರೋ ಹಾಂಗ ಮಾಡೇನಂದರ ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? ಸೂಳಿಯಾಗಿ ಇಪ್ಪತ್ತ ರ್ಷಾತು ಒಂದ ಗಳಿಸಲಿಲ್ಲಾ, ಒಂದ ಉಳಿಸಲಿಲ್ಲಾ. ಜೋಕುಮಾರಸ್ವಾಮಿ ದಯದಿಂದ ನೇಣು ಹಾಕಿಕೊಳ್ಳಾಗ ಒಂದು ಹಗ್ಗಾನಾದರೂ ಗಳಿಸಬೇಕಂದರ ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? [ನಿರಾಸೆಯಿಂದ ಗೌಡ್ತಿ ಅಳುವಳು] ಅಳೋದಕ್ಕ ಯಾರಿಗಿ ಬರಾಣಿಲ್ಲ? ತತಾ ನಾಲ್ಕ ಕೊಡ. ಹಾ ಅನ್ನೋದರಾಗ ಕಣ್ಣೀರಿನಿಂದ ತುಂಬಿಸ್ತೇನ. ಯಾ ಊರ ಸೂಳಿ? ಯಾ ಓಣಿ ಸೂಳಿ? ಅಂಗಳಾ ಉಡಗೋ ನೆವ ಮಾಡಿ ಬಂದಿ ಯಾವ ಜೋಗತೀನ ನೀನು ಯಾವ ಸವತೀನ ನೀನು? +ಗೌಡ್ತಿ: ತಾಯೀ, ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ || +ಶಾರಿ: ಏನ ಹುಚ್ಚಿ! ಕೈಗಿ ಸಿಕ್ಕ ಜೋಕುಮಾರಸ್ವಾಮೀನ್ನ ಯಾವ ಹೆಣ್ಣ ಬಿಟ್ಟಾಳು? ನನಗೂ ವಯಸ್ಸಾಗೇತಿ. ಹೊಟ್ಟೀ ನೆತ್ತಿ ನೋಡಾಕ ನನಗ ನಿನ್ಹಾಂಗ ಯಾರೂ ಹೆಣ್ಣಮಕ್ಕಳೀಲ್ಲ. ಮೊದಲ ನನ್ನ ಮೈ ಉಂಡದ್ದ, ಉಟ್ಟದ್ದ ಠಸಿ ಉಂಡ ತಿರಗಿದ್ದು. ನಾರೋ ಎಣ್ಣೀಲ್ದ ಮಗ್ಗಲ ಮಿಂಡಿಲ್ಲದ ಮಲಗಿದ್ದಲ್ಲ. ಮಿಂಡರನೆಲ್ಲಾ ಎಳಕಂಬರೋ ಮಂತ್ರ ಸಿಕ್ಕೈತಿ, ಹೆಂಗ ಕೊಡ್ಲಿ? ತಗಿ ತಗಿ ಕೊಡಾಣಿಲ್ಲ. +ಗೌಡ್ತಿ: ಅನ್ನಬ್ಯಾಡ ಇಲ್ಲಂತ ಉಡಿತುಂಬ ಮಗಳಂತ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ || +ಶಾರಿ: ಕರಗೋ ಕರಳ ಇದ್ದಿದ್ದರ ಸೂಳಿ ಆದೇನು? ಕೈಗಿ ಬಂದ ಸೌಭಾಗ್ಯ ಹಾದೀಲೆ ಹೋಗವರಿಗೆ ಹೆಂಗ ಕೊಟ್ಟೇನು? +ಗೌಡ್ತಿ: ಮಕ್ಕಳಿಲ್ಲದ ಬಂಜಿ ಬೇಡೇನ ಸೆರಗೊಡ್ಡಿ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ || +ಶಾರಿ: ಬಂಜಿ ಅಂದರ ನನಗೂ ಸಂಕತ ಆಗತೈತಿ ಖರೆ. ಅದಕ್ಕ ನಾ ಏನ್ಮಾಡಲಿ? ಅಂಗೈ ಐಶ್ವರ್ಯ ಹೆಂಗ ಕೊಟ್ಟೇನು? ಹುಚ್ಚಿ, ಸೂಳಿ ಮನಿಗಿ ಬಂದಮ್ಯಾಲಾದರೂ ಹುಚ್ಚತನ ಬಿಡಬೇಕಾಗಿತ್ತ. ಹೋಗಲು, ಯಾgಂತ ಹೆಸರ್‍ಹೇಳಿ ಹೋಗು. +ಗೌಡ್ತಿ: ಊರ ಗೌಡನ ಹೇಂತಿ ನಾ ಊರ ಗೌಡತಿ || ಉಡಿಯೊಡ್ಡಿ ಬೇಡೇನ ಹಿಡಿದೇನ ನಿನ್ನ ಚರಣ ತೋರೀಸ ದಯ ಕರುಣಾ || +ಶಾರಿ: [ ಆಘಾತಗೊಂಡು ] ಊರ ಗೌಡ್ತಿ? ಏನ ಹುಚ್ಚಿ ಇದ್ದೀಯ ಎವ್ವ? ಮಾನ ಮರ್‍ಯಾದಿ ಬಿಟ್ಟ ಸೂಳೀಮನಿಗಿ ಬಂಜಿ ಸೆರಗೊಡ್ಡಿ ಬಂದಿ. ಬಾಳಾದಿನ ಆಗಲಿಲ್ಲಾ ನಿನ್ನ ಮದಿವ್ಯಾಗಿ? +ಗೌಡ್ತಿ: ಇಂದಿಗೆ ಹತ್ತ ವರ್ಷ ತುಂಬ್ಯಾವು. +ಶಾರಿ: ಇನ್ನೂ ಗೌಡನ ಹೊಟ್ಯಾಗಿಂದ ತಿಳೀಲಿಲ್ಲ ಎವ? ಜೋಕುಮಾರಸ್ವಾಮೀನ ಕೊಟ್ಟೇನು. ಆದರ ಗೌಡನಿಂದ ನಿನಗ ಮಕ್ಕಳಾದಾವೇನು? +ಗೌಡ್ತಿ: ಯಾಕಾಗಾಣಿಲ್ಲ? ಎಷ್ಟ ಮಂದಿಗಿ ಆಗ್ಯಾವ ! +ಶಾರಿ: ಮಂದಿಗಿ ಆಗ್ಯಾವ ಖರೆ. ಗೌಡನ ಸೊಭಾವ ನಿನಗ ಇನ್ನೂ ಗೊತ್ತ ಆಗಿಲ್ಲ. ಲೋಕದಾಗಿದ್ದದ್ದೆಲ್ಲಾ ತಂದ ಆಗಬೇಕೂನ್ನೋದೊಂದ ಹಂಕಾರ ಬಿಟ್ಟರೆ ಅವನಲ್ಲಿ ಏನೈತಿ? ನನ್ನ ನೋಡಲ್ಲ ಎವ್ವಾ. ಇಡೀ ಆಯುಷ್ಯವೆಲ್ಲ ತೊಗಲ ಬಿಸಿಮಾಡಿಕೊಂಡ ಗಂಡಸರ ತೊಗಲಿಗೆ ತಿಕ್ಕೋದರಾಗ ತೀರಿ ಹೋಯ್ತು ! ಅನುಭವದ…ಮಾತ ಹೇಲಲ್ಯಾ ಎವ್ವಾ? ಬಸಣ್ಯಾನ ನೋಡು. ಅವ ಎಲ್ಲೆಲ್ಲಿ ನೋಡತಾನ ಅಲ್ಲಲ್ಲಿ ಹುಡಿಗೇರಿಗಿ ಬೆವರತೈತಿ. ನಿದ್ಯಾಗ ಬಂದ ಮೈ ಒದ್ದೀ ಮಾಡತಾನ ! ಗೌಡನ್ನೋಡಿದರ ಹಡಿಗೇರ ಬಾಯಿಗೆ ಸೆರಗ ಹಾಕ್ಕೊಂಡು ನಗತಾರ. ಅವನಿಂದ ನಿನಗ ಮಕ್ಕಳಾಗತಾವ? ನಾ ಹೆಂಗಸಾದ ಮೊದಲನೇ ದಿನ ತಾನಮೀಸಲ ಮುರೀತೇನಂತಾ ಗೌಡ ಬಂದ. ಚೀಲ ಬತ್ತಾ ಕೊಟ್ಟಾ, ಮ್ಯಾಲ ಐದು ರೂಪಾಯಿ ಕೊಟ್ಟ. ಪೈಲಾ ಗಿರಾಕಿ ಗೌಡ ಬಂದರೆ ಸೂಳೇರಿಗೆ ಹೆಂಗ ಆಗಬ್ಯಾಡ? ಸೀರಿ ಗಂತ ಸಡ್ಲ ಮಾಡಿಕೊಂಡ ಸಡಗರ ಮಾಡತಾ ದೇವರ ಕ್ವಾಣಿಗೆ ಹೋದರ- ಗೌಡ ಕಂಬಳಿ ಹೊತ್ತಕೊಂಡ ಗೊರಕೀ ಹೊಡೀತಿದ್ದ. ಕಾಲ ಒತ್ತೀಕೋತ ಕುಂತೆ. ಬೆಳಿಗ್ಗೆದ್ದ ಏನೂ ಆಗದವರ್‍ಹಾಂಗ ಹೋದ. ಅಂದಿಂದ ಹತ್ತ ಹದಿನೈದು ಮಂದಿ ಸೂಳೇರ ಮೀಸಲಾ ಮುರದ್ದಾನ.. “ಹೆಂಗರೆ?” ಅಂತ ಕೇಳಿದರ ಎಲ್ಲಾರೂ ನನ್ಹಾಂಗ ಹೇಳತಾರ ! ಹಿಂಗ ಯಾಕ ಮಾಡಿದ ಗೊತ್ತೈತಿ ಎವ್ವಾ? +ಗೌಡ್ತಿ: ಸೂಳೇರ ಮನಿಗಿ ಬಂದದ್ದಕ್ಕ ಕೆಡಕನಿಸಿರಬೇಕು. +ಶಾರಿ: ದಿನಾ ಅವನ ಕಾಲ ತಿಕ್ಕತಿ, ಜಳಕಾ ಮಾಡೋವಾಗ ಬೆನ್ನ ತಿಕ್ಕತಿ. ಅವನ ಹಿಂದ ನೋಡಿದಿ. ಮುಂದ ನೋಡಿದಿ. ಇಷ್ಟೆಲ್ಲಾ ನೋಡಿ ಮತ್ತ ಅವನ್ನ ಪ್ರೀತಿ ಮಾಡೇನಂತಿ- ನೀನೂ ದೊಡ್ಡ ಗರತಿ ಬಿಡು. ಯಾಕ ಹಂಗ ಮಾಡಿದಂದರ- ಕೂಡಲಿ ಬಿಡಲಿ, ಅವ ಮೀಸಲಾ ಮುರಿದಾ ಸೂಳೇರ ಮಕ್ಕಳೆಲ್ಲಾ ಅವನ ಮಕ್ಕಳ ಆಗತಾರೇನವಾ. ಹಾಂಗ ತಿಳಕೊಂಡ ಗೌಡ ಊರ ಮಂದಿಗೆಲ್ಲಾ ‘ ಏ ಮಗನ ಅಂತ ಕರೀತಾನ. ಇಂಥಾ ಗೌಡನಿಂದ ನಿನಗ ಮಕ್ಕಳಾಗತಾವು? +ಗೌಡ್ತಿ: ಜೋಕುಮಾರಸ್ವಾಮೀ ದಯದಿಂದ ಯಾಕಾಗಬಾರದು? +ಶಾರಿ: ಜೋಕುಮಾರಸ್ವಾಮಿನಂತೂ ತಗೊಡ್ಹೋಗು. ಆದರ ಸೂಳೀ ಹೊಚ್ಚಲಾ ಮೆಟ್ಟಿದೀ ಅಂದಮ್ಯಾಲ ಇನ್ನಾದರೂ ಶಾಣ್ಯಾಳಾಗಿ ಬದುಕು. ಇಲ್ಲಿಗೆ ಬಂದದ್ದನ್ನ ಯಾರಿಗೂ ಹೇಳಬ್ಯಾಡ. +ಗೌಡ್ತಿ: ತಾಯೀ, ನಿನ್ನ ಉಪಕಾರ ಹೆಂಗ ತೀರಿಸಲಿ? ನಿನ್ನ ಬಾಯಿಂದ ಒಂದ ಸಲ ಹೇಳು- ನನಗಮಕ್ಕಳಾಗತಾವಂತ. +ಶಾರಿ: ನಿನಗ ಮಕ್ಕಳಾಗತಾವ ಹೋಗು. [ ಗೌಡತಿ ತಲೆಯ ಮೇಳೆ ಜೋಕುಮಾರಸ್ವಾಮಿ ಬುಟ್ಟಿ ಹೊರಿಸುವಳು. ಗೌಡ್ತಿ ಹೊರಡುವಳು. ಸಂಗೀತ ] +ಡೊಳ್ಳ ಹೊಟ್ಟಿ ಉರುಳಿ ಬಿತ್ತೊ +[ರಸ್ತೆ. ಬಸಣ್ಣ ಗುರ್‍ಯಾ ಭೆಟ್ಟಿಯಾಗುವರು] +ಬಸಣ್ಣ ಮಿತ್ರಾ ಗುರಣ್ಣಾ ರಾಮೇರಾಮಪಾ ರಾಮೇರಾಮ. +ಗುರ್‍ಯಾ: ಮಿತ್ರಾ ಬಸಣ್ಣಾ ರಾಮೇರಾಮಪಾ ರಾಮೇರಾಮ. +ಬಸಣ್ಣ ಮಿತ್ರಾ ಗುರಣ್ಣಾ, ನಿನ್ನ ಮುಖಾ ಯಾಕ ಬಾಡೇತಿ? ಹೇಳಬೇಕಾದೀತ ನೋಡು. +ಗುರ್‍ಯಾ: ಮಿತ್ರಾ ಬಸಣ್ಣಾ, ಏನ್ಹೇಳಲಿ? ಬಡತನ ಪಾಪ ಹೌಂದೋ ಅಲ್ಲೊ, ವರಾ ಅಂತೂ ಅಲ್ಲಪಾ. +ಬಸಣ್ಣ: ಯಾಕೋ ಮಿತ್ರಾ, ಎಂದೂ ಇಷ್ಟ ನೊಂದ ಆಡಿದಾವಲ್ಲ, ಇಂದ ಆಡತಿ ಅಂದiಲ ಏನ ಕಾರಣ ಳು. +ಗುರ್‍ಯಾ: ಮಾರಾಯ, ಇಂದ ಗೌಡನ ಕೈಯಾಗ ಸಿಕ್ಕಿದ್ದೆ ! ನಾ ನಿನ್ನ ಹಂತ್ಯಾಕ ಬಂದದ್ದ ಅಧೆಂಗ ಗೊತ್ತಾಗೇತ್ಯೋ ! ಒದ್ದ ಬೆನ್ನ ಕಣ್ಣ ಮಾಡಾಕ ಬಂದಿದ್ದ. +ಬಸಣ್ಣ: ಅಂಜಾಕ ನೀ ಇಷ್ಟ ತಯಾರಿದ್ದರ ಯಾರ ಒದ್ಯಾಣಿಲ್ಲ ಹೇಳು? ಹಾಕ್ಯಾನಿಲ್ಲ ನಿನ್ನ ಹೊಲಕ್ಕ ಬಲಿ. +ಗುರ್‍ಯಾ: ಹಾಕೋದೇನ ಬಂತು? ಆ ಹೊಲ ಈಗ ಅವನ ಹೆಸರಿಗೇ ಆಗೇತಂತ. ಗೌಡಗೊಂದ ದೊಡ್ಡ ಹೊಟ್ಟಿ ಐತೇನಪಾ. ಯಾವತ್ತು ಆ ಹೊಟ್ಯಾಗಿಂದ ಮಾತಾಡತಾನ ಅವ. ನಾವ ಹೇಳಿದ್ದ ಅದಕ್ಕ ಕೇಳಿಸೋದ ಇಲ್ಲ. ಯಾಕಂದರ ಅದಕ್ಕ ಕಿವೀನ ಇಲ್ಲ. +ಬಸಣ್ಣ: ಏನ ಎಬದೊ ! ಕೈಯಾಗಿನ ಹೊಲಾ ಕಾಣಾ ಕಣಾ ಕಳಕೊಳ್ತಿಯಲ್ಲೊ? ಹೊಸ ಹೊಸ ಕಾಯ್ದೆ ಕಾನೂನ ಬಂದಾವಂತ ಹೇಳಬೇಕಿಲ್ಲ? +ಗುರ್‍ಯಾ: ಸಾಲಗಾರರಿಗೆ ಬಾಯಿ ಬರಾಣಿಲ್ಲೋ ಎಪ್ಪಾ ! +ಬಸಣ್ಣ: ಹೆದರಬ್ಯಾಡ ಅಧೆಂಗ ಹೊಲ ಕಸೀತಾನ ನಾ ನೋಡತೇನ. +ಗುರ್‍ಯಾ: ಇಂದೇನ ಮಜಾ ಆಯ್ತೋ ಬಸಣ್ಣಾ ! ಗೌಡ ಗುರುಪಾದನ ಮಗಳು ನಿಂಗೀನ ನೋಡಿ ಬಾಯಿ ತೆಗದಿದ್ದಾ ತಗದಿದ್ದಾ ತಗದಿದ್ದಾ, ನಿಂಗಿ ಏನ ಮಾಡಿದಳಂದಿ? +ಬಸಣ್ಣ: ಮಿತ್ರಾ ಏನ ಮಾಡಿದ್ಲು? +ಗುರ್‍ಯಾ: ಥೂ ಥೂ ಥೂ ಅಂತ ಮೂರಬರೆ ಉಗಳು ಹೋದಳಲ್ಲೊ ! +ಬಸಣ್ಣ: ಹಾಗಿರಬೇಕ ಇದ್ದರ. +ಗುರ್‍ಯಾ: ನಿಂಗಿ ಹಂತ್ಯಾಕಿದ್ದರ ಇಷ್ಟ ಧೈರ್‍ಯ ಬರತೈತೆ ಹುಡುಗಾ ! +ಬಸಣ್ಣ: ಮದಿವ್ಯಾಗತೀಯೇನ? +ಮೇಳ: ಸ್ವಾಮಿ ನಮ್ಮಯ್ ದೇವರೊ +ಢಂ ಢಂ ಇವರ ಹೆಸರೊ || +[ಗೊಡ ತನ್ನ ನಾಲ್ಕು ಜನರ ಪರಿವಾರದೊಂದಿಗೆ ಬರುವನು] +ಗೌಡ: ಯಾಕೋ ಗುರ್‍ಯಾ, ಇನ್ನೂ ಇಲ್ಲೇ ನಿಂತಿದಿ? ಅಂದಾಂಗ ಇವ ಯಾರ? ಏನಿವನ ಹೆಸರ? ಎಲ್ಲೋ ನೋಡಿಧಾಂಗಿತ್ತಲ್ಲೊ ! +ಬಸಣ್ಣಾ: ನನ್ನ ಹೆಸರ ಬೇಕ? ಒಡಪ ಹಾಕಿ ಹೇಳಲೊ? ಹಾಂಗ ಹೇಳಲೊ? +ಒಬ್ಬ: ಇವನ ಬಸಣ್ಯಾರಿ. +[ ಗೌಡ ಅವನನ್ನು ಸುಮ್ಮನಿರಿಸಿ ಮೂಲೆಯಲ್ಲಿ ನಿಂತಿರಲು ನಾಲ್ವರಿಗೆ ಸೂಚಿಸುತ್ತಾನೆ ] +ಗೌಡ: ಓಹೋ ಇವನ ಅಲ್ಲಾ ಬಸಣ್ನಂದರ? ಗುರ್‍ಯಾ ನಾ ಹೇಳಿದ್ದ ಹೇಳಿದೆಯೊ ಇಲ್ಲೊ? +ಗುರ್‍ಯಾ: ಹೇಳಿಲ್ಲರಿ, ಹೇಳತೇನ್ರಿ. ಬಸಣ್ಣಾ, ನಿಮ್ಮಪ್ಪ ದೆವ್ವಿನ ಹೊಲದ ಕೋರಪಾಲ ಕೊಟ್ಟಿಲ್ಲಂತ… +ಬಸಣ್ಣ: ಯಾವನ ಹೊಲಾ? ಏನು ಮಾತು? ಹುಸಾಹುಸಾ ಬೈಲಕಡೆ ಬರೋಬರಿ ಆಗಿಲ್ಲೇನ, ಬಾಯಿಗಿ ಬಂದಾಂಗ ಆಡತಿ? ಯಾವ ಉಳತಾನ ಅವನ ಭೂಮಿ ಮಾಲಕ ಅಂತ ಕಾಯ್ದೆ ಬಂದಾವ, ಹೇಳವಗ. +ಗೌಡ: ಎಲ ಎಲಾ? ಭಾರಿ ವಕೀಲಪಾ ! ಗುರ್‍ಯಾನ ವಕೀಲಕಿ ನೀನ ಹಿಡಿದ್ದೀಯಂತಲ್ಲ? ಕೆಲಸ ಗೆಲ್ಲಸಬೇಕಪಾ ಮತ್ತ. +ಬಸಣ್ಣ: ಅದನ್ನ ನೀ ಹೇಳಬೇಕ ನನಗ? +ಗೌಡ: ಒಂದ ಮಾತ ತಿಳಕೊ, ನಾ ಇದ್ದೀನಂತ ನೀವೆಲ್ಲ ಬದಕೀರಿ. +ನಾಲ್ವರೂ: ಹೌಂದ ಹೌಂದರಿ. ಹೌಂದ ಹೌಂದರಿ. +ಬಸಣ್ಣ: ಹೊಂದ ಹೌಂದೋ ನನ್ನ ಪರಮೇಶ್ವರಾ, ನಾವು ಬದಿಕಿದ್ದ ನಿನ್ನ ದಯದಿಂದ ಅಲ್ಲ? +ಗೌಡ: ಯಾರ ದಯದಿಂದ ಬದಕೀರಿ ತೋರಸ್ಲೀ? ಗುರ್‍ಯಾ. +ಗುರ್‍ಯಾ: ಓ ಎಪ್ಪಾ. +ಗೌಡ: ಸೊಲ್ಪ ಬಗ್ಗಿ ನಿಲ್ಲೊ. +[ ಗುರ್‍ಯಾ ಬಗ್ಗುವನು. ಗೌಡ ಅವನ ಮೇಲ ಕೂದ್ರುವನು.] +ನೀ ಯಾರ ದಯದಿಂದ ಬದುಕೀಯೋ ಮಗನ? +ಗುರ್‍ಯಾ: ಎಪ್ಪಾ, ನಿಮ್ಮ ದಯದಿಂದರಿ. +ಗೌಡ: ಅದನ್ನವನಿಗೆ ಹೇಳು. +ಗುರ್‍ಯಾ: ಬಸಣ್ಣಾ, ನಾ ಗೌಡನ zಯದಿಂದ ಬದಕೀನೋ. +ಬಸಣ್ಣ: ಹೊ ಹೊ ಹೊ ಹೊ! ಹೊಂದ ಹೌಂದೋ ಗೌಡ. ಮೊ ಮೊದಲ ದೇವರೂ ಹಿಂಗ ಹೇಳತಿದ್ದಾ: ಮಕ್ಕಳ್ರಾ ನೀವೆಲ್ಲ ನನ್ನ ದಯದಿಂದ ಬದಕೀರಿ- ಅಂತ. ಆದರ ಮನ್ನಿ ದೇವಸ್ಥಾನದೊಳಗಿನ ದೇವರ ಕಳವಾಗ್ಯಾವ. ಗೊತ್ತಿಲ್ಲಾ? +ಗೌಡ: ಕದ್ದವರ ಮುಕಳಿ ಕಡೀತಾವ. ಏನ ಮಾಡ್ಯಾರ ಮಖ್ಖಳು? +ಬಸಣ್ಣ: ಛೇ ಛೇ, ಹಂಗೇನಿರಾಕಿಲ್ಲ ತಗಿ. +ಗೌಡ: ಹೌಂದು? ತಡಿ ನಿನಗೂ ಖಾತ್ರಿ ಮಾಡತೇನ. ಇಂದಿನಿಂದ ನೀ ಉಳೋ ಹೊಲ ನಂದು. ಇನ್ನ ಮ್ಯಾಲ ಅಲ್ಲಿ ಕಾಲಿಟ್ಟರೆ ಆ ಕಾಲ ನಿನ್ನವಲ್ಲ ತಿಳಿ. +ಬಸಣ್ಣ: ಗೌಡ ಒಂದ ಮಾತ ಹೇಳಲಿ? +ಗೌಡ: ಏನ ಹೇಳೋದೆಲ್ಲಾ, ಈ ಬಂದೂಕಿಗೆ ಹೇಳಿಕೊ. ನಾ ಅದಕ್ಕೂ ಮಾತ ಕಲಿಸೇನಿ. ಬಂದೂಕ ಏನೇನ ಮಾತಾಡತೈತ್ರೊ? +ನಾಲ್ವರೂ: ಢಂಢಂ ಅಂತೈತ್ರಿ. +ಬಸಣ್ಣಾ: ನನ್ನ ಹಂತ್ಯಾಕೊಂದ ಬಂದೂಕೈತಿ. ಅದರ ನಾ ಗುಂಡು ಹಾಕಿದವರೆಲ್ಲಾ ಸಾಯೋದರ ಬದಲ ಮರಿ ಹಾಕತಾರ! ಹಹ್ಹಹ್ಹ- ನಿಂಗಿ ಹೇಳತಿದ್ಲು: ನಿನ್ನ ತಲ್ಯಾಗ ಬಿಳೀ ಕೂದಲ ಬಂದಾವತ: ಹೌಂದು ಗೌಡಾ? +ಗೌಡ: ತೋರಸಲಿ? ತಾರೋ ಬಂದೂಕ. +[ ಬಂದೂಕು ಇಸಿದುಕೊಳ್ಳುವನು. ಬಸಣ್ಣ ಬಂದೂಕಿನ ತುದಿಗೆ ಕಿವಿ ಹಚ್ಚಿ] +ಬಸಣ್ಣ: ನೋಡೋಣು, ಏನೇನ ಮಾತಾಡತೈತಿ ! ಏನೂ ಕೇಳಸವೊಲ್ದಲ್ಲ. +[ ಬಂದೂಕು ಕಸಿದೆಸೆಯವನು ] +ಹೋಗಲೇ ಬಡಿವಾರ ಬಸೆಟ್ಟಿ. ಹೊಲದಾಗ ಕಾಲಿಟ್ಟರ ಕಾಲ ಮುರೀತಾನಂತ. ನಿನ್ನ ಕಾಲಿಂದೇನ ಕಾಳಜೀನ ಇಲ್ಲೇನ ನಿನಗ? ರಟ್ಟೀ ಮುರದ, ಹೊಟ್ಟಿ ಕಟ್ಟಿ ನಮ್ಮಪ್ಪನು, ನಾನು ಕಾಡು ಕಡದ್ದೇವ. ಮಂದಿ ದೆವ್ವಿನ ಹೊಲಾ ಅಂತಾ ಹಗಲಿ ಆ ಕಡೆ ಹೋಗಾಕ ಹೆದರತಿದ್ದರು ಹಗಲಿ ರಾತ್ರಿ ಅಲ್ಲೇ ಬಿದ್ದಿರತಿದ್ದ ನಮ್ಮಪ್ಪ. ಇಂದ ಬಂದ ಹೊಲಾ ತಂದಂತ. +ಗೌಡ: ಅಜ್ಜಾ ಅರತೆಲಿ, ಮುತ್ಯಾ ಮೂರತೆಲಿ ಗೌಡಿಕಿ ನಮ್ಮದು. ನಿಮ್ಮಪ್ಪ ಬರದ ಬಟ್ಟ ಒತ್ತಿ ಕೊಟ್ಟಾನ, ಹೊಲಾ ನಮ್ಮದು. ಇಂದ ಬಂದೀ ಬದಲ ಮಾಡಾಕ. ಬೇಕಾದ್ದ ಕಾಯ್ದೆ ಬರಲಿ ಕಾನೂನು ಬರಲಿ. ದುಡ್ಡಿದ್ದಾವ ಯಾವತ್ತೂ ದೊಡ್ಡವಾಂತ ತಿಳಕೊ. ಮೂರಲ್ಲ ಅರ ದುಡ್ಡ ಕೊಟ್ಟರ ನಿನ್ನ ಕಾಯ್ದೆ ಕಾನೂನ ನನ್ನ ಕಿಸೇದಾಗ ಬಿದ್ದಾಡತಾವ. ನಾಕ ರೂಪಾಯಿ ಕೊಡತೇನ ನನ್ನ ಬಂದೂಕ ಹೊರಾಕ ಬರತಿ? +ಬಸಣ್ಣ: ಥೇಟ ಗಂಡಸಹಾಂಗ ಮಾತಾಡ್ತೀಯಲ್ಲೊ ಗೌಡಾ. ದೊಡ್ಡ ದೊಡ್ಡ ರಾಜರ ಹಜಾಮರಾಗಿ ಮಂದೀನ ಬೋಳಸತಾರ. ನೀ ಇನ್ನ ನಿನ್ನ ಅಧಿಮಾಕ ಬಿಟ್ಟಿಲ್ಲಲ್ಲ. ತೋರಿಸಲೇನ ನನ್ನ ಕೈ? +[ ಕೈ ತೋಳೇರಿಸಿ ಗುರ್‍ಯಾನೆದುರು ಕುಳಿತು ] +ಗುರ್‍ಯಾ, ಏಳ ಮಗನ ಕಿತ್ತುಕೊಂಡ ಬೇಕಾದ್ದಾಗಲಿ ನಾ ನಿನ್ನ ಬೆನ್ನ ಮ್ಯಾಲಿರತೇನ, ಏಳೊ. +ಗೌಡ: ನಾಯಿಗಿ ತಾ ಯಾರ ಮನಿ ನಾಯಂತ ಗೊತ್ತಿರೋದಿಲ್ಲೇನು? ಹೊಂದಲ್ಲರ್‍ಯೊ? +ನಾಲ್ವರು: ಹೊಂದ ಹೌಂದರಿ +ಒಬ್ಬ: ಒಂದಷ್ಟ ಒರಟ ಜಾತೀ ನಾಯಿಗಿ ಮನಿ ನೆನಪ ಇರಾಣಿಲ್ಲರಿ. ಯಾರ ಕೂಳ ಹಾಕತಾರ ಅವರ ಮನ್ಯಾಗ ಬಿದ್ದಿರತಾವರಿ. +ಬಸಣ್ಣ: ನೋಡೋ, ಅವನ ಮನಿ ನಾಯಾಗಿ ಬೀಳತೀಯೇನೊ? ನಾ ಹುಲಿಯಂಥಾವ ಇದ್ದೇನೇಳೊ ನೋಡಿಕೊಳ್ಳಾಕ. +ಒಬ್ಬ: ನಮ್ಮ ಢಂಢಂ ದೇವರು ಇಲ್ಲೀತನಕ ಒಟ್ಟ ನನ್ನ ಹುಲಿ ಕೊಂದಾರ? +ಇನ್ನೊಬ್ಬ: ಹನ್ನೊಂದ. +ಮತ್ತೊಬ್ಬ: ಇನ್ನ ಒಂದ ಡಜನ್ ಪೂರಾ ಆಗಿಲ್ಲಲ್ಲೊ. +ಬಸಣ್ಣ: ಗುರ್‍ಯಾ, ಏಳೋ, ನಿಂಗಿಯಂಥಾ ನಿಂಗಿ ಹುಸಾ ಅಂದಳಂತಿ. ಗೌಡಗ: ನೀ ಗಂಡಸಾಗಿ ಬಿದ್ದೀಯಲ್ಲೋ? ಏಳೋ. +[ಗುರ್‍ಯಾ ಕಿತ್ತುಕೊಡೇಳುವನು. ಗೌಡಾ ಬೀಳುವನು. ನಾಲ್ವರೂ ಹೌಹಾರಿ ಹಾಡು ಮುಗಿಯುವತನಕ ಇದ್ದ ಭಂಗಿಯಲ್ಲೇ ನಿಶ್ಚಲರಾಗುತ್ತಾರೆ. ಮೇಳ ಹಾಡುತ್ತಿರುವಾಗ ಬರ ಬರುತ್ತ ಗುರ್‍ಯಾ ಕುಣಿಯತೊಡಗುವನು.] +ಮೇಳ: ಡೊಳ್ಳ ಹೊಟ್ಟೆ ಉರುಳಿಬಿತ್ತೋ ಭೂಮಿಮ್ಯಾಗ +ತೇಲಗಣ್ಣ ಮೇಲಗಣ್ಣ +ಮೆತ್ತೀಕೊಂಡೀತಪ್ಪ ಮಣ್ಣ ಮೀಸೀ ಮ್ಯಾಗ +ಸಲಿಗಿ ನಾಯಿ ಬೆನ್ನ ಏರಿ ಆಳೇನಂತಿತ್ತೊ +ಭೂಮಿ ಸೀಮಿ ತಂದ ಅಂತಿತ್ತೊ +ಚಿತ್ತಪಟ್ಟ ಢಡಂಧುಡಿಕಿ ಅಂಗಾತ ಬಿತ್ತೊ || +[ ಹಾಡು ಮುಗಿದೊಡನೆ ಆ ನಾಲ್ವರೂ ಬಂದು ಗೌಡನನ್ನ ಎತ್ತುತ್ತಾರೆ. ಒಬ್ಬ ತಾನೆ ಗುರ್‍ಯಾನಂತೆ ಬಗ್ಗುತ್ತಾನೆ. ಗೌಡ ಅವನ ಮೇಲೆ ಕೂತಾಗ ಉಳಿದವರು ಗೌಡನನ್ನು ಉಪಚರಿಸುತ್ತಾರೆ ] +ಗೌಡ: ಹಲಕಟ್ಟ ನಾಯಿಗೋಳ್ರಾ, ಬಡವರಂತ ಸಡಲ ಬಿಟ್ಟರ ತಲಿಗೀ ಏರಿ ಬಿಟ್ಟಿರಿ? ಗುರ್‍ಯಾ: ಈ ಕಡೆ ಬರತೀನೊ?… +ಬಸಣ್ಣ: ಇವನ್ಯಾವ ನೊಣಾನೊ, ನೊರಜನೋ- ಇದನ್ನಷ್ಟ ಮಾತಾಡಸರ್‍ಯೋ- +ಒಬ್ಬ: ಯಾಕ ಬಸಣ್ಣ, ಇನ್ನೂ ನಿಮ್ಮಪ್ಪನ ಗೋರಿ ಆರಿಲ್ಲಾ, ಇಷ್ಟರಾಗ ಜೀವ ಬ್ಯಾಸರಾಯ್ತ? +ಬಸಣ್ಣ: ಹೂ ಹೂ ಜೀವ ಬ್ಯಾಸರಾಗಿ ಯಾರಾದರೂ ನಿಮ್ಮಂಥಾ ಶೂರರು ಕೊಂದರೆ ಸಾಯಬೇಖಂತ ಕುಂತೇನ. ನಾ ಒಬ್ಬ ಏನ ಊರಾಗಿನ ಬಡವರೆಲ್ಲ ಕುಂತಾರ. +ಗೌಡ: ಬಿಡಾಡಿ ನಾಯಿ ತಿರಕೊಂಡ ತಿನ್ನಲೀ ಅಂತ ಬಿಟ್ಟರ ಭಾಳಾಯ್ತಪಾ ನಿನ್ನ ಅದ್ದೂರಿ. +ಬಸಣ್ಣ: ಗೌಡ, ಬಾಯಾಗಿನ ಹಲ್ಲ ಮೊದಲ ಎಣಿಸಿಕೊಂಡ ಮಾತಾಡ. +ಗೌಡ: ಇನ್ನೂ ಎಳಕಿದ್ದೀ, ತಿರಿಗ್ಯಾಡಿ ಸೊಕ್ಕಲೀ ಅಂತ ಕೈಕಾದರ ಭಾಳ ಮಾತಾದ್ತೀಯಲ್ಲೋ, ಲಗಾಸರೋ ಮಗನ್ನ. +[ ನಾಲ್ವರೂ ಬಸಣ್ಣನ ಮೇಲೆ ಏರಿ ಹೋಗುವರು. ತುರ್‍ಯಾ ಹೆದರಿ ಚೀರುತ್ತ ಓಡುವನು. ] +ಗುರ್‍ಯಾ: ಅಯ್ಯೋ ಬರ್‍ಯೋ, ಗೌಡ ಬಸಣ್ನನ ಕೊಲ್ಲತಾನ ಬರ್‍ಯೋ… +[ಹೋಗುವನು} +ಗೌಡ: ಏ ಏ ಮಕಳ್ರಾ ಗುರ್‍ಯಾ ಮಂದೀನ ಕರಕೊಂಡ ಬರತಾರ. ಹಿಂದ ಬರ್ರಿ… +[ ನಾಲ್ವರೂ ಹಿಂದೆ ಸರಿಯುತ್ತಾರೆ ಬಸಣ್ಣ ಸೆಡ್ಡು ಹೊಡೆದು] +ಬಸಣ್ಣ: ಖರೆ ಗಂಡಸಿದ್ದರೆ ಯೀನ ಕಳಿಸಬ್ಯಾಡ. ನೀ ಬಾ. ಕೈಗಿ ಕೈ ಹತ್ತಿ ಆಂಯಾಲ ನೋದ ನನ್ನ ಕುವ್ವತ್ತು. ಅದೆಲ್ಲಿ ನಮ್ಮಪ್ಪನ ಕೊಂಧಾಂಗಾಂತ ತಿಳಿದಿಯೇನ? +ಗೌಡ: ಅದ್ಯಾಕೋ ಬರೀ ಗಂಡಸ್ತನದ ಮಾತ ಮಾತಾಡ್ತಿ. ಗಂದಸರದೊಂದ ತರ್ಕ ಹೇಳಲೇನ? +ಬಸಣ್ಣ: ಹೇಳ. +ಗೌಡ: [ಜೇಬಿನಲ್ಲಿಂi ಎಲೆಯಡಿಕೆ ಕೊಡುತ್ತ] +ಹೊಲಾ ನಂದೋ ನಿಂದೋ ಅನ್ನೋದಿಂದ ಖಾತ್ರಿ ಆಗಿ ಹೋಗಲಿ. ನನಗೂ ತಿಳೀಲಿ. ನಿನಗೂ ತಿಳೀಲಿ, ನಾಕು ಮಂದಿಗೂ ತಿಳೀಲಿ. ಇಂದ ಜೋಕುಮಾರ ಹುಣ್ಣಿವಿ. ಆ ಹೊಲದಾಗ ಬೆಳತನಕ ಯಾರ ಮಲಗತಾರ- ಹೊಲ ಅವರದು. ತಯಾರಿದ್ದೀಯೇನ? ತಯಾರಿದ್ದರ ಹಿಡಿ ವೀಳ್ಯ. +ಒಬ್ಬ: ನೋಡಪಾ, ಮೊದಲ ಹುಣ್ಣಿವಿ. ದೆವ್ವಾ, ಭೂತಾ ಭಾಳ, ನಿಮ್ಮಪ್ಪ ಎಲ್ಲಿ ಸತ್ತಂತ ನೆನಪ ಮಾಡಿಕೊ, ಹಿಡಿ. +ಇನ್ನೊಬ್ಬ: ಆ ಯೋಲ ಮಕ್ಕಳ ತಾಯಿ ಕತಿ ಗೊತ್ತೈತಿಲ್ಲೊ ಮತ್ತ? +ಬಸಣ್ಣ: ತಾ ತಯಾರಿದ್ದೇನ. +[ ವೀಳ್ಯ ತಕ್ಕೊಂಡು ಹೋಗುವನು. ಗೌಡ ಒಬ್ಬನನ್ನ ಕರೆದು ಹೇಳುವನು.] +ಗೌಡ: ನೀ ನಮ್ಮ ಮನಿಗಿ ಹೋಗು. ಊಟಾ, ಕಂಬಳಿ ತಗೊಂಬಾ. ಕ್ಳಿದರ ದೆವ್ವಿನ ಹೊಲಕ್ಕ ಮಲಗಾಕ ಹೋಘ್ಯಾರಂತ ಹೇಳು. ಎಲ್ಲಾರೂ ಕೂಡಿ ಹೊಲಕ್ಕ ಮಲಗಾಕ ಹೋಗ್ರಿ. ಕೆಲಸ ಮುಗಸ್ರಿ. ಅದ ಊಟಾ ನೀವು ಮಾಡ್ರಿ. ನಾ ಶಾರೀ ಮನ್ಯಾಗ ಇರತೇನು, ಬಂದ ಹೇಳ್ರಿ. ತಿಳೀತಲ್ಲ. +ಒಬ್ಬ: ಹೂನ್ರಿ. +[ಸಂಗೀತ] +ಜೋಕುಮಾರಸ್ವಾಮಿ +ಗೌಡನ ಮನೆ, ಬಸ್ಸಿ, ಶಿವಿ, ನೀಲಿ ಗೌಡ್ರಿಗಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ ಗೌಡ್ತಿ ಜೋಕುಮಾರ ಸ್ವಾಮಿಯ ಬುಟ್ಟಿಯೊಂದಿಗೆ ಪ್ರವೇಶಿಸುವಳು.] +ಗೌಡ್ತಿ: ಬಸ್ಸಿ, ನೋದ ಎಷ್ಟು ಅಂಜಿಸಿದಿರಿ ! ಬಾ ಸೊಲ್ಪ ದೂರ ಹೋಘೋದಕ್ಕೂ ಹೊಲೇರ ಶಾರಿ ತಾನ ಜೋಕುಮಾರಸ್ವಾಮೀನ ತರೋದಕ್ಕೂ ಸಮ ಆಯ್ತು. ನನಗ ಬೇಕಂತ ಯಾರೋ ಹೇಳಿದ್ದರಂತ. ತಗೋ ಎಪ್ಪಾ ಅಂದ್ಲು. ಲಗು ಪೂಜಿ ಸುರು ಮಾಡ್ರಿ. +ಬಸ್ಸಿ: ಎಲ್ಲಾ ತಯಾರ ಐತಿ. +[ ಬಸ್ಸಿ, ಶಿವಿ, ನೀಲಿ ಹಾಡತೊಡಗುವರು. ಆಗ ಜೋಕುಮಾರಸ್ವಾಮಿಗೆ, ಅಂದರೆ ಪಡವಲ ಕಾಯಿಗೆ ಕಣ್ಣು, ಮೀಸೆ ಬರೆದು ರುಮಾಲು ಸುತ್ತುತ್ತಾರೆ. ಆಮೇಲೆ ಅದನ್ನು ತಗೊಂಡು ಗೌಡ್ತಿ ಹಾಡಿನ ಭಾಗಗಳನ್ನು ಅಭಿನಯಿಸುತ್ತಾಳೆ. ಆಗ ಅವಳೊಂದಿಗೆ ಉಳಿದವರೂ ನರ್ತಿಸುತ್ತಾರೆ.] +ಬಸ್ಸಿ: +ಶಿವಿ: +ನೀಲಿ: ಚೆಂದಾದ ಹಸರಂಗಿ ದೋತರ ಜರತಾರಿ +ಬಾರಿ ರುಂಬಾಲ ಚೆಲುವಾ +ಜೋಕುಮಾರಸ್ವಾಮೀನ ನೋಡಿಕೊಂಡ ಗೆಳೆತವ್ವ +ಪೂಜಿ ಮಾಡೋಣು ನಡಿಯೇ || +ಮೀಸ್ಯಾಗ ನಗಿಯೇನ, ಕೆನ್ನಿಯ ಹೊಳಪೇನ +ಹುಬ್ಬ ಕುಣಿಸುವ ತುಂಟಾ +ಬಿಂಕದ ಬಾಲೇರ ತೊಂಕದಮ್ಯಾಲ ಕಣ್ಣ, +ಇವ ಜೋಕುಮಾರ ಏನ || +ಹವ್ವಲ್ಲೆ ಅಂದರ ಹೌಹಾರಿ ನಿಂತಾನ +ನಾವಲ್ಲೊ ಕರೆದವರಾ +ಬಂಜೇ ನಿಂತಾರೊ ಹುಬ್ಬಿಗಿ ಕೈ ಹಚ್ಚಿ +ದಯಮಾಡೋ ಸ್ವಾಮಿ ನೀನಾ || +ಎದಿಯಾಗ ಹುಡುಗ್ಯಾರು ಹೂವಿನಾಗ ಮುಚ್ಯಾರು +ಫಲಕೊಡೊ ಮಾದೇವಾ +ಮೇಲಾದ ದೇವರು ಜೋಕುಮಾರಸ್ವಾಮಿಯ +ಪೂಜೆ ಮಾಡೇವು ನಾವಾ || +ಬಸ್ಸಿ: ಇನ್ನ ಲಗು ಸ್ವಾಮೀನ ಪಲ್ಲೆ ಮಾಡ ಎವ್ವಾ. +ಗೌಡ್ತಿ: ಇನ್ನೇನೂ ಮಾಡೋದ ಉಳಿದಿಲ್ಲ ಹೌಂದಲ್ಲ? +ಬಸ್ಸಿ: ಇಲ್ಲರಿ. +ಗೌಡ್ತಿ: ತಾ ಹಂಗಾದರ. +[ ಮತ್ತೆ ಮೂವರೂ ಹಾಡುವರು. ಗೌಡ್ತಿ ಹಾಡಿನಂತೆ ಅಭಿನಯಿಸುತ್ತ ಪಲ್ಲೆ ಮಾಡುವಳು] +ಬಸ್ಸೀ: +ಶಿವಿ: +ನೀಲಿ: ರನ್ನದ ಮಣಿಮ್ಯಾಗ ಚಿನ್ನದ ಕುಡುಗೋಲ +ಹೆಂಗ ಹೆರಚಲೆ ಸ್ವಾಮಿ +ಅಡ್ಡಡ್ಡ ಹೆರಚಲೆ ಉದ್ದುದ್ದ ಹೆರಚಲೆ +ಹೋಳ ಮಾಡೇನ ಸ್ವಾಮಿ || +ರನ್ನದ ಒಲಿಮ್ಯಾಗ ಚಿನ್ನದ ಗಡಿಗ್ಯಾಗ +ಕುದಿಯಲಿಟ್ಟೇನ ಸ್ವಾಮಿ +ಕುದಿಸಿ ಬೋನವ ಮಾಡಿ ಅಟ್ಟ ಅಡಗಿಯ ಮಾಡಿ +ಪಲ್ಲೇ ವಡೇನ ಸ್ವಾಮಿ || +ಬಾ ಎನ್ನ ರುಚಿಗಾರ ಬಾ ಎನ್ನ ಸವಿಗಾರ +ಮಣಿ ಹಾಕಿ ಕಾದೇನೊ +ಜೋಕುಮಾರ ಸ್ವಾಮೀನ ಮೇಲಾದ ದೇವರ +ಪೂಜಿ ವಡೇವ ನಾವಾ||೦ +ಗೌಡ್ತಿ: ಬಸ್ಸಿ, ಗೌಡ ಬಂದ್ನೇನ್ನೋಡು. +ಬಸ್ಸಿ: [ ನೋಡಿ ಬಂದು ] ಯಾರೋ ಇತ್ತ ಬರೋಹಾಂಗ ಕಾಣತೈತಿ. ಗೌಡನ ಏನೋ. +ಶಿವಿ: ನಾ ಇನ್ನ ಬರತೇನ್ರವ್ವಾ. +ನೀಲಿ: ನಾನೂ ಬರತೇನ್ರವ್ವಾ. +ಗೌಡ್ತಿ: ಇಲ್ಲೇ ಊಟಾ ಮಾಡಿಕೊಂಡು ಹೋಘೀರಂತ ಕೂಡ್ರೆ. +ಶಿವಿ: ಬ್ಯಾಡ ಎವ್ವಾ ಮಕ್ಕಳ ಹಸದಿರಬೇಕು. +[ಇಬ್ಬರೂ ಹೋಗುವರು] +ಒಬ್ಬ: ಅಮ್ಮಾವ್ರ +ಗೌಡ್ತಿ: ಗೌಡ ಬರಲಿಲ್ಲೇನೊ? +ಒಬ್ಬ: ಇಲ್ಲರಿ +ಗೌಡ್ತಿ: ಎಲ್ಲಿ ಹೋದರು? +ಒಬ್ಬ: ಹೊಲಕ್ಕ ಮಲಗಾಕ ಹೋಗ್ಯಾರ್ರಿ. +ಗೌಡ್ತಿ: ಹೊಲಕ್ಕ? +ಒಬ್ಬ: ಆ ದೆವ್ವಿನ ಹೊಲಾ ಇಲ್ಲರಿ? +ಗೌಡ್ತಿ: ದಿನಾ ಬಿಟ್ಟು ಇಂದ ಯಾಕ ಹೋದ? +ಒಬ್ಬ: ಬಸಣ್ಣನ ಜೋಡಿ ಜಗಳಾಡಿ, ಹೊಲಾ ನಂದಾ ನಾ ಮಲಗಾವಂತ ಹೋದರ್ರಿ. ಹೋಗಿ ಕಂಬಳಿ, ಊಟಾ ತಗೊಂಬಾ ಅಂದರು. +ಗೌಡ್ತಿ: ಥೂ ನನ್ನ ನಶೀಬ ! ಕಂಬಳಿ ತಗೊಢೋಗು. +ಒಬ್ಬ: ಊಟಾನು ಕೊಡಂದಾರ್ರಿ. +ಗೌಡ್ತಿ: ಕಂಬಳಿ ಒಯ್ಯು. +[ಕಂಬಳಿ ಕೊಡುವಳು. ತೆಗೆದುಕೊಂಡು ಹೋಗುವನು] +ಬಸ್ಸಿ: ಇನ್ನ ಮಲಗರಿ ಎವ್ವ. ಹರ್‍ಯಾಗಿಂದ ಮಾಡಿದ್ದೆಲ್ಲಾ ನೀರಾಗ ಹುಣಸೀ ಣ್ಣ ತೊಳಧಾಂಗಾಯ್ತು. +ಗೌಡ್ತಿ: ನೀ ಮಲಗ ನಡಿ. ನನ್ನ ದೈವ ನೀ ಯಾಕೆ ಅನುಭವಿಸಬೇಕು? +ಬಸ್ಸಿ: ಮತ್ತೆ ನೀ ಏನ್ಮಾಡ್ತಿ? +ಗೌಡ್ತಿ: ಇನ್ನೇನ ಮಾಡಲಿ? ಎದಿಮ್ಯಾಲ ಕೈ ಇಟಗೊಂಡ ಮನೀ ಜಂತಿ ಎಣಿಸಿಗೋತ ಮಲಗತೇನ ! +ಬಸ್ಸಿ: ಗೌಡಗ ತಿಳೀಬೇಕ್ರವಾ. +ಗೌಡ್ತಿ: [ಆಳುತ್ತ ಹಗಲುಗನಸು ಕಾಣುತ್ತಾ] +ಗೌಡಗ ಇನ್ಹೆಂಗ ಹೇಳಲೇ ನಾ ಹೆಣ್ಣಂತ? ದೂರದ ಹಕ್ಕಿ ಹಾರಿ ಬರತೈತಿ. ! ಗೂಡಿನಾಗ ಕೂರತೈತಿ ! ಆ ನಾಡಿನ ಹಾಡೆಲ್ಲಾ ಹಾಡತೈತಿ ! ಹಾಡ ಕೇಳಿ ಮಣ್ಣಿಗಿ ಕಿವಿ ಮೂಡತಾವು ! ಕಿವಿಗುಂಟ ಮುಖ, ಕೈಕಾಲ ಮೂದತಾವು ! ಹಸರ ಒಡಮುರದ ಹಬ್ಬತೈತಿ ! +[ನಿಟ್ಟುಸಿರು ಬಿಟ್ಟು] +ಚಂದ್ರನ ಹಿಂದಿನ ರಾಕ್ಷಸ ಎಲ್ಲಿ ಬಿಡತಾನ ! ಕಣ್ಣಗುರಿ ಹಿಡಿದ ಹಾಡೋ ಹಕ್ಕಿ ಹಿಡಕೊಂಡ ! ಇಕ್ಕ ಈಗ ಮೂಡಿದ ಹಸರ, ಹೂವ ಚಿಗುರೆಲ್ಲಾ ಮಟಾಮಾಯ ! ಅದ ಬೀಳನೆಲ ! ಅದ ಎಲೆ ಉದುರಿಸಿಕೊಂಡ ಗಿಡ ! ಗಿಡದಾಗ ಬರೀ ಗೂಡ ತೂಗ್ಯಾಡತಾವ ! ಆ ಕಡೆ ಈ ಕಡೆ… +[ ಈ ಮಾತು ಹೇಳುತ್ತಿರುವಾಗಲೇ ಬಸ್ಸಿ ಹೋಗಿಬಿಟ್ಟಿರುತ್ತಾಳೇ. ಗೌಡ್ತಿ ನಿಧಾನವಾಗಿ ಹಾಡುತ್ತಾಳೆ] +ದೂರ ನಾಡಿನ ಹಕ್ಕಿ ಹಾರಿ ಬಾ ಗೂಡಿಗೆ +ಗೂಡ ತೂಗ್ಯಾವ ಗಾಳಿಗೆ +ಸುವ್ವಿ ಸುವ್ವಾಲೀ ಸುವ್ವಿ || +ಬೀಸುವ ಬಿರುಗಾಳಿ ಸುಳಿಯೋ ಸುಂಟರಗಾಳಿ +ನುಸುಳೀ ನೀ ಹಾರಿ ಬಾರಯ್ಯಾ +ಸುವ್ವಿ ಸುವ್ವಾಲೀ ಸುವ್ವಿ || +ಕಾವಲ ಸೈತಾನ ಗುರಿಯಿಟ್ಟ ಮುದಿಗಣ್ಣ +ತಪ್ಪಿಸಿ ಹಾರಿ ಬಾರಯ್ಯಾ +ಸುವ್ವಿ ಸುವ್ವಾಲೀ ಸುವ್ವಿ || +ಟೊಂಗಿ ಟೊಂಗಿಯ ಮ್ಯಾಲ ಕುಂತ ರೋಮಾಂಚನ +ಚಿಗುರು ಮೂಡಿಸ ಬಾರಯ್ಯಾ +ಸುವ್ವಿ ಸುವ್ವಾಲೀ ಸುವ್ವಿ || +ಆ ನಾಡ ಡ ಹಾಡಿ ಮಣ್ಣೀಗಿ ಕಿವಿ ಮೂಡಿ +ಒಡಮುರಿದ ಹಸರ ಹಬ್ಬಾಲಿ +ಸುವ್ವಿ ಸುವ್ವಾಲೀ ಸುವ್ವಿ || +[ಏನನ್ನೋ ಜ್ಞಾಪಿಸಿಕೊಂಡು ಥಟ್ಟನೆ ಎದ್ದು, ಮಾಡಿದ ಅಡಿಗೆಯನ್ನು ಗಂಟು ಕಟ್ಟಿಕೊಂಡು, ಒಂದು ದಿನ ನೀರಿನ ಚರಿಗೆ ತಗೊಂಡು, ಗಂಟು ತಲೆ ಮೇಲಿಟ್ಟುಕೊಂಡು ಹೊರಡುವಳು. ಸಂಗೀತ.] +ಹಕ್ಕಿ ಸಿಕ್ಕಿತು +[ ಗಿಡ, ಗುಡಿಸಲು, ನಾಲ್ವರೂ ಬಂದೂಕು ತಗೊಂಡು ಬರುತ್ತಾರೆ] +ಒಬ್ಬ: ಕುರಿ ಬಂದಿಲ್ಲೇನ್ರೋ? +ಇನ್ನೊಬ್ಬ: ಅದೆಲ್ಲಿ ಬರತೈತಿ ! ಕಾಣಾಕಾಣಾ ಸಾಯಾಕ ಯಾರ್ ಅಬರತಾರ ಹೇಳು? +ಮತ್ತೊಬ್ಬ: ಹಸಿವಾಗೈತಿ ನೀ ಊಟಾ ಯಾಕೊ ತರಲಿಲ್ಲ? +ಒಬ್ಬ: ಗೌಡ್ತಿ, ಕೊಡೋದಿಲ್ಲಂದಳಪಾ, ಕಂಬಳಿ ಕೊಟ್ಟಳು ತಗೊಂಬಂದೆ. +ಮಗುದೊಬ್ಬ: ಇನ್ನೇನ ಬೆಳತನಕ ಹಸದ ಇಲ್ಲೇ ಕುಂತಿರೋದ? +ಒಬ್ಬ: ಬೆಳತನಕಾ ಯಾಕೋ ಬಸಣ್ಯಾ ಈಗ ಬರತಾನ ತಡಿ. +ಇನ್ನೊಬ್ಬ: ಬರತಾನಂದಿ? +ಮತ್ತೊಬ್ಬ: ಇನ್ನೊಂದ ತಾಸೆರಡತಾಸ ನೋಡಿ ಹೋಗೋಣಂತ. +ಮಗುದೊಬ್ಬ: ಆಮ್ಯಾಲ ಬಂದರ? +ಒಬ್ಬ: ಅವ ಅಂಜುಬುರುಕಲ್ಲ, ತಡೀರೋ ಬಂದ ಬರತಾನ. +ಒಬ್ಬ: ಪಾಪ ಪುಣ್ಯ ನಮಗ್ಯಾಕಪಾ? ನಾವಂದರ ಹೇಳಿಕೇಳಿ ಗೌಡರ ನಾಯಿಗೊಳೇನಪಾ ! ಬೊಗಳೆಂದರೆ ಬೊಗೊಳಿದಾ. ಕಚ್ಚಂದರ ಕಚ್ಚಿದಾ. +ಇನ್ನೊಬ್ಬ: ಹಾಂಗ ನೋಡಿದರ ಬಸಣ್ಯಾಂದೇನ ತಪ್ಪೈತಿ? +ಮಗುದೊಬ್ಬ: ಸಾಲಾ ಇಸಕೊಂಡ ಹೊಲಾ ಬರಕೊಟ್ಟಿದ್ದ ತನಗ ಗೊತ್ತ ಇಲ್ಲಂತಾನಲ್ಲೊ? +ಇನ್ನೊಬ್ಬ: ಅಲ್ರೊ, ನೀವ ನೋಡೀರಿ. ನಮ್ಮ ಗೌಡ, ಎಷ್ಟೆಷ್ಟ ಮಂದಿ ಹೊಲಾ ಹಂಗಂಗ ಮುಣಗಿಸಿಕೊಂಡಾನಂತ. ಮತ್ತೆ ಬಸಣ್ಯಾಂದ ತಪ್ಪಂತೀರಿ. +ಒಬ್ಬ: ಅದೆಲ್ಲಾ ನಂಗ್ಯಾಕಪಾ? ಹೇಳಿದಷ್ಟ ಮಾಡಿದರಾಯ್ತು. ಗೌಡರ ಚಾಕರಿ ಹಿಡಿಯೋವಾಗ “ ಗೌಡರ ನಿಮ್ಮ ಅನ್ನಕ್ಕ ನಾ ಎಂದೂ ಎರಡ ಬಗಿಯೋದಿಲ್ಲರಿ” ಅಂತ ಹನುಮಪ್ಪನ ಬೂದಿ ಮುಟ್ಟೀವಿ. ನೆನಪೈತಿಲ್ಲ? +ಇನ್ನೊಬ್ಬ: ಆತ ಬಿಡ್ರಪಾ. +[ ಒಮ್ಮೆಲೆ ಅವರ ಮಧ್ಯದಲ್ಲಿ ಬಸಣ್ಯಾ ಮೇಲಿನಿಂದ ಜಿಗಿಯುತ್ತಾನೆ. ಎಲ್ಲರೂ ಗಡಬಡಿಸಿ ಎದುರಿಸಬೇಕೆನ್ನುವಷ್ಟರಲ್ಲಿ ಬಸಣ್ಯಾ ಬಂದೂಕು ಕಸಿದುಕೊಂಡಿರುತ್ತಾನೆ. ಎಲ್ಲರೂ ಹೆದರಿ ಚೆಲ್ಲಾಪಿಲ್ಲಿಯಾಗುತ್ತಾರೆ ] +ಬಸಣ್ನ: [ಬಂದೂಕು ತೋರಿಸುತ್ತ ] +ನಮ ದೇವರ ಹೆಸರೇನ ಗೊತ್ತೈತಿ? ಢಂಢಂ ದೇವರು ! ಇವಗ ಇಲ್ಲೊಂದು ಕುದುರಿ ಐತಿ. ಅದರ ಹಿಂದೊಂದು ಬೋಲ್ಟ್ ಐತಿ. ಅದುರಿಗಿ ಯಾರಿದ್ದರೂ ಸ್ವಾಮಿ ಒಮ್ಮೆ ಢಂ ಅಂದರಾಯ್ತು. ಎದುರಿಗಿದ್ದವರು ಏನ ಮಾಡ್ತಾರ ಹೇಳ್ರಿ?…ಮರಿ ಹಾಕ್ತಾರ ಮರಿ. ಸೂಳೀ ಮಕ್ಕಳ್ರಾ. ಗೌಡಾ ಎಲ್ಲಿದ್ದಾನ ಹೇಳ್ತೀರಿಲ್ಲ? +ಒಬ್ಬ: [ಹೆದರುತ್ತ] ಶಾರೀ ಮನ್ಯಾಗ. +ಬಸಣ್ಣ: ನನ್ನ ಮುಗಿಸಬೇಕಂತ ಕಳಿಸಿದ್ದ ಹೌಂದಲ್ಲ? +ಒಬ್ಬ: ಬಸಣ್ನಾ… +ಬಸಣ್ಣ: ನಮ್ಮಪ್ಪನ್ನ ಇಲ್ಲಿ ದೆವ್ವ ಕೊಂದಿತ್ತಲ್ಲ? +ಒಬ್ಬ: ಬಸಣ್ಣಾ ನಮ್ಮನ್ನ ಕೊಲ್ಲಬ್ಯಾಡೋ, ನಿನ್ನ ಕಾಲ ಬೀಳತೇವೊ ! +ಇನ್ನೊಬ್ಬ: ಬಸಣ್ನಾ, ತಪ್ಪಾಯ್ತೋ ಎಪ್ಪಾ, ನೀ ಹೇಳಿಧಾಂಗ ಕೇಳ್ತೀವೊ. +ಬಸಣ್ಣ: ಹೇಳಿಧಾಂಗ ಕೇಳ್ತೀರಿ? +ಇನ್ನೊಬ್ಬ: ಹೂನ ಎಪ್ಪ. +ಬಸಣ್ಣ: ಹಾಂಗಾದರೆ ಕುಂಡೀ ಎಳಕೊಂಡ ಗೌಡಗ ಸುದ್ದೀ ಹೇಳಿ, ಅವನ ಚಾಕರಿ ಬಿಡತ್ತೀರಿ? +ಒಬ್ಬ: ಬಂದೂಕ ಕೊಡ್ತಿ ಹಂಗಾದರ? +ಬಸಣ್ಣ: ಬಂದೂಕ ಬೇಕ? +[ಗುರಿ ಹಿಡಿಯುವನು] +ಎಲ್ಲರೂ: ಬ್ಯಾಡೋ ಎಪ್ಪಾ, ಬ್ಯಾಡೋ. +ಬಸಣ್ಣ: ಹೂ ಎಳಕೊಂಡ ಹೋಗ್ರಿ ಮತ್ತ. ಇನ್ನೊಮ್ಮಿ ಈ ಕಡೆ ಕಾಲ ಹಾಕಿದರೆ ನಿಮ್ಮನ್ನ ಜೀವ ಸಹಿತ ಬಿಡಾಣಿಲ್ಲ… +[ಎಲ್ಲರೂ ಕುಂಡಿ ಎಳೆಯುತ್ತ ಹೋಗುವರು. ಸ್ವಲ್ಪ ಹೊತ್ತು ಅತ್ತಿತ್ತ ಅಡ್ಡಾಡಿ ಅವರು ಬಿಟ್ಟು ಹೋದ ಕಂಬಳಿ ಹೊತ್ತುಕೊಂಡು ಗುಡಿಸಿಲಲ್ಲಿ ಮಲಗುತ್ತಾನೆ. ತುಸು ಹೊತ್ತಾದ ಬಳಿಕ ಗೌಡ್ತಿ ಊಟ ತಗೊಂಡು ಬರುತ್ತಾಳೆ] +ಗೌಡ್ತಿ: ಆಳಿಗಿ ಹೇಳಿಕಳಸದ ಒಂದ ಗಳಿಗಿ ನೀನ ಮನೀಗಿಬಂದಿದ್ದರ ಏನಾಗತಿತ್ತ? ಊಟ ಮಾಡಿ ಬರತಿರಲಿಲ್ಲಾ? ಬಸಣ್ಯಾನ ಜೋಡಿ ಜಗಳಾ ಮಾಡಿದೆಂತ, ಇಲ್ಲಿ ಬಂದೆಂತ. ಜಗಳಾ ನಾಳಿ ಮಾಡಿದ್ದರ ಆಗತಿರಲಿಲ್ಲಾ? ಎಷ್ಟ ಹೇಳೀನಿ, ಇಂದ ಬರಾಕ ಬೇಕ ಊತಕ್ಕಂತ. ಮುದ್ದಾಂ ತಪ್ಪಿಸಿದಾಂಗ ಮಾಡತಿ. ಏಳ ಊಟ ಮಾಡೇಳ. +[ಗುಡಿಸಲ ಅಸ್ಪಷ್ಟ ಬೆಳಕಿನಲ್ಲೇ ಊಟ ಬಡಿಸುವಳು. ಬಸಣ್ಣ ಸುಮ್ಮನೆ ಊಟಾ ಮಾಡುವನು] +ಹೊರಗ ಹೆಂತಾ ಚೆಂದ ಬೆಳದಿಂಗಳೈತಿ. ಹೊರಗ ಬಂದ ಉಣಬಾರದ? ಗೌಡ, ನನ್ನ ಖುಷಿ ಹೆಂಗ ದೊಡ್ಡಾವಾಗಿ ಮೂಡ್ಯಾವ ! ಏನೋ ಗಿಣಿ ಹಾಂಗ ಕೂಗತೈತಿ ! ಅದ್ಯಾವ ಹಕ್ಕಿ? ಯಾಕ ಮಾತಾಡವೊಲ್ಲಿ? ನಾ ಒಬ್ಬಾಕೀನ ಮನೀ ಬಿಟ್ಟ ಬಂದದ್ದಕ್ಕ ಸಿಟ್ಟ ಮಾಡೀದಿ ಹೌಂದಲ್ಲ? ಗೌಡಾ ನನ್ನ ಕರಳ ಬ್ಯಾನಿ ಹೆಂಗ ತಿಳಿಸಲಿ? ನೀ ಮೊದಲು ಗಂಡಸು; ಮಕ್ಕಳಬ್ಯಾಡಾ, ಮನೀ ಬ್ಯಾಡಾ. ಇದ್ದೇನಂತಿ ಒಂದ ಗೂಗಿ ಹಾಂಗ, ನಾ ಎಷ್ತಂದರೂ ಹೆಂಗಸು. ಮಕ್ಕಳಿಲ್ಲದ ಹೆಂಗಿದ್ದೇನು? ಬಸಣ್ಯಾನ ಹಂತ್ಯಾಕ ಒಂದ ಗಿಣಿ ಐತೆಂತ, ಬಸ್ಸಿ ಹೇಳಿದ್ಲು. ಮಂದೀ ಗಿಣಿ ನಮ್ಮ ಗಿಣಿ ಹೆಂಗಾದೀತು? ನಮ್ಮ ಗಿಣಿ ನನಗೀಗ ಕಣ್ಣ ಮುಂದ ಕಾಣಾಕ ಹತ್ತೈತಿ. ಇನ್ನ ಉಣ್ಣೋದ ಮುಗಿಲಿಲ್ಲೇನ ಅಂದರ? +[ಬಣ್ಣ ಗೌಡ್ತಿಯ ಸೆರಗು ಹಿಡಿದೆಳೆಯುವನು. ಗೌಡ್ತಿ ಸಂಭ್ರಮಿಸುತ್ತ ಹೊರಗೋಡಿ ಬರುವಳು. ಹಾಡು ಸಾಗುತ್ತಿದ್ದಂತೆ ಸೆರಗು ಎಳೆದವನು ಗೌಡನಲ್ಲವೆಂದು ತಿಳಿದು ಬೆಚ್ಚಿ ತಪ್ಪಿಸಿಕೊಳ್ಳಲೆತ್ನ್ಸಿ‌ಉವಳು] +ಬಸಣ್ಣ: ಏನ ಬಗಿ ಬಯಲಕ ಬಿದ್ದೇ ಭಾಳಾ ದಿನಕಾ +ಹುಣಿವೀ ಚಂದ್ರ ಮೂಡಿಧಾಂಗ ಮರತೇಕಾ +ಕಣ್ಣೀಗಿ ದೀಪಾ ಹಚ್ಚಿಧಾಂಗ ನಿನ್ನ ಬೆಳಕಾ || +ತೋಳ ತೊಡಿ ನಿವಳ ಸುದ್ದಾ ಬಾಳೆದಿಂಡಾ +ಎದೀಮ್ಯಾಗ ನಿಂಬೀ ಹಣ್ಣಾ +ಬಂದ ಸಿಕ್ಕೆ ಕೈಲಾಸ ಹರದ ಬಿದ್ದಾಂಗ || +ಏನ ಹೆಣ್ಣ ದಿನ ಬಣ್ಣ ನಡಸಣ್ಣಾ +ಮಾವಿನ ಹೋಳಿನಂಥಾ ಕಣ್ಣಾ +ಕಯ ಮ್ಯಾಲೆ ಕೈಯ ಹೊಡದ ಬಾರ ಕೂಡೋಣ || +ಗೌಡ್ತಿ: ಯಾಕೋ ಚೆಲುವಾ? ಯಾರ ಮುಂದಾ ಮಾತಾಡ್ತಿ ಗೊತ್ತೈತಿಲ್ಲ? ಗಂಡುಳ್ಳ ಗರತಿ. ಊರ ಗೌಡತೀನ ತರಿಬಿ ಕೇಳತಿ; ಎಚ್ಚರಿದ್ದೀಯಲ್ಲೋ? ಗೌಡ ಎಲ್ಲಿದ್ದಾನ ಹೇಳತೀಯಲ್ಲ? +ಬಸಣ್ಣ: ಅಬಬಬ ! ನನ್ನ ಸರದಾರ ಗೌಡ ಬೇಕಾಗಿದ್ದಾ? ಹೊಲೇರ ಶಾರಿ ಮನಿಗಿ ಹೋಗಬೇಕ್ಲಿ? ಅಲ್ಲೇ ಬಿದ್ದಾನಂತ ! +ಗೌಡ್ತಿ: ಈ ಕಂಬಳಿ ಹೆಂಗ ಬಂತು ನಿನ್ನ ಹಂತ್ಯಾಕ? +ಬಸಣ್ಣ: ನಮ್ಮಪ್ಪನ್ನ ಕೊಲ್ಲಿಸಿಧಾಂಗ ನನ್ನ ಕೊಲ್ಲಿಸಬೇಕಂತ ನಾಕ ಮಂದಿ ನಾಯಿಗಳನ್ನ ಕಳಿಸಿದ್ದಾ. ಅವರೆಲ್ಲಾ ಹೆದರಿಕೊಂಡ ಬಂದೂಕ ಕಂಬಳಿ ಬಿಟ್ಟು ಹೋದರು. +ಗೌಡ್ತಿ: ಇಂಥ ಪುಂಡ ನೀ ಯಾವನೋ? ಹೆಸರೇನ? ಕುಲ ಏನ? ಗೋತ್ರ ಏನ? ಹೇಳು. +ಬಸಣ್ಣಾ: [ನಗುತ್ತ] ಮಾತಿನಾಗ ಹೇಳಲೊ? ಹಾಡಿನಾಗ ಹೇಳಲೊ? +ಗೌಡ್ತಿ: [ಹೆಜ್ಜೆ ಮುಂದಿಟ್ಟು] ಹಲ್ಲ ಕಿಸಿಬ್ಯಾಡ. ಜೀವದ ಮ್ಯಾಲಿನ ಆಸೆ ಬಿಟ್ಟ ಹೇಳ ನನ್ನ ಕಾಲಿಗಿ +ಬಸಣ್ಣ: ಕಾಲ ಗೆಜ್ಜಿ ಝಣಾಝಣಾ ಹೆಜ್ಜಿ ಎದಿಮ್ಯಾಗ ಚೆಲ್ಲಿ +ಕೇಳತಿ ನಮ್ಮ ಹೆಸರಾ +ನಮ್ಮ ಹೆಸರಾ +ನಮ್ಮ ಹೆಸರ ಬರಕೊಳ್ಳ ನಿನ್ನ ಎದಿಯೊಳಗ || +ಊರ ಬಾಲೇರ ತುಂಬಾ ನಮ್ಮ ಹೆಸರಾ +ಅವರು ಹೇಳತಾರ +ಬಾಲೇರ ಕರೀತಾರ +ಕದ್ದ ಹೇಳತಾರ +ಬಂದ ಹೋಗೋ ಬಸಣ್ಯಾ ದೊರಿ || +ಊರ ಮುಕೇರ ಬಾಯಿತುಂಬ ನಮ್ಮ ಹೆಸರಾ +ಅವರು ಹೇಳತಾರ +ಅವರು ಕರೀತಾರ +ಬಂದ ಹೋಗೋ ಜೋಕುಮಾರ || +ಹುಡಿಗಿ ನಾ ಹೇಳಿದ್ದಾದರೂ ತಿಳದ ಬಂತೇನ? ಊರ ಬಾಲೇರಿಗೆಲ್ಲಾ ನನ ಹೆಸರ ಬಸಣ್ಣಾ ಅಂತ ಗೊತ್ತು. ಗರತೇರಿಗೆ ಗೊತ್ತು. ಮ್ಯಾಲ ಮುದುಕೇರಿಗೆ ಗೊತ್ತು. ಗೊತ್ತಿದ್ದೂ ಗೊತ್ತಿಲ್ಲದವರ್‍ಹಾಂಗ ಹಗಣಾ ಮಾಡಬ್ಯಾಡ. ಅಂತಃಕರಣದಿಂದ ಬಾಯಿ ತೆರೆದ ಕೇಳತೇನು. ಇಲ್ಲನ್ನಬ್ಯಾಡ, ಗುಡಿಸಲ ಬಂದ ನಾಕ್ ಅಮಾತ ಮಾತಾಡಿ, ಎಲಿ ಅಡಿಕಿ ತಿಂದ ಹೋಗಂತಿದ್ದೇನ್ನೋಡು. +ಗೌಡ್ತಿ: ಇದು ಯಾರದವ್ವ ಮಾನಗೇಡಿ ಮೂಳಾ +ಬಾಯಾಗ ಇಲ್ಲ ಕಾಳಾ +ತಿನ್ನಾಕ ಇಲ್ಲ ಕೂಳಾ +ಮುಂದ ನಿಂತ ಜೊಲ್ಲ ಸುರಿಸಿ ನೆಕ್ಕೀತ ನನ್ನ ಕಾಲಾ || +ನಾ ಹಂಡುಳ್ಳ ಗರತಿ ಶೀಲವಂತಿ +ಮೈಮ್ಯಾಲ ಏರಿ ಬರತಿ +ತಿವದೇನೋ ಮೋತಿ ಮೋತಿ +ಬಾಯಿ ತೊಳದ ಮಾತನಾಡೋ ಕಿತ್ತೇನೋ ನಿನ್ನ ಮೀಸಿ || +ನಾವು ಊರ ಗೌಡಾರು ಸಾವ್ಕಾರ +ಗಂಡ ಸರದಾರ +ಕೇಳುವುದಲ್ಲೋ ತಲಾ +ಕಡದಾನೊ ಹಾಡಾಹಗಲಿ ಮಾಡ್ಯಾನೊ ಚೂರ ಚೂರಾ || +ಬಸಣ್ಣ: ಓಹೊಹೊಹೊಹೊ! ನಿನ್ನ ಸರದಾರ ಗಂಡನ ಸುದ್ದೀ ಹೇಳಿದಿ? ನಿನ್ನ ಬಾದ್ದೂರ ಗಂಡನ ಸುದ್ದಿ ಹೇಳಿದಿ? ಯಾವ ನಿನ್ನ ಗಂಡ? ತಾನೂ ಗಂಡಸಂತ ತೋರಿಸೋದಕ್ಕ ಊರ ಬಾಲೇರ್‍ನ ಎಳ‌ಎಳದ ಓಡಿಹೋಗ್ತಾನ, ಅವನ ಅಲ್ಲೇನ ನಿನ್ನ ಗಂಡ? ಸೂಳೇರ ಮೀಸಲಾ ಮುರಿಯೋ ದಿನ ಕಂಬಳಿ ಹೊತ್ತ ಮಲಗತಾನ ಅವನ ಅಲ್ಲೇನ ನಿನ್ನ ಬಾದ್ದೂರ? ಹೇಂತಿ ಹತ್ತ ವರ್ಶ ಬಾಯಿ ತೆರೆದರೂ ಒಂದ ಮಾತಾಡೊ ಗಿಣಿ ತರಲಿಕ್ಕಾಗಲಿಲ್ಲ. ಅವನ ಅಲ್ಲೇನ ನಿನ್ನ ಗಂಡ? +ಹುಡಿಗಿ ಬಾಯಿ ತೆರೆದ ಚಾಲಿವರದ +ಗಂಟ ಬಿದ್ದೇನ ನಾನಾ | +ಪಂಟ ಹೇಳಬ್ಯಾಡ ನಗನಗತ +ತೋರಿಸ ದಯ ಕರುಣಾ || +ಈ ಜನುಮದಾಗ ಏನೈತಿ +ಹತ್ತೇತಿ ನಿನ್ನ ಭ್ರಾಂತಿ +ಒಲ್ಲೊನೆನಬ್ಯಾಡ ನಗನಗತ +ನೀ ಯಾವ ದೊಡ್ಡ ಗರತಿ || +ನಿನ್ನ ಅಂಗೈಯಾಗ ಹಿಡಕೊಳ್ಳ +ಆಡಿಸ ನನ್ನ ಪ್ರಾಣ | +ನೆವ ಹೇಳಬ್ಯಾಡ ಓಡಿ ಬಂದ +ಮಾಡಾಕ ಗೆಳಿತನಾ || +ಗೌಡ್ತಿ: ಬಸಣ್ಯಾ, ಕಾಣಾ ಕಾಣಾ ಇಂಥ ಪಾಪಕ್ಕ ಹೆಂಗ ಮನಸ ಮಾಡಿದಿ? ಹೇಲ್ತೇನ ಕೇಳು. +ಬಸಣ್ಣ: ಹುಡಿಗಿ ಚೆಮದಿಂದ ಹೇಳುವಂಥವಳಾಗು. +ಗೌಡ್ತಿ: ಅನ್ಯರ ಹೆಣ್ಣೊ ನಾನಾ +ಕರೀಬ್ಯಾಡೋ ಬಸಣ್ಯಾ ನನ್ನ +ಏನಾದ ಗೊತ್ತಿಲ್ಲೇನೋ ರಾವಣ || +ನಗಿ ಮಾಡಿ ಓಡಿ ಬಂದಿ +ಕೈಯೊಡ್ಡಿ ಬಾಯಿ ತೆರದಿ +ತಿಳಕೊಳ್ಳೊ ಬುದ್ದಿಗೇಡಿ ರೀತಿ ನಡತಿ || +ಗಂಡೂಳ್ಳ ಗರತಿ ನಾನಾ +ಹರಸೀಯೊ ಒಗತನಾ +ಪುಣ್ಯ ಪಾಪ ತಿಳಕೊಳ್ಳೊ ಹೈವಾನ || +ಬಸಣ್ಣ: ಜೋಕುಮಾರಸ್ವಾಮಿ ಪಲ್ಲೇವ +ಉಂಡಂಯಾಗೆಲ್ಲಿ ಪುಣ್ಯೇವ ಪಾಪ +ನಮಗ ಹೇಳಬ್ಯಾಡ | +ನಮಗ ತೋರಬ್ಯಾಡ ಶಾಸ್ತ್ರದ ಹಳೇಗಂಟ || +ನಾನು ಓದೇನ ಪುಸ್ತೆಕ ನೂರಾರಾ +ಎಲ್ಲ ಹೇಳತಾವ | +ಎಲ್ಲ ಹೇಳತಾವ ಕೂಡಬೇಕ ಗಂಡುಹೆಣ್ಣಾ || +ತಗೊ ಕೊಡತೇನ ನನ್ನ ಹಳಿ ರುಂಬಾಲ +ಗಂಟಿ ಕಟ್ಟಿ ಇಡ +ಗಂಟಿ ಕಟ್ಟಿ ಇಡ ಶಾಸ್ತ್ರದ ಪುಸ್ತೇಕ || +ಹುಡಿಗಿ ನಾ ಹೆಳಿದ್ದಾದರೂ ತಿಳದ ಬಂತೇನ? ಜೋಕುಮಾರಸ್ವಾಮಿ ಪಲ್ಲೆ ಉಂಡಂಯಾಲೆ ಪುಣ್ಯೆ ಎಲ್ಲಿ? ಪಾಪ ಎಲ್ಲಿ? ಬಂದ ಜೋಕುಮಾರಸ್ವಾಮಿ ಪಲ್ಲೆ ಉಣಿಸಿದಿ; ಬಿಟ್ಟೇನು? ನೀ ನೀಡಿದ್ದ ಉಂಡಮ್ಯಾಲ ಅಲ್ಲೇನ ಇಷ್ಟೇಲ್ಲಾ ಗರ್ದಿಗಮ್ಮತ್ ಆದದ್ದ? ಮಾತಾಡೋ ಗಿಣಿ ಇದ್ದವರನ್ನ ಬಿಡತಿ, ಎಲ್ಲೆಲ್ಲೋ ಹುಡಕತಿ, ಹೆಂಗ ಸಿಕ್ಕೀತು? ಬಾ, ಗೆಣಿತಾನ ಮಾಡ, ಬೇಡು ಎಂಥಾವ ಬೇಕ ಅಂಥಾ ಹಕ್ಕಿ- +ಕಾದ ಮೇದ ಹೆಣ್ಣ ನೀನಾ ನೋಡವಲ್ಲಿ +ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ || +ಹಾರ್‍ಯಾಡು ಹಕ್ಕಿಯ ಹಿಡದ ಕೊಟ್ಟೇನ ನಿನಗಾ +ಮಾತಾಡೊ ಅರಗಿಣಿಯ ತಂದ ಕೊಟ್ಟೇನ ನಿನಗಾ +ಮುಡಿಸೇನ ಹೂವಾ ಚಿಗುರಾ | ಎಲೆ ಗುಡಿಗಿ +ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ || +ಹೌದಂಬೊ ಹಂಗಾಮ ಹುಣ್ಣಿಮಿ ಚಂದ್ರಾಮ +ಬಿಡ ಬಿಡ ಬಡಿವಾರ ಕೇಳ ಹಕ್ಕಿಯ ಹಾಡಾ +ಬೀಸ್ಯಾವ ಮೂಡಗಾಳಿ || ಎಲೆ ಹುಡುಗಿ +ಕರಿತೇನ ಕಾಲ ಬಿದ್ದಾ ಬಾ ಬಾg ಪೋರಿ || +ಹುಡಿಗೀ ತಿಳಿತೇನ? ಹತ್ತ ವರ್ಷ ಹಕ್ಕಿ ಬೇಕಂತ ಹಂಬಲಿಸಿದಿ. ಹಕ್ಕಿ ಹಾರಿ ಬಂದ ತೊಡೀ ಮ್ಯಾಲ ಕುಂತೇನನ್ನೋ ಕಾಲಕ್ಕ ಬ್ಯಾಡಂತಿ! ನಿನ ಕರಳಾ ನಿಂದಾ? +ಗೌಡ್ತಿ: ಏನ ಮಾಡ್ಲಿ? ಒಂದ ಕಡೆ ಹಾಡೋ ಹಕ್ಕಿ. ಇನ್ನೊಂದ ಕಡೆ ಕಣ್ಣಾಗ ಚೂರಿ ಇಟ್ಟುಕೊಂಡ ಗಂಡ! ಬಸಣ್ಯಾ, ನಡುವ ನೀ ಬಂದ ಯಾಕ ಜೀವಾ ಕೊಡತಿ? ನನ್ನ ಎಡ್ಯಾಗ ಇದ್ದದ್ದ ಉಣ್ಣತೇನು? ಸುಮ್ಮನ ದಾರಿ ಬಿಡ. +ಬಸಣ್ಣ: ನನ್ನ ಎಡ್ಯಾಗಿದ್ದದ್ದ ಉಂಡಮ್ಯಾಲ ಅಲ್ಲೇನ ಇಷ್ಟೆಲ್ಲ ಆದದ್ದು? ಹೋಗತಿದ್ದರ ಹೋಗು ಬ್ಯಾಡನ್ನಾಣಿಲ್ಲ. ನಾನೂ ಒಲ್ಲೆನ್ನೋ ಹೆಣ್ಣ ಎಳದಾವಲ್ಲ. ಹಾಂಗ ಹೋಗೋವಾಗ ಹೊಲೇರ ಶಾರೀ ಮನೀಗಷ್ಟ ಹೋಗು. ಗೌಡ ಬಿದ್ದಾನ ಎಬ್ಬಿಸಿಕೊಂಡ ಹೊದೀಯಂತೆ. +ಗೌಡ್ತಿ: ಹೊಲಕ್ಕ ಮಲಗಾಕ ಹೋಗತೇನಂದ ಅಲ್ಲಿ ಹೆಂಗ ಹೋಗಿ ಬಿದ್ದಿದ್ದಾನೊ ! +ಬಸಣ್ಣ: ನಿನಗ ಇನ್ನೊಂದ ಸುದ್ದಿ ತಿಳಿದಿಲ್ಲ. ಗೌಡಗ ಈಗ ಗುರುಪಾದನ ಮಗಳು ನಿಂಗಿ ಬೇಕಾಗ್ಯಾಳಂತ. +ಗೌಡ್ತಿ: ಏನಂದಿ? +ಬಸಣ್ಣ: ಅಲ್ಲೇ ಶಾರೀನ ಕೇಳ್ಹೋಗು. +[ಗಿಣಿ ಚೀರಿದ ಸದ್ದು] +ಗೌಡ್ತಿ: ಗುಡಸಲದೊಳಗ ಯಾವುದೋ ಹಕ್ಕಿ ಚೀರಿಧಾಂಗಾಯ್ತಲ್ಲಾ? +ಬಸಣ್ಣ: ಅದ ನನ್ನ ಮಾತಾಡೋ ಗಿಣಿ. ರಾತ್ರಿ ಇಲ್ಲೇ ತಂದಿಟ್ಟಕೊಂಡಿದ್ದೆ. ಪಂಜರ ಉರುಳಿಬಿತ್ತೊ, ಹಾವ ಕಂಡಿತೊ ! +ಗೌಡ್ತಿ: ಲಗು ಹೋಗಿ ಏನಾಗೇತಿ ನೋಡಿ ಬಾ. +ಬಸಣ್ಣ: ನಿನಗ ಬ್ಯಾಡಾದ ಮ್ಯಾಲ ಗಿಣಿ ಇದ್ದರೆಷ್ಟು ಬಿಟ್ಟರೆಷ್ಟು? +ಗೌಡ್ತಿ: ಬ್ಯಾಡಾಂತ ನಾ ಎಲ್ಲಿ ಹೇಳಿದೆ? +ಬಸಣ್ಣ: ಬಾ ಹಾಂಗಾದರ. +[ಗುಡಿಸಿಲಲ್ಲಿ ಹೋಗಿ ಗಿಣಿಯುಳ್ಳ ಪಂಜರ ತರುತ್ತಾನೆ. ಗೌಡ್ತಿ ನೋಡಿ ಸಂಭ್ರಮಿಸುತ್ತಾಳೆ.] +ಗೌಡ್ತಿ: ಏನಾಗಿಲ್ಲ, ಹೌಂದಲ್ಲ? +ಬಸಣ್ಣ: ಏನಿಲ್ಲ. +ಗೌಡ್ತಿ: ಇದ ಮಾತಾಡತೈತಿ? +ಬಸಣ್ಣ: ನೀ ಇನ್ನೂ ಇದರ ಮಾತ ಕೇಳಿಲ್ಲ. ಇದರ ಮಾತ ಕೇಳಿ ಊರ ಹುಡುಗೇರ ಹಾಂಗ ಬಾಯ್ತಗೀತಾರ! ಎಂತೆಂಥಾ ಕತೀ ಹೇಳತೈತಿ ! +ಗೌಡ್ತಿ: ಇನ್ನ ನನಗ ಮಾತ್ರ ಈ ಗಿಣಿ ಮಾತ, ಕತಿ ಕೇಳಿಸಬೇಕು- +ಬಸಣ್ಯಾ, ಬಸಣ್ಯಾ- +ಗುಡಿಸಲದೊಳೀಕ +ಪ್ರಿಯಾ ಬಳೀಕ +ಹೋಗೋಣು ನಡಿ +ಮಾತನಾಡೋಣ ಹಕ್ಕಿಯ ಜೋಡಿ || +ಮೂಡಗಾಳಿ ಬೀಸ್ಯಾವೊ +ಹೂವ ಹಸರ ಚಿಗರ್‍ಯಾವೆಕೇಳಿ ಬಂದಾವೊ ಹಕ್ಕಿಯ ಹಾಡಾ +ಮಾತನಾಡೋಣ ಹಕ್ಕಿಯ ಕೂಡಾ || +[ಸಂಗೀತ] +ಢಂಢಂ ದೇವರ ಸೋಲು +ಮೇಳ : ತಿರಗತಾನ ಗೌಡ ಹಗಲಿ ರಾತ್ರಿ +ಅಂದಾನ ಅದಕ ಪಿರತಿ +ಕೋಳೀಯ ಬೆನ್ನ ಹತ್ತಿ +ನಿಂಗೀಯ ಬೆನ್ನ ಹತ್ತಿ +ಹಾಕತಾನ ಹತ್ತೆಂಟ ಬಲಿ ಹರದಾವ ಮೂಲಿ ಮೂಲಿ|| +ಆರ ತಿಂಗಳ ತಿರಿಗ್ಯಾನ ಹುಂಜ ಆಗಿ +ದಿನಾ ಬೆಳಗ ಕೂಗಿ +ಬಿಟ್ಟನ ಹೊಲ ಮನಿ +ಮರತಾನ ನಾಚೀಕಿ +ಕೋಳಿ ಗುರಿವ್ಯಾನ ಬುಟ್ಟಿಯೊಳಗ ಹಾರಿ ಕುಂತಿತ್ತ ಬೆರಕಿ|| +[ಈ ಹಾಡು ಹೇಳುತಿರುವಂತೆ ಗೌಡ ನಿಂಗಿಯ ಬೆನ್ನು ಹತ್ತಿ ಓಡಿಸಿಕೊಂಡು ಬರುವುದು, ಅವಳು ತಪ್ಪಿಸಿಕೊಳ್ಳುವುದು, ರಂಗದ ಸುತ್ತ ಓಡಾಡುವುದು ನಡೆದಿರುತ್ತದೆ.] +ಗೌಡ: ಆರು ತಿಂಗಳಾಯ್ತು, ತಪ್ಪಿಸ್ಯಾಡಿ ತಿರಿಗಿದಿ. ನಿನ್ನ ನೋಡಿದ ದಿನಾನ ಮಸಾಲಿ ಕೊಂಡ ಇಟ್ಟೀದೇನು ಇಂದ ಸಿಗಬಿದ್ದೆ ನನ್ನ ಕೋಳೇ! ಇನ್ನ ಹಟ ಹಿಡೀಬ್ಯಾಡ, ನಡಿ ಹೋಗೋಣು. +ನಿಂಗಿ: ಮಾನಗೇಡಿ, ಮಸಾಲಿ ಒಯ್ದ ನಿನ್ನ ಹೆಂಡತಿ ಮ್ಯಾಲ ಹಾಕಿ ನೆಕ್ಕೋ ಹೋಗ. ಇದ ಅನ್ನಾಣ ಅಂದಿ; ಇನ್ನೊಮ್ಮಿ ಅಂದರ ಅದ ಮಸಾಲಿ ನಿನಗ ಹಾಕೇನ. +ಗೌಡ: ನಾ ಹೇಳೋದೂ ಅದ ಮತ್ತ. ನನಗ ನೀ ಹಾಕು, ನಿನಗ ನಾ ಹಾಕತೇನು. ಇಂದ ಎಲ್ಲಾ ಜೀವಂತ ನನ್ನ ಅಂಗೈಯಾಗಿರತಿ, ಇಲ್ಲ ಸತ್ತ ಗೊರಕಿ ಹೋಗಿರಿತಿ. +ನಿಂಗಿ: ಹೌಂದು? ಅವಯ್ಯಾ! ಇವ ಎಂಥ ಶೂರ ಇದ್ದಿದ್ದಾನ? ಶೂರಾ ಮೀಸೀ ತೀದಿಕೊಳ್ಲಾ, ಮಂಡಾಗ್ಯಾವ? +ಗೌಡ: ನೀ ನನ್ನ ಅಂಗೈಯಾಗ ಬಂದಮ್ಯಾಲ ನಿನಗ ಆಡಾಕ ಇರಲೆಂತ ಹಾಂಗ ಬಿಟ್ಟೇನ, ಬಾ. +ನಿಂಗಿ: ಅವಯ್ಯಾ! ಇವ ಎಂಥಾ ಧೀರ ಇದ್ದಿದ್ದಾನ! ಧೀರಾ, ಬಸಣ್ಯಾ ಬಸಣ್ಯಾ ಬಂದಾನ ದೂರ ಸರಿ. +ಗೌಡ: ಹುಚ್ಚಿ, ಎಷ್ಟಂತ ಚಾಷ್ಟಿ ಮಾಡತಿ? ನಿನಗ ಮೊದಲ ಗೊತ್ತೈತಿ. ನಾಮನಸ್ಸ ಇಟ್ಟಿದ್ದ ಯಾವುದೂ ಬಿಟ್ಟಿಲ್ಲಂತ. ಮತ್ತ ಓಡ್ಯಾಡಸ್ತಿ, ಕಾಣಬಾರದ? ನಿನ್ನ ಸಲುವಾಗಿ ಮನಿಮಾರ ಬಿಟ್ಟ, ಹೊಲಾ ಬಿಟ್ಟ, ನೆಲಾ ಬಿಟ್ಟ, ಲಜ್ಜಿಗೇಡ್ಯಾಗಿ ತಿರಗತೇನು. ಊರ ಹುಡುಗೇರಿಗೆಲ್ಲಾ ಅದೊಂದು ಬಸಣ್ಯಾನ ಹುಚ್ಚು. ಅವನ ಬೆನ್ನ ಹತ್ತಿ ಏನ ಸುಖ ಸುರಕೊಳ್ತಿ? ತಿನ್ನಾಕ ಕೂಳಿಲ್ಲಾ, ನನ್ನ ಹೊಲಾ ಮಾಡಿಕೊಂಡ ಬಿದ್ದಾನ. ಅವ ಏನು ಕೊಟಾನು? ನನ್ನ ಬೆನ್ನ ಹತ್ತಿ ಬಾ. ಏನ ಬೇಕ ಅದನ್ನ ಬೇಡು, ಬೇಕಾದ್ದ ಬ್ಯಾಡಾದ್ದ ಉಡು, ಉಣ್ಣು, ತೊಡು ಬೇಕಂದರ ತಗೊ ಹಜಾರ ರೂಪಾಯಿ ಸಂಚಕಾರ!- ಕಿಣ್ ಕಿಣ್ ಕಿಣ್ ಕೇಳಿಸ್ತು? +ನಿಂಗಿ: ಕೇಳಿಸ್ತು. +ಗೌಡ: ಬಾ ಹಂಗಾರ ಬೆನ್ನ ಹತ್ತಿ. +ನಿಂಗಿ: (ಒಲಿದವರಂತೆ ಅಭಿನಯಿಸುತ್ತ) ನಿನ್ನ ಬೆನ್ನ ಹತ್ತಿ ಬಂದರ ನಮ್ಮವ್ವಾ ನಮ್ಮಪ್ಪಾ ಏನಂದಾರು? +ಗೌಡ: ಹೇಳಿ ಕೇಳಿ ಬಡವರು, ಗೌಡನ ಮುಂದ ನನ್ನ ಏನಂದಾರು? ಬೆನ್ನ ಹತ್ತಿ ಬಾ, ದೋ ಮಜಲ ಮನಿ ಕಟ್ಟಿಸಿಕೊಡತೇನ. ತೂಗ ಮಂಚ ಮಾಡಿಸಿ ತೂಗಾಕೊಂದ ತೊತ್ತಾದರೂ ಇಡತೇನ. ಅದೂ ಬ್ಯಾಡೆಂದರ ಕಾಜಿನ ಕಪಾಟ ಮಾಡಿಸಿ ಅದರಾಗ ಇಡತೇನ. ಬೇಕಂದರ ಒಬ್ಬ ಗಂಡನ್ನ ಮಾಡತೇನ. +ನಿಂಗಿ: ಗಂಡನ್ನ ಮಾಡತಿ? ನಿನ್ನ ಜೋಡಿ ಇದ್ದಮ್ಯಾಲ ನನ್ನ ಯಾರ ಮಾಡಿಕೊಂಡಾರು? +ಗೌಡ: ಯಾಕ ಚಿಂತೀ ಮಾಡತಿ? ನಮ್ಮ ಗುರ್‍ಯಾ ಇದ್ದಾನ್ನೋಡು, ಅವಗ ನಿನ್ನ ಮದಿವೀ ಮಾಡತೇನ. ಹೆಸರ ಗಂಡಂದಾ, ಮಸರ ನಂದಾ, ಏನಂತಿ? +ನಿಂಗಿ: ಹಂಗಾದರ ಗುರ್‍ಯಾ ಇಲ್ಲೇ ಇದ್ದಾನ ಕರೀಲಿ? ಗುರ್‍ಯಾ…. +[ಗುರ್‍ಯಾ ಪ್ರವೇಶಿಸುವನು. ಗೌಡ ಅವನನ್ನು ನೋಡಿ ಹೆದರುವನು.] +ಗುರ್‍ಯಾ: ಸರಣ್ರೀ ಗೌಡಪ್ಪಾ…ನೀವು ಹೀಂಗ ಹೇಳ್ತೀರಂತ ತಿಳಕೊಂಡ ನಾ ಈಕೀನ ಮದೀವ್ಯಾಗಾವಿದ್ದೇನ್ರಿ. +ಗೌಡ: ಏ ಸೂಳೀಮಗನ ಬಾರೋ ಇಲ್ಲಿ. +ಗುರ್‍ಯಾ: ಹೌಂದರಿ? ನಾ ನಮ್ಮಪ್ಪಗ ಹುಟ್ಟಿದಾವಂತ ತಿಳಕೊಂಡಿದ್ದೆ. ನಮ್ಮಪ್ಪ ನಿವ ಏನ್ರಿ ಮತ್ತ! +ಗೌಡ: ಯಾಕೋ ಮಗನ? +ಗುರ್‍ಯಾ: ಹಾ! ನಾ ಹೇಳೆದಿಲ್ರೆ. ನೀವ ನಮ್ಮಪ್ಪಂತ? ಯಾಕ್ಕರದಿ ಎಪ್ಪ? +ಗೌಡ: ಯಾಕೋ, ನಾಲಿಗಿ ಭಾಳ ಉದ್ದ ಬಿಡತಿ, ಈ ರಂಡೀ ಮುಂದ? +ಗುರ್‍ಯಾ: ಈಕಿ ರಂಡಿ ಅಲ್ಲರಿ. ನಾನ ಈಕಿ ಗಂಡ. ಇನ್ನ ಮದಿವ್ಯಾಗಿಲ್ಲರಿ. ನಿಶ್ಚಯ ಕಾರ್‍ಯ ಎಲ್ಲಾ ಮುಗದೈತ್ರಿ. +ಗೌಡ: ನಿನಗ ಈ ನಿಂಗಿಗೇ ಮದಿವಿ? ಯಾಕೋ, ಊರಾಗಿನ ಗಂಡಸರು ನಾವೆಲ್ಲಾ ಸತ್ತಿವೇನೊ? +[ನಿಂಗಿ ನಗುವಳು] +ಗುರ್‍ಯಾ: ಯಾಕ ನಾ ಗಂಡಸಲ್ಲರಿ? +ಗೌಡ: ಏ ಲಫಂಗಾ, ಬಾಯ್ಮುಚ್ಚತೀಯೊ?…… +ಗುರ್‍ಯಾ: ಎಲೀ ಇವರ! ಸುಳ್ಳಲ್ಲರೀ, ತಡೀರಿ, ಏ ಹೇಂತೇ ಇಲ್ಲಿ ಬಾರ. ಗೌಡರಿಗಿ ನಮ್ಮ ಮದಿವ್ಯಾಗಿನ್ನೂ ವಿಶ್ವಾಸಾಗಿಲ್ಲಂತ. ನನ್ನ ಕಾಲ ಬೀಳು. +[ನಿಂಗಿ ಗುರ್‍ಯಾನ ಕಾಲಿಗೆ ಬೀಳುವಳು. ಆಶೀರ್ವದಿಸುತ್ತ] +ಮನೀತುಂಬ ಮಕ್ಕಳಾ ಹಡದು ನಕ್ಕೋತ ಸಾಯುವಂಥಾವಳಾಗು- +ಗೌಡ: ನನ್ನ ಅನ್ನಾ ಉಂಡ ನನಗ ಎದರ ಮಾತಾಡೋವಷ್ಟ ಧೈರ್ಯ ಬಂತೇನೋ ನಿನಗ? +ಗುರ್‍ಯಾ: ಈ ಹೆಣ್ಣು ಭಾಳ ಕೆರ್ರರಿ. ಇದರ ಹಂತ್ಯಾಕಿದ್ದರ ಭಲೆ ಕೆಟ್ಟ ಧೈರ್ಯ ಬರತೈತಿ. ಅದಕ್ಕ ಮದಿವ್ಯಾಗತೇನ್ರಿ, ಅಲ್ಲೇನ? +[ಇಬ್ಬರೂ ನಗುವರು] +ಗೌಡ: ನಗಬ್ಯಾಡ, ನಿನ್ನ ಸಿಗದ ಹಾಕತೇನೀಗ. +ಗುರ್‍ಯಾ: ಏನರೆ ಹೇಳಬೇಕಾದರ ನಾವು ಮಾತಾಡೋದೆ ಇಲ್ಲರಿ. ಬರೀ ನಗತೇವ. +ನಗ್ಯಾಗ ಏನ ಬೇಕಾದ್ದ ತಿಳಸ್ತೇವ. ಈಗ ತೋರಸ್ಲ್ರಿ? +[ಪ್ರಶ್ನಾರ್ಥಕವಾಗಿ ನಗುವನು] +ಹೌಂದರಿ? ನಾ ಈಗ ಏನ ಕೇಳಿದೆ ಅಂದರ: ಹೇಂತೇ ಗೌಡರ ಬಂದೂಕು ಹೆಂಗ ಮಾತಾಡತೈತಿ? +[ನಿಂಗಿ ಕುಲುಕುಲು ನಗುವಳು]. +ನಿಂಗಿ ಏನಂದಳಂದರ; ಪುಸ್‌ಪುಸ್ ಮಾಡತೈತಂತ! +ಗೌಡ: ಮಗನ ನಿಂಗ ಜೀವ ಬ್ಯಾಸರಾಗೇತೇನೊ? +ಗುರ್‍ಯಾ: ಆಗಿತ್ತರಿ. ನಿಂಗೀನ ಮದಿವ್ಯಾದರ ಬ್ಯಾಸರ ಹೋಗತೈತೇನಂತ ಹೊಲಕ್ಕ ಹೋದೆ. ಹೊಲಕ್ಕ ಅವಳೂ ಬಂದಿದ್ದಳು. ನಂದೂ ನಶೀಬ ನೋಡ್ರಿ. ನೀವು ಆರ ತಿಂಗಳಿಂದ ಬಂದೂಕ ಹಿಡಕೊಂಡ, ಚಿನ್ನ, ಬೆಳ್ಳಿ ಹಿಡಕೊಂಡ ಹುಂಜಧಾಂಗ ಕೂಗೇ ಕೂಗಿದಿರಿ. ಅಕೇನೂ ತಿರಗಿ ನೋಡಲಿಲ್ಲ. ನೋಡೋಣಂತ ನಾನೂ ಹುಂಜಧಾಂಗ ಕೂಗಿದೆ. ಕೋಳಿ ಸನೇಕ ಬಂತು. ಗಪ್ಪನ ಹಿಡಕೊಂಡ ಮೈಮ್ಯಾಲ ಕೈಯಾಡಿಸಿದರ ಹೇಳಿ ಬಿಟ್ಟಿತಲ್ಲ: ಮಾವಾ-ಅಂತ. ಅದಕ್ಕ ಮದಿವ್ಯಾಗತೇನ್ರಿ. ನಕ್ಕೋತ ಹೇಳ್ತೀನಂತ ಸುಳ್ಳಂದೀರಿ ಮತ್ತ. ಖರೇನ ನಿಶ್ಚಯ ಆಗೇತ್ರಿ. ಕೇಳ್ರಿ ಬಸಣ್ಯಾನ ಬೇಕಂದರ, ಅವನ ಹಿರಿಯಾ ಆಗಿದ್ದ. +ಗೌಡ: ನನಗ ಬಸಣ್ಯಾಂದೂ ಈ ರಂಡೀದೂ ಗೊತ್ತೈತೊ. +ಗುರ್‍ಯಾ: ಹೌಂದರಿ? ಬದಣ್ಯಾ ಈಗ ಆರ ತಿಂಗಳಿಂದ ನಿಮ್ಮ ಹೊಲದಾಗಮಲಗತಾನ ಗೊತ್ತೈತ್ರಿ? +ಗೌಡ: ನಾಯಿ ಮಗನ; +[ಒದೆಯ ಹೋಗುವನು ಗುರ್‍ಯಾ ಅದೇ ಕಾಲು ಹಿಡಿದೆಳೆದಾಗ ಗೌಡ ಬೀಳುವನು.] +ಗುರ್‍ಯಾ: ನಾಯಿ ಮಗಾ ನಾನೋ ನೀನೋ ಲುಚ್ಚಾ? +ನಿಂಗಿ: ಗಂಡಾ, ಗೌಡರಿಗಿ ಹಿಂಗೆಲ್ಲಾ ಮಾತಾಡಬಾರದು. +ಗುರ್‍ಯಾ: ಹೌಂದಲ್ಲ! ಗೌಡರ ಬಸಣ್ಯಾನ ಹಂತ್ಯಾಕೊಂದು ಗಿಣಿ ಇತ್ತ ನೋಡ್ರಿ; ಅದನ್ನ ಗೌಡ್ತಿಗೆ ಕೊಟ್ಟಾನ್ರಿ. ಗೌಡ್ತಿ ಅದನ್ನೇನೋ ನುಂಗಿದಳಂತೆ, ಈಗ ಮೂರು ತಿಂಗಳಿಂದ ಗೌಡ್ತಿ ಹೊಟ್ಟಿ ಹಿಂಗಾಗೇತಂತ! ಅಲ್ಲೇನ ಹೇಂತೆ? +ನಿಂಗಿ: ನೋಡಿದರ ತಿಳೀತೈತಲ್ಲ. +ಗೌಡ: ಮಡಸ ನನ ಮಗನ. ಈ ಸುದ್ದಿ ಖರೇ ಇದ್ದರ ಬರೋಬರಿ. ಇಲ್ಲದಿದ್ದರ ಕಣ್ಣೀರ ಸುರಿಸೇನಂದರೂ ಒಂದ ಕಣ್ಣಿಡಾಣಿಲ್ಲ ನಿನ್ನ ಮುಖದಾಗ! ಮರೀಬ್ಯಾಡ. +[ಹೋಗುವನು.] +ಗುರ್‍ಯಾ: ಏ ಇನ್ನ ಚಪ್ಪಾಳಿ ಹೊಡೆದ ನಗತೇವು; ತಡೀರಿ +[ಇಬ್ಬರೂ ಚಪ್ಪಾಳೆ ತಟ್ಟಿ ಕುಣಿಯುವರು.] +[ಸಂಗೀತ] +ಕಡಿದಾರೊ ಸ್ವಾಮೀನ +[ಹೊಲ, ಗುಡಿಸಲು, ಬಸಣ್ಯಾ ಕೂತಿದ್ದಾನೆ. ಗೌಡ್ತಿ ಓಡುತ್ತ ಬರುತ್ತಾಳೆ] +ಬಸಣ್ಯಾ: ಬಾ ಬಾರ ಗೆಣತಿ, ಎಷ್ಟ ಹೊತ್ತ ಹಾದಿ ನೋಡಿದೆ… +ಗೌಡ್ತಿ: ಬಸಣ್ಯಾ- +ಬಸಣ್ಣ: ಯಾಕ? +ಗೌಡ್ತಿ: ಗೌಡಗ ನಮ್ಮ ಸುದ್ದಿ ಎಲ್ಲಾ ಗೊತ್ತಾಗೇತಿ. +ಬಸಣ್ಣಾ: ಆದರ ಆಗಲೇಳು, ಅದಕ್ಯಾಕ ಚಿಂತೀ ಮಾಡತಿ? ಬಂದ ನನ್ನ ಮನ್ಯಾಗಿದ್ದೀಯಂತ. +ಗೌಡ್ತಿ: ಗೌಡ ನಿನ್ನ ಬಿಟ್ಟಾನು? +ಬಸಣ್ಣಾ: ಹುಚ್ಚೀ, ಹಾದ್ಯಾನ ನಾಯಿ ಬೊಗಳಿದರ, ಹಾರ್‍ಯಾಡೋ ನೊಣದ ರೆಕ್ಕಿ ಬಡದರ, ಸಾಯತೇನಂತ ತಿಳಾದ್ದೀಯೇನ? ಗೊತ್ತಾದರ ಆಗಲಿ, ನಿನ್ನ ಗಂಡನ ಪುಂಡತನ ನನಗ ಗೊತ್ತಿಲ್ಲದ್ದೇನು? ಒಂದ ಗುಟರ್ ಹಾಕಿದರ ಬಂದೂಕ ಚೆಲ್ಲಿ ಓಡಿಹೋಗತಾನ. +ಗೌಡ್ತಿ: ನಿನ್ನಿ ನನಗ ಕನಸೇನ ಬಿದ್ದಿತ್ತ ಗೊತ್ತೈತಿ. +ಬಸಣ್ಣ: ಏನ ಬಿದ್ದಿತ್ತು? +ಗೌಡ್ತಿ: ಕನಸಿನ್ಯಾಗೊಂದು ಅಡಿವ್ಯಾಗಿತ್ತು. ಅಡಿವ್ಯಾಗೊಂದ ಗವೀ ಇತ್ತು. ನಿನ್ನ ಬಿರಸ ಎದಿ ನನ್ನ ಮೆತ್ತಾನ ಎದ್ಯಾಗ ಮೂಡಿಧಾಂಗ, ಮಿರಗ ಮೋಡದೊಳಗ ಮಿಂಚ ಹರದಾಡಿಧಾಂಗ, ಬಿದರಿನೊಳಗ ಬಿಚ್ಚಾನ ಗಾಳಿ ತುಂಬಿಧಾಂಗ ಅನ್ನಿಸಿ, ಗವ್ಯಾಗಿಂದ ನೀ ‘ಏ ಹುಡಿಗಿ’ ಅಂತ ಕರಧಾಂಗಾಯ್ತು. ಅಷ್ಟರಾಗ ಒಂದ ಒಣ ಒಡಕ ಬಿದರ ಗೂಗೀ ಹಾಂಗ ಸಿಳ್ಳ ಹಾಕಿದ್ದ ಕೇಳಿಸ್ತು. ಎಚ್ಚರಾದಾಗ ಗೌಡ ಸಿಳ್ಳ ಹಾಕ್ಕೊಂಡ ಹೊರಗ ಆಡ್ಡಾಡತಿದ್ದಾ. ಬಸಣ್ಯಾ, ಇದ ನಮ್ಮ ಕಡೀ ಭೇಟಿ ಆಯ್ತಲ್ಲೋ! +ಬಸಣ್ಣಾ: ಛೇ, ಛೇ ನೀ ಭಾರಿ ಹೆದರಾಕಿ ಬಿಡು. +ಗೌಡ್ತಿ: ದಿನಾ ನಾ ಹೇಳಿದ್ದ ಎಷ್ಟ ಚಂದ ಕೇಳತಿದ್ದಿ. ಇಂದ್ಯಾಕ ನನ್ನ ನಂಬವೊಲ್ಲಿ? ದಿನಾ ರಾತ್ರಿ ಬೆಳಗಿ ಈ ಮಣ್ಣ ಸೇರಿ ಬೆಳಗಿದಿ. ಕಾಣ ಕಾಣ ಇಂದ ನನ್ನ Pಣ್ಣಿದಿರಿಗೇ ನೀ ಮುಣಗೋದನ್ನ ಹೆಂಗ ನೋಡಲಿ? ಅವರೆಲ್ಲಾ ಇಂದ ನಿನ್ನ ಕೊಲ್ಲಬೇಕಂತ ಮಸತ್ತ ಮಾಡ್ಯಾರ. ಐನೂರ ಮಂದಿ ಚಂಡಾಲರನ್ನ ಕೂಡಿಕೊಂಡ ಗೌಡ ಇಂದ ಕಡ್ಯಾಕ ಬರತಾನು. ಲಗು ತಪ್ಪಿಸಿಕೊಂಡು ಓಡೇಳು. +ಬಸಣ್ಣ: ಅಯ್ಯಯ್ಯಯ್ಯ ! ಐನೂರ ಮಂದಿ ಚಂಡಾಲರ. ಬರಲಿ ಬಿಡ, ಅವರಪ್ಪ ತಾಯಿ ಹಾಲ ಕುಡದವರಲ್ಲಾ, ನಾ ಏನೂ ನಾಯೀ ಹಾಲ ಕುಡದ ಬೆಳೇದಿಲ್ಲಾ. ನೀ ಹಾ ಅನ್ನೋದರಾಗ ಅವರ ಮೀಶೀಗೆಲ್ಲ ಮಣ್ಣ ಹಚ್ಚಿ ಕಳಸ್ತೇನ. +ಗೌಡ್ತಿ: ಅಯ್ಯೋ! ನೀ ಕೆಡಿಸಿದ ಗರತೇರ ಗಂಡರೆಲ್ಲಾ ಕೂಡಿ, ರಂಡೇರ ಮಿಂಡರೆಲ್ಲಾ ಕೂಡಿ ಬರತಾರಂತ. ಏಳೋ, ನನ್ನ ಮಾತ ಕೇಳೊ. +ಬಸಣ್ಣ: ಬರಲಿ, ಬರಲಿ. ಅವರ ಹೆಂಡರೆಲ್ಲಾ ನನ್ನ ಮೈ ರುಚಿ ನೋಡ್ಯಾರ. ಇವರು ನನ್ನ ಕೈ ರುಚೀನಾದರೂ ನೋಡಲಿ. +ಗೌಡ್ತಿ: ಬಸಣ್ಯಾ, ದೂರ ಕೊಳ್ಳೀ ಬೆಳಕ ಕಂಡ್ಹಂಗಾತು. ಲಗು ಏಳು. +ಬಸಣ್ಣ: ಅದ ಕೊಳ್ಳಿದೆವ್ವ, ಬಿಡ. ದಿನಾ ಈ ಹುಣಸೀ ಮರಕ್ಕ ಆರತೀ ಬೆಳಗಾಕ ಬರತಾವ. +ಗೌಡ್ತಿ: ಅಯ್ಯೋ, ನಾ ಹೆಂಗ ಹೇಳಿದರ ನನ್ನ ಮಾತ ನಂಬ್ತೀಯೋ? ಬಸಣ್ಯಾ ಇದು ವಾದ ಮಾಡೋ ಯಾಳೇ ಅಲ್ಲ. +ಬಸಣ್ಣ: ಅವರಿಲ್ಲಿ ಬಂದರೂ ನಾ ಇಲ್ಲೇ ಇರಾವ. ಧೈರ್ಯ ಆಗದಿದ್ದರ ನೀ ನಡಿ. +ಗೌಡ್ತಿ: ಅಯ್ಯೋ ಬಸಣ್ಯಾ! ಮಾಡಲ್ಹೆಂಗಾ +ಮಾಡಲ್ಹೆಂಗಾ ಗೌಡ ಕಡಿಯ ಬಂದಾ || +ಪುಂಡ ಚಂಡಾಲರ ಕೈಯಾಗ ಕುಡಗೋಲ +ಕಡೆದ ಬಿಡತೇನಂತ ಮಾಡ್ಯಾರ ಹುಯ್ಯಾಲಾ +ಮಾಡಲ್ಹೆಂಗಾ | ಗೌಡ ಕಡಿಯ ಬಂದಾ || +ಅಡವಿ ಅರಣ್ಯಾದಾಗ ಅತ್ತ ಕರಿಯುವರಿಲ್ಲಾ +ಬಾಳಗೊಡಸದ ಮಂದಿ ಬುದ್ದಿ ಹೇಳವರಿಲ್ಲಾ +ಮಾಡಲ್ಹೆಂಗಾ | ಗೌಡ ಕಡಿಯ ಬಂದಾ || +[ದೂರದಿಂದ ಕಿರುಚುವಿಕೆ ಕೇಳಿಸುತ್ತದೆ] +ಬಸಣ್ಯಾ, ಕಣ್ಣ ತೆರೆದ ನೋಡೋ, ಕೊಳ್ಳಿದೆವ್ವಲ್ಲ, ಕೊಲೆಗಡುಕರೋ ಅವರು ಹೆಂಗ ಬೋರ್‍ಯಾಡತಾರ ನೋಡೋ! ಅವರು ಐನೂರು ಮಂದಿ, ನೀ ಒಬ್ಬ ಎದಕ್ಕ ಈಡಾದಿ? +ಬಸಣ್ಣ: ಹೌಂದಲ್ಲ. ನೋದು. ಈ ಕಡೆ ಕೊಳ್ಳಿ ಕಾಣಸೋದಿಲ್ಲ. ಓಡು- +ಗೌಡ್ತಿ: ನಿನ್ನ ಬಿಟ್ಟು ಹೆಂಗ ಹೋಗಲಿ? +ಬಸಣ್ಣಾ: ಮಾತಾಡೋ ಗಿಣಿ ಇದ್ದಲ್ಲಿ ನಾ ಮತ್ತ ಬಂದ ಬರತೇನ. ಓಡಿ ಹೋಗು. +ಗೌಡ್ತಿ: ಓಡಿದರ ಇಬ್ಬರೂ ಕೂಡಿ ಓಡೋಣು, ಹೋಡರ ನನ್ನ ಜೀವಾನೂ ನಿನ್ನ ಜೋಡಿ ಹೋಗಲಿ. +ಬಸಣ್ಣ: ನಮ್ಮಿಬ್ಬರ ಜೀವಕ್ಕಿಂತ ಗಿಣೀ ಜೀವ ದೊಡ್ದದಲ್ಲೇನ? ಓಡಿ ಗಿಣೀ ಜೀವಾ ಉಳಿಸೋದ ಬಿಟ್ಟಿದೀ. ಏನೇನೋ ವಾದ ಮಾಡ್ತಿ. ಗಿಣಿ ಇದ್ದಲ್ಲಿ ನಾ ಇದ್ದ ಇರತೇನ ಓಡು. +ಗೌಡಿ: ಓಡಂದಿ? +ಬಸಣ್ಣ: ಲಗು. +ಗೌಡ್ತಿ: ನೀ? +ಬಸಣ್ಣ: ಮತ್ತದ ಹಾಡ್ತಿ. +ಗೌಡ್ತಿ: ಓಡಲಿ? +ಬಸಣ್ಣ: ಲಗು ಓದು. +[ಗೌಡ್ತಿ ಓಡುವಳು. ಅವಳು ಹೋದ ದಿಕ್ಕನ್ನೇ ತುಸು ಹೊತ್ತು ನೋಡಿ] +ಹುಚ್ಚ ಹುಡುಗಿ ತನ್ನ ಹೊಟ್ಯಾಗಿನ ನನ್ನ ಮರತಾಳ! +[ಸುತ್ತ ನೋಡಿ ಗಿಡಕ್ಕೆ ತೂಗು ಹಾಕಿದ್ದ ಕುಡಗೋಲು ತೆಗೆದುಕೊಳ್ಳುವನು. ಧೈರ್ಯದಿಂದ ಮುನ್ನುಗ್ಗುವಷ್ಟರಲ್ಲಿ ಅವನು ನುಗ್ಗಿದಲ್ಲೆಲ್ಲ ಕೊಳ್ಳಿ, ಕುಡಗೋಲು ಹಿಡಿದವರು ಕಾಣಿಸಿಕೊಳ್ಳುತ್ತಾರೆ. ಬಸಣ್ಣ ಗಾಬರಿಯಾಗದಿದ್ದರೂ ಧೈರ್ಯ ತಂದುಕೊಂಡು ಮಾತಾನಾಡುತ್ತಾನೆ.] +ಏನ ಗೌಡರು, ಹೊಲದ ಕಡೆಗೆ ಬಂದಿರಿ? +[ಎಂದು ಹೇಳುತ್ತಿರುವತೆಯೇ ಒಬ್ಬ ಹಿಂದಿನಿಂದ ಒಂದು ಗೌಡನ ಸೂಚನೆಯಂತೆಯೆ ಏಟು ಹಾಕುತ್ತಾನೆ. ಬಸಣ್ಯಾ ಮೂರ್ಛೆ ಬೀಳುತ್ತಾನೆ. ಎಲ್ಲರೂ ಕಿರುಚುತ್ತ ಕೊರಡಿನಂತೆ ಅವನನ್ನು ಹೊತ್ತು ಹಾಡುತ್ತ ನರ್ತಿಸುತ್ತಾರೆ.] +ಎಲ್ಲರೂ: ಊರ ಪುಂಡ ಮಿಂಡನ ಮಗನ ಕಡಿ ಕಡಿ +ಹಿಂಗ ಗೌಡ್ತಿ ಕರದಾಳೋ ಬಸಣ್ಯಾ ನಡೀ ನಡೀ || +ಮಾತಾಡೋ ಗಿಣಿ ತೋರಿ +ಹುಡಿಗೇರನೆಳೆದವನ +ಮಲಗಿದ್ದ ಹೊಲ ಎಲ್ಲ +ತಂದಂತ ಅಂದವನ || +ಒಂದ ಏಟಿಗೆ ಇವನ +ನಾಕೆಂಟ ಮಾಡೋಣ +ಹದ್ದೀಗೆ ಹಾಕೋಣ +ಕೆಸರ ಮಣ್ಣ ಮಾಡೋಣ || +[ ಹಾಡು ಮುಗಿದ ಮೇಲೆ ಹಾಗೇ ಕೆಳಕ್ಕೆ ಚೆಲ್ಲಿ ಬಂದೂಕಿನಿಂದ ಗೌಡ ಬಸಣ್ಯಾನನ್ನು ಇರಿಯುತ್ತಾನೆ. ಬಸಣ್ಯಾ ‘ಆ’ ಎಂದು ಕಿರುಚಿದಾಗ ರಂಗವೆಲ್ಲ ಸ್ತಬ್ಧವಾಗುತ್ತದೆ. ಬಸಣ್ಯಾ ಸತ್ತನೆಂದು ಖಾತ್ರಿಯಾದ ಮೇಲೆ ಗೌಡ ತನ್ನ ಚಂಡಾಲರೊಂದಿಗೆ ಮರೆಯಾಗುತ್ತಾನೆ. ಬಸಣ್ಯಾನಿಗೆ ಸಹಾಯ ಮಾಡಲೆಂದೇ ಓಡಿಬಂದ ಗುರ್‍ಯಾನಿಗೆ ತಾನು ಮಾಡಿದ್ದು ಗೊತ್ತಾಗಿ ಪಶ್ಚಾತ್ತಾಪವಾಗುತ್ತದೆ. ಶ್ರದ್ಧಾಂಜಲಿಯೆಂಬಂತೆ ತನ್ನ ತಲೆಮ್ಯಾಲಿನ ರುಂಬಾಲನ್ನು ಹೆಣಕ್ಕೆ ಹೊಚ್ಚಿ ಬಸಣ್ಯಾ ಹಿಡಿದ ಕುಡಗೋಲನ್ನು ನಿರ್ಧಾರದಿಂದ ಕೈಗ್ತೆಕೊಳ್ಳುತ್ತಾನೆ. ನಿಶ್ಶಬ್ದದೊಳಗಿಂದ ಸೂತ್ರಧಾರನ ಹಾಡು ಉಕ್ಕುತ್ತದೆ] +ಮೇಳ: ಎಣಿಸಿ ಐನೂರ್‍ಮಂದಿ ಅವರಿಗಿ ಸಾವಿರ ಕೈಗಳು +ಹಿಡದ ಕಡಿದಾರು ಎಳೀದೇವರನ್ನಾ || +ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು +ಹೊಡದ ಕೊಂದಾರೋ ಎಳೀದೇವರನ್ನಾ || +ಕೊಂದಾರೆ ಒಗೆದಾರೊ ಸ್ವಾಮೀನ ಕಡದಾರೆ ಒಗೆದಾರೊ +ನೆತ್ತರ ಹರದಾವೊ ಹೊಳಿ ಹಳ್ಳ ತುಂಬಿ || +ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ +ಮಣ್ಣು ಮಣ್ಣೆಲ್ಲಾ ಹಸಿಹಸಿರ ತುಂಬಿ|| +ಒಳ್ಳೇಯ ಸರ್ಕಾರ ನಮ್ಮ ದೇಶವನಾಳಲಿ +ಮನಿಮನಿ ತುಂಬಲಿ ಆಡೋ ಮಕ್ಕಳಿಂದ +ಹೊಲ ಉಳೋ ರೈತ ಅವನೆ ನೆಲದೊಡೆಯನಾಗಲಿ +ದೇಶ ತುಂಬಲಿ ಧನಧಾನ್ಯದಿಂದ || +ಸುವ್ವೀ ಬಾ ಸುಂದರಾ ಸ್ವಾಮೀ +ಸುವ್ವೀ ಬಾ ಚಂದಿರಾ +ಸುವ್ವೀ ಬಾರಯ್ಯ ಜೋಕುಮಾರಸ್ವಾಮಿ || +ಮಂಗಲಂ +***** +ಮುಗಿಯಿತು +ಒಂದನೆಯ ದೃಶ್ಯ (ಹೊಲೆಯರ ಹಟ್ಟಿ. ಕೇರಿಗಳು ಕೂಡುವ ವಿಶಾಲ ಜಾಗ. ಒಂದು ಅರಳಿ ಕಟ್ಟೆ. ರಂಗದ ಎಡಭಾಗಕ್ಕೆ ಒಂದು ಮುರುಕಲು ಸೂರು ರಂಗದತ್ತ ಉಚಾಯಿಸಿದೆ. ಬಲ ಭಾಗದಲ್ಲಿ ಒಂದು ಬಿದಿರ ನೆರಕೆ. ಬೆಳಕು ಬಿದ್ದಾಗ […] +ಗಣ್ಣ ಪದ ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ ಸಣ್ಣ ಹುಡುಗರು ನಾವು ಬಣ್ಣಕ ಹೆದರವರು ಚೆನ್ನಾಗಿ ಕೇಳರಿ ನಮ್ಮ ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ ಬುದ್ಧಿವಂತರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_381.txt b/Kannada Sahitya/article_381.txt new file mode 100644 index 0000000000000000000000000000000000000000..fa06a2d4143a8cf2a5eb3b7d153688523a860144 --- /dev/null +++ b/Kannada Sahitya/article_381.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಭ್ರಮ: ಯಶವಂತ ಚಿತ್ತಾಲ ಹಾಗು ಚನ್ನವೀರ ಕಾಣವಿಯವರಿಗೆ ಎಪ್ಪತ್ತೈದು. ಈ ಅವರ ಕೃತಿಗಳನ್ನು ಸ್ಮರಿಸಿಕೊಳ್ಳುವುದರ ದೃಷ್ಟಿಯಿಂದ ಈ ಸಂಚಿಕೆಯ ಬಹುಭಾಗ ಆ ದೊಡ್ಡಜೀವಗಳಿಗೆ ಮೀಸಲಾಗಿಟ್ಟಿರುವುದು ಸ್ಪಷ್ಟವಾಗಿದೆ. +ಅಹಂಕಾರವೋ- ಕೃತಿಗಿಂತಲೂ ಅಧಿಕವಾದದ್ದನ್ನು ಲೇಖಕ ಹೇಳಲಾಗದು ಎಂಬ ಹುಂಬ ವಾದವೋ-ನಿಮ್ಮ ಕೃತಿಗಳಿಗಿಂತ ಹೆಚ್ಚಾಗಿ “ಜನ” ನನಗೆ ಮುಖ್ಯ ಎಂಬ ಅವಿವೇಕವೊ ಅಂತೂ ನಾನು ಲೇಖಕರನ್ನು ಲೇಖಕರನ್ನಾಗಿ ನೋಡಲು ಇಷ್ಟ ಪಡುವುದೇ ಇಲ್ಲ. ಹಾಗೆ ಎಂದೂ ನೋಡಿದ್ದೇ ಇಲ್ಲ. ಅಮೆರಿಕೆಯಿಂದ ಹಿಂತಿರುಗುವಾಗ ಮುಂಬೈಯಲ್ಲಿ ಒಂದು ದಿನ ಉಳಿದುಕೊಂಡಿದ್ದೆ. ಮಾರನೆ ದಿನ ಬೆಂಗಳೂರು ವಿಮಾನ ಹತ್ತಿದಾಗ, ವಿಮಾನದಲ್ಲಿ ಕಣ್ಮುಚ್ಚಿದ್ದಾಗ- ನನಗೆ ಕಾಡುತ್ತಿದ್ದುದು ಎರಡು ಬಲಹಸ್ತಗಳು. +ಯಶವಂತ ಚಿತ್ತಾಲರು ತಾವು ಕುಳಿತಿದ್ದ ಡಿನ್ನರ್ ಕುರ್ಚಿಯಿಂದ ಪಕ್ಕದಲ್ಲಿದ್ದ ಸೋಫಾವನ್ನು ಬಲಹಸ್ತದಿಂದ “ನೋಡಿ ಇದೇ ಜಾಗ” ಎಂದು ಬಲವಾಗಿ ಕುಟ್ಟಿದ್ದರು. ” ಇಲ್ಲೇ ನಾನು ಕುಳಿತು ಬೆಳಗ್ಗೆಯೇ ಬರೆಯಲು ಆರಂಬಿಸುತ್ತೇನೆ- ಅಗೋ ಆ ಸಮುದ್ರ ನೋಡುತ್ತ..” – ಹೊರಗಡೆ ರೊಯ್ಯೆಂದು ರಭಸವಾದ ಮಳೆ. ಅವರ ಮಾತುಗಳು ನನ್ನ ತಲೆಗೆ ಹೋಗುತ್ತಲೇ ಇರಲಿಲ್ಲ. ಅವರ ಅಂಗೈಯಲ್ಲಿದ್ದ ಬಲ-ಹಂಬಲ-ಮಮಕಾರ-ಮುಗ್ಧತೆ ಮಾತ್ರ ನನ್ನನ್ನು ತಟ್ಟಿತ್ತು. ಅವರು ಹೇಳುವುದಕ್ಕಿಂತ ಹೆಚ್ಚಿಗೆ, ಅವರ ಕೃತಿಗಳಿಗಿಂತ ಹೆಚ್ಚಿಗೆ ಅವರ ಅಂಗೈ ಹೇಳುತ್ತಿದೆಯೇನೋ ಎನ್ನಿಸುವಷ್ಟು ಬಲವಾಗಿ ಕುಟ್ಟಿದ್ದರು. ಈ ಮುದುಕರ ಬಲ ಇರುವುದೇ ಅವರುಗಳ ಅಂಗೈಯಲ್ಲಿ, ನೀವು ಯಾರನ್ನಾದರೂ ನಿಮ್ಮ ತಾತನನ್ನೋ- ಅಜ್ಜಿಯನ್ನೋ- ಕಲ್ಪಿಸಿಕೊಂಡು ನೋಡಿ: ಅವರುಗಳ ಅಂಗೈಯಲ್ಲಿ ಅಧಿಕ ಶಕ್ತಿ ಇರುವುದನ್ನು ನೀವು ಮನಗಾಣಬಲ್ಲಿರಿ. ಆ ಶಕ್ತಿಯನ್ನು ಎದುರಿಸಲಾಗದೆಯೋ- ಮುಖಾಮುಖಿ ಬೇಡವೇ ಬೇಡ ಎಂದೋ ಹಿಂಜರಿದದ್ದನ್ನು ಅಲ್ಲಿಂದಾಚೆಗೆ ಅವರುಗಳ ಬಗೆಗೆ ಅವ್ಯಕ್ತ ಭಯವನ್ನೋ, ಅಪ್ರತಿಮ ಗೌರವವನ್ನೋ ರೂಢಿಸಿಕೊಂಡು ಹೋಗಿರುತ್ತೇವೆ. ಆ ರೀತಿಯ ಗೌರವದಿಂದ ಚಿತ್ತಾಲರು ತಮ್ಮ ಸಾಹಿತ್ಯವನ್ನು ಬಳಸಿಕೊಳ್ಳಬಹುದೆಂದು ನೀಡಿದ್ದ ಅನುಮತಿ ಪತ್ರವನ್ನು ಸಂಭ್ರಮದಿಂದ ಹಿಡಿದು ಹೊರಬಂದಿದ್ದೆ.. +ವಾಷಿಂಗ್‌ಟನ್ನಿನಲ್ಲಿ ಇದೇ ರಿತಿಯ ಹಸ್ತವನ್ನು ಅದರ ಬಲವನ್ನು ನೋಡಿದ್ದೆ..ಕನ್ನಡಸಾಹಿತ್ಯ.ಕಾಂ- ಮುಂದೇನು ಎಂಬ ಪ್ರಶ್ನೆ ಆಗಲೇ ಚರ್ಚೆಯಾಗುತ್ತಿತ್ತು. ವಿಜಯಾ ಕುಲಕರ್ಣಿ, ಮನೋಹರ ಕುಲಕರ್ಣಿಯವರ ಮೆನೆಯಲ್ಲಿ. ‘ಭೂಮಿಕಾ’ದಲ್ಲಿ ಆಗತಾನೆ ಕಾರ್ಯಕ್ರಮ ಮುಗಿದಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಮತ್ತೆ ವಿಸ್ತೃತ ಚರ್ಚೆಗೆ ಅಲ್ಲಿ ಸೇರಿದ್ದರು. ರಿಚ್‌ಮಂಡ್ ನಗರದಿಂದ ಭೂಮಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರಾಜುರವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. “ನಿಮ್ಮ ಪ್ರಶ್ನೆಗಳೆಲ್ಲ ಆಮೇಲೆ. ಈಗ ಕನ್ನಡಸಾಹಿತ್ಯ.ಕಾಂ ಉಳಿಯಬೇಕು- ನೀವು ಈಗ..ಈಗ…” ನೆಲಕ್ಕೆ ತಮ್ಮ ಹಸ್ತವನ್ನು ಗುದ್ದಿ”ಈಗ ಈಗ ಏನ್ಮಾಡ್ತ್ತೀನೀಂತ ಹೇಳ್ರಿ..ನೀವು ಏನ್ಮಾಡೋಕ್ಕಾಗುತ್ತೇಂತ ಹೇಳ್ರಿ..ನನ್ನದು ಇನ್ನೂರು ಡಾಲರ್ ಇರಲಿ..” -ಹೀಗೆ ನೆಲಕ್ಕೆ ತಮ್ಮ ಹಸ್ತವನ್ನು ಗುದ್ದಿ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸುತ್ತ ನನ್ನಲ್ಲಿ ಆತ್ಮ ಸ್ಥೈರ್ಯ ಮೂಡಿಸಿದ್ದವರು ಸಂಕಲ್ಪ ಚಿತ್ರದ ನಿರ್ದೇಶಕ ಶ್ರೀನಿವಾಸ್‌ರವರು (ಪ್ರತಿವಾದಿ ಶ್ರೀನಿವಾಸ್). +-ವಿಪರ್ಯಾಸವೆಂದರೆ ಈಗಲೂ ಅದೇ ಚರ್ಚೆ ನಡೆಯುತ್ತಿದೆ. ಆಸಕ್ತಿಯುಳ್ಳವರು ಬೆಂಬಲಕ್ಕಾಗಿ ಇರುವ ಯಾಹೂ ಗ್ರೂಪ್ ಗೆ ಭೇಟಿ ನೀಡಬಹುದು. ವ್ಯತ್ಯಾಸವೆಂದರೆ ಈಗ ಜನ ಚರ್ಚೆಯಲ್ಲಿ-ಕನ್ನಡಸಾಹಿತ್ಯ.ಕಾಂ ಮುಂದುವರೆಸಬೇಕು ಎನ್ನುವುದರ ಹಂಬಲಕ್ಕೆ ಕಾರ್ಯಾಸಕ್ತವಾಗಿ, ಕನ್ನಡಸಾಹಿತ್ಯ.ಕಾಂ “ಸಮೂಹದಿಂದ ಸಮೂಹಕ್ಕಾಗಿ” ಎಂಬ ರೂಪು ರೇಷೆ ತಿದ್ದಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಸಂಭ್ರಮಿಸಬೇಕಾದ ಸಂಗತಿಗಳೆ. ನೀವೂ ಸಹ ಕೈ ಜೋಡಿಸಿದರೆ ಕನ್ನಡಸಾಹಿತ್ಯ.ಕಾಂ ಮುಂದುವರೆಯುತ್ತದೆ-ವಿಸ್ತರಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇಲ್ಲದಿದ್ದರೆ…ಕಾಲವೇ ನಿರ್ಣಯಿಸುತ್ತದೆ. ಕಾಲದ ಹಿಂದೆ ನಾವು ಅಡಗಿರುತ್ತೇವೆ. ವೈಯಕ್ತಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಜಾಣತನವೆಂದು ಇದನ್ನು ಪರಿಗಣಿಸದಿರಿ ಎಂದಷ್ಟೆ ಕೋರಿಕೊಳ್ಳುತ್ತೇನೆ. +ಈ ತಿಂಗಳ ಹತ್ತನೆ ದಿನಾಂಕದಂದು ಬೆಂಗಳೂರಿನಲ್ಲಿ ಕನ್ನಡಸಾಹಿತ್ಯ.ಕಾಂ ನಲ್ಲಿ ಸಮಾನ ಮನಸ್ಕರ ಸಭೆ (ಗ್ರೂಪ್) ಸೇರಲಿದೆ. ಆ ಸಭೆ ಎಲ್ಲ ನಿರ್ಧಾರಗಳಿಗೂ ನಿರ್ಣಾಯಕ ಪಾತ್ರ ವಹಿಸುತ್ತದೆಂದು ಅನ್ನಿಸಿದೆ. ಆ ನಿರ್ಣಾಯಕ ಸನ್ನಿವೇಶವನ್ನು ಗ್ರೂಪ್‌ಗೆ ಹೋಗಿ ಅಲ್ಲಿ ಆಗುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀವೂ ಸಹ ನೆರವಾಗಬಹುದು. +ಕನ್ನಡಸಾಹಿತ್ಯ.ಕಾಂ ನಿಲ್ಲಿಸುವುದೇ ಆದರು ಅದು ಸೆಪ್ಟೆಂಬರ್ ಕೊನೆಯಲ್ಲೇ. ಮುಂದುವರೆಸುವುದಾದರೂ ಸೆಪ್ಟೆಂಬರ್ ಕೊನೆಯಲ್ಲೇ.. +ಶೋಕ: ಕನ್ನಡದ ಸಾಹಿತ್ಯದ ಗೊತ್ತುಗುರಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಕೀರ್ತಿನಾಥ ಕುರ್ತುಕೋಟಿ ದಂಪತಿಗಳು ಒಂದೇ ದಿನ ಇಲ್ಲವಾದದ್ದು. ಕಳೆದ ತಿಂಗಳು ತಾನೆ ಅವರ ಕೃತಿಗಳನ್ನು ಪ್ರಕಟಿಸುವ ದೃಷ್ಟಿಯಿಂದ ಅವರನ್ನು ಬಲ್ಲ ಮಂದಾಕಿನಿ ಪುರೋಹಿತ್‌ರ ಮೂಲಕ ಪ್ರಯತ್ನಿಸಲಾಗಿತ್ತು. ಕುರ್ತುಕೋಟಿಯವರು ನನ್ನ ಬಳಿ ಮಾತನಾಡಲು ಅವರ ಸ್ನೇಹಿತರಿಗೆ ಸೂಚಿಸಿದ್ದರು. ಅವರ ಸ್ನೇಹಿತರು ಟೆಲಿಫೋನ್ ಮಾಡಿ ಅನುಮತಿಯ ಬಗೆಗೆ ಮಾತನಾಡಿ “ಅವರಿಗೆ ಹುಷಾರಿಲ್ಲ, ಸ್ವಲ್ಪ ಚೇತರಿಸಿಕೊಳ್ಳಲಿ, ಅವರೊಡನೆ ಮಾತನಾಡಿ ಅನುಮತಿ ಪತ್ರ ಕಳುಹಿಸುತ್ತೇನೆ” ಎಂದು ತಿಳಿಸಿದ್ದರು. +ಕುರ್ತುಕೋಟಿಯವರಂತೆ ಸಾಹಿತ್ಯವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸುವ ಬಲ ಬರಲಿ- ಎಂದು ಹಾರೈಸುತ್ತ ಅವರನ್ನು ಸ್ಮರಿಸಬಹುದೇನೊ.. +-ಶೇಖರ್‌ಪೂರ್ಣ +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […] +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_382.txt b/Kannada Sahitya/article_382.txt new file mode 100644 index 0000000000000000000000000000000000000000..f1006e7a2f8b6ed17d8d179bdaa34edcce9b33ce --- /dev/null +++ b/Kannada Sahitya/article_382.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪ್ರತಿದಿನದ ಸೂರ್ಯೋದಯದ ಬಿಳಿರಂಗು, ರುದ್ರಿಯ ಮನಸ್ಸಿನಲ್ಲಿ ನಿರೀಕ್ಷೆಯ ರಂಗವಲ್ಲಿ ಮೂಡಿಸುತ್ತದೆ. ಇನ್ನೇನು ಇಹದ ಎಲ್ಲ ವ್ಯಾಪರವೂ ಮುಗಿದೇ ಹೋಯಿತೇನೋ ಎಂಬಂತೆ ರಾತ್ರಿಯ ಸಮಯದಲ್ಲಿ ತಣ್ಣಗಿದ್ದ ಆ ದೇಹದ ಸಮಸ್ತ ಅಂಗಾಂಗಗಳೂ ಬಿಸಿಯಾಗುತ್ತವೆ. ಯಾರದ್ದಾದರೊಬ್ಬರ ನೆರವಿನಲ್ಲಿ ಆಶ್ರಮದ ಹೊರಜಗುಲಿಯ ಮೇಲೆ ಬಂದು ಕುಳಿತು ಬಿಟ್ಟರೆ ಒಳಹೋಗುವವರೆಗೆ ಕಣ್ಣೆಲ್ಲ ದಾರಿಯ ಮೇಲೇ. ಆ ದೂರದಿಂದ ಬರುವ ಆಕಾರ ಹತ್ತಿರ ಸರಿದು ಬರುವಾಗ, ರೆಪ್ಪೆಯಡಿಯ ಕಿರುಗಣ್ಣಿನಿಂದ ಅದನ್ನೇ ನೋಡತ್ತಾಳೆ. ಮಮತೆಯ ಪೊರೆ ಆವರಿಸಿದ ಮನದ ಪದರದ ಮೂಲಕ ನೋಡುವ ಅವಳ ಕಣ್ಣಿಗೆ “ಅದೋ ಅಲ್ಲಿ ಬರುತ್ತಿರುವವನು ತನ್ನ ಸಿವೇಸನಲ್ಲವೇ?ಎನಿಸುತ್ತದೆ. “ಹುಂ ನನಗೆ ಗೊತ್ತು. ಅಮ್ಮನಿಂದ ದೂರವಾಗಿ ಅವನು ಜಾಸ್ತಿ ದಿನ ಇರಲ್ಲಾಂತ” ಎಂದು ಅಂದುಕೊಳ್ಳುತ್ತಾಳೆ ಅವಳು. ಆದರೆ ಆ ಆಕಾರ ಇವಳತ್ತ ತಿರುಗಿಯೂ ನೋಡದೆ ಮುಂದೆ ಸರಿದಾಗ, ಅದರ ಹಿಂದಿನ ಆಕಾರದ ಮೇಲೆ ಕಣ್ಣಿಡುತ್ತ, “ಓ ಇವನು ಸಿವೇಸನಿರಬೇಕು, ಆ ಅವನು ಆಗ ಹೋದವನಲ್ಲ ಎಂಬ ಆಸೆಯ ಭಾವನೆಯನ್ನು ಎತ್ತಿ ಆ ಇನ್ನೊಂದು ಮನುಷ್ಯನ ಮೇಲೆ ಹಾಕಿ ಗುರುತಿಸುವ ಕೆಲಸದಲ್ಲಿ ತಲ್ಲೀನವಾಗುತ್ತದೆ. ಬಿಸಿಲು ಏರುತ್ತ ಹೋದಂತೆ, ಬಳಲಿದ ಕಣ್ಣುಗಳು, ಬಾಡುವ ದೇಹ, ವಿಶ್ರಾಂತಿ ಪಡೆದರೂ, ಕಿವಿ ಮಾತ್ರ ಜಾಗೃತವಾಗಿದ್ದು, ಫೋನಿನ ಕರೆಗೆ, ಅಂಚೆಯವನ ಕೂಗಿಗೆ, ಪಾರ್ಸೆಲ್ ಬಿದ್ದ ಶಬ್ದಕ್ಕೆ, ಇನ್ನಷ್ಟು ಚುರುಕಾಗಿ, “ಇದು ಸಿವೇಸನದೇ ಫೋನಿರಬೇಕು, ಅಂಚೆಯವ ಎಸೆದದ್ದು ನನಗೆ ಬಂದ ಪತ್ರವೇ ಇರಬೇಕು, ಇದು ನನಗೆ ಕಳಿಸಿದ ಪಾರ್ಸೆಲ್ ಆಗಿರಬಹುದು, ಅಗೋಚರವಾದುದೇನೋ ನಡೆದು ಹೋಗುತ್ತದೆ, ತನ್ನ ಮತ್ತು ಸಿವೇಸನನ್ನು ಹತ್ತಿರ ತಂದು ಬಿಡುತ್ತದೆ ಎಂಬ ಭ್ರಮೆಯಲ್ಲಿ ಉಸಿರು ಹಿಡಿದು, ಕಾಯುತ್ತಿದ್ದಾಳೆ ರುದ್ರಿ. ಆದರೆ ಈ ವರೆಗೆ ಏನೆಂದರೆ ಏನೂ ನಡೆದಿಲ್ಲ. ಮಗನೇ ಯಾಕೆ, ಅವಳ ಪರಿಚಯದ ಒಂದು ಆಕೃತಿಯೂ ಅವಳ ಕಣ್ಣಿಗೆ ಬಿದ್ದಿಲ್ಲ. +ಬೆಳಗಿನ ಬಿಸಿ ಕ್ರಮೇಣ ಸಂಜೆಗೆ ಆರಿ ರಾತ್ರಿ ಹಾಸಿಗೆಯ ಮೇಲೆ ಬೀಳುವ ಹೊತ್ತಿಗೆ ಹಿಮದಷ್ಟು ತಣ್ಣಗಾಗುವ ರಾತ್ರಿಯಂತೆಯೇ ಅವಳ ಆಸೆ, ನಿರೀಕ್ಷೆಗಳೂ ತಣ್ಣಗಾಗುತ್ತವೆ. ಏನೂ ಕೆಲಸ ಮಾಡದಿದ್ದರೂ ಕಾಯುವಿಕೆಯಲ್ಲೇ ದಣಿದ ರುದ್ರಿಯ ದೇಹ ಉಸಿರಿಲ್ಲದಂತೆ ಮಲಗಿ ಬಿಡುತ್ತದೆ. ಬೆಳಗಿನಿಂದ ಮಣ ಮಣ ಮಂತ್ರ ಉಸುರುವ ಅಜ್ಜಿ, ಊಟ-ತಿಂಡಿ ಹಂಚುವ ಹುಡುಗಿ, ಪ್ರಾರ್ಥನೆಗೆ ಕರೆಯುವ ಮೇಲ್ವಿಚಾರಕ, ಅಲ್ಲಿಂದಿಲ್ಲಿಗೆ ಬಿರುಸಿನಿಂದ ಓಡಾಡುವ ಸಹಾಯಕರು, ಕೆಲಸಗಾರರು, ಒಟ್ಟು ಇಡೀ ಆಶ್ರಮವೇ ದಿನದ ಸಂತೆ ಮುಗಿಸಿ ಮಾತು ಕಳೆದುಕೊಂಡು ಸ್ಥಬ್ದಗೊಳ್ಳುತ್ತದೆ. ಆಗ ಮೆಲ್ಲಗೆ ಎಚ್ಚರಗೊಂಡು, ಒಳಗೊಳಗೇ ಒಂದರ ನಂತರ ಒಂದರಂತೆ, ಮಿಸುಕಾಡುವುದು ರುದ್ರಿಯ ನೆನಪುಗಳು ಮಾತ್ರ. ಹೀಗೇ ತನ್ನನ್ನು ತಾನು ಏಕಾಂತಕ್ಕೆ ಕಟ್ಟಿ ಹಾಕಿಕೊಂಡು, ತನ್ನೊಳಗಿನ ನೆನಪುಗಳನ್ನೆಬ್ಬಿಸಿ ಅವುಗಳೊಂದಿಗೆ ಮಾತಾಡುತ್ತ, ಸಿವೇಸನ ಒಂದು ಭೇಟಿ, ಒಂದು ಕರೆ, ಒಂದು ಧ್ವನಿಗಾಗಿ ಕಾಯುತ್ತಾ, ತೆವಳಿ ಬರುವ ಹಗಲು ರಾತ್ರಿಗಳಿಗೆ ವಿದಾಯ ಹೇಳುತ್ತಾ, ತನ್ನ ಬದುಕಿಗೇ ವಿದಾಯ ಹೇಳಲು ಮನಸ್ಸನ್ನು ತಯಾರುಗೊಳಿಸಿಕೊಳ್ಳುತ್ತಿದ್ದಾಳೆ ಅವಳು. +* +* +* +ಬಾಳ ಕನಸಿನ ಹೊಳೆಯ ಆಳ ಅಳೆಯುವ ಮೊದಲೇ ರುದ್ರಿಯ ಗಂಡ ನಿಜವಾದ ಹೊಳೆಯ ಸುಳಿವಿಗೆ ಸಿಕ್ಕಿ ಮುಳುಗಿಹೋಗಿದ್ದ. ಬಡತನ ಬಗಲಲ್ಲಿ ಉಳಿದಿತ್ತು. ಆದರೆ ಮನದಲ್ಲಿ ಛಲವಿತ್ತು. “ಓದುಸ್‌ಬೇಕು. ಯಾರಿ೦ದಾನು ಕಸೀಕಾಗ್ದ ಇದ್ಯೆ ಆಸ್ತೀನ ಅವುನ್ ತಲಿನಾಗೆ ಕಟ್‌ಕೊಡ್ಬೇಕು, ಎಂಬುದು ಅವಳ ಹಗಲಿರುಳ ಮಂತ್ರವಾಗಿ, ಮಗನ ಘನತೆಯನ್ನು ಹಾಡುವ ಘಳಿಗೆಗಳ ಕನಸು ಕಾಣುತ್ತ, ಗಂಡನೊಂದಿಗೆ ಮಾಡುತ್ತಿದ್ದ ದಿನಗೂಲಿಯನ್ನೇ ಮುಂದುವರಿಸಿದ್ದಳು ಅವಳು. ಹೊಟ್ಟೆ ಬಟ್ಟೆ ಕಟ್ಟಿ ಸಾಗಿಸಿದ ಆ ದಿನಗಳು ಅವಳ ಪಾಲಿಗೆ ಒಂದು ಸಾಹಸ ಯಾತ್ರೆಯೇ. ಯಾವ ಕಷ್ಟ ಕೋಟಲೆಗೂ ಎದೆ ಅದುರಿಸದೆ, ತನ್ನ ಶ್ರಮದ ಗಂಟಿನೊಳಗಿನ ಇಷ್ಟಿಷ್ಟೇ ಚಿಲ್ಲರೆಗಳನ್ನು, ಬಂಗಾರದ ಬಿಸ್ಕೀಟುಗಳೆಂಬಂತೆ, ಎಣಿಸಿ ಎಣಿಸಿ ಮಗನ ಪ್ರತಿವರ್ಷದ ಪರೀಕ್ಷೆಗಳಿಗೆ ಕಟ್ಟಿದಳು. ಆ ಹಳ್ಳಿಯಲ್ಲಿ ಹೈಸ್ಕೂಲ್ ಇಲ್ಲದ್ದರಿಂದ ರಾಮನಗರದ ಅಣ್ಣನ ಮನೆಯಲ್ಲಿ ಅವನನ್ನು ಬಿಟ್ಟು ಅವನಾಗಿ ನಿಲ್ಲಿಸುವವರೆಗೆ ಓದಿಸಿದಳು. ಪಿ.ಯುಸಿ.ಯಲ್ಲಿ ಫೇಲಾಗಿ, ಓದು ಬಿಟ್ಟು ಬಂದ ಸಿವೇಸ, ಕೆಲತಿಂಗಳಕಾಲ ಹಳ್ಳಿಯಲ್ಲಿ ಉಳಿದಾಗಲೇ ಅವನ ಮತ್ತು ಚೆನ್ನಿಯ ಪ್ರೀತಿ-ಪ್ರೇಮಗಳ ವ್ಯಾಪಾರ ಗಟ್ಟಿಯಾದದ್ದು. ಸಂಗತಿ ದಟ್ಟವಾದದ್ದು. +ಅವರಿಬ್ಬರ ಅಂತರಂಗದೊಳಗೆ ಪ್ರೀತಿಯ ತಾಪ ಕಾಡತೊಡಗಿದೆ ಎಂಬ ಅನುಮಾನ ಬಂದಾಗಿನಿಂದ, ರುದ್ರಿ ಮಗನಿಗೂ, ಆ ಚನ್ನಮ್ಮನಿಗೂ ತಿಳಿ ಹೇಳುತ್ತಲೇ ಬಂದಿದ್ದಳು. “ಬ್ಯಾಡ ಕಣ್ಲಾ ಸಿವೂ. ನೀವಿಬ್ರೂವ ಒಬ್ರಿಗೊಬ್ರು ಇಷ್ಟೊಂದ್ ಅಚ್ಕಾಬ್ಯಾಡ್ದು. ನಂ ಜಾತೀನೇ ಬ್ಯಾರೆ. ಅವರ ಜಾತೀನೇ ಬ್ಯಾರೆ. ಅವ್ರು ಮನುಸ್ಸತ್ವದಾಗೆ ಕಡಿ. ನಾವು ಜಾತಿನಾಗೆ ಕಡಿ. ಚನ್ನಿಯ ಅಪ್ಪಂಗೆ ಬಳ್ಗ ದೊಡ್ದು. ನಿಮ್ಮಿಬ್ರ ಇಸ್ಯ ಗೊತ್ತಾದೇಟಿಗೆ ಉಲಿ ಅಂಗ್ ಮ್ಯಾಲೆ ಬಿದ್ದು ಚಮ್‌ಡಾ ಅರಿಯಾಕೂ ಏಸೋವಲ್ಲ ಅವು. ನಮ್‌ಗಿಂತ ಅನುಕೂಲನೂ ಐತಿ. ಈ ನಿಂ ಸಂಬಂದ ಒಳ್ಳೇ ಕೊನಿ ಕಾಣದು ಅನುಮಾನ್ನೇಯ. ಇಲ್ಲಿಗೇ ನಿಲ್ಸಿಬುಡಿ” ಎಂದು. ಆದರೆ ತಮ್ಮ ಸುತ್ತ ಪ್ರೀತಿಯ ಕಲ್ಲಿನಲ್ಲಿ ಪ್ರೇಮದ ಗಟ್ಟಿ ಗೋಡೆ ಕಟ್ಟಿಕೊಂಡ ಸಿವೇಸ ಮತ್ತು ಚೆನ್ನಿಗೆ, ಅದರಿಂದ ಹೊರ ನಿಂತು ಹೇಳಿದ ಇವಳ ಮಾತುಗಳು ಕೇಳಲೇ ಇಲ್ಲ. ಮೊದಲು ಕಣ್ಣುಗಳ ಮೂಲಕ ವಿನಿಮಯಗೊಂಡ ಅವರಿಬ್ಬರ ಪ್ರೀತಿ, ಆ ನಂತರ ಭಯದಲ್ಲಿ, ಕಳ್ಳತನದಲ್ಲಿ, ಅರೆ ಧೈರ್ಯದಲ್ಲಿ, ಅವರಿವರ ತೋಟದೊಳಗೆ, ಊರಂಚಿನ ಕಾಡಿನೊಳಗೆ, ಕೆರೆಯ ಏರಿಯ ಮೇಲೆ ನಿಜರೂಪದಲ್ಲಿ ಭೇಟಿ ಕೊಡತೊಡಗಿತು. ಈ ಭೇಟಿಗಳಿಂದ ಬಲಗೊಳ್ಳತೊಡಗಿದ ಅವರ ಪ್ರೇಮದ ಕಥೆ, ಇಡೀ ಹಳ್ಳಿಯ ಅರಿವಿಗೇ ಬಂದಿದ್ದೇ ಆಗ. +ನಾಲ್ಕೇ ಮನೆಯ ಆಚೆ ಸ್ವಲ್ಪ ದೊಡ್ಡದಾಗಿ ಇದ್ದುದು ಚೆನ್ನಿಯ ಮನೆ. ಅವಳ ಹೆತ್ತವರು, ಜಾತಿಯ ಸೆರಗು ಸುತ್ತಿಕೊಂಡು, ಬದುಕಿನ ಸೀರೆ ಉಡುವುದರಲ್ಲಿ ಮರ್ಯಾದೆಯ ಪಟ್ಟ ಸಿಗುತ್ತದೆ ಎಂದು ನಂಬಿದವರು, ಅನಿಷ್ಟದವನಾದರೂ ಜಾತಿಯ ಹುಡುಗನನ್ನು ಕಟ್ಟಿಕೊಳ್ಳುವುದರಲ್ಲೇ ಸ್ವರ್ಗಸುಖವಿದೆಯೆಂದು ಭ್ರಮಿಸಿದವರು. ಸುದ್ದಿ ತಿಳಿದಿದ್ದೇ ಗಾಬರಿಗೊಂಡರು. ಆರನೇ ತರಗತಿ ಮುಗಿಸಿ ಮನೆಗೆಲಸಕ್ಕಿಳಿದ ಚೆನ್ನಿಗೆ ಧಿಡೀರನೆ ಬೇರೊಂದು ಸ್ವಜಾತಿ ಅಂಗವಿಕಲ-ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿ, ಐದು ಕಿಲೊಮೀಟರ್ ದೂರದ ಅವಳ ಅಜ್ಜಿಯ ಮನೆಗೆ ಅವಳನ್ನು ಸಾಗ ಹಾಕಿ, ಪ್ರೇಮಿಗಳಿಬ್ಬರೂ ಕಂಗಾಲಾದುದನ್ನು, ಮತ್ತು ಮತ್ತೆಂದೂ ಭೇಟಿಯಾಗದಿದುದನ್ನು ಕಂಡು ಸಮಾಧಾನದ ನಿಟ್ಟುಸಿರಿಟ್ಟರು. ಇನ್ನು ಜಾತಿ-ಮರ್ಯಾದೆಗೆ ಕುಂದಿಲ್ಲವೆಂದು ನಿರಾಳರಾದರು. +ನಿರಾಶರಾದ ಚೆನ್ನಿ ಮತ್ತು ಸಿವೇಸ, ಮದುವೆಯ ಹಿಂದಿನ ವಾರದವರೆಗೆ ಮತ್ತೆ ಭೇಟಿಯಾಗಲಿಲ್ಲ. ಯಾರ ಮೇಲೂ ತಿರುಗಿ ಬೀಳಲಿಲ್ಲ. ನಿಜವೆಂದರೆ ಅವರಿಬ್ಬರ ನಡುವಿನ ಪ್ರೇಮ ಮಾತ್ರ ಮರೆಯಾಗಲೇ ಇಲ್ಲ. ಅಂತರಂಗದೊಳಗಿನ ಪಿಸುಮಾತು ಮತ್ತು ಭೇಟಿಗಳನ್ನು ನಿಲ್ಲಿಸಲೇ ಇಲ್ಲ. ಅವು ತಾವಿಬ್ಬರೂ ಸದಾಕಾಲ ಒಂದಾಗಿ ಬಿಡಲು, ತಮ್ಮತಮ್ಮಲ್ಲೇ ಉಪಾಯಗಳನ್ನು ಹುಡುಕಿಟ್ಟಿದ್ದವು. ತಮ್ಮ ಓಟಕ್ಕೆ ತಂತ್ರಗಳನ್ನು ರಚಿಸತೊಡಗಿದ್ದವು. ಅವರಿಬ್ಬರ ಈ ಒಂದಾಗುವ ಉಪಾಯಕ್ಕೆ, ಓಡಿ ಹೋಗುವ ತಂತ್ರಕ್ಕೆ ಮಾಧ್ಯಮವಾದವಳೇ ರುದ್ರಿ. +ರುದ್ರಿ ಪ್ರತಿ ಸ೦ಜೆ, ಊರಂಚಿನ ಕೆರೆಯ ಬಳಿ ಇದ್ದ ಸಣ್ಣ ಮಾರಿ ಗುಡಿಗೆ ದೀಪ ಹಚ್ಚಿ ಬರಲು ಹೋಗುತ್ತಿದ್ದಳು. “ಇರಾ ಒಬ್ಬ ಮಗ೦ಗೆ ಒಳ್ಳೇದ್ ಮಾಡ್ ತಾಯೀ, ಅವ್‌ನು ಅಂದ್ಕಂಡಿದ್ದೆಲ್ಲಾನೂ ನಡೀಲಿ. ಅವನುನ್ನ ಸುಕಾಗಿಡು”, ಎಂಬ ಬೇಡಿಕೆಯ ದೀಪದಲ್ಲಿ, ಮಾರಿಯ ಮುಖವನ್ನು ಬೆಳಗಿಸಿ ಬರುತ್ತಿದ್ದಳು. ಅಂದೂ ಹಾಗೆ ದೀಪ ಹಚ್ಚಿ ಮಾರಿಯ ಕಾಲಿಗೆ ತನ್ನ ತಲೆ ತಾಕಿಸಿದಾಗ, ನಸುಗತ್ತಲಿನಲ್ಲಿ ಮಾರಿಯ ವಿಗ್ರಹದ ಹಿಂದಿನಿಂದ ಯಾವುದೋ ಮೆತ್ತನೆಯ ಕೈಯ್ಯೊಂದು ಕೈ ಬೆರಳಿಗೆ ತಗಲಿತ್ತು. ಸಣ್ಣಗೆ ಕಿರುಚಿದವಳು, ಆ ಭಯದಿಂದ ಹೊರಬರುವುದರೊಳಗೆ, ಅರಳಿದ ಕಣ್ಣೊಳಗೆ ಎದುರಿದ್ದವಳ ಪ್ರತಿಬಿಂಬ ಪೂರ್ತಿ ಬೀಳುವುದರೊಳಗೆ, ಒಂದು ಪುಟ್ಟ ಡಬ್ಬಿ ಅವಳ ಅಂಗೈಲಿತ್ತು. ಸರಸರನೆ ಓಡಿ ಗಿಡಗಳ ಸಂದಿಯಲ್ಲಿ ಮರೆಯಾದವಳನ್ನೇ ಗಾಬರಿಯಲ್ಲಿ ನೋಡುತ್ತ ಪ್ರಶ್ನೆಯ ಉಸಿರು ಹಾಕಿದ್ದಳು ಅವಳು, “ ಐ ಚೆನ್ನಿನಾ”? +ರುದ್ರಿಯ ಭಯ ಇಮ್ಮಡಿಸಿತ್ತು. ಸುತ್ತ ಯಾರೂ ಗಮನಿಸುವವರಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರೂ, ಆ ಡಬ್ಬಿಯನ್ನು ಅಲ್ಲಿ ತೆರೆದು ನೋಡುವ ಧೈರ್ಯವಾಗದೆ, ಸೆರಗಲ್ಲಿ ಮುಚ್ಚಿ ಮಗನ ಮುಂದೆ ತಂದು ಬಿಚ್ಚಿದಳು. ಒಂದಕ್ಷರವೂ ಬರೆಯದ ಬಿಳಿ ಹಾಳೆಯ ಮೇಲೆ ಬರೀ ಗೆರೆಗಳು. ಊರಿನ ಬೆಟ್ಟದ ಒಂದು ರೇಖಾ ಗೋಪುರ. ಅದರ ಕೆಳಗೊಂದು ವೃತ್ತ. ಆಕಾಶದಲ್ಲಿ ಅರ್ಧ ಚಂದ್ರ. ಮೂರು ದಿನಗಳ ನಂತರ ಸಿವೇಸನಿಗೆ, ಆ ಗೆರೆ, ಚಂದ್ರ ಮತ್ತು ವೃತ್ತಗಳ ಅರ್ಥ ಹೊಳೆದಿತ್ತು. ಆ ‘ಗೆರೆಗಳು” ದಿನಗಳ ಲೆಕ್ಕವಾಗಿದ್ದವು. ‘ಬೆಟ್ಟ” ಭೇಟಿಗೆ ನಿಗದಿ ಪಡಿಸಿದ ಸ್ಥಳ, ಮತ್ತು ‘ವೃತ್ತ” ಅವರಿಬ್ಬರೂ ಭೇಟಿಯಾಗಬೇಕಾದ ಕೇಂದ್ರ ಬಿಂದು. “ಉಂ ಅಂಗಾದ್ರೆ ಅವಳೂ ತನ್ನುನ್ನ ಮರ್ತಿಲ್ಲ” ಸಿವೇಸ ಖುಶಿಯಲ್ಲಿ ಕುದುರೆಯಂತೆ ಕೆನೆದ. ಅವಳು ಸಿಕ್ಕೇಬಿಟ್ಟಂತೆ ನೆಗೆದ. ಭಯದಲ್ಲಿ ಮುಳುಗಿದ್ದ ಅಮ್ಮನಿಗೆ ಹಲವು ರೀತಿಯಲ್ಲಿ ಧೈರ್ಯ ತುಂಬಿ ಒಪ್ಪಿಸಿದ. ಸಂತಸದ ಅಲೆಗಳನ್ನು ನಗುವಿನಲ್ಲಿ ತೇಲಿಸಿ, ಮನೆ ತುಂಬ ಹೊಯ್ದಾಡಿದ. ಮರುದಿನ ಅದೇ ಚೀಟಿಗೆ ಎರಡು ದೊಡ್ಡ ರೈಟ್ ಮಾರ್ಕ್ ಹಾಕಿ, ತಾನೂ ಅಮ್ಮನ ಜೊತೆಗೆ ಮಾರಿಗುಡಿಗೆ ಹೋಗಿ ದೀಪ ಹಚ್ಚಿ, ವಿಗ್ರಹದ ಪಕ್ಕ ಅದೇ ಡಬ್ಬಿಯನ್ನು ಇಟ್ಟು ಬಂದ. ರುದ್ರಿ ಮಗ-ಸೊಸೆಯ ಜಾಣತನಕ್ಕೆ ಮನದಲ್ಲೇ ಮೆಚ್ಚಿದಳು., ಚೆನ್ನಿಯಷ್ಟೂ ಅವಳು ಓದಿಲ್ಲದಿದ್ದರೂ ಒಂದಿಷ್ಟು ವಿವೇಕವಿತ್ತು. ಪ್ರೀತಿಸಿದ ಮಕ್ಕಳು ಸುಖವಾಗಿರಬೇಕೆಂಬ ಅಪೇಕ್ಷೆ ಇತ್ತು. ತಮ್ಮದೇ ಜಾತಿಯ ಒಂದಿಷ್ಟು ಮೇಲ್ಪ೦ಗಡದ ಹುಡುಗಿ ತಮ್ಮ ಮನೆಗೆ ಬಂದರೆ, ಅಡಿಗೆ, ಊಟ, ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವೆಂಬ ನಿಶ್ಚಿಂತೆಯಿತ್ತು. ಗಟ್ಟಿ ‘ಗಂಡಾ”ದ ಸಿವೇಸನೇ ಒಪ್ಪಿ, ತಾನು “ಗಂಡಿನ ತಾಯಿ”ಯಾದವಳೂ ಒಪ್ಪಿದ ಮೇಲೆ, ಈ ಮದುವೆಯನ್ನು ವಿರೋಧಿಸುವುದಕ್ಕೆ, ಅವುಗಳ ದಿಮಾಕು ಬಿಟ್ಟರೆ ಬೇರೇನೂ ಕಾರಣವೇ ಇಲ್ಲ ಎಂಬುದು ಅವಳ ಅನಿಸಿಕೆಯಾಗಿತ್ತು. ವಿರೋಧಿಸುವವರ ವಿರುಧ್ದ ಸಂಚು ಹೂಡಿ, ಹೇಗಾದರೂ ಈ ನಂಟಸ್ತನ ಗಟ್ಟಿಗೊಳಿಸಿ, ಗೆಲ್ಲುವ ಹಟವೂ ಇತ್ತು. +ಆದರೆ ನಾಲ್ಕು ದಿನಗಳವರೆಗೆ ಅಲ್ಲಿಟ್ಟ ಡಬ್ಬಿಯನ್ನು ಯಾರೂ ಮುಟ್ಟಿರಲಿಲ್ಲ. ಮುಟ್ಟಿದ್ದರೂ ತೆಗೆದು ನೋಡಿದ್ದರೂ, ಏನೂ ಅರ್ಥವಾಗದಂತಹ ಗುಟ್ಟಿನ ಸಂದೇಶವದು. ಸಿವೇಸನಿಗೆ, ರುದ್ರಿಗೆ ಆ ಬಗ್ಗೆ ಭಯವಿರಲಿಲ್ಲ. ಆದರೆ ಚೆನ್ನಿಗೆ ತಮ್ಮ ಉತ್ತರವೇ ಮುಟ್ಟದಿದ್ದರೆ? ಅವಳಿಗೆ ಆ ಇನ್ನೊಬ್ಬನ ಜೊತೆ ಮದುವೆಯೇ ಆಗಿ ಬಿಟ್ಟರೆ? ಎನ್ನುವುದು ಅವರಿಬ್ಬರ ಭಯವಾಗಿತ್ತು. ಈ ಭಯ ಮತ್ತು ಅನುಮಾನಗಳಲ್ಲಿ, ಬೇರೆ ಉಪಾಯಗಳನ್ನು ಹುಡುಕುವುದರಲ್ಲಿ ಮತ್ತೆ ಎರಡು ದಿನ ಕಳೆದುವು. ಅವಳ ಮದುವೆಗೆ ಇನ್ನು ಕೆಲವೇ ದಿನ ಉಳಿದಿದ್ದವು. “ಓಕ್ಕಳ್ಲಿ. ಅವ್ಳೇ ಬಿಟ್ರೆ ಬ್ಯಾಡೇ ಬ್ಯಾಡ ಬಿಡು. ಅದಾಗ್ದಿದ್ರೆ ಬ್ಯಾರೆ ಉಡ್ಗೀನೇ ಆಗ್ಲಿ”, ಎಂದು ಯೋಚಿಸುತ್ತ ದೀಪ ಹಚ್ಚಲು ಬಂದ ರುದ್ರಿ, ಮಾರಿಯ ಬಲಗಾಲಿನ ಬಳಿ ಸಿವೇಸನಿಟ್ಟ ಡಬ್ಬಿಯ ಮೇಲೆ ಕರಿಮಣಿಯ ಕುಚ್ಚೊಂದನ್ನು ಕಂಡಳು. ಅದನ್ನು ಮಗನಿಗೆ ಮುಟ್ಟಿಸಿದಳು. +ಚೆನ್ನಿ ಹೇಳಿದ್ದೇನೊ. ತಾವು ಅರ್ಥ ಮಾಡಿಕೊಂಡಿದ್ದೇನೊ, ತಪ್ಪೋ ಸರಿಯೋ ಎಂಬ ಅನುಮಾನ ಮತ್ತು ಆತಂಕಗಳನ್ನು ಇಟ್ಟುಕೊಂಡೇ ಅಗತ್ಯಕ್ಕೆ ಬೇಕಾದಷ್ಟೇ ವಸ್ತುಗಳನ್ನು ಕೈಯ್ಯಲ್ಲೂ, ದುಗುಡ-ದ್ವ೦ದ್ವಗಳನ್ನು ಮನದಲ್ಲೂ ಇಟ್ಟುಕೊಂಡು, ಸಿವೇಸ ಆ ಬೆಟ್ಟದ ಬುಡದ ಸಣ್ಣ ಕಲ್ಲುಚಪ್ಪರದಡಿ ಸಿಗುವ, ಆಜೀವ ಪರ್ಯಂತದ ಸಮಾಧಾನವನ್ನು ಪಡೆಯಲು, ಪಡೆದು ಹಾರಿಸಿಕೊಂಡು ಹೋಗಲು ತಯಾರುಗೊಂಡು, ಚಂದ್ರೋದಯದ ವೇಳೆಗೆ ಮನೆ ಬಿಟ್ಟು ಹೊರಟಿದ್ದ. ಎದೆತುಂಬಿದ ಅಳುವನ್ನು ಹತ್ತಿಕ್ಕಿ, ತನ್ನ ಮುಂದಿನ ಜೀವನಾಧಾರದ ಜೀವವನ್ನು ಮನದುಂಬಿ ಹರಸಿ, ಮನೆಯಲ್ಲೇ ಮಗನ ತಲೆಯ ಮೇಲೆ ಅಕ್ಕಿಕಾಳು ಹಾಕಿ ಬೀಳ್ಕೊಟ್ಟಿದ್ದಳು ರುದ್ರಿ . +ಆ ನಂತರ, ಸಿವೇಸ ರಾತ್ರಿಯೇ ಏನು ಮತ್ತೆ ಮೂರು ದಿನಗಳಾದರೂ ಮನೆಗೆ ಹಿಂತಿರುಗಲಿಲ್ಲ. ಅಂದರೆ ಸಿವೇಸ ಅರ್ಥ ಮಾಡಿಕೊಂಡಿದ್ದು ಸರಿಯೇ ಇತ್ತು. ಊರಿನ ಚಟುವಟಿಕೆಗಳೆಲ್ಲ ಕತ್ತಲಸೆರೆಯಲ್ಲಿ ಮಲಗಿದ್ದಾಗ, ಆ ಚೆನ್ನಿ ಜಾಗೃತ ಹೆಜ್ಜೆಗಳನ್ನು ಓಡಿಸಿ ಬೆಟ್ಟದ ಅಡಿಗೆ ಬಂದಿರಲೇಬಹುದು. ಎಲ್ಲ ಜನರೂ ನಿದ್ದೆಯ ಮೈಯೊಳಗಿದ್ದಾಗ ಸಿವೇಸನನ್ನು ಭೇಟಿಯಾಗಿ, ಓಡಿರಲೂಬಹುದು. ಅವರಿಬ್ಬರೂ ಸೇರಿ ಯಾವುದೋ ಒಂದು ಊರು ಹೊಕ್ಕು, ಸಂಸಾರವನ್ನೂ, ಸಂಸಾರ ನಡೆಸಲು ಒಂದು ಉದ್ಯೋಗವನ್ನೂ, ಮಾಡುತ್ತಿರಬಹುದು, ಎ೦ಬಂತಹ ಆಲೋಚನೆಗಳೊಂದಿಗೆ, ಮಗನ ಸುಖದಲ್ಲಿ, ತನ್ನ ಅ೦ತರಂಗದ ಅಗಲಿಕೆಯ ನೋವನ್ನು ಮರೆತು ಕೆಲಸಕ್ಕೆ ತೊಡಗಿಸಿಕೊಂಡಳು ರುದ್ರಿ. +ತನ್ನ ಓಟಕ್ಕೆ ತಂತ್ರಗಳನ್ನು ಹುಡುಕುತ್ತಲೇ ಇದ್ದಳು ಚೆನ್ನಿ. ಅಮ್ಮನ ಮನೆಯ ಆಳಾಗಿದ್ದ ಗಂಗಿ, ಆ ದಿನ, ಹೇಳಿ ಕಳುಹಿಸಿದ೦ತೆ, ಅಲ್ಲಿಗೆ ಬಂದಾಗ, ಅವಳ ಜೊತೆಗೆ ಅಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ಹಟ ಮಾಡಿ ಹೊರಟಿದ್ದಳು. ಗಂಗಿಯ ಭದ್ರ ಕಾವಲಿನಲ್ಲಿ ಯಾವ ಅಪಾಯವನ್ನೂ ಊಹಿಸದ ಅಜ್ಜಿ, ಹಿರಿಯರ ಕಟ್ಟಪ್ಪಣೆಗೆ ಮತ್ತು ಕಾವಲಿಗೆ ಹೆದರಿ ಪರಸ್ಪರರನ್ನು ಕಟ್ಟಿಕೊಳ್ಳುವ ಆಸೆ ಬಿಟ್ಟಿದ್ದಾರೆಂದು ನಂಬಿದ ಅಜ್ಜಿ, ಸಲೀಸಾಗಿ ಅನುಮತಿಸಿದ್ದಳು. ತಮ್ಮ ದೊಡ್ಡಮನೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ಮದುವೆಗೆ ಜಮಾಯಿಸತೊಡಗಿದ ಜನರ ಊಟೋಪಚಾರದ ಉತ್ಸಾಹದಲ್ಲಿ ತೊಡಗಿಕೊಂಡಿದ್ದ, ದುಂಡ್ಯಾನ ಮನೆಯವರು, ಚೆನ್ನಿ ಅಜ್ಜಿಯ ಮನೆಯಲ್ಲೆ ಇದ್ದಾಳೆ, ಮದುವೆಯ ಹಿಂದಿನ ದಿನ ಅಜ್ಜಿಯ ಜೊತೆಗೆ ಬರುತ್ತಾಳೆ, ಎಂಬ ಅನಿಸಿಕೆಗಳೊಂದಿಗೆ ತಂತಮ್ಮ ಕೆಲಸಗಳಲ್ಲಿ ಮುಳುಗಿದ್ದರು. ಅವಳಿಗಾಗಿ ನಿಜವಾದ ಹುಡುಕಾಟ ಆರ೦ಭಿಸಿದ್ದು, ಅವಳು ಮನೆ ಬಿಟ್ಟೇ ಹೋಗಿದ್ದಾಳೆ ಎಂಬ ಸತ್ಯ ಮನದಟ್ಟಾಗಿದ್ದು, ಗಾಬರಿ, ಸಿಟ್ಟು, ಅವಮಾನ ಇತ್ಯಾದಿ ಭಾವಾವೇಶಗಳು ಧುತ್ತನೆ ಚೆನ್ನಿಯ ಹೆತ್ತವರನ್ನು ಆಕ್ರಮಿಸಿದ್ದು ಮದುವೆಯ ಹಿಂದಿನ ಮಧ್ಯಾಹ್ನ ಸಾಂತಜ್ಜಿ ಬಂದು ಕೇಳಿದಾಗಲೇ. ಅವಳು, “ಚೆನ್ನಿ ಎಲ್ಲೈತೆ, ಆಕಿದು ಮಕಾನೇ ಕಾಣಿಸ್ತಿಲ್ಲಲ”, ಎಂದು ಹೇಳಿದಾಗ, ಚೆನ್ನಿಗಾಗಿ ಹುಡುಕಾಟ ಆರಂಭಗೊಂಡಿತು. ಅವಳು ಎಷ್ಟು ಹೊತ್ತಿನಲ್ಲಿ ಗಂಗಿಯ ಜೊತೆ ಇಲ್ಲಿಗೆ ಹೊರಟಿದ್ದಳು, ಎಲ್ಲಿ ತಪ್ಪಿಸಿಕೊಂಡಳು, ಅವಳನ್ನು ಕಡೆಯ ಕ್ಷಣ ಯಾರು ಎಲ್ಲಿ ಕಂಡರು, ಇತ್ಯಾದಿಗಳೆಲ್ಲದರ ಬಗ್ಗೆ ಚರ್ಚೆ, ಮಾತುಕತೆ, ತನಿಖೆ, ಇತ್ಯಾದಿ ಆದಾಗ, ಅಜ್ಜಿಯ ಮನೆಯಿಂದ ಗಂಗಿಯ ಜೊತೆಗೆ ಹೊರಗೆ ಮಾತ್ರವಷ್ಟೆ ಬಂದ ಚೆನ್ನಿ, ನಿಜವಾಗಲೂ ಗಂಗಿಯ ಜೊತೆಗೆ ಬ೦ದಿರಲೇ ಇಲ್ಲ, ಮತ್ತು ಆ ಗಂಗಿಗೆ, ಅಜ್ಜಿ ಹಾಗೂ ಮೊಮ್ಮಗಳ ಮಾತು-ಒಪ್ಪಂದಗಳ ಬಗ್ಗೆ ಏನೇನೂ ಗೊತ್ತಿರಲೇ ಇಲ್ಲ, ಎಂಬೆಲ್ಲ ಸಂಗತಿಗಳು ಬಯಲಾದವು. ಹೆತ್ತವರ ಎಲ್ಲ ಕಟ್ಟು-ಕಾಯಿದೆಗಳನ್ನೂ ಮೌನವಾಗಿ ಒಪ್ಪಿದವಳಂತಿದ್ದ ಚೆನ್ನಿ, ಸೂಕ್ತ ಸಮಯದಲ್ಲಿ ಸದ್ದಿಲ್ಲದೆ ಹಾರಿ ಹೋಗಿದ್ದಳು. ಮದುಮಗಳೇ ಇಲ್ಲದೆ ಮದುವೆ ನಿಂತು ಹೋಯಿತು. +ರುದ್ರಿ ತನಗೂ ಏನೂ ತಿಳಿಯದವಳಂತೆ, ಸುದ್ದಿಯನ್ನು ಹೊಸ ಅಚ್ಚರಿಯಲ್ಲಿ ಕೇಳಿದಳು. “ಉಡ್ಗೀನೆ ನಾಪತ್ತೆ ಅಂತಾ? ಎಲ್ಲಿಗೋಗಿದ್ದೀತು ಅಂತೀನಿ”? ಎಂದು ಪ್ರಶ್ನೆ ಹಾಕಿದಳು. ಒಳಗೊಳಗೇ ನಕ್ಕಳು. ಆದರೂ ದುಂಡ್ಯಾನ ಕಡೆಯ ಜನ, ಚೆನ್ನಿಯ ಇಷ್ಟ-ಇರುವಿಕೆಯ ಜಾಗಗಳಲೆಲ್ಲ ಹುಡುಕಾಡಿ ನಿರಾಶರಾಗುತ್ತ ಹೋದಂತೆಲ್ಲ, ಸಿವೇಸನ ಮೇಲೆ ಅನುಮಾನ ಏಳತೊಡಗಿತು. ಸಿವೇಸ ಊರಿಗೆ ಬಂದ ದಿನ, ಹೊರಟ ಘಳಿಗೆ, ಹೋದ ವಿಧಾನ ಇತ್ಯಾದಿ ತನಿಖೆಗಳು ಹೆಚ್ಚಾದವು. ಬಂಡೆಯ ಮನಸ್ಸಿನ ದುಂಡ್ಯಾನ ಗುಂಪಿನ ಮುಂದೆ, ರುದ್ರಿ ಏನೇ ಉತ್ತರ ಕೊಟ್ಟರೂ ಸಿವೇಸ ಮಾತ್ರನಲ್ಲದೆ ರುದ್ರಿಯ ಮೇಲೂ ಅವರ ಅನುಮಾನ, ಆಕ್ರೋಶ ಹೆಚ್ಚುತ್ತ ಹೆಚ್ಚುತ್ತ ಅವಳನ್ನು ಕೊಚ್ಚಿಬಿಡಬೇಕೆಂಬ ಮಟ್ಟಕ್ಕೆ ಹೋಯಿತು. ಚೆನ್ನಿ ಸಿವೇಸನೊಂದಿಗೆ ಹಾರಿಬಿಟ್ಟಿದ್ದಾಳೆ ಎಂಬುದು ಮನಸ್ಸಿಗೆ ಖಾತರಿಯಾದಂತೆಲ್ಲ ಸ್ನೇಹ, ಪರಿಚಯ-ಸಂಬಂಧಗಳ ಮುಂದೆ ಅವರಿಗೆ ಆಗಲಿರುವ ಅವಮಾನ, ಅಸಹಾಕತೆಗಳೆಲ್ಲ, ಸಿಟ್ಟಿನ ದ್ರವವಾಗಿ, ನರನರಗಳಲ್ಲೆಲ್ಲ ಭರ್ರನೆ ಹರಿದಿತ್ತು. ಮೂಳೆಗಳು ಥರಥರ ನಡುಗಿದ್ದವು. ಕುಗ್ರಾಮದ ಆ ದುಡ್ಡಿನ ವ್ಯಕ್ತಿಗೆ ಅಶಿಕ್ಷಿತ ಜನಗಳ ಬಲವೂ ಸಿಕ್ಕಿತ್ತು. ಧಿ೦ ಧಿಂ ಎನ್ನುವ ಶಬ್ದದೊಂದಿಗೆ ಭೂಮಿ ನಡುಗಿಸುತ್ತ ಹತ್ತಿರ ಹತ್ತಿರ ಬರತೊಡಗಿದ ಅವರ ಆ ಹೆಜ್ಜೆಗಳೇ, ರುದ್ರಿಯನ್ನು ಭಯದ ತಿರುಗಣಿಯಲ್ಲಿ ಹಾಕಿ ತಿರುಗಿಸಿತ್ತು. ಕೈಗೆ ಸಿಕ್ಕ ರುದ್ರಿಯ ಮೇಲೆ, ಹಿಂದೆ ಮುಂದೆ ಯೋಚಿಸದೆ, ಅವರ ಕೊತಕೊತನೆ ಕುದಿವ ಸಿಟ್ಟಿನ ಆರ್ಭಟ ಆರಂಭಗೊಂಡಿತು. ‘ಅಲ್ಕಾ ರಂಡೆ, ನಿನ್ ಮಗನ್ನ ಒಸಿ ಅದ್‌ಬಸ್ತಿನಲ್ಲಿಡಕ್ಕಾಗ್ಲಿಲ್ಲ ನಿಂಗೆ? ಎಸ್ಟು ದಿನ್‌ದಿ೦ದ ಇಂಗೆ ಅವ್ರಿಬ್ರುನ್ನೂ ಇಲ್ಲಿಂದ ಓಡಿಸ್ಬೇಕಂತ ಪಿಲಾನ್ ಮಾಡಿದ್ದಿ? ಎಲ್ಲಿದ್ದಾರಿಗ್ಯೋಳು? ಯೋಳ್ದಿದ್ರೆ ಚರುಮ ಸುಲೀತೀವಿ, ಕುತ್ಗೆ ತರ್ದು ಆಕ್ತೀವಿ”, ಇತ್ಯಾದಿ ಬೈಗುಳಗಳಿಂದ ಆರಂಭಗೊಂಡು, ಕೋಲಿನಿ೦ದ ಹೊಡೆಯುವುದರಲ್ಲಿ ಮುಂದುವರಿಯಿತು. ಅವಳು ಎದುರಿಗಿದ್ದವರ ಎದೆ ಕರಗುವಂತೆ ಅಂಗಲಾಚಿದ್ದಳು, “ಇದ್ರಾಗೆ ನಂದೇನೂ ತೆಪ್ಪಿಲ್ರೋ ಯಪ್ಪ, ತಿಂದ ಉಲೀನ ಬಿಟ್ಟು ಎಲ್ಲೋ ಬಿಲದಾಗಿರೋ ಇಲೀಗ್ ಯಾಕೆ ಒದೀತೀರಿ”?ಎಂದು. ಅದರಿಂದ ಅವರ ಸಿಟ್ಟು ಇನ್ನಷ್ಟು ಏರಿ, ಕಾಡುಮೃಗದಂತಾಗಿದ್ದರು. “ನ೦ ಉಡುಗೀನ ನಿನ್ ಸೊಸಿ ಮಾಡ್ಕಂಡೇಟಿಗೆ ನೀನು ನಂ ಜಾತಿ ಆಗ್ಬಿಡಲ್ಲ. ಆ ಆಸಿ ಇದ್ರೆ ಬುಟ್ಬುಡು. ಬಗ್ಳು ಎಲ್ಲಿಗೆ ಓಡ್ಸಿದಿ ಅವ್ರನ್ನ””? ಎಂದು ಮಾತು ಮಾತಿಗೂ ಒಂದೊಂದರಂತೆ ಹೊಡೆತ ಹಾಕಿದರು. ಅವಳು ಮತ್ತೂ “ಗೊತ್ತಿಲ್ಲ”” ಎಂದೇ ಹೇಳಿದಾಗ, ಅವಳಿಂದ ಬಾಯಿ ಬಿಡಿಸಲೇಬೇಕೆಂಬ ಹಟ, ಓಡಿಹೋದ ಮಗಳನ್ನು ಎಳೆದುತಂದು ಮದುವೆ ಮಾಡಲೇಬೇಕೆಂಬ ಹಟದಿಂದ ಕೈಗೆ ಸಿಕ್ಕಿದ ಆ ಒಬ್ಬಂಟಿ ಹೆಂಗಸಿನ ಬಟ್ಟೆಗಳನ್ನು ಒಂದೊಂದಾಗಿ ಎಳೆದು ತೆಗೆದರು. “ಎಲ್ಲದಾರೆ”? ಎಂದು ಕೇಳಿದ್ದನ್ನೇ ಮತ್ತೆ ಮತ್ತೆ ಕೇಳಿದರು. ವಿವೇಕವಿಲ್ಲದ ಜಾತ್ಯಾಂಧರು, ತಮ್ಮ ರಾಕ್ಷಸ ರೋಷದ ಈ ದುರ್ವರ್ತನೆಯನ್ನೇ ಪೌರುಷವೆಂದು ಭಾವಿಸಿದರು. ರುದ್ರಿಗೆ ಖಚಿತವಿಲ್ಲದಿದ್ದರೂ, ಮಕ್ಕಳು ಇರಬಹುದಾದ ಜಾಗದ ಬಗ್ಗೆ ಊಹೆ ಇತ್ತು. ಅಷ್ಟನ್ನೇ ಅವಳು ಹೇಳಬಹುದಿತ್ತು. ಆದರೆ, ಅವರಿಬ್ಬರೂ ಅಲ್ಲಿ ನಿಜವಾಗಿ ಸಿಕ್ಕಿಬಿಟ್ಟು, ಈ ಚಂಡಾಲರು ಆ ಎಳೆಯ ಪ್ರೇಮಿಗಳ ರಕ್ತ ಹೊರಗೆಳೆದರೆ, ಎಂಬ ಅಗಾಧ ಭಯವೂ ಎಲ್ಲಕ್ಕಿಂತ ಹೆಚ್ಚಿಗೆ ಇತ್ತು. “ಇವ್ರ ಜಾತಿ ನಾಸ್ನಾಗಲಿ, ಮೆಚ್ಕಂಡವೆಲ್ಡೂ ಮಕ್ಳು ಎಲ್ಲಾದ್ರೂ ಸುಕಾಗಿರಲಿ”, ಎಂಬ ಒಳ ಆಸೆಯೂ ಇತ್ತು. ಅದರಿಂದಲೇ ಅವಳು ಬಾಯಿ ಬಿಡಲಿಲ್ಲ. ಬಿಟ್ಟಾಗಲೆಲ್ಲ ಹೇಳಿದ್ದು ಒಂದೇ ಮಾತು, “ನ೦ಗೊತ್ತಿಲ್ಲ. ದಿಟಾಗ್ಲೂ ಏನ೦ದ್ರೆ ಏನೂ ಗೊತ್ತಿಲ್ಲ. ನನ್ ಬಿಟ್ ಬಿಡ್ರೊ ಯಪ್ಪಾ”, ಎಂದು ಮತ್ತೆ ಮತ್ತೆ ಅಂಗಲಾಚಿದ್ದಳು. ಆದರೆ ಎದುರಿದ್ದವರ ಧಮನಿಗಳಲ್ಲಿ ರಕ್ತಕ್ಕೆ ಬದಲು, ಸಿಟ್ಟಿನ ರಸ ಹರಿಯುತ್ತಿದ್ದುದರಿಂದ ಅವರಿಗೆ ಅವಳ ಆ ಅಳು ಕಾಣಿಸಲೇ ಇಲ್ಲ. ಅಂಗಲಾಚುವಿಕೆ ಕಿವಿಗೆ ಕೇಳಿಸಲೇ ಇಲ್ಲ. ಇನ್ನು ಹೃದಯ ಅಥವಾ ಮನಸ್ಸು? ಅದು ಅವರಿಗೆ ಆಗ ಇರಲೇ ಇಲ್ಲ. ಅವರೆಲ್ಲ ಸೇರಿ ದರದರನೆ ಅವಳನ್ನು ಬೀದಿಗೆಳೆದರು, ಅವಳ ಮೇಲೆ ಉಳಿದೆರಡು ಬಟ್ಟೆಗಳನ್ನೂ ಸೆಳೆದು ನೆಲಕ್ಕೆ ಹಾಕಿದರು. ತನ್ನೆರಡು ಅಂಗೈಗಳಿಂದ ಐದುಮೂರರ ದೇಹವನ್ನು ಮರೆಮಾಡುವ ಪ್ರಯತ್ನದಲ್ಲಿ ಮುದುರಿಕೊಳ್ಳುತ್ತಿದ್ದವಳನ್ನು ಒ೦ದೆಡೆ ಕುಳಿತು ಕೊಳ್ಳುವುದಿರಲಿ, ನಿಲ್ಲಲೂಗೊಡದೆ, ಬೆನ್ನು, ಭುಜ, ಕೈಯ್ಯಿ, ಕಾಲುಗಳ ಮೇಲೆ ಬಾರಿಸಿ ಬಾರಿಸಿ, ಮುನ್ನಡೆಯಲು ಒತ್ತಾಯಿಸಿದರು. ನೋವಿನಿಂದ ಕಿರುಚಿ, ಕಿರುಚಿ, ಅವಮಾನದ ಆಗಸವೇ ಹರಿದು ಮೇಲೆ ಬಿದ್ದಂತೆ ನೆಲಕ್ಕಂಟಿಕೊಳ್ಳುತಿದ್ದ ಕಾಲುಗಳನ್ನು, ಕೀಳಲಾರದೆ ಕಿತ್ತು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದಿದ್ದಳು ರುದ್ರಿ. +ಊರ ಹೊರಗಿನ ತೋಟದವರೆಗೆ ಹಾಗೆ ಬೆತ್ತಲೆ ನಡೆದವಳ ಸುತ್ತ ಊರಿಗೇ ಊರೇ ಸೇರಿ ನೋಡಿತ್ತು. ಯಾರಿಗೂ ಹೇಳದೆ, ಯಾವ ವ್ಯವಸ್ಥೆಯೂ ಮಾಡದೇ ಅದೊಂದು ದೊಡ್ಡ ಮೆರವಣಿಗೆಯಾಗಿ ತಾನಾಗಿ ಪರಿಣಮಿಸಿತ್ತು. ಮೆರವಣಿಗೆಗೆ ಅಡ್ಡ ಬಂದ ಒಂದಿಬ್ಬರು ಹಿರಿಯರಿಗೂ, ರುದ್ರಿಯ ಇದ್ದೊಬ್ಬ ಭಾವನಿಗೂ ಕೆಲವು ಏಟುಗಳು ಬಿದ್ದವಷ್ಟೆ. ಆದರೆ ಮೆರವಣಿಗೆ ನಿಲ್ಲಲಿಲ್ಲ. ಹೊಡೆತ ತಪ್ಪಲಿಲ್ಲ. ಅಷ್ಟು ಮಾಡಿದರೂ ಅವಳಿಂದ ಮಾತ್ರ, ಚೆನ್ನಿಯ ಬಗ್ಗೆ ಒಂದೇ ಒಂದು ಸುಳಿವಿನ ಸೂಚನೆಯೂ ಸಿಗಲಿಲ್ಲ. ಸುಸ್ತಾದ ಸಿಟ್ಟಿನ ಜನ, ಅವಳನ್ನು ಅಲ್ಲೇ ಬಿಟ್ಟುಹೋದರು. ಬೀದಿಯಲ್ಲಿ ಎಸೆದಂತೆ, ಅರೆ ಎಚ್ಚರದಲ್ಲಿ ಬಿದ್ಡಿದ್ದವಳನ್ನು, ಅವಳ ಓರಗಿತ್ತಿ ತನ್ನ ಮನೆಗೆ ಕರೆದೊಯ್ದು, ಅವಳ ಮೈಯ ಎಲ್ಲ ಗಾಯಗಳಿಗೆ, ಎಣ್ಣೆ ಹಚ್ಚಿ ಆರೈಕೆ ಮಾಡಿದ್ದರೂ, ಇಡೀ ಶರೀರದ ಚರ್ಮ ಸುಲಿದು ಭಗಭಗನೆ ಉರಿಯುತ್ತಿತ್ತು. ಅದರೊಂದಿಗೆ ಅವಳೊಳಗಿನ ಮನಸ್ಸೂ ಕೂಡ. ಹಗಲಿನಲ್ಲಿ ಅವಳ ಮೇಲೆ ಅವರು ಎಳೆದು ಹಾಕಿದ್ದ ಅವಮಾನದ ಆಕಾಶ, ಕತ್ತಲಾಗುವ ಹೊತ್ತಿಗೆ ಅವಳ ಸುತ್ತ ಅಕ್ರೋಶದ ನಿಗಿನಿಗಿ ಕೆಂಡಗಳನ್ನು ಹೊತ್ತಿಸಿದ್ದುವು. ಕಣ್ಣಲ್ಲಿನ ದ್ವೇಷ ಬೆಂಕಿಯ ದೊಂದಿಯಾಗಿತ್ತು. +“ಇಲ್ಲ ಆ ಭಾಡ್ಯಾಗಳನ್ನು ಸುಂಕೆ ಬಿಡಂಗಿಲ್ಲ ನಾನು. ನನ್ನ ಮಾನಾ ಸುಟ್ಟೋರ್ದು, ಮನೀಮಟ ಸುಡ್ತೀನಿ. ಅವ್ರ ಜಾತಿ ನೆಗ್ದುಬಿದ್ದೋಗ್ಲಿ. ಅವ್ರ ವಂಸ ಎಕ್ಕುಟ್ಟೋಗ್ಲಿ”, ಎಂದು ಒ೦ದೇ ಸಮನೆ ಶಪಿಸುತ್ತಿದ್ದ ಅವಳ ಒಳಮನಸ್ಸು, ದುಂಡ್ಯಾನ ವ೦ಶವನ್ನೇ ನಿರ್ನಾಮ ಮಾಡುವ ಮಾರ್ಗಗಳನ್ನು ಹುಡುಕತ್ತಲಿತ್ತು. ಹೊಡೆತಗಳಿಂದ ಜಜ್ಜಿದ ಅವಳ ದೇಹ, ಮರುದಿನ ಕಳೆದು, ಸರಹೊತ್ತಾಗುವವರೆಗೂ ಸತ್ತಂತೆಯೇ ಬಿದ್ದಿತ್ತು. +ಅವಮಾನದ ನೆಲದಿಂದ ಹುಟ್ಟುವ ಛಲಕ್ಕಿಂತ ದೊಡ್ಡ ಶಕ್ತಿ ಬೇರೆ ಯಾವುದಿರಲು ಸಾಧ್ಯ? ಆ ಶಕ್ತಿಯೇ ಅವಳಿಗೆ ಆ ಹಳ್ಳಿ ಬಿಟ್ಟು ಓಡುವ ಚೈತನ್ಯವನ್ನೂ, ದುಂಡ್ಯಾನ ಕೊಟ್ಟಿಗೆಗೆ ಬೆಂಕಿ ಇಡುವ ಧೈರ್ಯವನ್ನೂ ಒದಗಿಸಿಕೊಟ್ಟಿತ್ತು. ದುಂಡ್ಯಾನ ಮನೆಗೆ ಅಂಟಿಕೊಂಡಂತೆಯೇ ಇದ್ದ ದನದ ಕೊಟ್ಟಿಗೆ ತೆಂಗಿನ ಮಡಿಲುಗಳಿಂದ ಮಾಡಿದ್ದು. ಹಾಗೂ ಅವನ ಮನೆ, ಬಿದಿರು ಮತ್ತು ಮರದ ತೊಲೆಗಳಿಂದ ಕಟ್ಟಿದ್ದು. ಬಿಸಿ ತಗುಲಿದರೆ ಬೆಂಕಿಯಾಗಿ ಬಿಡುವ ವಸ್ತುಗಳು. ಅವಳ ಯೋಚನೆ ಇದನ್ನೆಲ್ಲ ನೆನೆಸಿ ನಕ್ಕಿತು. ರಾತ್ರಿ ಎರಡು ಘಂಟೆ ಇರಬೇಕು. ರುದ್ರಿ ಮೆಲ್ಲಗೆ ಮೇಲೆದ್ದಳು. ಅವಳೆದೆಯ ಡವಡವ ಬಿಟ್ಟರೆ, ಇಡೀ ಹಳ್ಳಿಯ ಎದೆಬಡಿತವೇ ನಿಂತು ಹೋದಂತಹ ನಿಶಬ್ದ. ತಾನು ಇಡುವ ಬೆಂಕಿ, ಒಂದು ಫರ್ಲಾಂಗ್ ದೂರವಾದರೂ ತಾನು ಓಡುವ ಹೊತ್ತಿಗೆ, ಕೊಟ್ಟಿಗೆಗೆ ತಾಕುವ೦ತೆ ಉಪಾಯ ಮಾಡಿದ್ದಳು ಅವಳು. ತನ್ನೊಂದಿಗೆ ತಂದಿದ್ದ, ಸೀಮೆ‌ಎಣ್ಣೆಯಲ್ಲಿ ಅದ್ದಿದ ಉದ್ದನೆಯ ಹಗ್ಗವನ್ನು, ದುಂಡ್ಯಾನ ದನದ ಕೊಟ್ಟಿಗೆಗೆ ಕೆಲವಾರು ಮಾರುಗಳ ದೂರದಲ್ಲಿ ಒಂದರ ನಂತರ ಒಂದರಂತೆ ಒಂದಕ್ಕೊಂದು ತಗಲಿಸಿ ಇಟ್ಟಳು. ಮೊದಲನೆಯದಕ್ಕೆ ಕಡ್ಡಿ ಗೀರಿದ್ದೇ, ಸದ್ದಡಗಿಸಿ ಓಡತೊಡಗಿದಳು. ಕುದುರೆ ವೇಗದಲ್ಲಿ, ಕಡು ಕತ್ತಲ ಆ ರಾತ್ರಿಯಲ್ಲಿ, ತನ್ನ ಕಣ್ಣ ಬೆಂಕಿಯ ಬೆಳಕಿನಲ್ಲಿ, ಪುಟ್ಟ ಗಂಟು ಹೊತ್ತು ಓಡು ನಡಿಗೆಯಲ್ಲಿ, ಬೆಟ್ಟದ ಬುಡದ ರೆಸ್ತೆಯಲ್ಲದ ರಸ್ತೆಗೆ ಬ೦ದಳು. +ಶತಶತಮಾನಗಳ ಸುಖವನ್ನು ಸುರಿದರೂ, ಸಾವಿರಾರು ಸೀರೆಗಳನ್ನು ಸುತ್ತಿಕೊಟ್ಟರೂ, ಸ್ವರ್ಗದ ತಂಪನ್ನೆಲ್ಲ ಧಾರೆ ಎರೆದರೂ ಅಳಿಸಲಾಗದ ಆ ಅವಮಾನದೊಂದಿಗೆ, ಅದೇ ಹಳ್ಳಿಯಲ್ಲಿ ಜೀವಿಸುವುದು ಹೇಗೆ? ಎಲ್ಲಿ ನಿಂತರೂ, ಅಡಿಯಿಂದ ಮುಡಿಯವರೆಗೆ ತಾಡಪಾಲಿನಲ್ಲಿ ಸುತ್ತಿ ಮುಚ್ಚಿದರೂ ಬಟಾ ಬಯಲಿನಲ್ಲಿ ವಿವಸ್ತಳಾಗಿಯೇ ಉಳಿದು ಬಿಟ್ಟಂತಹ ಅಸಹನೀಯ ಅವಮಾನದ ಅನುಭವ. ಅದನ್ನು ಮರೆಯಲು ಆ ಹಳ್ಳಿಯನ್ನೇ ಬಿಟ್ಟು ಮಗನನ್ನು ಹುಡುಕಿಕೊಂಡು ಹೊರಟಿದ್ದಳು ಅವಳು. +ಎಷ್ಟು ಮೈಲು ನಡೆದಿದ್ದಳೋ, ಇನ್ನು ತಾನು ಯಾರ ಕೈಗೂ ಸಿಗದಷ್ಟು ದೂರ ಬಂದಿದ್ದೇನೆಂಬ ಸಮಾಧಾನದ ನಿಟ್ಟುಸಿರು ಹೊರಬಿದ್ದಾಗ ಒಮ್ಮೆ ತಿರುಗಿ ನೋಡಿದಳು ರುದ್ರಿ. ಆಕಾಶಕ್ಕೆ ದೂರು ಹೇಳುವಂತೆ ಹಲವಾರು ನಾಲಿಗೆಗಳನ್ನು ಮೇಲೆ ಚಾಚಿ, ಕುಣಿಯತೊಡಗಿತ್ತು ಬೆಂಕಿ. ಯಾರದೋ ಕೂಗು, ಗಲಾಟೆಗಳು, ತೀರ ಕ್ಷೀಣವಾಗಿ ಕೇಳಿಸುತ್ತಿದ್ದವು. “ಅಂಬಾ,.. ಮೆ” ಎಂದು ಕೂಗುತ್ತಿದ್ದ ದನ, ಕುರಿಗಳ ಆರ್ತನಾದ, ಅವಳ ಅಂತರಂಗದ ಗಾಯಗಳಿಗೆ ಸುಖದ ಮುಲಾಮು ಹಚ್ಚಿತು. ಒಳಗೆ ಸುತ್ತುತ್ತಿದ್ದ ದ್ವೇಷದ ಹೊಗೆಗೆ, ಸಮಾಧಾನದ ನೀರು ಸಿಂಪಡಿಸಿದಂತೆ ಸ್ವಲ್ಪ ಮಟ್ಟಿಗೆ ಉಪಶಮನಗೊಳ್ಳತೊಡಗಿತು. “ದುಂಡ್ಯಾ.. ನೀನು ಸಾಯಲ್ಲ ಅಂತ ನ೦ಗೊತ್ತು. ಬ್ಯಾಡ. ನಿನ್ನ ಕಣಜ, ಪೊಗದಸ್ತಾದ ಜಾನ್‌ವಾರ್‌ಗಳು, ಸುಟ್ಟು ನಿನ್ನ ಒಟ್ಟೆಗೆ ಬೆಂಕಿ ಬಿದ್ದಂಗಾಗತೈತಲ್ಲ. ಅಸ್ಟು ಸಾಕ್ಲಾ ನಂಗೆ”, ಎಂದು ಮನದಲ್ಲೇ ಅಟ್ಟಹಾಸದ ಗುಟುರು ಹಾಕಿದ್ದಳು. ಏನೂ ಮಾಡದ ಆ ಮುಗ್ಧ ಜಾನುವಾರುಗಳಿಗೂ ಜೀವವಿದೆ, ಅವಕ್ಕೂ ನೋವು, ತಾಪಗಳಿರುತ್ತವೆ, ಎಂಬುದು ರುದ್ರಿಯ ಮನಸ್ಸಿನಲ್ಲಿ ಆಗ ಬರಲೇ ಇಲ್ಲ. ನೆನೆಸಿಕೊಂಡು ಈಗ ಪಶ್ಚಾತ್ತಾಪ ಪಡುತ್ತಾಳೆ ರುದ್ರಿ. ಆ ರಾತ್ರಿ, ಬೆಂಕಿಯನ್ನು ನೋಡುತ್ತಿದ್ದ ಅವಳ ಕಣ್ಣು, ಒಳಗಿನ ದ್ವೇಷ ಕುಗ್ಗಿಸಿ, ನೆಮ್ಮದಿಯ ನಗು ನಕ್ಕಿತ್ತು. ಹೆಚ್ಚು ಹೊತ್ತು ಈ ಸುಖವನ್ನು ಅನುಭವಿಸುವಂತಿರಲಿಲ್ಲ ಅವಳು. ಬೆನ್ನಟ್ಟಿ ಬರಬಹುದಾದ ದುಂಡ್ಯಾನ ಜನರ ಕೈಗೆ ಮತ್ತೆ ಸಿಕ್ಕಿಕೊಳ್ಳದಂತೆ ತಪ್ಪಿಸಿಕೊಳ್ಳಬೇಕಿತ್ತು. ಬದುಕಿನ ಈ ಘಟ್ಟವನ್ನು ಮರೆತು ಹೊಸ ಬದುಕಿಗೆ ದಾರಿ ಮಾಡಿಕೊಳ್ಳಬೇಕಿತ್ತು. ಮುಂದಿನದು ನೆನಪಾದದ್ದೇ, ತನ್ನ ಹಳ್ಳಿಗೆ ಬೆನ್ನು ತಿರುಗಿಸಿ, ದಡದಡನೆ ನಡೆದಳು ಅವಳು. +ಬೆಳಕಿನ ಕಿರಣಗಳು ಹಗಲಾಗಲೆಂದು ಕಣ್ಣುಜ್ಜಿಕೊಳ್ಳುತ್ತ ಮೇಲೇಳುವ ಹೊತ್ತಿಗೆ, ರುದ್ರಿ ತನ್ನ ಹಳ್ಳಿಯಿಂದ ಬಹಳ ದೂರ ಬಂದಿದ್ದಳು. ಸಂತೂರುದೊಡ್ಡಿಯ ಕಡೆಗೊಮ್ಮೆ, ದಸವರದ ಕಡೆಗೆ ಇನ್ನೊಮ್ಮೆ, ಮತ್ತೆ ಯಾವಾಗಲೋ ಚಕ್ಕನದೊಡ್ಡಿ, ಅಬ್ಬೂರುದೊಡ್ಡಿ, ತಿಟ್ಟಮಾರನಹಳ್ಳಿ, ಚನ್ನಪಟ್ಟಣ, ಹೀಗೇ ಎಲ್ಲಿ ಕಾಲು ಬಿದ್ದರಲ್ಲಿ ನಡಿಗೆ. ನಡೆದ ನೆಲವೇ ಹಾದಿ. ಉಳಿದದ್ದೇ ಜೀವನ ಎಂಬಂತೆ, ಒಂದು ಮಾರ್ಗ, ಒಂದು ವಾಹನ, ಒಂದು ಊರು, ಒಂದು ಜನಕ್ಕೆ ಅಂಟಿಕೊಳ್ಳದೆ ಒಂದೇ ಸಮನೆ, ನಡೆದೇ ನಡೆದಳು. ಮುಂದೆ ಮುಂದೆ ಹೋದಳು. ಎದುರಿಗಿದ್ದವರು ದುಂಡ್ಯಾನಿಗೆ ಯಾವ ಬಂಧುವಾಗಿರುತ್ತಾರೋ, ಯಾವ ದೇಹದೊಳಗೆ ದುಂಡ್ಯಾನ ಸ್ನೇಹವಿರುತ್ತದೋ, ಎಂಬ ಭಯದಲ್ಲಿ, ತಲೆ ಎತ್ತಿ, ಎಲ್ಲೂ ಯಾರನ್ನೂ, “ಇದು ಯಾವ ಊರು?”, ಎಂದು ಕೇಳಲಿಲ್ಲ. ತನ್ನದು ಯಾವ ಹಳ್ಳಿ ಎಂದೂ ಹೇಳಲಿಲ್ಲ. ಯಾರಿಗೂ ಸರಿಯಾಗಿ ಮುಖ ತೋರಿಸಲಿಲ್ಲ. ಓರಗಿತ್ತಿ, ಪಕ್ಷಕ್ಕಾಗುವಷ್ಟು ಕಟ್ಟಿಕೊಟ್ಟ ರೊಟ್ಟಿ, ಚಟ್ನಿಪುಡಿಯ ಗಟ್ಟಿ ಆಹಾರದಿಂದಾಗಿ, ತನ್ನ ಕೆಲ ದಿನಗಳ ಪ್ರಯಾಣವನ್ನು ಯಾರ ಹ೦ಗಿಗೂ ಬೀಳದೇ ಮುಗಿಸಿದ್ದಳು ರುದ್ರಿ. +ಇನ್ನು ದುಂಡ್ಯಾನ ಜನ ಹಿಂಬಾಲಿಸುವುದಿಲ್ಲ, ತಾನಿನ್ನು ಅವರ ಕೈಗೆ ಸಿಕ್ಕುವುದಿಲ್ಲ, ಎಂಬ ಅನಿಸಿಕೆ ಧೃಡವಾದ ಸಮಯಕ್ಕೆ ಅವಳು ತನ್ನ ಹಿರಿಯ ಅಣ್ಣನ ಮನೆಯ ಹೊಸ್ತಿಲ ಒಳಹೊಕ್ಕಿದ್ದಳು. ಬಳಲಿ ಬಾಡಿಹೋದ ತಂಗಿಯ ತಲೆಯ ಮೇಲೆ ಅವಳಣ್ಣ ಅಕ್ಕರೆಯಿಂದ ಕೈ ನೇವರಿಸಿದ್ದಷ್ಟೆ ಗೊತ್ತು ಅವಳಿಗೆ. ಆ ಸ್ಪರ್ಷದೊಳಗಿದ್ದ ಪ್ರೀತಿಯ ತಂಪು, ಎದೆಯ ಮೂಲಕ ಕರುಳವರೆಗೆ ಇಳಿದು, ಆ ವರೆಗಿನ ಎಲ್ಲ ಭಯ, ಆಯಾಸಗಳನ್ನೂ ಅಳಿಸಿ ನಿಶ್ಚಿಂತೆಯ ಹಾಸಿಗೆಯಲ್ಲಿ ಮಲಗಿಸಿತ್ತು. ತಾನೀಗ ಕ್ಷೇಮವಾದ ಮತ್ತು ಭದ್ರವಾಗಿ ಕಾಪಾಡುವ ಅಣ್ಣನ ಕೋಟೆಯೊಳಗೆ ಸೇರಿದ್ದೇನೆ ಎಂಬ ಭರವಸೆಯ ಭಾವನೆಯೇ, ಅವಳು ಈ ವರೆಗೆ ಕಟ್ಟಿಕೊಂಡಿದ್ದ ಅಸಹನೆ, ಆಯಾಸ, ಅಳು, ಎಲ್ಲವನೂ ಹೊರಹಾಕಿತ್ತು. ವಿವಸ್ತಳನ್ನಾಗಿಸಿ ಮೆರವಣಿಗೆ ಮಾಡಿದ್ದನ್ನು ಬಿಟ್ಟು ಉಳಿದೆಲ್ಲವನ್ನೂ ಅಣ್ಣನ ಮುಂದೆ ಹೇಳಿಕೊಂಡು ಹಗುರಾದವಳು, ಹೊಟ್ಟೆ ತುಂಬ ತಿಂದು ಒಂದು ವಾರದ ನಿದ್ದೆ ಮುಗಿಸಿ, ಅಣ್ಣನ ಕೈ ಹಿಡಿದು ಮೇಲೆದ್ದಾಗ, ಬೆಂಗಳೂರಿನ ಸಿವೇಸನ ಮನೆಯಲ್ಲಿದ್ದಳು. +* +* +* +ಮಗ-ಸೊಸೆ, ರುದ್ರಿಯನ್ನು ಕಂಡದ್ದೇ ಸಂತೋಷಗೊಂಡರು. ರುದ್ರಿಯ ಕಣ್ಣಲ್ಲೂ ಸಂತೋಷದ ಸೂರ್ಯಕಾಂತಿ ಅರಳಿತ್ತು. ಅಣ್ಣನ ಮುಂದೆ ಹೇಳಿಕೊಂಡ ಎಲ್ಲ ಸಂಗತಿಗಳು, ಮಗಸೊಸೆಯರ ಮುಂದೆಯೂ ಅಣ್ಣನ ದನಿಯೊಂದಿಗೆ ಬಿತ್ತರಗೊಂಡವು. ಸಿವೇಸ ಕಛೇರಿಯೊಂದರಲ್ಲಿ ಗುಮಾಸ್ತನಾಗಿದ್ದ. ಚೆನ್ನಿ ಹೂವು ಕಟ್ಟುವ ಕೆಲಸ ಮಾಡತೊಡ್ಗಿದ್ದಳು. ತನ್ನ ಮಗನ ಜೀವನದ ಗಾಡಿಗೆ ಮೂರನೇ ಗಾಲಿಯಾಗಿ ಅಂದು ಸೇರಿಕೊಂಡ ರುದ್ರಿ, ಮತ್ತೆ ಹತ್ತಾರು ವರ್ಷಗಳ ಕಾಲ, ಎಲ್ಲೂ ಆ ಗಾಡಿ ದಡಗುಟ್ಟದಂತೆ ನೋಡಿಕೊಂಡಳು. ವಯಸ್ಸಿನ ಕಾಲುಗಳು ಹತ್ತರ ಮೆಟ್ಟಿಲು ಹತ್ತಿದಾಗಲಿಂದ ಹಳ್ಳಿಯಲ್ಲಿ ಒಂದೇ ಸಮನೆ ದುಡಿದ ದೇಹಕ್ಕೆ, ಸುಮ್ಮನೆ ಕೂತಿರಲು ಸಾಧ್ಯವಾಗಿರಲಿಲ್ಲ. ಮನೆಯಿಂದ ನಾಲ್ಕಾರು ಕಿಲೋಮೀಟರ್ ದೂರದಲ್ಲಿದ್ದ ಹರಿದಾಸರೊಬ್ಬರ ಆಶ್ರಮಕ್ಕೆ ಕೆಲಸ ಮಾಡಲು ಸೇರಿಕೊಂಡಳು. ಆ ಆಶ್ರಮ ಕೇವಲ ಕೆಲಸದ ತಾಣ ಮಾತ್ರವಾಗದೆ, ಅವಳ ವ್ಯಕ್ತಿತ್ವನ್ನೇ ಪರಿವರ್ತಿಸುವ ಆಧ್ಯಾತ್ಮಿಕ ತಾಣವೂ ಆಯಿತು. “ದೇವರು ತನ್ನ ಭಕ್ತರಲ್ಲಿ, ಸ್ತೀ ಪುರುಷ, ಜಾತಿ ವರ್ಗ, ಪಂಡಿತ-ಪಾಮರರೆಂಬ ಭೇದ ಎಣಿಸುವುದಿಲ್ಲ. ಸಿಟ್ಟು, ಕಾಮ, ಮೋಹ, ಲೋಭ, ಮದ, ಮತ್ಸರ, ಮುಂತಾದ ಅರಿಷಡ್ವರ್ಗಗಳನ್ನು ಬಿಡಬೇಕು. ಮನಸ್ಸಿನಲ್ಲೇ ಮೋಕ್ಷವಿದೆ. ಇನ್ನೊಬ್ಬರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇತ್ಯಾದಿ ಮಾತುಗಳು, ಆಗಾಗ ಕಿವಿಗೆ ಬೀಳುತ್ತಿದ್ದ ಪ್ರವಚನಗಳು, ದಾಸರ ಹಾಡುಗಳು, ಬೇರೆಯವರೊಂದಿಗಿನ ಸೌಜನ್ಯದ ಮಾತುಗಳು ಮತ್ತು ಉಪದೇಶಗಳ ಜೊತೆಗೆ, ಮನೆಯಲ್ಲಿ, ಮೊಮ್ಮಕ್ಕಳು ಕಲಿಯುತ್ತಿದ್ಡ ಪಾಠಗಳು, ಕ್ರಮೇಣ ಅವಳ ಮನಸ್ಸನ್ನು ಬದಲಾಯಿಸತೊಡಗಿತ್ತು. ಮಗ ಸಿವೇಸ, ಪ್ರತಿದಿನ ತನ್ನ ಮಕ್ಕಳನ್ನು ಮುಂದೆ ಕೂಡಿಸಿಕೊಂಡು ಹೇಳಿಕೊಡುತ್ತಿದ್ದ ಪಾಠದಲ್ಲಿ, ಅವನು ರಾಮನಗರದಲ್ಲಿ ಕಲಿತ ಕೆಲವು ಪದಗಳಲ್ಲಿ, “ಮಾತೃದೇವೋಭವ, ಪಿತೃದೇವೋಭವ,” ಎಂಬ ಪಾಠವೊಂದು ಅವಳಿಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹಾಗೆಂದರೆ ಏನರ್ಥ ಎಂಬ ಪ್ರಶ್ನೆಗೆ, “ಅಂಗಂದ್ರೆ ತಾಯಿಯೇ ದ್ಯಾವ್ರು, ತಂದೆಯೇ ದ್ಯಾವ್ರು ಅಂತ ಗೊತ್ತಾತಾ ಅಜ್ಜೀ?”, ಎಂದು ಮೊಮ್ಮಕ್ಕಳೇ ಉತ್ತರ ಕೊಡುವಷ್ಟು ಬುದ್ಧಿವಂತರಿದ್ದರು. ರುದ್ರಿ ಮೊಮ್ಮಕ್ಕಳ ಇಂಥ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡ ದಿನ, ಅವಳು ಆಶ್ರಮದ ಕೆಲಸ ಮುಗಿಸಿ ಹಿಂತಿರುಗುವಾಗ ಮೊಮ್ಮಕ್ಕಳಿಗೆ ಸಿಹಿ ತಿನಿಸು ಸಿಕ್ಕುತ್ತಿತ್ತು. ಬಡವರ್ಗದ ಜನರ ಪ್ರದೇಶದಲ್ಲಿ ಸಣ್ಣ ಸಣ್ಣ ಮನೆಗಳನ್ನು ಕಟ್ಟಿಕೊಂಡು, ಬಿಡುವಿನ ವೇಳೆಯಲ್ಲಿ ಅವರಿವರ ಬಗ್ಗೆ ಆಡಿಕೊಳ್ಳುತ್ತಿದ್ದ ಜನರ ನಡುವೆ, ಅವರಂತೆಯೇ ಆಗಿಹೋದ ಮಗ-ಸೊಸೆಯರಿಗಿಂತ ರುದ್ರಿ ಬೇರೆಯಾಗಿ ಇನ್ನೊಬ್ಬರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ವಿವೇಕವನ್ನು ಕ್ರಮೇಣ ಅಲ್ಪಸ್ವಲ್ಪವಾಗಿ ಹೊಂದತೊಡಗಿದ್ದಳು. ಆದರೂ ಶತಮಾನಗಳಿಂದ ಆಳದಲ್ಲಿ ಬೇರು ಬಿಟ್ಟಿದ್ದ, ಗಂಡೆಂದರೆ ಘನವೆಂಬ ಭಾವನೆ ಮಾತ್ರ, ಸಂಪೂರ್ಣ ಅಳಿಯದ ಕಾರಣ, ಬಿದ್ದ ಕಡ್ಡಿಯನ್ನೂ ಎತ್ತಿಡಗೊಡದಂತೆ ಅವಳು ಮಗನನ್ನು ಬೆಳೆಸಿದ್ದಳು. ಅಂತೆಯೇ ನೋಡಿಕೊಳ್ಳುತ್ತಿದ್ದಳು. ಅವನಂತೆಯೇ ದುಡಿಯುವ ಸೊಸೆಯ ಪರಿಶ್ರಮವೂ ದುಡಿತವೇ ಎಂಬುದನ್ನು ಅವಳು ಹೆಚ್ಚು ಗಮನಿಸಲೇ ಇಲ್ಲ. +ನಗರ ಜೀವನಕ್ಕೆ ಹೊಂದಿಕೊಂಡು ಗಂಡ, ಮಕ್ಕಳು, ತನ್ನ ಹೂ ಕಟ್ಟುವ ಕೆಲಸಗಳಲ್ಲೇ ಸ್ವರ್ಗಮೋಕ್ಷಗಳನ್ನು ಅನುಭವಿಸುತ್ತಿದ್ದ ಚೆನ್ನಿಯಾಗಲೀ, ಮಗನ ಮನೆ, ಕೆಲಸದ ಆಶ್ರಮಗಳನ್ನೇ ನೆಮ್ಮದಿಯ ತಾಣವೆಂದು ತಿಳಿದ ರುದ್ರಿಯಾಗಲೀ, ತಾವು ಬಿಟ್ಟು ಬಂದ ಹಳ್ಳಿಯ ಬಗ್ಗೆ, ಮೃಗೀಯಗುಣದ ದುಂಡ್ಯಾನ ಬಗ್ಗೆ ಎಷ್ಟೊ ವರ್ಷಗಳ ಕಾಲ ಯೋಚಿಸಲೇ ಇಲ್ಲ. ಎಲ್ಲವೂ ಸುಸೂತ್ರವಾಗಿತ್ತು. ಕುಟು೦ಬಕ್ಕೆ ಅನಿವಾರ್ಯವಾದ ಒಂದಿಷ್ಟು ಭಿನ್ನಾಭಿಪ್ರಾಯಗಳೊಂದಿಗೆ ನೆಮ್ಮದಿಯೂ ಇತ್ತು. ಮನೆಯ ಕೆಲಸದಲ್ಲಿ, ಮೊಮ್ಮಕ್ಕಳ ಸಾಂಗತ್ಯದಲ್ಲಿ ಸಮಾಧಾನವಿತ್ತು . ಈ ಸ್ಥಿತಿ ಬದಲಾದದ್ದು, ಮಗನ ಮನೆಯಲ್ಲಿದ್ದೂ, ಅವರ ಮನಸ್ಸುಗಳಿಂದ ರುದ್ರಿ ದೂರ ಸರಿಸಲ್ಪಟ್ಟಿದ್ದು, ಚೆನ್ನಿಯ ಅಣ್ಣ ಗೋರಪ್ಪ, ತನ್ನ ತಂಗಿಯ ಈ ಪತ್ತೆಯನ್ನು ಹುಡುಕಿ ತೆಗೆದ ಮೇಲೆ. ಇಲ್ಲಿ ಬಂದು ಕೆಲವು ದಿನಗಳು ಇದ್ದು ಹೋದಮೇಲೆ. ರುದ್ರಿ ಹಚ್ಚಿ ಬಂದ ಬೆಂಕಿಯಲ್ಲಿ ಸುಟ್ಟು ಹೋದ ಅವರ ಶ್ರೀಮಂತಿಕೆಯ ಪ್ರಮಾಣದ ಬಗ್ಗೆ, ಮಾತು ಮಾತಿನಲ್ಲೂ, ಈ ತಂಗಿಗೆ ಲೆಕ್ಕ ಕೊಡತೊಡಗಿದ ಮೇಲೆ. ಕಡಿದು ಹೋದ ತವರಿನ ಸಂಬಂಧಗಳು ಮತ್ತೆ ಕುದುರಿದವು. ಪ್ರೇಮವೊಂದನ್ನು ಬಿಟ್ಟು, ಇತರೆ ವಿಷಯಗಳಲ್ಲಿ, ಸ್ವಂತ ಆಲೋಚನೆ, ಸ್ವಂತ ನಿರ್ಧಾರಗಳಿಲ್ಲದ ಸೊಸೆ ದಿನೇ ದಿನೇ ಬದಲಾಗತೊಡಗಿದಳು. ಮರ್ಯಾದೆಯನ್ನೇ ಬಲಿತೆತ್ತು, ತನ್ನ ಕುಟುಂಬವನ್ನು ಕಟ್ಟಿದ ‘ತಾಯಿ‘ ಮರೆಯಾಗಿ, ತವರಿನ ಶ್ರೀಮಂತಿಕೆಯನ್ನು ಸುಟ್ಟ ಒಬ್ಬ ಅಪರಾಧಿಯನ್ನು ಮಾತ್ರ ಅವಳು ತನ್ನ ಅತ್ತೆಯಲ್ಲಿ ಕಾಣತೊಡಗಿದಳು. ಈ ವರೆವಿಗೂ ಯಾರ ಮುಂದೂ ಬಾಯಿ ಬಿಡದ ರುದ್ರಿಯ ಬೆತ್ತಲೆ ಮೆರವಣಿಗೆಯ ಸಂಗತಿಯಲ್ಲೂ, ತಂದೆಯದೇ ಗುಣವಿದ್ದ ಚೆನ್ನಿಗೆ, ಹೆಣ್ಣಾದ ರುದ್ರಿಯ ತಪ್ಪೇ ಕಾಣಿಸತೊಡಗಿತು. “ಅಲ್ಲ. ಬಟ್ಟೆ ಎಲ್ಲ ಕಳಚಿದ್ರೂ ಬಾಯಿ ಬುಢ್ದೆ ಮೆರವಣಿಗೆ ಮಾಡಿಸ್ಕಂತಂತೆ ಈ ಯಮ್ಮ. ಇನ್ನೆಂಥ ನಾಚಿಕಿಲ್ಲದ ಎಂಗಸಾಗಿರ್‌ಬೇಡ ಇದು? ಅವರ್ಮು೦ದೆ ಇದ್ದಿದ್ದಿದ್ದಂಗೆ ಯೋಳಿಬುಟ್ಟಿದ್ರೆ ಏನಾಗ್ತಿತ್ತು. ನಾವೇನು ಅವ್ರ ಕೈಗೆ ಸಿಗ್ತಿರಲಿಲ್ಲ”, ಎಂದು ಅವಳ ಹಳ್ಳಿಯ ಪುರುಷಪರ ಸಮಾಜದಂತೆಯೇ ಯೋಚಿಸಿ, ಇತರರ ಮುಂದೆ ಆ ಸುದ್ದಿ ಬಿತ್ತರಿಸಿದ್ದಳು. ಹಾಗೆ ಮಾಡಿದುದಕ್ಕೆ ಕಾರಣವಾಗಲೀ, ಆ ಅವಮಾನ ತನಗೇ ಆದಂತೆ ಎಂದಾಗಲೀ, ಇಡೀ ಹೆಣ್ಣು ಕುಲಕ್ಕೇ ಆದ ಅವಮಾನ ಎಂದಾಗಲೀ ಅವಳು ಯೋಚಿಸಲೇ ಇಲ್ಲ. “ನಮ್ಮಪ್ಪಂಗೆ ಬಲೆ ಕ್ವಾಪ. ಅಂಗ್ ಮಾಡಬಾರ್ದಿತ್ತು ಒಪ್ಕಳಣ. ಆದ್ರೆ ಬಟ್ಟೆ ಸೆಳಿಯೋ ಗಂಟ ಯಾಕ್ ಬುಡ್ಬೇಕಿತ್ತು ಈ ಯಮ್ಮ? ಅಸ್ಟೂ ಗ್ಯಾನ ಬ್ಯಾಡ್ವಾ? ನಮ್ಮಣ್ಣ ಬಂದ್ ಏಳೋಗಂಟ, ಈಟು ವರ್ಸ ನಮ್ಮನ್ಯಾಗೇ ಇದ್ರೂ, ಗುಟ್ಟಾಗಿ ಇಟ್ಟಿದ್ಲಲ್ಲ ಈ ಇಸ್ಯಾನ ಅಂತೀನಿ. ಈಗ್ ಕೇಳಿದ್ರೆ ನಿಮ್‌ಗೋಸ್ಕರ ಅಂಗ್ ಮಾಡ್ದೆ ಅಂತ ನಮ್ಮುನ್ನೇ ಕಾರ್ಣ ಮಾಡ್ತೌಳೆ. ಇದೆಂಗಿದ್ದೀತು ಅಂತೀನಿ” ಎಂದು ಚೆನ್ನಿ ಹೇಳುತ್ತಿದ್ದಳು. +“ಹಯ್ಯೊ ಮೂರ್ಕ ಎಣ್ಣೇ, ನೀನೂ ಒಂದು ಎಣ್ಣಾಗಿ, ನನ್ನ ಜಾಗದಾಗ್ ನಿಂತು ರುದಯದಿಂದ ಯೋಚ್ಣೆ ಮಾಡು. ನಿನ್ನಣ್ಣ, ಅಪ್ಪ, ಅಜ್ಜಗಳು ಯೋಳಿದ್ದನ್ನೇ ಸರಿ ಅಂತ ಯಾಕೆ ಅಂದ್ಕಳ್ತೀ”, ಎಂದು ರುದ್ರಿ ಅಂತರಂಗ ಬಹಿರಂಗದಿಂದ ವ್ಯಕ್ತಪಡಿಸಿದ್ದಳು ಸೊಸೆಗೆ. ಜೊತೆಗೆ ರುದ್ರಿ, ಮಗಸೊಸೆಯರ ಸ೦ಸಾರದ ಒಳಗೊಳಗೊಳಗೆ ಹೋಗಿ, ತಾನು ಆಶ್ರಮದಲ್ಲಿ ಕಂಡದ್ದನ್ನು, ಕಲಿತದ್ದನ್ನು, ಮನೆಮಂದಿಗೆಲ್ಲ ಕಲಿಯುವ ಒತ್ತಾಯ ಹೇರತೊಡಗಿದ್ದು; ಅದೇ ಸಮಯಕ್ಕೆ ಹರಿದಾಸರ ಆಶ್ರಮವೂ ಬೇರೆ ಊರಿಗೆ ವರ್ಗಾವಣೆಗೊಂಡು, ಅವಳು ಸಂಪೂರ್ಣ ಮಗನ ಅವಲಂಬಿಯಾಗಿ, ಮನೆಯಲ್ಲಿ ಉಳಿದದ್ದು; ಮನೆಗೆಲಸವೂ ಹೆಚ್ಚು ಮಾಡಲಾಗದೆ ದಿನೇದಿನೇ ದುರ್ಬಲಳಾಗತೊಡಗಿದ್ದು; ಇವೆಲ್ಲವೂ ಅವಳನ್ನು ಕ್ರಮೇಣ ಮನೆಯವರಿಂದ ದೂರಮಾಡತೊಡಗಿದ್ದವು. ಎಲ್ಲಕ್ಕಿಂತ ರುದ್ರಿಯ ದೇಹ ಮುದಿಯಾದರೂ, ಚೆನ್ನಿಯ ತವರಿನಿಂದ ಬಂದ ಹುರುಳಿಯ ಚೀಲದಿಂದ, ಎರಡು ಸೇರಿನಷ್ಟನ್ನು, ಸೊಸೆಗೆ ತಿಳಿಸದೆ, ತನ್ನ ಬಡಸ್ನೇಹಿತೆಯೊಬ್ಬಳಿಗೆ ಧಾರಾಳವಾಗಿ ದಾನ ಮಾಡುವ ಅಧಿಕಾರವನ್ನು ಅವಳು ಚಲಾಯಿಸಿದ್ದು, ಸೊಸೆಗೆ ಹೆಚ್ಚು ಸಿಟ್ಟು ತರಿಸಿತ್ತು. +ರುದ್ರಿಗೆ ಈ ನಡುವೆಯೇ ನಾಯಿ ಕೆಮ್ಮು ಕಾಡತೊಡಗಿದ ಮೇಲೆ ಚೆನ್ನಿಗೆ, ಅತ್ತೆಯ ಬಗ್ಗೆ ಬೇಸರ ಬರತೊಡಗಿತು. ಗಂಡನ ಆರಾಮ ಜೀವನ ಅವಳಿಗೂ ಬೇಕೆನಿಸುತ್ತಿತ್ತು. ಹಾಸಿಗೆಗೆ ಹೆಚ್ಚು ಅಂಟಿಕೊಳ್ಳತೊಡಗಿದ ಮುದುಕಿ, ಗಂಡನ ಸ್ವಂತ ತಾಯಿ. ಆದರೆ ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವನಿಗಿಲ್ಲ. ಮನೆಗಾಗಿ ಮಾಡುವ ದುಡಿಮೆಗೆ ಇಬ್ಬರದೂ ಹೆಗಲಿದೆ. ಆದರೆ ಮನೆ ನಿರ್ವಹಿಸುವ ಹೊಣೆಗಾರಿಕೆ ಅವನಿಗೆ ಕಡ್ಡಾಯವಲ್ಲ. ಒಬ್ಬ ಮಗನಿಗೆ ಪೋಲಿಯೊ ಬಂದು ಕಾಲು ಸೊಟ್ಟವಾಗಿದೆ. ಆದರೆ ಅದಕ್ಕೆ ಕಾರಣವೆನ್ನಲಾದ ನಿರ್ಲಕ್ಷತನದಲ್ಲಿ, ಈ ತಾಯಿಯ ಜೊತೆ ಅವನ ಹೆಸರಿಲ್ಲ, ಎಂಬೆಲ್ಲ ಅಂಶಗಳು ಕೆಂಡವಾಗಿ ಮನಸ್ಸಿನಲ್ಲೆ ಸುಡತೊಡಗಿದವು. ಮಕ್ಕಳೊಂದಿಗೆ ದಿನೇ ದಿನೇ ಬೆಳೆಯತೊಡಗಿದ ಸಂಸಾರದ ಭಾರದಿಂದ, ಬೇಸರವಾಗಿ, ಈ ಮುದಿ ಅತ್ತೆಯ ಕಿರಿಕಿರಿಯಿಂದ, ಬಿಡುಗಡೆಗೆ ತಹತಹಿಸತೊಡಗಿತು ಚೆನ್ನಿಯ ಮನಸ್ಸು. ಆ ಸಮಯದಲ್ಲೇ ಅವಳ ಕಿವಿಗೆ ಬಿದ್ದಿದ್ದು ಅಲಹಾಬಾದಿನ ಕುಂಬಮೇಳ, ಮತ್ತು ಅಲ್ಲಿ ಸಿಗುವ ಮೋಕ್ಷದ ದಾರಿಗಳು. +ಆ ದಿನ ಇದ್ದಕ್ಕಿದ್ದಂತೆ ಕೆಲಸದವರ ಮನೆಯಲ್ಲಿ ಸಾಲ ಈಸಿಕೊಂಡು ಬಂದ ಚೆನ್ನಿ, ಅಲಹಾಬಾದಿಗೆ ಹೊರಟು ಸಂಗಮದಲ್ಲಿ ಮುಳುಗಿ ಪಾವನರಾಗಿ ಬಂದು ಬಿಡುವ ಉತ್ಸಾಹ ತೋರಿದಳು. ಸಿವೇಸ ಅವಳ ಮಾತಿಗೆ ಹ್ಞೂಗುಟ್ಟಿ ಹೊರಡುವ ತನಕ ಅವಳ ಆ ಉತ್ಸಾಹ ಕುಂದಲಿಲ್ಲ. “ಪರಯಾಗದಾಗೆ ಅದೇ ಅಲಾಬಾದಿನಾಗೆ ನಡೀತ ಐತಲ್ಲ, ಕು೦ಬಮೇಳ ಅದಿಕ್ಕೋಗಣ ಅವ್ವ, ನೀನೂ ಬತ್ತಿಯ”? ಎಂಬ ಸಿವೇಸನ ಪ್ರಶ್ನೆ, ನಿಸ್ಸಾರದ ಹಾದಿಯಲ್ಲಿದ್ದ ರುದ್ರಿಯ ಬದುಕಿಗೆ ಸಡಗರದ ಸಿಂಚನ ಮಾಡಿತು. ಆಗೊಮ್ಮೆ, ಈಗೊಮ್ಮೆ, ಅಕ್ಕಪಕ್ಕದವರ ಟೀ.ವಿ.ಯಲ್ಲಿ ಬ೦ದಿದ್ದ ನೇರ ಪ್ರಸಾರಗಳನ್ನು, ಅವರಿವರಿಂದ ಕೇಳುತ್ತಿದ್ದ ಸುದ್ದಿಗಳನ್ನು ಕೇಳುತ್ತ, ನೋಡುತ್ತ ತೃಪ್ತಿ ಪಟ್ಟುಕೊಂಡಿದ್ದಳು ರುದ್ರಿ. “ಕು೦ಬಮೇಳಕ್ಕಾ? ನಾನಾ ಸಿವ? ನಾನಾ? ಎನ್ನುವುದರೊಂದಿಗೆ ಚಿಮ್ಮಿದ ಅವಳ ನಗುವಿನಲೆಗಳಲ್ಲಿ ಒಪ್ಪಿಗೆಯ ಉತ್ತರ ಸಿಕ್ಕಿಹೋಗಿತ್ತು. +ಬೆಂಗಳೂರಿನಿಂದ ಮದರಾಸಿಗೆ ಹೋಗಿ, ಮುಂದಿನ ರೈಲಿಗಾಗಿ ಮೂರು ಘ೦ಟೆಗಳ ಕಾಲ ತೂಕಡಿಸಿ, ಇನ್ನೊಂದು ರೈಲಿನಲ್ಲಿ ತೂರಿಕೊಂಡು ಹೊರಟಿದ್ದಳು ರುದ್ರಿ, ಮಗ ಸೊಸೊಸೆಯರೊಂದಿಗೆ. ಹಗಲು ರಾತ್ರಿ ತೊಗಿದ ರೈಲು, ಅಪರಿಚಿತ ಭಾಷೆ, ಕಾಣದ ಮುಖಗಳು, ಎರಡುಮೂರು ದಿನಗಳ ನಿದ್ದೆ, ಊಟ, ಮುಖಮಾರ್ಜನ, ಮಾತು, ಎಲ್ಲ ಕುಳಿತ ಬೋಗಿಯಲ್ಲೆ ಮುಗಿಸಿ, ಅಲಹಾಬಾದಿನ ನಿಲ್ದಾಣದಲ್ಲಿ ಅಟೋ ಹತ್ತಿ, ಸಂಗಮದ ನೆಲದಲ್ಲಿ ಕೆಳಗುರುಳಿಕೊಂಡಾಗ.. .. .. ಅಲ್ಲಿ ತೆರೆದು ಕೂತಿತ್ತು, ಇಡೀ ಬ್ರಹ್ಮಾಂಡದ ‘ಭಕ್ತರ ಜಗತ್ತು”. ದೈವ ಸಾನ್ನಿಧ್ಯಕ್ಕೆ, ಮೋಕ್ಷಕ್ಕೆ, ಶಾಶ್ವತ ಸಮಾಧಾನಕ್ಕೆ, ಮತ್ತು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ಸಿಗುವ ಅಪರೂಪದ ಪುಣ್ಯಕ್ಕಾಗಿ, ಎಡ ತಾಕುತ್ತಿದ್ದ ಪ್ರಚಂಡ ಭಕ್ತಜನಸಾಗರ. ಹರಿಯುವ ಜಲದ ನಡುವೆ ನುಗ್ಗುವ ಜನ ಪ್ರವಾಹ. ಆ ದೇವರು ಎಲ್ಲಿದ್ದಾನೋ, ಹೇಗಿದ್ದಾನೋ ಆದರೆ ಆ ದೇವರು ಎಂಬ ಹೆಸರಿನಲ್ಲಿ ಕೋಟಿಗಟ್ಟಲೆ ಜನರನ್ನು ಹೀಗೆ ಒಂದೆಡೆ ಕೂಡಿ ಹಾಕಿ, ನೀರಿಗೆ ಬೀಳಿಸಿ, ಮಣಮಣ ಮ೦ತ್ರಗಳನ್ನು ಹೇಳಿಸಿ ಹುಚ್ಚರನ್ನಾಗಿಸುವ ಆ ಅಧ್ಭುತ ಮಾಯಾ ಸಾಮರ್ಥ್ಯ ಯಾವುದಿರಬಹುದು? ರುದ್ರಿ ರೋಮಾ೦ಚಿತಳಾಗಿ ಎರಡೂ ಕೈಗಳನ್ನು ಮೇಲೆತ್ತಿ ಮುಗಿದಳು. +ಅಂದು ಮೌನಿ ಅಮಾವಾಸ್ಯೆ. ಗಂಗೆ, ಯಮುನೆ ಮತ್ತು ಸರಸ್ವತಿಯರ ಆ ಸಂಗಮದಲ್ಲಿ ಒಂದು ಮುಳುಗು ಹಾಕಿ, ಸೂರ್ಯ ದೇವತೆಗೆ ಅರ್ಘ್ಯ ಕೊಟ್ಟರೆ ಆತ್ಮದ ಪಾಪಗಳಿಗೆಲ್ಲ ಪರಿಹಾರವಂತೆ. ಆ ನಂಬಿಕೆಯಲ್ಲೇ ಸ್ನಾನ ಮಾಡಲು ಹೋದಾಗ, ಕರಿಕರಿಯ ಹುಳಗಳಂತೆ ಹರಿಯುವ೦ತ್ತಿದ್ದವು ಕೋಟಿ ಕೋಟಿ ಕಪ್ಪು ಮನುಷ್ಯ ತಲೆಗಳು. ಇಡೀ ಅಲಹಾಬಾದಿನ ಆ ಹುಯಿಲನ್ನು, ದೇವರ ಹೆಸರಿನ ವ್ಯಾಪಾರಗಳನ್ನು, ನೋಡುತ್ತ ನೋಡುತ್ತ ದಿಗ್ಬ್ರಾಂತಳಾಗಿದ್ದಳು ರುದ್ರಿ. ಎಲ್ಲೆಲ್ಲೂ ದೇವರ ಮಂತ್ರ, ಕಿವಿಗೆ ಬೀಳುತ್ತಿದ್ದ ದೇವರ ನಾಮ. ಕಣ್ಣು ಎಸೆದಲ್ಲೆಲ್ಲ ಜನ, ಕೈ ತಾಕಿದಲ್ಲೆಲ್ಲ, ತಿರುಗಿದಲ್ಲೆಲ್ಲ, ಎಡವಿದಲ್ಲೆಲ್ಲ, ಎಲ್ಲೆಲ್ಲೂ ಜನ ಜನ ಜನ. ಕಾವಿ ತೊಟ್ಟವರು, ಮಾರುದ್ದದ ಗಡ್ಡದವರು, ನಗ್ನರು, ಅರೆನಗ್ನರು, ದೇವರಿಗಾಗಿ ಜಪಿಸುವವರು, ತಪ್ಪಿಸಿಕೊ೦ಡವರಿಗಾಗಿ ತಪಿಸುವವರು. ಓಹ್! ರುದ್ರಿ ಮೈಮರೆತದ್ದೇ ಆಗ. ಕಣ್ಣು ಮುಚ್ಚಿ ಏಕಾಗ್ರ ಚಿತ್ತದಿಂದ, ತನ್ನೆಲ್ಲ ಭಕ್ತಿ-ಶ್ರದ್ಧೆಗಳನ್ನೂ ಒಟ್ಟುಗೂಡಿಸಿ ‘ಓ ದ್ಯಾವ್ರೇ ನಮ್ಮಪ್ಪ, ನಿ೦ಗೆ ಶರಣು ಬಂದಿವ್ನಿ ನನ್ನ ಕಾಪಾಡು ಸಿವಾ.”, ಎಂದು ಧ್ಯಾನಿಸಿ ತನ್ನನ್ನೆ ಸಮರ್ಪಿಸಿಕೊಂಡಿದ್ದಳು. +ಅವಳು ಕಣ್ಣು ಬಿಟ್ಟಾಗ, ಆ ದೇವರ ಕೃಪಾ ಕಟಾಕ್ಷವೊ, ಅವಳ ಮೈಮರೆವೋ, ಮೋಕ್ಷದ ದಾರಿಗೆ ಸಾಧನದ ಬಾಗಿಲೋ, ಅಂತೂ ಅವಳು ಒಬ್ಬಂಟಿಯಾಗಿಬಿಟ್ಟಿದ್ದಳು. ಮಗಸೊಸೆಯರಿಂದ ತಪ್ಪಿಸಿಕೊಂಡು ದಿಕ್ಕ್ಕೆಟ್ಟವಳಾಗಿದ್ದಳು. “ಚೆನ್ನೀ , ಸಿವೇಸಾ.. ಸಿವ.. ಸಿವಾ.. ಎಲ್ಲದೀರ .. ನಮ್ಮ ಸಿವೂನ ಕಂಡಿರ.. ಸಿವನ್ನ ಕಂಡಿರಾ”? ಎ೦ದು ಕೇಳುತ್ತ ನಿಂತಲ್ಲೇ ಹುಡುಕುವ ಹೆಜ್ಜೆಗಳನ್ನು ಸುತ್ತುಹರಿಸಿದ್ದಳು. ಇನ್ನು ಅವರು ಸಿಗುವಿದಿಲ್ಲವೆಂಬ ಭಯ, ಗಾಬರಿಗಳಲ್ಲಿ ದನಿ ಅಡಗಿ ಒಮ್ಮೆಲೆ ಎಚ್ಚರ ತಪ್ಪಿತ್ತು. ಮತ್ತೆ ಪ್ರಜ್ಞೆಗೆ ಮರಳಿ ಬಂದಾಗ, ಅವಳು ಕುಂಭನಗರದ ಬಹುಗುಣರ ಸ್ಮೃತಿ ಸಮಿತಿಯಲ್ಲಿದ್ದಳು. ಅಲ್ಲಿ ಅವಳಿಗೆ ಕಂಡಿದ್ದು ಇನ್ನೊಂದು ವಿಸ್ಮಯ ಲೋಕ. ಸುಮಾರು ಹತ್ತು ಸಾವಿರ ತಪ್ಪಿಸಿಕೊಂಡ ವೃದ್ಧೆಯರು ಅಲ್ಲಿದ್ದರು. ಅಲ್ಲಿದ್ದವರೆಲ್ಲ ಹೆಂಗಸರೇ ಆಗಿದ್ದುದಕ್ಕೆ ಮತ್ತೆ ಅವರ ಜ್ಞಾನದ ಕೊರತೆಯೇ ಕಾರಣವಿರಬೇಕೇನೋ. ಅವರಲ್ಲಿ ನಿಜವಾಗಲೂ ತಪ್ಪಿಸಿಕೊಂಡವರು ಮೂರು ಸಾವಿರ ಮುದುಕಿಯರು ಮಾತ್ರ. +ಸಮಿತಿಗೆ ಸೇರಿ ತಿಂಗಳಾದರೂ ರುದ್ರಿಯನ್ನು ಹುಡುಕಿಕೊಂಡು ಯಾರೂ ಬರಲಿಲ್ಲ. ತಿಂಗಳ ಹಿಂದಷ್ಟೇ ಬದಲಾದ, ಮಗನ ಮನೆಯ ವಿಳಾಸವೂ ಅವಳಿಗೆ ಗೊತ್ತಿರಲಿಲ್ಲ. ಮರುತಿಂಗಳು ಅವಳನ್ನು ಯಾವುದೋ ವೃದ್ಧಾಶ್ರಮಕ್ಕೆ ಕಳಿಸಲಾಯಿತು. ಅಂದಿನಿಂದ ಆಶ್ರಮದ ಮುಂದೆ ಓಡಾಡುವ ಎಲ್ಲ ಆಕೃತಿಗಳಲ್ಲೂ, ತನ್ನ ಸಿವನನ್ನು ಅರಸುವದೇ, ಅವನ ಹೆಸರನ್ನು ಜಪಿಸುವುದೇ ಅವಳ ದಿನನಿತ್ಯದ ಕರ್ಮ. +ಸಿವೇಸ ಕಳೆದ ತಾಯಿಯನ್ನು ಹುಡುಕಿಸಲು ಮನಸಾರೆ ಪ್ರಯತ್ನ ಪಟ್ಟ. ಆದರೆ ತಾಯಿ ಸಿಗಲಿಲ್ಲ. ಅವನೂ ತನ್ನ ಮಕ್ಕಳು, ಮನೆ ಮತ್ತು ತಾಯಿಯ ದೇಖ್‌ರೇಖಿಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟಿದ್ದರೆ, ಗಂಡಹೆಂಡತಿಯರಿಬ್ಬರಲ್ಲೂ ಸಮಾನ ಸ್ಥಾನ-ಹೊಣೆಗಾರಿಕೆಗಳಿದ್ದಿದ್ದರೆ, ಚೆನ್ನಿ, ತನ್ನ ಅತ್ತೆಯ ಈ ಕಳೆಯಲ್ಪಡುವ ಯೋಜನೆಯನ್ನೇ ಹಾಕುತ್ತಿರಲಿಲ್ಲವೇನೋ. ಹಾಕಿದ್ದರೂ ಸಫಲಳಾಗುತ್ತಿರಲಿಲ್ಲ. ಚೆನ್ನಿಯ ತಂತ್ರದ ಬಗ್ಗೆ ತಾಯಿ-ಮಗ, ಅಮಾಯಕರಾಗಿ ಪರಸ್ಪರ ಅಗಲಿ, ಹೀಗೆ ಕೊರಗಬೇಕಾದ ಸಂದರ್ಭವೂ ಬರುತ್ತಿರಲಿಲ್ಲ. ಬಂದಿದ್ದರೂ ತಾಯಿಯನ್ನು ಹುಡುಕಿಸುವಲ್ಲಿ ಸಿವೇಸ ವಿಫಲನಾಗುತ್ತಿರಲಿಲ್ಲ. +ರುದ್ರಿಯ ಹಿಡಿ ಹೃದಯ, ಮಗನಿಗಾಗಿ ಕಾಯುತ್ತಲೇ ಇತ್ತು. ಚಲಾವಣೆಯಲ್ಲಿದ್ದ ಆ ಜೀವ, ದೂರದ ಊರಿನಲ್ಲಿ ಸ೦ಬಂಧವನ್ನೂ, ದೇಹದ ಚೈತನ್ಯವನ್ನೂ ಕಳೆದುಕೊಂಡು ಮಣ್ಣ ಉಸುಬಿನಲ್ಲಿ ಹೂತು ಹೋಗುವವರೆಗೆ, ಜೀವ ಸೂತ್ರ ಕಡಿದು ಹೋಗುವವರೆಗೆ, ಎದೆಯ ಗೂಡಲ್ಲಿ ಮಾತ್ರ ಉಳಿದ, “ ಸಿವಾ.. .. ಸಿವ.. .. ಸಿವ” ಎಂಬ ಎರಡೇ ಎರಡು ಅಕ್ಷರಗಳು, ಆಶ್ರಮದಿಂದ ತನ್ನ ಬಿಡುಗಡೆಗಾಗಿ ಧೇನಿಸುತ್ತಲೇ ಇದ್ದವು. ಒಳಗೊಳಗೇ ಸಿವನ ಸಂಸಾರದಲ್ಲಿ ಸುತ್ತುತ್ತಲೇ ಇದ್ದವು. +***** +ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ-೨೦೦೨ ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ. +(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […] +“ಮಾ ನನ್ನನ್ನು ನಸುಕಿಗೇ ಎಬ್ಬಿಸುತ್ತಿದ್ದಳು. ಸದ್ದು ಮಾಡದೆ ಮುಖ ತೊಳೆಸುತ್ತಿದ್ದಳು. ನಂತರ ಖೋಲಿಯ ಬಾಗಿಲು ಮುಚ್ಚಿ ಕತ್ತಲಲ್ಲೆ ಬೀಗ ಹಾಕಿ, ನನ್ನ ಮತ್ತು ಅವಳ ಪ್ಲಾಸ್ಟಿಕ್ ಚಪ್ಪಲಿಗಳನ್ನು ಕೈಲಿ ಹಿಡಿದುಕೊಂಡು ತೇಲಿಗಲ್ಲಿಯ ಕೊನೆತನಕ ಸದ್ದಾಗದಂತೆ […] +ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_383.txt b/Kannada Sahitya/article_383.txt new file mode 100644 index 0000000000000000000000000000000000000000..5a63ce8a9c8ec48e9ec4ac22c37a490fc74681f8 --- /dev/null +++ b/Kannada Sahitya/article_383.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯಾವ ಕಾರಣವಿಲ್ಲದೆ ಇಂಥ ದ್ವೇಷ ಉರಿಯುತ್ತದಲ್ಲ ಎಂದುಕೊಂಡು ಶಾಸ್ತಿಗಳು ಆಮೇಲೆ ವಿ ಹ್ವಲರಾಗುತ್ತಾರೆ. ತನ್ನ ಮಗಳೂ ಮನೆ ಬಿಟ್ಟು ಹೋಗುವ ಮುಂಚೆ ಹೀಗೇ ತನ್ನನ್ನು ನೋಡಿದ್ದಳು. ಮಗಳು ಕಾಲೇಜಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ತಿಳಿದು ಈಗ ತನ್ನನ್ನು ಕಂಗಾಲುಗೊಳಿಸುತ್ತಿರುವ ಆ ಹಿಂದಿನ ರೋಷ ಮರುಕಳಿಸಿತ್ತು. ಮಗಳಿಗೆ ಆಡಬಾರದ್ದನ್ನು ಆಡಿದ್ದರು; ಅವಳು ತಂದೆಗೆ ಆಡಬಾರದ್ದನ್ನು ಆಡಿದ್ದಳು. ಪುರಾಣ ಪ್ರವಚನದಲ್ಲಿ ತೊಡಗಿದ್ದಾಗ ಪ್ರಹ್ಲಾದನ ಬಗ್ಗೆಯೋ, ಧ್ರುವನ ಬಗ್ಗೆಯೋ ಸಭಿಕರು ಅಷ್ಟೊಂದು ಆರ್ದ್ರಗೊಳ್ಳುವಂತೆ ಮಾತಾಡಬಲ್ಲವನು ಯಾರು, ಅದೂ ನಾನಿರಬಹುದೆ ಎಂದು ಶಾಸ್ತಿಗಳು ಬೆಚ್ಚುತ್ತಾರೆ. ತಾನು ಸದಾ ತನ್ನಿಂದ ಓಡಿಹೋಗುತ್ತಿದ್ದೇನೆ ಎನ್ನಿಸಿದ್ದಿದೆ. ಹೀಗೆ ಓಡುವುದನ್ನು ದಿನಕರನ ಕೊರಳಿನ ತಾಯಿತ ನಿಲ್ಲಿಸೀತೆ? ಅವ್ಯಕ್ತವಾದ ದಿಗಿಲಿಗೆ ತನ್ನನ್ನು ಅದು ಎದುರು ಮಾಡಿತ್ತು. ಆ ಎರಡು ಜೊತೆ ಕೆಕ್ಕರಿಸುವ ಕಣ್ಣುಗಳೂ ತನ್ನವೇ ಎಂದು ಅಸ್ಪಷ್ಟವಾಗಿ ಹೊಳೆದಂತಾಗಿ, ಗಾಬರಿಯಾಗಿ, ಇನ್ನೇನೋ ಯೋಚಿಸಲು ಪ್ರಯತ್ನಿಸುತ್ತ, “ಸೀತಮ್ಮ ಎರಡು ದಿನ ದಿನಕರನನ್ನು ಇಲ್ಲೇ ಇಟ್ಟುಕೊಳ್ಳಿ. ನಾನು ಬಂದು ಅವರನ್ನು ನಮ್ಮ ಕಗ್ಗಾಡಿಗೆ ಕರೆದುಕೊಂಡು ಹೋಗುವೆ. ನಮ್ಮಲ್ಲಿ ಒಂದೆರಡು ದಿನವಿದ್ದು ಅವರು ಕೇರಳಕ್ಕೆ ಹೋಗುತ್ತಾರಂತೆ. ಬೇಡ, ನಾನಿವತ್ತು ಏನೂ ತಿನ್ನುವವನಲ್ಲ. ಇವತ್ತು ಏಕಾದಶಿಯಲ್ಲವ?” ಎಂದು ಎಷ್ಟು ಒತ್ತಾಯಿಸಿದರೂ ಕೇಳದೆ ಶಾಸ್ತಿಗಳು ಹೊರಟೇಬಿಟ್ಟರು. ಟ್ಯಾಕ್ಸಿ ಸ್ಟಾಂಡಿನಲ್ಲಿ ಒಂದು ಟ್ಯಾಕ್ಸಿಯನ್ನು ಪಡೆದು ನೇರವಾದ ದಾರಿಬಿಟ್ಟು ತನ್ನ ಗುಪ್ತಭಕ್ತಿಯ ದೇವತೆಯೊಬ್ಬಳ ಜೀರ್ಣಗೊಂಡ ಗುಡಿಯಿರುವ ಕಾಡನ್ನು ಹೊಕ್ಕರು. ಎತ್ತಿನ ಬಂಡಿಗಳು ಓಡಾಡುವ ದಾರಿಯಲ್ಲಿ ಕಾರು ಹೋಗಬೇಕಿತ್ತು. ‘ನಿನಗೆ ಎರಡರಷ್ಟು ಬಾಡಿಗೆ ಕೊಡುವೆ’ ಎಂದು ಸ್ಥಳೀಯ ಗತ್ತಿನಲ್ಲಿ ಶಾಸ್ತಿಗಳು ಹೇಳಿದ್ದರಿಂದ ಚಾಲಕ ಮಾತಾಡದೆ ಕಾರನ್ನು ಇಕ್ಕಟ್ಟಿನಲ್ಲಿ ಓಡಿಸಲು ಒಪ್ಪಿದ್ದ. ದಟ್ಟವಾದ ಕಾಡಿನ ಮಧ್ಯೆ ಕಾರನ್ನು ನಿಲ್ಲಿಸಿ, ‘ಅರ್ಧಗಂಟೆ ಕಾದಿರು’ ಎಂದು ಶಾಸ್ತಿಗಳು ಸವೆದ ಹಾದಿಯಿಲ್ಲದ ಪೊದೆಗಳ ನಡುವೆ ತನ್ನದೇ ದಾರಿ ಮಾಡಿಕೊಳ್ಳುತ್ತ ನಡೆದರು. ಹಾಳುಬಿದ್ದ ಭಗವತಿಯ ಗುಡಿಯೆದುರು ಬಂದು ನಿಂತರು. ಭಗವತಿಗೆ ನಿತ್ಯ ದೀಪ ಉರಿಸಲೆಂದು ಹತ್ತಿರದ ಹಳ್ಳಿಯ ಬಡ ಬ್ರಾಹ್ಮಣನೊಬ್ಬನಿಗೆ ಶಾಸ್ತಿಗಳು ತಿಂಗಳಿಗೆ ೨೫೦ ರೂಪಾಯಿ ಕೊಡುತ್ತಿದ್ದರು. ಗುಡಿಯನ್ನು ಹೊಸದಾಗಿ ಕಟ್ಟಿಸಬೇಕೆಂದು ಒಮ್ಮೆ ಮನಸ್ಸಾಗಿತ್ತು. ಆದರೆ ಆ ದೇವಿಯ ಕಾರ್ಣಿಕ ಅವಳ ಗುಡಿ ಬದಲಾದರೆ ಉಳಿಯಲಿಕ್ಕಿಲ್ಲವೆಂದು ತನ್ನ ಎಲ್ಲ ಶಾಸ್ತಜ್ಞಾನವನ್ನೂ ಬದಿಗೊತ್ತಿ ನಂಬಿದ್ದರು ಶಾಸ್ತಿಗಳು. ತನ್ನ ಮಿದುಳಿನಲ್ಲಿ ಉರಿಯುವ ಕಣ್ಣು ಕಠೋರ ದೇವಿ ಭಗವತಿ ಎಂದು ಅವರು ನಂಬಿದ್ದರು. ಒಂದು ವರ್ಷದ ಹಿಂದೆ ತನ್ನ ಜಗಳಗಂಟಿ ಹೆಂಡತಿಯ ಪ್ರತಿನಿತ್ಯದ ರಾದ್ಧಾಂತ ತಡೆಯಲಾರದೆ, ಭಗವತಿಗೆ ಹರಕೆ ಹೇಳಿಕೊಂಡು, ತನ್ನ ಹೆಂಡತಿಯನ್ನು ಇಲ್ಲಿಗೆ ಕರೆತಂದಿದ್ದರು. ಮಹಾದೇವಿ ಭಗವತಿಯ ಎದುರು ನಿಂತು ದುರುಗುಟ್ಟ ತೊಡಗಿದಳು. ಇಡೀ ಕಾಡಿನ ಮೌನ ಸೀಳುವಂತೆ ಕಿಟಾರನೆ ಕಿರುಚಿಕೊಂಡಳು. ಕಣ್ಣನ್ನು ಕೆಕ್ಕರಿಸಿ ಶಾಸ್ತಿಗಳ ಎದುರು ನಿಂತು ಏನೇನೋ ಬಡಬಡಿಸತೊಡಗಿದಳು. ಅವಳ ಆಪಾದನೆಗಳಿಂದ ಶಾಸ್ತಿಗಳು ದಿಗಿಲು ಬಿದ್ದಿದ್ದರು. ಮೊದಲ ಹೆಂಡತಿಯನ್ನು ಮಣೆಯನ್ನು ತಲೆಗೆ ಜಪ್ಪಿ ತಾನು ಕೊಂದಿದ್ದೇನೆಂಬುದು ಇವಳಿಗೆ ಹೇಗೆ ತಿಳಿಯಿತು? ಅವಳು ಜಕಣಿಯಾಗೆ ತನ್ನನ್ನು ಕಾಡುತ್ತಿದ್ದಾಳೆಂದು ಮಹಾದೇವಿ ಅಬ್ಬರಿಸಿದ್ದಳು. ಇದ್ದಕ್ಕಿದ್ದಂತೆ ಆ ಮಹಾದೇವಿ ತನ್ನ ಮೊದಲ ಹೆಂಡತಿಯಾಗಿಯೇ ಬಿಟ್ಟಿದ್ದಳು. “ನನ್ನನ್ನು ಜಪ್ಪಿ ಜಪ್ಪಿ ಕೊಂದಂತೆ, ತನ್ನ ಸವತಿಯ ಮಗಳನ್ನು ಜಪ್ಪಿ ಕೊಲ್ಲಲು ಹೋಗಿದ್ದೆಯಲ್ಲೋ. ಏ ಕಟುಕ ಬ್ರಾಹ್ಮಣ’ ಎಂದು ಕಿರುಚತೊಡಗಿದ್ದಳು. ಶಾಸ್ತಿಗಳು ದೇವಿಯ ಎದುರು ನಿಂತು ಕಣ್ಣು ಮುಚ್ಚಿ ಕೇಳಿದರು: ‘ಭಗವತಿ ಯಾಕೆ ನನ್ನ ಹೆಂಡತಿಯ ಬಾಯಿಂದಲೂ ಸುಳ್ಳು ಹೇಳಿಸಿದೆ? ನನ್ನನ್ನೂ ಯಾಕೆ ಕೊಲೆಗಡುಕನಿರಬಹುದೆಂಬ ಭೀತಿಯಲ್ಲಿ ಈ ತನಕ ನಡೆಸಿಕೊಂಡೆ? ದಿನಕರ ನನ್ನ ಮಗನೋ, ಆ ಮಲೆಯಾಳಿ ಪಂಡಿತನ ಮಗನೋ ನಿಜ ಹೇಳು? ನಿಜ ತಿಳಿಯುವಂತೆ ನನಗೊಂದು ಸಂಜ್ಞೆ ಕೊಡು. ನನ್ನನ್ನು ಪ್ರೇತದಂತೆ ಅಲೆಸುತ್ತಿರಬೇಡ’ ಯಾವ ಸಂಜ್ಞೆಯೂ ಸಿಗಲಿಲ್ಲ. ತನ್ನ ಮಿದುಳಿನಲ್ಲಿ ಕೆಂಗಣ್ಣುಗಳು ಕೆಕ್ಕರಿಸುವುದು ನಿಲ್ಲಲಿಲ್ಲ. ಭಗವತಿಯ ಕಾನಿನಲ್ಲಿ ದಾರಿ ಹುಡುಕುತ್ತಾ ಟ್ಯಾಕ್ಸಿಯನ್ನು ನಿಲ್ಲಿಸಿದಲ್ಲಿಗೆ ಮರಳಿದರು. ಉಡುಪಿಯಿಂದ ಹತ್ತು ಮೈಲಿ ದೂರದ ಇನ್ನೊಂದು ಹಳ್ಳಿಗೆ ಕಾರು ನಡೆಸುವಂತೆ ಹೇಳಿದರು. ಆ ಹಳ್ಳಿಗೆ ಅದೊಂದೇ ದೊಡ್ಡ ಮನೆ. ಅದನ್ನು ಕಟ್ಟಿಸಿದವರು ಶಾಸ್ತಿಗಳೇ. ಆ ಮನೆಯಲ್ಲಿ ಮಾತ್ರ ಅವರ ಮಿದುಳಿನಲ್ಲಿ ಉರಿಯುವ ಕಣ್ಣುಗಳು ಶಾಂತವಾಗುತ್ತವೆ. ಅದು ಅವರ ಸೂಳೆಯ ಮನೆ. ರಾಧಾ ಎಂದು ಅವಳ ಹೆಸರು. ಆ ಹೆಸರೂ ಅವರು ಇಟ್ಟದ್ದೇ. ಬೊಂಬಾಯಿಯಲ್ಲಿ ಅವರ ಕಣ್ಣಿಗೆ ಬಿದ್ದ ಅನಾಥ ಹುಡುಗಿ ಅವಳು. ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಇಪ್ಪತ್ತು ವರ್ಷ ಪ್ರಾಯದವರಾಗಿದ್ದಾಗ ಅಣ್ಣನ ಜೊತೆ ಜಗಳವಾಡಿ ತನ್ನ ಆಸ್ತಿಯಲ್ಲಿ ಅರ್ಧಪಾಲು ಪಡೆದು ಬೊಂಬಾಗಿಯಿಗೆ ಹೋಗಿದ್ದರು. ಅಲ್ಲೊಂದು ‘ಭಗವತಿ ಕೃಪಾ’ ಎಂಬ ಹೆಸರಿನ ಹೋಟೆಲು ತೆರೆದಿದ್ದರು. ಆಗ ಅವರನ್ನು ಕಂಡಿದ್ದವರು ಇವರೇ ಈಗಿನ ಶಾಸ್ತಿಗಳು ಎನ್ನುತ್ತಿರಲಿಲ್ಲ. ಪೈಜಾಮ, ಅಂಗಿ, ತಲೆಗೊಂದು ಟೋಪಿ ಹಾಕಿಕೊಂಡು ಸಿಂಧಿಯೋ, ಮಾರ್ವಾಡಿಯೋ ಎನ್ನುವಂತೆ ಅವರು ರೂಪಾಂತರ ಹೊಂದಿದ್ದರು. ಜುಟ್ಟು ಕತ್ತರಿಸಿ, ಕ್ರಾಪು ಬಿಡುವಷ್ಟು ಧೈರ್ಯ ಸಾಲದೆ ಆ ಟೋಪಿ. +ಅಣ್ಣನೆಂದರೆ ತಮ್ಮನಿಗೆ ದ್ವೇಷ. ತಮ್ಮನೆಂದರೆ ಅಣ್ಣನಿಗೆ ದ್ವೇಷ. ಅಣ್ಣನಿಗೆ ಸಂತಾನವಿಲ್ಲ. ಹೆಂಡತಿ ಸತ್ತಿದ್ದಳು. ಅವನಿಗೆ ಗೂರಲು ಬೇರೆ. ಅಣ್ಣ ಮತ್ತೆ ಮದುವೆಯಾಗಿರಲಿಲ್ಲ. ವಂಶವನ್ನು ಉಳಿಸಲು ನೀನಾದರೂ ಮದುವೆಯಾಗು ಎಂದರೆ, ಶಾಸ್ತಿಗಳು ಒಪ್ಪಿರಲಿಲ್ಲ. ಕಗ್ಗಾಡಲ್ಲಿ ತೋಟ ಮಾಡಿಕೊಂಡು, ಮಳೆಗಾಲವೆಲ್ಲ ಹಲಸಿನ ಪಲ್ಯವನ್ನೋ ಬಣ್ಣದ ಸೌತೆಕಾಯಿ ಹುಳಿಯನ್ನೋ ತಿಂದುಕೊಂಡು, ಕಾಸು ಬಿಚ್ಚದ ಅಣ್ಣನ ಗೂರಲಿನ ಏದುಸಿರು ಕೇಳಿಸಿಕೊಳ್ಳುತ್ತ ಬದುಕಿರುವುದು ಸಹಿಸಲಾರದೆ, ತನ್ನ ಪಾಲು ಪಡೆದು, ಬೊಂಬಾಯಿಯಲ್ಲಿ ಅದನ್ನು ಪೋಲು ಮಾಡಲು ತೊಡಗಿದ್ದರು. ಹೋಟೆಲಿಟ್ಟರೂ ಗಲ್ಲದ ಮೇಲೆ ಕೂರುವುದು ಇನ್ನು ಯಾರೋ! ತನ್ನ ಆದಾಯವೆಷ್ಟು, ಖರ್ಚೆಷ್ಟು ಎನ್ನುವ ಎಗ್ಗಿಲ್ಲ. ಬೊಂಬಾಯಿಯಲ್ಲಿ ಶಾಸ್ತಿಗಳಿಗೆ ಹೆಣ್ಣಿನ ಚಟ ಹತ್ತಿತ್ತು. ತಲೆಹಿಡುಕರು ಸ್ನೇಹಿತರಾದರು. ಇಡೀ ದಿನ ಇಸ್ಪೀಟಾಡುವುದು ಶುರುವಾಯಿತು. ಸಾಕಷ್ಟು ನಿದ್ದೆಯಿಲ್ಲದೆ ಕಣ್ಣು ಸದಾ ಕೆಂಪಾಗಿರುತ್ತಿತ್ತು. ಸಿಗರೇಟು ಸೇದಿ ಸೇದಿ, ಕೆಮ್ಮು ಶುರುವಾಗಿತ್ತು. ಅಣ್ಣನಂತೆ ತನಗೂ ಗೂರಲು ಹತ್ತುವುದೆಂದು ದಿಗಿಲಾಗಲು ತೊಡಗಿತ್ತು. ಹೀಗಿರಲು ಒಂದು ದಿನ ಶ್ರೀಮಂತಳಾದ ಸೂಳೆಮನೆಯೊಂದರಲ್ಲಿ ಕನ್ನಡವನ್ನೂ ತುಳುವನ್ನೂ ಮಾತನಾಡುವ ರಾಧೆ ಕಣ್ಣಿಗೆ ಬಿದ್ದಳು. ಶಾಸ್ತಿಗಳಿಗೆ ಇಪ್ಪತ್ತೈದು ವರ್ಷವಾದರೆ ಅವಳಿಗಿನ್ನೂ ಹದಿನೇಳೋ ಹದಿನೆಂಟೋ ಇರಬಹುದು. ‘ನಿಮ್ಮ ಕಡೆಯದೇ ಒಂದು ಹೈಸ್ಕೂಲು ಓದುವ ಹುಡುಗಿ’ ಎಂದು ಸದ್ಗೃಹಸ್ಥನಂತೆ ಸಿಲ್ಕಿನ ಪಂಚೆಯುಟ್ಟು ಸಿಲ್ಕಿನ ಧೋತ್ರ ಹೊದೆದ ತಲೆಹಿಡುಕನೊಬ್ಬ ಶಿಫಾರಸು ಮಾಡಿ ಕರೆದುಕೊಂಡು ಹೋಗಿದ್ದ. ಈ ರಾಧೆ ಹಾರಿಸಿಕೊಂಡು ಬಂದ ಶಿವಮೊಗ್ಗೆಯ ಹತ್ತಿರದ ಹಳ್ಳಿಯ ಬಡವರ ಮನೆಯ ಹುಡುಗಿ ಎಂದು ತಿಳಿಯಿತು. ಅಷ್ಟೊಂದು ಲಂಪಟನೂ, ಹೆಣ್ಣಿನ ಬಗ್ಗೆ ಕ್ರೂರವಾದ ಆಸೆಗಳನ್ನು ಪಡೆದವನೂ ಆದ ತನಗೆ ರಾಧೆ ಬಗ್ಗೆ ಹುಟ್ಟಿದ ಅಕ್ಕರೆ ತನಗೇ ವಿಚಿತ್ರವಾಗಿ ಕಂಡಿತ್ತು. ಅವಳನ್ನು ಕೊಂಡ ಯಜಮಾನಿ ಚತುರೋಪಾಯಗಳಲ್ಲಿ ಮೂರಾದ ಸಾಮ, ಭೇದ, ದಂಡಗಳಿಗೂ ಜಗ್ಗದಿದ್ದಾಗ ಇನ್ನೊಂದನ್ನು ಅವಳ ನಿರೀಕ್ಷೆಗೆ ಮೀರುವಷ್ಟು ಬಳಸಿ, ಅವಳಿಗೆ ರಾಧೆಯನ್ನು ಪಡೆಯಲು ಖರ್ಚಾದ್ದರ ನಾಲ್ಕರಷ್ಟು ಹಣ ಕೊಟ್ಟು, ಹುಡುಗಿಯನ್ನು ಕೊಂಡು ಕೃತಜ್ಞಳಾದ ಹುಡುಗಿಯನ್ನು ತನ್ನ ಹೋಟೆಲಿಗೆ ತಂದರು. ತನ್ನ ಹೆಣ್ಣೆಂದು ಒಂದು ರೂಮಲ್ಲಿ ಇಟ್ಟುಕೊಂಡರು. ಇಸ್ಪೀಟು ಜೂಜು ಎಂದು ಅಲೆಯುತ್ತಿದ್ದವರು ಅವಳ ಮೇಲೆ ಕಣ್ಣಿಟ್ಟು ಕಾಪಾಡಲು ತೊಡಗಿದರು. ಅಣ್ಣನಿಗೆ ಆರೋಗ್ಯ ಸರಿಯಿಲ್ಲವೆಂದು ಇದ್ದಕ್ಕಿದ್ದಂತೆ ತಾರು ಬಂದಾಗ ಅವಳನ್ನೂ ಕರೆದುಕೊಂಡು ಹೊರಟರು. ಅವಳನ್ನು ಜೋಪಾನವಾಗಿ ಕಾಪಾಡಿ ಎಂದು ತನಗೆ ಗೊತ್ತಿದ್ದ ಮಂಗಳೂರಿನ ಹೋಟೆಲೊಂದರಲ್ಲಿ ಇರಿಸಿ, ಹಳ್ಳಿಗೆ ಬಂದರು. ಅಣ್ಣನ ಸಂಸ್ಕಾರಕ್ಕೆಂದು ಹತ್ತಿರದ ಬಂಧುಗಳು ತನಗಾಗಿ ಕಾದಿದ್ದರು. ಉಸಿರಾಡಲೆಂದು ಸದಾ ತೆರೆದುಕೊಂಡಿರುತ್ತಿದ್ದ ಅಣ್ಣನ ಬಾಯಿ ಮುಚ್ಚಿತ್ತು. ಮೂಗಿನ ಸುತ್ತ ನೊಣಗಳು ಕೂತಿದ್ದವು. ಎಷ್ಟೊಂದು ಸಾರಿ ಅಣ್ಣನ ಈ ಚೂಪಾದ ಮೂಗನ್ನು ಚಚ್ಚಬೇಕೆನ್ನುವಷ್ಟು ರೋಷ ಉಕ್ಕಿದೆ ತನ್ನಲ್ಲಿ ಎಂದು ನೆನೆದರು. ಹೀಗೆನ್ನಿಸಿ, ಅಣ್ಣನ ಶವ ಕಂಡಾಗಲೂ ತನ್ನ ಕಣ್ಣಿನಲ್ಲಿ ನೀರು ಬಂದಿರಲಿಲ್ಲ. ಅಷ್ಟು ಕ್ರೂರವಾದ ಮಾತುಗಳನ್ನು ಒಬ್ಬರಿಗೊಬ್ಬರು ಆಡಿಕೊಂಡಿದ್ದರು. ಅಣ್ಣ ನಿರ್ಬೀಜ, ಜುಗ್ಗ, ಸದಾ ಕರೆಕರೆಯಲ್ಲಿರುವ ರೋಗಗ್ರಸ್ತ. ಈಗ ಯೋಚಿಸಿದರೆ ತಮ್ಮದು ಒಂದು ಶಾಪಗ್ರಸ್ತ ಕುಟುಂಬವೆಂದು ಶಾಸ್ತಿಗಳಿಗೆ ಅನ್ನಿಸುತ್ತದೆ. ಅವರು ತನ್ನ ತಾಯಿಯ ಪ್ರೀತಿ ಕಂಡಿರಲಿಲ್ಲ . ಚಿಕ್ಕ ವಯಸ್ಸಲ್ಲೆ ಶಾಸ್ತಿಗಳಿಗೆ ಜನ್ಮವಿತ್ತು ತಾಯಿ ಸತ್ತದ್ದರಿಂದ ಅವರ ತಂದೆ ಮತ್ತೊಂದು ಮದುವೆಯಾಗಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಅವರ ಚಿಕ್ಕತಾಯಿ ತಾನೊಬ್ಬ ಶಾಪಗ್ರಸ್ತೆಯೆಂದೇ ತಿಳಿದು ಎಲ್ಲರನ್ನೂ ಹಿಂಸಿಸುತ್ತ ಬದುಕಿ ತೋಟದಲ್ಲಿ ನಾಗರ ಹಾವು ಕಚ್ಚಿ ಸತ್ತಿದ್ದರು. ಅವರ ಅಪ್ಪ ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡು ಸತ್ತಿದ್ದರು. ಅಣ್ಣನ ಹೆಂಡತಿ ನ್ಯುಮೋನಿಯಾ ಆಗಿ ಸತ್ತಿದ್ದಳು. ಈಗ ಅಣ್ಣ ಏಕಾಂಗಿಯಾಗಿ, ಜುಗ್ಗನಾಗಿ ಬದುಕಿ, ಹಳೆಮನೆಯ ಮೂಲೆ ಮೂಲೆಯಲ್ಲೂ ಪೂರ್ವಿಕರು ಹುಗಿದಿದ್ದಿರಬಹುದಾದ ಬಂಗಾರಕ್ಕಾಗಿ ಅಗೆದು, ಹುಡುಕಿ, ಸತ್ತಿದ್ದ. ಆದರೆ ಮನೆಯಲ್ಲಿ ಹಿರಿಯರು ಮಾಡಿಟ್ಟ ಆಸ್ತಿ ದಂಡಿಯಾಗಿತ್ತು. ಒಂದು ಟ್ರಂಕಿನ ತುಂಬ ಬಂಗಾರವಿತ್ತು. ಯಾರೋ ಪೂರ್ವಿಕರು ವಿಜಯನಗರ ಸಾಮ್ರಾಜ್ಯದ ಅವನತಿ ಕಾಲದಲ್ಲಿ ಕೊಳ್ಳೆ ಹೊಡೆದದ್ದು ಅದು ಎಂದು ಪ್ರತೀತಿ. ಮನೆಯನ್ನೆಲ್ಲ ಅಗೆದು ನೋಡಿಯಾದ ಮೇಲೆ ಮನೆಯ ಹಿಂದಿನ ತೋಟದಲ್ಲಿ ಎಲ್ಲೋ ಇನ್ನಷ್ಟು ಹುಗಿದ ಬಂಗಾರವಿದೆ ಎಂದು ನಂಬಿ ಅವರ ಅಣ್ಣ ಎಲ್ಲೆಲ್ಲೋ ಅಗೆಸಿ ಹುಡುಕುತ್ತಲೇ ತನ್ನ ಆಯುಷ್ಯ ಸವೆಸಿ ಸತ್ತಿದ್ದ. ಈಗ ಇಡೀ ಆಸ್ತಿಗೆ ಶಾಸ್ತಿ ಹಕ್ಕುದಾರರಾದರು. ಅಣ್ಣನ ಸಂಸ್ಕಾರ ಮುಗಿಸಿ, ಟ್ರಂಕಿನಲ್ಲಿದ್ದ ಬಂಗಾರವನ್ನು ತಿಜೋರಿ ತೆಗೆದು ನೋಡಿ, ‘ಅಣ್ಣ ಪೋಲು ಮಾಡಲಿಲ್ಲವಲ್ಲ’ ಎಂದು ಸಂತೋಷಪಟ್ಟಿದ್ದರು. ತನ್ನ ಅರಗಿಣಿ ರಾಧೆಯನ್ನು ಹೋಟೆಲಿಂದ ಕರೆದು ತಂದು ತನ್ನ ಆಸ್ತಿಗೆ ಐದು ಮೈಲಿ ದೂರದಲ್ಲಿ ನದಿಯ ದಂಡೆಯೊಂದರ ಮೇಲಿದ್ದ ತೋಟದಲ್ಲಿ ಒಂದು ಗುಡಿಸಲು ಕಟ್ಟಿಸಿ ಇಳಿಸಿದ್ದರು. ಅವಳನ್ನು ಕಾಯುವುದಕ್ಕೆ ನಂಬಿಕಸ್ತರಾದವರನ್ನು ಹುಡುಕುತ್ತಿದ್ದಾಗ ರಾಧೆ ತನ್ನ ಚಿಕ್ಕಮ್ಮನೊಬ್ಬಳು ಶಿವಮೊಗ್ಗದಲ್ಲಿ ಇರುವುದಾಗಿ ಹೇಳಿದಳು. ಅವಳಿಗೊಬ್ಬ ಗಂಡನೂ ಇದ್ದ. ಅವನು ಟೈಲರಾಗಿದ್ದ. ಚನ್ನಗಿರಿಯಲ್ಲಿ ಇಟ್ಟುಕೊಂಡ ಸಾಹುಕಾರನಿಗೆ ಮುದುಕಿಯಾಗಿ ಬೇಡವಾಗಿಬಿಟ್ಟಿದ್ದ ಅವಳ ತಾಯಿಯನ್ನೂ ಮತ್ತು ಅವಳ ಶಿವಮೊಗ್ಗದ ಮರ್‍ಯಾದಸ್ಥ ಬಳಗವನ್ನೂ ಹುಡುಕಿ ಶಾಸ್ತಿಗಳು ಕರೆದುಕೊಂಡು ತೋಟದ ಬಳಿಯಲ್ಲೊಂದು ಹೆಂಚಿನ ಮನೆ ಕಟ್ಟಿಸಿದ್ದರು. ಚಿಕ್ಕಮ್ಮನ ಗಂಡ ಟೈಲರಿಗೆ ಹತ್ತಿರದ ಪೇಟೆಯಲ್ಲಿ ಒಂದು ಬಟ್ಟೆಯಂಗಡಿ ತೆಗೆಸಿಕೊಟ್ಟಿದ್ದರು. ಕಗ್ಗಾಡಿನಲ್ಲಿದ್ದ ಶಾಸ್ತಿಗಳ ತೋಟದ ಮನೆಗೆ ಸ್ವಜಾತಿಯ ನೆರೆಹೊರೆಯಿಲ್ಲ. ದೂರದಲ್ಲಿದ್ದ ಬಂಧು ಬಳಗ ಯಾವತ್ತೂ ದೂರವಿದ್ದವರೇ. ಮನೆಯಲ್ಲಿ ಶ್ರಾದ್ಧವಾದಾಗ ನಿರ್ವಾಹವಿಲ್ಲದೆ ಬರುವವರು ಬಿಟ್ಟರೆ, ಜಾತಿಯ ಒಂದೇ ಒಂದು ನರಪಿಳ್ಳೆ ಮನೆಯ ಹತ್ತಿರ ಸುಳಿಯದು. ಆದ್ದರಿಂದ ಶಾಸ್ತಿಗಳು ನಿರ್ಭೀತರಾಗಿ ರಾಧೆಯ ಜೊತೆ ಸಂಬಂಧವಿಟ್ಟುಕೊಂಡರು. ಒಂದು ಹಳೆಯ ಅರಿವೆ ಟಾಪಿನ ಫೋರ್ಡ್ ಕಾರನ್ನು ಕೊಂಡು, ಪೈಜಾಮದ ಬದಲು ಕಚ್ಚೆ ಪಂಚೆಯುಟ್ಟು ಮೇಲೊಂದು ಶರ್ಟನ್ನು ಹಾಕಿಕೊಂಡು, ಪಂಪ್ ಶೂ ಧರಿಸಿ, ಎತ್ತಿನ ಬಂಡಿಯ ದಾರಿಯಲ್ಲಿ ಅದನ್ನು ನಡೆಸಾಡುತ್ತಾ ಬಂಧು ಬಳಗದಿಂದ ಇನ್ನಷ್ಟು ದೂರವಾಗಿದ್ದರು. ಹೀಗೆ ಎರಡು ವರ್ಷ ಕಳೆದಿತ್ತು. ರಾಧೆ ಪೀಡಿಸತೊಡಗಿದ್ದಳು: “ನಾನು ಎಷ್ಟೆಂದರೂ ನೀವು ಇಟ್ಟುಕೊಂಡವಳು. ನೀವು ಮದುವೆಯಾಗಲೇಬೇಕು” ಎಂದು. ರಾಧೆಯಲ್ಲಿ ಅವಳಿಗೆ ಮಕ್ಕಳಾಗಿರಲಿಲ್ಲ. ಶಾಸ್ತಿಗಳಿಗೆ ಅದೊಂದು ಚಿಂತೆಯಾಗಿತ್ತು: ‘ಈ ಶಾಪಗ್ರಸ್ತ ಕುಟುಂಬದ ತಾನೂ ನಿರ್ಬೀಜನೆ?’ ಎಂದು. ‘ಅದು ನನ್ನ ಹಣೆ ಬರಹ, ನೀವು ಮದುವೆಯಾಗಿ ನೋಡಿ’ ಎಂದು ರಾಧೆ ಗಂಟುಬಿದ್ದಿದ್ದಳು. ಶಾಸ್ತಿಗಳು ಅವರ ಅನುಭವದಲ್ಲಿ ರಾಧೆಯಂತಹ ಇನ್ನೊಂದು ಜೀವವನ್ನು ಕಂಡಿರಲಿಲ್ಲ. ಅವಳಿಗೆ ಆಸೆ ಇಲ್ಲವೆಂದಲ್ಲ. ಆದರೆ ಅವಳ ಆಸೆ ಸಂಸಾರದ ಮಿತಿಯಲ್ಲಿತ್ತು. ಗಂಜಿಗೆ ತೆಂಗಿನ ಹಾಲೂ, ಮಾವಿನ ಮಿಡಿಯ ಉಪ್ಪಿನ ಕಾಯಿಯೂ ಸಿಕ್ಕಂತಾಯಿತಲ್ಲ ಎಂದೇ ಅವಳಿಗೆ ಸಂತೋಷ. ಸದಾ ಉರಿದಾಡಿಕೊಂಡು ರೋಷದಲ್ಲೇ ಓಡಾಡುವ ಶಾಸ್ತಿಗಳು, ಬಾಯಿಯನ್ನು ಮುದ್ದಾಗಿ ತೆರೆದು ಮುದ್ದಾಗಿಮಾತಾಡುವ ರಾಧೆಯಿಂದ ಮೋಹಿತರಾಗಿ ಅವಳ ಬಳಿ ಮಾತ್ರ ಮೃದುವಾಗುವರು. ಅವಳ ಒತ್ತಾಯಕ್ಕೆ ಇಲ್ಲವೆನ್ನಲಾರದೆ, ತನಗೆ ಮಗುವಾಗಬಹುದೋ ಎಂಬ ಕುತೂಹಲದಿಂದಲೂ ಹೆಣ್ಣು ಹುಡುಕಲು ಶುರು ಮಾಡಿದರು. ಹತ್ತಿರದ ಯಾರೂ ಈ ಶ್ರೀಮಂತ ಶಾಪಗ್ರಸ್ತ ಮನೆಗೆ ಹೆಣ್ಣು ಕೊಡಲು ಮುಂದಾಗಲಿಲ್ಲ. ಏನೋ ಜಾತಕದ ನೆವ ಹೇಳಿ ಆಗುವುದಿಲ್ಲ ಎಂದು ಬಿಡುವರು. ಅಲ್ಲದೆ, ಮದುವೆ ಮಾಡಿಸುವ ಯಾವ ಹಿರಿಯರೂ ಶಾಸ್ತಿಗಳಿಗೆ ಆಪ್ತರಾಗಿ ಉಳಿದಿರಲಿಲ್ಲ. ತಾನೇ ಸ್ವತಃ ಹೋಗಿ ಹೆಣ್ಣು ಕೇಳುವವರನ್ನು ಯಾರು ಗೌರವಿಸುತ್ತಾರೆ? ಕೊನೆಗೆ ಚಿಕ್ಕಮಗಳೂರಿನ ಹಳ್ಳಿಯೊಂದರಲ್ಲಿ ಬಡ ಕುಟುಂಬದ ಹೆಣ್ಣೊಂದು ಇದೆಯೆಂದು ಗೊತ್ತಾಯಿತು. ಮೈಮೇಲೆ ಜರಿಯ ಶಲ್ಯ ಹೊದ್ದು, ಕಚ್ಚೆ ಹಾಕಿದ ಪಂಚೆಯುಟ್ಟು, ತಲೆಗೆ ಮೈಸೂರಿನವರ ಥರ ಪೇಟ ಕಟ್ಟಿಕೊಂಡು ವಿಭೂತಿ, ಕುಂಕುಮ ಧರಿಸಿ ಆಚಾರವಂತರಂತೆ ಕಾಣುತ್ತ ಶಾಸ್ತಿಗಳು ಹೆಣ್ಣು ಕೇಳಲು ಹೋದರು. ಎಂಟು ಹೆಣ್ಣುಗಳನ್ನು ಹೆತ್ತು ಮೊದಲನೆಯವಳು ಮದುವೆಯಾದರೆ ಸಾಕೆಂದು ಹಾತೊರೆಯುತ್ತಿದ್ದ ಹುಡುಗಿಯ ತಾಯಿ ತಂದೆಯರು ಭಾವೀ ಅಳಿಯನ ಶ್ರೀಮಂತಿಕೆ, ಅವನ ಕುಲ, ಅವನ ಗೋತ್ರ, ಅವನ ಜಾತಕ ನೋಡಿ, ಮತ್ತೇನು ಬೇರೆ ಏನಾದರೂ ತಿಳಿಯಬೇಕೆಂದೂ ಕುತೂಹಲ ಕೂಡ ಪಡದೆ ಸರೋಜಳನ್ನು ಮದುವೆ ಮಾಡಿಕೊಡಲು ಸಮ್ಮತಿಸಿದ್ದರು. ಸರೋಜ ಸ್ಫುರದ್ರೂಪಿಯಾದ ಹುಡುಗಿ. ದಿವ್ಯ ನಿರ್ಲಕ್ಷ್ಯದ ಅಗಲವಾದ ಕಣ್ಣುಗಳುಳ್ಳ ಸರೋಜ ತನಗೇನು ಬೇಕು ಬೇಡ ಹೇಳದೆ ಮದುವೆಯಾಗಿದ್ದಳು. ಅವಳಿಗೆ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿಯಿದೆ; ಸೊಗಸಾಗಿ ಭಾರತ ವಾಚನ ಮಾಡುತ್ತಾಳೆಂಬುದು ಶಾಸ್ತಿಗಳಿಗೆ ಮೊದಲಿಗೆ ಹೆಮ್ಮೆಯ ವಿಷಯವಾಗಿತ್ತು. ಹುಡುಗಿಯ ವಿದ್ಯಾಸಂಪನ್ನತೆ ಕೇಳಿ ರಾಧೆಯೂ ಸಂತೋಷಪಟ್ಟಿದ್ದಳು. ಪ್ರೀತಿ ಇಲ್ಲದ ಗಂಡಿನ ಕಡೆಯ ದಿಬ್ಬಣದಲ್ಲಿ ಅವಳೊಬ್ಬಳೇ ಪ್ರೀತಿಯುಳ್ಳವಳಾಗಿ ಸಾಕ್ಷಾತ್ ಗೌರಿಯಂತೆ ಸಿಂಗರಿಸಿಕೊಂಡು ಬಳಗದವಳಾಗಿ ಮದುವೆಗೂ ಬಂದಿದ್ದಳು. ಶ್ರೀಮಂತರಾದ ಶಾಸ್ತಿಗಳ ಈ ಸಂಬಂಧ ಸರೋಜಳ ತಾಯಿ ತಂದೆಯ ಕಿವಿಗೂ ಬಿದ್ದಿರಲಿಲ್ಲವೆಂದಲ್ಲ. ಆದರೆ ಅದನ್ನು ನಂಬದಂತೆ ಅವರು ನಟಿಸಿದ್ದರು. ರಾಧೆಗೆ ಮದುವೆ ಮನೆಯಲ್ಲಿ ಎಲ್ಲಿ ಊಟಕ್ಕೆ ಹಾಕಬೇಕೆಂಬುದು ಮಾತ್ರ ಅವರಿಗೆ ಸಮಸ್ಯೆಯಾಗಿತ್ತು. ಶಾಸ್ತಿಗಳು ಮಾಡಿಕೊಟ್ಟ ತೋಟದ ಫಸಲಿನಿಂದ ಬಂದ ಇಡೀ ವರ್ಷದ ಉಳಿತಾಯವನ್ನು ಬಳಸಿ ಅವಳು ವಧುವಿಗೆ ಸೀರೆಯನ್ನೂ, ಮಂಗಳೂರಿನ ಹೆಸರಾಂತ ಅಕ್ಕಸಾಲಿಗರು ಮಾಡಿಕೊಟ್ಟ ಹವಳ ಜೋಡಿಸಿದ ಬಂಗಾರದ ಬಳೆಗಳನ್ನೂ ಖರೀದಿಸಿದ್ದಳು. ಶಾಸ್ತಿಗಳ ಪರವಾಗಿ ಅವಳಲ್ಲದೆ, ಬೇರೆ ಯಾರೂ ಈ ಮದುವೆಯಲ್ಲಿ ಸಂಭ್ರಮಿಸಿರಲಿಲ್ಲ; ಉಡುಗೊರೆಯನ್ನೂ ಕೊಡಲಿಲ್ಲ. ಎಂಟು ಹೆಣ್ಣು ಹೆತ್ತು ಸೊರಗಿದ ಸರೋಜಳ ತಾಯಿ ತಂದೆಯರು ರಾಧೆಯ ಅಕ್ಕರೆಯಿಂದಲೂ, ಅದ್ದೂರಿಯ ಉಡುಗೊರೆಯಿಂದಲೂ, ತಮ್ಮ ಮಗಳಿಗೆ ಚಿಂತೆಯಿಲ್ಲವೆಂದು ಸಮಾಧಾನ ಪಟ್ಟಿದ್ದರು. ಹತ್ತಿರದ ಬಂಧುಗಳಿಗೆಲ್ಲ ಅವರು ಹೇಳುತ್ತಿದ್ದುದು ಹೀಗೆ – “ನನ್ನ ಅಳಿಯ ಕಾರಿಟ್ಟಿದ್ದಾನೆ, ಬೊಂಬಾಯಿಯಲ್ಲಿ ಹೋಟಲಿದೆಯಂತೆ. ಯಾರೋ ಅದನ್ನು ನೋಡಿಕೊಂಡು ಪ್ರತಿ ತಿಂಗಳೂ ಕ್ಯಾಶನ್ನು ಕಳಿಸುತ್ತಾರಂತೆ. ನೂರಾರು ಎಕರೆ ತೋಟದ ಮಾಲೀಕರು ನನ್ನ ಅಳಿಯ. ಮುಖ್ಯವೆಂದರೆ ನನ್ನ ಮಗಳಿಗೆ ಅತ್ತೆಯೂ ಇಲ್ಲ, ಮಾವನೂ ಇಲ್ಲ. ಎಲ್ಲ ಅವಳದೇ ವಹಿವಾಟು”. ಮನೆ ತುಂಬಿಸಿಕೊಂಡದ್ದಾಯಿತು. ಬೀಗರು ಹೋದದ್ದಾಯಿತು. ಶಾಸ್ತಿಗಳು ಈಗಲೂ ನೆನೆಯುತ್ತಾರೆ: ಅಷ್ಟೊಂದು ಲಕ್ಷಣವತಿಯಾದ ಹೆಂಡತಿ ತನ್ನನ್ನು ಮುಖವೆತ್ತಿ ನೋಡಿರಲಿಲ್ಲ. ಅದಕ್ಕೆ ಕಾರಣ ನಾಚಿಕೆಯಲ್ಲ. ತಾನೆಂದರೆ ಸಸಾರ ಎನ್ನುವುದು ಹೊಳೆಯಿತು. ಸರಸದಲ್ಲಿ ಕೈಹಿಡಿದರೆ ಕಲ್ಲಿನ ಗೊಂಬೆಯಂತೆ ನಿಲ್ಲುವಳು. ಅವಳ ಕಣ್ಣುಗಳ ದೃಷ್ಟಿ ತನ್ನ ದೃಷ್ಟಿಯನ್ನು ಕೂಡಿದ್ದೇ ನೆನಪಿಲ್ಲ. ಏನನ್ನೂ ನೋಡದಂತೆ, ಅವಳ ನಿರ್ಲಿಪ್ತ ಕಣ್ಣುಗಳು ಓಡಾಡುವವು. ಶಾಸ್ತಿಗಳು ಬೈದರು, ಹೊಡೆದರು. ಆದರೆ ಸರೋಜಳ ನಿರ್ಲಕ್ಷ್ಯ ಬದಲಾಗಲಿಲ್ಲ. ಪಕ್ಕದಲ್ಲಿ ಮಲಗುವಳು – ತನ್ನ ಕರ್ತವ್ಯವೆಂಬಂತೆ ಗಂಡನ ಜೊತೆ ಕೂಡುವಳು. ಆದರೆ ಅದರಿಂದ ಯಾವ ಫಲವೂ ದೊರೆಯಲಿಲ್ಲ. ಐದು ವರ್ಷಗಳಾದರೂ ಅವಳು ಗರ್ಭವತಿಯಾಗಿರಲಿಲ್ಲ. ರಾಧೆ ಏನೇನೋ ಮದ್ದು ಮಾಡಿಕೊಟ್ಟಳು. ಹೆಂಡತಿಯನ್ನು ಶಯ್ಯೆಯಲ್ಲಿ ಒಲಿಸಿಕೊಳ್ಳುವುದು ಹೇಗೆಂದು ಕಲಿಸಿಕೊಟ್ಟಳು. ಆದರೆ ಶಾಸ್ತಿಗಳು ಕಲಿತು ಉಪಯೋಗಿಸುತ್ತಿದ್ದ ಯಾವ ಕಾಮಕಲೆಯೂ ಸರೋಜಳನ್ನು ಸಡಿಲಿಸಲಿಲ್ಲ. ಬದಲಾಗಿ ಹೇಸುವಳು. ಕಾಮಕೇಳಿಮುಗಿದದ್ದೇ ಬಚ್ಚಲಿಗೆ ಹೋಗಿ ತಲೆಗೂ ಸ್ನಾನ ಮಾಡಿ ಬಂದು, ಒದ್ದೆ ತಲೆಯಲ್ಲೇ ಮಲಗಿ ಬಿಡುವಳು. ಶಾಸ್ತಿಗಳು ತಮ್ಮ ರೋಷವನ್ನು ಕಳೆದುಕೊಳ್ಳಲು ರಾಧೆಯ ಮನೆಗೆ ಕಾರು ಬಿಟ್ಟುಕೊಂಡು ನಡುರಾತ್ರೆಯಲ್ಲೇ ಹೋಗಿಬಿಡುವರು. ಆಶ್ಚರ್ಯವೆಂದರೆ ರಾಧೆಯ ಜೊತೆ ಮಾತ್ರ ಸರೋಜ ಎಷ್ಟು ಬೇಕೋ ಅಷ್ಟು ವಿಶ್ವಾಸದಲ್ಲಿ, ಆದರೆ ಸಲಿಗೆಯಿಲ್ಲದಂತೆ ಇರುವಳು. ರಾಧೆಗೆ ಓದುವುದರಲ್ಲಿ ಖುಷಿಯಿದ್ದುದರಿಂದ ತಾನು ತರಿಸಿಕೊಂಡ ಕಥೆ ಕಾದಂಬರಿಗಳನ್ನು ಸರೋಜಳಿಗೆ ಕಳಿಸುವುವಳು. ಸರೋಜ ತಾನು ತಾಯಿ ಮನೆಯಿಂದ ತಂದ ಪುಸ್ತಕಗಳನ್ನು ರಾಧೆಗೆ ಕಳಿಸುವಳು. ರಾಧೆ ತಾನು ಬೆಳೆದ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಸುಂದರವಾಗಿ ಹೆಣೆದು ಮುಡಿಯಲು ಸರೋಜಳಿಗೆ ಕಳಿಸುವಳು. ಸರೋಜ ಮೊದಲು ಅದನ್ನು ತಾನು ಪೂಜಿಸುವ ಶಾರದೆಗೆ ಮುಡಿಸಿ ತನ್ನ ಹೆರಳಿಗೆ ಸಿಕ್ಕಿಸಿಕೊಳ್ಳುವಳು. ರಾಧೆ ಮನೆಗೆ ಬರುವುದುಂಟು – ಬಾಳೆಲೆ ಬೇಕೆಂದೋ, ಹಗ್ಗ ಬೇಕೆಂದೋ ಅಥವಾ ರಂಗೋಲೆ ಪುಡಿ ಬೇಕೆಂದೋ ನೆವ ಮಾಡಿಕೊಂಡು. ಬರುವಾಗ ತಾನೇ ಕುಟ್ಟಿ ತಯಾರಿಸಿದ ಅವಲಕ್ಕಿಯನ್ನೊ, ಹಿತ್ತಲಿನಲ್ಲಿ ಬೆಳೆದ ತೊಂಡೆಯನ್ನೊ ತರುವಳು. ಅವಳನ್ನು ಬಹುವಚನದಲ್ಲಿ ‘ಒಳಗೆ ಬನ್ನಿ’ ಎಂದು ಸರೋಜ ಸತ್ಕರಿಸಿ ಕಾಫಿ ಮಾಡಿಕೊಡುವಳು. ಆದರೆ ಎಷ್ಟು ಬೇಕೋ ಅಷ್ಟು ಮಾತು. ಸಲಿಗೆ ಬೆಳೆಯಲೇ ಇಲ್ಲ. ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆದದ್ದೇ ಇಲ್ಲ. ರಾಧೆ ಬಂದಾಗ ಶಾಸ್ತಿಗಳು ಮನೆಯಲ್ಲಿ ಇದ್ದರೆ ಸೀದಾ ತನ್ನ ಕಾರು ನಿಲ್ಲಿಸಿದಲ್ಲಿಗೆ ಹೋಗಿ ಜವಾನನನ್ನು ಕರೆದು ಅದನ್ನು ತೊಳೆಸಲು ತೊಡಗುವರು. ರಾಧೆ ಹೆಚ್ಚು ಕಾಲವಿದ್ದು ಬಿಟ್ಟರೆ ಹಳ್ಳಿಯ ದಾರಿಯಲ್ಲಿ ಓಡಾಡುವ ಕಾರು ಒಂದು ದೂಳಿನ ಕಣವೂ ಇಲ್ಲದ ದೇವತಾ ವಿಗ್ರಹದಂತೆ ಮಿಂದು ಮಡಿಯಾಗಿ ಬಿಡಿವುದು. +ಅಧ್ಯಾಯ ೬ +ಈ ನಡುವೆ ಶಾಸ್ತಿಗಳ ಇಡೀ ಬದುಕನ್ನೇ ಬುಡಮೇಲು ಮಾಡುವಂತಹ ಒಂದು ಘಟನೆ ನಡೆಯಿತು. ಕನ್ನಡ ಮಾತಾಡಬಲ್ಲ ಮಲಯಾಳಿಯೊಬ್ಬ ಉಡುಪಿಯಲ್ಲಿ ಒಂದು ಆಯುರ್ವೇದದ ಶಾಪು ತೆರೆದ. ಕರುಣಾಕರ ಪಂಡಿತ ಎಂದು ಅವನ ಹೆಸರು. ಶಾಸ್ತಿಗಳಷ್ಟೇ ವಯಸ್ಸಿನ ಅವನು ಅವನ ಮುಖದ ಕಳೆಯನ್ನು ಹೆಚ್ಚುಮಾಡುವಂತಹ ಗಡ್ಡ ಮೀಸೆಗಳನ್ನು ಬಿಟ್ಟಿದ್ದ. ತಲೆಗೂದಲನ್ನು ಕತ್ತರಿಸದೆ ಅದನ್ನು ಗಂಟು ಹಾಕಿ ಕಟ್ಟುತ್ತಿದ್ದ. ಹಣೆಯ ಮೇಲೆ ಗಂಧದಬೊಟ್ಟು ಇಟ್ಟಿರುತ್ತಿದ್ದ. ಸೌಮ್ಯವಾದ ಲಕ್ಷಣವಾದ ಮುಖ ಅವನದು. ಅವನ ಹತ್ತಿರ ತನ್ನದಕ್ಕಿಂತ ಚೆನ್ನಾದ ಕಾರು ಇತ್ತು. ಅವನ ಉಡುಪು,ಅವನ ಹಾವ ಭಾವ ನೋಡಿದರೆ ತುಂಬ ಅನುಕೂಲವಂತನಂತೆಯೂ ಕಾಣುತ್ತಿದ್ದ. ಶಾಸ್ತಿಗಳು ಕಲಿತದ್ದಕ್ಕಿಂತ ಒಳ್ಳೆಯ ಹಿಂದಿ ಅವನಿಗೆ ಬರುತ್ತಿತ್ತು. ಇಂಗ್ಲಿಷ್ ಕೂಡ ಬರುತ್ತಿತ್ತು- ಆಧುನಿಕ ಅಲೋಪತಿಯ ವೈದ್ಯಕ್ರಮವೂ ಆತನಿಗೆ ಗೊತ್ತು. ಸಂಸ್ಕ್ರುತವೊ – ಅವನಿಗೆ ನೀರು ಕುಡಿದಂತೆ. ’ನೀವಿಟ್ಟ ಕಾರು ಯಾವ ಮಾಡೆಲು’ ಎಂದು ಕೇಳಲು ಹೋಗಿ, ವೀರ್ಯವರ್ಧಕ ಲೇಹ್ಯಗಳನ್ನು ಗುಪ್ತ ಮಲಾಲೋಚನೆಯಲ್ಲಿ ಪಡೆಯುವುದರಲ್ಲಿ ಈ ಪರಿಚಯ ಬೆಳೆದು, ಇಬ್ಬರೂ ಸ್ನೇಹಿತರಾದರು. ಒಮ್ಮೆ ಅವನನ್ನು ಮನೆಗೆ ಊಟಕ್ಕೆಂದು ಕರೆದುಕೊಂಡು ಹೋದರು. ಮನೆಯನ್ನು ಹೊಕ್ಕವನೇ ಅವನು ಸುತ್ತು ಮುತ್ತಲೂ ನೋಡಿ ಚಿಂತಿಸುತ್ತ ನಿಂತ. ಅವನ ಕಣ್ಣುಗಳು ಗಂಭೀರವಾಗಿ ಧ್ಯಾನಸ್ಥವಾದುದನ್ನು ಕಂಡು, ಚಿಂತೆಯಾಗಿ ಸಿಗರೇಟು ಹಚ್ಚಿದ ಶಾಸ್ತಿಗಳು ವಿನಯದಲ್ಲಿ ಅವನೆದುರು ನಿಂತರು. ಸೋಫಾ ತೋರಿಸಿ ಕೂರಿ ಎಂದರು. ಶಾಸ್ತಿಗಳು ಯಜಮಾನರಾದ ಕೂಡಲೇ ಮಂಗಳೂರಿನಿಂದ ತಂದ ಮೆತ್ತನೆಯ ಸೋಫಾದ ಮೇಲೆ ಕರುಣಾಕರ ಪಂಡಿತ ಕೂತ. ಇನ್ನೂ ತುಸು ಹೊತ್ತು ಕಣ್ಣುಮುಚ್ಚಿದ್ದವನು ಹೆಬ್ಬೆರಳಿನಿಂದ ಉಳಿದ ಬೆರಳುಗಳನ್ನು ಅವುಗಳ ಸಂದಿಗಳಲ್ಲಿ ಮುಟ್ಟಿ ನೋಡುತ್ತ ಏನೋ ಜವಿಸತೊಡಗಿದ. ಕಣ್ಣುಬಿಟ್ಟು ಶಾಸ್ತಿಗಳಿಗೆ, “ಬೇಸರಮಾಗದಿದ್ದರೆ ನಾನು ಏನೋ ಹೇಳುವುದಿದೆ. ನನಗೆ ಜ್ಯೋತಿಷ್ಯವೂ ಒಂದಿಷ್ಟು ಗೊತ್ತು. ನಮ್ಮ ಮನೆತನದ ಸಂಪ್ರದಾಯದಿಂದ ಕಲಿತದ್ದು” ಎಂದ. ಶಾಸ್ತಿಗಳಿಗೆ ಅವನ ಬಗ್ಗೆ ಗೌರವ ಇಮ್ಮಡಿಯಾಯಿತು. ಭಕ್ತಿಯಿಂದ “ದಯಮಾಡಬೇಕು” ಎಂದರು. “ಈ ಮನೆಯಲ್ಲಿ ಅನಿಷ್ಟವಿದೆ. ತಪ್ಪು ತಿಳಿಯಬೇಡಿ. ಪೂರ್ವಕಾಲದಲ್ಲಿ ಇಲ್ಲೊಂದು ಸ್ತೀಹತ್ಯೆ ನಡೆದಿದೆ. ಆದ್ದರಿಂದ ಇಲ್ಲಿ ಸಂತಾನವಿಲ್ಲ. ಇಲ್ಲಿ ಬದುಕುವವರಿಗೆ ಶಾಂತಿಯಿಲ್ಲ. ಕ್ಷುದ್ರ ಭೂತಗಳು ಇಲ್ಲಿ ಇರುವವರನ್ನು ಕವಿದುಬಿಡುತ್ತವೆ. ಇಲ್ಲಿ ಬಂದದ್ದೇ ನನ್ನ ಮಿದುಳಲ್ಲಿ ಕಿಡಿಕಾರುವ ಕಣ್ಣುಗಳೆರಡು ತೆರೆದಂತಾದವು. ಅವುಗಳನ್ನು ದಿಟ್ಟಿಸಲು ಇನ್ನೆರಡು ಕಣ್ಣುಗಳು ತೆರೆಯುತ್ತಿದ್ದಂತೆ ನಾನು ಜಪಮಾಡತೊಡಗಿದೆ….” ಎಂದು ಕರುಣಾಕರ ಪಂಡಿತ ಹೇಳಿದ್ದನ್ನು ಕೇಳಿ ಶಾಸ್ತಿಗಳು ಬೆಚ್ಚಿದರು. “ಇಲ್ಲೊಂದು ತಾಂತ್ರಿಕ ಪೂಜೆ ನಡೆಯಬೇಕು. ಅದಕ್ಕೆ ದಂಪತಿಗಳಿಬ್ಬರೂ ಸಹಕರಿಸಬೇಕು. ಅಂದರೆ ನಿಮ್ಮನೆಯಾಕೆ ಬೆತ್ತಲೆಯಾಗಿ ಒಬ್ಬರೆ ಕೂತು ಪೂಜೆ ಮಾಡಬೇಕು – ಕೊನೆಯಲ್ಲಿ” ಎಂದು ಕರುಣಾಕರ ಪಂಡಿತ ರೋಗಿಗೆ ಔಷಧದ ಸೇವನಾಕ್ರಮ ಹೇಳುವಂತೆ ಹೇಳಿದ್ದ. ಶಾಸ್ತಿಗಳು ನಿಟ್ಟುಸಿರು ಬಿಟ್ಟು, “ನೀವು ಮಾಡಿಸುತ್ತೀರ?” ಎಂದಿದ್ದರು. ಕರುಣಾಕರ ಪಂಡಿತ ‘ಆಗಬಹುದು’ ಎಂದು ಪಂಚಾಂಗ ನೋಡಿ ಶುಭ ದಿನ ಗೊತ್ತುಮಾಡಿದ್ದ. “ಈ ಪೂಜೆ ಗುಪ್ತವಾಗಿ ನಡೆಯತಕ್ಕದ್ದು” ಎಂದಿದ್ದ. +ಅಧ್ಯಾಯ ೭ +ಪೂಜೆ ಶುರುವಾಗುವುದಕ್ಕೆ ಮುಂಚೆ ಎಲ್ಲ ಸಿದ್ಧತೆಯೂ ನಡೆಯಿತು. ನಿರ್ಲಕ್ಷ್ಯದಲ್ಲಿ ಅಲೆಯುವ ಸರೋಜಳ ಕಣ್ಣುಗಳು ಕರುಣಾಕರ ಪಂಡಿತ ಪಟ್ಟೆಮುಡಿಯುಟ್ಟು ರಂಗೋಲೆಯನ್ನು ಕುಂಕುಮ ಅರಿಸಿನವನ್ನು ಬಳಸಿ ಮಂಡಳ ನಿರ್ಮಿಸುವುದನ್ನು ನೋಡುವುದರಲ್ಲಿ ತಲ್ಲೀನಗೊಂಡವು. ಅವನಿಗೆ ಶ್ರದ್ಧೆಯಿಂದ ಬತ್ತಿ ಹೊಸೆದುಕೊಟ್ಟಳು, ತೆಂಗಿನ ಸಿಪ್ಪೆ ಬಿಡಿಸಿಕೊಟ್ಟಳು. ಬೆಳಗಿದ ಚೊಂಬಿನಲ್ಲಿ ಶುಭ್ರವಾದ ಎಳ್ಳೆಣ್ಣೆ ತಂದುಕೊಟ್ಟಳು. ಇವನ್ನೆಲ್ಲ ಶಾಸ್ತಿಗಳು ಶುಭ ಚಿಹ್ನೆ ಎಂದು ಕಂಡು ಹರ್ಷಿತರಾದರು. ಎಂದಿಲ್ಲದ ಗೆಲುವು ಸರೋಜಳಲ್ಲಿ ಮೂಡತೊಡಗಿತ್ತು. ಅವಳು ಅಡ್ಡಾದಿಡ್ಡಿಯಾಗಿ ತೆರೆಯುತ್ತಿದ್ದ ಬೈತಲೆ ನೇರವಾಯಿತು. ಮದುವೆಯಲ್ಲಿ ಕೊಟ್ಟ ಆಭರಣಗಳನ್ನೆಲ್ಲ ಧರಿಸತೊಡಗಿದಳು. ಪೂಜೆ ಮುಗಿದ ಮೇಲೆ ಅವಳು ಕೊಡುವ ಕಾಫಿ ಹದವಾದ ಬಿಸಿಯಲ್ಲಿ ತನ್ನ ವಾಸನೆಯನ್ನು ಕಳೆದುಕೊಳ್ಳದಂತೆ ರುಚಿಯಾಗಿರುತ್ತಿತ್ತು. ಯಾವತ್ತೂ ಹಳೆಯ ಡಿಕಾಕ್ಷನ್ ಬಿಸಿ ಮಾಡಿ ಅವಳು ಕಾಫಿ ಕೊಟ್ಟದ್ದಿಲ್ಲ. ಕರುಣಾಕರ ಪಂಡಿತನನ್ನು ಕ್ರಮೇಣ ಅವಳು ವಿಶ್ವಾಸದಲ್ಲಿ ಹಚ್ಚಿಕೊಂಡಂತೆ ಕಂಡಿತು. ಒಂದು ತಿಂಗಳಿನ ಪೂಜೆಯಲ್ಲಿ ಹದಿನೈದು ದಿನಗಳು ಕಳೆದವು. ಅವಳ ಐನೀರಿನ ನಂತರ ಪೂಜೆ ಶುರುವಾದದ್ದು. ಪೂಜೆಯ ಮಧ್ಯೆ ಅವಳು ಮುಟ್ಟಾದಾಗ ತಾನೊಬ್ಬನೇ ಪೂಜೆ ಮಾಡಬೇಕು. ಇನ್ನೊಂದು ಐನೀರಿನ ನಂತರ ಕೊನೆಯ ಮೂರುದಿನ ಅವಳೊಬ್ಬಳೇ ಬೆತ್ತಲೆ ಕೂತು ಪೂಜಿಸಬೇಕು. ಇದು ಕರುಣಾಕರ ಪಂಡಿತನ ಪದ್ಧತಿಯಾಗಿತ್ತು. ಒಬ್ಬೊಬ್ಬರು ಒಂದು ಕ್ರಮದಲ್ಲಿದನ್ನು ನಡೆಸುತ್ತಾರೆ ಎಂದವನು ಹೇಳಿದ್ದ. ಕರುಣಾಕರ ಪಂಡಿತನಲ್ಲಿ ಅವಳಿಗೆ ಭಕ್ತಿ ಬೆಳೆಯುತ್ತಿರುವುದರಿಂದ ಸರೋಜ ಕೊನೆಯ ಹಂತದ ಪೂಜೆಗೆ ಸಮ್ಮತಿಸುತ್ತಾಳೆಂಬ ಶ್ರದ್ಧೆ ಶಾಸ್ತಿಗಳಲ್ಲಿ ಬೆಳೆದಿತ್ತು. ಈ ಪೂಜೆಯ ನಡುವೆ ಶಾಸ್ತಿಗಳು ಹೆಣ್ಣನ್ನು ಸೇರುವಂತಿರಲಿಲ್ಲ. ರಾಧೆಯ ಮನೆಗೂ ಶಾಸ್ತಿಗಳು ಹೋಗದಂತೆ ವ್ರತಶಾಲಿಗಳಾಗಿ ಕರುಣಾಕರ ಪಂಡಿತ ಹೇಳಿದಂತೆ ನಡೆದುಕೊಂಡರು. ಸರೋಜ ಮುಟ್ಟಾಗಿ ಐನೀರು ಸ್ನಾನ ಮಾಡಿ ಬೆತ್ತಲೆಯಾಗಿ ಕೂತು ಪೂಜೆ ಮಾಡಿದ್ದೂ ಮುಗಿಯಿತು. ದುಡ್ಡು ಕೊಡಹೋದರೆ ಕರುಣಾಕರ ಪಂಡಿತ ಒಪ್ಪಲಿಲ್ಲ. ಒತ್ತಾಯಕ್ಕೆ ಮಣಿದು ರೇಷ್ಮೆಯ ವಸ್ತಗಳನ್ನು ಕತ್ತಿಗೊಂದು ಬಂಗಾರದಲ್ಲಿ ಕಟ್ಟಿಸಿದ ರುದ್ರಾಕ್ಷಿಸರವನ್ನೂ ದಂಪತಿಗಳಿಂದ ಪಡೆದು, ನಮಸ್ಕಾರ ಮಾಡಿಸಿಕೊಂಡು ಅವರನ್ನು ಆಶೀರ್ವದಿಸಿದ್ದ. ಹತ್ತು ಮಕ್ಕಳ ತಾಯಿಯಾಗು ಎಂದು ಸರೋಜಳ ತಲೆಮುಟ್ಟಿ ಹೇಳಿದ್ದ. ಗೆಲುವಾಗಿ ಬಿಟ್ಟಿದ್ದ ಶಾಸ್ತಿಗಳು ‘ನೀವು ಬಂದು ಹೋಗುತ್ತಿರಬೇಕು’ ಎಂದು ಉಪಚರಿಸಿದರು. ಕರುಣಾಕರ ಪಂಡಿತ ಬಂದು ಹೋಗಲು ಶುರು ಮಾಡಿದ. ಒಂದು ಸಂಜೆ ಶಾಸ್ತಿಗಳು ರಾಧೆಯ ಮನೆಗೆ ಹೊಗಿದ್ದಾಗ ಬಂದು ಕಾದಿದ್ದು ಹೋದ ಶಾಸ್ತಿಗಳು ಸರೋಜಳಿಗೆ ಹೇಳಿದರು, ಸಂಜೆ ನಾನಿರುವುದಿಲ್ಲ, ಬೆಳಿಗ್ಗೆ ಬರಬೇಕಂತೆ ಎಂದು ಹೇಳು. “ಮತ್ತೆರಡು ದಿನಗಳಾದ ಮೆಲೆ ಅನುಮಾನವಾಗಿ “ಪಂಡಿತರು ಬಂದಿದ್ದರ?” ಎಂದು ಕೇಳಿದರು. +ಸರೋಜ ನಿರ್ಲಕ್ಷ್ಯದಿಂದ ಹೇಳಿದಳು: “ಬಂದಿದ್ದರು”. +ಶಾಸ್ತಿಗಳು ಉಕ್ಕಿ ಬಂದ ಕೋಪ ತಡೆದುಕೊಂಡು, ಅಣಕು ಸೌಜನ್ಯದಲ್ಲಿ ಕೇಳಿದರು: “ಕಾಫಿ ಮಾಡಿಕೊಟ್ಟಿತಾನೆ?” +“ಕೊಟ್ಟೆ” +“ನಾನು ಸಂಜೆಯಿರುವುದಿಲ್ಲ. ಬೆಳಿಗ್ಗೆ ಬನ್ನಿ ಎಂದು ಹೇಳಲಿಲ್ಲವೆ?” ಸರೋಜ ಉತ್ತರ ಕೊಡದೆ ಒಳಗೆ ಹೋಗಿಬಿಟ್ಟಿದ್ದಳು ಎಂಬುದನ್ನು ಮತ್ತೆ ಮತ್ತೆ ನೆನೆಯುತ್ತಾರೆ. ಅವಳು ಸೆರಗನ್ನು ಎಳೆದು ಹೊದ್ದುಕೊಂಡು ನಿರ್ಲಕ್ಷ್ಯದಲ್ಲಿ ನಡುಮನೆಯ ದೊಡ್ಡ ಹೊಸಲನ್ನು ಕಾಲೆತ್ತಿ ಇಟ್ಟು ದಾಟಿದ ಕ್ರಮ, ಆಗ ತನ್ನ ಕಣ್ಣಿಗೆ ಬಿದ್ದ ಅವಳ ಸೆಟೆದ ಬೆನ್ನು, ನೀಳವಾದ ಕತ್ತಿನ ದಾಷ್ಟ್ಯ ಅವರ ಎದೆಯಲ್ಲಿ ಬೆಂಕಿಯೇಳಿಸುತ್ತದೆ. ಶಾಸ್ತಿಗಳು ಸೀದ ಕಾರು ಹತ್ತಿ ಉಡುಪಿಗೆ ಹೋಗಿದ್ದರು. ಅವರ ಉರಿಯುವ ಮೋರೆಯನ್ನು ಕರುಣಾಕರ ಪಂಡಿತ ನಗುತ್ತ ಸ್ವಾಗತಿಸಿದ್ಡ. “ಏನು ಶಾಸ್ತಿಗಳೇ, ಬನ್ನಿ ಎಂದು ನಿಮ್ಮ ಒತ್ತಾಯ. ಬಂದರೆ ನೀವಿರುವುದೇ ಇಲ್ಲವಲ್ಲ. ಪ್ರತಿನಿತ್ಯ ನೀವು ನಾಪತ್ತೆಯಲ್ಲ! ನಿಮ್ಮ ಹೆಂಡತಿ ಉಪಚಾರ ಮಾಡಿ ಕಳಿಸುತ್ತಾರೆ ಎನ್ನಿ” ಎಂದು ಒಂದು ಚಿಟಿಕೆ ನಸ್ಯವೇರಿಸಿ ಆಪ್ತವಗಿ ಕೇಳಿದ್ದ. “ನೀವು ಮಲಗುವ ಕೋಣೆಯನ್ನು ಬದಲಾಯಿಸಿದ್ದೀರ ಎಂದು ಕೇಳಿದರೆ ನಿಮ್ಮ ಹೆಂಡತಿ ಯಾಕೋ ಉತ್ತರಿಸಲೇ ಇಲ್ಲ. ನೀವಿಲ್ಲದಾಗ ನಾನು ಆ ಪ್ರಶ್ನೆಯನ್ನು ಕೇಳಬಾರದಿತ್ತೋ ಏನೊ. ಮನೆ ಹೆಚ್ಚು ಶಾಂತವಾಗಿದೆ ಎನ್ನಿಸುತ್ತದೆಯ ನಿಮಗೆ?” ಶಾಸ್ತಿಗಳಿಗೆ ಅವನ ಮಾತಿನ ಮೋಡಿಯಿಂದ ಮನಸ್ಸು ತಂಪಾಗಿತ್ತು. “ಯಾಕೆ ಕೇಳಿದೆ ಅಂದರೆ, ನಾನು ಬಂದಾಗಲೆಲ್ಲ ಮನೆಯ ಒಂದು ಕತ್ತಲಿನ ಮೂಲೆಯಲ್ಲಿ ಇನ್ನೂ ಅವಿತುಕೊಂಡಿರುವ ಒಂದು ರೋಷದ ದೆವ್ವ ನನಗೆ ಕಾಣಿಸಿದಂತಾಗುತ್ತದೆ. ಅದು ನಿಮ್ಮನ್ನು ಕವಿದುಕೊಳ್ಳಲು ಹೊಂಚಿ ಕಾಯುತ್ತಿದೆ. ಸಾಮಾನ್ಯದ ದೆವ್ವವಲ್ಲ; ರಕ್ತದಾಹದ ದೆವ್ವ ಅದು. ನಾನು ಹೇಳಿಕೊಟ್ಟ ಮಂತ್ರವನ್ನು ಮನಸ್ಸಿನಲ್ಲೇ ಸದಾ ಜಪಿಸುತ್ತಿರಿ. ನಿಮ್ಮನ್ನು ಸಂಜೆ ಬರಬೇಡಿ, ಬೆಳ್ಳಿಗ್ಗೆ ಬಂದು ಹೋಗಿ ಎಂದು ಹೇಳಲು ಬಂದೆ. ಸಂಜೆ ನಾನು ಮನೆಯಲ್ಲಿ ಇರುವುದು ಕಡಿಮೆ. ನನ್ನ ಇನ್ನೊಂದು ತೋಟವಿದೆ. ಅದರ ಉಸ್ತುವಾರಿ ನಾನೇ ನೋಡಿಕೋಬೇಕು. ಅಲ್ಲಿರುವ ತೆಂಗಿಗೆ ಏನೋ ರೋಗ ಹತ್ತಿದಂತಿದೆ” ಎಂದು ಶಾಸ್ತಿಗಳು ಸ್ನೇಹದಲ್ಲಿ ಹೇಳಲು ಪ್ರಯತ್ನಿಸಿದ್ದರು. ತಾನು ರಾಧೆಯ ಜೊತೆ ಇಟ್ಟುಕೊಂಡಿದ್ದ ಸಂಬಂಧ ಪಂಡಿತನಿಗೆ ಗೊತ್ತಿಲ್ಲವೆಂದು ಭಾವಿಸಿದ್ದರು. ಆದರೆ ಪಂಡಿತ ಅವಿತುಕೊಂಡ ದೆವ್ವದ ಮಾತಾಡುವುದು ಕೇಳಿ ದಿಗಿಲಾಗಿತ್ತು. ಈ ಪಂಡಿತನಿಗೆ ಎಲ್ಲ ಗೊತ್ತಾಗಿ ಬಿಡುತ್ತದೆ ಎನ್ನಿಸಿತ್ತು. “ನಿಮಗೆ ಮಿದುಳಲ್ಲಿ ಕೆಂಪಾಗೆ ಏನೋ ಉರಿದಂತೆ ಕಾಣುತ್ತದಲ್ಲವೆ? ಎಲ್ಲ ಸರಿಹೋದರೆ ದೈವಕೃಪೆಯಿಂದ ನಿಮ್ಮ ಹೃದಯದ ಒಳಗೆ ತಂಪಾದ ಕಣ್ಣುಗಳು ತೆರೆದಂತಾಗಬೇಕು. ಅಲ್ಲಿಯ ತನಕ ರಕ್ತದಾಹಿಗಳಾದ ದೆವ್ವಗಳ ಕಾಟ ತಪ್ಪಿದ್ದಲ್ಲ. ನಾನು ನಾನು ನಾನು ಎಂಬ ಹೂಂಕಾರ ಹೋಗೋ ತನಕ ಶಾಂತಿಯಿಲ್ಲ ನೋಡಿ. ನೀಲವಾದ ಆಕಾಶವನ್ನು ನೆನೆಯುತ್ತ, ತೇಲುತ್ತಿರುವಂತೆ ಭಾವಿಸುತ್ತ ಜಪ ಮಾಡಿ. ನಿಮಗಾಗಲೀ ನಿಮ್ಮ ಹೆಂಡತಿಗಾಗಲೀ ಆಪತ್ತಾದಾಗ ನನ್ನನ್ನು ಎಚ್ಚರಿಸುವಂತೆ, ನನ್ನ ಇಷ್ಟದೇವತೆಗೆ ಅರಿಕೆ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ಬನ್ನಿ ಎಂದಿರಿ. ಅದು ನನಗೆ ಸಾಧ್ಯವಿಲ್ಲ. ನನಗೂ ಹಿಡಿದ ವ್ರತವಿರುತ್ತದಲ್ಲ? ರೋಗಿಗಳು ಬೇರೆ ಕಾಣಲು ಬರುತ್ತಾರೆ” ಎಂದು ನಸ್ಯವೇರಿಸಿ, “ನೋಡಿ ನನಗೂ ಈ ಒಂದು ಚಟ ಹತ್ತಿಕೊಂಡಿದೆ. ಈ ದೇಹದಲ್ಲಿರುವ ತನಕ ನಾವೆಲ್ಲರೂ ಮನುಷ್ಯರೇ. ಕ್ರೋಧ, ಕಾಮ, ಮೋಹ ಯಾರನ್ನೂ ಬಿಟ್ಟದ್ದಿಲ್ಲ” ಎಂದು ಪಂಡಿತ ನಗುತ್ತ, ಬಿಚ್ಚಿದ್ದ ತನ್ನ ತಲೆಗೂದಲನ್ನು ಕಟ್ಟಿಕೊಂಡಿದ್ದ. ಅವನು ಕೂದಲನ್ನು ಕಟ್ಟಿಕೊಳ್ಳುವಾಗ ಎಷ್ಟು ಮೋಹಕವಾಗಿ ಕಂಡು ತನ್ನನ್ನು ಉರಿಸಿದ್ದ ನೆನಪಾಗುತ್ತದೆ. ಶಾಸ್ತಿಗಳಿಗೆ ತಾನೊಂದು ಮೋಡಿಗೆ ಒಳಪಟ್ಟಿದ್ದೇನೆ ಎಂದು ಭಯವಾಗಿತ್ತು. ‘ನಾನಿಲ್ಲದಾಗ ಮನೆಗೆ ನೀನು ಬರಕೂಡದು’ ಎಂದು ರೋಷದಲ್ಲಿ ಹೇಳಬೇಕೆನ್ನಿಸಿತ್ತು. ಹಾಗೆ ಹೇಳಿ ಬಿಟ್ಟರೆ ಈ ಪಂಡಿತನ ಮೋಡಿಯಿಂದ ತಾನು ಪಾರಾದೇನು. ಆದರೆ ಆ ಮಾತು ಬಾಯಿಂದ ಬರಲಾರದೆ ಹೋಗಿತ್ತು. ‘ಎಲಾ ನನ್ನ ಮೇಲೇ ಈ ಪಂಡಿತ ಇಂಥ ಮೋಡಿ ಹಾಕಿಬಿಟ್ಟಿದ್ದರೆ ಸರೋಜಳ ಪಾಡೇನು’ ಎಂದು ಯೋಚಿಸುತ್ತ ಕಾರನ್ನು ತನ್ನ ಹಳ್ಳಿಗೆ ನಡೆಸಿದ್ದರು. ಪಂಡಿತ ಮಹಾ ರಸಿಕನಂತೆ ಕಾಣುತ್ತಾನೆ. ಏನೋ ತಿನ್ನುತ್ತಾನೆಂದು ಕಾಣುತ್ತದೆ. ಅವನ ಉಸಿರಾಟದ ಸುವಾಸನೆ ಮತ್ತು ಬರಿಸುತ್ತದೆ. ಮತ್ತೆ ಅದು ಯಾವ ಗಂಧವನ್ನು ಮೈಗೆಲ್ಲ ಬಳಿದುಕೊಳ್ಳುತ್ತಾನೊ. ಮನೆಗೆ ಬಂದವರೇ ಚಡಪಡಿಸತೊಡಗಿದ್ದರು. ಸರೋಜ ತನಗೆ ಅಡಿಗೆ ಮಾಡಿ ಊಟವನ್ನೇನೋ ಬಡಿಸುವಳು. ಕಾಫಿಯನ್ನೂ ಬೇಕಾದಾಗ ಕೊಡುವಳು. ಆದರೆ ಮಾತು ಆಡಳು. ತನ್ನತ್ತ ನೋಡಳು. ನೋಡಿದರೂ ಅವಳ ದಿವ್ಯ ನಿರ್ಲಕ್ಷ್ಯದ ಕಣ್ಣಿನಲ್ಲಿ ಎತ್ತಲೋ ದೂರ ನೋಡಿದಂತೆ ಇರುತ್ತದೆ. ಪುಸ್ತಕ ಹಿಡಿದು ಕೂತಾಗ ಮಾತ್ರ ಅವಳ ನೋಟ ಓದುವುದರಲ್ಲಿ ಏಕಾಗ್ರವಾಗಿ ನೆಟ್ಟಿರುತ್ತದೆ. ಆಸಕ್ತವಗಿ ಅವಳು ತನಗೆ ತಾನೇ ಮಾತಾಡಿಕೊಳ್ಳುತ್ತಿರುವಂತೆ ತೋರುತ್ತದೆ. ಹೂವು ಪೋಣಿಸುವಾಗಲೂ ಅವಳ ಹಲ್ಲು ಕೆಳತುಟಿಯನ್ನು ಕಡಿಯುತ್ತ, ಮುಗುಳ್ನಗುತ್ತ ಹೂವಿನ ತೊಟ್ಟಿನ ಜೊತೆ ಸಲ್ಲಾಪದಲ್ಲಿ ಮಗ್ನವಾಗಿರುವಂತೆ ಕಾಣುತ್ತದೆ. ಸೊಂಟದ ಮೇಲೆ ಕೈಯಿಟ್ಟುಕೊಂಡು ಪಾರಿಜಾತದ ಮರ ನೋಡುತ್ತ ತನಗೆ ತಾನೇ ಅವಳು ಗುನುಗಿಕೊಳ್ಳುವುದೂ ಉಂಟು. ಇವೆಲ್ಲ ತಾನು ನೋಡುತ್ತಿಲ್ಲವೆಂದು ಅವಳು ತಿಳಿದಿದ್ದಾಗ ಮಾತ್ರ. ಉಳಿದಂತೆ ಅವಳೂ ಈ ಮನೆಯಲ್ಲಿ ಇನ್ನೊಂದು ದೆವ್ವವೇ. ರಾತ್ರೆ ಅವಳ ಜೊತೆ ಮಲಗಬೇಕೆಂದು ಸಂಕಲ್ಪಿಸಿಕೊಂಡ ದಿನ ಯಾತನೆಯಾಗತೊಡಗುತ್ತದೆ. ಪಕ್ಕ ಒಂದು ಕ್ಷಣ ಮಲಗಿ, ಮಲಗಿರಲಾರದೆ ಎದ್ದು ಸೀದ ರಾಧೆಯ ಬಳಿ ಹೋಗಿಬಿಡುತ್ತಾರೆ. ಇವತ್ತು ಪಂಡಿತ ಬರದೆ ಇರಬಹುದು ಎಂದುಕೊಂಡು ಮನೆಯಲ್ಲಿ ನಿಲ್ಲದೆ ರಾಧೆಯ ಹತ್ತಿರವೇ ನೇರ ಹೋದರು. ರಾಧೆಯೋ ಯಾವಾಗಲೂ ರಾತ್ರೆ ಹೀಗೆ ತನ್ನ ಮನೆಗೆ ಬರಕೂಡದು, ಹೆಂಡತಿ ಜೊತೆ ಮಲಬಬೇಕು ಎಂದು ಬಾದಾಮಿ ಹಾಲು ಕುಡಿಸುತ್ತ ಬೇಡಿಕೊಂಡಳು. ಹೆಂಡತಿಯ ಜಘನ ಪ್ರದೇಶದಲ್ಲೂ, ಯೋನಿ ಪ್ರದೇಶದಲ್ಲೂ ಎಲ್ಲೆಲ್ಲಿ ಏನೇನು ಕಾಮಗಾರಿಯನ್ನು ಪೂರ್ವಭಾವಿಯಾಗಿ ಕೈಗೊಂಡು ಅವಳನ್ನು ಒಸಿಲಿಕೊಳ್ಳಬೇಕು ಎಂದು ತನ್ನ ಅನುಭವದ ವಶೀಕರಣ ವಿದ್ಯೆಯನ್ನು ಬೋಧಿಸಿದಳು. ರುಚಿಕರವಾದ ಈ ಪಾಠಗಳಿಂದಾಗಿ ತನ್ನ ಸಂಬಂಧಕ್ಕಿಂತ ಮುಂಚೆಯೇ ಯಾರೋ ಪರರು ಹೀಗೆಲ್ಲ ಅವಳಿಗೆ ಮಾಡಿರಬೇಕೆಂದು ಶಾಸ್ತಿಗಳು ಅಸೂಯೆಯಲ್ಲಿ ಅವಳನ್ನು ಪೀಡಿಸಲು ಶುರುಮಾಡಿದರು. “ನೀವೇನು ಈ ವಿದ್ಯೆಯಲ್ಲಿ ಕಡಿಮೆಯೆ? ಬೇರೆ ಯಾರಿಂದಾದರೂ ಇದನ್ನು ಏಕೆ ಕಲಿಯಬೇಕು?” ಎಂದು ಅವಳು ಶಾಸ್ತಿಗಳಿಗೆ ಸಮಾಧಾನ ಮಾಡುತ್ತಾ, “ಮರೆತುಬಿಟ್ಟಿರ? ಈ ಮನೆಗೆ ನನ್ನನ್ನು ತಂದ ಶುರುವಿನಲ್ಲಿ ನೀವು ಏನೇನು ಮಾಡಿಲ್ಲ. ನನ್ನಿಂದ ಏನೇನು ಮಾಡಿಸಿಕೊಂಡಿಲ್ಲ. ಈಗ ಮಾತ್ರ ನಿಮ್ಮನ್ನು ಒಂದು ದೆವ್ವ ಹೊಕ್ಕಿದೆ. ನಿಮಗೆ ಮಂಕು ಹಿಡಿಸಿಬಿಟ್ಟಿದೆ” ಎಂದು ನಗೆಯಾಡಿದಳು. ಪಂಡಿತ ಹೇಳಿದ್ದನ್ನೇ ರಾಧೆ ಹೇಳಿದ್ದು ಕೇಳಿ ಶಾಸ್ತಿಗಳಿಗೆ ಕಸಿವಿಸಿಯಾಗಿತ್ತು. +ಮಾರನೆ ದಿನ ಪರೀಕ್ಷೆ ಮಾಡಿಯೇ ಬಿಡುವುದೆಂದು ಸಂಜೆ ಹೊತ್ತಿಗೆ ರಾಧೆಯ ಮನೆಗೆ ಹೋಗಿ, ರಾತ್ರೆ ಹನ್ನೊಂದರ ತನಕ ಕಾದಿದ್ದು ತಮ್ಮ ಮನೆಗೆ ಬಂದರು. ಮನೆಯ ಎದುರು ಪಂಡಿತನ ಕಾರಿತ್ತು. ಎದೆ ಹೊಡೆದುಕೊಳ್ಳತೊಡಗಿತು. ಇವತ್ತು ನನ್ನಿಂದ ಎರಡು ಕೊಲೆಯಾಗಿ ಬಿಡುತ್ತದೆಂದು ಭಯವಾಗಿತ್ತು. +ನಡುಗುತ್ತ ಮನೆಯ ಬಾಗಿಲು ತಳ್ಳಿದರು – ಅದರ ಅಗಳಿ ಹಾಕಿರಲಿಲ್ಲ. ನಡುಗುವ ರೋಷದಲ್ಲೂ ಏನವರ ಸೊಕ್ಕು! ಆಶ್ಚರ್ಯವಾಗಿತ್ತು. ರಕ್ತ ನುಗ್ಗಿ ಅವರ ಕಿವಿಗಳು ಗವ್ವೆನ್ನುತ್ತಿದ್ದವು. ಹೀಗೆ ಗವ್ವೆನ್ನುವುದರ ಶಬ್ದದ ಒಳಗೇ ಸಂಗೀತದ ಆಲಾಪ ಕೇಳಿಸಿದಂತಾಯಿತು. ಮುಂಡೇ ಮಕ್ಕಳು ರೇಡಿಯೋ ಹಾಕಿಕೊಂಡು ತಮ್ಮ ಕೆಲಸ ನಡೆಸಿದ್ದಾರೆ ಎನ್ನಿಸಿ ಕಾಲುಗಳು ದುರ್ಬಲವಾದವು. ಸಂಗೀತ ಬರುತ್ತಿದ್ದುದು ಪಂಡಿತ ತನ್ನ ತಿಂಗಳಿನ ಪೂಜೆ ನಡೆಸಿದ ಕೋಣೆಯಿಂದ. ಅಲ್ಲಿಯೇ ಅವನು ಅವಳನ್ನು ಪವಿತ್ರಗೊಳಿಸುತ್ತೇನೆಂದು ಬೆತ್ತಲೆ ಮಾಡಿಯಾಗಿದೆ. ಈಗ ಸೂಳೇಮಗ ಗರ್ಭಾದಾನ ಮಾಡುತ್ತಿರಬೇಕು ಎಂದುಕೊಳ್ಳುತ್ತ, ಕತ್ತಲಿನಲ್ಲಿ ತಡಕಾಡುತ್ತ, ದೇವರ ಕೋಣೆಗೆ ಹೋದರು. ಅದರ ಬಾಗಿಲು ಹಾಕಿತ್ತು. ತಳ್ಳಿದರು. +ಅಲ್ಲಿ ದೊಡ್ಡ ಎರಡು ನೀಲಾಂಜನಗಳಲ್ಲಿ ಹತ್ತು ಬೆಳಕಿನ ಕುಡಿಗಳು ಉರಿಯುತ್ತಿವೆ. ಅವುಗಳ ನಡುವೆ ಸರೋಜ ಹೆರಳನ್ನು ಹೆಗಲಮೇಲೆ ಇಳಿಬಿಟ್ಟುಕೊಂಡು ಒಂದು ಕಾಲು ಮಡಚಿ ಕೂತು ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಬಾಗಿಲನ್ನು ದಡಾರನೆ ತಾನು ತೆಗೆದರೂ ಅವಳ ಕಣ್ಣುಗಳು ಮುಚ್ಚಿಯೇ ಇವೆ. ತನ್ನ ಅಗಮನ ಅಪ್ರಸ್ತುತವೆನ್ನುವಂತೆ ತಾಯಿ ಮನೆಯಿಂದ ತಂದ ತಂಬೂರಿ ಮೀಟುತ್ತ ಹಾಡುತ್ತಿದ್ದಾಳೆ. ಹೀಗೆ ಅವಳು ಹಾಡಿದ್ದನ್ನು ಅವರು ಕೇಳಿರಲಿಲ್ಲ. ಸಂಗೀತ ಕಲಿತಿದ್ದಾಳೆಂದು ಮಾತ್ರ ಗೊತ್ತಿತ್ತು. ಅವಳ ಎದುರು ಪದ್ಮಾಸನ ಹಾಕಿ ಪಂಡಿತನೂ ಕೂತಿದ್ದ. ತನ್ನ ಕಡೆ ನೋಡದೆ, ತಾನು ಬಂದದ್ದು ಗಮನಿಸಿ, ತನ್ನನ್ನೂ ಜೊತೆಗೆ ಕೂರುವಂತೆ ಸನ್ನೆ ಮಾಡಿದ್ದ. ಅವಳ ಜೊತೆ ಆಲಾಪದಲ್ಲಿ ಮಿಳಿಯ ತೊಡಗಿದ. ಈಗ ಕೂಡುವುದು, ಅವಳು ಬಿಟ್ಟಲ್ಲಿಂದ ಇವನು ಮುಂದುವರಿಯುವುದು, ಮತ್ತೆ ಅವಳು ನಿರೀಕ್ಷಿಸುತ್ತ ಕೂಡಿಕೊಳ್ಳುವುದು – ಹೀಗೆ. ಅರೆ, ತನ್ನ ಮನೆಯಲ್ಲೇ ಅವನು ತನ್ನನ್ನು ಉಪಚರಿಸುತ್ತಿದ್ದಾನೆಂದು ಆಶ್ಚರ್ಯವಾಗಿತ್ತು. ಏನು ಮಾಡುವುದು ತಿಳಿಯದೆ ಸುಮ್ಮನೇ ಕೂತರು. ಸರೋಜ ತನ್ನ ಸಂಗೀತ ಮುಗಿಸಿ ತಂಬೂರಿಯನ್ನು ಕಣ್ಣಿಗೊತ್ತಿಕೊಂಡು ಕೆಳಗಿಟ್ಟಳು. ಮಂದವಾದ ನೀಲಾಂಜನದ ತಂಪಾದ ಬೆಳಕಿನಲ್ಲಿ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ತನ್ನ ಮಿದುಳಲ್ಲಿ ಕೆಂಗಣ್ಣುಗಳು ತೆರೆಯಲು ತವಕಿಸುತ್ತಿವೆ ಎಂದು ಭಾಸವಾಗಿ ಶಾಸ್ತಿಗಳು ಉಸಿರನ್ನು ಬಿಗಿ ಹಿಡಿದರು. ಪಂಡಿತನನ್ನಾಗಲೀ, ಸರೋಜಳನ್ನಾಗಲೀ ಹೊಡೆದು ಸಾಯಿಸಲಾರೆ ಎನ್ನಿಸಿ, ತಾನು ನಿರ್ವೀರ್ಯನಾಗಿ ಬಿಟ್ಟೆ ಎನ್ನಿಸಿ ಕುಸಿದರು. +ಪಂಡಿತ ಸಂಗೀತ ಮುಗಿದ ನಂತರ ನಾಳೆ ಮತ್ತೆ ಬರುವೆನೆಂದು ಅವಳಿಗೆ ಮಾತ್ರ ಉಸುರಿ ಹೊರನಡೆದು ಚಪ್ಪಲಿ ಹಾಕಿಕೊಂಡ. ಅವನು ಚಪ್ಪಲಿಯನ್ನು ಹಾಕಿಕೊಳ್ಳುವ ಶಬ್ದ ಕೇಳಿಸಿತ್ತು. ಮತ್ತೆ ಅವನು ತನ್ನ ಕಾರನ್ನು ಸ್ಟಾರ್‍ಟ್ ಮಾಡುವ ಶಬ್ದ. ಸ್ಟಾರ್‍ಟ್ ಮಾಡಿ ಅದು ಗೇರಿನಲ್ಲಿ ಚಲಿಸುವ ಶಬ್ದ. ಮತ್ತೆ ಎಲ್ಲ ಶಬ್ದಗಳೂ ಕರಗಿದ್ದರ ಮೌನ. ಮತ್ತೆ ಕೊಟ್ಟಿಗೆಯಲ್ಲಿ ಮೆಲುಕು ಹಾಕುವ ದನಗಳ ಕೊರಳ ಗಂಟೆಯ ಶಬ್ದ- ಆಗ, ಈಗ. ಮತ್ತೆ ಯಾವ ಸದ್ದೂ ಇಲ್ಲ. ದೆವ್ವಗಳು ಮಾತ್ರ ತಿರುಗುಮುರುಗು ಪಾದಗಳಲ್ಲಿ ಸದ್ದಿಲ್ಲದಂತೆ ಚಲಿಸುತ್ತಿರಬೇಕು. +ಏನೂ ಆಗಿಯೇ ಇಲ್ಲವೆನ್ನುವಂತೆ ಸರೋಜ ಎದ್ದು ಮಲಗುವ ಕೋಣೆಗೆ ಹೋದಳು. ತಾನು ಸತ್ತು ಪ್ರೇತವಾಗಿಬಿಟ್ಟೆ ಎಂದು ಶಾಸ್ತಿಗಳು ಕುಸಿದೇ ಕೂತಿದ್ದರು. +ಮತ್ತೆ ಅವರಿಗೆ ಏನಾಗಿಬಿಟ್ಟಿತೋ, ದಟ್ಟವಾದ ಕಾಡಿನಲ್ಲಿ ಪೊದೆಗಳ ನಡುವೆ ಗುಪ್ತವಾಗಿ ಸಂಚರಿಸುವ ಕ್ರೂರವಾದ ಪಶುವಿನಂತೆ ಮುಚ್ಚಿದ ಬಾಯಲ್ಲೇ ಭಯಾನಕವಾದ ಶಬ್ದ ಹೊರಡಿಸಲು ತೊಡಗಿದರು. ಆ ಶಬ್ದ ದೀರ್ಘವಾಗಿತ್ತು. ಏರುತ್ತೇರುತ್ತ ಹೋಗಿ ಹಾಗೆಯೇ ಇಳಿಯುತ್ತಿಳಿಯುತ್ತ ಮೌನವಾಗಿ, ಮೌನವಾಗಿಯೂ ಭಯ ಹುಟ್ಟಿಸುತ್ತ, ಮತ್ತೆ ಏರುತ್ತಿತ್ತು. ಅದು ನರಳುವ ಶಬ್ದದಂತೆಯೂ ಹಸಿದ ಪ್ರಾಣಿ ಘೀಳಿಟ್ಟಂತೆಯೂ ಇತ್ತು. ಮನುಷ್ಯ ಪ್ರಾಣಿ ಹೊರಡಿಸುವ ಶಬ್ದದಂತಿರಲಿಲ್ಲ. ಯಾವ ಕ್ರೂರವಾದ ಮಾತಿಗೂ ಸಹ ನಿಲುಕಲಾರದ್ದನ್ನು, ಮಾತಿನ ಪ್ರೇತದಂತಿದ್ದುದನ್ನು ತನ್ನ ದೇಹ ಉಂಟು ಮಾಡುತ್ತಿದೆ ಎಂದೂ, ಒಳಗೆ ತಾನು ಸೊಕ್ಕಿ ಅಗಾಧವಾಗುತ್ತಿದ್ದೇನೆಂದೂ, ಶಾಸ್ತಿಗಳಿಗೆ ಭಾಸವಾಯಿತು. ಸರೋಜಳ ದಿವ್ಯವಾದ ಕಂಠ ಸ್ವಲ್ಪ ಹೊತ್ತಿನ ಮುಂಚೆ ಉಂಟು ಮಾಡಿದ್ದ ಆಲಾಪದ ಅಲೆಗಳನ್ನೆಲ್ಲ ಧ್ವಂಸಗೊಳಿಸುವ, ಭಾಷೆಯನ್ನು ತಿನ್ನುವ, ಎಲ್ಲ ಸೌಂದರ್ಯವನ್ನೂ ಅಣಕಿಸಿ ನಾಶಮಾಡುವ ಅಟ್ಟಹಾಸ ಅದಾಗಿತ್ತು. ಮರಗಿಡಗಳ ಬೇರುಗಳಿಗೆ ಪೋಷಕವಾಗುವ, ಹಕ್ಕಿಗಳಿಂದ ತಮ್ಮ ಮರಿಗಳನ್ನು ಸಾಕಲು ಗೂಡುಕಟ್ಟಿಸುವ, ಕ್ರಿಮಿಕೀಟಗಳಿಗೂ ಚಲನಶಕ್ತಿ ಕೊಡುವ, ಈ ಪೃಥಿವಿಯ ಒಳಿತಿನ ಒತ್ತಾಸೆಯನ್ನೇ ಕೊಲ್ಲುವಂತ್ತಿದ್ದ ಅಟ್ಟಹಾಸದಲ್ಲಿ ಈಳಿಡುತ್ತ ಮಲಗುವ ಕೋಣೆಗೆ ದಾಪು ಹೆಜ್ಜೆ ಹಾಕುತ್ತ ಶಾಸ್ತಿಗಳು ಹೋದರು. ಅರೆನಿದ್ದೆಯಲ್ಲಿ ಮುಗುಳ್ನಗುತ್ತಿದ್ದ ಸರೋಜಳನ್ನು ದೀಪ ಹಾಕಿ ನೋಡಿದರು. +ದೆವ್ವಗಳು ಸಹ ಅಂಥ ಮೈಥುನದಲ್ಲಿ ತೊಡಗಿರಲಿಕ್ಕಿಲ್ಲ. ಸರೋಜಳ ಬಟ್ಟೆಗಳನ್ನು ಕಿತ್ತು ಬಿಸಾಕಿ ಅವಳ ಮೈಮೇಲೆ ಈಳಿಡುತ್ತಲೇ ಎರಗಿದ್ದರು. ಅವಳ ಒಳಗೆ ಶೀತಲವಾಗಿ ಮಡುಗಟ್ಟಿಕೊಂಡ ಸಂಕಲ್ಪವನ್ನು, ತನ್ನನ್ನು ನಿರಾಕರಿಸಿರುವ ಅವಳ ದಿವ್ಯನಿರ್ಲಕ್ಷ್ಯವನ್ನು ಹಿಚುಕಿ ಸಾಯಿಸುವಂತೆ ಅವಳನ್ನು ಸಂಭೋಗಿಸತೊಡಗಿದ್ದರು. ಅವಳೂ ತನ್ನಂತೆ ನರಳುತ್ತಿಲ್ಲವೆನ್ನುವುದು, ತನ್ನನ್ನು ಕೊಲ್ಲುವಂತೆ, ಅವಳ ಕಣ್ಣುಗಳು ಕಿಡಿಕಾರಲಿಲ್ಲವೆನ್ನುವುದು, ಅವಳ ಮೇಲಿನ ತನ್ನ ಎಗರಾಟ ಅಪ್ರಸ್ತುತವೆನ್ನಿಸುವಂತೆ ಅವಳು ಸಹಿಸಿಕೊಡಿದ್ದಾಳೆಂಬುದು ಇನ್ನಷ್ಟು ಅವರ ಅಟ್ಟಹಾಸಕ್ಕೆ ಕಾರಣವಾಗಿತ್ತು. +ಅವಳೂ ಕೊನೆಯಲ್ಲಿ ಸಡಿಲಾಗಿ ಬಿಟ್ಟಿರಬಹುದೇ ಆಮೇಲೆ ಅವರು ಚಿಂತಿಸಿದ್ದಿದೆ. +ರಾಧೆಯ ಮನೆಯ ಬಳಿ ಕಾರು ನಿಲ್ಲಿಸಿ ಈಗ ಇಳಿಯುವಾಗ ಅವರಿಗೆ ದಿಗ್ಗನೆ ನೆನಪಿಗೆ ಬಂದದ್ದು ಅದು. +ಮುಂದುವರೆಯುವುದು +“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್ +ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […] +ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […] +“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_384.txt b/Kannada Sahitya/article_384.txt new file mode 100644 index 0000000000000000000000000000000000000000..e494744df324dcaa3ae5e60e23e0be77921fcc77 --- /dev/null +++ b/Kannada Sahitya/article_384.txt @@ -0,0 +1,76 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ +ಪ್ರೇಕ್ಷಕರ ತಕ್ಕ ಸೀಟಿನಲ್ಲಿ +ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ +ಬೆಂಗಳೂರನ್ನೇ ಹೊತ್ತ ಸೋಗಿನಿಂದ, +ಕಾಲ್ಗೆಟಿಸಿದ ನಗೆಯಿಂದ, +ಆತ್ಮೀಯರಾಗುತ್ತಾರೆ – +ಸ್ವಯಂಸೇವಕ ಸಂವೇದಕ ಗಿಳಿಗಳು; +ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ +ಸ್ವಾತಂತ್ರ್ಯೋತ್ತರ ವಿಚಿತ್ರ ತಳಿಗಳು – +‘ಹಲೋ’ ಅನ್ನುತ್ತಾರೆ ಗುರುತಿದ್ದರೆ, +ದುರುಗುಟ್ಟುತ್ತಾರೆ ಮರೆತಿದ್ದರೆ. +ಬಿಷಪ್ ಕಾಟನ್ನಿನ ಬಾಬ್‌ಕಟ್ಟಿನ ಪೊಗದಸ್ತು ಬೇಬಿಗಳು – +ಎನಿಡ್ ಬ್ಲೈಟನ್ನಳ ಕಥೆಯ ಸ್ಕರ್ಟ್ ಹಿಡಿದು ಜಿಗಿದಾಡಿ +ಮೌಂಟ್ ಕಾರ್ಮಲ್ಸಿಗೆ ತಲಪಿ, ಹರಗಿದ ಹೊಲಗಳಾಗಿ +ಮುಂಗಾರಿನೈನೀರನೆರೆದುಕೊಳ್ಳುವ ಹೊತ್ತಿಗೆ +ಆಗುತ್ತಾರೆ ಹಾಡ್ಲಿ ಛೇಸನ ವಿಲಾಯಿತಿ +ಹೀರೋಗಳ ಗುತ್ತಿಗೆ. +ಮೈ ತಿಳಿದಾಗ ಸಂಸ್ಕೃತಿಯ ಸ್ವಂತ ಸೂರುಗಳನ್ನ, +ಆರ್ಯಾವರ್ತತೆಯ ಹಚ್ಚನೆಯ ಬೇರುಗಳನ್ನ +ಹುಡುಕುತ್ತಾರೆ ನಾಟಕ, ನಾಟ್ಯಗಳಲ್ಲಿ; +ಚಲಚ್ಚಿತ್ರೀಯ ಸಂಗೀತದ ಅಚ್ಚ ಜಾನಪದ ಗೀತೆಗಳಲ್ಲಿ. +– ೨ – +ಫ್ಯಾಕ್ಟರಿ ಡೈರೆಕ್ಟರೊ, ಮಿಲ್ಲಿನ ಮ್ಯಾನೇಜರೊ ಡ್ಯಾಡಿ- +ಕಳಚಿ ದಿನನಿತ್ಯದ ಫೋನ್, ಫೈಲುಗಳ ಬೇಡಿ +ಸಂಜೆ ಸೆಂಚ್ಯುರಿ ಕ್ಲಬ್ಬಿನ ವಿಸ್ಕಿ, ಬಿಲಿಯರ್ಡ್ಸ್ ಹೊಕ್ಕರೆ +ಮನೆಯ ಜ್ಞಾಪಿಸಬೇಕ್ಯ್ ಕೋಳಿಗಳು ಹಾಡಿ. +ಇನ್ನು ಮಮ್ಮಿ: ಸೋಫಾದ ಮೆತ್ತನೆಯಲ್ಲಿ ಹಗಲ ಭಾಗಿಸುತ್ತ, +ಕಮರ್ಷಿಯಲ್ ಸ್ಟ್ರೀಟಿನಂಗಡಿಗಳ ಲೋಹಚುಂಬಕ ದೀಪ್ತಿ ಸುತ್ತ +ಪಾತರಗಿತ್ತಿಯಲೆದು, ಮಾತು ನಗೆಯಷ್ಟೆ ಕೊಳ್ಳುತ್ತ, +ಮೆಲ್ಲಲಾರದೆ ಸೌಖ್ಯ, +ಮಂಚಕ್ಕೆ ಮೈಚಾಚಿ ಕಾಮ ಫುಲ್‌ಸ್ಟಾಪಿರದ ದೀರ್ಘವಾಕ್ಯ. +-ಇಂಥವರ ಅಪರೂಪದ ಫಲಗಳಿವು; +ಪರ ಬೀಜ ಕನಸಿ, ಸಸಿ ನಿಗುರದ ಹತಾಶ ನೆಲಗಳಿವು; +ಫರಂಗಿ ಅಕ್ಷರಾಭ್ಯಾಸ ಮಾಡಿ ನಾರಂಗಿ ಪಡೆಯಬಯಸುವ +ನಿಷ್ಫಲ ಛಲಗಳಿವು. +– ೩ – +ತೆರೆ ಸಂಕುಚಿಸಿ ಸಭಾಂಗಣ ಕತ್ತಲಿಸಿದಾಗ +ಪ್ರೇಕ್ಷಕರ ಲಕ್ಷ್ಯಕ್ಕೆ ನಾಟಕ, ನಾಟ್ಯ, ಸಂಗೀತ ಬೆಸೆದು +ನೇಪಥ್ಯದಲ್ಲೊ, ಗೇಟಿನ ಮೂಲೆಯ ಅರೆಗತ್ತಲಲ್ಲೊ, +ಕಣ್ಣಲ್ಲೆ ನೇಗಿಲ ಹೂಡುವ ಪಡ್ಡೆ ಹೈದರ ಜೊತೆ +ಪಿಸಿಪಿಸಿ ಚಿಲಿಯುವ, ಮೈ ತಾಕಿಸುವ, +ಕುಚಾಯಿಸುವ +ಸ್ವಸಮಾರಂಭ ಆರಂಭಿಸುತ್ತಾರೆ. +ಕಾರ್ಯಕ್ರಮದ ಮೊದಲಲ್ಲಿ +ಸಮಸ್ತ ಉತ್ಸಾಹ ಮುಖಕ್ಕೆ ಹೇರಿಸಿಕೊಂಡವರು, +ಮುಗಿದಾಗ, ಮಂದಿ ಒಬ್ಬೊಬ್ಬರೆ ಕರಗಿದಾಗ, +ಬರಿದಾದ ರಂಗದ ಖಾಲಿ ಮೌನಗಳನ್ನ +ಗಂಟೆ ಮಾತ್ರದ ಸಂಸ್ಕೃತಿಯ ಉದುರು ಪಕಳೆಗಳನ್ನ +ಗೆರೆಗೊಂಡ ನೋಟದಲಿ ತುಂಬುತ್ತ +ಕೌಂಟರು, ಗೇಟು, ಪ್ರೇಕ್ಷಕರ ಸೀಟಲ್ಲಿ +ನಿಧಾನ ಚೆಲ್ಲುತ್ತಾರೆ; +ತಮ್ಮ ಅಳತೆಗೆ ತಕ್ಕ ಬಾಣ ದಕ್ಕದೆ ಕೊನೆಗು +ಅನಾಥ ಬಿಲ್ಲಾಗುತ್ತಾರೆ. +***** +ಕೀಲಿಕರಣ: ಶ್ರೀನಿವಾಸ +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […] +ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_385.txt b/Kannada Sahitya/article_385.txt new file mode 100644 index 0000000000000000000000000000000000000000..142d3d65e13b8a6d46ac140d1346cc32c9efb827 --- /dev/null +++ b/Kannada Sahitya/article_385.txt @@ -0,0 +1,1137 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ ಪಾದರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತಿತ್ತು. ಇಲ್ಲವೆ ಮೂರು, ನಾಲ್ಕು ವರ್ಷಗಳಿಂದ ಅನ್ವಾಲ ಕಾಯಿದೆ ಬಾಕಿ ಇರುತ್ತಿತ್ತು. ಇದರ ಪರಿಹಾರ ಮಾಡಲು ಪಾದರಿಗಳ ಬಳಿಗೆ ಜನ ಹೋಗುತ್ತಿದ್ದರು. ಡಾ.ರೇಗೋ, ಜಾನ್ ಡಯಾಸ್ ಪಾದರಿಗಳ ಕ್ಷೇಮ ಸಮಾಚಾರ ಕೇಳಲು ಹೋಗುತ್ತಿದ್ದರು. ಮಕ್ಕಳಿಗೆ ಮೊದಲ ದಿವ್ಯಪ್ರಸಾದ ನೀಡುವಂತೆ ಕೇಳಿಕೊಳ್ಳಲು ಕೆಲವರು ಹೋಗುವುದಿತ್ತು. ಭಾನುವಾರದ ಪೂಜೆ ಮುಗಿಸಿ, ಪಾದರಿ ಸಣ್ಣದೊಂದು ಪ್ರಾರ್ಥನೆ ಮಾಡಿ ಬೆಳಗಿನ ಉಪಹಾರ ತೆಗೆದುಕೊಂಡು ಬಂಗಲೆ ಬಾಗಿಲು ತೆರೆದು ಹೊರಗೊಮ್ಮೆ ಇಣುಕಿ ನೋಡಿ- +“ಹಾಂ…ಕೋಣ್ರೆ?” ಎಂದು ಕೇಳಿ ಒಳಗೆ ಮರೆಯಾದಾಗ ಹೊರಗೆ ಜಗಲಿಯ ಮೇಲೆ, ಅಂಗಳದಲ್ಲಿ ನಿಂತವರು ಒಬ್ಬೊಬ್ಬರಾಗಿ ಒಳಗೆ ಹೋಗುತ್ತಿದ್ದರು. +ಇಂದು ಮಾತ್ರ ಹೀಗೆ ಯಾರೂ ಪಾದರಿ ಬಂಗಲೆಯ ಬಳಿ ಕಂಡು ಬರಲಿಲ್ಲ. ಡಾ.ರೇಗೋ ಹಾಗೂ ಜಾನ್ ಡಯಾಸ್ ಈರ್ವರೇ ತೆರೆದ ಬಂಗಲೆ ಬಾಗಿಲ ಮೂಲಕ ಒಳಹೋದುದನ್ನು ಜನ ಕಂಡರು. +* +* +* +ಮೂರು ಗಂಟೆಗೆ ಸೇರಿದ ಸಭೆಯಲ್ಲಿ ಅಂತಹ ತೀರ್ಮಾನವೇನೂ ಆಗಲಿಲ್ಲ. ಪಾಸ್ಕು ಪಾದರಿಗಳಿಗೆ ಹೊಡೆಯಬಾರದಿತ್ತು ಎಂಬ ಮಾತೇ ಕೇಳಿ ಬಂದಿತಲ್ಲದೆ ಇದಕ್ಕೆ ಏನು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಜೂಂತ ಇರಿಸಿ ಅವನನ್ನು ಜೂಂತಗೆ ಕರೆಸಿ ದಂಡ ಹಾಕಿ, ಜಾತಿ ಕಟ್ ಮಾಡಿ ಎಂದೆಲ್ಲ ಜನ ಕೂಗಾಡಿದರು. ಇನಾಸನ ಮಗ , ಇನಾಸನ ಮನೆ, ಶಿಲುಬೆಯ ಮನೆ ಎಂದಾಗ ಏಕೋ ಜನರ ಕಾವು ಇಳಿಯಿತು. +“ಹೌದಪ್ಪ ಹುಡುಗ ಹೊಡೀಬಾರದಿತ್ತು..ಆದರೆ ಪಾದರಿ ಅವನನ್ನು ಲುಸಿಫ಼ೇರ್ ಅಂತ ಕರೀಬಹುದಾ?” ಎಂದು ಊಟದ ಮನೆ ಸಾಂತಾಮೋರಿಯ ಮಗ ಬಸ್ತು ಕೇಳಿದಾಗ ಯಾರೂ ಉತ್ತರ ಕೊಡಲು ಹೋಗಲಿಲ್ಲ. ಮದುವೆಯ ಸಂದರ್ಭದಲ್ಲಿ ಈ ಬಸ್ತುವನ್ನು ಪಾದರಿ ಸತಾಯಿಸಿದ್ದು ಆ ಕ್ಷಣದಲ್ಲಿ ಜನರ ನೆನಪಿಗೆ ಬಂದಿತು. ಹಿಂದೆಯೇ ಬೇರೆ ಬೇರೆ ಸಂದರ್ಭಗಳಲ್ಲಿ ಪಾದರಿ ತಮ್ಮ ಕಣ್ಣಿನಲ್ಲೂ ನೀರು ತರಿಸಿದ್ದು ನೆನಪಿಗೆ ಬಂದು ಬಸ್ತುವಿನ ವಿರುದ್ಧ ಯಾರೂ ಉತ್ತರ ಕೊಡಲು ಹೋಗಲಿಲ್ಲ. +ಇಷ್ಟಾದರೂ ಪಾಸ್ಕುವಿನ ಮೇಲೆ ಏನಾದರೊಂದು ಕ್ರಮ ಕೈಕೊಳ್ಳಬೇಕಲ್ಲ. ಹೀಗಾಗಿ ಮತ್ತೂ ಕೆಲ ಸಲಹೆಗಳು ಬಂದವು. +“ಖಾಂದೀರ ಖುರೀಸ್” (ಹೆಗಲ ಮೇಲೆ ಶಿಲುಬೆಕೊಟ್ಟು ನಿಲ್ಲಿಸುವುದು) ಎಂದರು ಯಾರೋ. +ಇದಕ್ಕೂ ಬೆಂಬಲ ಸಿಗಲಿಲ್ಲ. +ಕೊನೆಗೆ ಮಿರೋಣ ವಲೇರಿಯನ್ ಎದ್ದು ನಿಂತ. +ಈ ಸಭೆಗೆ ಊರಿನ ಕ್ರೀಸ್ತುವರೆಲ್ಲ ಬಂದಿದ್ದರು. ಡಾಕ್ಟ್ಯರ್ ರೇಗೋ ಒಬ್ಬರನ್ನು ಬಿಟ್ಟು. ಅವರಿಗೆ ಈ ಜನಸಾಮಾನ್ಯರ ಜತೆ ಕುಳಿತು ಮಾತನಾಡಲು, ಚರ್ಚೆ ಮಾಡಲು ಆಗುತ್ತಿರಲಿಲ್ಲವೇನೋ ಅವರು ಸಾಮಾನ್ಯವಾಗಿ ಬರುತ್ತಿರಲಿಲ್ಲ. +ಜಾನ್ ಡಯಾಸ್, ವಿನ್ಸೆಂಟ, ಡ್ರೈವರ್ ಚಾರ್ಲಿ ಬಂದಿದ್ದರು. ಈ ಜನ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ಅಧಿಕ ಸಂಖ್ಯೆಯಲ್ಲಿದ್ದ ಊರ ಜನರಿಗೆ ಮಾತನಾಡಲು ಬಿಟ್ಟು ಇವರು ಕೇಳುತ್ತ ಕೂಡುತ್ತಿದ್ದರು. ಈ ಊರ ಜನರಿಂದ ಎನೂ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಇವರಿಗೆ ಏನೂ ಗೊತ್ತಿಲ್ಲ. ಇವರು ಅಶಿಕ್ಷಿತರು, ಅನಕ್ಷರಸ್ಥರು ಎಂಬುದು ಇವರಿಗೆ ತಿಳಿದಿತ್ತು. ಆದರೆ ಕೊನೆಯ ಮಾತನ್ನು ಹೇಳುವ ಅವಕಾಶವನ್ನು ಈ ವಿದ್ಯಾವಂತ ಜನ ಕಾದಿರಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಇವರ ಮಾತಿಗೆ ಉಳಿದವರು ತಕ್ಷಣ ಒಪ್ಪಿಬಿಡುತ್ತಿದ್ದರು. +ಹೀಗಾಗಿ ಮಿರೋಣ ವಲೇರಿಯನ್ ಎದ್ದು ನಿಂತಾಗ ಎಲ್ಲರೂ ಮೌನದಿಂದ ಕುಳಿತರು. +“ನಾವು ಏನೇ ತೀರ್ಮಾನ ಮಾಡಿದ್ರು ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ವಲೇರಿಯನ ಎಲ್ಲರ ಮುಖ ನೋಡಿದ. +“ನಾವು ನಿತ್ಯ ಮನೇಲಿ ಇಗರ್ಜಿಲಿ ಪರಲೋಕ ಮಂತ್ರ ಹೇಳತೇವೆ..ಕ್ರಿಸ್ತಪ್ರಭು ನಮಗೆ ಕೊಟ್ಟ ದೊಡ್ಡ ಬಲ ಅದು..ಮನುಷ್ಯನ ಬದುಕು ಇರೋದೇ ಈ ಮಂತ್ರದ ಆಶ್ರಯದಲ್ಲಿ..ಈ ಮಂತ್ರದ ಮೂಲಕ ಏಸು ಪ್ರಭು ಕ್ಷಮೆ ಎಷ್ಟು ದೊಡ್ಡದು ಅನ್ನೋದನ್ನ ನಮಗೆ ತಿಳಿಸಿಕೊಟ್ಟಿದ್ದಾರೆ..ನಾನು ಒಂದು ಸರಳ ದಂಡನೆ ಹೇಳತೇನೆ..ಪಾಸ್ಕು ಹೋಗಿ ಪಾದರಿಗಳ ಹತ್ತಿರ ಕ್ಷಮಾಪಣೆ ಕೇಳಲಿ..ಅವರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ನನಗಿದೆ…ಅಲ್ಲಿಗೆ ಈ ಪ್ರಕರಣ ಮುಗಿಯುತ್ತೆ..ಮುಂದೆ ಹೀಗೆ ಆಗದ ಹಾಗೆ ನಾವು ನಮ್ಮ ಮಕ್ಕಳಿಗೆ ದೈವಿಕ ಶಿಕ್ಷಣ ಕೊಡೋಣ..” ಎಂದ ಆತ ತನ್ನದೇ ಆದ ಮಂಗಳೂರಿನ ಕೊಂಕಣಿಯಲ್ಲಿ. ಈ ಭಾಷೆ, ಈ ಮಾತು, ಅವನ ಧ್ವನಿ, ಅವನು ಹೇಳಿದ ರೀತಿ ಜನರ ಮೇಲೆ ಪರಿಣಾಮ ಬೀರಿತು. +“ಇದೀಗ ಸರಿಯಾದ ಮಾತು” ಎಂದ ಪಾಸ್ಕೋಲ. ಉಳಿದವರು ಕೂಡ. +ಆದರೂ ಕೆಲವರಿಗೆ ಈ ತೀರ್ಮಾನ ಸರಿ ಎನಿಸಲಿಲ್ಲ. ಪಾದರಿ ಬಳಿ ಈತ ಹೋಗಿ ಕ್ಷಮಾಪಣೆ ಕೇಳುವುದೇನೋ ಸರಿ. ಪಾದರಿ ಕ್ಷಮಿಸದಿದ್ದರೆ? +“ಅದು ಜನರಿಗೆ ಬಿಟ್ಟಿದ್ದು..ಅವರು ಏನು ಬೇಕಾದರೂ ಮಾಡಲಿ..” ಎಂದು ಕೊನೆಗೆ ಕೈತಾನ ಹೇಳಿದ. +* +* +* +ಇಲ್ಲಿ ನಡೆದುದೆಲ್ಲ ಪಾಸ್ಕುಗೆ ತಿಳಿದು ಹೋಯಿತು. ಅವನ ವಯಸ್ಸಿನವರೆಲ್ಲ ಸಭೆಗೆ ಬಂದಿದ್ದರಲ್ಲ. ಯಾರು ಯಾರು ಏನೇನು ಹೇಳಿದರು ಎಂಬುದನ್ನು ಅದೇ ಧಾಟಿಯಲ್ಲಿ ಸ್ನೇಹಿತರು ಹೇಳಿದಾಗ ಪಾಸ್ಕು ಸಿಡಿಮಿಡಿಗೊಳ್ಳುತ್ತ ಸಿಟ್ಟಿನಿಂದ ಹಲ್ಲು ಕಡಿಯುತ್ತ ತಾಳ್ಮೆ ಕಳೆದುಕೊಂಡು ಕೂಗಾಡುತ್ತ ತನ್ನ ಪ್ರತಿಕ್ರಿಯೆಯನ್ನು ನೀಡಿದ. +“ಜೂಂತ ಮಾಡತಾರಂತ..ಮಾಡಲಿ..ಆ ಪಾದರೀನ ಅವರು ಜೂಂತಗೆ ಕರೆಸಬೇಕು..ಅಲ್ಲಿ ನಾನು ಎಲ್ಲ ತೆಗೀತೀನಿ..” ಎಂದ ಆತ ತೋಳೇರಿಸಿ. +“ಜಾತಿ ಕಟ್ ಮಾಡತಾರ..ಮಾಡಲಿ..ನನಗೆ ಈ ಜಾತಿ ಬೇಡ..ನಾನು ಸಾಬರ ಜಾತಿಗೆ ಸೇರತೀನಿ.” +“ಖಂದೀರ ಖುರೀಸ್ ಕೊಡತಾರಂತೆ..ಅದು ಯಾವ ನನ್ನ ಮಗ ಅವನು ಖುರೀಸ್ ಕೊಡೋದು..ಅವನಿಗೆ ಅಷ್ಟು ತಾಕತ್ ಇದೆಯಾ.” ಎಂದು ಕಣ್ಣು ಕೆಂಪಗೆ ಮಾಡಿಕೊಂಡ. ಪಾದರಿಗಳ ಬಳಿ ಹೋಗಿ ಕ್ಷಮಾಪಣೆ ಕೇಳಬೇಕಂತೆ ಅನ್ನುವ ಮಾತು ಬಂದಾಗ ಪಾಸ್ಕು.. +“ನಾನು ಹೋಗೋಲ್ಲ..ಅವನೇನು ದೇವರ?” ಎಂದು ರೇಗಿದ. ಆದರೆ ಈ ಮಾತು ಬಂದಾಗ ಅವನು ಕೊಂಚ ತಣ್ಣಗಾಗಿದ್ದ. ಮೇಲೆ ಹೇಳಿದ ಎಲ್ಲ ಶಿಕ್ಷೆಗಳಿಗಿಂತ ಈ ಶಿಕ್ಷೆ ಸೌಮ್ಯವೂ, ಸಾಧುವೂ ಆಗಿದ್ದು ಒಂದು ಕಾರಣವಾದರೆ ಜನ ತನ್ನ ಬಗ್ಗೆ ಹೆಚ್ಚು ಕ್ರೂರಿಗಳಾಗಿ ವರ್ತಿಸಲಿಲ್ಲ ಎಂಬುದೂ ಒಂದು ಕಾರಣವಾಯಿತು. +ಅಂದೇ ಸಿಮೋನ ಅವನ ಮನೆಗೆ ಬಂದ. +“ಇನಾಸ ಇದೀಯ?” ಎಂದು ಕೇಳುತ್ತ ಬಂದವ ಪಾಸ್ಕುವನ್ನು ನೋಡಿ. +“ನೋಡಪ್ಪ..ನಾವು ಹೀಗೊಂದು ತೀರ್ಮಾನ ಮಾಡಿದೀವಿ..” ಎಂದು ವಿಷಯ ತಿಳಿಸಿದ. +“ನಾಳೆ ನಾಡಿದ್ದು ಹೋಗು..ಪದ್ರಾಬಾ ತಪ್ಪಾಯ್ತು..ಕ್ಷಮಿಸು..ಅಂತ ಕೇಳಿಕೋ..ಇದು ಊರಿಗೆಲ್ಲ ಗೊತ್ತಾಗೋ ಹಾಗೆ ಆಗಬಾರದು…ಬೇರೆ ಧರ್ಮೀಯರು ಏನು ತಿಳಕೊಳ್ಳೋದಿಲ್ಲ..” ಎಂದೂ ಕೆಲ ಮಾತುಗಳನ್ನು ನುಡಿದ. +ಪಾಸ್ಕು ಮಾತ್ರ ಹಾಂ ಹುಂ ಎಂದು ಏನೂ ಹೇಳಲಿಲ್ಲ. ಆದರೆ ಆತ ವಾದ ಮಾಡಲು ಪಾದರಿಗಳ ಬಗ್ಗೆ ಮತ್ತೇನೋ ಹೇಳಲು ಹೋಗಲಿಲ್ಲ. ಇದೊಂದೇ ಸಮಾಧಾನದಿಂದ ಸಿಮೋನ ಇನಾಸನಿಗೆ ಹೇಳಿ. ಅವನ ಹೆಂಡತಿಗೆ ಹೇಳಿ, ಸೈಡ್ ಡ್ರಾಮ ಸರಿಪಡಿಸುತ್ತ ಕುಳಿತ ರೈಮಂಡಗೆ ಹೇಳಿ. ಇನಾಸನ ಹೆಣ್ಣು ಮಕ್ಕಳನ್ನು ಮಾತನಾಡಿಸಿ ತಿರುಗಿ ಬಂದ. +ಇದೊಂದು ಪ್ರಕರಣ ಒಳ್ಳೆಯ ರೀತಿಯಲ್ಲಿ ಮುಗಿದು ಹೋದರೆ ಸಾಕು ಎಂದಾತ ಬಯಸಿದ್ದ. +* +* +* +ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಮಾತ್ರ ಈ ಪ್ರಕರಣವನ್ನು ಬೇರೊಂದು ದಿಕ್ಕಿಗೆ ತಿರುಗಿ ನಿಲ್ಲಿಸಿದ. +ಹೆಂಡತಿ ರಜೀನಾ ವಾಂತಿಯಾದಂತೆ ಆಗುತ್ತದೆ, ತಲೆ ಸುತ್ತುತ್ತದೆ ಎಂದು ಹೇಳಿದ್ದೇ ಗಾಬರಿಗೆ ಕಾರಣವಾಗಿ ಆತ ವೈಜೀಣ ಕತ್ರೀನಳ ಮನೆಗೆ ಹೋಗಿದ್ದ. +“ಭಾನುವಾರ ಪೂಜೆಗೆ ಬರತೀನಲ್ಲ..ಆಗ ಬಂದು ನಿನ್ನ ಹೆಂಡತೀನ ನೋಡತೀನಿ..ನೀನು ಗಾಬರಿಯಾಗಬೇಡ” ಎಂದವಳು ಹೇಳಿದ್ದಳು. +ಶನಿವಾರ ಸಂಜೆಯೇ ಈ ಪ್ರಕರಣವಾದದ್ದು ತಿಳಿಯಿತು. +“ಮೋಜಾ ದೇವ..ಹೆಂ ಕಿತೆಂ ಜಾಲ್ಲೆಂ” (ನನ್ನ ದೇವರೆ ಇದೇನಾಯಿತು) ಎಂದು ಜಪಸರ ಹಿಡಿದು ಕುಳಿತ ಅವಳು ತುಂಬಾ ನೊಂದುಕೊಂಡಳು. ರಾತ್ರಿ ಎಲ್ಲ ಅವಳಿಗೆ ಕೆಟ್ಟ ಕನಸುಗಳು. ಭಾನುವಾರ ಎದ್ದವಳೇ ಮೊದಲ ಪೂಜೆಗೆ ಬಂದಳು. ಏನೂ ಆಗಿಲ್ಲವೆಂಬಂತೆ ಪಾದರಿಗಳು ಪೂಜೆ ಮುಗಿಸಿದರು. ಕತ್ರೀನ ಪೂಜೆ ಮುಗಿಸಿಕೊಂಡು ಪಾದರಿ ಬಂಗಲೆಯ ಹಿಂದಿದ್ದ ಕೂಜ್ನಗೆ ಹೋದಳು. +“ಯೋ ಮಮ್ಮಿ” ಎಂದು ಫ಼ರಾಸ್ಕ ಅವಳನ್ನು ಸ್ವಾಗತಿಸಿದ. +“ಏನು ಕಾಲ ಬಂತು ಫ಼ರಾಸ್ಕ” ಎಂದು ಅಲ್ಲಿ ಕುಳಿತು ಮುಖ ಬಾಡಿಸಿಕೊಂಡು ಲೊಚಗುಟ್ಟಿದಳು. +“ಹೀಗೆ ಆಗಬಾರದಿತ್ತು ಫ಼ರಾಸ್ಕ..ಪಾದರಿಗಳ ಮೇಲೆ ಕೈ ಮಾಡೋದೆ?” ಎಂದು ಅವಳು ಗೋಡೆಗೆ ವರಗಿ ಕುಳಿತಳು. ಬಂದ ವಿಷಯ ಮರೆತಳು. +“ಆದದ್ದು ಆಗಿ ಹೋಯ್ತು ಮಮ್ಮಿ…ಮುಂದೆ ಅನುಭವಿಸಬೇಕಾದವನು ಮಾತ್ರ ಈ ಹುಡುಗನೇ” ಎಂದ ಫ಼ರಾಸ್ಕ. +“ನಮ್ಮ ಪಾದರಿಗಳನ್ನು ಎದುರು ಹಾಕಿಕೊಂಡವರಿಗೆ ಯಾರಿಗೂ ಒಳ್ಳೆಯದಾಗಿಲ್ಲ..ದೇವ ಮಣಿಯಾರಿಗಳ ನೋವು ನರಕದ ಬೆಂಕಿಯ ಹಾಗೆ ಶಾಶ್ವತ.” +“ಅಲ್ವೇ ಮತ್ತೆ” +“ಹಿಂದೆ ಪದ್ರಾಬ ಹೊಂಕೇರಿಯಲ್ಲಿ ಇದ್ದರಲ್ಲ..ಅಲ್ಲಿ ಒಬ್ಬ ಹುಡುಗ ಇವರಿಗೆ ವಿರೋಧವಾಗಿದ್ದ..ಅವನು ಪಾಸ್ಕು ಹಾಗೇನೆ ಪಾದರಿಗಳನ್ನು ತುಂಬಾ ಹಗುರವಾಗಿ ಕಂಡ. ಪಾದರಿಗಳು ತುಂಬಾ ಸುಧಾರಿಸಿಕೊಂಡರು. ಜನರಿಗೂ ಹೇಳಿ ನೋಡಿದರು. ಒಂದು ದಿನ ಅವರ ತಾಳ್ಮೆಯ ತಂತಿ ತುಂಡಾಗಿ ಹೋಯಿತು..ಇಗರ್ಜಿನಲ್ಲಿ ದೇವರ ಪೀಠದ ಮುಂದೆ ನಿಂತು ಎಡಗೈ ಶಾಪವನ್ನು ನೀಡಿದರು. ಈವತ್ತಿಗೂ ಆತ ಮೈ ತುಂಬ ತೊನ್ನಾಗಿ ನರಳ್ತಿದಾನೆ..” ಎಂದು ಫ಼ರಾಸ್ಕ ನಿಜ ಘಟನೆಯೊಂದನ್ನು ಹೇಳಿದ. ಪಾದರಿಗಳು ಜನರನ್ನು ಆಶೀರ್ವದಿಸುವಾಗೆಲ್ಲ ಬಲಗೈಯಿಂದ ಗಾಳಿಯಲ್ಲಿ ಶಿಲುಬೆ ಬರೆಯುವುದು ರೂಢಿ. ಅದೊಂದು ಪದ್ದತಿ ಕೂಡ. ಮದುವೆಯ ಉಂಗುರವನ್ನು ಮಂತ್ರಿಸುವಾಗ, ಚಿಕ್ಕ ಮಗುವಿಗೆ ಆಶೀರ್ವಾದ ನೀಡುವಾಗ, ತಮ್ಮ ಮುಂದೆ ಮೊಣಕಾಲೂರಿದವರನ್ನು ಆಶೀರ್ವದಿಸುವಾಗ ಎಲ್ಲ ಸಂದರ್ಭಗಳಲ್ಲಿ ಪಾದರಿ ಬಲಗೈಯನ್ನು ಮಡಚಿ ಕೈಯಿಂದ ಶಿಲುಬೆಯ ಗುರುತು ಮಾಡಿ “ದೇವರ ಆಶೀರ್ವಾದ” ಅನ್ನುತ್ತಾರೆ. ಈ ಆಶೀರ್ವಾದ ಅಮೂಲ್ಯವಾದದ್ದು, ಶ್ರೇಷ್ಠವಾದದ್ದು ಎಂಬುದು ಒಂದು ನಂಬಿಕೆ. ಇದೇ ಪಾದರಿ ಇದೇ ಆಶೀರ್ವಾದವನ್ನು ಎಡಗೈಯಿಂದ ಮಾಡಿದರೆ? ಅದು ಶಾಪ, ಶಿರಾಪ. ಸಾಮಾನ್ಯವಾಗಿ ಪಾದರಿಗಳು ಎಡಗೈ ಬಳಸುವುದಿಲ್ಲ. ಬಳಸಿದರೆ ಮಾತ್ರ ಅದು ವಿನಾಶಕಾರಕ. ಈ ನಂಬಿಕೆ ಇಗರ್ಜಿ ಮಾತೆಯನ್ನು ನಂಬುವ ಕ್ರೈಸ್ತ ಸಮೋಡ್ತಿಯಲ್ಲಿ ಬಹಳ ದಿನಗಳಿಂದ ಇದೆ. ಜನ ಏನೂ ಸಹಿಸಿಕೊಳ್ಳುತ್ತಾರೆ. ಆದರೆ ಎಡಗೈ ಆಶೀರ್ವಾದವನ್ನಲ್ಲ. +ಫ಼ರಾಸ್ಕ ಈ ವಿಷಯ ಹೇಳುತ್ತಿರಲು ಕತ್ರೀನಾ “ದೇವಾ” (ದೇವರೇ) ಎಂದು ಮಿಡುಕಾಡಿದಳು. +ಫ಼ರಾಸ್ಕ ಪಿಂಗಾಣಿ ಬಟ್ಟಲು ತಟ್ಟೆಯಲ್ಲಿ ಟೀ ಮಾಡಿಕೊಟ್ಟ. ಒಂದು ತುಂಡು ಬ್ರೆಡ್ಡು ತಂದಿರಿಸಿದ. ಕತ್ರೀನಾ ಅದನ್ನು ಮುಗಿಸಿದಳು. +“ರಜೀನಾ..ಹೀಗೆ ಬಾ..” ಎಂದು ಫ಼ರಾಸ್ಕನ ಹೆಂಡತಿ ರಜೀನಾಳ ಪರೀಕ್ಷೆ ಮಾಡಿದಳು. ಅವಳ ಕಿವಿಯಲ್ಲಿ ಏನೋ ಹೇಳಿ, ಅವಳು ನಾಚಿ ಕೆಂಪೇರುತ್ತಿರಲು- +“ಫ಼ರಾಸ್ಕ ಗಾಬರಿ ಏನಿಲ್ಲ..ಇನ್ನೊಂದು ಹದಿನೈದು ದಿನ ಆಗಲಿ..ನಾನು ಡಾಕ್ಟರ್ ಶಾಂತಾಬಾಯಿ ಹತ್ತಿರ ಕರಕೊಂಡು ಹೋಗಿ ಪರೀಕ್ಷೆ ಮಾಡಿಸಿ ಹೇಳತೀನಿ..” ಎಂದು ನಗುನಗುತ್ತ ಹೇಳಿ ಎದ್ದಳು. +ಅವಳು ಮನೆಮುಟ್ಟುವಷ್ಟರಲ್ಲಿ ಇಗರ್ಜಿಯ ಎರಡನೇ ಪೂಜೆಗೆ ರೇಶಿಮೆ ಸೀರೆಯುಟ್ಟು ಹೊರಟ ನಾಲ್ವರು ಅವಳಿಗೆ ಭೇಟಿಯಾದರು. +“ಪೂಜೆಗೆ ಹೋಗಿ ಬಂದ್ರ?” ಎಂದು ಕೇಳುತ್ತ ನಿಂತರು. +“ನಿನ್ನೆ ನೋಡಿ ಹೀಗೆ ಆಯ್ತು..” ಎಂದರು. ಕತ್ರೀನಾ ಮುಂದಿನ ಪರಿಣಾಮ ಏನಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದಳು. ಮಾಂಸ ತರಲು ಮಾರ್ಕೆಟಿಗೆ ಹೊರಟ ಫ಼ರಾಸ್ಕ ಎದುರು ಸಿಕ್ಕ ಕೆಲವರಿಗೆ ಈ ಸುಳುವು ನೀಡಿದ. ಇದಕ್ಕೆ ಸರಿಯಾಗಿ ಪಾದರಿ ಮಸ್ಕರಿನಾಸರು ಪೂಜೆಯ ನಡುವೆ ಶೆರಮಾಂವಂಗೆ ನಿಂತವರು- +” ಈ ಬಗ್ಗೆ ನೀವು ಏನು ತೀರ್ಮಾನ ಕೈಗೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ”. ಎಂದು ಹೇಳಿದ್ದು ಬೇರೇನೋ ಅರ್ಥವನ್ನು ನೀಡಿತು. ಮೂರು ಗಂಟೆಯ ಸಭೆಯಲ್ಲಿ ಮಿರೋಣ ವಲೇರಿಯನ್ ಬೇರೆ ತನ್ನ ಮಂಗಳೂರಿನ ಕೊಂಕಣಿಯಲ್ಲಿ- +“ನಾವು ಏನೇ ತೀರ್ಮಾನ ಮಾಡಿದರೂ ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ಕೇಳಿದ್ದ. +ಭಾನುವಾರವೆಲ್ಲ ಪಾಸ್ಕು ಏನು ಮಾಡುತ್ತಾನಂತೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಆತ ಪಾದರಿಗಳ ಕ್ಷಮಾಪಣೆ ಕೇಳುವ ಮನೋಸ್ಥಿತಿಯಲ್ಲಿ ಇಲ್ಲ ಎನ್ನುವಾಗ ಎಡಗೈ ಶಾಪದ ಮಾತು ಬಲವಾಗಿ ಕೇಳಿ ಬರತೊಡಗಿತು. ಕ್ರೈಸ್ತ ಸಮುದಾಯದಲ್ಲಿ ಎಲ್ಲಿಯೋ ಗುಪ್ತವಾಗಿ ಅಡಗಿದ್ದ ಈ ಭೀತಿಯ ಹಸ್ತ ಸ್ವಲ್ಪ ಮೇಲೆದ್ದು, ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡು, ಕುಷ್ಟರೋಗ, ತೊನ್ನು, ಕಣ್ಣು ಕಾಣದಿರುವುದು, ಕಾಲು ಊನವಾಗುವುದು, ಕೈ ಮೊಟಕಾಗುವುದು, ನಾಲಿಗೆ ಬಿದ್ದು ಹೋಗುವುದು ಮೊದಲಾದ ಶಾಶ್ವತ ಅಂಗಹೀನತೆಗಳನ್ನು ತಂದು ಎದುರು ನಿಲ್ಲಿಸಿ ಇಗರ್ಜಿಯ ಸುತ್ತಲಿನ ಮೂರು ಬೀದಿಗಳಲ್ಲಿ, ಬಾಮಣರು ವಾಸಿಸುವ ಕೆಳಗಿನ ಕೇರಿಯಲ್ಲಿ, ಕರಿಕಾಲಿನವರು ವಾಸಿಸುವ ರೈಲು ಇಲಾಖೆಯ ಮನೆಗಳ ಬಳಿ ವಿಷ ಗಾಳಿಯಾಗಿ ಹರಡಿಕೊಂಡಿತು. +ಇನಾಸ ಚಾಪೆಯೊಂದನ್ನು ಶಿಲುಬೆ ದೇವರ ಮುಂದೆ ಹಾಸಿಕೊಂಡು ಮಲಗಿಬಿಟ್ಟ. +ಬ್ಯಾಂಡಕಾರ ರೈಮಂಡ್- +“ರಾಂಡ್ಲಾ ಪುತ್ತ..ನಮ್ಮ ಮನೆಗೇನೆ ಕೆಟ್ಟ ಹೆಸರು ತಂದೆಯಲ್ಲ” ಎಂದು ಕೂಗಾಡಿದ. +ಇನಾಸನ ಹೆಂಡತಿ ಮೊನ್ನೆ ತಲೆಗೂದಲು ಕೆದರಿಕೊಂಡು, ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ಶಾಲೆಗೆ ಹೋಗಲು ಹಟ ಮಾಡುವ ಹುಡುಗನನ್ನು ತಳ್ಳಿಕೊಂಡು ಶಾಲೆಗೆ ಕೊಂಡೊಯ್ಯುವಂತೆ ಪಾಸ್ಕುವನ್ನು ಮನೆಯ ಹೊರಗೆ ಎಳೆ ತಂದಳು. ಇಷ್ಟು ಹೊತ್ತಿಗೆ ಪಾಸ್ಕು ಕೂಡ ಅರ್ಧ ಜೀರ್ಣವಾಗಿದ್ದ. ಪಾದರಿಗಳ ಎಡಗೈಯ ಶಾಪದ ಬಗ್ಗೆ ಬಹಳಷ್ಟು ಕೇಳಿದ್ದ ಈತ ಈ ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಬಾರದೆಂದು ನಿರ್ಧರಿಸಿದ. +* +* +* +ಎಲ್ಲೋ ಒಂದು ಕಡೆ ಬದಲಾವಣೆಯಾಯಿತೆಂದರೆ ಅದರ ಪ್ರಭಾವ ಎಲ್ಲ ಕಡೆ ಆಗುತ್ತದೆ. ಕಡಲಲ್ಲಿ ಹುಟ್ಟುವ ಒಂದು ಅಲೆ ಮತ್ತೊಂದು ಅಲೆಯ ಹುಟ್ಟಿಗೆ ಕಾರಣವಾಗುವಂತೆ ಹೊಸ ತರಂಗಗಳು ಏಳುತ್ತವೆ. +ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆದರೂ ಈ ಚಳುವಳಿಯ ಬಿಸಿ ಕ್ರೀಸ್ತುವರ ಕೇರಿಯತ್ತ ಸುಳಿಯಲಿಲ್ಲ. ವಿಶೇಷವಾಗಿ ಕ್ರೀಸ್ತುವರು ಇರುವಲ್ಲೆಲ್ಲ ವಿದೇಶಿ ಪಾದರಿಗಳು ಇದ್ದುದರಿಂದ ಈ ಇಟಲಿ, ಫ಼್ರೆಂಚ್, ಯುರೋಪಿಯನ್, ಗೋವಾ ಪಾದರಿಗಳು ಕ್ರೀಸ್ತುವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಂತೆ ನೋಡಿಕೊಂಡರು. ಹಾಗೆಯೇ ಕ್ರೀಸ್ತುವರಲ್ಲಿ ಅನಕ್ಷರಸ್ಥರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಚಳುವಳಿಗಳ ಕುರಿತು ಕೂಡ ಇವರು ವಿಚಾರ ಮಾಡಲಿಲ್ಲ. +ಬ್ರಿಟೀಷರು ಇಲ್ಲಿಯ ಜನರಿಗೆ ಆಡಳಿತವನ್ನು ವಹಿಸಿಕೊಟ್ಟು ಹೋಗುತ್ತಿರುವಾಗಲೇ ಶಿವಸಾಗರದ ಇಗರ್ಜಿ ಆಡಳಿತ ಗೋವೆಯ ಪ್ರಾವಿನ್ಶಿಯಲ್ ಅವರ ಕೈಯಿಂದ ಮೈಸೂರಿನ ಬಿಷಪ್ಪರ ಕೈಗೆ ಹಸ್ತಾಂತರಗೊಂಡಿತು. ನೀವು ಇದ್ದಲ್ಲಿಯೇ ಇರುತ್ತೀರೋ ಇಲ್ಲ ಗೋವೆಗೆ ಹಿಂತಿರುಗುತ್ತಿರೋ ಎಂದು ಗೋವೆಯ ಧರ್ಮಾಧಿಕಾರಿಗಳು ಇಲ್ಲಿದ್ದ ಗೋವೆಯ ಪಾದರಿಗಳಿಗೆ ಕೇಳಿದರು. ಕೆಲವರು ಇಲ್ಲಿಯೇ ಉಳಿದರು. ಕೆಲವರು ಗೋವೆಗೆ ಹಿಂತಿರುಗಿದರು. +ಮೈಸೂರಿನ ಸಭೆ ತಮಗೆ ಅಪರಿಚಿತ. ಈ ಸಭೆಗೆ ತಾನು ಹೊಸಬನಾಗುತ್ತೇನೆ. ಪರಕೀಯನಾಗುತ್ತೇನೆ. ಗೋವೆ ಇನ್ನೂ ಪೋರ್ತುಗಿಸರ ವಶದಲ್ಲಿಯೇ ಇದೆ. ಅಲ್ಲಿ ತಮಗೆ ಹೆಚ್ಚು ರಕ್ಷಣೆ ಇದೆ. ಸ್ವಾತಂತ್ರ್ಯಾನಂತರ ಇಲ್ಲಿಯ ಪರಿಸ್ಥಿತಿ ಹೇಗೋ ಎಂದೆಲ್ಲ ಯೋಚನೆ ಮಾಡಿದ ಪಾದರಿ ಮಸ್ಕರಿನಾಸ ಗೋವೆಗೆ ಹಿಂತಿರುಗುವ ತಮ್ಮ ನಿರ್ಧಾರವನ್ನು ಪ್ರಾವಿನ್ಶಿಯಲ್ ಅವರಿಗೆ ತಿಳಿಸಿ ಅಲ್ಲಿಂದ ಮುಂದಿನ ಆದೇಶ ಬರುವುದನ್ನು ಕಾಯತೊಡಗಿದರು. +ಶಿವಸಾಗರ ಬಹಳ ವೇಗವಾಗಿ ಬದಲಾವಣೆಯನ್ನು ಕಂಡಿತು. ಆಧುನಿಕ ಬದುಕಿಗೆ ಹೊರಳಿಕೊಂಡಿತು. ಜಾತಿಯ ಹೆಸರಿನ ಕೇರಿಗಳು, ಫ಼ಾತಿಮಾನಗರ, ಆಜಾದ ನಗರ, ಜೋಸೆಫ಼ ನಗರ ಎಂದೆಲ್ಲ ಪರಿವರ್ತನೆ ಹೊಂದಿದವು. ಜನರಲ್ಲಿ ಜಾತಿ, ಧರ್ಮ, ಒಳ ಪಂಗಡಗಳ ವ್ಯಾಮೋಹ ಹೋಗಲಿಲ್ಲವಾದರೂ ಈ ಬದಲಾವಣೆ ಒಂದು ರೀತಿಯಲ್ಲಿ ನಾಗರೀಕವಾಗಿ ಕಂಡಿತು. +ಊರಿನಲ್ಲಿ ಬ್ಯಾಂಕುಗಳು, ಸರಕಾರಿ ಕಛೇರಿಗಳು, ನರ್ಸಿಂಗ ಹೋಂಗಳು, ಶಾಲೆ, ಕಾಲೇಜುಗಳು, ವರ್ಕಶಾಪುಗಳು ಅಧಿಕಗೊಂಡದ್ದರಿಂದ ಮಂಗಳೂರು, ಕುಂದಾಪುರ, ಚಿಕ್ಕಮಗಳೂರಿನಿಂದ ಕ್ರೀಸ್ತುವರು ಅಧಿಕ ಸಂಖ್ಯೆಯಲ್ಲಿ ಬಂದರು. ಪ್ಲೇಗು, ಕಾಲರಾ ಮೂಲೋತ್ಪಾಟನೆ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಡಾಕ್ಟರ್ ರೇಗೋ ಬೇರೆ ಕಡೆಗೆ ವರ್ಗವಾಗಿ ಹೋಗಿದ್ದರು. ಅವರ್ ಜತೆ ಬಂದ ಚಾರ್ಲಿ, ವಿನ್ಸೆಂಟ್ ಕೂಡ ಊರು ಬಿಟ್ಟಿದ್ದರು. ಆದರೆ ಮ್ಯಾನೇಜರ ಜಾನ ಡಯಾಸ್ ಇಲ್ಲಿರುವಾಗಲೇ ನಿವೃತ್ತನಾಗಿ ಅವನಿಗೆ ಒಂದಿಷ್ಟು ಹಣ ಬಂದಿತ್ತು. ಅವನ ಹೆಂಡತಿ ಸಿಲ್ವಿಯಾ- +“ಶಿವಸಾಗರದಲ್ಲಿಯೇ ಇದ್ದು ಬಿಡೋಣ” ಎಂದು ಹಠ ಮಾಡಿದಳು. +ಜಾನ ಡಯಾಸನಿಗೆ ತನ್ನ ಊರಿಗೆ ಹೋಗಿ ಅಲ್ಲಿದ್ದ ಹಿರಿಯರ ಮನೆಯನ್ನು ಹೊಸದಾಗಿ ಕಟ್ಟಿಸಿ ಅಲ್ಲಿರಬೇಕು ಎಂಬ ಆಸೆಯಿತ್ತು. ಅವನ ತಂದೆಯೂ ಇದನ್ನೇ ಬಯಸುತ್ತಿದ್ದ. ಆದರೆ ಜಾನ್ ಡಯಾಸರ ಇಬ್ಬರು ತಮ್ಮಂದಿರು ಅಲ್ಲಿ ಇದ್ದುದರಿಂದ ಅವರಿಗೆ ಅನುಕೂಲವಾಗಿ ಬಿಡುತ್ತದೆ ಎಂದು ಸಿಲ್ವಿಯಾ- +“ನಾಕಾ ಅಬಾ…ಅಮಿಂ ಹಾಂಗಾರಾವ್ಯಾಂ” (ಬೇಡಪ್ಪ ನಾವು ಇಲ್ಲಿಯೇ ಇರೋಣ) ಎಂದು ಹಟಹಿಡಿದಳು. ಡಯಾಸ ಇಲ್ಲಿ ಮನೆಕೊಂಡ. ಅವನ ಮಗ ಜಾಕೋಬನಿಗೆ ಶ್ರೀ ಶಿವಸಾಗರ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಆತ ಶಿವಸಾಗರದವನೇ ಆದ. +ಮಿರೋಣ್ ವಲೇರಿಯನ್ ಇದನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡ. ಮಗ ನಿವೃತ್ತನಾದ. ಐದಾರು ವರ್ಷಗಳ ನಂತರ ಆತ ತೀರಿಕೊಂಡು ಇಗರ್ಜಿಯ ಮಿರೋಣ್ ಜಾಗವನ್ನು ಮಗನಿಗೆ ಬಿಟ್ಟುಕೊಟ್ಟ. ಅವನು ಕೂಡ ಪಿಟೀಲು ಬಾರಿಸಬಲ್ಲವನಾಗಿದ್ದ. ಕೀರ್ತನೆ ಗಾಯನ ಬಲ್ಲವನಾಗಿದ್ದ. ಪಾದರಿಗಳ ವಿಶ್ವಾಸಗಳಿಸಿದ್ದ ಅವನಿಗೆ ಏನೂ ಕಷ್ಟವಾಗಲಿಲ್ಲ. +ಇಗರ್ಜಿಯ ಸುತ್ತ ಇದ್ದ ಕ್ರೀಸ್ತುವರ ಮನೆಗಳೂ ಮತ್ತೂ ದೂರ ಹಬ್ಬಿಕೊಂಡವು. ಸಿಮೋನನ ಮನೆಯ ಹಿಂದಿನ ಸಾಲು ಕೆಳಕೇರಿ ಎಂದೇ ಪ್ರಖ್ಯಾತವಾಗಿ ಮೊನ್ನೆ ಮೊನ್ನೆ ಫ಼ಾತಿಮಾ ನಗರ ಎಂಬ ಹೆಸರು ಪಡೆಯಿತು. ಇಲ್ಲಿಗೂ ಓರ್ವ ಗುರ್ಕಾರ ಬೇಕು ಎಂದು ಜನ ಹೇಳಿದ್ದರಿಂದ ಶಿವಸಾಗರಕ್ಕೆ ಬಂದು ಕೆಲವರ್ಷಗಳಾಗಿದ್ದ ಅಲೆಕ್ಸ ಪಿಂಟೋ ಫ಼ಾತಿಮಾ ನಗರದ ಗುರ್ಕಾರ ಆಗಿ ನೇಮಕಗೊಂಡಿದ್ದ. +ಜತೆಗೆ ಪಾದರಿ ಮಸ್ಕರಿನಾಸ ಬೇರೊಂದು ಯತ್ನ ಮಾಡಿದ್ದರು. ಶಿವಸಾಗರಕ್ಕೆ ಕ್ರೈಸ್ತ ಶಾಲೆಯೊಂದರ ಅವಶ್ಯಕತೆ ಇತ್ತು. ಕ್ರೈಸ್ತ ಮಕ್ಕಳು ಸರಕಾರಿ ಶಾಲೆಯಲ್ಲಿ ಓದತೊಡಗಿದ್ದರು. ಅಲ್ಲಿಯ ಶಿಕ್ಷಣ ಹೇಗೆ ಇರಲಿ ಕ್ರೈಸ್ತ ಮಕ್ಕಳಿಗೆ ದೊರಕಬೇಕಾದ ಧಾರ್ಮಿಕ ಶಿಕ್ಷಣ ಅಲ್ಲಿ ದೊರೆಯುತ್ತಿರಲಿಲ್ಲ. ಎಲ್ಲ ಹುಡುಗರ ಜತೆ ಸೇರಿ ಪಾಠ ಕಲಿಯುವುದು, ಪರೀಕ್ಷೆ ಪಾಸು ಮಾಡುವುದು, ಎಲ್ಲರ ಜೊತೆ ಒಂದಾಗಿ ಬೆರೆತು ಇವರು ಕಳೆದು ಹೋಗುತ್ತಿದ್ದರು. +ನಾಲ್ಕು ಏಳನೆಯ ತರಗತಿಯವರೆಗಾದರೂ ಕ್ರೈಸ್ತ ಮಕ್ಕಳು ತಮ್ಮ ಸುಪರ್ದಿನಲ್ಲಿದ್ದರೆ ಚೆಂದ ಎಂದು ಇವರಿಗನಿಸಿತು. ಹೀಗೆಂದೇ ಮಂಗಳೂರಿನ ಒಂದು ವಿದ್ಯಾಸಂಸ್ಥೆಗೆ ಕಾಗದ ಬರೆದರು ಪಾದರಿ ಮಸ್ಕರಿನಾಸ. ಅಲ್ಲಿಯ ತೆರೇಜಾ ವಿದ್ಯಾ ಸಂಸ್ಥೆ ಶಿವಸಾಗರದಲ್ಲಿ ಒಂದು ಕಾನ್ವೆಂಟ್ ತೆರೆಯಲು ಮುಂದೆ ಬಂದಿತು. ಕಾನ್ವೆಂಟ್ ಕಟ್ಟಡ ಕಟ್ಟಲು ಒಂದು ನಿವೇಶನ ದೊರಕಿಸಿಕೊಡಬೇಕು ಎಂಬ ನಿಬಂಧನೆ ಹಾಕಲು ಪಾದರಿ ಊರವರ ಒಪ್ಪಿಗೆ ಪಡೆದು ಇಗರ್ಜಿ ಮುಂದಿನ ಮೈದಾನವನ್ನು ಕಾನ್ವೆಂಟಿಗೆ ಬಿಟ್ಟು ಕೊಡಲು ಒಪ್ಪಿಕೊಂಡರು. +ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಸಿಸ್ಟರುಗಳ ಒಂದು ತಂಡ ಇಲ್ಲಿಗೆ ಬಂದು ಇಳಿಯಲು ಅನೂಕೂಲವಾಗುವಂತೆ ಇಗರ್ಜಿಯ ಮುಂದೆಯೇ ಕಾನ್ವೆಂಟ್ ಕಟ್ಟಡ ಎದ್ದು ನಿಂತಿತು.ಹಿಂದೆಯೇ ಸಿಸ್ಟರುಗಳು ಬಂದರು. ತರಗತಿಗಳೂ ಆರಂಭವಾದವು. +ಕ್ರೀಸ್ತುವರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಲ್ಲದೆ ಬೇರೆ ಶಾಲೆಗಳಿಗೆ ಕಳುಹಿಸಬಾರದು ಎಂದು ಪಾದರಿ ಆದೇಶ ಹೊರಡಿಸಿದರು. ಮಕ್ಕಳಿಗೆ ಜ್ಞಾನೋಪದೇಶ ಹೇಳಿ ಕೊಡುವ ಹೊಣೆ ಸಿಸ್ಟರುಗಳದಾಯಿತು. ಸಂಜೆ ಶಾಲೆ ಬಿಟ್ಟ ತಕ್ಷಣ ಸಾಲು ಸಾಲಾಗಿ ಕ್ರೀಸ್ತುವರ ಮಕ್ಕಳನ್ನು ಶಾಲೆಯಿಂದ ಇಗರ್ಜಿಗೆ ಕರೆತಂದು ಅಲ್ಲಿ ಪ್ರಾರ್ಥನೆ ಮಾಡಿ- +“ಜೂಜೆ ಬಾಪ ಪಾವತುಂ ಅಮ್ಕಾಂ” (ತಂದೆ ಜೂಜೆಯೆ ನಮ್ಮನ್ನು ಕಾಪಾಡು) ಎಂದು ಮಕ್ಕಳು ಸಾಮೂಹಿಕವಾಗಿ ಹಾಡಿ ಮನೆಗಳಿಗೆ ಹೋಗುವ ಪದ್ಧತಿ ರೂಢಿಗೆ ಬಂದಿತು. +ಇಷ್ಟು ಹೊತ್ತಿಗೆ ಮೈಸೂರಿನಿಂದ ಹೊಸ ಪಾದರಿಯೋರ್ವರನ್ನು ಶಿವಸಾಗರಕ್ಕೆ ವರ್ಗ ಮಾಡಲಾಯಿತು. ಅವರು ಬರುವುದಕ್ಕೂ ಮೊದಲು ಶಿವಸಾಗರದಿಂದ್ ಗೋವೆಗೆ ತಿರುಗಿ ಬರುವಂತೆ ಪಾದರಿ ಮಸ್ಕರಿನಾಸರಿಗೆ ಗೋವೆಯ ಪ್ರಾವಿನ್ಶಿಯಲ್ ಅವರಿಂದ ಆದೇಶ ಬಂದಿತು. ಗೋವೆಯ ಪೊಂಡಾದ ಇಗರ್ಜಿಗೆ ಅವರನ್ನು ವರ್ಗ ಮಾಡಲಾಗಿತ್ತು.” ನೀನೂ ನನ್ನ ಜತೆ ಹೊರಡು” ಎಂದರು ಪಾದರಿ ಫ಼ರಾಸ್ಕನಿಗೆ. ಅವನ ಹೆಂಡತಿ ರಜೀನಾ ಮಗಳು ಎಲಿಜಬೆತ್ ಅವರ ಜತೆ ಹೊರಡಬೇಕಿತ್ತಲ್ಲ. +ಊರ ಜನ ಇವರನ್ನು ಪ್ರೀತಿಯಿಂದಲೇ ಬೀಳ್ಕೋಟ್ಟರು. +-೬- +ಮೈಸೂರಿನಿಂದ ಬರಬಹುದಾದ ಹೊಸ ಪಾದರಿಗೆ ಜನ ಕಾದರು. ಅವರಂತೂ ಬರಲಿಲ್ಲ. ಇಲ್ಲಿ ಸಿಸ್ಟರುಗಳು ಇದ್ದುದರಿಂದ ಅವರು ದಿನನಿತ್ಯ ಪೂಜೆ ಕೇಳಿ ದಿವ್ಯ ಪ್ರಸಾದವನ್ನು ಸ್ವೀಕರಿಸಲೇಬೇಕಾಗಿದ್ದುದರಿಂದ ಶಿವಸಾಗರದ ಹತ್ತಿರದಲ್ಲಿಯೇ ಇದ್ದ ತೀರ್ಥಪುರದ ಪಾದರಿ ಕೆಲ ದಿನ ಬಂದು ಇಲ್ಲಿ ಇದ್ದುದಾಯ್ತು. ನಂತರ ಒಂದು ದಿನ ಇಗರ್ಜಿಯ ಗಂಟೆ ಸದ್ದು ಮಾಡಿ- +“ಹೊಸ ಪಾದರಿ ಬಂದರು” ಎಂಬ ಸಂತಸದ ಸುದ್ದಿಯನ್ನು ಊರ ಜನರಿಗೆ ತಿಳಿಸಿತು. ತುಂಬಾ ವಯಸ್ಸಾದ , ನಿವೃತ್ತಿಗೆ ಒಂದು ಒಂದೂವರೆ ವರುಷವಿರುವ ಪಾದರಿ ಲಾರೆಟ್ಟೋ ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡರು. +ಪಾದರಿ ಲಾರೆಟ್ಟೋ ನಿಧಾನ ಎಂದರೆ ನಿಧಾನ. ಪೂಜೆ, ಪ್ರವಚನ, ದಿವ್ಯ ಪ್ರಸಾದ ನೀಡುವುದರಲ್ಲೂ ನಿಧಾನ. ಮಾತಿನಲ್ಲೂ ಅಷ್ಟೇ. ದೇವರ ಪೀಠವನ್ನೇರಿ ಪೂಜೆಗೆ ತೊಡಗಿದರಂತೂ ಹೊರಗಿನ ಪ್ರಪಂಚವನ್ನೇ ಮರೆತುಬಿಡುತ್ತಿದ್ದರು. ಬಗ್ಗಿ ಪವಿತ್ರ ಪುಸ್ತಕವನ್ನು ಹತ್ತು ಬಾರಿ ಮುತ್ತಿಡುತ್ತಿದ್ದರು. ದಿವ್ಯ ಪ್ರಸಾದವನ್ನು ಪಾದರಿಯೇ ಸ್ವೀಕರಿಸಬೇಕಾಗಿದ್ದರಿಂದ ಈ ಕಾರ್ಯಕ್ಕೆ ಕಡಿಮೆ ಎಂದರೆ ಐದು ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರವಚನಕ್ಕೆ ನಿಂತವರು ಕ್ರಿಸ್ತ ಪ್ರಭುವಿನ ಮಾತುಗಳನ್ನು ನುಡಿಯುತ್ತ ಗದ್ಗದಿತರಾಗುತ್ತಿದ್ದರು. ಅವರ ದನಿ ನಡುಗುತ್ತಿತ್ತು. ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಮಾತು ನಿಲ್ಲಿಸಿ, ಕೈನ ಉದ್ದ ತೋಳುಗಳಲ್ಲಿ ಇರಿಸಿದ ಕರವಸ್ತ್ರ ತೆಗೆದು ಕಣ್ಣೊರೆಸಿಕೊಳ್ಳುತ್ತಿದ್ದರು. +ಪಾದರಿ ಲಾರೆಟ್ಟೋ ಇಗರ್ಜಿ ಹಾಗೂ ಬಂಗಲೆ ಈ ಎರಡನ್ನೂ ಬಿಟ್ಟು ಹೊರ ಬರಲಿಲ್ಲ. ಇಗರ್ಜಿಯ ಎಲ್ಲ ವ್ಯವಹಾರ ವಹಿವಾಟನ್ನು ಗುರ್ಕಾರ ಸಿಮೋನ, ಗುರ್ಕಾರ ಪಿಂಟೋ, ಮಿರೋಣ್ ಡಯಾಸ್ ನಡೆಸಿಕೊಂಡು ಹೋದರು. ಹಿಂದಿನಿಂದ ನಡೆದುಕೊಂಡು ಬಂದುದೆಲ್ಲ ಹಾಗೆಯೇ ಮುಂದುವರೆಯಿತು. +ಲಾರೆಟ್ಟೋ ಬಂದ ಒಂದೂವರೆ ವರ್ಷಕ್ಕೆ ಅವರಿಗೆ ಅಲ್ಲಿಂದ ವರ್ಗವಾಯಿತು. ನಂತರ ಇನ್ನೂ ಕೆಲವರು ಊರಿಗೆ ಪಾದರಿಗಳಾಗಿ ಬಂದರು. ಪಾದರಿ ಫ಼ರ್ನಾಂಡಿಸ್, ಪಾದರಿ ಲೋಪಿಸ್, ಪಾದರಿ ಪಿಂಟೋ ಎರಡು ಮೂರು ವರ್ಷವಿದ್ದು ಕ್ರೀಸ್ತುವರ ಆಧ್ಯಾತ್ಮಿಕ ಬೇಕು ಬೇಡಗಳನ್ನು ಪೂರೈಸಿ ಹೋದರು. +ಊರು ಕೂಡ ಬೆಳೆಯಿತು. ಹಿರಿಯರು ಮತ್ತೂ ಹಿರಿಯರಾದರು. ಕಿರಿಯರಿಗೆ ವಯಸ್ಸಾಗಿ ಮದುವೆಯಾಗಿ ಮಕ್ಕಳಾದವು. ಕ್ರೀಸ್ತುವರ ಸಂಖ್ಯೆಯೂ ಅಧಿಕವಾಯಿತು. ಪಾದರಿ ಪಿಂಟೋ ವರ್ಗವಾಗಿ ಹೋದ ಮಾರನೇ ದಿನ ಒಂದು ಕರಿಕಾರು ಇಗರ್ಜಿಯ ಬಳಿ ಬಂದು ನಿಂತಿತು. ಗಡ್ಡ, ಮೀಸೆ ಇಲ್ಲದ, ಬೋಳು ಮುಖದ ಕರಿ ಪ್ಯಾಂಟು, ಬಣ್ಣದ ಶರಟಿನ, ಕಪ್ಪು ಕನ್ನಡಕ ಧರಿಸಿದ ಪಾದರಿ ಸಿಕ್ವೇರಾ ಕಾರಿನಿಂದ ಇಳಿದಾಗ ಅವರ ದಾರಿ ಕಾಯುತ್ತ ನಿಂತ ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮುಂದೆ ಧಾವಿಸಿ- +“ಬ್ಲೆಸ್ ಮಿ ಫ಼ಾದರ್” ಎಂದು ಕೈಮುಗಿದಾಗ ಪಾದರಿ ಸಿಕ್ವೇರಾ ಕಣ್ಣುಗಳು ಮಿಂಚಿದವು. +ಶಿವಸಾಗರಕ್ಕೆ ಮತ್ತೂ ಓರ್ವ ಪಾದರಿಗಳು ಬಂದರೆಂದು ಗಂಟೆ ಢಣ ಢಣಿಸ ತೊಡಗಿತು. +ಊರಿಗೆ ಬಂದ ಈ ಪಾದರಿ ಮಾತ್ರ ನಮ್ಮವರೇ ಆಗಿದ್ದರು. ಅವರ ಬಣ್ಣ, ಮುಖ ಚಹರೆ, ಮಾತಿನ ರೀತಿ ದೇಸೀಯವಾಗಿತ್ತು. ಸ್ಥಳಿಯ್ರೇ ಸಮಿನರಿಯಲ್ಲಿ ಶಿಕ್ಷಣ ಪಡೆದು ಪಾದರಿಗಳಾಗಿ ಜನರ ದೇವರ ಸೇವೆ ಮಾಡಲು ಮುಂದಾಗಿದ್ದರು. ಪಿಂಟೋ, ಡಯಾಸರಂಥವರಿಗೆ ಇದು ಅಪಾರ ಸಂತಸದ ವಿಷಯವಾಯಿತು ಕೂಡ. +* +* +* +ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ್ ಪಿಂಟೋ ಬಹಳ ವರ್ಷ ಮುಂಬಯಿಯಲ್ಲಿದ್ದ. ಮಧ್ಯ ರೈಲ್ವೆ ವರ್ಕಶಾಪಿನಲ್ಲಿ ಫ಼ೋರಮನ್ ಹುದ್ದೆಯಲ್ಲಿ ಒಳ್ಳೆಯ ಸಂಬಳ ಇತ್ಯಾದಿ ಪಡೆಯುತ್ತ ಉತ್ತಮ ಮಟ್ಟದಲ್ಲಿಯೇ ಅವನಿದ್ದ. ವರ್ಕಶಾಪಿನಿಂದ ಕೆಲವೊಂದು ವಸ್ತುಗಳನ್ನು ಹೊರಗೆ ಸಾಗಿಸುವ ವಿಷಯದಲ್ಲಿ ಕೆಲವರೊಂದಿಗೆ ಮನಸ್ತಾಪ ಬೆಳೆಸಿಕೊಂಡ. ಅವರು ಸ್ಟೀಲು, ಕಬ್ಬಿಣ ಬಿಡಿ ಭಾಗಗಳನ್ನು ಯಾರಿಗೂ ಕಾಣದ ಹಾಗೆ ಹೊರಗೆ ತೆಗೆದುಕೊಂಡು ಹೋಗುವಾಗ ಈತ ಸೆಕ್ಯುರಿಟಿಯವರಿಗೆ ತಿಳಿಸಿ ಅವರು ಸಿಕ್ಕಿಬೀಳುವಂತೆ ಮಾಡಿದ. ಅವರು ಇವನ ಮೇಲೆ ಕಣ್ಣಿಟ್ಟು ಇವನನ್ನು ಮಾಲು ಸಹಿತ ಹಿಡಿಯುವ ಯತ್ನ ಮಾಡಿದರು. ಇದು ಕ್ರಮೇಣ ಜಗಳ ಮಾರಾಮಾರಿಗೆ ಕಾರಣವಾಗಿ ಇನ್ನು ಮುಂಬಯಿಯಲ್ಲಿ ಇದ್ದರೆ ತನ್ನ ಜೀವನಕ್ಕೇ ಅಪಾಯ ಎಂಬುದು ಖಚಿತವಾಗಿ ಅಲೆಕ್ಸ ಮುಂಬಯಿ ಬಿಡುವ ವಿಚಾರ ಮಾಡಿದ. +ಮೂರು ತಿಂಗಳ ರಜೆ ಹಾಕಿ ಹೆಂಡತಿಯ ಜತೆ ಶಿವಸಾಗರಕ್ಕೆ ಬಂದ ಅಲೆಕ್ಸ ಕಳೆಕೇರಿಯ ವಿನ್ಸೆಂಟ್ ಮನೆಯಲ್ಲಿ ಉಳಿದ. ವಿನ್ಸೆಂಟ್ ಇವನ ಹೆಂಡತಿಯ ತಮ್ಮ. ಮುಂಬಯಿ ಬಿಡಬೇಕು ಅನ್ನುವುದಂತೂ ನಿರ್ಧಾರವಾಗಿತ್ತು. ಮುಂದೆ ಎಲ್ಲಿ ತಳವೂರುವುದು ಎಂಬುದು ನಿರ್ಧಾರವಾಗಿರಲಿಲ್ಲ. ಶಿವಸಾಗರ ಅದೇ ಬೆಳವಣಿಗೆಯನ್ನು ಹೊಂದುವಂತಹ ನಗರದಂತೆ ಅವನಿಗೆ ಕಂಡಿತು. ಯಾವ ಗಲಾಟೆಯೂ ಇಲ್ಲ, ಗೊಂದಲವಿಲ್ಲ, ಸಿಟಿ ಬಸ್ಸು ಹಿಡಿ, ಕ್ಯೂ ನಿಲ್ಲು, ನೀರಿಗಾಗಿ ಪರದಾಡು, ರೇಷನ್ನಿಗೆ ಓಡಾಡು, ಸೀಮೆ ಎಣ್ಣೆ ಸಿಗುವುದಿಲ್ಲ ಎಂಬ ತಕರಾರಿಲ್ಲ. ಗೂಂಡಾಗಳ ಕಾಟವಿಲ್ಲ. ಇಲ್ಲಿಯೇ ಏಕೆ ಉಳಿಯಬಾರದು ಎಂದು ಯೋಚಿಸಿದ. +ಪೇಟೆ ಬೀದಿಯಲ್ಲಿ ಒಂದು ಮಳಿಗೆಕೊಂಡು ವಾಹನಗಳ ಬಿಡಿಭಾಗಗಳ ಅಂಗಡಿ ಇಟ್ಟರೆ ವ್ಯಾಪಾರವಾಗಲಾರದೆ ಅನಿಸಿತು. +ವಿನ್ಸಂಟ್ ಹತ್ತಿರ ಮಾತನಾಡಿದ ವಲೇರಿಯನ್ ಡಯಾಸ್, ಜಾನ್ ಡಯಾಸ್, ಚಾರ್ಲಿ ಮೊದಲಾದವರ ಜತೆ ಮಾತನಾಡಿ ನೋಡಿದ. ಮುಂಬಯಿಯಿಂದ ಈತ ಬಂದಿದ್ದಾನೆಂದೇ ಜಾನ್ ಡಯಾಸ್ ಇವನನ್ನು ರಾತ್ರಿ ಊಟಕ್ಕೆ ಕರೆದಿದ್ದ. ಶಿವಮೊಗ್ಗದಿಂದ ಸಾಕು ಹಂದಿಯ ಮಾಂಸ ತರಿಸಿದ್ದ. ಅಲೆಕ್ಸ ತಾನೇ ವಿಸ್ಕಿ ತೆಗೆದುಕೊಂಡು ಹೋಗಿದ್ದ. +“ಘೇ ಸಾಯಬಾ..ಘೇ..ಇಲ್ಲೆ ಸೆಂ ಘೇ” (ತೊಕೋಳಯ್ಯ ಸಾಹೇಬ ತೊಕೋ..ಸ್ವಲ್ಪ ತೊಕೋ) ಎಂದು ಎಲ್ಲರ ಗ್ಲಾಸಿಗೆ ಒಂದಿಷ್ಟು ವಿಸ್ಕಿ ಸುರಿದು ಅಲೆಕ್ಸ್ ತನ್ನ ವಿಚಾರ ಮುಂದಿಟ್ಟ. +“ನೀನು ಬಾರಪ್ಪ ಇಲ್ಲಿಗೆ..ಇಲ್ಲಿ ಎಲ್ಲ ಅನುಕೂಲ ಇದೆ..ಊರು ಸಣ್ಣದು..ಜನ ಸ್ವಲ್ಪ ಹಿಂದುಳಿದೋರು..ಇಗರ್ಜಿನಲ್ಲಿ ಇಂಗ್ಲೀಷ ಪೂಜೆ ಇಲ್ಲ ಅನ್ನೋದೊಂದು. ನಮ್ ಜನ ಅನಸಿವಿಲೈಸ್ಡ್ ಅನ್ನೋದು ಇನ್ನೊಂದು. ಈ ಕೆಲವು ಕಾರಣಗಳನ್ನು ಬಿಟ್ರೆ ಊರು ಒಳ್ಳೇದು.” ಎಂದ ಜಾನ್ ಡಯಾಸ. ಉಳಿದವರೂ ಇದೇ ಅಭಿಪ್ರಾಯ ಪಟ್ಟರು. +ಅಲೆಕ್ಸ ತರಾತುರಿಯಲ್ಲಿ ಸೈಕಲ್ ನಾಗಪ್ಪನ ಅಂಗಡಿ ಪಕ್ಕದಲ್ಲಿ ಒಂದು ಮಳಿಗೆ ಕೊಂಡ. ತಾನೇ ಶಿವಮೊಗ್ಗ, ಹುಬ್ಬಳ್ಳಿಗಳಿಗೆ ಹೋಗಿ ಬೇಕಾದ ಸಾಮಾನುಗಳ ಸರಬರಾಜಿಗೆ ವ್ಯವಸ್ಥೆ ಮಾಡಿದ. ಮುಂಬಯಿಗೆ ಹೋಗಿ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ. ನಾಲ್ಕು ದಿನ ಅಲ್ಲಿ ಉಳಿದು ಪೆನ್ಶನ್ ಇತ್ಯಾದಿ ಬೇಗನೆ ಬರುವಂತೆ ಮಾಡಿದ. ಹೆಂಡತಿ ಮಕ್ಕಳ ಜತೆ ರೈಲು ಹತ್ತಿ ಶಿವಸಾಗರಕ್ಕೆ ಬಂದಿಳಿದ. +ಒಂದು ಶುಕ್ರವಾರ ಪೇಟೆ ಬೀದಿಯಲ್ಲಿ “ಪಿಂಟೋ ಆಟೋಸ್ಪೇರ್ಸ್” ಎಂಬ ಅಂಗಡಿ ತೆರೆದು ಪಾದರಿ ಮಸ್ಕರಿನಾಸರಿಂದ ಅಂಗಡಿ ಉದ್ಘಾಟನೆ ಇರಿಸಿಕೊಂಡ ಪಾದರಿಗಳು ಅಂಗಡಿಯನ್ನು ತಂದಿರಿಸಿದ ವಾಹನ ಬಿಡಿ ಭಾಗಗಳನ್ನು ಪವಿತ್ರ ಜಲದ ಸಿಂಪಡನೆಯಿಂದ ಮಂತ್ರಿಸಿ ದೇವರ ಪ್ರಾರ್ಥನೆ ಮಾಡಿದರು. ಪೇಟೆ ಬೀದಿಯವರು, ಕರಿಕಾಲಿನವರು ಡಾ.ರೇಗೋ, ಜಾನ ಡಯಾಸ್, ವಲೇರಿಯನ್ ಮೊದಲಾದವರು ಬಂದು ಅಲೆಕ್ಸಿಯ ಕೈ ಕುಲಕಿದರು. ಅಂಗಡಿ ಬೋನ, ಗುರ್ಕಾರ, ಸಿಮೋನ, ಪಾಸ್ಕೋಲ ಮೇಸ್ತ್ರಿ ಈ ಮೂವರನ್ನು ಮಾತ್ರ ಆತ ಕರೆದ. ಏಕೋ ಉಳಿದವರು ಅವನ ನೆನಪಿಗೆ ಬರಲಿಲ್ಲ. +ಅವನು ಮುಂಬಯಿ ಬಿಡಲು ಮತ್ತೂ ಒಂದು ಕಾರಣವೆಂದರೆ ಅವನ ಮೂರು ಜನ ಹೆಣ್ಣು ಮಕ್ಕಳು. ಗಂಡು ಮಕ್ಕಳಾಗಿದ್ದರೆ ಅವರ ವಿದ್ಯಾಭ್ಯಾಸ, ಮುಂದಿನ ಕೆಲಸ ಎಂದೆಲ್ಲ ಆತ ಮುಂಬಯಿಯಿಯಲ್ಲಿಯೇ ಇರಬೇಕಾಗುತ್ತಿತ್ತು. ಆದರೆ ತನ್ನ ಮೂವರೂ ಹೆಣ್ಣು ಮಕ್ಕಳು ಏನೆಂದರೂ ನಾಳೆ ಗಂಡನ ಮನೆಗೆ ಹೋಗುವವರು. ಅವರ ಹಣೆಯಲ್ಲಿ ಯಾವ ಊರು ಬರೆದಿದೆಯೋ ಅಂತು ಒಳ್ಳೆಯ ಕಡೆ ನೋಡಿ ಮದುವೆ ಮಾಡಿ ಕಳುಹಿಸಲು ಮುಂಬಯಿಯೇನು ಶಿವಸಾಗರವೇನು ಎಂದು ಆತ ಇಲ್ಲಿ ಬಂದ. ವಿನ್ಸೆಂಟ್ಯ್ ಅವನಿಗಾಗಿ ಒಂದು ಮನೆಯನ್ನು ತಾನಿರುವ ಕೇರಿಯಲ್ಲಿಯೇ ನೋಡಿದ. ಕೆಲವೇ ದಿನಗಳಲ್ಲಿ ಅಲೆಕ್ಸ್ ಬಲಾಢ್ಯನಾದ. ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಿತ್ತು. ಊರಿನಲ್ಲಿ ಗೌರವವಿತ್ತು. ಕೆಳಕೇರಿಯಲ್ಲಿ ಕ್ರೀಸ್ತುವರ ಸಂಖ್ಯೆ ಅಧಿಕವಾಗಿ ಅವರಿಗೊಬ್ಬ ಗುರ್ಕಾರ ಬೇಕೆನಿಸಿದಾಗ ಪಾದರಿ ಮಸ್ಕರಿನಾಸ ಅಲೆಕ್ಸನನ್ನು ಗುರ್ಕಾರ ಎಂದು ನೇಮಿಸಿದರು. +ಪಾದರಿ ಸಿಕ್ವೇರಾ ಬಂದ ನಂತರವಂತೂ ಅಲೆಕ್ಸ ಅರ್ಧ ಊರನ್ನೇ ಗೆದ್ದುಕೊಂಡ. +ಮೈಸೂರು ನಗರದಲ್ಲಿದ್ದ ಸಿಕ್ವೆರಾ ಅವರಿಗೆ ಶಿವಸಾಗರಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸಿತು. ಅವರಿಗಿದ್ದ ಒಂದು ಧೈರ್ಯವೆಂದರೆ ಇಲ್ಲಿ ತಮ್ಮ ಮಂಗಳೂರು ಭಾಷೆ ಮಾತನಾಡುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದುದು. ಮೈಸೂರಿನಲ್ಲಿ ತಮಿಳರು, ತೆಲುಗರು, ಕನ್ನಡಿಗರು ತುಂಬಿಕೊಂಡಿದ್ದರು. ಇವರು ಕೂಡ ಮನೆಯಲ್ಲಿ ಇಂಗ್ಲೀಷ ಮಾತನಾಡುತ್ತ ಯುರೋಪಿಯನ್ನರ ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಯತ್ನದಲ್ಲಿದ್ದರು. +ಅಲೆಕ್ಸ್ ಅವರಿಗೆ, ಶಿವಸಾಗರದ ಕ್ರೀಸ್ತುವರೆಲ್ಲರ ಪರಿಚಯ ಮಾಡಿಕೊಟ್ಟ. ಅವರ ವೃತ್ತಿ ಸ್ಥಾನ ಮಾನಗಳು, ಅವರ್ ಸ್ವಭಾವ, ಇಗರ್ಜಿಯ ಬಗ್ಗೆ ದೈವ ಭಕ್ತಿಯ ಬಗ್ಗೆ ಅವರಿಗಿರುವ ಆಸ್ಥೆ, ಆಸಕ್ತಿ ಹೀಗೆ ಸಮಸ್ತ ವಿಷಯಗಳೂ ಕೆಲವೇ ದಿನಗಳಲ್ಲಿ ಪಾದರಿ ಸಿಕ್ವೇರಾ ಅವರಿಗೆ ಲಭ್ಯವಾದವು. ಇಗರ್ಜಿಯ ಆಡಳಿತ ಅಲ್ಲಿಯ ಪದ್ಧತಿಗಳನ್ನು ಸಿಕ್ವೇರಾ ಪರಿಚಯ ಮಾಡಿಕೊಂಡರು. ಕ್ರೀಸ್ತುವರ ಮನೆಗಳಿಗೆ ಅವರು ಭೇಟಿಕೊಟ್ಟರು. ಜನರಲ್ಲಿಯ ದೈವ ಭಕ್ತಿ ದೈವ ಭೀತಿ ಕಂಡು ಅವರಿಗೆ ಸಂತಸವಾಯಿತು. ಇಂತಹ ಮುಗ್ಧತೆಯನ್ನು ಅವರು ಮೈಸೂರಿನಲ್ಲಿ ಕೂಡ ಕಂಡಿರಲಿಲ್ಲ. ಜನ ಪಾದರಿಗಳೆಂದರೆ ತುಂಬಾ ಗೌರವ ನೀಡುತ್ತಾರೆ ಎಂಬ ವಿಷಯ ಕೂಡ ಅವರ ಗಮನಕ್ಕೆ ಬಂದಿತು. ಆದರೆ ವೈಜಿಣ್ ಕತ್ರೀನ್ ತನ್ನ ಮನೆಯ ಜಗಲಿಯ ಮೇಲೆ ಕುಳಿತವಳು ಬಾಗಿಲಿಗೆ ಬಂದ ಸಿಕ್ವೇರಾ ಅವರನ್ನು ನೋಡಿ ಎದ್ದು ನಿಲ್ಲಲಿಲ್ಲ. ಕೈ ಮುಗಿಯಲಿಲ್ಲ. ಗುರ್ಕಾರ ಸಿಮೋನ ಹೇಳಿದಾಗ ಆಕೆ ಧಡ ಬಡಸಿ ಎದ್ದಳು. “ಪದ್ರಾಬ ಬೆಸಾಂವಂ ದಿಯಾ” ಎಂದು ಕೈಮುಗಿದಳು. ನಂತರ ತಾನು ಏನೋ ಒಂದು ತಪ್ಪು ಮಾಡಿದೆ ಎಂಬಂತೆ- +“..ಪದ್ರಾಬ ನೀವು ಲೋಬ್ ಹಾಕಿಕೊಂಡಿರಲಿಲ್ಲ ನೋಡಿ..ನನಗೆ ಗೊತ್ತಾಗಲಿಲ್ಲ..” ಎಂದು ತನ್ನ ವರ್ತನೆಗೆ ವಿವರಣೆ ನೀಡಿದಳು. +ಗುರ್ಕಾರ ಸಿಮೋನ ಕೂಡ ತನ್ನನ್ನು ಏನೋ ಒಂದು ರೀತಿಯಲ್ಲಿ ನೋಡುತ್ತಿದ್ದವನು. +“ಪದ್ರಾಬಾ ಒಂದು ವಿಷಯ” ಎಂದ. +“ಏನು?” ಎಂದು ಸಿಕ್ವೇರಾ ಅವನ ಮುಖ ನೋಡಿದರು. +“ನಮ್ಮ ಜನ ಉದ್ದ ನಿಲುವಂಗಿ, ಗಡ್ಡ, ಮೀಸೆ, ಕುತ್ತಿಗೆಯಲ್ಲಿ ಶಿಲುಬೆ, ಸೊಂಟಕ್ಕೆ ಗರ್ಡಲ್ ಇಲ್ಲವೆಂದರೆ ಪಾದರಿಗಳನ್ನು ಗುರುತಿಸುವುದಿಲ್ಲ..” ಎಂದು ಅಂಜುತ್ತ ಅಳುಕುತ್ತ ಹೇಳಿದ್ದು ಪಾದರಿ ಸಿಕ್ವೇರಾ ಅವರ ಮನಸ್ಸಿಗೆ ತಾಗಿತು. +ನಗರ ಪ್ರದೇಶಗಳಲ್ಲಿ ಆಗಲೇ ಪಾದರಿಗಳು ನಿಲುವಂಗಿ ತೊರೆದಿದ್ದರು. ಪ್ಯಾಂಟು, ಶರಟುಗಳು ಚಾಲ್ತಿಗೆ ಬಂದಿದ್ದವು. ಮುಖವನ್ನು ನುಣ್ಣಗೆ ಬೋಳಿಸಿಕೊಂಡು ಪೌಡರ್ ಸ್ನೋ, ಹಚ್ಚಿಕೊಳ್ಳುತ್ತಿದ್ದರು. ಪೂಜೆಯ ಸಮಯದಲ್ಲಿ ಧಾರ್ಮಿಕ ಕೆಲಸ ಮಾಡುವಾಗ ಮಾತ್ರ ನಿಲುವಂಗಿ ಇತ್ಯಾದಿ ತೊಡುತ್ತಿದ್ದರು. ಮೊದಲು ಪಾದರಿಗಳ ಈ ವರ್ತನೆಯನ್ನು ಅಲ್ಲಿಯ ಜನ ಪ್ರತಿಭಟಿಸಿದರು. ಆದರೆ ಎಲ್ಲ ಪಾದರಿಗಳೂ ಹೀಗೆಯೇ ಬದಲಾದಾಗ ಜನ ಅನಿವಾರ್ಯವಾಗಿ ಇದಕ್ಕೆ ಹೊಂಡಿಕೊಂಡರು. +ಇಲ್ಲೂ ಕೂಡ ಕೆಲ ದಿನ ಬೇಕಾಗಬಹುದು ಅಂದುಕೊಂಡರು ಸಿಕ್ವೇರಾ. ಸಿಮೋನನ ಮಾತಿಗೆ ಅವರು- +“ಹೌದೇನು?” ಎಂದು ಕೇಳಿ ನಕ್ಕರು. +ನಿಧಾನವಾಗಿ ಇಗರ್ಜಿಯಲ್ಲಿ ಕೆಲ ಬದಲಾವಣೆಗಳು ಆದವು. ಮುಷ್ಠಿ ಅಕ್ಕಿಯನ್ನು ಇನ್ನು ಮುಂದೆ ತರಬೇಡಿ ಎಂದರು. ತರಕಾರಿ ಇತ್ಯಾದಿ ತಂದು ಹರಾಜು ಹಾಕುವ ಪದ್ಧತಿ ನಿಂತು ಹೋಯಿತು. ಕಾಣಿಕೆ ಡಬ್ಬಿಯನ್ನು ಜನರ ಬಳಿಗೇನೆ ಕೊಂಡೊಯ್ಯುವುದು ನಿಂತು ಬಿಟ್ಟಿತು. ಇಗರ್ಜಿಯ ನಡುವೆ ಒಂದು ಮೇಜು ಇರಿಸಿ ಅದರ ಮೇಲೆ ಶಿಲುಬೆಗೇರಿದ ಏಸುವಿನ ಪ್ರತಿಮೆ ನಿಲ್ಲಿಸಲಾಯಿತು. ಪೂಜೆಯ ನಂತರ ಜನಬಂದು ಈ ಪ್ರತಿಮೆಯ ಪಾದಕ್ಕೆ ಮುತ್ತಿಟ್ಟು ಮುಂದೆ ಇಟ್ಟಿರುತ್ತಿದ್ದ ಗಾಜಿನ ತಟ್ಟೆಯಲ್ಲಿ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂದಿತು. +ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ ಚಿಕ್ಕಮಗಳೂರಿನ ಹತ್ತಿರವಿರುವ ಒಂದು ಕಾಫ಼ಿ ತೋಟದ ಮಾಲೀಕರೆಂದು, ಪಾದರಿ ಸಿಕ್ವೇರಾ ಅವರ ಕಿರಿಯ ಮಗನೆಂದೂ ಇವರ ಅಕ್ಕ ಭಾವಂದಿರು ಅಮೇರಿಕದಲ್ಲಿ ಇರುವುದರಿಂದಲೂ ಇವರಿಗೆ ಹಣದ ಕೊರತೆ ಇಲ್ಲವೆಂದೂ ಜನ ಮಾತನಾಡಿಕೊಂಡರು. ಪಾದರಿ ಸಿಕ್ವೇರಾ ಅವರ ಕರಿಯ ಕಾರು, ಕ್ಯಾಮರಾ, ರೇಡಿಯೋ ಇವರ ಕುತ್ತಿಗೆಯಲ್ಲಿಯ ಕಿರು ಬೆರಳ ಗಾತ್ರದ ಚಿನ್ನದ ಚೈನು, ಬೆರಳಲ್ಲಿಯ ಉಂಗುರಗಳು ಈ ಮಾತನ್ನು ಧೃಡಪಡಿಸಿದವು. +ಪಾದರಿ ಸಿಕ್ವೇರಾ ಇಗರ್ಜಿಗೆ ಬನ್ನಿ ಎಂದು ಹೇಳುತ್ತಿರಲಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಸತ್ತವರ ಆತ್ಮಗಳಿಗಾಗಿ ಪೂಜೆ ನೀಡುವುದು, ಇಗರ್ಜಿಗೆ ಕೊಡುವ ಅನ್ವಾಲ ಕಾಯಿದೆ ಈ ಯಾವ ಚಿಂತೆಯೂ ಅವರಿಗಿರಲಿಲ್ಲ. ಊರಿಗೆ ಬರುವಾಗ ಜೊತೆಯಲಿ ಓರ್ವ ಹುಡುಗನನ್ನು ಅವರು ಕರೆತಂದಿದ್ದರು. ಅವನು ಅವರ ಅಡಿಗೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಅವರು ಊರಿಗೆ ಬಂದ ಎಂಟು ದಿನಗಳ ನಂತರ ಒಂದು ಲಾರಿ ಬಂದು ಇಗರ್ಜಿಯ ಮುಂದೆ ನಿಂತು ಕುರ್ಚಿ, ಮೇಜು, ಮಂಚ, ಟೀಪಾಯಿ ಎಂದೆಲ್ಲ ಸಾಮಾನು ಇಳಿಸಿತು. ಜತೆಗೆ ಒಂದು ಮೋಟಾರು ಬೈಕ್ ಕೂಡ ಕೆಳಗಿಳಿಯಿತು. ಫೋಟೋ ಮುದ್ರಿಸುವ ಸಾಧನೆ ಸಲಕರಣೆಗಳೂ ಬಂದವು. +ಕೈಯಲ್ಲಿ ಕ್ಯಾಮರಾ ಹಿಡಿದು ತಿರುಗುವ ಪಾದರಿಯನ್ನು ಜನ ಕಂಡರು. ಅವರು ಇಗರ್ಜಿಯಲ್ಲಿ ಫೋಟೋ ತೆಗೆದರು. ಸಂತ ಜೋಸೆಫ಼ರ ಮಂಟಪದ ಫೋಟೋ ತೆಗೆದರು. ಇನಾಸನ ಮನೆ ಮುಂದಿನ ಶಿಲುಬೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. ಎಳೆ ಮಕ್ಕಳು, ಮುದುಕಿಯರು, ಮುದುಕರು ಇಗರ್ಜಿಗೆ ಬಂದ ಯುವತಿಯರು, ಹುಡುಗಿಯರು ಎಲ್ಲರೂ ಅವರ ಕ್ಯಾಮರಾ ಎದುರು ನಿಂತು ನಕ್ಕರು, ನಾಚಿದರು, ಕೇಕೆ ಹಾಕಿದರು. +“ಬೋರೋ ಪದ್ರಾಬ” (ಪಾದರಿಗಳು ಒಳ್ಳೆಯವರು) ಎಂದರು ಕೆಲವರು. +“ದೇವೊ ಸ್ಪೊಣ ನಾ” (ದೈವ ಭಕ್ತಿ ಇಲ್ಲ) ಎಂಬ ಅಭಿಪ್ರಾಯವೂ ಬಂದಿತು. +“ಅವರೆಲ್ಲಿ ಇವರೆಲ್ಲಿ” ಎಂದು ಹಿಂದಿನ ಪಾದರಿಗಳ ಜತೆ ಹೋಲಿಸಿ ನೋಡಿದರು. +ಸಿಮೋನ, ಪಾಸ್ಕೋಲ, ಕೈತಾನ, ಬಳ್ಕೂರಕಾರ, ಪೆದ್ರು, ಸಂತು, ಇಂತ್ರು, ಹಸಿಮಡ್ಲು ಪಾತ್ರೋಲ ಮೊದಲಾದವರಿಗೆಲ್ಲ ವಯಸ್ಸಾಗಿತ್ತು. ಊಟದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ತ್ಯಜಿಸಿದ್ದಳು. ಎಮ್ಮೆ ಮರಿಯ ಕೂಡ ಹಾಲಿನ ಮಾರಾಟ ನಿಲ್ಲಿಸಿದ್ದಳು. ಇವರಲ್ಲಿ ಯಾರಿಗೂ ಪಾದರಿ ಸಿಕ್ವೇರಾ ಮನಸ್ಸಿಗೆ ಬಂದಿರಲಿಲ್ಲ. ಅವರು ಪೂಜೆ ಮಾಡುವ ವಿಧಾನ, ಜಪಹೇಳಿ ಕೊಡುವುದೂ ಹಿಡಿಸುತ್ತಿರಲಿಲ್ಲ. ಭಕ್ತಿಯ ಅಂಶವೂ ಇಲ್ಲದ ಈ ಪೂಜೆ. ಅದು ಹೇಗೆ ಇರಲಿ ಈ ಜನ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡರು. ಕ್ರಿಸ್ತ ಪ್ರಭುವಿನ ಬದುಕಿನ ಪರಿಚಯ ಇವರಿಗಂತೂ ಇತ್ತಲ್ಲ. ಆತ ಲೋಕದ ಪಾಪಿಗಳನ್ನು ಉದ್ಧರಿಸಲು ಬಂದವ ಜನರಲ್ಲಿ ಒಂದು ಧಾರ್ಮಿಕ ಪ್ರಜ್ಞೆಯನ್ನಂತೂ ಬಿತ್ತಿದ್ದ. ಕೆಲ ವರುಷಗಳ ಹಿಂದೆ ಬತ್ತಿ ಹೋದ ಅದನ್ನು ಪಾದರಿ ಗೋನಸ್ವಾಲಿಸ್ ರು, ಪಾದರಿ ಮಸ್ಕರಿನಾಸರು ಮತ್ತೆ ಚಿಗುರುವಂತೆ, ಬೆಳೆಯುವಂತೆ ಮಾಡಿದರು. ಅದರ ಯತ್ನದಿಂದಾಗಿ ಶಿವಸಾಗರದ ಜನ ಈಗಲೂ ಅದೇ ಮನೋಪ್ರವೃತ್ತಿಯವರಾಗಿದ್ದರು. ಹಿರಿಯರು, ಹಳಬರಂತೂ ಈ ಪ್ರವೃತ್ತಿಯಿಂದ ಹೊರಬರಲಿಲ್ಲ. +ಇಷ್ಟಾದರೂ ಫ಼ಾತಿಮಾ ನಗರದ ಜನ ಪಾದರಿ ಸಿಕ್ವೇರಾ ಅವರನ್ನು ತುಂಬಾ ಮೆಚ್ಚಿಕೊಂಡರು. ಪೂಜೆ ಮುಗಿದಾಕ್ಷಣ ಇವರೆಲ್ಲ ಹೋಗಿ ಅವರನ್ನು ಕಂಡು ಮಾತನಾಡಿ ಬರುತ್ತಿದ್ದರು. ವಾರಕ್ಕೊಮ್ಮೆ ಇಲ್ಲ ಎರಡು ಬಾರಿ ಪಾದರಿ ಸಿಕ್ವೇರಾ ಅವರ ಮೋಟಾರ ಸೈಕಲ್ಲು ಫ಼ಾತಿಮಾ ನಗರದತ್ತ ಗುಡುಗುಡು ಸದ್ದು ಮಾಡುತ್ತ ಬರುತ್ತಿತ್ತು. ಅಲ್ಲಿ ಕೆಲ ಮನೆಗಳ ಅಂಗಳಕ್ಕೆ ಹೋಗಿ. ಕೆಲ ಮನೆಗಳ ಒಳಗೆ ಪ್ರವೇಶಿಸಿ- +“ಕಿತೆಂ…ಕಸಿ ಭಲಾಯ್ಕಿ?” (ಹೇಗೆ? ಆರೋಗ್ಯವಾಗಿದ್ದೀರಾ?) ಎಂದು ಕೇಳಿ ಬರುತ್ತಿದ್ದರು ಅವರು. +ರೈಲ್ವೆ ಇಲಾಖೆಗೆ ಕೆಲ ಹೊಸ ನೌಕರರು ಅಧಿಕಾರಿಗಳು ಬಂದಿದ್ದರು. ಅವರಲ್ಲಿ ಕೆಲವರು ಕ್ರೀಸ್ತುವರೂ ಇದ್ದರು. ಎಲ್ಲರಿಗೂ ಸರಕಾರಿ ಮನೆಗಳು ಸಿಗದ್ದರಿಂದ ಕೆಲವರು ಫ಼ಾತಿಮಾ ನಗರದಲ್ಲಿ ಮನೆ ಮಾಡಿದರು. ಇವರಿಗೂ ಪಾದರಿ ಸಿಕ್ವೇರಾ ಅವರಿಗೂ ಒಳ್ಳೆಯ ಸ್ನೇಹವಿತ್ತು. ಅವರು ಇವರ ಮನೆಗಳಿಗೂ ಬಂದು ಮಾತನಾಡಿಕೊಂಡು ಹೋಗುತ್ತಿದ್ದರು. ತಮ್ಮ ಮಾತಿನಲ್ಲಿ ವರ್ತನೆಯಲ್ಲಿ ಫ಼ಾತಿಮಾ ನಗರದ ಕ್ರೀಸ್ತುವರ ಬಗ್ಗೆ ಮೃದುವಾದ ಭಾವನೆಯನ್ನು ಇರಿಸಿಕೊಂಡಿದ್ದರು ಪಾದರಿ. ಇದಕ್ಕೆ ಕಾರಣ ಇವರೆಲ್ಲ ವಿದ್ಯಾವಂತರಾಗಿದ್ದರು. ಒಳ್ಳೆಯ ಉದ್ಯೋಗಗಳಲ್ಲಿದ್ದರು. ಉಡಿಗೆ ತೊಡಿಗೆಯಲ್ಲಿ ಮನೆಯ ರೀತಿ ರಿವಾಜುಗಳಲ್ಲಿ ನಾಜೂಕುತನ ಇರಿಸಿಕೊಂಡಿದ್ದರು. ರೈಲು ಇಲಾಖೆಯ ಕ್ರೈಸ್ತ ನೌಕರರು ತಮಿಳರಾಗಿದ್ದರಿಂದ ಇವರಿಗೆ ಕರಿಕಾಲಿನವರು ಎಂಬ ಅಡ್ಡಹೆಸರೂ ಬಿದ್ದಿತ್ತು. +ಹೀಗೆಯೇ ಪಾದರಿ ಸಿಕ್ವೇರಾ ಅವರ ಆಗಮನ ಸಂತ ತೆರೇಜಾ ಕಾನ್ವೆಂಟಿನ ಕನ್ಯಾ ಸ್ತ್ರೀಯರಿಗೂ ಸಂತಸವನ್ನು ತಂದಿತು. ಶಿವಸಾಗರದ ಕ್ರೀಸ್ತುವರಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ತರಬೇತಿಯನ್ನೂ ನೀಡುವುದು ಅವರ ಉದ್ದೇಶವಾಗಿತ್ತು. ಈ ಕೆಲಸವನ್ನು ಪಾದರಿ ಮಾಡುತ್ತಾರಾದರೂ ಶಿಕ್ಷಣದ ಜತೆ ಜತೆಗೆ ನೀಡುವ ಈ ತರಬೇತಿ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಕೊನೆಯವರೆಗೂ ಇರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. +ಬಹಳ ಹುರುಪಿನಿಂದ ಬಂದ ಅವರಿಗೆ ಇಲ್ಲಿ ನಿರಾಶೆಯಾಗತೊಡಗಿತು. ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದ ಕ್ರೀಸ್ತುವರ ಮಕ್ಕಳನ್ನು ಕಾನ್ವೆಂಟಿಗೆ ತಂದು ಸೇರಿಸಿಕೊಳ್ಳುವುದು ಮೊದಲು ಕಷ್ಟವಾಯಿತು. ಮನೆಗೆ ಶಾಲೆ ಹತ್ತಿರವಾಗಿದ್ದರೂ ಇದೊಂದು ವರ್ಷ ಕಳೆಯಲಿ ಎಂದರು. ನಂತರ ಮಕ್ಕಳು ಶಾಲೆಗೆ ಬಂದವು. ಹೆಸರು ಬರೆಸಿ ಹೋದವರು ನಿತ್ಯ ಹಾಜರಿ ಕೊಡಲು ಮರೆತರು. ಶುಚಿಯಾಗಿ ಬರುತ್ತಿರಲಿಲ್ಲ. ಪುಸ್ತಕ, ಪೆನ್ಸಿಲ್ಲು ತರುತ್ತಿರಲಿಲ್ಲ. ಬೆಳಿಗ್ಗೆ ಬಂದವರು ಸಂಜೆಗೆ ತಪ್ಪಿಸಿಕೊಂಡರು. ಕೆಲವರಿಗೆ ಆಸಕ್ತಿ ಇರಲಿಲ್ಲ. ಶಾಲೆಗೆ ಸೇರಿದ ಮೂರು ಆರು ತಿಂಗಳಲ್ಲಿ ಮಕ್ಕಳು ಬರುವುದನ್ನೇ ನಿಲ್ಲಿಸಿದರು. +ಸಿಸ್ಟರ್ ಲೀನಾ ದುಮಿಂಗನ ಮನೆಗೆ ಹೋಗಿ ಅವನ ಹೆಂಡತಿಗೆ- +“ನಿಮ್ಮ ಹುಡುಗ ಸರಿಯಾಗಿ ಶಾಲೆಗೆ ಬರುವುದಿಲ್ಲ” ಎಂದಾಗ ಆಕೆ- +“ಹೋಗು ಅಂತೀವಿ..ಅವನು ಹೋಗಿ ಗೇರು ಮರದ ಮೇಲೆ ಕೂತರೆ ನಾನು ಏನು ಮಾಡಲಿ?” ಎಂದು ಕೇಳಿದಳು. +ಜೋಸೆಫ಼ನ ಹೆಂಡತಿ ಕ್ರಿಸ್ತೀನಾ- +“ನೀವು ನಮ್ಮ ಹುಡುಗನಿಂದ ಕಸ ಗುಡಿಸೋದು ನೆಲ ತೊಳಿಯೋದು ಮಾಡಸ್ತೀರಂತೆ..ಆ ಕೆಲಸಾನ ಅವನು ಮನೇಲೇ ಮಾಡತಾನೆ ಬಿಡಿ..” ಎಂದಳು. +ಕಾನ್ವೆಂಟಿನ ಕನ್ಯಾಸ್ತ್ರಿಗಳು ಪ್ರತಿದಿನ ಒಂದೊಂದು ಮನೆಗೆ ಹೋಗಿ ಜಪಸರ ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡರು. ಮನೆಯವರೂ ಸೇರಿಕೊಂಡಿದ್ದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ಆದರೆ ಮನೆಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಇನಾಸನ ಮನೆಯಲ್ಲಿ ಅವನ ಮಕ್ಕಳು ಜಗಳವಾಡುತ್ತಿದ್ದರು. ಸಿಮೋನನ ಮನೆಯಲ್ಲಿ ಅತ್ತೆ ಸೊಸೆಯ ನಡುವೆ ಮಾತು. ಕೈತಾನ ಕುಡಿದು ಬಂದಿರುತ್ತಿದ್ದ. +“ಅಯ್ಯೋ ನಮ್ಮ ಕೆಲಸಾನೇ ಮುಗಿಲಿಲ್ವೇ” ಎಂದು ಹೆಂಗಸರು ಗೊಣಗಿದರು. +ಹೀಗಾಗಿ ಈ ಜಪಸರ ಪ್ರಾರ್ಥನೆ ಫ಼ಾತಿಮಾ ನಗರದ ಮನೆಗಳಿಗೆ ಮಾತ್ರ ಸೀಮಿತವಾಯಿತು. +ಪಾದರಿ ಮಸ್ಕರಿನಾಸ ಕೂಡ ಸಿಸ್ಟರುಗಳ ವಿಷಯದಲ್ಲಿ ಅಷ್ಟೊಂದು ಮೃದು ಹೃದಯಿಯಾಗಿರಲಿಲ್ಲ. ಊರಿಗೆ ಶಾಲೆ ಬೇಕು ಬನ್ನಿ ಎಂದು ಅವರೇ ತಮ್ಮನ್ನು ಕರೆದಿದ್ದರೂ ತಾವು ಬಂದ ನಂತರ ಅವರು ಬದಲಾಗಿದ್ದರು. +“ನಿಮ್ಮದೆಲ್ಲ ಸರಿ..ನೀವು ಎಲ್ಲ ಜನ ಬಂದ ಮೇಲೆ ಇಗರ್ಜಿಗೆ ಬರೋದು..ದಿವ್ಯ ಪ್ರಸಾದ ಸ್ವೀಕಾರಕ್ಕೆ ಪ್ರತ್ಯೇಕವಾಗಿ ಮೋಣಕಾಲೂರೋದು..ಕುಳಿತು ಕೊಳ್ಳಲಿಕ್ಕೆ ಬೇರೇನೆ ಜಾಗ ಬೇಕು ಅನ್ನೋದು ನನಗೆ ಹಿಡಿಸೋದಿಲ್ಲ..” ಅನ್ನುತ್ತಿದ್ದರು ಅವರು. +ಶಿವಸಾಗರಕ್ಕೆ ಹೊಸದಾಗಿ ಬಂದ ತಾವು ಹೀಗೊಂದು ಪದ್ಧತಿ ಆರಂಭಿಸಿದ್ದು ನಿಜವೆ. ಇನ್ನೇನು ಪಾದರಿ ಪೂಜೆ ಆರಂಭಿಸುತ್ತಾರೆ ಅನ್ನುವಾಗ ತಾವು ಕಾನ್ವೆಂಟಿನಿಂದ ಸಾಲಾಗಿ ಇಗರ್ಜಿಗೆ ಬರುತ್ತಿದ್ದೆವು. ಎಲ್ಲರೂ ಒಟ್ಟಿಗೇನೆ ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವಲ್ಲಿ ಮೊಣಕಾಲೂರುತ್ತಿದ್ದೇವು. ಊರಿಗೆ ಬಂದ ತಕ್ಷಣ ತಮಗಾಗಿ ಬೇರೆಯೇ ಆಸನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಪಾದರಿಗಳಿಗೆ ಕೇಳಿದ್ದೆವು. ಬೇರೆಲ್ಲ ಕಡೆಯೂ ಈ ಗೌರವ ತಮಗಿರುವಾಗ ಇಲ್ಲಿ ಏಕೆ ಬೇಡ? ಆದರೆ ಇದು ಮಸ್ಕರಿನಾಸರ ಕೋಪಕ್ಕೆ ಕಾರಣವಾಯಿತು. ಪೂಜೆ ಮುಗಿಸಿ ಅವರು ಪೂಜಾ ಪಾತ್ರೆ ಹಿಡಿದು ಒಳಕ್ಕೆ ತಿರುಗುವ ಮುನ್ನವೇ ತಾವು ಇಗರ್ಜಿಯಿಂದ ಹೊರಡುವುದನ್ನು ಸಹಿಸಲು ಅವರಿಂದ ಆಗುತ್ತಿರಲಿಲ್ಲ. ಆಗ ಅವರು ತಮ್ಮನ್ನು ದುರು ದುರು ನೋಡುತ್ತಿದ್ದರು. +ಪಾದರಿ ಸಿಕ್ವೇರಾ ಅವರಲ್ಲಿ ಈ ವರ್ತನೆಯಿಲ್ಲ. +“ಸಿಸ್ಟರ್ ಲೀನಾ…ಈವತ್ತು ನೀವು ಬೇರೆಯೇ ಕಾಣುತ್ತೀರಿ..” +“ಸಿಸ್ಟರ್ ಜ್ಯೋತಿ ನಿಮ್ಮದೊಂದು ಫೋಟೋ ತೆಗೆಯೋಣವೆ?” +“ಸಿಸ್ಟರ್ ಕ್ಲಾರಿಸ್..ನಿಮ್ಮ ಧ್ವನಿ ಚೆನ್ನಾಗಿದೆ.” ಎಂದೆಲ್ಲ ಹೇಳುತ್ತಾರೆ. ಕಾನ್ವೆಂಟಿಗೆ ಬರುತ್ತಾರೆ. ಇಗರ್ಜಿಗೆ ಹೂ ಕುಂಡ ಮಾಡಿಕೊಡಿ. ಅಲ್ತಾರ ಬಟ್ಟೆ ಹೆಣೆದು ಕೊಡಿ ಎಂದು ಕೇಳುತ್ತಾರೆ. +ಹಾಗೆಯೇ ಊರಿನ ಜನಕ್ಕೆ ಕಾನ್ವೆಂಟ್ ಬೇಕಾಗಿದೆ. ಊರಿನ ಶ್ರೀಮಂತರು, ವೈದ್ಯರು, ವಕೀಲರು, ಬ್ಯಾಂಕ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ತಮ್ಮ ಮಕ್ಕಳನ್ನು ತಂದು ತಂದು ಕಾನ್ವೆಂಟಿಗೆ ಸೇರಿಸುತ್ತಾರೆ. ಯೂನಿಫ಼ಾರಂ ಹೊಲಿಸಿ ಮಕ್ಕಳಿಗೆ ತೊಡಿಸಿ ಕಳುಹಿಸುತ್ತಾರೆ. ಫ಼ೀಸು ಡೋನೇಷನ್ ಎಷ್ಟು ಕೇಳಿದರೂ ಕೊಡುತ್ತಾರೆ. ಮದರ್ಸ್ ಡೇ, ಮಕ್ಕಳ ದಿನಾಚರಣೆ, ಫ಼್ಲ್ಯಾಗಡೇ ಎಂದೆಲ್ಲ ಹಣ ತನ್ನಿ ಎಂದಾಗ ಮಕ್ಕಳು ಉತ್ಸಾಹದಿಂದ ಹಣ ತರುತ್ತಾರೆ. +“ಏನಾದರೂ ಆಗಬೇಕಿದ್ದರೆ ಹೇಳಿ ಸಿಸ್ಟರ್” ಎಂದು ಕಂಟ್ರ್ಯಾಕ್ಟರ್ ಶೆಣೈ, ಹೋಟೆಲ್ ಮಾಲೀಕ ಅಪ್ಪಣ್ಣ, ಅಂಗಡಿ ಸಾಹುಕಾರ ವಿಶ್ವನಾಥ ಶೆಟ್ಟಿ, ಡಾಕ್ಟರ್ ಕೊದಂಡರಾವ್, ಎಸ್.ಪಿ ಷಡಕ್ಷರಿ ಬಂದು ಕೇಳುತ್ತಾರೆ. ತಟ್ಟನೆ ಏನಾದರೂ ಕೆಲಸವಾಗಬೇಕು ಅಂದರೆ ಮಾಡಿಕೊಡುತ್ತಾರೆ. ಈ ಸೌಜನ್ಯ ಸೇವಾ ಮನೋಭಾವ ಕ್ರೀಸ್ತುವರಲ್ಲಿ ಇಲ್ಲ. +“ಮದರ್ಸ್ ಡೇಗೆ ಎಂಟೆಂಟಾಣೆ ತನ್ನಿ ” ಎಂದರೆ ಕ್ರೀಸ್ತುವರ ಮಕ್ಕಳು ತರುವುದಿಲ್ಲ. +“ತೆಗೆದುಕೊಂಡು ಬಾ ಹೋಗು” ಎಂದು ಸಿಸ್ಟರ್ ಜ್ಯೋತಿ ಮಿಂಗೇಲಿಯ ಮಗನನ್ನು ಕಳುಹಿಸಿದ್ದಕ್ಕೆ ಅವನ ಹೆಂಡತಿ ಕಲ್ಲಿ ಕಾನ್ವೆಂಟಿಗೆ ಬಂದು- +“ನಿಮಗೇನು ಕಡಿಮೆಯಾಗಿರೋದು..ನಿಮಗೇನು ಮನೇ ಉಂಟು..ಮಕ್ಕಳಿದ್ದಾರೆಯೇ..” ಎಂದು ಕೂಗಾಡಿ ಹೋಗಿದ್ದಾಳೆ. +ಊರ ಜನರಿಗೆ, ಅಧಿಕಾರಿ ಶ್ರೀಮಂತರ ಮಕ್ಕಳಿಗೆ ಕಾನ್ವೆಂಟ್ ಬೇಕಾಗಿದೆ. ಹೀಗೆಂದೇ ಊರಿನಲ್ಲಿ ಕಾನ್ವೆಂಟ್ ನಡೆಯುತ್ತಿದೆ. ಈ ನಡುವೆ ಪಾದರಿ ಸಿಕ್ವೇರಾ ತಮ್ಮನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವುದು ಕೂಡ ನೆಮ್ಮದಿಯ ವಿಷಯ, ಎಂಬ ಅಭಿಪ್ರಾಯವನ್ನು ಸಂತ ತೆರೇಜಾ ಕಾನ್ವೆಂಟಿನ ಸಿಸ್ಟರುಗಳು ತಾಳಿದರು. +ಈ ಎಲ್ಲ ಹಿನ್ನೆಲೆಯಲ್ಲಿ ಶಿವಸಾಗರದ ಕ್ರಿಸ್ತುವರ ಬದುಕು ಸಾಗುತ್ತಿರಲು ಫ಼ಾತಿಮಾ ನಗರ ಹಾಗೂ ಜೋಸೆಫ಼್ ನಗರದ ಒಂದೊಂದು ಮನೆಯ ಬದುಕು ಒಂದೊಂದು ದಾರಿ ಹಿಡಿದಿತ್ತು. +* +* +* +ಸಿಮೋನ ಈಗ ಗುರ್ಕಾರ ಅಷ್ಟೆ. ಅವನು ಈಗ ಮೇಸ್ತ್ರಿಯಲ್ಲ.. ಕೆಲಸ ಮಾಡುವುದನ್ನು ಆತ ನಿಲ್ಲಿಸಿ ಬಹಳ ವರ್ಷಗಳಾಗಿವೆ. ಕೆಲಸ ಮಾಡಿಸುವುದನ್ನು ಕೂಡ. ಅವನ ಪ್ರಕಾರ ಕಲ್ಲು ಕೆಲಸ ಮಾಡುವುದರಲ್ಲಿ ಕ್ರೀಸ್ತುವರಿಗೆ ಇದ್ದ ಹೆಸರು. ನೈಪುಣ್ಯತೆ ಈಗ ಉಳಿದಿಲ್ಲ. +ಶಿವಸಾಗರದ ಯಾವುದೇ ಹಳೆ ಇಮಾರತ ತೆಗೆದುಕೊಳ್ಳಿ ಅದನ್ನು ಕಟ್ಟಿದವ ಇಲ್ಲ ಕಟ್ಟಿಸಿದವ ತಾನು ಅನ್ನುತ್ತಾನೆ ಸಿಮೋನ. +“ಅವತ್ತು ರಾಯರೆ, ಏನೂ ಇರಲಿಲ್ಲ..ಬಸ್ಸು, ರೈಲು ಕೇಳಬೇಡಿ..ಆದರೂ ಜನರನ್ನ ಕರೆತರತಿದ್ದೆ ಕೆಲಸ ಮಾಡತಿದ್ದೆ…ಎಂಥಾ ಕೆಲಸ! ಸೊರಬದ ಸೇತುವೆ ಕಟ್ಟಿದ್ದಕ್ಕೆ ಜಿಲ್ಲಾಧಿಕಾರಿಗಳೇ ನನಗೆ ಹಾರ ಹಾಕಿದ್ರು, ದೇವಪ್ಪನ ಛತ್ರ ಕಟ್ಟಿದ್ದಕ್ಕೆ ಬೆಳ್ಳಿ ಬಳೆ, ಮತ್ತೊಂದು ಕಟ್ಟಿದ್ದಕ್ಕೆ ಬಂಗಾರದ ಉಂಗುರ. ದಿನ ಬೆಳಗಾದ್ರೆ ಜನ ಮನೆಬಾಗಿಲಲ್ಲಿ ಸಿಮೋನ ಆ ಕೆಲಸ ಆಗಬೇಕು, ಈ ಕೆಲಸ ಆಗಬೇಕು..ಅಂತ ಬಂದು ನಿಂತಿರೋರು..” +ಕೇಳುವವರು ಸಿಕ್ಕರೆ ಆತ ಮಾತನಾಡುತ್ತ ಹೋಗುತ್ತಾನೆ. ಈಗೀಗ ಅವನು ಮಾತನಾಡುವುದನ್ನು ಹೆಚ್ಚು ಮಾಡಿದ್ದಾನೆ. +“ಈವತ್ತು ಈ ಹೆಸರು ಉಳಿದಿಲ್ಲ..ಊರಿನ ಯಾರಾದ್ರು ಒಬ್ರು ಕೇರಿಗೆ ಬರತಾರ ನೋಡಿ” ಎಂದು ಮುಖ ಬಾಡಿಸಿಕೊಂಡು ಕೇಳುತ್ತಾನೆ. +“ಯಾಕೆ? ಗೊತ್ತ ನಿಮಗೆ?” +ಅವನೇ ಉತ್ತರ ಕೊಡುತ್ತಾನೆ. +“ಬೇರೆ ಜನ ನಮಗಿಂತ ಚೆನ್ನಾಗಿ ಈ ಕೆಲಸ ಮಾಡತಾರೆ..ಮಲೆಯಾಳಿಗಳು, ತಮಿಳರು ಈ ಕೆಲಸ ಕಲಿತು ಭೇಷ ಅನ್ನಿಸಿಕೊಂಡಿದಾರೆ. ಹೊರಗಿನ ಜನ ಬೇಕಿಲ್ಲ. ಊರಲ್ಲಿ ಇರೋರೇ ಸಾಕು. ನಮ್ಮವರೂ ಇದ್ದಾರೆ..ಆದರೆ ರಾಯರೇ ನಮ್ಮ ಜನರನ್ನು ಹೆಂಡ ಕೆಡಿಸಿದೆ…ಕುಡಿದು ಕುಡಿದು ಎಲ್ಲ ದೋಟಿಗಳಾಗಿದಾರೆ..ಜನರ ಹತ್ರ ಅಡ್ವಾನ್ಸು ಅಂತ ಹಣ ತೊಕೊಳ್ಳೊದು..ಕೆಲಸಕ್ಕೆ ಹೋಗದೆ ಸತಾಯ್ಸೋದು..ಯಾರು ಕೆಲಸ ಕೊಡತಾರೆ ಹೇಳಿ ಹೀಗೆ ಮಾಡಿದ್ರೆ?” ಎಂದು ಕೇಳುತ್ತಾನೆ. +“ನಾನು ಹೇಳೋದು ಸುಳ್ಳಲ್ಲ, ಅಲ್ಲಿ ನೋಡಿ” ಸಿಮೋನ ತೋರಿಸುತ್ತಾನೆ. ಫ಼ಾತಿಮಾ ನಗರದಲ್ಲಿ ಎರಡು ಸಾರಾಯಿ ಅಂಗಡಿ , ಜೋಸೆಫ಼ ನಗರದಲ್ಲಿ ಎರಡು. ಈ ಎರಡೂ ನಗರಗಳಲ್ಲಿ ಎಂಟು ಬಾರುಗಳು. +“ಬ್ರಾಹ್ಮಣರ ಕೇರಿಲಿ ಲಿಂಗಾಯತರ ಕೇರೀಲಿ ಹೀಗೆ ಅಂಗಡಿ ಇಡೋಲ್ಲ…ಸರಕಾರ ಬಿಡಲ್ಲ..ಆದರೆ ಇಲ್ಲಿ..ಜನರಿಗೆ ಬೇಕು ಇಡತಾರೆ..ನಮ ಜನ ಈಗೀಗ ಕುಡಿದೇ ಸತ್ರು..” ಅನ್ನುತ್ತಾನೆ ಆತ. +ತಟ್ಟನೆ ಅವನಿಗೆ ತನ್ನ ಈರ್ವರು ಮಕ್ಕಳ ನೆನಪಾಗುತ್ತದೆ. ಕೇರಿಯ ಇತರೆ ತರುಣರ ನೆನಪಾಗುತ್ತದೆ. ಎಲ್ಲರೂ ಕುಡಿಯುವವರೆ, ಕುಡಿಯುವುದು ಅಂದರೇನು? ಬೆಳಿಗ್ಗೆ ಎದ್ದ ಕ್ಷಣದಿಂದ ಕುಡಿ ಕುಡಿ ಕುಡಿ. ಮದುವೆ ಮನೆಯಲ್ಲಿ ಕುಡಿ, ತೊಟ್ಟಿಲಿಗೆ ಹಾಕುವಲ್ಲಿ ಕುಡಿ, ಹಬ್ಬದ ದಿನ ಕುಡಿ, ಸತ್ತವರ ಮನೆಯಲ್ಲಿ ಕುಡಿ. ಹಿಂದೆ ಹೀಗೆ ಇರಲಿಲ್ಲ. ಕೆಲಸ ಮುಗಿಸಿ ಸಾಯಂಕಾಲ ಬಂದ ಏನೋ ಒಂದಿಷ್ಟು ಕುಡಿದು ಮಲಗಿದ. ಈಗ ? ಕುಡಿದವ ರಸ್ತೆಗೇನೆ ಹೋಗಬೇಕು. +ಊರ ಜನರಿಗೆ ಏನಾಗಿದೆ. ಕ್ರಿಶ್ಚಿಯನ್ ಅಂದ ಕೂಡಲೇ ಈ ಕುಡುಕುತನ ನೆನಪಿಗೆ ಬರುತ್ತದೆ. +“ಹೌದೋ ಅಲ್ಲವೋ ಹೇಳಿ?” ಮತ್ತೆ ಪ್ರಶ್ನೆ ಮಾಡುತ್ತಾನೆ ಸಿಮೋನ. +ಪಾದರಿ ಗೋನಸ್ವಾಲಿಸ್ ಹೇಳಿದರೆಂದು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿದ. ಅವರು ಒಂದು ಎರಡು ತರಗತಿ ಓದಿಬಿಟ್ಟರು. ಹೆಣ್ಣು ಮಕ್ಕಳು ಮದುವೆಯಾಗಿ ಹೋದರು. ಗಂಡು? ಅವರ ಮದುವೆಯೂ ಆಯಿತು. ಹಿರಿಯ ಮಗ ವಿಕ್ಟರ್ ಒಂದು ದಿನ ತನ್ನ ಬಳಿ ಬಂದ- +“..ಅಪ್ಪ ನಾನು ಬೇರೆ ಆಗುತ್ತೇನೆ” ಎಂದು. +ಅವನ ಮಾತೇ ವಿಚಿತ್ರವೆನಿಸಿತು. ತುಂಬಿಕೊಂಡ ಮನೆ ತನ್ನದು..ಆರು ಗಂಡು ಮೂರು ಹೆಣ್ಣು. ಹುಡುಗಿಯರು ಮದುವೆಯಾಗಿ ಹೋಗುವ ಮುನ್ನ ತನ್ನ ಮನೆಯಲ್ಲಿ ಸಂಜೆಯ ಪ್ರಾರ್ಥನೆ ಮಾಡುತ್ತಿದ್ದರೆ ಕೇರಿಗೆಲ್ಲ ಕೇಳುತ್ತಿತ್ತು. ತಾಯಿ ಬೇರೆ. ಎಲ್ಲರೂ ಅಲ್ತಾರಿನ ಮುಂದೆ ಮೊಣಕಾಲೂರಿ ಪರಲೋಕ ಮಂತ್ರ ಹೇಳುತ್ತಿದ್ದರೆ ಬಾಗಿಲ ಬಳಿ ನಿಂತ ತಾನು ಸಂತಸ ಪಡುತ್ತಿದ್ದೆ. ಈ ಮನೆ ಹೀಗೆಯೇ ತುಂಬಿಕೊಂಡಿರಲಿ ಎಂದು ಕೂಡ ಬಯಸುತ್ತಿದ್ದೆ. +“ನಮ್ಮ ಕುಟುಂಬದ ಏಕತೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರ ಸಮರ್ಪಿಸೋಣ” ಎಂದು ತಾನೇ ಹೇಳುತ್ತಿದ್ದ. +ಹೆಣ್ಣು ಮಕ್ಕಳ ಮದುವೆಯಾಯಿತು. ಮೂವರೂ ಮೂರು ದಿಕ್ಕಿಗೆ ಹೋದರು. ಅಮ್ಮ ತೀರಿಕೊಂಡಳು. ಆಗ ತನ್ನ ಮನೆಯ ಪ್ರಾರ್ಥನೆ ಸೊರಗಿತು. ಗಂಡು ಹುಡುಗರು ಹೆಣ್ಣು ಮಕ್ಕಳ ಹಾಗೆ ದನಿ ಎತ್ತಿ ಹಾಡುತ್ತಿರಲಿಲ್ಲ. ಹೆಂಡತಿಯೊಬ್ಬಳೆ ಹಾಡಬೇಕು. ಮನೆಯೂ ಬರಿದಾಗಿ ಹೋದಂತೆ. ಆದರೆ ಆಗಾಗ್ಗೆ ಇಗರ್ಜಿ ಹಬ್ಬಕ್ಕೊ ಕ್ರಿಸ್ಮಸ್ ಗೋ ಅಳಿಯಂದಿರು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂದಾಗ ಮತ್ತೆ ಮನೆ ತುಂಬಿಕೊಳ್ಳುತ್ತಿತ್ತು. +“ತೇರ್ಸ ಮಾಡಲಿಕ್ಕೆ ನಾವು ಇಗರ್ಜಿಗೇನೆ ಹೋಗಬೇಕು” ಅನ್ನುತ್ತಿದ್ದ ಕೊನೆಯ ಮಗ, ಅಷ್ಟು ಜನ ಮನೆಯಲ್ಲಿ ಆದರೂ ಅದೆಂತಹ ಸಂತಸ, ಸಂಭ್ರಮ. ಇದು ನಾಲ್ಕು ದಿನ ಎಂಟು ದಿನ. ನಂತರ ಮತ್ತೆ ಮನೆ ಬರಿದು. ಕ್ರಮೇಣ ಅಳಿಯಂದಿರು, ಹೆಣ್ಣು ಮಕ್ಕಳು ಬರುವುದನ್ನು ಕಡಿಮೆ ಮಾಡಿದರು. ಅವರಿಗೆ ಅವರದ್ದೇ ತಾಪತ್ರಯಗಳು ಕೆಲಸಗಳು. +ಹೀಗೆಂದೇ ಹಿರಿಯ ಮಗನಿಗೆ ಮದುವೆ ಮಾಡಿದೆ. ಎರಡನೆಯವನಿಗೂ ಇಬ್ಬರು ಸೊಸೆಯಂದಿರು ಬಂದರು. +ಮೇಣದ ಬತ್ತಿ ಹಚ್ಚಲು, ದೇವರಿಗೆ ಅಬ್ಬಲಿಗೆ ಹೂವಿನ ಹಾರ ಹಾಕಲು, ಪ್ರಾರ್ಥನೆ ಕಲಿಸಲು, ಕೀರ್ತನೆ ಹಾಡಲು ಹುಡುಗಿಯರು ಬಂದರು. ಮತ್ತೆ ಮನೆಗೆ ಕಳೆ ಬಂದಿತು. ದೇವರ ಕೋಣೆ ತುಂಬಿತು. +ಆದರೆ ಹೊರಗಿನಿಂದ ಬಂದ ಹುಡುಗಿಯರಿಂದ ಏಕೋ ಮನೆಯಲ್ಲಿ ಹೊಂದಾಣಿಕೆ ಕಾಣಲಿಲ್ಲ. ಮುಖ ಊದಿಸಿಕೊಳ್ಳುವುದು, ಅತ್ತೆಯ ಜತೆ ಜಗಳ, ಪ್ರಾರ್ಥನೆಗೆ ಬಾರದಿರುವುದು, ಊಟ ಮಾಡುವಾಗ ಬೇರೆ. ತನ್ನಿಂದ ಇದನ್ನು ಸಹಿಸಲಾಗಲಿಲ್ಲ. +“ಅಪ್ಪಿ..” ಎಂದು ಹೆಂಡತಿಯನ್ನು ಕರೆದೆ. +“ನೀನೆ ಸುಧಾರಿಸಿಕೊಂಡು ಹೋಗಬೇಕು. ಮೂರು ಜನ ಹೆಣ್ಣುಮಕ್ಕಳನ್ನು ಹೆತ್ತು ಬೆಳೆಸಿದವಳು ನೀನು. ಅವರು ಪರಸ್ಪರ ಕಾದಾಡುವಾಗ ಅವರಿಗೆ ಗದರಿಸಿ ಸುಮ್ಮನಿರಿಸಿದವಳು..ಈಗ ನಿನಗೆ ಇಬ್ಬರು ಸೊಸೆಯಂದಿರಿದ್ದಾರೆ..ನೋಡು..ಈ ಮನೆ ಮಾತ್ರ ಹೀಗೇ ಇರಬೇಕು ..” ಎಂದೆ. +ಅಪ್ಪಿ ಮಾತನಾಡಲಿಲ್ಲ, ಆದರೂ ಅವಳ ಮೇಲೆ ನನಗೆ ಭರವಸೆ, ನಂಬಿಕೆ, ತಾನು ಇಲ್ಲಿ ಬಂದು ಇದ್ದಾಗಲೂ ಮನೆ ನಡೆಸಿಕೊಂಡು ಹೋಗಿದ್ದಳು. ನಂತರವೂ ಮನೆ ನೋಡಿಕೊಂಡಿದ್ದಳು. +ಆದರೆ ಹಿರಿಯ ಮಗ-ಅಪ್ಪ ನಾನು ಬೇರೆಯಾಗುತ್ತೇನೆ ಎಂದು ಹೇಳಿದ ಹಿಂದಿನ ರಾತ್ರಿ ಅಪ್ಪಿ- +“..ನಾನೊಂದು ಮಾತು ಹೇಳತೇನೆ ನೀವು ಬೇಸರ ಮಾಡಿಕೋಬಾರದು..” ಎಂದು ಪೀಠಿಕೆ ಹಾಕಿದಳು. +“ಹಿರೇ ಸೊಸೆ ಹಠ ಹಿಡಿದುಕೂತಿದಾಳೆ..ಅವರು ಗಂಡ ಹೆಂಡತಿ ಬೇರೆ ಹೋಗಬೇಕಂತೆ…ಇಲ್ಲ ಅಂದ್ರೆ ನಾನು ಮನೇಲಿ ಇರೋದಿಲ್ಲ ಅಂತಿದಾಳೆ..” +“ಏನಂತೆ ಅವಳ ತೊಂದರೆ..” +“ನಿಜ ಏನೂಂತ ನನಗೆ ಗೊತ್ತಿಲ್ಲ-ಆದರೂ ನನಗೊಂದು ಅನುಮಾನ ಇದೆ..ಅವಳ ತಾಯಿ ಅವಳಿಗೆ ಇದನ್ನೆಲ್ಲ ಹೇಳಿಕೊಟ್ಟಿರಬಹುದು..” +“ನೋಡೋಣ” ಎಂದಿದ್ದೆ ತಾನು. ಆದರೆ ಈ ಮಾತು ನಡೆದ ಮಾರನೇ ದಿನವೇ ಮಗ ತಾನು ಬೇರೆಯಾಗುವುದಾಗಿ ಹೇಳಿದ್ದ. +“ಯೋಚಿಸು ವಿಕ್ಟರ್..ನಾವು ಒಡೆದು ಹೋಗುವುದರಲ್ಲಿ ದೊಡ್ಡಸ್ತಿಕೆ ಇಲ್ಲ..ಒಂದಾಗುವುದರಲ್ಲಿ ನಮ್ಮ ಸಮೋಡ್ತಿಯ ಪ್ರಭಾವ ಇದೆ..” ಎಂದೆ. +ಭಾಗ್ಯವಂತ ಕುಟುಂಬ ಅನ್ನುವಂತಹ ಒಂದು ಕಲ್ಪನೆ ನಮ್ಮಲ್ಲಿತ್ತು. ತಂದೆ ತಾಯಿ ಮಕ್ಕಳೆಲ್ಲ ಒಟ್ಟಿಗೇನೆ ಇರಬೇಕು. ಸುಖ ಸಂತೋಷ ಸ್ನೇಹದಿಂದ ಬದುಕಬೇಕು ಅನ್ನುವ ಆದರ್ಶವನ್ನು ಕ್ರಿಸ್ತಪ್ರಭು ನಮ್ಮ ಮುಂದೆ ಇಟ್ಟಿದ್ದ. ಈ ಕಲ್ಪನೆಗೆ ತನ್ನ ಕುಟುಂಬ ಈವರೆಗೆ ಒಂದು ನಿದರ್ಶನವಾಗಿತ್ತು. ನಾಳೆ ಈ ನಿದರ್ಶನ ಸುಳ್ಳಾಗಬಾರದಲ್ಲವೆ? +“ಇಲ್ಲ ಪಪ್ಪ..ನಾಳೆ ಜಗಳ ದೊಂಬಿ ಆಗುವುದಕ್ಕಿಂತ ಹೀಗೆ ಬೇರೆಯಾಗೋದೇ ಒಳ್ಳೇದೇನೋ ಅನ್ಸುತ್ತೆ..” ಎಂದ ಆತ ಎಲ್ಲವನ್ನೂ ನಿರ್ಧರಿಸಿರುವ ಹಾಗೆ. +“ಆಯಿತು..ನಿನ್ನ ತಾಯಿಗೂ ಒಂದು ಮಾತು ಹೇಳು..ನಿನ್ನ ತಮ್ಮಂದಿರಿಗೂ ಹೇಳು..” ಎಂದೆ. +ಅವನು ಯಾರಿಗೆ ಹೇಳಿದನೋ ಬಿಟ್ಟನೋ ಬೇರೆಯಾದ. ಇಗರ್ಜಿಯ ಹಿಂದೆಯೇ ವೈಜೀಣ ಕತ್ರಿನಳ ಮನೆ ಪಕ್ಕದಲ್ಲಿ ಬೇರೊಂದು ಮನೆ ಮಾಡಿದ. +“ಗುರ್ಕಾರ ಮಾಮ..ಏನು ಮಗ ಬೇರೆ ಹೋದನಂತೆ?” ಎಂದು ಹಲವರು ಕೇಳಿದರು. ಈ ಪ್ರಶ್ನೆಯ ಹಿಂದೆ ಏನೋ ವ್ಯಂಗ್ಯವಿತ್ತು. ಕುಹಕವಿತ್ತು. ನಿಮ್ಮ ಮನೆಯಲ್ಲಿಯೂ ಹೀಗೆ ಆಯಿತೆ” ಎಂಬ ತಿವಿತವಿತ್ತು. +ಹಲವಾರು ದಿನ ಇದೇ ಒಂದು ವ್ಯಥೆಯಾಯಿತು. ತನ್ನ ಪಾಲಿಗೆ ಈ ವ್ಯಥೆಯ ನಡುವೆಯೂ ಒಂದು ಸಂತಸವಿತ್ತು. ಊಟದ ಮನೆ ಸಾಂತಾಮೋರಿ ಮಕ್ಕಳು ಮಾಡಿಕೊಂಡ ಹಾಗೆ ತನ್ನ ಮಗ ಮಾಡಲಿಲ್ಲವಲ್ಲ ಎಂಬ ಸಮಾಧಾನ. +“ಅಪ್ಪಿ..ಹೋಗಲಿ ಬಿಡು..ದೇವದಿತ್ತ: ಸೈತಾನ ನಾಡ್ತ- ದೇವರು ಕೊಡುತ್ತಾನೆ ಸೈತಾನ ಆಟವಾಡಿಸುತ್ತಾನೆ ಅಂತ ಗಾದೆ ಇದೆಯಲ್ಲ. ಬೆರೆಯವರಾದರೂ ನಮ್ಮ ಜತೆ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದ ಗುರ್ಕಾರ ಸಿಮೋನ ಹೆಂಡತಿ. ಅವನಿಗೀಗ ವಯಸ್ಸಾಗಿತ್ತು. +ಜೋಸೆಫ಼ ನಗರದ ಜನರ ಕ್ಷೇಮ ಸಮಾಚಾರ, ಅವರ ಸಮಸ್ಯೆಗಳ ಪರಿಹಾರ ಎಂದು ಕೊಂಚ ತಿರುಗಾಟ ಮಾಡುವುದಿತ್ತು. ಗುರ್ಕಾರ ಎಂಬ ಗೌರವವಂತೂ ಇತ್ತು. +ಕ್ರೀಸ್ತುವರ ಸ್ಥಿತಿಗತಿಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ಬೇರೆಯವರು ಇವರ ವೃತ್ತಿಗಳನ್ನು ಕೈಕೊಂಡಿದ್ದು ಯುವಕರು ಬೇರೆ ವೃತ್ತಿಗಳ ಹುಡುಕಾಟದಲ್ಲಿರುವುದು. ಮಿತಿಮೀರಿದ ಕುಡಿತಗಳು ಇವರ ಬದುಕನ್ನು ಅತಂತ್ರಗೊಳಿಸಿದ್ದವು. +ಮುಂದೆ ಇಂದಿನ ತರುಣರು ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದರೆ ಅನುಕೂಲವಾಗುತ್ತಿತ್ತು. ಅಲ್ಲಲ್ಲಿ ಇರುವ ಕಾನ್ವೆಂಟುಗಳು, ಪಾದರಿಗಳ್ ಶಾಲೆ ಕಾಲೇಜುಗಳು ಈ ಕೆಲಸ ಮಾಡಬಹುದು. ಅವರು ಕೂಡ ಬೇರೆ ಜನರತ್ತ ತೋರುವ ಆಸಕ್ತಿಯನ್ನು ನಮ್ಮವರತ್ತ ತೋರುತ್ತಿಲ್ಲ. ಇದೂ ಒಂದು ಬೇಸರವೆ. +ಹೀಗೆ ಹಲವು ವಿಚಾರಗಳ ಸುಳಿಗೆ ಸಿಲುಕಿ ಬಿದ್ದು ತಾಳ್ಮೆ ಕಳೆದುಕೊಳ್ಳುತ್ತಿದ್ದ. ಯಾರಾದರೂ ಮಾತಿಗೆ ಸಿಕ್ಕರಂತೂ ಅವನ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿತ್ತು. ಇತ್ತೀಚೆಗೆ ಸಾಂತಾಮೋರಿ ಮನೆಯಲ್ಲಿ ನಡೆದ ಪಂಚಾಯ್ತಿಯ ಸಂದರ್ಭದಲ್ಲಿ ಗುರ್ಕಾರ ಸಿಮೋನನಿಗೆ ಬಂದ ಸಿಟ್ಟು, ಕ್ರೋಧವನ್ನು ಈ ಹಿಂದೆ ಯಾರೂ ನೋಡಿರಲಿಲ್ಲ. +* +* +* +ಶಿವಸಾಗರದಲ್ಲಿ ಮಲೆಯಾಳಿಗಳು, ಬೇರೆ ಜನ ಕಲ್ಲಿನ ಕೆಲಸ ಆರಂಭಿಸಿದ ನಂತರ ಘಟ್ಟದ ಕೆಳಗಿನಿಂದ ಬರುವವರ ಸಂಖ್ಯೆ ಕಡಿಮೆಯಾಯಿತು. ಬಂದ ಕೆಲವರು ದೊಡ್ಡಪ್ಪನ ಮನೆ, ಚಿಕ್ಕಪ್ಪನ ಮನೆ ಎಂದು ಅವರಿವರಲ್ಲಿ ಉಳಿದು, ಮಳೆಗಾಲದ ನಂತರ ತಾವೇ ಹೊಸದಾಗಿ ಮನೆ ಮಾಡಿದರು. ಊರ ತುಂಬಾ ಹೋಟೆಲುಗಳು ಆದವು. ಅಂಟುವಾಳದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ನಿಲ್ಲಿಸಿದಳು. ಅವಳ ಮಕ್ಕಳು ಬಸ್ತು ಮತ್ತು ಜಾನಿ ಈರ್ವರೂ ಗಾರೆ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಸಾಂತಾಮೋರಿ ಮಗಳ ಪ್ರಕರಣ ಬೇರೆ ಹಾಗೆ ಆದ ನಂತರ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಅನಂತರ ಅವಳು ಮಾಡಿದ ಒಂದು ಕೆಲಸವೆಂದರೆ ಇಬ್ಬರು ಮಕ್ಕಳ ಮದುವೆ ಮಾಡಿದ್ದು. ಮುರುಡೇಶ್ವರದಿಂದಲೇ ಇಬ್ಬರು ಹುಡುಗಿಯರನ್ನು ತಂದು ಮದುವೆ ಮಾಡಿ ಸೊಸೆಯಂದಿರನ್ನು ಮನೆ ತುಂಬಿಸಿಕೊಂಡಿದ್ದಳು. ಓಮ್ದು ವರ್ಷಕ್ಕೆಲ್ಲ ಸೊಸೆಯಮ್ದಿರು ಬಸಿರಾಗಿ, ಸೀಮಂತ ಮಾಡಿ ಅವರನ್ನು ಅವರವರ ತಾಯಂದಿರ ಮನೆಗೆ ಹೆರಿಗೆಗಾಗಿ ಕಳುಹಿಸಿದ್ದಳು. ಆರು ತಿಂಗಳ ನಂತರ ಸೊಸೆಯಂದಿರು ಮೊಮ್ಮಕ್ಕಳ ಜತೆ ಬಂದಿದ್ದರು. ಈರ್ವರು ಮೊಮ್ಮಕ್ಕಳನ್ನು ನೋಡಿಕೊಂಡು ಅವರ ಸ್ನಾನ ಮಾಡಿಸುತ್ತ, ಮಣ್ಣಿ ಮಾಡಿ ಅವುಗಳಿಗೆ ತಿನ್ನಿಸುತ್ತ- +“ಕುರುಕುರು ಕನ್ನ್ ಮ್ಹ್ಸಿಯೋ ಗೆಲೇರನ್ನ” ಎಂದು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತ ಕಾಲ ಕಳೆದಳು. +ಸೊಸೆಯಂದಿರು ಗಂಡು ಮಕ್ಕಳ ನಂತರ ಮತ್ತೆ ಈರ್ವರು ಗಂಡನ್ನು ಒಂದು ಹೆಣ್ಣನ್ನು ಪಡೆದು ಅಂಟವಾಳದ ಮನೆ ಮಕ್ಕಳಿಂದ ತುಂಬಿಕೊಂಡಿರುವಾಗ , ಹಿರಿಯ ಮೊಮ್ಮಕ್ಕಳು ಹದಿನಾಲ್ಕು ಹದಿನೈದನೆ ವಯಸ್ಸು ಕಂಡಿರುವಾಗ ಈರ್ವರೂ ಮಕ್ಕಳು ಬೇರೆ ಮನೆ ಮಾಡಲು ಯೋಚಿಸಿರುವುದು ಅವಳ ಗಮನಕ್ಕೆ ಬಂದಿದೆ. +ಏನೆಂದರೂ ಅವಳದ್ದು ಊಟದ ಮನೆ. ಮೇಸ್ತ್ರಿಗಳು ಕೆಲಸಗಾರರು- +“ಮೋರಿ ಮಾಯ..ಘೇ” ಎಂದು ತಿಂಗಳಿಗಷ್ಟು ಊಟದ ಹಣವನ್ನು ಬಟವಾಡೆಯಾದ ದಿನ ನೀಡುತ್ತಿದ್ದರು. ಯಾರೂ ಹಣ ನಿಲ್ಲಿಸಿಕೊಂಡಿದ್ದಿಲ್ಲ. ಅಡಿಗೆ ಮಾಡುವಲ್ಲಿ, ಊಟ ಬಡಿಸುವಲ್ಲಿ, ಮೀನು ಮಾಂಸ ಮಾಡಿದ ದಿನ ಹೋಳೂ ಹಾಕುವಾಗ ಕೊಂಚ ಹೆಚ್ಚು ಕಡಿಮೆ ಆಗಿದ್ದಿರಬಹುದು. ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂದು ಇದ್ದರೂ ಯಾರಿಗೋ ಹೆಚ್ಚು ಯಾರಿಗೋ ಕಡಿಮೆ ಆದದ್ದಿದೆ. ಹೀಗೆಂದು ಯಾರೂ ತಕರಾರೂ ಎತ್ತಲಿಲ್ಲ. ಸುಮಾರು ಮೂವತ್ತು ವರ್ಷ ತನ್ನ ಅನ್ನ ಸೇವೆ ನಡೆಯಿತು. ನಂತರ ತಾನೇ ನಿಲ್ಲಿಸಿದೆ. ಮಗಳು ಹಾಗೆ ಆಗಲೂ ತನ್ನ ಮನೆಯಲ್ಲಿ ಸದಾ ತುಂಬಿಕೊಂಡಿರುವ ಗಂಡಸರೇ ಕಾರಣ ಎಂಬ ಮಾತೂ ಕೇಳಿ ಬಂದಿತು. ಆದರೆ ಮನೆಗೆ ಊಟಕ್ಕೆ ಬರುವ ಜನ ಮಗಳ ವಿಷಯದಲ್ಲಿ ಸಲಿಗೆಯಿಂದ ಇರಲಿಲ್ಲ. ಮನೆಯಲ್ಲಿ ಇಂಥದಕ್ಕೆಲ್ಲ ಅವಕಾಶವಿರಲಿಲ್ಲ. ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ನಂತರವೂ ಕೆಲ ವರುಷ ಊಟದ ಮನೆ ಮುಂದುವರಿದಿತ್ತು. ನಂತರ ಅದನ್ನು ನಿಲ್ಲಿಸಿದೆ. ಹೀಗೆಂದು ಅಡಿಗೆ ಮಾಡುವುದು ನಿಲ್ಲುವಂತಿಲ್ಲವಲ್ಲ. ಇಬ್ಬರು ಮಕ್ಕಳು, ಸೊಸೆ ಮೊಮ್ಮಕ್ಕಳು ಎಂದು ಈಗಲೂ ಹಿಂದಿನ ಪಾತ್ರೆಗಳಲ್ಲಿಯೇ ಅಡಿಗೆ ಮಾಡುತ್ತಿದ್ದೇನೆ. ಹಿಂದಿನ ಅವೇ ಕಂಚಿನ ತಟ್ಟೆಗಳು, ಕಂಚಿನ ಲೋಟಗಳು ಬಳಕೆಯಲ್ಲಿವೆ. ಸೊಸೆಯಂದಿರು ಮಾತ್ರ ಬರುವಾಗ ಸ್ಟೀಲಿನ ತಟ್ಟೆ ಲೋಟ ತಂದಿದ್ದಾರೆ. ಅವುಗಳನ್ನು ಅವರು ಹೊರಗೆ ತೆಗೆದಿಲ್ಲ. ತೌರು ಮನೆಯವರು ಕೊಟ್ಟ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಿದ್ದಾರೆ. +“..ಇಡಿ..ಇಡಿ..ಈ ಕಂಚಿನ ತಟ್ಟೆ ಲೋಟಗಳು ಸದ್ಯಕ್ಕೇನೂ ಸವೆಯೋದಿಲ್ಲ..” ಎಂದು ತಾನು ಹೇಳಿದ್ದೇನೆ. +ಮಕ್ಕಳ ನಡುವೆ ಏನೂ ಮನಸ್ತಾಪ ಬಂದಿಲ್ಲ. ಅವರನ್ನು ಸೊಸೆ ಮೊಮ್ಮಕ್ಕಳನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆದರೂ ಬಸ್ತು ಒಮ್ಮೊಮ್ಮೆ ಕುಡಿದು ಬಂದು ಜಗಲಿಯ ಮೇಲೆ ಕುಳಿತು ಕೂಗಾಡುತ್ತಾನೆ. ಈ ಬದಿಯಲ್ಲಿ ಜಾನಿ ಕೂಳಿತು ಕೂಗಾಡುತ್ತಾನೆ. ಇದು ತನಗೆ ಚೆನ್ನಾಗಿ ಕಾಣಿಸುವುದಿಲ್ಲ. +ಊಟಕ್ಕೆ ಅಷ್ಟೊಂದು ಜನ ಬರುತ್ತಿದ್ದರಲ್ಲ ಯಾರೂ ಇಲ್ಲಿ ಕುಡಿಯಬಾರದು ಎಂದು ತಾನು ಹೇಳುತ್ತಿದ್ದೆ. ಊಟ ಮುಗಿಸಿ ಹೊರಡಿ ಅನ್ನುತ್ತಿದ್ದೆ. ಊಟಕ್ಕೆ ಮುನ್ನ ಎಲ್ಲರೂ ಸಾಯಂಕಾಲದ ಸ್ನಾನ ಮಾಡಬೇಕು. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಿದ್ದೆ. ಅಲ್ಲಿ ನಿಂತು ಜಪ ಮಾಡಬೇಕು. ನಂತರ ಬಂದ ಹಾಗೆ ಅವರೆಲ್ಲರಿಗೂ ಕುಚಲಕ್ಕಿ ಗಂಜಿ ಇಲ್ಲವೇ ಅನ್ನ, ಮೀನಿನ ಸಾರು ಇಲ್ಲವೆ ಸಾರು, ಹುರಿದ ಮೀನು. ಭಾನುವಾರದ ಮಾಂಸ. ಊಟ ಮುಗಿಸಿ ನಿಮ್ಮ ನಿಮ್ಮ ಬಿಡಾರಗಳಿಗೆ ಹೊರಡಿ. ಕುಡಿಯುವುದಿದ್ದರೆ ಅಲ್ಲಿ. ಮೊದ ಮೊದಲು ಈ ಜಪ ಮುಂದುವರಿದು ನಡುವೆ ನಿಂತು ಹೋಗಿತ್ತು. ಪಾದರಿ ಗೋನಸ್ವಾಲಿಸ್, ಪಾದರಿ ಮಸ್ಕರಿನಾಸ ಬಂದ ನಂತರ ಮತ್ತೆ ಮುಂದುವರೆಯಿತು. +ಈಗ ಮೊಮ್ಮಕ್ಕಳು ಸೊಸೆಯಂದಿರು ತಪ್ಪದೆ ಆಮೋರಿ ಹೇಳುತ್ತಾರೆ. ಜಪಸರ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಈ ಕೂಡುಕರ ಗದ್ದಲ. ಹಾಗೆಯೇ ಜಗಳ. ಬೇರೆ ಬೇರೆ ಬಿಡಾರ ಮಾಡುವ ಮಾತು. +“ಮಾಯ…ಹಾಂವುಂ. ಇಂಗಡ ರಾವ್ತಂ” (ಅಮ್ಮಾ ನಾನು ಬೇರೆ ಇರುತ್ತೇನೆ..) ಎಂದು ತೊದಲುತ್ತಾನೆ ಬಸ್ತು. +“ನಾನೂ ಅಷ್ಟೇ ” ಅನ್ನುತ್ತಾನೆ ಜಾನಿ. +ಅವರ ಮಾತು ಇವಳಿಗೆ ಅರ್ಥವಾಗುತ್ತದೆ. ದೊಡ್ಡ ಮನೆಯಲ್ಲಿ ಎರಡು ಅಡಿಗೆ ಮನೆ ಮಾಡುವ ಇರಾದೆ ಅವರದ್ದು. ಈಗ ಅವರು ದುಡಿದು ತಂದದ್ದರಲ್ಲಿ ಏನು ಕೊಡಲಿ ಕೊಡದಿರಲಿ ಇವಳು ಎಲ್ಲರಿಗೂ ಊಟ ಹಾಕುತ್ತಾಳೆ. ಕೆಲಬಾರಿ..” +“ಬಸ್ತು ಒಂದಿಷ್ಟು ಹಣ ಕೊಡು” +“ಜಾನಿ ನೀನು ದುಡ್ಡು ಕೊಟ್ಟಿಲ್ಲ” ಅನ್ನುವುದುಂಟು. ಬಟವಾಡೆಯ ದಿನ ಅವರಿಂದ ಹಣ ಕಿತ್ತುಕೊಳ್ಳುವುದುಂಟು. +“ಕೊಡಿ ಇಲ್ಲಿ..ನೂರು ರೂಪಾಯಿ..ಮನೆ ಹಿಂದೆ ಹಣದ ಗಿಡ ಇದೆ ಅಂತ ತಿಳಕೊಂಡಿದ್ದೀರ..ನಿಮಗೂ ಹಾಕಬೇಕು…ನಿಮ್ಮ ಹೆಂಡಿರಿಗೂ ಹಾಕಬೇಕು ಅಂದ್ರೆ ಎಲ್ಲಿಂದ ತರಲಿ” ಎಂದು ಕೇಳುತ್ತಾಳೆ. +ಬಸ್ತು, ಜಾನಿ ಇಬ್ಬರೂ ತಾಯಿಯ ಬಾಯಿಗೆ ಹೆದರಿ ಹಣ ಕೊಡುತ್ತಾರೆ. ಆದರೂ ತಾಯಿಯ ಹತ್ತಿರ ತುಂಬಾ ಹಣವಿದೆ ಅನ್ನುವುದು ಅವರ ವಾದ. +ಮನೆಯಲ್ಲಿ ಒಂದು ಕೊಠಡಿ ಇದೆ. ಕಾಳ್ಕಾ ಕೂಡ (ಕತ್ತಲೆ ಕೋಣೆ) ಎಂದು ಅದನ್ನು ಕರೆಯುತ್ತಾರೆ. ಈ ಕೋಣೆಗೆ ಕಿಟಕಿ ಇಲ್ಲ. ಮುಂಬದಿಯಲ್ಲಿ ಒಂದು ಬಾಗಿಲಿದೆ. ಒಳಗೆ ಮನೆಗೆ ಬೇಕಾದ ಅಷ್ಟು ಸಾಮಾನು ತುಂಬಿ ಇರಿಸಿದ್ದಾಳೆ. ಸಾಂತಾ ಮೊರಿ, ಪಾತ್ರೆ, ಪಡಗ, ಚೆಂಬು ಕೊಡಪಾನ, ತಟ್ಟೆ ಕರಟಗಳಿಂದ ಮಾಡಿದ ಸಾರು ಬಡಿಸುವ ಅನ್ನ ಬಡಿಸುವ ಕೈ ತಟ್ಟೆ ಲೋಟಗಳು, ಹಾಗೆಯೇ ಅಕ್ಕಿ, ಮೆಣಸಿನಕಾಯಿ, ನೀರುಳ್ಳಿ ಇತ್ಯಾದಿ ಸಾಮಾನು, ಒಂದು ಹಾಸಿಗೆ ಇದೆ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಮೇಲೆ ಬಸ್ತು, ಜಾನಿ, ನಾತೇಲ ಮಲಗಿದ್ದಾರೆ. ಈಗ ಮೊಮ್ಮಕ್ಕಳೂ ಮಲಗುತ್ತಾರೆ. ಆದರೆ ಬೇರೊಬ್ಬರು ಅಲ್ಲಿ ಪ್ರವೇಶಿಸುವಂತಿಲ್ಲ. ಒಳಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಸಾಂತಾಮೋರಿ ಹೊರ ಬಂದರೆ ಬಾಗಿಲಿಗೆ ಬೀಗ ಜಡಿಯುತ್ತಾಳೆ. ಕುತ್ತಿಗೆಯಲ್ಲಿಯ ಜಪಸರ, ಬಂಗಾರದ ಮಣಿ, ಸರದ ಜತೆಗೆ ಒಂದು ಕರಿ ಹಗ್ಗವಿದೆ. ಅದಕ್ಕೊಂದು ಬೀಗದ ಕೈಗೊಂಚಲು. ಪ್ರತಿ ಸಾರಿ ಹೊರಬಂದು ಬಾಗಿಲು ಹಾಕಿ ಬೀಗ ಸಿಕ್ಕಿಸಿ ಬೀಗ ಹಾಕುತ್ತಾಳೆ ಅವಳು. ಒಳಗೆ ಸಣ್ಣದೊಂದು ಪೆಟ್ಟಿಗೆಯೂ ಇದೆ. ಈ ಪೆಟ್ಟಿಗೆಯ ನೋಟುಗಳು, ನಾಣ್ಯಗಳು ಬಂಗಾರದ ಆಭರಣ ಇದೆ ಎಂಬುದು ಈ ಮಕ್ಕಳ ವಾದ. +ಮಗಳಿಗಾಗಿ ಅವಳು ತುಂಬಾ ಆಭರಣ ಮಾಡಿಸಿದ್ದರು. ಬಳೆ, ಕಿವಿ, ಬೆಂಡೋಲೆ, ಕೆನ್ನೆ ಸರಪಳಿ, ಪವನಿನ ಸರ, ಕಾಸಿನ ಸರ, ಜಡೆ ಬಿಲ್ಲೆ, ಮುಡಿಗೆ ಮುಳ್ಳು ಎಲ್ಲ ಮಾಡಿಸಿದ್ದಳು. ಮಗಳು ಓಡಿ ಹೋಗುವಾಗ ಎಲ್ಲ ಬಿಟ್ಟು ಹೋದಳು. ಅದನ್ನೆಲ್ಲ ಹಾಗೆಯೇ ಇರಿಸಿಕೊಂಡಿದ್ದಾಳೆ. ಸೊಸೆಯಂದಿರಿಗೂ ಕೊಟ್ಟಿಲ್ಲ. ಮೊಮ್ಮಕ್ಕಳಿಗೂ ಕೊಟ್ಟಿಲ್ಲ. ಹಣವಂತೂ ತುಂಬಾ ಇದೆ. ಇದೆಲ್ಲವನ್ನೂ ತಮಗೆ ಕೊಡಲಿ ಎಂಬುದು ಈ ಮಕ್ಕಳ, ಸೊಸೆಯಂದಿರ ಅಭಿಪ್ರಾಯ. +ಸಾಂತಾಮೊರಿಗೆ ಎಪ್ಪತ್ತೈದೋ, ಎಂಬತ್ತೋ ಆಯಿತು. ಇನ್ನೆಷ್ಟು ವರ್ಷ ಬದುಕುತ್ತಾಳೆ ಅವಳು ಎಂದು ಸಿಮೋನ, ಪಾಸ್ಕೊಲ, ಕತ್ರೀನ ಕೇಳುತ್ತಾಳೆ. ಮಕ್ಕಳಿಗೂ ಇದು ಹೌದು ಎನಿಸುತ್ತದೆ. +ದುಡಿದುದನ್ನು ಹೆಂಡಕ್ಕೆ ಹಾಕಿ, ಒಂದಿಷ್ಟನ್ನು ತಾಯಿಯ ಕೈಗೆ ಹಾಕಿ, ಮತ್ತೂ ಒಂದಿಷ್ಟನ್ನು ಹೆಂಡಿರ ಕೈಗೆ ಹಾಕಿ ಈ ಮಕ್ಕಳು ಕೂಗಾಡುತ್ತಾರೆ ನಾವು ಬೇರೆ‌ಆಗುತ್ತೇವೆ ಅನ್ನುತ್ತಾರೆ. +“ಏನು..ಈ ಮನೇಲಿ ಎರಡು ಒಲೇನ?” ಸಾಂತಾಮೋರಿ ಕೇಳುತ್ತಾಳೆ. ಇದು ತುಂಬಾ ವಿಚಿತ್ರವೆನಿಸುತ್ತದೆ ಅವಳಿಗೆ. ದಿನನಿತ್ಯ ಇಪ್ಪತ್ತು ಮೂವತ್ತು ಜನ ಒಂದೆಡೆಯಲ್ಲಿ ಕುಳಿತು ಊಟ ಮಾಡುತ್ತಿದ್ದುದು ನೆನಪಿಗೆ ಬರುತ್ತದೆ. ಅನುಕೂಲಕ್ಕೆಂದು ಈ ಎರಡು ಒಲೆಗಳು ಒಂದು ಕೂಡೊಲೆ, ಪಾತ್ರೆ ಸಣ್ಣದೆಂದು ಎರಡು ಮೂರು ಬಾರಿ ಅನ್ನ ಮಾಡುವುದು, ಗಂಜಿ ಬೇಯಿಸುವುದು ನಡೆಯುತ್ತಿತ್ತು. ಸಾಕಷ್ಟು ದೊಡ್ಡ ಅಡಿಗೆ ಮನೆ. ಊಟದ ಮನೆ ಕೂಡ ದೊಡ್ಡದೆ. ಆದರೆ ಮನೆಯನ್ನೇ ಎರಡು ಭಾಗವನ್ನಾಗಿ ವಿಭಜಿಸಿದ ಘಟನೆ ಈವರೆಗೆ ನಡೆದಿರಲಿಲ್ಲ. +ಒಟ್ಟಿಗೇ ಅಡಿಗೆ ಮಾಡಿ ಒಟ್ಟಿಗೇನೆ ಕುಳಿತು ಊಟ ಮಾಡುವ ಸಂಪ್ರದಾಯ ನಡೆದು ಬಂದ ಈ ಮನೆಯಲ್ಲಿ ಎರಡು ಒಲೆಗಳನ್ನು ಹೂಡಿದ ನಂತರ ಏನಾದೀತು? ಮೊಮ್ಮಕ್ಕಳು ಬೇರೆ ಬೇರೆ ಕುಳಿತು ಬೇರೆ ಬೇರೆ ಊಟ ಮಾಡುತ್ತಾರೆ. ಸೊಸೆಯಂದಿರು ಅವರವರ ಗಂಡಂದಿರಿಗೆ ಮಕ್ಕಳಿಗೆ ಬಡಿಸುತ್ತಾರೆ. ತಾನು ಊಟ ಮಾಡುವುದು ಎಲ್ಲಿ? ಇಲ್ಲ ತಾನೂ ಮೂರನೇ ಒಲೆ ಹೂಡಬೇಕೆ? +ಸಾಂತಾಮೊರಿ ಜಗಲಿಯ ಆ ತುದಿಗೊಬ್ಬ ಈ ತುದಿಗೊಬ್ಬರಂತೆ ಕುಳಿತ ಮಕ್ಕಳನ್ನು ನೋಡಿದಳು. ಅವಳ ತೊಡೆಯ ಮೇಲೆ ಈ ಇಬ್ಬರೂ ಮಕ್ಕಳು ಹೆತ್ತ ಕರುಳು ತುಂಡುಗಳು ತೊಡೆಗೆ ತಲೆಯೂರಿ ಮಲಗಿದ್ದವು. ಮೊಮ್ಮಕ್ಕಳ ತಲೆ ನೇವರಿಸಿ ಅವಳೆಂದಳು. +“…ಈ ಮನೇಲಿ ಎರಡು ಒಲೆ ಹೂಡಲಿಕ್ಕೆ ನಾನು ಬಿಡೋದಿಲ್ಲ..” +“..ಮತ್ತೆ?” +“ನೀವು ಬೇರೆ ಮನೆ ಮಾಡಿ” ಬಿಗಿ ಮಾತಿನಲ್ಲಿಯೇ ಅವಳು ಉತ್ತರಿಸಿದಳು. +ಬಸ್ತು, ಜಾನರು ಇದನ್ನು ನಿರೀಕ್ಷಿಸಿರಲಿಲ್ಲ. ಅವರಿಬ್ಬರೂ ಬೇರೆ ಬೇರೆ ಮನೆ ಮಾಡಲು ನಿರ್ಧರಿಸಿದ್ದರು. ಯಾವುದಾದರೂ ರೀತಿಯಲ್ಲಿ ತಾಯಿಯನ್ನು ತನ್ನ ಮನೆಯಲ್ಲಿರಿಸಿಕೊಂಡರೆ ಕತ್ತಲೆ ಕೋಣೆಯಲ್ಲಿ ಅವಳು ಗುಪ್ತವಾಗಿ ಇರಿಸಿರುವ +ಹಣ ಬಂಗಾರ ತನ್ನದಾಗುತ್ತದೆ ಎಂದು ಬಸ್ತು ತಿಳಿದ ಹಾಗೆಯೇ ಜಾನಿಕೂಡ ಯೋಚಿಸಿದ್ದ. ಮನೆಯಲ್ಲಿ ಎರಡು ಒಲೆ ಮಾಡಿದ ಕೂಡಲೆ ಅವಳು ಒಂದಲ್ಲ ಒಂದು ಕಡೆ ಸೇರಿಕೊಳ್ಳಬೇಕಲ್ಲ. ಅವಳು ಮೊದಲಿನಿಂದಲೂ ತನ್ನನ್ನೇ ಹೆಚ್ಚು ಪ್ರೀತಿಸುವುದರಿಂದ ತನ್ನ ಬಳಿಯೇ ಇರುತ್ತಾಳೆ ಎಂದು ಬಸ್ತು ನಿರೀಕ್ಷಿಸಿದ್ದ. +ಆದರೆ ನೀವು ಬೇರೆ ಮನೆ ಮಾಡಿ ಎಂದಾಗ ಇಬ್ಬರಿಗೂ ನಿರಾಶೆಯಾಯಿತು. ಬೇರೆ ಮನೆ ಎಂದರೆ ಅವಳು ಈ ಮನೆ ಬಿಡುವುದಿಲ್ಲ. ಕತ್ತಲೆ ಕೋಣೆ ಖಾಲಿಯಾಗುವುದಿಲ್ಲ. +“ಆಯ್ತು..ಮನೆ ಬೇರೆ ಮಾಡತೇವೆ..ನಮ್ಮದನ್ನ ನಮಗೆ ಕೊಡು..” ಎಂದ ಬಸ್ತು ಹೀಗಾದರೂ ಒಂದು ತೀರ್ಮಾನವಾಗಲಿ ಎಂದು. +“ಏನದು ನಿನ್ನ ಪಾಲಿನದು? ಏನು ನಿಮ್ಮಪ್ಪ ಮಾಡಿದ ಆಸ್ತಿ ಇದೆಯೆ ಇಲ್ಲಿ..ಇಲ್ಲ ನಿಮ್ಮಜ್ಜ ಮಾಡಿದ್ದು ಇದೆಯೆ?” ಎಂದು ಕೆಣಕಿದಳು ಸಾಂತಾಮೋರಿ. +ಘಟ್ಟದ ಕೆಳಗಿನಿಂದ ಅವಳು ಬರುವಾಗ ತಂದದ್ದು ಸಣ್ಣದೊಂದು ಬಟ್ಟೆಯ ಗಂಟು, ಪೊಟ್ಲಿ. ಈಗ ಮನೆಯಲ್ಲಿ ಏನೇನಿದೆ ಅದೆಲ್ಲವನ್ನೂ ಮಾಡಿದವಳು ತಾನು. ಈ ಮಕ್ಕಳು ದುಡಿಯುತ್ತಾರೆಂದು ಒಂದು ಸೂಜಿ ಕೂಡ ಈವರೆಗೆ ಮನೆಗೆ ಅಂತ ತಂದುದಿಲ್ಲ. ಇನ್ನು ಇವರದ್ದು ಏನಿದೆ ಇಲ್ಲಿ. +“ಕತ್ತಲೆ ಕೋಣೆಯಲ್ಲಿ ಮುಚ್ಚಿ ಇಟ್ಟೀದಿಯಲ್ಲ..ಅದೆಲ್ಲ ಯಾರಿಗೆ? ಬೇರೆ ಮನೆ ಮಾಡಬೇಕು ಅಂದ್ರೆ ಹಣ ಬೇಡ್ವ..” ಎಂದ ಜಾನಿ. +ಕತ್ತಲೆ ಕೋಣೆಯ ವಿಷಯ ಬಂದ ಕೂಡಲೆ ಸಾಂತಾಮೋರಿಗೆ ಚೇಳು ಕುಟುಕಿದಂತಾಯಿತು. ಅವಳು ಅಲ್ಲಿ ಹಣ ಇರಿಸಿದ್ದಳು. ಬಂಗಾರ ಇರಿಸಿದ್ದಳು. ಸತ್ತ ಮೇಲೆ ಕೊಂಡೊಯ್ಯಲೆಂದು ಇರಿಸಿದ್ದು ಅಲ್ಲ ಅದು. ಮಕ್ಕಳಿಗೆ ಮೊಮ್ಮಕ್ಕಳಿಗೆ ಕಷ್ಟ ಕಾಲದಲ್ಲಿ ಆದೀತೆಂದು ಇರಿಸಿದ್ದು. ಈಗ ತಾನು ಈ ಮನೆಯನ್ನು ನೋಡಿಕೊಳ್ಳುತ್ತಿರುವುದೇ ಆ ಹಣದಿಂದ. ಆ ಹಣವನ್ನು ಈಗ ಈ ಇಬ್ಬರಿಗೆ ಹಂಚಿ ಬಿಟ್ಟರೆ ನಾಳೆ ಮೊಮ್ಮಕ್ಕಳ ಗತಿ? +“ಜಾನಿ..ಅದೆಲ್ಲ ನೀನು ನನಗೆ ಕೇಳಬೇಡ..ನಿನಗೆ ಈ ಮನೇಲಿ ಇರಲಿಕ್ಕೆ ಮನಸ್ಸಿಲ್ಲ ಈಗಿಂದೀಗಲೇ ಹೊರಡು..ಹ್ಯಾಗೂ ದುಡೀತೀರಲ್ಲ..ನಿಮ ನಿಮ ಹೆಂಡಿರು ಮಕ್ಕಳನ್ನು ನೀವು ಸಾಕಿ..ನಿಮ್ಮ ಹೊಟ್ಟೆಗೆ ತಂದು ಹಾಕಿ ಹಾಕಿ ನನಗೆ ಸಾಕಾಗಿ ಹೋಗಿದೆ..” ಎಂದಳು ಸಾಂತಾ ಮೋರಿ. +ಈ ಮಾತು ಬೆಳೆಯುತ್ತಿರುವಾಗಲೇ ಸಿಮೋನ ಮನೆಗೆ ಬರುತ್ತಿದ್ದವ ಇವರ ಮನೆ ಬಳಿ ನಿಂತ. +“ಏನದು ಗಲಾಟೆ?” ಎಂದು ಸಾಂತಾ ಮೋರಿ ಮನೆ ಅಂಗಳಕ್ಕೆ ಕಾಲಿಟ್ಟ. +“ನೋಡು ಸಿಮೋನ..” ಎಂದು ಸಾಂತಾ ಮೋರಿ ಮುಖ ಬಡಿಸಿಕೊಂಡಳು. +“ಯಾಕ್ರೋ..ಕಷ್ಟಾನೋ ಸುಖಾನೋ ಒಂದಾಗಿ ಇರಬೇಕು..ಒಂದೇ ಮನೇಲಿ ಎರಡು ಒಲೆ ಹೂಡೋದು..ಅಣ್ಣ ತಮ್ಮಂದಿರು ಬೇರೆಯಾಗೋದು..ಆಸ್ತೀಲಿ ಪಾಲು ಕೇಳೋದು..ಏನದು?” ಎಂದ ಸಿಮೋನ ಗುರ್ಕಾರನ ಗತ್ತಿನಲ್ಲಿ. +“ಗುರ್ಕಾರ ಮಾಮ..ನಿಮ ಮನೆ ಕತೇನೆ ಹಳಸಿಕೊಂಡು ಕೂತಿದೆ..ನೀವು ಇಲ್ಲಿ ಯಾಕೆ ಬಂದ್ರಿ?” ಎಂದು ವ್ಯಂಗ್ಯವಾಗಿ ಕೇಳಿದ ಬಸ್ತು. +ಸಿಮೋನನ ಮಗ ವಿಕ್ಟರ್ ಆಗಲೇ ಬೇರೊಂದು ಮನೆ ಹುಡುಕುತ್ತಿರುವುದು ಕೇರಿಗೆಲ್ಲ ಗೊತ್ತಾಗಿತ್ತು. +“ಹಲ್ಲು ಉದುರಿಸಿ ಬಿಟ್ಟೇನು” ಎಂದು ಎರಡು ಹೆಜ್ಜೆ ಮುಂದಿಟ್ಟ ಸಿಮೋನ. ನಿನ್ನೆ ಮೊನ್ನೆಯವರೆಗೆ ಊಟ ಮಾಡಿದವರ ತಟ್ಟೆ ತೊಳೆದಿಡುತ್ತಿದ್ದ ಹುಡುಗ ನಾಲಿಗೆಯನ್ನು ಇಷ್ಟ ಉದ್ದ ಮಾಡುವುದೇ? ಬಸ್ತು ಕೂಡ ಹಿಂದೆ ಸರಿಯಲಿಲ್ಲ. ಮಾತು ಮಾತಿಗೆ ಸೇರಿ ಸಿಮೋನ ಬಸ್ತುವಿನ ಕೆನ್ನೆಗೆ ಹೊಡೆದ. ಬಸ್ತು ಕೂಡ ಕೈ ಉದ್ದ ಮಾಡಲಿದ್ದಾಗ ಸಾಂತಾಮೋರಿ ಅವನನ್ನು ತಡೆದಳು. ಇದೇ ಮೂಲ ಕಾರಣವಾಗಿ ಬಸ್ತು ಜಾನರು ಆ ಮನೆ ಬಿಟ್ಟು ಬೇರೆ ಮನೆ ಮಾಡಿದರು. ಊಟದ ಮನೆಯಲ್ಲಿ ಈಗ ಸಾಂತ ಮೋರಿಯೊಬ್ಬಳೆ. ಅವಳು ಕತ್ತಲೆ ಕೋಣೆ ಸೇರಿದರೆ ಹೊರಬೀಳುವುದೇ ಕಡಿಮೆಯಾಯಿತು. +-೭- +ಎಮ್ಮೆ ಮರಿಯಳ ಕೊಟ್ಟಿಗೆ ಈಗ ಬರಿದಾಗಿದೆ. ಹಿಂದಿನಂತೆ ಕೆಲಸ ಮಾಡಲು ಆಗುವುದಿಲ್ಲ ಎಂಬುದನ್ನು ಅರಿತ ಅವಳು ನಿಧಾನವಾಗಿ ವರ್ತನೆ ಮನೆಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದಳು. ಹಿಂದೆಲ್ಲ ಎಮ್ಮೆಗಳು ಹಾಲು ಬತ್ತಿಸಿಕೊಂಡಾಗ ಹೊಸ ಎಮ್ಮೆ ತರುತ್ತಿದ್ದವಳು. ಹೊಸ ಎಮ್ಮೆ ಕೊಳ್ಳುವುದನ್ನು ಬಿಟ್ಟಳು. ಎರಡು ಎಮ್ಮೆಗಳು ಕೊಟ್ಟಿಗೆಯಲ್ಲಿಯೇ ಸತ್ತವು. ಒಂದು ಸೊರಬದ ಸೇತುವೆಯ ಮೇಲೆ ಶೇಂದಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸತ್ತಿತು. ಉಳಿದ ಎಮ್ಮೆಗಳನ್ನು ಹಳ್ಳಿಗೆ ಹೊಡೆದಳು. ಅಲ್ಲಿ ಯಾರೋ ಅವುಗಳನ್ನು ಕೊಂಡರು. ಈಗ ಕೊಟ್ಟಿಗೆಯಲ್ಲಿ ಒಂದು ಹಸುವಿದೆ. ತುಂಬಿಕೊಂಡ ಕೊಟ್ಟಿಗೆಯನ್ನು ಬರಿದಾಗಿಸಬಾರದೆಂದು ಈ ಹಸು ಕಟ್ಟಿದ್ದಾಳೆ. ಜತೆಗೆ ಮನೆಯಲ್ಲಿ ಮೊಮ್ಮಕ್ಕಳಿಗೆ ಹಾಲು ಬೆಕಲ್ಲ. +ಗಾಡಿ ಮಂಜನ ತಾಯಿ ರುದ್ರಮ್ಮ ಪ್ರೀತಿಯಿಂದ ನೋಡಿಕೊಂಡ ಮಗಳು ಫ಼ಿಲೋಮೆನಾ ಗಂಡನ ಮನೆ ಸೇರಿದ್ದಳು. ಮದುವೆಯಾಗಿ ಹೋದವಳನ್ನು ಗಂಡ ಮತ್ತೆ ತಾಯಿಯ ಮನೆಗೆ ಕಳುಹಿಸಿರಲಿಲ್ಲ. ಮದುವೆಗೆ ಬಂದಾಗ ತನ್ನ ಕಡೆಯವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಎಮ್ಮೆ ಕೊಟ್ಟಿಗೆಯ ಮಗ್ಗುಲಲ್ಲಿಯ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಊಟ ಉಪಚಾರ ಸರಿ ಹೋಗಲಿಲ್ಲ ಎಂಬ ಕಾರಣವನ್ನೇ ದೊಡ್ಡದು ಮಾಡಿ ಆತ ಫ಼ಿಲೋಮೆನಾಳನ್ನು “ನೀನು ಮತ್ತೆ ತಾಯಿ ಮನೆ ಅಂದ್ರೆ ಬರೆ ಹಾಕತೀನಿ..” ಎಂದು ಬೆದರಿಸಿ ಇಟ್ಟಿದ್ದ. ಮಂಜನ ತಾಯಿ ರುದ್ರಮ್ಮ ಹಾಸಿಗೆ ಹಿಡಿದವಳು. +“ಪಿಲ್ಲಮ್ಮ..ಪಿಲ್ಲಮ್ಮ” ಎಂದು ಕನವರಿಸಿ ಮರಿಯಳ ಮಗ ಗುಸ್ತೀನ ಹೀಗೆ ಫ಼ಿಲೋಮೆನಾಳನ್ನು ಕಳುಹಿಸಿ ಎಂದು ಜನರ ಮೂಲಕ ಹೇಳಿ ಕಳುಹಿಸಿದ್ದರೂ ಫ಼ಿಲೋಮೇನಾ ಬಂದಿರಲಿಲ್ಲ. ಇಲ್ಲಿ ರುದ್ರಮ್ಮ ಇದೊಂದು ಕೊರಗು ಇರಿಸಿಕೊಂಡು ಸತ್ತಿದ್ದಳು. ಹಲವಾರು ವರ್ಷಗಳಿಂದ ಮಗಳನ್ನು ಕಾಣದ ಮರಿಯ- +“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಾದೆ ಉಂಟಲ್ಲ” ಎಂದು ಕೊರಗನ್ನು ಕಡಿಮೆ ಮಾಡಿದ್ದಳು. +ಈಗ ಇವಳಿಗೆ ನೆಮ್ಮದಿ ಎಂದರೆ ಮೂವರು ಮಕ್ಕಳೂ ಮದುವೆಯಾಗಿದ್ದರು. ಹಿರಿಯ ಮಗ ಗುಸ್ತೀನ ಬ್ಯಾಂಕಿನಲ್ಲಿ ಅಟೆಂಡರ್ ಆಗಿದ್ದ. ಎರಡನೆಯವ ದುಮಿಂಗ ವೆಟರನರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ. ಮೂರನೆಯವ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡಬಾಯ್..ದೇವರ ದಯೆಯಿಂದ ಮೂವರೂ ಒಟ್ಟಿಗೇನೆ ಇದ್ದರು. ಸೊಸೆಯಂದಿರಾಗಿ ಮನೆಗೆ ಬಂದವರು ಕೂಡ ಒಳ್ಳೆಯ ಹುಡುಗಿಯರೆ. ಮಂಕಿ, ಹಡಿನಬಾಳ, ಕೂಡ್ಲದಿಂದ ಬಂದ ಈ ಹುಡುಗಿಯರು ಮನೆಯ ವಾತಾವರಣಕ್ಕೆ ಹೊಂದಿಕೊಂಡರು. ಕೊಟ್ಟಿಗೆಯಲ್ಲಿ ಎಮ್ಮೆ ಶಗಣೆ ಬಾಚಿದರು. ಎಮ್ಮೆಗಳ ಮೈ ತೊಳೆದು ಹಾಲು ಕರೆದರು. +ನಿತ್ಯ ಒಟ್ಟಿಗೇನೆ ಪ್ರಾರ್ಥನೆ ಮಾಡುತ್ತಾರೆ. +“ಮಾಯಂ ಬೆಸಾಂವಂದೀ” ಎಂದು ಸೊಸೆಯಂದಿರು, ಮಕ್ಕ್ಳು, ಮೊಮ್ಮಕ್ಕಳು ಬಂದು ಎದುರು ನಿಂತು ಕೈ ಮುಗಿಯುವಾಗ ಮರಿಯಾಗೆ ಕಣ್ಣುಗಳು ತುಂಬಿ ಬರುತ್ತವೆ. +ಎಲ್ಲರನ್ನೂ ದೇವರ ಹೆಸರಿನಲ್ಲಿ ಆಶೀರ್ವದಿಸುತ್ತಾಳೆ. ಪ್ರತಿ ಮೊಮ್ಮಗನ, ಮೊಮ್ಮಗಳ ಕೈಹಿಡಿದು “ಹೋಡಜಾ” “ಹೋಡಜಾ” (ದೊಡ್ಡವನಾಗು ದೊಡ್ಡವನಾಗು) ಎಂದು ಹೇಳುವಾಗ ಹೃದಯ ಹೂವಿನಂತೆ ಅರಳುತ್ತದೆ. +ಏಕೋ ಅವಳಿಗೆ ತಟ್ಟನೆ ಹಿಂದಿನದೆಲ್ಲ ನೆನಪಿಗೆ ಬರುತ್ತದೆ. ಇಲ್ಲಿ ಬಂದು ಕೆಲಸ ಮಾಡಿದರೆ ಒಂದಿಷ್ಟು ಹಣ ಮಾಡಬಹುದೆಂದು ಕಾಯ್ಕಿಣಿಯರ ಒಡೆಯರ ತೋಟ ಬಿಟ್ಟು ಇಲ್ಲಿಗೆ ಬಂದದ್ದು. ಗಂಡನ ಹಿಂದೆಯೇ ತಾನೂ ಬಂದೆ. ಗಂಡ ಸಂತಿಯಾಗ ಶೆಟ್ಟಿಹಳ್ಳಿ ಶ್ರೀಮಂತರ ಮನೆ ಕಟ್ಟುವಾಗ ಮನೆಯ ಮೇಲಿನಿಂದ ಬಿದ್ದು ಸತ್ತ. ಅಂದು ಕ್ರಿಶ್ಚಿಯನ್ನರು ಸತ್ತರೆ ಹುಗಿಯಲು ಊರಿನಲ್ಲಿ ಸಿಮಿತ್ರಿ ಇರಲಿಲ್ಲ. ಜತೆಗೆ ನೆಂಟರು ಇಷ್ಟರು ಇಲ್ಲದ ಕಡೆ ಗಂಡನನ್ನು ಮಣ್ಣು ಮಾಡಿ ತಿರುಗಿ ಬಂದೆ. ಎಮ್ಮೆ ಕಟ್ಟಿದೆ. ಪಾದರಿ ಗೋನಸ್ವಾಲಿಸ್ ಊರಿಗೆ ಬಂದ ನಂತರ ತನ್ನ ಮಕ್ಕಳ ಬದುಕಿಗೆ ಒಂದು ಕ್ರಮ ವಿಧಾನ ಬಂದಿತು. ಮಕ್ಕಳನ್ನು ಪಾದರಿಗಳ ಮಾತಿಗೆ ಬೆಲೆ ಕೊಟ್ಟು ಸರಕಾರಿ ಶಾಲೆಗೆ ಕಳುಹಿಸಿದೆ. ಮನೆ ಮನೆಗೆ ಹಾಲು ಕೊಡುತ್ತ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿ ತರುತ್ತ, ಇಗರ್ಜಿ ಪೂಜೆ, ಪ್ರಾರ್ಥನೆ ಎಂದು ಆ ಕೆಲಸ ಮಾಡುತ್ತ ಹುಡೂಗರು ಐದು ಆರನೆ ತರಗತಿಯವರೆಗೆ ಓದಿದರು. +ಮಕ್ಕಳಿಗೆ ಒಂದೊಂದು ಕೆಲಸ ಬೇಕಲ್ಲ. ಕ್ರೀಸ್ತುವರಿಗೊಂದು ಕೆಲಸ ಇತ್ತಾದರೂ ತನ್ನ ಗಂಡನ ತಲೆಗೇನೆ ಈ ಕೆಲಸ ಅಂತ್ಯ ಕಂಡಿತು. ಆ ಕೆಲಸ ಕೂಡ ಮಕ್ಕಳಿಗೆ ಬೇಡ ಎನಿಸಿತು. ತಾನೇ ಅವರಿವರನ್ನು ಕಂಡೆ. ಬ್ಯಾಂಕಿನ ಅಧ್ಯಕ್ಷರನ್ನು ಕಂಡೆ, ದನದ ಆಸ್ಪತ್ರೆ ವೈದ್ಯರನ್ನು ಕಂಡೆ. ಸರಕಾರಿ ಆಸ್ಪತ್ರೆ ವೈದ್ಯರು ಬಲ್ಲವರಾಗಿದ್ದರು. +“ರಾಯರೆ..ನಮ ಹುಡುಗನಿಗೆ ಒಂದು ಕೆಲಸ ಕೊಡಿಸಿ” ಎಂದೆ. +ಈ ಎಲ್ಲರ ಮನೆಗಳಿಗೂ ಹಾಲು ಕೊಡುತ್ತಿದ್ದವಳು ತಾನು. ದೊಡ್ಡವರ ಮನೆಗಳಿಗೆ ನೀರು ಬೆರೆಸದೆ ಹಾಲು ಸರಬರಾಜು ಮಾಡುತ್ತಿದ್ದೆ. +“ಕಳಿಸು..ಮಗ ಓದಿದಾನ?” ಎಂದು ಕೇಳಿದರು. ಗುಸ್ತೀನ, ದುಮಿಂಗ, ಬಸ್ತು ಈ ಮೂವರಿಗೂ ಕೆಲಸವಾಯಿತು. ತುಂಬಾ ಗೌರವದ ಕೆಲಸ. ಬೇರೆ ಕ್ರೀಸ್ತುವರ ಮಕ್ಕಳು ಬಾಚಿ ಹೆಗಲಿಗೇರಿಸಿಕೊಂಡು ಹೋಗುತ್ತಿದ್ದರೆ ತನ್ನ ಮಕ್ಕಳು ಶುಚಿಯಾದ ಬಟ್ಟೆ ಧರಿಸಿ, ಆಫ಼ೀಸರುಗಳ ಹಾಗೆ ಕೆಲಸಕ್ಕೆ ಹೋಗುವುದನ್ನು ಕಂಡಾಗ ಸಂತಸವಾಗುತ್ತಿತ್ತು. +ಮಕ್ಕಳು ಮುಂದೆಯೂ ಈ ಗೌರವವನ್ನು ಉಳಿಸಿಕೊಂಡರು. ಒಂದು ಕುಡಿಯುವುದಿಲ್ಲ, ಇಸ್ಪೀಟ ಆಡುವುದಿಲ್ಲ. ಬೀಡಿ ಸಿಗರೇಟು ಮುಟ್ಟಲಿಲ್ಲ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾರೆ. ಇದೇ ಸಂತಸ ಮರಿಯಳಿಗೆ. +ಆದರೂ ಒಂದು ಕೊರತೆ. +ಮೂವರು ಮಕ್ಕಳ ಸಂಸಾರ ಬೆಳೆಯುತ್ತಿದೆ. ಈ ಮೂವರಿಗೂ ಒಂದೊಂದು ಮನೆ ಮಾಡಿಕೊಟ್ಟರೆ ಆಗುತ್ತಿತ್ತೇನೋ ಎನಿಸುತ್ತದೆ. ತನ್ನ ಹಳೆಯ ಮನೆಯಲ್ಲಿ ಇವರು ಎಷ್ಟು ದಿನ ಇದ್ದಾರು. ಈ ವಿಚಾರ ಅವಳ ತಲೆಯಲ್ಲಿ ಬಂದ ಕೆಲವೇ ದಿನಗಳಲ್ಲಿ ಮೂರನೇ ಮಗ ಬಸ್ತು ಅವಳ ಬಳಿ ಬಂದ. ಅವನಿಗೆ ಆಸ್ಪತ್ರೆ ಬಸ್ತು ಎಂಬ ಹೆಸರು ಬಿದ್ದಿತ್ತು. ಊರಿನಲ್ಲಿ ಬಸ್ತು ಎಂದು ಹೆಸರಿರುವವರು ಬೇರೆಯವರೂ ಇದ್ದುದರಿಂದ ಇವನಿಗೆ ಈ ಹೆಸರು- +“ಮಾಯ್..” ಎಂದ ಆತ +“ಏನು ಬಸ್ತು?” +“ಮುನಿಸಿಪಾಲಿಟಿಯವರು ಜಾಗ ಇಲ್ಲದವರಿಗೆ ಜಾಗ ಮಂಜೂರು ಮಾಡತಿದಾರೆ..” +“ಹೌದು” +“ಹೌದು ನಾನೊಂದು ಅರ್ಜಿ ಹಾಕಿಕೊಂಡಿದೀನಿ..ದುಮಿಂಗನಿಗೂ ಹೇಳಿದೀನಿ..ನಮಗೆ ಜಾಗ ಸಿಕ್ಕರೆ ಸರಕಾರದಿಂದ ಮನೆಕಟ್ಟಲಿಕ್ಕೆ ಹಣಾನೂ ಸಿಗುತ್ತೆ..” +“ಒಳ್ಳೆ ಕೆಲಸ ಮಾಡಿದ್ರ..” +ಅಂದು ಮರಿಯ ಮಕ್ಕಳು ತಂದು ಕೊಟ್ಟ ಹಣದಲ್ಲಿ ಐವತ್ತು ರೂಪಾಯಿಗಳನ್ನು ದೇವರ ಪೀಠದಲ್ಲಿ ದೇವರ ಇಮಾಜಿನ ಪದತಳದಲ್ಲಿ ಇರಿಸಿದಳು. ದೋರನಳ್ಳಿಯ ಸಂತ ಅಂತೋನಿಯ ಹೆಸರಿನಲ್ಲಿ ಒಂದು ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿದಳು..ದೋರ್ನಹಳ್ಳಿಗೆ ಹೋಗುವವರು ಸಿಕ್ಕಾಗ ಈ ಹಣವನ್ನು ದೇವರಿಗೆ ತಲುಪಿಸಬೇಕು ಅಂದುಕೊಂಡಳು. +ಅವಳ ಹರಕೆ ದೇವರಿಗೆ ತಲುಪಿತೇನೋ ಅನ್ನುವ ಹಾಗೆ ಆಸ್ಪತ್ರೆ ಬಸ್ತು ಹಾಗೂ ದುಮಿಂಗನಿಗೆ ಮುನಸಿಪಾಲಿಟಿಯಿಂದ ಜಾಗ ಮಂಜೂರಾಯಿತು. ಕೂಡಲೇ ಅವರು ಮನೆ ಕಟ್ಟಲು ಮುಂಗಡ ಹಣ ನೀಡುವಂತೆ ಸರಕಾರಕ್ಕೆ ಅರ್ಜಿ ಕೂಡ ಹಾಕಿದರು. ಶಿವಸಾಗರ ಜಯಪ್ರಕಾಶನಗರದಲ್ಲಿ ಹೊಸ ಮನೆಗಳನ್ನು ಕಟ್ಟುವ ಸಿದ್ಧತೆಗೂ ಅವರು ತೊಡಗಿದರು. +* +* +* +ಜಯಪ್ರಕಾಶ ನಗರದಲ್ಲಿ ಮೂರನೇ ತಿರುವಿನ ಮೊದಲ ಎರಡು ಮನೆಗಳು ಕಂಟ್ರ್ಯಾಕ್ಟರ್ ಕುಂಜುಮನ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವಾಗಲೇ ಜೋಸೆಫ಼ ನಗರದ ಸುತಾರಿ ಇನಾಸನ ಮನೆ ನೆಲಸಮವಾಯಿತು. ಸುಮಾರು ಐವತ್ತು ವರ್ಷಗಳ ಹಿಂದೆ ಸುಣ್ಣದ ರುದ್ರ ಕಟ್ಟಿದ ಮನೆಯನ್ನು ಬೀಳಿಸುವುದು ಏನೂ ಕಷ್ಟವಾಗಲಿಲ್ಲ. ಮಣ್ಣಿನ ಗೋಡೆಗಳು ಆಗಲೇ ಜೀರ್ಣಗೊಂಡಿದ್ದವು. ಬೊಂಬು ಹೊದಿಸಿದ ಮಾಡು ಸುರುಬು ಹತ್ತಿತ್ತು. ಮರದ ಬಾಗಿಲುಗಳು ಹುಳ ಹಿಡಿದು ಟೊಳ್ಳಾಗಿದ್ದವು. ಬಹಳ ಮುಖ್ಯವಾಗಿ ಸುತಾರಿ ಇನಾಸ ಒಂದು ಶುಕ್ರವಾರ ಶಿಲುಬೆಯ ಎದುರು ನಿಂತು ಕೈ ಮುಗಿದು-ದೇವಾ_ಎಂದು ದೇವರನ್ನು ಕರೆಯುತ್ತ ಹೋಗಿ ಮನೆ ಜಗಲಿಯ ಮೇಲೆ ಕುಳಿತವ ಅಲ್ಲೇ ಕುಸಿದು ಬಿದ್ದಿದ್ದ. +ಅದು ಶಿಲುಬೆಯ ಪ್ರಾರ್ಥನೆಗೆ ಜನ ಸೇರುವ ಸಮಯ. ಬಂದವರು ಯಾರೋ ಪಾದರಿ ಸಿಕ್ವೇರಾ ಅವರನ್ನು ಕರೆಯಲು ಓಡಿದರು. ಅವರು ಮೋಟಾರ ಬೈಕ್ ಹತ್ತಿ ಬಂದವರು ಕೊಂಚ ಬಿಸಿಯಾಗಿದ್ದ ಇನಾಸನಿಗೆ ಅಂತ್ಯ ಅಭ್ಯಂಜನ ನೀಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೋದರು. +ಈ ಕಡೆ ಜನರ ಪ್ರಾರ್ಥನೆ ಮುಂದುವರಿದಿರಲು ಅತ್ತ ಕೆಲವರು ಇನಾಸನ ದೇಹಕ್ಕೆ ಮಜ್ಜನ ಮಾಡಿಸಿದರು. ಕೂಡಲೇ ಬಿಳಿ ಉಡುಗೆ ಸಿದ್ಧವಾಯಿತು. ಪೆಟ್ಟಿಗೆ ಮಾಡಲು ಸುತಾರಿ ಬಂದು ಅಂದಾಜಿನ ಅಳತೆ ತೆಗೆದುಕೊಂಡು ಹೋದ. ಚಮಾದೋರ ಇಂತ್ರು ಸಿಮಿತ್ರಿಯಲ್ಲಿ ಹೊಂಡ ತೋಡಲು ಹಾರೆ, ಪಿಕಾಸಿ ಹಿಡಿದು ನಡೆದ. +ಇನಾಸನ ಹೆಣ್ಣು ಮಕ್ಕಳಿಗೆ ಟೆಲಿಗ್ರಾಂ ಗಳನ್ನು ಕಳುಹಿಸಲಾಯಿತು. ಗಂಡು ಮಕ್ಕಳು ಜಗಲಿಯ ಮೇಲೆ ಕುಳಿತರು. ಮೊನ್ನೆ ಒಳ ಬಾಗಿಲಿಗೆ ಒರಗಿ ಕುಳಿತಳು. +ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿಗಳು ಉರಿಯುತ್ತಿರಲು ಹೊರಗೆ ಸೇರಿದ ಜನ ನಿಧಾನವಾಗಿ ಒಳ ಬಂದು ಕುಳಿತು ಪ್ರಾರ್ಥನೆ, ಕೀರ್ತನೆಗಳನ್ನು ಮುಂದುವರೆಸಿದರು. +ಮಾರನೇ ದಿನ ಹನ್ನೆರಡು ಗಂಟೆಗೆಲ್ಲ ಇನಾಸನ ಹೆಣ್ಣುಮಕ್ಕಳು ಧಾವಿಸಿ ಬಂದರು. +“ಬಾಬಾ..ಬಾಬಾ” ಎಂದು ತಂದೆಯ ಶವದ ಮೇಲೆ ಬಿದ್ದು ಅವರು ಅತ್ತರು. ಇಂತ್ರು ಮೂರು ಗಂಟೆಗೆ ಮರಣ ಎಂದು ಮನೆ ಮನೆಗೆ ಹೋಗಿ ಹೇಳಿ ಬಂದ. +ರೈಮಂಡನ ಸಹಾಯಕರು ಮರಣ ಸೂಚಕವಾದ ರಾಗವನ್ನು ಬಾರಿಸುತ್ತಿರಲು ಇನಾಸನ ಶವಯಾತ್ರೆ ಮನೆಯಿಂದ ಹೊರಟಿತು. ಶವ ಪೆಟ್ಟಿಗೆಯನ್ನು ಶಿಲುಬೆಯ ಮೂಂದೆ ಇರಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಗರ್ಜಿ. ಅಲ್ಲಿಂದ ಸಿಮಿತ್ರಿ. ಪಾದರಿಗಳ ಪ್ರಾರ್ಥನೆ ಇತರೆ ಸಂಸ್ಕಾರಗಳು ಮುಗಿದ ನಂತರ ಇಂತ್ರು ಹೊಂಡಕ್ಕೆ ಇಳಿದು ಪೆಟ್ಟಿಗೆಯನ್ನು ಒಳಗೆ ಇಳಿಸಿಕೊಂಡ. ಅದನ್ನು ಸರಿಯಾಗಿ ಇರಿಸಿ ಹೊಂಡದ ಎರಡೂ ದಂಡೆಯ ಮೇಲೆ ಕೈ ಇರಿಸಿ ಆತ ಮೇಲೆ ಬಂದ ನಂತರ ಪಾದರಿ ಮೊದಲನೆಯವರಾಗಿ ಮೂರು ಹಿಡಿ ಮಣ್ಣನ್ನು ಹಾಕಿದರು. ನಂತರ ಜನ ನುಗ್ಗಿ ದಬದಬನೆ ಹಿಡಿ ಹಿಡಿ ಮಣ್ಣನ್ನು ಹೊಂಡಕ್ಕೆ ತೂರಿದರು. +ಗುರ್ಕಾರ ಸಿಮೋನ ಇಗರ್ಜಿ ಮುಂದೆ ನಿಂತು ಸಿಮಿತ್ರಿಯಿಂದ ತಿರುಗಿ ಹೋಗುತ್ತಿರುವ ಜನರಿಗೆ- +“…ಎಲ್ಲ ಮರಣದ ಮನೆಗೆ ಬಂದು ದೇವರ ಪ್ರಾರ್ಥನೆ ಮಾಡಿ ಗಂಜಿ ನೀರು ಕುಡಿದು ಹೋಗಬೇಕು” ಎಂದು ವಿನಂತಿ ಮಾಡಿಕೊಳ್ಳುತ್ತಿದ್ದ. ಇನಾಸನ ಕಿರಿಯ ಮಗ ಪಾಸ್ಕು ಆಗಲೇ ಪ್ರಾರ್ಥನೆಯ ಸಮಯದಲ್ಲಿ ನೀಡಲು ಶರಾಬನ್ನು ತರಲು ಹಣ ಕೊಟ್ಟು ಕಳುಹಿಸಿದ್ದ. +* +* +* +ಇನಾಸ ಸತ್ತ ತಿಂಗಳಿಗೆಲ್ಲ ಅವನ ಮನೆಯ ಗೋಡೆಗಳು ಬಿರುಕು ಬಿಟ್ಟವು. +ಒಂದು ಬೆಳಿಗ್ಗೆ ರೈಮಂಡ್ ಸಿಮೋನನ ಬಳಿ ಬಂದ. +“ಮಾಮ..” ಎಂದು ಮಾತಿಗೆ ತೊಡಗಿದ. +“ಅಪ್ಪ ಹೋದರು” ಎಂದು ಮುಖ ಸಣ್ಣದು ಮಾಡಿಕೊಂಡ. +“ಇನ್ನು ನಾನು ಪಾಸ್ಕು ಒಂದೇ ಮನೇಲಿ ಇರಲಿಕ್ಕೆ ಆಗೋಲ್ಲ ಮಾಮ..ನಾವು ಇರತೀವಿ ಎಂದ್ರು ಈ ಹೆಂಗಸರು ಬಿಡೋಲ್ಲ.” ಅಂದ. +“ಈಗ ಏನು ಆಗಬೇಕು?” +“ನೀವು ಹಿರಿಯರು ಬಂದು ಒಂದು ಪಂಚಾಯ್ತಿ ಮಾಡಬೇಕು.” +“ಏನು ಪಂಚಾಯ್ತಿ ರೈಮಂಡ್..ನೀನು ನಿನ್ನ ತಮ್ಮ ಕೂತು ಬಗೆಹರಿಸಿಕೊಳ್ಳಿ..” ಎಂದ ಸಿಮೋನ. +“ಹಾಗಲ್ಲ ಮಾಮ..ಮೂರನೆಯವರು ಒಬ್ಬರು ಇದ್ದರೆ ಒಳ್ಳೇದು..ನಾವು ನಾವು ಅಂದರೆ ಜಗಳ ಆಗುತ್ತೆ..ಕಿತ್ತಾಟ ಆಗುತ್ತೆ.” +“ಸರಿಯಪ್ಪ ಬರತೇನೆ…” ಎಂದು ಸಿಮೋನ ಒಪ್ಪಿಕೊಂಡ. +ಮನೆಯಲ್ಲಿ ಜೀವ ಇರಲಿಲ್ಲ. ಮನೆ ಇರುವ ಜಾಗವನ್ನು ಸರಿಯಾಗಿ ಅರ್ಧ ಮಾಡಲಾಯಿತು. ಒಂದು ಅರ್ಧ ರೈಮಂಡನಿಗೆ ಉಳಿದದ್ದು ಪಾಸ್ಕುಗೆ. ಮನೆಯಲ್ಲಿ ಹಂಡೆ, ತಪ್ಪಲೆ, ಕೊಡಪಾನ, ಚೆಂಬು, ತಟ್ಟೆ ಎಂದೆಲ್ಲ ತುಂಬಾ ಪಾತ್ರೆಗಳಿದ್ದವು. ಇವುಗಳ ಪಾಲೂ ಆಯಿತು. +ರೈಮಂಡನ ಹೆಂಡತಿ ಅವನ ಬಳಿ ನಿಂತು ಅವನ ಕಿವಿ ಕಚ್ಚುತ್ತಿದ್ದಳು. ಪಾಸ್ಕು ಹೆಂಡತಿ ತನ್ನ ಗಂಡನ ಕಿವಿ. +“ಇನ್ನೇನು?” ಎಂದು ಕೇಳಿದ ಸಿಮೋನ. +“ಅಲ್ಲ ಅಮ್ಮನ ಮೈ ಮೇಲೆ” ರೈಮಂಡ ನೆಲ ನೋಡುತ್ತ ನುಡಿದ. +ಸಿಮೋನನ ದೇಹದಲ್ಲಿಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಆತ ಕೆಂಪಗಾದ. +“..ಏಯ್ ರೈಮಂಡ..ನಿನಗೊಂದು ಧರ್ಮ ಇದೆ..ರೀತಿ ಇದೆ. ದೇವರ ಹತ್ತು ಕಟ್ಟಲೆಗಳನ್ನು ನಾವು ಯಾವತ್ತೂ ಮರೀಬಾರದು. ತಾಯಿ ಬದುಕಿರಬೇಕಾದರೇನೆ ಅವಳ ಮೈ ಮೇಲೆ ಇರೋ ಬಂಗಾರದ ಮೇಲೆ ಕಣ್ಣು ಹಾಕತೀಯಲ್ಲ ನೀನೇನು ಕ್ರೀಸ್ತುವನಾ? ಇಂತಹಾ ಪಂಚಾಯ್ತಿ ಮಾಡಲಿಕ್ಕೆ ನಾನಿಲ್ಲಿ ಬಂದಿಲ್ಲ..” +ಆತ ಕೂತಲ್ಲಿಂದ ಎದ್ದು ತನ್ನ ಹೆಗಲಿಗೆ ಟವಲು ಎಸೆದುಕೊಂಡು ಹೊರಟ. +“ನಿಲ್ಲಿ ಮಾಮ..ನಿಲ್ಲ..ನೀವು ಹೇಳಿದ ಹಾಗೆ ನಾವು ಕೇಳತೀವಿ” ಎಂದು ಪೇಚಾಡಿಕೊಂಡ ರೈಮಂಡ. +“..ಇಲ್ಲಿ ಕೇಳಿ..ಈಕೆ ಬದುಕಿರೋವರೆಗೆ ನೀವಿಬ್ರು ಇವಳನ್ನ ನೋಡಿಕೋ ಬೇಕು..ಅವಳ ಮೈಮೇಲಿನ ಬಂಗಾರಕ್ಕೆ ನೀವ್ಯಾರೂ ಕೈ ಹಾಕಬಾರದು..ಅವಳು ಇರೋ ತನಕ ಅದು ಅವಳದ್ದು..ಅವಳು ಅದನ್ನು ಏನೂ ಮಾಡಬಹುದು..ಕೇಳುವ ಹಕ್ಕು ನಿಮಗಿಲ್ಲ” +ಬಾಗಿಲ ಮರೆಯಲ್ಲಿ ನಿಸ್ತೇಜ ಮುಖ ಹೊತ್ತು ಕುಳಿತ ಮೊನ್ನೆಯನ್ನೇ ನೋಡುತ್ತ ಸಿಮೋನ ನುಡಿದ. ಅವಳು ಮೂಕಿಯಾಗಿದ್ದುದು ಒಳ್ಳೆದಾಯಿತೇನೋ ಅನಿಸಿತು. ಅವಳಂತೂ ಇವರೆಗೆ ಏನೂ ಮಾತನಾಡಿರಲಿಲ್ಲ. +“..ಹಾಗೇನೇ..ಮತ್ತೊಂದು ವಿಷಯ” +ಸಿಮೋನ ಮಾತನ್ನು ಮುಂದುವರೆಸಿದ. +“ನಿಮ್ಮ ಮನೆ ಅಂಗಳದಲ್ಲಿ ದೇವರ ಶಿಲುಬೆ ಇದು ಈ ಇಡೀ ಮನೆಗೆ, ಊರಿಗೆ ಸೇರಿದ್ದು. ನೀವಿಬ್ರು ಇದನ್ನು ನೋಡಿಕೊಳ್ಳತಕ್ಕದ್ದು.” ಎಂದ. +ರೈಮಂಡ ಪಾಸ್ಕು ಅವರ ಹೆಂಡಿರು ಒಪ್ಪಿಕೊಂಡರು. +ಈ ಪಂಚಾಯ್ತಿ ಮುಗಿಯುತ್ತಿದ್ದಂತೆಯೇ ಇನಾಸನ ಮನೆ ಕುಸಿಯಿತು. ತಾತ್ಕಾಲಿಕವಾಗಿ ತಮ್ಮ ತಮ್ಮ ಮಾವಂದಿರ ಮನೆ ಸೇರಿಕೊಂಡ ರೈಮಂಡ್ ಪಾಸ್ಕು ಇಲ್ಲಿ ಎರಡು ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಿದರು ಕೂಡ. ಇನಾಸನ ಹೆಂಡತಿ ಮೊನ್ನೆ ಕೂಡ ಮಗ ಪಾಸ್ಕುವಿನ ಮಾವನ ಮನೆಯಲ್ಲಿ ಕೆಲದಿನಗಳ ಮಟ್ಟಿಗೆ ಉಳಿದುಕೊಂಡಳು. +* +* +* +ಈ ಜಾಗದಲ್ಲಿ ಪ್ರತ್ಯೇಕವಾದ ಮನೆಯೊಂದನ್ನು ಕಟ್ಟಬೇಕೆಂಬುದು ಪಾಸ್ಕು ಹೆಂಡತಿ ಜೋಸೆಫ಼ಿನಾಳ ಬಹುದಿನಗಳ ಆಸೆಯಾಗಿತ್ತು. ಗುತ್ತಿಗೆದಾರ ಪಾಸ್ಕೋಲ ಕೂಡ ತನ್ನ ಹಳೆ ಮನೆ ಮುರಿದು ಹೊಸ ಮನೆ ಕಟ್ಟಿದ್ದ. ಕೇರಿಯಲ್ಲಿ ಇನ್ನೂ ಕೆಲ ಹೊಸ ಮನೆಗಳು ಕಾಣಿಸಿಕೋಂಡಿದ್ದವು. ಹೀಗಿರುವಾಗ ತಾವು ಮಣ್ಣಿನ ಗೋಡೆ, ಬೊಂಬಿನಿಂದ ಮಾಡಿರುವ ಮನೆಯಲ್ಲಿ ವಾಸಿಸುವುದು ಅವಳಿಗೆ ಬೇಕಿರಲಿಲ್ಲ. +ಬೇರೆ ಎಲ್ಲಿಯಾದರೂ ಜಾಗ ನೋಡಿ..ಅಲ್ಲಿ ಹೊಸ ಮನೆ ಕಟ್ಟೋಣ” ಎಂಬ ಅವಳ ಮಾತಿಗೆ ಪಾಸ್ಕು ಅಷ್ಟು ಮಹತ್ವ ಕೊಟ್ಟಿರಲಿಲ್ಲ. ಮನೆ ತಾನೆ? ಕಟ್ಟೋಣ ಅನ್ನುತ್ತಿದ್ದ. ಅವನ ಮನಸ್ಸಿಗೆ ತಾವಿರುವಲ್ಲಿಯೇ ಮನೆ ಕಟ್ಟಬೇಕು ಅನಿಸುತ್ತಿತ್ತು. ಜೈಪ್ರಕಾಶನಗರದಲ್ಲೊ, ಅಶೋಕನಗರದಲ್ಲೋ ನಿವೇಶನಗಳು ದೊರೆತರೂ ಕೇರಿ ಬಿಟ್ಟು ಇಗರ್ಜಿ ಬಿಟ್ಟು ದೂರ ಹೋಗಲು ಆತ ಸಿದ್ಧನಿರಲಿಲ್ಲ. +ತಂದೆಗೆ ಹೇಳಿ ಇಲ್ಲಿಯೇ ಮನೆ ಕಟ್ಟಬಹುದು. ಆದರೆ ಈಗ ರೈಮಂಡಗೂ ಅದರಲ್ಲಿ ಜಾಗ ಕೊಡಬೇಕು. ತಾನು ಕಟ್ಟಿದ ಮನೆಯಲ್ಲಿ ಅವನೂ ಬಂದು ಸೇರಿಕೊಳ್ಳುತ್ತಾನೆ. ಏನು ಉಪಯೋಗ? ತಮ್ಮದೇ ಆದ ಒಂದು ಮನೆ ಇರಬೇಕು ಎಂಬ ಆಸೆ ನೆರವೇರುವುದಿಲ್ಲವೇ? ಎಂದು ಆತ ಯೋಚಿಸುತ್ತಿರಬೇಕಾದರೇನೆ ಇನಾಸ ತನ್ನ ಪ್ರಯಾಣ ಮುಗಿಸಿದ್ದ. +ಪಾದರಿಗಳನ್ನು ಕರೆದೊಯ್ದು ಮಂತ್ರಿಸಿ ಆತ ಕೆಲಸ ಪ್ರಾರಂಭಿಸಿದ. ಈತ ಮನೆಗೆ ನೆಲಪಾಯ ತೋಡುತ್ತಿರಲು ಅತ್ತ ಜಾನಿ ಕೂಡ ಕೆಲಸ ಪ್ರಾರಂಭಿಸಿದ. +ಕಲ್ಲು ಮರಳು ಮಣ್ಣು ಎಂದೆಲ್ಲ ಮನೆ ಅಂಗಳ ತುಂಬಿ ಹೋಗಲು ಶುಕ್ರವಾರದ ಪ್ರಾರ್ಥನೆಗೆ ಜನ ಬರುವುದು ನಿಂತು ಹೋಯಿತು. ಆದರೂ ಮೊನ್ನೆ ಮಾತ್ರ ಪ್ರತಿನಿತ್ಯ ಹೋಗಿ ಶಿಲುಬೆ ದೇವರ ಮುಂದೆ ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿ ಬರುತ್ತಲಿದ್ದಳು. +* +* +* +ಅಳಿಯ ಮನೆ ಕಟ್ಟಿಸುತ್ತಿದ್ದಾನೆ ಎಂದರೆ ಪಾಸ್ಕೋಲ ಮೇಸ್ತ್ರಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ. ಶಿವಸಾಗರದಲ್ಲಿ ಎಷ್ಟೋ ಮನೆಗಳನ್ನು ಕಟ್ಟಡಗಳನ್ನು ಅವನೂ ಕಟ್ಟಿಸಿದ್ದನಲ್ಲವೇ? ಸಿಮೋನನ ಸಹಾಯಕನಾಗಿ ಊರಿಗೆ ಬಂದ ತಾನು ಕೆಲವೇ ವರ್ಷಗಳಲ್ಲಿ ಕಂಟ್ರಾಟುದಾರನಾದೆ. ಸಿಮೋನ ಕಾಯಿಲೆಯಿಂದ ಮಲಗಿದ್ದುದರ ಲಾಭ ಪಡೆದು ತಾನು ಸ್ವತಂತ್ರವಾಗಿ ಕೆಲಸ ಹಿಡಿದೆ. ಸಿಮೋನ ತಿರುಗಿ ಬಂದವ- +“ಪಾಸ್ಕೋಲ..ನೀನು ಹೀಗೆ ಮಾಡೋದ? ಎಂದು ಕೇಳಿದ. +“ಅರ್ಧ ಆಗಿರೋ ಕೆಲಸ ನೀನಾದರೂ ಮುಗಿಸಿ ಕೊಡು ಅಂದರು..ಇದರಲ್ಲಿ ನನ್ನ ತಪ್ಪಿಲ್ಲ..” ಎಂದಿದ್ದೆ ತಾನು. ಸಿಮೋನ ಈ ಮಾತನ್ನು ನಂಬಲಿಲ್ಲ. ಅವನು ನಂಬಬೇಕು ಎಂದು ತಾನೂ ಬಯಸಲಿಲ್ಲ. +ಊರಿನಲ್ಲಿ ಕಾಮಗಾರಿಯಂತೂ ಭರ್ಜರಿಯಾಗಿತ್ತು. ಒಂದಲ್ಲಾ ಒಂದು ಕೆಲಸ ಸಿಕ್ಕಿತು. ಬೇಗನೆ ತಾನು ಸಿಮೋನನ ಹಾಗೆಯೇ ಕಂಟ್ರಾಟುದಾರನಾದೆ. ಕ್ರೀಸ್ತುವರ ನಡುವೆ ಸಿಮೋನನಿಗೆ ಮೊದಲ ಸ್ಥಾನವಾದರೆ ತನಗೆ ಎರಡನೆಯ ಸ್ಥಾನ. ಆತ ಗುರ್ಕಾರ ಆದರೆ ತಾನು ಫ಼ಿರ್ಜಂತ. ಮೊದಲ ನಾಲ್ಕು ವರ್ಷ ಈ ಫ಼ಿರ್ಜಂತ ಗೌರವದಿಂದ ತಾನು ಮುಕ್ತನಾಗಲಿಲ್ಲ. ಏಕೆಂದರೆ ತನ್ನನ್ನು ಬಿಟ್ಟರೆ ಬೇರೆ ಜನ ಕೇರಿಯಲ್ಲಿ ಇರಲಿಲ್ಲ. ಬಾಲ್ತಿದಾರ ಬೇಡ ಎಂದ. ಕೈತಾನ, ಬಳ್ಕೂರ ಕಾರ, ಸಾನಬಾವಿ, ಪೆದ್ರು ಎಲ್ಲರೂ- +“..ಅದನ್ನು ನಮ್ಮಿಂದ ಸುಧಾರಿಸಿಕೊಂಡು ಹೋಗಲಿಕ್ಕೆ ಆಗಲ್ಲಪ್ಪ..ನೀನೇ ಇರು..” ಎಂದರು. +ನಾಲ್ಕು ವರ್ಷ ತನ್ನ ಅಧ್ಯಕ್ಷತೆಯಲ್ಲಿಯ ಊರ ಇಗರ್ಜಿ ಹಬ್ಬ ನಡೆಯಿತು. ಒಂದಿಷ್ಟು ಖರ್ಚು ಬರುತ್ತಿತ್ತು. ಇಗರ್ಜಿಯ ಸಿಂಗಾರ. ಊರಿನಲ್ಲಿ ತೋರಣ ಕಟ್ಟುವುದು, ಕೇರಿಯಲ್ಲಿ ಅಲ್ಲಲ್ಲಿ ಕಮಾನು ನಿರ್ಮಾಣ. ಬ್ರೇಸ್ಪುರ ದಿನದ ಧ್ವಜಾ ರೋಹಣ, ಪಟಾಕಿ, ಬ್ಯಾಂಡು ಎಂದೆಲ್ಲ ತಾನೇ ಖರ್ಚು ಮಾಡುತಿದ್ದೆ. ನಂತರ ಬೇಡ ಬೇಡವೆಂದರೂ ಫ಼ಿರ್ಜಂತ ಆಗಲೇಬೇಕಾಯಿತು. ಅವರೆಲ್ಲ ನೆಪಮಾತ್ರದ ಫ಼ಿರ್ಜಂತಗಳು. ಯಾರೂ ತನ್ನ ಹಾಗೆ ಹಬ್ಬ ಮಾಡಲಿಲ್ಲ. ಈಗ ಹಬ್ಬದ ಮೊದಲ ದಿನ ಮೇಡಿ ನೆಟ್ಟು ಬಾವುಟ ಹಾರಿಸುವುದಿಲ್ಲ. ಫ಼ಿರ್ಜಂತ ಇಲ್ಲ. ಆ ವೈಭವವಿಲ್ಲ. +ಆ ವೈಭವ ತನ್ನ ಬದುಕಿನಿಂದಲೂ ಈಗ ದೂರ. ಮಗಳು ಜೋಸೆಫ಼ಿನಾ ಪಾಸ್ಕುವನ್ನು ಮದುವೆಯಾಗುತ್ತೇನೆ ಎಂದಾಗ ಬೇಡವೆಂದೆ. ಸುತಾರಿ ಇನಾಸನ ಅಂತಸ್ತಿಗೂ ತನ್ನ ಅಂತಸ್ತಿಗೂ ತುಂಬಾ ಅಂತರವಿದೆ ಎಂದೆ. ಪಾಸ್ಕುವಿಗೆ ಬಡಗಿಯ ಕೆಲಸವಲ್ಲದೆ ಬೇರೆ ಕೆಲಸ ಗೊತ್ತಿಲ್ಲ. ಅದೂ ಇವನು ಮಾಡುವ ಕೆಲಸಕ್ಕೊಂದು ಗೌರವವಿದೆಯೇ? ಎಂದು ಕೇಳಿದೆ. ಈ ಸಂಬಂಧ ಬೇಡವೆಂದರೂ ಆಕೆ ಕೇಳಲಿಲ್ಲ. +“ಸರಿ ನಿನ್ನ ಹಣೆಬರಹ” ಎಂದೆ. +ಮಗಳ ಮದುವೆಯನ್ನಂತೂ ಚೆನ್ನಾಗಿಯೇ ಮಾಡಿದೆ. ಒಬ್ಬಳೇ ಮಗಳ ಮದುವೆಯಲ್ಲವೆ? ಆದರೆ ಇದೇ ತನಗೆ ಭಾರವಾಯಿತು. ಜವಳಿ ಅಂಗಡಿಯಲ್ಲಿ ಸಾಲ, ದಿನಸಿ ಅಂಗಡಿಯಲ್ಲಿ ಸಾಲ, ಭಗವಾನಜಿ ಹತ್ತಿರ ಹೆಂಡತಿ ರೀತಾಳ ಭೋರಿ ಮಣೆ ಸರ, ಕಾಸಿನ ಸರ, ಉಂಗುರ ಒಯ್ದಿಟ್ಟು ಸಾಲ ತಂದದ್ದೂ ಆಯಿತು. ಅಂಗಡಿ ಸಾಲ, ಜವಳಿ ಅಂಗಡಿ ಸಾಲವನ್ನೂ ತೀರಿಸಲು ಎರಡು ಮೂರು ವರ್ಷಗಳು ಬೇಕಾದವು. ನಡುವೆ ಜೊಸೆಫ಼ಿನಾ ಹೆರಿಗೆಗೆ ಬಂದಳು. ಮಗುವಿನ ಅಂಗಡಿಯಿಂದ ರೀತಳ ಒಡವೆ ಬಿಡಿಸಿಕೊಂಡು ಬರಲಾಗಲಿಲ್ಲ. +“ರೀತಾ..ಏನು ಹೀಗಾಯ್ತು ನಮ್ಮ ಪರಿಸ್ಥಿತಿ” ಎಂದು ಕಣ್ಣಲ್ಲಿ ನೀರು ತಂದು ಕೊಂಡಾಗ ಅವಳು- +“ಅವೆಲ್ಲ ಮಾಡಿಸಿದ್ದೇ ಕಷ್ಟ ಕಾಲಕ್ಕೆ ಇರಲಿ ಅಂತ ಅಲ್ವೆ?” ಎಂದು ತನಗೇನೆ ಸಮಾಧಾನ ಹೇಳಿದಳು. +ಮೆಜಾರಿಟಿಗೆ ಬಂದ ಮಗ ತನ್ನದೇ ಕೆಲಸವನ್ನು ಮುಂದುವರೆಸಿದ. ಸರಕಾರಿ ಶಾಲೆಗೆ ಸೇರಿಸಿದರೂ ಈತ ಓದಲಿಲ್ಲ. ಮಿಡಲ ಸ್ಕೂಲ್ ತನಕ ಹೋಗಿ ಬಿಟ್ಟ. ಈಗ ನಾಲ್ಕನೆ ದರ್ಜೆ ಗುತ್ತಿಗೆದಾರನಾಗಿ ಲೋಕೋಪಯೋಗಿ, ನೀರಾವರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಾನೆ. ರಸ್ತೆ ರಿಪೇರಿ, ಸರಕಾರಿ ಮನೆಗಳಿಗೆ ಸುಣ್ಣ ಬಣ್ಣ, ಕಾಲು ಸೇತುವೆ ನಿರ್ಮಾಣ. ಮೋರಿ ಕಟ್ಟುವುದು, ಕೆರೆ ರಿಪೇರಿ ಎಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾನೆ. ಸರಕಾರ ಕೊಡುವುದು ಅಲ್ಲಲ್ಲಿಗೆ ಸರಿ ಹೋಗುತ್ತದೆ. ಇದರಲ್ಲಿ ಕಛೇರಿ ಖರ್ಚು ಬೇರೆ. ಗುರ್ಕಾರ ಸಿಮೋನ ಈಗಲೂ ಊರ ಕ್ರೀಸ್ತುವರ ನಡುವೆ ತನ್ನ ಮೊದಲ ಸ್ಥಾನಮಾನಗಳನ್ನು ಉಳಿಸಿಕೊಂಡಿದ್ದಾನೆ. ಆದರೆ ತಾನು ಎಂದೋ ಒಂಭತ್ತನೆಯ ಸ್ಥಾನಕ್ಕೋ ಬಂದು ತಲುಪಿದ್ದೇನೆ. ಈ ಬೇಸರದಲ್ಲೇ ಮನೆಯಲ್ಲಿ ಕೂತಿರುತ್ತೇನೆ. ಪೇಟೆ ಕಡೆ ಹೋದರೆ ಬೋನನ ಅಂಗಡಿಗೆ ಹೋಗಿ ಬರುತ್ತೇನೆ. +ಅಳಿಯ ಮನೆ ಕಟ್ಟಿಸಲು ಆರಂಭಿಸಿದ ಮೇಲೆ ಕಾಲ ಕಳೆಯುವುದು ಕಷ್ಟವೆನಿಸುತ್ತಿಲ್ಲ. ಅಲ್ಲಿ ಹೋಗಿ ನಿಲ್ಲುತ್ತೇನೆ. ಒಂದು ಕಾಲದಲ್ಲಿ ತಾನು ಮಾಡಿದ ಕೆಲಸವೆ. ಆದರೆ ಈಗ ಎಲ್ಲ ಬದಲಾಗಿದೆ. ಒಂಬತ್ತು ಗಂಟೆಗೆ ಕೆಲಸದವರು ಬರುತ್ತಾರೆ. ಅವರು ಉಟ್ಟ ಪಂಚೆ ಬಿಚ್ಚಿ ಬೇರೆ ಉಡುಪು ಧರಿಸಿ ಕೆಲಸ ಆರಂಭಿಸುವುದು ಒಂಬತ್ತುವರೆಗೆ, ನಡುನಡುವೆ ಬೀಡಿ ಸೇದು, ಮಾತನಾಡು, ಹತ್ತೂವರೆಗೆ ಟೀ ಕುಡಿಯಲು ಹೋಗುತ್ತಾರೆ. ಒಂದು ಗಂಟೆಗೆ ಊಟ, ಮೂರು ಗಂಟೆಗೆ ಟೀ, ನಾಲ್ಕುವರೆಗೆಲ್ಲ ಕೆಲಸ ನಿಲ್ಲಿಸಿ ಹೊರಟರೆ. ಪಡಪೋಸಿ ಕೆಲಸ ಬೇರೆ. ಸಿಮೆಂಟು ಮಾರಿ ತಿಂದರು, ಮರಳು ಬೇರೆ ಕಡೆ ಸಾಗಿಸಿದರು. ವಾರದಲ್ಲಿ ಎರಡು ದಿನ ಬಾರದಿರುವುದೂ ಉಂಟು. ಹೀಗಾಗಿ ಜನ ಕ್ರೀಸ್ತುವರನ್ನು ಬಿಟ್ಟು ಬೇರೆಯವರನ್ನು ಕರೆಯುತ್ತಾರೆ. ಹಿಂದೆ ತಾನು, ಸಿಮೋನ, ಕೈತಾನ ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಎಷ್ಟೊಂದು ಶೃದ್ಧೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೆವಲ್ಲ. ಈಗ ಆ ಮನೋಭಾವವಿಲ್ಲ. ಕ್ರೀಸ್ತುವರಿಗೆ ಕೆಲಸ ಸಿಗದಿರಲು ಇದೂ ಒಂದು ಕಾರಣ. +ಸದ್ಯ ಅಳಿಯ ಯಾವ ಕ್ರೀಸ್ತುವರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈರ್ವರು ಮಲೆಯಾಳಿಗಳು, ಓರ್ವ ಊರಿನವನೇ. ತಾನು ಹೋಗಿ ಅಲ್ಲಿ ನಿಂತಿರುತ್ತೇನೆ. +ಅಳಿಯ ಬುದ್ದಿವಂತ ಆ ಸಣ್ಣ ಜಾಗದಲ್ಲಿಯೇ ಒಂದು ಮನೆ. ಅದರ ಮಗ್ಗುಲಲ್ಲಿ ಒಂದು ಮಳಿಗೆ ಕಟ್ಟಿಸುತ್ತಿದ್ದಾನೆ. ಉದ್ದೋ ಉದ್ದವಾಗಿರುವ ಈ ಮಳಿಗೆ ಏಕೆ ಅಂದರೆ- +“…ನನ್ನ ವಿಚಾರ ಏನೋ ಇದೆ ನೋಡೋಣ” ಅನ್ನುತ್ತಾನೆ. +ಮನೆ ಕೂಡ ಮಜಬೂತಾಗಿದೆ. ವ್ಹರಾಂಡ, ಹಾಲ್, ಮಲಗುವ ಕೋಣೆ, ಊಟದ ಕೋಣೆ, ಅಡಿಗೆ ಕೋಣೆ, ಹಿಂದೆ ಬಚ್ಚಲು, ಕಕ್ಕಸು ಎಂದು ಎಲ್ಲ ಅನುಕೂಲವಿರುವ ಮನೆ ಅಳಿಯನದು. ಹಿಂದೆ ತಾವೆಲ್ಲ ತಮಗಾಗಿ ಕಟ್ಟಿಕೊಳ್ಳುತ್ತಿದ್ದುದು ಬೇರೆಯದೇ ಆದ ರೀತಿಯ ಮನೆಗಳನ್ನು, ಜಗಲಿ ಅದು ದಾಟಿದರೆ ದೇವರ ಕೋಣೆ, ನಂತರ ಅಡಿಗೆ ಮನೆ, ಹಿತ್ತಲ ಅಂಚಿನಲ್ಲಿ ಕಕ್ಕಸು. ಕೆಲ ಮನೆಗಳಲ್ಲಿ ಎಮ್ಮೆ ಬಂದು ಬಾಯಿ ಹಾಕುವಂತಹ ಕಕ್ಕಸಿನ ಕಿಂಡಿ. ಕೆಲವು ಕಡೆಗಳಲ್ಲಿ ಆಳವಾದ ಹೊಂಡದ ಮೇಲೆ ಹಾಸಿದ ಚಪ್ಪಡಿ. ನಡುವೆ ದೊಡ್ದದೊಂದು ಕಿಂಡಿ. ಕೆಳಗೆ ಮಿಚುಗುಡುವ ಹುಳಗಳು. ಈಗ ಎಲ್ಲ ಬೇರೆ ಥರ. ಬೊಂಬಾಯಿ ಕಕ್ಕಸು ಬಂದ ನಂತರವಂತೂ ಮನೆಗಳು ಮತ್ತೂ ನಾಜೂಕು. ಪಾಸ್ಕು ಕಟ್ಟಿಸುತ್ತಿರುವ ಮನೆ ಕೂಡ ಇಂತಹದ್ದೆ, ಬೆಳಿಗ್ಗೆ ಸಂಜೆ ತಾನು ಅಲ್ಲಿಗೆ ಹೋಗುತ್ತೇನೆ. +“ನೀವು ಇಲ್ಲಿ ಇರತೀರಲ್ಲ” ಎಂದು ಹೇಳಿ ಅಳಿಯ ಹೊರಟು ಹೋಗುತ್ತಾನೆ. +ಪಾಸ್ಕೋಲ ಹೀಗೆ ಅಳಿಯನ ಮನೆಯ ಬಳಿ ನಿಂತಿರುವಾಗಲೇ ರಸ್ತೆಯ ಮೇಲೆ ಕೈತಾನ ಕಂಡು ಬಂದ. +“ಪಾಸ್ಕೋಲ ಮಾಮ ಹ್ಯಾಗೆ ಆರೋಗ್ಯ?” ಎಂದು ಕೇಳುತ್ತ ಕೈತಾನ ಪಾಸ್ಕೋಲನ ಬಳಿ ಬಂದ. +ಕೈತಾನನಿಗೆ ವಯಸ್ಸಾಗಿತ್ತು. ಈಗಂತೂ ಅವನು ಕೆಲಸಕ್ಕೂ ಹೋಗುತ್ತಿರಲಿಲ್ಲ. ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ನಂತರದ ಹೆರಿಗೆಗಳನ್ನು ಮಾಡಿ ಮಾಡಿ ಆತ ನಿತ್ರಾಣನಾಗಿ ಹೋಗಿದ್ದ. ಅವನ ಹೆಂಡತಿ ಕಾಸಿಲ್ಡ ಈಗ ದುಡಿದು ತಂದು ಗಂಡನನ್ನು ಮನೆಯಲ್ಲಿ ಉಳಿದ ಕೊನೆಯ ಮಗಳು ಪ್ರೆಸಿಲ್ಲಾಳನ್ನು ಸಾಕಬೇಕಿತ್ತು. +ಕಾಸಿಲ್ಡ ಮೂರು ನಾಲ್ಕು ಮನೆಯ ಕೆಲಸ ಮಾಡುತ್ತಿದ್ದಳು. ಫ಼ಾತಿಮಾ ನಗರದ ಅಲೆಕ್ಸ ಪಿಂಟೋ, ಜಾನ ಡಯಾಸ್, ರೈಲ್ವೆ ಇಲಾಖೆಯ ಇರುದನಾದನ ಮನೆಗಳಲ್ಲಿ ಎರಡು ಮೂರು ಗಂಟೆ ಅವಳು ಕೆಲಸ ಮಾಡುತ್ತಿದ್ದಳು. ಜಾನ ಡಯಾಸನ ಹೆಂಡತಿ ಸಿಲ್ವಿಯ ತೊಳೆದ ಪಾತ್ರೆಗಳನ್ನೇ ಎರಡೆರಡು ಬಾರಿ ತೊಳೆಯಲು ಹೇಳುತ್ತಿದ್ದಳು. ಮನೆಯನ್ನು ಎರಡು ಸಲ ಗುಡಿಸಿ ಒರೆಸಬೇಕು. ಪಿಂಟೋ ಹೆಂಡತಿ ಮಗ್ಗಿಬಾಯಿ ಕೂಡ ಹೀಗೆಯೇ. +“ಶಿಶಿಶಿ..ಏನಿದು ಪಾತ್ರೆ ತೊಳೆಯೋ ರೀತಿ? ನೀವು ನಿಮ್ಮ ಮನೇಲೂ ಹೀಗೇನೆ ಕೆಲಸ ಮಾಡುವುದ?” ಎಂದು ಮಾತು ಮಾತಿಗೆ ತಿವಿಯುತ್ತಿದ್ದಳು ಅವಳು. ಇರುದನಾದನ ಹೆಂಡತಿ ಪಾಪಮ್ಮ ಪಾಪದ ಹೆಂಗಸು- +“ಅಲ್ಲಿಷ್ಟು ಗುಡಿಸಿ ಬಿಡು ಕಾಶಿಲ್ಡ..ಬಟ್ಟೆ ನಾನು ಹಾಕತೇನೆ” ಅನ್ನುತ್ತಿದ್ದಳು. +ಪಿಂಟೋ, ಡಯಾಸ್ ಮನೆಯಲ್ಲಿ ಒಂದು ಲೋಟ ಕಾಫ಼ಿ ಕೂಡ ಇವಳಿಗೆ ಸಿಗುತ್ತಿರಲಿಲ್ಲ. ಪಾಪಮ್ಮ ಕಾಫ಼ಿ ತಿಂಡಿಕೊಟ್ಟು ಉಪಚರಿಸುತ್ತಿದ್ದಳು. ಈ ಮೂರು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಬಂದು ಕಾಸಿಲ್ಡ ಅಡಿಗೆ ಮಾಡಬೇಕಿತ್ತು. +ಮನೆಗೊಬ್ಬ ಮಗಬೇಕು ಎಂದು ಎಲ್ಲ ದೇವರುಗಳಿಗೂ ಹರಕೆ ಹೊತ್ತು ಹುಟ್ಟಿದ ಮಗ ಅವರ ಕೈಬಿಟ್ಟಿದ್ದ. ಊರಿನಲ್ಲಿ ಜನರ ಬಾಯಲ್ಲಿ ಚೌಡಪ್ಪ ಎಂದೇ ಜನಪ್ರಿಯ ನಾಗಿದ್ದ ದುಮಿಂಗ ಮದುವೆಯಾಗಿದ್ದೇ ಹೊರ ಹೋದ. ಅವನಿಗೆ ತಂದೆ ತಾಯಿಯ ನೆನಪು ಕೂಡ ಆಗುವುದಿಲ್ಲ. ಹೀಗಾಗಿ ಕಾಸಿಲ್ಡ ತನ್ನ ಗಂಡ, ಕೊನೆಯ ಮಗಳು ಪ್ರೆಸಿಲ್ಲಳ ಬದುಕಿಗೊಂದು ಆಧಾರವಾಗಿ ಕೆಲಸ ಹುಡುಕಿಕೊಂಡಳು. +ಸಂಜೆ ಅವಳಿಗೆ ಮಹಿಳಾ ಸಮಾಜದ ಕೆಲಸ. ಅಲ್ಲಿ ಕಸ ಹೊಡೆಯುವುದು, ಬರುವ ಸದಸ್ಯೆಯರ ಸಣ್ಣ ಪುಟ್ಟ ಕೆಲಸ ಮಾಡಿಕೊಡುವುದು. ಆಕೆ ಕೊಂಚ ನಯ ನಾಜೂಕು ಕಲಿತಳು. ತಿದ್ದಿ ತೀಡಿ ಸೀರೆ ಉಡ ತೊಡಗಿದಳು. +ಗಂಡ ಅಂಕೋಲ ಬಿಟ್ಟು ಇಲ್ಲಿಗೆ ಬಂದದ್ದು ಹಣ ಮಾಡಲೆಂಬುದು ಅವಳಿಗೆ ಗೊತ್ತಿತ್ತು. ಅವನಿಂದ ಹಣ ಮಾಡಲಂತೂ ಆಗಲಿಲ್ಲ. ಆದರೂ ತಾವು ಸುಖವಾಗಿದ್ದೆವು. ಈಗಲೂ ಮರ್ಯಾದೆಯಿಂದ ಇದ್ದೇವೆ. ಜಪ, ಪೂಜೆ, ಪ್ರಾರ್ಥನೆ, ಪಾಪ ನಿವೇದನೆ. ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುವುದಿಲ್ಲ. ಆದರೂ ಏನೋ ಆತಂಕ. ಮಗಳೊಬ್ಬಳಿದ್ದಾಳೆ. ಅವಳ ಮದುವೆ ಆದರೆ ಸಾಕು ಎಂಬ ಹಾರೈಕೆ. +ಪ್ರೆಸಿಲ್ಲಾ ಬುದ್ಧಿವಂತ ಹುಡುಗಿ. ಎಲ್ಲ ವಿಷಯಗಳಲ್ಲೂ ಚುರುಕು. ಸರಕಾರಿ ಪ್ರೌಢಶಾಲೆಗೇನೆ ಹೆಸರು ತರುವಂತೆ ಓದಿ ಮುಂದೆ ಬಂದಳು. ಶಿವಸಾಗರದ ಕ್ರೀಸ್ತುವರಲ್ಲಿ ಹೀಗೆ ಓದಿ ಬೇರೆಯವರ ಗಮನ ಸೆಳೆದವಳು ಪ್ರೆಸಿಲ್ಲ ಒಬ್ಬಳೆ. ಇದೀಗ ಕಾನ್ವೆಂಟ್ ಶಾಲೆಯಲ್ಲಿ, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಕ್ರೀಸ್ತುವರ ಮಕ್ಕಳು ಇದ್ದಾರಾದರೂ ತುಂಬಾ ಬುದ್ಧಿವಂತೆ ಎನಿಸಿಕೊಂಡವಳು ಪ್ರೆಸಿಲ್ಲಾ. +ಇದೇ ಕಾರಣದಿಂದಲೋ ಏನೋ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪ್ರೆಸಿಲ್ಲಾಳನ್ನು ಕರೆದು- +“..ಮುಂದೆ ಕೆಲಸ ಮಾಡುವ ಆಸೆ ಇದೆಯೇನಮ್ಮ ನಿನಗೆ” ಎಂದು ಕೇಳಿದರು. +ಯಾವ ಹುಡುಗಿಯೂ ಕೆಲಸಕ್ಕೆ ಹೋಗದ ಕಾಲ ಅದು. ಹೋದರೂ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ದೊರಕುತ್ತಿತ್ತು. ಪ್ರೆಸಿಲ್ಲ ಈ ದಿಕ್ಕಿನಲ್ಲಿ ವಿಚಾರ ಮಾಡಿರಲಿಲ್ಲ. ಅಕ್ಕಂದಿರ ಹಾಗೆಯೇ ಮದುವೆಯಾಗಿ ಹೋಗುವುದು ಎಂದವಳು ವಿಚಾರ ಮಾಡಿದ್ದಳು. ಆದರೆ ತನ್ನ ಮದುವೆಯ ನಂತರ ಅಪ್ಪ, ಅಮ್ಮನ ಗತಿ ಏನು ಎಂಬ ಪ್ರಶ್ನೆ ಅವಳನ್ನು ಕಾಡುತ್ತಿತ್ತು. ತಮ್ಮನಂತೂ ಅವರನ್ನು ನೋಡಿಕೊಳ್ಳುವುದಿಲ್ಲ. ಮುಂದೆ ಅವರ ಗತಿ? +“ಹೋಗತೀನ ಸಾರ” ಎಂದಳವಳು. +ಅವಳ ಅರ್ಜಿ ಶಿವಮೊಗ್ಗೆಯ ವಿದ್ಯಾ ಇಲಾಖೆಗೆ ಹೋಯಿತು. ಅಲ್ಲಿಂದ ಮಾರುತ್ತರಕ್ಕಾಗಿ ಕಾದಾಗ ಉತ್ತರ ಕೂಡ ಬಂದಿತು. +ಪ್ರೆಸಿಲ್ಲಾಳನ್ನು ಶಿವಮೊಗ್ಗೆಯ ಒಂದು ಕಡೆ ಸಂತಸ ಇನ್ನೊಂದು ಕಡೆ ಆತಂಕ. ಶಿವಮೊಗ್ಗೆಗೆ ಹೋಗಬೇಕು. ಅಲ್ಲಿ ವಾಸಿಸಬೇಕು. ದೊಡ್ಡ ಊರು. ಕೆಲಸ ಹೇಗೋ. ಹೀಗೆಂದು ಸಿಕ್ಕ ಕೆಲಸ ಬಿಡಲುಂಟೆ? ತಂದೆ ಕೆಲಸ ಮಾಡಲಾಗದೆ ಮನೆಯಲ್ಲಿ ಕೂತಿರುವಾಗ, ತಾಯಿ ಅವರಿವರ ಮನೆಗಳಲ್ಲಿ ದುಡಿಯುವಾಗ ತಾನು ಮನೆಬಾಗಿಲಿಗೆ ಬಂದ ಕೆಲಸವನ್ನು ತಿರಸ್ಕರಿಸುವುದೆ? +“ಬಾಬಾ…ನಾನು ಏನು ಮಾಡಲಿ?” ಎಂದು ತಂದೆಯನ್ನೇ ಕೇಳಿದಳು ಪ್ರೆಸಿಲ್ಲ. +“ಪದ್ರಾಬಾ ಅವರನ್ನ ಕೇಳಿ ಬರತೀನಿ” ಎಂದ ಕೈತಾನ ಮನೆ ಬಿಟ್ಟ. +ದಾರಿಯಲ್ಲಿ ಎದುರಾದ ಪಾಸ್ಕೋಲನ ಹತ್ತಿರವೂ ಈ ವಿಷಯ ಪ್ರಸ್ತಾಪ ಮಾಡಿದ. +“ಹೌದು? ಒಳ್ಳೆಯದಾಯ್ತು..ಪದ್ರಾಬ ಏನು ಹೇಳತಾರೋ ನೋಡು..ಕೊನೆಗಾಲದಲ್ಲಿ ನಿಮಗಂತೂ ಒಂದು ಆಧಾರ ಬೇಕಲ್ಲ” ಎಂದ ಪಾಸ್ಕೊಲ. +ಅವನಿಗೂ ಸಂತೋಷವಾಗಿತ್ತು. ಕೈತಾನನದು ಒಳ್ಳೆಯ ಕುಟುಂಬ. ಆದರೆ ಒಳ್ಳೆಯವರಿಗೇನೆ ಕಷ್ಟಗಳು ಹೆಚ್ಚಲ್ಲವೆ? +“ಹೋಗಿ ಬಾ..” ಎಂದು ಕೈತಾನನನ್ನು ಬೀಳ್ಕೋಟ್ಟ ಪಾಸ್ಕೊಲ. +* +* +* +ಇಗರ್ಜಿಯ ಗಂಟೆ ಮಧ್ಯಾಹ್ನದ ಪ್ರಾರ್ಥನಾ ಸಮಯವಾಯಿತು ಎಂಬುದನ್ನು ನೆನಪು ಮಾಡಿಕೊಟ್ಟಿತು. ಪಾಸ್ಕೊಲ ನಿಂತಲ್ಲಿಯೇ ಶಿಲುಬೆಯ ವಂದನೆ ಮಾಡಿದ. +ಒಂದೆರಡು ನಿಮಿಷಗಳಲ್ಲಿ ಮತ್ತೆ ಕೈತಾನ ಕಂಡ. ಉಟ್ಟ ಪಂಚೆಯ ಒಂದು ಚುಂಗನ್ನು ಕೈಯಲ್ಲಿ ಹಿಡಿದು ನಡೆದು ಬರುತ್ತಿದ್ದ. ನಡಿಗೆಯಲ್ಲಿ ಚುರುಕುತನವಿತ್ತು. ಲವಲವಿಕೆಯಿತ್ತು. ಮುಖದ ಮೇಲೆ ಬಹಳ ದಿನಗಳ ನಂತರ ಮೂಡಿ ಬಂದ ಮಂದಹಾಸ. +“ಕೈತಾನ ಮಾಮ ಕೆಲಸ ಹಣ್ಣೋ ಕಾಯೋ?” +“ಹಣ್ಣು ಪಾಸ್ಕೋಲ..ಹಣ್ಣು” +ಕೈತಾನ ನೇರವಾಗಿ ಪಾಸ್ಕೊಲನ ಬಳಿ ಬಂದ. +ಪಾದರಿ ಸಿಕ್ವೇರಾ ಅವನಿಗೆ ಭರವಸೆ ನೀಡಿದ್ದರು. ಸಿಸ್ಟರುಗಳು ನಡೆಸುವ ಹಾಸ್ಟೆಲಿನಲ್ಲಿ ಇರಲು ಪ್ರೆಸಿಲ್ಲಾಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು. +“ಪ್ರೆಸಿಲ್ಲಾ ಹೋಗಲಿ..ಸಿಕ್ಕ ಕೆಲಸವನ್ನು ಬಿಡೋದು ಬೇಡ..” ಎಂದಿದ್ದರು. +“ಮುಂದಿನ ವ್ಯವಸ್ಥೆ ಮಾಡಬೇಕಲ್ಲ..ಬರತೀನಿ” ಎಂದು ಕೈತಾನ ರಸ್ತೆಗೆ ಇಳಿದ. +“ಪಾಯಸ ಮಾಡಲಿಕ್ಕೆ ಹೇಳು ಕಾಸಿಲ್ಡ ಬಾಯಿಗೆ ..ನಾನು ಸಾಯಂಕಾಲ ಬರತೀನಿ” ಎಂದ ಪಾಸ್ಕೊಲ. +ದೇವರು ಒಂದು ಕುಟುಂಬವನ್ನು ಕಾಪಾಡಿದ. ಅವನಿಗೆ ಕೃತಜ್ಞತೆಗಳಿರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. +ಕೆಲಸಗಾರರು ಊಟದ ಸಮಯವಾಯಿತೆಂದು ಕೆಲಸ ನಿಲ್ಲಿಸಿದಾಗ ಪಾಸ್ಕೊಲನಿಗೆ ಚುರುಗುಟ್ಟುತ್ತಿರುವ ತನ್ನ ಹೊಟ್ಟೆಯ ನೆನಪಾಯಿತು. +-೮- +ಸಾನಬಾವಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದನಂತರ ಸಂಪೂರ್ಣ ಬದಲಾಗಿ ಹೋದಳು. ಆವರೆಗೆ ಪೆದ್ರುವಿನ ಮನೆಯಲ್ಲಿದ್ದು ಅವನ ಹೆಂಡತಿ ಅನ್ನಿಸಿಕೊಳ್ಳದೇ, ಇಟ್ಟುಕೊಂಡವಳು ಎಂಬ ಹೆಸರಿನಲ್ಲಿಯೇ ಕರೆಸಿಕೊಳ್ಳುತ್ತಿದ್ದ ಆಕೆ ಪಾದರಿ ಗೋನಸ್ವಾಲಿಸರ ಕೃಪೆಯಿಂದ ’ಹೆಂಡತಿ’ ಎಂಬ ಗೌರವಕ್ಕೆ ಪಾತ್ರಳಾಗಿಬಿಟ್ಟಳು. ಕೇರಿಯವರು ಅವಳನ್ನು ನೋಡುವ ರೀತಿ ಬೇರೆಯಾಯಿತು. ಮಾತನಾಡಿಸುವ ಧಾಟಿ ಬೇರೆಯಾಯಿತು. ಸಿಮೋನಿನ ತಾಯಿ ಅವಳನ್ನು ಧುವೇ(ಮಗಳೆ) ಎಂದು ಕರೆಯತೊಡಗಿದಳು. ಅವಳು ಕೇರಿಯ ಇತರರ ಪಾಲಿಗೆ ಬಾಯಿ (ಅಕ್ಕ) ಹುನ್ನಿ (ಅತ್ತಿಗೆ) ಮೌಸಿ (ಚಿಕ್ಕಮ್ಮ) ಎಲ್ಲ ಆದಳು. ಕೆಲ ಮಕ್ಕಳಿಗೆ ದೇವಮಾತೆಯೂ ಆಗಿ ಅವರಿಂದ ಮೊದೋನ ಎಂದು ಕರೆಸಿಕೊಳ್ಳತೊಡಗಿದಳು. ತಟ್ಟನೆ ತನ್ನ ಸ್ಥಾನಮಾನಗಳು ಬದಲಾದದ್ದು ಅವಳಿಗೆ ಸಂತೋಷವನ್ನು ತಂದಿತು. ಹೀಗೆಯೇ ಸಿಮೋನನ ಮಗಳು ಕಲಿಸಿದ ಜಪ ಮಂತ್ರಗಳು ಅವಳ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟವು. ಭಾನುವಾರ ಬಂತೆಂದರೆ ಎಲ್ಲ ಹೆಂಗಸರ ಹಾಗೆ ಅಚ್ಚುಕಟ್ಟಾಗಿ ಸೀರೆಯುಟ್ಟು, ತಲೆಯ ಮೇಲೆ ಸೆರಗು ಹೊದ್ದು ಎಲ್ಲರಿಗೂ ಮೊದಲು ಇಗರ್ಜಿಗೆ ಹೋಗತೊಡಗಿದಳು. ಅಲ್ಲಿ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುತ್ತಿರಲಿಲ್ಲ. ಅವಳ ಈ ಶೃದ್ಧೆ ಆಸಕ್ತಿ ಉಳಿದವರನ್ನು ಬೆರಗುಗೊಳಿಸುತ್ತಿತ್ತು. +“ನೋಡೇ..ಮೊನ್ನೆ ಮೊನ್ನೆ ನಮ್ಮ ಸಮೋಡ್ತಿನೊಳಗೆ ಬಂದವಳ..ಭಕ್ತಿ ನೋಡು” ಎಂದು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು. +ಸಾನಬಾವಿ ಪೆದ್ರು ಕೂಡ ಪ್ರತಿ ಭಾನುವಾರ ಇಗರ್ಜಿಗೆ ಹೋಗಲೇ ಬೇಕಾಯಿತು. ಮನೆಯಲ್ಲಿ ನಿತ್ಯ ಪ್ರಾರ್ಥನೆ ತಪ್ಪಲಿಲ್ಲ. ದೇವರ ಮುಂದೆ ಮೇಣದ ಬತ್ತಿ ಹಚ್ಚುವುದನ್ನು ರಂಗಿ ಯಾವತ್ತೂ ಮರೆಯುತ್ತಿರಲಿಲ್ಲ. +ಅವರಿಗೆ ಮತ್ತೂ ಅಚ್ಚರಿಯಾದುದೆಂದರೆ ಇಗರ್ಜಿಯಲ್ಲಿ ಮದುವೆಯಾಗುವುದಕ್ಕೂ ಮೊದಲು ಅವರು ಒಟ್ಟಿಗೇನೆ ಇದ್ದರು. ಗಂಡ ಹನುಮಂತನ ಹತ್ತಿರದ ಸಂಬಂಧಿ ವೀರಭದ್ರ ತನ್ನನ್ನು ಒಳಗೆ ಹಾಕಿಕೊಳ್ಳುವ ಯತ್ನ ಮಾಡಿದಾಗ ರಂಗಿ ಪೆದ್ರುವಿನಲ್ಲಿಗೆ ಓಡಿ ಬಂದು ಅವನ ಮನೆ ಸೇರಿಕೊಂಡಿದ್ದಳು. ಒಂದು ಗಂಡು ಒಂದು ಹೆಣ್ಣು ಅದೆಷ್ಟು ದಿನ ದೂರ ದೂರ ಇರಲು ಸಾಧ್ಯ. ಅದೊಂದು ರಾತ್ರಿ ತನಗೆ ಅರಿವಿಲ್ಲದೇನೆ ರಂಗಿ ಪೆದ್ರುವಿನ ತೋಳುಗಳಲ್ಲಿ ಸಿಲುಕಿ ಮೈ ಹಿಂಡಿದಂತಾಗಿ ದೇಹದ ನರನರಗಳಲ್ಲಿ ಬೆಂಕಿ ಪ್ರಜ್ವಲಿಸಿ, ಹೀಗೆ ಹೊತ್ತಿಕೊಂಡ ಬೆಂಕಿ ಪೆದ್ರುವಿನಿಂದ ನಂದಿಹೋಗಿ ಹಿತಕರವಾಗಿ ಆಕೆ ನರಳಿದ್ದಳು. ಆನಂತರ ಈ ಪ್ರಕರಣ ಮತ್ತೆ ಮತ್ತೆ ಮುಂದುವರೆದಿತ್ತು. ಇಷ್ಟಾದರೂ ಅವಳು ಗರ್ಭಿಣಿಯಾಗಿರಲಿಲ್ಲ. ಎಲ್ಲಿ ಏನಾಗುತ್ತದೋ ಎಂಬ ದಿಗಿಲು. ಅನೈತಿಕವಾಗಿ ಬದುಕುತ್ತಿರುವ ತನಗೆ ಮಗುವಾದರೆ ಅದೊಂದು ಆಪಾದನೆ ಹೊರಬೇಕಾದೀತೆ ಎಂಬ ಆತಂಕದಲ್ಲಿ ದಿನಗಳು ಉರುಳಿ ಹೋಗಿದ್ದವು. +ನಂತರ ಪಾದರಿ ಗೋನಸ್ವಾಲಿಸರು ಅವರನ್ನು ಗಂಡ ಹೆಂಡತಿ ಎಂದು ದೇವರ ಎದುರು ನಿಲ್ಲಿಸಿ ಆಶೀರ್ವದಿಸಿದ್ದರು. ಇದರ ನಂತರ ಪೆದ್ರು- +“..ಫ಼್ಲೊರಿನಾ..” ಎಂದು ಬೇರೆಯೆ ಆದ ರೀತಿಯಲ್ಲಿ ಅಪ್ಪಿ ಮುದ್ದಾಡಿದ್ದ. ಆನಂತರ ಅವಳು ಕೂಡ ಯಾವುದೇ ಭೀತಿ ಭಿಡೆ ಇಲ್ಲದೆ ಪೆದ್ರುವಿಗೆ ತನ್ನ ಮೈ ನೀಡಿದ್ದಳು. ಇದಾದ ಕೆಲವೇ ತಿಂಗಳುಗಳಲ್ಲಿ ಸುತಾರಿ ಇನಾಸನ ಹೆಂಡತಿ ಮೊನ್ನೆ ಫ಼್ಲೊರಿನಾ ಮನೆ ಹಿಂದಿನ ಮಂಟಪದ ಬಳಿ ವಾಂತಿ ಮಾಡುತ್ತ ಕುಳಿತಿರುವುದನ್ನು ಕಂಡು ಸಾಂತಾ ಮೊರಿಯನ್ನು ಕರೆತಂದಳು. +ಸಾಂತಾಮೋರಿ- +“ರಂಗೀ..ರಂಗೀ..ಏನಾಯ್ತು..ಏನಾಯ್ತು?” ಎಂದು ಕೇಳುತ್ತ ಓಡಿ ಬಂದಳು. +ಪೆದ್ರು ಇದು ದೇವರ ಕೃಪೆಯೇ ಹೌದು ಅಂದುಕೊಂಡ. ಫ಼್ಲೋರಿನಾಗೂ ಇದರಲ್ಲಿ ಅನುಮಾನ ಉಳಿಯಲಿಲ್ಲ. ಅಂದು ಗಂಡ ಹೆಂಡತಿ ಅಲ್ತಾರಿನ ಮುಂದೆ ನಿಂತು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಆರು ತಿಂಗಳ ನಂತರ ಪೆದ್ರುವಿನ ಹಾಗೆಯೇ ಗಟ್ಟಿ ಮುಟ್ಟಾಗಿದ್ದ. ಆದರೆ ರಂಗಿಯ ಬಣ್ಣ ಕಸಿದುಕೊಂಡ ಮಗ ಮನೆಯಲ್ಲಿ ಹುಟ್ಟಿದ. +ಹೆರಿಗೆ ಮಾಡಿಸಲೆಂದು ಬಂದ ವೈಜೀಣ್ ಕತ್ರೀಣ್ ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸುತ್ತ- +“..ಆಂಜ್ ಬೊಡ್ವೊ (ದೇವದೂತ) ಬಂದಿದ್ದಾನೆ ನಿಮ್ಮ ಮನೆಗೆ..ತುಂಬಾ ಮುದ್ದಾಗಿದ್ದಾನೆ..” ಎಂದು ಕೂಗಿ ಹೇಳಿದ್ದು ನೋವಿನಲ್ಲೂ ಕಿವಿಗೆ ಬಿದ್ದು ರಂಗಿಯ ಮುಖ ಅರಳಿತ್ತು. ಟೋಲ್ ನಾಕಾದ ಆ ಮನೆಯನ್ನು ಬಿಟ್ಟು ಬಂದ ತನ್ನ ಬದುಕು ಈ ಪರಿಯಲ್ಲಿ ಹಿಗ್ಗಿದ್ದನ್ನು ಕಲ್ಪಿಸಿಕೊಂಡು ಅವಳು ಸಂತಸಪಟ್ಟಳು. ಏಸು ಮರಿ ಜೋಸೆಫ಼ರ ಮೇಲಿನ ಅವಳ ಭಕ್ತಿ ಮತ್ತೂ ಅಧಿಕವಾಯಿತು. +ಮಗನಿಗೆ ನಲವತ್ತನೇ ದಿನ ನಾಮಕರಣಕ್ಕೆಂದು ಕೊಂಡೊಯ್ದಾಗ ಪಾದರಿ ಮಗು ಹುಟ್ಟಿದ ತಾರೀಕು ಕೇಳಿದರು. ಕ್ರಿಶ್ಚಿಯನ್ ಕ್ಯಾಲೆಂಡರ್ ನೋಡಿ ಮಗು ಹುಟ್ಟಿದ ದಿನವೆ ಸಂತ ಗ್ರೆಗೋರಿ ಕೂಡ ಹುಟ್ಟಿದ್ದರಿಂದ ಮಗುವಿನ ಹುಟ್ಟಿದ ದಿನದ ಹೆಸರು ಗ್ರೆಗೋರಿ ಎಂದರು. ಪೆದ್ರುವಿಗೆ ತನ್ನ ಅಜ್ಜನ ಹೆಸರನ್ನು ಮಗುವಿಗೆ ಇಡಬೇಕೆಂದಿತ್ತು. ಅದನ್ನೂ ಆತ ಗೋನಸ್ವಾಲಿಸರಿಗೆ ಹೇಳಿದಾಗ ಅವರು ಇಡೋಣ ಎಂದರು. ಮಗುವಿನ ದೇವ ಪಿತ ದೇವ ಮಾತೆಯಾಗಲು ಅಂಕೋಲಾದ ಕೈತಾನ ಅವನ ಹೆಂಡತಿ ಕಾಸಿಲ್ಡ ಮುಂದೆ ಬಂದರು. ಇಗರ್ಜಿಯಲ್ಲಿ ಸಾನಬಾವಿ ಪೆದ್ರುವಿನ ಮಗನಿಗೆ ಗ್ರೆಗೋರಿ ಫ಼್ರಾನ್ಸಿಸ್ ಎಂದು ನಾಮಕರಣ ಮಾಡಲಾಯಿತು. ಬೋನ ಇಗರ್ಜಿಯ ಗಂಟೆ ಬಾರಿಸಿ ಊರಿಗೆಲ್ಲ ಸುದ್ದಿ ತಿಳಿಸಿದ. ಅಂದು ಸಣ್ಣ ಪ್ರಮಾಣದ ಒಂದು ಊಟ ಕೂಡ ಪೆದ್ರುವಿನ ಮನೆಯಲ್ಲಿ ಇತ್ತು. ಸಾನಬಾವಿ ಪೆದ್ರುವಿನ ಮನೆತನದ ಹೆಸರು ಡಿಸೋಜ ಆಗಿದ್ದರಿಂದ ಅವನ ಮಗ ಗ್ರೆಗೋರಿ ಫ಼್ರಾನ್ಸಿಸ್ ಡಿಸೋಜಾ ಎಂದೇ ಸರಕಾರಿ ಶಾಲೆಯಲ್ಲಿ ದಾಖಲಾದ. +ಸಾನಬಾವಿ ಪೆದ್ರು ಶಿವಸಾಗರಕ್ಕೆ ಬಂದ ಸಿಮೋನ, ಪಾಸ್ಕೊಲ ಇನಾಸ ಇವರೆಲ್ಲರಿಗಿಂತ ಏಳೆಂಟು ವರ್ಷ ಕಿರಿಯನಾಗಿದ್ದ. ಅವನು ಮದುವೆಯಾದದ್ದೂ ತಡವಾಗಿ, ಮಗು ಹುಟ್ಟಿದ್ದು ಮತ್ತು ತಡವಾಗಿ. ಹೀಗಾಗಿ ಅವನ ಮಗ ಗ್ರೆಗೋರಿ ಪ್ರೌಢಶಾಲೆಗೆ ಬಂದಾಗ ಪಾದರಿ ಗೋನಸ್ವಾಲಿಸ್ ಹೊರಟು ಹೋಗಿ ಪಾದರಿ ಮಸ್ಕರಿನಾಸ ಊರಿಗೆ ಬಂದು ಎರಡು ಮೂರು ವರ್ಷಗಳಾಗಿದ್ದವು. ಮಕ್ಕಳನ್ನು ಓದಿಸಿ ಓದಿಸಿ ಎಂಬ ಮಾತನ್ನು ಇವರೂ ಹೇಳುತ್ತಿದ್ದರು. +ಪೆದ್ರುಗೆ ಮಗನ ಓದಿನ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. +“ಈ ಇಜಾರ ಪಜಾರ ಹಾಕಿಕೊಂಡವರು ಏನು ದುಡೀತಾರೆ ಮಾರಾಯ..ನಮ್ಮಷ್ಟು ದುಡೀತಾರ ಅವರು?” ಎಂದು ವಿದ್ಯಾವಂತರನ್ನು ತಿರಸ್ಕಾರದಿಂದ ನೋಡುತ್ತಿದ್ದ. +ಆದರೆ ಫ಼್ಲೋರಿನಾಗೆ ಮಗ ಓದಿ ಆಫ಼ೀಸರ ಆಗಬೇಕು ಎಂಬ ಆಸೆ. ಹೀಗೆಂದೇ ಅವಳು ಮಗನ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ದಳು. ಆತ ಶಾಲೆಗೆ ತಪ್ಪಿಸಿಕೊಳ್ಳಬಾರದು, ಮನೆಯಲ್ಲಿ ಚೆನ್ನಾಗಿ ಓದಬೇಕು. ಸಂಜೆ ಪ್ರಾರ್ಥನೆಯ ಗಂಟೆ ಆಗುತ್ತಿದೆ ಅನ್ನುವಾಗ ಎಲ್ಲೇ ಇರಲಿ ಮನೆಗೆ ಬರಬೇಕು. ಕೈಕಾಲು ಮುಖ ತೊಳೆದು ಅಮೋರಿ ಮಾಡಿ ಓದಲು ಕೊಡಬೇಕು. ಒಂಬತ್ತು ಗಂಟೆಯ ತನಕ ಸೀಮೆ ಎಣ್ಣೆ ದೀಪ ಎದುರು ಇರಿಸಿಕೊಂಡು ಓದು. ಮತ್ತೆ ಬೆಳಗಿನ ಪ್ರಾರ್ಥನೆಯ ಗಂಟೆ ಆದಾಗ ಏಳಬೇಕು. ಮತ್ತೆ ಓದು. ವಯಸ್ಸಿಗೆ ಅನುಗುಣವಾಗಿ ಜ್ಞಾನೋಪದೇಶ ಕಲಿಸಿದಳು. ಪ್ರಥಮ ದಿವ್ಯ ಪ್ರಸಾದ ಸ್ವೀಕಾರ ಸಮಾರಂಭವನ್ನು ಚೆನ್ನಾಗಿಯೇ ಮಾಡಿದಳು. ಮಗನಿಗೆ ಬಿಳಿ ಉಡುಗೆ ತೊಡಿಸಿ ತಲೆಗೊಂದು ಹೂ ಕಿರೀಟವಿರಿಸಿ, ಕೈಗೆ ಮೇಣದ ಬತ್ತಿ ಕೊಟ್ಟು ದಿವ್ಯ ಪ್ರಸಾದ ಸ್ವೀಕಾರ ಸಮಾರಂಭ ಮುಗಿಸಿ, ತಾನೇ ಮಗನನ್ನು ಮನೆ ಮನೆಗೆ ಕರೆದೊಯ್ದು ಹಿರಿಯರಿಂದ ಆಶೀರ್ವಾದ ಮಾಡಿಸಿದಳು. +ಅವಳಿಗೊಂದು ಆಸೆ. ಟೋಲನಾಕಾದ ಬಳಿಯ ಅವರ ಹತ್ತಿರದ ಬಂಧು ಬಳಗದವರು ಅವಳನ್ನು ಅವಳ ಮಗ ಗಂಡನನ್ನು ಗಮನಿಸುತ್ತಿದ್ದರು. ಅವರ ಸ್ಥಿತಿಗತಿಯಲ್ಲಿ ಅಂತಹ ಬದಲಾವಣೆಗಳಾಗಿರಲಿಲ್ಲ. ಹಿಂದಿನಂತೆಯೇ ಬಡತನದಲ್ಲಿ ಕಲ್ಲು ಮಣ್ಣಿನ ಕೆಲಸ ಮಾಡುತ್ತ ಅವರಿದ್ದರು. ಅವರ ಮುಂದೆ ತನ್ನ ಮಗ ಮೆರೆಯಬೇಕು. ಊರಿನಲ್ಲಿ ಒಂದು ಒಳ್ಳೆಯ ನೌಕರಿ ಪಡೆದು ಭಲೆ ಅನಿಸಿಕೊಳ್ಳಬೇಕು ಎಂದೆಲ್ಲ ಅವಳು ಬಯಸಿದಳು. ಅವಳ ಬಯಕೆಯಂತೆಯೇ ಮಗ ಗ್ರೆಗೋರಿ ಓದುತ್ತಿದ್ದ ಕೂಡ. +ಸಾನಬಾವಿ ಪೆದ್ರುವಿನಲ್ಲಿ ಈಗಲೂ ಕೆಲಸ ಮಾಡುವ ಶಕ್ತಿ ಇತ್ತು. ಸಿಮೋನ, ಇನಾಸ ಮುದುಕರಾಗಿದ್ದರೂ ಈತ ಅಲ್ಲಿ ಇಲ್ಲಿ ಕೆಲಸ ಹಿಡಿದು ಮಾಡಿಸುತ್ತ, ತಾನೂ ಮಾಡುತ್ತ ಪೆದ್ರು ಮೇಸ್ತ್ರಿ ಅನ್ನುವ ಹೆಸರು ಉಳಿಸಿಕೊಂಡಿದ್ದ. ಫ಼್ಲೊರಿನಾ ಕೂಡ ಕೆಲಸ ಮಾಡಿಕೊಂಡಿದ್ದವಳೆ. ಪೆದ್ರು ಮನೆ ಸೇರಿದ ನಂತರವೂ ಅವಳು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ಹಿಂದೆಲ್ಲ ಕಟ್ಟಡ ಕೆಲಸಕ್ಕೇ, ಸುಣ್ಣ ತೆಗೆಯಲು ಹೋಗುತ್ತಿದ್ದವಳು ಈಗ ಮೀನು ತೆಗೆದುಕೊಂಡು ಹಳ್ಳಿಗಳಿಗೆ ಹೋಗುತ್ತಾಳೆ. ಅವಳ ಜತೆ ಕೇರಿಯ ಮತ್ತೂ ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಹತ್ತಿರದ ಐದಾರು ಹಳ್ಳಿಗಳಿಗೆ ಹೋಗುವುದು. ಹಳ್ಳಿ ಹೆಂಗಸರು ತಮಗೆ ಬೇಕಾದ ಒಣ ಬಂಗಡೆ, ಸೊರಲು, ಮೋರಿ ಮೀನು ಕೊಂಡು ಭತ್ತ ಕೊಡುತ್ತಾರೆ. ಹೋಗುವಾಗ ಮೀನು ಕೊಂಡೊಯ್ದರೆ ಬರುವಾಗ ಭತ್ತ ತುಂಬಿಕೊಂಡು ಬರುತ್ತಾರೆ. ಕೆಲಬಾರಿ ಮೀನು ಕೊಟ್ಟು ಸುಗ್ಗಿಯಲ್ಲಿ ಭತ್ತ ತರುತ್ತಾರೆ. ಹತ್ತು ಹದಿನೈದು ಮೈಲಿ ಫ಼ಾಸಲೆಯಲ್ಲಿರುವ ಹಳ್ಳಿಗಳಿಗೆ ಹೋಗಿ ಬರುವುದಕ್ಕೆ ಒಂದು ಎರಡು ಗಂಟೆಯಾಗುತ್ತದೆ. +ಮನೆಗೆ ತಂದ ಭತ್ತವನ್ನು ಕುದಿಸಬೇಕು, ಬೇಯಿಸಿದ ಭತ್ತವನ್ನು ಒಣಹಾಕ ಬೇಕು. ನಂತರ ಮಿಲ್ಲಿಗೆ ಕೊಂಡೊಯ್ದು ಅಕ್ಕಿ ಮಾಡಿಸಬೇಕು. ಇಷ್ಟು ಮಾಡಿದ ನಂತರ ಪರಿಮಳ ಬೀರುವ ಕುಸುಬಲು ಅಕ್ಕಿ ದೊರೆಯುತ್ತದೆ. ಮಳೆಗಾಲಕ್ಕೆ ಅಕ್ಕಿಯ ಸಮಸ್ಯೆ ಬಗೆಹರಿಯುತ್ತದೆ. +ಹಳ್ಳಿಗಳಿಗೆ ಹೊರಡುವಾಗ ಹೆಂಗಸರೆಲ್ಲ ಒಟ್ತಿಗೇನೆ ಹೋಗುತ್ತಾರೆ. ಊರ ಟೋಲಗೇಟಿನ ಬಳಿ ಮುಖ್ಯ ರಸ್ತೆ ಕಾಲು ದಾರಿಗಳಾಗಿ ಒಡೆದುಕೊಳ್ಳುತ್ತದೆ. ಒಂದೊಂದು ಹಳ್ಳಿ ಒಂದೊಂದು ದಿಕ್ಕಿಗೆ ಇದ್ದುದರಿಂದ- +“ಬರತೀನಿ ಕತ್ರೀನ” +“ಬರತೀನಿ ಮೇರಿ” +” ಬರತೀನಿ ರಂಗಿ” ಎಂದು ಕೂಗಿ ಹೇಳಿ ಎಲ್ಲ ಚದುರುತ್ತಾರೆ. ಆದರೆ ಮೀನು ಹೊತ್ತು ಅಷ್ಟು ದೂರ ಹೋದ ರಂಗಿ ಗಕ್ಕನೆ ತಿರುಗಿ ನಿಲ್ಲುತ್ತಾಳೆ. +“ಮೇರಿ..ನಿನಗೆ ಹೇಳಿದ್ದಲ್ವ?” +“ಏನು..ನೀನು ಹೇಳಿದ್ದು..” +“ನನ್ನ ರಂಗಿ ಅಂತ ಕರೀಬೇಡ ಅಂತ..” +“ಓ! ಮರೆತು ಹೋಯ್ತು ಕಣೆ ರಂಗಿ..” +ಮತ್ತೆ ಈರ್ವರೂ ನಗುತ್ತಾರೆ. +“ನಿನ್ನ ನಾಲಿಗೆಗೆ ಬರೆ ಹಾಕಬೇಕು ನೋಡು” ಅನ್ನುತ್ತಾಳೆ ಫ಼್ಲೊರಿನಾ ಮುಂಡಿಗೆ ಪೊದೆಗಳ ಆಚೆಗೆ ಮರೆಯಾಗುತ್ತ. +ಬಿದ್ರಳ್ಳಿಗೆ ಹೋಗುವ ಕಾಲುದಾರಿ ಹಿಡಿದಾಗ ಶಾಲೆಗೆ ಹೊರಟ್ಯ ಮಕ್ಕಳು ಎದುರಾಗುತ್ತಾರೆ. +“ಶಾಲೆಗಾ?” ಎಂದು ಕೇಳುತ್ತಾಳೆ ಫ಼್ಲೊರಿನಾ. ಮಕ್ಕಳು ಗುರುತಿದ್ದುದರಿಂದ ಹೌದು ಎಂದು ಹೇಳಿ ಮುಂದಾಗುತ್ತಾರೆ. +ಇವಳಿಗೆ ಮಗನ ನೆನಪಾಗುತ್ತದೆ. +ಮಗ ಸದಾ ಓದುತ್ತಿರುತ್ತಾನೆ. ಶಾಲೆಯ ಪುಸ್ತಕಗಳನ್ನು ಮಾತ್ರವಲ್ಲ ಬೇರೆ ಬೇರೆ ಪುಸ್ತಕಗಳನ್ನು ತಂದು ಓದುತ್ತಾನೆ. +ಮೊನ್ನೆ ಮನೆ ಮಂತ್ರಿಸಲು ಬಂದ ಪಾದರಿ ಸಿಕ್ವೇರಾ ಮಗ ಮೇಜಿನ ಮೇಲೆ ರಾಶಿ ಹಾಕಿರುವ ಪುಸ್ತಕಗಳನ್ನು ತಿರುವಿ ಹಾಕಿ- +“ಏನು ಗ್ರೆಗೋರಿ ಇವುಗಳನ್ನೆಲ್ಲ ಓದುತ್ತಾನ? ” ಎಂದು ಕೇಳಿದರು. +“ಹೌದು ಪದ್ರಾಬ..ಅವನಿಗೆ ಓದುವ ಹುಚ್ಚು. ಊಟ, ನಿದ್ದೆ ಕೂಡ ಬಿಟ್ಟು ಓದುತ್ತಾನೆ..” ಎಂದೆ. +“ಪ್ರಾರ್ಥನೆ ಜಪ ಎಲ್ಲ ಮಾಡತಾನೆ ಅಲ್ವೆ?” ಎಂದವರು ಕೇಳಿದರು. +“ಅದನ್ನ ಮರೆಯೋದಿಲ್ಲ..ಮನೇಲಿ ಪ್ರಾರ್ಥನೆ ಹೇಳಿ ಕೊಡುವವನೇ ಅವನು” ಎಂದೆ. +“ಓದಲಿ..ಓದಲಿ..ಏನು ಬೇಕಾದರೂ ಓದಲಿ. ಆದರೆ ಜಪ ಪ್ರಾರ್ಥನೆ ಇಗರ್ಜಿಗೆ ಬರೋದು ಬಿಡಬಾರದು. ದೈವ ಭಕ್ತಿ, ದೈವ ಭೀತಿ ಇರಬೇಕು.” +“ನಮ ಹುಡುಗ ಹಾಗಲ್ಲ ಪದ್ರಾಬಾ” ಎಂದಿದ್ದೆ ತಾನು. +ಆ ಭರವಸೆ ತನಗಿದೆ. ಮಗ ಗ್ರೆಗೋರಿ ದೇವರ ಮೇಲೆ ನಂಬಿಕೆ ಭಕ್ತಿ ಇರಿಸಿಕೊಂಡೇ ದೊಡ್ಡ ಮನುಷ್ಯನಾಗುತ್ತಾನೆ. ನಮಗೆ ಒಳ್ಳೆಯದಾಗಬೇಕು ಅಂದರೆ ದೇವರ ಕೃಪೆ ಬೇಕಲ್ಲವೇ? +ಬಿದ್ರಳ್ಳಿಯ ಹನುಮಂತ ದೇವರ ಗುಡಿಯ ಮುಂದೆ ಇವಳು ಊರನ್ನು ಪ್ರವೇಶಿಸುತ್ತಾಳೆ. ಅವಳನ್ನು ನೋಡಿದ್ದೆ ಹಳ್ಳಿ ಹೆಂಗಸರು- +“ಬಾ ಫ಼್ಲೋರಿ ನಮ್ಮ..ಹೋದವಾರ ನೀ ಬರ್ಲೇ ಇಲ್ಲ” ಎಂದು ಕೇಳುತ್ತಾರೆ. +* +* +* +ಬೋನ ರೆಮೇಂದಿಯರ ಮಗ ಫ಼ಿಲಿಪ್ಪ ಮಾತ್ರ ಸಾನಬಾವಿ ಪೆದ್ರುವಿನ ಮಗನಿಗಿಂತ ಚಿಕ್ಕವ. ಪ್ರೌಢಶಾಲೆ ಮುಗಿಸಿದ ಮಗ ಆಗಾಗ್ಗೆ ಬಂದು ಅಂಗಡಿಯಲ್ಲಿ ಕೂಡುವುದು ತುಸು ಅನುಕೂಲಕರವೆನಿಸಿತು ಬೋನನಿಗೆ. ಅವನಿಗೂ ಈಗ ವಯಸ್ಸಾಗುತ್ತ ಬಂದಿತ್ತಲ್ಲವೆ? +ಹೆಂಡತಿ ರೆಮೇಂದಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಬೋನನಿಗೆ ಅವಳ ಮೇಲಿನ ಆಸಕ್ತಿ ಒಂದಿಷ್ಟು ಕಡಿಮೆಯಾಗಿರಲಿಲ್ಲ. ಮದುವೆಯಾಗಿ ಈಗ ಹಲವು ವರ್ಷಗಳಾಗಿದ್ದರೂ ರೆಮೇಂದಿ ಹಿಂದಿನಂತೆಯೇ ಉತ್ಸಾಹದ ಬುಗ್ಗೆಯಾಗಿದ್ದಳು. ಫ಼ಿಲಿಪ್ಪ ಹುಟ್ಟುವುದಕ್ಕೂ ಮೊದಲು ಒಂದು ಬಾರಿ ಮೈ ಇಳಿದು ಕತ್ರೀನ ಬಂದು ಅವಳನ್ನು ನೋಡಿಕೊಂಡಿದ್ದಳು. ಫ಼ಿಲಿಪ್ಪ ಹುಟ್ಟಿದಾಗ ಬಾಣಂತನ ಮಾಡಿದವಳು ಕೂಡ ಅವಳೇನೆ. ಆದರೆ ಮತ್ತೆ ಕೆಲ ವರ್ಷಗಳ ಹಿಂದೆ ಎರಡನೇ ಬಾರಿ ಮೈ ಇಳಿದಾಗ ಕತ್ರೀನಬಾಯಿ ಇರಲಿಲ್ಲ. ಊರ ತುಂಬ ನರ್ಸಿಂಗ ಹೋಂಗಳು ಆದದ್ದು ಒಂದು ಕಾರಣವಾದರೆ ಕತ್ರೀನಬಾಯಿ ಮನೆ ಜಗಲಿಯ ಮೇಲೆ ಕುಳಿತು ಜಪಸರದ ಮಣೆ ಎಣಿಸುತ್ತಲೇ ಪ್ರಾಣ ಬಿಟ್ಟದ್ದು ಮತ್ತೊಂದು ಕಾರಣವಾಗಿತ್ತು. +ಇಷ್ಟಾದರೂ ರೆಮೇಂದಿ ಸೊರಗಿಲ್ಲ. +ಪಾದರಿ ಗೋನಸ್ವಾಲಿಸ್ ಇದ್ದಾಗ ಅಡಿಗೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದ ರೆಮೇಂದಿ ಅಂದು ಹೇಗಿದ್ದಳೋ ಇಂದೂ ಹಾಗೆಯೇ ಇದ್ದಾಳೆ. ಆದರೆ ಅವಳಲ್ಲಿ ಏನೋ ಗಾಂಭೀರ್ಯ ಬಂದಿದೆ. ನಡೆಯುವಾಗ ಆ ಚೆಲ್ಲುತನವಿಲ್ಲ. ನಿಧಾನವಾಗಿ ತೂಗಿ ನೋಡಿ ಹೆಜ್ಜೆ ಹಾಕುತ್ತಾಳೆ. ತಂದೆ ಸತ್ತ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನೂ ಕಳೆದುಕೊಂಡ ಆಕೆಯ ಮೇಲೆ ಮನೆಯನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯೂ ಬಿದ್ದು ಈ ಗಾಂಭೀರ್ಯ ಬಂದು ಅವಳಲ್ಲಿ ಸೇರಿಕೊಂಡಿದೆ. +ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅವಳಲ್ಲಿ ಬೇಸರವಿದೆ. +ಬಟ್ಲರ ಫ಼ರಾಸ್ಕನ ಆಗಮನದ ನಂತರದ ಕಾಣಿಕೆ ಡಬ್ಬಿಯ ಪ್ರಕರಣ. ನಂತರ ವಲೇರಿಯನ ಡಯಾಸ ಮಿರೋಣ್ ಆದದ್ದು ಅವಳ ಮನಸ್ಸಿಗೆ ಬಂದಿಲ್ಲ. ಇದು ತನ್ನ ಗಂಡನಿಗೆ ಮಾಡಿದ ಅವಮಾನವೆಂದೇ ಅವಳು ತಿಳಿದುಕೊಂಡಿದ್ದಾಳೆ. +” ಇದನ್ನೆಲ್ಲ ನೀವು ಸುಮ್ನೆ ಸಹಿಸಿಕೊಂಡು ಹೋಗಬಾರದು” ಎಂದು ಹಲವು ಬಾರಿ ಹೇಳಿದ್ದಾಳೆ. +ಹಿಂದೆ ಬಟ್ಲರ ಹೆಂಡತಿ ಎಂದು ಕರೆಸಿಕೊಳ್ಳಲು ಕೊಂಚ ಹಿಂಜರಿಯುತ್ತಿದ್ದ ಆಕೆ ಈಗ ಜವಳಿ ಅಂಗಡಿ ಸಾಹುಕಾರನ ಹೆಂಡತಿ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಾಳೆ. +ಗಂಡ ಮನೆಗೆ ಬಂದು ಊಟ ಮುಗಿಸಿ ಮತ್ತೆ ಅಂಗಡಿಗೆ ಹೊರಟಾಗ ರೇಮೇಂದಿ- +“ಏನು ಬಿಸಿಲಲ್ಲಿ ಹೊರಟು ಬಿಟ್ರಿ” ಎಂದು ತುಸು ಧ್ವನಿ ಏರಿಸುತ್ತಿದ್ದಳು. +“ಬಾಳಾ..ಮಧ್ಯಾಹ್ನದ ನಂತರ ನೀನು ಸ್ವಲ್ಪ ಅಂಗಡಿ ನೋಡಿಕೋ” ಎಂದು ಮಗನಿಗೆ ಹೇಳುತ್ತಿದ್ದಳು. +ಆತ ಕೂಡ ವ್ಯಾಪಾರದಲ್ಲಿ ಪಳಗಿದ್ದ. +ಜವಳಿ ಅಂಗಡಿ ಈಗ ವಿಸ್ತಾರಗೊಂಡಿತ್ತು. ಅಂಗಡಿಯಲ್ಲಿ ಮೂರು ನಾಲ್ಕು ಜನ ಹುಡುಗರೂ ಇದ್ದರು. ತನ್ನ ನಂತರ ಯಾರಾದರೂ ಅಂಗಡಿ ನೋಡಿಕೊಳ್ಳಲು ಬೇಕಲ್ಲ ಎಂದು ಬೋನ ಮಗನನ್ನು ಕಾಲೇಜಿಗೆ ಕಳುಹಿಸಲಿಲ್ಲ. ಅದು ಈಗ ಅನುಕೂಲವೇ ಆಯಿತು. +ಊಟ ಮಾಡಿ ಮಲಗಿಕೊಂಡ ಬೋನ ನಾಲ್ಕು ಗಂಟೆಗೆ ಏಳುತ್ತಾನೆ. ರೆಮೇಂದಿ ಬಿಸಿಬಿಸಿ ಕಾಫ಼ಿ ಮಾಡಿ ತಂದು ಗಂಡನ ಕೈಗೆ ಕೊಡುತ್ತಾಳೆ. +ಆತ ಹೊರ ಹೋಗಲು ಸಿದ್ಧನಾಗುತ್ತಿರಲು ರೇಮೇಂದಿ ಒಂದೆರಡು ಸಾಮಾನಿನ ಹೆಸರು ಹೇಳಿ- +“ಬಾಳು ಕೈಲಿ ಈ ಸಾಮಾನು ಕಳಿಸಿಕೊಡಿ” ಅನ್ನುತ್ತಾಳೆ. +“ಮತ್ತೆ?” ಎಂದು ಅವಳ ಮುಖ ನೋಡುತ್ತಾನೆ ಬೋನ. +“ಏನದು?” ಹೊಸದಾಗಿ ನೋಡತಿದೀರೋ ಹೇಗೆ ನನ್ನನ್ನು ? ಅವಳು ಕೆಣಕುತ್ತಾಳೆ. +“ನೀನು ನನಗೆ ಯಾವತ್ತೂ ಹೊಸಬಳೆ” ಎಂದು ನಗುತ್ತಾನೆ ಬೋನ. +ರಸ್ತೆಯುದ್ದಕ್ಕೂ ಹಲವರನ್ನು ಮಾತನಾಡಿಸುತ್ತ ಬೋನ ಅಂಗಡಿಗೆ ಬರುತ್ತಾನೆ. +ಮಗನ ಎದುರು ಕುಳಿತು ನಗುತ್ತಿದ್ದ ಹುಡುಗಿಯೊಬ್ಬಳು ಧಡಬಡಿಸಿ ಎದ್ದು- +“ನಾನು ಬರತೀನಿ” ಎಂದು ಫ಼ಿಲಿಪ್ಪನಿಗೆ ಹೇಳಿ ಹೊರಡುತ್ತಾಳೆ. +ಫ಼ಿಲಿಪ್ಪ ತಾನು ಕುಳಿತಲ್ಲಿಂದ ಎದ್ದು ತಂದೆಗೆ ಜಾಗ ಮಾಡಿಕೊಡುತ್ತ- +“ಅಲೆಕ್ಸ ಪಿಂಟೋ ಮಗಳು ಪಪ್ಪ..” ಎಂದು ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ. +“ಹೌದು..ಅಲ್ವೆ?” +ಬೋನ ಮಗನ ಮುಖದ ಮೇಲಿನ ಸಂಭ್ರಮವನ್ನು ಗಮನಿಸುತ್ತಾನೆ. +ಪಿಂಟೋ ಮಗಳು ಇವನ ಜವಳಿ ಅಂಗಡಿಯಿಂದ ಇಳಿದು ನಾಗಪ್ಪನ ಸೈಕಲ್ ಶಾಪ್ ಪಕ್ಕದ ಪಿಂಟೋ ಆಟೋ ಸ್ಪೇರ್‍ಸ ಅಂಗಡಿ ಮೆಟ್ಟಲು ಹತ್ತುತ್ತಾಳೆ. +-೯- +ಊರಿನ ಪುರಸಭೆಯ ಚುನಾವಣೆ ಬರುತ್ತದೆ. ಈ ಬಾರಿ ಕೆಲ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಗೆ ಧುಮುಕುತ್ತಿವೆ. ಫ಼ಾತಿಮಾ ನಗರ, ಜೋಸೆಫ಼ ನಗರ ಎರಡೂ ಸೇರಿ ಆದ ಮೂರನೇ ಡಿವಿಜನ್ನಿನಿಂದ ಯಾರನ್ನು ನಿಲ್ಲಿಸುವುದು ಎಂದು ಕಾಂಗ್ರೆಸ್ಸಿನವರು ಅಭ್ಯರ್ಥಿಯನ್ನು ಹುಡುಕ ಹೊರಟಾಗ ಅವರ ಕಣ್ಣಿಗೆ ಅಂತೋನಿ ಬೀಳುತ್ತಾನೆ. ಪಾಸ್ಕೋಲ ಮೇಸ್ತ್ರಿಯ ಮಗ. ಲೋಕೋಪಯೋಗಿ ಇಲಾಖೆ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರ ಅನಿಸಿಕೊಂಡು ಹೆಸರು ಮಾಡಿರುವಾತ. ಇವನಿಗೆ ಜಾತಿ ಬೆಂಬಲವೂ ಸಿಗುತ್ತದೆ. ಇವನನ್ನು ಏಕೆ ನಿಲ್ಲಿಸಬಾರದು ಎಂದು ಕಾಂಗ್ರೆಸ ಖಾಸಿಂ ಸಾಹೇಬರು ಪಾಸ್ಕೋಲನ ಮನೆಗೆ ಬಂದದ್ದೂ ಆಯಿತು. ಅವರ ಜತೆ ಇನ್ನೂ ಕೆಲವರು ಇದ್ದರು. +“ಅಂತೋನಿಯವರೆ..ನಾವು ಒಂದು ಇಚಾರಕ್ಕೆ ಬಂದಿದ್ದೇವೆ..ನೀವು ಆಗಲ್ಲ ಅನ್ನಬಾರದು..” ಎಂದು ಪೀಠಿಕೆ ಹಾಕಿ ವಿಷಯಕ್ಕೆ ಬಂದರು ಖಾಸಿಂ ಸಾಹೇಬರು. +ಚುನಾವಣೆ ಅಂದ ಕೂಡಲೆ ಅಂತೋನಿ ಬೆಚ್ಚಿ ಬಿದ್ದ. ಕಾಲಬಳಿ ಹಾವು ಸುಳಿದ ಹಾಗೆ ಪರದಾಡಿದ. +“ಅಲ್ಲ ಯೋಚಿಸಿ..ಎಲ್ಲ ಜಾತಿಯವರೂ ನಿಲ್ಲತಾರೆ ಅಂದ ಮೇಲೆ ನಿಮ್ಮವರೂ ನಿಲ್ಲಬೇಕು..ನಿಮ್ಮವರ ಓಟುಗಳಂತೂ ಗ್ಯಾರಂಟಿ..ಬೇರೆಯವರೂ ನಿಮ್ಮ ಕೈ ಬಿಡೋಲ್ಲ..ಹುಂ ಅನ್ನಿ” ಎಂದು ಉಳಿದವರೂ ಒತ್ತಾಯ ಮಾಡಿದ್ದರಿಂದ ಅಂತೋನಿ- +“ನೋಡೋಣ..ಒಂದೆರಡು ದಿನ ಕೊಡಿ” ಎಂದ. +“ಆಯ್ತು..ನಾಡಿದ್ದು ನಾವು ಬರತೇವೆ” ಎಂದು ಹೇಳಿ ಖಾಸಿಂ ಸಾಹೇಬರು ತಮ್ಮ ಸಂಗಡಿಗರ ಜತೆ ಹೋದರು. +ಆಂತೋನಿಯ ಮನಸ್ಸಿನಲ್ಲಿ ನಿಧಾನವಾಗಿ ಒಂದು ಬೀಜ ಮೊಳಕೆಯೊಡೆಯತೊಡಗಿತು. ಪುರಸಭೆ ಸದಸ್ಯನಾಗುವುದು ಸಣ್ಣ ವಿಷಯವಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ, ಜಾತಿಯವರೆಲ್ಲ ಕೈಹಿಡಿದರೆ ಇದು ಸುಲಭ. ಈ ಬಗ್ಗೆ ಒಂದಿಬ್ಬರಲ್ಲಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬಹುದಲ್ಲವೆ? +ಅಂತೋನಿ ಮೊದಲು ತನ್ನ ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದ. +“ನಿಲ್ಲು” ಎಂದು ಪಾಸ್ಕೋಲ ತಾನೇ ಹುರುಪುಗೊಂಡ. ಅವನದೊಂದು ಆಸೆ ಹಾಗೆಯೇ ಬತ್ತಿ ಹೋಗಿತ್ತು. ಶಿವಸಾಗರದ ಕ್ರೀಸ್ತುವರ ನಡುವೆ ತಾನು ಪ್ರಮುಖನಾಗಬೇಕೆಂದು ಅವನು ಏನೆಲ್ಲ ಮಾಡಿದ್ದ. ಸಿಮೋನನನ್ನು ಹಿಂದೆ ಹಾಕಬೇಕೆಂಬ ಅವನ ಯತ್ನ ಫ಼ಲಕಾರಿಯಾಗಲಿಲ್ಲ. ಕೊನೆಗೆ ಸಿಮೋನ ಗುರ್ಕಾರ ಆದ. ಈಗ ಅವನ ಹಿರಿಯ ಮಗ ತಂದೆಯ ಸ್ಥಾನಕ್ಕೆ ಬರುವ ಯತ್ನದಲ್ಲಿದ್ದಾನೆ. ಅಲ್ಲದೆ ಈಗೀಗ ಗುರ್ಕಾರನಿಗೆ ಹಿಂದಿನ ಗೌರವವಿಲ್ಲ. ಅವನ ಮಾತನ್ನು ಯಾರೂ ಕೇಳುವುದಿಲ್ಲ. ಅವನಿಗೆ ಗೊತ್ತಿಲ್ಲದೇನೆ ಇಗರ್ಜಿಯಲ್ಲಿ ಏನೇನೋ ನಡೆದುಹೋಗುತ್ತದೆ. ಈಗ ಗೌರವ ಇರುವುದು ಇಂತಹ ಸ್ಥಾನಗಳಿಗೆ. ಮಗ ನಾಳೆ ಗೆದ್ದು ಬಂದರೆ ತನಗೆ ತುಂಬಾ ಗೌರವ ಸಿಗುತ್ತದಲ್ಲವೇ? +“..ನಿಲ್ಲು..ಹಾಗೇ ಗುರ್ಕಾರ ಮಾಮನನ್ನು ಬೋನ ಸಾಹುಕಾರರನ್ನು ಪಾದರಿಗಳನ್ನು ಕಂಡು ಬಾ..” ಎಂದ ಪಾಸ್ಕೋಲ. +ಅಂತೋನಿ ಸಿಮೋನನ ಮನೆಗೆ ಹೋದ. +ಎಲೆ ಅಡಿಕೆಯನ್ನು ಕೊಟ್ಟಣಕ್ಕೆ ಹಾಕಿ ಕುಟ್ಟುತ್ತಿದ್ದ ಸಿಮೋನ.. +“ಬಾ..” ಎಂದ. +“ಚೆನ್ನಾಗಿದೀಯ? ಇಷ್ಟು ದೂರ?” ಎಂದು ಕೇಳಿದ. +“ಹೌದು, ನಮ್ಮವರಿಗೆ ಮನೆ ಕಟ್ಟಲಿಕ್ಕೆ ಜಾಗಬೇಕು. ಮುನಿಸಿಪಾಲಿಟಿಗೆ ಹೋದರೆ ನಮ್ಮವರ ಕೆಲಸ ಕೂಡಲೇ ಆಗಬೇಕು ಅಂದರೆ ನಮ್ಮವರು ಯಾರಾದ್ರು ಅಲ್ಲಿ ಇರಬೇಕು. ಕಾನ್ವೆಂಟಿನವರು ಬಿದರಳ್ಳಿಗೆ ಹೋಗುವ ದಾರೀಲಿ ಜಾಗ ಕೇಳಿದಾರೆ ಅದು ಮಂಜೂರಾಗಬೇಕು..ನೀನು ನಿಲ್ಲು ..ನಾವು ಇದೀವಿ..” ಎಂದು ಆತ ತನ್ನ ಅಭಿಪ್ರಾಯ ಹೇಳಿದ. +ಈ ಹಿಂದೆ ಈರ್ವರು ಈ ಡಿವಿಜನ್ನಿನಿಂದ ನಿಂತು ಗೆದ್ದುಬಂದಿದ್ದರು. ಇವರಿಂದ ಹೇಳಿಕೊಳ್ಳುವ ಕೆಲಸವೇನೂ ಆಗಿರಲಿಲ್ಲ. ಇವರು ಬೇರೆ ಕೋಮಿನವರು ಆಗಿದ್ದರಿಂದ ಕ್ರೀಸ್ತುವರಿಗೆ ಅನುಕೂಲವಾಗಿರಲಿಲ್ಲ. +ಅಂತೋನಿ ಹಾಗೆಯೇ ಬೋನನನ್ನು ಕಂಡ. +ಅವನೂ ಸಂತೋಷ ವ್ಯಕ್ತಪಡಿಸಿದ. +“ನನ್ನ ಬೆಂಬಲ ನಿನಗಿದೆ..ನೀನೂ ಸ್ವಲ್ಪ ಹಣ ಖರ್ಚು ಮಾಡಬೇಕಾಗಿ ಬರಬಹುದು..ಆದರೆ ಧೈರ್ಯಗೆಡಬೇಡ..ನಿಲ್ಲು..” ಎಂದು ಆತ ಅಂತೋನಿಯವರನ್ನು ಹುರಿದುಂಬಿಸಿದ. +* +* +* +ಕ್ರಿಸ್ಮಸ್ ಗೆ ಕೆಲವೇ ದಿನಗಳಿದ್ದುದರಿಂದ ಪಾದರಿ ಸಿಕ್ವೇರಾ ಇಗರ್ಜಿಗೆ ಸುಣ್ಣ ಬಣ್ಣ ತೆಗೆಸುವಲ್ಲಿ ತೊಡಗಿದ್ದರು. ಗುರ್ಕಾರ ಅಲೆಕ್ಸ ಪಿಂಟೋ ಬಣ್ಣ ತೆಗೆಯುವವರಿಗೆ ಸಲಹೆ ನೀಡುತ್ತ ಇಗರ್ಜಿಯ ಹೊರಗೆ ಒಳಗೆ ತಿರುಗಾಡುತ್ತಿದ್ದ. ಪಾದರಿ ಸಿಕ್ವೇರಾ ಬಂದ ನಂತರ ಕ್ರಿಸ್ಮಸ್ ಹಬ್ಬಕ್ಕೆ ಒಂದು ಜಾತ್ರೆಯ ರೂಪ ಬಂದಿತು. ಇಗರ್ಜಿಯ ಬಲ ಭಾಗದಲ್ಲಿ ದೊಡ್ಡ ಪ್ರಮಾಣದ ಕ್ರಿಬ್ ತಯಾರಿಸಿ ಅಲ್ಲಿ ಜೋಸೆಫ಼ ಮೇರಿಯರ ಮೂರು ನಾಲ್ಕು ಅಡಿ ಎತ್ತರದ ಪ್ರತಿಮೆ ಇರಿಸಿ, ಇವರ ನಡುವೆ ಬಾಲ ಏಸುವನ್ನು ಮಲಗಿಸಿ ಕ್ರಿಸ್ಮಸ್ ಹಬ್ಬದ ಮಹತ್ವದ ಘಟನೆಯನ್ನು ಅತಿ ವರ್ಣರಂಜಿತವಾಗಿ ಸೃಷ್ಟಿ ಮಾಡಲಾಗುತ್ತಿತ್ತು. ಕ್ರಿಬ್ಬಿನಲ್ಲಿ ದನಕರು, ಕುರಿಗಳು, ದನಗಾಹಿಗಳು, ಸೇತುವೆ, ಕಾಡು ಹೊಲ ಗದ್ದೆಗಳು, ಹಳ್ಳಿ ಗುಡಿಸಲುಗಳು ರೂಪ ತಳೆಯುತ್ತಿದ್ದವು. ವಿದ್ಯುತ್ ದೀಪಗಳಿಂದ ಇದನ್ನು ಸಜ್ಜುಗೊಳಿಸಿ ಊರಿನ ಜನರನ್ನೇ ಇಲ್ಲಿಗೆ ಸೆಳೆದು ತರುತ್ತಿದ್ದರು ಪಾದರಿ ಸಿಕ್ವೇರಾ. ಈ ಬಾರಿ ಮತ್ತೆ ಏನು ಹೊಸದಾಗಿ ಮಾಡಬೇಕು ಎಂಬ ಬಗ್ಗೆ ವಿಚಾರ ಮಾಡುತ್ತ ನಿಂತಿದ್ದ ಪಾದರಿ ಸಿಕ್ವೇರಾ ಅವರ ಬಳಿ ಸಾರಿ ಅಂತೋನಿ ಕೈ ಮುಗಿದ. +“ಬೆಸಾಂವಂದಿಯಾ ಫ಼ಾದರ್..” ಅವರು ಕೊಂಚವೇ ತಿರುಗಿ ನೋಡಿ. +“ಹುಂ..ಏನು?” ಎಂದು ಕೇಳಿದರು. +ಕೈ ಎತ್ತಿ ಶಿಲುಬೆ ಗುರುತು ಮಾಡಿ ಆಶೀರ್ವದಿಸುವ ಪದ್ಧತಿಯನ್ನು ಇವರು ರೂಢಿಸಿಕೊಂಡಿರಲಿಲ್ಲ. +ಅಂತೋನಿ ತುಸು ಹೊತ್ತು ಅವರ ಮಗ್ಗುಲಲ್ಲಿ ನಿಂತಿದ್ದ. ತಾನು ಚುನಾವಣೆಗೆ ನಿಲ್ಲಲಿರುವ ವಿಷಯ ಹೇಳಿ ಅವರ ಅಭಿಪ್ರಾಯ ಬೆಂಬಲ ತಿಳಿದುಕೊಳ್ಳಲು ಆತ ಬಂದಿದ್ದ. ಪಾದರಿಗಳು ಹುಂ ಎಂದರೆ ಅವರ ಸಹಕಾರ ಸಿಕ್ಕರೆ ತನ್ನ ಗೆಲುವು ಸುಲಭ ಎಂಬುದು ಅವನ ಅಭಿಪ್ರಾಯವಾಗಿತ್ತು. ಆದರೆ ಈ ವಿಷಯವನ್ನು ಇಲ್ಲಿ ಹೊರಗೆ ಹೇಗೆ ಹೇಳುವುದು? ಅವರು ಬಂಗಲೆಯಲ್ಲಿ ಇದ್ದಿದ್ದರೆ ಹೇಳಲು ಅನುಕೂಲವಾಗುತ್ತಿತ್ತು. +“ಒಂದು ವಿಷಯ ಮಾತನಾಡಬೇಕಿತ್ತು ಫ಼ಾದರ್” ಎಂದ ಅಂತೋನಿ. +ಈಗ ಅವರು ಮುಖ ತಿರುಗಿಸಿ ಅವನನ್ನು ನೋಡಿದರು. +“ಏನದು?” +ಅಂತೋನಿ ಮತ್ತೂ ಕಾದ. ಅವರು ಹತ್ತು ನಿಮಿಷದ ಮಟ್ಟಿಗೆ ಬಂಗಲೆಗೆ ಬಂದಿದ್ದರೆ ಆಗುತ್ತಿತ್ತಲ್ಲ. +“ಏನು ಹೇಳು..” +ಅಂತೋನಿ ಹೇಳುವುದೇ, ಸೈ ಎಂದು ನಿರ್ಧರಿಸಿದ. +“ಫ಼ಾದರ್ ನಾನು ಚುನಾವಣೆಗೆ ನಿಲ್ಲಬೇಕು ಅಂತ ಯೋಚನೆ ಮಾಡತಿದೀನ..ನಿಮ್ಮ ಆಶೀರ್ವಾದ ಬೆಂಬಲ ಬೇಕು..” +ಅವರು ನಿಂತಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಹೋದರು. ಗಂಟೆ ಗೋಪುರದವರೆಗೂ ಹೋಗಿ ಅಲ್ಲಿ ನಿಂತು ಇಗರ್ಜಿಯ ಬಲ ಮೂಲೆಯನ್ನು ನೋಡಿ ತಿರುಗಿ ಬಂದರು. ಅಂತೋನಿ ಅವರ ಹಿಂದೆಯೇ ಹೆಜ್ಜೆ ಹಾಕಿದ. +“ಯೋಚನೆ ಮಾಡೀದೀಯ? ಅಲ್ಲಿ ಹೋಗಿ ಏನೇನು ಮಾಡಬೇಕು ಗೊತ್ತಲ್ಲ? ಪುರಸಭೆ ಸದಸ್ಯತ್ವ ಅಂದರೆ ಸುಮ್ಮನೆ ಆಗೋದಿಲ್ಲ..ಅದು ಯಾರೂ ಮಾಡಬಹುದಾದ ಕೆಲಸ ಅಲ್ಲ..” +ಅಂತೋನಿಯ ಮುಖ ಬಿಳಿಚಿಕೊಳ್ಳತೊಡಗಿತು. ಗಂಟೆಗೋಪುರದ ನೆರಳಿನಲ್ಲಿ ನಿಂತಿರುವ ತನ್ನನ್ನು ಆ ನೆರಳು ನುಂಗುತ್ತಿದೆಯೇನೋ ಎಂದು ಆತ ಗಾಬರಿಗೊಂಡ. ಪಾದರಿ ಸಿಕ್ವೇರಾ ಅವರ ಮಾತಿನ ಧಾಟಿ, ಬಳಸಿದ ಶಬ್ದಗಳ ಧ್ವನಿ ಹಿತಕರವಾಗಿರಲಿಲ್ಲ. ಇದು ನಿನಗೆ ಹೆಳಿದ್ದಲ್ಲ ಎಂಬುದನ್ನು ಈ ರೀತಿಯಲ್ಲಿ ಅವರು ಹೇಳುತ್ತಿದ್ದಾರೆ ಎಂಬುದು ಅವನಿಗೆ ಖಚಿತವಾಯಿತು. ಆದರೂ ಅವನೆಂದ- +“ಫ಼ಾದರ್..ದೇವರ ಆಶೀರ್ವಾದ ಇದ್ದರೆ ಯಾವ ಕೆಲಸಾನೂ ದೊಡ್ಡದಲ್ಲ ಅಲ್ಲವೆ? ನೀವು ದೇವರ ಆಶೀರ್ವಾದಾನ ನನಗೆ ದೊರಕಿಸಿಕೊಡಬೇಕು..” +“ನೀನು ಪ್ರಯತ್ನಪಡು..ನಾವು ಪಾದರಿ ಮಾದರಿಗಳು ಈ ರಾಜಕೀಯದಲ್ಲಿ ಪ್ರವೇಶ ಮಾಡಬಾರದು..ನಿನಗೆ ಒಳ್ಳೆಯದಾಗಲಿ..” ಎಂದರವರು ಪ್ಯಾಂಟಿನ ಕಿಸೆಯಿಂದ ಬೀಗದ ಕೈ ಗೊಂಚಲು ತೆಗೆದು ಬಂಗಲೆಯತ್ತ ತಿರುಗುತ್ತ. +ಅಂತೋನಿ ಅಲ್ಲಿ ನಿಲ್ಲಲಿಲ್ಲ. +ಅವನಂತೂ ಒಂದು ನಿರ್ಧಾರ ಮಾಡಿದ್ದ. ಪುರಸಭೆಯ ಬರಲಿರುವ ಚುನಾವಣೆಗೆ ನಿಲ್ಲುವುದೇ ಸರಿ ಎಂಬ ತೀರ್ಮಾನಕ್ಕೂ ಬಂದಿದ್ದ. ಮತ್ತೆ ಮನೆಗೆ ಬಂದ ಖಾಸಿಂ ಸಾಹೇಬರಿಗೆ ತನ್ನ ನಿರ್ಧಾರ ಹೇಳಿದ. ಕೇರಿಯ ಎಲ್ಲರಿಗೂ ವಿಷಯ ತಿಳಿಯಿತು. ಎಲ್ಲರೂ ಅಂತೋನಿಯನ್ನು ಮುಂಚಿತವಾಗಿಯೇ ಅಭಿನಂದಿಸಿದರು ಕೂಡ. +ಆದರೆ ಅಂತೋನಿ ಚುನಾವಣಾ ಅಧಿಕಾರಿಗೆ ಅರ್ಜಿ ನೀಡಿದ ಒಂದೇ ದಿನದಲ್ಲಿ ಮೂರನೇ ಡಿವಿಜನ್ನಿನಿಂದ ಸೋಷಲಿಸ್ಟ +ಪಕ್ಷದಿಂದ ಜಾನ ಡಯಾಸ ಕೂಡ ಅರ್ಜಿ ಕೊಂಡದ್ದು ತಿಳಿದು ಬಂದು ಕಾಂಗ್ರೆಸ್ ಪಕ್ಷದವರು ಗೊಂದಲಗೊಂಡರು. +“ಬೇರೆ ಯಾರೇ ಆಗಿದ್ರು ನಾವು ಯೋಚನೆ ಮಾಡುತಿರಲಿಲ್ಲ..ಆದರೆ ನಿಮ್ಮ ಜಾತಿಯವರೇ ಬೇರೊಬ್ಬರು ನಿಂತರಲ್ಲ..ಓಟು ಒಡೆದು ಹೋಗಲ್ವೇ” ಎಂದವರು ಮೈ ಪರಚಿಕೊಂಡರು. +“ಡಯಾಸರಿಗೆ ಉಮೇದುವಾರಿಕೇನ ಹಿಂದಕ್ಕೆ ತೆಗೆದುಕೊಳ್ಳಲು ಹೇಳಿ..ನಿಮ್ಮ ನಿಮ್ಮಲ್ಲಿ ಈ ಪೈಪೋಟಿ ಬೇಡ.” +– ಎಂಬ ಮಾತುಗಳೂ ಕೇಳಿ ಬಂದವು. +ಡಯಾಸ ನಿರ್ಧಾರ ನಂತರದ್ದು ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಆದರೂ ಆತ ಹಿಂದೆ ಸರಿಯಲಿಲ್ಲ. ಬೋನ, ಸಿಮೋನ, ಪಾಸ್ಕೋಲ ಇನ್ನೂ ಕೆಲವರು ಈ ಬಗ್ಗೆ ಯತ್ನಿಸಿದರು. ಈ ಬಗ್ಗೆ ಇನ್ನೂ ವಿವರವಾಗಿ ಪರಿಶೀಲಿಸಿದಾಗ ಪಾದರಿ ಸಿಕ್ವೇರಾ ಡಯಾಸಗೆ ಬೆಂಬಲ ಕೊಡುತ್ತಿರುವುದೂ ತಿಳಿದುಬಂದಿತು. +“ನೀವು ಹಿಂದೆ ಸರಿಬೇಡಿ..ನಾವು ಫ಼ೈಟ್ ಕೊಡೋಣ” ಎಂದರು ಅಂತೋನಿಯ ಪರವಾಗಿದ್ದ ಕೇರಿಯ ಯುವಕರು. +ಚುನಾವಣೆ ಬರುತ್ತಿದೆ ಅನ್ನುವಾಗ ಮೂರನೆ ಡಿವಿಜನ ರಣರಂಗವಾಯಿತು. +“ಇದೇನ್ರಿ ಹೇಗೆ ನೀವು ನೀವೇ ಜಗಳ ಮಾಡೋದು” ಎಂದು ಇತರೆ ಕೋಮಿನವರು ಅಂತೋನಿ ಹಾಗೂ ಡಯಾಸರ ಮುಖ ನೋಡಿದರು. +ಭಾನುವಾರ ಪಾದರಿ ಸಿಕ್ವೇರಾ ಶರಮಾಂವಂಗೆ ನಿಂತವರು- +“ಚುನಾವಣೆ ಬಂದಿದೆ..ಬುದ್ಧಿವಂತರನ್ನ ಅನುಭವ ಇರುವವರನ್ನ ಆರಿಸಿ” ಎಂದಷ್ಟೇ ಹೇಳಿ ಬೇರೆ ವಿಷಯಕ್ಕೆ ಬಂದರೂ ಅವರು ಭೇಟಿಯಾದ ಎಲ್ಲರಿಗೂ ಡಯಾಸಗೇನೆ ಓಟು ಹಾಕಲು ಹೇಳಿದರು ಎಂಬುದು ಎಲ್ಲರ ಕಿವಿಗೂ ಬಿದ್ದಿತು. +ಸಾಲದ್ದಕ್ಕೆ ಕಾನ್ವೆಂಟಿನ ಸಿಸ್ಟರುಗಳು ಬೇರೆ ಮನೆಮನೆಗೆ ಹೋದವರು ಅಂತೋನಿಗೆ ಏನು ಗೊತ್ತು? ಕಂಟ್ರ್ಯಾಕ್ಟರ್ ಆದ ಕೂಡಲೆ ಎಲ್ಲ ಬರುತ್ತದೆಯೇ ಎಂದೇನೋ ಮಾತನಾಡಿಕೊಂಡದ್ದು ಕೇಳಿ ಬಂದಿತು. +ಅಂತೋನಿ, ಅವನ ಹೆಂಡತಿ, ಅವನ ಗೆಳೆಯರು ಕಾಂಗ್ರೆಸ್ ಸಂಸ್ಥೆ ಪ್ರಚಾರಕ್ಕೇನೂ ಕಡಿಮೆ ಮಾಡಲಿಲ್ಲ. ಆದರೆ ಚುನಾವಣೆ ನಡೆದು ಫ಼ಲಿತಾಂಶ ಹೊರಬಿದ್ದಾಗ ಜಾನಡಯಾಸ ಗೆದ್ದಿದ್ದ. ಅಂತೋನಿ ಸೋತಿದ್ದ. +ಅಂತೋನಿಯನ್ನು ಕಟ್ಟಿಕೊಂಡು ತಿರುಗಾಡಿದ ಕ್ರೀಸ್ತುವ ಯುವಕರು- +“..ಇದು ಯಾಕೆ ಹೀಗಾಯ್ತು ನಮಗೆ ಗೊತ್ತಿದೆ..” ಎಂದು ಹಲ್ಲುಕಡಿದರು. ಮಾಡಿದರು. ಮುಷ್ಟಿ ಬಿಗಿದುಕೊಂಡು, ತುಟಿ ಕಚ್ಚಿಕೊಂಡು ತೋಳಿನ ಸ್ನಾಯುಗಳನ್ನು ಹೊರಳಿಸುತ್ತ, ಅವರು ಮಾತನಾಡಿಕೊಳ್ಳುತ್ತಿದ್ದುದು ಗುರ್ಕಾರ ಸಿಮೋನನ ಕಿವಿಗೆ ಬಿದ್ದಿತು. ಬೋನ ಕೇಳಿಸಿಕೊಂಡ. ಇವರಿಬ್ಬರೂ ಆತಂಕದಿಂದ ಆ ಯುವಕರ ಬಳಿ ಹೋದರು. +“ನೋಡಿ ಹಾಗೆಲ್ಲ ಮಾತನಾಡಬಾರದು..ಡಯಾಸ ಕೂಡ ನಮ್ಮವನೇ ಅಲ್ವೆ..ಅವನೂ ನಮ್ಮ ಕೇರಿಗೆ ನಮ್ಮ ಜನರಿಗೆ ಒಳ್ಳೆಯದು ಮಾಡತಾನೆ..” ಎಂದು ಸಮಾಧಾನ ಹೇಳಿದರು. +ಈ ಚುನಾವಣಾ ಫಲಿತಾಂಶದ ಹಿಂದೆಯೇ ಕ್ರಿಸ್ಮಸ್ ಹಬ್ಬ ಬಂದಿತು. ಮನೆ ಮನೆಯ ಮುಂದೆ ನಕ್ಷತ್ರಗಳು ತೂಗಿ ಬಿದ್ದವು. ಶುಭಾಶಯ ಪತ್ರಗಳು ದೂರದ ನೆಂಟರಿಂದ ಗೆಳೆಯರಿಂದ ಬಂದವು. ಇವರೂ ಆರಿಸಿ ಜನರಿಗೆ ಕಳುಹಿಸಿದರು. ರಾತ್ರಿ ಎರಡು ಗಂಟೆಯವರೆಗೆ ಮನೆ ಮಂದಿ ಕುಳಿತು ಚಕ್ಕುಲಿ, ಶಂಕರ ಪೊಳೆ, ಉಂಡೆ, ಚೌಡೆ ಕಿಡಿಯೆ, ಸುಕ್ರುಂಡೆ, ನೆವ್ರೆ ಎಂದೆಲ್ಲ ತಿಂಡಿಗಳನ್ನು ಮಾಡಿದರು. ಹೊಸಬಟ್ಟೆ ಹೊಲಿಸುವ ಓಡಾಟ, ಮನೆಗೆ ಸುಣ್ಣ ಬಣ್ಣ ಮಾಡಿಸುವುದು. ಹೀಗೆ ಜನ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದರು. +ಡಿಸೆಂಬರ ಇಪ್ಪತ್ನಾಲ್ಕರ ರಾತ್ರಿ ಹತ್ತು ಗಂಟೆಗೇನೆ ಇಗರ್ಜಿಯ ಗಂಟೆ ಬಾರಿಸಿತು. ಜಗತ್ತಿನಲ್ಲಿ ಶಾಂತಿ, ಪ್ರೀತಿ, ಕರುಣೆ, ಕ್ಷಮೆ, ದಯೆಯನ್ನು ಬಿತ್ತಲೆಂದು ಬಂದ ದೇವಕುಮಾರನ ಜನ್ಮ ಸಂದರ್ಭವನ್ನು ಆಚರಿಸಲು ಜೋಸೇಫ಼ ನಗರ, ಫ಼ಾತಿಮಾ ನಗರದ ಕ್ರೀಸ್ತುವರು ಸಂತಸ ಸಂಭ್ರಮದಲ್ಲಿ ಇಗರ್ಜಿಗೆ ಧಾವಿಸಿದರು. ರೈಲು ನಿಲ್ದಾಣದ ಹಿಂಬದಿಯ ಮನೆಗಳಿಂದ, ಜಯಪ್ರಕಾಶ ನಗರದಿಂದ, ಊರಿನ ಇನ್ನೂ ಕೆಲವು ಬಡಾವಣೆಗಳಿಂದ ಕ್ರೀಸ್ತುವರು ಬಂದರು. +ಇಗರ್ಜಿ ಬಾಗಿಲಲ್ಲಿ ಕೈ ಕುಲುಕುವ, ಹ್ಯಾಪಿ ಕ್ರಿಸ್ಮಸ್ ಎಂದು ಹೇಳುವ ಅಪ್ಪಿಕೊಳ್ಳುವ ಸಂಭ್ರಮ ಕಂಡಿತು. ವಿವಿಧ ಬಗೆಯ ಸೆಂಟುಗಳಿಂದ, ಸೀರೆಯೊಳಗೆ ಹಾಕಿ ಇರಿಸಿದ ಡಾಂಬರಿನ ಗುಳಿಗೆಯ ಪರಿಮಳದಿಂದ, ಜತೆಗೆ ವಿಸ್ಕಿ ಬ್ರಾಂಡಿ ಶರಾಬಿನ ವಾಸನೆಯಿಂದ ಇಗರ್ಜಿ ಸುತ್ತಲಿನ ಗಾಳಿ ಭಾರವಾಗಿ ಬೀಸಿತು. +ಮಧ್ಯರಾತ್ರಿಯ ಹೆಪ್ಪುಗಟ್ಟಿಸುವ ಛಳಿಯಲ್ಲಿ ಪಾದರಿ ಕ್ರಿಬ್ಬಿನಲ್ಲಿ ಏಸು ಬಾಲನ ಪ್ರತಿಮೆ ಇರಿಸಿದಾಗ ಗಡಿಯಾರ ಹನ್ನೆರಡು ಬಾರಿಸಿತು. ಇಗರ್ಜಿಯ ಗಂಟೆ ಮೋಹಕವಾಗಿ ಟಿಂಟಣಿಸಿತು. ಮಿರೋಣ್ ಜಾನಡಯಾಸ್ ಪೀಟಿಲಿನ ಮೇಲೆ ಕಮಾನು ಏರಿಸಿ, ಇಳಿಸಿ- +“ಆದೇಸ್ತೆ ಫ಼ಿದೇಲೆಸ ಲೇತು ತೂಯಿ ಪ್ರಾಂತಿಸ ಹೋಸಾನ್ನ ಹೋಸಾನ್ನ..” ಎಂದು ಏಸು ಹುಟ್ಟಿದ ಸಂತಸವನ್ನು ಸಾರುವ ಲ್ಯಾಟಿನ್ ಗೀತೆಯೊಂದನ್ನು ಹಾಡಿದ. ಛಳಿಗೆ ಸಣ್ಣಗೆ ನಡಗುತ್ತ ಜನ ಈ ಹಾಡಿಗೆ ತಮ್ಮ ದನಿ ಸೇರಿಸಿದರು. ಜನ ಎತ್ತರದ ದನಿಯಲ್ಲಿ ಹಾಡುತ್ತಿದ್ದರೆ ಪ್ರತ್ಯೇಕವಾಗಿ ಕುಳಿತ ಸಿಸ್ಟರುಗಳು ಕೆಳಗಿನ ದನಿಯಲ್ಲಿ ತಮ್ಮ ಧ್ವನಿ ಸೇರಿಸಿದರು. +* +* +* +ಬಳ್ಕೂರಕಾರ್ ಕೈತಾನನಿಗೆ ಯಾವುದೇ ತೊಂದರೆ ತಾಪತ್ರಯಗಳು ಇರಲಿಲ್ಲ. ಕೈ ತುಂಬ ಕೆಲಸವಿತ್ತು. ಅವನು ಎಲ್ಲರಿಗಿಂತಲೂ ಹಿರಿಯನಾಗಿದ್ದರಿಂದ ಊರಿನಲ್ಲಿ ಕ್ರೀಸ್ತುವರ ನಡುವೆ ಗೌರವವಿತ್ತು. ಮಜಬೂತಾದ ಮನೆ ಕಟ್ಟಿದ್ದ. ಕುರ್ಚಿ, ಮಂಚ, ಮೇಜು ಎಂದು ಅವರಿವರು ನೋಡಿ ಹೊಟ್ಟೆಗಿಚ್ಚು ಪಡುವಂತೆ ಮಾಡಿಸಿದ್ದ. ಗುಂಡಬಾಳೆಯಿಂದ ಇನಾಸಜ್ಜಿ ಬಂದು ಇವನ ಮನೆಯಲ್ಲಿ ನಿಂತ ನಂತರವಂತೂ ಇವನ ಅದೃಷ್ಟ ಬದಲಾಗಿತ್ತು. +ಮುದುಕಿ ಒಂದಿಷ್ಟು ಹಣ ತಂದು ಅಳಿಯನಿಗೆ ಕೊಟ್ಟಿದ್ದಾಳೆ..ಎಂದು ಜನ ಮಾತನಾಡಿಕೊಳ್ಳುತ್ತಿದ್ದರಾದರೂ ಇದೆಷ್ಟು ನಿಜ ಎಂಬುದು ಯಾರಿಗೂ ತಿಳಿದಿರಲಿಲ್ಲ. +ಇವನ ಹಿರಿಯ ಮಗ ಸ್ಯಾಮ್ಸನ್ ಮಾತ್ರ ವಿದ್ಯಾವಂತನಾಗಿರಲಿಲ್ಲ. ಉಳಿದವರೆಲ್ಲ ಪ್ರೌಢಶಾಲೆಯ ಒಂದು ಎರಡನೆ ತರಗತಿಯವರೆಗೆ ಓದಿ ಮುಂದೆ ಓದಲಾಗದೆ ಹಳ್ಳಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಕೈತಾನನ ಹಿರಿಯ ಮಗ ಸ್ಯಾಮ್ಸನ್ನನ ಮದುವೆ ಹಿಂದೇ ಆಗಿದ್ದರಿಂದ ಅವನ ಸಂಸಾರ ಕೂಡ ಕೈತಾನನ ಮೇಲೆಯೇ ಅವಲಂಬಿಸಿಕೊಂಡಿತ್ತು. ಓರ್ವ ಮಗಳ ಮದುವೆ ಮಾಡಿ ಕೈತಾನ ಒಂದು ಭಾರ ಕಡಿಮೆ ಮಾಡಿಕೊಂಡಿದ್ದ. +ಇನಾಸಜ್ಜಿ ಸತ್ತ ನಂತರ ಅವಳ ಹನ್ನೊಂದನೇ ದಿನ, ನಲವತ್ತನೇ ದಿನ ಎಂದೆಲ್ಲ ಮಾಡಿ ವರ್ಷದ ಪೂಜೆಯನ್ನೂ ಇರಿಸಿಕೊಂಡ. ಪ್ರತಿ ವರುಷ ಇಗರ್ಜಿಯಲ್ಲಿ ಪೂಜೆ ಮಾಡಿಸಿ ಮನೆಯಲ್ಲಿ ಊಟ ಹಾಕುವುದನ್ನು ಮುಂದುವರೆಸಿದ. ಹೀಗೆ ಒಂದೆರಡು ವರ್ಷ ಸತ್ತವರಿಗೆ ಪೂಜೆ ಕೊಡಿಸಿ ಒಂದಿಷ್ಟು ನಷ್ಟ ಮಾಡಿಕೊಂಡ. ಆದರೆ ಮೂರನೇ ವರ್ಷ ಅತ್ತೆ ಹೆಸರಿನಲ್ಲಿ ಪೂಜೆ ಕೊಡಿಸಲು ಇವನೇ ಇರಲಿಲ್ಲ. +ಭಟ್ಕಳದ ಇಗರ್ಜಿಯ ಹಬ್ಬಕ್ಕೆ ಹೋದವ ಅಲ್ಲಿ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದ. ಸಂಜೆ ತೆಂಗಿನಮರದ ಶೇಂದಿ ತಾಜಾ ತಾಜಾ ಸಿಗುತ್ತದೆಂದು ಕುಡಿಯಲು ಹೋದವ ಎಷ್ಟು ಕುಡಿದರೂ ತೃಪ್ತಿಯಾಗದೆ ಅದರಲ್ಲಿಯೇ ಮುಳುಗಿ ಹೋದ. ಕತ್ತಲಾದ ಮೇಲೆ ನೆಂಟರ ಮನೆಗೆ ಹಾಳು ಬಿದ್ದ ಒಂದು ಹಿತ್ತಲ ಮೂಲಕ ಬರುತ್ತಿದ್ದವ ಅಲ್ಲಿದ್ದ ನೆಲಬಾವಿಗೆ ಬಿದ್ದ. +ಯಾರೋ ನೆಂಟರ ಮನೆಗೆ ಹೋಗಿರಬೇಕೆಂದು ಇವನು ಉಳಿದುಕೊಂಡಿದ್ದ ಮನೆಯವರು ತಿಳಿದರು. ಶಿವಸಾಗರದಲ್ಲಿ ಇವನ ಹೆಂಡತಿ ನಮಾ ಮೊರಿಯಾ ಹೀಗೆ ತಿಳಿದಳು. ಆದರೆ ಮೂರು ದಿನಗಳ ನಂತರ ಕೆಟ್ಟ ವಾಸನೆಯಿಂದ ವಿಷಯ ತಿಳಿಯಿತು. ಕೆಂಪು ರುಮಾಲು, ಜರಕಿ ಚಪ್ಪಲಿ, ಎಲೆ ಅಡಿಕೆ ಚೀಲದಿಂದ ವಿಷಯ ಸ್ಪಷ್ಟವಾಯಿತು. ಹೆಣವನ್ನು ಭಟ್ಕಳದಲ್ಲಿಯೇ ಮಣ್ಣು ಮಾಡಲಾಯಿತು. ಇವನ ಹೆಂಡತಿ ಮಕ್ಕಳು ಸಿಮೋನ, ಪಾಸ್ಕೋಲ ಶಿವಸಾಗರದಿಂದ ಇಲ್ಲಿಗೆ ಬಂದರು. +ನಂತರ ಇಲ್ಲಿಯ ಪರಿಸ್ಥಿತಿ ಕೆಡತೊಡಗಿತು. ಮನೆಯಲ್ಲಿದ್ದ ಮರದ ಸಾಮಾನುಗಳನ್ನೆಲ್ಲ ಮಾರಿ ತಿನ್ನುವ ಪರಿಸ್ಥಿತಿ ಬಂದಿತು. ಸ್ಯಾಮ್ಸನ್ನನ ತಮ್ಮಂದಿರು ಶಿವಸಾಗರದ ಆಸುಪಾಸಿನ ಹಳ್ಳಿಗಳಲ್ಲಿ ಹಾಲುಮಡ್ಡಿ ವ್ಯಾಪಾರ, ಅಡಿಕೆ ವ್ಯಾಪಾರ ಎಂದು ಬೇರೆ ಬೇರೆ ಉದ್ಯೋಗ ಹಿಡಿದು ಅಲ್ಲಿಯೇ ಮನೆ ಮಾಡಿದರು. ಸ್ಯಾಮ್ಸನ ಹೆಂಡತಿ, ಮಗಳು ಗ್ಲೋರಿಯಾ ತಾಯಿಯನ್ನು ಸಾಕಿಕೊಂಡು ಹಳೆಯ ಮನೆಯಲ್ಲಿದ್ದಾನೆ. ಇವನ ಮಗಳು ಗ್ಲೋರಿಯಾ ವಿದ್ಯಾವಂತಳಾಗಿದ್ದಾಳೆ. ಅವಳಿಗೆ ಒಂದು ಕೆಲಸವನ್ನು ಹುಡುಕುವ ಯತ್ನದಲ್ಲೂ ಇದ್ದಾನೆ ಸ್ಯಾಮ್ಸನ. +ಈ ನಡುವೆ ಉಳಿದ ತಮ್ಮಂದಿರು ಮನೆಯಲ್ಲಿ ಪಾಲು ಕೇಳುತ್ತಿದ್ದಾರೆ. ಸ್ಯಾಮ್ಸನ ತಮ್ಮಂದಿರಿಗೆ ಎಲ್ಲಿ ಪಾಲುಕೊಡಬೇಕಾಗುತ್ತದೋ ಎಂದು ಮುನಿಸಿಪಾಲಿಟಿಯಲ್ಲಿ ಏನೋ ಭಾನಗಡಿ ಮಾಡಿದ್ದಾನೆಂದೂ ಸುದ್ದಿಯಿದೆ. +ಇಗರ್ಜಿ ಹಬ್ಬಕ್ಕೆ ವರ್ಷಕ್ಕೊಮ್ಮೆ ಬರುವ ಅವನ ತಮ್ಮಂದಿರು- +“ಸ್ಯಾಮ್ಸನ್, ಎಲ್ಲ ಸರಿ. ನೀನು ಈ ಮನೇನ ಒಳಗೆ ಹಾಕಿಕೊಂಡಿದ್ದು ನ್ಯಾಯಾನ? ಇದು ದೇವರ ಹತ್ತು ಕಟ್ಟಲೆಗಳಿಗೆ ವಿರೋಧ ಅಲ್ವ?” ಎಂದು ಜಗಳ ತೆಗೆಯುತ್ತಾರೆ. +ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಗ್ಲಾಸ್ ಹಿಡಿದ ಇವರು ಇಗರ್ಜಿಗೆ ಹೋದವರು ಅಲ್ಲಿಯೇ ಹತ್ತಿರದಲ್ಲಿರುವ ಶರಾಬು ಬಿಳಿಯಪ್ಪನ ಅಂಗಡಿಗೆ ಹೋಗಿ ಸ್ವಲ್ಪ ಕುಡಿದಿರುತ್ತಾರೆ. ಪೂಜೆ ಮುಗಿದದ್ದೆ ಸ್ನೇಹಿತರ ಮನೆ ಗುರುತಿನವರ ಮನೆ ಎಂದು ಒಂದೊಂದು ಗ್ಲಾಸು ಏರಿಸಿ ಊಟದ ಹೊತ್ತಿಗೆ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿರುತ್ತಾರೆ. ಅಣ್ಣ ಸ್ಯಾಮ್ಸನ ತಂದೆಯ ಮನೆಯನ್ನು ಮುರಿದು ಹೊಸದಾಗಿ ಕಟ್ಟಿರುವುದನ್ನು ನೋಡಿದಾಗ ಇವರಿಗೆ ತಾಳ್ಮೆ ಕಳೆದು ಹೋಗಿ ಇವರು ಮಾತನಾಡತೊಡಗುತ್ತಾರೆ. ಮಾತಿಗೆ ಮಾತು ಸೇರಿ ಅದು ಜಗಳವಾಗಿ ಪರಿವರ್ತನೆ ಹೊಂದಿ ಕೊನೆಗೆ ಹೊಡೆದಾಟಕ್ಕೆ ಹೋಗಿ ಸಿಮೋನನೋ ಪಾಸ್ಕೋಲನೋ ಬಂದು ಬಿಡಿಸ ಬೇಕಾಗುತ್ತದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. +ಗುರ್ಕಾರ ಸಿಮೋನ ಒಂದು ದಾರಿ ತೋರಿಸಿದ. +“ಮನೆ ಹೇಗೂ ನಿನ್ನದಾಗಿದೆ..ನಿನ್ನ ತಮ್ಮಂದಿರಿಗೆ ಅವರವರ ಪಾಲಿನ ಹಣ ಕೊಡು..ಒಂದು ಪತ್ರ ಬರೆಸಿಕೋ..ಅಲ್ಲಿಗೆ ಈ ಜಗಳ ನಿಲ್ಲುತ್ತೆ..ಹಬ್ಬಕ್ಕೆ ಬಂದವರು ಹೊಡೆದಾಡಿದರು ಅನ್ನುವ ಮಾತು ಸುಳ್ಳಾಗುತ್ತದೆ..” ಎಂಬ ಗುರ್ಕಾರನ ಮಾತಿಗೆ ಸ್ಯಾಮ್ಸನ್ ಅವನ ತಮ್ಮಂದಿರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಈ ನಡುವೆ ಸ್ಯಾಮ್ಸನ್ ಮಗಳು ಗ್ಲೋರಿಯಾ ಹೈಸ್ಕೂಲು ಮುಗಿಸಿದ್ದಾಳೆ. ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿದ್ದಾಳೆ. ಕೈತಾನನ ಮಗಳು ಪ್ರೆಸಲ್ಲಾಗೆ ಕೆಲಸ ಸಿಕ್ಕಿದೆ. ಇವಳಿಗೆ ಸಿಕ್ಕಿಲ್ಲ. ಮಗಳಿಗೊಂದು ಕೆಲಸ ಕೊಡಿಸಬೇಕು ಎಂಬ ಯತ್ನವನ್ನು ಸ್ಯಾಮ್ಸನ್ ಬಿಟ್ಟಿಲ್ಲ. +ಕಾನ್ವೆಂಟಿನಲ್ಲಿ ಈರ್ವರು ಶಿಕ್ಷಣ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನು ಸ್ಯಾಮ್ಸನಗೆ ಹೇಳಿದವರು ಡಾಕ್ಟರ್ ಕೊದಂಡರಾವ್. ಮಳೆಗಾಲದಲ್ಲಿ ಅವರ ಬಾವಿ ಕುಸಿದಿತ್ತು. ಮಳೆಗಾಲ ಮುಗಿದ ನಂತರ ಬಾವಿಯಿಂದ ನೀರು ಹೊರ ಹಾಕಿ ಕೆಳಗಿನಿಂದ ಕಲ್ಲುಕಟ್ಟಿಕೊಂಡು ಬರುವ ಕೆಲಸ ವಹಿಸಿಕೊಂಡ ಸ್ಯಾಮ್ಸನ್ ಮೇಲಿನಿಂದ ಗಡಗಡೆಯ ಮೂಲಕ ಕಲ್ಲುಗಳನ್ನು ಕೆಳಕ್ಕೆ ಇಳಿಸುತ್ತಿರುವಾಗ ಡಾಕ್ಟರ್ ಕೊದಂಡರಾವ್ ಅಲ್ಲಿಗೆ ಬಂದು ನಿಲ್ಲುತ್ತಿದ್ದರು. ಅದು ಇದು ಮಾತಿನ ನಡುವೆ ಸ್ಯಾಮ್ಸನ್ ಮಗಳು ಪ್ರೌಢಶಾಲೆ ಮುಗಿಸಿ ಮನೆಯಲ್ಲಿ ಕುಳಿತಿರುವ ವಿಷಯ ಬಂದಿತು. +“ಅಲ್ಲಿ ಕಾನ್ವೆಂಟಿನಲ್ಲಿ ಎರಡು ಕೆಲಸ ಖಾಲಿ ಇದೆ ನೋಡು..” ಎಂದರು. ಅವರಿಗೂ ಕಾನ್ವೆಂಟಿಗೂ ಹತ್ತಿರದ ಸಂಪರ್ಕವಿತ್ತು. ಕೊದಂಡರಾಯರ ಮಕ್ಕಳೆಲ್ಲ ಕಾನ್ವೆಂಟಿನಲ್ಲಿಯೇ ಓದುತ್ತಿದ್ದರು. ಸಿಸ್ಟರುಗಳಿಗೆ ಏನೇ ಕಾಯಿಲೆಯಾದರೂ ಅವರು ಇವರ ಬಳಿಗೇನೆ ಬರುತ್ತಿದ್ದರು. ಹೀಗಾಗಿ ಕಾನ್ವೆಂಟಿನ ಹಲವು ವಿಷಯಗಳು ಇವರಿಗೆ ತಿಳಿದಿರುತ್ತಿದ್ದವು. +“ಹೌದಾ..ರಾಯರೆ?” ಎಂದು ಉತ್ಸಾಹದಿಂದ ಕೇಳಿದ ಸಾಮ್ಸನ್. +“ಹೌದು..ಅದು ನಿಮ್ಮದೇ ಅಲ್ವ..ಅರ್ಜಿ ಹಾಕಿಸು ಕೆಲಸ ಸಿಗುತ್ತೆ..” ಎಂದರವರು ಖಚಿತವಾಗಿ- +ಸ್ಯಾಮ್ಸನ್‌ಗೆ ಇಷ್ಟಕ್ಕೇನೆ ಸಂತೋಷವಾಯಿತು. ಮನೆಗೆ ಬಂದವನೇ ಮಗಳಿಗೆ ಹೇಳಿ ಒಂದು ಅರ್ಜಿ ಬರೆಸಿಕೊಂಡು ಸ್ನಾನ ಮಾಡಿ ಬೇರೆ ಉಡುಪು ಧರಿಸಿ ಮಗಳನ್ನು ಕರೆದುಕೊಂಡು ಕಾನ್ವೆಂಟಿಗೆ ಧಾವಿಸಿದ. ಸಿಸ್ಟರುಗಳೆಲ್ಲ ಕಾನ್ವೆಂಟಿನ ಒಳಗಿನ ಅವರ ಕೊಪೆಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಪ್ರಾರ್ಥನೆ ಆಗುವ ತನಕ ಇವರು ಹೊರಗೇನೆ ನಿಂತಿರುತ್ತಿದ್ದರು. ನಂತರ ತೂಗು ಬಿದ್ದ ಕಿರು ಗಂಟೆಯ ದಾರ ಎಳೆದರು. ಹೆಡ್‌ಸಿಸ್ಟರ್ ಬಂದು ಬೀಗ ತೆಗೆದು ಬಾಗಿಲು ತೆಗೆದು- +“..ಕೋಣ್ ಜಾಯ?” (ಯಾರು ಬೇಕು?) ಎಂದು ಕೇಳಿದಾಗ ಸ್ಯಾಮ್ಸನ್ ಅವರ ಕೈಗೆ ಅರ್ಜಿ ನೀಡಿದ. ಅವರು ಅರ್ಜಿ ಓದಿದರು. ಸಾಮ್ಸನ್ ಹಾಗೂ ಗ್ಲೋರಿಯಾರನ್ನು ಎರಡು ಮೂರು ಸಾರಿ ನೋಡಿದರು. ನಂತರ- +“..ನೋಡೋಣ…” ಎಂದರು ತೀರಾ ಸಪ್ಪೆಯಾಗಿ. +“..ಸಿಸ್ಟರ್ ಇದೊಂದು ಉಪಕಾರ ಮಾಡಬೇಕು ನೀವು..” ಎಂದು ಸ್ಯಾಮ್ಸನ್ ಕೈ ಮುಗಿದ. +“ಆಯ್ತು…ಆಯ್ತು..” ಎಂದು ಹೆಡ್‌ಸಿಸ್ಟರ್ ಒಳಹೋಗಿ ಬೀಗ ಹಾಕಿಕೊಂಡರು. +ಕೊದಂಡರಾಯರ ಮಾತು ಕೇಳಿ ಉತ್ಸಾಹದಿಂದ ಬಂದವ ಏಕೋ ಸಿಸ್ಟರರ ದನಿ ಕೇಳಿ ನಿರುತ್ಸಾಹಗೊಂಡ. +ಗ್ಲೋರಿಯಾ ಹಿಂದೆಯೇ ವಿಷಯ ತಿಳಿದ ಹಸಿಮಡ್ಲು ಪಾತ್ರೋಲನ ಮಗಳೂ ಒಂದು ಅರ್ಜಿ ಕೊಟ್ಟಳು. +ತಿಂಗಳುಗಳು ಉರುಳಿದವು. ಅರ್ಜಿಕೊಟ್ಟವರಿಗೆ ತಾವು ಕೊಟ್ಟ ಅರ್ಜಿಯ ಕತೆ ಏನಾಯಿತು ಎಂಬುದು ತಿಳಿಯಲಿಲ್ಲ. ಆದರೂ ಅವರಿಗೊಂದು ಆಸೆ. ಕೆಲಸ ಸಿಗಬಹುದು. ದೇವರು ಕೈಬಿಡಲಾರ ಎಂಬ ಭರವಸೆ. +ಜನವರಿ ತಿಂಗಳು, ಮೂರು ರಾಯರ ಹಬ್ಬ ಆಚರಿಸುವ ಸಂದರ್ಭ. ಬಾಲ ಏಸುವನ್ನು ನೋಡಲು ಮೂರು ಜನ ಪಂಡಿತರು ಬಂದು ಮಗುವಿಗೆ ಕಾಣಿಕೆಗಳನ್ನು ನೀಡಿ ಹೋಗುತ್ತಾರೆ. ಕ್ರಿಬ್ಬಿನಲ್ಲಿ ಮೂವರು ರಾಯರ ಪ್ರತಿಮೆಗಳನ್ನು ಇರಿಸಿ ಅದೊಂದು ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಸುಪಾಸಿನಲ್ಲಿ ಒಂದು ಸುದ್ದಿ ಕೇಳಿ ಬಂದಿತು. +ಕಾನ್ವೆಂಟಿಗೆ ಈರ್ವರು ಹೊಸ ಶಿಕ್ಷಕಿಯರು ಬಂದಿದ್ದಾರೆ. ಒಬ್ಬರು ಮಂಗಳೂರಿನವರು. ಈಗ ಹಾಲಿ ಕಾನ್ವೆಂಟಿನಲ್ಲಿರುವ ಸಿಸ್ಟರ್ ಲೀನಾರ ಅಕ್ಕನ ಮಗಳು. ಇನ್ನೊಬ್ಬಳು ಮಿರೋಣ್ ಜಾನ್ ಡಯಾಸನ ಮಗಳು. ಈವರೆಗೆ ಮಂಗಳೂರಿನಲ್ಲಿ ಇದ್ದವಳನ್ನು ಈಗ ಡಯಾಸ ಇಲ್ಲಿಗೆ ಕರೆಸಿಕೊಂಡು ಕೆಲಸ ಕೊಡಿಸಿದ್ದಾನೆ. +ಸ್ಯಾಮ್ಸನ ಮನೆ ಜಗಲಿಯ ಮೇಲೆ ಕವಳ ಜಗಿಯುತ್ತ ಕುಳಿತವ ಮಗಳಿಂದ ಒಂದು ಚಂಬು ನೀರು ತರಿಸಿಕೊಂಡು ಬಾಯಿ ಮುಕ್ಕಳಿಸಿ, ಹಲ್ಲಿನ ಸಂದಿ ಗೊಂದಿಯಲ್ಲಿ ಸೇರಿಕೊಂಡ ಅಡಿಕೆ ಚೂರನ್ನು ನಾಲಿಗೆ ತುದಿಯಿಂದ ಹೊರಗೆಳೆದು ಅಂಗಳಕ್ಕೆ ತೂಸಿ, ಶರಟೊಂದನ್ನು ತಗುಲಿಸಿಕೊಂಡು ಮನೆಯಿಂದ ಹೊರಬಿದ್ದ. +ರೋಗ ಬಂದ ಕೋಳಿಯ ಮೂಗಿಗೆ ಅದರ ಒಂದು ಪುಕ್ಕ ಚುಚ್ಚಿ ಅದು ತೂರಾಡುತ್ತ ಅಂಗಳದ ತುಂಬ ಓಡಿಯಾಡುವ ಹಾಗೆ ಸ್ಯಾಮ್ಸನ್ನನ ಪರಿಸ್ಥಿತಿಯಾಗಿತ್ತು. ಮಗಳಿಗೆ ಕಾನ್ವೆಂಟಿನಲ್ಲಿ ಕೆಲಸ ಸಿಗಬಹುದು ಅನ್ನುವ ಆಸೆ ಇತ್ತು. ಇದು ನಿರಾಶೆಯಾಗಿ ಪರಿವರ್ತನೆ ಹೊಂದುವುದರ ಜತೆಗೆ ಮೀರೋಣ್ ಜಾನಡಯಾಸನ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು. +ಜಾನಡಯಾಸನಿಗೇನೂ ಕಡಿಮೆಯಾಗಿರಲಿಲ್ಲ. ಅವನ ಮಗ ಕೆಲಸದಲ್ಲಿದ್ದ. ಹೆಣ್ಣು ಮಕ್ಕಳಲ್ಲಿ ಈರ್ವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕಂದಿರ ಜತೆಯಲ್ಲಿದ್ದ ಕೊನೆಯವಳಿಗೂ ಈಗ ಕೆಲಸ ದೊರಕಿದೆ. +ಇಷ್ಟೇ ಅಲ್ಲ ಈ ಬಾಮಣ ಊರಿನಲ್ಲಿ ಇಲ್ಲದ ಮನಸ್ತಾಪಗಳನ್ನು ಉಂಟುಮಾಡುತ್ತ ಅವರಿವರ ಮನೆಗೆ ಬೆಂಕಿ ಇಡುತ್ತ ಇಗರ್ಜಿಯಲ್ಲಿ ದೈವ ಭಕ್ತನಾಗಿ, ಪಾದರಿಯ ಆಪ್ತನಾಗಿ ಮೆರೆಯುತ್ತಿದ್ದಾನೆ. +ಪಾದರಿ ಸಿಕ್ವೇರಾ ಬಂದ ನಂತರ ಇಗರ್ಜಿಯ ಹಣಕಾಸಿನ ವ್ಯವಹಾರವನ್ನು ಈತ ನೋಡಿಕೊಳ್ಳುತ್ತಾನೆ. ಇಗರ್ಜಿಯ ನಡುವೆ ಇಟ್ಟ ಕಾಣಿಕೆ ತಟ್ಟೆಯನ್ನು ಒಳಗೆ ತೆಗೆದುಕೊಂಡು ಹೋಗುವುದು. ಉಳಿದ ಸಂತರ ಬಳಿ ಇರಿಸಿರುವ ಕಾಣಿಕೆ ಡಬ್ಬಗಳ ಬೀಗ ತೆಗೆದು ಹಣ ಎಣಿಸಿಕೊಳ್ಳುವುದು, ಈ ಬಗೆಯ ಕೆಲಸ ಮಾಡುತ್ತ ಒಂದಿಷ್ಟು ಹಣವನ್ನು ತನ್ನ ಜೇಬಿಗೂ ಇಳಿಸುತ್ತಾನೆಂದು ಇಗರ್ಜಿಗೆ ಹೋಗುವ ಸಣ್ಣ ಹುಡುಗರೂ ಹೇಳುತ್ತಾರೆ. +ಕರಿಕಾಲಿನ ಇರುದನಾದದ ಮಗಳು ರೈಲ್ವೆ ಗಾರ್ಡ್ ಓರ್ವನ ಜತೆ ಓಡಿ ಹೋಗಿ ಆರು ತಿಂಗಳಾಗಿತ್ತು. ಅವಳು ಭದ್ರಾವತಿಗೆ ಹೋಗಿ ಸೇರಿಕೊಂಡು ಅಲ್ಲಿ ಆ ಗಾರ್ಡ ಜತೆ ಸಂಸಾರ ಕೂಡ ಹೂಡಿದ್ದಳು. ಇಲ್ಲಿ ಗುಲ್ಲು ಗಲಾಟೆಯಾಯಿತು. ಈ ಡಯಾಸ ಹಾಗೂ ಗುರ್ಕಾರ ಪಿಂಟೋ ಭದ್ರಾವತಿಗೆ ಹೋಗಿ ಆ ಹುಡುಗಿಯನ್ನು ಕರೆ ತಂದರು. ಆರು ತಿಂಗಳು ಯಾರ ಜತೆಗೋ ಇದ್ದು ಬಂದವಳು ಅನ್ನುವ ಕಾರಣಕ್ಕೆ ಕ್ರೀಸ್ತುವರು ಅವಳ ವಿಚಾರಣೆ ಆಗಬೇಕು ಎಂದರು. ಜೂಂತ ಇರಿಸಿ ಎಂದು ಕೂಗಾಡಿದರು. ಈ ಡಯಾಸ ಅವಳ ಆರೋಗ್ಯ ಸರಿಯಿಲ್ಲ ಎಂದು ಅವಳನ್ನು ಶಿವಮೊಗ್ಗೆಗೆ ಕರೆದೊಯ್ದು ಹದಿನೈದು ದಿನ ಆಸ್ಪತ್ರೆಯಲ್ಲಿರಿಸಿ ಅವಳನ್ನು ಸರಿ ಮಾಡಿ ಕರೆತಂದ. ಇದು ಸಾಲದೆಂದು ಓಡಿ ಹೋದವಳನ್ನು ಪಾದರಿ ಕೋಲಾರದ ಓರ್ವ ಹುಡುಗನಿಗೆ ಮದುವೆ ಮಾಡಿದರು. +ಗುರ್ಕಾರನ ಪಿಂಟೋನ ಮೊಮ್ಮಗಳು ಅವನ ಹೆಂಡತಿ ತಂಗಿಯ ಮಗಳು ಚಿಕ್ಕಮಗಳೂರಿನಲ್ಲಿ ಎರಡು ವರ್ಷದಿಂದ ಪ್ರೌಢಶಾಲೆಯಲ್ಲಿ ಫ಼ೇಲಾಗುತ್ತಿದ್ದವಳನ್ನು ಇಲ್ಲಿಗೆ ಕರೆತಂದು ಕಾನ್ವೆಂಟಿಗೆ ಸೇರಿಸಿ ಪಾಸು ಮಾಡಿಸಿದ. ಆ ಹುಡುಗಿಯನ್ನು ಚೆನ್ನಾಗಿ ಓದಿ ಬರೆಯಬಲ್ಲ ಬೇರೊಂದು ಹುಡುಗಿಯ ಪಕ್ಕದಲ್ಲಿ ಕೂರಿಸಿ ಅವಳದನ್ನು ನೋಡಿ ಬರೆಯುವಂತೆ ಇವಳಿಗೆ ಹೇಳಿ ಇವಳು ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದವ ಈ ಡಯಾಸ. ಇದಕ್ಕೆ ಸಿಸ್ಟರುಗಳ ಬೆಂಬಲ. +ಇವನ ಮನೆಯಿಂದ ಹಂದಿ ಮಾಂಸ, ಹೊಳೆ ಮೀನು ನಿರಂತರವಾಗಿ ಕಾನ್ವೆಂಟಿಗೆ ಸರಬರಾಜು ಆಗುತ್ತದೆ. ಸಿಸ್ಟರುಗಳು ಇವನ ಮನೆಗೆ ವಾರಕ್ಕೆ ಎರಡು ದಿನ ಬಂದು ಹೋಗುತ್ತಾರೆ. ಡಯಾಸ ತನ್ನ ಜನರ ಬಗ್ಗೆ ಅವರ ಮಕ್ಕಳ ಬಗ್ಗೆ ತುಂಬಾ ಮುತುವರ್ಜಿವಹಿಸುತ್ತಾನೆ. +ಬೇರೆ ಊರುಗಳಲ್ಲಿ ಮನೆ ಮಾಡಿಕೊಂಡಿರುವ ತನ್ನ ತಮ್ಮಂದಿರು ಆಸ್ತಿಯಲ್ಲಿ ಪಾಲು ಕೇಳಲು ಕೂಡ ಈ ಡಯಾಸ ಕಾರಣ ಎಂಬ ಮಾತಿದೆ. ಅವರು ಹಬ್ಬಕ್ಕೆ ಬಂದಾಗಲೆಲ್ಲ ಈತ ಅವರನ್ನು ನಿಲ್ಲಿಸಿಕೊಂಡು- +“ಫ಼್ಲೋರಾ..ಏನು ನಿನ್ನ ತಂದೆ ಕಟ್ಟಿದ ಮನೇನ ಪೂರ್ತಿಯಾಗಿ ನಿನ್ನ ಅಣ್ಣನಿಗೇಕೇ ಬಿಟ್ಟು ಬಿಟ್ತಿರಾ?” ಎಂದು ಓರ್ವ ತಮ್ಮನಿಗೆ ಕೇಳಿದರೆ ಇನ್ನೋರ್ವನ ಹತ್ತಿರ- +“ಹಬ್ಬಕ್ಕೆ ಬಂದೆಯಾ ಸೈಮನ್..ಬರಬೇಕು ..ಇಲ್ಲಿ ತಂದೇದು ಅಂತ ಒಂದು ಮನೆ ಇದೆಯಲ್ಲ..ಅದನ್ನು ಸಾಮ್ಸನ್ ನೋಡಿಕೊಂಡರೂ ಅದು ನಿಮ್ಮದೇ ಮನೆ ಅಲ್ವೆ?” ಎಂದು ಕೇಳುತ್ತಾನೆ. +ಮೂರನೆಯವನಿಗೂ ಹೀಗೆಯೇ ಕೇಳಿ ಅವರೆಲ್ಲರ ತಲೆ ಕೆಡಿಸುತ್ತಾನೆ. +ಇಂತಹ ಡಯಾಸ ಈಗ ತನ್ನ ಮಗಳಿಗೆ ಸಿಗಬಹುದಾಗಿದ್ದ ಕೆಲಸವನ್ನು ಕಿತ್ತುಕೊಂಡಿದ್ದಾನೆ. ಈ ಬಾಮಣ ಬಾಮಣರೂ ಒಂದೇ. ಅವರು ಬೇರೆಯವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇಲ್ಲವೆಂದರೆ ಸಿಸ್ಟರ್ ಲೀನಾ ಅಕ್ಕನ ಮಗಳನ್ನು ಕರೆತಂದು ಇಲ್ಲಿ ಕೆಲಸ ಕೊಡಿಸಬೇಕಿತ್ತೆ? ಗ್ಲೋರಿಯಾಗೆ ಕೆಲಸ ಕೊಡುವುದು ಬೇಡ. ತೀರಾ ಬಡವನಾಗಿರುವ ಹಸಿಮಡ್ಲು ಪತ್ರೋಲನ ಮಗಳಿಗಾದರೂ ಕೊಡಬಹುದಿತ್ತಲ್ಲ. +ಈ ಎಲ್ಲ ವಿಷಯಗಳು ತಲೆಯಲ್ಲಿ ಮುಳ್ಳು ಹಂದಿಯ ಗಣೆಗಳ ಹಾಗೆ ನಿಮಿರಿ ನಿಂತಿರಲು ಆತ ರಸ್ತೆಗೆ ಇಳಿದ. +ಎದುರು ಬಂದ ಎಲ್ಲರನ್ನೂ ನಿಲ್ಲಿಸಿಕೊಂಡು- +“ಅಲ್ಲ..ಇವರು ಹೀಗೆ ಮಾಡಬಹುದ? ಅವರು ದೇವರ ಸೇವಕರಲ್ವ? ಹಗಲೂ ರಾತ್ರಿ ಪ್ರಾರ್ಥನೆ ಜಪ ಅಂತ ಕಾಲ ಕಳೆಯೋ ಜನ ಅಲ್ವ..ಅವರು ಹೀಗೆ ಮಾಡಬಹುದ?” ಎಂದು ಕೇಳಿದ. +ಗುರ್ಕಾರ ಸಿಮೋನನ ಮನೆಗೆ ಹೋಗಿ- +“ಅವರಿಗೆ ನಮ್ಮ ಊರಿನ ಜಮೀನಿರಬೇಕು..ಅಲ್ಲಿ ಅವರು ಕಾನ್ವೆಂಟ್ ಕಟ್ಟಬೇಕು..ಕೆಲಸ ಮಾಡಲಿಕ್ಕೆ ಮಂಗಳೂರಿನವರೇಬೇಕಾ? ನಮ್ಮ ಹೆಣ್ಣು ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬರೋದಿಲ್ವ..ನೀವು ಗುರ್ಕಾರ ಅಂತ ಇದೀರಲ್ಲ ಇದನ್ನ ಕೇಳಬೇಕು..” ಎಂದು ಕೂಗಾಡಿದ. +ಪಾಸ್ಕೋಲನನ್ನು ನಿಲ್ಲಿಸಿಕೊಂಡು- +“ಹ್ಯಾಗಿದೆ ನ್ಯಾಯ? ಆವತ್ತು ನಿನ ಮಗ ಸೋತ..ಯಾರಿಂದ? ಈ ಬಾಮಣರಿಂದ. ಈಗ ನನ ಮಗಳಿಗೆ ಕೆಲಸ ಸಿಗಲಿಲ್ಲ ಯಾರಿಂದ? ಈ ಬಾಮಣರಿಂದ. ನಾವು ಚಾರಡಿಗಳು ಗೌಡಿಗಳು ನೇಂದರಗಳು ಊರು ಬಿಡೋಣ..ಈ ಬಾಮಣರೇ ಇಲ್ಲಿ ಇದ್ದು ಬಿಡಲಿ..” ಎಂದ. +ಬೋನನ ಅಂಗಡಿಗೂ ಹೋದ. +ಅಲ್ಲಿ ಕೂಗಾಡಿ ಪಿಂಟೋನ ಅಂಗಡಿಯತ್ತ ಒಮ್ಮೆ ನೋಡಿ ರಸ್ತೆಯತ್ತ ಉಗುಳಿ ಮುಂದೆ ಹೋದ. +* * * * +ಸ್ಯಾಮ್ಸನಗೆ ಆದ ನಿರಾಶೆ, ಹಸಿಮಡ್ಲು ಪತ್ರೋಲನಿಗಾದ ಅನ್ಯಾಯ ಊರ ಕ್ರಿಸ್ತುವರ ಗಮನಕ್ಕೆ ಬಾರದಿರಲಿಲ್ಲ. ಹಿರಿಯರು ಮುದುಕರು ಛೆ! ಪಾಪ!! ಎಂದೆಲ್ಲ ಮರುಕ ಪಟ್ಟರು. ಸಿಸ್ಟರುಗಳು ಏಕೆ ಹೀಗೆ ಮಾಡಿದರು ಎಂದು ಇಳಿದನಿಯಲ್ಲಿ ಮಾತನಾಡಿಕೊಂಡರು. ಆದರೆ ಇದೀಗ ಮೀಸೆ ಚಿಗುರುತ್ತಿದ್ದ ಎದೆ ಬಿರುಸಾಗುತ್ತಿದ್ದ ತರುಣರು ಇದನ್ನು ಸಹಿಸಿಕೊಳ್ಳಲಿಲ್ಲ. +ಈ ಸಿಸ್ಟರುಗಳ ಬಗ್ಗೆ ಡಯಾಸ, ಪಿಂಟೋನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. +ಬೋನನ ಮಗ ಫ಼ಿಲಿಪ್ಪನಿಗೆ ಕೆಟ್ಟ ಅನುಭವಗಳು ಆಗಿದ್ದವು. ಕಾನ್ವೆಂಟ್ ಶಾಲೆಯಲ್ಲಿ ಓದುವಾಗ ಶಾಲೆಯನ್ನು ಗುಡಿಸಲು ತನ್ನನ್ನು, ಗ್ರೆಗೋರಿಯನ್ನು, ರಾಬರ್ಟಿಯನ್ನು ಅವರು ಕರೆಯುತ್ತಿದ್ದರು. +ಡಾಕ್ಟರ್ ಕೋದಂಡರಾಯರ ಮಗ ಶಾಲೆಯಲ್ಲಿ ವಾಂತಿಮಾಡಿಕೊಂಡಾಗ ಅದನ್ನು ತೆಗೆಯಲು ಸಿಸ್ಟರ್ ಲೀನಾ ಕರೆದದ್ದು ಇಂತ್ರು ಮಗ ಸಿರೀಲನನ್ನು. ನಿತ್ಯ ಶಾಲೆಯ ಬೀಗ ತಂದು ಬಾಗಿಲು ತೆಗೆದು, ಸಂಜೆ ಬೀಗ ಹಾಕುವ ಕೆಲಸ ಸುತಾರಿ ಇನಾಸನ ಮಗ ಪಾಸ್ಕು ಮಾಡಬೇಕಾಗುತ್ತಿತ್ತು. +ಊರಿನ ಬಡ ಕ್ರೈಸ್ತುವರ ಮಕ್ಕಳು. ಕಲ್ಲು ಕೆತ್ತುವ, ಕಲ್ಲು ತೆಗೆಯುವ, ಗಿಲಾಯಿ ಮಾಡುವ ಎಲ್ಲರ ಮಕ್ಕಳಿಗೂ ಶಾಲೆಯಲ್ಲಿ ಒಂದಲ್ಲಾ ಒಂದು ಕೆಲಸ. +“..ದೇವಾಚೆಂ ಕಾಮ ಕೆಲೇರ್..ದೇವ ಬೊರೆಂ ಕರ್ತಾ…”(ದೇವರ ಕೆಲಸ ಮಾಡಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ) ಎಂಬ ಮಾತು ಬೇರೆ. +ಎಲ್ಲಿಂದಲೋ ಬರುವ ಗೋದಿ, ಎಣ್ಣೆ, ಹಾಲಿನ ಪುಡಿ ಬಟ್ಟೆ ಎಲ್ಲ ಡಯಾಸ, ಪಿಂಟೋ ಮನೆಗೆ. ಉಳಿದವರಿಗೆ ದೇವರ ಆಶೀರ್ವಾದ. +ಇದು ಫ಼ಿಲಿಪ್ಪನ ಅನುಭವ. ಉಳಿದವರ ಅನುಭವ ಕೂಡ ಬೇರೆಯಾಗಿರಲಿಲ್ಲ. +ಇಗರ್ಜಿಯಲ್ಲಿ ಸಾಲು ಸಾಲಾಗಿ ಬೆಂಚುಗಳನ್ನು ಹಾಕಲಾಗಿತ್ತು. ಈ ಬೆಂಚುಗಳ ಮೇಲೆ ಹೆಸರುಗಳು. ಅಲ್ಲಿ ಕುಳಿತುಕೊಳ್ಳಬೇಕಾದ ಜನರೇ ಬೇರೆ. ಪಾಸ್ಕು, ಬಸ್ತು, ಪೆದ್ರು, ಸಾಂತ ಕೈತಾನ, ಇಂತ್ರು, ಸಂತ, ಬಡ್ತೋಲ, ಫ಼ರಾಸ್ಕ ಯಾರೂ ಅಲ್ಲಿ ಕೂರುವಂತಿಲ್ಲ. ಒಂದು ವೇಳೆ ಕೂತರೂ ಅವರನ್ನು ಎಬ್ಬಿಸುತ್ತಾನೆ ಡಯಾಸ ಪಿಂಟೋ. +“ಏನು..ನೀನೇನು ದೊಡ್ಡ ಆಫ಼ೀಸರ್ರ..ಬೆಂಚಿನ ಮೇಲೆ ಕೂರಲಿಕ್ಕೆ?” ಎಂದು ಕೇಳುತ್ತಾನೆ. +ಆವತ್ತು ಅಂತೋನಿಗೆ ಹಾಗೆ ಆಯಿತು. +ಈಗ ಗ್ಲೋರಿಯಾಗೆ ಹೀಗೆ. +ಹಸಿಮಡ್ಲು ಮಗಳಿಗೆ ಹೀಗೆ. +“ಇದು ಯಾಕೆ ಹೀಗೆ ಆಗತಿದೆ..ನಮಗೆ ಗೊತ್ತು” ಎಂದು ಯುವಕರು ಗುರುಗುಟ್ಟಿದರು. +ಇಗರ್ಜಿ ಮುಂದೆ, ಸಂತ ಜೋಸೆಫ಼ರ ಮಂಟಪದ ಮುಂದೆ, ಕೇರಿಯ ಸರಕಾರಿ ಬಾವಿಯ ಬಳಿ ಜೋಸೆಫ಼ ನಗರದ ಕಾಮತಿ ಅಂಗಡಿ ಬಳಿ, ನಿಂತು ಯುವಕರು ಕಿಡಿಕಾರಿದರು. ಗುರ್ಕಾರ ಸಿಮೋನನ ಕಿವಿಗೂ ಇದು ಬಿದ್ದಿತು. ಬೋನನೂ ಕೇಳಿಸಿಕೊಂಡ. +ಈ ಬಾರಿ ಅವರು ಏನನ್ನೂ ಹೇಳಲು ಹೋಗಲಿಲ್ಲ. +ಸಂಜೆಯ ಆಮೋರಿಗೆ ಕುಳಿತಾಗ ಮಾತ್ರ +“ದೇವಾ” ಎಂದು ದೇವರೆದುರು ಮೊರೆ ಇಟ್ಟರು. +“ಈ ತಳಮಳ ಸಿಟ್ಟು ಕೋಪ ದೂರ ಮಾಡು..” ಎಂದು ಕೈ ಮುಗಿದರು. +* +* +* +ಇತ್ತೀಚಿನ ದಿನಗಳಲ್ಲಿ ಹೀಗೆ ಒಂದಲ್ಲಾ ಒಂದು ಘಟನೆ ನಡೆದು ಸಿಮೋನ ವಿಚಲಿತನಾಗುತ್ತಿದ್ದ. ಮೊನ್ನೆ ಮೊನ್ನೆ ವೈಜೀಣ್ ಕತ್ರೀನ ತೀರಿಕೊಂಡಾಗ ನಡೆದುದನ್ನು ಏನು ಮಾಡಿದರೂ ಮರೆಯಲು ಅವನಿಂದ ಆಗಿರಲಿಲ್ಲ. +ಹಿಂದೆ ಸಂತು ಮೇಸ್ತ ಎಂದು ಒಬ್ಬಾತ ಕೆಲ ವರುಷ ಶಿವಸಾಗರದಲ್ಲಿ ಮನೆ ಮಾಡಿಕೊಂಡಿದ್ದ. ಈತ ಹೊನ್ನಾವರದ ಹತ್ತಿರವಿದ್ದ ಜೋಗಮಠದವ. ಇವನ ಹೆಂಡತಿ ಹೊನ್ನಾವರದವಳು. ಇವಳ ತಂದೆ ಮೂರು ನಾಲ್ಕು ಮಚವೆ ಇರಿಸಿಕೊಂಡು ತುಸು ಅನುಕೂಲವಾಗಿಯೇ ಇದ್ದವನು. ಇವನು ಮಗಳಿಗೆ ಹೆರಿಗೆಯಾಗಿ ಮಗಳು ಗಂಡನ ಮನೆಗೆ ಹೊರಟಾಗ, ದೂರದ ಊರಿನಲ್ಲಿ ನೆಂಟರು ಇಷ್ಟರು ಇಲ್ಲದ ಕಡೆ ಮಗಳನ್ನು ಮಗುವನ್ನು ನೋಡಿಕೊಂಡು ಇರಲಿ ಎಂದು ಕತ್ರೀನಳನ್ನು ಅವಳ ಜತೆ ಕಳುಹಿಸಿದ. ಕತ್ರೀನಳ ತಾಯಿ ಅನ್ನಾಬಾಯಿ ಕೂಡ ಹೊನ್ನಾವರದಲ್ಲಿ ಹೆರಿಗೆ ಮಾಡಿಸುವುದು ಬಾಣಂತಿಯರಿಗೆ ಸ್ನಾನ ಮಾಡಿಸು ಎಂದು ಕೆಲಸ ಮಾಡಿಕೊಂಡಿದ್ದವಳೆ. ಇಷ್ಟು ಬಿಟ್ಟರೆ ಹೆಚ್ಚು ವಿವರ ಅವಳ ಬಗ್ಗೆಯೂ ಇಲ್ಲ. ಕತ್ರೀನಳ ಬಗ್ಗೆಯೂ ಇರಲಿಲ್ಲ. +ಕತ್ರಿನ ಶಿವಸಾಗರಕ್ಕೆ ಬಂದವಳು ಎರಡು ವರ್ಷ ಸಂತು ಮೇಸ್ತನ ಮನೆಯಲ್ಲಿದ್ದಳು. ಅವನ ಸಣ್ಣ ಸಣ್ಣ ಮಕ್ಕಳನ್ನು ನೋಡಿಕೊಂಡು, ಸಂತು ಹೆಂಡತಿಯನ್ನು ನೋಡಿಕೊಂಡು ಇವಳಿದ್ದಳು. +ಸಂತು ಮೇಸ್ತ ಮಾತ್ರ ಒಳ್ಳೆಯವನಾಗಿರಲಿಲ್ಲ. ಮೇಲಿನ ಮನೆ, ಹೆಗ್ಗೋಡು, ಸೂರಗುಪ್ಪೆ ಎಂದೆಲ್ಲ ಅಲ್ಲಲ್ಲಿ ಕೆಲಸ ಹಿಡಿದು ಮನೆ ಕಟ್ಟಿಸುತ್ತಿದ್ದ ಈತ ಹೋದಲ್ಲೆಲ್ಲ ಏನೇನೋ ಭಾನಗಡಿ ಮಾಡಿಕೊಳ್ಳುತ್ತಿದ್ದ ವಿಷಯ ತನ್ನ ಕಿವಿಗೂ ಬೀಳುತ್ತಿತ್ತು. ಒಂದೆರಡು ಸಾರಿ ತಾನೂ ಇವನಿಗೆ ಹೇಳಿದೆ- +“ನೋಡು ಸಂತು…ನಾವು ಬೇರೆ ಊರಿನವರು..ನಮ್ಮ ಧರ್ಮ ಕೂಡ ಬೇರೆ..ನಾವು ಇಲ್ಲಿ ಗೌರವದಿಂದ ಇರಬೇಕು..ಹೆಂಡತಿ ಮಕ್ಕಳು ಅಂತ ಇರಬೇಕಾದರೆ ನಮ್ಮ ಜವಾಬ್ದಾರಿ ಕೂಡ ಹೆಚ್ಚು..ಅವರಿವರು ಸದರದಿಂದ ಮಾತನಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು..” ಎಂದೆಲ್ಲ ಹೇಳಿಯೂ ನೋಡಿದೆ. +ಅವನು ಸರಿಹೋಗಲಿಲ್ಲ. +ಈ ನಡುವೆ ಅವನು ಮನೆಯಲ್ಲಿದ್ದ ಕತ್ರೀನಳನ್ನು ಕೆಣಕಿದ ಎಂದು ಕಾಣುತ್ತದೆ. ಅವಳೂ ಅವನ ಮನೆ ಬಿಟ್ಟು ಬೇರೆ ಮನೆ ಮಾಡಿದಳು. ಈ ಸಂತು ಮೇಸ್ತನ ಖ್ಯಾತಿ ಅವನ ಮಾವನ ಕಿವಿಗೂ ಬಿದ್ದು ಅವನು ಬಂದದ್ದೇ- +“..ನೀವೆಲ್ಲ ಇಲ್ಲಿಂದ ಹೊರಡಿ..” ಎಂದು ಹೇಳಿ ಸಂತುವಿನ ಇಡೀ ಕುಟುಂಬವನ್ನು ಹೊರಡಿಸಿಕೊಂಡು ಘಟ್ಟ ಇಳಿದ. ಆದರೆ ಈ ಕುಟುಂಬದ ಜತೆ ಬಂದ ಕತ್ರೀನ ಇಲ್ಲೇ ಉಳಿದಳು. +ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸುವ ಕೆಲಸವನ್ನು ಕತ್ರೀನ ತನ್ನ ಕೈಗೆತ್ತಿಕೊಂಡಳು. ಶಿವಸಾಗರಕ್ಕೆ ಈ ಕೆಲಸ ಮಾಡುವವರ ಅವಶ್ಯಕತೆ ಇತ್ತು. ಈ ಅವಶ್ಯಕತೆಯನ್ನು ಕತ್ರೀನ ಪೂರೈಸತೊಡಗಿದಳು. ಸಂತು ಮೇಸ್ತು ಊರು ಬಿಡುವಾಗ ಅದೇ ಊರಿಗೆ ಬಂದ ಇಂತ್ರು ಈ ಮನೆಯಲ್ಲಿ ಸೇರಿಕೊಂಡ. ವೈಜೀಣ ಕತ್ರೀನ ಅಲ್ಲಿಯೇ ಬೇರೊಂದು ಮನೆ ಕಟ್ಟಿಕೊಂಡಳು. ಸಿಮೋನ ಅವಳ ನೆರವಿಗೆ ನಿಂತ. +ಒಂಟಿ ಹೆಂಗಸು ಉದ್ದಕ್ಕೂ ಒಂದೇ ಕೆಲಸ ಮಾಡಿಕೊಂಡು ಬಂದಳು. ರಾತ್ರಿ ಎಂದು ನೋಡಲಿಲ್ಲ. ಮಳೆಗಾಲ ಚಳಿಗಾಲ ಎಂದು ನೋಡಲಿಲ್ಲ. ಯಾರೇ ಮನೆ ಬಾಗಿಲಿಗೆ ಹೋಗಿ ಕರೆದರೂ ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದಳು. ನೋವು ಎಂದು ನರಳುತ್ತಿದ್ದವರಿಗೆ ಧೈರ್ಯ ಹೇಳುತ್ತಿದ್ದಳು. +ಮನೆ ಬಾಗಿಲಿಗೆ ಕತ್ರೀನಮ್ಮ ಬಂದಿದ್ದಾಳೆ ಎಂದರೆ ಎಲ್ಲರಿಗೂ ಧೈರ್ಯ. +ಊರಿಗೆ ಬಂದಾಗ ಮೂವತ್ತು ಮೂವತ್ತೈದರ ಪ್ರಾಯ ಹೊಂದಿದ್ದ ಕತ್ರೀನ ಪುರುಷರ ದಬ್ಬಾಳಿಕೆಗೂ ಒಳಗಾದಳು. ಅವಳ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಯಾರೋ ಮನೆ ಬಾಗಿಲು ಬಡಿದು ಓಡಿ ಹೋಗುತ್ತಿದ್ದರು. ಸಾವಿರ ಕಣ್ಣುಗಳು ಆಸೆಯಿಂದ ಚಪಲದಿಂದ ಅವಳನ್ನು ನೋಡಿ ಉರಿಯುತ್ತಿದ್ದವು. ಆದರೂ ತನ್ನ ಕೆಲಸ ಮಾಡಿಕೊಂಡು ಉಳಿದಳು ಕತ್ರೀನ. +ಊರಿನಲ್ಲಿ ಪಾದರಿ ಇರಲಿ ಇಲ್ಲದಿರಲಿ ಮನೆಯಲ್ಲಿ ಜಪ ಪ್ರಾರ್ಥನೆ ನಿಲ್ಲಿಸಲಿಲ್ಲ. ನಿತ್ಯ ಅಮೋರಿಯ ಸದ್ದು ಕೇಳಿ ಬರುತ್ತಿದ್ದುದು ತಮ್ಮ ಮನೆಯಿಂದ ಹಾಗೂ ಅವಳ ಮನೆಯಿಂದ ಮಾತ್ರ. ಊರಿಗೆ ಪಾದರಿ ಬಂದದ್ದು ಅವಳಿಗೆ ತುಂಬಾ ಸಂತೋಷದ ವಿಷಯವಾಯಿತು. ಪ್ರತಿದಿನ ಬೆಳಿಗ್ಗೆ ಅವಳು ಇಗರ್ಜಿಗೆ ಬಂದು ಪೂಜೆ ಕೇಳಬೇಕು. ಭಾನುವಾರಗಳಂದು ದಿವ್ಯಪ್ರಸಾದ ಸ್ವೀಕಾರ. +“ಈ ಕತ್ರೀನಬಾಯಿ ಪ್ರತಿವಾರ ದಿವ್ಯಪ್ರಸಾದ ತೊಕೊಳ್ತಾಳಲ್ಲ ಅವಳೇನು ಪಾಪ ಮಾಡಿರತಾಳೆ?” ಎಂದು ಯಾರೋ ಮಾತಾಡಿಕೊಂಡಿದ್ದು ಇವಳ ಕಿವಿಗೆ ಬಿದ್ದು ಇವಳು- +“..ಪಾಪ ಮಾಡಿದೀನಿ ಅಂತ ಅಲ್ಲ..ನನಗೆ ಶಕ್ತಿ ಬರಲಿ ಅಂತ ನಾನು ಕ್ರಿಸ್ತ ಪ್ರಭುವಿನ ರಕ್ತ ಮಾಂಸವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸೋದು” ಎಂದು ಹೆಳುತ್ತಿದ್ದಳು. +ತಪಸ್ಸಿನ ಕಾಲದ ಉಪವಾಸ, ಮುಂತಿ ಮಾತೆಯ ಹಬ್ಬದ ನವೇನ ಹೀಗೆ ಯಾವುದನ್ನೂ ಬಿಡಲಿಲ್ಲ. +ಊರಿಗೇನೆ ಬೇಕಾದವಳಾಗಿದ್ದವಳು ಕತ್ರೀನ. ಎಲ್ಲ ಜನರಿಗೂ ಅವಳ ಬಗ್ಗೆ ಗೌರವ ಪ್ರೀತಿ. +ಇತ್ತೀಚೆಗೆ ವಯಸ್ಸಾಗಿತ್ತು ಅವಳಿಗೆ. ಊರ ತುಂಬಾ ನರ್ಸಿಂಗ ಹೋಂಗಳು ಆಗಿದ್ದವು. ಆದರೂ ಹೆರಿಗೆ ಕಷ್ಟಕರವಾದಾಗ ನರ್ಸಿಂಗ ಹೋಂನವರು ಕೂಡ ಆಟೋ ಕಳುಹಿಸಿ ಕತ್ರೀನಳ ಮೇಲೆ ತುಂಬಾ ಭರವಸೆ ಇರಿಸಿಕೊಂಡ ಕೆಲವರು- +“..ನೀನು ಬಂದು ನಮ್ಮ ಜತೇಲಿ ಇರು..ಕತ್ರೀನಬಾಯಿ..ನಮಗಷ್ಟೇ ಸಾಕು” ಎಂದು ಹೇಳುತ್ತಿದ್ದರು. +ಕತ್ರೀನಬಾಯಿ ಹಣ ಮಾಡಬಹುದಿತ್ತು. ಕಳ್ಳ ಬಸಿರನ್ನು ತೆಗೆಸಲೆಂದು ಬಹಳ ಜನ ಅವಳಲ್ಲಿಗೆ ಬರುತ್ತಿದ್ದರು. +“ನಾನು ಇದೊಂದು ಕೆಲಸ ಮಾಡಲ್ಲ..ಇದು ಧರ್ಮ ದ್ರೋಹ…ದೇವರ ಸೃಷ್ಟಿನ ಹೊಸಕಿ ಹಾಕಿ ನಾನು ದೇವದ್ರೋಹಿ ಆಗಲಾರೆ..” ಎಂದು ಹೇಳುತ್ತಿದ್ದಳು. +ಹೆರಿಗೆ ಮಾಡಿಸಲೆಂದು ಹೋದ ಈಕೆಗೆ ದೊರಕುತ್ತಿದ್ದ ಪ್ರತಿಫ಼ಲ ಒಂದು ಸೀರೆ. ಒಂದು ಮೊರದ ತುಂಬ ಅಕ್ಕಿ, ಎಲೆ, ಅಡಿಕೆ, ಕೆಲ ರೂಪಾಯಿಗಳು ಇಷ್ಟರಿಂದಲೇ ಬದುಕಿದ್ದಳು ಕತ್ರೀನ. +ಇಳಿ ವಯಸ್ಸಿನಲ್ಲಿ ಕೈಯಲ್ಲಿ ಜಪಸರ ಹಿಡಿದು ಮಣಿ ಎಣಿಸುತ್ತ ಕೂತಿರುತ್ತಿದ್ದಳು. ಸಿಮೋನನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಅವಳಿಗಾಗಿ ಊಟ ಮತ್ತೊಂದು ಹೋಗುತ್ತಿತ್ತು. +“ಬೇಡ ಕಣೆ ಅಪ್ಪಿ…ನಾಲಿಗೆಗೆ ರುಚಿಯಿಲ್ಲ” ಎಂದು ಹೇಳುತ್ತಿದ್ದಳು. +ಒಂದು ತುತ್ತು ಉಂಡು ಉಳಿದುದನ್ನು ಮನೆ ಬಾಗಿಲಿಗೆ ಬರುವ ಕೊರಗರ ಮಕ್ಕಳಿಗೆ ಇಕ್ಕುತ್ತಿದ್ದಳು. +ಈ ಕತ್ರೀನ ಕೈಯಲ್ಲಿ ಜಪಸರ ಹಿಡಿದೇ ಕೊನೆಯ ಉಸಿರು ಎಳೆದಳು. ರಾತ್ರಿಗೆ ಅವಳಿಗೆ ಊಟ ಕೊಡಲೆಂದು ಹೋಗಿದ್ದ ಸಿಮೋನನ ಹೆಂಡತಿ ಅಪ್ಪಿಬಾಯಿ- +“..ದೇವಾ..” (ದೇವರೇ) ಎಂದು ಕೂಗಿ ಓಡಿ ಬಂದಳು. +ಹೆಂಗಸರು ಹೋಗಿ ಸ್ನಾನ ಮಾಡಿಸಿ, ಬಿಳಿ ಸೀರೆ ಉಡಿಸಿ, ಶವವನ್ನು ತಂದು ಮನೆಯ ಹೊರಗೆ ಮಲಗಿಸಿದರು. ಸುತಾರಿ ಮರದ ಶವ ಪೆಟ್ಟಿಗೆ ಸಿದ್ಧಪಡಿಸಿದ. ಜನ, ಹೂವು, ಮೇಣದ ಬತ್ತಿಯನ್ನು ಹಿಡಿದು ಅವಳ ಮನೆಗೆ ಧಾವಿಸಿದರು. ಹಿಂದುಗಳು, ಮುಸ್ಲೀಮರು ದಂಡಿಯಾಗಿ ಬಂದರು. ಆದರೆ ಪಾದರಿ ಸಿಕ್ವೇರಾ ಕತ್ರೀನಬಾಯಿಯ ಶವ ಸಂಸಾರಕ್ಕೆ ಸಿಗಲಿಲ್ಲ. +ಬೆಳಿಗ್ಗೆ ಊರಲ್ಲಿದ್ದ ಅವರು- +“ನಾನು ಹತ್ತು ಗಂಟೆಗೆ ಹೊರಗೆ ಹೋಗಬೇಕು. ಅಷ್ಟರಲ್ಲಿ ಎಲ್ಲ ಮುಗಿಸಿ” ಎಂದರು. +ಕತ್ರೀನಳ ತಾಯಿಯ ಕಡೆಯ ಸಂಬಂಧಿಗಳು ಹೊನ್ನಾವರದಿಂದ ಬರಬೇಕಿತ್ತು. ಸಿಮೋನ- +“…ಅವರು ಬರಲಿ ಪದ್ರಾಬಾ..ಹನ್ನೆರಡು ಗಂಟೆವರೆಗೆ ನೀವು ಇರಿ..” ಎಂದು ಕೇಳಿಕೊಂಡ. +“ಇಲ್ಲ..ಇಲ್ಲ..ಎಲ್ಲ ನೀವೇ ಮಾಡಿ ಮುಗಿಸಿ” ಎಂದು ಸಿಕ್ವೇರಾ ಕಾರನ್ನು ಏರಿದರು. +ಹನ್ನೆರಡು ಗಂಟೆಗೆ ಕತ್ರೀನಳ ಸಂಬಂಧಿಕರು ಬಂದರು. ಶವಯಾತ್ರೆಗೆ ಸಾಕಷ್ಟು ಜನ ಸೇರಿದ್ದರು. ಶವವನ್ನು ಇಗರ್ಜಿಗೆ ಕೊಂಡೊಯ್ದು ಅಲ್ಲಿ ಒಂದು ತೇರ್ಸ ಮಾಡಲಾಯಿತು. ನಂತರ ಮಿರೋಣ, ಡಯಾಸ, ಗುರ್ಕಾರರ ನೇತೃತ್ವದಲ್ಲಿ ಶವ ಸಂಸ್ಕಾರ ಆಯಿತು. +“ಛೇ! ಎಂತಹ ಸಾವು ಬಂತು ನೋಡಿ. ಒಂದು ಪೂಜೆ ಸಿಗಲಿಲ್ಲ. ಪಾದರಿಗಳ ಆಶೀರ್ವಾದ ಸಿಗಲಿಲ್ಲ ಎಂದು ಜನ ಪೇಚಾಡಿಕೊಂಡರು. +ಪಾದರಿ ಸಿಕ್ವೇರಾ ಅಷ್ಟು ಅವಸರ ಮಾಡಿಕೊಂಡು ಹೋದದ್ದು ಎಲ್ಲಿಗೆ ಎಂಬುದು ಅನಂತರ ಸಿಮೋನನಿಗೆ ತಿಳಿದುಬಂದಿತು. ಮೈಸೂರಿನಿಂದ ಬಂದ ನಾಲ್ವರು ಹೆಂಗಸರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಿಗೆ ಜಲಪಾತ ತೋರಿಸಲು ಪಾದರಿ ಸಿಕ್ವೇರಾ ಕರೆದುಕೊಂಡು ಹೋಗಿದ್ದರು. +ಸಿಮೋನ ಅಂತರಂಗದಲ್ಲಿಯೇ ಕೊರಗಿದ. +“ಏನು ಪದ್ರಾಬಾ..ನೀವು ಹೀಗೆ ಮಾಡುವುದಾ?” ಎಂದು ನೇರವಾಗಿ ಪಾದರಿ ಸಿಕ್ವೇರಾ ಅವರಿಗೆ ಕೇಳಿ ಬಿಡಬೇಕು ಅಂದುಕೊಂಡ. ಏನೋ ಅಳುಕು, ಅಂಜಿಕೆ ಅಡ್ಡ ಬಂದಿತು. ಪಾದರಿ ಹೀಗೆ ಮಾಡಬಾರದಿತ್ತು ಎಂದು ಮನಸ್ಸಿನಲ್ಲಿಯೇ ಮಿಡುಕಾಡಿದ. +“ಅರೆ..ನಿಮಗೆ ಗೊತ್ತಿಲ್ದ? ಈ ಜನ ದುಡ್ಡು ಮಾಡಾಕೆ ಹೋತಾರೆ.ದುಡ್ಡು.” ಎಂದಿದ್ದರು ಅವರು. +ಕೆಲವರನ್ನು ಈತ ಪರೀಕ್ಷೆ ಮಾಡಿಯೂ ನೋಡಿದ. ಅವರೆಲ್ಲ ದುಡ್ಡು ಮಾಡಿದ್ದರು..ಹೆಂಡತಿ ನಮಾಮೋರಿ ಜತೆ ಪ್ರಸ್ತಾಪಿಸಿದ. +ಬಳ್ಕೂರಿನಲ್ಲಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಪರೂಪಕ್ಕೆ ಕೆಲಸ ಸಿಗುತ್ತಿತ್ತು. ಬೇರೆ ಸಂದರ್ಭಗಳಲ್ಲಿ ದೋಣಿಗಳಿಗೆ ಸುಪಾರಿ ತುಂಬುವುದು, ತೆಂಗಿನಕಾಯಿ ಸುಲಿಯುವುದು, ಎಣ್ಣೆ ಗಾಣ ಆಡಿಸುವುದು ಎಂದು ಅದು ಇದು ಕೆಲಸ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ತಿನ್ನಲು ಐದು ಬಾಯಿಗಳು-ಹಾಡ ಹಾಡ (ತೆಗೆದುಕೊಂಡು ಬಾ ತೆಗೆದುಕೊಂಡು ಬಾ) ಅನ್ನುತ್ತಿರಲು ಇವನು ಎಲ್ಲಿಂದ ತಂದಾನು? ಹೆಂಡತಿ ಕೂಡ ’ನೋಡಿ’ ಎಂದಳು. ಆದರೆ ಗುಂಡುಬಾಳೆಯ ಈ ಮುದುಕಿ ತಟ್ಟನೆ ಒಪ್ಪಿಗೆ ಕೊಡಲಿಲ್ಲ. +“ಹ್ಯಾಗೋ ಆಗುತ್ತೆ..ಇಲ್ಲೇ ಇದ್ರೆ ಆಗಲಿಕ್ಕಿಲ್ಲ” ಎಂದು ಕೇಳಿದಳು ಅವಳು. +ಕೊನೆಗೆ ಅಳಿಯ ಓರ್ವನೇ ಹೋಗುತ್ತೇನೆ ಎಂದಾಗ “ಹೋಗಿ ಬನ್ನಿ..ದೇವರು ಒಳ್ಳೆಯದನ್ನು ಮಾಡತಾನೆ” ಎಂದಳು. ಅವಳಿಗೂ ಮಗಳ ಬದುಕು ಹಸನಾಗಲಿ ಎಂಬ ಆಸೆ ಇತ್ತು. +* +* +* +ಬಳ್ಕೂರಕಾರ ಕೈತಾನ ಶಿವಸಾಗರಕ್ಕೆ ಬಂದ. ಸಿಮೋನ ಕರೆದು ಅವನಿಗೆ ಕೆಲಸ ಕೊಟ್ಟ. ಸೇತುವೆ ನಿರ್ಮಾಣ, ಸರಕಾರಿ ಕಟ್ಟಡಗಳು, ಸಾಹುಕಾರಿ ಕಟ್ಟಡಗಳು ಎಂದು ಸಾಕಷ್ಟು ಕೆಲಸಗಳಿದ್ದವು. ಅಲ್ಲೆಲ್ಲ ಕಲ್ಲು ಕೆತ್ತುತ್ತ, ವಾರಕ್ಕೊಮ್ಮೆ ಸೈದೂರನ ಕುಲುಮೆಯಲ್ಲಿ ಬಾಚಿ ಸರಿಪಡಿಸಿಕೊಳ್ಳುತ್ತ ಸಾಂತಾಮೋರಿ ಮನೆಯಲ್ಲಿ ಊಟ ಮಾಡಿಕೊಂಡು ಆತ ಉಳಿದ. +ಒಂದು ಎರಡು ವರುಷ ಇಲ್ಲಿ ಇರಬೇಕು ಎಂದು ಬಂದವ ಕೊನೆಗೆ ಶಿವಸಾಗರದಲ್ಲಿಯೇ ತಾನು ಉಳಿಯಬೇಕೆಂದು ವಿಚಾರ ಮಾಡಿದ. ಕೊಪೆಲಗೆ ಹತ್ತಿರವೇ ಒಂದು ಜಾಗ ಕೂಡ ಅವನಿಗೆ ಮಂಜೂರಾಯಿತು. ಅವನೇ ಮನೆ ಕಟ್ಟಿದ. ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದ. +ಗುಂಡಬಾಳೆಗೆ ಹೋಗಿ ಇನಾಸಜ್ಜಿಗೂ ಶಿವಸಾಗರಕ್ಕೂ ಬರಲಿಕ್ಕೆ ಹೇಳಿದ- +“ಅತ್ತೆ ಬಂದು ಬಿಡು ಹೋಗೋಣ” ಎಂದ. +ಇಷ್ಟು ಹೊತ್ತಿಗೆ ಇನಾಸಜ್ಜಿಯ ಕೈಯಲ್ಲೂ ಏನೂ ಮಾಡಲಾಗುತ್ತಿರಲಿಲ್ಲ. ಕಾಡಿಗೆ ಹೋಗಿ ಸೊಪ್ಪು, ಬೇರು ಹುಡುಕಿ ತರಲು ಕಷ್ಟವಾಗುತ್ತಿತ್ತು. ಮಡಲು ಹೆಣೆಯುತ್ತಿದ್ದಳಲ್ಲದೆ, ತೆಂಗಿನ ನಾರು ಬಿಡಿಸಿ ಹಗ್ಗ ಹೆಣೆಯಲು ಆಗುತ್ತಿರಲಿಲ್ಲ. ದೊಡ್ಡ ಶಾನುಭೋಗರು ಯಾವುದೋ ಅಭಿಮಾನದಿಂದ ಅಕ್ಕಿ ಅದು ಇದು ಕೊಡುತ್ತಿದ್ದರು. ಗುಂಡಬಾಳೆಯ ಇಗರ್ಜಿಯೊಂದೇ ಅವಳಿಗೆ ಆಧಾರ. ಎರಡನೆಯ ಆಧಾರವೆಂದರೆ ಬಳ್ಕೂರಿನ ಮಗಳು, ಅಳಿಯ, ಮೊಮ್ಮಕ್ಕಳು. ಈಗ ಅವರೂ ದೂರವಾಗುತ್ತಾರೆ ಅಂದಾಗ ಮನಸ್ಸು ಖಾಲಿ ಖಾಲಿಯಾದಂತೆ ಭಾಸವಾಯಿತು. ಇಲ್ಲಿ ಏನಿದೆ ಎಂದು ತಾನಿರಬೇಕು ಎಂದು ಒಂದು ಕ್ಷಣ ಯೋಚಿಸಿದಳು. ಅಳಿಯನಂತೂ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮೊಮ್ಮಕ್ಕಳೂ ಕೂಡ. ಅವರ ಜತೆಗೇನೆ ಕೊನೆಯ ದಿನಗಳನ್ನು ಕಳೆಯುವುದು ಅಂದುಕೊಂಡ ಅವಳು- +“ಹೌದು ಕೈತಾನ..ಅಲ್ಲಿ ಇಗರ್ಜಿ ಪಾದರಿ ಅಂತ ಇದ್ದಾರೆ ಅಲ್ವ?” ಎಂದು ಸಹಜವಾಗಿ ಕೇಳಿದಳು.ಇಗರ್ಜಿ ಇಲ್ಲದ ಪಾದರಿ ಇಲ್ಲದ ಊರುಗಳೂ ಇರುತ್ತವೆ ಅಲ್ಲವೇ? ಈಗ ಇಗರ್ಜಿ ಹೊನ್ನಾವರ ಗುಂಡುಬಾಳೆಯಲ್ಲಿದೆ ಆದರೆ ಬೇರೆ ಕೆಲ ಊರುಗಳಲ್ಲಿ ಇಲ್ಲ. ಅಲ್ಲಿ ಹೇಗೋ ಯಾರಿಗೆ ಗೊತ್ತು? +ಅವಳ ಮಾತಿಗೆ ಕೈತಾನ ನಕ್ಕ. +“ಇಲ್ಲ ಅತ್ತೆ ನಮ್ಮವರ ಮನೆಗಳು ಹತ್ತು ಹದಿನೈದಿವೆ. ಒಂದು ಕೊಪೆಲ ಇದೆ. ಪಾದರಿ ಮಾತ್ರ ಇಲ್ಲ..ಮುಂದೆ ಬರಬಹುದು..” +“ಹಾಗಾದ್ರೆ ನಾನು ಬರೋದಿಲ್ಲ” ಎಂದು ಬಿಟ್ಟಳು ಇನಾಸಜ್ಜಿ. +ಇಗರ್ಜಿ ಪಾದರಿ ಇಲ್ಲದ ಊರಿಗೆ ಹೋಗಿ ದೈವಿಕತೆಯ ಗಂಧಗಾಳಿ ಇಲ್ಲದಲ್ಲಿ ಬದುಕಲು ಅವಳು ಸಿದ್ಧಳಿರಲಿಲ್ಲ. +“ಈವತ್ತಲ್ಲ ನಾಳೆ ಇಗರ್ಜಿಯಾಗುತ್ತೆ ಅತ್ತೆ” ಎಂದು ಕೈತಾನ ಹೇಳಿದರೂ ಅವಳು ಕೇಳಲಿಲ್ಲ. +“ಅದು ಆಗಲಿ..ನಾನು ಬರತೀನಿ” ಎಂದು ಬಿಟ್ಟಳು. +ಕೈತಾನ ಶಿವಸಾಗರಕ್ಕೆ ಬಂದು ಬಳ್ಕೂರಕಾರ ಆದ. ಅವನ ಹೆಂಡತಿ ಬಳ್ಕೂರಕಾರ ಹೆಂಡತಿಯಾದಳು. ಮಕ್ಕಳು ಬಳ್ಕೂರಕಾರ ಮಕ್ಕಳಾದರು. +ಇಲ್ಲಿಗೆ ಬಂದದ್ದು ಬಳ್ಕೂರಕಾರಗೆ ಒಳಿತಾಯಿತು. ಆತ ಒಳ್ಳೆಯ ಹಣ ಮಾಡಿದ. ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಮನೆಯನ್ನು ಹೊಸದಾಗಿ ಕಟ್ಟಿಸಿದ್ದಾನೆ. ಮನೆಯಲ್ಲಿ ಮೇಜು, ಕುರ್ಚಿ, ಮಂಚಗಳನ್ನೆಲ್ಲ ಮಾಡಿಸಿದ್ದಾನೆ. ಈಗ ಕಲ್ಲು ಕೆತ್ತುವ ಕೆಲಸ ಬಿಟ್ಟು ಮೇಸ್ತ್ರಿಯ ಕೆಲಸಕ್ಕೆ ತೊಡಗಿದ್ದಾನೆ. ಊರಿನಲ್ಲಿ ಇಗರ್ಜಿ ಬೇರೆ ಆಗಿದೆ. ಪಾದರಿ ಗೋನಸ್ವಾಲಿಸ್ ಬಂದಿದ್ದಾರೆ. +ಅವನಿಗೆ ತಟ್ಟನೆ ಇನಾಸಜ್ಜಿಯ ನೆನಪಾಗಿದೆ. ಅವನ ಹೆಂಡತಿ ನಮಾಮೋರಿ ಒಂದು ಬಾರಿ “ಇಲ್ಲಿ ಇಗರ್ಜಿ ಎಲ್ಲ ಆಗಿದೆ..ಅಮ್ಮ ಬರತಿದ್ಲೋ ಏನೋ..” ಎಂದು ಹೇಳಿದ್ದು ಕೂಡ ಕೈತಾನ ಈ ವಿಷಯ ಮರೆಯದಂತೆ ಮಾಡಿತು. +ಅತ್ತೆಯನ್ನು ನೋಡುವ ನೆಪದಲ್ಲಿ ಗುಂಡಬಾಳೆಗೆ ಹೋದ ಕೈತಾನ ಅಲ್ಲಿಂದ ತಿರುಗಿ ಬರುವಾಗ ಇನಾಸಜ್ಜಿಯನ್ನು ಕರೆತಂದ. ದೋಣಿಯಲ್ಲಿ ಅನಂತರ ಬಸ್ಸಿನಲ್ಲಿ ಜಪಸರದ ಮಣಿಗಳನ್ನು ಎಣಿಸುತ್ತ ಬಂದ ಇನಾಸಜ್ಜಿ ಶಿವಸಾಗರದ ಇಗರ್ಜಿಯನ್ನು ನೋಡಿ ಸಂತಸಪಟ್ಟಳು. ಮಗಳು ಮೊಮ್ಮಕ್ಕಳನ್ನು ನೋಡಿಯೂ ಅವಳಿಗೆ ಆನಂದವಾಯಿತು. +ಗುಂಡಬಾಳೆಯಲ್ಲಿಯ ಅವಳ ದಿನಚರಿ ಇಲ್ಲಿಯೂ ಹಾಗೆಯೇ ಮುಂದುವರೆಯಿತು. +ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗುತ್ತಿದ್ದ ಸಿಮೋನನ ತಾಯಿ, ವೈಜೀಣ್ ಕತ್ರೀನರ ಜತೆ ಇನಾಸಜ್ಜಿಯೂ ಸೇರಿಕೊಂಡಳು. +ಮೊದಲ ದಿನ ಇಗರ್ಜಿಗೆ ಹೋಗಿ ಬಂದ ಅಜ್ಜಿ ಗೋನಸ್ವಾಲಿಸ್ ರನ್ನು ತುಂಬಾ ಮೆಚ್ಚಿಕೊಂಡಳು. +“ಈ ಪಾದರಿಗಳು ತುಂಬಾ ದೈವಭಕ್ತರು…ಅವರು ಅರ್ಪಿಸುವ ಪೂಜೆಯನ್ನು ಕೇಳೋದೇ ಒಂದು ಪುಣ್ಯ..” ಎಂದಳವಳು. +ಅವರ ಕೋಪ, ಸಿಟ್ಟು, ಅವರ ನಾಗರಬೆತ್ತ, ಪಾಮಿಸ್ತ್ರಿ ಹಿಡಿದು ಹೊಡೆಯುವುದು ಅವಳ ಗಮನಕ್ಕೇನೆ ಬರಲಿಲ್ಲ. ಇದು ಅನಿವಾರ್ಯ ಎನಿಸಿತ್ತೇನೋ ಅವಳಿಗೆ. ಅವಳು ದಿವ್ಯಪ್ರಸಾದ ಸ್ವೀಕರಿಸುತ್ತ ಉಳಿದುಬಿಟ್ಟಳು. +ಆದರೆ ಮಸ್ಕರಿನಾಸರು ಊರಿಗೆ ಬಂದ ನಂತರ ಮಾತ್ರ ಅವಳ ಪ್ರತಿಕ್ರಿಯೆ ಬೇರೆಯಾಗಿತ್ತು. +“ಈ ಪಾದರಿ ಯಾಕೆ ಪದೇ ಪದೇ ಜನರ ಕಡೆ ತಿರುಗಿ ನೋಡೋದು ..” ಎಂದವಳು ಕೇಳುತ್ತಿದ್ದಳು. +“ಬರೀ ಕಾಣಿಕೆ ಕಾಣಿಕೆ ಅಂತಾರೆ ಪಾದರಿ..” ಎಂದು ರಾಗ ಎಳೆದರು. +ಆದರೂ ಅವಳ ನಿತ್ಯದ ಭೇಟಿ ನಿಲ್ಲಲಿಲ್ಲ. ಮನೆಯಲ್ಲಿ ಪೂಜೆ ಪ್ರಾರ್ಥನೆ ಬಿಡಲಿಲ್ಲ. ಶುಕ್ರವಾರದ ಶಿಲುಬೆಯ ಪ್ರಾರ್ಥನೆ ನಿಲ್ಲಿಸಲಿಲ್ಲ. +ಆದರೆ ಈಗ ಒಂದು ತಿಂಗಳಿಂದ ಅವಳು ಹಾಸಿಗೆ ಬಿಟ್ಟು ಏಳುತ್ತಿಲ್ಲ. ಮಗಳು ಅಳಿಯ ಅಕ್ಕಪಕ್ಕದ ಮನೆಗಳವರು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಸರಕಾರಿ ವೈದ್ಯರೂ ಮನೆಗೆ ಬಂದು ನೋಡಿದ್ದಾರೆ. +“ಕಾಯಿಲೆ ಏನಿಲ್ಲ..ವಯಸ್ಸಾಯಿತಲ್ಲ” ಎಂದವರು ಹೇಳಿದ್ದಾರೆ. +ಇನಾಸಜ್ಜಿಗೆ ತೊಂಬತ್ತು ಆಗಿದೆ. ಮಲಗಿದಲ್ಲಿಯೇ ಕರಗಿ ಹೋಗಿದ್ದಾಳೆ ಆಕೆ. ಎಲ್ಲರ ಗುರುತು ಹಿಡಿಯುತ್ತಾಳೆ, ಮಾತನಾಡಿಸುತ್ತಾಳೆ. ಕೆಲ ಬಾರಿ ಎಲ್ಲ ಮರೆತು ಹೋದಂತೆ ಪಿಳಿ ಪಿಳಿ ನೋಡುತ್ತಾಳೆ. +ಸಿಮೋನ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಬಳ್ಕೂರಕಾರ್ ಎದುರಾದ. +“ಬನ್ನಿ ..ಗುರ್ಕಾರ ಮಾಮ” ಎಂದ. +“ಯಾರು ಸಿಮೋನನ?” ಎಂದು ಕೇಳಿದಳು ಮುದುಕಿ. +“ನಿನ್ನ ಹೆಂಡತಿ ಬಂದು ನೋಡಿಕೊಂಡು ಹೋದಳು” ಎಂದು ನಕ್ಕಳು. +“ಮಕ್ಕಳೆಲ್ಲ ಚೆನ್ನಾಗಿದಾರ? ಮಗಳ ಮದುವೆ ಮಾಡಬೇಕಾ?” ಎಂದೆಲ್ಲ ವಿಚಾರಿಸಿದಳು. +ಒಳ್ಳೆ ಕಡೆ ನೋಡಿ ಮದುವೆ ಮಾಡು..ನಾನು ಇರೋದಿಲ್ಲ ಮದುವೆ ನೋಡಲಿಕ್ಕೆ?..ನಾನು ಹೊರಟೆ” ಎಂದಳು ಯಾವುದೇ ಉದ್ವೇಗ ಉದ್ವಿಗ್ನತೆಗೆ ಒಳಗಾಗದೆ. +“ನಮಾಮೋರಿ..ಕುಡಿಲಿಕ್ಕೆ ಏನಾದರೂ ಮಾಡಿಕೊಡು” ಎಂದು ಮಗಳಿಗೆ ಕೂಗಿ ಹೇಳಿದಳು. +“ಶುಕ್ರವಾರ ಶಿಲುಬೆ ಪ್ರಾರ್ಥನೆ ಬಂದಿದೆ..” ಎಂದೇನೋ ಹೇಳಲು ಹೋಗಿ ಮಾತು ನಿಲ್ಲಿಸಿದಳು. ಸಿಮೋನ ಸುಮ್ಮನೆ ಕೊಂಚ ಹೊತ್ತು ಕುಳಿತಿದ್ದು ನಮಾಮೋರಿ ತಂದುಕೊಟ್ಟ ಕಾಫ಼ಿ ಕುಡಿದು ಎದ್ದು ಬಂದ. +* +* +* +ಉದ್ದ ಸಾಲಿನ ಮೂರನೆ ಮನೆ ಸುತಾರಿ ಇನಾಸನದಾದರೆ ಅಡ್ಡ ಸಾಲಿನ ಮೂರನೇ ಮನೆ ಬಳ್ಕೂರಕಾರನಾದು. ಶುಕ್ರವಾರ ಸಂಜೆ ಅಲ್ಲಿ ಪರಲೋಕ ಮಂತ್ರ ಹೇಳಿದರೆ, ಕೀರ್ತನೆ ಹಾಡಿದರೆ ಅದು ಇಲ್ಲಿ ನೇರವಾಗಿ ಕೇಳುತ್ತದೆ. ನಲವತ್ತು ಐವತ್ತು ಜನ ಸೇರಿ ಹಾಡುವುದರಿಂದ ಸಂಜೆಯ ಮೌನದಲ್ಲಿ ಇಂಪಾಗಿ ಕೇಳಿಸುತ್ತದೆ. +ಈ ಶಿಲುಬೆ ಪ್ರಾರ್ಥನೆಗೆ ಮುಂಚಿತವಾಗಿಯೇ ಕೈತಾನ ಪಾದರಿ ಮಸ್ಕರಿನಾಸರನ್ನು ಮನೆಗೆ ಕರೆಸಿಕೊಂಡಿದ್ದ. +“..ನಮ್ಮ ಅತ್ತೆಗೊಂದು ಅಂತ್ಯಾಭ್ಯಂಜನ ನೀಡಿಬಿಡಿ ಪದ್ರಾಬ..” ಎಂದು ಹೇಳಿದ್ದ. +ಅವನಿಗೆ ಏನೋ ಅನುಮಾನ. ಸಂಜೆಯ ರೈಲು ಊರು ಬಿಡುವಾಗ ಈ ಮುದುಕಿಯೂ ಹೊರಟು ಬಿಡುತ್ತಾಳೇನೋ ಎಂಬ ಆತಂಕ. +ಹೀಗಾಗಿ ಪಾದರಿ ಬಂದರು. +ಪಾಪ ನಿವೇದನೆಗೆ ಕಿವಿಗೊಟ್ಟರು. +ದಿವ್ಯಪ್ರಸಾದ ನೀಡಿದರು. +ಪರಿಶುದ್ಧ ಎಣ್ಣೆಯನ್ನು ಇನಾಸಜ್ಜಿಯ ಹಣೆಯ ಮೇಲೆ ಲೇಪಿಸಿ- +“ಈ ಲೇಪನದಿಂದಲೂ ತಮ್ಮ ಮಹತ್ವಾಕಾಂಕ್ಷೆಯಿಂದಲೂ, ಕರ್ತರು ನಿನ್ನ ಪಂಚೇಂದ್ರಿಯಗಳಿಂದ ನೀನು ಮಾಡಿದ ಪಾಪಗಳನ್ನು ಕ್ಷಮಿಸಲಿ” ಎಂದರು. +ಅವರು ತಮ್ಮ ಕೆಲಸಮುಗಿಸಿ ಹೋಗುತ್ತಿರಲು ಇನಾಸನ ಮನೆ ಮುಂದಿನಿಂದ ಪ್ರಾರ್ಥನೆ ಕೇಳಿ ಬರತೊಡಗಿತು. +ಅಜ್ಜಿ ಆಲಿಸುತ್ತ ಕುಳಿತಳು. +ಬೆನ್ನಿಗೆ ಕೊಟ್ಟ ತಲೆದಿಂಬನ್ನು ತೆಗೆಯಲು ಬಂದ ಮಗಳಿಗೆ ಬೇಡ ಎಂದವಳು ತಿಳಿಸಿದಳು. ತಲೆದಿಂಬಿನ ಅಡಿಯಿಂದ ಜಪಸರ ತೆಗೆದು, ಅದರಲ್ಲಿಯ ಶಿಲುಬೆಗೆ ಮುತ್ತಿಟ್ಟು ಮಣಿ ಮಣಿ ಎಣಿಸತೊಡಗಿದಳು. +ಏಳು ಗಂಟೆಗೆ ರೈಲು ಶಿವಮೊಗ್ಗೆಗೆ ಹೊರಟಿದ್ದು ಕೂ ಎಂದಿತು. ಇಲ್ಲಿ ಜನ ಕೀರ್ತನೆ ಹಾಡುತ್ತಿದ್ದರು. +ಇನಾಸಜ್ಜಿ ನಿಧಾನವಾಗಿ ಪಕ್ಕಕ್ಕೆ ಹೊರಳಿದಳು. +* +* +* +ಬೆಳಿಗ್ಗೆ ಸಿಮಿತ್ರಿಯಲ್ಲಿ ಹೊಂಡ ತೋಡಲೆಂದು ಅನುಮತಿ ಕೇಳಲು ಚಮಾದೋರ ಇಂತ್ರು ಪಾದರಿಗಳ ಬಂಗಲೆ ಬಳಿ ಹೋದ. ತನ್ನ ಸಂಗಡಿಗನನ್ನು ಸಲಕರಣೆಗಳ ಸಹಿತ ಸಿಮಿತ್ರಿಗೆ ಕಳುಹಿಸಿ ಇಂತ್ರು ಪಾದರಿಗಳ ಎದುರು ಹೋಗಿ ನಿಂತ. +ಮರಣದ ಗಂಟೆ ಕೂಡ ಆಗಲೇ ಸದ್ದು ಮಾಡುತಲಿತ್ತು. +“ಕೋಣ್ರೆತೋ?” ಎಂದು ಎಂದಿನಂತೆ ಕೇಳುತ್ತ ಬಂದರು ಪಾದರಿ. +ಫ಼ರಾಸ್ಕನ ಹೆಂಡತಿ ರಜೀನಾ ಕೆಂಪು ಸೀರೆಯುಟ್ಟು ಅಲ್ಲೆಲ್ಲ ತಿರುಗಾಡುತ್ತಿದ್ದಳು. +“ಪದ್ರಾಬಾ..ಬಳ್ಕೂರಕಾರ ಅತ್ತೆ ತೀರಿಕೊಂಡರಲ್ಲ” ಎಂದು ಪೀಠಿಕೆ ಹಾಕಿದ ಇಂತ್ರು. +“ಹೌದು ಏನೀಗ?” ಏಕೋ ಅವರ ಮಾತು ಗಡುಸಾಗಿತ್ತು. +“ನಾನು ಹೊಂಡ ತೆಗೀಲಿಕ್ಕೆ ಹೊರಟಿದ್ದಿ” +“ಅವರಿಗೆ ಇಲ್ಲಿ ಬರಲಿಕ್ಕೆ ಹೇಳು. ಅವರಿಂದ ಇಗರ್ಜಿಗೆ ಬರಬೇಕಾದ ಬಾಕಿ ಯಾರಂತೆ ಕೊಡೋದು” ಎಂದರು ಪಾದರಿ ಮಸ್ಕರಿನಾಸ ತುಸು ಒರಟಾಗಿ. ಇಂತ್ರು ಎರಡು ನಿಮಿಷ ನಿಂತು ಅಲ್ಲಿಂದ ಹೊರಟ. +* +* +* +ಸುತಾರಿ ಇನಾಸನ ಮಗ ಪಾಸ್ಕು ತಂದೆಯ ಕೆಲಸ ಮುಂದುವರೆಸಿದವ ಬಳ್ಕೂರಕಾರ ಮನೆ ಅಂಗಳದಲ್ಲಿಯೇ ಮರಣದ ಪೆಟ್ಟಿಗೆ ಮಾಡತೊಡಗಿದ. ಜನ ಬಂದು ಬಂದು ಹೋಗುತ್ತಿದ್ದರು. ಇನಾಸಜ್ಜಿಗೆ ಸ್ನಾನ ಮಾಡಿಸಿ ಬಿಳಿ ಸೀರೆ ಉಡಿಸಿ ತಂದು ಮಲಗಿಸಲಾಗಿತ್ತು. ಎಷ್ಟೋ ವರ್ಷಗಳಿಂದ ಅವಳ ಸಂಗಾತಿಯಾಗಿದ್ದ ಜಪಸರವನ್ನು ಜೋಡಿಸಿದ ಅವಳ ಕೈಗೆ ಸುತ್ತಲಾಗಿತ್ತು. ಜಪಸರದಲ್ಲಿನ ಬೆರಳುದ್ದದ ಶಿಲುಬೆ ಎದ್ದು ಕಾಣುತ್ತಿತ್ತು. ಶಾಂತಳಾಗಿ ಮಲಗಿದ್ದಳು ಅಜ್ಜಿ. ಬಂದ ಜನತಂದ ಹೂವು, ಮೇಣದ ಬತ್ತಿ ಪ್ಯಾಕೇಟುಗಳನ್ನು ಶವದ ಬಳಿ ಇರಿಸಿ, ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗಂಡಸರು ಅಂಗಳದಲ್ಲಿ ಹಾಕಿದ ಅಡ್ಡ ಬೆಂಚಿನ ಮೇಲೆ ಕುಳಿತು ಅಲ್ಲಲ್ಲಿ ನಿಂತು ಮಾತಿಗೆ ತೊಡಗಿದ್ದರು. ಸಾವಿನ ಕರಿ ನೆರಳು ಅಲ್ಲೆಲ್ಲ ತೆಳುವಾಗಿ ಹರಡಿಕೊಂಡಿತು. +ಇಂತ್ರು…ದಣಪೆ ದಾಟಿ ಒಳಬಂದವನೇ ಸಿಮೋನ, ಬೋನರ ಜತೆ ಮಾತನಾಡುತ್ತ ನಿಂತಿದ್ದ ಬಳ್ಕೂರಕಾರನನ್ನು ಕರೆದ. +“..ಏನು ಇಂತ್ರು..ಕೆಲಸ ಆಯಿತೆ?” ಎಂದು ಅಲ್ಲಿಂದಲೇ ಕೇಳಿದ ಸಿಮೋನ. +“ಅಲ್ಲ ಅದೇನೋ ಇಗರ್ಜಿಗೆ ಕೊಡಬೇಕಾದ ಬಾಕಿ ಇದೆಯಂತಲ್ಲ..ಅದು ಕೊಡದೆ ಹೊಂಡ ತೆಗೀಲಿಕ್ಕೆ ಅನುಮತಿ ಕೊಡಲ್ವಂತೆ ಪಾದರಿಗಳು” ಎಂದು ಇಂತ್ರು ದೊಡ್ಡ ದನಿಯಲ್ಲಿ ಹೇಳುತ್ತಿರಲು ಅಲ್ಲಿ ಸೇರಿದವರೆಲ್ಲ ಕೇಳುತ್ತ ನಿಂತರು. +ಬಳ್ಕೂರಕಾರ್ ಕೂಡಲೇ ಎಚ್ಚೆತ್ತ. ಈ ಪ್ರಸಂಗವನ್ನು ಬೆಳೆಯಲು ಬಿಡಬಾರದು ಎನಿಸಿ ಆತ ಮನೆಯಿಂದ ಹೊರಟ. ಸಿಮೋನ, ಬೋನ ಕೂಡ ಅವನಿಗೆ ಜತೆಯಾದರು. +ಪಾದರಿ ಮಸ್ಕರಿನಾಸ ಸಹಜವಾಗಿ ಎಂಬಂತೆ ಅನ್ವಾಲ ಕಾಯಿದೆಯ ವಹಿ ತೆಗೆದರು. +“ನೋಡಿ ವರ್ಷಕ್ಕೊಂದು ಸಾರಿ ಕೊಡಬೇಕಾದ್ದನ್ನ ಕೊಟ್ಟರೆ ಈ ಎಲ್ಲ ರಗಳೆಗಳೂ ಇರೋದಿಲ್ವೆ..ನಮ್ಮ ಜನರಿಗೆ ಎಲ್ಲದಕ್ಕೂ ಹಣ ಇರುತ್ತೆ..ಇಗರ್ಜಿಗೆ ಕೊಡಲಿಕ್ಕೆ ಮಾತ್ರ ಇರಲ್ಲ..” ಎಂದು ಕೇಳುತ್ತ ಬಳ್ಕೂರಕಾರ ಕೊಟ್ಟ ಹಣವನ್ನು ಲೆಕ್ಕ ಮಾಡಿ ಅದಕ್ಕೊಂದು ರಶೀದಿ ಬರೆದುಕೊಟ್ಟರು. +ಸಿಮೋನನಿಗಾಗಲಿ, ಬೋನನಿಗಾಗಲಿ ಅಲ್ಲಿ ಮತ್ತೊಂದು ಮಾತು ಹೇಳಲು ಅವಕಾಶವಾಗಲಿಲ್ಲ. +ಇಂತ್ರು ಸಿಮಿತ್ರಿಯತ್ತ ತಿರುಗಿದ್ದನ್ನು ನೋಡಿ ಈ ಮೂವರೂ ಕೇರಿಗೆ ಹಿಂತಿರುಗಿದರು. +ಇನಾಸಜ್ಜಿಯನ್ನು ಮಣ್ಣಿಗೆ ತಲುಪಿಸಲು ಊರ ಕ್ರೀಸ್ತುವರೆಲ್ಲ ಬಂದರು. +ವಿಶೇಷವಾಗಿ ಗಮನ ಸೆಳೆದವರೆಂದರೆ ಬಾಮಣ ಪಂಗಡದವರು, ಹೆಂಗಸರು ಗಂಡಸರಾಗಿ ಎಲ್ಲರೂ ಕರಿ ಬಟ್ಟೆ ಧರಿಸಿ, ಕೈ ಮುಂದೆ ಕಟ್ಟಿಕೊಂಡು, ಇಂಗ್ಲೀಷಿನಲ್ಲಿ ಜಪ ಮಾಡುತ್ತ ಶವದ ಹಿಂದೆಯೇ ನಡೆದು ಬಂದದ್ದು ಉಳಿದ ಕ್ರೀಸ್ತುವರ ಮೆಚ್ಚುಗೆ ಗಳಿಸಿತ್ತು. +* +* +* +ಇನಾಸಜ್ಜಿ ತೀರಿಕೊಂಡ ಕೆಲವೇ ದಿನಗಳಲ್ಲಿ ಇಗರ್ಜಿಯ ಗಂಟೆ ಮರಣ ಸೂಚಕವಾದ ಸದ್ದನ್ನು ಮತ್ತೊಮ್ಮೆ ಮಾಡಿ- +“ಯಾರು..ಯಾರಂತೆ?” ಎಂದು ಕೇರಿಯ ಜನ ಮನೆಯಿಂದ ಹೊರಬಂದು ಇಗರ್ಜಿಯತ್ತ ನೋಡುವಂತೆ ಮಾಡಿತು. +ಬಲಗಾಲುದ್ಧ ಬಾಲ್ತಿದಾರ ಈಗ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಅವನ ಕತೆ ಮುಗಿದು ಹೋಯಿತು ಎನ್ನುವಂತಾಗಿ ಪಾದರಿ ಮಸ್ಕರಿನಾಸ ಹೋಗಿ ಆತನಿಗೆ ಅಂತ್ಯಾಂಭ್ಯಂಜನ ನೀಡಿ ಬಂದಿದ್ದರು. ಪೆಟ್ಟಿಗೆ ಮಾಡುವವರು, ಬಟ್ಟೆ ಹೊಲಿಯುವವರು, ಸಮಾಧಿ ತೋಡುವವರು ಇಂದು ನಾಳೆ ಎಂದು ಕ್ಷಣಗಳನ್ನು ಎಣಿಸುತ್ತಿದ್ದಾಗ ಬಾಲ್ತಿದಾರ.. +“ರೇಮೆಂದಿ..” ಎಂದು ಮಗಳ ಹೆಸರನ್ನು ಹಿಡಿದು ಕೂಗುತ್ತ ಎದ್ದು ಕುಳಿತಿದ್ದ +“ಹೋ..ಈ ಮುದುಕ ಇಷ್ಟು ಬೇಗ ಸಾಯೋದಿಲ್ಲಪ್ಪ..” ಎಂದು ಜನ ಮಾತನಾಡಿಕೊಂಡರು. +ಬಾಲ್ತಿದಾರ ಕಾಲೆಳೆದುಕೊಂಡು ಜಗಲಿಗೆ ಬಂದ. ಅಂಗಳಕ್ಕೂ ಬಂದ. ಮೊಮ್ಮಗನ ಜತೆ ಮಾತನಾಡಿದ. ಅಳಿಯನ ಸಂಗಡ ಹರಟೆ ಹೊಡೆದ. ಸಿಮೋನ, ಪಾಸ್ಕೋಲ ಹೋದಾಗ ಅವರೊಂದಿಗೂ ಅದು ಇದು ಪ್ರಸ್ತಾಪ ಮಾಡಿದ. ನಾಲ್ಕನೆಯ ದಿನ ಮತ್ತೆ ಹಾಸಿಗೆ ಹಿಡಿದ. +ಹೀಗೆಯೇ ಆಟವಾಡಿದವ ಒಂದು ದಿನ ಗೊರಗೊರ ಎಂದು ಸದ್ದು ಮಾಡಿ ಕತ್ತು ಹೊರಳಿಸಿದ. +ಎಂದಿನಂತೆ ಸಿಮೋನ ಓಡಿ ಬಂದ. +ಶಿರಾಲಿಯಿಂದ ಕರೆತಂದ ಈತನಿಗೆ ತಾನು ಜವಳಿ ಅಂಗಡಿ ಭುಜಂಗನಲ್ಲಿ ಕೆಲಸ ಕೊಡಿಸಿದ್ದನ್ನು ಸಿಮೋನ ಮರೆತಿರಲಿಲ್ಲ. ಕಲ್ಲು ಮಣ್ಣಿನ ಕೆಲಸ ಮಾಡಲಾಗದ ಈತ ದರ್ಜಿಯಾದ. ಜವಳಿ ಅಂಗಡಿ ಮಾಲಿಕನಾದ. ಬೋನ ಅಳಿಯನಾಗಿ ಬಂದ ನಂತರ ಇವನ ಅಂಗಡಿಯೂ ಅಭಿವೃದ್ದಿ ಹೊಂದಿತು. ಅಳಿಯ ಮಗ ಒಳ್ಳೆಯ ರೀತಿಯಲ್ಲಿದ್ದಾರೆ ಎಂಬ ಸಂತಸವೂ ಇವನಲ್ಲಿತ್ತು. +“ಎಲ್ಲ ಆಯಿತು ಸಿಮೋನ..ಈ ಹುಡುಗನದೊಂದು ಮದುವೆ ನೋಡಬೇಕು ಅಂತ ಆಸೆ..” ಎಂದು ಹೇಳುತ್ತಿದ್ದ ಆಗಾಗ್ಗೆ. +“ನೋಡುವಿಯಂತೆ..ಆ ಇಗರ್ಜಿ ಸಂತನನ್ನು ಕೇಳಿಕೊ..ಅವನು ಒಪ್ಪಿದರೆ ಇದು ಕಷ್ಟ ಅಲ್ಲ..” ಎಂದು ಹೇಳುತ್ತಿದ್ದೆ ತಾನು, ಈಗೀಗ ಬಾಲ್ತಿದಾರ ಸದಾ ಜಪಸರ ಹಿಡಿದು ಕೂರುತ್ತಿದ್ದ. ಆಗದಿದ್ದರೂ ಭಾನುವಾರ ಇಗರ್ಜಿಗೆ ಬರುತ್ತಿದ್ದ. ಆದರೆ ಇಗರ್ಜಿ ಸಂತನಿಗೆ ಇವನು ಇರುವುದು ಬೇಕಿರಲಿಲ್ಲವೇನೋ. ಆತ ಬಾಲ್ತಿದಾರನನ್ನು ತನ್ನಲ್ಲಿಗೆ ಕರೆದುಕೊಂಡ. +ಸಿಮೋನ ಬೋನನ ಮನೆಗೆ ಹೋದಾಗ ಬಾಲ್ತಿದಾರನ ಹೆಂಡತಿ ಅನರಿತಾ ಗಂಡನ ಶವದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. +“..ಅಣ್ಣಾ..ನನಗಿನ್ನು ಯಾರಿದಾರೆ..ನನ್ನದೆಲ್ಲ ಹೋಯ್ತು..” ಎಂದವಳು ನೆಲಕ್ಕೆ ಹಣೆ ಚಚ್ಚಿಕೊಳ್ಳುವಾಗ ಸಿಮೋನ- +“ಅನರಿತಾ..ಸಾಕು ಮಾಡು…ಯಾರೂ ಇಲ್ಲ ಅಂತ ಹೇಳಬೇಡ..ದೇವರ ಹಾಗಿರೋ ಅಳಿಯ ಇದಾನೆ..ಮಗಳು ಇದಾಳೆ..ಮೊಮ್ಮಗ ಇದ್ದಾನೆ…ಏನು ಮಾತು ಅಂತ ಹೇಳ್ತಿಯಾ..ನೀನೇನು ಇಲ್ಲಿ ಖಾಯಂ ಆಗಿ ಇರಲಿಕ್ಕೆ ಬಂದವಳ..ನಿನ ಗಂಡನಿಗೆ ಬೇಗನೆ ಸದ್ಗತಿ ಸಿಗಲಿ ಅಂತ ಬೇಡಿಕೋ..” ಎಂದು ದನಿ ಎತ್ತರಿಸಿ ಕೂಗಾಡಿದ. +ಅನರಿತಾ ನಿಧಾನವಾಗಿ ಚೇತರಿಸಿಕೊಂಡು ಕುಳಿತಳು. +ಮನೆ ಮನೆಗಳಿಂದ ಬಂದವರು ಅಲ್ತಾರಿನ ಮುಂದೆ ಮೇಣದ ಬತ್ತಿ ಹಚ್ಚಿ ತೇರ್ಸ, ಕೀರ್ತನೆಯಲ್ಲಿ ತೊಡಗಿದರು. +ಬೋನ ಕಾಲಕಾಲಕ್ಕೆ ಇಗರ್ಜಿಗೆ ಕೊಡಬೇಕಾದುದನ್ನೆಲ್ಲ ಕೊಡುತ್ತ ಬಂದದ್ದರಿಂದ ಪಾದರಿ ಮಸ್ಕರಿನಾಸ ಯಾವುದೇ ತಕರಾರು ಮಾಡದೆ ಶವಸಂಸ್ಕಾರಕ್ಕೆ ಮುಂದಾದರು. +ಬಲಗಾಲುದ್ದನ ಹೆಂಡತಿ ಅನರಿತಾ ತುಸು ಮಂಕಾದಳು. ನಿಧಾನವಾಗಿ ಅವಳು ಕೂಡ ಜಪಸರ ಪ್ರಾರ್ಥನೆ, ಇಗರ್ಜಿಗೆ ಹೋಗುವುದು ಎಂದು ದೇವರತ್ತ ತಿರುಗಿಕೊಂಡಳು. +ಆದರೆ ಮನೆಗೆ ಹೊಸದಾಗಿ ಬಂದ ಮೊಮ್ಮಗ ಅವಳ ಸಮಯವನ್ನೆಲ್ಲ ತೆಗೆದುಕೊಳ್ಳತೊಡಗಿದ್ದ. ಫ಼ಿಲಿಪ್ಪ ತಾಯಿಯ ಬಣ್ಣವನ್ನು ತಂದೆಯ ಮುಖ ಚಹರೆಯನ್ನು ಪಡೆದಿದ್ದ.ಸದಾ ಚಟುವಟಿಕೆಯಲ್ಲಿರುವ ತುಂಟ. ಅವನಿಗೆ ನಿದ್ದೆಯೇ ಕಡಿಮೆ ಅನ್ನುವುದು ಅವನ ತಾಯಿಯ ದೂರು. +ಬೆಳಿಗ್ಗೆ ಇಗರ್ಜಿ ಗಂಟೆ ಆಗುತ್ತಿರುವಂತೆಯೇ ಎದ್ದು ಮಲಗಿದವರನ್ನೆಲ್ಲ ಎಚ್ಚರಿಸಿ ಅವರ ಹಾಸಿಗೆಯಿಂದ ಇವರ ಹಾಸಿಗೆಗೆ ತಿರುಗಾಡೀ ಎಲ್ಲರೂ ಎದ್ದು ಕೂಡುವಂತೆ ಮಾಡುತ್ತಿದ್ದ. +ಫ಼ಿಲಿಪ್ಪ ಬೋನ ರೇಮೇಂದಿಗಿಂತಲೂ ತನ್ನ ಅಜ್ಜಿಗೇನೆ ಹೆಚ್ಚಾಗಿ ಹಚ್ಚಿಕೊಂಡದ್ದು ಅವಳು ತನ್ನ ಗಂಡನನ್ನು ಮರೆಯಲು ಕಾರಣವಾಯಿತು. +-೪- +ಇನಾಸಜ್ಜಿಯ ತಿಂಗಳ ಪೂಜೆಯನ್ನು ಬಳ್ಕೂರಕಾರ ಒಳ್ಳೆಯ ರೀತಿಯಲ್ಲಿಯೇ ಇರಿಸಿಕೊಂಡ. ಬೆಳಿಗ್ಗೆ ಇಗರ್ಜಿಯಲ್ಲಿ ಇರಿಸಿಕೊಂಡು ಪಾಡುಪೂಜೆ ಹನ್ನೆರಡು ರೂಪಾಯಿಯ ಗಾಯನ ಪೂಜೆಯೇ. ಮಿರೋಣ ವಲೇರಿಯನ ಪಿಟಿಲು ಬಾರಿಸಿಕೊಂಡು ಹಲವು ಕೀರ್ತನೆಗಳನ್ನು ಹಾಡಿದ. ಪಾದರಿ ಮಸ್ಕರಿನಾಸ ಕರಿ ಉಡುಪು ಧರಿಸಿ ಪೂಜಾ ಸಲ್ಲಿಸಿದರು. ಇಗರ್ಜಿಯ ನಡುವೆ ಅಲ್ತಾರನ ಮುಂದೆ ಕಪ್ಪು ಬಟ್ಟೆ ಹೊದಿಸಿದ ಶವಪೆಟ್ಟಿಗೆಯನ್ನು ಇರಿಸಲಾಗಿತ್ತು. ಪೂಜೆಯ ನಂತರ ಬಳ್ಕೂರಕಾರ, ಅವನ ಹೆಂಡತಿ ಮಕ್ಕಳು, ಪೂಜೆಗೆ ಬಂದ ಇನ್ನೂ ಹಲವರು ಇಗರ್ಜಿಯ ಹಿಂಬದಿಯಿಂದ ಸಿಮಿತ್ರಿಗೆ ಹೋದರು. ಇನಾಸಜ್ಜಿಯ ಸಮಾಧಿಯ ಮೇಲೆ ಮೇಣದ ಬತ್ತಿ ಹಚ್ಚಿ ಇರಿಸಿದರು. ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಮತ್ತೆ ಪ್ರಾರ್ಥನೆಯಾಯಿತು. ಕುಟುಂಬದ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಇನಾಸಜ್ಜಿಯ ಆತ್ಮವನ್ನು ಕೇಳಿಕೊಳ್ಳಲಾಯಿತು. ಏಕೆಂದರೆ ಅವಳು ಈಗ ದೇವರಿಗೆ ಹತ್ತಿರವಾಗಿದ್ದಾಳೆ ಅಲ್ಲವೆ? +ಬಳ್ಕೂರಕಾರ ಮನೆಯಲ್ಲಿ ಮಧ್ಯಾಹ್ನದ ಊಟ. ಒಂದು ಬಾಳೆ ಎಲೆಯಲ್ಲಿ‌ಒಂದು ಎಡೆ ತೆಗೆದಿರಿಸಿ ಅದನ್ನು ಸಿಮೋನನ ಮನೆಯ ಬೆಳ್ಳಿಗೆ ಕೊಡಲಾಯಿತು. ನಂತರ ಗಂಡಸರ ಪಂಕ್ತಿಗೆ ಸಿಮೋನನೇ ಮುಂದೆ ನಿಂತು ಶರಾಬು ಹಂಚಿದ. ಊಟದ ಎಲೆಯ ಮುಂದೆ ಕುಳಿತ ಪ್ರತಿಯೊಬ್ಬರೂ ಶರಾಬಿನ ಗ್ಲಾಸನ್ನು ತೆಗೆದುಕೊಂಡು ಎರಡು ಹನಿ ಶರಾಬನ್ನು ನೆಲಕ್ಕೆ ಚಲ್ಲಿ ಗ್ಲಾಸನ್ನು ಹಿಡಿದುಕೊಂಡು- +ನಮ್ಮನ್ನು ಅಗಲಿಹೋದ ಇನಾಸಜ್ಜಿಗಾಗಿ, ಈ ಕುಟುಂಬದ ಅಗಲಿದ ಆತ್ಮಗಳಿಗಾಗಿ ಒಂದು ಪರಲೋಕ ಒಂದು ನಮೋರಾಣೆ ಮಂತ್ರ ಅರ್ಪಿಸೋಣ ಎಂದು ಹೇಳಿ ಅದನ್ನು ಮುಗಿಸಿ ಎಲ್ಲರತ್ತ ತಿರುಗಿ. +“ಹ್ವಾಯ..ದೇವ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದು ಹೇಳಿ ಗ್ಲಾಸನ್ನು ಬರಿದಾಗಿಸಿ ಬಳ್ಕೂರಕಾರಗೆ ಹಿಂತಿರುಗಿಸಿದರು. +ಅದೇ ಗ್ಲಾಸು ಎಲ್ಲರ ಕೈಗೂ ಹೋಯಿತು.. ಮತ್ತೆ ಪ್ರಾರ್ಥನೆ. ದೇವರು ಒಳ್ಳೆಯದನ್ನು ಮಾಡಲಿ ಎಂಬ ಹಾರೈಕೆ. +ಬಳ್ಕೂರಕಾರ ಎರಡು ಮೂರು ಬಾರಿ ಬೇಡ ಬೇಡ ಅನ್ನುತ್ತಿದ್ದರೂ ಗ್ಲಾಸನ್ನು ತುಂಬಿಕೊಟ್ಟ. ಅವನ ಹೆಂಡತಿ ನಮಾಮೋರಿ- +“ಮಾವ ಊಟ ಮಾಡಿ” +“ದೊಡ್ಡಪ್ಪ ಊಟ ಮಾಡಿ” +“ಅಣ್ಣ ನಾಚಿಕೋ ಬೇಡ” +“ತಮ್ಮ ಹೊಟ್ಟೆಗೆ ಕಮ್ಮಿ ಮಾಡಕೋಬಾರದು” ಎಂದು ಹೇಳಿ ಮತ್ತೆ ಮತ್ತೆ ಬಡಿಸಿದಳು. ಆಗ ಊಟಕ್ಕೆ ರಂಗೇರಿತು. ಮಾತುಗಳು ಕೊಂಚ ಬಿರುಸಾದವು. +ಪಾಸ್ಕೋಲ ಮೇಸ್ತ್ರಿ ಹಣೆಯ ಮೇಲೆ ಬಂದು ಬಿದ್ದ ಕೂದಲನ್ನು ಹಿಂದೆ ತಳ್ಳಿ- +“ಗುರ್ಕಾರ ಸಿಮೋನ..ನೀನು ಏನೇ ಹೇಳು..ಈ ಪಾದರಿ ನನ್ನ ಮನಸ್ಸಿಗೆ ಬರಲಿಲ್ಲ..” ಎಂದ. +“ನನ್ನ ಮನಸ್ಸಿಗೂ..” ಅಂಕೋಲದ ಕೈತಾನ ನಡುವೆ ಬಾಯಿ ಹಾಕಿದ. +“ಯಾಕೆ ಮನಸ್ಸಿಗೆ ಬರಲಿಲ್ಲ..ನಿನಗೆ ಗೊತ್ತಲ್ಲ..ಈತ ನಮ್ಮ ಬೀಗರ ಎದುರು ನನ್ನನ್ನು ಮೂರು ಕಾಸಿನವನಾಗಿ ಮಾಡಿಬಿಟ್ಟ..ಬೋನ ಸಾಹುಕಾರ ಇಲ್ಲದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೊ..” ಎಂದು ಆತ ಒತ್ತರಿಸಿ ಬಂದ ನೋವನ್ನು ತಡೆದುಕೊಳ್ಳುತ್ತ ತೊದಲಿದ. +ಕೈತಾನ ಮೊಮ್ಮಗನನ್ನು ನಾಮಕರಣಕ್ಕೆ ಕರೆದೊಯ್ದದ್ದು. ಅಲ್ಲಿ ಪಾದರಿ ಬಾಕಿ ಕೇಳಿದ್ದು. ಕೈತಾನನ ಬೀಗರು ಹಣ ಕೊಟ್ಟದ್ದು. ಬೋನ ಸಾಹುಕಾರನಿಂದ ಸಾಲ ತಂದು ಆತ ಹಣ ಹಿಂದಿರುಗಿಸಿದ್ದು. ಈ ಬಗ್ಗೆ ಕೈತಾನನ ಬೀಗರು – +“ಪಾದರಿಗಳು ಹೀಗೂ ಇರತಾರೆಯೇ” ಎಂದು ಹೇಳಿದ್ದು ಊರಿಗೆಲ್ಲಾ ಗೊತ್ತಾಗಿತ್ತು. +“ಛೆ ಛೆ ಛೆ” ಎಂದು ಉಳಿದವರು ಲೊಚಗುಟ್ಟಿದರು. +“ನಾನು ಹೇಳತೀನಿ ಕೇಳು ಸಿಮೋನ” ತನ್ನ ಮಾತು ಮುಗಿದಿಲ್ಲ ಎಂಬಂತೆ ನಡುವೆ ಧುಮುಕಿದ ಪಾಸ್ಕೋಲ- +“..ಈ ಹಿಡಿ ಅಕ್ಕಿ ಪಾದರಿಗೆ ಹಣ ಎಷ್ಟಿದ್ದರೂ ಸಾಲದು ಮಾರಾಯ..ಇವನ ಹೊಸ ಪಿಲಾನ ಏನು ಗೊತ್ತ?” +ಆತ ಎಲ್ಲರ ಮುಖ ನೋಡಿದ. +“ಏನು ಏನು?” ಬಾಲ್ತಿದಾರ ಕುರಿಯ ಎಲುಬು ಚೀಪುತ್ತ ಕೇಳಿದ. +ಪಾದರಿ ಮಸ್ಕರಿನಾಸರಿಗೆ ’ಹಿಡಿ ಅಕ್ಕಿ ಪಾದರಿ’ ಎಂಬ ಹೆಸರು ಹೊಸದಾಗಿ ಬಿದ್ದಿತ್ತು. ಮನೆ ಹೆಂಗಸರಿಗೆಲ್ಲ ಅವರು ಒಂದು ಸಲಹೆ ನೀಡಿದರು. +“ನೀವು ದಿನಾ ಅನ್ನ ಮಾಡಲು ಅಕ್ಕಿ ಹಾಕುತ್ತೀರಲ್ಲ..ಅದರಲ್ಲಿ ಒಂದು ಹಿಡಿ ತೆಗೆದು ಬೇರೆ ಇಡಿ..ಒಂದು ವಾರಕ್ಕೆ ಹದಿನಾಲ್ಕು ಅಡಿ ಆದರೆ ಅರ್ಧ ಸೇರು ಆಗಬಹುದು. ಭಾನುವಾರ ಪೂಜೆಗೆ ಬರುವಾಗ ಅದನ್ನು ತಂದು ಇಗರ್ಜಿಗೆ ಕೊಡಿ..ನಿಮಗೆ ದೇವರ ಆಶೀರ್ವಾದ ದೊರೆಯುತ್ತದೆ.” +ಪಾದರಿ ಮಾತಲ್ಲವೇ? ಹೆಂಗಸರು ಇಗರ್ಜಿಗೆ ಬರುವಾಗ ಬಿಳಿ ವಸ್ತ್ರದಲ್ಲಿ ಸಣ್ಣ ಕೈಚೀಲದಲ್ಲಿ ಅಕ್ಕಿ ತಂದರು. ದೇವರ ಪೀಠದ ಮುಂದೆ ರಾಶಿ ಹಾಕಿದರು. ಪೂಜೆಯ ನಂತರ ಅದನ್ನು ತರಕಾರಿಯ ಜತೆ ಹರಾಜು ಹಾಕಲಾಯಿತು. ಜನರಿಗೆ ದೇವರ ಆಶೀರ್ವಾದ ಲಭ್ಯವಾಯಿತು. ಇಗರ್ಜಿಗೆ ಹಣ ಬಂದಿತು. ಪಾದರಿ ಮಸ್ಕರಿನಾಸ ಅವರಿಗೆ ಹಿಡಿ ಅಕ್ಕಿ ಪಾದರಿ ಎಂಬ ಹೆಸರು ಬಿದ್ದಿತು. +“ಈಗ ಮತ್ತೆ ಏನು ಉಪಾಯ ಹುಡುಕಿದ್ದಾರೆ ಈ ಪಾದರಿ?” +ಎಲ್ಲ ತಲೆ ಎತ್ತಿ ಪಾಸ್ಕೋಲನ ಮುಖ ನೋಡಿದರು. +“ನಿಮಗೆ ಬೇಕಾಗಿರೋ ಮೇಣದ ಬತ್ತಿನ ಇಗರ್ಜಿನಲ್ಲಿ ಕೊಂಡುಕೊಳ್ಳಿ ಅಂತ ಪಾದರಿ ಹೇಳೋದು ಯಾಕೆ ಗೊತ್ತೆ?” +ಪಾಸ್ಕೋಲ ಸುತ್ತ ಕುಳಿತವರ ಮುಂದೆ ಇನ್ನೊಂದು ಸವಾಲು ಇರಿಸಿದ. +“ಯಾಕೆ ಯಾಕೆ?” ಮತ್ತೆ ಪ್ರಶ್ನೆಗಳು ಕೇಳಿ ಬಂದವು. +ಹೋದ ಭಾನುವಾರ ಪಾದರಿ ಹೀಗೊಂದು ಫ಼ರಮಾನ ಹೊರಡಿಸಿದ್ದರು. +“ಪ್ರಿಯ ಕ್ರೀಸ್ತುವರೆ..ನೀವು ಮೇಣದ ಬತ್ತಿಗಳನ್ನು ಅಂಗಡಿಯಲ್ಲಿ ಕೊಳ್ಳುವುದರ ಬದಲು ಇನ್ನು ಮುಂದೆ ಇಗರ್ಜಿಯಲ್ಲಿ ಕೊಳ್ಳಿ..ಮಿರೋಣ ಆಗಲಿ ಕುಜ್ನೇರ ಆಗಲಿ ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ನಿಮಗೆ ಕೊಡತಾರೆ..ಅಲ್ಲಿ ಕೊಡುವಷ್ಟೇ ಹಣಾನ ನೀವು ಇಲ್ಲಿ ಕೊಟ್ಟರಾಯ್ತು..” ಎಂದಿದ್ದರು ಅವರು. +ಪಾದರಿಯ ಮಾತಲ್ಲವೆ? ಯಾರೂ ಇದರ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ. ಕೆಲವರು ಕೂಡಲೇ ಹಣಕೊಟ್ಟು ಮೇಣದ ಬತ್ತಿಗಳನ್ನು ಕೊಂಡು ಕೊಂಡರು. ಆದರೆ ಈಗ ಪಾಸ್ಕೋಲ ಮೇಸ್ತ್ರಿ ಇದರ ಗುಟ್ಟು ಹೊರಗೆ ಎಳೆದ. +ಕ್ರೀಸ್ತುವರು ಮಾತ್ರವಲ್ಲದೆ ಇತರೆ ಮತಸ್ಥರು ಕೂಡ ಸಂತ ಜೋಸೆಫ಼ರ ಮಂಟಪಕ್ಕೆ ಇಗರ್ಜಿಗೆ ಬೇರೆ ಬೇರೆ ಸಂತರಿಗೆ ಮೇಣದ ಬತ್ತಿಗಳನ್ನು ಕೊಡುವ ಪದ್ದತಿಯನ್ನು ರೂಢಿಸಿಕೊಂಡಿದ್ದರು. ಮಕ್ಕಳಿಗೆ ಕಾಯಿಲೆಯಾದರೆ, ಏನೋ ಕೆಡುಕಾದರೆ, ಒಳ್ಳೆಯದಾಗಬೇಕು ಎಂದೆನಿಸಿದರೆ, ಎತ್ತಿಗೋ ದನಕ್ಕೋ ತೊಂದರೆ ಉಂಟಾದರೆ ಕೂಡಲೆ ಜನ- +“ಶಿಲುಬೆ ದೇವರಿಗೆ ಮೇಣದ ಬತ್ತಿ ಕೊಡತೇನೆ” ಎಂದು ಹೇಳುತ್ತಿದ್ದರು. +ಈ ದೇವರು ಹಣ್ಣು, ಕಾಯಿ, ಉದ್ದಿನಕಡ್ಡಿ, ಕರ್ಪೂರ ಸ್ವೀಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ ಹರಕೆ ಹೇಳಿಕೊಂಡವರು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಹಚ್ಚಿ ಕೈ ಮುಗಿದು ಹೋಗುತ್ತಿದ್ದರು. ಈ ಬತ್ತಿಗಳು ಸಾಲು ಸಾಲಾಗಿ ಉರಿದು, ಕರಗಿದ ಮೇಣ ಅಲ್ಲೆಲ್ಲ ಗಟ್ಟಿಯಾಗಿ ನಿಂತಿರುತ್ತಿತ್ತು. +ಮಸ್ಕರಿನಾಸ ಬಂದ ಕೂಡಲೆ ಮೇಣದ ಬತ್ತಿಗಳನ್ನು ಉರಿಸುವುದನ್ನು ನಿಲ್ಲಿಸಿದರು. ದೇವರಿಗೆ ಮೇಣದ ಬತ್ತಿ ಕೊಟ್ಟರೆ ಸಾಕು. ಹಚ್ಚಲೇಬೇಕೆಂದಿಲ್ಲ ಎಂದರು. ಒಂದೆರಡು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಸದಾ ಹಚ್ಚಿಡಿ ಉಳಿದ ಬತ್ತಿ ಬಂಡಲುಗಳನ್ನು ಹಾಗೆಯೇ ತೆಗೆದಿಡಿ ಎಂದು ಅಲ್ಲಿರುವ ಹುಡುಗರಿಗೆ ಹೇಳಿದರು. +ಜನ ಈ ಹೊಸ ಪದ್ದತಿಗೆ ಹೊಂದಿಕೊಂಡರು. ಮೇಣದ ಬತ್ತಿ ದೇವರಿಗೆ ತಲುಪಿಸಿದರಾಯಿತು. ಹಚ್ಚುವ ಕೆಲಸ ಅವರು ಮಾಡುತ್ತಾರೆ ಎಂದು ಜನ ತಿಳಿದರು. +ಇದರಿಂದಾಗಿ ಇಗರ್ಜಿಯಲ್ಲಿ ಮೇಣದ ಬತ್ತಿ ಬಂಡಲುಗಳು ರಾಶಿ ಬಿದ್ದಿದ್ದವು. ಆಗ ಪಾದರಿ ಮಸ್ಕರಿನಾಸರು ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ಇಗರ್ಜಿಯಲ್ಲಿ ಕೊಳ್ಳಿರಿ ಎಂದರು. +“ಗೊತ್ತಾಯ್ತ ನಿಮಗೆ?” ಎಂದು ಮೀಸೆ ಕುಣಿಸಿದ ಪಾಸ್ಕೋಲ ಮೇಸ್ತ್ರಿ. +“ಹೌದು..ಈ ಪಾದರಿ ಹೀಗೆ ಹಣ ಮಾಡತಾನಲ್ಲ..ಅದು ಯಾರಿಗೆ? ಇವನಿಗೇನು ಸಂಸಾರನೆ? ಮಕ್ಕಳೆ?” +ಆ ವರೆಗೆ ಸುಮ್ಮನೆ ಕುಳಿತ ಸಾನಬಾವಿ ಪೆದ್ರು ಮುಖ್ಯವಾದ ಪಾಯಿಂಟ್ ಎತ್ತಿದ. ಈಗಾಗಲೇ ಓರ್ವ ಮಗನ ತಂದೆಯಾಗಿದ್ದ ಅವನಿಗೆ ತಾಪತ್ರಯಗಳು ಪ್ರಾರಂಭವಾಗಿದ್ದವು. ಕೆಲಸಕ್ಕೆ ಹೋಗುವುದು ಬೇಡ ಎಂದು ರಂಗಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ. ಊರಿನಲ್ಲಿ ಕಲ್ಲು ಕೆಲಸದವರ ಸಂಖ್ಯೆ ಅಧಿಕವಾಗಿತ್ತು. ಹೊಸದಾಗಿ ಮಲೆಯಾಳಿ ಮೇಸ್ತ್ರಿಗಳು ಬಂದು ಸೇರಿಕೊಂಡು ಕ್ರೈಸ್ತ ಮೇಸ್ತ್ರಿಗಳ ಕೆಲಸಕ್ಕೇನೆ ಕಲ್ಲು ಹಾಕಿದ್ದರು. ಆದಾಯ ಕಡಿಮೆಯಾಗುತ್ತಿದೆ ಅನ್ನುವಾಗ ಪಾದರಿಗಳು ಅನ್ವಾಲ ಕಾಯಿದೆ..ಹಬ್ಬದ ವಂತಿಗೆ..ಪೂಜೆಗೆ ಹಣ..ಕಾಣಿಕೆ ಡಬ್ಬಿಗೆ ಹಣ..ಹಿಡಿ ಅಕ್ಕಿ ಎಂದೆಲ್ಲ ಹಣ ಕೇಳುತ್ತಿದ್ದರು. ಹೀಗೆಂದೇ ಸಿಡಿಮಿಡಿಗೊಂಡ ಪೆದ್ರು ಹೀಗೊಂದು ಪ್ರಶ್ನೆ ಕೇಳಿದ. +ಆಗಲೇ ಬಳ್ಕೂರಕಾರ ನಾಲ್ಕನೇ ಬಾರಿ ಬಾಟಲಿ ಗ್ಲಾಸಿನ ಜತೆ ಹೊರಬಂದು ಊಟ ಮಾಡುತ್ತಿರುವವರ ನಡುವೆ ನಿಂತ. +“..ಅದು..ನಾನು ಹೇಳತೇನೆ…” ಎಂದ ಹಸಿಮಡಲು ಪಾತ್ರೋಲ. +ಈತ ಶಿವಸಾಗರಕ್ಕೆ ಹೊಸದಾಗಿ ಎಂದರೆ ಇಗರ್ಜಿ ಕಟ್ಟಲು ಬಂದವರಲ್ಲಿ ಇವನೂ ಒಬ್ಬ. ಹೀಗೆ ಬಂದವ ಶಿವಸಾಗರದ ನಯ ನಾಜೂಕುತನ, ನಾಗರೀಕತೆ, ಪಟ್ಟಣದ ಸೊಬಗಿಗೆ ಮರುಳಾಗಿ ಇಲ್ಲಿಯೇ ಮನೆ ಮಾಡಿದ. ಊರಿನಿಂದ ಹೆಂಡತಿ ಮಕ್ಕಳನ್ನು ಕರೆತಂದ. ಈಗ ಈ ಊರಿನವನೆ ಈತ. ಆದರೆ ಹಸಿ ಮಡಲು ಪತ್ರೋಲ ಎಂಬ ಹೆಸರು ಇವನನ್ನು ಬಿಟ್ಟಿಲ್ಲ. +ಮುರುಡೇಶ್ವರದ ಚಂದ್ರ ಹಿತ್ತಲಿನಲ್ಲಿ ಇವನ ಮನೆ. ಒಡೆಯರ ಐನೂರು ಆರುನೂರು ತೆಂಗಿನ ಮರಗಳನ್ನು ನೋಡಿಕೊಂಡಿದ್ದ ಇವನ ಅಜ್ಜ ಹಸಿ ಮಡಲು ಲಾದ್ರು. ಇವನ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮುಖ್ಯ ಉದ್ಯಮವೆಂದರೆ ಮಡಲು ಹೆಣೆಯುವುದು. ತೆಂಗಿನ ಹೆಡೆ ಬಿದ್ದ ತಕ್ಷಣ ಇಲ್ಲವೆ ಕಾಯಿ ಕೀಳಲು ಮೇಲೆ ಹತ್ತಿದಾಗ ಬೇಡದ ಗರಿ ನೋಡಿ ಕತ್ತರಿಸಿ ಕೆಳಗೆ ಹಾಕಿ ಅದನ್ನು ಹೆಣೆಯುವುದು. ಹೆಣೆದು ಹೆಣೆದು ಮಡಲಿನ ರಾಶಿಯನ್ನು ಒಂದೆಡೆ ಒಟ್ಟುವುದು. ಮನೆಗೆ ಹೊದಿಸಲು, ಬಚ್ಚಲಿಗೆ ಮರೆಯಾಗಿ ಕಟ್ಟಲು, ಚಪ್ಪರದ ಮೇಲೆ ಹಾಸಲು, ನೆಲಕ್ಕೆ ಹಾಸಲು ಇದು ಬಳಕೆಯಾಗುತ್ತಿತ್ತು. ಮೀನಿನ ಅಂಗಡಿಗಳವರು, ಜಾತ್ರೆ ಅಂಗಡಿಗಳವರು, ಗುಡಿಸಲು ಕಟ್ಟುವವರು ಬಂದು ಈ ಮಡಲನ್ನು ಕೊಂಡುಕೊಳ್ಳುತ್ತಿದ್ದರು. ಮನೆಯಲ್ಲಿ ಲಾದ್ರು, ಅವನ ಹೆಂಡತಿ, ಹೆಂಡತಿಯ ತಂಗಿ, ಲಾದ್ರುವಿನ ತಾಯಿ, ಅವನ ಅಣ್ಣನ ಹೆಂಡತಿ, ಹೀಗೆ ಏಳೆಂಟು ಜನರಿಗೆ ಇದೇ ಕೆಲಸ. ಯಾರಿಗೇ ಆಗಲಿ ಮಡಲು ಬೇಕೆಂದರೆ ಅವರು ಇವನಲ್ಲಿಗೆ ಬರುತ್ತಿದ್ದರು. ಲಾದ್ರು ನಂತರ ಅವನ ಮಗ ಇದನ್ನು ಮುಂದುವರೆಸಿದ. ಆದರೆ ಪಾತ್ರೋಲ ಇಲ್ಲಿಗೆ ಬಂದದ್ದರಿಂದ ಅಲ್ಲಿ ಈ ಕೆಲಸ ಸೊರಗಿತು. ಆ ಹೆಸರು ಮಾತ್ರ ಇವನಿಗೆ ಖಾಯಂ ಆಯಿತು. +ಪಾದರಿಗೆ ಹಣ ಏಕೆ ಎಂಬ ಪ್ರಶ್ನೆ ಬಂದಾಗ ಅದನ್ನು ನಾನು ಹೇಳುತ್ತೇನೆ ಎಂದು ಪಾತ್ರೋಲ ಮುಂದೆ ಬರಲು ಒಂದು ಕಾರಣವಿತ್ತು. ಇವನ ಹೆಂಡತಿ ಭಟ್ಕಳದವಳು. ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಏನಿದ್ದಾನೆ ಅವನ ಹತ್ತಿರದ ಸಂಬಂಧಿ ಇವನ ಹೆಂಡತಿ. +ಈ ಫ಼ರಾಸ್ಕನಿಗೆ ಮದುವೆ ಮಾಡಿದವರೇ ಪಾದರಿ ಮಸ್ಕರಿನಾಸ್. ಫ಼ರಾಸ್ಕ ಭಟ್ಕಳದ ಇಗರ್ಜಿಯ ಬಟ್ಲರ್ ಆಗಿದ್ದವ. ಬಹಳ ವರ್ಷಗಳಿಂದ ಮಸ್ಕರಿನಾಸರು ಅಲ್ಲಿಗೆ ಬರುವುದಕ್ಕೂ ಮೊದಲು ಅವನು ಅಲ್ಲಿಯ ಬಟ್ಲರೇ. ಮಸ್ಕರಿನಾಸ ಅಲ್ಲಿಗೆ ಬಂದದ್ದು ಸುಂಕೇರಿಯಿಂದ. ಬಂದವರೇ ಬಟ್ಲರ್ ಮದುವೆ ಬಗ್ಗೆ ಗಡಿಬಿಡಿ ಮಾಡಿದರು. ಫ಼ರಾಸ್ಕನಿಗೆ ಭಟ್ಕಳ, ಶಿರಾಲಿ, ಮುರುಡೇಶ್ವರ, ಹೊನ್ನಾವರದಲ್ಲಿ ಹೆಣ್ಣು ಕೊಡುವವರು ಇರಲಿಲ್ಲ ಎಂದಲ್ಲ, ಇದ್ದರು, ಆದರೆ ಮಸ್ಕರಿನಾಸರು ಸುಂಕೇರಿಯಿಂದ ಒಂದು ಹೆಣ್ಣನ್ನು ತಂದರು. ಈಗ ಇಲ್ಲಿಗೂ ಈ ಬಟ್ಲರನನ್ನು ಅವನ ಹೆಂಡತಿಯನ್ನು ಕರೆತಂದಿದ್ದಾರೆ. +“..ಈ ಬಗ್ಗೆ ನಾನು ವಿಶೇಷವಾಗಿ ಹೇಳೋದು ಏನಿಲ್ಲ..” ಎಂದು ಬೇರೆ ಹಸಿಮಡಲು ಪಾತ್ರೋಲ ನುಡಿದ. +“ಹಣ ಯಾಕೆ ಅಂತ ಕೇಳಿದ್ರಲ್ಲ ಅದಕ್ಕೆ ಹೇಳತೇನೆ. ಈ ಫ಼ರಾಸ್ಕನ ಹೆಂಡತಿ ರಜೀನಾ ಇದ್ದಾಳಲ್ಲ ಅವಳ ತಮ್ಮ ವಕೀಲ ಓದ್ತಿದಾನೆ..ಎಲ್ಲಿ? ಮುಂಬೈನಲ್ಲಿ..ಅವನನ್ನು ನಮ್ಮ ಪಾದರಿ ಓದಸ್ತಿದಾರೆ..ಈಗ ತಿಳೀತಲ್ಲ..” ಎಂದು ಪಾತ್ರೋಲ ನಾಲ್ಕನೇ ಗ್ಲಾಸಿಗೆ ಕೈ ಒಡ್ಡಿದ. +ಒಂದೇ ಗ್ಲಾಸನ್ನು ಮುಗಿಸಿ ಊಟ ಮಾಡುತ್ತಿದ್ದ ಬೋನ ಸಣ್ಣದಾಗಿ ಕೆಮ್ಮಿದ- +“ಇನ್ನು ಈ ವಿಷಯ ಬೇಡ” ಎಂದು ಆತ ನುಡಿದ. +“ಪಾದರಿ ಅಂದರೆ ದೇವರ ಮಣಿಯಾರಿ..ಅವರು ನಮಗೋಸ್ಕರ ಇದಾರೆ..ನಾವು ಅವರಿಗೋಸ್ಕರ ಅಲ್ಲ..ಅವರನ್ನು ನೋಡಿಕೊಳ್ಳೋನು ದೇವರು..ಅವನಿಗೆ ಬಿಡೋಣ..” +ಅರ್ಧ ಅಮಲಿನಲ್ಲಿದ್ದವರು, ಅದೇ ಅಮಲೇರುತ್ತಿದ್ದವರು ಈ ಮಾತಿಗೆ ತಲೆದೂಗಿದ್ದರು. ಸಿಮೋನ ಕೂಡ- +“ಅದು ಖರೆ..ಬೋನ ಸಾಹುಕಾರ್ರು ಹೇಳುವ ಮಾತು ಒಪ್ಪಬೇಕಾದ್ದೆ..” ಎಂದ. +ಬಳ್ಕೂರಕಾರಗೂ ಮಾತು ಈ ದಿಕ್ಕಿನಲ್ಲಿ ಸಾಗುವುದು ಬೇಕಿರಲಿಲ್ಲ. +“ಮಾತು ಸಾಕು ಊಟ ಮಾಡಿ” ಎಂದೂ ಅವನು ಹೇಳಿದ. +ಊಟ ಮುಂದುವರೆಯಿತು. ಬಳ್ಕೂರಕಾರ್ ಕರೆದ ಎಲ್ಲರೂ ಊಟಕ್ಕೆ ಬಂದಿದ್ದರು. ಆದರೆ ಅವನಿಗೆ ಬೇಸರವಾದುದೆಂದರೆ ಬಾಮಣರು ಯಾರೂ ಅವನ ಮನೆಯತ್ತ ಸುಳಿದಿರಲಿಲ್ಲ. +…ಇರಲಿ…ಎಂದು ಆತ ನೊಂದುಕೊಂಡ. +ಇನಾಸಜ್ಜಿಯ ತಿಂಗಳ ಪೂಜೆ ಮುಗಿಯುತ್ತಿದ್ದಂತೆಯೇ ನವೆಂಬರ ತಿಂಗಳು ಬಂದಿತು. +* +* +* +ನವೆಂಬರ ತಿಂಗಳ ಮೊದಲ ವಾರದಲ್ಲಿಯೇ ಸರ್ವ ಆತ್ಮರ ಹಬ್ಬ . ಸಿಮಿತ್ರಿಯಲ್ಲಿರುವ ಎಲ್ಲ ಸಮಾಧಿಗಳನ್ನು ಸಂಬಂಧಪಟ್ಟವರು ಶುಚಿಮಾಡಿ ಸುತ್ತ ಬೆಳೆದ ಪೊದೆ ಗಿಡಗಳನ್ನು ಕತ್ತರಿಸಿ, ಸುತ್ತ ಶಗಣಿ ಸಾರಿಸಿ, ಸಮಾಧಿಗಳಿಗೆ ಸುಣ್ಣ ಬಳಿದು, ತಲೆಯ ಬಳಿ ನೆಟ್ಟ ಶಿಲುಬೆ ಮುರಿದು ಬಿದ್ದಿದ್ದರೆ ಅದನ್ನು ಸರಿ ಮಾಡಿ, ಸಮಾಧಿ ಮಂತ್ರಿಸಲು ಬರುವ ಪಾದರಿಗಾಗಿ ಕಾಯುವುದು ಒಂದು ಪದ್ಧತಿ. ಇದರ ಹಿಂದಿನ ದಿನ ರಾತ್ರಿ ಮನೆಗಳಿಗೆ ಆಲ್ಮ(ಆತ್ಮ)ಗಳು ಬರುತ್ತವೆ ಎಂಬುದು ಒಂದು ನಂಬಿಕೆ. ಆಲ್ಮಗಳಿಗಾಗಿಯೇ ಅಡಿಗೆ ಮಾಡಿರಿಸಿ ವಿಶೇಷವಾಗಿ ಪಾಯಸ ಮಾಡಿ ಅದನ್ನು ಯಾರಿಗೂ ಬಡಿಸದೆ ಹಾಗೆಯೇ ಇರಿಸುವುದು ಕೂಡ ಒಂದು ಪದ್ಧತಿ. ಪಾಯಸ ಬಡಿಸು ಬಡಿಸು ಎಂದು ಹಟ ಹಿಡಿದ ಮಕ್ಕಳಿಗೆ- +“ಇಲ್ಲ ಮಗ ರಾತ್ರಿ ಅಜ್ಜ ಬರತಾರೆ..ಅಜ್ಜಿ ಬರತಾಳೆ ಅವರು ಊಟ ಮಾಡಿ ಹೋದ ನಂತರ ಬೆಳಿಗ್ಗೆ ನಾವು ಊಟ ಮಾಡೋಣ..” ಎಂದು ತಾಯಂದಿರು ಸಮಾಧಾನ ಹೇಳುವುದು ಎಲ್ಲ ಕ್ರೀಸ್ತುವರ ಮನೆಗಳಲ್ಲೂ ನಡೆದು ಬಂದಿತ್ತು. ಮನೆಯ ಸಣ್ಣ ಮಕ್ಕಳು ನಂಬುತ್ತಿದ್ದರು ಕೂಡ. +ಅದೇ ದಿನ ದೊಡ್ಡವರ ಕೆಲಸವೆಂದರೆ ಸಮಾಧಿ ಸರಿಪಡಿಸುವುದು. +ಶಿವಸಾಗರದ ಸಿಮಿತ್ರಿಯಲ್ಲಿ ಆಗಲೇ ಸಾಕಷ್ಟು ಸಮಾಧಿಗಳು ತಲೆ ಎತ್ತಿದ್ದವು. ಸಿಮಿತ್ರಿಯಲ್ಲಿ ಸುತ್ತ ಪಾಗಾರ ಹಾಕಲಾಗಿತ್ತು. ಪಾದರಿ ಗೋನಸ್ವಾಲಿಸ್ ಎತ್ತರದ ಒಂದು ಶಿಲುಬೆಯನ್ನು, ಒಂದು ವೇದಿಕೆಯನ್ನು ಮಾಡಿಸಿದ್ದರು. ಪ್ಲೇಗು ಮಾರಿಗೆ ಬಲಿಯಾದ ಜೂಜನ ಸಮಾಧಿಯೇ ಸಿಮಿತ್ರಿಯ ಮೊದಲ ಸಮಾಧಿಯಾದದ್ದು ಒಂದು ವಿಪರ್ಯಾಸವೆ. ಜೂಜ ಸತ್ತ ಸುಮಾರು ಆರು ತಿಂಗಳ ನಂತರ ಶಿರಾಲಿಯ ತಾರಿ ಬಾಗಿಲಿನಿಂದ ಅವನ ತಾಯಿಯ ಅಣ್ಣ ತಮ್ಮಂದಿರು ಎಂದು ಈರ್ವರು ಬಂದು ಊರಿನಲ್ಲಿ ಗಲಾಟೆ ಬೇರೆ ಮಾಡಿದ್ದರು. +“ನಮ್ಮವನು ಅಂತ ಅವನಿದ್ದ..ಅವನ ಹೊಂಡಕ್ಕೆ ಹಿಡಿ ಮಣ್ಣು ಹಾಕಲಿಕ್ಕೆ ನೀವು ನಮಗೆ ಅವಕಾಶ ಮಾಡಿಕೊಡಲಿಲ್ಲ..ನೀವು ನಮಗೊಂದು ಮಾತು ಹೇಳಿ ಕಳುಹಿಸಲಿಲ್ಲ..” ಎಂದು ಸಿಮೋನ ಜೂಜೆಯ ಕತೆಯನ್ನು ವಿಸ್ತಾರವಾಗಿ ಹೇಳಿದ. +ಅರಮನೆ ಕೊಪ್ಪದ ಜೂಜನ ಮನೆಯನ್ನು ರಿಪೇರಿ ಮಾಡಿ, ಅದನ್ನು ಯಾರೋ ಸಾಹೇಬರಿಗೆ ಕುರಿ ದೊಡ್ಡಿ ಮಾಡಿಕೊಳ್ಳಲು ಬಾಡಿಗೆಗೆ ಕೊಟ್ಟು, ತಿಂಗಳ ಬಾಡಿಗೆ ಎಂದು ಒಂದೂವರೆ ಸಾವಿರ ರೂಪಾಯಿಗಳನ್ನು ಮುಂಗಡ ತೆಗೆದುಕೊಂಡ ಹೊರಟ ಅವರು ಮಾಡಿದ್ದ ಒಂದು ಕೆಲಸವೆಂದರೆ ಜೂಜನ ಸಮಾಧಿಯನ್ನು ಕಲ್ಲಿನಿಂದ ಕಟ್ಟಿ, ಕಲ್ಲಿನ ಶಿಲುಬೆ ಇರಿಸಿ ಹೋದದ್ದು. ಹೀಗಾಗಿ ಸಿಮಿತ್ರಿಯ ಮೊದಲ ಸಮಾಧಿ ಒಳ ಹೋದ ತಕ್ಷಣ ಕಣ್ಣಿಗೆ ಬೀಳುತ್ತಿತ್ತು. +ಈ ಸಮಾಧಿಯ ಸಾಲಿನಲ್ಲಿಯೇ ಗಾಡಿ ಸಿಮೋನನ ತಾಯಿಯ ಸಮಾಧಿ ಕೂಡ ಮೊನ್ನೆ ಮೊನ್ನೆ ಕಾಣಿಸಿಕೊಂಡಿತ್ತು. ಮಗನನ್ನು ಮೊಮ್ಮಕ್ಕಳನ್ನು ಬಿಟ್ಟಿರಲಾರದ ಈ ಮುದುಕಿ ಮುರುಡೇಶ್ವರದಿಂದ ಇಲ್ಲಿಗೆ ಬಂದು, ನಿತ್ಯ ಮೊಮ್ಮಕ್ಕಳಿಗೆ ಜಪ, ಪ್ರಾರ್ಥನೆ ಹೇಳಿಕೊಟ್ಟು, ಪಾದರಿ ಊರಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ ತಪ್ಪದೆ ಪೂಜೆ ಕೇಳಿ ಒಂದು ಅರ್ಥದಲ್ಲಿ ದೈವಿಕ ಬದುಕನ್ನು ಸಾಗಿಸಿ ಭಾಗ್ಯವಂತ ಮರಣವನ್ನೇ ಅನುಭವಿಸಿದಳು. +ಬೂದಿ ಬುಧುವಾರದಿಂದ ಆರಂಭವಾಗುವ ತಪಸ್ಸಿನ ಕಾಲವನ್ನು ಕಟ್ಟು ನಿಟ್ಟಾಗಿ ಆಚರಿಸಿದಳು. ಉಪವಾಸ ಹಿಡಿದಳು. ವಯಸ್ಸಾದವರು ಉಪವಾಸ ಇರಬೇಕಾಗಿಲ್ಲ ಎಂದು ಪಾದರಿ ಹೇಳಿದರೂ ಇವಳು ಕೇಳಿರಲಿಲ್ಲ. ಈ ಕಾಲದಲ್ಲಿ ಹೂ ಮುಡಿಯ ಬೇಡಿ ಎಂದು ಸೊಸೆಗೆ ಕೇರಿಯ ಹೆಣ್ಣುಮಕ್ಕಳಿಗೆ ಹೇಳಿದಳು. ಮನೆಯಲ್ಲಿ ಸೀಟಿ ಹೊಡೆಯಬೇಡಿ, ಹಾಡು ಹೇಳಬೇಡಿ, ಕೇಕೆ ಹಾಕಿ ನಗಬೇಡಿ ಎಂದು ಮೊಮ್ಮಕ್ಕಳಿಗೆ ಹೇಳಿದಳು. ಪ್ರತಿ ಶುಕ್ರವಾರ ಇಗರ್ಜಿಗೆ ಹೋಗಿ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡಳು. ಈ ಅವಧಿಯಲ್ಲಿ ಹೇಳುವ ಎಲ್ಲ ಕೀರ್ತನೆಗಳನ್ನು ನೋವು, ವಿಷಾದದ ದನಿಯಲ್ಲಿ ಹೇಳುವಂತೆ ಮಕ್ಕಳಿಗೆ ಸಲಹೆ ನೀಡಿದಳು. ಕ್ರಿಸ್ತ ಪ್ರಭು ಅವನ ಜೀವಿತದ ಈ ನಲವತ್ತು ದಿನ ಏನೆಲ್ಲ ನೋವು, ಹಿಂಸೆ, ಅವಮಾನಗಳನ್ನು ಎದುರಿಸಿದನೋ ಅದನ್ನೆಲ್ಲ ಸ್ಮರಿಸಿಕೊಳ್ಳುವಂತೆ ಪದೇ ಪದೇ ಮೊಮ್ಮಕ್ಕಳಿಗೆ ಹೇಳಿದಳು. ಶುಭ ಶುಕ್ರವಾರದಂದು ಕ್ರಿಸ್ತಪ್ರಭುವನ್ನು ಶಿಲುಬೆಗೆ ಏರಿಸಿದ ಘಟನೆಯನ್ನು ಪಾದರಿ ಗೋನಸ್ವಾಲಿಸ್ ಇಗರ್ಜಿಯಲ್ಲಿ ತಿಳಿಸಿಕೊಟ್ಟರು. ಈ ಘಟನೆಯನ್ನು ವಿವರಿಸುತ್ತ ಅವರ ಧ್ವನಿ ಗದ್ಗದಿತವಾಯಿತು. ಮಾತು ನಿಲ್ಲಿಸಿ ಅವರು ಎರಡು ನಿಮಿಷ ನಿಂತರು. ನಿಲುವಂಗಿಯ ಜೇಬಿನಿಂದ ಬಿಳಿವಸ್ತ್ರ ತೆಗೆದು ಕಣ್ಣೊರೆಸಿಕೊಂಡರು. ಸೆರಮಾಂವಂ ಕೇಳುತ್ತ ಕುಳಿತವರ ಅನುಭವ ಕೂಡ ಇದೇ ಆಯಿತು. +ಶಿಲುಬೆಗೆ ಏರಿಸಿದ ಕ್ರಿಸ್ತನ ಪ್ರತಿಮೆಗೆ ಎಲ್ಲ ಮುತ್ತಿಟ್ಟು ಮನೆಗೆ ಬಂದರು. +ಆ ರಾತ್ರಿ ಏಕೋ ಸಿಮೋನನ ತಾಯಿ ಎದ್ದು ಕುಳಿತಳು. +“ಸಿಮೋನ ಮಕ್ಕಳೆಲ್ಲ ಮಲಗಿದ್ದಾರಾ?” ಎಂದು ಕೇಳಿದರು. +ಸಿಮೋನನಿಗೆ ಅನುಮಾನವಾಗಿ ಆತ ಮಕ್ಕಳನ್ನು, ಹೆಂಡತಿಯನ್ನು ಕೂಗಿ ಎಬ್ಬಿಸಿ ಅವರನ್ನು ತಾಯಿಯ ಬಳಿ ಕರೆತರುವಷ್ಟರಲ್ಲಿ ಈ ಮುದುಕಿ ಎದ್ದು ದೇವರ ಪೀಠದ ಬಳಿ ಹೋಗಿದ್ದವಳು ಅಲ್ಲೇ ಕುಸಿದಿದ್ದಳು. +ಶಿವಸಾಗರದ ಸಿಮಿತ್ರಿಗೆ ಇನ್ನೊಂದು ಸೇರ್ಪಡೆಯಾಯಿತು. ಸಿಮೋನ ತಾಯಿಗಾಗಿ ಕಲ್ಲಿನ ಸಮಾಧಿ ಕಟ್ಟಿಸಿದ. +ಬಳ್ಕೂರಿನ ಕೈತಾನನ ಅತ್ತೆ ಗಂಡಬಾಳೆಯ ಇನಾಸಜ್ಜಿ ಕೊನೆಗಾಲದಲ್ಲಿ ಇಲ್ಲಿ ಬಂದು ಸತ್ತಳು. ಇವಳ ಸಮಾಧಿ ಕಟ್ಟಿಸಿ ಬಳ್ಕೂರಕಾರ ಅತ್ತೆಗೊಂದು ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟ. +ಹೀಗೆಯೇ ಪಾಸ್ಕೋಲ ಮೇಸ್ತ್ರನ ಹೆಂಡತಿ ರೀತಾಳ ತಮ್ಮ ಬಹಳ ವರ್ಷ ಹೆಸರು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ಸಿಮಿತ್ರಿ ಸೇರಿಕೊಂಡ. +ಊರಿಗೆಲ್ಲ ಆಗಾಗ್ಗೆ ಕಾಡು ಹಂದಿ ಮಾಂಸವನ್ನೋ ಜಿಂಕೆ ಮಾಂಸವನ್ನೋ ಬೇಟೆಯಾಡಿ ತಂದು ಪಾಲು ಮಾಡಿ ಮಾರುತ್ತಿದ್ದ ಹಂದಿಗುಸ್ತೀನ ಕೂಡ ಇಲ್ಲಿಯೇ ಇದ್ದ. ಬಲಗಾಲುದ್ದ ಬಾಲ್ತಿದಾರನ ಸಮಾಧಿ ಕೂಡ ಇದೇ ಸಾಲಿನಲ್ಲಿತ್ತು. +ಊರಿನ ಹೊಸ ಇಗರ್ಜಿ ಕಟ್ಟಲೆಂದೇ ಬಂದು ಶಿವಸಾಗದವನೇ ಆಗಿ ಹೋದ ಭಟ್ಕಳದ ಸಾನ್ ಪುತ್ತು ಮೂರು ತಿಂಗಳು ಕ್ಷಯರೋಗದಿಂದ ನರಳಿ, ಗುಣಕಾಣದೆ ಸತ್ತಿದ್ದ. ಅವನನ್ನು ಕೂಡ ಈ ಸಿಮಿತ್ರಿಯಲ್ಲಿಯೇ ಮಣ್ಣು ಮಾಡಲಾಗಿತ್ತು. +ಮೊನ್ನೆ ಮೊನ್ನೆ ಬಂದ ಹೆಲ್ತ ವಿಸಿಟರ್ ವಿನ್ಸೆಂಟನ ಮಾವ ಅಳಿಯನ ಮನೆಗೆ ಬಂದವ, ಬಂದ ಮೂರನೇ ದಿನ ಕುಡಿದದ್ದು ಜಾಸ್ತಿಯಾಗಿ ಸತ್ತಿದ್ದ. ಮೊದಲಿನಿಂದಲೂ ಅತಿಯಾಗಿ ಕುಡಿಯುತ್ತಿದ್ದ ಆತ ಶಿವಸಾಗರಕ್ಕೆ ಬಂದವನೇ ಕುಡಿಯಲಾರಂಭಿಸಿ, ಕೊನೆಗೆ ಅದು ಹೆಚ್ಚಾಗಿ ಪ್ರಾಣ ಬಿಟ್ಟಿದ್ದ. ಅವನ ಶವವನ್ನು ದೂರದ ಮಂಗಳೂರಿಗೆ ಒಯ್ಯುವ ಅನುಕೂಲತೆ ಇಲ್ಲದ್ದರಿಂದ ಅವನನ್ನು ಇಲ್ಲಿ ಹುಗಿಯಲಾಗಿತ್ತು. ವಿನ್ಸೆಂಟ್ ತನ್ನ ಮಾವನ ಸಮಾಧಿಯನ್ನು ಉಳಿದೆಲ್ಲ ಸಮಾಧಿಗಿಂತಲೂ ಉತ್ತಮವಾಗಿ ಭವ್ಯವಾಗಿ ಕಟ್ಟಿಸಿ ಸಮಾಧಿಯ ಶಿಲುಬೆಗಲ್ಲಿನ ಮೇಲೆ ತನ್ನ ಮಾವನ ಹೆಸರನ್ನು, ಹುಟ್ಟಿದ ತಾರೀಖನ್ನು ಸತ್ತ ತಾರೀಖನ್ನು ಬರೆಸುವುದರ ಜೊತೆಗೆ-ನಿಮ್ಮ ನೆನಪು ಸದಾ ನಮ್ಮಲ್ಲಿ ಹಸಿರಾಗಿರುತ್ತದೆ ಎಂದು ಇಂಗ್ಲೀಷಿನಲ್ಲಿ ಬರೆಸಿದ್ದ. ಶಿವಸಾಗರದ ಸಿಮಿತ್ರಿಯಲ್ಲಿ ಹೀಗೆ ಬರೆಸಲಾದ ಸಮಾಧಿ ಇದೊಂದೆ ಆಗಿತ್ತು. +ಹೀಗೆ ಸಿಮಿತ್ರಿಯಲ್ಲಿ ಇಪ್ಪತ್ತು ಇಪ್ಪತೈದು ಸಮಾಧಿಗಳು ಎದ್ದು ನಿಂತಿದ್ದವು. ಒಂದೆರಡು ಸಮಾಧಿಗಳು ಕಟ್ಟಿಸದೇ ಇದ್ದುದರಿಂದ ನೆಲಮಟ್ಟಕ್ಕೆ ಇಳಿದು ನಾಶವಾಗಿದ್ದವು. ಕೆಲವು ಸಮಾಧಿಗಳ ಬಳಿ ನೆಟ್ಟ ಶಿಲುಬೆ ಮುರಿದಿತ್ತು. +ಮುಖ್ಯವಾಗಿ ಸಿಮಿತ್ರಿಯ ತುಂಬ ಗಿಡ, ಪೊದೆಗಳು, ತುಂಬೆ ಗಿಡಗಳು, ಕಾಡು ಬಳ್ಳಿ ಹಬ್ಬಿತ್ತು. ನಾಳೆ ಸಮಾಧಿಗಳ ಪೂಜೆ ಮಾಡಬೇಕೆಂದರೆ ಸಿಮಿತ್ರಿ ಮೊದಲು ಶುಚಿಯಾಗಬೇಕು. ಸಮಾಧಿಗಳನ್ನು ಸಂಬಂಧಪಟ್ಟವರು ನೋಡಿಕೊಳ್ಳುತ್ತಾರೆ. ಆದರೆ ಸಿಮಿತ್ರಿಯನ್ನು ಶುಚಿ ಮಾಡುವವರು ಯಾರು? +ಪಾದರಿ ಮಸ್ಕರಿನಾಸ ಇದಕ್ಕೊಂದು ದಾರಿ ಕಂಡು ಹಿಡಿದರು. ಹಿಂದಿನ ಭಾನುವಾರ ಜ್ಞಾನೋಪದೇಶಕ್ಕೆ ಬಂದ ಯುವಕರಿಗೆ- +“ನೀವು ಈ ಬಾರಿ ಸಿಮಿತ್ರಿ ಶುಚಿ ಮಾಡಬೇಕು..ಶನಿವಾರ ಸರ್ವ ಆತ್ಮರ ಹಬ್ಬ..ಶುಕ್ರವಾರ ನೀವೆಲ್ಲ ಈ ಕೆಲಸ ಮಾಡಬೇಕು..” ಎಂದರು. ಹಾಗೆಯೇ ಜನರನ್ನು ಕುರಿತು ಇಗರ್ಜಿಯಲ್ಲಿ- +“ಯಾರ ನೆಂಟರ ಇಷ್ಟರ ಸಮಾಧಿಗಳು ಸಿಮಿತ್ರಿಯಲ್ಲಿವೆಯೋ ಅವರೆಲ್ಲ ಅಂತಹ ಸಮಾಧಿಗಳನ್ನು ಶುಚಿ ಮಾಡಿ, ಸುಣ್ಣ ಬಣ್ಣ ಮಾಡಿಸಿ..ಬಂಗಲೆಗೆ ಬಂದು ಹೆಸರು ಹೇಳಿ ಒಂದು ರೂಪಾಯಿ ಕೊಟ್ಟು ಚೀಟಿ ಮಾಡಿಸಿ..ನಾನು ಸಮಾಧಿ ಮಂತ್ರಿಸಲು ಬಂದಾಗ ಹೀಗೆ ಯಾರ ಚೀಟಿ ಇದೆಯೋ ಅಂತಹ ಸಮಾಧಿಗಳನ್ನು ಮಾತ್ರ ಮಂತ್ರಿಸುತ್ತೇನೆ..ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೂವು ಹಾಕಿ ನೀವು ನಿಮ್ಮ ನಿಮ್ಮ ಸಂಬಂಧಿಗಳ ಸಮಾಧಿ ಬಳಿ ಕಾದು ನಿಂತಿರಬೇಕು. ಸಮಾಧಿ ಮಂತ್ರಿಸುವ ಸಂದರ್ಭದಲ್ಲಿ ಗೌರವ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಅಂದರೆ ಸತ್ತು ಪುಲಗತ್ತಿಯಲ್ಲಿರುವ ಆತ್ಮಗಳಿಗೆ ಬೇಗನೆ ಸದ್ಗತಿ ದೊರೆಯುತ್ತದೆ”. ಎಂದು ಹೇಳಿದ್ದರು. +ಜ್ಞಾನೋಪದೇಶ ನಡೆಯುವಾಗ ಪಾದರಿಗಳು ಕೇವಲ ಯುವಕರಿಗೇನೆ ಕೆಲಸ ಹೇಳಿದ್ದು ಯುವತಿಯರಿಗೆ ಸಂತೋಷವನ್ನುಂಟು ಮಾಡಿತು. ಹೀಗಾಗಿ ಯುವತಿಯರ ನಡುವೆ ಇದ್ದ ಪಾಸ್ಕೋಲನ ಮಗಳು ಜೊಸೆಫ಼ಿನ, ಸುತಾರಿ ಇನಾಸನ ಕೊನೆಯ ಮಗಳು ಪಾವಲೀನಾ, ಎಮ್ಮೆ ಮರಿಯಳ ಮಗಳು ಫ಼ಿಲೋಮೆನಾ. +“ಪದ್ರಾಬಾ,…ಪದ್ರಾಬಾ..ನಮಗೆ ಏನೂ ಕೆಲಸ ಇಲ್ಲವೇ?” ಎಂದು ಕೇಳಿದರು. +ಈ ಹುಡುಗಿಯರ ತಂಡ ಯಾವಾಗಲೂ ಪಾದರಿ ಮಸ್ಕರಿನಾಸರ ಸುತ್ತ ಘೇರಾಯಿಸಿಕೊಂಡಿರುತ್ತಿತ್ತು. ಹಾ ಹೂ ಎಂದು ಕೂಗುತ್ತ ಅವರ ಹೊಟ್ಟೆ, ಬೆನ್ನು ತೋಳುಗಳನ್ನು ತೋರು ಬೆರಳಿನಿಂದ ತಿವಿಯುತ್ತ, ಕೈಯಲ್ಲಿ ಬೆತ್ತ ಹಿಡಿದು ಅವರತ್ತ ಬೆತ್ತ ಬೀಸಿದಂತೆ ಹೆದರಿಸುತ್ತ ತರುಣಿಯರ ತಂಡದ ಚೀತ್ಕಾರಕ್ಕೆ ಹುಸಿ ಮುನಿಸಿಗೆ ನಗೆಗೆ ಕಾರಣವಾಗುತ್ತಿದ್ದರು, ಪಾದರಿ ಮಸ್ಕರಿನಾಸ. +ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಹುಡುಗರಿಗೆ ಮಾತ್ರ ಕೆಲಸ ಹೇಳಿದರಲ್ಲ ಎಂದು ಇವರಿಗೆ ಸಂತಸವಾದರೂ, ಈ ನೆಪದಲ್ಲಿ ಇಗರ್ಜಿಗೆ ಬರುವ, ಇಲ್ಲಿ ತಿರುಗಾಡುವ ಅವಕಾಶ ತಪ್ಪಿ ಹೋಯಿತಲ್ಲ ಎಂದು ವ್ಯಥೆಯಾಯಿತು. ಹೀಗೆಂದೇ ಫ಼ಿಲೋಮೆನಾ ಬಾಯಿ ಬಿಟ್ಟು ಕೇಳಿದಳು. ಜೋಸೆಫ಼ಿನ ಪಾವಲಿನಾ ತಮ್ಮ ದನಿ ಸೇರಿಸಿದರು. +“…ಹೋ!” ಎಂದು ಅಚ್ಚರಿ ವ್ಯಕ್ತಪಡಿಸಿದರು ಪಾದರಿ. +“..ನೀವೂ ಬರಬೇಕು..ನನ್ನ ಜತೆ..ಸಮಾಧಿ ಮಂತ್ರಿಸುವಾಗ ಕೀರ್ತನೆ ಹೇಳಲಿಕ್ಕೆ ನೀವು ಬೇಕು..” ಎಂದರು. +“ಬರ್ತೀರಿ ಅಲ್ಲ? ಎಂದು ಬೇರೆ ಕೇಳಿದರು. +“ಬರ್ತೀವಿ..ಬರ್ತೀವಿ..” +ಎಂದು ರಾಗವಾಗಿ ಎಲ್ಲ ಹುಡುಗಿಯರೂ ಒಂದೇ ಸಾರಿ ಆಲಾಪಿಸಿದರು. +* +* +* +ಜ್ಞಾನೋಪದೇಶ ಮುಗಿದು ಮಕ್ಕಳು, ಯುವಕ ಯುವತಿಯರು ಚದುರಿ ಹೋಗತೊಡಗಿದಾಗ ಸುತಾರಿ ಇನಾಸನ ಮಗ ಪಾಸ್ಕು ಕೊಂಚ ಹಿಂದೆಯೇ ಉಳಿದ. ಎಲ್ಲ ಯುವಕರೂ ಇಗರ್ಜಿಯಿಂದ ಹೊರಬಿದ್ದ ನಂತರ ಹೊರಬಂದ ಹುಡುಗಿಯರ ತಂಡ ಕೂಡ ಎರಡು ಮೂರು ಗುಂಪುಗಳಾಗಿ ಒಡೆದುಕೊಂಡು ಪಾಸ್ಕೋಲ ಮೇಸ್ತ್ರಿಯ ಕೊನೆಯ ಮಗಳು ಜೋಸೆಫ಼ಿನ್ ಇಗರ್ಜಿ ಬಾವಿಯತ್ತ ತಿರುಗಿ- +“ನಾನು ಹೀಗೇ ಬರತೀನಿ ಕಣೆ ಫ಼ಿಲೋಮಿನಾ” ಎಂದು ಹೇಳಿ ಇಗರ್ಜಿ ಬಾವಿಯತ್ತ ತಿರುಗಿದಾಗ ಗಂಟೆಯ ಗೋಪುರದ ಕೆಳಗೆ ನಿಂತ ಪಾಸ್ಕುವಿನ ಮೈ ಎಲ್ಲ ಬಿಸಿಯಾಗಿ ಎದೆ ಬಡಿದುಕೊಳ್ಳತೊಡಗಿತು. ಜತೆಗೆ ಅಪಾರ ಸಂತೋಷವೂ ಆಯಿತು. +ಪಾದರಿ ಗೋನಸ್ವಾಲಿಸರು ಶಿವಸಾಗರ ಬಿಡುವ ಮುನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಇಗರ್ಜಿಯ ಬಲ ಪಾರ್ಶ್ವದಲ್ಲಿ ಪಾಸ್ಕೋಲ ಮೇಸ್ತ್ರಿಯ ಮನೆಯ ನೇರಕ್ಕೆ ಒಂದು ಬಾವಿ ತೆಗೆಸಿದ್ದು. ಮೊದಲೆಲ್ಲ ಗಾಡಿ ಸಿಮೋನನ ಮನೆಯ ಬಾವಿಯಿಂದಲೇ ಬೋನನೀರು ತರುತ್ತಿದ್ದ. ಇಗರ್ಜಿಯ ಸುತ್ತ ಬೇಲಿ ಕಟ್ಟಿದ ಮೇಲೂ ಇಲ್ಲಿಂದಲೇ ನೀರು ತರುವ ಅವನ ಕಾಯಕ ಮುಂದುವರೆದಿತ್ತು. ಇಲ್ಲಿ ಇಗರ್ಜಿ ಕೆಲಸ ಪ್ರಾರಂಭವಾದಾಗ ಆ ಕಾಮಗಾರಿಗೆ ಸಿಮೋನ ಗಾಡಿಯಲ್ಲಿ ಊರ ಕೆರೆಯಿಂದ ನೀರು ತರಿಸಿ, ತಾತ್ಕಾಲಿಕವಾಗಿ ಕಟ್ಟಲಾದ ನೆಲ ಟ್ಯಾಂಕಿಯಲ್ಲಿ ಅದನ್ನು ತುಂಬಿ ಇರಿಸಿಕೊಳ್ಳುತ್ತಿದ್ದ. +ಇಗರ್ಜಿ ಕಟ್ಟಿ ಮುಗಿದ ನಂತರ ಇಗರ್ಜಿಗೆ ಒಂದು ಬಾವಿ ಇದ್ದರೆ ಅನುಕೂಲ ಎನಿಸಿತು ಗೋನಸ್ವಾಲಿಸರಿಗೆ. ಹಸಿರು ಕಡ್ಡಿ ಹಿಡಿದು ಜಲ ನೋಡುವ ಓರ್ವರು ಇಗರ್ಜಿಯ ಸುತ್ತ ತಿರುಗಾಡಿ ಕೊನೆಗೆ ಬಲ ಪಾರ್ಶ್ವದಲ್ಲಿ ತುಸು ದೂರ ಒಂದು ಜಾಗ ಗುರುತಿಸಿದರು. ಅಲ್ಲಿ ಬಾವಿ ತೆಗೆದಾಗ ಒಳ್ಳೆಯ ನೀರು ಸಿಕ್ಕಿತು. ಇಗರ್ಜಿಯ ನೀರಿನ ಸಮಸ್ಯೆ ಕೊನೆಗೂ ಬಗೆಹರಿಯಿತು. ಆದರೆ ಇಲ್ಲಿ ಬಾವಿಯಾದದ್ದು, ಬಾವಿಯಲ್ಲಿ ಹೇರಳ ನೀರಿರುವುದು, ಬಾವಿಯ ಆಚೆಗೆ ಇರುವ ಎರಡು ಮೂರು ಮನೆಗಳವರಿಗೆ ಆಸೆ ಕೆರಳಿಸಿತು. +ಜಿಲ್ಲಾಧಿಕಾರಿ ಮೆಗ್ಗಾನ ಸಾಹೇಬ ಇಗರ್ಜಿಗೆ ಬಂದು ಹೋದ ನಂತರ ಇಗರ್ಜಿ ಕೇರಿಯಲ್ಲಿ ಒಂದು ಸರಕಾರಿ ಬಾವಿ ತೋಡಲಾಗಿದ್ದರೂ ಅದರಲ್ಲಿ ನೀರು ತುಂಬಾ ಆಳದಲ್ಲಿತ್ತು. ಬೆಳಗಿನ ಜಾವ ಸೇದುಕೊಂಡರೆ ನೀರು ಸಿಗುತ್ತಿತ್ತಲ್ಲದೆ ಅನಂತರ ಕೊಡಪಾನದ ಬದಲು ತಂಬಿಗೆ ಹಾಕಿ ನೀರನ್ನು ಗೋರಬೇಕಾಗುತ್ತಿತ್ತು. ಹೀಗಾಗಿ ಸಾನ ಬಾವಿ ಪೆದ್ರು, ಪಾಸ್ಕೋಲ ಮೇಸ್ತ್ರಿ,ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ ಮೊದಲಾದವರೆಲ್ಲ ಸರಕಾರಿ ಬಾವಿ ಆಯಿತೆಂದು ಸಂತಸ ಪಟ್ಟವರು. ಆ ಬಾವಿಯ ಕತೆ ಹೀಗಾದುದರಿಂದ ಮತ್ತೆ ಹಿಂದಿನಂತೆಯೇ ಸಿಮೋನ ಮೇಸ್ತ್ರನ ಬಾವಿ, ಎಮ್ಮೆ ಮರಿಯಾಳ ಬಾವಿ, ಈ ತುದಿಯಲ್ಲಿ ಮಿಂಗೇಲಿ ಬಾವಿ ಎಂದು ನೀರಿಗೆ ಹೋಗತೊಡಗಿದರು. +ಆದರೆ ಇಗರ್ಜಿ ಜಾಗದಲ್ಲಿ ಒಂದು ಬಾವಿ ಆದದ್ದು, ಪಾದರಿ ಅವರ ಬಟ್ಲರ್ ಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಬಾವಿ ಸದಾ ತುಂಬಿರುವುದು ನೀರಿಗಾಗಿ ಪರದಾಡುತ್ತಿದ್ದವರಿಗೆ ಸಂತಸವನ್ನುಂಟು ಮಾಡಿತು. ಆದರೆ ನಡುವೆ ಬೇಲಿ ಇತ್ತು. ಒಂದು ಕಂದಕವಿತ್ತು. ಪಾದರಿಯ ಹೆದರಿಕೆ ಬೇರೆ. ಕೊನೆಗೆ ಪಾಸ್ಕೋಲ ಮೇಸ್ತ್ರಿ ಧೈರ್ಯ ಮಾಡಿ ಗೋನಸ್ವಾಲಿಸರಲ್ಲಿ ಬಂದ. +“ಪದ್ರಾಬಾ..” ಎಂದ. +“ಕೋಣ್ರೆ ತೋ..” ಎಂದವರು ಕೇಳಿದರು, ಟಪಾಲು ನೋಡುತ್ತ ಕುಳಿತವರು. +“ನಾನು ಪದ್ರಾಬ ಪಾಸ್ಕೋಲ” +“ಹಾಂ..ಏನು?” +ವಿನಯದಿಂದಲೇ ಪಾಸ್ಕೋಲ ತನ್ನ ಹಾಗೂ ಅಕ್ಕಪಕ್ಕದ ಮನೆಗಳವರ ನೀರಿನ ತಾಪತ್ರಯ ತೋಡಿಕೊಂಡ. +“ಹಾ..ಹೇಳು ಏನು ಮಾಡಬೇಕು”? ಅವನನ್ನೇ ಕೇಳಿದರು ಅವರು. +“ಅಲ್ಲಿ ಓಡಾಡಲಿಕ್ಕೆ ಒಂದು ದಣಪೆ ಇಟ್ಟರೆ ನಮಗೆ ನೀರು ಸಿಗುತ್ತಿತ್ತು” +“ನೀರು ತೊಗೊಂಡು ಹೋಗಿ..ಅದು ಇಗರ್ಜಿ ಬಾವಿ..ಧಾಜಣರಿಗೆ ಸೇರಿದ್ದು..ಆದರೆ..” ಅವರು ಮಾತು ನಿಲ್ಲಿಸಿದರು. +ಮತ್ತೆ ಜನ ಚೌಡಿ ಬನಕ್ಕೆ ಬರತೊಡಗಿದರೆ? +“ಇಲ್ಲ..ಪದ್ರಾಬ..ನೀರಿಗಲ್ಲದೇ ನಾವು ಬೇರೆ ಯಾವ ಕಾರಣಕ್ಕೂ ಅಲ್ಲಿಂದ ಬರೋದಿಲ್ಲ..” ಎಂದ ಆತ. +ಅಂತೆಯೇ ಅಲ್ಲೊಂದು ದಣಪೆ ತೆರೆದುಕೊಂಡಿತ್ತು. ಆ ನಾಲ್ಕು ಮನೆಗಳವರು ನೀರು ಕೊಂಡೊಯ್ಯತೊಡಗಿದರು. ಆದರೆ ಕ್ರಮೇಣ ಅಲ್ಲೊಂದು ಕಾಲು ದಾರಿ ಮೈತಳೆಯಿತು. ಇಗರ್ಜಿಗೆ ಬರುವವರು, ಇಗರ್ಜಿಯಿಂದ ಹೋಗುವವರು ಹೀಗೆಯೇ ತಿರುಗಾಡಲಾರಂಭಿಸಿದರು. ಪಾದರಿ ಮಸ್ಕರಿನಾಸ ಬಂದ ನಂತರವಂತೂ ಈ ದಾರಿ ಮತ್ತೂ ತೆರೆದುಕೊಂಡು ಅಗಲವಾಯಿತು. +ಹೀಗೆಂದು ಹಿಂದಿನಂತೆಯೇ ಪೊದೆಗಳು, ಮರಗಳು, ಗಿಡಗಳು, ಬಿದಿರ ಹಿಂಡು ಇದ್ದೇ ಇತ್ತು. ಸುತ್ತು ಬಳಸಿಕೊಂಡು ಬರುವುದರ ಬದಲು ಇದು ಸಮೀಪವಾಗಿದ್ದರಿಂದ ಇಗರ್ಜಿ ಸುತ್ತಲಿನ ಸಮೀಪದ ಏಳೆಂಟು ಮನೆಗಳವರು, ಮಕ್ಕಳು ಇದನ್ನೇ ಬಳಸಿಕೊಳ್ಳತೊಡಗಿದರು. +* +* +* +ಜೋಸೆಫ಼ಿನಾ ತಲೆಯ ಮೇಲಿನ ಏವ್ ತೆಗೆದು ಮಡಚಿ ಕೈಯಲ್ಲಿರಿಸಿಕೊಂಡು ಕಾಲುದಾರಿಯತ್ತ ತಿರುಗಿ ಅಷ್ಟು ದೂರ ಹೋದವಳು ತುಸು ತಡೆದು ನಿಂತಳು. ಹಿಂದಿನಿಂದ ಪಾಸ್ಕು ಬಂದು ಅವಳ ಜತೆ ಸೇರಿಕೊಂಡ- +” ಈದತೋರ್ನ ಯಾವಾಗ ಮುಗಿಯುತ್ತೆ ಅನ್ನಿಸಿ ಬಿಡುತ್ತೆ ಅಲ್ಲ?” ಎಂದು ಆತ ತಟ್ಟನೆ ಮಾತಿಗೆ ತೊಡಗಿದಾಗ. +ಇಬ್ಬರೂ ಕಾಲುದಾರಿ ಬಿಟ್ಟು ವಿಶಾಲವಾಗಿ ನೆಲದವರೆಗೂ ರೆಂಬೆಕೊಂಬೆ ಬಿಟ್ಟು ಹರಡಿಕೊಂಡ ಮಾವಿನ ಮರದ ಮರೆಗೆ ಸರಿದರು. +“..ದತೋರ್ನ ಕಲೀಬೆಕಲ್ಲ” +“ಏನದು ಕಲಿತದ್ದೆ ಕಲಿಯೋದು..ದೇವರ ಹತ್ತು ಕಟ್ಟಲೆಗಳು..ಇಗರ್ಜಿ ಮಾತೆಯ ಕಟ್ಟಲೆಗಳು..ಪಾಪ ನಿವೇದನಾ ಪ್ರಾರ್ಥನೆ. ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ..ಥೂ! ಥೂ! ಬೇಸರ ಬಂದು ಹೋಗುತ್ತೆ..” +ಮಾವಿನ ಮರದ ಸಣ್ಣ ರೆಂಬೆ ಮುರಿದು ಎಲೆಗಳನ್ನು ಹರಿದು ಚೆಲ್ಲುತ್ತ ಸಿಡಿಮಿಡಿಗೊಂಡ ಪಾಸ್ಕು. +“ದತೋರ್ನಗೆ ಬರಲಿಲ್ಲ ಅಂದರೆ ನಾಳೆ ಮದುವೆ ಇಲ್ಲ..ಮದುವೆ ಬೇಕು ಅನ್ನೋದಾದ್ರೆ ದತೋರ್ನ ಕಲೀಬೇಕು.” +ನಗು ನಗುತ್ತ ಕೆಣಕಿದಳು ಜೋಸೆಫ಼ಿನಾ. +ಕೆಲವೇ ತಿಂಗಳ ಹಿಂದೆ ಸಾಂತಾ ಮೋರಿ ಮಗ ಬಸ್ತು ಸಿದ್ಧಾಪುರದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಸಿದ್ಧಾಪುರದಲ್ಲಿ. ಆದರೆ ನಿಯಮದ ಪ್ರಕಾರ ಇಲ್ಲಿಯ ಪಾದರಿ ಚೀಟಿಕೊಡಬೇಕು. ಈ ಚೀಟಿ ತೆಗೆದುಕೊಂಡು ಹೋಗಿ ಅಲ್ಲಿಯ ಪಾದರಿಗೆ ಕೊಟ್ಟರೆ ಮದುವೆ. +ಬಸ್ತು ಮಸ್ಕರಿನಾಸರ ಬಳಿ ಹೋಗಿ +“ಪದ್ರಾಬ…ಚೀಟಿ ಕೊಡಿ” ಎಂದು ಕೇಳಿದಾಗ ಅವರು- +“ಸಾಂತಾಮೋರಿ ಎರಡು ವರ್ಷದಿಂದ ಅನ್ವಾಲ ಕಾಯಿದೆ ಕೊಟ್ಟಿಲ್ಲ..” ಎಂದು ಮೊದಲ ತಕರಾರು ತೆಗೆದರು. ನಂತರ “ನೀನು ಪ್ರತಿ ಭಾನುವಾರ ಇಗರ್ಜಿಗೆ ಬರುವುದಿಲ್ಲ”. ಇದು ಎರಡನೇ ತಕರಾರು. +“ವರ್ಷಕ್ಕೆ ಒಂದು ಸಾರಿಯಾದರೂ ಪಾಪ ನಿವೇದನೆ ಮಾಡಿ ದಿವ್ಯಪ್ರಸಾದ ಸ್ವೀಕರಿಸಬೇಕು ಎಂಬುದು ಇಗರ್ಜಿ ಮಾತೆಯ ಕಟ್ಟಲೆ..ಅದನ್ನು ಈಡೇರಿಸುತ್ತಿದ್ದೀಯಾ?” ಎಂದು ಮೂರನೇ ಪ್ರಶ್ನೆ ಕೇಳಿದರು. +ಈ ಮೂರೂ ಪ್ರಶ್ನೆಗಳನ್ನು ಕೇಳಿಯೂ ಬಸ್ತು ನೀಡಿದ ಉತ್ತರಗಳನ್ನು ಒಪ್ಪಿಕೊಂಡ ಮಸ್ಕರಿನಾಸರು- +“ಅದೆಲ್ಲ ಸರಿ..ನಿನಗೆ ಎಲ್ಲ ಜಪಮಂತ್ರಗಳು ಬರುತ್ತಾ? ಎಲ್ಲಿ ಪರಲೋಕ ಮಂತ್ರ ಹೇಳು..ದೇವರ ಹತ್ತು ಕಟ್ಟಲೆಗಳನ್ನು ಹೇಳು? ಪಾಪ ನಿವೇದನಾ ಪ್ರಾರ್ಥನೆ ಹೇಳು” ಎಂದು ಕೇಳಿ ಬಸ್ತುವನ್ನು ಗೊಂದಲದಲ್ಲಿ ಕೆಡವಿದರು. ಅವನಿಗೆ ಎಲ್ಲವೂ ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು- +“ನಾಳೆಯಿಂದ ಬಾ..ಎಲ್ಲ ಕಲಿತ ನಂತರ ನಿನಗೆ ಚೀಟಿ..” ಎಂದು ನುಡಿದು ಬಿಟ್ಟರು. +ಬಸ್ತು ನಿತ್ಯ ಕೆಲಸ ಮುಗಿಸಿಕೊಂಡು ಬಂದು ಪಾದರಿಯ ಬಂಗಲೆಗೆ ಹೋಗುವುದನ್ನು ನೋಡಿ ಜನ ನಕ್ಕರು. ಏಪ್ರಿಲ್ ತಿಂಗಳಲ್ಲಿ ತಪಸ್ಸಿನ ಕಾಲ ಮುಗಿದ ಕೂಡಲೇ ಆಗಬೇಕಾದ ಬಸ್ತು ಮದುವೆ ಮಳೆಗಾಲದ ಜೂನ್ ತಿಂಗಳಲ್ಲಿ ಆಗಿ ಜನ- +“ದತೋರ್ನ ಕಲೀದಿದ್ದರೆ ಹೀಗೆ..ಪಾಯಸ ಮಳೆನೀರಿನಿಂದ ತೆಳ್ಳಗಾಗಿ ಹೋಗುತ್ತೆ..” ಎಂದು ನಕ್ಕರು. +ಇದು ಎಲ್ಲ ಯುವಕ ಯುವತಿಯರಿಗೂ ಒಂದು ಎಚ್ಚರಿಕೆಯಾಯಿತು. +“ಅದು ಹೌದು” ಎಂದ ಪಾಸ್ಕು ಬಸ್ತುವಿಗಾದ ಅವಸ್ಥೆಯನ್ನು ನೆನಸಿಕೊಂಡು +ಪಾಸ್ಕು ಹಾಗೂ ಜೋಸೆಫ಼ಿನ ಮದುವೆ ಬಗ್ಗೆ ಮಾತನಾಡುವಲ್ಲಿ ಒಂದು ಉದ್ದೇಶವಿತ್ತು. ತಾವಿಬ್ಬರೂ ಮುಂದೆ ಮದುವೆಯಾಗಬೇಕೆಂದು ಇವರು ನಿರ್ಧರಿಸಿದ್ದರು. ಇಬ್ಬರ ನಡುವೆ ಬಹಳ ದಿನಗಳಿಂದ ನಡೆದು ಬಂದ ಸ್ನೇಹ ಅವರಿಗೆ ಗೊತ್ತಿಲ್ಲದೇನೆ ಪ್ರೇಮವಾಗಿ ಪರಿವರ್ತನೆ ಹೊಂದಿತ್ತು. ಚಿಕ್ಕಂದಿನಿಂದಲೂ ಇವರು ಒಟ್ಟಿಗೇನೆ ಆಟವಾಡಿಕೊಂಡು ಬೆಳೆದಿದ್ದರು. ಒಂದೆರಡು ವರ್ಷ ಶಾಲೆಗೂ ಒಟ್ಟಿಗೇನೆ ಹೋಗಿ ಬಂದಿದ್ದರು. ಪಾದರಿ ಗೋನಸ್ವಾಲಿಸ್ ಶಿವಸಾಗರಕ್ಕೆ ಬರುವ ಹೊತ್ತಿಗೆ ಇಲ್ಲಿಯ ಕ್ರೀಸ್ತುವರು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಜತೆಗೇನೆ ಕೆಲಸಕ್ಕೆ ಕರೆದೊಯ್ಯುವುದನ್ನು ಅಭ್ಯಾಸ ಮಾಡಿದ್ದರು. ಈ ಮಕ್ಕಳು ಕೂಡ ತಂದೆಯ ಕೆಲಸವನ್ನೇ ಕಲಿತು ಅದನ್ನೇ ಮುಂದುವರಿಸುವ ನಿರ್ಧಾರ ಕೂಡ ಮಾಡಿದ್ದರು. ಹೀಗಾಗಿ ಶಾಲೆಗೆ ಹೋಗುವ ಕ್ರೀಸ್ತುವರ ಮಕ್ಕಳು ಯಾರೂ ಆಗ ಇರಲಿಲ್ಲ. +ಪಾದರಿ ಗೋನಸ್ವಾಲಿಸ್ ಬಂದವರೇ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದಾಗ ಸಿಮೋನ, ಇನಾಸ, ಮರಿಯ, ಪಾಸ್ಕೋಲ, ಬಾಲ್ತಿದಾರ, ಕೈತಾನ ಮೊದಲಾದವರು ತಮ್ಮ ಮಕ್ಕಳಲ್ಲಿ ತೀರಾ ಚಿಕ್ಕವರಾಗಿದ್ದವರನ್ನು ಶಾಲೆಗೆ ಸೇರುವ ವಯಸ್ಸಿನ ಒಳಗೆ ಇದ್ದವರನ್ನು ಶಾಲೆಗೆ ಕಳುಹಿಸಲು ಯತ್ನಿಸಿದರು. ಆದರೆ ಈ ಕ್ರಿಯೆ ಈ ಮಕ್ಕಳ ಪಾಲಿಗೆ ಹೊಸದಾಗಿತ್ತು. ಹಳ್ಳಿಗೆ ಅನತಿ ದೂರದಲ್ಲಿದ್ದ ಮಂಕಾಳೆ ಹಳ್ಳದಲ್ಲಿ ಏಡಿ ಹಿಡಿಯುತ್ತ, ಕಂಬಳಿಕೊಪ್ಪದ ಬ್ಯಾಣದಲ್ಲಿ ಕಾಡು ಗೇರು ಹಣ್ಣು, ಕವಳಿ ಹಣ್ಣು, ನೇರಲೆ ಹಣ್ಣು ಆರಿಸುತ್ತ, ಕೊಪೆಲ ಹಿಂಬದಿಯಲ್ಲಿ ಮರಕೋತಿ ಆಡುತ್ತ, ಮನೆ ಅಂಗಣದಲ್ಲಿ ಕುಂಟಾ ಬಿಲ್ಲೆ, ಜಗಲಿಯ ಮೇಲೆ ಎತಗಲ್ಲಾಟ, ಚೆನ್ನಮಣೆ, ಕವಡೆ ಆಡುತ್ತ ಕಾಲ ಕಳೆಯುತ್ತಿದ್ದ ಈ ಮಕ್ಕಳು ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಳ್ಳುವುದೇ ಕಷ್ಟವಾಯಿತು. ಇವರು ಶಾಲೆಗೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಹೋದರೂ ಒಂದು ವರ್ಷ ಆರು ತಿಂಗಳು ಹೋಗಿ ಬಿಟ್ಟರು. +ಕ್ರೀಸ್ತುವರ ಮಕ್ಕಳಲ್ಲಿ ನಿರಂತರವಾಗಿ ಶಾಲೆಗೆ ಹೋದವರೆಂದರೆ ಸಿಮೋನನ ಮೂರನೇ ಮಗ ಫ಼ೆಡ್ಡಿ, ಪಾಸ್ಕೋಲನ ಮಗ ಅಂತೋನಿ, ಬಳ್ಕೂರಕಾರರ ಮಗ ಸಾಮ್ಸನ್, ಇಂತ್ರು ಮಗ ಸಿರಿಲ, ಇವರಲ್ಲೂ ಒಂದಿಬ್ಬರು ಶಾಲೆ ಬಿಟ್ಟರು. ಉಳಿದವರೆಲ್ಲ ತಂದೆಯ ಕೆಲಸ ಕಲಿಯುತ್ತ, ಪೋಲಿ ತಿರುಗುತ್ತ, ಪಾದರಿಗಳ ಕೆಲಸ ಮಾಡುತ್ತ ಉಳಿದರು. +ಪಾಸ್ಕೋಲನ ಮಗಳು ಜೋಸೆಫ಼ಿನ ಪ್ರೈಮರಿ ನಾಲ್ಕನೇ ತರಗತಿ ತನಕ ಓದಿ ಬಿಟ್ಟಳು. ಸುತಾರಿ ಇನಾಸನ ಮಗ ಪಾಸ್ಕು ಮಿಡಲ್ ಸ್ಕೂಲಿಗೆ ಹೋಗಿ ಅಲ್ಲಿ ಟೋಪಿ ಮೇಸ್ಟ್ರಿಗೆ ಬೈದು ಓಡಿ ಬಂದ. ಸ್ವಲ್ಪ ಅಣ್ಣನ ಬ್ಯಾಂಡ್‌ಸೆಟ್ಟಿನೊಂದಿಗೆ ತಾಳ ಬಾರಿಸಲು ಹೋದ. ಅದೂ ಬೇಸರವಾಯಿತು. ಕೊನೆಗೆ ತಂದೆಯ ಉಳಿ, ಗರಗಸ ಹಿಡಿದು ಕೆಲಸ ಕಲಿತ. ಅಷ್ಟು ಹೊತ್ತಿಗೆ ತನ್ನ ಮನೆಯಿಂದ ಎರಡೇ ಮನೆಗಳ ಆಚೆಗಿದ್ದ ಪಾಸ್ಕೋಲನ ಮಗಳು ಜೋಸೆಫ಼ಿನ ದುಂಡು ದುಂಡುಗೆ ಬೆಳೆದಿರುವುದು ಇವನಿಗೆ ಆಕರ್ಷಕವಾಗಿ ಕಂಡಿತು. ಮೊದಲೇ ಪರಿಚಯವಿದ್ದುದರಿಂದ ಮಾತನಾಡುವುದು ಕಷ್ಟವಾಗಲಿಲ್ಲ. ಪ್ರತಿ ಭಾನುವಾರ ಜ್ಞಾನೊಪದೇಶದ ನೆಪದಲ್ಲಿ ಒಂದೆರಡು ಗಂಟೆ ಒಟ್ಟಿಗೇನೆ ಕಳೆಯುತ್ತಿದ್ದರು. ಇಗರ್ಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಅವಳು ದಿವ್ಯ ಪ್ರಸಾದ ಸ್ವೀಕರಿಸಲು ಹೊಗುವಾಗ ಈತ ನೋಡುತ್ತಿದ್ದ. ಕೀರ್ತನೆ ಹಾಡುವಾಗ ಅವಳು ಇವನತ್ತ ದೃಷ್ಟಿ ಹಾಯಿಸಿ ನಗುತ್ತಿದ್ದಳು. +ಕ್ರಮೇಣ ಮಾತನಾಡಬೇಕು. ಹತ್ತಿರವಿರಬೇಕು ನೋಡಬೇಕು, ನಗಬೇಕು ಎಂಬ ಮನೋವಾಂಛೆ ಹೆಚ್ಚತೊಡಗಿತು. ಅದಕ್ಕಾಗಿ ಸಮಯ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುವುದು, ಸೃಷ್ಟಿಸಿಕೊಳ್ಳುವುದು ಪ್ರಾರಂಭವಾಯಿತು. +“ಆ ವಿಷಯ ಹಾಗಿರಲಿ….ಶುಕ್ರವಾರ ಬೆಳಿಗ್ಗೆ ಬೇಗ ಬಂದು ಬಿಡು…ಸಿಮಿತ್ರಿ ಹತ್ತಿರ” ಎಂದ ಪಾಸ್ಕು, ಮದುವೆಯ ವಿಷಯ ಪಕ್ಕಕ್ಕಿರಿಸಿ. +“ಬೆಳಿಗ್ಗೆ ಯಾಕೆ..ಪದ್ರಾಬ ಸಮಾಧಿ ಮಂತ್ರಿಸಲಿಕ್ಕೆ ಬರತಾರಲ್ಲ..ಅವರ ಜತೆ ಬಂದರೆ ಸಾಕಲ್ಲ..” ಎಂದಳು ಜೊಸೆಫ಼ಿನಾ. ಪಾದರಿ ಕೂಡ ಹಾಗೆಯೇ ಹೇಳಿದ್ದರಲ್ಲ. +“ಬೆಳಿಗ್ಗೆ ಬಾ..ನಾವೆಲ್ಲ ಸೇರಿ ಸಿಮಿತ್ರಿ ಕ್ಲೀನ್ ಮಾಡೋಣ..” ಎಂದ ಆತ ಏನೋ ಆಸೆಯಿಂದ. +“ಅದೆಲ್ಲ ನಿಮ್ಮ ಕೆಲಸ..” +“ಮತ್ತೆ ನಿಮ್ಮ ಕೆಲಸ ಏನು? ಪಾದರಿ ಲೋಬ ಹಿಡಿದುಕೊಂಡು ಡ್ಯಾನ್ಸ್ ಮಾಡೋದ?” ಎಂದ ಸಿಡುಕಿನಿಂದ. +ಈ ಹುಡುಗಿಯರು ಅದರಲ್ಲೂ ತನ್ನ ಜೋಸೆಫ಼ಿನ ಪಾದರಿಯ ಭುಜಕ್ಕೆ ಅಂಟಿ ನಿಂತು ನಗುವುದು, ಕೇಕೆ ಹಾಕುವುದು, ಅವನಿಂದ ತಿವಿಸಿಕೊಳ್ಳುವುದು ಇವನಿಗೆ ಹಿಡಿಸುತ್ತಿರಲಿಲ್ಲ. ಮುಖ್ಯವಾಗಿ ಈ ಪಾದರಿಯ ಬಗ್ಗೇನೆ ಅವನಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. +ಈ ಹಿಂದೆ ಆಗಿ ಹೋದ ತಪಸ್ಸಿನ ಕಾಲದ ಕೊನೆಯ ದಿನಗಳಲ್ಲಿ ಆತ ಕಂಡ ದೃಶ್ಯವನ್ನು ಮರೆಯಲಾರದವನಾಗಿದ್ದ. ಶುಭ ಶುಕ್ರವಾರ ಏಸು ಪ್ರಭುವಿನ ವಧೆಯಾಗಿತ್ತು. ಮತ್ತೆ ಪ್ರಭು ಪುನರುತ್ಥಾನವಾಗುವವರೆಗೆ ಲೋಹದ ಗಂಟೆ ಹೊಡೆಯುವಂತಿರಲಿಲ್ಲ. ಈ ಮೂರು ದಿನ ಬಾರಿಸಲೆಂದೇ ಒಂದು ಮರದ ಗಂಟೆಯನ್ನು ಮಾಡಿ ತನಗೆ ನೀಡಿ- +“ತೊಕೊಂಡು ಹೋಗಿ ಪದ್ರಾಬಾಗೆ ಕೊಡು” ಎಂದು ಹೇಳಿದ್ದ. +ಹಲ್ಲುಗಳಿರುವ ಒಂದು ಹಿಡಿ. ಅದಕ್ಕೆ ತೂಗು ಬಿದ್ದಿರುವ ಒಂದು ಹಲಗೆ ಹಿಡಿಯನ್ನು ಹಿಡಿದು ಬೀಸುತ್ತ ತಿರುಗಿಸಿದರೆ ಈ ಹಲಗೆ ಹಲ್ಲುಗಳಿಗೆ ತಾಗಿ ಕಿರ್ರ ಎಂದು ಸದ್ದು ಮಾಡುತ್ತಿತ್ತು. ಈ ಹಿಂದೆ ಇದ್ದು ಮುರಿದು ಹೋದ ಅದನ್ನು ಅಪ್ಪ ಸರಿ ಮಾಡಿದ್ದ. ಇದನ್ನು ಇಗರ್ಜಿಯ ಸುತ್ತ ತಿರುಗಿಸುತ್ತ ಮೂರು ಸುತ್ತು ಬಂದರೆ ಇಗರ್ಜಿಯ ಆಸುಪಾಸಿನ ಮನೆಗಳಿಗೆ ಕೇಳಿಸಿ ಜನ ಇಗರ್ಜಿಗೆ ಬರುತ್ತಿದ್ದರು. +ಈ ಮರದ ಗಂಟೆ ಹಿಡಿದು ತಾನು ಮೊದಲು ಇಗರ್ಜಿಗೆ ಹೋದೆ. ಇಗರ್ಜಿಯಲ್ಲಿ ಎಲ್ಲ ದೇವರ ಪ್ರತಿಮೆಗಳಿಗೂ ಮುಸುಕು ಹಾಕಲಾಗಿತ್ತು. ಇಗರ್ಜಿಯಲ್ಲಿಯ ಬಣ್ಣದ ತೋರಣಗಳನ್ನು ತೆಗೆಯಲಾಗಿತ್ತು. ಶಿಲುಬೆಗೇರಿಸಿದ ಏಸುವಿನ ಪ್ರತಿಮೆಯ ಎದುರು ಕೆಲವರು ದುಃಖ ವೇದನೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಪಾದರಿ ಅಲ್ಲಿ ಎಲ್ಲೂ ಕಾಣದ್ದರಿಂದ ತಾನು ಬಂಗಲೆಗೆ ಹೋದೆ. +ಬಂಗಲೆಯ ಬಾಗಿಲು ಅರ್ಧ ತೆರೆದುಕೊಂಡಿತ್ತು. ’ಪದ್ರಾಬ’ ಎಂದು ಕೂಗುತ್ತ ಬಾಗಿಲು ತಳ್ಳಿಕೊಂಡು ಒಳಹೋದೆ. ಪಾದರಿಗಳ ಜೊತೆಗಿದ್ದ ರಜೀನಾ ಗಾಬರಿಯಿಂದ ಎದ್ದು ಒಳಗೆ ಓಡಿ ಹೋದಳು. ಧಡಬಡಿಸಿ ಎದ್ದು ನಿಂತ ಪಾದರಿ- +“..ಯಾರು? ಏನು?” ಎಂದು ಕೇಳಿದರು. +ಮರದ ಗಂಟೆಯನ್ನು ಅವರ ಮುಂದೆ ಇರಿಸಿ ಬಂದೆ. +ತನ್ನ ಮೈ ಬೆವೆತು ಹೋಗಿತ್ತು. ತಾನೂ ಗಾಬರಿಯಾಗಿದ್ದೆ. ಅದೇ ಹೊಸ ಅನುಭವಗಳಿಗೆ ಹಾತೊರೆಯುತ್ತಿದ್ದ ತಾನು ಒಂದು ಕ್ಷಣ ವಿಚಲಿತನಾಗಿದ್ದೆ. ನೇರ ಬಂದವನೇ ಮನೆ ಜಗಲಿಯ ಮೇಲೆ ಕುಳಿತೆ. ಅಂಗಳದಲ್ಲಿ ಶಿಲುಬೆಗೆ ಅಪ್ಪ ಸುಣ್ಣ ಬಳಿಯುತ್ತಿದ್ದ. ಈಸ್ಟರ ಬಂತೆಂದು ಮನೆಗೆಲ್ಲ ಸುಣ್ಣ ಬಣ್ಣ ಆಗುತ್ತಲಿತ್ತು. +“ಕೊಟ್ಟೆಯಾ?” ಎಂದು ಕೇಳಿದ. +“ಹುಂ..” ಎಂದೆ. +ಅಪ್ಪನಿಗೆ ಈ ವಿಷಯ ಹೇಳಬೇಕು ಎನಿಸಿತು, ಹೇಳಲಿಲ್ಲ. ಈ ದೊಡ್ಡವರೇ ಒಂದು ರೀತಿ. ಇದೇ ಪಾದರಿ ತಮ್ಮ ಮನೆ ಅಂಗಳದಲ್ಲಿ ಯ ಶಿಲುಬೆ ದೇವರ ಮುಂದೆ ಕಬ್ಬಿಣದ ಕಾಣಿಕೆ ಡಬ್ಬಿ ತಂದಿರಿಸಿದಾಗ ತಾನು ಅಪ್ಪನ ಎದುರು ಕೂಗಾಡಿದ್ದೆ. +“ಪಾದರಿ ಇದನ್ನ ಯಾಕೆ ಇಲ್ಲಿ ತಂದಿಡಬೇಕು?” ಎಂದು ಕೇಳಿದ್ದೆ. +ವಾರಕ್ಕೊಮ್ಮೆ ಆತ ಬಂದು ಪೆಟ್ಟಿಗೆಯಿಂದ ಹಣ ತೆಗೆದುಕೊಂಡು ಹೋಗುವುದು ತನಗೆ ಸರಿ ಕಂಡಿರಲಿಲ್ಲ. ಶಿಲುಬೆಯ ರಕ್ಷಣೆ ಮಾಡುವವರು, ಅದರ ಮುಂದೆ ಮೇಣದ ಬತ್ತಿ ಹಚ್ಚಿ ಅದಕ್ಕೆ ಸುಣ್ಣ ಬಳಿದು, ಕೆಳಗೆ ಶಗಣಿ ಸಾರಿಸಿ ಬರುವವರಿಗೆ ವ್ಯವಸ್ಥೆ ಮಾಡಿಕೊಡುವವರು ನಾವು. ಹಣ ಮಾತ್ರ ಪಾದರಿಗೆ? ಎಂದು ಕೇಳಿದಾಗ ಅಪ್ಪ- +“..ಪಾದರಿಗಳ ಬಗ್ಗೆ ಹಾಗೆಲ್ಲ ಮಾತನಾಡಬಾರದು ಪಾಸ್ಕು..” ಎಂದಿದ್ದ. +ಈಗಲೂ ಹಾಗೆಯೇ ಆತ ಹೇಳುತ್ತಾನೆ. ಪಾದರಿ ಎಂದರೆ ಅಪ್ಪನಿಗೆ ಮಾತ್ರವಲ್ಲ ಊರ ಎಲ್ಲರಿಗೂ ದೇವರ ಪ್ರತಿರೂಪ. ಅವರ ಬಗ್ಗೆ ಭಿನ್ನವಾಗಿ ವಿಚಾರ ಮಾಡಲು ಅವರು ಸಿದ್ಧರಿಲ್ಲ. ಹೀಗೆಂದೇ ಮರದ ಗಂಟೆಯ ಪ್ರಕರಣವನ್ನು ತಾನು ಯಾರಿಗೂ ಹೇಳಲಿಲ್ಲ. ಆದರೆ ಪಾದರಿಯನ್ನು ನೋಡಿದಾಗಲೆಲ್ಲ ಮೈ ಉರಿಯುತ್ತದೆ. ಈ ಹುಡುಗಿಯರು ಅವನ ಸುತ್ತ ಕುಣಿಯುವುದನ್ನು ಕಂಡಾಗ ಸಿಟ್ಟು ಬರುತ್ತದೆ. ಈ ಹುಡುಗಿಯರಿಗೂ ಏನೂ ಗೊತ್ತಾಗುವುದಿಲ್ಲ. ಈಗ ಜೋಸೆಫ಼ಿನ ಕುಣಿಯುತ್ತಿಲ್ಲವೆ? +“..ಏನೀಗ? ಅವರು ಪಾದರಿ ಅಲ್ವ?” ಎಂದು ತಿರುಗಿ ಕೇಳಿದಳು ಜೋಸೆಫ಼ಿನಾ. +“ಸರಿ..ನಾನು ಬರತೀನಿ..ನಿನಗೆ ಮನಸ್ಸಿದ್ದರೆ ಬೆಳಿಗ್ಗೆ ಬಾ..ನಾನು ಅಲ್ಲಿ ಇರತೀನಿ”. +ಎಂದವನೇ ಪಾಸ್ಕು ಅಲ್ಲಿಂದ ಹೊರಟ. ಅವನಿಗೆ ಜೊಸೆಫ಼ಿನಳ ಮೇಲೆ ಸಿಟ್ಟು ಬಂದಿರಲಿಲ್ಲ. ಸಿಟ್ಟು ಬಂದದ್ದು ಪಾದರಿ ಮಸ್ಕರಿನಾಸರ ಮೇಲೆ. +* +* +* +ಪಾದರಿ ಮಸ್ಕರಿನಾಸರ ಮಾತಿಗೆ ಬೆಲೆ ಕೊಟ್ಟಂತೆ ಎಲ್ಲ ಯುವಕರು ಬೆಳಗಾಗುತ್ತಿರಲು ಸಿಮಿತ್ರಿಯ ಬಳಿ ಹಾಜರಾದರು. ಕತ್ತಿ, ಕುಡುಗೋಲು, ಗುದ್ದಲಿ ಹೊತ್ತುಕೊಂಡೇ ಅವರು ಬಂದರು. ಬಟ್ಲರ್ ಫ಼ರಾಸ್ಕ ಬಂದು ಸಿಮಿತ್ರಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳಿದ. ಸಿಮಿತ್ರಿಯೊಳಗೆ ಪ್ರವೇಶ ಮಾಡುವಲ್ಲಿ ಬೆಳೆದ ಗಿಡ, ಪೊದೆ ಸವರಿ ಬಿಡಿ ಎಂದ. ನಂತರ ಪ್ರತಿ ಸಮಾಧಿಯ ಬಳಿ ಹೋಗಲು ದಾರಿ ಮಾಡಿ. ಅಲ್ಲೆಲ್ಲ ಹುಲ್ಲು ಕೆತ್ತಿ ಹಾಕಿ. ಪೊದೆ ಬೆಳೆದಿದ್ದರೆ ತೆಗೆಯಿರಿ ಎಂದ. +ಪಾಸ್ಕು ಅವನ ಸ್ನೇಹಿತರು ಕೈಗೆ ಹತ್ಯಾರಗಳನ್ನು ಎತ್ತಿಕೊಂಡರು. ಶರಟು ತೆಗೆದು ಮರದ ರೆಂಬೆಗಳಿಗೆ ತೂಗು ಹಾಕಿ, ಥು ಎಂದು ಅಂಗೈಗಳ ಮೇಲೆ ಉಗಿದುಕೊಂಡು ಸಲಿಕೆ, ಗುದ್ದಲಿ ಹಿಡಿದರು. +ಪಾಸ್ಕು ತಲೆ ಎತ್ತಿ ನೋಡಿದ. ಯಾವ ಹುಡುಗಿಯರೂ ಬರಲಿಲ್ಲ. ಜೋಸೆಫ಼ಿನಾ ಕೂಡ ಬರಲಿಲ್ಲ. +ಜನ ಬಂದು ತಮ್ಮ ತಮ್ಮ ಬಂಧುಗಳು ಸಮಾಧಿಗಳನ್ನು ಸರಿಪಡಿಸತೊಡಗಿದರು. ಅಲ್ಲೂ ಕೂಡ ಹುಲ್ಲು ಕೀಳುವ, ಶಗಣೆ ಸಾರಿಸುವ, ಸುಣ್ಣ ತೆಗೆಯುವ ಕೆಲಸ ಆರಂಭವಾಯಿತು. +ಜೋಸೆಫ಼ಿನಾ ಬರಬಹುದು ಅಂದುಕೊಂಡಿದ್ದ ಪಾಸ್ಕು. ಈವತ್ತು ಇಲ್ಲಿಗೆ ಬರಲು ಯಾರೇ ತರುಣ ತರುಣಿಯರಿಗೆ ಅಡ್ಡಿ ಇರಲಿಲ್ಲ. ಸಿಮಿತ್ರಿಯಲ್ಲಿ ಸಮಾಧಿಗಳನ್ನು ಪಾದರಿ ಮಂತ್ರಿಸುತ್ತಾರೆಂಬುದು, ಸಿಮಿತ್ರಿಯಲ್ಲಿ ಜ್ಞಾನೋಪದೇಶಕ್ಕೆ ಬರುವವರೇ ಶುಚಿ ಮಾಡಬೇಕು ಎಂಬುದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಷಿಸಿದ ಹಾಗೆ ಕೆಲ ಹುಡುಗಿಯರು ಬಂದು ಅದು ಇದು ಕಿತ್ತು ಹುಡುಗರ ಹತ್ತಿರ ನಿಂತು ಮಾತನಾಡಿಯೂ ಹೋಗಿದ್ದರು. ಆದರೆ ಜೋಸೆಫ಼ಿನಾ ಮಾತ್ರ ಬರಲಿಲ್ಲ. +ಪಾಸ್ಕು ಹಾಗೂ ಜೋಸೆಫ಼ಿನಾ ಬಹಳ ಸಾರಿ ಇಲ್ಲಿಗೆ ಬಂದಿದ್ದರು. +ಸಿಮಿತ್ರಿಯ ಹೊರಗೋಡೆಯ ಮಗ್ಗುಲಲ್ಲಿ ಪೊದೆ ಪೊದೆಯಾಗಿ ಬೆಳೆದಿರುವ ತುಂಬೆ ಗಿಡಗಳಲ್ಲಿ ಅರಳುವ ನೀಲಿ ಹೂವುಗಳಿಂದ ಮಕರಂದ ಹೀರಲು ಕರೀ ದುಂಬಿಗಳು ಹೇರಳವಾಗಿ ಬರುತ್ತಿದ್ದವು. ಇವುಗಳಲ್ಲಿ ಭೀಮ ಎಂಬ ಕಪ್ಪು ದುಂಬಿಯನ್ನು ಹಿಡಿದು ಅದರ ಕಾಲಿಗೆ ದಾರಕಟ್ಟಿ ಹಾರ ಬಿಡುವುದು ಹುಡುಗರ ಒಂದು ಹವ್ಯಾಸವಾಗಿತ್ತು. ಪಾಸ್ಕು ಇಂತಹ ಮೂರು ನಾಲ್ಕು ಭೀಮ ದುಂಬಿಗಳನ್ನು ಬೆಂಕಿಪೆಟ್ಟಿಗೆಯಲ್ಲಿ ಹಾಕಿ ಇರಿಸಿಕೊಳ್ಳುತ್ತಿದ್ದ. ತಿನ್ನಲೆಂದು ಚೆಂಡು ಹೂವಿನ ಸೊಪ್ಪನ್ನು ಕೂಡ ಈ ಪೆಟ್ಟಿಗೆಯಲ್ಲಿ ಹಾಕುತ್ತಿದ್ದ. ಈ ಭೀಮನನ್ನು ಹಿಡಿಯಲು ಆತ ಬಂದಾಗೆಲ್ಲ ಜೋಸೆಫ಼ಿನಾ ಅವನ ಹಿಂದಿರುತ್ತಿದ್ದಳು. ಇಗರ್ಜಿಗೆ ಪೂಜೆಗೆ, ಪಾಪ ನಿವೇದನೆಗೆ, ಇಗರ್ಜಿ ಗುಡಿಸಿ ತೊಳೆಯಲು, ಇಗರ್ಜಿಯ ಪೀಠದ ಮೇಲಿರಿಸುವ ಮೇಣದ ಬತ್ತಿ ಸ್ಟ್ಯಾಂಡು, ಹೂವಿನ ದಾನಿಗಳನ್ನು ಬೆಳಗಲು, ಜ್ಞಾನೋಪದೇಶಕ್ಕೆ ಇಲ್ಲಿ ಬಂದಾಗಲೆಲ್ಲ ಅವರು ದುಂಬಿ ಹಿಡಿಯಲು ಬರುವುದಿತ್ತು. ಇಲ್ಲಿ ಆಡಿ ಓಡಿ ನೆಗೆದು, ಪಾಸ್ಕು ಜೋಸೆಫ಼ಿನಾಳನ್ನು ಹೆದರಿಸಿ ಬೆದರಿಸಿ, ಅರ್ಧ ಗಂಟೆ ಕಳೆದು ಹಿಂದಿರುಗುತ್ತಿದ್ದರು. ಅದನ್ನೆಲ್ಲ ನೆನಸಿಕೊಳ್ಳುತ್ತ ಪಾಸ್ಕು ಕೆಲಸ ಮಾಡಿದ. +ಹನ್ನೆರಡು ಗಂಟೆಗೆ ಇಗರ್ಜಿಯ ಗಂಟೆ ಸದ್ದು ಮಾಡಿತು. ನಿಂತಲ್ಲೆ ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ಕೆಲವರು ಜಪ ಮಾಡಿದರು. +ಜೋಸೆಫ಼ಿನಾ ಮಾತ್ರ ಬರಲಿಲ್ಲ. +* +* +* +ಸಂಜೆಯಾಗುತ್ತಿರಲು ಸಿಮಿತ್ರಿಯಲ್ಲಿ ಜನ ಸಂದಣಿ ಅಧಿಕವಾಯಿತು. ಸಮಾಧಿಗಳೆಲ್ಲ ಹೂವು ಬಣ್ಣದ ಕಾಗದಗಳಿಂದ ಸಿಂಗರಿಸಲ್ಪಟ್ಟವು. ಮೇಣದ ಬತ್ತಿಗಳನ್ನು ಶಿಲುಬೆಯ ಕೆಳಗೆ ಅಂಟಿಸಿ ಅವುಗಳನ್ನು ಹೊತ್ತಿಸಲು ಪಾದರಿ ಬರಲೆಂದು ಜನ ಕಾದರು. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದವರು ಊಟ ಮುಗಿಸಿಕೊಂಡು ಮತ್ತೆ ಸಂಜೆ ಬಂದರು. ಸಮಾಧಿಗಳನ್ನು ಮಂತ್ರಿಸ ಬಯಸುವವರು ಪಾದರಿಗಳ ಬಂಗಲೆಗೆ ಹೋಗಿ ಹಣ ಕಟ್ಟಿ ಚೀಟಿ ತಂದರು. ಚೀಟಿ ಹಿಡಿದುಕೊಂಡು ಸಮಾಧಿಗಳ ಬಳಿ ಕಾದು ನಿಂತಾಗ ಪಾದರಿ ಬಂದರು. +ಅವರ ಹಿಂದೆ ಹುಡುಗಿಯರ ಹಿಂಡು. +ಜತೆಗೆ ಪಿಟೀಲು ಹಿಡಿದ ವಲೇರಿಯನ್ ಡಯಾಸ್, ಪಾಸ್ಕು ಹಾಗೂ ಇತರ ತರುಣರು ಕೂಡ ಈ ತಂಡದಲ್ಲಿ ಸೇರಿಕೊಂಡರು. +ಪಾದರಿ ಮಸ್ಕರಿನಾಸ ಒಂದೊಂದೇ ಸಮಾಧಿಯ ಬಳಿ ನಿಂತು ಚೀಟಿ ಕೈಗೆ ತೆಗೆದುಕೊಂಡು ಸಮಾಧಿಯನ್ನು ಪವಿತ್ರ ಜಲದಿಂದ ಮಂತ್ರಿಸಿದರು. ಸಾಮೂಹಿಕ ಪ್ರಾರ್ಥನೆ ನಡೆಯಿತು. ಕೀರ್ತನೆಗಳನ್ನು ಹಾಡಲಾಯಿತು. ಜನ ಕೂಡ ಎಲ್ಲ ಸಮಾಧಿಗಳ ಬಳಿ ಸೇರಿ ತಾವೂ ಪ್ರಾರ್ಥನೆಯಲ್ಲಿ ಸೇರಿಕೊಂಡರು. +ಆಗೆಲ್ಲ ಪಾಸ್ಕು ಗುಂಪಿನ ನಡುವೆ ನಿಂತು ಪಾದ್ರಿಗೆ ಹತ್ತಿರದಲ್ಲಿದ್ದ ಜೋಸಿಫ಼ಿನಾಳನ್ನು ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ತಲೆಯ ಮೇಲಿನ ಏವ್ ಸರಿಪಡಿಸಿಕೊಂಡು ತುಟಿ ಕಚ್ಚಿಕೊಂಡಳು. ಶಿಲುಬೆಯ ಗುರುತು ಮಾಡುತ್ತ ಕತ್ತು ಹೊರಳಿಸಿದಳು. ಪಾಸ್ಕು ಮುಖ ಮಾತ್ರ ಬಿಗಿದುಕೊಂಡೇ ಇತ್ತು. ಹುಡುಗಿಯರ ಮುಖ ನೋಡುತ್ತ, ನಗುತ್ತ ಪುಟ ನೆಗೆಯುತ್ತ ಸಮಾಧಿಯಿಂದ ಸಮಾಧಿಗೆ ನಡೆದ ಪಾದರಿ ಮಸ್ಕರಿನಾಸರನ್ನೇ ದುರುಗುಟ್ಟಿ ನೋಡುತ್ತ ಆತ ಆ ಗುಂಪನ್ನು ಹಿಂಬಾಲಿಸಿದ. +ಎಲ್ಲ ಸಮಾಧಿಗಳನ್ನು ಮಂತ್ರಿಸಿ ಆಯಿತು. ಕೊನೆಯದಾಗಿ ಒಂದು ಪ್ರಾರ್ಥನೆ ಸಲ್ಲಿಸಲು ಜನ ಸಮಾಧಿಗಳನ್ನು ದಾಟಿಕೊಂಡು ಸಿಮಿತ್ರಿಯ ಪ್ರವೇಶ ದ್ವಾರದ ಬಳಿ ಇದ್ದ ಶಿಲುಬೆಯ ವೇದಿಕೆಯತ್ತ ನಡೆಯಲಾರಂಭಿಸಿದರು. ಆಗ ಕೊಂಚ ನೂಕು ನುಗ್ಗಲಾಯಿತು. ಬೆಳೆದ ಗಿಡಗಳ ನಡುವೆ ದಾರಿ ಮಾಡಿಕೊಳ್ಳುವಾಗ ಒಬ್ಬರಿಗೆ ಒಬ್ಬರು ಅಡ್ಡಿ ಬಂದರು. ಪಾಸ್ಕು ನೇರವಾಗಿ ಪಾದರಿ ಮಸ್ಕರಿನಾಸರ ನಿಲುವಂಗಿಯನ್ನು ತುಳಿದದ್ದರಿಂದ ಅವರು ಶಿರಾಲಿ ಜೂಜನ ಸಮಾಧಿಯ ಮೇಲೆ ಬೋರಲಾಗಿ ಬೀಳಬೇಕಿದ್ದವರು ಮುಗ್ಗರಿಸಿ ಸಮಾಧಿಯ ಶಿಲುಬೆಯನ್ನು ಹಿಡಿದು ಸಾವರಿಸಿಕೊಂಡು ನಿಂತರು. ಅದೇ ತಮ್ಮನ್ನು ದಾಟಿದ ಪಾಸ್ಕುವಿನ ತೋಳು ಹಿಡಿದು ಅವರು. +“ಏಯ್ ಲುಸಿಫ಼ೇರ್…ಕಣ್ಣು ಕಾಣೋದಿಲ್ವ ನಿನಗೆ?” ಎಂದು ಅಬ್ಬರಿಸಿದರು. +ಪಾಸ್ಕು ಇದನ್ನು ನಿರೀಕ್ಷಿಸಿದ್ದನೋ ಇಲ್ಲವೋ ಅಂತು ಲುಸಿಫ಼ೇರ ಎಂದು ಪಾದರಿ ತನ್ನನ್ನು ಕರೆದರಲ್ಲ ಎಂಬುದೇ ಅವನಿಗೆ ಸಾಕಾಯಿತು. +ಮುಂದೆ ಹೋದ ಆತ ತಟ್ಟನೆ ತಿರುಗಿ ನಿಂತನು. ಬೀಳಲಿದ್ದ ಪಾದರಿಯನ್ನು ಹುಡುಗಿಯರೆಲ್ಲ ತಡೆದು ನಿಲ್ಲಿಸಿದ ಹಾಗೆ ಮಸ್ಕರಿನಾಸರ ಸುತ್ತ ಈ ಹುಡುಗಿಯರು ನಿಂತಿರಲು, ಪ್ರಧಾನವಾಗಿ ಜೋಸೆಫ಼ಿನಾ ಮಸ್ಕರಿನಾಸರ ಬಲಗಡೆಯಲ್ಲಿ ಕಾಣಿಸಿಕೊಳ್ಳಲು ಪಾಸ್ಕು ಕೈಚಾಚಿ ಪಾದರಿಗಳ ಎದೆಯ ಮೇಲೆ ಅಂಗೈ ಊರಿ- +“ಲುಸಿಫ಼ೇರ್ ನಾನಲ್ಲ..ನೀನು..” +ಅನ್ನುತ್ತಿರಲು ಪಾದರಿ ಮಸ್ಕರಿನಾಸರ ಪಾಸ್ಕುವಿನ ಕೆನ್ನೆಗೆ ಅಪ್ಪಳಿಸಲು ಕೈ ಎತ್ತುತ್ತಿರಲು ಪಾಸ್ಕು ಕೈ ಬೀಸಿ ಆಯಿತು. +ಇಗರ್ಜಿಯಿಂದ ಸಾಯಂಕಾಲದ ಪ್ರಾರ್ಥನಾ ಗಂಟೆ ಕೇಳಿ ಬರುತ್ತಿರಲು ಇಲ್ಲಿ ಸಿಮಿತ್ರಿಯಲ್ಲಿ ಶಿಲುಬೆಯ ವೇದಿಕೆಯ ಬಳಿ ಶಿವಸಾಗರದ ಕ್ರೈಸ್ತರು, ಬಾಮಣ ಪಂಗಡದವರು. +“..ಜೇಜು ಅಮ್ಕಾಂರಾಕ್” +“ದೇವರೇ ನಮ್ಮನ್ನು ರಕ್ಷಿಸು” +“ಮೈ ಲಾರ್ಡ್ ಸೇವ್ ಅಸ್” ಎಂದು ಚೀರಿ ದಿಙ್ಮೂಢರಾಗಿ ನಿಂತರು. +-೫- +“ನಿಮ್ಮ ನಡುವೆಯೇ ಓರ್ವ ಅಂತಃ ಕ್ರಿಸ್ತ ಹುಟ್ಟಿಕೊಂಡಿದ್ದಾನೆ” ಎಂದು ಪಾದರಿ ಮಸ್ಕರಿನಾಸ ನುಡಿದಾಗ ಇಗರ್ಜಿಯಲ್ಲಿ ಕುಳಿತ ಜನರ ಮೈ ಮೇಲೆ ಹಾವು ಹರಿದಾಡಿತು. ಹಿಂದಿನ ಸಂಜೆ ನಡೆದ ಘಟನೆಗೆ ಎಲ್ಲರೂ ಸಾಕ್ಷಿಗಳಾಗಿದ್ದರು. ಕೆಲಸ ಕಾರ್ಯಗಳಿಗೆ ಹೋದ ಗಂಡಸರಿಗೆ ಮನೆಯಲ್ಲಿ ಹೆಂಗಸರು ಹೀಗೆ ಹೀಗೆ ಎಂದು ಹೇಳಿದರು. ಸಿಮೋನ, ಇನಾಸ, ಪೆದ್ರು, ಪಾಸ್ಕೋಲ, ಕೈತಾನ ಮೊದಲಾದವರಿಗೆ ಪೇಟೆ ಚೌಕದಲ್ಲಿಯೇ ವಿಷಯ ತಿಳಿದುಹೋಯಿತು. +“ಬೋನ ಸಾಹುಕಾರ್ರೆ ಯಾರೋ ನಿಮ್ಮ ಪಾದರೀನ ಹೊಡೆದರಂತೆ ಹೌದೆ?” ಎಂದು ಸೈಕಲ್ ಶಾಪ್ ನಾಗಪ್ಪ ಬೋನನ ಅಂಗಡಿಗೇನೆ ಬಂದು ಕೇಳಿದಾಗ ಬೋನ ಗಾಬರಿಗೊಂಡ. ಗೋಡೆ ಮೇಲಿನ ದೇವರ ಪಟ ಕಿತ್ತು ತಲೆಯ ಮೇಲೆ ಬಿದ್ದಂತಾಗಿ ಆತ ಕೂಡಲೆ ಅಂಗಡಿಯಿಂದ ಹೊರ ಬಂದ. ಬಾಚಿಯನ್ನು ಹೆಗಲ ಮೇಲೆ ಹೇರಿಕೊಂಡು ಅವಸರದಲ್ಲಿ ಹೊರಟ ಬಳ್ಕೂರಕಾರ್ ಕೈತಾನನ ಮಗನನ್ನು ನೋಡಿ, ’ಅರೇ ದುಮಿಂಗಾ? ಯೋ ಹಂಗಾ?” ಎಂದು ಕೂಗಿದ. +ಬಳಿ ಬಂದ ದುಮಿಂಗನಿಗೆ ಮಾತ್ರ ಕೇಳುವ ಹಾಗೆ- +“ಏನದು ಗಲಾಟೆ ಇಗರ್ಜಿ ಹತ್ತಿರ?” ಎಂದು ಕೇಳಿದ. +“ನನಗೂ ಗೊತ್ತಿಲ್ಲ..ಚಾ ಹೋಟೆಲಿನ ಹತ್ತಿರ ಮಾತನಾಡಿ ಕೊಳತಿದ್ರು..ಇನಾಸನ ಮಗ ಪಾಸ್ಕು ಪದ್ರಾಬ ಅವರನ್ನ ಹೊಡೆದನಂತೆ..” ಎಂದ ಆತ. +ಅರ್ಧ ಗಂಟೆ ಮುಂಚಿತವಾಗಿಯೇ ಅಂಗಡಿ ಬಾಗಿಲು ಹಾಕಿ ಕೇರಿಗೆ ಬಂದ ಬೋನ. ಅವನಂತೆಯೇ ಉಳಿದವರೂ ಅಲ್ಲಿ ಸೇರಿದ್ದರು. ಸಿಮೋನ ಆಗಲೆ ಬಂದು ಮನೆಗೆ ತಲುಪಿದ್ದ. +ಏನು ನಡೆಯಿತು ಎಂಬುದು ತಿಳಿಯಿತು. ಕೂಡಲೆ ಹೋಗಿ ಪಾದರಿ ಮಸ್ಕರಿನಾಸರನ್ನು ಮಾತನಾಡಿಸಬೇಕು ಎಂಬ ವಿಚಾರ ಬಂದಾಗ ಇನ್ನರೋ. +“ಅವರು ಪ್ರಾರ್ಥನೆ ಮಾಡಿದ್ದೇ ಹೋಗಿ ಬಂಗಲೆ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು” ಎಂದರು. +ಇಡೀ ಕೇರಿಗೇನೆ ಬರ ಸಿಡಿಲು ಬಡಿದಂತೆ ಆಗಿತ್ತು. ಆ ದೃಶ್ಯವನ್ನು ಕಣ್ಣಾರೆ ಕಂಡವರು ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದೆರಡು ನಿಮಿಷ ತೆಗೆದುಕೊಂಡಿದ್ದರು. ಪಾದರಿ ಮುಗ್ಗರಿಸಿದ್ದು, ಶಿಲುಬೆ ಹಿಡಿದು ನಿಂತು ಪಾಸ್ಕುವನ್ನು ಹಿಡಿದುಕೊಂಡದ್ದು, ಏನೋ ಹೇಳಿದ್ದು, ಆತ ತಿರುಗಿದ್ದು, ಮುಂದಿನ ಕ್ಷಣದಲ್ಲಿ ರಪರಪನೆ ಪಾದರಿಗಳ ಕೆನ್ನೆಗೆ ಪಾಸ್ಕು ಹೊಡೆದದ್ದು , ದೇವರ ಲಾರ್ಡು ಎಂದೆಲ್ಲ ಜನ ಕೂಗುತ್ತಿರಲು ಇನಾಸನ ಹೆಂಡತಿ ಮೊನ್ನೆ ಕೂಗುತ್ತ ತನ್ನ ಮಗನ ಮುಖ ಮೈ ಮೇಲೆ ಗುದ್ದುತ್ತ ಆತನನ್ನು ಸಿಮಿತ್ರಿಯ ಹೊರಗೆ ತಳ್ಳಿಕೊಂಡು ಹೋದದ್ದು, ಪಾದರಿಗಳು ವೇದಿಕೆಯನ್ನೇರಿ ಶಿಲುಬೆಯ ಮುಂದೆ ಮೊಣಕಾಲೂರಿದ್ದು ಎಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಗಿತ್ತು. +ಎಲ್ಲ ಜನ ನಾಲಿಗೆ ಒಣಗಿ ಹೋಗಿ, ಉಸಿರಾಟ ನಿಂತಂತಾಗಿ, ಕಲ್ಲು ಕಂಬಗಳ ಹಾಗೆ ನಿಂತಿರಲು ಶಿಲುಬೆಯ ಮುಂದೆ ಮೊಣಕಾಲೂರಿದ ಪಾದರಿ ಮಸ್ಕರಿನಾಸ ಎದ್ದು ನಿಂತು ಹಣೆ, ಎದೆ, ಭುಜಗಳ ಮೇಲೆ ಶಿಲುಬೆಯ ಗುರುತು ಬರೆದುಕೊಂಡು- +“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ” ಎಂದಾಗ ಜನ ಎಚ್ಚೆತ್ತಿದ್ದರು. ನಂತರ ನಿಧಾನವಾಗಿ ಪ್ರಾರ್ಥನೆಗೆ ತೊಡಗಿದ್ದರು. +ಪ್ರಾರ್ಥನೆ ಮುಗಿದ ನಂತರ ಪಾದರಿ ಅಲ್ಲಿ ನಿಲ್ಲಲಿಲ್ಲ. ಯಾರ ಹತ್ತಿರವೂ ಮಾತನಾಡಲಿಲ್ಲ. ಎಲ್ಲರಿಗಿಂತಲೂ ಮುಂದೆ ಹೋಗಿ ಬಂಗಲೆ ಸೇರಿಕೊಂಡರು. +ಜನ ಕೇರಿಗೆ ಬಂದರು. +ಹೀಗೆ ಈವರೆಗೆ ಎಲ್ಲಿಯೂ ನಡೆದಿರಲಿಲ್ಲ. ನಡೆಯಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಹೀಗೆ ನಡೆಯಬಾರದು. +ಏಕೆಂದರೆ ಮನುಷ್ಯರಿಗೆ ಸತ್ಯವನ್ನು ಭೋದಿಸಲು, ದಿವ್ಯ ಜೀವನವನ್ನು ಅವರಿಗೆ ತಂದುಕೊಡಲು, ದೇವರ ಮಕ್ಕಳಾಗಿ ಜೀವಿಸುವುದಕ್ಕೆ ಅವರಿಗೆ ಸಹಾಯ ಮಾಡಲು, ಮಹಾ ಯಾಜಕರಾದ ಏಸು ಪ್ರಭು ಇಗರ್ಜಿ ಮಾತೆಗೆ ಪಾದರಿಗಳನ್ನು ದಯಪಾಲಿಸಿದ್ದಾರೆ. ಈ ಪಾದರಿಗಳು ದೇವರ ಪ್ರತಿನಿಧಿ. ಕ್ರಿಸ್ತ ಪ್ರಭುವಿಗೆ ಸೇವಕರು. ಕ್ರೀಸ್ತುವರಿಗೆ ಹಲವು ಸಂಸ್ಕಾರಗಳನ್ನು ನೀಡುತ್ತ ಅವರ ಬದುಕನ್ನು ಆಧ್ಯಾತ್ಮಿಕ ಜೀವನವನ್ನು ಗಟ್ಟಿಗೊಳಿಸುವವರು ಈ ಪಾದರಿ. +ಈ ಕಾರಣದಿಂದಲೇ ಪಾದರಿಗಳ ಬಗ್ಗೆ ಕ್ರೀಸ್ತುವರಿಗೆ ಅಪಾರ ಗೌರವ. ರಸ್ತೆಯಲ್ಲಿ ಎದುರಾದರೆ ಮಣ್ಣಿನಲ್ಲಿ ಮೊಣಕಾಲೂರಿ ದೇವರ ಆಶೀರ್ವಾದ ಬೇಡುತ್ತಾರೆ. ಅವರಿಗೆ ಗೌರವ ನೀಡುತ್ತಾರೆ. ಯಾವ ಕಾರಣಕ್ಕೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಲೋಪ ದೋಷಗಳ ಬಗ್ಗೆ ವ್ಯಂಗ್ಯ ಮಾಡುವುದಿಲ್ಲ. ತಂದೆ ಎಂದು ಅವರನ್ನು ಕರೆಯುತ್ತಾರೆ. ಅಂತಹ ಆತ್ಮದ ತಂದೆಯನ್ನು ನಿನ್ನೆ ಮೊನ್ನೆಯ ಈ ಹುಡುಗ ಹೊಡೆಯುವುದೇ? +ಎಲ್ಲೆಲ್ಲೂ ಇದೇ ಮಾತಾಯಿತು. +ಮರಿಯ ದನಕರು, ಎಮ್ಮೆಗಳಿಗೆ ಹುಲ್ಲು ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಪೆದ್ರು ಹೆಂಡತಿ ರಂಗಿ- +“ದೇವರೇ ಹೀಗೂ ಉಂಟ” ಎಂದಳು. +ವೈಜಿಣ್ ಕತ್ರೀನ್- +“ದೇವರೆ ನಾನು ಇದೇನು ಕೇಳುತ್ತಿದ್ದೇನೆ” ಎಂದು ಮೂಗಿನ ಮೇಲೆ ಬೆರಳಿರಿಸಿಕೊಂಡಳು. ಬೆಳಿಗ್ಗೆ ಪೂಜೆಗೆ ಹೋದ ಅವಳು ಸಂಜೆ ಸಿಮಿತ್ರಿಗೆ ಹೋಗಿರಲಿಲ್ಲ. ಈಗೀಗ ಇಗರ್ಜಿಗೆ ಹೋಗಿ ಬರುವುದೇ ಶ್ರಮದಾಯಕವಾಗುತ್ತಿತ್ತು. ಹೀಗೆಂದೇ ಆತ್ಮಗಳಿಗೆ ಶಾಂತಿಕೋರಲು ಅವಳು ಹೋಗಿರಲಿಲ್ಲ. ಈ ಸುದ್ದಿ ಕೇಳಿದ ಮೇಲೆ ಅಲ್ಲಿಗೆ ಹೋಗದಿದ್ದುದು ಒಳ್ಳೆಯದಾಯ್ತು ಅಂದುಕೊಂಡಳು. +ಮನೆಗಳ ದೇವರ ಪೀಠದ ಮುಂದೆ ಮೇಣದ ಬತ್ತಿಗಳು ಉರಿಯಲಿಲ್ಲ. ಹೊರಗೆ ಬಿಟ್ಟ ಕೋಳಿಗಳನ್ನು ಜನ ಗೂಡಿಗೆ ತುಂಬಿ ಗೂಡಿನ ಬಾಗಿಲು ಹಾಕಲಿಲ್ಲ. ಅಡಿಗೆ ಮನೆಯಲ್ಲಿ ಒಲೆಗೆ ಬೆಂಕಿ ಮಾಡಲಿಲ್ಲ. ಸಿಮಿತ್ರಿಯ ಪ್ರಾರ್ಥನೆಗೆ ಹೋಗಿ ಬಂದವರು ಬೇರೆ ಸೀರೆ ಉಡಲಿಲ್ಲ. ಹುಡುಗಿಯರು ಬಟ್ಟೆ ಬದಲಾಯಿಸಲಿಲ್ಲ. ಎಲ್ಲ ಕಡೆ ಇದೇ ಮಾತು ನಡೆಯುತ್ತಿರಲು ಕೆಲಸಕ್ಕೆ ಹೋದ ಗಂಡಸರೂ ಧಾವಿಸಿ ಬಂದರು. +ಇನಾಸ ಕೆಲಸಕ್ಕೆ ಹೋಗುತ್ತಿರಲಿಲ್ಲ. ಭಾರವಾದ ಕೆಲಸಗಳನ್ನು ಮಾಡಲು ಅವನಿಂದ ಆಗುತ್ತಿರಲಿಲ್ಲ. ಇಂದು ಹಬ್ಬ ಬೇರೆ. ದೊಡ್ಡ ಹಬ್ಬ ಅಲ್ಲವಾದರೂ ಸರ್ವ ಆತ್ಮಗಳಿಗೆ ಸದ್ಗತಿ ಕೋರುವ ಹಬ್ಬವೆಂದು ಮನೆಯಲ್ಲಿಯೇ ಇದ್ದ. ಸಂಜೆ ಸಿಮಿತ್ರಿಗೆ ಹೋಗುವುದೂ ಬೇಡವೆನಿಸಿತ್ತು. +ಹೆಂಡತಿ ಮೊನ್ನೆ ಜರಿ ಸೀರೆಯುಟ್ಟು ಅಬ್ಬಲಿಗೆ ಮುಡಿದು ತಾನು ಪ್ರಾರ್ಥನೆಗೆ ಹೋಗುವುದಾಗಿ ಸಂಜ್ಞೆ ಮಾಡಿ ಹೇಳಿ ಹೋದಳು. ಇಗರ್ಜಿ ಗಂಟೆ ಹೊಡೆದ ಕೊಂಚ ಹೊತ್ತಿಗೆ ಮಗನನ್ನು ಹೊಡೆಯುತ್ತ ದಬ್ಬುತ್ತ ತಾನೂ ಕೆಟ್ಟದಾಗಿ ಕಿರುಚುತ್ತ ಬಂದಾಗ ಇನಾಸನಿಗೆ ಅಚ್ಚರಿಯಾಯಿತು. +ಪಾಸ್ಕು ಮುಖ ಮುಚ್ಚಿಕೊಂಡು ಬಂದವನೇ ಮನೆಯೊಳಗೆ ಸೇರಿಕೊಂಡ. ಮೊನ್ನೆ ಜಗಲಿಯ ಮೇಲೆ ಕುಳಿತು ಹೋ ಎಂದಳು. +ಎಲ್ಲದಕ್ಕೂ ಅವಳು ಒಂದೊಂದು ಸಂಕೇತ ಇರಿಸಿಕೊಂಡಿದ್ದಳು. ಇಗರ್ಜಿ ಅನ್ನುವುದಕ್ಕೆ ಶಿಲುಬೆಯ ಗುರುತು. ಪ್ರಾರ್ಥನೆ ಅನ್ನುವುದಕ್ಕೆ ಕೈ ಮುಗಿಯುವುದು. ಪೂಜೆ ಅನ್ನುವುದಕ್ಕೆ ನಾಲಿಗೆ ಹೊರಹಾಕಿ ದಿವ್ಯಪ್ರಸಾದ ಸ್ವೀಕರಿಸುವುದು ಹೀಗೆ, ತನಗೆ ಮಾತ್ರ ಅರ್ಥವಾಗುವ ಸಂಕೇತಗಳು ಇವು. ಪಾದರಿ ಅನ್ನುವುದಕ್ಕೇ ಅವಳು ಎತ್ತರದ ವ್ಯಕ್ತಿ ಎಂದು ಕೈ ಮಾಡಿ ತೋರಿಸಿ ನಂತರ ಕನ್ನಡಕದ ಗುರುತು ಹೇಳುತ್ತಿದ್ದಳು. ಈಗ ಮಾತಿನ ನಡುವೆ ಐದಾರು ಬಾರಿ ಪಾದರಿ ಪಾದರಿ ಎಂದು ಹೇಳಿ ಕೆನ್ನೆಗೆ ಬಡಿದಂತೆ ತೋರಿಸಿ ಒಳಗೆ ಸೇರಿಕೊಂಡ ಮಗನತ್ತ ಬೆರಳು ಮಾಡಿದಳು. +“ಏನು ಇವನು ಪದ್ರಾಬಾಗೆ ಹೊಡೆದನೆ?” ಎಂದು ಇನಾಸ ಬೆರಗಾಗಿ ಬೆದರಿ ಎದ್ದು ನಿಂತು ಗದರಿಸಿ ಕೇಳಿದ. +“ಹೌದು ಹೌದು” ಎಂದು ತಲೆಯಾಡಿಸಿದಳು ಮೊನ್ನೆ. ಅವಳ ಕಣ್ಣುಗಳಿಂದ ನೀರು ಕೂಡ ಧುಮುಕಿತು. +“ಪಾಸ್ಕು..ಏನಾಯ್ತು?” ಎಂದು ಇನಾಸ ಒಳ ಹೋಗಿ ಮಗನ ಎದುರು ನಿಂತು ಅಬ್ಬರಿಸಿದ. ಆತ ಮಾತನಾಡದೆ ಕುಳಿತಾಗ ಏನೋ ಆಗಿದೆ ಎಂಬುದು ಖಚಿತವಾಯ್ತು. +ಸಿಮಿತ್ರಿಯ ಬಳಿ ಏನು ನಡೆಯಿತೆಂಬುದು ವಿವರವಾಗಿ ಇನಾಸನಿಗೆ ತಿಳಿದುಬಂದದ್ದು ಅಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಕೇರಿಯ ಜನ ತಿರುಗಿ ಬಂದಾಗಲೇ. ಪಾಸ್ಕು ಪಾದರಿಗಳಿಗೆ ಹೊಡೆದನೆಂಬುದಂತೂ ನಿಜವಾಗಿತ್ತು. ಅವರು ಲುಸಿಫ಼ೆರ್ ಎಂದು ಇವನನ್ನು ಬೈದದ್ದು. ಇವನು ಅದಕ್ಕೆ ನೀಡಿದ ಪ್ರತಿಕ್ರಿಯೆ ತಿಳಿಯಿತು. ಪಾಸ್ಕು ಅಷ್ಟು ದೂರ ಹೋಗಬಾರದಿತ್ತು. ಆದರೆ ಇದು ಇಂದೇ ಆಕಾರ ಪಡೆದ ಕ್ರಿಯೆಯಲ್ಲ. ಪಾಸ್ಕು ಯಾವತ್ತಿನಿಂದಲೋ ಪಾದರಿ ಮಸ್ಕರಿನಾಸರ ವಿರುದ್ಧ ಒಂದಲ್ಲಾ ಒಂದು ವಿಷಯ ಹೇಳುತ್ತ ಬಂದಿದ್ದ. ಆ ವಿಷಯ ಇಂದು ಹೀಗೆ ಸ್ಪೋಟಗೊಂಡಿದೆ. +ಇನಾಸ ಹೋಗಿ ಮಗನನ್ನು ಕೇಳಬೇಕೆಂದು ಬಯಸಿದ. ಆದರೆ ಅಷ್ಟುಹೊತ್ತಿಗೆ ಅವನ ಸಿಟ್ಟು ಕ್ರೋಧವೆಲ್ಲ ಇಳಿದು ಹೋಗಿತ್ತು. +ಮಗ ಹೀಗೆ ಮಾಡಬಾರದಿತ್ತು ಎಂದು ಈತ ಪೇಚಾಡುತ್ತ ಕುಳಿತನಲ್ಲದೆ ಮಗನನ್ನು ಇದಕ್ಕಾಗಿ ದಂಡಿಸಬೇಕು. ಏಕೆ ಹೀಗೆ ಮಾಡಿದೆ ಎಂದು ಕೇಳಬೇಕು ಎಂದು ಅವನಿಗೆ ಅನಿಸಲಿಲ್ಲ. +ನಿಧಾನವಾಗಿ ಕತ್ತಲು ಗಾಢವಾಯಿತು. ರಾತ್ರಿಯ ಗಂಟೆಗಳು ಉರುಳಿದವು. ಒಂದು ಬಗೆಯ ವಿಷಾದ ಉಸಿರುಗಟ್ಟಿಸುವ ವಾತಾವರಣ ಇಗರ್ಜಿಯ ಸುತ್ತ ಹಬ್ಬಿಕೊಂಡಿತು. +ಮಾರನೆ ದಿನ ಬೆಳಿಗ್ಗೆ ಪ್ರಾರ್ಥನೆಯ ಗಂಟೆಯಾಯಿತು. ನಂತರ ಸಾದಾ ಪೂಜೆಯ ಗಂಟೆ. +ಭಾನುವಾರದ ವಿಶೇಷ ಪೂಜೆಯ ಗಂಟೆ. +ಘಂಟಾನಾದದಲ್ಲಿ ಕೂಡ ಎಂದಿನ ಲವಲವಿಕೆ ಇಂಪು ಇರಲಿಲ್ಲ. ಜನ ಆತಂಕದಿಂದಲೇ ಇಗರ್ಜಿಗೆ ಹೋದರು. ಬಾಗಿಲಲ್ಲಿಯ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಂಡು, ಗಂಡಸರು ತಲೆಯ ಮೇಲಿನ ಟೋಪಿ ತೆಗೆದು, ಹೆಂಗಸರು ತಲೆಯುಡುಗೆ ಧರಿಸಿ, ಸೀರೆ ಸೆರಗನ್ನು ಎಳೆದುಕೊಂಡು ಒಳ ಹೋದರು. ಪ್ರಾರ್ಥನೆ, ಕೀರ್ತನೆ, ಪಾದರಿ ಪೀಠಬಾಲಕರ ಜತೆ ಅಲ್ತಾರಿಗೆ ಬಂದು ಪೂಜೆಯನ್ನು ಆರಂಭಿಸಿದರು. ಅವರು ಎಂದಿನಂತಿದ್ದರು. ಅದೇ ಚುರುಕು, ಅದೇ ಮುಖಭಾವ, ಏನೂ ಆಗಿಲ್ಲ ಎಂಬಂತೆ. +ಪೂಜೆಯ ನಡುವೆ ದಿವ್ಯಪ್ರಸಾದದ ಮೇಜಿಗೆ ಒರಗಿ ಅವರು ನಿಂತರು.ಇಡೀ ಇಗರ್ಜಿಯ ತುಂಬ ದೃಷ್ಟಿ ಬೀರಿದರು. ಕೈಲಿದ್ದ ಕರವಸ್ತ್ರವನ್ನು ಮೇಲಂಗಿಯ ತೆರೆದ ತೋಳಿನೊಳಗೆ ತುರುಕಿಸಿದರು. ಆಳವಾಗಿ ಉಸಿರೆಳೆದುಕೊಂಡರು. +“ಮೊಗಚಾ ಕ್ರೀಸ್ತಾಂವನೂಂ” (ಪ್ರೀತಿಯ ಕ್ರೀಸ್ತುವರೆ) ಎಂದರು. ತುಸು ತಡೆದು ಅವರೆಂದರು.- +“ನಿಮ್ಮ ನಡುವೆಯೇ ಓರ್ವ ಅಂತಃಕ್ರಿಸ್ತ ಹುಟ್ಟಿಕೊಂಡಿದ್ದಾನೆ.” +ಹತ್ತಿಯ ಬಿಳಿ ಉಂಡೆಯಂತಿದ್ದ ಮುಗಿಲು ತಟ್ಟನೆ ಕಡು ಕಪ್ಪಾಗಿ, ಭಾರವಾಗಿ ಭರ್ಜಿಯಂತಹ ಒಂದು ಹೊನ್ನ ಶೂಲ ಅದರ ಒಡಲಿಂದ ಚಿಮ್ಮಿ ನೆಲಕ್ಕೆ ಅಪ್ಪಳಿಸಿತು. ಜನ ಬೆಚ್ಚಿದರು. +“ಕ್ರಿಸ್ತನನ್ನು ವಿರೋಧಿಸುವವರು, ಕ್ರಿಸ್ತ ಪ್ರಭುವಿನ ಪ್ರತಿನಿಧಿಗಳನ್ನು ಅವಮಾನಿಸುವವರು, ಪ್ರಭುವಿನ ಬೋಧನೆ ತತ್ವಗಳನ್ನು ಅವಹೇಳನಗೊಳಿಸುವವರು ನಿಮ್ಮ ನಡುವಿನಿಂದಲೇ ಹುಟ್ಟಿ ಬರುತ್ತಾರೆ ಎಂಬ ವಾಕ್ಯ ಪವಿತ್ರ ಗ್ರಂಥದಲ್ಲಿದೆ. ಈ ವಾಕ್ಯ ನಿಜವಾಗಿದೆ. ಯಾವ ತಂದೆಯೂ ರೊಟ್ಟಿಯನ್ನು ಕೇಳಿದ ಮಗನಿಗೆ ಕಲ್ಲನ್ನು, ಮೀನನ್ನು ಕೇಳಿದ ಮಗನಿಗೆ ಹಾವನ್ನು ಕೊಡುವುದಿಲ್ಲ. ನಿಮ್ಮೆಲ್ಲರನ್ನು ಪ್ರೀತಿ, ಮಮತೆ ದೈವ ಭಕ್ತಿಯನ್ನು ನೀಡಿ ಸಾಕುತ್ತಿರುವ ನಿಮ್ಮ ತಂದೆಗೆ ನೀವು ಏನು ಕೊಟ್ಟಿರುವಿರಿ ಯೋಚನೆ ಮಾಡಿ..” +ಪಾದರಿ ಮಸ್ಕರಿನಾಸರು ಕ್ಷಣ ಕ್ಷಣಕ್ಕೂ ಕೋಪಿಷ್ಟರಾಗುತ್ತ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲು ಪೊದೆಗಳನ್ನು ತನ್ನ ಒಡಲೊಳಗೆ ಸೆಳೆದುಕೊಂಡು ಹೊತ್ತಿ ಉರಿಯುವ ಕಾಡು ಗಿಚ್ಚಿನಂತೆ ಚಟಪಟಿಸುತ್ತ ಮಾತನಾಡಿದರು. ಸಾಮಾನ್ಯವಾಗಿ ಬೈಬಲಿನ ಒಂದು ಪ್ರಸಂಗವನ್ನು ಆರಿಸಿಕೊಂಡು ಅದನ್ನೇ ವಿಸ್ತರಿಸಿ, ವಿಶ್ಲೇಷಿಸಿ ಜನತೆಗೆ ಸಂದೇಶ ನೀಡುವ ಕೆಲಸವನ್ನು ಅಂದು ಮಾಡದೆ ಕ್ರಿಸ್ತ ವಿರೋಧಿ ಧೋರಣೆಯ ಕುರಿತೇ ಸ್ವಲ್ಪ ಹೊತ್ತು ಮಾತನಾಡಿ ಕೊನೆಯಲ್ಲಿ. +“ಪ್ರೀತಿಯ ಕ್ರೀಸ್ತುವರೆ..ನಿಮ್ಮ ಕಣ್ಣೆದುರು ಒಂದು ಅಕೃತ್ಯ ನಡೆದಿದೆ…ಈ ಬಗ್ಗೆ ನೀವು ಏನು ತೀರ್ಮಾನ ಕೈ ಕೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ..ಧರ್ಮ ಸಮ್ಮತವಾದ ಒಂದು ತೀರ್ಮಾನವನ್ನು ಕೈಕೊಳ್ಳಲು ಕ್ರಿಸ್ತ ಪ್ರಭುವು ನಿಮಗೆ ಮನಸ್ಸನ್ನು ಶಕ್ತಿಯನ್ನು ನೀಡಲೆಂದು ನಾನು ಅವನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ..” ಎಂದು ತಮ್ಮ ಶೆರಮಾಂವಂ ಮುಗಿಸಿದರು. +ಪಾದರಿ ಈ ಎಲ್ಲ ಮಾತುಗಳನ್ನು ಆಡುವುದರ ಮೂಲಕ ಜನರ ಹೆಗಲ ಮೇಲೇನೆ ಒಂದು ಹೊರೆ ಹೊರಿಸಿದ್ದರು. ಸುತಾರಿ ಇನಾಸನ ಮಗ ಪಾಸ್ಕುವಿನಿಂದ ಪಾದರಿಗಳ ಅವಮಾನವಂತೂ ಆಗಿತ್ತು. ಅವರಿಗೆ ನೋವಾಗಿತ್ತು. ಇದರ ಪರಿಹಾರ ಹೇಗೆ ಎಂಬುದನ್ನು ಜನ ನಿರ್ಧರಿಸಬೇಕಿತ್ತು. ಇಗರ್ಜಿಯಿಂದ ಹೊರ ಬಂದ ಜನ ಅಲ್ಲಲ್ಲಿ ನಿಂತು ಇದೇ ವಿಷಯ ಮಾತನಾಡಿದರು. ಪಾಸ್ಕೋಲ, ಕೈತಾನ, ಬಾಲ್ತಿದಾರ ಮೊದಲಾದವರು ಗುರ್ಕಾರ ಸಿಮೋನನನ್ನು ಹುಡುಕಿಕೊಂಡು ಬಂದರು. ಮಿರೋಣ ವಲೇರಿಯನ ಜಾನಡಯಾಸ್ ವಿನ್ಸೆಂಟ್, ಜಾನಿ ಸಂತ ಜೋಸೆಫ಼ರ ಮಂಟಪಕ್ಕೆ ಅನತಿ ದೂರದಲ್ಲಿ ಒಂದೆಡೆ ನಿಂತರು. ಗುಡ್ ಮಾರ್ನಿಂಗ್ ಹೇಳುತ್ತ ಹೋಗಿ ಇವರ ಜತೆ ಸೇರಿಕೊಂಡರು. +ಈ ಬಗ್ಗೆ ಏನು ಮಾಡುವುದು ಎಂದು ಪಾದರಿ ಮಸ್ಕರಿನಾಸರನ್ನು ಕೇಳುವಂತಿರಲಿಲ್ಲ. ಅವರು ಈಗ ವಿಷಯವನ್ನು ಜನರ ನಿರ್ಧಾರಕ್ಕೆ ಬಿಟ್ಟು ತಾವು ದೂರ ಸರಿದಿದ್ದರು. ಎಲ್ಲ ಜನ ಗುರ್ಕಾರನ ಮುಖ ನೋಡುವ ಪರಿಸ್ಥಿತಿ ಉದ್ಭವವಾಗಿತ್ತು. +ನಿನ್ನೆ ರಾತ್ರಿಯೇ ಗುರ್ಕಾರ ಸಿಮೋನ ಇನಾಸನ ಮನೆಗೆ ಹೋಗಿದ್ದ. +“ಪಾಸ್ಕು ಎಂತಹ ಕೆಲಸ ಮಾಡಿಬಿಟ್ಟೆಯಲ್ಲ” ಎಂದು ಪಾಸ್ಕುವನ್ನು ಎದುರು ಕೂಡಿಸಿಕೊಂಡು ಸಿಮೋನ ಗೋಳಾಡಿದ್ದ. +ಈ ಪಾದರಿಯ ಬಗ್ಗೆ ತನಗಾಗಲಿ, ಊರಿನಲ್ಲಿ ಇತರ ಯಾರಿಗೇ ಆಗಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗೆಂದು ತಮ್ಮ ಅಭಿಪ್ರಾಯವನ್ನು ಅಸಹನೆಯಿಂದ ಹೀಗೆ ವ್ಯಕ್ತಪಡಿಸಬೇಕೆಂದು ಯಾರೂ ಬಯಸಿರಲಿಲ್ಲ. ಪಾದರಿ ಏನೆಂದರೂ ದೇವರ ಪ್ರತಿನಿಧಿ. ತಮಗೂ ದೇವರಿಗೂ ನಡುವೆ ಸಂಬಂಧ ಸೇತುವೆಯಾಗಿ ನಿಂತಿರುವಾತ. ಆತನ ಮಾತು ಕೇಳಿಕೊಂಡು, ಹಿಂಸೆಯಾದರೆ ಸಹಿಸಿಕೊಂಡು ಹೋಗುವುದೇ ಸೂಕ್ತ ಎಂದು ಎಲ್ಲ ಜನ ನಿರ್ಧರಿಸಿದ್ದರು. ಊರಿನಲ್ಲಿ ಈ ಪಾದರಿ ಬಂದ ನಂತರ ಕಿರಿ ಕಿರಿಯುಂಟು ಮಾಡುವ ಹಲವು ಪ್ರಸಂಗಗಳು ನಡೆದಿದ್ದರೂ ಜನ ಅವುಗಳನ್ನು ನುಂಗಿಕೊಂಡಿದ್ದರು. ಆದರೂ ಈ ಹುಡುಗ ಹೀಗೆ ಮಾಡಿಬಿಟ್ಟನಲ್ಲ ಎಂದು ಸಿಮೋನ ಪೇಚಾಡಿದ. +ಪಾಸ್ಕು ತಾನು ತಪ್ಪು ಮಾಡಿಲ್ಲ, ತಪ್ಪು ಏನಿದ್ದರೂ ಪಾದರಿಗಳದ್ದು ಎಂದು ಹೇಳಲು ಬಾಯಿ ತೆರೆದನಾದರೂ ಸಿಮೋನ ಅದಕ್ಕೆ ಆಸ್ಪದ ಕೊಡಲಿಲ್ಲ. +“ನೀನು ದುಡುಕಬಾರದಿತ್ತು..ಅವರು ಲುಸಿಫ಼ೇರ ಅಂದರು..ಒಂದು ಏಟು ಹೊಡೆದರು. ಏನಾಯಿತು? ನಮ್ಮ ಆತ್ಮದ ತಂದೆ ಅಧ್ಯಾತ್ಮದ ಗುರು..ಅವರಿಗೆ ತಗ್ಗಿ ಬಗ್ಗಿ ನಾವು ನಡೆಯಬೇಕಲ್ಲವೇ? ” ಎಂದು ಪಾಸ್ಕುಗೇನೆ ಉಪದೇಶ ನೀಡಿದ. +“ನಿನ್ನ ಮನೆಗೆ ಎಂತಹ ಗೌರವ ಇದೆಯಲ್ಲ ಊರಿನಲ್ಲಿ..” ಎಂದು ಬೇರೆ ಮನೆಯ ಹಿರಿಮೆ ಬಗ್ಗೆ ಹೇಳಿದ. +ಸುತಾರಿ ಇನಾಸನ ಮನೆ ಈಗ ಒಂದು ಪವಿತ್ರ ತಾಣವಾಗಿತ್ತು. ತೇರ್ಸಗೆ ಬರುವವರು, ಮೇಣದ ಬತ್ತಿ ಕೊಡಲು ಬರುವವರು, ರಸ್ತೆಯ ಮೇಲೆ ಹೋಗುವಾಗ ನಿಂತು ಶಿಲುಬೆಯ ಗುರುತು ಮಾಡುವವರು ಹೆಚ್ಚಾಗಿದ್ದಾರು. ಖುರ್ಸಾ ಘರ್(ಶಿಲುಬೆಯ ಮನೆ) ಎಂಬ ಆಡ್ಡ ಹೆಸರು ಬಿದ್ದಿತ್ತು ಈ ಮನೆಗೆ. ಈ ಒಂದು ಪ್ರಕರಣದಿಂದಾಗಿ ಮನೆಯ ಹೆಸರೇ ಹಾಳಾಯಿತಲ್ಲ ಎಂದು ಆತ ವಿವರವಾಗಿ ಹೇಳಿದ. +“ಏನು ಮಾಡೋಣ ಇನಾಸ?” ಎಂದು ಇನಾಸನ ಮುಖ ನೋಡಿದ… +ತಾನಾಯಿತು ತನ್ನ ಕೆಲಸವಾಯಿತು ಮನೆ ಅಂಗಳದ ಶಿಲುಬೆಯಾಯಿತು ಎಂದು ಒಂದು ರೀತಿಯ ಸಂತನ ಬದುಕನ್ನು ಸಾಗಿಸಿದ್ದ ಇನಾಸ. ಅವನ ಹೆಂಡತಿ ಮೂಕಿಯಾಗಿದ್ದರಿಂದಲೋ ಏನೋ ಕೇರಿಯ ಉಸಾಬರಿಗೂ ಈಗೀಗ ಹೋಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಅಷ್ಟೆಯೇ ಊರ ಅಡಿಕೆ ಮಂಡಿಯಲ್ಲಿ ಅಡಕೆ ಆರಿಸುವ ಕೆಲಸ ಮಾಡಿಕೊಂಡು ತನಗೆ ತಮಗೆ ಏನು ಬೇಕೋ ಅದನ್ನೆಲ್ಲ ಮಾಡಿಕೊಂಡಿದ್ದರು. ಇಬ್ಬರಿಗೂ ನೆಂಟಸ್ತಿಕೆಯಾಗಿತ್ತು. ಕೊನೆಯವಳಾದ ಪಾವೇಲಿನ ಕೂಡ ಒಳ್ಳೆಯ ಹುಡುಗಿಯೇ. ಇನಾಸನ ಹಿರಿಯ ಮಗ ಬ್ಯಾಂಡ್ ಸೆಟ್ ಇರಿಸಿಕೊಂಡು ತನ್ನ ಜೀವನಕ್ಕೊಂದು ದಾರಿ ಕಲ್ಪಿಸಿಕೊಂಡಿದ್ದ. ಈ ಪಾಸ್ಕು ಕೂಡ ತಂದೆಯ ಕೆಲಸವನ್ನು ಮುಂದುವರೆಸಿಕೊಂಡು ಒಳ್ಳೆಯ ಹೆಸರು ಮಾಡಿದ್ದ. ಈಗ ಇದೊಂದು ಕಳಂಕ ಅಂಟಿಕೊಂಡಿತೆ? +ಇನಾಸ ಕಣ್ಣೊರೆಸಿಕೊಂಡು ಸಿಮೋನನನ್ನೇ ಕೇಳಿದ. +“ಏನು ಮಾಡೋಣ ಹೇಳು ಸಿಮೋನ. ಮಗ ಮಾಡಿದ ತಪ್ಪಿಗೆ ಶಿಲುಬೆಯ ಮೇಲೆ ಮೊಳೆ ಹೊಡೆಸಿಕೋ ಅಂದರೂ ನಾನು ಸಿದ್ಧ..” ಎಂದ ಆತ ನೋವನ್ನು ತಡೆದುಕೊಳ್ಳಲಾರದೆ. +“ನೋಡೋಣ..ನೋಡೋಣ..” ಎಂದು ಸಿಮೋನ ರಾತ್ರಿ ಇನಾಸನ ಮನೆಯಿಂದ ತಿರುಗಿಬಂದಿದ್ದ. +ಈಗ ಭಾನುವಾರದ ಬೆಳಿಗ್ಗೆ ಪೂಜೆ ಮುಗಿದ ನಂತರ ಸಿಮೋನ ಹತ್ತು ಜನರಿಗೆ ಉತ್ತರ ಕೊಡಬೇಕಾಯಿತು. ಪಾಸ್ಕೋಲ- +“ಏನಾದರೊಂದು ತೀರ್ಮಾನ ಮಾಡಿ” ಎಂದ. +ಸಿಮೋನ ಸುತ್ತಲೂ ಸೂಕ್ಷ್ಮವಾಗಿ ಗಮನಹರಿಸಿದ. ಇಗರ್ಜಿಗೆ ಬಂದ ಎಲ್ಲ ಗಂಡಸರೂ ಅಲ್ಲಲ್ಲಿ ಗುಂಪುಗೂಡಿ ನಿಂತಿದ್ದರು. ಯುವಕರೂ ಇದ್ದರು. ಹೆಂಗಸರು, ಮಕ್ಕಳು, ಯುವತಿಯರು ನಿಧಾನವಾಗಿ ಕರಗಿ ಹೋಗಲಾರಂಭಿಸಿದರು. ಚಮಾದೋರ ಇಂತ್ರು ಗುರ್ಕಾರನ ಬಾಯಿಯಿಂದ ಬರುವ ಮಾತಿಗಾಗಿ ಎಂಬಂತೆ ಅವನ ಹತ್ತಿರವೇ ನಿಂತಿದ್ದ. +ಸಿಮೋನ, ಪಾತ್ರೋಲ, ಬೋನ, ಬಾಲ್ತಿದಾರ, ಕೈತಾನ ಎಂದು ಬಳಿ ಇದ್ದ ಕೆಲ ಹಿರಿಯರ ಬಳಿ ಸಮಾಲೋಚನೆ ನಡೆಸಿದ. +ಮಧ್ಯಾಹ್ನ ಮೂರು ಗಂಟೆಗೆ ಇಗರ್ಜಿಯಲ್ಲಿ ಒಂದು ಸಭೆ ಕರಿಯಬೇಕೆಂಬ ನಿರ್ಧಾರವಾಯಿತು. ಅಂತೆಯೇ ಇಂತ್ರುಗೆ ಎಲ್ಲರಿಗೂ ವಿಷಯ ತಿಳಿಸಲು ಹೇಳಲಾಯಿತು. ಏನೋ ಒಂದು ತೀರ್ಮಾನವಾಗಬಹುದು ಎಂಬ ಆಶಯದೊಂದಿಗೆ ಇಗರ್ಜಿಗೆ ಬಂದು ಉಪವಾಸವಿದ್ದು ದಿವ್ಯ ಪ್ರಸಾದ ಸ್ವೀಕರಿಸಿದ ಜನ ಉಪವಾಸ ಮುರಿಯಲು ಮನೆಗಳತ್ತ ತಿರುಗಿದರು. ಆದರೆ ಯಾರಲ್ಲೂ ಉತ್ಸಾಹವಿರಲಿಲ್ಲ. +ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ ಪಾದರಿಗಳಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತಿತ್ತು. ಇಲ್ಲವೆ ಮೂರು, ನಾಲ್ಕು ವರ್ಷಗಳಿಂದ ಅನ್ವಾಲ ಕಾಯಿದೆ ಬಾಕಿ ಇರುತ್ತಿತ್ತು. ಇದರ ಪರಿಹಾರ ಮಾಡಲು ಪಾದರಿಗಳ ಬಳಿಗೆ ಜನ ಹೋಗುತ್ತಿದ್ದರು. ಡಾ.ರೇಗೋ, ಜಾನ್ ಡಯಾಸ್ ಪಾದರಿಗಳ ಕ್ಷೇಮ ಸಮಾಚಾರ ಕೇಳಲು ಹೋಗುತ್ತಿದ್ದರು. ಮಕ್ಕಳಿಗೆ ಮೊದಲ ದಿವ್ಯಪ್ರಸಾದ ನೀಡುವಂತೆ ಕೇಳಿಕೊಳ್ಳಲು ಕೆಲವರು ಹೋಗುವುದಿತ್ತು. ಭಾನುವಾರದ ಪೂಜೆ ಮುಗಿಸಿ, ಪಾದರಿ ಸಣ್ಣದೊಂದು ಪ್ರಾರ್ಥನೆ ಮಾಡಿ ಬೆಳಗಿನ ಉಪಹಾರ ತೆಗೆದುಕೊಂಡು ಬಂಗಲೆ ಬಾಗಿಲು ತೆರೆದು ಹೊರಗೊಮ್ಮೆ ಇಣುಕಿ ನೋಡಿ- +“ಹಾಂ…ಕೋಣ್ರೆ?” ಎಂದು ಕೇಳಿ ಒಳಗೆ ಮರೆಯಾದಾಗ ಹೊರಗೆ ಜಗಲಿಯ ಮೇಲೆ, ಅಂಗಳದಲ್ಲಿ ನಿಂತವರು ಒಬ್ಬೊಬ್ಬರಾಗಿ ಒಳಗೆ ಹೋಗುತ್ತಿದ್ದರು. +ಇಂದು ಮಾತ್ರ ಹೀಗೆ ಯಾರೂ ಪಾದರಿ ಬಂಗಲೆಯ ಬಳಿ ಕಂಡು ಬರಲಿಲ್ಲ. ಡಾ.ರೇಗೋ ಹಾಗೂ ಜಾನ್ ಡಯಾಸ್ ಈರ್ವರೇ ತೆರೆದ ಬಂಗಲೆ ಬಾಗಿಲ ಮೂಲಕ ಒಳಹೋದುದನ್ನು ಜನ ಕಂಡರು. +* +* +* +ಮೂರು ಗಂಟೆಗೆ ಸೇರಿದ ಸಭೆಯಲ್ಲಿ ಅಂತಹ ತೀರ್ಮಾನವೇನೂ ಆಗಲಿಲ್ಲ. ಪಾಸ್ಕು ಪಾದರಿಗಳಿಗೆ ಹೊಡೆಯಬಾರದಿತ್ತು ಎಂಬ ಮಾತೇ ಕೇಳಿ ಬಂದಿತಲ್ಲದೆ ಇದಕ್ಕೆ ಏನು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಜೂಂತ ಇರಿಸಿ ಅವನನ್ನು ಜೂಂತಗೆ ಕರೆಸಿ ದಂಡ ಹಾಕಿ, ಜಾತಿ ಕಟ್ ಮಾಡಿ ಎಂದೆಲ್ಲ ಜನ ಕೂಗಾಡಿದರು. ಇನಾಸನ ಮಗ , ಇನಾಸನ ಮನೆ, ಶಿಲುಬೆಯ ಮನೆ ಎಂದಾಗ ಏಕೋ ಜನರ ಕಾವು ಇಳಿಯಿತು. +“ಹೌದಪ್ಪ ಹುಡುಗ ಹೊಡೀಬಾರದಿತ್ತು..ಆದರೆ ಪಾದರಿ ಅವನನ್ನು ಲುಸಿಫ಼ೇರ್ ಅಂತ ಕರೀಬಹುದಾ?” ಎಂದು ಊಟದ ಮನೆ ಸಾಂತಾಮೋರಿಯ ಮಗ ಬಸ್ತು ಕೇಳಿದಾಗ ಯಾರೂ ಉತ್ತರ ಕೊಡಲು ಹೋಗಲಿಲ್ಲ. ಮದುವೆಯ ಸಂದರ್ಭದಲ್ಲಿ ಈ ಬಸ್ತುವನ್ನು ಪಾದರಿ ಸತಾಯಿಸಿದ್ದು ಆ ಕ್ಷಣದಲ್ಲಿ ಜನರ ನೆನಪಿಗೆ ಬಂದಿತು. ಹಿಂದೆಯೇ ಬೇರೆ ಬೇರೆ ಸಂದರ್ಭಗಳಲ್ಲಿ ಪಾದರಿ ತಮ್ಮ ಕಣ್ಣಿನಲ್ಲೂ ನೀರು ತರಿಸಿದ್ದು ನೆನಪಿಗೆ ಬಂದು ಬಸ್ತುವಿನ ವಿರುದ್ಧ ಯಾರೂ ಉತ್ತರ ಕೊಡಲು ಹೋಗಲಿಲ್ಲ. +ಇಷ್ಟಾದರೂ ಪಾಸ್ಕುವಿನ ಮೇಲೆ ಏನಾದರೊಂದು ಕ್ರಮ ಕೈಕೊಳ್ಳಬೇಕಲ್ಲ. ಹೀಗಾಗಿ ಮತ್ತೂ ಕೆಲ ಸಲಹೆಗಳು ಬಂದವು. +“ಖಾಂದೀರ ಖುರೀಸ್” (ಹೆಗಲ ಮೇಲೆ ಶಿಲುಬೆಕೊಟ್ಟು ನಿಲ್ಲಿಸುವುದು) ಎಂದರು ಯಾರೋ. +ಇದಕ್ಕೂ ಬೆಂಬಲ ಸಿಗಲಿಲ್ಲ. +ಕೊನೆಗೆ ಮಿರೋಣ ವಲೇರಿಯನ್ ಎದ್ದು ನಿಂತ. +ಈ ಸಭೆಗೆ ಊರಿನ ಕ್ರೀಸ್ತುವರೆಲ್ಲ ಬಂದಿದ್ದರು. ಡಾಕ್ಟ್ಯರ್ ರೇಗೋ ಒಬ್ಬರನ್ನು ಬಿಟ್ಟು. ಅವರಿಗೆ ಈ ಜನಸಾಮಾನ್ಯರ ಜತೆ ಕುಳಿತು ಮಾತನಾಡಲು, ಚರ್ಚೆ ಮಾಡಲು ಆಗುತ್ತಿರಲಿಲ್ಲವೇನೋ ಅವರು ಸಾಮಾನ್ಯವಾಗಿ ಬರುತ್ತಿರಲಿಲ್ಲ. +ಜಾನ್ ಡಯಾಸ್, ವಿನ್ಸೆಂಟ, ಡ್ರೈವರ್ ಚಾರ್ಲಿ ಬಂದಿದ್ದರು. ಈ ಜನ ಕೂಡ ಹೆಚ್ಚು ಮಾತನಾಡುತ್ತಿರಲಿಲ್ಲ. ಅಧಿಕ ಸಂಖ್ಯೆಯಲ್ಲಿದ್ದ ಊರ ಜನರಿಗೆ ಮಾತನಾಡಲು ಬಿಟ್ಟು ಇವರು ಕೇಳುತ್ತ ಕೂಡುತ್ತಿದ್ದರು. ಈ ಊರ ಜನರಿಂದ ಎನೂ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಇವರಿಗೆ ಏನೂ ಗೊತ್ತಿಲ್ಲ. ಇವರು ಅಶಿಕ್ಷಿತರು, ಅನಕ್ಷರಸ್ಥರು ಎಂಬುದು ಇವರಿಗೆ ತಿಳಿದಿತ್ತು. ಆದರೆ ಕೊನೆಯ ಮಾತನ್ನು ಹೇಳುವ ಅವಕಾಶವನ್ನು ಈ ವಿದ್ಯಾವಂತ ಜನ ಕಾದಿರಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಇವರ ಮಾತಿಗೆ ಉಳಿದವರು ತಕ್ಷಣ ಒಪ್ಪಿಬಿಡುತ್ತಿದ್ದರು. +ಹೀಗಾಗಿ ಮಿರೋಣ ವಲೇರಿಯನ್ ಎದ್ದು ನಿಂತಾಗ ಎಲ್ಲರೂ ಮೌನದಿಂದ ಕುಳಿತರು. +“ನಾವು ಏನೇ ತೀರ್ಮಾನ ಮಾಡಿದ್ರು ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ವಲೇರಿಯನ ಎಲ್ಲರ ಮುಖ ನೋಡಿದ. +“ನಾವು ನಿತ್ಯ ಮನೇಲಿ ಇಗರ್ಜಿಲಿ ಪರಲೋಕ ಮಂತ್ರ ಹೇಳತೇವೆ..ಕ್ರಿಸ್ತಪ್ರಭು ನಮಗೆ ಕೊಟ್ಟ ದೊಡ್ಡ ಬಲ ಅದು..ಮನುಷ್ಯನ ಬದುಕು ಇರೋದೇ ಈ ಮಂತ್ರದ ಆಶ್ರಯದಲ್ಲಿ..ಈ ಮಂತ್ರದ ಮೂಲಕ ಏಸು ಪ್ರಭು ಕ್ಷಮೆ ಎಷ್ಟು ದೊಡ್ಡದು ಅನ್ನೋದನ್ನ ನಮಗೆ ತಿಳಿಸಿಕೊಟ್ಟಿದ್ದಾರೆ..ನಾನು ಒಂದು ಸರಳ ದಂಡನೆ ಹೇಳತೇನೆ..ಪಾಸ್ಕು ಹೋಗಿ ಪಾದರಿಗಳ ಹತ್ತಿರ ಕ್ಷಮಾಪಣೆ ಕೇಳಲಿ..ಅವರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ನನಗಿದೆ…ಅಲ್ಲಿಗೆ ಈ ಪ್ರಕರಣ ಮುಗಿಯುತ್ತೆ..ಮುಂದೆ ಹೀಗೆ ಆಗದ ಹಾಗೆ ನಾವು ನಮ್ಮ ಮಕ್ಕಳಿಗೆ ದೈವಿಕ ಶಿಕ್ಷಣ ಕೊಡೋಣ..” ಎಂದ ಆತ ತನ್ನದೇ ಆದ ಮಂಗಳೂರಿನ ಕೊಂಕಣಿಯಲ್ಲಿ. ಈ ಭಾಷೆ, ಈ ಮಾತು, ಅವನ ಧ್ವನಿ, ಅವನು ಹೇಳಿದ ರೀತಿ ಜನರ ಮೇಲೆ ಪರಿಣಾಮ ಬೀರಿತು. +“ಇದೀಗ ಸರಿಯಾದ ಮಾತು” ಎಂದ ಪಾಸ್ಕೋಲ. ಉಳಿದವರು ಕೂಡ. +ಆದರೂ ಕೆಲವರಿಗೆ ಈ ತೀರ್ಮಾನ ಸರಿ ಎನಿಸಲಿಲ್ಲ. ಪಾದರಿ ಬಳಿ ಈತ ಹೋಗಿ ಕ್ಷಮಾಪಣೆ ಕೇಳುವುದೇನೋ ಸರಿ. ಪಾದರಿ ಕ್ಷಮಿಸದಿದ್ದರೆ? +“ಅದು ಜನರಿಗೆ ಬಿಟ್ಟಿದ್ದು..ಅವರು ಏನು ಬೇಕಾದರೂ ಮಾಡಲಿ..” ಎಂದು ಕೊನೆಗೆ ಕೈತಾನ ಹೇಳಿದ. +* +* +* +ಇಲ್ಲಿ ನಡೆದುದೆಲ್ಲ ಪಾಸ್ಕುಗೆ ತಿಳಿದು ಹೋಯಿತು. ಅವನ ವಯಸ್ಸಿನವರೆಲ್ಲ ಸಭೆಗೆ ಬಂದಿದ್ದರಲ್ಲ. ಯಾರು ಯಾರು ಏನೇನು ಹೇಳಿದರು ಎಂಬುದನ್ನು ಅದೇ ಧಾಟಿಯಲ್ಲಿ ಸ್ನೇಹಿತರು ಹೇಳಿದಾಗ ಪಾಸ್ಕು ಸಿಡಿಮಿಡಿಗೊಳ್ಳುತ್ತ ಸಿಟ್ಟಿನಿಂದ ಹಲ್ಲು ಕಡಿಯುತ್ತ ತಾಳ್ಮೆ ಕಳೆದುಕೊಂಡು ಕೂಗಾಡುತ್ತ ತನ್ನ ಪ್ರತಿಕ್ರಿಯೆಯನ್ನು ನೀಡಿದ. +“ಜೂಂತ ಮಾಡತಾರಂತ..ಮಾಡಲಿ..ಆ ಪಾದರೀನ ಅವರು ಜೂಂತಗೆ ಕರೆಸಬೇಕು..ಅಲ್ಲಿ ನಾನು ಎಲ್ಲ ತೆಗೀತೀನಿ..” ಎಂದ ಆತ ತೋಳೇರಿಸಿ. +“ಜಾತಿ ಕಟ್ ಮಾಡತಾರ..ಮಾಡಲಿ..ನನಗೆ ಈ ಜಾತಿ ಬೇಡ..ನಾನು ಸಾಬರ ಜಾತಿಗೆ ಸೇರತೀನಿ.” +“ಖಂದೀರ ಖುರೀಸ್ ಕೊಡತಾರಂತೆ..ಅದು ಯಾವ ನನ್ನ ಮಗ ಅವನು ಖುರೀಸ್ ಕೊಡೋದು..ಅವನಿಗೆ ಅಷ್ಟು ತಾಕತ್ ಇದೆಯಾ.” ಎಂದು ಕಣ್ಣು ಕೆಂಪಗೆ ಮಾಡಿಕೊಂಡ. ಪಾದರಿಗಳ ಬಳಿ ಹೋಗಿ ಕ್ಷಮಾಪಣೆ ಕೇಳಬೇಕಂತೆ ಅನ್ನುವ ಮಾತು ಬಂದಾಗ ಪಾಸ್ಕು.. +“ನಾನು ಹೋಗೋಲ್ಲ..ಅವನೇನು ದೇವರ?” ಎಂದು ರೇಗಿದ. ಆದರೆ ಈ ಮಾತು ಬಂದಾಗ ಅವನು ಕೊಂಚ ತಣ್ಣಗಾಗಿದ್ದ. ಮೇಲೆ ಹೇಳಿದ ಎಲ್ಲ ಶಿಕ್ಷೆಗಳಿಗಿಂತ ಈ ಶಿಕ್ಷೆ ಸೌಮ್ಯವೂ, ಸಾಧುವೂ ಆಗಿದ್ದು ಒಂದು ಕಾರಣವಾದರೆ ಜನ ತನ್ನ ಬಗ್ಗೆ ಹೆಚ್ಚು ಕ್ರೂರಿಗಳಾಗಿ ವರ್ತಿಸಲಿಲ್ಲ ಎಂಬುದೂ ಒಂದು ಕಾರಣವಾಯಿತು. +ಅಂದೇ ಸಿಮೋನ ಅವನ ಮನೆಗೆ ಬಂದ. +“ಇನಾಸ ಇದೀಯ?” ಎಂದು ಕೇಳುತ್ತ ಬಂದವ ಪಾಸ್ಕುವನ್ನು ನೋಡಿ. +“ನೋಡಪ್ಪ..ನಾವು ಹೀಗೊಂದು ತೀರ್ಮಾನ ಮಾಡಿದೀವಿ..” ಎಂದು ವಿಷಯ ತಿಳಿಸಿದ. +“ನಾಳೆ ನಾಡಿದ್ದು ಹೋಗು..ಪದ್ರಾಬಾ ತಪ್ಪಾಯ್ತು..ಕ್ಷಮಿಸು..ಅಂತ ಕೇಳಿಕೋ..ಇದು ಊರಿಗೆಲ್ಲ ಗೊತ್ತಾಗೋ ಹಾಗೆ ಆಗಬಾರದು…ಬೇರೆ ಧರ್ಮೀಯರು ಏನು ತಿಳಕೊಳ್ಳೋದಿಲ್ಲ..” ಎಂದೂ ಕೆಲ ಮಾತುಗಳನ್ನು ನುಡಿದ. +ಪಾಸ್ಕು ಮಾತ್ರ ಹಾಂ ಹುಂ ಎಂದು ಏನೂ ಹೇಳಲಿಲ್ಲ. ಆದರೆ ಆತ ವಾದ ಮಾಡಲು ಪಾದರಿಗಳ ಬಗ್ಗೆ ಮತ್ತೇನೋ ಹೇಳಲು ಹೋಗಲಿಲ್ಲ. ಇದೊಂದೇ ಸಮಾಧಾನದಿಂದ ಸಿಮೋನ ಇನಾಸನಿಗೆ ಹೇಳಿ. ಅವನ ಹೆಂಡತಿಗೆ ಹೇಳಿ, ಸೈಡ್ ಡ್ರಾಮ ಸರಿಪಡಿಸುತ್ತ ಕುಳಿತ ರೈಮಂಡಗೆ ಹೇಳಿ. ಇನಾಸನ ಹೆಣ್ಣು ಮಕ್ಕಳನ್ನು ಮಾತನಾಡಿಸಿ ತಿರುಗಿ ಬಂದ. +ಇದೊಂದು ಪ್ರಕರಣ ಒಳ್ಳೆಯ ರೀತಿಯಲ್ಲಿ ಮುಗಿದು ಹೋದರೆ ಸಾಕು ಎಂದಾತ ಬಯಸಿದ್ದ. +* +* +* +ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಮಾತ್ರ ಈ ಪ್ರಕರಣವನ್ನು ಬೇರೊಂದು ದಿಕ್ಕಿಗೆ ತಿರುಗಿ ನಿಲ್ಲಿಸಿದ. +ಹೆಂಡತಿ ರಜೀನಾ ವಾಂತಿಯಾದಂತೆ ಆಗುತ್ತದೆ, ತಲೆ ಸುತ್ತುತ್ತದೆ ಎಂದು ಹೇಳಿದ್ದೇ ಗಾಬರಿಗೆ ಕಾರಣವಾಗಿ ಆತ ವೈಜೀಣ ಕತ್ರೀನಳ ಮನೆಗೆ ಹೋಗಿದ್ದ. +“ಭಾನುವಾರ ಪೂಜೆಗೆ ಬರತೀನಲ್ಲ..ಆಗ ಬಂದು ನಿನ್ನ ಹೆಂಡತೀನ ನೋಡತೀನಿ..ನೀನು ಗಾಬರಿಯಾಗಬೇಡ” ಎಂದವಳು ಹೇಳಿದ್ದಳು. +ಶನಿವಾರ ಸಂಜೆಯೇ ಈ ಪ್ರಕರಣವಾದದ್ದು ತಿಳಿಯಿತು. +“ಮೋಜಾ ದೇವ..ಹೆಂ ಕಿತೆಂ ಜಾಲ್ಲೆಂ” (ನನ್ನ ದೇವರೆ ಇದೇನಾಯಿತು) ಎಂದು ಜಪಸರ ಹಿಡಿದು ಕುಳಿತ ಅವಳು ತುಂಬಾ ನೊಂದುಕೊಂಡಳು. ರಾತ್ರಿ ಎಲ್ಲ ಅವಳಿಗೆ ಕೆಟ್ಟ ಕನಸುಗಳು. ಭಾನುವಾರ ಎದ್ದವಳೇ ಮೊದಲ ಪೂಜೆಗೆ ಬಂದಳು. ಏನೂ ಆಗಿಲ್ಲವೆಂಬಂತೆ ಪಾದರಿಗಳು ಪೂಜೆ ಮುಗಿಸಿದರು. ಕತ್ರೀನ ಪೂಜೆ ಮುಗಿಸಿಕೊಂಡು ಪಾದರಿ ಬಂಗಲೆಯ ಹಿಂದಿದ್ದ ಕೂಜ್ನಗೆ ಹೋದಳು. +“ಯೋ ಮಮ್ಮಿ” ಎಂದು ಫ಼ರಾಸ್ಕ ಅವಳನ್ನು ಸ್ವಾಗತಿಸಿದ. +“ಏನು ಕಾಲ ಬಂತು ಫ಼ರಾಸ್ಕ” ಎಂದು ಅಲ್ಲಿ ಕುಳಿತು ಮುಖ ಬಾಡಿಸಿಕೊಂಡು ಲೊಚಗುಟ್ಟಿದಳು. +“ಹೀಗೆ ಆಗಬಾರದಿತ್ತು ಫ಼ರಾಸ್ಕ..ಪಾದರಿಗಳ ಮೇಲೆ ಕೈ ಮಾಡೋದೆ?” ಎಂದು ಅವಳು ಗೋಡೆಗೆ ವರಗಿ ಕುಳಿತಳು. ಬಂದ ವಿಷಯ ಮರೆತಳು. +“ಆದದ್ದು ಆಗಿ ಹೋಯ್ತು ಮಮ್ಮಿ…ಮುಂದೆ ಅನುಭವಿಸಬೇಕಾದವನು ಮಾತ್ರ ಈ ಹುಡುಗನೇ” ಎಂದ ಫ಼ರಾಸ್ಕ. +“ನಮ್ಮ ಪಾದರಿಗಳನ್ನು ಎದುರು ಹಾಕಿಕೊಂಡವರಿಗೆ ಯಾರಿಗೂ ಒಳ್ಳೆಯದಾಗಿಲ್ಲ..ದೇವ ಮಣಿಯಾರಿಗಳ ನೋವು ನರಕದ ಬೆಂಕಿಯ ಹಾಗೆ ಶಾಶ್ವತ.” +“ಅಲ್ವೇ ಮತ್ತೆ” +“ಹಿಂದೆ ಪದ್ರಾಬ ಹೊಂಕೇರಿಯಲ್ಲಿ ಇದ್ದರಲ್ಲ..ಅಲ್ಲಿ ಒಬ್ಬ ಹುಡುಗ ಇವರಿಗೆ ವಿರೋಧವಾಗಿದ್ದ..ಅವನು ಪಾಸ್ಕು ಹಾಗೇನೆ ಪಾದರಿಗಳನ್ನು ತುಂಬಾ ಹಗುರವಾಗಿ ಕಂಡ. ಪಾದರಿಗಳು ತುಂಬಾ ಸುಧಾರಿಸಿಕೊಂಡರು. ಜನರಿಗೂ ಹೇಳಿ ನೋಡಿದರು. ಒಂದು ದಿನ ಅವರ ತಾಳ್ಮೆಯ ತಂತಿ ತುಂಡಾಗಿ ಹೋಯಿತು..ಇಗರ್ಜಿನಲ್ಲಿ ದೇವರ ಪೀಠದ ಮುಂದೆ ನಿಂತು ಎಡಗೈ ಶಾಪವನ್ನು ನೀಡಿದರು. ಈವತ್ತಿಗೂ ಆತ ಮೈ ತುಂಬ ತೊನ್ನಾಗಿ ನರಳ್ತಿದಾನೆ..” ಎಂದು ಫ಼ರಾಸ್ಕ ನಿಜ ಘಟನೆಯೊಂದನ್ನು ಹೇಳಿದ. ಪಾದರಿಗಳು ಜನರನ್ನು ಆಶೀರ್ವದಿಸುವಾಗೆಲ್ಲ ಬಲಗೈಯಿಂದ ಗಾಳಿಯಲ್ಲಿ ಶಿಲುಬೆ ಬರೆಯುವುದು ರೂಢಿ. ಅದೊಂದು ಪದ್ದತಿ ಕೂಡ. ಮದುವೆಯ ಉಂಗುರವನ್ನು ಮಂತ್ರಿಸುವಾಗ, ಚಿಕ್ಕ ಮಗುವಿಗೆ ಆಶೀರ್ವಾದ ನೀಡುವಾಗ, ತಮ್ಮ ಮುಂದೆ ಮೊಣಕಾಲೂರಿದವರನ್ನು ಆಶೀರ್ವದಿಸುವಾಗ ಎಲ್ಲ ಸಂದರ್ಭಗಳಲ್ಲಿ ಪಾದರಿ ಬಲಗೈಯನ್ನು ಮಡಚಿ ಕೈಯಿಂದ ಶಿಲುಬೆಯ ಗುರುತು ಮಾಡಿ “ದೇವರ ಆಶೀರ್ವಾದ” ಅನ್ನುತ್ತಾರೆ. ಈ ಆಶೀರ್ವಾದ ಅಮೂಲ್ಯವಾದದ್ದು, ಶ್ರೇಷ್ಠವಾದದ್ದು ಎಂಬುದು ಒಂದು ನಂಬಿಕೆ. ಇದೇ ಪಾದರಿ ಇದೇ ಆಶೀರ್ವಾದವನ್ನು ಎಡಗೈಯಿಂದ ಮಾಡಿದರೆ? ಅದು ಶಾಪ, ಶಿರಾಪ. ಸಾಮಾನ್ಯವಾಗಿ ಪಾದರಿಗಳು ಎಡಗೈ ಬಳಸುವುದಿಲ್ಲ. ಬಳಸಿದರೆ ಮಾತ್ರ ಅದು ವಿನಾಶಕಾರಕ. ಈ ನಂಬಿಕೆ ಇಗರ್ಜಿ ಮಾತೆಯನ್ನು ನಂಬುವ ಕ್ರೈಸ್ತ ಸಮೋಡ್ತಿಯಲ್ಲಿ ಬಹಳ ದಿನಗಳಿಂದ ಇದೆ. ಜನ ಏನೂ ಸಹಿಸಿಕೊಳ್ಳುತ್ತಾರೆ. ಆದರೆ ಎಡಗೈ ಆಶೀರ್ವಾದವನ್ನಲ್ಲ. +ಫ಼ರಾಸ್ಕ ಈ ವಿಷಯ ಹೇಳುತ್ತಿರಲು ಕತ್ರೀನಾ “ದೇವಾ” (ದೇವರೇ) ಎಂದು ಮಿಡುಕಾಡಿದಳು. +ಫ಼ರಾಸ್ಕ ಪಿಂಗಾಣಿ ಬಟ್ಟಲು ತಟ್ಟೆಯಲ್ಲಿ ಟೀ ಮಾಡಿಕೊಟ್ಟ. ಒಂದು ತುಂಡು ಬ್ರೆಡ್ಡು ತಂದಿರಿಸಿದ. ಕತ್ರೀನಾ ಅದನ್ನು ಮುಗಿಸಿದಳು. +“ರಜೀನಾ..ಹೀಗೆ ಬಾ..” ಎಂದು ಫ಼ರಾಸ್ಕನ ಹೆಂಡತಿ ರಜೀನಾಳ ಪರೀಕ್ಷೆ ಮಾಡಿದಳು. ಅವಳ ಕಿವಿಯಲ್ಲಿ ಏನೋ ಹೇಳಿ, ಅವಳು ನಾಚಿ ಕೆಂಪೇರುತ್ತಿರಲು- +“ಫ಼ರಾಸ್ಕ ಗಾಬರಿ ಏನಿಲ್ಲ..ಇನ್ನೊಂದು ಹದಿನೈದು ದಿನ ಆಗಲಿ..ನಾನು ಡಾಕ್ಟರ್ ಶಾಂತಾಬಾಯಿ ಹತ್ತಿರ ಕರಕೊಂಡು ಹೋಗಿ ಪರೀಕ್ಷೆ ಮಾಡಿಸಿ ಹೇಳತೀನಿ..” ಎಂದು ನಗುನಗುತ್ತ ಹೇಳಿ ಎದ್ದಳು. +ಅವಳು ಮನೆಮುಟ್ಟುವಷ್ಟರಲ್ಲಿ ಇಗರ್ಜಿಯ ಎರಡನೇ ಪೂಜೆಗೆ ರೇಶಿಮೆ ಸೀರೆಯುಟ್ಟು ಹೊರಟ ನಾಲ್ವರು ಅವಳಿಗೆ ಭೇಟಿಯಾದರು. +“ಪೂಜೆಗೆ ಹೋಗಿ ಬಂದ್ರ?” ಎಂದು ಕೇಳುತ್ತ ನಿಂತರು. +“ನಿನ್ನೆ ನೋಡಿ ಹೀಗೆ ಆಯ್ತು..” ಎಂದರು. ಕತ್ರೀನಾ ಮುಂದಿನ ಪರಿಣಾಮ ಏನಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದಳು. ಮಾಂಸ ತರಲು ಮಾರ್ಕೆಟಿಗೆ ಹೊರಟ ಫ಼ರಾಸ್ಕ ಎದುರು ಸಿಕ್ಕ ಕೆಲವರಿಗೆ ಈ ಸುಳುವು ನೀಡಿದ. ಇದಕ್ಕೆ ಸರಿಯಾಗಿ ಪಾದರಿ ಮಸ್ಕರಿನಾಸರು ಪೂಜೆಯ ನಡುವೆ ಶೆರಮಾಂವಂಗೆ ನಿಂತವರು- +” ಈ ಬಗ್ಗೆ ನೀವು ಏನು ತೀರ್ಮಾನ ಕೈಗೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ”. ಎಂದು ಹೇಳಿದ್ದು ಬೇರೇನೋ ಅರ್ಥವನ್ನು ನೀಡಿತು. ಮೂರು ಗಂಟೆಯ ಸಭೆಯಲ್ಲಿ ಮಿರೋಣ ವಲೇರಿಯನ್ ಬೇರೆ ತನ್ನ ಮಂಗಳೂರಿನ ಕೊಂಕಣಿಯಲ್ಲಿ- +“ನಾವು ಏನೇ ತೀರ್ಮಾನ ಮಾಡಿದರೂ ಪಾದರಿಗಳು ಒಪ್ಪಬೇಕು..ಅಲ್ವೇ?” ಎಂದು ಕೇಳಿದ್ದ. +ಭಾನುವಾರವೆಲ್ಲ ಪಾಸ್ಕು ಏನು ಮಾಡುತ್ತಾನಂತೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಆತ ಪಾದರಿಗಳ ಕ್ಷಮಾಪಣೆ ಕೇಳುವ ಮನೋಸ್ಥಿತಿಯಲ್ಲಿ ಇಲ್ಲ ಎನ್ನುವಾಗ ಎಡಗೈ ಶಾಪದ ಮಾತು ಬಲವಾಗಿ ಕೇಳಿ ಬರತೊಡಗಿತು. ಕ್ರೈಸ್ತ ಸಮುದಾಯದಲ್ಲಿ ಎಲ್ಲಿಯೋ ಗುಪ್ತವಾಗಿ ಅಡಗಿದ್ದ ಈ ಭೀತಿಯ ಹಸ್ತ ಸ್ವಲ್ಪ ಮೇಲೆದ್ದು, ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡು, ಕುಷ್ಟರೋಗ, ತೊನ್ನು, ಕಣ್ಣು ಕಾಣದಿರುವುದು, ಕಾಲು ಊನವಾಗುವುದು, ಕೈ ಮೊಟಕಾಗುವುದು, ನಾಲಿಗೆ ಬಿದ್ದು ಹೋಗುವುದು ಮೊದಲಾದ ಶಾಶ್ವತ ಅಂಗಹೀನತೆಗಳನ್ನು ತಂದು ಎದುರು ನಿಲ್ಲಿಸಿ ಇಗರ್ಜಿಯ ಸುತ್ತಲಿನ ಮೂರು ಬೀದಿಗಳಲ್ಲಿ, ಬಾಮಣರು ವಾಸಿಸುವ ಕೆಳಗಿನ ಕೇರಿಯಲ್ಲಿ, ಕರಿಕಾಲಿನವರು ವಾಸಿಸುವ ರೈಲು ಇಲಾಖೆಯ ಮನೆಗಳ ಬಳಿ ವಿಷ ಗಾಳಿಯಾಗಿ ಹರಡಿಕೊಂಡಿತು. +ಇನಾಸ ಚಾಪೆಯೊಂದನ್ನು ಶಿಲುಬೆ ದೇವರ ಮುಂದೆ ಹಾಸಿಕೊಂಡು ಮಲಗಿಬಿಟ್ಟ. +ಬ್ಯಾಂಡಕಾರ ರೈಮಂಡ್- +“ರಾಂಡ್ಲಾ ಪುತ್ತ..ನಮ್ಮ ಮನೆಗೇನೆ ಕೆಟ್ಟ ಹೆಸರು ತಂದೆಯಲ್ಲ” ಎಂದು ಕೂಗಾಡಿದ. +ಇನಾಸನ ಹೆಂಡತಿ ಮೊನ್ನೆ ತಲೆಗೂದಲು ಕೆದರಿಕೊಂಡು, ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ಶಾಲೆಗೆ ಹೋಗಲು ಹಟ ಮಾಡುವ ಹುಡುಗನನ್ನು ತಳ್ಳಿಕೊಂಡು ಶಾಲೆಗೆ ಕೊಂಡೊಯ್ಯುವಂತೆ ಪಾಸ್ಕುವನ್ನು ಮನೆಯ ಹೊರಗೆ ಎಳೆ ತಂದಳು. ಇಷ್ಟು ಹೊತ್ತಿಗೆ ಪಾಸ್ಕು ಕೂಡ ಅರ್ಧ ಜೀರ್ಣವಾಗಿದ್ದ. ಪಾದರಿಗಳ ಎಡಗೈಯ ಶಾಪದ ಬಗ್ಗೆ ಬಹಳಷ್ಟು ಕೇಳಿದ್ದ ಈತ ಈ ಪ್ರಕರಣವನ್ನು ಮುಂದುವರೆಸಿಕೊಂಡು ಹೋಗಬಾರದೆಂದು ನಿರ್ಧರಿಸಿದ. +* +* +* +ಎಲ್ಲೋ ಒಂದು ಕಡೆ ಬದಲಾವಣೆಯಾಯಿತೆಂದರೆ ಅದರ ಪ್ರಭಾವ ಎಲ್ಲ ಕಡೆ ಆಗುತ್ತದೆ. ಕಡಲಲ್ಲಿ ಹುಟ್ಟುವ ಒಂದು ಅಲೆ ಮತ್ತೊಂದು ಅಲೆಯ ಹುಟ್ಟಿಗೆ ಕಾರಣವಾಗುವಂತೆ ಹೊಸ ತರಂಗಗಳು ಏಳುತ್ತವೆ. +ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆದರೂ ಈ ಚಳುವಳಿಯ ಬಿಸಿ ಕ್ರೀಸ್ತುವರ ಕೇರಿಯತ್ತ ಸುಳಿಯಲಿಲ್ಲ. ವಿಶೇಷವಾಗಿ ಕ್ರೀಸ್ತುವರು ಇರುವಲ್ಲೆಲ್ಲ ವಿದೇಶಿ ಪಾದರಿಗಳು ಇದ್ದುದರಿಂದ ಈ ಇಟಲಿ, ಫ಼್ರೆಂಚ್, ಯುರೋಪಿಯನ್, ಗೋವಾ ಪಾದರಿಗಳು ಕ್ರೀಸ್ತುವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಂತೆ ನೋಡಿಕೊಂಡರು. ಹಾಗೆಯೇ ಕ್ರೀಸ್ತುವರಲ್ಲಿ ಅನಕ್ಷರಸ್ಥರು ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಚಳುವಳಿಗಳ ಕುರಿತು ಕೂಡ ಇವರು ವಿಚಾರ ಮಾಡಲಿಲ್ಲ. +ಬ್ರಿಟೀಷರು ಇಲ್ಲಿಯ ಜನರಿಗೆ ಆಡಳಿತವನ್ನು ವಹಿಸಿಕೊಟ್ಟು ಹೋಗುತ್ತಿರುವಾಗಲೇ ಶಿವಸಾಗರದ ಇಗರ್ಜಿ ಆಡಳಿತ ಗೋವೆಯ ಪ್ರಾವಿನ್ಶಿಯಲ್ ಅವರ ಕೈಯಿಂದ ಮೈಸೂರಿನ ಬಿಷಪ್ಪರ ಕೈಗೆ ಹಸ್ತಾಂತರಗೊಂಡಿತು. ನೀವು ಇದ್ದಲ್ಲಿಯೇ ಇರುತ್ತೀರೋ ಇಲ್ಲ ಗೋವೆಗೆ ಹಿಂತಿರುಗುತ್ತಿರೋ ಎಂದು ಗೋವೆಯ ಧರ್ಮಾಧಿಕಾರಿಗಳು ಇಲ್ಲಿದ್ದ ಗೋವೆಯ ಪಾದರಿಗಳಿಗೆ ಕೇಳಿದರು. ಕೆಲವರು ಇಲ್ಲಿಯೇ ಉಳಿದರು. ಕೆಲವರು ಗೋವೆಗೆ ಹಿಂತಿರುಗಿದರು. +ಮೈಸೂರಿನ ಸಭೆ ತಮಗೆ ಅಪರಿಚಿತ. ಈ ಸಭೆಗೆ ತಾನು ಹೊಸಬನಾಗುತ್ತೇನೆ. ಪರಕೀಯನಾಗುತ್ತೇನೆ. ಗೋವೆ ಇನ್ನೂ ಪೋರ್ತುಗಿಸರ ವಶದಲ್ಲಿಯೇ ಇದೆ. ಅಲ್ಲಿ ತಮಗೆ ಹೆಚ್ಚು ರಕ್ಷಣೆ ಇದೆ. ಸ್ವಾತಂತ್ರ್ಯಾನಂತರ ಇಲ್ಲಿಯ ಪರಿಸ್ಥಿತಿ ಹೇಗೋ ಎಂದೆಲ್ಲ ಯೋಚನೆ ಮಾಡಿದ ಪಾದರಿ ಮಸ್ಕರಿನಾಸ ಗೋವೆಗೆ ಹಿಂತಿರುಗುವ ತಮ್ಮ ನಿರ್ಧಾರವನ್ನು ಪ್ರಾವಿನ್ಶಿಯಲ್ ಅವರಿಗೆ ತಿಳಿಸಿ ಅಲ್ಲಿಂದ ಮುಂದಿನ ಆದೇಶ ಬರುವುದನ್ನು ಕಾಯತೊಡಗಿದರು. +ಶಿವಸಾಗರ ಬಹಳ ವೇಗವಾಗಿ ಬದಲಾವಣೆಯನ್ನು ಕಂಡಿತು. ಆಧುನಿಕ ಬದುಕಿಗೆ ಹೊರಳಿಕೊಂಡಿತು. ಜಾತಿಯ ಹೆಸರಿನ ಕೇರಿಗಳು, ಫ಼ಾತಿಮಾನಗರ, ಆಜಾದ ನಗರ, ಜೋಸೆಫ಼ ನಗರ ಎಂದೆಲ್ಲ ಪರಿವರ್ತನೆ ಹೊಂದಿದವು. ಜನರಲ್ಲಿ ಜಾತಿ, ಧರ್ಮ, ಒಳ ಪಂಗಡಗಳ ವ್ಯಾಮೋಹ ಹೋಗಲಿಲ್ಲವಾದರೂ ಈ ಬದಲಾವಣೆ ಒಂದು ರೀತಿಯಲ್ಲಿ ನಾಗರೀಕವಾಗಿ ಕಂಡಿತು. +ಊರಿನಲ್ಲಿ ಬ್ಯಾಂಕುಗಳು, ಸರಕಾರಿ ಕಛೇರಿಗಳು, ನರ್ಸಿಂಗ ಹೋಂಗಳು, ಶಾಲೆ, ಕಾಲೇಜುಗಳು, ವರ್ಕಶಾಪುಗಳು ಅಧಿಕಗೊಂಡದ್ದರಿಂದ ಮಂಗಳೂರು, ಕುಂದಾಪುರ, ಚಿಕ್ಕಮಗಳೂರಿನಿಂದ ಕ್ರೀಸ್ತುವರು ಅಧಿಕ ಸಂಖ್ಯೆಯಲ್ಲಿ ಬಂದರು. ಪ್ಲೇಗು, ಕಾಲರಾ ಮೂಲೋತ್ಪಾಟನೆ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಡಾಕ್ಟರ್ ರೇಗೋ ಬೇರೆ ಕಡೆಗೆ ವರ್ಗವಾಗಿ ಹೋಗಿದ್ದರು. ಅವರ್ ಜತೆ ಬಂದ ಚಾರ್ಲಿ, ವಿನ್ಸೆಂಟ್ ಕೂಡ ಊರು ಬಿಟ್ಟಿದ್ದರು. ಆದರೆ ಮ್ಯಾನೇಜರ ಜಾನ ಡಯಾಸ್ ಇಲ್ಲಿರುವಾಗಲೇ ನಿವೃತ್ತನಾಗಿ ಅವನಿಗೆ ಒಂದಿಷ್ಟು ಹಣ ಬಂದಿತ್ತು. ಅವನ ಹೆಂಡತಿ ಸಿಲ್ವಿಯಾ- +“ಶಿವಸಾಗರದಲ್ಲಿಯೇ ಇದ್ದು ಬಿಡೋಣ” ಎಂದು ಹಠ ಮಾಡಿದಳು. +ಜಾನ ಡಯಾಸನಿಗೆ ತನ್ನ ಊರಿಗೆ ಹೋಗಿ ಅಲ್ಲಿದ್ದ ಹಿರಿಯರ ಮನೆಯನ್ನು ಹೊಸದಾಗಿ ಕಟ್ಟಿಸಿ ಅಲ್ಲಿರಬೇಕು ಎಂಬ ಆಸೆಯಿತ್ತು. ಅವನ ತಂದೆಯೂ ಇದನ್ನೇ ಬಯಸುತ್ತಿದ್ದ. ಆದರೆ ಜಾನ್ ಡಯಾಸರ ಇಬ್ಬರು ತಮ್ಮಂದಿರು ಅಲ್ಲಿ ಇದ್ದುದರಿಂದ ಅವರಿಗೆ ಅನುಕೂಲವಾಗಿ ಬಿಡುತ್ತದೆ ಎಂದು ಸಿಲ್ವಿಯಾ- +“ನಾಕಾ ಅಬಾ…ಅಮಿಂ ಹಾಂಗಾರಾವ್ಯಾಂ” (ಬೇಡಪ್ಪ ನಾವು ಇಲ್ಲಿಯೇ ಇರೋಣ) ಎಂದು ಹಟಹಿಡಿದಳು. ಡಯಾಸ ಇಲ್ಲಿ ಮನೆಕೊಂಡ. ಅವನ ಮಗ ಜಾಕೋಬನಿಗೆ ಶ್ರೀ ಶಿವಸಾಗರ ಬ್ಯಾಂಕಿನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಆತ ಶಿವಸಾಗರದವನೇ ಆದ. +ಮಿರೋಣ್ ವಲೇರಿಯನ್ ಇದನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡ. ಮಗ ನಿವೃತ್ತನಾದ. ಐದಾರು ವರ್ಷಗಳ ನಂತರ ಆತ ತೀರಿಕೊಂಡು ಇಗರ್ಜಿಯ ಮಿರೋಣ್ ಜಾಗವನ್ನು ಮಗನಿಗೆ ಬಿಟ್ಟುಕೊಟ್ಟ. ಅವನು ಕೂಡ ಪಿಟೀಲು ಬಾರಿಸಬಲ್ಲವನಾಗಿದ್ದ. ಕೀರ್ತನೆ ಗಾಯನ ಬಲ್ಲವನಾಗಿದ್ದ. ಪಾದರಿಗಳ ವಿಶ್ವಾಸಗಳಿಸಿದ್ದ ಅವನಿಗೆ ಏನೂ ಕಷ್ಟವಾಗಲಿಲ್ಲ. +ಇಗರ್ಜಿಯ ಸುತ್ತ ಇದ್ದ ಕ್ರೀಸ್ತುವರ ಮನೆಗಳೂ ಮತ್ತೂ ದೂರ ಹಬ್ಬಿಕೊಂಡವು. ಸಿಮೋನನ ಮನೆಯ ಹಿಂದಿನ ಸಾಲು ಕೆಳಕೇರಿ ಎಂದೇ ಪ್ರಖ್ಯಾತವಾಗಿ ಮೊನ್ನೆ ಮೊನ್ನೆ ಫ಼ಾತಿಮಾ ನಗರ ಎಂಬ ಹೆಸರು ಪಡೆಯಿತು. ಇಲ್ಲಿಗೂ ಓರ್ವ ಗುರ್ಕಾರ ಬೇಕು ಎಂದು ಜನ ಹೇಳಿದ್ದರಿಂದ ಶಿವಸಾಗರಕ್ಕೆ ಬಂದು ಕೆಲವರ್ಷಗಳಾಗಿದ್ದ ಅಲೆಕ್ಸ ಪಿಂಟೋ ಫ಼ಾತಿಮಾ ನಗರದ ಗುರ್ಕಾರ ಆಗಿ ನೇಮಕಗೊಂಡಿದ್ದ. +ಜತೆಗೆ ಪಾದರಿ ಮಸ್ಕರಿನಾಸ ಬೇರೊಂದು ಯತ್ನ ಮಾಡಿದ್ದರು. ಶಿವಸಾಗರಕ್ಕೆ ಕ್ರೈಸ್ತ ಶಾಲೆಯೊಂದರ ಅವಶ್ಯಕತೆ ಇತ್ತು. ಕ್ರೈಸ್ತ ಮಕ್ಕಳು ಸರಕಾರಿ ಶಾಲೆಯಲ್ಲಿ ಓದತೊಡಗಿದ್ದರು. ಅಲ್ಲಿಯ ಶಿಕ್ಷಣ ಹೇಗೆ ಇರಲಿ ಕ್ರೈಸ್ತ ಮಕ್ಕಳಿಗೆ ದೊರಕಬೇಕಾದ ಧಾರ್ಮಿಕ ಶಿಕ್ಷಣ ಅಲ್ಲಿ ದೊರೆಯುತ್ತಿರಲಿಲ್ಲ. ಎಲ್ಲ ಹುಡುಗರ ಜತೆ ಸೇರಿ ಪಾಠ ಕಲಿಯುವುದು, ಪರೀಕ್ಷೆ ಪಾಸು ಮಾಡುವುದು, ಎಲ್ಲರ ಜೊತೆ ಒಂದಾಗಿ ಬೆರೆತು ಇವರು ಕಳೆದು ಹೋಗುತ್ತಿದ್ದರು. +ನಾಲ್ಕು ಏಳನೆಯ ತರಗತಿಯವರೆಗಾದರೂ ಕ್ರೈಸ್ತ ಮಕ್ಕಳು ತಮ್ಮ ಸುಪರ್ದಿನಲ್ಲಿದ್ದರೆ ಚೆಂದ ಎಂದು ಇವರಿಗನಿಸಿತು. ಹೀಗೆಂದೇ ಮಂಗಳೂರಿನ ಒಂದು ವಿದ್ಯಾಸಂಸ್ಥೆಗೆ ಕಾಗದ ಬರೆದರು ಪಾದರಿ ಮಸ್ಕರಿನಾಸ. ಅಲ್ಲಿಯ ತೆರೇಜಾ ವಿದ್ಯಾ ಸಂಸ್ಥೆ ಶಿವಸಾಗರದಲ್ಲಿ ಒಂದು ಕಾನ್ವೆಂಟ್ ತೆರೆಯಲು ಮುಂದೆ ಬಂದಿತು. ಕಾನ್ವೆಂಟ್ ಕಟ್ಟಡ ಕಟ್ಟಲು ಒಂದು ನಿವೇಶನ ದೊರಕಿಸಿಕೊಡಬೇಕು ಎಂಬ ನಿಬಂಧನೆ ಹಾಕಲು ಪಾದರಿ ಊರವರ ಒಪ್ಪಿಗೆ ಪಡೆದು ಇಗರ್ಜಿ ಮುಂದಿನ ಮೈದಾನವನ್ನು ಕಾನ್ವೆಂಟಿಗೆ ಬಿಟ್ಟು ಕೊಡಲು ಒಪ್ಪಿಕೊಂಡರು. +ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಸಿಸ್ಟರುಗಳ ಒಂದು ತಂಡ ಇಲ್ಲಿಗೆ ಬಂದು ಇಳಿಯಲು ಅನೂಕೂಲವಾಗುವಂತೆ ಇಗರ್ಜಿಯ ಮುಂದೆಯೇ ಕಾನ್ವೆಂಟ್ ಕಟ್ಟಡ ಎದ್ದು ನಿಂತಿತು.ಹಿಂದೆಯೇ ಸಿಸ್ಟರುಗಳು ಬಂದರು. ತರಗತಿಗಳೂ ಆರಂಭವಾದವು. +ಕ್ರೀಸ್ತುವರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಲ್ಲದೆ ಬೇರೆ ಶಾಲೆಗಳಿಗೆ ಕಳುಹಿಸಬಾರದು ಎಂದು ಪಾದರಿ ಆದೇಶ ಹೊರಡಿಸಿದರು. ಮಕ್ಕಳಿಗೆ ಜ್ಞಾನೋಪದೇಶ ಹೇಳಿ ಕೊಡುವ ಹೊಣೆ ಸಿಸ್ಟರುಗಳದಾಯಿತು. ಸಂಜೆ ಶಾಲೆ ಬಿಟ್ಟ ತಕ್ಷಣ ಸಾಲು ಸಾಲಾಗಿ ಕ್ರೀಸ್ತುವರ ಮಕ್ಕಳನ್ನು ಶಾಲೆಯಿಂದ ಇಗರ್ಜಿಗೆ ಕರೆತಂದು ಅಲ್ಲಿ ಪ್ರಾರ್ಥನೆ ಮಾಡಿ- +“ಜೂಜೆ ಬಾಪ ಪಾವತುಂ ಅಮ್ಕಾಂ” (ತಂದೆ ಜೂಜೆಯೆ ನಮ್ಮನ್ನು ಕಾಪಾಡು) ಎಂದು ಮಕ್ಕಳು ಸಾಮೂಹಿಕವಾಗಿ ಹಾಡಿ ಮನೆಗಳಿಗೆ ಹೋಗುವ ಪದ್ಧತಿ ರೂಢಿಗೆ ಬಂದಿತು. +ಇಷ್ಟು ಹೊತ್ತಿಗೆ ಮೈಸೂರಿನಿಂದ ಹೊಸ ಪಾದರಿಯೋರ್ವರನ್ನು ಶಿವಸಾಗರಕ್ಕೆ ವರ್ಗ ಮಾಡಲಾಯಿತು. ಅವರು ಬರುವುದಕ್ಕೂ ಮೊದಲು ಶಿವಸಾಗರದಿಂದ್ ಗೋವೆಗೆ ತಿರುಗಿ ಬರುವಂತೆ ಪಾದರಿ ಮಸ್ಕರಿನಾಸರಿಗೆ ಗೋವೆಯ ಪ್ರಾವಿನ್ಶಿಯಲ್ ಅವರಿಂದ ಆದೇಶ ಬಂದಿತು. ಗೋವೆಯ ಪೊಂಡಾದ ಇಗರ್ಜಿಗೆ ಅವರನ್ನು ವರ್ಗ ಮಾಡಲಾಗಿತ್ತು.” ನೀನೂ ನನ್ನ ಜತೆ ಹೊರಡು” ಎಂದರು ಪಾದರಿ ಫ಼ರಾಸ್ಕನಿಗೆ. ಅವನ ಹೆಂಡತಿ ರಜೀನಾ ಮಗಳು ಎಲಿಜಬೆತ್ ಅವರ ಜತೆ ಹೊರಡಬೇಕಿತ್ತಲ್ಲ. +ಊರ ಜನ ಇವರನ್ನು ಪ್ರೀತಿಯಿಂದಲೇ ಬೀಳ್ಕೋಟ್ಟರು. +-೬- +ಮೈಸೂರಿನಿಂದ ಬರಬಹುದಾದ ಹೊಸ ಪಾದರಿಗೆ ಜನ ಕಾದರು. ಅವರಂತೂ ಬರಲಿಲ್ಲ. ಇಲ್ಲಿ ಸಿಸ್ಟರುಗಳು ಇದ್ದುದರಿಂದ ಅವರು ದಿನನಿತ್ಯ ಪೂಜೆ ಕೇಳಿ ದಿವ್ಯ ಪ್ರಸಾದವನ್ನು ಸ್ವೀಕರಿಸಲೇಬೇಕಾಗಿದ್ದುದರಿಂದ ಶಿವಸಾಗರದ ಹತ್ತಿರದಲ್ಲಿಯೇ ಇದ್ದ ತೀರ್ಥಪುರದ ಪಾದರಿ ಕೆಲ ದಿನ ಬಂದು ಇಲ್ಲಿ ಇದ್ದುದಾಯ್ತು. ನಂತರ ಒಂದು ದಿನ ಇಗರ್ಜಿಯ ಗಂಟೆ ಸದ್ದು ಮಾಡಿ- +“ಹೊಸ ಪಾದರಿ ಬಂದರು” ಎಂಬ ಸಂತಸದ ಸುದ್ದಿಯನ್ನು ಊರ ಜನರಿಗೆ ತಿಳಿಸಿತು. ತುಂಬಾ ವಯಸ್ಸಾದ , ನಿವೃತ್ತಿಗೆ ಒಂದು ಒಂದೂವರೆ ವರುಷವಿರುವ ಪಾದರಿ ಲಾರೆಟ್ಟೋ ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡರು. +ಪಾದರಿ ಲಾರೆಟ್ಟೋ ನಿಧಾನ ಎಂದರೆ ನಿಧಾನ. ಪೂಜೆ, ಪ್ರವಚನ, ದಿವ್ಯ ಪ್ರಸಾದ ನೀಡುವುದರಲ್ಲೂ ನಿಧಾನ. ಮಾತಿನಲ್ಲೂ ಅಷ್ಟೇ. ದೇವರ ಪೀಠವನ್ನೇರಿ ಪೂಜೆಗೆ ತೊಡಗಿದರಂತೂ ಹೊರಗಿನ ಪ್ರಪಂಚವನ್ನೇ ಮರೆತುಬಿಡುತ್ತಿದ್ದರು. ಬಗ್ಗಿ ಪವಿತ್ರ ಪುಸ್ತಕವನ್ನು ಹತ್ತು ಬಾರಿ ಮುತ್ತಿಡುತ್ತಿದ್ದರು. ದಿವ್ಯ ಪ್ರಸಾದವನ್ನು ಪಾದರಿಯೇ ಸ್ವೀಕರಿಸಬೇಕಾಗಿದ್ದರಿಂದ ಈ ಕಾರ್ಯಕ್ಕೆ ಕಡಿಮೆ ಎಂದರೆ ಐದು ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರವಚನಕ್ಕೆ ನಿಂತವರು ಕ್ರಿಸ್ತ ಪ್ರಭುವಿನ ಮಾತುಗಳನ್ನು ನುಡಿಯುತ್ತ ಗದ್ಗದಿತರಾಗುತ್ತಿದ್ದರು. ಅವರ ದನಿ ನಡುಗುತ್ತಿತ್ತು. ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಮಾತು ನಿಲ್ಲಿಸಿ, ಕೈನ ಉದ್ದ ತೋಳುಗಳಲ್ಲಿ ಇರಿಸಿದ ಕರವಸ್ತ್ರ ತೆಗೆದು ಕಣ್ಣೊರೆಸಿಕೊಳ್ಳುತ್ತಿದ್ದರು. +ಪಾದರಿ ಲಾರೆಟ್ಟೋ ಇಗರ್ಜಿ ಹಾಗೂ ಬಂಗಲೆ ಈ ಎರಡನ್ನೂ ಬಿಟ್ಟು ಹೊರ ಬರಲಿಲ್ಲ. ಇಗರ್ಜಿಯ ಎಲ್ಲ ವ್ಯವಹಾರ ವಹಿವಾಟನ್ನು ಗುರ್ಕಾರ ಸಿಮೋನ, ಗುರ್ಕಾರ ಪಿಂಟೋ, ಮಿರೋಣ್ ಡಯಾಸ್ ನಡೆಸಿಕೊಂಡು ಹೋದರು. ಹಿಂದಿನಿಂದ ನಡೆದುಕೊಂಡು ಬಂದುದೆಲ್ಲ ಹಾಗೆಯೇ ಮುಂದುವರೆಯಿತು. +ಲಾರೆಟ್ಟೋ ಬಂದ ಒಂದೂವರೆ ವರ್ಷಕ್ಕೆ ಅವರಿಗೆ ಅಲ್ಲಿಂದ ವರ್ಗವಾಯಿತು. ನಂತರ ಇನ್ನೂ ಕೆಲವರು ಊರಿಗೆ ಪಾದರಿಗಳಾಗಿ ಬಂದರು. ಪಾದರಿ ಫ಼ರ್ನಾಂಡಿಸ್, ಪಾದರಿ ಲೋಪಿಸ್, ಪಾದರಿ ಪಿಂಟೋ ಎರಡು ಮೂರು ವರ್ಷವಿದ್ದು ಕ್ರೀಸ್ತುವರ ಆಧ್ಯಾತ್ಮಿಕ ಬೇಕು ಬೇಡಗಳನ್ನು ಪೂರೈಸಿ ಹೋದರು. +ಊರು ಕೂಡ ಬೆಳೆಯಿತು. ಹಿರಿಯರು ಮತ್ತೂ ಹಿರಿಯರಾದರು. ಕಿರಿಯರಿಗೆ ವಯಸ್ಸಾಗಿ ಮದುವೆಯಾಗಿ ಮಕ್ಕಳಾದವು. ಕ್ರೀಸ್ತುವರ ಸಂಖ್ಯೆಯೂ ಅಧಿಕವಾಯಿತು. ಪಾದರಿ ಪಿಂಟೋ ವರ್ಗವಾಗಿ ಹೋದ ಮಾರನೇ ದಿನ ಒಂದು ಕರಿಕಾರು ಇಗರ್ಜಿಯ ಬಳಿ ಬಂದು ನಿಂತಿತು. ಗಡ್ಡ, ಮೀಸೆ ಇಲ್ಲದ, ಬೋಳು ಮುಖದ ಕರಿ ಪ್ಯಾಂಟು, ಬಣ್ಣದ ಶರಟಿನ, ಕಪ್ಪು ಕನ್ನಡಕ ಧರಿಸಿದ ಪಾದರಿ ಸಿಕ್ವೇರಾ ಕಾರಿನಿಂದ ಇಳಿದಾಗ ಅವರ ದಾರಿ ಕಾಯುತ್ತ ನಿಂತ ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮುಂದೆ ಧಾವಿಸಿ- +“ಬ್ಲೆಸ್ ಮಿ ಫ಼ಾದರ್” ಎಂದು ಕೈಮುಗಿದಾಗ ಪಾದರಿ ಸಿಕ್ವೇರಾ ಕಣ್ಣುಗಳು ಮಿಂಚಿದವು. +ಶಿವಸಾಗರಕ್ಕೆ ಮತ್ತೂ ಓರ್ವ ಪಾದರಿಗಳು ಬಂದರೆಂದು ಗಂಟೆ ಢಣ ಢಣಿಸ ತೊಡಗಿತು. +ಊರಿಗೆ ಬಂದ ಈ ಪಾದರಿ ಮಾತ್ರ ನಮ್ಮವರೇ ಆಗಿದ್ದರು. ಅವರ ಬಣ್ಣ, ಮುಖ ಚಹರೆ, ಮಾತಿನ ರೀತಿ ದೇಸೀಯವಾಗಿತ್ತು. ಸ್ಥಳಿಯ್ರೇ ಸಮಿನರಿಯಲ್ಲಿ ಶಿಕ್ಷಣ ಪಡೆದು ಪಾದರಿಗಳಾಗಿ ಜನರ ದೇವರ ಸೇವೆ ಮಾಡಲು ಮುಂದಾಗಿದ್ದರು. ಪಿಂಟೋ, ಡಯಾಸರಂಥವರಿಗೆ ಇದು ಅಪಾರ ಸಂತಸದ ವಿಷಯವಾಯಿತು ಕೂಡ. +* +* +* +ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ್ ಪಿಂಟೋ ಬಹಳ ವರ್ಷ ಮುಂಬಯಿಯಲ್ಲಿದ್ದ. ಮಧ್ಯ ರೈಲ್ವೆ ವರ್ಕಶಾಪಿನಲ್ಲಿ ಫ಼ೋರಮನ್ ಹುದ್ದೆಯಲ್ಲಿ ಒಳ್ಳೆಯ ಸಂಬಳ ಇತ್ಯಾದಿ ಪಡೆಯುತ್ತ ಉತ್ತಮ ಮಟ್ಟದಲ್ಲಿಯೇ ಅವನಿದ್ದ. ವರ್ಕಶಾಪಿನಿಂದ ಕೆಲವೊಂದು ವಸ್ತುಗಳನ್ನು ಹೊರಗೆ ಸಾಗಿಸುವ ವಿಷಯದಲ್ಲಿ ಕೆಲವರೊಂದಿಗೆ ಮನಸ್ತಾಪ ಬೆಳೆಸಿಕೊಂಡ. ಅವರು ಸ್ಟೀಲು, ಕಬ್ಬಿಣ ಬಿಡಿ ಭಾಗಗಳನ್ನು ಯಾರಿಗೂ ಕಾಣದ ಹಾಗೆ ಹೊರಗೆ ತೆಗೆದುಕೊಂಡು ಹೋಗುವಾಗ ಈತ ಸೆಕ್ಯುರಿಟಿಯವರಿಗೆ ತಿಳಿಸಿ ಅವರು ಸಿಕ್ಕಿಬೀಳುವಂತೆ ಮಾಡಿದ. ಅವರು ಇವನ ಮೇಲೆ ಕಣ್ಣಿಟ್ಟು ಇವನನ್ನು ಮಾಲು ಸಹಿತ ಹಿಡಿಯುವ ಯತ್ನ ಮಾಡಿದರು. ಇದು ಕ್ರಮೇಣ ಜಗಳ ಮಾರಾಮಾರಿಗೆ ಕಾರಣವಾಗಿ ಇನ್ನು ಮುಂಬಯಿಯಲ್ಲಿ ಇದ್ದರೆ ತನ್ನ ಜೀವನಕ್ಕೇ ಅಪಾಯ ಎಂಬುದು ಖಚಿತವಾಗಿ ಅಲೆಕ್ಸ ಮುಂಬಯಿ ಬಿಡುವ ವಿಚಾರ ಮಾಡಿದ. +ಮೂರು ತಿಂಗಳ ರಜೆ ಹಾಕಿ ಹೆಂಡತಿಯ ಜತೆ ಶಿವಸಾಗರಕ್ಕೆ ಬಂದ ಅಲೆಕ್ಸ ಕಳೆಕೇರಿಯ ವಿನ್ಸೆಂಟ್ ಮನೆಯಲ್ಲಿ ಉಳಿದ. ವಿನ್ಸೆಂಟ್ ಇವನ ಹೆಂಡತಿಯ ತಮ್ಮ. ಮುಂಬಯಿ ಬಿಡಬೇಕು ಅನ್ನುವುದಂತೂ ನಿರ್ಧಾರವಾಗಿತ್ತು. ಮುಂದೆ ಎಲ್ಲಿ ತಳವೂರುವುದು ಎಂಬುದು ನಿರ್ಧಾರವಾಗಿರಲಿಲ್ಲ. ಶಿವಸಾಗರ ಅದೇ ಬೆಳವಣಿಗೆಯನ್ನು ಹೊಂದುವಂತಹ ನಗರದಂತೆ ಅವನಿಗೆ ಕಂಡಿತು. ಯಾವ ಗಲಾಟೆಯೂ ಇಲ್ಲ, ಗೊಂದಲವಿಲ್ಲ, ಸಿಟಿ ಬಸ್ಸು ಹಿಡಿ, ಕ್ಯೂ ನಿಲ್ಲು, ನೀರಿಗಾಗಿ ಪರದಾಡು, ರೇಷನ್ನಿಗೆ ಓಡಾಡು, ಸೀಮೆ ಎಣ್ಣೆ ಸಿಗುವುದಿಲ್ಲ ಎಂಬ ತಕರಾರಿಲ್ಲ. ಗೂಂಡಾಗಳ ಕಾಟವಿಲ್ಲ. ಇಲ್ಲಿಯೇ ಏಕೆ ಉಳಿಯಬಾರದು ಎಂದು ಯೋಚಿಸಿದ. +ಪೇಟೆ ಬೀದಿಯಲ್ಲಿ ಒಂದು ಮಳಿಗೆಕೊಂಡು ವಾಹನಗಳ ಬಿಡಿಭಾಗಗಳ ಅಂಗಡಿ ಇಟ್ಟರೆ ವ್ಯಾಪಾರವಾಗಲಾರದೆ ಅನಿಸಿತು. +ವಿನ್ಸಂಟ್ ಹತ್ತಿರ ಮಾತನಾಡಿದ ವಲೇರಿಯನ್ ಡಯಾಸ್, ಜಾನ್ ಡಯಾಸ್, ಚಾರ್ಲಿ ಮೊದಲಾದವರ ಜತೆ ಮಾತನಾಡಿ ನೋಡಿದ. ಮುಂಬಯಿಯಿಂದ ಈತ ಬಂದಿದ್ದಾನೆಂದೇ ಜಾನ್ ಡಯಾಸ್ ಇವನನ್ನು ರಾತ್ರಿ ಊಟಕ್ಕೆ ಕರೆದಿದ್ದ. ಶಿವಮೊಗ್ಗದಿಂದ ಸಾಕು ಹಂದಿಯ ಮಾಂಸ ತರಿಸಿದ್ದ. ಅಲೆಕ್ಸ ತಾನೇ ವಿಸ್ಕಿ ತೆಗೆದುಕೊಂಡು ಹೋಗಿದ್ದ. +“ಘೇ ಸಾಯಬಾ..ಘೇ..ಇಲ್ಲೆ ಸೆಂ ಘೇ” (ತೊಕೋಳಯ್ಯ ಸಾಹೇಬ ತೊಕೋ..ಸ್ವಲ್ಪ ತೊಕೋ) ಎಂದು ಎಲ್ಲರ ಗ್ಲಾಸಿಗೆ ಒಂದಿಷ್ಟು ವಿಸ್ಕಿ ಸುರಿದು ಅಲೆಕ್ಸ್ ತನ್ನ ವಿಚಾರ ಮುಂದಿಟ್ಟ. +“ನೀನು ಬಾರಪ್ಪ ಇಲ್ಲಿಗೆ..ಇಲ್ಲಿ ಎಲ್ಲ ಅನುಕೂಲ ಇದೆ..ಊರು ಸಣ್ಣದು..ಜನ ಸ್ವಲ್ಪ ಹಿಂದುಳಿದೋರು..ಇಗರ್ಜಿನಲ್ಲಿ ಇಂಗ್ಲೀಷ ಪೂಜೆ ಇಲ್ಲ ಅನ್ನೋದೊಂದು. ನಮ್ ಜನ ಅನಸಿವಿಲೈಸ್ಡ್ ಅನ್ನೋದು ಇನ್ನೊಂದು. ಈ ಕೆಲವು ಕಾರಣಗಳನ್ನು ಬಿಟ್ರೆ ಊರು ಒಳ್ಳೇದು.” ಎಂದ ಜಾನ್ ಡಯಾಸ. ಉಳಿದವರೂ ಇದೇ ಅಭಿಪ್ರಾಯ ಪಟ್ಟರು. +ಅಲೆಕ್ಸ ತರಾತುರಿಯಲ್ಲಿ ಸೈಕಲ್ ನಾಗಪ್ಪನ ಅಂಗಡಿ ಪಕ್ಕದಲ್ಲಿ ಒಂದು ಮಳಿಗೆ ಕೊಂಡ. ತಾನೇ ಶಿವಮೊಗ್ಗ, ಹುಬ್ಬಳ್ಳಿಗಳಿಗೆ ಹೋಗಿ ಬೇಕಾದ ಸಾಮಾನುಗಳ ಸರಬರಾಜಿಗೆ ವ್ಯವಸ್ಥೆ ಮಾಡಿದ. ಮುಂಬಯಿಗೆ ಹೋಗಿ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ. ನಾಲ್ಕು ದಿನ ಅಲ್ಲಿ ಉಳಿದು ಪೆನ್ಶನ್ ಇತ್ಯಾದಿ ಬೇಗನೆ ಬರುವಂತೆ ಮಾಡಿದ. ಹೆಂಡತಿ ಮಕ್ಕಳ ಜತೆ ರೈಲು ಹತ್ತಿ ಶಿವಸಾಗರಕ್ಕೆ ಬಂದಿಳಿದ. +ಒಂದು ಶುಕ್ರವಾರ ಪೇಟೆ ಬೀದಿಯಲ್ಲಿ “ಪಿಂಟೋ ಆಟೋಸ್ಪೇರ್ಸ್” ಎಂಬ ಅಂಗಡಿ ತೆರೆದು ಪಾದರಿ ಮಸ್ಕರಿನಾಸರಿಂದ ಅಂಗಡಿ ಉದ್ಘಾಟನೆ ಇರಿಸಿಕೊಂಡ ಪಾದರಿಗಳು ಅಂಗಡಿಯನ್ನು ತಂದಿರಿಸಿದ ವಾಹನ ಬಿಡಿ ಭಾಗಗಳನ್ನು ಪವಿತ್ರ ಜಲದ ಸಿಂಪಡನೆಯಿಂದ ಮಂತ್ರಿಸಿ ದೇವರ ಪ್ರಾರ್ಥನೆ ಮಾಡಿದರು. ಪೇಟೆ ಬೀದಿಯವರು, ಕರಿಕಾಲಿನವರು ಡಾ.ರೇಗೋ, ಜಾನ ಡಯಾಸ್, ವಲೇರಿಯನ್ ಮೊದಲಾದವರು ಬಂದು ಅಲೆಕ್ಸಿಯ ಕೈ ಕುಲಕಿದರು. ಅಂಗಡಿ ಬೋನ, ಗುರ್ಕಾರ, ಸಿಮೋನ, ಪಾಸ್ಕೋಲ ಮೇಸ್ತ್ರಿ ಈ ಮೂವರನ್ನು ಮಾತ್ರ ಆತ ಕರೆದ. ಏಕೋ ಉಳಿದವರು ಅವನ ನೆನಪಿಗೆ ಬರಲಿಲ್ಲ. +ಅವನು ಮುಂಬಯಿ ಬಿಡಲು ಮತ್ತೂ ಒಂದು ಕಾರಣವೆಂದರೆ ಅವನ ಮೂರು ಜನ ಹೆಣ್ಣು ಮಕ್ಕಳು. ಗಂಡು ಮಕ್ಕಳಾಗಿದ್ದರೆ ಅವರ ವಿದ್ಯಾಭ್ಯಾಸ, ಮುಂದಿನ ಕೆಲಸ ಎಂದೆಲ್ಲ ಆತ ಮುಂಬಯಿಯಿಯಲ್ಲಿಯೇ ಇರಬೇಕಾಗುತ್ತಿತ್ತು. ಆದರೆ ತನ್ನ ಮೂವರೂ ಹೆಣ್ಣು ಮಕ್ಕಳು ಏನೆಂದರೂ ನಾಳೆ ಗಂಡನ ಮನೆಗೆ ಹೋಗುವವರು. ಅವರ ಹಣೆಯಲ್ಲಿ ಯಾವ ಊರು ಬರೆದಿದೆಯೋ ಅಂತು ಒಳ್ಳೆಯ ಕಡೆ ನೋಡಿ ಮದುವೆ ಮಾಡಿ ಕಳುಹಿಸಲು ಮುಂಬಯಿಯೇನು ಶಿವಸಾಗರವೇನು ಎಂದು ಆತ ಇಲ್ಲಿ ಬಂದ. ವಿನ್ಸೆಂಟ್ಯ್ ಅವನಿಗಾಗಿ ಒಂದು ಮನೆಯನ್ನು ತಾನಿರುವ ಕೇರಿಯಲ್ಲಿಯೇ ನೋಡಿದ. ಕೆಲವೇ ದಿನಗಳಲ್ಲಿ ಅಲೆಕ್ಸ್ ಬಲಾಢ್ಯನಾದ. ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರವಿತ್ತು. ಊರಿನಲ್ಲಿ ಗೌರವವಿತ್ತು. ಕೆಳಕೇರಿಯಲ್ಲಿ ಕ್ರೀಸ್ತುವರ ಸಂಖ್ಯೆ ಅಧಿಕವಾಗಿ ಅವರಿಗೊಬ್ಬ ಗುರ್ಕಾರ ಬೇಕೆನಿಸಿದಾಗ ಪಾದರಿ ಮಸ್ಕರಿನಾಸ ಅಲೆಕ್ಸನನ್ನು ಗುರ್ಕಾರ ಎಂದು ನೇಮಿಸಿದರು. +ಪಾದರಿ ಸಿಕ್ವೇರಾ ಬಂದ ನಂತರವಂತೂ ಅಲೆಕ್ಸ ಅರ್ಧ ಊರನ್ನೇ ಗೆದ್ದುಕೊಂಡ. +ಮೈಸೂರು ನಗರದಲ್ಲಿದ್ದ ಸಿಕ್ವೆರಾ ಅವರಿಗೆ ಶಿವಸಾಗರಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸಿತು. ಅವರಿಗಿದ್ದ ಒಂದು ಧೈರ್ಯವೆಂದರೆ ಇಲ್ಲಿ ತಮ್ಮ ಮಂಗಳೂರು ಭಾಷೆ ಮಾತನಾಡುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದುದು. ಮೈಸೂರಿನಲ್ಲಿ ತಮಿಳರು, ತೆಲುಗರು, ಕನ್ನಡಿಗರು ತುಂಬಿಕೊಂಡಿದ್ದರು. ಇವರು ಕೂಡ ಮನೆಯಲ್ಲಿ ಇಂಗ್ಲೀಷ ಮಾತನಾಡುತ್ತ ಯುರೋಪಿಯನ್ನರ ಒಂದು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಯತ್ನದಲ್ಲಿದ್ದರು. +ಅಲೆಕ್ಸ್ ಅವರಿಗೆ, ಶಿವಸಾಗರದ ಕ್ರೀಸ್ತುವರೆಲ್ಲರ ಪರಿಚಯ ಮಾಡಿಕೊಟ್ಟ. ಅವರ ವೃತ್ತಿ ಸ್ಥಾನ ಮಾನಗಳು, ಅವರ್ ಸ್ವಭಾವ, ಇಗರ್ಜಿಯ ಬಗ್ಗೆ ದೈವ ಭಕ್ತಿಯ ಬಗ್ಗೆ ಅವರಿಗಿರುವ ಆಸ್ಥೆ, ಆಸಕ್ತಿ ಹೀಗೆ ಸಮಸ್ತ ವಿಷಯಗಳೂ ಕೆಲವೇ ದಿನಗಳಲ್ಲಿ ಪಾದರಿ ಸಿಕ್ವೇರಾ ಅವರಿಗೆ ಲಭ್ಯವಾದವು. ಇಗರ್ಜಿಯ ಆಡಳಿತ ಅಲ್ಲಿಯ ಪದ್ಧತಿಗಳನ್ನು ಸಿಕ್ವೇರಾ ಪರಿಚಯ ಮಾಡಿಕೊಂಡರು. ಕ್ರೀಸ್ತುವರ ಮನೆಗಳಿಗೆ ಅವರು ಭೇಟಿಕೊಟ್ಟರು. ಜನರಲ್ಲಿಯ ದೈವ ಭಕ್ತಿ ದೈವ ಭೀತಿ ಕಂಡು ಅವರಿಗೆ ಸಂತಸವಾಯಿತು. ಇಂತಹ ಮುಗ್ಧತೆಯನ್ನು ಅವರು ಮೈಸೂರಿನಲ್ಲಿ ಕೂಡ ಕಂಡಿರಲಿಲ್ಲ. ಜನ ಪಾದರಿಗಳೆಂದರೆ ತುಂಬಾ ಗೌರವ ನೀಡುತ್ತಾರೆ ಎಂಬ ವಿಷಯ ಕೂಡ ಅವರ ಗಮನಕ್ಕೆ ಬಂದಿತು. ಆದರೆ ವೈಜಿಣ್ ಕತ್ರೀನ್ ತನ್ನ ಮನೆಯ ಜಗಲಿಯ ಮೇಲೆ ಕುಳಿತವಳು ಬಾಗಿಲಿಗೆ ಬಂದ ಸಿಕ್ವೇರಾ ಅವರನ್ನು ನೋಡಿ ಎದ್ದು ನಿಲ್ಲಲಿಲ್ಲ. ಕೈ ಮುಗಿಯಲಿಲ್ಲ. ಗುರ್ಕಾರ ಸಿಮೋನ ಹೇಳಿದಾಗ ಆಕೆ ಧಡ ಬಡಸಿ ಎದ್ದಳು. “ಪದ್ರಾಬ ಬೆಸಾಂವಂ ದಿಯಾ” ಎಂದು ಕೈಮುಗಿದಳು. ನಂತರ ತಾನು ಏನೋ ಒಂದು ತಪ್ಪು ಮಾಡಿದೆ ಎಂಬಂತೆ- +“..ಪದ್ರಾಬ ನೀವು ಲೋಬ್ ಹಾಕಿಕೊಂಡಿರಲಿಲ್ಲ ನೋಡಿ..ನನಗೆ ಗೊತ್ತಾಗಲಿಲ್ಲ..” ಎಂದು ತನ್ನ ವರ್ತನೆಗೆ ವಿವರಣೆ ನೀಡಿದಳು. +ಗುರ್ಕಾರ ಸಿಮೋನ ಕೂಡ ತನ್ನನ್ನು ಏನೋ ಒಂದು ರೀತಿಯಲ್ಲಿ ನೋಡುತ್ತಿದ್ದವನು. +“ಪದ್ರಾಬಾ ಒಂದು ವಿಷಯ” ಎಂದ. +“ಏನು?” ಎಂದು ಸಿಕ್ವೇರಾ ಅವನ ಮುಖ ನೋಡಿದರು. +“ನಮ್ಮ ಜನ ಉದ್ದ ನಿಲುವಂಗಿ, ಗಡ್ಡ, ಮೀಸೆ, ಕುತ್ತಿಗೆಯಲ್ಲಿ ಶಿಲುಬೆ, ಸೊಂಟಕ್ಕೆ ಗರ್ಡಲ್ ಇಲ್ಲವೆಂದರೆ ಪಾದರಿಗಳನ್ನು ಗುರುತಿಸುವುದಿಲ್ಲ..” ಎಂದು ಅಂಜುತ್ತ ಅಳುಕುತ್ತ ಹೇಳಿದ್ದು ಪಾದರಿ ಸಿಕ್ವೇರಾ ಅವರ ಮನಸ್ಸಿಗೆ ತಾಗಿತು. +ನಗರ ಪ್ರದೇಶಗಳಲ್ಲಿ ಆಗಲೇ ಪಾದರಿಗಳು ನಿಲುವಂಗಿ ತೊರೆದಿದ್ದರು. ಪ್ಯಾಂಟು, ಶರಟುಗಳು ಚಾಲ್ತಿಗೆ ಬಂದಿದ್ದವು. ಮುಖವನ್ನು ನುಣ್ಣಗೆ ಬೋಳಿಸಿಕೊಂಡು ಪೌಡರ್ ಸ್ನೋ, ಹಚ್ಚಿಕೊಳ್ಳುತ್ತಿದ್ದರು. ಪೂಜೆಯ ಸಮಯದಲ್ಲಿ ಧಾರ್ಮಿಕ ಕೆಲಸ ಮಾಡುವಾಗ ಮಾತ್ರ ನಿಲುವಂಗಿ ಇತ್ಯಾದಿ ತೊಡುತ್ತಿದ್ದರು. ಮೊದಲು ಪಾದರಿಗಳ ಈ ವರ್ತನೆಯನ್ನು ಅಲ್ಲಿಯ ಜನ ಪ್ರತಿಭಟಿಸಿದರು. ಆದರೆ ಎಲ್ಲ ಪಾದರಿಗಳೂ ಹೀಗೆಯೇ ಬದಲಾದಾಗ ಜನ ಅನಿವಾರ್ಯವಾಗಿ ಇದಕ್ಕೆ ಹೊಂಡಿಕೊಂಡರು. +ಇಲ್ಲೂ ಕೂಡ ಕೆಲ ದಿನ ಬೇಕಾಗಬಹುದು ಅಂದುಕೊಂಡರು ಸಿಕ್ವೇರಾ. ಸಿಮೋನನ ಮಾತಿಗೆ ಅವರು- +“ಹೌದೇನು?” ಎಂದು ಕೇಳಿ ನಕ್ಕರು. +ನಿಧಾನವಾಗಿ ಇಗರ್ಜಿಯಲ್ಲಿ ಕೆಲ ಬದಲಾವಣೆಗಳು ಆದವು. ಮುಷ್ಠಿ ಅಕ್ಕಿಯನ್ನು ಇನ್ನು ಮುಂದೆ ತರಬೇಡಿ ಎಂದರು. ತರಕಾರಿ ಇತ್ಯಾದಿ ತಂದು ಹರಾಜು ಹಾಕುವ ಪದ್ಧತಿ ನಿಂತು ಹೋಯಿತು. ಕಾಣಿಕೆ ಡಬ್ಬಿಯನ್ನು ಜನರ ಬಳಿಗೇನೆ ಕೊಂಡೊಯ್ಯುವುದು ನಿಂತು ಬಿಟ್ಟಿತು. ಇಗರ್ಜಿಯ ನಡುವೆ ಒಂದು ಮೇಜು ಇರಿಸಿ ಅದರ ಮೇಲೆ ಶಿಲುಬೆಗೇರಿದ ಏಸುವಿನ ಪ್ರತಿಮೆ ನಿಲ್ಲಿಸಲಾಯಿತು. ಪೂಜೆಯ ನಂತರ ಜನಬಂದು ಈ ಪ್ರತಿಮೆಯ ಪಾದಕ್ಕೆ ಮುತ್ತಿಟ್ಟು ಮುಂದೆ ಇಟ್ಟಿರುತ್ತಿದ್ದ ಗಾಜಿನ ತಟ್ಟೆಯಲ್ಲಿ ಕಾಣಿಕೆ ಹಾಕುವ ಪದ್ಧತಿ ಜಾರಿಗೆ ಬಂದಿತು. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ +ನೆನಕೆಗಳು… ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ – ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ […] +“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” “ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” “ಹ್ಞೂಂ ಬಾ, […] +“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_386.txt b/Kannada Sahitya/article_386.txt new file mode 100644 index 0000000000000000000000000000000000000000..3f02e3fd55dbc1e6f534d67c2b8b33468de44d94 --- /dev/null +++ b/Kannada Sahitya/article_386.txt @@ -0,0 +1,162 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ . ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ ಆಚೆ ಕುಪ್ಪಣ್ಣಭಟ್ಟರ ತೋಟವಾದರೆ ಈಚೆ ಅಪ್ಪಣ್ಣಭಟ್ಟರ ತೋಟ. ಇಬ್ಬರೂ ಶ್ರೀ ಮಠದ ನರಸಿಂಹದೇವರ ಒಕ್ಕಲು. ಇಬ್ಬರೂ ಕೈಲಿ ಬರಿಯ ತೀರ್ಥದ ಬಟ್ಟಲು ಹಿಡಿದು ಘಟ್ಟದ ಕೆಳಗಿನಿಂದ ದುಗ್ಗಾಣಿಯಿಲ್ಲದೆ ಅಡಿಕೆ ತೋಟ ಮಾಡಲು ಬಂದವರು. ಆರು ಮೈಲಿಯಾಚೆಯಿರುವ ಗೋಪಾಲಕಂತಿಯವರ ಅಂಗಡಿಯಲ್ಲಿ ಇಬ್ಬರದೂ ಲೆಖ್ಖವುಂಟು. +ಕುಪ್ಪಣ್ಣಭಟ್ಟರು ವಯಸ್ಸಿನಲ್ಲಿ ಹಿರಿಯರು. ಅವರು ಕಳೆದ ಐವತ್ತು ಸಂವತ್ಸರ ಒಣಗಿದ ಹುಳಿ ಮಾವಿನ ಹಣ್ಣಿನಂತಹ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಒಂದು ಕಾಲದಲ್ಲಿ – ಅಂದರೆ ಹೆಚ್ಚೇನಲ್ಲ, ಬರಿಯ ಎರಡು ವರ್ಷದ ಕೆಳಗೆ – ಪೆಟ್ಟೊಂದಕ್ಕೆ ತುಂಡೆರಡು ಎನ್ನುವಂತಹ ಮಾತನ್ನಾಡಲು ಮಾತ್ರ ಬಾಯಿ ತೆರೆಯುತ್ತಿದ್ದ ಮನುಷ್ಯ. ಕಪ್ಪಗೆ ಕುಳ್ಳಗೆ ಕೃಶವಾದ ಅವರ ಶರೀರ ಮಾತ್ರ ದಿನಗಳೆದಂತೆ ಸೊರಗುತ್ತಿದೆ. ಉಳಿದ ಮರ್ಜಿಯಲ್ಲೇನು ಬದಲಿಲ್ಲ. ಅದೇ ಹೊಳೆಯುವ ಬೋಳುತಲೆ, ಒಂದು ಕಾಲದಲ್ಲಿ ಸದಾಸಿಡುಕಿನ, ಈಗ ಮಂಕಾಗಿ ಉರಿಯುವ ಸಣ್ಣ ಕಣ್ಣುಗಳು. ಗುಜ್ಜ ಮೂಗು. ದಿಂಡು ಮಾವಿನ ಮೂತಿಯ ಗದ್ದ. ಉಟ್ಟ ಪಂಚೆ ಹೊದ್ದ ದೋತ್ರಗಳ ಮೇಲೆ ಅವರ ಸಾಲದಂತೆಯೇ ವರ್ಷಾಂತರದಿಂದ ಉಳಿದು ಬಂದ ಬಾಳೆ ಕರೆ. ಅಡಿಕೆ ಕರೆ. ಬಾಯಿಯ ಒಂದು ಪಾರ್ಶ್ವದಲ್ಲಿ ಸದಾ ಒಂದು ಹೊಗೆಸೊಪ್ಪಿನ ಉಂಡೆ ಇದ್ದೇ ಇರಬೇಕು. ಒಂದು ಕಾಲದಲ್ಲಿ ಏನಾದರೂ ಸಿಟ್ಟಿನ ಮಾತನ್ನಾಡುವ ಪ್ರಮೇಯ ಒದಗಿದಲ್ಲಿ ಎದುರು ಪಕ್ಷದವನ ಮಾತನ್ನೆಲ್ಲ ಬಿಗಿದ ತುಟಿಯಲ್ಲಿ ಆಲಿಸಿ, ಅಂಗಳದೊಂದು ಮೂಲೆಗೆ ದಿಡೀರನೆ ನಡೆದು, ಹೊಗೆ ಸೊಪ್ಪನ್ನು ಉಗಿದು, ಎದುರಾಳಿ ಎದುರುತ್ತರ ಕೊಡಬಾರದು- ಹಾಗೆ ಫಟೀರೆನ್ನುವ ಒಂದು ಮಾತನ್ನಾಡಿ ಮತ್ತೆ ಹೊಗೆ ಸೊಪ್ಪಿನ ಚೂರೊಂದನ್ನ್ನು ಸುಣ್ಣದಲ್ಲಿ ತಿಕ್ಕಿ ಬಾಯಲ್ಲಿಟ್ಟು ಮೌನವಾಗಿಬಿಡುತ್ತಿದ್ದ ಮನುಷ್ಯ ಅವರು. ಈಗ ಮಾತ್ರ ಕಾಲು ಕೆರೆದುಕೊಂಡು ಜನ ಜಗಳಕ್ಕೆ ಬಂದರೂ ನನಗೂ ನಿನಗೂ ವೈವಾಟಿಲ್ಲವೆಂಬಂತೆ ಬೀಗ ಮುದ್ರೆಯ ಮುಖವನ್ನೆತ್ತಿ ನಿಶ್ಚಲರಾಗಿಬಿಡುತ್ತಾರೆ. +ಸೀಬಿನ ಕೆರೆ ಅಪ್ಪಣ್ಣಭಟ್ಟರು ಲೋಕಪ್ರಿಯರು. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾದ ನಾಜೋಕಾದ ರಾಗದ ಮಾತು ಅವರದು. ಎರಡು ಮೈಲಾಚೆ ಇರುವ ಬಂಕ್ಲಾಪುರದ ಅಗ್ರಹಾರದ ಬ್ರಾಹ್ಮಣರೆಲ್ಲ -ಬಡವ ಬಲ್ಲಿದನೆನ್ನದೆ – ಅವರಿಗೆ ಬೇಕಾದವರು. ಮೊದಲೇ ಕುಪ್ಪಣ್ಣಭಟ್ಟರು ಜಗಳಗಂಟಿಯಾದ್ದರಿಂದ ಒಂದಲ್ಲ ಒಂದು ಕಾರಣದಿಂದ ಬಂಕ್ಲಾಪುರದವರನ್ನೆಲ್ಲ ಮೈಮೇಲೆ ಹಾಕಿಕೊಂಡಿದ್ದರು. ಆದ್ದರಿಂದ ಎಲ್ಲರಿಗೂ ಅಪ್ಪಣ್ಣಭಟ್ಟರೆಂದರೆ ಆಗಬೇಕು. ಅಲ್ಲದೆ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರಂತೆಯೇ ದುಗ್ಗಾಣಿಯಿಲ್ಲದೆ ಬಂದವರಾದರೂ ತೋಟ, ಮನೆ, ಗದ್ದೆಯನ್ನು ಲಾಯಕ್ಕಾಗಿ ಇಟ್ಟುಕೊಂಡಿದ್ದರು. ಅಪ್ಪಣ್ಣಭಟ್ಟರ ಸೂರಿನ ಕೆಳಗೆ ಸೇವಂತಿಗೆ ; ಅಂಗಳದಲ್ಲಿ ಚಪ್ಪರ . ಬಂದವರಿಗೆ ಬಣ್ಣದ ಚಾಪೆ ಹಾಸಿ, ಕಾಫಿ ಕೊಟ್ಟು ಉಪಚರಿಸದೆ ಕಳುಹಿಸುವುದಿಲ್ಲ. ಆದರೆ ಶೂದ್ರರ ಅಂಗಳ ಬೇಕು- ಕುಪ್ಪಣ್ಣಭಟ್ಟರ ಅಂಗಳ ಮಾತ್ರ ಬೇಡ. ಅಲ್ಲೆ ಸಗಣಿ, ಮಕ್ಕಳ ಪಾಯಖಾನೆ, ಮೊಣಕಾಲೆತ್ತರ ಹುಲ್ಲು, ಇಲ್ಲವೆ ಕೆಸರು . ಕಾಲು ಬೆರಳಿನ ಸಂದಿ ಕಡಿಯುವ ಜಿಗಣೆ. ಗೂಬ್ಬರದ ಗುಂಡಿಯ ನೊಣ. ಅಪ್ಪಣ್ಣಭಟ್ಟರು ಅನ್ನುತ್ತಾರೆ ‘ನಮ್ಮ ಕೊರಗನ ಗುಡಿಸಲು ಅವರದಕ್ಕಿಂತ ವಾಸಿ. ಹೋಗಿ ನೋಡಿ ಬೇಕಾದರೆ.’ +ಗೋಪಾಲಕಮ್ತಿಯ ಅಂಗಡಿಯಲ್ಲಿ ಕುಪ್ಪಣ್ಣಭಟ್ಟರ ಸಾಲ ವರ್ಷಾಂತರದ ಬಡ್ಡಿ ಚಕ್ರಬಡ್ಡಿಗಳ ಶೇಕಡಾ ಲೆಖ್ಖಗಳ ಖಾತೆಯಿಂದ ಖಾತೆಗೆ ಸಾವಿರಕ್ಕೂ ಮಿಕ್ಕು ಬೆಳೆದಿದೆ. ಒಂದು ವರ್ಷದಿಂದಲೂ ಕಂತಿಯ ಕಡೆಯಿಂದ ವಸೂಲಿ ಸಾಬ ವಾರಕ್ಕೊಮ್ಮೆ ಬಂದು, ಕುಪ್ಪಣ್ಣಭಟ್ಟರ ಜಗಲಿಯ ಮೇಲೆ ಕೂತು ಕಾಡುವ ವಿಷಯ ಎಲ್ಲರಿಗೂ ತಿಳಿದಿದೆ. ಅಪ್ಪಣ್ಣಭಟ್ಟರು ಮಾತ್ರ ವರ್ಷದ ಕೊನೆಯಲ್ಲಿ ಕಮ್ತಿಯ ಲೆಖ್ಖದಲ್ಲಿ ಕಾಸು ಉಳಿಸಿಕೊಳ್ಳದಂತೆ ಅಪ್ಪಣ್ಣಭಟ್ಟರು ಕೊಟ್ಟದ್ದಲ್ಲದೆ, ವಸೂಲಿಗೆ ಬಂದ ಶಾನುಭೋಗರಿಗೆ ಒಂದು ಕೊಳಗ, ಏಜೆಂಟರಿಗೆ ಎರಡು ಕೊಳಗದಂತೆ ಮರ್ಯಾದೆ ಅಡಿಕೆ ಕೊಟ್ಟು ಪಾಯಸದ ಅಡಿಗೆ ಮಾಡಿ ಊಟ ಹಾಕಿಸಿ ಕಳಿಸುತ್ತಾರೆ. ಕುಪ್ಪಣ್ಣಭಟ್ಟರ ಗೇಣಿ ಮಾತ್ರ ವರ್ಷಾಂತರ ಹತ್ತು ಹನ್ನೆರಡು ಮಣಗಳಂತೆ ಉಳಿದು, – ಉಳಿದು ಈಗ ಐದು ಸಾವಿರ ರೂಪಾಯಿಯ ಮ್ಳೆ ಸಾಲವಾಗಿದೆ. ಮಠದವರು ‘ಒಂದೋ ತೋಟ ಬಿಡಿ. ಇಲ್ಲ ಸಾಲ ತೀರಿಸಿ’ ಎಂದು ಪೀಡಿಸಹತ್ತಿದ್ದಾರೆ. ಅಲ್ಲದೆ ತೋಟಕ್ಕೆ ಸರಿಯಾಗಿ ಬೇಸಾಯವಾಗದೆ, ಸಸಿ ನಡದೆ, ಮರಗಳೆಲ್ಲ ಕೃಶವಾಗಿದೆಯೆಂದು ಏಜೆಂಟರಿಗೆ ಸಿಟ್ಟು. ಅಪ್ಪಣ್ಣಭಟ್ಟರಿಗಾದರು ಗೇಣಿಗೆ ಕೊಟ್ಟರೆ ತೋಟವನ್ನಾದರೂ ಊರ್ಜಿತಕ್ಕೆ ತರುತ್ತಾನೆಂದು ಏಜೆಂಟರು ಬಾಯಿ ಬಿಟ್ಟು ಹೇಳುತ್ತಾರೆ. ‘ಏನೋ ನಿಮ್ಮ ಕೃಪೆ ’ಯೆಂದು ಕಷ್ಟವಾನಿಯಾದ ಅಪ್ಪಣ್ಣಭಟ್ಟರು ಶ್ರೀ ಗುರುಗಳು ಕಾಶಿಗೆ ಹೋಗುವ ಮುಂಚೆ ಅವರನ್ನು ಕರೆಸಿ ಬಿಕ್ಷೆ ಮಾಡಿದರು: ಬೆಳ್ಳಿಯ ತಟ್ಟೆಯಲ್ಲಿ ಐವತ್ತು ಬೆಳ್ಳಿಯ ರೂಪಾಯಿಯಿಟ್ಟು ಸ್ವಾಮಿಗಳ ಪಾದಕ್ಕೆ ಬಿದ್ದರು. +ಜನರೆನ್ನುವ ಮಾತಿಗೂ ಕುಪ್ಪಣ್ಣಭಟ್ಟರ ನಡತೆಗೂ ಸರಿಸಮವೆನ್ನಬೇಕೆಂದು ಸ್ವತಃ ಮೈದುನನೇ ಅಂದ ಮೇಲೆ, ಅಪ್ಪಣ್ಣಭಟ್ಟರು ರಾಗವಾಗಿ ಬುಕ್ಲಾಪುರದವರ ಎದುರಿಗೆಲ್ಲ ಅಂದದ್ದು ಹೆಚ್ಚಲ್ಲ: “ನಾನಂತೂ ಆಗುವುದಿಲ್ಲ ಮಹರಾಯರಿಗೆ ಹೋಗ, ನೀವೇನು ಮಾಡಿದ್ದೀರಿ ಅವರಿಗೆ? ಹಿರಿಯ ಮಾಣಿಗೆ ಮನೆಯಲ್ಲೇ ಉಪನಯನ ಮಾಡಿ ನಿಮ್ಮನ್ನೆಲ್ಲ ಊಟಕ್ಕೆ ಕರೆದಿದ್ದರೆ ಗಂಟು ಕರಗಿಬಿಡುತ್ತಿತ್ತೆ? ಬಸ್ಸು ಹಿಡಿದು ಬರ್ರೆಂದು ಆಗುಂಬೆಗೆ ಹೋಗಿ ದೇವಸ್ಥಾನದಲ್ಲಿ ಒಂದಕ್ಕೆರಡು ಖರ್ಚು ಮಾಡುವಷ್ಟೇನು ಬಂದಿತ್ತು ಬ್ರಾಹ್ಮಣನಿಗೆ? ಹಾಸಿಗೆಯಿದ್ದಷ್ಟು ಕಾಲುಚಾಚಬೇಕೆಂದು ಅದಕ್ಕೆ ಹಿರಿಯರು ಅನ್ನುವುದು. ಆದರೆ ಅವರ ಹಾಸಿಗೆ ಎಷ್ಟುದ್ದ ಗೊತ್ತೊ? ಹೋಯ್ ! ನನ್ನ ಮಾತನ್ನು ನೀವು ಬೇಕಾದರೆ ನಂಬಿ ಅಥವಾ ಬಿಡಿ. ಆ ಮನೆಯಲ್ಲವರಿಗೆ ಗಂಟು ಸಿಕ್ಕಿದೆಯಯ್ಯ. ನನಗದು ಖಾತ್ರಿ. ಇಲ್ಲದೆ ಈ ಆಟಾಟೋಪವೆಲ್ಲ ಎಲ್ಲಿಂದ ನಡೆಯ ಬೇಕು”ಎಂದು ಕೊನೆಯ ಮಾತುಗಳನ್ನು ಕಣ್ಣು ಮಿಟುಕಿಸಿ ಮೆತ್ತಗೆ ಹೇಳುತ್ತಾರೆ. +ಭಾಗ -೨ +ಯಾಕೆ ಹೀಗೆ ತೆಪ್ಪಗಾಗಿ ಮಂಕು ಬಡಿದು ಕೂತಿರುತ್ತಾರೆಂದು ನಡುಮನೆಯ ಮೂಲೆಯಲ್ಲಿ ಉಬ್ಬಸವಿಡುತ್ತ ಕೂತ ಕುಪ್ಪಣ್ಣಭಟ್ಟರ ಹೆಂಡತಿ ಗೌರಮ್ಮನಿಗೆ ಆಶ್ಚರ್ಯ. ಸಂಜೆ ಜೋಯಿಸ ಹಕ್ಕೆ ಚಿರೋ ಎಂದು ಕೂಗುತ್ತಿದ್ದರೂ, ಕೊಟ್ಟಿಗೆಗೆ ಆಕಳು ಬಂದು ಹಾಲು ಕರೆದಾದ ಮೇಲೂ, ಮಗಳು ಭಾಗೀರತಿ ದೇವರಿಗೆ ದೀಪ ಹತ್ತಿಸಿದ ನಂತರವೂ ಸಂಧ್ಯಾವಂದನೆಗೆ ಏಳಿ ಏಳಿ ಎಂದು ಮೂರು ಬಾರಿ ಕರೆಯಬೇಕಾಯಿತು. ಹಿಂದೆ ಗಾಜು ಒಡೆದುಬಿಡುತ್ತಾರೆಂದು ಮಕ್ಕಳ ಹತ್ತಿರ ಲಾಟೀನು ಹಚ್ಚಲು ಕೊಡುತ್ತಿರಲಿಲ್ಲ; ಈಗ ಹಿರಿಯ ಮಾಣಿಯೆ ಲಾಟೀನಿನ ಗಾಜು ಒರೆಸಿ, ದೀಪ ಹತ್ತಿಸಿ ಜಗುಲಿಗೆ ಒಯ್ದು, ‘ಅಪ್ಪಯ್ಯ ಏಳಿ’ಎನ್ನಬೇಕು. +ಗೌರಮ್ಮನಿಗಿನ್ನೂ ನೆನಪಿದೆ. ಎರಡು ವರ್ಷಗಳ ಕೆಳಗೆ ನಾಲೂರಿನಿಂದ ಅವಳ ತಮ್ಮ ಸುಬ್ರಹ್ಮಣ್ಯ ಬಂದ. ಈಚೆಗೆ ತವರಿನಿಂದ ಬರುವುದೇ ಕಡಿಮೆ. ಇರಲಿ. ಒಡಹುಟ್ಟಿದೊಬ್ಬ, ತಮ್ಮನಾದರೂ ಲಕ್ಷಣವಾಗಿ ತೋಟ ಗದ್ದೆ ಮಾಡಿಕೊಂಡು ವೈನಾಗಿ ಜೀವನ ಮಾಡುತ್ತಿದ್ದಾನಲ್ಲ- ಅದೇ ಸಂತೋಷ. ಇವರೊಬ್ಬರೆ ಯಾಕೆ ಹೀಗೆಂದು ತಿಳಿಯುವುದಿಲ್ಲ. ಇವರ ಹಾಗೆ ತಾಲಿ ಹಿಡಿದು ಘಟ್ಟದ ಕೆಳಗಿನಿಂದ ಬಂದ ಅಪ್ಪಣ್ಣಭಟ್ಟ ಗುರುಗಳನ್ನು ಮನೆಗೆ ಕರೆದು ಐವತ್ತು ರೂಪಾಯಿ ಭಿಕ್ಷೆ ಮಾಡಿಸುವಷ್ಟು ದೊಡ್ಡವನಾದ. ಊಟವೆಲ್ಲ ಆದ ಮೇಲೆ ಗುರುಗಳು ಗಿಂಡಿ ಮಾಣಿಯ ಹತ್ತಿರ ಹೇಳಿಕಳುಹಿಸಿದರು. ಇವರನ್ನು ಕರೆದುಕೊಂಡು ಬಾ ಅಂತ. ಇವರಾದರೂ ಎಷ್ಟು ತಗ್ಗಿ ನಡೆದಾರು? ಮುವ್ವತ್ತು ವರ್ಷದಿಂದ ಕಾಲಿಡದ ಅಪ್ಪಣ್ಣಾಭಟ್ಟನ ಮನೆಯಲ್ಲಿ ಅವನ ಮುಖದ ಎದುರೇ ಗುರುಗಳ ಹತ್ತಿರ ಛೀಮಾರಿ ಹಾಕಿಸಿಕೊಳ್ಳುವುದು ಸಾಧ್ಯವೆ? ಅಡಿಗೆಮನೆಯಲ್ಲಿ ಮುಚ್ಚಿ ಕೂತರು. ಹಾಗೆಲ್ಲ ಕೂತ ಜನ್ಮವೇ ಅಲ್ಲ ಇವರದ್ದು. ಮುಚ್ಚಿ ಕೂತು ಭಾಗೀರತಿಗೆ ಅಂದರು: ‘ನಾನು ಮನೇಲಿಲ್ಲವೆಂದು ಹೇಳಿಬಿಡು.’ಆದರೆ ಗುರುಗಳಿಗೆ ಅಪ್ಪಣ್ಣಭಟ್ಟ ಹಚ್ಚಿಕೊಡದೆ ಇರುತ್ತಾನೆಯೆ? ಒಬ್ಬೊಬ್ಬರ ಗ್ರಹಚಾರ : ಇಲ್ಲದಿದ್ದರೆ ಇವರಿಗೆ ತಿಂಗಳಲ್ಲಿ ಇಪ್ಪತ್ತು ದಿನ ಉಬ್ಬಸ ಹಿಡಿದ ತನ್ನಂತಹವಳೆ ಗಂಟು ಬೀಳಬೇಕೆ ? ಬೇಲಿಯಾಚೆ ಅಪ್ಪಣ್ಣಭಟ್ಟನ ತೋಟದಲ್ಲಿ ಅಷ್ಟೊಂದು ಅಡಿಕೆ ! ಈಚೆಯೋ ಇವರ ತೋಟದಲ್ಲಿ ಕೊಳೆ ರೋಗ ಹಿಡಿದು ಎಲ್ಲ ನೆಲದ ಪಾಲು . ಎಲ್ಲ ಕೆಲಸದ ಆಳೂ ಅವನ ಮನೆಗೆ ! ಇವರ ಹತ್ತಿರವೋ ಒಬ್ಬನೂ ಉಳಿಯುವುದಿಲ್ಲ . ಇನ್ನು ನಿಷ್ಠುರದ ಮಾತೋ ? ಊರಲ್ಲೆಲ್ಲ ನಿಷ್ಠುರ ಇವರಿಗೆ. ಆಯಿತ? ಎರಡು ಕಾಲಿನ ಮೇಲೆ ಓಡಾಡುವ ನರಪ್ರಾಣಿ ಬಿಡದೆ ಜಗಳವಾಡಿದ್ದಾರೆ ಇವರು. ಒಂದು ಮೋಸ ಗೊತ್ತಿಲ್ಲ: ಒಂದು ದಗ ಗೊತ್ತಿಲ್ಲ: ಒಂದು ಸುಳ್ಳಾಡಿ ಗೊತ್ತಿಲ್ಲ . ಸಿಟ್ಟೆಂದರೆ ಸಿಟ್ಟು. ಒಬ್ಬೊಬ್ಬರ ನಕ್ಷತ್ರಾನೆ ಹಾಗೆ. ನನ್ನ ಹಾಗೆ ಕೆಲವರು ಗೋಳಿಡುತ್ತ ಸಾಯಬೇಕೆಂದು ನಿಯಮ. ಒಟ್ಟು ಹಣೆಬರಹ. +ಏನು ನೆನೆಸಿಕೊಂಡೆ ? – ಎಂದು ಗೌರಮ್ಮ ಉಬ್ಬಸದಿಂದ ಸುಧಾರಿಸಿಕೊಳ್ಳುತ್ತ ಚಿಂತಿಸುವರು. ಅದೇ ಸುಬ್ರಹ್ಮಣ್ಯ ಬಂದ. ಭಾವಯ್ಯ ಕಷ್ಟದಲ್ಲಿದ್ದರೆಂದು ಉಡಾಫೆಯ ಮಾತನ್ನಾಡಲಿಲ್ಲ. ಗೌರವದಿಂದಲೇ ಹೇಳಿದ: +“ಭಾವಯ್ಯ, ಈ ಪ್ರಾಂತ್ಯದಲ್ಲಿ ಯಾರಿಗೂ ನಿಮ್ಮನ್ನು ಕಂಡರೆ ಆಗದು . ಅಪ್ಪಣ್ಣಭಟ್ಟರಂತೂ ನೀವು ಎಂದರೆ ಕತ್ತಿ ಮಸೆಯುತ್ತಾರೆ. ಮಠದವರಂತೂ ತೋಟ ಬಿಡಿರೆಂದು ನಿಮಗೆ ಬೆನ್ನು ಹತ್ತಿದ್ದಾರಂತೆ . ಭಾಗೀರತಿಗೆ ವಯಸ್ಸಾಗಿದೆ. ಗಂಡು ಹುಡುಕಬೇಕು. ನೀವು ತೀರ್ಥಹಳ್ಳಿಯಲ್ಲೊಂದು ವರ ನೋಡಿ ಬಂದರೆ ಅಪ್ಪಣ್ಣಭಟ್ಟ ಚಾಡಿ ಹೇಳಿ ಛಿದ್ರ ಹಚ್ಚಿ ತಪ್ಪಿಸಿದನಂತೆ. ಮೈನೆರೆದು ಬಾಳೆ ಮರದಂತೆ ನಿಂತ ಹುಡುಗಿಯನ್ನು ಎಷ್ಟು ದಿನವೆಂದು ಮನೆಯಲ್ಲಿ ಇಟ್ಟುಕೊಳ್ಳುವುದು. ? ಹಿರಿಯರಾದ ನಿಮಗೆ ಅನ್ನುವ ತ್ರಾಣವಿಲ್ಲ: ಆದರೂ ಹೇಳುವೆ. ನಿಮ್ಮ ಗ್ರಹಗತಿಗಳಿಗೆ ಈ ತೋಟ ಸೇರುವುದಿಲ್ಲ. ಎಲ್ಲ ಬಿಟ್ಟು ಹಾಯಾಗಿ ಬಂದುಬಿಡಿ. ಹಲಸಿನೂರಿನಲ್ಲಿ ನನ್ನದೊಂದು ಐನೂರು ಮರ ತೋಟವುಂಟಲ್ಲ: ನಿಮ್ಮ ಕೈಯಲ್ಲಾದಷ್ಟು ಮಾಡಿ. ಉಳಿದದ್ದು ನಾನು ನೋಡುವೆ. ”ಎಂದು ಎಷ್ಟು ಮೃದುವಾಗಿ ಸುಬ್ರಹ್ಮಣ್ಯ ಹೇಳಿದ್ದ ! ಎರಡು ವರ್ಷದ ಕೆಳಗೆ. ಇವರೋ ಪರಶುರಾಮನಂತೆ ಕುಣಿದು ಬಿಟ್ಟರು. +“ನಾನು ಸತ್ತ ಮೇಲೆ ನನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವಿಯಂತೆ, ಈಗ ನಿನ್ನ ಕೆಲಸ ನೀನು ನೋಡಿಕೋ ”ಎಂದು ಖಂಡತುಂಡು ಆಡಿಬಿಟ್ಟು ನನ್ನ ತಮ್ಮನಿಗೆ ನೋವಾಗುವಂತೆ ಮಾಡಿಬಿಟ್ಟರು. +ಈಗ ಆ ಸಿಟ್ಟೇ ಇಲ್ಲ. ಆ ವಸೂಲಿ ಸಾಬ, ಆ ಮಠದ ಒರಟು ಉಗ್ರಾಣಿ ವಾರಕ್ಕೊಮ್ಮೆ ಬಂದು ಪೀಡಿಸತೊಡಗಿದ ಮೇಲೆ ಅರ್ಧಕ್ಕರ್ಧವಾಗಿಬಿಟ್ಟಿದ್ದಾರೆ. ಎಂದೆಂದೂ ಕೇಳದವರು ಒಂದು ದಿನ ಬಂದು ಹೆಂಡತಿಯ ಎದುರು ನಿಂತು ಕೇಳಿದರು: “ನಿನ್ನ ನಗ ಕೊಡುವಿಯಾ? ಆರು ತಿಂಗಳಲ್ಲಿ ಹಿಂದಕ್ಕೆ ತಂದುಕೊಡುವೆ ಮಹಾರಾಯಿತಿ”ಎಂದರು. ಆ ಕೊರಳಿನಲ್ಲಿ ಆ ದೈನ್ಯದ ಸ್ವರ ಪ್ರಥಮ ಬಾರಿಗೆ ಕೇಳಿ ಗೌರಮ್ಮನಿಗೆ ಎದೆಯಲ್ಲಿ ಚೂರಿ ಇರಿದಂತಾಯಿತು. ಒಟ್ಟು ನನ್ನ ತಾಳಿ ಗಟ್ಟಿಯಾಗಿದ್ದರೆ ಸಾಕೆಂದು, ಪೆಟ್ಟಿಗೆಯಿಂದ ಮಗಳು ಭಾಗೀರತಿಗೆಂದು ಇಟ್ಟುಕೊಂಡಿದ್ದ ತೌರವರು ಹಾಕಿದ ಬುಗುಡಿ, ಬಂಗಾರದ ಪಾಟಿ, ಚೈನು, ನಾಲ್ಕೆಳೆ ಸರ, ತಿರುಪಿನ ಹೂವು, ಸಮಸ್ತ ಆಭರಣವನ್ನೂ ಕಣ್ಣಿನಲ್ಲಿ ನೀರು ತುಂಬಿದ್ದನ್ನು ತೋರಗೊಡದೆ ಎತ್ತಿಕೊಟ್ಟರು. ಆಮೇಲಿನಿಂದ ಅವರ ಪ್ರಾರ್ಥನೆಯಿಷ್ಟೆ “ನನ್ನ ತಾಳಿ ಗಟ್ಟಿಯಾಗಿಡಪ್ಪ . ಭಾಗೀರತಿಗೊಂದು ಗಂಡನ ಮನೆ ಕಾಣಿಸಪ್ಪ ”ಆದರೆ ಮೈಮೇಲೆ ನಗವಿಲ್ಲದ ಬೆತ್ತಲೆ ಹುಡುಗಿಯನ್ನು ಯಾರಾದರೂ ಲಗ್ನವಾಗುವರೆ? ಇವರೇನು ಮಾಡಿಬಿಟ್ಟರೋ ಭಂಗಾರವನ್ನ ಎಂದು ಆ ಕಾರಣಕ್ಕಾಗಿ ಕರೆಕರೆಯಾಗುತ್ತದೆ. ಈ ಉಬ್ಬಸದ ನಿತ್ಯ ರೋಗದ ಶರೀರಕ್ಕೆ ಮತ್ತೇನಾದರೂ ಅಶೆಯಿಲ್ಲ. “ನಾನೇನು ಬಂಗಾರ ಹೇರಿಕೊಳ್ಳಬೇಕೊ? ಅವರ ಮರ್ಯಾದೆ ಉಳಿಯಲಿ ಸದ್ಯ. ”ಎಂದು ಪದೆಪದೇ ಅಂದುಕೊಳ್ಳುವಳು. ಸುಬ್ರಹ್ಮಣ್ಯ ತವರಿನಿಂದ ಬರುತ್ತಾನೋ ಎಂದು ದಾರಿಕಾಯುವಳು. ಅವನ ಹತ್ತಿರವಾದರೂ ಎಲ್ಲ ಸುದ್ದಿ ಹೇಳಿಕೊಂಡು ಬಂಗಾರದ ವಿಷಯವನ್ನು ತಿಳಿಸಿ ಎದೆ ಹಗುರ ಮಾಡಿಕೊಳ್ಳಬಹುದಿತ್ತು. +ಭಾಗೀರತಿ ಅಡಿಗೆ ಮನೆಯಲ್ಲಿ ಹಸಿ ಸೌದೆಗೆ ಅಗ್ನಿ ಆವೇಶಿತನಾಗುವಂತೆ ಮಾಡಲು ಊದುಗೋಳವೆಯಲ್ಲಿ ಊದಿ ಊದಿ ಕೆಮ್ಮಿದಳು. ನೀರು ಹರಿದು ಹರಿದು ಒಣಗಿದ ಕಣ್ಣುಗಳನ್ನು ಸೆರಗಿನಿಂದ ಒರೆಸಿಕೊಂಡಳು . ಕೆದರಿದ ತಲೆಗೂದಲನ್ನು ನೇವರಿಸಿಕೊಂಡಿದ್ದಳು.ಬತ್ತಿದ ಕೆನ್ನೆಗಳ ಪೆಚ್ಚು ಮೋರೆಯನ್ನೆತ್ತಿ ನಡುಮನೆಗೆ ಬಂದು “ಅಮ್ಮ ಹುಳಿ ಮಾಡಲು ತೊಗರಿಬೇಳೆಯಿಲ್ಲ” ವೆಂದಳು. “ಸೌತೆ ಬೀಜದ ಸಾರು ಮಾಡು ”ಎಂದರು ಗೌರಮ್ಮ. +ಹಲಸಿನೂರಿಗೆ ಹೋಗಲು ಯಾಕೆ ಇವರು ಒಪ್ಪಬಾರದೊ? ಇಲ್ಲಿದ್ದು ಪಥ ಸಾಗಿಸುವಂತಿಲ್ಲ. ಅಪ್ಪಣ್ಣಭಟ್ಟನಂತೂ ಯಮದೂತನಂತೆ ಬೆನ್ನು ಹತ್ತಿದ್ದಾನೆ. ಈ ತೋಟದ ಮೇಲೆ ಅವನ ಕಣ್ಣು. ಗದ್ದೆಗೆ ನೀರು ಬರದಂತೆ ಕಟ್ಟೆ ಕಟ್ಟುತ್ತಾನೆ. ತನ್ನ ಗದ್ದೆಗೆ ದನ ನುಗ್ಗದಂತೆ ಬೇಲಿ ಭದ್ರ ಕಟ್ಟಿಕೊಳ್ಳಬಾರದ? ಒಂದು ವೇಳೆ ನುಗ್ಗಿತು. ಬರಿ ಬೆದರಿಸಬಾರದ? ನಾಲ್ಕು ಪೆಟ್ಟು ಕೊಟ್ಟು ಅಟ್ಟಬಾರದ? ಜಿದ್ದಿನ ಮೇಲೆ ಅಪ್ಪಣ್ಣಭಟ್ಟ ನಾಲ್ಕು ಮೈಲಿಯಾಚೆಯ ದೊಡ್ಡಿಗೆ ಆಳಿನ ಹತ್ತಿರ ದನವನ್ನು ಹೊಡೆಸಿ ಕಟ್ಟಿಸಿದ. ಸಂಜೆಯಾದರೂ ಕೊಟ್ಟಿಗೆಗೆ ಬಾರದ ದನವನ್ನು ಇವರೇ ಖುದ್ದಾಗಿ ಹುಡುಕಿಕೊಂಡು ಹೋಗಿ ರೂಪಾಯಿ ತೆತ್ತು ಬಿಡಿಸಿಕೊಂಡು ಬರಬೇಕಾಯಿತು. +ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಗಣಪ ಅಮ್ಮಾ ಎಂದು ಅತ್ತುಕೊಂಡು ಬಂದ. “ಈ ಮಗುವಿಗಷ್ಟು ಅಕ್ಕಿ ತೊಳೆದ ಕಲಗಚ್ಚಿನ ಪಾನಕ ಕೊಡೇ”ಎಂದು ಕೂಗಿದರು ಗೌರಮ್ಮ. +ಇದ್ದಿಯೋ ಸತ್ತಿಯೋ ಎಂದು ಕೇಳುವವರು ಆಸುಪಾಸಿನಲ್ಲಿ ಇಲ್ಲ. ಇಕೋ ಮುಡಿದುಕೊ ಎಂದು ಭಾಗೀರತಿಗೆ ಒಂದು ರಂಜದ ಸರ ಕರೆದು ಕೊಟ್ಟವರಿಲ್ಲ. +ಇದ್ದಕಿದ್ದಂತೆ ಬಂಗಾರದ ನೆನಪಾಗಿ ಕಣ್ಣು ನೀರು ಹರಿಯತೊಡಗಿತು. ಕೆಮ್ಮು ಬಂದು ಉಬ್ಬಸ ಹತ್ತಿತು. ಪ್ರಾಣವನ್ನೆ ಆಹ್ವಾನಿಸಿ ವಿಸರ್ಜಿಸುವಂತೆ ಗೌರಮ್ಮ ಉಬ್ಬಸವಿಡುತ್ತ ನಡುಮನೆಯ ಕತ್ತಲೆಯ ಮೂಲೆಯಲ್ಲಿ ಕೂತರು. +ಭಾಗ: ೩ +ಹೆಂಡತಿ ಒಂದು ರಾಗವೆತ್ತಿದರೆ ಸಾಕು. ನಿನ್ನ ನಗ ಬೇಡವೆಂದು ಬಿಡುವನೆಂದು ಕುಪ್ಪಣ್ಣಭಟ್ಟರು ಮನಸ್ಸು ಗಟ್ಟಿ ಮಾಡಿಕೊಂಡೆ ಕೇಳಿದ್ದರು . ಆದರೆ ಅವಳು ಮರು ಮಾತಾಡದೆ ಪೆಟ್ಟಿಗೆಯ ಬಾಗಿಲು ತೆರೆದು ರೇಶ್ಮೆಯ ವಸ್ತದಲ್ಲಿ ಕಟ್ಟಿಟ್ಟಿದ್ದ ಚಿನ್ನವನ್ನೆಲ್ಲ ಎತ್ತಿಕೊಟ್ಟಿದ್ಡರಿಂದ ಭಟ್ಟರು ಇನ್ನಷ್ಟು ಬಾಗಿ ಬಿಟ್ಟರು . ಇದೇ ಋಣಮುಕ್ತರಾಗಲು ಕೊನೆಯ ಯತ್ನ ಎಂದು ಬ್ಯಾಂಕಿಗದನ್ನು ಗುಟ್ಟಾಗಿ ಒಯ್ದು, ಅಡವಿಟ್ಟು ಎರಡುಸಾವಿರದ ಐನೂರು ರೂಪಾಯಿ ತಂದರು . ಆರು ತಿಂಗಳೊಳಗೆ ಇದನ್ನು ಬಿಡಿಸಿ ಹೆಂಡತಿಗೆ ಒಪ್ಪಿಸಿಬಿಡುವನೆಂದು ಶಪಥ ಹಾಕಿಕೊಂಡರು. +ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಿನ್ನೂರು ಮರದಂತೆ ತೋಟ ಮಾಡಿಕೊಂಡಿದ್ದ ಸಣ್ಣ ಪುಟ್ಟ ಬೇಸಾಯಗಾರರಿಗೆ ಮಣ ಒಂದಕ್ಕೆ ಇಪ್ಪತ್ತೈದರಂತೆ ಮುಂಗಡಕೊಟ್ಟರು. ಉಳಿದ ಇಪ್ಪತ್ತೈದನ್ನು ಅಡಿಕೆ ಮಾರಿದ ಮೇಲೆ ಕೊಡುತ್ತೇನೆಂದು ವಚನಕೊಟ್ಟರು. +ಅಪ್ಪಣ್ಣಭಟ್ಟರಾದರೂ ಮಣ ಒಂದಕ್ಕೆ ನಲವತ್ತೇಳು, ತಪ್ಪಿದರೆ ನಲವತ್ತೆಂಟರ ಮೇಲೆ ಬೆಲೆ ಕೊಟ್ಟಿದ್ದಿಲ್ಲ. ಅಲ್ಲದೆ ಅವರು ಮಣ ಒಂದಕ್ಕೆ ಹದಿನೈದು ರೂಪಾಯಿಗಿಂತ ಹೆಚ್ಚಿಗೆ ಮುಂಗಡ ಕೊಟ್ಟವರಲ್ಲ. ಆದ್ದರಿಂದ ಕುಪ್ಪಣ್ಣಭಟ್ಟರು ಇದೊಂದು ಕೈ ನೋಡಿಬಿಡೋಣವೆಂದು ಒಟ್ಟು ಒಂದು ನೂರು ಮಣ ಅಡಿಕೆ ಸಂಪಾದಿಸಿ, ಲಾರಿಯಲ್ಲಿ ಶಿವಮೊಗ್ಗೆಗೆ ಸಾಗಿಸಿ, ಮಂಡಿಯಲ್ಲಿ ತುಂಬಿದರು . “ಒಳ್ಳೆ ದರವೇರಿದ ಮೇಲೆ ಮೇಲೆ ನಾನೇ ಖುದ್ದಾಗಿ ಬರುವೆ . ಆಮೇಲೆ ಮಾರಾಟ ಮಾಡಿದರಾಯಿತು. ಯಾವುದಕ್ಕೂ ಆಗೀಗ ಒಂದು ಕಾಗದ ಹಾಕಿ ”ಎಂದು ಮಂಡಿಯವರಿಗೆ ಹೇಳಿ ಹಿಂದಕ್ಕೆ ಬಂದರು +ತನ್ನ ಗಿರಾಕಿಗಳು ಕೈ ತಪ್ಪಿದ್ದರಿಂದ ಅಪ್ಪಣ್ಣಭಟ್ಟ ಸಿಟ್ಟಿನಲ್ಲಿ ಕುಣಿದುಬಿಟ್ಟ. ಎಲ್ಲೋ ಇವರಿಗೆ ಗಂಟು ಸಿಕ್ಕಿರಲೇ ಬೇಕು. ಆದ್ದರಿಂದ ಈ ಅಟಾಟೋಪವೆಂದು ಊರೆಲ್ಲ ಸಾರಿ ಬಂದ. +ಇತ್ತಲಾಗಿ ಕುಪ್ಪಣ್ಣಭಟ್ಟರು ನಿತ್ಯ ಚೀಲದಿಂದ ಕವಡೆ ತೆಗೆದು ಸಾಲಾಗಿ ಜೋಡಿಸಿ ನಿಮಿತ್ಯ ನೋಡಿದರು. ಮತ್ತೆ ಪಂಚಾಂಗದ ಅಂಚಿನಲ್ಲೆಲ್ಲ ಲೆಖ್ಖ ಮಾಡಿದರು. ಮಠಕ್ಕೆ ಕೊಡಬೇಕಾದ ಬಾಬ್ತು ಐದು ಸಾವಿರ ; ಕಮ್ತಿಗೆ ಒಂದು ಸಾವಿರ : ಹೆಂಡತಿಯ ಉಬ್ಬಸದ ಮದ್ದಿಗೆಂದಾದ ಸಾಲ ಮೂರು ನೂರು : ಈಗ ಬ್ಯಾಂಕಿನಲ್ಲಿ ಅಡವಿಟ್ಟು ಪಡೆದ ಸಾಲದ ಮೇಲೆ ಬಡ್ಡಿ: ಭಾಗೀರತಿಯ ಮದುವೆಯ ಖರ್ಚು , ಎಲ್ಲಕ್ಕಿಂತ ಮೊದಲು ಬಂಗಾರವನ್ನು ಬ್ಯಾಂಕಿನಿಂದ ತಂದುಬಿಡಬೇಕು. ಮುಂದಿನ ವರ್ಷ ಬೇಕಾದರೆ ಮತ್ತೆ ಅಡವಿಟ್ಟು ಹಣ ಪಡೆದರಾಯಿತು. +ಮತ್ತೆ ಲೆಖ್ಖ ಮಾಡುವರು. ಅಡಿಕೆಯ ದರವೇರಿ ಮಣಕ್ಕೊಂದರ ಅರವತ್ತು ರೂಪಾಯಿಯಾದರೂ ಸಿಕ್ಕರೆ ಮಣ ಒಂದರ ಹತ್ತು ರೂ ಲಾಭ. ಒಟ್ಟು ಒಂದು ಸಾವಿರದ ಎರಡು ನೂರು ರೂಪಾಯಿಯನ್ನು ಕಮ್ತಿಗೆ ಕೊಡುವುದು. ಒಂದೈವತ್ತನ್ನು ಡಾಕ್ಟರಿಗೆ ಕೊಡುವುದು: ಮಠಕ್ಕೊಂದು ಇನ್ನೂರ ಐವತ್ತು . ಉಳಿದ ಐನೂರು ಬ್ಯಾಂಕಿನಲ್ಲಿಟ್ಟು , ಎರಡು ಸಾವಿರದ ಐನೂರು ಚಿಲ್ಲರೆಯನ್ನು ಕೊಟ್ಟು ಬಂಗಾರವನ್ನು ಹಿಂದಕ್ಕೆ ತಂದು , ಮತ್ತೆ ಮುಂದಿನ ಸಾರಿ ಬಂಗಾರವನ್ನು ತಿರುಗಿ ಅಡವಿಟ್ಟು , ಒಟ್ಟು ಮೂರು ಸಾವಿರದ ಅಸಲಿನಲ್ಲಿ ವ್ಯಾಪಾರ ಮಾಡುವುದು. ಹೀಗೆ ಹತ್ತು ವರ್ಷ ನಡೆದರೆ ಸಾಕು. ಸಾಲವನ್ನೆಲ್ಲ ತೀರಿಸಿ ಬಿಡಬಹುದು. ಚೀಲದಿಂದ ಇನ್ನೊಮ್ಮೆ ಕವಚವನ್ನು ತೆಗೆದು ಸಾಲಾಗಿ ಇಟ್ಟು ನಿಮಿತ್ಯ ನೋಡುವರು. +ಗೊಬ್ಬರದ ಗುಂಡಿಯಿಂದೆದ್ದು ಬಂದ ನೊಣ ಮೂಗಿನ ಮೇಲೆ ಏರಿಕೂತು ಉರಿಯಿತು. ಅಟ್ಟಿದರೂ ಕಣ್ಣಿಗೆ ಕಟ್ಟುವ ನುಸಿ . ಉಶ್ , ಎಂದರು. ಕಿವಿಯಲ್ಲಿ ಕರ್ಣಪಿಶಾಚಿಯಂತೆ ಕಾಡುವ ಸೊಳ್ಳೆ. ಅಂಗಳದ ಮೂಲೆಯಲ್ಲೊಂದು ಹಲಸಿನ ಸೇಡೆ ಒಣಗುತ್ತಿತ್ತು. ಗಾಳಿ ಬೀಸಿದರೆ ಕೊಟ್ಟಿಗೆಯ ನಾತ. ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾದ ಐದು ವರ್ಷದ ಮಗ ಅಂಗಳದೊಂದು ಮೂಲೆಯಲ್ಲಿ ಬೆತ್ತಲೆ ಮೈಯಲ್ಲಿ ಕುಕ್ಕುರು ಕೂತಿದ್ದ. ಅಂಗಳದಲ್ಲಿದ್ದೂಂದು ಬೂದು ನಾಯಿ , ಬೂದಿ ಗುಡ್ಡೆಯ ಮೇಲೊರಗಿದ್ದೊಂದು ಕರಿ ನಾಯಿ ಕುಳಿತ ಹುಡುಗನಲ್ಲೆ ತದೇಕ ಮಗ್ನರಾಗಿದ್ದವು. +ಬರಿಗಾಲಿನ ಮೇಲೆ ಕೂತು ರಕ್ತ ಹೀರುತ್ತಿದ್ದ ಸೊಳ್ಳೆಯನ್ನು ಉಜ್ಜಿಕೊಳ್ಳುತ್ತ ಭಟ್ಟರು ಎದ್ದು ನಿಂತರು. ಹಾಳು ನುಸಿಕಾಟವೆಂದು ಕಳ್ಳಿಯ ಕಡ್ಡಿಯೊಂದನ್ನು ಮುರಿದು ತಂದು ಸೂರಿಗೆ ಕಟ್ಟಿದರು. ಭಾಗೀರತಿ ಊದುಗೊಳವೆ ಹಿಡಿದು ಅಂಗಳಾಕ್ಕೆ ಬಂದು “ ಆಯಿತೇನೊ ಗಣಪ ” ಎಂದಳು. ಮತ್ತೆ ಅವನಿಗೆ ತೊಳೆಯಲು ಚೆಂಬು ನೀರನ್ನು ಬಚ್ಚಲಿನಿಂದ ತಂದಳು. ಗಣಪ ಖಾಲಿ ಮಾಡಿದ ಜಾಗಕ್ಕೆ ಬೂದುನಾಯಿ , ಕರಿ ನಾಯಿ ನುಗ್ಗಿದವು. ಅವುಗಳ ಬೊಗಳಾಟದಲ್ಲಿ ಮನಸ್ಸಿನ ಗುಣಾಕಾರಕ್ಕೆ ಭಗ್ನವಾದಂತಾಗಿ ಭಟ್ಟರು ‘ ಹಚ ಹಚ ’ ಎಂದರು. +ನಡುಮನೆಯ ಮೂಲೆಯಿಂದ ಗೌರಮ್ಮನ ಉಬ್ಬಸ ಗರಗಸ ಶಬ್ದದಂತೆ ಭಟ್ಟರ ಪ್ರಾಣವನ್ನು ಕಲಿಸಿಬಿಟ್ಟಿತು. “ ಭಾಗೀರತಿ ಇವಳಿಗಷ್ಟು ಮದ್ದು ಕೊಡೆ ” ಎಂದು ಕೂಗಿ ಶತಪಥ ಜಗುಲಿಯಲ್ಲಿ ತಿರುಗಿದರು. +ಹೆಂಚು ಹೊದೆಸಬೇಕು. ತೇವದ ಗೋಡೆಯ ಮೇಲೆಲ್ಲ ಮಳೆಗಾಲದಲ್ಲಿ ಕಪ್ಪಗೆ ಹರಿಯುವ ಕಂಬಳಿ ಹುಳ . ಸೋರಿ ಸೋರಿ ನೆಲದ ಮೇಲೆ ನೂರು ತೂತು. . ಮಕ್ಕಳನ್ನು ಮಲಗಿಸಲು ಚಿಮಣಿ ಹಿಡಿದು ಸೋರದಿರುವ ಜಾಗವನ್ನು ರಾತ್ರೆಯೆಲ್ಲ ಹುಡುಕಬೇಕು. ತೇವವಿಲ್ಲದ ಜಾಗವೆಂದು ಸದ್ಯ ಕಣ್ಣು ಮುಚ್ಚುವಷ್ಟರಲ್ಲಿ ಪಟಕ್ ಪಟಕ್ ಎಂದು ಕಣ್ಣಿನ ಮೇಲೆ ಸೂರಿನಿಂದ ಹನಿ ಉದುರುವುದು, ಆಯಿತೊ? ಒರಳೆ ಬೇರೆ. ಹಾಸಿದ ಚಾಪೆಯ ಕೆಳಗೆ ಒರಳೆ. ಅಕ್ಕಿ ತುಂಬಿದ ಪಣತದಲ್ಲಿ ಒರಳೆ. ದೇವರ ಪೆಟ್ಟಿಗೆಯ ತಳಕ್ಕೇ ಒರಳೆ. ಅಂಡಿಗೆ ಒರಳೆ ಹಿಡಿಯುವುದು ಮಾತ್ರ ಇನ್ನೊಂದು ಬಾಕಿ. +ಕಳ್ಳಿಯ ಅಷ್ಟಾವಕ್ರ ಕಡ್ಡಿಗಳ ಮೇಲೆ ನುಸಿ ಕೂತು ಹಸಿರಾದ ದಿಂಡು ಕಪ್ಪಾಯಿತು. ಕುಪ್ಪಣ್ಣಭಟ್ಟರಿಗೆ ಕಾಡುರಗಳೆಯಾಗಿ ಅಂಗಳದಲ್ಲಿ ನಿರ್ವಿಣ್ಣ ನಿಂತರು. ಬೆನ್ನಿಗೆ ಗುಡ್ಡ . ಎದುರು ಗದ್ದೆ. ಎಡ ಬಲಕ್ಕೆ ಗಾಡಿದಾರಿ ಕಾಡಿನ ಮಧ್ಯೆ . ಯಾರೋ ದೂರದಲ್ಲಿ ಸುಳಿದಂತಾಯಿತು. “ ಯಾರದು ” ಎಂದರು . ‘ ನಾನಯ್ಯ ’ ಎಂದು ಕಟ್ಟಿಗೆ ತಲೆಯ ಮೇಲೆ ಹೊತ್ತ ಮಂಜ ಬೇಗೆ ಬೇಗ ಕಾಲುಹಾಕಿದ. ‘ ಸ್ವಲ್ಪ ನಿಲ್ಲೋ ’ ಎಂದರು. ‘ ನಮ್ಮ ಮನೆಗೆ ಯಾವತ್ತು ಸೌದೆ ಒಟ್ಟುವುದು ಮಾರಾಯ ’ ಎಂದರು. ‘ ಸೀಬಿನ ಕೆರೆ ಅಯ್ಯನವರದ್ದಾದನಂತರ ’ ಎಂದು ಅವ ಎಗ್ಗಿಲ್ಲದೆ ನಡೆದು ಬಿಟ್ಟ. ಏನು ಮಾಡುವುದಕ್ಕೂ ತೋಚದೆ ಕುಪ್ಪಣ್ಣಭಟ್ಟರು ಕತ್ತಿ ಹಿಡಿದು ಬಾಳೆಲೆ ಕೊಯ್ದು ಬರುವುದೆಂದು ತೋಟಕ್ಕೆ ನಡೆದರು. ಅವರು ಹೊರಕ್ಕೆ ಬರುವಷ್ಟರಲ್ಲಿ ನಾಲ್ಕು ಮೈಲಿ ದೂರದ ಸ್ಕೂಲಿನಿಂದ ಮೂರು ಮಾಣಿಗಳು ಹಸಿದು ಹಿಂದಕ್ಕೆ ಬಂದಿದ್ದವು. ಭಾಗೀರತಿ ದನಗಳಿಗೆ ಕಾದು ನಿಂತಿದ್ದವು. ಗರಗಸವಿಟ್ಟು ಕೊಯ್ದಂತೆ ಉಬ್ಬಸವಿಡುತ್ತಿದ್ದ ಗೌರಮ್ಮನ ಸಂಕಟ ಭಾಗೀರತಿ ಕೊಟ್ಟ ಔಷದಿಯಿಂದ ಏನೂ ಶಮನವಾಗಿರಲಿಲ್ಲ. ಗಣಪ ಒಂದು ಬಟ್ಟಲಲ್ಲಿ ಹಸಿ ಅವಲಕ್ಕಿ ಬೆಲ್ಲದುಂಡೆಯನ್ನಿಟ್ಟುಕೊಂಡು ಮುಕ್ಕುತ್ತ ಕೂತಿದ್ದ. +ಅಡಿಕೆಯ ದರ ಮೂವತ್ತೊಂದಕ್ಕೇರಿತು. ಐವತ್ತೆರಡಕ್ಕೆ ಏರಿತು. ಮತ್ತೆ ತಿಂಗಳಲ್ಲಿ ಐವತ್ತೈದಾಯಿತು. ಕುಪ್ಪಣ್ಣಭಟ್ಟರು ಅರವತ್ತಾಗಲಿ ಎಂದು ಮಾರಲಿಲ್ಲ. +ನಿಮ್ಮ ದುಡ್ಡು ನೀರುಪಾಲಾಯ್ತೆಂದು ತಿಳಿಯಿರಿ ಎಂದು ಕುಪ್ಪಣ್ಣಭಟ್ಟರಿಗೆ ಅಡಿಕೆ ಮಾರಿದವರಿಗೆಲ್ಲ ಅಪ್ಪಣ್ಣಭಟ್ಟ ಚುಚ್ಚಿದ. ಕುಪ್ಪಣ್ಣಭಟ್ಟರಿಗೆ ತಗಾದೆ ಹೆಚ್ಚಾಯಿತು. ದಿನಕ್ಕೆ ಎಂಟು ಹತ್ತು ಜನರಂತೆ ಸದಾ ತನ್ನ ಜಗುಲಿಯ ಮೇಲೆ ಕೂತಿರುವವರಿಗೆ ನೆಪ ಹೇಳಿ ಹೇಳಿ ಸುಸ್ತಾದರು. ಇನ್ನೊಂದು ತಿಂಗಳು ತಡೆಯಿರಿ ಎಂದು ಆಳುದ್ದ ಶರೀರವನ್ನು ಗೇಣುದ್ದ ಮಾಡಿ ಬೇಡಿದರು. ನಡೆಯಲಿಲ್ಲ. ಕೊನೆಗೊಂದು ದಿನ ಶಿವಮೊಗ್ಗೆಗೆ ಓಡಿ ದಾಸ್ತಾನು ಮಾಡಿದ ಅಡಿಕೆಯ ಮೇಲೆ ಮಂಡಿಯಿಂದ ಶೇಕಡಾ ಹಡಿನೈದು ರೂ . ಬಡ್ಡಿಯ ಮೇಲೆ ಎರಡು ಸಾವಿರದ ಮೂರು ರೂಪಾಯಿ ಸಾಲವನ್ನು ತಂದರು. ಮಣಕ್ಕೊಂದರಂತೆ ಇನ್ನೊಂದು ಹತ್ತತ್ತು ರೂಪಾಯಿಯನ್ತೆ ಕೊಟ್ಟು ‘ ತಿಂಗಳು ತಡೆಯಿರಿ . ಉಳಿದ ಹದಿನೈದು ಕೊಡುವೆ ’ ನೆಂದು ಗಿರಾಕಿಗಳನ್ನು ಪ್ರಾರ್ಥಿಸಿದರು. +ಕುಪ್ಪಣ್ಣಭಟ್ಟರ ಹತ್ತಿರ ಹಣ ಓಡಾಡುತ್ತಿರುವುದನ್ನು ತಿಳಿದ ಅಪ್ಪಣ್ಣಭಟ್ಟ ಗೋಪಾಲಕಮ್ತಿಗೆ ಹಚ್ಚಿಕೊಟ್ಟ. ಮಠದ ಏಜೆಂಟರ ಕಿವಿಯಲ್ಲಿ , ‘ಮಹರಾಯರೆ ಅವರ ಹತ್ತಿರ ದುಡ್ಡುಂಟು’ ಎಂದು ಚುಚ್ಚಿದ. ‘ನಿಮ್ಮ ಲೆಖ್ಖ ಚುಕ್ತಾಗಬೇಕೊ? ಇದೇ ಸರಿಯಾದ ಸಮಯ’ ಎಂದ. +ಕಮ್ತಿ ಕಡೆಯಿಂದ ವಸೂಲಿಸಾಬ ಒಂದು ಮಧ್ಯಾಹ್ನ ಬಂದು ಜಗುಲಿಯ ಮೇಲೆ ಕೂತ. ಕುಪ್ಪಣ್ಣಭಟ್ಟರು ಬೇಡಿದರು: ಕಾಡಿದರು. ದಪ್ಪ ಮೀಸೆಯ ಸಾಬ ಕವಳ ಹಾಕಿ ಕೂತೇಬಿಟ್ಟ. ‘ ಐದು ನೂರು ಸಂದಾಯವಾಗದ ಹೊರ್ತು ನಾನೇಳುವುದಿಲ್ಲ, ಇಲ್ಲಿಂದ.’ ಎಂದು ಚಂಡಿ ಹಿಡಿದ- ಕೂಗಲು ಪ್ರಾರಂಭಿಸಿದ. +ಅಳುವ ಮನುಷ್ಯನಾಗಿದ್ದರೆ ಭಟ್ಟರು ಅತ್ತುಬಿಡುತ್ತಿದ್ದರು. ಸಾಬ ಕೂಗಾಡಿದಂತೆ ಒಳಗೆ ಗೌರಮ್ಮನ ಉಬ್ಬಸ ಹೆಚ್ಚಾಯಿತು. ದುಃಸ್ವಪ್ನದಲ್ಲಿ ಕೈಯೆತ್ತಲಾರದವನಂತೆ ಭಟ್ಟರು ಕೂತುಬಿಟ್ಟರು. ದೂರದಲ್ಲೊಂದು ಮನುಷ್ಯ – ಪ್ರಾಣಿ ಸುಳಿದಾಡಿದಂತಾದರೆ ಸಾಕು, ಸಾಬನ ಗಂಟಲು ದೊಡ್ಡದಾಗುತ್ತಿತ್ತು. +ಪೆಟ್ಟಿಗೆಯ ಬಾಗಿಲು ತೆಗೆದು ನಾಲ್ಕು ನೂರು ರೂಪಾಯಿಯನ್ನು ಸಾಬನಿಗೆ ಕೊಟ್ಟರು. ಅವನು ಗೊಣಗುತ್ತಲೇ ಸೈಕಲ್ ಹತ್ತಿ ಹೋದ. ಅಪ್ಪಣ್ಣಭಟ್ಟರು ದಾರಿಯಲ್ಲಿ ಕಾದು ಸಾಬನಿಗೆ ಕಾಫಿ ಕೊಟ್ಟರು. +ಸಾಬ ಹೋಗುತ್ತಿದ್ದಂತೆ ಡಾಕ್ಟರರ ಕಡೆಯಿಂದ ಕಾಂಪೌಂಡರ್ ಬಂದ. ಅವನಿಗೆ ಇನ್ನೊಂದು ನೂರು ಕೊಟ್ಟಿದ್ದಾಯಿತು. ಕೈಯಲ್ಲಿ ಒಂದು ಸಾವಿರ ಉಳಿಯಿತು. ಲಾಭದ ಹಣದಲ್ಲಿ ಸಾಲವನ್ನು ತೀರಿಸಿದಂತಾಯಿತು. ಪರವಾಯಿಲ್ಲವೆಂದು ಕುಪ್ಪಣ್ಣಭಟ್ಟರು ಸಮಾಧಾನಗೊಂಡರು. ಮಾರನೇ ಬೆಳಿಗ್ಗೆ ಮಠದ ಏಜೆಂಟರೇ ಹಾಜರು. +ಭಟ್ಟರು ಮಣೆ ಹಾಕಿದರು. ಉಪಚರಿಸಿದರು. ಕಾಫಿ ಮಾಡಿಸಲೇ ಎಂದರೆ ಏಜೆಂಟರು ಬೇಡವೆಂದರು. “ ನೋಡಿ ನನ್ನ ಕಾಲು ಬಾತುಕೊಂಡಿದೆ. ಆದರೂ ನಾನೆ ಖುದ್ದು ಬಂದೆ. ಮಠದ ಕಡೆ ನೀವೇನು ಮುಖ ತೋರಿಸುವವರಲ್ಲ. ಗುರುಗಳು ಅಪ್ಪಣ್ಣಭಟ್ಟರ ಮನೆಗೆ ದಯಮಾಡಿಸಿದಾಗ ಹೇಳಿಕಳುಹಿಸಿದರೂ ನೀವು ಬರಲಿಲ್ಲ. ನರಸಿಂಹದೇವರಿಗೆ ದ್ರೋಹ ಮಾಡಿದವರಿಗೆ ಉಳಿಗಾಲವಿಲ್ಲ ಭಟ್ಟರೇ. ಎಲ್ಲಿ ಮಠದ ಬಾಕಿ ಕೊಟ್ಟುಬಿಡಿ.” ಎಂದು ಗಾಳಿ ಬೀಸಿಕೊಳ್ಳುತ್ತ ಏಜೆಂಟರು ಕೂತೆ ಬಿಟ್ಟರು. ಗೋಪಾಲಕಮ್ತಿಗೆ ನಾಲ್ಕು ನೂರು ಕೊಟ್ಟ ವಿಷಯ ತಿಳಿದಿದ್ದರಿಂದ ಏಜೆಂಟರು ಭಟ್ಟರ ಪ್ರಾರ್ಥನೆ ಬೆಳೆದಷ್ಟೂ ರೇಗಿದರು. +“ನಾಳೆಯೇ ಜಪ್ತಿಗೆ ವಾರಂಟು ತರುವೆ ’ ಎಂದು ಎದ್ದುನಿಂತರು. +ಕುಪ್ಪಣ್ಣಭಟ್ಟರು ಎಂಟು ನೂರು ತೆತ್ತು ನಿಟ್ಟುಸಿರುಬಿಟ್ಟರು. ಎಜೆಂಟರು “ಮುಂದಿನ ಗಡಿ ವಸೂಲಿಗೆ ಬಂದಾಗ ಉಳಿದದ್ದೆಲ್ಲ ಸಂದಾಯವಾಗಬೇಕು : ಇಲ್ಲವೆ ತೋಟ ಬಿಡಬೇಕು” ಎಂದು ಎಚ್ಚರಿಸಿ , ಅಪ್ಪಣ್ಣಭಟ್ಟರ ಮನೆಗೆ ಊಟಕ್ಕೆ ಹೋದರು. +ಮಾರೆನೆ ದಿನ ಅಡಿಕೆ ಮಾರಿದವರು ಒಟ್ಟಾಗಿ ಮುತ್ತಿದರು. +“ಇನ್ನು ಐದೈದಾದರೂ ಕೊಡಿ , ಭಟ್ಟರೇ. ಮನೆಯಲ್ಲಿ ಕಷ್ಟ. ಮಳೆಗಾಲದ ಸಾಮಾನು ಕೊಳ್ಳಬೇಕು” ಭಟ್ಟರ ಕೈಯಲ್ಲಿ ದುಡ್ಡಾಡುವುದು ಲೋಕಕ್ಕೆಲ್ಲ ತಿಳಿದುಬಿಟ್ಟಿತ್ತು. +ಅಡಿಕೆ ಬೆಲೆ ಐವತ್ತೈದರಿಂದ ಮೇಲೇಳಲಿಲ್ಲ. ಐವತ್ತಕ್ಕಿಳಿದುಬಿಟ್ಟಿತು. ಕಂಗಾಲಾದ ಭಟ್ಟರು ಶಿವಮೊಗ್ಗೆಗೆ ಬಸ್ಸು ಹಿಡಿದು ಹೋದರು. ಅಡಿಕೆಯನ್ನು ಮಾರಿದರು. ಮಂಡಿಯ ಸಾಲ ಬಡ್ಡಿ ತೀರಿಸಿದರು. ಅಡಿಕೆಯನ್ನು ತನಗೆ ಮಾರಿದವರಿಗೆ ಕಾಸು ಉಳಿಸಿಕೊಳ್ಳದಂತೆ ಉಳಿದ ಹಣವನ್ನು ಕೊಟ್ಟರು. ಬ್ಯಾಂಕಿನಲ್ಲಿ ಅಡವಿಟ್ಟು ಪಡೆದ ಹಣದ ಬಡ್ಡಿಯನ್ನು ತೀರಿಸಿದರು. ನಗ ಮಾತ್ರ ಬ್ಯಾಂಕಿನಲ್ಲೇ ಉಳಿಯಿತು. +ಮಳೆ ಹಿಡಿಯುವ ಮುಂಚೆ ಮೈದುನ ಗಾಡಿ ಕಟ್ಟಿಸಿಕೊಂಡು ಬಂದು , ಗಿಣಿಗೆ ಹೇಳುವಂತೆ ಭಾವಯ್ಯನಿಗೆ ಹೇಳಿದ: “ಬಂದು ಬಿಡಿ , ಭಾಗೀರತಿಗೆ ನಾನು ವರ ಹುಡುಕುವೆ . ಅಕ್ಕ ನಿತ್ರಾಣಳಾಗಿದ್ದಾಳೆ. ಗಣಪ ಕಡ್ಡಿಯಾಗಿದ್ದಾನೆ .” ಮತ್ತೆ ಅಕ್ಕನಿಗೆ ಹೇಳಿದ : “ನನ್ನ ಇವಳು ಗರ್ಭಿಣಿ. ನೀನು , ಭಾಗೀರತಿ ಮನೆಗೆ ಬಂದೊಂದು ಆರು ತಿಂಗಳಿದ್ದರೆ ಉಪಕಾರವಾಗುತ್ತದೆ. ಬಾಣಂತನ ಮಾಡುವವರು ಇಲ್ಲ. ಭಾಗೀರತಿಯಿಂದ ತುಂಬ ಸಹಾಯವಾಗುತ್ತದೆ. ಅವಳಿಗೆ ವರ ಹುಡುಕುವೆ ನಾನು. ನಿನ್ನ ಯಜಮಾನರ ಮಾತು ಕೇಳಬೇಡ. ಬಂಗಾರ ಯಾಕೆ ಅವರ ಕೈಯಲ್ಲಿ ಕೊಟ್ಟೆ? ನನ್ನ ಮಾತು ಕೇಳಿ ಹಲಸೂರಿಗೆ ಬಂದು ಬಿಡಬಾರದೆ? ಒರಟು ಜನ್ಮ ಅವರದ್ದು . ತಾನು, ತನ್ನ ಹಠ. ಹೆಂಡತಿ, ಮಕ್ಕಳು ಎಂದು ಯಾರ ಲೆಖ್ಖವೂ ಇಲ್ಲ. ಉಳಿದವರಂತೆ ಉದ್ದಾರವಾಗದ ಹಾಗೆ ಏನಾಗಿದೆ ಹೇಳು ಇವರಿಗೆ. ನನಗಂತೂ ಹೊಳೆಯುವುದಿಲ್ಲ.” +“ಇವರಿಗಿತ್ತೀಚೆಗೆ ಯಾಕ ಸರಿಯಿಲ್ಲ ಕಣೋ , ನಾನು ಹೇಗೆ ಬಿಟ್ಟು ಬರಲೋ ?” ಎಂದರು ಗೌರಮ್ಮ. +“ಒಂದಾರು -ತಿಂಗಳ ಮಟ್ಟಿಗಾದರೂ ಬಾ ಅಕ್ಕ . ಇವಳಿಗೆ ಬಾಣಂತನ ಮಾಡುವವರಿಲ್ಲ. ಭಾಗೀರತಿಗೂ ವರ ನೋಡುವೆ ” ಎಂದು ಸುಬ್ರಹ್ಮಣ್ಯ ದುಂಬಾಲು ಬಿದ್ದ. ಕುಪ್ಪಣ್ಣಭಟ್ಟರು ಹೂ ಅನ್ನಲಿಲ್ಲ , ಊಹು ಎನ್ನಲಿಲ್ಲ. ‘ಅವಳ ಇಷ್ಟ’ ಎಂದು ಬಿಟ್ಟರು. ‘ ನೀವೂ ಅಷ್ಟು ದಿನ ಬನ್ನಿ’ ಎಂದರೆ ‘ತೋಟ ನೋಡಿಕೊಳ್ಳುವವರು ಯಾರು?’ ಎಂದು ಬಿಟ್ಟರು. ಗೌರಮ್ಮನಿಗೆ ತವರಿಗೆ ಹೋಗುವ ಆಸೆ : ಬಂಗಾರ ಕೈ ತಪ್ಪಿದ ದುಃಖ : ಭಾಗೀರತಿಯ ಮದುವೆಯ ಆತಂಕ : ಗಂಡನ ಬಗ್ಗೆ ಕಳವಳ – ಆದರೂ ಕೊನೆಯಲ್ಲಿ ತಮ್ಮನ ಜೊತೆ ಗಾಡಿಯಲ್ಲಿ ಹೊರಟುಬಿಟ್ಟರು. +ಕುಪ್ಪಣ್ಣಭಟ್ಟರು ಒಬ್ಬರೇ ಮನೆಯಲ್ಲಿದ್ದು ಗಂಜಿ ಬೇಯಿಸಿಕೊಂಡು ದುಡಿದು ಮಳೆಗಾಲವೆಲ್ಲ ಕಳೆದರು. ಉಬ್ಬಸದ ಹೆಂಡತಿ ಮೂಲೆಯಲ್ಲಿಲ್ಲದೆ ಮನೆಯಲ್ಲಿಷ್ಟು ಶಾಂತಿ . ಭಣಗುಟ್ಟುವ ಮೌನ. ಮಳೆ ಜಡಿಯುತ್ತ ಇದ್ದಂತೆ ರಾತ್ರೆ ಕಣ್ಣುಬಿಟ್ಟು ಮಲಗಿದ್ದ ಭಟ್ಟರ ಮನಸ್ಸಿನಲ್ಲಿ ಒಂದು ನಿಶ್ಚಯ ಗಟ್ಟಿಯಾಯಿತು. ಆ ಬಂಗಾರವನ್ನು ಬ್ಯಾಂಕಿನಿಂದ ಬಿಡಿಸಿ ಹೆಂಡತಿಗೆ ಕೊಟ್ಟುಬಿಡಬೇಕು. ಯಾರ ಋಣವೂ ಬೇಡ. +ನೂರು ಮಣ ಅಡಿಕೆಯಾಗಬೇಕಾದಲ್ಲಿ ಬರೆ ಐವತ್ತು ಮಣ ಕೈಗೆ ಹತ್ತಿತು. ಕುಪ್ಪಣ್ಣಭಟ್ಟರು ಕಾಶಿಯಲ್ಲಿದ್ದ ಶ್ರೀ ಗುರುಗಳ ಪಾದಾರವಿಂದದಲ್ಲಿ ಬೇಡಿ ಕಾಗದ ಬರೆದರು: “ಈ ಬಾರಿಯೊಂದು ಅನುಗ್ರಹ ತೋರಿಸಿ. ಮುಂದಿನ ಸಾರಿ ಎಲ್ಲ ಗೇಣಿಯನ್ನು ಕೊಟುಬಿಡುವೆ. ಬಡವನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ !” +ಆದರೆ ಉತ್ತರವೇ ಇಲ್ಲ. ಹದಿನೈದು ದಿನ ಕಾದರು. ಇನ್ನು ಕಾದರೆ ಕಮ್ತಿಯ ವಸೂಲಿ ಸಾಬ, ಮಠದ ಏಜೆಂಟರು ಬಂದು ಮುತ್ತುತ್ತಾರೆ. ಐವತ್ತು ಮಣದಲ್ಲಿ ಒಂದಡಿಕೆ ನನಗುಳಿಯದಂತೆ ಎತ್ತಿಕೊಂಡು ಹೋಗುತ್ತಾರೆ . ಬಂಗಾರ ಬ್ಯಾಂಕಿನಲ್ಲಿ ಉಳಿದುಬಿಡುತ್ತದೆ. +ಅಡಿಕೆಯನ್ನು ಸಾಗಿಸಿಬಿಡುವುದೆಂದು ನಿಶ್ಚಯ ಮಾಡಿದರು. ಗೇಣಿ ವಸೂಲಿಗೆ ಏಜೆಂಟರು ಬರುವ ಮುಂಚೆ ಅಡಿಕೆಯನ್ನು ಸಾಗಿಸಿಬಿಡಬೇಕು. ಆದದ್ದಾಗಲಿ, ಮುಂದಿನ ವರ್ಷದಿಂದ ಸಾಲ ತೀರಿಸುತ್ತಾ ಬರುತ್ತೇನೆಂದು ಬೇಕಾದರೆ ಜನಿವಾರ ಮುಟ್ಟಿ ಆಣೆ ಹಾಕಿಕೊಳ್ಳುವೆ. ಈ ವರ್ಷ ಬಂಗಾರವನ್ನು ಬಿಡಿಸಿಕೊಳ್ಳದಿದ್ದರೆ ಅದರ ಮೇಲೆ ಮತ್ತೆ ಬಡ್ಡಿ ಬೆಳೆಯುತ್ತದೆ . ಕೈಗತವಾಗದೆ ಈ ಜನ್ಮಕ್ಕೆ ತಪ್ಪಿಬಿಡುತ್ತದೆ. +ಹೀಗೆ ನಿರ್ಧಾರ ಮಾಡಿ ಶಿವಮೊಗ್ಗೆಯ ಕಡೆಗೆ ಹೋಗುವ ಲಾರಿಯಿದೆಯೋ ವಿಚಾರಿಸಲು ಪೇಟೆಗೆ ಹೋದರು. ಗೋಪಾಲಕಮ್ತಿಯ ಶಡ್ಡಗನ ಲಾರಿಯೊಂದು ಮಾತ್ರ ಇದೆಯೆಂದು ತಿಳಿಯಿತು. ಆದದ್ದು ಆಗಲಿ ಎಂದು ಮಾತನಾಡಿದರು.ಅವನು , “ಬುಧವಾರ ಲಾರಿ ಹೋಗುವುದು ” ಎಂದ. “ಎಷ್ಟು ಮಣ ತುಂಬುವುದಕ್ಕೆ‌ಇದೆ ?” ಎಂದ. +ಕುಪ್ಪಣ್ಣಭಟ್ಟರು ಮೆಟ್ಟಿಲಿಳಿಯುತ್ತಿದ್ದಂತೆ ಸೀದ ಹೋಗಿ ಗೋಪಾಲಕಮ್ತಿಗೆ ತಿಳಿಸಿದ. +ಮಾರನೇ ದಿನ ಬೆಳಿಗ್ಗೆಯೇ ಜಗುಲಿಯ ಮೇಲೆ ವಸೂಲಿಸಾಬ ಹಾಜರು. ಭಟ್ಟರ ಎದೆ ಧಸಕ್ಕೆಂದಿತು. ‘ಹಿಂದಿನ ಬಾಕಿ ಆರುನೂರು. ಬಡ್ಡಿಯೊಂದೈವತ್ತು. ಒಟ್ಟು ಆರುನೂರೈವತ್ತು ತರದೆ ಬರಬೇಡ ಎಂದಿದ್ದಾರೆ ಕಮ್ತಿಗಳು’ ಎಂದು ಕೂತಲ್ಲಿಂದ ಅವ ಅಲುಗಲಿಲ್ಲ. +ಕುಪ್ಪಣ್ಣಭಟ್ಟರು , ‘ಸ್ವಲ್ಪ ತಡೆಯಪ್ಪ . ಹಿಂದೆ ನಾಲ್ಕು ನೂರು ಕೊಟ್ಟು ತೀರಿಸಲಿಲ್ಲವೆ’ ಎಂದರು. ಸಾಬ ಕೇಳಲಿಲ್ಲ. ಗಟ್ಟಿಯಾಗಿ ಕೂಗಿ ಮಾತನಾಡಿದ. ಸೊಪ್ಪು ಹೊತ್ತು ತರುತ್ತಿದ್ದ ಅಪ್ಪಣ್ಣಭಟ್ಟರ ಆಳು ಇದನ್ನು ಕೇಳಿಸಿಕೊಂಡು ಒಡೆಯರಿಗೆ ತಿಳಿಸಿದ. ಅಪ್ಪಣ್ಣಭಟ್ಟರು ಕೂಡಲೆ ಗಾಡಿ ಕಟ್ಟಿಸಿಕೊಂಡು ಮಠಕ್ಕೆ ಹೋದರು. +ಮಧ್ಯಾಹ್ನವಾದ ಮೇಲೆ ಸಾಬ ಸೈಕಲ್ ಹತ್ತಿ ಪೇಟೆಗೆ ಕಮ್ತಿಯ ಹತ್ತಿರ ಮಾತಾಡಿ ತಕ್ಕಡಿ ಚೀಲ ತಂದ : ‘ಆರು ನೂರ ಐವತ್ತು ರೂಪಾಯಿ ಸಾಲಕ್ಕೆ ಸಲ್ಲುವಷ್ಟು ಅಡಿಕೆಯನ್ನು ತೂಕ ಮಾಡಿಕೊಡಿ’ ಎಂದ. ‘ಮಣಕ್ಕೆ ಒಂದರ ನಲವತ್ತೈದು ರೂಪಾಯಿಯಂತೆ ಹದಿನೈದು ಮಣ ನೀವು ನನಗೆ ಕೊಟ್ಟರೆ , ನಾನೇ ನಿಮಗೆ ಇಪ್ಪತ್ತೈದು ರೂಪಾಯಿ ಕೊಡಬೇಕಾಗುತ್ತದೆ. ಇಗೋ ಹಣ’ ಎಂದು ಜೇಬಿನಿಂದ ದುಡ್ಡು ತೆಗೆದು ತೋರಿಸಿದ. +ಶಿವಮೊಗ್ಗೆಯಲ್ಲಿ ಅಡಿಕೆ ದರ ಕಮ್ಮಿಯೆಂದರೆ ಮಣಕ್ಕೆ ಐವತ್ತು ರೂಪಾಯಿ : ಅಲ್ಲದೆ ಕಮ್ತಿಯ ಮರುವ ತೂಕ ಬೇರೆ . ಆಗದು ಎಂದರು ಭಟ್ಟರು ಒರಟಾಗಿ. +ಸಾಬ ಧೈರ್ಯ ಮಾಡಿ ತಕ್ಕಡಿ ಹಿಡಿದು ಕಾಲಿಟ್ಟ. ಭಟ್ಟರಿಗೆ ಸಿಟ್ಟು ರುಮ್ಮೆಂದು ತಲೆಗೆ ಏರಿಬಿಟ್ಟಿತು. ಥಟ್ಟನೆ ಚಿಮ್ಮಿ ಚೀಲದಲ್ಲಿ ಅಡಿಕೆ ಕೂಡಿಟ್ಟಿದ್ದ ರೂಮಿನ ಹೊಸಲಿನ ಮೇಲೆ ಕೂತರು. “ಈ ಅಡಿಕೆಯನ್ನು ನೀನು ಮುಟ್ಟುವ ಮುಂಚೆ ನನ್ನ ಹೆಣ ಬೀಳಬೇಕು ” ಎಂದರು. +ವಸೂಲಿ ಸಾಬನಿಗೆ ತಬ್ಬಿಬ್ಬಾಯಿತು. ಎರಡು ಹೆಜ್ಜೆ ಹಿಂದಕ್ಕೆ ಸರಿದು ತಕ್ಕಡಿಯನ್ನು ಕೆಳಗಿಟ್ಟು ಕೂತ. ವಸ್ತದ ಮುಂಡಾಸು ಬಿಚ್ಚಿ ಮುಖ ಒರೆಸಿಕೊಂಡ. “ ದೊಡ್ಡವರೆ ಹೀಗೆ ಭಂಡತನಕ್ಕೆ ಇಳಿದರೆ ” ಎಂದು ಗೊಣಗಿಕೊಂಡ. +ವಸೂಲಿ ಸಾಬ ಮುಂದೇನು ಮಾಡುವುದೆಂದು ಅರಿಯದೆ ಭಟ್ಟರನ್ನು ದುರುಗುಟ್ಟಿ ನೋಡುತ್ತ ಕೂತೇಬಿಟ್ಟ. ಭಟ್ಟರೂ ಪರವಶರಾದವರಂತೆ ಹೊಸಲಿನ ಮೇಲೆ ಬಾಗಿಲಿಗೆ ಅಡ್ಡ ಕೈಮಾಡಿ ಕೂತರು. ಅವರ ಕೃಶ ಶರೀರ ಭಾವದೊತ್ತಡಕ್ಕೆ ನಡುಗತೊಡಗಿತು. ತುಟಿ ಅದುರಿತು. +ಹೀಗೆ ಹತ್ತು ಹನ್ನೆರಡು ನಿಮಿಷ ಕಳೆಯುವುದರಲ್ಲೇ ಎತ್ತಿನ ಕೊರಳಿನ ಗಂಟೆಯ ಶಬ್ದ ಕೇಳಿಸಿತು: ಶಬ್ದದ ಮೇಲೆ ಮಠದ ಗಾಡಿಯೆಂದು ಭಟ್ಟರಿಗೆ ಹೊಳೆಯಿತು. ಕ್ಷಣ ಮೈ ಬತ್ತಿದಂತಾಗಿ ಕಣ್ಣು ಮುಚ್ಚಿದರು. ಮತ್ತೆ ಮನಸ್ಸನ್ನು ಕಲ್ಲು ಮಾಡಿ ಕೂತರು. ಏಜೆಂಟರು , ಶಾನುಭೋಗರು, ಮಠದ ಉಗ್ರಾಣಿ, ತಕ್ಕಡಿ ಹಿಡಿದ ಇನ್ನೊಬ್ಬ ಆಳು ನೇರ ಒಳ ಬಂದರು. ಜರಿ ಶಲ್ಯದಿಂದ ಗಾಳಿ ಬೀಸಿಕೊಳ್ಳುತ್ತ ಏಜೆಂಟರು: +“ಏನು ನಡೆದಿದೆ ಇಲ್ಲಿ” ಎಂದರು. +ವಸೂಲಿ ಸಾಬ ಕಮ್ತಿಯವರಿಗೆ ಸಲ್ಲಬೇಕಾದ ಸಾಲದ ವಿಷಯ ತಿಳಿಸಿದ. ಅದಕ್ಕೆ ಏಜೆಂಟರು : +“ಇವರು ನಮ್ಮ ಒಕ್ಕಲು. ಶ್ರೀ ನರಸಿಂಹ ದೇವರ ಗೇಣಿ ಮತ್ತು ಹಳೆಯ ಬಾಕಿ ಚುಕ್ತವಾಗಬೇಕು. ಏನಿದ್ದರೂ ಕಮ್ತಿಯದು ಆಮೇಲೆ, ಹಾಗೆಂದು ನಿನ್ನ ಒಡೇರಿಗೆ ಹೇಳು” ಎಂದರು. +ವಸೂಲಿ ಸಾಬ ಅಷ್ಟಕ್ಕೆ ಬಿಡಲಿಲ್ಲ. ‘ಕಮ್ತಿಯವರ ಸಾಲ ತೀರಿಸುತ್ತೇನೆ ಎಲ್ಲಕ್ಕಿಂತ ಮೊದಲಾಗಿ ಎಂದು ಭಟ್ಟರು ವಚನ ಕೊಟ್ಟಿದ್ದಾರೆಂದು ಒಂದು ಸುಳ್ಳು ಹೊಡೆದ. ಗುಟ್ಟಾಗಿ ಅಡಿಕೆ ಸಾಗಿಸಬೇಕೆಂದಿದ್ದರು ಎಂದು ಹೇಳಿದ. +“ಇಷ್ಟಕ್ಕೆ ಇಳಿದುಬಿಟ್ಟಿರಾ ಭಟ್ಟರೆ? ನರಸಿಂಹ ದೇವರ ಆಸ್ತಿಯನ್ನು ನುಂಗಿ ದಕ್ಕಿಸಿಕೊಳ್ಳುತ್ತೇನೆಂದು ತಿಳಿದಿರಾ? ” ಎಂದರು ಏಜೆಂಟರು. ತಿರಸ್ಕಾರದಿಂದ ಭಟ್ಟರ ಕಡೆ ನೋಡಿ. ಭಟ್ಟರು ದೈನ್ಯದಿಂದ ತಾನ ಗುರುಗಳಿಗೆ ಬರೆದ ವಿಷಯ ಹೇಳಿದರು. ಜನಿವಾರವನ್ನು ಕೈಯಲ್ಲಿ ಹಿಡಿದು “ಈ ಬಾರಿಯೊಮ್ಮೆ ಮನ್ನಿಸಿದರೆ ಮುಂದಿನ ಸಲದಿಂದ ಚುಕ್ತ ಮಾಡುತ್ತ ಬರುತ್ತೇನೆ” ಎಂದರು. +“ಚುಕ್ತಾ ಮಾಡುತ್ತಾರಂತೆ ಚುಕ್ತ ! ಯಾವ ಬಾಯಲ್ಲಿ ಅಂತೀರಿ ಹೇಳಿ? ಅಡಿಕೆ ವ್ಯಾಪಾರ ಮಾಡಕ್ಕೆ ಕೈಯಲ್ಲಿ ದುಡ್ಡಿದೆ : ದೇವರ ಸಾಲ ತೀರಿಸಲಿಕ್ಕೆ ಇಲ್ಲ, ಅಲ್ಲವ? ಗುರುಗಳು ಖುದ್ದು ಹೇಳಿಕಳಿಸಿದರೆ ಬಂದು ನೋಡಲಿಕ್ಕಾಗದ ಧಿಮಾಕು ನಿಮಗೆ ಬಂತಲ್ಲ? ಮಠದ ಅನ್ನವನ್ನೇ ತಿಂದುಕೊಂಡಿದ್ದು. ದೇವರ ಅನ್ನ ತಿನ್ನುತ್ತಿದ್ದೀನಿ, ತೋಟವನ್ನು ಊರ್ಜಿತವಾಗಿಟ್ಟುಕೊಂಡಿರಬೇಕೆಂಬ ಲೆಖ್ಖವಿಲ್ಲ ನಿಮಗೆ. ಥತ್, ನಾಚಿಗೆಗೆಟ್ಟ ಬ್ರಾಹ್ಮಣ. ಈ ಮನೆಯನ್ನಿಟ್ಟುಕೊಂಡಿರುವ ಪಾಡು ನೋಡಿ. ನೀವೇನು ಶೂದ್ರರೋ , ಕುಲೀನ ಬ್ರಾಹ್ಮಣರೊ? ಇಗೋ ಗುರುಗಳ ಆಜ್ಞೆಯೇ ಆಗಿದೆ ” ಎಂದು ಏಜೆಂಟರು ಜೇಬಿನಿಂದ ಕಾಗದ ತೆಗೆದು ಓದಿದರು, ಗುರುಗಳು ಅದರಲ್ಲಿ ಕುಪ್ಪಣ್ಣಭಟ್ಟರನ್ನು ಎಬ್ಬಿಸಿ ಅಪ್ಪಣ್ಣಭಟ್ಟರಿಗೆ ತೋಟ ಗೇಣಿಗೆ ಕೊಡಬೇಕೆಂದು ವಿಧಿಸಿ ಬರೆದಿದ್ದರು. +ಶಾನುಭೋಗರು ಕನ್ನಡಕ ಹಾಕಿ ಕುಪ್ಪಣ್ಣಭಟ್ಟರ ಸಾಲ ಬಡ್ಡಿಗಳ ಮೊತ್ತ ಮಾಡಿ “ಮೂರು ಸಾವಿರ ” ಎಂದರು . ಏಜೆಂಟರು ಮಠದ ಉಗ್ರಾಣಿಗೆ “ಕೋಣೆಯಲ್ಲಿರುವ ಅಡಿಕೆಯನ್ನು ಅಳಿ” ಎಂದರು. +ಎಮ್ಮೆ ವ್ಯಾಪರ ಮಾಡುತ್ತಿದ್ದು ದುಡ್ಡೆಲ್ಲ ನಷ್ಟವಾದ ಮೇಲೆ ಹೋದ ವರ್ಷ ಮಠ ಸೇರಿದ್ದ ಉಗ್ರಾಣಿ ಏಜೆಂಟರನ್ನು ಮೆಚ್ಚಿಸಲೆಂದು ಸಡಗರದಿಂದ ಎದ್ದು ನಿಂತ. ಆಳೆತ್ತರದ ಕಪ್ಪು ಭೀಮಾಕೃತಿ ಅವನದ್ದು. ಹೊಸಲಿನ ಮೇಲೆ ಕೂತಿದ್ದ ಕುಪ್ಪಣ್ಣಭಟ್ಟರ ಎದುರು ನಿಂತು: +“ಜಾಗ , ಜಾಗ .” ಎಂದು ಒರಟಾಗಿ ಅಂದ. +“ಹ್ವಾಯ್ , ಕಮ್ತಿಯವರಿಗೆ ಅದರಲ್ಲಿ ಹದಿನೈದು ಮಣ ಸಲ್ಲಬೇಕು ” ಎಂದ ವಸೂಲಿ ಸಾಬ. +“ನೀನಿಲ್ಲಿಂದ ಜಾಗ ಬಿಡುತ್ತೀಯೋ? ಅಥವಾ ಮರ್ಯಾದೆಯಾಗಬೇಕೊ?” ಏಜೆಂಟರು ಗದರಿಸಿ ವಸೂಲಿಸಾಬನನ್ನು ತಿಂದುಬಿಡುವಂತೆ ನೋಡಿದರು. ವಸೂಲಿ ಸಾಬ ನಡೆದದ್ದೆಲ್ಲವನ್ನು ಕಮ್ತಿಗೆ ತಿಳಿಸಿಬಿಡಬೇಕೆಂದು ಅವಸರದಿಂದ ಸೈಕಲ್ ಹತ್ತಿ ಹೊರಟ. “ನೀನೆ ಏಕೆ ಮೊದಲಾಗಿ ಅಡಿಕೆ ಅಳೆದು ತರಲಿಲ್ಲವೆಂದು” ಕಮ್ತಿ ಛೀಮಾರಿ ಹಾಕುವನೆಂದು ಸಾಬನಿಗೆ ನಡುಕ ಹತ್ತಿಬಿಟ್ಟಿತು. ಏನು ಸುಳ್ಳು ಹೇಳಿ ಪಾರಾಗುವುದು ಎಂದು ಚಿಂತಿಸುತ್ತ ಸೈಕಲ್ ತುಳಿದ. +ಹೊಸಲಿನ ಮೇಲ ಕೈಯಡ್ಡ ಮಾಡಿ ಕೂತಿದ್ದ ಹಿಡಿ ಶರೀರದ ಭಟ್ಟರಿಗೆ ಇನ್ನೊಮ್ಮೆ ಉಗ್ರಾಣಿ: +“ಹ್ವಾಯ್, ಜಾಗ, ಜಾಗ .” ಎಂದ. +“ನೀವು ಇಲಿರುವ ಕಾಳಡಿಕೆ ಮುಟ್ಟುವ ಮುಂಚೆ ನನ್ನ ಹೆಣ ಬೀಳಬೇಕು” ಕುಪ್ಪಣ್ಣಭಟ್ಟರು ಗಡಸಾಗಿ, ಗಟ್ಟಿಯಾಗಿ ಹೇಳಿದರು. +ಒಂದು ಕ್ಷಣ ಏಜೆಂಟರಿಗೆ ಶಾನುಭೋಗರಿಗೆ, ಮಠದ ಉಗ್ರಾಣಿಗೆ ತಬ್ಬಿಬಾಯಿತು. ಏಜೆಂಟರು ಕಕ್ಕಾಬಿಕ್ಕಿಯಾಗಿ ಕೇಳಿದರು. +“ಏನೆಂದಿರಿ ?” +“ಮೊದಲು ನನ್ನ ಹೆಣ ಬೀಳಬೇಕು ಎಂದೆ” . ಅವರ ಇಡಿಯ ಪ್ರಾಣ ಬೆಂಕಿಯ ನಾಲಗೆಯಂತೆ ನಿಶ್ಚಯದಿಂದ ಉರಿಯುತ್ತಿತ್ತು. +“ಬ್ರಾಹ್ಮಣನಾಗಿ ಹುಟ್ಟಿ ಯಾಕೆ ಹೀಗೆ ಭಂಡಗೆಟ್ಟುಬಿಟ್ಟಿರಿ ಭಟ್ಟರೆ ?” ಎಂದು ಏಜೆಂಟರು ಕೂಗಿದರು. ಶಾನುಭೋಗರು ಪುಸಲಾಯಿಸಿದರು. ಏನೂ ನಡೆಯಲಿಲ್ಲ. +“ಆಗಲಿ ನಿಮ್ಮ ಸೊಕ್ಕು ಇಳಿಸುವೆ” ಎಂದು ಏಜೆಂಟರು ಎದ್ದು ನಿಂತು ಹೊರಟರು. ಪರಿವಾರ ಸಮೇತ, ಅಪ್ಪಣ್ಣಭಟ್ಟರ ಮನೆಗೆ ಹೋಗಿ “ಗಾಡಿಯಲ್ಲೆಲ್ಲಾದರೂ ಭಟ್ಟರು ಅಡಿಕೆ ಸಾಗಿಸದಂತೆ ಒಂದು ಕಣ್ಣಿಟ್ಟಿರಿ . ನಾಳೆಯೇ ಬಂದು ತಕ್ಕ ಶಾಸ್ತಿ ಮಡುವೆ” ಎಂದು ಎಲ್ಲ ಏಜೆಂಟರು ಧೃಡನಿರ್ಧಾರದಲ್ಲಿ ಗಾಡಿಯನ್ನು ಹತ್ತಿ ಹೊರಟುಬಿಟ್ಟರು: ಒಂದು ಲೋಟ ಕಾಫಿಗೂ ಅಪ್ಪಣ್ಣಭಟ್ಟರ ಮನೆಯಲ್ಲಿ ನಿಲ್ಲಲಿಲ್ಲ. +ಹೊಸಲಿನ ಮೇಲೆ ಕೂತ ಕುಪ್ಪಣ್ಣಭಟ್ಟರ ಕಾಲು ಮರಗಟ್ಟಿತ್ತು. ಎದ್ದುನಿಂತು ಸುಧಾರಿಸಿಕೊಂಡು ಬಾಗಿಲಿಗೆ ಅಗಳಿ ಹಾಕಿ, ಸ್ನಾನ ಮಾಡಿ ಗಂಜಿಯನ್ನು ಬೇಯಿಸಿಕೊಂಡು ತಿಂದರು. ಸಾಯಂಕಾಲ ಕೊಟ್ಟಿಗೆಗೆ ಬಂದ ಹಸುಗಳನ್ನು ಕಟ್ಟಿ, ಕಲಗಚ್ಚು ಕೊಟ್ಟು, ಹಾಲು ಕರೆದರು. ಲಾಟೀನು ಹಚ್ಚಿ ನಡುಮನೆಯಲ್ಲಿ ಕೂತರು. ಮತ್ತೆ ಅಡಿಗೆ ಮಾಡಲು ಇಷ್ಟವಿಲ್ಲದೆ ಒಂದಿಷ್ಟು ಕಾಯಿಸಿದ ಹಾಲು ಕುಡಿದು ಅಲ್ಲೇ ಒರಗಿದರು. ನಿದ್ದೆ ಹತ್ತಲೇ ಇಲ್ಲ. ಎಷ್ಟು ಹೊತ್ತಿರಬಹುದೆಂದು ಅಂಗಳಕ್ಕೆ ಬಂದು ಆಕಾಶ ನೋಡಿದರು. ವೃಕ್ಷಗಳ ಗಂಭೀರ ಮೌನದಲ್ಲಿ ನಸುಕಿನ ಮುನ್ನದ ಬೆಳ್ಳಿ ಆಕಾಶದಲ್ಲಿ ಹೊಳೆಯುತ್ತಿತ್ತು. ಒಳಗೆ ಬಂದು ಅಗಳಿ ಹಾಕಿ ಕಣ್ಣು ಮುಚ್ಚಿದರು. ಹಾಗೇ ರೆಪ್ಪೆ ಬಡಿ ನಿದ್ದೆ ಹತ್ತಿದಂತಾಯಿತು. +ದನ ಕಾಯುವ ಹುಡುಗ ಬಂದು ಕೂಗಿದಾಗಲೇ ಎಚ್ಚರ. ಮುಖ ತೊಳೆದು, ಬಾವಿಯಿಂದ ಸೇದಿದ ನೀರನ್ನು ಮೈಮೇಲೆ ದಡದಡನೆ ಸುರಿದುಕೊಂಡು ಒಲೆ ಹತ್ತಿಸಿ, ಎಸರಿಟ್ಟರು. +ಹೊರಗೆ ಬಾಗಿಲು ಕುಟ್ಟಿದಂತಾಯ್ತು. +“ನಾನು ಅಮೀನ ಭಟ್ಟರೇ, ಬಾಗಿಲು ತೆಗೆಯಿರಿ.” +ಭಟ್ಟರು ಮಾತಾಡಲಿಲ್ಲ. ಅಡಿಕೆ ತುಂಬಿದ ಕೋಣೆಯ ಹೊಸಿಲಿನ ಮೇಲೆ ಹೋಗಿ ಕೂತುಬಿಟ್ಟರು. ಮತ್ತೆ ಸೈಕಲ್ಲಿನ ಬೆಲ್ಲು ಬಾರಿಸಿದ ಶಬ್ದ . ಕಮ್ತಿಯ ಸ್ವರ: +“ಭಟ್ಟರೆ ಬಾಗಿಲು ತೆರೆಯಿರಿ. ಮಣಕ್ಕೆ ನಲವತ್ತೇಳರಂತೆ ಕೊಡುವೆ. ಲೆಖ್ಖ ಚುಕ್ತಾ ಮಾಡಿಬಿಡಿ .” +ಭಟ್ಟರು ಹಂದಲಿಲ್ಲ . ಮತ್ತೆ ವಸೂಲಿ ಸಾಬ ಕೂಗಿದ. +“ಬಾಗಿಲು ತೆರೆಯುತೀರೋ ಇಲ್ಲವೊ ?” +ಅಮೀನ ತಿರುಗಿ ಬಂದ . ಕಮ್ತಿಗೂ ಅವನಿಗೂ ವಾಗ್ವಾದ ಹತ್ತಿತು. ಏಜೆಂಟರನ್ನೇ ಕರೆದು ತರುವೆನೆಂದು ಅಮೀನ ಹೋದ. ಕಮ್ತಿ ಮತ್ತೆ ಕರೆದ: +“ಭಟ್ಟರೆ ಬಾಗಿಲು ತೆರೆಯಿರಿ. ಮಣಕ್ಕೆ ಐವತ್ತರಂತೆ ಕೊಡುವೆ . ನನ್ನ ಲೆಖ್ಖ ಚುಕ್ತ ಮಾಡಿಬಿಡಿ .” +ಉತ್ತರವಿಲದ್ದರಿಂದ ಬಾಯಾರೆ ಬೈಯತೊಡಗಿದ. “ನೀವಿಂಥ ಭಂಡರೆಂದು ತಿಳಿದಿದ್ದರೆ ಅಂಗಡಿಯ ಮೆಟ್ಟಿಲಿನ ಮೇಲೆ ನಿಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ – ತಿಳಿಯಿತ ?” +ಕಮ್ತಿ ಕೊನೆಗೆ ವಸೂಲಿ ಸಾಬನಿಗೆ ಗಟ್ಟಿಯಾಗಿ ಹೇಳಿದ: +“ಬುಡನ್, ಕೂಡಲೇ ನೀನು ಸೈಕಲ್ ಹತ್ತಿ ಇವರ ಮೈದುನರ ಊರಿಗೆ ಹೋಗು . ಪೈ ಬಿಡದಂತೆ ಸಾಲ ತೀರಿಸುವ ತನಕ ಅವರ ಮನೆಯ ಕಟ್ಟೆ ಬಿಟ್ಟು ಏಳಬೇಡ . ಇವರಿಗೆ ಮರ್ಯಾದೆಯಿಲ್ಲದಿದ್ದರೆ ಅವರಿಗೂ ಇಲ್ಲವ ನೋಡುವ .” +ಅಷ್ಟರಲ್ಲಿ ಏಜೆಂಟರೂ ಬಂದರು. ಕಮ್ತಿಗೂ ಅವರಿಗೂ ಜಟಾಪಟಿಯಾಯಿತು. ಪಿಂಡಕ್ಕೆ ಮುತ್ತಿದ ಕಾಗೆಗಳ ಹಾಗೆ ಕೂಗಾಡಿದರು. ಏಜೆಂಟರು ಕೊನೆಗೆ : +“ಹೊಡಿಯೋ ಡಂಗುರ ಬುಕ್ಲಾಪುರದಲ್ಲಿ” ಎಂದು ಡಂಗುರದವನಿಗೆ ಹರಾಜು ಸಾರಲು ಹೇಳಿದರು. ಡಂಗುರದವನು ಅಲ್ಲಿಂದಲೇ ಪ್ರಾರಂಭಿಸಿದ. ಡಂಗುರ ಬಡಿದು ಕೂಗಿದ: +“ಕುಪ್ಪಣ್ಣಭಟ್ಟರ ಚರಾಸ್ತಿಯೆಲ್ಲ ಹರಾಜಿಗಿದೆ . ಬೇಕಾದವರು ಬಂದು ಹಿಡಿಯಬದುದು.” +ಡಂಗುರದ ಶಬ್ದದಲ್ಲಿ ಕಮ್ತಿಯ ಕೂಗಾಟ ಮುಳುಗಿತು. ತಮ್ಮಟೆಯ ಶಬ್ದ ದೂರ ದೂರವಾಗುತ್ತಿದ್ದಂತೆ – +“ನಾನು ಕೋರ್ಟಿಗೆ ಹೋಗುವೆ” ಎಂದ ಕಮ್ತಿ. +“ದಯಮಾಡಿಸು” ಎಂದರು ಏಜೆಂಟರು. +ತಮ್ಮಟೆಯ ಶಬ್ದ ಇನ್ನಷ್ಟು ದೂರವಾಯಿತು. ಮೌನ ಕವಿಯಿತು. ಹೊರಗೆ ಬಿಸಿಲು ಏರಿತು. +“ಅಮೀನರೆ ಮುಂದಿನ ಕೆಲಸ ನಿಮ್ಮದು . ಉಗ್ರಾಣಿಗಳೇ ಇವರಿಗೆ ಸಹಾಯ ಮಾಡಿ. ಭಟ್ಟರಿನ್ನೇನಾದರೂ ತಂಟೆ ಮಾಡಿದರೆ ನಾನು ಅಪ್ಪಣ್ಣಭಟ್ಟನಲ್ಲಿರುವೆ. ಬಂದು ಕರೆಯಿರಿ” ಎಂದು ಏಜೆಂಟರು ಹೊರಟುಹೋದರು. +“ಬಾಗಿಲು ತೆರೆಯುತೀರೋ ಅಗುಳಿ ಮುರಿದ್ ಬರಬೇಕೊ ?” ಉಗ್ರಾಣಿ ಕೂಗಿದ. +ಉತ್ತರವಿಲ್ಲದ್ದು ನೋಡಿ ಪಿಕಾಶಿಯೆತ್ತಿ ಬಾಗಿಲಿಗೆ ಎಕ್ಕಿದ: ಅಗಳಿ ಲಟಲಟ ಎಂದಿತು. +“ಈಗಲಾದರೂ ಬಾಗಿಲು ತೆರೆಯಿರಿ.” ಎಂದು ಉಗ್ರಾಣಿ ಮತ್ತೆ ಕೂಗಿದ . ಉತ್ತರವಿಲ್ಲದ್ದು ನೋಡಿ ಇನ್ನೊಂದೇಟು ಹಾಕಿದ. ಅಗುಳಿ ಮುರಿದು ಬಾಗಿಲು ದಡಾರನೆ ತೆಗೆದುಕೊಂಡಿತು. ಉಗ್ರಾಣಿ ಯಮದೂತನಂತೆ ಎದುರು ಬಂದು ನಿಂತ. ಜಪ್ಪೆನ್ನದೆ ಕೂತಿದ್ದ ಭಟ್ಟರಿಗೆ ಏಳುವಂತೆ ಸನ್ನೆ ಮಾಡಿದ. +ಭಟ್ಟರು ಕಣ್ಣು ಮುಚ್ಚಿ ಕೂತೇ ಬಿಟ್ಟರು. ಮುದುರಿ ಕೂತ ಅವರ ಹಿಡಿ ಶರೀರವನ್ನು ಉಗ್ರಾಣಿ ನಿರಾಯಾಸ ಎತ್ತಿ ಅಂಗಳದ ಬಿಸಿಲಿನಲ್ಲಿಟ್ಟು ಬಂದ. ಅಡಿಕೆ ಚೀಲಗಳನ್ನೆಲ್ಲ ಬೆನ್ನುಕೊಟ್ಟು ಎತ್ತಿ ತಂದು ಅಂಗಳದ ಒಂದು ಮೂಲೆಯಲ್ಲಿಟ್ಟ. +ಉಗ್ರಾಣಿಗೆ ಹುರುಪೇರಿಬಿಟ್ಟಿತ್ತು. ಅಮೀನನ ಕಡೆ ತಿರುಗಿ : +“ಪಾತ್ರೆ ಪರಟೆಯ ಸಹಿತ ಹರಾಜೊ ?” ಎಂದು ಕೇಳಿದ. +ಅಮೀನ ಜೇಬಿನಿಂದ ಚೀಟಿ ತೆಗೆದು ಓದಿ : +“ಹಾ, ಚರಾಸ್ತಿ, ಸ್ಥಿರಾಸ್ತಿ ಸಹಿತ ಎಲ್ಲ ಹರಾಜು ಆಗಬೇಕೆಂದು ಅಪ್ಪಣೆ ಚೀಟಿಯಿದೆ” ಎಂದ. +ಉಗ್ರಾಣಿ ಮನೆಯೊಳಕ್ಕೆ ನುಗ್ಗಿದ. ಹಾಲಿನ ಪಾತ್ರೆಯನ್ನು ಎತ್ತಿ ತಂದು ಅಂಗಳದ ಮೂಲೆಯಲ್ಲಿ ಹಾಲು ಚೆಲ್ಲಿದ. ನಂತರ ಒಂದೊಂದಾಗಿ ಹಂಡೆ, ಬಾಣಲೆ, ಅನ್ನದ ತಪ್ಪಲೆ, ಹರಿವಾಣ, ಬೆಳ್ಳಿಯ ಚೊಂಬು, ಬಟ್ಟಲು, ತೀರ್ಥದ ಬಟ್ಟಲು ( ಭಟ್ಟರು ಘಟ್ಟದ ಕೆಳಗಿನಿಂದ ಬಂದಾಗ ತಂದದ್ದು ), ಜಾಗಟೆ, ಶಂಖ, ಹಬ್ಬಹರಿದಿನದ ಕಡಾಯಿಗಳು, ತೊಟ್ಟಿಲು, ಸವುಟು, ಹಾಸಿಗೆ, ಹರಕು ಚಾಪೆ ಕಂಬಳಿ, ಚಾವಡಿಯಲ್ಲಿದ್ದ ಒಂದು ಮರದ ಬೆಂಚು, ಹನ್ನೆರಡು ಕೂರುವ ಮಣೆ, ಶ್ರೀ ಕೃಷ್ಣನ ಬೆಳ್ಳಿಯ ಒಂದು ಪಟ, ಪಟ್ಟೆ ಮಡಿ ಹೀಗೆ ಸಾಲಿಗ್ರಾಮವಿದ್ದ ದೇವರ ಪೆಟ್ಟಿಗೆಯೊಂದನ್ನು ಬಿಟ್ಟು, ಕಸಪರಿಕೆ ಸಮೇತ ಭಟ್ಟರ ಎಲ್ಲ ಚರಾಸ್ಥಿಗಳನ್ನು ತಂದು ಅಂಗಳದಲ್ಲಿ ಹರಡಿದ . ಭಟ್ಟರು ಕಣ್ಣೆತ್ತದೆ ತನ್ನ ಚರಾಸ್ತಿಗಳ ನಡುವೆ ತಲೆಯ ಮೇಲೆ ಕೈಹೊತ್ತು ಬಿಸಿಲಿನಲ್ಲಿ ಕುಕ್ಕರು ಕೂತರು. +“ದನಗಳು ಸೇರುತ್ತವಲ್ಲ, ಚರಾಸ್ತಿಯಲ್ಲಿ” ಎಂದ ಉಗ್ರಾಣಿ. +“ಓಹೋ” ಎಂದ ಅಮೀನ. +ಹರಾಜನ್ನು ಸಾರಿ ತಮ್ಮಟೆಯನ್ನು ಬಾರಿಸುತ್ತ ಹಿಂದಕ್ಕೆ ಬಂದ ಆಳಿಗೆ “ಗುಡ್ಡದ ಮೇಲೆ ಇವರ ದನಗಳಿವೆ ಹೊಡೆದುಕೊಂಡು ಬಾ” ಎಂದ ಉಗ್ರಾಣಿ. ಸಣ್ಣ ಪುಟ್ಟ ಲೋಟ, ತಟ್ಟೆಗಳನ್ನು ತುಂಬಲೆಂದು ಉಗ್ರಾಣಿ ಒಳಗೆ ಹೋಗಿ ಖಾಲಿ ಗೋಣಿಚೀಲವೊಂದನ್ನು ತಂದು ಅಂಗಳದಲ್ಲಿ ಕೊಡವಿದ. ನಾಲ್ಕಾರು ಹಸಿ ಮೈಯ ಇಲಿಮರಿಗಳು ಅದರಿಂದ ಪತಪತನೆ ಉದುರಿದವು. ವಿಲವಿಲ ಒದ್ದಾಡಿದವು. ಅಮೀನ “ಇಸ್ಸಿ” ಎಂದ. ಉಗ್ರಾಣಿ ನಕ್ಕು “ಥತ್” ಎಂದ . ಅಂಜುತ್ತಂಜುತ್ತ ಒಂದು ಕಾಗೆ ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಎಗರಿ ಕುಕ್ಕಿ ಕಣ್ಣುಬಿಡದ ನುಣ್ಣನೆಯ ಮೈಯ ಮರಿಯನ್ನೆತ್ತಿ ಹಾರಿತು. +ದೂರದಲ್ಲಿ ಅಲ್ಲೊಂದು ಇಲ್ಲೊಂದು ಮರದ ಸಂದಿಯಿಂದ ಕೆಲಸದ ನೆವದಿಂದ ಬಂದವರಂತೆ ಕೈಯಲ್ಲಿ ಕತ್ತಿಯನ್ನೋ, ಹಗ್ಗವನ್ನೊ ಹಿಡಿದು ನಿಂತು ನೋಡುತ್ತಿದ್ದ ಬುಕ್ಲಾಪುರದವರು ಅಂಗಳಕ್ಕೆ ಬರುವ ಧೈರ್ಯ ಮಾಡಲಿಲ್ಲ. ಭಟ್ಟರ ಚಿರಾಸ್ತಿಯನ್ನು ಹರಾಜಿನಲ್ಲಿ ಹಿಡಿಯಲಿಲ್ಲ. ಪರರ ವಸ್ತುವಿಗೆ ಆಸೆ ಮಾಡಿ ತಾವ್ಯಾಕೆ ಪಾಪ ಕಟ್ಟಿಕೊಳ್ಳಬೇಕೆಂದು, “ಛೆ ಪಾಪ, ಪಾಪ ; ಎಂದು ಮರುಗಿ ಒಬ್ಬೊಬ್ಬರಾಗಿ ಹಿಂದಕ್ಕೆ ನಡೆದರು. ಅಲ್ಲೊಬ್ಬ ಇಲ್ಲೊಬ್ಬನಂತೆ ಪರಮ ಕುತೂಹಲಿಗಳು ಮಾತ್ರ ನಿಂತರು. +ಏಜೆಂಟರು ಬಂದು ಅಡಿಕೆ ಚೀಲಗಳನ್ನು ತೂಗಿಸಿ ಗಾಡಿಗೆ ತುಂಬಿಸಿದರು. ಅಮೀನ ಒಂದು ಚೀಟಿಯಲ್ಲೆಲ್ಲ ಬರೆದುಕೊಂಡ . ಕಸಪರಕೆ, ಚಿಲ್ಲರೆ ಪಾತ್ರೆ, ದೇವರ ಬೆಳ್ಳಿಪಟ, ಶಂಖ, ಜಾಗಟೆ ಬಿಟ್ಟು ಉಳಿದೆಲ್ಲ ಪಾತ್ರೆಗಳನ್ನು ಗಾಡಿಗೆ ತುಂಬಿಸಿದರು. +ಭಟ್ಟರ ಮುಖ ನೋಡದ ಏಜೆಂಟರು ಗಟ್ಟಿಯಾಗಿ ಅಂದರು: +“ನರಸಿಂಹ ದೇವರ ಆಸ್ತಿಗೆ ಮುಟ್ಟುಗೋಲು ಹಾಕಿ ಊರ್ಜಿತರಾದವರು ಇಲ್ಲ ಭಟ್ಟರೇ – ತಿಳಿಯಿತ? ಇನ್ನು ಮುಂದೆ ಈ ತೋಟವಾಗಲಿ, ಈ ಮನೆಯಾಗಲಿ ನಿಮ್ಮ ಭೋಗ್ಯದಲ್ಲಿಲ್ಲ. ಇನ್ನು ಮುಂದೆ ಅಪ್ಪಣ್ಣಭಟ್ಟರು ದೇವರ ಒಕ್ಕಲು” ಎಂದು ಹೇಳಿ ಗಾಡಿಯಲ್ಲಿ ಕೂತರು: ಕೊನೆಯ ಗುಂಡು ಹಾರಿಸಿದರು: +“ನಿಮಗೇನು ಕಮ್ಮಿ ಹೇಳಿ ? ದುಡ್ಡಿನ ಗಂಟನ್ನು ನಿಮ್ಮ ಹೆಂಡತಿಯ ಜೊತೆ ತವರಿಗೆ ಸಾಗಿಸಿಬಿಟ್ಟಿದ್ದೀರಲ್ಲ.” +ಭಾಗ – ೪ +ಬುಕ್ಲಾಪುರದಲ್ಲಿ ಒಂದು ಬಾಲ ವಿಧವೆಯಾದ ಸೀತಕ್ಕ ಎಂಬ ಅಜ್ಜಿ ಇತ್ತು. ಯಾವ ದಿಕ್ಕು ದಿವಾಣಿಯೂ ಇಲ್ಲದೆ, ಸತ್ತ ಮೇಲೆ ಪಿಂಡ ಹಾಕಲೊಂದು ಸಬಂಧಿಯಿಲ್ಲದೆ ಒಬ್ಬಂಟಿಯಾಗಿ ಮುರುಕು ಗುಡಿಸಲೊಂದರಲ್ಲಿ ಅದರ ವಾಸ. ದಿನಕ್ಕೆರಡು ಹಿಡಿ ಅಕ್ಕಿಯನ್ನು ಅವರಿವರಿಂದ ಪಡೆದು ದಿನಕ್ಕೊಂದು ಹೊತ್ತು ಅದರ ಗಂಜಿಯೂಟ. ಆದರೂ ಅಜ್ಜಿಯ ನಾಲಿಗೆಗೆ ಅಗ್ರಹಾರದ ಜನ ತತ್ತರ ನಡುಗುವರು. ಹತ್ತಿರ ಸುಳಿದ ಶೂದ್ರರೆಂದರೆ, ಮಡಿಯುಟ್ಟ ಮೇಲೆ ಬಂದು ಮುಟ್ಟುವ ಹುಡುಗರೆಂದರೆ, ತಾನೆಲ್ಲಾದರೂ ಎದುರಾದರೆ ಹಿಂದಕ್ಕೆ ತಿರುಗಿ ಮೂರು ಹೆಜ್ಜೆ ನಡೆಯುವ ಶಕುನಭೀತರೆಂದರೆ ಸೀತಕ್ಕನ ಶಾಪದ ಸುರಿಮಳೆ ಪ್ರಾರಂಭವಾಗುವುದು. ಚೊಂಬು ಹಿಡಿದು ಮನೆಮನೆಯ ಎದುರು ನಿಂತು ದಿನಕ್ಕೊಮ್ಮೆ ಕೂಗಾಡದಿದ್ದರೆ ಅಜ್ಜಿಯ ಜೀವಕ್ಕೆ ನೆಮ್ಮದಿಯಿಲ್ಲ. ಸೀತಕ್ಕನ ನಾಲಗೆಗೆ ಹೆದರಿ, ಕೇಳುವಮುನ್ನವೆ ಅಗ್ರಹಾರದ ಜನ ಪಾವಕ್ಕಿ ಎತ್ತಿಕೊಟ್ಟುಬಿಡುವರು. ಮಧ್ಯಾಹ್ನ ಊಟವಾದ ಮೇಲೆ ಹೊಳೆಯ ಕಲ್ಲಿನ ಮೇಲೆ ಕೂತು ಅದರ ಹೊತ್ತು ಹೋಗುವುದು. ಅಥವಾ ದೇವಸ್ಥಾನದ ಕಟ್ಟೆಯ ಮೇಲೆ ಕೂತು ಹೂಬತ್ತಿ ಹೊಸೆಯುವುದು, ಕಾಲು ಕರೆದಾದರೂ – ಅಂತೂ ಒಟ್ಟಿನಲ್ಲಿ ಜನ ತನ್ನನ್ನು ಸಸಾರವಾಗಿ ಕಾಣುವಂತೆ ಮಾಡಿ, ಪಿತೃಗಳನ್ನೆಲ್ಲ ಸಾಕ್ಷಿಗೆ ಕರೆದು ಕೆಟ್ಟುಹೋದ ಕಾಲದ ಬಗ್ಗೆ ಗೊಣಗಾಡದೆ ಸೀತಕ್ಕನಿಗೆ ನಿದ್ದೆ ಬರದು. ಅವರ ವಯಸ್ಸೆಷ್ಟೋ ಯಾರಿಗೂ ತಿಳಿಯದು. ಕಂಡಂತೆ ಆಚಂದ್ರಾರ್ಕದಿಂದ ಇರುವ ಅಜ್ಜಿ. ಅದು ಬಹುವಚನದಿಂದ ಮಾತಾಡಿಸುವ ನರಜೀವ ಆಸುಪಾಸಿನಲ್ಲಿಲ್ಲ. +ಸೀತಕ್ಕನಿಗೆ ಡಂಗುರ ಕೇಳಿಸಿ, ಕಿವಿ ನೆಟ್ಟಗಾಯಿತು. ಬೇಗ ಮೂರು ಮುಳುಗು ಹಾಕಿ ಗುಡಿಸಲಿಗೆ ಹೋಗಿ ಗಂಜಿ ಬೇಯಿಸಿಕೊಂಡು ತಿಂದು ಚೊಂಬು ಹಿಡಿದು ಹೊರಟಿತು. ಏನು ಸುದ್ದಿಯೆಂದು ಮನೆಮನೆ ಅಲೆಯಿತು. ಗಂಡಸು ಪಿಳ್ಳೆ ಅಗ್ರಹಾರದಲ್ಲಿರಲಿಲ್ಲ. ಹೆಂಗಸರು ಮಾತಾಡರು. ಕೊನೆಗೊಬ್ಬ ಶೂದ್ರ ಹೇಳಿದ. ಹೀಗೆ ಅಂತ. ಸೀತಕ್ಕನ ಸವಾರಿ ಸೀದ ಕುಪ್ಪಣ್ಣಭಟ್ಟರ ಅಂಗಳಕ್ಕೆ ನಡೆಯಿತು. +ಬಂದು ನೋಡಿದರೆ ಅಂಗಳದಲ್ಲಿ ಒಂದಿಷ್ಟೂ ಕಲಾಯಿ ಇಲ್ಲದ ಅಂಕುಡೊಂಡು ಪಾತ್ರೆ, ಪೊರಕೆ, ಬಿಸಿಲಿಗೆ ಬೋಳು ನೆತ್ತಿಯೆತ್ತಿ ಕುಕ್ಕುರು ಕೂತ ಕುಪ್ಪಣ್ಣಭಟ್ಟ. +ಸೀತಕ್ಕನ ಕಿರುಚಾಟ ಮಧ್ಯಾಹ್ನದ ಹಪಹಪ ಮೌನವನ್ನು ಕಳವಳಿಸಿಬಿಟ್ಟಿತು. +“ಯಾವರಂಡೆಮಗ ನಿನ್ನ ಮನೆ ಹಾಳು ಮಾಡಿದನೋ ? ಅವನ ಮನೆ ಮಂಟಾನವಾಗ. ಅವನ ದನ ಹುಲಿ ಹಿಡಿಯ. ನಿನಗೇನು ಧಾಡಿ ಬಡಿದಿದೆ ಹೀಗೆ ಕೂರಲು? ಏಳು, ಎದ್ದೇಳು. ನಿನಗೂ ಸರಿಯಾಯಿತು. ಬಡವನ ಸಿಟ್ಟು ದವಡೆಗೆ ಮೂಲ ಅಂತ ಸುಮ್ಮನೆ ಅಂತಾರೆ ಅಂತ ತಿಳಿದಿಯ? ನಿನ್ನ ಗರ್ವವೇನು? ನಿನ್ನ ಸೊಕ್ಕೇನು? ಅದಕ್ಕೊಂದು ಇತಿಮಿತಿಯಿತ್ತ ? ಈ ಅಜ್ಜಿಯನ್ನು ಕರೆದು ಇದ್ದೀಯ ಸತ್ತಿಯ ಎಂದು ನೀನು ವಿಚಾರಿಸಿದ್ದಿಯ ?” +ಕುಪ್ಪಣ್ಣಭಟ್ಟ ತೆಪ್ಪಗೆ ಕೂತೇ ಬಿಟ್ಟಿದ್ದು ನೋಡಿ ಸೀತಕ್ಕನಿಗೆ ಕಸಿವಿಸಿಯಾಯಿತು. ಮತ್ತೆ ಕೂಗಲು ಪ್ರಾರಂಭಿಸಿದಳು. +“ನಿನ್ನ ಮನೆ ಹಾಳು ಮಾಡಿದವನ ಮನೆ ಉರಿದು ಹೋಗ, ಯಾರೋ ಅಲ್ಲಿ ದೆವ್ವದಂತೆ ನಿಂತದ್ದು?” +ಮರದ ಬುಡದಲ್ಲೊಬ್ಬ ನಿಂತದ್ದು ಸೀತಕ್ಕನಿಗೆ ಹೊಳೆದು, ಅಂಗಳ ದಾಟಿ “ಯಾವ ಪುಣ್ಯಾತ್ಮನೋ ನೀನು ಬಾ ಇಲ್ಲಿ” ಎಂದು ಬುಕ್ಲಾಪುರದ ನರಸಿಂಹ ಭಟ್ಟನೆನ್ನುವ ಯುವಕನನ್ನು ಕರೆದಳು. ಅವನು ಅಂಜುತ್ತಂಜುತ್ತ ಬಂದ. +“ಅಲ್ಲಿ ಬಿಸಿಲಲ್ಲಿ ಬ್ರಾಹ್ಮಣ ಬಿದ್ದಿರೋದು ನೋಡುತ್ತ ನಿಂತಿದ್ದೀಯಲ್ಲ ? ನಿನ್ನ ಕಣ್ಣು ಸೇದು ಹೋಗ” – ಎಂದು ಅವನನ್ನೆಳೆದು ತಂದಳು . ಕುಪ್ಪಣ್ಣಭಟ್ಟರನ್ನು ಇಬ್ಬರೂ ಸೇರಿ ಕೈಹಿಡಿದೆತ್ತಿ ಜಗುಲಿಯ ನೆರಳಿನ ಮೇಲೆ ಕೂರಿಸಿದರು. ನರಸಿಂಹಭಟ್ಟ ಮೆಲ್ಲಗೆ ಕಾಲು ಕಿತ್ತ. +ಅಪ್ಪಣ್ಣಭಟ್ಟ, ಏಜೆಂಟ್, ಕುಪ್ಪಣ್ಣಭಟ್ಟ ಬುಕ್ಲಾಪುರದ ಭಟ್ಟರು, ಎಲ್ಲರನ್ನೂ ಒಟ್ಟಾಗಿ ಶಪಿಸುತ್ತ ಸೀತಕ್ಕ ಅಂಗಳದಲ್ಲಿ ಬಿದ್ದಿದ್ದ ಪಾತ್ರೆಗಳನ್ನೆಲ್ಲ ಜಗುಲಿಯ ಮೇಲೆ ಕೂಡಿಸಿತು. ಹಾಕಿದ್ದ ಬೀಗ ನೋಡಿ, ಬೀಗ ಹಾಕಿದವನ ಕೈಯನ್ನು ಸರ್ಪ ಕಡಿಯಲಿ ಎಂದು ಶಪಿಸಿ ಚೊಂಬು ಹಿಡಿದು ಅಪ್ಪಣ್ಣಭಟ್ಟನ ಮನೆಗೆ ಹೋಗಿ, ಅಲ್ಲಿ ನಿಂತು ಇನ್ನೊಂದಿಷ್ಟು ಕೂಗಿ ತನ್ನ ಗುಡಿಸಲಿಗೆ ಅಜ್ಜಿ ಬಂದಿತು. ಎರಡು ಹಿಡಿ ಅವಲಕ್ಕಿಗೆ ಹಸಿಮೆಣಸಿನಕಾಯಿ ನುರಿದು, ಉಪ್ಪು ಹಾಕಿ, ಬೇಡಿ ತಂದಿದ್ದ ಮೊಸರನ್ನೆಲ್ಲ ಸುರಿದು ಮತ್ತೆ ಕುಪ್ಪಣ್ಣಭಟ್ಟನ ಮನೆಗೆ ಸೀತಕ್ಕ ನಡೆದು ಬಂದಿತು. “ಇಕೋ ತಿನ್ನು, ಹೊಟ್ಟೆ ಕಾಯಿಸಿಕೊಂಡು ಬೆಪ್ಪರಾಷ್ಟ್ರನಂತೆ ಕೂತಿರಬೇಡ” ಎಂದು ಬಾಳೆಯ ಎಲೆಯ ಮೇಲೆ ಮೊಸರವಲಕ್ಕಿ ಹಾಕಿ ತಿರುಗಿ ತನ್ನ ಗುಡಿಸಲಿಗೆ ಬಂದು ಸ್ನಾನ ಮಾಡಿ ನೆಲದ ಮೇಲೆ ಮಲಗಿತು. +ಭಾಗ : ೫ +ಕತ್ತಲಾದ ಮೇಲೆ ಅಪ್ಪಣ್ಣಭಟ್ಟರು ಕೊಟ್ಟಿಗೆ ಕೆಲಸದ ಆಳನ್ನು ಕರೆದು, “ಭಟ್ಟರು ಅಲ್ಲೇ ಇದ್ದಾರೊ ? ಹೆಂಡತಿಯ ತವರಿಗೆ ಗಾಡಿ ಬಿಟ್ಟರೊ ನೋಡಿ ಬಾ . ಮೆತ್ತಗೆ ಸದ್ದಾಗದಂತೆ ಹೋಗು” ಎಂದು ಕಳುಹಿಸಿದರು. ಆಳು ಕತ್ತಲಿನಲ್ಲಿ ಮೆತ್ತಗೆ ಬಂದು ಚಂದ್ರನ ಬೆಳಕಿನಲ್ಲಿ ಜಗುಲಿಯ ಮೇಲೆ ನಿಶ್ಚಲ ಕೂತ ರೂಪ ನೋಡಿ ಹೆದರಿ ಓಡಿ ಸುದ್ದಿ ತಿಳಿಸಿದ. ಅಪ್ಪಣ್ಣಭಟ್ಟರು ಹೆಂಡತಿಯ ಎದುರು ನಿಂತು, “ನೋಡಿದಿಯಾ ಧಿಮಾಕು ? ಏಜೆಂಟರ ಎದುರೇ ಏನು ಧಿಮಾಕು ಮಾಡಿದ ಗೊತ್ತೆ ? ಇದೊಂದು ಹೊಸ ತಂತ್ರವಷ್ಟೆ . ನಸುಕಲ್ಲೆದ್ದು ಹೆಂಡತಿಯ ತವರಿಗವನು ಹೋಗದಿದ್ದರೆ ನನ್ನ ಹೆಸರು ಅಪ್ಪಣ್ಣಭಟ್ಟನಲ್ಲ” ಎಂದರು. +ಬೆಳಾಗಾಯಿತು. ಕಟ್ಟಿಗೆಯನ್ನು ತಂದು ಹಾಕುವ ಆಳು, “ಭಟ್ಟರು ಜಗುಲಿಯ ಮೇಲೆ ಕೂತುಬಿಟ್ಟಿದ್ದಾರೆ” ಎಂದು ಹೇಳಿದ. ಅಪ್ಪಣ್ಣಭಟ್ಟರು “ಏನು ವಿಷಯ ನೋಡುವ” ಎಂದು ಏಜೆಂಟರು ಕೊಟ್ಟ ಬೀಗದ ಕೈಯನ್ನು ಸೊಂಟಕ್ಕೆ ಸಿಕ್ಕಿಸಿ ಖುದ್ದು ಹೊರಟರು. ಕುಪ್ಪಣ್ಣಭಟ್ಟರ ಮನೆ ಹತ್ತಿರವಾಗುತ್ತಿದ್ದಂತೆ ಎದೆ ಹೊಡೆದುಕೊಳ್ಳತೊಡಗಿತು. ಮರವೊಂದರ ಹಿಂದೆ ನಿಂತು ಕತ್ತಿಯಿಂದೇನೊ ಸವರುವಂತೆ ನಟಿಸುತ್ತ ನೋಡಿದರು. +ಜಗುಲಿಯ ಮೇಲೆ ನಿಶ್ಚಲವಾಗಿ ಹರಕು ಮುರುಕು ಪಾತ್ರೆಯ ಜೊತೆ ಕುಪ್ಪಣ್ಣಭಟ್ಟರ ಕಪ್ಪುಶರೀರ ಗೋಡೆಗೊರಗಿ ಕೂತಿದೆ. ತಲೆಯ ಮೇಲೊಂದು ಅಂಗವಸ್ತವಿದೆ . ಎದೆ ಜಗ್ಗೆಂದಿತು. ಇನ್ನೂ ಹತ್ತಿರ ಬಂದರು. ಕುಪ್ಪಣ್ಣಭಟ್ಟರು ಏನಾದರೂ ಜಗಳವಾಡಬಂದರೆ ಅಂದುದಕ್ಕೆ ಪ್ರತಿ ಅಂದುಬಿಡುವುದು : ‘ನಿಮ್ಮ ಗಂಟನ್ನೆಲ್ಲ ತವರಿಗೆ ಸಾಗಿಸಿಬಿಟ್ಟಿರಾ?’ ಎಂದು ಕೇಳಿಬಿಡುವುದು ಎಂದು ದೈರ್ಯ ಹೇಳಿಕೊಂಡರು. ಅಂಗಳಕ್ಕಿಳಿದರು : ಬೂದುನಾಯಿ ಕುಪ್ಪಣ್ಣಭಟ್ಟರನ್ನೇ ತದೇಕಮಗ್ನವಾಗಿ ನೋಡುತ್ತ ಕೂತಿದೆ. ಒಂದು ಬಾಳೆಯೆಲೆಯ ಮೇಲೆ ಮೊಸರವಲಕ್ಕಿ ಒಣಗಿ ಹಾಗೇ ಬಿದ್ದಿದೆ . ಸದ್ದಿಲ್ಲ . ತಿಳಿಯುವುದೊರಳಗೆ, ‘ ಭಟ್ಟರೇ ’ ಎಂದು ಕರೆದು ಬಿಟ್ಟರು. ಮಾತಿಲ್ಲ. ಕಣ್ಣುಮುಚ್ಚಿ ಕೂತ ಶರೀರವನ್ನು ನಡುಗುವ ಕೈಗಳಿಂದ ತಿವಿದರು. +ಕುಪ್ಪಣ್ಣಭಟ್ಟರ ಮುದಿ ಮುಖದ ರಕ್ತವೆಲ್ಲ ಬತ್ತಿ ಬೆಂಡಾಗಿತ್ತು. ಮೈಯನ್ನಿನೊಮ್ಮೆ ಅಲುಗಿಸಿದ ಮೇಲೆ ಕಣ್ಣು ತೆರೆಯಿತು. ಅಪ್ಪಣ್ಣಭಟ್ಟರಿಗೆ ಜೀವ ಬಂದಂತಾಯಿತು. +“ಅಲ್ಲ – ನೀವು ಹಾಗೆ ಏಜೆಂಟರ ಎದುರು ಒರಟು ಮಾಡಬಾರದಿತ್ತು” ಎಂದರು. +ಕುಪ್ಪಣ್ಣಭಟ್ಟರು ತೆರೆದ ಕಣ್ಣುಗಳನ್ನು ಹಾಗೆ ತೆರೆದಿದ್ದು ಸುಮ್ಮನೇ ಕೂತರು . ಅಪ್ಪಣ್ಣಭಟ್ಟರಿಗೆ ಧೈರ್ಯ ಬಂದಿತು: +“ನಿಮಗೇನು ಕಮ್ಮಿಯಾಗಿದೆ ಭಟ್ಟರೇ, ಅಂತೂ ಕೊನೆಯ ತನಕ ನಮ್ಮ ಮೇಲೆ ದ್ವೇಷ ಸಾಧಿಸಿದಿರಿ . ಹಾಗಂತ ನಿಮ್ಮ ಮೇಲೆ ನನಗೆ ವಿಷವಿಲ್ಲ. ಎಷ್ಟೆಂದರೂ ನೀವು ನನಗೆ ಹಿರಿಯರು. ಚಿಕ್ಕವನೆಂದು ನೀವು ನನಗೆ ಹರಸಬೇಕೆ ವಿನಹ ಕೆಟ್ಟದ್ದು ಬಗೆಯಬಾರದು . ನನಗದು ಒಳ್ಳೇಯದಲ್ಲ. ಹೊರಟುಹೋಗುವಾಗ ನಿಮ್ಮ ಜೊತೆ ನಿಷ್ಠುರ ಬೇಡವೆಂದು ಮಾತಾಡಿಸುವ ಅಂತ ಬಂದೆ . ಬೇಕಾದರೆ ಗಾಡಿ ಕಟ್ಟಿಸುವೆ – ನಿಮ್ಮ ಮೈದುನರ ಮನೆಗೆ . ಎದ್ದು ಬಂದು ಊಟ ಮಾಡಿ ಹೋಗಿ. ಮುವ್ವತ್ತು ವರ್ಷದ ವೈರ ಮರೆತುಬಿಡುವ.” +ಅಪ್ಪಣ್ಣಭಟ್ಟರ ಬಾಯಿಂದ ಅವರಿಗೆ ತಿಳಿಯದಂತೆಯೇ ಒಂದು ಮಾತಿನ ಬಾಲದಲ್ಲಿನ್ನೊಂದು ಮಾತು ಬಂತು. ಅಲ್ಲದೆ ಕುಪ್ಪಣ್ಣಭಟ್ಟರ ಮೌನದಿಂದಾಗಿ ಒಂದಕ್ಕಿಂತ ಇನ್ನೊಂದು ಮಾತಿನ ಸ್ವರ ಏರುತ್ತೇರುತ್ತ ಹೋಯಿತು. ಆದರೆ ಆಡಿದ್ದೆಲ್ಲ ತನ್ನ ಕಿವಿಗಳನ್ನೆ ಗವ್ವೆಂದು ಮುತ್ತಿದಂತಾಗಿ ಕೊನೆಗೆ ಅಪ್ಪಣ್ಣಭಟ್ಟರು ಕುಪ್ಪಣ್ಣಭಟ್ಟರ ಮೂಕ ಮುಖ ಮುದ್ರೆಯನ್ನು ಅವಕ್ಕಾಗಿ ನೋಡುತ್ತ ನಿಂತರು. ಚಲಿಸುತ್ತಿದ್ದ ಬಾಯಿ ಮುಚ್ಚಿತು. ಮೌನದ ಕ್ಷಣ ತುಂಬ ನೋವಾಗಿ ಬಾಯಿ ಮತ್ತೆ ಚಲಿಸಿತು. ಅಪ್ಪಣ್ಣಭಟ್ಟರು ಅಂಗಳ ಸುತ್ತುತ್ತ ಅಂದರು: +“ನಾನು ನಿಮ್ಮ ಮನೆ ಹಾಳು ಮಾಡಬೇಕೆಂದು ಮಾಡಲಿಲ್ಲ ಮಾರಾಯರೆ. ಮುವ್ವತ್ತು ವರ್ಷ ನಿಮ್ಮ ಹತ್ತಿರ ಹಚಹಚ ಎನ್ನಿಸಿಕೊಂಡು ಕಾಲ ಹಾಕಿದೆ. ಆಯಿತ? ನಿಮ್ಮ ತಂಟೆಗೆ ನಾನು ಬರಲಿಲ್ಲ. ಏನೋ ನರಸಿಂಹದೇವರ ಪಾಲಿನ ಅಡಿಕೆ ಆ ಬಡ್ಡಿಮಗ ಕಮ್ತಿಯ ಪಾಲಾಗುತ್ತದಲ್ಲ ಎಂದು ಏಜೆಂಟರಿಗೊಂದು ಮಾತು ನಾನು ತಿಳಿಸುದ್ದುಂಟು. ಹಾಗೆಲ್ಲ ಸುಳ್ಳು ಹೇಳಿದರೆ ನನ್ನ ನಾಲಗೆ ಸೀಳಿ ಹೋಗಲಿ. ಬೇಕಾದರೆ ಬುಕ್ಲಾಪುರದ ಹತ್ತು ಸಮಸ್ತರನ್ನು ಕರೆಸಿ ಪಂಚಾಯಿತಿ ಮಾಡಿಸಿ . ನನ್ನ ತಪ್ಪೆಂದು ತೀರ್ಮಾನವಾದರೆ ನಿಮ್ಮ ಕಾಲು ಹಿಡಿದುಬಿಡುತ್ತೇನೆ. ಹೋದ ವರ್ಷ ನನ್ನ ಅಡಿಕೆ ಗಿರಾಕಿಗಳನ್ನೆಲ್ಲ ನೀವು ತಪ್ಪಿಸಿದಿರಿ. ಅಡಿಕೆ ವ್ಯಾಪಾರಕ್ಕೆ ದುಡ್ಡಿರುವಾಗ ಗೇಣಿ ಬಾಕಿ ಮಾಡಿಕೊಂಡರೆ ಎಂಥವರಿಗಾದರೂ ಸಿಟ್ಟು ಬರುತ್ತ ಇಲ್ಲವ ನೀವೆ ಹೇಳಿ? ಎಲ್ಲದಕ್ಕೂ ಒಂದು ನ್ಯಾಯ, ಒಂದು ಕಟ್ಟು ಬೇಡವ ? ನಾನು ಮಕ್ಕಳೊಂದಿಗ ಭಟ್ಟರೆ : ನಿಮ್ಮ ಮಗಳಿಗೆ ಹೇಗೋ ಹಾಗೇ ನನ್ನ ಮಗಳಿಗೂ ಮದುವೆಯಾಗಬೇಕು. ನನಗೂ ಕಷ್ಟ. ಒಂದು ವರ್ಷದಿಂದ ನನ್ನ ಹೊಟ್ಟೆಯಲ್ಲಿ ಅದೆಂಥ ರೋಗವೋ ! ಸದಾ ನೋವು. ಹೋದ ತಿಂಗಳು ಒಂದು ಪಕ್ಕಾ ಸೇರು ಹಾಲು ಕರೆಯುತ್ತಿದ್ದ ಎಮ್ಮೆ ಲಕ್ ಎಂದು ಸತ್ತುಬಿಟ್ಟಿತು. ಎಲ್ಲ ಗ್ರಹಚಾರ ಭಟ್ಟರೇ. ಏಳಿ . ಎದ್ದೇಳಿ. ಮನೆಗೆ ಬಂದು ಊಟ ಮಾಡಿ ಗಾಡಿ ಕಟ್ಟಿಸುವೆ . ನಿಮ್ಮ ಮೈದುನರ ಮನೆಗೆ ತಂಪಾದ ಮೇಲೆ ಹೊರಡುವಿರಂತೆ .” +ಬೂದು ನಾಯಿ ಕುಪ್ಪಣ್ಣಭಟ್ಟರ ಕಡೆ, ಮತ್ತೆ ಒಣಗಿದ ಮೊಸರವಲಕ್ಕಿ ಕಡೆ, ಮತ್ತೆ ಅಪ್ಪಣ್ಣಭಟ್ಟರ ಕಡೆ ನೋಡಿತು. ಕುಪ್ಪಣ್ಣಭಟ್ಟರು ಶೂನ್ಯದೃಷ್ಟಿಯಾಗಿ ಕಾಡಿನ ಕಡೆ ನೋಡಿದರು. ಮೌನದಲ್ಲಿ ಮತ್ತೆ ಅಪ್ಪಣ್ಣಭಟ್ಟರ ಗಂಟಲು ಒಣಗಿಬಿಟ್ಟಿತು. ಪಿಂಡ ಹಾಕುವಾಗ ಪಿತೃಗಳನ್ನು ಹೆಸರು ಹಿಡಿದು ಕರೆಯುವೋಪಾದಿಯಲ್ಲಿ, ಮಂತ್ರವನ್ನು ಉಚ್ಛರಿಸುವಂತೆಯೇ ‘ ಭಟ್ಟರೆ ಭಟ್ಟರೆ ’ ಎಂದರು. ಬೂದುನಾಯಿ ಎದ್ದು ನಿಂತು ಮೈಯನ್ನು ನೀಡಿ ಆಕಳಿಸಿ ಕಣ್ಣುಮುಚ್ಚಿ ಕೂತಿತು.ನುಸಿಗಳು ಕಣ್ಣಿಗೆ ಕಿಕ್ಕರಿಸಿದವು. ಬಿಸಿಲು ಉರಿಯಿತು. ತಲೆಯಮೇಲೆ ಪಾಣಿ ಪಂಚೆ ಹೊದ್ದು, ಕುಕ್ಕರು ಕಾಲಿನಲ್ಲಿ ತಲೆ ಮೇಲೆ ಕೈಹೊತ್ತು ಕೂತ ಪ್ರಾಣವನ್ನು ಅಪ್ಪಣ್ಣಭಟ್ಟರ ಕಣ್ಣು ಪ್ರಥಮಬಾರಿಗೆನ್ನುವಂತೆ ನೋಡಿ, ಹೊಟ್ಟೆ ತೊಳೆಸಿದಂತೆ ಆಯಿತು. ಮೊಸರಿನಲ್ಲಿ ಬಿರಿದು ಒಣಗಿದ ಅವಲಕ್ಕಿ: ಅದರ ಮೇಲೆ ನೊಣ : ಕುಪ್ಪಣ್ಣಭಟ್ಟರ ಮೂಗಿನ ಮೇಲೆ ನೊಣ : ಮುಚ್ಚುವ ಬಿಡುವ ಕಣ್ಣು . +“ಮಹರಾಯರೇ, ನಿಮ್ಮ ಗಂಟು ನನಗೆ ಬೇಡ. ಮಹರಾಯರೇ, ಈ ಮನೆಯಲ್ಲಿ ನೀವೆ ಇದ್ದು ಬಿಡಿ. ನೀವು ಕಣ್ಣುಮುಚ್ಚುವ ತನಕ ನಿಮ್ಮ ಕೃಷಿಗೆ ನಾನೇ ಈ ತೋಟವನ್ನು ಬಿಟ್ಟುಕೊಟ್ಟಿರುತ್ತೇನೆ. ನರಸಿಂಹ ದೇವರ ಗೇಣಿಯನ್ನು ನೀವು ಬಾಕಿ ಮಡಿಕೊಳ್ಳದಂತೆ ನನಗೆ ವರ್ಷ ವರ್ಷ ಗೇಣಿ ಕೊಡುತ್ತ ಬಂದರೆ ಸಾಕು. ನಾನು ಕಟುಕನಲ್ಲ ಭಟ್ಟರೇ. ನಿಮ್ಮ ಹಾಗೆ ನಾನೂ ಘಟ್ಟದ ಕೆಳಗಿನಿಂದ ಬರಿಯ ತಾಲಿ ಹಿಡಿದು ಬಂದವ. ಸಂಭಾವನೆಗೆ ಹೋಗಿದ್ದಾಗ ದಾರಿಯ ಬಿಸಿಲಿನಲ್ಲಿ ನನ್ನ ಅಪ್ಪಯ್ಯ ಬಿದ್ದು ಸತ್ತಂತೆ ನನಗೊಂದು ಸಾವು ಬರದಿದ್ದರೆ ಸಾಕು. ಸಾಯುವಾಗ ಒಂದು ಗುಟುಕು ನೀರಿಲ್ಲದೆ, ದಾರಿಯ ಬಿಸಿಲಿನಲ್ಲಿ ಕಾಗೆಗಳು ನನ್ನ ಅಪ್ಪಯ್ಯನನ್ನು ಕಟುಕಿದಂಥ ಪಾಡು ನನಗೆ ಬರದಿದ್ದರೆ ಸಾಕು. ಇಕೊಳ್ಳಿ ಬೀಗದ ಕೈ ಮಾರಾಯರೆ, ಇಕೊಳ್ಳಿ” ಎಂದು ಅಪ್ಪಣ್ಣಭಟ್ಟರು ಮೂಗಿನಿಂದ ಸಿಂಬಳ ತೆಗೆದು ಅತ್ತರು. +ಪ್ರಾಣದ ವಿಸರ್ಜನೆಗೆ ಧ್ಯಾನಿಸುತ್ತಿರುವಂತೆ ಕುಕ್ಕರು ಕೂತ ಕುಪ್ಪಣ್ಣಭಟ್ಟರು ಇದಕ್ಕೂ ಮಾತಾಡಲಿಲ್ಲ. ಮೌನಿಯ ವಸ್ತಾವೃತ ಆಕೃತಿ ಕಣ್ಣಿನಲ್ಲಿ ಊರಿದಂತಾಗಿ ಅಪ್ಪಣ್ಣಭಟ್ಟರ ಸಲೀಸು ಬಾಯಿ ಸ್ತಬ್ಧವಾಯಿತು. ಕಣ್ಣು ಒಣಗಿತು. ತಲೆಯ ಮೇಲೆ ತಾವೂ ಒಂದು ವಸ್ತ ಹೊದ್ದು ಜಗುಲಿಯ ಮೆಲೆ ಕುಕ್ಕುರು ಕಾಲಿನಲ್ಲಿ ಕೂತರು. +***** +ಬರ್ಮಿಂಗಂ, ೧೯೬೬ +[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […] +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […] +ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_387.txt b/Kannada Sahitya/article_387.txt new file mode 100644 index 0000000000000000000000000000000000000000..b95ad9969542f836ecde7f144898eb4956d33d99 --- /dev/null +++ b/Kannada Sahitya/article_387.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಒಂದರಗಳಿಗೆಯ +ಬಂಧುರ ಸ್ಪರ್‍ಶಕೆ +ಮಂದಾನಿಲನೈತಂದಿಹನು; +ಹಗಲಿನ ಬಿಸಿಲಿಗೆ +ಮಾಗಿದ ಬನಗಳ +ಫಲಗಳ ಸೊಂಪಿನಲೀಜಿಹನು. +೨ +ರವಿಯದೊ ಬಿದ್ದನು! +ಕವಿಯಿದೊ ಎದ್ದನು +ತಂಗಾಳಿಯ ಜತೆ ಕೇಳಿಯಲಿ- +ನೀಲಾಂಗಣದಲಿ +ಮೋಡದ ಪುತ್ಥಳಿ +ತೂಕಡಿಸುತ್ತಿರೆ ನಿದ್ದೆಯಲಿ. +೩ +ಕ್ಷಿತಿಜದ ವರ್‍ತುಲ +ಕನ್ನೆಯ ಕೆನ್ನೆಯ +ಕಿತ್ತಿಳೆ ಹಣ್ಣಿನ ಬಣ್ಣವಿದು; +ಗುಂಗುರು ಗುಂಗುರು +ಮುಂಗುರುಳಂತೆಯೆ +ಮುಚ್ಚಂಜೆಯ ಮುಂಜೆರಗಿಹುದು. +೪ +ಒಂದೊಂದಾಗಿಯೆ +ತಾರಗಳಿಣಕಿರೆ +ಬಾನಿಗೆ ಹೊಸ ಚಿಗುರೊಡೆದಂತೆ! +ದೇವ ಕಣಗಿಲೆಯು +ಎಲೆಗಳನುದುರಿಸಿ +ಕೊಂಬೆಗೆ ಹಿಡಿ ಹೂ ತಳೆದಂತೆ. +೫ +ತಳಿರಂಗೈಯಲಿ +ಕುಳಿತಿಹ ಕೋಗಿಲೆ +ಯಾವುದೊ ಛಂದಕೆ ಕುಕಿಲುತಿದೆ. +ಮತ್ತೊಂದೆಡೆಯಲಿ +’ಟುವ್ವಿ’ಯ ಸವಿಯುಲಿ +ತಿರೆಯಾನಂದವ ಸಾರುತಿದೆ. +೬ +ಮುಚ್ಚಂಜೆಯ ತೆರೆ- +ಯಾಚೆಗೆ ಕನಸಿನ +ಲೋಕವು ನಾಕವ ತೆರೆದಿಹುದು; +ತುಂಬಿದ ಚಂದಿರ +ಸ್ವಪ್ನದಿ ಸುಂದರ +ಮಾಯಾ ಮಂದಿರ ರಚಿಸುವದು. +೭ +ಹಗಲಿರುಳೆರಡರ +ಬಂಧುರ ಮಿಲನದಿ +ಮಿಸುಕಾಡದ ನಸು ಬೆಳಕಿಹುದು; +ದಿನವಿಡಿ ಬಳಲಿಕೆ +ಸಂಜೆಯ ಅಲಸಿಕೆ +ವಿಲಸತ್ ಪ್ರಭೆಯಲಿ ಕರಗಿಹುದು. +***** +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] +ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […] +ಆ ಗಿಡಾ, ಈ ಗಿಡಾ ಒಂದೊಂದೂ ಜೇಂಗೊಡಾ; ಬಾಂದೇವಿಗೆ ನೆಲದಾಯಿಯ ಹೂಗೊಂಡೆಯ ಹೊಂಗೊಡಾ ಯಾವ ಹಸಿರೊ, ಯಾವ ಹೆಸರೊ ತರುಲತೆಗಳ ತೋರಣಾ; ಬಂದುದೆಲ್ಲಿ? ಬೆಳೆಯಿತಲ್ಲಿ? ನಿಷ್ಕಾರಣ ಕಾರಣಾ ನೀಲಾಂಗಣ, ತಿರೆ-ಕಂಕಣ ಕೆಂದಳಿರಿನ ಕಾವಣಾ; ಅಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_388.txt b/Kannada Sahitya/article_388.txt new file mode 100644 index 0000000000000000000000000000000000000000..2b96fe09404fda5bcb07cdfaa50c6ef808c19e94 --- /dev/null +++ b/Kannada Sahitya/article_388.txt @@ -0,0 +1,56 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದು ಬಿನ್ನಹ ಹುಲಿಯೆ ಕೇಳು +ಕಂದನಿರುವನು ದೊಡ್ಡಿಯೊಳಗೆ +ಒಂದು ನಿಮಿಷದಿ ಮೊಲೆಯ ಕೊಟ್ಟು +ಬಂದು ಸೇರುವೆನಿಲ್ಲಿಗೆ…. +ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; +ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ ಕರುವಿಗೆ ಒಂದು ನಿಮಿಷದಲ್ಲಿ ಹಾಲು ಕುಡಿಸಿ ಬಂದು, ಹುಲಿಗೆ ಆಹಾರವಾಗುವುದಾಗಿ ಮಾತು ಕೊಟ್ಟಿತು ನಿಜ. ಆದರೆ ಒಂದು ನಿಮಿಷದಿ ಹಾಲು ಕೊಟ್ಟು ಬರುತ್ತೇನೆ ಅನ್ನುವ ಪುಣ್ಯಕೋಟಿಯ ಕಾರಣವನ್ನು ಹುಲಿ ಒಪ್ಪಿದ್ದಾದರೂ ಹೇಗೆ? ಓoಣ ಚಿ vಚಿಟiಜ ಡಿeಚಿsoಟಿ ಎಂದು ಹುಲಿ ಅದನ್ನು ನಿರಾಕರಿಸಬಹುದಿತ್ತು. ಹಾಗೆ ನಿರಾಕರಿಸುವುದಕ್ಕೆ ಹುಲಿಗೆ ಸಾಕಷ್ಟು ಕಾರಣಗಳೂ ಇದ್ದುವಲ್ಲ. +ಮೊದಲನೆಯದಾಗಿ ಸಾಯುತ್ತಿರುವ ಪುಣ್ಯಕೋಟಿ ಒಂದು ನಿಮಿಷ ಹಾಲು ಕುಡಿಸಿ ಬರುತ್ತೇನೆ ಅನ್ನುವ ಮಾತಲ್ಲಿ ಅರ್ಥವೇ ಇಲ್ಲ. ಯಾಕೆಂದರೆ ಹೇಗೂ ಪುಣ್ಯಕೋಟಿ ಸಾಯುತ್ತದೆ. ಮಾರನೆಯ ದಿನ ಅದರ ಕಂದ ಕರುವಿಗೆ ಯಾರು ಹಾಲು ಕುಡಿಸುತ್ತಾರೆ. ಬೇರೆ ಯಾರಾದರೂ ಹಾಲು ಕುಡಿಸುತ್ತಾರೆ ಎನ್ನುವುದಾದರೆ ಪುಣ್ಯಕೋಟಿ ತಕ್ಷಣವೇ ಹುಲಿಗೆ ಖಂಡವಿದಕೋ ಎಂದು ಕೊಟ್ಟುಬಿಡಬಹುದಿತ್ತಲ್ಲ. ಅದಕ್ಕಿಂತ ಹೆಚ್ಚಾಗಿ ಪುಣ್ಯಕೋಟಿಯ ಕಂದನಷ್ಟೇ ಅರ್ಬುದ ವ್ಯಾಘ್ರನೂ ಹಸಿದಿದ್ದನಲ್ಲ. ಹಸಿದ ಹುಲಿಗೆ ಪುಣ್ಯಕೋಟಿಯ ಕಂದನ ಹಸಿವು ಅದು ಹೇಗೆ ಅರ್ಥವಾಯಿತು. ಹಸಿದವರಿಗಷ್ಟೇ ಮತ್ತೊಬ್ಬರ ಹಸಿವು ಅರ್ಥವಾಗುತ್ತಾ? +ಟೀವಿ ಸೀರಿಯಲ್ ಕತೆಗಾರರಿಗೆ ಕೊಟ್ಟರೆ ಅದೊಂದು ಎಂಥಾ ಸೆಂಟಿಮೆಂಟಿನ ಎಪಿಸೋಡಾಗು ತ್ತಿತ್ತು ಊಹಿಸಿ. ಅವರ ಕಲ್ಪನೆಯಲ್ಲಿ ಪುಣ್ಯಕೋಟಿಯನ್ನು ಹುಲಿ ಸುಮ್ಮನೆ ಹೋಗಲು ಬಿಡುತ್ತಲೇ ಇರಲಿಲ್ಲ. ತಕ್ಷಣದ ಹಸಿವು ತೀರಿಸಿಕೊಳ್ಳಲು ಪುಣ್ಯಕೋಟಿಯ ಸ್ವಲ್ಪ ಮಾಂಸವನ್ನು ತಿಂದೇ ಕಳಿಸುತ್ತಿತ್ತು. ಒದ್ದಾಡುತ್ತಾ, ತೆವಳಿಕೊಂಡು ಕಂದಮ್ಮನನ್ನು ಪುಣ್ಯಕೋಟಿ ನೋಡಲು ಹೋಗುವುದನ್ನು ಐವತ್ತು ಎಪಿಸೋಡುಗಳ ತನಕ ಎಳೆದು ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಬಹುದಿತ್ತು ಎಂಬ ಸಂತೋಷದಲ್ಲಿ ಸೀರಿಯಲ್ ಕತೆಗಾರರ ಪಲ್ಸ್‌ರೇಟ್ ಹೆಚ್ಚಾಗುತ್ತಿತ್ತು. +ಇಂಥ ತರಲೆಗಳನ್ನೆಲ್ಲ ಕಸದ ಬುಟ್ಟಿಗೆ ಹಾಕಿ ನೋಡುತ್ತಾ ಹೋದರೆ ‘ಗೋವಿನ ಹಾಡು’ ವಿಚಿತ್ರ ಕಾರಣಗಳಿಗೆ ರಂಜಿಸುತ್ತದೆ. ಇತ್ತೀಚಿಗೆ ಈ ಪದ್ಯವನ್ನು ಮತ್ತೊಂದು ರೀತಿಯಲ್ಲಿ ಸಂಸ್ಕೃತಿ ಕಥನಕಾರರು ವಿವರಿಸುತ್ತಾರೆ. ತನ್ನೆಲ್ಲ ಚಿತ್ರರೂಪಕತೆ ಮತ್ತು ಸೊಗಸಿಗಿಂತ ಆಳವಾದ ಅರ್ಥವೊಂದು ‘ಗೋವಿನ ಹಾಡಿ’ನಲ್ಲಿ ಅಡಗಿದೆ ಎನ್ನುವುದು ಸುಳ್ಳಲ್ಲ್ಲ. ಅದು ಸಮಾಜದ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ಹಿಂದೆ ಭಾವಿಸಿದ್ದರೆ, ನೈತಿಕತೆಯನ್ನು ಹೆಚ್ಚಿಸುವುದು ಅಂದರೆ ಶೋಷಣೆಯನ್ನು ಹೆಚ್ಚಿಸುವುದೆ ಎಂಬ ಪ್ರಶ್ನೆಯನ್ನು ಪರಂಪರೆಯನ್ನು ಆಧುನಿಕವಾಗಿ ಪರಿಭಾವಿಸುವ ಮಂದಿ ಕೇಳುತ್ತಾರೆ. ಅವರ ಪ್ರಕಾರ ಗೋವಿನ ಹಾಡು ಶೋಷಿತರನ್ನು ಮತ್ತಷ್ಟು ಶೋಷಿಸುವ, ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ. ಅವರು ತೀರಾ ಸಂಕೀರ್ಣವಾದ ವಿವರಗಳಲ್ಲಿ ಕೊಡುವ ಕಾರಣಗಳನ್ನು ತೀರಾ ಸರಳವಾಗಿ ಬರೆದಿಟ್ಟರೆ ಅದು ಇಷ್ಟು; (ಆದರೆ ವಿಮರ್ಶೆಯನ್ನಾಗಲೀ ಅದರ ಪರಿಭಾಷೆ ಯನ್ನಾಗಲೀ, ಪೂರಕವಾದ ಅಧ್ಯಯನ ಪ್ರಕ್ರಿಯೆಯ ಸ್ವರೂಪವನ್ನೂ, ವಿನ್ಯಾಸವನ್ನೂ, ಸಂರಚನೆ ಯನ್ನೂ, ಸಂವಿಧಾನವನ್ನೂ ಸರಳಗೊಳಿಸುವುದು ಸರಿಯಲ್ಲ ಎನ್ನುವುದು ಆಧುನಿಕ ವಿಮರ್ಶಕರ ವಾದ. ಅವರಲ್ಲಿ ಕ್ಷಮೆ.) +ಇಲ್ಲಿ ಪುಣ್ಯಕೋಟಿ ಎಂದರೆ ಆಳುವ ವರ್ಗ, ಪುರೋಹಿತಶಾಹಿಗಳು. ಹುಲಿಯೆಂಬುದು ಶ್ರಮಿಸುವ ವರ್ಗ. ಶ್ರಮಿಸುವ ವರ್ಗದವರಿಗೆ ಗೋವಿನ ಕುಟಿಲೋಪಾಯಗಳು ಗೊತ್ತಿಲ್ಲ. ಗೋವು ಸತ್ಯದ ಹೆಸರಿನಲ್ಲಿ ಹುಲಿಯನ್ನು ಕೊನೆಗೂ ಕೊಂದು ಹಾಕುತ್ತದೆ. ಯಾವುದು ‘ಸಾಧು’ವೋ ಅದು ಗೆಲ್ಲುತ್ತದೆ. ಕ್ರೌರ್ಯ ಸೋಲುತ್ತದೆ ಎಂದು ನಾವು ಇದುವರೆಗೂ ತಿಳಿದುಕೊಂಡಿರುವುದು ತಪ್ಪು. ಗೆಲ್ಲುವುದು ಸಾಧುವಲ್ಲ, ನಿಜವಾದ ಕ್ರೌರ್ಯ. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಹಸು ತನ್ನನ್ನು ತಾನು ಸತ್ಯಕ್ಕೆ ವಿಧಿಸಿಕೊಳ್ಳುವಂತೆ ಮೂಲಕ ಹುಲಿಯೂ ಗೋವಿನ ಸತ್ಯವನ್ನೇ ಅಪ್ಪಿಕೊಳ್ಳುವಂತೆ ಮಾಡುತ್ತದೆ. ಆದರೆ ಇಲ್ಲಿ ಗೋವಿನ ಸತ್ಯವೇ ಬೇರೆ, ಹುಲಿಯ ಸತ್ಯವೇ ಬೇರೆ. ತನಗಿಂತ ಬಲಶಾಲಿಯಾದ ಹುಲಿಯನ್ನು ಹಸುವಿನಂಥ ಹಸು ಸತ್ಯವೆಂಬ ಆಯುಧದ ಮೂಲಕ ಕೊಲ್ಲುವುದೇ ಪುಣ್ಯಕೋಟಿಯ ಕತೆ. +ಇದನ್ನು ಒಪ್ಪಿದರೆ ಗೋವಿನ ಹಾಡು ಎಂಬ ಸರಳ ಪದ್ಯವನ್ನು ಸುಮ್ಮನೆ ಓದಿ ಆನಂದಿಸುವ ಖುಷಿಯಿಂದ ವಂಚಿತರಾಗುತ್ತೇವೆ ಎಂದು ಹೇಳುವವರಿದ್ದಾರೆ. ಇಂಥ ಪದ್ಯಗಳನ್ನು ಹೀಗೆ ವಿಶ್ಲೇಷಿಸುವುದು ತಪ್ಪು ಎನ್ನುವವರೂ ಸಿಗುತ್ತಾರೆ. ಆದರೆ ಒಂದು ಪದ್ಯ ಕಾಲಕ್ರಮೇಣ ಪಡೆದುಕೊಳ್ಳುವ ಹೊಸ ಅರ್ಥಗಳ ಬಗ್ಗೆ ಚಿಂತಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದು ಕವಿತೆಗಿರುವ ಶಕ್ತಿಯ ಬಗ್ಗೆ ನಾವು ಬೆರಗಾಗುತ್ತೇವೆ. +ಖಂಡವಿದೆಕೋ ಮಾಂಸವಿದೆಕೋ +ಗುಂಡಿಗೆಯ ಬಿಸಿ ರಕ್ತವಿದೆಕೋ +ಚಂಡವ್ಯಾಘ್ರನೆ ನೀನಿದೆಲ್ಲವನುಂಡು ಸಂತಸದಿಂದಿರು. +ಪುಣ್ಯಕೋಟಿ ತನ್ನನ್ನು ತಾನು ಅರ್ಪಿಸಿಕೊಳ್ಳಲಂದೇ ಬಂದಿದೆ. ಅದಕ್ಕೆ ತನ್ನ ಹತ್ತಿರ ಏನೇನಿದೆ ಅನ್ನುವುದು ಗೊತ್ತಿದೆ. ಅದನ್ನು ಒಪ್ಪಿಸುವ ಹೊತ್ತಿಗೂ ಹಸು ತನ್ನ ವ್ಯಂಗ್ಯ ಮತ್ತು ಚುಚ್ಚುವ ಶೈಲಿಯನ್ನು ಮರೆಯುವುದಿಲ್ಲ. ನೀನು ಚಂಡವ್ಯಾಘ್ರ-ಕ್ರೂರಿ ಕಣಯ್ಯಾ ಎನ್ನುವುದನ್ನು ಹಸು ನೆನಪಿಸುತ್ತದೆ. ಇದನ್ನೆಲ್ಲ ತಿಂದು ನೀನು ಸುಖವಾಗಿರು ಎಂದು ವ್ಯಂಗ್ಯವಾಗಿ ಹೇಳುತ್ತದೆ. ಆದರೆ ಪುಣ್ಯಕೋಟಿಗೆ ತಾನು ಹುಲಿಯನ್ನು ಕೊಲ್ಲುತ್ತೇನೆ ಅನ್ನುವುದು ಮೊದಲೇ ಗೊತ್ತಿತ್ತೆ? ಅಂಥ ಸುಳಿವು ಸಿಕ್ಕುವುದಿಲ್ಲ. ಯಾಕೆಂದರೆ ಪುಣ್ಯಕೋಟಿ ತನ್ನ ಕಂದನಿಗೊಂದು ಸೂಚನೆ ನೀಡುತ್ತದೆ. ‘ಎಲ್ಲಿಗೆ ಹೋದರೂ ಆ ಬೆಟ್ಟದ ಕಿಬ್ಬಿಯ ಹತ್ತಿರ ಹೋಗಬೇಡ. ಅಲ್ಲಿ ಹುಲಿರಾಯನಿದ್ದಾನೆ ಹುಷಾರ್.’ ಒಂದು ವೇಳೆ ಹಸು ಹೋಗದೆ ಇದ್ದರೆ ಏನಾಗುತ್ತಿತ್ತು? ಕತೆಯೇ ನಡೆಯುತ್ತಿರಲಿಲ್ಲ ಅಥವಾ ಕತೆ ಜನಪ್ರಿಯವಾಗುತ್ತಿರಲಿಲ್ಲ. ಮುಂದೆ ಯಾವ ಹುಲಿಯೂ ಯಾವ ಹಸುವನ್ನೂ ನಂಬುತ್ತಿರ ಲಿಲ್ಲ. ಹಸುವನ್ನು ಗೋಮುಖವ್ಯಾಘ್ರ ಎಂದು ಹುಲಿಗಳು ಭಾವಿಸುತ್ತಿದ್ದವೇ? +ಹೀಗೆ ಏಕಕಾಲಕ್ಕೆ ಅನೇಕ ಯೋಚನೆಗಳನ್ನು ಕವಿತೆ ಹುಟ್ಟುಹಾಕುತ್ತದೆ. ಅದು ಬೀರುವ ಸಾಮಾಜಿಕ ಪರಿಣಾಮವನ್ನು ಹೊರತುಪಡಿಸಿ ಈ ಕವಿತೆಯನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅದು ಒಳಿತು ಮತ್ತು ಕೆಡಕುಗಳ ನಡುವಿನ ಯುದ್ಧದ ಕತೆ. ಆದರೆ ಯಾವುದು ಒಳಿತು, ಯಾವುದು ಕೆಟ್ಟದ್ದು ಅನ್ನುವುದು ವಿವಾದಾಸ್ಪದ. ಯುವ ಕತೆಗಾರರು ಈ ಕವನವನ್ನು ಇಡಿಯಾಗಿ ಧ್ಯಾನಿಸದೇ ಹೋದರೆ ಅವರು ಮಹತ್ವದ್ದೇನನ್ನೂ ಬರೆಯುವುದಕ್ಕೆ ಸಾಧ್ಯವಾಗದು. ಇದರ ಕಥನ ಶಕ್ತಿ ಅದ್ಭುತವಾದದ್ದು. ಕವಿತೆ ತೀರ ನಿರುಮ್ಮಳವಾದ ಒಂದು ವಾತಾವರಣದ ಚಿತ್ರಣದೊಂದಿಗೆ, ನೆಮ್ಮದಿಯ ಭಾವದಲ್ಲಿ ಶುರುವಾಗುತ್ತದೆ. +ಧರಣಿ ಮಂಡಲ ಮಧ್ಯದೊಳಗೆ +ಮೆರೆಯುತಿಹ ಕರ್ನಾಟ ದೇಶದೊ +ಳಿರುವ ಕಾಳಿಂಗನೆಂಬ ಗೊಲ್ಲನ ಕತೆಯಿದು +ಎಂದೇ ಕತೆ ಆರಂಭವಾದರೂ ಇದು ಗೊಲ್ಲನ ಕತೆಯಲ್ಲ. ಗೊಲ್ಲ ಯಾಕೆ ಮುಖ್ಯನಾಗುತ್ತಾನೆ ಎಂದರೆ ಆತ ಸತ್ಯಸಂಧ ಹಸುವನ್ನು ಸಾಕಿದ್ದಾನೆ ಎನ್ನುವ ಕಾರಣಕ್ಕೆ. ಆ ಹಸುಗಳೋ ಮಾಡುವುದಿಷ್ಟನ್ನೇ; +ಗೊಲ್ಲ ದೊಡ್ಡಿಯೊಳಿರುವ ಹಸುಗಳು +ಎಲ್ಲ ಬೆಟ್ಟದ ಮೇಲೆ ಮೇಯುತ +ಹುಲ್ಲನೊಳ್ಳೆಯ ನೀರ ಕುಡಿಯುತ +ಅಲ್ಲಿ ಮೆರೆದುವರಣ್ಯದಿ… +ಇಂಥ ಸುಂದರ ಚಿತ್ರ ಮುಂದಿನ ಕ್ಷಣದಲ್ಲೇ ಬದಲಾಗುತ್ತದೆ. ಅದು ಕತೆಗೊಂದು ಅನಿರೀಕ್ಷಿತ ತಿರುವು. ಅದೇ ಬೆಟ್ಟದಲ್ಲಿ ಹಸಿಹಸಿದು ಅಬ್ಬರಿಸುವ ಹುಲಿಯೊಂದಿದೆ. ಮೇವು ಮುಗಿಸಿದ ಹಸುಗಳು ಸಿರಿಸಂಜೆಯ ಸೊಬಗಲ್ಲಿ ಮರಳುವಾಗ ಅದು ಸಿಡಿದು ರೋಷದಿ ಮೊರೆಯುತ್ತ ಘುಡುಘುಡಿಸಿ ಭೋರಿಡುತ ಛಂಗನೆ ಪುಣ್ಯಕೋಟಿಯ ಮುಂದೆ ನೆಗೆಯುತ್ತದೆ. +ಆ ಕ್ಷಣ ನಮ್ಮ ಮನಸ್ಸು ಪುಣ್ಯಕೋಟಿಯ ಬಗ್ಗೆ ಮರಮರಗುತ್ತದೆ. ಎಂಥಾ ಹಸುವಿಗೆ ಎಂಥಾ ಕಷ್ಟ ಎಂದುಕೊಳ್ಳುತ್ತೇವೆ. ಆದರೆ ಪುಣ್ಯಕೋಟಿ ಸಾಮಾನ್ಯ ಹಸುವಲ್ಲ. ಅದರ ಕನ್‌ವಿನ್ಸಿಂಗ್ ಕೆಪಾಸಿಟಿಯ ಬಗ್ಗೆ ಅನುಮಾನ ಇಟ್ಟುಕೊಂಡರೆ ಕೆಟ್ಟೀರಿ. ಹಸಿದ ಹುಲಿಗೇ ಅದು ಸಮಜಾಯಿಷಿ ನೀಡಬಲ್ಲದು. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ಅದು ತಪ್ಪಿಸಿಕೊಂಡು ಬರುತ್ತದೆ. ಪರಮಾತ್ಮನ ಹೆಸರು ಹೇಳಬೇಕಾದರೆ ಹುಲಿಗೂ ಆ ಪರಮಾತ್ಮನ ಮೇಲೆ ನಂಬಿಕೆ ಇರಬೇಕು ತಾನೆ? +ಅಲ್ಲಿಂದ ಹಸು ತಪ್ಪಿಸಿಕೊಂಡು ಬರುವುದು ಮೂರನೆಯ ಘಟ್ಟ. ಆದರೆ ಹಾಗೆ ತಪ್ಪಿಸಿಕೊಂಡು ಬಂದದ್ದು ಕ್ಷಣಿಕ. ಮತ್ತೆ ಅದು ಮರಳಬೇಕು. ‘ಕಟ್ಟಕಡೆಯಲಿ ಮೇಯಬೇಡ, ಬೆಟ್ಟದೊತ್ತಿಗೆ ಹೋಗಬೇಡ, ದುಷ್ಟ ವ್ಯಾಘ್ರನು ಹೊಂಚುತಿರುವನು’ ಎಂದು ಅದು ಎಚ್ಚರಿಕೆ ನೀಡಿ ಹೊರಡುವುದು ಮುಂದಿನ ಘಟ್ಟ. ಅತ್ಯಂತ ಸಮೃದ್ಧವಾದ ಭಾವಾತಿರೇಕ ಸಿಗುವುದು ಇಲ್ಲಿಯೇ. ಈ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುತ್ತದೆ. +ಒಂದು ಅರ್ಥದಲ್ಲಿ ಅಲ್ಲಿಗೆ ಕತೆ ಮುಗಿಯಬೇಕು. ಯಾಕೆಂದರೆ ಹಸು ತನ್ನ ಸತ್ಯವಾಕ್ಯಕೆ ತಪ್ಪಿ ನಡೆಯದೇ ಹುಲಿಗೆ ಆಹಾರವಾಗಲು ಹೋಯಿತು. ಹಸುವಿನ ಸತ್ಯಸಂಧತೆ ಚಿರಾಯು ವಾಯಿತು. ಆದರೆ ಕವಿಗೆ ಗೊತ್ತು; ಎಲ್ಲರ ಕರುಣೆಗೂ ಪ್ರೀತಿಗೂ ಹಸು ಪಾತ್ರವಾಗಿದೆ. ಅದನ್ನು ಹುಲಿ ಕೊಂದು ತಿಂದರೆ ಕತೆ ಸತ್ವಹೀನವಾಗುತ್ತದೆ. ಕವಿ ತಕ್ಷಣವೇ ಹುಲಿಯನ್ನು ಮತ್ತೊಬ್ಬ ನಾಯಕನನ್ನಾಗಿ ಚಿತ್ರಿಸುತ್ತಾನೆ. +ಹಸುವಿನ ಸತ್ಯಸಂಧತೆಗೆ ಬೆರಗಾಗಿ ಹುಲಿಯೇ ತನ್ನನ್ನು ತಾನು ಕೊಂದುಕೊಳ್ಳುತ್ತದೆ. ಅಕ್ಕ ಇವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹಾರಿ ಪ್ರಾಣವ ಬಿಡುತ್ತದೆ. ಅಲ್ಲಿಗೆ ಕೊನೆಯಲ್ಲಿ ಮನಸ್ಸಲ್ಲಿ ನಿಲ್ಲುವುದು ಹಸುವಲ್ಲ, ಕಾಳಿಂಗನೆಂಬ ಗೊಲ್ಲನೂ ಅಲ್ಲ. ತ್ಯಾಗಜೀವಿ ಹುಲಿ. +ಇದಕ್ಕಿಂತ ಉತ್ತಮವಾದ ಕೊನೆ ಈ ಕವಿತೆಗೆ ಸಾಧ್ಯವಿತ್ತೇ ಎಂದು ಯೋಚಿಸಿದರೆ ಮತ್ತೇನೂ ಹೊಳೆಯುವುದೇ ಇಲ್ಲ. ಪ್ರತಿಯೊಂದು ಹಂತದಲ್ಲೂ ಅದು ಪ್ರಶ್ನೆಗಳನ್ನೂ ಪರಿಹಾರಗಳನ್ನೂ ಸೃಷ್ಟಿಸುತ್ತಾ ಮುಂದುವರಿಯುತ್ತದೆ. ಹುಲಿಯಿಂದ ಹಸು ಹೇಗೆ ಪಾರಾಗುತ್ತದೆ, ಹಸುವಿನ ಮಾತನ್ನು ಹುಲಿ ನಂಬುತ್ತದೆಯೇ, ತಪ್ಪಿಸಿಕೊಂಡು ಬಂದ ಹಸು ಮತ್ತೆ ಹುಲಿಯ ಹತ್ತಿರ ಹೋಗುತ್ತದೆಯೇ, ಸಾವಲ್ಲದೆ ಹುಲಿಗೆ ಬೇರೆ ದಾರಿ ಯಾವುದಿತ್ತು… +ಅತ್ಯಂತ ಘೋರವಾಗಿ ಕವಿತೆ ಕೊನೆಯಾಗುತ್ತದೆ. ಸತ್ತ ಮೇಲೂ ಹುಲಿ ಬದುಕಿ ಉಳಿಯುತ್ತದೆ. ಹುಲಿಯನ್ನು ಕೊಂದದ್ದು ಪುಣ್ಯಕೋಟಿಯ ಒಳ್ಳೆಯತನವೋ, ಹುಲಿಯ ಹುಂಬತನವೋ ಅಥವಾ ಸತ್ಯವೆಂಬ ಆಯುಧವೋ… +ನೀವು ಯೋಚಿಸಿ. ಜೊತೆಗೆ ಆ ಕವಿತೆಯ ಬಗ್ಗೆ ಪುತಿನ, ಕೆ.ವಿ. ಸುಬ್ಬಣ್ಣ, ಮೊಗಳ್ಳಿ ಗಣೇಶ್ ಬರೆದಿರುವುದನ್ನು ಓದಿ. +ಜಾನಕಿ ಕಾಲಂ – ಸಂಕಲನದಿಂದ +ಕನ್ನಡಸಾಹಿತ್ಯ.ಕಾಂ ಪ್ರಕಟಣೆ: ಫೆಬ್ರವರಿ: ೨೦೦೬ +ಕೃಪೆ: ಛಂದ ಪುಸ್ತಕ +ಪ್ರತಿಗಳಿಗೆ: ಛಿhಚಿಟಿಜಚಿ ಂಖಿ ಥಿಚಿhoo.ಛಿom +ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […] +ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […] +ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_389.txt b/Kannada Sahitya/article_389.txt new file mode 100644 index 0000000000000000000000000000000000000000..8fdc903b6e7f3b385496573b316bbfb6bb52e6e3 --- /dev/null +++ b/Kannada Sahitya/article_389.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ ಒಂದು ಹಗಲು. ತಿಂಡಿ ಮುಗಿಸಿ ಷೂ ಲೇಸನ್ನು ಕಟ್ಟಿಕೊಳ್ಳುತ್ತಿರುವಾಗಲೆ ಕೊರಳಿಗೆ ನೇಣು ತೂಗಿಸಿ ಶರಟಿನ ಕಿಸೆಯಲ್ಲಿ ಇಳಿಬಿಟ್ಟುಕೊಂಡಿದ್ದ ಮೊಬೈಲು ಹೊಡೆದುಕೊಂಡಿತ್ತು. ಹಿಂದಿನ ದಿನ ಆಫೀಸಿಗೆ ಫೋನಿಸಿದ್ದವಳಿಗೆ ಬೇಕೆಂದೇ ತಾನು ಆಫೀಸಿನಲ್ಲಿ ಇಲ್ಲವೆಂದು ಹೇಳಿಸಿ, ಅವಳ ಆರು ಕರೆಗಳನ್ನು ಅವಾಯ್ಡ್ ಮಾಡಿ, ಯಾವುದೇ ಸಮಯದಲ್ಲಿ ಮೊಬೈಲಿಗೆ ಬರಬಹುದಾದ ಕರೆಗಳನ್ನು ತಡೆಗಟ್ಟಲು ಅದನ್ನು ಬಂದು ಮಾಡಿಟ್ಟಿದ್ದವನಿಗೆ ಈಗದು ಟ್ರಿಂಗುಟ್ಟಿದಾಗ ಎದೆ ಸಶಬ್ದ ಢವಿಸಿತ್ತು. ಕೆಲವಾರು ರಿಂಗುಗಳ ಬಳಿಕ ಅದು ಯಾವುದೋ ಎಸ್ಟೀಡಿ ಬೂತಿನ ನಂಬರೆಂದು ಖಚಿತ ಪಡಿಸಿಕೊಂಡು ರಿಸೀವ್ ಮಾಡಿದ್ದ. +‘ನಿರಿ, ನಾನು ಕಣೋ…!’ ಎನ್ನುವ ಅವಳ ದನಿ ಕೇಳುತ್ತಿದ್ದಂತೆಯೆ ನಿರಂಜನನ ಮೂರು ತಿಂಗಳುಗಳ ತಾಳ್ಮೆ, ಕಾತುರಗಳು ಸೋರಿ ಹೋಗಿದ್ದವು. ಊರಿನ ಎಚ್ಚರದ ದಟ್ಟಣೆಯಲ್ಲಿ ಒಬ್ಬನೇ ಹಾದು ಹೋಗುವಾಗಲೆಲ್ಲ ಅವಳು ಎಂದಾದರೂ ಫೋನು ಮಾಡಿದಲ್ಲಿ ಹೇಗೆ ಮಾತನಾಡಬೇಕು ಅಂತೆಲ್ಲ ಕಲ್ಪಿಸಿಕೊಳ್ಳುತ್ತ, ಹತ್ತಾರು ದಾವೆಗಳನ್ನು ಮತ್ತೆ ಮತ್ತೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ ಮಾತುಗಳೆಲ್ಲ ಇಂತಹ ಗಟ್ಟಿ ವಾಸ್ತವದಲ್ಲಿ ಕಳಚಿಕೊಂಡಿದ್ದವು. ಅವಳಿಗೆ ತನ್ನ ತಪ್ಪುಗಳು ಮನದಟ್ಟಾಗುವವರೆಗೆ ನೇರ ಮಾತಿಗೆ ನಿಲುಕಬಾರದೆಂದುಕೊಂಡಿದ್ದವನು ಈಗ ಅವಳ ದನಿಗೆ ಒಮ್ಮೆಲೇ ಕರಗಿಹೋಗಿದ್ದ. ಅವನಾಡಿದ ಕೆಲವೇ ಮಾತುಗಳಲ್ಲಿ ದುಗುಡ ದಟ್ಟಯಿಸಿತ್ತು. ಏರಿರದ ಧ್ವನಿಯ ನಡು ನಡುವೆ ಉಮ್ಮಳ. ಹೆಚ್ಚೇನೂ ಹೇಳಲಾಗದೆ ಮತ್ತೆ ಫೋನಿಸುವಂತೆ ಅವಳಿಗೆ ಹೇಳಿದ್ದ. +ಹಿಂದಿನ ದಿನವಷ್ಟೇ ಹಿಮಳ ಹುಟ್ಟಿನ ತೇದಿಯಾದ್ದರಿಂದ ಅವಳ ಅಮ್ಮನ ಮನೆಗೆ ಫೋನು ಮಾಡಿ ನಿರಂಜನ ಶುಭ ಕೋರಿದ್ದ. ಅತ್ತೆ ಬೇರಿನ್ನೇನನ್ನು ವಿಚಾರಿಸಿಕೊಳ್ಳುವ ಮೊದಲೆ ‘ಅವಳಿಗೆ ನನ್ನ ಬೆಸ್ಟ್ ವಿಷಸ್ ತಿಳಿಸಿಬಿಡಿ. ಅವಳ ಖುಷಿಯಷ್ಟೆ ನನಗೆ ಮುಖ್ಯ.’ ಎಂದಷ್ಟೆ ಮೊಟುಕಾಗಿ ಹೇಳಿ ಫೋನು ಇಟ್ಟಿದ್ದ. ಅವರೂ ಅವಳನ್ನು ಕರೆದು ಇವನೊಟ್ಟಿಗೆ ಮಾತಿಗೆ ಎಡೆ ತೋರಿರಲಿಲ್ಲ. ಇವನೂ ಅವಳ ಬಗೆಗೆ ಕೇಳಿರಲಿಲ್ಲ. ಕಳೆದ ಎರಡು ತಿಂಗಳಿಂದ ಹಿಮಳ ಬಗೆಗಿನ ಖುದ್ದು ಉಸಾಬರಿಯನ್ನು ಬಲವಂತದಿಂದ ಕಡಿದುಕೊಂಡ ಬಳಿಕ ಅವಳು ಈವರೆಗೆ ಫೋನಿಗೂ ಸಿಕ್ಕಿರಲಿಲ್ಲ. ಈ ತನಕದ ನಿರೀಕ್ಷೆಗಳೆಲ್ಲ ಫಲಿಸದಿದ್ದಾಗ ಅವಳೆಂದೂ ಮತ್ತೆ ತಾನಾಗಿ ಫೋನಿಸಲಾರಳು ಎಂದು ಆಗಾಗ್ಗೆ ಅಂದುಕೊಂಡರೂ, ಅಂತಹ ಸನ್ನಿವೇಶವೊಂದು ತಳೆದು ಬಂದರೆ ತಾನು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಆಗಾಗ್ಗೆ ಲೆಕ್ಕಾಚಾರ ಹಾಕುತ್ತಿದ್ದ. +ಚಿಲಕ ಹಾಕಿಕೊಳ್ಳಲು ಬಾಗಿಲವರೆಗೆ ಬಂದ ಶಾರದೆ ಮಗನಲ್ಲಿ ಏನನ್ನೋ ತಡಕುವಂತೆ ನೋಡಿದಾಗ ಮುಖವನ್ನು ಬೇರೆಲ್ಲೋ ತಿರುಗಿಸಿ ಸಾವರಿಸಿಕೊಂಡು ಮತ್ತೆ ಅವಳತ್ತ ಮಾಡಿ ಅದು ತನ್ನ ಕೆಲಸದ ಬಗೆಗಿನ ಫೋನೆಂದು ಬಲವಂತದ ನಗೆ ಚೆಲ್ಲಿದ. ಹೊರಗೆ ಬಂದು ಜೀಪು ಚಾಲೂ ಮಾಡುವವರೆಗೂ ಅಮ್ಮ ತನ್ನತ್ತಲೇ ದೃಷ್ಟಿ ಹುದುಗಿಸಿದ್ದನ್ನು ಗಮನಿಸಿ ಮುಜುಗರವಾಗಿತ್ತು. ಹಿಮ ಜೊತೆಯಲ್ಲಿದ್ದಾಗ ಅಮ್ಮನಿಗೆ ತನ್ನ ಬಗೆಗೆ ಇಷ್ಟೊಂದು ಕಾಳಜಿಯಿರಲಿಲ್ಲವಲ್ಲ ಎಂದು ತಂತಾನೆ ಹೇಳಿಕೊಂಡ. ಮನೆಯಿರುವ ಇಪ್ಪತ್ತನೆಯ ಕ್ರಾಸು ದಾಟಿ ಮೇಯಿನು ರೋಡಿನತ್ತ ಹೊರಳಿ ಅವಸರದಲ್ಲಿ ಸಿಗರೇಟು ಹೊತ್ತಿಸುವಾಗ ಪ್ರಣತಿಯ ಫೋನು ಬಂದಿತ್ತು. ತಾನು ಅವಳನ್ನು ನೋಡಲಿಕ್ಕೆಂದೇ ಹೊರಟಿರುವುದಾಗಿ ಮೊಟುಕಾಗಿ ಉತ್ತರಿಸಿ ಜೀಪಿನ ವೇಗ ಹೆಚ್ಚಿಸಿದ. ಮನೆಯಿಂದ ರಿಚ್ಮಂಡ್ ಸರ್ಕಲ್ ತಲುಪುವಾಗ್ಗಿನ ಇಪ್ಪತ್ತು ನಿಮಿಷಗಳಲ್ಲಿ ಮೂರು ಸಿಗರೇಟುಗಳ ಹೊಗೆಯುಗುಳಿದ್ದ. ಮನಸ್ಸು ಹಿಮಳ ಮತ್ತೊಂದು ಫೋನಿನ ಲೆಕ್ಕಾಚಾರದಲ್ಲಿತ್ತು. ಇರುಳುಗಳ ಕನವರಗಳಷ್ಟೇ ಎಚ್ಚರದ ತುಡಿತಗಳನ್ನೂ ಹತೋಟಿಯಲ್ಲಿಟ್ಟುಕೊಂಡು ಒತ್ತಾಯದ ನಿರಾಳದಲ್ಲಿ ಹಗಲುಗಳನ್ನು ಅಳವಡಿಸುತ್ತಿರುವಾಗ ಮತ್ತೊಮ್ಮೆ ಅದರಲ್ಲಿ ಸಲ್ಲದ ತಲ್ಲಣವನ್ನು ಹೂಡುವಂತೆ ಅವಳು ಫೋನಿಸಿದಳೇಕೊ? ತಿಳಿಗೊಂಡ ಮನಸ್ಸಿನಲ್ಲಿ ತನ್ನ ಕಹಿ ನೆನಹುಗಳನ್ನು ಕಲಿಲಗಳಾಗಿ ಮತ್ತೆ ತೂರುವುದಕ್ಕೆಂತಲೋ? ತನ್ನ ಗೈರಿನಲ್ಲಿ ಊರಿನ ಹಾಳು ಜಂಜಟದಲ್ಲಿ ತನ್ನ ಗಂಡನಾಗಿದ್ದವನು ಹೇಗೆ ಹೆಣಗುತ್ತಿದ್ದಾನೆಂದು ನೋಡುವುದಕ್ಕೆಂತಲೊ? ಇಲ್ಲವೆ ಎಂದಿನಂತೆ ತನ್ನನ್ನು ಕಾಡುವುದಕ್ಕೆಂತಲೊ? ಆದದ್ದಾಗಲಿ, ಅವಳ ಮತ್ತೊಂದು ಕರೆಗೆ ತಾನು ಓಗೊಡಬಾರದು. ಓಗೊಟ್ಟರೂ ನಿರ್ಲಿಪ್ತವಾಗಿ ಮಾತು ತೂಗಿಸಬೇಕು. . . ಯೋಚನೆಗಳ ಜಾಳಿನಲ್ಲಿ ಸುತ್ತಲಿನ ನಿಚ್ಚಳದ ಎಚ್ಚರವನ್ನು ಮರೆತವನಾಗಿ ನಿರಂಜನ ಕ್ಯಾಷ್ ಫಾರ್ಮಸಿಯ ಸಿಗ್ನಲ್ಲನ್ನು ಹಾರಿಸಿ ಟ್ರಾಫಿಕ್ ಕಾಪ್‌ನ ಸೀಟಿಗೋಗೊಟ್ಟು, ತಪ್ಪಿತಸ್ಥನಂತೆ ಸಾರಿ ಹೇಳಿ ಒಂದಷ್ಟು ತೆತ್ತು, ಮುಂದೆ ಸಾಗುವಾಗ ನೆನಹುಗಳನ್ನು ಮತ್ತಷ್ಟು ಮುಸುರಿಸಿಕೊಂಡ. +ಹಿಮ ತನಗಿನ್ನಿಲ್ಲ ಎಂಬುದನ್ನು ಅರಿವಿಗೊಡ್ಡಿಕೊಳ್ಳುತ್ತಲೆ ಖಿನ್ನನಾಗುತ್ತಿದ್ದವನಿಗೆ ಅವಳ ಅಗಲಿಕೆಯೂ ಒಂದು ವಾಸ್ತವವೆಂದು ಅನಿಸಹತ್ತಿದ್ದು ತಿಂಗಳಿಂದೀಚೆಗಷ್ಟೆ. ಅವಳನ್ನು ಹೊರತುಗೊಂಡ ತನ್ನ ಬದುಕು ಆ ವಾಸ್ತವಕ್ಕಿಂತ ದೊಡ್ಡದು ಎಂದು ತನಗೆ ತಾನೆ ಈಗೀಗ್ಗೆ ಸಮರ್ಥಿಸಿಕೊಂಡು ಮನಸ್ಸಿನ ಜಾಳು ತಗೆಬಗೆಗಳನ್ನು ತಹಬದಿಗೆ ತಂದುಕೊಳ್ಳುತ್ತಿದ್ದ. ಸಲ್ಲದ ನೆವ ಹೊತ್ತು ಮರುಕಳಿಸುವ ನೆನಹುಗಳನ್ನು ಹತ್ತಿಕ್ಕುತ್ತ ಅವಳು ತನ್ನೊಟ್ಟಿಗಿಲ್ಲದ ಊರ ಹರಹಿನಲ್ಲಿ ಹೊಸತನ್ನು ಹುಡುಕುತ್ತಿದ್ದ. ಎಂಟು ವರ್ಷಗಳ ಅವಳ ಸಹಯೋಗದಲ್ಲಿ ಮದುವೆಯ ಮುನ್ನದ ಎಲ್ಲ ಸಹವರ್ತಿಗಳ ಸಂಪರ್ಕವನ್ನು ಕಡಿದುಕೊಂಡಿದ್ದವನಿಗೆ ತನ್ನೊಳಗಿನ ಅಳಲು ತೋಡಿಕೊಳ್ಳಲೂ ಯಾರೂ ಇಲ್ಲದಂತಹ ದುಸ್ತರದ ಸನ್ನಿವೇಶವೀಗ ತಳೆದು ನಿಂತಿತ್ತು. ಓಟವೇ ಗ್ರಾಸವಾದ ಊರಿನಲ್ಲಿ ರೇಸಿಗೆ ಬಿಟ್ಟ ಕುದುರೆಯಂತೆ ತನ್ನನ್ನು ತಾನೇ ಹೂಡಿಕೊಂಡಿದ್ದವನಿಗೆ ಎಂಥದೋ ಶೂನ್ಯವೊಂದರ ಆವಿರ್ಭವವಾಗಿ, ಅದರೆಡೆಯಲ್ಲಿ ಇನ್ನೇನನ್ನಾದರೂ ಅನತಿ ಕಾಲದಲ್ಲಿ ತುಂಬುವುದು ಸದ್ಯಕ್ಕೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ನಸುಕಿನಲ್ಲಿ ಜಿಮ್ಮ್‌ನಿಂದ ಮೊದಲುಗೊಂಡು ಇನ್ನಿತರೆ ಪ್ರಾತಃವಿಧಿಗಳನ್ನು ಮುಗಿಸಿ ಬೆಳಗಿನ ಏಳೂವರೆಗೆ ದಿನಚರಿಯಲ್ಲಿ ತೊಡಗಿಕೊಂಡರೆ ಅದು ಕೊನೆಗೊಳ್ಳುತ್ತಿದ್ದುದು ರಾತ್ರಿಯ ಹತ್ತೂವರೆಗೆ. ಇಂತಹ ಅವಿರತದ ದೈನಂದಿನದಲ್ಲಿ ತೊಡಗಿಸಿಕೊಂಡಿದ್ದವನಿಗೆ ಹಿಮ ಇರುವವರೆಗೆ ಅವಳಿಗೂ ತನ್ನ ಸಮಯದಲ್ಲಿ ಒಂದಷ್ಟು ಹಿಸ್ಸೆಯನ್ನು ಕೊಡಬೇಕೆಂದು ನಿರಂಜನನಿಗೆ ಅನಿಸಿದ್ದುದು ಕಡಿಮೆಯೆ. ಈಗ ಇದ್ದಕ್ಕಿದ್ದಂತೆ ದಿನದ ಆಯಸ್ಸು ಅಕ್ಷಯವಾದಂತೆ ಅನಿಸುತ್ತಿದ್ದರೂ ಹಂಚಿಕೊಳ್ಳಲು ಅವಳಿಲ್ಲ. ಹಿಮಳಿಲ್ಲದ ಇವನ ಎಚ್ಚರವೆಲ್ಲ ಹಿಗ್ಗಿಕೊಂಡು ಅದನ್ನು ಮೊಟಕುಗೊಳಿಸಲು ಯಾವುದರಲ್ಲಿಯಾದರೂ ಕೂಡಲೆ ತೊಡಗಿಕೊಳ್ಳುವುದು ಅನಿವಾರ್ಯವಾಗಿತ್ತು. +ಆಗಾಗ್ಗೆ ಅಗತ್ಯಕ್ಕಿಂತ ಹೆಚ್ಚು ಉದ್ವಿಗ್ನಗೊಳ್ಳುತ್ತಿದ್ದ ಹಿಮ ಯಾವುದೇ ಸಂದರ್ಭದಲ್ಲಿ ಇಂತಹ ಹಠಾತ್ ನಿರ್ಣಯಕ್ಕೆ ಕೈಯಿಕ್ಕಬಲ್ಲಳು ಎಂಬುದು ನಿರಂಜನನ ಅರಿವಿನಲ್ಲಿದ್ದ ವಿಷಯವೆ. ಅವಳ ಎಂತಹ ಹಠಾತ್ತಿಗೂ ತಾನು ಸಿದ್ಧನಾಗಿರಬೇಕು ಎಂದು ಆಗಾಗ್ಗೆ ಅಂದುಕೊಳ್ಳುತ್ತಿದ್ದವನಿಗೆ ಅವಳ ಗೈರು ಸುರು ಹಚ್ಚಿದ ಒಂಟಿತನ ಭಯಂಕರ ಹುಚ್ಚು ಹಿಡಿಸಿತ್ತು. ಹಿಮಳ ನಿರ್ಗಮನದಷ್ಟೆ ಹಠಾತ್ತಾಗಿ ಈ ಪ್ರಣತಿ ನಿರಂಜನನ ಡೋಲಾಯಮಾನದ ಬದುಕಿನಲ್ಲಿ ಅಡಿಯಿಟ್ಟಿದ್ದಳು. ಬದುಕಿನ ಸಗಟಿನಲ್ಲಿ ದೊರಕಬಹುದಾದ ಘೋರ ಮಗ್ಗುಲೆಂದರೆ ಬೇಸರ ಎಂಬುದು ಹಿಮಳ ಅಗಲಿಕೆ ಹೇಳಿಕೊಟ್ಟ ಪಾಠವೆಂದುಕೊಳ್ಳುತ್ತಿದ್ದ ಒಂದು ಬೆಳಗಿನಲ್ಲಿ ನಿರಂಜನನಿಗೆ ಪ್ರಣತಿಯ ಪರಿಚಯವಾಗಿತ್ತು. +* +* +ಪ್ರಣತಿ ಮೆಹತಾ. ಇಪ್ಪತ್ತೇಳರ ಹರೆಯದ ಗುಜರಾತಿ ಹೆಣ್ಣು. ವೃತ್ತಿಯಿಂದ ಛಾಯಾಗ್ರಾಹಕಿ. ಪ್ರತಿಷ್ಠಿತ ಟಿವಿ ಚಾನೆಲ್‌ಗಳಿಗಾಗಿ ಹತ್ತಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣತಿ. ಈಚೆಗಷ್ಟೆ ‘ಸಮಕಾಲೀನ ಸಂಗೀತ ಪರಂಪರೆಯಲ್ಲಿ ಹೊಸ ಹೊಳಹುಗಳು’ ಎಂಬ ವಿಚಾರವನ್ನು ಕುರಿತು ತನ್ನ ಥೀಸಿಸ್ ಪ್ರಬಂಧವನ್ನು ಮಂಡಿಸಿದ್ದವಳು. ಮುಂದೊಂದು ಮ್ಯೂಸಿಕ್ ಅಕೆಡೆಮಿಯನ್ನು ಹುಟ್ಟುಹಾಕುವ ಕನಸನ್ನು ಎಚ್ಚರದಲ್ಲೂ ಅಸ್ವಗತವೆಂಬಂತೆ ಎಲ್ಲರಲ್ಲಿ ಕಟ್ಟುವವಳು. ತನ್ನೆಲ್ಲ ಸಾಧನೆಗಳ ನಡುವೆ ತನ್ನ ಸುತ್ತಲೂ ಯಾವುದೇ ಪ್ರಭಾವಲಿಯನ್ನು ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೆ ಬೆರೆಯುವುದರಿಂದ ಎಲ್ಲರಿಗೂ ಕೆಲವು ಮಾತುಗಳಲ್ಲಿಯೆ ಬೇಕಾಗುವವಳು. ಬದುಕಿನ ಬಗೆಗಿನ ಖಚಿತ ನಿರ್ಲಿಪ್ತ ನಿಲುವುಗಳು, ಬಿಗುಮಾನವಿಲ್ಲದ ಸರಳ ಮನಸ್ಸಿನ ಸುಂದರ ರೂಹುಗಳು ಅವಳ ವ್ಯಕ್ತಿತ್ವಕ್ಕೆ ವಯಸ್ಸಿಗೆ ಮೀರಿದ ಛಾಪು ಹೊದಿಸಿದಂತಿತ್ತು. ನಿರಂಜನನ ನಿಟ್ಟಿನಲ್ಲಿ ಹೇಳುವುದಾದರೆ, ತನ್ನ ಕ್ಯಾಮೆರಾ ಕಣ್ಣಿನಿಂದ ಸುತ್ತಲಿನ ಜಗತ್ತಿನ ಸೂಕ್ಷ್ಮ ವಿವರಗಳೊಟ್ಟಿಗೆ ಫ್ರೇಮಿನಲ್ಲಿ ಅಡಕಗೊಳ್ಳುವ ಜನರ ಚರ್ಯೆಗಳನ್ನೂ ಗ್ರಹಿಸಿ ಬದುಕಿನ ಎಳೆಗಳನ್ನು ಸ್ಥೂಲದಲ್ಲಿ, ಸೂಕ್ಷ್ಮದಲ್ಲಿ ದಾಖಲಿಸುತ್ತ, ಸುತ್ತಲಿನ ಪರಿಸರದ ಪ್ರತಿಯೊಂದು ಅಂಶದಲ್ಲೂ ಅತ್ಯಂತ ಆಪ್ತತೆಯನ್ನು ಹೂಡುವವಳು ಎಂತಹವರಿಗೂ ಇಷ್ಟವಾಗಬಹುದಷ್ಟೆ. ಅವಳನ್ನು ಭೇಟಿ ಮಾಡಿದಂದೆ ನಿರಂಜನನಿಗೆ ಎಚ್ಚರದ ನೇರ ಅರಿವಿಗೆ ಬಾರದ ಯಾವುದೋ ಬಂಧದ ಪದರವೊಂದು ಅವನನ್ನು ಸುತ್ತುವರೆದಂತಾಗಿತ್ತು. ಇಬ್ಬರೂ ಒಬ್ಬರಿಗೊಬ್ಬರು ಕಂಡುಕೊಂಡ ಆಕಸ್ಮಿಕದಷ್ಟೇ ಅನಿರೀಕ್ಷಿತವಾದ, ‘ಆಲ್ಮೋಸ್ಟ್ ಇಮ್ಮೀಡಿಯೆಟ್’ ಎನ್ನಿಸುವಂತೆ ಅವರಲ್ಲಿ ಅದೆಂಥದೋ ಬೆಸುಗೆ ಕೂಡಿಬಂದಿತ್ತು. ತನಗಿಂತ ಹತ್ತು ವರ್ಷಗಳಷ್ಟು ಹಿರೀಕನಾದ ನಿರಂಜನನೊಟ್ಟಿಗಿನ ಮೂರನೆಯ ಭೇಟಿಯಲ್ಲಿಯೆ ‘ತನಗೆ ಇಂತಹವನ ಜೊತೆ ಬದುಕಿನ ಪೂರ್ತಿ ಸಿಕ್ಕರಾಗದೆ?’ -ಎಂದು ತನ್ನ ನೋಟ್‌ಪ್ಯಾಡ್‌ನಲ್ಲಿ ಗೀಚಿಕೊಂಡಿದ್ದಳು. ಒಮ್ಮೆ ಕಾಫೀ ಷಾಪಿನಲ್ಲಿ ಅವಳು ಆಗಾಗ್ಗೆ ಕನಸುವ ಮ್ಯೂಸಿಕ್ ಅಕೆಡೆಮಿಯನ್ನು ಕುರಿತು ಮಾತನಾಡಿ, ಅದಕ್ಕೊಂದು ಊರಿಗೆ ಮಾದರಿಯಾಗುವಂತಹ ಕಟ್ಟಡವನ್ನು ಹೇಗೆ ನಿರ್ಮಿಸಬಹುದೆಂದು ನಿರಂಜನ ತಿಳಿಸಿದ್ದ. ಅದರ ವಿನ್ಯಾಸದ ರೂಪುರೇಷೆಗಳನ್ನು ವಿವರಿಸುತ್ತ, ಒಂದು ಟಿಷ್ಯೂ ಚೌಕದಲ್ಲಿ ಅವನು ಎಳೆದ ಕೆಲವು ಗೆರೆಗಳ ಜಾಡು ಹಿಡಿದು ಅವುಗಳಲ್ಲಿ ತನ್ನ ಬದುಕಿನ ಸುಪ್ತ ಪಥಗಳಿವೆಯೆ? -ಎಂದು ತಡಕಿದ್ದಳು. ಆ ಚೌಕವನ್ನು ಮಡಿಚಿ ತನ್ನ ವ್ಯಾನಿಟಿಯಲ್ಲಿ ವಿಸಿಟಿಂಗ್ ಕಾರ್ಡ್‌ಗಳ ನಡುವೆ ತೂರಿಸಿಟ್ಟುಕೊಳ್ಳುವಾಗ ಅದು ತನ್ನ ಬದುಕಿನದೆ ಪ್ರಣಾಳಿಕೆಯೆಂದನಿಸಿ ಅವಳಿಗೆ ಹೆಮ್ಮೆಯಾಗಿತ್ತು. ಇನ್ನು ನಿರಂಜನ ಕಣತಿಯೋ- ಧಾವಂತವೆ ಮೈವೆತ್ತಿದಂತಹ ಊರು ತನ್ನ ಸುತ್ತಲೂ ಹೊಸೆದಿದ್ದ ಜಡ್ಡನ್ನು ಅವಳ ಒಡನಾಟದಲ್ಲಿ ಪದರ ಪದರವಾಗಿ ಕಳಚಿ ಹಗುರಗೊಂಡಂತಿದ್ದ. ತಾನು ಹಿಮಳೊಟ್ಟಿಗೆ ಹವಣಿಸುತ್ತಿದ್ದ ಆಡಂಬರದ ಬದುಕಿನಾಚೆಗೆ ವೆಚ್ಚವೆ ಇಲ್ಲದ ಮೋಜಿನ ಸರಳ ಸುಂದರ ಮಜಲೂ ಈ ಊರಿನಲ್ಲಿದೆ ಎಂದು ಪ್ರಣತಿಯ ಸಹವಾಸದಲ್ಲಿ ಅರಿತುಕೊಂಡು ಅವನಲ್ಲಿ ಹೊಸ ಹುರುಪು ಕಟ್ಟಿಕೊಂಡಿತ್ತು. ಈಚೀಚೆಗಂತೂ ತನ್ನೊಡಲಿನ ಪಸೆಯನ್ನು ನೆಲದಲ್ಲಿ ಚೆಲ್ಲಿ ಹಗುರಗೊಂಡ ಮುಗಿಲಿನ ಬೆಳರು ತೆಳುಮೆ ತಳೆದಂತಿತ್ತು ಅವನ ಮನಸ್ಸು. ಕವಿದ ಕಪ್ಪು ಗಾಜಿನ ತಣಿದ ಹವೆಯುಳ್ಳ ತನ್ನ ಜೀಪು ಕಾರುಗಳಾಚೆ ಸಿರಿಯ ಗರವಿಲ್ಲದ, ಮ್ಯಾನರಿಸಮ್ಮುಗಳ ಕಟ್ಟುಪಾಡಿಲ್ಲದ ಪರ್ಯಾಯ ವಲಯದೊಳಕ್ಕೆ ತನ್ನನ್ನು ಹೂಡಿಕೊಂಡಿದ್ದ. ಹತ್ತು ವರ್ಷಗಳ ಹಿಂದಿನ ತನ್ನ ಹುಮ್ಮಸ್ಸಿನ ಮೇರಿನಲ್ಲಿ ನಡೆಸದ ಯುವೋತ್ಸಾಹದ ವಹಿವಾಟುಗಳೆಲ್ಲ ಅವನ ಮೂವತ್ತಾರರ ಹರೆಯವನ್ನು ಮರೆಮಾಚುವಂತೆ ತೆರೆದುಕೊಂಡವು. ನೀರಿನಲ್ಲಿ ಮಿದ್ದ ಹಕ್ಕಿಯೊಂದು ಮೈಕೊಡವಿ ಎದ್ದು ರೆಕ್ಕೆ ಬಿಚ್ಚಿ ಹಾರಿದ ಸ್ವಚ್ಛಂದತೆಯನ್ನು ಕ್ರಮೇಣ ಕಂಡುಕೊಂಡಿದ್ದ. +ಪ್ರಣತಿ ಮೆಹತಾ ನಿರಂಜನನನ್ನು ಭೇಟಿ ಮಾಡಿದ ಭಾನುವಾರ ಹಿಮಳ ವಿದಾಯದ ಬಳಿಕದ ಮೊದಲನೆಯದು. ಅಸಾಧ್ಯವೆನಿಸುವ ಬಿಡುವು ತನ್ನನ್ನು ಚಪ್ಪರಿಸುತ್ತ ತೊಟ್ಟಿಕ್ಕಿಸುವ ಬೇಸರವನ್ನು ನೀಗಿಕೊಳ್ಳುವುದು ಹೇಗೆಂಬ ಮೆಲುಕಿನಲ್ಲಿ ಈಜೀಪುರದ ಕೊಳಚೆಯ ಮಗ್ಗುಲಿಗೆ ಹೊಂದಿಕೊಂಡಂತಿರುವ ಮಿಸೆಸ್ ರಸ್ತೋಗಿಯವರ ಸೈಟಿನ ಮುಂದೆ ಬೊಲೇರೋ ನಿಲ್ಲಿಸಿ ನಿರಂಜನ ತನ್ನ ವಿನ್ಯಾಸದ ಕಟ್ಟಡವನ್ನು ನಿರುಕಿಸುತ್ತಿರುವಾಗಲೆ ಪ್ರಣತಿ ತನ್ನ ಹತ್ತಾರು ಅಟ್ಯಾಚ್‌ಮೆಂಟ್‌ಗಳಿದ್ದ ಕ್ಯಾಮೆರಾವನ್ನು ಹೊತ್ತು ಎದುರಾದದ್ದು. ತನ್ನ ಅಂಡಿಗೊಂದು ಬಾಲಂಗೋಚಿ ಹೊಸೆದುಕೊಂಡಂತೆ ಹಿಂದೆ ಬಂದ ಕೊಳೆಗೇರಿಯ ಮಕ್ಕಳ ಹಿಂಡಿನ ಕೇಕೆಯ ನಡುವೆ ಇಬ್ಬರ ಮುಖಾಮುಖಿ. ‘ಇxಛಿuse me. ಙou seem ಣo me ಚಿs ಣhe ಚಿಡಿಛಿhiಣeಛಿಣ oಜಿ ಣhis ಠಿಟಚಿಛಿe. ಅಚಿಟಿ I ಣಚಿಞe some ಠಿiಛಿಣuಡಿes oಜಿ ಣhese ಞiಜs ತಿiಣh ಥಿouಡಿ ಛಿಡಿeಚಿಣioಟಿ ಚಿs ಣhe bಚಿಛಿಞಜಡಿoಠಿ?’ ಪರವಾನಗಿ ಯಾಚಿಸಿ ಹತ್ತಾರು ಮಕ್ಕಳನ್ನು ಅಲ್ಲಲ್ಲಿ ಪೋಸು ಕೊಡುವಂತೆ ನಿಲ್ಲಿಸಿ ಸಾಲಾಗಿ ಕೆಮೆರಾ ಕ್ಲಿಕ್ಕಿಸುತ್ತಿದ್ದ ಅವಳ ತಾದಾತ್ಮ್ಯ ನಿರಂಜನನಲ್ಲಿ ವಿಪರೀತ ಕೌತುಕವನ್ನು ಹುಟ್ಟಿಸಿತ್ತು. ಬೊಲೇರೋದಿಂದ ಇಳಿದು ಕಟ್ಟಡದೊಳಗೆ ಹಾಯುತ್ತಿದ್ದವನಿಗೆ ತಾನೂ ಅವಳ ಕಣ್ಣುಗಳ ಚೌಕಟ್ಟಿನಲ್ಲಿ ಹುದುಗಿರಬಹುದು ಎಂಬುದರ ಸ್ಪಷ್ಟ ಪರಿವೆಯಿರಲಿಲ್ಲ. ‘I ತಿouಟಜ ಟiಞe ಣo hಚಿve ಛಿoಠಿies oಜಿ ಣhese ಠಿiಛಿಣuಡಿes’ ಎಂದು ತನ್ನ ವಿಸಿಟಿಂಗ್ ಕಾರ್ಡು ಕೊಟ್ಟವನನ್ನು ಹುಡುಕಿಕೊಂಡು ಮೂರನೆಯ ದಿನವೆ ಆಫೀಸಿಗೆ ಬಂದಿದ್ದಳು ಪ್ರಣತಿ. ನಿರಂಜನ ಹಮ್ಮಿದ ಚಹಾ ಸಂದರ್ಭದಲ್ಲಿ ಇಬ್ಬರೂ ತಂತಮ್ಮ ಬಗೆಗೆ ಹೇಳಿಕೊಳ್ಳುವ, ಒಬ್ಬರೊಬ್ಬರ ಬಗೆಗೆ ತಿಳಿದುಕೊಳ್ಳುವ ಅಡೆಯಿಲ್ಲದ ಘಳಿಗೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ನಿರಂಜನ ತನ್ನ ವೈಯಕ್ತಿಕ ಬದುಕಿನ ಬಿರಿದ ಹಂದರವನ್ನು ನೇರ ಮಾತುಗಳಲ್ಲಿ ವಿಷದ ಪಡಿಸಿದ. +‘Suಟಿಜಚಿಥಿs geಣ exಣಡಿemeಟಥಿ boಡಿiಟಿg, Pಡಿಚಿಟಿಚಿಣhi’ ವಾರದ ದಿನಗಳಲ್ಲಿ ಕೆಲಸದ ನೆವದಲ್ಲಿ ಹಗಲು ಹೇಗೋ ತೂಗಿ ಸವೆಯುವುದಾದರೂ, ಭಾನುವಾರದ ಉದ್ದವನ್ನು ವ್ಯಯಿಸುವುದು ಕಷ್ಟವೆಂದು ನಿರಂಜನ ಹೇಳಿದಾಗ ಪ್ರಣತಿ ತಾನು ಅವನಿಗೆ ಜೊತೆ ಕೊಡುವುದಾಗಿ ಹೇಳಿದ್ದಳು. ಈ ಊರಿನಲ್ಲಿ ಎಡೆಯಿರದೆ ಕಟ್ಟಡಗಳು, ವಾಹನಗಳು ಹುಟ್ಟು ಹಾಕುವ ಇಕ್ಕಟ್ಟುಗಳಲ್ಲೂ ತನ್ನ ಕೆಮೆರಾ ಮೂಲಕ ಖಾಸಗೀ ಸನ್ನಿವೇಶಗಳನ್ನು ಅನುಭವಿಸುವುದು ರಜೆಯ ದಿನಗಳಲ್ಲಿ ಆದ್ದರಿಂದ ನಿರಂಜನ ಅವಳೊಟ್ಟಿಗೆ ಜೊತೆಯಾಗಬಹುದೆಂದು ಹೇಳಿದ್ದಳು. ‘ಙou ಛಿಚಿಟಿ ಛಿಚಿಡಿಡಿಥಿ mಥಿ bಚಿggಚಿge ಚಿಡಿouಟಿಜ!! I meಚಿಟಿ mಥಿ ಛಿಚಿmeಡಿಚಿ equiಠಿmeಟಿಣ’ ನಿರಂಜನ ನಗೆ ತುಳುಕಿಸಿದ್ದ. +ಮರು ಶನಿವಾರವೆ ಇಬ್ಬರೂ ‘ಫೀಚರಿಂಗ್ ವೆಸ್ಟರ್ನ್ ಘಾಟ್ಸ್’ ಎನ್ನುವ ಅಸ್ಸೈನ್‌ಮೆಂಟನ್ನು ಹಮ್ಮಿಕೊಂಡು, ಊರೆಲ್ಲ ಮಲಗಿದ ಬಳಿಕ ಬೊಲೇರೋದಲ್ಲಿ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ ಚಿಕ್ಕಮಗಳೂರನ್ನು ಮೂರನೆಯ ಪಾಳಿಯಲ್ಲಿ ತಲುಪಿದ್ದರು. ಮರುದಿನದ ಬೆಳಗಿನಲ್ಲಿ ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಹೋಗಿ, ಅಲ್ಲಿಂದ ಚಾರ್ಮಡಿ ಘಾಟಿಯಿಳಿದು ಮತ್ತೆ ಮಂಗಳೂರು ಹೆದ್ದಾರಿ ಹೊಕ್ಕು ಶಿರಾಡಿ ಮಾರ್ಗವಾಗಿ ಘಟ್ಟವೇರಿ ಬೆಂಗಳೂರು ತಲುಪುವಾಗ ರಾತ್ರಿ ಹತ್ತಾಗಿತ್ತು. ಕಾಡುಮೇಡುಗಳ ನೆಲದ ವೈವಿಧ್ಯವನ್ನು ಹಾದು ಸಾಗುವ ಹೆದ್ದಾರಿ ನಿರಂಜನನ್ನಂತೂ ಒಂಟಿಯಾಗಿಸಿರಲಿಲ್ಲ. ತಾನು ಜೀಪು ಚಾಲಿಸುವಾಗ ದಾರಿಯಲ್ಲಿ, ಪ್ರಣತಿ ಸ್ಟಿಯರಿಂಗ್ ಹಿಡಿದಿರುವಾಗ ಡಾಮರಿನ ಹರಹಿನಾಚೀಚೆ ಕ್ಷಿತಿಜದವರೆವಿಗೆ ತೊಡಗಿಸಿಕೊಳ್ಳುತ್ತಿದ್ದವನಿಗೆ ತನ್ನ ಕರಾಳ ಬೇಸರವನ್ನು ನೀಗಿದುದು ತಾವಿಬ್ಬರೂ ಹೊರಟ ಸವ್ವಾರಿಯೆ ಅಥವಾ ಪ್ರಣತಿ ತನ್ನ ಕೆಮೆರಾ ಕೈಚಳಕದ ನಡುನಡುವೆ ಪ್ರತಿಯೊಮ್ಮೆ ನೆಲ-ಮುಗಿಲುಗಳು ಹೂಡುವ ಬೆರಗು ಕಂಡೊಡನೆ ಒರಲುತ್ತಿದ್ದ ಕೇಕೆ ಅಬ್ಬರಗಳ ಲವಲವಿಕೆಯೆ ಎಂದೆಲ್ಲ ತಾಳೆ ಹಾಕಿ ನಿರುತ್ತರಗೊಂಡಿದ್ದ. ‘ಓiಡಿಚಿಟಿರಿಚಿಟಿ! ಙou ಣತಿo ಜಿeಟಟ iಟಿ ಟove ಚಿಟಿಜ goಣ mಚಿಡಿಡಿieಜ is iಣ?’ ನೆನಪುಗಳು ಒತ್ತರಿಸುವಂತೆ ಪ್ರಣತಿ ಕೇಳಿದಾಗ ನಿರಂಜನ ಅವನ್ನು ಒತ್ತಾಯದಿಂದ ಹತ್ತಿಕ್ಕುತ್ತ ಹಾದಿ ಮಗ್ಗುಲಿನ ತೊರೆಯಂಚಿನ ಬೆಳ್ಳಕ್ಕಿಗಳತ್ತ ಬೊಟ್ಟು ಮಾಡಿ ಮಾತು ಹಾರಿಸಿದ್ದ. ಆ ಬಳಿಕದ ಭಾನುವಾರ ಅವಳೊಟ್ಟಿಗೆ ಔಟರ್ ರಿಂಗ್ ರೋಡಿನಲ್ಲಿ ಗುರಿಯಿಲ್ಲದೆ ಗಿರಕಿ ಹೊಡೆಯುತ್ತ ಸುತ್ತಿದುದಾಗಿತ್ತು. ರೋಡುಂಗುರದ ಇಕ್ಕೆಲದಲ್ಲಿ ತಲೆಯೆತ್ತುತಿರುವ ಕಾಂಪ್ಲೆಕ್ಸುಗಳು ಎಡೆಕೊಡಬಹುದಾದ ಟ್ರ್ಯಾಫಿಕ್ಕನ್ನು ಕುರಿತು ಇಬ್ಬರೂ ಚರ್ಚಿಸಿದ್ದರು. ಮರುವಾರ ಮದರಾಸು ಹೆದ್ದಾರಿಯಲ್ಲಿ ಚಿಂತಾಮಣಿಯತ್ತ ಸಾಗಿ ದಾರಿ ಬದಿಯಲ್ಲಿನ ಗುಡ್ಡವನ್ನು ಹತ್ತಿ ಹೊತ್ತು ಮುಳುಗುವವರೆಗೂ ಅಡ್ಡಾಡಿ ಚುಕ್ಕಿ ಮಿಣುಕುಗಳ ಜಾಡಿನಲ್ಲಿ ರಸ್ತೆಯನ್ನು ಹೊಕ್ಕು ಊರಿಗೆ ಹಿಂತಿರುಗಿದ್ದರು. ಪ್ರಣತಿ ಕೆಮೆರಾದಲ್ಲಿ ದೃಶ್ಯದ ಆಯತವನ್ನು ನಿರ್ಮಿಸುವಾಗ ಮೈಮರೆಯುವಂತೆ ತಲ್ಲೀನಗೊಳ್ಳುವುದನ್ನು ನಿರಂಜನ ಬೆರಗುಗೊಳ್ಳುತ್ತಿದ್ದ. ಹೀಗೆ ತಿಂಗಳು ಕಳೆಯುವಷ್ಟರಲ್ಲಿ ವಾರಾಂತ್ಯವೆಂದರೆ ಅದು ಪರಸ್ಪರರಿಗೆ ಮೀಸಲು ಎನ್ನುವ ಅವಿನಾಭಾವದ ಎಳೆಯೊಂದು ಇಬ್ಬರನ್ನೂ ಇನ್ನಷ್ಟು ಹೆಣೆದಿತ್ತು. ವೃತ್ತಿಯಿಂದ ಆರ್ಕಿಟೆಕ್ಟಾಗಿರುವ ನಿರಂಜನ ಬದುಕಿನ ಸಮಷ್ಠಿಪ್ರಜ್ಞೆಯ ಬಗೆಗೆ, ಅದಕ್ಕೆ ತಮ್ಮನ್ನೊಳಗೊಂಡಿರುವ ನೆಲದ ಹರಹನ್ನು ನಾವು ಅನುವುಗೊಳಿಸುವ ಬಗೆಗೆ ಆಗಾಗ್ಗೆ ವಿವರಿಸುವಾಗಲೆಲ್ಲ ಪ್ರಣತಿ ಯಾವುದೋ ಕತೆಯೆಂಬಂತೆ ಕಣ್ಣಗಲಿಸಿಕೊಂಡು ಕಿವಿಗೊಡುತ್ತಿದ್ದಳು. ‘ Iಣ is veಡಿಥಿ veಡಿಥಿ exಛಿiಣiಟಿg ಣo heಚಿಡಿ ಥಿou ಣಚಿಟಞ!!’ ಎಂದು ಗರ ಬಡಿದವರಂತೆ ಹೇಳುತ್ತಿದ್ದಳು. ಹಾಗೆ ಹೇಳಿದಾಗಲೆಲ್ಲ ನಿರಂಜನನಿಗೆ ತಾನು ಹಿಮಳೊಟ್ಟಿಗೆ ಎಂದೂ ಇಷ್ಟೊಂದು ಮಾತು ಆಡುತ್ತಿರಲಿಲ್ಲವಲ್ಲ? ಅಥವಾ ತನ್ನ ಮಾತುಗಳಿಗೆ ಅವಳೆಂದೂ ಕಿವಿಯಗಲಿಸುತ್ತಿರಲಿಲ್ಲವಲ್ಲ ಅಂತ ತನ್ನಲ್ಲಿಯೆ ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದ. +ಕೆಲವು ಭಾನುವಾರಗಳಂದು ಪ್ರಣತಿ ಅವನನ್ನು ತಾನು ಆಸ್ಥೆಯಿಟ್ಟುಕೊಂಡಿರುವ ಊರಿನ ಗುಟ್ಟು, ವಿಸ್ಮಯಗಳ ಮಗ್ಗುಲನ್ನು ಕ್ಲಿಕ್ಕಿಸುವ ನೆವದಲ್ಲಿ ತನ್ನೊಟ್ಟಿಗೆ ಕರೆದೊಯ್ದಿದ್ದಳು. ಜನವೇ ಜನವಾದ ಮೆಜೆಸ್ಟಿಕ್ಕಿನ ಫ್ಲೈ-ಓವರ್, ಶಿವಾಜಿನಗರದ ದಟ್ಟಣೆ, ಊರಿನ ನೆಲದ ಕಣಿವೆಗಳಲ್ಲಿ ಹರಿವ ಕೊಳಚೆ ಮಗ್ಗುಲಿನ ನಿರಾಶ್ರಿತ ನೆಲೆಗಳು, ವಾಹನಗಳು ಕಚ್ಚಿಕೊಳ್ಳುವ ಇಕ್ಕಟ್ಟಿನ ದಾರಿ. . . ಇವುಗಳು ಅವಳ ಕೆಮೆರಾಕ್ಕೆ ಗ್ರಾಸವಾಗುವ ವಿಷಯಗಳಾಗಿದ್ದವು. ನಿರಂಜನ ಅವಳ ಫೋಟೋಗ್ರಫಿಯ ಸಲುವಿನಿಂದಾಗಿ ಊರಿನ ಹತ್ತು ಹಲವು ಒಳಗೊಳಗಿನ ಪಾರ್ಶ್ವಗಳನ್ನು ಕಂಡರಿತುಕೊಂಡಿದ್ದ. ಒಮ್ಮೆ ಇಬ್ಬರೂ ಬನ್ನೇರುಘಟ್ಟ ರೋಡಿನ ಒಳಾಂತರದಲ್ಲಿ ಶೂಟಿಂಗ್ ಮುಗಿಸಿ ಮನೆಗೆ ವಾಪಸಾದಾಗ ಹತ್ತೂ ಮುಕ್ಕಾಲು ದಾಟಿತ್ತು. ಅಂದೇಕೊ ನಿರಂಜನನಿಗೆ ಅಂದು ಇರುಳು ನಡುಮಟ್ಟ ಮುಟ್ಟುವವರೆಗೆ ನಿದ್ದೆ ಹತ್ತಿರಲಿಲ್ಲ. ತನ್ನ ಬದುಕಿನ ಅಸಂಗತ ಮಜಲುಗಳನ್ನು ಕುರಿತು ಲೆಕ್ಕಾಚಾರದಲ್ಲಿತ್ತು ಮನಸ್ಸು. ತನ್ನೆಲ್ಲ ಸಮಸ್ಯೆಗಳ ನಡುವೆಯೂ ಈ ಊರಿನ ಅಗಾಧ ಹಾಸಿನಲ್ಲಿ ತನಗೊಂದು ತನ್ನದೇ ಆದ ನೆಲೆಯಿದ್ದು ಸಾಕಷ್ಟು ಗಳಿಕೆಯೂ ಇದೆಯಷ್ಟೆ. ತಾನು ಈ ಊರಿನ ಹರಹನ್ನು ತನ್ನ ಬೊಲೇರೋದಲ್ಲಿ ದಿನಕ್ಕೆರಡು ಬಾರಿಯಂತೆ ಎರಡು ತುದಿಗಳ ನಡುವೆ ಹಾಯುತ್ತಿದ್ದರೂ, ತಾನೇ ಕಂಡರಿಯದ ಅದೆಷ್ಟೋ ನೆಲೆಗಳು ಇಲ್ಲಿ ಹುದುಗಿವೆ. ಪ್ರತಿಯೊಂದು ನೆಲೆಯಲ್ಲೂ ಕಿಂಚಿತ್ತು ಬದುಕಿಗಾಗಿ ಹೆಣಗಾಟ. ಬೊಲೇರೋದ ದೊಡ್ಡ ಗಾಲಿಗಳ ಅಗಲ ಮೈ ಸಾಗಲಾಗದಷ್ಟು ಕಡಿದಾದ ಒಳಾಂತರಗಳಲ್ಲಿ ಹಲವಾರು ಶ್ರಮದ ನೆಲಗಟ್ಟುಗಳಿವೆ. ಅವುಗಳಲ್ಲೂ ನೋವು-ನಲಿವುಗಳಿವೆ. ಅಳಲಿನೊಟ್ಟಿಗೆ ಇದ್ದುದರಲ್ಲೇ ನಗೆ ಕಾಣುವ ನಂಬಿಕೆಗಳಿವೆ. ನಾಳಿನ ಬಗೆಗಿನ ಅನಿಶ್ಚಿತತೆಯುಳ್ಳ ಅಸಂಗತ ನಮೂನೆಗಳ ಬದುಕುಗಳಲ್ಲೂ ಎದೆ ಸೆಟೆದು ನಿಲೆ ನಿಲ್ಲುವ ಜೀವಗಳಿವೆ. ಕೆಲವಾರು ಸ್ವಕೀಯವೆನಿಸುವ ಮನಸ್ಸುಗಳಿವೆ. . . ಇವುಗಳನ್ನು ಕಂಡರಿತು ದಾಖಲಿಸಬಲ್ಲ ಪ್ರಣತಿಯಂತಹ ಸೂಕ್ಷ್ಮ ದೃಷ್ಟಿಗಳೂ ಇವೆ. . . . ಈ ನಡುವೆ ತಾನು ಮತ್ತು ಹಿಮಳಂತಹವರು ಮಾತ್ರ ಎಲ್ಲವಿದ್ದೂ ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಇಲ್ಲವಾಗುತ್ತೇವೆ. ಜೊತೆಯಲ್ಲಿದ್ದೂ ಸಲ್ಲದ ಆಚೆಗಳಲ್ಲಿ ಹುದುಗಿ ಒಬ್ಬರಿಂದೊಬ್ಬರು ಕಳೆದುಹೋಗುತ್ತೇವೆ. ಒಂದೇ ಹಾಸಿಗೆಯಲ್ಲಿ ಮಲಗಿಯೂ ತಂತಮ್ಮ ಸುತ್ತ ತಮ್ಮದೆ ಭ್ರಮೆಗಳನ್ನು ಸ್ರವಿಸಿ, ಅವುಗಳದೆ ಎಳೆಗಳಲ್ಲಿ ಕೋಶಗಳನ್ನು ಕಟ್ಟಿ ಅಭೇದ್ಯರಾಗುತ್ತೇವೆ. ಎದುರಿಗಿದ್ದರೂ ಮನಸ್ಸುಗಳ ವಿಕ್ಷಿಪ್ತತೆಯನ್ನು ಹಂಚಿಕೊಳ್ಳದೆ ಇನ್ನೊಬ್ಬರಲ್ಲಿ ಗುಟ್ಟು ಕಟ್ಟುತ್ತೇವೆ. ಅವರಿವರಿಂದ ತಮ್ಮದೇ ರಹಸ್ಯಗಳು ರಟ್ಟಾಗುವಷ್ಟು ದೂರವಾಗುತ್ತೇವೆ. ಈವರೆಗೆ ತಾನು ಮಾಡುತ್ತಿದ್ದ ಊರನ್ನು ಕುರಿತು ವ್ಯಾಖ್ಯಾನಗಳು, ಜನಸೆಲೆಯನ್ನು ಕುರಿತು ಭಾಷಣಗಳು, ನೆಲದ ಹಾಸಿನಲ್ಲಿ ಜನಸಮಷ್ಠಿಯೆಂಬುದು ಕಟ್ಟುವ ಮನೆಗಳು, ಬೀದಿಗಳು, ಮಾರುಕಟ್ಟೆಗಳು, ಮೈದಾನಗಳು, ಆಡಳಿತ ಕೇಂದ್ರಗಳು- ಇಂತ ಎಲ್ಲ ಮೂರ್ತ ಮಾದರಿಗಳ ಬಗ್ಗೆ ಹೊಸ ಅರ್ಥ ಹುಡುಕುವಂತಹ ಲೇಖನಗಳು, ಕೊನೆಗೆ ತನಗೆ ಬೌದ್ಧಿಕವಾಗಿ ಒಗ್ಗದ ಹಿಮಳದ್ದೇ ನಿಟ್ಟಿನಲ್ಲಿ ಬದುಕನ್ನು ಕಲ್ಪಿಸಿಕೊಳ್ಳುವ ಕವನಗಳು. . . ಇವೆಲ್ಲವೂ ಈ ಕಡಿದು ಆವರಣಗಳ ಅನಿವಾರ್ಯದಲ್ಲಿ ಬದುಕುವ ಜೀವಗಳ ನಡುವೆ ಗೌಣವಾಗುವುದಿಲ್ಲವೆ? ನಡುನಡುವೆ ಹಿಮಳ ನೆನಪುಗಳು ಧಾವಿಸಿ ಮರಳಿ ಸಾಂಧ್ರಗೊಂಡಂತೆಲ್ಲ ಅವನ ಕೆನ್ನೆಗಳು ತೋಯ್ದಿದ್ದವು. ಯೋಚನೆಯ ಸಾವಕಾಶದಲ್ಲೆಲ್ಲೊ ಹಗಲು ಹುಟ್ಟುವ ಹೊತ್ತಿನಲ್ಲಿ ನಿದ್ದೆಯ ಮಂಪರು ಹತ್ತಿತ್ತು. +ಬಳಿಕದ ಮುಂಜಾವಿನಲ್ಲಿ ಪ್ರಣತಿಗೆ ಫೋನಿಸಿ ತನ್ನ ಮನಸ್ಸಿನ ಹೊಯ್ದಾಟವನ್ನು ನಿರಂಜನ ಹೇಳಿಕೊಂಡಿದ್ದ. ಈವರೆಗೆ ಗಂಭೀರವಾಗಿ ಏನನ್ನೂ ಅವನೊಟ್ಟಿಗೆ ಹೇಳಿರದ ಪ್ರಣತಿ ಅಂದು ಅವನಿಗೆ ಸಾಕಷ್ಟು ತಿಳಿಹೇಳಿದಳು. ಥ್ರಿಲ್ಲೇ ಇರದ ಬದುಕನ್ನು ಬದುಕು ಎನ್ನಲಾದೀತೆ? ಬದುಕಿನ ನಿರಂತರ ಲಹರಿಯಲ್ಲಿ ಅಡಚಣೆಗಳು ಬಂದಾಗಲಷ್ಟೇ ಹೊನಲು ರಮಣೀಯವೆನಿಸುವುದು? ಎಲ್ಲವನ್ನೂ ಒಪ್ಪಿಕೊಂಡು ಯಾರ ಯೋಚನೆಗಳ ಜಾಳಿಗೆ, ಹಂಗಿಗೆ ನಿಲುಕದಂತೆ ಉದ್ದಿಮೆಯನ್ನು ನಿರಂಜನ ಇನ್ನಷ್ಟು ಬೆಳೆಸಬಹುದಲ್ಲವೆ? ಈಗ ಬೆಳೆದಿರುವ ಎತ್ತರವನ್ನೂ ಮೀರಿ ಬೆಳೆದು ತನ್ನನ್ನೂ ಒಳಗೊಂಡಂತೆ ಹತ್ತಾರು ಮಂದಿಯ ಬದುಕಿಗೆ ಅರ್ಥವತ್ತಿನ ಹಿಸ್ಸೆಯೊದಗಿಸಬಹುದಲ್ಲವೆ? ‘ಬ್ಯಾಂಗಲೂರ್ ಟಾಯಿಂಸ್’ನ ಸಿರಿಯುಳ್ಳ, ಘನವುಳ್ಳ ಮಂದಿಯ ಪುಟಗಳಲ್ಲಿ ಅವನ ಹೆಸರೂ ಬರಬಹುದಲ್ಲವೆ? ಹೊಸ ಬಗೆಯಲ್ಲಿ ಬದುಕಿನ ಅರ್ಥವನ್ನು ಕಂಡುಕೊಳ್ಳಲು ಇದಕ್ಕಿಂತ ಹೊಸ ಅವಕಾಶವಿನ್ನೆಲ್ಲಿದೆ? ಹಳೆಯ ನೆನಪುಗಳಲ್ಲಿ ಜಡ್ಡುಗಟ್ಟಿರುವ ಎಲ್ಲ ಬಿಂಬಗಳನ್ನು ಕಳಚಿ ಹೊಸತೊಂದು ಇಮೇಜನ್ನೇಕೆ ಇವನು ಹುಟ್ಟುಹಾಕಬಾರದು? ಪ್ರಣತಿಯ ಮಾತುಗಳನ್ನು ಕೇಳಿದ ಮೇಲಂತೂ ನಿರಂಜನ ಹಿಮಳನ್ನು ಪ್ರಣತಿಯೊಟ್ಟಿಗೆ ತೂಗಿ ನೋಡಲಿಕ್ಕೆ ತೊಡಗಿದ. ಬದುಕನ್ನು ಸಮಗ್ರವಾಗಿ ನೋಡದ ಹಿಮಳನ್ನು ಕುರಿತು ತಾನಿನ್ನೂ ಏಕಿಷ್ಟು ಭಾವುಕನಾಗುತ್ತೇನೆ? ಇಷ್ಟಾಗಿ ಅವಳನ್ನು ಪೂರ್ತಿ ಕಂಡರಿತಿದ್ದೂ. . . ಅವಳ ಸ್ವಭಾವಾದರೂ ಎಂಥದ್ದು! ಯಾವುದನ್ನೂ ನೇರವಾಗಿ ಓದಲಾಗದ ದ್ವಂದ್ವವುಳ್ಳಂಥದು. ಕೆಲವೊಮ್ಮೆ ತನ್ನನ್ನು ಘನತೆಯುಳ್ಳ ಗಟ್ಟಿಯನ್ನಾಗಿ ಕಂಡಿದ್ದರೆ, ಹಲವೊಮ್ಮೆ ಎಲ್ಲವನ್ನೂ ತೋರುವ ಗಾಜಿನ ಪದರಕ್ಕಿಂತಲೂ ಪಾರದರ್ಶಕವಾದ ತೆಳುಮೆಯೆಂದು ಬಗೆಯುವುದು. ಮೋಂಬತ್ತಿಯ ನೆತ್ತಿಯಲ್ಲಿ ಓಲಾಡುವ ಬೆಳಕಿನ ಬಿತ್ತದಂತಹ ಚಿತ್ತ ಅವಳದ್ದು. ತನ್ನೆದುರಿಗೆ ಸಿಗುವ ಎಲ್ಲವುಗಳ ನೆರಳು ನೆರಳನ್ನೂ ತೂಗಾಡಿಸಿ ತಡಕುವ ಜಾಯಮಾನ! ಎಂತಲೆ ಅವಳು ತಮ್ಮಿಬ್ಬರ ಒಲುಮೆಯ ಗಟ್ಟಿ ಕಟ್ಟನ್ನೂ ಬಿಚ್ಚಿ ಮದುವೆಯನ್ನೇ ಗೋಜಲು ಮಾಡಿ ದೂರವಾದದ್ದು. . . ಅದೂ ತಾನಾಗಿಯೇ ಸಲ್ಲದ ದುಗುಡದ ಮೋಡವನ್ನು ಹೊದ್ದು ದುಮ್ಮಾನದಿಂದ ದಟ್ಟಯಿಸಿ ಭೋರೆಂದು ಮಳೆ ಸುರಿದು ಸರಿದು ಹೋದದ್ದು. . . ಅದರ ಹುಚ್ಚು ನೆರೆಯಲ್ಲಿ ಹೇಳ ಹೆಸರೂ ನಿಲುಕದಂತೆ ಇಂದು ಕೊಚ್ಚಿ ಹೋಗಿಲ್ಲವೆ ತಾನು? ಅಂದು ಬಹಳ ಕಾಲ ನಿರಂಜನನ ಮನಸ್ಸು ಹಿಮ ಮತ್ತು ಪ್ರಣತಿ- ಇಬ್ಬರ ನಡುವೆ ತೂಗಾಡುತ್ತಿತ್ತು. +* +* +‘ಔh sಣoಠಿ iಣ, ಓiಡಿಚಿಟಿರಿಚಿಟಿ! ಂಜಿಣeಡಿ ಚಿಟಟ she is ಥಿouಡಿ ತಿiಜಿe’ ಪ್ರಣತಿ ತನ್ನ ಮಾತುಗಳನ್ನು ಹೆಕ್ಕಿ ಹೆಕ್ಕಿ, ತೂಗಿ ತೂಗಿ ನಿರಂಜನನ ಮುಂದಿಡುತ್ತಿದ್ದವಳು ಒಮ್ಮೆಲೆ ಕನಲಿದವಳಂತೆ ಹೇಳಿದಳು. ಅವನು ಅವಳನ್ನು ಭೆಟ್ಟಿ ಮಾಡುತ್ತಿದ್ದಂತೆ ತಮ್ಮಿಬ್ಬರ ಸುತ್ತ ಹಲವು ಕಣ್ಣುಗಳ ಹೊಂಚು ಬಾರಿಸ್ಟಾದ ಮೂರಡಿಗೆ ಮೂರಡಿಯ ಮೇಜಿನಲ್ಲಿ ನೆಟ್ಟಿರಬಹುದು ಎಂಬುದರ ಯೋಚನೆಯೂ ಇಲ್ಲದೆ ಸಶಬ್ದವಾಗಿ ತನ್ನ ದುಗುಡವನ್ನು ಹನಿದಿದ್ದ. ಹಿಮ ತನ್ನನ್ನು ಮತ್ತೆ ಕಸಿದುಕೊಳ್ಳಬಾರದು! ತಾನು ಮರಳಿ ಮತ್ತೆ ತೋರಿಕೆಯ ಬದುಕಿನಲ್ಲಿ ಜಾರಿಕೊಳ್ಳಬಾರದು! ಹಾಗಾಗಿ ಅವಳೊಟ್ಟಿಗೆ ಮತ್ತೆಂದೂ ಯಾವ ಭೇಟಿಯೂ ಬೇಡ. . . +ನಿರಂಜನನ ಮಾತುಗಳಿಗೆ ಪ್ರತಿಕ್ರಿಸಿದ ಪ್ರಣತಿಯ ದನಿಯಲ್ಲಿ ಏರಿಳಿತವಿರದ ಹದವಿತ್ತು. ಕದಡಿದ ರಾಡಿ ತಿಳಿಗೊಂಡಂತಹ ಸ್ಥಿತಿ ನಿರಂಜನ ಮನಸ್ಸಿಗಿದ್ದರೂ ತಳದಲ್ಲಿನ ಬಗ್ಗಡವನ್ನು ಅವನು ಮೊಗೆದು ಹೊರಹಾಕಿಲ್ಲವೆಂಬುದು ತನಗೆ ಗೊತ್ತಿರುವುದಷ್ಟೆ. ಆ ತಿಳಿ ಹಾಳೆಯ ಒಳಗೆ, ತಳವಿಲ್ಲದ ಹಳ್ಳದ ಗೋಡೆಗಳ ಕಂದರದಲ್ಲೆಲ್ಲೋ ಹೂಡಿಟ್ಟಿರುವ ಹಿಮಳನ್ನು ಕುರಿತಾದ ಗೀಳು ಅದೆಷ್ಟು ಎಂಬುದು ತನ್ನೊಬ್ಬಳಿಗಷ್ಟೆ ಗೊತ್ತು. ನಿರಂಜನ ಇನ್ನೂ ಅವಳ ಅಗಲಿಕೆಯನ್ನು ಒಪ್ಪಿಕೊಂಡಿಲ್ಲದ ಕಾರಣ ಎಲ್ಲ ದ್ವಂದ್ವಗಳನ್ನು ಹತ್ತಿಕ್ಕಿ ಅವನು ಹಿಮ ಮತ್ತೆ ಫೋನಿಸುತ್ತಿದ್ದಂತೆ ಅವಳನ್ನು ಭೆಟ್ಟಿ ಮಾಡಲೇಬೇಕು. ಅವಳು ಇವನ ಬದುಕಿನ ತೊರೆಯನ್ನು ಮತ್ತೆ ಸೇರುವುದಾದಲ್ಲಿ ಅವಳನ್ನು ಒಪ್ಪಿಕೊಳ್ಳಲೇಬೇಕು. ಆದರೆ ನಿರಂಜನನಲ್ಲಿದ್ದ ಹಮ್ಮೊಂದೆ ಪ್ರಣತಿಯ ಮಾತುಗಳನ್ನು ಒಪ್ಪುವುದಕ್ಕೆ ಬಿಡುತ್ತಿಲ್ಲ. ಪ್ರೀತಿಯಲ್ಲಿ ಇನ್ನೆಂತಹ ಹಮ್ಮು-ಬಿಮ್ಮು? . . . +ನಿರಂಜನ ಮೇಲು ಮಾತಿಗೆ ತನ್ನೊಳಗಿನ ಅಳುಕನ್ನು ಮುಚ್ಚುವಂತೆ ಏನೇನೋ ಸಮಜಾಯಿಷಿ ಹೇಳಿದ. ವಾಸ್ತವದಲ್ಲಿ ಅವನು ಹಿಮಳೊಟ್ಟಿಗೆ ಮತ್ತೊಂದು ಅನರ್ಥದ ಭೇಟಿಗೆ, ಅವಳ ಮತ್ತೊಂದು ತಿರಸ್ಕಾರಕ್ಕೆ ಸಿದ್ಧನಿರಲಿಲ್ಲ. ಪ್ರಣತಿ ಅವನಿಗೆ ಹಿಮ ಅನಿವಾರ್ಯವೆಂಬುದನ್ನು ನಿಚ್ಚಳವಾಗಿ ತಿಳಿಹೇಳಿದಳು. ಅವಳನ್ನು ಭೇಟಿ ಮಾಡುವ ಮೊದಲೇ ಅಲ್ಲಿ ತಿರಸ್ಕಾರವಿದೆಯೆಂದು ಹೇಗೆ ಗೊತ್ತು? ‘ Whಥಿ ಣಚಿಟಞ oಜಿ ಡಿeರಿeಛಿಣioಟಿ? Whಥಿ ಜoes oಟಿe ಡಿesigಟಿ beಜಿoಡಿe ಣಚಿಞiಟಿg uಠಿ ಣhe ಣಚಿsಞ? I ಞಟಿoತಿ iಣ is ಜiಜಿಜಿiಛಿuಟಣ. . . ಎusಣ imಚಿgiಟಿe. . !! Iಣ is oಟಿಟಥಿ ತಿheಟಿ ಚಿ ಛಿಚಿಣeಡಿಠಿiಟಟಚಿಡಿ iಟಿsಠಿiಣe oಜಿ iಣs suಜಿಜಿeಡಿiಟಿgs ಡಿuಠಿಣuಡಿes oಠಿeಟಿ iಣs ಛಿoಛಿಛಿooಟಿ iಣ emeಡಿges iಟಿ ಚಿ beಚಿuಣiಜಿuಟ buಣಣeಡಿಜಿಟಥಿ!’ ಕಂಬಳಿ ಹುಳ ತನ್ನ ಕೋಶವನ್ನು ಒಡೆದು ಅತೀವ ಕಷ್ಟದಿಂದ ಹೊರಬಂದರಷ್ಟೆ ಅದು ಚಿಟ್ಟೆಯಾಗಿ ಬಣ್ಣ ಬಣ್ಣದ ರೂಹುಗಳಲ್ಲಿ ಹರಿದಾಡಲು ಸಾಧ್ಯ. ಗರ್ಭದೊಳಗಿನ ಬೆಚ್ಚನೆಯ ಕೋಶ ನಿರಂಜನಿಗೆ ಬೇಕೋ? ಇಲ್ಲವೆ ಅದರಾಚೆಗಿನ ಸುಂದರವಾದ ಎಷ್ಟೆಲ್ಲ ಸ್ತರಗಳಲ್ಲಿ ತೀವ್ರವಾಗಿ ಅನುಭವಿಸಿ ಸವಿಯಬಹುದಾದ ಬದುಕೊ? ಮುಗಿಲುಗಳ ನಡುವೆ ತೂಗುವ ಹಕ್ಕಿಗೆ ನೆಲದಿಂದ ಗುಟುಕು ಹೆಕ್ಕಿದ ಮೇಲಷ್ಟೆ ಬಾನಾಟದ ಕೆಲಸ! +ಪ್ರಣತಿಯಿನ್ನೂ ಕೆಲವಾರು ದೃಷ್ಟಾಂತಗಳ ಮೈದಡವುತ್ತಿರುವಾಗಲೇ ಹಿಮಳ ಕರೆ ನಿರಂಜನ ಮೊಬೈಲಿನ ಮೌನವನ್ನು ಭೇದಿಸಿತು. ನಿರಂಜನ ಸಣ್ಣಗೆ ನಡುಗುತ್ತ ತನ್ನ ಢವಿಸುವ ಗುಂಡಿಗೆಯೊಳಗಿನ ಆಳದ ಮಾತುಗಳಿಗೆ ಬೆಲೆಯಿತ್ತು ಅವಳನ್ನು ಆ ಬಳಿಕದ ಒಂದು ತಾಸಿನಲ್ಲಿ ಷಾಪರ್ಸ್ ಸ್ಟಾಪ್‌ನ ಮಗ್ಗುಲಿಗಿರುವ ಎ.ಟಿ.ಎಂ. ಕೌಂಟರಿನ ಬಳಿ ಭೇಟಿಯಾಗುವುದಾಗಿ ಹೇಳಿದ. ನಿರಂಜನನಿಗೆ ಪ್ರಣತಿ ಆ ಭೇಟಿಯ ಯಾವುದೇ ಸರಣಿಯಲ್ಲಿ ಉದ್ವಿಗ್ನಗೊಳ್ಳಬಾರದೆಂದು ಹೇಳಿ ಅಲ್ಲಿಂದ ಅವನನ್ನು ಬೀಳ್ಕೊಟ್ಟಳು. ‘ಅಚಿಟಟ me ಚಿs sooಟಿ ಚಿs ಥಿou ಚಿಡಿe ಣhಡಿough!’ +* +* +ಹನ್ನೆರಡೂವರೆಗೆ ನಿಯತಿಯಾದ ಸ್ಥಳದಲ್ಲಿ ನಿರಂಜನ ಒಳಗಿನ ಕೆಲವು ಸುಪ್ತ ತಲ್ಲಣಗಳಿಗೆ ಮೌನದಲ್ಲಿ ಕಂಪಿಸುತ್ತ ನಿಂತ. ಆರು ವರ್ಷಗಳ ತಮ್ಮ ಜೊತೆಯ ಆಪ್ತ ಕ್ಷಣಗಳಷ್ಟೇ ಈ ಭೇಟಿಯ ಬಂಡವಾಳವೆಂದು ಬೊಲೇರೋ ನಿಲ್ಲಿಸುವಾಗ ತನಗೆ ತಾನೇ ಒಮ್ಮೆ ಹೇಳಿಕೊಂಡಿದ್ದ. ಈ ಆರು ವರ್ಷಗಳಲ್ಲಿ ತನ್ನ ಬದುಕಿನಲ್ಲಿ ಏನೇನೆಲ್ಲ ಜರುಗಿ ಹೋಗಿದೆ. ಅದೂ ಎಷ್ಟು ಕ್ಷಿಪ್ರವಾಗಿ! ಹಿಮ ಅತಿ ಸಂಬಳದ ವಾಂಛೆಗಳ ಬೆನ್ನೇರಿ ಸವ್ವಾರಿ ಮಾಡಿದಷ್ಟೆ ವೇಗದಲ್ಲಿ. . . ಎಗ್ಗಿಲ್ಲದೆ ಹಿಗ್ಗುತ್ತ, ಇದ್ದುದರಲ್ಲಿ ಇನ್ನಷ್ಟು ತುರುಕಿಕೊಳ್ಳುತ್ತಿರುವ ಈ ಊರಿನ ದಾಪಿಗೆ ತಳುಕು ಹಾಕುವಂತೆ. . . ವಾಸ್ತವದಲ್ಲಿ ಅಂದುಕೊಂಡಿದ್ದಕ್ಕಿಂತ ಬೇಗಬೇಗನೆ ಕಡಲಾಚೆಯ ಯಾರದೋ ಎಚ್ಚರಗಳಿಗೆ ತನ್ನನ್ನು ಅನುವುಗೊಳಿಸಿಕೊಳ್ಳುತ್ತಿರುವ ಊರಿನ ಧಾವಂತ ಅವೆಷ್ಟು ಮನಸ್ಸುಗಳ ಜೋಡಿಯನ್ನು ಒಡೆದಿರಬಹುದು? ತನ್ನ ಮಾಟದ ಅಸಂಬದ್ಧತೆಯನ್ನೇ ತನ್ನಲ್ಲಿ ಹೂಡಿಕೊಂಡವರ ಮೇಲೂ ಝಳಪಿಸಿ ಎಷ್ಟು ಒಡನಾಟಗಳನ್ನು ಛಿದ್ರಿಸಿರಬಹುದು? ಎಷ್ಟು ಒಲುಮೆಗಳನ್ನು ದಿವಾಳಿಗೆಬ್ಬಿಸಿರಬಹುದು? ಎಷ್ಟು ಮುದ್ದುಗರೆವ ಪಿಸುಮಾತುಗಳ ಲಲ್ಲೆಗಳನ್ನು ಅಸಹನೆಯ ತಾರಕಕ್ಕೇರಿಸಿ ಬೀದಿಗುಂಟ ಅಬ್ಬರವನ್ನು ಮೊರೆಸಿರಬಹುದು? ತಾನು ಹೂಡಿಕೊಂಡಿರುವ ಮೋಜಿನ ಬೊಜ್ಜೇ ಅವೆಷ್ಟು ಒಡಲುಗಳ ಸುತ್ತ ಕೊಬ್ಬಿನ ಪದರಗಳಾಗಿ, ಅವೆಷ್ಟು ಬದುಕುಗಳಲ್ಲಿ ಅಸಮತೋಲನದ ವಜ್ಜೆಯಾಗಿ ಬಹಿರಂಗಗೊಂಡಿರಬಹುದು? ನಿರಂಜನ ಮೂರನೆಯ ಸಿಗರೇಟನ್ನು ಹೊತ್ತಿಸುತ್ತಿರುವಾಗಲೆ ಇದ್ದಕ್ಕಿದ್ದಂತೆ ವ್ಯಕ್ತಗೊಂಡ ಹಿಮ ಅದನ್ನು ಅವನ ಬಾಯಿಯಿಂದ ಕಿತ್ತೆಸೆದು, ‘ ನೀನಿನ್ನೂ ನಿನ್ನ ಚಾಳಿ ಬಿಟ್ಟಿಲ್ಲ ಅಲ್ಲವಾ?’ ಎಂದಳು. +ನಿರಂಜನನಿಗೆ ಒಮ್ಮೆಲೇ ಪ್ರತ್ಯಕ್ಷಗೊಂಡ ಹಿಮಳನ್ನು ನೋಡುತ್ತಿದ್ದಂತೆ ಬಿಸಿಲಿಗೆ ತೆರಹಿದ ಮಂಜಿನ ಘನದಂತೆ ಕರಗತೊಡಗಿದ. ಮಾತುಗಳೇ ಹೊರಡಲಿಲ್ಲ. +‘ನಿರಿ! ಅದೇನು ಹಾಗೇ ನಿಂತುಬಿಟ್ಟೆ? ನಾನು ಅದೇ ಹಿಮಾನೆ! ನಿನ್ನೊಟ್ಟಿಗೆ ಇಲ್ಲ ಅಷ್ಟೆ. ಇನ್ನು ಮೇಲೆ ಯಾವಾಗಲೂ ಇರೋಕ್ಕಾಗಲ್ಲ!!’ ಅವಳು ಉಲುಹು ಬಿಚ್ಚುತ್ತಿದ್ದಂತೆ ಕೊರಳು ವೇದನೆಯಿಂದ ನರಳಿದಂತಾಯಿತು. ‘ನೀನು ಊರಿಗೆ ಬರ್ತ್‌ಡೆ ವಿಷ್ ಹೇಳಲಿಕ್ಕೆ ಫೋನು ಮಾಡಿದ್ದೆಯಂತೆ. ನಿನ್ನ ಮೇಯಿಲ್ ಕೂಡ ಓದಿದೆ. Iಣ’s ಞiಟಿಜ oಜಿ ಣeಡಿಡಿibಟಥಿ ತಿeeಞeಟಿeಜ me ouಣ , ಓiಡಿi. . . ಈ ಮದುವೆ, ಒಡನಾಟ ಎಲ್ಲ ನಮ್ಮ ಥರದವರಿಗಲ್ಲ. ಆದರೂ ಅದೆಷ್ಟು ಚೆನ್ನಾಗಿದ್ದೆವಲ್ಲೋ ನಾವು? ಊoತಿ ಟಿiಛಿe iಣ ತಿಚಿs! ಏನು ಮಾಡೋದು ಹೇಳೂ? ನಿನಗೆ ನನಗೆ ಅಂತ ಸಮಯವೇ ಇರಲಿಲ್ಲ. ಮೂರು ಹೊತ್ತೂ ಕೆಲಸದ ಉಸಾಬರಿ. ಇಲ್ಲಾ ಅವರಿವರದ್ದು. ಙou ಠಿiಟಿಛಿheಜ ouಡಿ mಚಿಡಿಡಿiಚಿge, ಓiಡಿi. . . !!’ ಹಿಮಳಲ್ಲೂ ತಿಂಗಳುಗಳ ದುಗುಡ ಹೆಪ್ಪುಗಟ್ಟಿದ್ದುದು ಮೆಲ್ಲನೆ ಕರಗತೊಡಗಿತ್ತು. ನಿರಂಜನ ತನ್ನಲ್ಲಿಯೆ ರೂಢಿಸಿಕೊಂಡಿದ್ದ ಸಂಯಮದ ಒಡ್ಡನ್ನು ಒಡನೆಯೆ ಒಡೆದು ‘I miss ಥಿou, ಊimಚಿ! ಒiss ಥಿou so muಛಿh! ನೀನಿರೋವರೆಗೆ ನಾನು ಇಷ್ಟು ಮಿಸ್ಸ್ ಮಾಡ್ತೀನಿ ಅಂತ ಅಂದುಕೊಂಡೇ ಇರಲಿಲ್ಲ.’ ಎಂದು ಗಳಗಳನೆ ಅತ್ತುಬಿಟ್ಟ. +‘ಅಳುತ್ತೀ ಯಾಕೋ, ನಿರೀ? ನಿನಗದೇನು ಕಮ್ಮಿಯಾಗಿದೆ ಹೇಳೂ? ಎರಡು ಕಾರೂ, ಒಂದು ಬಂಗಲೇ, ಆಳೂಕಾಳೂ. . .! ನಿಮ್ಮವ್ವ! ನಿಮ್ಮಾಂಟೀ!! ಎಲ್ಲಾ ಇದ್ದಾರಲ್ಲಾ? ವೇಯ್ಟ್ ಲಾಸ್ ಪ್ರೋಗ್ರಾಂ ಬೇರೆ ಸೇರ್ಕೊಂಡು ತೆಳ್ಳಗೆ ಇನ್ನೊಂದು ಹಸೇ ಏರೋ ಹಾಗೆ ಮಿಂಚುತ್ತಾ ಇದ್ದೀ!’ +‘ಹಂಗಿಸಬೇಡವೋ ಹಿಮಾ!! ನಾನು ಅನುಭವಿಸುತ್ತಾ ಇರೋದು ನನಗಷ್ಟೆ ಗೊತ್ತು!’ +‘ಇನ್ನೇನು ಹೇಳಲಿ ಹೇಳು? ನನಗೂ ಬೇಜಾರಾಗಿಲ್ವಾ? ಯಾರೋ ನಮ್ಮ ಮೇಲೆ ಕಣ್ಣು ಹಾಕಿಬಿಟ್ಟರೋ ನಿರೀ. . . ! ಇನ್ನು ಯಾರು ಹೇಳು ನಿಮ್ಮ ಆಂಟೀ! She ಚಿಟತಿಚಿಥಿs bಡಿoughಣ ಟಿegಚಿಣive eಟಿeಡಿgಥಿ iಟಿಣo ouಡಿ home. ಂಟಿಜ ಥಿou ತಿhoಟಟಥಿ ತಿeಟಿಣ bಥಿ heಡಿ. ಇರಲೀ ಬಿಡು, ನಾವು ಇಷ್ಟೇ ಪಡಕೊಂಡು ಬಂದದ್ದು. ನಾನಂತೂ ನಮ್ಮಪ್ಪನ ಭಿಕ್ಷೆಯಲ್ಲಿದ್ದೀನಿ.’ +‘ಹಿಮಾ! ಙou hಚಿve ಛಿhoseಟಿ ಣo be so. ನನ್ನನ್ನೇಕೆ ಬ್ಲೇಮ್ ಮಾಡೋದೂ?. . . ಸಾಲದ್ದಕ್ಕೆ ಮತ್ತೆ ಮತ್ತೆ ನಮ್ಮಮ್ಮ. . . ಆಂಟೀ. . . ಹಾಗಂತ ನಿಮ್ಮಪ್ಪ ಅಮ್ಮ ಏನು ಕಡಿಮೆ ಮಾಡಲಿಲ್ಲವಲ್ಲಾ? ಒಮ್ಮೆ. . . ಒಮ್ಮೆಯಾದರೂ ನಮ್ಮಿಬ್ಬರ ನಡುವೆ ಏನು ನಡೀತಾ ಇದೆ ಅಂತ ಬಂದು ನೋಡಿದರಾ ಹೇಳು? ನಾನೊಂದು ಮಾತು ಹೇಳ್ತೀನಿ ಕೇಳು. ಇದನ್ನು ಯಾರೂ ಸರೀ ಮಾಡಲಿಕ್ಕಾಗೋಲ್ಲ. We shouಟಜ hಚಿve heಟಠಿeಜ ouಡಿseಟves. ಈಗಲೂ ಕಾಲ ಮಿಂಚಿಲ್ಲ ಅಲ್ಲವಾ?’ +‘ನೋಡು ಮೂರು ತಿಂಗಳಾದ ಮೇಲೆ ಥಿouಡಿ ತಿomಚಿಟಿ hಚಿs ಛಿome ಣo meeಣ ಥಿou. ಮತ್ತೆ ನಮ್ಮಪ್ಪ ಅಮ್ಮನ ವಿಷಯ ತೆಗೀತ್ತೀಯಾ. ನಾಚಿಕೆ ಆಗೋಲ್ಲಾ? ಐeಣ us ಣಚಿಟಞ someಣhiಟಿg ಟಿiಛಿe ಚಿಟಿಜ sತಿeeಣ!’ +ನಿರಂಜನ ಅವಳ ಕಣ್ಣುಗಳ ಆಳಕ್ಕಿಳಿಯುವ ಪ್ರಯತ್ನವನ್ನು ಮಾಡಿದ. ಏನೂ ಸ್ಪಷ್ಟವೆನಿಸಲಿಲ್ಲ.‘ಸರಿ ಬಾ. ಒಳಗೆ ಹೋಗೋಣ. ಏನಾದರೂ ತಿಂತೀಯೇನು?’ ಹಿಮ ಇಲ್ಲವೆಂಬಂತೆ ಗೋಣು ಹಾಕಿದಳು. ‘ಒಳಕ್ಕೆ ಹೋಗಿ ಕೂತ್ಕೋಳ್ಳೋಣ. ಆಮೇಲೆ ಏನು ಮಾಡೋದು ಅಂತ ಡಿಸೈಡ್ ಮಾಡಬಹುದು.’ +ಷಾಪರ್ಸ್ ಸ್ಟಾಪಿನ ಕೊನೆಯ ಅಂತಸ್ತಿನಲ್ಲಿರುವ ಕಾಫೀ ಷಾಪಿನಲ್ಲಿ ಇಬ್ಬರೂ ಎದುರುಬದುರಿಗೆ ಕುಳಿತವರು ಕೆಲಕಾಲ ಮಾತನಾಡಲಿಲ್ಲ. ಹಿಮ ನಿರಂಜನ ತಲೆಗೂದಲಿನಲ್ಲಿ ಅಲ್ಲಲ್ಲಿ ರೇಖಿಸಿದ್ದ ಕೆಂಚುಗೆರೆಗಳನ್ನು ನೋಡುತ್ತಿದ್ದಳು. ಇವನು ಅವಳ ಕೈಬೆರಳುಗಳಲ್ಲಿದ್ದ ಆರು ಉಂಗುರಗಳಲ್ಲಿ ತಾನು ಉಡುಗೊರೆಯಾಗಿ ಕೊಟ್ಟವೆಷ್ಟೆಂದು ಲೆಕ್ಕಿಸುತ್ತಿದ್ದ. ಕಷಾಯದಂತಹ ಕಾಫಿಗೆ ಬುರುಗಿದ ಕೆನೆಹಾಲನ್ನು ಬೆರೆಸಿ ಗುಟುಕಿಸುವಾಗಲಷ್ಟೆ ಹಿಮ ಮತ್ತೆ ಮಾತು ಬಿಚ್ಚಿದಳು. ‘ಈಗ ನಿನ್ನ ಲಾಯರ್‌ಗಳು ಯಾರು?’ +‘ಇದ್ದಾರೆ ಒಬ್ಬರು. ನೀನು ಅಪಾಯಿಂಟ್ ಮಾಡಿರೋ ಅಷ್ಟು ಹೈ ಪ್ರೊಫೈಲ್ ಅಂತೂ ಇಲ್ಲ. ಇಷ್ಟಕ್ಕೂ ಅದರ ಯೋಚನೆ ಈಗೇಕೆ? ಃoಣh oಜಿ us ಞಟಿoತಿ ಣhಚಿಣ ತಿe ಛಿಚಿಟಿ ಟಿoಣ be ಣogeಣheಡಿ. ನಿನಗೆ ಈ ಮದುವೆ ಬೇಕಾದರೆ ನನಗೂ ಬೇಕು. ಇಲ್ಲವಾದರೆ ಇಲ್ಲ.’ +‘ಆದರೂ ನಿರೀ, ನಾವೇಕೆ ಮ್ಯೂಚುವಲ್ ಕನ್ಸೆಂಟ್‌ನಲ್ಲಿ ಬೇರೆಯಾಗಬಾರದೂ?’ +‘ಡಿವೋರ್ಸ್ ಬೇಕಾಗಿರೋದು ನಿನಗೆ. ನಾನಂತೂ ಕೇಳಿಲ್ಲ. ಈ ಮದುವೆ ನಿನ್ನ ಪಾಲಿಗೆ ಎಂದೋ ಮುಗಿದು ಹೋಗಿದೆ ಅಂತ ಎಲ್ಲೆಲ್ಲಿ ಹೇಳಿದ್ದೀಯಾ ಅನ್ನೋದು ನಿನಗೆ ಗೊತ್ತಿದೆ. ನೀನು ಜೊತೆಯಲ್ಲಿ ಇದ್ದಾಗಲೂ ನಾನು ಡಮ್ಮಿಯಾಗಿದ್ದೆ. ಈಗ ಉಳಿದಿರೋದು ಕಾನೂನಿನ ಠಸ್ಸೆ ಒಂದೆ. ಖಿhe ಡಿemಚಿiಟಿಜeಡಿ oಜಿ ಣhis ತಿeಜಜiಟಿg shಚಿಟಟ ಚಿಟso ಛಿeಚಿse oಟಿ iಣs oತಿಟಿ. . . iಟಿ iಣs oತಿಟಿ ಣime ಚಿಟಿಜ sಠಿಚಿಛಿe. ನೀನು ಜೊತೆಯಲ್ಲಿದ್ದಾಗ ನಾನು ಮಾಡಿದ ಸಹಮತದ ಪ್ರಸ್ತಾಪವನ್ನು ನೀನು ಯಾವಾಗಲೂ ವಿರೋಧಿಸಿದೆ. ಈಗ ಇನ್ನೆಂಥ ಕನ್ಸೆಂಟ್ ಹೇಳೂ? ನೀನು ಕೋರ್ಟಿನ ಬಾಗಿಲು ಬಡಿದಿದ್ದೀ. ನಾನು ಅದಕ್ಕೆ ಕಾಯ್ತೀನಿ. ಬದುಕಿನ ಸಾರವನ್ನೇ ಹೀರಿಕೊಂಡ ಈ ಮದುವೆಯಲ್ಲಿ ಇನ್ನುಳಿದಿರುವುದೆಲ್ಲ ತಂತಾನೇ ವ್ಯಯವಾಗಲಿ. ಆ ಶೇಷವನ್ನೂ ತಾನಾಗಿಯೆ ವ್ಯಯಗೊಳಿಸಿ ಕೊನೆಯಾಗಲಿ.’ +ಹಿಮ ಕೂಡಲೆ ಅಸಹನೆಯಿಂದ ಎದ್ದು ನಿಂತು ಗಾಜಿನ ತೆರೆಗಳಿಂದಾಚಿಗಿನ ಆಕಾಶವನ್ನು ನೋಡತೊಡಗಿದಳು. ಅವಳ ಮುಖವನ್ನು ರಾಹು ಆವರಿಸಿದಂತಿತ್ತು. ನಿರಂಜನ ಅವಳ ಮಗ್ಗುಲಿಗೆ ಬಂದು ‘ಬಾ. ಕೆಳಗೊಂದು ಗಿಫ್ಟ್ ತಗೊಳ್ಳೋಣ.’ ಎಂದ. ಹಿಮ ಕೂಡಲೆ ಮುಖವರಳಿಸಿ ‘ನೀನು ನನಗೊಂದು ಲಿಪ್‌ಸ್ಟಿಕ್ ಬಯ್ ಮಾಡ್ತೀಯಾ?’ ಎಂದಳು. ಇಬ್ಬರೂ ನಿಧಾನವಾಗಿ ಮೆಟ್ಟಿಲಿಳಿದು ನೆಲ ಅಂತಸ್ತಿನಲ್ಲಿರುವ ಬೆಡಗಿನ ಆವರಣಕ್ಕೆ ಬಂದರು. ಹಿಮ ಕೆಲವಾರು ಲ್ಯಾಕ್ಮೆ, ರೆವ್‌ಲಾನ್‌ಗಳನ್ನು ಪರಿಶೀಲಿಸಿ ಒಂದನ್ನು ಆಯ್ದು ತುಟಿಗೆ ಮೆದ್ದಿ ನಿರಂಜನ ಅಭಿಪ್ರಾಯವನ್ನು ಕೇಳಿದಳು. ‘ಊoತಿ is iಣ?’ +ನಿರಂಜನನಿಗೆ ನಾಲ್ಕೈದು ವರುಷಗಳ ಹಿಂದಿನ ತುಟಿಯ ರಂಗಿನ ಆಪ್ತ ಸಂದರ್ಭವೊಂದರ ನೆನಪಾಗಿ ಕಣ್ಣುಗಳು ಮತ್ತೆ ತೊಯ್ದವು. ‘ಹಿಮಾ! ಈಗಿಂದ ನಾನು ನಿನ್ನ ಗಂಡನಲ್ಲ. ಮದುವೆಗೆ ಮೊದಲಿನ ಹಾಗೆ ಬಾಯ್‌ಫ್ರೆಂಡ್ ಸಹ ಅಲ್ಲ. . . ನನ್ನ ಒಪೀನಿಯನ್ ಏಕೆ ಹೇಳು? ಐeಣ us hಚಿve iಣ biಟಟeಜ’ ಕ್ಯಾಷ್ ಕೌಂಟರಿನಲ್ಲಿ ಆರುನೂರು ಚಿಲ್ಲರೆಗೆ ಕ್ರೆಡಿಟ್ ಕಾರ್ಡ್ ಉಜ್ಜಿಸಿ ರುಜುಮಾಡಿ ಇಬ್ಬರೂ ಆಚೆ ಬಂದು ಪಾರ್ಕ್ ಮಾಡಿದ್ದ ಬೊಲೇರೋ ಹಿಂಬದಿಯ ಮರೆಯಲ್ಲಿ ನಿಂತರು. ಹಿಮ ಮೆಲ್ಲನೆ ಅವನ ಮೊಣಕೈಯಲ್ಲಿನ ನವಿರಿನ ಹುಲುಸನ್ನು ತಡವಿದಳು. ಅವನ ಕೈ ಹಿಂಜರಿಯಲಿಲ್ಲ. ಅವನ ಅದೇ ಕೈ ಅಷ್ಟೇ ಮೆಲ್ಲನೆ ಅವಳ ನಡುವನ್ನು ಬಳಸಿತು. ಒಂದು ಹಿತವಾದ ಅಪ್ಪುಗೆ. ಎಷ್ಟೋ ದಿನಗಳ ಹಿಂದೆ ಸ್ವಕೀಯ ಭ್ರಮೆಗಳಲ್ಲಿ ಮರೆಯಾಗಿದ್ದ ಪುಳಕದ ಮಧುರ ಸ್ಪಂದನವೊಂದು ಮತ್ತೆ ಮೈದಳೆಯಿತು. ಇಬ್ಬರೂ ಮುಂದುವರೆಯುವ ಮುನ್ನ ನಿರಂಜನ, ‘ಬೇಡ ಹಿಮಾ. . . ಮತ್ತೆ ನಾವು ಹೊಸ ಭರವಸೆಗಳನ್ನು ಹುಟ್ಟಿಸಿಕೊಳ್ಳುವುದು ಬೇಡ.’ ಅಂತಂದರೂ ಅವಳ ಬೆನ್ನು ತಡವುತ್ತ ಕಿವಿಯಲ್ಲಿ ಉಸುರಿದ. ‘Weಡಿe ಥಿou eveಡಿ iಟಿ ಟove ತಿiಣh me, ಊimಚಿ?’ +ಹಿಮ ಕೊಂಚ ಹಿಂದೆ ಸರಿದು ಮೆಲುವಾಗಿ ದನಿದಳು. ‘I ತಿಚಿs ಚಿಟತಿಚಿಥಿs iಟಿ ಟove ತಿiಣh ಥಿou, ಓiಡಿi. ಇveಟಿ ಚಿಣ seveಟಿಣಥಿ. . . ಚಿಣ ಣhe ಟಚಿsಣ sಣಚಿges oಜಿ mಥಿ ಟiಜಿe I shಚಿಟಟ be iಟಿ ಟove ತಿiಣh ಥಿou. ಕೊನೆ ತನಕ ನಿನ್ನ ಪ್ರೀತಿಸ್ತೀನಿ!!’ ಅವಳ ಕಣ್ಣಿನಿಂದ ಕೆಲವು ಹನಿಗಳು ಅವನ ಭುಜವನ್ನು ಒದ್ದೆ ಮಾಡಿದವು. ಮತ್ತೆ ಒಮ್ಮೆಲೆ ಅವಳು ಹಿಂಜರಿದು ಅವಾಂತರದಿಂದ ಹೇಳಿದಳು. ‘ಹೊರಡುತ್ತೀನಿ. ಟೈಂ ಆಯಿತು.’ ನಿರಂಜನ ಮುಂದಕ್ಕೆ ಏನು ಹೇಳಲಾಗದೆ ಮೂಕನಾದ. ಅವನು ಮನಸ್ಸಿನಲ್ಲಿಯೆ ಮಾತು ಜೋಡಿಸುವಷ್ಟರಲ್ಲಿ ಹಾದಿ ಮಗ್ಗುಲಿಗೆ ಹರಿಯುತ್ತಿದ್ದ ಆಟೋವೊಂದನ್ನು ನಿಲ್ಲಿಸಿ ನಟ್ಟಿರುಳಿನ ಗಡಿ ದಾಟಿದ ಸಿಂಡರೆಲಾಳ ಗಡುವು ಹೊತ್ತವಳಂತೆ ಗಡಿಬಿಡಿಯಲ್ಲಿ ಕುಳಿತು ಲವ್ ಯೂ ಎಂದು ಮತ್ತೆ ಹೇಳಿ ಬೀಳ್ಕೊಂಡಳು. ಸರ್ಕಲ್ಲನ್ನು ಸುತ್ತಿ ಬಲಕ್ಕೆ ತಿರುಗುವವರೆಗೂ ನಿರಂಜನನ ದೃಷ್ಟಿ ರಿಕ್ಷಾದ ಬಡರುಬಡರಿನ ಭರದ ಬೆನ್ನು ಹತ್ತಿತ್ತು. +ನಿರಂಜನ ಡಾಮರು ಉಜ್ಜುವ ಚರಚರ ಚರಾಚರಗಳ ನಡುವೆ ಅಲ್ಲೇ ಕೆಲಕಾಲ ಸ್ತಬ್ದನಾದ. ಎಷ್ಟೋ ಹೊತ್ತು ಅಲ್ಲೇ ನಿಂತವನು ಹಬ್ಬದ ಪ್ರಯುಕ್ತದ ಸೋಡಿ ಮಾರಾಟಕ್ಕೆಂದು ದಟ್ಟಯಿಸಿದ್ದ ಸಂದಣಿಯಲ್ಲಿ ಒಂಟಿಯೆನಿಸಿದ. ಸುಮಾರು ಅರೆತಾಸು ಕಳೆದಿರಬೇಕು, ಸುತ್ತಲೂ ಇದ್ದ ಹಲವರ ಮಾತುಗಳ ನಡುವಿನ ಅವನ ಅನಿರ್ವಚನೀಯವನ್ನು ಸೀಳುವಂತೆ ಪ್ರಣತಿಯ ಕರೆ ರಿಂಗುಣಿಸಿತು. +***** +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […] +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_39.txt b/Kannada Sahitya/article_39.txt new file mode 100644 index 0000000000000000000000000000000000000000..fbb6288f4d0959906b28a5d4144751df8136c032 --- /dev/null +++ b/Kannada Sahitya/article_39.txt @@ -0,0 +1,172 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅರ್ಪಣೆ +ಪ್ರಿಯ ಮಿತ್ರರಾದ +ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ +ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, ಇರುವಿಕೆ. ೩. ಕಾಲಕೃತವಾದ ಪರಿಣಾಮ; ಈ ಅವಸ್ಥೆಯು (ಭಾವ ವಿಕಾರವು) ’ಜಾಯತೇ, ಅಸ್ತಿ, ವರ್ಧತೇ, ವಿಪರಿಣಮತೇ, ಅಪಕ್ಷೀಯತೇ, ನಶ್ಯತಿ’ ಎಂದು ಆರು ವಿಧವೆಂಬ ಯಾಸ್ಕರ ಅಭಿಪ್ರಾಯ. “ಅವಿದ್ಯಾಸ್ಮಿತಾ ರಾಗದ್ವೇಷಾಭಿನಿವೇಶಾಃ” ಎಂದು ಐದು ವಿಧವೆಂದು ಯೋಗಶಾಸ್ತ್ರದಲ್ಲಿ ಉಕ್ತವಾಗಿರುವುದು. ’ಅನಾಗತಾವಸ್ಥಾ, ಅಭಿವ್ಯಕ್ತಾವಸ್ಥಾ, ಅತಿರೋಹಿತಾವಸ್ಥಾ’ ಹೀಗೆ ಮೂರು ವಿಧವೆಂದು ಸಾಂಖ್ಯರ ಅಭಿಪ್ರಾಯ. +* +* +* +ಅವಸ್ಥೆ +ಇನ್ನೂ ಐವತ್ತು ತುಂಬುವುದಕ್ಕೆ ಮುಂಚೆಯೇ ಅವನು ಸಾಯುತ್ತಾ ಮಲಗಿದ್ದಾನೆ. ಸಾವಿನ ಜೊತೆ ಹೋರಾಡುತ್ತಾ ಅವನು ನೆನಪು ಮಾಡಿಕೊಂಡು ಹೇಳುವ ಕೆಲವು ಘಟನೆಗಳಿಂದ ಅವನ ಮನಸ್ಥಿತಿ ಊಹಿಸಬಹುದು. ಹುಡುಗಾಟಿಕೇಲಿ ಕೃಷ್ಣಪ್ಪಗೌಡ ಬಹಳ ಒಳ್ಳೆ ಈಜುಗಾರ. ನದಿ ತುಂಬಿ ಹರೀತಿದ್ದಾಗ ಒಂದು ದಂಡೆಯಿಂದ ಧುಮುಕಿ ಇನ್ನೊಂದು ದಡ ಸೇರತ ಇದ್ದ. ಅವನು ಒಮ್ಮೆ ಹೀಗೆ ಈಜು ಬಿದ್ದಾಗ – ಇನ್ನೇನು ಅರ್ಧ ಹೊಳೆ ದಾಟಿಯಾಗಿದೆ, ಅವನ ಜೊತೆ ಈಜು ಬಿದ್ದ ಗೆಳೆಯ ಒಂದು ಮಾರು ಹಿಂದಿದಾನೆ – ಕೃಷ್ಣಪ್ಪಗೌಡನ ಕೈ ಬತ್ತಿ ಬಂತಂತೆ. ಮುಂದು ಹೋಗಲಿಕ್ಕೆ ಆಗ್ಲಿಲ್ಲಂತೆ. “ಮಾರಾಯ ನಾನು ಮುಳುಗ್ತಿದೀನಿ. ನೀನು ಹೋಗಯ್ಯ” ಅಂತ ಅವಸರ ಅವಸರವಾಗಿ ಕೂಗಿಕೊಂಡು ಮುಳುಗೇ ಬಿಟ್ಟನಂತೆ. ಅವನ ಗೆಳೆಯ -ಹನುಮನಾಯ್ಕನೆಂದು ಅವನ ಹೆಸರು- ಸಾಹಸ ಮಾಡಿ ಉಳಿಸಿದನಂತೆ. ಆದರೆ ಒಂದು ಕ್ಷಣ ತಾನು ಸತ್ತೇ ಸಾಯ್ತೀನಿ ಅನ್ನಿಸಿದಾಗ ತನ್ನ ಮನಸ್ಸು ನಿರ್ವಿಕಾರವಾಗಿತ್ತಲ್ಲ ಅದನ್ನು ಕೃಷ್ಣಪ್ಪ ನೆನೆಸಿಕೊಳ್ಳುವಾಗ ಪಾರ್ಶ್ವವಾಯು ಬಡಿದು ಮಲಗಿದವನ ಎರಡು ದೊಡ್ಡ ಕಣ್ಣುಗಳಲ್ಲೂ ನೀರು ತುಂಬುವುದುಂಟು. +ಕೃಷ್ಣಪ್ಪ ಕಡುಕೋಪಿ ಬೇರೆ. ಹೈಸ್ಕೂಲು ಓದುತ್ತ ಇದ್ದಾಗ ತನ್ನ ಸ್ನೇಹಿತನೊಬ್ಬನ ರಿಪೇರಿಗೆ ಕೊಟ್ಟ ವಾಚು ತರೋಕ್ಕೆ ಅಂತ ಅಂಗಡಿಗೆ ಹೋದ. ಅಂಗಡಿಯವನಿಗೂ ಈತ ಗೊತ್ತು. ಚೆನ್ನಾಗಿಯೇ ಗೊತ್ತು. ಆದರೆ ಬಡವನಾಗಿದ್ದ ಈ ಕೃಷ್ಣಪ್ಪನ ಒಡಾಟದ ಗತ್ತು ಕಂಡರೆ ಈ ಅಂಗಡಿಯವನಿಗೆ ಅಸೂಯೆ. “ನಿಮ್ಮನ್ನು ನಂಬಿ ಹೇಗೆ ಕೊಡೋಕೆ ಸಾಧ್ಯರೀ ವಾಚನ್ನು?” ಎಂದನಂತೆ ಒಂದು ಕಣ್ಣಿಗೆ ಭೂತ ಕನ್ನಡಿಯ ಗಾಜನ್ನು ಸಿಕ್ಕಿಸಿಕೊಂಡು – ವಕ್ರವಾಗಿ ನೋಡುತ್ತ. “ರೀ ನಿಮ್ಮ ಈ ಗಾಜಿನ ಗೂಡನ್ನು ಪುಡಿಪುಡಿ ಮಾಡಿಬಿಡ್ತೇನೆ ಇನ್ನೊಂದು ಸಾರಿ ನೀವು ಹಾಗೆ ಅಂದರೆ” ಅಂದನಂತೆ ಕೃಷ್ಣಪ್ಪ. “ಬಡವನ ಸಿಟ್ಟು ದವಡೆಗೆ ಮೂಲ” ಅಂದನಂತೆ ಅಂಗಡಿಯವನು – ಚಿಮಟದಿಂದ ಏನೋ ಕೆದಕುತ್ತ. ಹಾಗಂದಿದ್ದೇ ರಿಪೇರಿ ಸಲಕರಣೆಗಳನ್ನೂ ಬಿಚ್ಚಿದ ವಾಚುಗಳನ್ನೂ ಇಟ್ಟಿದ್ದ ಗಾಜಿನ ಗೂಡನ್ನು ಎತ್ತಿ ಕೃಷ್ಣಪ್ಪ ಫಳ್ ಅಂತ ನೆಲಕ್ಕೆ ಒಗೆದು ನಡೆದುಬಿಟ್ಟನಂತೆ. ಅವನ ಕೋಪ ಕಂಡಾಗ ಎಂಥವರಾದರೂ ನಡುಗಿಬಿಡ್ತ ಇದ್ದರು. +ಇಂಥ ದೂರ್ವಾಸ ಮುನಿ ಕೈಕಾಲು ಎತ್ತಲಿಕ್ಕೆ ಆಗದೆ ಮಲಗಿರೋದನ್ನು ನೋಡೋಕೆ ಕಷ್ಟ ಆಗಿತ್ತು. ಈಗ ಕೋಪ ಬಂದರೆ ಅವನ ತುಟಿಗಳು ನಡುಗಿ, ಮೂಗಿನ ಸೊಳ್ಳೆ ಹಿಗ್ಗಿ, ಕಣ್ಣುಗಳಲ್ಲಿ ನೀರು ತುಂಬುವುದು -ಅಷ್ಟೆ. +ಅಥವಾ ಮಲಗಿದಲ್ಲಿಂದಲೇ ಕೋಲನ್ನೆತ್ತಿ ಹೆಂಡತಿಯನ್ನು ಜಪ್ಪಲು ಪ್ರಯತ್ನಿಸುತ್ತಾನೆ. ಖಾಹಿಲೆ ಹಿಡಿದ ಗಂಡನ ಶುಶ್ರೂಷೆ ಇತ್ತ. ಅತ್ತ ಬ್ಯಾಂಕಿನಲ್ಲಿ ಗುಮಾಸ್ತೆ ಕೆಲಸ, ಈ ನಡುವೆ ವರಾತ ಹಿಡಿದು ಮೂಲೆಯಲ್ಲಿ ಸಿಂಬಳ ಸುರಿಸುತ್ತ ಕೂತ ಐದು ವರ್ಷದ ಮಗಳು -ಇವೆಲ್ಲ ಕೂಡಿಕೊಂಡು ಹೆಂಡತಿ ಹುಚ್ಚಾಗುವಳು. ಅವಳ ಕೂದಲು ಯಾವಾಗಲೂ ಕೆದರಿರುವುದು. “ನಿಮ್ಮ ಒಣಗರ್ವಕ್ಕಷ್ಟು ಬೆಂಕಿ ಹಾಕ” ಎಂದು ಗಂಡನ ಮೇಲೆ ಗೊಣಗುತ್ತ ಅವಳು ಒಮ್ಮೆ ತನ್ನ ಮಗಳ ತುಟಿ ಹರಿದು ರಕ್ತ ಸೋರುವಷ್ಟು ಬಿರುಸಾಗಿ ಅವಳ ಮೂತಿಯನ್ನು ಹಿಂಡಿದ್ದುಂಟು. +ಇಷ್ಟೊಂದು ರಂಪದಲ್ಲೂ ಕೃಷ್ಣಪ್ಪನ ಮನಸ್ಸು ನಿರ್ವಿಕಾರವಾಗಿ ಬಿಡುವುದೂ ಇಲ್ಲವೆಂದಲ್ಲ. ಅವನ ಜೀವನಚರಿತ್ರೆ ಬರೆಯಲೆಂದು ನಿತ್ಯ ಬರುತ್ತಿದ್ದ ಭೋಳೆ ಸ್ವಭಾವದ ನಾಗೇಶನಿಗೆ ಕೃಷ್ಣಪ್ಪ ತನ್ನ ಹಿಂದಿನ ಕಥೆ ಹೇಳಲು ಶುರು ಮಾಡುವ. ತನ್ನ ಸದ್ಯದ ಸ್ಥಿತಿಯನ್ನು ಅರಿಯುವುದಕ್ಕಾಗಿ ಅವನು ಹೇಳಿಕೊಳ್ಳುತ್ತಿದ್ದುದರ ಆಳ ಅಗಲ ಎಳೆಯನಾದ ನಾಗೇಶನಿಗೆ ತಿಳಿಯುತ್ತಿತ್ತೋ ಇಲ್ಲವೋ ಎಂಬುದು ಕೃಷ್ಣಪ್ಪನನ್ನೇನೂ ಬಾಧಿಸಿದಂತೆ ಕಾಣುವುದಿಲ್ಲ. +ಬಾಲಕನಾಗಿದ್ದಾಗ ಕೃಷ್ಣಪ್ಪನಿಗೆ ದನ ಕಾಯುವ ಕೆಲಸ. ಕಂಬಳಿಕೊಪ್ಪೆ ಹಾಕಿಕೊಂಡು ಕೈಯಲ್ಲೊಂದು ಕತ್ತಿ ಕೊಳಲು ಹಿಡಿದು ತನ್ನ ಹಳ್ಳಿಯ ದನಗಳನ್ನೆಲ್ಲಾ ಮೇಯಿಸಿಕೊಂಡು ಬರುತ್ತಿದ್ದ ಕತೆಯನ್ನವನು ಅದರಲ್ಲೇನೋ ತನಗೆ ಮಾತ್ರ ತಿಳಿಯುವ ಅರ್ಥಗಳು ತುಂಬಿವೆ ಎನ್ನುವಂತೆ ಹೇಳುವುದು. ಸಾಯುತ್ತಿರುವ ಅವನಿಗೆ ತನ್ನ ಹಿಂದಿನ ಬದುಕಿನಲ್ಲಿ ಆಗೀಗ ದಿವ್ಯವಾದದ್ದು ಪ್ರವೇಶಿಸಿದ್ದಿದೆ ಎಂದು ಈಗ ಅನ್ನಿಸುವುದು ವಸ್ತುನಿಷ್ಠಸತ್ಯವೋ, ಅಥವಾ ಅಂಥ ನಂಬಿಕೆ ಸದ್ಯದ ಕ್ಷುದ್ರದೆಸೆಯನ್ನು ಗೆಲ್ಲಲು ಅಗತ್ಯವೋ ಹೇಗೆ ಹೇಳುವುದು? ವೈಚಾರಿಕವಾಗಿ ಕೃಷ್ಣಪ್ಪ ನಿರೀಶ್ವರವಾದಿ; ಜೊತೆಗೇ, ಕಬೀರ, ಅಲ್ಲಮ, ನಾನಕ, ಮೀರ, ಪರಮಹಂಸ ಇತ್ಯಾದಿ ದೈವಿಕ ತಲೆತಿರುಕರನ್ನು ಮೆಚ್ಚುಗೆ ಹಾಸ್ಯ ಅನುಮಾನಗಳಿಂದ ಅವರೆಲ್ಲ ತನಗೆ ಪರಮ ಆಪ್ತರೆಂಬಂತೆ ಕಿಚಾಯಿಸುವವನು -ಆದ್ದರಿಂದ ಅವನ ಒಟ್ಟು ನಿಲುವೇನು ಎಂದು ಹೇಳುವುದು ಕಷ್ಟದ ವಿಷಯವೇ. ಹುಡುಗಾಟಿಕೆಯಲ್ಲಿ ಬೆಳಗಿನ ಜಾವ ಮನೆಮನೆಯ ಎದುರು ನಿಂತು ದನಕರುಗಳನ್ನು ಬಿಡಿಸಿಕೊಂಡು, ಗುಡ್ಡ ಹೊಳೆ ಬಯಲುಗಳಲ್ಲಿ ಅವುಗಳನ್ನು ಮೇಯಿಸುತ್ತ ಓಡಾಡಿಸಿಕೊಂಡಿದ್ದು, ಸಂಜೆ ಹಿಂದಕ್ಕೆ ಹೊಡೆದುಕೊಂಡು ಬರುವುದು. ಮರದ ಕೆಳಗೆ ಕೂತು ಆಲಸ್ಯದ ಕಣ್ಣುಗಳಲ್ಲಿ ಮೇಯುವ ದನಗಳನ್ನು ಗಮನಿಸುತ್ತ, ಕೊಳಲಿನಲ್ಲಿ ತನ್ನ ಮನಸ್ಸಿನ ಲಹರಿಯನ್ನು ನುಡಿಸುತ್ತ ತಾನೇನು ಯೋಚಿಸುತ್ತಿದ್ದೆ ಆಗ ಎಂಬುದನ್ನವನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುವಾಗ ಒಂದು ಮುಖ್ಯ ಘಟನೆ ಅವನ ಕಣ್ಣೆದುರು ನಿಲ್ಲುತ್ತದೆ. ಅದನ್ನು ಹೇಳುವ ಮುಂಚೆ ಇದ್ದಕ್ಕಿದ್ದಂತೆ ಅವನು “ಮಾರಾಯರೆ -ಆಗ ನಾನೇನೊ ಸುಖವಾಗಿದ್ದೇಂತ ತಿಳೀಬೇಡಿ -ಗದ್ದೇಲಿ ಹಸಿರು ಕಾಣಿಸ್ತು ಅಂದರೆ ನನ್ನ ಕಥೆ ಮುಗೀತು ಅಂತ ತಿಳಿಕೊಳ್ಳಿ. ದನಕರುಗಳು ಹುಚ್ಚೆದ್ದು, ಬೇಲಿ ಗೀಲಿ ಕಿತ್ತು ನುಗ್ಗಿ ಬಿಡ್ತಿದ್ದುವು ಗದ್ದೆಗೆ. ನಾನೊಬ್ಬನೆ ತಲೆ ಕೆಟ್ಟವನ ಹಾಗೆ ಅವುಗಳನ್ನು ಅಟ್ಟುತ್ತ ಕೊನೆಗೆ ಕೈಸಾಗದೆ ಕೂತುಬಿಡ್ತಿದ್ದೆ -’ಧೋ’ ಎಂಬ ಮಳೆಯಲ್ಲಿ – ಮಂಕು ಬಡಿದವನ ಹಾಗೆ. ಬೀಳ್ತಿತ್ತು ನೋಡಿ ಆಗ ಬೆನ್ನ ಮೇಲೆ” -ಹೇಳುತ್ತ ಕೃಷ್ಣಪ್ಪ ನಗುತ್ತಾನೆ ಈಗ. ಕಣ್ಣುಗಳಲ್ಲಿ ಆಗಿನ ದಿಗಿಲನ್ನೂ ಬೀಳುತ್ತಿದ್ದ ಪೆಟ್ಟುಗಳ ನೋವನ್ನೂ ನಟಿಸಿ ತೋರಿಸುತ್ತಾನೆ. ಇದನ್ನು ನೆನೆಸುತ್ತಿದ್ದಂತೆ ದನ ಕಾಯುವುದರಿಂದ ತನ್ನನ್ನು ಪಾರುಮಾಡಿದ ಮಹೇಶ್ವರಯ್ಯ ಅವನಿಗೆ ನೆನಪಾಗುತ್ತಾರೆ. +ಮಹೇಶ್ವರಯ್ಯ ಯಾರೋ ಎತ್ತ ಕಡೆಯವರೋ ತಿಳಿಯದು. ಯಾವುದೋ ಊರಿಗೆ ಬರುತ್ತಾರೆ ಅನ್ನಿ. ಮನೆ ಗಿನೆ ಓರಣ ಮಾಡಿಕೋತಾರೆ. ಇರುವುದು ಒಬ್ಬರೇ ಆದರೂ ಅಡಿಗೆಯವನನ್ನು ಇಟ್ಟುಕೊಳ್ಳುತ್ತಾರೆ. ತನ್ನ ಬಟ್ಟೆ ಮಾತ್ರ ತಾನೇ ಒಗೆದು ಕೊಳ್ಳುತ್ತಾರೆ. ಅವರ ಬಾಯಿಂದ ಕಾಳಿದಾಸನ ಸಂಸ್ಕೃತ ಕೇಳಬೇಕು. ಹಿಂದುಸ್ತಾನಿ ಗಾಯನ ಕೇಳಬೇಕು -ದೊಡ್ಡ ರಸಿಕ. ತಾಂಬೂಲದಿಂದ ಕೆಂಪಾದ ಅವರ ತುಟಿಗಳ ಮೇಲಿನ ಗಿರಿಜಾ ಮೀಸೆ, ಅವರ ಕಿವಿಯಲ್ಲಿನ ಹೊಳೆಯುವ ವಜ್ರದ ಒಂಟಿಗಳು, ಅವರ ಮುಚ್ಚುಕೋಟು, ಶುಭ್ರವಾದ ಕಚ್ಚೆ ಹಾಕಿದ ಪಂಚೆ, ಅವರು ಹಿಡಿದ ಬೆಳ್ಳಿ ಕಟ್ಟಿದ ಬೆತ್ತ, ಅವರ ಕಣ್ಣಿನ ಪ್ರಶಾಂತ ಭಾವ -ಇತ್ಯಾದಿಗಳನ್ನು ವಿವರಿಸುತ್ತಿದ್ದಂತೆಯೇ ಅವರು ದೊಡ್ಡ ವಿರಾಗಿಗಳು ಎಂದೂ ಕೃಷ್ಣಪ್ಪ ಹೇಳುತ್ತಾನೆ. ಅವರು ಸ್ಪಷ್ಟ ಹೇಳಿಕೊಂಡಿರದಿದ್ದರೂ ಕೃಷ್ಣಪ್ಪನ ಊಹೆ ಅವರ ಹೆಂಡತಿ ಯಾರನ್ನೋ ಇಟ್ಟುಕೊಂಡಿದ್ದು ತಿಳಿದು ಮಹೇಶ್ವರಯ್ಯ ಮನೆ ಬಿಟ್ಟದ್ದು ಎಂದು. ಲಕ್ಷಾಧೀಶ ಮನುಷ್ಯ -ಹೆಂಡತಿಗಷ್ಟು ಆಸ್ತಿ ಬಿಟ್ಟು ಉಳಿದ ಹಣ ಬ್ಯಾಂಕಲ್ಲಿಟ್ಟು ಹೀಗೆ ನಿವೃತ್ತರಾಗಿ ಊರೂರು ಅಲೆಯುತ್ತಿದ್ದರು. ಯಾವಾಗಲೂ ಓದುತ್ತಿರುತ್ತಿದ್ದರು. ಆತ ತ್ರಿಕಾಲಜ್ಞಾನಿಯೆಂದು ಕೃಷ್ಣಪ್ಪನ ನಂಬಿಕೆ. ಮಹೇಶ್ವರಯ್ಯ ಎಲ್ಲಾದರೂ ಬಂದರು ಎನ್ನಿ. ಬಂದು ಕೂತವರು ಇದಕ್ಕಿದ್ದಂತೆ “ಭೋ” ಎನ್ನುವುದುಂಟು. ಆಗ ಅವರ ಮುಖದಲ್ಲಿ ಕಳವಳ ಕಾಣಿಸಿಕೊಳ್ಳುತ್ತದೆ. ಅವರನ್ನು ಕರೆದವರು ಎಷ್ಟು ಒತ್ತಾಯ ಮಾಡಿದರೂ ಹೇಳುವುದಿಲ್ಲ. ಮುಂದಾಗಿರುವ ಅನಿಷ್ಟ ಅವರಿಗೆ ಗೊತ್ತಾಗಿರುತ್ತದೆ. ಅದನ್ನು ಆಮೇಲೆ ಕಿವಿಯಲ್ಲಿ ಕೃಷ್ಣಪ್ಪನಿಗೆ ಹೇಳುತ್ತಿದ್ದರು. ಅವರನ್ನು ಕಂಡರೆ ಎಲ್ಲಿ ಅವರು “ಭೋ” ಎಂದುಬಿಡುವರೋ ಎಂದು ಜನ ಹೆದರುತ್ತಿದ್ದರು. ಹಾಗೆ ಅನ್ನದೆ ಕೂಡ ಅವರು ಇರಲಾರರು. ಆದ್ದರಿಂದಲೇ ಬನ್ನಿ ಎಂದರೆ ಮಹೇಶ್ವರಯ್ಯ “ಆ ಗೃಹಸ್ಥನಿಗೆ ಏನು ಅನಿಷ್ಟ ಕಾದಿದೆಯೋ ಗೊತ್ತಿಲ್ಲಯ್ಯ -ಆದ್ದರಿಂದ ನಾನು ಅವನ ಮನೆಗೆ ಬರಲ್ಲ” ಎಂದು ಬಿಡುತ್ತಿದ್ದರು. +ಮುಂದಿನ ಅನಿಷ್ಟ ಕಂಡು ’ಭೋ’ ಅನ್ನುತ್ತಿದ್ದ ಮಹೇಶ್ವರಯ್ಯನ ದುರಂತವೆಂದರೆ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದು ಕಾಣಿಸುತ್ತಿದ್ದುದೇ ತೀರ ಅಪರೂಪ. ಕೃಷ್ಣಪ್ಪನ ಬಗ್ಗೆ ಮಾತ್ರ ಅವರು ಒಮ್ಮೆ ಒಳ್ಳೆಯದನ್ನು ಕಂಡದ್ದುಂಟು. ಅದು ನಡೆದದ್ದು ಹೀಗೆ: +ಕೊಳಕು ಚೆಡ್ಡಿ ಬನೀನು ಹಾಕಿಕೊಂಡು ಹೊಳೆದಂಡೆಯ ಅಶ್ವತ್ಥಮರದ ಕೆಳಗೆ ಕೃಷ್ಣಪ್ಪ ಕೂತಿದ್ದ. ಕೊಯಿಲು ಮುಗಿದಿದ್ದರಿಂದ ಅವನಿಗೆ ದನಗಳು ಗದ್ದೆಗೆ ನುಗ್ಗುವ ಭಯವಿರಲಿಲ್ಲ. ನದಿಯ ಝಳಝಳ ಶಬ್ದ, ದನಗಳ ಕೊರಳಿನ ಗಂಟೆ ಇವುಗಳು ಕಿವಿಯ ಮೇಲೆ ಬೀಳುತ್ತಲಿದ್ದಾಗ ಕೃಷ್ಣಪ್ಪನಿಗೆ ಖುಷಿಯಾಗಿರಬೇಕು. ಎಂದಿಗಿಂತ ಹೆಚ್ಚು ಖುಷಿಯಾಗಿರಬೇಕು. ಕೊಳಲನ್ನೂದುವ ಬದಲು ಕುಮಾರವ್ಯಾಸ ಭಾರತ ಹಾಡಬೇಕೆನ್ನಿಸಿತು. ನಾಲ್ಕು ವರ್ಷ ಸ್ಕೂಲಿಗೆ ಹೋಗಿದ್ದ ಕೃಷ್ಣಪ್ಪ ಭಾರತವನ್ನು ಓದಿ ಕಲಿತದ್ದಲ್ಲ; ಅವನ ಮಾಸ್ತರರಾಗಿದ್ದ ಜೋಯಿಸರು ಓದುವುದನ್ನು ಆಗೀಗ ಕೇಳಿ ಕಲಿತದ್ದು. ಭಾವವಶವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದ. ಅವನ ಹಳ್ಳಿಯ ಹತ್ತಿರದ ಪೇಟೆಯೊಂದರಲ್ಲಿ ಆಗ ಬೀಡು ಬಿಟ್ಟಿದ್ದ ಮಹೇಶ್ವರಯ್ಯ ತಮ್ಮ ಕೋಟನ್ನು ಒಗೆಯುತ್ತ ನದಿಯಲ್ಲಿದ್ದರು. ಅವರು ಅಲ್ಲಿಗೇ ಯಾಕೆ ಒಗೆಯಲು ಬಂದಿದ್ದರೆಂಬುದೂ ಆಶ್ಚರ್ಯ. ಅವತ್ತು ಬೆಳಿಗ್ಗೆ ಅವರು ಪೇಟೆಯಲ್ಲಿ ನಡೆಯುತ್ತಿದ್ದಾಗ ಅರೆಹುಚ್ಚನಾಗಿದ್ದ ನಿವೃತ್ತ ಶಾಲಾ ಮಾಸ್ತರನೊಬ್ಬ ಅವರನ್ನು ನಿಲ್ಲಿಸಿದನಂತೆ. ಕೋಟನ್ನು ಬೇಡಿದನಂತೆ. “ಕೊಡ್ತೀನಿ ಮಾರಾಯರೆ. ಆದರೆ ತೊಟ್ಟಿದ್ದಲ್ಲವೆ? ಒಗೀಬೇಕು” ಎಂದು ಸೋಪುಕೊಂಡು ಹಾಗೇ ನಡೆಯುತ್ತ ಈ ಹೊಳೆಯ ಈ ದಂಡೆಗೆ ಬಂದಿದ್ದರಂತೆ. ಎರಡು ಮೈಲಿಯಾದರೂ ಆಗತ್ತೆ ಪೇಟೆಗೂ, ಈ ನದಿಗೂ. +ಮಹೇಶ್ವರಯ್ಯ ಹಾಡುತ್ತಿದ್ದ ಹುಡುಗನ ಎದುರು ನಿಂತು ’ಭೋ’ ಎಂದರು. ಕೃಷ್ಣಪ್ಪ ನಾಚಿಕೆಯಿಂದ ಹಾಡು ನಿಲ್ಲಿಸಿದ. ಎತ್ತಲೋ ದೂರ ನೋಡುತ್ತ, ಕೈಯಲ್ಲಿ ನೀರು ಸೋರುತ್ತಿದ್ದ ಕೋಟು ಹಿಡಿದ ಮಹೇಶ್ವರಯ್ಯ “ಏ ಹುಡುಗ ದನಗಳನ್ನು ಕಟ್ಟಿ ಹಾಕಿದ ಮೇಲೆ ಸಾಯಂಕಾಲ ಇಲ್ಲಿ ಬಂದು ನನಗೆ ಕಾದಿರು” ಎಂದು ಕೋಟನ್ನು ಹಿಂಡಿ ಅಲ್ಲಿಂದ ಹೊರಟುಹೋದರು. ತಾನು ಕೂತಿದ್ದು ಅಶ್ವತ್ಥಮರದ ಬುಡದಲ್ಲಿ; ಎದುರಿಗಿದ್ದ ಪೇರಳೆ ಮರದಲ್ಲಿ ಎರಡು ಪಂಚವರ್ಣದ ಗಿಳಿಗಳಿದ್ದವು ಎಂದು ಕೃಷ್ಣಪ್ಪ ನೆನಪು ಮಾಡಿಕೊಳ್ಳುತ್ತಾನೆ. ಆ ಮರದ ಮೇಲೆ ಅಪರೂಪದ ಬಣ್ಣದ ಹಕ್ಕಿಯೊಂದನ್ನು ತಾನು ಕಂಡದ್ದುಂಟು ಎಂದು ಹೇಳುತ್ತಾನೆ. +ಸಾಯಂಕಾಲ ಕೃಷ್ಣಪ್ಪ ಕಾದ. ಕೋಲು ಬೀಸಿಕೊಂಡು ಬಂದ ಮಹೇಶ್ವರಯ್ಯ “ಅಯ್ಯೋ ಪೆದ್ದು ಹುಡುಗ, ನೀನು ಯಾರೆಂದು ನಿನಗೆ ಇಷ್ಟು ದಿನವೂ ತಿಳಿಯದೆ ಹೋಯಿತೆ? ಬಾ ನನ್ನ ಹಿಂದೆ” ಎಂದು ಸೀದ ಕೃಷ್ಣಪ್ಪನ ಮನೆಗೆ ಹೋದರು. ಕೃಷ್ಣಪ್ಪನಿಗೆ ತಂದೆಯಿಲ್ಲ, ತಾಯಿ ಅವಳ ಅಣ್ಣನ ಮನೆಯಲ್ಲಿ ಅಣ್ಣನ ಹೆಂಡತಿಯಿಂದ ಮೂದಲಿಸಿಕೊಳ್ಳುತ್ತ ಪ್ರತಿನಿತ್ಯ ಕಡುಬಿಗೆ ತಿರುವುತ್ತ, ದನಕರುವಿಗೆ ಮುರ ಬೇಯಿಸುತ್ತ, ಗೊಬ್ಬರಕ್ಕೆ ಸೊಪ್ಪು ತಂದು ಹಾಕುತ್ತ ಬದುಕುವುದು. ಕೈಯಲ್ಲಿ ಉಂಗುರ, ಹರಳಿನ ಒಂಟಿ, ಬೆಳ್ಳಿ ಕಟ್ಟಿದ ಬೆತ್ತ -ಇವುಗಳನ್ನು ಕಂಡೇ ಕೃಷ್ಣಪ್ಪನ ಮಾವ ದಂಗು ಬಡಿದು ನಿಂತ. ಮಹೇಶ್ವರಯ್ಯ ಬೈದರು. “ಎಂಥ ಮುಟ್ಠಾಳ ಜನ ನೀವು. ಮನೆಯಲ್ಲಿರುವ ಮಾಣಿಕ್ಯ ನಿಮ್ಮ ಕಣ್ಣಿಗೆ ಬೀಳದೆ ಹೋಯಿತಲ್ಲ” ಎಂದು ಅವರಿಗೆ ದುಡ್ಡು ಕೊಟ್ಟು, ಗದರಿಸಿ, ಕೃಷ್ಣಪ್ಪನನ್ನು ಹತ್ತು ಮೈಲಿಯಾಚೆಯ ಊರಲ್ಲಿದ್ದ ಹಾಸ್ಟೆಲಲ್ಲಿ ಬಿಟ್ಟು ಸ್ಕೂಲು ಸೇರಿಸಿದರು. ಹಣದ ವ್ಯವಸ್ಥೆ ಮಾಡಿ ಕಣ್ಮರೆಯಾದರು. ವರ್ಷಕ್ಕೊಮ್ಮೆ ಬಂದು ನೋಡುತ್ತಿದ್ದರು. ಕೃಷ್ಣಪ್ಪ ಹೀಗೆ ಬಿ‌ಎ ತನಕ ಓದಿದ್ದು. ತನಗೆ ಸಲಿಗೆ ಬೆಳೆದ ಮೇಲೂ ಮಹೇಶ್ವರಯ್ಯ ಆಶ್ಚರ್ಯಕರ ವ್ಯಕ್ತಿಯಾಗಿ ಉಳಿದಿದ್ದರು ಎಂದು ಹಿಂದಿನದನ್ನು ನೆನಪಿಸಿಕೊಳ್ಳುತ್ತಿದ್ದ ಕೃಷ್ಣಪ್ಪ. “ನನಗೆ ಕಷ್ಟ ಬಂದಾಗಲೆಲ್ಲ ಅವರು ಪ್ರತ್ಯಕ್ಷವಾಗಿಬಿಡುತ್ತಾರೆ. ನಾನು ಜೈಲಿಗೆ ಹೋದಾಗ ಅವರು ಹಾಜರು. ಹಾಗೆಯೇ ಜ್ವರ ಗಿರ ಬಂದು ಮಲಗಿದಾಗ. ಮೊದಲನೇ ಚುನಾವಣೆಗೆ ನಿಂತಾಗ ಖರ್ಚಿಗೆಂದು ಸಾವಿರ ರೂಪಾಯಿ ಕೊಟ್ಟು ಹೋದರು. ಅವರು ಹೇಗೆ ಬಂದು ಯಾವುದಾದರೂ ಊರಲ್ಲಿ ನೆಲೆಸುತ್ತಿದ್ದರೋ ಹಾಗೇ ಊರನ್ನು ಬಿಟ್ಟೂ ಹೋಗುತ್ತಿದ್ದರು -ಮನೆಯಲ್ಲಿದ್ದ ಪಾತ್ರೆ, ಪರಟೆ, ಫ಼ರ್ನೀಚರು ಎಲ್ಲವನ್ನೂ ಕಂಡಕಂಡವರಿಗೆ ಕೊಟ್ಟು. ವಿಚಿತ್ರ ಮನುಷ್ಯ. ಅವರು ಯಾವ ಜಾತಿ, ಯಾವ ಪಂಗಡ ನನಗೆ ಈಗಲೂ ತಿಳಿಯದು. ಬ್ರಾಹ್ಮಣರೋ ಲಿಂಗಾಯತರೋ ಇದ್ದಿರಬಹುದು -ನಾನು ಮಾಂಸ ತಿನ್ನುವುದನ್ನು ಬಿಟ್ಟಿದ್ದರಿಂದ ಅವರಿಗೆ ಸಂತೋಷವಾಯಿತೆಂದು ಈ ನನ್ನ ಊಹೆ. ಅವರಿಗೆ ಕುಲೀನ ಹೆಣ್ಣುಗಳೆಂದರೆ ಕಣ್ಣೆತ್ತಿ ನೋಡಲಾರದ ಮರ್ಯಾದೆ. ಆದರೆ ಸೂಳೆಯರೆಂದರೆ ಬಲು ಚಪಲ, ಸಂಸ್ಕೃತದಲ್ಲಿ ಅವರಿಗೆ ಗೊತ್ತಿಲ್ಲದ ಪೋಲಿ ಪದ್ಯವೇ ಇರಲಿಲ್ಲ. ಮಹಾನುಭಾವ. ಅವರಿಗೆ ರಾಜಕೀಯ ಅಂದರೆ ಚೂರೂ ಆಸಕ್ತಿಯಿರಲಿಲ್ಲ. +“ನೀನು ಎಲ್ಲ ಕಷ್ಟ ಎಲ್ಲ ಬವಣೆ ಪಟ್ಟು ನಿನ್ನ ಊರಲ್ಲೇ ಬೆಳೆಯಬೇಕು” ಎಂದು ಅವರು ಹೇಳಿದ್ದರಂತೆ. ಕೃಷ್ಣಪ್ಪ ತನ್ನ ಹಳ್ಳಿಯ ಹತ್ತಿರದ ನಗರದಲ್ಲೆ ಬೆಳೆದ. ಅವನಿಗಾಗುತ್ತಿದ್ದ ಅವಮಾನಗಳೇನೂ ಮಹೇಶ್ವರಯ್ಯ ಕಳಿಸುತ್ತಿದ್ದ ಹಣದಿಂದ ನಿಲ್ಲಲಿಲ್ಲ. ಬಡವರ ಮನೆ ಹುಡುಗನಲ್ಲವೆ? ಅವನು ಹೈಸ್ಕೂಲು ಓದುವಾಗ ಹಾಸ್ಟೆಲಿನ ವಾರ್ಡನ್ ಒಬ್ಬ -ತುಂಬ ಶ್ರೀಮಂತ ಜಮೀಂದಾರ -ಕೃಷ್ಣಪ್ಪನನ್ನು ಅತ್ಯಂತ ತಾತ್ಸಾರದಿಂದ ಕಾಣುತ್ತಿದ್ದ. ಕೃಷ್ಣಪ್ಪನ ಠೀವಿ ಎಲ್ಲರಿಗೂ ಕಣ್ಣು ಕುಕ್ಕುವಂಥದ್ದು. ನಾವು ಇರುವ ಸ್ಥಿತಿಗೂ ಆಗಬೇಕೆಂದು ಹಂಬಲಿಸುವ ಸ್ಥಿತಿಗೂ ಅಂತರವಿದ್ದಾಗ, ಮುಖವಾಡ ನಿಜವಾದ ಮುಖ ಆಗುವ ಮುನ್ನ ಏನೇನು ಸಂಕಟಪಡಬೇಕಾಗುತ್ತದೆ ಎಂಬುದನ್ನು ಕೃಷ್ಣಪ್ಪ ಹಲವು ಘಟನೆಗಳಿಂದ ವಿವರಿಸುತ್ತಿದ್ದ. ಈಗ ಸಾಯುತ್ತಿರುವಾಗಲೂ ಅಂಥ ಸಂಕಟದಿಂದ ಅವನಿಗೆ ಬಿಡುಗಡೆಯಿರಲಿಲ್ಲ. ಅವನ ಬಡಪಾಯಿ ಹೆಂಡತಿ ಅವನಿಂದ ಪೆಟ್ಟು ತಿಂದು ಅಡಿಗೆ ಮನೆಯಲ್ಲಿ ತಲೆಕೆದರಿ ನಿಂತು, “ಇವರೊಬ್ಬ ಮಹಾನಾಯಕರಂತೆ. ಕ್ರಾಂತಿ ಮಾಡ್ತಾರಂತೆ. ಹೆಂಡತೀನ್ನ ಹೊಡೆಯೋದು ಮೊದಲು ನಿಲ್ಲಿಸಲಿ ನೋಡುವ” ಎಂದು ಗೊಣಗುವಾಗ ಕೃಷ್ಣಪ್ಪ ಖಿನ್ನನಾಗುತ್ತಾನೆ. ತನ್ನ ದುರಹಂಕಾರವನ್ನು ಹದ್ದಿನಲ್ಲಿಡಲು ಮಹೇಶ್ವರಯ್ಯ ಕಲಿಸಿದ್ದ ಹಾಸ್ಯಪ್ರವೃತ್ತಿ, ಈ ತನ್ನ ತೇಜಸ್ಸು ಕಳೆದುಕೊಂಡ ದೇಹದಿಂದ ಬಿಟ್ಟೇ ಹೋಯಿತೇ ಎಂದು ತಬ್ಬಿಬ್ಬಾಗುತ್ತಾನೆ. +ಯಾವುದೋ ಸಣ್ಣ ತಪ್ಪಿಗಾಗಿ ಹಾಸ್ಟೆಲ್ ವಾರ್ಡನ್ ಒಮ್ಮೆ ಕೃಷ್ಣಪ್ಪನಿಗೆ ಹೊಡೆಯುವ ಧೈರ್ಯ ಮಾಡಿದನಂತೆ. ಕೊಂದುಬಿಡುವಂತೆ ಅವಡುಗಚ್ಚಿ ಬೆತ್ತ ತೆಗೆದುಕೊಂಡು ಉಳಿದ ಎಲ್ಲ ಹುಡುಗರ ಎದುರು ಅವನು ರೌದ್ರಾವತಾರ ತಾಳಿ ನಿಂತ. ಚಾಚಿದ ಗಲ್ಲ, ಗುಳಿ ಬಿದ್ದ ಕಣ್ಣುಗಳು, ಮೈಲೆ ಕಜ್ಜಿಯಿಂದ ತೂತಾದ ಮುಖದ ಈ ಕುಳ್ಳ ವಾರ್ಡನ್ ಸ್ವಭಾವತಃ ಪುಕ್ಕ. ಅವನ ಕೀರಲು ದನಿಯ ಆರ್ಭಟ ಕೇಳಿ ಕೃಷ್ಣಪ್ಪನಿಗೆ ಹೇಸಿಗೆ ಉಂಟಾಯಿತು. ತನ್ನ ನಾಯಕತ್ವ ಒಪ್ಪಿಕೊಂಡಿದ್ದ ಹುಡುಗರೆಲ್ಲ ಬೆರಗಾಗಿ ಮುಂದೇನು ತಿಳಿಯದೆ ನಿಂತಿದ್ದರು. ಕೃಷ್ಣಪ್ಪ ವಾರ್ಡನ್‌ಗೆ ಬೆನ್ನು ತಿರುಗಿಸಿದ. ಚಡ್ಡಿಯನ್ನು ಬಿಚ್ಚಿದ. ಅಂಡಿನ ಮೇಲೆ ಹಣ್ಣಾಗಿ ಕೆಂಪಗೆ ಗುಂಡಗೆ ಇದ್ದ ಕುರ ಒಂದನ್ನು ಬೆರಳಿನಿಂದ ತೋರಿಸುತ್ತ, ಕತ್ತು ತಿರುಗಿಸಿ, “ಸ್ವಾಮಿ ಈ ಕುರ ಇರೋ ಜಾಗ ಬಿಟ್ಟು ಇನ್ನೆಲ್ಲಾದರೂ ಹೊಡೀರಿ” ಎಂದು ಪೃಷ್ಠವನ್ನೊಡ್ಡಿ ಬಾಗಿದ. ಹುಡುಗರೆಲ್ಲ ಗೊಳ್ ಎಂದು ನಕ್ಕರು. ವಾರ್ಡನ್ ಅವಮಾನ ಸಿಟ್ಟುಗಳಲ್ಲಿ ನಡುಗುತ್ತ ತನ್ನನ್ನು ಸುತ್ತುವರಿದ ತಿರಸ್ಕಾರ ಕಂಡು ಹೆದರಿ ಹೊರಟು ಹೋದ. ಸ್ಥಾನ ಶ್ರೀಮಂತಿಕೆಗಳ ದವಲತ್ತನ್ನು ಹೀಗೇ ಕೃಷ್ಣಪ್ಪ ಬಹಳ ಸಾರಿ ಗೆದ್ದಿದ್ದಾನೆ. +“ನಿನ್ನೊಳಗೊಂದು ಹುಲಿಯಿದೆಯೊ” ಎಂದು ಮಹೇಶ್ವರಯ್ಯ ಹೇಳುತ್ತಿದ್ದರಂತೆ. ಮಹೇಶ್ವರಯ್ಯ ದುರ್ಗಿಯ ಗುಪ್ತಭಕ್ತರು. ಯಾವಾಗಾದರೊಮ್ಮೆ ಇದ್ದಕ್ಕಿದ್ದಂತೆ ಯಾರೂ ತನ್ನನ್ನು ತಿಳಿಯದ ಜಾಗ ಹುಡುಕಿ ದುರ್ಗಿಯ ಆರಾಧನೆಗೆ ತೊಡಗಿಬಿಡುವರು. ಹಗಲು ರಾತ್ರೆ ನಡೆಯುವ ಈ ಆರಾಧನೆ ತಿಂಗಳುಗಟ್ಟಲೆ ಅವರನ್ನು ಒಂದೇ ಜಾಗಕ್ಕೆ ಕಟ್ಟಿಹಾಕಿದ್ದುಂಟು. ಇಂಥ ಒಂದು ಆರಾಧನೆ ಕೃಷ್ಣಪ್ಪನ ಸಮ್ಮುಖದಲ್ಲಿ ನಡೆದಿದೆ. “ಹುಲಿಯನ್ನು ಸವಾರಿ ಮಾಡಬೇಕೊ” -ಎಂದು ಮಹೇಶ್ವರಯ್ಯ ಕೃಷ್ಣಪ್ಪನಿಗೆ ಆಪ್ತವಾಗಿ ಹೇಳಿದ್ದಾರೆ. ಕೆಂಪು ಪಟ್ಟೆ ಮಡಿಯುಟ್ಟು, ಹಣೆಯ ಮೇಲೆ ದೊಡ್ಡ ಕುಂಕುಮವಿಟ್ಟು, ಒದ್ದೆಯಾದ ಬೆಳೆಸಿದ ತಲೆಗೂದಲನ್ನು ಭುಜದ ಮೇಲೆ ಚೆಲ್ಲಿದ ಈ ದೇವಿಯ ಆರಾಧಕನ ಹೊಳೆಯುವ ಕಣ್ಣುಗಳನ್ನು ಕೃಷ್ಣಪ್ಪ ಸಂಶಯದಿಂದ ನೋಡಲು ಪ್ರಯತ್ನಪಟ್ಟಿದ್ದ. ಅವನಿಗೆ ಯಾವ ದೇವರ ಪೂಜೆಯೂ ಸಾಧ್ಯವಿರಲಿಲ್ಲ. ತನ್ನ ಮುಖವಾಡವನ್ನು ಮುಖವೇ ಮಾಡಬಲ್ಲ ಮಹೇಶ್ವರಯ್ಯನ ನೆಚ್ಚುಗೆಯೂ ಕೃಷ್ಣಪ್ಪನಿಗೆ ಬೇಕಿತ್ತಲ್ಲವೆ? ಆದ್ದರಿಂದ ದಿವ್ಯವಾದದ್ದೊಂದು ತನ್ನನ್ನು ಹೊಗುವುದಕ್ಕಾಗಿ ಸಂಶಯವನ್ನೂ ಮೀರಿ ಏಕಾಗ್ರನಾಗಿ ಕೂತು ಅವರ ಮಾತು ಕೇಳಿಸಿಕೊಳ್ಳುತ್ತಿದ್ದ. ಕೃಷ್ಣಪ್ಪನನ್ನು ಬದಲಿಸುತ್ತ ಬೆಳೆಸಲು ಮಹೇಶ್ವರಯ್ಯ ಅವನನ್ನು ಹೀಯಾಳಿಸಿದ್ದೂ ಇಲ್ಲವೆಂದಲ್ಲ. ಸದಾ ಕನ್ನಡಿಯ ಎದುರು ನಿಂತು ತಲೆಬಾಚುತ್ತಲೋ ಮುಖ ಹಿಂಡಿಕೊಳ್ಳುತ್ತಲೋ ಇದ್ದ ಕೃಷ್ಣಪ್ಪನ ಆತ್ಮರತಿಯನ್ನು ಹೀಗೇ ಜರಿದು ಅವರು ಬಿಡಿಸಿದ್ದು. +ನಗುತ್ತಲೋ, ಘರ್ಜಿಸುತ್ತಲೋ ಕೃಷ್ಣಪ್ಪನ ಒಳಹುಲಿ ನೆಗೆಯುತ್ತಿತ್ತು. ದುಷ್ಕರ್ಮಿಗಳಿಗೆ ತಾವು ಹುಳ ಎನ್ನಿಸುವ ಹಾಗೆ ಮಾಡಬಲ್ಲ ಶಕ್ತಿಯನ್ನು ಕೃಷ್ಣಪ್ಪ ಗಳಿಸಿಕೊಂಡಿದ್ದ. ಅವನು ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿದ ವಿರೋಧ ಪಕ್ಷದ ನಾಯಕನಲ್ಲವೆ? ಆದ್ದರಿಂದ ಆತನ ಬಾಯಿ ಕಟ್ಟಿಸಲು ಕೊಳಕರು, ಖದೀಮರು ಏನೇನೋ ಪ್ರಯತ್ನ ಮಾಡುವರು. ಇದರಿಂದ ಕೃಷ್ಣಪ್ಪನಿಗೆ ಸದಾ ಅವಡುಕಚ್ಚಿಕೊಂಡೇ ಬದುಕಬೇಕಾಗಿ ಬಂದುದು. +ಆದ್ದರಿಂದಲೇ ಏನೋ ಸಮಾಜಕ್ಕೆ ತನ್ನನ್ನು ಒಡ್ಡಿಕೊಳ್ಳದಂಥ ಮಹೇಶ್ವರಯ್ಯನಂಥ ಆತ್ಮಾರಾಮರು, ಕೃಷ್ಣಪ್ಪನಿಗೆ ಅಚ್ಚುಮೆಚ್ಚಾಗಿ ಉಳಿದದ್ದು. ಕೊಳೆಯುವುದೇ ಜಾಯಮಾನವಾದ ನಿತ್ಯಜೀವನದ ಕ್ಷೇತ್ರದಲ್ಲಿ ಪೂರ್ಣ ಶುದ್ಧಿ ಹುಡುಕೋದೇ ಅಸಂಬದ್ಧವಿರಬಹುದೇ ಎಂಬ ಪ್ರಶ್ನೆ ಅವನನ್ನು ಬಾಧಿಸಿದ್ದಿದೆ. ಬಜೆಟ್ಟು, ಕಾಮಗಾರಿ, ಲಂಚ, ಭಡ್ತಿ, ವರ್ಗ, ನೌಕರಿ ಇತ್ಯಾದಿಗಳಿಂದ ಮುಳುಗಿಸುವ ರಾಜಕೀಯದಿಂದ ಮೇಲೇಳಲು ಕೃಷ್ಣಪ್ಪ ಸದಾ ಪ್ರಯತ್ನಿಸುತ್ತಾನೆ. ಕ್ರಾಂತಿಯ ಕನಸು ಕಾಣುತ್ತಾನೆ. ಆದರೆ ತನ್ನ ಕ್ರಾಂತಿಕಾರತೆ ಕ್ರಮೇಣ ತೇಪೆ ಕೆಲಸವಾಗಿಬಿಟ್ಟಿದೆ. ತನ್ನನ್ನು ತೇಲಿಸುವ ಮಹೇಶ್ವರಯ್ಯನೂ ಈಚೆಗೆ ಬರುವುದಿಲ್ಲ. ಒಂದೋ ಭಯಂಕರ ಜಗಳಗಂಟನೂ ಅಹಂಕಾರಿಯೂ ಆಗಬೇಕು; ಅಥವಾ ಸಮಾಜದಿಂದ ಮುಖ ತಿರುಗಿಸಿದ ಆತ್ಮಾರಾಮನಾಗಬೇಕು. ಲೋಭಿಗಳನ್ನು ಕಸವಾಗಿ ಕಾಣುವಂಥ ಮಾತಾಡಿ ಕೃಷ್ಣಪ್ಪ ಹಿಗ್ಗುತ್ತಾನೆ. ಹೀಗೆ ಹಿಗ್ಗುವುದೇ ತನಗೆ ಚಾಳಿಯಾಗಿಬಿಟ್ಟಿತಲ್ಲ ಎಂದು ಹೆದರುತ್ತಾನೆ. ತನ್ನ ಕೋಪದಿಂದ ಸುತ್ತಲಿನ ವಾತಾವರಣದಲ್ಲಿ ಚೂರೂ ಬದಲಾವಣೆಯಾಗದಿದ್ದಾಗ ಕೋಪ ತೀಟೆಯಾಗದೆ ಬೇರೆ ಮಾರ್ಗವಿದೆಯೆ ಎಂದು ಸಮಾಧಾನಪಡುತ್ತಾನೆ. ಇಂಥ ಕೋಪ ತಾಪ ಪ್ರೇಮಗಳ ತೀವ್ರತೆಗೆ ಕಬೀರ ಅಲ್ಲಮರಂಥ ಅರೆಹುಚ್ಚರ ಕವಿತೆಯೇ ರಾಜಕೀಯಕ್ಕಿಂತ ಉತ್ತಮ ಮಾಧ್ಯಮ ಎಂದುಕೊಳ್ಳುತ್ತಾನೆ. +ಆದರೆ ಕೃಷ್ಣಪ್ಪ ಸಾಹಿತಿಯಾಗಲು ಪ್ರಯತ್ನಿಸಿ ಸೋತವ. ಒಮ್ಮೆ ಬಿಳಿ ಕಾಗದದ ಮೇಲೆ ದುಂಡನೆಯ ಅಕ್ಷರದಲ್ಲಿ ಅರ್ಧವಾಕ್ಯವೊಂದನ್ನು ಬರೆದು ಅದನ್ನು ಮುಗಿಸಲಾರದೇ ಹೋಗಿದ್ದ. ’ಸುಗ್ಗಿಯ ಕಾಲದಲ್ಲಿ ಬೆಳಗಿನ ಹೊತ್ತು ಕರಿಯ ಎನ್ನುವ ಹೊಲೆಯನೊಬ್ಬ ತನ್ನ ತಲೆಯ ಮೇಲೆ ಹೇಲಿನ ಕುಕ್ಕೆ ಇಟ್ಟುಕೊಂಡು ಹೋಗುತ್ತಿದಾಗ’ ಎಂದು ವಾಕ್ಯ ಕೊನೆಯಾಗದೆ ನಿಂತಿತ್ತು. ಹೀಗೆ ಹೋಗುತ್ತಿದ್ದಾಗ ಅವನಲ್ಲಿ ಲೋಕದ ಕೊಳಕನ್ನು ಸುಡಬಲ್ಲ ಬೆಂಕಿಯಂಥ ಸಿಟ್ಟು ಹುಟ್ಟಿತೆಂದು ಬರೆಯಲು ಸಾಧ್ಯವೆ? ಸಾಧ್ಯವಾಗಲು ಒಂದೋ ನಿಜಜೀವನದಲ್ಲಿ ಅಂಥ ಸಿಟ್ಟು ಹುಟ್ಟಿದ್ದರ ದಾಖಲೆಯಿರಬೇಕು. ಅಥವಾ ಅಂಥದ್ದು ಹುಟ್ಟುವುದು ನಿಜವೆಂದು ಅನ್ನಿಸುವಂತೆ ಮಾಡಬಲ್ಲ ವಾಕ್ಸಿದ್ಧಿ ತನಗೆ ಬೇಕು. ಕೈಸಾಗದೆ ಇರೋವರು ಮಾತಲ್ಲಿ ತೀಟೆ ತೀರಿಸ್ಕೋತಾರೆ ಎಂದು ಕವಿಗಳನ್ನು ಅವನು ಜರೆಯುತ್ತಿದ್ದ. ಇದರಲ್ಲಿ ಅಸೂಯೆ ಕಂಡ ಮಹೇಶ್ವರಯ್ಯ, “ಸುಡುವ ತಾಕತ್ತಿದ್ದರೆ ಸುಡಯ್ಯ, ವಾಗ್ದೇವಿಯನ್ನು ಜರೆಯಬೇಡ” ಎಂದಿದ್ದರು. ಎಲ್ಲೆಲ್ಲೋ ಕೋಪವನ್ನು ಚೆಲ್ಲುವುದರ ಬದಲು ಅದನ್ನು ಮಾತಿನಲ್ಲೆ ಒಳಚಾಚಿದ ಬೆಂಕಿಯ ನಾಲಗೆ ಮಾಡಿ ಉರಿಸುವುದೇ ಶ್ರೇಷ್ಠವೆಂದು ಮಹೇಶ್ವರಯ್ಯನ ಅಭಿಪ್ರಾಯ. ಆದರೆ ಕೃಷ್ಣಪ್ಪನಿಗೆ ಗೊತ್ತು: ತನ್ನ ಮಾತುಗಳು ತನ್ನ ಗರ್ವಕ್ಕೇ ಅಂಟಿಕೊಂಡು ಬಿಡುತ್ತಿದ್ದವು; ಮೈ ತುಂಬ ಏಳುವ ಪಿತ್ಥಗಂಧೆಯಂತೆ ತನ್ನಿಂದ ಹೊರಬೀಳುತ್ತಿದ್ದವು. +* +* +* +ಪೊರೆ ಬಿಡುವಾಗಿನ ಸಂಕಟಗಳಿಂದ ಕೃಷ್ಣಪ್ಪನಿಗೊಮ್ಮೆ ಹುಚ್ಚು ಹಿಡಿದದ್ದೂ ಇದೆ. ಇಂಟರ್‍ಮೀಡಿಯೆಟ್ ಕಾಲೇಜಿನಲ್ಲಿ ಆಗ ಕೃಷ್ಣಪ್ಪ ಓದುತ್ತಿದ್ದ. ಅವನ ಜಾತಿಯ ಹಾಸ್ಟೆಲಲ್ಲಿ ಆಗ ಅವನಿಗೆ ಬಿಟ್ಟಿ ಊಟ, ವಸತಿ. ವಯಸ್ಸು ಇಪ್ಪತ್ತೈದು ಇದ್ದರೂ ಇರಬಹುದು. ಅವನು ಹುಟ್ಟಿದ ತಾರೀಖು ಯಾರಿಗೆ ಸರಿಯಾಗಿ ಗೊತ್ತು? ಅನಕ್ಷರಸ್ಥಳಾದ ತಾಯಿಯನ್ನು ಕೇಳಿದರೆ ನೆರೆ ಬಂದ ವರ್ಷ ಎನ್ನುತ್ತಾಳೆ. ಕೃಷ್ಣಪ್ಪ ಫ಼್ರೀ ಬೋರ್ಡರಾಗಿದ್ದರೂ ಆ ಹಾಸ್ಟೆಲಿನಲ್ಲಿ ಇದ್ದ ಶ್ರೀಮಂತ ಹುಡುಗರಿಗೆಲ್ಲ ನಾಯಕ. ಯಾರಿಗಿಲ್ಲದಿದ್ದರೂ ಅವನಿಗೆ ಮಾತ್ರ ಸ್ವತಂತ್ರವಾದ ರೂಮು -ಹುಡುಗರೆಲ್ಲ ಕೂಡಿ ಬಿಟ್ಟುಕೊಟ್ಟದ್ದು. ಒಮ್ಮೆ ಕೃಷ್ಣಪ್ಪನಿಗೆ ತುಂಬ ಜ್ವರ ಬಂತು. ಅವನಿಗೆ ಗುರಪ್ಪ ಎಂಬ ಶ್ರೀಮಂತ ಅನುಯಾಯಿ ಇದ್ದ. ಅವನು ಕೃಷ್ಣಪ್ಪನ ಶುಷ್ರೂಷೆ ಮಾಡುತ್ತಿದ್ದಾಗ, ತುಂಬ ಜ್ವರದಲ್ಲಿದ್ದ ಕೃಷ್ಣಪ್ಪ: “ನನಗೊಂದು ಹೊಸ ಹಾಸಿಗೆ ಮಾಡಿಸಿಕೊಡು” ಎಂದ. ಗುರಪ್ಪ ಸ್ವಲ್ಪ ಜುಗ್ಗು ಸ್ವಭಾವದವನೆಂದು ಕೃಷ್ಣಪ್ಪನಿಗೆ ಗೊತ್ತು. ಹಾಸಿಗೆ ಹೇಗಿರಬೇಕೆಂದು ವಿವರಿಸಿದ: “ಏಯ್ ಗುರಪ್ಪ -ಜುಗ್ಗುತನ ಮಾಡಬೇಡ. ಹಾಸಿಗೆ ಸುತ್ತ ಬೇರೆ ಬಟ್ಟೇನೇ ಉಪಯೋಗಿಸಿ ಅಂಚು ಕಟ್ಟಿಸಬೇಕು. ಹಾಸಿಗೆ ಬಾಕ್ಸ್ ಥರ ಇರಬೇಕು. ಗೊತ್ತಾಯ್ತೇನೋ?” ಅಂದ. ಗುರಪ್ಪ ’ಹೂ’ ಎಂದು ಹಾಸಿಗೆ ಹೊಲಿಸಿ ತಂದ. ಕೃಷ್ಣಪ್ಪನಿಗೆ ಜ್ವರ ಏರಿತ್ತು. ಏನೇನೋ ಬಡಬಡಿಸುತ್ತಿದ್ದವ ಹಾಸಿಗೆಯ ಅಂಚುಗಳನ್ನು ಮುಟ್ಟಿ ನೋಡಿದ. “ಹಾವಿನ ಥರ ಮೂತಿ ಚೂಪಾಗಿದೆಯಲ್ಲೋ? ಬಾಕ್ಸ್ ಹಾಗೆ ಇರಬೇಕು – ಬಾಕ್ಸ್ ಹಾಗೆ” ಎಂದು ಕಣ್ಣುಗಳನ್ನು ತೆರೆಯಲಾಗದಿದ್ದರೂ ಗುರಪ್ಪನ ಮುಖ ಹುಡುಕುತ್ತಾ ಏಳಲು ಪ್ರಯತ್ನಿಸಿದ. ಅವನು ಹೇಳಿದಂಥ ಹಾಸಿಗೆಯನ್ನೇ ಹೊಲಿಸಿದ್ದೇನೆ ಎಂಬ ಗುರಪ್ಪನ ವಿವರಣೆಯಿಂದ ಅವನಿಗೆ ಸಿಟ್ಟು ಬಂತು. ಹಾಸಿಗೆಯೇ ಬೇಡವೆಂದು ನೆಲದ ಮೇಲೆ ಮಲಗಿದ. ಥಂಡಿಯಾಗುತ್ತದೆಂದು ಗುರಪ್ಪ ಬೇಡಿಕೊಂಡರೂ ಏಳಲಿಲ್ಲ. ಕೆಲವು ತಿಂಗಳುಗಳ ಹಿಂದೆ ಹೀಗೇ ಗುರಪ್ಪನಿಗೆ ಜ್ವರ ಬಂದಿತ್ತು. ಆಗ ಕೃಷ್ಣಪ್ಪ ಅವನ ಪಕ್ಕದಲ್ಲಿ ಸದಾ ಕೂತಿದ್ದು ಹಣೆಗೆ ಒದ್ದೆ ಬಟ್ಟೆ ಹಾಕಿದ್ದ; ಅವನು ಮಾಡಿಕೊಂಡ ವಾಂತಿಯನ್ನು ಬಾಚಿದ್ದ. ಇದರಿಂದ ಗುರಪ್ಪನಿಗೆ ಕೃಷ್ಣಪ್ಪನನ್ನು ಪೂಜಿಸುವಂಥ ಭಕ್ತಿ ಹುಟ್ಟಿತ್ತು. ಆದರೂ ಜಿಪುಣನಾದ ಗುರಪ್ಪನಿಗೆ ಒಳ್ಳೆಯ ಹಾಸಿಗೆ ಹೊಲಿಸುವುದು ಅನಗತ್ಯ ದುಂದು ಎನ್ನಿಸಿರಬಹುದು. ಸನ್ನಿಯಲ್ಲಿದ್ದವನ ಮಾತಿಗೇಕೆ ಬೆಲೆ ಕೊಡಬೇಕು ಎಂದು ವಂಚನೆ ಮಾಡುವ ಧೈರ್ಯವೂ ಇದ್ದಿರಬಹುದು. ಈ ಸಣ್ಣತನ ಕೃಷ್ಣಪ್ಪನನ್ನು ಅತೀವವಾಗಿ ಬಾಧಿಸಿರಬೇಕು. ಗುರಪ್ಪ ಅನಂತರ ಅತ್ಯಂತ ದೈನ್ಯದಿಂದ ಬೇರೆ ಹಾಸಿಗೆ ಹೊಲಿಸಿಕೊಂಡು ಬಂದು ಬೇಡಿಕೊಂಡರೂ ಕೃಷ್ಣಪ್ಪ ಅದರ ಮೇಲೆ ಮಲಗಲಿಲ್ಲ. ತನ್ನ ಹಳೆಯ ಹಾಸಿಗೆ ಮೇಲೂ ಮಲಗಲಿಲ್ಲ. ಈಚಲು ಚಾಪೆಯ ಮೇಲೆ ಮಲಗಿದ. ಗುರಪ್ಪ ಜೋಲು ಮೋರೆ ಹಾಕಿಕೊಂಡು ಪಕ್ಕದಲ್ಲಿ ಸದಾ ಕೂತಿರುತ್ತಿದ್ದರೂ ಅವನನ್ನು ಮಾತಾಡಿಸುತ್ತಿರಲಿಲ್ಲ. +ಜ್ವರ ಸ್ವಲ್ಪ ಇಳಿದ ಮೇಲೆ ತನ್ನ ಮಾವನ ಹಿರಿಯ ಮಗನಿದ್ದ ಊರಲ್ಲಿ ಶುಶ್ರೂಷೆ ಪಡೆಯಲೆಂದು ಹೊರಟ. ಆ ಊರಿಗೆ ಹೋಗಲು ಟ್ರೈನ್ ಹಿಡಿಯಬೇಕು. ಮುವ್ವತ್ತು ಮೈಲಿಯ ನಂತರ ಟ್ರೈನ್ ಇಳಿದು ಬಸ್ ಹಿಡಿಯಬೇಕು. ಇರುವ ಒಂದೇ ಬಸ್ಸಿಗೆ ನಿಗದಿಯಾದ ಕಾಲವಿಲ್ಲ. ಸ್ಟೇಶನ್ನಿನಲ್ಲಿ ಇಳಿದ ಕೃಷ್ಣಪ್ಪ ಬಸ್ಸಿಗೆ ಕಾಯುತ್ತ ಒಂದು ಹೋಟೆಲಿನ ಬೆಂಚಿನ ಮೇಲೆ ಮಲಗಿದ. +ಇನ್ನೂ ಸಣ್ಣಗೆ ಜ್ವರವಿತ್ತು. ಬೆಂಚಿನ ಮೇಲೆ ಮಲಗಿದ ಕೃಷ್ಣಪ್ಪನನ್ನು ಹೋಟೆಲು ಯಜಮಾನ ನೋಡಿ, ಹೊಗೆಸೊಪ್ಪಿನ ರಸ ತುಂಬಿದ ತನ್ನ ಬಾಯನ್ನು ಮೇಲಕ್ಕೆತ್ತಿ, ಗಡ್ಡ ಕೆರೆದುಕೊಳ್ಳುತ್ತ ಏಳುವಂತೆ ಸನ್ನೆ ಮಾಡಿದ. ಕೃಷ್ಣಪ್ಪ ದುರುಗುಟ್ಟಿ ನೋಡಿದ. ಯಜಮಾನನಿಗೆ ಕೋಪ ಬಂತು. ಹೊಗೆಸೊಪ್ಪು ಉಗುಳಿ ಬಂದು “ಏಳಯ್ಯ, ಇಲ್ದಿದ್ರೆ ಎಳೆಸಿಹಾಕ್ತೀನಿ” ಎಂದ. ಕೃಷ್ಣಪ್ಪ ಹಿಂದಿನಂತೆ ದುರುಗುಟ್ಟಿ ನೋಡುತ್ತಲೇ ಪ್ರಶಾಂತವಾದ ಧ್ವನಿಯಲ್ಲಿ ಹೇಳಿದ: “ನನಗೆ ಜ್ವರ. ಹೊರಗೆ ಬಿಸಿಲಲ್ಲಿ ಮಲಗಲಾರೆ. ಬಸ್ಸು ಬರುವ ತನಕ ಇಲ್ಲಿ ಮಲಗಿರಲು ತಾವು ಅನುಮತಿ ಕೊಡಬೇಕು”. ಮಾತಿನಲ್ಲಿದ್ದ ಸೌಜನ್ಯ ಅವನ ಕಣ್ಣುಗಳಲ್ಲಿರಲಿಲ್ಲ. “ಇವನನ್ನು ಎಳೆದು ಹಾಕ್ರೋ. ದಿಕ್ಕಿಲ್ಲದ ಸೂಳೇಮಕ್ಕಳಿಗೆ ಮಲಗಕ್ಕಲ್ಲ ಈ ಹೋಟೆಲಿರೋದು” ಎಂದ. ಮಾಣಿಯೊಬ್ಬ ಬಂದು ಕೃಷ್ಣಪ್ಪನ ತಲೆಯಿಂದ ಟ್ರಂಕನ್ನೆಳೆದ. ಯಜಮಾನ ಅದನ್ನು ಇಸುಕೊಂಡು ಹೊರಗೆಸೆದಾಗ ಟ್ರಂಕಿನಲ್ಲಿದ್ದದ್ದೆಲ್ಲ ಮಧ್ಯಾಹ್ನದ ಬಿಸಿಲಲ್ಲಿ ಚೆಲ್ಲಿತು. ಕೃಷ್ಣಪ್ಪನನ್ನು ಎಳೆಯಲು ಹೋದಾಗ “ನನ್ನ ಮೈ ಮುಟ್ಟೀರಿ -ಜೋಕೆ” ಎಂದು ತೂರಾಡುತ್ತ ಹೊರಗೆ ಹೋದ. ಗಂಭೀರವಾಗಿ ತನ್ನ ಜುಬ್ಬದ ತೋಳನ್ನು ಸರಿಸಿಕೊಂಡು ಟ್ರಂಕಿಗೆ ಚೆಲ್ಲಾಪಿಲ್ಲಿಯಾದ್ದನ್ನು ತುಂಬಿದ. ಉರಿಯುವ ಬಿಸಿಲಲ್ಲಿ ಟ್ರಂಕಿನ ಮೇಲೆ ಕೂತು, ಪೂರ್ವಕಾಲದ ಉಗ್ರಮುನಿಕುಮಾರನಂತೆ ಹೋಟೆಲಿನ ಕಟ್ಟಡವನ್ನು ದಿಟ್ಟಿಸುತ್ತ “ಇದಕ್ಕೆ ಬೆಂಕಿ ಬಿದ್ದು ಎಲ್ಲ ಸುಟ್ಟು ಹೋಗುತ್ತೆ -ತಿಂಗಳ ಒಳಗೆ” ಎಂದ ಪ್ರಶಾಂತವಾಗಿ. ಯಜಮಾನ ಥೂ ಎಂದು ಉಗುಳಿದಾಗ ಕೃಷ್ಣಪ್ಪ ಕರುಣೆಯಿಂದ ನಕ್ಕ…………. +ಇಂಥ ಮಾತನ್ನಾಡಬಲ್ಲ ಶಕ್ತಿ ಈಗಲೂ ಅವನಿಗೆ ಇದೆ. ಓಡಾಡಲಾಗದಿದ್ದರೂ, ಕುರ್ಚಿಯಲ್ಲಿ ಎತ್ತಿಸಿಕೊಂಡು ಹೋಗಿ ಅಸೆಂಬ್ಲಿಯಲ್ಲಿ ಹೇಳಿದ್ದಾನೆ: ಯಾರ ಕಡೆಗೂ ನೋಡದೆ, ಕಣ್ಣೆತ್ತಿ: “ನಾನೀಗ ಪ್ರವಾದಿಯಂತೆ ಹೇಳುತ್ತಿರುವೆ -ಕೇಳಿ -ಬಿಡಿ -ನನಗದು ಅಲ್ಪ ವಿಷಯ. ಬಡವರು ಸಿಟ್ಟಿಗೇಳುತ್ತಾರೆ. ನಿಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಾರೆ.” ದೈನಿಕ ಪತ್ರಿಕೆಗಳಲ್ಲಿ ಇದನ್ನು ಹಾಸ್ಯಪ್ರಿಯ ಸಂಪಾದಕರು ಬಾಕ್ಸ್ ಮಾಡಿ ಆಶ್ಚರ್ಯಸೂಚಕ ಚಿಹ್ನೆಯಿಂದ ಕೊನೆ ಮಾಡಿ ಪ್ರಕಟಿಸಿದರು. ಅಚಲ ಮುಖ, ಅವನ ಧ್ವನಿ, ಅವನ ಗಂಭೀರ ಧಾಟಿಗಳ ಜೊತೆ ಈ ಮಾತುಗಳನ್ನು ಖುದ್ದು ಕೇಳಿದವರಿಗೆ ಅದೇನೂ ಹಾಸ್ಯವೆನ್ನಿಸಿವುದಿಲ್ಲ. ಆದರೆ ನಿತ್ಯಜೀವನದ ತರಲೆ ತಾಪತ್ರಯಗಳ ಸುದ್ದಿಗಳ ಆಶಾದಾಯಕವೆನ್ನಿಸುವ ಯಥಾಸ್ಥಿತಿಯ ಆವರಣದಲ್ಲಿ ಮಾತ್ರ ಕೃಷ್ಣಪ್ಪನ ಮಾತುಗಳನ್ನು ಅಚ್ಚಿನಲ್ಲಿ ಕಂಡಾಗ ಆಭಾಸವೆನ್ನಿಸುತ್ತದೆ. ಅಹಂಕಾರಿಯೊಬ್ಬನ ಗೊಣಗಾಟವೆನ್ನಿಸುತ್ತದೆ. ಅದು ಕೃಷ್ಣಪ್ಪನಿಗೆ ಗೊತ್ತಿರುವುದರಿಂದ ಬಡವರು ಸಿಟ್ಟಿಗೇಳುವ ತನಕ ತನ್ನ ತಿರಸ್ಕಾರ ದ್ವೇಷಗಳನ್ನು ಮೊನಚಾಗಿ ಉಳಿಸಿಕೊಳ್ಳಬೇಕೆಂದು ಸೊರಗುತ್ತಿರುವ ದೇಹದಲ್ಲಿ ಹೆಣಗುತ್ತಾನೆ……. +ಕೃಷ್ಣಪ್ಪನ ಮಾವನ ಮಗ ರಂಗಪ್ಪ ಸಣ್ಣಪುಟ್ಟ ಲಂಚಗಳಿಗೆ ಕೈಯೊಡ್ಡಿ ಬದುಕುತ್ತಿದ್ದ ಒಬ್ಬ ಬಡಪಾಯಿ ಗುಮಾಸ್ತ. ಮನೆಯಲ್ಲಿ ಎಂಟು ಸಣ್ಣ ಪುಟ್ಟ ಮಕ್ಕಳು. ಕೇವಲ ಎರಡು ರೂಮುಗಳಿದ್ದ ನಾಡಹೆಂಚಿನ ಸೋರುವ ಈ ಮನೆಯ ಒಡತಿ ಸಾವಿತ್ರಮ್ಮ. ತನ್ನ ಸೀತಬುರುಕ ಮೂಗನ್ನು ಕೈಯಿಂದ ಸೀನಿ ಗೋಡೆಗೆ ಒರಸುತ್ತ ಯಾವಾಗಲೂ ಗೊಣಗುವ, ತನ್ನ ಗಂಡನಿಗೂ ಕೃಷ್ಣಪ್ಪನಿಗೂ ಊಟ ಬಡಿಸುವಾಗ ಗಂಡನಿಗೆ ಗಟ್ಟಿ ಮಜ್ಜಿಗೆಯನ್ನೂ ಕೃಷ್ಣಪ್ಪನಿಗೆ ನೀರು ಮಜ್ಜಿಗೆಯನ್ನೂ ಯಾವ ನಾಚಿಕೆಯಿಲ್ಲದೆ ಸುರಿಯುವ ಹೆಂಗಸು -ಅವಳು. ಈ ಹೆಂಗಸನ್ನು ತನ್ನ ದುರುಗುಟ್ಟುವ ಕೋಪದ ಕಣ್ಣುಗಳಿಂದ ಕೃಷ್ಣಪ್ಪ ಗೆಲ್ಲಲಾರದೆ ಹೋದ. ಈ ಪೇಟೆಗೆ ಅವನು ಚಿಕಿತ್ಸೆಗೆಂದು ಬಂದದ್ದು. ಇಲ್ಲವಾದಲ್ಲಿ ತಾಯಿಯ ಊರಿಗೆ ಹೋಗಬಹುದಿತ್ತು. ಮಕ್ಕಳು ಮಲಗುವ ರೂಮಿನಲ್ಲಿ ಸದಾ ತನ್ನ ಕಣ್ಣಿಗೆ ಕಾಣುವ ಹಾಗೆ ಮಲಗಿರುತ್ತಿದ್ದ ಕೃಷ್ಣಪ್ಪನ ನಿರುಪಯೋಗತನವನ್ನೂ, ಎಲ್ಲರಂತೆ ಹಿಟ್ಟು ತಿನ್ನದೆ ಅನ್ನ ಬಯಸುತ್ತಿದ್ದ ಅವನ ರೋಗವನ್ನೂ ತಮ್ಮ ಬಡತನವನ್ನೂ ರಾಗವಾಗಿ ತನ್ನ ಪಾಡಿಗೆ ತಾನು ಆಡಿಕೊಳ್ಳುತ್ತ ಅಡಿಗೆ ಮನೆಯ ಹಿತ್ತಾಳೆ ಪಾತ್ರೆಗಳನ್ನು ಕುಕ್ಕುತ್ತ ಕೃಷ್ಣಪ್ಪನ ಗರ್ವ ಇನ್ನೂ ಹೆಚ್ಚು ಬೆಳೆಯುವಂತೆ ಮಾಡಿದಳು. +ತನ್ನ ಸುತ್ತಲಿನ ಕ್ಷುದ್ರತೆ ಗೆಲ್ಲಲು ಅನ್ಯ ಮಾರ್ಗವಿರದೆ ಕೃಷ್ಣಪ್ಪ ಗಾಢವಾದ ಮೌನ ತಾಳಿದ. ಮಕ್ಕಳ ಉಚ್ಚೆ, ಹೇಲು, ಗಂಡನ ಹೊಟ್ಟೆಬಾಕತನ, ಸದಾ ಬೀಳುವ ಕಸ ಇವುಗಳ ಜೊತೆ ದಿನನಿತ್ಯ ಹೋರಾಡುವ ಎಲ್ಲ ಸಾಮಾನ್ಯ ಕ್ಷುದ್ರ ಹೆಣ್ಣುಗಳಂತೆ ಇವಳು ಒಬ್ಬಳು ಎಂದು ಆಕೆಯನ್ನು ಮೊದಲಿನಂತೆ ದುರುಗುಟ್ಟಿ ನೋಡುವುದನ್ನೂ, ಅವಳಿಗೆ ಪ್ರತ್ಯುತ್ತರ ಕೊಡುವುದನ್ನೂ ನಿಲ್ಲಿಸಿದ. ಅವಳ ಕ್ಷುದ್ರತೆ ತನ್ನ ಶಕ್ತಿಹೀನ ದೇಹವನ್ನೂ ಮನಸ್ಸನ್ನೂ ಆಕ್ರಮಿಸದಿರಲೆಂದು ದಯಾವಂತನಾದ. ಹೀಗಿರುವಾಗ ಎರಡು ಘಟನೆಗಳು ಒಂದೇ ದಿನ ನಡೆದು ಕೃಷ್ಣಪ್ಪನಲ್ಲಿ ಒಂದು ವಿಸ್ಮಯಕಾರಿಯಾದ ಪರಿವರ್ತನೆಯಾಯಿತು. +ಕೃಷ್ಣಪ್ಪ ತನ್ನ ದಿನಚರಿ ಬರೆದಿಡುತ್ತಿದ್ದ ಒಂದು ಕಡತವಿತ್ತು. ತಾನು ಗೊಣಗುವಾಗಲೆಲ್ಲ ಈ ಪುಸ್ತಕ ಹಿಡಿದು ಗುಂಡನೆಯ ಅಕ್ಷರದಲ್ಲಿ ಏನೇನೋ ಬರೆಯುತ್ತ ಪ್ರಸನ್ನ ಮುಖದಿಂದ ಇರುತ್ತಿದ್ದ ಕೃಷ್ಣಪ್ಪನನ್ನು ಅವಳು ಸಿಡಿಮಿಡಿಗೊಳ್ಳುತ್ತ, ದುರುಗುಟ್ಟಿ ನೋಡುತ್ತ ನಿಂತುಬಿಡುವಳು. ಅನಕ್ಷರಸ್ಥೆಯಾದ ಸಾವಿತ್ರಮ್ಮನಿಗೆ ಕೃಷ್ಣಪ್ಪನನ್ನು ಮಗ್ನಗೊಳಿಸುವ ಈ ಕಸುಬು ಯಾವುದೋ ಮಾಟ ಮಾಡುವ ವಿಧಿಯಂತೆ ಕಾಣುತ್ತಿತ್ತು. ಒಂದು ಬೆಳಿಗ್ಗೆ ಅವನಿನ್ನೂ ನಿದ್ದೆಯಲ್ಲಿದ್ದಾಗ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ ನೀರಿನ ಒಲೆ ಹತ್ತಿಸಿದಳು. ಕೇಳಿದರೆ ಅವತ್ತು ಬೆಂಕಿ ಹೊತ್ತಿಸಲು ಕುರುಳು ಇರಲಿಲ್ಲವೆಂದು ಹೇಳುವುದೆಂದುಕೊಂಡಳು. +ಕೃಷ್ಣಪ್ಪ ಎಚ್ಚರವಾದವನು ಮಾವಿನ ಎಲೆಯಿಂದ ಹಲ್ಲು ಉಜ್ಜಿ, ನಡುಮನೆಗೆ ಬಂದು “ಎಲ್ಲಿ ನನ್ನ ಪುಸ್ತಕ?” ಎಂದ. ಅನುಮಾನವಾಗಿ ಬಚ್ಚಲಿಗೆ ಮತ್ತೆ ಹೋಗಿ ನೋಡಿದ. ಪುಸ್ತಕದ ರಟ್ಟಿನ ಚೂರೊಂದು ಕರಕಲಾಗಿದ್ದುದು ಕಂಡು ಸಾವಿತ್ರಮ್ಮನ ಎದುರು ನಿಂತು ಮಾತಾಡದೆ ದುರುಗುಟ್ಟಿ ನೋಡಿದ. ಸಾವಿತ್ರಮ್ಮ ನಿಷ್ಕಳಂಕ ಭಾವದಿಂದ “ಕುರುಳು ಇರಲಿಲ್ಲ” ಎಂದಳು. ಕೃಷ್ಣಪ್ಪ ಅಚಲನಾಗಿ ನಿಂತ. ಈ ಹೆಂಗಸನ್ನು ಕೊಲ್ಲಬಹುದು ಎನ್ನಿಸಿತು. ಜೊತೆಗೇ ಕಣ್ಣುಗಳಲ್ಲಿ ನೀರು ತುಂಬಿಬಂದವು. ಈ ನೀರನ್ನು ನೋಡಿ ಸಾವಿತ್ರಮ್ಮ ತನ್ನ ಬಗ್ಗೆ ಪಶ್ಚಾತಾಪ ಪಟ್ಟಾಳೆಂದು ಹಾಸಿಗೆ ಮೇಲೆ ಹೋಗಿ ಮಲಗಿದ. ಕಣ್ಣುಮುಚ್ಚಿದ. ಅವನಿಗೆ ಅರ್ಥವಾಗದಂಥ ಭಾವನೆಗಳು ಮನಸ್ಸಲ್ಲಿ ಏಳತೊಡಗಿದವು. ತನ್ನ ಸುತ್ತಲಿನ ಕ್ಷುದ್ರತೆ ತನ್ನನ್ನು ನಾಶ ಮಾಡದೆ ಬಿಡದು ಎಂಬ ಭಾವನೆ ಬಲವಾಗುತ್ತ ತಾನು ತೀರ ದುರ್ಬಲ ಎಂದು ಅನ್ನಿಸತೊಡಗಿತು. ತನ್ನ ಬೆರಳನ್ನು ಕತ್ತರಿಸಿ ಹಾಕೆಬೇಕೆನ್ನಿಸಿ ಪೆಟ್ಟಿಗೆಯಿಂದ ಬ್ಲೇಡ್ ತೆಗೆದ. ಈಗ ಅಂಜದೆ ಬೆರಳು ಕತ್ತರಿಸಿಕೊಳ್ಳಬಲ್ಲೆನಾದರೆ ನಾನು ಎಲ್ಲಕ್ಕಿಂತ ಗಟ್ಟಿ ಎಂದರ್ಥ ಎಂದು ಬೆರಳು ಕೊಯ್ಯಲು ಸಿದ್ಧನಾಗುತ್ತಿದ್ದಂತೆಯೇ ಪಕ್ಕದ ಮನೆಯ ಹೆಂಗಸೊಬ್ಬಳು “ಕೇಳಿದಿರಾ ಸಾವಿತ್ರಮ್ಮ” ಎಂದು ಒಳಗೆ ನುಗ್ಗಿ “ಅರಸಾಳಲ್ಲಿ ಹೋಟೆಲಿಟ್ಟುಕೊಂಡಿದ್ದರಲ್ಲ ಉಡುಪರು -ಅವರ ಹೋಟೆಲಿಗೆ ಬೆಂಕಿ ಬಿತ್ತಂತೆ. ಅವರ ಮೈ ಕೈಯೆಲ್ಲ ಸುಟ್ಟು ಆಸ್ಪತ್ರೆಗೆ ಸೇರಿಸಿದ್ದಾರಂತೆ” ಎಂದಳು. +ಕೃಷ್ಣಪ್ಪನಿಗೆ ಇದನ್ನು ಕೇಳುತ್ತಿದ್ದಂತೆಯೆ ತನ್ನ ಶಾಪ ನೆನಪಾಗಿ ತಾನು ದೈವಾಂಶಸಂಭೂತ ಎನ್ನಿಸಿತು. ಶಾಪದ ಪ್ರಕಾರ ಒಂದು ತಿಂಗಳಾಗಬೇಕಿತ್ತು. ಈಗ ತಿಂಗಳ ಮೇಲೆ ಹತ್ತು ದಿನಗಳಾಗಿದ್ದವು. ಕೃಷ್ಣಪ್ಪನ ಉದ್ವೇಗದಲ್ಲಿ ಇದು ಅವನನ್ನು ಬಾಧಿಸಲಿಲ್ಲ. ತಾನು ದೇವಾಂಶಸಂಭೂತ, ಈ ಅಂಶ ಬೆಳೆದು ತಾನು ದೇವರೇ ಆಗಿಬಿಡಬೇಕು ಎಂದು ಗಹಗಹಿಸಿ ನಕ್ಕ. ಪಕ್ಕದ ಮನೆ ಹೆಂಗಸು, ಸಾವಿತ್ರಮ್ಮ ನೋಡುತ್ತಿದ್ದಂತೆಯೇ ಪೆನ್ಸಿಲ್ ಕೆತ್ತುವಂತೆ ಕಾಲಿನ ಕಿರುಬೆರಳನ್ನು ಕೆತ್ತಿದ. ಅದರಿಂದ ರಕ್ತ ಚಿಮ್ಮುವಾಗ ನಗುತ್ತಲೇ ಇದ್ದ. +ಅಲ್ಲಿಂದ ಶುರುವಾಯಿತು, ಕೃಷ್ಣಪ್ಪನ ಹುಚ್ಚು. ಮಹೇಶ್ವರಯ್ಯನಂತೆ ನಡುಮನೆಯಲ್ಲಿ ಕೂತು ರಂಗೋಲೆಯಿಂದ ದೊಡ್ಡದೊಂದು ಮಂಗಳ ಬರೆದು ಅದನ್ನು ಅರಿಸಿನ ಕುಂಕುಮದಿಂದ ತುಂಬಿದ. ನಡುವೆ ಒಂದು ಬೆಳಗಿದ ಗಿಂಡಿಯಿಟ್ಟು ದೇವಿಯನ್ನು ಪ್ರತಿಷ್ಠಾಪಿಸಿದ. ಬರೀ ಕೌಪೀನ ಧರಿಸಿ ಕೂತು ಮಹೇಶ್ವರಯ್ಯ ಕೊಟ್ಟಿದ್ದ ಸೌಂದರ್ಯಲಹರಿಯನ್ನು ಓದಲು ಪ್ರಾರಂಭಿಸಿದ. ಶೂದ್ರರು ಮಂತ್ರ ಹೇಳುವುದೇ ಎಂದು ಸಾವಿತ್ರಮ್ಮ ರೇಗಿದಳು. ಹೆದರಿದಳು. ಸ್ಪಷ್ಟವಾಗಿ ಮಂತ್ರೋಚ್ಚಾರ ಮಾಡುತ್ತಿದ್ದ ಅವನ ಹತ್ತಿರ ಹೋಗಲಾರದೆ ಕಂಗಾಲಾಗಿ ನಿಂತಳು. ಸ್ಕೂಲಿನಿಂದ ಬಂದ ಮಕ್ಕಳನ್ನು ಹಿತ್ತಲಿಂದಲೇ ಅಡಿಗೆ ಮನೆಗೆ ಕರೆದು ಕೃಷ್ಣಪ್ಪನ ಹತ್ತಿರ ಹೋಗಬೇಡೆಂದಳು. ಗಣಮಗನಂತೆ ಕೂತ ಕೃಷ್ಣಪ್ಪನನ್ನು ಕಂಡು ಅವಳ ಗಂಡ ರಂಗಪ್ಪನೂ ತಬ್ಬಿಬ್ಬಾದ. ತೋರಣ ಕಟ್ಟಿ ಎಂದು ಕೃಷ್ಣಪ್ಪ ನಡುವೆ ಕೂಗಿ ಹೇಳಿದಾಗ ರಂಗಪ್ಪನೇ ಸ್ವತಃ ಹೋಗಿ ಮಾವಿನ ಎಲೆ ತಂದು ತೋರಣ ಕಟ್ಟಿದ. +ಯಾರೂ ನಡುಮನೆಯಲ್ಲಿ ಸುಳಿಯಲಿಲ್ಲ. ಹೀಗೆ ಮೂರು ದಿನ ಪೂಜೆಗೆ ಸಾವಿತ್ರಮ್ಮ ತುಟಿಪಿಟಕ್ಕೆನ್ನದೆ ಮಡಿಯಾಗಿ ಪಾಯಸ ಕೋಸಂಬರಿಗಳ ನೈವೇದ್ಯ ತಯಾರಿಸಿದಳು. ಈ ಅನಿರೀಕ್ಷಿತವಾದ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬುದು ಅಕ್ಕಪಕ್ಕದ ಯಾರಿಗೂ ತಿಳಿಯಲಿಲ್ಲ. ಕಛೇರಿಯಲ್ಲಿದ್ದ ಉಳಿದ ಬ್ರಾಹ್ಮಣ ಗುಮಾಸ್ತರು ಇದರಿಂದ ನಿನಗೆ ಕೆಡುಕಾಗುತ್ತೆ ಎಂದು ರಂಗಪ್ಪನನ್ನು ಹೆದರಿಸಿದರು. ಇನ್ನು ಕೆಲವರು ದ್ವಿಜನಲ್ಲದವನು ದೇವಿಯನ್ನು ಆವಾಹಿಸುವಿದೇ ಶಕ್ಯವಲ್ಲೆಂದರು. ಈ ದೀಕ್ಷೆಯನ್ನು ಕೃಷ್ಣಪ್ಪನಿಗೆ ಕೊಟ್ಟಿರಬಹುದಾದ ಮಹೇಶ್ವರಯ್ಯ ಯಾವ ಜನ ಎಂಬ ಊಹಾಪೋಹಗಳಿಗೆ ಸಮಂಜಸ ಉತ್ತರವಿರಲಿಲ್ಲ. ಬಂಗಾಳದ ಶಕ್ತಿಪಂಥದ ಉಪಾಸನೆ ಇದಾದಲ್ಲಿ ಕೃಷ್ಣಪ್ಪನಿಗೂ ಉಳಿದವರಿಗೂ ಕೆಡುಕು ಕಟ್ಟಿಟ್ಟದ್ದೆ ಎಂದ -ಮಂತ್ರಗಳ ಅಲ್ಪಸ್ವಲ್ಪ ಪರಿಚಯವಿದ್ದ ಗುಮಾಸ್ತನೊಬ್ಬ. ರಂಗಪ್ಪನ ಜೊತೆ ಬಂದು, ಹೊರಗೆ ನಿಂತು ಮಂತ್ರ ಕೇಳಿಸಿಕೊಂಡು ಅರ್ಥಗರ್ಭಿತವಾಗಿ ಇದು ತಾಂತ್ರಿಕ ಉಪಾಸನೆ ಎಂದು ತಲೆಯಾಡಿಸಿದ. ರಂಗಪ್ಪ ಇದರ ನಿವಾರಣೆಗೆ ಉಪಾಯವೇನೆಂದು ಕೈಮುಗಿದು ಬೇಡಿದ. “ಇದೆ -ನೋಡಿ ಹೇಳ್ತೀನಿ. ಆವಾಹನೆ ಮಾಡಿದ ಮೇಲೆ ಸರಿಯಾದ ವಿಸರ್ಜನೆಯೂ ಆಗಬೇಕು. ಈ ಮಾಟಮಂತ್ರಗಳು ನೋಡಿ ಅದಕ್ಕೆ ಕೈ ಹಾಕಿದವರನ್ನೆ ನುಂಗಿಬಿಡುತ್ತವೆ” ಎಂದ. ಆತ ನಿಜವಾಗಿ ಹೆದರಿದಂತೆ ಕಂಡು ರಂಗಪ್ಪ ಕಂಗಾಲಾದ. +ಕೃಷ್ಣಪ್ಪ ನಿದ್ದೆಯನ್ನೂ ಮಾಡುತ್ತಿರಲಿಲ್ಲ. ದಿನಕ್ಕೆ ಮೂರು ಸಾರಿ ಬಾವಿಯಿಂದ ನೀರು ಸೇದಿ ತಲೆ ಮೇಲೆ ಸುರಿದುಕೊಂಡು ಕೂತುಬಿಡುತ್ತಿದ್ದ. ಗಟ್ಟಿಯಾಗಿ ಮಂತ್ರಗಳನ್ನು ಹಗಲು ರಾತ್ರೆ ಓದುತ್ತಲೇ ಇರುತ್ತಿದ್ದ. ನಿದ್ದೆ ಮಾಡುತ್ತಿರಲಿಲ್ಲ. ದೇವಿಗೆ ನೈವೇದ್ಯ ಮಾಡಿದ ಪಾಯಸವನ್ನು ಚೂರು ತಿನ್ನುತ್ತಿದ್ದ -ಅಷ್ಟೆ. ರಂಗಪ್ಪ ಪ್ರತಿದಿನ ಬೆಳಿಗ್ಗೆ ಹೋಗಿ ಒಂದು ಬುಟ್ಟಿ ತುಂಬ ಹೂವು ತರುತ್ತಿದ್ದ -ದೇವಿಗೆ ಪ್ರಿಯವಾದ ದಾಸವಾಳ ಹೂವಿಗಾಗಿ ನಾಲ್ಕು ಮೈಲಿ ಹೋಗಿ ಬರುತ್ತಿದ್ದ. ಇಡೀ ಮನೆ ಕೃಷ್ಣಪ್ಪ ಹೇಳಿದಂತೆ ಮೂರು ದಿನ ನಡೆದುಕೊಂಡಿತು. +ದೈವಾರಾಧನೆಯನ್ನು ಬುದ್ಧಿಪೂರ್ವಕವಾಗಿ ನಿರಾಕರಿಸುವ ಕೃಷ್ಣಪ್ಪನಿಗೆ ಈಗಲೂ ಆಗ ತಾನು ಪಡೆದ ಸ್ವಚ್ಛಂದ ಸ್ಥಿತಿ ರಹಸ್ಯಮಯವಾಗಿ ಕಾಣುತ್ತದೆ. ಮೂರು ದಿನ ಹೀಗೆ ದೇವಿಪೂಜೆ ಮಾಡಿದ ಮೇಲೆ ತನ್ನ ಮರ್ತ್ಯ ಶರೀರಕ್ಕಿಂತ ತಾನು ಬೇರೆ ಎನ್ನಿಸಿತಂತೆ. ಅನ್ನಿಸಿದ್ದೇ ಪೂಜೆಯನ್ನು ಬಿಟ್ಟು ಎದ್ದು, ತೊಟ್ಟ ಕೌಪೀನವನ್ನು ಬಿಚ್ಚಿ ಹಾಕಿ ಹೊರಬಂದನಂತೆ. ಬೆತ್ತಲೆಯಾಗಿ ಬೀದಿಯಲ್ಲಿ ನಡೆದನಂತೆ. ಆಗ ಅರ್ಧ ಭಯ, ಅರ್ಧ ಗೌರವಗಳಲ್ಲಿ ಜನ ತನ್ನನ್ನು ನೋಡುವಾಗ ಅವನ ಉನ್ಮಾದ ಹೆಚ್ಚಾಗಿ ಊರಿನ ತುದಿಯಲ್ಲಿದ್ದ ಗಣಪತಿ ಕಟ್ಟೆಯ ಮೇಲೆ ಹೋಗಿ ಕೂತು ಬಿಟ್ಟನಂತೆ. +ಮುಂದಿನದು ಕೃಷ್ಣಪ್ಪನಿಗೆ ನೆನಪಿಲ್ಲ. ಮಹೇಶ್ವರಯ್ಯ ಎಲ್ಲಿಂದ ಬಂದರೋ, ತನ್ನನ್ನು ಒಯ್ದು ಏನು ಚಿಕಿತ್ಸೆ ಮಾಡಿಸಿದರೋ -ಕೃಷ್ಣಪ್ಪ ಅಂತೂ ಕೊನೆಗೆ ಸರಿಹೋದ. +* +* +* +ಇದು ಹುಚ್ಚಾದರೆ ಕೊನೆಯನ್ನು ಎದುರು ನೋಡುತ್ತ ಮಲಗಿರುವ ಕೃಷ್ಣಪ್ಪನಿಗೆ ಇಂಥ ಉನ್ಮಾದ ಈಗಲೂ ಶಕ್ಯವಾಗಿದೆಯೆಂದೇ ಹೇಳಬೇಕು. ಅವನನ್ನು ತಿರಸ್ಕಾರದಿಂದ ನೋಡುವುದು ಯಾರಿಗೂ ಸಾಧ್ಯವಿಲ್ಲ. ಅವನ ಹೆಸರು ಕೂಡ ಅವನ ಮಿತಿಯನ್ನು ಸಾರುವಂತಿತ್ತಲ್ಲವೆ? ರಿಜಿಸ್ಟರಿನಲ್ಲಿ ಅವನ ಹೆಸರು ಕೃಷ್ಣಪ್ಪಗೌಡ. “ಕೃಷ್ಣಪ್ಪಗೌಡ” ಎಂದರೆ ಸಲಿಗೆಯನ್ನೂ, ಅವನು ಶೂದ್ರ ಎಂಬುದನ್ನೂ ಸೂಚಿಸುವಂತಿತ್ತಾದ್ದರಿಂದ ಅವನನ್ನು ಹೇಗೆ ಕರೆಯಬೇಕೆಂಬುದೇ ಅವನ ಉಪಾಧ್ಯಾಯರಿಗೆ ಸಮಸ್ಯೆಯಾಗುತ್ತಿತ್ತು. ಕೃಷ್ಣಪ್ಪ ಎಂದರೆ ತೀರ ಸಲಿಗೆಯಾಗುತ್ತಿತ್ತು. ಹಾಗಾಗಿ ಎಲ್ಲರೂ ಆತನಿಗೊಂದು ಹೆಸರೇ ಇಲ್ಲವೆನ್ನುವಂತೆ “ಗೌಡರೇ” ಎಂದು ಕರೆಯುವುದು. +ಅವನು ತನ್ನ ಕ್ಷುದ್ರತೆಯನ್ನು ಹೀಗೆ ಹಠಾತ್ತನೆ ಮೀರಿ ಎಲ್ಲರಿಗೂ ದಂಗುಬಡಿಸಿಬಿಡುತ್ತಿದ್ದು, ಒಮ್ಮೆ ರಾಜ್ಯಪಾಲರ ಭಾಷಣದಲ್ಲಿ ದೇಶದ ಕ್ಷಾಮ ಪರಿಸ್ಥಿತಿ ಬಗ್ಗೆ ಯಾವ ಕಾಳಜಿಯೂ ವ್ಯಕ್ತವಾಗಿಲ್ಲವೆಂದು ಕೋಪೋದ್ರಿಕ್ತನಾಗಿ, ಭಾಷಣದ ಪ್ರತಿಯನ್ನು ನೆಲದ ಮೇಲೆ ಹಾಕಿ, ಕಾಲಿನಿಂದ ಮೆಟ್ಟಿ ನಿಂತ ಅವನ ಉಗ್ರಮೂರ್ತಿಯನ್ನು ಉಳಿದ ಪ್ರಜಾಪ್ರತಿನಿಧಿಗಳು ಒಂದು ನಿಮಿಷ ಏನು ಮಾಡುವುದು ತಿಳಿಯದೆ ಎವೆಯಿಕ್ಕದೆ ನೋಡಿದ್ದರು. ನಂತರ ಸಭೆಗೆ ಅವಮಾನ ಇತ್ಯಾದಿ ಕೂಗಾಡಿ ಅವನನ್ನು ಹೊರಗೆ ಹಾಕಿದ್ದರು. ಖದೀಮರಿಗೆ ಮಾತ್ರ ಸೌಜನ್ಯ ಅಗತ್ಯ ಎಂದು ಕೃಷ್ಣಪ್ಪನ ನಿಲುವು. ಆದರೆ ತನಗೆ ಪರಿಚಿತನೊಬ್ಬ ವೈರಿಯಾಗಿರಲಿ, ಅವನು ಖಾಹಿಲೆಯಿಂದ ಮಲಗಿದ್ದಾನೆಂದು ಗೊತ್ತಾದರೆ ಹಣ್ಣು ಕಟ್ಟಿಸಿಕೊಂಡು ಹೋಗಿ ಅವನನ್ನು ನೋಡುತ್ತಿದ್ದ -ಹೀಗೆ ಕೃಷ್ಣಪ್ಪ ಬಂದು ನೋಡಿದರೆ ರೋಗಿಗಳು ಅತ್ಯಂತ ಹರ್ಷಿತರಾಗಿಬಿಡುತ್ತಿದ್ದರು. +ಒಂದು ಬೆಳಿಗ್ಗೆ ಕೃಷ್ಣಪ್ಪನಿಗೆ ಉಚ್ಚೆಗೆ ಅವಸರವಾಯಿತು. ಆದರೆ ಏಳಲಾರ. ’ಸೀತ, ಸೀತಾ’ ಎಂದು ಹೆಂಡತಿಯನ್ನು ಪ್ಯಾನ್ ಕೊಡಲು ಕೂಗಿದ. ಅವಳು ಸ್ನಾನ ಮಾಡುತ್ತಿದ್ದಿರಬೇಕು. ದುರ್ಬಲವಾದ ದೇಹವಲ್ಲವೆ, ತಡೆಯಲಾರದೆ ಮಲಗಿದಲ್ಲೆ ಉಚ್ಚೆ ಮಾಡಿಕೊಂಡ. ಅವಳು ಸ್ನಾನ ಮುಗಿಸಿಕೊಂಡು ಬಂದು ಖಿನ್ನವಾಗಿದ್ದ ಅವನ ಮುಖ ಕಂಡು ’ಏನು?’ ಅಂದಳು. ಕೃಷ್ಣಪ್ಪ ಹೇಳಿಕೊಳ್ಳದಿದ್ದರೂ ವಾಸನೆಯಿಂಅದ್ ಆಕೆಗೆ ತಿಳಿಯಿತು. ಇದರಿಂದ ಆಕೆಗೆ ಸಂತೋಷವಾಗಿರಬೇಕೆಂದು ಊಹಿಸಿ ಕೃಷ್ಣಪ್ಪನಿಗೆ ಕೋಪ ಬಂತು. ಹೆಂಡತಿ ಲಗುಬಗೆಯಿಂದ ಬೇರೆ ಹಾಸಿಗೆಗೆ ಅವನನ್ನು ಎತ್ತಿ ವರ್ಗಾಯಿಸುತ್ತ “ನನ್ನನ್ನು ಕಂಡರೆ ಸಿಡಿಸಿಡಿ ಅಂತೀರಲ್ಲ -ಬೇರೆ ಯಾರು ನಿಮ್ಮ ಉಚ್ಚೆ ಹೇಲು ಬಳೀತಿದರು ಹೇಳಿ? ನಿಮಗಾಗಿ ಕಾದುಕೊಂಡಿದ್ದಳು ಅಂತೀರಲ್ಲ, ಆ ಆಕಿ ಈ ಕೆಲಸ ಮಾಡುತ್ತಿದ್ದಳ? ಅಥವಾ ಆ ಲೂಸಿಯೊ ಪೂಸಿಯೊ ಇದ್ದಳಂತಲ್ಲ ಅವಳು ಮಾಡ್ತಿದ್ದಳ?” ಹೆಂಡತಿ ರಮಿಸಲು ಆಡಿದ ಮಾತೆಂದು ತಿಳಿದಿ ಕೃಷ್ಣಪ್ಪ ಒಳಗಿಂದೊಳಗೆ ಇನ್ನಷ್ಟು ಉರಿದ. ಈ ಹೆಂಗಸು ತನ್ನ ಸೇವೆಯಲ್ಲಿ ಕೊನೆಗೂ ತನ್ನನ್ನು ಗೆಲ್ಲುತ್ತಿದೆ ಎನ್ನಿಸಿತು. ಗೌರಿ ದೇಶಪಾಂಡೆ ಮತ್ತು ಲೂಸಿನಾರ ವಿಷಯವನ್ನು ಹೆಂಡತಿಗೆ ಹೇಳಿದವನೂ ಕೃಷ್ಣಪ್ಪನೆ. ಅಂಥ ಸಂಗತಿಗಳನ್ನು ಹೇಳಿ ಅವಳ ಸಣ್ಣತನವನ್ನು ಗೆಲ್ಲಲು ಅವನು ಪ್ರಯತ್ನಿಸಿದ್ದ. ಅವನು ಮಾತಾಡುವಾಗ ಅವಳು ಹಾ ಹೂ ಅನ್ನುವವಳಲ್ಲ. “ಏನೊ ನಂಗದೆಲ್ಲ ತಿಳೀದು. ನಿಮ್ಮ ಮಧ್ಯಾಹ್ನದ ಔಸ್ತಿ ತಗೊಂಡ್ರ” ಎನ್ನುತ್ತಾಳೆ. ಅಥವಾ ಪಕ್ಕದ ಮನೆ ಹೆಂಗಸು ಮ್ಯಾಟಿನಿಗೆ ಕರೆದಿದಾರೆ ಹೋಗಿ ಬರ್ತೇನೆ ಅನ್ನುತ್ತಾಳೆ. ಗೃಹಕೃತ್ಯದ ನಿತ್ಯದ ಉಪಾದ್ವ್ಯಾಪಗಳು, ಹೆಚ್ಚೆಂದರೆ ಬ್ಯಾಂಕಿನ ಉಳಿದ ಕೆಲಸಗಾರರ ಮದುವೆ, ಮುಂಜಿ, ಮಕ್ಕಳು, ಬಾಣಂತನ ಇತ್ಯಾದಿ ಸಂಗತಿಗಳು -ಇಷ್ಟೇ ಅವಳ ಪ್ರಪಂಚ. ಇವಳ ಜೊತೆ ಕೃಷ್ಣಪ್ಪ ಮದುವೆಯಾದ ಒಬ್ಬ ಮಗಳನ್ನು ಪಡೆದಿದ್ದ -ಅಷ್ಟೇ ಆಮೇಲೆ ದೇಹಸಂಬಂಧವನ್ನೂ ಇಟ್ಟುಕೊಳ್ಳಲಾರದೆ ಹೋಗಿದ್ದ. ಆದರೆ ಈಗ ಅವನ ಮೈ ತೊಳೆಯುವುದರಿಂದ ಹಿಡಿದು , ಉಚ್ಚೆ ಹೇಲು ಎತ್ತುವವಳೂ ಅವಳೆ. ಅವಳು ಗೆಲ್ಲುತ್ತಿದ್ದಾಳೆ ಎಂದು ಕೃಷ್ಣಪ್ಪನಿಗೆ ಗೊತ್ತಾಗಿತ್ತು. ತಾನು ಕ್ರೂರವಾಗಿ ನಡೆದುಕೊಂಡಾಗ ಈಚೆಗೆ ಅವಳು ಶಾಂತವಾಗಿ ಸಹಿಸಿಕೊಂಡಿರುವುದನ್ನು ಕಂಡಾಗಲಂತೂ ಕೃಷ್ಣಪ್ಪನಿಗೆ ತನ್ನ ವ್ಯಕ್ತಿತವೇ ಪೊಳ್ಳಾಗಿಬಿಡುತ್ತಿದೆ ಎಂದು ಭಯವಾಗುತ್ತಿತ್ತು. +ಪ್ರಾರಂಭದಿಂದಲೇ ಅವಳು ಗೆದ್ದಿದ್ದಳು. ಇಲ್ಲದಿದ್ದಲ್ಲಿ ಲೂಸಿನಾ ಮತ್ತು ಗೌರಿಯರ ಕತೆಯನ್ನು ಹೆಂಡತಿಗೆ ಅವನು ಹೇಳಿ ಅವಳ ಗೌರವ ಸಂಪಾದಿಸಲು ಪ್ರಯತ್ನ ಪಡಬೇಕಾಗಿರಲಿಲ್ಲ. ಹೆಂಡತಿಯನ್ನ ಸಂಭೋಗಿಸುವ ಮುಂಚೆ ಈ ತನ್ನ ಮೈ ಈ ತನ್ನ ಮನಸ್ಸು ಸಾಮಾನ್ಯದ್ದಲ್ಲ ಎಂದು ಅವಳಿಗೆ ಅನ್ನಿಸುವಂತೆ ಮಾಡುವ ಕೃಷ್ಣಪ್ಪನ ಉಪಾಯಗಳು ಸೀತೆಯ ದಡ್ಡತನದಿಂದಾಗಿ ಅವನಿಗೇ ಹಾಸ್ಯಾಸ್ಪದವಾಗಿ ಕಂಡುಬಿಡುತ್ತಿದ್ದವು. ಸಾವಿತ್ರಮ್ಮ ತಾನು ಬರೆಯುತ್ತಿದ್ದ ದಿನಚರಿ ಸುಟ್ಟಿದ್ದನ್ನು ಹೇಳಿದಾಗ ’ದಿನಚರಿಯಲ್ಲೇನು ಮಹಾ ಇರೋಕೆ ಸಾಧ್ಯ’ ಎಂದು ಅವಳು ಆಶ್ಚರ್ಯಪಟ್ಟಿದ್ದಳು. ನಿಧಾನವಾಗಿ ಕಚ್ಚೆ ಕಟ್ಟಿದ ಪಂಚೆ ಅಂಗಿಗಳನ್ನು ಬಿಚ್ಚುತ್ತ ಅವನು ಆಡುತ್ತಿದ್ದ ಮಾತುಗಳಿಂದ ಬೋರಾದ ಸೀತೆ, “ಬೇಗ ಬನ್ನಿ. ಹೆಚ್ಚು ಹೊತ್ತು ಸತಾಯಿಸಬೇಡಿ ನನ್ನ. ಬೆಳಿಗ್ಗೆ ಒಂಬತ್ತು ಗಂಟೆಗೇ ಬ್ಯಾಂಕಿಗೆ ಹೋಗಬೇಕಲ್ಲ” ಎಂದು ರಮಿಸುವಂತೆ ನಕ್ಕಾಗ ಕೃಷ್ಣಪ್ಪನಿಗೆ ಅವಳ ಮೇಲಿನ ಆಸೆಯೇ ಬತ್ತಿಬಿಡುತ್ತಿತ್ತು. ಮೂಲದಲ್ಲಿ ಇವಳ ಮಟ್ಟದವನೇ ನಾನು ಇರಬೇಕು. ಇಲ್ಲದಿದ್ದಲ್ಲಿ ಇವಳನ್ನು ಮದುವೆಯಾಗುತ್ತಿದ್ದೆನೆ? ನನ್ನ ನಿಜವಾದ ಮಟ್ಟ ನಾನು ಮುಟ್ಟಿದೆ ಎಂದು ಖಿನ್ನನಾಗಿ ಮಲಗುತ್ತಿದ್ದ. ಅಥವಾ ಅವಳ ಸಂಗ ಮಾಡಬೇಕೆನ್ನಿಸಿದಾಗ ಅದಕ್ಕೆ ಮುಂಚೆ ಚೆನ್ನಾಗಿ ಕುಡಿದುಬಿಡುತ್ತಿದ್ದ. +* +* +* +ಕೃಷ್ಣಪ್ಪ ಬಿ‌ಎ ಓದುವಾಗ ಕಾಲೇಜಿನ ಕೊನೆ ವರ್ಷದಲ್ಲಿ ಅವನ ಸಹಪಾಠಿಯಾಗಿದ್ದ ಗೌರಿ ದೇಶಪಾಂಡೆ ಜೊತೆ ಅವನ ಸಖ್ಯ ಶುರುವಾಯಿತು. ಸ್ಕೂಲಿಗೆ ಲೇಟಾಗಿ ಸೇರಿದ್ದರಿಂದ ಕೃಷ್ಣಪ್ಪ ಅವಳಿಗಿಂತ ಏಳೆಂಟು ವರ್ಷಗಳಾದರೂ ಹಿರಿಯ. ನಲವತ್ತೆರಡು, ನಲವತ್ತೇಳರ ಚಳುವಳಿಗಳಲ್ಲಿ ಕೃಷ್ಣಪ್ಪ ವಿದ್ಯಾರ್ಥಿ ನಾಯಕನಾಗಿದ್ದವನಾದ್ದರಿಂದ ಹುಡುಗಿಯರಿಗೆಲ್ಲ ಅವನೊಂದು ಲೆಜೆಂಡು. ಅವನ ಸಿಟ್ಟು, ಗರ್ವ, ಅವನಿಗೆ ಹುಚ್ಚು ಹಿಡಿದ ಕ್ರಮ ಇತ್ಯಾದಿಗಳನ್ನು ತಿಳಿದಿದ್ದ ಹುಡುಗಿಯರಲ್ಲಿ ಸೂಕ್ಷ್ಮ ಮನಸ್ಸಿನವರು ಅವನನ್ನು ತಮ್ಮ ಅಧ್ಯಾಪಕರಿಗಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದರು. ಅವನು ಕ್ಲಾಸಿಗೆ ಬರುವುದೇ ಕಡಿಮೆ. ಬಂದಾಗ ಅಧ್ಯಾಪಕರೂ ತಮ್ಮ ಚಿಲ್ಲರೆ ಹಾಸ್ಯಗಳನ್ನು ಮಾಡದೆ ಗಂಭೀರವಾಗಿ ಪಾಠ ಮಾಡುತ್ತಿದ್ದರು. ಪರೀಕ್ಷೆ ಗಿರೀಕ್ಷೆಗಳೆಂದು ತಲೆ ಕೆಡಿಸಿಕೊಳ್ಳದ ಕೃಷ್ಣಪ್ಪ ಅಸಾಮಾನ್ಯ ಬುದ್ಧಿಶಾಲಿ. ಸ್ವತಂತ್ರವಾಗಿ ಯೋಚಿಸುತ್ತಾನೆ, ವಯಸ್ಸಾದವ ಇತ್ಯಾದಿ ಕಾರಣಗಳಿಂದ ಅಧ್ಯಾಪಕರು ಅವನ ಬಗ್ಗೆ ಮುಜುಗರ ಪಡುತ್ತಿದ್ದರು. +ಕೃಷ್ಣಪ್ಪ ಕರ್ರನೆಯ ಗಟ್ಟಿಮುಟ್ಟಾದ ಆಳು. ಶುಭ್ರವಾದ ಖಾದಿ ಪಂಚೆಯನ್ನುಟ್ಟು ಜುಬ್ಬ ತೊಟ್ಟು ಕಾಲೇಜಿಗೆ ಬರುತ್ತಿದ್ದ. ಈ ಬಿಳಿಯ ಬಟ್ಟೆಯಲ್ಲಿ ಅವನು ಮಾಟವಾಗಿ ಕಡೆದು ನಿಲ್ಲಿಸಿದ ಕಪ್ಪು ವಿಗ್ರಹದಂತೆ ಕಾಣುತ್ತಿದ್ದ. ಅವನ ಪ್ರಶಾಂತ ಮುಖ ದುರುಗುಟ್ಟಿ ನೋಡುವಾಗ ಮಾತ್ರ ಕ್ರೂರವಾಗಿ ಭಯ ಹುಟ್ಟಿಸುವಂತೆ ಇರುತ್ತಿತ್ತು. ಮಾತು ಮೃದು -ದಪ್ಪವಾದ ಹಾಡುಗಾರನ ಗಂಟಲು ಅವನದು. ಆಫ಼್ರಿಕಾದ ಪ್ರಿನ್ಸ್ ಎಂದು ಹುಡುಗಿಯರು ಅವನನ್ನು ಕರೆಯೋದು. ’ಪ್ರಿನ್ಸ್ ಬಂದಿದಾನೆ ಕಣೆ ಇವತ್ತು’ ಎಂದು ಅವನನ್ನು ಅಪರೂಪವಾಗಿ ಕಂಡಾಗ ಹುಡುಗಿಯರು ಗೆಲುವಾಗುತ್ತಿದ್ದರು. +ಗೌರಿ ದೇಶಪಾಂಡೆ ಕಾಲೇಜಿನಲ್ಲಿ ಹೆಸರಾದ ನರ್ತಕಿ. ಸಂಗೀತಗಾರ್ತಿ. ಕ್ಲಾಸಿನಲ್ಲಿ ಮೊದಲನೆಯವಳು. ಅವಳಿಗೆ ಕೃಷ್ಣಪ್ಪನೆಂದರೆ ಇಷ್ಟವೆಂದು ಊಹಿಸಿದ್ದ ಜಾಣೆಯರು ಅವಳನ್ನು ರಾಧೆಯೆಂದು ಕಿಚಾಯಿಸುತ್ತಿದ್ದರು. ಎದುರಿಗಲ್ಲ -ಹಿಂದೆ. ಇದಕ್ಕೆ ಕಾರಣ ಗೌರಿ ಯಾರ ಜೊತೆಯೂ ಹೆಚ್ಚು ಬಳಸದೆ ಒಂಟಿಯಾಗಿರುತ್ತಿದ್ದುದು. +ಇದರಿಂದ ಉಳಿದ ಹುಡುಗಿಯರಿಗೆ ಆಶ್ಚರ್ಯವಾಗಲು ಕಾರಣವಿತ್ತು. ಗೌರಿಯ ತಾಯಿ ಗಂಡನನ್ನು ಬಿಟ್ಟು ಓಡಿ ಬಂದು ಒಂದು ಅಡಿಕೆ ಮಂಡಿ ಸಾಹುಕಾರನಾದ ನಂಜಪ್ಪನ ಸೂಳೆಯಾಗಿ ಬದುಕುತ್ತಿದ್ದಾಳೆಂದು ಗೊತ್ತಿದ್ದೂ ಗೌರಿಯನ್ನು ನಿಕೃಷ್ಟವಾಗಿ ಕಾಣುವುದು ಸಾಧ್ಯವಿರಲಿಲ್ಲ -ಗೌರಿ ಅಷ್ಟು ಗಂಭೀರವಾಗಿರುವಳು. ಸಾಹುಕಾರ ನಂಜಪ್ಪ ಗೌರಿಯ ತಾಯಿ ಅನಸೂಯಾ ಬಾಯಿಯನ್ನು ಬಂಗಲೆ ಕಟ್ಟಿ ಇರಿಸಿದ್ದ. ಅವಳ ಓಡಾಟಕ್ಕೆಂದು ಪ್ರತ್ಯೇಕವಾಗಿ ಒಂದು ಕಾರ್ ಮತ್ತು ಡ್ರೈವರನ್ನೂ ಇಟ್ಟಿದ್ದ. ಊಟಿಯ ಗುಲಾಬಿಗಳನ್ನು ಬೆಳೆಸಿದ್ದ ವಿಶಾಲವಾದ ಕಾಂಪೌಂಡಿನ ಆಕೆಯ ಮನೆ ಊರಲ್ಲಿ ಪ್ರಸಿದ್ಧವಾದದ್ದು. ಅನಸೂಯಾ ಬಾಯಿಯನ್ನು ಹೊರಗೆ ನೋಡಿದವರೇ ಕಡಿಮೆ. ಅವಳನ್ನು ನೋಡದವರೂ ಅವಳ ಸೌಂದರ್ಯವನ್ನು ಹೊಗಳುತ್ತಿದ್ದರು. ಗೌರಿಯೇ ಇಷ್ಟು ಸುಂದರಿಯಾಗಿರಬೇಕಾದರೆ ಅವಳ ತಾಯಿಯೆಷ್ಟು ಇರಬೇಕೆಂದು ಊಹಿಸುತ್ತಿದ್ದರು. +ಅನಸೂಯಾಬಾಯಿ ಕಾರಿನಲ್ಲಿ ಊರಿನ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿದ್ದ ಬಂಗಲೆಯಿಂದ ಕೆಮ್ಮಣ್ಣುಗುಂಡಿಗೋ, ಮಂಗಳೂರಿಗೋ ಹೋಗಲು ಮಾತ್ರ ಅವಳು ಕಾರನ್ನು ಬಳಸುವುದು. ಗೌರಿ ದೇಶಪಾಂಡೆ ಈ ಕಾರಲ್ಲೇ ನಿತ್ಯ ಕಾಲೇಜಿಗೆ ಬಂದು ಹೋಗುವುದು. ಇದರಿಂದ ಉಳಿದ ಹುಡುಗಿಯರಿಗೆ ಅವಳ ಬಗ್ಗೆ ಇನ್ನಷ್ಟು ಅಸೂಯೆ. ದೇಶಪಾಂಡೆ ಎಂಬ ಅವಳ ಕೊನೆ ಹೆಸರಿಂದಾಗಿ ಅವಳಿಗೊಬ್ಬ ಆ ಹೆಸರಿನ ತಂದೆಯಿರಬೇಕೆಂದೂ, ಅಪ್ಪನ ಜೊತೆಗೆ ಬದುಕದೆ ಯಾವನೋ ತಾಯಿಯ ಮಿಂಡನ ಜೊತೆ ಬದುಕುವ ಗೌರಿ ಎಂಥ ನತದೃಷ್ಟೆಯೆಂದೂ, ಇಷ್ಟಿದ್ದೂ ಸಭೆಯಲ್ಲಿ ಕುಣಿಯುವ ಹಾಡುವ ಹುಡುಗಿ ನಾಚಿಕೆಗೆಟ್ಟವಳೆಂದೂ ಹುಡುಗಿಯರೆಲ್ಲ ಆಡಿಕೊಳ್ಳುವರು. ಜೊತೆಗೇ ಗೌರಿಯ ವರ್ತನೆಯಿಂದ ತಬ್ಬಿಬ್ಬಾಗುವರು. +ಈ ಹುಡುಗಿಯರ ಜಗತ್ತಿಗೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ಗೌರಿ ಇರುವಳು. ಮೈಮೇಲೆ ಯಾವ ಒಡವೆಯನ್ನೂ ಧರಿಸದೆ ಬಿಳಿಯ ಸೀರೆಯುಟ್ಟು, ಬಿಳಿ ಕುಪ್ಪಸ ತೊಟ್ಟು, ತನ್ನ ಉದ್ದನೆಯ ಕಪ್ಪು ಜಡೆಗೆ ಬಿಳಿ ಗುಲಾಬಿ ಸಿಕ್ಕಿಸಿಕೊಂಡು ಅವಳು ಗಂಭೀರವಾಗಿ ಕ್ಲಾಸಲ್ಲಿ ಕೂರುವಳು. ಲೇಡೀಸ್ ರೂಮಿನಲ್ಲಿದ್ದಾಗ ಏನಾದರೊಂದು ಪುಸ್ತಕ ಹಿಡಿದು ಓದುತ್ತಿರುವಳು. ಸಾಮಾನ್ಯವಾಗಿ ಹುಡುಗಿಯರು ಪರಸ್ಪರ ಏಕವಚನದಲ್ಲಿ ಮಾತಾಡಿಕೊಂಡರೂ ತನ್ನನ್ನು ಏಕವಚನದಲ್ಲಿ ಮಾತಾಡಿಸಬಂದವರನ್ನೂ ಮೃದುವಾಗಿ ಬಹುವಚನದಲ್ಲಿ ಸಂಬೋಧಿಸಿ ತನ್ನ ದೂರವನ್ನು ಕಾಯ್ದುಕೊಳ್ಳುವಳು. ಕೃಷ್ಣಪ್ಪ ಇವಳನ್ನು ಎಂದೂ ಮಾತಾಡಿಸದಿದ್ದರೂ ತನ್ನ ಸರೀಕಳು ಎಂಬಂತೆ ಅವಳನ್ನು ನೋಡುವನು. +ಒಂದು ಸಂಜೆ ಕೃಷ್ಣಪ್ಪ ಒಂಟಿಯಾಗಿ ಕಾಲೇಜಿನ ಕಡೆ ವಾಕಿಂಗ್ ಬಂದ. ಫ಼ುಟ್‌ಬಾಲ್ ಟೀಮೊಂದು ಆಟ ಮುಗಿಸಿ ಮನೆ ಕಡೆ ಹೊರಟಿತ್ತು. ಈ ಟೀಮಿನ ಕ್ಯಾಪ್ಟನ್ ಆಗಿದ್ದ ಧಾಂಡಿಗನೊಬ್ಬ ತನ್ನ ತಂಡವನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ಗೋಡೆಯ ಮೇಲೇನೊ ಬರೆಯುತ್ತಿದ್ದ. ಎಲ್ಲರೂ ನಗುತ್ತಿದ್ದುದು ಕಂಡು ಕೃಷ್ಣಪ್ಪನ ಗಮನ ಆ ಕಡೆ ಹೋಯಿತು. ಧಾಂಡಿಗನ ಹೆಸರು ರಾಮು -ಕಾಲೇಜಿನ ಪುಂಡನೆಂದು ಪ್ರಸಿದ್ಧ. ಅವನಿಗೂ ಹೆಚ್ಚು ಕಡಿಮೆ ಕೃಷ್ಣಪ್ಪನಷ್ಟೇ ವಯಸ್ಸಾದ್ದರಿಂದ, ಅವನ ತಂದೆ ಊರಿನ ದೊಡ್ಡ ರೈಸ್ ಮಿಲ್ ಮಾಲೀಕನಾದ್ದರಿಂದ ಕೃಷ್ಣಪ್ಪನಿಗೆ ಸಿಗುತ್ತಿದ್ದ ಗೌರವ ಕಂಡರೆ ಅವನಿಗೆ ಅಸೂಯೆ. ಕೃಷ್ಣಪ್ಪ ಇಂಥ ವಿದ್ಯಾರ್ಥಿ ಪುಂಡರ ಜೊತೆ ಬೆರೆಯುತ್ತಿರಲಿಲ್ಲ -ಅವರನ್ನು ಮುಖವೆತ್ತಿ ನೋಡುತ್ತಲೂ ಇರಲಿಲ್ಲ. ತನಗಿಲ್ಲಿ ಸರೀಕರು ಯಾರೂ ಇಲ್ಲವೆನ್ನುವಂತೆಯೇ ಅವನು ಕಾಲೇಜಿನಲ್ಲಿ ನಡೆದುಕೊಳ್ಳುತ್ತಿದ್ದುದು. ಯಾರ ಜೊತೆಯೂ ಪೈಪೋಟಿ ಮಾಡದ ಕೃಷ್ಣಪ್ಪನ ಜೊತೆಗೆ ಹೇಗೆ ನಡೆದುಕೊಳ್ಳಬೇಕೆಂಬುದು ಇಂಥ ವಿದ್ಯಾರ್ಥಿಗಳಿಗೆ ತಿಳಿಯದು. +ಅವನು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದುದನ್ನು ಓದಿದ ಕೃಷ್ಣಪ್ಪನಿಗೆ ಕೋಪದಿಂದ ಮೈ ಬಿಸಿಯಾಯಿತು. “ಗೌರಿ ಸೂಳೇ ಮಗಳು. ಏ ಗೌರಿ ನಿನ್ನ ಮುತ್ತಿಗೆಷ್ಟು ಬೆಲೆ?” ಎಂಬ ತನ್ನ ವಾಕ್ಯಗಳನ್ನು ಸವಿಯುತ್ತ ನಿಂತಿದ್ದ ರಾಮುವಿನ ಬಳಿ ಹೋಗಿ ಕೃಷ್ಣಪ್ಪ, “ನೀವು ಬರೆದದ್ದನ್ನು ಅಳಿಸಿ” ಎಂದ -ಅವನ ಗಂಭೀರ ದಪ್ಪ ಸ್ವರದಲ್ಲಿ. +ರಾಮುಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. -“ಯಾರು ಬರೆದದ್ದು ಅಂತ ನಿಮಗೇನು ಗೊತ್ತರಿ?” ಎಂದ ಕ್ಷೀಣವಾಗಿ. ತಾನು ಬುದ್ಧಿವಂತಿಕೆಯ ಮಾತನ್ನಾಡಿಬಿಟ್ಟೆನೆಂದು ಅನುಯಾಯಿಗಳು ತಿಳಿಯಲಿ ಎಂದು ಹೀಯಾಳಿಸುವಂತೆ ನಕ್ಕ. +“ನೀನೇ ಬರೀತ ಇದ್ದದ್ದನ್ನ ನಾನು ನೋಡಿದೆ.” +ಕೃಷ್ಣಪ್ಪ ತನ್ನ ಸಿಟ್ಟನ್ನು ಅದುಮಿ ಗಂಭೀರವಾಗಿ ಹೇಳಿದ. +ರಾಮು ಪೈಲ್ವಾನ್. ದೊಡ್ಡ ಮೀಸೆ ಬಿಟ್ಟಿದ್ದ. ಒಳಗಿಂದೊಳಗೆ ತಾನು ಕೃಷ್ಣಪ್ಪನಿಗೆ ಹತ್ತಿರದವನಾಗಬೇಕೆಂಬ ಅಸೂಯೆ ಇದ್ದಿರಬಹುದು. ಇನ್ನೊಬ್ಬ ಗಟ್ಟಿ ಕುಳದ ಜೊತೆ ಜಗಳವಾಡಿದ ಮೇಲೆ ಸಮಸಮದ ಗೆಳೆತನ ಪ್ರಾಪ್ತಿಯಾಗುತ್ತದೆಂಬುದನ್ನು ಅರಿತ ಅನುಭವಿ ಅವನು. ಆದರೆ ಕೃಷ್ಣಪ್ಪ ತನ್ನನ್ನು ನಿಕೃಷ್ಟವಾಗಿ ಕಾಣುತ್ತಿದ್ದನೇ ಹೊರತು ಒಂದು ಹೊಡೆದು ತಿರುಗಿ ಹೊಡೆತ ತಿಂದು ಆಪ್ತನಾಗುವುದಕ್ಕೆ ತಯ್ಯಾರಿದ್ದಂತೆ ಕಾಣಲಿಲ್ಲ. ರಾಮು ಕೆಣಕುವ ಧೈರ್ಯ ಮಾಡಿದ. +“ಅವಳೇನು ನಿಮ್ಮ ರಾಧೆಯೇನ್ರಿ?” +ಈಗಲಾದರೂ ತನ್ನನ್ನು ಕೃಷ್ಣಪ್ಪ ಹೊಡೆಯಬಹುದು. ಆಗ ಅವನ ಮೇಲೆ ಬಿದ್ದು ತನ್ನ ಮರ್ಯಾದೆ ಉಳಿಸಿಕೊಳ್ಳಬಹುದು ಎಂದು ರಾಮು ಬಗೆದಿದ್ದು ವ್ಯರ್ಥವಾಯಿತು. ಕೃಷ್ಣಪ್ಪ ಅಲ್ಲೇ ಇದ್ದ ನಲ್ಲಿಯಲ್ಲಿ ತನ್ನ ಕರ್ಚೀಫ಼ನ್ನು ಒದ್ದೆ ಮಾಡಿಕೊಂಡು ಬಂದು ಗೋಡೆಯ ಮೇಲೆ ಬರೆದದ್ದನ್ನು ಒರೆಸಲು ಪ್ರಾರಂಭಿಸಿದ. ರಾಮು ಕಾದುನಿಂತ -ಇನ್ನಷ್ಟು ಕೆಣಕಲು. +“ನಿಮಗೆ ಪುಕ್ಕಟೆ ಕೊಡ್ತಾಳೇಂತ ಕಾಣುತ್ತೆ” ಎಂದ. ಅವನ ಮಾತಿಗೆ ಸಂಗಡಿಗರು ಸಿಳ್ಳೆ ಹೊಡೆದರು. ಆದರೆ ಅವರು ಯಾರೂ ಇಲ್ಲವೇ ಇಲ್ಲ ಎಂಬಂತೆ ಕೃಷ್ಣಪ್ಪ ಅವರ ಕಡೆಗೆ ನೋಡದೆ ನಡೆದೇ ಬಿಟ್ಟ. ಇನ್ನೊಮ್ಮೆ ಬರೆಯಬಹುದೆಂದು ಅಷ್ಟು ದೂರ ಹೋದ ಮೇಲೆ ಅವನಿಗೆ ಅನುಮಾನವಾಯಿತು. ತಿರುಗಿ ನೋಡಬೇಕೆಂಬ ಆಸೆಯನ್ನು ಅದುಮಿಕೊಂಡ. ತನ್ನ ಸುತ್ತಲಿನ ಕ್ಷುದ್ರತೆಯನ್ನು ತಾನು ಗೆಲ್ಲುತ್ತಿಲ್ಲವೆ; ಹಾಗೆಯೇ ಗೌರಿಯೂ ಗೆಲ್ಲಲಿ ಎನ್ನಿಸಿತು. +ಮಾರನೇ ದಿನ ಗೋಡೆ ಬರಿದಾಗಿತ್ತಾದ್ದರಿಂದ ತಾನು ಗೆದ್ದಿದ್ದೇನೆ ಎಂದು ಕೃಷ್ಣಪ್ಪ ಅಂದುಕೊಂಡರೆ ಅದರ ಮಾರನೇ ದಿನ “ಗೌರಿ ಕೃಷ್ಣಪ್ಪನಿಗೆ ಪುಕ್ಕಟೆ ಕೊಡುತ್ತಾಳೆ. ಕೃಷ್ಣಪ್ಪ ಗೌರಿಯ ತಲೆಹಿಡುಕ” ಇತ್ಯಾದಿ ಟಾರಿನಲ್ಲಿ ಕಾಣಿಸಿಕೊಂಡವು. ಇಡೀ ಕಾಲೇಜಿನಲ್ಲಿ ಈ ಬಗ್ಗೆ ಗುಸುಗುಸು ಎದ್ದಿತ್ತು. ಕ್ಲಾಸುಗಳೆಲ್ಲ ಶುರುವಾದ ಮೇಲೆ ಟಾರಿನಿಂದ ಬರೆದದ್ದನ್ನು ಕೆತ್ತಿ ತೆಗೆದು ಜವಾನರು ಈ ಬರವಣಿಗೆಯನ್ನು ಗೋಡೆಯ ಮೇಲೆ ಇನ್ನಷ್ಟು ಆಳವಾಗಿ ಅಚ್ಚಿಸಿದ್ದರು. ಕೃಷ್ಣಪ್ಪ ತನಗಿದು ಸಂಬಂಧವಿಲ್ಲವೆನ್ನುವಂತೆ ಓಡಾಡುತ್ತ ಗೌರಿಯ ಮುಖ ನೋಡಿದ. ಅವಳಿಗೆ ಇದರಿಂದ ದುಃಖವಾಗಿದೆಯೆ ಎಂದು ಅನುಮಾನವಾಯಿತು. ಆದರೆ ಅವಳೂ ವಿಚಲಿತಳಾದಂತೆ ಕಾಣಲಿಲ್ಲ. ಅವತ್ತು ಸಂಜೆ ಅವನೇ ಅವಳ ಮನೆಗೆ ಹೋಗಿ ಬೆಲ್ ಒತ್ತಿದ. +ಹಾಡುತ್ತಿದ್ದ ಗೌರಿ ಹೊರಗೆ ಬಂದು ಕೃಷ್ಣಪ್ಪನನ್ನು ನೋಡಿ ಆದ ಸಂತೋಷ ತೋರಗೊಡದೆ ಒಳಗೆ ಕರೆದುಕೊಂಡು ಹೋಗಿ ಕೂರಿಸಿದಳು. ತೋರುಗಾಣಿಕೆಯಿಲ್ಲದೆ ಅವಳಲ್ಲಿ ಗುಪ್ತವಾಗಿ ಅರಳಿದ ಭಾವ ಗುರುತಿಸಿ ಉತ್ತೇಜಿತನಾದ ಕೃಷ್ಣಪ್ಪ ಕಾರ್ಪೆಟ್ಟನ್ನು ನೋಡುತ್ತ ನಿಧಾನವಾಗಿ ಹೇಳಿದ: +“ನನ್ನ ಸರೀಕರು ಈ ಕಾಲೇಜಿನಲ್ಲಿ ನೀವೊಬ್ಬರೆ ಅನ್ನೋದು ಇವತ್ತು ಖಾತ್ರಿಯಾಯ್ತು.” +ಕೃಷ್ಣಪ್ಪ ಗೌರಿಯ ಮುಖ ನೋಡದೆ ಗಾಜಿನ ಟೇಬಲ್, ಗೋಡೆಯ ಮೇಲಿನ ದೇವರ ಚಿತ್ರಗಳು, ತಂಬೂರಿ ಇತ್ಯಾದಿಗಳನ್ನು ಗಮನಿಸಲು ಪ್ರಯತ್ನಿಸಿದ. ದೊಡ್ಡ ಗಾಜಿನ ಕಿಟಕಿಯಾಚೆಗೆ ಅರಳಿದ ಗುಲಾಬಿ ಹೂಗಳು ಕಂಡವು. ತಾನು ಹೀಗೆ ಬಂದು ಹೀಗೆ ಮಾತಾಡಿ ಅಗ್ಗವಾಗಿ ಬಿಟ್ಟೆನೆಂದು ಅವನಿಗೆ ವಿಷಾದವಾಯಿತು. +“ನಾನು ಆಡಿದ್ದನ್ನು ಹಚ್ಚಿಕೋಬೇಡಿ. ಮಾತಾಡಿ ನಾನು ಚೀಪಾದೆ. ನಿಮ್ಮನ್ನೂ ಚೀಪು ಮಾಡಿದೆ” ಎಂದು ಎದ್ದ. +“ಇಲ್ಲ -ಕೂರಿ” ಎಂದು ಗೌರಿ ತಡವರಿಸುತ್ತ ಹೇಳಿದಳು. “ನಿಜ -ನನ್ನ ತಾಯಿ ನನ್ನ ತಂದೇನ್ನ ನಾನು ಮಗುವಾಗಿದ್ದಾಗ ಬಿಟ್ಟು ಬಂದರು. ನಂಜಪ್ಪನವರು ಅವರನ್ನು ಇಟ್ಟುಕೊಂಡಿದ್ದಾರೆ. ನೋಡಿ, ಇವರೆಲ್ಲಾ ಅವರದೇ ವಸ್ತುಗಳು” ಎಂದು ಎದ್ದು ನಿಂತಳು. “ಇಷ್ಟು ತಿಳಿದ ಮೇಲೆ ನಿಮಗೆ ಹೇಗೆ ಅನ್ನಿಸ್ತ ಇದೆಯೊ ನನಗೆ ಗೊತ್ತಿಲ್ಲ” ಗೌರಿಯ ಮುಖ ತನ್ನ ಉದ್ವೇಗವನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕಂಡಿತು. +“ನಿಮಗೆ ಸಮಾಧಾನ ಹೇಳಲಿಕ್ಕೆ ನಾನು ಬಂದದ್ದಲ್ಲ. ನೀವೊಂದು ವಿಶಿಷ್ಟ ವ್ಯಕ್ತೀಂತ ತಿಳಿದು ನಿಮ್ಮನ್ನು ಗೌರವಿಸ್ತೀನಿ” ಎಂದು ಕೃಷ್ಣಪ್ಪ ಎದ್ದು ಒಂದು ಹೆಜ್ಜೆಯಿಟ್ಟ. +“ನನಗೆ ತಂದೆಯಾಗಿದ್ದೋರು ದೇಶಪಾಂಡೆ ಅಂತ. ಅವರೂ ನನ್ನ ತಾಯೀನ್ನ ಇಟ್ಟುಕೊಂಡಿದ್ದರು. ಬ್ಯಾಂಕಿನಲ್ಲಿ ದುಡ್ಡು ಕದ್ದು ಜೈಲಿಗೆ ಹೋದರು. ಗಂಡನಿಲ್ಲದೆ ನನ್ನ ಅಮ್ಮ ಬದುಕಲಾರರು. ಆದ್ದರಿಂದ -” +ಈಗ ಗೌರಿಯನ್ನು ದುರುಗುಟ್ಟಿ ನೋಡುತ್ತ ಕೃಷ್ಣಪ್ಪ ಹೇಳಿದ: +“ನನ್ನ ನೀವು ಪರೀಕ್ಷೆ ಮಾಡ್ತಿದೀರಲ್ಲವೆ? ಹೀಗೆಲ್ಲ ಮಾಡೊದು ಚೀಪ್.” +ಗೌರಿ ಭಾರ ಕಳೆದಂತಾಗಿ ನಕ್ಕುಬಿಟ್ಟಳು. ಹೀಗೆ ನಕ್ಕಾಗ ಅವಳು ತುಂಟು ಹುಡುಗಿಯಂತೆ ಕಂಡು ಕೃಷ್ಣಪ್ಪನಿಗೆ ಕಸಿವಿಸಿಯಾಯಿತು. ಒಂದೋ ನೀನು ನಿನ್ನ ಸುತ್ತಲಿನ ದಿನನಿತ್ಯದ ಕ್ಷುದ್ರತೆ ಗೆಲ್ಲುತ್ತಿ; ಅಥವಾ ಈ ಕ್ಷುದ್ರತೆಗೆ ತುತ್ತಾಗುತ್ತಿ -ಇದು ಬದುಕಿನ ನಿಯಮ ಎನ್ನುವ ಮಾತನ್ನು ಈ ಹುಡುಗಿಗೆ ಹೇಳಿ ತನ್ನ ಒಳಗನ್ನು ತೆರಯಬೇಕೆಂದಿದ್ದ ಕೃಷ್ಣಪ್ಪನಿಗೆ ಅವಳ ಸ್ವಭಾವದಲ್ಲಿದ್ದ ತುಂಟತನ ತಡೆಯಾಗಿ ಕಂಡು ನಿರಾಸೆಯಾಯಿತು. ಕೃಷ್ಣಪ್ಪನ ಮುಖದ ಮೇಲಿನ ಭಾವ “ನಾನು ನಿನಗೆ ಅಗಮ್ಯ” ಎಂದು ಸೂಚಿಸಿದ್ದನ್ನು ಕಂಡು +“ನೀವು ತುಂಬ ಅಹಂಕಾರಿಗಳು ಅಲ್ವ?” ಎಂದಳು. +ಕೃಷ್ಣಪ್ಪ ಬೇಸರದಿಂದ ಮುಖ ತಿರುಗಿಸಿದ. ಹಣೆಯ ಮೇಲೆ ಕುಂಕುಮದ ಬದಲು ವಿಭೂತಿಯನ್ನಿಟ್ಟುಕೊಂಡು ತಾನು ಬರುವ ಮುಂಚೆ ಅವಳು ಹಾಡುತ್ತಿದ್ದಳು. ಈಗ ಸೊಂಟದ ಮೇಲೆ ಕೈಯನ್ನಿಟ್ಟು ತ್ರಿಭಂಗಿಯಲ್ಲಿ ನರ್ತಕಿಯಂತೆ ನಿಂತಿದ್ದಾಳೆ. ಅವಳು ತನ್ನನ್ನು ಗೆಲ್ಲಲು ಪ್ರಯತ್ನಿಸುತ್ತಿರಬಹುದು. ತನ್ನನ್ನು ರಮಿಸಲು ಸುಮ್ಮನೇ ಕೆಣಕುತ್ತಿದ್ದಾಳೊ ಅಥವಾ ಅದು ಗಂಭೀರವಾದ ಪ್ರಶ್ನೆಯೊ? ಅವಳು ತುಂಟಾಗಿ ಕೇಳಿದ್ದರೆ ತನ್ನ ಉತ್ತರ ಜಂಬಗಾರಿಕೆಯಾಗಿ ಬಿಡತ್ತೆ. ಕೃಷ್ಣಪ್ಪ ಎತ್ತಲೋ ದುರುಗುಡುತ್ತ ನಿಂತಿರುವುದು ಕಂಡು – +“ತಮಾಷೆಗಲ್ಲ ನಾನು ಹೇಳಿದ್ದು. ನನ್ನ ಅಮ್ಮ ಒಳ್ಳೆಯವಳು. ನಂಜಪ್ಪನವರೂ ಒಳ್ಳೆಯವರು, ಆದರೆ ಯಾರಿಗೂ ನಿಲುಕದ ಹಾಗೆ ನಾನು ಇದ್ದುಬಿಡತೀನಿ. ನಾನು ಅಳದೆ ಬಹಳ ವರ್ಷ ಆಯ್ತು. ಆದ್ದರಿಂದ ನಾನೂ ನಿಮ್ಮ ಹಾಗೇ ಅಹಂಕಾರಿ ಅನ್ನಿಸತ್ತೆ” ಎಂದಳು. +ಕೃಷ್ಣಪ್ಪನ ಮುಖ ಕಠಿಣವಾಗಿ ಅವನ ಕಣ್ಣುಗಳು ಕಿರಿದಾದವು. +“ನನ್ನ ಅಮ್ಮನ್ನ ನೋಡತೀರ? -ಮೇಲಿದಾರೆ ಕರೀತೀನಿ.” +ಗೌರಿ ಆತಿಥ್ಯ ಮಾಡುವವರ ಧಾಟಿಯಲ್ಲಿ ಕೇಳಿದಳು. ಜುಬ್ಬದ ಜೋಬುಗಳಲ್ಲಿ ಕೈಯಿಟ್ಟು, ನಿರ್ಭಾವದಿಂದ ಗೌರಿಯನ್ನು ನೋಡುತ್ತ +“ಬೇಡ ನನಗೇನು ಮಾತಾಡಬೇಕು ಗೊತ್ತಾಗಲ್ಲ. ಹಿಂಸೆಯಾಗಿ ಬಿಡ್ತದೆ” ಅಂದು ಕೃಷ್ಣಪ್ಪ ಹೊರಟುಹೋದ. +* +* +* +ಸೀದ ರೂಮಿಗೆ ಹೋಗಿ ಒಂದು ಕಾಗದ ಬರೆದ. +“ಪ್ರಿಯ ಶ್ರೀಮತಿ ಗೌರಿ ದೇಶಪಾಂಡೆ, +ನೀವು ನನ್ನ ಮೇಲೆ ಪರಿಣಾಮ ಮಾಡಲೆಂದು ಮಾತಾಡಿದಿರಿ ಎಂದು ಅನುಮಾನವಾಗಿ ನಾನು ಉತ್ತರ ಕೊಡಲಿಲ್ಲ. ನಾವು ಒಂಟಿಯಾಗಿದ್ದಾಗ ನಮಗೇ ಆಡಿಕೊಳ್ಳದ ಮಾತುಗಳನ್ನು ಬೇರೊಬ್ಬರಿಗೆ ಯಾಕೆ ಹೇಳಬೇಕು? ಎದುರೊಬ್ಬರು ಇದ್ದಾರೆ ಎಂಬ ಭಾವನೆಯಿಂದ ಹುಟ್ಟುವ ಮಾತುಗಳಲ್ಲೆ ಪಡಪೋಶಿ ಇದೆ. ಆದ್ದರಿಂದ ನಾನು ಸೌಜನ್ಯದ ವಿರೋಧಿ. ದುಡ್ಡು ಮಾಡುವವರಿಗೆ, ಜನಪ್ರಿಯತೆ ಬಯಸುವವರಿಗೆ ಸೌಜನ್ಯದ ಅಗತ್ಯವಿದೆ. ಆಳವಾದ ಸಂಬಂಧಗಳಿಗೆ ಸೌಜನ್ಯ ಅಡ್ಡವಾಗುತ್ತದೆ. ನಾನು ನಿಮ್ಮನ್ನು ಹುಡುಕಿಕೊಂಡು ಬಂದು ಹೇಳಿದ್ದರ ಉದ್ದೇಶ ಬರೀ ಒಬ್ಬರನ್ನೊಬ್ಬರು ಗುರುತಿಸಿಕೊಳ್ಳಬೇಕೆಂಬುದು. ಆದರೆ ನಿಮ್ಮ ಸಹಾನುಭೂತಿ ಬೇಡುವ ದೌರ್ಬಲ್ಯದ ಅಂಶ ನನ್ನ ಕ್ರಿಯೆಯಲ್ಲೂ ಇದ್ದಿರಬಹುದು. +ನಾನು ಅಹಂಕಾರಿಯಲ್ಲ. ನೀವೂ ಅಲ್ಲ. ಕ್ಷುದ್ರತೆಗೆ ತುತ್ತಾದವರಿಗೆ ನಾವು ಹಾಗೆ ಕಾಣಿಸಬಹುದು. ಒಂದು ಮರ, ಒಂದು ಪಕ್ಷಿ, ಒಂದು ಮೃಗ, ಒಬ್ಬ ತಿರುಕ -ಯಾರನ್ನೇ ನೋಡಿದಾಗಲೂ ನಾನು ಎಲ್ಲರಿಗಿಂತ ಅನ್ಯ ಎನ್ನಿಸುತ್ತದೆಯೇ ಹೊರತು ಅವುಗಳಿಗಿಂತ ದೊಡ್ಡವನು ಎಂದು ಅನ್ನಿಸುವುದಿಲ್ಲ. ಇತರರು ತನ್ನನ್ನು ಆಕ್ರಮಿಸಲು ಬಂದಾಗ ಮಾತ್ರ ಹಾವು ತನ್ನ ವಿಷವನ್ನು ಬಳಸುವಂತೆ ನಾನು ನನ್ನ ಗರ್ವವನ್ನು ವ್ಯಕ್ತಪಡಿಸುತ್ತೇನೆ. ನಾನು ಹುಟ್ಟಿ ಬಂದ ವಾತಾವರಣದಲ್ಲಿ ಕ್ಷುದ್ರತೆ ಗೆಲ್ಲಲು ಇದು ನನಗೆ ಅಗತ್ಯವಾದ್ದಕ್ಕೆ ನಾನು ಕಾರಣನಲ್ಲ. ನಿಮ್ಮ ಹಿನ್ನೆಲೆ ನೋಡಿದರೆ ನಿಮ್ಮ ಬಗ್ಗೆಯೂ ಇದು ನಿಜ ಎನ್ನಿಸುತ್ತದೆ. ಈ ಹೊರಗಿನ ಕ್ಷುದ್ರತೆ ಹೊರಗಿನದು ಮಾತ್ರವಲ್ಲ -ನಮ್ಮ ಒಳಗೂ ಇರುವಂಥಾದ್ದು. ನಮ್ಮ ತೀವ್ರತೆಯನ್ನು ಕೊಲ್ಲಲು ಇಂಥ ಸಂಚು ನಮ್ಮ ಒಳಗೂ ಹೊರಗೂ ನಡೆಯುತ್ತಲೇ ಇರುವುದರಿಂದ ಸದಾ ಎಚ್ಚರವಾಗಿರುವ ನಿಲುವು ಸಂಪನ್ನರಿಗೆ ಗರ್ವದಂತೆ ಕಾಣಬಹುದು. ಇದು ಅನಿವಾರ್ಯ, ಮೋಹಕ್ಕೆ ವಶವಾಗದ ನಿಷ್ಠುರತೆ, ನಮ್ಮ ಸುತ್ತ ಸಾಯುತ್ತ ಹುಟ್ಟುತ್ತ ಇರುವುದಕ್ಕೆಲ್ಲ ತೆರೆದುಕೊಂಡು ಎಚ್ಚರ -ಇದೇ ಯೋಗ. ಚೈತನ್ಯ ಮತ್ತು ಜಡತ್ವ ಜೋಡಿಗಳು ಎಂಬುದನ್ನು ಮರೆಯಬೇಡಿ. +-ಕೃಷ್ಣಪ್ಪ” +ಕಾಗದ ಬರೆದು ಅಂಚೆಗೆ ಹಾಕಿ ಕೃಷ್ಣಪ್ಪ ಕುಂಬಾರ ಕೊಪ್ಪಲಿಗೆ ಹೋದ. ಕಡಿದಾದ ಬೀದಿಯಲ್ಲಿ ನಡೆಯುತ್ತ ಧಾನ್ಯಗಳನ್ನು ಮಾರುವ ಅಂಗಡಿಯೊಂದರ ಮೇಲಿನ ಉಪ್ಪರಿಗೆಯಲ್ಲಿ ದೀಪವಿದ್ದುದನ್ನು ಕಂಡು ತೀರ ದುರವಸ್ಥೆಯಲ್ಲಿದ್ದ ಉಪ್ಪರಿಗೆ ಮೆಟ್ಟಿಲುಗಳನ್ನು ಕೊಳಚೆ ಗಲ್ಲಿಯೊಂದರಿಂದ ಹತ್ತಿ ಹೋದ. ಹತ್ತಿ ಹೋಗುವಾಗ ಉಚ್ಚೆಯ ನಾತ ಅಸಹನೀಯವಾಗಿತ್ತು. ಮಹಡಿ ಬಾಗಿಲು ತಟ್ಟಿದ. +ಕಚ್ಚೆಪಂಚೆಯುಟ್ಟು ಜುಬ್ಬ ತೊಟ್ಟ ಅಣ್ಣಾಜಿ ಯಾರು ಎಂದು ಕೇಳಿ ಕೃಷ್ಣಪ್ಪನೆಂದು ಗುರುತಿಸಿದ ಮೇಲೆ ಬಾಗಿಲು ತೆರೆದ. ಅಣ್ಣಾಜಿ ರೂಮಿನಲ್ಲಿ ಊದಿನ ಕಡ್ಡಿ ಉರಿಯುತ್ತಿದ್ದುದರಿಂದ ವಾಸನೆ ಹಿತವೆನ್ನಿಸಿತು. ಅಣ್ಣಾಜಿ ಇಂಗ್ಲಿಷಿನಲ್ಲಿ ’ಬಾ ಕೂತುಕೊ’ ಎಂದು ನೆಲದ ಮೇಲೆ ಹಾಸಿದ್ದ ಒಂದು ತುದಿಯನ್ನು ತೋರಿಸಿ ಇನ್ನೊಂದು ತುದಿಯಲ್ಲಿ ತಾನು ಕೂತ. +ನಡುವಯಸ್ಸಿನ ಅಣ್ಣಾಜಿ ಆಕರ್ಷಕ ವ್ಯಕ್ತಿ. ಎದ್ದು ಕಾಣುವ ಚೂಪಾದ ಗಲ್ಲ -ಪೊದೆ ಹುಬ್ಬುಗಳು -ತೆಳ್ಳಗೆ ಎತ್ತರವಾಗಿದ್ದ. ಕೂದಲನ್ನು ಉದ್ದವಾಗಿ ಬೆಳೆಸಿ ಹಿಂದಕ್ಕೆ ಬಾಚಿದ್ದ. ಅವನು ಗಡ್ಡ ಬೆಳೆಸುತ್ತಿದ್ದನೆಂಬುದು ಮುಖದ ಮೇಲೆ ಬೆಳೆದಿದ್ದ ಒಂದು ತಿಂಗಳಿನ ಕೂದಲಿನಿಂದ ತಿಳಿಯಬಹುದಿತ್ತು. ಚಾರ್ಮಿನಾರ್ ಸಿಗರೇಟನ್ನು ಹೊತ್ತಿಸಿ ಅಣ್ಣಾಜಿ ಕೃಷ್ಣಪ್ಪನ ಮಾತಿಗೆ ಕಾದ. +ಕೃಷ್ಣಪ್ಪ ಅಣ್ಣಾಜಿ ಓದುತ್ತಿದ್ದ ಟ್ರಾಟ್ಸ್ಕಿ ಪುಸ್ತಕವನ್ನು ಹಾಸಿಗೆ ಮೇಲೆ ಗಮನಿಸಿದ. ನಾಡ ಹೆಂಚಿನ ಇಳಿಜಾರಾದ ಸೂರಿನ ಸಣ್ಣ ರೂಮಿನಲ್ಲಿ ಹಾಸಿಗೆ, ಒಂದು ಟ್ರಂಕು, ಕೆಲವು ಪುಸ್ತಕಗಳು ಬಿಟ್ಟು ಬೇರೇನೂ ಇರಲಿಲ್ಲ. +ಕೃಷ್ಣಪ್ಪ ಜೇಬಿನಿಂದ ಇನ್ನೂರು ರೂಪಾಯಿಗಳನ್ನು ಎತ್ತಿ ಕೊಟ್ಟ. ಕೃಷ್ಣಪ್ಪನ ಸ್ವಭಾವ ತಿಳಿದ ಅಣ್ಣಾಜಿ ’ಥ್ಯಾಂಕ್ಸ್’ ಅನ್ನದೆ ಜೇಬಲ್ಲಿ ಹಾಕಿಕೊಂಡು ತನಗಾದ ಸಮಾಧಾನವನ್ನೂ ತೋರಿಸಿಕೊಳ್ಳದೆ ಇಂಗ್ಲಿಷಲ್ಲಿ ಹೇಳಿದ: +“ನಾನು ಈ ರೂಮನ್ನೂ ಬದಲಾಯಿಸಬೇಕಾಗಿ ಬಂದಿದೆ.” +ಅಣ್ಣಾಜಿ ಎದ್ದು ಬೀದಿಗೆ ತೆರೆಯುವ ಮರದ ಸಣ್ಣ ಕಿಟಕಿಯ ಕೊಳಕಾದ ಪರದೆ ಸರಿಸಿ ತೋರಿಸಿದ: +“ಮಫ಼್ತಿಯಲ್ಲಿರೋ ಪೋಲೀಸ್. ನಿನ್ನೆಯಿಂದ ಈ ರೂಮಿಗೆ ಯಾರು ಬರ್ತಾರೆ ಹೋಗ್ತಾರೆ ಗಮನಿಸ್ತ ಇದೆ ಹಂದಿ.” +“ನನ್ನ ಹಾಸ್ಟೆಲ್ ರೂಮಿಗೆ ಬಂದಿರು.” +ಕೃಷ್ಣಪ್ಪನ ಮಾತಿಗೆ ಅಣ್ಣಾಜಿ ಅದೂ ಕ್ಷೇಮವಲ್ಲವೆಂಬಂತೆ ತಲೆಯಲ್ಲಾಡಿಸಿದ. ಅವನನ್ನು ಅಣ್ಣಾಜಿಯೆಂದು ಕೃಷ್ಣಪ್ಪ ಕರೆಯುವುದಿಲ್ಲ. ಯಾಕೆಂದರೆ ಅವನ ನಿಜವಾದ ಹೆಸರೇನೆಂಬುದು ಕೃಷ್ಣಪ್ಪ ಕೇಳಿಲ್ಲ. ಪೋಲಿಸರಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ಅಣ್ಣಾಜಿ ಪ್ರತಿ ಊರಲ್ಲೂ ಒಂದೊಂದು ಹೆಸರಿಟ್ಟುಕೊಂಡು ಇರುತ್ತಿದ್ದ. ಗೋವಾದ ಪೋರ್ಚುಗೀಸ್ ಜೈಲಿನಿಂದ ತಪ್ಪಿಸಿಕೊಂಡು ಬಂದ ಅಣ್ಣಾಜಿ ಮಹಾರಾಷ್ಟ್ರದವನು. ಗೋವಾದಿಂದ ತೆಲಂಗಾಣ ಪ್ರದೇಶಕ್ಕೆ ಹೋಗಿ ಅಲ್ಲಿ ಹಳ್ಳಿಯೊಂದರಲ್ಲಿ ರೈತ ಸಂಘಟನೆ ಮಾಡುತ್ತಿದ್ದಾಗ ಜಮೀಂದಾರನೊಬ್ಬನನ್ನು ಇವನ ಅನುಯಾಯಿಗಳು ಕೊಲ್ಲಲು ಪ್ರಯತ್ನಿಸಿದ್ದರು. ಜಮೀಂದಾರ ಕಾಲು ಮುರಿದುಕೊಂಡು ಬದುಕಿಕೊಂಡ. ಅಣ್ಣಾಜಿಯ ಯೋಜನೆಗೆ ಮೀರಿ ರೈತರಲ್ಲಿ ಕೆಲವರು ಮುಂದುವರೆದಿದ್ದರು. ಸಿಕ್ಕಿಬಿದ್ದ ರೈತರ ಮೇಲೆ ಕೊಲೆಯತ್ನದ ಆಪಾದನೆಯ ವಿಚಾರಣೆ ನಡೆಯುತ್ತಿತ್ತು. ಒಬ್ಬ ಆಪಾದಿತ ರೈತನನ್ನು ಅಪ್ರೂವರ್ ಮಾಡಿಕೊಂಡು ಅಣ್ಣಾಜಿಯ ಬಗ್ಗೆ ಪೋಲೀಸರು ವಿಷಯ ಸಂಗ್ರಹಿಸಿದ್ದರು. ಅಣ್ಣಾಜಿ ಊರಿಂದ ಊರಿಗೆ ತಪ್ಪಿಸಿಕೊಂಡು ತಿರುಗುತ್ತ ಈ ಊರಿಗೆ ಬಂದಿದ್ದ. ಇಂಗ್ಲಿಷ್ ಪಾಠ ಹೇಳಿಕೊಡುತ್ತೇನೆಂದು ನಾಲ್ಕೈದು ಮನೆಗಳಲ್ಲಿ ಟ್ಯೂಶನ್ ಇಟ್ಟುಕೊಂಡಿದ್ದ. ಆಂಧ್ರ ಪೋಲೀಸರು ಆರ್. ಎಲ್. ನಾಯಕ್ ಎಂಬ ಹೆಸರಲ್ಲಿ ಇವನನ್ನು ಹುಡುಕುತ್ತಿದ್ದರು. ಗೋವಾದ ಪೋಲೀಸರು ಪಿ. ಟಿ. ದೇಶಪಾಂಡೆ ಎಂಬ ಹೆಸರಿನ ಇವನನ್ನು ಗಲ್ಲಿಗೆ ಏರಿಸಲೂ ಸಿದ್ಧರಾಗಿ ಕಾಯುತ್ತಿದ್ದರು. ಅವನು ಹೇಳಿಕೊಂಡಿದ್ದಕ್ಕಿಂತ ಹೆಚ್ಚನ್ನು ಅಣ್ಣಾಜಿ ಬಗ್ಗೆ ಕೃಷ್ಣಪ್ಪ ಕೇಳುತ್ತಿರಲಿಲ್ಲ. ತನ್ನ ಜೀವನಕ್ಕೊಂದು ಉದ್ದೇಶ ಹುಡುಕುತ್ತಿದ್ದ ಕೃಷ್ಣಪ್ಪನಿಗೆ ನೂರಾರು ಕ್ರಾಂತಿಕಾರಕ ಪುಸ್ತಕಗಳನ್ನು ಓದಿದ್ದ ಅಣ್ಣಾಜಿ ಮಹೇಶ್ವರಯ್ಯನಂತೆಯೇ ಗುರುವಾಗಿ ಕಂಡಿದ್ದ ಎಂದು ಹೇಳಬಹುದು. +ಅಣ್ಣಾಜಿಗೆ ಅವನು ಬಿಟ್ಟುಬಂದ ಊರಲ್ಲೆಲ್ಲ ಒಬ್ಬೊಬ್ಬ ಪ್ರೇಯಸಿ. ಪ್ರತಿ ತಿಂಗಳೂ ಅವರಿಗೆಲ್ಲ ಅಷ್ಟಿಷ್ಟು ಹಣ ಅವನು ಕಳಿಸಬೇಕು. ಹೀಗಾಗಿ ಹುಲಿಯ ಹುಣ್ಣಿನಂತೆ ಅವನ ಸಾಲ. ಕೃಷ್ಣಪ್ಪನೇ ಮನಿಯಾರ್ಡರ್ ಮಾಡುವುದು -ಕೊಲ್ಹಾಪುರದಲ್ಲಿ ದರ್ಜಿಯ ಮಗಳೊಬ್ಬಳಿಗೆ ಅವಳ ಬಿ.ಟಿ. ವಿದ್ಯಾಭ್ಯಾಸಕ್ಕಾಗಿ ತಿಂಗಳಿಗೆ ಇಪ್ಪತ್ತೈದು, ಗೋವಾದಲ್ಲಿ ಇವನಿಂದ ಮಗುವನ್ನು ಪಡೆದ ಗುಮಾಸ್ತೆಯೊಬ್ಬಳಿಗೆ ಇಪ್ಪತ್ತೈದು, ಚಿಕ್ಕ ವಯಸ್ಸಲ್ಲೇ ಇವನನ್ನು ಮದುವೆಯಾಗಿ ಒಂದು ಗಂಡು ಮಗು ಹೆತ್ತು ತಾಯಿಯ ಮನೆ ಸೇರಿ ನಾಗಪುರದಲ್ಲಿದ್ದ ಖಾಸ ಹೆಂಡತಿಗೆ ಇಪ್ಪತ್ತೈದು, ಹದಿನೈದು ವರ್ಷಗಳಿಂದಾದರೂ ಇದಕ್ಕಾಗಿ ಇವನಿಗೆ ಸಾಲ ಕೊಟ್ಟ ಇವನ ಆ ಬಡ ಅನುಯಾಯಿಗಳಿಗೆ ಆಗೀಗ ತೀರಿಸಲು ಇನ್ನಷ್ಟು -ಹೀಗೆ ಮೈಯೆಲ್ಲ ಸಾಲ ಅಣ್ಣಾಜಿಗೆ. ಬರೀ ಚಹಾ ಸಿಗರೇಟಲ್ಲೆ ಬದುಕುತ್ತ, ಈಚಲು ಚಾಪೆ ಮೇಲೆ ಮಲಗಿ ನಿದ್ರಿಸಬಲ್ಲ ಅಣ್ಣಾಜಿಗೆ ಇನ್ನು ಯಾವ ದುಶ್ಚಟವೂ ಇರಲಿಲ್ಲ. +ಪ್ರತಿ ದಿನವೂ ಅಣ್ಣಾಜಿ ದುಡ್ಡಿಗೆ ಪರದಾಡುತ್ತ ಮುಂದಿನವಾರ ಕೊಟ್ಟುಬಿಡುವೆ ಇತ್ಯಾದಿ ಸುಳ್ಳುಗಳನ್ನು ಹೇಳುತ್ತ ಜನರನ್ನು ವಂಚಿಸಲು ತನ್ನೆಲ್ಲ ಆಕರ್ಷಣೆಗಳನ್ನೂ ಬಳಸುವುದನ್ನು ಕಂಡು ಕೃಷ್ಣಪ್ಪನಿಗೆ ಜಿಗುಪ್ಸೆಯಾಗುತ್ತಿತ್ತು. ಆದರೆ ತನ್ನ ಹೆಸರಿನ ವ್ಯಾಮೋಹವನ್ನೂ ಬಿಟ್ಟ ವ್ಯಕ್ತಿ ಈತ. ಪರಿಚಯವಾದ ಪ್ರಾರಂಭದಲ್ಲಿ ಅಣ್ಣಾಜಿ ಕೇಳುತ್ತಿದ್ದ ದುಡ್ಡನ್ನು ಅವರಿವರಿಂದ ಪಡೆದು ಕೊಡುವಾಗ ಅವನು ಹೇಳುವ ಸುಳ್ಳುಗಳಿಂದಾಗಿ ಕೃಷ್ಣಪ್ಪ ಕ್ಷುದ್ರನಾಗಿ “ನಿನ್ನ ಮೇಲೆ ನನಗೆ ಗೌರವವಿದೆ. ನನ ಹತ್ತಿರ ಸುಳ್ಳು ಹೇಳಬೇಡ” ಎಂದಿದ್ದ. ಕ್ಷಣ ಮಂಕಾಗಿ ಕೂತು ಅಣ್ಣಾಜಿ ತನ್ನ ಕಥೆ ಹೇಳಲು ತೊಡಗಿದಾಗ, “ಸಾಕು ಬಿಡು. ನಾನು ಪ್ರತಿ ತಿಂಗಳೂ ಆದಷ್ಟು ಹಣ ನಿನಗೆ ಒಟ್ಟು ಮಾಡಿ ಕೊಡುವೆ” ಎಂದಿದ್ದ. ಜೊತೆಗೇ ಇಂಗ್ಲಿಷ್ ಟ್ಯೂಷನ್ ಹೇಳುವುದರಿಂದಲೂ ಅಣ್ಣಾಜಿಗೆ ಸುಮಾರು ನೂರೈವತ್ತು ಸಿಗುತ್ತಿತ್ತು. +“ಯಾವುದೋ ತತ್ವಕ್ಕಾಗಿ ಮೈಮರೆತು ಇರುವ ನೀನು ಯಾಕೆ ಈ ಕ್ಷುದ್ರ ವಿಷಯಗಳಿಗೆ ಸಿಕ್ಕಿಹಾಕಿಕೊಂಡಿದ್ದು?” ಎಂದು ಉತ್ತರ ಬಯಸದೆ ತನಗೇ ಕೇಳಿಕೊಳ್ಳುವಂತೆ ಕೃಷ್ಣಪ್ಪ ಹೇಳಿದ. +ಅಣ್ಣಾಜಿ ಚಾರ್ಮಿನಾರ್ ಹೊತ್ತಿಸಿ +“ನಿನ್ನಲ್ಲೇ ನೀನು ಸಂಪೂರ್ಣ ಎನ್ನೋ ಗರ್ವ ನಿನಗೆ. ನೀನು ಮೂಲಭೂತವಾಗಿ ಫ಼್ಯಾಸಿಸ್ಟ್ ಮನೋಧರ್ಮದವ” ಎಂದ. +ಮುಸ್ಲಿಂ ಹೋಟೆಲಲ್ಲಿ ಬಾಂಬೆ ಟೀ ಕುಡಿಯುತ್ತ ಇಬ್ಬರೂ ಮಾತಾಡುತ್ತಿದ್ದರು. ರೇಡಿಯೋ ಗದ್ದಲದಲ್ಲಿ ಧ್ವನಿ ಎತ್ತರಿಸಿ ಮಾತಾಡಬೇಕಿತ್ತು. ಕೃಷ್ಣಪ್ಪನಿಗದು ಇಷ್ಟವಿಲ್ಲದಿದ್ದರೂ ಹೇಳಿದ: +“ಕ್ರಾಂತಿಗಾಗಿ ಬದುಕೋವನು ವ್ಯಾಮೋಹಿಯಾಗಿರಕೂಡದು. ದುಡ್ಡಿನ ವ್ಯವಹಾರ ಹಚ್ಚಿಕೊಂಡು ಬೂರ್ಶ್ವಾ ಆಗಬಾರದು.” ಈ ಹೊಸ ಶಬ್ದಗಳನ್ನು ಅಣ್ಣಾಜಿಯಿಂದಲೇ ಕೃಷ್ಣಪ್ಪ ಕಲಿತದ್ದು. +“ನಿಜ ನೀನು ಹೇಳೋದು. ನಾನು ಸುಮ್ಮನಿದ್ದರೂ ಹೆಂಗಸರು ನನ್ನ ಹಚ್ಚಿಕೋತಾರೆ.” +ತನಗೇ ಅದು ರಹಸ್ಯ ಎನ್ನುವಂತೆ ಅಣ್ಣಾಜಿ ಎದ್ದು ನಿಂತ. ನಡೆನುಡಿಯಲ್ಲಿ ಅಣ್ಣಾಜಿ ಚುರುಕು. ಕೃಷ್ಣಪ್ಪ ನಿಧಾನ. +ಇವು ಕೃಷ್ಣಪ್ಪನ ಜೀವನದಲ್ಲಿ ಬಹಳ ಮುಖ್ಯ ದಿನಗಳು ಎನ್ನಬೇಕು. ಪಾರ್ಕಿನಲ್ಲಿ ಕೂತು ನೆಲಗಡಲೆ ಸುಲಿದು ತಿನ್ನುತ್ತ ಕೃಷ್ಣಪ್ಪ ಅಣ್ಣಾಜಿ ಗಂಭೀರವಾಗಿ ಚರ್ಚಿಸುವರು. ಅಣ್ಣಾಜಿ ತನ್ನ ಪಾಠವನ್ನು ಮಾರ್ಕ್ಸ್‌ನ ಒಂದು ಮಾತಿನಿಂದ ಶುರು ಮಾಡಿದ್ದ: “ಈ ವರೆಗೆ ತಾತ್ವಿಕರು ಪ್ರಪಂಚದ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ; ಆದರೆ ನಮ್ಮ ಕೆಲಸ ಪ್ರಪಂಚವನ್ನು ಬದಲಿಸುವುದು.” ಇಂಥ ಅನೇಕ ಮಾತುಗಳು ಕೃಷ್ಣಪ್ಪನನ್ನು ಆಳವಾದ ವಿಚಾರಗಳಿಗೆ ಹಚ್ಚಿದ್ದುವು. ನಮ್ಮ ಪ್ರಜ್ಞೆ ಸ್ವತಂತ್ರ ವಸ್ತುವಲ್ಲ -ಉತ್ಪಾದನೆಗಾಗಿ ನಾವು ತೊಡಗುವ ಅನೇಕ ಸಂಬಂಧಗಳಿಂದ ಉಂಟಾದದ್ದು ಎಂದು ಅಣ್ಣಾಜಿ ಕೆಣಕಿದಾಗ ಜಡಪ್ರಪಂಚದಿಂದ, ದೈನಿಕಗಳಿಂದ ಸೋಲಬಾರದೆಂಬ ಹಠವಾದಿ ಕೃಷ್ಣಪ್ಪ ಒಪ್ಪಿರಲಿಲ್ಲ. ಪಾರ್ಶ್ವವಾಯುವುನಿಂದ ನರಳುತ್ತಿರುವಾಗಲೂ ಈ ಬಗ್ಗೆ ಅವನಿಗೆ ಅನುಮಾನ ಉಳಿದೇ ಇತ್ತು. ವಾದಿಸಿದ್ದ: +“ಮನುಷ್ಯ ತನ್ನ ಪರಿಸರಾನ್ನ ಮೀರತಾನೆ -ಇದನ್ನು ನಾನು ವಾದಿಸಲಾರೆ. ನನ್ನ ಅನುಭವದ ಮಾತು ಇದು. ಆ ವಿಷಯ ಬಿಡು. ಕೂಲಿಕಾರರನ್ನು ರೈತರನ್ನು ನೀನು ಒಟ್ಟು ಮಾಡಿ ಹೋರಾಟಕ್ಕೆ ಹಚ್ಚೋದು ಯಾವ ಪುರುಷಾರ್ಥಕ್ಕೆ? ಅವರ ಕೂಲಿ ಇನ್ನಷ್ಟು ಹೆಚ್ಚಿ, ಮನೆಗೊಂದು ರೇಡಿಯೋ, ಸ್ಟೈನ್‌ಲೆಸ್ಸ್ ಪಾತ್ರೆಗಳನ್ನು ಅವರು ಕೊಂಡುಬಿಡುವಂತಾದರೆ ಅವರ ಜೀವನ, ಈ ಪ್ರಪಂಚ ಬದಲಾದಂತೆಯೊ? ಪ್ರತಿ ನಿತ್ಯದ ಬದುಕಿನಲ್ಲಿ ಅದೇ ಕೆಲಸಗಳು, ಅದೇ ಜಂಜಾಟಗಳು, ಅದೇ ತರಲೆ ತಾಪತ್ರಯಗಳು ಹೋಗಿಬಿಡ್ತಾವ? ಅವರು ಇನ್ನಷ್ಟು ಆಸೆಬುರುಕರಾಗ್ತಾರೆ -ನಿನ್ನಂಥವರಿಂದ.” +“ಹಾಗಲ್ಲ, ನೀನು ವ್ಯಕ್ತಿವಾದಿಯ ಹಾಗೆ ಮಾತಾಡ್ತಿದ್ದಿ.” +’ವ್ಯಕ್ತಿವಾದಿ’ ಇತ್ಯಾದಿ ಶಬ್ದಗಳಲ್ಲಿ ತನ್ನ ಅನುಮಾನ ಬಗೆಹರಿಸಲು ಪ್ರಯತ್ನಿಸುವ ಅಣ್ಣಾಜಿಯ ವಾದಕ್ರಮದಿಂದ ಕೃಷ್ಣಪ್ಪನಿಗೆ ಬೇಸರ ಬರುತ್ತಿತ್ತು. ಅಣ್ಣಾಜಿ ಸಮಾಧಾನದಿಂದ ವಿವರಿಸುತ್ತಿದ್ದ: +“ತಮ್ಮ ಜೀವನದ ಸುಧಾರಣೆಗಾಗಿ ಬಡವರನ್ನು ಹೋರಾಡೋಕೆ ಸಿದ್ಧ ಮಾಡ್ತೀವಿ ಅನ್ನು -ಈ ಹೋರಾಟ ಅಷ್ಟಕ್ಕೆ ನಿಲ್ಲಲ್ಲ. ನಮ್ಮ ವರ್ಗದ ಜೀವನಮಟ್ಟ ಹೆಚ್ಚಿಸಿಕೊಳ್ಳೊ ಆಸೆಬುರುಕತನಕ್ಕೂ ಅವರ ಆಸೆಗೂ ಮೂಲಭೂತ ವ್ಯತ್ಯಾಸವಿದೆ. ಅವರ ಆಸೆ ಚಲನಶೀಲ. ಅವರ ಆಸೆ ಹೆಚ್ಚುತ್ತ ಹೋದಂತೆ ಈ ಪ್ರಪಂಚದ ಸ್ವರೂಪಾನೇ ಬದಲಾಗಬೇಕಾಗಿ ಬರುತ್ತೆ. ಅವರ ದುಡಿಮೆಯೇ ಈ ಸಮಾಜದ ಸ್ಥಿತಿಗೂ ಗತಿಗೂ ದ್ರವ್ಯ ಅನ್ನೋದನ್ನ ಒಪ್ಪಿಕೊಂಡಿದ್ದಿ ತಾನೆ? ನಮ್ಮ ಪುರುಷಾರ್ಥಗಳಿಗೆಲ್ಲ ಮೂಲ ಈ ದುಡಿಮೆ. ಆದರೆ ಈ ದುಡಿಮೆಯ ಲಾಭ ಹೋಗೋದು ಬಂಡವಾಳಶಾಹಿಗೆ. ಶೋಷಣೇನೇ ಈ ವ್ಯವಸ್ಥೆಗೆ ಆಧಾರ. ಬಡವರು ಶೋಷಣೆಗೂ ಒಳಗಾಗ್ತಾರೆ; ಬರ್ತಾ ಬರ್ತಾ ತಮ್ಮ ಕೈಯಿಂದ ಬೆಳೆದದ್ದಕ್ಕೂ ತಮಗೂ ಸಂಬಂಧಾನೇ ಇಲ್ಲವೆನ್ನೋದನ್ನ ಅರೀತಾರೆ. ಮನುಷ್ಯನಿಂದಲೇ ಮನುಷ್ಯನಿಗೆ ಇವೆಲ್ಲ ಆಗ್ತಿರೋದೂಂತ ಅರ್ಥವಾಗ್ತ ಹೋದ ಹಾಗೆ ತನ್ನ ನಿತ್ಯಜೀವನಾನ್ನ ಶುಷ್ಕವಾಗಿ ಮಾಡೋ ವ್ಯವಸ್ಥೇನೇ ಬದಲಾಗಬೇಕು. ಸುಧಾರಣೆಗಳಿಂದ ಇದು ಸಾಧ್ಯವಾಗದು ಅನ್ನೋದನ್ನ ಅರೀತಾರೆ. ಮೇಲಿನ ವರ್ಗದ ನಮ್ಮಂಥ ಕೆಲವರಿಗೆ ಅದು ಬುದ್ಧಿಪೂರ್ವಕವಾಗಿ ಅರ್ಥವಾದರೆ ರೈತರಿಂದ ಹುಟ್ಟಿ ಬಂದ ನಿನ್ನಂಥ ಸೂಕ್ಷ್ಮ ಮನಸ್ಸಿನವರಿಗೆ ಅದು ಅನುಭವದಿಂದ ಗೊತ್ತಾಗತ್ತೆ. ನಿನ್ನಂಥವರು ಅದನ್ನು ಉಳಿದವರಲ್ಲಿ ಬಿತ್ತುತ್ತೀರಿ. ಹಾಗೇ ಕ್ರಾಂತಿ ಆಗತ್ತೆ. ನಾವಾಗಬೇಕೂಂತ ಬಯಸೋದ್ರಿಂದ ಮಾತ್ರ ಕ್ರಾಂತಿಯಾಗತ್ತೆ ಅನ್ನೋದು ವ್ಯಕ್ತಿವಾದವಾಗಿಬಿಡತ್ತೆ. ತನ್ನ ಕೋಳಿ ಕೂಗಿದ್ರಿಂದ ಬೆಳಗಾಯ್ತು ಅಂತ ತಿಳಿಯೋ ಮುದುಕಿ ಕಥೆ ಹಾಗೆ ಅದು. ಕ್ರಾಂತಿಯಾಗತ್ತೆ ಅನ್ನೋದು ಸಮಾಜದ ಚಲನೆಯ ನಿಯಮ. ಅದನ್ನ ತ್ವರಿತಗೊಳಿಸೋ ವೇಗವರ್ಧಕಗಳು, ಅಥವಾ ಸೂಲಗಿತ್ತಿಯರು ನಾವು.” +ಅಣ್ಣಾಜಿಯ ಕಣ್ಣುಗಳು ಹೊಳೆಯುತ್ತಿದ್ದವು. ಪಾರ್ಕಲ್ಲಿ ಕಡಲೇಕಾಯಿ ಬೆಲ್ಲವನ್ನು ಕೊಳ್ಳಿರೆಂದು ಬೇಡುತ್ತ ಕಾಡುತ್ತ ನಿಂತ ಹುಡುಗನನ್ನು ನೋಡುತ್ತ ಕೃಷ್ಣಪ್ಪ: +“ಇಂಥ ದೈನ್ಯದ ಹುಡುಗರೂ ರೊಚ್ಚೆದ್ದು ಕ್ರಾಂತಿ ಮಾಡ್ತಾರೆ ಅನ್ನು” +ಎಂದು ಅರ್ಧ ಅನುಮಾನದಿಂದ ಕೇಳುತ್ತಿದ್ದ. +“ಖಂಡಿತವಾಗಿ. ಫ಼್ರಾನ್ಸಿನ ಜೈಲಿನ ಗೇಟು ಒಡೆದದ್ದು ಗೊತ್ತಲ್ಲ.” +“ಯಾವತ್ತೋ ಒಂದು ದಿನ ಆವೇಶದಿಂದ ಕುಣಿದು ಮತ್ತೆ ಪ್ರಪಂಚ ಅದೇ ಅರ್ಥಹೀನ ದೈನಿಕಗಳ ಜಾಡಿಗೆ ಸಿಕ್ಕಿಹಾಕಿಕೊಳ್ಳುತ್ತಲ್ಲ?” +“ಇಲ್ಲ -ಕ್ರಾಂತಿಯಿಂದ ನಮ್ಮ ದೈನಿಕವೂ ಸೃಷ್ಟಿಶೀಲವಾಗುತ್ತೆ.” ತನ್ನ ತರ್ಕ ಎಲ್ಲ ಅನುಮಾನಗಳಿಗೆ ಪ್ರೂಫ಼್ ಎಂಬ ಅಣ್ಣಾಜಿಯ ಯೋಚನಾಕ್ರಮದಿಂದ ಕೃಷ್ಣಪ್ಪನಿಗೆ ಕರೆಕರೆಯಾಗುತ್ತಿತ್ತು. +’ಹುಟ್ಟೋದು, ಸಾಯೋದು, ಉಣ್ಣೋದು, ಉಳೋದು, ಸಂಭೋಗ ಮಾಡೋದು ಎಲ್ಲವುದಕ್ಕೂ ಒಂದೊಂದು ಹಬ್ಬ ಮಾಡಿದೆಯಲ್ಲ -ನಮ್ಮ ಹಿಂದೂ ಧರ್ಮ; ನಮ್ಮ ಭೂಮಿ ಹುಣ್ಣಿಮೆ ಹಬ್ಬದ ಅರ್ಥ ಗೊತ್ತ ನಿನಗೆ?” +ಬೇಸರದಿಂದ ಕೃಷ್ಣಪ್ಪ ಹೇಳುತ್ತಿದ್ದ. ಅದನ್ನೂ ಗಂಭೀರವಾಗಿ ಅಣ್ಣಾಜಿ ವಿಶ್ಲೇಷಿಸುತ್ತಿದ್ದ: +“ಶುಷ್ಕವಾಗಿಬಿಡುವ ದೈನಿಕಗಳನ್ನು ಭ್ರಮೇಲಿ ಗೆಲ್ಲೋದಕ್ಕೂ ನಿಜವಾಗಿ ವಾಸ್ತವವಾಗಿ ಗೆಲ್ಲೋದಕ್ಕೂ ವ್ಯತ್ಯಾಸವಿದೆ. ಉತ್ಪಾದನೆಯ ಸಂಬಂಧಗಳು ಬದಲಾದಾಗ ದುಡಿಮೆ ಸೃಷ್ಟಿಶೀಲವಾಗತ್ತೆ. ಅಹಂಕಾರದಲ್ಲಿ ಸೆಟೆದು ದೊಣ್ಣೆನಾಯಕನಂತೆ ಓಡಾಡ್ತ ಕ್ಷುದ್ರತೆಯಿಂದ ಹೊರಗೆ ನಿಲ್ತೀನಿ ಅಂತ ನೀನು ತಿಳಿದಿರೋದು ಭ್ರಮೆ. ಹೋಗಿ ರೈತರ ನಡುವೆ ಕೆಲಸ ಮಾಡು. ಅವರನ್ನು ಹೋರಾಟಕ್ಕೆ ಸಂಘಟಿಸು. ನೀನೊಬ್ಬ ಸೂಲಗಿತ್ತೀಂತ ತಿಳಕೊ -ತಾವು ಉಳೋ ನೆಲಕ್ಕವರು ಒಡೆಯರಾಗೋದೇ ನಿಜವಾದ ಭೂಮಿ ಹುಣ್ಣಿಮೆ.” +ಕೃಷ್ಣಪ್ಪನಿಗೆ ತನ್ನ ಅನುಭವದ ಸತ್ಯವೇ ಬೇರೆ ಎಂದು ಕಂಡರೂ ಅಣ್ಣಾಜಿಯ ವಾದವೂ ಸರಿಯಾಗಿ ಕಂಡು ತಬ್ಬಿಬ್ಬಾಗಿಬಿಡುತ್ತಿದ್ದ. +“ಹಾಗಾದರೆ ರಷ್ಯದಲ್ಲಿ ದುಡಿಮೆಯೆಲ್ಲ ಸೃಷ್ಟಿಶೀಲವಾಗಿಬಿಟ್ಟಿದೆಯೊ?” +ಕೃಷ್ಣಪ್ಪ ಅಣ್ಣಾಜಿಯನ್ನು ಹಂಗಿಸುವಂತೆ ಕೇಳುತ್ತಿದ್ದ. +“ನೋಡು ಕೃಷ್ಣಪ್ಪ, ಆಗಬೇಕಾದ್ದೆಲ್ಲ ರಷ್ಯಾದಲ್ಲೆ ಆಗಿಲ್ಲ ನಿಜ. ಕ್ರಾಂತಿಗೆ ಜನರನ್ನು ಸಿದ್ಧಮಾಡಿದ ಪಕ್ಷ ತಾನೇ ಒಡೆಯನಾಗಿಬಿಟ್ಟಿದೆ ಅಲ್ಲಿ. ಕ್ರಾಂತಿ ಒಂದು ದಿನದ ಕೆಲಸವಲ್ಲ. ಆದ ತಪ್ಪನ್ನು ಸದಾ ತಿದ್ದಿಕೊಳ್ತಾನೇ ಹೋಗಬೇಕು. ಈಗ ಚೈನಾದಲ್ಲಿ ನೋಡು….” +ಕಾಡುತ್ತಿದ್ದ ಕಡಲೇಕಾಯಿ ಮಾರುವ ಹುಡುಗನನ್ನು “ಗೆಟ್ ಅವೇ” ಎಂದು ಗದರಿಸಿ ಅಣ್ಣಾಜಿ ಸಿಗರೇಟು ಹತ್ತಿಸಿದ. ಬಾಯಲ್ಲಿ ಸಿಗರೇಟು ಹಚ್ಚಿಸಿ ತನ್ನ ಜುಬ್ಬದ ಸಡಿಲವಾದ ತೋಳುಗಳನ್ನು ಮಡಿಸಿಕೊಂಡು ಜೇಬಿನಿಂದ ಪೆನ್ಸಿಲ್ ಕಾಗದ ತೆಗೆದ. ಚೈನಾದ ಮ್ಯಾಪನ್ನು ಬರೆದು ಲಾಂಗ್ ಮಾರ್ಚನ್ನು ವಿವರಿಸುತ್ತಿದ್ದಂತೆಯೇ ಕೃಷ್ಣಪ್ಪ ರೇಗಿದ ಧ್ವನಿಯಲ್ಲಿ ಹೇಳಿದ: +“ನಮ್ಮ ದೇಶದ ಕಮ್ಯುನಿಸ್ಟರು ದೇಶದ್ರೋಹಿಗಳು. ನಲವತ್ತೆರಡರ ಚಳುವಳೀಲಿ ಯಾಕೆ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ರು ಹೇಳು? ನನಗಂತೂ ರಷ್ಯಾಕ್ಕೂ ಚೈನಾಕ್ಕೂ ತಲೆಹಿಡುಕನಾಗಿ ಕೆಲಸ ಮಾಡೋದು ಸಾಧ್ಯವಿಲ್ಲ.” +ಅಣ್ಣಾಜಿ ಸಮಾಧಾನ ಕಳೆದುಕೊಳ್ಳದೆ ಹೇಳಿದ: +“ನಮ್ಮ ದೇಶದ ಕಮ್ಯುನಿಸ್ಟರು ಬಂಜೆಯರು -ಒಪ್ಪಿದೆ. ಆದರೆ ಎರಡನೇ ಯುದ್ಧದ ಸಮಯದಲ್ಲಿ ಜರ್ಮನೀನ್ನ ಸೋಲಿಸೋದು ಮುಖ್ಯವಾಗಿತ್ತು ಅನ್ನೋದನ್ನೂ ನಾನು ಒಪ್ಪುತೀನಿ. ಆದರೂ ನಾನು ಆಗ ಪಾರ್ಟಿ ಬಿಟ್ಟು ಗಾಂಧಿ ಚಳುವಳೀಲಿ ಭಾಗವಹಿಸಿದ್ದೆ -ಇವೆಲ್ಲ ಕಾಂಟ್ರಡಿಕ್ಷನ್ನುಗಳು. ನೋಡು ಕೃಷ್ಣಪ್ಪ ನನ್ನ ಉದ್ದೇಶ ಇದು: ಆಸೆಬುರುಕರ ಬಗ್ಗೆ ಪ್ರಚಂಡ ತಿರಸ್ಕಾರ ಇರೋದನ್ನ ನಿನ್ನಲ್ಲಿ ನಾನು ಕಂಡಿದೇನೆ. ಈ ಗರ್ವ ದಲಿತರ ಕ್ರಾಂತಿಗೆ ಅತ್ಯಗತ್ಯವಾದ ಡ್ರೈವಿಂಗ್ ಫ಼ೋರ್ಸ್. ನನಗಿಂತ ನೀನೇ ಗಟ್ಟಿಯಾಗಿ ಉಳೀತಿ ಅಂತ ಅನ್ನಿಸೋದರಿಂದ ಈ ಕ್ರಾಂತಿಯ ಬೀಜಾನ್ನ ಬಿತ್ತಲಿಕ್ಕೇಂತ ನಿನಗಿದೆಲ್ಲ ನಾನು ಹೇಳ್ತಿದೇನೆ. ನನ್ನ ಜೀವನ ಈಗ ನೂರು ತರಲೆ ತಾಪತ್ರಯಗಳಲ್ಲಿ ಗಂಟುಗಂಟಾಗಿ ಬಿಟ್ಟಿದೆ. ನಾನಾಗಿ ಇದನ್ನೆಲ್ಲ ಹರಕೊಳ್ಳಲಾರೆ. ದೇಶದಲ್ಲಿ ಜನ ಕ್ರಾಂತಿಗೆ ಸಿದ್ಧರಾದಾಗ ನಾನೆಲ್ಲ ಹರಕೊಂಡು ಅವರ ಜೊತೆ ನಿಂತಿರ್ತೀನಿ ಅಂತ ನನಗೆ ಗೊತ್ತು. ಗೋವಾದಲ್ಲೆ ಪೋಲೀಸರು ಒಂದು ಹೆಜ್ಜೆ ಮುಂದಿಟ್ಟರೆ ಶೂಟ್ ಮಾಡ್ತೀವಿ ಅಂದಾಗ ನನ್ನ ಹಿಂದೆ ಸತ್ಯಾಗ್ರಹ ಮಾಡ್ಲಿಕ್ಕೆ ಅಂತ ಬಂದಿದ್ದವರು ಹಿಂಜರಿದರು. ಆಗ ನಾನು ನನ್ನ ಪುಕ್ಕತನಾನ್ನ ಮೀರಿ ಪೋಲೀಸರನ್ನ ಧಿಕ್ಕರಿಸಿ ಒಂದು ಹೆಜ್ಜೆ ಮುಂದಿಟ್ಟೆ. ಗುಂಡಿನ ಶಬ್ದಕ್ಕಾಗಿ ಕಾದೆ. ಆಗ ಹಿಮ್ಮೆಟ್ಟುತ್ತಿದ್ದ ನನ್ನ ಹಿಂದಿದ್ದ ಜನರೆಲ್ಲ ಇದ್ದಕಿದ್ದಂತೆ ನುಗ್ಗಿ ಬಂದರು. ಪೋಲೀಸರೂ ಶೂಟ್ ಮಾಡಲಾರದೆ ಸುಮ್ಮಗೆ ನಿಂತರು. ನನ್ನ ವರ್ಗದ ಮಿತೀನ್ನ ನಾನು ಇಂಥ ಸಂದರ್ಭಗಳಲ್ಲಿ ಮೀರಿದರೆ ನೀನು ಮಾತ್ರ ಪ್ರತಿಕ್ಷಣಾನೂ ಮೀರತ ಹೋಗಬಲ್ಲೆ: ರೈತನವನಾದ್ದರಿಂದ ನೂರಾರು ಜನರನ್ನು ನಿನ್ನ ಜತೇಲಿ ತಗೊಂಡು ಹೋಗಬಲ್ಲೆ ಅಂತ ತಿಳಿದಿದ್ದೀನಿ. ಹೋಗಬಲ್ಲೆ ಅಲ್ಲ -ಹೋಗಲೇ ಬೇಕಾಗುತ್ತೆ. ಇದು ಸೈಂಟಿಫ಼ಿಕ್ ಸತ್ಯ. ವ್ಯಕ್ತಿವಾದಿಯಾದರೆ ನಿನ್ನ ಸ್ವಭಾವ ಫ಼್ಯಾಸಿಸ್ಟ್ ಆಗ್ತಾ ಹೋಗತ್ತೆ. ಆದ್ರಿಂದ ನೀನು ಮಾಸ್ ಮ್ಯಾನ್ ಆಗಬೇಕು. ವರ್ಗಹೋರಾಟದ ಮುಂಚೂಣಿಯಲ್ಲಿ ನಿನ್ನಂಥವರು ನಿಲ್ಲಬೇಕು. ಕಮ್ಯುನಿಸ್ಟರನ್ನು ಮರೆತುಬಿಡು. ಈ ನೆಲದ ಸಾರವನ್ನು ಹೀರಿದ, ಈ ಕ್ಷುದ್ರ ಚರಿತ್ರೇನ್ನ, ಹಾಗೇ ವೈಭವವನ್ನು ಅರ್ಥಮಾಡಿಕೊಂಡ ಒಂದು ಹೊಸ ಕ್ರಾಂತಿಕಾರಿ ಪಕ್ಷಾನ್ನ ಈ ದೇಶದಲ್ಲಿ ನಾವು ಕಟ್ಟಬೇಕು….” +ಅಣ್ಣಾಜಿ ಸ್ಫೂರ್ತಿಯಿಂದ ಮಾತಾಡುತ್ತ ಪರವಶನಾಗಿದ್ದ. ಕೃಷ್ಣಪ್ಪನನ್ನು ಅದು ಆವರಿಸಿತ್ತಾದರೂ ತನ್ನ ಆಳವಾದ ಸಂಶಯವನ್ನು ಹೇಳದೇ ಅವನಿಗೆ ವಿಧಿಯಿರಲಿಲ್ಲ: +“ಜನ ಇನ್ನಷ್ಟು ಸರಾಗವಾಗಿ ಉಣ್ಣೋ ಮಲಗೋ ಸಾಯೋ ಕೆಲಸ ಮಾಡಿಕೋತ ಹೋಗಲಿಕ್ಕೆ ಈ ಉಪದ್ವ್ಯಾಪವೆಲ್ಲ ಯಾಕೆ ಹೇಳು.” +ಅಣ್ಣಾಜಿಗೆ ಕೋಪ ಬಂತು: +“ಮುಚ್ಚು ಬಾಯಿ. ಗರ್ವದ ಮಾತಾಡಬೇಡ. ಜೀವನಕ್ಕಿಂತ ನೀನು ಶ್ರೇಷ್ಠ ಅಂತ ತಿಳಿಯೋಕೆ ನೀನು ಯಾರು? ದೇವರ? ಕ್ಷುದ್ರವಾದ ದೈನಿಕ, ದೈನಿಕ, ಅಂತ ಗೋಳಿಡ್ತಿದೀಯಲ್ಲ, ಅದನ್ನು ಬಿಟ್ಟು ಉಳಿದದ್ದೇನಿದೆ? ಈ ದೈನಿಕ ಜೀವನಕ್ಕೇ ಪ್ರಭೇನ್ನ ತರೋದಕ್ಕಿಂತ ದೊಡ್ಡ ಕೆಲಸ ಏನಿದೆ? ಸಮಾಧಿಯಲ್ಲೋ, ಭಕ್ತಿಯ ಪರವಶತೇಲೊ ಎಲ್ಲಕ್ಕಿಂತ ಮೇಲೆ ಹೋಗ್ತೀನಿ ಅಂತ ತಿಳಿದಿರೋ ಹಿಂಜಿದ ಬುದ್ಧಿಯ ಈಡಿಯಟ್ಟರಂತೆ ಮಾತಾಡಬೇಡ.” +ಈವರೆಗೆ ಯಾರೂ ಕೃಷ್ಣಪ್ಪನನ್ನು ಹೀಗೆ ಜರೆದಿರಲಿಲ್ಲ. ಈ ಮಾತಾಡುವಾಗ ಅಣ್ಣಾಜಿ ಅವನ ಬದುಕಿನ ಮಿತಿಗಳನ್ನು ಮೀರಿದ್ದು ಕಂಡು ಕೃಷ್ಣಪ್ಪ ಗೌರವದಿಂದ ಹೇಳಿದ -ತಾನು ಹೇಳೋದು ಅಪ್ರಸ್ತುತ ಎನ್ನಿಸಿದರೂ. +ನೋಡು, ನನಗೆ ಇಬ್ಬರು ಹತ್ತಿರದವರು ಇದಾರೆ. ಬುದ್ಧ ಮತ್ತು ಕ್ರಿಸ್ತ. ತಾಯಿಗೆ ಕ್ರಿಸ್ತ ಹೇಳಿದನಲ್ಲ ’ಏ ಹೆಂಗಸೆ ನೀನು ಯಾರು?’ ಅಂತ -ಅದು ನನಗೆ ಇಷ್ಟವಾದ ನಿಲುವು. ಹಾಗೇನೇ ನಮ್ಮ ಅಲ್ಲಮ, ನಾನಕ, ಕಬೀರರಂಥ ಅರೆಹುಚ್ಚರೂ ಯಾವುದೋ ದೊಡ್ಡ ಸತ್ಯಾನ ತಮ್ಮ ಮಾತಿನಲ್ಲಿ ಆರದಂತೆ ಬಚ್ಚಿಟ್ಟಿದ್ದಾರೆ ಅಂತ ನನಗನ್ನಿಸುತ್ತೆ. ಆದ್ರಿಂದ ಜನರ ಹೊಟ್ಟೆ ಬಟ್ಟೆ ಉಪದ್ವ್ಯಾಪಗಳಲ್ಲಿ ಮುಳುಗೋದೂಂದ್ರೆ.” +ತಾನು ಮಾತನ್ನು ಪೂರ್ಣ ಮಾಡಿದರೆ ತನ್ನ ಮನಸ್ಸಲ್ಲಿ ನಿಜವಾಗಿ ಇರೋ ಗೊಂದಲಾನ್ನ ಸರಳಗೊಳಿಸಿದಂತೆ ಆದೀತೆಂದು ಕೃಷ್ಣಪ್ಪ ಅರ್ಧಕ್ಕೆ ನಿಲ್ಲಿಸಿದ. +ಅಣ್ಣಾಜಿ ಸುಮ್ಮನಿದ್ದ. ಕೃಷ್ಣಪ್ಪನೂ ಸುಮ್ಮನೆ ಕೂತ. ಪಾರ್ಕಿನಲ್ಲಿ ಗಾಳಿ ಹಿತವಾಗಿತ್ತು. ಹೊಸದಾಗಿ ಮದುವೆಯಾದ ದಂಪತಿಗಳು, ಚಿಕ್ಕ ಮಕ್ಕಳನ್ನು ಸಂತೈಸುತ್ತ ಕೂತ ಹೆಂಗಸರು, ಅವರ ಡೊಳ್ಳುಹೊಟ್ಟೆಯ ಗಂಡಂದಿರು, ನಿವೃತ್ತರಾದ ಮೇಲೆ ತಮ್ಮ ಬೆಳೆದ ಮಕ್ಕಳ ಜೊತೆ ಕಾದಾಡುವ ಮುದುಕರು, ಇಂಥ ಜೀವನ ಇನ್ನಷ್ಟೂ ಉಜ್ವಲವಾಗುತ್ತದೆ ಎಂದು ಅಣ್ಣಾಜಿ ಹೇಳುತ್ತಾನಲ್ಲ ಅದು ಹೇಗೆ ಎಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಕೂತ. ಅಣ್ಣಾಜಿ ಮೃದುವಾಗಿ ಹೇಳಿದ: +“ನೀನು ಹೇಳಿದ ಯಾರೂ ಸಮಾಜ ಬಿಟ್ಟು ನಿಲ್ಲಲಿಲ್ಲ ಕೃಷ್ಣಪ್ಪ. ಅವರಿಗೂ ನಮಗೂ ಇರೋ ವ್ಯತ್ಯಾಸ ಅಂದ್ರೆ ಅವರು ಭ್ರಮೇಲಿ ಗೆಲ್ಲಲಿಕ್ಕೆ ನೋಡಿದರು. ನಾವು ಕಾರ್ಖಾನೇಲಿ, ಹೊಲದಲ್ಲಿ ನಿಜವಾಗಿ ಗೆಲ್ಲಲಿಕೆ ಪ್ರಯತ್ನಪಡ್ತೇವೆ. ನೀನು ಹೀಗೇ ಪ್ರಾಮಾಣಿಕವಾಗಿ ಉಳಿದರೆ ನೀನೂ ನನ್ನ ಥರಾನೇ ಯೋಚನೆ ಮಾಡಲೇಬೇಕಾಗತ್ತೆ -ಇವತ್ತಲ್ಲ -ನಾಳೆ.” +* +* +* +ಅಣ್ಣಾಜಿ ತಾನು ಪಾಠ ಹೇಳಿಕೊಡುತ್ತಿದ್ದ ಚನ್ನವೀರಯ್ಯನ ಮನೇಲಿ ಹೋಗಿ ಸದ್ಯಕ್ಕೆ ಇರುವುದೆಂಬ ತನ್ನ ನಿರ್ಧಾರವನ್ನು ಕೃಷ್ಣಪ್ಪನಿಗೆ ಹೇಳಿದ. ಈ ಮಫ಼್ತಿಯಲ್ಲಿರೋನು ಸಿ‌ಐಡಿ ಅಲ್ಲದಿರಬಹುದೆಂದು ಕೃಷ್ಣಪ್ಪನಿಗೆ ಅನುಮಾನ. ತನ್ನ ಸುತ್ತ ರಹಸ್ಯದ ವಾತಾವರಣವನ್ನು ಬಯಸುವ ಅಣ್ಣಾಜಿಯ ಭ್ರಮೆಯಿರಬಹುದು -ಅದು. ಇಲ್ಲವಾದಲ್ಲಿ ತನ್ನ ದಿನನಿತ್ಯದ ವಿಧಿಗಳೆಲ್ಲ ಅಣ್ಣಾಜಿಗೆ ಸಪ್ಪೆಯಾಗಿಬಿಡುತ್ತವೆ. ಆದರೆ ನಿಜವಾಗಿ ಹೆದರಿದಂತೆಯೂ ಅವನು ಕಾಣುತ್ತಿದ್ದ. +“ನಾನು ದೀಪ ಆರಿಸಿ ಹೊರಗೆ ಹೊರಟು ಹೋಗ್ತೇನೆ. ಸ್ವಲ್ಪ ಹೊತ್ತು ಬಿಟ್ಟು ನೀನು ನನ್ನ ಬೆಡಿಂಗ್ ಮತ್ತು ಪುಸ್ತಕಗಳನ್ನು ಚನ್ನವೀರಯ್ಯನ ಮನೆಗೆ ಸಾಗಿಸು -ಆ ಹಂದಿಗದು ಗೊತ್ತಾಗದಂತೆ” ಎಂದು ಪಿಸುಗುಟ್ಟಿ ಅಣ್ಣಾಜಿ ದೀಪ ಆರಿಸಿ ಹೊರಟ. ಕೃಷ್ಣಪ್ಪ ಕಿಟಕಿಯ ಮೂಲಕ ಮಫ಼್ತಿಯವನ ಚಲನವಲನಗಳನ್ನು ಗಮನಿಸುತ್ತ ನಿಂತ. ಅಣ್ಣಾಜಿ ದೀಪ ಆರಿಸಿ ಇಳಿದದ್ದನ್ನು ಅವನು ಗಮನಿಸಿರಬಹುದೆಂದು ಅನುಮಾನವಾಯಿತು. ಆತನೂ ಅಲ್ಲಿಂದ ಕದಲಿದ. ಅಣ್ಣಾಜಿಯ ಬೆನ್ನು ಹತ್ತಿ ಅವನು ನಡೆದಿರಬಹುದು. ಅಣ್ಣಾಜಿ ಇದನ್ನು ಮೊದಲೇ ಊಹಿಸಿ, ತಾನು ಸೀದ ಚನ್ನವೀರಯ್ಯನ ಮನೆಗೆ ಹೋಗುವುದಿಲ್ಲವೆಂದೂ ಕಾಕ ಹೋಟೆಲಲ್ಲಿ ಏನಾದರೂ ತಿಂದು, ತಾನು ಟ್ಯೂಶನ್ ಹೇಳುವ ಒಂದೆರಡು ಮನೆಗಳಿಗೆ ಹಾಗೇ ಭೇಟಿ ಕೊಟ್ಟು, ಇನ್ನೊಂದು ತಿಂಗಳು ತಾನು ಬರುವುದಿಲ್ಲವೆಂದು ಹೇಳಿ, ಬಳಸುದಾರಿಯಲ್ಲಿ ಚನ್ನವೀರಯ್ಯನ ಮನೆಗೆ ಹೋಗುತ್ತೇನೆಂದೂ ಕೃಷ್ಣಪ್ಪನ ಜೊತೆ ತನ್ನ ಗೆರಿಲ್ಲಾ ಉಪಾಯಗಳನ್ನು ಸೂಚಿಸಿದ್ದ. +ಸ್ವಲ್ಪ ಹೊತ್ತಿನ ಮೇಲೆ ಮಫ಼್ತಿಯಲ್ಲಿದ್ದವನು ಇನ್ನೂ ಹತ್ತಿರ ಪ್ರತ್ಯಕ್ಷವಾದ. ಬೋಡುತಲೆ ದಪ್ಪಕತ್ತುಗಳ, ಕೋಟ್ ಹಾಕಿ ಪಂಚೆಯುಟ್ಟ ಅವನು ಸಿಗರೇಟು ಕೊಳ್ಳುತ್ತ ಕೋಣೆಯ ಎದುರಿನ ಬೀದಿಯ ಮಗ್ಗುಲಲ್ಲೆ ನಿಂತಿದ್ದ. ಕೃಷ್ಣಪ್ಪ ಅವನನ್ನು ಗುರುತಿಟ್ಟುಕೊಳ್ಳಲು ಸೂಕ್ಷ್ಮವಾಗಿ ಗಮನಿಸಿದ. ಅವನ ಪಂಚೆ ಶುಭ್ರವಾಗಿತ್ತು. ಅಡಿಕೆ ತೋಟದ ಸಾಹುಕಾರನಂತೆ ಕಾಣುತ್ತಿದ್ದ. ಹಳ್ಳಿಯಿಂದ ಅಡಿಕೆ ಮಾರಲು ಬಂದಿರಬಹುದು. ಈ ಬೀದಿಯ ಸುತ್ತಮುತ್ತ ಇರುವರೆಂದು ಹೇಳಲಾದ ಯಾವುದೋ ವೇಶ್ಯೆಯ ಮನೆಯೊಳಗೆ ಹೋಗಲು ಪ್ರಶಸ್ತವಾದ ಸಮಯಕ್ಕೆ ಕಾಯುತ್ತಿರಬಹುದು. ಇಂಥ ಕ್ಷುಲ್ಲಕ ಸಿ‌ಐಡಿ ಕೆಲಸಕ್ಕೆ ತಾನು ನಿಲ್ಲಬೇಕಾಯಿತೆಂದು ಕೃಷ್ಣಪ್ಪನಿಗೆ ರೇಗಿತು. ಈ ವರೆಗೆ ಭಾಗವಹಿಸಿದ ಎಲ್ಲ ಚಳುವಳಿಗಳಲ್ಲೂ ಗಾಂಧಿವಾದಿಯಾಗಿದ್ದ ಕೃಷ್ಣಪ್ಪನಿಗೆ ರಾಜಾರೋಷವಾಗಿ ಮಾಡಲಾಗದ ಅಣ್ಣಾಜಿಯ ರಾಜಕೀಯದಲ್ಲೇನೊ ತಪ್ಪಿದೆ ಎನ್ನಿಸಿತು. ತಾನು ಇದ್ದ ಪಾರ್ಟಿಗಳನ್ನೆಲ್ಲ ಒಡೆಯುತ್ತ ಕೃತ್ರಿಮಗಳಿಗೆ ಟ್ಯಾಕ್ಟಿಕ್ಸ್ ಎಂಬ ಹೆಸರು ಕೊಟ್ಟು ಅಣ್ಣಾಜಿ ಮಾಡುತ್ತಿದ್ದ ಕಾರಸ್ತಾನಗಳಲ್ಲೇ ಪಕ್ವವಾಗುತ್ತ ಹೋಗಬೇಕಾದ ರಾಜಕೀಯ ಕ್ರಾಂತಿ, ಕೃಷ್ಣಪ್ಪನ ಸ್ವಭಾವಕ್ಕೆ ಒಗ್ಗಿರಲಿಲ್ಲ. ಆದರೆ ಅಣ್ಣಾಜಿ ದಾರ್ಶನಿಕನಂತೆಯೂ ಕೃಷ್ಣಪ್ಪನಿಗೆ ಕಂಡಿದ್ದ -ತನ್ನ ಹತ್ತಿರ ಅವನು ಮುಚ್ಚುಮರೆ ಮಾಡುತ್ತಿರಲಿಲ್ಲ. +ಕೋಟು ಪಂಚೆಯ ವ್ಯಕ್ತಿ ತನ್ನ ಜೇಬಿನಿಂದ ಕಪ್ಪು ಟೊಪ್ಪಿ ತೆಗೆದು ತಲೆಗೆ ಹಾಕಿಕೊಂಡು ಒಂದು ಜಟಕ ಹತ್ತಿದ್ದನ್ನು ಕೃಷ್ಣಪ್ಪ ನೋಡಿದ. ಅವನು ಕಣ್ಮರೆಯಾದ ಮೇಲೆ ಹೋಗಿ ಒಂದು ಜಟಕಾ ತಂದು ಅಣ್ಣಾಜಿಯ ಸರ್ವಸ್ವವಾದ ಹೋಲ್ಡಾಲಿನಲ್ಲಿ ಎಲ್ಲವನ್ನೂ ತುಂಬಿಕೊಂಡು ಬಳಸುದಾರಿಯಲ್ಲಿ ಚನ್ನವೀರಯ್ಯನ ಮನೆಗೆ ಹೋದ. +***** +ಮುಂದುವರೆಯುವುದು +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_390.txt b/Kannada Sahitya/article_390.txt new file mode 100644 index 0000000000000000000000000000000000000000..8cef692e8b345a3eb671f8a6bb0faaf45e68eded --- /dev/null +++ b/Kannada Sahitya/article_390.txt @@ -0,0 +1,114 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಬೀದರ. ೨೭ ಮತ್ತು ೨೮ ಜನವರಿ ೨೦೦೬ +ನುಡಿ ನಮನ : +ಪಾತಾಳದಿಂದತ್ತ ಮಾತ ಬಲ್ಲವರಿಲ್ಲ +ಗಗನದಿಂದ ಮೇಲೆ ಅನುಭಾವ ತಾನಿಲ್ಲ +ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ +ಹೊರಗಣ ಹೊರಗನು ಅರಿಯಬಲ್ಲವರಿಲ್ಲ +ಹಿಂದಣ ಹಿಂದನು ಮುಂದಣ ಮುಂದನು +ತಂದು ತೋರಿದ ನಮ್ಮ ಗುಹೇಶ್ವರನು. +ಅಖಂಡ ಕರ್ನಾಟಕದ ಬಂಧುಗಳೇ, ಕನ್ನಡವನ್ನು ತನ್ಮೂಲಕ ಭಾರತವನ್ನು ಪ್ರೀತಿಸುತ್ತ ವಿಶ್ವದ ತುಂಬೆಲ್ಲ ಬದುಕುತ್ತಿರುವ ಸಕಲ ಜೀವರೇ ತಮ್ಮೆಲ್ಲರಿಗೂ ಶರಣು ಶರಣಾರ್ಥಿ. +ಬಂಧುಗಳೇ, ಅಲ್ಲಮನ ಈ ವಚನ “ಮಾತು” ಮತ್ತು “ಅನುಭಾವ”ಗಳನ್ನು ಪರಿವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತದೆ. “ಮಾತು” ಅಂದರೆ ಭಾಷೆ, ಅರ್ಥಾತ್ ಸಂಸ್ಕೃತಿ. ತಾತ್ಪರ್ಯ ಒಟ್ಟು “ಬದುಕು” ಎಂದೇ ಅರ್ಥ. ಜೀವಿಯ ಒಟ್ಟು ಬದುಕಿನ ಪ್ರಚಂಡ ಅಸ್ತಿತ್ವ ಅದರ ಶಕ್ತಿ, ಸಾಮರ್ಥ್ಯ, ಅನಂತತೆ ಕುರಿತು; ಅದೇ ಕಾಲಕ್ಕೆ ಬದುಕಿನ ಇತಿಮಿತಿ ಕುರಿತು ವಾಸ್ತವದ ನೆಲೆಯಲ್ಲಿ ನಡೆಸಿದ ಅನ್ವೇಷಣೆಯಾಗಿ ನನಗಾದರೂ ಅರ್ಥ ಕಟ್ಟಿಕೊಡುತ್ತಿದೆ. ಏಕೆಂದರೆ ನಾವೆಲ್ಲ ಇಂದು ವಿಶ್ವವೆಂಬ ಹಳ್ಳಿಯೊಂದರ ಪರಿವ್ಯಾಪ್ತಿಯಡಿಯಲ್ಲಿ ಏಕಕಾಲಕ್ಕೆ ತೀರ ವಿಸ್ತೃತವೂ, ಇನ್ನೊಂದು ಮಗ್ಗುಲಲ್ಲಿ ತೀರ ಕುಬ್ಜರೂ ಆಗುತ್ತಿದ್ದೇವೆ. ನಾವೇನಾಗುತ್ತಿದ್ದೇವೆ ಎಂಬುದಕ್ಕೆ ನಾವೇ ಜವಾಬ್ದಾರರು ಹೌದೇ, ಅಲ್ಲವೆ? ಎಂಬ ದ್ವಂದ್ವಗಳು, ನಾವು ಮತ್ತೇನೋ ಆಗಬೇಕಾಗಿತ್ತಲ್ಲ ಎಂಬ ತಳಮಳವೂ, ಅರಿವಿಲ್ಲದಂತೆ ಯಾರಿಗೋ ನಮ್ಮನ್ನು ಮಾರಿಕೊಂಡುಬಿಟ್ಟಿವೇನೋ ಎಂಬ ಆತಂಕವೂ ನಮ್ಮನ್ನು ಕಾಡುತ್ತಿವೆ. +ಈ ರೀತಿ ದ್ವಂದ್ವ, ತಳಮಳ, ಆತಂಕಗಳು ಏಕಕಾಲಕ್ಕೆ ಮುತ್ತಿಕೊಂಡಿರುವ ಈ ಸಮ್ಮಿಶ್ರಭಾವ ತಾಕಲಾಟಗಳ ವಿಚಿತ್ರ ಮನೋಸ್ಥಿತಿಯಲ್ಲಿ ನುಡಿಹಬ್ಬ ನಡೆಸುತ್ತಿದ್ದೇವೆ. ಹಿಂದಿನ ಹಲವು ಸಮ್ಮೇಳನಾಧ್ಯಕ್ಷರುಗಳು ಗುರುತಿಸಿರುವಂತೆ ಇದು ಕನ್ನಡದ ಹಬ್ಬ, ಸಂತೆ, ಜಾತ್ರೆ, ಉತ್ಸವ, ಮೆರವಣಿಗೆ, ಸಾಂಸ್ಕೃತಿಕ ಚಿಂತನ, ರಾಜಕೀಯ ವೈಭವ, ಸಾಹಿತಿಗಳ ಪರಿಷೆ ಏನೆಲ್ಲವೂ ಹೌದು ಮತ್ತು ಅಲ್ಲ. ನಾನು ಹೌದು ಮತ್ತು ಅಲ್ಲ ಎಂಬ ಎರಡೂ ವಿರೋಧಿ ನೆಲೆಯ ಶಬ್ದಗಳನ್ನು ಏಕಕಾಲಕ್ಕೆ ಬಳಸುವ ಮೂಲಕ ವರ್ತಮಾನದ ಸಂಕೀರ್ಣಾತಿ ಸಂಕೀರ್ಣ ಬದುಕಿನ ದಿಗ್ದರ್ಶನ ಮಾಡಿಸುವ ಪ್ರಯತ್ನಕ್ಕಿಳಿಯುತ್ತೇನೆ. +ಇಂದು ನಮ್ಮ ಬದುಕು ಹೌದು ಮತ್ತು ಅಲ್ಲ ಎರಡರ ನಡುವಿನ ಬಿಕ್ಕಟ್ಟಿನಲ್ಲಿ ಹೊಸದೊಂದು ಸತ್ಯಕ್ಕೆ (ಸತ್ಯ ಎಂಬುದು ಕೂಡ ಸಾಪೇಕ್ಷ ಎಂಬ ತಿಳುವಳಿಕೆಯೊಂದಿಗೆ) ತೆರೆದುಕೊಳ್ಳುವ ಧಾವಂತದಲ್ಲಿದೆ. ಈ ಸತ್ಯವಾದರೂ ಹಲವು ಸುಳ್ಳು ಭ್ರಮೆಗಳೊಂದಿಗೆ ಕಳ್ಳೆಮಿಳ್ಳೆಯಾಡಿಸುತ್ತಿದೆ, ಬದುಕು ಆಟವಾದಂತೆ ಆಡುತ್ತಿರುವವರ ಮನಸ್ಸುಗಳಲ್ಲಿ ಹಿರ್ಸ್, ಹ್ಯಾವ, ಜಿದ್ದುಗಳು ಹೆಚ್ಚಾಗುತ್ತಿವೆ. ಈ ಜಿದ್ದು, ಹಿರ್ಸ್, ಹ್ಯಾವಗಳನ್ನು ನಕಾರಾತ್ಮಕವಾಗಿಯೇ ಚರ್ಚಿಸಬೇಕಾಗಿಲ್ಲ. ಏಕೆಂದರೆ ಬದುಕೇ ಅಂಥದ್ದು. ಅದು ಕೇವಲ ನಕಾರಕ್ಕೋ ಅಥವಾ ಕೇವಲ ಸಕಾರಕ್ಕೋ ಬಿಚ್ಚಿಕೊಳ್ಳುವಂಥದ್ದಲ್ಲ. ಹೀಗಿರುವಾಗ ಬದುಕಿಗೆ ನಾವು ಏನೆಲ್ಲ ಪರಿಭಾಷೆಗಳನ್ನು ಕಟ್ಟಿಕೊಂಡು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಹೊರಟಿರುವಾಗಲೂ ಅದು ಅವುಗಳಿಂದ ಜಿಗಿದು ನಿತಾಂತ ನಗ್ನವಾಗಿ ಅಣಕಿಸುತ್ತದೆ. ಆದ್ದರಿಂದ ಅದನ್ನು ನಿರಪೇಕ್ಷ ನೆಲೆಯಲ್ಲಿ ಗ್ರಹಿಸುತ್ತಿರುವಾಗಲೂ ನಮ್ಮ ಸಂದರ್ಭಗಳಿಗೆ ಅಂದರೆ ನಾವು ಬದುಕಿರುವ ಸ್ಥಿತಿಗತಿಯ ಆಗುಹೋಗುಗಳೊಂದಿಗೆ ಸಂವೇದಿಸಿಕೊಳ್ಳುವ ಜರೂರಿ ಇದ್ದೇ ಇರುತ್ತದೆ. ಈ ಜರೂರಿಯ ಹತ್ತಾರು ಹುಡುಕಾಟಗಳಲ್ಲಿ ಸಂಸ್ಕೃತಿ ಚಿಂತನೆಯು ಬಹು ಮುಖ್ಯವಾದುದು. ಇಂಥ ಸಂಸ್ಕೃತಿ ಚಿಂತನೆಯ ಬಹುಮುಖ್ಯ ನೆಲೆಗಳೆನಿಸಿಕೊಂಡಿರುವ ಸಾಹಿತ್ಯ ಸಮ್ಮೇಳನಗಳು ಬದುಕನ್ನು ಹೊಸ ಪ್ರಮೇಯಗಳಿಗೆ ಒಡ್ಡಿಕೊಳ್ಳುವ “ಹಿಕಮತ್ತು”ಗಳಾಗಬೇಕಿದೆ. “ಹಿಕಮತ್ತು” ಎಂಬುದನ್ನು ನಾನು ಈ ಹೊತ್ತು ಕನ್ನಡ ಮಾತನಾಡುವ ಮತ್ತು ಕನ್ನಡವನ್ನೆ ಬದುಕುವ ಒಟ್ಟು ಜನಾಂಗದ ಬಾಳ್ವೆಯ ಪ್ರಶ್ನೆಯಾಗಿ ನಿರ್ವಚಿಸಿಕೊಂಡಿದ್ದೇನೆ. +ಕನ್ನಡ ನುಡಿ ಚಿಂತನೆ ಕರ್ನಾಟಕದ ನಿರ್ದಿಷ್ಟ ಭೌಗೋಲಿಕ ಪ್ರದೇಶದಲ್ಲಿ ವಾಸಿಸುತ್ತಿರುವವರ ಬಾಳ್ವೆಯ ಪ್ರಶ್ನೆ ಮಾತ್ರವಲ್ಲ; ಕನ್ನಡ ಮಾತಾಡುವವರು ಎಲ್ಲೆಲ್ಲಿ ವಾಸಿಸುತ್ತಿರುವರೋ ಅವರೆಲ್ಲರೂ ಹಿಡಿ ನೆಮ್ಮದಿಯಿಂದ ಬದುಕುವಂಥ ವಾತಾವರಣ ಕಲ್ಪಿಸುವ ರಾಜಕೀಯ ಇಚ್ಛಾಶಕ್ತಿಯ ಚರ್ಚೆವರೆಗೂ ಇದರ ಅರ್ಥವನ್ನು ವಿಸ್ತರಿಸಿಕೊಳ್ಳಬೇಕಿದೆ. +ಇಂಥ ಚರ್ಚೆಯೊಂದನ್ನು ಚಾಲನೆಗೊಳಿಸುವಂಥ “ಅಧ್ಯಕ್ಷ ಸ್ಥಾನ” ಒದಗಿಸಿಕೊಟ್ಟ ಈ ಇಳಿವಯಸ್ಸಿನಲ್ಲಿ ಬೌದ್ಧಿಕ ಹರೆಯ ಉಕ್ಕುವಂತೆ ಹಾರೈಸಿದ ಸಮಸ್ತ ಕನ್ನಡಿಗರಿಗೂ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ವೇದಿಕೆ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. +ಕನ್ನಡ ಮಣ್ಣಿನ ಚೈತನ್ಯ, ವಚನಕಾರರ ಭೂಮಿಯ ಬೆವರ ಸೊನೆಯ ಮಾನವತಾವಾದಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ಸ್ಮೃತಿ ಜ್ಯೋತಿಯೊಂದಿಗೆ ಅಂಕಿತವಾಗಿರುವ ಈ ವೇದಿಕೆಯಿಂದ ನಾನು, ಅವರ ಕರುಣೆಯ ಕಂದ, ಸಮ್ಮೇಳನ ಅಧ್ಯಕ್ಷನಾಗಿ ಮತನಾಡುತ್ತಿರುವದು ನನಗಂತೂ ಅನಿರ್ವಚನೀಯ ಆನಂದ ನೀಡುತ್ತಿದೆ. ಪಟ್ಟದ್ದೇವರು, ನಾನು ಮತ್ತು ಹೈದ್ರಾಬದ ಕರ್ನಾಟಕ ಪ್ರದೇಶವೆಂಬ ಮೂರು ಭಾವ ಘಟಕಗಳ ಸುತ್ತ ಈ ಅರವತ್ತು, ಎಪ್ಪತ್ತು ವರ್ಷಗಳ ಸಂಘರ್ಷಮಯ ಪರಂಪರೆ ಇದೆ. ಕರುಳು ಬಳ್ಳಿಯ ಅಪ್ಯಾಯಮಾನ ನಂಟಿದೆ. ಈ ನಾಡಿನ ಬದುಕು, ಬದುಕೇ ಭಾಷೆಯಾದ ಕನ್ನಡತನದ ಹೋರಾಟದ ಗಾಥೆಯಿದೆ. ಕನ್ನಡವೆಂಬ ಭಾಷಿಕ ಹತ್ಯಾರುಗಳು ಕಾಲಕಾಲಕ್ಕೆ ಎದುರಿಸಿದ ಸವಾಲುಗಳು, ಅನ್ಯಭಾಷಿಕ ಸಮುದಾಯದೊಂದಿಗೆ ನಡೆಸಿದ ಸಂವಾದಗಳು, ಅನ್ಯಸಂಸ್ಕೃತಿಯ ಮುಖಾಮುಖಿಗಳು ಹೀಗೆ ಏನೆಲ್ಲ ಭಾವಸಂವೇದಿ ಪಲಕುಗಳು ಒಂದೊಂದಾಗಿ ನನ್ನೊಳಗೆ ಬಿಚ್ಚಿಕೊಳ್ಳುತ್ತವೆ. ಶರೀರವೆಂಬ ಈ ಎಲವು ತೊಗಲಿನ ಹಂದರಕ್ಕೆ ಮುಪ್ಪೆಂಬ ಪ್ರಾಕೃತಿಕ ಅವಸ್ಥೆ ಅಂಟಿಕೊಂಡಿದ್ದರೂ ಮನಸಿನ ಹರೆಯಕ್ಕೆ ಬದ್ಧನಾಗಿರುವ ನನಗೆ ಕಳೆದ ಕ್ಷಣಗಳುಹಚ್ಚಹಸುರಾಗಿ ಉಸಿರ ಬಳ್ಳಿಗೆ ತಿದಿಯೊತ್ತುತ್ತಿವೆಯಾದ್ದರಿಂದ ತುಸುವಾದರೂ ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲು ಸಾಧ್ಯವಾಗದು. ಹಾಗೆ ನೋಡಿದರೆ ನಾನು ಇತಿಹಾಸದ ಕುರುಡು ಆರಾಧಕನೂ ಅಲ್ಲ. ಅಥವಾ ಇತಿಹಾಸದ ತುಚ್ಛೀಕರಣದ ಮೂಲಕವೇ ವರ್ತಮಾನದ ಕಿರೀಟಕ್ಕೆ ಗರಿ ಮೂಡಿಸಿಕೊಳ್ಳಬೇಕೆಂಬ ಹಂಬಲವುಳ್ಳವನೂ ಅಲ್ಲ. ಇತಿಹಾಸದ ಕಸಬರಿಗೆಯಿಂದ ವರ್ತಮಾನದ ಅಂಗಳವನ್ನು ಗುಡಿಸುವ ಮೂಲಕವೇ ಭವಿಷ್ಯವನ್ನು ಸ್ವಚ್ಛವಾಗಿಡಬೇಕೆಂಬ ನಂಬಿಕೆಯುಳ್ಳವನು ನಾನು. +ಧರಿನಾಡ ಸಾಹಿತ್ಯ ಸಿರಿ* +ಎರಡು ಸಾವಿರ ವರ್ಷಗಳಿಗೂ ಮಿಕ್ಕು ದೀರ್ಘ ಇತಿಹಾಸವುಳ್ಳ ಕನ್ನಡ ಸಾಹಿತ್ಯವು ಜಾಗತಿಕ ಸಾಹಿತ್ಯ ಕ್ಷೇತ್ರಗಳೊಂದಿಗೆ ಗುರುತಿಸಿಕೊಳ್ಳುವ ತಾಕತ್ತು ಹೊಂದಿದೆ. ಸಂಕೀರ್ಣ ಸಾಮಾಜಿಕ ವ್ಯವಸ್ಥೆಯ ಪ್ರತಿನಿಧಿತ್ವವನ್ನು ನಿಭಾಯಿಸಿಕೊಂಡು ಬಂದಿರುವ ಈ ಸಾಹಿತ್ಯ ಹಲವು ವೈವಿಧ್ಯ ಮತ್ತು ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿದೆ. ಹಾಗೆ ನೋಡಿದರೆ ಒಟ್ಟು ಕನ್ನಡ ಸಾಹಿತ್ಯವೆಂದು ಇಂದು ಗುರುತಿಸಿಕೊಳ್ಳುತ್ತಿರುವ ಮೊತ್ತದಲ್ಲಿ ಹಿರಿಯ ಪಾಲು ನಾವು ನಿಂತ ನೆಲದ ಸೃಷ್ಟಿಯೇ ಆಗಿದೆ. ಅಂದರೆ ಹೈದ್ರಾಬಾದ ಕರ್ನಾಟಕವೆಂದು ಗುರುತಿಸಿಕೊಂಡಿರುವ ಬೀದರ, ಗುಲಬರ್ಗಾ, ರಾಯಚೂರ, ಕೊಪ್ಪಳ ಜಿಲ್ಲೆಗಳ ಹರಹಿನಲ್ಲಿ ಸೃಷ್ಟಿಯಾದದ್ದು ಸ್ಮರಣೀಯ ಸಂಗತಿಯಾಗಿದೆ. +ಶ್ರೀವಿಜಯ ಮತ್ತು ನೃಪತುಂಗರ ಹೆಸರುಗಳೊಂದಿಗೆ ಜೋಡಿಸಿಕೊಂಡಿರುವ ‘ಕವಿರಾಜಮಾರ್ಗ’ ಮಾನ್ಯಖೇಟ (ಗುಲಬರ್ಗಾ ಜಿಲ್ಲೆಯ ಮಳಖೇಡ)ದಲ್ಲಿ ರಚನೆಯಗಿದೆ. ಇತ್ತೀಚೆಗೆ ಹಂಪ ನಾಗರಾಜಯ್ಯನವರು ತಮ್ಮ ಸಂಶೋಧನೆಯ ಮೂಲಕ ಕನ್ನಡದ ಮೊಟ್ಟ ಮೊದಲ ಉಪಲಬ್ಧ ಕೃತಿ ಎಂದು ಪ್ರತಿಪಾದಿಸುತ್ತಿರುವ “ವಡ್ಡಾರಾಧನೆ”ಯು ಬೇದರ ಜಿಲ್ಲೆಯ ಹಳ್ಳಿಖೇಡ “ಬಿ” ಗ್ರಾಮದಲ್ಲಿ ಸೃಷ್ಟಿಯಗಿದೆ. “ಮಾನವ ಜಾತಿ ತಾನೊಂದೆ ವಲಂ” ಎಂದು ಹೇಳಿದ ಆದಿಕವಿ ಪಂಪ ಬೀದರ ಸೀಮೆಗೆ ಸಮೀಪವಾಗಿರುವ ಕರೀಮನಗರ ಜಿಲ್ಲೆಯ ಇಂದಿನ ವೇಮುಲವಾಡನ್ನು ಆಳುತ್ತಿದ್ದ ಚಾಲುಕ್ಯ ವಂಶದ ಎರಡನೇ ಅರಿಕೇಸರಿಯ ಆಸ್ಥಾನದಲ್ಲಿದ್ದುಕೊಂಡು ಕೃತಿ ರಚಿಸಿದನು. ಕರೀಮನಗರ ಜಿಲ್ಲೆ ಆ ಹೊತ್ತು ಕನ್ನಡ ನಾಡಿನ ಭಾಗವಾಗಿತ್ತು. ಶಕ್ತಿಕವಿ ರನ್ನ ತರ್ದವಾಡಿ ನಾಡಿನ ಮುಧೋಳದಲ್ಲಿ ಜನಿಸಿ, ಶ್ರವಣಬೆಳ್ಗೊಳದಲ್ಲಿ ಅಧ್ಯಯನ ಮಾಡಿದವನದರೂ ಆಶ್ರಯವನ್ನು ಅರಸಿ ಬಂದದ್ದು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನ ಬಳಿಗೆ. ಇಮ್ಮಡಿ ತೈಲಪನ ಮಗ ಸತ್ಯಾಶ್ರಯ ಇರಿವ ಬೆಡಂಗನನ್ನು ತನ್ನ ಕಥಾನಾಯಕ ಭೀಮನೊಂದಿಗೆ ಸಮೀಕರಿಸಿ ಕಾವ್ಯ ಬರೆದ ಕವಿರತ್ನ ರನ್ನ ಈ ಭಾಗದ ಬದುಕನ್ನು ಅನಾವರಣಗೊಳಿಸುವ ಕೆಲಸ ಮಾಡಿದ್ದಾನೆ. ಎಂತಲೇ ಕರ್ನಾಟಕದ ಇತರ ಯಾವ ಭಾಗದಲ್ಲಿ ಎಲ್ಲೂ ಬಳಕೆಯಲ್ಲಿಲ್ಲದ, ಅಥವಾ ಪರಿಚಯವೂ ಇರದ ಹತ್ತಾರು ಶಬ್ದಗಳನ್ನು ಪಂಪ, ರನ್ನರು ಬಳಸಿದ್ದಾರೆ. ಅವುಗಳಲ್ಲನೇಕ ಪದರೂಪಗಳು ಇವತ್ತಿಗೂ ಬೀದರ ಭಾಗದಲ್ಲಿ ಬಳಕೆಯಲ್ಲಿರುವುದನ್ನು ಕಾಣಬಹುದು. +“ಪಂಚತಂತ್ರ” ಬರೆದ ದುರ್ಗಸಿಂಹ ಚಾಲುಕ್ಯ ಜಯಸಿಂಹನಲ್ಲಿ ಸಂಧಿವಿಗ್ರಹಿಯಾಗಿದ್ದರೆ, ಉತ್ತರ ಭಾರತದಿಂದ ಬಂದ ಪುಷ್ಪದಂತ ಕವಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಲ್ಲಿ ಆಶ್ರಯ ಪಡೆದುಕೊಂಡು ಇದೇ ಮಣ್ಣಿನ ಉಪ್ಪಿನ ಋಣದಲ್ಲಿ ತ್ರಿಷಷ್ಟಿ ಮಹಾಪುರುಷ ‘ಗುಣಾಲಂಕಾರ’, ‘ಯಶೋಧರ ಚರಿತೆ’, ‘ನಾಗಕುಮಾರ ಚರಿತೆ’ಗಳನ್ನು ಅಪಭ್ರಂಶುವಿನಲ್ಲಿ ರಚಿಸಿದ್ದಾನೆ. ಇದೇ ಮೂರನೇ ಕೃಷ್ಣನ ಆಸ್ಥಾನದಲ್ಲಿದ್ದುಕೊಂಡು “ಶಾಂತಿ ಪುರಾಣ” “ಭುವನೈಕ್ಯ ರಾಮಾಭ್ಯುಧಯ” ಕೃತಿಗಳನ್ನು ಬರೆದ ಪೊನ್ನ ಕವಿಯು ನಮ್ಮ ನೆಲದವನೆ. “ಕವಿಚೂತವನ ಚೈತ್ರ” ಬಿರುದಾಂಕಿತನಾದ ಲಕ್ಷ್ಮೀಶ ಗುಲಬರ್ಗಾ ಜಿಲ್ಲೆಯ ಸುರಪೂರ ತಾಲೂಕಿನ ದೇವಪೂರದವನು. +ಭರತದ ಉತ್ತರ ದಿಕ್ಕಿನಿಂದ ಬರುವವರಿಗೆ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ‘ಕಲ್ಯಾಣ’, ಚಾಲುಕ್ಯ ಚಕ್ರವರ್ತಿಗಳ ಕರ್ಮಭೂಮಿಯಾದಂತೆ ಕನ್ನಡ ನಾಡವರ ಕಣಕಣದಲ್ಲೂ ಅರ್ಥವಂತಿಕೆ ತುಂಬಿದ ಧರಿನಾಡು ಕೂಡಾ. ಚಾಲುಕ್ಯ ಚಕ್ರವರ್ತಿ ೬ನೇ ವಿಕ್ರಮಾಡಿತ್ಯನ ಕಾಲದಲ್ಲಿ ಕಲ್ಯಾಣವು ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಗಿ ಜಗತ್ತಿನ ಗಮನ ಸೆಳೆದಿರುವದುಂಟು. ಕ್ರಿ.ಶ. ೧೦೬೩ ರಲ್ಲಿ ಕಾಶ್ಮೀರದಿಂದ ಬಂದ ಬಿಲ್ಹಣನು ಸಂಸ್ಕೃತದಲ್ಲಿ “ವಿಕ್ರಮಾಂಕದೇವಚರಿತಂ” ಕೃತಿ ರಚಿಸಿದರೆ, ಇದೇ ಅವಧಿಯಲ್ಲಿ ಬೀದರ ಜಿಲ್ಲೆಯ ಮಾಸಿಮಡು ಗ್ರಾಮದಲ್ಲಿ ಜನಿಸಿ ಗುಲಬರ್ಗಾದ ಮರತೂರಿನಲ್ಲಿ ನೆಲೆಸಿದ ವಿಜ್ಞಾನೇಶ್ವರನು ನ್ಯಾಯಶಾಸ್ತ್ರ ಕುರಿತು ‘ಮಿತಾಕ್ಷರ’ ರಚಿಸಿದ್ದಾನೆ. ೬ನೇ ವಿಕ್ರಮಾದಿತ್ಯನ ಮಗನಾದ ಮೂರನೇ ಸೋಮೇಶ್ವರನು ಸ್ವಂತ ಕವಿಯು, ಪಂಡಿತನು ಆಗಿದ್ದು “ಮಾನಸೋಲ್ಲಾಸ”(ಅಭಿಲಷಿತಾರ್ಥ ಚಿಂತಾಮಣಿ) ಎಂಬ ವಿಶ್ವಕೋಶವನ್ನು ಕಾಣಿಕೆಯಾಗಿ ಕೊಟ್ಟಿದ್ದಾನೆ. +ಆದ್ಯ ವಚನಕಾರನೆಂದು ಗುರುತಿಸಿಕೊಳ್ಳುತ್ತಿರುವ ಜೇಡರ ದಾಸಿಮಯ್ಯ ಗುಲಬರ್ಗಾ ಜಿಲ್ಲೆಯ ಸುರಪೂರ ಬಳಿಯಿರುವ ಮುದೇನೂರಿನ ನಿವಸಿ. ಅವನ ಹೆಂಡತಿ ಶಿವಶರಣೆ ದುಗ್ಗಳೆ ಗುಲಬರ್ಗಾದ ಗೊಬ್ಬೂರಿನವಳು. ಕೆಂಭಾವಿ ಭೋಗಣ್ಣ, ಸಗರದ ಬ್ರಹ್ಮಯ್ಯ, ಈ ಪಟ್ಟಿ ತುಂಬಾ ಬೆಳೆಯುತ್ತದೆ. ಕನ್ನಡ ಸಾಹಿತ್ಯದಲ್ಲಿ ‘ವಚನ ಸಾಹಿತ್ಯ’ವೆಂಬ ಹೊಸ ರೂಪವೊಂದು ಆ ಹೊತ್ತಿನ ಸಮಾಜೋಧಾರ್ಮಿಕ ಸಂಘರ್ಷದಲ್ಲಿ ಮೈದಾಳಿ ನಿಂತದ್ದು ಕೂಡಾ ಇದೇ ನೆಲದಲ್ಲಿ. ಬಸವ, ಅಲ್ಲಮ, ಅಕ್ಕಮಹಾದೇವಿ, ಮುಕ್ತಾಯಿ, ನೀಲಮ್ಮ, ಹರಳಯ್ಯ, ಮಧುವರಸ ಮುಂತಾದ ಶರಣಸಂದೋಹದಲ್ಲಿ ಕರ್ನಾಟಕದ ಬದುಕು ಸಮೂಲವಾಗಿ ಚಾತುರ್ವರ್ಣ್ಯವನ್ನು ಧಿಕ್ಕರಿಸಿ ನಿಂತದ್ದು ಜಗತ್ತಿಗೆ ಇಂದಿಗೂ ಮಾದರಿಯಾಗಿದೆ. ವರ್ಗ, ವರ್ಣ, ಲಿಂಗ, ಜಾತಿಯ ವೈಷಮ್ಯಗಳನ್ನು ಕಿತ್ತೊಗೆಯಲು ಕ್ರಾಂತಿಯ ಕಹಳೆ ಮೊಳಗಿಸಿದ ಹೋರಾಟದ ನೆಲವೇ ಇದು. ಹರಳಯ್ಯ ಮಧುವರಸರ ಮಕ್ಕಳ ವಿಲೋಮ ವಿವಾಹವು ವರ್ಣಸಂಕರದ ಕಿಚ್ಚು ಹಚ್ಚಿ ತ್ಯಾಗ ಬಲಿದಾನಗಳ ಮೂಲಕವೇ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದು ಇಲ್ಲಿಯೇ. ನಾಡಿನ ಮೂಲೆ ಮೂಲೆಗಳಿಂದ ಬಂದ ಅಸಂಖ್ಯಾತ ದಮನಿತರು ಸಮಾನತೆಯ ಬೆಳಕ ಬತ್ತಿಯನ್ನು ಕಣ್ಣಲ್ಲಿ ಹೊತ್ತಿಸಿಕೊಂಡು ಕಲ್ಯಾಣದ ಕೆಂಪು ನೆಲದಲ್ಲಿ ಉರಿಯುಂಡ ಕರ್ಪೂರವಾಗಿದ್ದಾರೆ. ಕ್ರಾಂತಿಗೆ ರಕ್ತ ಬಸಿದ ಅವರ ಕೆಂಪಿನ ಕಂಪು ಈ ಮಣ್ಣಿನ ಹುಡಿಯೊಳಗೆ ಗುಲಾಲು ಬುಕೀಟುಗಳ ಘಾಟು ಎಬ್ಬಿಸುವಂತಿದೆ. +ಕನ್ನಡ ನುಡಿಯಮ್ಮನಿಗೆ ನಮ್ಮ ಕವಿಗಳು ವರ್ಣಿಸಿರುವಂತೆ ಎರಡು ಸಿರಿಕಳಶಗಳು ತಾನೇ. ಒಂದು ವಚನವಾದರೆ ಇನ್ನೊಂದು ಕೀರ್ತನೆ. ೨ನೇ ಘಟ್ಟದಲ್ಲಿ ಕೀರ್ತನೆಗಳ ಮುಖಾಂತರ ಭವತುಂಬಿ, ಮನತುಂಬಿ ಹಡಿ, ಆಡಿ ದಣಿದ ದಾಸರು ರಾಯಚೂರ ಎರೆಮಣ್ಣಿನ ಕಸುವುಳ್ಳ ಸಂತಾನ. ತತ್ವಪದ ಸಾಹಿತ್ಯಕ್ಕಂತೂ ಕೃಷ್ಣೆ ಭೇಮೆಯರ ಮಧ್ಯದ ಸಗರನಾಡು ಟಂಕಸಾಲೆಯೇ ಸರಿ. ಹೀಗೆ ಇದನ್ನು ಬೆಳೆಸುತ್ತ ಹೋಗುವುದಾದರೆ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ನಾನು ಪುನರ್ ಸಾದರ ಪಡಿಸಬೇಕಾದೀತು. ಈ ಮೇಲಿನ ಪಕ್ಷನೋಟದ ಮೂಲಕ ಒಟ್ಟು ಕನ್ನಡ ಸಾಹಿತ್ಯ ಮತ್ತು ಅದಕ್ಕೆ ವಸ್ತುವಾಗಿರುವ ಬದುಕು ಈ ಭಾಗದವರಿಂದಲೇ ಹದಗೊಂಡದ್ದು ಎಂಬುದನ್ನು ನಾನು ಮಗುದೊಮ್ಮೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿಯೂ ದಲಿತ-ಬಂಡಾಯ ಸಾಹಿತ್ಯದ ಕ್ರಾಂತಿ ಕಹಳೆ ಮೊಳಗಿದ್ದು ಈ ಭಾಗದಿಂದಲೆ ಎಂಬುದು ಗಮನಿಸಬೇಕು. +ಈ ಎಲ್ಲ ಹಿರಿಮೆ ಗರಿಮೆಗಳೊಂದಿಗೆ ಹಲವು ನೋವುಗಳನ್ನು ಈ ಭಾಗ ತನ್ನೊಡಲೊಳಗೆ ಕಾಪಿಟ್ಟುಕೊಂಡಿದೆ. ಅಪ್ಪಟ ಕನ್ನಡವನ್ನೆ ಗಟ್ಟಿಗೊಳಿಸುತ್ತ ಕನ್ನಡತನವನ್ನೆ ಹಾಸುಂಡು ಬದುಕುತ್ತಿರುವಾಗಲೂ ಈ ನೆಲ ಹಲವು ಭಾಷಿಕ ದಾಳಿಗಳನ್ನು ಎದುರಿಸಿದೆ. ಗಡಿನಾಡ ಸೀಮೆಗಳಾದ ಆಂಧ್ರ, ಮಹಾರಾಷ್ಟ್ರ ನಾಡುಗಳಿಂದ ಒತ್ತುವರಿ ಸಹಿಸಿಕೊಳ್ಳುತ್ತಲೇ ತನ್ನತನ ಉಳಿಸಿಕೊಳ್ಳಲು ಇಲ್ಲಿನ ಅಚ್ಚಕನ್ನಡದ ಬೇಸಾಯಗಾರರು ಅವಿರತ ಹೋರಾಟ ಮಾಡಿದ್ದಾರೆ. ದೇಶಿಯ ಮತ್ತು ಅನ್ಯದೇಶಿಯ ಪ್ರಭುತ್ವಗಳು ದಾಳಿ ಮಾಡಿದಾಗ ಇಲ್ಲಿಯ ಜನಸಾಮಾನ್ಯರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸೌಹಾರ್ದ ಪರಂಪರೆಯನ್ನೇ ರೋಗ ನಿರೋಧಕ ಶಕ್ತಿಯಾಗಿ ಬಳಸಿಕೊಂಡಿದ್ದಾರೆ. ಕನ್ನಡದ ಮೇಲೆ ಕುತ್ತು ಬಂದಾಗ ಸರ್ವಸ್ವ ಮುಡುಪಿಟ್ಟು ಹೋರಾಟ ಮಾಡಿದ ಕೆಲವೊಂದು ಮಹನೀಯರನ್ನು ಇಲ್ಲಿ ಸ್ಮರಿಸಲೇಬೇಕು. ಏಕೆಂದರೆ ಕನ್ನಡ ಭಾಷೆಯ ಉಳಿವಿಗಾಗಿ ಈ ಭಾಗದವರು ಮಾಡಿದಷ್ಟು ಹೋರಾಟ ಬೇರೆ ಯಾವ ಭಾಗದವರೂ ಮಾಡಿಲ್ಲ ಎಂಬ ಮಾತು ಉತ್ಪ್ರೇಕ್ಷೆಯಲ್ಲ. +ರಾಯಚೂರಿನ ತಾರಾನಾಥರು, ಕಲಬುರ್ಗಿಯ ದೊಡ್ಡಪ್ಪ ಅಪ್ಪ, ದತ್ತಾತ್ರೇಯರಾವ ಹೇರೂರು, ಬೀದರಿನ ಪ್ರಭುರಾವ ಕಂಬಳಿವಲೆ, ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಕಲಿಸಿ ಆಳರಸರ ಕೆಂಗಣ್ಣಿಗೆ ಗುರಿಯಾದ ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು, ಆರ್.ವಿ.ಬಿಡಪ್ ಈ ಮುಂತಾದವರು ಕನ್ನಡಕ್ಕಾಗಿ ಮಾಡಿದ ಹೋರಾಟಗಳ ದೊಡ್ಡ ಇತಿಹಾಸವೇ ಇದೆ. ಆದರೆ ಈ ಸಂಗತಿಗಳು ಚಾರಿತ್ರಿಕ ಘಟ್ಟಗಳಲ್ಲಿ ದಾಖಲಾಗದೆ ಉಳಿದುಕೊಂಡಿವೆ. ಬರುಬರುತ್ತ ಇವೆಲ್ಲ ಸಂಪೂರ್ಣ ವಿಸ್ಮೃತಿಗೆ ಸರಿದುಹೋಗುವ ಅಪಾಯವೂ ಇಲ್ಲದಿಲ್ಲ. ಆದ್ದರಿಂದ ಮುಂದಿನ ಪೀಳಿಗೆಯವರು ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳನ್ನು ದಾಳಲಿಸುವುದಷ್ಟೇ ಅಲ್ಲ; ಇವುಗಳ ಭದ್ರ ಬುನಾದಿಯ ಮೇಲೆ ಭವಿಷ್ಯದ ಕನ್ನಡ ಕಟ್ಟಬೇಕಿದೆ. +ಕರುನಾಡ ಸಾಹಿತ್ಯ ಸಿರಿ +ಭಾರತ ಅತ್ಯಂತ ಪ್ರಾಚೀನ ಕಾಲದಿಂದಲೂ ಕೃಷಿಕೃತ್ಯವನ್ನೆ ಅಭಿವೃದ್ಧಿಪಡಿಸಿಕೊಂಡು ಬಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇವರು ಕೃಷಿಯ ತೊಟ್ಟಿಲಾದ ಭೂಮಿ ಮತ್ತು ನೀರನ್ನು ಆರಾಧಿಸಿದ್ದಾರೆ. ಶಿವಸಂಸ್ಕೃತಿಯ ದಟ್ಟ ಕುರುಹುಗಳು ಹರಪ್ಪ ಮಹೊಂಜೊದಾರ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿರುವದಕ್ಕೂ ಒಕ್ಕಲುತನವೇ ಆಧಾರವಾಗಿದೆ. ಶಿವನ ಪ್ರತೀಕವಾದ “ಶಿವಲಿಂಗ”, ಒಕ್ಕಲುತನಕ್ಕೆ ಆಧಾರವಾದ “ನಂದಿ”, ಜೀವನಶಕ್ತಿಯಾದ ನೀರು (ಗಂಗೆ). ಅದರೊಟ್ಟಿಗೆ ಉಳಿದೆಲ್ಲ ಪಶು, ಪಕ್ಷಿ, ಕೃಷಿ ಸಲಕರಣಗಳಾದ ರೆಂಟೆ, ಕುಂಟೆ, ನೇಗಿಲು, ಋತುಮಾನಗಳು, ಋತುಗಳ ವಿದ್ಯಮಾನಗಳನ್ನು ಪ್ರತಿನಿಧಿಸುವ ಹಬ್ಬ ಹರಿದಿನಗಳು ಹೀಗೆ ಇದೊಂದು ಸ್ವಾಯತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂಥ ದೇಶ. ಇಂಥ ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಯೂ ಪುಟ್ಟ ಭಾರತಿಯೇ ಸರಿ. +ಹೀಗಾಗಿಯೇ ಭಾರತದ ಎಲ್ಲ ಧರ್ಮ, ಮತ ಪಂಥಗಳು, ವಿಚಾರಗಳು, ದಾರ್ಶನಿಕ ನಿಲುವುಗಳು, ಭಾಷಾ ಪರಿವಾರಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕ ಸೌಹಾರ್ದತೆಯ ತೊಟ್ಟಿಲಾಗಿ ಬಾಳು ಹೂಡಿಕೊಂಡು ಬಂದಿದೆ. ತತ್ಫಲವಾಗಿಯೇ ಭಾಷಾ ಬಾಂಧವ್ಯ, ದಾರ್ಶನಿಕ ಸಂಕೀರ್ಣತೆ, ಪ್ರಾದೇಶಿಕ ಸಾಂರಸ್ಯ ಪರಸ್ಪರ ಕೊಡುಕೊಳ್ಳುವಿಕೆ ಇಲ್ಲಿ ರೂಢಿಯಲ್ಲಿದೆ. ನೆರೆಯ ಭಾಷಿಕರೊಂದಿಗೆ ತೀರ ಆತ್ಮೀಯವಾಗಿ ಬಾಳುತ್ತಿರುವವರು ನಾವು. ಇತ್ತೀಚೆಗೆ ಕೋಮುಶಕ್ತಿಗಳು, ಭಾಷಾಂಧರು ನಮ್ಮಗಳ ನಡುವೆ ಭಾವನಾತ್ಮಕ ಒಡಕು ಹುಟ್ಟಿಸಿ ಪರಸ್ಪರ ಶಾಂತಿ ಕದಡುವಂತೆ ಹುನ್ನಾರಗಳನ್ನು ಹೂಡಿದಾಗಲೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ. ಹೀಗೆ ಕನ್ನಡಿಗರು ಇತರ ಜನವಿರೋಧಿ ಶಕ್ತಿಗಳಿಗೆ ಮಣಿಯದೆ ಉಳಿದುಕೊಂಡು ಬರುತ್ತಿರುವದಕ್ಕೆ ದೀರ್ಘ ಚಾರಿತ್ರಿಕ ಸೌಹಾರ್ದ ಪರಂಪರೆಯೇ ಕಾರಣವಾಗಿದೆ ಎಂಬುದನ್ನು ಪರಾಂಬರಿಸಬೇಕು. ಕನ್ನಡ ನಾಡು-ನುಡಿಯ ಇತಿಹಾಸದತ್ತ ಒಂದು ಪುಟ್ಟ ನೋಟ ಹರಿಸಿದರೂ ಸಾಕು, ಈ ಮಾತು ಮನವರಿಕೆಯಾಗದಿರದು. ಭಾಷಿಕ ಚರಿತ್ರೆಯ ಪಲಕುಗಳನ್ನು ಒಂದೊಂದಾಗಿ ಬಿಚ್ಚುತ್ತ ಹೋದರೂ ಸರಿಯೇ ಅದರ ನಡೆಯಲ್ಲಿಯೇ ಸಾಂಸ್ಕೃತಿಕ ವಿದ್ಯಮಾನಗಳು ಇತರೆಲ್ಲ ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಶಿಸ್ತುಗಳೊಂದಿಗೆ ತಳಕು ಹಾಕಿಕೊಂಡು ಒಟ್ಟು ಬದುಕಿನ ದೊಡ್ಡದೊಂದು ಸಹಬಾಳ್ವೆಯ “ಕ್ಯಾನವಾಸು” ಎದುರಾಗುತ್ತದೆ. +ಕರ್ನಾಟಕವೆಂಬ ಹೆಸರು ಹೊತ್ತ ಈ ನಾಡಿನಲ್ಲಿ ಜನಜೀವನದ ಕುರುಹು ಕಾಣಿಸಿಕೊಂಡ ಅತ್ಯಂತ ಪ್ರಾಚೀನ ಕಾಲದಿಂದಲೂ ಇವರ ಮನೆಮಾತು ಕನ್ನಡವೇ ಆಗಿತ್ತು. ಅದು ಮೂಲ ದ್ರಾವಿಡಕ್ಕೆ ಹೆಚ್ಚು ಸಮೀಪವಾದ ರೂಪ ಧರಿಸಿತ್ತು. ಈ ಮಣ್ಣಿನ ದುಡಿಮೆಗಾರರ ಎದೆಯ ಭಾಷೆಯಾದ ಕನ್ನಡಕ್ಕೆ ಕಾವ್ಯಭಾಷೆಯಾಗಿ ಶಿಷ್ಟಪದ ಸೀಮೆಗೇರಲು ಕೆಲಹೊತ್ತು ಹಿಡಿದಿರಬಹುದು. ಆದರೆ ಕೂಡಲಸಂಗಮ ದೇವರಿಗೆ ಕೇಡಿಲ್ಲವಾಗಿ ಅವರೆಲ್ಲ ತತ್ಪೂರ್ವದಲ್ಲಿಯೇ ತಾವು ಒಲಿದಂತೆ ಆಡುವದನ್ನು ಹಾಡುವದನ್ನು ರೂಢಿಸಿಕೊಂಡಿದ್ದರು. ಎಂತಲೇ ಪೂರ್ವದ ಹಳಗನ್ನಡ ರೂಪಗಳು, ಚೆತ್ತಾಣ, ಬೆದಂಡೆಯಂಥ ಜಾನಪದ ಮಟ್ಟುಗಳು, ಆಡುನುಡಿಯ ದೇಶೀ ನುಡಿಗಟ್ಟುಗಳು ಈ ಮುಂತಾದವುಗಳು ಆಯಾ ಕಾಲಕ್ಕೆ ತಕ್ಕಂತೆ ರೂಪ, ವಿನ್ಯಾಸಗಳೊಂದಿಗೆ ಬೆಳೆದುಕೊಂಡು ಬಂದಿವೆ. ಶಿಷ್ಟ ರಚನೆಯ ಪೂರ್ವದಲ್ಲಿಯೇ ನೂರಾರು ವರ್ಷಗಳವರೆಗೆ ಈ ಜನಸಾಮಾನ್ಯರು “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳಾಗಿ” ಬರೆದ ಸಾಹಿತ್ಯ ಅಪ್ಪಟ ದೇಶೀ ಚಿಂತನೆಯ ಕಣಜವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ದ್ರಾವಿಡ ಭಾಷಾ ಪರಿವಾರಗಳ ವೈಶಿಷ್ಟ್ಯ ಇರುವುದೇ ಇಲ್ಲಿ. ಅವುಗಳಿಗಿರುವ ಅಖಂಡ ಜನಪರತೆ ಮತ್ತು ಜೀವಪರತೆ ಸಾವಿರಾರು ವರ್ಷಗಳ ಭಾಷಿಕ ತಿಕ್ಕಾಟಗಳ ನಡುವೆಯೂ ಅವುಗಳನ್ನು ಬದುಕಿಸಿಕೊಂಡು ಬಂದಿದೆ. ಈ ಭಾಷೆಗಳಿಗಿರುವ ಪ್ರಾಕೃತಿಕ ಜೀವಸಂವೇದಿ ಗುಣವಿದೆಯಲ್ಲ, ಅದು ತುಂಬಾ ಅಪರೂಪದ್ದು. ಅದು ಮತ್ತು ದುಡಿಯುವವರ ಎದೆಯ ದನಿ ಇವೆರಡೂ ಅವುಗಳನ್ನು ಎಲ್ಲೆಲ್ಲೂ ಹರಿಗಡಿಯದಂತೆ ನಿರಂತರಗೊಳಿಸಿವೆ. ದಮನಕಾರಿ ದಾಳಿಗಳ ನಡುವೆಯೂ ಮತ್ತೆ ಮತ್ತೆ ಮೈಕೊಡವಿ ನಿಲ್ಲುವಂಥ ಕ್ರಿಯಾತ್ಮಕ ಗತಿಶೀಲತೆಯನ್ನು ಅವುಗಳಿಗೆ ತಂದುಕೊಟ್ಟಿವೆ. +ಅದರಲ್ಲಿಯೂ ಕನ್ನಡ ಭಾಷೆ ಅತ್ಯಂತ ಪ್ರಾಯೋಗಿಕವೂ, ವ್ಯಾವಹಾರಿಕವೂ, ಅಷ್ಟೇ ಭಾವಾಭಿವ್ಯಂಜಕತೆಯುಳ್ಳದ್ದೂ ಆಗಿದೆ. ಭಾಷೆಯ ಈ ಸ್ವರೂಪ ನಮ್ಮ ಜನತೆಯ ಗುಣಸ್ವಭಾವದ ಪ್ರತೀಕವಾಗಿದೆ. ಕವಿರಾಜಮಾರ್ಗಕಾರನ ಮಾತಿನಲ್ಲಿ ಹೇಳುವುದಾದರೆ, +ಕುರಿತರಲ್ಲದೆ ಮತ್ತಂ ಪೆರರುಂ +ತಂತಮ್ಮ ನುಡಿಗಳೊಳೆಲ್ಲರ್ ಜಾಣರ್ +ಕಿರುವಕ್ಕಳುಮ್ ಆ ಮೂಗರುಮ್ +ಅರಿಪಲ್ಕರಿವರ್ ವಿವೇಕಮಂ ಮಾತುಗಳಂ. +ಇಂಥ ವಿವೇಕ ಮತ್ತು ಅನುಭವದ ಮಾತುಗಳು ಕನ್ನಡಿಗರನ್ನು, ಅವರ ಭಾಷೆಯನ್ನು ಜೀವಂತವಿಟ್ಟಿದೆ. ಕನ್ನಡ ಎಂದಿಗೂ ಅನವಶ್ಯಕ ಮಡಿವಂತಿಕೆ ಮತ್ತು ಶಾಸ್ತ್ರೀಯ ಕಾಠಿಣ್ಯವನ್ನು ಮೈಗೂಡಿಸಿಕೊಂಡು ಬರಲಿಲ್ಲ. ಎಂತಲೇ ಅತ್ಯಂತ ಪ್ರಾಚೀನ ಕಾಲದಲ್ಲಿ ಸಂಸ್ಕೃತ, ಪ್ರಾಕೃತ, ಪಾಲಿ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ ಭಾಷೆಗಳೊಂದಿಗೆ ಕೂಡಿಕೊಂಡು ಬಾಳಿದರೆ, ಮಧ್ಯಕಾಲೀನ ಸಂದರ್ಭದಲ್ಲಿ ಮರಾಠಿ, ಅರಬ್ಬಿ, ಪಾರ್ಶಿ, ಗುಜರಾತಿ ಭಾಷೆಗಳೊಂದಿಗೆ, ಆಧುನಿಕ ಕಾಲಕ್ಕೆ ಬಂದರೆ ಇಂಗ್ಲಿಷ್, ಹಿಂದಿ, ಪೋರ್ಚುಗೀಸ್, ಖಡಿಬೋಲಿ, ಅವಧ ಮುಂತಾದ ಭಾಷೆಗಳೊಂದಿಗೆ, ಇನ್ನು ತನ್ನದೇ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಿ, ತುಳು ಭಾಷೆಗಳಂತೂ ಸರಿಯೇ ಸರಿ. ಉಪಭಾಷೆಗಳಂತೂ ಅದರ ವಿಶಿಷ್ಟತೆಯೇ ಆಗಿದೆ. ಹೀಗೆ ಎಲ್ಲ ಭಾಷೆಯ ಭಾಷಿಕ ಆಯಾಮಗಳು ಮತ್ತು ಆ ಭಾಷೆಗಳನ್ನಾಡುವ ಜನತೆಯ ಸಂಸ್ಕೃತಿಯೊಂದಿಗೆ ಸಾಮರಸ್ಯದ ಬದುಕನ್ನು ನಡೆಸಿಕೊಂಡು ಬಂದಿದೆ. ಇಂದಿಗೂ ಅದೇ ನೆಲೆಯಲ್ಲಿ ಸಾಗಿಕೊಂಡು ಬರುತ್ತಿದೆ. ಕನ್ನಡ ಜನತೆ ಈ ರೀತಿ ಕಾಲಕಾಲಕ್ಕೆ ತನ್ನ ಬದುಕಿನ ಪರಿಧಿಗೆ ಯಾವು ಯಾವುದೋ ಕಾರಣಕ್ಕಾಗಿ ಬಂದು ನಿಂತುಕೊಂಡಿದ್ದ ಇತರ ಜನಸಮುದಾಯವನ್ನು ಅವರವರ ಬದುಕಿನೆಲ್ಲ ಮಿತಿಗಳೊಂದಿಗೆ ಒಗ್ಗಿಸಿಕೊಂಡು, ಅರಗಿಸಿಕೊಂಡು, ಅರ್ಥೈಸಿಕೊಂಡು ಬರುತ್ತಿದೆ. “ಮಾನವ ಜತಿ ತಾನೊಂದೆ ವಲಂ” ಎಂಬ ಉಚ್ಚ ತತ್ವದಲ್ಲಿ ಅಪಾರ ನಂಬುಗೆಯಿಟ್ಟುಕೊಂಡು ಬರುತ್ತಿರುವದರಿಂದಲೇ ಇಂದು ಅದು ಮೃತಭಾಷೆಗಳ ಗುಂಪಿಗೆ ಸೇರದೆ ಜೀವಂತ ಭಾಷೆಯಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಕನ್ನಡಕ್ಕೆ ಎಂದಿಗೂ “ಶುದ್ಧವೆಂಬ”, ಶಾಸ್ತ್ರೀಯವೆಂಬ ಭ್ರಮೆಯಿಲ್ಲ. ಆದ್ದರಿಂದ ಅದು ಯಾರನ್ನು, ಯಾವುದನ್ನೂ ಕಳೆದುಕೊಳ್ಳಲಾರದು. ಎಲ್ಲರನ್ನೂ, ಎಲ್ಲ ಭಾಷೆಯ ಸೊಗಡನ್ನೂ ಕೂಡಿಸಿಕೊಂಡು ಭರಿಸಿಕೊಳ್ಳುವ ಮೂಲಕವೇ ಹೆಚ್ಚೆಚ್ಚು ಸಮೃದ್ಧವೂ, ಶಕ್ತಿಯುತವೂ ಆಗಿದೆ. ಮರಾಠಿ ಗಡಿ ಭಾಗಗಳಲ್ಲಿ ಮರಾಠಿಗನ್ನಡ, ಆಂಧ್ರದ ಗಡಿ ಭಾಗಗಳಲ್ಲಿ ತೆಲುಗುಗನ್ನಡ, ಕೊಂಕಣಿಮಯ ಕನ್ನಡ, ಉರ್ದುಮಯ ಕನ್ನಡ, ತಮಿಳ್ಗನ್ನಡ ಹೀಗೆ ಹಲವು ಲೆಕ್ಕವಿಲ್ಲದಷ್ಟು ಕನ್ನಡ ರೂಪಗಳು ಯಾರ ಮುಲಾಜಿಗೆ ಒಳಪಡದೆ ತಮ್ಮ ಪಾಡಿಗೆ ತಾವು ಆಕಾರ ತಳೆಯುತ್ತಲೇ ಬರುತ್ತಿವೆ. +ಕನ್ನಡಿಗರ ಈ ಉದಾರವಾದಿ ವೈಶಾಲ್ಯವನ್ನು ಅಭಿಮಾನಶೂನ್ಯ ಸ್ಥಿತಿಯೆಂದು ಹಗುರಾಗಿ ಭಾವಿಸಬೇಕಾಗಿಲ್ಲ. ಎರಡು ಭಾಷಿಕ ಸಮುದಾಯಗಳ ನಡುವಿನ ಕರುಳಬಳ್ಳಿ ಸಂಬಂಧದಲ್ಲಿ, ಪರಸ್ಪರ ವ್ಯವಹಾರ ತೂಗಿಸಿಕೊಳ್ಳುವ ಸಂದರ್ಭಗಳಲ್ಲಿ ಹಲವು ಉಪಭಾಷೆಯ ಸ್ವರೂಪಗಳು ನಿರ್ಮಾಣಗೊಳ್ಳುತ್ತವೆ. ಸಾಮಾನ್ಯ ಜನತೆಯ ನಡುವೆ ಒಣ ಅಭಿಮಾನ ಅಥವಾ ಭಾಷಾ ಮಡಿವಂತಿಕೆಗೆ ಅರ್ಥವೇ ಇರಲಾರದು. ಆದ್ದರಿಂದ ಅವರು ಹುಸಿ ಭಾಷಾ ದುರಭಿಮಾನಿಗಳು ಸೃಷ್ಟಿಸುವ ಎಲ್ಲ ರೀತಿಯ ಅವಘಡಗಳನ್ನು ಮೀರಿ ತಮ್ಮದೇ ವ್ಯಾವಹಾರಿಕ ಬದುಕೊಂದನ್ನು ಕಟ್ಟಿಕೊಂಡು ಹೊರಟೇಬಿಡುತ್ತಾರೆ. ಹೀಗೆಂದೇ ಕನ್ನಡಿಗರು ತಮ್ಮ ಅಭಿಮಾನವನ್ನು ಕಾಪಾಡಿಕೊಳ್ಳುತ್ತಲೇ ತಮ್ಮ ಮೇಲಾಗುವ ದಾಳಿಗಳನ್ನು ಎದುರಿಸಿದ್ದಾರೆ. ಅವು ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹೀಗೆ ಯಾವುದೇ ಪ್ರಕಾರದ ದಾಳಿಗಳಾಗಿರಬಹುದು. ಅವುಗಳನ್ನು ತಮ್ಮ ಸ್ವಂತಿಕೆಯ ಉಪಾಧಿಯಿಂದಲೇ ಸಮರ್ಥವಾಗಿ ಎದುರಿಸಿದ್ದಾರೆ. ಅದೇ ಕಾಲಕ್ಕೆ ಜನಸಾಮಾನ್ಯರ ಬದುಕಿನ ಅವಶ್ಯಕತೆಗಳನ್ನು ಭರಿಸಲೆಂದೇ ಜನಪರ ಚಳುವಳಿಗಳನ್ನು ಕಟ್ಟಿಕೊಂಡು ಬದುಕಿದ್ದಾರೆ. +ಕನ್ನಡಿಗರು ಹೊರಗಿನಿಂದ ಬಂದ ಧರ್ಮ, ಭಾಷೆ, ವಿಚಾರ, ಜೀವನದ ರೀತಿ ನೀತಿ ಯಾವುದೇ ಇರಲಿ ಅವೆಲ್ಲವುಗಳನ್ನು ಸಾರಾಸಗಟಾಗಿ ತಿರಸ್ಕರಿಸಲೂ ಇಲ್ಲ. ಯಥಾವತ್ತಾಗಿ ಅವುಗಳನ್ನು ಸ್ವೀಕರಿಸಿ “ತಮ್ಮತನ”ವನ್ನು ಕಳೆದುಕೊಳ್ಳಲೂ ಇಲ್ಲ. ಅನ್ಯರ ಸಂಸ್ಕೃತಿಯಲ್ಲಿರುವ ಗುಣಾತ್ಮಕ ಅಂಶಗಳನ್ನು ತೆರೆದ ಮನಸ್ಸಿನಿಂದ ಬರಮಡಿಕೊಂಡು ಸ್ಥಳೀಯ ದೇಶೀ ಸಂಸ್ಕೃತಿಯ ಆಕಾರದೊಳಗೆ ವಿಲೀನಗೊಳಿಸಿಕೊಂಡಿದ್ದಾರೆ. ಈ ಮೂಲಕವೇ ಅವರಿಗೆ ಬದಲಾದ ಸಂದರ್ಭಗಳಿಗೆ ತಕ್ಕಂತೆ ಹೊಸ ಲಯಗಳಲ್ಲಿ ಬದುಕು ಹಿಡಿಯಲು ಸಾಧ್ಯವಗಿದೆ. ಎಂತಲೇ ಕ್ರಿ.ಶ. ೯ನೇ ಶತಮಾನದಲ್ಲಿಯೇ ಕವಿರಾಜಮಾರ್ಗಕಾರನು +ಕಸವರಮೆಂಬುದು ನೆರೆ ಸೈ +ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮಮುಮಂ +ಕಸವೇಂ ಕಸವರಮೇನು +ಬ್ಬಸಮಂ ಬಸಮಲ್ಲದಿರ್ದು ಮಾಡುವೊಡೆಲ್ಲಂ || +ಎಂದು ಹೇಳುತ್ತ ಪರಧರ್ಮ ಮತ್ತು ಪರವಿಚಾರಗಳನ್ನು ಗೌರವಿಸುವದೇ ನಿಜವಾದ ಬಂಗಾರವೆಂದು, ಅದೇ ಪರಮ ಮೌಲ್ಯವೆಂದು ಸಾರಿದ್ದಾನೆ. ಇಲ್ಲವಾದರೆ ಕಸವರವೂ (ಬಂಗಾರವೂ) ಕಸದ ಸಮಾನವೇ ವ್ಯರ್ಥ ಎನ್ನುತ್ತಾನೆ. ಇದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿನ ಜನತೆ ತಮ್ಮದೇ ಸಮುದಾಯ ಸಂಸ್ಕೃತಿ ಮತ್ತು ಧರ್ಮಗಳನ್ನು ಆಚರಿಸಿಕೊಂಡು ಬದುಕುತ್ತಿರುವಾಗಲೂ ಇತರ ಉನ್ನತ ತತ್ವ, ದರ್ಶನಗಳಿಗೆ ಎಡೆಮಾಡಿಕೊಟ್ಟಿದ್ದಾರೆ. ಕ್ರಿ.ಶ. ಪ್ರಾರಂಭದಿಂದಲೂ ಉತ್ತರ ಭಾರತದಿಂದ ಬಂದ ಜೈನಧರ್ಮವಿರಬಹುದು, ತತ್ಪೂರ್ವದಲ್ಲೆ ಉದಯವದ ಬೌದ್ಧ ಧರ್ಮವೇ ಇರಬಹುದು. ಬೌದ್ಧರ ದಯೆ, ಜೀವಾನುಕಂಪೆ, ಜೈನರ ಅಹಿಂಸೆ-ಸಹನೆಗಳನ್ನು ಬೆರೆಸಿಕೊಂಡೂ ತನ್ನ ಅನನ್ಯತೆ (ಐಡೆಂಟಿಟಿ)ಯನ್ನು ಉಳಿಸಿಕೊಂಡು ಬಂದಿದೆ. ಕ್ರಿ.ಶ. ೮ನೇ ಶತಮಾನದ ಹೊತ್ತಿಗೆ ಜೈನಧರ್ಮ ಕನ್ನಡದ ಧರ್ಮವೇ ಆಗಿ ಪರಿಣಮಿಸಿತ್ತು. +ಭೌಗೋಲಿಕವಾಗಿ ಸುರಕ್ಷಿತ ನೆಲದಲ್ಲಿ ವಾಸಿಸುತ್ತಿರುವ ಕನ್ನಡಿಗರು ಸ್ವಭಾವತಃ ಸಾತ್ವಿಕರು, ಉದಾರಚರಿತರು. ಧೀರೋದಾತ್ತರು, ಹೀಗಾಗಿ ಅಹಿಂಸೆ ಮತ್ತು ಪರೋಪಕಾರಗಳನ್ನು ಪ್ರತಿಪಾದಿಸುವ ಜೈನ, ಬೌದ್ಧ ಧರ್ಮಗಳು ಬಹು ಬೇಗನೆ ಇವರ ಮನ ಗೆದ್ದವು. ಆದ್ದರಿಂದಲೇ ಸಾಹಿತ್ಯಕವಾಗಿಯೂ ಸಾಂಸ್ಕೃತಿಕವಾಗಿಯೂ ಕ್ರಿ.ಶ. ೧೦ನೇ ಶತಮಾನವು ಜೈನರ ಸುವರ್ಣಯುಗವೆಂದು ಗುರುತಿಸಿಕೊಳ್ಳಲು ಸಾಧ್ಯವಗಿದೆ. ಮಣ್ಣ ಹುಡಿಯೊಳಗೆ ಬೆವರ ಹನಿಸಿ ಜೀತ ಮಾಡುವವರ ಕನ್ನಡಕ್ಕೆ ಕಾವ್ಯದ ಕಸುವನ್ನು ಹುರಿಗೊಳಿಸಿದವರು ಜೈನಕವಿಗಳು. ಶ್ರಮಿಕರ ಭಾಷೆಯಲ್ಲಿ ಮೊದಲ ಬಾರಿಗೆಂಬಂತೆ ಆಳುವವರ ಧ್ವನಿಯನ್ನು ಕಾವ್ಯಪ್ರತಿಮೆಗಳಲ್ಲಿ ಹದಗೊಳಿಸಿ ಸಾರಸ್ವತ ಲೋಕವೊಂದನ್ನು ತೆರೆದಿಡುವ ಜೈನರು ಬದುಕು, ಬರಹ ಎರಡನ್ನೂ ಅಹಿಂಸಾತತ್ವದ ನೆಲೆಯಲ್ಲಿಯೇ ಸ್ಥಾಪಿಸುವ ಪ್ರಯತ್ನ ಮಾಡಿದರು. ಗಂಗರು, ರಾಷ್ಟ್ರಕೂಟ, ಚಾಲುಕ್ಯ ಅರಸು ಮನೆತನದ ರಾಜರುಗಳನೇಕರು ಜೈನಧರ್ಮಕ್ಕೆ ಅಗ್ರಪಟ್ಟ ನೀಡುವ ಮೂಲಕ ಅಹಿಂಸೆ ಮತ್ತು ದಯೆಯಂಥ ಮೌಲ್ಯಗಳನ್ನೆ ರಾಜಧರ್ಮವೆಂಬಂತೆ ಪಾಲಿಸಿಕೊಂಡು ಬಂದಿರುವದು ತೀರ ಅಪರೂಪದ ಸಂಗತಿ. ಹಾಗೆ ನೋಡಿದರೆ ಪ್ರಭುತ್ವ ಮತ್ತು ಹಿಂಸೆ ಸಮೀಕರಣವಾಗುವಂತೆ, ಪ್ರಭುತ್ವ ಮತ್ತು ಜೈನರ ಅಹಿಂಸಾ ತತ್ವ ಸಮೀಕರಣವಾಗುವುದು ತುಂಬ ಕಷ್ಟದ ಸಂಗತಿ. ಪ್ರಭುತ್ವ ಮತ್ತು ಅಹಿಂಸೆ ಇವು ಪರಸ್ಪರ ವಿರೋಧಿ ನೆಲೆಯಲ್ಲಿ ಮಾತ್ರ ಮುಖಾಮುಖಿಯಾಗಬಲ್ಲವು. ಈ ತೆರನ ಅಂತರ್ ವಿರೋಧಿ ನೆಲೆಗಳ ನಡುವೆಯೇ ಒಂದು ಮಧ್ಯಮ ಮಾರ್ಗವನ್ನು ಹುಡುಕುವ ಜರೂರಿ ಅವರಿಗೆ ಕಾಣಿಸಿಕೊಂಡದ್ದು ಅಕಾರಣವಾಗಿರಲಿಲ್ಲ. +ವೈದಿಕರು ಯಜ್ಞ ಯಾಗಾದಿಗಳಲ್ಲಿ ನಡೆಸುವ ಹಿಂಸೆ ಮತ್ತು ಕ್ಷಾತ್ರಪೌರುಷದ ಯುದ್ಧಪಿಪಾಸು ಕ್ರೌರ್ಯ ಈ ಎರಡನ್ನೂ ಪ್ರತಿರೋಧಿಸುವ ವೈಧಿಕ ವಿರೋಧಿ ನೆಲೆಯ ಜೈನ, ಬೌದ್ಧ ಧರ್ಮಗಳು ಕನ್ನಡಿಗರ ತೀವ್ರ ಜರೂರಿಯಾದವು. ಹೀಗೆಂದೇ ೧೦ನೇ ಶತಮಾನದ ಕನ್ನಡ ಕವಿಗಳಿಗೆ ನೇರವಾಗಿ ಯುದ್ಧವನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಕಟ ಎದುರಾದಂತಿದೆ. ಈ ತಾಕಲಾಟದಲ್ಲಿಯೇ ಅವರಿಗೆ “ಲೌಕಿಕ”, “ಆಗಮಿಕ”ವೆಂಬ ಅಭಿವ್ಯಕ್ತಿ ತಂತ್ರಗಳು ಅನಿವಾರ್‍ಯವಾಗಿವೆ. ಲೌಕಿಕ ಕಾವ್ಯಗಳಾದ ವಿಕ್ರಮಾರ್ಜುನ ವಿಜಯ, ಗದಾಯುದ್ಧಗಳಲ್ಲಿ ಯುದ್ಧದ ಕತೆ ಮತ್ತು ವರ್ಣನೆ ಬಂದಿದೆಯಾದರೂ ಅವು ಯುದ್ಧಗಳ ಪರವಾಗಿಲ್ಲ. ಪಂಪ ಅರ್ಜುನನ ಬಾಯಿಂದ “ಬಂದು ಮೊರೆಹೊಕ್ಕವರನ್ನು ಕಾಯುವದೇ ಶೌರ್ಯವೆಂದು” ಹೇಳಿಸಿದರೆ, ರನ್ನನಾದರೊ ಗಾಂಧಾರಿಯ ಬಾಯಲ್ಲಿ “ಸಮರ ವ್ಯಾಪಾರಂ ಮಾಣ್ದು ಮಗನೆ” ಎಂದು ಹೇಳಲು ಹಚ್ಚುತ್ತಾನೆ. ೧೦ನೇ ಶತಮಾನದ ಹಲವು ಕಾವ್ಯಗಳಲ್ಲಿ ಯುದ್ಧವಿರೋಧಿ ನಿಲುವು ಅನುರಣಿಸುತ್ತಿದೆ. ಈ ಕಾವ್ಯಗಳು ಕನ್ನಡಿಗರ ಶೌರ್ಯ, ಸಾಹಸಕ್ಕೆ ಎಂತೋ ಅಂತೆಯೇ ಶಾಂತಿಪ್ರಿಯತೆ ಮತ್ತು ವರ್ಗ ಸಂಘರ್ಷಕ್ಕೂ ಪ್ರತೀಕವಾಗಿ ನಿಲ್ಲುತ್ತವೆ. ಎಲ್ಲ ಕಾವ್ಯಗಳನ್ನು ಉದಾಹರಣೆ ಸಹಿತವಾಗಿ ಪ್ರಸ್ತುತಪಡಿಸುವುದು ಇಲ್ಲಿನ ವ್ಯಾಪ್ತಿಗೆ ಸಾಧ್ಯವಿಲ್ಲ. ಆದರೂ ಆಯಾ ಯುಗಧರ್ಮದ ಆಶಯವನ್ನು ವ್ಯಾಖ್ಯಾನಗಳಲ್ಲಿ ಗಮನಿಸುವ ಮೂಲಕವೇ ಒಟ್ಟು ಸ್ವರೂಪವನ್ನು ಗ್ರಹಿಸುವ ಪ್ರಯತ್ನ ಮಾಡೋಣ. ಪ್ರಭುತ್ವಪೋಷಿತ ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸುವ ಮೂಲಕವೇ ಕ್ರಿಯಾತ್ಮಕವಾಗುವ ವಚನ ಸಾಹಿತ್ಯವಂತೂ ಪಂಪಾದಿಗಳ ಕಾವ್ಯಪ್ರತಿಭೆಗೆ ಶ್ರಮಸಂಸ್ಕೃತಿಯ ಧಾತುವನ್ನು ಸೇರಿಸುತ್ತದೆ. ವರ್ಣಾಶ್ರಮ ಧರ್ಮದ ಆಶ್ರಮ ಮೂಲ ಬದುಕನ್ನು ಪ್ರತಿಭಟಿಸಿ ಶ್ರಮಮೂಲ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತರುವದೇ ವಚನ ರಚನೆಯ ಪ್ರಮುಖ ಕಾಳಜಿಯಾಗಿದೆ. ಆದ್ದರಿಂದಲೇ ಕನ್ನಡವೆಂದರೆ ವಚನ. ವಚನವೆಂದರೆ ಯಜಮಾನ ಸಂಸ್ಕೃತಿಯ ಧಿಕ್ಕಾರ. ಅಸಂಖ್ಯ ಶೋಷಿತರ ಬದುಕಿನ ಒಳಿತಿಗಾಗಿ ನಡೆಸಿದ ತಾತ್ವಿಕ ಹೋರಾಟವೆಂದೇ ಗುರುತಿಸಲ್ಪಡುವ ಈ ಸಾಹಿತ್ಯ ಸಮುದಾಯದ ಅಂಚಿನಲ್ಲಿರುವ ಕೊನೆಯ ಮಾನವನ ಹಸಿವು, ತಳಮಳವೆಂದೇ ಗೃಹೀತವಾಗುತ್ತದೆ. ಹೊಲೆಯ, ಮಾದಿಗ, ಸಮಗಾರ, ಮಡಿವಾಳ, ಅಂಬಿಗ, ಡೋಹರ ಮುಂತಾದ ಹಲವು ಹತ್ತು ಕಾಯಕದಲ್ಲಿ ನಿರತರಾದ ದೈಹಿಕ ದುಡಿಮೆಗಾರರು ತಮ್ಮ ತಮ್ಮ ಬಾಳ್ವೆ ಹಕ್ಕಿಗಾಗಿ ನಡೆಸಿದ ಸಂಘರ್ಷದಲ್ಲಿ ಉದಿಸಿಬಂದ ಈ ಸಾಹಿತ್ಯ ಪ್ರಾಯಶಃ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿಯೇ ಅಪರೂಪದ ಸಂಕಥನವಾಗಿ ನಿಲ್ಲುತ್ತದೆ. ಏಕೆಂದರೆ ಈ ಮೇಲಿನ ಹದಿನೆಂಟು ಜಾತಿಯ ವೃತ್ತಿಬಾಂಧವರು ತಮ್ಮ ವೃತ್ತಿ ಪರಿಭಾಷೆಯಲ್ಲಿ ಹಸಿವು ಮತ್ತು ಸ್ವಾಭಿಮಾನದ ಪ್ರಶ್ನೆಗಳನ್ನು ಎತ್ತುತಾರೆ. ಹಸಿವು ಮತ್ತು ಸೃಜನಶೀಲತೆ ಪರಸ್ಪರ ಒಂದರೊಳಗೊಂದು ಆಕಾರ ಪಡೆದುಕೊಳ್ಳುವ ಪರಿಗೆ ಅಕ್ಷರಲೋಕವೇ ತಲ್ಲಣಿಸುತ್ತದೆ. ವಚನ ರಚನೆ ತನ್ನ ಈ ಅಖಂಡ ಶ್ರಮಿಕ ಸೃಜನಶೀಲತೆಯ ಕಾರಣವಾಗಿಯೇ ತದನಂತರದ ಒಟ್ಟು ಕನ್ನಡ ಸಾಹಿತ್ಯ ಮೇಲೆ ಅವ್ಯಾಹತವಾಗಿ ಪ್ರಭಾವ ಬೀರುತ್ತಲೆ ಬರುತ್ತಿದೆ. +ಹರಿಹರ, ರಾಘವಾಂಕ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ದಾಸರ ಕೀರ್ತನೆ, ಅನುಭಾವಿಗಳ ತತ್ವಪದ, ಸೂಫಿಗಳ ಗೀತೆ, ಗಜ಼ಲ್, ವೀರಶೈವರ ಪುರಾಣಗಳು, ಸ್ತೋತ್ರಸಾಹಿತ್ಯ, ಕೊಡೇಕಲ್ ಸಾಹಿತ್ಯ, ಜಾನಪದೀಯ ಸೊಗಡುಳ್ಳ ಮಂಟೇಸ್ವಾಮಿ ಕಾವ್ಯ, ಮಲೆ ಮಹದೇಶ್ವರ ಕಾವ್ಯ, ಮುಂತಾಗಿ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭಕ್ಕೂ ವಚನ ಪರಂಪರೆ ಒಂದಿಲ್ಲೊಂದು ಆಯಾಮಗಳಲ್ಲಿ ಅನುರಣಿತಗೊಳ್ಳುತ್ತಲೇ ಇದೆ. ಆಧುನಿಕೋತ್ತರ ಈ ಘಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಪುನರ್ ಮೌಲ್ಯೀಕರಣಗೊಳಿಸುವ ಪ್ರಕ್ರಿಯೆಯಲ್ಲೂ ವಚನಗಳು ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತಿರುವದಕ್ಕೆ ಅದರ ಶ್ರಮಮೂಲ ಧಾತುವೇ ಕಾರಣವಾಗಿ ನಿಲ್ಲುತ್ತದೆ. +ಹಳಗನ್ನಡ ಸಾಹಿತ್ಯದ ಘಟ್ಟದಲ್ಲಿ ವಚನ ಸಾಹಿತ್ಯ ಹಿಮದಿನ ಪರಂಪರೆಯನ್ನು ಅರಗಿಸಿಕೊಳ್ಳುತ್ತಲೇ ನಿರ್ಣಾಯಕ ಬಿಂದುವಿಗೆ ಬಂದು ತಲುಪಿದಂತೆ; ಆಧುನಿಕ ಕಾಲದಲ್ಲಿಯೂ ದಲಿತ, ಬಂಡಾಯಗಳು ಹಿಂದಿನ ನವೋದಯ, ಪ್ರಗತಿಶೀಲ, ನವ್ಯರ ಪ್ರಯೋಗ, ಪರಂಪರೆಗಳನ್ನು ಮುಖಾಮುಖಿಯಾಗಿಸಿಕೊಂಡೇ ಹೊಸ ದಿಗಂತಕ್ಕೆ ಬಂದು ತಲುಪಿವೆ. ಸದ್ಯ ನಾವು ಬಂಡಾಯೋತ್ತರ, ದಲಿತೋತ್ತರ ಎಂದು ಕರೆದುಕೊಳ್ಳುವ ಧಾವಂತದಲ್ಲಿದ್ದೇವೆ. ನಾನು ಇಲ್ಲಿ “ಕರೆದುಕೊಳ್ಳುವ” ಎಂಬ ಶಬ್ದವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ಬಳಸುತ್ತಿದ್ದೇನೆ. ಏಕೆಂದರೆ ಹಾಗೇ ಕರೆದುಕೊಳ್ಳುವುದಕ್ಕೂ, ಹಾಗೆಂದು ಗುರುತಿಸುವದಕ್ಕೂ ತುಂಬಾ ವ್ಯತ್ಯಾಸವಿದೆ. ಕರೆದುಕೊಳ್ಳುವ ಕ್ರಿಯೆ ಗುರುತಿಸುವಂತಾಗುವ ರಾಚನಿಕ ಸ್ವರೂಪಗಳಲ್ಲಿ ಆಕಾರ ತಳೆಯುವಂತಾಗಬೇಕು. ಜನಪರಂಪರೆ ಅದನ್ನು ಗ್ರಹಿಸಿ ಸ್ಪಂದಿಸಬೇಕು. ವಾಸ್ತವದ ಬದುಕು ಅದರೊಂದಿಗೆ ಸಂವಾದಿಸುವ, ತನ್ಮೂಲಕ ವಾದ, ವಿವಾದಗಳಿಗೆ ಸುರುವಿಟ್ಟುಕೊಳ್ಳುವ ಹೀಗೆ ಸೃಜನಶೀಲತೆಯು ಅಖಂಡ ಬದುಕಿನ ಧಾತುವಾಗಿ ಮೈದಾಳಬೇಕಲ್ಲವೆ? ಆಗ ಮಾತ್ರ ಒಂದು ಸಾಹಿತ್ಯ ಪರಂಪರೆಯನ್ನು ಗುರುತಿಸುವ ಕ್ರಿಯೆಗೆ ಅರ್ಥ ಬರುತ್ತದೆ. +ಬಂಧುಗಳೇ, ಇಂದು ಸಾಹಿತ್ಯಕ ಸೃಜನಶೀಲತೆ ಎಂಬುದು ಈ ಮೊದಲಿನಂತೆ ಬದುಕು ಬೀದಿಯಲ್ಲಿನ ಒಂದು ಅಂಗವೋ, ಆಯಾಮವೋ, ಭಾಗವೋ ಆಗಿ ಉಳಿದಿಲ್ಲ; ಉಳಿಯಬಾರದು ಕೂಡ. ವಿಶ್ವದ ವಿದ್ಯಮಾನಗಳು ಕಣ್ಣೆವೆ ಮಿಟುಕಿಸುವಷ್ಟರಲ್ಲಿ ಗಾಳಿ, ಬೆಳಕುಗಳಿಗಿಂತ ವೇಗವಾಗಿ ಓಡುತ್ತಿರುವ ಈ ಹೊತ್ತಿನಲ್ಲಿ “ಸಾಹಿತ್ಯ”ವೆಂಬುದು ಕೂಡಾ ಅಸಂಖ್ಯ ಜ್ಞಾನಶಿಸ್ತುಗಳ ಪರಿಪ್ರೇಕ್ಷ್ಯದಲ್ಲಿ ಸಮ್ಮಿಳಿತಗೊಂಡು ಜೀವನ ನಿರ್ವಹಣೆಯ ವಿಧಾನವಾಗಿ ನಿರ್ವಚಿಸಿಕೊಳ್ಳಬೇಕಿದೆ. ಇದರರ್ಥ ಕನ್ನಡ ಭಾಷೆ ಅಥವಾ ಸಾಹಿತ್ಯವೆಂದರೆ ಕನ್ನಡ ಜನತೆಯ ಬದುಕುವ ಪ್ರಶ್ನೆಯಾಗಿ ಚರ್ಚಿತವಾಗಬೇಕಿದೆ. ಕನ್ನಡ ಉಳಿಯಬೇಕಾದರೆ ಕನ್ನಡ ಮಾತಾಡುವ ಸಾಮಾನ್ಯರು ಉಳಿಯಬೇಕು. ಅವರ ಬದುಕು ಸಂತೃಪ್ತಿ, ನೆಮ್ಮದಿಯಲ್ಲಿ ನಡೆಯುವಂತಾಗಬೇಕು. ಆದ್ದರಿಂದ ಕರ್ನಾಟಕದ ಸಮಾಜೋಧಾರ್ಮಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಮಾನವಿಕ, ಮನೋವೈಜ್ಞಾನಿಕ, ಪರಿಸರಾತ್ಮಕ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಖಗೋಳ ಭೂಗೋಳ ಮುಂತಾಗಿ ಅಖಂಡ ಬ್ರಹ್ಮಾಂಡದ ಉಪಲಬ್ಧಿ ಮತ್ತು ಹಂಚಿಕೆಯ ಪ್ರಶ್ನೆಗಳನ್ನು ಚರ್ಚಿಸಬೇಕಿದೆ. ಆದ್ದರಿಂದ ಜನತೆಯ ಪ್ರಾಥಮಿಕ ಅವಶ್ಯಕತೆಗಳಾದ ನೆಲ, ಜಲ, ಅಕ್ಷರ, ಅನ್ನ, ಅರಿವು, ಆರೋಗ್ಯ, ಸೂರು, ಉದ್ಯೋಗ, ಇತ್ಯಾದಿ ಉಪಯೋಗಿ ಘಟಕಗಳ ಸ್ಥಿತಿಗತಿ ಕುರಿತು ಪುಟ್ಟ ನೋಟ ಹರಿಸಬೇಕಾದದ್ದು ಈ ವ್ಯಾಪ್ತಿಗೆ ಹೊರಗಾಗಲಾರದೆಂದೇ ನನ್ನ ಅಭಿಪ್ರಾಯ. ಈ ಹೊತ್ತು ಸಾಹಿತ್ಯ ಮತ್ತು ಸಾಹಿತಿಗಳ ಚಿಂತನೆ ಹರಿಯಬೇಕಾಗಿರುವದೇ ಈ ನೆಲೆಯಲ್ಲಿ. ಸೃಜನಶೀಲತೆಯಂಬುದನ್ನು ಬದುಕಿನ ಪ್ರಾಥಮಿಕ ಅವಶ್ಯಕತೆಗಳಿಂದ ಹೊರಗಿಟ್ಟು ನಡೆಸುವ ವಾದಗಳು ಇವೆಯಲ್ಲ, ಅವು ಜೀವವಿರೋಧಿ ನಂಬಿಕೆಯ ಮನೋಜಾಡ್ಯವೇ ಆಗಿವೆ. +ಜಲ ಮತ್ತು ನೆಲ : +ಒಡಲುಗೊಂಡವ ಹಸಿವ +ಒಡಲುಗೊಂಡವ ಹುಸಿವ +ಒಡಲುಗೊಂಡವನೆಂದು +ನೀನೆನ್ನ ಜಡಿದೊಮ್ಮೆ ನುಡಿಯದಿರ ! +ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ. +ಹಸಿವಿನ ಪ್ರಖರತೆ, ಅದನ್ನು ತುಂಬಿಸಿಕೊಳ್ಳುವ ಅವಶ್ಯಕತೆ ಎರಡನ್ನೂ ಏಕಕಾಲಕ್ಕೆ ಹೊಳೆಸುವ ದಾಸಿಮಯ್ಯನ ಈ ವಚನ ನಮ್ಮೊಳಗೆ ಹಲವು ಅರ್ಥಸಾಧ್ಯತೆಗಳನ್ನು ಬಿಟ್ಟುಕೊಡುತ್ತದೆ. ಮೊದಲನೆಯದಾಗಿ ಸಕಲ ಜೀವರಾಶಿಯ ಅಸ್ತಿತ್ವಕ್ಕೆ ಕಾರಣವಾಗಿರುವ ಈ “ಹಸಿವು” ಎಲ್ಲ ಸಮಸ್ಯೆಯ ಮೂಲವೂ ಹೌದು. ಆತ್ಯಂತಿಕವೂ ಹೌದು. ಜೀವರಾಶಿಯ ಉದಯದೊಂದಿಗೆ ಅಲ್ಲದಿದ್ದರೂ ಜೀವಸಂಕುಲ ತನಗಾಗಿ ಒಂದು ವ್ವಸ್ಥೆಯನ್ನು ನಿರ್ಮಿಸಿಕೊಂಡು ನಿರ್ಬಂಧಕ್ಕೆ ಒಳಪಟ್ಟಾಗಿನಿಂದಲೂ ಹಸಿವಿನ ಸಮಸ್ಯೆ ಕಾಡಿದೆ. ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆ ಇಂದಿಗೂ ಜೀವಂತವಾಗಿಯೇ ಇದೆಯಾದರೂ ಇದಕ್ಕಿಂತ ಗಂಭೀರವಾದ ಸಮಸ್ಯೆಯೊಂದು ಇಂದು ಹಸಿವಿನ ಸಮಸ್ಯೆಯನ್ನು ಮಂಕುಗೊಳಿಸಿದ್ದು ಈ ಸಹಸ್ರಮಾನದ ಮಹ ದುರಂತಗಳಲ್ಲೊಂದು. ಅದು ನೀರಿನ ಸಮಸ್ಯೆ. ನೂರು ವರ್ಷಗಳ ಹಿಂದೆ ಭೂಮಂಡಲದಲ್ಲಿ ನೀರಿಗಾಗಿ ಈ ಪರಿಯ ಹಾಹಾಕಾರ ಹುಟ್ಟಿತ್ತೆಂಬ ಊಹೆ ಎಷ್ಟು ಜನರಿಗಿದ್ದೀತು ಹೇಳುವುದು ಕಷ್ಟ. ಆದರೆ ಬಹುತರ ಜನಸಾಮಾನ್ಯರಿಗಂತೂ ಇದರ ಪರಿವೆ ಇರಲಿಲ್ಲ. +ಭೂಮಿಯ ಮೇಲ್ಮೈನ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ ನಮ್ಮ ಬಳಕೆಗೆ ಯೋಗ್ಯವಿರುವ ನೀರಿನ ಪ್ರಮಾಣ ಬಹಳ ಕಡಿಮೆ. ಒಟ್ಟು ಲಭ್ಯವಿರುವ ನೀರಿನಲ್ಲಿ ಶೇಕಡಾ ೯೭.೩ ರಷ್ಟು ನೀರು ಸಾಗರದಲ್ಲಿದೆ. ಶೇಕಡಾ ೨.೦ ರಷ್ಟು ನೀರು ಘನರೂಪ ಅಂದರೆ ಮಂಜುಗಡ್ಡೆಯಾಗಿದೆ. ವಾಯುಮಂಡಲದ ಆವಿ ಅಂದರೆ ಮೋಡ, ನದಿಗಳು, ಅಂತರ್ಜಲ, ಕೊಳವೆಬಾವಿಗಳು, ಸೇರಿ ಶೇಕಡಾ ೦.೭ ನೀರು ಇದೆ. ಇದರಲ್ಲಿ ಶೇಕಡಾ ೧ರಷ್ಟು ನೀರು ಮಾತ್ರ ಜೀವಿಗಳಿಗೆ ಆಧಾರವಾಗಿದೆ. ೧೯೭೦ ರ ದಶಕಕ್ಕೂ ಮೊದಲು ಭಾರತದ ಅಂತರ್ಜಲ ಮಳೆನೀರಿನ ಹತ್ತು ಪಟ್ಟು ಇತ್ತು. ಆದರೆ ಇಂದು ಕೊಳವೆ ಬಾವಿಗಳ ಸಂಖ್ಯೆ ಏರುತ್ತಿರುವದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅನೇಕ ಕಡೆ ಅದು ಸಂಪೂರ್ಣ ಬತ್ತಿ ಹೋಗಿದೆ. +ಭಾರತದ ಹಲವೆಡೆಯಂತೆ ಕರ್ನಾಟಕದಲ್ಲಿಯೂ ಇತ್ತೀಚೆಗೆ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಹಾಗೆ ನೋಡಿದರೆ ನೀರಿನ ಅಭಾವ ಇಂದು ವಿಶ್ವವನ್ನೆ ವ್ಯಾಪಿಸಿರುವ ಭಯಂಕರ ಸಮಸ್ಯೆಯಾಗಿದೆ. ಜಾಗತೀಕರಣದ ಹಾವಳಿಯಲ್ಲಿ ಈಗಾಗಲೇ ಲಾಭಖೋರ ರಾಷ್ಟ್ರೀಯ ಪಾಲಿಸಿಗಳಡಿಯಲ್ಲಿ ಕೋಲಾ ಪಾನೀಯ ಕಂಪನಿಗಳಿಗೆ ನದಿ, ಸರೋವರಗಳನ್ನು ಮಾರಿಕೊಂಡು ಜನತೆಯ ಪ್ರಾಣಕ್ಕೆ ಸಂಚಕಾರ ತಂದ ಘಟನೆಗಳು ಭಾರತದಂಥ ಬಡರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ಧವೇನಾದರೂ ಜರುಗಬಹುದಾದರೆ ಅದು ನೀರಿಗಾಗಿ ನಡೆಯುವ ಯುದ್ಧವಾಗಬಹುದೆಂಬ ಸಂಭವನೀಯತೆಯನ್ನು ತಜ್ಞರು ಚರ್ಚಿಸುತ್ತಿದ್ದಾರೆ. +ಕರ್ನಾಟಕದ ಪ್ರತಿಶತ ೬೦ ರಷ್ಟು ಗ್ರಾಮಗಳು ಮತ್ತು ಅಷ್ಟೇ ಪ್ರಮಾಣದ ನಗರಗಳು ನೀರಿನ ಅಭಾವವನ್ನು ಹೇಳಲಸದಳ ರೀತಿಯಲ್ಲಿ ಎದುರಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಕುಸಿಯುತ್ತಿರುವ ಅಂತರ್ಜಲಮಟ್ಟ, ಒಂದು ಕಾರಣವಾದರೆ, ದೊರೆಯುವ ನೀರಿನ ಸಂಗ್ರಹಣೆ, ಇದ್ದ ನೀರಿನ ಅಸಮರ್ಪಕ ಸರಬರಾಜು, ಸಂಬಂಧಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇವು ಇನ್ನೊಂದು ಕಾರಣವಾಗುತ್ತಿವೆ. ಮುಂದುವರೆದು ಹೇಳುವುದಾದರೆ ಸದ್ಯ ಜನತೆಯ ನೀರಿನ ಬವಣೆಗೆ ಇವೇ ಪ್ರಮುಖ ಕಾರಣಗಳಾಗುತ್ತಿವೆ. ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ ಎಂಬ ಅರಿವಿದ್ದಾಗಲೂ ಸರಕಾರಿ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಯಾವೊಂದು ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟರು ಎಂಬಂತೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಅಲ್ಪಕಾಲಿಕ, ಬೇಕಾಬಿಟ್ಟಿ ಯೋಜನೆಗಳನ್ನು ಹಾಕಿಕೊಳ್ಳುವುದು, ಒಂದಕ್ಕೆ ನಾಲ್ಕುಪಟ್ಟು ಹಣವನ್ನು ವಿನಿಯೋಗಿಸಿ ತುಂಬಾ ಕಳಪೆ ಕಾಮಗಾರಿ, ತರಾತುರಿಯಲ್ಲಿ ಅಶುದ್ಧ ನೀರು ಸರಬರಾಜು ಮಾಡುವದು, ಎಷ್ಟೋ ಶಹರುಗಳಲ್ಲಿ ನಲ್ಲಿಯ ಪೈಪುಗಳು ಡ್ರೈನೇಜ ಪೈಪುಗಳೊಂದಿಗೆ ಸೇರಿಕೊಂಡು ಅತ್ಯಂತ ಕಲುಷಿತ ನೀರು ಸರಬರಾಜು ಆಗಿರುವ ಸಂಗತಿಗಳು ಇವೆ. ನೀರಿಗಾಗಿ ಎಲ್ಲೆಂದರಲ್ಲಿ ಜನತೆ ದಿನಬೆಳಗಾದರೆ ಮುಷ್ಕರ, ಧರಣಿ, ರಾಸ್ತಾರೋಕೋ ಮುಂತಾದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವದು ಅನಿವರ್‍ಯವಾಗುತ್ತಿದೆ. ಇದಕ್ಕೆಲ್ಲ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಅಧಿಕಾರಿ ವರ್ಗ, ಆಳುವ ವರ್ಗದ ಪ್ರತಿನಿಧಿಗಳು ಈ ದಿಶೆಯಲ್ಲಿ ಸಂವೇದನಾಹೀನರಂತೆ ವರ್ತಿಸುತ್ತಿರುವದು ನಾಚಿಕೆ ತರಿಸುತ್ತಿದೆ. ನೆರೆಯ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳನ್ನು ನೋಡಿ ನಾವು ಕಲಿಯಬೇಕಾಗಿದೆ. ಆ ರಾಜ್ಯಗಳ ಆಡಳಿತ ಮತ್ತು ಅಧಿಕಾರಿವರ್ಗ ಈ ದಿಸೆಯಲ್ಲಿ ಎಷ್ಟು ಸಚೇತಕವಾಗಿದೆಯೆಂದರೆ ಅವರು ಸಂಗ್ರಹಿತ ನೀರನ್ನು ಪೋಲಾಗದಂತೆ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. +ಅವರು ತಮ್ಮ ನೀರಿನ ಅವಶ್ಯಕತೆಯನ್ನು ಗ್ರಾಮ ಮತ್ತು ನಗರಗಳ ವಿಸ್ತಾರ, ಜನಸಂಖ್ಯಾ ಪ್ರಮಾಣವನ್ನು ಅನುಲಕ್ಷಿಸಿ ರೂಪಿಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲೂ ಸರಕಾರ ಮತ್ತು ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಜಲಸಂರಕ್ಷಣೆ ಮತ್ತು ಸಮರ್ಪಕವಾದ ಸರಬರಾಜು ಇವು ತುರ್ತಾಗಿ ಮಾಡಬೇಕಾದ ಕೆಲಸಗಳು. ನಮ್ಮ ರಾಜ್ಯದ ನೀರು ಸರಬರಾಜು ಮಂಡಳಿಗಳಲ್ಲಿ ಮನೆ ಮಾಡಿಕೊಂಡಿರುವ ಸೋಂಭೇರಿತನ ಮತ್ತು ಬ್ರಹ್ಮಾಂಡ ಭ್ರಷ್ಟತೆಗಳು ತೊಲಗಬೇಕು.ಜನತೆಯಲ್ಲಿಯೂ ನೀರನ್ನು ರಕ್ಷಿಸಿ ಬಳಸಿಕೊಳ್ಳುವ ಎಚ್ಚರ ಮೂಡಿಸಬೇಕು. ಈಗಗಲೆ ಸರ್ಕಾರ ಜಲಸಂವರ್ಧನೆ ಯೋಜನೆಗಳನ್ನು ಅಲ್ಲಲ್ಲಿ ಕಾರ್ಯಗತಗೊಳಿಸುತ್ತಿದೆಯಾದರೂ ಅದು ಪರಿಣಾಮಕಾರಿಯಾಗುವಂತೆ ಸಾಕಾರವಾಗುತ್ತಿಲ್ಲ. ನೀರು ಒದಗಿಸುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕು. ಅಂದಾಗ ಮಾತ್ರ ನೀರಿನ ಅಭಾವಕ್ಕೆ ಪರಿಹಾರ ದೊರೆತೀತು. ಇಲ್ಲವಾದರೆ ಈ ಪರದಾಟ ಮುಂಬರುವ ದಿನಗಳಲ್ಲಿ ತೀರ ಗಂಭೀರ ರೀತಿಯ ಅನಾಹುತಗಳನ್ನು ಸೃಷ್ಟಿಸಲಿದೆ ಎಂಬ ಪ್ರಜ್ಞೆ ಇರಲಿ. +ಭೌತಿಕ ಮೌಲ್ಯಗಳಲ್ಲಿ ಅತ್ಯಂತ ಬೆಲೆಯುಳ್ಳದ್ದೂ ಮತ್ತು ಮೂರ್ತವಾಗಿ ಕೈಗೆಟಕುವ ಉಪಕರಣವೆಂದರೆ “ಭೂಮಿ”. ಈ ನೆಲದ ಮೆಲೆ ಹುಟ್ಟಿದೆಲ್ಲರಿಗೂ ಇದರ ಮೇಲೆ ಸಮನವದ ಹಕ್ಕು ಇದೆ ಎಂಬುದು ಒಂದು ತರ್ಕ ಮತ್ತು ಆದರ್ಶ. ವಾಸ್ತವದಲ್ಲಿ ಭೂಮಿಯ ಮೇಲೆ ಅಸಮಾನ ಒಡೆತನವಿದೆ. ಮೂಲತಃ ಅಲೆಮಾರಿಯಾದ ಮಾನವ ಸಮುದಾಯ ಒಂದೆಡೆ ನೆಲೆನಿಂತು ವೈಯಕ್ತಿಕ ಆಸ್ತಿ ಒಡೆತನಕ್ಕೆ ಸುರುವಿಟ್ಟುಕೊಂಡಂತೆ ಅಸಮಾನ ಹಂಚಿಕೆ ಪ್ರಾರಂಭವಾಗಿ ಅದೇ ಜಮೀನ್ದಾರಿ ವ್ಯವಸ್ಥೆಯ ಬರ್ಬರ ಕೃತ್ಯಗಳಿಗೆ ದಾರಿ ಮಾಡಿಕೊಟ್ಟಿತು. ಈ ಊಳಿಗಮಾನ್ಯ ವ್ಯವಸ್ಥೆ ತನ್ನ ಅಸಮಾನ ಹಂಚಿಕೆಯ ಮೂಲಗಳನ್ನು ಕಾಪಾಡಿಕೊಳ್ಳಲೆಂದೇ ತನಗೆ ಅನುಕೂಲವಾಗುವ ಕರ್ಮಸಿದ್ಧಾಂತವನ್ನು ರೂಪಿಸಿಕೊಂಡಿತು. ಕರ್ಮಸಿದ್ಧಾಂತದ ಉತ್ಪತ್ತಿಗಳಾದ ಪಾಪ, ಪುಣ್ಯ, ಸ್ವರ್ಗ, ನರಕ ಮುಂತಾದ ಭ್ರಮಾತ್ಮಕ ತಂತ್ರಗಳು ಇಂದಿಗೂ ಆಳವಗಿ ಆಚರಣೆಯಲ್ಲಿವೆ. ಹೀಗಾಗಿ ವ್ಯವಸ್ಥೆ ನಿರ್ಮಿಸಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಅಸಮಾನತೆಗಳು ಇನ್ನೂ ಚಾಲ್ತಿಯಲ್ಲಿವೆ. ಎಲ್ಲ ಬಗೆಯ ತಾರತಮ್ಯಗಳು, ಅನಿಷ್ಟ ಜಾತಿ ಪದ್ಧತಿ ಕಾಲಕ್ಕೆ ತಕ್ಕ ಬೇರೆ ಬೇರೆ ಚಹರೆಗಳಲ್ಲಿ ತಾಂಡವ ಆಡುತ್ತಿದೆ. ಕೃಷಿಯ ಪ್ರಧಾನ ಉಪಕರಣವಾಗಿರುವ “ಭೂಮಿ” ದುಡಿಯದಿರುವವರ ಸುಪರ್ದಿನಲ್ಲೆ ಉಳಿದುಕೊಂಡು ಬರುತ್ತಿರುವದರಿಂದ ಬದಲಾದ ಆರ್ಥಿಕ ಸಂರಚನೆಗಳಲ್ಲಿಯೂ ಅದು ಪ್ರಮುಖ ಬಂಡವಾಳವಾಗುತ್ತಿದೆ. ಕರ್ನಾಟಕದಲ್ಲಿ ಭೂಮಿತಿ ಶಾಸನ ೧೯೭೨ ರಲ್ಲಿಯೇ ಜಾರಿಗೆ ಬಂದಿದೆಯಾದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರಮಿಕ ವರ್ಗದ ತೀವ್ರ ಹೋರಾಟದಿಂದಾಗಿ ಅಲ್ಲಿ ಭೂಸುಧಾರಣೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾದದ್ದು ಬಿಟ್ಟರೆ ಕರ್ನಾಟಕದ ಇನ್ನುಳಿದ ಯಾವ ಜಿಲ್ಲೆಯಲ್ಲೂ ಭೂಹಂಚಿಕೆ ಸಮರ್ಪಕವಾಗಿ ಆಗಲೇ ಇಲ್ಲ. +ಇಂದಿಗೂ ಕರ್ನಾಟಕದ ಸಾಗುವಳಿಯೋಗ್ಯವಾದ ಒಟ್ಟು ಭೂಮಿಯಲ್ಲಿ ಶೇಕಡಾ ೪೧.೯೬ ರಷ್ಟು ಭೂಮಿಯು ಶೇಕಡಾ ೧೧.೨೫ ರಷ್ಟು ಜನರ ಒಡೆತನದಲ್ಲಿದೆ. ಶೇಕಡಾ ೪೭.೭೩ ರಷ್ಟು ಭೂಮಿಯು ೪೬.೮೦ ರಷ್ಟು ಜನರ ಕೈಯಲ್ಲಿಯೂ ಶೇಕಡಾ ೧೦.೩೧ ರಷ್ಟು ಭೂಮಿಯು ಶೇಕಡಾ ೪೧.೯೫ ರಷ್ಟು ಜನರ ಸುಪರ್ದಿನಲ್ಲಿದೆ. ಅಂದರೆ ಹೆಚ್ಚು ಕೃಷಿಯೋಗ್ಯ ಭೂಮಿ ಕೆಲವೊಬ್ಬರ ಒಡೆತನದಲ್ಲಿಯೂ, ತೀರ ಕಡಿಮೆ ಪ್ರಮಾಣದ ಭೂಮಿ ಹಲವರ ಒಡೆತನದಲ್ಲಿಯೂ ಇದೆ. ಇಂದಿಗೂ ನಿಜವಾಗಿ ದುಡಿಯುವವರು ಅದರ ಒಡೆಯರಾಗಿಲ್ಲ. ತತ್ಕಾರಣವಾಗಿ ಕರ್ನಾಟಕದಲ್ಲಿ ರೂಪ ಬದಲಿಸಿಕೊಂಡ ಅರೆ ಪಾಳೇಗಾರಿ ವ್ಯವಸ್ಥೆ ಇದೆ. ಈ ವ್ಯವಸ್ಥೆ ಪೋಷಿಸಿದ ಅಸಮಾನತೆ ಬಿತ್ತುವ ಮೌಲ್ಯಗಳು, ನಂಬಿಕೆಗಳು ನಮ್ಮ ತಲೆಯನ್ನು ಆಳುತ್ತಿವೆ. ವಿಚಾರಗಳೇ ಮನುಷ್ಯರನ್ನು ಆಳುತ್ತವೆ. ಆದರೆ ಇಂದಿನವರೆಗೂ ಆಳುವವರ ವಿಚಾರಗಳೆ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿವೆ. ತಮ್ಮ ಹಿತ ಕಾಪಾಡದ ವಿಚಾರಗಳನ್ನೇ ತಮ್ಮದೆಂದು ನಂಬಿಕೊಂಡು ಬಂದಿರುವ ಜನತೆ ಅರಿವಿಲ್ಲದೆ ತಿರುಗಣಿ ಮಡುವಿನ ಸೆಳವಿಗೆ ಸಿಲುಕಿಕೊಂಡಿರುತ್ತದೆ. ಈ ಸೆಳವಿನಿಂದ ತಪ್ಪಿಸಿಕೊಂಡು ಮೇಲೆದ್ದು ಬರುವದು ಅಷ್ಟು ಸುಲಭವಲ್ಲ. ಅದಕ್ಕೆ ಎಲ್ಲ ಮೂಲದಿಂದಲೂ ವಿಚಾರಕ್ರಾಂತಿ ಎದ್ದು ಬರಬೇಕಾಗುತ್ತದೆ. ಕುವೆಂಪು ತಮ್ಮ ಸಾಹಿತ್ಯದುದ್ದಕ್ಕೂ ಯಾವ ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನಕ್ಕೆ, ಕ್ರಾಂತಿಗೆ ಪಂಥಾಹ್ವಾನ ನೀಡಿದ್ದರೋ ಅಂಥ ಕ್ರಾಂತಿಯು ಪುನರ್‌ಘಟಿಸಬೇಕಿದೆ. +ಜಮೀನ್ದಾರಿ ವ್ಯವಸ್ಥೆ ರೂಪ ಬದಲಿಸಿಕೊಂಡಿದೆ ಎಂಬ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ, ಒಕ್ಕಲುತನ ಪದ್ಧತಿ ಈ ಹಿಂದಿನ ಅವಸ್ಥೆ ದಾಟಿಕೊಂಡು ಹೊಸ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಕೃಷಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ನೂರಾರು ಎಕರೆ ಭೂಮಿ ಹೊಂದಿದ್ದ ಗೌಡ, ಸಾಹುಕಾರ, ಜಮೀನ್ದಾರ, ವತನದಾರ, ದೇಶಪಾಂಡೆ, ಹೆಗಡೆಗಳೆನಿಸಿಕೊಂಡಿದ್ದ ಭೂಮಾಲೀಕರು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ದಿವಾಳಿಯೆದ್ದಿದ್ದಾರೆ. ಪರಂಪರಾಗತ ಈ ಭೂಮಾಲೀಕರು ಬದಲಾದ ಸಂದರ್ಭಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ತಮ್ಮ ಆಸ್ತಿ-ಪಾಸ್ತಿಯನ್ನು ಮತ್ತೊಂದು ಲಾಭದಾಯಕ ಉದ್ದಿಮೆಗಳಲ್ಲಿ ತೊಡಗಿಸಿ ನಗರಗಳಿಗೆ ಯಾರು ವಲಸೆ ಬಂದಿರುವರೋ ಅವರು ಮಾತ್ರ ಇಂದು ಒಂದಷ್ಟು ನಿರುಮ್ಮಳವಾಗಿ ಬದುಕುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿಯೇ ಇರುವ ಸಣ್ಣಪುಟ್ಟ ರೈತರು, ಹಳೆಯ ಜೀವನ ವಿಧಾನಕ್ಕೆ ಅಂಟಿಕೊಂಡಿರುವ ವೃತ್ತಿ ಕಸಬುದಾರರು ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ರೈತರ ಸರಣಿ ಆತ್ಮಹತ್ಯೆಗಳು ನಮ್ಮ ಹದಗೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗಿವೆ. ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ಅಂದರೆ ಪ್ರಾರಂಭದ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಒಕ್ಕಲುತನದಲ್ಲಿ ಸಣ್ಣಪುಟ್ಟ ವೈಜ್ಞಾನಿಕ ಸುಧಾರಣೆಗಳು ಸುಧಾರಿತ ತಳಿಯ ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳು, ಹನಿ ನೀರಾವರಿ, ವ್ಯಾಪಾರಿ ಬೆಳೆಗಳು ಇವುಗಳಿಂದಾಗಿ ಅಧಿಕ ಇಳುವರಿಯೇನೋ ಬರುತ್ತಿದೆ. ಆದರೆ ಬೆಳೆದ ಧಾನ್ಯಕ್ಕೆ ಸ್ವಯತ್ತ ಮಾರುಕಟ್ಟೆ ಅಥವಾ ಸಮರ್ಪಕ ಬೆಲೆ, ಧಾನ್ಯಗಳ ದಾಸ್ತಾನು ವ್ಯವಸ್ಥೆ, ಸಂಸ್ಕರಣ ಘಟಕಗಳು ಇಲ್ಲದ್ದಕ್ಕಾಗಿ ರೈತರು ಹೆಚ್ಚೆಚ್ಚು ಬೆಳೆದರೂ ಹೂಡಿದಷ್ಟೂ ಹಣವೂ ಬರದೆ ಕಂಗಾಲಾಗುತ್ತಿದ್ದಾರೆ. ಇಂದು ಒಕ್ಕಲುತನ ಲಾಭದಾಯಕ ವೃತ್ತಿಯಾಗಿ ಉಳಿದಿಲ್ಲ. ನೇರವಾಗಿ ಕೃಷಿಯಲ್ಲಿ ತೊಡಗಿದ ರೈತರು ಸರಕಾರದ ಒಕ್ಕಲುತನ ವಿರೋಧಿ ನೀತಿಯಿಂದಾಗಿ ದಯನೀಯ ಸ್ಥಿತಿಗೆ ತಲುಪುತ್ತಿದ್ದರೆ, ಇನ್ನೊಂದೆಡೆ ಕೃಷಿ ಉತ್ಪಾದಿತ ವಸ್ತುಗಳ ಖರೀದಿ, ಬಿಕರಿ ವಹಿವಾಟು ನಡೆಸುವ ದಲ್ಲಾಳಿ ಸಮುದಾಯ ಇದರ ನಿವ್ವಳ ಲಾಭ ದೋಚುತ್ತಿದೆ. ಆದ್ದರಿಂದ ಪ್ರತ್ಯಕ್ಷ ಭೂ ಒಡೆತನಕ್ಕಿಂತ ಪರೋಕ್ಷ ಭೂ ಒಡೆತನವೇ ದೊಡ್ಡ ಬಂಡವಾಳವಾಗಿ ಪರಿವರ್ತನೆಯಾಗುತ್ತಿದೆ. ಈ ರೀತಿಯಲ್ಲಿ ಜಮೀನ್ದಾರೀ ವ್ಯವಸ್ಥೆ ಸ್ಥಾನಪಲ್ಲಟವಾಗಿದೆ. +ಭೂಮಿಯಲ್ಲಿ ಕೃಷಿ ಮಾಡುವುದು ಇಂದು ಲಾಭದಾಯಕವಾಗಿರಲಿಕ್ಕಿಲ್ಲ. ಆದರೆ ಭೂಮಿಯ ಮುಖಬೆಲೆ ಅದರಲ್ಲೂ ಕೃಷಿಯೇತರ ಚಟುವಟಿಕೆಗಳಲ್ಲಿ ಅಂದರೆ ಸೈಟು, ಕಾಂಪ್ಲೆಕ್ಸು, ಅಂಗಡಿ ಮುಂಗಟ್ಟು ಈ ತೆರದಲ್ಲಿ ಅದರ ಬೆಲೆ ಗಗನಕ್ಕೇರುತ್ತಿದೆ. ದೊಡ್ಡ ದೊಡ್ಡ ಶಹರುಗಳಲ್ಲಿ ಭೂಮಿಯೇ ಪ್ರಧಾನ ವಹಿವಾಟು ಆಗಿದ್ದು ಎಲ್ಲ ತರದ ಭ್ರಷ್ಟಾಚಾರ, ಹಿಂಸೆ, ಕ್ರೌರ್ಯ ಅಲ್ಲಿ ಮನೆಮಾಡಿಕೊಂಡಿವೆ. ಬೆಂಗಳೂರು ಒಂದು ನಗರದಲ್ಲಿಯೇ ಘಟಿಸಿದ ಹಲವಾರು ಭೂಹಗರಣಗಳನ್ನು ನೆನಪಿಸಿಕೊಂಡರೂ ಸಾಕು, ಬಂಡವಾಳ ವ್ಯವಸ್ಥೆಯ ಕಬಂಧ ಬಾಹುಗಳ ಅರಿವಾಗದೇ ಇರದು. ಈ ರೀತಿಯ ಭೂವ್ಯಾಪಾರೀಕರಣ ಬಡವ-ಬಲ್ಲಿದರ ನಡುವೆ, ಕೃಷಿಕ-ಕೃಷಿಯೇತರ ವ್ಯಾಪಾರಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿದೆ. ಹಳ್ಳಿಗಳಲ್ಲಿ ಬೇಸಾಯದ ದಿವಾಳೀಕರಣ, ನಗರಗಳಲ್ಲಿ ವಿದೇಶಿ ಬಂಡವಾಳೀಕರಣ ಇವೆರಡೂ ಕನ್ನಡ ಜನತೆಯ ಬದುಕನ್ನು ಧ್ವಂಸಗೊಳಿಸುತ್ತಿವೆ. ಆದ್ದರಿಂದ ಆಡಳಿತವನ್ನು ನಿಯಂತ್ರಿಸುವ ಸರಕಾರ ತನ್ನ ವ್ಯಾಪಾರಿ ನೀತಿಗಳಲ್ಲಿಯೇ (ಪಾಲಿಸಿ) ಸಮೂಲ ಬದಲಾವಣೆ ತಂದು ಜಲ-ನೆಲವನ್ನು ರಾಷ್ಟ್ರೀಯ ಸಂಪತ್ತಾಗಿ ಪರಿಗಣಿಸಬೇಕು. ನೀರು ಮತ್ತು ನೆಲ ಆ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಮಾರುಕಟ್ಟೆಯಲ್ಲಿ ಒಂದು ಲೀಟರ್ ಹಾಲಿಗೆ ಹನ್ನೆರಡು ರೂಪಾಯಿ ಇದ್ದರೆ ಅದೇ ಶುದ್ಧ ಕುಡಿಯುವ ಒಂದು ಲೀಟರ್ ನೀರಿಗೆ ಹದಿನೈದು ರೂಪಾಯಿ ಇದೆ. ಅದರೆ ಹಾಲು ಕುಡಿದು ಬದುಕಲಗದು. ಬದುಕುವುದಕ್ಕೆ ನೀರೇ ಬೇಕು. ಬಾಳುವುದಕ್ಕೆ ಒಂದು ಸೂರೇ ಬೇಕು. ಜವಾಬ್ದಾರಿಯುತ ಸರಕಾರವೊಂದಕ್ಕೆ ತನ್ನ ನಾಡಿನಲ್ಲಿ ವಾಸಿಸುತ್ತಿರುವ ಜನತೆಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಬೇಕು. +ಅಕ್ಷರ ಮತ್ತು ಕೆಲಸ : +ಅಕ್ಷರ ಮಾನವನ ಅದ್ಭುತ ಆವಿಷ್ಕಾರ. +ಇದು ಸರ್ವ ಜ್ಞಾನ ಶಿಸ್ತುಗಳನ್ನು ಭರಿಸಿಕೊಳ್ಳುವ ಸಶಕ್ತ ಮಾಧ್ಯಮ. ಜಗತ್ತಿಗೆ ತಾನು ತೆರೆದುಕೊಳ್ಳುವ, ಜಗತ್ತನ್ನು ತನ್ನೊಳಗೆ ಆಹ್ವಾನಿಸಿಕೊಳ್ಳುವ ಪರಿಣಾಮಕಾರಿ ಉಪಕರಣವೆನಿಸಿಕೊಂಡಿರುವ ಈ ಅಕ್ಷರ ವೈದಿಕಶಾಹಿಯ ಸ್ವಾರ್ಥದಿಂದಾಗಿ ಈ ನೆಲದಲ್ಲಿ ಎಲ್ಲರಿಗೂ ದಕ್ಕಿರಲೇ ಇಲ್ಲ. ವರ್ಣಾಶ್ರಮ ಪದ್ಧತಿಯನ್ನು ಅನೂಚಾನವಾಗಿ ಆಚರಿಸಿಕೊಂಡು ಬಂದಿರುವ ಕಾರಣವಾಗಿ ಶೂದ್ರರು, ದಲಿತರು, ಮಹಿಳೆಯರು ಮೊನ್ನೆಮೊನ್ನೆಯವರೆಗೂ ಅಕ್ಷರ ಬೆಳಕಿನಿಂದ ದೂರವೇ ಉಳಿದಿದ್ದರು. ಬ್ರಿಟಿಷರ ಆಗಮನ, ದೇಶೀ ನಾಯಕರುಗಳ ಸುಧಾರಣಾವಾದಿ ಧೋರಣೆ, ಶೂದ್ರರ-ದಲಿತರ ಎಚ್ಚೆತ್ತ ಪ್ರಜ್ಞೆಯಿಂದಾಗಿ ತೀರ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ತೆರೆದುಕೊಂಡಿದ್ದೇವೆ. ಈಗ ಪ್ರತಿಯೊಬ್ಬರಿಗೂ ಅಕ್ಷರ ಮತ್ತು ಅನ್ನ ಎಂಬ ಪಾಲಿಸಿಯನ್ನು ಒಪ್ಪಿಕೊಂಡೂ ಅರ್ಧ ಶತಮಾನ ಸಂದುಹೋಗಿದೆ. ಸ್ವತಂತ್ರ ಭಾರತದಲ್ಲಿ ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಹತ್ತಾರು ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಈ ಕುರಿತು ದೊಡ್ಡ ಭರವಸೆ ನೀಡಿಯೇ ಗೆದ್ದು ಬಂದು ಗದ್ದುಗೆ ಹಿಡಿದಿವೆ. ಆದರೆ ಇಂದು ನಮ್ಮ ಶಿಕ್ಷಣದ ಗತಿ ಪ್ರಾಥಮಿಕ ಮಟ್ಟದಿಂದ ಉನ್ನತ ಹಂತದವರೆಗೆ ಏನಾಗಿದೆ ಎಂಬುದನ್ನು ನೋಡಿದರೆ ಖಂಡಿತ ಸಿಟ್ಟು ಮತ್ತು ಜಿಗುಪ್ಸೆ ಹುಟ್ಟುತ್ತದೆ. ನಾನು ಯಾಕೆ ‘ಸಿಟ್ಟು’ ಮತ್ತು ‘ಜಿಗುಪ್ಸೆ’ ಎಂಬ ಶಬ್ದಗಳನ್ನು ಬಳಸುತ್ತಿದ್ದೇನೆಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳ ಮುಂಚೂಣಿಯಲ್ಲಿರುವ ದೇಶವೊಂದಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷ ಗತಿಸಿದರೂ ತನ್ನ ಅರ್ಧದಷ್ಟು ಪ್ರಜೆಗಳಿಗೆ ಕನಿಷ್ಠ ಅಕ್ಷರ ಕೊಡಲು ಸಾಧ್ಯವಾಗಿಲ್ಲ ಎಂದರೆ ಏನರ್ಥ? ಇಂಥ ಸ್ಥಿತಿಯನ್ನು ಒಪ್ಪಿಕೊಂಡಿರುವ ಪ್ರಜೆಗಳ ಸೋಂಭೇರಿತನಕ್ಕೆ, ಅವರ ರಾಜಿ ಮನೋಭಾವದ ದಾಸ್ಯತ್ವಕ್ಕೆ ಜಿಗುಪ್ಸೆ ಬರುತ್ತದೆ. ಆಳುವ ವರ್ಗವು ಉದ್ದೇಶಪೂರ್ವಕವಾಗಿಯೇ ಜನರನ್ನು ಅಕ್ಷರದಿಂದ ವಂಚಿತರನ್ನಾಗಿ ಮಾಡುತ್ತಿದೆಯಲ್ಲ; ಅದಕ್ಕಾಗಿ ಸಿಟ್ಟು, ತಳಮಳಗಳು ಹುಟ್ಟುತ್ತವೆ. +ಒಟ್ಟು ದೇಶದ ಸಾಕ್ಷರತೆ ೨೦೦೧ನೇ ಸಾಲಿನ ಮಾಹಿತಿ ಪ್ರಕಾರ ೬೫.೩೮ ಮಾತ್ರ. ಕರ್ನಾಟಕದ ಸಾಕ್ಷರತೆ ೬೭.೦೪ ಇದೆ. ಇದು ಸರಕಾರ ಕೊಡಮಾಡಿದ ಮಾಹಿತಿ. ವಾಸ್ತವದಲ್ಲಿ ಸಾಕ್ಷರತೆ ಪ್ರಮಾಣ ಪ್ರತಿಶತ ೫೦ ಕ್ಕಿಂತಲೂ ಕಡಿಮೆ ಇದೆ. ಅದರಲ್ಲೂ ಮಹಿಳೆಯರ ಸಾಕ್ಷರತೆ ಪ್ರಮಾಣ ಪುರುಷರ ಅರ್ಧದಷ್ಟು ಇಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರು ಇಂದಿಗೂ ಶಾಲೆಗಳ ಮುಖ ನೋಡಿಲ್ಲ. ಕರ್ನಾಟಕದಲ್ಲಿ ೧೯೯೧ನೇ ಸಾಲಿನ ಜನಗಣತಿ ಪ್ರಕಾರ ಸಾಕ್ಷರತೆ ೫೬.೦ ರಷ್ಟು ಇತ್ತು. ಈಗ ೬೭.೦೪ ರಷ್ಟಾಗಿದೆ. ಅಂದರೆ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿಶತ ೧೧ ರಷ್ಟಾದರೆ ವರ್ಷಕ್ಕೆ ಶೇಕಡಾ ೧.೧೦ ಪರಿಮಾಣದಲ್ಲಿ ಮಾತ್ರ ಶಿಕ್ಷಣದಲ್ಲಿ ಹೆಚ್ಚಳ ತರಲು ಸಾಧ್ಯವಾಗುತ್ತಿದೆ. ಇದು ನಿರಾಶಾದಾಯಕ ಬೆಳವಣಿಗೆ. ನಿರ್ದಿಷ್ಟ ಅವಧಿ ನಿಗಧಿಪಡಿಸಿ ಸಂಪೂರ್ಣ ಸಾಕ್ಷರತೆ ಸಾಧಿಸುವದು ಅಸಾಧ್ಯವೇನಲ್ಲ. ಆದರೆ ಜನತೆಗೆ ಶಿಕ್ಷಣ ನೀಡುವ ಮನಸ್ಸು ಪ್ರಭುತ್ವಕ್ಕೆ ಇಲ್ಲವೆಂದೇ ವಿಧಿತವಾಗುತ್ತದೆ. +ನಮ್ಮ ನಾಡಿನ ಸರ್ಕಾರ, ಮಠಾಧೀಶರು, ರಾಜಕೀಯ ಮುತ್ಸದ್ದಿಗಳು ಖಾಸಗಿ ವೈದ್ಯಕೀಯ, ತಾಂತ್ರಿಕ, ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ತೆಗೆಯಲು ಉತ್ಸಾಹ ತೋರಿಸುವಷ್ಟು ಪ್ರಾಥಮಿಕ, ಪ್ರೌಢಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆಗೆಯಲು ತೋರಿಸುವುದಿಲ್ಲ. ಕ್ರಿ.ಶ. ೧೯೮೦ ರಿಂದಲೂ ಕರ್ನಾಟಕವು ಉನ್ನತ, ವೃತ್ತಿಪರ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ಕೊಡುತ್ತಿದ್ದು ಪ್ರಾಥಮಿಕ ಹಂತವನ್ನು ಕಡೆಗಣಿಸುತ್ತಿದೆ. ಸರಕಾರವೂ ಲಾಭಖೋರ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹವನ್ನು ತನ್ನದೆ ಸಾರ್ವಜನಿಕ ವಲಯದ ಶಾಲಾ, ಕಾಲೇಜುಗಳಿಗೆ ನೀಡುತ್ತಿಲ್ಲ ಎಂಬುದೇ ದೊಡ್ಡ ವಿಪರ್‍ಯಾಸವಾಗಿದೆ. ಇತ್ತೀಚಿನ ದಿನಗಳಲ್ಲಂತೂ ಇವರೆಲ್ಲರಿಗೂ ಉನ್ನತ ಶಿಕ್ಷಣವೆಂಬುದು ನಿವ್ವಳ ಹಣ ಮಾಡುವ ಉದ್ಯಮವಾಗುತ್ತಿದೆ. ಒಟ್ಟು ರಾಷ್ಟ್ರದಲ್ಲಿರುವ ಅರ್ಧದಷ್ಟು ತಾಂತ್ರಿಕ ಕಾಲೇಜುಗಳು ಕರ್ನಾಟಕವೊಂದರಲ್ಲಿಯೇ ಇರುವುದಕ್ಕೆ ಮುಖ್ಯ ಕಾರಣ ಈ ಉದ್ಯಮಶೀಲತೆಯ ಹಪಾಹಪಿಯೇ ಆಗಿದೆ. ವೃತ್ತಿಪರ ಪದವಿಯ ಸೀಟುಗಳಾದರೂ ಕರ್ನಾಟಕದವರಿಗಿಂತ ಇತರ ರಾಜ್ಯದವರಿಗೆ ಮಾರಿಕೊಳ್ಳಲೆಂದೇ ಸೃಷ್ಟಿಯಾಗಿವೆಯೆಂಬುದನ್ನು ಗಮನಿಸಬೇಕು. ಕಳೆದ ಐದಾರು ವರ್ಷಗಳಿಂದ ಸಿ.ಇ.ಟಿ.ಯಲ್ಲಾಗುತ್ತಿರುವ ಗೊಂದಲಗಳೇ ಆಳುವವರ ಬಂಡವಾಳಶಾಹಿಪರ ಲಾಬಿಗೆ ಸಾಕ್ಷಿಯಾಗಿವೆ. +ಸದ್ಯ ಅಸ್ತಿತ್ವದಲ್ಲಿರುವ ವ್ಯವಸ್ಥೆಯೇ ಸುಧಾರಿಸಲು ಸಾಧ್ಯವಿಲ್ಲವೆನ್ನುವ್ಷ್ಟು ಹದಗೆಟ್ಟಿದೆ. ಮತ್ತೆ ಅಂಥ ಸಂದರ್ಭದಲ್ಲಿ ಜಾಗತೀಕರಣದ ಹಾವಳಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಧೂಳಿಪಟ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಖಾಸಗೀಕರಣ ಕುಟುಕು ಜೀವ ಹಿಡಿದವನ ಕುತ್ತಿಗೆ ಒತ್ತಿದಂತೆ ಆಗುತ್ತಿದೆ. ಈಗಾಗಲೇ ವಿದೇಶಿ ಶಿಕ್ಷಣ ಕಂಪನಿಗಳು ಬೆಂಗಳೂರು ನಗರದಲ್ಲಿ ತಮ್ಮ ಅಕ್ಷರ ಮಳಿಗೆ ತೆರೆದಿಟ್ಟುಕೊಂಡಿವೆ. ಇಂಥ ವಿದೇಶಿ ಕಂಪನಿ ನಿರ್ಮಿತ ಶಾಲಾ ಕಾಲೇಜುಗಳೊಂದಿಗೆ ಸ್ಪರ್ಧೆ ಹೂಡುವ ನೆಪದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳು ಸ್ವಯಂ ಸುಧಾರಣೆ ನೆಪದಲ್ಲಿ ಮನಬಂದಂತೆ ಶುಲ್ಕ ಏರಿಸುತ್ತಿವೆ. ಗುಣಮಟ್ಟದ ಶಿಕ್ಷಣವೆಂಬ ಘೋಷಣೆಯ ಅಡಿಯಲ್ಲಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ಕಡಿತ ಮಾಡುತ್ತಿದೆ. ತತ್ಪರಿಣಾಮವಾಗಿ ಸರಕಾರಿ, ಅರೆ ಸರಕಾರಿ ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟು ಶಿಕ್ಷಣ ಸಂಪೂರ್ಣ ಖಾಸಗಿ ಒಡೆತನಕ್ಕೆ ಸರಿದುಕೊಳ್ಳುತ್ತಿದೆ. ಈಗಾಗಲೇ ಇದರ ಬಿಸಿ ಜನತೆಗೆ ತಟ್ಟಿದೆ. ಸಣ್ಣ ಉದಾಹರಣೆ ಹೇಳುವುದಾದರೆ, ಕಳೆದ ವರ್ಷಗಳಲ್ಲಿ ಬಿ.ಎ. ಪದವಿಗೆ ಸಾಮಾನ್ಯ ಮಟ್ಟದ ವಿದ್ಯಾರ್ಥಿಗೆ ೮೦೦/- ರೂಪಾಯಿಗಳಷ್ಟು ಇದ್ದ ಶುಲ್ಕ ಈ ವರ್ಷ ಹತ್ತಿರ ಹತ್ತಿರ ೨೦೦೦/- ರೂಪಾಯಿಗೆ ಬಂದು ತಲುಪಿದೆ. ಇದರ ನೇರ ಪರಿಣಾಮ ಬಡವರು, ಗ್ರಾಮವಾಸಿಗಳು, ದಲಿತರು, ಮಹಿಳೆಯರು ಬಲಿಯಾಗುತ್ತಾರೆ. ಏರುತ್ತಿರುವ ಶುಲ್ಕದಿಂದಾಗಿ ಅವರು ಮತ್ತೆ ಅಕ್ಷರ ಲೋಕದಿಂದ ದೂರವೇ ಉಳಿದುಬಿಡುತ್ತಿದ್ದಾರೆ. +“ಶಿಕ್ಷಣದಲ್ಲಿ ಗುಣಮಟ್ಟ” ಎಂಬ ಶೈಕ್ಷಣಿಕ ಪಾಲಿಸಿಯೇ ಜನವಿರೋಧಿ ಮತ್ತು ಪ್ರಾದೇಶಿಕ ಭಾಷಾ ವಿರೋಧಿಯಾಗಿದೆ. ಗುಣಮಟ್ಟ ಎತ್ತರಿಸುವ ನೆಪದಲ್ಲಿ ಕ್ರಿಯಾಶೀಲವಾಗಿರುವ “ನ್ಯಾಕ್”ನಂಥ ಯೋಜನೆಗಳು ಸಂಬಂಧಪಟ್ಟವರಿಗೂ ಅರಿವಿರದಂತೆ ಇಂಗ್ಲೀಷ ಭಾಷಾ ಹೇರಿಕೆ ಮತ್ತು ಸಾರ್ವಜನಿಕ ಬಂಡವಾಳದ ಹಿಂತೆಗೆತವೇ ಆಗಿದೆ. ಹೀಗಾಗಿ ಖಾಸಗೀಕರಣದ ಮುಖ್ಯ “ಅಜೆಂಡಾ” ಎಂದರೆ ಶಿಕ್ಷಣದ ದುಬಾರೀಕರಣ. ತನ್ಮೂಲಕ ವಿದ್ಯೆ ಈ ಹಿಮದಿನಂತೆ ಮತ್ತೆ ಕೆಲವೇ ಜನರ ಸ್ವತ್ತಾಗುವುದು. ನಮ್ಮ ಘನ ಸರಕಾರವು ಈಗಾಗಲೇ “ಉನ್ನತ ಶಿಕ್ಷಣ ಗ್ರಾಹಕ ಸರಕು”; ದುಡ್ಡಿದ್ದವರು ಮಾತ್ರ ಅದನ್ನು ಖರೀದಿಸಿಕೊಳ್ಳತಕ್ಕದು ಎಂದು ಘೋಷಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಮಾಜಿಕ ನ್ಯಾಯದ ಮೀಸಲಾತಿ ಪದ್ಧತಿಯ ಧ್ವಂಸವೇ ಇದರ ಮೊದಲ ಗುರಿಯಾಗಿದೆ. ಈಗ ಚಾಲ್ತಿಯಲ್ಲಿರುವ ಸಾರ್ವಜನಿಕ ಕ್ಷೇತ್ರದಲ್ಲಿನ ಮೀಸಲಾತಿ ವ್ಯವಸ್ಥೆ ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳಬೇಕು ಎಂಬ ಮಾತು ತುಟಿ ಅನುಕಂಪ ಮಾತ್ರವಾಗಿ ಉಳಿಯುತ್ತದೆ. ನಿಜವಾದ ಅರ್ಥದಲ್ಲಿ ಅದನ್ನು ಜಾರಿಗೊಳಿಸುವದು ಸಾಧ್ಯವಾಗದು. ಈ ದಿಶೆಯಲ್ಲಿ ದಮನಿತ ಶೋಷಿತ ಜನತೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸದ ಗಾಲಿ ಹಿಮ್ಮುಖವಾಗಿ ಚಲಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದ ಚಳುವಳಿ, ಹೋರಾಟಗಳು ಮುಂದಿನ ದಿನಗಳಲ್ಲಿ ಅನಿವಾರ್‍ಯವಾಗಲಿವೆ. ಅವು ಮಾತ್ರ ಮುಂದಿನ ದಾರಿಗೆ ಪ್ರಾಣಮಿತ್ರರಾಗಲಿವೆ. +ಜನತೆ ರೊಚ್ಚಿಗೇಳುವ ಪೂರ್ವದಲ್ಲಿಯೇ ಸರಕಾರ ಎಚ್ಚೆತ್ತುಕೊಳ್ಳುವದು ಒಳಿತು. ಪ್ರಾಥಮಿಕ ಮತ್ತು ಪ್ರೌಢಮಟ್ಟದ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವದು ಮತ್ತು ಪ್ರತಿಯೊಬ್ಬ ಪ್ರಜೆಗೂ ಅದು ದಕ್ಕುವಂತಾಗಬೇಕು. ಜನತೆಗೆ ಅಕ್ಷರ ನೀಡುವಲ್ಲಿ ಸರಕಾರ ಪ್ರಬಲ ಇಚ್ಛಾಶಕ್ತಿ ಹೊಂದಿರಬೇಕೇ ವಿನಾ ಮೂಗಿಗೆ ತುಪ್ಪ ಒರೆಸುವಂಥ ನಿರರ್ಥಕ ಯೋಜನೆಗಳನ್ನು ತರಬಾರದು. ಸರಕಾರಿ ಶಾಲೆಗಳ ಮಟ್ಟ ಮತ್ತು ಮೌಲ್ಯ ಎರಡನ್ನೂ ಎತ್ತರಿಸಿ ಇಲ್ಲಿರುವ ಖಾಸಗಿ ಒಡೆತನಕ್ಕೆ ಮುಟ್ಟುಗೋಲು ಹಾಕಬೇಕು. ಈಗ ಸುಮಾರು ೨೦-೨೫ ವರ್ಷಗಳ ಹಿಂದೆ ಕರ್ನಾಟಕದಾದ್ಯಂತ ಸಾರ್ವಜನಿಕ ಪ್ರಾಥಮಿಕ, ಪ್ರೌಢಶಾಲೆಗಳು ನೀಡುತ್ತಿದ್ದ ಶಿಕ್ಷಣ ಮಟ್ಟಕ್ಕೂ, ಇಂದು ಅವೇ ಶಾಲೆಗಳು ಕೊಡುತ್ತಿರುವ ಶಿಕ್ಷಣ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಏಕೆ? ಇಂದು ಒಂಚೂರು ಆರ್ಥಿಕ ಅನುಕೂಲತೆ ಇದ್ದವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ, ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲು ಇಷ್ಟಪಡುತ್ತಿಲ್ಲ. ಶತ ಸಾಹಸಪಟ್ಟಾದರೂ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲೀಷ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಪರದಾಡುತ್ತಾರೆ, ಏಕೆ? ಕನ್ನಡ ಸರಕಾರಿ ಶಾಲೆಗಳ ಈ ಮೊದಲಿನ ಗುಣಮಟ್ಟ, ಮೌಲ್ಯ ಏಕೆ ಹಾಳಾಗಿವೆ? ಅದಕ್ಕೆ ಯಾರು ಹೊಣೆಗಾರರು? ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೆ? +ಏಕೆಂದರೆ ಈ ಮೊದಲಿನಂತೆ ಸರಕಾರಿ ಶಾಲೆಗಳು ಉತ್ತಮವಾಗಿಲ್ಲ ಎಂಬ ಸತ್ಯವೂ, ಇಂಗ್ಲೀಷ ಮಾಧ್ಯಮದಲ್ಲಿ ಓದಿಸಿದರೆ ಮಾತ್ರ ಸಾರ್ಥಕವೆಂಬ ವ್ಯಾವಹಾರಿಕ ಮನೋಭಾವವೂ ಜನತೆಯ ತಲೆ ಹೊಕ್ಕಿದೆ. ಇಂಗ್ಲೀಷ ಕಲಿಕೆ ಮಾತ್ರ ತಮ್ಮ ಮುಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬ ಭ್ರಮೆಗಳು ಅವರನ್ನು ಅಟ್ಟಾಡಿಸುತ್ತಿವೆ. ಈ ತೆರನ ಭ್ರಮೆಗಳನ್ನು ಹೊಡೆದೋಡಿಸಬೇಕಾದ ಜವಾಬ್ದಾರಿ ಕೆಲಸವನ್ನು ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಆಡಳಿತವರ್ಗ ಎಲ್ಲರೂ ಮಾಡಬೇಕಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕಡ್ಡಾಯ ಕುರಿತು ಗೋಕಾಕ ವರದಿಯನ್ನು ಜಾರಿಗೊಳಿಸಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡ ಮಾತೃಭಾಷಿಗಳು ಮರಾಠಿ ಮಾಧ್ಯಮದಲ್ಲಿ ಕಲಿತು ಬದುಕುವುದು ಸಾಧ್ಯವಾಗುವುದಾದರೆ, ಕರ್ನಾಟಕದಲ್ಲಿರುವ ಇತರ ಭಾಷಿಗರಿಗೆ ಕನ್ನಡ ಕಲಿಯುವುದು ಕಷ್ಟ ಏಕಾಗಬೇಕು? ಒಮ್ಮೆ ಭಾಷಾವಾರು ಪ್ರಾಂತ ರಚನೆ ಒಪ್ಪಿಕೊಂಡ ಮೇಲೆ ಆಯಾ ಭಾಷಿಕ ರಾಜ್ಯಗಳಲ್ಲಿ ವಾಸಿಸುವ ಜನತೆ ಆಯಾ ಭಾಷೆಯನ್ನು ಕಲಿಯಬೇಕು. ಭಾಷೆ ಎನ್ನುವುದು ವಿಷಯವಸ್ತುವಲ್ಲ ಅದೊಂದು ಮಾಧ್ಯಮ. ಅಂತೆಯೇ ಅದು ರೂಢಿಯೂ ಹೌದು. ನಿರಂತರ ಸಂಪರ್ಕ ಮತ್ತು ಬದುಕಿನ ಅನಿವಾರ್‍ಯತೆ ಯಾವುದೇ ಭಾಷೆಯನ್ನಾದರೂ ಕಲಿಸಿಬಿಡುತ್ತದೆ. ಹಾಗೆಯೇ ಯಾವುದೇ ಭಾಷೆ ಶ್ರೇಷ್ಠ ಕನಿಷ್ಠವೆಂಬ ನಂಬಿಕೆಯೂ ಅವೈಜ್ಞಾನಿಕವಾಗಿದೆ. ಇಂಗ್ಲೀಷ ಶ್ರೇಷ್ಠ ಮತ್ತು ಅನಿವಾರ್‍ಯ ಎಂಬ ಭ್ರಮೆ ತುಂಬಿದವರು ಆಳರಸರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಣದ ಥೈಲಿ ತುಂಬಿಕೊಳ್ಳುತ್ತಿರುವವರು ಶಿಕ್ಷಣ ಕ್ಷೇತ್ರದ ವ್ಯಾಪಾರಿ ದಲ್ಲಾಳಿಗಳು. ಇದಕ್ಕೆ ಬಲಿಯಾಗುತ್ತಿರುವವರೇ ಅಮಾಯಕ ಕನ್ನಡಿಗರು. ಮಗುವಿನಲ್ಲಿ ಅಭಿವ್ಯಕ್ತಿ ಸ್ಪಷ್ಟತೆ, ನಿಖರವಾದ ವಿವೇಚನಾ ಸಾಮರ್ಥ್ಯ, ಸೂಕ್ಷ್ಮ ಗ್ರಹಣಶಕ್ತಿ ಬೆಳೆಯಬೇಕಾದರೆ ಮಾತೃಭಾಷೆಯಲ್ಲಿಯೇ ಮೂಲ ಶಿಕ್ಷಣ ಕಲಿಸಬೇಕೆಂಬುದು ವೈಜ್ಞಾನಿಕ ಸತ್ಯ. ಇದನ್ನು ಶಿಕ್ಷಣತಜ್ಞರು ಸಾರಿ ಹೇಳುತ್ತಿರುವಾಗಲೂ ಜನರ ಅರಿವಿಗೆ ಬರುತ್ತಿಲ್ಲವಾದರೆ ಅದಕ್ಕೆ ಕಾರಣಗಳೇನು? ಎಂಬುದನ್ನು ಹುಡುಕಬೇಕು. ಕಾರಣವಿಷ್ಟೇ, ಒಟ್ಟು ಭಾಷಾ ಕಲಿಕೆಯಲ್ಲಿರುವ ದೋಷಗಳು, ಹದಗೆಟ್ಟ ಕನ್ನಡ ಮಾಧ್ಯಮ ಶಾಲೆಗಳು, ಇಂಗ್ಲೀಷ ಶಾಲೆಗಳು ಸೃಷ್ಟಿಸುತ್ತಿರುವ ಲಾಭಖೋರ ಆಮಿಷಗಳು ಮತ್ತು ಈ ದಿಸೆಯಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರಕಾರದ ಸೋಂಭೇರಿ ಪ್ರವೃತ್ತಿ. ಈ ಎಲ್ಲವುಗಳು ತಮ್ಮ ತಮ್ಮ ನೆಲೆಯಲ್ಲಿ ರಿಪೇರಿಯಾದರೆ ಕನ್ನಡ ಕಲಿಕಾ ಪ್ರಕ್ರಿಯೆ ಕುಂಠಿತವಾಗದು. +ಕನ್ನಡಪರ ಚಿಂತನೆ ಹರಿಸುವ ಬುದ್ಧಿಜೀವಿಗಳು ಕನ್ನಡ ಶಾಲಾ, ಕಾಲೇಜುಗಳ ಮಾಸ್ತರುಗಳೇ ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮಕ್ಕೆ ಕಳಿಸುತ್ತಿರುವದು ತೀರ ಶೋಚನೀಯ ಸಂಗತಿ. ಯಾರು ಮಕ್ಕಳನ್ನು ಇಂಗ್ಲೀಷ ಮಾಧ್ಯಮದಲ್ಲಿ ಓದಿಸುವರೋ ಅವರೇ ಕನ್ನಡ ದ್ರೋಹಿಗಳು. ಯಾವ ಸರಕಾರ ಒಳಸುಳಿದಾರಿಗಳ ಮೂಲಕ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಲು ಹಸಿರು ನಿಶಾನೆ ತೋರಿಸುವುದೋ ಅದೇ ಜನವಿರೋಧಿ ಸರಕಾರ. +ಬಂಧುಗಳೇ, ಕೇಂದ್ರ ಸರಕಾರದ ಹಿಂದಿ ದಬ್ಬಾಳಿಕೆ, ರಾಜ್ಯ ಸರಕಾರದ ಇಂಗ್ಲೀಷ ಮೋಹ, ನೆರೆಯ ರಾಜ್ಯಗಳ ಭಾಷಾ ಒತ್ತುವರಿ, ಮೇಲಾಗಿ ಅಮೇರಿಕಾದಂಥ ರಾಷ್ಟ್ರಗಳ ಇಂಗ್ಲೀಷ ದಾಳಿ ಇವುಗಳಿಂದ ಕನ್ನಡವನ್ನು ರಕ್ಷಿಸಿಕೊಳ್ಳಬೇಕಾದ ಅಗ್ನಿ ಪರೀಕ್ಷೆ ನಮ್ಮ ಮುಂದಿದೆ. ನಾವು ಹಟದಿಂದ ಕನ್ನಡ ದೀಕ್ಷೆ ತೊಡಬೇಕಿದೆ. ಸುಮ್ಮನೆ ಕನ್ನಡ ಉಳಿಸಿ ಎಂದು ಘೋಷಣೆ ಹಾಕಿದರೆ ಸಾಲದು. ಉಳಿಸಿ ಎಂದಾಕ್ಷಣ ಉಳಿಯಲು ಅದು ಪೆಟ್ರೋಲ್ ಅಥವಾ ಡೀಸೆಲ್ ಅಲ್ಲ. ಭಾಷೆ ಮಾಧ್ಯಮ ಮಾತ್ರವಲ್ಲ ಅದು ಸಂಪೂರ್ಣ ಬದುಕೇ ಆಗಿರುತ್ತದೆ. ಕನ್ನಡ ಉಳಿಯಬೇಕು ಎಮದರೆ ಕನ್ನಡ ಮಾತಾಡುವ ಜನತೆ ಉಳಿಯಬೇಕು. ಅಂದರೆ ಕನ್ನಡ ಮಾತಾಡುವ ಅಸಂಖ್ಯ ಜನಸಾಮಾನ್ಯರು ಆರ್ಥಿಕ ಭದ್ರತೆಯೊಂದಿಗೆ ಹಿಡಿ ನೆಮ್ಮದಿಯಿಂದ ಬದುಕುವಂತಾಗಬೇಕು. ಅಸಂಖ್ಯ ಕೂಲಿ, ಕಾರ್ಮಿಕ, ರೈತಾಪಿ ಜನರ ದುಡಿತಕ್ಕೆ ತಕ್ಕ ಬೆಲೆ, ತನ್ಮೂಲಕ ಅನ್ನ, ಸೂರು, ಶಿಕ್ಷಣ, ಕೆಲಸ, ಆರೋಗ್ಯ ಇವು ಲಭ್ಯವಾಗಬೇಕು. ಅಂದಾಗ ಅವರು ಬದುಕುತ್ತಾರೆ. ಅವರ ಮೂಲಕ ಭಾಷೆ ತಾನೇ ಬೆಳೆದು ಕುಣಿದು ಕುಪ್ಪಳಿಸುತ್ತದೆ. ಭಾಷೆಯು ಪಂಡಿತರ ವ್ಯಾಕರಣ, ‘ಯಾ’ ಹುಸಿ ಹೋರಾಟಗಾರರ ಘೋಷಣೆಗಳಿಂದ ಸೋಗಲಾಡಿಗಳ ಭಾಷಣಗಳಿಂದ ಉಳಿಯುವುದಿಲ್ಲ. ಅದು ಈ ಮಣ್ಣಿನ ದುಡಿಮೆಗಾರರ ಕೈ ಬಲಪಡಿಸುವುದರಿಂದ ಮಾತ್ರ ಉಳಿಯುತ್ತದೆ. +ಇತ್ತೀಚೆಗೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಕೆಲವು ತಜ್ಞರು ಮೂರನೇ ತರಗತಿಯಿಂದ ಎಂದೂ, ಇನ್ನು ಕೆಲವರು ಯಥಾ ಪ್ರಕಾರ ಈ ಮೊದಲಿನಂತೆ ಐದನೇ ತರಗತಿಯಿಂದ ಕಲಿಸುವಂತಾಗಲಿ ಎಂದು ವಾದಿಸುತ್ತಿದ್ದಾರೆ. +ಆದರೆ ಕನ್ನಡ ಮಾಧ್ಯಮ ಓದುವ ಮಕ್ಕಳಿಗೆ ಮೂರನೇ ತರಗತಿಯಿಂದ ಇಂಗ್ಲೀಷ ಒಂದು ವಿಷಯವಾಗಿ ಓದುವಂತೆ ಇಂಗ್ಲೀಷ ಮಾಧ್ಯಮದಲ್ಲಿ ಓದುವ ಮಕ್ಕಳೂ ಸಹಿತ ಕನ್ನಡವನ್ನು ಮೂರನೇ ತರಗತಿಯಿಂದ ಓದುವಂತಾಗಬೇಕು. ಕೇಂದ್ರೀಯ ಪಠ್ಯಕ್ರಮ ಓದುವ ಮಕ್ಕಳಿಗಂತೂ ತ್ರಿಭಾಷಾ ಸೂತ್ರ ಇದ್ದೇ ಇದೆ. ಈಗ ಪ್ರಶ್ನೆ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸುತ್ತಲೇ ಗಿರಿಕಿ ಹೊಡೆಯುತ್ತಿದೆ. ಒಂದು ಮಗುವಿನ ಕಲಿಯುವ ಸಾಮರ್ಥ್ಯ, ಏಕಕಾಲಕ್ಕೆ ಹಲವು ಭಿನ್ನ ಭಾಷೆಗಳನ್ನು ಕಲಿಯುವ ಕ್ಷಮತೆ, ಬೌದ್ಧಿಕ ಭಾರ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸುವುದು ಒಳಿತು. ಈ ದಿಸೆಯಲ್ಲಿ ಮಾತೃಭಾಷೆಯೊಂದನ್ನು ಬಿಟ್ಟು ಉಳಿದ ಭಾಷಾ ಕಲಿಕೆಯೂ ಐಚ್ಛಿಕವಾಗಿರುವುದು ಸೂಕ್ತ. +ಒಟ್ಟಾರೆ “ಶಿಕ್ಷಣ”, ಅದೂ ಗುಣಮಟ್ಟದ ಶಿಕ್ಷಣ ವ್ಯಕ್ತಿಯ ಪ್ರಾಥಮಿಕ ಅವಶ್ಯಕತೆಗಳಲ್ಲೊಂದು. ಅಂತೆಯೇ ಅದು ಸರಕಾರವು ಪೂರೈಸಬೇಕಾದ ಘಟಕ. ಪ್ರಾಥಮಿಕ, ಪ್ರೌಢ, ಪದವಿ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಲ್ಲ ಬಗೆಯ ಶಿಕ್ಷಣ ಎಲ್ಲರಿಗೂ ಕಡಿಮೆ ಶುಲ್ಕದಲ್ಲಿ ಸುಲಭವಾಗಿ ದೊರೆಯುವಂತಾಗಬೇಕು. ಆಗಲೇ ಒಂದು ದೇಶ ಸುಭದ್ರ ಮತ್ತು ಶಾಂತಿಯುತವಾಗಿರಬಲ್ಲುದು. ಜನಪರ ಕಾಳಜಿಯುಳ್ಳ ಜವಾಬ್ದಾರಿಯುತ ಸರಕಾರವೊಂದಕ್ಕೆ ಇದು ಕಷ್ಟವೇನಲ್ಲ. ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. +ದುಡಿಯುವ ಎಲ್ಲ ಕೈಗಳಿಗೆ ಕೆಲಸ ದೊರಕುವಂತಾಗಬೇಕು. ಇದು ಶಿಕ್ಷಣದೊಂದಿಗೆ ತಳಕು ಹಾಕಿಕೊಂಡಿರುವ ಜನತೆಯ ಇನ್ನೊಂದು ಪ್ರಾಥಮಿಕ ಬೇಡಿಕೆ. ಹಾಗೆ ನೋಡಿದರೆ ಶಿಕ್ಷಣ ಮತ್ತು ಉದ್ಯೋಗವನ್ನು ಸಮೀಕರಿಸಿಕೊಂಡು ಬರುತ್ತಿರುವ ನಮ್ಮ ಮೂಲಗ್ರಹಿಕೆಗಳಲ್ಲಿಯೇ ಹಲವಾರು ತೊಂದರೆಗಳಿವೆ. ಶಿಕ್ಷಣ ಪ್ರಜ್ಞಾವಂತಿಕೆಗಾಗಿ. ಉದ್ಯೋಗ ಬದುಕುವುದಕ್ಕಾಗಿ. ಇವು ಪರಸ್ಪರ ಪೂರಕ ಮತ್ತು ಪ್ರೇರಕ ಅಂಶಗಳಾಗಬೇಕೇ ಹೊರತು ಒಂದರ ಬಾಲಂಗೋಚಿ ಮತ್ತೊಂದಲ್ಲ. ನೌಕರಿಗಾಗಿಯೇ ಪದವಿ ಸಂಪಾದನೆ ಎಂಬುದನ್ನು ನಂಬಿಸಲ್ಪಟ್ಟಿರುವುದರಿಂದ ಹೇಗಾದರೂ ಮಾಡಿ ಪದವಿ ಗಿಟ್ಟಿಸಿಕೊಳ್ಳಬೇಕೆಂಬ ಧಾವಂತ ನಮ್ಮ ಯುವಕರನ್ನು ಮುತ್ತಿಕೊಂಡಿದೆ. ಹೀಗಗಿ ಅವರ ಲಕ್ಷ್ಯ ಪದವಿ ಕಡೆಗಿದೆಯೇ ಹೊರತು ಜ್ಞಾನ ಸಂಪಾದನೆ ಕಡೆಗಿಲ್ಲ. ಅಲ್ಲದೆ ನವು ಸದ್ಯ ಕೊಡುತ್ತಿರುವ ಶಿಕ್ಷಣಕ್ಕೂ ಸ್ಪಷ್ಟವಾದ ಉದ್ದೇಶ, ನಿರ್ದಿಷ್ಟ ಗುರಿ ಇದ್ದಂತೆ ತೋರುವುದಿಲ್ಲ. ಭ್ರಷ್ಟ ವ್ಯವಸ್ಥೆಯ ಕಾರಣವಾಗಿ ಉದ್ದಕ್ಕೂ ಹತ್ತಾರು ವರ್ಷ ಏನೇನೋ ಕಸರತ್ತು ಮಾಡಿ ಒಂದು ಪದವಿ ಪಡೆದುಕೊಂಡ ಯುವಕರು ಯಾವುದೇ ಕಾರ್ಯಕೌಶಲ್ಯ, ದುಡಿಯುವ ಕ್ಷಮತೆ ಇಲ್ಲದೆ ಭಯಾನಕ ಶೂನ್ಯದತ್ತ ಚಲಿಸುತ್ತಿದ್ದಾರೆ. ಇದು ಒಂದು ದೇಶಕ್ಕೆ ಅಂಟಿಕೊಳ್ಳುವ ವ್ಯಾಧಿಯಿದ್ದಂತೆ. ಈ ಅಪಾಯದಿಂದ ತಪ್ಪಿಸಿಕೊಳ್ಳಬೇಕಾದರೆ ಮೊದಲು ಪ್ರತಿಯೊಬ್ಬರ ಕೈಗೆ ಕೆಲಸ ಸಿಗಬೇಕು. ಕಾಯಕವಿಲ್ಲದ ಕೈಗಳು ಕಲ್ಲುಗಳನ್ನು ತೂರಿ, ಬಸ್ಸು, ರೈಲುಗಳ ಗಾಜುಗಳನ್ನಾದರೂ ಒಡೆಯುತ್ತವೆ. ಕೋವಿಯನ್ನಾದರೂ ಹಿಡಿಯುತ್ತವೆ. ತೀರ ಪರಕಾಷ್ಠೆಗೇರಿದರೆ ವಿಮಾನಗಳನ್ನು “ಹೈಜಾಕ್” ಆದರೂ ಮಾಡುತ್ತವೆ. ಏಕೆಂದರೆ ದುಡಿಯುವ ಕೈಗಳಿಗೆ ಮಾತ್ರ ಹೊಟ್ಟೆಯ ಬೆಂಕಿ ತಣಿಸುವ ಶಕ್ತಿ ಇದೆ. ಯಾವ ಕೈಗಳಿಗೆ ಹೊಟ್ಟೆಯ ಬೆಂಕಿಯನ್ನು ತಣಿಸುವ ಮಾರ್ಗೋಪಾಯಗಳು ಲಭ್ಯವಾಗುವದಿಲ್ಲವೋ ಅವೇ ಕೈಗಳು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತವೆ ಎಂಬ ಸತ್ಯವನ್ನು ನಾವು ಮರೆಯಬಾರದು. +ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ಯಾವುದೇ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹೊಸ ಕೆಲಸಗಳನ್ನು ಸೃಷ್ಟಿಸುವುದು ಒತ್ತಟ್ಟಿಗಿರಲಿ, ಇದ್ದ ಕೆಲಸಗಳನ್ನು ಜನತೆಯಿಂದ ಕಸಿದುಕೊಳ್ಳಲಾಗಿದೆ. ಈ ದಶಕದಲ್ಲಿ ಸುಮಾರು ೭೦ ಲಕ್ಷ ಉದ್ಯೋಗಗಳು ನಾಶವಾಗಿರಬೇಕೆಂದು ಅಂದಾಜಿದೆ. ಈ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದು ವಾಸ್ತವದ ಗಂಭೀರತೆಯನ್ನು ಮನಗಾಣಿಸುತ್ತದೆ. ಇದ್ದ ಕೆಲಸಗಳು ಕಳೆದುಹೋಗಲು ಕಾರಣವೇನಿರಬಹುದು ಎಂದು ವಿಚಾರಿಸುವುದಾದರೆ, ಹೆಚ್ಚುತ್ತಿರುವ ಯಾಂತ್ರಿಕರಣದಿಂದಾಗಿ ದೈಹಿಕ ದುಡಿಮೆಯ ಕೂಲಿ ಕೆಲಸಗಳು ಖೋತಾ. ಕಂಪ್ಯೂಟರೀಕರಣದಿಂದಾಗಿ ಗುಮಾಸ್ತಗಿರಿ ಕೆಲಸಗಳ ಕಬಳಿಕೆ. ಜಾಗತಿಕ ಮಾರುಕಟ್ಟೆಯ ಸ್ಪರ್ಧೆಯಿಂದಾಗಿ ಆಂತರಿಕ ಮಾರುಕಟ್ಟೆಯ ಮಧ್ಯವರ್ತಿ ಕೆಲಸಗಳು ನಾಪತ್ತೆ. ವಿದೇಶಿ ಕಂಪನಿಗಳ ಆಗಮನದಿಂದಾಗಿ ದೇಶಿ ಉದ್ದಿಮೆಗಳು ದಿವಾಳಿಯೆದ್ದು ಇಲ್ಲಿಯ ನೌಕರಿಗಳು ಮಂಗಮಾಯ. ಗಣನಿಯ ಪ್ರಮಾಣದಲ್ಲಿ ಸಾರ್ವಜನಿಕ ಬಂಡವಾಳದ ಹಿಂತೆಗೆತದಿಂದಾಗಿ ಎಲ್ಲೆಲ್ಲೂ ಅಭದ್ರತೆ, ಅರಾಜಕತೆ, ಒಕ್ಕಲುತನ ದಿವಾಳಿಯೆದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕದಿಂದ ಲಕ್ಷಾಂತರ ಕೃಷಿ ಕಾರ್ಮಿಕರು ವಲಸೆ ಹೋಗಿದ್ದಾರೆ. ಬೆಂಗಳೂರು ಮಹಾನಗರ ಒಂದರಲ್ಲಿಯೇ ೨೦ ರಿಂದ ೨೫ ಸಾವಿರ ವಿವಿಧ ಜ್ಞಾನಶಿಸ್ತುಗಳ ಪದವೀಧರ ಯುವಕರು ಪ್ರತಿನಿತ್ಯ ಕೆಲಸಕ್ಕಾಗಿ ಅಲೆದು ಜೀವಚ್ಛವವಾಗುತ್ತಿದ್ದಾರೆ. ಇವುಗಳ ನಡುವೆ ಕರ್ನಾಟಕ ಸರಕಾರ ಕಳೆದ ವರ್ಷದಲ್ಲಿ ೩೪ ಲಕ್ಷ ಹಳದಿಕಾರ್ಡು (ರೇಷನ್)ಗಳನ್ನು ಬಡವರಿಂದ ಕಸಿದುಕೊಂಡಿದೆ. ಹಸಿದ ಹೊಟ್ಟೆಗಳು ರೋದಿಸುತ್ತಿರುವ ನಾಡಿನಲ್ಲಿ ಮಿರಿಮಿರಿ ಮಿಂಚುವ ಸಾಲ ಹೊತ್ತ ಹೆದ್ದಾರಿಗಳು ಮಾತ್ರವಿದ್ದರೆ ಸಾಕೆ? ಕೆಲಸವಿಲ್ಲದ ಖಾಲಿ ಕೈ. ಶೂನ್ಯ ಮನಸ್ಸುಗಳಿಗೆ ಹಿತಾನುಭವ (ಫೀಲ್ ಗುಡ್) ಮೂಡಲು ಸಾಧ್ಯವೇ? ಹೇಳಿ. ಈ ಎಲ್ಲ ಅವಾಂತರಗಳಿಗೆ ಕಾರಣವಾಗಿರುವ ಜಾಗತೀಕರಣ ಕುರಿತು ಇನ್ನಷ್ಟು ವಿವರವಾದ ಚರ್ಚೆ ಅಗತ್ಯವೆಂದು ಭಾವಿಸುತ್ತೇನೆ. +ಖಾಸಗೀಕರಣ, ಉದಾರೀಕರಣ, ಜಾಗತೀಕರಣ (ಖಾ‌ಉಜಾ) : +‘ಖಾ‌ಉಜಾ’ ಪಾಲಿಸಿ ನಮ್ಮ ದೇಶವನ್ನು ಒಳಗೊಳಗೆ ನಖಶಿಖಾಂತ ಪೊಳ್ಳು ಮಾಡುತ್ತಿದೆ. ಶಿಕ್ಷಣ, ಉದ್ಯೋಗ, ಒಕ್ಕಲುತನ, ವ್ಯಾಪಾರ, ಬ್ಯಾಂಕು, ಮಾಧ್ಯಮ, ಸಂಸ್ಕೃತಿ ಹೀಗೆ ಎಲ್ಲೆಂದರಲ್ಲಿ ಈ ತ್ರಿವಳಿಗಳ ಕಬಂಧಬಾಹುಗಳು ವ್ಯಾಪಿಸಿಕೊಂಡು ದೇಶದ ಆಂತರಿಕ ವ್ಯವಸ್ಥೆ ಪೂರ್ತಿ ಕುಸಿದಿದೆ. ಕ್ರಿ.ಶ. ೧೯೯೧ ರಲ್ಲಿ ಗ್ಯಾಟ್ ಪ್ರಸ್ತಾವನೆಗೆ ಸಹಿ ಹಾಕುವಾಗ ಕೆಲವೇ ಕೆಲವು ಎಡ ವಿಚಾರವಾದಿಗಳು ಇದನ್ನು ವಿರೋಧಿಸಿದವು. ಮೇಲಾಗಿ ಇವುಗಳ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಪಟ್ಟವು. ಆದರೆ ನಾವ್ಯಾರೂ ಎರಡು ದಶಕಗಳ ಹಿಂದೆ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇಂದು ಅದರ ಬಿಸಿ ಎಲ್ಲ ಹಂತದಲ್ಲಿ ತಟ್ಟಿದೆ. ಸಾಮ್ರಾಜ್ಯಶಾಹಿ ಜಾಗತೀಕರಣದ ಹಾಗೂ ನವ-ಉದಾರವಾದಿ ನೀತಿಯ ಅಮಾನವೀಯ ಪರಿಣಾಮಗಳು ಸಮಾಜದ ಎಲ್ಲ ವಲಯಗಳಿಗೆ ವ್ಯಾಪಿಸಿವೆ. ಮಾನವ ಕುಲದ ಭವಿಷ್ಯಕ್ಕಾಗಿ ಅನಿವಾರ್ಯವಾಗಿರುವ ಪ್ರಕೃತಿ, ಪರಿಸರ ಹಾಗೂ ಪ್ರಾಕೃತಿಕ ಸಮತೋಲನಕ್ಕೂ ಇದು ವ್ಯಾಪಿಸಿದೆ. ಗರಿಷ್ಠ ಲಾಭದ ದಾಹವು ದೇಶೀಯ ಸಂಪನ್ಮೂಲಗಳನ್ನು ಅಪಾಯಕ್ಕೊಡ್ಡಿದೆ. ಶಿಕ್ಷಣ, ಸಂಸ್ಕೃತಿ ಮತ್ತು ವಿಜ್ಞಾನದಲ್ಲಿ ಸಾಧಿಸಲಾದ ಅಭಿವೃದ್ಧಿಗಳು ದೊಡ್ಡ ಆರ್ಥಿಕ ಹಿತಾಸಕ್ತಿಗಳ ಹಿಡಿತಕ್ಕೆ ಹಾಗೂ ಸಾಮ್ರಾಜ್ಯಶಾಹಿ ಸಿದ್ಧಾಂತಗಳಿಗೆ ಒಳಪಟ್ಟಿದೆ. ಆದರೆ ಈ ದೊಡ್ಡ ಬಂಡವಾಳದ ಶೋಷಣೆಯು ಸಾಂಆಜಿಕ ಮಟ್ಟವನ್ನು ಅತ್ಯಂತ ಹೀನಾಯ ದಾರಿದ್ರ್ಯಕ್ಕೆ ದೂಡಿದೆ. ನಾವು ನೋಡುನೋಡುತ್ತಿರುವಂತೆಯೇ ವಿದ್ಯುತ್, ವಿಮೆ, ಸಾರಿಗೆ, ನೀರು ಸರಬರಾಜು ಖಾಸಗಿ ವಲಯಕ್ಕೆ ಸೇರಿ ಹೋದವು. ರೈತರಿಗೆ ಕೊಡುವ ಸಬ್ಸಿಡಿಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಬ್ಯಾಂಕು, ಕಚೇರಿ, ಕಂಪನಿಗಳಲ್ಲಿ ಸ್ವಯಂ ನಿವೃತ್ತಿಗಳ ಸಂಖ್ಯೆ ಗಗನಕ್ಕೇರಿದೆ. ಸರಕಾರ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕೃಷಿ ಕೂಲಿಕಾರರಿಗೆ ಮತ್ತು ಭೂರಹಿತರಿಗೆ ನೀಡುವ ಬದಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅಥವಾ ಸ್ಥಳೀಯ ಗುತ್ತಿಗೆದಾರರಿಗೆ ಅಗ್ಗದ ದರಗಳಲ್ಲಿ ಮಾರಿದೆ. ಅಥವಾ ಭೋಗ್ಯಕ್ಕೆ ನೀಡಿದೆ. ಸ್ನೇಹಿತರೇ, ಬಹಳ ದೂರದ ಉದಾಹರಣೆ ಬಿಡಿ. ನಮ್ಮ ಹತ್ತಿರದ ಅಂದರೆ ಹೈದ್ರಾಬಾದ ಕರ್ನಾಟಕದ ಗುಲಬರ್ಗಾ, ಬೀದರ, ರಾಯಚೂರ, ಕೊಪ್ಪಳ ಜಿಲ್ಲೆಗಳ ಅತಿ ಪುಟ್ಟ ಉದಾಹರಣೆ ಕಡೆ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಈ ಭಾಗದಲ್ಲಿದ್ದ ಎಲ್ಲ ಸಣ್ಣ, ಪುಟ್ಟ, ಮಧ್ಯಮ ಗಾತ್ರದ ತೈಲ ಕಾರ್ಖಾನೆಗಳು ಸುಳಿವಿಲ್ಲದೆ ಸ್ತಬ್ಧವಾಗಿವೆ. ಅವುಗಳ ವ್ಯಾಪಾರಿಗಳು, ದುಡಿಯುವ ಕಾರ್ಮಿಕರು ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಅವರ ಉತ್ಪಾದನೆಗಳಂತೂ ಮಾರಾಟವಾಗಲಿಲ್ಲ. ಆದರೆ ಅವರ ಮಾನ-ಸ್ವಾಭಿಮಾನಗಳಂತೂ ಹರಾಜಾಗಿ ಹೋಗಿವೆ. +ಈ ಜೀವವಿರೋಧಿ ಜಾಗತೀಕರಣವು ನಮ್ಮ ಪರಂಪರಾಗತ ಸಾಸ್ಕೃತಿಕ ಲೋಕವನ್ನು ಕಬಳಿಸುತ್ತಿರುವುದು ಇನ್ನೂ ಆತಂಕದ ಸಂಗತಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಗುಂಗಿನಲ್ಲಿ ಈ ಮೊದಲೇ ನಮ್ಮ ದೇಶೀ ಸಂಸ್ಕೃತಿಯ ನೆಲೆಗಳಾದ ಹಾಡು, ಹಬ್ಬ, ಉಡುಗೆ, ತೊಡುಗೆ, ಗುಡಿ ಕೈಗಾರಿಕೆ, ಜಾನಪದೀಯ ಮಟ್ಟು, ಕಲಾಕೌಶಲ್ಯ ಮುಂತಾದವುಗಳನ್ನು ವಿಸ್ಮೃತಿಯತ್ತ ತಳ್ಳಿದ್ದಾಗಿತ್ತು. ಅಷ್ಟರಲ್ಲಿಯೇ ಸುನಾಮಿಯಂತೆ ಬಂದೆರಗಿದ ಜಾಗತೀಕರಣವು ಎವೆ ಪಿಳುಕುವಷ್ಟರಲ್ಲಿ “ನಮ್ಮದೆನ್ನುವುದನ್ನು” ಸೆಳೆದುಕೊಂಡು ಕೊಚ್ಚಿ ಹಾಕತೊಡಗಿದೆ. ಏಕಮುಖೀ ಸಂಸ್ಕೃತಿಯ ಆಮಿಷ ಒಡ್ಡುತ್ತ ನಮ್ಮ “ನೇಟಿವಟಿ”ಯನ್ನೇ ಧೂಳೀಪಟ ಮಾಡುತ್ತಿರುವುದು ಪ್ರಜ್ಞಾವಂತರೊಳಗೆ ಗಾಬರಿ ಹುಟ್ಟಿಸುತ್ತಿದೆ. ಕರ್ನಾಟಕವು ಬಹುಮುಖೀ ಸಂಸ್ಕೃತಿಯ ಅದರಲ್ಲೂ “ಹಡದವ್ವ” ಸಂಸ್ಕೃತಿಯ ತವರುಮನೆ. ಇಲ್ಲಿ ಪ್ರತಿ ಹಳ್ಳಿಗೂ ಒಂದೊಂದು ವಿಶಿಷ್ಟ ಕರುಳು ಸಂಸ್ಕೃತಿ ಇದೆ. ಪ್ರತಿ ಹತ್ತು ಕಿಲೋ ಮೀಟರಿಗೆ ಒಂದು ಉಪಭಾಷೆಯ ಸೊಗಡಿದೆ. ಅಷ್ಟೇ ಏಕೆ ಹಳ್ಳಿಗಳ ಒಳಗೇನೇ ಪ್ರತಿ ಕೇರಿ ಕೇರಿಗೆ ವೈವಿಧ್ಯಮಯ ನಡೆ-ನುಡಿಗಳಿವೆ. ಈ ಎಲ್ಲವುಗಳನ್ನು ಭಾವ ಬಳ್ಳಿಯ ಏಕಸೂತ್ರತೆಯೊಂದಿಗೆ ಬೆಸೆದುಕೊಂಡು ಒಂದು ವಿಶಿಷ್ಟ ಲಯದಲ್ಲಿ ನಮ್ಮಗಳ ಬದುಕು ಸಮೃದ್ಧವಾಗಿದೆ. ಹೀಗಿರುವಗಲೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ಸಂಸ್ಕೃತಿ ಎಂಬುದೇ ದೊಡ್ಡ ಮೋಸ. ‘ಸಂಸ್ಕೃತಿ’ ಎನ್ನುವುದು ಒಂದು ಪ್ರತ್ಯೇಕ ಸಂಸ್ಥೆಯಲ್ಲ. ನಿಜವಾದ ಅರ್ಥದಲ್ಲಿ ಜನಸಮುದಯದ ದಿನನಿತ್ಯದ ಕಷ್ಟ ಕಾರ್ಪಣ್ಯಗಳ ಕುರಿತಾದ ವ್ಯಾಖ್ಯಾನವೇ ಸಂಸ್ಕೃತಿ. ಅದು ಒಂದು ಬಣದ ಅಥವಾ ಕೋಮಿನ ವಿಧಿ-ವಿಧಾನ, ನಡೆ-ನುಡಿ ಮತ್ರವಲ್ಲ. ಅಂತೆಯೇ ಒಂದು ಸಮೂಹದ ಖಾಸಗಿ ಆಸ್ತಿಯೂ ಅಲ್ಲ. ಅದು ಇಡೀ ಜನಕೋಟಿಯ ಉಸಿರ ಗಾಥೆ. ಒಂದು ಸೂಕ್ತ ಉಪಮೆಯೊಂದಿಗೆ ಹೇಳಬಹುದಾದರೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎಳ್ಳ‌ಅಮವಾಸೆಯಂದು ಮಾಡುವ ವಿಶೇಷ ಭಕ್ಷ್ಯ “ಸಜ್ಜೆ ಕಡಬು ಭಜ್ಜಿ ಪಲ್ಲ್ಯೆದಂತೆ”. ಭಜ್ಜಿ ಪಲ್ಲ್ಯೆ ಅಂದರೆ ಎಲ್ಲ ನಮೂನೆಯ ದ್ವಿದಳ ಧಾನ್ಯ, ಎಲ್ಲ ನಮೂನೆಯ ತರಕಾರಿ, ಸಖತ್ ಖಾರಾ, ಉಪ್ಪು, ಹಸಿ ಮೆಣಸಿನಕಾಯಿ ಸೇರಿಸಿ ಮಾಡುವ ಮೇಲೋಗರವದು. ನಮ್ಮದೆ ಹೊಲಗಳಲ್ಲಿ ಬೆಳೆದ ಸಜ್ಜೆಯ ಹಿಟ್ಟಿನಿಂದ ಗೋಲು ಕಡಬುಗಳನ್ನು ಮಾಡಿ ಅದರೊಂದಿಗೆ ಸೇರಿಸಿ ತಿಂದವರಿಗೆ ಅದರ ರುಚಿ ಗೊತ್ತು. ಎಲ್ಲ ಜನಪದರನ್ನು ಅವರವರ ನೆಲದ ಸಂಸ್ಕೃತಿಯ ಗುರುತಿನೊಂದಿಗೇನೇ ವ್ಯಾಪಕ ಅಖಂಡ ಸಂಸ್ಕೃತಿಯ ಧಾರೆಗಳಾಗಿ ಬೆಸೆಯುವುದೇ ನಮ್ಮ ವೈಶಿಷ್ಟ್ಯ. ಭಾರತೀಯ ಸಂಸ್ಕೃತಿಯೆಂದರೆ ದೇಶದೆಲ್ಲೆಡೆ ದೊರೆಯುವ ಒಂದೇ ನಮೂನಿ ರುಚಿ, ಬಣ್ಣ ಹೊಂದಿ ಮಿಂಚಿನ ಕಾಗದದಲ್ಲಿ ಸುತ್ತಿರುವ ಚಾಕಲೇಟ್ ಅಲ್ಲ. ಆದ್ದರಿಂದ ಕರ್ನಾಟಕ, ಕನ್ನಡಿಗರು ತಮ್ಮ ಧಾರೆಗಳ ವೈವಿಧ್ಯತೆಯಲ್ಲಿಯೇ ಅನನ್ಯತೆ ಉಳಿಸಿಕೊಂಡು ಬದುಕುತ್ತಿದ್ದಾರೆ. ಬದುಕಬೇಕು ಕೂಡ. +ವಿದ್ಯುನ್ಮಾನ ಮಾಧ್ಯಮಗಳು ಜಾಗತೀಕರಣದ ಮೆದುಳು ಇದ್ದಂತೆ. ಟಿ.ವಿ. ಚಾನೆಲ್ಲುಗಳು, ಮೊಬೈಲ್, ಇಂಟರನೆಟ್, ಎಸ್,ಎಂ,ಎಸ್., ಎಂ.ಎಂ.ಎಸ್. ಇವುಗಳಲ್ಲಿ ಬಿಂಬಿಸಲಗುತ್ತಿರುವ ಸಂಸ್ಕೃತಿ ಎಂಥದ್ದು? ಅದು ನಮ್ಮ ಜನಾಂಗವನ್ನು ಮುಟ್ಟಿಸುವುದಾದರೂ ಎಲ್ಲಿಗೆ? ಎಂಬುದನ್ನು ಕುರಿತು ನಾವೆಲ್ಲ ಚಿಂತಿಸಬೇಕಾದದ್ದು ಅತ್ಯಂತ ಅವಶ್ಯವಾಗಿದೆ. ಈ ವಿದ್ಯುನ್ಮಾನ ಲೋಕದಲ್ಲಿ ಹಿಂಸೆ, ಲೈಂಗಿಕತೆ, ಕ್ರೌರ್ಯ ಬಿಟ್ಟರೆ ಮತ್ತೊಂದಿಲ್ಲ. ನಮ್ಮ ಮಕ್ಕಳು ಪ್ರತಿ ನಿಮಿಷಕ್ಕೊಂದು ಬಲಾತ್ಕಾರ, ಪ್ರತಿ ಒಂದೂವರೆ ನಿಮಿಷಕ್ಕೊಂದು ಕೊಲೆ ನೋಡುತ್ತವೆ. ಎಸ್.ಎಂ.ಎಸ್.ಗಳಲ್ಲಿ ಬರುವ ನಗ್ನ ಚಿತ್ರಗಳು, ಇಂಟರ್‌ನೆಟ್‌ನಲ್ಲಿ ಬರುವ ಅಶ್ಲೀಲ ಚಿಟ್‌ಚಾಟ್‌ಗಳು, ಶ್ರೀಮಂತರ ಬದುಕನ್ನು ವೈಭವೀಕರಿಸುವ ಮೆಗಾ ಸಿರಿಯಲ್ಲುಗಳು, ಪುರೋಹಿತ ಸಂಸ್ಕೃತಿಯ ಮೌಢ್ಯ ಬಿಂಬಿಸುವ ಚಲನಚಿತ್ರಗಳು, ಹುಸಿದೇಶಭಕ್ತಿಯ ಅಮಲನ್ನು ತುಂಬುವ ವರದಿಗಳು, ಧರ್ಮ, ದೇವರುಗಳ ಹೆಸರಿನಲ್ಲಿ ಪ್ರಚೋದಿಸುವ ಮತೀಯದ್ವೇಷ, ಕರ್ಮಸಿದ್ಧಾಂತವನ್ನು ಸಮರ್ಥಿಸುವ ಪಾಪಭೀತಿ ಇವು ಎಲ್ಲವುಗಳಿಂದ ಅಮಯಕ ಜನತೆಯನ್ನು ಬಚಾಯಿಸಬೇಕಿದೆ. +ಈ ಬೀದರ ನೆಲದಲ್ಲಿ ಒಂಬತ್ತು ನೂರು ವರ್ಷಗಳ ಹಿಂದೆ ಬಸವಾದಿ ಶರಣರು ಮಾದಾರ ಚನ್ನಯ್ಯದಿಗಳು ಕಲಿಸಿಕೊಟ್ಟ ವೈಚಾರಿಕತೆ, ಕಾಯಕಧೀರತ್ವಗಳು ಇವೆಯಲ್ಲ, ಆ ಕಾಯಕ ಜೀವಿಗಳ ಮನೋಸ್ಥೈರ್ಯ, ವಸ್ತುಸತ್ಯ ಮತ್ರ ಒಪ್ಪಿಕೊಳ್ಳುವ ತಾತ್ವಿಕ ಸುಳುಹುಗಳನ್ನೆ ಮತ್ತೆ ಜನತೆಯತ್ತ ತೆಗೆದುಕೊಂಡು ಹೋಗಬೇಕಿದೆ. ಪಾಪ, ಪುಣ್ಯಗಳ ಹುಸಿ ಭ್ರಮೆಗಳಲ್ಲಿ ಸಿಕ್ಕು ಭಜನೆ, ನಾಮಸ್ಮರಣೆ ಮೂಲಕವೇ ಏನೆಲ್ಲ ಸಾಧಿಸಬಹುದು; ಜಪ, ಹೋಮ, ಹವನಗಳ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಭಾವಿಸಿರುವ ನಿಷ್ಕ್ರಿಯಾವಾದಿಗಳನ್ನು ಕೂಡಿಸಿಕೊಂಡು ಈ ಕೆಳಗಿನ ವಚನದ ಅರ್ಥ ಬಿಡಿಸಿ ಹೇಳಬೇಕಿದೆ. +ಸುಖ ಬಂದಡೆ ಪುಣ್ಯದ ಫಲವೆನ್ನೆನು +ದುಃಖ ಬಂದಡೆ ಪಾಪದ ಫಲವೆನ್ನೆನು +ನೀ ಮಾಡಿದಡಾಯಿತ್ತೆಂದೆನ್ನೆನು. +ಕರ್ಮಕೆ ಕರ್ತ್ರುವೆ ಕಡೆಯೆಂದೆನ್ನೆನು +ಉದಾಸೀನವಿಡಿದು ಶರಣೆನ್ನೆನು +ಕೂಡಲ ಸಂಗಮದೇವಾ ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ +ಸಂಸಾರ ಸವೆಯೆ ಬಳಸುವೆನು. +ಇಲ್ಲಿ ಬಸವಣ್ಣ ವ್ಯಕ್ತಿ ಶ್ರಮದ ಘನತೆ, ಗೌರವವನ್ನು ಎತ್ತಿಹಿಡಿದು ವರ್ತಮಾನದ ಕಷ್ಟ ಕೋಟಲೆಗಳೊಂದಿಗೆ ಗುದ್ದಾಡುವುದೇ ನಿಜವಾದ ಬದುಕು ಎನ್ನುತ್ತಾನೆ. ಇಂದು, ಈ ಕ್ಷಣ ನಾವು ಎದುರಿಸುತ್ತಿರುವ ಸಂಕಟ, ತಲ್ಲಣಗಳಿಗೆ ನಮ್ಮ ಸದ್ಯದ ಸ್ಥಿತಿ-ಗತಿಗಳಿಗೆ ನಾವೇ ಕಾರಣ. ಅರ್ಥಾತ್ ನಮ್ಮ ಸಾಮೂಹಿಕ ನಡೆಗಳು, ರಾಜಕೀಯ ವ್ಯವಸ್ಥೆ ಮತ್ತು ವೈಯಕ್ತಿಕ ಹಿತಾಸಕ್ತಿಗಳೇ ಕಾರಣ. ಈ ಹೊತ್ತಿನ ದುಃಖಕ್ಕೆ ಯಾವುದೋ ಕಾಣದ ಜನ್ಮದಲ್ಲಿ ಮಾಡಿದ ಕರ್ಮವೆಂಬ ಗೊಡ್ಡು ವೇದಾಂತಕ್ಕೆ ಆಧಾರವಿಲ್ಲ. ಆದ್ದರಿಂದ ನಾವೆಲ್ಲ ಮೈಮುರಿದು ಕಾಯಕ ಮಾಡುವ ಮೂಲಕ ಅಭಿವೃದ್ಧಿಯನ್ನು, ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಸಮಾನತೆಯನ್ನೂ ತರಬೇಕೆಂದು ಹೇಳಿದ್ದು ತುಂಬಾ ಅರ್ಥಪೂರ್ಣ. ಇಂಥ ಕ್ರಿಯಾಶೀಲತೆಯನ್ನು, ಜನೋಪಯೋಗಿ ಮಹತ್ವಾಕಾಂಕ್ಷೆಗಳನ್ನು ಜನತೆಯ ಬುದ್ಧಿ, ಭಾವಗಳಲ್ಲಿ ತುಂಬಬೇಕಿದೆ. +ಕುಳಿತು ಮಂತ್ರ ಹೇಳಿ ಮರುಳು ಮಾಡುವ ಸಂಸ್ಕೃತಿ ನಮ್ಮದಲ್ಲ. ಕೈ ಮೈಗಳಿಗೆ ಕೆಸರು ಹಚ್ಚಿಕೊಂಡು ಬೆವರು ಸುರಿಸಿ ಬಂಗಾರದ ಬೆಳೆ ತೆಗೆಯುವ ಬೆವರು ಸಂಸ್ಕೃತಿ ನಮ್ಮದು. ಅನೇಕತೆಯಲ್ಲಿ ಏಕತೆ ಕಂಡ ಈ ನಾಡಿನ ದಲಿತ, ಮಾದಿಗ, ಡೋಹರ, ಸಮಗಾರ, ಕಂಬಾರ ಹಲವಾರು ಕುಲ ವೃತ್ತಿ ಬಾಂಧವರ ಜೀವಂತ ಸಂಸ್ಕೃತಿ ನಮ್ಮದು. ಇಂಥ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿಯನ್ನು ಎದುರಿಸಲು ನಾವೆಲ್ಲ ಮೈಕೊಡವಿ ನಿಲ್ಲಬೆಕಿದೆ. ಜಾಗತೀಕರಣದ ಈ ಸಾಂಸ್ಕೃತಿಕ ಯುದ್ಧಕ್ಕೆ ಪ್ರತಿರೋಧವಾಗಿ ವಿಶ್ವ ಸಾಮಾಜಿಕ ವೇದಿಕೆಯಡಿ (ವರ್ಲ್ಡ್ ಸೋಷಿಯಲ್ ಫೋರಮ್) ಎಲ್ಲ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಒಂದಾಗಿ “ಇನ್ನೊಂದು ಜಗತ್ತು ಸಾಧ್ಯ” “ಅನದರ್ ವರ್ಲ್ಡ್ ಈಸ್ ಪಾಸಿಬಲ್” ಎಂಬುದನ್ನು ಕಳೆದ ವರ್ಷ ಮುಂಬೈನಲ್ಲಿ ನಡೆದ ಸಮ್ಮೇಳನದಲ್ಲಿ ತೋರಿಸಿಕೊಟ್ಟಿವೆ. ಆದ್ದರಿಂದ ಕನ್ನಡಿಗರಾದ ನಮಗೆ ಬೆಂಗಳೂರು ಸಿಂಗಪೂರ ಆಗುವುದು ಬೇಕಿಲ್ಲ. ಅದು ಕೆಂಪೇಗೌಡನ ಬೆವರ ಬೆಲೆಯ ಬೆಂದ ಕಾಳೂರು ಮಾತ್ರವಾಗಿರಲಿ. ಬೀದರ ಅಮೇರಿಕಾದ ಒಂದು ಹಳ್ಳಿಯಾಗಬೇಕಿಲ್ಲ. ಅದು ಮಾದಿಗರ ಚನ್ನಯ್ಯನ ಅಂಬಲಿ ನುಚ್ಚು ಅಟ್ಟುಣ್ಣುವ ನೆಲವೇ ಆಗಿರಲಿ. ಇದರರ್ಥ ಪ್ರಗತಿಗೆ ವಿಮುಖರಾಗಬೇಕೆಂದಿಲ್ಲ. ನಮ್ಮ ಹಳ್ಳಿ, ನಗರಗಳು ಎಲ್ಲ ತಂತ್ರಜ್ಞಾನ, ವಿಜ್ಞಾನವನ್ನು ಜನಮುಖಿಯಾಗಿ ಬಳಸಿಕೊಂಡು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲಿ. ನಾವು ಆಧುನೀಕರಣ, ತಂತ್ರಜ್ಞಾನ, ವಿಜ್ಞಾನದ ವಿರೋಧಿಗಳಲ್ಲ. ರಾಷ್ಟ್ರದ ಅಭಿವೃದ್ಧಿಯ ವಿರೋಧಿಗಳಲ್ಲ. ಅಖಂಡ ರಾಷ್ಟ್ರದ ಭಾವತಂತುವಿನ ವಿರೋಧಿಗಳಲ್ಲ. ಆದರೆ ರಾಷ್ಟ್ರೀಯತೆ ಎಂಬ ಸೋಗಿನಡಿ ದೇಶದ ಹಿಡಿಯಷ್ಟಿರುವ ಜನತೆ ತನ್ನ ದಮನಕಾರಿ ಸಂಸ್ಕೃತಿಯನ್ನೇ ಹೇರುತ್ತಿರುವ ಧೋರಣೆಯ ವಿರೋಧಿಗಳಾಗಿದ್ದೇವೆ. ಈ ದೇಶದ ಶೂದ್ರ, ದಲಿತ ಮತ್ತು ಮಹಿಳೆಯರನ್ನು ತುಳಿಯಲೆಂದೇ ಸೃಷ್ಟಿಸಿಕೊಂಡಿರುವ ಪೊಳ್ಳು ಸಂಸ್ಕೃತಿಯ ವಿರೋಧಿಗಳಾಗಿದ್ದೇವೆ. ಅವರ ಜನವಿರೋಧಿ ಕುತಂತ್ರಗಳನ್ನು ನಿರ್ನಾಮಗೊಳಿಸಲೆಂದೇ ಕಂಕಣಬದ್ಧರಾಗಿದ್ದೇವೆ. +ಅಡಿ ಟಿಪ್ಪಣಿ: ಧರಿನಾಡು ಎಂದು ಬೀದರ ಭಾಗಕ್ಕೆ ಕರೆಯುವ ವಾಡಿಕೆ ಇದೆ. +***** +ಉಳಿದದ್ದು: ಮುಂದಿನ ಸಂಚಿಕೆಗೆ +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […] +ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು […] +(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_391.txt b/Kannada Sahitya/article_391.txt new file mode 100644 index 0000000000000000000000000000000000000000..a51d387933e5868248dfa6ddedf2bc6523b8efa7 --- /dev/null +++ b/Kannada Sahitya/article_391.txt @@ -0,0 +1,190 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಥೆ ಆಯಿತೇ ಅಣ್ಣ, ಬಹಳ ಸಣ್ಣ +ಕಥೆಯ ಮೈಗಿಂತ ಮಿಗಿಲದರ ಬಣ್ಣ +-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) +ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) +ದಿವಂಗತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಅಂಬಿಕಾತನಯದತ್ತ) ಅವರ ‘ನಾದಲೀಲೆ’ ಕವನ ಸಂಕಲನದ ಪ್ರಥಮ ಪ್ರಕಟಣೆ ಇಂದಿಗೆ ೬೪ ವರುಷಗಳ ಹಿಂದೆ, ೧೯೩೮ನೇ ಇಸವಿಯಲ್ಲಿ, ಮಾಸ್ತಿಯವರ ಮುನ್ನುಡಿಯೊಂದಿಗೆ. ಅವರ ‘ನಾದಲೀಲೆ’ ಎಂಬ ಕವನ ನಿಖರವಾಗಿ ಪ್ರಕಟವಾದ ವರುಷ ನನಗೆ ತಿಳಿದಿಲ್ಲ. ಆದರೆ ೨೦೦೨ನೇ ಇಸವಿಯಲ್ಲಿ ವೈಯಕ್ತಿಕವಾದೊಂದು ಸಂದರ್ಭದಲ್ಲಿ ನನ್ನ ವಿಚಾರದ, ಭಾವದ ಭಾಗವಾಗಿ ‘ನಾದಲೀಲೆ’ ಕವನ ನನ್ನೊಳಗೆ ಜೀವ ತಳೆಯಿತು. ಆಗ ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಸಾವು-ಜೀವದ ಆಟದಂತೆ ಪರಿಭಾವಿಸಿದ ನನ್ನ ಖಾಸಗಿ ಕಾವ್ಯಾನುಭವವನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ. ಬೇಂದ್ರೆಯವರ ‘ನಾದಲೀಲೆ’ ಕವನದ ಪಠ್ಯ ಹೀಗಿದೆ: +೧ +ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪ|| +ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ +ತರಳ ತರಳೆ, ಚಿಗುರ ಚಿಗುರೆ ಹೂವು ಹೂವು ಹುಲ್ಲೆ +ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ +ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ +ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ +ಕೋಲು ಸಖೀ….. +೨ +ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ +ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ, +ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ +ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ +ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ +ಕೋಲು ಸಖೀ….. +೩ +ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ +ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ +ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ +ಕಾದಲನೆಡೆ ಬೇಡ, ಬಹಳು, ಕಾದಲೆ ಹೂಮಾಲೆ! +ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ +ಕೋಲು ಸಖೀ….. +೪ +ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ +ಮುಗಿಲಬಾಯ ಗಾಳಿಕೊಳಲ ಬೆಳಕ ಹಾಡ ಬೀರಿ +(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ) +ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ +ಕೋಲು ಸಖೀ….. +ಈ ಓದಿನ ಬಳಿಕ ನನ್ನ ಖಾಸಗಿ ಅನುಭವದ ಹಿನ್ನೆಲೆ ಹೇಳಬೇಕು. ಅದು ಜೀವನವನ್ನು ಅಪಾಯಕ್ಕೆ ಒಡ್ಡಿದ ಒಂದು ಆಕಸ್ಮಿಕ ಅನಾರೋಗ್ಯದ ವಿಚಾರ. +ಕಳೆದ ತಿಂಗಳು (ಜುಲಾಯಿ ೨೦೦೨) ದೇಹದ ಚೈತನ್ಯವನ್ನು ಹಿಂಡಿ ಹಿಪ್ಪೆ ಮಾಡಿದ ನಾಲ್ಕು ದಿನಗಳ ವಿಪರೀತ ಜ್ವರ ಬಂತು. ತಜ್ಞ ವೈದ್ಯರು ವೈರಲ್ ಜ್ವರ ಎಂದು ಔಷಧಿ ನೀಡಿದರು. ಐದನೇ ದಿನ ರಾತ್ರೆ ನನ್ನನ್ನು ಪರೀಕ್ಷಿಸಲು ನಿತ್ಯ ಮನೆಗೆ ಬರುತ್ತಿದ್ದ ಚರ್ಮರೋಗ ತಜ್ಞನಾದ ನನ್ನ ಹೆಂಡತಿಯ ತಮ್ಮ ನನ್ನ ಮೈಯಲ್ಲಿ ಪುಟ್ಟ ರಕ್ತನಾಳಗಳು ಅಲ್ಲಲ್ಲಿ ಒಡೆದು ಚರ್ಮದಲ್ಲಿ ರಕ್ತ ಮೆಲ್ಲಗೆ ಒಸರುವುದನ್ನು ಗಮನಿಸಿ, ಅದಕ್ಕೆ ತಕ್ಷಣ ಚಿಕಿತ್ಸೆಯ ಅಗತ್ಯವಿದೆಯೆಂದು ರಾತ್ರೆ ಹನ್ನೊಂದು ಗಂಟೆಗೆ, ತಕ್ಷಣ ಬಂದ ನನ್ನ ತಮ್ಮನ ಕಾರಲ್ಲಿ ಕೊಂಡೊಯ್ದು, ನನ್ನನ್ನು ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಿದ. ಮುಂದಿನ ಎರಡು ವಾರಗಳ ಕಾಲ ನಾನು ಅಲ್ಲಿದ್ದೆ. +ರಕ್ತವನ್ನು ಹೆಪ್ಪುಗಟ್ಟಿಸಲು ನೆತ್ತರಿನೊಳಗೆ ಹದಿಮೂರು ಪರಿಕರಗಳಿವೆ. ಈ ಹದಿಮೂರು ಅಂಶಗಳಿಗೆ ನಾಯಕ ಪ್ಲೇಟ್‌ಲೆಟ್(ಠಿಟಚಿಣeಟeಣ)ಎಂಬ ರಕ್ತಕಣ. ಇದು ಬಿಳಿ, ಕೆಂಪು ರಕ್ತಕಣಗಳಂತೆ ರಕ್ತದಲ್ಲಿ ಇರಬೇಕಾದ ಅಂಶ. ಈ ಪ್ಲೇಟ್‌ಲೆಟ್ ಕಣಗಳ ಆಜ್ಞೆಯಂತೆ ಇತರ ಹನ್ನೆರಡು ಅಂಶಗಳೂ ಸೇರಿ ಗಾಯಗೊಂಡಾಗ ರಕ್ತ ಹೆಪ್ಪುಗತ್ಟುತ್ತದೆ. ಗಾಯದಿಂದ ರಕ್ತಸೋರುವುದು ನಿಲ್ಲುತ್ತದೆ. ದೇಹದ ಒಳಗೆ ಹೃದಯದ ಪ್ರತಿ ಬಡಿತಕ್ಕೂ ಚಲಿಸುವ ರಕ್ತದ ನಿರಂತರ ಚಲನೆ ಇದೆ. ದೇಹದೊಳಗೆ ರಕ್ತಹರಿಯುವಾಗ ಅಲ್ಲಲ್ಲಿ ಸಣ್ಣಪುಟ್ಟ ಸಹಜ ರಕ್ತಸ್ರಾವಗಳಾಗುತ್ತಾ ಇರುತ್ತವೆ. ಆ ಸ್ರಾವವನ್ನು ಈ ಪ್ಲೇಟ್‌ಲೆಟ್ ಕಣಗಳು ಸ್ವಾಭಾವಿಕವಾಗಿ ತಡೆಹಿಡಿದು ಸರಿಪಡಿಸುತ್ತವೆ. ಹೀಗೆ ನೆತ್ತರು ಕಟ್ಟಿಸಲು ರಕ್ತದ ಒಂದು ಅಳತೆಯಲ್ಲಿ ಪ್ಲೇಟ್‌ಲೆಟ್ ಕಣಗಳು ಕನಿಷ್ಠ ಒಂದೂವರೆ ಲಕ್ಷ ಇರಬೇಕು. ಆ ಸಂದರ್ಭದಲ್ಲಿ ಈ ಕಣಗಳು ನನ್ನ ರಕ್ತದಲ್ಲಿ ಕೇವಲ ಸಾವಿರದ ಇನ್ನೂರಕ್ಕೆ ಇಳಿದು ದೇಹದ ಒಳಗೆ ಎಲ್ಲಿ ಬೇಕಾದರೂ(ಮೆದುಳು, ಎದೆ, ಹೊಟ್ಟೆ, ಕರುಳು, ಮೂತ್ರಕೋಶ ಇತ್ಯಾದಿ)ರಕ್ತಸ್ರಾವ ಉಂಟಾಗಿ ಯಾವ ಕ್ಷಣದಲ್ಲೂ ಜೀವಕ್ಕೂ ಅಪಾಯವಾಗಬಲ್ಲ ಬೆದರಿಕೆ ಒಡ್ಡಿತ್ತು. +ಒಡನೆಯೇ, ಬೆಂಗಳೂರಿನಲ್ಲೇ ಇರುವ ನನ್ನ ಸಹೋದರನ ರಕ್ತದಿಂದ ಪ್ಲೇಟ್‌ಲೆಟ್ ಕಣಗಳನ್ನು ತೆಗೆದು ನನ್ನ ದೇಹಕ್ಕೆ ಸೇರಿಸಲಾಯಿತು. ದೂರದ ಊರಿನಲ್ಲಿದ್ದ ನನ್ನ ಇನ್ನೊಬ್ಬ ತಮ್ಮ ತಕ್ಷಣ ಹೊರಟು ರಕ್ತಕಣಗಳನ್ನು ನೀಡಬಲ್ಲ ನನ್ನ ಕುಟುಂಬದವರನ್ನು ಕಾರಲ್ಲಿ ತುಂಬಿಕೊಂಡು ಬೆಂಗಳೂರು ತಲುಪಿದ. ಸಹೋದರನ ರಕ್ತದಿಂದ ಮೊದಲು ನೀಡಿದ್ದ ಪ್ಲೇಟ್‌ಲೆಟ್ ಕಣಗಳು ನನ್ನ ದೇಹದೊಳಗೆ ಸಾಯತೊಡಗಿದವು. ರಕ್ತಕಣಗಳ ಸಂಖ್ಯೆ ಹೀಗೇಕೆ ಇಳಿಯುತ್ತಿವೆ ಎಂದು ಪರೀಕ್ಷಿಸಲು ಸೊಂಟದ ಒಂದು ಎಲುಬನ್ನು ಚುಚ್ಚಿ ಅದರ ಟೊಳ್ಳಿನ ಒಳಗಿನ ಮಜ್ಜೆಯನ್ನು(ಃoಟಿe ಒಚಿಡಿಡಿoತಿ)ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಬೇಕಾದ ರಕ್ತಕಣಗಳು ಉತ್ಪತ್ತಿಯಾಗುತ್ತಿವೆಯೇ? ಅಥವಾ ರಕ್ತದ ಕ್ಯಾನ್ಸರ್ ಏನಾದರೂ ಇದೆಯೇ ಎಂಬುದನ್ನು ತಿಳಿಯುವುದು ಉದ್ದೇಶ. +ಎರಡನೇ ಸಲ ನನ್ನ ಇನ್ನೊಬ್ಬ ತಮ್ಮನ ದೇಹದಿಂದ ರಕ್ತಕಣಗಳನ್ನು ತೆಗೆದು ನೀಡುವುದೆಂದು ನಿರ್ಧರಿಸಲಾಯಿತು. ಆ ಸಂದರ್ಭದಲ್ಲಿ ನನಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮುಖ್ಯ ವೈದ್ಯರು ನನ್ನ ಬಳಿ ಬಂದು, ಪುನಃ ನೀಡುವ ರಕ್ತಕಣಗಳನ್ನು ರಕ್ಷಿಸಲು ಕೆಲವು ಗಂಭೀರ ಔಷಧಿಗಳನ್ನು ನೀಡುವುದಾಗಿ ಹೇಳಿ, ಭಾರತದಲ್ಲಿ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆ ನೀಡಿ ಪ್ರಯತ್ನಿಸುತ್ತೇವೆ; ಸಹಾಯಕ್ಕಾಗಿ ದೇವರನ್ನೂ ಪ್ರಾರ್ಥಿಸೋಣ; ಶಾಂತಚಿತ್ತರಾಗಿ-ಎಂದು, ನಾನು ಉದ್ವೇಗಗೊಳ್ಳಬಾರದೆಂದು ಸೂಚಿಸಿದರು. (ಉದ್ವೇಗಗೊಂಡರೆ ರಕ್ತದ ಒತ್ತಡ ಏರುಪೇರಾಗಿ ರಕ್ತಸ್ರಾವವಾಗುವ ಅಪಾಯ.) ಪ್ರತಿ ಗಂಟೆಗೂ ನಿಖರವಾದ ರಕ್ತದ ಒತ್ತಡ ದಾಖಲು ಇಡುವಂತೆ ತಿಳಿಸಿದರು. +ಸದಾ ನನ್ನ ಬಳಿಯೇ ಇದ್ದ ಸ್ವತಃ ತಜ್ಞ ವೈದ್ಯರಾದ ನನ್ನ ತಮ್ಮ, ನನ್ನ ಹೆಂಡತಿಯ ತಮ್ಮ ಹಾಗೂ ಅಣ್ಣ ಎಲ್ಲರಲ್ಲೂ ಆತಂಕ, ಚಿಂತೆ. ಮನೆ ಮಂದಿಯೇ ಆದ ತಜ್ಞ ಡಾಕ್ಟರುಗಳ ಆತಂಕ ಕಂಡು ಕುಟುಂಬದ ಇತರರೂ ಮನಸ್ಸಿನೊಳಗೆ ಕಂಗಾಲಾಗಿಬಿಟ್ಟಿದ್ದರು. ಮಲಗಿದ್ದಾಗ ಮಂಚತಾಕಿಯೋ, ಬಚ್ಚಲಿಗೆ ಹೋಗುವಾಗ ಗೋಡೆ ಏನಾದರೂ ತಗುಲಿ ತಲೆಯೊಳಗೆ ಪುಟ್ಟ ನರ ಅದುರಿ ರಕ್ತಸ್ರಾವವಾದರೂ ಅಪಾಯ ಎಂದು ಹಗಲಿರುಳೂ ಜಾಗ್ರತೆ. ಬ್ಲೆಡು ತಾಗಬಹುದದ್ದರಿಂದ ಗಡ್ಡ ತೆಗೆಯಬೇಡಿ, ಬ್ರಶ್ ತಾಗಬಹುದಾದ್ದರಿಂದ ಹಲ್ಲು ಉಜ್ಜಬೇಡಿ-ಹೀಗೆ ರಕ್ತಸ್ರಾವ ಆಗದ ಹಾಗೆ ಸಕಲ ಮುಂಜಾಗರೂಕತೆಗಳು. +ಇದರ ನಡುವೆ ನಾನು ಕೆಲಸ ಮಾಡುವ ಕಂಪೆನಿಯ ಅಧಿಕಾರಿಗಳು ಬಂದು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು, ಮದ್ರಾಸು ಅಥವಾ ಬೊಂಬಾಯಿಗೆ ಏರ್‌ಲಿಫ್ಟ್ ಮಾಡಬೇಕೆ ಎಂದು ವಿಚಾರಿಸಹತ್ತಿದರು. ಆಸ್ಪತ್ರೆಗೆ ಎಷ್ಟೇ ಖರ್ಚಾದರೂ ಭರಿಸುವ ಪತ್ರ ಕಳುಹಿಸಿದರು. ಅಮೆರಿಕದಲ್ಲಿದ್ದ ನನ್ನ ಮೇಲಧಿಕಾರಿ ಫೋನುಮಾಡಿ ಯಾವುದಕ್ಕೂ ಚಿಂತೆ ಬೇಡ ಎಂದರು. ಅವರ ಪರವಾಗಿ ಇನ್ನೊಬ್ಬ ಅಧಿಕಾರಿ ಬಂದು ನಾನು ಕೆಲಸ ಮಾಡುವ ಕಂಪೆನಿ ಅವಶ್ಯಕತೆ ಇದ್ದರೆ ವಿಶೇಷ ಸಂದರ್ಭದಲ್ಲಿ ಹೆಚ್ಚಿನ ಹಣವನ್ನು ಚಿಕಿತ್ಸೆಗಾಗಿ ಖರ್ಚುಮಾಡಬಲ್ಲದೆಂದೂ, ಭಾರತದಲ್ಲಾಗಲೀ ಎಲ್ಲೇ ಆಗಲೀ ಸರಿಯಾದ ಚಿಕಿತ್ಸೆಯಾಗುವಲ್ಲಿಗೆ ಒಯ್ಯಬಹುದೆಂದು ಸೂಚಿಸಿದರು. ಇಂಗ್ಲೆಂಡಿನಲ್ಲಿ ರಕ್ತದ ಕ್ಯಾನ್ಸರಿಗೆ ಉತ್ತಮ ಚಿಕಿತ್ಸೆ ಇದೆಯಾದ್ದರಿಂದ ವೆಚ್ಚದ ಬಗ್ಗೆ ಚಿಂತೆ ಬೇಡ ಎಂಬುದನ್ನು ಪರೋಕ್ಷವಾಗಿ ಸೂಚಿಸುವುದು ಅವರ ಉದ್ದೇಶ. ಹದಗೆಟ್ಟ ನನ್ನ ರಕ್ತದ ಆರೋಗ್ಯ, ಆತಂಕಗೊಂಡ ವೈದ್ಯರು, ಆಕಸ್ಮಿಕ ಆಘಾತದಿಂದ ತತ್ತರಗೊಂಡ ಕುಟುಂಬ, ಅದರ ಜೊತೆ ಎಷ್ಟು ಖರ್ಚಾದರೂ ಪರವಾಗಿಲ್ಲ, ಎಲ್ಲಿ ಬೇಕಾದರೂ ಚಿಕಿತ್ಸೆ ಮಾಡಿಸೋಣ ಎಂಬ ಸದಾಶಯದ ಕಂಪೆನಿ ಅಧಿಕಾರಿಗಳು-ಇವೆಲ್ಲಾ ಒಟ್ಟು ಸೇರಿ ಜೀವಕ್ಕೆ ಅಪಾಯ ಬಂದರೂ ಬರಬಹುದು ಎಂಬುದನ್ನು ಅರಿವಿಗೆ ತರುವ ಒಂದು ವಾತಾವರಣ ಸೃಷ್ಟಿಸಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿ ಮೃತ್ಯುಪ್ರಜ್ಞೆ ತಿಳಿವಿಗೆ ಬರುತ್ತದೆ. +ಇದರ ನಡುವೆ ಸೊಂಟದ ಎಲುಬು ಚುಚ್ಚಿ ಮಜ್ಜೆ ತೆಗೆಯಲು ನೀಡಿದ ಅರೆ ಅರಿವಳಿಕೆ ಚುಚ್ಚುಮದ್ದಿನಿಂದಾಗಿ ಅರ್ಧ ನಿದ್ರೆ ಎಚ್ಚರದ ಜೋಂಪು. ಪ್ರಾಣಕ್ಕೂ ಅಪಾಯವಾಗಬಲ್ಲ ಸಾದ್ಯತೆ ಇದೆ. ಎಂಬ ಇಂತಹ ಒಂದು ವಾತಾವರಣದಲ್ಲಿ-ನಿದ್ರೆ-ಎಚ್ಚರಗಳ ನನ್ನ ಸ್ಥಿತಿಯಲ್ಲಿ ‘ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ’ ಎಂಬ ಕವಿ ಬೇಂದ್ರೆಯ ಬೇಟೆಗಾರನ ಅರಿವು ಹಾಗೂ ಅದನ್ನು ಕಾವ್ಯನಾಯಕ ಮೀರುವ ಕ್ರಮ ಹೇಗೋ ನನ್ನ ಪ್ರಜ್ಞೆಯೊಳಗೆ ಮೂಡಿಬಂತು. +ಸುತ್ತಲೂ ಕುಟುಂಬದವರು, ಬಂಧು ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು ಹೇಗೋ ಸುದ್ದಿ ತಿಳಿದು ಫೋನು ಮಾಡುತ್ತಿದ್ದ ಪರಿಚಿತರು! ಎಲ್ಲರ ನಿರಂತರ ಪ್ರೀತಿ ಹಾಗೂ ಬೇಗನೆ ಗುಣಮುಖವಾಗಲೆಂಬ ಹಾರೈಕೆ. ನನ್ನೊಳಗೆ ‘ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ ನಾರಿ’ ಎಂಬ ಸಾವನ್ನು ಮೀರಿ ಜೀವನ ಸೌಂದರ್ಯದ ಉತ್ಕಟತೆಯನ್ನು ಹೇಳುವ ಬೇಂದ್ರೆ ಸಾಲುಗಳು. +ಆಸ್ವತ್ರೆಗೆ ಸೇರಿದ ಐದನೇ ದಿನ ನಾನು ಸಂಪೂರ್ಣ ಪ್ರಾಣಾಪಾಯದಿಂದ ಪಾರಾಗಿರುವುದಾಗಿಯೂ ಇನ್ನೇನೂ ಭಯವಿಲ್ಲವೆಂದೂ ಮತ್ತೊಂದಷ್ಟು ದಿನ ಆಸ್ಪತ್ರೆಯಲ್ಲಿರಬೇಕಾಗಬಹುದೆಂದು ಆಸ್ಪತ್ರೆಯ ವೈದ್ಯರುಗಳು ತಿಳಿಸಿದರು. ಸುತ್ತಲ್ಲಿದ್ದ ದುಗುಡ ಮಾಯವಾಗಿ ಮನೆಯವರೆಲ್ಲರ ಮುಖದಲ್ಲಿ ನಗೆ ಅರಳಿತು. ಹೀಗೆ ನಾನು ವೈದ್ಯರು ತಿಳಿದಂತೆ ಸಾವಿನ ಅಪಾಯದ ಮುಖಾಮುಖಿಯಲ್ಲಿದ್ದಾಗ ಬೇಂದ್ರೆಯವರ ‘ನಾದಲೀಲೆ’ ನನ್ನ ಅಂತರಂಗ ಪ್ರಜ್ಞೆಯಲ್ಲಿ ಹೇಗೆ ಒದಗಿಬಂತು ಎಂಬುದನ್ನು ನನಗೆ ನಾನೇ ಈಗ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ಆ ಅನುಭವ ರೂಪತಳೆದ ಕ್ರಮದಲ್ಲೇ ಆದಷ್ಟು ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ. +* +* +* +ಬೇಂದ್ರೆಯವರ ಈ ಬೇಟೆಗಾರ ನನ್ನ ಗಮನ ಸೆಳೆದದ್ದು ಸುಮಾರು ೨೪ ವರುಷಗಳ ಹಿಂದೆ. ಆಗ ನಾನು ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಒಂದು ಸಂಜೆ, ಕನ್ನಡ ವಿಮರ್ಶಕ ಜಿ.ಎಚ್.ನಾಯಕರ ಮನೆಯಲ್ಲಿ ಮೀರಕ್ಕ ಕೊಟ್ಟ ತಿಂಡಿ ತಿನ್ನುತ್ತ ಹರಟುತ್ತಿದ್ದಾಗ ‘ನಾದಲೀಲೆ’ ಕವನದ ಬಗ್ಗೆ ಯಾಕೋ ಮಾತು ಬಂತು. ನಾಯಕರು “ನೋಡ್ರಿ ಬೇಂದ್ರೆಯ ಪ್ರಜ್ಞಾವಲಯ; ಅತ್ತಣಿಂದ ಬೇಟೆಗಾರ ಯಾವಾಗ ಬೇಕಾದರೂ ಬರಲೂ ಬಹುದು. ಅದು ಡೆತ್ +(ಆeಚಿಣh). ಆ ಸಾವಿನ ಜೊತೆ ಈ ಎಲ್ಲಾ ಜೀವಕ್ರಿಯೆಗಳು. ಇದು ಬಹಳ ಸಂಕೀರ್ಣವಾದ ಅರಿವು. ನನ್ನ ಲೆಕ್ಕದಲ್ಲಿ ಬೇಂದ್ರೆಯ ಅತ್ಯುತ್ತಮ ಕವನಗಳಲ್ಲಿ ಒಂದು’ ’ ಎಂಬ ಅರ್ಥದ ಮಾತುಗಳನ್ನು ಹೇಳಿದರು. ( ಆ ಬಳಿಕ ಜಿ.ಎಚ್. ನಾಯಕರು ಸಂಪಾದಿಸಿ, ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಹೊಸಗನ್ನಡ ಕವಿತೆ’ ಎಂಬ ಅಂಥಾಲಜಿಯಲ್ಲಿ ‘ನಾದಲೀಲೆ’ ಕವನ ಸೇರಿದೆ.) ಅಂದಿನಿಂದ ‘ನಾದಲೀಲೆ’ ಜೀವನ ಸಮೃದ್ಧಿ, ಕೋಲಾಟದ ಉತ್ಸಾಹ, ಉಲ್ಲಾಸ, ಹೂವು, ಹುಲ್ಲು, ತಂಗಾಳಿಯ ಬೆಳಗಿನ ಬೆಳಕಿನಲ್ಲಿ ಸಮೃದ್ಧಿಯ ಪ್ರಾಣವಾಯು ಹೀರುವ ತರಳ ಎರಳೆಯ ಹಿಂದೆ ಅತ್ತಣಿಂದ ಬರಬಹುದಾದ ಬೇಟೆಗಾರ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದು ಹೋದ. +ಆಸ್ಪತ್ರೆಯಲ್ಲಿ ಎಲುಬು ಚುಚ್ಚಲು ನೀಡಿದ ಅರಿವಳಿಕೆಯ ಅರೆ ಎಚ್ಚರ ನಿದ್ರೆಯ ಜೊಂಪಿನಲ್ಲಿ, ಈ ಬೇಟೆಗಾರ ಹೇಗಿರುತ್ತಾನೆ ಎಂದು ಕಾಣಲು ನಾನು ಪ್ರಯತ್ನಿಸುತ್ತಿದ್ದೆ. ಅವನು ಕೇವಲ ಮೃತ್ಯು ಆಗಿರಬಹುದೆ ಎಂಬ ಯೋಚನೆ. ಮೃತ್ಯು ಎಂದರೆ ಒಂದು ಶಬ್ದ. ಭಾಷೆಯೊಂದರ ಪದಕ್ಕಿಂತ ಆಚೆ ಅದು ಏನು? ಹಾಗಾದರೆ ಸಾಯುವುದೆ? ಅಂದರೆ ಏನು? ಅದು ಹೇಗಿರುತ್ತದೆ? ಅದು ಜೀವ ನಿಲ್ಲುವಾಗ ಏನೂ ಇಲ್ಲದಂತಾಗುವ ಕತ್ತಲು ಇರಬಹುದೆ ಎಂಬ ಸಂಶಯ. +ಆ ಕತ್ತಲಿನ ಕಲ್ಪನೆಯಲ್ಲಿ ನನ್ನ ನೆನಪಿಗೆ ಬಂದುದು ದಶಕಗಳ ಹಿಂದೆ ನಾನು ನೋಡಿದ ಬರ್ಗ್‌ಮನ್‌ನ‘ಸೆವೆನ್ತ್ ಸೀಲ್’ ಸಿನಿಮಾದ ಒಂದು ದೃಶ್ಯ. ಅದರಲ್ಲಿ, ಸಮುದ್ರದ ಅಲೆಗಳ ನಿರಂತರ ಚಲನೆಯ ಹಿನ್ನೆಲೆಯಲ್ಲಿ ನಾಯಕನೊಡನೆ ಚೆಸ್ ಆಟದ ದೊಡ್ಡ ಮ್ಯಾಟ್‌ನಲ್ಲಿ ಡೆತ್ (ಆeಚಿಣh)ನಿರಂತರವಾಗಿ ಚದುರಂಗ ಆಡುತ್ತಾ ಇರುತ್ತದೆ. ಅವರು ಒಬ್ಬರನ್ನೊಬ್ಬರು ಸೋಲಿಸುವ ಪ್ರಯತ್ನದಲ್ಲಿದ್ದಾರೆ. ಆ ಚದುರಂಗ ಆಡುವ ಮೃತ್ಯುವಿಗೆ ಇಡೀ ದೇಹದ ಹಾಗೂ ತಲೆಯ ಹಿಂಭಾಗವನ್ನು ಮುಚ್ಚುವ ಕಪ್ಪಗಿನ ದೊಡ್ಡ ದೊಗಲೆ ಕೋಟಿನಂತಹ ಒಂದು ಡ್ರೆಸ್. +ಆದರೆ, ‘ನಾದಲೀಲೆ’ ಯ ಬೇಟೆಗಾರ ಕಪ್ಪಗಿನ ಕಾಸ್ಟ್ಯೂಮಿನವನಲ್ಲ ಅನಿಸುತ್ತಿತ್ತು. ಆ ಬೇಟೆಗಾರನ ಬಗ್ಗೆ ಯೋಚಿಸುವಾಗ ನಾನು ಪ್ರಾಥಮಿಕ ಶಾಲೆಯಲ್ಲಿ ನನ್ನ ಹಳ್ಳಿಯಲ್ಲಿ ಓದುತ್ತಿದ್ದಾಗ ಸ್ಕೂಲ್‌ಡೇಯಲ್ಲಿ ನೋಡಿದ ಬೇಟೆಗಾರನ ನೃತ್ಯದ ಒಂದು ನೆನಪು ಮೂಡಿತು. ಅದರಲ್ಲಿ ಸ್ಕೂಲಿನ ರಂಗಮಂದಿರದಲ್ಲಿ ಹಾಕಿದ ಕಾಡಿನ ಚಿತ್ರದ ಹಿನ್ನೆಲೆಯಲ್ಲಿ ಒಬ್ಬ ಬೇಟೆಗಾರ ನೃತ್ಯ ಮಾಡುತ್ತಾ ಬಂದಿದ್ದ. ಅವನ ಕೈಯಲ್ಲಿ ಬಿಲ್ಲು, ತಲೆಗೆ ಗರಿ, ಮೈಗೆ ಚಿರತೆ ಬಣ್ಣದ ಬಟ್ಟೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ಬೇಟೆಗಾರ. ‘ನಾದಲೀಲೆ’ ಯಲ್ಲೂ ಕೋಲಾಟದ ಕುಣಿತ. +ಈ ನೃತ್ಯದ ಬೇಟೆಗಾರ ಮನಸ್ಸಿಗೆ ಬಂದೊಡನೆ ಬರ್ಗ್‌ಮನ್‌ನ‘ಡೆತ್’ ನನ್ನೊಳಗಿನಿಂದ ಮಾಯವಾದ. ನನಗನ್ನಿಸಿದ್ದು, ಬರ್ಗ್‌ಮನ್‌ನ ‘ಡೆತ್’ ನಾಯಕನನ್ನು ಸೋಲಿಸುವ ಚದುರಂಗದ ಆಟದಲ್ಲಿದ್ದಾನೆ. ತೆರೆಗಳು ಚಲಿಸುವ ಕಾಲ ಇರಬಹುದು. ಬೇಂದ್ರೆಯ ಬೇಟೆಗಾರ ಅತ್ತಣಿಂದಲೂ ಕುಣಿಯುತ್ತಲೇ ಬರಬೇಕಷ್ಟೇ. ಯಾಕೆಂದರೆ ‘ಕೋಲು ಸಖೀ ಚಂದ್ರಮುಖೀ’ ಎಂದು ಕೋಲಾಟದ ಕುಣಿತದಲ್ಲಿ ಕಾವ್ಯನಾಯಕ ಇದ್ದಾನೆ. ಈ ಕೋಲಾಟದ ಕುಣಿತ ಇರುವುದರಿಂದ ಅತ್ತಣಿಂದ ಆಕಸ್ಮಿಕವಾಗಿ ಬರಬಹುದಾದವನಾದರೂ ಅವನ ಪ್ರವೇಶ ಕುಣಿಯದೆ ಹೇಗೆ ಸಾಧ್ಯ? ಹಾಗಾಗಿ, ಬರ್ಗ್‌ಮನ್‌ನ ‘ಡೆತ್’ ನಂತೆ ಅವನು ನಿಶ್ಚಲವಾಗಿ ಕುಳಿತು ಹೊಂಚು ಹಾಕುವವನಲ್ಲ. ಅವನು ಕಪ್ಪಗೆ ಇರುವುದೂ ಸಾಧ್ಯವಿಲ್ಲ. ಯಾಕೆಂದರೆ ಅವನು ಬರುವುದು ಕತ್ತಲಂಥ ಕತ್ತಲವೇ ಜಾರಿದ ಬಳಿಕ. ಕಂಗೆಡಿಸುವ ಮಂಜು ಕಳೆದು ಬೆಳಗಾತದ ಕಂಗೊಳಿಸುವ ಕೆಂಪು ಮುಂದೆ ಬರುವಾಗ. ಆವ ಈ ಜಿಂಕೆ, ಕುಣಿವ ಮಣಕ, ಗಾಳಿ, ಹೂವು,ಹುಲ್ಲು ಇವುಗಳೊಡನೆ-ಪ್ರಕೃತಿಯ ಜೀವಧಾರಣೆಯ ನಡುವೆಯೇ ಕುಣಿಯುವವ ಅನಿಸಿಬಿಟ್ಟಿತು. ಯಾಕೋ ಏನೋ ಅಡಿಗರ ‘ಜೀವನ ನಿಧಾನ ಶೃತಿ ಶುದ್ಧಿ ಮೊರೆಯ ಕರಾವು’ ಸಾಲು ನೆನಪಾಯಿತು. ಆದರೆ ಕವಿ ಅಡಿಗರ ‘ವರ್ಧಮಾನ’ ಕವನದ ಆ ಸಾಲಿನ ಹಿಂದುಮುಂದುಗಳು ಕೂಡಿ ಬರಲಿಲ್ಲ.(೨) +ಬದಲಾಗಿ,ಈ ಬೇಟೆಗಾರನೆ ‘ವಿಧಿ’ ಇರಬಹುದು ಎಂಬ ಒಂದು ಅಸ್ಪಷ್ಟ ಕಲ್ಪನೆ. ಅರೆನಿದ್ರೆ ಅರೆ ಎಚ್ಚರ. ಹಾಗಿದ್ದರೆ ವಿಧಿ ಎಂದರೆ ಎಲ್ಲವೂ ಮೊದಲೇ ನಿರ್ಣಯಿಸಲ್ಪಟ್ಟ ಒಂದು ವ್ಯವಸ್ಥೆಯೇ? ಅಡಿಗರ ‘ಅಳುವ ಕಡಲೊಳೂ ತೇಲಿ ಬರುತಲಿದೆ/ನಗೆಯ ಹಾಯಿದೋಣಿ’ ಎಂಬ ಪದ್ಯದಲ್ಲಿ(‘ಇದು ಬಾಳು’ ಕವನ ‘ಭಾವತರಂಗ’ ಸಂಕಲನ) ‘ಯಾರ ಲೀಲೆಗೋ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ’ ಎನ್ನುತ್ತಾರೆ.(೩) ಈ ಬೇಟೆಗಾರನೂ ಏನಾದರೂ ಗುರಿಯಿರದೆ ಬಾಣ ಬಿಡುವವನೆ? ಅದು ಸಾಧ್ಯವಿಲ್ಲ. ಬೇಟೆಗಾರನಂತೂ ಗುರಿ ಇಟ್ಟೇ ಬಾಣ ಹೂಡುವವ. ಆದರೆ ಇಟ್ಟ ಗುರಿ ತಪ್ಪಲೂಬಹುದು. ಯಾಕೆಂದರೆ ಇಲ್ಲಿ ಜೀವದ ಕುಣಿತ ಇದೆ. ಬಾಣ ಬರುವಾಗ ಜೀವದ ಕುಣಿತ ಆ ಕಡೆ ಹೆಜ್ಜೆ ಇಟ್ಟರೆ ಗುರಿ ತಪ್ಪಬಹುದು. ಅಕಸ್ಮಾತ್ ಗುರಿ ತಪ್ಪದೇ ಹೋದರೂ ಬೇಟೆಗಾರನ ಬಾಣಕ್ಕೆ ಸಿಕ್ಕಿ, ಬಿದ್ದು ಉರುಳುವುದೂ ಈ ನಿರಂತರವಾದ ಜೀವರಾಶಿಯ ಕೋಲಾಟದ ಕುಣಿತದ ಒಂದು ಭಾಗವೇ. ಜೀವದ ಕುಣಿತ ಕುಣಿಯಬೇಕು.(೪) ಬೇಟೆಗಾರನೂ ಕುಣಿಯುವ ಸಮಗ್ರ ಜೀವರಾಶಿಗಳ ಒಂದು ಭಾಗವೆ. ಅದಕ್ಕೆ ಭಯ ಯಾಕೆ ಎಂಬ ಭಾವ ಬಂದಿತು. +ದೇಹಕ್ಕೆ ಅದರ ಅಪಾಯಗಳನ್ನು ಸರಿಪಡಿಸಿಕೊಳ್ಳುವ ಶಕ್ತಿ ಇದೆ. ವೈದ್ಯರ ಕೆಲಸ ಈ ಸ್ವರಕ್ಷಣೆಯ ಶಕ್ತಿಯ ಜೊತೆ ಕೈ ಜೋಡಿಸುವುದು. ನನ್ನ ಸುತ್ತಲಿದ್ದ ಅನೇಕ ವೈದ್ಯರೂ ನನ್ನ ದೇಹವೂ ಈ ವಿಶ್ವ ಪ್ರಕೃತಿಯ ಜೀವಜಾಲದ ನಿರಂತರ ಕುಣಿತವೆಂಬ ಚಲನೆಯ ಒಂದು ಭಾಗವೆ. ದೇಹದೊಳಗಿನ ರಕ್ತಸಂಚಾರ, ಶ್ವಾಸೋಚ್ಛ್ವಾ ಸಗಳೂ ಚಲನೆಯೇ. ದೇಹದ ಒಳಗಿನ ಹಾಗೂ ಹೊರಗಿನ ಚಲನೆಗಳು ಈ ಸಮಸ್ತ ವಿಶ್ವದ ಒಟ್ಟೂ ಚನೆಯ ಭಾಗವೆ. ಅದರ ಜೊತೆ ಸಮಶೃತಿ ಇದ್ದಷ್ಟು ಕಾಲ ಉಳಿಯುತ್ತದೆ. ಇಲ್ಲವಾದರೆ ಇಲ್ಲ. ಇದ್ದಷ್ಟು ಹೊತ್ತು ಜೀವ ಜಗತ್ತಿನ ಈ ನಿರಂತರ ಕುಣಿತದ ತಾಳ-ಲಯಗಳಲ್ಲಿ ಮಗ್ನನಾಗಿರುವುದು ಮುಖ್ಯ. ಬೇಟೆಗಾರ ಮರಣ ಭಯವಾಗಿ ಕಾಡಬಾರದು ಎಂಬ ಭಾವ ಪ್ರೇರಣೆಯಾದಂತೆ ಭಾಸವಾಯಿತು. +ಅದು ಅರಿವು ತಪ್ಪಿಸಲು ನೀಡಿದ ಚುಚ್ಚುಮದ್ದಿನ ನಿದ್ರೆಯ ಕನಸೊ ಅಥವಾ ನನ್ನ ಆಗಿನ ತಿಳುವಳಿಕೆಯೋ ಎಂದು ಈಗ ಹೇಳುವುದು ಕಷ್ಟ. ಒಟ್ಟಿನಲ್ಲಿ ಅನಿಸಿದ್ದು: ಈ ಬೇಟೆಗಾರನ ಜೊತೆ ಸೋಲು ಗೆಲುವಿನ ಆಟ ಆಡುವುದಲ್ಲ; ಬಂದಾಗ ಅವನ ಜೊತೆ ಕುಣಿಯುವುದು. ಈ ತಾಳ-ಲಯಗಳ ನಾದ ಉಂಟುಮಾಡುವ ಜೀವಪ್ರಕೃತಿಯ ಲೀಲೆಯಲ್ಲಿ ಬೇಟೆಗಾರನಿಗೂ ಕುಣಿಯದೆ ಬೇರೆ ಗತಿ ಇಲ್ಲ ಎಂಬ, ಸಾವನ್ನೂ ಬದುಕಿನ ಪ್ರೇಮದಲ್ಲಿ ತಬ್ಬಿಕೊಳ್ಳಬಹುದಾದ, ಯಾವ ಭಾವೋದ್ರೇಕವೂ ಇಲ್ಲದ, ಇದು ಸಹಜವಾದ್ದು ಎಂಬ ಒಂದು ಮಾನಸಿಕ ಸ್ಥಿತಿ ಬಂದು ಬಿಟ್ಟಿತ್ತು ಎಂದು ನನಗೆ ಈಗ ತೋರುತ್ತದೆ. +ಆ ದಿನ ಸಂಜೆ ಎಲುಬಿನ ಮಜ್ಜೆಯ ವರದಿ ಬಂತು. ರಕ್ತದ ಕ್ಯಾನ್ಸರಿನ ಯಾವ ಅಪಾಯವೂ ಇಲ್ಲ. ಎಲುಬಿನ ಒಳಗೆ ನನ್ನ ದೇಹಕ್ಕೆ ಬೇಕಾದ ರಕ್ತಕಣಗಳ ನಿರಂತರ ಸೃಷ್ಟಿ ಆಗುತ್ತಲೇ ಇದೆ. ಆದರೆ ರಕ್ತಕ್ಕೆ ಸೇರಿದೊಡನೆ ಅದು ನಾಶವಾಗುತ್ತಿದೆ. ಆ ಸಮಸ್ಯೆ ಪರಿಹಾರವಾಗುವ ಮೊದಲು ದೇಹದೊಳಗೆ ರಕ್ತಸೋರಿ ಅಪಾಯವಾಗಬಹುದು. ನನ್ನ ಸಹೋದರನ ರಕ್ತದಿಂದ ಬೇಕಾದ ಕಣಗಳನ್ನು ತೆಗೆದು ನನ್ನ ರಕ್ತಕ್ಕೆ ಸೇರಿಸತೊಡಗಿದ್ದರಿಂದ ಕನಿಷ್ಠ ಮುಂದಿನ ಹನ್ನೆರಡು ಗಂಟೆಗಳ ಕಾಲ ಏನೂ ಅಪಾಯ ಆಗದು ಎಂಬ ತುಸು ನೆಮ್ಮದಿಯ ಭಾವ ಆಸ್ಪತ್ರೆಯ ನನ್ನ ಮಂಚದ ಸುತ್ತಲೂ ಪಸರಿಸಿತು. +* +* +* +ಗಂಟೆಗೊಮ್ಮೆ ಏನೋ ಒಂದು ರಕ್ತಪರೀಕ್ಷೆ. ಸೂಜಿ ಚುಚ್ಚು ನೆತ್ತರು ತೆಗೆದಲ್ಲೆಲ್ಲಾ ರಕ್ತ ಹೆಪ್ಪುಗಟ್ಟುವುದು ನಿಧಾನವಾಗಿ ರೂಪಾಯಿಯಗಲ ನೀಲಿ ಮಚ್ಚೆ. ಕೈಯ ನರಕ್ಕೊಂದು ಟ್ಯಾಗ್‌ನಂತೆ ಸೂಜಿ ಚುಚ್ಚಿ ನಿರಂತರವಾಗಿ ಅದರ ಮೂಲಕ ಒಂದಲ್ಲ ಒಂದು ಔಷಧಿ ತಳ್ಳುತ್ತಾ ಇದ್ದರು. ದೇಹದೊಳಗೆ ಸದಾ ಹರಿಯುತ್ತಿದ್ದ ಯಾವ ಯಾವುದೋ ಮದ್ದುಗಳ ನಡುವೆ ನನಗೆ ಬಹು ಪ್ರಿಯವಾದ ಬೇಂದ್ರೆಯವರ ಕೆಲವು ಸಾಲುಗಳು ಮನಸ್ಸಿನಲ್ಲಿ ಸುತ್ತುತ್ತಿದ್ದವು. ಅದರಲ್ಲಿ ಒಂದು ‘ಅಂಬಿಕಾತನಯದತ್ತ’ ಎಂಬ ಕವನದ್ದು: +ಯಾವ ಯೋಗ ನಿದ್ರೆಯಲ್ಲಿ ಏನು ಕನಸು ಕಂಡೆನೊ| +ಯಾರ ಹಾಲನುಂಡೆನೋ|| +ಈ ವಿಶ್ವಜಾಲದಲ್ಲಿ ಬಂದೆ ಅದಕೆ ಮಿಡುಕುತ| +ಅದರ ಧಾರೆ ಹುಡುಕುತ|| +ಇನ್ನೊಂದು ಸಾಲು ‘ಕಣ್ಣಕಾಣಿಕೆ’ ಕವನದ್ದು.(ಇವೆರಡೂ ‘ಗಂಗಾವತರಣ’ ಸಂಕಲನದಲ್ಲಿರುವ ಪದ್ಯಗಳು) +ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ| +ಎಲ್ಲೋ ಏನೊ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ +ಮರವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ|| +ಅಂತರಂಗದಾ ಮೃದಂಗ ಅಂತು ತೋಂ ತನಾನಾ +ಚಿತ್ತ ತಾಳ ಬಾರಿಸುತ್ತಲಿತ್ತು ಝಂ ಝಣಾಣಾ| +ನೆನವು ತಂತಿ ಮೀಟುತಿತ್ತು ತಂ ತನನನ ತಾನಾ|| +ಈ ಸಾಲುಗಳು ನೆನಪಿಗೆ ಬಂದವೇ ಹೊರತು ಆ ಕವನಗಳ ಸಂದರ್ಭಗಳು ಕೂಡಿಬರಲಿಲ್ಲ. ಯಾಕೋ ಏನೋ ಅವು ನನ್ನ ಮನಸ್ಸೊಳಗೆ ಕೂತಿದ್ದ ‘ನಾದಲೀಲೆ’ ಯ ಬೇಟೆಗಾರನ ಸುತ್ತಲೇ ಹೊಂಚುಹಾಕುತ್ತಿದ್ದವು. ಯೋಗನಿದ್ರೆಯಲ್ಲಿ ಪವಡಿಸಿರುವ ಮಹಾವಿಷ್ಣು ಸರ್ವಾಂತ್ಯದ ಪ್ರಳಯದಲ್ಲಿ ಎಲೆಯಮೇಲೆ ಕಾಲಬೆಟ್ಟು ಚೀಪುತ್ತಾ ಮಲಗಿರುವ ಮುಗ್ಧ ಮಗು.(೫) ತಾಯಿಯ ಹಾಲನ್ನುಣ್ಣುವ ಮಗುವಿನ ಮನೋಸ್ಥಿತಿಯಲ್ಲಿ ಮಾತ್ರ ಯೋಗನಿದ್ರೆಯ ಕನಸು ಸಾಧ್ಯವೇ? ಅಥವಾ ಮಗುವಾಗಿ ಹಾಲುಣ್ಣುವ ಸ್ಥಿತಿ ಯೋಗನಿದ್ರೆಯ ಕನಸಿಗೆ ಸಮಾನವಾದ್ದೆ? ನಲವತ್ತು ದಾಟಿದ ಮಧ್ಯವಯಸ್ಸಿನ ನನ್ನಲ್ಲಿ ಈ ಮಗುವಿನ ಮನಸ್ಸು ಮಾಯವಾಗಿದೆ. ಅಗಾಧವಾದ ಈ ವಿಶ್ವಜಾಲದ ಎದುರು ಚುಕ್ಕೆಗಿಂತ ಚಿಕ್ಕದಾದ ಕಂಪ್ಯೂಟರ್ ಜಾಲದ ಅಮೆರಿಕಾದ ಕಂಪನಿಯೊಂದರ ಕೆಲಸದೊಳಗೆ ಮುಚ್ಚಿ ಮುಳುಗಿಹೋಗಿದ್ದೇನೆ. ನನ್ನೊಳಗೆ ಎಲ್ಲೋ ಹುದುಗಿರುವ ಮಗುವಿನ ಮನಸ್ಸನ್ನು ಪುನಃ ಪಡೆಯದೆ ಈ ನಾದಲೀಲೆಯ ಕೋಲಾಟದ ಕುಣಿತದಲ್ಲಿ ಭಾಗವಹಿಸಲು ಸಾಧ್ಯವೇ?(೬) +‘ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ’ ಎಂದು ನಾದಲೀಲೆಯ ನಾಯಕ ಕವನದ ನಾಯಕಿಗೆ ಹೇಳುತ್ತಿದ್ದಾನೆ. ಕೊಳಲಿನ ಕೃಷ್ಣ ಪ್ರೇಮದ ದ್ಯೋತಕ. ಜೀವಪ್ರೀತಿಯ ಮುಗ್ಧತೆಗೂ ಪ್ರತೀಕ. ಗಂಡು ಹೆಣ್ಣಿನ ಪ್ರೇಮದಲ್ಲಿ ಜೀವ ಸಂಕುಲಗೊಳ್ಳಬೇಕು. ಈ ಪ್ರೇಮದ ಅವಿರ್ಭಾವದಲ್ಲೆ ಮಗು ಹುಟ್ಟಬೇಕು. ಹಾಗಾಗಲು ಮನಸ್ಸಿನಲ್ಲಿ ಮಗುಭಾವ ಜೀವಂತವಿರಬೇಕು. ಆಗ ಮಾತ್ರ ಕೊಳಲಿನವನನ್ನು ಕಾಣಲು ಸಾಧ್ಯ. ‘ಕೊಳಲಿನವ’ ಕೇವಲ ಗೋಕುಲದ, ಪುರಾಣದ ಕೃಷ್ಣ ಮಾತ್ರ ಅಲ್ಲ. ಅವ ಎಲ್ಲಾ ಕಡೆ ಜೀವದ ಉಸಿರನ್ನು ಪ್ರೇಮದ ಕೊಳಲಿನಲ್ಲಿ ತುಂಬುವವ. +ಹಾಗಾದರೆ ಕೋಲುಸಖೀ ಎಂದು ಹಾಡುತ್ತಿರುವುದು, ನಾಟ್ಯವಾಡುತ್ತಿರುವುದು ಇನ್ನೊಬ್ಬಳು ಹೆಣ್ಣೆ? ಇಬ್ಬರು ಅಥವಾ ಅನೇಕ ಹೆಣ್ಣುಗಳು ತಮ್ಮ ಕೋಲಾಟದ ತನ್ಮಯತೆಯಲ್ಲಿ ಜೀವಸೃಷ್ಟಿಯ ಕೊಳಲಿನವನನ್ನು ಎಲ್ಲೆಲ್ಲು ಕಾಣುತ್ತಿದ್ದಾರೆಯೆ? ಆದರೆ ಕೋಲಾಟ, ಕಂಡಹಾಗೆ ಗಂಡು ಹೆಣ್ಣುಗಳು ಜೊತೆಯಾಗಿ ಹಾಡಿ ಕುಣಿದು ಆಡುವ ನಾಟ್ಯ. ಆ ಕೋಲಾಟದಲ್ಲಿ ಒಬ್ಬನು ಕೊಳಲಿನವನೆ? ಅಲ್ಲ. ಎಲ್ಲೆಲ್ಲೂ ಇರುವ ಕೊಳಲಿನವನ ಜೀವಶಕ್ತಿ ಎಲ್ಲರಲ್ಲಿ ಸೇರಿಕೊಂಡಿದೆ. ಜೀವದ ಉಸಿರೇ ಕೊಳಲು. ಅವ ಕೇವಲ ಕೃಷ್ಣನಲ್ಲ. ಅವನು ಕೊಳಲಿನಿಂದ ಈ ಸಖಿಯರ ನಾಟ್ಯಕ್ಕೂ ನಾದಕ್ಕೂ ತಾಳಲಯದ ಶೃತಿಯಲ್ಲಿ ಸೇರಿಕೊಂಡು ಜೀವದ ಆಟ ಆಡಬಲ್ಲವನು. ಕೃಷ್ಣನೂ ಸತ್ತದು ಬೇಟೆಗಾರ ಜಿಂಕೆಯೆಂದು ಹೊಡೆದ ಬಾಣ ತಾಗಿ. ಬೇಟೆಗಾರ ಕೊಳಲಿನವನನ್ನೂ ಬಿಟ್ಟವನಲ್ಲ. ಔಷಧಿಯ ನಿದ್ರೆ ಎಚ್ಚರಗಳ ಸಂಗಮದಲ್ಲಿ ಕೊಂಡಿಕಳಚುವ ನೆನಪುಗಳು. +ಕಲ್ಪದಾದಿಯಲ್ಲಿ ಉಂಟಾದ ವಿರಹದ ಬಳಿಕ, ನೆಲದಮಣ್ಣು ತಾಗಿ, ಮರೆವೆಗೊಂಡು ಬಿದ್ದಿರುವಾಗ, ಅವನ ಹುಡುಕಿ ಕಾಂಬ ಹೊಸ ಕಣ್ಣು ಹಚ್ಚುವವನೋ ಕೊಲ್ಲಬಲ್ಲ ಈ ಬೇಟೆಗಾರ? ಅರ್ಥಾತ್ ಕೊಂದೂ ಬದುಕಿಸುವ ಕೆಲಸ. ಅದು ಸುಟ್ಟು ಹುಟ್ಟಿಸುವ ಭಾವ. ಮೂಲರತಿಯ ತೇವ ಸೋಕುವ ಬೇಟದ ಬಗೆ ಅದು.(೭) +ಹಣೆಯ ಕಣ್ಣು ಹುರಿದ ಮೇಲನಂಗವಾದ ಭಾವ +ತಾನೆ ರಸವೆ ಆಯ್ತು ಸೋಕೆ ಮೂಲ ರತಿಯ ತೇವ +ಕಣ್ಣಿನಾರತಿಯನು ಎತ್ತಿ ಒತ್ತಿ ಬಂತು ಜೀವ|| (ಕವನ:ಕಣ್ಣಕಾಣಿಕೆ) +* +* +* +ಮಾರನೆಯದಿನ ನನ್ನ ಒತ್ತಿನ ತಮ್ಮನ ದೇಹದಿಂದ ಹೀರಿ ಮೊದಲ ಬಾರಿ ನೀಡಿದ್ದ ರಕ್ತದ ಪ್ಲೇಟ್‌ಲೆಟ್ ಕಣಗಳನ್ನೆಲ್ಲಾ ನನ್ನ ದೇಹದ ಒಳಗಿನ ವ್ಯವಸ್ಥೆಯೇ ಕೊಂದು ಹಾಕಿದೆ. ಪುನಃ ಕಣಗಳ ಸಂಖ್ಯೆ ಒಂಭತ್ತು ಸಾವಿರದಿಂದ ಕೆಳಗೆ ಇಳಿಯತೊಡಗಿದೆ. ಕಮ್ಮಿಯಾಗಿದ್ದ ಬಿಳಿರಕ್ತಕಣಗಳು ದೇಹದಲ್ಲಿ ವ್ರಿದ್ಧಿಸಿವೆ. ಆದರೆ ಈ ಹೊಸ ಬಿಳಿ ರಕ್ತಕಣಗಳಿಗೆ ಯಾವುದು ವೈರಿಯಾವನು ಗೆಳೆಯ ಎಂಬುದು ತಿಳಿಯದೆ ದೇಹದೊಳಗಿನ ಪ್ಲೇಟ್‌ಲೆಟ್ ಕಣಗಳನ್ನೆಲ್ಲಾ ಯದ್ವಾತದ್ವಾ ಕೊಂದುಹಾಕುತ್ತಿವೆ. ದೇಹದೊಳಗೆ ಇಮ್ಯುನಿಟಿ ಸಿಸ್ಟಮ್ ಇದ್ದಕ್ಕಿದ್ದಂತೆ ವಿಪರೀತ ಏರುಪೇರಾಗಿದೆ. ಅದಕ್ಕೆ ಡೆಂಗು, ಪಾರ್‍ವೊ, ಅಥವಾ ಹೀಗೆ ಯಾವುದಾದರೂ ವೈರಸ್ ಕಾರಣವೋ, ಅಥವಾ ಏನಾದರೂ ಬ್ಯಾಕ್ಟೀರಿಯಾಗಳೆ(ಲೆಪ್ರೋಸ್ಪೆರೋಸಿಸ್ ಎಂಬ ಪಿತ್ತಕೋಶ, ಕರುಳುಗಳಿಗೆ ತಗಲುವ ರೋಗ) ಅಥವಾ ಯಾವುದಾದರೂ ಔಷಧಿಯ ಈ ತನಕ ತಿಳಿಯದಿದ್ದ ದುಷ್ಪರಿಣಾಮವೋ? ಯಾವುದೂ ಇದಮಿತ್ಥಂ ಎಂಬ ಪರೀಕ್ಷೆಗೆ ಸಿಗುತ್ತಿಲ್ಲ. +ಹೊರಗಿನಿಂದ ಹೊಸತಾದ ಪ್ಲೇಟ್‌ಲೆಟ್ ರಕ್ತಕಣಗಳನ್ನು ತುಂಬಿಸಬೇಕು. ದೇಹವೇ ಉತ್ಪಾದಿಸುತ್ತಿರುವ ರಕ್ತಕಣಗಳನ್ನು ರಕ್ಷಿಸಬೇಕು. ದೇಹದ ಒಳಗೆ ಎಲ್ಲೂ ರಕ್ತಸ್ರಾವವಾಗಬಾರದು. ನನಗೋ ಅಸಾಧ್ಯವಾದ, ತಡೆಯಲಾರದ ಹೊಟ್ಟೆನೋವು, ನಿಧಾನವಾಗಿ ಹೆಚ್ಚುತ್ತಿರುವ ತಲೆನೋವು. ಹೊಟ್ಟೆಯೊಳಗೆಲ್ಲಾದರೂ ಸಣ್ಣದಾಗಿ ರಕ್ತಸ್ರಾವ ಪ್ರಾರಂಭವಾಗಿದ್ದರೆ ಏನು ಗತಿ ಒಂದು ಎಂ.ಡಿ. ಓದಿರುವ ನನ್ನ ಕೊನೆಯ ತಮ್ಮನಿಗೆ ದಿಗಿಲು. ಗಂಟೆಗೊಮ್ಮೆ ರಕ್ತದ ಒತ್ತಡ ಪರಿಕ್ಷೆ, ಶಾಂತಚಿತ್ತರಾಗಿರಿ ಎಂದು ವೈದ್ಯರ ಸಲಹೆ. ನನ್ನ ತಮ್ಮ ಅವನ ದೇಹದಿಂದ ಬೇಕಾದ ರಕ್ತಕಣಗಳನ್ನು ಸಂಗ್ರಹಿಸಿ ತರಲು ಹೊರಟ. ನನಗೆ, ಆ ಬೇಟೆಗಾರನನ್ನು ಜೀವಶಕ್ತಿಯ ಆಟದಲ್ಲಿ ನಾದಲೀಲೆಯಲ್ಲಿ ಮೀರುವ ಬಗ್ಗೆ ಯಾರಲ್ಲಾದರೂ ಮಾತಾಡುವ ಆಸೆ. ಆಸ್ಪತ್ರೆಯ ಮಂಚದ ಬಳಿ ಮಡಿಕೇರಿಯಿಂದ ನನ್ನನ್ನು ನೋಡಲು ಬಂದಿದ್ದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ತಲ್ಲಣಗೊಂಡು ಕೂತಿದ್ದ. ಅವನೊಡನೆ ಬೇಂದ್ರೆಯ ಬೇಟೆಗಾರನ ಬಗ್ಗೆ ಹೇಳಹೊರಟಾಗ, ಅವನು, ನೀನೀಗ ಆಯಾಸಗೊಳ್ಳಬಾರದು, ಸ್ವಲ್ಪ ಕಣ್ಣುಮುಚ್ಚಿ ನಿದ್ರಿಸಲು ಪ್ರಯತ್ನಿಸು ಎಂದ. +ನನಗೆ ಅದೇ ನಿದ್ರೆ ಎಚ್ಚರಗಳ ಗುಂಗು. ಸಾಮಾನ್ಯ ಸ್ಥಿತಿಯಲ್ಲಿ ಒಬ್ಬನ ದೇಹ ಒಂದು ತಿಂಗಳಲ್ಲಿ ಅದರ ಇಮ್ಯುನಿಟಿ ಸಿಸ್ಟಮ್‌ಗಾಗಿ ಉತ್ಪಾದಿಸುವಷ್ಟು ಸ್ಪಿರಾಯ್ಡ್‌ನ್ನು ಔಷಧಿರೂಪದಲ್ಲಿ ಒಂದು ಗಂಟೆಯ ಅವಧಿಯಲ್ಲಿ, ಪ್ಲೇಟ್‌ಲೆಟ್ ಕಣಗಳನ್ನು ರಕ್ಷಿಸುವುದಕ್ಕಾಗಿ, ನನ್ನ ದೇಹಕ್ಕೆ ನೀಡುತ್ತಿದ್ದರು. ಬಿಳಿರಕ್ತಕಣಗಳನ್ನು ನಿಯಂತ್ರಿಸುವುದಕ್ಕೆ ಅದು ಸಹಕಾರಿ. ಸ್ಪಿರಾಯ್ಡ್ ದೇಹದಲ್ಲಿ ಹಸಿಯಾದ ಚೈತನ್ಯವನ್ನೂ ಉಲ್ಲಾಸವನ್ನೂ ಸೃಷ್ಟಿಸುತ್ತದೆ. ಆ ಮಂಪರಿನಲ್ಲಿ ಬೇಟೆಗಾರನನ್ನು ಲಕ್ಷಿಸದೆ ಎಲ್ಲೂ ಇರುವ ಕೊಳಲಿನವನ ಚಿತ್ರ ಹೆಚ್ಚು ಗೋಚರಿಸತೊಡಗಿತು. +ಕೋಲು ಸಖೀ ಎಂದು ಕೋಲಾಟದ ನೃತ್ಯವನ್ನು ನಾದಲೀಲೆ ಮಾಡುವ ತಾಳ-ಲಯದ ಶುದ್ಧಿಯೇ ಬ್ರಹ್ಮಾಂಡದ ಚಲನೆಯ ರೂಪದಂತೆ ಭಾಸವಾಯಿತು. ಆ ಜೀವನೋತ್ಸಾಹದ ಕುಣಿತವೂ(೮) ನಾದದಲ್ಲಿ ಸೇರಿಕೊಂಡ‘ಲೀಲೆ’ ಯ ಅವಿಭಾಜ್ಯವಾದೊಂದು ಅಂಗದಂತಿದೆ. ಅಂತಹ ಜೀವದ ಲೀಲೆಗೆ ಶೃತಿ ಸೇರಿಸಬಲ್ಲವನು ಎಲ್ಲು ಇರುವ ಕೊಳಲಿನವನು. ಹೊರ ಕಣ್ಣಿಗೆ ಕಾಣದೆಯೂ, ಕುಣಿತದೊಳಗಿನ ನಾದದಿಂದ ಕಿವಿಯ ಮೂಲಕ ಗೋಚರಿಸಬಲ್ಲ ಸಮಶೃತಿಯವನು. ಅವನ ಕೊಳಲು ಕೇವಲ ಗಾಳಿಯೂದುವ ಕೊಳವೆ. ಆದರೆ ಅದು ಜೀವ ಪ್ರೇಮದ ಪ್ರಾಣತುಂಬುವ ಗಾಳಿ. +ಕೊಳಲಿನೊಳಗೆ ಪ್ರಾಣತುಂಬುವ ಗಾಳಿಯ ನೆನಪಿನಿಂದ ‘ನಾದಲೀಲೆ’ ಪ್ರಾಣವಾಯು ಕೇಂದ್ರಿತವಾಗಿ ಕಾಣತೊಡಗಿತು. ಬೇಟೆಗಾರನ ಬಾಣ ಉಸಿರನ್ನು ನಿಲ್ಲಿಸುವಂತಹದ್ದು. ನಾದಲೀಲೆಯ ಜೀವತನ್ಮಯತೆ ಪ್ರಾಣವಾಯುವನ್ನು ಪ್ರೇರೇಪಿಸುವಂತಹದ್ದು. ಎಲ್ಲಿತ್ತೋ ಏನೂ. ಅನಾಯಾಸವಾಗಿ ಎಚ್ಚರದ ಕನಸಿನಲ್ಲಿ ಎಂಬಂತೆ ಕವನದ ವಿವರಗಳು ಒಂದರ ಮೇಲೊಂದು ಕೂಡಿ ಬಂದು ಕಾಣತೊಡಗಿದವು. +ಆ ಜಿಂಕೆಗಳು ಕತ್ತಲೆ ಕಳೆದು, ಮುಂಜಾವದ ಗಾಳಿಯನ್ನು (ಎಲರು)ಮೂಸಿ ನೋಡುತಿರುವುವು. ಅಲ್ಲಿನ ನಸು ಬೆಳಕು, ಬೀರುತ್ತಿರುವ ಪ್ರಾಣವಾಯುವನ್ನು ಹೀರುತ್ತಾ ಇರುವ ‘ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ’ ಗಳು ಉತ್ತು ಬಿತ್ತುವ ಪ್ರಕೃತಿಗೆ ಪೋಷಕವಾಗಿರುವ ಸಾಕುಪ್ರಾಣಿಗಳು. ಉಲ್ಲಾಸದಲ್ಲಿ ಕುಣಿವ ದನದ ಕರು, ಸುಂದರವಾದ ಎಳೆ ಎಮ್ಮೆ ಕರು(ಮಣಕ) ಮನುಷ್ಯರಿಗೆ ನಿತ್ಯ ಕಾಣುವ ಇನ್ನೊಂದು ಬಗೆಯ ಜೀವಸಮೂಹ. ಜೀವ ಚೈತನ್ಯದ ಅಭಿರೂಪಗಳು. ಅಲ್ಲಿ ಬೇಟೆಗಾರ ಪ್ರತ್ಯಕ್ಷ ಬರಲಾರ. ಆದರೆ ಪರೋಕ್ಷವಾಗಿ ಕೊಳಲಿನವನಂತೆ ಎಲ್ಲಾ ಕಡೆ ಅವನಿದ್ದಾನೆ. ಆದರೂ ಪ್ರಾಣಿಸಂಕುಲ ಬೇಟೆಗಾರನ ಭಯವನ್ನು ಮೀರಿದೆ. ಪ್ರಾಣವಾಯುವನ್ನು ಹೀರುವ ಕ್ರಮದಲ್ಲೇ ಜೀವ ಚೈತನ್ಯ ಬೇಟೆಗಾರನನ್ನು ಮರೆತು ಬದುಕುವ ಕ್ರಮ ಅಡಗಿದೆ ಅನಿಸಿತು. +ಈ ಪ್ರಾಣವಾಯುವಾದರೋ ಬಹು ಸುಂದರವಾದ್ದು. ಸುವಾಸನೆ ಉಳ್ಳದ್ದು. ಬೆಳ್ಳಿ ಚುಕ್ಕೆ(ಬೆಳಗಾತ ಚಿಕ್ಕದಾಗುತ್ತಾ ಮಾಯವಾಗುವ ಶುಕ್ರಗ್ರಹ)ಸಣ್ಣದಾಗುತ್ತಾ(ಚಿಕ್ಕೆಯಾಗಿ) ಮುಳುಗುವ ಮುಂಜಾವಿನ ಎಲರಿನಲ್ಲಿ ಚಿಗುರು, ಹೂಗಳ ಆಹ್ಲಾದ ಇದೆ. ಅದು ಪ್ರಾಣವಾಯುವಾದ ಬಳಿಕ ಅರೆ ಬಿರಿದ ಮೊಗ್ಗೆಯ(ಮುಕುಲ)ವಿಕಾಸಗೊಂಡ ಹೂವಿನ (ಅಲರು) ಅರಳಿದ ಪುಷ್ಪದ (ಮಲರು) ಸುವಾಸನೆಯ ಹರಡುವಿಕೆ(ಪಸರು) ಸೇರಿದೆ. ಪ್ರಾಣವಾಯು ಗಂಧಗಾಳಿ ಪ್ರಕೃತಿಯ ಅಹ್ಲಾದವಾಗಿ ವ್ಯಾಪಿಸಿದೆ. ಜೊತೆಗೆ ಅರೆಬಿರಿದ ಮೊಗ್ಗೆ (ಮುಕುಲ) ಬೆಳೆದು ಅರಳಿ ಪ್ರಕೃತಿ ತುಂಬಾ ಪಸರಿಸಿ ನೋಡುವಲ್ಲೆಲ್ಲಾ ಕಣ್ಣು ಸೋಲುವಂತಾಗಿದೆ. ಹಾಗೆ ಹಬ್ಬಿದ ಪುಷ್ಪರಾಶಿಗಳೇ ದುಂಡಗಾದ ದೊಡ್ಡ ಮಾಲೆಯಾಗಿದೆ. ನಲ್ಲನೆಡೆಗೆ(ಕಾದಲ) ನಲ್ಲೆ(ಕಾದಲೆ) ಖಂಡಿತಾ ಬಹಳು. ಸಮಸ್ತ ವಿಶ್ವವೇ ಈ ಸಮಾಗಮದಲ್ಲಿ ತೊಡಗಿಕಂಡಂತೆ, ಅವಳ ಬಳಿ ಸಮಸ್ತ ಪ್ರಕೃತಿಯೇ ಒಂದು ಪುಷ್ಪಮಾಲೆಯಾಗಿದೆ. +ಅರರೆ, ಈ ತರಳ ಎರಳೆ, ಹರಿಣಿಗಳಿದ್ದಲ್ಲಿ ಕೈಯಲ್ಲಿ ಹೂಮಾಲೆ ಹಿಡಿದ ನಲ್ಲೆ, ನಲ್ಲರು. ಇನ್ನಿಲ್ಲಿ ಬೇಟೆಗಾರನಿಗೇನು ಕೆಲಸ? ಈ ನಲ್ಲನಲ್ಲೆಯರ ಸುತ್ತ ಕೋಲು ಸಖೀ ಚಂದ್ರಮುಖೀ ಎಂದು ಸುಗ್ಗಿಯ ಉತ್ಸಾಹದ ಕೋಲಾಟ ನಡೆಯುತ್ತಿದೆ. ಇನ್ನೀಗ ಹೂಮಾಲೆ ಹಿಡಿದವರೂ ಕುಣಿಯಬೇಕೆ? ಪ್ರಶ್ನೆಗಳು. ಉತ್ತರವಿಲ್ಲ. ಎಚ್ಚರಗೊಂಡಾಗ ತಲೆನೋವು, ವಿಪರೀತ ಹೊಟ್ಟೆನೋವು. ಕಣ್ಣುಮುಚ್ಚಿದರೆ ಏನೇನೋ ಅಸ್ಪಷ್ಟ ಚಿತ್ರಗಳು(ಅದು ಸ್ಟಿರಾಯ್ಡ್ ಔಷಧಿಯ ಸೈಡ್ ಎಫೆಕ್ಟ್‌ಗಳಲ್ಲಿ ಒಂದು ಎಂದು ಆಮೇಲೆ ತಿಳಿಯಿತು). ಹಾಗೆ ಕನ್ಣು ಬಾಡಿ ತುಸು ನಿದ್ರೆಗೆ ಜಾರುವಂತಾದರೆ ಕೋಲಾಟದಂತಹ ಯಾವುದೋ ನೃತ್ಯ, ಅಸ್ಪಷ್ಟ ಸಂಗೀತ. ಸುಂದರವಾದ ಹೂದೋಟದಂತಹ ಬನ. +ವೈದ್ಯನಾದ ನನ್ನ ತಮ್ಮ ಅವನ ರಕ್ತದಿಂದ ಬೇರ್ಪಡಿಸಿದ ಪ್ಲೇಟ್‌ಲೆಟ್ ಕಣಗಳ ಪ್ಯಾಕೆಟ್ ಹಿಡಿದುಕೊಂಡು ಬಂದ. ಆ ಕಣಗಳನ್ನು ನನ್ನ ದೇಹದೊಳಗೆ ತುಂಬಿಸಿ ಒಂದು ಗಂಟೆ ಬಳಿಕ ಪುನಃ ಸೂಜಿ ಚುಚ್ಚಿ ರಕ್ತತೆಗೆದು ಕಣಗಳ ಪರೀಕ್ಷೆ. ನಾನು ಬಹಳ ಆಯಾಸಗೊಂಡಿದ್ದೆ. ಮೈಕೈ ನೋವು. ಎಲುಬಿಗೆ ಚುಚ್ಚಿದ ಬೇನೆ. ನನಗೇ ಅರಿಯದಂತೆ ಗಾಢನಿದ್ರೆಗೆ ಸಂದು ಹೋಗಿದ್ದೆ.೯ +ರಾತ್ರಿ ಯಾವಾಗಲೋ ಎಚ್ಚರ ಅಥವಾ ಅದು ಎಚ್ಚರವಾದಂತೆ ಕನಸೋ, ಈಗ ಹೇಳಲಾರೆ. ಪುರಾತನವಾದ ನಮ್ಮ ಊರುಮನೆಯಲ್ಲಿ(ಅದು ೧೮೫೯ರಲ್ಲಿ ನನ್ನ ಅಜ್ಜನ ಅಜ್ಜ ಕಟ್ಟಿಸಿದ ಮನೆ) ನನ್ನ ಚಿಕ್ಕಪ್ಪ ಪೂಜೆ ಮಾಡಿ ಮಂಗಳಾರತಿ ಊದುತ್ತಿದ್ದ ಶಂಖ ನನ್ನ ಬಳಿ ಹಾಸಿಗೆಯಲ್ಲಿದೆ. ಅರೆರೆ ಇದು ಶಂಖವಲ್ಲ, ನಾದಲೀಲೆ ಸಂಕಲನದ ಮುಖಪುಟದ ಚಿತ್ರ.೧೦ ಈ ಪುಸ್ತಕ ಇಲ್ಲಿಗೆ ಹೇಗೆ ಬಂತು? ನಾನು ಆಸ್ಪತ್ರೆಯಲ್ಲಿ ಓದಲು ಹೆಂಡತಿಯಲ್ಲಿ ತರಲು ಹೇಳಿದ್ದು ಅರ್ಧ ಓದಿ ಇಟ್ಟಿದ್ದ ಜಿ.ಎಚ್.ನಾಯಕರ ‘ಹರಿಶ್ಚಂದ್ರಕಾವ್ಯ’ ದ ಮೇಲಿನ ವಿಮರ್ಶೆ, ‘ಗುಣಗೌರವ’ ಹಾಗೂ ಇತ್ತೀಚಿಗೆ ಬಂದ ಆಲನಹಳ್ಳಿಯ ಸಮಗ್ರ ಕಥೆಗಳ ಸಂಕಲನ. ‘ನಾದಲೀಲೆ’ ಪುಸ್ತಕ ತರಲು ಹೇಳಿಲ್ಲ. ಬಹುಶಃ ಸ್ಟಿರಾಯ್ಡ್ ಔಷಧಿಯ ಭ್ರಮೆಯಾಗಿರಬಹುದು. ಬೆಳಿಗ್ಗೆ ಎಂಟುಗಂಟೆಗೆ ಮುಖ್ಯ ಡಾಕ್ಟರು ಬರುವಾಗ ರಕ್ತಕಣಗಳ ಪರೀಕ್ಷೆಯ ಹೊಸ ರಿಪೋರ್ಟು ಬೇಕು. ಹಾಗಾಗಿ ನಸುಕಿಗೆ ಮೊದಲೆ ರಕ್ತ ತೆಗೆಯಲು ದಾದಿ ಎಬ್ಬಿಸುತ್ತಾಳೆ. ಬೆಳಗಿನ ತನಕ ಚೆನ್ನಾಗಿ ನಿದ್ದೆ ಮಾಡಬೇಕು. +ಕನಸೋ,ಎಚ್ಚರವೋ, ಭ್ರಮೆಯೋ ಎಂದು ಈಗ ಹೇಳಲಾರದಂತ ಸುಂದರ ಬೆಳಗಾತ. ಅಹ್ಲಾದ ಚೈತನ್ಯದ ಸುಗ್ಗಿ. ತಿರುಚೆಂದೂರಿನ ಕಡಲ ಕಿನಾರೆಯಲ್ಲಿ೧೧ ದಶಕಗಳ ಹಿಂದೆ ನೋಡಿದ ದುಂಡಗಿನ ಕೆಂಪಗಿನ ಸೂರ್ಯೋದಯ. ಕತ್ತಲಿನ ಹಿಂಸೆಯೆಲ್ಲಾ ಕಳೆದೇ ಹೋಗಿದೆ. (ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ? ಕೇಳುವ ಪ್ರಶ್ನೆಯ ರೆಟರಿಕ್‌ನಲ್ಲೆ ಸಮಾಧಾನದ ಉತ್ತರ ಅಡಗಿದೆ.) ನೆನಪಿಗೆ ಬಂದ ಒಂದು ವಾಕ್ಯ ‘ಮುಗಿಲ ಬಾಯ ಗಾಳಿ ಕೊಳಲ ಬೆಳಕ ಹಾಡ ಬೀರಿ.’ ಇದೇನಿದು! ಭೂಮಿ ಆಕಾಶಗಳನ್ನು ಒಟ್ಟಿಗೆ ಬೆಸೆಯುವ ಗಾಳಿ ಕೊಳಲು. ಇದು ಕರೆವ ಕರುವನ್ನು ಸೆಳೆವ ಗೋಪಾಲನ ಬಿದಿರು ಕೊಲಲಲ್ಲ. ಕೊಳಲಿನವನು ಎಲ್ಲು ಇಹನು ಎಂದರೆ ಆಕಾಶ ಭೂಮಿಯನ್ನು ಒಂದು ಮಾಡುವವನೆ? ಇಲ್ಲೀಗ ಅದು ಮುಗಿಲು ಬಾಯ ಗಾಳಿಕೊಳಲು. ಇನ್ನೊಂದು ಕಡೆ ಅದು ‘ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!’ ಎಂಬ ಬೇಂದ್ರೆಯ (‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನ)ಸಾಲಲ್ಲವೆ?ನೆನಪು ಸ್ಪಷ್ಟವಾಗಲಿಲ್ಲ. +‘ಮುಗಿಲಬಾಯ ಗಾಳಿ ಕೊಳಲ ಬೆಳಕ ಹಾಡ ಬೀರಿ/ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?’ ಇನ್ನು ಕೊಳಲಿನವನ ಕಾಣೆ ಎಂಬುದು ಸಾಧ್ಯವಿಲ್ಲ. ಕೃಷನ(ಕೊಳಲಿನವನ)ವಿಶ್ವರೂಪದರ್ಶನದಂತೆ ಮೂರ್ತೀಕರಣಗೊಂಡ(Peಡಿsoಟಿiಜಿiಛಿಚಿಣioಟಿ)ಮುಗಿಲು. ಅದರ ಬಾಯಲ್ಲಿ ಇರುವುದು ಗಾಳಿಯ ಕೊಳಲು. (ಹಾಗೆಯೇ ಮುಗಿಲಿನ ಬಾಯಿಯೂ ಗಾಳಿಗೆ ಕೊಳಲು.) ಪ್ರೇಮದ ಲಹರಿ, ಜೀವ ಪ್ರಾಣದ ಉಸಿರು, ವಿಶ್ವಶೃತಿಯ ನಾದ ಎಲ್ಲಾ ಒಂದು ನಿರಂತರ ನಾಟ್ಯದಲ್ಲಿ ತೊಡಗಿದ, ಜೀವ-ಸಾವು ಸೇರಿಕೊಂಡ ಚಲನೆಯ ಒಂದು ಆಟದಂತೆ (ಲೀಲೆ) ಕೊಳಲೇ ಗಾಳಿಯಾಗಿ ಗಾಳಿಯೇ ಕೊಳಲಾಗಿ ಸೇರಿಕೊಂಡಿದೆ. ಮುಗಿಲಿನಿಂದ ಮಳೆ, ಬೆಳೆ, ಬಿತ್ತನೆ, ಜೀವರಾಶಿಯ ಚಿಗುರು. +ಆ ಕೊಳಲಿನಿಂದ ಮುಂಜಾವದ ಎಲರು ಪ್ರಾಣವಾಯುವಾಗಿ ಭೂಮಿ ಆಕಾಶಗಳನ್ನು ವ್ಯಾಪಿ‌ಅಬಲ್ಲದು. ಈ ಗಾಳಿ ಕೊಳಲು ಬೀರುವುದು ಬೆಳಕಿನ ಹಾಡನ್ನು. ಪುನಃ ಕಣ್ಣು, ಕಿವಿಗಳ ಅನುಭವ.೧೨ ಮೈಯನ್ನು(ತ್ವಚೆ) ಸ್ಪರ್ಶಿಸುವ ಗಾಳಿ. ಆ ಗಾಳಿಯಲ್ಲಿ ಮೂಗಿಗೆ ತಾಕುವ ಅಲರು, ಮಲರುಗಳ ಕಂಪು. ನಾಲಗೆಯಿಂದ(ಗಾಳಿ ಮೂಲಕ) ಹಾಡುವ ಹಾಡು. ಹೀಗೆ ಪಂಚೇಂದ್ರಿಯಗಳ ಮೂಲಕ ಪ್ರವೇಶಿಸಿ ಬದುಕಿನ ಪ್ರೀತಿಯ ಜೀವಚೈತನ್ಯವನ್ನು ಅಂತರಾಳದ ಅನುಭವವಾಗಿ ಪಡಿಮೂಡಿಸುವ ಗಾಳಿ ಕೊಳಲು ಪ್ರಾಣವಾಯುವಾಗಿ ಆವರಿಸಿದೆ. ಹಿಂದೆ ಕೊಳಲಿನವನು ಎಲ್ಲು ಇಹನು ಎಂಬುದು ಈಗ ಮುಗಿಲ ಬಾಯ ಗಾಳಿಕೊಳಲ ಮೂಲಕ ವಿಸ್ತರಿಸಿ ಪೃಥ್ವಿ ಅಂತರಿಕ್ಷಗಳಲ್ಲಿ ವ್ಯಾಪಿಸಿದೆ. ಸಹೃದಯರಿಗೆ ಇದೊಂದು ಅತ್ಯದ್ಭುತವಾದ ‘ಕಾವ್ಯಾನುಭವ’ . +ಇಲ್ಲಿ ಮುಗಿಲ ಬಾಯ ಕೊಳಲು ಬೀರುವಮ್ತಹದ್ದು ಬೆಳಕಿನ ಹಾಡು. ‘ಬೀರು’ ಎಂದರೆ ‘ಹರಡು’ (Sಠಿಡಿeಚಿಜ)’ ‘ಪ್ರಸಾರ ಮಾಡು’ (bಡಿoಚಿಜಛಿಚಿsಣ) ಎಂಬ ಹಾಡು (ಧ್ವನಿ) ಹಾಗೂ ಬೆಳಕು ಎರಡಕ್ಕೂ ಹೊಂದುವ ಅರ್ಥ ಇವೆ. ರೈತನು ಹೊಲದಲ್ಲಿ ಭತ್ತದ ನೇಜಿ ಹಾಕಲು ಬಿತ್ತನೆ ಬೀಜಗಳನ್ನು ಬೀರುತ್ತಾನೆ. ಮುಂದೆ ಅವು ಬೆಳೆಯುತ್ತವೆ. ‘ನಾದ’ ಲೀಲೆಗೆ ಇಲ್ಲಿ‘ಹಾಡು’ ಇದೆ. ಆದರೆ ಅದು ಬೆಳಕಿನ ಹಾಡು. ಕತ್ತಲನ್ನು ಕಳೆದು ಅದು ಬೆಳಗಾಗಿ ದಿನವಾಗಿ ಬೆಳೆಯುತ್ತದೆ. ಬೆಳಕು ಕಿವಿಗಲ್ಲ. ಆದರೆ, ಇಲ್ಲಿ ಬೆಳಗಿಗೂ ನಾದಮಯವಾದ ಹಾಡಿನ ಒಂದು ಲಯವಿದೆ. ಹಾಡಿಗೂ ಬೆಳಗುವ ಹೊಳಪಿದೆ. ಅಂತಹ ಬೆಳಕ ಹಾಡನ್ನು ಮುಗಿಲು (ಆಕಾಶ) ಬೀರಿದಾಗ(ಅದು ಕತ್ತಲನ್ನು ಕಳೆದು ಬೆಳಕನ್ನು ತರುವ ಹಾಡು) ಗಾಳಿ ಕೊಳಲಿನ ಪ್ರೇಮ ಚೈತನ್ಯ ಆವಾಹನೆಗೊಂಡು ಕಂಗೊಳಿಸುವ ಕೆಂಪು ಇರಲಿ; ಬೇಕಾದರೆ ಕಂಗೆಡಿಸುವ ಮಂಜು ಬರಲಿ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಈ ಆತ್ಮವಿಶ್ವಾಸ ಬೇಟೆಗಾರನನ್ನು ಮರೆಸಿಬಿಡುತ್ತದೆ. ಅಲ್ಲಿ ಬೇಟೆ ಇಲ್ಲ. ಅದೆಲ್ಲ ಒಂದು ಆಟವಾಗಿ ತೋರುತ್ತದೆ. +ಆಟವೆಂದರೆ ಮಗುವಿನ ಆಟ. ಸೃಷ್ಠಿ ಕ್ರಿಯೆಯಲ್ಲಿ ಕೂಡುವ ಬೇಟದ ಆಟ. ಅದೂ ಬೇಟದ ಒಂದು ಬಗೆ(ಬೇಟೆಯಲ್ಲ;ಆಟವೆಲ್ಲ;ಬೇಟದ ಬಗೆ, ನಾರಿ.)ಈ ಜಗವೆಂಬ ನಾಟಕ ರಂಗದ ಒಂದು ಆಟ. ‘ನಾದಲೀಲೆ’ ಯ ಕೋಲಾಟದ ಭಾಗವಾದ ಆಟ. ‘ಲೀಲೆ’ ಯೆಂಬ ಆಧ್ಯಾತ್ಮಿಕ ಕಲ್ಪನೆಯ ಅಂಗವಾದ ಆಟ. ನಾದವೇ ಲೀಲೆಯಾದ ಸೃಷ್ಠಿಯ ಆವರ್ತನಲಯದ ತಾಳಮೇಳಗಳು ಕೂಡುವ ಸಮಶೃತಿಯ ಆಟ. ಬ್ರಹ್ಮಾಂಡದ ಲೀಲೆಯನ್ನು ಹಿಡಿದಿಡುವ ಬೇಟದ ಬಗೆ ಇದು. +ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾಗ ಇಷ್ಟು ಸ್ಪಷ್ಟವಾದ ಕಲ್ಪನೆ ಬಂದಿತ್ತೆಂದು ಹೇಳಲಾರೆ. ಕತ್ತಲು ಕಳೆದ ಸುಂದರ ಬೆಳಗಿನ ಒಮ್ದು ಕಲ್ಪನೆ ಸ್ಪಷ್ಟವಿತ್ತು. ಅದು ಬೇಂದ್ರೆಯ ‘ಬೆಳಗು’ ಕವನವನ್ನು ಮೂಡಲ ಮನೆಯಾ ಮುತ್ತಿನ ನೀರಿನ/ಎರಕವ ಹೊಯ್ದಾ) ‘ಬೆಳ್ಳಿಮೋಡ’ ಸಿನಿಮಾದಲ್ಲಿ ಹಾಡಿದ ದಾಟಿಯ ನೆನಪು ತಂದಿತ್ತು. ಅಲ್ಲಿ ಬೆಳಕಿನ ಸಂಭ್ರಮ ಸಂಮೃದ್ಧಿ. ಬೇಟೆಗಾರ ಮಾಯವಾದ ಅಥವಾ ಆ ಬೇಟೆಗಾರ ಈ ಬ್ರಹ್ಮಾಂಡವನ್ನು ಆವರಿಸಿರುವ ಮಧುರ ನಾದದ ಜೀವ ತಂತುಗಳ ಸೃಷ್ಟಿಲೀಲೆಯ ಭಾಗವಾಗಿ ಸೇರಿ ಹೋದಂತೆ ನನಗೆ ಭಾಸವಾಯಿತು. ಅದು ಅರೆಪ್ರಜ್ಞಾವಸ್ಥೆಯ ಅಥವಾ ಸುಷುಪ್ತ ಸ್ಥಿತಿ ಎನ್ನಬಹುದಾದ ಕನಸು ಎಚ್ಚರಗಳ ಸಂಗಮದ ಅನುಭವವೂ ಆಗಿದ್ದಿರಬಹುದು. ಭಾವಸ್ಮೃತಿಯಲ್ಲಿ ಅವೆಲ್ಲಾ ಬಹುಶಃ ಕಲಸಿಕೊಳ್ಳುತ್ತಿದ್ದವೇನೋ. +ಬೆಳಗಾತ ನಾಲ್ಕೂವರೆ ಗಂಟೆಗೆ ದಾದಿ ಬಂದು ಎಬ್ಬಿಸಿದಳು. ಆ ದಾದಿ ಕ್ರಿಚ್ಯನ್ ಸನ್ಯಾಸಿನಿ.-ವಿಜಯಶಂಕರ್, ಈ ತನಕ ನಿನಗೆ ಬೇಕಾದ ರಕ್ತಕಣಗಳು ಏರುತ್ತಾ ಇಲ್ಲ ಅಲ್ಲವೆ? ನಾನು ಪರೀಕ್ಷೆಗೆ ನಿನ್ನ ರಕ್ತ ತೆಗೆಯುವ ಮೊದಲು ಸರ್ವಶಕ್ತನಾದ ದೇವರನ್ನು ಪ್ರಾರ್ಥಿಸುತ್ತೇನೆ. ನಿನ್ನ ರಕ್ತದ ಪ್ಲೇಟ್‌ಲೆಟ್ ಕಣಗಳು ವೃದ್ಧಿಸಲಿ-ಎಂದು ಇಂಗ್ಲಿಷಿನಲ್ಲಿ ಹೇಳಿ ಸೂಜಿ ಚುಚ್ಚಿದಳು. +ಬೆಳಿಗ್ಗೆ ಎಂಟು ಗಂಟೆಗೆ ರಕ್ತ ಪರೀಕ್ಷೆಯ ವರದಿ ಬಂತು. ರಾತ್ರಿಯ ಎಂಟು ಗಂಟೆಗಳ ಅವಧಿಯಲ್ಲಿ ಹತ್ತು ಸಾವಿರಕ್ಕೆ ತುಸು ಅಧಿಕ ರಕ್ತಕಣಗಳು ಮಾತ್ರ ಸತ್ತಿದ್ದವು. ನನ್ನ ವೈದ್ಯ ಸಹೋದರನ ದೇಹದಿಂದ ನೀಡಿದ್ದರಲ್ಲಿ ನಲವತ್ತು ಸಾವಿರ ಕಣಗಳು ಬದುಕಿ ಉಳಿದಿದ್ದವು. ಬೆಳಿಗ್ಗೆ ಬಂದ ಮುಖ್ಯ ವೈದ್ಯರು, ಇನ್ನೊಂದು ದಿನಕ್ಕೆ ಏನೂ ಅಪಾಯವಾಗದು. ರಕ್ತಕಣಗಳು ಹದಿನೈದು ಸಾವಿರದಿಂದ ಕೆಳಗಿಳಿಯುವವರೆಗೆ ಹೊರಗಿನಿಂದ ಹೊಸ ಕಣಗಳನ್ನು ನೀಡುವುದು ಬೇಡ. ಔಷಧಿಯಲ್ಲೇ ನಿಯಂತ್ರಿಸೋಣ. ದೇಹ ವ್ಯವಸ್ಥೆ ಸಹಕಾರ ನೀಡುವ ಸೂಚನೆ ಪ್ರಾರಂಭಿಸಿದೆ ಎಂದರು. ಮತ್ತೆರಡು ದಿನಗಳಲ್ಲಿ ವೈದ್ಯರು, ನಾನು ಪ್ರಾಣಾಪಾಯದಿಂದ ಸಂಪೂರ್ಣ ಪಾರಾಗಿರುವುದಾಗಿಯೂ ಮತ್ತೊಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಾಧ್ಯವಾಗಲೂಬಹುದು ಎಂದು ಘೋಷಿಸಿದರು. ನನ್ನ ಹೆಂಡತಿ, ಮಕ್ಕಳು, ತಂದೆ, ತಾಯಿ, ತಮ್ಮಂದಿರು, ಅತ್ತೆ, ಮಾವ, ಭಾವಂದಿರು, ನಾದಿನಿಯರು-ಎಲ್ಲರ ಮುಖದಲ್ಲೂ ನಗು, ಸಂತೋಷ, ನಿರುದ್ವಿಗ್ನತೆಯ ಭಾವ. +ಆಸ್ಪತ್ರೆಯಲ್ಲಿ ನನಗೊಂದು ಅಚ್ಚರಿಯ ವಿಚಾರ. ದೇಹಕ್ಕೆ ಅಪಾಯ ಇದ್ದಷ್ಟುಕಾಲ ಪ್ರತಿ ಗಂಟೆಗೊಮ್ಮೆ ದಾಖಲಿಸುತ್ತಿದ್ದ ರಕ್ತದ ಒತ್ತಡ ಪರೀಕ್ಷೆಯಲ್ಲಿ ಏನೂ ಏರೂ ಪೇರೂ ಇರಲಿಲ್ಲ. ಸಮಾಧಾನದ ಸಹಜ ಒತ್ತಡ. ನನ್ನದು ರಕ್ತ ಸಂಬಂಧಿ ರೋಗ. ಆದರೂ ಎಲ್ಲೂ ಉದ್ವಿಗ್ನತೆಯಿಂದ ರಕ್ತದ ಒತ್ತಡ ಹೆಚ್ಚುಕಮ್ಮಿಯಾಗಿ ಏನೇ ತೊಂದರೆ ಅಥವಾ ಆಂತರಿಕ ರಕ್ತಸ್ರಾವ ಆಗಲಿಲ್ಲ. ‘ಬೇಟೆಗಾರ’ ನನ್ನು ನಾನು ಸ್ವೀಕರಿಸಿದ ರೀತಿಕ್ರಮ)ಕಾರಣವೆ? ನಾನೇನೂ ಹೇಳಲಾರೆ. ಆದರೆ ವೈದ್ಯರುಗಳು ಹೇಳಿದರು-ನಿನ್ನ ಶಾಂತ ಸ್ವಭಾವ ಸಹಕರಿಸಿದೆ. ಗುಣವಾಗಲು ಶೇಕಡಾ ನಲವತ್ತು ಭಾಗ ನಿನ್ನ ವಿಲ್ ಪವರ್ ಕಾರಣ. ಮತ್ತೊಬ್ಬ ವೈದ್ಯರ ಪ್ರಕಾರ ಆಯುರ್ವೇದ ಶಾಸ್ತ್ರ ಹೇಳುವ ದೇಹದೊಳಗಿನ ಪ್ರಾಣಾಗ್ನಿ ನನ್ನೊಳಗೆ ಬಲಿಷ್ಠವಾಗಿದ್ದು ನನ್ನನ್ನು ಅಪಾಯದಿಂದ ಕಾಪಾಡಿದ್ದು. ಇನ್ನೊಬ್ಬ ವೈದ್ಯರ ಪ್ರಕಾರ ಸದೃಢವಾಗಿದ್ದ ನನ್ನ ಇತರ ದೇಹಾರೋಗ್ಯ ರಕ್ತದ ಈ ಆಕಸ್ಮಿಕ ಅಪಘಾತದಿಂದ ಪಾರು ಮಾಡಿದ್ದು. +ವರ್ತಮಾನ ತಿಳಿದ ನನ್ನ ಗುರುಗಳಾದ ಡಾ||ಯು.ಆರ್.ಅನಂತಮೂರ್ತಿಯವರು ಮಾರನೆಯ ದಿನ ಫೋನ್ ಮಾಡಿ, “ವಿಚಾರ ತಿಳಿಯಿತಪ್ಪಾ ವಿಜಯ. ಬದುಕಿನ ಪ್ರೀತಿ ನಮ್ಮನ್ನು ರಕ್ಷಿಸುವುದು. ಬದುಕುವ ಬಯಕೆ ಜೊತೆಗೆ ದೈವಕೃಪೆಯೂ ಇರಬೇಕು. ನೀನು ಉದ್ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿರುವಿ. ದೇಹವನ್ನಿನ್ನು ದಂಡಿಸಬೇಡ. ಸಂಗೀತವೆಂದರೆ ನಿನಗೆ ಮೋಹ. ಇಷ್ಟವಾದ್ದನ್ನು ಓದುತ್ತಾ ಬೇಕಾದ ಸಂಗೀತ ಕೇಳುತ್ತಾ ಸ್ವಲ್ಪ ಹಾಯಾಗಿರು’ ’ ಎಂದರು. ಸುದಿ ತಿಳಿದು ಊರಿನಿಂದ ಆಸ್ಪತ್ರೆಗೆ ಫೋನು ಮಾಡಿಸಿ ಮಾತನಾಡಿದ ಸುಬ್ರಾಯ ಚೊಕ್ಕಾಡಿಯವರಲ್ಲಿ ನಿಮಗೆ ಬೇಂದ್ರೆಯ ‘ನಾದಲೀಲೆ’ ಕವನ ಇಷ್ಟವೆ ಎಂದು ಕೇಳಿದೆ. +ಭಾಗ-೨ +ಎರಡು ವಾರಗಳ ಆಸ್ಪತ್ರೆವಾಸ ಮುಗಿಸಿ ಮನೆಗೆ ಬಂದವ ‘ನಾದಲೀಲೆ’ ಸಂಕಲನ ಬಿಡಿಸಿದೆ. ಕವನದ ಭಾವ ಸಂದರ್ಭದಲ್ಲಿ ಬೇಂದ್ರೆಯವರು ಹೀಗೆ ಬರೆದಿದ್ದಾರೆ: +“ಜೀವನದ ತಾಲ-ಲಯಾನುಸಾರಿತ್ವದಲ್ಲಿ ಒಂದು ನಾದತನ್ಮಯತೆ ಇದೆ. ಮರಣದ ಭಯ ಬೇತಾಲಕ್ಕೆ ಎಳೆಯುವುದು. ಜೀವನದ ತನ್ಮಯತೆ ಬೆಳಕು, ಹೂವು, ಹರಿಣಿ, ಹಸುಗಳ ಜೀವನದಲ್ಲೂ ದಿನವೂ ಕಂಗೊಳಿಸುವುದು.’ ’ +ನನ್ನ ಮನೆಯಲ್ಲಿದ್ದ ಪುಸ್ತಕಗಳಲ್ಲಿ ‘ನಾದಲೀಲೆ’ ಬಗ್ಗೆ ಯಾರು ಏನು ಬರೆದಿದ್ದಾರೆಂದು ಹುಡುಕಿದೆ. ಕೀರ್ತಿನಾಥಕುರ್ತುಕೋಟಿ, ಜಿ.ಎಸ್.ಅಮೂರ, ಯು.ಆರ್.ಅನಂತಮೂರ್ತಿ, ಶಂಕರ ಮೊಕಾಶಿ ಪುಣೇಕರ, ರಾಜೇಂದ್ರ ಚೆನ್ನಿ, ಮಲ್ಲೇಪುರಂ ಜಿ.ವೆಂಕಟೇಶ್, ಕೆ.ವಿ.ತಿರುಮಲೇಶ್, ಸಿ.ಕೆ.ನಾವಲಗಿ, ಬಿ.ಎಚ್.ಶ್ರೀಧರ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಚ್.ಎಸ್.ರಾಘವೇಂದ್ರರಾವ್, ವಾಮನಬೇಂದ್ರೆ, ಕೆ.ಸಿ.ಶಿವಾರೆಡ್ಡಿ, ಜಿ.ಎಚ್.ನಾಯಕ, ಬೇಂದ್ರೆ ಬಗ್ಗೆ ಬರೆದಿದ್ದಾರೆ. ಆದರೆ ಅವರ ಪುಸ್ತಕಗಳಲ್ಲಿ ‘ನಾದಲೀಲೆ’ ಬಗ್ಗೆ ಮಾತಿಲ್ಲ. (ಈ ಲೇಖನ ಬರೆದ ಬಳಿಕ ‘ನಾದಲೀಲೆ’ ಬಗ್ಗೆ ಜಿ.ಎಚ್.ನಾಯಕರು ಮಾಡಿದ ಭಾಷಣದ ಅಚ್ಚಾದ ಪ್ರತಿ ಓದಲು ದೊರಕಿತು. ಪ್ರಕಟಣೆಗೆ ಮೊದಲು ಅವರ ಮಾತುಗಳನ್ನು ಈ ಲೇಖನದಲ್ಲಿ ಸೇರಿಸಿಕೊಂಡಿದ್ದೇನೆ.) +ಡಾ||ರುಕ್ಮಿಣಿ ಪರ್ವತಿ ಅವರು ‘ಅಂಬಿಕಾತನಯದತ್ತರ ಭಾವಗೀತೆಗಳು’ ಎಂಬ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಎಚ್.ವಿ.ಪದವಿ ಪಡೆದ ಪ್ರೌಢ ಪ್ರಬಂಧದಲ್ಲಿ(ಪುಸ್ತಕ ಪ್ರಕಟಣೆ ಮೈಸೂರಿನ ಉಷಾ ಸಾಹಿತ್ಯ ಮಾಲೆ) ಈ ಪದ್ಯ ವಿಶೇಷವಾಗಿ ಚಿಕ್ಕ ಮಕ್ಕಳ ಮನಸ್ಸನ್ನು ಸೆಳೆದಿದೆ ಎಂದು ಹೇಳುತ್ತಾರೆ. ಮುಂದುವರಿದ ಅವರು ‘ಬೇಂದ್ರೆಯವರ ಪತ್ನಿ ತಾಪತ್ರಯಗಳಿಂದ ಕುಗ್ಗಿ ಹೋದಾಗ ಅವಳಿಗೆ ಧೈರ್ಯ ಕೊಡಲು ಅಂಬಿಕಾತನಯದತ್ತರು ಪ್ರಾಣಭಯವಿಲ್ಲದೆ ಮೇಯುವ ಪ್ರಾಣಿಗಳ, ಇನ್ನೊಬ್ಬರ ಸುಖಕ್ಕಾಗಿ ಅರಳುವ ಹೂವುಗಳ ಉಪಮೆಗಳಿಂದ ಕೂಡಿದ ‘ನಾದಲೀಲೆ’ “ಕವನವನ್ನು ಸೃಷ್ಠಿಸಿದ್ದಾರೆ’ ’ ಎಂದು ಬರೆಯುತ್ತಾರೆ. ಈ ರೀತಿಯಲ್ಲಿ ಬರೆಯುತ್ತಾ ಹೋದ ಅವರ ವಿಶ್ಲೇಷಣೆ ನನಗೆ ಒಪ್ಪಿಗೆಯಾಗಲಿಲ್ಲ, ಮಾತ್ರವಲ್ಲ ಇಂತಹ ಬರಹಗಳು ಕವನಕ್ಕೆ ನ್ಯಾಯ ನೀಡುವುದಿಲ್ಲ ಎಂದೂ ಅನಿಸಿತು. +ಡಾ||ಡಿ.ಆರ್.ನಾಗರಾಜ್ ಅವರು ಬೇಂದ್ರೆಯವರ ‘ನೃತ್ಯಯಜ್ಞ’ ಕವನದ ಬಗ್ಗೆ ಬರೆಯುತ್ತಾ (ಅಮೃತ ಮತ್ತು ಗರುಡ ವಿಮರ್ಶಾ ಸಂಕಲನ) ‘ನಾದಲೀಲೆ’ ಕುರಿತು ಹೀಗೆ ಹೇಳುತ್ತಾರೆ: +‘ನಾದಲೀಲೆ’ ಯಲ್ಲಿ ಕೊನೆಯ ತನಕ ಅಪಾಯದ, ಬೇಟೆಗಾರನ ಭೀತಿ ಮುಂದುವರಿದು ಪರಿವರ್ತನೆಯಾಗುತ್ತದೆ. ‘ಬೇಟೆಯಲ್ಲ, ಆಟವೆಲ್ಲ, ಬೇಟದ ಬಗೆ’ ಎಂಬ ಅರಿವು ಮೂಡಿ ಅದು ಮೂಲ ಪ್ರೇಮದಲ್ಲಿ ಒಂದಾಗುತ್ತದೆ. ಚಕ್ರ ತಿರುಗಿ ಸಾಮರಸ್ಯಕ್ಕೆ ನಿಲ್ಲುತ್ತದೆ. ಕುತೂಹಲದ ಸಂಗತಿ ಎಂದರೆ, ಈ ವಿನ್ಯಾಸಕ್ಕೆ ವಿರುದ್ಧವಾದ ಕವನಗಳೂ ಬೇಂದ್ರೆಯವರಲ್ಲಿ ಸಾಕಷ್ಟಿವೆ. ಅಂಥ ವಿಶೇಷ ಕೃತಿ ‘ನೃತ್ಯಯಜ್ಞ’ . +ಡಾ||ಜಿ.ಎಸ್.ಶಿವರುದ್ರಪ್ಪನವರು, ಬೇಂದ್ರೆ:ಮಂಥನ ಚರ್ಚೆಯಲ್ಲಿ(ಅಡಿಗ,ಕಣವಿಯವರೊಡನೆ ಶೂದ್ರ-ನವೆಂಬರ್ ೧೯೮೧ನೇ ಇಸವಿ ಸಂಚಿಕೆ)ನಾದಲೀಲೆ ಸಂಕಲನದ ಕವನಗಳನ್ನು ಬಹಳ ಜನ ಗಮನಿಸಲಿಲ್ಲ ಎನ್ನುತ್ತಾರೆ. ಮುಂದುವರಿದ ಜಿ.ಎಸ್.ಎಸ್. ನಾದಲೀಲೆ ತುಂಬಾ ‘ಮಿಸ್ಟಿಕ್’ ಕವನಗಳಿವೆ ಎಂದು ಹೇಳುತ್ತಾರೆ. ಜಿ.ಎಸ್.ಎಸ್ ಹೇಳುವ ಮಾತುಗಳು: “ತನ್ನ ಒಳಗಿನ ಅಂತರಂಗ, ಅದರ ತಾಕಲಾಟಗಳು ಅನ್ನೋದು ಕೇವಲ ಸಾಮಾಜಿಕವದದ್ದಾಗಲೀ, ಕೌಟುಂಬಿಕವಾದದ್ದಾಗಲೀ ಮಾತ್ರ ಆಗುವುದಿಲ್ಲ. ಒಂದು ಮನಸ್ಸು ಬೇರೊಂದು ಊigheಡಿ ಒiಟಿಜ‌ಅಂತ ಏನು ಕರಿತೀವಿ ಅದರೊಂದಿಗೆ ಸಂವಾದ ಸ್ಥಾಪಿಸಿಕೊಳ್ಳುವ ಸಂದರ್ಭದ ಅನೇಕ ತಾಕಲಾಟಗಳನ್ನು ನಾವು ಆ ಪದ್ಯಗಳಲ್ಲಿ, ಇಮೇಜ್‌ಗಳಲ್ಲಿ ಕಾಣ್ತೀವಿ. ಮೊದಲ ಪದ್ಯ ‘ನಾದಲೀಲೆ’ ಯಲ್ಲೂ ಅಷ್ಟೇ: ‘ಕಂಗೊಳಿಸುವ ಕೆಂಪು ಮುಂದೆ ಕಂಗೆಡಿಸುವ ಮಂಜು ಹಿಂದೆ’ ಸಾಲಿನಲ್ಲಿ ಮನುಷ್ಯನ ಅಸ್ತಿತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಇxisಣeಟಿಛಿe ಕುರಿತು, ಹಿಂದನ್ನು ಕುರಿತು, ಮುಮ್ದನ್ನು ಕುರಿತು, ಇದರಲ್ಲಿ ನಮ್ಮ ದಾರಿ ಏನು ಅನ್ನೋದನ್ನ ಕುರಿತು, ಒಂದು ರೀತಿಯ ಅನುಭಾವಿಕ ಅನ್ವೇಷಣೆ ಕೂಡ ಅದರಲ್ಲಿ ಆಗುತ್ತದೆ.’ ’ +ಪ್ರೊ|| ಜಿ.ಎಚ್.ನಾಯಕರು ‘ನಾದಲೀಲೆ’ ಯನ್ನು ಬೇಂದ್ರೆಯವರ ಪ್ರಾತಿನಿಧಿಕ ಕವನಗಳಲ್ಲಿ ಒಂದೆಂದು ಭಾವಿಸುತ್ತಾರೆ. ಬೇಂದ್ರೆಯವರ ಶಕ್ತಿ, ಮಿತಿ ಎರಡೂ ಬಿಂಬಗೊಳ್ಳುವಂತಹ ಕವನಗಳಲ್ಲಿ ಇದೂ ಒಂದೆಂದು ಜಿ.ಎಚ್.ನಾಯಕರು ತಮ್ಮ ಅನೇಕ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆಂದು ನನ್ನ ಅನೇಕ ಮಿತ್ರರು ತಿಳಿಸಿದರು.( ಬೇಂದ್ರೆ ಕುರಿತಾದ ಅವರ ಭಾಷಣ ಕೇಳುವ ಅವಕಾಶ ನನಗೆ ಇನ್ನೂ ದೊರಕಿಲ್ಲ)ಜಿ.ಎಚ್.ನಾಯಕರು ಮಂಡ್ಯದ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ‘ಸಾಹಿತ್ಯಕೂಟ’ ದಲ್ಲಿ ‘ಬೇಂದ್ರೆಕಾವ್ಯ:ನಾದ,ಅರ್ಥ, ಅರಿವು’ ಎಂಬ ಉಪನ್ಯಾಸವನ್ನು ೨೩-೨-೨೦೦೧ರಂದು ನೀಡಿದ್ದರು. ಅಲ್ಲಿ ‘ನಾದಲೀಲೆ’ ಕವನ ಕುರಿತು ಮಾಡಿದ ಅರ್ಥವ್ಯಾಖ್ಯಾನ, ಅದೇ ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ(ನೆಲದಸಿರಿ-೨೦೦೧)ಪ್ರಕಟವಾಗಿದೆ. ‘ನಾದಲೀಲೆ’ ಯ ನಾಲ್ಕು ಪುಟಗಳ ಈ ಪ್ರಾಯೋಗಿಕ ವಿಮರ್ಶೆಯಲ್ಲಿ ಜಿ.ಎಚ್.ನಾಯಕರ ವಿಮರ್ಶೆಯ ಮೂಲ್ಯಮಾಪನ ಗುಣವೂ ಗೋಚರಿಸುತ್ತದೆ. ಅದನ್ನು ಹೀಗೆ ಸಂಗ್ರಹಿಸಬಹುದು: +“ಈ ಕವನದಲ್ಲಿ ನಾದ ಗುಣದ ಸಮೃದ್ಧಿ ಇದೆ. ಕವನ ಪ್ರತಿಮಾ ವಿಧಾನದಲ್ಲಿ ಬೆಳೆದಿದೆ. ಚಿತ್ರವತ್ತಾದ ಸನ್ನಿವೇಶಗಳ ಸೃಷ್ಟಿ ಇದೆ. ಮೊದಲಿನಿಂದ ಕೊನೆಯವರೆಗೂ ಧ್ವನಿಶಕ್ತಿಯು ಪ್ರತಿಮೆಗಳ ಮೂಲಕ, ಮಾತ್ರವಲ್ಲ ಪದ ಪ್ರಯೋಗಗಳಲ್ಲಿಯೂ ಅನುರಣಿಸುತ್ತಿದೆ. ಕವನದಲ್ಲಿ ಅನುಭವವನ್ನು ಅರಿವಿನ ನೆಲೆಗೆ ವಿಸ್ತರಿಸಿ ತಾತ್ವಿಕ ನಿಲುವನ್ನು ಪ್ರತಿಪಾದಿಸುವ ಅಥವಾ ತಾತ್ವಿಕ ತಿಳಿವಳಿಕೆಯನ್ನು ಹಾಯಿಸುವ ಉತ್ಸಾಹ ಉದ್ದೇಶ ಇದೆ….. +“ಕವನದ ಮೊದಲ ಮೂರು ಪದ್ಯಭಾಗಗಳ ಕ್ರಿಯಾಕೇಂದ್ರವು ಅನುಕ್ರಮವಾಗಿ ಕಾಡಿನಲ್ಲಿ, ನಾಡಿನಲ್ಲಿ, ಬೀಡಿನಲ್ಲಿ ಇದೆ. ಕೊನೆಯ ಪದ್ಯಭಾಗದಲ್ಲಿ ಹಿಂದಿನ ಪದ್ಯಭಾಗಗಳಲ್ಲಿ ಧ್ವನಿತವಾಗುತ್ತ ಬಮ್ದದ್ದಕ್ಕೆ ತಾತ್ವಿಕ ವ್ಯಾಖ್ಯಾನವನ್ನು ನೀಡಲಾಗಿದೆ. ಈ ಅರಿವಿನ ಸ್ವರೂಪ ಯಾವ ಬಗೆಯದು?…. +“ಈ ಕವನದ ಚಿತ್ರಕ ಶಕ್ತಿ, ಪ್ರತಿಮಾ ವಿಧಾನದಲ್ಲಿ ಕವನ ಕಟ್ಟುವ ಕಲೆಗಾರಿಕೆ, ಧ್ವನಿಶಕ್ತಿಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಪ್ರತಿಭಾಶಕ್ತಿ ಅನನ್ಯವಾಗಿದೆ; ಸ್ವೋಪಜ್ಞವಾಗಿದೆ. ಆದರೆ ಕವನ ಪರಿಣಾಮಗೊಳಿಸಿದ ಅರಿವು ಅನನ್ಯ, ಸ್ವೋಪಜ್ಞ ಎನ್ನಬಹುದೆ? ಇದು ಇಲ್ಲಿ ಎದುರಾಗುವ ಪ್ರಶ್ನೆ.’ ’ +ಬೇಂದ್ರೆ ಬಗ್ಗೆ ಬಹಳಷ್ಟು ಬರೆದಿರುವ ಪ್ರೊ||ಕೀರ್ತಿನಾಥಕುರ್ತುಕೋಟಿಯವರು ‘ನಾದಲೀಲೆ’ ಬಗ್ಗೆ ಯಾಕೆ ಬರೆದಿಲ್ಲ ಎಂದು ನನಗೆ ಬಹಳ ಕುತೂಹಲವಾಯಿತು. ಧಾರವಾಡದ ಅವರ ಮನೆಗೆ ಫೋನು ಮಾಡಿದೆ. ಆ ಹೊತ್ತಿಗೆ ಅವರೂ ನನ್ನ ‘ನಾದಲೀಲೆ’ ಅನುಭವವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಮನಃಸ್ಥಿತಿಯಲ್ಲಿದ್ದರು. ಜ್ವರದಿಂದ ಆಸ್ಪತ್ರೆ ಸೇರಿದ್ದ ಅವರ ಪತ್ನಿ ಒಂದು ದಿನ ಕೋಮಾದಲ್ಲಿದ್ದು ಆಗ ತಾನೆ ಕಣ್ಣುಬಿಟ್ಟಿದ್ದರು. ನಿರಂತರ ಡಯಾಲಿಸಿಸ್ ಚಿಕಿತ್ಸೆಯಲ್ಲಿರುವ ಅವರ ಒಬ್ಬ ಪುತ್ರ ರಕ್ತದ ಒತ್ತಡ ಏರುಪೇರಾಗಿ ಆತಂಕದಿಂದ ಅಸ್ಪತ್ರೆಯಲ್ಲಿದ್ದು ಆಗತಾನೆ ಹಿಂತಿರುಗಿದ್ದರು. “ಆ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಕಾವ್ಯವೂ ಲೈಫ್ ಸೇವರ್೧೩ ಐiಜಿe sಚಿveಡಿ) ಜೀವರಕ್ಷಕ ಆಗುವುದು ಹೀಗೆ’ ’ ಎಂದರು. ಈ ಕವನದ ಬಗ್ಗೆ ನೀವು ಯಾಕೆ ಏನೂ ಈ ತನಕ ಬರೆದಿಲ್ಲ ಎಂದು ಪುನಃ ಕೇಳಿದರೆ, ನನ್ನನ್ನೆ ಬರೆಯುವಂತೆ ಪ್ರೇರೇಪಿಸಿದರು. +ನನ್ನ ಪ್ರಜ್ಞೆಯಲ್ಲಿ ಹೇಗೋ ಇಳಿದ ಒಂದು ಕವನ ಹೀಗೆ ನನಗೆ ಒದಗಿ ಬಂದಿದೆ. ವಿಮರ್ಶಾಪಾಂಡಿತ್ಯದ ದೃಷ್ಟಿಯಿಂದ ಈ ರೀತಿ ಕಾವ್ಯಕ್ಕೆ ಪ್ರತಿಕ್ರಿಯಿಸುವುದು ಸರಿಯೋ ತಪ್ಪೋ ಎಂಬುದು ನನಗೆ ಇಲ್ಲಿ ಮುಖ್ಯವಲ್ಲ. ಒಂದು ವಿಶಿಷ್ಟ ಸಂದರ್ಭದಲ್ಲಿ ನಾನು ಅನುಭವಿಸಿದ ‘ನಾದಲೀಲೆ’ ಕವನದ ಸ್ಪರ್ಶಸುಖವನ್ನು ಹೀಗೆ ಹಂಚಿಕೊಳ್ಳುವುದು ಅದರ ಅಂತಃಸತ್ವವನ್ನು ಗುರುತಿಸಿದ ಒಂದು ರೀತಿ ಎಂದು ನಾನು ತಿಳಿಯುತ್ತೇನೆ. ಇದರಿಂದಾಗಿ, ಬದುಕಿನ ಜೀವಂತವಾದ ಇತರ ಸಹಜ ಸಂದರ್ಭಗಳಲ್ಲಿ ಉತ್ತಮ ಕಾವ್ಯಾನುಭವ ಸಿದ್ಧಿಸಲು ಏನೂ ತೊಂದರೆಯಾಗದು. ಡಾ||ಯು.ಆರ್. ಅನಂತಮೂರ್ತಿಯವರು ಹೇಳಿದಂತೆ ಪೂರ್ವಾಪರ) “ಬೇಂದ್ರೆ, ಮುಖ್ಯವಾಗಿ ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ.’ ’ +ಬೇಂದ್ರೆ ಕಾವ್ಯಾನುಭವದ ಎದುರು ನನ್ನ ಅನುಭವದ ನಿರೂಪಣೆ ಸಪ್ಪೆ ಅನಿಸಿದರೆ ಅದಕ್ಕೆ ಕಾವ್ಯದ ಶ್ರೇಷ್ಠತೆಯೇ ಕಾರಣ. ಕವಿ ಅನುಭವವೊಂದನ್ನು ಭಾಷೆಯಲ್ಲಿ ಸೃಜಿಸಿದಾಗ ಕಾವ್ಯಾನುಭವದ ಸೃಷ್ಟಿಕರ್ತನನ್ನೇ ಮೀರಿ ಪಡೆಯುವ ಆಳ, ವೈಶಾಲ್ಯಗಳ ಬಗ್ಗೆ ಕಾವ್ಯ ಮೀಮಾಂಸೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಕಾವ್ಯಾನುಭವ ಹಾಗೂ ಅದರ ಅನುಭವದ ಪರಿಕಲ್ಪನೆಗಳಿಗೆ ಸಂಬಂಧಿಸಿದ ವಿಚಾರವದು. ಇಲ್ಲಿ ಬೇಂದ್ರೆ ಕಾವ್ಯ ಇಂದಿನ ಅನುಭವದ ನಿಕಷದಲ್ಲೂ ಪರೀಕ್ಷಿಸಿಕೊಂಡು ಶ್ರೇಷ್ಠ ಕಾವ್ಯದ ಸಾರ್ವಕಾಲಿಕ ಸತ್ಯವನ್ನೇ ಪ್ರತಿಪಾದಿಸಿದೆ.೧೪ +ಟಿಪ್ಪಣಿಗಳು ಮತ್ತು ಉಲ್ಲೇಖ: +೧. ಕಳೆದ ದಶಕದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೇಂದ್ರ ನೃತ್ಯ ಅಕಾಡೆಮಿಯವರು ವಿಭಿನ್ನ ಕೊರಿಯಾಗ್ರಫಿ ನಾಟ್ಯಪ್ರದರ್ಶನ ಉತ್ಸವವನ್ನು ಏರ್ಪಡಿಸಿದ್ದರು. ಅದರಲ್ಲಿ ಕೇರಳದ ಕೊರಿಯಾಗ್ರಫರ್ ಒಬ್ಬರು *ಹೆಸರು ಯಾವುದೂ ನೆನಪಾಗುತ್ತಿಲ್ಲ)ಸಾವನ್ನು ಕೇಂದ್ರವಾಗಿಟ್ಟುಕೊಂಡು ಬಹುಸುಂದರವಾದ ಕೊರಿಯಾಗ್ರಫಿ ನಾಟ್ಯಪ್ರದರ್ಶಿಸಿದ್ದರು. ನಾನು ಮತ್ತು ಎಂ.ಟಿ.ಯ ಗೆಳೆಯ ಕೆ.ರಾಮದಾಸ್ ಆ ಎಲ್ಲಾದಿನಗಳ ಪ್ರದರ್ಶನ ನೋಡಿದ್ದೆವು. +ಸಾವಿನ ಬಗೆಗಿನ ಆ ಪ್ರದರ್ಶನದಲ್ಲಿ-ಕೈಗಾರಿಕೆ,ಅಪಘಾತ, ರೋಗ ಹೀಗೆ ಬದುಕಿನ ವಿವಿಧ ಮಜಲುಗಳಲ್ಲಿ ಹೊಕ್ಕು ಹೊರಡುವ ಸಾವು, ಆದರೆ ಧೀರನಾದ ಪೂರ್ಣಾಯುಷಿ ಒಬ್ಬ, ಸಹಸ್ರ ಚಂದ್ರರನ್ನು ಕಾಣುವ ಚೈತನ್ಯ ಉಳ್ಳವನು, ಬಿಳಿ ವಸ್ತ್ರಧಾರಿಯಾಗಿ, ಕಪ್ಪುಬಟ್ಟೆ ತೊಟ್ಟ ಸಾವು ವಿವಿಧ ರೀತಿಯಲ್ಲಿ ಪಂಥಾಹ್ವಾನದ ಪಟ್ಟಿನಂತೆ ವಿಭಿನ್ನ ಹೆಜ್ಜೆ ಹಾಕಿ ಕುಣಿದಾಗ ತಾನೂ ಮೃತ್ಯುವಿನ ಕೈ ಅಮುಕಿ ಹಿಡಿದು ಸಮರಸದ ತಾಳಲಯದಲ್ಲಿ ನರ್ತಿಸುತ್ತಾನೆ. ಅವನು ಸಾವನ್ನೂ ಮಣಿಸುವ ಆಶಯಪಾತ್ರ. ಬಹು ಅದ್ಭುತವಾಗಿ ಮೂಡಿ ಬಂದಿದ್ದ ಆ ನೃತ್ಯ ಸಂಯೋಜನೆ ಅಪರೋಕ್ಷವಾಗಿ ‘ನಾದಲೀಲೆ’ ಆಸ್ಪತ್ರೆಯಲ್ಲಿ ನನ್ನೊಳಗೆ ಹರಡಿಕೊಂಡ ಕ್ರಮದಲ್ಲಿ ಎಲ್ಲೋ ಸೇರಿಕೊಂಡಿದ್ದಿರಬಹುದು ಎಂದು ಈಗ ಅನಿಸುತ್ತದೆ. +೨. ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕವನದ ಕೊನೆಯ ನಾಲ್ಕು ಸಾಲುಗಳು: +“ಗಹ್ವರದ ಮುಖ ಅಲ್ಲಿ;ಆಚೆ ಬಯಲ ಬರಾವು; +ಹಣ್ಣು ಹಂಪಲು ಹಸುರ ಬಲ್ಲೆ, ಬಲ್ಲೆ; +ಜೀವನನಿಧಾನಶೃತಿ ಶುದ್ಧಿ ಮೊರೆವ ಕರಾವು; +ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.’ ’ ಎಂಬಲ್ಲಿಯೂ ಕತ್ತಲೆ ಕಳೆದ, ಸುಂದರ ಬೆಳಕು, ಹಸುರು ಹಾಗೂ ಜೀವಶಕ್ತಿಯ ವಿಕಾಸದ ಇತ್ಯಾತ್ಮಕ*ಠಿosiಣive) ಸ್ವೀಕಾರ ಇದೆ ಎಂಬುದನ್ನು ಗಮನಿಸಬೇಕು. +೩. ಗೋಪಾಲಕೃಷ್ಣ ಅಡಿಗರ ‘ಭಾವತರಂಗ’ ಸಂಕಲನದ ‘ಇದು ಬಾಳು’ ಕವನದ ಐದನೇ ಭಾಗ. +“ಆಶೆಯೆಂಬ ತಳವೊಡೆದ ದೋಣಿಯಲಿ +ದೂರತೀರಯಾನ; +ಯಾರಲೀಲೆಗೋ ಯಾರೊ ಏನೊ ಗುರಿ +ಯಿರದ ಬಿಟ್ಟಬಾಣ!’ ’ +ಇಲ್ಲಿ ಅಡಿಗರು ಗುರಿ-ಇರದೆ ಇದನ್ನು ‘ಗುರಿಯಿರದೆ’ ಎಂಬ ಯಕಾರ ಆಗಮಸಂಧಿಯನ್ನು ಉಳಿಸಿಯೂ ಸಂಯೋಜನೆಯನ್ನು ಒಡೆದು ಎರಡು ವಾಕ್ಯಗಳಲ್ಲಿ ಇಟ್ಟು ‘ಯಾರಲೀಲೆಗೋ ಯಾರೊ ಏನೊ ಗುರಿ’ ಎಂದು ಒಂದು ಅರ್ಥವನ್ನು ಉಳಿಸಿಕೊಳ್ಳುತ್ತಾರೆ. ಇನ್ನೊಂದು ಅರ್ಥದಲ್ಲಿ ‘ಗುರಿಯಿರದೆ ಬಿಟ್ಟಬಾಣ’ ಎಂದಾಗ ವಿಧಿವಾದದ ಸಕಲ ನಿಯಂತ್ರಣ ಮೂಲತ್ವವನ್ನೇ ಪ್ರಶ್ನಿಸುತ್ತಾರೆ. ಈ ವಿವರಗಳೆಲ್ಲಾ ‘ನಾದಲೀಲೆ’ ಯ ‘ಬೇಟೆಗಾರ’ ನ ಪತ್ತೆಯಲ್ಲಿ ತೊಡಗಿದ್ದ ಮನಸ್ಸಿಗೆ ಹೊಳೆದಿರಲಿಲ್ಲ. +೪. ‘ಗರಿ’ ಕವನ ಸಂಕಲನದ ‘ಕುಣಿಯೋಣು ಬಾರ!’ ಎಂಬೊಂದು ನಲ್ವಾಡುವಿನಲ್ಲಿ ಬೇಂದ್ರೆಯ ಸಾಲುಗಳು: +“ನಾನಲ್ಲ +ನೀನಲ್ಲ +ನನ್ನಲ್ಲಿ ನೀನಿಲ್ಲ +ಸಾವಿನ ನೋವಿಲ್ಲ!ಕುಣಿಯೋಣು ಬಾರ +ಕುಣಿಯೋಣು ಬಾ|| +ಇದ್ದದ್ದು ಮರೆಯೋಣ +ಇಲ್ಲದ್ದು ತೆರೆಯೋಣ +ಹಾಲ್ಜೇನು ಸುರಿಯೋಣ! ಕುಣಿಯೋಣು ಬಾರ +ಕುಣಿಯೋಣು ಬಾ||’ ’ +ಕುಣಿಯತೊಡಗಿದಾಗ ಸಾವು ಮರೆಯಾಗುತ್ತದೆ*ಸಾವಿನ ನೋವಿಲ್ಲ).ನಾಟ್ಯ ಬೇಂದ್ರೆಗೆ ಒಂದು ಲಯಕಾರಿ ಸಾಮರಸ್ಯ. ‘ನೃತ್ಯಯಜ್ಞ’ ಕವನದ ಈ ಸಾಲುಗಳನ್ನು ಗಮನಿಸಬಹುದು. +“ಜಗವೆಲ್ಲವೂ ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ +ಸಖಿ ಸಂಮುಖ ತಲ್ಲೀನತೆಯಲಿ ಏಕಾಕಿ’ ’ +“ಅಕ್ಷರದೀ ಬ್ರಹ್ಮಕೃತ್ಯ ನಿತ್ಯದಿ ಈ ನೃತ್ಯ +ಚಿತ್ರದಲಿ ಚಿತ್ರಿಸುತಿರೆ, ಮರ್ತ್ಯಮಹುದಮರ್ತ್ಯ’ ’ +“ಪುರುಷನಿದಿರು ಪ್ರಕೃತಿ ಕುಣಿಯುವುದೆಂದು ಸಾಂಕ್ಯಸೂತ್ರ +ಪ್ರಕೃತಿ ಸಾಕ್ಷಿ ಪುರುಷ ನಾಟ್ಯ ನವೋನವ ವಿಚಿತ್ರ’ ’ +‘ನೃತ್ಯಯಜ್ಞ’ ದ ಬಗ್ಗೆ ಡಿ.ಆರ್.ನಾಗರಾಜ, ಮೊಕಾಶಿ, ಕುರ್ತುಕೋಟಿ ಚರ್ಚಿಸಬಲ್ಲ ಮಾತುಗಳನ್ನು ಬರೆದಿದ್ದಾರೆ. ಅದರ ಚರ್ಚೆ ಈಗ ಬೇಡ. ಮುಖ್ಯವಾದ ಮಾತೆಂದರೆ ಬೇಂದ್ರೆಗೆ ‘ನೃತ್ಯ’ ಎಂದೂ ಒಬ್ಬನ ನಾಟ್ಯವಾಗಿರಲೇ ಇಲ್ಲ. ‘ನಾಟ್ಯ’ ಒಂದು ‘ಪ್ರವೃತ್ತಿ’ ಯಾಗಿ ಅದು ವಿಸ್ತರಿಸುತ್ತಾ ಪ್ರಕೃತಿ-ಪುರುಷರ ನೆಲೆಗೂ; ಅದನ್ನು ದಾಟಿದ ತಾತ್ವಿಕ ನೆಲೆಗಳಿಗೂ ವಿಸ್ತರಿಸಿದೆ. +‘ನಾಟ್ಯ’ ಒಂದು ದೈಹಿಕ ಚಲನೆ ಹಾಗೂ ಮಾನಸಿಕ ‘ತನ್ಮಯತೆ’ ಎರಡು ಕ್ರಿಯೆಗಳನ್ನೂ ಉದ್ದೀಪಿಸುತ್ತದೆ. ಈ ತಲ್ಲೀನತೆಯಲ್ಲಿ ಕುಣಿತದ ಜೀವ ಹೊರಗಿನ ಚರ ಜಗತ್ತಿನ ಜೊತೆ ಸಾಮರಸ್ಯ ಪಡೆಯುತ್ತದೆ. ಮನುಷ್ಯ ಭೂಮಿಯ ಮೇಲೆ ಚಲನೆಯಲ್ಲಿದ್ದಾನೆ. ಹಾಗೇ ಭೂಮಿ ಸೂರ್ಯನ ಸುತ್ತ, ಸೂರ್ಯ ಮತ್ಯಾವುದೋ ನಕ್ಷತ್ರದ ಕಡೆ ಚಲಿಸುತ್ತಿದ್ದಾನೆ. ಸಮಸ್ತ ಬ್ರಹ್ಮಾಂಡವೇ ಒಂದು ಚಲನೆಯ ಜಗತ್ತು. ಅದರಲ್ಲಿ ಚಲಿಸುತ್ತಿರುವ ಮನುಷನ ಒಳಗೂ, ಉಸಿರಾಟ, ರಕ್ತಪರಿಚಲನೆ, ಮನಸ್ಸಿನ ಯೋಚನೆಗಳ ಚಲನೆ. ಜೊತೆಗೆ ಹಗಲು ರಾತ್ರಿ, ಗಾಳಿ ನೀರುಗಳ ಚಲನೆ. ಇಂತಹ ವಿಶ್ವದ ನಿರಂತರ ಚಲನೆ ಜೊತೆ ಸಮಶೃತಿಯಲ್ಲಿದ್ದಾಗ ಮಾತ್ರ ಬದುಕು. ಆಗ ಅದು ನಾಟ್ಯ. ಅಂತಹ ಕುಣಿತದಲ್ಲಿ ಸಾವಿನ ನೋವಿಲ್ಲ, ಈ ವಿಶ್ವ ಚಲನೆ *ನಾಟ್ಯ)ಯ ಸಮಶೃತಿ ತಪ್ಪಿದಾಗ ಅದು ಮರಣಮುಖವಾಗಬೇಕಾಗುತ್ತದೆ. +೫. ಬೇಂದ್ರೆಯವರ ‘ಸಂಚಯ’ ಕವನ ಸಂಕಲನದ ‘ಚಾಂಗದೇವ ಪಾಸಷ್ಟಿ’ ಕವನದ ಈ ಕೆಳಗಿನ ಸಾಲಿಗಳನ್ನೂ ನೆನಪಿಸಿಕೊಳ್ಳಬಹುದು. +“ಕಡಲು ಕಡಲು ಒಂದೊಡಲು ಆಗಿ ಪ್ರಳ- +ಯದಲಿ ನೀರೆ ನೀರು +ಉಗಮ ಸಂಗಮಗಳೆರಡ ನುಂಗಿ ನಿ- +ನ್ನೊಳಗೆ ನೀನೇ ಸೇರು’ ’ +೬. ಕಾವ್ಯಾನುಭವದ ಭಿನ್ನತೆಯನ್ನು ಗುರುತಿಸಲು ಬೇಂದ್ರೆಯವರ ‘ಜೀವಲಹರಿ’ ಸಂಕಲನದ ‘ನಾದಬೇಕು’ ಎಂಬ ಕವನದ ಜೊತೆ ಹೋಲಿಸಬಹುದು. ‘ನಾದಬೇಕು’ ಕವನದಲ್ಲಿ ‘ನಾದ’ ದ ಹೇಳಿಕೆಗಳಿವೆ. ‘ಜೀವಲಹರಿ’ ಸಂಕಲನ ೧೯೫೭ರಲ್ಲಿ ಅಂದರೆ ನಾದಲೀಲೆ ಬಂದು ೧೯ ವರುಷಗಳ ಬಳಿಕ ಪ್ರಕಟವಾಗಿದೆ. ‘ನಾದಬೇಕು’ ಕವನದಲ್ಲಿ ‘ನಾದ’ ದ ಮೂಲಕ ತಾತ್ವಿಕ ಆಳ ಅಗಲಗಳನ್ನು ವಿಸ್ತರಿಸಿ ಹೇಳುವ ಪ್ರಯತ್ನ ಇದೆ. ಆದರೆ ಇದು ‘ನಾದಲೀಲೆ’ ಯಂತಹ ಯಶಸ್ವಿ ಕವನ ಅಲ್ಲ. ಅಡಿಗರು ಬೇಂದ್ರೆ ಬಗ್ಗೆ ಹೇಳಿದ ತತ್ವಪದದ *ಶೂದ್ರ ನವೆಂಬರ್ ೧೯೮೧ನೇ ಸಂಚಿಕೆ)ನೆನಪು ಬರುವಂತಿದೆ. +೭. ‘ಕಣ್ಣಿನಾರತಿ’ ಹಾಗೂ ‘ಎತ್ತಿ‌ಒತ್ತಿಬಂತು ಜೀವ’ ತನ್ನ ವಿಶೇಷಾರ್ಥಗಳನ್ನು ಗುಪ್ತವಾಗಿ ಸೂಚಿಸುತ್ತದೆ. ಮೂಲರತಿಯ ‘ತೇವ’ ಎಂಬ ಪದಕ್ಕೆ ಲೈಂಗಿಕ ಸಂದರ್ಭದ ಒಂದು ಅರ್ಥವ್ಯಾಪ್ತಿಯೂ ಇದೆ. ಆ ಅರ್ಥದಲ್ಲಿ ‘ಒತ್ತಿ ಬಂತು ಜೀವ’ ಗರ್ಭಾಂಕುರವನ್ನೂ ಸೂಚಿಸಬಲ್ಲದು. ಆ ‘ತೇವ’ ಸೋಕಲು ಶಿವನ ಹಣೆಯ ಸುಡುವ ಕಣ್ಣಿನ ಬೆಂಕಿ ಮಾಯವಾಗಿ ಅದು ಆರತಿಯಾಗುತ್ತದೆ. ಆ ಕಣ್ಣಿನ ರತಿ ಎತ್ತಿ ಎತ್ತಿ ಜೀವವನ್ನು ಬರಿಸುತ್ತದೆ. ಆಗ ಅನಂಗನ ಹುಟ್ಟು. ಗಂಡು-ಹೆಣ್ಣು ಒಂದಾಗುವ ಮದುವೆಯಲ್ಲಿ ಮದುಮಕ್ಕಳಿಗೆ ಎತ್ತುವ ಆರತಿ ಎಲ್ಲರ ಸಮ್ಮುಖದ ವಿಧ್ಯುಕ್ತ ಆಚರಣೆ. ಆದರೆ ಮೂಲರತಿಯ ತೇವವೇ ಜೀವ ಸಂಸ್ಕಾರಗೊಂಡಾಗ ಕಣ್ಣಿನಾರತಿ ಸೌಂದರ್ಯವನ್ನು ಬೆಳಗುತ್ತದೆ. ಕಾಮ, ಪ್ರೇಮ, ಪ್ರಕೃತಿ ಸ್ವಭಾವಗಳು ಸೃಷ್ಟಿಯ ಸೌಂದರ್ಯದಲ್ಲಿ ಸತ್ತು ಹುಟ್ಟುವ ಬಗೆ ಇದು. ಸುಟ್ಟು ಹುಟ್ಟುವ ಈ ಪ್ರಕ್ರಿಯೆ ಸಾವನ್ನು ಮರೆಸಿ ಸೌಂದರ್ಯವನ್ನೂ ಸೃಷ್ಟಿಶೀಲತೆಯನ್ನೂ ಸ್ಥಾಪಿಸುತ್ತದೆ. ಸಾವನ್ನು ಮರೆತು ಸಾಗುವ ಸೃಷ್ಟಿಯೇ ನಿರಂತರವಾದ ಜೀವ ಪ್ರವಾಹ. ಸೃಷ್ಟಿಯೇ ಒಂದು ಆಟ *ಲೀಲೆ) ಹಾಗೂ ಪಾಟ *ಹಾಡು,ನೀತಿ). ಕವನದ ಮುಂದಿನ ಮೂರು ಸಾಲುಗಳು: +ಎದೆಯ ತೊರಿಸಿ ಕಣ್ಣ ತೆರಿಸಿ ಹೋದ ಮಾಟ ನೋಟ +ಮರಳಿ ಬಂದು ಕಣ್ಣ ಕೊಟ್ಟು ಹೃದಯ ಜೀವ ಕೂಟ +ಸೃಷ್ಟಿಯನ್ನೇ ನಡೆಸುತಿಹನು ಆಗಿ ಆಟ ಪಾಟ|| +೮. ಸಂಗೀತ ಶಾಸ್ತ್ರದ ಪ್ರಕಾರ ‘ನಾ’ ಎಂದರೆ ಪ್ರಾಣವಾಯು ‘ದ’ ಎಂದರೆ ಪ್ರಾಣಾಗ್ನಿ. ಇವುಗಳ ಅವಿಚ್ಛಿನ್ನ ಘರ್ಷಣೆಯಿಂದ ನಾದ ಹುಟ್ಟುತ್ತದೆ. ಹೀಗೆ ಉತ್ಪನ್ನವಾದ ನಾದ ನಾಭಿ, ಹೃದಯ, ಕಂಠ, ನಾಲಗೆ ಮತ್ತು ಶಿರಸ್ಸು ಇವುಗಳ ಮುಖಾಂತರ ಪುಷ್ಟಿಗೊಂಡು ಪ್ರಕಟವಾಗುತ್ತದೆ. +೯. ಒಬ್ಬನ ರಕ್ತದಿಂದ ಒಂದು ಸಲ ನಾನು ಪಡೆದ ಪ್ಲೇಟ್‌ಲೆಟ್ ಕಣಗಳು ಬ್ಲಡ್‌ಬ್ಯಾಂಕಿನಲ್ಲಿ ಹನ್ನೆರಡು ಮಂದಿ ರಕ್ತದಾನಿಗಳ ರಕ್ತದಿಂದ ಪಡೆಯಬಹುದಾದ ಕಣಗಳಿಗೆ ಸಮಾನ. ದಾನಿಯ ದೇಹದ ಮೂರನೇ ಎರಡು ಭಾಗದಷ್ಟು ರಕ್ತವನ್ನು ಡಯಾಲಿಸಿಸ್ ಮಾಡಿದಂತೆ ಒಂದು ಯಂತ್ರದೊಳಗೆ ತುಂಬಿಸಿ, ಅದರಿಂದ ಪ್ಲೇಟ್‌ಲೆಟ್ ಕಣಗಳನ್ನು ಬೇರ್ಪಡಿಸಿ ರಕ್ತವನ್ನು ಪುನಃ ದಾನಿಯ ದೇಹಕ್ಕೆ ತುಂಬಿಸಲು ಕನಿಷ್ಠ ಮೂರು ಗಂಟೆಗಳ ಸಮಯ ಬೇಕು. ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಪ್ಲೇಟ್‌ಲೆಟ್ ಕಣ ತೆಗೆಯುವ ಯಂತ್ರ ಹಾಳಾದ್ದರಿಂದ, ಸ್ವಲ್ಪ ದೂರದ ತಿಪ್ಪಸಂದ್ರದಲ್ಲಿರುವ್ ಟಿ.ಟಿ.ಕೆ. ಬ್ಲಡ್ ಬ್ಯಾಂಕಿನ ಯಂತ್ರ ಉಪಯೋಗಿಸಿ ಈ ಕಣಗಳನ್ನು ಬೇರ್ಪಡಿಸಬೇಕಾಯಿತು. ಆದ್ದರಿಂದ ಆತ ಬಂದಾಗ ಸಂಜೆಯಾಗಿತ್ತು. ಹಾಗಾಗಿ ರಾತ್ರಿಯ ನಿದ್ರೆಗೆ ಜಾರಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. +೧೦. ‘ನಾದಲೀಲೆ’ ಸಂಕಲನದ ಮೊದಲ ಮುದ್ರಣದ ಮುಖಪುಟದಲ್ಲಿ ಶಂಖದ ಸಂಕೇತದ ಒಂದು ಚಿತ್ರ. ಮೊಗಚಿ ಇಟ್ಟ ಶಂಖದಿಂದ ರೆಕ್ಕೆ ಉಳ್ಳ ಪುಟ್ಟ ಮುಗ್ಧ ದೇವರ ಮಕ್ಕಳು ಶಂಖ ಊದುತ್ತಾ ಹಾರಿ ಹೊರಬಂದು ಹಾರಾಡುವ ಶಂಖ ಊದುವ ಚಿತ್ರ. ಪ್ರಖ್ಯಾತ ಕತೆಗಾರರಾದ ದಿವಂಗತ ಎಂ ಸೀತಾರಾಮ *ಆನಂದ) ‘ನಾದಲೀಲೆ’ ಕವನ ಸಂಗ್ರಹದ ಮೊದಲ ಮುದ್ರಣಕ್ಕೆ ಶಂಖದ ಸಂಕೇತದ ಈ ಮುಖಚಿತ್ರವನ್ನು ಬರೆದುಕೊಟ್ಟಿದ್ದರು. ೧೯೮೯ರಲ್ಲಿ ಪ್ರಕಟವಾದ ಹನ್ನೊಂದನೇ ಮುದ್ರಣದಲ್ಲೂ ಇದೇ ಚಿತ್ರವನ್ನು ಪುನರ್ ಮುದ್ರಿಸಿದ್ದಾರೆ. ನನ್ನ ಸ್ವಂತದ ಕಾಪಿ ಈ ಮುಖಪುಟ ಚಿತ್ರವುಳ್ಳದ್ದು. ಆದ್ದರಿಂದ ಶಂಖ ಚಿತ್ರದ ಮೂಲಕ ನಾದಲೀಲೆ ಸಂಕಲನದ ಕವರ್‌ಪೇಜ್ ನೆನಪಿಗೆ ಬಂದುದು ಎಂದು ನನ್ನ ಊಹೆ. +೧೧. ‘ತಿರುಚೆಂದೂರು’ ಬಂಗಾಳಕೊಲ್ಲಿಯ ಕಡಲ ತಡಿಯ ಪಟ್ಟಣ. ಇಲ್ಲಿ ಪ್ರಖ್ಯಾತ ‘ವಡಿವೇಲು’ ದೇವಸ್ಥಾನವಿದೆ. ಇಲ್ಲಿನ ಕರಾವಳಿ ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಆದಿತನಾರ್ ಕಾಲೇಜುಗಳ ಸಮೂಹ ಇದೆ. ಒಂದು ಸಂದರ್ಭದಲ್ಲಿ ಕರಾವಳಿಗೆ ತಾಗಿಕೊಂಡಿರುವ ಈ ಕಾಲೇಜು ಹಾಸ್ಟೆಲಿನಲ್ಲಿ ನಾನು ಮೂರುವಾರಗಳ ಕಾಲ ವಾಸವಾಗಿದ್ದೆ. ಅಲ್ಲಿದ್ದಷ್ಟು ದಿನ ಬೆಳಗಾತ ಸೂರ್ಯೋದಯದ ವೀಕ್ಷಣೆ ಮತ್ತು ಕಡಲ ಕಿನಾರೆಯ ನಡಿಗೆ. ಪೂರ್ವ ದಿಕ್ಕಾದ್ದರಿಂದ ಬಂಗಾಳಕೊಲ್ಲಿಯ ಸೂರ್ಯೋದಯ ಬಹು ಸುಂದರ. ದೊಡ್ಡ ಬೆಳಗು. ಪೂರ್ವಕರಾವಳಿಯ ಅರುಣೋದಯ ವೈಭವ, ನಾನು ಆ ಕಾಲದಲ್ಲಿ ಉದ್ಯೋಗದಲ್ಲಿದ್ದ ಉಡುಪಿಯ *ಪಶ್ಚಿಮ ಕರಾವಳಿ) ಸೂರ್ಯೋದಯಕ್ಕಿಂತ ಭಿನ್ನ. ಸೂರ್ಯೋದಯದಲ್ಲಿ ಇನ್ನೂ ಮಹತ್ತಾದ ಸಾಗರ ವೈಶಾಲ್ಯದ ಹರಹನ್ನು ಕನ್ಯಾಕುಮಾರಿಯಲ್ಲಿ ಕಾಣಬಹುದು. +೧೨. ‘ಹೃದಯ ಸಮುದ್ರ’ *ಪ್ರಥಮ ಮುದ್ರಣ ಜುಲಾಯಿ ೧೯೫೬) ಸಂಕಲನದಲ್ಲಿ “ನನ್ನ ಕಣ್ಣೇ ಕಿವಿಯು/ಕವಿಯು ನಾನು’ ’ ಎಂದಿದ್ದಾರೆ. *ಕವನ: ‘ಶ್ರೀ ಮಾತೃಶ್ರೀಗೆ’ )ಈ ಕವನದಲ್ಲಿ ಕಣ್ಣಿಂದಲೆ ಕುಡಿಯುವ/ನುಡಿಯುವ ಅನುಭವ. +೧೩. ಕುರ್ತಕೋಟಿಯವರು ಕಾವ್ಯ ಲೈಫ್‌ಸೇವರ್ ಆಗುತ್ತದೆ ಎಂದಾಗ ಬಹಳಹಿಂದೆ *ಸುಮಾರು ೨೫ ವರುಷಗಳ ಹಿಂದೆ, ಮೈಸೂರಿನ ಮಾನಸ ಗಂಗೋತ್ರಿ ಲೈಬ್ರರಿಯಲ್ಲಿ)ಓದಿದ ಜಾನ್ ಸ್ಟುವರ್‍ಟ್ ಮಿಲ್‌ನ ಒಂದು ಬರಹ ನೆನಪಾಯಿತು. +ಕಳೆದ ಶತಮಾನದ ಇಂಗ್ಲೆಂಡ್‌ನ ಅರ್ಥಶಾಸ್ತ್ರಜ್ಞ ಜಾನ್ ಸ್ಟುವರ್‍ಟ್ ಮಿಲ್ ದೊಡ್ಡ ವಿದ್ವಾಂಸರಾಗಿದ್ದ ಆತನ ತಂದೆ ಜೊತೆ ಎಳೆ ಬಾಲ್ಯದಿಂದಲೇ ಕಲಿತು ಬಹುದೊಡ್ಡ ಪಂಡಿತನಾದ. ಆದರೆ, ಬಾಲ್ಯದಲ್ಲಿ ತಂದೆಯೊಡನೆ ಈ ಓದಿನ ಓಘದಲ್ಲಿ ಬಿದ್ದು ತನ್ನ ಸಹಜ ಬಾಲ್ಯವನ್ನು ಕಳೆದುಕೊಂಡ ಅವನು ಯೌವನದಲ್ಲಿ ಒಂದು ರೀತಿಯ ಮಾನಸಿಕ ಖಿನ್ನತೆಗೆ *ಟಿeಡಿvous bಡಿeಚಿಞಜoತಿಟಿ)ಒಳಗಾದ. ಕೊನೆಗೆ ಇಂಗ್ಲಿಷ್ ಕವಿ ವರ್ಡ್ಸ್‌ವರ್ತ್‌ನ +ಖಿiಟಿಣeಡಿಟಿ ಂbbeಥಿ ಪದ್ಯವನ್ನು ಓದುತ್ತಾ ತನ್ನ ಬಾಲ್ಯವನ್ನು ಮರಳಿ ಪಡೆದು ಮಾನಸಿಕ ಖಿನ್ನತೆಯಿಂದ ಹೇಗೆ ಪಾರಾದ ಎಂಬುದನ್ನು ಬರೆದಿದ್ದಾನೆ. +೧೪. ಧಾರವಾಡದ ಸಮಾಜ ಪುಸ್ತಕಾಲಯ ಪ್ರಕಟಿಸಿದ ಬೇಂದ್ರೆಯವರ ‘ಸಾಹಿತ್ಯದ ವಿರಾಟ್ ಸ್ವರೂಪ’ ಗ್ರಂಥದ ಅನುಬಂಧ-೪ರಲ್ಲಿ, ಶ್ರೀಮತಿ ಶಾಂತಾ ಗಲಗಲಿ ಅವರು ೧೯೪೬ರ ವಾಹಿನಿ ವಿಶೇಷ ಸಂಚಿಕೆಯಲ್ಲಿ ‘ನಾದಲೀಲೆ’ ಬಗ್ಗೆ ಒಂದು ಲೇಖನ ಪ್ರಕಟಿಸಿದ್ದಾರೆ ಎಂದು ತಿಳಿಯುತ್ತಿದೆ ಎಂದಿದ್ದಾರೆ. ಆ ಲೇಖನ ಓದಲು ನನಗೆ ಇನ್ನೂ ಸಿಗಲಿಲ್ಲ. +***** +ಆಗಸ್ಟ್ ೨೦೦೨ +೧. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ ಗುಹೇಶ್ವರ ನಿಮ್ಮ ಶರಣ ಸಂಬಂಧ ೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ ನಿಮ್ಮ ನಿಲವನನುಭವ […] +ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […] +‘ಬಿಚ್ಚು’ (ಲಾರೆನ್ಸ್)‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್)‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ (ಬ್ಲೇಕ್) ಆದರೆ: ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_392.txt b/Kannada Sahitya/article_392.txt new file mode 100644 index 0000000000000000000000000000000000000000..af647acbfd9636d11e94ececd175eca9fa2b17b6 --- /dev/null +++ b/Kannada Sahitya/article_392.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹತ್ತು ದಿನಗಳವರೆಗೆ ಮನರಂಜನೆಯ ಬೇರೆ ಬೇರೆ ಕಾರ್ಯಕಲಾಪಗಳಿದ್ದವು. ಮೊದಲನೇ ದಿನ ಶಾಸ್ತ್ರೀಯ ಗಾನಕ್ಷೇತ್ರದಲ್ಲಿ ಹೆಸರು ಗಳಿಸಿದ ಪುಣೆಯ ಶ್ರೀಮತಿ ಸಗುಣಾಬಾಯಿಯವರ ಗಾಯನ ಇಡಲಾಗಿತ್ತು. ನಾಡಹಬ್ಬದ ನಿಮಿತ್ತವಗಿಯೇನಿಮಿತ್ತವಾಗಿಯೇ ಧಾರವಾಡಕ್ಕೆ ಬರಲಿದ್ದ ಸಗುಣಾಬಾಯಿಯವರು ಆ ಒಂದು ದಿನ ಅಲ್ಲಿ ಬರಲು ಒಪ್ಪಿಕೊಂಡಿದ್ದರು. ಇಂತಹ ಹೆಸರುಗೊಂಡ ಕಲಾವಿದಳನ್ನು ಕೇಳುವ ಭಾಗ್ಯ ಸುಲಭವಾಗಿ ದೊರೆತುದಕ್ಕಾಗಿ ಕಾರ್ಯಕ್ರಮವನ್ನು ಏರ್ಪಡಿಸಿದವರಂತೆ ಅಲ್ಲಿಯ ಜನರೂ ಆ ವರುಷದ ನಾಡಹಬ್ಬದಲ್ಲಿ ಹೆಚ್ಚಿನ ಆಸ್ಥೆಯನ್ನು ವಹಿಸಿದ್ದರು. +ನಾನಿನ್ನೂ ಆ ಊರಿಗೆ ಹೊಸಬನಾಗಿದ್ದೆ. ಶಂಭುಶಾಸ್ತ್ರಿಗಳೊಬ್ಬರೇ ನನ್ನ ನಿಕಟ ಪರಿಚಯದವರಾಗಿದ್ದರು. ಆದುದರಿಂದ ಮೊದಲೇ ನಿಶ್ಚಿತವಾದಂತೆ ಕಾರ್ಯಕ್ರಮಕ್ಕೆ ಇನ್ನೂ ಅರ್ಧ ತಾಸು ಇರುವಾಗಲೇ ಅವರು ನನ್ನನ್ನು ಕರೆದೊಯ್ಯಲು ಬಂದರು. +ಕಾರ್ಯಕ್ರಮವು ಊರ ಮಧ್ಯಭಾಗದಲ್ಲಿರುವ ರಾಮದೇವಾಲಯದಲ್ಲಿತ್ತು. ಪ್ರವೇಶಧನವಿರಲಿಲ್ಲವಾದ್ದರಿಂದ ಸಭಾಮಂಟಪವು ಕಿಕ್ಕಿರಿದು ತುಂಬಿತ್ತು. ಊರ ಜನರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಲಗುಬಗೆಯಿಂದ ಮುಗಿಸಿ ಆದಷ್ಟು ಬೇಗ ಬಂದು ಜಾಗ ಹಿಡಿದು ಕುಳಿತಿದ್ದರು. ಅಲ್ಲಿಯ ಜನರೇ ತುಂಬ ರಸಿಕರು ಎನಿಸಿತು! ಶಂಭುಶಾಸ್ತ್ರಿಗಳು ನನ್ನನ್ನು ಸಭಾಭವನಕ್ಕೆ ಕರೆದೊಯ್ದು ಕೆಲವು ನಿಯಂತ್ರಿತ ದೊಡ್ಡ ವ್ಯಕ್ತಿಗಳಿಗೆ ಸಿದ್ಧಪಡಿಸಿದ ಸ್ಥಳದಲ್ಲಿ ಕೂಡ್ರಿಸಿದರು. +ಸುತ್ತಲೆಲ್ಲ ಅಂದಿನ ಕಾರ್ಯಕ್ರಮ, ಸುಗುಣಾಬಾಯಿಯವರ ಬಗ್ಗೇ ಮಾತು. ನನಗೆ ಗಾಯನದಲ್ಲಿ ಅಷ್ಟೇನೂ ಆಸ್ಥೆಯಿರಲಿಲ್ಲ. ಶಾಸ್ತ್ರೀಯ ಸಂಗೀತದ ಅಭಿರುಚಿಯಂತೂ ಏನೂ ಇರಲಿಲ್ಲ. ಆದರುಆದರೂ ಶಂಭುಶಾಸ್ತ್ರಿಯವರು ಅಂದು ಸುಗುಣಾಭಾಯಿಯವರನ್ನು ಕುರಿತು ನನ್ನ ಮುಂದೆ ಕೊಟ್ಟ ದೊಡ್ಡ ವ್ಯಾಖ್ಯಾನ ನನ್ನಲ್ಲಿ ಅವಳ ಬಗ್ಗೆ ಕುತೂಹಲ ಹುಟ್ಟಿಸಿತ್ತು! ಸುತ್ತಲೂ ನೆರೆದವರಲ್ಲಿ ನನ್ನಂತೆಯೇ ಆ ವ್ಯಕ್ತಿಯನ್ನು ನೋಡಲೆಂದೇ ಬಂದವರು ಅನೇಕರಿದ್ದಿರಬಹುದು. +ಗಂಟೆ ಹತ್ತಾಯಿತು. ಕಾರ್ಯಕ್ರಮವು ಆಗಲೇ ಆರಂಭವಾಗಬೇಕಿತ್ತು. ಆದರೆ ಕಾರ್ಯಕ್ರಮದ ಏರ್ಪಾಟಿಗೆ ಕಾರಣರಾದವರಲ್ಲಿಯ ಒಬ್ಬರ ಮೋರೆಯೂ ಅಲ್ಲಿ ಕಾಣಲಿಲ್ಲ. ಶಂಭುಶಾಸ್ತ್ರಿಗಳೇ ಅಂದು ಸುಗುಣಾಬಾಯಿಯವರ ಪರಿಚಯವನ್ನು ಮಾಡಿಕೊಡುವವರಿದ್ದರು. ಅವರ ಗಾಯನದ ರೀತಿಯನ್ನು ಶಾಸ್ತ್ರಿಯವರಷ್ಟು ಕೂಲಂಕುಷವಾಗಿ ಅರಿತು, ಅದರ ಸವಿ ಸೇವಿಸಿ ಆನಂದಿಸಿದವರು ಅಲ್ಲಿ ಬೇರೆ ಯಾರೂ ಇದ್ದಂತಿರಲಿಲ್ಲ! ಆದ್ದರಿಂದಲೇ ಅವರ ಪ್ರತ್ಯಕ್ಷ ಪರಿಚಯ ತಮಗೆ ಇರಲಿಲ್ಲವಾದರೂ ಅವರ ಗಾಯನ ಕಲೆಯ ಪರಿಚಯ ಮಾತ್ರ ಸ್ವತಃ ಅವಳಿಗಿಂತ ತಮಗೇ ಹೆಚ್ಚು ಗೊತ್ತಿದೆ ಎನ್ನುವಂತಿತ್ತು, ಶಾಸ್ತ್ರಿಯವರ ಮಾತಿನ ರೀತಿ! +ಖುರ್ಚಿಯ ಮೇಲೆ ಕುಳಿತ ಕೂಡಲೇ ಶಾಸ್ತ್ರಿಗಳು ನನ್ನ ಅಸ್ತಿತ್ವವನ್ನೂ, ಸುತ್ತಲಿದ್ದ ಜನರನ್ನೂ ಅಷ್ಟೇಕೆ ಅಂದಿನ ಕಾರ್ಯಕ್ರಮವನ್ನೂ ಮರೆತಿರಬೇಕು. ಅಂದು ಅಷ್ಟೆಲ್ಲ ಜನರ ಮುಂದೆ ನಿಂತು, ಅಷ್ಟೊಂದು ವಿಖ್ಯಾತ ವ್ಯಕ್ತಿಯ ಪರಿಚಯ ಮಾಡಿಕೊಡುವುದೆಂದರೆ ಸಾಮಾನ್ಯ ಕೆಲಸವೇ! ಕಿಸೆಯಲ್ಲಿ ತಂದ ಕಾಗದದ ಪುಟಗಳನ್ನು ಓದುವುದರಲ್ಲಿ ಮಗ್ನರಾಗಿದ್ದರು. ಕಾರ್ಯಕ್ರಮಕ್ಕೆ ಕಾರಣರಾದವರಲ್ಲಿಯ ಒಬ್ಬರೂ ಇನ್ನೂ ಬರುವ ಲಕ್ಷಣ ತೋರದಿದ್ದರಿಂದ ಸಭೆಯಲ್ಲಿ ಗುಲ್ಲು ಸಿಳ್ಳು ಹೆಚ್ಚಾದವು. ಆದರೂ ಶಾಸ್ತ್ರಿಗಳ ಈದು ಭಂಗವಾಗಲಿಲ್ಲ. ಕೊನೆಗೆ ನಾನೇ ಬೇಸತ್ತು ಶಾಸ್ತ್ರಿಗಳಿಗೆ ಎಂದೆ: +“ಕಾರ್ಯಕ್ರಮ ಇಷ್ಟು ಬೇಗ ಆರಂಭ ಆಗುವ ಲಕ್ಷಣವಿಲ್ಲ. ಸ್ಟೇಜಿನ ಮೇಲೆ ಯಾವ ತಯಾರಿಯೂ ಆದಂತೆ ತೋರುವದಿಲ್ಲ.” +“ಛೇ ಛೇ!ಹಾಗೇಕೋ? ನಮ್ಮ ಗೋಪಾಲ ಹಾಗೆಲ್ಲ ಪಡಪೋಸಿಯಲ್ಲ. ಒಂದು ಕೆಲಸ ಕೈಯಲ್ಲಿ ತೆಗೆದುಕೊಳ್ಳುವಾಗಲೇ ಅವನು ಹಿಂದು ಮುಂದು ನೋಡುತ್ತಾನೆ. ಆದರೆ ಒಮ್ಮೆ ಕೈಕೊಂಡ ಬಳಿಕ ಅದನ್ನು ಪಾರುಗಾಣಿಸದೇ ಬಿಡುವುದಿಲ್ಲ. ಏನೋ ಅವಳಿಗೆ ಬರಲಿಕ್ಕೆ ಹೊತ್ತಾಗಿರಬೇಕು. ಧಾರವಾಡದಿಂದ ಬರುವುದು. ಕಾರುಗೀರಿನ ವ್ಯವಸ್ಥೆ ಸರಿಯಾದ ಹೊತ್ತಿನಲ್ಲಿ ಆಗಿರಲಿಕ್ಕಿಲ್ಲ”ಎಂದರು ಶಾಸ್ತ್ರಿಗಳು. +“ನಿಮಗೆ ಇಂದು ಭೆಟ್ಟಿಯಾಗಲಿಲ್ಲವೇ ಗೋಪಾಲನದು?” +“ಬೆಳಿಗ್ಗೆ ಒಮ್ಮೆಯಾಗಿತ್ತು. ಅದರ ನಂತರ ನನಗೆ ಸ್ವಲ್ಪ ಕೆಲಸವಿದ್ದುದರಿಂದ ಅವನ ಹತ್ತಿರ ಹೋಗಲಿಲ್ಲ; ಅವನೂ ಬರಲಿಲ್ಲ. ಬಹುತೇಕ ಕೆಲಸದ ಒತ್ತಡ.” +ರಾತ್ರೆ ಹತ್ತೂವರೆ ಸಮೀಪ ಹತ್ತಿತು. ಜನರೆಲ್ಲ ಬೇಸತ್ತು ಕಾರ್ಯಕ್ರಮವಾಗುವುದೋ ಇಲ್ಲವೋ ಎಂದು ಸಂಶಯಪಡಹತ್ತಿದರು. ಕೆಲವರಿಗೆ ಆಗಲೇ ನಿದ್ದೆ ಆವರಿಸಹತ್ತಿತು. ಶಾಸ್ತ್ರಿಗಳಿಗೂ ಸ್ವಲ್ಪ ದುಗುಡ ಹೆಚ್ಚಿರಬೇಕು. ಓದುತ್ತ ಕುಳಿತಿದ್ದ ಪುಟಗಳನ್ನು ಕಿಸೆಯಲ್ಲಿಡುತ್ತ, +“ಸುಳ್ಳಲ್ಲ, ಹೇಳ್ತಾ ಹೇಳ್ತಾ ಹೊತ್ತು ಬಹಳೇ ಆಗಿಬಿಟ್ತಲ್ಲ. ಇನ್ನೂ ತಬಲೆ, ಪೆಟ್ಟಿಗೆ ಸಹ ಬಂದಿಲ್ಲ” ಎನ್ನುವಷ್ಟರಲ್ಲಿ ಕಾರೊಂದು ದೇಗುಲದ ಬಾಗಿಲಲ್ಲಿ ನಿಂತಿತು. ಹಾಡಿಗಿಂತ ಬರುವವಳ ಮೋರೆ ನೋಡಲೆಂದೇ ಉತ್ಸುಕರಾಗಿದ್ದ ಅನೇಕರು “ಅವಳು ಬಂದಳು” ಎಂದು ಏಕಕಂಠದಲ್ಲಿ ನುಡಿದು ಭರ್ರನೆ ಎದ್ದು ಕಾರಿಗೆ ಮುತ್ತಿಗೆ ಹಾಕಿದರು. ಅವರನ್ನೆಲ್ಲ ಬದಿಗೆ ಸರಿಸಿ ಅವಳು ಸ್ಟೇಜಿಗೆ ಬರುವ ತನಕ ಇನ್ನೂ ಕೆಲ ಹೊತ್ತು ಕಳೆಯಿತು. ಅಂತೂ ರಾತ್ರೆ ಹನ್ನೊಂದು ಹೊಡೆಯುವ ಹೊತ್ತಿಗೆ ಕಾರ್ಯಕ್ರಮ ಆರಂಭವಾಗಿತ್ತು. +ಹೆಂಗಸರನೇಕರಲ್ಲಿ ಆಗಲೇ ಅವಳ ಸೀರೆ, ಮೈಮೇಲಿನ ಆಭರಣ, ಮೋರೆಯ ಬಣ್ಣ ಇವುಗಳ ವರ್ಣನೆಗೆ ಮೊದಲಾಯಿತು. ಕೆಲವರು ಥೇಟ್ ಲಕ್ಷ್ಮಿಯೆಂದರು. ಇನ್ನು ಕೆಲವರು ಬಿನ್ನಾಣಗಿತ್ತಿಯೆಂದರು. ಇಷ್ಟೆಲ್ಲ ಗಂಡಸರ ಮುಂದೆ ಹಾಡುವ ಧೈರ್ಯದ ಹೆಣ್ಣು-ಗಂಡುಬೀರಿ ಎಂದರು, ಇನ್ನು ಹಲವರು.ಆದರೆ ಇಷ್ಟು ಹೊತ್ತಿನವರೆಗೆ ಶಾಸ್ತ್ರಿಗಳ ಬಾಯಿಯಿಂದ ಒಂದು ಚಕಾರ ಶಬ್ಧವೂ ಹೊರಬೀಳಲಿಲ್ಲ ! ಕಿಸೆಯೊಳಗಿನ ಕಾಗದದ ಹಾಳೆಗಳು ತಿರುಗಿ ಬಂದಿದ್ದವು. ಆದರೆ ಅವರನ್ನು ಆದಿನ ಪರಿಚಯ ಮಾಡಿಕೊಡಲು ಯಾರೂ ಕರೆಯಲೇ ಇಲ್ಲ. ಒಮ್ಮೆಲೇ ಕಾರ್ಯಕ್ರಮವು ಆರಂಭವಾಗುವಂತೆ ತೋರಿತು- ತಬಲಾದವನು ತಬಲೆಯನ್ನು ಸರಿಪಡಿಸಿದ. ಆಗ ಆ ಶಾಸ್ತ್ರಿಗಳು ಬಿಟ್ಟ ನೀಳವಾದ ನಿಟ್ಟುಸಿರೊಂದು ಅವರು ಅಡಗಿಸಲು ಯತ್ನಿಸಿದರೂ ನನಗೆ ಕೇಳಿಸಿತು! ಅದಾಗಲೇ ಸಾಕಷ್ಟು ರಾತ್ರಿಯಾದುದರಿಂದ ಉಳಿದ ಸಾಂಪ್ರದಾಯಿಕ ಆಡಂಬರವನ್ನು ರದ್ದುಗೊಳಿಸಿದರೆಂದು ಯಾರಿಗೂ ತಿಳಿಯುವಂತಿತ್ತು. ಎಲ್ಲರೂ ಹಾಡುಗಾರರ ಬಾಯಿಂದ ಹೊರಬೀಳಲಿರುವ ನಾದದ ಕಡೆಗೇ ಕಿವಿ ಕೊಟ್ಟು ಕುಳಿತಿದ್ದರು. +ಇದೀಗ ಶಾಸ್ತ್ರಿಗಳು ಬಾಯಿಬಿಟ್ಟರು:“ ಬಂಗಾರಕ್ಕೆ ಸುಗಂಧ ಕೂಡಿದೆಯಂತಿಲ್ಲವೇ ಅವಳ ಸೌಂದರ್ಯ? ಇಷ್ಟುದಿನ ಬರಿಯೇ ರೇಡಿಯೋದ ಮೇಲೆ ಕೇಳಿಯೇ ಆನಂದಿಸಿದ್ದೆ. ಈ ಹೊತ್ತು ಸ್ವತಃ ನೋಡುವ ಸುಯೋಗ! ಕಲೆ ಮತ್ತು ರೂಪ ಹೀಗೆ ಒಂದೆಡೆ ಸಿಗುವುದು ಅಪರೂಪ. ಅಡ್ಡಿಯಿಲ್ಲ. ಥೇಟ್ ಅಪ್ಸರೆಯಿದ್ದಾಳೆ. ಹುಡುಗಿ. ಇಷ್ಟು ಚಿಕ್ಕಾಯಸ್ಸಿನಲ್ಲಿ ಗಾಯನದಲ್ಲಿ ಇಷ್ಟು ನೈಪುಣ್ಯ ಪಡೆದುದು ಬಹಳ ಆಶ್ಚರ್ಯ.” +ಅವರು ಇನ್ನೂ ಮಾತನಾಡುತ್ತಿರುವಾಗಲೇ ವೀಣೆಯವನು ತನ್ನ ತಂತಿ ಮೀಟಿದ. ಮರುಕ್ಷಣವೇ ಅದರ ನಾದಕ್ಕೆ ಹೊಂದಿಕೊಳ್ಳುವಂತೆ ಅವಳ ಬಾಯಿಯಿಂದ ‘ಆ’ ಎಂಬ ಸ್ವರವು ಹೊರಬಿದ್ದಿತು. ಗವಯಿಗಳ ಸಂಪ್ರದಾಯದಂತೆ ಒಮ್ಮೆ ಕೆಮ್ಮಿ, ಕಂಠ ಸಡಿಲಿಸಿ ತನ್ನ ಸ್ವರವನ್ನು ಇನ್ನೂ ಮೇಲೆ ಒಯ್ದಳು. ಅಷ್ಟೇ: ಶಾಸ್ತ್ರಿಗಳು ಒಮ್ಮೆಲೇ ‘ಭೇಷ್’ ಎಂದರು. “ಅವಳಿನ್ನೂ ಹಾಡಲು ಆರಂಭಿಸಲೇ ಇಲ್ಲ, ಅದಾಗಲೇ ಭೇಷ್ ಎಂದಿರಲ್ಲ” ಎಂದು ಕೇಳಿದೆ. “ಅಯ್ಯೋ ಮರುಳೆ, ಅದೇನೊ ಹೇಳ್ತಾರಲ್ಲ ಬೆಳೆಯ ಸ್ವರೂಪ ಎಳೆಯಲ್ಲೇ ಎಂದು; ನುರಿತ ಕಿವಿಗಳಿದ್ದರೆ ಅವಳು ತುಟಿ ತೆರೆಯುವುದರೊಳಗೇ ಹೇಳಬಹುದು, ಅವಳು ಯಾವ ರಾಗ ಹಾಡಲಿದ್ದಾಳೆಂದು (!) ಹಾಡುಗಾರನ ನಿಜವಾದ ಕಲೆ ಈ ಆಲಾಪದಲ್ಲೇ ಇದೆ. ನಾನು ಈಗಲೇ ಊಹಿಸಬಲ್ಲೆ ಅವಳು ಹಾಡಲಿರುವ ರಾಗ ‘ಮಾಲಕಂಸ್’ ಎಂದು” ಎಂದು ನನ್ನ ಕಿವಿಯಲ್ಲಿ ನುಡಿದರು, ತಮ್ಮ ಮಾತಿನಿಂದ ಉಳಿದವರಿಗೆಲ್ಲ ತೊಂದರೆಯಾದೀತೋ ಎಂದು ಬೆದರಿದರೆನ್ನುವಂತೆ! “ಭೇಷ್ ಭೇಷ್”! ನೋಡಿದೆಯಾ ಅವಳು ಹೇಗೆ ತನ್ನ ಸ್ವರವನ್ನು ಏರಿಸಿ ಒಮ್ಮೆಲೇ ಕೆಳಗಿಳಿಸಿದಳೆಂದು. ಇದೋ ಈಗದು ಇನ್ನೂ ಕೆಳಗಿಳಿಯಹತ್ತಿತು. ಇದು ನೋಡು ಸುಗುಣಬಾಯಿಯ ವೈಶಿಷ್ಟ್ಯ. ಒಂದು ಮೈಲು ದೂರದಿಂದ ಇಂದಿನ ಕಾರ್ಯಕ್ರಮ ಕೇಳುತ್ತಿದ್ದರೂ ನಾನು ಕಣ್ಣು ಮುಚ್ಚಿ ಹೇಳುತ್ತಿದ್ದೆ: ಹಾಡುವವಳು ಸುಗುಣಬಾಯಿಯೇ ಎಂದು. ಅವಳ ಈ ವೈಶಿಷ್ಟ್ಯವನ್ನು ಹಸ್ತಗತ ಮಾಡಿಕೊಂಡವರು ತೀರ ವಿರಳ. ವ್ಹಾ ವ್ಹಾ ! ಏನು ದನಿ ! ಏನು ಸವಿ !! ಇನ್ನೂ ಹಾಡಿಗೆ ಸುರು ಮಾಡಿಲ್ಲ. ಇದು ಬರೇ ಆಲಾಪ. ಸುಂದರವಾದ ಕಟ್ಟಡ ಕಟ್ಟಬೇಕಾದರೆ ಹೇಗೆ ಸರಿಯಾದ ಬುನಾದಿ ಬೇಕೋ ಹಾಗೆ ಅವಳು ಕಟ್ಟಲಿರುವ ಗಾನಮಂದಿರಕ್ಕೆ ಈ ಅಲಾಪವೇ ತಳಹದಿ. ಬಹಳ ಮಂದಿಗೆ ಇದರ ಅರ್ಥವೇ ಆಗುವುದಿಲ್ಲ. ಏನೋ ಎಮ್ಮೆಯಂತೆ ‘ಆ ಅಂತಾರೆ ಎನ್ನುತ್ತಾರೆ” ಎಂದರು. ದುರ್ದೈವದಿಂದ ನನಗೂ ಹಾಗೇ ಅನಿಸಹತ್ತಿತು. “ನನಗೆ ಅವಳ ದನಿ ಅಷ್ಟೇನೂ ಸೇರಲಿಲ್ಲ. ಇದಕ್ಕಿಂತಲೂ ಸವಿಯಾದ ದನಿಯನ್ನು ಕೇಳಿದ್ದೇನೆ ಎಷ್ಟೋ ಸಿನೇಮಾಗಳಲ್ಲಿ” ಎಂದೆ. ಇದನ್ನು ನುಡಿದುದು ಸ್ವಲ್ಪ ದೊಡ್ಡಕ್ಕಾಗಿರಬೇಕು. ನನ್ನ ಎಡಕ್ಕೆ ತುಸು ದೂರ ಕುಳಿತ ವ್ಯಕ್ತಿಯೊಂದು ಕಣ್ಣುಹುಬ್ಬುಗಳಿಂದಲೇ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು. “ಅದೇ ಅದೇ ! ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲದವರಿಗೆ ಸಿನೇಮಾ ಹಾಡುಗಳಲ್ಲೇ ಇಂಪು. ಅದು ನಿನ್ನ ತಪ್ಪಲ್ಲ. ಅದಕ್ಕೆ ಮೊದಲಿನಿಂದಲೂ ಸಂಗೀತದಲ್ಲಿ ಒಂದು ಬಗೆಯ ಅಭಿರುಚಿ ಇರಬೇಕು. ನನಗೆ ನೋಡು, ಒಂದು ಐದು ವರ್ಷದ ಹುಡುಗನಾಗಿದ್ದಾಗಿನಿಂದ ಈ ಗಾನದ ಹುಚ್ಚು ಬಹಳ” ಎಂದರು ಶಾಸ್ತ್ರಿಗಳು. ಅವರ ಮಾತಿಗೆ ತಮ್ಮ ಸಂಪೂರ್ಣ ಸಮ್ಮತಿಯಿದೆಯೆಂಬಂತೆ ನನ್ನ ಎಡಕ್ಕೆ ಕುಳಿತ ಮುದುಕನೊಬ್ಬ, “ಸಂಗೀತ ಅಂದರೆ ಏನ್ರಿ ಹಾಡಲಿಕ್ಕೆ ಹೇಗೆ ಅದರ ಅಭ್ಯಾಸ ಬೇಕೋ ಹಾಗೆ ಅದನ್ನು ಕೇಳಿ ಸವಿಯಲು ಅದರ ಜ್ಞಾನ ತುಂಬ ಇರಬೇಕು” ಎಂದ. ಆದರೆ ನನ್ನ ಹಿಂದಿನಿಂದ ಬಂದ ಮಾತುಗಳಿಂದ ಮಾತ್ರ ನನಗೆ ಬಹಳ ನಾಚಿಕೆಯಾಯಿತು. “ಏನು ಕಗ್ಗಾ ಇದ್ದಾನೋ ಈ ಪ್ರಾಣಿ. ಈ ದನಿ ಇಂಪಲ್ಲ ಅಂತೆ. ಹಃ ! ಸುಗುಣಬಾಯಿ ಪ್ರಖ್ಯಾತಳಾದುದೇ ಅವಳ ದನಿಗಾಗಿ. ಅದೇನೋ ಹೇಳ್ತಾರಲ್ಲ, ಯಾರ ಮುಂದೆಯೋ ಕಿನ್ನರಿ ಬಾರಿಸಿದಂತೆ…. ಎಂದು.” “ಒಟ್ಟಿನಲ್ಲಿ ಧಾರವಾಡದ ಜನ ನೋಡು ಇಲ್ಲಿಯವರಿಗಿಂತ ಹೆಚ್ಚು ರಸಿಕರು. ಸುಗುಣಬಾಯಿಯೆಂದರೆ ಎಲ್ಲರಿಗೂ ಪ್ರೀತಿ. ನಾ ಹೋದ ಸಲ ಅಲ್ಲಿ ಹೋದಾಗ ರೇಡಿಯೋದ ಮೇಲೆ ಆಕೆಯ ಹಾಡು ಬಂತೆಂದರೆ ಊಟ ಮಾಡುವುದನ್ನು ಬಿಟ್ಟು ಹಾಡು ಕೇಳಲಿಕ್ಕೆ ಕೂಡ್ರುತ್ತಿದ್ದರು” ಎಂದರು ಶಾಸ್ತ್ರಿಗಳು. (ಇಂದು ಬೆಳಗಿನಿಂದ ಈ ಮಾತನ್ನು ಅವರು ಹತ್ತು ಸಲವಾದರೂ ಅಂದಿರಬೇಕು!) ಆಗ ತಬಲೆಯವನು ಒಮ್ಮೆ ‘ಢಣ್’ ಎಂದು ಬಡೆದ. “ಈಗ ಹಾಡು ಸುರು ಆಗುತ್ತದೆ ನೋಡು”- ಶಾಸ್ತಿಗಳು ಭವಿಷ್ಯ ನುಡಿದರು. +ಅವಳು ಒಂದು ಹಿಂದೀ ಹಾಡನ್ನು ಹಾಡಲು ಆರಂಭಿಸಿದಳು. ಸಭೆಯಲ್ಲಿ ಕೂಡಲೇ ಅನೇಕ ತಲೆಗಳು ತೂಗಹತ್ತಿದವು. ನನ್ನ ಎಡಕ್ಕೆ ಕುಳಿತ ಮುದುಕ ತನ್ನ ತೊಡೆಯನ್ನೇ ತಬಲೆಯನ್ನಾಗಿ ಮಾಡಿದ. ನಮ್ಮ ಮುಂದಿನ ಸಾಲಿನಲ್ಲೇ ಕುಳಿತ ಅನ್ನಪೂರ್ಣ ಸ್ಟೋರ್ಸಿನ ಪರಶುರಾಮಭಟ್ಟರು ಕ್ಷಣಕ್ಕೊಮ್ಮೆ ಹಿಂದೆ ನೋಡಿ ತಮ್ಮ ಹುಬ್ಬಿನ ಕುಣಿತದಿಂದಲೇ ನನ್ನ ಬಳಿಯ ಮುದುಕನ ಕೂಡ ಸಂಭಾಷಣೆ ಮಾಡಹತ್ತಿದರು, “ಹೇಗೆ ಭೇಷ್ ಇದೆ” ಎನ್ನುವಂತೆ. ಶಾಸ್ತಿಗಳಂತೂ ಒಮ್ಮೆಲೇ ಕಣ್ಣುಮುಚ್ಚಿ ಸಮಾಧಿ ಹತ್ತಿದವರಂತೆ ತಟಸ್ಥ ಕುಳಿತುಬಿಟ್ಟರು. ಹಾವಾಡಿಗನ ಪುಂಗಿಯ ನಾದಕ್ಕೆ ಮುಗ್ಧವಾಗಿ ಹೆಡೆಯಾಡಿಸುವ ನಾಗರದಂತೆ ಅವರ ತಲೆಯಷ್ಟೇ ತಬಲೆಯ ಬಡಿತಕ್ಕೆ ಸರಿಯಾಗಿ ತೂಗುತ್ತಿತ್ತು. ಅವರ ಆ ಅಲೆದಾಟ ನಿಂತರೆ ಕುರುಕ್ಷೇತ್ರದಲ್ಲಿ ಅಶ್ವತ್ಥಾಮನ ಮರಣದ ಸುದ್ದಿ ಕೇಳಿ ತಮ್ಮ ದೇಹವನ್ನು ರಥದಲ್ಲೇ ಬಿಟುಬಿಟ್ಟು ಸ್ವರ್ಗಲೋಕದಲ್ಲಿ ತಮ್ಮ ಮಗನನ್ನು ಹುಡುಕುವ ದ್ರೋಣಾಚಾರ್ಯರ ನೆನಪಾಗುತ್ತಿತ್ತು, ಅವರನ್ನು ನೋಡಿ ! ನಿಜಕ್ಕೂ ಅವರ ಜೀವ ಬೇರೆ ಯಾವುದೋ ಲೋಕದಲ್ಲಿ ಸಂಚರಿಸುತ್ತಿರಬೇಕು. ಅವರ ಗಾನಪ್ರಿಯತೆಯನ್ನು ಕಂಡು ಬೆರಗಾದೆ. ಆದರೆ ಆ ಕಲೆಯ ಬಗ್ಗೆ ನನಗಿದ್ದ ಅಜ್ಞಾನವನ್ನು ಕುರಿತು ಅಷ್ಟೇ ಬೇಸರಪಟ್ಟೆ. ನಾನು ಅಷ್ಟು ಅರಸಿಕನೇ? ಅಂದಿನ ಹಾಡು ಅಷ್ಟೇನೂ ಕೆಟ್ಟದ್ದಿರಲಿಲ್ಲ. ಅವಳ ದನಿಯೂ ತಕ್ಕಮಟ್ಟಿಗೆ ಇತ್ತು. ಆದರೆ ಅದರಲ್ಲಿ ಹೀಗೆ ಮೈಮರೆಸುವ (ತಲೆದೂಗಿಸುವ) ಶಕ್ತಿ ಇತ್ತು ಎಂದು ಮಾತ್ರ ನನಗೆ ಅನಿಸಲಿಲ್ಲ. ಸುಗುಣಬಾಯಿಯ ವಿಖ್ಯಾತಿಯ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅನೇಕ ಪತ್ರಿಕೆಗಳಲ್ಲಿ ಅವಲಅವಳ ಬಗ್ಗೆ ಬಂದ ಲೇಖನಗಳನ್ನು ಓದಿದ್ದೇನೆ. ಅವುಗಳಲ್ಲಿ ಬಂದ ಪ್ರಶಂಸೆಯಲ್ಲಿ ಅತಿಶಯೋಕ್ತಿ ಇದೆ ಎನ್ನದಿರಲು ಅದೇ ಗಾನವನ್ನು ಕೇಳಿ ತನ್ಮಯರಾಗಿ ಕುಳಿತ ಶಂಭುಶಾಸ್ತ್ರಿಗಳೊಬ್ಬರೇ ಸಾಕು. +ನನಗೆ ನಿದ್ದೆ ಬರಹತ್ತಿತು. ಇಷ್ಟೊಂದು ಖ್ಯಾತಿಗೊಂಡ ಹಾಡುಗಾರಳ ಕಾರ್ಯಕ್ರಮಕ್ಕೆ ಬಂದು ನಿದ್ದೆ ಮಾಡುವಷ್ಟು ಅರಸಿಕನೆನಿಸಿಕೊಳ್ಳುವುದು ನನಗೆ ಸೇರಲಿಲ್ಲ. ಶಾಸ್ತ್ರಿಗಳನ್ನಾದರೂ ಸ್ವಲ್ಪ ಮಾತನಾಡಿಸೋಣವೆಂದು ಅವರ ಭುಜ ತಟ್ಟಿ “ಶಾಸ್ತ್ರಿಗಳೇ” ಎಂದೆ. ಅವರು ಒಮ್ಮೆಲೇ ಜಿಗಿದುಬಿದ್ದುದನ್ನು ಕಂಡು ನನಗೇ ಕೆಡುಕೆನಿಸಿತು; ಸುಳ್ಳೇ ಅವರ ಗಾನಸಮಾಧಿಯನ್ನು ಕೆಡಿಸಿದೆನಲ್ಲ ಎಂದು. “ಅರೇ! ನಾವಿನ್ನೂ ಇಲ್ಲೇ ಇದ್ದೀವಲ್ಲ! ಆಹ, ಏನು ಕಲೆ! ಏನು ಕಲೆ! ಕಲೆಯೆಂದರೆ ದೇವರು ಮೆಚ್ಚಿ ಕೊಟ್ಟ ಕಾಣಿಕೆಯೆಂದು ಹೇಳುವುದು ಸುಳ್ಳಲ್ಲ. ಛೇ ಛೇ ಛೇ, ಏನು ಚಾತುರ್ಯ! ಏನು ಪ್ರಾವೀಣ್ಯ! ನಾನಂತೂ ಈ ಲೋಕದಲ್ಲೇ ಇರಲಿಲ್ಲ ನೋಡು. ಅವಳ ಇಂಪು ದನಿ ಅಲೆ ಅಲೆಯಾಗಿ ತೇಲಿಸುತ್ತಿತ್ತು ನನ್ನನ್ನು. ಏನೋ ಗರುಡಪಕ್ಷಿಯ ರೆಕ್ಕೆಯ ಮೇಲೆ ಕುಳಿತು ಮೇಲೆ ಮೇಲೆ ಹಾರಿಹೋಗುತ್ತಿದ್ದಂತೆ ಭಾಸವಾಯಿತು. ಚಂದ್ರಲೋಕದಲ್ಲಿ ವಿಹರಿಸುತ್ತಿದ್ದಂತೆ, ನಕ್ಷತ್ರಗಳನ್ನೇ ಕೈಯಿಂದ ಕಿತ್ತು ಸಂಗ್ರಹಿಸುತ್ತಿದ್ದಂತೆ, ಎಂಥ ದಿವ್ಯ ಅನುಭವ! ದೇವರ ಸಾನ್ನಿಧ್ಯದಲ್ಲಿದ್ದಂತೆ ಅನಿಸಿತು. ಕಲೆಯೆಂದರೆ ದೇವರು ತಾನೆ! ಈಗಲಾದರೂ ಮೆಚ್ಚಿದೆಯಾ ಸುಗುಣಾಬಾಯಿಯ ಗಾನವನ್ನು?” ಎಂದು ಕೇಳಿದರು. ಅವರ ಆಗಿನ ದನಿ ಈ ಲೋಕದ್ದೇ ಆಗಿರಲಿಲ್ಲ. ಅವರ ಆ ಅನುಭವವನ್ನು ಕಂಡು ಬೆರಗಾದ ನಾನು “ಮೆಚ್ಚಿದೆ” ಎಂದೆ, ನನ್ನ ಮನಸ್ಸಿನ ವಿರುದ್ಧ. +ಅವಳ ಮೊದಲನೇ ಹಾಡು ಮುಗಿದುದೇ ಚಪ್ಪಾಳೆಯ ಸುರಿಮಳೆಯಾಯಿತು. ಪರಶುರಾಮ ಭಟ್ಟರಂತೂ ತಮ್ಮ ಮೋರೆಯನ್ನು ತಿರುವಿಯೇ ಕುಳಿತು, “ಏನ್ರೀ ಇಷ್ಟು ಚೆನ್ನಾಗಿ ಹಾಡ್ತಾಳೆ ಎಂಬ ಕಲ್ಪನೆ ಕೂಡ ಇರಲಿಲ್ಲ” ಎಂದರು ಶಾಸ್ತ್ರಿಗಳೊಡನೆ. ಶಾಸ್ತ್ರಿಗಳು ಕೂಡಲೇ ಗಂಭೀರವಾಗಿ ಬರಿಯೇ “ಹೂಂ” ಎಂದರು. ತಾವು ಈ ಮೊದಲೇ ಅವಳನ್ನು (ಹಾಗೂ ಅವಳ ಬಗ್ಗೆ) ಬಹಳ ಸಲ ಕೇಳಿದುದರಿಂದ ತಮಗೆ ಏನೂ ಆಶ್ಚರ್ಯವಾಗಲಿಲ್ಲ ಎಂಬ ಭಾವವಿತ್ತು ಅವರ ಹೂಕಾರದಲ್ಲಿ! “ವಯಸ್ಸೂ ತೀರ ಚಿಕ್ಕದು. ಇಷ್ಟು ಚಿಕ್ಕ ವಯಸ್ಸಿನಲ್ಲಿ” ಎಂದು ನನ್ನ ಬಳಿ ಕುಳಿತ ಮುದುಕ ಮಾತು ಪೂರ್ಣಗೊಳಿಸುವ ಮೊದಲೇ “ಕಲೆಗೂ ವಯಸ್ಸಿಗೂ ಏನೂ ಸಂಬಂಧವಿಲ್ಲ. ದೇವರ ದೇಣಿಗೆ ಅದು. ಪೂರ್ವಜನ್ಮದ ಪುಣ್ಯವಿರಬೇಕು,” ಎಂದರು ಶಾಸ್ತ್ರಿಗಳು. ಅವರ ದನಿಯಲ್ಲಿಯ ಗಾಂಭೀರ್ಯ ಇನ್ನೂ ಹೆಚ್ಚಿತ್ತು. ನನ್ನ ಹಿಂದೆ ಎಲ್ಲೋ ಅವಳ ರೂಪದ ವರ್ಣನೆ ನಡೆದಿತ್ತು. +ರಾತ್ರಿ ಬಹಳವಾದುದರಿಂದ ಅವಳ ಎರಡನೇ ಹಾಡೇ ಕೊನೆಯ ಹಾಡಾಗಬೇಕಾಯಿತು. ಎರಡನೇ ಹಾಡು ನಡೆದಾಗಲೂ ಸಭೆಯೆಲ್ಲ ತಲೆದೂಗುತ್ತಿತ್ತು. ಆದರೆ ಆ ತಲೆದೂಗಿನಲ್ಲಿ ಹಾಡಿನ ಮೆಚ್ಚುಗೆಗಿಂತ ನಿದ್ದೆಯ ಭಾರವೇ ಹೆಚ್ಚಿದೆಯೇನೋ ಎಂಬ ಸಂಶಯ ನನ್ನ ಅರಸಿಕ ತಲೆಯಲ್ಲಿ ಮಿಂಚಿತು. ಇಡಿಯ ಸಭೆಗೆ ಸಭೆಯೇ ಗಾಯನದಲ್ಲಿ ಹೆಚ್ಚು ಆಸ್ಥೆ ಇಡುವುದು ಅಸಾಧ್ಯ ತಾನೇ. ಆದರೆ ಶಾಸ್ತ್ರಿಗಳಿಗೂ ತೂಕಡಿಕೆ ಬಂದಂತೆ ಅನಿಸಿದ್ದರಿಂದ, ಕಿವಿಯಲ್ಲಿ ಕೇಳಿದೆ, “ಏನು ಶಾಸ್ತಿಗಳೇಶಾಸ್ತ್ರಿಗಳೇ, ನಿದ್ದೆ ಬಂದಂತಿದೆಯಲ್ಲ.” +“ಇಲ್ಲವೋ, ನಿನ್ನೆ ರಾತ್ರೆ ಸ್ವಲ್ಪ ನಿದ್ದೆಗೆಟ್ಟಿತು, ಇಂದು ಮಧ್ಯಾಹ್ನ ನಿದ್ದೆ ಮಾಡಲು ಹೊತ್ತೇ ದೊರೆಯಲಿಲ್ಲ. ನಾನೇನು ಅವಳ ಹಾಡುಗಳನ್ನು ಎಷ್ಟುಸಲ ಕೇಳಿದ್ದೇನೆ! ಧಾರವಾಡಕ್ಕೆ ಹೋದಾಗ ರೇಡಿಯೋದ ಮೇಲೆ, ಗ್ರಾಮಾಫೋನಿನ ಮೇಲೆ. ಅವಳು ಈಗ ಹಾಡುತ್ತಿದ್ದ ಹಾಡಂತೂ ಅತಿ ಜನಪ್ರಿಯವಾದುದು – ಬಹಳ ಸಲ ಕೇಳಿದ್ದೇನೆ. ಆದರೂ ಸ್ವತಃ ಅವಳನ್ನೇ ಕೇಳಿರಲಿಲ್ಲ. ಇಂದು ಕೇಳಿದೆ. ತುಂಬ ಆನಂದವಾಯಿತು. ಇಂದು ನಿಜವಾಗಿ ಬಂದುದೆಂದರೆ ನಿನ್ನ ಸಲುವಾಗಿ. ತಾನು ಮೆಚ್ಚಿದ್ದನ್ನು ಉಳಿದವರೂ ಮೆಚ್ಚಬೇಕು ಎಂಬ ಇಚ್ಚೆ ಪ್ರತಿಯೊಬ್ಬನಿಗೂ ಇರುತ್ತದೆ ತಾನೇ?” ಎಂದರು, ಶಾಸ್ತ್ರಿಗಳು. +ಎರಡನೇ ಹಾಡು ಮುಗಿದುದೇ ಇನ್ನೊಂದು ಹಾಡುಗಾಗಿ ಕೂಡ್ರುವ ಉತ್ಸಾಹ ಬಹಳ ಜನರಲ್ಲಿ ಇದ್ದಂತಿರಲಿಲ್ಲ. ಮುಂದಿನ ಕೆಲವು ಸಾಲುಗಳಲ್ಲಿ ಕೂತವರಂತೂ ಒಬ್ಬರು ಇನ್ನೊಬ್ಬರ ಮೇಲೆ ನೋಡಹತ್ತಿದರು. ಎಲ್ಲರಿಗೂ ನಿದ್ರಾದೇವಿ ಪೂರ್ಣ ಒಲಿದಿದ್ದಳು. ಆದರೆ ಅರ್ಧಕ್ಕೇ ಹೊರಟುಹೋಗಿ ಅರಸಿಕನೆನಿಸಿಕೊಳ್ಳುವ ಧೈರ್ಯವಾಗದೇ ಎಲ್ಲರೂ ನಿರುಪಾಯರಾಗಿ ಕೂತಂತೆ ಭಾಸವಾಯಿತು. ಅವರನ್ನೆಲ್ಲ ಈ ಕುತ್ತಿನಿಂದ ಬಿಡಿಸಲೆಂದೇ ಎನ್ನುವಂತೆ ಕಾರ್ಯಕ್ರಮದ ಕಾರ್ಯದರ್ಶಿಯಾದ ಗೋಪಾಲನು ಸ್ಟೇಜಿನ ಮೇಲೆ ಕಾಣಿಸಿಕೊಂಡನು. ಸಭಿಕರನ್ನೆಲ್ಲ ಒಮ್ಮೆ ಕೈ ಮುಗಿದು “ಮಾನ್ಯರೇ, ಈಗಾಗಲೇ ತುಂಬ ರಾತ್ರಿಯಾದುದರಿಂದಲೂ, ಹಾಡುಗಾರರೂ ತುಂಬ ದಣಿದಿದ್ದರಿಂದಲೂ ಎರಡನೇ ಹಾಡೇ ಕೊನೆಯದಾಗಬೇಕಾಗಿದೆ. ಆದರಿಂದ ನಿಮಗೆಲ್ಲ ನಿರಾಶೆಯಾಗಬಹುದಾದರೂ ನಮ್ಮ ನಿರುಪಾಯತೆಗಾಗಿ ಕ್ಷಮಿಸುವಿರೆಂದು ನಂಬಿದ್ದೇವೆ. ಎಂದಿಗಿಂತಲೂ ಈ ವರುಷ ನಾಡಹಬ್ಬವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸುವ ನಿಶ್ಚಯದಿಂದ ನಾವೆಲ್ಲ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿದೆವು. ನಿಮ್ಮೆಲ್ಲರ ಪ್ರೋತ್ಸಾಹವೂ ತುಂಬ ಸಿಕ್ಕಿತು. ಆದರೆ ಮೊದಲನೇ ದಿನವೇ ವಿಧಿಯು ನಮ್ಮೆಲರನಮ್ಮೆಲ್ಲರ ಉತ್ಸಾಹದ ಮೇಲೆ ನೀರೆರೆಚಲು ಕಾದು ಕೂತಂತಿತ್ತು. ಆದರೆ ಇಂದಿನ ಕಾರ್ಯಕ್ರಮ ನಮ್ಮ ಕಲ್ಪನೆಗೂ ಮೀರಿ ಸಫಲವಾದುದರ ಎಲ್ಲ ಶ್ರೇಯ ಇಬ್ಬರಿಗೆ ಸಲ್ಲಬೇಕು. ಒಬ್ಬರು ಕಾರ್ಯದರ್ಶಿಗಳಾದ ಸೀತಾರಾಮಶೆಟ್ಟಿಯವರು (ಚಪ್ಪಾಳೆ), ಇನ್ನೊಬ್ಬರು ಇಂದಿನ ಹಾಡುಗಾರರಾದ (ದೀರ್ಘ ಚಪ್ಪಾಳೆ) ಶ್ರೀಮತಿ ಶೋಭಾದೇವಿ. (ಸಭೆಯಲ್ಲಿ ಏಕಕಂಠವಾದ ‘ಆಂ’ ಎಂದು ಆಶ್ಚರ್ಯದ ಉದ್ಗಾರ!) ಇದನ್ನು ಕೇಳಿ ನಿಮಗೆಲ್ಲ ಆಶ್ಚರ್ಯದ ಧಕ್ಕೆಯಾಗುವುದೆಂದು ನನಗೆ ಗೊತ್ತಿದೆ. ಒಂದು ಆಕಸ್ಮಿಕ ತೊಡಕಿನ ಮೂಲಕ ಸುಗುಣಾಬಾಯಿಯವರಿಗೆ ಇಂದು ಬರಲಾಗುವುದಿಲ್ಲವೆಂದು ಇಂದು ಮಧ್ಯಾಹ್ನವೇ ತಂತಿ ಬಂತು. ಈ ಅಕಲ್ಪಿತ ಪ್ರಸಂಗದಿಂದ ನಮಗೆ ದಿಕ್ಕು ತೋಚದಾಯಿತು. ಮೊದಲನೇ ದಿನವೇ ಹೀಗಾಗುವುದು ನಮಗೆ ಅಶುಭದಾಯಕವೆನಿಸಿತು. ಆದರೆ ಸೀತಾರಾಮರ ಪ್ರಯತ್ನದಿಂದ ಸುಗುಣಬಾಯಿಯವರದೇ ಗಾನಶಾಲೆಯ ವಿದ್ಯಾರ್ಥಿನಿಯಾದ ಶೋಭಾದೇವಿಯವರ ಸಹಾಯ ನಮಗೆ ದೊರೆತುದು ನಮ್ಮ ಭಾಗ್ಯ (ತಿರುಗಿ ಚಪ್ಪಾಳೆ.) ಸುಗುಣಬಾಯಿಯವರ ಗಾನಪದ್ಧತಿಯನ್ನು ಅವರು ಎಷ್ಟು ಚೆನ್ನಾಗಿ ಹಸ್ತಗತ ಮಾಡಿಕೊಂಡಿದ್ದಾರೆ ಎಂಬುದನ್ನು ನಿಮ್ಮಲ್ಲಿಯ ಅನೇಕರು ಈಗಾಗಲೇ ತಿಳಿದಿರಬೇಕು. (ದೀರ್ಘ ಚಪ್ಪಾಳೆ) ಸ್ವತಃ ಸುಗುಣಬಾಯಿಯವರಿಗೇ ಬರಲಾಗದಿದ್ದರೂ ಅವರ ಅಭಾವವೂ ನಮಗೆ ಎಳ್ಳಷ್ಟೂ ಅನಿಸದಂತೆ ಇಂದಿನ ಕಾರ್ಯಕ್ರಮವನ್ನು ಸಾಂಗಗೊಳಿಸಿದ್ದಕ್ಕೆ ಅವರನ್ನು ನಿಮ್ಮೆಲ್ಲರ ವತಿಯಿಂದ, ನಾಡಹಬ್ಬ ಸಂಘದ ವತಿಯಿಂದ ಅಭಿನಂದಿಸುತ್ತೇನೆ.” +ಅವನ ಮಾತು ಮುಗಿದ ಬಳಿಕ ನಾನು ಎಡಕ್ಕೆ ನೋಡಿದಾಗ ಅಲ್ಲಿಯ ಮುದುಕ ಆಗಲೇ ಎದ್ದುನಿಂತು ಸುತ್ತಲೂ ಹಚ್ಚಿದ ಚಿತ್ರಗಳಲ್ಲಿ ದೃಷ್ಟಿನೆಟ್ಟಿದ್ದ, ತಾನು ಇವನ್ನೆಲ್ಲ ಈ ಮೊದಲು ನೋಡಿರದೇ ಇಲ್ಲವಲ್ಲ ಎನ್ನುವಂತೆ! ಪರಶುರಾಮ ಭಟ್ಟರಂತೂ ಈಗ ಮಾತನಾಡಲು ಹೊತ್ತೇ ಇಲ್ಲ ಎಂಬಂತೆ ನಟಿಸುತ್ತ ಅಲ್ಲಿಂದ ಜಾರಿದರು. ಆದರೆ ಶಾಸ್ತ್ರಿಗಳ ಮೋರೆ ನೋಡುವ ಧೈರ್ಯ ಮಾತ್ರ ನನಗಾಗಲಿಲ್ಲ. ನಿದ್ದೆಯಿಂದ ಬಳಲಿದ ಜನರೆಲ್ಲ ಮನೆಗೆ ಹೋಗುವ ಅವಸರದಲ್ಲಿದ್ದುದರಿಂದ ಮಂದಿರವು ಬರಿದಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಆದರೆ ಶಾಸ್ತ್ರಿಗಳು ಮಾತ್ರ ತಮ್ಮ ಕುರ್ಚಿ ಬಿಟ್ಟು ಕದಲಲಿಲ್ಲ. ತಮ್ಮ ಸುತ್ತಲು ಯಾರೂ ಇಲ್ಲದ್ದನ್ನು ಕಂಡು, “ನನಗೆ ಆಗಲೇ ಸಂಶಯ ಬಂದಿತ್ತು. ಯಾಕೆಂದರೆ ಆ ಎರಡನೇ ಹಾಡನ್ನು ನಾನೆಷ್ಟೋ ಸಲ ಕೇಳಿದ್ದೇನೆ. ಆದರೆ ಇಂದೇಕೋ ನನಗೆ ಅಷ್ಟು ಸೇರಲಿಲ್ಲ. ಇಲ್ಲವಾದರೆ ನನಗೆ ಹೀಗೆ ನಿದ್ದೆ ಬರುತ್ತಿತ್ತೆ? ಗಾಯನದ ಹುಚ್ಚು ಇದ್ದವರಿಗೆ ನಿದ್ದೆಯ ಪರಿವೆ ಇದೆಯೇ? ಆದರೂ ಸುಗುಣಬಾಯಿಯ ಗಾನಪದ್ಧತಿಯನ್ನು ಚೆನ್ನಾಗಿಯೇ ಅಭ್ಯಾಸ ಮಾಡಿದ್ದಾಳೆ ಹುಡುಗಿ. ಮೊದಲನೇ ಹಾಡಂತೂ ಅವಳೇ ಹಾಡುತ್ತಾಳೆ ಎನ್ನುವಂತಿತ್ತು” ಎಂದರು. ಈ ಹೊತ್ತಿಗೆ ಸೀತಾರಾಮ ಹಾಗೂ ಗೋಪಾಲರು ಶೋಭಾದೇವಿಯನ್ನು ಕಾರಿನವರೆಗೆ ಕಳಿಸಿ ಬೀಳ್ಕೊಟ್ಟು ಬಂದರು. ಗೋಪಾಲ ಬಂದವನೇ, “ಶಾಸ್ತ್ರಿಗಳೇ, ನೀವು ಮಾತ್ರ ಕ್ಷಮಿಸಬೇಕು. ನಿಮಗೆ ಸಂಪೂರ್ಣ ನಿರಾಶೆಯಾಗಿದೆ ಎಂಬುದನ್ನು ಬಲ್ಲೆ. ಮತ್ತೇನು ಮಾಡುವುದು, ಹೀಗೆ ಐನಹೊತ್ತಿಗೆ ಕುತ್ತಿಗೆ ಕೊಯ್ದರೆ! ಸಾಧಾರಣ ಮೂರು ಗಂಟೆಗೆ ತಂತಿ ಬಂತು. ನನಗಂತೂ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಸೀತಾರಾಮ ಉಳಿಸಿದ ನಮ್ಮನ್ನೆಲ್ಲ. ಅವನದೇ ಹಂಚಿಕೆ ಇದೆಲ್ಲ. ಕೂಡಲೇ ಸಿರ್ಸಿಗೆ ಹೋಗಿ ಇವಳನ್ನು ಕರಕೊಂಡು ಬಂದ. ಅವನ ಗುರುತಿನವಳೇ, ಅಲ್ಲಿಯ ದೇವಸ್ಥಾನವೊಂದರ ಕುಣಿತದ ಹುಡುಗಿ. ಶಾಸ್ತ್ರೀಯ ಸಂಗೀತದ ಜ್ಞಾನ ಬಹಳವಿಲ್ಲದಿದ್ದರೂ ತಕ್ಕಮಟ್ಟಿಗೆ ಹಾಡುತ್ತಾಳೆ. ರೂಪ ಮಾತ್ರ ಚೆನ್ನಾಗಿದೆ. ಹೇಗಾದರೂ ಇಂದಿನ ಕಾರ್ಯಕ್ರಮ ರದ್ದುಗೊಳಿಸಬಾರದು ಎಂದು ಉಪಾಯ ತೋರದೆ ಅವಳನ್ನೇ ಕರೆಸಿದೆವು. ಹೇಗಾದರೂ ಪಾರಾದೆವೋ ಇಲ್ಲವೋ! ಅಷ್ಟೇ ಸಾಕು. ಇನ್ನೆಂದಿಗೂ ಬೇಡ ಈ ದೊಡ್ಡವರ ಗೊಡವೆ” ಎನ್ನುತ್ತಿರುವಾಗ ಶಂಭುಶಾಸ್ತ್ರಿಗಳು ತಾವು ತುಂಬ ದಣಿದಿದ್ದೇವೆಂದು ಲಗುಬಗೆಯಿಂದ ಅವರಿಂದ ಬೀಳ್ಕೊಂಡರು. +ಅಂದಿನಿಂದ ಶಾಸ್ತ್ರಿಗಳು ಗಾಯನದ ಬಗ್ಗೆ ಮಾತನಾಡುವುದನ್ನು ನಾನಂತೂ ಕೇಳಿಲ್ಲ ! +***** +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ಇದುವರೆಗೂ ಬೇರೆ ಯಾರ ಜೊತೆಯೂ […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_393.txt b/Kannada Sahitya/article_393.txt new file mode 100644 index 0000000000000000000000000000000000000000..4a7adf57c8b1350d36cc26f2758b7fd4981ca5ca --- /dev/null +++ b/Kannada Sahitya/article_393.txt @@ -0,0 +1,56 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಏರ್‍ಪೋರ್ಟ್ ರಸ್ತೆಯಲ್ಲಿ ಹಗಲುಗನಸುತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿ ಹಾಕಿದ ದೃಶ್ಯ ಕಾಣಿಸಿ, ಬಹುಶಃ ಸೈಕಲ್ಲಿನವನು ಖುಶಿಯಿಂದ ಸೀಟಿ ಹಾಕಿಕೊಂಡು ಬರುತ್ತಿದ್ದು, ಆಟೋವನ್ನು ಗಮನಿಸದೇ ಹೋಗಿರಬಹುದು. ಅಥವಾ ಸ್ಟೈಲಾಗಿ, ಕೈಬಿಟ್ಟು, ಸೈಕಲ್ ತಿರುಗಿಸಲು ಯತ್ನಿಸಿರಬಹುದು ಎನಿಸಿತು. ಜನರೇ ಇಲ್ಲದ ಆ ರಸ್ತೆಯಲ್ಲಿ ನಡೆದರೆ ಸಿಗುವ ಸ್ಮಶಾನದಷ್ಟೇ ಪ್ರಶಾಂತವಾಗಿತ್ತು ಆ ಜಾಗ. +ಸಮೀಪ ಹೋಗಿ ನೋಡಿದಾಗ, ಬಿದ್ದ ಆಟೋರಿಕ್ಷಾದಡಿ ಸೈಕಲ್ ಚಾಲಕನ ಕಾಲು ಸಿಕ್ಕಿಹಾಕಿಕೊಂಡು, ಅವನು ಮೇಲೇಳಲು ಪ್ರಯತ್ನಿಸುತ್ತಿದ್ದ. ಅವನ ಬಳಿಗೆ ನಡೆದು ನಿಂತ ಆಟೋ ಚಾಲಕನ ಮುಖವನ್ನು ನೋಡಿದ ಕೂಡಲೇ ಅದು ಬದಲಾದಂತೆನಿಸಿದ್ದು ಕೇವಲ ಭ್ರಮೆಯಿರಲಾರದು. ಆಟೋದ ಹಿಂಬದಿಯ ಸೀಟಿನಿಂದ ಇಳಿದ ಮಹಿಳೆ ತನ್ನ ಬರಿಗಾಲುಗಳನ್ನು ನೋಡಿಕೊಂಡು ಸುತ್ತಮುತ್ತಲೂ ಚಪ್ಪಲಿಗಳಿಗಾಗಿ ಶೋಧಿಸತೊಡಗಿದಳು. ಅಲ್ಲೆಲ್ಲೂ ಯಾರೂ ಕಂಡುಬರಲಿಲ್ಲ. ಕೆಲ ಕಾರುಗಳು ಮಾತ್ರ ವೇಗವಾಗಿ ಬಂದು, ಆ ಸ್ಥಳದಲ್ಲಿ ಸಂಪೂರ್ಣ ನಿಲ್ಲಿಸುವಷ್ಟು ವೇಗ ತಗ್ಗಿಸಿ, ನಡೆದದ್ದು ಅಪಘಾತವೆಂದು ಖಾತ್ರಿಯಾಗುತ್ತಿದ್ದ ಹಾಗೆಯೇ ಮುಂದೆ ಹೊರಟುಬಿಡುತ್ತಿದ್ದರು. ಭಯಾನಕ ದೃಶ್ಯವೂಂದನ್ನು ನೋಡಿ ಓಡುವ ಜನರಂತೆ, ಇನ್ನೂ ವೇಗವಾಗಿ! ಹೀಗೆ ಅಂತರ್ಧಾನವಾದ ಕಾರುಗಳಲ್ಲಿ ಒಂಡಾದರೂ ನಿಂತು ಸಹಾಯಮಾಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಯಾರೂ ನಿಲ್ಲಲಿಲ್ಲ. +ಆಟೋದ ಚಾಲಕ ಏನೂ ತೋರದೆ ಪ್ರತಿಮೆಯಾಗಿ ನಿಂತಿದ್ದ. ಹಿಂದಿನ ಸೀಟಿನಿಂದ ಎದ್ದು ಬಂದ ಹೆಣ್ಣಲ್ಲದೇ ಅಲ್ಲೊಬ್ಬ ಗಂಡೂ ಕುಳಿತಿದ್ದಾನೆಂಬುದು ತಿಳಿದದ್ದು ಅವನು ಹೊರಬರುವ ಪ್ರಯತ್ನ ಮಾಡಿದಾಗಲೇ. ಮೊದಲಿಗೆ ಸ್ವಲ್ಪ ಉದ್ದಕ್ಕೆ ಬಿಟ್ಟಿದ್ದ ಅರೆನೆರೆತ ಕೂದಲು, ಆಮೇಲೆ ಕೂದಲು ನೆಟ್ಟಿದ್ದ ತಲೆ, ಬೋಳು ಹಣೆ, ಚೀನೀ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ ಅಥವಾ ಬೆಳೆದೂ ಬೋಳಿಸಿದ್ದ ನುಣ್ಣನೆಯ ಮೀಸೆಯ ಭಾಗ, ಹೀಗೆ ಅಂಗುಲಂಗುಲವಾಗಿ ಆ ವ್ಯಕ್ತಿ ಹೊರಬರುವ ಪ್ರಯತ್ನ ಮಾಡುತ್ತಿದ್ದ. ಅವನು ತೊಟ್ಟಿದ್ದ ಅಂಗಿಯ ಬಿಳಿಯ ಕಾಲರ್ ನಿಂದ ಕೆಳಗೆ, ರೋಜಾ ಬಣ್ಣದ ಮುಖ್ಯ ಭಾಗ, ನಿಧಾನಕ್ಕೆ ಮೇಲೆದ್ದು, ಹೆಂಗಸಿನ ಅದೇ ಬಣ್ಣದ ಸೀರೆಯ ನೆರಿಗೆಗಳೊಳಗೆ ಲೀನವಾಯಿತು. ತನ್ನ ಸೀರೆಯನ್ನು ಪಾದದಿಂದ ಸ್ವಲ್ಪ ಮೇಲಕ್ಕೆ ಎತ್ತಿ ಹಿಡದ ಹೆಣ್ಣು, ತನ್ನ ಚಪ್ಪಲಿಗಳ ಶೋಧ ಮುಂದುವರಸಿದ್ದಳು. ಕಷ್ಟದಿಂದ ಮೇಲೆಳಲು ಪ್ರಯತ್ನಿಸುತ್ತಿದ್ದ ಆ ಗಂಡಸಿಗಾಧಾರವಾಗಿ ಆಟೋ ಚಾಲಕ ಮುಂದುವರೆದ. ಅವನ ತೋಳ ಕೆಳಗೆ ಕೈ ತೂರಿಸಿ, ಅವನಿಗೆ ನಿಲ್ಲಲು ಸಹಾಯ ಮಾಡಿದ. ಅವನು ತನ್ನ ದೇಹದ ಭಾರವನ್ನು ಕಾಲಮೇಲೆ ಹೇರುವಷ್ಟರಲ್ಲಿ, ಆಟೋದ ಭಾರವನ್ನೇ ಕಾಲಮೇಲೆ ಹೊತ್ತ ಸೈಕಲ್ಲಿನವ ಬೊಬ್ಬೆ ಹೊಡೆಯಲಾರಂಭಿಸಿದ. +ಎಲ್ಲರೂ ಅಪಘಾತವನ್ನು ಕಂಡಾಕ್ಷಣ ಕೋರ್ಟು ಕಛೇರಿಯ ಭಯದಿಂದ ಓಡಿ ಹೋಗುವವರೇ ಆದರೆ, ಈ ಜಗತ್ತಿನಲ್ಲಿ ಮಾನವೀಯತೆಗೆ ಎಡೆಯೆಲ್ಲಿ ಎಂದೆನಿಸಿದಾಗ, ಇಲ್ಲೇನಾದರೂ ಸಹಾಯ ಮಾಡಲೇಬೇಕೆನಿಸಿತು. ಪ್ರತಿ ವ್ಯಯಕ್ತಿಕ ಸಮಸ್ಯೆಯನ್ನು ಜಗತ್ತಿನ ಸಮಸ್ಯೆಯಾಗಿ ವಿಸ್ತರಿಸಿದರೆ ಮಾತ್ರ ಇಂಥ ಸಹಾಯ ಮಾಡಲು ಸಾಧ್ಯ. ಇದು ದೊಡ್ಡ ಸಮಸ್ಯೆಯನ್ನೊಡ್ಡುವ ಅಪಘಾತವಲ್ಲವಾದ್ದರಿಂದ ಇಲ್ಲಾದರೂ ಸಹಾಯ ಮಾಡಬೇಕೆನಿಸಿ ಮುಂದುವರೆಯುತ್ತಿದ್ದಂತೆ, ಆಟೋದ ಚಾಲಕ ತಲೆಯೆತ್ತಿ ನೋಡಿ, ಮಾತನಾಡಲಾರಂಭಿಸಿದ : +“ಸರ್ ಈ ವಿಷಯ ದಯಮಾಡಿ ಪೊಲೀಸರಿಗೆ ತಿಳಿಸಿದರೆ ಉಪಕಾರವಾಗುತ್ತೆ, ಜತೆಗೆ ಇವರನ್ನು ಆಸ್ಪತ್ರೆಗೆ ಸೇರಿಸಲೂ ಅನುಕೂಲವಾಗುತ್ತದೆ.” +ಆಟೋದವನ ಮಾತಿಗೆ ತಲೆಯಾಡಿಸಿ, ಜೇಬು ತಡಕಿ, ಎರಡು ಐವತ್ತು ಪೈಸೆಗಳ ನಾಣ್ಯವನ್ನು ಹಿಡಿದು, ಟೆಲಿಫೋನ್ ಹುಡುಕಿ ಹೊರಟಾಗ, ಮಧ್ಯಾಹ್ನದ ಸೂರ್ಯ ಮೈಯೊಳಗಿನ ನೀರನ್ನೆಲ್ಲಾ ಬೆವರಿನ ರೂಪದಲ್ಲಿ ಹೀರುತ್ತಿದ್ದ. +ಹೀಗೆ ವ್ಯಯಕ್ತಿಕ ಸಮಸ್ಯೆಗೆ ಜಾಗತಿಕ ಆಯಾಮ ನೀಡಿ ಮುಂದಡಿಯಿಟ್ಟಾಗ, ಸ್ವಲ್ಪ ದೂರದಲ್ಲಿ ಒಂದು ಬೆಳಕು ಕಾಣಿಸಿತು. ಅವನಲ್ಲಿ ಫೋನಿತ್ತಾದರೂ, ಅವನು ಫೋನ್ ಮಾಡಲು ಅನುಮತಿ ನೀಡಲಿಲ್ಲ. ಮತ್ತಷ್ಟು ದೂರದಲ್ಲಿ ಅವನು ಬೆಟ್ಟು ಮಾಡಿ ತೋರಿಸಿದೆಡೆ ಒಂದು ಔಷಧಿಯಂಗಡಿಯಾಚೆ ಫೋನಿತ್ತು. ಹೊಸದಾಗಿ ಅಲ್ಲಿಂದು ಫೋನ್ ಹಚ್ಚಿದ್ದಾರೆಂದು ಬೇಕರಿಯವ ಹೇಳಿದ. ಅಲ್ಲಿಗೆ ಹೋದಾಗ, ಹೋದದ್ದು ವ್ಯರ್ಥವೆನಿಸಿತು. ಕಾರಣ: ಫೋನಿಗೆ ಬೇಕಾಗಿದ್ದುದು ಎರಡು ಎಂಟಾಣೆಗಳಲ್ಲ. ಒಂದು ರೂಪಾಯಿನ ನಾಣ್ಯ. ಜೇಬಿನಲ್ಲಿ ತಡಕಿದರೆ, ಅಲ್ಲಿರಲಿಲ್ಲ. ಔಷಧಿ ಅಂಗಡಿಯಲ್ಲೂ ಬೇಕರಿಯಲ್ಲೂ, ಬೇಕರಿ ಪಕ್ಕದ ಪಾನ್ ಅಂಗಡಿಯಲ್ಲೂ ರೂಪಾಯಿ ನಾಣ್ಯ ದೊರೆಯಲಿಲ್ಲ. ಆಟೋದ ಚಾಲಕನ ಬಳಿ ಇದ್ದಾತೆಂದು ಮತ್ತೆ ವಾಪಸ್ ನಡೆದು ಬಂದಾಗ ಕಂಡದ್ದೇನು? ನಂಬಲು ಸಾಧ್ಯವಾಗಲಿಲ್ಲ. ಕನಸೇ ? ನನಸೇ ? ಯಾವುದು ? ಈಗ ನೋಡುತ್ತಿರುವುದೇ ? ಹಿಂದೆ ನೋಡಿದ್ದೇ ? ಏನು ? +ಆಶ್ಚರ್ಯ, ಭೀತಿ ತುಂಬಿದ ಆಶ್ಚರ್ಯ. ಹಿಂದಿರುಗುವ ವೇಳೆಗ ಕಂಡದ್ದು ಸಂಪೂರ್ಣ ಭಿನ್ನ ದೃಶ್ಯ. ಆಟೋದ ಸುತ್ತೂ ಜನರು ನಿಂತಿದ್ದಾರೆ. ಆಟೋದ ಗಾಜುಗಳು ಒಡೆದು ಎಲ್ಲಲ್ಲೂ ಚೂರುಚೂರು, ಚೆಲ್ಲಾಪಿಲ್ಲಿ. ಒಂದು ಗಾಜಿನ ತುಂಡು ವಿಚಿತ್ರ ರೀತಿಯಲ್ಲಿ ಸೈಕಲ್ಲಿನವನ ಕರುಳಿನಲ್ಲಿ ಸಿಕ್ಕಿಕೊಂಡು, ಸುತ್ತಲೂ ರಕ್ತವೋ ರಕ್ತ. ಒಂದು, ಎರಡು, ನಾಲ್ಕು, ಎಂಟು, ಹದಿನಾರೆಂದು ಜನರು ಸೇರಿ, ಜನರ ಗುಂಪು ಬೆಳೆಯುತ್ತಾ ದೊಡ್ಡದಾಗುತ್ತಿದ್ದಂತೆ ಅದೇ ಸಂಖ್ಯೆಯಲ್ಲಿ ಶವದ ಮೇಲೆ ನೊಣಗಳು ಧಾಳಿ ಮಾಡಿದವು. ಗುಂಪು ಬೆಳೆದು ಬೆಳೆದು ಆ ದೃಶ್ಯದ ಮೇಲೆ ದಾಳಿ ಮಾಡಿ, ರಸ್ತೆ ಸಂಚಾರಕ್ಕೆ ತಡೆಯೊಡ್ಡಿದಾಗ. ಕುತೂಹಲ ತಾಳಲಾರದ ಜನರೂ ತಮ್ಮ ವಾಹನಗಳಿಂದಿಳಿದು ಬರತೊಡಗಿದರು. ಮೈಯೊಳಗಾವರಿಸಿದ ಒಂದು ವಿಚಿತ್ರ ಭಾವನೆಗೆ ಪೋಷಕವಾಗಿ, ಏನೂ ತಿಳಿಯದ ಜನರ ಮಾತುಗಳು, ಗೊಬ್ಬರವಾಗತೊಡಗಿದವು. ಏನೂ ನೋಡದ ಜನರು ದೃಶ್ಯವನ್ನು ಕಣ್ಣಾರೆ ಕಂಡಂತೆ ವರ್ಣಿಸಿ ಅಪಘಾತವನ್ನು ಪುನರ್ಸೃಷ್ಟಿಸುತ್ತಿದ್ದ ರೀತಿ ನೋಡಿದಾಗ ಹಿಂದೆ ಕಂಡದ್ದು ಕನಸಿರಬಹುದೇ ಎಂಬ ಅನುಮಾನವೂ ಬಂದದ್ದುಂಟು. ಅಲ್ಲಿ ಚಕ್ರವ್ಯೂಹ ರಚಿಸಿದ್ದ ಜನರ ಗುಂಪಿನೊಳಕ್ಕೆ ಜಾಗ ಮಾಡಿಕೊಂಡು ನಿಧಾನವಾಗಿ ಆ ಜನಸಮೂಹವನ್ನು ಭೇದಿಸುತ್ತಾ ಶವದ ಬಳಿ ಹೋಗುತ್ತಿದ್ದಾಗ, ಹೊಸ ಜನರಿಂದ ಹೊಸ ಸುದ್ದಿ, ಸುದ್ದಿಯಿಂದ ಹೊಸ ವಿವರ, ವಿವರದಿಂದ ಹೊಸ ಹೊಸ ಆಯಾಮಗಳನ್ನು ಪಡೆದ ಈ ಅಪಘಾತ, ಯಾರೊಬ್ಬರ ವ್ಯಯಕ್ತಿಕ ಸಮಸ್ಯೆಯಾಗಿಯೂ ಉಳಿದಿರಲಿಲ್ಲ ! ಅನಂತರ ಸಂದರ್ಭದ ಅನಿವಾರ್ಯತೆಯಿಂದ ಬಂದ ಪೊಲೀಸರು, ಆಟೋದ ಚಾಲಕನನ್ನು ಬಂಧಿಸಿದರು. ಅವರು ಮಹಜರ್ ನಡೆಸಿ, ಅಲ್ಲಿ ದಾರಿ ಖಾಲಿಯಾಗಲು ಕಾದು ನಿಂತಿದ್ದ ಎಲ್ಲ ವಾಹನಗಳಿಗೆ ಬೇರೆ ಮಾರ್ಗ ತೋರಿಸಿಕೊಡುವ ವೇಳೆಗೆ ಪ್ರತ್ಯಕ್ಷ ಸಾಕ್ಷಿಗಳ ಒಂದು ದೊಡ್ಡ ಗುಂಪೇ ಸನ್ನದ್ಧವಾಗಿ ನಿಂತಿತ್ತು. ಗುಂಪಿನ ಜನರಿಗೂ ಶವಕ್ಕೂ ದೂರವನ್ನಳೆಯುವಂತೆ, ಹುರಿಹಗ್ಗದೋಪಾದಿಯಲ್ಲಿ ಅವನ ಕರುಳ ಬಳ್ಳಿ ರಸ್ತೆಯ ಮೇಲೆ ಅಂಕುಡೊಂಕಾಗಿ ಹಬ್ಬಿಕೊಂಡಿತ್ತು. ಕಂಡದ್ದನ್ನು ಕಂಡಂತೆ ಹೇಳಲೆತ್ನಿಸಿದ ಬಾಯನ್ನು ಕಟ್ಟಿದ್ದೇನು ? ಬೀಟ್‌ರೂಟ್ ಕೋಸಂಬರಿಯಂತೆ, ಹೊರಗೆ ಬಂದಿದ್ದ ಸೈಕಲ್ಲಿನವನ ಮಾಂಸದ ಮೇಲೆ ಮುಸುರಿದ್ದು ನೊಣಗಳೋ, ಅಥವಾ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಈ ಸುದ್ದಿಯ ಭಯಾನಕತೆಯೋ? ಮುಂದೆ, ರಸ್ತೆಯಲ್ಲಿ, ಅಪಘಾತಕ್ಕೀಡಾಗಿ, ಇದೇ ರೀತಿ ಸತ್ತು ಬಿದ್ದ ಬೀದಿ ನಾಯಿಗಳನ್ನು ಕಂಡಾಗಲೂ, ಆ ದೃಶ್ಯವೂ, ಇದೇ ಆಯಾಮದ ಭೀಕರತೆ ಪಡೆಯಲಿತ್ತು. ಪೂರ್ವನಿರ್ಧಾರಿತ ನಾಟಕವೆಂಬಂತೆ, ನಡೆಯುತ್ತಿದ್ದ ಈ ನಾಟದ ಸೂತ್ರವೆಲ್ಲ? ಸೂತ್ರಧಾರಿಯೆಲ್ಲಿ ? “ನಾಟಕದಲ್ಲಿ ನಿರ್ದೇಶಕನೇ ದೇವರು, ಆದರೆ ದುರಂತವೆಂದರೆ ಪಾತ್ರಧಾರಿಗಳೆಲ್ಲಾ ನಾಸ್ತಿಕ”ರೆಂದು ಜಾರ್ಕೋ ಪೆಟಾನ್ ಹೇಳಿದ್ದ ಸೂತ್ರ ಇಲ್ಲಿ ವರ್ತಿಸದಿರುವುದಕ್ಕೆ ನಿರ್ದೇಶಕ ಅಗೋಚರವಾಗಿರುವುದೇ ಕಾರಣವಿರಬಹುದೇ ? ಪ್ರಶ್ನೆಗಳು ಪ್ರಶ್ನೆಗಳು ಪ್ರಶ್ನೆಗಳು. ಉತ್ತರವೆಲ್ಲಿ ? ಉತ್ತರವಿಲ್ಲ. ಆಟೋದಲ್ಲಿದ್ದ ಆ ಹೆಂಗಸೂ ಇಲ್ಲ. ನಿಧಾನವಾಗಿ ಉದ್ಭವವಾದ ಆ ಗಂಡಸೂ ಇಲ್ಲ. ಚಪ್ಪಲಿಗಳೂ ಇಲ್ಲ. +ಹೊಟ್ಟೆಯಲ್ಲಿ ತಳಮಳವಾಗಿ, ಉಚ್ಚೆ ಹೊಯ್ಯಬೇಕೆನಿಸಿ, ಸುತ್ತ ಕಣ್ಣಾಡಿಸಿದರೆ ಎಲ್ಲೂ ಏಕಾಂತದ ಜಾಗವಿಲ್ಲ. ಇದನ್ನೆಲ್ಲಾ ಯಾರೊಂದಿಗಾದರೂ ತೋಡಿಕೊಳ್ಳಬೇಕೆಂದೆನ್ನಿಸಿತಾದರೂ, ಆ ಜನಜಂಗುಳಿಯ ನಡುವೆ ಒಂದಾದರೂ ಪರಿಚಿತ ಆತ್ಮೀಯ ಮುಖಭಾವ ಕಾಣದೇ, ಒಂಟಿತನದ ಬೊಂಬಾಯಿ ಭಾವ ಉಂಟಾಯಿತು. ಪೊಲೀಸರಿಗೆ ಹೇಳಬಹುದು. ಆದರೆ ಇಷ್ಟು ಜನ ಪ್ರತ್ಯಕ್ಷ ಸಾಕ್ಷಿಗಳು ತಯಾರಾಗಿ ನಿಂತಿರುವಾಗ, ಅಲ್ಪ ಸಂಖ್ಯಾತವಾಗುವುದು ಸಹಜವೆನಿಸಿ, ಯಾರೂ ನಂಬಲಾರರೆಂಬ ನಂಬಿಕೆ ಬಲವಾಗಿ ಮನದಲ್ಲಿ ಬೇರೂರಿತು. ಸುತ್ತ ನೋಡಿದರೆ ಎಲ್ಲ ಮುಖಗಳೂ ಏನಾದರೊಂದು ಹೇಳಲು ಕಾತರವಾಗಿದೆಯೆನಿಸುತ್ತಿತ್ತೇ ಹೊರತು, ಕೇಳಲು ತಾಳ್ಮೆಯಿದ್ದಂತಹ ಒಂದೂ ಮುಖ ಕಾಣಲಿಲ್ಲ. ಪೋಲೀಸರ ಖಾಕಿ ನೋಡಿದಾಗಲೆಲ್ಲಾ ನಡೆದಾಡುವ ಕಂಬಗಳ ನೆನಪಾಗುತ್ತದೆ. ಕೇಳುವ ಕಿವಿಗಳಂತಿರಲಿ, ಹೇಳಿದವನ ಮೇಲೇ ಈ ಕಂಬಗಳು ಯಾವ ಕ್ಷಣದಲ್ಲಾದರು ವಾಲಿಬಿಡಬಹುದಿತ್ತು. ಯಾಕೆ ಎಲ್ಲರೂ ಜಡ್ಡುಗಟ್ಟಿದ್ದಾರೆನ್ನಿಸುತ್ತದೆ. ಮೊನ್ನೆ ವಾರ್ತಾಪತ್ರಿಕೆಯಲ್ಲೋದಿದ ಹೊಸ ಡಿ. ಐ. ಜಿ ಯೊಬ್ಬರ ಸುದ್ದಿ ನೆನಪಾಯಿತು. ಮಹಾಜನತೆಯ ಅಹವಾಲುಗಳನ್ನು ಅವರು ಶಾಂತಿಯಿಂದ ಕೇಳುತ್ತಾರೆಂಬ ವಿಷಯ ಒಂದು ದೊಡ್ಡ ಸುದ್ದಿಯಾದಾಗ, ಮಿಕ್ಕವರೇನು ಮಾಡುತ್ತಿದ್ದಾರೆಂದು ಯಾರಿಗೂ ಊಹಿಸಲು ಸುಲಭ. ಸುದ್ದಿ ಸುಮ್ಮನೆ ಹಬ್ಬುವುದಿಲ್ಲ. ಕಥೆಗಳಲ್ಲಿಯೇ ಅನೇಕ ವಾಸ್ತವದ ಅಂಶಗಳಿರವಾಗ, ಸುದ್ದಿ_ಅದು ಗಾಳಿ ಗುದ್ದಿ ಬಂದ ಸುದ್ದಿಯೇ ಆಗಿರಲಿ. ಅಲ್ಲಿ ವಾಸ್ತವದಂತೆ ಇರುವುದೆಲ್ಲವೇ? ಸೀದಾ ಪೋಲೀಸ್ ಹೆಡ್ ಕ್ಚಾರ್ಟರ್ಸ್‌ಗೆ ಹೋಗಿ ಡಿ. ಐ. ಜಿ. ಯವರಲ್ಲಿ ಕಂಡದ್ದನ್ನು ಕಂಡಂತೆ ಹೇಳಬೇಕೆನಿಸಿದಾಗ, ಆಟೋ ಹತ್ತಲು ಮನಸ್ಸಾಗಲಿಲ್ಲ. ಭೌತಿಕವಾಗಿ, ಕಣ್ಣನ್ನು ಆವರಿಸಿರುವ, ಮಾನಸಿಕವಾಗಿ ಆಲೋಚನೆಗಳನ್ನೇ ನುಂಗಿಬಿಡುವಂತಹ, ಆಟೋದ ಕಾರಣವಾಗಿ ಘಟಿಸಿದ ಈ ಭೀಕರ ದೃಶ್ಯ ಎದುರಿಗಿರುವಾಗ ಆಟೋ ಹತ್ತುವುದು ಹೇಗೆ? ಮನಸ್ಸಿಗೆ ಧೈರ್ಯವಾಗಲಿಲ್ಲ. ನಿಧಾನವಾಗಿ ಹೆಜ್ಜೆ ಎಳೆದಾಗ, ಒಂದು ಆಟೋವನ್ನೇ ಎಳೆದೊಯ್ಯುತ್ತಿರುವಷ್ಟು ಪ್ರಯಾಸದ ಭಾವನೆಯಿಂದ ಮುಂದೆ ಸಾಗಿದಾಗ, ಮರೀಚಿಕೆಯಂತೆ ಕಂಡ ದೂರದ ಬಸ್ ಸ್ಟಾಪ್ ಸ್ವಲ್ಪ ಆಸೆ ಹುಟ್ಟಿಸಿತು. ಆಟೋದಲ್ಲಾದರೆ ಒಂಟಿತನವೂ ಇರುತ್ತದೆ. ಇಲ್ಲಾದರೆ ಹಲವು ಜನರಿರಬಹುದೆಂದು ಯೋಚಿಸುತ್ತಿದ್ದಂತೆ ಬಸ್ ನಿಧಾನವಾಗಿ ಬಂದಿತ್ತು. ಅಲ್ಲೂ ಪರಿಚಿತ ಮುಖ ಕಾಣಲಿಲ್ಲ. +ಹೆಡ್ ಕ್ವಾರ್ಟರ್ಸ್‌ನಲ್ಲಿ ಡಿ. ಐ. ಜಿ ಆರನೆಯ ಮಹಡಿಯಲ್ಲಿ ಕುಳಿತುಕೊಳ್ಳುತ್ತಾರೆಂದು ತಿಳಿಯಿತು. ಲಿಫ್ಟ್ ಕೆಳಬರುವುದು ತಡವಾದಾಗ ಆ ಚಡಕಡಿಯಲ್ಲಿ ಆರೂ ಮಹಡಿಗಳನ್ನು ಮೆಟ್ಟಿಲ ಮೂಲಕವೇ ಹತ್ತುವ ಆಲೋಚನೆ ಬಂದಿತಾದರೂ, ಬಳಲಿದ ದೇಹ, ಇನ್ನೂ ಹೆಚ್ಚಾಗಿ ಬಳಲಿದ ಮನಸ್ಸು ಒಪ್ಪಲಿಲ್ಲ. ನಿಧಾನವಾಗಿ ತಾಳ್ಮೆ ತಂದುಕೊಳ್ಳುತ್ತಿದ್ದಂತೆ, ಅಷ್ಟೇ ನಿಧಾನವಾಗಿ ಲಿಫ್ಟಿನ ಬಾಗಿಲೂ ತೆರೆಯಿತು. +ಒಳಹೊಕ್ಕು ನಿಂತಾಗ ಕಂಡದ್ದೆಲ್ಲಾ ಪೋಲೀಸ್ ಮುಖಗಳೇ. ನೀಟಾಗಿ ಕತ್ತರಿಸಿದ ಕೂದಲಿನ. ದೈತ್ಯ ದೇಹದ ಸಮವಸ್ತ್ರಧಾರಿಗಳೂ, ಮಫ್ತಿಗಳೂ ಸುತ್ತಲೂ ಆವರಿಸಿ ನಿಂತದ್ದು ನೋಡಿದರೆ ಯಾರಿಗಾದರೂ ಕುಬ್ಜತೆಯ ಭಾವನೆ. ಆ ಜೋಡಿ ಜೋಡಿಗಂಗಳ ತೀಕ್ಷ. ಪರೀಕ್ಷಾತ್ಮಕ ದೃಷ್ಟಿಯಲ್ಲಿ ನಾನೇ ಅಪರಾಧಿಯೆಂಬ ಭಾವನೆ, ಉಂಟಾದರೆ, ಅದು ತೀರಾ ಸಹಜವಿತ್ತು. ಲಿಫ್ಟ ಆರನೆಯ ಮಹಡಿಗೇರುತ್ತಿದೆಯೋ, ಅಂತರಿಕ್ಷಕ್ಕೋ ಎಂಬ ಅನುಮಾನ ಬರುವಷ್ಟು ನಿಧಾನವಾಗಿ ಚಲಿಸುತ್ತಿತು. ಆ ಸಮಯದಲ್ಲೊಮ್ಮೆ ಎವರೆಸ್ಟ್ ಶಿಖರವನ್ನೇ ಹತ್ತಿ ಇಳಿಯಬಹುದಿತ್ತೇನೋ. ಕಡೆಗೊಮ್ಮೆ ಲಿಫ್ಟಿನ ಬಾಗಿಲು ತೆರೆದಾಗ, ಉಸಿರುಗಟ್ಟಿದ್ದ ವಾತಾವರಣಕ್ಕೆ ಆಮ್ಲಜನಕದ ಮಹಾಪೂರ ಬಂದಂತಾಗಿ, ದೀರ್ಘ ಉಸಿರೆಳೆದುಕೊಂಡರೂ, ತತ್ತರಿಸುವಂತಾಯಿತು. ಚೇತರಿಸಿಕೊಂಡು ಹೊರಗಡಿಯಿಡುವಷ್ಟರಲ್ಲಿ ಲಿಫ್ಟಿನ ಬಾಗಿಲು ತಾನೇ ತಾನಾಗಿ ಮುಚ್ಚಿಕೊಳ್ಳಲು ಪ್ರಾರಂಭವಾಗಿ ಇದ್ದಕ್ಕಿದ್ದಂತೆ ಆಲೋಚನೆಗಳಿಂದ ಎಚ್ಚರಗೊಂಡಾಗ. ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿಕೊಂಡ ಹಾಗಾಯಿತು. +ಡಿ. ಐ. ಜಿ. ಯವರ ಕೋಣೆಯ ಹೊರಗೆ ಕಪ್ಪು ಹಿನ್ನೆಲೆಯಲ್ಲಿ, ಬಂಗಾರದಕ್ಷರಗಳಲ್ಲಿ ಬರೆದಿದ್ದ ಹೆಸರೇ ಆಪ್ಯಾಯಮಾನವಾಗಿದೆಯೆನಿಸಿ, ಕಾರ್ಯದಶಿಯ ಬಳಿ ಚೀಟಿ ಕೊಟ್ಟು, ಒಳಹೋಗಲು ಪರವಾನಗಿ ದೊರೆತು ಬಾಗಿಲು ತೆರೆದು ಒಳಗಡಿಯಿಟ್ಟಾಗ, ಹವಾನಿಯಂತ್ರಣ ಯಂತ್ರದ ಲಘುಶಬ್ದವೂ ಸಂಗೀತದ ಸ್ವರಗಳಂತೆ ಕೇಳಿಸಿದ್ದು ನಿಜ. ಮೆತ್ತನೆಯ ಮೆತ್ತೆಯ ಮೇಲೆ ಕುಂಡಿಯೂರಿದಾಗ, ಅಷ್ಟೂ ಭಾರ ಅದಕ್ಕಿಳಿದು, ಒಂದು ಸಣ್ಣ ಪ್ರತಿಭಟನೆಯ ಅಪಸ್ವರ ಅದರಿಂದ ಹೊಮ್ಮಿದರೂ, ವಿಶೇಷ ಲಘುತ್ವದ, ಭಾವನೆ ಮುದನೀಡಿತು. ನೆತ್ತಿಯ ಮೇಲಿದ್ದ ಎಷ್ಟೋ ಆತಂಕದ ಭಾವನೆಯನ್ನು ಮೆತ್ತೆಯ ಮೇಲೆ ಇಳಿಸಿದಂತಾಯಿತು. +ಡಿ. ಐ. ಇ. ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಡುವಯಸ್ಕನ ಅಹವಾಲನ್ನು ತಾಳ್ಮೆಯಿಂದ ಕೇಳುತ್ತಿದ್ದರು. ಇಬ್ಬರಲ್ಲಿ ಪರಿಚಿತರ್‍ಯಾರು ಎಂಬ ಪ್ರಶ್ನೆಯುದ್ಭವಿಸಿದಾಗ ಕಂಡದ್ದು ಹ್ಯಾಂಗರಿಗೆ ನೇತುಹಾಕಿದ್ದ ಡಿ. ಐ. ಜಿ.ಯವರ ಸಮವಸ್ತ್ರ. ಪೋಲೀಸರು ಸಮವಸ್ತ್ರ ಕಳಚಿದಾಗ ಆತ್ಮೀಯರಂತೆ ಕಾಣುತ್ತಾರೆಂದು ತಿಳಿದಾಗ, ಪರಿಚಿತ ಭಾವನೆಯೇನೂ ಉಂಟಾಗಲಿಲ್ಲ. ಆದರೆ ಪಕ್ಕದ ನಡುವಯಸ್ಕ ಪರಿಚಿತನಂತೆ ಕಂಡ. ಆತ್ಮೀಯನಂತೆ ಅಲ್ಲ. ನಡುವಯಸ್ಕ ತನ್ನ ಅಹವಾಲನ್ನು ಮುಂದುವರೆಸುತ್ತಿದ್ದಂತೆ, ದೃಷ್ಟಿಯೂ ಮುಂದುವರಿದು ಕೋಣೆಯ ಸುತ್ತ ಅಡ್ಡಾಡಿತು. ಆದರೆ ದೃಷ್ಟಿ ಮತ್ತೆ ನಡುವಯಸ್ಕನತ್ತ ಕೇಂದ್ರೀಕೃತವಾಗುತ್ತಿದ್ದ ಹಾಗೆ ಅವನಾಡುತ್ತಿದ್ದ ಮಾತುಗಳ ಬಗೆಗೂ ಗಮನ ಹರಿಯಿತು. ನರೆತ ಚಿಗುರುಗೂದಲ ತಲೆ, ಅಲ್ಲಿಂದ ಕಾಲರಿಲ್ಲದ ಕುರ್ತಾ, ನಡುಗುವ ಕೈಗಳು, ಅಲ್ಲಿ ನಡುಗುವ ಕೈ ಬರಹದಲ್ಲಿ ಬರೆದ ಅರ್ಜಿ, ಹೀಗೆ ದೃಷ್ಟಿ ಕೆಳಕೆಳಗೆ ಹೋಗುತ್ತಿದ್ದಂತೆ, ಕಂಡದ್ದು ಪ್ರಕೃತಿದತ್ತ ಕಾಲಿನಂತೆಯೇ ಕಾಣುತ್ತಿದ್ದ ಮರದ ಪಾದ, ದೃಷ್ಟಿ ಪಾದದ ಮೇಲೆ ಬಿದ್ದಾಗ ಕೇಳಿಸಿದ ಅವನ ಮಾತುಗಲು ಹೊಸ ಅರ್ಥ ಸ್ಪುರಿಸಿದಂತಾಯಿತು-“ಹಣ ಖರ್ಚಾದರೂ ಪರವಾಗಿಲ್ಲ ಸ್ವಾಮಿ, ಜೀವ ಉಳಿದರೆ ಸಾಕಾಗಿದೆ.” ಎಂದು ಆ ವ್ಯಕ್ತಿ ಹೇಳುತ್ತಿದ್ದಮ್ತೆ, ತುಂಬಿ ಬಂದ ಕಣ್ಗಳು ಯಾರವು? ಈಗವನ ವೈಯಕ್ತಿಕ ಸಮಸ್ಯೆಯೂ ಒಂದು ಜಾಗತಿಕ ರೂಪ ತಾಳಲಿದ್ದು, ಈ ಪ್ರಪಂಚದಲ್ಲಿ ಎಲ್ಲೆಲ್ಲೂ ಅನ್ಯಾಯ, ಅರಾಜಕತೆ ತುಂಬಿದೆಯೆನಿಸಿ, ಜಗತ್ತಿನ ಭವಿಷ್ಯದ ಬಗ್ಗೆ ತಿವ್ರ ಭೀತಿಯುಂಟಾಗಿ ಬೆವರು ಹರಿದಾಗ, ಅದನ್ನು ಹೀರುವ ಉತ್ಸಾಹಿ ಸೂರ್ಯನನ್ನೂ, ಹವಾ ನಿಯಂತ್ರಣ ಹೊರಗೇ ಬಂಧಿಸಿಟ್ಟಿದ್ದರಿಂದ, ಜೇಬಿನೊಳಗಿನ ರುಮಾಲನ್ನು ತೆಗೆದು ಒರೆಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. +ನಡುವಯಸ್ಕನ ಅಹವಾಲು ಕೇಳಿದ ಡಿ.ಐ. ಜಿ. ಏನಾದರು ಬಂದೋಬಸ್ತು ಮಾಡುವ ಆಶ್ವಾಸನೆ ನೀಡಿದರು. ಕುಂಟುತ್ತಾ ಆತ ಹೊರನಡೆಯುತ್ತಿದ್ದಂತೆ ಕಾಫಿ ಕುಡಿದು ಹೋಗುವಂತೆ, ಡಿ. ಐ. ಜಿ. ಅವನನ್ನು ತಡೆದರು. ನಂತರ ಇತ್ತ ಹಾಯ್ದ ಡಿ. ಐ. ಜಿ. ಯ ತವಕದ ನೋಟಕ್ಕೆ ಉತ್ತರವೆಂಬಂತೆ, ಅಂದಿನ ಘಟನೆಯ ಸಂಪೂರ್ಣ ವರದಿ ಬಾಯಿಂದ ಹೊರಬಿತ್ತು. ಎಲ್ಲ ಹೇಳಿದ ನಂತರವೂ ಡಿ ಐ. ಜಿಯವರ ಕಿರುನಗೆ, ಬದಲಾಗದ ಮುಖಚಹರೆ, ‘ಇಂಥ ಕತೆಗಳನ್ನು ಗಂಟೆಗೆರಡು ಕೇಳುತ್ತೇನೆ’ ಎಂಬಂತಹ ನೋಟ ಮಾಸದೇ, ಅದೇ ನೋಟ ಮುಂದುವರೆದು ಭೇದಿಸಿ ನೋಡುವಂತಹ ಸೀಳುನೋಟವಾಗಿ ಪರಿವರ್ತನೆಗೊಂಡಾಗ,ಅವರನ್ನೆದುರಿಸಲಾಗದೇ ಸೂರು ದಿಟ್ಟಿಸಬೇಕಾಯಿತು. ಸೂರಿನಿಂದಲೂ, ಗೋಡೆಗಳಿಂದಲೂ, ಡಿ. ಐ. ಜಿಯ ಮುಖದಿಂದಲೂ ಒಂದೇ ಭಾವನೆಗಳು ” ಮುಂದೇನು? ಇಷ್ಟನ್ನು ತನ್ನೇ ಯಾಕೆ ಹೇಳಿದ್ದು? ನೋಡಿದ್ದಾಯಿತು. ಸುಮ್ಮನೆ ಮನೆಗೇ ಹೋಗಿದ್ದರಾಗುತ್ತಿತ್ತು. ಜಗತ್ತಿನ ಅನ್ಯಾಯಗಳಿಗೆ ಆತ್ಮಸಾಕ್ಷಿಯಾಗಿ ನಿಲ್ಲುವ ಅಧಿಕಾರವನ್ನು ಕೊಟ್ಟವರು ಯಾರು ? ಯಾಕೆ ಈ ಪ್ರಯತ್ನ ? ಅವರ ಭಾವನೆಗಳೆಗೆ ಉತ್ತರ ದೊರೆಯದೇ ಕಡಕಾಡಿ, ಜೇಬಿನಿಂದ ಮತ್ತೊಮ್ಮೆ ರುಮಾಲು ತೆಗೆದು, ಮುಖ ಒರೆಸಿಕೊಳ್ಳುವಷ್ಟರಲ್ಲಿ, ಕಾಫಿ ಮುಂದಿತ್ತೆಂಬುದು ಗಮನಕ್ಕೇ ಬಂದಿರಲಿಲ್ಲ. ಗಮನ ಸೆಳೆವ ಕೆಲಸವನ್ನೂ ಡಿ. ಐ. ಜಿ ಯೇ ಮಾಡಬೇಕಾಯಿತು. +ಡಿ. ಐ . ಜಿ ಯವರ ಕೋಣೆಯಿಂದ ಹೊರಬಂದಾಗ ಒಂದು ತರದ ನಿರಾಳ ಭಾವ ಇದ್ದದ್ದು ಕಾಫಿ ಕುಡಿದದ್ದರಿಂದಲೋ. ಡಿ. ಐ. ಜಿ ಗೆ ಎಲ್ಲವನ್ನೂ ತಿಳಿಸಿದ್ದರಿಂದಲೋ, ತಿಳಿಯದೇ, ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಹೋಗುವ ಯೋಚನೆ ಮಾಡುವಷ್ಟು ದೈರ್ಯವೂ ಬಂದುಬಿಟ್ಟಿತ್ತು. ಇಷ್ಟೆಲ್ಲ ಘಟಿಸುವ ವೇಳೆಗೆ ಸೂರ್ಯ ತನ್ನ ತಾಪಕ್ಕೇ ತಾನೇ ರೋಸಿ, ಅರಬ್ಬೀ ಸಮುದ್ರದಲ್ಲಿ ಮುಳುಗುಹಾಕುತ್ತಿದ್ದ. ಹೆಜ್ಜೆ ಮುಂದಿರಿಸುತ್ತಾ ನಡೆದಾಗ ಹಿಂದಿನಿಂದ ಏನೋ ಶಬ್ದವಾದಂತಾಗಿ ಸ್ವಲ್ಪ ಭಯವಾಯಿತು. ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ ? ತಿರುತಿರುಗಿ ನೋಡಿಕೊಂಡು, ಕತ್ತು ನೋವು ತರಿಸಿಕೊಂಡೂ ಮುಂದೆ ಸಾಗಿದಾಗ ಒಂದು ಸಿಗರೇಟ್ ಸೇದಬೇಕೆನಿಸಿತು. ಹಾಗೆಂದೇ ಒಂದು ಅಂಗಡಿಯ ಮುಂದೆ ನಿಂತಾಗ, ಬಂದ ಹೆಜ್ಜೆಯ ಸಪ್ಪಳ, ಹಿಂದಿನ ಭೀತಿಗೆ ಕಾರಣವಿಲ್ಲದಿಲ್ಲ ಎಂಬುದನ್ನು ನಿರೂಪಿಸಿಬಿಟ್ಟಿತು. ಲಟಕ್ ಲಟಕ್ ಎಂದು ಶಬ್ದ ಮಾಡುತ್ತಾ ನಡೆದುಬಂದವನು ಕುಂಟ ನಡುವಯಸ್ಕ : +“ಈವತ್ತ್ನ ಆಕ್ಸಿಡೆಂಟು ತುಂಬಾ ಭಯಾನಕವಾಗಿತ್ತಲ್ಲ ? ಅದು ನಡೆದಾಗ ನಾನೂ ಅಲ್ಲೇ ಇದ್ದೆ, ನಿಮ್ಮನ್ನು ನೋಡಿದೆನು.” +ಅನಿರೀಕ್ಷಿತವಾಗಿ ಮಾತನಾಡಿದ ಅವನನ್ನು ಕಂಡು ಭಯವಾದರೂ, ಜೀವಕ್ಕೆ ಹೆದರಿ ಡಿ. ಐ. ಜಿ.ಗೆ ಅಹವಾಲು ಕೊಡುತ್ತಿದ್ದುದು, ಆ ಮುಖದ ದೈನ್ಯತೆ, ಆತ್ಮೀಯವಲ್ಲದಿದ್ದರು, ಪರಿಚಿತವೆನಿಸಿದ ಈ ಮೂರ್ತಿಯನ್ನು ನೋಡಿದಾಗ ಎಲ್ಲವನ್ನೂ ಅವನಲ್ಲಿ ತೋಡಿಕೊಳ್ಳಬೇಕಿನಿಸಿ, ಪ್ರರಂಭಿಸಿದ್ದಕ್ಕೇ : “ನಿಮಗೆ ಯಾಕೆ ಇಲ್ಲದ ಉಸಾಬರಿ ? ಸುಮ್ಮನೆ ನಿಮ್ಮಷ್ಟಕ್ಕೆ ನೀವು ಹೋಗಬಹುದಿತ್ತಪ. ಜೀವ ಹೋವುವಂಥದ್ದೇನೂ ಆಗಲಿಲ್ಲವಲ್ಲಾ ಅಲ್ಲಿ ?” ಎಂದು ಹೆದರಿಸುವ ದನಿಯಲ್ಲಿ ಹೇಳಿದ. +ನಿಜ, ಯಾಕೆ ಉಸಾಬರಿ ? ಲೋಕಕ್ಕೆ ಆತ್ಮಸಾಕ್ಷಿಯೇ ಬೇಡವೆಂಬ ಪರಿಸ್ಥಿತಿ ಉದ್ಭವವಾಗಿರುವಾಗ ಆ ಭೂಮಿಕೆಯನ್ನು ಮೈ ಮೇಲೆ ಕೆಡವಿಕೊಳ್ಳುವುದರಲ್ಲಿ ಯಾವ ಅರ್ಥವು ಇಲ್ಲ. ಮುಂದೆ ಮುಂದೆ ನಡೆಯುತ್ತಿದ್ದಂತೆ, ಆ ನಡುವಯಸ್ಕನೂ ಜತೆಜತೆಗೆ ಕುಂಟಿದ. ಅವನಿಂತ ತಪ್ಪಿಸಿಕೊಳ್ಳಬೇಕೆನಿಸಿ, ಯೋಚಿಸುತ್ತ ಅವನತ್ತ ನೋಡಿದಾಗ, ಅವನ ಮುಖ ಅರಿಚಿತ ಎನ್ನಿಸಿದ್ದೇಕೆಂಬುದರ ಎಳೆ ಸಿಕ್ಕಂತಾಯಿತು : ಉದ್ದನೆಯ ಅರೆನೆರೆತ ಕೂದಲುಗಳು ಸಣ್ಣದಾಗಿ ಕತ್ತರಿಸಿದ್ದರೂ, ಆ ಕೂದಲು ನೆಟ್ಟ ತಲೆ, ಬೋಳುಹಣೆ, ಚೀನೀ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ ಅಥವಾ ಬೆಳೆದೂ ಬೋಳಿಸಿದ ನುಣ್ಣನೆಯ ಮೀಸೆಯ ಭಾಗ, ಹೇಗೆ ಅಂಗುಲಂಗುಲವಾಗಿ ಗಮನಿಸುತ್ತಿದ್ದಂತೆ, ಅವನ್ಯಾರೆಂಬ ಅನುಮಾನ ಉಳಿಯಲಿಲ್ಲ. ಆದರೆ ಅವನೂ ಅಲ್ಲಿ ಉಳಿಯಲಿಲ್ಲ. ತಪ್ಪಿಸಿಕೊಳ್ಳುವ ಅವಶ್ಯಕತೆ, ಅವನಿಗೇ ಇನ್ನೂ ಹೆಚ್ಚಾಗಿತ್ತು ಎನ್ನಿಸಿತು. ಅದರೂ ಅವನು ಡಿ. ಐ. ಜಿ.ಯ ಬಲಿ ಬಂದದ್ದು ಏಕೆ? ಅವನಿಗೂ ಜೀವಾಪಾಯವೇ ಎಂಬ ಪ್ರಶ್ನೆಗಳೆಲ್ಲಾ ಪ್ರಶ್ನೆಗಳಾಗಿಯೇ ಉಳಿದವು. ಮಾಯಾನಗರಿಯ ಜನಗಂಗುಳಿಯಲ್ಲಿ ಯಾರಿಗು ತಿಳಿಯದಂತೆ ಕರಗಿ ಹೋಗುವ ಕಲೆಯನ್ನು ಕರತಗಮಾಡಿಕೊಂಡವನನ್ನು ಹೆಕ್ಕಿ ತೆಗೆಯುವುದು ಕಷ್ಟವಾಗಿತ್ತು, ವಿಷಯ ಮೂರನೆಯ ಆಯಾಮವನ್ನು ಪಡೆಯುತ್ತಿದ್ದಾಗ, ಅಪಘಾತದ ಸ್ಥಳಕ್ಕೆ ಮತ್ತೊಮ್ಮೆ ಕತ್ತಲಲ್ಲಿ ಹೋಗುವುದು ಅಪಾಯವೆನಿಸಿ ಮನೆಯತ್ತ ಹೆಜ್ಜೆ ಹಾಕಿದರೂ, ರಸ್ತೆಯ ಒಂಟಿತನ ಮನೆಯಲ್ಲೇನೂ ಪರಿಹಾರವಾಗುವುದಿಲ್ಲ. ಎಂದೂ ತಿಳಿದಿತ್ತಾದ್ದರಿಂದ, ಅಷ್ಟೇನೂ ಉತ್ಸಾಹ ತೋರದೇ ಮನೆಗೆ ನಡೆದು ಹೋದದ್ದಾಯಿತು. ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ,, ನಂಬುವುದು ಯಾರನ್ನು ? ಆತ್ಮೀಯವಾಗಿ ಕಂಡುಬಂದ ಮುಖಚಹರೆಯೂ ಅದರಡಿಯಲ್ಲಿರಿಸಿಕೊಂಡಿರುವ ಗುಟ್ಟುಗಳನ್ನು ಬಿಟ್ಟುಕೊಡದೇ ಕಾಡುವ ಈ ಕಾಲದಲ್ಲಿ, ಡಿ. ಐ. ಜಿ ತಾನೆ, ನಂಬಲರ್ಹವಾದ ವ್ಯಕ್ತಿಯೇ ? ಇವನ್ಯಾವ ಗಿಡದ ತೊಪ್ಪಲು ? +ರಸ್ತೆಯಲ್ಲಿ ಕಂಡ ಮುಖಗಳೆಲ್ಲಾ ತಲೆಯೊಡೆಯಲು ಸಿದ್ಧವಾಗಿವೆ ಎಂಬ ಅಪನಂಬಿಕೆ ಹೊತ್ತು ಮನೆಗೆ ಬಂದಾಗ ಭೀತಿ ಇಳಿದಿರಲಿಲ್ಲ. ಡಿ. ಐ. ಜಿ. ಯವರನ್ನು ನೋಡಿದ ನಂತರ, ಅವರ ಕೋಣೆ ಹೊಕ್ಕು ಬಂದ ವ್ಯಕ್ತಿಯಿಂದಾಗಿಯೇ ಘಟಿಸಿದ ಈ ಘಟನೆಯನ್ನು ನೆನಪಿಸಿಕೊಳ್ಳಲೂ ಭಯವಾಗುತ್ತಿತ್ತು. ಯಾವುದು ವಾಸ್ತವ ? ಪತ್ರಿಕೆಯ ವರದಿಯೇ ? ಅಥವಾ ಈಗ ಕಂಡದ್ದೇ ? ಅಥವಾ ಎರಡೂ ಸುಳ್ಳೇ ? ಏನು ಮಾಡಬೇಕು ? ಎಲ್ಲೋ ಅಗೋಚರ ಸುಳಿಯೊಂದರಲ್ಲಿ ಸಿಕ್ಕಿ, ಕೈಗೇನೂ ಸಿಕ್ಕದಿದ್ದಾಗ ಖಾಕಿ ಬಣ್ಣದ ಹುಲುಕಡ್ಡಿಯನ್ನೇ ಹಿಡಿದು ಭಾರ ಹೇರಬೇಕೀಯಿತು. ಮಿಕ್ಕಂತೆ ಸಂತಾಪದ ಮಾತು ಕೇಳುವುದನ್ನು ಬಿಟ್ಟರೆ ಬೇರೇನೂ ಆಗಲಾರದು. ಹಾಗಾದರೆ ಈಗ ನಡೆದದ್ದನ್ನೂ ಡಿ. ಐ. ಜಿ.ಗೆ ವರದಿಯೊಪ್ಪಿಸುವುದೇ ? ತನಗೇ ರಕ್ಷಣೆ ಬೇಕೆಂದು ದೈನ್ಯದಿಂದ ಬೇಡಿಕೊಂಡ ವ್ಯಕ್ತಿಯಿಂದ ಪ್ರಾಣಾಪಾಯವ್ದೆ ಎಂಬುದು ಒಂದು ಕಡೆ. ಸಂಜೆಯ ಅಪಘಾತದಲ್ಲಿ ಅನಂತ ಪ್ರತ್ಯಕ್ಷ ಸಾಕ್ಷಿಗಳು ಕೊಟ್ಟಿರುವ ಸಾಕ್ಷ್ಯ ಒಂದು ಕಡೆ. ಈ ನಡುವುವಿನ ಸತ್ಯದ ಮುಳ್ಳು ವಾಲುವುದೆತ್ತ ? ಚುಚ್ಚುವುದಾರನ್ನು ? ಅದನ್ನು ಉದ್ಧರಿಸುವವರು ಯಾರು ? ಡಿ. ಐ. ಜಿ ಯವರ ಪ್ರತಿಕ್ರಿಯೆ ಈ ಹಿನ್ನೆಲೆಯಲ್ಲಿ ಹೇಗಿದ್ದೀತು ? : +“ಅಲ್ರೀ, ನಾನು ತಾನೆ ಯಾರನ್ನು ನಂಬೋದು ? ಆ ಮನುಷ್ಯ ತನ್ನ ಜೀವಕ್ಕೇ ಅಪಾಯಾಂತಾನೆ. ಇಲ್ಲಿ ನೋಡಿದರೆ ಅವನಿಂದಲೇ ಅಪಾಯಾಂತ ದೂರು. ಹೀಗೆ ಹೆದರಿ ಬಂದ ಪ್ರತಿ ವ್ಯಕ್ತಿಗೂ ಪೋಲೀಸ್ ಪ್ರೊಟೆಕ್ಷನ್ ಬೇರೆ ಬೇಕು. ನಾವು ಎಲ್ರಿಗೂ ಪ್ರೊಟೆಕ್ಷನ್ ಕೊಡ್ತಾ ಹೋದ್ರೆ ಅರ್ಧ ಜನಸಂಖ್ಯೆಗೆ ಭದ್ರತೆ ಕೊಡಬೇಕಾಗುತ್ತದೆ. ಮೇಲಾಗಿ ಪೋಲೀಸರೂ ಮನುಷ್ಯರಲ್ಲವೇ ? ಅವರಿಗೂ ಭದ್ರತೆ ಬೇಕಾಗುತ್ತೆ…. ಇದಕ್ಕೆ ಕೊನೆಯೆಲ್ಲಿ ? ಸ್ವಲ್ಪ ದೈರ್ಯ ತಂದುಕೊಂದು ನಮಗೆ ತನಿಖೆ ನಡೆಸೋಕ್ಕೆ ಅವಕಾಶ ಕೊಡಬಹುದಲ್ಲಾ,” +ಅದೂ ನಿಜವೇ. ಸತ್ತವನ ದೇಹದ ಪೋಸ್ಟ್ ಮಾರ್ಟೆಂ ವರದಿ ಇನ್ನೂ ಬರಬೇಕು. ಫೊರೆನ್ಸಿಕ್ ಲ್ಯಾಬ್‌ಗೆ ಕಳಿಸಿದ ಗಾಜಿನ ಚೂರುಗಳ ವರದಿಯೂ ಬರುವ ತನಕ, ಹೇಳಿದ್ದನ್ನು ನಂಬುದುದಕ್ಕೆ ಆಧಾರವೇ ಇಲ್ಲವಾಗುತ್ತದೆ. ಬಂಧಿಸಿದ ಆಟೋದವನಿಗೆ ಥರ್ಡ್ ಡಿಗ್ರಿ ಕೊಟ್ಟು ಬಾಯಿ ಬಿಡಿಸಬಹುದು. ಇಲ್ಲವೇ ಯಾರಾದರೂ ಅವನನ್ನು ಜಾಮೀನಿನ ಮೇಲೆ, ಅಥವಾ ವಕೀಲರ ಸಹಾಯದಿಂದ ಬಿಡಿಸಿಕೊಂಡು ಹೋದರೆ ? ಹಾಗಾಗದಿರಲಿ. ಇನ್ಯಾ ಅಲ್ಲಾ ! +ಅಂದು ಸಂಜೆ ದೂರದರ್ಶನ ವಾರ್ತೆಯಲ್ಲೂ ಈ ಅಪಘಾತ ಪ್ರಮುಖ ಸ್ಥಾನ ಪಡೆದಿತ್ತು. ಜತೆಗೆ ಇನ್ನೆಲ್ಲೋ ನಡೆದ ಒಂದು ಕೊಲೆಯ ವಿಷಯವೂ. ಅಲ್ಲೂ ಯಾರೋ ಆಟೋ ನಿಲ್ಲಿಸಿ, ಒಳಗಿದ್ದ ಸಂಚಾರಿಯನ್ನು ಹೊರಗೆಳೆದು ಮಚ್ಚಿನಿಂದ ಕೊಚ್ಚಿಹಾಕಿದರಂತೆ. ಕೇಳುತ್ತಿದ್ದಂತೆ ಮೈ ಉರಿದು ನೆವರಿತು. ಬೆವರುತ್ತಲೇ ನಡುಕವೂ ಹತ್ತಿಕೊಂಡಿತು. ಅಂಥಹ ಸೆಕ್ಕೆ ಅದರಲ್ಲಿ ನಡುಕ ಹಿಂದೆಂದೂ ಹೀಗಾಗಿರಲಿಲ್ಲ. ಹಾಗೇ ಕುಳಿತಿದ್ದಾಗ, ದಿನವೂ ಪತ್ರಿಕೆಗಳಲ್ಲಿ ಈ ವಾರ್ತೆಗಳು ಒಂದೇ ಏಕಾತಾನತೆಯಿಂದ ಓದುವೆವು. ದೂರದರ್ಶನದಲ್ಲಿ ನೋಡುವೆವು ಎಂದು ನೆನಪಾಗಿ, ಈ ಎಲ್ಲ ವಾರ್ತೆಗಳಿಗೂ ಈಗ ಹೊಸ ಅರ್ಥವ್ಯಾಪ್ತಿಯೊಂದು ಹಬ್ಬಿ, ಜಾಗತಿಕ ಸಮಸ್ಯೆಯೊಂದು ತೀರ ಹತ್ತಿರ ಬಂದು. ಆತ್ಮೀಯವಾಗಿ ಮಾತನಾಡಿಸಿದ ವೈಯಕ್ತಿಕ ಸಮಸ್ಯೆ ಆಗಿಹೋಯಿತು. +ಆ ರಾತ್ರಿ ಅದ್ಭುತವಾದ ನಿದ್ದೆಯೂ ಬಂದಾಗ, ಭಗವಂತನಿಗೆ ಈ ವರದಾನಕ್ಕಾಗಿ ಕೃತಜ್ಞತೆ ಹೇಳಬೇಕೆನಿಸಿತು. ಬಳಲಿದ ಮನಕ್ಕೆ ತಂಪಾದ ನಿದ್ರೆಗಿಂತ ಬೇಕಾದ್ದು ಬೇರೇನು ? ಅಂದಿನ ಸೂರ್ಯೋದಯ ಎಂದಿನತಿರಲಿಲ್ಲ. ಹೊಸ ಉತ್ಸಾಹ ಹೊಸ ಹುರುಪು ಮೈಗೂಡಿತ್ತು. ಪುಕ್ಕಲರಾಗಿ ಜೀವನ ಕಳೆವುದೆಷ್ಟು ದಿನ? ಎಲ್ಲೋ ಒಂದೆಡೆ ಭಂಡ ಧೈರ್ಯ ತಂದುಕೊಳ್ಳದಿದ್ದರೆ, ತರಕಾರಿಯ ಹಾಗೆ ಸಿಕ್ಕಸಿಕ್ಕ ಚಾಕುಗಳಿಂದ ಕೊಚ್ಚಿಸಿಕೊಂಡು, ಉಸಿರು ಬಿಡಬೇಕಾಗುತ್ತದೆ. ಎಲ್ಲೋ ಒಂದೆಡೆ ಎಲ್ಲ ಹಂಗನ್ನೂ ತೊರೆಯಬೇಕೆಂದು ನಿರ್ಧರಿದಾಗಲೇ ಡಿ. ಐ. ಜಿ ಯವರ ಫೋನು ಬಂದಿತು. +“ನಿನ್ನೆ ಸಿಕ್ಕ ಟೆಕ್ ಆಫ್‌ನಿಂದ ಅನುಕೂಲವಾಯಿತು. ಫೊರೆನ್ಸಿಕ್ ವರದಿ ಬಂದಿದೆ. ಆಟೋ ಚಾಲಕನ ಕೈ ಬೆರಳುಗಳು ಸ್ಪಷ್ಟವಾಗಿವೆ. ಪೋಸ್ಟ್ ಮಾರ್ಟೆಂ ಕೂಡ, ಇದು ಕೊಲೆ ಎಂಬುದಕ್ಕೆ ಆಧಾರ ಒದಗಿಸೋ ಹಾಗೆಯೇ ಇದೆ. ನಿನ್ನೆ ರಾತ್ರಿ ಆ ಕುಂಟನನ್ನೂ ಬಂಧಿಸಿದ್ದೇನೆ. ಆಟೋ ಚಾಲಕ ಅವನನ್ನೂ ಐಡೆಂಟಿಫೈ ಮಾಡಿದ್ದಾನೆ. ಥ್ಯ್ಯಾಂಕ್ಸ್.” +ಜಗತ್ತನ್ನೇ ಉದ್ಧರಿಸಿದ ಭಾವನೆ ಉಂಟಾಗುವುದು ಸಹಜವಿತ್ತು. ಆದರೆ ಋಷಿಗಳು ನಿರಂತರವಾಗಿ ಇರುವುದಾದರೆ, ಜೀವನ ಬರಡು ಎಂಬುದನ್ನು ನಿರೂಪಿಸಲೆಂಬಂತೆ, ಮತ್ತೊಂದು ಫೋನ್ ಕರೆ ಬಂತು. ಈ ಬಾರಿ ಬಂದದ್ದು ನಮ್ರತೆಯ ವಿಧೇಯಕ ದನಿ : “ನೀವು ನಿನ್ನೆ ಡಿ.ಐ.ಜಿಯವರೊಂದಿಗೆ ಮಾತಾಡಿದ್ದು ನಮಗೆ ಗೊತ್ತಾಗಿದೆ. ನಮ್ಮ ಖಾಸಗೀ ವಿಷಯಕ್ಕೆ ತಲೆ ಹಾಕುವುದು ನಿಮಗೇ ಒಳ್ಳೇದಲ್ಲ.” +ಉತ್ತರವಾಗಿ ಒಂದು ವಾದವನ್ನು ಮಂದಿಸಿದ್ದಕ್ಕೆ, ಮತ್ತೆ ತಾಳ್ಮೆಯಿಂದ, ಸಣ್ಣ ಮಕ್ಕಳಿಗೆ ವಿವರಿಸುವಂತೆ ನಿಧಾನ ದನಿಯಿಂದ ಅವನು ಮನಸ್ಸಿಗೆ ನಾಟುವಂತೆ ಹೇಳಿದ. ಸಿನೇಮಾದಲ್ಲಿ ತೋರುವ ಖಳನಿಗೂ, ರಮಿಸುವ ದನಿಯ ಇವನಿಗೂ ತುಂಬಾ ವ್ಯತ್ಯಾಸವಿದೆಯೆನಿಸಿತು. ಪ್ರೀತಿಯಿಂದ ಲಲ್ಲೆಗರೆದು ಮಕ್ಕಳಿಗೆ ಅನ್ನ ತಿನ್ನಿಸುವ ತಾಯಿಯ ದನಿಯಲ್ಲಿ ಹೇಳಿದಾಗ, ಅವನ ಬಗ್ಗೆ ಒಂದು ಬಗೆಯ ಪ್ರೀತಿಯು, ಗೌರವವೂ, ಹುಟ್ಟಿಕೊಂಡಿತು. ಅದೇ ಕ್ಷಣಕ್ಕೆ ಅಲ್ಲಿನ ಗಾಂಭೀರ್ಯ ಭೀತಿಯನ್ನೂ ಹುಟ್ಟಿಸಿತು. ಈಗ ಮಾಡಿರೋ ತಪ್ಪಿಗೆ ಶಿಕ್ಷೆಯನ್ನಂತೂ ಅನುಭವಿಸುವುದು ದಿವ್ಯನ್ಯಾಯವಾದರೂ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಹೀಗೆ ರಮಿಸುತ್ತಿರುವುದಾಗಿ ಆತ ಹೇಳಿದ. ಹೀಗೆ ಬಂದ ಕರೆಗೆ ಪ್ರತಿಕ್ರಿಯೆ ಏನು? ಹೇಗಿದ್ದರೂ ಕೈ ಮುರಿದೊ, ಕಾಲು ಮುರಿದೋ, ತಲೆಯೊಡೆದೋ, ಸೇಡು ತೀರಿಸಿಕೊಳ್ಳಲು ತಯಾರಿರುವ ಈ ಜನರಿಗೆ ಹೆದರಿ ಸುಮ್ಮನಾದರೂ ಅಪಾಯ. ಏನಾದರೂ ಮಾಡಿದರೂ ಅಪಾಯ. ಪ್ರಿಯ ಸ್ನೇಹಿತರಾದ ಡಿ. ಐ. ಜಿ. ಗೆ ಹೇಳಿ ರಕ್ಷಣೆ ಪಡೆಯಬಾರದೇಕೆ ? ಅಥವಾ ಮುಂದಾಗಬಹುದಾದ ಅನಾಹುತಕ್ಕೆ ಮೊದಲೇ ವೈಯಕ್ತಿಕ ನೆಲೆಯಲ್ಲಿ ಒಂದೆರಡು ತಯಾರಿಗಳನ್ನು ಮಾಡಿಟ್ಟಿದ್ದರೆ ? +ಮತ್ತೆ ಡಿ. ಐ. ಜಿ. ಯವರ ಕಾರ್ಯಾಲಯದತ್ತ ಹೆಜ್ಜೆ ಹಾಕುತ್ತಿದ್ದಂತೆ, ಒಂಟಿತನದ ತೀವ್ರ ಭಾವನೆ ಕಾಡಿತು. ಈಗ ಈ ದುಗುಡಗಳನ್ನು, ದ್ವಂದ್ವಗಳನ್ನು ಆತ್ಮೀಯವಾಗಿ ತೋಡಿಕೊಳ್ಳಲು ಯಾರೂ ಇಲ್ಲವಲ್ಲಾ ಎನ್ನಿಸಿತು. ಡಿ. ಐ. ಜಿ ಯವರ ಬಳಿ ತೋಡಿಕೊಳ್ಳುವುಡು ಅಪಾಯ. ತೋಡಿಕೊಳ್ಳದಿದ್ದರೂ ಅಪಾಯ. ಅವರು ತಾನೆ ಎಷ್ಟರ ಮಟ್ಟಿಗಿನ ಅಂತಃಕರಣದಿಂದ ನೋಡಿಯಾರು ? ಹೀಗೆ ಈಚೆಗೆ ಗೆಳೆಯನೊಬ್ಬ “ಶಾದಿ ಕರ್ಲೋ. ಜಿಂದಗಿ ಮೆ ಸಹಾರಾ ಜಾಹಿಯೇ’ ಎಂದು ಹೇಳಿದ್ದಕ್ಕೆ “ಸಹಾರಾ ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ ಗೊತ್ತುಂಟೋ” ಎಂದು ಮಾತು ಹಾರಿಸಿದ್ದುಂಟು. ಆ ಮಿತ್ರ “ಗೊತ್ತಿಲ್ಲ” ಎಂದು ಉತ್ತರಿಸಿದ್ದೂ ಉಂಟು, +ಈಗ ಈ ದ್ವಂದ್ವಗಳ ಬೆನ್ನೇರಿ ಹೋಗುವಾಗ ಬಾಳ ಸಂಗಾತಿಯೊಬ್ಬಳಿದ್ದಿದ್ದರೆ…. ಒಮ್ಮೆ ಯಾರನ್ನಾದರೂ, ಇಂಥ ಸಂದರ್ಭದ ಸ್ವಾರ್ಥಕ್ಕಾಗಿ ಲವ್ ಮಾಡಿದ್ದರೆ…. ಎಂದೆಲ್ಲಾ ಆಲೋಚನೆಗಳು ಅಡ್ಡದಿಡ್ಡಯಾಗಿ ಹರಿದಾಡಿ, ಹಾಗೇನಾದರೂ ಆಗಿದ್ದರೆ, ಅವಳೂ ಈ ಅಪಾಯದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲವೇ ಎಂದೂ ಅನ್ನಿಸಿದಾಗ, ಎದುರಿಗೆ ನಿಂತದ್ದು ಹಿಂದಿನ ಬೃಹದಾಕಾರದ ಪ್ರಶ್ನೆಯೇ-“ಸಹಾರಾ ಯಾವುದು ? ಜತೆಯೋ, ಮರುಭೂಮಿಯೋ ?” +ತಲೆಯಲ್ಲಿ ಯುದ್ಧ ನಡೆಸಿ ಹುಚ್ಚನಾದಾಗ ಅದಕ್ಕೆ ಕಾರಣ ಕೇವಲ ಭೀತಿ ಎಂಬುದಾದ ತಿಳಿಯಲಿಲ್ಲ. ಡಿ. ಐ. ಜಿಯ ಕಾರ್ಯಾಲಯದತ್ತ ಹೆಜ್ಜೆ ಹಾಕುವಾಗ, ಸುತ್ತಲಿನ ಜಗತ್ತು ಪೂರ್ತ ಅನುಮಾನದಿಂದ ಕೋಪದಿಂದ ದಿಟ್ಟಿಸುತ್ತಿರುವಂತೆನಿಸಿತು. ಜತೆಗೆ ಮತ್ತೊಂದು ಅನುಮಾನವು_ಅನುಮಾನ ಯಾರಿಗೆ ? ಜಗತ್ತಿಗೋ….ಅಥವಾ ದ್ವಂದ್ವಗಳನ್ನು ಹೊತ್ತು ನಡೆಯುತ್ತಿರುವವನಿಗೋ. ಬಸ್ ಹತ್ತುವಾಗ ಕಂಡಕ್ಟರ್ ಕೂಡಾ ಕೊಲ್ಲುವಂತೆ ನೋಡಿದ. ಬದಿಗೆ ನಿಂತಿದ್ದ ವ್ಯಕ್ತಿ ಕೇಳಿದ ಪ್ರಶ್ನೆಗಳೂ ಹಾಗೇ ಇದ್ದವು. “ಎಲ್ಲಿಗೆ ?” “ಯಾಕೆ ?”…. ಇತ್ಯಾದಿ, ಇವನೂ ಆ ಗುಂಪಿಗೆ ಸೇರಿದವನೇ ? ಕಾರಣ “ನಿಮಗ್ಯಾಕೆ ಇಲ್ಲದ ಉಸಾಬರಿ” ಎಂದು ಉಪದೇಶದ ಮಾತುಗಳನ್ನೂ ಹೇಳಿದ. +ಡಿ. ಐ. ಜಿಯ ಕಾರ್ಯಾಲಯದಲ್ಲಿ ಕಾರ್ಯದರ್ಶಿಯೆದುರು ಚೀಟಿ ಬರೆಯುತ್ತಾ ಕೂತಾಗ ಅವನೂ “ಯಾಕೆ ಸರ್, ನಿಮಗೆ ಬೇರೇನೂ ಸಮಸ್ಯೆಗಳಿಲ್ಲಾಂತ ಈ ಲೋಕೋದ್ಧಾರದ ಕೆಲಸ ಮಾಡಿತ್ತಿದ್ದೀರೇನು ? ಮುಂದೆ ಬರುವ ಕೋರ್ಟಿನ ಸಮನ್‌ಗಳನ್ನು ನಿಭಾಯಿಸುವುದು ಕಷ್ಟ. ದುಷ್ಟರಿಂದ ದೂರವಿರುವುದೇ ಒಳಿತಲ್ಲವೇ ?” ಎಂದು ಕೇಳಿದಾಗ ಇವನೂ…. ದಂಧೆಯಲ್ಲಿ ಸಾಚಾ ಯಾರು ಖೋಟಾ ಯಾರು ಯಾರು ಯಾವ ದಂಧೆಗೆ ಸಾಚಾ ? +ಮತ್ತೆ ಡಿ. ಐ. ಜಿಯವರ ಸಂದರ್ಶನ ಮುಗಿಸಿ ಹೊರಬಂದಾಗ ಧೈರ್ಯದ ಭಾವನೆಯೂ ಉಂಟಾಗಲಿಲ್ಲ. “ಈ ಘಟನೆಯ ಒಂದು ಕೊಂಡಿ ಮಾತ್ರ ನಮಗೆ ಸಿಕ್ಕಿದೆ. ಅದರ ಸರಪಳಿ ಎಲ್ಲಿಗೆ ಹೋಗುತ್ತದೆಂದೂ ಗೊತ್ತು. ಆದರೆ ಸರಪಳಿ ಎಳೆದು ಇದನ್ನು ನಿಲ್ಲಿಸುವ ದಾರಿ ಗೊತ್ತಿಲ್ಲ. ಏಕೆಂದರೆ ಸರಪಳಿಯ ಅಂತ್ಯಕ್ಕಿಂತ, ಕೊಂಡಿಗಳು ಮುಖ್ಯವಾಗುವ ನಮಗೆ ಅರ್ಧದಾರಿ ಹೋಗುವಷ್ಟರಲ್ಲೇ ಸರಪಳಿ ಕಡಿದಿರುವುದು ತಿಳಿಯುತ್ತದೆ. ಮತ್ತೆ ಹೊಸಕೊಂಡಿ, ಹೊಸ ಸರಪಳಿ ಹುಡುಕಿ ಹೋಗಬೇಕು. ಇದು, ಅನುಭವದ ಮಾತು. ವೈಯಕ್ತಿಕವಾಗಿ ನನ್ನನ್ನ ಕೇಳುವುದಾದರೆ, ನೀವು ಇದರಿಂದ ದೂರ ಇರೋದೇ ಒಳ್ಳೇದು” ಎಂದು ಆತ ಹೇಳಿದಾಗ, ಹೇಡಿತನದ ಒಳ್ಳೆಯ ಗುಣಗಳು ಎಲ್ಲರಲ್ಲೂ ಎಷ್ಟು ವಿಫುಲವಾಗಿವೆ ಎಂದು ಮನವರಿಕೆಯಾಯಿತು. ಹೊರಬರುತ್ತಿದ್ದಂತೆ, ನಿಜಕ್ಕೂ ಇದನ್ನೆಲ್ಲ ಹಂಚಿಕೊಳ್ಳಲು ಒಂದು ಗಟ್ಟಿ ಹೃದಯದ ಸಹಾರಾ ಬೇಕೆನಿಸಿದ್ದೂ ಉಂಟು. +ಎಂದಿನಂತೆ ಸಮಯಕ್ಕೆ ಸರಿಯಾಗಿ ಹೋಗಲಾರದೆ, ತಡವಾದುದಕ್ಕೆ ಆತಂಕಪಡುತ್ತಾ ಹೊರಬಂದು ಆಫೀಸಿನತ್ತ ಹೆಜ್ಜೆ ಹಾಕುತ್ತಿರುವಾಗ ಯಾರೋ ಹಿಂಬಾಲಿಸಿದ ಭಾವನೆ. ಅಥವಾ ಭ್ರಮೆ. ಭ್ರಮೆಯ ಬಗ್ಗೆ ನಂಬಿಕೆ ಗಟ್ಟಿಯಾಗುತ್ತಾ ಹೋದಾಗ ಅದು ವಾಸ್ತವವಾಗಿ ಪರಿವರ್ತನೆಗೊಳ್ಳುವುದೂ ಉಂಟು. ರಸ್ತೆ ಸ್ವಲ್ಪ ನಿರ್ಜನವಾಗುತ್ತಿದೆ ಎನ್ನಿಸಿದಂತೆ ಭಯವೂ ಜಾಸ್ತಿಯಾಯಿತು. ಯಾರೋ ಬಂದು ಕಾಲರ್‍ಪಟ್ಟಿ ಹಿಡಿದು, ಕೆನ್ನೆಯ ಮೇಲೆ ಬಾರಿಸಿ, ಕಬ್ಬಿಣದ ಸಲಾಕೆಯಿಂದ ಕಾಲಿಗೆ ಬಲವಾಗಿ ಪೆಯ್ಟ್ಟು ಕೊಟ್ಟದ್ದು ಅನುಭವಕ್ಕೆ ಬಂತು. ಹಿದಿರುಗಿ ನೋಡಿದಾಗ ಆ ವ್ಯಕ್ತಿ ನಸುನಕ್ಕ : +“ಇದು ಮೊದಲ ಪಾಠ ಮಾತ್ರ. ಕಲಿತರೆ ಒಳ್ಳೆಯದು” ಎಂದು ಕರಗಿ ಹೋದ. ಅವನಷ್ಟೇ ಅಲ್ಲ. ತಲೆ ತಿರುಗಿದಾಗ ಒಂದಿಷ್ಟು ಸಮಯ ಜಗತ್ತೇ ಕರಗಿ ಹೋಗುತ್ತದೆ. ಕಡೆಗೊಮ್ಮೆ, ಭಂಡತನಕ್ಕೂ, ಈಗಿವನು ಕೊಟ್ಟಿದ್ದ ಜೀವನದ ಪಾಠಕ್ಕೂ, ಧೈರ್ಯಕ್ಕೂ, ಭಯಕ್ಕೂ ಕೊಂಡಿಗಳನರಸುತ್ತಾ ಎದ್ದು ನಿಲ್ಲಲು ಯತ್ನಿಸಿದಾಗ ಒಂದು ಸುಂದರ ಹೆಣ್ಣು : “ಸಹಾಯ ಮಾಡಲೇ” ಎಂದು ಕಾತರದಿಂದ ಒಳಗೆ ಬರುತ್ತಿದ್ದಂತೆ, ಮಾನವೀಯತೆಯ ಬಗ್ಗೆ ಕಳೆದುಕೊಳ್ಳುತ್ತಿದ್ದ ಎಲ್ಲ ನಂಬುಗೆಗಳೂ ಮರುಕಳಿಸಿದಂತಾಗಿ, ಅವಳ ಸೌಂದರ್ಯ ಜಗತ್ತನ್ನು ಇನ್ನೂ ಸುಂದರವಾಗಿಸುತ್ತಿದೆ ಎನ್ನಿಸಿ, ಅವಳು ಬಳಿ ಬರದಿದ್ದರೆ ಅದೇ ದೊಡ್ಡ ಉಪಕಾರ ಎಂದು ಸದ್ಯಕ್ಕವಳು ಏನೂ ನೋಡಿಲ್ಲವೆಂದೂ ಮನವರಿಕೆ ಮಾಡಿಕೊಡುವ ಯತ್ನ ಸಫಲವಾಗುತ್ತಿದ್ದಂತೆ, ಸಂಭಾಷಣೆಗೆ ಮತ್ತೊಂದು ಬಾಲಂಗೋಚಿ ಸೇರಿಕೊಂಡಿತ್ತು. ಮುಂದೆಂದಾದರೂ, ಸಂದರ್ಭ ಒದಗಿ ಬಂದರೆ ಜೀವನದಲ್ಲೊಂದು ಸಹಾರಾ ಆಗಬಹುದೆಂದು ಸೂಚಿಸಿದಾಗ, ವಿಚಿತ್ರ ಬಡಬಡಿಕೆಗಳನ್ನು ಕೇಳಿ , ಏನೂ ಅವಳಿಗರ್ಥವಾಗದೇ ಚಕಿತಳಾಗಿ ಕರುಣೆಯ ದೃಷ್ಟಿ ಬೀರುತ್ತಲೇ ಎರಡು ಹೆಜ್ಜೆ ಹಿಂದೆ ಹೋದಳು. +ಕಷ್ಟಪಟ್ಟು ಮತ್ತೆ ಪೋಲೀಸ್ ಹೆಡ್‌ಕ್ವಾರ್ಟಸ್‌ಗೆಂದು ಆಟೋರಿಕ್ಷಾವನ್ನೇ ಹಿಡಿಯಲು ಧೈರ್ಯಮಾಡಿ ಒಂದು ಹೆಜ್ಜೆ ಕುಂಟಿದಾಗ ಅವಳ ದನಿ ಕೇಳಿಸಿತು : “ನಿಮ್ಮ ಹೆಸರೇನು ತಿಳಿದುಕೊಳ್ಳಬಹುದೇ ?” +ಪ್ರಶ್ನೆಗೆ ಮುಖದಲ್ಲಿ ತುಂಟ ನಗೆಯೊಂದು ಅರ್ಥಗರ್ಭಿತವಾಗಿ ಹೊಮ್ಮುತ್ತಿದ್ದಂತೆ ಉತ್ತರವೂ ಅಪ್ರಯತ್ನವಾಗಿ ಹೊರಚಿಮ್ಮಿತ್ತು. +***** +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ […] +ನೀವು ಕಾಣದ ನಾಳೆಗಳಲ್ಲಿ… ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_394.txt b/Kannada Sahitya/article_394.txt new file mode 100644 index 0000000000000000000000000000000000000000..c181e7197f00f760b2cc5da27e744e6236be5507 --- /dev/null +++ b/Kannada Sahitya/article_394.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇತ್ತೀಚೆಗೆ ಸುಬ್ಬಣ್ಣನವರ ಬಗ್ಗೆ ಬರೆಯುತ್ತಾ ನಾನು ಈ ಮತುಗಳನ್ನು ಹೇಳಿದ್ದೆ: +ತೊಂಬತ್ತರ ದಶಕದಲ್ಲಿ ಸಿ.ಜಿ.ಕೆ – ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅವರಿಗೆ ಅದನ್ನು ಕೊಂಡೊಯ್ಯಲು ಸಾಧ್ಯವಾಗಲೇ ಇಲ್ಲ. ರಂಗನಿರಂತರದ ದಿನಗಳನ್ನು ಈಗ ನೆನಪು ಮಾಡಿಕೊಂಡರೆ, ಸಿ.ಜಿ.ಕೆ ಪಣ ಕಟ್ಟಿ ಹತ್ತು ದಿನ ಎಡೆಬಿಡದೇ ಸೈಕಲ್ ಓಡಿಸಿ ಲಿಮ್ಕಾ ರಿಕಾರ್ಡ್ ಸ್ಥಾಪಿಸಿದ ಒಂಟಿ ಖಿಲಾಡಿಯಂತೆ ಕಾಣುತ್ತಿದ್ದರೆನ್ನಿಸುತ್ತದೆ. ಆದರ ಆ ದಿನಗಳಲ್ಲಿ ಅವರ ಇರ್ದ್ ಗಿರ್ದ್ ಸುತ್ತುತ್ತಿದ್ದ ನಮಗೆ ಇದು ಬಹಳ ದೊಡ್ದ ಸಾಧನೆ ಅನ್ನಿಸಿತ್ತು. ಬಹುಶಃ ಸಿ.ಜಿ.ಕೆ.ಗೆ ಆರ್ಥಿಕ ಸವಲತ್ತುಗಳಿದ್ದಿದ್ದರೆ ಅವರು ಒಂದು ರೆಪರ್ಟರಿಯನ್ನು ಸ್ಥಾಪಿಸುತ್ತಿದ್ದರೋ ಏನೋ.. ಇಲ್ಲಿ ಹೇಳಬೇಕಾದ ಮುಖ್ಯ ವಿಷಯವೆಂದರೆ, ನೀನಾಸಂ ನಂತಹ ಸಂಸ್ಥೆಯನ್ನು ನಡೆಸುವುದು ಕೇವಲ ಒಂದು ಹವ್ಯಾಸವಾಗಿ ಮಾಡಲು ಆಗುವಂತಹದ್ದಲ್ಲ. +ಸಿಜಿಕೆಯವರ ಸಂಪರ್ಕ ಕಡಿದು ವರ್ಷಗಳೇ ಆದ ನಂತರ ಅವರ ನೆನಪು ಇದ್ದಕ್ಕಿದ್ದ ಹಾಗೆ ಯಾಕೆ ಬಂತು ಅನ್ನುವುದು ನನಗೆ ಗೊತ್ತಿಲ್ಲ, ಆದರ ನಾಟಕದ ಸಂಧರ್ಭದಲ್ಲಿ ಸಿಜಿಕೆಯವರನ್ನು ನೆನಪು ಮಾಡಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲವೇನೋ. ಹಾಗೆ ನೋಡಿದರೆ ನನಗೆ ಸಿಜಿಕೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರೊಡನೆಯ ಒಡನಾಟ ಕೇವಲ ಒಂದು ವರ್ಷದ ಅವಧಿಗೆ ಸೀಮಿತವಾಗಿತ್ತು. ಪಾಲ್ ಸುದರ್ಶನನ ಒಡನಾಟದಲ್ಲಿ ರವೀಂದ್ರ ಕಲಾಕ್ಷೇತ್ರದ ಕಟ್ಟೆಯಲ್ಲಿ ಅನೇಕ ಸಂಜೆಗಳನ್ನು ನಾವುಗಳು ಕಳೆದದ್ದುಂಟು. ಎಪ್ಪತ್ತು-ಎಂಬತ್ತರ ದಶಕದ ರಂಗಭೂಮಿಯ ಉತ್ತುಂಗದ ನಂತರ ಕಲಾಕ್ಷೇತ್ರದ ಕಟ್ಟೆ ಹೆಚ್ಚು ಕಮ್ಮಿ ಖಾಲಿಯಾಗಿತ್ತು. ಕಾರ್ನಾಡರು ಸಿನೆಮಾದತ್ತ ಒಲವು ತೋರಿ ಆ ಕ್ಷೇತ್ರದಲ್ಲಿ ಕೆಲವು ಪ್ರಯೋಗಗಳನ್ನು ನಡೆಸುತ್ತಿದ್ದರು. ಬಿ.ವಿ.ಕಾರಂತರು ಸ್ವಲ್ಪದಿನ ಕಾರ್ನಾಡರ ಜೊತೆ ಸಿನೇಮಾ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ರಂಗಭೂಮಿಯ ಕೆಲಸದಲ್ಲಿ ನಿರತರಾಗಿ ಭೋಪಾಲದ ಭಾರತ ಭವನ, ಎನ್.ಎಸ್.ಡಿಗಳತ್ತ ಒಲವು ತೋರಿದ್ದರು. ನಾಗಾಭರಣ ಕೂಡಾ ಸಿನೇಮಾದ ಕಡೆಗೆ ವಾಲಿಬಿಟ್ಟಿದ್ದರು. ಮಿಕ್ಕ ಬೆಂಗಳೂರಿನ ರಂಗಕರ್ಮಿಗಳೆಲ್ಲ (ನಾಟಕಕಾರ/ನಿರ್ದೇಶಕರಾದ ನಾಗೇಶ್, ಸೀತಾರಾಂ, ನಟ ಪ್ರಕಾಶ್ ರೈ) ಆಗಷ್ಟೇ ಹೊಸದಾಗಿ ತೆರೆದುಕೊಳ್ಳುತ್ತಿದ್ದ ಟಿ.ವಿ ಸೀರಿಯಲ್ ಗಳ ಹೊಸ ಮಾಧ್ಯಮದಲ್ಲಿ ತಮ್ಮ ಪ್ರಯೋಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಹೀಗೆ ಎಲ್ಲರೂ ಬೆಂಗಳೂರಿನ ನಾಟಕರಂಗವನ್ನು ತ್ಯಜಿಸಿ ಹೋಗುತ್ತಿದ್ದ ಕಾಲದಲ್ಲಿ, ನಾಟಕಗಳನ್ನು ಆಡಲು ಕಲಾಕ್ಷೇತ್ರದ ಬಾಡಿಗೆ ದುಸ್ತರವಾಗುತ್ತಿದ್ದ ಸಮಯದಲ್ಲಿ. ಪ್ರತಿ ಭಾನುವಾರ ಇಡೀ ಭಾರತ ದೇಶವನ್ನೇ ಅರ್ಧ ಘಂಟೆಯ ಕಾಲ ಸ್ಥಬ್ಧಗೊಳಿಸುತ್ತಿದ್ದ ರಾಮಾಯಣ ಮಹಾಭಾರತ ಸೀರಿಯಲ್ ಗಳು ಬರುತ್ತಿದ್ದ ಕಾಲದಲ್ಲಿ, ಶಂಕರ್ ನಾಗ್ ಮಾಲ್ಗುಡಿಯತ್ತ ಹೋಗಿದ್ದ ಕಾಲದಲ್ಲಿ ಸಿಜಿಕೆ ಬೆಂಗಳೂರಿನ ರಂಗಭೂಮಿಯನ್ನು ಮತ್ತೆ ಜೀವಂತ ಮಾಡಲು ಭಗೀರಥ ಯತ್ನ ಮಾಡಿದ್ದರು. +ರಂಗನಿರಂತರ ಸತತವಾಗಿ ನೂರೈವತ್ತು ದಿನಗಳ ಕಾಲ ಸಿಜಿಕೆಯವರಿಗೆಂದೇ ಬೇರೆಯಾಗಿ ನಿರ್ಮಿಸಿದ್ದ ಕಲಾಕ್ಷೇತ್ರದ ಹಿಂಭಾಗದ ಪುಟ್ಟ ಟೆಂಪರರಿ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಆ ಆರು ತಿಂಗಳಲ್ಲಿ ಹದಿನೈದು ನಾಟಕಗಳ ಪ್ರಯೋಗಕ್ಕೆ ಸಿಜಿಕೆ ಕಾರಣರಾದರು. ಹಾಗೆ ನೋಡಿದರೆ ಆ ಆಯೋಜನೆಯಲ್ಲಿ ಸಿಜಿಕೆ ನಿರ್ದೇಶಿಸಿದ ನಾಟಕವಿತ್ತೇ ಎಂಬುದು ನನಗೆ ನೆನಪಾಗುತ್ತಿಲ್ಲ. ಪಾಲ್ ಸುದರ್ಶನನ ಕಥೆಯಾಧರಿಸಿ ತಯಾರಿಸಿದ ಸುಣ್ಣ ಹಚ್ಚಿದ ಸಮಾಧಿಗಳು ನಾಟಕವನ್ನ ಸಿಜಿಕೆ ನಿರ್ದೇಶಿಸಿದರೆಂದು ನನಗೆ ನೆನಪು. ಎಷ್ಟೋ ನಟರು, ನಿರ್ದೇಶಕರು, ಬೆಳಕಿನ ರಂಗಕರ್ಮಿಗಳು ಬಂದು ತಮ್ಮ ತಮ್ಮ ನಾಟಕಗಳನ್ನು ಆಡಿ ನಾಪತ್ತೆಯಾದರೂ ಅಲ್ಲಿ ಸ್ಥಾವರವಾಗಿ ನಿಂತಿದ್ದವರು ಸಿಜಿಕೆ. ಬಹುಶಃ ಸಿಜಿಕೆಯ ಜೊತೆ ಇಡೀ ನೊರೈವತ್ತು ದಿನ ನಿಂತು “ಕಟ್ಟೆ” ಎನ್ನುವ ಒಂದು ಪುಟದ ಟೈಪ್ ಮಾಡಿದ ಸೈಕ್ಲೊಸ್ಟೈಲ್ ಪತ್ರಿಕೆಯನ್ನು ಎಡಬಿಡದೇ ತಂದವರು ಪಾಲ್. ಆಗ ಐ‌ಐ‌ಎಂನಲ್ಲಿ ಡಾಕ್ಟರೇಟ್ ಮಾಡುತ್ತಿದ್ದ ನಾನು, ಸುದ್ದಿ ಸಂಗಾತಿಯಲ್ಲಿದ್ದ ಕೇಶವ ಮಳಗಿ ಸುಮಾರಷ್ಟು ಸಂಜೆಗಳನ್ನು ಸಿಜಿಕೆ ಜೊತೆ ಕಳೆದದ್ದುಂಟು.. +ಸಿಜಿಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆನ್ನುವುದು ಬರೇ ಔಪಚಾರಿಕವಾದ ಮಾತು. ಅವರು ತೀರಿಕೊಂಡಾಗ ಪತ್ರಿಕೆಗಳಲ್ಲಿ “ಗಾಂಧಿಯನ್ ಸ್ಟಡೀಸ್” ವಿಭಾಗದ ನಿರ್ದೇಶಕರಾಗಿದ್ದರೆಂಬುದು ತಿಳಿದು ನಾನು ಆಶ್ಚರ್ಯಗೊಂಡೆ. ಅದು ಇತ್ತೀಚಿನ ಮಾತು. ಸಿಜಿಕೆ ನಾಟಕ ಅಕಾದಮಿಯ ಚೇರ್ಮನ್ ಆದದ್ದೂ ನನಗೆ ಸೋಜಿಗವುಂಟುಮಾಡಿತ್ತು. ಸಿಜಿಕೆ ಏನೇ ಕೆಲಸ ಮಾಡಿದರೂ ಅದರಲ್ಲಿ ಒಂದು ರೀತಿಯ ಅಚ್ಚುಕಟ್ಟು ಇರುತ್ತಿತ್ತು. ಅವರು ತಮ್ಮ ರಂಗನಿರಂತರದಂತಹ ಕನಸುಗಳಿಗಾಗಿ ಹಣವನ್ನು ಎಲ್ಲಿಂದ ಪೂರೈಸುತ್ತಿದ್ದರೊ, ಹೇಗೆ ಅದನ್ನು ಒಟ್ಟುಗೂಡಿಸುತ್ತಿದ್ದರೋ ತಿಳಿಯದು. ಆದರೆ ಹಣದ ಬಗ್ಗೆ ಅವರು ಎಂದೂ ಚಿಂತಿಸಿದ್ದನ್ನು ನಾನು ನೋಡಿದ್ದಿಲ್ಲ. ಹಾಗೆ ನೋಡಿದರೆ ಸಿಜಿಕೆಯವರು ಕಾರ್ನಾಡರಂತೆ ಫ್ಲಾಂಬೊಯಂಟ್ ಆಗಿರಲ್ಲ, ಅವರೊಡನೆ ಮಾತನಾಡಿದರೆ ವಿಶ್ವ ನಾಟಕ ರಂಗದ ಬಗ್ಗೆ ನಾಟಕಕಾರರ ಬಗ್ಗೆ ದೊಡ್ಡ ದೊಡ್ಡ ವಿಚಾರಗಳಾಗಲೀ, ಸ್ಟೇಜ್ ಕ್ರಾಫ್ಟ್ ಬಗ್ಗೆ ಶೈಲಿಗಳಬಗ್ಗೆ ಎಂದೂ ಅವರು ಮಾತನಾಡಿದ್ದು ನೆನಪಿಲ್ಲ. ಅವರ ಜೊತೆ ಹರಟೆಯೆಂದರೆ ಯಾವ ನಾಟಕ ಎಲ್ಲಿ ಆಡುವಾಗ ಏನು ಗಮ್ಮತ್ತಿನ ಘಟನಾವಳಿ ನಡೆಯಿತೆಂದು ವಿವರಿಸುವುದರಲ್ಲೇ ಮುಗಿದುಹೋಗುತ್ತಿತ್ತು. ರಂಗಮಂಚದ ಮೇಲೆ ಅವರು ಹೆಚ್ಚು ಕಾಣಿಸಿಕೊಂಡದ್ದೂ ನನಗೆ ನೆನಪಿಲ್ಲ. ರಂಗನಿರಂತರ ಮುಗಿದ ದಿನ ಅವರು ಮಂಚದ ಮೇಲೆ ಬಂದು ಆಡಿದ ಮಾತುಗಳು “ನಾನು ಒಂದು ರೆಪರ್ಟರಿ ಮಾಡುವ ನಿಟ್ಟಿನಲ್ಲಿ ನೂರೈವತ್ತು ದಿನ ನಿರಂತರ ನಾಟಕದ ಪ್ರಯೋಗ ಮಾಡಿದೆ.. ಮುಂದೆ ರೆಪರ್ಟರಿ ಮಾಡುವುದೇ ನನ್ನ ಉದ್ದೇಶ. ಅದು ಆಗದಿದ್ದರೆ ನಾನು ನಾಟಕ ಮಾಡುವುದನ್ನೇ ಬಿಟ್ಟುಬಿಡುತ್ತೇನೆ” ಎಂದಷ್ಟೇ ಹೇಳಿ ರಂಗದಿಂದ ಇಳಿದುಬಿಟ್ಟರು. +ಸಿಜಿಕೆ ಒಂದು ಥರದಲ್ಲಿ ಜನ, ಗಣ, ಮನದ ವ್ಯಕ್ತಿಯಾಗಿದ್ದರು. ಅವರು ಆಯೋಜಿಸಿದ ಯಾವುದೇ ಕಾರ್ಯಕ್ರಮದಲ್ಲಿ ಅವರು ಹಾರ ಹಾಕಿ ಸನ್ಮಾನಿಸುತ್ತಿದ್ದದ್ದು ತೆರೆಯ ಮರೆಯಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು. ಒಂದು ರೀತಿಯಲ್ಲಿ ಇದು ಅವರ ಕನ್ವಿಕ್ಷನ್ ನ ದ್ಯೊತಕವಾಗಿತ್ತು. ಹೀಗಾಗಿಯೇ ಸಿಜಿಕೆ ಜನಬೆಂಬಲದಿಂದಲೇ ಕಷ್ಟಸಾಧ್ಯವಾದ ಕೆಲಸಗಳನ್ನು ಸರಳವಾಗಿ ಎಂಬಂತೆ ಮಾಡಿತೋರಿಸುತ್ತದ್ದರು. ಶಿವಪ್ರಕಾಶರ ನಾಟಕಗಳಾದ “ಶೇಕ್ಸ್ ಪಿಯರನ ಸ್ವಪ್ನ ನೌಕೆ” ಸುಲ್ತಾನ್ ಟಿಪ್ಪು” ಅಥವಾ ದೇವನೂರ ಮಹಾದೇವರೆ “ಒಡಲಾಳ” ವನ್ನು ನಾಟಕ ಮಾಡಿಸುವುದು ಸುಲಭದ ಮಾತೇನೂ ಆಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಕಿ.ರಂ.ನಾಗರಾಜರ ಕೈಯಲ್ಲಿ ಪೆನ್ನು ಹಿಡಿಸುವ ಕೆಲಸ ವನ್ನೂ ಸಿಜಿಕೆ ಸಮರ್ಥವಾಗಿ ಮಾಡಿದರು. ಕಿ.ರಂ ಎಷ್ಟು ಹೊತ್ತು ಬೇಕಾದರೂ ಮಾತಾಡುತ್ತಾರಾಗಲಿ ಅವರ ಕೈಯಲ್ಲಿ “ಕಾಲಜ್ಜಾನಿ ಕನಕ” ದಂತಹ ನಾಟಕ ಅವರ ಕೈಯಲ್ಲಿ ಬರೆಸಬೇಕೆಂದರೆ ಅದು ಕಷ್ಟಸಾಧ್ಯದ (ಅಥವಾ ಅಸಾಧ್ಯದ) ಮಾತೇ. ಇಂಥದನ್ನು ಸಿಜಿಕೆ ಸರಳವಾಗಿ ಮಾಡಿಬಿಡುತ್ತಿದ್ದರು. +ದೇವನೂರ ಮಹಾದೇವರ ಕುಸುಮಬಾಲೆ ಆಗಷ್ಟೇ ಬಿಡುಗಡೆಯಾಗಿತ್ತು. ಸಿಜಿಕೆ ಆ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಆದರೆ ಅವರ ಅಭಿಪ್ರಾಯದಲ್ಲಿ ಅದನ್ನು ನಾಟಕಕ್ಕೆ ಇಳಿಸುವುದು ಸುಲಭಸಾಧ್ಯದ ಮಾತಾಗಿರಲಿಲ್ಲ. ಕುಸುಮಬಾಲೆಯಲ್ಲಿ ಸಿಜಿಕೆ ಕಂಡದ್ದು ಭಾಷೆಯ ಹಾಗೂ ಕಥನದ ಸಂಭ್ರಮವನ್ನ. ನಾಟಕದ ಮಾಧ್ಯಮಕ್ಕೆ ಒಗ್ಗದಿದ್ದರೂ ಕುಸುಮಬಾಲೆಯ ಬಗ್ಗೆ ರಂಗಮಂಚದ ಮೇಲೆ ಏನಾದರೂ ಮಾಡಬೇಕೆಂಬ ತುಡಿತವಿದ್ದದ್ದರಿಂದ ಅದು ಅವರನ್ನು ಕುಟುಕುತ್ತಿದ್ದುದರಿಂದ ಆ ಕಾದಂಬರಿಯನ್ನು ಕೈಬಿಡದೇ ಅದಕ್ಕೆ ಒಂದು ಕಥಾಕಥನದ ಫಾರ್ಮಾಟ್ ಕೊಟ್ಟು ಅದನ್ನು ರಂಗದ ಮೇಲೆ ನಿರೂಪಿಸಿಯೇಬಿಟ್ಟರು. +ರಂಗನಿರಂತರದ ತಕ್ಷಣ ಸಿಜಿಕೆ ನಾವುಗಳು ಊಹಿಸಲಾರದ್ದನ್ನು ಮಾಡಿದರು. ಈ ವಿವರ ಬಹುಶಃ ಬಹಳಷ್ಟು ಜನರಿಗೆ ಗೊತ್ತಿಲ್ಲ ಎನ್ನಿಸುತ್ತದೆ. ಚಿತ್ರನಟ ಲೋಕೇಶ್ ನಿರ್ಮಿಸಿ ನಿರ್ದೇಶಿಸಬೇಕೆಂದುಕೊಂಡ “ಭುಜಂಗಯ್ಯನ ದಶಾವತಾರಗಳು” ಚಿತ್ರಕ್ಕೆ ಚಿತ್ರಕಥೆ ಬರೆಯಲು ಸಿಜಿಕೆ ಹೊರಟು ನಿಂತರು. ಎಲ್ಲರೂ ಟಿ.ವಿ. ಚಿತ್ರರಂಗ ಎಂದು ಓಡಾಡುತ್ತಿದ್ದ ಆಗಿನ ದಿನಗಳಲ್ಲಿ ನಾಟಕವೆಂದು ಕಲ್ಲುಬಂಡೆಯಂತೆ ನಿಂತಿದ್ದ ಸಿಜಿಕೆ ಯಾಕೆ ಸಿನೆಮಾಕ್ಕೆ ಹೋದರು ಎನ್ನುವುದು ನನಗೆ ಸೋಜಿಗದ ಸಂಗತಿಯಾಗಿತ್ತು. ಸಿಜಿಕೆ, ಲೋಕೇಶ್, ಕೇಶವ ಮಳಗಿ ಮತ್ತು ನಾನು – ನಾಲ್ಕೂ ಮಂದಿ ಲೋಕೇಶರ ಈಗಲೋ ಆಗಲೋ ಎನ್ನುವರೀತಿಯಲ್ಲಿದ್ದ ಅಂಬಾಸಿಡರ್ ಕಾರಿನಲ್ಲಿ ಬೆಂಗಳೂರಿನಿಂದಾಚೆ ಒಂದು ಪುಟ್ಟ ಅಣೆಕಟ್ಟಿನ ಪಕ್ಕದಲ್ಲಿದ್ದ ಹಳ್ಳಿಯೊಂದರ ಐಬಿಯಲ್ಲಿ ಮೂರು ದಿನ ಬಿಡಾರ ಹೂಡಿ ಶ್ರೀಕೃಷ್ಣ ಆಲನಹಳ್ಳಿಯ ಕಾದಂಬರಿಯನ್ನ ದೃಶ್ಯ ಮಾಧ್ಯಮಕ್ಕೆ ಇಳಿಸುವ ಕಾರ್ಯವನ್ನು ಪ್ರಾರಂಭಿಸಿದೆವು. ಊರು ಯಾವುದೆಂಬುದು ನನಗೆ ನೆನಪಾಗುತ್ತಿಲ್ಲ, ಆದರ ಆ ಮೂರುದಿನಗಳು ಮಾತ್ರ ಅದ್ಭುತವಾಗಿದ್ದವು. ಲೋಕೇಶ್ ಗಾಡಿಯಲ್ಲಿ ಒಂದು ಕ್ರೇಟ್ ರಮ್ ತುಂಬಿಸಿಕೊಂಡು ತಂದಿದ್ದರು. ಸಿಜಿಕೆ ಆಗಷ್ಟೇ “ಗುಂಡು ಬಿಟ್ಟಿದ್ದೇನೆ” ಎಂಬ ಹೊಸ ಖಯಾಲಿಯನ್ನ ಪ್ರದರ್ಶನ ಮಾಡುತ್ತಿದ್ದರು. ಬೆಳಿಗ್ಗೆ ನಿಧಾನವಾಗಿ ಎದ್ದರೂ ರಾತ್ರೆ ತಡವಾಗುವವರೆಗೆ ಭುಜಂಗಯ್ಯನ ಚಿತ್ರಕಥೆಯನ್ನು ಪರಿಕಲ್ಪಿಸಿ ಬರೆಯುವುದು — ಬೇಸರವಾದಾಗ ನಾನು ಒಯ್ದಿದ್ದ ತಿರುಮಲೇಶರ ಅವಧ ದ ಕವಿತೆಗಳನ್ನು ಓದುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ, ಸಿಜಿಕೆ ತಮ್ಮ “ಗುಂಡು ಹಾಕುವುದಿಲ್ಲ” ಎಂಬ ಶಪಥವನ್ನು ನೆನಪು ಮಾಡಿಕೊಳ್ಳುತ್ತಲೇ — ಒಂದು ಮುಚ್ಚಳಿಕೆ” ಅನ್ನುತ್ತಾ ರಂ ಬಾಟಲಿನ ಮುಚ್ಚಳಕ್ಕೆ ನಾಲ್ಕಾರು ಹನಿ ರಮ್ ಸುರಿದು ನೀಟಾಗಿ ಗಂಟಲಿಗೆ ಸೇರಿಸುತ್ತದ್ದರು. ಗುಂಡೇರುತ್ತಿದ್ದಂತೆ ಲೋಕೇಶ್ ಸುಶ್ರಾವ್ಯವಾಗಿ ರತ್ನನ ಪದಗಳನ್ನು ಹಾಡುತ್ತಿದ್ದರು… +ಶ್ರೀಕೃಷ್ಣನ ಎಲ್ಲ ಕಾದಂಬರಿಗಳ ಸಿನೆಮಾ ಆವೃತ್ತಿಯಲ್ಲಿ ನಟಿಸಿದ್ದರಿಂದ, ಲೋಕೇಶ್ ಗೆ ಈ ಚಿತ್ರ ಮಾಡಬೇಕೆಂಬ ತುಡಿತ. ಆದರೆ ಶ್ರೀಕೃಷ್ಣ ತೀರಿಕೊಳ್ಳುವುದಕ್ಕೆ ಮುಂಚೆ ಆ ಕಾದಂಬರಿಯ ಟಿ.ವಿ ಹಕ್ಕುಗಳನ್ನು ನಾಗೇಶ್ ಗೆ ಮಾರಿ ಚಲನಚಿತ್ರದ ಹಕ್ಕುಗಳನ್ನು ಲೋಕೇಶ್ ಗೆ ಮಾರಿದ್ದರು. ಆಗಲೇ ದೂರದರ್ಶನಕ್ಕಾಗಿ ನಾಗೇಶ್ ಅದನ್ನು ಚಿತ್ರೀಕರಿಸುವ ತಯಾರಿ ನಡೆಸಿದ್ದರು.. ಆದರೂ ಲೋಕೇಶ್ ಗೆ ಮಾತ್ರ ಇದನ್ನು ಮಾಡಲೇಬೇಕೆಂಬ ಹಠ. ಒಟ್ಟಾರೆ, ಸಿಜಿಕೆ ಆ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚಿತ್ರಕಥೆ ಬರೆದದ್ದಲ್ಲದೇ ಅದರ ನಿರ್ದೇಶನದ ಸಮಯದಲ್ಲೂ ಲೋಕೇಶ್ ಜೊತೆ ಸಿಜಿಕೆ ಇದ್ದರೆಂದು ನನಗೆ ನೆನಪು. +ಆಗ ಸಿಜಿಕೆ ಸಿನೆಮಾ ಲೋಕಕ್ಕೆ ಹೋಗಬಹುದೆಂದು ನನಗನ್ನಿಸಿದ್ದರೂ ಅದು ನಿಜವಾಗಲಿಲ್ಲ. ಬಹುಶಃ ರಂಗನಿರಂತರದ ಮನಾಟನಿಯನ್ನು ಮುರಿಯಲು ಸಿಜಿಕೆ ಲೋಕೇಶ್ ಅವರ ಕರೆಗೆ ಓ ಗೊಟ್ಟಿರಬಹುದು. ಅಥವಾ ಅಸಲೀ ರಂಗಕರ್ಮಿ ಲೋಕೇಶರ ಜೊತೆ ಕೆಲಸ ಮಾಡಲು ಸಹಜವಾಗಿಯೇ ಇಷ್ಟಪಟ್ಟಿರಬಹುದು. +ಆ ನಂತರ ನನಗೆ ಸಿಜಿಕೆಯ ಸಂಪರ್ಕ ತಪ್ಪಿಹೋಯಿತು. ನಾನು ಬೆಂಗಳೂರಿನಿಂದ ಹೊರನಾಡಿಗನಾದೆ. ಆತ ನಾಟಕ ಅಕಾದಮಿಯ ಅಧ್ಯಕ್ಷರಾಗಲು ಒಪ್ಪಿದ್ದೇ ನನಗೆ ಆಶ್ಚರ್ಯ ಉಂಟುಮಾಡಿತ್ತು. ಆದರೆ ಶುದ್ಧ ರಂಗಕರ್ಮಿ ಸಿನೇಮಾದಲ್ಲಿ ಕೈಯಾಡಿಸಿದಂತೆ ಅವರು ಸಂಸ್ಥೆ ನಡೆಸುವುದರಲ್ಲೂ ಕೈಯಾಡಿಸಿನೋಡಬೇಕೆಂದು ಆ ಕೆಲಸವನ್ನ ಒಪ್ಪಿಕೊಂಡರೇ? ಇಲ್ಲ ತಮ್ಮ ಕನಸಿನ ರೆಪರ್ಟರಿಯನ್ನೆ ಸ್ಥಾಪಿಸುವ ಸಲುವಾಗಿ ಅದನ್ನ ಒಪ್ಪಿಕೊಂಡರೇ? ನನಗೆ ತಿಳಿಯದು. ಅವರು ಆ ಪಾತ್ರದಲ್ಲಿ ಎಷ್ಟು ಸಫಲರಾಗಿದ್ದರೆಂಬುದೂ ಗೊತ್ತಿಲ್ಲ. +ನನಗನ್ನಿಸುವಂತೆ ಸಿಜಿಕೆ ರಂಗನಿರಂತರದಂತಹ “ಘಟನೆ”ಗಳನ್ನು ಚೆನ್ನಾಗಿ ಸಂಯೋಜಿಸುತ್ತಿದ್ದರು. ಆದರ ಅದನ್ನು ಒಂದು ಚಳುವಳಿಯಾಗಿ ಪರಿವರ್ತಿಸುವ ಕ್ಷಮತೆ ಅವರಲ್ಲಿಲ್ಲ. ಇದಕ್ಕೆ ಕಾರಣ ಅವರು ಸಂಸ್ಥಾಗತವಾದದ್ದನ್ನು ಪ್ರಶ್ನಿಸುತ್ತ, ಅವುಗಳಿಗೆ ಸವಾಲಾಗುತ್ತ ಸಿಡಿದು ನಿಂತವರು. ಸಿಜಿಕೆ ಸಂಸ್ಥೆಯ ಚೌಕಟ್ಟಿನೊಳಗೆ ಕೆಲಸ ಮಾಡುವವರಾಗಿದ್ದರೆ ಇಲ್ಲ ಆತ ಒಳ್ಳೆಯ ಅರ್ಥಶಾಸ್ತ್ರದ ಉಪನ್ಯಾಸಕರಾಗಿರುತ್ತಿದ್ದರು ಇಲ್ಲವೇ ವಿಶ್ವವಿದ್ಯಾಲಯವನ್ನು ಪೂರ್ಣವಾಗಿ ತ್ಯಜಿಸಿ ತಮ್ಮ ಚಳವಳಿಯನ್ನು ಮುಂದುವರೆಸುತ್ತಿದ್ದರು. ಅವರು ಈ ಎರಡನ್ನೂ ಮಾಡಲಿಲ್ಲ. ಅಧ್ಯಾಪಕರ ಕೆಲಸದಲ್ಲಿದ್ದುಕೊಂಡು ಅದನ್ನು ಒಂದು ಹವ್ಯಾಸದಂತೆ ಸ್ವೀಕರಿಸಿ, ನಾಟಕಗಳನ್ನು ಮಾಡಿಸುತ್ತಾ ಆ ಹವ್ಯಾಸವನ್ನು ಒಂದು ವೃತ್ತಿಯಂತೆ ಪರಿಗಣಿಸಿ ಮುಂದುವರೆದರು. ಹೀಗಾಗಿ ಅವರ ರೆಪರ್ಟರಿಯ ಕನಸು ಕನಸಾಗಿಯೇ ಉಳಿದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. +ತಮ್ಮ ಕೊನೆಯ ಎರಡು ಬೆರಳುಗಳ ನಡುವೆ ಸಿಗರೇಟನ್ನು ಸಿಕ್ಕಿಸಿ ದಮ್ಮೆಳೆಯುತ್ತಿದ್ದ ಚಿಟಿಕೆ ಬಾರಿಸಿ ಬೂದಿ ಉದುರಿಸುತ್ತಿದ್ದ ಸಿಜಿಕೆಯವರ ಚಿತ್ರ ನನ್ನ ಮನಸ್ಸಿನಲ್ಲಿ ಈಗಲೂ ಇದೆ. ಅವರು ತೀರಿಕೊಂಡಾಗ ನೀಟಾಗಿ ತಲೆ ಬಚಿದ್ದ ಸಿಜಿಕೆಯವರ ಚಿತ್ರವನ್ನು ನಾನು ಪತ್ರಿಕೆಗಳಲ್ಲಿ ನೋಡಿದೆ…. ಆದರೆ ನಾನು ನೋಡಿದ್ದ ಸಿಜಿಕೆ ಎಂದೂ ತಲೆ ಬಾಚಿದ್ದಿಲ್ಲ, ಇಸ್ತ್ರಿಯಾದ ಅಂಗಿ ತೊಟ್ಟಿದ್ದಿಲ್ಲ, ನಾಟಕ ಬಿಟ್ಟರೆ ಬೇರೇನನ್ನೂ ಯೋಚಿಸಿದ್ದಿಲ್ಲ.. ಈಗ ಲೋಕೇಶ್ ಇಲ್ಲ, ಸಿಜಿಕೆ ಇಲ್ಲ… ಅವರ ನೆನಪಿಗೆ ನಾನು ಕೇಶವ ಮಳಗಿ ಕೂತು ಒಂದು ಮುಚ್ಚಳಿಕೆ ರಂ ಹಾಕಬೇಕು. +***** +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […] +ಭಾಷೆ ಜನಸಂಪರ್ಕದ ಬಹು ಪ್ರಮುಖ ಸಾಧನ. ಮನುಷ್ಯರು ತಮ್ಮ ಎಲ್ಲ ಬಗೆಯ ಅನುಭವ, ಆಲೋಚನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾರೆ, ಇಂತಹ ಒಂದು ಅಭಿವ್ಯಕ್ತಿಮಾಧ್ಯಮ ಮನುಷ್ಯನಿಗೆ ದೊರಕಿರುವುದರಿಂದಲೇ ಅವನಿಂದ ಒಂದು ಸಮಾಜವನ್ನೂ ತನ್ಮೂಲಕ ನಾಗರಿಕತೆಯನ್ನೂ ಕಟ್ಟಲು […] +ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_395.txt b/Kannada Sahitya/article_395.txt new file mode 100644 index 0000000000000000000000000000000000000000..1fd7e9fe13e1e2ad07237a551e3f369b40e40f4a --- /dev/null +++ b/Kannada Sahitya/article_395.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪುಟ್ಟ ಮಗ ಓಡಿ ಬಂದು +ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; +“ಅಮ್ಮ ನನಗೊಂದು ಕಥೆ ಹೇಳು – +ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” +‘ಅದು ಒಂದಾನೊಂದು ಕಾಲದ +ಒಂದಾನೊಂದು ಊರು. +ನನ್ನೂರು ಧರಣಿಮಂಡಲ ಮಧ್ಯದಲ್ಲಿ +ಹಾಲು ಬೆಲ್ಲ ಕುದಿಸಿದ ಗಿಣ್ಣ +ಅಂಗೈಲಿಟ್ಟು ನೆಕ್ಕಾಗ ಅಂಬಾ ಅಂದಿತ್ತು +ಕೊಟ್ಟಿಗೆಯ ಪುಣ್ಯಕೋಟಿ +ಹೊರಗೆ ಧಾರಾಕಾರ ಮಳೆ!’ +ಮಿಂಚಿತ್ತು ಪುಟ್ಟ ಕಣ್ಣುಗಳಲ್ಲಿ – +ಕಥೆಗೂ ನೆನಪಿಗೂ ಹೆಚ್ಚು ಅಂತರವಿಲ್ಲ +ಕಥೆ ಸುಳ್ಳಿರಬಹುದು +ನೆನಪು ಸುಳ್ಳಾಗಬಹುದು. +‘ಆ ಊರ ಅವಳು +ಅಂಥಿಂಥವಳಲ್ಲ!….’ +“ಅಂದರೆ?” +‘ಅಂಥವಳೂ ಅಲ್ಲ, ಇಂಥವಳೂ ಅಲ್ಲ’ +ಎತ್ತಿ ಮುದ್ದಾಡುತ್ತಾಳೆ +ಹಣ್ಣು ಹಂಪಲು ಕೊಟ್ಟು +ಹೊಟ್ಟೆದುಂಬಿಸುತ್ತಾಳೆ. +ಚಿಮ್ಮುತ್ತದೆ ಜೀವಜಲ – ನಿರಾತಂಕ +ತುಂಬಿ ನದಿ ಹಳ್ಳ, ಕೊಳ್ಳ. +‘ಅವಳ ನದಿಗಳಲ್ಲಿ ಚಿನ್ನದಂಥಾ ಮೀನು, +ವಜ್ರ ವೈಢೂರ್ಯದ ಹೊಳಪು +ಕೆಂಪು, ಹಳದಿ, ನೀಲಿ ನೀರಲ್ಲಿ ಬೆರೆತು +ಆಡಿದ ಚಕ್ಕಂದ….’ +ಕೂಸಿಗೀಗ ಕಣ್ಣ ತುಂಬಾ ನಿದ್ದೆ +ಕನಸು ಬೀಳುತ್ತಿರಬೆಕು. +ಕಥೆಗೂ ಕನಸಿಗೂ ಹೆಚ್ಚು ಅಂತರವಿಲ್ಲ, +ಎರಡಕ್ಕೂ ಸುಳ್ಳಿನ ಮೂಲ. +ಅವಳ ಗುಡ್ಡ ಕಾಡು ಕಡಿದು, +ಡಾಂಬರಿನ ಹಚ್ಚೆ ಹೊಯ್ದು ಸಿಂಗರಿಸಿದ್ದಾರೆ. +ಆ ಗುಡ್ಡಗಳ ನೆತ್ತಿಗಿಳಿದು +ಸೂರ್ಯ ಮುತ್ತಿಡುತ್ತಿದ್ದದ್ದು +ಈಗೊಂದು ಕಥೆ. +ಸುಡುವ ಬಿಸಿಲು ನೆತ್ತಿ ಸೀಳುತ್ತಿರುವಾಗ +ಅವಳ ಹಸಿರಿನ ಕಂಪು +ತಂಗಾಳಿಯ ತಂಪು +ನದಿಯ ನೀರಿನ ತೇವ…. +– ಈಗೊಂದು ನೆನಪು. +ಪುಟ್ಟ ಮಗ ಮಗ್ಗುಲ ಬದಲಿಸುತ್ತಾನೆ, +ಒಂದಾನೊಂದು ಕಾಲದ ನೆನಪಿನ ಕಥೆಯನ್ನು +ಕೇಳದೆಯೇ ಮಲಗಿಬಿಡುತ್ತಾನೆ. +***** +ಕೀಲಿಕರಣ: ಕಿಶೋರ್‍ ಚಂದ್ರ +ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […] +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_396.txt b/Kannada Sahitya/article_396.txt new file mode 100644 index 0000000000000000000000000000000000000000..d4615f3b2a65ba1daa1bb68247ebee82364babf6 --- /dev/null +++ b/Kannada Sahitya/article_396.txt @@ -0,0 +1,64 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಹಿಂದಿನಳಲ ಮರೆತುಬಿಡು +ಇಂದು ಅಡಿಯ ಮುಂದಕಿಡು +ಇಡು, ಇಡು ಇಟ್ಟು ಬಿಡೂ” +ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ +ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! +ತಂತಿ ಕಂಬ +ಗಿಡದ ಸಾಲು +ದಾಟಿ ನುಗ್ಗುತಿಹುದು ರೈಲು +ದಾರಿ ಸವೆಯೆ ಮೈಲು ಮೈಲು +ಕಣ್ಗೆ ತಂಪನೀಯುತಿಹುದು ಹಸುರು ಹುಲ್ಲುಗಾವಲು +ಮೋಹವೆರಚಿ ಬಿಸಿಲ್ಗುದುರೆ ಕುಣಿಯುತಿರಲು ಸುತ್ತಲು, +ಅಲ್ಲಿ ಮೇವ ದನದ ಹಿಂಡು +ಓಡಿ ಬರುವ ಗಾಡಿ ಕಂಡು +ಮೃತ್ಯು ಕುಣಿದು ಬಂದಿತೆಂದು ಚಂಗನೆದ್ದು ನಗೆದಿವೆ! +ದೂರದಲ್ಲಿ ಶೈಲ ಶಿಖರ +ಬುಗುರಿಯಂತೆ ತಿರುಗಿದೆ; +ಅದರ ಮೇಲೆ ನೆಳಲು ಬಿಸಿಲ ಕೈಯ ಹಿಡಿದು ಸಾಗಿದೆ. +ಕವಿಯ ಭಾವ ಕಾವುಗೊಂಡು +ಕವಿತೆಯಲ್ಲಿ ಮುಕ್ತಿ ಪಡೆದು +ಶಾಂತ ನಿದ್ರೆಗೈಯುವಂತೆ ಮೋಡ ಹಾಗೆ ತೇಲಿದೆ. +ದುಡುಂ ದುಡುಂ +ಬೀಳ್ದೊಡಂ +ಗಾಳಿ ಮಳೆಯು ಪೊಯ್ದೊಡಂ +ನೆಲವನಗಿದು ಬಗಿಯುವಂತೆ +ಬೃಹದ್ ಬಯಲು ಬಿರಿಯುವಂತೆ +ಕ್ಷಿತಿಜದಂಚನಿರಿಯುವಂತೆ +ಬಿಡುಗಡೆಗೆದೆ ತುಡಿಯುವಂತೆ +ಕಿಡಿ ಕಿಡಿ ಕಿಡಿ ಕಾರುತ! +ಸಿಡಿ ಸಿಡಿ ಸಿಡಿದೇಳುತ! +ರೈಲು ಯಂತ್ರ ಕ್ರಾಂತಿ ಮಂತ್ರ ಘೋಷಿಸುತ್ತ ಸಾಗಿದೆ! +ತನ್ನ ಬೆನ್ನು ಬಿದ್ದ ಜನಕೆ ಅಭಯ ಹಸ್ತ ನೀಡಿದೆ. +ಲೋಹದೆರಡು ಹಳಿಗಳುದ್ದ +ಗಾಲಿಯುರುಳಿ ಉರುಳುತಿರಲು +ನೆಲದ ಎದೆಯು ನಡುಗುತಿರಲು +ನಿಮಿಷಕೊಂದು ನೂರು ಹೆಜ್ಜೆ +ಇಡುವಕಾಂಡ ತಾಂಡವ! +ಮೂರ್ತಿವೆತ್ತ ಭೈರವ! +ದಿಕ್ತಟಗಳ ಬಿರಿಸುತಿಹುದು ಇದರ ರೌದ್ರ ಆರವ! +ಗುರಿಯ ನೇರ ದಾರಿಗುಂಟ +ನುಗ್ಗುತಿಹನು ರೈಲು ಬಂಟ +ದುಡಿಮೆ ದುಡಿಮೆ ದುಡಿಮೆಯೆಂದು +ಹೊಟ್ಟೆ ಹೊಟ್ಟೆ ಬಡಿದುಕೊಂಡು +ಕಲ್ಲಿದ್ದಲಿ ನುಂಗಿಕೊಂಡು +ನಿಟ್ಟುಸಿರಿನ ಕರ್ಬೊಗೆಯದು ಕಾಳೋರಗವಾಗಿರೆ +ತಿದಿಯೊತ್ತುತ ಪೂತ್ಕರಿಸುತ ಗಾಳಿಯ ಮೇಲ್ವಾಯ್ದಿರೆ +ಸಿಡಿಗುಂಡಿನ ಸೇಡಿನಂತೆ +ಬಿಲ್ಜಾಣನ ಬಾಣದಂತೆ +ರೈಲುಬಂಟನೋಡುತಿಹನು ಓಡುತಿಹನು ಮುಂದಕೆ +ಕರ್ತವ್ಯದ ಭಾರವಿಳಿಸೆ ನಿಲ್ದಾಣದ ಸನಿಹಕೆ +ನಾವು ನೀವು ಅಗಲಿ ಕೂಡಿ ಅತ್ತು ನಗುವ ತಾಣಕ್ಕೆ! +***** +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […] +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ ಸಂಕಲ್ಪವೊಂದೇ ಮೋಡ; ಶಾಖ ಮರೆ, ಬರೆದರೆ ಬರೀ ಅಕ್ಷರಗಳ ಹೊರೆ; ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ ಒರಗಿದರೆ ಬರೆಯಿಸುವ ಅದೃಢತೆ; ಹೊರಗಾಗುವುದು ಕವಿತೆ. ಒಮ್ಮೊಮ್ಮೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_397.txt b/Kannada Sahitya/article_397.txt new file mode 100644 index 0000000000000000000000000000000000000000..13bc4f9c9b179dc711ffd83e2c0e24fd560c6ed3 --- /dev/null +++ b/Kannada Sahitya/article_397.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇಲ್ಲಿ ಬಯಲಿದೆ, +ಬರೀ ಬಯಲು. +ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ +ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ +ಅನಾವಶ್ಯಕ ಮಹತ್ವ. +ಇಲ್ಲಿ ಇದ್ದವರು ಬಂದುಹೋದವರು +ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ +ಒಂದಲ್ಲಾ ಒಂದು ಕಿಟಿಪಿಟಿ +ನಡೆಸಿಯೇ ಇದ್ದಾರೆ. +ನನ್ನ ಸಂಬಂಧಿಗಳು ಅಪ್ಪನದೋ ಅಮ್ಮನದೋ ಕಡೆಯಿಂದ ಬಂದು +ತಾವೇ ಬಯಲುದ್ದಕ್ಕೂ ಬೆಳೆದೂ ಬೆಳೆದೂ +ಧುತ್ತೆಂದು ಬೆತ್ತಲಾಗಿ ಬಿದ್ದಿದ್ದಾರೆ ಈಗಲೂ. +ಕೆಲವು ಭಕ್ತಾಗ್ರಣಿಗಳಂತೂ ಗೇಣಿಕೊಟ್ಟು +ತೂಗಿಸಿ ತೂಗಿನಿಂತು ಹೊಗರಿ +ಧಾಂದಲೆ ಎಬ್ಬಿಸಿ ಕ್ರಾಂತಿಗಳ ತವರೀಗ +ಈ ಇದೇ ಬಯಲು….. +ದೊಡ್ಡ ಮೇಳಗಳು ಹಂದರ ಜಡಿದು ಕೊಳ್ಳೆ +ಹೊಡೆಯುವದು, +ಪರ್ವ ಕೀರ್ತನೆ ಕಾಲಕ್ಷೇಪ ದಾನ ಧರ್ಮ ನಂಜಿಕೊಂಡು ಬಂದಿದ್ದು.. +ಮೇಳ ಸತ್ತು ಬೆಂಡಾದರೂ ಬಲವಂತದ +ಚಂಡೆ ಮೃದಂಗಗಳು ಅರಚುತ್ತಲೇ ಬಿದ್ದಿದ್ದು…. +ಇವೆಲ್ಲ ಇಲ್ಲಿಯ ಖಾಯಂ ಸಂಕ್ಷಿಪ್ತ ಭೂತ ಸತ್ಯಗಳು. +ಆಗಾಗ ಶಿವರಾತ್ರಿಯ ಜಾಗರಣೆಗೆ ಬಂದು +ಇಲ್ಲಿ ಡೇರೆ ಹೂಡಿದ ಬೈಲು ಸೀಮೆಯ ಯಾತ್ರಿಕರು ಕಡೆಗೆ +ಬೈಲುಕಡೆಗೆ ಹೋಗುವುದೂ ಇಲ್ಲಿಯೇ. +ಇವೆಲ್ಲ ನಡೆದಂತೆ +ನನ್ನ ಮತ್ತು ಬಯಲ ಸಂಬಂಧ ಅಷ್ಟಕ್ಕಷ್ಟೇ ಆದರೂ +ಬಯಲ ಬಳಸದೆ ಇರುವದು ಅಪಚಾರ ಅವಿವೇಕ +ಎಂದು ಬಂದ ಕಂಪನಿಗೆಲ್ಲ ಜೋತು ಬಿದ್ದು +ಚಾರಕನಾಗಿಯೋ ಕೋಡಂಗಿಯಾಗಿಯೋ +ಕುಣಿದುಬಿಡುತ್ತೇನೆ. +ಎಲ್ಲರೂ ಕಿರೀಟ ಕಟ್ಟುತ್ತಾರೆ ಮತ್ತೆ ಬಿಚ್ಚುತ್ತಾರೆ +ಪಗಡೆ ಕಟ್ಟುತ್ತಾರೆ ಮತ್ತೆ ಬಿಚ್ಚುತ್ತಾರೆ +ಬಿಲ್ಲು ಹೆದೆಗೇರಿಸಿ ಝೇಂಕರಿಸಿ +ಬೊಬ್ಬಿರಿಯುತ್ತಾರೆ ಬೋಳುಬೋಳಾಗಿ +(ಹೇಳುತ್ತ ನಡೆದರೆ ಗದ್ಯವೇ ಆದೀತು) +ಹೀಗೆ +ನಾನಾ ರೀತಿಯ ಕಿಚಿಪಿಚಿ, ಪ್ರಭುತ್ವ, ನ್ಯಾಯ +ನಡೆದೇ ಇದೆ ಈ +ನಗ್ನ ವೇಧಶಾಲೆಯಲಿ ನಿತ್ಯ +ಆದರೆ ಅವರಿವರೆನ್ನದೆ ಅದೂ ಇದೂ ಎನ್ನದೆ +ಸಹಿಸಿ ತೆಪ್ಪಗಿದೆಯಲ್ಲ ಬಯಲು +ಅದೇ ವಿಚಿತ್ರ +ಆದರೂ ಸತ್ಯ +***** +ಚನ್ನವೀರ ಕಣವಿ ಕೊಡೆ ಹಿಡಿಯುತ್ತೇವೆ: ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು ಸಿಡಿಸುವ ಕೊಳೆಗೆ, ಆಗದವರು ಎದುರಿಗೆ ಬಂದಾಗ ಮರೆಗೆ- ಹೊತ್ತು ಬಂದಂತೆ. ಮತ್ತೊಬ್ಬರ ತಲೆಗೆ ನೆರಳು ಮಾಡುವ ಉಸಾಬರಿಗೆ ಹೋಗಿ ಚುಚ್ಚುತ್ತೇವೆ; ಮೆಚ್ಚುತ್ತೇವೆ: ಹೆಣ್ಣು […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_398.txt b/Kannada Sahitya/article_398.txt new file mode 100644 index 0000000000000000000000000000000000000000..cd06105cb6f883bd1d6ec8b4996cc136591b33cb --- /dev/null +++ b/Kannada Sahitya/article_398.txt @@ -0,0 +1,79 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು ತಲೆಕೆಳಗಾಗಿ ಜೋಲಾಡುವುದಕ್ಕೆ ಕಾರಣವೇನು?’ ಎಂಬುದಾಗಿ ಪ್ರಶ್ನೆ ಮಾಡಿದ. ಆಗ ಆ ಪಿತೃಗಳು ‘ಅಯ್ಯಾ ನಮ್ಮ ಅವ್ಯವಸ್ತೆಯನ್ನು ಏನೆಂದು ಹೇಳೋಣ. ನಮ್ಮ ವಂಶದಲ್ಲಿ ಜರತ್ಕಾರುವೆಂಬುವನು ಜನಿಸಿದ್ದಾನೆ. ಅವನು ಮದುವೆ ಮಾಡಿಕೊಳ್ಳದಿರುವ ಕಾರಣ ಸಂತಾನಹೀನನಾದ ಆತನ ಮೂಲಕ ನಮಗೆ ಈ ಅವಸ್ಥೆ ಪ್ರಾಪ್ತವಾಗಿದೆ’ ಎಂದರು. ಆಗ ಜರತ್ಕಾರು ‘ನಾನೇ ಆ ಜರತ್ಕಾರು. ನಿಮ್ಮನ್ನು ಈ ಅಧೋಗತಿಯಿಂದ ಪಾರುಮಾಡುತ್ತೇನೆ. ಆದರೆ ನಾನು ನನ್ನ ಹೆಸರಿನ ಹುಡುಗಿಯನ್ನೇ ಮದುವೆಯಾಗುವೆನು’ ಎನ್ನಲು ಪಿತೃದೇವತೆಗಳು ಅದಕ್ಕೆ ಸಮ್ಮತಿಸಿದರು. ಬಳಿಕ ಜರತ್ಕಾರು ಹುಡುಗಿಯನ್ನು ಹುಡುಕುತ್ತ ವಾಸುಕಿಯ ತಂಗಿ ಜರತ್ಕಾರುವೆಂಬ ಹೆಸರಿನವಳೆಂಬುದನ್ನು ತಿಳಿದು ಆತನಲ್ಲಿಗೆ ಹೋಗಿ, ಅವನ ತಂಗಿಯನ್ನು ತನಗೆ ಕೊಡುವುದೆಂದು ಕೇಳಿದ. ನಾಗರಾಜನಾದ ವಾಸುಕಿ ಸಮ್ಮತಿಸಿ ಮದುವೆ ಮಾಡಿಕೊಟ್ಟ. ಬಳಿಕ ಜರತ್ಕಾರು ಆಕೆಯನ್ನು ಕರೆದುಕೊಂಡು ತನ್ನ ಆಶ್ರಮವನ್ನು ಸೇರಿದ. +(೨) ನಾಗರಾಜನಾದ ವಾಸುಕಿಯ ಸಹೋದರಿ, ಮೇಲೆ ಹೇಳಿದ ಜರತ್ಕಾರು ಮುನಿಯ ಹೆಂಡತಿ. ಆಸ್ತಿಕ ಮುನಿಯನ್ನು ಹೆತ್ತವಳು. ಒಮ್ಮೆ ಸಂಧ್ಯಾಸಮಯದಲ್ಲಿ ಜರತ್ಕಾರು ನಿದ್ರಿಸುತ್ತಿದ್ದ. ಸಂಧ್ಯಾ ಸಮಯ ಮೀರಿಹೋಗುವುದೆಂಬ ಭಯದಿಂದ ಈಕೆ ಹೆದರುತ್ತಲೇ ತನ್ನ ಪತಿಯನ್ನು ಎಚ್ಚರಗೊಳಿಸಿದಳು. ಜರತ್ಕಾರು ಮುನಿ ಎಚ್ಚೆತ್ತು ಕೋಪದಿಂದ ತನ್ನ ಪತ್ನಿ ತನ್ನನ್ನು ಸ್ವಲ್ಪವೂ ಲೆಕ್ಕಿಸದೆ ಇಂತಹ ಅಪಮಾನ ಮಾಡಿದಳೆಂಬ ಕೋಪದಿದ್ಮ ತಪಸ್ಸಿಗಾಗಿ ಅರಣ್ಯಕ್ಕೆ ಹೋದನು. ಉಗ್ರ ತಪಸ್ಸಿನಿಂದ ದೇಹವನ್ನು ಕೃಶಮಾಡಿದವನಾದುದರಿಂದ ಜರತ್ಕಾರುವೆಂವ ಹೆಸರು. +(‘ಪುರಾಣನಾಮ ಚೂಡಾಮಣಿ’) +೧ +ತಿರುಪತಿ ಪಿಮ್ಮಪ್ಪನ ದಯೆಯಿಂದ ಕೊನೆಗೂ ಗರ್ಭ ನಿಂತು, ಇವನು ಹುಟ್ಟಿ, ಈ ಹೆಸರು ಪಡೆದದ್ದೆಂದು ಬೋಳುತಲೆಯ ಮೇಲೆ ಕೆಂಪು ಸೀರೆಯ ಸೆರಗನ್ನು ಎಳೆದುಕೊಳ್ಳುತ್ತಾ ನೆರೆಹೊರೆಗೆ ತಾಯಿ ತನ್ನ ಹುಟ್ಟನ್ನು ಪವಿತ್ರಗೊಳಿಸುವಾಗ ತಿಮ್ಮಪ್ಪ ಮುಳ್ಳಾಗುತ್ತಿದ್ದ. ಅವನ ಹತ್ತನೇ ವಯಸ್ಸಿನಲ್ಲಿ ತಂದೆಯಿಲ್ಲದ ಮಗನಿಗೆ ವಿಜೃಂಭಣೆಯಿಂದ ತಿರಿಪತಿಯಲ್ಲಿ ಉಪನಯನ ಮಾಡಿದಿ, ಪಾಪನಾಶಿನಿಯಲ್ಲಿ ಮೂರು ಮುಳುಗು ಹಾಕಿಸಿ, ಒಂದು ಕ್ಷಣ ನಿಲ್ಲಿಸಿದಾಗ ಕನ್ಣು ಕೋರೈಸುವ ಅಲಂಕೃತ ವಿಗ್ರಹ ತಿಮ್ಮಪ್ಪನಿಗೆ ಓಕರಿಕೆ ಬರಿಸಿತ್ತು. ತಿರುಪತಿಗೆ ಬರುವಾಗ ದಾರಿಯಲ್ಲಿ ಅವನಿಗೆ ಇನ್ನೊಂದು ಮೈ ಕಳಚಿಕೊಂಡಂತಹ ಅನುಭವವೂ ಆಗಿತ್ತು. +ಕಿಕ್ಕಿರಿದು ತುಂಬಿದ ರೈಲಿನಲ್ಲಿ ಸೀಟಿನ ಕೆಳಗೆ ಮಲಗಿ ಅರ್ಧ ನಿದ್ರೆಯಲ್ಲಿ ಅವನು ಬಳಲುತ್ತಿದ್ದ. ಹಲವರು ಹೀಗೇ ನಿದ್ದೆಯ ಹಲವು ಅವಸ್ಥೆಗಳಲ್ಲಿ ಅತ್ತಿತ್ತ ಹೊರಳಲಾರದ್ರ್ ಬಿದ್ದಿದ್ದರು. ಹೆಂಗಸರು, ಮಕ್ಕಳು, ಮುದುಕರು, ಬುಟ್ಟಿಗಳಲ್ಲಿ ಹಳಸಿ ನಾರುತ್ತಿದ್ದ ಅವರ ಬುತ್ತಿಯ ಎಂಜಲು, ಸೆಕೆಗೆ ಬೆವರುತ್ತಿದ್ದ ಅವರ ವಾಸನೆ. ಮಕ್ಕಳ ಉಚ್ಚೆಯ ಕಮಟು- ಈ ಅಸಹ್ಯದ ನಡುವೆ ಯಾವುದೋ ಕೈ ಆರ್ತವಾಗಿ ಅವನನ್ನು ತಡವುತ್ತಿದ್ದಂತೆ ಭಾಸವಾಯಿತು. ಅದು ಹಿತವೆನ್ನಿಸತೊಡಗಿತು. ಯಾರ ಕೈ ಅದು ತಿಳಿಯದಂತೆ ಪಕ್ಕದಲ್ಲಿ ಒಂದು ಮುದುಕಿಯೂ, ಇನ್ನೊಬ್ಬ ಪ್ರಾಯದ ಹೆಂಗಸೂ ಮಲಗಿದ್ದರು.ಮುಖ ಕಾಣಿಸದ ಈ ಯಾರ ಕೈಗೋ ಅವನು ಉದ್ರೇಕಿತನಾಗುತ್ತ ಹೋದಂತೆ ಆ ಕೈಯೂ ಚುರುಕಾಗುತ್ತ ಅವನು ಆವರೆಗೆ ತಿಳಿಯದ ಇನ್ನೊಂದು ಶರೀರವನ್ನು ತನ್ನೊಳಗೆ ಸೃಷ್ಟಿಸುತ್ತ ಹೋಯಿತು. ಅದರ ಉದ್ರೇಕ ತಾಳಲಾರದೆ ಅವನು ಎದ್ದು ನಿಂತ. +ಆಗಿನ್ನೂ ಸೂರ್ಯ ಹುಟ್ಟುತ್ತಿದ್ದ. ರೈಲಿನ ಕಿಟಿಕಿಯಿಂದ ಹಠಾತ್ತನೆ ಕನ್ಣಿಗೆ ಎದುರಾದದ್ದು ಬಹು ದೂರದಲ್ಲಿ ಒಂದು ಬೋಳಾದ ಎತ್ತರದ ಬೆಟ್ಟ. ಅದರ ನೆತ್ತಿಯ ಮೇಲೆ ಕೆಂಪು ಉಂಡೆಯಾದ ಸೂರ್ಯ. ಒಂದು ಕ್ಷಣ ತಾನಿರುವುದೆಲ್ಲಿ ಎಂಬ ಪ್ರಜ್ಞೆ ತಿಮ್ಮಪ್ಪನಿಗೆ ಉಳಿದಿರಲಿಲ್ಲ. ಕಣ್ಣು ಕತ್ತಲೆ ಕಟ್ಟಿದಂತಾಯಿತು. +ತನ್ನ ಕಾಲನ್ನು ಸ್ದೇ ಕೈ ಸವರುತ್ತ ಕಚಗುಳಿಯಾಗುವಂತೆ ಮೃದುವಾಗಿ ಅಲ್ಲಿ ಇಲ್ಲಿ ಚೂಟುತ್ತಿತ್ತು. ತಿಮ್ಮಪ್ಪ ಕಾಲು ಕೊಸರಿಕೊಂಡ. ತಾಯಿಯನ್ನು ಹುಡುಕಿದ. ರೈಲಿನಲ್ಲಿ ಒಂದು ಮೂಲೆಯಲ್ಲಿ ಬೋಳುತಲೆಯ ಮೇಲೆ ಸೆರಗು ಹೊದ್ದು ತಾಯಿ ಜಪದ ಮಾಲೆ ಹಿಡಿದು ಜಪಿಸುತ್ತಿದ್ದಳು. ಇರುವಷ್ಟೆ ಮೂಲೆಯಲ್ಲಿ ತನ್ನ ಚಿಪ್ಪಿನೊಳಗೆ ಸಂಕ್ಷೇಪವಾಗಿ ಅಡಗಿದ ಆಮೆಯಂತಿದ್ದಳು. ತನ್ನಷ್ಟಕ್ಕೆ ತಾನು ಮಡಿಯಲ್ಲಿದ್ದು, ರೈಲಲ್ಲೂ ಶುಭ್ರಳೆಂದು ಕಂಡ ತಾಯಿ ಹತ್ತಿರ ಕರೆದಳು. ತನ್ನ ಜಾಗದಲ್ಲಿ ಕೂರಿಸಿಕೊಂಡು ತಿನ್ನಲು ಅವಲಕ್ಕಿ ಕೊಟ್ಟಳು. ಹಸಿವಾದರೂ ತಿನ್ನಬೇಕೆನ್ನಿಸಿರಲಿಲ್ಲ. ಗಲೀಜುಗೊಂಡಂತೆ ಅನ್ನಿಸಿತ್ತು. +-೨- +ದೇವರು ಪ್ರಾಯಶಃ ಇಲ್ಲವಾದ್ದರಿಂದ ಯಾವುದಕ್ಕೂ ಅರ್ಥವಿಲ್ಲ ಎಂಬ ಭಾವನೆ ತಿಮ್ಮಪ್ಪನನ್ನು ಶೂಲೆಯಂತೆ ಬಾಧಿಸುತ್ತದೆ ಎಂಬ ಅವನ ಬರವಣಿಗೆಯ ಅಭಿಮಾನಿಗಳು ತಿಳಿದಿದ್ದಾರೆ. ಅವನ ನಿರ್ಭಾವದ ಶೀತಲ ರಚನೆಗಳು ಹೀಗೆ ಅವರಿಗೆ ಧ್ವನಿಸುತ್ತವೆ. ಆದರೆ ಅವು ಓದುಗನನ್ನು ಓರೆ ನೋಟದಿಂದಲೂ ನೋಡದೆ ಶೂನ್ಯವನ್ನು ದಿಟ್ಟಿಸುತ್ತವೆ. +ತಿಮ್ಮಪ್ಪನಿಗೆ ತಂದೆಯನ್ನು ನೋಡಿದ ನೆನಪಿಲ್ಲ. ಜರತಾರಿ ಶಲ್ಯ, ರುಮಾಲು ಧರಿಸಿ ಮಾಸುತ್ತ ಹೋದ ನಡುಮನೆಯ ಚಿತ್ರಪಟವಾಗಿ ತಂದೆಯನ್ನು ಅವನು ಕಾಣುತ್ತ ಬೆಳೆದದ್ದು. ತಾನೇ ಬೇಯಿಸಿಕೊಂಡ ಗಂಜಿಯನ್ನು ದಿನಕ್ಕೊಂದು ಸಾರಿ ಊಟ ಮಾಡಿ, ಏಕಾದಶಿ ದಿನ ಉಗುಳೂ ನುಂಗದಂತೆ ಹಸಿದಿದ್ದು. ಸದಾ ಮಡಿಯಲ್ಲಿ ತನ್ನನ್ನು ಪೊರೆದು ಬೆಳೆಸಿದ ತಾಯಿಯಿಂದ ಅವನು ದೂರವಾಗುತ್ತ ಹೋದಂತೆ ಅವನ ಶಾಬ್ದಿಕ ರಚನೆಗಳು ಸ್ವಯಂ ಪ್ರತಿಭೆಯ ಕಠೋರ ಶಿಲ್ಪಗಳಾಗುತ್ತ ಹೋದದ್ದು. +ಬಾಲನಿದ್ದಾಗ ಎಲ್ಲರಂತೆ ತಾಯಿಯೂ ಒಂದು ಹೆಣ್ಣೆಂದು ಅವನಿಗೆ ಭಾಸವಾಗುತ್ತಿದ್ದು ಅವಳು ಮುಟ್ಟಾಗಿ ಹೊರಗೆ ಕೂತಾಗ. ಮುಟ್ಟು ನಿಂತ ಮೇಲೆ ಈ ಹತ್ತು ವರ್ಷಗಳೂ ತನ್ನ ಬೋಳು ತಲೆಯ ಕಠೋರ ವ್ರತದಲ್ಲಿ ದೇವರನ್ನು ಮಗನಿಗೆ ಆಕಾರಗೊಳಿಸಲು ಮೌನವಾಗಿ ಒಣಗುತ್ತ ಹೋದ ಅವಳ ಆರ್ತತೆಯನ್ನು ನಿರಾಕರಿಸಿ ತಿಮ್ಮಪ್ಪ ಬೆಳೆಯುತ್ತ ಹೋದ. ತಾಯಿಯ ಬಗ್ಗೆ ತನ್ನ ಬಾಲ್ಯದ ಅಕ್ಕರೆಯನ್ನೂ, ನಂತರದ ಉದ್ವಿಗ್ನತೆಯನ್ನೂ ಕ್ರಮೇಣ ಕಳಕೊಂಡಿದ್ದ. +ಅವಳ ವೈಧವ್ಯದ ಮಡಿವಂತಿಕೆಯ ಕಾಠಿಣ್ಯದಿಂದಾಗಿ ತಿಮ್ಮಪ್ಪನಿಗೆ ಆಕರ್ಷಿತರಾದ ಯಾವ ವಿದ್ಯಾವಂತ ಹೆಣ್ಣೂ ಅವಳ ಮನೆಯಲ್ಲಿರಲು ಒಪ್ಪುವುದಿಲ್ಲವೆಂದು ತಾಯಿಗೆ ಗೊತ್ತು. ತಿಮ್ಮಪ್ಪನಿಗೂ ಮದುವೆ ಬೇಕಿರಲಿಲ್ಲ. ಆದರೆ ಈ ಘೋರ ತಪಸ್ವಿನಿ ಪಿತ್ರಾರ್ಜಿತ ಒಡವೆಗಳನ್ನು ಒಂದು ದೊಡ್ಡ ಕಬ್ಬಿಣದ ಟ್ರಂಕಿನಲ್ಲಿಟ್ಟು, ಬೀಗ ಹಾಕಿ, ಒಂದು ಮುದಿ ಸರ್ಪದಂತೆ ಕಾವಲು ಕೂತಿದ್ದಳು. ಅದರ ಪಕ್ಕ ಕೂತೇ ಅವಳು ಜಪ ಮಾಡುವುದು. ಗೋಡೆಯ ಮೇಲೆ ರಾಯರ ಪಠ. ಮೂಲೆಯಲ್ಲಿ ಅವಳು ಮಲಗುವ ಚಾಪೆ, ಅದರ ಮೇಲೊಂದು ಕೃಷ್ಣಾಜಿನ. +ಅವಳು ಕಾವಲು ಕೂತ ಆಭರಣಗಳು ಬರಲಿರುವ ಸೊಸೆಗಾಗಿ. ಮಗನ ಜಾತಕ ನೋಡಿದ ಜೋಯಿಸರು ಇನ್ನು ಕೆಲವೇ ವರ್ಷಗಳಲ್ಲಿ ಕಂಟಕ ಪರಿಹಾರವಾಗಿ ಒಳ್ಳೆಯ ಯೋಗ ಪ್ರಾಪ್ತವಾಗುವುದೆಂದು ಭವಿಷ್ಯ ನುಡಿದಿದ್ದರು. ಅವರ ಪ್ರಕಾರ ಅವನಿಗಿದ್ದ ಕಂಟಕವೆಂದರೆ ಸನ್ಯಾಸದ ಬಯಕೆ. ಪ್ರತಿನಿತ್ಯ ಮೂಗಿನ ತನಕ ಕುಡಿದು, ಯಾವ ಸರ್ಕಾರಿ ಉದ್ಯೋಗಕ್ಕೂ ಆಸೆಪಡದೆ, ಯಾರಿಗೂ ಹಲ್ಲುಗಿಂಜದೆ, ವಾರಾಂಗನೆಯರ ಸಹವಾಸದಲ್ಲಿ, ಅಪೇಯ ಪಾನ ಅಭಕ್ಷ್ಯ ಭೋಜನದಲ್ಲಿ ತೊಡಗಿರುವ ತನ್ನ ಮಗ ಅವಧೂತಪಥದಲ್ಲಿ ದಿಕ್ಕು ತಪ್ಪಿರುವ ಕರುಣಾಜನಕ ಮಗುವಾಗಿ ತಾಯಿಗೆ ಕಂಡಿದ್ದ, ಅವನ ಶಾಬ್ದಿಕ ರಚನೆಗಳೆಲ್ಲ ವಿರೋಧಭಕ್ತಿಯ ಸ್ತೋತ್ರಗಳೆಂದೇ ಉಡುಪಿಯ ಸಂಸ್ಕೃತ ಪಂಡಿತರ ಈ ಮಗಳು ತಿಳಿದಿದ್ದಳು. +-೩- +ತಿಮ್ಮಪ್ಪನ ಕ್ರೂರ ಒಳನೋಟಗಳಿಂದ ಅವಮಾನಿತರಾಗದವರು ಇಲ್ಲವೆನ್ನಬಹುದು. ಸಜ್ಜನರೆಂದೂ, ಸದ್ಗೃಹಸ್ಥರೆಂದೂ, ಪ್ರಯೋಗಶೀಲರೆಂದೂ ನಾವೆಲ್ಲ ತಿಳಿಯುವ ಮಂದಿಯನ್ನು ಅವನು ನ್ರ್ದಯವಾಗಿ ಅನಾವರಣಗೊಳಿಸಿ, ಅವರು ಇರುವ ಸ್ವಾನುರಕ್ತಿಯ ನರಕವನ್ನು ಬಯಲುಗೊಳಿಸುತ್ತಿದ್ದ. ಈ ಅನಾವರಣ ಕ್ರಿಯೆಯಲ್ಲಿ ಅವನು ಮುದಗೊಳ್ಳುತ್ತಿರಲಿಲ್ಲ. ಅವನ ರಚನೆಗಳು ಅಪಸ್ವರವಿಲ್ಲದ ಕಂಚಿನ ಕುಂಭಗಳಂತಿದ್ದವು, ಉಜ್ಜಿದಾಗ ಮಾತ್ರ ಅವು ಹೊಳೆದು ಧ್ವನಿಸುತ್ತಿದ್ದವು. +ತಿಮ್ಮಪ್ಪ ಅನ್ಯರಿಗಾಗಿ ಸೃಷ್ಟಿಸಿದ ನರಕ ಇದೋ?-ಈ ಪ್ರಶ್ನೆ ಅವನ ಅಭಿಮಾನಿಗಳನ್ನು ಕಾಡಿದೆ. ಅವನ ಬರವಣೀಗೆಯನ್ನು ರೋಗಗ್ರಸ್ತ ಎಂದು ಟೀಕಿಸುವವರೂ ಇದ್ದಾರೆ. ತಮ್ಮ ಸಮಾಧಾನಕ್ಕಾಗಿ ಅವರು ಹೇಳಿಕೊಳ್ಳುತ್ತಾರೆ: ಈ ತಿಮ್ಮಪ್ಪನ ಆದಾಯ ನೋಡಿ, ಏನೂ ಮಾಡದೆ ಅವನಿಗೆ ತನ್ನ ತಾಯಿಯ ಪಿತ್ರಾರ್ಜಿತ ಆಸ್ತಿಯಿಂದ ತಿಂಗಳಿಗೆ ಹತ್ತುಸಾವಿರ ರೂಪಾಯಿಯಾದರೂ ಸಿಗುತ್ತದೆ. ಅವಳ ತಾತ ದಿವಾನರಾಗಿ ಗಂಟು ಮಾಡಿ ಇಟ್ಟ ಆಸ್ತಿ ಇದು. ಹೊಟ್ಟೆ ಪಾಡಿಗೆ ತಿಮ್ಮಪ್ಪ ದುಡಿಯಬೇಕಾಗಿ ಬಂದಿದ್ದರೆ ಅವನ ದುಃಖಕ್ಕೂ ಅವನ ನರಕಕ್ಕೂ ಅವನ ಕ್ರೂರ ಒಳನೋಟಕ್ಕೂ ಚಾರಿತ್ರಿಕ ರಿಯಾಲಿಟಿ ಇರುತ್ತಿತ್ತು. +ಅವನನ್ನು ಮೆಚ್ಚುವವರಿಗೆ ಇನ್ನೇನೋ ಧ್ವನಿಸುತ್ತದೆ. ಅವನ ಭಾಷಾ ವಿನ್ಯಾಸಗಳ ಕರಾಳ ಗಹ್ವರದಲ್ಲಿ ಕೆಲವೊಮ್ಮೆ ಹಠಾತ್ತನೆ ದಿವ್ಯ ಬೆಳಕಿನ ಸುದ್ದಿ ಮಿನುಗುತ್ತದೆ. ಎಮ್ಮೆಕರು ಬಾಲವೆತ್ತಿ ನಿರುದ್ದಿಶ್ಯವಾಗಿ ಮುಂಜಾನೆ ಕುಣಿಯುತ್ತದೆ. ವಿಕೃತ ಮೋರೆಗಳು ಬುದ್ಧನಂತೆ ಮುಗುಳ್ನಗುತ್ತವೆ. ಹೂವುಗಳು ಕನಸಿನಲ್ಲಿ ತೋರುವಂತೆ ಇನ್ನಷ್ಟು ಅಗಲವಾಗಿರುತ್ತವೆ. +-೪- +ಅವನಿಗೆ ಮನೆಯಲ್ಲಿ ಅಡಿಗೆ ಮಾಡಿ ಬಡಿಸಲು ಒಂದು ಹುಡುಗಿಯಿದೆ. ಸಿಂಬಿ ಸುತ್ತಿ ಮೂಲೆಯಲ್ಲಿ ತನ್ನ ಪೆಟ್ಟಿಗೆಯ ಪಕ್ಕ ಜಪಿಸುತ್ತ ಕೂತಿರುವ ತಾಯಿ ತನ್ನ ಕೈಯಿಂದಲೇ ಬೇಯಿಸಿಕೊಂಡ ಗಂಜಿಯನ್ನು ತಿನ್ನುವುದು. ಅದಕ್ಕಾಗಿ ಅವಳಿಗೆ ಬೇರೆಯದೇ ಆದ ಸೌದೆಯ ಒಲೆಯಿದೆ. ಅವಳು ಬಳಸುವ ನೀರಿಗಾಗಿ ಹಿತ್ತಿಲಿನಲ್ಲಿ ಬಾವಿಯಿದೆ. ಆದರೆ ತಿಮ್ಮಪ್ಪನಿಗಾಗಿ ರೆಫ್ರಿಜಿರೇಟರ್, ಗ್ಯಾಸ್ ಒಲೆ ಇತ್ಯಾದಿ ಸಲಕರಣೆಗಳು ಇವೆ. ತಮ್ಮ ಬಂಗಲೆಯಿದ್ದ ದೊಡ್ಡ ಕಾಂಪೌಂಡಿನ ಮೂಲೆಯಲ್ಲಿದ್ದ ಒಂದು ರೂಮನ್ನು ಅವನಿಗೆ ಅಡಿಗೆ ಮಾಡುವ ಈ ಹುಡುಗಿಗೂ ಅವಳ ಮುದಿ ತಾಯಿಗೂ ಕೊಡಲಾಗಿದೆ. ಇಬ್ಬರಿಗೂ ಊತ, ಬತ್ಟೆ, ವಸತಿಗಳನ್ನು ತಾಯಿ ಒದಗಿಸುತ್ತಾಳೆ. +ಕಮಲ ಎಂಬ ಈ ಹುಡುಗಿ ಎಸ್.ಎಸ್.ಎಲ್,ಸಿ. ಓದಿದ್ದಾಳೆ. ತಿಮ್ಮಪ್ಪ ಬರೆದದ್ದನ್ನೆಲ್ಲ ಇವಳೇ ಟೈಪ್ ಮಾಡುವುದು. ಅವನ ಪುಸ್ತಕಗಳನ್ನೆಲ್ಲ ನೀಟಾಗಿ ಧೂಳು ಒರೆಸಿ ಜೋಡಿಸುವುದು. ಅವನ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು ಇಸ್ತ್ರಿ ಮಾಡುವುದು. ಕಮಲ ಅವನನ್ನು ಆರಾಧಿಸುತ್ತಾಳೆ. ಅವನು ಕುಡಿದು ವಾಂತಿ ಮಾಡಿದರೆ ಅದನ್ನವಳು ಹೇಸಿಗೆ ಪಡದೆ ಬಾಚುತ್ತಾಳೆ. ಇರುವ ಎರಡು ಸೀರೆಗಳನ್ನು ಹರಿದದ್ದು ಕಾಣಿಸದಂತೆ ಉಟ್ಟುಕೊಳ್ಳುತ್ತಾಳೆ. ಸದಾ ಶುಭ್ರವಾಗಿರುತ್ತಾಳೆ. ತೆಳುವಾಗಿ ತೆಂಗಿನ ಎಣ್ಣೆ ಸವರಿ, ತನ್ನ ಕಪ್ಪು ಕೂದಲನ್ನು ಸಡಿಲವಾಗಿ ಹೆಣೆದು ಬಾಚಿಕೊಂಡಿರುತ್ತಾಳೆ. ಯಾವಾಗಲೂ ಒಂದು ಸಣ್ಣ ಮಲ್ಲಿಗೆ ದಂಡೆಯನ್ನೊ, ಸಂಪಿಗೆಯನ್ನೊ ಮುಡಿದುಕೊಂಡು ತಮ್ಮ ದೊಡ್ಡ ಕಾಂಪೌಂಡಿನಲ್ಲಿ ಯಾವುಯಾವುದು ಹೂ ಬಿಡುತ್ತಿದೆ ಎಂಬುದನ್ನು ಸುವಾಸಿನಿಯಾಗಿ ಸೂಚಿಸುತ್ತಾಳೆ. ತುಂಬು ತುಟಿ, ತುಸು ದಪ್ಪ ಮೂಗು, ತುಂಬಿದ ಕೆನ್ನೆ ಮತ್ತು ಜಿಂಕೆಯ ಕಣ್ಣುಗಳು ಎಣ್ಣೆಗೆಂಪು ಬಣ್ಣದ ಈ ಹುಡುಗಿ ದೇಹದಲ್ಲಿ ಎಷ್ಟು ಚುರುಕೋ, ಬುದ್ಧಿಯಲ್ಲಿ ಅಷ್ಟು ಮಂದವೆಂದು ತಿಮ್ಮಪ್ಪ ಅಂದುಕೊಳ್ಳುತ್ತಾನೆ. ಅವನ ಒಳನೋಟದ ಕ್ರೂರ ಅನಾವರಣಕ್ಕೆ ಸಿಗುವ ವಸ್ತುವಲ್ಲ ಅದು. ಆದರೆ ತಾಯಿಯನ್ನು ದೂರವಿಟ್ಟಂತೆ ಇವಳ ಆರಾಧನೆಯನ್ನೂ ತಿರಸ್ಕರಿಸುವುದು ತನ್ನ ಸ್ಥಿರತೆಗೆ ಅವಶ್ಯಕವೆಂದು ಅವನು ತಿಳಿದಿದ್ದಾನೆ. ಈ ಸ್ಥಿರತೆಯಲ್ಲಿ ಮಾತ್ರ ಅವನು ತೋರಿಕೆಯ ಭಕ್ತಿ ತರುವ ನೆಮ್ಮದಿಯನ್ನೂ, ತೋರಿಕೆಯ ಪ್ರೇಮದ ಕಪಟವನ್ನೂ, ಈ ಕಪಟ ಕಟ್ಟಿಕೊಡುವ ಸಾಂಸಾರಿಕ ಭದ್ರತೆಯನ್ನೂ ತಿರಸ್ಕರಿಸಿ ಸ್ವಾನುರಕ್ತಿಯ ನರಕದಲ್ಲಿ ಇರುವ ಮನುಷ್ಯನ ನಿಜಸ್ಥಿತಿ ಕಂಡಾನು. +ಆದರೂ ಒಂದು ದಿನ ಕುತೂಹಲ ಕೆರಳಿತು. ಸೂಳೆಯರ ಸಹವಾಸದಲ್ಲಿ ಜಡಗೊಳಿಸಿಕೊಂಡಿದ್ದ ಕಾಮ ಹೀಗೆ ಕೆರಳಲು ಕಾರಣ, ತಾನು ರಾತ್ರೆಯ ಆರಾಧನೆ ಮುಗಿದ ಮೇಲೆ ಬರುವುದೆಂದು ಅವನ ಕಿವಿ ಮೇಲೆ ಬೀಳುವಂತೆ ಹೇಳಿ ತಾಯಿ ರಾಯರ ವೃಂದಾವನಕ್ಕೆ ಹೋದದ್ದು. ತಿಮ್ಮಪ್ಪ ಬರೆಯುತ್ತ ಕೂತವನು ಸಿಗರೇಟು ಹಚ್ಹ್ಚಿದ್ದ. ಪುಸ್ತಕದ ಧೂಳು ಒರೆಸುತ್ತ ತನ್ನ ಕೋಣೆಯಲ್ಲಿ ನಿಂತ ಕಮಲಳನ್ನು ಗಮನಿಸಿದ. ಎದ್ದು ಹೋಗಿ ಅವಳ ಎದುರು ನಿಂತು ತನ್ನನ್ನು ಕೂಡುವಂತೆ ನಿರ್ಭಾವದಿಂದ ಕೇಳಿದ. ಅವಳು ತಲೆತಗ್ಗಿಸಿ ಸಮ್ಮತಿಸಿದಲು. ಬಟ್ಟೆಯನ್ನು ಬಿಚ್ಚಹೋದಾಗ ನಾಚಿದಲು. ತನ್ನ ನಾಚಿಕೆ ಅವನಿಗೆ ಅಡ್ಡಿಯಾದೀತೆಂದು ಕಷ್ಟಪಟ್ಟಳು. ಮಲಗಿದಾಗ ಸುಖಪಟ್ಟವಳಂತೆಯೂ ಕಂಡಳು. ಆನಂತರ ದುಡ್ಡು ಕೊಡಲು ಹೋದಾಗ ಭಯದಲ್ಲಿ ಬಿಳುಚಿ ಅಳತೊಡಗಿದಳು. +ಇದನ್ನು ತಿಮ್ಮಪ್ಪ ನಿರೀಕ್ಷಿಸಿರಲಿಲ್ಲ. ಅತ್ಯಂತ ಹೇಸಿಗೆಯಾಗಿ ಮೈನವಿರೇಳಿತು. ಭಯವಾಯಿತು. ನಿಷ್ಠುರವಾಗಿ ಅವನು ಬೆನ್ನು ಹತ್ತಿದ ಸತ್ಯದಲ್ಲಿ ಈಗ ತಾನು ಕಂಡದ್ದಕ್ಕೆ ಜಾಗವಿರಲಿಲ್ಲ. ಈ ಘಟನೆಯ ನಂತರ ಕಮಲಳೂ ತನ್ನ ವ್ರತಶೀಲ ತಾಯಿಯಂತೆ ದೇವರ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಕಾದಿರುವ ಜಾತಕ ಪಕ್ಷಿಯಂತೆ ತೋರತೊಡಗಿದಳು. ಸದಾ ಗರ್ಭಗೊಳ್ಳುತ್ತ, ಸದಾ ಹೆರುತ್ತ, ಸ್ವಪ್ರೇಮದಲ್ಲಿ ಗಿಜಿಗುಟ್ಟುವ ಜೀವಜಾಲದಲ್ಲಿ ತಾನು ಮೋಹಿತನಾಗುವ ಸಾಧ್ಯತೆ ಕಂಡು ತಿಮ್ಮಪ್ಪ ಗೊಂದಲಗೊಂಡ. +ದೇಹ ಹಸಿದಾಗ ತಾನು ಹೇಸುತ್ತಲೇ ತೃಪ್ತಿಪಡಬೇಕಾದ ಗಲ್ಲಿಗೆ ನಿತ್ಯ ಕುಡಿದು, ತಿಂದು ಹೋಗತೊಡಗಿದ. ಕಮಲ ತನ್ನನ್ನು ಆಕರ್ಷಿಸಿದಂತೆ ತನ್ನ ತೆವಲು ತೀಟೆಗಳನ್ನು ಕಳೆದುಕೊಂಡು ಸಪ್ಪೆಯಾಗಿ ಅವನು ಮನೆಗೆ ಬರುವುದು ಶುರುವಾಗಿ ಈಗ ಎರದು ತಿಂಗಳುಗಳ ಮೇಲಾಗಿದೆ. +-೫- +ಇವತ್ತು ಕೂಡ ಏನೂ ಆಗದ ಹಾಗೆ ಕತ್ತಲಿನಲ್ಲಿ ಯಾವುದೋ ಹೆಣ್ಣಿನ ಜೊತೆ ಮಲಗಿಯಾದ ಮೇಲೆ ಒಂದು ಗ್ಲಾಸು ಸಾರಾಯಿಯನ್ನು ಗಟಗಟನೆ ಕುಡಿದು ಸಿಗರೇಟು ಹಚ್ಚಿ ಕಾರಲ್ಲಿ ಕೂತು ಯೋಚಿಸಿದ. ಯಾಕೆ ಹೀಗಿರುವುದು? ತನ್ನನ್ನು ಬಿಟ್ಟು ತನ್ನ ಬರವಣಿಗೆ ನಿಲ್ಲುವುದು, ಆದ್ದರಿಂದ ತನಗಿಂತ ತನ್ನ ಕೃತಿ ದೊಡ್ಡದು ಎಂದು ತಿಳಿದಿರುವುದರಿಂದ ತಾನೆ? ಆದರೆ ಈ ಕೃತಿಗಳೂ ತಮ್ಮ ಪ್ರತಿಭೆ ತೋರುವುದು ಆತ್ಮದ್ವೇಷಿಗಳಿಗೆ ಮಾತ್ರ. ಅವರೂ ಆತ್ಮರತರೇ. ತನ್ನನ್ನೇ ತಾನು ಛೇಡಿಸಿಕೊಡು ಉತ್ಪನ್ನವಾಗುವ ಈ ದ್ರವ್ಯದ ಬಗ್ಗೆಯೂ ಯಾವತ್ತಿಗಿಂತ ಇವತ್ತು ಹೆಚ್ಚು ಹೇಸಿಗೆಯಾಯಿತು. ತನ್ನ ಕರ್ತವ್ಯದಲ್ಲಿ ತತ್ಪರಳಾದ ಸೂಳೆ, ದೇವರಿಗಾಗಿ ಒಣಗುತ್ತಿರುವ ತನ್ನ ತಾಯಿಯಂತೆಯೇ ಹೆಚ್ಚು ಶುದ್ಧವಾದ ರೀತಿಯಲ್ಲಿ ಇರುವವಳು ಎನ್ನಿಸಿತು. +ಕಾರು ನಿಲ್ಲಿಸಿಕೊಂಡಲ್ಲಿ ಒಂದು ಕಸದ ಬುಟ್ಟಿಯಿತ್ತು. ಸೂಳೆಯರು ಒಡೆದ ಬಳೆಗಳು, ಮುಟ್ಟಿನ ಬಟ್ಟೆ, ಸೀಳಿದ ಪ್ಲಾಸ್ಟಿಕ್ ವಸ್ತುಗಳು ಮತ್ತು ಉಪಯೋಗಿಸಿದ ಕಾಂಡೋಮ್‌ಗಳನ್ನೆಲ್ಲ ಎಸೆಯುವ ಮುನಿಸಿಪಾಲಿಟಿ ತೊಟ್ಟಿ ಅದು. ಅದರಲ್ಲೂ ಉಪಯುಕ್ತವಾದ್ದು ಇರಬಹುದೆಂದು ಭರವಸೆಯಿಂದ ತಲೆಕೆದರಿದ ಭಿಕ್ಷುಕಿಯರು ಬೆಳಿಗ್ಗೆ ತೊಟ್ಟಿಯಲ್ಲಿ ಕೈ ಹಾಕಿ ಹುಡುಕುತ್ತಾರೆ. ತಿಮ್ಮಪ್ಪನಿಗೆ ವಾಂತಿ ಬಂದಂತಾಯಿತು. ಕಾಮುಕತೆ ಮತ್ತು ಭಕ್ತಿ ತನ್ನನ್ನು ಮೈ ಮರೆಯುವಂತೆ ಮಾಡಿ, ಜೀವನದ ವಿಲಾಸದಲ್ಲಿ ತನ್ಮಯಗೊಳಿಸೀತೆಂದು ಹೆದರಿ, ತಾನು ಹೀಗೆ ಒಡೆದು ನಿಂತದ್ದು. ಒಡೆದು ನಿಂತೇ ಬರೆದದ್ದು. +ಕಾರಿನ ಸೀಟಿನ ಮೇಲೆ ತನ್ನ ಈಚಿನ ರಚನೆಗಳನ್ನು ಒಳಗೊಂಡ ನೋಟ್ ಬುಕ್ ಇತ್ತು. ತನ್ನನ್ನು ತೀವ್ರವಾಗಿ ಬಳಲಿಸಿದ ರಚನೆಗಳು ಅವು. ಯಾವ ಎಗ್ಗಿಲ್ಲದೆ ತನ್ನ ಎಲ್ಲ ಭಾವನೆಗಳಿಗೂ ಪೂರ್ಣಾವಕಾಶ ಕೊಟ್ಟು, ಉತ್ಕಟತೆಯನ್ನು ಅನುಭವಿಸುತ್ತಲೇ ಹೇಸುತ್ತ ತನ್ನಿಂದ ಹುಟ್ಟಿಸಿಕೊಂಡವು. ಮನುಷ್ಯನ ಜರತ್ಕಾರು ಸ್ಥಿತಿಯನ್ನು ಶೋಧಿಸುವ ತನ್ನ ಈಚಿನ ರಚನೆಗಳ ನೋಟ್ ಬುಕ್ಕನ್ನು ತೊಟ್ಟಿಗೆ ಎಸೆದುಬಿಟ್ಟ. ಅವುಗಳಲ್ಲಿದ್ದ ಛಲದ ಶೈತ್ಯ ಸೋಗಿನದು ಆಗಿರದಿದ್ದರೆ, ಹೀಗೆ ತೊಟ್ಟಿಯಲ್ಲಿ ಕಸವಾಗಿ ಕಣ್ಮರೆಯಾಗುವುದೇ ಆ ರಚನೆಗಳ ನೈಜ ದೆಸೆಯಾಗಿ ಕಂಡಿತು. ಹುಟ್ಟಿಸುವ ಹಂಗಿಲ್ಲದೆ, ಸುಮ್ಮನಿರುವ ವಜ್ರದಂತೆ ಹೊಳೆಯುತ್ತ ತನ್ನ ಪಾಡಿಗೆ ತಾನು ಇದ್ದುಬಿಡಬೇಕೆಂಬ ಆಸೆಯಾಯಿತು. +ಹಗುರೆನ್ನಿಸಿ ಮನೆಗೆ ಡ್ರೈವ್ ಮಾಡಿದ. +-೬- +ಮನೆಯ ದೊಡ್ಡ ಕಾಂಪೌಂಡಿನ ಒಳಗೆ ತಾಯಿ ಆರೈಕೆ ಮಾಡಿ ಬೆಳೆಸಿದ ಸಂಪಿಗೆ, ಸಂಜೆಮಲ್ಲಿಗೆ, ಪಾರಿಜಾತ, ದಾಸವಾಳ, ಬಿಲ್ವ, ತುಂಬೆ, ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ರತ್ನಗಂಧಿ, ನಂಜಬಟ್ಟಲು ಇದ್ದವು. ಈ ಎಲ್ಲವೂ ಅವಳು ನಿತ್ಯ ಪೂಜೆ ಮಾಡುವ ಮನೆ ದೇವರಿಗಾಗಿ, ಮಿಕ್ಕದ್ದು ಕಮಲಳ ಹೆರಳಿಗೆ, ರಾಯರ ವೃಂದಾವನಕ್ಕೆ. ಉಳಿದು ಇಷ್ಟವಾಗಿ ಹಂಚಿದ್ದು ನೆರೆಹೊರೆಯವರ ದೇವರಪೂಜೆಗೆ. ನೂರು ವರ್ಷಗಳಿಂದ ಲಡ್ಡಾಗುತ್ತ ಹೋದ ಸುಣ್ಣದ ಗಾರೆಯ ದಿವಾನರ ಬಂಗಲೆಯ ಅಕ್ಕಪಕ್ಕದಲ್ಲೆಲ್ಲ ತಾಯಿ ಬಾಡಿಗೆಗೆಂದು ಅಡ್ಡಾದಿಡ್ಡಿಯಾಗಿ ಕಟ್ಟಿಸಿದ ಕಿಷ್ಕಿಂಧದಂತಹ ಗೂಡಿನ ಮನೆಗಳು. ಮನೆಗಳಲ್ಲಿ ಇರುವವರ ಸಂಸಾರ ತಾಪತ್ರಯಗಳು, ಪರದಾಟಗಳು, ಕಾಮುಕ ಚೇಷ್ಟೆಗಳು, ಸಣ್ಣತನಗಳು-ಅಂಥವುಗಳಿಂದೆಲ್ಲ ದೂರವಿರುವ ಘೋರವಾದ ಮಡಿಯ ತಾಯಿಯ ಮುಖೇನ ಚಿಕ್ಕವನಿದ್ದಾಗ ತನ್ನ ಕಿವಿಗೆ ಬಿದ್ದು, ತನ್ನ ಬರವಣಿಗೆಯ ದ್ರವ್ಯವಾದವು. ಹಾಗೆಯೇ ಇಲ್ಲಿ ಹೆಣಗುತ್ತ ಗೊಣಗುತ್ತ ಇರುವವರು ತೆರುವ ಬಾಡಿಗೆಯೇ ತನ್ನನ್ನು ಈತನಕ ಆರಾಮಿನಲ್ಲಿ ಸಾಕಿರುವ ಸಂಪತ್ತೂ ಆಗಿತ್ತು. ಈಗ ತಿಮ್ಮಪ್ಪನಿಗೆ ಇಲ್ಲಿ ಮರಗಳು ಮತ್ತು ಅವಕ್ಕೆ ಬರುವ ಹಕ್ಕಿಗಳು ಬಿಟ್ಟರೆ ಬೇರೆ ಯಾವ ಆಸಕ್ತಿಯೂ ಉಳಿದಿರಲಿಲ್ಲ. ಕಾಂಪೌಂಡಿನ ವಠಾರದ ಪರಿಚಿತ ಜೋಲು ಮೋರೆಗಳಂತೆ ತನ್ನ ಕೃತಿಗಳೂ ನಿಸ್ತೇಜವಾಗತೊಡಗಿದ್ದವು. +ರಾತ್ರೆ ಹನ್ನೆರಡರ ಮೇಲಾದರೂ ತಾಯಿ ಮಲಗುತ್ತಿದ್ದ ಕೋಣೆಯಲ್ಲಿ ದೀಪ ಉರಿಯುತ್ತಿರುವುದು ಕಂಡು ತಿಮ್ಮಪ್ಪ ಅನುಮಾನಿಸುತ್ತ ಬಾಗಿಲಿನ ಬೀಗ ತೆರೆದು ಒಳಗೆ ಹೋದ. ಅಡಿಗೆಯ ಹುಡುಗಿ ಕಮಲ ತಾಯಿಯ ಕೋಣೆಯಿಂದ ಹೊರಗೆ ಬಂದು ಕಣ್ಣುನೀರು ತುಂಬಿ ನಿಂತಳು. ಅವಳು ಕಂಗಾಲಾಗಿದ್ದಂತೆ ಕಂಡಿತು. ತನ್ನ ಬಾಯಿಯಿಂದ ಹೆಂಡ ಮತ್ತು ಬೆಳ್ಳುಳ್ಳಿಯ ವಾಸನೆ ಬರುತ್ತಿರಬಹುದೆಂದು ತಿಮ್ಮಪ್ಪ ದೂರ ನಿಂತು ಒಂದು ಸಿಗರೇಟು ಹಚ್ಚಿ, “ಏನು” ಅಂದ. +“ಅಮ್ಮನ ಮಾತು ನಿಂತು ಹೋಗಿದೆ. ನಿಮಗೆ ಕಾದಿದ್ದಾರೆ” ಎಂದು ಕಮಲ ತನ್ನ ಕೈಯಲ್ಲಿದ್ದ ತಾಮ್ರದ ಗಿಂಡಿಯನ್ನು ಒಡ್ಡಿದಳು. ಸಾಯುವಾಗ ಕುಡಿಯಲೆಂದು ಕಾಶಿಯಿಂದ ತಂದ ಗಂಗೆ ಅದರಲ್ಲಿತ್ತು. ಇವತ್ತು ಬೆಳಿಗ್ಗೆಯೂ ತಾಯಿ ಅದನ್ನು ಪೂಜಿಸಿದ್ದಾಳೆ ಎಂಬುದು ಗಂಧದಲ್ಲಿ ಅಂಟಿದ ಅದರ ಮೇಲಿನ ತುಳಸೀದಳದಿಂದ ತಿಳಿಯುವಂತಿತ್ತು. +ತಿಮ್ಮಪ್ಪ ಸಿಗರೇಟನ್ನು ನೆಲಕ್ಕೆಸೆದು ಉಜ್ಜಿದ. ಅವಳು ಒಡ್ಡಿದ ಗಿಂಡಿಯನ್ನು ಮುಟ್ಟಲಿಲ್ಲ. ಸೀದ ಬಚ್ಚಲಿಗೆ ಹೋಗಿ ತಾಯಿ ಉಪಯೋಗಿಸುತ್ತಿದ್ದ ಉಮಿಕರಿಯಿಂದ ಹಲ್ಲು ಉಜ್ಜಿದ. ಅವನು ಬಾಲನಿದ್ದಾಗ ತಾಯಿಯೇ ಕರ್ಪೂರ ಬೆರೆಸಿದ ಉಮಿಕರಿಯಿಂದ ಅವನ ಹಲ್ಲನ್ನು ಉಜ್ಜುತ್ತಿದ್ದಳು. ಕಂಕಳು, ಕಿವಿಯ ಸಂದಿ, ತೊಡೆಯ ಸಂದಿ ಎಲ್ಲೂ ಬಿಡದಂತೆ ಹೆಸರಿನ ಹಿಟ್ಟನ್ನು ಬೆರೆಸಿದ ಸೀಗೆಯಿಂದ ಉಜ್ಜಿ ತೊಳೆದು ತನ್ನನ್ನು ಶುದ್ಧ ಮಾಡುತ್ತಿದ್ದಳು. +ಹೊಳೆಯುವ ತಾಮ್ರದ ಚೊಂಬಿನಿಂದ ಹಂಡೆಯಲ್ಲಿದ್ದ ತಣ್ಣೀರು ಸುರಿದುಕೊಂಡು ಚಳಿಯಲ್ಲಿ ನಡುಗುತ್ತ ಮೈಯನ್ನು ಒರೆಸಿಕೊಂಡ. ರೂಮಿಗೆ ಹೋಗಿ ತನ್ನ ಬಾಲ್ಯಕಾಲದ ಕೆಂಪುರೇಷ್ಮೆಯ ಪಟ್ಟೆಯುಟ್ಟು, ಮಡಿಯಲ್ಲಿ ತಾಯಿಯ ಕೋಣೆಗೆ ಬಂದ. ಉಪನಯನವಾದ ಮೇಲೆ ಕೆಲವು ವರ್ಷಗಳ ಕಾಲ ಅಂಗಿ ತೆಗೆದು ಇದನ್ನು ಉಟ್ಟುಕೊಳ್ಳದ ಹೊರತು ಅವನಿಗೆ ತಾಯಿ ಊಟ ಬಡಿಸುತ್ತಿರಲಿಲ್ಲ. ಈಗ ಪಟ್ಟೆ ಮಡಿ ಹರಿದಿತ್ತು. ಮಾಸಿತ್ತು. ಕಮಲಳ ಕೈಯಿಂದ ಗಿಂಡಿ ತೆಗೆದುಕೊಂಡು ತಾಯಿಯ ಬಳಿ ಮಂಡಿಯೂರಿ ಕೂತ. ಸಾವಿನ ಸೂಚನೆ ತಿಳಿದ ಕೂಡಲೇ ತಾಯಿ ರಾಯರ ಪಟದ ಕೆಳಗೆ ಬರಿ ನೆಲದ ಮೇಲೆ ಮಲಗಿರಬೇಕು, ಅಥವಾ ಕಮಲ ಮಲಗಿಸಿರಬೇಕು. ಅವಳು ಅಷ್ಟು ಕೃಶಳೂ ಆಗಿದ್ದಳು. +ಗರಗಸದಿಂದ ಮರದ ದಿಮ್ಮಿಯನ್ನು ಕೊಯ್ದಂತೆ ತಾಯಿ ಉಸಿರಾಡುತ್ತಿದ್ದಳು. ದೇವರನ್ನು ತನಗೆ ಸ್ಥಾಪಿಸುವಂತೆ ಯೌವ್ವನವನ್ನೆಲ್ಲ ಒಣಗಿಸಿಕೊಂಡು. ವಿರೂಪಿಯಾಗಿ, ಇಳಿವಯಸ್ಸಿನಲ್ಲಿ ಉದುರಲೆಂದು ಕಾದಿದ್ದ ಅವಳಲ್ಲೂ ಸಾವಿಗೆ ನಾಶಮಾಡಲು ಅಷ್ಟೊಂದು ಗಟ್ಟಿಯಾದ ಪ್ರಾಣಶಕ್ತಿ ಇರಬಹುದೆಂದು ಅವನು ಊಹಿಸಿರಲಿಲ್ಲ. ತನ್ನನ್ನು ನೋಡಲೆಂದು ಆಯಾಸದಲ್ಲಿ ಜೀವಧಾರಣೆ ಮಾಡಿ ಕಾದಿರುವಂತೆ ಕಂಡಳು. ಎಷ್ಟೋ ವರ್ಷಗಳಿಂದ ‘ಅಮ್ಮ’ ಎಂದು ಮಾತು ಶುರುಮಾಡದವನು ‘ಅಮ್ಮ’ ಎಂದ. ಅವಳು ಕಣ್ಣು ಅರೆತೆರೆದು ಪ್ರಯಾಸದಲ್ಲಿ ಕೈಯೊಡ್ಡಿದಳು. ತಾನು ತಾಯಿಯ ಕೈ ಹಿಡಿದುದನ್ನು ಕಮಲ ನೋಡಿದಳೆಂದು ಮುಜುಗರವಾಯಿತು. ಗಿಂಡಿಯನ್ನು ಅವಳ ಬಾಯಿಗೆ ಒಯ್ದ. ಅಮ್ಮ ತನ್ನ ಇನ್ನೊಂದು ಕೈಯನ್ನು ಒಡ್ಡಿ ಕಮಲಳ ಕೈ ಹಿಡಿದಳು. ತಿಮ್ಮಪ್ಪ ಕಮಲಳ ಕೈ ಹಿಡಿಯುವಂತೆ ಕಣ್ಣಿನಲ್ಲೇ ಬೇಡಿದಳು. ಈ ಪ್ರದರ್ಶನಕ್ಕೆ ಅಂಜುತ್ತ, ಎಡಕೈಯಲ್ಲಿ ಕಮಲಳ ಕೈಹಿಡಿದು, ಬಲಗೈಯಿಂದ ಗಿಂಡಿಯನ್ನು ತಾಯಿಯ ಬಾಯಿಗೆ ನೀರು ಸುರಿಯುವಂತೆ ಓರೆ ಮಾಡಿದ. ತಾಯಿಯ ಗಂಟಲು ಮೂರು ಬಾರಿ ಚಲಿಸಿ ಗಂಗೆಯನ್ನು ಕುಡಿಯಿತು. ತಾಯಿಯ ಪ್ರಾಣ ಹಾರಿದ ಮೇಲೆ ಕಮಲ ಅವಳ ಕಣ್ಣನ್ನು ಮುಚ್ಚಿದಳು. ಕಾಲನ್ನು ಮಡಿಸಿದಳು. ತೆಂಗಿನ ಹೋಳಿನಲ್ಲಿ ದೀಪವನ್ನು ಕಾಲಿನ ಬುಡದಲ್ಲೂ ತಲೆಯ ಮೇಲೂ ಹಚ್ಚಿಟ್ಟಳು. ಕಾಲು ಬೆರಳಿಗೆ ಎಣ್ಣೆ ಹಚ್ಚಿ ತಿಮ್ಮಪ್ಪನಿಗೂ ಹಚ್ಚುವಂತೆ ಕಣ್ಣಿನಲ್ಲೇ ಬೇಡಿದಳು. ಅಕ್ಕಿಕಾಳನ್ನು ಬಾಯಿಗೆ ಹಾಕಿ ತಿಮ್ಮಪ್ಪನಿಗೂ ಹಾಕುವಂತೆ ಬೇಡಿದಳು. ಈ ವಿಧ್ಯುಕ್ತ ಕ್ರಿಯೆಗಳಲ್ಲಿ ಕಮಲ ಮೌನವಾಗಿ ನುಂಗಿಕೊಳ್ಳುತ್ತಿದ್ದ ಉಮ್ಮಳದಿಂದ ತಾನೂ ಅತ್ತುಬಿಡಬಹುದೆಂದು ಮುಜಗರವಾಗಿ ತಿಮ್ಮಪ್ಪ ರೂಮಿಗೆ ಹೋಗಿ ಸಿಗರೇಟು ಹಚ್ಚಿದ. +ಕಮಲ ಈಗ ಅಳಲು ಪ್ರಾರಂಭಿಸಿದಳು. ತನ್ನ ಮುದಿ ತಾಯಿಗೆ ಸುದ್ದಿ ಮುಟ್ಟುವಷ್ಟು ಗಟ್ಟಿಯಾಗಿ ಅತ್ತಳು. ಧಾವಿಸಿ ಬಂದ ಅವಳ ತಾಯಿ ನೆಲಕ್ಕೆ ಕೈ ಬಡಿಯುತ್ತ ನೆರೆಹೊರೆಗೆ ಕೇಳುವಷ್ಟು ಗಟ್ಟಿಯಾಗಿ ಅತ್ತಳು ನೆರೆಹೊರೆ ಧಾವಿಸಿ ಬಂದು ಬೀದಿಯ ಜನ ಒಟ್ಟಾಗುವಂತೆ ಅತ್ತರು. ತಾಯಿಯನ್ನು ಕೊಂಡಾಡಿದರು. ಅವಳ ಧಾರ್ಮಿಕತೆ, ಅವಳ ನೈಷ್ಠಿಕ ಮಡಿ, ಅವಳ ಸಂಸ್ಕೃತ ಜ್ಞಾನ, ಅವಳ ಪರೋಪಕಾರಿ ಬುದ್ಧಿ, ಅವಳ ಕುಟುಂಬ ಶ್ರದ್ಧೆ, ಅವಳ ಮರಗಿಡಗಳ ಪ್ರೀತಿ, ತಾನು ಒಬ್ಬಂಟಿಯಾಗಿ ಬೆಳೆಸಿದ ಮಗನ ಕೀರ್ತಿಯಿಂದ ಅವಳು ಪಡುತ್ತಿದ್ದ ಹೆಮ್ಮೆ-ಹೀಗೆ ತನ್ನ ಕಿವಿಗೆ ಬೀಳುವಂತೆ ಎಲ್ಲರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಪ್ಪ ತನ್ನೊಳಗೆ ಕಠಿಣವಾಗಿ ಮೌನವಾಗಲು ಪ್ರಯತ್ನಿಸುತ್ತ ಕೂತ. +-೭- +ಈ ಮುಂದೆ ನಡೆದ ಘಟನೆಗಳ ಅರ್ಥ ತಿಮ್ಮಪ್ಪನ ಜರತ್ಕಾರು ಸ್ಥಿತಿಯ ದುಮ್ಮಾನಕ್ಕೆ ಸಿಕ್ಕ ಪರಿಹಾರವೆಂದು ತಿಳಿಯಲಾಗದು. ಮನುಷ್ಯನ ಜರತ್ಕಾರು ಸ್ಥಿತಿಯ ದುಮ್ಮಾನಕ್ಕೆ ಪರ್ಯಾಯವಾದ ಸ್ಥಿತಿಯೆಂದರೆ ಜೀವನವೇ ದುಃಖವೆಂದು ಅರಿತ ಬುದ್ಧನ ಕರುಣೆಯದು ಎಂದು ತಿಮ್ಮಪ್ಪ ತನ್ನ ಕೃತಿಯಲ್ಲಿ ಮೂಡಿಸಲು ಯತ್ನಿಸಿ ವಿಫಲನಾಗಿದ್ದಾನೆ. ತಿರುಪತಿಯಲ್ಲಿ ಪಟ್ಟ ಜಿಗುಪ್ಸೆಯಲ್ಲೋ, ತಾಯಿಯ ಉಗ್ರ ತಪಸ್ಸಿಗೆ ಎದುರಾಗಿಯೋ, ಸಭ್ಯ ಜೀವನದ ತೋರುಗಾಣಿಕೆಯನ್ನು ತಿರಸ್ಕರಿಸಲೆಂದು ಮನಃಪೂರ್ವಕ ಆಯ್ದುಕೊಂಡ ಹೊಲಸಿನ ಸಹವಾಸದಲ್ಲೋ ಇರುತ್ತ, ಈ ಪ್ರತಿಕ್ರಿಯೆಯ ಫಲವಾಗಿ ತನ್ನಿಂದ ಉದ್ಭವವಾಗುವ ಶಾಬ್ದಿಕ ವಿನ್ಯಾಸಗಳಲ್ಲಿ ಮಾತ್ರ ತನ್ನ ಅರಿವು ನಿಜವಾಗಲಾರದು ಎಂದು ಅವನಿಗೆ ತಿಳಿಯುತ್ತ ಹೋಗಿದೆ. ಆದ್ದರಿಂದ ಅವನು ಈ ಮುಂದಿನ ಘಟನೆಗಳಿಂದ ಗೊಂದಲಗೊಂಡು ಮೃದುವಾದ-ಎಂದಷ್ಟೇ ಹೇಳಬಹುದು ಸಧ್ಯದಲ್ಲಿ. +ತಾಯಿಯನ್ನು ಸುಟ್ಟು ಎರಡು ದಿನಗಳಾದ ಮೇಲೆ ಕಮಲ ಒಂದು ಬೆಳಿಗ್ಗೆ ತನ್ನೆದುರು ಬಂದು ಏನೋ ಹೇಳಲು ಅಂಜುತ್ತಿರುವವಳಂತೆ ಕಂಡಳು. ನಿತ್ಯದಂತೆ ಅವಳು ಹೂವು ಮುಡಿಯದೇ ಇದ್ದುದರಿಂದ ಸೂತಕದಲ್ಲಿರುವ ಜ್ಞಾತಿಯಂತೆ ಕಂಡಳು. ಸಿಗರೇಟು ಸೇದುತ್ತಿದ್ದ ತಿಮ್ಮಪ್ಪ ತನ್ನೊಳಗೆ ರೂಪ ಪಡೆಯಲು ನಿರಾಕರಿಸುವ, ಪಡೆಯುವ ರೂಪಗಳಲ್ಲಿ ಉಚ್ಛಿಷ್ಟದಂತೆ ತೋರುವ ಶಬ್ದಗಳಿಗೆ ಹೇಸುತ್ತ ಕೂತಿದ್ದ. ತಲೆ ಎತ್ತಿ ‘ಏನು’ ಎಂದ. +‘ಸತ್ತ ಮೇಲೆ ಕೊಡು ಅಂತ ಅಮ್ಮ ನಿಮಗೊಂದು ಪತ್ರ ಬರೆದಿಟ್ಟಿದ್ದಾರೆ’ ಎಂದು ಕಮಲ ಕಣ್ಣಿನ ತುಂಬ ನೀರು ತುಂಬಿಕೊಂಡಳು. ತಿಮ್ಮಪ್ಪ ಉತ್ತರಿಸದೇ ಅವಳೇ ಕಾಗದ ಕೊಡುವಳೆಂದು ಕಾದ. ಆದರೆ ಕಮಲ ‘ಬರೆದಿಟ್ಟು ತಿಂಗಳಾಯಿತು.’ ಎಂದಳು. ‘ತಗೊಂಡು ಬಾ’ ಎಂದರೆ ಅವಳು ಅಲ್ಲಾಡದೆ ಬೀಗದ ಕೈ ಕೊಟ್ಟಳು. ತಿಮ್ಮಪ್ಪ ತಾಯಿಯ ಕೋಣೆಗೆ ಹೋಗಿ ದೊಡ್ಡ ಟ್ರಂಕಿನ ಹಳೆಯ ಕಾಲದ ಪಟ್ಟಿಗಳಿಂದ ಭದ್ರವಾದ ಮುಚ್ಚಳವನ್ನು ತೆಗೆದ. +ಅದರ ತುಂಬ ತಾಯಿಯ ಮುತ್ತೈದೆತನದ ರೇಷ್ಮೆಯ ಹಳೆಯ ಕಾಲದ ಭಾರವಾದ ಸೀರೆಗಳು: ಮಧುರೆ ಮೀನಾಕ್ಷಿ, ಕೊಲ್ಲೂರಿನ ಮೂಕಾಂಬಿಕೆಗೆ ಉಡಿಸುವಂಥವು. ಅವುಗಳಿಂದ ಒಣಗಿದ ಕೇದಗೆಯ ವಾಸನೆ ಬರುತ್ತಿತ್ತು. ಪ್ರತಿವರ್ಷ ತಮ್ಮ ಪೂರ್ವಿಕರ ಹಳ್ಳಿಯಿಂದ ಒಬ್ಬ ಕೇದಗೆಯನ್ನು ತಾಯಿಗೆ ಸರಬರಾಜು ಮಾಡುತ್ತಿದ್ದ. ಮುತ್ತಾತನ ಕಾಲದಲ್ಲಿ ಕೇರಳದಿಂದ ತಂದ ಹಿತ್ತಾಳೆಯ ಚೆಲ್ಲವೊಂದು ಟ್ರಂಕಿನ ಬದಿಯಲ್ಲಿ ಇತ್ತು. ಅದರಲ್ಲಿ ತನ್ನ ಬಾಲ್ಯದ ವ್ಯಾದಿಗಳನ್ನು ನಿವಾರಿಸುತ್ತಿದ್ದ ಸವೆದ ಬಜೆಯ ಚೂರು, ಜಾಯಿಕಾಯಿ, ಗೋರೋಜನ, ಕಸ್ತೂರಿ, ವಿಜಯನಗರ ಕಾಲದ್ದೆಂಬ ಖ್ಯಾತಿಯ ಮೂರುಸುತ್ತು ತೆಯ್ದು ನೆಕ್ಕುವ ಕಪ್ಪಾದ ಸಾಲಿಗ್ರಾಮದಂತಹ ಉಂಡೆ ಇದ್ದುವು. ಆಪತ್ಕಾಲದಲ್ಲಿ ಈ ಸರ್ವರೋಗ ನಿವಾರಕ ಉಂಡೆಯನ್ನು ತಾಯಿಯಿಂದ ಬೇಡಿ ನೆರೆಹೊರೆಯವರು ಅಲ್ಲದೆ, ಅವನ ಪೂರ್ವಜರ ಹಳ್ಳಿಯವರು ಹುಡುಕಿಕೊಂಡು ಬರುವುದನ್ನು ತಿಮ್ಮಪ್ಪ ನೋಡಿದ್ದಾನೆ. ಈ ಔಷಧಿಗಳಲ್ಲದೆ ಚೆಲ್ಲದಲ್ಲಿ ಅವನ ಬಂಗಾರದ ಉಡಿದಾರ, ಕಿವಿಯ ಒಂಟಿ ಇದ್ದವು. ಇನ್ನೊಂದು ಗಂಧದ ಪೆಟ್ಟಿಗೆಯಲ್ಲಿ ಸೊಸೆಗಾಗಿ ತಾಯಿ ಸರ್ಪಗಾವಲು ಕಾದ ಒಡವೆಗಳಿದ್ದವು. ಆ ಪೆಟ್ಟಿಗೆಯ ಮೇಲೆ ಮಡಿಸಿ ಅಂಚಿಗೆ ಅರಿಸಿನ ಕುಂಕುಮ ಹಚ್ಚಿ ಇಟ್ಟಿದ್ದ ಕಾಗದವನ್ನು ಎತ್ತಿಕೊಂಡು ತಿಮ್ಮಪ್ಪ ಓದಿದ್ದ: +“ಚಿರಂಜೀವಿಗೆ ಆಶೀರ್ವಾದಗಳು. ಈ ಪ್ರಜೋತ್ಪತ್ತಿ ಸಂವತ್ಸರದ ಕಾರ್ತೀಕಮಾಸದ ಏಕಾದಶಿ ದಿನದಂದು ಸ್ವಹಸ್ತದಿಂದ ಬರೆದಿರುವ ಈ ಒಕ್ಕಣೆಯನ್ನು, ಹರಿವಾಯು ಅನುಗ್ರಹದಿಂದ ನಾನು ಸತ್ತ ಮೇಲೆ ನೀನು ಪಾಲಿಸುವುದು. ನನ್ನ ಶ್ರಾದ್ಧಾದಿಗಳನ್ನು ನೀನು ಮಾಡತಕ್ಕದ್ದು, ಇಲ್ಲವಾದರೆ ಮಗನಾದ ನಿನಗೆ ಸದ್ಗತಿಯಿಲ್ಲ. ಜನ್ಮವಿತ್ತ ತಾಯಿಗೆ ಮಾಡಬೇಕಾದ ವಿಧಿಗಳಲ್ಲಿ ನಿನಗೆ ನಂಬಿಕೆಯಿರುವುದು ಮುಖ್ಯವಲ್ಲ. ಪರಂತು ಹರಿವಾಯು ಪ್ರೇರಣೆಯಿಂದ ನಿನಗೆ ನಂಬಿಕೆ ಬಂದರೂ ಬರಬಹುದು. ಇಲ್ಲವಾದರೂ ಮಾಡುವುದಕ್ಕೆ ಅಡ್ಡಿಯಿಲ್ಲ, ಅಲ್ಲದೆ ನಿನ್ನ ಈ ಕಂಟಕ ಪರಿಹಾರವಾಗುವ ಕಾಲ ಬಂದಿದೆ. ಹರಿವಾಯು ಪ್ರೇರಣೆಯಿಂದ ಚಿರಂಜೀವಿ ಸೌಭಾಗ್ಯವತಿ ಕಮಲಳಿಗೆ ನಿನ್ನಿಂದ ಗರ್ಭದಾನ ನೆರವೇರಿದೆ. ನನ್ನ ಅಜ್ಜಯ್ಯನಿಂದ ನನಗೆ ಪ್ರಾಪ್ತವಾದ ಎಲ್ಲ ಚಿರ ಚರ ಆಸ್ತಿಯೂ ಆ ಶಿಶುವಿಗೆ ಸೇರತಕ್ಕದ್ದು, ಸೌಭಾಗ್ಯವತಿ ಕಮಲಳು ಈ ಆಸ್ತಿಯ ಎಲ್ಲ ಉಸ್ತುವಾರಿಯನ್ನೂ ವಹಿಸತಕ್ಕದ್ದು, ನಿನ್ನ ಶುಶ್ರೂಷೆಯನ್ನೂ ಅವಳು ನಿನಗೆ ಪ್ರಿಯವಾಗುವ ರೀತಿಯಲ್ಲೇ ಮಾಡತಕ್ಕದ್ದು, ರಾಯರು ಕನಸಿನಲ್ಲಿ ಕಾಣಿಸಿಕೊಂಡು ನನಗೆ ಮಾಡಿದ ಆಜ್ಞೆಯನ್ನು ನಾನು ಶಿರಸಾವಹಿಸಿ ಬರೆದಿಟ್ಟಿದ್ದೇನೆ. ನೀನು ಇದನ್ನು ನಡೆಸಿಕೊಡುವಿಯೆಂದು ತ್ರಿಕಾಲಜ್ಞಾನಿಗಳಾದ ರಾಯರು ನನಗೆ ಹೇಳಿದ್ದಾರೆ. ಶ್ರೀವೆಂಕಟೇಶಸ್ವಾಮಿಯು ಕರುಣೆಯಿಂದ ಗರ್ಭದಲ್ಲಿ ನಿಲ್ಲುವಂತೆ ಮಾಡಿದ ಕಾರಣವಾಗಿ ನನ್ನ ಶಿಶುವಾದ ನೀನೂ, ಚಿ.ಸೌ.ಕಮಲಳೂ , ಹುಟ್ಟಲಿರುವ ವಂಶೋದ್ಧಾರಕನೂ, ಆಯುರಾರೋಗ್ಯ ಭಾಗ್ಯಾದಿಗಳನ್ನು ಪಡೆದು ಸುಖವಾಗಿ ಬಾಳಿರೆಂದು ಆಶೀರ್ವದಿಸುತ್ತೇನೆ. ಇತಿ. ಶಂ. ರುಕ್ಮಿಣಿಯಮ್ಮ” +ತಿಮ್ಮಪ್ಪ ಕಾಗದವನ್ನು ಜೇಬಿನಲ್ಲಿಟ್ಟುಕೊಂಡು ಹೊರಬಂದು ಅಡಿಗೆ ಮನೆಯಲ್ಲಿದ್ದ ಕಮಲಳ ಎದುರು ನಿಂತು ಪ್ರಶ್ನಾರ್ಥಕವಾಗಿ ನೋಡಿದ. ಅವಳ ಮುಖ ನೋಡಿದ್ದೇ ಅವನಿಗೆ ಗೊತ್ತಾಯಿತು: ಕಮಲಳಿಗೆ ಈ ಕಾಗದದಲ್ಲಿ ಏನಿದೆ ಎಂಬ ವಿಷಯ ತಿಳಿಯದು ಎಂದು ಆದರೂ ಕೇಳಿದ: +“ಅಮ್ಮ ಏನು ಬರೆದಿದ್ದಾರೆ ನಿನಗೆ ಹೇಳಿದಾರ?” +ಕಮಲ ಇಲ್ಲವೆಂದು ತಲೆಯನ್ನು ಆಡಿಸಿ ಕಣ್ಣು ತುಂಬಿ ಬಂದು ತಲೆ ತಗ್ಗಿಸಿದಳು. ಸೆರಗಿನಿಂದ ಬಾಯಿ ಮುಚ್ಚಿಕೊಂಡಳು. +“ಎಷ್ಟು ತಿಂಗಳಾಯಿತು?” +ಕಮಲ ಕೈಯೆತ್ತಿ ಪಾತ್ರೆಯುಜ್ಜಿ ಒರಟಾದ ತನ್ನ ಮೂರು ಬೆರಳುಗಳನ್ನು ಸಂಕೋಚದಿಂದ ತೋರಿದಲು. ಪೂರ್ಣ ಸೆರಗು ಹೊದ್ದು ಉಂಗುಷ್ಠದಿಂದ ನೆಲಕೆಯುತ್ತ ನಿಂತಳು. ತನಗೆ ತಿಳಿಯದಂತೆಯೇ ತಿಮ್ಮಪ್ಪನ ಧ್ವನಿ ಗಡುಸಾಗಿತ್ತು. +“ಅಮ್ಮನಿಗೆ ಹೇಗೆ ಗೊತ್ತಾಯ್ತು?” +ಕಮಲ ಬಾಯಿ ಬಿಟ್ಟು ಹೇಳುವ ಅಗತ್ಯವಿರಲಿಲ್ಲ. ಕಮಲ ಹೊರಗೆ ಕೂರದೆ, ತನ್ನ ತಾಯಿಯನ್ನು ಅಡಿಗೆಗೆ ಕಳಿಸದೇ ತಾನೇ ಪ್ರತಿನಿತ್ಯ ಇಡೀ ತಿಂಗಳು ಅಡುಗೆ ಮಾಡಲು ಬಂದಿದ್ದರಿಂದ ಹದ್ದುಗಣ್ಣಿನ ಮುದುಕಿಯೇ ಊಹಿಸಿರುತ್ತಾಳೆ. ತಪ್ಪಿತಸ್ಥಳಂತೆ ನಿಂತವಳು ತಾಳಿಕೊಳ್ಳಲಾರದೆ, ಇನ್ನೇನು ಅತ್ತೇಬಿಡುವಳೆಂದು ತಿಮ್ಮಪ್ಪನಿಗೆ ದಿಗಿಲಾಯಿತು. ರೂಮಿಗೆ ಹೋಗಿ ತಾನು ಬರೆಯುತ್ತಿದ್ದ ತೇಬಲ್ಲಿನ ಎದುರು ಕೂತು ಕಂಪಿಸಿದ. ತನಗೆ ಥಟ್ಟನೇ ಹೊಳೆದ ಯೋಚನೆಯಿಂದಾಗಿ ಅಸಹ್ಯವಾಯಿತು. ಅಮ್ಮ ಬರೆದಿಟ್ಟ ಕಾಗದವನ್ನು ಹರಿದುಹಾಕಿ, ಕಮಲಳ ಗರ್ಭ ತೆಗೆಸಿ, ಅವಳಿಗೊಂದೆರಡು ಲಕ್ಷ ರೂಪಾಯಿಯನ್ನೂ ತಾಯಿಯ ಎಲ್ಲ ಒಡವೆಗಳನ್ನೂ ಕೊಟ್ಟು, ತಾನು ಸ್ವತಂತ್ರನಾಗಿಬಿಡಬೇಕೆಂದು ಅವನಿಗೆ ಆಸೆಯಾಗಿತ್ತು. ತಕ್ಷಣ ಅನ್ನಿಸಿತು: ತಾನು ಅನಾವರಣಗೊಳಿಸುತ್ತ ಹೋದ ಮನುಷ್ಯನ ಸ್ವಾನುರಕ್ತ ಪ್ರೇಮರಹಿತ ಪಾಡಿನ ನಿಜವಾದ ಚಿತ್ರ ತಾನೇ ಆಗಿದ್ದ. ಈಗ ಪಡುತ್ತಿರುವ ಆತ್ಮದ್ವೇಷದಲ್ಲಿ ತಾಯಿ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸಿದರೂ, ಇಂಥ ಆಸೆಯನ್ನು ಜನ್ಮತಃ ಪಡೆದ ತಾನು ಬದಲಾಗಲಾರೆ. ಹಾಗೆ ಅನ್ನಿಸಿ ದಿಗಿಲಾದ್ದರಿಂದ, ಕಮಲಳ ಹತ್ತಿರ ಏನೂ ಹೇಳದೆ, ಕಾರನ್ನು ಹತ್ತಿಕೊಂಡು ಹೋಗಿ ತನಗೆ ಪರಿಚಯದ ಒಬ್ಬ ಲಾಯರ್‌ಗೆ ತಾಯಿಯ ಪತ್ರವನ್ನು ರಿಜಿಸ್ಟರ್ ಮಾಡಿಸಲು ಕೊಟ್ಟ. ಅದರ ಒಂದು ಜೆರಾಕ್ಸ್ ಕಾಪಿಯನ್ನು ಮನೆಗೆ ತಂದ. ತಾನು ಕೂದಲೇ ಮನೆಗೆ ಬಂದದ್ದು ನೋಡಿ ಖುಷಿಪಟ್ಟು ಕಮಲ ಕಾಫಿ ತಯಾರಿಯಲ್ಲಿದ್ದುದು ನೋಡಿ, “ಕಾಫಿ ಬೇಡ, ಒಂದು ಗ್ಲಾಸ್ ಬ್ರಾಂಡಿ” ಎಂದ. ಯಾವ ಗ್ಲಾಸಲ್ಲಿ ಯಾವ ಬ್ರಾಂಡಿಯನ್ನು ಸುರಿದುಕೊಡುವುದೆಂದು ಅವಳಿಗೆ ತೋರಿಸುತ್ತ ತಾನೇ ಸುರಿದು ಗಟಗಟನೆ ಕುಡಿದು, ‘ತಗೊ’ ಎಂದು ತಾಯಿಯ ಪತ್ರವನ್ನು ಕೊಟ್ಟ. ಸೆರಗೆಳೆದುಕೊಂಡು ತನ್ನ ದೊಡ್ಡ ಕಣ್ಣುಗಳಲ್ಲಿ ಏನನ್ನೂ ನಿರೀಕ್ಷಿಸದೆ ನಿಂತಿದ್ದ ಕಮಲಳ ಕೈಯಲ್ಲಿ ಪತ್ರ ಕೊಟ್ಟಾಗ ಅವಳ ಕೈ ಕಂಪಿಸುತ್ತಿತ್ತು. ಓದಲು ಅವಳು ಹೆದರಿದ್ದು ಕಂಡು, “ಅಮ್ಮನ ರೂಮಲ್ಲಿ ಕೂತು ಓದಿಕೊ” ಎಂದ. +-೮- +ತಾಯಿಯ ಶ್ರಾದ್ಧ ಕರ್ಮಗಳನ್ನು ಇಡೀ ಕುಲ ವಹಿಸಿಕೊಂಡು ನಡೆಸಿತು. ತಾಯಿಯ ತಲೆಯನ್ನು ಪ್ರತಿ ತಿಂಗಳು ಬೋಳಿಸುತ್ತಿದ್ದ ಕುಲದ ಕ್ಷೌರಿಕ ಮುದುಕ ಅಂಗಳದಲ್ಲೇ ನೆಲೆಯೂರಿದ. ತನ್ನ ಸ್ಥಾನವನ್ನು ಶ್ರಾದ್ಧ ಕ್ರಿಯೆಯಲ್ಲಿ ಅವನು ಸ್ಥಾಪಿಸಿಕೊಂಡಂತೆ, ದಾನಕ್ಕೆ ಗೋವನ್ನು ಒದಗಿಸುವ ಬ್ರಾಹ್ಮಣ, ದರ್ಬೆತಿಲ ಇತ್ಯಾದಿ ದ್ರವ್ಯಗಳನ್ನು ಸಿದ್ಧಪಡಿಸುವ ಬ್ರಾಹ್ಮಣ, ದುರ್ದಾನವನ್ನು ಹಿಡಿಯುವ ಎದೆಗಾರಿಕೆಯ ನಿಷ್ಠ ಬ್ರಾಹ್ಮಣರು-ಎಲ್ಲ ಹಾಜರಾದರು. ಜನಿವಾರವನ್ನು ಸವ್ಯ, ಅಪಸವ್ಯ ಮಾಡಿಕೊಳ್ಳುತ್ತ ತಾಯಿಯ ಸದ್ಗತಿಗೆ ಅಗತ್ಯವಾದ ಎಲ್ಲ ಕ್ರೆಯೆಗಳೂ ತನ್ನಿಂದ ಸಾಂಗವಾಗಿ ನಡೆದವು. ಎಲ್ಲ ಪಿತೃಗಳೂ ಕಾಗೆಯ ರೂಪದಲ್ಲಿ ಹಾಜರಾಗಿ ತಾನು ಹೊರಗಿಟ್ಟ ಪಿಂಡವನ್ನು ಕುಕ್ಕಿ ಕುಕ್ಕಿ ತಿಂದವು. ತಿನ್ನುತ್ತ ಇನ್ನಷ್ಟು ಕಾಗೆಗಳನ್ನು ಕರೆದವು. +ಕತ್ತಲಾಗುತ್ತಿದ್ದಂತೆ ರಾತ್ರಿಯ ಮೌನವನ್ನು ಸೀಳಿ ಬರುವ ಅಯ್ಯಪ್ಪ ಭಕ್ತಿಯ ಆಕ್ರಂದನ. ಬೆಳಗಿನ ಜಾವದ ತನಕ ಇದು ಮುಂದುವರಿದರೆ, ಬೆಳಿಗ್ಗೆ ಅದರ ಜೊತೆಯಲ್ಲೇ ಮಸೀದಿಯ ಪ್ರಾರ್ಥನೆಗೆ ಕರೆ. ದೇವರುಗಳಿಂದ ಹೀಗೆ ಕಿವಿಕುಕ್ಕಿಸಿಕೊಂಡು ಕಾಂಪೌಂಡಿನ ಹೊರಗೆ ಬರುತ್ತಿದ್ದಂತೆ, ಬೀದಿಯಲ್ಲಿ ಕಣ್ಣುಕುಕ್ಕಿಸಿಕೊಂಡು ಚಳಿಯಲ್ಲಿ ಕಕ್ಕಸ್ಸಿಗೆ ಕೂತ ಚಿಂದಿ ಬಟ್ಟೆಯ ಮಕ್ಕಳು, ಮತ್ತೆ ಎಲ್ಲ ಗೋಡೆಗಳ ಮೇಲೆ, ಕಂಬಗಳ ಮೇಲೆ, ಕಪ್ಪುಟಾರು ರಸ್ತೆಯ ಮೇಲೆ, ರಾಜಕೀಯ ಚೀತ್ಕಾರಗಳು, ಕಾಮವರ್ದಿನೀ ಆಗ್ರಹಗಳು, ಇದು ತಿನ್ನಿ, ಇದೇ ಕುಡಿ, ಇದೇ ಹಚ್ಚು, ಇದೇ ಉಡು, ಇದು ಚೀಪು, ಇವರನ್ನು ಕೊಲ್ಲು, ಅವರನ್ನು ತುಳಿ, ಅದನ್ನು ಬೀಳಿಸು, ಇದನ್ನು ಧಿಕ್ಕರಿಸು, ಭವಿಷ್ಯಕ್ಕಾಗಿ ಕಟ್ಟು, ಸೇರಿಕೊ, ಸೇರಬೇಡ….. +ದೇವರಿಂದ, ಮಕ್ಕಳಿಂದ, ಕ್ರುದ್ಧರಿಂದ, ಪುಳಕಿತರಿಂದ ಸಮೃದ್ಧವಾದ ಈ ಗಿಜಿಗಿಜಿ ಕೊಚ್ಚೆಯಲ್ಲಿ ಕಂತುತ್ತೇನೆಂದು ತಿಮ್ಮಪ್ಪ ಹೆದರಿದ. ತನ್ನ ಆಂತರ್ಯದ ಮಾತಿನ ಹೊಳಪನ್ನೂ ಶುಚಿಯನ್ನೂ ಕಳೆದುಕೊಂಡು ಬಿಟ್ಟೇನೆಂದು ಆತಂಕಪಟ್ಟ. ಈ ಕೊಳಕು ಬೀದಿಗಳ ಮೇಲೆ ರಾಯರ ಮಠಕ್ಕೆ ಬರಿಗಾಲಿನಲ್ಲಿ ತನ್ನ ಮಡಿ ಕಳೆಯದಂತೆ ನಡೆದಾಡುತ್ತಿದ್ದ ತಾಯಿಯ ಬಗ್ಗೆ ಆಶ್ಚರ್ಯಪಟ್ಟ. +-೯- +ಹೀಗೆ ಸೃಷ್ಟಿಯ ಅರ್ಥಹೀನ ವಿಲಾಸದಿಂದ ಓಕರಿಕೆಪಡುತ್ತ ಎರಡು ತಿಂಗಳ ಕಾಲ ಡ್ರೈವ್ ಮಾಡಿಕೊಂಡು ಊರೂರು ಸುತ್ತಿ ನೆಮ್ಮದಿ ಕಾಣದೆ ತಿಮ್ಮಪ್ಪ ಮನೆಗೆ ಬಂದ. +ಹೊಸ ಬಣ್ಣ ತೊಟ್ಟು ಮನೆ ಶೋಭಿಸುತ್ತಿತ್ತು. ತಾಯಿಯ ಪುರಾತನಕಾಲದ ಸೀರೆಗಳೆಲ್ಲ ಬಿಸಿಲಿನಲ್ಲಿ ಗಾಳಿಯಾಡಲು ಹರಡಿದ್ದವು. ಕಮಲಳ ದಪ್ಪ ಮೂಗಿನ ಮೇಲೆ ತಾಯಿಯ ವಜ್ರದ ಮೂಗು ಬೊಟ್ಟಿತ್ತು. ಕಿವಿಯಲ್ಲಿ ವಜ್ರದ ವಾಲೆಗಳಿದ್ದವು. ಸಡಿಲಾದ ಅವಳ ಜಡೆಯಲ್ಲಿ ಮಲ್ಲಿಗೆ ದಂಡೆಯಿತ್ತು. ತಿಮ್ಮಪ್ಪನನ್ನು ಕಂಡದ್ದೇ ತನ್ನ ಪ್ರಾರ್ಥನೆ ಕೈಗೂಡಿತೆಂಬಂತೆ ಸಂಭ್ರಮಿಕಳಾಗಿ ಕಮಲ ಸೆರಗು ಹೊದ್ದು ಕೆನ್ನೆಗೆ ಅರಿಶಿನ, ಹಣೆಗೆ ಕುಂಕುಮವಿಟ್ಟ ಸೌಭಾಗ್ಯವತಿಯಾಗಿ ನಡುಮನೆಯಲ್ಲಿ ನಿಂತಳು. ಅವತ್ತು ರಾತ್ರೆ ಅಂಜುತ್ತ ಅವನ ಹಾಸಿಗೆ ಪಕ್ಕ ಕೂತಳು. ಕುಡಿಯಲು ಬ್ರಾಂಡಿ ಸುರಿದುಕೊಟ್ಟಳು. ಅವನು ಮಲಗು ಎಂದಾಗ ಕಾಲುಗಳನ್ನು ಮಡಚಿ ಮುದುರಿ ಮಲಗಿದಳು. +ರಾತ್ರೆ ತಿಮ್ಮಪ್ಪನಿಗೊಂದು ಕನಸು ಬಿತ್ತು, ಒಂದು ಹೆಣ್ಣು ಬೆತ್ತಲೆ ಮಲಗಿದೆ. ಎರಡು ಕಾಲುಗಳೂ ಎಳೆದುಕೊಂಡು ತನ್ನ ತೊಡೆಗಳನ್ನು ಅಗಲಿಸಿದೆ. ಅದರ ಯೋನಿ ಎರಡು ದಳಗಳ ಬೃಹತ್ ಪುಷ್ಪದಂತೆ ಅರಳಿಕೊಂಡಿದೆ. ಆದರೆ ಅದರ ಕೈಗಳು ಮುಖವನ್ನು ಕಾಣಗೊಡದಂತೆ ಮುಚ್ಚಿವೆ. ಅದರ ಕೂದಲಿನ ರಾಶಿ ತಲೆಯ ಮೇಲೆ ಚೆಲ್ಲಿ ಬೆಳೆದ ಪೊದೆಯಂತಿದೆ. ಕನಸಿನಲ್ಲಿ ಚಡಪಡಿಸುತ್ತ ಅಮ್ಮ, ಅಮ್ಮ ಎಂದ. ಮುಚ್ಚಿದ ಮುಖ ತೆರೆಯಲಿಲ್ಲ. ಭಯವಾಯಿತು. ಹೇಸಿಗೆಯಾಯಿತು. ವಾಂತಿ ಬಂದಂತಾಯಿತು. ಅವನು ನಿತ್ಯ ಮಲಗುತ್ತಿದ್ದ ಸೂಳೆಯರ ಹೆಸರುಗಳನ್ನೂ ನೆನಪಿಸಿಕೊಂಡು ಕರೆಯತೊಡಗಿದ. ಲಕ್ಷ್ಮೀ, ಲಲಿತಾ, ರಾಗಿಣೀ, ಕೋಮಲಾ, ಮಾರ್ಗರೇಟ್, ಲೈಲಾ, ಕಾಮಿನೀ, ಲಸಿತಾ, ಸುಭಗಾ-ಮುಖ ಮುಚ್ಚಿಯೇ ಇತ್ತು. ತೊಡೆಗಳು ಕಿಸಿದು ಯೋನಿ ತೆರೆದೇ ಇತ್ತು. ಕಮಲಾ ಎಂದ. ಮುದುರಿ ನಿದ್ದೆ ಮಾಡುತ್ತಿದ್ದ ಕಮಲ ಬೆಕ್ಕಿನಂತೆ ಬೆಚ್ಚಗೆ ತನ್ನ ಮುಖವನ್ನು ಅವನ ಕೆನ್ನೆಗೆ ಒತ್ತಿದಳು. ಕನಸು ಕೊನೆಯಾಗಿ ಅರ್ಧ ಎಚ್ಚರಾದಾಗ, ತನ್ನ ಓಕರಿಕೆ ನೆನಪಾಯಿತು. ಕಮಲ ಬಯಕೆಯಲ್ಲಿ ಅವತ್ತು ಮಧ್ಯಾಹ್ನ ವಾಂತಿ ಮಾಡಿಕೊಂಡದ್ದೂ, ತನ್ನ ಸೆರಗಿನಲ್ಲಿ ಮುಚ್ಚಿಕಟ್ಟಿಕೊಂಡಿದ್ದ ಜೇಡಿ ಮಣ್ಣನ್ನು ತಿನ್ನುತ್ತಿದ್ದುದೂ ನೆನಪಾಯಿತು. ಅವಳ ತುಸು ಉಬ್ಬಿದ ಹೊಟ್ಟೆ ಅವನ ಹೊಟ್ಟೆಗೆ ಒತ್ತಿಕೊಂಡಿತ್ತು. ತನಗಿಂತ ಅನ್ಯವಾದೊಂದು ಜೀವ ಅಲ್ಲಿ ರೂಪುಗೊಳ್ಳುತ್ತಿತ್ತು. ಅರೆನಿದ್ದೆಯಲ್ಲಿ ಅದನ್ನು ನಿರೀಕ್ಷಿಸುತ್ತ, ಗಾಢನಿದ್ದೆಗೆ ಜೀವ ಹೊರಳುವ ಜಡತ್ವದಲ್ಲಿ ಕಮಲಳ ದೇಹದ ಶಾಖವನ್ನು ಅವನ ದೇಹ ಸ್ವೀಕರಿಸಿತು. +***** +(ಚಿತ್ತಾಲರ ೫೦ನೇ ಕಥೆ) ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ […] +ಇಂದು ಮಾರ್ಚ ಒಂದನೆಯ ತಾರೀಖು.೨೯೦ ರೂಪಾಯಿ-ಕಿಸೆಯಲ್ಲಿ!ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು.ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_399.txt b/Kannada Sahitya/article_399.txt new file mode 100644 index 0000000000000000000000000000000000000000..6618940a82fb1277480846db50190ce5a8987447 --- /dev/null +++ b/Kannada Sahitya/article_399.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಾಗೇ ಕಾಲು….. +ಹೆಜ್ಜೆ ಮುಂದೊಂದು ಹೆಜ್ಜೆ +ದೂರ…. ದೂರದ ತನಕ +ತನ್ನ ಪಾಡಿಗೆ ತಾನು, +ಅಕ್ಕ ಪಕ್ಕದ ಗಿಡಮರಗಳೆಲ್ಲಾ +ಮುಂದು ಮುಂದಕ್ಕೆ ಸಾಗಿದಹಾಗೆ, +ನಡೆದಷ್ಟೂ ಸುಮ್ಮನೆ ನಡೆಸುತ್ತದೆ +ದಿಕ್ಕಿಲ್ಲದ ಮನಸ್ಸು. +ಹಾದಿಯಂಚಿಗೆ ಗುಡ್ಡಗಾಡು +ಸರಿದು ಹೋಗಿರಬೇಕು. +ಮನಸ್ಸಿಗಂಟಿದ ಮೋಡದ ಹಾಗೆ +ಆಕಾಶಕ್ಕೆಲ್ಲ ಮೆತ್ತುಕೊಂಡಿದೆ ಮಬ್ಬು +ಎಷ್ಟು ದೂರ ಬಂದಿದ್ದೇನೆ ಹೀಗೆ +ಸುಮ್ಮನೆ ನಡೆದು. +ಬೀಸೊ ಗಾಳಿ ಬೀಸುತ್ತದೆ. +ಕ್ಷಣಗಳನ್ನೇ ಮರೆತುಹೋದಂತೆ ಕಾಲ, +ಸ್ತಬ್ಧವಾಗಿತ್ತು ಸಮಯ. +ನಾಡಿಮಿಡಿಯುತ್ತಿತ್ತೋ +ಹೃದಯ ಬಡಿಯುತ್ತಿತ್ತೋ +ಕಿವಿಗಂತೂ ಏನೂ ಕೇಳಿಸಲಿಲ್ಲ. +ಅಂಕು-ಡೊಂಕಿಲ್ಲದ ರಸ್ತೆಯಲ್ಲಿ +ಒಂಟಿಯಾಗಿ +ಹಾಗೇ………. +ಹೆಜ್ಜೆ ಮುಂದೊಂದು ಹೆಜ್ಜೆ…….. +***** +ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […] +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_4.txt b/Kannada Sahitya/article_4.txt new file mode 100644 index 0000000000000000000000000000000000000000..3a70f1a2233b9d39a66d813e0aeb66354c2c2621 --- /dev/null +++ b/Kannada Sahitya/article_4.txt @@ -0,0 +1,725 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೆನಕೆಗಳು… +ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ – +ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ ಹಿರಿಯ ಕವಿ ಮತ್ತು ಗೆಳೆಯ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರಿಗೆ- +ಗೆಳೆಯ ಡಾ.ಪುರುಷೋತ್ತಮ ಬಿಳಿಮಲೆಯವರು ತೇರನ್ನು ಓದಿ ಮೆಚ್ಚು ಮಾತುಗಳನ್ನು ಹೇಳಿದ್ದಾರೆ. ಅವರ ಮೆಚ್ಚು ಮಾತುಗಳನ್ನು ಈ ಕೃತಿಯ ಬೆನ್ನುಡಿಯಾಗಿಸಿಕೊಂಡು ನನ್ನ ಧೈರ್ಯ ಹೆಚ್ಚಿಕೊಂಡಿದ್ದೇನೆ.ನನ್ನ ಬಗ್ಗೆ ಅಪಾರ ಪ್ರೀತಿ ತೋರುವ,ಆನಂದಕಂದ ಗ್ರಂಥಮಾಲೆಗೆ ಅಸ್ತಿವಾರ ಹಾಕಿದ ಬಿಳಿಮಲೆಯವರಿಗೆ – +ಯಾವತ್ತಿಗೂ ನನ್ನ ಕಥೆಗಳ ಬಗ್ಗೆ ಅಪಾರ ಪ್ರೀತಿ ತೋರಿಸಿದ,ಈ ಕಥಾನಕಕ್ಕೆ ಬ್ಲರ್ಬ್ ಬರೆದಿರುವ ನನ್ನ ಪ್ರೀತಿಯ ಗೆಳೆಯ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ- +ಈ ಕಾದಂಬರಿಯನ್ನು ಬರೆಯುವಾಗ ಗೊಂದಲಿಗರ ಹಾಡಿನ ಕೋರಸ್ಸಿನ ಬಗ್ಗೆ ಮಾಹಿತಿ ನೀಡಿದ ಗಳೆಯ ಡಾ.ನಿಂಗಣ್ಣ ಸಣ್ಣಕ್ಕಿ ಅವರಿಗೆ- +ಈ ಕಥಾನಕವನ್ನು ಅದರ ಆರಂಭದಿಂದಲೂ ಓದಿ,ಚರ್ಚಿಸಿ ಅದರ ರೂಪಾಂತರಗಳಿಗೆ ಕಾರಣರಾದ ಡಾ.ಸಿ.ಎನ್.ಆರ್.,ನರಹಳ್ಳಿ ಬಾಲಸುಬ್ರಹ್ಮಣ್ಯ,ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಎಚ್.ಎಸ್.ರಾಘವೇಂದ್ರ ರಾವ್,ರಾಜಾರಾಮ ಹೆಗಡೆ,ಮಲ್ಲಿಕಾರ್ಜುನ ಹಿರೇಮಠ, ಚಂದ್ರಶೇಖರ ತಾಳ್ಯ ,ಶಂಕರ ಕಟಗಿ, ಜಿ.ಎಲ್.ರಾಮಪ್ಪ ,ಅವರಿಗೆ- +ಓದಿ ಅಪಾರ ಪ್ರೀತಿಯನ್ನು ತೋರಿದ ಹಿರಿಯ ಮಿತ್ರರೂ,ಕನ್ನಡದ ಅಪರೂಪದ ವಿಮರ್ಶಕರೂ ಆದ ಮಾಧವ ಕುಲಕರ್ಣಿ ಅವರಿಗೆ- +ಬೆಳಗಾವಿಯಲ್ಲಿ ಈ ಕಥಾನಕವನ್ನು ಓದಿಸಿ ಕೇಳಿ ಮೆಚ್ಚು ಮಾತುಗಳನ್ನಾಡಿ ಧೈರ್ಯ ನೀಡಿದ ಹಿರಿಯ ಗೆಳೆಯರಾದ ಚಂದ್ರಕಾಂತ ಕುಸನೂರು,ಮಿತ್ರರಾದ ಡಿ.ಎಸ್.ಚೌಗಲೆ,ಶಿರೀಷ್ ಜೋಶಿ,ಜಿ.ಕೆ.ಕುಲಕರ್ಣಿ,ಮದ್ದು ಗುಂಡೇನಟ್ಟಿ ,ಮತ್ತು ಗೆಳೆಯರಿಗೆ- +ಚಿತ್ರದುರ್ಗದಲ್ಲಿ ಈ ಕಥಾನಕವನ್ನು ಓದಿಸಿ ಕೇಳಿ,ಚರ್ಚೆಯನ್ನು ಏರ್ಪಡಿಸಿದ ‘ಅಭಿರುಚಿ’ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಗೆಳೆಯ ಡಿ.ಎಸ್.ನಾಗಭೂಷಣ, ವೀರೇಂದ್ರಕುಮಾರ್,ಟಿ.ಆರ್.ರಾಧಾಕೃಷ್ಣ ಮತ್ತು ಅಭಿರುಚಿಯ ಎಲ್ಲ ಸದಸ್ಯರಿಗೆ- +ಹೀಗೆ ಈ ಕಥಾನಕದುದ್ದಕ್ಕೂ ನನ್ನನ್ನು ಕೈ ಹಿಡಿದು ನಡೆಸಿದ ಈ ಎಲ್ಲರಿಗೂ +ಶರಣು ಶರಣೆನ್ನುವೆ +ನನ್ನ ಬಗ್ಗೆ ಪ್ರೀತಿ ತೋರುವ ನನ್ನ ಅಣ್ಣ-ತಮ್ಮಂದಿರು-ಅಕ್ಕಂದಿರು ಮತ್ತು ಎಲ್ಲ ಬಂಧುಗಳಿಗೆ- +ಬದುಕಿನ ಬಗ್ಗೆ ಪ್ರೀತಿ ಹೆಚ್ಚಿಸುತ್ತಿರುವ ನಮ್ಮ ಮನೆತನದ ಮುಂದಿನ ಪೀಳಿಗೆಯ ಎಲ್ಲ ಹೊಸ ಕುಡಿಗಳಿಗೆ- +ನನ್ನ ಬಗ್ಗೆ ಯಾವತ್ತಿಗೂ ಪ್ರೀತಿಯನ್ನು ತೋರುವ ಗೆಳೆಯ ಲಿಂಗದೇವರು ಹಳೆಮನೆ,ಸಹೋದರಿ ಡಿ.ನಂದಾ,ಗೆಳೆಯರಾದಬಾಳಾಸಾಹೇಬ ಲೋಕಾಪುರ,ಪ್ರಹ್ಲಾದ್ ಅಗಸನಕಟ್ಟೆ, ಜಿ.ಎನ್.ಮಲ್ಲಿಕಾರ್ಜುನ,ಎಸ್.ಕೆ.ಕೊನೆಸಾಗರ, ಸಿ.ವಿ.ಜಿ.ಚಂದ್ರು,ಮತ್ತು ಎಲ್ಲ ಗೆಳೆಯರಿಗೆ- +ಪ್ರೀತಿ ಎರೆದು ಸಾಕಿದ ಇವರೆಲ್ಲರಿಗೂ ಕೃತಜ್ಞತೆಗಳನ್ನು ಹೇಳುವೆ +ಬಲರಾಮ, – ರಾಘವೇಂದ್ರ ಪಾಟೀಲ +ಅಧ್ಯಾಪಕರ ಕಾಲನಿ, +ಮಲ್ಲಾಡಿಹಳ್ಳಿ – ೫೭೭ ೫೩೧ +ಮುನ್ನುಡಿ +ಮಿತ್ರರಾದ ರಾಘವೇಂದ್ರ ಪಾಟೀಲರು ನವ್ಯೋತ್ತರ ಕನ್ನಡ ಕಥೆಗಾರರಲ್ಲಿ ಪ್ರಮುಖರು.ಇದುವರೆಗೆ ಪಾಟೀಲರ ನಾಲ್ಕು ಕಥಾ ಸಂಕಲನಗಳು,ಒಂದು ಕಾಂಬರಿ ,ಒಂದು ಜೀವನ ಚರಿತ್ರೆ, ಇತ್ಯಾದಿ ಒಟ್ಟು ಹದಿಮೂರು ಕೃತಿಗಳು ಹೊರಬಂದಿವೆ;ಮತ್ತು ಕಳೆದ ಹತ್ತು ವರ್ಷಗಳಿಂದ ಸಾಹಿತ್ಯ ಸಂವಾದ ಎಂಬ ನಿಯತಕಾಲಿಕವನ್ನು ಸಂಪಾದಿಸುತ್ತಿರುವ ಸಾಧನೆಯೂ ಇವರದು.ಇವರ ಇತ್ತೀಚಿನ ನೀಳ್ಗತೆ ಅಥವಾ ಕಿರು ಕಾದಂಬರಿ (ಇದನ್ನು ಎಂದು ಕರೆದರೆ ಹೆಚ್ಚು ಸರಿಯಾದೀತೇನೋ?) ತೇರು ಕೃತಿಗೆ ಅವರ ಕೋರಿಕೆಯಂತೆ ‘ಮುನ್ನುಡಿ’ ಎಂಬ ಒಂದು ಪ್ರವೇಶವನ್ನು ಸೂಚಿಸುವುದು ನನಗೆ ತುಂಬಾ ಸಂತೋಷದ ಹಾಗೂ ಅಭಿಮಾನದ ಸಂಗತಿ. +‘ನವ್ಯೋತ್ತರ’ ಎಂಬ ವಿಶೇಷಣವನ್ನು ನಾನು ಪಾಟೀಲರ ಬಗ್ಗೆ ಕೇವಲ ಕಾಲಸೂಚಕವಾಗಿ ಉಪಯೋಗಿಸಿಲ್ಲ. ನಾನು ಗ್ರಹಿಸಿರುವಂತೆ, ಕನ್ನಡದ ‘ಸಣ್ಣ ಕಥೆ’ ಎಂಬ ಪ್ರಭೇದ ನವ್ಯ ಯುಗದಲ್ಲಿ ಒಂದು ದಿಕ್ಕಿನಲ್ಲಿ ಅದ್ಭುತವಾಗಿ ಬೆಳೆಯಿತು – ನವ್ಯ ಕಾವ್ಯಕ್ಕೆ ಸರಿ ಸಾಟಿಯಾಗಿ.(ನವ್ಯ ಸಾಹಿತ್ಯದಲ್ಲಿ ಪ್ರತಿಯೊಂದು ಪ್ರಭೇದವೂ ‘ಕಾವ್ಯ’ದ ಮತ್ತೊಂದು ರೂಪವೇ ಆಗಿತ್ತು ; ಅಥವಾ ಆಗಿರಬೇಕು ಎಂಬುದು ನವ್ಯ ಲೇಖಕರ ನವ್ಯ ಲೇಖಕರ ನಿಲುವಾಗಿತ್ತು ಎಂಬುದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ). ಈ ನಿಲುವಿಗೆ ವಿರುದ್ಧವಾಗಿ, ನವ್ಯೋತ್ತರ ಕಥನ ಸಾಹಿತ್ಯ ಮತ್ತೊಂದು ದಿಕ್ಕಿನಲ್ಲಿ – ಸಮಷ್ಟಿ ಚಿಂತನೆ, ಅಂತಃಶಿಸ್ತೀಯ ಸಾಮಾಜಿಕ ಗ್ರಹಿಕೆ,ಭ್ರಮೆ – ವಾಸ್ತವಗಳ ಮಿಶ್ರಣ ಇತ್ಯಾದಿಗಳ ದಿಕ್ಕಿನಲ್ಲಿ – ಕಥನ ಸಾಹಿತ್ಯದ ಸಾಧ್ಯತೆಗಳನ್ನು ಆಳವಾಗಿ ಶೋಧಿಸಲು ತೊಡಗಿತು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪಾಟೀಲರ ದೇಸಗತಿ,ಮಾಯಿಯ ಮುಖಗಳು ಮತ್ತು ಇತ್ತೀಚಿಗಿನ ತೇರು ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತವೆ. ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು ಅಥವಾ ಜಾನಪದ/ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು. ಈ ಹೇಳಿಕೆ ತೇರು ಕೃತಿಯನ್ನು ಅದರ ಪ್ರಥಮ ಆವೃತ್ತಿಯಂತೆ ಕಾಣುವ ‘ದೇಸಗತಿ’ ಕಥೆಯೊಡನೆ ಹೋಲಿಸಿದಾಗ ಹೆಚ್ಚು ಸ್ಪಷ್ಟವಾಗುತ್ತದೆ. +ತೇರು ಚಲಿಸುತ್ತದೆ. ಈ ತ್ಯಾಗಕ್ಕಾಗಿ ದ್ಯಾವಪ್ಪನಿಗೆ ದೇಸಾಯಿಯಿಂದ ಕಳ್ಳೀಗುದ್ದಿ ಎಂಬ ಊರಿನಲ್ಲಿ ಎಂಟೆಕರೆ ಜಮೀನು ಇನಾಮಾಗಿ ದೊರೆಯುತ್ತದೆ ; ಮತ್ತು ಅಂದಿನಿಂದ ಪ್ರತಿ ವರ್ಷ ದ್ಯಾವಪ್ಪ ಅಥವಾ ಅವನ ವಂಶದವರು ರಥೋತ್ಸವದ ದಿನ ರಥದ ಚಕ್ರಕ್ಕೆ ಹಣೆ ಒಡೆದುಕೊಂಡು ಮಾಡುವ ‘ರಕ್ತ ತಿಲಕ’ದ ಸೇವೆಯ ಆಚರಣೆ ಪ್ರಾರಂಭವಾಗುತ್ತದೆ. ದರೆ, ಕಾಲಕ್ರಮದಲ್ಲಿ ಜನರಿಗೆ ದೇವರಲ್ಲಿ ಮತ್ತು ರಥೋತ್ಸವದಲ್ಲಿಯೇ ನಂಬಿಕೆ ಕಮ್ಮಿಯಾಗುತ್ತದೆ ; ಇನಾಮಿನ ಜಮೀನನ್ನು ಮೋಸದಿಂದ ಆ ಊರಿನ ಗೌಡ ತನ್ನದಾಗಿಸಿಕೊಳ್ಳುತ್ತಾನೆ ; ಮತ್ತು ಆಧುನಿಕ ಕಾಲದ ದ್ಯಾವಪ್ಪನ ವಂಶಸ್ಥ (ಅವನ ಹೆಸರೂ ದ್ಯಾವಪ್ಪ ಎಂತಲೇ) ರಕ್ತ ತಿಲಕದ ಸೇವೆಯನ್ನು ತ್ಯಜಿಸಿ, ಕೆಲ ಕಾಲ ಜೆ.ಪಿ. ಆಂದೋಳನದಲ್ಲಿ ಭಾಗವಹಿಸಿ ಜೈಲಿಗೆ ಹೋಗಿ, ಆನಂತರ (ಬಾಬಾ ಆಮ್ಟೆ ಅವರ) ಸೇವಾಶ್ರಮವನ್ನು ಸೇರುತ್ತಾನೆ. +ದೇಸಗತಿಯಂತಹ ಊಳಿಗಮಾನ್ಯ ವ್ಯವಸ್ಥೆಯಾಗಲೀ, ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಾಗಲೀ, ಒಂದು ವ್ಯವಸ್ಥೆಗೆ ಅಧಿಕಾರವನ್ನು ಕೊಡುವ ಮತ್ತು ಅದನ್ನು ಮಾನ್ಯ ಮಾಡುವ ಅನೇಕ ಸಂಕಥನಗಳಲ್ಲಿ ಅತಿ ಪ್ರಬಲ ಹಾಗೂ ಪ್ರಭಾವಿಯಾದುದು ಧಾರ್ಮಿಕ ಸಂಕಥನ. “ನಾ ವಿಷ್ಣುಃ ಪೃಥಿವೀಪತಿಃ” ಎಂಬಂತಹ ಒಂದು ಸಮುದಾಯ ಮಾನ್ಯ ಮಾಡದಿದ್ದರೆ ಅಧಿಕಾರದಲ್ಲಿರುವ ಆ ಸಮುದಾಯದ ನಾಯಕನಿಂದಾಗುವ ಕೃತ್ಯಾಕೃತ್ಯಗಳನ್ನು, ಅಪಾರ ಜೀವಹಾನಿಯನ್ನು ಆ ಸಮುದಾಯ ಒಪ್ಪುವುದು ಸಾಧ್ಯವೇ ಇಲ್ಲ. ಹೀಗೆ ಪ್ರಭುತ್ವವನ್ನು ಅಸ್ತಿತ್ವಕ್ಕೆ ತರುವ, ಅದನ್ನು ಬಲಪಡಿಸುವ , ಹಾಗೂ ಅದಕ್ಕೆ ಮಾನ್ಯತೆ ದೊರಕಿಸಿ ಕೊಡುವ, ಒಂದು ಕಾಲಘಟ್ಟದ ಪ್ರಭಾವೀ ಧಾರ್ಮಿಕ ಸಂಕಥನದ ಸ್ವರೂಪವೇನು? ಅದು ರೂಪುಗೊಳ್ಳುವ ಪ್ರಕ್ರಿಯೆ ಎಂತಹದು?…..ಈ ಪ್ರಶ್ನೆಗಳು ತೇರು ಕೃತಿಯ ಕೇಂದ್ರದಲ್ಲಿದೆ. +ಮೊದಲನೆಯದಾಗಿ (ಕೃತಿ ದಾಖಲಿಸುವಂತೆ) ಯಾವುದೇ ಒಂದು ಧಾರ್ಮಿಕ ಸಂಕಥನಕ್ಕೆ ಶಕ್ತಿ ಬರುವುದು ಅದರ ಮೂರ್ತ ರೂಪದ ಸಂಕೇತಗಳ ಮೂಲಕ – ಗುಡಿ ಗೋಪುರಗಳು, ಸಾಮೂಹಿಕ ಉತ್ಸವಾಚರಣೆಗಳು… ಇತ್ಯಾದಿ ಸಂಕೇತಗಳ ಮೂಲಕ. ಈ ಕಾರಣಕ್ಕಾಗಿಯೇ ಪ್ರತಿಯೊಬ್ಬ ರಾಜ – ನವಾಬನೂ ಮಾಡುತ್ತಿದ್ದ/ಮಾಡುವ ಮೊದೆಲ ಕೆಲಸವೆಂದರೆ ದೇವಾಲಯಗಳನ್ನು /ಮಸೀದೆಗಳನ್ನು / ಚರ್ಚುಗಳನ್ನು ನಿರ್ಮಿಸುವುದು. ಇವುಗಳು ಬೃಹತ್ತಾಗಿದ್ದಷ್ಟೂ, ಭವ್ಯವಾಗಿದ್ದಷ್ಟೂ ಇವುಗಳ ಪ್ರಭಾವ ಹೆಚ್ಚುತ್ತದೆ. ಇದೇ ನೆಲೆಯಲ್ಲಿ, ದರೋಡೆಕೋರ ವೆಂಕೊಭರಾವ್ ‘ರಂಗೋ ಪಟವರ್ಧನ್ ದೇಸಾಯಿ’ ಆಗುವ ಪ್ರಕ್ರಿಯೆಯ ಮೊದಲನೆಯ ಹೆಜ್ಜೆಯೆಂದರೆ ಅವನು ನಿರ್ಮಿಸುವ ವಿಠ್ಠಲ ದೇವರ ಗುಡಿ ಮತ್ತು ಅದರ ಬೃಹತ್ ತೇರು. ಈ ಭಾಗದ ನಿರೂಪಕ ಸ್ವಾಂವಜ್ಜ ಹೇಳುವಂತೆ – “ದೇಸಗತಿ ಹಾಳಾದರೂ ಈ ಗುಡಿಯ ಒಂದ ಮೂಲಿ ಸೈತ ಮುಕ್ಕಾಗದಂಗ ನಿಂತೈತಿ…ದೇಸಗತಿ ಕಟ್ಟಾಕ ಬಲಾ ಕೊಟ್ಟ ಬಲವಂತ ದೈವ ಅದಾ…..ವಿಠ್ಠಲ ರುಕುಮಾಯಿ ದೇವರ ತೇರಂದರ ತೇರು ನೋಡರಿ…ಅದನೂ ದೇಸಾಯರಣಿ ಕಟ್ಟಿಸಿದ್ದು…ಏನಿಲ್ಲಂದರೂ ಒಂದ ಗೇಣು ದೀಡಗೇಣು ದಪ್ಪನಾದ ಎರಡು ಮಾರು ಎತ್ತರಿದ್ದ ಕಲ್ಲಿನ +ದೇಸಗತಿ ಕಥಾ ಸಂಕಲನದಲ್ಲಿರುವ ‘ದೇಸಗತಿ’ ಎಂಬ ಕಥೆ ಮಧ್ಯಕಾಲೀನ ಭಾರತದಲ್ಲಿ ವ್ಯಕ್ತಿಯೊಬ್ಬನ ಸಾಹಸ,ಆಕಸ್ಮಿಕಗಳು ಇವುಗಳ ಕಾರಣದಿಂದಾಗಿ ಹೇಗೆ ಅನೇಕಾನೇಕ ದೇಸಗತಿಗಳು, ಪಾಳೆಯ ಪಟ್ಟುಗಳು ಮತ್ತು ಚಿಕ್ಕ ಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.ಈ ಕಥೆಯಲ್ಲಿ , ಧರಮನಟ್ಟಿಯ ದೇಸಗತಿಯನ್ನು ಸ್ಥಾಪಿಸುವ ವೆಂಕೋಬರಾವ್ ನಿಜವಾಗಿ ಒಬ್ಬ ಪಿಂಡಾರೆ ನಾಯಕ.ಒಂದು ಸಂದರ್ಭದಲ್ಲಿ ಪೇಶ್ವೆ ಸೈನಿಕರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಓಡುತ್ತಿರುವಾಗ ಅಕಸ್ಮಾತ್ತಾಗಿ ಧರಮನಟ್ಟಿ ಎಂಬ ಗ್ರಾಮಕ್ಕೆ ಬರುತ್ತಾನೆ.ಅಲ್ಲಿಯವರೆಗೂ ಸಮರ್ಥ ಸ್ಥಳೀಯ ನಾಯಕರಿಲ್ಲದೆ ಪದೇ ಪದೇ ದರೋಡೆಕೋರರ ಧಾಳಿಗೆ ಪಕ್ಕಾಗುತ್ತಿದ್ದ ಧರಮನಟ್ಟಿಯಲ್ಲಿ ವೆಂಕೋಬ ರಾವ್ ‘ರಂಗೋ ಪಟವರ್ಧನ್’ ಎಂಬ ಹೊಸ ಹೆಸರಿನಲ್ಲಿ ಅಲ್ಲಿಯೇ ನೆಲೆಯೂರಿ, ಒಂದು ಪ್ರಬಲ ದೇಸಗತಿಯನ್ನು ಸ್ಥಾಪಿಸುತ್ತಾನೆ. ಈ ದೇಸಗತಿಯ ಸ್ಥಾಪನೆಯ ಹಿಂದೆ ವೆಂಕೋಬರಾಯನ ಸುಳ್ಳು,ಕಾರಭಾರಿಯಾದ ತ್ರಿಯಂಬಕ ಭಟ್ಟನ ಅಧಿಕಾರ ಲಾಲಸೆ, ಅಲ್ಲಿಯ ಸಾಮಾನ್ಯ ಜನರ ಮುಗ್ಧತೆ, ಮತ್ತು ಅಂದಿನ ಕಾಲದ ಅರಾಜಕತೆ – ಇವೆಲ್ಲವೂ ಕ್ರಿಯಾಶೀಲವಾಗಿರುವ್ಠುದನ್ನು ಕಥೆ ಸಮರ್ಥವಾಗಿ ದರ್ಶಿಸುತ್ತದೆ. ಮುಂದೆ ಬ್ರಿಟಿಷರ ಆಗಮನದ ನಂತರ ಮತ್ತು ಸ್ವಾತಂತ್ರ್ಯಾನಂತರ ಭಾರತದ ಇತರ ರಾಜ್ಯ – ಪಾಳೆಪಟ್ಟುಗಳಂತೆ ಧರಮನಟ್ಟಿಯ ದೇಸಗತಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ; ಮತ್ತು ಕೊನೆಯ ದೇಸಾಯಿಯಾದ ಮಾಣಿಕ್ ಅಮೆರಿಕನ್ ಸ್ತ್ರೀಯೊಬ್ಬಳನ್ನು ಮದುವೆಯಾಗಿ ಅಮೆರಿಕಾಕ್ಕೆ ವಲಸೆ ಹೋಗುತ್ತಾನೆ. +‘ದೇಸಗತಿ’ ಎಂಬ ಒಂದು ರಾಜಕೀಯ ವ್ಯವಸ್ಥೆಯ ಆಳದಲ್ಲಿರುವ ಕಪಟ – ಸ್ವಾರ್ಥ-ಕ್ರೌರ್ಯಗಳನ್ನು ‘ದೇಸಗತಿ’ ಕಥೆ ಪರಿಣಾಮಕಾರಿಯಾಗಿ ಬಯಲು ಮಾಡುತ್ತದೆ, ನಿಜ.ಆದರೆ, ಒಂದು ಮಟ್ಟದಲ್ಲಿ ಕಥೆ ವೆಂಕೋಬ ರಾವ್ ಉರುಫ್ ರಂಗೋ ಪಟವರ್ಧನ್‌ನಂತಹವರ ಸಾಹಸಗಳನ್ನು ವೈಭವೀಕರಿಸುತ್ತದೆ ಕೂಡಾ.(ಪ್ರೇಮ – ಕಾಮ- ಸಾಹಸಗಳೇ ಪ್ರಧಾನವಾಗಿರುವ ವೆಂಕೋಬರಾಯನ ಕಥೆ ಎಂಬ ಪ್ರಸಿದ್ಧ ನೀಳ್ಗವನವನ್ನು ನೆನಪಿಗೆ ತರುತ್ತದೆ). ‘ದೇಸಗತಿ’ಯಂತಹ ಊಳಿಗಮಾನ್ಯ ವ್ಯವಸ್ಥೆಯನ್ನು ಮತ್ತೊಂದು ಪರಿಪ್ರೇಕ್ಷ್ಯದಿಂದ ,ಆಳವಾಗಿ ವಿಶ್ಲೇಷಿಸುವ ಪ್ರಯತ್ನ ತೇರು ಕೃತಿಯಲ್ಲಿದೆ. +ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ ‘ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ.ಹೊನ್ನ ಕಳಸದ,ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ. ಆದರೆ ಮೊದಲನೆಯ ರಥೋತ್ಸವದ ಸಂದರ್ಭದಲ್ಲಿಯೇ ಆ ತೇರು ನೂರಾರು ಜನರು ಪ್ರಯತ್ನಿಸಿದರೂ ಚಲಿಸುವುದಿಲ್ಲ ; ಮತ್ತು ಶಾಸ್ತ್ರದ ಅಯ್ಯನವರು ನರ ಬಲಿ ಆಗಬೇಕೆಂದು ಹೇಳುತ್ತಾರೆ. ಕೊನೆಗೆ. ‘ಕೆಳ’ ಜಾತಿಯ ಬಡ ದ್ಯಾವಪ್ಪ ಎಂಬುವವನ ಮಗನನ್ನು ಬಲಿ ಕೊಟ್ಟ ನಂತರ ಗಾಲಿಗಳು…ಗಾಲಿಗಳಿಗಿಂತ ಒಂದು ಮಳದಷ್ಟು ಮ್ಯಾಲ ಎತ್ತರಕ್ಕೆ …ಎತ್ತರವಾದ ಈ ಚೌಕಟ್ಟಿನ ಮ್ಯಾಲೆ ಕುಂತಿದೆ ಆರು ಮಜಲಿನ ಅಷ್ಟ ಕೋನಾಕಾರದ ತೇರು…”. +ಎರಡನೆಯದಾಗಿ, ಧಾರ್ಮಿಕ ಸಂಕಥನಗಳು ತಮ್ಮ ಉಳಿವಿಗಾಗಿ ಮತ್ತು ಪ್ರತಿಷ್ಠೆಗಾಗಿ ಒಂದು ಬಗೆಯ ಹಿಂಸೆಯನ್ನು ವೈಭವೀಕರಿಸುತ್ತವೆಯಷ್ಟೇ ಅಲ್ಲದೇ ಅದನ್ನು ಅನಿವಾರ್ಯವಾಗಿಸುತ್ತವೆ. (“ಸ್ವಧರ್ಮೇ ನಿಧನಃ ಶ್ರೇಯಃ ಪರಧರ್ಮೋ ಭಯಾವಹಃ”, ಮೃತೋವಾ ಪ್ರಾಪ್ತ್ಯತೆ ಸ್ವರ್ಗಂ,ಜಿತೋವಾ ಭುಕ್ಷ್ಯಸೆ ಮಹೀಂ” ಇತ್ಯಾದಿ ವೈಭವೀಕರಿಸುವ ಸೂತ್ರಗಳು) ಈ ಸಂದರ್ಭದಲ್ಲಿ ಮುಖ್ಯವಾಗಿ ನಾವು ಗಮನಿಸಬೇhಕದ ಅಂಶವೆಂದರೆ ಇಂತಹ ಧಾರ್ಮಿಕ ಸಂಕಥನಗಳ ಆಧಾರವಾದ ಸಾಮೂಹಿಕ ನಂಬಿಕೆ – ಆಚರಣೆಗಳ ಬಲಿ ದಲಿತರು ಅಥವಾ/ಮತ್ತು ಸ್ತ್ರೀಯರಾಗಿರುತ್ತಾರೆ.ಅತ್ಯಂತ ಸಿನಿಕತನದ “ದೈವೋ ದುರ್ಬಲ ಘಾತಕಃ” ಎಂಬಂತಹ ಹೇಳಿಕೆಗಳು ಇಂತಹ ಸಂದರ್ಭದಲ್ಲಿ ವಾಚ್ಯಾರ್ಥದ ನೆಲೆಯಲ್ಲಿಯೂ ಸತ್ಯವಾಗುತ್ತವೆ ; ಊರ ಹಬ್ಬಗಳಲ್ಲಿ , ‘ಊರಿನ ಕ್ಷೇಮಕ್ಕಾಗಿ’ ಸಿಡಿ ಏರುವವರು, ಕೊಂಡ ಹಾಯುವವರು, ಓಕಳಿ ಆಡುವವರು, ಕೆರಗೆ ‘ಹಾರ’ವಾಗುವವರು,ದೇವದಾಸಿಯರು, ‘ಸತಿ’ಯಾಗುವವರು …ಇವರೆಲ್ಲರೂ ದಲಿತರೇ / ಸ್ತ್ರೀಯರೇ. +ರಂಗೋ ಪಟವರ್ಧನ್ ಕಟ್ಟಿಸಿದ ತೇರು ಚಲಿಸದೆ ಅದಕ್ಕೆ ನರಬಲಿ ಕೊಡಬೇಕೆಂದು ತೀರ್ಮಾನಿಸಿದಾಗ ದೇಸಾಯರು, ಕಾರಭಾರಿಗಳು, ಡಂಣಾಯಕರು ಇತ್ಯಾದಿ ಅಧಿಕಾರಸ್ಥರೆಲ್ಲರೂ ಒಂದಲ್ಲ ಒಂದು ಕಾರಣ ಹೇಳಿ ತಾವು /ತಮ್ಮ ಮನೆಯವರು ಬಲಿಯಾಗುವ ಆಪತ್ತಿನಿಂದ ತಪ್ಪಿಸಿಕೊಳ್ಳುತ್ತಾರೆ.ಕೊನೆಗೆ ಅವರೆಲ್ಲರೂ, ಎಂದರೆ ಅಧಿಕಾರದಲ್ಲಿರುವವರೆಲ್ಲರೂ, “ಸ್ವಾಮೀಗೆ ಬೇಕಂತ ನರಮನುಸ ಬಲಿಯು/ಕಾಟುಕರ ಜಾತೀಯ ಮನುಸಾ ಬೇಕಲ್ಲೋ” ಎಂದು ನಿರ್ಧರಿಸುತ್ತಾರೆ.ಬಲಿಯಾಗುವವರಲ್ಲಿ “ಹೆಣ್ಣು ಗಂಡೆಂಬುವ ಭೇದ ಇಲ್ಲ…..ಸಣ್ಣವರು, ದೊಡ್ಡವರು ಅಂಬುವ ವಯಸ್ಸಿನ ನಿರ್ಬಂಧ ಇಲ್ಲ… ಫಕ್ತ ಉತ್ತಮರ ಕುಲದವರು ಮಾತ್ರ ಬ್ಯಾಡ / ಉತ್ತಮರ ಕುಲದವರನ್ನ ಬಿಟ್ಟು ಯಾವುದಾದರೂ ಕಾಟುಕರ ಕುಲದ ಒಂದು ಇಸಮನ್ನು ಹಿಡಿದು ತೇರಿನ ಬಲೆಗೆ ತರಬೇಕು”. ಅಂತೆಯೇ ಕೊನೆಗೆ ಸೂತ್ರದ ಗೊಂಬೆ ಆಟದಿಂದ ಹೊಟ್ಟೆ ಹೊರೆಯುವ, ಒಂಭತ್ತು ಮಕ್ಕಳು ಮತ್ತು ಬಸುರಿ ಹೆಂಡತಿ ಇರುವ, ಬಡ ದ್ಯಾವಯ್ಯ ತನ್ನ ನಡುಕಲ ಮಗನನ್ನು ‘ದೇವರ ಕೆಲಸ’ಕ್ಕೆ ಕೊಡಲು ಒಪ್ಪುತ್ತಾನೆ. +ದೇವರ/ಧರ್ಮದ ವಿರುದ್ಧ ಇಂದಿನ ಕಾಲದ ದ್ಯಾವಪ್ಪ ಬಂಡಾಯ ಹೂಡುವುದು ಈ ಕಾರಣಕ್ಕಾಗಿಯೇ – ದುರ್ಬಲರ ಮೇಲಾಗುವ ಕ್ರೌರ್ಯವನ್ನು ಈ ದೇವರುಗಳು/ಧರ್ಮಗಳು ಸಮರ್ಥಿಸುತ್ತವೆ,ಪೋಷಿಸುತ್ತವೆ ಎಂಬ ಕಾರಣಕ್ಕಾಗಿ.ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗಿ ಬಂದ ನಂತರ ದ್ಯಾವಪ್ಪ ಹೀಗೆ ಹೇಳುತ್ತಾನೆ : +“…ನಮ್ಮದು ಪುಣ್ಯ…ನಮ್ಮ ಪೂರ್ವಿಕರೆಲ್ಲಾ ಅವತಾರೀ ಪುರುಷರೂ… +ಹಂಗಣಿ- ಹೀಂಗಣಿ ಅಂತ …ತೆಲೀ ಚಿಟ್ಟ ಹಿಡದ ಹೋತರೀ…ಹಿಂದಿಂದ ತಗೊಂಡು ಹಿತ್ತಲದಾಗ ಅತ್ತರಂತ!…ಅಲ್ಲರೀ ನಮ್ಮ ವ್ಯವಸ್ಥಾದಾಗ ಬಡವರು ಮರ್ಯಾದಿಂದ ಬದಕೂ ಹಾದೀ ಹೇಳರಿ…ಹಳ್ಯಾಗಿನ ಗೌಡರೂ-ಕುಲಕರ್ಣ್ಯಾರೂ-ಜಮೀನದಾರರೂ ಮತ್ತ ಜಾತ್ಯಸ್ಥರು ಮಾಡತಿರೋ ಹಂತಾ ದಂಡಾವರ್ತೀ ಬಗ್ಗೆ ವಿಚಾರ ಮಾಡರಿ…” +ದ್ಯಾವಪ್ಪನ ಕಳಕಳಿಯ ಈ ಮಾತುಗಳು ಎಲ್ಲಾ ಧಾರ್ಮಿಕ ಸಂಕಥನಗಳಿಗೂ ಅನ್ವಯಿಸುತ್ತವೆ. ಏಕೆಂದರೆ ಎಲ್ಲಾ ‘ತೇರು’ಗಳೂ ಹರಿಯುವುದು ದಲಿತರ, ದುರ್ಬಲರ,ಸ್ತ್ರೀಯರ ದೇಹಗಳ ಮೇಲೆಯೇ. +ಧಾರ್ಮಿಕ ಸಂಕಥನಗಳಿಗೂ ಒಂದು ಆದಿಯಿದೆ, ಬೆಳವಣಿಗೆಯಿದೆ.ಈ ಬೆಳವಣಿಗೆಯ, ಬೆಳೆದು ಬಲಶಾಲಿಯಾಗುವ ಪ್ರಕ್ರಿಯೆಯನ್ನು ನಾವು ಗುರುತಿಸಲು ಸಾಧ್ಯವೆ? ತೇರು ಕೃತಿಯ ಮುಖ್ಯ ಕಾಳಜಿಗಳಲ್ಲಿ ಇದೊಂದು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಕೃತಿಯ ಅದ್ಭುತ ನಿರೂಪಣಾ ಕ್ರಮಗಳಲ್ಲಿಯೇ ಕಾಣಬಹುದು. +ಕೃತಿಯಲ್ಲಿ ಅನೇಕ ನಿರೂಪಕರಿದ್ದಾರೆ.ಅನೇಕ ಶೈಲಿಯ/ಧಾಟಿಯ ನಿರೂಪಣೆಗಳಿವೆ.ಕೃತಿಯ ಒಟ್ಟಾರೆ ನಿರೂಪಕ ಬೆಂಗಳೂರಿನಲ್ಲಿರುವ ಪಾಟೀಲನೆಂಬ ಪತ್ರಕರ್ತ. ತನ್ನ ತಿರುಗಾಟದಲ್ಲಿ ಅವನು ಭೇಟಿ ಮಾಡುವ ಅನೇಕ ವಿಕ್ಷಿಪ್ತ ವ್ಯಕ್ತಿಗಳಲ್ಲಿ ಸ್ವಾಂವಜ್ಜನೆಂಬ ಧರಮನಟ್ಟಿಯ ಮುದುಕನೂ ಒಬ್ಬ. ಇವನ ಮೂಲಕ ಮತ್ತು ಇವನ ಮಾತುಗಳಲ್ಲಿಯೇ ನಾವು ಧರಮನಟ್ಟಿಯ ಪೂರ್ವೇತಿಹಾಸ ಮತ್ತು ಸದ್ಯ ಸ್ಥಿತಿ ಇವುಗಳನ್ನು ಅರಿಯುತ್ತೇವೆ. ಆದರೆ, ಕಥೆಯ ಒಂದು ಮುಖ್ಯ ಭಾಗವಾದ ತೇರಿನ ಮತ್ತು ರಕ್ತ ತಿಲಕದ ಸಂಗತಿ ವೃತ್ತಿ ಗಾಯಕರಾದ ಗೊಂದಲಿಗರಿಂದ,ಅವರ ‘ಗಾಯನ’ದ ಮೂಲಕವೇ ನಿರೂಪಿಸಲ್ಪಟ್ಟಿದೆ.(ಈ ಗೊಂದಲಿಗರ ಕಥನ ಕಾಲ್ಪನಿಕವಾಗಿದ್ದರೂ ವಾಸ್ತವಿಕ ಮೌಖಿಕ ಕಥನ/ಸ್ಥಳ ಪುರಾಣಗಳಷ್ಟೇ ಪರಿಣಾಮಕಾರಿಯಾಗಿದ್ದು,ಕಥೆಗಾರರ ಬಹುಮುಖೀ ಸೃಜನಶೀಲ ಪ್ರತಿಭೆಗೆ ನಿದರ್ಶನವಾಗಿದೆ.) ಪರಿಣಾಮತಃ ಮುಖ್ಯ ನಿರೂಪಕನ ವಸ್ತು ನಿಷ್ಠ ಧ್ವನಿ,ಸ್ವಾಂವಜ್ಜನ ಹಳಹಳಿಕೆಯ ಹಾಗೂ ಕಳಕಳಿಯ ಧ್ವನಿ, ಗೊಂದಲಿಗರ ಶೈಲೀಕೃತ ಹಾಗೂ ಕಥನೋತ್ಸಾಹದ ಧ್ವನಿ, ಕೊನೆಯ ತಲೆಮಾರಿನ ದ್ಯಾವಪ್ಪನ ಹತಾಶ ಧ್ವನಿ ….ಇವೆಲ್ಲವೂ ಒಂದೆಡೆ ಬಂದು, ನಿರೂಪಣೆಯ ನೆಲೆಯಲ್ಲಿ ಮೌಲಿಕ ಬಹುಧ್ವನಿತ್ವ ತೇರು ಕೃತಿಗೆ ಲಭಿಸಿದೆ. +ಇಂತಹ ಭಿನ್ನ ಭಿನ್ನ ನಿರೂಪಣೆಗಳ ಮೂಲಕ ಲೇಖಕರು ಒಂದು ಧಾರ್ಮಿಕ ಸಂಕಥನ ಹೇಗೆ ಜನ್ಮ ತಾಳುತ್ತದೆ ಮತ್ತು ಯಾವ ಯಾವ ಅಂಶಗಳು ಅದನ್ನು ಪೋಷಿಸುತ್ತವೆ ಎಂಬುದನ್ನು ಯಶಸ್ವಿಯಾಗಿ ನಾಟ್ಯೀಕರಿಸುತ್ತಾರೆ.ಕೃತಿ ದರ್ಶಿಸುವಂತೆ, ಆಕಸ್ಮಿಕವಾಗಿ ಮತ್ತು ಅಧಿಕಾರಸ್ಥರ ಕುಟಿಲತೆಯಿಂದ ಒಂದು ಘಟನೆ (ಅಥವಾ ದುರ್ಘಟನೆ) ನಡೆಯುತ್ತದೆ – ತೇರಿಗೆ ಕೊಡುವ ನರಬಲಿಯಂತೆ. ಇದೊಂದು ದುರದೃಷ್ಟಕರ ಘಟನೆಯೆಂದು ಜನರು ನಂತರ ಮರೆತು ಬಿಡಬಹುದಾಗಿತ್ತು – ಆದರೆ ಆ ಘಟನೆಯಲ್ಲಿಯೇ ತಮ್ಮ ಅಧಿಕಾರದ ಸಮರ್ಥನೆಯನ್ನು ಕಂಡುಕೊಂಡ ‘ಪ್ರಭುಗಳು’ ಅದನ್ನೊಂದು ವಾರ್ಷಿಕ ಅದನ್ನೊಂದು ಆಚರಣೆಯನ್ನಾಗಿಸಿ, ಅದರ ನೆನಪನ್ನು ಜೀವಂತವಾಗಿಡುತ್ತಾರೆ. ಹಾಗೆಯೇ ಆ ಘಟನೆಯಿಂದ ನೊಂದವರೂ ಕೂಡಾ ಅದನ್ನು ವೈಭವೀಕರಿಸಿ ಅದರ ನೆನಪನ್ನು ಜೋಪಾನಿಸುತ್ತಾರೆ – ಮೂಲ ದ್ಯಾವಪ್ಪನಂತೆ. ಅವನು ‘ದೇಸಗತಿಯ ದೈವಕ್ಕ ಮಗನನ್ನು ಬಲಿಕೊಟ್ಟ ಕಥೆಯನ್ನು ಕಣ್ಣು ಮನಸು ತುಂಬುವ ಹಾಗೆ ವರ್ಣಿಸತಾನೆ…ಕಾಣದ ಕಥಿಯನ್ನಣಿ ಕಂಡಂಗೆ ಹೇಳುವವ ಅವ…ಇನ್ನು ತನ್ನ ತೊಗಲಿಗೇ ಅಂಟಿದ ಅನುಭವಕ್ಕೆ ಬಣ್ಣಾ ತುಂಬುವದನ್ನ ಯಾರಾದರೂ ಹೇಳಿಕೊಡಬೇಕೇನು !” ಇದು ಎರಡನೆಯ ಘಟ್ಟ. +ಎರಡನೆಯ ಘಟ್ಟದಲ್ಲಿ , ಮೂಲ ಘಟನೆಯ ವಿವರಗಳು(ಸಾಂಕೇತಿಕವಾಗಿ) ಮತ್ತೆ ಮತ್ತೆ ಪುನರಾವರ್ತಿಸಲ್ಪಟ್ಟು, ಸುತ್ತ ಮುತ್ತಲ ಜನರ ಸಾಮೂಹಿಕ ಭಾವಕೋಶವನ್ನು ಆಕ್ರಮಿಸಿದ ನಂತರ ಅವು (ಘಟನೆಯ ಅತಿ ರಂಜಿತ ವಿವರಗಳು) ಒಂದು ‘ಕಥನ’ದ ರೂಪವನ್ನು ಪಡೆಯುತ್ತವೆ – ವೃತ್ತಿ ಗಾಯಕರಾದ ಗೊಂದಲಿಗರು/ಹಳಬರು ಹಾಡುವ ‘ತೇರಿನ ಕಥೆ’ಯಂತೆ. ಯಾವುದೇ ಒಂದು ವಾಸ್ತವ ಘಟನೆ ಶಾಬ್ದಿಕ/ನಾದದ /ಶಿಲ್ಪದ ರೂಪ ಪಡೆದ ಕೂಡಲೇ ಅದಕ್ಕೊಂದು ಬಗೆಯ ‘ಶಾಶ್ವತತೆ’ ಲಭಿಸುತ್ತದೆ. ಇಲ್ಲಿಂದ ಮುಂದೆ ಅದೊಂದು ಸ್ವತಂತ್ರ ಸಂಗತಿಯಾಗಿ, ವಿಶಿಷ್ಟ ಸ್ಥಳ – ಕಾಲಗಳ ಬದ್ಧತೆಯನ್ನು ಮೀರಿ, ಜನರನ್ನು ಪ್ರಭಾವಿಸುವ ಹಾಗೂ ನಿಯಂತ್ರಿಸುವ ‘ಸಂಕಥನ’ವಾಗುತ್ತದೆ. +ಪ್ರಭುತ್ವ ಕೇಂದ್ರಿತ ವ್ಯವಸ್ಥೆ ಹುಟ್ಟು ಹಾಕುವ ಸಂಕಥನಗಳ ವಿವರಗಳು ಕಾಲಕಾಲಕ್ಕೆ ಬೇರೆ ಬೇರೆಯಾಗಿರಬಹುದು ; ಆದರೆ ಅವುಗಳ ಮೂಲ ಆಶಯ ಮತ್ತು ಸ್ವರೂಪ ಬದಲಾಗುವುದಿಲ್ಲ. ಧರಮನಟ್ಟಿಯ ತೇರಿನ ಸಂಕಥನದ ಬದಲಿಗೆ ಮತ್ತೊಂದು, ‘ನವ ನಿರ್ಮಾಣ ಚಳುವಳಿ’ಯ, ಸಂಕಥನ ಜನ್ಮ ತಾಳಬಹುದು ; ಕಾಲ ಕ್ರಮದಲ್ಲಿ ಅದೂ ಪೊಳ್ಳೆಂದು ಸಾಬೀತಾಗಿ ಮತ್ತೊಂದು ಅದರ ಸ್ಥಾನಕ್ಕೆ ಬರಬಹುದು.ಒಂದು ಕಾಲಘಟ್ಟದಲ್ಲಿ ಮೂಲ ಪುರುಷ ದ್ಯಾವಪ್ಪ “ನೋಡೂ…ದೈವ ಹಿಂತಾ ಸೇವಾ ಮಾಡೂದನ್ನ ನಮ್ಮ ಮನಿತನಕ್ಕ ಕೊಟ್ಟೈತಿ” ಎಂದು ಅಖಂಡ ವಿಶ್ವಾಸದಿಂದ ಹೇಳುವಂತೆಯೇ, ಅವನ ವಂಶಕ್ಕೆ ಸೇರಿದ ಮತ್ತೊಬ್ಬ ದ್ಯಾವಪ್ಪ -“…ಅವರು ಇದ್ದರ ಏನಾತರೀ…ಜೇಪೀ ಅದಾರಲ್ಲರೀ…ಇವರು ತಪ್ಪು ಮಾಡಿದರ ಜೇಪಿ ಅವರು ಸುಮ್ಮನಣಿ ಬಿಟ್ಟಾರ ಏನರೀ?… ಕಿಂವೀಗೆ ಹಳ್ಳಾ ಹಚ್ಚಿ ಬುದ್ಧೀ ಹೇಳ್ಯಾರಲ್ಲರೀ…” ಎಂದು ನಂಬುತ್ತಾನೆ. ಶ್ರದ್ಧಾ ಕೇಂದ್ರಗಳು ಬೇರೆ ಬೇರೆಯಾಗಿರಬಹುದು, ಆದರೆ ಶ್ರದ್ಧೆಯ ಸ್ವರೂಪ ಒಂದೇ ಆಗಿರುತ್ತದೆ. +ಇಂತಹ ಸಂಕಥನಗಳಿಂದ ಬಿಡುಗಡೆ ಪಡೆಯುವ ದಾರಿಗಳು ಯಾವವು? ತೇರು ಎರಡು ಸಾಧ್ಯತೆಗಳನ್ನು ನಮ್ಮ ಮುಂದಿಡುತ್ತದೆ – ಎರಡೂ ಅಸಾಧಾರಣ ವ್ಯಕ್ತಿಗಳಿಗೆ ಮಾತ್ರ ಕಾಣಿಸುವ ಸಾಧ್ಯತೆಗಳು. ಒಂದು : ಒಂದು ಸಂಕಥನಕ್ಕೆ ತನ್ನನ್ನು ಕಾಯಾ ವಾಚಾ ಮನಸಾ ಸಂಪೂರ್ಣವಾಗಿ ಒಪ್ಪಿಸಿಕೊಂಡು ಬಿಡುವುದು ; ಮತ್ತು ಆ ಮೂಲಕ ಆ ಸಂಕಥನದ ನಿಯಂತ್ರಣವನ್ನು ಮೀರುವುದು – ಪ್ರಥಮ ದ್ಯಾವಪ್ಪನಂತೆ.ಅವನು ರಕ್ತ ತಿಲಕದ ಆಚರಣೆಯನ್ನು ಶೋಷಣೆಯಂತೆ ಕಾಣದೇ (ಅದು ಶೋಷಣೆಯೇ ಆಗಿದ್ದರೂ), +‘ಸೇವೆ’ಯಂತೆ ಪರಿಗಣಿಸಿ, ಅದಕ್ಕಾಗಿ (ಹಾಸ್ಯಾಸ್ಪದವೆನಿಸಿದರೂ) ತನ್ನ ‘ರಕ್ತ ಶುದ್ಧಿ’ಯನ್ನು ಮಾಡಿಕೊಂಡು, ರಥೋತ್ಸವದ ಒಂದು ತಿಂಗಳ ಮೊದಲೇ ಮನೆಯಿಂದ ಹೊರಟು,ಸುತ್ತಮುತ್ತಲಿನ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಕೊನೆಗೆ ತೇರಿನ ಸೇವೆ ಮಾಡಿ ತನ್ನನ್ನು ಕೃಕೃತ್ಯನೆಂದು ಭಾವಿಸುತ್ತಾನೆ. (ಈ ಭಾಗ ಕೃತಿಯಲ್ಲಿ ಅನುಭಾವೀ ಕಾವ್ಯಾತ್ಮಕತೆಯನ್ನು ಪಡೆಯುತ್ತದೆ). ಇಂತಹ ಸಂಪೂರ್ಣ ಶರಣಾಗತಿಯ ಕಾರಣದಿಂದಲೇ ಅವನಿಗೆ ಗೂಗಿಕೊಳ್ಳದಲ್ಲಿ ಗಂಗಾಮಾಯಿಯ ತುಂಟ ನಡೆಯನ್ನು , ಮತ್ತೊಂದು ಕಡೆ ಅವಳ ಪ್ರಶಾಂತ ಮಂದಸ್ಮಿತವನ್ನು ಮತ್ತು ಇನ್ನೊಂದು ಕಡೆ ಅವಳ ಚೇಷ್ಟೆಯ ಜಿಗಿತವನ್ನು ಕಾಣಲು, ಅನುಭವಿಸಲು ಸಾಧ್ಯವಾಗುತ್ತದೆ. “ಈ ಪೃಥುವೀ ಅಂಬುದರ ಮ್ಯಾಲೆ ಶಿವ ಹೆಂಗೆ ಕಾಣಸತಿದ್ದಾನೂ…” ಎಂದು ಸೋಜಿಗ ಪಡಲು ಸಾಧ್ಯವಾಗುತ್ತದೆ. ರಾತ್ರಿಯ ಬೆಳದಿಂಗಳನ್ನು ಮನಸ್ಸಿನ ತುಂಬಾ ಅವನು ತುಂಬಿಕೊಂಡು ಅಪೂರ್ವ ಶಾಂತಿಯನ್ನು ಪಡೆಯುತ್ತಾನೆ. ಇದು ನಾಮದೇವ,ತುಕಾರಾಮ ಮುಂತಾದ ಸಂತರಿಗಿರುವ ಸಾಧ್ಯತೆ. +ಇಂತಹ ಸಾಧ್ಯತೆ ಇಂದು ದೂರವಾಗಿದೆ. ಆಧುನಿಕ ದ್ಯಾವಪ್ಪ ಹೇಳುವಂತೆ, ಇಂದು “ದೇವರೂ ದಿಂಡರೂ ಎಲ್ಲಾ ಔಟ್ ಆಫ್ ಡೇಟ್ ಆಗ್ಯಾವರೀ…ಗೂಗೀ ಕೊಳ್ಳದಾಗ ಈಗ ಯಾವ ಸಿದ್ಧರೂ ಕಾಣೂದಿಲ್ಲ..ಅಲ್ಲಿ ಈಗ ಕಳ್ಳರು ಅಡಗಿಕೊಂಡಿರತಾರರಿ…ನವಲ ತೀರ್ಥದಾಗ ಗಂಗವ್ವ ಈಗ ಸೆಳವ ಕಳಕೊಂಡಾಳರಿ…” ಹೀಗೆ ಬದಲಾದ ಸಾಮಾಜಿಕ – ರಾಜಕೀಯ ಪರಿಸ್ಥಿತಿಯಲ್ಲಿ ಇರುವ ಮತ್ತೊಂದು ಸಾಧ್ಯತೆಯೆಂದರೆ ತ್ಯಾಗಕ್ಕಾಗಿ, ದೀನ ದುಃಖಿಗಳ ಸೇವೆಗಾಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು – ಕುಷ್ಠ ರೋಗಿಗಳ ಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಬಾಬಾ ಆಮ್ಟೆಯವರಂತೆ, ಮದರ್ ತೆರೆಸಾ ಅವರಂತೆ. ಇಂದಿನ ದ್ಯಾವಪ್ಪ ಕೊನೆಗೆ ಆಮ್ಟೆಯವರ ಆಶ್ರಮವನ್ನೇ ಸೇರುತ್ತಾನೆ. +ಇವೆರಡೂ ಆಯ್ಕೆಗಳು ಸಾಧ್ಯವಿಲ್ಲದ ಅಸಂಖ್ಯಾತ ಜನ ಸಾಮಾನ್ಯರು ಆಧುನಿಕತೆ, ರಾಷ್ಟ್ರ, ಸ್ವಧರ್ಮ…ಇತ್ಯಾದಿ ಒಂದಲ್ಲಾ ಒಂದು ಸಂಕಥನದ ಒಳಗೇ ಇರಬೇಕಾಗುತ್ತದೆ – ಬೃಹತ್ ಗಾತ್ರದ ತೇರನ್ನು ಎಳೆಯುತ್ತಾ ಅಥವಾ ಅದರ ಕಲ್ಲಿನ ಗಾಲಿಗಳು ನಿಷ್ಕರುಣೆಯಿಂದ ಉರುಳುವುದನ್ನು ನಿಷ್ಕ್ರಿಯವಾಗಿ ನೋಡುತ್ತಾ . +* +* +* +ವಿರಮಿಸುವ ಮೊದಲು ಇಂತಹ ವಿಚಾರ ಪ್ರಚೋದಕ ಹಾಗೂ ಮೌಲಿಕ ಕಥನವನ್ನು ಸೃಜಿಸಿರುವ ರಾಘವೇಂದ್ರ ಪಾಟೀಲರಿಗೆ ನನ್ನ ಹಾರ್ದಿಕ ಅಭಿನಂದನೆಗಳು.ಇನ್ನೂ ಅನೇಕಾನೇಕ ಅರ್ಥಪೂರ್ಣ ಕೃತಿಗಳು ಅವರಿಂದ ಹೊರಬರಲಿ ಮತ್ತು ಗಾಢ ಚಿಂತನೆಗೆ ನಮ್ಮನ್ನು ಪ್ರಚೋದಿಸಲಿ ಎಂದು ಹಾರೈಸುತ್ತೇನೆ. +-ಸಿ.ಎನ್.ರಾಮಚಂದ್ರನ್ +ಮಂಗಳೂರು +೦೬-೦೧-೦೩ +ಭಾಗ : ಒಂದು +ನಾನು ಗೋಕಾವಿಯ ಬಸ್ ಸ್ಟ್ಯಾಂಡಿನಲ್ಲಿ ಸಿಮೆಂಟಿನ ಬೆಂಚಿನ ಮ್ಯಾಲೆ ಕೂತಿದ್ದೆ…ಯಥಾ ರೀತಿ ವ್ಯಾಳ್ಯಾಕ್ಕ ಸರಿಯಾಗಿ ಬಿಡದ ಬಸ್ಸುಗಳನ್ನು ಬಯ್ಯುತ್ತ…ಮುಖಾ ಎತ್ತಿ ಮುಂದಕ ನೋಡಿದರ ನನ್ನ ಎದುರಿಗಿನ ಬೆಂಚಿನ ಮ್ಯಾಲ ಕೂತಿದ್ದ ಒಬ್ಬ – ಮಿಕೀ ಮಿಕೀ ಅಂತ ನನ್ನಣಿ ನೋಡಲಿಕ್ಕತ್ತಿದ್ದ !…ಕೆಂಪಗಿನ ಮುಖ…ಹಣಿಯ ಮ್ಯಾಲ ಆಳವಾದ ಗೆರಿಗೋಳು…ಅರವತ್ತು ಅರವತ್ತೈದರ ಆಸುಪಾಸಿನ ವಯಸ್ಸು ಇದ್ದೀತು…ನೆಟ್ಟಗಿನ ಮೂಗು…ಹೆಚ್ಚೂ ಕಡಿಮಿ ಪೂರಾ ಬೆಳ್ಳಗಾದ ಮೀಸಿ…ಕಿಂವಿಗೆ ಭಂಗಾರದ ಒಂಟಿಗಳು…ಧೋತರಾ -ಬಿಳೀ ಅಂಗಿ…ಅಂಗಿಗೆ ಬೆಳ್ಳಿಯ ಗುಂಡಿಗಳು…ತಲೀಗೆ ಬಿಳಿಯಪಟಕಾ ಸುತಿಗೊಂಡಿದ್ದ….ಆ ಮನಶಾನ್ನ ಎಲ್ಯೋ ನೋಡಿಧಂಗ ನೋಡಿಧಂಗ ಅನಿಸಿತು…ಬಸ್ ಸ್ಟ್ಯಾಂಡಿನ್ಯಾಗ ಕೂತ ಯಾರರೇ ಹಿಂಗ ನನ್ನನ್ನು ದಿಟ್ಟಿಸಿ ನೋಡತಿದ್ದರೆ ನನಗ ಅವರ ಬಗ್ಗೆ ಭಾಳ ಆಸಕ್ತಿ ಹುಟ್ಟತದ…ಯಾಕಂತಂದರೆ…ಹಿಂಗಣಿ ಬಸ್‌ಸ್ಟ್ಯಾಂಡಿನಲ್ಲಿ ಭೆಟ್ಟಿಯಾಗಿದ್ದ ಒಬ್ಬ ಮನಶಾ(ಭೂತ!?) ನನ್ನನ್ನ ಒಂದು ವಿಶೇಷ ಅನುಭವಕ್ಕೆ ಒಡ್ಡಿದ್ದ …ಆ ದೆವ್ವಿನ ಅನುಭವನಣಿ ಕಥಿಯ ಹುಚ್ಚಿನ ಕರಿ ಟೊಪಿಗಿಯ ರಾಯ ಅನ್ನುವ ಕಥೀ! ಇನೊಬ್ಬ ಮನಶಾ ಇನೊಮ್ಮೆ ಹಿಂಗಣಿ ಗೋಕಾವಿಯ ಸ್ಟ್ಯಾಂಡಿನ್ಯಾಗ ಸಿಕ್ಕು ಧರಮನಟ್ಟಿಯ ದೇಸಗತಿಯ ಕಥೀ ಹೇಳಿದ್ದ…ಈಗ ‘ಇಂವ್ಯಾರಪಾಣಿ…’ ಅಂತ ಮನಸಿನ್ಯಾಗಣಿ ಅನಕೋತಿರಬೇಕಾದರೆ ಅಂವ ಎದ್ದು ನನ್ನ ಕಡೇನಣಿ ಬಂದು -ನನ್ನ ಮುಂದನಣಿ ನಿಂತು ‘ನಮಸ್ಕಾರರೀ…’ ಅಂದ.ನಾನು ಒಮ್ಮಿಗೆಲೆ ಎಚ್ಚರಾದವನಂಗೆ …‘ಹಾಂ…ಹಾಂ.. ನಮಸ್ಕಾರ ’ ಅಂತಂದು ಅವನ್ನ ದಿಟ್ಟಿಸಿ ನೋಡಲಿಕ್ಕತ್ತಿದೆ… +‘ನಾ ಸ್ವಾಂವಪ್ಪರೀ…ಧರಮನಟ್ಯಾಂವ…ಹಿಂದ ಒಮ್ಮಿ ಇಲ್ಲೇ ಇದಣಿ ಟ್ಯಾಣಿನ್ಯಾಗಣಿ ನಿಮ್ಮನ್ನ ಭೆಟ್ಟಿ ಆಗಿದ್ದಿನಿ ನೋಡರಿ…ನೆಪ್ಪ ಇದ್ದಿರಬೇಕಲ್ಲರೀ…’ ಅಂದ. ನಾನು ಗುರುತು ಹತ್ತದೆ ಮಿಕಿ ಮಿಕಿ ಅಂತ ನೋಡಿದೆ…. ಅಂವ -‘ಹಾಂ …ಹೌದ ಬಿಡ್ರಿ.ಬಾಳ ದಿನಾ ಆತು…ನೀವು ಬೆಂಗಳೂರಿನ್ಯಾಗ ವರ್ತಮಾನ ಪತ್ರಿಕಾದಾಗ ಅದಣಿನ ಅಂತ ಹೇಳಿದ್ದಿರಿ…’ ಅಂದಾಗ -ಅರೇ ಈ ಮುದಕಗ ನನ್ನ ಪೂರಾ ಗುರ್ತು ಇದ್ದಂಗದಣಿ ಅಂತ ಅನಕೊಂಡೆ… ಆದರೆ ಅವನ ನೆನಪನ್ನುವದು ನನ್ನ ಮನಸಿನ್ಯಾಗ ಎಳ್ಳು ಕಾಳಿನಷ್ಟೂ ಮೂಡಲಿಲ್ಲ…ಅವನ ಮುಖದ ಚಹರೇ ಹಿಡದು ನೆನಪಿನ ಫೈಲ ಎಲ್ಲಾ ತಕ್ಕೊಂಡು ಕೂತರೆ…‘ಊಂ ಹೂಂ…!’. +ನಾನು ಹಿಂಗ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಅಂವ ತನ್ನಷ್ಟಕ್ಕೆ ತಾನು ತನ್ನ ಮಾತು ಮುಂದುವರಿಸಿದ್ದ.‘….ನೀವು ಶಾರದವರು.ಅದರಾಗೂ ಬೆಂಗಳೂರಿನ್ಯಾವರು…ನಿಮ್ಮೂವಣಿ ನಿಮಗ ನೂರಾ ಎಂಟು ಹಣಗಲಾ ಹರತಾಟಗೋಳು ಇರತಾವು.ಹಂತಾದ್ದರೊಳಗ ನಂದೇನ ಮಹಾ ಅಂತ ನೆಪ್ಪ ಉಳದೀತ ಬಿಡ್ರಿ…ಆ ಸರತೆ ಭೆಟ್ಟಿ ಆದಾಗ ನಿಮಗ ನಾ ಧರಮನಟ್ಟೀ ದೇಸಗತೀ ಕಥೀ ಹೇಳಿದ್ದಿನಿ ನೋಡರಿ…ಅದೇನರ ನೆಪ್ಪ ಇದ್ದರಣಿ ಇದ್ದಿರಬೇಕು….’ ಅಂತ ಹೇಳತಿದ್ದಂಗಣಿ ನನಗ ಒಮ್ಮಿಗೆಲೇ ಆ ಅಜ್ಜನ ನೆನಪು ಸಿಕ್ಕಿತು….ನಾನು ‘ಹಾಂ..ಹಾಂ..!’ ಅಂದು ನೆನಪಿಗೆ ಬಂತು ಅಂತ ಹೇಳಬೇಕಂದರೆ ಆ ಮನಶಾ ನನಗೆ ಮಾತಾಡಲಿಕ್ಕೆ ಚಾನ್ಸು ಕೊಡದೇ ತನ್ನ ಮಾತನ್ನೇ ಮುಂದುವರಿಸಿದ… +‘ಹೂಂ…ನಿಮ್ಮ ಹರತಾಟದೊಳಗ ನಮ್ಮ ಊರಿನ ಕಥೀ ನೆನಪ ಇಟಗೋ ಅಂದರ ಅಧೆಂಗ ಆದೀತು ಬಿಡ್ರಿ…ಅಗದೀ ಕಳಬಳ್ಳೀ ಸಂಬಂಧಗೋಳಣಿ ಮರತ ಹೋಗೂ ಹಂತಾ ಭರಾಟೀ ಕಾಲ ಇದಾ…ಹಂತಾದ್ದರಾಗ ನಮ್ಮ ಧರಮನಟ್ಟೀ ದೇಸಗತೀ ಕಥೀ ನೆಪ್ಪ ಇಟಗೋಪಾ ಅಂದರ ಎಲ್ಲೀ ಮಾತು ! ಹಾಂ..ಹಂಗ ಕೇಳಿದರಣಿ ನಾನಣಿ ಹುಚಪ್ಯಾಲಿ…ಆ ದೇಸಗತೀ ಸುದ್ದೀ ಕಥೀ ಮಾಡಿ ಹೇಳಿ ನಿಮ್ಮ ಮನಸಿನ್ಯಾಗ ಉಳಸಾಕ ನೋಡಾಕತ್ತದನು….ಆದರ ಆ ದೇಸಗತಿಯ ಅಗದೀ ಖಾಸ ವಾರಸುದಾರ ಮಾಣೀಕ್ ದೇಸಾಯನಣಿ ವಿಲಾಯತೀ ಹೆಣ್ಣ ಕಟಿಗೊಂಡು ಅದೆಲ್ಲಿಗೋ ಅಮುರಿಕಾ ಅಂತ…ಆ ಅಮುರಿಕಾಕ್ಕ ಹಾರಿ ಹ್ವಾದನಂತ…ತನ್ನ ಕಳ್ಳಿನ ಕುಡೀ – ಆ ಎಳೇ ಕಂದ ಅಮೃತನ್ನ ಸದೇಕ ಬಿಟ್ಟು ಇಮಾನದಾಗ ಕುಂತು ಹ್ವಾದನಂತ…ಈ ಅಮೃತಂದರ- ಮತ್ತ ನಮ್ಮ ದೇಸಗತಿನ್ನ ಕಟ್ಟಿ ನಿಂದರಸಾಂವ … ಅಂತ ಹಲಬತಿದ್ದ ಅಮೃತನ ಮುತ್ತಜ್ಜ ಕಲ್ಪನಾಥ ದೇಸಾಯರನಣಿ ಮತ್ತ ತನ್ನ ಎಳೇ ಕೂಸನ್ನ – ಇಬ್ಬರನೂ ನೋಡಿಕೊಳ್ಳಲಿಕ್ಕೆಂತ ಇಬ್ಬರು ಆಯಾಗೋಳನ ನೇಮಿಸಿ, ಅವರಿಗೆ ಉಡಿ ತುಂಬ ರೊಕ್ಕಾ ಕೊಟ್ಟು ದೇಸಾ ಬಿಟ್ಟು ಹ್ವಾದನಂತ…! ಅಲ್ಲರೀ…ರೊಕ್ಕ ಸಿಕ್ಕಮ್ಯಾಲ ಯಾರ ದರಕಾರ ಯಾರಿಗೆ ಇರತೈತಿ ಹೇಳ್ರಿ…ಮಜಾ ನೋಡ್ರಿ…ಆ ಕೂಸಿನ್ನ ನೋಡಿಕೊಳ್ಳಾಕ ನೇಮಣೂಕೀ ಮಾಡಿದ ಆಯಾನ ಹೆಸರು ಅನಸೂಯಾ ಅಂತ! ತ್ರಿಮೂರ್ತಿಗೋಳನ ಕೂಸಗೋಳನ ಮಾಡಿ ನಮ್ಮ ಆದಿನಾಥನಂಗ ಪೂರಾ ಬತ್ತಲೇ ಆಗಿ ಮಲೀ ಕುಡಿಸಿದ ಮಾತಾಯಿಯ ಹೆಸರೂ ಅನಸೂಯಾನಣಿ ಅಂತ!…ಇಲ್ಲಿ ಇಕಿ ಈ ಅನಸೂಯಾ ಏನ ನೋಡಿಕೊಂಡಳು…? ಹಾಲು ಕುಡಿಯುವ ಕಂದಮ್ಮನ ತುಟಿಗೋಳಿಗೆ ಮತ್ತ ಇಡೀ ಮೈಯಂತ ಮೈಗೆ ಕಟ್ಟಿರವಿ ಮುಕರಿ…ಕಡದು ಕಡದು …ಚಿಟ್ ಚಿಟ್ಟಂತ ಚೀರಿ…ಆ ಎಳೀ ಕಳಿಗಿ ಪ್ರಾಣಾ ಬಿಟ್ಟಿತ್ತು. ಇನ್ನ ತೊಟ್ಟಲದಾಗ ಹೆಣಾ ಆಗಿ ಮಲಗಿದ ಮರಿಮಗನ್ನ ನೋಡಿದ ಕಲ್ಪನಾಥ ದೇಸಾಯರ ಹರಣನೂ ಹಾರಿ ಹೋಗಿತ್ತು…ನಮ್ಮ ಧರಮನಟ್ಟಿಯ ದೇಸಗತಿಯ ಹೆಸರ ಹೇಳಿಕೊಳ್ಳಾಕ ಯಾರಂಬುವ ಯಾರೂ ನಮ್ಮ ನಾಡಿನ್ಯಾಗ ಉಳೀಲಿಲ್ಲ ನೋಡರಿ!… ಇನ್ನ ಆ ಕಾರಭಾರೀ ತ್ರಿಂಬಕ ಭಟ್ಟನ ಸಂತಾನ ಅಂತೂ ಎಂದೋ ಊರು ಬಿಟ್ಟು … ಪುಣೇ-ಮುಂಬಯಿ -ಬರೋಡಾ ಅಂತ ದೇಸಾಂತರಕ್ಕ ಹೋಗಿ ಧರಮನಟ್ಟಿಯ ಸಂಪರ್ಕಕ್ಕ ಹೊರತಾಗಿ ಬಿಟ್ಟಾವು…ದೇಸಗತಿಗೆ ಸಂಬಂಧ ಇದ್ದವರಣಿ ಹಿಂಗ ಅದರ ಹಂಗು ಹರಕೊಂಡು ಹೋಗಿರಬೇಕಾದರಣಿ…ಅದನ್ನ ಮನಸಿನ್ಯಾಗ ಇಟಗೊಂಡು ಕಥೀ ಮಾಡಿ ಹೇಳುವ ನಾನೂ…ನಾ ಹುಚಪ್ಯಾಲಿ ಹೌದಲ್ಲರಿ…?’ +…ಹಿಂಗ ಅಂವ ಒಂದಣಿ ಸವನಣಿ ಮಾತಾಡಿ ನಿಂದರಿಸಿ,ಆಮ್ಯಾಲ ಮಿಕಿ ಮಿಕೀ ಅಂತ ನನ್ನ ಮುಖಾ ನೋಡಲಿಕತ್ತ ಮ್ಯಾಲಣಿ ನನಗ ಮಾತಾಡಲಿಕ್ಕೆ ಅವಕಾಶ ಸಿಕ್ಕಿತು.ನಾನು-‘ಏ..ಏಣಿ ಹಂಗೇನ ಅಲ್ಲರೀ ಯಜ್ಜಾ..ನನಗ ಪೂರಾ ನೆನಪಿಗೆ ಬಂದೈತಿ… ಭಾಳ ದಿನಾ ಆಗಿತ್ತ ನೋಡ್ರಿ.ಅದಕ್ಕಣಿ ಒಮ್ಮಿಗೆಲೇ ಗುರತ ಹತ್ತಲಿಲ್ಲ…ನೀವು ಹೇಳಿದ ಕತೀ ನನ್ನ ತೆಲ್ಯಾಗಣಿ ಕುಂತೈತಿ.ಅಷ್ಟಣಿ ಯಾಕ…ನಾ ಅದನ ಬರದು ಪೇಪರಿನ್ಯಾಗ ಛಾಪಿಸೀದನು’ ಅಂತ ಅಂದೆ.ಸ್ವಾಂವಜ್ಜ ಇದನ ಕೇಳಿ ಭಾಳ ಉತ್ತೇಜಿತನಾದ… ‘ಹೌದರೀ…? ಏ ಬಾಳ ನಿವಳ ಆತ ಬಿಡರಿ…ನಾ ನಿಮಗ ಹೇಳಿದ್ದು ಸಾರ್ಥೇಕ ಆದಂಗ ಆತು…ನಾ ಆಗ ನಿಮಗ ನಮ್ಮ ಊರಿನ ವಿಟ್ಠಲ ದೇವರ ಗುಡೀ ತೇರಿನ ಮಜಕೂರು ಹೇಳಿದ್ದಿನಿ ಏನರಿ…?ಹೇಳಿರಾಕಿಲ್ಲರಿ…’ ಅಂದ. ನಾನು ಊಹೂಂ ಅಂತ ಅಂದದ್ದು ಅಂವಗ ಹೇಳರಿ ಅಂತಂದಂಗ ಕೇಳಿಸಿತೋ ಯಾರಿಗೆ ಗೊತ್ತು !…ಅಂವ ಸುರೂ ಮಾಡೇ ಬಿಟ್ಟ ಧರಮನಟ್ಟಿಯ ವಿಟ್ಠಲ ದೇವರ ಗುಡಿಯ ತೇರಿನ ಪುರಾಣಾವನ್ನ… +* +* +* +…ದೇಸಗತಿಯನ್ನ ಕಟ್ಟಿದ ರಂಗೋ ಪಟವರ್ಧನ ದೇಸಾಯರು ಧರಮನಟ್ಟಿಯೊಳಗ ತಮ್ಮ ಮನಿದೇವರು ವಿಟ್ಠಲಂದು ಒಂದು ಗುಡೀ ಕಟ್ಟಿಸಿದರರೀ…ದೇಸಗತಿ ಹಾಳಾದರೂ ಈ ಗುಡಿಯ ಒಂದ ಮೂಲಿ ಸೈತ ಮುಕ್ಕಾಗದಂಗ ನಿಂತೈತಿ ನೋಡ್ರಿ…ಸಣ್ಣಾಗಿ ಕಟದ ಬಿಳೀ ಕಲ್ಲಿನ ಕಟ್ಟಡ…ಗ್ವಾಡಿ ಮತ್ತ +ಶಿಖರದ ಮ್ಯಾಲೆಲ್ಲಾ ಸುಳವಗೋಳೂ ಮತ್ತ ಚಿತ್ತಾರಗೋಳು…ಒಂದೊಂದು ಕಂಬನೂ ಹೂವಿನ ಬಳ್ಳಿ ಇದ್ದಂಗಣಿ ನೋಡ್ರಿ ! ಗರ್ಭ ಗುಡ್ಯಾಗಿನ ವಿಟ್ಠಲ ರುಕುಮಾಯಿ ಅಂತೂ ಥೇಟ್ ಅವರಣಿ!…ಅಗದೀ ಎದ್ದ ಬರೂಹಂಗ ಕಾಣತಾರು ! ದೇಸಗತಿ ಕಟ್ಟಾಕ ಬಲಾ ಕೊಟ್ಟ ಬಲವಂತ ದೈವ ಅದಾ…ತ್ರಾಹಿ ಅಂಬುವ ಮಂದಿನ್ನ ಕಾಪಾಡುವಂಥಾ ದೇವರು…ದೇಹಿ ಅಂಬುವ ಮಂದಿಗೆ ಬೇಡಿದ್ದು ನೀಡುವ ಜಾಗ್ರುತ ಕ್ಷೇತ್ರ ಅಂತ ನಾಡಿನ ಎಂಟೂ ದಿಕ್ಕಿಗೆ ಹಬ್ಬಿ …ನಮ್ಮ ಊರಿನ ವಿಟ್ಠಲ ದೇವಸ್ಥಾನ ಜಗತ್ ಪ್ರಸಿದ್ಧ ಆಗೇತಿ.ನಮ್ಮ ಊರಾಗ ನಮ್ಮದೊಂದಣಿ ಜಯ್ಯಾರ ಮನಿತನಾರೀ…ಜಯ್ಯಾರ ಆದರೂ ನಾವು ವಿಟ್ಠಲ ದೇವರಿಗೆ ನಡಕೋತೀವರಿ…ಯಾವ್ಯಾವ ನಾಡಿನ್ಯಾಗ ಯಾವ್ಯಾವ ದೇವರು ಇರತಾವೋ ಅವನ್ನಣಿ ನಾವು ನಂಬಬೇಕಲ್ಲರೀ…? +ವಿಟ್ಠಲ ರುಕುಮಾಯಿ ದೇವರ ತೇರಂದರ ತೇರು ನೋಡರಿ…ಅದನೂ ದೇಸಾಯರಣಿ ಕಟ್ಟಿಸಿದ್ದು…ಏನಿಲ್ಲಂದರೂ ಒಂದ ಗೇಣು ದೀಡ ಗೇಣು ದಪ್ಪನಾದ – ಎರಡು ಮಾರು ಎತ್ತರವಿದ್ದ ಕಲ್ಲಿನ ಗಾಲಿಗಳು…ಅಬಬಣಿ! ಅಷ್ಟು ಪಿಂಡ ಇದ್ದ – ಅಷ್ಟು ಅಗಲ ಇದ್ದ ಕಲ್ಲಿನ ಹಾಸು ಫಳಿಗಳನ್ನ ಯಾವ ಖಣಿಯಿಂದ ಎಬ್ಬಿಸಿದ್ದಾರೂ ಅಂತ ! ಧರಮನಟ್ಟಿಯ ದೇಶ ಅಂದರ ಹಿರಿಹೊಳಿಯ ದಂಡಿಯ ಎರೀ ಮಣ್ಣಿನ ಬಯಲೋ ಬಯಲು ನಾಡರಿ… ಇಲ್ಲಿ ಒಂದು ಸಣ್ಣ ಕಲ್ಲು ಸಿಗುವುದೂ ದುರ್ಲಭ! ಹಂತಾದ್ದರಾಗ ಈ ಕಲ್ಲು ಫಳಿಗಳನ್ನ ಎಲ್ಲಿಂದ ತಂದಿದ್ದಾರಪಾ ಅಂತ ಸೋಜಿಗ ಆಗತೈತಿ…ಮಂದಿ ಆ ಗಾಲಿಗೋಳನ ಅವು ಕಲ್ಲಿನವೂ ಅಂತ ಖಾತ್ರೀ ಮಾಡಿಕೊಳ್ಳುವವರಹಂಗ-ಅವನ್ನ ಮುಟ್ಟೀ-ಬಾರಿಸೀ ನೋಡತಾರ…ಆ ಗಾಲಿಗಳ ಮ್ಯಾಲ ಮರಾ ಗಿಡಾ ಬಳ್ಳಿಗೋಳ ಸುಳವುಗಳು…ಗಾಲಿಗಳ ನಟ್ಟ ನಡಕ ಎರಡು ಮಳದಗಲದ ಗುಂಭ…ಗುಂಭದ ನಡೂ ಮಧ್ಯೆ ಮಳದಗಲದ ಆರುಪಾರು ರಂಧ್ರ… ಆ ರಂಧ್ರದೊಳಗಿಂದ ಹಾದು ಬಂದು – ಮಳವುದ್ದ ಹೊರಗೆ ಚಾಚಿದ ಮರದ ಕೆಚ್ಚಿನ ಅಚ್ಚು ಮತ್ತ ಆ ಅಚ್ಚಿಗೆ ಸಿಗಿಸಿದ ರಟ್ಟೆ ಗಾತ್ರದ ಕಬ್ಬಿಣದ ಕೀಲುಗಳು…ಎರಡೆರಡು ಮಳ ಹಮ್ಮ ಚೌಕದಷ್ಟು ದಪ್ಪನಾದ ಅಂಥಾ ಕೆಚ್ಚು ನೀಡಿದ ಆ ಮರವಾದರೂ ಯಾವ ಆಕಾರದ್ದು ಇದ್ದಿರಬೇಕು ಶಿವನೇ ಅಂತ ಸೋಜಿಗ ಆಗತೈತಿ… +ಆ ತೇರು ಕಟ್ಟಿದ ವಿಶ್ವಕರ್ಮ ಈ ಅಚ್ಚಿನ ಮ್ಯಾಲೂ ಸುಳವು ಕೆತ್ತಿದ್ದಾನೆ… ನದೀ…ಕಾಳಿಂದಿ ಮಡು…ಮುಗಲು-ಸೂರ್ಯಾ …ಚಂದ್ರಾಮ…ಮತ್ತ ಚಿಕ್ಕಿಗೋಳು! ಆ ಎರಡು ಅಚ್ಚುಗಳ ಮ್ಯಾಲೆ ಕುಂತ -ಮಾರು ದೀಡ ಮಾರಿನಷ್ಟು ಎತ್ತರವಾದ, ದಪ್ಪನೆಯ ಕೆಚ್ಚಿನಿಂದ ಮಾಡಿದ ಮರದ ಚೌಕಟ್ಟು….ಆ ಚೌಕಟ್ಟಿನ ತೋಳುಗಳ ಮ್ಯಾಲೂ ಚಿಕ್ಕಿ ಚಂದ್ರಾಮರ ರಾಜ್ಯ ! ಗಾಲಿಗಳಿಗಿಂತ ಒಂದು ಮಳದಷ್ಟು ಮ್ಯಾಲ ಎತ್ತರಕ್ಕೆ…ಎತ್ತರವಾದ ಈ ಚೌಕಟ್ಟಿನ ಮ್ಯಾಲೆ ಕುಂತಿದೆ ಆರು ಮಜಲಿನ ಅಷ್ಟಕೋನದಾಕಾರದ ತೇರು…ನಾಳೆ ರಾಮನವಮಿಯ ದಿವಸ ತೇರು +ಎಳೀತಾರೆ…ತೇರು ಎಳಿಯೂಕಿಂತಾ ಮದಲು ಒಬ್ಬ ಪರವಂತ ತೇರಿನ ಗಾಲಿಗೆ ತನ್ನ ತೆಲೀ ಹೊಡಕೊಂಡು ರಗತಾ ತಗದು ತೇರಿನ ಮೂಡಣ ದಿಕ್ಕಿನ ಮಕಕ್ಕ ಹಚ್ಚತಾನರೀ… ಇದಕ್ಕ ರಗತ ತಿಲಕದ ಸೇವಾ ಅಂತಾರು . +ಈ ಪದ್ಧತೀ ಕೇಳಿ ನನ್ನ ಮನಸಿನ್ಯಾಗ ಕುತೂಹಲ ಹುಟ್ಟಿತು…ನನ್ನ ಕಣ್ಣಾಗಿನ ಕೌತುಕವನ್ನ ಕಂಡ ಆ ಹಿರೇಮನಶಾ ‘…ಏ ಹೆಂಗೂ ಇಲ್ಲೇ ಹತ್ತರದಾಗ ಬಂದದೀರಿ. ನಾಳೆ ತೇರು ಮುಗಿಸಿಕೊಂಡ ಹೊಂಡೂರಂತೇ…ಹೆಂಗೂ ನಾಳೆನಣಿ ತೇರು…ನಮ್ಮ ಊರಿಗೆ ಹೊಂಡೂಣೂ ನಡೀರಿ…’ ಅಂತ ಆ ಸ್ವಾಂವಜ್ಜ ಬೆನ್ನಣಿ ಹತ್ತಿ ಬಿಟ್ಟ …ನಾನು ನನ್ನ ಕುತೂಹಲದ ಮೂಲಕವಾಗಿ ಸ್ವಾಂವಜ್ಜನ ಊರಿಗೆ ಹೋಗಿ ಒಂದು ದಿವಸ ಇದ್ದು… ರಕ್ತ ತಿಲಕದ ಸೇವಾ ಮತ್ತ ತೇರಿನ ಉತ್ಸವವನ್ನ ನೋಡಿಕೊಂಡೇ ಹೋದರಾತು ಅಂತ ನಿರ್ಧಾರ ಮಾಡಿ -ಆ ಹಿರೇ ಮನಶಾನ ಬೆನ್ನು ಹತ್ತಿ ಧರಮನಟ್ಟಿಗೆ ಹೋದೆ… +ಎರಡು ದಿನ ಮದಲೇ ಧರಮನಟ್ಟಿಗೆ ಬಂದು ಬೀಡು ಬಿಟ್ಟಿರುವಂಥಾ ನಣದೀ ಗೊಂದಲಿಗ್ಯಾರು…ತೇರಿನ ಮೊದಲಿನ ರಾತ್ರಿ-ಅಂದರೆ-ಚೈತ್ರ ಶುದ್ಧ ಅಷ್ಟಮಿಯ ರಾತ್ರಿ -ಧರಮನಟ್ಟಿಯ ತೇರಿನ ಮಹಾತ್ಮೆಯನ್ನ ಕಥೀ ಮಾಡಿ ಹೇಳುವ ಪದ್ಧತಿ ಇದೆಯಂತೆ…ನನ್ನ ಊಟವಾದ ಮ್ಯಾಲೆ ಸ್ವಾಂವಜ್ಜ ಅನುಮಾನಿಸಿಕೋತ ಅನುಮಾನಿಸಿಕೋತ -‘ಹೆಂಗರೀ…? ಗೊಂದಲಿಗ್ಯಾರು ಹೇಳೂ ತೇರಿನ ಮಹಾತ್ಮಿಯ ಕಥೀ ಕೇಳತಿರ್‍ಯೋ ಇಲ್ಲಾ ಮಲಕೊಂಡು ವಿಶ್ರಾಂತೀ ತಗೋತೀರೋ…?’ ಅಂತ ಕೇಳಿದ.ನಾನು ಆ ತೇರಿನ ಪುರಾಣವನ್ನ ತಿಳಕೋಲಿಕ್ಕೆಂತಣಿ ಅಲ್ಲಿಗೆ ಬಂದವನು… ‘ಏ…ಮಲಗೂದೇನು ಇದ್ದಣಿ ಇರತೈತಿ…ಅವರ ಕಥೀ ಕೇಳೂಣು ನಡೀರಿ’ ಅಂತ ಸ್ವಾಂವಜ್ಜನ್ನ ಹೊಂಡಿಸಿಕೊಂಡು ಹೊಂಟೆ…ಗುಡಿಯ ಬಯಲಿಗೆ ಬಂದಾಗ ಆಗಲೇ ಗಣಪತಿಯ ಪೂಜಿ – ಅಂಬಾ ಭವಾನಿಯ ಪೂಜೀ ಮುಗಿಸಿ ಕಥಿಯ ಭಾಗಕ್ಕ ಪ್ರವೇಶ ಮಾಡಿದ್ದರು… +ಸ್ವಾಂವಜ್ಜ ‘ಈಗ ಕಥೀ ಸುರು ಆಗೇತಿ…ಬರ್ರಿ ಇಲ್ಲಿ ಕುಂಡ್ರೂಣೂ’ ಅಂತ ಜಾಗಾ ಮಾಡತಿರಬೇಕಾದರೆ ನಾನು ಗುಡಿಯ ಮುಂದೆ ಭವ್ಯವಾಗಿ ನಿಂತ ತೇರನ್ನ ನೋಡಿ, ಅಂವ ತೋರಿಸಿದ ಜಾಗಾದಾಗ ಕುಂತು ನಣದಿಯ ಗೊಂದಲಿಗ್ಯಾರು ಹೇಳತಿದ್ದ ಕಥಿಯೊಳಗ ತಲ್ಲೀನನಾದೆ… +* +* +* +ಆಹಾಣಿ… +ಒಂದಾನೇ ಮಜಲಾಗೆ ಏನೇನು ನೋಡು +ಹರ ನನ್ನ ಮಾದೇವೈ || +ಒಂದಾನೇ ಮಜಲಾಗೆ ಆದಿ ಶೇಷಾನೊ +ಶಿವ ಶಿವ ಮಾದೇವೈ || +ಆಹಾ…ಒಂದಾನೇ ಮಜಲಿನ ಎಂಟೂ ದಿಕ್ಕೆಂಬುವ ಕಡೆ ಆದಿಶೇಷಾನೆಂಬೊ ಸರ್ಪವು ಮ್ಯಾಗಿನ ಇಡೀ ಬ್ರಹ್ಮಾಂಡವನ್ನ ಹೊತಗೊಂಡು ನಿಂತದಾವೇ… +ಎರಡಾನೆ ಮಜಲಾಗೆ ಏನೇನು ನೋಡೋ +ಹರ ಹರ ಮಾದೇವೈ || +ಎರಡಾನೇ ಮಜಲಾಗೆ ಐರಾವತವಯ್ಯಾ +ಶಿವ ಶಿವ ಮಾದೇವೈ || +ಆಹಾಣಿ… ಎರಡಾನೇ ಮಜಲಿನಲ್ಲಿ ಎಂಟೆಂಬುವ ಎಂಟು ದಿಕ್ಕಿಗೆ ಮಕ ಮಾಡಿದ ಎಂಟು ಎಂಟು ಐರಾವತಗೋಳೂ ಸೊಂಡಲೆಂಬುವದನ್ನಣಿ ಮ್ಯಾಲಕೆತ್ತೀ… +ಹರ ಹರ ಮಾದೇವೈ || +ಸೊಂಡಲೆಂಬುವನ್ನಣಿ ಮ್ಯಾಲಕ ಎತ್ತಿ ಮ್ಯಾಗಿನ ನಾಲ್ಕು ಮಜಲುಗಳನಣಿ ಹೊತ್ತು ನಿಂತಣಿದಾವೆ +ಶಿವ ಶಿವ ಮಾದೇವೈ || +ಮೂರಾನೆ ಮಜಲಾಗೆ ಮತ್ತೇನು ನೋಡೋ +ಹರ ಹರ ಮಾದೇವೈ || +ಆಹಾ… +ಮೂರಾನೇ ಮಜಲಾಗೆ ಮತ್ಸ್ಯ -ಕೂರ್ಮ -ಇಲಿ ಹೆಗ್ಗಣ ಹಂದಿಗಳಾದಿಯಾಗಿ ನಾನಾ ನಮೂನೆಯ ಕಾಟಕ ಜೀವಿಗಳಂಬೋವೂ – ಕಾಟಕ ಮಿಕಗೋಳೂ +ಶಿವ ಶಿವ ಮಾದೇವೈ || +ಆ ನಾನಾ ನಮೂನಿಯ ಕಾಟುಕ ಜೀವಗಳೂ ಮಿಕಗಳೂ ಮ್ಯಾಗಿನ ಮೂರು ಮಜಲನ್ನ ಹೊತ್ತು ನಿಂತದಾವೇ… +ಹರ ನನ್ನ ಮಾದೇವೈ || +ಹಾಂ… +ನಾಕಾನೇ ಮಜಲಾಗೆ ನೆರದದ್ದು ಏನೊ +ಹರ ನನ್ನ ಮಾದೇವೈ || +ನಾಕಾನೇ ಮಜಲಾಗೆ ಎತ್ತು ಕುದರಿಗಳೊ +ನಾಕಾನೆ ಮಜಲಾಗೇ ಹೈನದ ಆಕಳವೈ +ನಾಕಾನೆ ಮಜಲಾಗೆ ಮತ್ತೇನು ನೋಡೋ +ನಾಕಾನೆ ಮಜಲಾಗೇ ಕುಂಟಿ ಕೂರಿಗಿಯೈ +ನಾಕಾನೆ ಮಜಲಾಗೆ ನೊಗ ಗಾಲಿ ತಕ್ಕಡಿಯೈ +ಶಿವ ನನ್ನ ಮಾದೇವೈ || +ಆಹಾಣಿ… +ಐದಾನೇ ಮಜಲಾಗೆ ಇದ್ದದ್ದು ಏನೋ +ಹರ ನನ್ನ ಮಾದೇವೈ || +ಐದಾನೇ ಮಜಲಾಗೆ ಬಿಲ್ಲು ಬಾಣಗಳೊ +ಐದಾನೆ ಮಜಲಾಗೆ ಬಿಲ್ಲಾಳು ಬಂಟಾರೋ +ಐದಾನೇ ಮಜಲಾಗೆ ಕತ್ತಿ ಕಠಾರಿಗಳೋ +ಐದಾನೆ ಮಜಲಾಗೆ ಕಡುಗಲಿ ಬಂಟಾರೋ +ಬ್ಯಾಟಿಯಾಡುವ ಸಿಂಹ ಶಾರ್ದೂಲ ಮಖವೊ +ಶಿವ ನನ್ನ ಮಾದೇವೈ || +ಆರಾನೇ ಮಜಲಾಗೆ ಯಾರ್‍ಯಾರು ಇದ್ದಾರೇ +ಹರ ನನ್ನ ಮಾದೇವೈ || +ಆರಾನೇ ಮಜಲಾಗೆ ವಾಣಿ ಸರಸೋತಿಯೊ +ಆರಾನೇ ಮಜಲಾಗೆ ಗೆಜ್ಜೆ ಕಟ್ಟಿದ ನವಲೊ +ಆರಾನೆ ಮಜಲಾಗೆ ವೇದಾದ ಗ್ರಂಥಾವೊ +ಆಹಾ… +ವೇದಾದ ಗ್ರಂಥಾವು ತಂಬೂರಿ ಢೋಲಕವೈ +ಶಿವ ನನ್ನ ಮಾದೇವೈ || +ಆಹಾಣಿ…ಆರಾನೇ ಮಜಲಿನ್ಯಾಗೆ ಸರಸೋತಿ ತಾಯೀ ವೇದಾದ ಗ್ರಂಥಾವು ಗೆಜ್ಜೆ ಕಟ್ಟಿದ ನವಲು ತಂಬೂರಿ ಢೋಲಕ್ಕುಗಳದಾವೆಯಾಣಿಹಾಣಿ… +ಹರ ನನ್ನ ಮಾದೇವೈ || +ಆರಾನೆ ಮಜಲೀನ ಮ್ಯಾಲಕ್ಕ ಏನೊ +ಶಿವ ನನ್ನ ಮಾದೇವೈ |. +ಆರಾನೆ ಮಜಲೀನ ಮ್ಯಾಲಕ್ಕ ನೋಡೊ +ಬಂಗಾರ ಕಳಸಾವು ಸಿಂಗಾರ ಪ್ರಭೆಯೈ +ಸೂರ್ಯ ಬಿಂಬದ ಒಳಗ ಚಂದ್ರಾನ ಬಿಂಬಾ +ನೆತ್ತೀಯ ತುದಿಗೆ ಸಹಸ್ರಾರದ ಕಳಸಾ +ಹರ ಹರ ಮಾದೇವೈ || +ಉಘೆ ಉಘೆ ಎನ್ನೀರಿ ನಮ್ಮೂರ ತೇರೀಗೇ +ಶಿವ ಶಿವ ಮಾದೇವೈ || +ಜಯ ಜಯ ಎನ್ನೀರಿ ಧರಮನಟ್ಟೀಯ ತೇರೀಗೆ +ಹರ ನನ್ನ ಮಾದೇವೈ || +ಆಹಾಂ… +ಇಂಥಾ ಮೂರು ಲೋಕದೊಳಗೂ ಮೆರಿಯುವಂಥಾ ಹೊನ್ನ ಕಳಸದ ತೇರು ಕಟ್ಟಿಸಿದ ಪಟವರ್ಧನ ದೊರೀ ಅಂತಾರೇ… +ಬಾರಪ್ಪ ಮಂತ್ರಿಯೇ ಬಾರಯ್ಯ ಬಾರೋ +ಹೊನ್ನ ಕಳಸದ ತೇರು ಎಳಿಯೂದು ಎಂದೊ +ಬಂಗಾರ ಕಳಸದ ತೇರ ಎಳಿಯೂದು ಎಂದೋ +ಆಹಾಣಿ… +ಕಾರಭಾರಿ ತ್ರಿಂಬಕ ಭಟ್ಟರಾದರೂ ದೊರಿಯ ಮಾತು ಕೇಳಿ ಲಗು ಬಗಿಯಿಂದ ಮನೀಗೆ ನಡದಾರೇಣಿ +ಹರ ನನ್ನ ಮಾದೇವೈ || +ಲಗುಬಗೆಯಿಂದ ಮನಿಗೆ ಬಂದು ದರಬಾರಿನ ದಿರಿಸನಾದರು ಕಳಿಯುತಾರೇ ದರಬಾರಿನ ದಿರಿಸು ಅಂಬುವುದನ್ನ ಕಳದು ಕೈ ಕಾಲು ಮಕಾ ತೊಳದು ಮಡೀ ಪಂಜೇ ಅಂಬುವುದನ್ನ ಉಟಗೊಂಡು ದೇವರ ಜಗಲಿಯ ಮುಂದ ಕುಂತು +ಆಹಾಣಿ… +ದೇವರ ಜಗಲಿಯ ಮುಂದ ಕುಂತು ಬೆಳ್ಳಿಯ ನೀಲಾಂಜನದಾಗೆ ತುಪ್ಪವನ್ನ ಸುರುವಿ +ಬತ್ತೀಗೆ ದೀಪದ ಕುಡಿಯ ಮುಡಿಸುತಾರೇ +ಶಿವ ನನ್ನ ಮಾದೇವೈ || +ಆಹಾಣಿ… +ದೇವರ ಮುಂದಿನ ನೀಲಾಂಜನದ ಬತ್ತಿಗೆ ಜೋತಿಯ ಕುಡಿಯನಾದರೂ ಮುಡಿಸಿ ಶಿವನೇ ಅಂದು ಕಣ್ಣು ಮುಚ್ಚಿ ಕೈ ಮುಗಿಯುತಾರೆ +ಹರ ನನ್ನ ಮಾದೇವೈ || +ಆಹಾ… +ಶಿವನೇ ಅಂತ ಕಣ್ಣು ಮುಚ್ಚಿ ಕೈಯ ಮುಗಿಯತಿದ್ದರೆ ಆಹಾಣಿ… +ಶಿವ ನನ್ನ ಮಾದೇವೈ || +ಭರ್ರೆಂಬೊ ಗಾಳೀಯು ಬೀಸ್ಯಾವೆ ಶಿವನೆ +ದೀಪಾದ ಕುಡಿಯೂ ಹೊಯ್ದಾಡುತಾವೇ +ಕೈ ಮುಗದು ಕಣ್ಣಾ ತೆರಿಯುವದರೊಳಗೇ +ಆಹಾ… +ಅಲ್ಲಿ ಆಗ ದೇವರ ಮುಂದಿನ ನೀಲಾಂಜನದ ಬತ್ತಿಯ ತುದಿಗೆ ಮುಡಿಸಿದ ದೀಪದ ಕುಡಿಯಾದರೂ ಭರ್ರೆಂಬೊ ಆ ಗಾಳಿಗೆ ನಂದಿ ಹೊಗಿಯ ಗಮಟು ವಾಸನಿ ಎದ್ದಿತಲ್ಲೋ ಶಿವನೇ +ಹರ ನನ್ನ ಮಾದೇವೈ || +ಹಿಂಗ ದೀಪದ ಕುಡಿಯಾದರೂ ನಂದಿ ಹೊಗಿಯ ಗುನುಗು ಎದ್ದದ್ದು ಕಂಡ ತ್ರಿಯಂಬಕ ಭಟ್ಟ ಅಂತಾನೇ – +ಯಾಕಪ್ಪಾ ಶಿವನೇ ಅಪಸಕುನ ಮಾಡಿ ಬಿಟ್ಟಿಯಲ್ಲಾಣಿ +ಶಿವ ಶಿವ ಮಾದೇವೈ || +ಯಾಕಪ್ಪಾ ಶಿವನೆ ಅಪಸಕುನ ಮಾಡಿಬಿಟ್ಟಿಯಲ್ಲಾ ಣಿ +ಅಂತ ಬಾಳ ವ್ಯಸನ ಪಡುತಾರೇ… +ಬಾಳ ದುಕ್ಕ ಪಡುತಾ ಸ್ವಾಮಿನ್ನ ನೆನದು ಕೈ ಮುಗದು ಮತ್ತೆ ಬತ್ತಿಗೆ ದೀಪದ ಕುಡಿಯ ಮುಡಿಸುತಾರೆ +ಸ್ವಾಮಿನ್ನ ನೆನದು ಮತ್ತೆ ಬತ್ತೀಗೆ ದೀಪದ ಕುಡೀ ಮುಡಿಸಿದರೇ +ಮತ್ತೆ ಭರ್ರೆಂಬೋ ಗಾಳಿ ಬಂತಲ್ಲೊ ಶಿವನೇ +ಮನಸಂಬುವದನ್ನ ಗಟ್ಟಿ ಮಾಡಿಕೊಂಡು ಮೂರನೇ ಸರತೀ ಮತ್ತೆ ಬತ್ತಿಗೆ ಜ್ಯೋತಿಯನ್ನ ಮುಡಿಸಿದರೆ +ಆ ಜ್ಯೋತಿಯನ್ನಾದರೂ ಭರ್ರೆಂಬೊ ಗಾಳಿ +ಬಂದು ಆರಿಸಿ ಬಿಡತಿದ್ದರೇಣಿ… +ಆಹಾಣಿ… +ಭಟ್ಟಾರ ಮನದಾಗ ಅಂಜೀಕಿ ಹುಟ್ಯಾವೈ +ಅಪಸಕುನ ನೆನದು ಥರ ಥರಾ ನಡಗುತಾರೆ +ಹರ ನನ್ನ ಮಾದೇವೈ || +ಆಹಾ… +ಭಟ್ಟರ ಮನದಾಗ ಅಂಜಿಕಿ ಅನ್ನುವುದು ಹುಟ್ಟಿ ಅವರು ಎದ್ದು ಧಡಧಡನೆ ಪಡಸಾಲಿಗೆ ಬಂದು ಹಳಬನನ್ನ ಕರೆಯುತಾರೆ +ಆಹಾಣಿ… +ಧಡ ಧಡ ಅಂತ ಪಡಸಾಲಿಗೆ ಬಂದು ಹಳಬನನ್ನ ಕರದು-ಏ ಹಳಬಾ ಶಾಸ್ತ್ರದ +ಅಯ್ಯನವರನ್ನ ಕರದ ತಾ ಹೋಗೋ ಅಂತ ಹೇಳುತಾರೇ +ಹರ ನನ್ನ ಮಾದೇವೈ || +ಶಾಸ್ತ್ರದ ಅಯ್ಯನವರು ಬಂದು ಹೊತಿಗೀ ತಗದು ಶಾಸ್ತ್ರ ನೋಡಿ ಕಾರಭಾರಿಗಳಿಗೆ ಹೇಳುತಾರೇ – +ಕಾರಭಾರೀ ದೊರೆಯೆ ನೀವು ನನ್ನ ಮನ್ನಸರಿ +ಈ ತೇರು ಎಳಿಯುವದುದು ತರವಲ್ಲ ತಂದೇ +ಎಡಕೆ ಅಪಸಕುನಾವು ಬಲಕೆ ಅಪಸಕುನಾ +ಹಿಂದೆ ಅಪಸಕುನಾವು ಮುಂದೆ ಅಪಸಕುನಾ +ಎಂಟು ಮೂಲಿಗಳಲ್ಲಿ ಎಂಟು ಅಪಸಕುನಾ +ಹಿಂಗೆ ಅಪಸಕುನವೆಂಬುದು ಆವರಿಸಿದ ಈ ತೇರನ್ನ ಎಳಿಯುವುದು ತರವಲ್ಲ ತಂದೇ ಅಂತ ನುಡದ ಶಾಸ್ತ್ರದ ಅಯ್ಯನವರನ್ನ ಕಾರಭಾರಿ ಎಂಬ ತ್ರಿಂಬಕ ಭಟ್ಟ ಬೈಯ್ಯುತಾರೆ +ಆಹಾಣಿ… +ಶಾಸ್ತ್ರದ ಅಯ್ಯನವರನ್ನ ಬೈದು ಕಳಿಸಿ – ಕಾರಭಾರಿಯೆಂಬವರೂ ಇತ್ತ ದೇಸಾಯರ ವಾಡೇಕ್ಕ ಬರುತಾರೆ +ಹರ ನನ್ನ ಮಾದೇವೈ || +ದೇಸಾಯರ ವಾಡೇಕ್ಕ ಬಂದು ದೇಸಾಯರಿಗೆ ಹೇಳುತಾರೇ – +ಚೈತ್ರ ಶುಕ್ಲದ ತ್ರಯೋದಶಿಯ ದಿನವೊ +ಅಕ್ಷಯ್ಯ ತದಗೀಯ ಸುಮುಹೂರ್ತದಾಗೆ +ಸ್ವಾಮೀಯ ತೇರೂ ಎಳಿಯೂವದಯ್ಯಾ +ಶಿವ ಶಿವ ಮಾದೇವೈ || +ಆಹಾಣಿ…ಕಾರಭಾರಿಯೆಂಬೋರು ಶುಕ್ಲ ತದಗಿಯ ಮುಹೂರ್ತದಾಗೆ ತೇರನ್ನ ಎಳಿಯೂದಕ್ಕ ದೊರಿಯ ಅಪ್ಪಣೀ ಪಡದು …ಆಹಾಣಿ… +ಊರೂರಿಗೆ ಸುದ್ದೀಯ ಕಳಿಸ್ಯಾರು ಕಾಣಿ +ಡಂಗೂರ ಹೊಡಿಸ್ಯಾರು ದೇಸಗತಿ ತುಂಬ +ಅಕ್ಕ ತಂಗಿಯದರನ್ನ ಕರಿಯ ಕಳುಹ್ಯಾರೊ +ಬೀಗಾರು ಬಿಜ್ಜರಿಗೆ ಹೇಳಿ ಕಳುಹ್ಯಾರೊ +ನೆಂಟಾರು ಇಷ್ಟಾರು ಬಂಧು ಬಳಗಾವೊ +ಎಂಟು ದಿಕ್ಕೀನಿಂದ ಭಕ್ತ ಕೋಟೀಯೊ +ಬಂಡೀಯ ಕಟಿಗೊಂಡು ಬಂದು ಸೇರ್‍ಯಾರೊ +ಸ್ವಾಮೀಯ ತೇರಾನು ನೋಡ ಬಂದಾರೊ +ಧರಮನಟ್ಟಿಯ ಸಿಂಗಾರ ಕಾಣಬಂದಾರೊ || +ಹರ ನನ್ನ ಮಾದೇವೈ || +ಆಹಾಣಿ… +ಚೈತ್ರ ಬಹುಳ ತದಗಿಯ ದಿವಸ ಸ್ವಾಮೀಯ ಗುಡಿಯ ಅಂಗಳದಾಗೆ ನಿಂತ ತೇರಿನ ಸುತ್ತ ದೇಸಗತಿಯ ಭಕುತ ಜನರೆಂಬೋರು ನೆರದು ಉಧೋ ಉಧೋ ಅನ್ನುತಾರೆ +ಶಿವ ನನ್ನ ಮಾದೇವೈ || +ಇಟ್ಠಲ ಸ್ವಾಮೀಗೆ ಚಾಂಗ ಬೋಲೋ ಚಾಂಗ ಬೋಲೋ ಅಂತ ಮೈ ಮರತು ಕೂಗೂತಾರೆ…ಆಹಾಣಿ… +ಹರ ನನ್ನ ಮಾದೇವೈ|| +ಆಹಾಣಿ… +ಆಗ ಅರಬ್ಬೀ ಕುದರಿಯನ್ನ ಹತಿಗೊಂಡು ಮೆರವಣಿಗಿಯಿಂದ ಪಟವರ್ಧನ ದೊರಿಯಾದರೂ ಬರುತಾನೆ +ಶಿವ ನನ್ನ ಮಾದೇವೈ || +ಪಟವರ್ಧನ ದೊರಿಯ ಮಾರಾಣಿ ಲೀಲಾವತಿಯಾದರೂ ಮೇಣೆಯೊಳಗ ಕುಂತು ಪರಿವಾರ ಕಟಿಗೊಂಡು ಅಲ್ಲಿಗೆ ಬರುತಾಳೆ +ಆಹಾಣಿ… +ದೇಸಾಯರು ಲೀಲಾವತಿ ರಾಣಿಯನ್ನ ಜೊತೆಗೊಂಡು ಸ್ವಾಮಿಯ ಗರ್ಭ ಗುಡಿಯೊಳಗ ಹೋಗಿ ಸ್ವಾಮೀಯ ಪಾದಕ್ಕ ಶರಣು ಮಾಡತಾರೆ +ಆಹಾಣಿ… +ಸ್ವಾಮಿಯ ಪಾದಕ್ಕ ಶರಣು ಮಾಡಿ ಪೂಜಾ ಅಂಬುವದ ಮಾಡಿಸಿ ಮಂಗಳಾರತಿಯ ಮಾಡಸುತಾರೇ… +ಶಿವ ನನ್ನ ಮಾದೇವೈ || +ಪೂಜಾ ಅಂಬುವದ ಮಾಡಿಸಿ ಮಂಗಳಾರತಿಯನಾದರೂ ಮಾಡುಸಿ ಪಟವರ್ಧನ ದೊರಿ ರಾಣಿ ಸಹಿತಾಗಿ ವಿಟ್ಠಲ ಸ್ವಾಮಿಯ ಚರ ಮೂರ್ತಿಯನ್ನ ಹೊತ್ತು ತರುವ ಪೂಜಾರಿಯನ್ನ ಬಲಗೊಂಡು ಗರ್ಭ ಗುಡಿಯಿಂದ ಹೊರಗೆ ಬರುತಾರೆ +ಆಹಾಣಿ.. +ಆಗ ವಿಟ್ಠಲ ಸ್ವಾಮಿಯನ್ನ ಸಿಂಗಾರದಿಂದ ತೇರಿನ್ಯಾಗ ಇಡುತಾರೆ +ವಿಟ್ಠಲ ಸ್ವಾಮಿಯನ್ನ ಸಿಂಗಾರದಿಂದ ತೇರಿನ್ಯಾಗ ಇಟ್ಟು ಪಟವರ್ಧನ ದೇಸಾಯರು ಮತ್ತ ರಾಣೀ ಸಾಹೇಬರು ಸ್ವಾಮಿಯ ರಥಕ್ಕ ಪೂಜೀಯ ಮಾಡುತಾರೆ +ಪೂಜೀಯ ಮಾಡಿ ಆರುತಿಯಾ ಎತ್ತುತಾರೈ || +ಆರುತಿಯ ಬೆಳಗಿ ಪ್ರದಕ್ಷಿಣಾ ಹಾಕುತಾರೈ || +ಶಿವ ನನ್ನ ಮಾದೇವೈ || +ಪ್ರದಕ್ಷಿಣಾ ಹಾಕುತಾ ಜಯ ಜಯ ವಿಟ್ಠಲ ರುಕುಮಾಯೀ ವಿಠ್ಠಲ ಅಂತ ಘೋಷಾವ ಮಾಡೂತಾರೇ ಆಹಾಣಿ… +ನೆರದ ಮಂದಿ ಎಲ್ಲಾ ಚಾಂಗ ಬೋಲೊ ಚಾಂಗ ಬೋಲೊ ಅಂತ ಉಧೋ ಉಧೋ ಅಂತ ಘೋಷಾವ ಮಾಡುತಾರೇ +ಆಹಾಣಿ… +ಪ್ರದಕ್ಷಿಣಾ ಹಾಕಿ ಸ್ವಾಮಿಗೆ ಜಯ ಜಯ ಅಂತ ಘೋಷ ಮಾಡಿ ಪಟವರ್ಧನ ದೇಸಾಯರು ಮತ್ತ ಲೀಲಾವತಿ ರಾಣಿ ಸ್ವಾಮಿಯ ರಥಕ್ಕ ಸಾಷ್ಟಾಂಗ ನಮಸ್ಕಾರ ಮಾಡುತಾರೆ +ಆಹಾಣಿ.. +ಸ್ವಾಮಿಯ ರಥಕ್ಕ ಸಾಷ್ಟಾಂಗ ನಮಸ್ಕಾರ ಮಾಡಿ ಭಕುತಿಯಿಂದ ಸ್ವಾಮಿಯ ರಥದ ಹಗ್ಗವನ್ನಾದರೂ ಕೈಯಿಂದ ಮುಟ್ಟುತಾರೇ +ಆಹಾಣಿ… +ಸ್ವಾಮಿಯ ರಥದ ಹಗ್ಗವನ್ನಾದರೂ ಕೈಯಿಂದ ಮುಟ್ಟಿ ಅಲ್ಲಿ ನೆರೆದಂಥಾ ಭಕ್ತರು ಸ್ವಾಮಿಯ ತೇರನ್ನ ಎಳಿಯಲೀ ಅಂತ ಹಿಂದಾಕೆ ಸರಿಯುತಾರೆ +ಆಹಾಣಿ… +ಅಲ್ಲಿ ಲಕ್ಷ ಲಕ್ಷ ಭಕುತ ಮಂದೀಗೆ ಸಾಕಾಗುವ ಹಂಗೆ ಫರ್ಲಾಂಗುಗಟ್ಟಲೇ ಉದ್ದಾನುದ್ದ ತೇರಿನ ಹಗ್ಗ ಇದ್ದೂ … +ಆಹಾಣಿ… +ಸ್ವಾಮೀಯ ತೇರು ಎಳದು ಸೇವಾ ಮಾಡಬೇಕನ್ನೋ ಮಂದಿ ಯಂಬುವದು ನಾ ಮುಂದು ತಾ ಮುಂದು ಅಂತ ನುಗ್ಗಿ ಬಂದೂ +ಚಾಂಗ ಬೋಲೊ ಚಾಂಗ ಬೋಲೋ ಅಂತ ಘೋಷಾವ ಮಾಡಿ ತೇರಿನ ಹಗ್ಗವನ್ನ ಎಳಿಯೂತಾರೇ +ಹರ ನನ್ನ ಮಾದೇವೈ|| +ಆಹಾಣಿ… +ಸ್ವಾಮಿಯ ಮಹಿಮೆ ಏನೆಂಬುವದು ಯಾರಿಗೆ ತಿಳದೀತು ! +ಭೋರೆಂಬ ಜನಸಾಗರವೆಲ್ಲಾ ಕಾಲು ಊರಿ ಕಸುವು ಹಾಕಿ ಉಸರು ಬಿಗಿ ಹಿಡಿದು ಸ್ವಾಮಿಯ ಆ ರಥವನ್ನಾದರೂ ಎಳದಾರೇ +ಆಹಾಣಿ… +ಭೋರೆಂಬುವ ಸಾಗರದ ಹಂಗೆ ಇದ್ದ ಅಷ್ಟು ಮಂದಿ ಮಂದಾರ ಅಂಬುವ ಪರ್ವತಕ್ಕೆ ಹಗ್ಗವನ್ನ ಕಟ್ಟಿ ಎಳದಿದ್ದರೇ ಅದಾದರೂ ಮುಂದಕ ಸರಿಯತಿತ್ತೋ ಏನೊ…ಆಹಾಣಿ… +ಆದರೆ ಇಲ್ಲಿ ಈ ಭೋರೆಂಬ ಜನಸಾಗರವೆಲ್ಲಾ ಕಾಲು ಊರಿ ಕಸುವು ಹಾಕಿ ಉಸರು +ಬಿಗಿ ಹಿಡಿದು ಸ್ವಾಮಿಯ ಆ ರಥವನ್ನಾದರೂ ಎಳದರೇ +ಸ್ವಾಮೀಯ ತೇರು ಜಪ್ಪಂತ ಅನಲಿಲ್ಲ …ಆ ತೇರಿನ ಗಾಲಿಯಂಬೋವು ನಾಕು ಬಟ್ಟಿನಷ್ಟಾದರೂ ಮುಂದಕ ಸರದು ಬರಲಿಲ್ಲಾ…ಆಹಾಣಿ… +ಶಿವ ನನ್ನ ಮಾದೇವೈ || +ಆಗ ಕಾರಭಾರಿ ತ್ರಿಂಬಕ ಭಟ್ಟರು ದೇಸಾಯರನ ಏಕಾಂತಕ ಕರಕೊಂಡು ಹೋಗುತಾರೇ +ಆಹಾಣಿ… +ಏಕಾಂತಕ ಕರಕೊಂಡು ಹೋಗಿ ಶಾಸ್ತ್ರದ ಅಯ್ಯನವರು ಹೇಳಿದ ಶಾಸ್ತ್ರವನ್ನಾದರೂ ನುಡದು ಹೇಳುತಾರೇ +ಆಹಾಣಿ… +ಮಂತ್ರಿ ಅಂಬೋನು ಹೇಳಿದ್ದು ಕೇಳಿ ದೇಸಾಯರ ಹರಣ ತಲ್ಲಣಿಸುತಾದೆ… +ಮುಂದೇನು ಮಾಡೂದೋ ಮಂತ್ರೀ ಅಂತ – +ಆಹಾಣಿ…ಸ್ವಾಮಿಯ ತೇರು ಎಳಿಯದಿದ್ದರ ಈ ದೇಸಗತಿ ಉಳದೀತು ಹೆಂಗೋ ಮಂತ್ರೀ ಅಂತ ಹಲುಬಿ ಹಂಬಲಿಸುತಾರೇ +ಆಗ ತ್ರಿಂಬಕ ಭಟ್ಟ ಮನದಾಗೇ ವಿಚಾರ ಮಾಡಿ ಡಂಣಾಯಕಗ ಹೇಳಿ ಕಳುಹತಾನೆ +ಆಹಾಣಿ… +ಯಾರಲ್ಲಿ ಬಾರಪ್ಪ ಬ್ಯಾಗ ಬನ್ನೀರೊ +ಬ್ಯಾಗಾನೆ ಡಂಣಾಯಕನ ಕರದು ತನ್ನೀರೊ +ಹರ ನನ್ನ ಮಾದೇವೈ || +ಹೇಳಿ ಕಳುಹಿದ ಕೂಡಲೇ ಓಡಿ ಬಂದ ಡಂಣಾಯಕ ದೇಸಾಯರಿಗೆ ಮುಜರೀ ಮಾಡುತಾನೆ +ಆಹಾಣಿ… +ಮುಜರೀ ಮಾಡಿ ಕರಸೀದ ಕಾರಣಾದರೂ ಏನಂತ ಕೇಳುತಾನೆ +ಹರ ನನ್ನ ಮಾದೇವೈ|| +ಆಹಾಣಿ…ಆಗ ತ್ರಿಂಬಕ ಭಟ್ಟ ನುಡಿಯುತಾನೇ +ಚನ್ನ ಡಂಣಾಯಕ ನೀನು ಶೂರ ಡಂಣಾಯಕನೊ +ಪಾಗಾದಾಗಿನ ಕುದರೀ ಬ್ಯಾಗಾನೆ ತರಿಸೊ +ಕುದರಿ ಎತ್ತುಗಳನಾ ಕಟ್ಟಿ ತೇರನ್ನ ಎಳಸೋ +ಶಿವ ನನ್ನ ಮಾದೇವೈ|| +ಆಹಾಣಿ…ಡಂಣಾಯಕನಾದರೂ ಪಾಗಾದಾಗಿನ ಆರು ನೂರು ಕುದರಿಗಳನ್ನ ತರಸುತಾನೆ +ಆರು ನೂರು ಎತ್ತುಗಳನ್ನಾದರೂ ಕೂಡಿ ಹಾಕಿ ತರಸುತಾನೆ +ಆಹಾಣಿ… +ಆರು ನೂರು ಕುದರೀ ಆರು ನೂರು ಎತ್ತುಗಳನ್ನಾದರೂ ತರಿಸಿ +ಅವುಗಳನ್ನ ಸೂರ್ಯಾ ಚಂದ್ರಾಮ ಚಿಕ್ಕಿಗಳನ್ನ ಕೆತ್ತಿದ ಸ್ವಾಮಿಯ ತೇರಿನ ಅಚ್ಚಿಗೆ ಹೂಡಿ ಹೊಡೆಯುತಾನೇ +ಆಹಾ… +ಆರು ನೂರು ಕುದರಿ ಎತ್ತುಗಳಾದರೂ ಮುಂಗಾಲುಗಳ ಮ್ಯಾಲೆ ಭಾರಾ ಹಾಕೀ +ಆ ತೇರೆಂಬುವ ಸ್ವಾಮಿಯ ರಥವನ್ನ ಎಳಿಯಲಿಕ್ಕೆ ತಿಣಿಕ್ಯಾಡಿ ತಿಣಿಕ್ಯಾಡಿ +ವಸ್ ವಸ್ ಅಂತ ತೇಕತಾವೇ…ಆಹಾಣಿ… +ವಸ್ ವಸ್ ಅಂತ ತೇಕಿ ಮುಂಗಾಲು ಮಡಿಚಿಕೊಂಡು ಮುಂದಕ್ಕ ಬೀಳುತಾವೇ +ಹರ ನನ್ನ ಮಾದೇವೈ || +ಅಷ್ಟಾದರೂ ಸ್ವಾಮಿಯ ರಥವಂಬುವುದು ನಾಕು ಬೆರಳಿನಷ್ಟಾದರೂ ಮುಂದಕ ಸರಿಯಲಿಲ್ಲವಲ್ಲಾ ತಂದೇ +ಶಿವ ನನ್ನ ಮಾದೇವೈ|| +ಆಗ ಡಂಣಾಯಕನ ಮಕದ ಮ್ಯಾಲ ಬೆವರನ್ನುವದು ಹರಿಯತೈತಿ +ಆಹಾಣಿ…ಬೆವರು ಹರಿಯೂವ ಮಕವ ಹೊತ್ತು ಡಂಣಾಯಕನಾದರೂ ಪಟವರ್ಧನ ದೊರಿಯ ವಾಡೇಕ್ಕ ಓಡಿ ಬಂದೂ – +ಆಹಾಣಿ… +ದೇಸಾಯರ ವಾಡೇಕ್ಕಾದರೂ ಓಡಿ ಬಂದು ದೇಸಾಯರಿಗೆ ಸ್ವಾಮೀ ನನ್ನ ಮನ್ನಸಬೇಕು… +ಆ ಸ್ವಾಮಿಯ ಸಕುನವಾದರೂ ಏನಿದ್ದೀತು ಅಂಬುದು ಕೇವಲ ನರಮನುಸನಾದ ನನಗೇನೂ ತಿಳೀದು ಸ್ವಾಮೀ ಅಂತಂಬುವ ಡಂಣಾಯಕನ ಸೊಲ್ಲು ಕೇಳಿ ದೇಸಾಯರ ಎದಿಯಾದರೂ ಝಲ್ಲನ್ನುತಾದೆ…ಆಹಾಣಿ… +ದೇಸಾಯರ ಎದಿಯಾದರೂ ಝಲ್ಲಂದು ಕಾರಭಾರಿ ಭಟ್ಟನ ಹೊಟ್ಟೀ ಕರಳಿನ್ಯಾಗ ಗೊಳ್ ಗೊಳ್…ಅಂತ ಸದ್ದು ಹುಟ್ಟಿ ಅಂವ ಗದಗದಾ ಅಂತ ನಡಗುತಾನೇ… +ದೇಸಾಯರು ತಮ್ಮ ಆಸನಾ ಬಿಟ್ಟು ಎದ್ದು ನೆಟ್ಟಗೇ ಗುಡಿಗೆ ಹೊಂಡುತಾರೆ…ಕಾರಭಾರಿ ಅವರ ಹಿಂದಿಂದ ಹಿಂದಿಂದಣಿ ಓಡಿ ಓಡಿ …ಇಬ್ಬರೂ ಗುಡಿಯ ಮುಟ್ಟುತಾರೆ… ಗುಡಿಯೊಳಗ ಹೊಕ್ಕು ಗರ್ಭ ಗುಡಿಯೊಳಗೆ ಸ್ವಾಮಿಯ ಪಾದದ ಮುಂದೆ ಕುಂಡರತಾರೇ… +ಆಹಾಣಿ… +ಗರ್ಭಗುಡಿಯೊಳಗ ಸ್ವಾಮಿಯ ಪಾದದ ಮುಂದ ಕುಂತಾದಮ್ಯಾಲೆ ಕಾರಭಾರಿಗಳು ಪೂಜಾರಿಗೆ ಅಂತಾರೆ – +ಏನಪ್ಪ ಪೂಜಾರೀಣಿ… ನಿನ್ನ ಸ್ವಾಮಿಯ ಮನಸಿನ್ಯಾಗಾದರೂ ಏನೈತಿ ? +ಎರಡೂ -ನಾಕು ಮಜಲಿನ ಹೊನ್ನ ಕಳಸದ ತೇರು ಮುಂದಕ ನಡೀಬೇಕಂದರ ಏನ ಮಾಡಬೇಕಂತ ನಿನ್ನ ಸ್ವಾಮಿಯನ್ನಾದರೂ ಕೇಳು… +ಪೂಜಾರಿ ಅಂದರ ಬರೇ ಪೂಜಾದ ದಕ್ಷಿಣಾ ಎತ್ತೂದೂ ಭಕ್ತ ಮಂದಿ ತಂದುಕೊಟ್ಟ ಎಡೀ ಅಂಬುವದನ್ನ ತಿನ್ನೋದು ಅಷ್ಟಣಿ ಅಲ್ಲ… +ಆಹಾಣಿ… +ಪೂಜಾರಿ ಅಂದರ ದೇವರನ ಮಾತಾಡಸಬೇಕು…ದೇವರನ ಮಾತಾಡಿಸಿ ಅವನ ಮನಸಿನ್ಯಾಗ ಏನೈತೀ ಅಂತ – +ತೇರಂಬುವದು ಮುಂದಕ ನಡೀಬೇಕಾದರ ಏನು ಮಾಡಬೇಕಂತ ತಿಳದ ಹೇಳಬೇಕಪಾ ಪೂಜಾರೀ ಅಂತ ಅನ್ನುತಾರೆ +ಪೂಜಾರಿಗೆ ಬುಗಲು ಆತು … +ಕಾರಭಾರಿ ಅಂಬುವವ ಇಷ್ಟ ಮಾತು ನುಡದ ಕೂಡಲೇ ದೇಸಾಯರು ಸ್ವಾಮಿಯ ಪಾದಕ್ಕ ಶರಣುಮಾಡಿ ಗರ್ಭಗುಡಿಯಿಂದ ಹೊರಗೆ ನಡಿಯುತಾರೆ… +ಗುಡಿಯಿಂದ ಹೊರಬಿದ್ದ ಕಾರಭಾರಿ ತೇರಿಗೆ ಸೇರಿದ ಮಂದಿಗೆ ಏನು ಹೇಳತಾನಂದರೆ- +ತದಗೀಯ ಮೂರ್ತವು ಓಮು ಬರಲಿಲ್ಲಾ +ಮುಂದ ಒದಗುವ ಮೂರ್ತ ತಿಳದು ಹೇಳೇವೊ +ಶಿವ ನನ್ನ ಮಾದೇವೈ || +ತೇರು ಎಳಿಯೂದಕ್ಕ ನೆರದ ಮಂದಿ ಕಾರಭಾರಿಯ ನುಡಿ ಕೇಳಿ ಅವರು ಮೂಕರಾಗಿ ನಿಂತಾರಲ್ಲೊ ಶಿವನೇ ! +ಆಹಾಣಿ… +ಸ್ವಾಮಿಯ ತೇರು ಎಳಿಯಲಿಕ್ಕೆ ಬಂದರೆ ತೇರು ಎಳಿಯದೇ ಅಪಸಕುನ ಹೊತ್ತು ಊರು ಸೇರುವುದು ಹೆಂಗೋ ತಂದೇ ಅಂತ ಅಲ್ಲಿ ಸೇರಿದ ಮಂದಿ ದುಕ್ಕವ ಮಾಡುತಾರೆ… ದುಕ್ಕವ ಮಾಡಿ ಆಕಾಸದ ಕಡೆ ನೋಡಿ – ಕೈಮುಗದು… +ಹೋಗುವ ಮಂದಿ ಹೋಗಿ…ಉಳದ ಮಂದಿ ಅಲ್ಲಲ್ಲೇ ಗುಂಪು ಗುಂಪಾಗಿ ಕುಂಡರತಾರೇ +ಆಹಾಣಿ… +ನೆರದ ಮಂದಿಗೆ ಹೇಳುವ ಮಾತು ಹೇಳಿ ಕಾರಭಾರಿಗಳು ಮುಂದ ಮುಂದ ಹೋಗತಿದ್ದಂಥಾ ದೇಸಾಯರ ಹಿಂದ ಹಿಂದ ಓಡುತಾರೆ +ಆಹಾಣಿ… +ದೇಸಾಯರು ತಮ್ಮ ವಾಡೇ ಹೊಕ್ಕು ದರ್ಬಾರದ ತಮ್ಮ ಪೀಠದ ಮ್ಯಾಗ ಧಪ್ಪಂತ ಕುಸದು ಕುಂತು ಉಸರುಗರಿಯತಾರೆ… +ಆಹಾಣಿ…ಉಸರುಗರಿಯುವ ದೇಸಾಯರಿಗೆ ಕಾರಭಾರಿ ಅಂತಾರೆ – +ದೊರಿಗಳು ಹಂಗ ಉಸರುಗರೀಬಾರದು…ದೊರಿಗಳು ಉಸರುಗರದರೆ ನಾಡಿಗೆ ಒಳ್ಳೇದಲ್ಲ +ಹರ ನನ್ನ ಮಾದೇವೈ || +ದೇಸಾಯರು ‘ಉಸರುಗರಿಯುವದು ಹಾಳಾಗಲೀ…ಈಗ ಇದಕ್ಕ ಏನ ಹಾದೀ ಹುಡಕತೀ ಹೇಳೂ…’ ಅಂತಾರೆ. +ಆಗ ಕಾರಭಾರಿ ಹೊರಗ ಹೋಗಿ ಹಳಬ ಅನ್ನವನನ್ನ್ನ ಕರದು ಶಾಸ್ತ್ರದ ಅಯ್ಯನವರನ್ನಾದರೂ ಕರಕೊಂಡ ಬಾರಪಾ ಹಳಬಾ ಅಂತ ಹೇಳಿ ಕಳಹುತಾರೆ… +ಹಾಂ ಅನ್ನುವದರೊಳಗೆ ಶಾಸ್ತ್ರದ ಅಯ್ಯ ದೇಸಾಯರ ವಾಡೇಕ್ಕ ಓಡಿಬಂದು +ದೇಸಾಯರಿಗೆ ಮುಜರೀ ಮಾಡಿ +ಕಾರಭಾರಿಗಳ ಕಡೆ ನೋಡಿ ‘ನಾ ಮದಲಣಿ ಹೇಳಿದ್ದಿನಲ್ಲರೀ ’ ಅಂತ ಹೇಳಲಿಕ್ಕೆ ಹೊಂಟ ಅವನ ಬಾಯಿಯನ್ನ ಮುಚ್ಚಿಸಿ – +ಆಹಾಣಿ… +ಅವನ ಬಾಯಿಯನ್ನಾದರೂ ಮುಚ್ಚಿಸಿ ‘ನಿನ್ನ ಅಪಸಕುನದ ಸುದ್ದೀ ಹೇಳಿ ಆತಲಾ…ಈಗ ಆ ಅಪಸಕುನಾ ತಗದು ಶುಭ ಸಕುನ ಸಿಗೂ ಹಾದೀ ತಿಳದ ಹೇಳು ’ ಅಂತ ಕಾರಭಾರಿ ಬಿರುನುಡಿಯ ನುಡಿಯುತಾರೇ +ಆಹಾಣಿ… +ಕಾರಭಾರಿಯ ಮಾತು ಕೇಳತಿದ್ದಂಗೇ ಶಾಸ್ತ್ರದ ಅಯ್ಯನವರು ಅಲ್ಲೇ ಒಂದು ಮಂಚದ ಮ್ಯಾಲೆ ಕುಂತು ತಮ್ಮ ಹೊತಿಗಿಯ ಗಂಟು ಬಿಚ್ಚತಾರೆ +ಹೊತಿಗಿಯ ಗಂಟು ಬಿಚ್ಚಿ ಪ್ರಶ್ನೆ ಕುಂಡಲೀ ಹಾಕೀ – +ಗುಣಿಸಿ ಭಾಗಿಸೀ ಲೆಕ್ಕಾ ಹಾಕಿ ನೋಡತಾರೆ … +ಆಹಾಣಿ… +ಲೆಕ್ಕಾ ಹಾಕಿ ನೋಡಿ ಕವಡೀ ಎಸದು ಸರೀ – ಬೆಸವ ನೋಡುತಾರೆ +ಸರಿ ಬೆಸವ ನೋಡಿ ಮತ್ತ ಹೊತಿಗೀಯ ನೋಡಿ ಸಕುನವ ಓದುತಾರೆ +ಆಹಾ… +ಹತ್ತು ನಮೂನಿಯ ಲೆಕ್ಕಾ ಹಾಕಿ ಅಳದೂ ಸುರದೂ -ಸುರದೂ ಅಳದೂ ಆ ಶಾಸ್ತ್ರದ ಅಯ್ಯನವರು ಹೇಳತಾರೇ – +ಶಾಸ್ತ್ರ ನುಡಿಯುವದನ್ನ ನುಡದೇನು ದೊರಿಯೆ +ನರಮನುಸ ನಾನು ನನಗೇನು ತಿಳಿಯಾದು +ಹರ ನನ್ನ ಮಾದೇವೈ || +ಆಹಾ… +ನಾನಾದರೂ ಪಾಮರನು…ನಾನೆಂಬ ನಾನು ಏನೂ ಅರಿಯದ ಮೂಢನು… ದೊರಿಯೇ ಶಾಸ್ತ್ರ ಏನು ಹೇಳುತದೆಯೋ ಅದನಷ್ಟೇ ನಿಮಗೆ ಹೇಳೇನು ಅಂತಂದು ಆ ಶಾಸ್ತ್ರದ ಅಯ್ಯನಾದರೂ ಹಿಂಗ ನುಡದಾನೆ – +ಹಿಂಡಿ ಹಾಕದ ಆಕಾಳು ಹಿಂಡೀತು ಹೆಂಗೊ +ಕಾಳು ಹಾಕದೆ ಕುದರಿ ಓಡೀತು ಹೆಂಗೊ +ನರಮನುಸ ಕಟ್ಟಿಸಿದ ತೇರು ನಿನ್ನಾದೂ +ನನಗೇನು ಕೊಟ್ಟೀಯೊ ಮುಂದೆ ನಡಸಾಕೆ +ನರಮನಸನ್ಹೊರತು ನನಗೆ ಮತ್ತೇನು ಬ್ಯಾಡೊ +ಆಹ್ಹಾಣಿ…! +ಶಾಸ್ತ್ರದ ಅಯ್ಯನವರ ಮಾತು ಕೇಳಿದ ಕಾರಭಾರಿ ನುಡೀತಾನೆ – +ಏನು ಮಾಡಂತೀಯೊ ಖಂಬೀರ ದೊರಿಯೆ +ನರಮನುಸ ಬಲಿಯು ಬೇಕಂತ ತೇರೀಗೆ +ಮನುಸ ಕಟ್ಟಿದ ತೇರೀಗೆ ಮನುಸಾಣಿನೆ ಬಲಿಯೊ +ಏನು ಮಾಡಂತೀಯೊ ಖಂಬೀರ ದೊರಿಯೇ +ಶಿವ ನನ್ನ ಮಾದೇವೈ || +ಬಲೀ ಬೇಡತೈತಿ ಅಂತನ್ನುವ ಮಾತು ಕೇಳತಿದ್ದಂಗೇ ದೇಸಾಯರು ಅಂತಾರೆ – +ವಾಡೇದೊಳಗಿರುವವರು ನಾವು ಇಬ್ಬಾರೇ +ನಾವೇ ಇಲ್ಲದಿರಕ ದೇಸಗತಿಯ ಗತಿ ಹೆಂಗ? +ಹರ ಹರ ಮಾದೇವೈ || +ಆಹಾಣಿ… +ಆಗ ಕಾರಭಾರಿ ಅನ್ನುತಾರೇ – +ದೊರಿಯೆ ನಿನ್ನ ಮಾತು ಸರಿಯಯ್ಯ ತಂದೆ +ದೇಸಗತಿ ನಡೆಸಾಲು ನಾನೂನು ಬೇಕೂ +ದೇಸಾಯರೂ ಮತ್ತ ಕಾರಭಾರಿಗಳು ಹಿಂಗ ನುಡದಾಗ ಅಂಜಿದ ಡಂಣಾಯಕನಾದರೂ ಹಿಂಗ ನುಡಿಯತಾನೆ – +ಹೌದು ಬರಾಬ್ಬರೀ ನೀವು ಬಲಿಯಲ್ಲಾ ಣಿ +ನನ್ನ ಮನಿಯಾಗೂನೂ ಯಾರೂ ಬಲಿಯಲ್ಲ +ಆಹಾಣಿ… +ದೇಸಾಯರು ಕಾರಬಾರಿ ಮತ್ತ ಡಂಣಾಯಕ ಇವರು ಮತ್ತು ಇವರ ಕುಟುಂಬದವರು +ಯಾರೂ ಬಲಿ ಆಗುವದಿಲ್ಲ ಅಂತಾದ ಮ್ಯಾಲೇ…ಆಹಾಣಿ… +ಆಗ ದೇಸಾಯರೇ ಶಾಸ್ತ್ರದ ಅಯ್ಯನವರನ್ನ ಕೇಳುತಾರೆ – +ಅಯ್ಯನವರೇ ನೀವೇ ಹೊತಿಗೀ ನೋಡಿ ಯಾರು ಬಲಿ ಅಂಬುವುದನ್ನ ತಿಳದು ಹೇಳರೀ ಅಂತ +ಆ ಶಾಸ್ತ್ರದ ಅಯ್ಯನಾದರೂ ಪ್ರಶ್ನೆ ಕುಂಡಲೀ ಹಾಕಿ -ಗುಣಿಸೀ-ಭಾಗಿಸೀ ನೋಡತಾರೆ +ಕವಡೀಯ ಎಸದು ಸರಿ ಬೆಸವ ನೋಡುತಾರೆ… +ಮತ್ತೆ ಗುಣಿಸೀ ಭಾಗಿಸೀ ಲೆಕ್ಕವ ಮಾಡಿ ಹೊತಿಗಿಯ ತಗದು ಸಕುಣವ ಓದುತಾರೆ… ಆಹಾ… +ಹತ್ತು ನಮೂನಿಯ ಲೆಕ್ಕಾ ಹಾಕಿ ಅಳದೂ ಸುರದೂ – ಸುರದೂ ಅಳದೂ ಶಾಸ್ತ್ರದ ಅಯ್ಯನವರು ಹೇಳುತಾರೇ- +ಶಾಸ್ತ್ರ ನುಡಿಯುವುದನ್ನ ನುಡದೇನು ದೊರಿಯೆ +ನರಮನುಸ ನಾನು ನನಗೇನು ತಿಳಿಯಾಣಿದು +ಹರ ಹರ ಮಾದೇವೈ || +ಮೊದಲೆರಡು ಮಜಲು ದೈವದ ಮಜಲುಗಳೊ +ಮೂರರಿಂದಾರು ನರಮನುಸಾರ ಮಜಲುಗಳೊ +ಕೆಳಗಿನ ಮಜಲಾಗೆ ಕಾಣೊ ಕಾಟುಕ ಜೀವಗಳು +ಮನುಸಾರನ್ನ ಬಿಟ್ಟು ಸ್ವಾಮಿ ಮತ್ತೇನು ಒಲ್ಲಾನು +ಹರ ಹರ ಮಾದೇವೈ || +ಶಾಸ್ತ್ರದ ಅಯ್ಯನವರ ನುಡಿಯ ಕೇಳಿ ದೇಸಾಯರು ಕಾರಭಾರಿಗಳ ಮುಖವನ್ನ ನೋಡತಾರೆ… +ಆಗ ಕಾರಭಾರಿಗಳು – ಯಾರಪ್ಪ ಹೊರಗೇ ಅಂತ ಬಾಗಿಲಾಳನ್ನ ಕರದು ತಳವಾರನನ್ನ ಕರದು ತಾಣಿ ಅಂತ ಹೇಳುತಾರೆ… +ಆಹಾಣಿ… +ಓಡೋಡಿ ಬರುತಾನೆ ತಳವಾರ ಮಾದ +ಬಾಗಲ ಹೊರಗೇ ನಿಂತು ಶರಣನ್ನುತಾನೆ +ಏನಯ್ಯ ದೊರಿಯೆ ಹೇಳಿ ಕಳುಹಿದ್ದು +ಶಿವ ನನ್ನ ಮಾದೇವೈ || +ಆಹಾಣಿ… +ತಳವಾರ ಮಾದ ಓಡಿ ಬಂದು ಬಾಗಲ ಹೊರಗೇ ನಿಂತು ಶರಣು ಮಾಡಿ – +ಏನಪ್ಪಾ ದೊರಿಯೆ ಹೇಳಿ ಕಳುಹಿದಿರೀ ಅಂತ ಕೇಳಿದಾಗ ಎದ್ದು ಹೊರಗೆ ಬಂದ ತ್ರಿಂಬಕ ಭಟ್ಟ ಹೇಳುತಾನೆ – +ಆಹಾಣಿ… +ನಿನ್ನ ಹೇಳಿ ಕಳುಹಿದ್ದು ಯಾಕೇ ಅಂದರೇ- +ಅಪಸಕುನವಾಗಿ ಸ್ವಾಮಿಯ ತೇರು ಎಳಿಯಲಾರದೇ ನಿಂತು ದೇಸಗತಿಗೇ ಕುತ್ತು ಬಂದು ಕುಂತೈತಿ.ಶಾಸ್ತ್ರ ಕೇಳಿದ್ದಕ್ಕ ಶಾಸ್ತ್ರ ಹೇಳುತಾದೇ… +ಸ್ವಾಮೀಗೆ ಬೇಕಂತ ನರಮನುಸ ಬಲಿಯು +ಕಾಟುಕರ ಜಾತೀಯ ಮನುಸಾ ಬೇಕಲ್ಲೋ +ಆಹಾಣಿ… +ಏನಪ್ಪಾ ತಳವಾರಾಣಿ +ಸ್ವಾಮಿಯ ತೇರಿಗೆ ಬಲಿ ಕೊಡಬೇಕಂತ ಶಾಸ್ತ್ರ ಹೇಳುತೈತಿ …ಕಾಟುಕರ ಜಾತಿಯ ಮನುಸಾನ್ನ ಬಲಿ ಕೊಡಬೇಕಂತ ಶಾಸ್ತ್ರ ಹೇಳತೈತೆಲ್ಲಪಾಣಿ ತಳವಾರಾಣಿ +ಅದಕ್ಕೇ ನೀನಾದರೂ ಹೊಲಿ ಹದಿನೆಂಟು ಜಾತಿಗಳಿಗೆ ಸೇರಿದ ಯಾವನಾದರೂ ಒಬ್ಬನನ್ನ ಬಲಿಯಾಗಲಿಕ್ಕೆ ಹಿಡದು ತರಬೇಕಲ್ಲಪಾ ತಳವಾರಾಣಿ… +ಆಹಾಣಿ… +ಆಗ ತಳವಾರ ಮಾದ ಅಂತಾನೆ – ಯಾಕಾಗವಲ್ಲದು ಯಪ್ಪಾಣಿ ದೊರಿಯೆ… +ಪುಣ್ಯೇದ ಕೆಲಸಾ…ಸ್ವಾಮಿಯ ತೇರು ಮುಕ್ಯ… +ನೀವು ಹೇಳಿದಂತಾ ಮನುಸನನ್ನ ನಾನಾದರೂ ಹುಡುಕಿ ತಂದು ಒಪ್ಪಸತೇನರೀ ಯಪ್ಪಾ ಅಂತ ಹೇಳಿ ಶರಣು ಮಾಡಿ ಹೋಗತಾನಲ್ಲಾ ತಳವಾರ ಮಾದಾಣಿ…ಆಹಾಣಿ… ||ಶಿವ ನನ್ನ ಮಾದೇವೈ|| +ಇಷ್ಟ ಆಗೂದಕಂದರ ತದಗಿಯ ಮುಹೂರ್ತ ಮೀರಿ ಹೋಗಿರತೈತಿ… +ಸೂರ್ಯಾ ಪರಮಾತಮನಾದರೂ ತನ್ನ ತೇರು ಹೊಡಕೊಂಡು ಪಡೂ ದಿಕ್ಕಿನ ತುದಿಗೆ ಹೋಗುತಾನೆ +ಆಹಾಣಿ… +ಪಡೂ ದಿಕ್ಕಿನ ತುದೀಗೆ ಹೋದ ಸೂರ್ಯೇ ಪರಮಾತಮಾ ತಾಯಿಯ ಮಡಲಿನ್ಯಾಗೆ ಸೇರಿ ಮನಕೊಂಡು ಈ ಭೂಮಿ ಅಂಬುವುದರ ಮ್ಯಾಲೆ ಕತ್ತಲು ಕವಕೊಳ್ಳತೈತಿ +ಆಹಾಣಿ… +ಹಂಗ ಕತ್ತಲು ಕವಕೊಂಡಾಗ +ಊರಿನ ಹೊಲಿ ಹದಿನೆಂಟು ಕಾಟುಕ ಜಾತಿಯ ಮಂದಿಯೊಳಗೆ ಸ್ವಾಮಿಯ ತೇರಿಗೆ ತಮ್ಮವರನ್ನ ಬಲಿ ಕೊಡತಾರನ್ನುವ ಸುದ್ದಿ ಹಬ್ಬೀ… +ಆಹಾಣಿ… +ಸ್ವಾಮಿಯ ತೇರಿಗೆ ತಮ್ಮವರನ್ನ ಬಲಿ ಕೊಡತಾರನ್ನುವ ಸುದ್ದಿ ಗೊತ್ತಾಗಿ +ಅವರು ಕವಕೊಂಡ ಆ ಕತ್ತಲದೊಳಗೆ ಯಾರಿಗೂ ಗೊತ್ತು ಆಗದಂಗೆ +ಜಾತ್ರಿಗೆ ಬಂದವರು ಹೊಳ್ಳಿ ತಮ ತಮ್ಮ ಊರಿಗೆ ಹೊಂಟವರಂಗೆ +ಊರು ಬಿಟ್ಟು ಹೋಗುತಾರೇ +ಆಹಾಣಿ… +ಹರೆವತ್ತು ಎದ್ದು ನೋಡಿದರೆ ಹೊಲಿ ಹದಿನೆಂಟು ಕಾಟುಗರ ಜಾತಿಗಳವರಂಬುವವರು ಒಬ್ಬರೂ ಊರಾಗ ಇಲ್ಲದೇ +ಆಹಾಣಿ… +ಊರಾಗಿನ ಕಸಾ ಅಂಬುವದು ಹಂಗಣಿ ಬಿದ್ದೈತಿ +ಡಣ್ಣಾಯಕ ಯಾಕಂತ ವಿಚಾರಸಲಿಕ್ಕೆ ಅಂತ ಅವರ ಕೇರಿಗೆ ಹೋದರೆ ಅವರ ಮನಿಗಳ ಬಾಗಲಂಬುವವು ಎಲ್ಲಾ ಹಾರುಹೊಡದು +ಅಲ್ಲಿ ಮನಸ್ಯಾರು ಇಲ್ಲದ ಖಾಲೀ ಮನಿಗಳಂಬುವವು ನಿಂತಾವಲ್ಲಾ +ಶಿವ ಶಿವ ಮಾದೇವೈ || +ತಳವಾರ ಮಾದ ಅಂಬುವವನೂ ಓಡಿ ಹೋಗ್ಯಾನೆ +ಆಹಾ…ಹಳಬರಂಬುವವರೂ ಓಡಿ ಹೋಗ್ಯಾರೆ… +ಆಹಾಣಿ… +ಅತ್ತ ಇತ್ತ ಹೇಳಿ ಕಳಿಸೀನಂದರ ಹಂಗ ಕಳಸಾಕ ಕೈಯಾಳುಗಳೂ ಇಲ್ಲದಂಗ ಆಗಿ ಕುಂತೈತೆಲ್ಲೊ ಶಿವನೆ +ಹರ ನನ್ನ ಮಾದೇವೈ|| +ಆಹಾಣಿ… +ಬೆಳಗಾಗತಿದ್ದಂಗೇ ಗುಲ್ಲು ಗುಲ್ಲಾಯಿತಲ್ಲಾ … +ಎಳೆಯದ ತೇರು ಮುಂದಕ ಇಟಗೊಂಡು – +ಬಂದ ಬೀಗರು ಬಿಜ್ಜರನ್ನ ಕಟಿಗೊಂಡು ಹೊಲಿ ಹದಿನೆಂಟು ಜಾತಿಗಳ ಜನರೆಂಬುವವರು ಊರು ಬಿಟ್ಟು ಓಡಿ ಹೋಗ್ಯಾರಂತೇ …ಆಹಾಣಿ +ಹೌದೇ… +ಹಾಂ…ಹೌದಂತೆ… +ಅರೇ ಯಾಕಂತೇ… +ಹಿಂಗೆ ಅಂತೆ ಅಂತೇ ಅಂತ ಧರಮನಟ್ಟಿಯೊಳಗ ನಾನಾ ನಮೂನಿಯ ಕಂತೇ ಪುರಾಣಗಳು ಹಬ್ಬುತಾವೇ…ಆಹಾಣಿ… +ನಸುಕು ಹರಿಯತಿದ್ದಂಗೇ ದೇಸಾಯರಿಗೆ ಸುದ್ದಿ ತಿಳದು ಕಾರಭಾರಿಗೆ ಹೇಳಿ ಕಳುಹುತಾರೆ +ಓಡೋಡಿ ಬಂದ ಕಾರಭಾರಿಗೆ ದೇಸಾಯರು ಹಿಂಗೆ ಹೇಳುತಾರೆ – +ಹರ ಹರ ಮಾದೇವೈ || +ಏನಪ್ಪಾ ಮಂತ್ರಿಯಯ್ಯ…ನಿನ್ನ ನಂಬಿ ನಾನಾದರೂ ಉದ್ಧಾರ ಆದಂಗ ಆತಲ್ಲಾಣಿ! +ರಾತೋ ರಾತ್ರಿ ಕಾಟುಗರ ಜಾತಿಗಳ ಮಂದಿಯೆಲ್ಲಾ ಊರು ಖಾಲೀ ಮಾಡಿ ಓಡಿ ಹೋಗಿದಾರೇ +ಆಹಾಣಿ… +ತೇರಿಗೆ ಬಲಿ ಅಂಬುವುದು ಹೋಗಲಿ ಹಾದಿ ಬೀದಿಗಳನ್ನ ಗುಡುಸಿ ಸ್ವಚ್ಛ ಮಾಡವರೂ ಇಲ್ಲದಂಗ ಆಗಿ ಕುಂತೈತಿ +ಆಹಾ… +ದೇಸಗತಿಯ ಗತಿ ಇಲ್ಲಿಗೆ ಬಂದು ಕುಂತಿತಲ್ಲೋ ಕಾರಭಾರೀ +ಕಾರಭಾರಿ ತ್ರಿಂಬಕ ಭಟ್ಟರಂಬವರು ಹೇಳತಾರೆ – +ದೇಸಾಯರಂಬುವವರು ನೀವು ನೀವ್ಯಾಕೆ ಚಿಂತೀ ಮಾಡುತೀರಿ… +ಊರಾಗಿನ ಕಾಟುಗರೆಲ್ಲ ಓಡಿ ಹೋದರೆ ಏನಾತು ಈ ಭೂಮಿಯ ಮ್ಯಾಲಿನ ಎಲ್ಲಾ ಕಾಟುಗರು ಜಗತ್ತು ಅಂಬುವುದನ್ನ ಬಿಟ್ಟು ತೊಲಗಿಲ್ಲವಲ್ಲಾ … +ಎಲ್ಲಾ ಯವಸ್ತಾ ಆಗುತೈತಿ…ನೀವು ನಿರುಮ್ಮಳವಾಗಿರ್ರಿ… ಅನ್ನುತಾರೇ +ಆಹಾಣಿ… +ಹಿಂಗ ದೇಸಾಯರಿಗೆ ನಿರುಮ್ಮಳ ಇರ್ರಿ ಅಂತ ಹೇಳಿ ಹೊಳ್ಳಿ ತಮ್ಮ ಮನಿಗೆ ಹೊಂಟ ಕಾರಭಾರಿಗಳು ಹಾದಿಯೊಳಗ ಸಿಕ್ಕ ಯಾರನೋ ಒಬ್ಬರನ ಡಂಣಾಯಕನ ಮನಿಗೆ ಓಡಿಸಿ ಅವನನ್ನ ಅರ್ಜೆಂಟು ಕರೆಕಳುಹತಾರೆ +ಶಿವ ಶಿವ ಮಾದೇವೈ || +ಡಂಣಾಯಕ ಕಾರಭಾರಿಯ ಮನಿಗೆ ಓಡಿ ಓಡಿ ಬರುತಾನೆ… +ಆಹಾ… +ಓಡಿ ಓಡಿ ಬಂದ ಡಂಣಾಯಕ ಕಾರಭಾರಿಗೆ ಕೈಮುಗದು +ಏನು ಸಂಗತಿರೀ ಅಂತಾ ಕೇಳುತಾನೆ…ಆಹಾ… +ಆಗ ಅಲ್ಲಿ ಕಾರಭಾರಿಗಳು ಕೆಂಡವಾಗಿ ಕುಂತದಾರೇ +ಕೆಂಡವಾಗಿ ಕುಂತ ಕಾರಭಾರಿಗಳು ಅಂತಾರೇ – +ಡಂಣಾಯಕರ ನಿದ್ದಿ ಈಗ ಮುಗೀತು ಏನೊ ! +ಆಹಾ…ನಿಮ್ಮಂತ ಡಂಣಾಯಕ ಇದ್ದರ ದೇಸಗತಿ ಉದ್ಧಾರ ಆಗತಾವ ನೋಡರಿ ! +ಇಲ್ಲಾ ಸ್ವಾಮೀ… +ತೇರಿಗೆ ಅಂತ ಹೋಳಿಗೀ-ಅದೂ ಇದೂ ಅಂತ ಅಡಿಗೀ ಮಾಡಿದ್ದರು…ರಾತರೀ ಸ್ವಲಪ ಹೆಚ್ಚಿಗೇ ಉಂಡಂಗಾಗಿ ಒಂದೀಟು ಹೆಚ್ಚಿಗೇ ನಿದ್ದಿ ಬಂದಂಗಾತು…ಹಿಂಗಾಗಿ… +ಅಂತ ಡಂಣಾಯಕರು ದೈನಾಸಪಟ್ಟರೆ – +ಆಹಾ… +ಡಂಣಾಯಕನು ಹಿಂಗ ದೈನಾಸಪಡತಿದ್ದರೇ ಕಾರಭಾರಿಗಳು ಅಂತಾರೇ +ನಿಮ್ಮ ಮುಗ್ಗಲಗೇಡಿತನದಿಂದ ಊರಾಗಿನ ಕಾಟುಕ ಜಾತಿಯ ಮಂದಿ ಎಲ್ಲಾ ರಾತೋ ರಾತ್ರಿ ಓಡಿ ಹೋಗ್ಯಾರೆ…ಈಗ ಹಾದಿ ಬೀದಿಗಳ ಕಸಾ ಗುಡಸಸೂ ಯವಸ್ತಾ ಆಗಬೇಕು… +ದೇಸಾಯರ ವಾಡೇಕ್ಕ ಮತ್ತ ನಮ್ಮ ಮನೀ ಹಂತೇಕ ಬಾಗಲಾಳುಗಳ ಯವಸ್ತಾ ಆಗಬೇಕು… +ಇದು ಎಲ್ಲಾದರಕಿಂತಾ ಮುಖ್ಯವಾದದ್ದಂದರ-ಇಂದ ಚೌತಿ +ಇಂದಿಗೆ ಐದ ದಿನದಲೇ ರಾಮನವಮಿ… +ರಾಮನವಮಿಯ ಮೂರ್ತಕ್ಕ ತೇರು ಎಳೀಲಿಕ್ಕೇ ಬೇಕು ಅಂತ ದೇಸಾಯರು ಆe ಮಾಡ್ಯಾರು… +ಅಷ್ಟರೊಳಗಂದರ ನೀವು – +ಹೆಣ್ಣು ಗಂಡಂಬುವ ಭೇದ ಇಲ್ಲ – ಸಣ್ಣವರು ದೊಡ್ಡವರು ಅಂಬುವ ವಯಸ್ಸಿನ ನಿರ್ಬಂಧ ಇಲ್ಲ . ಫಕ್ತ ಉತ್ತುಮರ ಕುಲದವರು ಮಾತ್ರ ಬ್ಯಾಡ – +ಉತ್ತುಮರ ಕುಲದವರನ್ನ ಬಿಟ್ಟು ಯಾವದಾದರೂ ಕಾಟಕರ ಕುಲದ ಒಂದು ಇಸಮನ್ನ ಹಿಡದು ತೇರಿನ ಬಲಿಗೆ ತರಬೇಕು… +ಆಹಾಣಿ… +ಕಾರಭಾರಿಗಳು ಹೇಳತಾರೇ +ದೇಸಾಯರು ಆಡಿದ ಮಾತನ ನಿಮಗ ಹೇಳಾಕತ್ತನು ನೋಡರಿ… +ಅವರು ಹೇಳ್ಯಾರ – +ನಾ ಬರೂಮುಂದ ತಂದ ಕತ್ತಿಗೆ ಹತ್ತಿದ ರಗತ ಒಣಗಿ ಉದರಾಕತ್ತೇತಿ… +ಅದಕ್ಕ ಹಸೀ ರಗತದ ಲೇಪ ಬೇಕು…ಮದಲು ಡಂಣಾಯಕಂದು ಆಗಲೀ +ಆಮ್ಯಾಲ ನಿಮ್ಮ ರಗತದ ರುಚೀ ನನ್ನ ಕತ್ತಿಗೆ ತೋರಸತನು…. +ಡಂಣಾಯಕನ ಹುದ್ದೇ ಅಂದರ ಹುಡಗಾಟ ಅಲ್ಲ…ತಿಳಕೋರಿ…ಹೆಂಗ ಮಾಡತೀರೋ ಮಾಡರಿ…ನಾ ಹೇಳಿದ ಎಲ್ಲಾ ಕೆಲಸಗೋಳನೂ ಪೂರೈಸಬೇಕು ನೋಡರಿ +ಅಂತ ತಾಕೀತು ಮಾಡಿ ಕಾರಭಾರಿಗಳು ಡಂಣಾಯಕನ್ನ ಕಳಿಸಿ ಕೊಡುತಾರೇ +ಹರ ಹರ ಮಾದೇವೈ || +ಕಾರಭಾರಿನ್ನ ಬೈಕೊಂತ ಹಾದೀ ಹಿಡದ ಡಂಣಾಯಕ ಮದಲು ಊರಿನ ಹಾದಿ ಬೀದಿಗಳ ಕಸಕ್ಕ ಮತ್ತ ದೇಸಾಯರ ವಾಡೇ ಮತ್ತ ಈ ಹಾರುವ ಕಾರಭಾರಿಯ ಮನಿಯ ಬಾಗಲಾಳುಗಳಾಗಿ ಕೆಲಸಾ ಮಾಡಲಿಕ್ಕೆ ಫೌಜಿನ ಸಿಪಾಯಿಗಳನ್ನ ಹೊಂದಸಲಿಕ್ಕೆ ಊರ ಹೊರಗಿನ ಗರಡೀ ಮನಿಗೆ ಬಂದು ಅದರ ಯವಸ್ತಾ ಮಾಡತಾನೇ… +ಅದಾದ ಮ್ಯಾಲ ತೇರಿನ ಬಲಿಯ ವಿಚಾರ ಬಂತು… +ಆಹಾ…ಹೆಣ್ಣಾದರೂ ಆಗಲಿ -ಗಂಡಾದರೂ ಆಗಲಿ…ಸಣ್ಣ ಕಂದಮ್ಮನಾದರೂ ಆಗಲಿ +ಹರೇದವನಾದರೂ ಆಗಲಿ ಇಲ್ಲಾ ಗೋರಿಗೆ ಹೊಂಟಿರುವ ಮುದುಕನಾದರೂ ಆಗಲಿ… +ಫಕ್ತ ಉತ್ತುಮ ಕುಲದವರು ಆಗಿರಬಾರದಂತೆ!ಆಹಾ… +ಈ ಜಗತ್ತಿನ್ಯಾಗ ಕಾಟುಗರ ಕುಲಗಳು ನೂರಾ ಎಂಟು ಇರುತಿರಲಾಗಿ- +ಮತ್ತೆ ಕಾಟುಗರ ಜಾತಿಗೆ ಸೇರಿದವರಿಗೆ ಮಕ್ಕಳಂಬುವವು ಮಣಾರ ಇರುತಿರಲಾಗಿ +ಮತ್ತೆ ಅವರಿಗೆ ಬಡತನ ಅಂಬೋದು ಗಳಿಸಿದ ಆಸ್ತಿ ಇದ್ದಂತೆ ಇರುತಿರಲಾಗಿ – +ಹಿಂತಾ ಒಂದು ಬಲಿಯನ್ನ ಹುಡುಕುವುದೇನು ದೊಡ್ಡ ಮಾತಲ್ಲ +ಎರಡು ದಿನದಾಗೆ ಬಲಿ ಪಶುವನ್ನ ಹುಡಿಕಿ ಈ ಹಾರುವಯ್ಯನ ಮುಂದೆ ಒಯ್ದು ನಿಂದರಿಸಿದರೆ ಆಯಿತಲ್ಲಾ ಅಂತ ಯೋಚನಿಯ ಮಾಡುತಾನೇ… +ಅಲ್ಲ ಈ ಕಾರಭಾರಿ ತೆಲಿ ತಗಿಯುವ ಮಾತು ಆಡುತಾನೆ – ದೇಸಾಯರು ಆ ಮಾತು ಆಡಿರತಾರೊ ಇಲ್ಲಾ ಇವನೆ ಹಂಗ ಹುಟ್ಟಿಸಿ ಹೇಳತಾನೋ…ಯಾಂವ ಬಲ್ಲ ! ಅವರು ಆಡಿರಲಿ ಬಿಡಲೀ…ಈ ಹಾರುವಯ್ಯ ಮನಸು ಮಾಡಿದರೆ ದೇಸಾಯರ ಕೈಯಿಂದನೇ ಹಿಂತಾ ಕೆಲಸಾ ಮಾಡಸೇ ಮಾಡಿಸುತಾನೇ ಅಂತ ಯೋಚಿಸುತಾನೇ… +ನನಗಾದರೂ ಇಲ್ಲದ ಉಸಾಬರೀ ಯಾಕ ಬೇಕು…ಅಂವ ಹೇಳಿದ ಕೆಲಸಾ ಪೂರೈಸಿ ಬಿಟ್ಟರೆ ಮುಗೀತು… +ಆಹಾಣಿ… +ಇದೇನು ಅಗದೀ ಸಸಾರ ಕೆಲಸ ಅಂತ ಹೊಂಟ ಡಂಣಾಯಕನಿಗೆ ಆಮ್ಯಾಲ ದಗದದ ಗಾಢ ಗೊತ್ತಾಗಲಿಕ್ಕೆ ಸುರುವಾತು… +ಲಢಾಯಿ ಆದರೆ ಅದರ ಮಾತು ಬ್ಯಾರೇ…ಅಲ್ಲಿ ಕತ್ತೀ ತಗೊಂಡು ಯಾರನ ಬೇಕಾದವರನ್ನ ಸೀಳಬಹುದು… +ಅಲ್ಲಿ ಹಿಂಗ ಮಾಡಬಹುದೇ – ಇವರನ ಕೊಲ್ಲಬಹುದೇ ಅಂತ ಯಾವ ತರ್ಕಗೋಳೂ ಅಡ್ಡ ಬರೂದುಲ್ಲ… +ಮತ್ತ ಲಢಾಯಿಗೆ ಹೊಂಡಾಕ -ಫೌಜಿಗೆ ಸೇರಾಕ ಬರ್ರೀ ಅಂತ ಮಂದಿನ್ನ ಕರ್‍ಯಾಕ ಯಾವ ಭಿಡೇ-ಅನುಮಾನಾ ಇರಾಣಿಲ್ಲ … +ಇಷ್ಟರ ಮ್ಯಾಗ ಲಢಾಯಿಯ ಸಲುವಾಗಿ ಫೌಜು ಸೇರುವದಂದರೆ -ಅದು ಒಂದು ಉದ್ಯೋಗ ಇದ್ದಂಗೆ… +ಆದರ ತೇರಿಗೆ ಬಲೀ ಆಗರೀ ಅಂತ ಕೇಳಾಕ – +ತೇರಿಗೆ ನಿನ್ನ ಮಗನ್ನ ಬಲೀ ಕೊಡು – +ತೇರಿಗೆ ನಿನ್ನ ಮಗಳನ ಬಲೀ ಕೊಡೂ +ಅಂತ ಕೇಳಲಿಕ್ಕೆ ಈ ಡಂಣಾಯಕ ಅನಿಸಿಕೊಳ್ಳುವ ಡಂಣಾಯಕನಿಗೆ ಬಾಯಿಯೇ ಏಳವಲ್ಲದಾತು… +ಮೂರು ದಿನಾ ಸುತ್ತಮುತ್ತಲಿನ ಊರುಗಳಿಗೆ ಹೋಗಿ-ಹೇಳಲಾರದೇ ಹುಡುಕಲಾರದೇ +ಒಣಾ ಫುಕಟಣಿ ಅಡ್ಯಾಡಿ ಅಡ್ಯಾಡಿ ಹೊಡಮಳ್ಳಿ ಬರುತಾನೆ ಈ ಡಂಣಾಯಕ ಅನಿಸಿಕೊಳ್ಳುವ ಡಂಣಾಯಕ… +ಅಷ್ಟರಾಗಣಿ ತದಗಿಗೆ ಎಳಿಯದ ತೇರು ರಾಮನವಮಿಗೆ ಎಳಿಯತೈತಿ ಅನ್ನುವ ಸುದ್ದಿ ಸದ್ದಿಲ್ಲದಣಿ ತನ್ನಂಗ ತಾನಣಿ ಮಂದ್ಯಾಗ ಹಬ್ಬಿತ್ತು… +ಅಂದ ಅಷ್ಟಮೀ ತಿತಿ… +ಮೂರು ದಿನಾ ಎಲ್ಲಾ ಬಲಿ ಆಗುವ ಮನುಸಾನ್ನ ಹುಡಿಕ್ಕೊಂಡು ಅಡ್ಯಾಡಿದ ಡಂಣಾಯಕ ಏನು ಮಾಡುವುದೂ ಅಂತ ಹರ್‍ಯಾಗ ಏಳತಿದ್ದಂಗಣಿ ಚಿಂತೀ ಮಾಡತಿದ್ದರೆ… +ಪಾರವ್ವ ಅಂಬೋ ಡಂಣಾಯಕನ ಹೆಂಡತಿ- +ನಾಳೆನಣಿ ತೇರು ಎಳೀತಾರಂತ ಹೌದೇನರೀ… +ಅಂತ ಕೇಳುತಾಳೆ. ಹೇಂತಿ ಹಿಂಗ ಕೇಳಿದಾಗ ಡಂಣಾಯಕನಿಗೆ ಬುಗುಲು ಆಗತದೆ +ಆಹಾಣಿ…ಬಲಿಯಾಗುವ ಮನುಸಾನ್ನ ಒಯ್ದು ಕೊಡದಿದ್ದರೆ ತೇರ ಹೆಂಗ ಎಳದಾರು… +ನನಗ ನೋಡಿದರ ಈ ದಗದ ಬಗೀಹರಿಯಧಂಗ ಆಕ್ಕೊಂಡ ಕುಂತೈತಿ… +ಅಯ್ಯೋ ದೇವರಣಿ…ಆ ಹಾರುವಯ್ಯ ಹೇಳಿಧಂಗ ಜೀವಾ ಕಳಕೊ ವ್ಯಾಳ್ಯಾ ಬಂತಲ್ಲಪಾ +ಶಿವನೇ… +ಹೆಂಗ ಮಾಡೂದಿನ್ನಣಿ…ಅಂತ ದುಕ್ಕ ಪಡತಾ ಕುಂತಾಗ…ಆಹಾ… +ಪಾರವ್ವ ಅಂಬುವ ಇವನ ಹೇಂತಿ ಕೇಳುತಾಳೆ… +ಹೆಣ್ಣ ಹೆಂಗಸಿನಂಗ ಹಂಗ್ಯಾಕ ಕುಂತೀ +ತೆಲಿಗಿ ಕೈ ಇಟಗೊಂಡೀದಿ ಯಾತರ ಚಿಂತಿ +ಹರ ನನ್ನ ಮಾದೇವೈ || +ಡಂಣಾಯಕನ ಹೇಂತಿ ಗಂಡನ್ನ ಕೇಳುತಾಳೇ – +ಮೀಸೀ ಹೊತ್ತ ಗಂಡುಸಾದ ನಿನಗೆ ಹಿಂಗೆ ತೆಲೀ ಮ್ಯಾಲ ಕೈಹೊತ್ತು ಕುಂಡ್ರೂಹಂತಾ ಪರಸಂಗ ಏನು ಬಂತೂ ಅಂತ… +ದೇಸಗತಿಯ ಡಂಣಾಯಕನಾಗಿ ಹಿಂಗ ತೆಲೀಗೆ ಕೈಹೊತ್ತು ಕುಂಡ್ರೂದು ಸೋಭಿಸುವುದಿಲ್ಲ ತಗಿ ಅಂತ +ಛೀಮಾರಿ ಹಾಕುತಾಳೆ…ಆಹಾಣಿ… +ಆಗ ಡಂಣಾಯಕನೆಂಬೋನು ಹೆಂಡತಿಗೆ ಹೇಳುತಾನೆ – +ತೆಲೀ ಹೋಗೂ ಹಂತಾ ಯಾಳೇ ಬಂದಾಗ ತೆಲೀ ಮ್ಯಾಲ ಕೈ ಇಟಗೋದಣಿ ಇನ್ನೆಲ್ಲಿ ಇಟಗೋಲೀ…! +ಆ ಹಾರುವಯ್ಯ ನೀಗದ ಕೆಲಸಾ ಹೇಳಿ ನನ್ನ ಸಿಗಿಸಿ ಇಟ್ಟದಾನು… +ನನ ಮ್ಯಾಲ ಮದಲಿಂದಲೂ ಅಂವಗ ಕಣ್ಣು… +ಇನ್ನೇನ ನಾಳಿಗೆ ನನ್ನ ತೆಲೀ ತಗಿಯೂದೊಂದು ಬಾಕೀ ಉಳದಂಗ ಆಗೇತಿ ಅಂತ ನುಡದು…. +ಹಿಂಗಿಂಗ ಹಿಂಗಿಂಗಣಿ ಅಂತ ತಾನು ಹುಡಿಕಿ ತರಬೇಕಾಗಿದ್ದ ಬಲಿಯ ಸಂಗತೀ ಎಲ್ಲಾ ಹೇಳುತಾನೆ…ಆಹಾ… +ಆಗ ಪಾರೋತೆವ್ವ ಹೇಳುತಾಳೆ – +ನೀನು ಧರಮನಟ್ಟೀ ದೇಸಗತಿಯ ಡಂಣಾಯಕ ಆದದ್ದು ಸಾರ್ತೇಕ ಆದಂಗ ಆತು ನೋಡು… ಇಟ್ಠಲ ಸ್ವಾಮಿಯ ಬಲದ ಮ್ಯಾಲಣಿ ಈ ದೇಸಗತಿ ಹುಟ್ಟಿದ್ದು … +ಹಾಂಣಿ… +ತುಂಬಿದ ಹಿರಿಹೊಳೀ ಪಾರು ಹಾಯಿಸಿ ದೇಸಾಯರನ ಇಲ್ಲಿಗೆ ಕಳಿಸಿದ್ದು ಆ ಇಟ್ಠಲ ಸ್ವಾಮಿಯೇ… +ಹಂತಾ ಸ್ವಾಮಿಯ ತೇರಿಗೆ ಒಂದು ಬಲೀ ಹುಡಕಿ ತಾ ಅಂದರಣಿ… +ಕೇಳಾಕ ಬಾಯಿ ಏಳವಲ್ಲದೂ ಅಂತ ಮನ್ಯಾಗ ಕುಂತು ಹೆಂಗಸಿನ ಹಂಗ ಅಳಾಕತ್ತದೀ ಅಲ್ಲಾ +ಇದು ನಿನಗ ಇದು ಸೋಬಾ ತರೂಹಂತಾದ್ದು ಏನ ಹೇಳೂ… +ಅಂತ ಯಡ್ಡಿಸಿ ಕೇಳುತಾಳೆ… +ಆತು ಈಗೇನ ಆಗಿಲ್ಲ… +ತೇರು ಇರೂದು ಇನೂ ನಾಳಿಗೆ…ನಿನ್ನ ತೆಲೀ ಹೋಗಧಂಗ ನಾ ನೋಡಿಕೋತನು ಅಂತ ಧೈರ್ಯಾ ಹೇಳುತಾಳೆ +ಡಂಣಾಯಕಗ ಹೋದ ಜೀವ ಹೊಡಮಳ್ಳಿ ಬಂದಂಗಾಗತೈತೀ… +ಆಹಾಣಿ… +ತನ್ನ ಗಂಡನಿಗಾದರೂ ಈ ಪರಕಾರ ನುಡದಪಾರೋತೆವ್ವ ಸ್ವಾಮಿಯ ಗುಡಿಯ ಹತ್ತರ ಬಂದು ಅಲ್ಲಿ ನೋಡುತಾಳೆ… +ಆಹಾಣಿ… +ಪೌಳೀಯ ತೆಂಕಣ ಮೂಲ್ಯಾಗೆ +ಪೌಳೀಯ ದಕ್ಷಿಣ ಮೂಲ್ಯಾಗೆ +ಶಿವ ನನ್ನ ಮಾದೇವೈ || +ಗೊಂಬೀರಾಮರಾ ದ್ಯಾವಯ್ಯಾ +ತೊಗಲ ಗೊಂಬೀಯ ಆಡಸವನೊ +ಹರ ನನ್ನ ಮಾದೇವೈ || +ಹೆಂಡಾತಿ ಮಕ್ಕಳ ಕಟಿಗೊಂಡು +ಗೊಂಬೀಯ ಆಡಸಾಕೆ ಬಂದವನೆ +ಶಿವ ನನ್ನ ಮಾದೇವೈ || +ಪೌಳೀಯ ವಾಮ ಮೂಲ್ಯಾಗೆ +ಸಂಸಾರ ಕಟಿಗೊಂಡು ಉಳದವನೆ +ಹರ ನನ್ನ ಮಾದೇವೈ || +ಆಹಾಣಿ… +ಸ್ವಾಮಿಯ ತೇರು ಮುಂದಕ ಹೋಗಿ ಊರಾಗಿನ ಕಾಟುಕ ಮಂದಿಯೆಲ್ಲಾ ಓಡಿ ಹೋಗಿದ್ದಲ್ಲದೆ … +ತೇರು ನಿಂತು ಹೋಗಿದ್ದಕ್ಕೆ ಊರಾಗಿನ ಮಂದಿಯ ಮನಸೆಂಬುವವು ಸೂತಕದೊಳಗ ಇದ್ದಂಗ ಆಗಿ – +ಆ ಗೊಂಬೀರಾಮರ ದ್ಯಾವಯ್ಯನ ಸೂತರದ ಗೊಂಬಿಯ ಆಟಾ ನೋಡಲಿಕ್ಕೆ ಮಂದಿಯೆನ್ನುವದು ಇಲ್ಲದೇ – +ಅವನ ಸಂಸಾರ ಅಂಬುವುದಕ್ಕೆ ಕೂಳಂಬುವುದು ತತ್ವಾರ ಆಗಿ ಕುಂತೈತೆಲ್ಲಾಣಿ… +ಆಹಾ… +ಬಸುರಿಯಾಗಿರುವ ಹೇಂತಿ ಮತ್ತ ಒಂಭತ್ತ ಮಕ್ಕಳನ ಕಟಿಗೊಂಡು ಕೂಳಿಗೆ ತತ್ವಾರ ಪಡುತಾ ಆ ದೇವಯ್ಯ – +ಅಯ್ಯೋ ಮಕ್ಕಳ ಕೊಡಬ್ಯಾಡೋ ಮುಕ್ಕಣ್ಣಾಣಿ… +ಅವುಗಳ ತುತ್ತಿನ ಚೀಲ ಅಂಬುವುದನ್ನ ತುಂಬುವದು ಹೆಂಗೋ … +ಅಂತಾ ದುಕ್ಕ ಪಡುತಿರಲಾಗೀ…ಆಹಾಣಿ… +ಆಗ ಅಲ್ಲೀಗೆ ಬರುತಾಳೆ ಡಂಣಾಯಕನ ಹೇಂತಿ ಪಾರೋತೆವ್ವ… +ಮೊರ ತುಂಬ ಜ್ವಾಳಾವ ತಂದಾಳೊ +ತೂರು ಬುಟ್ಟಿಯ ತುಂಬ ಗೋದಿಯನೊ +ಶಿವ ನನ್ನ ಮಾದೇವೈ || +ಅರಪಾವು ಬ್ಯಾಳೀಯ ಸುರಿವ್ಯಾಳೊ +ಮ್ಯಾಲೆ ಬೆಲ್ಲದ ದೊಡ್ಡ ಕರಣೀಯೊ +ಹರ ನನ್ನ ಮಾದೇವೈ || +ಆಹಾ… +ಜ್ವಾಳಾ-ಗೋದಿ-ಬ್ಯಾಳೀ ಬೆಲ್ಲಾ …ಇವನೆಲ್ಲಾ ಆ ಗೊಂಬೀರಾಮರ ದ್ಯಾವಪ್ಪನ ಸಂಸಾರದ ಮುಂದಾದರೂ ಇಟ್ಟು +ಡಂಣಾಯಕನ ಹೇಂತಿ ಹೇಳುತಾಳೇ …ಆಹಾ… +ಮಕ್ಕಳಂಬೂವು ದೇವಾರೂ…ಆಹಾಣಿ… +ಆ ದೇವರಂಥಾ ಮಕ್ಕಳನಾದರೂ ಉಪಾಸ +ಕೆಡವಿದರೆ ತಂದೀ ತಾಯೀ ಅಂಬುವವರು +ರವ ರವ ನರಕಕ್ಕೆ ಬೀಳುತಾರೆ…ಆಹಾಣಿ… +ಈ ಜ್ವಾಳಾ ಗೋದಿ -ಬ್ಯಾಳಿ ಬೆಲ್ಲಾ ಎಲ್ಲಾ ತಗೋರಿ…ಮಕ್ಕಳಿಗಾದರೂ ಅಡಗೀ ಮಾಡಿ ಉಂಬಾಕ ಹಾಕರೀ… +ಅಂತ ನುಡಿಯುತಾಳೆ…ಆಹಾಣಿ… +ಅಲ್ಲಿ ನೆರದಿದ್ದ ದ್ಯಾವಪ್ಪನ ಮಕ್ಕಳು ಬ್ಯಾಳಿಯ ಮ್ಯಾಗೆ ಇಟ್ಟ +ಬೆಲ್ಲಾದ ಕಣ್ಣಿಯನ್ನ ಬಾಯೊಳಗ ನೀರು ಸುರಿಸಿಗೊಂತ +ತದೇಕ ನೋಡತಿರಬೇಕಾದರೆ…ಆಹಾಣಿ… +ಡಂಣಾಯಕನ ಹೇಂತಿ ಆ ಮಕ್ಕಳಿಗೆ ಆ ಬೆಲ್ಲದ ಕಣ್ಣಿಯನ್ನ ಮುರದು ಸಣ್ಣ ಸಣ್ಣ ತುಂಡು ಮಾಡಿ ಕೊಡುತಾಳೆ… +ದ್ಯಾವಯ್ಯನ ಆ ಮಕ್ಕಾಳು…ಆಹಾಣಿ… +ಬೆಲ್ಲದ ತುಂಡಗಳನ ಅಂಗೈಯಾಗ ಇಟಗೊಂಡೂ +ಕಣ್ಣ ತುಂಬ ನೋಡಿ…ಆಹಾಣಿ… +ಬಾಯಾಗ ಹಾಕೊಂಡು ಒಂದು ಕ್ಷಣಾ ಸೀಪಿ… +ಮತ್ತ ಬಾಯಾಗಿಂದ ತಗದು ಅಂಗೈಯೊಳಗ ಲಿಂಗಯ್ಯನ್ನ ಇಟಗೊಂಡಂಗ ಇಟಗೊಂಡು ನೋಡುತಿರಬೇಕಾದರೇ…ಆಹಾಣಿ… +ಆ ಡಂಣಾಯಕನ ಅಂಬುವವನ ಹೇಂತಿ +ಪಾರೋತೆವ್ವ ಮೆಲ್ಲಗೇ ಬಲಿಯ ಹೆಣಿಯುತಿದ್ದಳಲ್ಲಾಣಿ… +ಹಿರಿಯ ಮಗನನ್ನ ಸ್ವಾಮಿ ತೇರಿಗೆ ನೀಡೊ +ಮೂಡಾಲ ಸೀಮೇಲಿ ಮೂರೆಕರೆ ಭೂಮೀ +ಶಿವ ಶಿವ ಮಾದೇವೈ || +ಹಿರಿಯ ಮಗನನ್ನ ನಾನು ಕೊಡಲಾರೆ ತಾಯೆ +ಕಡೀಯ ಮಗನನ್ನಾರ ಸ್ವಾಮಿಗೆ ಕೊಡುಬಾರೆ +ಪಡುವಾಣ ದಿಕ್ಕಿನ್ಯಾಗೇ ಆರೆಕರೆ ಭೂಮೀ +ಹರ ಹರ ಮಾದೇವೈ || +ಮಲಿಯ ಕುಡಿಯುವ ಕಂದ ಕೊಡಲಾರೆ ತಾಯೆ +ನಡಕೀನ ಮಗನನ್ನ ಸ್ವಾಮಿಗೆ ಕೊಡು ಬಾರೊ +ತೆಂಕಾಣ ದಿಕ್ಕಿನ್ಯಾಗೆ ಎಂಟೆಕರೆ ಭೂಮೀ +ಶಿವ ಶಿವ ಮಾದೇವೈ || +ಕೊಡತೇನು ಬಿಡು ತಾಯೆ ಐದಾನೆ ಮಗನ +ಸ್ವಾಮಿ ಕೊಟ್ಟದ್ದು ಸ್ವಾಮೀಗೇ ಅರುಪಣಿಣಾ +ಗೊಂಬೀರಾಮರ ದ್ಯಾವಯ್ಯನು ತನ್ನ ನಡಕಿನ ಮಗ ಚಂದ್ರಾಮನನ್ನ ಸ್ವಾಮಿಯ ತೇರಿಗೆ ಕೊಡತನು ಅಂತ ಒಪ್ಪಿದರೆ ಅವನ ಹೇಂತಿ ಲಗಮವ್ವ ಬೋರ್‍ಯಾಡಿ ಅತ್ತು – +ನನ್ನ ಮಗನ್ನ ನಾನು ಕೊಡಲಾರೇ ಅಂತ ಗೋಳ್ಯಾಡುತಾಳೇ +ಆ ದ್ಯಾವಯ್ಯ ಅಂಬುವವ ಹೇಂತಿಗೆ ಕಣ್ಣು ಸನ್ನೀ ಮಾಡಿ ಸಮಾದಾನ ಮಾಡುತಾನೇ +ಹಂಗ ಕಣ್ಣು ಸನ್ನಿಯ ಮಾಡಿ ಹೇಂತಿಯನ್ನ ಸಮಾದಾನ ಮಾಡೀದ ದ್ಯಾವಯ್ಯ ಡಂಣಾಯಕನ ಹೇಂತಿ ಹೋದಮ್ಯಾಲೆ ತನ್ನ ಹೆಂಡಾತಿಗೆ ಹೇಳುತಾನೇ…ಆಹಾಣಿ… +ಆಕಿಗೆ ಹೂಂ ಅಂತ ಹೇಳದಿದ್ದರೆ ಈ ಜ್ವಾಳಾ ಗೋದೀ-ಬ್ಯಾಳೀ ಬೆಲ್ಲಾ- +ಎಲ್ಲಾ ಹೊಳ್ಳಿ ಹೊತಗೊಂಡು ಹೋಗತಿದ್ದಳು… +ಅದಕ್ಕಣಿ ಹೂಂ ಅಂದದೀನು… +ಇಂದ ರಾತರೀ ತೆಪ್ಪಿಸಿಕೊಂಡ ಹೋದರಾತು…ಆಹಾಣಿ… +ಇಷ್ಟರಮ್ಯಾಲ ನೀನೂ ಇಚಾರ ಮಾಡು – +ನಮಗೇನು ಮಕ್ಕಳ ಕೊರತಿಯಿಲ್ಲ…ಸ್ವಾಮಿಯೇ ಕೊಟ್ಟ ಮಕ್ಕಳು… +ಒಬ್ಬನನ್ನ ಈ ಸ್ವಾಮಿಗೆ ಕೊಟ್ಟರೆ ಉಳದ ಮಕ್ಕಳೆಲ್ಲಾ ಸುಕದಿಂದ ಇರತಾವೆ +ಅಂತ ತಿಳಿ ಹೇಳಿದರೂ ಲಗಮವ್ವ ತಾಯಿ ಜಪ್ಪಯ್ಯ ಒಪ್ಪಲಿಲ್ಲ… +ಆಹಾಣಿ… +ಇತ್ತ ದ್ಯಾವಯ್ಯನ ಐದನೇ ಮಗನನ್ನಾದರೂ ತೇರಿನ ಬಲಿಗೆ ಹೊಂದಿಸಿಕೊಂಡು ಮನಿಗೆ ಬಂದ ಪಾರವ್ವ ಗಂಡನಿಗೆ ಹೇಳುತಾಳೇ… +ಚಿಂತಿಯನ ಬಿಡು…ತೊಗಲು ಗೊಂಬೀ ಆಡಸೂ ಗೊಂಬರಾಮರ ಸಂಸಾರದ ಐದಾನೆ ಮಗನನ್ನ ಹೊಂದಿಸಿಗೊಂಡು ಬಂದೀನು… +ಗಂಡು ಕಳ್ಳಿನ ಗೊಂಬೀ ಆಡಸೂ-ತಂದಿಯೆಂಬೊ ಆ ಮನುಸಾ +ಒಪ್ಪಿ ಹೂಂ ಅಂದಾನೆ… +ಆದರೆ ಹೆತ್ತ ಕಳ್ಳು ಹೂಂ ಅಂದಿಲ್ಲ…ಆ ದ್ಯಾವಪ್ಪ ಅಂಬುವವ ಕಣ್ಣ ಸನ್ನೀ ಮಾಡಿ ಹೇಂತಿನ್ನ ಸುಮ್ಮಗಾಗಿಸಿದಾನೆ… +ನೀನು ಸದ್ದೇಕ್ಕ ಎದ್ದು ಹೋಗಿ ಆ ಗೊಂಬೀರಾಮರ ಸಂಸಾರ ಊರು ಬಿಟ್ಟು ಓಡಿಹೋಗದಂಗ ಕಾವಲಾ ಹಾಕಸು… +ಆ ಗಂಡಾ ಹೇಂತಿಗೆ ಸೀರೀ ಧೋತರಾ ಮತ್ತ ಆ ಮಕ್ಕಳಿಗೆ ಅಂಗೀ ಚಡ್ಡೀ-ಹೊಟ್ಟಿಗೆ ಕಾಳೂ ಕಡೀ ಕಳಸು… +ಎಂಟೆಕರೇ ತ್ವಾಟದ ಆಸೇ ಹಚ್ಚೀನು…ಆಹಾಣಿ… +ಆ ಕಾರಭಾರೀ ಹಾರುವಯ್ಯನಿಗೆ ಅಷ್ಟು ಭೂಮೀ ಕೊಟ್ಟರೇನಣಿ ಬಲಿ ಆಗುವ ಇಸಮು ಸಿಗತೈತೆಂತ ಹೇಳರಿ +ಅಂತ ತಾಕೀತು ಮಾಡಿದಳು… +ಆಹಾಣಿ… +ಕುಣಕೊಂತ ಬಂದಂಗ ಬರತಾನೆ ಡಂಣಾಯಕ ದೇಸಾಯರ ವಾಡೇಕ್ಕ … +ಇಂವ ಅಲ್ಲಿಗೆ ಬರಾವ ಇದ್ದಾನ ಅನ್ನುವುದು ಮದಲೇ ತಿಳದವನಂಗೆ – +ಪಾಯಸದೊಳಗಿನ ನೊಣಧಂಗ +ಆ ಕಾರಭಾರಿ ಅಂಬುವ ಹಾರುವಯ್ಯ ಮದಲೇ ಬಂದು ಅಲ್ಲಿ ಇವನಿಗೆ ಕಾಕೊಂತ ಕುಂತಂಗ ಕುಂತೈದಾನೆ !…ಆಹಾಣಿ… +ಎಲಾ ಹಾರುವಯ್ಯ ಅದಕ್ಕಣಿ ನೀ ಕಾರಭಾರೀ ಆಗೀದೀ ಅಂತ ಮನಸಿನ್ಯಾಗ ಅನಕೊಂಡು ದೇಸಾಯರಿಗೆ ಮುಜರೀ ಮಾಡಿ ಕಾರಭಾರಿಗಳಿಗೆ ನಮಸ್ಕಾರ ಹೇಳಿ +ಬಲಿಯ ಯವಸ್ತಾ ಆದದ್ದು ಎಲ್ಲಾ ತಿಳಿಸಿ ಭೂಮಿಯ ವಿಚಾರವ ಹೇಳುತಾನೆ- +ಕಾರಭಾರಿಗಳು ಆಗಲಿ ಆಗಲಿ ಅಂದು – +ಮುಂದಿನ ಯವಸ್ತಾ ಎಲ್ಲಾ ಮಾಡ ಹೋಗೂ ಅಂತಾ ಹೇಳಿ ಕಳುಹಿಸುತಾರೇ … +ತಮ್ಮ ಎಲ್ಲಾ ಮಾತಗೋಳನೂ ಕಾರಭಾರಿಗೇ ಕೊಟ್ಟವರಂಗ ದೇಸಾಯರು ಬರೇ ಗೋಣು ಆಡಸತಿದ್ದರು +ಆಹಾ… +ರಾಮನವಮೀಯ ದಿವಸದ ಮೂರ್ತದಾಗೇ… +ಧರಮನಟ್ಟಿಯ ದೇಸಾಯರ ರಾಮರಾಜ್ಯದೊಳಗೆ ದೇಸಾಯರು ಕಟ್ಟಿಸಿದ ಎರಡೂ – ನಾಕು ಮಜಲಿನ ತೇರು ಎಳಿಯತೈತೀ ಅಂತ ಜಾಹೀರು ಆಗಿ ಧರಮನಟ್ಟಿಯ ನಾಡಿನ ಮಂದಿ ಎಲ್ಲಾ ಸಂಭ್ರಮದಿಂದಾಲಿ ನೆರೆಯುತಾರೆ… +ತಳವಾರ ಮಾದ ಮತ್ತ ಕಾಟುಕರ ಎಲ್ಲಾ ಮಂದಿ ಊರಿಗೆ ಹೊಳ್ಳಿ ಬರುತಾರೆ…ಮಾದ ಕಾರಭಾರೀ ಹಂತೇಕ ಬಂದು – +ಯಪ್ಪಾ ನಾನೂ ಬಲಿಯ ಯವಸ್ತಾ ಮಾಡಿಕೊಂಡ ಬರಾಕ ಬಳಗಾ ಎಲ್ಲಾ ಕಟಿಗೊಂಡು ನಾಡಿನ ತುಂಬ ಓಡಾಡತಿದ್ದರೆ ಬಲಿಯ ಯವಸ್ತಾ ಆಗಿ ರಾಮನವಮೀ ಅಂಬೂ ದಿವಸ ಧರಮನಟ್ಟಿಯ ತೇರೂ ಅಂತ ನಾಡಿನ ತುಂಬ ಜಾಹೀರು ಆಗಿ ಸುದ್ದಿ ತಿಳಿದು ಓಡಿ ಬಂದೀವಿ ತಂದೇ ಅಂತ ಗುಂಡಾಡಸತಾನೆ… +ಊರೂ ಕೇರೀಗಳನ ಗುಡಸೂದೂ-ಸ್ವಚ್ಛ ಮಾಡೂದೂ ಹಂತಾ ದಗದ ಇರತಾವೇ +ಆದ್ದರಿಂದ – +ಮತ್ತ ಈಗ ಹೆಂಗೂ ಬಲಿಯ ಸಮಸ್ಯಾ ಮುಗದದ್ದರಿಂದ +ಕಾರಭಾರಿಗಳು ಅವರನ ಬೈದಂಗ ಮಾಡಿ ಅವರವರ ಕೆಲಸಕ್ಕ ಕಳಿಸಿದರು… +ರಾಮನವಮಿಯ ದಿವಸ…ಆಹಾಣಿ… +ಗೊಂಬೀ ರಾಮರ ದ್ಯಾವಪ್ಪನ ಐದನೇ ಮಗಾ ಚಂದ್ರಾಮಗ ಜಳಕಾ ಮಾಡಿಸಿ ರೇಶಿಮಿಯ ಕೆಂಪು ಮಗುಟವ ಉಡಸುತಾರೇ …ಆಹಾಣಿ… +ಕೆಂಪು ಮಗುಟವನ್ನ ಉಡಿಸಿ ಹಣಿತುಂಬ ಕುಂಕುಮವನ್ನಾದರೂ ಹಚ್ಚಿ +ಸ್ವಾಮೀಯ ಗುಡಿಯ ಸುತ್ತ ಪ್ರದಕ್ಷಿಣ ಹೊಡಸುತಾರೆ… +ಆಹಾಣಿ… +ಗರ್ಭ ಗುಡಿಯೊಳಗ ದೇಸಾಯರು ಮತ್ತ ರಾಣೀಸಾಹೇಬರು ಪೂಜಿ ಮಾಡಿಸಿ ಮಂಗಳಾರತಿಯ ಮಾಡಸುತಾರೆ… +ಮಂಗಳಾರುತಿಯ ಮಾಡೀಸಿ ವಿಟ್ಠಲ ಸ್ವಾಮಿಯ ಚರ ಮೂರ್ತಿಯನ್ನ ಪೂಜಾರಿ ಹೊತ್ತು ಹೊರಗೆ ತರಬೇಕಾದರೆ ಅವನನ್ನ ಬಲಕ್ಕೆ ಇಟಗೊಂಡು ಪಟವರ್ಧನ ದೊರಿಗಳೂ ರಾಣೀಸಾಹೇಬರೂ ತೇರಿನ ಹಂತೇಕ ಬರುತಾರೆ +ಹರ ನನ್ನ ಮಾದೇವೈ|| +ಆಹಾಣಿ… +ಪೂಜಾರಿ ವಿಟ್ಠಲ ಸ್ವಾಮಿನ್ನ ರಥದಾಗೆ ಇಟ್ಟ ಮ್ಯಾಲೆ ಮತ್ತೆ ಅಲ್ಲಿ ತೇರಿನ ಪೂಜೀ ಮಾಡುತಾರೆ… +ತೇರಿನ ಪೂಜಾನಾದರೂ ಮಾಡಿ ಮಂಗಳಾರುತೀಯ ಬೆಳಗುತಾರೆ…ಆಹಾಣಿ… +ಮಂಗಳಾರುತೀಯ ಬೆಳಗಿ ಆದಮ್ಯಾಲೆ ಆ ಹುಡಗನ ಕೈಹಿಡದು ತೇರಿನ ಸುತ್ತ ಪ್ರದಕ್ಷಿಣವ ಹಾಕಸುತಾರೆ… +ಶಿವ ಶಿವ ಮಾದೇವೈ || +ಹಿಂಗ ಆ ಹುಡಗ ಪ್ರದಕ್ಷಿಣ ಹಾಕತಿರಬೇಕಾದರೆ ಊರ ಮಡಿವಾಳ ಗೌಡನೆಂಬಾತ ಆ ಹುಡಗನ ಪಾದಗಳಂಬುವವು ನೆಲದ ಮಣ್ಣೀಗೆ ತಾಗಿ ಮುಡಚಟ್ಟು ಆಗದ ಹಂಗೆ- +ಆಹಾಣಿ… +ಆ ಹುಡುಗಾನ ಎಳಿಯ ಪಾದಗಳಂಬುವದಕ್ಕೆ ಬಿಸಲಿಗೆ ಕಾದ ನೆಲದ ಬಿಸಿ ತಾಗಬಾರದೂ ಅಂತ – +ಆ ಮಡಿವಾಳ ಗೌಡನಾದರೂ ಮಡಿಮಾಡಿದ ಧೋತರಗಳನ್ನ ಮೀಸಲ ನೀರಿನ್ಯಾಗ ತೋಯಿಸಿ ತೋಯಿಸಿ -ಪ್ರದಕ್ಷಿಣ ಹೊಡಿಯುವ ಚಂದ್ರಾಮ ಅನ್ನುವ ಆ ಹುಡಗನ ಮುಂದ ಮುಂದ ಹಾಸತಿದ್ದರೆ…ಆಹಾಣಿ… ಶಿವ ಶಿವ ಮಾದೇವೈ|| +ಆಹಾಣಿ.. +ಆಗ ಆ ಹುಡುಗನ ಅವ್ವ ಲಗಮವ್ವ ಅಂಬುವಾಕಿ ತನ್ನನ್ನ ಬಿಗಿಯಾಗಿ ಹಿಡಕೊಂಡಿದ್ದ ಗಂಡನ ಕೈಯಿಂದ ಕೊಸರಿಕೊಂಡು – +ಅಲ್ಲಿ ನೆರೆದಿದ್ದ ಮಂದೀಯ ಹಿಂಡಿನೊಳಗೆ ನುಗ್ಗಿ ನುಸುಳಿ… +ಓಡಿ ಬಂದು ತನ್ನ ಮಗನನ್ನ ಅವಚಿಕೊಳ್ಳಲಿಕ್ಕೆ ಬರುತಾಳೇ…ಆಹಾಣಿ… +ಮಗನೇ ಚಂದ್ರ್ಯಾ ಅಂತ ಚೀರಿ… +ಅವರ ಕೈಯ್ಯ ಕೊಸರಿಕೊಂಡು ಓಡಿ ಬಾ ಮಗನೇ ಅನ್ನುತಾಳೆ +ಹರ ಹರ ಮಾದೇವೈ|| +ಆಹಾಣಿ… +ಆಗ ಅಲ್ಲಿ ಪೂಜಾರಿ ಮತ್ತ ನೆರದ ಹಿರ್‍ಯಾರು – +ಏ ಮುಡಚಟ್ಟು …ಮುಡಚಟ್ಟು ! ಮೈಲಿಗಿ ಆಗುತೈತಿ… +ಆಕಿನ್ನ ಹಿಡಕೋರಿ -ಎಳಕೋರಿ… +ಅಂತ ಕೂಗತಿದ್ದರಣಿ ಅಲ್ಲಿ ನೆರದಂಥಾ ಮಂದಿಯಾದರೂ ಆಕಿನ್ನ ಹಿಡದು ತೇರಿನಿಂದ ಅತ್ತಲಾಕಡೆ ದೂರ ದೂರ ಎಳಕೊಂಡ ಒಯ್ಯತಾರಲ್ಲೋ ಶಿವನೇ +ಹರ ನನ್ನ ಮಾದೇವೈ || +ಆಮ್ಯಾಲೆ ಆ ಚಂದ್ರಾಮನ್ನ +ತೇರಿನ ಎಡಕೀನ ಗಾಲೀಗೆ ಅಡ್ಡವಾಗಿ ಮನಗಿಸುತಾರೆ… +ಆ ಕಂದಾನ ತೇರೀನ ವಾಮ ಗಾಲಿಯ ಕೆಳಗೆ… +ಅಡ್ಡಾಕೆ ಮನಗಿಸುತಾರೇ +ಆಹಾಣಿ… +ಪರುವತದಂಥಾ ಆ ತೇರೀನ ಎಡದ ಗಾಲೀಗೆ ಆ ಎಳೇಯ ಕಂದಾನ ಅಡ್ಡವಾಗಿ ಮನಗಿಸಿ – +ದೇಸಾಯರು +ಜಯಾ ಜಯ ಶ್ರೀ ವಿಟ್ಠಲ ಮಾರಾಜಕೀ ಅಂತ ಘೋಷ ಮಾಡಿ – +ಕೂಡಿದ ಮಂದಿ ಎಲ್ಲಾ +ಉಧೋ ಉಧೋ ಚಾಂಗಬೋಲೊ ಚಾಂಗ ಬೋಲೋ ಅಂತ ಘೋಷ ಮಾಡಿ +ಆ ತೇರಣಿನ್ನ ಎಳದರೇ +ಆಹಾಣಿ… +ಆ ತೇರಂಬುವದು ಇಳಕಲಿನ್ಯಾಗ ಉಳ್ಳುವ ಗೋಲಿಯ ಗುಂಡದ ಹಂಗ ಸುರಳೀತ ನಡದೀತಲ್ಲೋ ಶಿವನೆ +ಹರ ಹರ ಮಾದೇವೈ || +ಆಹಾ… +ಆ ಕಾಟುಗರ ಕುಲದ ಕಂದಮ್ಮನ್ನ ತಿಂದು +ಮುಂದಾಕೆ ನಡೆದ ತೇರು +ಸೂರ್ಯೇ ಚಂದ್ರಾಮ ಇರುವ ತನಕಾ… +ಆಹಾ … +ಆಕಾಸದಾಗೆ ಚಿಕ್ಕಿಗೋಳು ಇರೂ ಮಟಾ +ಆ ರಥವಂಬುವದು ಮುಂದಕ ನಡಿಯೂದಕೆ +ಕಾಟುಗರ ರಗುತವನ್ನ ಬಯಸುತಾದಲ್ಲೊ ಶಿವನೇ +ಶಿವ ಶಿವ ಮಾದೇವೈ || +ಆಹಾ.. +ಅದುಕೇ ಪ್ರತೀ ವರಸ ಗೊಂಬೀರಾಮರ ದ್ಯಾವಯ್ಯನ ಮನಿತನದವರಂಬುವವರೂ +ಧರಮನಟ್ಟೀಯ ವಿಠ್ಠಲ ಸ್ವಾಮೀಯ ತೇರಿಗೆ ಬಂದೂ +ಸ್ವಾಮೀಯ ತೇರಿನ ಗಾಲೀಗೆ ತೆಲಿ ಅಂಬುದ ಜಜ್ಜಿಕೊಂಡೂ +ಆಹಾಣಿ… +ಅವರು ತೆಲಿಯಂಬುದ ಜಜ್ಜಿಕೊಂಡೂ +ಹಣಿಯಿಂದ ಬಸಿಯುವ ಬಿಸಿ ರಗುತದಿಂದಾ +ಆ ಹಣಿಯಿಂದ ಬಸಿಯೂ ಹಂತಾ ಹಸಿ ರಗುತದಿಂದಾ ಸ್ವಾಮೀಯ ತೇರಿನ ಮೂಡಣ ದಿಕ್ಕಿನ ಮಖಕ್ಕೆ ರಗುತದಾ ತಿಲಕ ಇಡಬೇಕಂತ ಕಟ್ಟು ವಿಧಿಸುತಾರೇ ಹರ ನನ್ನ ಮಾದೇವೈ || +***** +ಮುಂದುವರೆಯುವುದು +ಸಾವಿರದ ಶರಣವ್ವ ಕರಿಮಾಯಿ ತಾಯೆ ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ […] +ಅಧ್ಯಾಯ ೧೫ – ೧ – ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_40.txt b/Kannada Sahitya/article_40.txt new file mode 100644 index 0000000000000000000000000000000000000000..e48d0fa18069aa2e00ebb1821190f9ba8014cf45 --- /dev/null +++ b/Kannada Sahitya/article_40.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ ಹಿಡಿದು ಕಾರಿನವರೆಗೂ ವಾಹನಗಳಿವೆ. ಯಾರೊಬ್ಬರ ತಂಟೆಗೆ ಹೋಗದೆ ಅವರಾಯಿತು ಅವರ ಬದುಕಾಯಿತು ಎಂಬಂತೆ ಇರುವವರು. ಕೆಲಸಕ್ಕೆ ಹೋಗುವವರೇ ಜಾಸ್ತಿ ಇರುವುದರಿಂದ ಬೆಳಗಾಗುವುದೂ ಬೇಗ. ಬೆಳಗಾಗಲು ಸೂರ್ಯ ಮೂಡಬೇಕೆಂತಲೂ ಇಲ್ಲ. ಬೆಳಗಿನಜಾಮ ನಾಲ್ಕರಿಂದ ಒಂದೊಂದೇ ಕಣ್ಣು ತೆರೆಯುತ್ತದೆ. ಅವಸರದ ತಿಂಡಿ ಅಡುಗೆ, ಹೊರಡುವ ಗಡಿಬಿಡಿ. ಮಕ್ಕಳನ್ನು ರೆಡಿ ಮಾಡಿ ಕಳಿಸುವುದೇ ಎಲ್ಲಕ್ಕಿಂತ ದೊಡ್ಡದು. ಮಕ್ಕಳೆಲ್ಲ ಚೀಲ ಸಿಕ್ಕಿಸಿಕೊಂಡು ಬೆನ್ನು ಮುಡುಗಿಸಿಕೊಂಡು ದಢದಢನೆ ತಮಗಾಗಿ ಬಂದ ಬಸ್ಸು, ಆಟೋ ಈಗೀಗ ಟ್ಯಾಕ್ಸಿಗಳಲ್ಲಿಯೂ, ಓಡಿ ಕುಳಿತು ಹೊರಟುಹೋಗುವಾಗ ಏನೋ ಈ ದೇಶಕ್ಕೆ ಮುಂದೆ ಎಂತಹ ಸುಂದರ ದಿನಗಳು ಬರಲಿವೆಯಪ್ಪಾ ಯಾರೂ ಕನಸು ಕಾಣಬೇಕು. ಮಕ್ಕಳು ಹೋದ ಸ್ವಲ್ಪ ಹೊತ್ತಿಗೇ ಅಂತೂ ಕೆಲಸ ಹೇಗೂ ಮುಗಿದ ದಣಿವು ದುಗುಡದ ಮುಖದಲ್ಲಿ ಜೋಡಿಜೋಡಿಗಳು ಮನೆಗೆ ಬೀಗ ಹಾಕಿ ತಂತಮ್ಮ ವಾಹನಗಳಲ್ಲಿ ಹೊರಡುತ್ತಾರೆ. ಒಂಭತ್ತರಿಂದ ಹತ್ತರವರೆಗೆ ಒಂದೊಂದೇ ಮನೆ ಬಾಗಿಲುಗಳು ತೆರೆದ ಕಣ್ಣುಗಳು ಮುಚ್ಚಿಕೊಳ್ಳುವಂತೆ ಮುಚ್ಚಿಕೊಳ್ಳುತ್ತವೆ. ಇನ್ನು ಐದು, ಆರು ಗಂಟೆ ಸಂಜೆಯವರೆಗೂ ಹಾಗೆಯೇ. ಸಂಜೆಯ ನಂತರ ಒಂದೆರೆಡು ಗಳಿಗೆ ಮಾತುಕತೆ, ಮತ್ತೆ ಬಾಗಿಲು. +ಎಲ್ಲ ಮನೆಗಳೂ ಹೀಗೆಯೇನಲ್ಲ. ಗಂಡಸರು ಮಾತ್ರ ಹೊರಗೆ ದುಡಿಯಲು ಹೋಗುವ ಮನೆಗಳೂ ಇವೆ. ಇಬ್ಬರೂ ಕೆಲಸಕ್ಕೆ ಹೋದರೂ ಮನೆಯಲ್ಲಿ ತಾಯಿ ತಂದೆಯೋ ಅತ್ತೆಮಾವಂದಿರೋ ಇರುವ ಮನೆಗಳೂ. ಏನಿದ್ದರೂ ಎಲ್ಲ ಬಾಗಿಲು ಹಾಕಿಕೊಂಡು ಒಳಗೆ ಇರುವವರೇ. ಈಗಂತೂ ದಿನಕ್ಕೊಂದು ಬಗೆಯ ಕಳ್ಳತನದ ಕಥ ಪೇಪರುಗಳಲ್ಲಿ ಬರುವಾಗ ಅನಾವಶ್ಯಕ ಹೊರಗಿರುವುದು, ಬಾಗಿಲು ತೆಗೆದಿಟ್ಟು ಎಲ್ಲೋ ಒಂದು ಕಡೆ ಏನಾದರೂ ಮಾಡುತ್ತ ಇರುವುದು ಎಲ್ಲ ಕೂಡದು. ಹಾಗಾಗಿ ಹತ್ತು ಗಂಟೆಯ ಗೌಜುಗಲಾಟೆ ಮುಗಿಯಿತಂದರೆ ವಿಸ್ತರಣೆ ಎಂಬುದು ‘ಲಂಡನ್’ ಆಗುತ್ತದೆ ಎನ್ನುತ್ತಾರೆ. ಲಂಡನ್ ಎಂದರೆ ಹೋಗಿ ತಿಳಿಯದಿದ್ದರೂ ಕೇಳಿ ತಿಳಿದಿರುವ ಪ್ರಕಾರ ಹೀಗೆಯೇ ಇರಬಹುದು ಎಂಬ ಒಂದು ಅಂದಾಜಿನಲ್ಲಿ. ಹತ್ತು ಗಂಟೆಯ ನಂತರ ಮೌನ ಹೊದೆದು ಧ್ಯಾನಸ್ಥವಾಗಿರುವಂತೆ ಕಾಣುವ ಹಗಲಿನಡಿಯ ಈ ವಿಸ್ತರಣೆಯಲ್ಲಿ ಮತ್ತೆ ಕೇಳಿ ಬರುವ ಶಬ್ದಗಳೆಂದರೆ ಕ್ಯಾರಿಯರ್ ಕೊಂಡೊಯ್ಯುವವನ ಸೈಕಲ್ ಬೆಲ್ಲು. ಚಾಣ ಚಾಣಾ ಎಂದು ಕೂಗುವ ಚೇಣದವ, ಚಪ್ಪಲಿ ರಿಪೇರಿ, ಪೇಪರ್ ಹಳೆ ಪೇಪರ್, ಪ್ಲಾಸ್ಟಿಕ್ ಲಕೋಟೆಯವ, ಗುಜರಿಯವ, ತರಕಾರಿ ಗಾಡಿ. +ಇವರಿಗೆಲ್ಲ ಯಾರು ಬಾಗಿಲು ತೆರೆಯುತ್ತಾರೆ ಸುಮ್ಮನೆ? ಸಾಧ್ಯವಾದಷ್ಟೂ ಎದುರಿನ ತಳಿಕಂಡಿಯಿಂದಲೇ ಮಾತು ಮುಗಿಸುತ್ತಾರೆ. ಅವಶ್ಯವಿದ್ದರೆ ಮಾತ್ರ, ಬೇಕಾಗಿರುವುದು ತಮ್ಮ ಮನೆಯ ಮುಂದೆ ಹಾದುಹೋಗುವಾಗ ಹೊರಬಂದು, ಆತ ಅವರನ್ನು ಕಂಡದ್ದೇ ನಿಂತು ಇತ್ತ ತಿರುಗಿದನೆಂದರೆ, ಕೆಲಸ ಹೇಳುವ ಶಿಸ್ತಿನವರು. ಒಟ್ಟಾರೆ ಪರಿಚಿತ ಮತ್ತು ಸಲೀಸು ಶಬ್ದಗಳಲ್ಲಿ ಹೇಳಬೇಕೆಂದರೆ ಭಾರೀ ಡೀಸೆಂಟ್ ವಿಸ್ತರಣೆ. ಅಲ್ಲಿ ಸ್ವಲ್ಪವಾದರೂ ಅತ್ತ ಇತ್ತ ಓಡಾಡಿಕೊಂಡಿರುವವರೆಂದರೆ ಮುದುಕಿ ಪಂಡಿತಮ್ಮ ಮಾತ್ರ. +ಪಂಡಿತಮ್ಮ ಸಂಬಾರಬಳ್ಳಿ ಸೊಪ್ಪು, ಮಜ್ಜಿಗೆ ಹುಲ್ಲು, ವಂದಲಗ ಇತ್ಯಾದಿ ನೆಪ ಮಾಡಿ ಎಲ್ಲರ ಮನೆ ಹತ್ತಿ ಇಳಿಯುತ್ತಾರೆ. ಹಾಗೆಂತ ಅವರೂ ಎರಡು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಇದ್ದ ಎರಡು ನಿಮಿಷದಲ್ಲಿ ಒಂದು ಸೆಕೆಂಡೂ ಬಾಯಿ ಮುಚ್ಚದೆ ಅಲ್ಲಲ್ಲಿನ ವೃತ್ತಾಂತ ಬಿಚ್ಚುತ್ತಾರೆ. ಪಂಡಿತಮ್ಮನಂಥವರು ಇರಬೇಕು, ತೀರ ಬೇಸರವಾದಾಗ ಅವರಿವರ ಮನೆಯ ಚಿಕ್ಕ ಚಿಕ್ಕ ಚರಿತ್ರೆ ಯಾರಿಗೆ ಬೇಡ? ಯಾರು ಯಾರು ಪ್ರೀತಿ ಮಾಡಿದರು, ಪಿ.ಹೆಚ್.ಡಿ. ಮಾಡಿದರು, ಕಾಲೇಜಿಗೆ ಸೇರಿದರು, ಯಾರಿಗೆ ಭಡ್ತಿಯಾಯಿತು, ಯಾರು ಫೇಲು, ಪಾಸು, ವರ್ಗ, ಯಾರಿಗೆ ಹುಶಾರಿಲ್ಲ, ಏನಾಗಿದೆ, ಈ ನಾರು ಬೇರು ಯಾಕೆ, ಅದನ್ನು ತಯಾರಿಸುವುದು ಹೇಗೆ ಇತ್ಯಾದಿ ಹೇಳುತ್ತ ದಾಟಿಕೊಳ್ಳುತ್ತಾರೆ. ವ್ಯಾನೊಂದು ಫ್ರಿಜ್ಜನ್ನೋ ಮತ್ತೇನನ್ನೋ ಹೊತ್ತು ಬಂದಿತೆಂದರೆ ಅದು ಯಾರ ಮನೆಗೆ ಎಂದು ನಿಂತಲ್ಲೇ ತನ್ನೊಳಗೇ, ಪರರಿಗೂ ಕೇಳಿಸುವಂತೆ, ಹೇಳಿಕೊಳ್ಳುತ್ತ ಬೋನಸ್ ಸಿಕ್ಕಿರಬೇಕು ಮುಂತಾಗಿ ಕಾರಣಗಳನ್ನು ಹುಡುಕುವವರು. ಸುಖ ದುಃಖ ಸಂತೋಷ ಆರೋಗ್ಯ ಅನಾರೋಗ್ಯ ಎಲ್ಲವನ್ನೂ ನಾನಾ ವಿಧದ ಏರುಪೇರಿನ ದನಿಯಲ್ಲಿ ಹೇಳುತ್ತ ಹೇಳುತ್ತ ನಡೆದುಬಿಡುವಂಥವರು. +ಸರೋಜ ಗಂಡ ಹೆಂಡತಿ ವರ್ಗವಾಗಿ ಇಂಥಲ್ಲಿ ಮನೆ ಸಿಕ್ಕಿ ಒಂದು ರಾತ್ರಿ ಬಂದಿಳಿದರು. ಬೆಳಗೆದ್ದು ಕಿಟಕಿ ಬಾಗಿಲು ತೆರೆದರೆ ಉದ್ದಾನುದ್ದಕ್ಕೂ ಘಟ್ಟದ ಸಾಲು! ಸೂರ್ಯ ಮೂಡಿ ಬರುವ ಬಾಗಿಲು. ಮೂಡಲ ಮನೆಯಲ್ಲಿ ನಿತ್ಯವೂ ಎರಕ ಹೊಯ್ಯುವ ಮುತ್ತಿನ ನೀರು. ಚಿಕ್ಕಂದಿನಲ್ಲಿ ಸುಲಭವಾಗಿ ಸ್ಲೇಟಿನಲ್ಲಿ ಬರೆಯುವ ಗುಡ್ಡಗಳು, ನಡುವಿಂದ ಮೂಡಿ ಬರುವ ಸೂರ್ಯ, ಹೋಗಹೋಗುತ್ತ ಅಗಲವಾಗುವ ಅವನ ಉದ್ದುದ್ದ ಕಿರಣಗಳು ಎಲ್ಲ ಕೇವಲ ಚಿತ್ರವಲ್ಲ. ನಿಜವಾಗಿಯೂ ಸೂರ್ಯೋದಯವೆಂಬುದು ಹೀಗೆಯೇ ಇರುತ್ತದೆ ಎಂದು ತಿಳಿಯಬೇಕಾದರೆ ಇಲ್ಲಿಗೆ ಬರಬೇಕಾಯಿತು ಎನ್ನುತ್ತ ಸರೋಜ ಕಿಟಕಿ ಬಳಿಯಲ್ಲಿ ನಿಂತೇಬಿಟ್ಟಳು. ಆ ಇಡೀ ವಾತಾವರಣ ಭೂಲೋಕದ್ದಾಗಿ ಕಾಣದೆ ಮೇಲಿನ ಯಾವುದೋ ಒಂದು ಲೋಕದ ಚೂರನ್ನು ಅನಾಮತ್ತಾಗಿ ಎತ್ತಿ ಇಲ್ಲಿ ತಂದಿಟ್ಟಿದ್ದಾರೋ ಎಂಬಂತಿತ್ತು. ಈ ದೃಶ್ಯಕ್ಕಾಗಿಯೇ ಆದರೂ ಮನೆಗೆ ಕೊಡುವ ಬಾಡಿಗೆ ಏನೂ ಅಲ್ಲವೆನಿಸಿತು. ಇಂತಹದೆಲ್ಲ ಎಲ್ಲಿ ಸಿಗುತ್ತದೆ, ಎಷ್ಟೆಲ್ಲ ಊರು ತಿರುಗಿದೆವು! ಅಲ್ಲೆಲ್ಲ ಕಿಟಕಿಯ ಬಾಗಿಲು ತೆರೆದರೆ ಒಂದೋ ಪಕ್ಕದ ಮನೆಯ ಗೋಡೆ, ಇಲ್ಲ ಅಂಗಡಿ ಸಾಲು, ಮೋಟರು ಕಾರು. ಇಷ್ಟು ಪ್ರಶಾಂತ ವಿಸ್ತರಣೆ ಇದುವರೆಗಿನ ವರ್ಗದಲ್ಲಿ ಎಲ್ಲಿಯೂ ಸಿಕ್ಕಿಲ್ಲ. ಬೇಸರವಾಯಿತೇ ಮನೆಯೆದುರು ಕುರ್ಚಿ ಹಾಕಿಕೊಂಡು ಗುಡ್ಡಬೆಟ್ಟದ ಸಾಲು ನೋಡುತ್ತ ಕುಳಿತರೆ ಸಾರಿ. ಸಮಯ ಹೇಳಕೇಳದೆ ಪಶ್ಚಿಮಕ್ಕೆ ಜಾರುತ್ತದೆ. ಮೂರು ವರ್ಷವಾಗುತ್ತಲೂ ಇಲ್ಲಿಂದ ಮತ್ತೆ ಗುಳೇ ಹೋಗಬೇಕಲ್ಲ. ಹೀಗಿನ ಉದ್ಯೋಗವೇ ಬೇಡ…. “ಹೋಯ್, ಏಳಿ, ನೋಡಿ. ಎಲ್ಲಾದರೂ ಇಂತಹ ಜಾಗದಲ್ಲಿ ಮನೆ ಕಟ್ಟಿಕೊಂಡು ಸ್ವಸ್ಥ ಇದ್ದುಬಿಡೋಣ.” ಪತಿ ಮಲಗಿದಲ್ಲೇ ನಕ್ಕ. ಅವಸರ ಪಟ್ಟುಕೊಂಡು ತೀರ್ಮಾನಕ್ಕೆ ಬರಬಾರದು. ತಾಳಬೇಕು ಎಂದು ಹಿರಿಯರು ಹೇಳುತ್ತಾರೆಂಬುದನ್ನು ನೆನಪಿಸುವಂತೆ. ಹಾಗಾದರೆ ಇಲ್ಲಿ ಏನೋ ಒಂದು ಘಟನೆಯಾಗಿ ಭ್ರಮೆ ಕಳಚುತ್ತದೆ ಅಂತನಿಸಿದರೆ, ಹೌದು-ಅಲ್ಲ ಎರಡೂ. +ಪ್ರಸಂಗವೂಂದನ್ನು ಹೇಳಲು ಪ್ರಯತ್ನ ಮಾಡುತ್ತೇನೆ. ಹೇಗೆ ಹೇಳಲು ಹೋದರೂ ಕಡೆಗೂ ಅದು ಗಂಡುಹೆಣ್ಣು ಶೋಷಣೆ ದರ್ಪ ಇತ್ಯಾದಿಗಳ ಮಟ್ಟಿಗೇ ಬಂದು ಮುಟ್ಟಿಕೊಳ್ಳುತ್ತದೋ ಎಂಬ ಆತಂಕದೊಂದಿಗೇ. +* +* +* +ಮೇಲಿನ ವಿಸ್ತರಣೆಯ ಬಗ್ಗೆ ಏನೆಲ್ಲ ವರ್ಣನೆ ಮಾಡಿದೆನೊ ಅದೆಲ್ಲವನ್ನೂ ಅಲ್ಲಿನ ಒಂದು ಸಂಸಾರವನ್ನು ಬಿಟ್ಟು ಅಥವಾ ಒಂದು ಸಂಸಾರ ಇಲ್ಲದೇ ಇದ್ದರೆ ಎಂದು ಓದಿಕೊಳ್ಳಬೇಕು. ಆ ಇಡೀ ವಿಸ್ತರಣೆಗೆ ಅದೊಂದು ಕಪ್ಪು ಚುಕ್ಕಿ. ಉಳಿದ ಮನೆಯವರು ಯಾರೂ ಅತ್ತ ಕಣೆತ್ತಿಯೂ ಕಾಣರು. ಆದರೆ ಎಲ್ಲರಿಗಿಂತ ಮೊದಲು ಬಂದು ಸೇರಿಕೊಂಡ ಸಂಸಾರವದು. ಅಲ್ಲಾಡಿಸುವಂತೆಯೇ ಇಲ್ಲ. ಆ ಮನೆಯಲ್ಲಿರುವುದು ಅಜ್ಜ ಸತ್ತು, ಅಪ್ಪ ಸತ್ತು ಈಗ ಮಗ. ಮಗನ ಹೆಂಡತಿ. ಅದು ಆತ ಮದುವೆಯಾದ ಹೆಂಡತಿಯಲ್ಲ ಹಾರಿಸಿಕೊಂಡು ಬಂದದ್ದು ಅಂತೆಲ್ಲ ಹೇಳುತ್ತಾರೆ. +ಸರೋಜ ಬಂದು ಅಲ್ಲಿ ಸೇರುವಾಗ ಆ ಹೆಂಡತಿಯಲ್ಲದ ಹೆಂಡತಿ ಸಾಯುತ್ತಾ ಇದ್ದಾಳೆ ಎಂಬ ಸುದ್ದಿ ಇತ್ತು. ಅದಕ್ಕೆ ಸರಿಯಾಗಿ ದಿನನಿತ್ಯ ಮುಂಜಾವಿನ ಮೃದು ಬೆಳಗನ್ನೂ ಪರಚಿ ಛಿದ್ರಗೊಳಿಸುವ, ಮೈಮರೆತು ಮಲಗಿರುವ ರಾತ್ತಿಯ ಕೆನ್ನೆಗೆ ಫಟಾರನೆ ತಟ್ಟಿ ಎಬ್ಬಿಸುವ, ಆಚೀಚೆ ಮನೆಗಳಿವೆ, ಜನರಿದ್ದಾರೆ ಎಂಬ ಎಲ್ಲ ರಂದೂ ಮೀರಿ, ಕೂಗದಿದ್ದರೆ ಸತ್ತೇಬಿಡುತ್ತೇನೆಂಬ ತಾರಕಕ್ಕೇರುವ ಇಳಿಯುವ ಆರ್ತನಾದ. ತಾನು ಬಂದ ದಿನ ರಾತ್ರಿಯೂ ಯಾರೋ ಮರಣಾಂತಿಕವಾಗಿ ಕಿರುಚಿಕೊಂಡದ್ದು ಪ್ರಯಾಣದ ಆಯಾಸದಲ್ಲಿನ ನೀಳ ನಿದ್ದೆಯಲ್ಲಿ ಎಲ್ಲೋ ಆಳವನ್ನು ಕಲಕಿದಂತಾದ್ದು – ನೆನಪಿಸಿಕೊಳ್ಳುವಳು ಸರೋಜ. ಹೆಂಡತಿಗೆ ಏನು ಖಾಯಿಲೆಯೆಂದು ಗೊತ್ತಿಲ್ಲವಾದರೂ ಅದೊಂದು ಗುಣಕಾಣದ ಖಾಯಿಲೆ ಎಂದೂ ಸಾಯುವುದಿದ್ದರೂ ಬೇಗ ಸಾಯುವುದಿಲ್ಲವೆಂದೂ ಹೇಳುತ್ತಿದ್ದರು. ನಾಲ್ಕು ದಿನ ಸುಮ್ಮನೆ ಇದ್ದರೆ ಆರು ದಿನ ಚಿರ್ರ ಚೀರುವ ಇರುಳು, ಮುಂಜಾವುಗಳು. ಮುತ್ತಿನ ಎರಕ ಬಿರುಕು ಬಿದಲಾರಂಭಿಸಿತು. +ಮೊದಮೊದಲು ಸರೋಜ ತಲ್ಲಣಗೊಂಡು ಎದ್ದು ಬಾಗಿಲಿಗೆ ಓಡಿಬರುತ್ತಿದ್ದಳು. ತೆರೆದು ಏನಾಯಿತು ನೋಡುತ್ತಿದ್ದಳು. ಅಲ್ಲಿಯೋ ಬಾಗಿಲು ಹಾಕಿಕೊಂಡೇ ಇರುತ್ತಿತ್ತು. ಬಾಗಿಲು ತಟ್ಟಿ ಕೇಳುವ ಅಂದರೆ ಸಲಿಗೆ ಪರಿಚಯ ಎರಡೂ ಇಲ್ಲದ ಹೊಸ ದಿನಗಳು. ಉಳಿದ ಮನೆಗಳವರು ಮೆಲ್ಲ ತಮ್ಮ ಕಿಟಕಿ ತೆರೆದು ಹಣುಕುತ್ತ, ಕ್ಷಣ ಆಲೈಸಿ ಮತ್ತೆ ಮುಚ್ಚಿ ತಮ್ಮ ಪ್ರಪಂಚದಿಂದ ಆ ಮನೆಯನ್ನು ಕಡಿದುಕೊಳ್ಳುತ್ತಿದ್ದುದನ್ನು ಕಂಡು ಬೆಚ್ಚಿಬಿದ್ದಳು. ಒಂದೇ ಒಂದು ಮನೆ, ಆಧುನಿಕದ ಎಲ್ಲೋ ಕಣ್ಣುಕಾಣದ ದೂರತುದಿಗೆ ದೌಡಾಯಿಸಿ ತಲುಪಲು ಹೊರಟ ಧಾವಂತದಂತಿರುವ ಉಳಿದೆಲ್ಲ ಮನೆಗಳನ್ನು ಅಗೋಚರವಾಗಿ ಮರಗಟ್ಟಿಸಿದ್ದು ಕಂಡು ದಿಗಿಲುಗೊಂಡಳು. ಪಕ್ಕದ ಮನೆಯವಳೊಡನೆ ಕೇಳಿದರೆ “ಅದು ಬಿಡಿ, ಹೇಳಿ ಪ್ರಯೋಜನವಿಲ್ಲ” ಅಂತ ಕೈಕೊಡವಿದಳು ಹೊರತು ಮುಂದೆ ಒಂದು ಶಬ್ದ ಬೇಕೆಂದರೂ ಇಲ್ಲ. ಯಾರೊಬ್ಬರಲ್ಲೂ. +ಒಂದು ದಿನ ಮೇಲುಸಾಲಿನ ಮನೆಯ ಕಾವೇರಿಗೆ ರಾತ್ರಿಯಿಂದ ಜ್ವರ ಎನ್ನುತ್ತ ಕಷಾಯಕ್ಕೆ ಮಜ್ಜಿಗೆಹುಲ್ಲು ಬೇಕೆಂದು ಕೇಳಿಕೊಂಡು ಬಂದ ಪಂಡಿತಮ್ಮ ಹುಲ್ಲನ್ನು ಕತ್ತರಿಸಿ ಮಡಚಿ ಅದರ ಎಳೆಗಳಿಂದಲೇ ಬಿಗಿದು ಗಂಟು ಹಾಕುತ್ತ ಆ ಮನೆಯ ಕಡೆ ಹುಬ್ಬಿನಲ್ಲೇ ಸನ್ನೆ ತೋರಿಸಿ “ಹಾಸಿಗೆಗಂಟಿ ಹೋಗಿದ್ದಾಳೆ ಹುಡುಗಿ. ಇದ್ದ ತ್ರಾಣ ಎಲ್ಲ ಕೂಗಲಿಕ್ಕೇ ಆಯಿತಲ್ಲ. ಅದಕ್ಕೆ ಕಾಯಿಲೆ ಮತ್ತೇನಲ್ಲಪ್ಪ…. ಅಂವ ಶಬ್ದ ಮಾಡದೆ ಹೊಡೆಯುತ್ತಾನೆ. ಅವಳು ಪ್ರಪಂಚಕ್ಕೆಲ್ಲ ಕೇಳುವಂತೆ ಕೂಗುತ್ತಾಳೆ…. ಹಾಂ. ಪ್ರಪಂಚಕ್ಕೇನು ಕೇಳುವುದಿಲ್ಲ ಬಿಡು. ಕೇಳಿಯಾದರೂ ಏನು?” +“ಹೋಗಿ ಒಮ್ಮೆ ನೋಡಿಕೊಂಡು ಬರಬಹುದಿತ್ತು. ಹೋಗೋಣವೆ ಪಂಡಿತಮ್ಮ?” +“ಬೇಡ ಬೇಡ. ಅದೆಲ್ಲ ನಿನಗಿನ್ನೂ ಗೊತ್ತಿಲ್ಲ. ಸತ್ತುಕೊಳ್ಳಲಿ. ಒಟ್ಟಾರೆ ನಾವು ಗಂಡ ಹೆಂಡತಿ ಆಚೆಬದಿಯಿದ್ದು ಸೋತೆವು. ಇವರಿಗೆ ನಿದ್ದೆಯಾದರೂ ಬರುತ್ತದೆ. ನಂಗೆ ಅದೂ ಇಲ್ಲ. ಕೇಳಬೇಕಲ್ಲ ಎಲ್ಲ, ಕಾಣದಿದ್ದರೂ. ಈಗ ಹೋಗಿ ಕಷಾಯ ಮಾಡುತ್ತೇನೆ. ಊಟಕ್ಕೂ ಇದರದ್ದೇ ಸಾರು ಮಾಡಿಕೊಡುತ್ತೇನೆ.” ಎಂದರು ಮನೆಯಲ್ಲಿ ಗಂಡ ಹೆಂಡತಿ ಮಾತ್ರವೇ ಇರುವ ಪಂಡಿತಮ್ಮ. “ಗಂಡನಿಗೆ ಪೆನ್ಶನ್ ಬರುತ್ತದೆ. ಮಕ್ಕಳೂ ದುಡ್ಡು ಕಳಿಸುತ್ತಾರೆ. ಅಚ್ಚುಕಟ್ಟಾಗಿ ಯಾವ ತಾಪತ್ರಯವೂ ಇಲ್ಲದೆ ಇರುವ ಅಂದರೆ….” ಗೊಣಗುತ್ತ ಪಿಸುವಾಗಿ “ನೋಡಿದ್ದೀಯ ಅವನನ್ನ? ಈಶ್ವರನ ಗಣದಲ್ಲೊಂದು ತಪ್ಪಿಸಿಕೊಂಡು ಬಂದ ಹಾಗಿದೆ.” ಆಗದು ಅಂತ ಕಂಡರೆ ಇಷ್ಟೆ. ಮನುಷ್ಯ ಭೂತಪ್ರೇತವಾಗಿ ಕಾಣುವುದೇ – ಅಂತಂದುಕೊಂಡರೆ ಒಂದು ಬೆಳಿಗ್ಗೆ ಬಾಗಿಲು ಬೆಲ್ಲಾಯಿತು. ಸರೋಜ ಹೋಗಿ ಬಾಗಿಲು ತೆರೆದವಳು ಒಮ್ಮೆ ಹಿಮ್ಮೆಟ್ಟಿ ನಿಂತಳು. ಸುಳ್ಳಲ್ಲ, ಇದು ಸಾಕ್ಷಾತ್ ಗಣವೇ! ಗುರುತು ಹೇಳುವುದೇ ಬೇಡ. ಏನೋ ಸ್ಕೀಮಿಗೆ ದುಡ್ಡು ಕೇಳಲು ಬಂದದ್ದು ಎಂದ. ತಾವು ಅಂಥದಕ್ಕೆಲ್ಲ ದುಡ್ಡು ಕಟ್ಟುವುದಿಲ್ಲ, ಕ್ಷಮಿಸಿ ಎಂದು ಹೋಗಬಹುದೆಂಬಂತೆ ಬಾಗಿಲು ವಾರೆ ಮಾಡಿದಳು. ಕ್ಷಣ ನಿಂತು, ಬಂದ ದಿನದಿಂದ ಹಗಲು ರಾತ್ರಿ ಆ ನಮೂನೆಯ ಬೊಬ್ಬೆಯ ಹಿಂದಿರುವ ಮನುಷ್ಯನನ್ನು ತಬ್ಬಿಬ್ಬುಗೊಳಿಸುವ ಒಂದು ಮಾತನ್ನಾದರೂ, ಕಡೇಪಕ್ಷ ಆ ಹೆಂಗಸಿನ ಬಗ್ಗೆ ಕಾಳಜಿ ತೋರುವ ಮಾತನ್ನಾದರೂ ಆಡಬೇಕೆಂದಿದ್ದವಳು ಟಪಾರನೆ ಬಾಗಿಲು ಹಾಕಿಬಿಟ್ಟಳು. ಖಂಡಿತ ಆಕೆ, ಬಂದವರು ಇನ್ನೂ ಮೆಟ್ಟಿಲಲ್ಲಿ ನಿಂತಿರುವಾಲೇ ತಾನು ಹೇಗೆ ಬಾಗಿಲು ಹಾಕಬಲ್ಲೆನೆಂದು ಊಹಿಸಿಕೊಂಡಿರಲೇ ಇಲ್ಲ. ಒಮ್ಮೊಮ್ಮೆ ನಮ್ಮ ವರ್ತನೆ ನಾವೆಂದರೆ ಏನೆಂದು ನಾವೇ ತಿಳಕೊಂಡಿರುತ್ತೇವೋ ಅದರ ವ್ಯತಿರಿಕ್ತ ವ್ಯಕ್ತವಾಗುತ್ತ ಸೋಜಿಗವಾಗಿ ಬಿಡುತ್ತದೆಯಲ್ಲ – ಅಚ್ಚರಿಪಟ್ಟಳು. +“ಎಲ್ಲಿ ಹಡಬೆಟ್ಟಿ. ಬರ್‍ಕತ್ತು ಬರಲಿಕ್ಕಿಲ್ಲ.” – ಅಂತ ಆತ ಗಟ್ಟಿಯಾಗಿ ಹೇಳುತ್ತ ಹೋದದ್ದು ಕಿವಿಯ ಮೇಲೆ ಬೀಳುತ್ತಿದ್ದಂತೆ ಧುಮುಧಮು ಒಳಗೆಬಂದಳು. ಇದುವರೆಗೆ ಇಂತಹ ಬೈಗಳನ್ನೇ ಕೇಳದವಳು, ಅವಮಾನದಿಂದ ಕೆನ್ನೆಯೆಲ್ಲ ಬಿಸಿಯೇರಿ ಭಯದಿಂದಲೂ ಕಂಪಿಸುತ್ತಿದ್ದಳು. +“ಏನು ಏನು?” – ಎಂದ ಪತಿ. +“ಏನಿಲ್ಲ, ಅದೇ, …. ಆ ಜನ…. ನಾ ಯಾಕೆ ಹೆದರಿದೆ ಎಲ್ಲ ಬಿಟ್ಟು ಅವನಿಗೆ?…. ಒಂದಿನ ಅವನ ಹೆಂಡತಿಯನ್ನ ನೋಡಿಕೊಂಡೇ ಬರುತ್ತೇನೆ…. ಪಾಪ ಮಲಗಿದ್ದಲ್ಲೇ ಇದ್ದಾಳಂತೆ. ಬಾಯಿಗೆ ಬೇಕಾದ್ದು ಏನಾದರೂ ಮಾಡಿ ಕೊಟ್ಟು ಬರುತ್ತೇನೆ” – ಎಂದಳು ಆವೇಶ ಏರಿದಂತೆ. +“ಹೊಲಸಿಗೆ ಕಲ್ಲು ಹೊಡೆಯುತ್ತಾರಾ? ಅಂವ ಮರ್ಯಾದೆ ತೆಗೆದು ಮಾತಾಡುವವ. ಆ ಹೆದರಿಕೆಗೇ ಎಲ್ಲರೂ ಸುಮ್ಮನಿರುವುದು ಹೊರತು ಹೃದಯ ಇಲ್ಲದೆ ಏನಲ್ಲ. ಅವನ ಒಂದು ಕೆಟ್ಟ ಮಾತೇ ಜೀರ್ಣವಾಗಿಲ್ಲ ನಿನಗೆ, ಹೋಗುತ್ತಾಳಂತೆ! ಎಲ್ಲಿಯಾದರೂ ಬಾಯಿಗೆ ಬಂದ ಹಾಗೆ ಹೇಳಲಿ., ಎಂದ ಪತಿ. ಆಕೆ ಒಳಮುಖವಾಗಿ ಚಿಂತೆ ನಿಂತಳು. +ಹೇಗೆ ಹೊಲಸಿಗೆ ಕಲ್ಲು ಹೊಡೆಯಬಾರದೆಂದೇ ಕಲಿಯುತ್ತಾ ಬೆಳೆಯುತ್ತೇವೆ. ಹೊಲಸನ್ನು ತೊಳೆಯಲು ಹೊರಡುವ ಧೈರ್ಯ ಹೇಳಿಕೊಡದ ವಿದ್ಯೆ. ಎಂತಲೇ ಹೊಲಸು ತೊಳೆಯುವ ವರ್ಗ ಬೇರೆಯಾಯಿತು? ಅಂದ ಹಾಗೆ, ಗಾಂಧೀಜಿ ಹೊಲಸನ್ನೂ ತೊಳೆದರಂತೆ…. +“ಈಗ ಈ ಬೀದಿಯಲ್ಲಿ ಗಾಂಧೀಜಿ ವಾಸವಾಗಿದ್ದಾರೆ ಎಂದುಕೊಳ್ಳೋಣ. ಏನು ಮಾಡುತ್ತಿದ್ದರು?” +“ಸಂಜೆ ನೋಡೋಣ…. ಈಗ ಪುರಸೊತ್ತಿಲ್ಲ.” +ಅವತ್ತು ಮಕ್ಕಳನ್ನು ಶಾಲೆಗೆ ಹೊರಡಿಸುವಾಗಲೂ ಶ್ರದ್ಧೆ ಸಾಲದಾಯಿತು. ಕೈ‌ಓಡಾಟ ನಿಧಾನವಾಯಿತು. “ತಲೆ ಎಲ್ಲೋ ಇದ್ದರೆ ಮತ್ತೇನಾಗುತ್ತದೆ?” ಪತಿಯ ಸಿಟ್ಟಿನ ಮಾತೂ ಕಿವಿಯ ಮೇಲೆ ಬೀಳದಾಯಿತು. ಮಕ್ಕಳು ಆಟೋ ಬಂತು ಆಟೋ ಬಂತು ಎಂದು ಹೊತ್ತಾಗಿದ್ದಕ್ಕೆ ಕೈಕಾಲು ಬಡಿದು ಅತ್ತುಕೊಂಡೇ ಶಾಲೆಗೆ ಹೋದವು. +“ಹೋಗಬೇಡ ಅಂದೆ ಅಲ್ಲಿಗೆ. ಇನ್ನು ನಾನು ಅತ್ತ ಆಫೀಸಿಗೆ ಹೋದ ಮೇಲೆ ಮೆಲ್ಲ ಮನಸ್ಸು ಮಾಡುವುದಲ್ಲ.” – ಎಂದು ಪತಿ ಆಫೀಸಿಗೆ ಹೊರಟುಹೋದ. +ಆತ ಹಾಗೆ ಹೇಳಿದರೇನಾಯಿತು? ಹೋಗಿ ಬಂದೇ ಬಿಡುವುದು ಎಂದುಕೊಂಡಳು. ಹೆಜ್ಜೆ ಮುಂದಿಡಲು ಧೈರ್ಯ ಸಾಕಾಗಲಿಲ್ಲ. ನೀತಿಪಾಠ ಹೇಳುವ ಮರಿಯಾಗೊರೆಟ್ಟಿ ಜಗತ್ತಿನಲ್ಲೆಲ್ಲ ಎಲ್ಲ ಮಕ್ಕಳಿಗೂ ಹಿರಿಯರು ಎದುರಿಡುವ ಒಂದು ಪುಟ್ಟ ಲೆಕ್ಕ ಹೇಳಿದ್ದರು. “ಒಂದು ಬುಟ್ಟಿಯಲ್ಲಿ ನೂರು ಮಾವಿನ ಹಣ್ಣುಗಳಿವೆ. ಅದರಲ್ಲಿ ಒಂದು ಕೊಳೆತಿತು. ಒಂದು ವಾರದ ಮೇಲೆ ಉಳಿಯುವುದೆಷ್ಟು?” ಉಳಿಯುವುದೆಷ್ಟು? +ಕೊಳೆಯುವುದು ಎಂದರೆ ಏನು ಮೇಡಂ? ಇದೇನಾ? ಧೈರ್ಯ ಕಳೆಯುವುದಾ? ಸಂಜೆ ಮಕ್ಕಳೊಡನೆ ಕೇಳಬೇಕು ನಿಮಗೂ ಈ ಲೆಕ್ಕ ಕೇಳಿದ್ದಾರಾ ಅಂತ. ಕೇಳಿದರೆ “ಯಾಕೆ ಮೇಡಂ, ಒಂದೇ ಕೊಳೆತ ಹಣ್ಣಿನೆದುರು ತೊಂಭತ್ತೊಂಬತ್ತೂ ಹೆದರಿ ಕೊಳೆಯಬೇಕು? ಅದರ ವಿರುದ್ಧ ಯಾಕಾಗಬಾರದು? – ಅಂತ ಕೇಳಿ” ಎಂದು ಹುರಿದುಂಬಿಸಿ ಪ್ರಶ್ನೆ ಎಬ್ಬಿಸಿಕೊಡಬೇಕು. +* +* +* +ಎಂದಿಗಿಂತಲೂ ಭಯಂಕರ ಬೊಬ್ಬೆಯ ರಾತ್ರಿಯಿಡೀ ಕಳೆದು ಚುಮುಚುಮು ಬೆಳಕಷ್ಟೇ. ಪಂಡಿತಮ್ಮ ಬಂದರು. ಏನು? ಅಂದರೆ “ನೀರೊಟ್ಟೆ ಬೇರಿದ್ದರೆ ಬೇಕಿತ್ತು. ರಾತ್ರಿಯಿಡೀ ಚಳ್ಳಾಂಪುಳ್ಳಿ. ಪಾಯಿಖಾನೆ-ಮನೆ ತಿರುಗಿದ್ದೇ ತಿರುಗಿದ್ದು. ಕಾಲು ಹೇಗೆ ನಡುಗುತ್ತಿದೆ ನೋಡು!” ಎನ್ನುತ್ತ ಉಸ್ಸೆಂದು ಹಿಂಬದಿ ಜಗಲಿಯಲ್ಲಿ ಕುಳಿತರು. ಬೇಧಿ ಎನ್ನಬಾರದೆ….ಸ್ಸಿ. ಎಂದುಕೊಳ್ಳುತ್ತ ಎಲ್ಲಿಟ್ಟಿದೆ ಎಂದೇ ಮರೆತ ಬೇರನ್ನು ಕರಡಿಗೆಯ ಬಾಯಿ ತೆರೆದು ತೆರೆದು ಅಂತೂ ಹುಡುಕಿಕೊಟ್ಟಳು ಸರೋಜ. “ಅಬ್ಬ. ಜೀವ ಬಂತು. ಹೊರಕಡೆಗೆ ಇದು ರಾಮಬಾಣವಲ್ಲವೆ!” ಎನ್ನುತ್ತ “ಆಯಿತಲ್ಲ ಕತೆ, ಇನ್ನು ಆ ಹೆಂಗಸಿನ ಚಟ್ಟ ಎತ್ತಿದರೆ ಸೈ.” ಎಂದರು ಪಂಡಿತಮ್ಮ. +“ಯಾಕೆ? ಅಂದ ಹಾಗೆ ನಿನ್ನೆ ರಾತ್ರಿ ಏನು ಬೊಬ್ಬೆಯದು ಎಂದೂ ಇಲ್ಲದಷ್ಟು! ನನಗೆ ನಿದ್ದೆಯೇ ಇಲ್ಲ.” +“ಹಾಗಾದರೆ ನನಗೆ? ಅಲ್ಲೇ ಆಚೆಗಿರುವ ನಾವು ಹೇಗಿರಬೇಕು? ಗಂಡಸರು ಬಿಡು ಹೇಗಿದ್ದರೂ ನಿದ್ದೆ ಮಾಡುತ್ತವೆ. ಕೆಟ್ಟ ಜಾತಿ…. ಅದರಲ್ಲೂ ನನಗೆ ರಾತ್ರಿಯಿಡೀ ಪಾಯಿಖಾನೆ – ಮನೆ ತಿರುಗಾಟ. ಸಾಕಾಗಿಹೋಯಿತಪ್ಪ.” ಎಂದು ಬಾಯಲ್ಲಿ ಉಸಿರು ತೆಗೆದುಕೊಂಡರು. “ಯಾರು ಹೆತ್ತ ಮಗುವೋ ಅದು ಪಾಪ. ಸುರುಟಿಯೇ ಹೋಯಿತು. ಇನ್ನಾದರೂ ಸತ್ತರೆ ಸಾಕಪ್ಪ.” – ರಾಗವೆಳೆಯುತ್ತ ನಿತ್ರಾಣದ ಕಾಲೆಳೆದುಕೊಂಡು ಹೊರಟುಹೋದರು. +ಅವತ್ತು ರಾತ್ರಿಯೇ ಹೆಂಡತಿ ತೀರಿಕೊಂಡಳು. ಗೊತ್ತಾಗಿದ್ದು ಆ ಮನೆಯ ಅಂಗಳದಲ್ಲಿ ಲೈಟು ಕಂಡಾಗಲೇ. +ಎಂದೂ ಅಂಗಳಕ್ಕೆ ಲೈಟು ಹಾಕದವನಿಗೆ ಇವತ್ತೇನು ದೀಪಾವಳಿ ಎಂದು ನೋಡಿದರೆ ಅಂಗಳದಲ್ಲಿ ಹೆಣ ಮಲಗಿತ್ತು. ಏನೊ ಮಣಮಣ ಮಂತ್ರ ಕೇಳುತ್ತಿತ್ತು. ಸುತ್ತ ಎಂಟು ಹತ್ತು ಮಂದಿ ಮೌನವಾಗಿ ನಿಂತಿದ್ದರು. “ಅಯ್ಯೊ. ಸತ್ತೇ ಹೋದಳೆ!” ಎಂದು ಕಂಠ ಒತ್ತಿಟ್ಟಂತೆ ಉದ್ಗರಿಸಿದಳು ಸರೋಜ. ಈಗಾದರೂ ಹೋಗಿ ನೋಡಿ ಬರೋಣ ಎಂದು ಹೆಜ್ಜೆ ಹೊರಗಿಟ್ಟ ಇಬ್ಬರೂ “ಬೇಡ ಇಲ್ಲೇ ಕಾಣುತ್ತದಲ್ಲ” ಅಂತ ನಿಂತರು. ಅಲ್ಲಿಯವರೆಗೆ ಹೋಗಿ ನೋಡುವುದು ಅತಿ ಕುತೂಹಲವಾದೀತು ಎಂದೋ, ಆತ ಯಾಕೆ ಬಂದಿರಿ ಎಂದು ಘರ್ಜನೆ ಹಾಕಿಯಾನು ಎಂದೋ ಹಿಂದೆಯೇ ಬಂದೇ ಬರುವ ತಮ್ಮ ಎಳೆಯ ಮಕ್ಕಳು ಹೆಣ ನೋಡಿ ಹೆದರಿಯಾವು ಎಂದೋ ವಿಸ್ತರಣೆಯ ಯಾರೊಬ್ಬರೂ ಅಲ್ಲಿ ಇಲ್ಲದಿರುವುದು ಗಮನಿಸಿಯೊ. ಕಾರಣವೆಂಬುದು ಯಾವತ್ತೂ ಒಂಟಿಯಾಗಿರುವುದು ಅಪರೂಪ. ಅದು ನೆಲೆಸುವುದೇ ಗುಂಪುಗುಂಪಲ್ಲಿ. ಎಲ್ಲರೂ ಇವರಂತೆಯೇ ಅವರವರ ಮನೆಯ ಮುಂದೆ ನೋಡುತ್ತ ನಿಂತಿದ್ದರು. ಗಂಡ ಪುರೋಹಿತ ಹೇಳಿದ ಹಾಗೆ ತಟಪಟ ಮಾಡುವುದು ಕಾಣಿಸುತ್ತಿತ್ತು. ‘ಮುತ್ತೈದೆತನದ ಭಾಗ್ಯ’, ಒಂದು ಹೂವಿನ ಹಾರವನ್ನು ನಿಂತಲ್ಲೇ ಹೆಣದ ಮೇಲೆ ಎಸೆದ; ಕುಂಕುಮ ಅರಸಿನ ಚೆಲ್ಲಿದ. ನಾರಾಯಣ ನಾರಾಯಣ ಎನ್ನುತ್ತ ಹೆಣ ಎತ್ತಿದರು. ಕ್ಷಣದಲ್ಲಿ ಎಲ್ಲ ಖಾಲಿಯಾಯಿತು. +“ದುಃಖವೇ ಬರುತ್ತದಲ್ಲವ?” ಎಂದಳು ಪಕ್ಕದ ಮನೆ ಹೆಂಗಸು. ಸ್ವಲ್ಪ ತಡೆದು “ಹೋಯ್, ಅಲ್ಲಿ, ಅಲ್ಲಿ ನೋಡಿ, ಪಂಡಿತಮ್ಮ ನೋಡಿ. ಪಾಯಿಖಾನೆ-ಮನೆ ತಿರುಗುತ್ತಿದೆ. ನೋಡಿ ನೋಡಿ.” – ಎಂದು ಕುಟುಕುಟು ನಕ್ಕಳು. +* +* +* +ಮರುದಿನ – ನೋಡಿಬಿಡಿಸಿದ ಚಿತ್ರದಂತೆ ಗುಡ್ಡದೆಡೆಯಿಂದ ಮೂಡುವ ಸೂರ್ಯ ಮೂಡಿದ. ಬೆಳಗಾಗುವುದು ಆಯಿತು. ಬಾಯಿಪಾಠದಂತೆ ವಿಸ್ತರಣೆಯ ಚಟುವಟಿಕೆ ಸುರುವಾಯಿತು. ನಿಲ್ಲಬಾರದೆಂಬ ಶಾಪ ಹೊತ್ತವರಂತೆ ಬಸ್ಸು ಆಟೋ ಸ್ಕೂಟರ್ ಟ್ಯಾಕ್ಸಿ ಕಾರುಗಳು ಓಡಲಾರಂಭಿಸಿದವು. +ಕಡಗೂ ಎಲ್ಲಿಗೆ? ಯಾತಕ್ಕೆ? +ಸರೋಜ ಕಿಟಕಿ ತೆರೆದು ಖಿನ್ನಳಾಗಿ ನಿಂತಿದ್ದಂತೆ ದೂರದಲ್ಲಿ ಪಂಡಿತಮ್ಮ ಬೆನ್ನ ಹಿಂದೆ ಕೈಕಟ್ಟಿಕೊಂಡು ನಿಧಾನ ಬರುವುದು ಕಾಣಿಸಿತು. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_400.txt b/Kannada Sahitya/article_400.txt new file mode 100644 index 0000000000000000000000000000000000000000..30a0c7e3b28b98e20c375cc96a851971d1eafae7 --- /dev/null +++ b/Kannada Sahitya/article_400.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸೂರ್ಯ +ಆಗಾಗ +ಹಗಲುಗಳ ನುಂಗಿ +ಸುಖವಾಗಿ +ಸಾಯುತ್ತಿದ್ದ +ಅಥವಾ ಬದುಕುತ್ತಿದ್ದ +ಆಗೊಮ್ಮೆ ಈಗೊಮ್ಮೆ +ಹೆಣ್ಣುಗಳ +ತುಟಿಯಲ್ಲಿ +ಪಿಸುನುಸುಳುತ್ತಿದ್ದ +ಅಯ್ಯೋ ಗದ್ದಲ +ಭೂಮಿಯ ತುಂಬ +ಮಕ್ಕಳೋ ಮಕ್ಕಳು! +***** +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […] +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_401.txt b/Kannada Sahitya/article_401.txt new file mode 100644 index 0000000000000000000000000000000000000000..33dd25d8f8da9af82e71fab966c4f6231075fa30 --- /dev/null +++ b/Kannada Sahitya/article_401.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಲೀನಾ- +ಯುಗಾದಿ ಬಂತು ಗೊತ್ತ +ಬೋರು ಕಣೆ +ಮಾಮೂಲು ಬದಲಾವಣೆ +ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ +ಒದ್ದೆಯಾಯಿತು ಸಂಜೆ. +ಹೌದೆ +ಕತ್ತಲಿಗು ಬತ್ತಲಿಗು ನಂಟೆ ? +ಓಹೋ +ನಮಗಾಗೂ ಉಂಟಲ್ಲ +ಬಯಲು ತಂಟೆ +ಬೋರು ಕಣೆ ಲೀನ +ಹಾಂ, ಕಾವ್ಯ ವೈಯಕ್ತಿಕತೆ ಕೊರೆಯೋಣ? +ಸುಳ್ಳು ಕತೆ ಕವಿತೆಗಳ ಬರೆಯೋಣ? +ನೀರುಳ್ಳಿ ಬಿಚ್ಚಿ ಹುಡುಹುಡುಕಿ ನೋಡೋಣ? +ಏನುಳಿಯುತ್ತೆ ಹೇಳು? +ಒಂದಿಂಚು ಗೆರೆ ಸೊನ್ನೆಯಲ್ಲೇ +ಹೆಚ್ಚು ಕಮ್ಮಿ, +ನಿನ್ನ ಮುಡಿ ಮಲ್ಲಿಗೆಯೊ ಕೆಂಪು ಕೆಂಡ +ಹೃದಯ ಕಮಲದ ಪಕಳೆ ಸುಟ್ಟು ದಂಡ +ಗದ್ಯವಾಗುತ್ತೆ ಕಣೆ ಲೀನ +ಮಾತು ಸಾಕಲ್ಲ- +ಅಂಕೆ ಕೂಡಿಸಿ ಕಳೆದು +ಸೊನ್ನೆ ಸೊಕ್ಕಿಸಿ ಬೆಳೆದು +ಯಾರೂ ಹುಡುಕಿ ತೆಗೆಯದಂತೆ +ಬಾರೆ ಕಳೆದು ಹೋಗೋಣ +ಯುಗಾದಿ ಬೋರು ಕಣೆ ಲೀನ. +****** +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […] +ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […] +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_402.txt b/Kannada Sahitya/article_402.txt new file mode 100644 index 0000000000000000000000000000000000000000..25e70d7b0d6dbe7bff44eccd6dadd5ccabd393b0 --- /dev/null +++ b/Kannada Sahitya/article_402.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಕ್ಷರಾದ ಬಸಂತ್‌ಕುಮಾರ್‍ ಪಾಟೀಲ್ ಅವರೆ, +ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ ಮರೆತ ಮಂದಿ ನಿರ್ಮಾಪಕರ ಸಂಘದಲ್ಲಿ ತುಂಬಿ ತುಳುಕಿದ್ದರು. +ಈಗ ಹಣವನ್ನು ಹುಣಿಸೇಬೀಜದಂತೆ ಖರ್ಚು ಮಾಡಬಲ್ಲ ಘಟಾನುಘಟಿಗಳು ನಿಮ್ಮ ಸಂಘದಲ್ಲಿದ್ದಾರೆ. ಪೈಪೋಟಿಯ ಮೇಲೆ ಚಿತ್ರ ತೆಗೆಯುತ್ತಿದ್ದಾರೆ ಒಬ್ಬರಿಗಿಂತ ಒಬ್ಬರು ಜೋರಾಗಿ. ಇಂಗ್ಲೆಂಡ್, ಅಮೆರಿಕಾ, ಹಾಂಗ್‌ಕಾಂಗ್ ಮುಂತಾದ ಕಡೆಯಲ್ಲೆಲ್ಲಾ ಕನ್ನಡ ಚಿತ್ರಗಳ ಚಿತ್ರೀಕರಣ ನಡೆದು ಎಲ್ಲೆಡೆ ಕನ್ನಡದ ಬಾವುಟ ಹಾರಾಡುತ್ತಿದೆ. ನಿಜಕ್ಕೂ ಇದು ಫೆಂಟಾಸ್ಟಿಕ್ ಎನ್ನಬಹುದಾದ ಬೆಳವಣಿಗೆ. +‘ಶಿಸ್ತಿಲ್ಲದ ಎಲ್ಲ ಯೋಜನೆಗಳೂ ‘ಸುಸ್ತಾಗಿ’ ಮಲಗುತ್ತವೆ ಎಂಬುದರಿತ ತಾವು ಪ್ರತಿ ಹೆಜ್ಜೆಯಲ್ಲೂ ಶಿಸ್ತನ್ನು ‘ಮಸ್ತಾಗಿ’ ತರಲು ಯತ್ನಿಸುತ್ತಿದೀರಿ. +ಅದಕ್ಕಾಗಿ ಮೊದಲು ನಿಮಗೆ ಸಾವಿರ ಪ್ರಮಾಣಗಳು ಕ್ಷಮಿಸಿ ಪ್ರಣಾಮಗಳು. ಈ ಸಾಹಿತ್ಯ ನೋಡಿ ನೀವು ನಮ್ಮ ತಾತ, ಮುತ್ತಾತ, ಕೋಲು ತಾತಂದಿರು ಮಹಾರಾಜರ ಆಸ್ಥಾನದಲ್ಲಿ ‘ಆಸ್ಥಾನ ಪಂಡಿತ’ರಾಗಿದ್ದರು ಎಂದು ತಪ್ಪು ತಿಳಿಬೇಡಿ. ಸತ್ಯವಾಗಿ ಹೇಳುತ್ತೇನೆ. ನನ್ನಾಣೆಗೂ – ನನ್ನ ಕಣ್ಣಾಣೆಗೂ – ನಮ್ಮ ವಂಶದಲ್ಲಿ ಯಾರೂ ಪರಾಕು-ಪಂಪನ್ನೊತ್ತುವ ಕೆಲಸಕ್ಕೆ ಕೈಹಾಕಿಲ್ಲ ಈವರೆಗೆ. ಆದರೆ, ಈಗ ನಾನು ನಿಮಗೆ ಅರ್ಜಿ ಬರೆದುಕೊಳ್ಳಲು ಮುಖ್ಯ ಕಾರಣ ಏನೆಂಬುದನ್ನು ಮುಂದೆ ಹೇಳುವಂಥವನಾಗುತ್ತೇನೆ. ಅದೇನು ಎಂಬುದು ಕೊಂಚ ಸಸ್ಪೆನ್ಸಿರಲಿ. ಈಚೆಗೆ ಈ ‘ಸಸ್ಪೆನ್ಸ್’ ಎಂಬ ಪದ ಮುಹೂರ್ತದಂದು ಪ್ರತಿ ನಿರ್ಮಾಪಕ ನಿರ್ದೇಶಕರಿಂದಲೂ ಹೇಳಲ್ಪಟ್ಟು ಜನಪ್ರಿಯವಾಗಿದೆ. ಇರಲಿ. +ನನ್ನ ಹೆಸರು ತಿಪ್ಪೇಶಿ. ಈಗ ಎಲ್ಲ ನನ್ನನ್ನು ಡಾಕ್ಟರ್‍ ತಿಪ್ಪೇಶಿ ಎಂದೇ ಕರೆಯುತ್ತಾರೆ. ಆದರೆ, ನಾನು ಎಂ.ಎ. ಓದಿ ಡಾಕ್ಟರೇಟ್ ಪಡೆದವನಲ್ಲ. ನಮ್ಮ ವಂಶಜರು ಅಳಲೆಕಾಯಿ ಪಂಡಿತರು. ನನಗಂತೂ ಮುಂಚಿನಿಂದ ಸೊಪ್ಪು, ಸದೆ, ಅಳಲೆಕಾಯಿ, ಮೆಣಸಿನಕಾಯಿ, ಸೀಬೆಕಾಯಿ, ಚಕ್ಕೋತ್ನಕಾಯಿ ತುಂಬ ಇಷ್ಟ. ಆದ್ದರಿಂದ ಹಾಗು ಹೀಗೂ ಆರ್ಯುರ್ವೇದ ಓದಿ ಡಾಕ್ಟರ್‍ ಎನಿಸಿಕೊಂಡಿರುವೆ. ನನಗೆ ಕಥೆ-ಕವನ ನಾಟಕ-ವಿಮರ್ಶೆ ಬರೆಯುವ ಹುಚ್ಚು ಮುಂಚಿನಿಂದ. +ಕಥೆ-ಕವನ ಬರೆದರೂ ಡಾ. ತಿಪ್ಪೇಶಿ ಎಂದೇ ಹಾಕುತ್ತಿದ್ದೆ. ಡಾಕ್ಟರ್‍ ಎಂಬುದನ್ನು ನೋಡಿಯೇ ನನ್ನ ಕಥೆ ಕವನಗಳು ಹಲವು ದೊಡ್ಡ ದೊಡ್ಡ ಪತ್ರಿಕೆಗಳಲ್ಲಿಯೂ ಅಚ್ಚಾಯಿತು. ಕೊನೆಗೊಮ್ಮೆ ಯಾರೋ ಹಾಳಾದವನು ಸಾಹಿತ್ಯ ವಲಯದವರಿಗೆ ನನ್ನ ಡಾಕ್ಟರೇಟ್ ಗುಟ್ಟು ರಟ್ಟುಮಾಡಿದ ನಂತರ ಡಾ. ಯು.ಆರ್‍. ಅನಂತಮೂರ್ತಿ, ಡಾ. ಕಂಬಾರ, ಡಾ. ಎಸ್.ಎಲ್. ಭೈರಪ್ಪ, ಡಾ. ಗಿರೀಶ್ ಕಾರ್ನಾಡ್, ಡಾ. ದಿವಸ್ಪತಿ ಹೆಗಡೆ, ಡಾ.ಸಿದ್ದಲಿಂಗಯ್ಯ ಮುಂತಾದವರೆಲ್ಲ ನನ್ನನ್ನು ದೂರವೇ ಇಟ್ಟರು. +ಆದರೆ, ಚಲನಚಿತ್ರರಂಗದವರು ನನ್ನ ಈ ಡಾಕ್ಟರ್‍ ಪದಕ್ಕೆ ತುಂಬ ಗೌರವ, ಮಹತ್ವ, ಮನ್ನಣೆ ನೀಡಿ ಚಿತ್ರಕ್ಕೆ ಸಾಹಿತ್ಯ, ಗೀತೆಗಳನ್ನು ರಚಿಸಲು ಆಹ್ವಾನಿಸಿದ್ದಾರೆ ಎಂಬುದು ತಮಗೂ ಗೊತ್ತಿರಬೇಕು. ಕೆಲವು ಹೊಸ ನಿರ್ಮಾಪಕ ನಿರ್ದೇಶಕರು ಸಂಗೀತ ನಿರ್ದೇಶನದ ಅವಕಾಶವೂ ನನಗೆ ನೀಡಿದ್ದಾರೆ. ನಾನು ಹಾಡುಗಳು ಬರೆದ ಚಿತ್ರಗಳಿಗೆ ಸಾಹಿತ್ಯ-ಸಂಗೀತ ಎಂದೇ ಟೈಟಲ್‌ಕಾರ್ಡ್‌ಗಳಲ್ಲಿ ಹಾಕಿಸಿಕೊಂಡು ಜಗತ್ ಪ್ರಸಿದ್ಧನಾಗಿರುವೆ. +ನಾನು ಸಾಹಿತ್ಯ ಎಂದು ಹಾಕಿಕೊಳ್ಳುವುದನ್ನು ಬರಗೂರು ರಾಮಚಂದ್ರಪ್ಪನವರು ಬಹಳಷ್ಟು ವೇದೆಕೆಗಳಲ್ಲಿ ನನ್ನ ಹೆಸರು ಹೇಳದೆ ಖಂಡಿಸಿದ್ದಾರೆ. ಎಷ್ಟೋ ಬಾರಿ ಆ ಸುದ್ದಿ ಓದಿ ಗೊಳೋ ಎಂದು ಅತ್ತಿದ್ದೇನೆ. ಆ ಸುದ್ದಿ ಅಚ್ಚು ಮಾಡಿದವರನ್ನು ಧಾರಾಳವಾಗಿ ಶಪಿಸಿದ್ದೇನೆ – +ಮಾನ್ಯರೆ, +ಈಗ ಬರುತ್ತಿರುವ ಚಿತ್ರ ಸಾಹಿತ್ಯ, ಎಲ್ಲಾ ಪದಗಳ ಮಿಶ್ರಣವಾಗಿ ಗೊಜ್ಜಾಗಿದೆ ಎಂದು ನಿಮಗನಿಸಿಲ್ಲವೇ? ಆದರೆ, ನನ್ನ ಸಾಹಿತ್ಯದ ಸಾಲುಗಳಲ್ಲಿ ಅಲ್ಲಿ ಇಲ್ಲಿ ಒಂದೊಂದು ಸಂಸ್ಕೃತ ಪದ ಗೂಳಿಯಂತೆ ನುಗ್ಗಬಹುದೆ ಹೊರತು ಕನ್ನಡಕ್ಕೆ ಮಾರಕವಾಗಿಲ್ಲ. ಬೇಕಾದರೆ ನಮ್ಮ ಮನೆಗೆ ಬಂದು ನೋಡಿ ಕುವೆಂಪು, ಬೇಂದ್ರೆ, ಪು.ತಿನ., ಕೆ.ಎಸ್.ನ., ಜಿ.ಎಸ್ಸೆಸ್, ನಿಸಾರ್‍ ಅಹಮ್ಮದ್ ಮುಂತಾದವರ ಎಲ್ಲ ಕವನ ಸಂಕಲನಗಳೂ ನನ್ನಲ್ಲಿವೆ. ಅದೆಲ್ಲವನ್ನೂ ಅಜೀರ್ಣವಾಗುವಷ್ಟು ಬಾರಿ ಓದಿ ಜೀರ್ಣಿಸಿಕೊಂಡಿರುವವನು ನಾನು. ಚಿತ್ರಕ್ಕೆ ಹಾಡು ಬರೆಯಲು ಕುಳಿತಾಗ ನನಗೆ ನೆನಪಿನ ಶಕ್ತಿ ಅಗಾಧವಾಗಿರುವುದರಿಂದ ಕೆಲವು ಹಾಡುಗಳಲ್ಲಿ ಅವರಿವರ ಸಾಲುಗಳು ನನಗೇ ತಿಳಿಯದಂತೆ ತೇಲಿ ಬಂದರೆ ಅದೊಂದು ತಪ್ಪೇ? +ಚಿ. ಉದಯಶಂಕರ್‍, ಕುರಾಸೀ, ಕಣಗಾಲ್ ಪ್ರಭಾಕರಶಾಸ್ತ್ರಿ, ವಿಜಯನಾರಸಿಂಹ ಮುಂತಾದವರ ಚಿತ್ರಗೀತೆಗಳ ಎಲ್ಲಾ ಕ್ಯಾಸೆಟ್ ನನ್ನ ಬಳಿ ಇದೆ. ಅವನ್ನೂ ನಾನು ಮೇಲಿಂದ ಮೇಲೆ ಕೇಳುವುದರಿಂದ ಕೆಲವು ಬಾರಿ ಆ ಟ್ಯೂನ್‌ಗಳು, ಸಾಲುಗಳು ನನ್ನನ್ನು ನಕ್ಷತ್ರಿಕನಂತೆ ಕಾಡಿ-ನನ್ನ ಲೇಖನಿಗೂ-ಸಂಗೀತ ನಿರ್ದೇಶನಕ್ಕೂ ಆಹಾರವಾದರೆ ಅದು ನನ್ನ ತಪ್ಪೇ? +ಹಾಗೆ ನೋಡಿದರೆ ನಾನಿನ್ನೂ ಬೂದಿ ಮುಚ್ಚಿದ ಕೆಂಡವೇ, ಥ್ರಿಲ್ಲರ್‍ ಮಂಜು ಸಹಾ ಕವಿಯಾಗಲು ಹೊರಟಿದ್ದಾರೆ ಎಂದಾಗ ನನ್ನಂತಹವರು ಎಲ್ಲಿಗೆ ಹೋಗಬೇಕು. ತಾವು ಈಗ ನಿರ್ಮಾಪಕರು ನಿರ್ಮಾಪಕರ ಸಂಘದ ಅಧ್ಯಕ್ಷರು ಅಷ್ಟೇ ಅಲ್ಲ ಹೀರೊ ಆಗಿ ಸೆಕೆಂಡ್ ಇನ್ನಿಂಗ್ಸ್‌ಗೆ ಸಿನಿ ಪೆವಿಲಿಯನ್ಗೆ ಇಳಿದಿರುವವರು. ಭಿನ್ನಮತೀಯ ನಿರ್ಮಾಪಕರನ್ನು ಒಂದೇ ಸೂರಿನಡಿ ಕಲೆ ಹಾಕಿರುವ ಧೀಮಂತರು. ಅಷ್ಟೇ ಅಲ್ಲ, ಭರ್ಜರಿ ಸ್ಟಾರ್‍ ಹೋಟೆಲನ್ನೂ ಪ್ರಾರಂಭಿಸಿರುವವರು. +ಅಂದ ಮೇಲೆ ನೀವೇ ಈಗ ಒಂದು ಪತ್ರಿಕೆ ಪ್ರಾರಂಭಿಸುವುದು ಕಷ್ಟವೇ? ದಯಮಾಡಿ ಪತ್ರಿಕೆ ಆರಂಭಿಸಿ. ಈ ತಿಪ್ಪೇಶಿಗೆ ನಿಮ್ಮ ಹೋಟೆಲ್‌ನಲ್ಲೇ ಒಂದು ಆಫೀಸ್ ಮಾಡಿಕೊಡಿ. ತಾವು ಕೃಪೆ ಮಾಡಿದಲ್ಲಿ ನಿಮ್ಮ ಸಂಘದ ಎಲ್ಲ ನಿರ್ಮಾಪಕರಿಗೂ ತುಂಬ ಕನ್ಸಷೆನ್ ರೇಟ್‌ನಲ್ಲಿ ಹಾಡುಗಳು ಬರೆದುಕೊಡುವೆ. ಟ್ಯೂನ್ ಕೊಟ್ಟರೂ ಸಾಕು, ಐದೇ ನಿಮಿಷದಲ್ಲಿ ಹಾಡು ಗೀಚಿ ಬಿಸುಡುವೆ. ನಿಮ್ಮ ನಿರ್ಮಾಪಕರ ಸಂಘದ ಪತ್ರಿಕೆಯಲ್ಲಿ ಬಿಸಿಬಿಸಿ ಹುರಿಗಾಳಿನಷ್ಟೇ ರೋಚಕವಾಗಿ ಬರೆಯುವೆ. ನನಗೆ ಎಲ್ಲ ಪ್ರೆಸ್‌ನಲ್ಲಿ ಕೆಲಸಮಾಡಿ ಅಭ್ಯಾಸವಿರುವುದರಿಂದ ಮ್ಯಾನೇಜ್‌ಮೆಂಟ್‌ನವರ ಮನೋಭಿರುಚಿಯನ್ನರಿತು ಅವರಿಗೆ ಪ್ರಿಯವಾಗುಂತೆ ಬರೆಯುವುದೂ ಗೊತ್ತು. +ನೀವು ಪತ್ರಿಕೆ ಆರಂಭಿಸಿದಲ್ಲಿ ನಿಮ್ಮ ಮೂಗಿನ ನೇರಕ್ಕೆ ಅನುಗುಣವಾಗಿ ಬರೆಯುವುದಲ್ಲದೆ ಅವನ್ನು ನಿರ್ಮಾಪಕರಿಗೆ ಓದಿ ಸೆನ್ಸಾರ್‍ ಮಾಡಿಸಿಕೊಂಡು ಅಚ್ಚಿಗೆ ಕಳಿಸುವೆ. ನೀವು ಯಾರೂ ಬೇಕಾದರೂ ಸಂಪಾದಕರಾಗಿ ನನ್ನ ಅಭ್ಯಂತರವಿಲ್ಲ. ನನಗೆ ಕೈ ತುಂಬ ಸಂಬಳ ಕೊಟ್ಟರಾಯಿತು. ಬರವಣಿಗೆ ವಿಮರ್ಶೆ ಒಮ್ಮೆ ಓದಿ ನೋಡಿ. ಅನಂತರ ಎಲ್ಲ ಹೀಗೆ ಬರೆಯಿರಿ ಎಂದು ನೀವೇ ಹೇಳುತ್ತೀರಿ. +ಡಾಕ್ಟರ್‍ ತಿಪ್ಪೇಶಿಯ ಈ ಕನಸು ನನಸು ಮಾಡಬಲ್ಲ ಏಕೈಕ ಧರ್ಮಪುರುಷ ತಾವೆ ಅದಕ್ಕೆ ತಮ್ಮ ‘ಮರ್ಜಿ’ ಆಶಿಸಿ ಈ ‘ಅರ್ಜಿ’ ಹಾಕಿರುವೆ ತಮ್ಮ ಅತ್ಯಂತ ವಿಧೇಯ +– ಡಾ. ತಿಪ್ಪೇಶಿ +ನಾನು ಮೊನ್ನೆ ಮನೆಯಿಂದ ಹೊರಟಾಗ ಎದುರಿಗೆ ಸಿಕ್ಕ ಡಾ. ತಿಪ್ಪೇಶಿ “ನಿಮಗೆ ಬಸಂತ್‌ಕುಮಾರ್‍ ಪಾಟೀಲರು ಚೆನ್ನಾಗಿ ಗೊತ್ತಲ್ಲವೇ?” ಎಂದ. +“ನಾನು ಇರುವುದು ಹನುಮಂತನಗರದಲ್ಲಿ. ಬಹು ಮುಂಚಿನಿಂದ ನನಗವರು ಪರಿಚಯ” ಎಂದೆ. +“ಹಾಗಿದ್ದರೆ ಈ ಅರ್ಜಿ ದಯಮಾಡಿ ಅವರಿಗೆ ತಲುಪಿಸಿ ನನ್ ಬಗ್ಗೆ ರೆಕಮೆಂಡ್ ಮಾಡಿ” ಎಂದು ಹೇಳಿ ಹೊರಟ. +ಓದಿದಾಗ ‘ನಗೆಯು ಬರುತಿದೆ ಹಾಡು’ ನೆನಪಾಯಿತು. +***** +(೧೪-೯-೨೦೦೧) +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […] +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_403.txt b/Kannada Sahitya/article_403.txt new file mode 100644 index 0000000000000000000000000000000000000000..2261fd945d35d8776220f7b1c7d15ecddad85221 --- /dev/null +++ b/Kannada Sahitya/article_403.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಅಗಸ್ಟ ಹದಿನೈದು) +ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ +ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; +ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ +ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ +ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- +ಬಳಿಸಾರಿ ಬಂದಿಹುದು ಸೌಖ್ಯ ಸುದಿನ; +ಬಾಗಿಹರು ಹೊಸ ನಾಡ ನಾಯಕರ ಹೇಳಿಕೆಗೆ- +ಕೈಗೂಡಲಿಹುದವರ ಭವ್ಯಯಾನ. +ಸುಲಿಗೆ ಮೋಸ, ಸಭ್ಯತೆಯ ವೇಷ, ಸತ್ಯತೆಗೆ ಬಂದ ಹ್ರಾಸ +ಚಿನ್ನದಂಥ ನಾಡಿನಲಿ ಕನ್ನ ಕೊರೆದಂಥ ಕಳ್ಳ ಸಾಸ. +ಹಿಂದು ಮುಸ್ಲಿಮರ ಬಂಧುಬಾಂಧವರ ಭೇದಬೀಜವರಸಿ +ರಕ್ತದೋಕುಳಿಯ ಚೆಲ್ಲಿಸಿದರು ಕಣ್ಣೀರ ಕೋಡಿ ಹರಿಸಿ. +ದೇಶಭಕ್ತರನು ಸರ್ವಶಕ್ತರನು ಸೆರೆಯ ಕಾಳಕಿಳಿಸಿ +ಲಾಠಿ ಗುಂಡು ದುರ್ದಮ್ಯಶಿಕ್ಷೆ ಮರ್ದನೆಗೆ ರೂಪುಗೊಳಿಸಿ, +ಜನತಯುಸಿರ ಹತ್ತಿಕ್ಕಲೆಂದು ಸುತ್ತಾಡಿತಲ್ಲಿ ದಂಡು +ಅರಸುತನಕೆ ಓಗೊಟ್ಟುದಿಲ್ಲ ಎದಗೆಟ್ಟುದಿಲ್ಲ ಬಂಡು. +ಹಡೆದ ತಾಯ್ತಂದೆ, ಮಡದಿ ಮಕ್ಕಳನು, ಮನೆಯ ಮೋಹವನ್ನು +ತೊರೆದು ಬಂದು ಹೋರಾಟಕೆಂದು ನೀಗಿದರು ಪ್ರಾಣವನ್ನು +ಅವರು ಸುರಿದ ಕೆನ್ನೀರಧಾರೆ ಮುನ್ನೀರಿನಂತೆ ತೋರೆ +ಸ್ವಾತಂತ್ರ್ಯ ರವಿಯು ಮೂಡಿದನು; ಮುಖಕೆ ನತ್ತರಿನ ಕಲೆಯು ಬೇರೆ. +ಬಂತು ಬಂತು ಬಿಡುಗಡೆಯು ಬಂತು, ನಿಲುಗಡೆಯ ಹಾಡ ಬಂತು; +ಬಸವಳಿದ ಜನಕೆ ಯಶಕೋರಿ ಬಂತು, ಸಾಮ್ಯತೆಯ ಸುಧೆಯ ತಂತು. +ನರಳಿಕೆಯ ನೋವ, ಬಳಲಿಕೆಯ ಸಾವ ಮೆಟ್ಟಿಕ್ಕಿ ಉಕ್ಕಿ ಬಂತು. +ಅಮರತೆಯ ಹೀರಿ, ಸಮರಸತೆ ಬೀರಿ ಹೊಂದೇರನೇರಿ ಬಂತು! +ಇಂದಿಲ್ಲ ನಾಳೆ ಹೋಳಾದ ನಾಡು ಬೆಸೆದೀತು ಭಯವದೇಕೆ? +ಹಿಂದಾದ ಸಿರಿಯು ಎಂದಾದರೊಮ್ಮೆ ಮುಂದಿನ್ನು ಬಾರದೇಕೆ? +“ಭಾರತವು ಒಂದು, ಭಾರತಿಯು ತಾಯಿ, ಕುಲವೊಂದೆ ಭರತಕುಲವು” +ಎಂದೆಂಬ ಘೋಷ ಕೊರಲುಕ್ಕಿ ಬರಲಿ ಬಂದಂತ ಹಿರಿಯ ಹೊನಲು. +ಆಳುವವರ ಕುಟಿಲತೆಗೆ ಇನ್ನು ಮುನ್ನಿಲ್ಲವಿಲ್ಲಿ ತಾಣ, +ಸಾಮ್ರಾಜ್ಯಶಾಹಿ ಹೆಡೆಯೆತ್ತದಿನ್ನು ವಿಷಕಾರಲಾರದಣ್ಣ. +ಬೆಂದವರ ಬಳಿಗೆ, ನೊಂದವರ ಕೆಲಕೆ ಮಮತೆಯಲಿ ಬಂದುನಿಂದು +ಅಭಯತೆಯ ನೀಡಿ, ಮಂಗಲವ ಹಾಡಿ ಭಾರತಿಗೆ ನಮಿಸಿರಿಂದು. +ಭರತ ಭೂಮಿಯುದ್ದಾಮಕೀರ್ತಿ +ಧವಳತೆಯ ಶಿಖರವೇರಿ- +ಯುಗಯುಗದ ನಿದ್ರೆ ತಾಮಸದ ಮುದ್ರೆ +ಕಡಿದೊಗೆದು ದೂರ ತೂರಿ. +ಸಾವಿನೊಡನೆ ಸೆಣಸಾಡಿ ಗೆದ್ದೆವೋ +ಇನ್ನಿಲ್ಲ ಸಮರ ಮಾರಿ; +ನಾಲ್ವತ್ತು ಕೋಟಿ ನರಕುರಿಗಳಲ್ಲ +ಕೇಸರಿಗಳೆಂದು ಸಾರಿ, +ಜನಮನದ ರೂಢಿ ಮೌಡ್ಯತೆಯ ಸೀಳಿ +ಮಾರ್ಮೊಳಗುತಿಹುದು ಭೇರಿ! +ಅಣ್ಣತಮ್ಮದಿರ ಅಕ್ಕತಂಗಿಯರ ಹಿರಿಯ ಜೀವಗಳಿರ, +ನಾಡಿನೊಲುಮೆಯಲಿ ಬಲುಮಗೊಂಡ ದಿವ್ಯಾತ್ಮ ತೇಜಗಳಿರ +ಈ ದಿನದ ದಿವ್ಯದೋಜಸ್ಸಿನಲ್ಲಿ ತೇಜಸ್ವಿಯಾದ ಮನವು +ಬೆಳಬೆಳಗಲಿನ್ನು ಜಗದಗಲವಾಗಿ ಮಿಗಿಲಾದ ತನ್ನತನವು! +***** +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […] +ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_404.txt b/Kannada Sahitya/article_404.txt new file mode 100644 index 0000000000000000000000000000000000000000..be1272dcf8f227d55eb59982bf9428bfa1ab510d --- /dev/null +++ b/Kannada Sahitya/article_404.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪಾದ ಧೂಳಿಯಲ್ಲೇ +ಬೀಜ ನೆನೆಸಿ ಹದ +ಬೆಳೆಸಿ ಹಸಿರು +ಉಸಿರುವಾಸೆ +ಮೊಳಕೆಯ ಮೂಕಭಾಷೆ +***** +ಸಿನೀ ಮೋಹ ವಿಲಾ ಮೋಹ ದಷ್ಟೆ ದಿಗ್ಗೇಡಿ. ***** +ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. ***** +ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_405.txt b/Kannada Sahitya/article_405.txt new file mode 100644 index 0000000000000000000000000000000000000000..e254efff76929d335d52aef37141c9a91cf26d88 --- /dev/null +++ b/Kannada Sahitya/article_405.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೋದೆ ಹೋದೆನು ದೂರ ನಡೆದೆನು +ಕನಸು ಕೈಹಿಡಿದಾಚೆಗೆ, +ಊರಿನಾಚೆಗೆ ಗಿರಿಯ ಶೃಂಗಕೆ +ಚೆಲುವು ಚಿಮ್ಮುವ ಕಾಡಿಗೆ; +ಕಾಡಗಿಡಗಳು ಮುಗಿಲ ಮುತ್ತಿಡೆ +ಈರ್ಷೆ ತೋರಿಸುವಲ್ಲಿಗೆ, +ಹಚ್ಚ ಹಸುರಿನ ಪಚ್ಚ ಪಯಿರಿನ +ನಿಚ್ಚಸುಂದರ ಬೀಡಿಗೆ +ಏರಿ ಗಿರಿಯನು, ಹತ್ತಿ ಶಿಖರದಿ +ನಿಂತು, ನೋಟವ ಚಾಚಿದೆ; +ಸುತ್ತುಮುತ್ತಿನ ಬೆಟ್ಟದೊತ್ತಿನ +ತೊರೆಯ ಕಲಕಲ ಕೇಳಿದೆ; +ಗುಬ್ಬಿ, ಗೊರವಂಕ, ಗಿಳಿಯು, ಟಿಂವಕ್ಕಿ +ಹಾರೆ ಸಾಲುಗೊಂಡು, +ಚಿಗರೆ ಮೊಲಗಳು, ಹುಲಿಯು ಸಿಂಹಗಳು +ಬರಲು ಹಿಂಡು ಹಿಂಡು. +“ಎಂಥ ರಾಜ್ಯ ಹಗೆತನವ ತ್ಯಾಜ್ಯ ಅಹ!” +ಎಂದು ಹರುಷಗೊಂಡೆ; +ಒಂದಕೊಂದು ಚಿನ್ನಾಟವಾಡೆ, ಹಿರಿ +ಸಾಮ್ಯತನವ ಕಂಡೆ. +ಹುಲ್ಲು ಮೇದು, ಹಾಲ್ಗಾಳು ತಿಂದು, ತಿಳಿ +ನೀರನೀಂಟಲೆಂದು +ತೊರೆಗೆ ಬಂದು ಮಳಲಾಟವಾಡಿದವು- +ಏನ ಹೇಳಲಿಂದು? +ಪಂಜೆಯುಟ್ಟ, ಬಿಳಿಯಂಗಿ ತೊಟ್ಟ +ನನ್ನೆಡೆಗೆ ಧಾವಿಸಿದವು; +ದಿಟ್ಟತನದಲವು ಒಂದಕೊಂದು +ಮುಂದಾಗಿ ಪ್ರಶ್ನಿಸಿದವು; +“ಏನು ನಿಮ್ಮ ನಾಡಿನಲಿ ಕೊಲೆ ಸುಲಿಗೆ- +ಯಾದವಂತೆ ನಿಜವೆ? +ಒಂದೆ ನೆಲದಲ್ಲಿ ನಿಂತ ನಾಡಿಗರು +ಇಂತುಗೈಯೆ ತರವೆ? +ಜ್ಞಾನವಿಹುದೆಂದು ಮೃಗಕು ಮಿಗಿಲೆಂದು +ಜಂಬ ಕೊಚ್ಚಲಿಲ್ಲೆ? +ದೇವ ಕರುಣಿಸಿದ ತಿಳಿವನಿಂತು ನೀವ್ +ಹಾಳು ಮಾಡಲಿಲ್ಲೆ? +ಜಾತಿಕೋತಿಗಳ ಜಗಳ ಜಂಜಡವು +ಎಮ್ಮ ಬಳಿಗೆ ಬೇಡ; +ನರನ ಪಾಡಿದುವೆ? ಬಡಿಯದಿರಲಿ, ಚಿ +ನಿಮ್ಮ ಗಾಳಿ ಕೂಡ!” +ಹಕ್ಕಿವಿಂಡು ಒಕ್ಕೊರಲಿನಿಂದಲಿದ +ಕೇಳಿ ಹೋದುವಲಲ! +ಚಿಗರೆ ಮೊಲಗಳೂ ಜಿಗಿದು ನೆಗೆದವೊ +ಏನ ಹೇಳಲಳಲ! +ಗುಡುಗಿತ್ತು ಸಿಂಹ, ನಡುಗಿತ್ತು ಭೂಮಿ +ಉಡುಗಿತ್ತು ಎದೆಯು ಕೆರಳಿ, +ಕನಸು ಕರಗೆ, ನೀರಾಗೆ ಮೈಗೆ, +ಓ! ನವಿರು ಬಂತು ಮರಳಿ. +***** +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […] +ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_406.txt b/Kannada Sahitya/article_406.txt new file mode 100644 index 0000000000000000000000000000000000000000..2ece9013a495a1218589f9630172dd270d7bcaf6 --- /dev/null +++ b/Kannada Sahitya/article_406.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ +ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ ಹೇಗೆ ಕೂಡಿ ಬಂದಿದೆಯೆಂದರೆ ಈ ಮೂರೂ ಸಮ್ಮೇಳನಗಳೊಂದಿಗೆ ನನಗೆ ಅವಿನಾಭಾವದ ಆತ್ಮೀಯ ಸಂಬಂಧ ಹಾಸುಹೊಕ್ಕಾಗಿದೆ. ೧೯೬೦ರಲ್ಲಿ ಇಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ನನ್ನ ವಿದ್ಯಾಗುರುಗಳಾಗಿದ್ದು ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸಿದ ಪ್ರಾಚಾರ್ಯ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್‍ಯರು. ವಿದ್ಯಾರ್ಥಿಗಳೂ ಅಭಿಮಾನಿಗಳೂ ಸೇರಿ ಮೈಸೂರಿನಲ್ಲಿ ಸಮಾರಂಭ ಏರ್ಪಡಿಸಿ ಡಿ.ಎಲ್.ಎನ್. ಅವರನ್ನು ಬೀಳ್ಕೊಟ್ಟ ಆ ಅವಿಸ್ಮರಣೀಯ ದೃಶ್ಯ ಇಂದಿಗೂ ನನ್ನ ನೆನಪಿನಂಗಳದಲ್ಲಿ ಅರಳಿ ನಿಲ್ಲುತ್ತದೆ. +ಅನಂತರ ೧೯೮೫ರಲ್ಲಿ ಇಲ್ಲಿ ಏರ್ಪಾಟಾದ ಎರಡನೆಯ ಸಾಹಿತ್ಯಸಮ್ಮೇಳನದ ರೂವಾರಿ ಡಾ. ಹಂಪನಾ ಆಗಿದ್ದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಅವರ ಅವಧಿಯಲ್ಲಿ ಬೀದರ್ ಸಮ್ಮೇಳನಕ್ಕೆ ಕನ್ನಡ ನಾಡಿನ ಕಣ್ಮಣಿ ಡಾ. ಹಾ. ಮಾ. ನಾಯಕ್ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನದ ಒಂದು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಹಿತ್ಯದ ಸಂದರ್ಭದ ಸ್ಮೃತಿ ಹಚ್ಚಹಸುರಾಗಿದೆ. ಈ ಎರಡು ಸಾಹಿತ್ಯ ಸಮ್ಮೇಳನಗಳ ನಡುವಣ ಅವಧಿಯಲ್ಲಿ ಬೀದರ್ ಜಿಲ್ಲೆಯೊಂದಿಗೆ ನಿಕಟತೆ ಮುಂದುವರಿದಿತ್ತು. ೧೯೭೫ರಲ್ಲಿ ನಾನು ಮತ್ತು ಪ್ರೊ. ಹಂಪನಾ ಈ ಪುಟ್ಟ ಜಿಲ್ಲೆಯ ತಾಲೂಕು ಕೇಂದ್ರಗಳಾದ ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದು ಮತ್ತು ಬಸವಕಲ್ಯಾಣದಲ್ಲಿ ಉಪನ್ಯಾಸ ನೀಡಿದ್ದು ನನ್ನ ಭಾವಕೋಶದಲ್ಲಿ ಸಿಹಿನೆನಪಾಗಿ ಉಳಿದಿದೆ. ಅಂದಿನ ಜಿಲ್ಲಾಧಿಕಾರಿ ಪುಟ್ಟಸ್ವಾಮಿಗೌಡರು ಬೀದರಿನಲ್ಲಿ ನಮ್ಮಿಬ್ಬರಿಗೂ ಅದ್ದೂರಿ ಪೌರಸನ್ಮಾನ ಸಮಾರಂಭವನ್ನು ಏರ್ಪಡಿಸಿ ಗೌರವ ನೀಡಿದ್ದು ಮರೆಯಲಾಗದ ಹಿತಾನುಭವ. ಜಗಜ್ಯೋತಿ ಬಸವಣ್ಣನವರ ಎಂಟುನೂರನೆಯ ಉತ್ಸವ ಕಾರ್ಯಕ್ರಮಗಳು ಈ ಭಾಗದಲ್ಲಿ ನಡೆದಾಗ ಬಿ.ಡಿ.ಜತ್ತಿಯವರು ಬರಮಾಡಿಕೊಂಡಿದ್ದರು. ಶ್ರೇಷ್ಠ ಕವಯತ್ರಿಯೂ ದಾರ್ಶನಿಕರೂ ಆದ ತಾಯಿ ಜಯದೇವಿ ತಾಯಿ ಲಿಗಾಡೆಯವರು ಬಸವಕಲ್ಯಾಣಕ್ಕೆ ಕರೆಸಿ ತೋರಿದ ಅಂತಃಕರಣ ತುಂಬಿದ ಅಕ್ಕರೆ – ಹೀಗೆ ಒಸಗೆಯ ಮೇಲೆ ಒಸಗೆ ಒದಗಿ ಬಂದವು. ಕಬ್ಬಿಗೆ ಜೇನು ಕಟ್ಟಿದಂತೆ. ಬೀದರ್ ಜಿಲ್ಲೆ ನನ್ನ ಬದುಕಿಗೆ ಕೊಟ್ಟ ವಾತ್ಸಲ್ಯಧಾರೆಯನ್ನು ನೆನೆದು ಕೃತಜ್ಞತೆಯಿಂದ ಕೈಮುಗಿಯುತ್ತೇನೆ. +ಬೀದರ್ ಜಿಲ್ಲೆ ವಿಶಾಲ ಕರ್ನಾಟಕದ ತುತ್ತತುದಿಯಲ್ಲಿ ಮಿರಿಮಿರಿ ಮಿರುಗುವ ಮುಕುಟಮಣಿ. ಇಲ್ಲಿಯ ಇತಿಹಾಸ, ಸಾಂಸ್ಕೃತಿಕ ಸಮನ್ವಯ ಪರಂಪರೆ, ಸಿಲ್ಪ, ಸಾಹಿತ್ಯ, ಕಲೆ-ಇವು ವಿಶಿಷ್ಟ ಬಗೆಯಲ್ಲಿ ಆವಿಷ್ಕಾರಗೊಂಡಿವೆ. ಇಲ್ಲಿಯ ಸುಭದ್ರ-ಸುಂದರ ಬೃಹತ್ ಕೋಟೆ ಚರಿತ್ರೆಯ ಅಧ್ಯಾಯಗಳನ್ನು ಬಿಚ್ಚಳಿಸುತ್ತವೆ. ಈ ಸ್ಥಳದ ವಿಶಿಷ್ಟ ಬಿದಿರಿ ಕುಶಲಕಲೆ ಅನ್ಯಾದೃಶ್ಯವಾಗಿದ್ದು ಅದರ, ಸೂಕ್ಷ್ಮರೇಖೆಗಳ ಬಾಗು ಬಳಕುಗಳನ್ನು ನೋಡಲು ಕಣ್ಣು ಅರಳುತ್ತವೆ. ಅನುಭಾವಿಗಳು, ಆಜೀವಕರು, ದಾಸರು, ಮಹಾನ್ ಶರಣ ಶರಣೆಯರು ನಡೆದಾಡಿದ ಪುಣ್ಯಭೂಮಿ ಬೀದರಿನ ನೆಲ. ಇಸ್ಲಾಂಧರ್ಮ ಹಾಗೂ ಇತಿಹಾಸದ ಪ್ರತೀಕಗಳಾಗಿ ನಿಂತಿರುವ ಇಲ್ಲಿನ ಬೃಹತ್ ಸ್ಮಾರಕಗಳು ಜಗತ್ ಪ್ರಸಿದ್ಧವಾಗಿವೆ. +ಇಷ್ಟು ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮಹತ್ವ ಬೆನ್ನ ಬತ್ತಳಿಕೆಯಾಗಿರುವ ಬೀದರಿನಲ್ಲಿ ನಾವೆಲ್ಲ ಸಮಾವೇಶವಾಗಿರುವುದು ಪುಳಕಾನುಭವವಾಗಿದೆ. ಸರಿಯಾಗಿ ಇಂದಿಗೆ ಎರಡು ವರ್ಷ ಒಂದು ತಿಂಗಳು ಹಗೂ ಒಂದು ವಾರವಾಯಿತು ನಾನು ಸಮ್ಮೇಳನಾಧ್ಯಕ್ಷೆಯಾಗಿ. ಅದಕ್ಕೂ ಮೊದಲು ದೀರ್ಘ ಕಾಲದಿಂದ ಕರ್ನಾಟಕದಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ಕನ್ನಡಿಗರು ನನ್ನನ್ನು ಆತ್ಮೀಯತೆಯಿಂದ ಆಹ್ವಾನಿಸಿ ಅಕ್ಕರೆ ಅಭಿಮಾನ ತೋರಿದ್ದಾರೆ. ನನಗೆ ಐವತ್ತು ವರ್ಷ ಮತ್ತು ಅರವತ್ತು ವರ್ಷ ತುಂಬಿದ ನೆಪ ಮಾಡಿಕೊಂಡು ನುಡಿಮಲ್ಲಿಗೆಯ ಮಳೆಗರೆದುದಲ್ಲದೆ ಆರು ಅಭಿನಂದನ ಗ್ರಂಥಗಳನ್ನು ಮುಡಿ ತುಂಬಿಸಿ ಹರಸಿದ್ದಾರೆ. ೨೦೦೩ರಲ್ಲಿ ಸಮ್ಮೇಳನಾಧ್ಯಕ್ಷೆ ಆದಮೇಲೆ ಪ್ರೀತಿಯ ಮಹಾಪೂರದಲ್ಲಿ ನಾನು ತಬ್ಬಿಬ್ಬಳಾದೆ. ನಾಡಿನ ಈ ಗೌರವಾದರಗಳ ಋಣಭಾರದಿಂದ ಮುಕ್ತಳಾಗಲು ನಾನು ಬಹಳ ಕ್ರಿಯಾಶೀಲಳಾಗಬೇಕೆಂಬ ಕರ್ತವ್ಯ ಪ್ರಜ್ಞೆಯಿಂದ ಉದ್ದೀಪನಗೊಂಡು ನಾಡಿನ ಉದ್ದಗಲಗಳಲ್ಲಿ ಸಂಚಾರ ಕೈಗೊಂಡೆ. ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ, ಕರ್ನಾಟಕದ ಬಹುಮಟ್ಟಿನ ಜಿಲ್ಲೆಗಳಲ್ಲಿ ಏರ್ಪಾಟು ಮಾಡಿದ ಸಾಹಿತ್ಯ ಸಮಾರತೊಂಭಗಳಲ್ಲಿ ಭಾಗವಹಿಸಿ ಕನ್ನಡ ಪರ ಚಿಂತನೆಗಳ ಕಾಳು ಬಿತ್ತಿದ್ದೇನೆ. ಪಾಂಡಿಚೇರಿಯಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನದಲ್ಲಿ ಅಲ್ಲಿಯ ಮುಖ್ಯಮಂತ್ರಿ ಮತ್ತು ಜನತೆಯ ಸಮ್ಮುಖದಲ್ಲಿ ಕರ್ನಾಟಕದ ಭವ್ಯ ಪರಂಪರೆಯ ಶೃಂಗಗಳನ್ನು ಪರಿಚಯಿಸಿದೆ. ಮುಂಬೈ ವಿಶ್ವವಿದ್ಯಾನಿಲಯ, ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯ ಹಾಗೂ ವಿಜಯವಾಡ ವಿಶ್ವವಿದ್ಯಾಲಯಗಳಲ್ಲಿ ಸಮಾವೇಶಗೊಂಡ ರಾಷ್ಟ್ರೀಯಮಟ್ಟದ ಸಂಕಿರಣಗಳಲ್ಲಿ ಕನ್ನಡದ ಅನನ್ಯತೆಯನ್ನು ಕನ್ನಡೇತರರಿಗೂ ಮನವರಿಕೆ ಮಾಡಿದ್ದು ಹರ್ಷದ ಅನುಭವ. ಇದೇ ರೀತಿ ಕಲಕತ್ತಾದ ರಾಯಲ್ ಏಷಿಯಾಟಿಕ್ ಸೊಸೈಟಿ ಏರ್ಪಡಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಅನ್ಯ ಪ್ರಭಾವಗಳಲ್ಲಿ ಕೊಚ್ಚಿ ಹೋಗದೆ ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತ ತನ್ನ ಸೋಪಜ್ಞ ನೆಲೆಗಳನ್ನು ಗಟ್ಟಿಯಾಗಿ ಬೆಳೆಸಿರುವುದನ್ನು ಸ್ಥಾಪಿಸುವ ಸದವಕಾಶ ಪ್ರಾಪ್ತವಾಗಿತ್ತು. ಕುಪ್ಪಂನ ದ್ರಾವಿ‌ಒಡ ವಿಶ್ವಿದ್ಯಾಲಯದಲ್ಲಿ ಕನ್ನಡದ ಅರಿವಿನಿಂದ eತಿ ಭಾಷೆಗಳ ಅಧ್ಯಯನ ಪಡೆದುಕೊಳ್ಳುಬಹುದಾದ ತಿಳಿವಳಿಕೆಯ ಸ್ವರೂಪವನ್ನು ದೃಷ್ಟಾಂತಗಳೊಂದಿಗೆ ನಿರೂಪಿಸಿದ್ದು ತೌಲನಿಕ ಅಧ್ಯಯನಕಾರರಿಗೆ ಉಪಯುಕ್ತವೆನಿಸಿತು. ಈ ವಿವರಗಳನ್ನು ಇಲ್ಲಿ ಸಂಕ್ಷೇಪಿಸಿ ಪ್ರಸ್ತಾಪಿಸಿದ್ದಕ್ಕೆ ಮುಖ್ಯ ಕಾರಣವಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷಳಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ನಾನು ಕನ್ನಡದ ಮಹತ್ವ ಮತ್ತು ಅನನ್ಯತೆಯ ಲಕ್ಷಣಗಳನ್ನು, ಕರ್ನಾಟಕದ ೨೨ ಜಿಲ್ಲೆಗಳಲ್ಲೇ ಅಲ್ಲದೆ ಕರ್ನಾಟಕದ ಹೊರಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು, ಬಿಂಬಿಸಿರುವ ಸಂತೋಷವನ್ನು ನಿವೇದಿಸಿಕೊಳ್ಳುವ ಸಲುವಾಗಿ. ಸಮ್ಮೇಳನದ ಅಧ್ಯಕ್ಷೆಯಾಗಿ ಈ ಕೆಲಸ ನನ್ನ ನೈತಿಕ ಸಾಂಸ್ಕೃತಿಕ ಜವಾಬುದಾರಿಯಾಗಿತ್ತು ಎಂಬ ಕರ್ತವ್ಯ ಪ್ರಜ್ಞೆಯಿಂದ ನಾನು ನಡೆದುಕೊಂಡಿದ್ದೇನೆ. +ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಸ್ತಾಂತರಗೊಳಿಸುತ್ತಿರುವ ಈ ಸ್ಥತ್ಯಂತರದ ಹೊಸ್ತಿಲಲ್ಲಿ ನಿಂತು ಆಡುವ ಮಾತುಗಳು ಹೆಚ್ಚು ಇರಬಾರದೆಂಬ ಅರಿವು ಇರುವುದರಿಂದ ಕೇವಲ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ. ಒಂದನೆಯದು ಕನ್ನಡ ಭಾಷೆಗೇ ಸಂಬಂಧಿಸಿದ್ದು. ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳು ಹಲವಾರಿವೆ, ದಿಟ. ಅವು ಇಂಥ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದುದೂ ಅಗತ್ಯ. ಬಹುಮುಖ್ಯವಾಗಿ ಕಾಡುತ್ತಿರುವುದು ಮಕ್ಕಳ ಪ್ರಾಥಮಿಕ ಶಿಕ್ಷಣ ಯಾವ ಮಾಧ್ಯಮದಲ್ಲಿ ನಡೆಯಬೇಕು ಎಂಬುದು. +ಕನ್ನಡ ನಾಡಿನಲ್ಲಿ ಕನ್ನಡವೊಂದೇ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೂ ಮಾಧ್ಯಮ ಭಾಷೆ ಕನ್ನಡವೇ ಆಗಿರಬೇಕು. ಮಕ್ಕಳ ಮನಸ್ಸೆಂಬ ಹೊಲದಲ್ಲಿ ಕನ್ನಡದ ಕಾಳುಗಳನ್ನು ಬಿತ್ತಬೇಕು. ಇದಕ್ಕೆ ತಯಾತ್ವಿಕವಾಗಿ ಎಲ್ಲರೂ ಒಪ್ಪಿಗೆ ಕೊಡುತ್ತಾರೆ. ಆದರೆ ಇಂದು ವಾಸ್ತವವಾಗಿ ನಡೆಯುತ್ತಿರುವುದೇನು? ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡ ಶಾಲೆಯಿಂದ ಕಿತ್ತು ಇಂಗ್ಲಿಷ್ ಶಾಲೆಗಳಲ್ಲಿ ನಾಟಿ ಮಾಡುತ್ತಿದ್ದಾರೆ. ಪರಿಣಾಮವಾಗಿ ಇತ್ತ ಕನ್ನಡ ಶಾಲೆಗಳು ಒಣಗುತ್ತಿವೆ, ಅತ್ತ ಇಂಗ್ಲಿಷ್ ಶಾಲೆಗಳು ಪಲ್ಲವಿಸಿ ಚಿಗುರುತ್ತಿವೆ. ಮುನ್ನೂರು ನಾನ್ನೂರು ಮಕ್ಕಳು ಕನ್ನಡ ಮಾಧ್ಯನದಲ್ಲಿ ಕಲಿಯುತ್ತಿದ್ದ ಶಾಲೆಗಳಲ್ಲೀಗ ೩೦-೪೦ ಮಕ್ಕಳು ಬಂದರೆ ಹೆಚ್ಚು ಎಂಬಂತಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ತುಂಬಿ ತುಳುಕುತ್ತಿವೆ. ಇದು ತುಂಬ ಗಂಭೀರವಾಗಿ ಚಿಂತಿಸಿ ಜರೂರಾಗಿ ಪರಿಹಾರ ಕಂಡುಕೊಳ್ಳಬೇಕಾದ ವಿಷಯ. +ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹು ಮುಖ್ಯ. ದೇಶದ ಪ್ರಾದೇಶಿಕ ಭಾಷೆಗಳಿಗೆ ಬಂದೆರಗಿರುವ ಇಂಗ್ಲಿಷ್ ಭಾಷೆಯ ಕುತ್ತನ್ನು ನಿವಾರಿಸಲು ನೆರವಾಗುವ ಹಾಗೆ ಸಮಾನ ಶಿಕ್ಷಣ ನೀತಿಯನ್ನು ಕೇಂದ್ರ ಸಕಾರ ಜಾರಿಗೊಳಿಸಬೇಕು. ಈಗ ‘ಮಾತೃಭಾಷೆ’ಗೆ ಇರುವ ಅರ್ಥ ಮತ್ತು ಪರಿಕಲ್ಪನೆಯನ್ನು ವಿಸ್ತಾರಗೊಳಿಸಬೇಕು. ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರ ಭಾಷೆಯೂ ಕನ್ನಡವೇ. ಮನೆಯ ಒಳಗಡೆ ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳಲಿ, ಆದರೆ ಹೊಸ್ತಿಲು ದಾಟಿ ಹೊರಬರುತ್ತಿದ್ದಂತೆ ಎಲ್ಲರ ಭಾಷೆಯೂ ಕನ್ನಡವಾಗಬೇಕು. ಸಂಭಾಷಣೆ, ವ್ಯಾಪಾರ, ವ್ವಹಾರ, ಆಡಳಿತ, ಶಿಕ್ಷಣ ಇವೆಲ್ಲ ಕನ್ನಡದಲ್ಲಿ ನಡೆಯಬೇಕು. ಇದನ್ನು ಕೇವಲ ಕರ್ನಾಟಕವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುತ್ತಿದ್ದರೂ ತಾತ್ವಿಕವಾಗಿ ಇದು ರಾಷ್ಟ್ರಕ್ಕೇ ಅನ್ವಯವಾಗಬೇಕಾದ ಭಾಷಿಕ ಸಿದ್ಧಾಂತ. ಆಯಾ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳೇ ಅಲ್ಲಿಯ ಮಾತೃಭಾಷೆ – ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕು. ಅದರಿಂದ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕತೆಗೆ ಪಟ್ಟ ಕಟ್ಟಿದಂತೆ ಆಗುತ್ತದೆ. ಪ್ರಾದೇಶಿಕ ಭಾಷೆಗಳನ್ನು ಪುನರುಜ್ಜೀವಿಸಲು, ಸಪ್ರಾಣಿಸಲು ಇದು ಯೋಗ್ಯ ಉಪಕ್ರಮ. ಪ್ರಾದೇಶಿಕ ಭಾಷೆ ಮತ್ತು ಸಾಸ್ಕೃತಿಕ ಸೊಗಡನ್ನು ಉಳಿಸಿಕೊಂಡು ಶಿಕ್ಷಣ ಅರ್ಥಪೂರ್ಣವಾಗುತ್ತದೆ. +ನಾನು ಒತ್ತುಕೊಟ್ಟು ಅವಧಾರಣೆಯಿಂದ ಹೇಳುವುದಿಷ್ಟು: “ಪ್ರಾದೇಶಿಕ ಭಾಷೆಯಲ್ಲಿಯೇ ಸಿಕ್ಷಣ ನಡೆಯಬೇಕು” – ಎನ್ನುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಡಿಸಬೇಕು. ಎಲ್ಲ ಅನುದಾನಿತ, ಅನುದಾನರಹಿತ ಖಾಸಗಿ ಶಿಕ್ಷಣಸಂಸ್ಥೆಗಳನ್ನು ಈ ಆಜ್ಞೆಯ ಪರಿಧಿಗೆ ಸೇರಿಸಬೇಕು. ಸಾಧ್ಯವಾದರೆ ರಾಷ್ಟ್ರೀಕರಣ ಮಾಡಿ ಏಕರೀತಿಯ ಶಿಕ್ಷಣ, ಏಕರೀತಿಯ ಶಿಕ್ಷಣ ಶುಲ್ಕಜಾರಿಗೆ ತರಬೇಕು. ಇಷ್ಟಾದರೆ ಆಯಾ ರಾಜ್ಯದ ಮಕ್ಕಳಿಗೆ ಆಯಾ ಪ್ರದೇಶದಲ್ಲಿ ಶಿಕ್ಷಣ, ಉದ್ಯೋಗ ಬಾಳ ಸುಲಭ ಸಾಧ್ಯವಾಗಿ ಈಡೇರುತ್ತದೆ. +ಎರಡನೆಯ ಮಹತ್ವದ ವಿಷಯವೆಂದರೆ ಸುವರ್ಣ ಕರ್ನಾಟಕದ ಈ ಸುಭ ಸಂಭ್ರಮಾಚರಣೆಯಲ್ಲಿ ಕರ್ನಾಟಕದಲ್ಲಿ ಒಂದು ಸೂಕ್ತ ಸ್ಮಾರಕ ನಿರ್‍ಮಾಣವಾಗಬೇಕು. ಇದಕ್ಕೆ ಮಹತ್ವದ ಕಾರಣವಿದೆ. ದಿನಾಕ ೦೧.೧೧.೧೯೫೬ರಂದು ಕರ್ನಾಟಕ ಏಕೀಕರಣಗೊಂಡ ಆ ಐತಿಹಾಸಿಕ ಘಟನೆಯನ್ನು ಅಂದಿನ ನಮ್ಮ ಭರತ ದೇಶದ ರಾಷ್ಟ್ರಾಧ್ಯಕ್ಷರಾಗಿದ್ದ ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದರು ಉದ್ಘಾಟಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಆ ಸಂಭ್ರಮ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಂದಿನ ಮೈಸೂರು ರಾಜ್ಯದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಆಗಮಿಸಿದ್ದರು. ಕಡಿದಾಳ್ ಮಂಜಪ್ಪನವರು ಹಾಗೂ ಎಸ್. ನಿಜಲಿಂಗಪ್ಪನವರು ಕಾರ್ಯಕ್ರಮದ ರೂವಾರಿಗಳಾಗಿದ್ದರು. ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿ ಸಡಗರದಿಂದ ಸಂಭ್ರಮಿಸಿದ ಮಹತ್ವದ ಸಮಾರಂಭ ಅದಾಗಿತ್ತು. ಆ ಐತಿಹಾಸಿಕ ಘಟನೆ ನಡೆದು ೫೦ ವರುಷಗಳಾಗುತ್ತಿವೆ. ಅದರ ನೆನಪಿಗಾಗಿ ಕರ್ನಾಟಕ ಸರ್ಕಾರ ಈ ಸುವರ್ಣ ಕರ್ನಾಟಕದ ಆಚರಣೆಯ ಸಂದರ್ಭದಲ್ಲಾದರೂ ಐತಿಹಾಸಿಕ ಮಹತ್ವದ ಸ್ಮಾರಕವನ್ನು ನಿರ್ಮಿಸಬೇಕು. ಬೆಂಗಳೂರಿನಲ್ಲಿ ಸೆಂಟ್ರಲ್ ಜೈಲ್ ಇದ್ದ ಜಾಗದಲ್ಲಿ ಈಗ ‘ಫ್ರೀಡಂ ಪಾರ್ಕ’ನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಪಾರ್ಕಿನಲ್ಲಿ ಈ ಸ್ಮಾರಕವನ್ನು ನಿರ್ಮಿಸಬಹುದು. ಬೆಂಗಳೂರಿನಲ್ಲಿ ಇದಕ್ಕಾಗಿ ಜಾಗದ ಸಮಸ್ಯೆಯೂ ಇಲ್ಲ. ಕರ್ನಾಟಕಕ್ಕೆ ಆಗಮಿಸಿದ ಪ್ರವಸಿಗರು ಕಡ್ಡಾಯವಾಗಿ ನೋಡಲೇಬೇಕಾದ ಒಂದು ಐತಿಹಾಸಿಕ ಪ್ರೇಕ್ಷಣೀಯ ಕುರುಹಾಗಿ ಈ ಸ್ಮಾರಕ ನಿಲ್ಲಬೇಕು. +ಹಸ್ತಂತರದ ಐತಿಹಾಸಿಕ ಕ್ಷಣಗಳನ್ನು ಇನ್ನು ವಿಳಂಬಿಸಲರೆ. ೭೧ನೆಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿ ಕನ್ನಡಿಗರು ವರ್ಷಿಸಿದ ಅಮೃತೋಪಮ ಪ್ರೀತಿಗೌರವಗಳಿಗೆ ನಾನು ಆಜನ್ಮವೂ ಋಣಿಯಾಗಿದ್ದೇನೆ. ಈ ನಾಡಿಗೆ, ನುಡಿಗೆ ಕೃತಜ್ಞತೆ ಹೇಳಿದರೂ ಅದು ಅಲ್ಲಿಗೆ ಮುಗಿಯುವುದಿಲ್ಲ. ಈ ಹಸ್ತಾಂತರವೆಂಬುದು ಕೂಡ ಸಾಂಕೇತಿಕ ಮಾತ್ರ. ಕನ್ನಡ ಕಟ್ಟುವ ಕೆಲಸಕ್ಕೆ ಆರಂಭವಿದೆಯೇ ಹೊರತು ಅಂತ್ಯ ಇಲ್ಲ. ಈ ಕೈಂಕರ್‍ಯಕ್ಕೆ ಕಂಕಣ ಕಟ್ಟಿದ ಮೇಲೆ ಅಲ್ಪವಿರಾಮ, ಅರ್ಧವಿರಾಮ ಬರಬಹುದೇ ಹೊರತು ಪೂರ್ಣ ವಿರಾಮ ಎಂಬುದಿಲ್ಲ. ನಾನು ಅಧ್ಯಕ್ಷೆ ಆಗುವ ಮೊದಲೂ ಕನ್ನಡವನ್ನು ನಂಬಿ ಬಾಳಿ ಬೆಳೆದವಳು. ಈ ಅಧ್ಯಕ್ಷ ಸ್ಥಾನವನ್ನು ಒಪ್ಪಿಸಿಕೊಟ್ಟ ಮೇಲೂ ಕನ್ನಡವೇ ಶರಣು. ಕರ್ನಾಟಕಕ್ಕೆ ನನ್ನಂಥವರು ಕೋಟಿಕೋಟಿ ಅಮೃತಪುತ್ರ ಪುತ್ರಿಯರಿದ್ದಾರೆ. ಆದರೆ ನನಗೆ ಕನ್ನಡ ಬಿಟ್ಟರೆ ಬೇರೆ ದಾರಿ ಇಲ್ಲ. ಇದೇ ಬೆಳಕಿನ ದಾರಿ. ಇದೇ ಅರಿವಿನ ಮನೆ. +ಕನ್ಡ ನುಡಿಯ ಪ್ರತೀಕವಾದ, ಕನ್ನಡಿಗರ ದ್ಯೋತಕವಾದ ಈ ಕನ್ನಡ ಬಾವುಟವನ್ನು ಹೊಸ ಅಧ್ಯಕ್ಷರಾದ ಶಾಂತರಸರಿಗೆ ಈ ಮಹಾಸಭೆಯ ಸಾಕ್ಷಿಯಾಗಿ ಒಪ್ಪಿಸುತ್ತಿದ್ದೇನೆ. ಈ ಶುಭಸಂದರ್ಭದಲ್ಲಿ ಹೇಳಬೇಕಾದ ಮಾತೆಂದರೆ – “ಶಾಂತರಸರೇ, ನಿಮ್ಮ ಕನ್ನಡಪರ ನಿಲುವುಗಳಿಗೆ ನಿಮ್ಮೊಂದಿಗೆ ಸಾಹಿತ್ಯ ಪರಿಷತ್ತು, ಸಮ್ಮೇಳನದ ಮತ್ತು ಪರಿಷತ್ತಿನ ಹಿಂದಿನ ಅಧ್ಯಕ್ಷರು ಮತ್ತು ಸಮಸ್ತ ಕನ್ನಡಿಗರು ಜತೆಗಿದ್ದಾರೆ, ನಿಮಗೆ ಎಲ್ಲ ಒಳಿತನ್ನೂ ಹಾರೈಸುತ್ತಿದ್ದಾರೆ”. ಇದಿಗೊ ಸ್ವೀಕರಿಸಿ ಈ ಬಾವುಟವನ್ನು. ಇದು ಬರಿಯ ಬವುಟವಲ್ಲ, ಕನ್ನಡದ ಬವುಟ, ಸಮರ್ಥರು ಹಿಡಿದಾಗ ಹಾರುವುದು ಪಟಪಟ : ಏರಿಸಿ ಹಾರಿಸಿ ಕನ್ನಡ ಬಾವುಟ ! +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […] +೧. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ ಗುಹೇಶ್ವರ ನಿಮ್ಮ ಶರಣ ಸಂಬಂಧ ೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ ನಿಮ್ಮ ನಿಲವನನುಭವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_407.txt b/Kannada Sahitya/article_407.txt new file mode 100644 index 0000000000000000000000000000000000000000..0b86dcde72e8ac29cc1b0af706a3649762003b2b --- /dev/null +++ b/Kannada Sahitya/article_407.txt @@ -0,0 +1,159 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- +“ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” +ಎಂದು ಹೇಳಿದ್ದು ಕಿವಿಯಲ್ಲಿ ಪ್ರತಿಧ್ವನಿಸಿತು. +ಹೋದ ವರುಷ ಕೂಡ ಈತ ಹೀಗೆಯೇ ಹೇಳಿಹೋಗಿದ್ದ. ಲಿಂಗನಮಕ್ಕಿ ಡ್ಯಾಮು ಹತ್ತು ಅಡಿಯೂ ಎದ್ದಿರಲಿಲ್ಲ ಆಗ. ಈ ವರುಷ ಡ್ಯಾಮಿನಲ್ಲಿ ನೀರು ನಿಲ್ಲುವುದಿಲ್ಲವೆಂದು ಬೇರೆ ಸರ್ವೆಗೆ ಬಂದಿದ್ದವರು ಹೇಳಿಹೋಗಿದ್ದರು. ಆದರೂ ಮುದುಕನ ಮಾತಿಗೆ ಹೇರಂಬ, ಪರಮೇಶ್ವರಯ್ಯ ತಾನು ಕಾರ್ಗಲ್ಲಿನೆ ಮುಳುಗಡೆ ಆಫೀಸಿಗೆ ಓಡಿ ಅಲ್ಲಿ ವಿಚಾರಿಸಿದಾಗ ಅವರು ಬಯ್ದು ಕಳುಹಿಸಿದ್ದರು – +“ಇಲ್ಲ ಹೋಗ್ರಿ. ನಿಮಗೆ ಪರಿಹಾರ ಕೊಟ್ಟು ಬೇರೆ ಬೇರೆ ಜಮೀನು ಕೊಡೋ ತನಕ ನೀವಿಲ್ಲೆ ನಿಶ್ಚಿಂತೆಯಿಂದ ಇರಿ” +ಎಂದರು. ಹೋದವರುಷ ನಿಶ್ಚಿಂತೆಯಿಂದ ಇದ್ದುದಾಯಿತು. ಶರಾವತಿಯಲ್ಲಿ ನೀರೇನೂ ಏರಲಿಲ್ಲ. ಹೊಸಮನೆ ಹಳ್ಳಿ ಮುಳುಗಲಿಲ್ಲ. ಎಂದಿನಂತೆ ತೋಟ-ಹೊಲಗಳಲ್ಲಿ ಅಡಿಕೆ-ಭತ್ತ ಬೆಳೆದು, ಕೊಯ್ದು, ಮಾರಿ ತಾವು ಆನಂದದಿಂದಲೇ ಉಳಿದುಬಿಟ್ಟೆವು. +ಆದರೆ ಇದೀಗ ಡ್ಯಾಮು ದೊಡ್ಡ ಗೋಡೆಯೋಪಾದಿಯಲ್ಲಿ ಎದ್ದು ನಿಂತಿದೆ, ಈ ವರುಷ ಡ್ಯಾಮಿನಲ್ಲಿ ನೀರು ನಿಲ್ಲುವುದು ಖಚಿತವೆಂದು ಹೇಳಲಾಗಿದೆ. ಆ ಮುದುಕ ಹೇಳಿದ ಹಾಗೆ ಹೊಸಮನೆಹಳ್ಳಿ ಮುಳುಗಿ ಹೋಗುತ್ತದೋ ಏನೋ. ಹೀಗೇನಾದರೂ ಆದರೆ ತನ್ನ ಮನೆಯ ಗತಿ? +ನದಿಯನ್ನೇ ನೋಡುತ್ತ ದರೆಯ ಮೇಲೆ ನಿಂತುಬಿಟ್ಟ. ಮನೆಗಳ ಸಾಲಿನಿಂದ ಒಂದು ಕೂಗಳತೆಯಷ್ಟು ದೂರದಲ್ಲಿದೆ ಶರಾವತಿ, ಬೇಸಿಗೆಯಲ್ಲಿ ನದಿಯಲ್ಲಿ ನೀರಿರುವುದಿಲ್ಲ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ದಡವುಕ್ಕಿ ನೀರು ಹೊಲಗಳವರೆಗೂ ಬರುತ್ತದೆ. ಅಷ್ಟೆ. ಆದರೆ ಹೊಲತೋಟಗಳಿಗೇನೂ ಅಪಾಯವಿಲ್ಲ. ಈಗ ಡ್ಯಾಮು ಕಟ್ಟಿದ ಮೇಲೆ ನೀರು ಇನ್ನೂ ಏರಿ ಬರಬಾರದೆಂದೇನಿಲ್ಲ. ಡ್ಯಾಮು ಪೂರ್ಣವಾಗಿ ಕಟ್ಟಿ ಮುಗಿದ ಮೇಲೆ ನೀರು ಇಲ್ಲಿಯವರೆಗೂ ಏರುತ್ತದೆಂದು ಹಳ್ಳಿಯ ಹಿಂಬದಿಯ ಸೀತಾಪರ್ವತದ ನೆತ್ತಿಯ ಮೇಲೆ ಕೆಂಪು ಕಲ್ಲು ನೆಟ್ಟು ಹೋಗಿದ್ದಾರೆ. ಈ ಮುದುಕ ಈ ವರ್ಷವೇ ಹಳ್ಳಿ ಮುಳುಗುತ್ತದೆಂದು ಹೇಳುತ್ತಿದ್ದಾನೆ. +ಈ ವರ್ಷವೇಕೆ ಈಗಲೇ ಮುಳುಗಲಿ. ನೂರಾರು ಹಳ್ಳಿ, ಸಾವಿರಾರು ಮನೆಮಠಗಳನ್ನು ಮುಳುಗಿಸಲು ಹೊರಟಿರುವ ಸರ್ಕಾರಕ್ಕೆ ತನ್ನ ಮನೆ, ಹಳ್ಳಿ ಮುಳುಗಿಸುವುದೇನು ದೊಡ್ಡ ವಿಷಯವೆ? ಆದರೆ ಅದೇನೋ ಜಮೀನೋ ಪರಿಹಾರವೋ ಕೊಡುವುದಾಗಿ ಹೇಳುತ್ತಿದ್ದರಲ್ಲ ಅದು ತನಗೆ ಬರುವುದು ಯಾವಾಗ? +ಯಾರು ಯಾರೋ ಸುಡುಗಾಡಿನವರೆಲ್ಲ ಇಲ್ಲಿಗೆ ಬಂದು ತೋಟ ಅಳೆದು, ಹೊಲ ಅಳೆದು, ಮನೆ, ಕೊಟ್ಟಿಗೆ, ಸೌದೆ ಹಾಕುವ ಮನೆ, ತೋಟದ ಮನೆಗಳಿಗೆಲ್ಲ ಬೆಲೆಕಟ್ಟಿ, ನಿಮಗೆಲ್ಲಿ ಜಮೀನು ಬೇಕು ಎಂದು ವಿಚಾರಿಸಿಕೊಂಡು ಹೋಗಿ ಒಂದು ವರ್ಷವೇ ಆಯಿತು. ಇವರು ಬಂದುಹೋದಮೇಲೆ ಮಳೆಗಾಲ, ಛಳಿಗಾಲ, ಬೇಸಿಗೆಕಾಲ ಬಂದುಹೋಗಿ ಈಗ ಮತ್ತೆ ಮಳೆಮೋಡ ಗುಡುಗುತ್ತಿದೆ. ಹಳ್ಳಿಯ ಐದು ಕುಟುಂಬಗಳಲ್ಲಿ ಎರಡು ಕುಟುಂಬಗಳು ಹುಟ್ಟಾಳುಗಳವು. ಅವರಿಗೆ ಪರಿಹಾರವೇನಿಲ್ಲ. ಉಳಿದ ಮೂರು ಕುಟುಂಬಗಳಿಗೆ ತಕ್ಕ ಪರಿಹಾರ ಸಿಗುತ್ತದೆಂದರು. +ಪರಮೇಶ್ವರಯ್ಯ ಆಫಿಸಿಗೆ ಹೋಗಿ ಅವರ ಪಿಂಡಕ್ಕೆ ಒಂದಿಷ್ಟು ಸುರಿದುಬಂದನೇನೋ. ಅವನಿಗೆ ಬೇಗನೆ ಪರಿಹಾರ ಸಿಕ್ಕಿತು. ಸಾಗರದ ಹತ್ತಿರ ಜಮೀನೂ ಕೊಟ್ಟರು. ಹೇರಂಬನೂ ಅದೇನೋ ಮಾಡಿರಬೇಕು. ಅವನಿಗೂ ಸಧ್ಯದಲ್ಲಿ ಪರಿಹಾರದ ಹಣ ಕೊಡುತ್ತಾರಂತೆ. ಆದರೆ ತನಗೆ? ನಿಮಗೆ ಸಂಬಂಧಪಟ್ಟ ಫೈಲೇ ಕಳೆದು ಹೋಗಿದೆ ಎನ್ನುತ್ತಾನೆ ಆ ಮುಳುಗಡೆ ಆಫೀಸ್ ಸರ್ವೇಯರ್ ಶೆಟ್ಟಿ. ಈ ವರೆಗೂ ಹತ್ತುಸಾರಿ ಆಯಿತು ಹೋಗಿಬಂದುದು. ನಾಳೆ ಮತ್ತೊಮ್ಮೆ ಹೋಗಿಬರಬೇಕು….ಗಣಪಯ್ಯ ಹೊರಟ ಮನೆಯತ್ತ. +ಹೊಸಮನೆಹಳ್ಳಿಯ ಒಂದು ಬದಿಯಲ್ಲಿ ಶರಾವತಿ, ಇನ್ನೊಂದು ಬದಿಯಲ್ಲಿ ಗುಡ್ಡ. ಈ ಗುಡ್ಡಕ್ಕೆ ಸೀತಾಪರ್ವತ ಎಂದೂ ಕರೆಯಲಾಗುತ್ತದೆ. ರಾಮಾಯಣ ಕಾಲದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ವನವಾಸ ಮಾಡುತ್ತ ಇಲ್ಲಿಗೆ ಬಂದಿದ್ದರಂತೆ. ಶರಾವತಿ ದಾಟಿ ಈ ಗುಡ್ಡದ ಗುಹೆಯಲ್ಲಿ ವಾಸವಾಗಿದ್ದರಂತೆ ಸ್ವಲ್ಪದಿನ, ಗುಡ್ಡದ ನೆತ್ತಿಯ ಮೇಲೆ ಹತ್ತಾರು ಹೆಬ್ಬಂಡೆಗಳಿವೆ, ಗುಹೆಯಾಕಾರದ ಪೊಟರೆ ಇದೆ. ಮಳೆಗಾಳಿ ಹೊಡೆತಕ್ಕೆ ಮಂಚದಾಕಾರ ತಾಳಿರುವ ಬಂಡೆ ಸೀತಾರಾಮರ ಮಂಚ ಎಂಬ ಹೆಸರು ತಾಳಿದೆ. ಹೆಸರೇನೋ ಸೀತಾಪರ್ವತ, ಆದರೆ ಇದೇನೂ ಪರ್ವತವಲ್ಲ. ಅಷ್ಟೇನೂ ಎತ್ತರವಲ್ಲದ, ವಿಸ್ತಾರವಾಗಿರುವ ಒಂದು ಗುಡ್ಡ ಇದು. ಗುಡ್ಡದ ಬೆನ್ನ ಮೇಲಕ್ಕೆ ಕಾಡು. ನೆತ್ತಿ ಬರಿಯ ಬೋಳು. ಗುಡ್ಡದ ಪಾದದಲ್ಲಿ ಸುತ್ತಲೂ ಚದುರಿದಂತೆ ಐದು ಕುಟುಂಬಗಳು. ಮೂರು ಅಡಿಕೆ ತೋಟಗಳು. ಮೂರು ಗದ್ದೆಗಳು. ಐದು ಕುಟುಂಬಗಳಲ್ಲಿ ಮೂರು ಶ್ರೀಮಂತ ಕುಟುಂಬಗಳು. ಎರಡು ಹುಟ್ಟಾಳುಗಳ ಕುಟುಂಬಗಳು. +ಶ್ರೀಮಂತರೆಂದರೆ ಹೇರಂಬಹೆಗಡೆ ಹಾಗು ಪರಮೇಶ್ವರಪ್ಪ. ಇವರ ತೋಟ ಹೊಲಗಳಲ್ಲಿ ಬಿಟ್ಟಿ ದುಡಿಯುವ ಹಸಲರ ಬೈರನದೊಂದು ಮನೆ. ಹಾಗು ಹಸಲರ ಹಾಲನದೊಂದು ಮನೆ. ಐದನೆಯವನಾಗಿ ಗಣಪಯ್ಯ. ಅತ್ತ ಶ್ರೀಮಂತನೂ ಅಲ್ಲ, ಇತ್ತ ಬಡವನೂ ಅಲ್ಲ. ಇರುವುದೆಂದರೆ ಎರಡು ಎಕರೆ ಬಾಗಾಯಿತು, ನಾಲ್ಕು ಎಕರೆ ಖುಷ್ಕಿ, ತೋಟದಲ್ಲಿ ಹೊಲದಲ್ಲಿ ಕೆಲಸ ಮಾಡಲು ಹುಟ್ಟಾಳುಗಳಿಲ್ಲ. ಕೂಲಿಕೊಟ್ಟು ಆಳುಗಳನ್ನು ಕರೆತರಬೇಕು. ಈ ಪದ್ಧತಿ ಹಿಂದಿನಿಂದಲೂ ನಡೆದುಬಂದಿದೆ. +ಶರಾವತಿ ನದಿಯನ್ನು ದಾಟಿಹೋದರೆ ತಾಳಗುಪ್ಪ, ಹಿರೇಮನೆ, ಸಾಗರ ಇತ್ಯಾದಿ ಊರುಗಳು. ಇದು ಮೂಡಣ ದಿಕ್ಕಿನ ವಿಷಯ. ಪಡುವಣಕ್ಕೆ ಹೊರಳಿದರೆ ಅರಲಗೋಡು, ಭೀಮೇಶ್ವರ ಇತ್ಯಾದಿ. ಹೊಸಮನೆಯವರ ಸಂಪರ್ಕವೆಲ್ಲ ಮೂಡಣದವರೊಡನೆ. ಬೇಸಿಗೆಯಲ್ಲಿ ನದಿ ದಾಟುವುದು ಸುಲಭ. ವಿಶಾಲವಾಗಿರುವ ನದಿಯ ಪಾತ್ರದಲ್ಲಿಯ ಬಂಡೆಗಳ ಮೇಲೆ ಹಾರಿ ಕುಪ್ಪಳಿಸಿದರೆ ಆ ದಂಡೆ. ಆದರೆ ಮಳೆಗಾಲದಲ್ಲಿ ಮಾತ್ರ ಇದು ನಿಷಿದ್ಧ. ತುಂಬಿ ಹರಿಯುತ್ತಿರುತ್ತಾಳೆ ಶರಾವತಿ ಆಗ. ಒಂದು ಬಂಡೆಯೂ ಕಾಣಿಸುವುದಿಲ್ಲ. ನೀರು ಮಂದವಾಗಿ ಮಲಿನವಾಗಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ನದಿದಾಟುವ ಪ್ರಮೇಯ ಬರುವುದೂ ಇಲ್ಲ. ಮಳೆಗಾಲ ಆರಂಭವಾಗುತ್ತದೆ ಎನ್ನುವಾಗ ನಾಲ್ಕು ತಿಂಗಳುಗಳಿಗೆ ಬೇಕಾದ ಎಲ್ಲ ಸಾಮಾನು-ಸರಂಜಾಮು ತಾಳಗುಪ್ಪ-ಸಾಗರದಿಂದ ಬಂದುಬಿಡುತ್ತದೆ. ಅಷ್ಟೂ ಸಾಗರಕ್ಕೆ ಹೋಗಬೇಕೆಂದರೆ ತುಮ್ರಿ ಬ್ಯಾಕೋಡಿನ ದಾರಿ ಇದ್ದೇ ಇದೆ. +ಇದು ಸುಮಾರು ಐವತ್ತು ವರ್ಷಗಳಿಂದ ನಡೆದುಬಂದಿರುವ ರೀತಿ. ಹೇರಂಬ ಹೆಗಡೆಯ ಮನೆಯ ಎದುರಿರುವ ತೆಂಗಿನಮರಗಳು, ಹಲಸಿನ ಮರ ಹೊಸಮನೆಯ ಪ್ರಾಚೀನತೆಯನ್ನು ಹೇಳುತ್ತವೆ. ಹೇರಂಬಹೆಗಡೆಯದೇ ಈ ಸ್ಥಳದ ಹಳೇಮನೆ. ಹೆಗಡೆಯ ಅಜ್ಜ ಮಾವಿನಗುಂಡಿಯ ಹತ್ತಿರದ ಹೊಸಮನೆಹಳ್ಳ ಬಿಟ್ಟುಬಂದು ಇಲ್ಲಿ ಮನೆ ಕಟ್ಟಿದಾಗ ಈ ಮನೆ ಹೊಸಮನೆಯಾಯಿತು. ಆದರೆ ಆ ನಂತರ ಗಣಪಯ್ಯನ ತಂದೆ, ಪರಮೇಶ್ವರನ ತಂದೆ ಇಲ್ಲಿ ಬಂದು ಜಮೀನು ಮಾಡಿ ಮನೆ ಕಟ್ಟಿಸಿದಾಗ, ಇವರ ಮನೆಗಳು ಹೊಸಮನೆಗಳಾದವು. ಹೇರಂಬನ ಮನೆ ಹಳೆಯದಾಯಿತು. ಹಳ್ಳಿಗೆ ಮಾತ್ರ ಹೊಸಮನೆ ಎಂಬ ಹೆಸರೇ ಉಳಿಯಿತು. +ಹೊಸಮನೆ ಮುಳುಗುವ ಕಾಲ ಈಗ ಬಂದಿದೆ. ಮಳೆಗಾಲದಲ್ಲಿ ಹಳ್ಳಿಯ ಬಳಿಗೆ ಬಾರದೆ ದೂರದಿಂದಲೇ ಅಬ್ಬರಿಸುತ್ತಿದ್ದ ಶರಾವತಿ ಈಗ ಹಳ್ಳಿಯನ್ನು ನುಂಗುವ ವಿಚಾರ ಮಾಡುತ್ತಿದ್ದಾಳೆ. ಈಗೀಗ ಶರಾವತಿಯ ಹರಿಯುವಿಕೆ ಕಡಿಮೆಯಾಗಿ ನೀರು ಮುಂದೆ ಸರಿಯುವುದರ ಬದಲಿಗೆ ನಿಂತು ಮಡುಗಟ್ಟುವುದು ಕಂಡುಬರುತ್ತಿದೆ. +ಗಣಪಯ್ಯ ತೋಟದಿಂದ ಮನೆಯತ್ತ ತಿರುಗಿದಾಗ ಕಣ್ಣಿಗೆ ಬಿದ್ದ ಶರಾವತಿಯಲ್ಲಿ ಗಮನಿಸಿದ್ದು ಇದನ್ನೇ, ನದಿಯ ಪ್ರವಾಹ ಹರಿದುಹೋದರೆ ಒಂದು ಗಂಡಾಂತರ ಕಡಿಮೆಯಾದ ಹಾಗೆ. ಆದರೆ ಪ್ರವಾಹವಾಗಿ ಏರಿ ಬಂದು ನೀರು ನಿಂತರೆ? ನೀರು ಒಂದೇ ಸಮನೇ ಹರಿದು ಬರುತ್ತಲೇ ಇದ್ದರೆ? ಮುಳುಗಡೆ ಆಫೀಸಿನ ಜವಾನ ಹೇಳಿದ ಮಾತು ಕಿವಿಯಲ್ಲಿ ಮಾರ್ದನಿಗೊಟ್ಟಿದ್ದು ಈ ಸಮಯದಲ್ಲೆ. +ಹೊಸಮನೆಯ ಒಂದೇ ಬದಿಯಲ್ಲಿದ್ದ ಶರಾವತಿ, ಲಿಂಗನಮಕ್ಕಿ ಡ್ಯಾಮು ಕಟ್ಟಿದ್ದರಿಂದ ನಾಲ್ಕೂ ಕಡೆಗಳಲ್ಲಿ ತುಂಬಿಕೊಳ್ಳುವ ಸಾಧ್ಯತೆ ಇತ್ತು. ನದಿ ಕವಲಾಗಿ ಒಡೆದುಕೊಂಡು ಸೀತಾಪರ್ವತವನ್ನು ಬಳಸಿಕೊಂಡು ಮತ್ತೆ ಮುಂದೆ ಒಂದಾಗಿ ಹರಿಯುವುದೇ ಅಲ್ಲದೆ ಹೆಚ್ಚು ಹೆಚ್ಚು ನೀರು ಬಂದ ಹಾಗೆಲ್ಲ ಸೀತಾಪರ್ವತವನ್ನು ಸ್ವಲ್ಪ ಸ್ವಲ್ಪವಾಗಿ ಕಬಳಿಸುತ್ತ ಕೊನೆಗೊಂದು ಸಾರಿ ಇಡೀ ಪರ್ವತವನ್ನೇ ಹೊಟ್ಟೆಯಲ್ಲಿ ಹಾಕಿಕೊಂಡು ಗುಳುಂ ಮಾಡುವ ವಿಷಯವೂ ಅಸಂಭವವೇನಲ್ಲ, ಸೀತಾಪರ್ವತವೇ ಹೋದಮೇಲೆ ಹೊಸಮನೆಹಳ್ಳಿಯಾಗಲೀ, ಗಣಪಯ್ಯ, ಹೇರಂಬ ಪರಮೇಶ್ವರಪ್ಪನ ಮನೆ-ತೋಟ-ಹೊಲಗಳಾಗಲಿ ಉಳಿದಾವೆಂಬ ಭರವಸೆ ಎಲ್ಲಿ? ಒಡೆಯರ ಮನೆಗಳೇ ಮುಳುಗಿದ ಮೇಲೆ ಹುಟ್ಟಾಳುಗಳ ಗುಡಿಸಲುಗಳು ಪಾಡು ಏನಾಗಬೇಡ? +ಹೀಗೆಂದೇ ಸರಕಾರ ಹೊಸಮನೆಹಳ್ಳಿಯ ಕೆಲವರಿಗೆ ಪರಿಹಾರ ಕೊಟ್ಟಿತ್ತು. ಎಕರೆ ಬಾಗಾಯಿತಿಗೆ ಇಷ್ಟು, ಖುಷ್ಕಿಗೆ ಇಷ್ಟು, ಮನೆ, ಕೊಟ್ಟಿಗೆ, ಬಾವಿಗೆ ಇಷ್ಟಿಷ್ಟು ಎಂದೆಲ್ಲ ಹಣ ಸಂದಾಯವಾಗಿತ್ತು. ಬೇರೆಡೆಗಳಲ್ಲಿ ಜಮೀನು ಕೊಟ್ಟಿತ್ತು. ಅಲ್ಲಿಗೆ ಮರಮಟ್ಟುಗಳನ್ನು ಸಾಗಿಸಲು ವಾಹನ ಸೌಕರ್ಯ ಒದಗಿಸಿತ್ತು. ಇಂತಿಷ್ಟು ದಿನಗಳಲ್ಲಿ ಈ ಹಳ್ಳಿಬಿಟ್ಟು ಹೊರಡಬೇಕೆಂದು ನೋಟೀಸು ಜಾರಿಮಾಡಿತ್ತು. ಈ ನೋಟೀಸಿಗೆ ಹೆದರಿಕೊಂಡೇ ಎಂಬಂತೆ ಪರಮೇಶ್ವರಪ್ಪ ಹಳ್ಳಿಬಿಟ್ಟು ಹೊರಟ. ಇವನ ಹಿಂದೆ ಹಸಲರ ಹಾಲನ ಬಿಡಾರವೂ ಹೋಯಿತು. +ಈಗ ಹೊಸಮನೆಹಳ್ಳಿಯಲ್ಲಿರುವ ಮನೆಗಳೆಂದರೆ ಮೂರೆ, ಹೇರಂಬ ಹಾಗು ಇವನ ಹುಟ್ಟಾಳು ಹಸಲರ ಬೈರನದು ಮತ್ತು ಗಣಪಯ್ಯನದು. ಹೇರಂಬ ಮನೆ-ತೋಟ-ಹೊಲಗಳಿಗೆ ಇನ್ನೇನು ಪರಿಹಾರ ಮಂಜೂರಾಗಿ ಆತ ಇಲ್ಲಿಂದ ಹೊರಟರೂ ಹೊರಟನೆ ಎಂಬ ಗಾಳಿ ಮಾತೂ ಇದೆ. ಹೇರಂಬನೇನೋ ಇಲ್ಲೇ ಇರುವ ವಿಚಾರಮಾಡಿ ಭತ್ತ ಬಿತ್ತಿದ್ದಾನೆ. ಆದರೆ ಪರಿಹಾರ ಕೊಟ್ಟ ಮೇಲೆ ಬಿಟ್ಟು ಹೊರಡು ಎಂದು ಸರಕಾರ ಹೇಳಿದರೆ ಆತ ಹೊರಡಬೇಕಾಗುತ್ತದೆ. ಹೀಗೆ ಹೇರಂಬ ಹೊರಟರೆ ಅವನ ಹುಟ್ಟಾಳು ಬೈರನೂ ಅವನ ಹಿಂದೆ ಹೊರಟನೆ. ಅನಂತರ ಹೊಸಮನೆಹಳ್ಳಿಯಲ್ಲಿರುವುದೆಂದರೆ ತನ್ನ ಮನೆಯೊಂದೆ! +ಹುಲಿ ಹೊಕ್ಕ ಕಾಡಿನಲ್ಲಿ ಹೊರಟವನಂತೆ ಗಣಪಯ್ಯ ಮನೆಗೆ ಬಂದ. ಚಪ್ಪರದಲ್ಲಿ ಕಾಲಿಡುತ್ತಿರುವ ಹಾಗೆಯೇ ಜಗುಲಿಯ ಮೇಲಿನ ಮಂಚದಲ್ಲಿ ಮಲಗಿದ್ದ ಅಪ್ಪ ತಾನು ಬಂದುದನ್ನು ಗಮನಿಸಿ, ಕೆಮ್ಮಿ ನರಳಿ ಎಂದ- +“ಗಣಪಾ….ಹೇರಂಬ ಸಿಕ್ಕಿದ್ನೇನೋ?” +“ಇಲ್ಲ….ನಾನು ತೋಟದಿಂದ ಬಂದೆ. ಇಲ್ಲಿಗೆ ಬಂದಿದ್ನಾ ಅವನು?” +“ಹೌದು, ನಿನ್ನ ನೋಡಬೇಕು ಅಂದ… ಅವನು ಈ ವರ್ಷ ಇಲ್ಲಿಂದ ಹೊರಡೋ ಯೋಚನೆ ಮಡ್ತಿದಾನೆ ಅಂತ ಕಾಣುತ್ತೆ…” +“ಹೌದಾ” +ಹುಲಿ ಯಾವ ಮರದ ಮರೆಯಲ್ಲಿ, ಯಾವ ಬಂಡೆಯ ಹಿಂಬದಿಯಲ್ಲಿ ಅಡಗಿದೆಯೋ? ಎಲ್ಲಿಂದ ಮೈಮೇಲೆ ಹಾರುತ್ತದೋ ಎಂದು ಹೆದರಿ ಹೆದರಿ ಬಂದುದಕ್ಕೂ, ಇಲ್ಲಿ ಹುಲಿ ಹಾರಿದ್ದಕ್ಕೂ ಸರಿಹೋಯಿತು. ಕಳಚದ ಚಪ್ಪಲಿ ಸಿಕ್ಕಿಕೊಂಡು ಮತ್ತೆ ಹೊರಟ. ಹೆಂಡತಿ ಬಾಗಿಲಲ್ಲಿ ನಿಂತಾಕೆ ಒಳಗೆ ಹೋದಳು. +ಹೇರಂಬ ಈ ವರುಷ ಇಲ್ಲೇ ಕಳೆಯೋಣ ಎಂದು ಹೇಳಿದ್ದ. ಅವನೇನೋ ಅನಂತಪುರದ ಹತ್ತಿರ ಜಮೀನು ಕೇಳಿದ್ದ. ಆದರೂ ಈ ಮಳೆಗಾಲವನ್ನು ಇಲ್ಲೇ ಕಳೆದು ಅನಂತರ ಹೊಸ ಜಮೀನಿಗೆ ಹೋಗುವುದಾಗಿ ಹೇಳುತ್ತಿದ್ದ. ಆದರೆ ಈಗ ಇದೇನಾಯಿತು? ಹೆಗಲಮೇಲಿನ ವಸ್ತ್ರಕ್ಕೆ ಮುಖ ತಿಕ್ಕಿಕೊಂಡು ದರೆಯ ಮೇಲಿನಿಂದ ಹೇರಂಬನ ತೋಟಕ್ಕೆ ಇಳಿದ. +ಹೇರಂಬನ ತೋಟದಲ್ಲಿ ಗಡಿಬಿಡಿ, ತೋಟದ ಮನೆಯ ಮಾಡಿಗೆ ಹೊದಿಸಿದ್ದ ಸೋಗೆಯನ್ನು ತೆಗೆಯುವ ಸನ್ನಾಹ. ಅವನ ಮನೆಯ ಹತ್ತಿರವೂ ಗದ್ದಲ. ಕೊಟ್ಟಿಗೆಯ ಮೇಲಿನಿಂದ ಮರದ ತೊಲೆಗಳನ್ನು ಕೆಳಗಿಳಿಸಲಾಗುತ್ತಿತ್ತು. ಅರಲಗೋಡಿನ ದೀವ್ರ ಆಳುಗಳು ಓಡಿಯಾಡುತ್ತಿದ್ದರು. ಹೇರಂಬ ಹೊರಡುವುದಂತೂ ಖಚಿತವೆಂದಾಯಿತು. ಕಾರಣವೇನಿರಬಹುದು? +ಗಣಪಯ್ಯ ತೋಟದ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬರುತ್ತಿರುವುದನ್ನು ನೋಡಿ ಹೇರಂಬ ಮುಂದೆ ಬಂದ. +“ಗಣಪಯ್ಯ ನಿನ್ ಮನೆಗೆ ಹೋಗಿದ್ದೆ. ಅಪ್ಪಯ್ಯ ಹೇಳಿದ್ರ ನಾನು ಬಂದಿದ್ದೆ ಅಂತ?” +“ಹೌದು, ಇದೇ ಈಗ ತೋಟದಿಂದ ಬಂದೆ. ನೀನು ಬಂದಿದ್ದ ವಿಷಯ ತಿಳೀತು. ಈ ಕಡೆ ಬಂದೆ. ಅಲ್ಲ! ಇದೆಲ್ಲ ಏನು ಅಂತ?” +“ಈ ವಿಷಯ ಹೇಳೋಣ ಅಂತನೇ ನಾನು ಬಂದಿದ್ದೆ. ಬಾ ಹೀಗೆ” +ಹೇರಂಬನ ಹಿಂದೆ ಜಗುಲಿ ಏರಿ ಚಾಪೆಯ ಮೇಲೇರಿ ಕುಳಿತಾಗ, ಹೇರಂಬ ಒಳ ಬಾಗಿಲತ್ತ ತಿರುಗಿ- +“ಕೂಸೇ, ಗಣಪಯ್ಯ ಬಂದಾನೆ ಅಂತ ಹೇಳು” +ಎಂದು ಹೆಂಡತಿಗೆ ಕೇಳುವಂತೆ ಮಗಳಿಗೆ ಕೂಗಿ ಹೇಳಿ ಗಣಪಯ್ಯನತ್ತ ತಿರುಗಿದ. +“ಮುಳುಗಡೆ ಆಫೀಸಿನಲ್ಲಿ ನನ್ನ ರಿಕಾರ್ಡೆಲ್ಲ ತೀರ್ಮಾನವಾಗಿದೆ. ನಾನೇ ಹೋಗಿ ನೋಡಿಬಂದೆ. ತೋಟ-ಹೊಲ-ಮನೆ ಬಾಬ್ತು ಸದ್ಯಕ್ಕೆ ಐವತ್ತು ಸಾವಿರ ರೂಪಾಯಿ ಮಂಜೂರಾಗಿದೆ. ಅನಂತಪುರದ ಜಮೀನು ನನ್ನ ಹೆಸರಿಗೇನೇ ಮಂಜೂರಾಗಿದೆ. ಅಲ್ಲಿ ಕಾಡು ಕಡಿದು ಸಾಗುವಳಿ ಮಾಡೋದಕ್ಕೂ ಬೇರೆ ಹಣ ಮಂಜೂರು ಮಾಡಿದಾರೆ. ಈ ಕೂಡಲೇ ಹೊಸಮನೆಹಳ್ಳಿ ಬಿಟ್ಟು ಹೊರಡಿ ಅಂತ ಆಜ್ಞೇನೂ ಮಾಡಿದ್ದಾರೆ…ಈವತ್ತಲ್ಲ ನಾಳೆ ಇಲ್ಲಿಂದ ಹೋಗ್ಲೇಬೇಕು. ತೋಟದಲ್ಲಿ ಗೊನೇ ಬಿಟ್ಟಿರೋ ಅಡಿಕೆ ಆಸೆಗೆ, ಹೊಲದಲ್ಲಿ ಬಿತ್ತಿರೋ ಭತ್ತದ ಆಸೆಗೆ ಇಲ್ಲಿ ನಿಂತು ಪರದಾಡೋದು ಯಾಕೆ? ನೀರು ಈ ವರುಷ ಎಲ್ಲಿಗೆ ಏರುತ್ತೋ? ಗುಡ್ಡ ಮುಳುಗೋದಿಲ್ಲ. ಆದ್ರೆ ಮನೆ-ತೋಟ ಉಳಿಯುತ್ತೆ ಅಂತ ಏನು ಗ್ಯಾರಂಟಿ? ಅದಕ್ಕೆ ಹಳ್ಳಿ ಬಿಡೋದು ಅಂತ ನಿರ್ಧಾರ ಮಾಡಿದೀನಿ. ನಾಳೆ ಸರಕಾರಿ ಲಾರಿ ಬರುತ್ತೆ, ಸಾಮಾನು ಸಾಗಿಸಲಿಕ್ಕೆ”. +ಹೇರಂಬನ ಮಗಳು ಕಾಫಿ ಲೋಟ ತಂದಿರಿಸಿದಳು. ಹೇರಂಬ ‘ತೆಗೆದುಕೋ’ ಎಂದ. ಗಣಪಯ್ಯ ಯಾಂತ್ರಿಕವಾಗಿ ಅದನ್ನೆತ್ತಿಕೊಂಡು ತುಟಿಗಿರಿಸಿದ. ಹೇರಂಬನ ಮಾತಿಗೆ ಏನು ಉತ್ತರ ಕೊಡುವುದೆಂಬುದೇ ಅರಿಯದೆ ಕೊರಡಿನ ಏಟು ತಿಂದವನಂತೆ ನಾಲಿಗೆ ಕಚ್ಚಿಕೊಂಡು ಕುಳಿತ. +“ಹೇರಂಬ….ನಿನ್ನ ಕೆಲಸ ಆಯ್ತು. ನಾನು ಎಲ್ಲಿಗೆ ಹೋಗಲಿ? ಏನು ಮಾಡಲಿ? ಸರಕಾರ ಜಮೀನು ಪರಿಹಾರ ಕೊಡೋತನಕ ನಾನಂತೂ ಇಲ್ಲಿಂದ ಹೋಗಬಾರದು ಅಂತ ತೀರ್ಮಾನ ಮಾಡಿದೀನಿ. ನೀರು ಏರಿ ಹಳ್ಳಿ ಮುಳುಗಿ ನಾವೆಲ್ಲ ಸತ್ರೂ ಚಿತೆಯಿಲ್ಲ….ಇಲ್ಲಿಂದ ಹೋಗೋದಂತೂ ಸುಳ್ಳು” +“ಮತ್ತೂ ಒಂದ್ಸಾರಿ ಆಫೀಸಿಗೆ ಹೋಗಿ ಬಾ ಗಣಪಯ್ಯ, ಹತ್ತೋ ಐದೋ ಕೊಟ್ರೆ ಕೆಲಸ ಬೇಗ ಆದೀತು.” +ಕೊಟ್ಟಾಯ್ತು. ನೂರರ ಮೇಲಾಯ್ತು ಕೊಟ್ಟಿದ್ದು; ಇನ್ನು ಪ್ರಾಣ ಕೊಡೋದೇ ಬಾಕಿ”. +ಹೆಗಲಮೇಲಿನ ವಸ್ತ್ರವನ್ನು ಫಟೀರನೆ ಝಾಡಿಸಿ ಮತ್ತೆ ಹೆಗಲಮೇಲೆ ಅದನ್ನು ಹಾಕಿಕೊಂಡು ಹೊರಟ ಗಣಪಯ್ಯ- +“ನಾನು ಬರ್ತೀನಿ ಹೇರಂಬ” +ಎಂದವನೇ ಹೇರಂಬನ ಮನೆಯಿಂದ ಹೊರಬಿದ್ದ. +ಅಂದುಕೊಂಡಹಾಗೆಯೇ ಆಯಿತು. ಹೇರಂಬ, ಹಸಲರ ಬೈರ ಇಲ್ಲಿಂದ ಹೋದಮೇಲೆ ಹೊಸಮನೆ ಹಳ್ಳಿಯಲ್ಲಿ ನಾವು ಮೂವರೆ. ತಾನು, ತನ್ನ ತಂದೆ, ಹೆಂಡತಿ ನಾಗವೇಣಿ. ಶರಾವತಿ ಹಳ್ಳಿಯ ಸುತ್ತ ಆಕ್ರಮಣ ಮಾಡಿಕೊಂಡು, ಮೇಲೆ ಮೇಲೆ ಏರುತ್ತಿರಲು ನಾವು ಮೂವರೇ ಈ ದ್ವೀಪದಲ್ಲಿ ನಾಲ್ಕು ತಿಂಗಳುಗಳನ್ನು ಕಳೆಯಬೇಕು. ಈ ಮಳೆಗಾಲ ಮುಗಿಯುವ ತನಕ ಈ ದ್ವೀಪಕ್ಕೆ ಯಾವುದೇ ರೀತಿಯ ಹೊರಗಿನ ಸಂಪರ್ಕವಿರುವುದು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಇಲ್ಲಿ ಬದುಕುವುದು ಹೇಗೆ? ಈ ರಗಳೆಯೇ ಬೇಡ. ಎಲ್ಲಿಗಾದರೂ ಹೋಗೋಣವೆಂದರೆ, ಎಲ್ಲಿಗೆ ಹೋಗುವುದು? ತೋಟ, ಹೊಲಗಳ ಮೇಲೆ ಅವಲಂಬಿಸಿಕೊಂಡಿರುವ ತಾನು ಬದುಕುವುದಾದರೂ ಹೇಗೆ? +ಮನೆಗೆ ಬರುತ್ತಿರುವಂತೆಯೇ ಅಪ ಕಾತರದ ಧ್ವನಿಯಲ್ಲಿ ಕೇಳಿದ- +“ಮಾಣಿ, ಹೇರಂಬ ಏನಂತೆ?” +“ಅವನು ಹೊರಟಿದಾನೆ ಅಪ್ಪಯ್ಯ, ಅವನಿಗೆ ಸರಕಾರ ಜಮೀನು ಕೊಟ್ಟಿದೆಯಂತೆ….ಹಣಾನ ಮಂಜೂರು ಮಾಡಿದೆಯಂತೆ….ಹೊಸ ಜಮೀನಿಗೆ ಹೋಗಿ ಸಾಗುವಳಿ ಮಾಡ್ತೀನಿ ಅಂತಿದಾನೆ ಅವನು….ಕೊಟ್ಟಿಗೆಮನೆ ಕೀಳ್ತಿದಾನೆ….ನಾಳೆ ನಾಡಿದ್ದರಲ್ಲಿ ಅವನು ಇಲ್ಲಿಂದ ಸಂಸಾರಸಮೇತ ಹೋಗೋದಂತೂ ನಿಜ….” +“ಹೌದಾ” +ಮುದುಕ ಅಡಿಕೆ ಮರದ ಗರಿಗಳು ಗಾಳಿಗೆ ಕಂಪಿಸುವುದನ್ನೇ ನೋಡಿದ. +“ಮಾಣಿ ಈ ವರ್ಷ ನೀರು ಇಲ್ಲಿಗೆಲ್ಲ ಬರುತ್ತಂತ?” +“ಅದೇನಾಗುತ್ತೋ….ನಾವು ಮಾತ್ರ ಇಲ್ಲಿಂದ ಹೋಗೋ ಹಾಗಿಲ್ಲ…” +ಮಗ ನೆಲವನ್ನು ಒದೆಯುತ್ತ ಒಳಹೋದುದನ್ನು ನೋಡಿ ಮುದುಕ ನಿಟ್ಟುಸಿರು ಬಿಟ್ಟ. +ಈ ಒಂದು ವರ್ಷವನ್ನೂ ಇಲ್ಲಿ ಕಳೆದರಾಗುತ್ತಿತ್ತು ಎಂಬುದು ಮುದುಕನ ಬಯಕೆ ಹೊಸಮನೆಹಳ್ಳಿ ಬಿಟ್ಟು ಹೊರಡಬೇಕೆನ್ನುವ ವಿಚಾರ ಬಂದರೆ ಮುದುಕನ ಕೈಕಾಲು ಬಿದ್ದುಹೋಗುತ್ತವೆ. ಆತ ನೆಲಹಿಡಿದು ಕುಳಿತುಬಿಡುತ್ತಾನೆ. ಈ ತುಂಡು ನೆಲದ ಮೇಲೆ ಅದೇನೋ ಪ್ರೀತಿ, ವ್ಯಾಮೋಹ, ಹೆಣ್ಣು ತನ್ನ ತೌರಿಗಾಗಿ ಹಂಬಲಿಸುವಂತಹಾ ಮನೋಭಾವ. ಈ ಪ್ರದೇಶವನ್ನು ಬಿಟ್ಟು ಹೋಗಬಾರದೆನ್ನುವ ಛಲ. ಮುಳುಗಿದ ಮೇಲೂ ಇಲ್ಲಿ ನಿಲ್ಲಲು ಸಾಧ್ಯವಿಲ್ಲವೆ ಎಂದಾತ ಯೋಚಿಸಿದ್ದು ನೂರು ಸಲ. ಡ್ಯಾಮು ನಿಲ್ಲದೆ ಒಡೆದುಹೋಗಲಿ ಎಂದು ಹಾರೈಸಿದ್ದು ಸಾವಿರ ಬಾರಿ, ಬಂದ ಬಂದ ಸರಕಾರಿ ನೌಕರರನ್ನೆಲ್ಲ ಅಡ್ಡಗಟ್ಟಿ ಮುದುಕ ಕೇಳುತ್ತಿದ್ದ-ಸೀತಾಪರ್ವತ ನಿಜವಾಗಿಯೂ ಮುಳುಗಿಹೋಗುತ್ತದೆಯೇ? ಎಂದು. ಆ ನೌಕರರು ಏನೇನೋ ಉಡಾಫೆಯ ಮಾತನಾಡುವುದಿತ್ತು. ಹಲವರು ಇರುವ ವಿಷಯ ಹೇಳುತ್ತಿದ್ದರು. ಗುಡ್ಡದ ಮೇಲೆ ಹತ್ತು ಅಡಿ ನಿರು ನಿಲ್ಲುತ್ತದೆಂದೂ, ಆದರೆ ಇಷ್ಟು ನೀರು ನಿಲ್ಲಲು ಡ್ಯಾಮು ಪೂರ್ಣವಾಗಿ ಕಟ್ಟಿ ಮುಗಿಯಬೇಕೆಂದೂ ಅವರು ಹೇಳುತ್ತಿದ್ದರು. ಇನ್ನೂ ಮೂರು ವರ್ಷಗಳ ವರೆಗೆ ಹೊಸಮನೆಹಳ್ಳಿಗೆ ಯಾವ ಅಪಾಯವೂ ಇಲ್ಲವೆಂಬ ಭರವಸೆಯನ್ನೂ ಕೆಲವರು ನೀಡಿದ್ದರು. +ಅಲ್ಲಿಯವರೆಗಾದರೂ ಇಲ್ಲಿರಬಹುದಲ್ಲ ಎಂಬುದು ಮುದುಕನ ವಾದ. ಈಗಲೇ ಪರಿಹಾರಕ್ಕೆ, ಜಮೀನಿಗೆ ಏಕೆ ವರಾತ ಹಚ್ಚಬೇಕು. ಅದು ನಿಧಾನವಾಗಿ ಬರಲಿ. ಈಗಂತೂ ಉಣ್ಣಲು ಕಡಿಮೆಯಾಗದಷ್ಟು ಇದೆಯಲ್ಲ-ಇದು ಮುದುಕಳಿ ವಾದ. ಏನೋ ಹಳ್ಳಿಯ ಸುತ್ತ ನೀರು ನಿಲ್ಲಬಹುದು. ಕೂಲಿಯಾಳುಗಳು ಸಿಗದೇ ಹೋಗಬಹುದು, ಇಷ್ಟಕ್ಕೇ ಗಾಬರಿಯಾಗುವುದೇಕೆ? ಒಂದು ಮಳೆಬಿದ್ದಾಕ್ಷಣ ತೋಟದ ಹೊಲದ ಕೆಲಸಗಳನ್ನು ಮುಗಿಸಿದರೆ, ಮತ್ತೆ ಮಳೆಗಾಲ ಮುಗಿದ ಮೇಲೆ ತಾನೆ ಕೊಯಿಲು ಇತ್ಯಾದಿ. ಮಧ್ಯದ ಚಿಲ್ಲರೆ ಕೆಲಸಗಳನ್ನು ಮಾಡಲು ಯಾರನ್ನಾದರೂ ಇಟ್ಟುಕೊಂಡರಾಯಿತು. ಮುದುಕನೇನೋ ಒಂದು ನಿರ್ಧಾರಕ್ಕೆ ಬಂದ. ಆದರೆ ಅವನ ಮಗ? +ಗಣಪಯ್ಯ ಸರಕಾರವನ್ನು ಶಪಿಸಿಹಾಕಿದ. ನಾಳೆ ಹೋಗಿ ಮುಳುಗಡೆ ಆಫೀಸನ್ನೇ ಕೆಡವಿಹಾಕುವವನಂತೆ ಕೂಗಾಡಿದ. ನಾಗವೇಣಿ ಇಲ್ಲಿರುವುದು ಬೇಡ, ನಾಲ್ಕು ತಿಂಗಳ ಮಟ್ಟಿಗೆ ಹೋಗಿ ತನ್ನ ತಂದೆಯ ಮನೆಯಲ್ಲಿರೋಣ ಎಂದಾಗ- +“ನಾಲ್ಕು ತಿಂಗಳಾದ ಮೇಲೇನು ಶೆಗಣಿ ತಿನ್ನೋದ” ಎಂದು ಹೆಂಡತಿಯ ಮೇಲೆ ತಿರುಗಿಬಿದ್ದ. +“ಸರಕಾರದೋರು ನನಗೆ ಜಮೀನು, ಪರಿಹಾರ ಕೊಟ್ರು ಅದು ಈಗ ನಾನು ತೊಕೊಳೋ ಕುಳ ಅಲ್ಲ. ಈ ಮಳೆಗಾಲದಲ್ಲಿ ನಾನಿಲ್ಲಿ ಇದ್ದು ಬೆಳೆ ಬೆಳೆಯೋನೇ ಸೈ…. ಅದೇನು ಬೇಕಾದ್ರೂ ಆಗಲಿ…” +ಎಂದು ತೋಳೇರಿಸಿದ. ತಂದೆ ಒಳಬಂದು ತನ್ನ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದಾಗ ಇನ್ನೂ ಖುಷಿಪಟ್ಟ. ನಿನಗೆ ಅಷ್ಟೊಂದು ಬೇಸರವಾಗಿರುವುದಾದರೆ ನೀನು ನಿನ್ನ ತಂದೆಯ ಮನೆಗೆ ಹೋಗು ಎಂದು ಬೇರೆ ಹೆಂಡತಿಗೆ ಬೆದರಿಕೆ ಹಾಕಿದ. ಹೇರಂಬ ಹೊಲ-ತೋಟ ಬಿಟ್ಟು ಹೋಗುತ್ತಿದ್ದಾನೆ. ಅದನ್ನೂ ತಾನೇ ನೋಡಿಕೊಳ್ಳಬಾರದೇಕೆ ಎಂದು ಕೋಪದ ನಡುವೆ ಹೊಸದೊಂದು ವಿಚಾರ ತಲೆಯಲ್ಲಿ ಹೊಕ್ಕಿದ್ದರಿಂದ ಶಾಂತನಾದ. ಹೇರಂಬ ಅಡಕೆ ಮರಗಳನ್ನು, ಭತ್ತದ ಸಸಿಗಳನ್ನು ಕಿತ್ತು, ಒಯ್ಯುವುದು ಸಾಧ್ಯವಿಲ್ಲ. ಅವುಗಳನ್ನು ನೋಡಿಕೊಳ್ಳಲು ಇಲ್ಲಿಯಾರೂ ಇರುವುದಿಲ್ಲ. ಅವನು ಹೋಗುವಾಗ ಒಂದು ಮಾತು ಕೇಳಿದರೆ, ಆಯಿತು ಎಂದಾನು. ಜೊತೆಗೆ ಫಸಲು ಬಂದ ಮೇಲೆ ಏನಾದರೂ ತಂದುಕೊಡುತ್ತೇನೆಂದು ಹೇಳುವುದು. ಹೀಗೆ ಆದರೆ ಒಳ್ಳೆಯದೆ. ಮುಳುಗಡೆ ಆಫೀಸಿನವರು ಬಂದು ತಕರಾರು ಮಾಡಿದರೆ ಒಂದೆರಡು ಕಾಸು ಎಸೆದರಾಯಿತು. ನೋಡೋಣ. +ಹೆಂಡತಿಯತ್ತ ತಿರುಗಿ ಹುಮ್ಮಸ್ಸಿನಿಂದ ಕೇಳಿದ- +“ನೀರು ಕಾದಿದೆ ಏನೆ?” +ನಾಗವೇಣಿ ಒಣಗಿದ ಬದನೆಕಾಯಿ ಮುಖ ಮಾಡಿಕೊಂಡಿದ್ದವಳು ಹುಂಞ್ ಎಂದಳು. +ಜಗುಲಿಯ ಮೇಲಿನ ಅಡ್ಡಗಳುವಿನಲ್ಲಿದ್ದ ಪಾಣೀಪಂಚೆಯನ್ನು ತೆಗೆದು ಸೊಂಟಕ್ಕೆ ಸುತ್ತಿಕೊಂಡ. ಉಟ್ಟಪಂಚೆ ಸಡಿಲಿಸಿ, ಮೌಂಜಿಯನ್ನು ಪಾಣೀ ಪಂಚೆಯ ಮೇಲೆ ಎಳೆದುಕೊಂಡ. ತೋಳು ಕೆರೆದುಕೊಳ್ಳುತ್ತ ಬಚ್ಚಲಿಗೆ ನಡೆದ. +ಸೀತಾಪರ್ವತದ ನೆತ್ತಿಯಮೇಲಿನ ನೀರ ಝರಿಯೊಂದರ ತಿಳಿನೀರು, ಅಡಿಕೆ ಮರದ ದೋಣಿಯ ಮೂಲಕ ಹರಿದು ನೇರವಾಗಿ ಬಚ್ಚಲು ಮನೆಗೇನೇ ಬಂದು ಬೀಳುತ್ತಿತ್ತು. ನೀರಿನ ತೊಟ್ಟಿಯಲ್ಲಿ ನೀರು ಧಪಧಪ ಎಂದು ಬೀಳುವ ಸದ್ದು ಕಿವಿಗಳಿಗೆ ಹೊಂದಿಕೊಂಡು ಹೋಗಿತ್ತು. ನಾಗವೇಣಿ ತೊಟ್ಟಿಯ ನೀರನ್ನು ಹಂಡೆಗೆ ಮೊಗೆದಳು. ಬಚ್ಚಲು ಒಲೆಗೆ ಕುಂಟೆಯೊಂದನ್ನು ತುರುಕಿ, ಸೀಗೇ ಪುಡಿಯನ್ನು ಬಚ್ಚಲ ಕಟ್ಟೆಯ ಮೇಲೆ ತಂದಿರಿಸಿ, ತೆಂಗಿನ ಕತ್ತ ತರಲು ಒಳ ಹೋದಾಗ, ಗಣಪಯ್ಯ ಬಿಸಿಬಿಸಿ ನೀರನ್ನು ತಲೆಯ ಮೇಲೆ ಸುರಿದುಕೊಂಡು ಹಾಂ ಎಂದ. ಆ ವರೆಗಿನ ಆಯಾಸ ದಣಿವು ಎಲ್ಲವೂ ಮಾಯವಾದಂತಿತ್ತು. +ಹೇರಂಬನದು ಒಂದು ರೀತಿಯ ಸ್ವಭಾವ. ಅತಿಯಾಸೆ ಎನ್ನುವುದೇ ಇಲ್ಲದ ವ್ಯಕ್ತಿ ಆತ. ಮೊದಲು ಹೊಸಮನೆಯಲ್ಲೇ ಇದ್ದು ತೋಟ-ಹೊಲ ನೋಡಿಕೊಂಡು ಮಳೆಗಾಲ ಮುಗಿದ ಮೇಲೆ ಹೊಸ ಜಮೀನಿಗೆ ಹೊರಟುಬಿಡುವುದೆಂದು ಯೋಚಿಸಿದನಾದರೂ ಆ ನಂತರ ಸರಕಾರ ಪರಿಹಾರ ಕೊಟ್ಟು ಹೊಸ ಜಮೀನು ಕೊಟ್ಟಮೇಲೂ ಈ ಹಳೆಯದರ ಮೇಲೆಯೇ ಏಕೆ ಅವಲಂಬಿಸಿಕೊಂಡಿರಬೇಕು ಎಂದು ಯೋಚಿಸಿದ. ಅನಂತಪುರದ ಹತ್ತಿರದ ಆ ಹೊಸ ಸ್ಥಳವು ಅವನ ಮನಸ್ಸಿಗೆ ತುಂಬಾ ಹಿಡಿಸಿತಲ್ಲದೇ ಪಟ್ಟಣದ ವ್ಯಾಮೋಹವೂ ಸ್ವಲ್ಪ ಇದ್ದುದರಿಂದ ಇಲ್ಲಿಗೆ ಹೊಸಮನೆಯ ವ್ಯಾಮೋಹ ಸಾಕು ಎಂದು ನಿರ್ಧರಿಸಿದ. ನಾಳೆ ಹೇಗೋ, ತನ್ನದು ತುಂಬಿದಮನೆ. ಹೆಂಡತಿ ತುಂಬಿದ ಬಸುರಿ ಬೇರೆ, ಚಿಕ್ಕಚಿಕ್ಕ ಮಕ್ಕಳು, ಶರಾವತಿಯ ನೀರು ಹಳ್ಳಿಯ ಸುತ್ತ ಘೇರಾಯಿಸಿಕೊಂಡಾಗ ಏನಾದರೂ ಬೇಕಾದರೆ? ಘೇರಾಯಿಸಿಕೊಂಡ ನೀರು ಇಳಿಯದೇ ಹೋದರೆ? ಇಂಜಿನಿಯರುಗಳ ಲೆಕ್ಕಾಚಾರದಲ್ಲಿ ಹೆಚ್ಚುಕಡಿಮೆಯಾಗಿ ನೀರು ಏರಿ ಹಳ್ಳಿ ಮುಳುಗಿದರೆ? ಇಷ್ಟು ದಿನ ಇಲ್ಲಿ ಇದ್ದುದೇ ಸಾಕು, ಇನ್ನು ಹೊರಡಬೇಕು… +ಹೇರಂಬ ಹೊರಟಿದ್ದೂ ಆಯಿತು. ಸರಕಾರಿ ಲಾರಿಗಳು ಬಂದು ಅವನ ಸಾಮಾನುಗಳನ್ನೆಲ್ಲ ಹೊತ್ತುಕೊಂಡು ಹೋದವು. ಮರ, ಹಂಚು, ಹುಲ್ಲು, ಎಲ್ಲವನ್ನೂ ಆತ ಸಾಗಿಸಿದ. +ಗಣಪಯ್ಯ ಹೋಗಿ- +‘ಹೇರಂಬ, ನನ್ನ ವಿಚಾರ ಹೀಗಿದೆ” +ಎಂದಾಗ ಹೇರಂಬ- +“ನಾನೇ ಹೇಳಬೇಕೂಂತಿದ್ದೆ…ನೀನು ಇಲ್ಲೇ ಉಳೀಯೋದಾದ್ರೆ ನಾನು ಈವರೆಗೂ ನೋಡ್ಕೋತಿದ್ದ ತೋಟ-ಹೊಲಾನ ನೀನೇ ನೋಡ್ಕೋ. ಹಾಗೆ ನೋಡಲಿಕ್ಕೆ ಹೋದರೆ ಇದು ನಂದಲ್ಲ…ನಂದಾಗಿತ್ತು. ಅಷ್ತೆ…ಒಂದು ಅಡಕೇನೂ ನೀನು ನನಗೆ ಕೊಡೋದು ಬೇಡ…ಭತ್ತ ನಾನು ಬಿತ್ತಿದೀನಿ…ಅದನ್ನು ಕೊಡೋದು ಬಿಡೋದು ನಿನಗೆ ಸೇರಿದ್ದು…ಯಾಕೆ ಅಂದ್ರೆ ನೀನು ಮುಂದೆ ನನಗಿಂತ ಹೆಚ್ಚಾಗಿ ಕೆಲಸ ಮಾಡಬೇಕಲ್ಲ…” +ಎಂದ. ಕೊನೆಗೆ ಅವನೇ ಮತ್ತೆ- +“ಈಗ ಇಲ್ಲಿ ಇರೋವ್ರು ನೀವು ಮೂವರು…ನಿನ್ ತಂದೆ ಏನೂ ಕೆಲಸ ಮಾಡಲಾರ…ನೀನು ನಿನ್ ಹೆಣ್ತಿ ಅದೆಷ್ಟು ಮಾಡ್ತೀರ…ಬೇಕಾದ್ರೆ ಯಾರಾದ್ರೂ ದೀವ್ರನಾಯ್ಕರು ಸಿಕ್ರೆ ಕೆಲಸಕ್ಕೆ ಇಟ್ಕೊ…” +ಎಂದ. ಗಣಪಯ್ಯ ತಲೆಯಾಡಿಸಿದ. +“ನೀನು ಹೇಳೋದು ಸರಿಯೆ…ಧೈರ್ಯಕ್ಕೆ ಆಸರೆಗೆ ಒಂದಿಬ್ರು ಬೇಕು…ಅರಲಗೋಡಿನಲ್ಲಿ ಇಲ್ಲ ಹಿರೇಮನೇಲಿ ಯಾರಾದ್ರು ಸಿಗ್ತಾರೋ ನೋಡ್ತೀನಿ…” +ಎಂದ ಗಣಪಯ್ಯ. +ಹೇರಂಬ ಹೆಗಡೆ ಅವನ ಹೆಂಡತಿ ಮಕ್ಕಳು, ಹಸಲರ ಬೈರ ಅವನ ಹೆಂಡತಿ ಮಕ್ಕಳು ಹೊಸಮನೆಹಳ್ಳಿಗೆ ವಿದಾಯ ಹೇಳಿ ಹೊರಟರು. ಮೂರು ದಿನಗಳಿಂದ ಓಡಿಯಾಡುತ್ತಿದ್ದ ಎರಡು ಲಾರಿಗಳು ಕೊನೆಯ ಬಾರಿಗೆ ಹೇರಂಬ ಹೆಗಡೆ ಹಾಗೂ ಅವನ ಮನೆಯವರನ್ನು, ಬೈರ ಹಾಗೂ ಅವನ ಹೆಂಡತಿ ಮಕ್ಕಳನ್ನು ಹತ್ತಿಸಿಕೊಂಡು ಶರಾವತಿ ನದಿಯ ಮಗ್ಗುಲಲ್ಲಿಯೇ ತಾತ್ಕಾಲಿಕವಾಗಿ ಮಾಡಿದ ರಸ್ತೆ ಹಿಡಿದು ತಾಳಗುಪ್ಪದ ಹೆದ್ದಾರಿಯತ್ತ ನಡೆದವು. +ಎರಡೂ ಲಾರಿಗಳು ಅತ್ತ ಹೊರಟುಹೋದ ಮೇಲೆ ಹೊಸಮನೆಯ ಮೂವರಿಗೆ ತುಂಬಾ ಬೇಸರವಾಯಿತು. ಅಂಜಿಕೆಯಾಯಿತು. ಕೆಡುಕೆನಿಸಿತು. ಈಗಿಂದೀಗ ಹೊರಟು ಬಿಡಬೇಕು ಎನಿಸಿತು. ಆದರೆ ಇದೆಲ್ಲ ತಾತ್ಕಾಲಿಕ. ಗಣಪಯ್ಯ ಮಳೆಗಾಲಕ್ಕೆ ಸೌದೆ ಮಾಡಬೇಕೆಂದು ಹೆಗಲಮೇಲೆ ಕೊ‌ಆಡಲಿ ಹಾಕಿಕೊಂಡು ಹೊರಟ. ನಾಗವೇಣಿ ಕೊಟ್ಟಿಗೆಯತ್ತ ಬಂದ ಬೆಳ್ಳಿ ಕರುವಿಗೆ ಹಾಲು ಕುಡಿಸಬಹುದೆಂದು ಅತ್ತ ಓಡಿದಳು. ಮುದುಕ ಚಪ್ಪರದ ಹೊರಗೆ ಕುಳಿತು ಒಣಹಾಕಿದ್ದ ಉದ್ದಿನ ಹಪ್ಪಳಕ್ಕೆ ಕಾಗೆ ಬಾರದಂತೆ ನೋಡಿಕೊಳ್ಳತೊಡಗಿದ. ದೂರದ ಶರಾವತಿಯ ಮೇಲಿನಿಂದ ಬೀಸಿಬಂದ ಗಾಳಿ ತಣ್ಣಗಿತ್ತು. ನೀಲಿ ಆಕಾಶದಲ್ಲಿ ಬಿಳಿ ಮುಗಿಲೊಂದು ತೆಳುವಾಗಿ ತೇಲುತ್ತಿತ್ತು. +* +* +* +ಗಣಪಯ್ಯ ಕಾರ್ಗಲ್ಲಿನ ಮುಳುಗಡೆ ಆಫೀಸಿಗೆ ಹೋದ. ಮುದಿ ಜವಾನ ಸಾಹೇಬರ ಬಾಗಿಲು ಕಾಯುತ್ತ ಕುಳಿತವ- +“ಏನು ಸ್ವಾಮಿ, ಬೋ ದೂರ ಬಂದ್ರಿ” +ಎಂದು ಹುಳುಕು ಹಲ್ಲು ತೋರಿಸಿದ. ಗಣಪಯ್ಯ ಅವನನ್ನು ಪಕ್ಕಕ್ಕೆ ತಳ್ಳಿ ಸಾಹೇಬರ ಎದುರು ಹೋಗಿ ನಿಂತು ಹೊಸಮನೆಹಳ್ಳಿಯ ಹೇರಂಬನಿಗೂ, ಪರಮೇಶ್ವರಪ್ಪನಿಗೂ ಪರಿಹಾರ, ಜಮೀನು ಕೊಟ್ಟಿರುವ ವಿಷಯ ಹೇಳಿ- +“ನಾನೇನು ಪಾಪ ಮಾಡಿದ್ದೆ ಸ್ವಾಮಿ….ನಾನು, ನನ್ನ ತಂದೆ, ಹೆಂಡತಿ ಈ ವರುಷದ ಮಳೆಗಾಲದ ಜಲಸಮಾಧಿಯಾಗಲಿ ಅಂತ ನಿಮ್ಮಾಸೆಯೋ ಹೇಗೆ?” +ಎಂದು ಕೇಳಿದ. +ಸಾಹೇಬರು ಕೊಂಚ ಸೌಮ್ಯ ಸ್ವಾಭಾವದವರು. ಹೆಚ್ಚು ತಾಳ್ಮೆಯುಳ್ಳವರು. ಹಳ್ಳಿಗರ ದುಡುಕು ಸ್ವಾಭಾವವನ್ನು ಅರಿತವರು. ಗಣಪಯ್ಯನ ಜೋರು ಇಳಿದಮೇಲೆ ಹತ್ತಿರದ್ ಖುರ್ಚಿಯನ್ನು ತೋರಿಸಿ ಅವರೆಂದರು- +“ಕೂತ್ಕೊಳ್ಳಿ ಇವ್ರೆ….” +ಗಣಪಯ್ಯ ಸ್ಟೂಲಿನ ಮೇಲೆ ಕುಳಿತ. ತಾನು ಹಾಗೆಲ್ಲ ಕೂಗಿಕೊಳ್ಳಬಾರದಿತ್ತು ಎಂದು ಈಗ ಅವನಿಗೂ ಅನ್ನಿಸಿತು. ಮತ್ತೆ ಹೊಸದಾಗಿ ಹೇಳುವವನಂತೆ ಎಲ್ಲವನ್ನೂ ಅರಿಕೆ ಮಾಡಿಕೊಂಡ. ಪರಮೇಶ್ವರಯ್ಯ, ಹೇರಂಬರು ಪರಿಹಾರ ಪಡೆದು ಹೋದುದು ತಾನು ಯಾವ ಪರಿಹಾರವೂ ಇಲ್ಲದೇ ಮುಳುಗಡೆಯಾಗಲಿರುವ ಆ ಹಳ್ಳಿಯಲ್ಲಿ ಇರಬೇಕಾಗಿ ಬಂದಿರುವುದನ್ನು ಹೇಳಿದ. ಸಾಹೇಬರು ಬೆಲ್ಲು ಕುಟ್ಟಿ ಜವಾನನನ್ನು ಕರೆದು ಅದಾರ ಹೆಸರನ್ನೋ ಹೇಳಿ- +“ಅವರನ್ನ ಕರಿ” +ಎಂದರು. ಅಂಜುತ್ತ ಅಳುಕುತ್ತ ಎದುರುಬಂದು ನಿಂತವ ಹೊಸಮನೆಗೆ ಬಂದು ಹೋಗಿದ್ದೆ ಸರ್ವೇಯರ್. +“ಏನ್ರಿ ಸೆಟ್ರೆ… ಇವರದೇನೋ ಕೇಸ್ ಸೆಟ್ಲ್ ಆಗಿಲ್ವಂತೆ ಯಾಕೆ?” +“ಆಗಿದೆಯಲ್ಲ ಸಾರ್… ಚೆಕ್ ರೆಡಿಯಾಗಿದೆ…” +ಸೆಟ್ಟಿ ಮೈ ಪರಚಿಕೊಂದ. +“ಏನ್ರಿ ಆಗಿರೋದು… ಹೊಸಮನೆಹಳ್ಳಿಲಿರೋ ಎಲ್ಲರಿಗೂ ಜಮೀನು, ಪರಿಹಾರ ಕೊಟ್ಟಿದೀರೇನ್ರಿ ನೀವು?” +ಸೆಟ್ಟಿಯ ಹಾವಭಾವ ಕಂಡೇ ಸಾಹೇಬರು ಎಲ್ಲವನ್ನೂ ಅರ್ಥಮಾಡಿಕೊಂಡರು. +“ಪರಮೇಶ್ವರಪ್ಪ, ಹೇರಂಬ ಹೆಗಡೆ ಇವರಿಗೆ ಕೊಟ್ಟಿದೆ ಸಾರ್” +“ಈ ಇವರಿಗೆ ಹೇಳ್ರಿ-” +“ಇಲ್ಲ ಸಾರ್” +“ಯಾಕೆ?” +ಶೆಟ್ಟಿ ಸಣ್ಣಗೆ ಬೆವರಲಾರಂಭಿಸಿದ. +“ಇವರು ಸಾಕಷ್ಟು ಕೊಡಲಿಲ್ವೇನೋ ಪಾಪ ನಿಮಗೆ” +ಸಾಹೇಬರು ಹಗುರವಾಗಿ ಮೊಟಿಕಿಸಿದರು. ಶೆಟ್ಟಿ ನಾಲಿಗೆ ಕಚ್ಚಿಕೊಂಡ. ಚೌಕದಲ್ಲಿ ಚಪ್ಪಲಿ ಏಟು ತಿಂದವನಂತೆ. ತಲೆತಗ್ಗಿಸಿ ನಿಂತಾಗ ಸಾಹೇಬರೆಂದರು- +“ಏನ್ರಿ ಆಯ್ತು ಇವರ ಕೇಸಿಗೆ?” +“ಫೈಲ್ ಕಳೆದು ಹೋಗಿದೆ ಸಾರ್” +“ಹೀಗೋ…’ +ಸಾಹೇಬರು ಗಣಪಯ್ಯನತ್ತ ತಿರುಗಿದರು. ಅವರಿಗೂ ಬೇಸರವೆನಿಸಿತ್ತು. ಯಾವ ಪಾಪದಲ್ಲೂ ಭಾಗಿಗಳಲ್ಲದ ರೈತಾಪಿಜನ ವಿನಾ ಕಾರಣ ತೊಂದರೆ ಅನುಭವಿಸುವುದನ್ನು ಅವರೂ ಸಹಿಸದಾದರು. ಶೆಟ್ಟಿಯನ್ನು ನಿಲ್ಲಿಸಿಕೊಂಡು, ಗಣಪಯ್ಯನಿಗೆ ಅವರೆಂದರು. +“ನೋಡಿ ಇವ್ರೆ, ನಿಮಗೆ ಬರಬೇಕಾಗಿರೋ ಹಣ, ಜಮೀನು ಇತ್ಯಾದಿ ಏನಿದೆ ಅದನ್ನು ಈ ಮಳೆಗಾಲ ಮುಗಿದ ತಿಂಗಳಿಗೇನೇ ನಿಮಗ ಕೊಡಿಸೋ ಜವಾಬ್ದಾರಿ ನನಗಿರಲಿ…ಹೊಸಮನೆಹಳ್ಳಿ ಸುತ್ಲೂ ನೀರು ನಿಂತ್ರೂ ಅದು ಅನಂತರ ಇಳಿದುಹೋಗುತ್ತೆ. ನೀವೇನೂ ಗಾಬ್ರಿಯಾಗಬೇಡ್ರಿ, ಹೋಗಿಬನ್ನಿ” +ಗಣಪಯ್ಯ ಅವರ ಮೆದುದನಿಗೆ ಮುಗ್ಧನಾಗಿ ಅಲ್ಲಿಂದ ಹೊರಟ. ಬಾಗಿಲು ದಾಟುತ್ತಿರುವಾಗ ಸಾಹೇಬರು ಶೆಟ್ಟಿಯ ಮೇಲೆ ರೇಗಿ ಬೀಳುತ್ತಿರುವುದು ಕೇಳಿಸಿತು. ಮನಸ್ಸಿಗೆ ಸಂತೋಷವೂ ಆಯಿತು. +ಗಣಪಯ್ಯ ಬಸ್ಸು ಹತ್ತಿ ಅರಲಗೋಡಿಗೆ ಬಂದ. ಅಲ್ಲಿಂದ ಕಾಲುದಾರಿ ಹಿಡಿದು ಹೊಸಮನೆಯತ್ತ ತಿರುಗಿದ. ಹೊಸಮನೆಯ ಋಣ ಇನ್ನೂ ಇದೆ ಎಂಬುದು ಖಚಿತವಾಗಿತ್ತು. ನೋಡೋಣ ಏನಾಗುತ್ತದೋ ಎಂದುಕೊಂಡು ಗಣಪಯ್ಯ ಹಾದಿ ತುಳಿಯಲಾರಂಭಿಸಿದ. ದೂರದಿಂದ ಸೀತಾಪರ್ವತ ಕಣ್ಣಿಗೆ ಬಿತ್ತು. ಸೀತಾಪರ್ವತದ ನೆತ್ತಿಯ ಮೆಲೆ ಕಪ್ಪು ಮೋಡಗಳ ಹಿಂದು ತೇಲುತ್ತಿತ್ತು. +ರೋಹಿಣಿ +ಅಷ್ಟು ದೂರದಲ್ಲಿ ಶರಾವತಿ ಹರಿಯುತ್ತದೆಂದರೆ ಶರಾವತಿಯ ಈ ದಡದ ಮೇಲೆ ಹೊಲಗಳ ಸಾಲು. ಗುಡ್ದದ ಇಳಿಜಾರು ಮೈಯನ್ನೇ ಬಯಲನ್ನಾಗಿ ಮಾಡಿಕೊಂಡ ಹೊಲಗಳು. ಪರಮೇಶ್ವರಪ್ಪನ ಹೊಲಗಳೆಲ್ಲ ಈಗ ಹಾಳುಬಿದ್ದಿವೆ. ಅಲ್ಲೆಲ್ಲ ಗಿಡಗಳು ಪೊದೆಗಳು ಬೆಳೆದಿವೆ. ಅವನ ಅಡಿಕೆ ತೋಟವನ್ನು ನೆಲಸಮ ಮಾಡಿದ್ದು ಆರು ತಿಂಗಳುಗಳ ಹಿಂದೆ. ಸಾಗರಕ್ಕೆ ಅದಾರೋ ಮಂತ್ರಿಗಳು ಬರುತ್ತಾರೆಂದು ಇಲ್ಲಿಯ ಅಡಿಕೆ ಮರಗಳನ್ನೆಲ್ಲ ಕೊಯ್ದುಕೊಂಡು ಹೋದರು. +ಈಗ ಗಣಪಯ್ಯನ ಹೊಲದ ಹಸಿಮಣ್ಣಿನಲ್ಲಿ ಬೆರಳುದ್ದದ ಹಸಿರು ಸಸಿಗಳೆದ್ದು ನಿಂತಿವೆ. ಹೇರಂಬನ ಹೊಲದಲ್ಲೂ ಅಷ್ಟೆ. ಒಂದು ಹದ ಮಳೆ ಬಿದ್ದಾಗ ಬಿತ್ತಿದ ಬೀಜಗಳೆಲ್ಲ ಈಗ ಎದ್ದುನಿಂತಿವೆ. ಈಗ ಮತ್ತೆ ಮಳೆ ಬೀಳಬೇಕು. +ಈ ಹೊಲಗಳಿಗೆ ಅಂಟಿಕೊಂಡೇ ಅಡಿಕೆ ತೋಟ. ಗುಡ್ಡದ ಒಂದು ಪಾರ್ಶ್ವದಲ್ಲಿ ಗೇಣಗಲ ಜಾಗದಲ್ಲಿ ಗಣಪಯ್ಯನ ತೋಟ. ಮಧ್ಯದಲ್ಲಿ ಅವನ ಮನೆ. ಅನಂತರ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿರುವ ಹೇರಂಬನ ಅಡಿಕೆ ತೋಟ. ಕೊನೆಯದಾಗಿ ಹಿಂದೆ ತುಂಬಿಕೊಂಡು ಕಳಕಳಿಸುತ್ತಿದ್ದು ಈಗ ಪಾಳುಬಿದ್ದಿರುವ ಪರಮೇಶ್ವರಯ್ಯನ ಮನೆ-ತೋಟವಿದ್ದ ಜಾಗ. ಹಸಲರುಗಳ ಮನೆಗಳಿದ್ದುದು ಅಡಕೆ ತೋಟಗಳ ಪಾರ್ಶ್ವದಲ್ಲಿ. ಈಗ ಮಾತ್ರ ಈ ಮನೆಗಳಿಲ್ಲ. +ಈಗ ಅಲ್ಲಿರುವ ಮನೆಯೊಂದೇ ಗಣಪಯ್ಯನದು. ಹೊಸಮನೆ ಹಳ್ಳಿಗೆಲ್ಲ ಒಂದೇ ಮನೆ. +ತೋಟದಲ್ಲಿಯ ಚೂರುಪಾರು ಕೆಲಸ ಮುಗಿಸಿಕೊಂಡು ಹೊರಟಾಗ ನಾಗವೇಣಿ ತೋಟದತ್ತ ಇಳಿಯುವುದು ಕಂಡಿತು. ತೋಟದ ಹಳ್ಳದಲ್ಲಿ ಕೈಕಾಲು ಮುಖಕ್ಕೆ ನೀರು ಉಗ್ಗಿಕೊಂಡು ದಂಡೆಗೆ ಬರುವಾಗ ನಾಗವೇಣಿ ಹತ್ತಿರ ಬಂದು- +“ಹೌದಾ….ಬೆಳ್ಳಿ ದನ ಬರ್ಲೇ ಇಲ್ವಲ್ಲ” +ಎಂದಳು. ಮಾತನಾಡಲು ಬಾಯಿ ತೆರೆದರೆ ಹೌದಾ ಎನ್ನುವ ಶಬ್ದ ಮೊದಲು ಅವಳ ಬಾಯಿಂದ ಹೊರಬೀಳಬೇಕು. ತನ್ನ ಹತ್ತಿರ ಮಾತನಾಡುವಾಗಲಂತೂ ಈ ಶಬ್ದ ಬಂದೇ ಮರುತ್ತದೆ. +“ಹೌದಾ?” +ಎಂದು ತಾನು ಅವಳ ದಾಟಿಯಲ್ಲೇ ಕೇಳಿದಾಗ ಅವಳು ತಲೆಕೊಡವಿ- +“ಶ್ಶೀ…ನಿಮಗೆ ತಮಾಷೆಯಾ?” ಎಂದಳು. +ಮುಖದ ಮೇಲಿನ ಆತಂಕದ ಜೊತೆಗೆ ನಾಚಿಕೆಯೂ ಸೇರಿಕೊಂಡಿತು. ಇಳಿ ಬಿಸಿಲು ತೋಟದಲ್ಲಿ ರಂಗುರಂಗಾಗಿ ಬಿದ್ದಿರಲು. ಈ ಬಿಸಿಲಿಗೆ ಮಯ್ಯೊಡ್ಡಿ ನಿಂತ ನಾಗವೇಣಿ ಚಿಗುರುಚಿಗುರಾಗಿ ಕಂಡು ಮೈಮನಸ್ಸು ಹುರುಪುಗೊಂಡಿತು. ಹಸಿವು – ಆಸೆಯಿಂದ ಅವಳತ್ತ ನೋಡಿದಾಗ ಆಕೆ- +“ಏನು, ನಾನು ಹೇಳಿದ್ದು ಕೇಳಸ್ತಾ…. ಬೆಳ್ಳಿ ಬಂದಿಲ್ಲ.” +ಎಂದಳು ಮತ್ತೂ ಒಂದು ಸಾರಿ. +“ನಾನೂ ಅದೇ ಕೇಳಿದ್ದು. ಹೌದಾ ಅಂತ.” +“ಹೌದು?” +“ಮಳಲಿ ಗೌಡ್ರ ಗೂಳಿ ಬಂದಿತ್ತಪ್ಪ…. ಅದ್ರ ಹಿಂದೆ ಹೋತೋ ಏನೋ….” +“ಶ್ಶೀ….” +ಎಂದಳು ನಾಗವೇಣಿ. +ಅಡಿಕೆ ತೋಟದ ತುಂಬ ದೃಷ್ಟಿ ಹಾಯಿಸಿದ. ತೋಟದ ಕೆಲಸಕ್ಕೆಂದು ಬಂದ ಅರಲಗೋಡಿನ ಜನ ಹೋಗಿ ಬಹಳ ಹೊತ್ತಾಗಿತ್ತು. ಯಾರ ಸುಳಿವೂ ಇರಲಿಲ್ಲ. ಅಪ್ಪ ಮನೆಬಿಟ್ಟು ಹೊರಬರಲಾರ. ಬೇರೆ ಯಾರಾದರೂ ಇಲ್ಲಿಗೆ ಬಂದಾರಾದರೂ ಯಾಕೆ? +ನಾಗವೇಣಿ ಅನುಮಾನದಿಂದ ನೋಡುತ್ತಿರಲು ಮುಂದೆನುಗ್ಗಿ ಅವಳನ್ನು ಬಾಚಿ ತಬ್ಬಿಕೊಂಡ. ಅಯ್ಯೋ ಬಿಡಿ ಬಿಡಿ ಎಂದವಳು ಕೊಸರಾಡುತ್ತಿದ್ದರೂ ಕೇಳದೇ ಅವಳ ಮೃದು ಮೈಯನ್ನು ತನ್ನ ಮೈಗವಚಿಕೊಂಡು, ತುಟಿಯನ್ನು ಅವಳ ಕೆನ್ನೆಗೊತ್ತಿ, ‘ನಾಗೂ’ ಎಂದ, ನಾಗವೇಣಿ ತಪ್ಪಿಸಿಕೊಂಡಳು. +“ಏನಿದು ಹುಡುಗಾಟ” +ಎಂದವಳೇ ತೋಟದಿಂದ ಹೊರಬಿದ್ದಳು. ತಾನು ಅವಳ ಬೆನ್ನು ಹತ್ತಿ ಹೊರಟ. “ಬೆಳ್ಳಿ ಗುಡ್ಡದಮೇಲೆ ಮೇಯುತ್ತಿತ್ತು. ನಾನು ನೋಡ್ಕೊಂಡ್ ಬರ್ತೀನಿ ಹೋಗು” +ಎಂದ. ನಾಗವೇಣಿ ಕೇಳಲಿಲ್ಲ. ‘ನಡೀರಿ ನಾನೂ ಬರ್ತೀನಿ’ ಎಂದಳು. ಇಬ್ಬರೂ ಗುಡ್ಡ ಹತ್ತಿದರು. +ಸೀತಾಪರ್ವತವನ್ನು ತಾವಿಬ್ಬರೂ ಏರುತ್ತಿರುವುದು ಇದು ನಾಲ್ಕನೇ ಬಾರಿ. ಮದುವೆಯಾಗಿ ಬಂದ ಹೊಸದರಲ್ಲಿ ಒಂದುಬಾರಿ ನಾಗವೇಣಿಯೊಡನೆ ತಾನು ಸೀತಾರಾಮರ ಮಂಚ, ಗುಹೆಯವರೆಗೂ ಹೋಗಿಬಂದಿದ್ದ. ಅನಂತರ ಕೃಷ್ಣಯ್ಯ ಬಂದಾಗ. ಬೆಳ್ಳಿ, ಗುಹೆಯ ಹತ್ತಿರ ಕರುಹಾಕಿದಾಗ ಮತ್ತೊಂದುಸಾರಿ. ಇದು ನಾಲ್ಕನೇ ಬಾರಿ ನಾಗವೇಣಿ ಇಲ್ಲಿಗೆ ಬಂದ ಮೂರು ವರ್ಷಕ್ಕೆ ಮನೆಯ ಹಿಂದಿನ ಗುಡ್ಡ ಹತ್ತುತ್ತಿರುವುದು ನಾಲ್ಕನೇ ಬಾತಿ. ತಾನು ಹೆಚ್ಚಾಗಿ ಗುಡ್ಡ ಹತ್ತುವವನಲ್ಲ. ಸೌದೆ ಕಡಿಯಲು ತುದಿಗೇನೂ ಹೋಗಬೇಕಾಗಿಲ್ಲ. ಅಷ್ಟು ದೂರ ಹೋಗಬೇಕೆಂದರೆ ಹೀಗೇ ಏನಾದರೊಂದು ಪ್ರಮೇಯ ಒದಗಿಬರಬೇಕಷ್ಟೆ. ದನಕರು ಕಳೆದುಹೋದರೆ ಅಲ್ಲಿಯವರೆಗೂ ಹೋಗಬೇಕು. ಆದರೆ ಕಳೆದುಹೋದ ದನಕರು ಕೆಳಗಿನ ಬಯಲಿನಲ್ಲಿ ಇಲ್ಲವೆ ಅರಲಗೋಡಿನ ಕಾಡಿನಲ್ಲಿ ಸಿಕ್ಕಿಬಿಡುತ್ತವೆ. ದನಕರು ಗುಡ್ಡದ ತುದಿಗೆ ಹೋಗುವುದೂ ಅಪರೂಪ. ಬೆಳ್ಳಿ ಮಾತ್ರ ಗುಡ್ಡದತ್ತ ಹೋಗುತ್ತಿರುವುದನ್ನು ತಾನು ನೋಡಿದ್ದೆ. ಹಿಂದೆ ಅದು ಗುಹೆಯ ಎದುರು ಕರುಹಾಕಿತ್ತು. ಈಗ ಮತ್ತೆ ಅತ್ತ ಹೋಗಿರಬಹುದೆ? +ಗುಡ್ಡದ ಬೆನ್ನು ಮೇಲಿನ ಕಾಲುಹಾದಿ ಹಿಡಿದು ನಡೆಯಲಾರಂಭಿಸಿದಾಗ ನಾಗವೇಣಿ ಹಿಂದಿನಿಂದ ಬಂದು ಸೇರಿಕೊಂಡಳು. ಗಂಡನ ಜೊತೆ ಹೆಜ್ಜೆ ಹಾಕುತ್ತ, ಬೆಳ್ಳೀ ಬಾ ಬಾ ಎಂದು ಕೂಗುತ್ತ ಮುನ್ನಡೆಯುತ್ತಿರಲು ಗಣಪಯ್ಯ ಹೆಂಡತಿಯತ್ತ ಬಾರಿ ಬಾರಿಗೂ ತಿರುತಿರುಗಿ ನೋಡುತ್ತ ಅದೇನೋ ಒಂದು ರೀತಿಯಲ್ಲಿ ನಕ್ಕ. +“….ಹೌದಾ ಈ ತಮಾಷೆ ಯಾಕೆ?” +ನಾಗವೇಣಿ ಮುಖ ಊದಿಕೊಂಡಳು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ಅವನ ಉದ್ದವಾದ ಗಡ್ಡ, ಹೆಗಲಮೇಲೆ ಚೆಲ್ಲಿದ ಕೂದಲು, ಅವನು ಉಟ್ಟು ಹೊದೆಯುವ ಸಾದಾ ಬಿಳಿ ಪಂಚೆ, ಅವನ ಶಾಂತವಾದ ಕಣ್ಣುಗಳು – – ಥೇಟು ಒಬ್ಬ ಋಷಿ ಕುಮಾರನವು ಎನ್ನಿಸುತ್ತಿತ್ತು. ಇವನು ಯಾರ ಮಗನೂ […] +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_408.txt b/Kannada Sahitya/article_408.txt new file mode 100644 index 0000000000000000000000000000000000000000..ec2fdb36abeaf80ab6b11a839d165bc6c06d5889 --- /dev/null +++ b/Kannada Sahitya/article_408.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, ಕೆ‌ಎಸ್‌ಸಿಯ ಮುಂಚೂಣಿಯಲ್ಲಿದ್ದಾಗ, ‘ನಮ್ಮ ಸುತ್ತಮುತ್ತಲಿನ ಹುಡುಗರು ನಮ್ಮ ಅಗತ್ಯಗಳನ್ನೇಕೆ ಮರೆಯುತ್ತಾರೆ?’, ಕೇವಲ ಸ್ವಕೇಂದ್ರಿತ ಚಟುವಟಿಗಳಿಗಷ್ಟೇ ಸೀಮಿತಗೊಂಡುಬಿಡುತ್ತಾರೇಕೆ? ಮುಂತಾದ ಈ ಪ್ರಶ್ನೆಗಳೇ ನನ್ನ ಮಾತುಕತೆ, ಚರ್ಚೆ, ಹರಟೆ, ಬಯ್ಗಳ ಎಲ್ಲವೂ ಆಗಿಹೋಯ್ತು. ತಾಂತ್ರಿಕವಾಗಿ ಏನಾದರೂ ಮಾಡಬೇಕು ಎಂದನ್ನಿಸಿದಾಗಲೇ ಸಿಕ್ಕವರು: ಕೆ‌ಎಸ್‌ಸಿಯ, ನಮ್ಮ ಹುಡುಗರು ಎಂದೆನ್ನಬಹುದಾದ ರುದ್ರಮೂರ್ತಿ ಹಾಗು ರಾಘವ ಕೋಟೇಕರ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇವರುಗಳು ಕೆಲಸವನ್ನು ಮಾಡುತ್ತಾ, ಕೆಲವು ಆಭಾಸಗಳ ನಡುವೆ, ನಿಜವಾಗಿಯೂ ನಮ್ಮ ಅಗತ್ಯಗಳೇನೇನು, ಅವುಗಳಿಗಾಗಿ ನಾವು ಮಾಡಬಹುದಾದ್ದೇನೇನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಘು ಹೆಚ್ಚು ಕಡಿಮೆ ನಮ್ಮೆಲ್ಲ ಅಗತ್ಯಗಳನ್ನು ಪೂರೈಸಬಹುದಾದ ಸಿ‌ಎಂಎಸ್ ಮುಗಿಸುವ ಹಾದಿಯಲ್ಲಿದ್ದಾನೆ. ಜೊತೆಗೆ ಆತನೇ ಯಶಸ್ವಿಯಾಗಿ ಬರಹಕ್ಕೆ ಪೂರಕವಾಗಿರಬಹುದಾದಂತಹ ಜಾವಾ ಸ್ಕ್ರಿಪ್ಟ್ ಮಾಡಿ ಮುಗಿಸಿದ್ದಾನೆ. ಇದಕ್ಕೆ ಸ್ಫೂರ್ತಿ: ವಿಜಯಲಕ್ಶ್ಮಿ ನಾರಾಯಣ್‌ರವರ hಣಣಠಿ://ತಿತಿತಿ.iiಣ.eಜu/~ಟಚಿಞsviರಿ/ಟಚಿಟಿguಚಿge/ಞಚಿಟಿಟಿಚಿಜಚಿ.hಣmಟ ಸಹಕಾರಿ ಎಂದು ಸ್ಮರಿಸಿ ತನ್ನ ಪ್ರಾಮಾಣಿಕತೆಯನ್ನೂ ತೋರಿಸಿದ್ದಾನೆ. ಅಪರೂಪದ ಹುಡುಗ. +ಈ ನಮ್ಮ ರುದ್ರಮೂರ್ತಿ ಸುಮ್ಮನೆ ಕೂರುವವರೇನಲ್ಲ: ಹಳೆಯ ಸ್ಪೆಲ್‌ಚೆಕ್ಕರ್ ಕೈಗೆತ್ತಿಕೊಂಡರು: ಈಗ ಅದು ಪೂರ್ಣಪ್ರಮಾಣದ ಸ್ಪೆಲ್ ಚೆಕ್ಕರ್ ಆಗಿದೆ. ಕನ್ನಡದ ಎಲ್ಲ ಫಾಂಟ್‌ಗಳನ್ನು ಇನ್‌ಸ್ಟಾಲ್ ಮಾಡಲು-ಅದನ್ನು ಮುಂಚೆಯೇ ನೋಡಲು ಅಥವ ನಿರ್ವಹಿಸಬಹುದಾದ ಒಂದು ಚೊಕ್ಕವಾದ ಸಾಧನವನ್ನು ಮಾಡಿಮುಗಿಸಿದ್ದಾರೆ. ಅದರಲ್ಲಿ-ಕನ್ನಡದಲ್ಲಿ ಉಚಿತವಾಗಿ ಸಿಗಬಹುದಾದ ಎಲ್ಲ ಫಾಂಟ್‌ಗಳೂ ಒಂದೇ ಕಡೆ ಸಿಗಲಿದೆ. ಬೇಕಾದಾಗ, ಬೇಕಾದ್ದನ್ನು ನೀವು ಸ್ಥಾಪಿಸಿಕೊಳ್ಳಬಹುದು. ಇಷ್ಟರಲ್ಲೇ ಕನ್ನಡಸಾಹಿತ್ಯ.ಕಾಂ -ಅದನ್ನು ಬಿಡುಗಡೆ ಮಾಡುತ್ತದೆ ಎಂದು ಸದ್ಯಕ್ಕೆ ತಿಳಿಸಬಯಸುತ್ತೇನೆ. +ಕನ್ನಡಸಾಹಿತ್ಯ.ಕಾಂನ ತಾಂತ್ರಿಕ ವಿಭಾಗದ ಸದಸ್ಯರಾಗಿರುವ ಇವರಿಬ್ಬರೂ ಮುಂದೆ ಅನೇಕ ಜನೋಪಕಾರಿಯಾಗಬಹುದಾದ ಕೆಲಸಗಳನ್ನು ಮಾಡಲಿದ್ದಾರೆ ಎಂದೆನ್ನುವ ಭರವಸೆಯನ್ನಂತೂ ಮೂಡಿಸಿರುವುದು ಸುಳ್ಳಲ್ಲ. ಕನ್ನಡಸಾಹಿತ್ಯ.ಕಾಂನ ಎಂಟು ವರ್ಷಗಳ ಸಾಧನೆ? – ಎಂದು ಮೂಗುಮುರಿಯಬಹುದಾದವರಿಗೆ: ನಿಜ, ಅಪಾರವಾದ, ಅತ್ಯುತ್ತಮ ಸಾಹಿತ್ಯದ ಪ್ರಾತಿನಿಧಿಕ ಶಕ್ತಿಯಾಗಿರುವುದರೊಂದಿಗೆ, ಇನ್ನೂ ಹೆಚ್ಚಿನ ಕೆಲಸವಂತೂ ಆಗಬೇಕಿತ್ತು-ಹಾಗೆಂದು ಈಗ ಆಗಿರುವ ಕೆಲಸ-ಸಾಧನೆ ನಗಣ್ಯವೇನಲ್ಲ ಎಂದು ಕೊಂಚ ಹೆಮ್ಮೆ-ಕೊಂಚ ವಿನಯ ಎರಡರ ಮಿಶ್ರಣದಲ್ಲಿ ಪ್ರತಿಕ್ರಿಯಿಸಬಹುದೇನೋ… +* +* +* +ಎಷ್ಟು ದಿನ ನೀವೊಬ್ಬರೇ ಎಲ್ಲವನ್ನೂ ನಿರ್ವಹಿಸುತ್ತೀರಿ? -ಅಚ್ಚರಿಯಿಂದ, ಕೆಲವೊಮ್ಮೆ ‘ನಾವೆಲ್ಲ ಸಕ್ರಿಯರೂ ಆಗಿರುವಾಗ ನೀವೊಬ್ಬರೆ ಮಾಡುವುದು ಸರಿಯಲ್ಲ’ ಎಂದೆನ್ನುವ ಧ್ವನಿ ಆಕ್ಷೇಪಣೆಯಾಗಿಯೂ, ’ಕನ್ನಡಸಾಹಿತ್ಯ.ಕಾಂ’ನ ಅಂತರ್ಜಾಲ ಕಾರ್ಯಚಟುವಟಿಕೆಯ ಬಗೆಗೆ ಪ್ರಶ್ನೆಯಾಗಿಯೂ ಕೇಳಿಬರುತ್ತಲಿತ್ತು. ಜೊತೆಗೆ ಹತ್ತು ಹಲವಾರು ಪ್ರಶ್ನೆಗಳು. ಕೆ‌ಎಸ್‌ಸಿಯ ಚಟುವಟಿಕೆಗಳನ್ನು ಎರಡು ರೀತಿ ವಿಂಗಡಿಸಬಹುದು: ಒಂದು ಅಂತರ್ಜಾಲದಲ್ಲಿ ಹಾಗು ಅಂತರ್ಜಾಲೇತರ ಚಟುವಟಿಕೆಗಳು. ಎರಡೂ ಬಿರುಸು ಪಡೆದುಕೊಂದು ವ್ಯಾಪಕವಾಗಿ ಬೆಳೆಯುತ್ತಾ ಪ್ರಮುಖವೆಂದೆನ್ನಿಸತೊಡಗಿವೆ. ಹೀಗಾಗಿ ನನ್ನಲ್ಲೂ ಅನೇಕಾನೇಕ ಪ್ರಶ್ನೆಗಳು. ಸಭೆಗಳೂ ಆಗುತ್ತಿದ್ದವೂ-ಚರ್ಚೆಯೂ ನಡೆಯುತ್ತಿದ್ದವು. ಆದರೆ, ಎಲ್ಲವೂ ಅಪೂರ್ಣವಾಗಿಯೇ ಉಳಿದುಬಿಡುತ್ತಿದ್ದವು. ಈಗಬಂದೆ ಎಂದೋ, ಬೇರೆ ಮುಖ್ಯವಾದ ಕೆಲಸವಿದೆ ಎಂದೋ ಅಂತೂ ನೆಪಗಳನ್ನೊಡ್ಡಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದವರೆಲ್ಲ ಕರಗುತ್ತಾ, ಸಭೆಯು ಅದರ ಗಾಂಭೀರ್ಯವೂ ಕರಗಿಹೋಗುತ್ತಿತ್ತು. ಈ ಬಾರಿ ಎಲ್ಲರನ್ನೂ ಒಂದೆಡೆ ಸೇರಿಸಿದರೆ, ಏನಾದರೂ ಗಂಭೀರವಾದದ್ದು ನಡೆಯಲೇ ಬೇಕು ಎಂದನ್ನಿಸಿದಾಗ: ಬೆಂಗಳೂರಿನ ಆಚೆಗೆ ಎರಡು ದಿನ ಸಭೆ ಸೇರಬಾರದೇಕೆ ಎಂದೆನ್ನುವ ಯೋಚನೆ ಬಂದಿತು. ಅಂತೆಯೆ ಏರ್ಪಾಟೂ ಆಯಿತು. ಸಭೆಗೆ ಬಂದವರನ್ನೆಲ್ಲ ‘ಕೋರ್ ಮೆಂಬರ್ಸ್’ (ಕೇಂದ್ರ ಸದಸ್ಯರು) ಎಂದು ಕರೆಯಲಾಗುವುದು ಎಂದೂ ಹೇಳಲಾಗಿತ್ತು. ಸಭೆಗೆ ಹಾಜರಾದವರು: +ಕಿರಣ್, ಶೇಖರ್, ಅರೇಹಳ್ಳಿ ರವಿ, ರುದ್ರಮೂರ್ತಿ, ರಾಘವ ಕೋಟೆಕರ್, ಲಾವಣ್ಯ, ಸೌಮ್ಯ, ಕಿಶೋರ್‌ಚಂದ್ರ, ಶೇಖರ್‌ಪೂರ್ಣ, ವಿಕ್ರಮ ಹತ್ವಾರ, ರಮೇಶ್, ಜಯಕುಮಾರ್, ಮನೋಜ್, ಪ್ರಮೋದ್ ಪಿ ಟಿ, ರಾಜ್‌ಕುಮಾರ್, ಅಜಿತ್, ವಿವೇಕ್ ಶಂಕರ್, ಸೀತಾ ಶೇಖರ್, ನಂದಿನಿ, ಶ್ರೀನಿವಾಸ್, ಅನ್ನಪೂರ್ಣ ಸುಬ್ಬರಾವ್, ಅವಿನಾಶ್, ಪ್ರಭಾಕರ್ ಎಚ್ ಎಸ್, +ಭಾಗವಹಿಸಿದವರಲ್ಲಿ ಕೆ ಎಸ್ ಸಿ ಗುಂಪಿಗೆ ಹೆಚ್ಚು ಪರಿಚಿತರಾದ ಕಿರಣ್, ರುದ್ರಮೂರ್ತಿ, ರಾಘವ ಕೋಟೆಕಾರ್, ಕಿಶೊರ್ ಚಂದ್ರ. ಲಾವಣ್ಯ, ಸೌಮ್ಯ, ಅರೇಹಳ್ಳಿ ರವಿ, ಅನ್ನಪೂರ್ಣ ಸುಬ್ಬರಾವ್, ನನ್ನ ಕುಟುಂಬ, ಮಕ್ಕಳು ಇವರುಗಳ ಜೊತೆಗೆ ಸಕ್ರಿಯರಾಗಿದ್ದೂ ಅಪರಿಚಿತರಾಗಿದ್ದ ರಮೇಶ್, ಮನೋಜ್, ವಿವೇಕ್ ಶಂಕರ್, ಪ್ರಭಾಕರ್ ಎಚ್ ಎಸ್, ಜಯಕುಮಾರ್, ಮನೋಜ್, ಪ್ರಮೋದ್ ಪಿ ಟಿ, ರಾಜ್‌ಕುಮಾರ್, ಶೇಖರ್, ಅವಿನಾಶ್ ಮುಂತಾದವರೂ ಇದ್ದರು. +ಇವರೆಲ್ಲರ ಉಪಸ್ಥಿತಿಯಿರುವ ಹೊಸ ಟ್ರಸ್ಟ್ ಒಂದನ್ನು ಆಗಸ್ಟ್ ೨ ೨೦೦೮ರಂದು ರಚಿಸಲಾಗಿದೆ. ಆಗಸ್ಟ್ ೧ ಮತ್ತು ೨ ಶುಕ್ರವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಓದೇಕಾರ್ ಫಾರಂನ ಅಂಗಳದಲ್ಲಿ ವಿವಿಧ ಚರ್ಚೆ-ಚಟುವಟಿಕೆಗಳು ನಡೆದವು. +ಸಭೆಯ ಕಲಾಪಗಳ ವರದಿ ವಿವಿಧ ಸಮಿತಿಗಳ ಪದಾಧಿಕಾರಿಗಳ ಪಟ್ಟಿಯೊಂದಿಗೆ ಈ ಪುಟದಲ್ಲಿದೆ . +* +* +* +’ಸಂವಾದ.ಕಾಂ” ’ಕನ್ನಡಸಾಹಿತ್ಯ.ಕಾಂ’ ಮುಂಚೂಣಿಯಲ್ಲಿದ್ದವರ ಮತ್ತೊಂದು ಅಂತರ್ಜಾಲ ತಾಣ. ಅದರ ಅಗತ್ಯದ ಬಗ್ಗೆ ಕೇಂದ್ರ ಸದಸ್ಯರ ಮಧ್ಯದಲ್ಲೂ ಅನೇಕ ಗೊಂದಲಗಳಿವೆ. ’ಕನ್ನಡಸಾಹಿತ್ಯ.ಕಾಂ’ನಿಂದ ದೂರ ಹೋಗುತ್ತಿದ್ದೇವೆಯೆ? ಎಂಬ ಆತಂಕವೂ ತೋರದೇ ಇಲ್ಲ. ’ಕನ್ನಡಸಾಹಿತ್ಯ.ಕಾಂ’ಗೆ ಯಾವುದೇ ರೀತಿಯ ಲೋಪ ಉಂಟಾಗುವುದಿಲ್ಲ ಎಂಬ ಭರವಸೆ ನೀಡುತ್ತಾ, ಎಲ್ಲ ಪ್ರಶ್ನೆ ಹಾಗು ಆತಂಕಗಳಿಗೆ ಇಲ್ಲಿ ಉತ್ತರಿಸುವುದಕ್ಕಿಂತಲೂ ’ಸಂವಾದ.ಕಾಂ” ಪುಟಗಳಲ್ಲೇ ವಿವರ ನೀಡುವುದು ಸೂಕ್ತ ಎಂದೆನ್ನಿಸುತ್ತದೆ. +’ಸಂವಾದ.ಕಾಂ” ಸದ್ಯಕ್ಕಂತೂ ಪ್ರಾಯೋಗಿಕ ಮತ್ತು ಉದ್ಘಾಟನಾಪೂರ್ವ ಚಟುವಟಿಕೆ ಮಾತ್ರ ಎಂಬ ಸಂಗತಿಯನ್ನು ಸ್ಪಷ್ಟಪಡಿಸಿ, ’ಕನ್ನಡಸಾಹಿತ್ಯ.ಕಾಂ’ ಅಂತರ್ಜಾಲದಲ್ಲಿ ಅತ್ಯುನ್ನತ ಸಾಹಿತ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಯಾಗಿದ್ದರೆ, ’ಸಂವಾದ.ಕಾಂ”-ನಾಟಕ, ಸಿನಿಮಾ, ಟಿವಿ, ಚಿತ್ರಕಲೆ, ಛಾಯಾಚಿತ್ರಣ ಮುಂತಾದ ದೃಶ್ಯ ಮಾಧ್ಯಮಗಳಿಗೆ ಮೀಸಲಿಡಬಹುದಾದಂತಹ ತಾಣವಷ್ಟೇ ಆಗಿರಬಹುದು. +ದಂಗು ಬಡಿಸುವ ಈ ಕೆಲವು ವಿವರಗಳನ್ನು ಮಾಹಿತಿ ರೂಪದಲ್ಲಿ ಏಪ್ರಿಲ್ ಜೂನ್-೨೦೦೮ರ ದೇಶಕಾಲ ಸಂಚಿಕೆಯಿಂದ ನೀಡುತ್ತಿದ್ದೇವೆ. +೧೯೯೧ರಲ್ಲಿ ಭಾರತದಲ್ಲಿ ಕೇವಲ ೬ ಟಿವಿ ವಾಹಿನಿಗಳಿದ್ದು ದಿನಕೆ ಕೆಲವು ಗಂಟೆಗಳ ಪ್ರಸಾರ ಮಾತ್ರ ಇತ್ತು. ಇಂದು, ಅಂದರೆ ೧ ಜನವರಿ ೨೦೦೮ರಲ್ಲಿ, ನಮ್ಮಲ್ಲಿ ೩೨೬ ಟಿವಿ ವಾಹಿನಿಗಳು ದಿನದ ೨೪ ಗಂಟೆಯೂ ಪ್ರಸಾರ ಮಾಡುತ್ತಿವೆ. ಇಂದಿನ ಮಾಧ್ಯಮ ಮತ್ತು ಮನೋರಂಜನೋದ್ಯಮ ೪೪೦ ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುದ್ದು ಮತ್ತು ವರ್ಷಕ್ಕೆ ಪ್ರತಿಶತ ೧೮ರ ವೇಗದಲ್ಲಿ ಬೆಳೆಯುತ್ತಿರುವಂತದ್ದು. ಇದರಲ್ಲಿ ಸಿಂಹಪಾಲಿ ಟಿವಿಯದೇ(’ಆಯ್ಕೆಯ ಸ್ವಾತಂತ್ರ್ಯ?’-ಅತುಲ್ ತಿವಾರಿ ಲೇಖನದಿಂದ) +ಮಾತಿನಲ್ಲಿ ಟೆಲಿವಿಷನ್ ಜಗತ್ತು ಅಂದೆ. ಟೆಲಿವಿಷನ್ ವ್ಯವಹಾರ ಅಂದೆ. ಇದು ಎಷ್ಟು ದೊಡ್ಡ ವ್ಯವಹಾರ, ಅದೆಷ್ಟು ದೊಡ್ಡ ಜಗತ್ತು ಅಂತ ನೋಡೋಣ. ಇವತ್ತು ಭಾರತದಲ್ಲಿ ಸುಮಾರು ೧೦೮ ಮಿಲಿಯನ್ ಟೆಲಿವಿಷನ್ ಹೊಂದಿರುವ ಮನೆಗಳಿದ್ದಾವೆ. ಅದರಲ್ಲಿ ಸುಮಾರು ಎಪ್ಪತ್ತು ಮಿಲಿಯನ್(ಏಳುಕೋಟಿ) ಮನೆಗಳಿಗೆ ಕೇಬಲ್ ಟೆಲಿವಿಷನ್ ಸಂಪರ್ಕವಿದೆ(ಇವು ಎನ್ ಆರ್ ಎಸ್ ಸಮೀಕ್ಷೆಯ ಅಂಕಿ‌ಅಂಶ). ಒಂದು ಮನೆಯಲ್ಲಿ ಅಂದಾಜು ೫ ಜನ ವಾಸ ಮಾಡುತ್ತಾರೆ ಅಂದರೆ ಸುಮಾರು ಮೂವತ್ತೈದು ಕೋಟಿ ಜನ ಕೇಬಲ್ ಟೆಲಿವಿಷನ್ ನೋಡುತ್ತಾರೆ ಅಂತಾಯಿತು. ಪ್ರತಿ ಮನೆ ಅಂದಾಜು ತಿಂಗಳಿಗೆ ನೂರು ರೂಪಾಯಿಗಳನ್ನು ಕೇಬಲ್ ಸಂಪರ್ಕಕ್ಕೆ ಖರ್ಚು ಮಾಡುತ್ತದೆ ಅಂದರೆ ಕೇಬಲ್ ಚಂದಾ ಆದಾಯವೇ ತಿಂಗಳಿಗೆ ಏಳುನೂರು ಕೋಟಿ(’ಟಿವಿ ಎಂಬ ವ್ಯಾಪಾರ’-ಸುರೇಂದ್ರನಾಥ್ ಎಸ್ ಲೇಖನದಿಂದ) +ಇಂತಹ ಬೃಹತ್ ಆರ್ಥಿಕ ಚಟುವಟಿಕೆಯನ್ನು ಆಕ್ರಮಿಸಿ ಕುಳಿತಿರುವ ವ್ಯವಸ್ಥಿತ ದುರಾಕ್ರಮಣದ ಬಗೆಗೆ ಬೇಕಾಗಿರುವ ಆರೋಗ್ಯಕರವಾದ ಪ್ರಜ್ಞೆಯನ್ನು ಬೆಳೆಸುವ ಸಣ್ಣದೊಂದು ಚಟುವಟಿಕೆಯಾಗಿ ’ಸಂವಾದ.ಕಾಂ’ ರೂಪುಗೊಂಡರೆ ಅದು ನನ್ನ ಮತ್ತು ನಿಮ್ಮ ಯಶಸ್ಸು. +ದೇಶಕಾಲದ ೧೩ನೇ ಸಂಚಿಕೆಯಲ್ಲಿ ಸಮಯ ಪರೀಕ್ಷೆ ವಿಭಾಗವನ್ನು ಯೋಜಿಸಿ ನಿರ್ವಹಿಸಿದ ಅಕ್ಷರ ಕೆ ವಿಯವರಿಗೆ ಮತ್ತು ಸಂಪಾದಕ ವಿವೇಕ ಶಾನಭಾಗರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. +* +* +* +ಈ ಸಂಚಿಕೆಯೊಂದಿಗೆ ನಮ್ಮ ಲೇಖಕರ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಸೊಮಶೇಖರ್ ಜಿ ಮತ್ತು ಜೋಗಿಯವರಿಗೆ ಸ್ವಾಗತ. +ಮುಂದಿನ ಸಂಚಿಕೆ? ನಿರ್ದಿಷ್ಟವಾಗಿ ನಿಗದಿತವಾಗಿ ಇದೇ ದಿನ ಆಗುತ್ತದೆಂದು ಸದ್ಯಕ್ಕೆ ತಿಳಿಸುವ ಸ್ಥಿತಿಯಲ್ಲಿಲ್ಲ. ಒಂದಂತೂ ಖಚಿತ: ’ಕನ್ನಡಸಾಹಿತ್ಯ.ಕಾಂ’ ಹಿಂದೆ ಪ್ರಕಟಿಸಿರುವ ಎಲ್ಲವನ್ನೂ ಅಂತರ್ಜಾಲಕ್ಕೆ ತೆರೆದಿಟ್ಟ ನಂತರವೇ ಮುಂದಿನ ಸಂಚಿಕೆ ಪ್ರಕಟವಾಗುತ್ತದೆ. +ಶೇಖರ್‌ಪೂರ್ಣ +೨೪-೦೯-೨೦೦೮ +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […] +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_409.txt b/Kannada Sahitya/article_409.txt new file mode 100644 index 0000000000000000000000000000000000000000..39186fa3d698e0c464cfd21114349d6d66a5912d --- /dev/null +++ b/Kannada Sahitya/article_409.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, ಅಲ್ಲಮ, ಚನ್ನಬಸವ, ಸಿದ್ಧರಾಮ ಮತ್ತು ಮಡಿವಾಳ ಮಾಚಯ್ಯ ಅಕ್ಕನ ವ್ಯಕ್ತಿತ್ವವನ್ನು ತಮ್ಮ ರಚನೆಗಳಲ್ಲಿ ರೂಪಿಸಿದ್ದಾರೆ. ಇಂಥ ವಚನಗಳನ್ನು ಒಟ್ಟಾಗಿ ನೋಡುವುದರಿಂದ ಅಕ್ಕನ ಸಮಕಾಲೀನರು ಅಕ್ಕನನ್ನು ಕಂಡ ಬಗೆ ತಿಳಿಯುತ್ತದೆ. ನಾವು ಇಂದು ಅಕ್ಕನನ್ನು ಆಕೆಯೊಬ್ಬ ಬಂಡಾಯಗಾರ್ತಿ, ಭಾವಗೀತೆಗಳ ಕವಿ ಎಂದೆಲ್ಲ ಕಂಡು ಮೆಚ್ಚಿದ್ದರೆ ಅವಳ ಸಮಕಾಲೀನರು ಆಕೆಯ ಆಧ್ಯಾತ್ಮಿಕ ಸಾಧನೆಯನ್ನು ಮಾತ್ರ ಮೆಚ್ಚಿದ್ದಂತೆ ಕಾಣುತ್ತದೆ. ಅಕ್ಕನ ವ್ಯಕ್ತಿತ್ವವನ್ನು ವಿವರಿಸುವಾಗ ಈ ಎಲ್ಲ ವಚನಕಾರರೂ ಬಹುಮಟ್ಟಿಗೆ “ಇಲ್ಲ”, “ನೀಗಿಕೊಂಡ”, “ಕಳೆದುಕೊಂಡ”, ಮುಂತಾದ ನಿಷೇಧವಾಚಕಗಳನ್ನೇ ಬಳಸಿ ಮಾತನಾಡಿರುವುದು ಗಮನಾರ್ಹ. ಅಕ್ಕ ಏನಲ್ಲ, ಅವಳಲ್ಲಿ ಏನಿಲ್ಲ ಎಂಬುದನ್ನು ವಿವರಿಸುತ್ತಾ ಅವಳು ಏನು, ಎಂಥವಳು ಎಂಬುದನ್ನು ಕಾಣಿಸಲು ಪ್ರಯತ್ನಿಸುತ್ತಾರೆ. +– ೧ – +ಬಸವಣ್ಣ ಅಕ್ಕನನ್ನು ಮೆಚ್ಚಿಕೊಂಡಾಡುವುದಕ್ಕೆ ಮೂರು ಕಾರಣಗಳಿವೆ. ಅಕ್ಕ ನಾಚಿಕೆಗಳು ಇಲ್ಲದವಳು, ಯಾವ ಹೊರೆಯೂ ಇಲ್ಲದವಳು ಮತ್ತು ಅವಳ ಭಾಷೆ ಪರಿಶುದ್ಧವಾದದ್ದು. +ಬಸವಣ್ಣ ಮೂರು ಬಗೆಯ ನಾಚಿಕೆಗಳನ್ನು ಕುರಿತು ಮಾತನಾಡಿದ್ದಾನೆ. ಮೊದಲನೆಯದು ಕಾಯದ ಲಜ್ಜೆ. ಇದು ಕೇವಲ ಕಲ್ಪಿತವಾದದ್ದು ಎನ್ನುತ್ತಾನೆ. ಗಂಡು ಹೆಣ್ಣಿನ ದೇಹದ ಕೆಲವು ಭಾಗಗಳು ನಾಚಿಕೆಯನ್ನು ಹುಟ್ಟಿಸುತ್ತವೆ, ಹುಟ್ಟಿಸಬೇಕು ಎಂಬ ಧೋರಣೆ; ಅಥವ ಹಾಗೆ ಬಚ್ಚಿಟ್ಟುಕೊಂಡ ಭಾಗಗಳು ಕಾಮಪ್ರಚೋದಕ ಎಂಬ ತಿಳಿವು ಇವೆಲ್ಲ “ನಿಜ” ಅಲ್ಲ, ಕಲ್ಪಿತಗಳು. ಎರಡನೆಯ ನಾಚಿಕೆ ಜೀವಕ್ಕೆ ಸಂಬಂಧಿಸಿದ್ದು. ಇದನ್ನು ಅವನು ಮೋಹವೆನ್ನುತ್ತಾನೆ. ಬದುಕಿಗೆ ಅಗತ್ಯವೆಂದು ಭಾವಿಸಿ ಮೋಹವನ್ನು ಹುಟ್ಟಿಸಿಕೊಂಡಿರುವ ವಸ್ತುಗಳೆಲ್ಲ ಜೀವದ ಲಜ್ಜೆಗೆ ಕಾರಣವಾಗುತ್ತವೆ. ಮೂರನೆಯ ನಾಚಿಕೆ ನೆನಪಿಗೆ ಸಂಬಂಧಿಸಿದ್ದು. ನೆನಪೂ ನಾಚಿಕೆಗೆ ಕಾರಣವಲ್ಲವೆ. ನೆನಪು ಎಂಬುದು ಮರೆವಿನ ಇನ್ನೊಂದು ಮುಖತಾನೇ? ಆ ನೆನಪು ಮತ್ತು ಮರೆವನ್ನು ಸುಟ್ಟುಬಿಟ್ಟರೆ ಮನದ ಲಜ್ಜೆ ಇಲ್ಲವಾಗುತ್ತದೆ. ಅಕ್ಕಮಹಾದೇವಿ ಹೀಗೆ ಕಾಯ, ಜೀವ ಮತ್ತು ಮನಸಿನ ಲಜ್ಜೆಗಳು ಇಲ್ಲದವಳು. ಅಕ್ಕನಲ್ಲಿ “ತವಕ”ವಿಲ್ಲ, “ಸ್ನೇಹ”ವಿಲ್ಲ,”ವ್ಯವಹಾರ”ವೂ ಇಲ್ಲ. ತವಕವಿಲ್ಲವೆಂದರೆ ಆಸೆ, ಹಂಬಲ, ಆತುರ ಇತ್ಯಾದಿಗಳಿಲ್ಲದವಳು; ಸ್ನೇಹವೆಂದರೆ ಯಾವುದೇ ಬಗೆಯ ಜಿಡ್ಡು ಇಲ್ಲದವಳು; ಕೊಡುವ ಕೊಳ್ಳುವ, ತಾನೇನೋ ಕೊಡಬೇಕು ಮತ್ತು ಕೊಟ್ಟು ಏನನ್ನೋ ಪಡೆಯಬೇಕು ಎಂಬ ವ್ಯವಹಾರಧೋರಣೆಯೂ ಅಕ್ಕನಲ್ಲಿ ಇಲ್ಲ ಎಂದು ಬಸವ ಅವಳನ್ನು ಮೆಚ್ಚಿದ್ದಾನೆ.(ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೩) +ಬಸವಣ್ಣ ಅಕ್ಕನನ್ನು ಮೆಚ್ಚುವುದಕ್ಕೆ ಇನ್ನೊಂದು ಕಾರಣವಿದೆ. “ಮಹದೇವಿ ಎಂಬ ಭಕ್ತೆಗೆ ಆವ ಹೊರೆಯೂ ಇಲ್ಲ” ಎಂಬುದು ಅವನ ಮೆಚ್ಚುಗೆಗೆ ಕಾರಣವಾಗಿದೆ. ರೂಪ ಇರುವ ಮನುಷ್ಯರನ್ನು ಒಲಿದರೆ ಆಗ ಒಲುಮೆಯನ್ನು ಉಳಿಸಿಕೊಳ್ಳುವುದಕ್ಕೆ ತನ್ನ ತನುವನ್ನು ಸುಂದರವಾಗಿಟ್ಟುಕೊಳ್ಳುವ ಹೊರೆ ಇರುತ್ತದೆ. ಆದರೆ ಅಕ್ಕ ರೂಪಿಲ್ಲದವನನ್ನು ಒಲಿದವಳು. ಆದ್ದರಿಂದ ತನ್ನ ತನುವಿನ ಹಂಗಿನ ಭಾರ ಕಳೆದುಕೊಂಡವಳು. ಮನಸ್ಸಿರುವ ಮನುಷ್ಯನನ್ನು ಒಲಿದರೆ ತನ್ನ ಮತ್ತು ಆತನ ಅಭಿಮಾನವನ್ನು ಕಾಪಾಡಿಕೊಳ್ಳಬೇಕಾದ ಹಂಗಿನ ಭಾರ ಇರುತ್ತದೆ. ಆದರೆ ಅಕ್ಕ ಮನವಿಲ್ಲದವನನ್ನು ಒಲಿದವಳು. ಆದ್ದರಿಂದಲೇ ಅಭಿಮಾನದ ಹೊರೆಯನ್ನು ಜೋಪಾನಮಾಡಿಕೊಳ್ಳಬೇಕಾದ ಭಾರ ಕಳೆದುಕೊಂಡವಳು. ಅಕ್ಕ ಯಾರನ್ನು ಒಲಿದಳೋ ಅವನು ದಿಗಂಬರನಾದ್ದರಿಂದ ತಾನೂ ಕೌಪೀನದ ಹಂಗಿನ ಭಾರ ಕಳೆದುಕೊಂಡವಳು. ಈ ಭಕ್ತೆ ಯಾವ ಹೊರೆಯೂ ಇಲ್ಲದೆ ಎಷ್ಟು ಲಾಘವದಿಂದ ಇದ್ದಾಳಲ್ಲ ಎಂಬುದು ಬಸವನ ಮೆಚ್ಚುಗೆಗೆ ಕಾರಣ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೪) +ಬಸವ ಅಕ್ಕನನ್ನು ಮೆಚ್ಚುವುದಕ್ಕೆ ಮೂರನೆಯ ಕಾರಣ ಅವಳು ತನ್ನಲ್ಲಿ ತಾನು ನಿಶ್ಚಯಗೊಂಡವಳು, ಆದ್ದರಿಂದ ಅವಳ ಭಾಷೆ ಬೀಸರವೋಗಿಲ್ಲ, ಎಂದರೆ ಮೀಸಲಳಿದಿಲ್ಲ, ಅಶುದ್ಧವಾಗಿಲ್ಲ ಎನ್ನುತ್ತಾನೆ. ಬಸವ ನಡೆ ಮತ್ತು ನುಡಿಗಳ ಪರಿಶುದ್ಧತೆಗೆ ಗಮನಕೊಟ್ಟವನಲ್ಲವೆ? ಆದ್ದರಿಂದಲೇ ಅಕ್ಕನ ಪರಿಶುದ್ಧಭಾಷೆ ಅವನ ಮೆಚ್ಚುಗೆಗೆ ಕಾರಣವಾಗಿದೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೫) ನಮ್ಮಲ್ಲಿ ಅನುಭಾವ ಎಂಬ ಮಾತನ್ನು ಮೌನ ಎಂಬುದರೊಡನೆ ಸಮೀಕರಿಸುವ ತಪ್ಪು ಕಲ್ಪನೆಯೊಂದಿದೆ. ವಚನಕಾರರು ನಿಶ್ಶಬ್ದದ ಬಗ್ಗೆ ಹೇಳುತ್ತಾರೆ, ಮಾತನ್ನು ಸೂತಕ ಎನ್ನುತ್ತಾರೆ ಇತ್ಯಾದಿಗಳೆಲ್ಲ ನಿಜ. ಆದರೆ ವಚನಗಳನ್ನು ನೋಡಿದರೆ ಅನುಭಾವ ಎಂಬ ಮಾತನ್ನು ಸಮಾನ ಮನೋಧರ್ಮಿಗಳ ನಡುವಿನ ಸಂವಾದ ಎಂಬ ಅರ್ಥದಲ್ಲೂ ಬಳಸಿರುವುದು ಕಾಣುತ್ತದೆ. ಅಕ್ಕನ ಭಾಷೆ ಪರಿಶುದ್ಧವಾದದ್ದು ಎನ್ನುವಾಗ ಅವಳ ಮಾತಿನಲ್ಲಿ ಮಾತು-ಅರ್ಥಗಳ ನಡುವೆ, ಭಾವ-ಭಾಷೆಗಳ ನಡುವೆ ಸಂದಿಲ್ಲ, ಅವಳ ಮಾತು ಜ್ಯೋತಿರ್ಲಿಂಗದಷ್ಟು ಶುದ್ಧಪ್ರಭೆಯನ್ನುಳ್ಳದ್ದು ಎಂದೇ ಬಸವಣ್ಣ ಹೇಳುತ್ತಿರುವಂತಿದೆ. ಎಷ್ಟು ಬೇಕೋ ಅಷ್ಟು ಮಾತನಾಡುವ ಅಕ್ಕನ ಸ್ವಭಾವವನ್ನು ಕುರಿತು ಹೇಳುತ್ತ ಚನಬಸವಣ್ಣ “ಒಂದನಾಡಹೋಗಿ ಒಂಬತ್ತನಾಡುವವರೆಲ್ಲ” ಹಿರಿಯರೆ ಎಂದು ಕೇಳುವ ಮೂಲಕ ಅಕ್ಕನ ಭಾಷೆಯ ಶಕ್ತಿಯನ್ನು ಕೊಂಡಾಡುತ್ತಾನೆ.ಅಕ್ಕನದು ಬೆರೆಸಿ ಬೇರಿಲ್ಲದ ಹಿರಿತನ, ಅವಳು ಸುಮ್ಮನೆ ವಯಸ್ಸಾದವಳಲ್ಲ ಎಂದು ಚನ್ನಬಸವಣ್ಣ ಅಕ್ಕನ ಹಿರಿಮೆಯನ್ನು ಗುರುತಿಸುತ್ತಾನೆ. ಅನುಭಾವಿಗಳಾಗಿದ್ದೂ ತಮ್ಮ ಒಳಗನ್ನು ಅಕ್ಕನ ಹಾಗೆ ಮಾತಿನಲ್ಲಿ ಹೇಳಬಲ್ಲವರು ವಿರಳ. ಆದ್ದರಿಂದಲೆ ಅವಳ ಒಂದು ವಚನಕ್ಕೆ ಇರುವ ಶಕ್ತಿ ಆದ್ಯರ ಅರುವತ್ತು,ಬಸವಣ್ಣನ ಇಪ್ಪತ್ತು, ಅಲ್ಲಮಪ್ರಭುವಿನ ಹತ್ತು ಮತ್ತು ಅಜಗಣ್ಣನ ಐದು ವಚನಗಳಿಗೆ ನಿರ್ವಚನವಾಗಬಲ್ಲದು ಎಂದು ಸಿದ್ಧರಾಮ ಹೇಳುತ್ತಾನೆ. +ಕಲಿದೇವ ಎಂಬ ಅಂಕಿತದ ಮಡಿವಾಳ ಮಾಚಯ್ಯ ಅಕ್ಕನ ವ್ಯಕ್ತಿತ್ವದ ವಿರೋಧಾಭಾಸಗಳನ್ನು ಗುರುತಿಸಿ, ಮೆಚ್ಚಿದ್ದಾನೆ. ಅಕ್ಕ ಕಾಮಿಯಾಗಿದ್ದು ನಿಃಕಾಮಿ, ಅವಳು ಸೀಮೆಯಲ್ಲಿದ್ದು ನಿಸ್ಸೀಮೆ, ಭವಿಯ ಸಂಗ ತೊರೆದು ಭವಬಾಧೆ ಹರಿದವಳು (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧) ಮತ್ತು ಅಕ್ಕನಲ್ಲಿ ಹೆಂಗೂಸೆಂಬ ಭಾವ ಬಯಲ ಬೆರೆಸಿತ್ತು (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧೧). ಅಕ್ಕನ ವಚನಗಳಲ್ಲಿರುವ ಲೈಂಗಿಕ ಪ್ರತಿಮೆಗಳ ಬಗ್ಗೆ ಕನ್ನಡ ನವ್ಯ ವಿಮರ್ಶೆ ಪ್ರಧಾನವಾಗಿ ಚರ್ಚಿಸಿತು. ಆದರೆ ಅಕ್ಕ ನಿಃಕಾಮಿ ಅಷ್ಟೇ ಅಲ್ಲ ಆಕೆ ಹೆಂಗುಸೆಂಬ ಭಾವವನ್ನೇ ಇಲ್ಲವಾಗಿಸಿಕೊಂಡಿದ್ದವಳು ಎಂಬುದು ಅವಳ ಸಮಕಾಲೀನರ ಧೋರಣೆಯಾಗಿರುವಂತಿದೆ. ಭಾಷೆಯ ಮಟ್ಟದಲ್ಲಿ ತನ್ನ ಭಾವ ತೀವ್ರತೆಯನ್ನು ತಿಳಿಸಲು ಲೈಂಗಿಕ ಪ್ರತಿಮೆಗಳನ್ನು ಬಳಸಿದರೂ ಅವಳ ಮನಸ್ಸಿನಲ್ಲಿ ಅಂಥ ಆಸೆ ಇರಲ್ಲಿಲ್ಲ; ಕಾಮದ ಅತಿ ಹಂಬಲ ಅಥವ ಅದರ ನಿರಾಕರಣೆ, ಎರಡೂ ವ್ಯಕ್ತಿತ್ವದ ದೃಷ್ಟಿಯಿಂದ ಆತಂಕಗಳನ್ನು ಹುಟ್ಟಿಸಬಲ್ಲುದು. ಕಾಮವನ್ನು ಸಹಜವೆಂದು ತಿಳಿಯುವುದು ಸಮತೋಲನದ ನಿಲುವು. ಚೆನ್ನಮಲ್ಲಿಕಾರ್ಜುನನನ್ನು “ಸಹಜಮಿಥುನರೂಪ” ಎಂದು ಕರೆಯುವಾಗ ಅಕ್ಕ ಕಾಮವನ್ನು ಸಹಜವೆಂದು ನೋಡಿದ್ದು ಸ್ಪಷ್ಟವಾಗಿದೆ. ಯಾವ ವಿಕಾರಗಳೂ ಇಲ್ಲದಿರುವುದೇ ಸಹಜತೆ. ಅಕ್ಕ ಹಾಗೆ ಸಹಜವಾಗಿದ್ದಳು. ಹೆಣ್ಣುತನ ಮತ್ತು ಗಂಡುತನಗಳೆಂಬ ಕಲ್ಪನೆಗಳು ಸಮಾಜ ಸಂಸ್ಕೃತಿಯ ಕಾರಣದಿಂದ ವ್ಯಕ್ತಿಯ ಮನಸ್ಸಿನಲ್ಲಿ ಬೇರೂರುತ್ತವೆ. ನಿಜವಾಗಿ ಹೆಂಗುಸುತನವೆಂಬುದು ಒಂದು ಸಾಮಾಜಿಕ ಚಹರೆ. ಅದರೊಡನೆ ಹೆಂಗುಸು ಹೀಗಿರಬೇಕು, ಬಾರದು ಎಂಬೆಲ್ಲ ಕಲ್ಪಿತಗಳ ಸರಣಿಯೇ ಹುಟ್ಟಿಕೊಳ್ಳುತ್ತದೆ. ಅಕ್ಕ ಹೆಂಗೂಸೆಂಬ ಭಾವವನ್ನು ಬಯಲಾಗಿಸಿಕೊಂಡಿದ್ದವಳು ಎನ್ನುವುದು ಬಹುದೊಡ್ಡ ಮಾತು. ನಮ್ಮನಮ್ಮೊಳಗಿರುವ ಗಂಡು ಅಥವ ಹೆಣ್ಣುತನ “ನಿಜ”ವಲ್ಲ, ಅದು ಕೇವಲ “ಭಾವ”, ಆರೋಪಿತ ಎಂಬ ಅರಿವು ಪಡೆಯುವುದು ಬಹುದೊಡ್ಡ ಸಾಧನೆ. ಅದು ಅಕ್ಕನಿಗೆ ಸಾಧ್ಯವಾಗಿತ್ತು ಎಂಬುದು ಮಾಚಯ್ಯನ ದೃಷ್ಟಿಯಾಗಿದೆ. +ವಚನಕಾರರು ನೆನಪು ಮತ್ತು ಮರೆವುಗಳ ಸಂಬಂಧವನ್ನು ಕುರಿತು ಗಾಢವಾಗಿ ಆಲೋಚಿಸಿದ್ದಾರೆ. ನಾವು ಯಾವುದನ್ನು ನಮ್ಮ ವ್ಯಕ್ತಿತ್ವ ಎಂದುಕೊಳ್ಳುತ್ತೇವೆಯೋ ಅದು ಬಹುಮಟ್ಟಿಗೆ ನೆನಪುಗಳನ್ನು ಆಧರಿಸಿಯೇ ರೂಪುಗೊಂಡಿರುತ್ತದೆ. ವರ್ತಮಾನಕ್ಕೆ ನಾವು ತೋರುವ ಪ್ರತಿಕ್ರಿಯೆಗಳಲ್ಲೆವೂ ನೆನಪಿನಿಂದಲೇ ಮೂಡುತ್ತವೆ. ಮರೆವು ನೆನಪಿನದೇ ಇನ್ನೊಂದು ಮುಖ. ಲೌಕಿಕ ವ್ಯವಹಾರ ಸುಸೂತ್ರವಾಗಿ ನಡೆಯಲು ನೆನಪು ಅಗತ್ಯವೇ ಆದರೂ ಆಧ್ಯಾತ್ಮಿಕ ಪ್ರಗತಿಗೆ ಹಳೆಯ ನೆನಪುಗಳು ಪ್ರತಿಬಂಧಕವೇ ಹೌದು. ಅಂತೆಯೇ ನಮ್ಮ ನಿಜವನ್ನು ನಾವು ಮರೆತು, ನಮ್ಮ ಬಗ್ಗೆ ನಾವು ಕಟ್ಟಿಕೊಂಡಿರುವ ಕಲ್ಪನೆಗಳಿಗೆ ಬದ್ಧರಾಗಿರುವುದೂ ಆಧ್ಯಾತ್ಮಿಕ ವಿಕಾಸಕ್ಕೆ ತೊಂದರೆಯನ್ನು ಒಡ್ಡುತ್ತದೆ. ಅಕ್ಕ ಮರೆವಿಲ್ಲದವಳು. ಅಂದರೆ ತನ್ನ ನಿಜವೇನು ಎಂಬುದರ ಅರಿವನ್ನು ಮರೆಯದೆ ಇದ್ದವಳು. ಆದ್ದರಿಂದಲೇ ನಾವು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುವ ಲೌಕಿಕ ನೆನಪುಗಳ ಬಂಧನಕ್ಕೆ ಸಿಲುಕದವಳು. ಲೌಕಿಕ ಜೀವನ ನಮ್ಮಲ್ಲಿ ರೂಪಿಸುವ ಗತಕಾಲದ ನೆನಪುಗಳು ಹಿರಿದು-ಕಿರಿದು, ಮಹತ್ವದ್ದು-ಕ್ಷುಲ್ಲಕವಾದದ್ದು ಎಂಬಂಥ ಕಲ್ಪಿತ ಬಂಧನಗಳನ್ನು ರೂಪಿಸುತ್ತವೆ. ಅಕ್ಕ ನೆನಪುಗಳಿಂದ ಪಾರಾಗಿದ್ದವಳು, ಮರೆವು ಇಲ್ಲದೆ ತನ್ನ ಅರಿವನ್ನು ಉಳ್ಳವಳು. ಆದ್ದರಿಂದಲೇ ಅವಳು ಹಿರಿದು-ಕಿರಿದು ಇತ್ಯಾದಿ ಅಳತೆಗಳನ್ನು ಮೀರಿದವಳು. ಸಾವು ಎಂಬುದೂ ಕೂಡ ನೆನಪಿನಿಂದಲೇ ಪ್ರೇರಿತವಾಗುವ ಭಯ. ಹುಟ್ಟಿದ್ದೇವೆ ಎಂಬ ನೆನಪು ಇರುವವರೆಗೂ ಸತ್ತೇವು ಎಂಬ ಭಯ ಇರುತ್ತದೆ. ಸತ್ತರೆ ನಮ್ಮೊಡನೆ ನಮ್ಮ ಎಲ್ಲ ನೆನಪುಗಳೂ, ನಾವು ಪ್ರೀತಿಯನ್ನು ಬೆಳೆಸಿಕೊಂಡಿರುವ ಸಂಗತಿಗಳೆಲ್ಲವೂ, ಕೊನೆಗೆ ನಾವು ಯಾವುದನ್ನು ನಮ್ಮ ವ್ಯಕ್ತಿತ್ವ ಎಂದುಕೊಂಡಿದ್ದೇವೆಯೋ ಅದೂ ಮರೆವೆಗೆ ಸಂದುಬಿಡುತ್ತದೆ ಎಂಬ ಭಯ ನಮ್ಮನ್ನು ಕವಿಯುತ್ತದೆ. ಹುಟ್ಟು ಮತ್ತು ಸಾವುಗಳು ವಿರುದ್ಧ ಧೃವವಾಗಿ ಕಂಡು ಒಂದು ಬಯಸಬೇಕಾದದ್ದು ಇನ್ನೊಂದು ತಿರಸ್ಕರಿಸಬೇಕಾದದ್ದು ಎಂಬ ಧೋರಣೆ ನಮ್ಮಲ್ಲಿ ಬೆಳೆಯುತ್ತದೆ. ಅಕ್ಕ ಹುಟ್ಟು ಸಾವುಗಳ ಕಲ್ಪಿತ ಭಯದಿಂದ ಪಾರಾಗಿದ್ದವಳು. ದೇಹ ಪಡೆದು ಹುಟ್ಟುವ ಹುಟ್ಟು ಮಾತ್ರವೇ ಹುಟ್ಟಲ್ಲ, ನಾನು ಎಂದೆಂದಿಗೂ ಇರುವವಳೇ ಎಂಬ ನಿಲುವಿನವಳು. ಆದ್ದರಿಂದ ಅವಳು ಅಜಾತಳು. ಆಜಾತಳಾದ್ದರಿಂದಲೇ ಅವಳಿಗೆ ಸಾವಿನ ಭಯವಿಲ್ಲ ಎಂದು ಸಿದ್ಧರಾಮ ಹೊಗಳುತ್ತಾನೆ. +ಅಲ್ಲಮ ಅಕ್ಕನ ಕಾಲಾತೀತ ಗುಣದ ಬಗ್ಗೆ ನುಡಿದಿದ್ದಾನೆ. ಆದಿ ಮತ್ತು ಅಂತ್ಯ, ಅನಾದಿ ಮತ್ತು ಅನಂತ ಇವೆಲ್ಲ ನಮ್ಮ ಕಾಲದ ಕಲ್ಪನೆಯನ್ನು ಸೂಚಿಸುವ ಪದಗಳು. ಇಂಥ ಕುರುಹುಗಳಿಲ್ಲದೆ ನಮ್ಮ ದಿನ ನಿತ್ಯದ ವ್ಯವಹಾರ ಸಾಗದು, ನಿಜ. ಆದಿ ಶಕ್ತಿ ಎಂದು ಯಾವುದನ್ನು ಗುರುತಿಸುತ್ತಾರೋ ಅದು ಕೇವಲ ನಮ್ಮ ಭಾಷೆಯ ಒಂದು ಪದ, ಒಂದು ಕುರುಹು. ಹಾಗೆಯೇ ಅನಾದಿ ಎಂಬುದು ಕೂಡ ಒಂದು ಹೆಸರು. ನಾವು ಏನೇನನ್ನು ಹೆಸರಿಟ್ಟು ಗುರುತಿಸುತ್ತೇವೆಯೋ ಅವೆಲ್ಲ ಪರಿಮಿತಿಗೆ ಒಳಪಟ್ಟುಬಿಡುತ್ತವೆ. ಅಕ್ಕ ಹಾಗೆ ಕುರುಹುಗಳಿಗೆ, ಹೆಸರಿನ ಮಿತಿಗಳಿಗೆ ಒಳಗಾದವಳಲ್ಲ. ಅವಳೊಂದು ಬೆಳಕು. ಅಂತರಂಗ ಮತ್ತು ಬಹಿರಂಗ ಎಂಬ ವ್ಯತ್ಯಾಸಗಳಿಲ್ಲದೆ ಅಂತರಂಗದ ಬೆಳಕು ಬಹಿರಂಗದಲ್ಲೂ ವ್ಯಾಪಿಸಿಕೊಂಡಂತೆ ಇರುವವಳು ಅಕ್ಕ ಎಂದು ಅಲ್ಲಮ ಹೇಳುತ್ತಾನೆ. +ಅಕ್ಕ ಇಂಥ ಬೆಳಕು ಹೇಗಾದಳು ಎಂಬುದನ್ನು ಅಲ್ಲಮ ಹೇಳಿದ್ದಾನೆ. ನಾನೆಂದರೆ ದೇಹ ಮಾತ್ರ ಎಂದುಕೊಂಡಿರುವವರೆಗೂ ಸತ್ಯ ಎಂಬುದು ಅರಿವಿಗೆ ಬರಲಾರದು. ವಚನಕಾರರು ಈ ಸತ್ಯವನ್ನು ಲಿಂಗ ಎಂದೂ ಕರೆದಿದ್ದಾರೆ. ಅಕ್ಕ ತಾನೆಂದರೆ ಕೇವಲ ದೇಹ, ಅಥವ ಹೆಣ್ಣುದೇಹ ಎಂಬ ಕಲ್ಪನೆಗೆ ಸಿಲುಕಿದವಳಲ್ಲ. ಅವಳಲ್ಲಿ ತನುಗುಣವಿಲ್ಲದ್ದರಿಂದ ಆಕೆ ಲಿಂಗಸಂಗಿ. ನಾವು ಯಾವುದನ್ನು ನಮ್ಮ ಮನಸ್ಸು ಎನ್ನುತ್ತೇವೆಯೋ ಅದು ನೆನಪುಗಳ ಪ್ರಭಾವದಿಂದ ರೂಪುಗೊಂಡದ್ದು, ಇಷ್ಟ ಮತ್ತು ಅನಿಷ್ಟಗಳೇ, ನನಗೆ ಬೇಕು ನನಗೆ ಬೇಡ ಎಂಬಂಥ ನಿಲುವುಗಳೇ ಪ್ರಮುಖವಾಗಿರುವಂಥದ್ದು. ಮನೋಗುಣ ಮುಖ್ಯವಾಗಿಬಿಟ್ಟರೆ ಆಗ ಇರುವ ಸತ್ಯ ನಮಗೆ ಕಾಣದೆ ಮನಸ್ಸು ಏನನ್ನು ಬಯಸುತ್ತದೆಯೋ ಅದು ಮಾತ್ರ ಕಾಣತೊಡಗುತ್ತದೆ. ಮನಸ್ಸೇ ಮುಖ್ಯ ಎಂದುಕೊಂಡವರಿಗೆ ಸತ್ಯವಾಗಲಿ, ಸತ್ಯದ ಅರಿವಾಗಲೀ ದೊರೆಯದು. ಅಕ್ಕ ಮನೋಗುಣವಿಲ್ಲದವಳು ಆದ್ದರಿಂದ ಸದಾ ಅರಿವುಸಂಗಿ ಎಂದು ಅಲ್ಲಮ ಹೇಳುತ್ತಾನೆ. ನಮಗೆ ಭಾವಗಳೇ ಮುಖ್ಯವಾದರೆ ಆಗ ಸರಿ ಮತ್ತು ತಪ್ಪು, ಒಳಿತು ಮತ್ತು ಕೆಡುಕು ಎಂಬಂಥ ತೀರ್ಮಾನಗಳ ಬಲೆಯಲ್ಲಿ ಸಿಲುಕಿ ಭಾವದ ಕತ್ತಲಲ್ಲಿ ತಡಕಾಡಬೇಕಾಗುತ್ತದೆ. ಅಕ್ಕನಲ್ಲಿ ಈ ಮೂರುಗುಣಗಳೂ, ಅಂದರೆ ದೇಹಗುಣ, ಮನೋಗುಣ ಮತ್ತು ಭಾವಗುಣ ಇಲ್ಲ. ಆದ್ದರಿಂದ ಅವಳು ಸದಾ ಲಿಂಗಸಂಗಿ, ಅರಿವು ಸಂಗಿ ಮತ್ತು ಮಹಾಪ್ರಭೆ ಎಂದು ಅಲ್ಲಮ ಗುರುತಿಸುತ್ತಾನೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೮) +ನೋಟವೆ ತಾನಾದವಳು, ತನ್ನ ತಾನರಿದ ನಿಜಶಕ್ತಿ, ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ಎಂದವನು ಅಲ್ಲಮ. ಅಕ್ಕನ ವ್ಯಕ್ತಿತ್ವ ಅಖಂಡವಾದದ್ದು. ಅಂದರೆ ಅವಳಲ್ಲಿ ತಾನು ಬೇರೆ, ಈ ಲೋಕ ಬೇರೆ ಎಂಬ ನಮ್ಮೆಲ್ಲರಲ್ಲು ಸಾಮಾನ್ಯವಾಗಿರುವ ದೃಷ್ಟಿ ಇರಲಿಲ್ಲ. ಅವಳ ಬುದ್ಧಿ, ಮನಸ್ಸು, ದೇಹಗಳು ಬೇರೆ ಬೇರೆ ದಾರಿಗಳಲ್ಲಿ ಸಾಗುತ್ತ ಅಂತರಂಗದ ತೊಳಲಾಟಕ್ಕೆ ಕಾರಣವಾಗಿರಲಿಲ್ಲ. ತಾನು ಬೇರೆ ಲೋಕ ಬೇರೆ ಎಂಬ ದ್ವಂದ್ವ ಅವಳಲ್ಲಿ ಇಲ್ಲವಾದ್ದರಿಂದಲೆ ಅವಳದು ಭಿನ್ನವಿಲ್ಲದ ಅರಿವು. “ನಾನು” ಎಂಬುದೂ ಇಲ್ಲದೆ, ನಾನು ನೋಡುತ್ತಿರುವ ವಸ್ತು ತನ್ನಿಂದ ಬೇರೆ ಎಂಬ ಖಂಡ ದೃಷ್ಟಿಯೂ ಇಲ್ಲದೆ ನೋಟವೇ ತಾನು ಎಂಬ ಸ್ಥಿತಿಯನ್ನು ಪಡೆದುಕೊಂಡವಳು. ಆದ್ದರಿಂದಲೇ ಅವಳದು ತಾನರಿದ ನಿಜ ಶಕ್ತಿ. ಅವಳಿಗೆ ಇಂಥ ಅಖಂಡತೆ ಇದ್ದದ್ದರಿಂದಲೇ ಲೋಕದಿಂದ, ಇತರರಿಂದ ಮನ್ನಣೆಯನ್ನು ಪಡೆಯಬೇಕೆಂಬ ಮಮಕಾರವೂ ಇರಲಿಲ್ಲ. ಅಂತೆಯೇ ಅವಳು ಮಹದೇವಿ ಎಂದು ಅಲ್ಲಮ ನುಡಿಯುತ್ತಾನೆ. ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೭) +ತನ್ನ ನಿಲುಕಡೆಯನಿಜವ ತಾನರಿಯದವಳು. ನುಡಿಗೆ ಎಡೆಗೊಡದ ಘನವ ಹಿಡಿದವಳು. ಎಡೆ ಇಲ್ಲದ ಪರಿಪೂರ್ಣದೊಳಗೆ ನಡೆ ನುಡಿ ಕೆಟ್ಟವಳು. ಅಕ್ಕ ಅಖಂಡವಾದವಳು ಆದ್ದರಿಂದಲೇ ಅವಳಿಗೆ ತಾನು ಯಾವ ನಿಲುಕಡೆಯನ್ನು ಪಡೆದಿದ್ದೇನೆ ಎಂಬ ಅರಿವು ಇಲ್ಲ. ಹಾಗೆ ಗೊತ್ತಿದ್ದಿದ್ದರೆ ಅವಳ ವ್ಯಕ್ತಿತ್ವ ಭಿನ್ನವಾಗಿಬಿಡುತ್ತಿತ್ತು. ಗೊತ್ತಿದೆ ಎಂದರೆ ತನಗಿಂತ ಬೇರೆಯಾವುದೋ ಇದೆ, ಅದು ಗೊತ್ತಿದೆ ಎಂದರ್ಥವಲ್ಲವೆ? ಅಕ್ಕ ಹಾಗೆ ತನಗೆ ಗೊತ್ತಿದೆ, ಗೊತ್ತಿಲ್ಲ ಎಂಬ ದ್ವಂದ್ವಗಳಿಲ್ಲದವಳು. ಹೀಗಾಗಿ ಅವಳು ಘನ, ಘನವನ್ನು ಹಿಡಿದವಳು ಅಥವ ಘನವೇ ಅವಳನ್ನು ಹಿಡಿದು ಘನದ ಹಿಡಿತಕ್ಕೆ ಒಳಗಾದವಳು. ಅವಳು ನುಡಿಗೆ ಎಡೆ ಇಲ್ಲದ ಪರಿಪೂರ್ಣದೊಳಗೆ ಇರುವವಳು. ಅಂಥ ಸ್ಥಿತಿಯಲ್ಲಿ ಮಾತು ಬೇಕಾಗಿಲ್ಲ. ಮಾತು ಎಂಬುದು ನಮ್ಮನ್ನು ನಿಜದಿಂದ ಬೇರೆ ಮಾಡುವ ಮಾಧ್ಯಮ. ಅಕ್ಕ ನುಡಿಗೆಟ್ಟವಳು, ಅಂದರೆ ನುಡಿಯ ಹಂಗು ಇಲ್ಲದವಳು. ನುಡಿಯ ಅಗತ್ಯವೇ ಇಲ್ಲದೆ ನುಡಿ ಕೆಟ್ಟು, ಇಲ್ಲವಾದ ಸ್ಥಿತಿ ಅವಳದು. ನಡೆಗೆಟ್ಟವಳೂ ಹೌದು. ಈ ಮಾತುಗಳನ್ನು ಕೊಂಚ ವಿವರಿಸುವುದು ಅಗತ್ಯವಿದೆ. ನಾವು ಇಂದು ಕೇಡು, ಕೆಟ್ಟ ಎಂಬ ಮಾತುಗಳನ್ನು ಒಳ್ಳೆಯ ಅರ್ಥದಲ್ಲಿ ಬಳಸುವುದೇ ಇಲ್ಲ. ಆದರೆ ವಚನಕಾರರಲ್ಲಿ ಅನೇಕ ಬಾರಿ ಕೆಡು, ಕೆಟ್ಟ ಎಂಬ ಮಾತುಗಳು ಧನಾತ್ಮಕ (ಪಾಸಿಟಿವ್) ಅರ್ಥದಲ್ಲಿ ಬಳಕೆಯಾಗಿರುವುದು ಕಾಣುತ್ತದೆ. ” ಸತ್ಯದ ಬಲದಿಂದ ಅಸತ್ಯದ ಕೇಡು,” ” ಜ್ಯೋತಿಯ ಲದಿಂದ ತಮಂಧಡ ಕೇಡು” ಎಂಬಂಥ ಮಾತುಗಳಲ್ಲಿ ಕತ್ತಲೆಯು ಕೆಟ್ಟರೆ ತನ್ನ ಅದು ಬೆಳಕಾಗುತ್ತದೆ, ಅಸತ್ಯ ಕೆಟ್ಟರೆ ಅದು ಸತ್ಯವಾಗುತ್ತದೆ ಎಂಬ ಅರ್ಥ ಹೊಳೆಯುತ್ತದೆಯಲ್ಲವೆ? ಹಾಗೆಯೇ ನುಡಿಯು ಕೆಟ್ಟರೆ ಅದು ಮೌನವಾಗುತ್ತದೆ. ನಡೆ ಕೆಟ್ಟರೆ ನಿಶ್ಚಲತೆಯಾಗುತ್ತದೆ. ಅಕ್ಕನದು ನುಡಿಯು ಮೌನವಾದ ನುಡಿ, ಗಮನವಿಲ್ಲದ ನಿರ್ಗಮನ ಎಂದು ಅಲ್ಲಮ ಹೇಳುತ್ತಿರುವಂತಿದೆ. (ಅಕ್ಕನ ವಚನಗಳು, ಎಲ್. ಬಸವರಾಜು. ವಚನ ಸಂಖ್ಯೆ ೧೨) +ಇನ್ನೊಂದು ರೀತಿಯಿಂದ ನೋಡುವುದಾದರೆ ಲೌಕಿಕ ನೀತಿಯ ದೃಷ್ಟಿಯ ಸರಿ ತಪ್ಪುಗಳ ನಡೆ ಕೂಡ ಅವಳದಲ್ಲ. ಯಾವುದನ್ನು ಶೂನ್ಯ ಸಂಪಾದನೆ ಎಂಬ ಕೃತಿ “ಶೂನ್ಯ”ವೆಂದು ಕರೆಯುತ್ತದೆಯೋ ಅದನ್ನು ಸಂಪಾದಿಸಿಕೊಂಡಿದ್ದವಳು. ಅಲ್ಲಮ ಅದನ್ನು ಗುರುತಿಸಬಲ್ಲ. ಆದರೆ ಅವನು ಇನ್ನೂ ತನ್ನ ಶೂನ್ಯವನ್ನು ಸಂಪಾದಿಸಿಕೊಳ್ಳಬೇಕಿದೆ. “ಶೂನ್ಯ ಸಂಪಾದನೆ” ಕೃತಿಯಲ್ಲಿ ಅಕ್ಕನ ಪ್ರಸಂಗದ ನಂತರ ಅಲ್ಲಮನೂ ತನ್ನ ಅಂತಿಮ ಪಯಣಕ್ಕೆ ತೊಡಗಿದ ಪ್ರಸಂಗ ಬರುತ್ತದೆ. ಮತ್ತೆ ಕಲ್ಯಾಣಕ್ಕೆ ಬರುವ ಸಂಗತಿಯೂ ಬರುತ್ತದೆ. ಅಲ್ಲಮ ಹಾಗೆ ಕಲ್ಯಾಣಕ್ಕೆ ಬಂದಾಗ ಅವನು ಹೇಗಿದ್ದ ಎಂಬ ವರ್ಣನೆ ಇದೆಯಲ್ಲ ಅದು ಅಲ್ಲಮನ ಶೂನ್ಯ ಸಂಪಾದನೆ ಪೂರ್ಣವಾದದ್ದನ್ನು ಸೂಚಿಸುತ್ತದೆ. ಲೋಕದ ಕಣ್ಣಿಗೆ ಉನ್ಮತ್ತನಂತೆ, ಬಾಲಕನಂತೆ, ಹುಚ್ಚನಂತೆ ಕಾಣುವ ಆದರೆ ಎರಡಳಿದ ಸ್ಥಿತಿಯಲ್ಲಿದ್ದ ಅಲ್ಲಮನ ವರ್ಣನೆ ಬಹಳ ಉಜ್ವಲವಾದದ್ದು. ಅಕ್ಕ ಕಲ್ಯಾಣಕ್ಕೆ ಬರುವ ವೇಳೆಗಾಗಲೇ ಅಂಥ ಎತ್ತರವನ್ನು ತಲುಪಿದ್ದವಳು. ಇನ್ನುಳಿದದ್ದು ಅವಳು ತನುವೆಂಬ ಕದಳಿಯಲ್ಲಿ, ಮನವೆಂಬ ಕದಳಿಯಲ್ಲಿ ಕರ್ಪೂರದಂತೆ ಕರಗುವುದು ಮಾತ್ರ. ಅವಳ ಆಧ್ಯಾತ್ಮಿಕ ಹಿರಿಮೆಯನ್ನು ಅವಳ ಸಮಕಾಲೀನ ವಚನಕಾರರು ಹೀಗೆ ಕೊಂಡಾಡಿದ್ದಾರೆ. +– ೨ – +ಅಕ್ಕನ ಸಮಕಾಲೀನ ವಚನಕಾರ್ತಿಯರು ಯಾರೂ ಅಕ್ಕನನ್ನು ಸ್ಮರಿಸಿರುವುದು, ಕೊಂಡಾಡಿರುವುದು ಗಮನಕ್ಕೆ ಬಂದಿಲ್ಲ. ಅಕ್ಕನನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖೆಯ ವಚನಗಳು ದೊರೆತಿರುವುದು ಅಕ್ಕಮನದು. ಆಕೆಯಂತೂ “ಸೀಮೆವಂತ ” ಎಂಬ ಮಾತನ್ನು ಮತ್ತೆ ಮತ್ತೆ ಬಳಸುತ್ತ ತಾನು ತನ್ನ ಕುಟುಂಬ, ವ್ರತ, ಮನೆಗೆಲಸ ಇತ್ಯಾದಿಗಳ ಸೀಮೆಗಳೊಳಗೇ ಇದ್ದು ಸಾಧನೆ ಮಾಡಬಯಸುವವಳು ಎಂದಿದ್ದಾಳೆ. ಅವಳ ಧೋರಣೆ ಅಕ್ಕನ ನಿಲುವಿಗೆ ವಿರುದ್ಧವಾದದ್ದಾಗಿ ಕಾಣುತ್ತದೆ. ಕೇವಲ ಅಕ್ಕ ಮಾತ್ರವಲ್ಲ, ಮುಕ್ತಾಯಕ್ಕನ ದುಃಖವನ್ನು ಕಟುವಾಗಿ ವಿಮರ್ಶಿಸುವ ವಚನಕಾರ್ತಿಯರೂ ಇದ್ದಾರೆ. ನಾವು ಇಂದು ಅಷ್ಟೊಂದು ಮೆಚ್ಚುವ ಅಕ್ಕ ಅಥವ ಮುಕ್ತಾಯಕ್ಕರನ್ನು ಏಕೆ ಸಮಕಾಲೀನ ವಚನಕಾರ್ತಿಯರು ನೆನೆಯುವುದೂ ಇಲ್ಲ, ಆದರೆ ಬಸವ ಮುಖ್ಯನಾಗಿ ಇತರ ಅನೇಕ ವಚನಕಾರರನ್ನು ಪ್ರೀತಿ ಭಕ್ತಿಗಳಿಂದ ಸ್ಮರಿಸುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ. +ಈ ಪ್ರಶ್ನೆಗೆ ಎರಡು ಸಮಾಧಾನಗಳಿರುವುದು ಸಾಧ್ಯ. ವಚನಕಾರ್ತಿಯರು ಬರೆದ ಎಲ್ಲ ವಚನಗಳೂ ಸಿಕ್ಕಿಲ್ಲ ಎಂದುಕೊಳ್ಳಬಹುದು. ಆದರೆ ಇದು ತೃಪ್ತಿಕರ ಉತ್ತರವಲ್ಲ. ಇನ್ನೊಂದು ಆ ಕಾಲದ ಸ್ತೀಯರ, ಸಾಮಾಜಿಕ ವಾಸ್ತವ ಪ್ರೇರಿತ ದೃಷ್ಟಿಕೋನ ಕಾರಣ ಎನ್ನಬಹುದು. ಅಕ್ಕ ತುಳಿದ ದಾರಿ ಎಲ್ಲ ಲೌಕಿಕ ಮಹಿಳೆಯರಿಗೆ ಆದರ್ಶವಾಗುವುದು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಿರಬಹುದೆ? ಅಥವ ಎಲ್ಲ ವಚನಕಾರ್ತಿಯರ ರಚನೆಗಳಲ್ಲಿ ವ್ರತ, ನೇಮ ಪೂಜೆಗಳೇ ಬಹುಭಾಗ ಆಕ್ರಮಿಸಿರುವುದನ್ನು ಕಂಡರೆ ಮಹಿಳೆಯ ಆಧ್ಯಾತ್ಮಿಕ ಸಾಧನೆಗೆ ಪುರುಷ ದೃಷ್ಟಿಕೋನ ಕೆಲವು ಮಿತಿಗಳನ್ನು ವಿಧಿಸಿತ್ತೆಂದು ಊಹಿಸಬಹುದೆ? ನಿಸ್ಸೀಮರಾಗುವುದು, ಬಯಲನ್ನು ಗಳಿಸುವುದು, ಇತ್ಯಾದಿ ಆಧ್ಯಾತ್ಮಿಕ ಎತ್ತರಗ್‌ಳೆಲ್ಲ ಪುರುಷರಿಗಷ್ಟೆ, ಪುರುಷ ಮನೋಧರ್ಮಕ್ಕಷ್ಟೆ ಸಾಧ್ಯ ಎಂಬ ಮನೋಧರ್ಮ ಕೆಲಸಮಾಡಿದೆಯೇ? +ಈ ಪ್ರಶ್ನೆಗಳು ಆಧ್ಯಾತ್ಮಿಕ ಪ್ರಶ್ನೆಗಳಲ್ಲ, ಸಾಮಾಜಿಕ ಪ್ರಶ್ನೆಗಳು. ಬಹುಶಃ ಅಕ್ಕ ಕೂಡ ಆಧ್ಯಾತ್ಮಿಕತೆಯ ಈ ಪುರುಷ ಪ್ರಾಧಾನ್ಯವನ್ನು ಒಪ್ಪಿಕೊಂಡಿರಬಹುದು ಎಂಬ ಭಾವ ಅವಳ ಕೆಲವು ವಚನಗಳನ್ನು ಓದಿದಾಗ ಬರುತ್ತದೆ. “ನಾಮದಲ್ಲಿ ಹೆಂಗೂಸೆಂಬ ಹೆಸರಾದರೇನು, ಭಾವಿಸಲು ಗಂಡುರೂಪು,” “ಮುಂಗೈಯಲ್ಲಿ ವೀರಗಂಕಣವನಿಕ್ಕಿ, ಮುಂಗಾಲಲ್ಲಿ ತೊಡರುಬಾವುಲಿಯ ಕಟ್ಟಿದೆ, ಗಂಡುಡಿಗೆಯನ್ನುಟ್ಟೆನೆಂಬ ಮಾತಿನ ಬಿರಿವ ನುಂಗಿದೆನು”, ಎಂಬಂಥ ಮಾತುಗಳು ಮತ್ತು ಅಘಟಿತ ಘಟಿತನ ಒಲವಿನ ಶಿಶು ಎಂದು ಆರಂಭವಾಗುವ ಅಕ್ಕನ ವಚನ ಇವನ್ನು ಈ ಮಾತಿಗೆ ನಿದರ್ಶನವಾಗಿ ನೋಡಬಹುದು (ಶಿವ ಶರಣೆಯರ ವಚನಗಳು, ಕರ್ನಾಟಕ ಸಂಸ್ಕೃತಿ ಇಲಾಖೆ, ಸಂ.ವೀರಣ್ಣ ರಾಜೂರ, ಕ್ರಮವಾಗಿ ವಚನ ಸಂಖ್ಯೆ ೧೩೦, ೨೨೮ ಮತ್ತು ೧೨) +ಅನುಭಾವವೆಂಬುದು ಕಾಲವೆಂಬ ಕಲ್ಪನೆಯನ್ನು ಮೀರುವ ಅಪೇಕ್ಷೆ, ಅದೊಂದು ಕಾಲಾತೀತ ಸ್ಥಿತಿ; ಆದರೆ ಅದನ್ನು ಭಾಷೆಯಲ್ಲಿ ವ್ಯಕ್ತಪಡಿಸಿದಾಗ ಕಾಲಧರ್ಮ, ಕಾಲಧರ್ಮವು ರೂಪಿಸುವ ಸಾಮಾಜಿಕ ಮಾನಸಿಕ ಮನ್ಧರ್ಮಗಳಿಗೆ ಒಳಪಡದೆ ವಿಧಿಯಿಲ್ಲ. ಅಕ್ಕನ ಸಮಕಾಲೀನ ವಚನಕಾರರು ಅವಳ ಆನುಭಾವಿಕತೆಯನ್ನು ಮೆಚ್ಚಿದರೂ ಸಮಕಾಲೀನ ಶರಣೆಯರು ಅಕ್ಕನ ಬಗ್ಗೆ, ಮತ್ತು ತಮ್ಮ ಇತರ ಒಡನಾಡಿ ವಚನಕಾರ್ತಿಯರ ಬಗ್ಗೆ ಮೌನವಹಿಸಿರುವುದು; ಅಕ್ಕನಲ್ಲಿ ಮತ್ತು ಇತರ ವಚನಕಾರ್ತಿಯಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುವ ಪೌರುಷ ಮನೋಧರ್ಮ ಇವನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ. ಅಕ್ಕನ ವಚನಗಳನ್ನು ಈಗ ನಡೆದಿರುವುದಕ್ಕಿಂತ ಇನ್ನೂ ಹೆಚ್ಚು ವಿವರವಾಗಿ ಅಕ್ಕನೇ ರೂಪಿಸಿಕೊಂಡಿರುವ ಪರಿಣಾಮಿ, ಧಾವತಿ, ಮುಂತಾದ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ, ಆಕೆ ಬಳಸುವ ಹೋಲಿಕೆ ರೂಪಕಗಳಿಗು ತಾತ್ವಿಕ ವಿಚಾರಗಳಿಗೂ ಇರುವ ಸಂಬಂಧವನ್ನು ಅನುಲಕ್ಷಿಸಿಕೊಂಡು ಪರಿಶೀಲಿಸುವುದು ಅಗತ್ಯವಾಗಿದೆ. ಅದು ಇನ್ನೊಂದೇ ವಿಸ್ತೃತ ಅಧ್ಯಯನ ವಸ್ತುವಾಗುತ್ತದೆ. +***** +‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ […] +ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ, ನಿನ್ನ ನಲ್ಮೆಯ ನೆಳಲನೀವ ಮಾವು: ನಿನ್ನೊಲವನಪ್ಪಿ ತೋರುವ ಕೊಳದ ತಳ ಕೆಸರು- ಇಲ್ಲಾಡುವುದು-ಇದೇ ಹೊಸ ಠರಾವು(ಕೂಪ ಮಂಡೂಕ)-ಗೋಪಾಲಕೃಷ್ಣ ಅಡಿಗ ಆರ್ಥಿಕ ರಂಗದಲ್ಲಿ ‘ಜಾಗತೀಕರಣ’ ಇಂದು ಎಲ್ಲಾ ಸರ್ಕಾರಗಳ ಮೂಲಮಂತ್ರ. […] +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_41.txt b/Kannada Sahitya/article_41.txt new file mode 100644 index 0000000000000000000000000000000000000000..86f7e41fafee307dbce295c8fe9cf0d446036509 --- /dev/null +++ b/Kannada Sahitya/article_41.txt @@ -0,0 +1,146 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ ಆಡುವುದಕ್ಕಾಗಿ ಒಂದು ಆಟ ಕಲಿಯುತ್ತಿದ್ದರು. ಆ ಸುದ್ದಿ ಕೇಳಿ ಇವನ ಮನಸ್ಸು ಆವಿಶ್ರಾಂತವಾಯಿತು. +ಪಂಚಾಯ್ತಿ ಆಫಿಸಿಗೆ ಪಾಪ ಮಾಸ್ತರನನ್ನು ಕರೆಸಿದ. ಚತುಷ್ಟಯರೂ ಹಾಜರಾದರು. ‘ಕಾರ ಹುಣ್ಣಿವೀ ದಿನ ಆಡಾಕ ಒಂದು ಆಟ ಕಲಸಿರಿ’ ಎಂದು ಕಣ್ಣಂಚಿನಲ್ಲಿ ಕನಸು ತುಳುಕುತ್ತ ಆಜ್ಞೆ ಮಾಡಿದ. ಪಾಪ ಮಾಸ್ತರ ಎಂದೂ ನಾಟಕ ಮಾಡಿದವನಲ್ಲ, ಬಹಳವಾದರೆ ತನ್ನ ಜೀವಮಾನದಲ್ಲಿ ನಾಕೈದು ನಾಟಕ ನೋಡಿದ್ದನಷ್ಟೆ. ಅಲ್ಲದೆ ಅವನ ವಯಸ್ಸೂ ಇಂಥ ಖುಶಿ ಮೋಜಿಗೆ ಮೀರಿದ್ದಾಗಿತ್ತು. “ಅದೆಂಗಾದೀತರಿ? ಆಗೋಣಿಲ್ಲ” ಅಂದ.ತನಗೆಂಥ ನಾಟಕ ಬಂದೀತು? ಬರೋಣಿಲ್ಲವೆಂದ. ಪರಿಪರಿಯಾಗಿ ಹೇಳಿದ, ಅಂಗಲಾಚಿದ. ಆದರೆ ಮಾಸ್ತರ ಆಗೋಣಿಲ್ಲ ಎಂದರೆ ನಾಟಕವಾಡುವ ತಮ್ಮ ಅವಕಾಶ ತಪ್ಪುವುದಲ್ಲಾ ಎಂದು ಚತುಷ್ಟಯರ ತವಕ. ಆದರೂ ಒತ್ತಾಯ ಮಾಡಿದರು. ಬೇಡಿದರು. ಕೊನೆಗೆ ಉಪಾಯ ಗೊತ್ತೇ ಇದೆ-‘ಸ್ವಥಾ ಸರಪಂಚ ಸಾಹೇಬರ ಕೇಳತಾರೆಂದರ ಕಿಮ್ಮತ್ತಿಲ್ಲೇನ? ಇಂದಽ ಮ್ಯಾಲಿನವರಿಗೆ ಬರದ ಹಾಕಿದರ ನಿಮ್ಮ ಗತಿ ಏನಾದೀತು?’ ಏನಾಗುತ್ತಿತ್ತೋ, ಪಾಪ ಮಾಸ್ತರನಂತೂ ಹೆದರಿದ. +ಅವರನ್ನು ಕೂರಿಸಿಕೊಂಡೇ ‘ಸೀತಾಪಹರಣ’ ನಾಟಕವಾಡುವುದೆಂದು ತೀರ್‍ಮಾನಿಸಿದರು. ಬೆಳಗಾವಿಯಿಂದ ವಿದ್ಯುದ್ದೀಪ, ಅಲಂಕಾರ, ವೇಷಭೂಷಣಗಳನ್ನು ಬಾಡಿಗೆ ತರಿಸುವುದೆಂದು ಮಾತಾಯ್ತು. ರಾವಣನ ಆಸ್ಥಾನದಲ್ಲಿ ಒಂದು ‘ಡ್ಯಾನ್ಸು ಹಾಕಿ, ಅದಕ್ಕಾಗಿ ಬೆಳಗಾವಿಯಿಂದ ಚಿಮಣಾಳನ್ನು ತರಿಸುವುದೆಂದಾಯಿತು. ಸ್ಥೂಲವಾಗಿ ಪಾತ್ರಗಳ ಹಂಚಿಕೆಯೂ ಆಯ್ತು. ಗುಡಸೀಕರ ಯಾವ ಪಾತ್ರವನ್ನೂ ವಹಿಸಲಿಲ್ಲ. ರಾವಳನ ಪಾತ್ರಕ್ಕೆ ಕಳ್ಳನನ್ನು ಬಿಟ್ಟರೆ ಯಾರಿದ್ದಾರೆ? ರಾವಳನ ಪಾತ್ರ ತನಗೆ ಖಚಿತವಾದ ಕೂಡಲೇ ಕಳ್ಳ ಸೀತೆಯ ಪಾತ್ರಕ್ಕೆ ನಿಂಗೂನನ್ನು ಶಿಫಾರಸ್ಸು ಮಾಡಿದ. ಗುಡಸೀಕರ ಒಪ್ಪಲಿಲ್ಲ. ರಮೇಸನೇ ಸೀತೆಯಾದ. ನಾರದ ಹಾಗೂ ಹನುಮಂತ-ಈ ಎರಡೂ ಪಾತ್ರಗಳನ್ನು ಮೆರಮಿಂಡ ವಹಿಸಿಕೊಂಡ. ಸಾತೀರ ಶಿವನಾದ. ಉಳಿದ ರಾಮ ಲಕ್ಷ್ಮಣ ಇತ್ಯಾದಿ ಪಾತ್ರಗಳನ್ನು ಊರಲ್ಲಿಯ ತಮಗೆ ಅನುಕೂಲದ ಹುಡುಗರಿಗೆ ಹಂಚಿದರು. ಪಾಪ ಮಾಸ್ತರನಿಗೂ ಒಂದು ಪಾತ್ರ ಕೊಡಬೇಕೆಂದು ಸೂಚನೆ ಬಂತು. ತಕ್ಷಣವೇ ಆತ ಎದ್ದು ಕೈಮುಗಿದು ಬೇಡವೆಂದ. ಬಿಟ್ತರು. ಹೀಗೆ ನಾಟಕದ ವಿಚಾರ ಒಂದು ಗಟ್ಟಿ ಮುಟ್ಟ ಹಂತಕ್ಕೆ ಬಂದಾಗ ನಾಯೆಲ್ಯಾ ಬಂದ. +ಗುಡಸೀಕರನ ದಯದಿಂದ ನಾಯೆಲ್ಯಾ- ಒಂದು ಕುರಿ ದಂಡ ಕೊಟ್ಟನಲ್ಲ, ಮಾದಿಗರು ಇಂದೇ ಅದರ ಹಬ್ಬ ಇಟ್ಟುಕೊಂಡಿದ್ದರು. ಅದು ಕುಲದವರ ಹಬ್ಬವಾದುದರಿಂದ ಗುಡಸೀಕರ ಅಲ್ಲಿಗೆ ಹೋಗಬೇಕಾದ ಅಗತ್ಯವಿರಲಿಲ್ಲ. ಆದರೆ ಕುರಿ ಕೊಟ್ಟವನ ತಾನೆಂದು, ಅದೂ ಗೌದನ ಆಳು ಮನುಷ್ಯನಿಗೆ ಕೊಟ್ತವನೆಂದೂ ಕೂಡಿದ ಮಂದಿ ಔದಾರ್‍ಯದ ಕಟ್ಟಿನಲ್ಲಿ ತನ್ನ ರೂಪ ನೋಡಲೆಂದೂ ತಾನೂ ಬರುವುದಾಗಿ ಹೇಳಿದ್ದ. ನಾಯೆಲ್ಯಾ ದಂಡ ತೆತ್ತನಾದ್ದರಿಂದ ಮಾಂಸದಲ್ಲಿ ಅವನಿಗೂ ಒಂದು ಪಾಲು ಸಿಕ್ಕುವುದಿತ್ತು. ಮಂದಿ ಹಬ್ಬ ಮಾಡಿದರೇ ಕಾಲು ನೋಯುವ ಹಾಗೆ ಕುಣಿಯುವವನು. ಇನ್ನು ಈಗ ಕೇಳಬೇಕೆ? ಬಹಳ ಉತ್ಸಾಹದಿಂದಲೇ ಕರೆಯಬಂದ. ಓಡೋಡಿ ಬಂದಿದ್ದನೆಂದು ತೋರುತ್ತದೆ, ತೇಗುತ್ತ. +“ಸಾಹೇಬರ, ಎಲ್ಲಾ ತಯಾರಾಗೇತಿ ಬರಬೇಕ್ರಿ” +ಅಂದ. ಅವನನ್ನು ನೋಡಿದೊಡನೆ ಚತುಷ್ಟಯರಿಗೆ ಮತ್ತೆ ನಗು ಬಂತು., ಸಾತೀರ ನಗುತ್ತ- +“ನಾಯೆಲ್ಯಾ ಮನ್ನಿ ಫಾರಿನ್ ಭಿರಂಡಿ ಕುಡದಲ್ಲ ಮಗನ, ಹೆಂಗ್ಹೆಂಗ ಆತೊ?” +-ಅಂದ. ಆ ಘಟನೆ ನೆನಪಿಸಿಕೊಳ್ಳುವುದೂ ಬೇಡವಾಗಿತ್ತು. ಅವಮಾನಿತನಂತೆ ನಾಚಿಕೊಂಡು, +“ಎಲ್ಲಾ ಹುದಲಾ ಬಿದ್ಧಾಂಗಿತ್ತ ಬಿಡರಿ” +“ಇನ್ನ ಮ್ಯಾಲ ಭಿರಂಡಿ ಕುಡಿಯಾಣಿಲ್ಲ ಅಂತ ಕರಿಮಾಯಿ ಆಣಿ ಮಾಡಿದೀಯಂತಲ್ಲ. ಹೌಂದೇನ?” +-ಅಂದ ಮೆರಮಿಂಡ. +“ಹೌಂದ್ರಿ ಗೌಡ್ರು ಆಣಿ ಮಾಡಿಸ್ಯಾರ” +“ಯಾರ ಕೊಟ್ಟರೂ ಕುಡಿಯಾಣಿಲ್ಲಾ?” +“ಒಟ್ಟ ಆ ಭಿರಂಡಿ ಸುದ್ದಿ ಎತ್ತಬ್ಯಾಡ್ರಿ ನನ್ನ ಮುಂದ” +-ಅಂದ. ಗುಡಸೀಕರ ಮೆಲ್ಲಗೆ ನಾಯೆಲ್ಯಾನಿಗಾಗಿಯೇ ತೆಗೆದಿರಿಸಿದ್ದ ಬ್ರಾಂದಿ ಬಾಟ್ಲಿ ತೆಗೆದು, ಎತ್ತಿ ಮುಖದ ಮುಂದೆ ತೂಗುತ್ತ- +“ನೋಡ್ಲೆ ಮಗನ” +-ಅಂದ. ಪಾಪ ಮಾಸ್ತರನಿಗೆ ಅದೆಲ್ಲಿಂದ ವಾಸನೆ ಬಂತೋ, ಕೂಡಲೇ ಧೋತರದಿಂದ ಮೂಗು ಮುಚ್ಚಿಕೊಂಡ. ನಾಯೆಲ್ಯಾನ ಮನಸ್ಸು ಆಗಲೇ ಕರಗಿ ಬಾಟ್ಲಿಯ ಭಿರಂಡಿಯಷ್ಟೇ ತೆಳ್ಳಾಗಾಗಿತ್ತು. ಆದರೆ ಬಾಯಿಬಿಟ್ಟು ಹೇಳಲಾರ. ಮನಸ್ಸು ನಿಯಂತ್ರಿಸಿಕೊಳ್ಳುವವನಂತೆ, ಕಣ್ಣುಮುಚ್ಚಿ ತಂತಾನೇ ಮಾತಾಡಿಕೊಳ್ಳುವವನಂತೆ ಗೋಣು ಹಾಕಿ “ಛೇಛೇ ಶಕ್ಯೆ ಇಲ್ಲ ತಗೀರಿ” ಅಂದ. ಗುಡಸೀಕರ ಸುಮ್ಮನಾಗಬಹುದಿತ್ತು. ಆದರೆ ಗೌಡನ ಎದುರಿನಲ್ಲಿ ಆಣೆ ಮಾಡಿದ್ದನಲ್ಲ, ಅದು ಅವನ ಹೊಟ್ಟೆಯೊಳಗೆ ಚಿಮಣಿಯೆಣ್ಣೆ ಸುರಿದಂತಾಯ್ತು. ನೊಂದುಕೊಂಡ ಕೂಡ ಅಷ್ಟರಲ್ಲಿ ಪಾಪಮಾಸ್ತರ ಬಾಯಿಹಾಕಿದ- +“ಅಧೆಂಗ ಕುಡೀತಾನ್ರಿ? ಗೌಡ್ರ ಮುಂದ ಆಣೆ ಪ್ರಮಾಣ ಮಾಡ್ಯಾನಂತಲ್ಲ, ಬಿಟ್ಟಿದ್ದ ಪಾಡ ಆಗಲಿಲ್ಲ? ಆಗದೇನು? ಬಡವ, ಹೇಂತಿ ಮಕ್ಕಳದಾವಲ್ಲ? ಹೌಂದು. ಅದಕ್ಕ ಕುಡೀಬ್ಯಾಡಪಾ” +-ಅಂದ, ನಾಯೆಲ್ಯಾ ಗುಡಸೀಕರ ಇಬ್ಬರನ್ನೂ ಟಕಮಕ ನೋಡುತ್ತ. +“ಛೇ, ಆ ಮಗ್ಗ ಎಂಥಾ ಆಣಿ ತಗೀರಿ” -ಅಂದ ಕಳ್ಳ +“ನೀವಽ ಕೊಡಾಕ ನಿಂತರ ಗೌಡರ ಆಣಿ ಯಾಕ ತಡದೀತ? ಗೌಡರೇನ ಇಲ್ಲಿ ನೋಡಾಕ ಬರತಾರ? ಯಾರ ನಶೀಬ ಯಾರ ಕಂಡಾರ? ಕುಡಿಕುಡಿಯೋ ಮಗನಽ”-ಅಂದ ಕಳ್ಳ ಆ ಭಾಗ್ಯ ತನಗಿಲ್ಲವಲ್ಲಾ ಎಂದು ಕೊರಗುತ್ತ. ಪಾಪ ಮಾಸ್ತರನಿಗೆ ಸಹಿಸುವುದಾಗಲಿಲ್ಲ. +“ನ್ಯಾಯೆಲ್ಯಾ ಏನಂತಾನ? ಒಲ್ಲೆ ಅಂತಾನ. ಮತ್ತ ಜೋರ ಯಾಕ ಮಾಡತೀರಿ? ಬ್ಯಾಡ ಬಿಡಿರಿ” +ಗುಡಸೀಕರ ಛಟ್ಟನೆ ಮೇಲೆದ್ದು- +“ಮಾಸ್ತರ, ಈಗ ನ್ಯಾಯೆಲ್ಯಾ ಕುಡದರ ಏನ ಜಿದ್ದ ಕಟ್ಟತೀರಿ” +ಹೇಳಿದ. ಮಾಸ್ತರ ದಂಗಾದ “ಏನ ಕೊಟ್ಟೇನು? ಏನೂ ಇಲ್ಲರಿ” ಎಂದುಕೊಂಡು ಸುಮ್ಮನಾದ. +ಗುಡಸೀಕರ ಬಾಟ್ಲಿ ತೆಗೆದು ಪಾಪ ಮಾಸ್ತರನ ಕಡೆ ನಡೆದ. “ನಾ ಇನ್ನ ಹೋಗಲೇನ್ರಿ? ಹೋಗತೇನ್ರಿ?” ಎಂದು ಕೈಮುಗಿದು ಎದ್ದು ನಿಂತ. ಗುಡಸೀಕರ “ನಿಲ್ಲಿರಿ” ಎಂದು ಚೀರಿ ಮಾಸ್ತರನ ಸಮೀಪ ಹೋದ. ಮಾಸ್ತರ ಮತ್ತೆ ಮೂಗು ಮುಚ್ಚಿಕೊಂಡ. “ಕೈ ಬಿಡಿರಿ” ಎಂದು ಗದರಿ ಹಿಡೀರೆಂದು ಒತ್ತಾಯದಿಂದ ಬಾಟ್ಲಿ ಅವರ ಕೈಗಿಟ್ಟ. ಮಾಸ್ತರ ಗಡಗಡ ನಡುಗತೊಡಗಿದ್ದ. ‘ನಾ ನಿಮಗ ಕಲಿಸಿದ ಮಾಸ್ತರ ಅಲ್ಲರೆ? ಬ್ಯಾಡ್ರಿ’ ಎಂದು ಬೆಬೆಬೆ ಹೇಳುತ್ತಿರುವಷ್ಟರಲ್ಲಿ ಗುಡಸೀಕರ ಮತ್ತೆ ಗದರಿದ. +“ನಿಮಗಲ್ಲ. ಹೋಗಿ ನ್ಯಾಯೆಲ್ಯಾಗ ಹಣಸಿರಿ. ಕುಡೀತಾನ. ನ್ಯಾಯೆಲ್ಯಾ ಬಗಸೀ ಒಡ್ಡಿ ಕುಡಿಯೋ ಮಗನ, ಇದೊಂದು ದಿನಾ” ಎಂದ. ನ್ಯಾಯೆಲ್ಯಾ ಧರ್‍ಮಸಂಕಟದಿಂದಲೆಂಬಂತೆ-ಅಥವಾ ಹೆಂಗೊ ಸಿಕ್ಕೇ ಸಿಗುತ್ತಾದ್ದರಿಂದ ಇನ್ನಷ್ಟು ಒತ್ತಾಯ ಮಾಡಿಸಿಕೊಂಡರೆ ಇನ್ನಷ್ಟು ಹೆಚ್ಚು ದಕ್ಕೀತೆಂಬ ಉದ್ದೇಶದಿಂದಲೋ, ಆದರೆ ಎರಡನೇ ಉದ್ದೇಶವೇ ಗುಡಸೀಕರನಿಗೆ ಖಾತ್ರಿಯಾಗುವಂತೆ ಅಭಿನಯಿಸುತ್ತ “ಬ್ಯಾಡ್ರೀಯೆಪ” ಎಂದು ಹಲ್ಲುಕಿರಿದ. ಗುಡಸೀಕರ ನ್ಯಾಯೆಲ್ಯಾನ ಬಗ್ಗೆ ಬಹಳ ಮಿದುವಾಗಿದ್ದಂತೆ ಕಂಡಿತು- +“ನ್ಯಾಯೆಲ್ಯಾ, ಮಗನೇ, ನನ್ನ ಮಾನ ದೊಡ್ದದೋ ನಿನ್ನ ಆಣಿ ದೊಡ್ದದೋ? ಕುರಿ ಕೊಟ್ಟ ಉಪಕಾರ ಮರಿತೀದಿ ಏನೋ?”-ಎಂದ. ‘ನನ್ನ ಮಾನ ಎನ್ನುವಾಗ ಒಂದೆರಡು ಬಾರಿ ಎದೆಯನ್ನು ದಂದಂ ಗುದ್ದಿಕೊಂಡ. ಕೂಡಲೇ ನ್ಯಾಯೆಲ್ಯಾ-“ಬಿಡರೀಯೆಪ, ನೀವ್ಯಾಕಷ್ಟ ಮನಸಿಗಿ ಹಚ್ಚಿಕೋತೀರಿ? ತತರ್ರಿ” ಎಂದು ಬೊಗಸೆಯೊಡ್ಡಿದ. ಮಾಸ್ತರ ಗುಡಸೀಕರನ್ನೊಮ್ಮೆ, ನ್ಯಾಯೆಲ್ಯಾನನ್ನೊಮ್ಮೆ ನೋಡುತ್ತ ಭೂತ ಕಂಡ ಮಕ್ಕಳಂತೆ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿದ್ದ. “ಹೂಂ ಮಾಸ್ತರ ಹನಸಿರಿ” ಎಂದು ರಮೇಸ ಆಜ್ಞೆಮಾಡಿದ. ಮಾಸ್ತರ ಇನ್ನೂ ತನ್ನ ಕರ್‍ಮ ಹಳೆದುಕೊಳ್ಳುತ್ತಾ ನಿಂತಾಗ ಗುಡಸೀಕರ “ಹೇಳಿದ್ದ ಕೇಳಿಸಲಿಲ್ಲೇನ್ರಿ?” ಅಂದ. ಪಾಪ ಮಾಸ್ತರ ಧಡಪಡಿಸಿ ಓಡಿಹೋಗಿ ಗಡಗಡ ನಡುಗುತ್ತ ಹನಿಸತೊಡಗಿದ. ಬಾಟ್ಲಿ ನಡುಗಿ ನ್ಯಾಯೆಲ್ಯಾನ ಅಂಗಿಯ ಮೇಲೆ ಬಿದ್ದಿತು. ನ್ಯಾಯೆಲ್ಯಾ ಅಂಗಿಯನ್ನೇ ನೆಕ್ಕಿಕೊಂಡ. ಏನು ರುಚಿ! ಆತ ಹಾಗೆ ಮುಂಗೈ, ಅಂಗಿ ನೆಕ್ಕಿಕೊಂಡುದನ್ನು ನೋಡಿ ಗುಡಸೀಕರನಿಗೆ ಎಷ್ಟು ಆನಂದವಾಯಿತೆಂದರೆ ಓಡಿಹೋಗಿ ಮಾಸ್ತರನ ಕೈಯಲ್ಲಿಯ ಬಾಟ್ಲಿ ತಾನೇ ಕಸಿದುಕೊಂಡು “ಆಽ ಅನ್ನಲೇ” ಅಂದ. ನ್ಯಾಯೆಲ್ಯಾ ಮುಖ ಮೇಲೆ ಮಾಡಿ ಬಾಯಿ ತೆರೆದ. ಚತುಷ್ಟಯರು ಜೊಲ್ಲು ಸುರಿಸುತ್ತಿರಲಾಗಿ, ಗುಡಸೀಕರ ದಿಗ್ವಿಜಯದಿಂದೆಂಬಂತೆ ಖೊಖ್ಖೊಖ್ಖೊಕ್ ನಗುತ್ತಾ ನಾಯೆಲ್ಯಾನ ಬಾಯಲ್ಲಿ, ಮುಖದಲ್ಲಿ, ಮೈಮೇಲೆ ಅಂಗಿಯ ಮೇಲೆ ಹನಿಸಿದ. ನ್ಯಾಯೆಲ್ಯಾ ಹಸೀ ಹಸೀ ಭಿರಂಡಿಯನ್ನು ಹಾಗೇ ಕರುಳು ಚುರ್ರೆನ್ನುವಂತೆ ಕುಡಿದ. ಮೈಮೇಲಿನ ಅಂಗಿ ಒದ್ದೆಯಾಗಿತ್ತು. ಅದನ್ನೂ ನೆಕ್ಕಿಕೊಂಡ. ನೆಲಕ್ಕೆ ಬಿದ್ದಿತ್ತು. ಅಂಗೈಯಿಂದ ಸವರಿ ನೆಕ್ಕಿಕೊಂಡ. ಅವನು ಈ ಥರ ನೆಕ್ಕುತ್ತಿರುವುದನ್ನು ನೋಡಿ ಇಲ್ಲಿ ಬಿದ್ದಽತೆಽ ನೆಕ್ಕಲೇ ಎಂದು ಗುಡಸೀಕರ ತನ್ನ ಪಾದ ಒಡ್ಡಿದ. ನ್ಯಾಯೆಲ್ಯಾ ಅದನ್ನೂ ನೆಕ್ಕಿದ. ಉಳಿದವರೆಲ್ಲ ನಗುತ್ತಿದ್ದರು. ಕಳ್ಳ ರಾವಳನಂತೆ ನಗುವುದನ್ನು ಈಗಿನಿಂದಲೇ ತಾಲೀಮು ನಡೆಸಿದ. ಒಬ್ಬರಿಗಿಂತ ಒಬ್ಬರು ಹುಚ್ಚುಹುಚ್ಚಾಗಿ ನಗುತ್ತಿರುವುದನ್ನು ನೋಡಿ ಮಾಸ್ತರನಿಗೆ ಗಾಬರಿಯಾಗಿ ಯಾರಿಗೂ ಗೊತ್ತಾಗದಂತೆ ಓಡಿಹೋದ. ಗೌಡನ ಮುಂದೆ ಆಣೆಮಾಡಿದ್ದು ನೆನಪಾಗಿ ಅದನ್ನು ಮರೆಯಲೆಂದೋ, ಗಾಬರಿಯಿಂದಲೋ ನ್ಯಾಯೆಲ್ಯಾ ತಾನೂ ಎಲ್ಲರ ಜೊತೆ ನಗತೊಡಗಿದ. ಮೆರಮಿಂಡನಿಗೆ ಅದೇನು ಹುರುಪು ಬಂತೋ, ಎದ್ದು ನಿಂತು ವೀರಾವೇಶದಿಂದ: +“ಗುಡಸೀಕರರಿಗೆ ಜಯವಾಗಲಿ, ಜೈಹಿಂದ್!” ಅಂದ. ಉಳಿದ ಮೂವರೂ ಜೈಹಿಂದ್ ಅಂದರು. ನ್ಯಾಯೆಲ್ಯಾ ‘ಕರೀಮಾಯಿ’ ಅಂದ. ಗುಡಸೀಕರ “ಈಗಿಂದೀಗ ಬರತೀವು, ಮುಂದ ನಡಿ ಮಗನಽ” ಅಂದ. ನ್ಯಾಯೆಲ್ಯಾ ಓಡಿದ. +ತೋಟದ ಗುಡಿಸಲ ಮುಂದಿನ ಚಕ್ಕಡಿಯಲ್ಲಿ ಗೌಡ ಕಂಬಳಿ ಚೆಲ್ಲಿಕೊಂಡು ಅಂಗಾತವಾಗಿ, ಎರಡೂ ಕೈ ತಲೆಗಿಂಬು ಮಾಡಿಕೊಂಡು ಮಲಗಿದ್ದ. ಶಿವಸಾನಿ ಕಾಲು ತಿಕ್ಕುತಿದ್ದಳು. ಭೂಮಿ ನಿಟ್ಟುಸಿರು ಬಿಟ್ಟಂತೆ ಬೇಸಿಗೆಯ ಗಾಳಿ ಬಿಸಿಯಾಗಿತ್ತು. ಚಿಕ್ಕೆಯ ಮಂದ ಬೆಳಕಿನಲ್ಲಿ ಭೂಮಿ ನಿದ್ರಿಸಲಾರದೆ, ಎಚ್ಚರಿರಲಾರದೆ ಒದ್ದಾಡಿದಂತೆ ಗಿಡಮರ ಚಲಿಸುವ ಸದ್ದು ಆಗಾಗ ಕೇಳಿಸುತ್ತಿತ್ತು. ಅಷ್ಟರಲ್ಲಿ ಊರಿನಲ್ಲಿ ಗಂಡುಹೆಣ್ಣುಗಳೆಲ್ಲ ಕಿಟಾರನೆ ಕಿರುಚಿದ ದನಿ ಕೇಳಿಸಿತು. ಗೌಡ ಕಣ್ಣು ತೆರೆದ. ನಿಜವೋ, ಸುಳ್ಳೋ ಎಂದು ಕಿವಿಗೊಟ್ಟು ಕೇಳಿದ. ಶಿವಸಾನಿಯೂ ಕೇಳಿದಳು. ಹೌದು ಯಾರೋ ಕಿರುಚುತ್ತಿದ್ದರು. ಥಟ್ತನೆ ಕಂಬಳಿ ಹೆಗಲಿಗೇರಿಸುತ್ತಲೇ ಓಡಿದ. ಸೀದಾ ಮಾದರ ಹಬ್ಬವಾಗುವಲ್ಲಿಯೇ ಹೋದ. ಅಂಗೀಯೆಲ್ಯಾನ ಹೆಂಡತಿ ಮೈಮೇಲಿನ ಸೀರೆಯ ಖಬರಿಲ್ಲದೇ ಎದೀದೆ ಬಡಿದುಕೊಂಡು ಅಳುತ್ತಿದ್ದಳು. ಮಕ್ಕಳು ಕಿರುಚುತ್ತಿದ್ದವು. ಸೇರಿದ್ದ ಜನ ಖಬರತಪ್ಪಿ ಬಿದ್ದ ಅಂಗಿಯೆಲ್ಯಾನ ಮೈಮೇಲೆ ಮಣ್ಣು ಗೊಜ್ಜುತ್ತಿದ್ದರು. ಲಗಮವ್ವ ಗುಡಸೀಕರನ ವಂಶಾವಳಿ ಉದ್ಧರಿಸುತ್ತಿದ್ದಳು. ಆಗಲೇ ಯಾರೋ ದತ್ತಪ್ಪನ ಬಳಿಗೂ ಓಡಿಹೋಗಿದ್ದರು. ಅಂಗೀಯೆಲ್ಯಾನ ಮೈ ಸುಟ್ಟುಹೋಗಿ ಎಡಭಾಗದ ಮೈಚರ್‍ಮ ಸುಲಿದು ಬಿದ್ದಿತ್ತು. ಇಡೀ ಮೈ ಬೆಂದ ಮಾಂಸದ ಹಾಗೆ ಬಿದ್ದಿತ್ತು. ನ್ಯಾಯೆಲ್ಯಾ ಅಗಾಗ ಬಾಯಿ ಬಾಯಿ ಬಿಡುತ್ತಿದ್ದುದರಿಂದ ಮಾತ್ರ ಜೀವವಿದೆಯೆಂದು ತಿಳಿಯಬೇಕಷ್ಟೆ. ಅಷ್ಟರಲ್ಲಿ ದತ್ತಪ್ಪನೂ ಓಡಿಬಂದ. ಮೊದಲು ಅವನನ್ನು ಗುಡಸಲಿಗೆ ಸಾಗಿಸಲಿಕ್ಕೆ ಹೇಳಿದ. ಹುಡುಗರಿಬ್ಬರು ಮೆಲ್ಲಗೆ ನ್ಯಾಯೆಲ್ಯಾನನ್ನು ಎತ್ತಿ ಅವನ ಗುಡಿಸಲ ಕಡೆ ನಡೆದರು. ಗೌಡನೂ ಬೆನ್ನುಹತ್ತಿಹೋದ. ಅವರಿವರಿಂದ ವಿಷಯ ತಿಳಿಯಿತು: +ನ್ಯಾಯೆಲ್ಯಾ ಇಂದು ವಿಪರೀತ ಕುಡಿದಿದ್ದನೆಂದೂ, ಸರಪಂಚ ಹಾಗೂ ಮೆಂಬರರು ಕುರಿಹಬ್ಬ ನೋಡಲು ಬಂದಾಗ ತಾನೇ ಹಲಗೆ ಬಾರಿಸುವುದಾಗಿ ಕಸಿದುಕೊಂಡು ತೂರಾಡುತ್ತಾ ಬಾರಿಸತೊಡಗಿದನೆಂದೂ, ಗುಡಸೀಕರ ನಾಕಾಣೆ ಎಸೆದಾಗ, ಬಾರಿಸುತ್ತ ಅದನ್ನು ಹಣೆಗಂಟಿಸಿಕೊಳ್ಳಲು ಹೋದಾಗ ಅಲ್ಲೇ ಪಕ್ಕದಲ್ಲೇ ಇದ್ದ ಬೆಂಕಿಯಲ್ಲಿ ಬಿದ್ದನೆಂದೂ, ಎಷ್ಟೇ ಅವಸರದಲ್ಲಿ ಹೊರತೆಗೆದರೂ ಅಂಗಿ ಸೆರೆಯಲ್ಲಿ ತೊಯ್ದಿದ್ದರಿಂದ ಬೇಗನೇ ಆರಿಸಲಾಗಲಿಲ್ಲವೆಂದೂ ಹೇಳಿದರು. ಅವರವರ ಕರ್‍ಮ; ಗೌಡ ಸುಮ್ಮನೇ ಕೂತ. +ದತ್ತಪ್ಪ ಮಾಡುವ ಔಷಧಿಯನ್ನೆಲ್ಲ ಪೂರೈಸಿದ ಮೇಲೆ ಹೊರಗೆ ಬಂದ. ಮಾತಿಲ್ಲದೆ ಮುಂದೆ ಮುಂದೆ ನಡೆದ. ಗೌಡ ಹಿಂದಿನಿಂದ ಬಂದ. ದತ್ತಪ್ಪ ಏನಾದರೂ ಹೇಳುತ್ತಾನೆಂದು ಗೌಡನ ನಿರೀಕ್ಷೆ. ಹೊರಳು ದಾರಿ ಬಂದೊಡನೆ ಗೌಡನಿಗೆ ನಿರಾಸೆಯಾಯ್ತು. ಗೌಡ “ದತ್ತೂ” ಅಂದ. ದತ್ತಪ್ಪ ತಿರುಗಿನಿಂತ. ಪಕ್ಕದಲ್ಲಿದ್ದ ಒಂದು ಬಂಡೆಯ ಮೇಲೆ ದತ್ತಪ್ಪ ಹೋಗಿ ಕೂತ. ಗೌಡನೂ ಕಂಬಳಿ ಚೆಲ್ಲಿಕೊಂಡು ಮೊಳಕಾಲಿಗೆ ಕೈಸುತ್ತಿ ಕೂತ. ಅವನೇ ಮಾತಾಡಲೆಂದು ದತ್ತಪ್ಪ ಕೂತ. ಏನು ಮಾತಾಡುವುದೆಂದು ಗೌಡ ಕೂತ. ಬಹಳ ಹೊತ್ತಿನ ತನಕ ಇಬ್ಬರೂ ಸುಮ್ಮನೇ ಕೂತರು. ಆ ಸಮಯದಲ್ಲಿ ಯಾರಾದರೂ ಹೆಂಗಸರು ಹೊರಗೆ ಬಂದು ಇವರನ್ನು ಕಂಡಿದ್ದರೆ ಭೂತಗಳೆಂದು ಖಂಡಿತ ಹೆದರುತ್ತಿದ್ದರು. ಅಷ್ಟೇ ಯಾಕೆ ಕಂಡವರು ಯಾರಾದರೂ ‘ನಿನ್ನೆ ರಾತ್ರಿ ಈ ಬಂಡೇ ಮೇಲೆ ಗೌಡ, ದತ್ತಪ್ಪ ಕೂತಿದ್ದರೆಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ. +ಬಹಳ ಹೊತ್ತಾದ ಬಳಿಕ ದತ್ತಪ್ಪ ಬಾಯಿಬಿಟ್ಟ. +“ಗೌಡಾ, ಊರಾಗ ಮಾರಿ ಹೊಕ್ಕಽದಲ್ಲೋ” +ಗೌದ ಸುಮ್ಮನಾದ. +“ನಾಳಿ ಮುಂಜಾನೆ ಅವನ ಮನೀಗಿ ಹೋಗಿ, ಪಂಚಾಯ್ತಿಗೆ ರಾಜಿನಾಮೆ ಕೊಡಂತ ಹೇಳಿಬರ್‍ತೀನಿ” +-ಅಂದ. ಗೌಡ ಇನ್ನೂ ಸುಮ್ಮನಿದ್ದ. +“ಏನಾರ ಮಾತಾಡೊ” +ಗೌಡ ನಿಧಾನವಾಗಿ ತುಟಿಬಿಚ್ಚಿದ: +“ಜರಾ ವಿಚಾರಮಾಡೊ ದತ್ತೂ. ಅವನ ಕೈಯಿಂದ ಪಂಚಾಯ್ತಿ ತಗೊಂಡರೇನ ಬಂತು? ತಗೊಳ್ಳಾಕ ಅದೆಲ್ಲಿ ಐತಿ? ಒಂದು ವೇಳೆ ಕಸಗೊಂಡಿ ಅಂತ ತಿಳಿ; ಅವರೈದೂ ಮಂದಿ ಕೂರುತಾರ, ಮನ್ಯಾಗ ಕುಡೀತಾರ, ತಾವೂ ಕೆಡತಾರ, ಊರ್‍ನೂ ಕೆಡಸ್ತಾರ. ಊರಾಗ ಪಂಚಾಯ್ತಿ ಇಲ್ಲಾಪಾ. ಗುಡಸ್ಯಾಗ ದುಡ್ಡ ಐತಿ. ಮದ ಐತಿ, ಆ ಹುಡಗನ್ನ ಹಾದಿಗಿ ತರಾಕ ಏನಾರ ಹಾದಿ ಹುಡುಕು.” +ಗೌಡನ ಮಾತೂ ನಿಜವೇ. ನಿಜ ಹೇಳೋದಾದರೆ ಪಂಚಾಯ್ತಿ ಕಸಿದುಕೊಂಡರೆ ಅವನ ಹುಳ ತಗ್ಗಬಹುದು. ಅವಮಾನವಾಗಿ ಹಾದಿಗೆ ಬರಬಹುದು ಅಥವಾ ಏನಿಲ್ಲೆಂದರೂ ಈಗುಳಿದ ಹಾದಿಯಂತೂ ಅದೊಂದೇ. ತಾವಿಬ್ಬರೂ ಸತ್ತಮೇಲೆ ಏನೋ, ಎಂತೋ, ಅಂತೂ ಜೀವಂತವಿದ್ದಾಗಲಾದರೂ ಊರು ಹಾಳುಗೆಡವಬಾರದೆಂದುಕೊಂಡರು. ಎದ್ದರು. ಅಷ್ಟರಲ್ಲಿ ಹೊಲಗೇರಿಯಿಂದ ಮತ್ತೆ ಕಿರಿಚಾಟ ಕೇಳಿಸಿತು. ನ್ಯಾಯೆಲ್ಯಾ ಸತ್ತಿದ್ದ! +ಮುನಿಯೆಲ್ಯಾ, ಮಾರಾಯ, ಕುಡಿದ, ತಿಂದ, ಬದುಕನ್ನು ಬಳಿದುಂಡ, ಕರಿಮಾಯಿಯನ್ನು ಕಂಡ, ಭೂತಗಳನ್ನು ಕಂಡ. ಕಂಡದ್ದನ್ನು ಕಥೆಮಾಡಿದ. ತಾನೇ ಕಥೆಯಾಗಿ ಊರವರ ನೆನಪಿಗೊಂದು ನೋವಾದ. ಮಾಯದ ಗಾಯವಾದ. ಕರಿಮಾಯಿಗೆ ಹೆಸರಿಟ್ಟ, ಹೆಂಡತಿಗೆ ಹೆಸರಿಟ್ಟ, ಸ್ವಯಂ ಮೂರು ಹೆಸರಿನಿಂದ ಹೆಸರುವಾಸಿಯಾದ. ಕರಿಮಾಯಿಯ ಆಣೆ ತಪ್ಪಿದರೆ ಏನಾಗುವುದೆಂಬುದಕ್ಕೆ ಉದಾಹರಣೆಯಾದ. ಅವನಿಗೆ ಗಣಪದವಿ ದಯಪಾಲಿಸಲೆಂದು ಕರಿಮಾಯಿಗೆ ಶರಣೆನ್ನೋಣ. +ಉದ್ಯೋಗಪರ್ವ +ಮಾರನೇ ದಿನ ದತ್ತಪ್ಪ, ಕೈಮಾರು ಹೊತ್ತೇರಿರಬೇಕು, ಗುಡಸೀಕರನ ಮನೆಗೆ ಬಿಜಯಂಗೈದ. ಗುಡಸೀಕರ ಮಹಡಿಯ ಮೇಲೆ ಕೂತು ದನಿ ಮಾಡಿ ಇಂಗ್ಲಿಷ್ ಓದುತ್ತಿದ್ದ. ಅವನ ತಾಯಿಗೂ ತಂಗಿಗೂ ಆಶ್ಚರ್‍ಯವಾಯಿತು; ದತ್ತಪ್ಪ ತಮ್ಮ ಮನೆತನಕ ಬರುವುದೆಂದರೇನು? ಗಿರಿಜ ಮಹಡಿ ಹತ್ತಿ ದತ್ತಪ್ಪ ಬಂದುದನ್ನು ತಿಳಿಸಿಬಂದಳು. ಒಳಗಿನಿಂದ ಗೌರವ ಸಂಭ್ರಮದಿಂದ ಮುದುಕಿಹೊರಗೆ ಬಂದಳು. “ಬರ್ರಿ ಬರ್ರೀಯೆಪ” ಎನ್ನುತ್ತ ಜಮಖಾನ ಹಾಸಿದಳು. ದತ್ತಪ್ಪ “ಹೂಂ ಮಗಳು ವಯಸ್ಸಿಗೆ ಬಂದಾಳ; ಚೆಲೋ ವರ ಕೊಡಬೇಕಿಲ್ಲೊ” ಎನ್ನುತ್ತ ಕೂತ. ಗಿರಿಜಾ ನಾಚಿ ಒಳಗೋಡಿದಳು. “ನೀವಽ ನೋಡಿ ಅದರದ್ದೊಂದ ಮದವೀ ಮಾಡಿಬಿಡಿರಿ” ಎಂದು ಮುದುಕಿ ಹೇಳುತ್ತಿದ್ದಂತೆ ಗುಡಸೀಕರ ಕೆಳಗಿಳಿದು ಬಂದ! ತಾಯಿ ಒಳಗೆ ಹೋದಳು. +“ಏನು? ದತ್ತಪ್ಪನವರು ಮನೀತನಕ ಬಂದಿರಿ?” ಎನ್ನುತ್ತ ಗಡಂಚಿಯ ಮೇಲೆ ಕೂತ. ದತ್ತಪ್ಪ ಬಂದುದಕ್ಕೆ ತಾಯಿ, ತಂಗಿ ಸಡಗರ ಮಾಡಿದ್ದು ಸರಿಬರಲಿಲ್ಲ. ಹಾಗೆಂದು ಬಾಯಿಬಿಟ್ಟು ಹೇಳಲಾರ. ಆದರೆ ಆತ ಬಂದುದಕ್ಕೆ ಏನೋ ಮಹತ್ವದ ಕಾರಣ ಇರಬೇಕೆಂದು ಊಹಿಸಿದ. ಬಹುಶಃ ನಿನ್ನೆ ನಾಯೆಲ್ಯಾ ಸೆರೆಕುಡಿದು ಸುಟ್ಟುಕೊಂಡು ಸತ್ತದ್ದು, ಇದಕ್ಕೆಲ್ಲ ತಾನೇ ಹೊಣೆಯೆಂದು, ಆ ತಪ್ಪೆಲ್ಲ ತನ್ನ ಮೇಲೇ ಹೊರಿಸಲು ಬಂದಿರಬಹುದು ಎಂದುಕೊಂಡ. ಸ್ವಲ್ಪ ಅಧೀರನೂ ಆದ. ಜಾರಿಕೊಳ್ಳಲು ಕೊಡಬೇಕಾದ ಜವಾಬುಗಳನ್ನೆಲ್ಲ ತಯಾರು ಮಾಡಿಕೊಂಡ. ಹ್ಯಾಗೆ ಸುರುಮಾಡೋದು ಎಂದು ದತ್ತಪ್ಪ ಕೂತ. ಈ ಹುಡುಗ ತಮ್ಮ ಪೈಕಿ ಅಲ್ಲ ಅನ್ನಿಸಿತು. ಹಾಗೇ ಎಷ್ಟಂತ ಕೂರುತ್ತಾನೆ? +“ತಮ್ಮಾ ನಿನ್ನ ಜೊತಿ ಒಂದಷ್ಟ ಮಾತಾಡೋದಿತ್ತಲ್ಲ” +“ಅದೇನ ಇಲ್ಲೇ ಆಗಲೆಲ್ಲ.” +“ನೋಡಪಾ, ನಾವೆಲ್ಲಾ ಹಿರೇರು ಕೂಡಿ ಪಂಚಾಯ್ತಿ ಮಾಡಿಕೊ ಅಂತ ನಿನ್ನ ಕೈಯಾಗ ಕೊಟ್ಟಿವಿ. ಊರಿಗೇನಾರ ಹೊತ ಮಾಡ್ತಿ ಅಂತಂದ್ವಿ. ಅದೇನೂ ಆಗಲಿಲ್ಲ. ಊರವರೆಲ್ಲಾ ತಿರುಗಿ ನೀವಽ ತಗೊಳ್ರಿ ಅಂತ ನಮಗ ಹೇಳಾಕ ಹತ್ಯಾರ. ಅದಕ್ಕ ನೀನಽ ಮುಂದಾಗಿ ಕೊಟ್ಟುಬಿಡು.” +ಗುಡಸೀಕರ ಇದನ್ನು ನಿರೀಕ್ಷಿಸಿರಲಿಲ್ಲ. ಈಗ ಸರಿಯಾಗಿ ಉತ್ತರ ಕೊಡದಿದ್ದರೆ ತಾನು ಸೋತಂತೆ. +“ನೋಡ್ರಿ, ಬೇಕಾದಾಗ ಕೊಡಾಕ, ಬ್ಯಾಡೆಂದಾಗ ತಗೊಳ್ಳಾಕ ಪಂಚಾಯ್ತಿಯೇನೂ ನಿಮ್ಮ ಮನಿ ಆಸ್ತಿ ಅಲ್ಲ, ಅದು ಊರುಗಾರಿಕೆ ವಿಷಯ. ಪಂಚಾಯ್ತಿ ಜಾರಿಗಿ ಬರಬೇಕಾದರೂ ಒಂದಷ್ಟ ನೇಮ ಅದಾವ, ಕಾಯ್ದೆ ಕಾನೂನು ಅದಾವ. ಅದರ ಪ್ರಕಾರ ಆಗೇತಿ. ಈಗ ತತಾ ಅಂದರ ಎಲ್ಲಿಂದ ಕೊಡೋಣು? ಇನ್ನ ಆರೆಂಟ ತಿಂಗಳಿಗಿ ಇಲೆಕ್ಷನ್ ಬರತೈತಿ. ನೀವೂ ನಿಂತಕೊಳ್ರಿ, ನಾವೂ ನಿಂತಕೋತೀವಿ.” +“ಖರೆ”-ಅಂದ ದತ್ತಪ್ಪ. +“-ನನ್ನ ಮನಿ ಆಸ್ತಿ ಅಲ್ಲ, ನಿನ್ನ ಮನೀದೂ ಅಲ್ಲ. ಕಾಯ್ದೆ ಕಾನೂನಂದಿ; ಅದ್ಯಾವ ಕಾಯ್ದೆ ಕಾನೂನಿಲ್ಲದಽ ನಿನ್ನ ಕೈಗೆ ಕೊಟ್ಟಿವಿ. ಆಗ್ಯಾಕ ನಿನಗ ಕಾಯ್ದೆ ಕಾನೂನು ನೆನಪಾಗಲಿಲ್ಲಪಾ?” +ದತ್ತಪ್ಪನ ಆಕ್ರಮವಾದಕ್ಕೆ ಎದುರುತ್ತರ ಕೊಡುವುದು ಕಷ್ಟವೇ. +“ಊರವರೆಲ್ಲಾ ಕೂಡಿ ಕೊಟ್ಟಿರಿ; ಅದಕ್ಕ ಅದು ಕಾಯ್ದೆಶೀರ ಆತು. ಈಗ ನೀವೊಬ್ಬರಽ ಕೇಳಾಕ ಬಂದಿರಲಾ. ಅದಕ್ಕ ಕಾಯ್ದೆ ನೆನಪಾತು.” +“ಹಂಗಾದರ ಈಗೂ ಊರಮಂದಿನೆಲ್ಲಾ ಕೂಡಿಸಿ ಈ ಮಾತ ಹೇಳಸಂತೀಯೇನು?” +ದತ್ತಪ್ಪನಿಗಿದು ಅಸಾಧ್ಯವಲ್ಲ. ಊರ ಮಂದಿ ಕೂಡಿ ಒತ್ತಾಯ ಮಾಡಿದರೆ ತಾನು ಹಿಂದೆ ಸರಿಯಲೇಬೇಕಾಗಬಹುದು. ಅಲ್ಲದೆ ಊರಿನಲ್ಲಿ ತನ್ನ ಬೆನ್ನುಕಟ್ಟುವ ಜನ ಈ ನಾಲ್ಕು ಜನ ಮೆಂಬರರನ್ನು ಬಿಟ್ಟರೆ ಯಾರೂ ಇರಲಿಲ್ಲವೆನ್ನುವುದೂ ಅವನಿಗೆ ಗೊತ್ತು. ಅದೆಲ್ಲಿಂದ ಈ ಪೀಡೆ ಗಂಟುಬಿತ್ತೋ ಎಂದುಕೊಂಡ. +“ನೋಡ್ರಿ, ನಿಮಗ್ಯಾಕ ಪಂಚಾಯ್ತಿ ಮ್ಯಾಲ ಕಣ್ಣು ಬಿದ್ದಾವಂತ ಗೊತ್ತಾಗೇತಿ. ಮೊದಲ ಪಂಚಾಯತಿ ಬಂದಾಗ ಅದೇನಂತ ನಿಮಗ ಗೊತ್ತಿರಲಿಲ್ಲ. ಬಿಟ್ಟಕೊಟ್ಟಿರಿ. ಈಗ ನಾವಷ್ಟು ಊರಾಗ ಮುಂದ ಬರಾಕ ಹತ್ತಿದೇವಲ್ಲ. ಅದಕ್ಕ ಹೊಟ್ಟೀಕಿಚ್ಚ ಸುರುವಾಗೇತಿ. ನಮಗಿದೆಲ್ಲಾ ತಿಳಿಯೋದಿಲ್ಲನ್ನಬ್ಯಾಡ್ರಿ.” +ಹುಡುಗನ ಭ್ರಮ ಕೇಳಿ ದತ್ತಪ್ಪ ಮನಸ್ಸಿನಲ್ಲೇ ಬಾಯಮೇಲೆ ಬೆರಳಿಟ್ಟುಕೊಂಡು ಭಲೇ ಅಂದ. +“ಹೌಂದಪಾ, ನೀ ಮುಂದ ಹೊಂಟೀದಿ, ನಾವು ಹಿಂದ ಉಳದೀವಿ. ನಾವಷ್ಟ ಮುಂದ ಬರಾಕ ನಮ್ಮ ಕೈಗೀ ಪಂಚಾಯ್ತಿ ಕೊಡತೀಯೇನು?” +ಮಾತಿನ ವ್ಯಂಗ್ಯವನ್ನು ತಂತಾನೇ ಸಂತೋಷಿಸುತ್ತ ಕೇಳಿದ ದತ್ತಪ್ಪ. ಇನ್ನೂ ಏನೇನು ಹೇಳುತ್ತಿದ್ದನೋ, ಅಷ್ಟರಲ್ಲಿ ಗುಡಸೀಕರ ಭಾರೀ ಜಗಳವಾದಂತೆ-ಏರುದನಿಯಲ್ಲಿ ಅವನ ಮಾತನ್ನು ಕತ್ತರಿಸಿದ- +“ಅಧೆಂಗರಿ? ಹೇಳಲಿಲ್ಲಾ ಇಲೆಕ್ಷನ್ ಬರಲೆಂತ? ಆಳಬೇಕಂತ ಹೇಳಿ ಊರಗಾರಿಕಿ ಗುತ್ತಿಗಿ ತಗೊಂಡಿದಿರೇನ? ಇಷ್ಟದಿನ ಆಳಿದಿರಿ, ಸಾಕಾಗಲಿಲ್ಲ? ಇನ್ನ ಹೊಸಬರಿಗಷ್ಟ ಚಾನ್ಸ್ ಕೊಡಿರಿ.” +“ಚಾನ್ಸ್ ಕೊಟ್ಟಿವಲ್ಲಪಾ, ಕೊಟ್ಟಿದ್ದಕ್ಕ ಊರಿಗೇನ ಹಿತ ಮಾಡಿದಿ?” +“ಇಷ್ಟದಿನ ಹೇತ ರಟ್ಟಿ ಮಾಡೀರಿ. ಅದನ್ನ ತೊಳ್ಯಾಕ ಒಂದಷ್ಟ ದಿನ ಬ್ಯಾಡ?” ಗುಡಸೀಕರನ ಏರುದನಿ ಕೇಳಿ ಜಗಳವಾಡುತ್ತಿದ್ದಾರೆಂದು ಅವನ ತಾಯಿ ಒಳಗಿನಿಂದ ಬಂದಳು. ಗಿರಿಜಾ ದೂರ ನಿಂತು ಕೇಳುತ್ತಿದ್ದಳು. ಆಸುಪಾಸು ಹಾದುಹೋಗುತ್ತಿದ್ದವರು ಹೊರಬಾಗಿಲಲ್ಲಿ ನಿಂತು ಇದೇನೆಂದು ಕೇಳುತ್ತಿದ್ದರು. ಗುಡಸೀಕರನಿಗೆ ಭಂಡ ಧೈರ್ಯ ಬಂತು. ಬಾಯಿಗೆ ಬಂದ ಹಾಗೆ ಮಾತಾಡತೊಡಗಿದ. ಹೊರಗೆ ನಿಂತ ಒಬ್ಬ ಹುಡುಗನಿಗೆ ಪಂಚಾಯ್ತಿ ಮೆಂಬರರನ್ನು ಕರೆತರಲಿಕ್ಕೆ ಹೇಳಿದ. ತಾನು ಊರಿಗೆ ಎಷ್ಟೆಲ್ಲ ಹಿತ ಮಾಡಬೇಕೆಂದರೂ ಹಳೇ ಹದ್ದುಗಳು ಅಡ್ಡಿಬರುತ್ತವೆಯೆಂದ; ಈ ಊರಾಗಲೇ ಬೆಳಗಾವಿಯಾಗಿರುತ್ತಿತ್ತು- ಎಂದ ಪೋಜುದಾರನ ಎದುರಿಗೆ ಅವಮಾನ ಮಾಡಿದ್ದಕ್ಕೆ ಅಂದ. ಹೀಗೆ ಬಿಟ್ಟೂ ಬಿಡದೆ ಮಾತಾಡುವುದಕ್ಕೆ ಕಾರಣ ಹೀಗೇ ಚತುಷ್ಟಯರು ಬರುವ ತನಕ ನಡೆಸಿ ಅವರು ಬಂದರೋ ತಲೆಗೊಬ್ಬ ಒಂದೊಂದು ಮಾತಾಡಿದರೂ ದತ್ತಪ್ಪನ ಬಾಯಿ ಕಟ್ಟಿಹೋಗುತ್ತದೆ-ಎಂದು ಹೊಂಚಿದ್ದ. +ಅವನೆಂದುಕೊಂಡಿದ್ದಂತೆ ಚತುಷ್ಟಯರೂ ಬಂದರು. ಮನೇ ಮುಂದೆ ಆಗಲೇ ಹಿಂಡು ಜನ ಸೇರಿದ್ದರು. ಏನು ಯಾಕೆ-ಯಾರಿಗೂ ತಿಳಿಯುತ್ತಿರಲಿಲ್ಲ. ಬರೇ ಗುಡಸೀಕರನ ಬಾಯಿ ಕೇಳಿಸುತ್ತಿತ್ತು. ದತ್ತಪ್ಪ ಅವನ ಚಿಕ್ಕತನದ ವಾಚಾಳಿತನದೊಂದಿಗೆ ಆಟವಾಡುತ್ತ ಕೂತುಬಿಟ್ಟ. ಬಂದ ಚತುಷ್ಟಯರು ದತ್ತಪ್ಪನಿಗೆ ನಮಸ್ಕಾರ ಮಾಡಿ ಮೂಲೆ ಸೇರಿದರು. ಆಗಾಗ ಹಲ್ಲು ಕಿಸಿದರು; ಹಸ್ತ ಹೊಸೆದರು. ಅವರನ್ನು ಕೆಣಕುತ್ತ, “ಕೇಳಿದಿರೇನ್ರೋ? ನಾವೆಲ್ಲ ಸೇರಿ ಊರ ಹಾಳುಮಾಡಿದಿವಂತ. ಅದಕ್ಕ ಪಂಚಾಯ್ತಿ ಬಿಟ್ಟಕೊಡಿರಿ ಅಂತ ಹೇಳಾಕ ಬಂದಾನ” ಎಂದು ಹೇಳಿ ದತ್ತಪ್ಪನ ಕಡೆಗೂ ತಿರುಗಿ “ಹೋಗ್ರಿ; ಎಲೆಕ್ಷನ್ ಆಗಲಿ; ಅಲ್ಲೇ ತೀರ್ಮಾನವಾಗಲಿ” ಎಂದ. ಕೂಡಿದವರಿಗೆ ವಿಷಯವೇನೆಂದು ತಿಳಿಯಿತು. ಚತುಷ್ಟಯರು ಉತ್ತರ ಹೊಳೆಯದೆ ಸಾಲೆ ಮಕ್ಕಳಂತೆ ಸುಮ್ಮನೆ ಕೈಕಟ್ಟಿಕೊಂಡು ನಿಂತರು. ಕೂಡಿದವರಲ್ಲೊಬ್ಬ “ಹೌಂದಪಾ, ಹಿರೇರ ಹೇಳಿಧಾಂಗ ಕೇಳಬೇಕು” ಅಂದ. ಗುಡಸೀಕರನಿಗೆ ಇನ್ನೂ ಸಿಟ್ಟುಬಂತು- “ಹಿರೇತನ ಮಾಡಾಕ ನಾ ನಿನ್ನ ಕರಸಲಿಲ್ಲಪಾ; ಮೊದಲ ನನ್ನ ಮನೀ ಬಿಟ್ಟು ಹೊರಬೀಳು” ಅಂದ. +ತಕ್ಷಣ ದತ್ತಪ್ಪ ಎದ್ದು ಹೊರನದೆದುಬಿಟ್ಟ. ಮಂದಿಗೆ ಗುದಸೀಕರ ದತ್ತಪ್ಪನಿಗೇ ಮನೆಬಿಟ್ಟು ಹೊರಬೀಳೆಂದು ಹೇಳಿದಂತೆನಿಸಿತು. ಅವರೂ ಸಿಟ್ಟಾಗಿ ತಲೆಗೊಂದು ಮಾತಾಡುತ್ತ ಚೆದುರಿದರು. ಚತುಷ್ಟಯರು ಮಾತಾಡದ್ದೊಂದು ಕಡೆ. ಮಂದಿಯಲ್ಲೊಬ್ಬ ನಡುವೆ ಬಾಯಿಹಾಕಿದ್ದಿನ್ನೊಂದು ಕಡೆ, ಇನ್ನಷ್ಟು ಮಾತಾಡಿಸಿಕೊಳ್ಳಲು ದತ್ತಪ್ಪ ಕೂರಲಿಲ್ಲದ್ದು ಮತ್ತೊಂದು ಕಡೆ-ಎಲ್ಲ ಕೂಡಿ ಗುಡಸೀಕರನ ತಲೆ ಕಾವೇರಿತು. ಅವನ ತಾಯಿಗೂ ಅಸಮಧಾನವಾಯ್ತು; ದತ್ತಪ್ಪ ಮನೆಗೆ ಬಂದಾಗ ಗೌರವದಿಂದ ಮಗ ನಡೆದುಕೊಳ್ಳಲಿಲ್ಲವಲ್ಲಾ, ಇದ್ಯಾಕೆ ಹೀಗೆ ಮಾಡಿದನೆಂದು ಬಗೆಹರಿಯಲಿಲ್ಲ. ಅಲ್ಲದೆ ದತ್ತಪ್ಪ ಶಾಂತವಾಗೇ ಮಾತಾಡಿದ್ದ. ಎದುರಿನ ಕಣ್ಣುಗಳನ್ನು ಎದುರಿಸಲಾರದೆ, ಅಟ್ಟ ಹತ್ತಿ ತನ್ನ ಬಿಟ್ಟು ಉಳಿದೆಲ್ಲ ದತ್ತಪ್ಪ ಇಲ್ಲವೆ ಗೌಡನೆಂಬಂತೆ ಬಾಯಿ ತುಂಬ ಬೈಯುತ್ತ ಅಡ್ಡಾಡತೊಡಗಿದ. +ನಿಜ ಹೇಳಬೇಕೆಂದರೆ ಗುಡಸೀಕರ ಖಳನಾಯಕನಲ್ಲ. ಕಲಿತದ್ದರ ಬಗ್ಗೆ ಒಂದಿಷ್ಟು ಧಿಮಾಕಿತ್ತು. ಕಲಿತವರೇ ಇಲ್ಲದಲ್ಲಿ ಅದು ಹೆಚ್ಚಲ್ಲ. ಪ್ರಾಯದ ಮದ ಇತ್ತು; ಆ ವಯಸ್ಸಿಗೆ ಅದೂ ಹೆಚ್ಚಲ್ಲ. ಅಪ್ಪ ಗಳಿಸಿದ ದುಡ್ಡಿತ್ತು; ಆದರೆ ಧಾರಾಳತನವೂ ಇತ್ತು. ಜನ ಅವನನ್ನೆಂದೂ ತಮ್ಮ ಶತ್ರುವೆಂದು ಭಾವಿಸಲಿಲ್ಲ. ಗೌಡನಿಗೂ ಅವನಿಗೂ ವಿರೋಧವಿದೆಯೆಂದು ತಿಳಿಯಲಿಲ್ಲ. ಹೆಚ್ಚೇನು, ಚತುಷ್ಟಯರೂ ಹಾಗೆ ನಂಬಲಿಲ್ಲ. +ಕಲಿತ ಪ್ರಾಯದ ಎಲ್ಲ ಹುಡುಗರಂತೆ ಅವನೂ ಆದರ್ಶದ ಬೆಂಕಿಯನ್ನು ಪದರಿಗೆ ಕಟ್ಟಿಕೊಂಡ. ಬೆಂಕಿಯ ಬೆಳಕಿನಲ್ಲಿ ಕನಸು ಕಂಡ. ಅದರ ಕಾವಿನಲ್ಲಿ ಹುರುಪುಗೊಂಡ. ಪ್ರಾಯದ ಎಳೆಯರನ್ನು ಲಗಮವ್ವ “ಇಸಾಮಿತ್ರನ್ಹಾಂಗ” ಎಂದಿದ್ದಾಳೆ, ತನ್ನ ಹಾಡಿನಲ್ಲಿ. ಅದು ನಿಜವೆ: ಇದ್ದ ವ್ಯವಸ್ಥೆಯ ಅರೆಕೊರೆ ಸರಿಪಡಿಸುವ ಆಸೆ; ಪುನಃ ಸೃಷ್ಟಿಸುವ ಬಯಕೆ. ಊರಿಗೆಲ್ಲ ತಾನೊಬ್ಬನೇ ಸುಶಿಕ್ಷಿತನಾದ್ದರಿಂದ, ಬೆಳಗಾವಿಯ ಲೋಕಜೀವನ ಕಂಡವನಾದ್ದರಿಂದ ತನ್ನ ಪಾಲಿನ ಹೊಣೆಗಾರಿಕೆ ಜಾಸ್ತಿಯೆಂದು ಮನಗಂಡಿದ್ದ. ದೇಶಕ್ಕೆ ದೇಶವನ್ನೇ ಬದಲು ಮಾಡುವುದು ತನ್ನಿಂದಾಗಲಿಕ್ಕಿಲ್ಲ ಖರೆ; ಕಲಿತವರಿಗೆ ಗಾಂಧೀಜಿ ಹೇಳಲಿಲ್ಲವೆ? ಹಳ್ಳಿಗಳಿಗೆ ಹೋಗಿರಿ-ಎಂದು. ಸರಿ, ತನ್ನ ಪಾಡಿಗೆ ತಾನು ತನ್ನ ಹಳ್ಳಿ ಸುಧಾರಿಸಿದರೆ ಸಾಕು, ಇದಕ್ಕಿಂತ ಸಾರ್ಥಕವಾದ ಕೆಲಸ ಇನ್ನೇನಿದೆ? ಚಳವಳಿ ಸೇರಲಿಲ್ಲ; ಆದರೆ ಗಾಂಧಿ ಹೇಳಿದಂತೆ ಖಾದಿ ಉಟ್ಟ; ತೊಟ್ಟ, ಇನ್ನೇನು, ಸ್ವಲ್ಪ ಕುಡಿಯುವ ಚಟ ಇತ್ತು. ಹಳ್ಳಿಗರ ಕಣ್ಣಲ್ಲಿ ಅದೊಂದು ದುಶ್ಚಟವೂ ಅಲ್ಲ. ಬಹುಶಃ ಗಾಂಧೀ ಬಂದು ಏನು ಕೇಳಿದರೂ ಇವನಲ್ಲಿ ಉತ್ತರಗಳಿದ್ದವು. ಆದರೆ ‘ಯಾಕೋ ಗುಡಸೀಕರ ಕುಡಿಯುತ್ತಿ?’ಎಂದು ಕೇಳಿದ್ದರೆ ಮಾತ್ರ ನಿರುತ್ತರನಾಗುತ್ತಿದ್ದ. ಒಮ್ಮೊಮ್ಮೆ ಕರುಳಿಗಿಳಿದ ಚಟ ಬಿಡಲಾರದೆ ಅದಕ್ಕೂ ನೆಪ ಹುಡುಕುತ್ತಿದ್ದ. ಅದು ದೊಡ್ಡದಲ್ಲ, ಅವನ ಪ್ರಾಯದ ಮುಖದಲ್ಲಿಯ ಮೊಡವೆಯಂತೆ ಕಂಡೀತಷ್ಟೆ. +ಕೈಯಲ್ಲಿ ಗಾಂಧೀಫೋಟೋ, ತಲೆಯಲ್ಲಿ ಹಳವಂಡ ಹೊತ್ತುಕೊಂಡು ಹಳ್ಳಿಗೆ ಬಂದ. ಆದರೆ ಹಳ್ಳಿಯಲ್ಲಿ ಜನ ಕಾಣಿಸಲಿಲ್ಲ; ಪ್ರಾಣಿಗಳಿದ್ದವು.ಅಂಕುಡೊಂಕಾದ ರಸ್ತೆಗಳು; ಗಟಾರಿಲ್ಲದ ಓಣಿಗಳು, ಕೊಳೆತು ಎಲ್ಲೆಂದರಲ್ಲಿ ನಾರುವ ತಿಪ್ಪೆಗಳು, ಧೂಳಿನಲ್ಲಿ ಉರುಳಾಡುವ ಕೂಸುಗಳು, ಕುನ್ನಿಗಳು, ಬೇಕಾಬಿಟ್ಟಿ ಅಡ್ಡಾಡುವ ನಾಯಿಗಳು, ದನಗಳು, ಜನಗಳು-ಕಂಡು ಅಪಾರ ಕರುಣೆ ಬಂತು. ಕೊಳೆ ತೊಳೆಯಬೇಕಾದ್ದೇ ಮೊದಲ ಕೆಲಸವೆಂದುಕೊಂಡ. ಅದಕ್ಕೆ ಅವಕಾಶವೂ ಸಿಕ್ಕಿತು. +ಪಂಚಾಯ್ತಿಯಾಯಿತು; ತಾನೇ ಸರಪಂಚನಾದ. ಸಭೆ ಮಾಡಿದ. ಅವನ ಸಭೆಗಳಿಗಾದ ಗತಿ ಹಿಂದೆ ನೋಡಿದ್ದೀರಿ. ಆದರೆ ನಿಂಗೂನ ಕೇಸಿನಲ್ಲಿ ಆಘಾತವೇ ಆಯ್ತು ಗುಡಸೀಕರನಿಗೆ. ಕಾಣಾಕಾಣಾ ಆದ ಖೂನಿಯನ್ನು ಹಾಡುಹಗಲೇ ಮುಚ್ಚುವುದೆಂದರೆ! ಖೂನಿಯೆಂದರೆ ಖೂನಿಯೇ. ಹೆಚ್ಚಲ್ಲ, ಕಮ್ಮಿಯಲ್ಲ. ಅದರ ತೀರ್‍ಮಾನ ಕೋರ್ಟಿನಲ್ಲೇ ಆಗಬೇಕು. ಕಾಯ್ದೆ ಹಳ್ಳಿಗೊಂದು, ಶಹರಕ್ಕೊಂದು ಇರುವುದಿಲ್ಲ. ಊರ ಗೌಡ, ಕುಲಕರ್‍ಣಿ ಈ ರೀತಿ ತಾವೇ ಕಾನೂನನ್ನು ಕೈಗೆ ತಕ್ಕೊಂಡರೆ ನ್ಯಾಯ ಉಳಿದೀತೆ? ಛೇ ಛೇ ಇದನ್ನು ಯೋಚಿಸುವುದೇ ಅಸಾಧ್ಯ. ಈ ತನಕ ಅವನಿಗೆ ಗೌಡ, ದತ್ತಪ್ಪನ ಬಗ್ಗೆ ಗೌರವ ಭಾವನೆ ಇರಲಿಲ್ಲ. ಅಸಮಧಾನವೂ ಇರಲಿಲ್ಲ. ಆದರೆ ಈಗ ಮಾತ್ರ ಕೋಪ ಬಂತು. ಕಾಪಾಡುವ ಹೆಸರಿನಲ್ಲಿ ಊರನ್ನು ಹಾಳು ಮಾಡುವವರು ಇವರೇ-ಎಂದುಕೊಂಡ. ಸಾಲದ್ದಕ್ಕೆ ಎಲ್ಲ ಕೂಡಿ ಪೋಜುದಾರನ ಎದುರಿಗೆ ಅವರಂತೇ ಮಾತಾಡಿದ್ದರು. ಜನ ಎಷ್ಟೆಲ್ಲ ಅಜ್ಞಾನದಲ್ಲಿದ್ದರೆ ಅಷ್ಟಷ್ಟು ಇವರಿಬ್ಬರೂ ದೇವತೆಗಳಾಗುತ್ತಾರೆ. ಅದಕ್ಕೆ ಇವರಿಗೆ ಜ್ಞಾನದ ಮಾತಾಡುವವರು ಬರ್ಷಣವಾಗುತ್ತಾರೆ. ತಾನು ಮುಂದೆ ಬಂದರೆ ಜನಕ್ಕೆ ತಿಳಿವಳಿಕೆ ಕೊಟ್ತರೆ ಇವರ ಮಹಿಮೆ ನಂದುವುದಲ್ಲಾ, ಅದಕ್ಕೇ ಇವರಿಗೆ ತನ್ನ ಬಗ್ಗೆ ಅಸೂಯೆ ಎಂದುಕೊಂಡ. +ಇವತ್ತೂ ಅಂಥದೇ ಆಘಾತವಾಗಿತ್ತು. ಎಲೆಕ್ಷನ್ನಿಲ್ಲದೆ ಹಿರಿಯರು ಪಂಚಾಯ್ತಿ ತನ್ನ ಕೈಗಿಟ್ಟದ್ದು ನಿಜ. ಆದರೆ ಅದಕ್ಕೆ ಕಾರಣ ಬೇರೆ. ಕಲಿತವರಿರಲ್ಲ; ಪಂಚಾಯ್ತಿ ಅಂದರೇನೆಂದು ಗೊತ್ತಿಲ್ಲ. ಬೇರೆ ದಿಕ್ಕಿಲ್ಲದೆ ತಟ್ಟೆಯೊಳಗಿಟ್ಟು ಕೈಗಿತ್ತರು. ಈಗ ತಿರುಗಿ ಕೇಳಿದರೆ?- ಹೊಸದಾಗಿ ಕಲಿತವರು ಬಂದರೋ? ದತ್ತಪ್ಪ ಊರವರನ್ನೆಲ್ಲ ಕೂಡಿಸಿ ಪಂಚಾಯ್ತಿ ಕೇಳಿದ ಎನ್ನೋಣ. ಗೌಡನಿಗೆ ಹೆದರಿ ಮಂದಿ ಕೈ ಎತ್ತಲೂಬಹುದು. ಹಾಗಾದರೆ ಅದು ಪಂಚಾಯ್ತಿ ಆಯ್ತೆ? ಊರಿನ ಪ್ರತಿಯೊಬ್ಬನಿಗೂ ಆಯ್ಕೆಮಾಡುವ ಸ್ವತಂತ್ರ ಹಕ್ಕಿದೆ. ಇವರಿಗೆ ಅದು ಬೇಕಿಲ್ಲ. +ಹೀಗೆ- +ಹಲವು ಹದಿನೆಂಟು ಥರ ಯೋಚಿಸಿದ. ಯಾವ ಮಗ್ಗುಲಿನಿಂದ ತಿಳಿದು ನೋಡಿದರೂ ತನ್ನದೇ ನಿಜ ಅನ್ನಿಸಿತು. ಒಂದಂತೂ ಅವನಿಗೆ ಖಾತ್ರಿಯಾಯ್ತು; ಹಿಂದಿನಂತೆ ಈ ಸಲ ಪಂಚಾಯ್ತಿಯನ್ನ ಅವರು ತಟ್ಟೆಯೊಳಗಿಟ್ಟು ಕೊಡೋದಿಲ್ಲ. ಎಲೆಕ್ಷನ್ ಗ್ಯಾರಂಟಿ. ಆದರ ತಯಾರಿ ಈಗಿನಿಂದಲೇ ಸುರುಮಾಡಬೇಕೆಂದ. ಕಾರಹುಣ್ಣಿವೆ ದಿನ ನಾಟಕವಾಡುತ್ತೇವಲ್ಲಾ ಅದು ಎಲೆಕ್ಷನ್ ಗೆಲುವನ್ನು ಹತ್ತಿರ ತರಬೇಕು ಎಂದುಕೊಂಡ. +ಸೀತಾಪಹರಣ +ನಾಟಕದ ತಯಾರಿ ಅದ್ದೂರಿಯಿಂದ ನಡೆಸಿದರು. ಕಾರಹುಣ್ಣಿವೆಯ ದಿನ ಸಮೀಪಿಸಿದಂತೆ ಹುಡುಗರ ಗಡಿಬಿಡಿ ಅತಿಯಾಯ್ತು. ಇವರಾಡುವ ನಾಟಕ ಜನರ ಕಿವಿ, ಬಾಯಿಗೆ ಸುದ್ದಿಯಾಯ್ತು. ಬಾಲೆಯರು ನೀರು ತರುವ ದಾರಿಯ ಮಾತಿಗೆ ಕಥೆಯಾಯ್ತು. ದಿನಾ ಅದರ ತಾಲೀಮು (ರಿಹರ್ಸಲ್), ನೋಡುವುದಕ್ಕೇ ಹಿಂಡು ಹಿಂಡು ಜನ ಸೇರುತ್ತಿದ್ದರು. ಮುಂದೆ ಏನಾದರಾಗಲಿ, ತಾಲೀಮುಗಳ ಆ ಸಡಗರ, ಆ ಸಂಭ್ರಮ, ಆ ವೈಯಾರ, ಛೇ ನಾಟಕದ ಹುಡುಗರು ಅಷ್ಟೂ ದಿನ ನೆಲಕ್ಕೆ ಕಾಲೂರಲೇ ಇಲ್ಲ. +ಕಳ್ಳ ರಾವಳನಾಗಿದ್ದನಲ್ಲವೆ?- ಕಲ್ಲೀ ಮೀಸೆ ಬಿಟ್ಟು ದಿನಾ ಎಣ್ಣೆ ಹಚ್ಚಿ ಉಜ್ಜಿದ್ದೇ -ಸಂಭಾಷಣೆ ಕಂಠಪಾಠ ಮಾಡಲಿಕ್ಕೆ ಹೋಗಿ ಬಂದಲ್ಲಿ ಆ ಮಾತು ಒದರಿದ್ದೇ , ನಿಂಗೂ ಸಿಕ್ಕರೆ ಅವನೇ ಸೀತೆಯೆಂದು ಎಳೆದೆಳೆದು ಗಂಟಲ ನರ ಹರಿಯೋ ಹಾಗೆ ಕಾಡು ಕಿರಚಿದ್ದೇ-ಸುಳ್ಳಲ್ಲ, ಈಗ ಯಾರೊಂದಿಗೆ ಏನು ಮಾತಾಡಿದರೂ ರಾವಳನ ಧಾಟಿಯಲ್ಲೇ ಮಾತಾಡುತ್ತಿದ್ದ. ಅವನ ನಡಿಗೆಯ ರೀತಿ ಕೂಡ ಬದಲಾಗಿ ಕಿಸುಗಾಲು ಹಾಕಿ ನಡೆಯುತ್ತಿದ್ದ. +ಇತ್ತ ರಮೇಸನ ಸೀತೆಯ ಸಡಗರ ಹೇಳತೀರದು. ಗೇಣುದ್ದ ಕೂದಲ ಬಿಟ್ಟು, ಸೋರುವ ಹಾಗೆ ಎಣ್ಣೆ ಹಚ್ಚಿಕೊಂಡು, ಪೇಟೆಯ ಸೂಳೆಯರಂತೆ-ತಲೆ ಬಾಚಿಕೊಂಡು, ಮೂಗು ಮುರಿಯುವ ವೈಯಾರವೇ, ಕೈ ತಿರುಗಿಸುವ ಅಭಿನಯವೇ, ಹುಬ್ಬು ಹಾರಿಸಿ ತುಟಿ ಕಚ್ಚಿಕೊಳ್ಳುವ ಸೃಂಗಾರವೇ, ಆಹಾ ನಿಂಗೂನ ಹೃದಯದಲ್ಲಿ ಸವತಿ ಮತ್ಸರ ಹುಟ್ಟಿಸಿದ್ದು ಹೆಚ್ಚಲ್ಲ. ಹುಡುಗಿಯರೂ ಇವನನ್ನು ನೋಡಿ ಕರುಬುವಂತಾಯಿತು. ಆಂಜನೇಯನಾದ ಮೆರಮಿಂಡ ಈಗ ನೆಗೆಯುತ್ತಲೇ ನಡೆದಾಡುತ್ತಿದ್ದ. ಇವರ ಉರವಣಿ ನೋಡಿ ಊರ ಹುಡುಗರು ನಾಟಕದಲ್ಲಿ ಪಾತ್ರ ಸಿಕ್ಕವರೇ ನಶೀಬವಂತರೆಂದು ಅಸೂಯೆಪಟ್ಟರು. +ನಾಟಕ ನೋಡುವುದಕ್ಕೆ ಜನ ದಿನದಿನಕ್ಕೆ ಹೆಚ್ಚು ಹೆಚ್ಚು ಕೌತುಕ ತಾಳುತ್ತಿದ್ದರೆ ನಿಂಗೂ ಮಾತ್ರ ಹೆಚ್ಚು ಹೆಚ್ಚು ಹೊಟ್ಟೆಕಿಚ್ಚಿನಿಂದ ಉರಿದ. ತನಗೆ ಸೀತೆಯ ಪಾತ್ರ ಕೊಡಲಿಲ್ಲವಲ್ಲಾ ಎಂದು ತಳಮಳಿಸಿದ. ತಾನು ಸೀತೆಯಾಗಿದ್ದರೆ ಹೇಗೆ ನಿಲ್ಲುತ್ತಿದ್ದೆ. ಹ್ಯಾಗೆ ಕುಣಿಯುತ್ತಿದ್ದೆ, ಹ್ಯಾಗೆ ಹಾಡುತ್ತಿದ್ದೆ. ಹ್ಯಾಗೆ ಅಭಿನಯಿಸುತ್ತಿದ್ದೆ. ಕಳ್ಳ ಎದುರು ಬಂದಾಗ ಹ್ಯಾಗಿರುತ್ತಿದ್ದೆ, ಎಳೆದಾಗ ಹ್ಯಾಗೆ ಒಳಗಾಗುತ್ತಿದ್ದೆ, ಹೊತ್ತಾಗ ಹ್ಯಾಂಗೆ ಅನುಕೂಲಳಾಗುತ್ತಿದ್ದೆ-ಇತ್ಯಾದಿ ಕಲ್ಪಿಸಿ ಇನ್ನಷ್ಟು ಅಸೂಯೆಪಟ್ಟ. ತಾನು ನಪುಂಸಕನಾಗಿದ್ದು ವ್ಯರ್ಥವೆನಿಸಿತು. ಹ್ಯಾಗೆ ನಾಟಕ ಮಾಡುತ್ತಾರೋ ನೋಡೇ ಬಿಡುತ್ತೇನೆಂದುಕೊಂಡ. +ಸುದ್ದಿ ಸುತ್ತ ಹದಿನಾಕು ಹಳ್ಳಿಗೆ ಹಬ್ಬಿತು. ಬೆಳಗಾಂವಿಯಿಂದ ಚಿಮಣಾ ಬರುತ್ತಾಳೆಂದು, ಡ್ಯಾನ್ಸು ಮಾಡುತ್ತಾಳೆಂದು, ವಿದ್ಯುದ್ದೀಪ ತರಿಸುತ್ತಾರೆಂದು ಮೊದಮೊದಲಿದ್ದರೆ, ಆಮೇಲೆ ಅದಕ್ಕೆ ಕೈಕಾಲು ಮೂಡಿ ಕಳ್ಳ ರಂಗತಾಲೀಮಿನಲ್ಲಿ ಕಿರಿಚಿದಾಗ ಪಕ್ಕದ ಮನೆಯ ಬಸರಿ ಹಲಿವುಳ್ದಳೆಂದು, ಮೆರಮಿಂಡನ ಮೈಯಲ್ಲಿ ಸ್ವಥಾ ಆಂಜನೇಯ ತುಂಬುವನೆಂದು ಹಬ್ಬತೊಡಗಿದವು. ಸೀತೆಯಾದ ರಮೇಸ ಈಗೀಗ ಹೆಂಗಸರಂತೆ ತಿಂಗಳಿಗೊಮ್ಮೆ ಮುಟ್ಟಾಗುವನೆಂದೂ ನಿಂಗೂ ಹೇಳಿದ. ಇಂಥ ಸುದ್ದಿ ಪಾತ್ರಧಾರಿಗಳ ಕಿವಿಗೆ ಬಿದ್ದಾಗಲಂತೂ ಒಬ್ಬೊಬ್ಬ ಒಂದೊಂದು ರೀತಿ ಪುಳಕಗೊಳ್ಳುತ್ತ ಅದು ನಿಜವೆಂಬಂತೆ ಅಭಿನಯಿಸುತ್ತಿದ್ದ. ನಾಟಕದ ದಿನ ಯಾವಾಗ ಬಂದೀತೋ ಎಂದು ಪ್ರತಿ ಜೀವ ಚಡಪಡಿಸುತ್ತಿತ್ತು. ಸಧ್ಯ ಆ ದಿನವೂ ಬಂತು. +ಆ ದಿನ ಗೌಡ ಆರು ತಾಸಿನ ಮಧ್ಯಾಹ್ನ ಗುಡಿಸಲ ಮುಂದಿನ ಮರದಡಿ ಕೂತು ಕೂರಿಗಿ ಜೋಡಿಸುತ್ತಿದ್ದ. ತೋಟದ ಅಂಚಿನಲ್ಲಿ ಶಿವನಿಂಗ ಮೇವು ಮಾಡುತ್ತಿದ್ದವನು ಅಲ್ಲೇ ನಿಂತುಕೊಂಡು ಊರಿನ ಕಡೆಗೆ ನೋಡುತ್ತಿದ್ದ. ಅವನನ್ನು ಗಮನಿಸಿ ಗೌಡ ತಾನೂ ಊರ ಕಡೆ ನೋಡಿದ. ದೂರದಲ್ಲಿ ದತ್ತಪ್ಪ, ಲಗಮವ್ವ ಅವರೊಂದಿಗೆ ಇನ್ನಿಬ್ಬರು, ಪರವೂರಿನವರು ಗುಡಿಸಲಕಡೆಗೇ ಬರುತ್ತಿದ್ದರು. ಇಂಥ ಅಪವೇಳೆಯಲ್ಲಿ ದತ್ತಪ್ಪ ಬರೋ ಪೈಕಿ ಅಲ್ಲ, ಯಾಕಿರಬಹುದೆಂದು ಗೌಡನಿಗೂ ಆಶ್ಚರ್‍ಯವಾಯಿತು. ಹಾಗೇ ನೋಡುತ್ತ ನಿಂತ. +ಗೌದನಿಗೆ ಉಳಿದಿಬ್ಬರು ನಮಸ್ಕಾರ ಮಾಡಿದರು. ಆಗಂತುಕರ ಉದ್ದ ಕೂದಲು, ಅವನ್ನು ಮುಚ್ಚುವಂತೆ ಹಾಕಿದ ಕರಿ‌ಈಟೊಪ್ಪಿಗೆ-ಇವುಗಳಿಂದ ಆಟದವರೇ-ಎಂದು ಖಚಿತವಾಯ್ತು. ಪಡಸಾಲೆಯಲ್ಲಿ ಎಲ್ಲರೂ ಕೂತರು. ಪಕ್ಕದ ಹಳ್ಳಿಯವರು ಪಾರಿಜಾತ ಕಲಿತಿದ್ದಾರೆ, ಆಡೋದಿಕ್ಕೆ ಬಂದಿದ್ದಾರೆಂದು ದತ್ತಪ್ಪ ವಿಷಯ ಹೇಳಿದ. ಕಾರಹುಣ್ಣಿವೆ ಒಂದರ್ಥದಲ್ಲಿ ಗೌಡನ ಮನೆಯ ಹಬ್ಬ, ಕರಿ ಹರಿಯುತ್ತಿರಲಿಲ್ಲ. ಯಾಕೆಂದರೆ ವರ್ಷಗಳ ಹಿಂದೆ ಕರಿ ತಪ್ಪಿಸಿಕೊಂಡು ಪರವೂರಿಗೆ ಹೋಗಿತ್ತು. ಈ ದಿನ ರಾತ್ರಿ ಕರಿಮಾಯಿ ಶಿಶು ಮಕ್ಕಳು ಸಮೇತ ಗೌಡನ ಮನೆಗೆ ಬಂದು, ಬೇಟೆಯ ಬಿನ್ನಾಯ ಮಾಡಿ, ಆಟ, ಮೋಜು ನೋಡಿ ಬೆಳಿಗ್ಗೆ ಗುಡಿಗೆ ಹೋಗುವುದು ಪದ್ಧತಿ. ಊರಿನಲ್ಲಿ ಈ ದಿನವೇ ಗುಡಸೀಕರನ ಮಂಡಳಿ ನಾಟಕ ಆಡುವವರಿರುವಾಗ ಇನ್ನೊಂದನ್ನು ಆಡಿಸುವುದು ಗೌಡನಿಗೆ ಒಪ್ಪಾಗಿ ತೋರಲಿಲ್ಲ. ಆದರೆ ಬಂದವರು ಕೇಳಲಿಲ್ಲ. ನೀವೇ ನೋಡದಿದ್ದರೆ ನಾವೇನು ಕಲಿತಂತಾಯಿತೆಂಬಥ ಮಾತಾಡಿದರು. ಅದು ಆ ಭಾಗದ ಕಲಾವಿದರಿಗೆ ಸಹಜ. ಗೌಡನ ಅಭಿರುಚಿ ಅಂಥದ್ದು, ಹಾಡುಗಾರಿಕೆಯಿರಲಿ, ಕುಣಿತವಿರಲಿ, ಮಾತುಗಾರಿಕೆಯಿರಲಿ- ಅದರ ಹೆಚ್ಚುಗಾರಿಕೆಯನ್ನು ಗುರುತಿಸಬಲ್ಲವನಾಗಿದ್ದ. ಆಡಂಬರದ ಕಲೆಯಿಂದ ಅದನ್ನು ಬೇರ್ಪಡಿಸಬಲ್ಲವನಾಗಿದ್ದ. ಅಂತೂ ಗೌಡನಿಂದ ಭೇಷ್ ಅನ್ನಿಸಿಕೊಳ್ಳದವನು ಕಲಾವಿದನೇ ಅಲ್ಲ ಎಂಬಂಥ ಗುಂಗು ಕಲಾವಿದರಲ್ಲಿತ್ತು. +ಗೌಡನ ಹುಚ್ಚೇನು ಕಮ್ಮಿಯಲ್ಲ. ಕೌಜಲಗಿ ನಿಂಗವ್ವನಿಗೆ ಭೇಷ್ ಅಂದವನು, ಶಿವಗುರೆಪ್ಪನಿಗೆ ಭಲೆ ಅಂದವನು. ಖುಷಿ ಬಂದಾಗ ಗೌಡನ ಕೊಡುಗೈ ತಡೆಯುವವರೇ ಇಲ್ಲ. ಅದೇನು ಹುಚ್ಚೋ, ಕಲೆಯ ಜೊತೆ ವಿಚಿತ್ರ ತಾದಾತ್ಮ ಹೊಂದುತ್ತಿದ್ದ. ಹಿಂದೊಮ್ಮೆ ಸ್ವತಃ ನಿಂಗವ್ವ ಸತ್ಯಭಾಮೆಯಾಗಿ ಭಕ್ತಿ, ಸೇಡು, ಅನುರಾಗಗಳ ಸುಳಿಗೆ ಸಿಕ್ಕು “ಕೃಷ್ಣಾ” ಎಂದು ಆರ್ತಳಾಗಿ ಹಾಡಿದಾಗ ಆ ದಿನ ಗೌಡ ಮುದಿ ಹೆಂಗಸಿನಂತೆ ಅತ್ತುಬಿಟ್ಟಿದ್ದ. ಕಲಾವಿದರೂ ಹಾಗಿದ್ದರು. ಅದೇ ನಿಂಗವ್ವನನ್ನು ದತ್ತಪ್ಪ ಮುಂಗೈ ಹಿಡಿದು ಏನು ಕೇಳುತ್ತಿ ಕೇಳು ಎಂದಿದ್ದ. “ಕೃಷ್ಣ ಕುಡದ ಹಾಲಿನ ಗಡಿಗ್ಯೊ ಇದು. ಇದನ್ಯಾಕ ಮುಟ್ಟತಿ” ಎಂದಿದ್ದಳು. ದತ್ತಪ್ಪ ಕೂಡಲೇ ಅವಳ ಕಾಲು ಮುಟ್ಟಿ ನಮಸ್ಕರಿಸಿದ್ದ. ಆ ಕಲಾವಿದರು, ಅವರ ಕಲೆಗಳು ಬದುಕಿನ ಗೂಢಗಳನ್ನು ಝುಮ್ಮುದಟ್ಟಿಸುವಂತೆ ಚುಚ್ಚಿದ್ದವು. ಆ ಅನುಭವದಿಂದ ಇವರು ಧನ್ಯರಾಗಿದ್ದರು. +ಆದರೆ ಈ ದಿನ ಆ ಅನುಭವ ಬೇಡವಾಗಿತ್ತು. ಚೆಲುವಾದ ಹಾಡುಗಾರಿಕೆಗೆ ಮೈ ಪುಳಕಗೊಳ್ಳುವ ದಿನ ಅಲ್ಲ ಇದು, ಮಾತುಗಾರಿಕೆಯ ಚಕಮಕಿಯ ಕಿಡಿ ಈ ದಿನ ತಲೆಯಲ್ಲಿ ಬೆಳಕು ಚೆಲ್ಲುವಂತಿರಲಿಲ್ಲ. ಕುಣಿತಕ್ಕೆ ಕಣ್ಣು ಹಿಗ್ಗುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಗುಡಸೀಕರನ ನಾಟಕದಿಂದಾಗಿ ಬಂದವರೆದುರು ಊರ ಹುಳುಕುಗಳನ್ನು ಹೇಗೆ ತೋಡಿಕೊಳ್ಳುವುದು? ಅಷ್ಟು ದೂರದಿಂದ ಬಂದವರನ್ನು ಹೇಗೆ ನಿರಾಸೆಗೊಳಿಸುವುದು? ಅಷ್ಟರಲ್ಲಿ ಶಿವನಿಂಗ ದೂರ ನಿಂತಿದ್ದವನು “ಅವರೂ ಮಾಡಿಕೊಳ್ಳೋದಾದರ ಆಡಲಿ; ನಾವ್ಯಾಕ ನಮ್ಮ ಪದ್ಧತಿ ಬಿಡಬೇಕು?” ಅಂದ. ಬೇರೆ ಸಂದರ್ಭದಲ್ಲಾದರೆ ಗೌಡ ಈ ಮಾತು ಮೆಚ್ಚುತ್ತಿದ್ದನೋ ಏನೊ” ಅದೇನು ಮಾಡ್ತೀಯೊ ನೀನ ಮಾಡಿಕೊ ಮಾರಾಯ” ಎಂದುಬಿಟ್ಟ ದತ್ತಪ್ಪನಿಗೆ. ದತ್ತಪ್ಪನಿಗೆ ಅಷ್ಟು ಸಾಕಾಗಿತ್ತು ಕಲಾವಿದರನ್ನು ಎಬ್ಬಿಸಿಕೊಂಡು ಹೊರಟ. +ಊರಿನ ಇನ್ನೊಂದು ಭಾಗದಲ್ಲಿ ವಿಚಿತ್ರ ಲವಲವಿಕೆ ತುಂಬಿತ್ತು. ಸ್ಟೇಜು ಕಟ್ಟುವ ಸೀನು ಸೀನರಿಯ ಪರದೆ ಕಟ್ಟುವ ನಾ ಮುಂದು, ನೀ ಮುಂದು ಜನಗಳ ಉತ್ಸಾಹ ಹೇಳತೀರದು. ನಾಟಕವಿನ್ನೂ ರಾತ್ರಿ ಉಂಡು ಮಲಗೋ ಹೊತ್ತಿಗೆ ಸುರುವಾಗೋದು. ಜನ ಆಗಲೇ ಸ್ಟೇಜಿನ ಬಳಿ ಗಂಡು ಹೆಣ್ಣೆನ್ನದೆ, ಕಿರಿ ಹಿರಿಯರೆನ್ನದೆ ಸೇರಿಬಿಟ್ಟಿದ್ದರು. ನಾಟಕದ ಪ್ರತಿಯೊಬ್ಬ ಪಾತ್ರಧಾರಿ ಮದುವೆಯ ವರನಂತೆ, ಕೂಡಿದವರು ತನ್ನ ಮದುವೆಗೇ ಬಂದವರೆಂಬಂತೆ ಸಡಗರದಿಂದ ನೋಡುತ್ತ ನೋಡಿಸಿಕೊಳ್ಳುತ್ತ ಆ ಕಡೆ ಈ ಕಡೆ ಓಡಾಡುತ್ತಿದ್ದ. ಅವರಿಗೆ ಮುಗಿಲು ಮೂರೇ ಗೇಣು ಉಳಿದಿತ್ತು. ಸೇರಿದವರಿಗೆ ತಾನು ಪಾತ್ರಧಾರಿಯೆಂದು ತಿಳಿಯಬೇಕಲ್ಲ? ತನ್ನ ಪಾತ್ರದ ಮಾತುಗಳನ್ನು ಜನರ ಗುಂಪಿನಲ್ಲೇ ಬಾಯಿಪಾಠ ಮಾಡುತ್ತ ಅಡ್ಡಾಡುತ್ತಿದ್ದ. ಪಕ್ಕದ ಹಳ್ಳಿಗಳ ಹೈಕಳು ಆಗಲೇ ರಾತ್ರಿಯ ಬುತ್ತಿ ಕಟ್ಟಿಕೊಂಡು ಬಂದಿದ್ದರು. ವಿದ್ಯುದ್ದೀಪದ ಬಗ್ಗೆ, ಚಿಮಣಾ ಬಗ್ಗೆ ಎಲ್ಲರೂ ತಮತಮಗೆ ತಿಳಿದ ಕಥೆಗಳನ್ನು ಎಷ್ಟು ಹೇಳಿ ಕೇಳಿದರೂ ತೃಪ್ತಿಯಿಲ್ಲ. +ಚಿಮಣಾ ಗುಡಸೀಕರನ ಮನೆಯಲ್ಲಿದ್ದಳು. ಅವನ ಮನೆಯ ಮುಂದೊಂದು ಹಿಂಡು ಹುಡುಗರು ನಿಂತಿದ್ದರು. ಅಪ್ಪಿತಪ್ಪಿ ಚಿಮಣಾ ಉಗುಳೋದಕ್ಕಾದರೂ ಹೊರಗೆ ಬಂದರೆ ಆಗಲೇ ನೋಡಬೇಕೆಂಬ ತವಕ ಪ್ರತಿಯೊಬ್ಬನಿಗೆ. ಒಳಗೆ ಮಾತಾಡುವವರ ದನಿ ಹೊರಗಿನವರಿಗೆ ಹೆಣ್ಣುದನಿಯಾಗಿ ಕೇಳಿಸುತ್ತಿತ್ತು. ಗಿರಿಜಳ ಓಡಾಟ ಹೇಳತೀರದು. ಪರಿಚಿತ ಹುಡುಗರನ್ನೋ, ಪಾತ್ರಧಾರಿಗಳನ್ನೋ ಕರೆದು ಏನೇನೋ ಕೆಲಸ ಹೇಳುತ್ತ ಗಾಳಿ ತುಂಬಿದ ಎಳೆಗರುವಿನಂತೆ ಒಳಗೊಮ್ಮೆ, ಹೊರಗೊಮ್ಮೆ ವಿನಾಕಾರಣ ಓಡಾಡುತ್ತ ತನ್ನ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದಳು. +ಆ ದಿನ ಊರಿನಲ್ಲಿ ನಾಟಕವಿದ್ದ ವಿಷಯ ಬಯಲಾಟದ ಕಲಾವಿದರಿಗೂ ಗೊತ್ತಿತ್ತು. ತಮ್ಮ ಬಯಲಾಟಕ್ಕೆ ಜನ ಸೇರುವುದಿಲ್ಲವೆಂದೂ ಗೊತ್ತಿತ್ತು. ನಿರಾಸೆಯೂ ಆಗಿತ್ತು. ಆದರೂ ಗೌಡ, ಹಿರಿಯರೂ ನೋಡುತ್ತಾರಲ್ಲಾ, ಸಾಕೆಂದು ಸುಮ್ಮನಾದರು. +ಊರಿನ ಬಯಕೆ ಹಣ್ಣಾದಂತೆ ಹೊತ್ತು ಮುಳುಗಿತು. ಕತ್ತಲಾಗುವುದರೊಳಗೇ ಹೊಸ ನಾಟಕದವರು ವಿದ್ಯುದ್ದೀಪ ಹಚ್ಚಿಬಿಟ್ಟರು. ಕೇಳಬೇಕೆ? ಜನ ಅವಸರವಸರವಾಗಿ ಊಟ ಮಾಡಿ, ಸ್ಟೇಜಿನ ಮುಂದೆ ಅನುಕೂಲ ಜಾಗ ಹಿಡಿದುಕೊಂಡು ನಾ ಮುಂದೆ ತಾ ಮುಂದೆಂದು ಜಗಳಾಡುತ್ತ ಕೂತುಬಿಟ್ಟರು. +ಪ್ರೇಕ್ಷಕರಲ್ಲಿ ಒಡೆದು ಕಾಣುತ್ತಿದ್ದವಳೆಂದರೆ ಗಿರಿಜಾ. ಅವಳಿಗೆ ಹೆಮ್ಮೆ, ತಾನು ಗುಡಸೀಕರನ ತಂಗಿಯಾದದ್ದಕ್ಕೆ, ಚಿಮಣಾ ತಮ್ಮ ಮನೆಯಲ್ಲಿ ಇಳಿದುಕೊಂಡಿದ್ದಕ್ಕೆ. ಎಲ್ಲರೂ ತನ್ನ ಮಾತು ಕೇಳುತ್ತಿರುವರೆಂಬ ಜೋರು ದನಿಯಲ್ಲಿ ಮಾತಾಡುತ್ತಿದ್ದಳು. ಅವಳ ಸುತ್ತ ಹತ್ತಾರು ಸಮವಯಸ್ಸಿನ ಹುಡುಗಿಯರು ಬಿಟ್ಟ ಕಣ್ಣು ಬಿಟ್ಟಹಾಗೆ, ತೆರೆದ ಬಾಯಿ ತೆರೆದ ಹಾಗೇ, ಆಕೆ ಹೇಳುವುದನ್ನೆಲ್ಲ ಭಯ, ಭಕ್ತಿ ಬೆರಗಿನಿಂದ ಕೇಳುತ್ತ ಕುಳಿತಿದ್ದರು. ಚಿಮಣಾಳನ್ನು ಎಷ್ಟು ವರ್ಣಿಸಿದರೂ ಆ ಹುಡುಗಿಯ ಬಾಯಿಗೆ ಸೋಲಿರಲಿಲ್ಲ. +“ಚಿಮಣಾ ಅಂದರ ಏನಂತ ತಿಳಿದಿರೆ? ಅಂಗಡ್ಯಾಗಿನ ಗೊಂಬ್ಯಾಗ್ಯಾಳ! ಪತ್ತಲ ಉಟ್ಟಾಳ ಖರೆ, ನಮ್ಹಾಂಗ ಸೆರಗ ತಲೀಮ್ಯಾಲ ಹೊರೊಣಿಲ್ಲ. ಹಾರೂರ್‍ಹಾಂಗ ಹೆಗಲ ಮ್ಯಾಲ ಹಾಕತಾಳ. ದೊಡ್ಡ ಸಾವ್ಕಾರಂತ! ನಿಂತ ನೋಡಿದರ ತಲೀ ಮ್ಯಾಗಿನ ರುಂಬಾಲ ಕೆಳಗ ಬೀಳಬೇಕ, ಅಷ್ಟೆತ್ತರ ಬಂಗ್ಲೆ ಐತಂತ; ಆರ ಮಂದಿ ಹೆಂಗಸರ ಬರೀ ಆಕೀ ಸೀರಿ ಒಗ್ಯಾಕ ಇದ್ದಾರಂತ! ಮತ್ತ ಹಾಸಿಗಿ ಹಾಸವಾಕಿ ಬ್ಯಾರೆ! ಅಡಿಗೀ ಮಾಡುವಾಕೀ ಬ್ಯಾರೇ, ಊಟ ನೀಡುವಾಕಿ ಬ್ಯಾರೇ, ಊಟದ ಮ್ಯಾಲ ಎಲಡಿಕಿ ಮಡಿಚಿ ಕೊಡುವಾಕಿ ಬ್ಯಾರೆ! ನಮ್ಹಾಂಗ ಬುಟ್ಟಿ ತಿಂದ ತೊಟ್ಟಿ ಹೇತಾಳಂದೀ! ನಮ್ಮ ಮನ್ಯಾಗ ಊಟ ಮಾಡೋವಾಗ ನಾನಽ ನೋಡೇನಲ್ಲ-ಈಟ ಈಟ ಅನ್ನ, ಇಷ್ಟ ಸಾರ, ಹಾಲ ತುಪ್ಪ! ಮೂರ ತುತ್ತು ಊಟ ಮಾಡತಾಳ, ಕೈ ತೊಳೀತಾಳ ಅಷ್ಟ. ಕುಬಸದಾಗಿನ ಬಾಡೀ ಹೆಂಗೈತಂದಿರೇ? ದಿನಕ್ಕ ಮೂರು ಬಾಡಿ ತೊಡತಾಳ! ಬಾಡೀಗೀ ಸೈತ ನಾರೂ ಎಣ್ಣಿ ಹಚ್ಚಿರತಾಳ….” ಇತ್ಯಾದಿ ಇತ್ಯಾದಿ ಈ ಮಾತು ಕೇಳಿ ಪಾಪ ಒಂದು ಅರಿಯದ ಬಾಲೆ “ಆಕೀನೂ ನಮ್ಹಾಂಗ ಹೂಂಸ ಬಿಡತಾಳು?” ಎಂದು ಕೇಳಿತು. ಆಶ್ಚರ್ಯವೆಂದರೆ ಈ ಪ್ರಶ್ನೆಗೆ ಯಾರೂ ನಗಲಿಲ್ಲ. ಇದಕ್ಕೂ ಗಿರಿಜಾ ಗಂಭೀರವಾಗಿಯೇ ಉತ್ತರಕೊಟ್ಟಳು. +ನಾಟಕ ಸುರುವಾಗೋತನಕ ಗಿರಿಜಾ ಒಂದಿಲ್ಲೊಂದು ಇಂಥ ಸಂಗತಿ ಹೇಳುತ್ತಲೇ ಇದ್ದಳು. ಉಳಿದವರು ಕೇಳುತ್ತಲೇ ಇದ್ದರು. ಹೇಳಿ ಅವಳು ದಣಿಯಲಿಲ್ಲ, ಕೇಳಿ ಅವರು ದಣಿಯಲಿಲ್ಲ. ಇಂಥ ಹರಿಕಥೆಗಳು ಪ್ರೇಕ್ಷಕರಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇದ್ದವು. ಗೌಡನ ಮನೇ ಮುಂದೆ ಬಯಲಾಟವಾಗಲೇ ಸುರುವಾಗಿತ್ತು. +ಇವರ ನಾಟಕ ಸುರುವಾಯ್ತು. ಪ್ರಾರಂಭಕ್ಕೆ ಗುಡಸೀಕರ ರಂಗದ ಮೇಲೆ ಬಂದು ನಾಟಕ ಕಲೆಯ ಬಗ್ಗೆ ಒಂದು ಉಪನ್ಯಾಸ ಬಿಗಿದ. ಯಾರಿಗೂ ಭಾಷಣ ತಿಳಿಯಲಿಲ್ಲ. ಆದರೆ ಯಾರೂ ಗದ್ದಲ ಮಾಡಲಿಲ್ಲ. ಭಾಷಣದ ಅಂತ್ಯಕ್ಕೆ ಪಾಪಮಾಸ್ತರ ಬಂದು ಅವನಿಗೊಂದು ಮಾಲೆ ಹಾಕಿ “ನಮ್ಮ ಊರಿನಲ್ಲಿ ಗುಡಸೀಕರ ಜಗತ್ಪ್ರಸಿದ್ಧರಾಗಿದ್ದಾರೆ” ಎಂಬಂಥ ಏನೇನೋ ಒದರಿದ. ಗುಡಸೀಕರ ಹೋಗಿ ಪ್ರೇಕ್ಷಕರಲ್ಲಿ ತನಗಾಗಿ ಹಾಕಿದ್ದ, ಸಾಲೆಯಿಂದ ತಂದಿರಿಸಿದ್ದ, ನಾಲ್ಕೂ ಕಾಲು ಸರಿಯಾಗಿದ್ದ ಕುರ್ಚಿಯಲ್ಲಿ ಠೀವಿಯಿಂದ ಕೂತ. ಪರದೆ ಎದ್ದಿತು. +ಪಾರ್ವತಿ ಪರಮೇಶವರರ ಸಭೆಯಿಂದ ನಾಟಕ ಸುರುವಾಯಿತು. ಲೋಕದ ತಂದೆತಾಯಿಗಳಾದ ಅವರು ಜಗತ್‌ಕಲ್ಯಾಣ ಮರೆತು ಸರಸದಲ್ಲಿ ತೊಡಗಿದ್ದಾಗ ನಾರದನ ಪ್ರವೇಶವಾಗಬೇಕು. ಅವನ ಪ್ರವೇಶ ಹಳ್ಳೀಯ ಮಂದಿಗೆ ಅಕ್ಷರಶಃ ರೋಮಾಂಚನವೆಬ್ಬಿಸಿತು. ಜೋತುಬಿದ್ದ ಹಗ್ಗದ ತುದಿಯ ಕುಣಿಕೆಯಲ್ಲಿ ಕಾಲೂರಿ ನಾರದ ಉರ್ಫ್ ಮೆರಮಿಂಡ ನಾರಾಯಣನ ನಾಮಸ್ಮರಣೆ ಮಾಡುತ್ತ ಮೇಲ್ಭಾಗದಿಂದ ಮಧ್ಯ ರಂಗದವರೆಗೆ ಇಳಿದ. ಭಾವುಕ ಮಂದಿಗೆ ನಾರದ ಆಕಾಶದಿಂದ ಅವತರಿಸುತ್ತಿರುವನೋ ಏನೋ ಎಂಬಂತಾಯ್ತು. ಬೆಕ್ಕಸ ಬೆರಗಾಗಿ ಬಾಯಲ್ಲಿ ಗುಂಗಾಡು ಹೊಕ್ಕು ಹೊರಬಂದರೂ ಖಬರಿಲ್ಲದೆ ಕೂತರು. +ನಾರದ ಮಹರ್ಷಿ “ಎಲೈ ಜಗನ್ನಿಯಾಮಕನಾದ ಪರಮಾತ್ಮನೇ” ಎನ್ನುತ್ತ ಜಿಗಿಯಬೇಕು. ಹಾಗೆ ಜಿಗಿಯಹೋದರೆ ಕುಣಿಕೆ ಬಿಗಿಯಾಗಿ ಕಾಲು ಹೊರಬರಲೇ ಇಲ್ಲ! ಜೋಲಿ ತಪ್ಪಿದ ಮಹರ್ಷಿ ಕೈಬಿಟ್ಟ. ಸುದೈವಕ್ಕೆ ಕಾಲ ಕುಣಿಕೆ ಹಾಗೇ ಬಿಗಿಯಾಗೇ ಇದ್ದುದರಿಂದ ನೆಲಕ್ಕೆ ಅಪ್ಪಳಿಸಲಿಲ್ಲ. ನಾರದನ ಕಾಲು ಕುಣಿಕೆಯಲ್ಲಿ ಸಿಕ್ಕು ಕೆಳಕ್ಕೂ ಬೀಳದೆ, ನಿಲ್ಲಲಿಕ್ಕೂ ಆಗದೆ ತಲೆಕೆಳಕಾಗಿ ತೂಗಾಡತೊಡಗಿದ! ಜನ ಹೋ ಎಂದು ನಗತೊಡಗಿದರು. ಕೆಲವರು ಇದೂ ನಾಟಕವೇ ಇರಬಹುದೆಂದು ಸ್ವಲ್ಪ ಹೊತ್ತು ಸುಮ್ಮನಿದ್ದರು. ಆದರೆ ನಾರದನ ಚಡಪಡಿಕೆ ನೋಡಿ ಅವರಿಗೂ ಅರ್ಥವಾಯಿತು. +ಗುಡಸೀಕರ ಎದ್ದು “ಪರದೇ ಬಿಡೋ” ಎಂದು ಕೂಗಿದ. ಶಿವ ಗಾಬರಿಯಾಗಿ ಒಳಗೋಡಿದ. ಗುಡಸೀಕರ ಮತ್ತೆ ಕೂಗಿದ. ಪಾಪ ಪಾರ್ವತಿಗೆ ಕೂಗಾಡುವ ಜನರನ್ನು ತೂಗಾಡುವ ನಾರದನನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ತಾನು ಬಾಯಿಪಾಠ ಮಾಡಿದ್ದ ಹಾಡನ್ನು ಅಭಿನಯಸಮೇತ ಕೀರಲು ದನಿಯಲ್ಲಿ ಒದರುತ್ತ, ಸೊಂಟದ ಮೇಲೆ ಎರಡೂ ಕೈ ಊರಿ ಕುಣಿಯತೊಡಗಿದ. ಜನಕ್ಕೆ ನಗೆಯಿಂದ ಹುಚ್ಚು ಹತ್ತುವುದೊಂದು ಬಾಕಿ. ತೂಗಾಡುವ ನಾರದನನ್ನು ನೋಡುವುದೇ? ಕುಣಿಯುವ ಪಾರ್ವತಿಯನ್ನು ನೋಡುವುದೇ? ಕಿರಿಚಾಡುವ ಗುಡಸೀಕರನನ್ನು ನೋಡುವುದೇ? ಕೊನೆಗೆ ಗುಡಸೀಕರ ಎದ್ದು ಒಳಗೆ ಹೋದ. +ಒಳಗಿದ್ದ ಕಳ್ಳ ರಾವಳನಿಗಾಗಲೇ ನೆತ್ತಿಗೇರುವಷ್ಟು ನಶೆಯೇರಿತ್ತು. ರಂಗದ ಮೇಲೆ ಆಗಲೇ ಆಂಜನೇಯ ಬಂದು ತೂರಾಡುತ್ತಿದ್ದಾನೆಂದು ಭಾವಿಸಿ ಓಡಿಬಂದು “ಎಲವೆಲವೋ ದುಷ್ಟ ಕಪಿಯೇ” ಎಂದು ನಿಲ್ಲಲಾರದೆ ಜೋಲಿ ತಡೆಯಲಾರದೆ ಗದೆ ಎತ್ತಿ ತೂಗುವ ನಾರದನನ್ನು ಹೊಡೆಯಹೋಗಿ ಕರೆಂಟಿನ ಪೆಟ್ಟಿಗೆಗೆ ಜೋರಿನಿಂದ ಅಪ್ಪಳಿಸಿದ. ಕರೆಂಟು ಹೋಗಿ ವಿದ್ಯುದ್ದೀಪಗಳೆಲ್ಲಾ ಆರಿಹೋಗಿ ಜನ ಹೋ ಎಂದು ಎದ್ದುಬಿಟ್ಟರು. ಮಕ್ಕಳು, ಹೆಂಗಸರು ಕಿರಿಚಾಡತೊಡಗಿದರು. ಜನಕ್ಕೆ ಈಗ ಪಾರಿಜಾತದ ನೆನಪಾಯಿತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದು ಆ ಕಡೆ ನುಗ್ಗಿದರು. +ಎಲ್ಲ ಎದ್ದುಹೋದರು. ರಂಗಭೂಮಿ ಸ್ತಬ್ಧವಾಗಿತ್ತು. ಗುಡಸೀಕರ ಬ್ಯಾಟ್ರಿ ಹಿಸುಕಿ ಎಲ್ಲರನ್ನೂ ಹೆಸರುಗೊಂಡು ಕರೆಯುತ್ತ ಹುಡುಕಿದ. ಪರದೆಯ ಹಿಂದೆ ಕಳ್ಳ ಮೂಲೆಯಲ್ಲಿ ಕಾಲೆತ್ತೋ, ಕೈಯೆತ್ತೋ ಬೇಹೋಶ್ ಆಗಿ ಒಣಗು ಹಾಕಿದ ಬಟ್ಟೆಯ ಹಾಗೆ ಬಿದ್ದುಬಿಟ್ಟಿದ್ದ. ಹೋಗಿ ಎಬ್ಬಿಸಿ ನೋಡಿದ. ನಶೆಯೇರಿದ್ದು ಸ್ಪಷ್ಟವಾಯಿತು. ಸಮೀಪದಲ್ಲಿ ಸೀತೆ ಮುರಿದ ಗೊಂಬೆಯ ಹಾಗೆ ಬಿದ್ದುಬಿಟ್ಟಿದ್ದಳು. ಉಳಿದವರೆಲ್ಲ ಫರಾರಿ. ಹಾಗೇ ನೋಡುತ್ತ ಬಂದಾಗ ಚಿಮಣಾ ಪಿಳಿಪಿಳಿ ಕಣ್ಣು ಬಿಡುತ್ತ ಸಂಕುಚಿತವಾಗಿ ಉಡುಗಿದ್ದಳು. ಕೋಪ, ತಾಪ, ನಿರಾಸೆಗಳಿಂದ ಮೊದಲೇ ಸುಡುತ್ತಿದ್ದವನಲ್ಲಿ ಸೊಂಟದ ಬೆಂಕಿ ಭುಗಿಲ್ಲೆಂದು ಹೊತ್ತಿಕೊಂಡು ಉರಿಯಿತು. ತನಗೇ ಗೊತ್ತಿಲ್ಲದಂತೆ ಹೋಗಿ ಅವಳನ್ನು ತಬ್ಬಿಕೊಂಡ. +ನಿಂಗೂ ಚೆಲೋದಾಗಿ ಸೇಡು ತೀರಿಸಿಕೊಂಡಿದ್ದ. ಮುಟ್ಟಿ ನೋಡಿಕೊಳ್ಳುವ ಹಾಗೆ ಬರೆ ಎಳೆದಿದ್ದ. ತಿಂದರೆ ತುಟಿ ಕೆಂಪಗಾಗುತ್ತವೆಂದು ಪುಸಲಾಯಿಸಿ ರಾವಳ ಉರ್ಫ್ ಕಳ್ಳನಿಗೂ ಸೀತೆ ಉರ್ಫ್ ರಮೇಸನಿಗೂ ಎಲಡಿಕೆ ಮಡಚಿ ಕೊಟ್ಟಿದ್ದ. ಅದರಲ್ಲಿ ಮತ್ತುಬರುವ ಗಿಡಮೂಲಿಕೆ ಇಟ್ಟಿದ್ದ. ಗುಡಸೀಕರನ ಭಾಷಣ ಮುಗಿಯೋ ಹೊತ್ತಿಗೆ ರಾವಳನ ತಲೆತಿರುಗಿ ಎದುರು ನಿಂತವರು ಎರಡೆರಡಾಗಿ ಕಾಣತೊಡಗಿದರು. ಜಗಿಯುತ್ತ ತುಟಿಸವರಿಕೊಳ್ಳುತ್ತ ಮೂಲೆಗೊರಗಿದ್ದ ಸೀತೆ ಮೇಲೇಳಲೇ ಇಲ್ಲ. ಕಳ್ಳನಿಗೆ ಜೊಂಪು ಕೂಡ ಹತ್ತಿತು. ಅಷ್ಟರಲ್ಲಿ ಜನರ ಹಾಹಾಕಾರ ಕೇಳಿಸಿ ಎಚ್ಚೆತ್ತು ನೋಡಿದ. ನಾರದ ತೂಗಾಡುತ್ತಿದ್ದನಲ್ಲಾ, ಓಹೋ ಹನುಮಂತನ ಪ್ರವೇಶವಾಗಿದೆಯೆಂದು ಭಾವಿಸಿ ಓಡಿಹೋದ. ಹೊಡೆಯುವುದಕ್ಕೆ ಹೋಗಿ ನಾರದನ ಬದಲು ಕರಂಟ್ ಡಬ್ಬಿಗೆ ಹೊಡೆದ. ಮುಂದಿನ ಕಥೆ ನಿಮಗೆ ಗೊತ್ತೇ ಇದೆ. ಕತ್ತಲಲ್ಲಿ ಜನರ ಹಾ ಹೋ ನಡೆದು ನಟರು ಗಾಬರಿಯಿಂದ ಬೆದರಿದ ಕುರಿಗಳಂತೆ ದಿಕ್ಕುಪಾಲಾಗಿ ಸತ್ತೆವೋ, ಬದುಕಿದೆವೋ ಎಂದು ಓಡಿಹೋದರು. +ಆದರೆ ಯಾರಿಂದ ಹೀಗಾಯಿತೆಂದು ಕೊನೆಯ ತನಕ ಯಾರಿಗು ತಿಳಿಯಲೇ ಇಲ್ಲ. ತನಗೆ ಯಾರೋ ಮದ್ದು ಮಾಟ ಮಾಡಿರಬೇಕೆಂದು ಕಳ್ಳ ನಂಬಿದರೆ, ತನಗೆ ದೃಷ್ಟಿಯಾಗಿ ಹೀಗಾಯಿತೆಂದು ಸೀತೆ ನಂಬಿದ. ಕರಿಮಾಯಿಯಿಂದಲೇ ಹೀಗಾಯಿತೆಂದು ಜನ ನಂಬಿದರು. ಯಾಕೆಂದರೆ ಇದು ವಿನಾಕಾರಣ ನಂಬಿಕೆಯಲ್ಲ. +ಇಲ್ಲಿ ಗುಡಸೀಕರನ ನಾಟಕ ನಡೆದಿದ್ದರೆ ಗೌಡನ ಮನೆಯ ಮುಂದೆ ಪಾರಿಜಾತ ನಡೆದಿತ್ತಲ್ಲವೆ? ದೇವರೇಸಿ ಅಲ್ಲೇ ಕೂತು ಆಟ ನೋಡುತ್ತಿದ್ದ. ಸರಿಸುಮಾರು ಇಲ್ಲಿ ನಾರದ ತೂಗಾಡುತ್ತಿದ್ದಾಗ ಅಲ್ಲಿ ದೇವರೇಸಿ ಒಂದೆರಡು ಸಲ ಬಿಕ್ಕಿದನಂತೆ. ಇಲ್ಲಿ ತಾಯಿ ಬಿಕ್ಕುವುದಕ್ಕೂ ಅಲ್ಲಿ ಕರಂಟು ಹೋಗುವುದಕ್ಕೂ ಸಮವಾಯಿತು. ತಾಯಿ ಇಲ್ಲೀ ತನಕ ಹರಿಯುವ ನೀರು ತರುಬಿದ್ದಳು. ಬಿಳಿ ಮೋಡದಿಂದ ಮಳೆ ಬರಿಸಿದ್ದಳು. ಆದರೆ ವಿದ್ಯುದ್ದೀಪ ಕಳೆಯಬಲ್ಲಳೆಂದು ಯಾರಿಗೂ ತಿಳಿದಿರಲಿಲ್ಲ. ಮಾರನೇ ದಿನವೇನೋ ಕಾರಾರು ರೀತ್ಯ ಗುಡಸೀಕರ ವಿದ್ಯುದ್ದೀಪದವನಿಗೆ ಹಣಕೊಟ್ಟು ಕಳಿಸಿದ್ದ. ಆದರೆ ಅವನ ಕಣ್ಣು ಹೋದವೆಂದೂ, ಅವನು ಅಳುತ್ತ ಇನ್ನೊಬ್ಬರ ಕೈಹಿಡಿದುಕೊಂಡು ಹೋದನೆಂದೂ ಸುದ್ದಿ ಅಥವಾ ನಂಬಿಕೆ ಹಬ್ಬಿತು. ಹೆಚ್ಚೇನು, ಗೌಡ, ದತ್ತಪ್ಪ ಕೂಡ ಇದನ್ನು ನಂಬಿದರು. +ಈ ನಂಬಿಕೆಗಳಿಂದ ಚತುಷ್ಟಯರೂ ಅಧೀರರಾದರು. ಆದರೆ ಗುಡಸೀಕರ ಮಾತ್ರ ಎಳ್ಳಕಾಳು ಮುಳ್ಳ ಮೊನೆಯಷ್ಟೂ ವಿಚಲಿತನಾಗಲಿಲ್ಲ. ಚಿಮಣಾಳ ಸಂಗಸುಖದಲ್ಲಿ ಹುಡುಗ ಒಳಗೊಳಗೇ ಆಳದಲ್ಲಿ ಅಳ್ಳಕಾಗಿದ್ದ. ನಾಟಕ ಕೆಟ್ಟುದಕ್ಕೆ ಕಾರಣ ಕೆದರಿ ತಿಳಿಯುವ ಗೋಜಿಗೆ ಅವ ಹೋಗಲೇ ಇಲ್ಲ. +ನಾಟಕವಾದ ಎರಡು ಮೂರು ದಿನ ಊರಿನ ಮನಸ್ಸು ಕದಡಿಬಿಟ್ಟಿತ್ತು. ಊರ ಬಾಯೊಳಗೆಲ್ಲ ಕರಿಮಾಯಿಯ ಸುದ್ದಿಯೇ. ಚಿಮಣಾಳ ಸುದ್ದಿಯೇ. ನಾಟಕದ ಸುದ್ದಿಯೇ. ಗುಡಸೀಕರ ಈಗ ಗೌಡನ ಎದುರಾಳಿಯಾಗಿದ್ದ. ಗೌಡ ತಾನೇ ಮುಂದಾಗಿ ಪಂಚಾಯ್ತಿ ಕೊಟ್ಟದ್ದನ್ನು, ಈತ ಎಲ್ ಎಲ್. ಬಿ. ಪಾಸಾದಾಗ ಸಕ್ಕರೆ ಹಂಚಿದ್ದನ್ನು ಜನ ಸ್ಮರಿಸಿದರು. ಆದರೆ ಹುಡುಗಿಯರ ಕಲ್ಪನೆಗಳಿಗೆ ರೆಕ್ಕೆ ಮೂಡಿ ಸಿಕ್ಕಾಪಟ್ಟೆ ಹಾರಾಡಲು ಇರೋ ಮುಗಿಲು ಸಾಲದೆನಿಸಿ, ಹಳೇ ಮುದುಕಿಯರು ಕಾಶಿ ಕೈಲಾಸದ ಕನಸು ಕಂಡಂತೆ ಇವರು ಬೆಳಗಾವಿಯ ಕನಸು ಕಾಣತೊಡಗಿದರು. +ಈಗ ಊರಲ್ಲಿ ಚಿಮಣಾ ಇದ್ದಳು. ಅವಳೊಂದಿಗೆ, ಅವಳ ಜೊತೆ ಬಂದಿದ್ದ ಇನ್ನೊಬ್ಬ ನಮ್ಮ ಕಥೆಯಲ್ಲಿ ಕಾಲಿರಿಸಿದ. ಅವನೇ ಬಸವರಾಜು. ಗುಡಸೀಕರ ಮತ್ತೆ ಚೇತರಿಸಿಕೊಂಡ. ಚತುಷ್ಟಯರನ್ನು ಕರೆಸಿದ. ಅವರೋ ನಾಟಕ ತನ್ನಿಂದಲೇ ಕೆಟ್ಟಿತೆಂದು ಪ್ರತಿಯೊಬ್ಬನೂ ಒಳಗೊಳಗೇ ಹುಳುಹುಳು ಮಾಡುತ್ತಿದ್ದ. ಈ ಮೂರು ದಿನವೆಲ್ಲ ಅವರು ತಮ್ಮ ಮೇಲಿನ ತಪ್ಪು ಜಾರುವಂಥ ನೆಪ ಸೃಷ್ಟಿಸಿರುವುದರಲ್ಲೇ ಕಾಲ ಕಳೆದಿದ್ದರು. ಕರೆಸಿದ್ದಕ್ಕೆ ಅಂಜುತ್ತ ಹೋದರೆ ಆಶ್ಚರ್‍ಯ ಕಾದಿತ್ತು. ಗುಡಸೀಕರ ನಾಟಕದ ಸುದ್ದಿ ಎತ್ತಲೇ ಇಲ್ಲ. +“ಯಾಕ್ರೋ? ಚಾದಂಗಡಿ ವಿಚಾರ ಮರತಬಿಟ್ಟರೇನ್ರೋ? ಹೋಗ್ರಿ, ಹೋಗ್ರಿ, ಊರ ಹೊರಗ ಹೊಲಗೇರಿ ಹಂತ್ಯಾಕ ನಮ್ಮ ಜಾಗಾ ಐತಲ್ಲ, ಅಲ್ಲೊಂದು ಗುಡಸಲಾ ಹಾಕ್ರಿ. ನಾಳಿ ಚೆಲೋ ದಿನ ಐತಿ. ಸುರುಮಾಡೋಣು, ನಡೀರಿ.” +ಬಾರೋ ಬಾರೋ ನಮ್ಮಯ್ಯಾ +ಕೇಳಬೇಕೇ? ಮಾರನೇ ದಿನ ಸೂರ್‍ಯ ನೆತ್ತಿಗೆ ಬರುವುದರೊಳಗಾಗಿ ಹೊಲಗೇರಿಯಾಚೆ, ಲಗಮವ್ವನ ಗುಡಿಸಲದಿಂದ ಸ್ವಲ್ಪ ದೂರದಲ್ಲೇ ಹೊಸ ಗುಡಿಸಲೆದ್ದಿತು. ಸ್ವತಃ ಗುಡಸೀಕರನೇ ಮುಂದೆ ನಿಂತು ಅದರ ಹುವೇನವೇ ನೋಡಿಕೊಂಡ. ಒಂದಿಬ್ಬರು ಆಳುಗಳನ್ನು ಹೆಚ್ಚಾಗಿ ಹಚ್ಚಿಸಿ ಹಸನು ಮಾಡಿಸಿದ. ಜನ ಇದನ್ನು ಅಷ್ಟಾಗಿ ಗಮನಿಸಲಿಲ್ಲ. ದುರ್ಗಿ ಮಾತ್ರ ಲಗಮವ್ವನ ಕಣ್ಣು ತಪ್ಪಿಸಿ ಆಗಾಗ ಏನೋ ನೆಪಗಳಿಂದ ಹೊರಬಂದು ಗುಡಸೀಕರನನ್ನೇ ಆಸೆಬುರುಕಿಯಾಗಿ ನೋಡುತ್ತಿದ್ದಳು. ತನ್ನ ಕಡೆ ಒಂದು ಸಲವಾದರೂ ನೋಡಲೆಂದು ಹಿಂದೆ ಮುಂದೆ ಸುಳಿದಾಡಿದಳು. ಹಾದುಹೋಗುತ್ತಿದ್ದ ಅವ್ವಕ್ಕಗಳನ್ನು ಸ್ವಲ್ಪ ಏರುದನಿಯಲ್ಲೇ ಮಾತಾಡಿಸಿ ವಿನಾಕಾರಣ ಕುಲುಕುಲು ನಕ್ಕಳು. ಇವಳ ಈ ಹಗುರನಡೆ ಲಗಮವ್ವನಿಗೆ ತಿಳಿದು ಗದರಿಕೊಂಡಳು. ದುರ್ಗಿ ವಿಧಿಯಿಲ್ಲದೆ ಒಳಸೇರಬೇಕಾಯ್ತು. +ಬಂದಂದಿನಿಂದ ಚಿಮಣಾ ಹಾಗೂ ಬಸವರಾಜು ಗುಡಸೀಕರನ ತೋಟದಲ್ಲೇ ಇದ್ದರು. ಈಗ ಅವರ ಬಿಡಾರ ಸಿದ್ಧವಾಯಿತಲ್ಲ. ಮಧ್ಯಾಹ್ನದ ಉರಿಬಿಸಿಲು, ಮೃಗ ಮಳೆಯ ಗುರುತು ಒಡೆದಿರಲಿಲ್ಲ. ದನಕರುಗಳು ಮರದ ನೆರಳಿಗೆ ನಿಂತು ಬಾಯಿಬಿಡುತ್ತಿದ್ದವು. ಕೆರೆಯಲ್ಲಿ ಈಜು ಬಿದ್ದ ಮಕ್ಕಳು ದನಗಳ ಹಾಗೆ ಅಲ್ಲೇ ಆಡುತ್ತ ಹೊರಗೆ ಬರಲು ನಿರಾಕರಿಸುತ್ತಿದ್ದವು. ಭಾವುಕ ಭಕ್ತರೀಗ ಗುಡಿಗೆ ಹೋಗಿದ್ದರೆ ಕರಿಮಾಯಿಯ ಮುಖದಲ್ಲೂ ತಿಳಿ ಬೆವರು ಕಾಣಬಹುದಿತ್ತು. ಅರ್ಥಾತ್ ಅಂಥಾ ಬಿಸಿಲಿತ್ತು. ಇಂಥಾ ಉರಿ ಉರಿ ಬಿಸಿಲಿನಲ್ಲಿ ತೋಟದಿಂದ ಚಿಮಣಾ ಮತ್ತು ಬಸವರಾಜು ಕಳ್ಳನ ನೇತೃತ್ವದಲ್ಲಿ ಬಂದು ತಮಗಾಗಿ ತಯಾರಾಗಿದ್ದ ಗುಡಿಸಲು ಹೊಕ್ಕರು. +ಅವರು ಬಂದು ಹೊಕ್ಕದ್ದರಿಂದ ಕೆಲವು ಚಿಮಣಾ ಭಕ್ತರು ಬಂದರು. ಯಾರೂ ಬೆದರಿಸಲಿಲ್ಲವಾದ್ದರಿಂದ ಅಲ್ಲೇ ನಿಂತರು. ಗುಡಸೀಕರ ಇನ್ನೂ ದೇಖರೇಖಿ ಮಾಡುತ್ತ ನಿಂತಿದ್ದಾನೆ. ಚತುಷ್ಟಯರು ಓಡಾಡುತ್ತಿದ್ದಾರೆ. ಭಕ್ತರು ಜೋಡಿಯಾಗಿ ಪರಸ್ಪರ ಭುಜಗಳ ಮೇಲೆ ಕೈಯೂರಿ ಜೊಲ್ಲು ಸುರಿವ ಮಾತಾಡುತ್ತಿದ್ದಾರೆ. ಅಷ್ಟರಲ್ಲಿ ಗುಡಿಸಲ ಒಳಗಿನಿಂದ ಸಂಗೀತ ಕೇಳಿಸಿತು. ಹೊರಗಿನ ಎಲ್ಲರ ಕಿವಿ ನಿಮಿರಿದವು. ಕೆಲಸ ಮಾಡುತ್ತಿದ್ದವರು ಗಪ್‌ಚಿಪ್, ಗೊಂಬೆಗಳ ಹಾಗೆ, ಕುತೂಹಲದಿಂದ ಸ್ತಬ್ಧರಾದರು. ಹೋಗಿ ನೋಡೇವೆಂದರೆ ಗುಡಸೀಕರ ಇರೋವಾಗ ತಾವು ಒಳಗೆ ಹೋಗೋದು ಹ್ಯಾಗೆ, ಇದ್ದುದರಲ್ಲಿ ಗುಡಸೀಕರನೊಬ್ಬನಿಗೇ ಅದೇನೆಂದು ಗೊತ್ತಿತ್ತು. ಅಷ್ಟರಲ್ಲಿ ಒಳಗಡೆಯಿಂದ ಚಿಮಣಾ ಬಂದು ಚಾದಂಗಡಿಯ ಬಾಗಿಲಲ್ಲಿ ನಿಂತಳು. +ನಮ್ಮ ಕಥೆಯಲ್ಲಿ ಕಾಲಿಟ್ಟ ಹೊಸ ನಾಯಕಿಯನ್ನು, ಕರಿಮಾಯಿಗೆ ಕೈಮುಗಿದು ಸ್ವಾಗತಿಸೋಣ. ಊರಿನಲ್ಲಿ ಹೊಸಗಾಳಿ ಸುಳಿಯಲೆಂದು, ಆರೋಗ್ಯ ಕೆಡದಿರಲೆಂದು, ಹಚ್ಚಿದ ಎಳೆ ದೀಪ ಕಳೆಯದಿರಲೆಂದು ಹಾರೈಸೋಣ. +ಬಂದಳಲ್ಲ; ನೋಡಿದರೆ ಎಂಥ ಅಪರೂಪದ ರೂಪ! ದಟ್ಟವಾಗಿ ಕಾಡಿಗೆ ಹಚ್ಚಿದ ಬಟ್ಟಲಗಣ್ಣು; ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ನಗಲಿದ್ದಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಎಳೆ ಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು-ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತವೆ; ಎದೆ ಕೂಡ, ಸಧ್ಯಕ್ಕೆ ಒಂದೇ ಒಂದು ಸಣ್ಣ ಹೋಲಿಕೆಯಿಂದ ಆಕೆಯ ವರ್ಣನೆಯನ್ನು ಮುಗಿಸಬಹುದು; ಬಂಗಾರದ ಮುಖ ಹಾಕಿದಾಗಿನ ಕರಿಮಾಯಿಯ ವಿಗ್ರಹ ಇದೆಯಲ್ಲ;- ನೀವು ಭಾವುಕರಾಗಿ ನೋಡಿದರೆ ಚಿಮಣಾ ಹಾಗೆ ಕಾಣಿಸುತ್ತಿದ್ದಳು. ಆದರೆ ಆ ಊರಿನ ಯಾರಿಗೂ ಈ ಹೋಲಿಕೆ ಹೊಳೆಯುವುದು ಸಾಧ್ಯವಿರಲಿಲ್ಲ. +ಚಿಮಣಾಳ ಹಿಂದಿನಿಂದ ಬಸವರಾಜು, ಅವಳೊಂದಿಗೆ ಬಂದಿದ್ದವನು, ಎಡಗೈಯಲ್ಲಿ ಸಣ್ಣ ರೇಡಿಯೊ ಹಿಡಿದುಕೊಂಡು ಹೊರಬಂದ. ಬಣ್ಣಬಣ್ಣದ ಉದ್ದ ತೋಳಿನ ಅಂಗಿ ತೊಟ್ಟಿದ್ದ. ಕೆಳಗೆ ಸೊಂಟದಿಂದ ಅಂಗಾಲಿನ ತನಕ ಇನ್‌ಶರ್ಟ್ ಮಾಡಿ ಪ್ಯಾಂಟು ಹಾಕಿದ್ದ. ಪದ ಮುಚ್ಚುವ ಹಾಗೆ ಬೂಟು ಹಾಕಿದ್ದ. ಎಡಗೈಯಲ್ಲಿ ರೇಡಿಯೋ ಇತ್ತು. ಬಲಗೈಯಲ್ಲಿ ಸಿಗರೇಟಿತ್ತು. ಸೇದುತ್ತ ಆಗಾಗ ಮೂಗು ಬಾಯಿಗಳಿಂದ ನಾಜೂಕಾಗಿ ಹೊಗೆಬಿಡುತ್ತಿದ್ದ. ಹಾಗೆ ಬಿಟ್ಟಾಗ ಹೊಗೆ ಚಕ್ರಗಳ ಸಣ್ಣ ದೊಡ್ಡ ಸರಪಳಿ ಹೊರಬರುತ್ತಿತ್ತು. ಈಗ ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆಂದು ಅವನಿಗೆ ಗೊತ್ತಿತ್ತು. ತಾನು ಎಲ್ಲಿಗೆ ಹೋದರೆ ಅಲ್ಲಿ ಬೆನ್ನು ಹತ್ತುತ್ತಾರೆಂದು ಅವನಿಗೆ ಗೊತ್ತಿತ್ತು. ಅದಕ್ಕೇ ಆತ ಎದುರಿನ ಗುಡಸೀಕರನನ್ನು ಮಾತಾಡಿಸಲಿಲ್ಲ. ತನ್ನ ಪಾಡಿಗೆ ತಾನು ರೇಡಿಯೋ ಹಾಡು ಕೇಳುತ್ತ ಊರು ನೋಡುವವನಂತೆ ಹೊರಟ. ಅಲ್ಲಿದ್ದವರು ಬೆರಗೋ, ಹೊಯ್ಕೋ ಹೋ ಎನ್ನುತ್ತ ವಶೀಕರಣಕ್ಕೆ ಒಳಗಾದವರಂತೆ ಬೆನ್ನುಹತ್ತಿದರು. +ಮಂದಿಯ ಕಲ್ಪನೆಗೆ ದೊಡ್ಡ ಆಘಾತವಾಗಿತ್ತು. ಸಣ್ಣ ಪೆಟ್ಟಿಗೆ ಇಷ್ಟು ಚೆನ್ನಾಗಿ ಹಾಡುವುದೆಂದರೇನು ಕೆಲವರು, ಪೆಟ್ಟಿಗೆಯಲ್ಲಿ ಕಿರುಬೆರಳು ಗಾತ್ರದ ಜನ ಇದ್ದಾರೆಂದು ಹುಡುಗರು, ಇದೆಲ್ಲ ಯಂತ್ರವೆಂದು ಬಲಿತವರು, ಹೌಂದು, ಮಲೆನಾಡಿನಲ್ಲಿ ಯಂತ್ರ ಮಂತ್ರ ಮಾಡುವವರಿರುತ್ತಾರೆಂದು, ಇದು ಅವರ ಕರಾಮತ್ತು ಎಂದು ಇನ್ನು ಕೆಲವರು, ಇಂಗರೇಜಿಯವರ ಜಾದೂಗಾರಿಕೆಯೆಂದು ತಿಳಿದವರು- ಒಂದೇ ಎರಡೇ ಹತ್ತು ಹೆಜ್ಜೆ ಬೆನ್ನುಹತ್ತುವುದರೊಳಗೆ ಒಬ್ಬೊಬ್ಬನ ತಲೆಯಲ್ಲಿ ಕನಿಷ್ಠ ಹತ್ತೆಂಟು ಕಲ್ಪನೆ ಹುಟ್ಟಿ ತೇಲಿ ಮುಳುಗತೊಡಗಿದವು. ಎಲ್ಲರ ಕಲ್ಪನೆಗಳು ಎಕದಂ ಕ್ರಿಯಾಶೀಲವಾದುವು. ಎಲ್ಲರೂ ಈಗ ಎರಡಾಗಿದ್ದರು: ರೇಡಿಯೋ ಕೇಳಲು ಕಿವಿಯಾದರು, ಬಸವರಾಜನನ್ನು ನೋಡಲು ಕಣ್ಣಾದರು. +ಸನ್ನಿವೇಶದ ಸರಿಯಾದ ಲಾಭ ಪಡೆದವರು ಚತುಷ್ಟಯರು. ಎಷ್ಟೆಂದರೂ ಬಸವರಾಜು ತಾವು ಕರೆತಂದವನಲ್ಲವೆ? ಅವನ ಬಗ್ಗೆ ಎಲ್ಲಿಲ್ಲದ ಅಭಿಮಾನ ಮೂಡಿತು. ಕಲ್ಳ ಒಂದೆರಡು ಸಲ, ಹೋಗುತ್ತಿದ್ದ ಬಸವರಾಜನ ಭುಜದ ಮೇಲೆ ಕೈಹಾಕಲು ನೋಡಿದ. ಅದು ಸಾಧ್ಯವಾಗದ್ದಕ್ಕೆ ತಂತಾನೆ ‘ನಮ್ಮ ದೋಸ್ತಿ’ ಎಂದು ಹೇಳಿಕೊಂಡು ನಕ್ಕ. ಜನರ ಅಜ್ಞಾನಕ್ಕೆ ಚತುಷ್ಟಯರಿಗುಂಟಾದ ಮರುಕ ಅಷ್ಟಿಷ್ಟಲ್ಲ. ಏನೇನೋ ಮಾತಾಡಿಕೊಂಡು, ಕಲ್ಪನೆಗಳನ್ನೋಡಿಸಿಕೊಂಡು ಹೋಗುತ್ತಿದ್ದ ಜನರಿಗೆ ಅವರೇ ತಿಳುವಳಿಕೆ ಹೇಳಬೇಕಾಯಿತು. ಗುಡಸೀಕರನ ಹಿಂದೆ ಇದನ್ನು ವರ್ಣಿಸಿ ಇದರ ಹೆಸರು ‘ರೇಡವೇ’ ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡು, ಆ ಜ್ಞಾನವನ್ನು ಎಲ್ಲರಿಗೂ ಅಭಿಮಾನಪೂರ್ವಕವಾಗಿ ಹಂಚುತ್ತಿದ್ದರು. ಅಲ್ಲದೆ ಬೆಂಬತ್ತಿದ ಗುಂಪಿನಲ್ಲಿ ಹೆಜ್ಜೆಗೊಬ್ಬೊಬ್ಬ ಹೊಸಬ ಸೇರಿಕೊಳ್ಳುತ್ತಿದ್ದ. ಹೆಜ್ಜೆಗೊಮ್ಮೊಮ್ಮೆ ಹೊಸದಾಗಿ ವಿವರಿಸುತ್ತಿದ್ದರು. ಆಶ್ಚರ್ಯವೆಂದರೆ ಉದಾರಿಯಲ್ಲದ ಮೆರಮಿಂಡ ಈ ದಿನ ಪುಷ್ಕಳ ಉದಾರಿಯಾಗಿಬಿಟ್ಟ. ಗುಂಪಿನ ಇಬ್ಬರಿಗೆ ಸಿಗರೇಟಿನ ತುಂಡು ಕೊಟ್ಟು ಹತ್ತಿಸಿಕೊಳ್ಳಲು ಕಡ್ಡೀಪೆಟ್ಟಿಗೆ ಕೂಡ ಕೊಟ್ಟ. +ಆಕಸ್ಮಾತ್ ಘಟಿಸಿದ ಹಾವಿನ ಸುದ್ದಿಯಷ್ಟೇ ತೀವ್ರವಾಗಿ ಬಸವರಾಜೂನ ‘ರೇಡವೇ’ ಸುದ್ದಿ ಊರಲ್ಲಿ ಹಬ್ಬಿತು. ಹುಡುಗರು, ಹುಡುಗಿಯರು, ತರುಣರು, ಮುದುಕರು ಹೀಗೆ ಮೊದಮೊದಲು ಹತ್ತಿಪ್ಪತ್ತಿದ್ದ ಗುಂಪು ಬರುಬರುತ್ತ ನೂರಾರಾಯ್ತು. ಬಸವರಾಜನಿಗೆ ಪ್ರಾರಂಭದಲ್ಲಿ ದಿಗಿಲಾಯಿತಾದರೂ ಮುಂದೆ ವಿಚಿತ್ರ ಖುಷಿಯಾಗತೊಡಗಿತ್ತು. ಸಿಗರೇಟು ಹೆಚ್ಚಾಗಿಯೇ ಸೇದಿದ. ಇನ್ನಷ್ಟು ಹೊಗೆ ಚಕ್ರ ಬಿಟ್ಟ. ಅದು ಅದೃಶ್ಯ ಯಂತ್ರವೊಂದರ ಉರುಳುವ ಚಕ್ರಮಾಲೆಯಂತೆ ಕಾಣುತ್ತಿತ್ತು. ಊರು ಸುತ್ತಿ ಗುಡಿಸಲಿಗೆ ಬಂದ. ಅಂತೂ ಹೊಸ ಚಹದಂಗಡಿಯ ನವೀನ ಪ್ರಾರಂಭ ಈ ರೀತಿ ಆಯ್ತು. +ಅದು ಅಡ್ಡವಾರವಾದುದರಿಂದ, ಕರಿಮಾಯಿ ಮೈತುಂಬ ಬೇಕಾಗಿದ್ದಿರಲಿಲ್ಲ. ಆದರೆ ಆ ದಿನ ಸಂಜೆ ಕರಿಮಾಯಿ ಮೈತುಂಬಿದಳು. ಕೂಡಲೇ ಗೌಡನಿಗೆ, ಹಿರಿಯರಿಗೆ ಕರೆಹೋಯಿತು. ಎಲ್ಲ ಬಂದರು. ತಾಯಿ ವಿಚಿತ್ರವಾಗಿ ಬಿಕ್ಕುತ್ತಿದ್ದಳು. ಬಿಕ್ಕುತ್ತ ಸಂಕಟಪಡುತ್ತಿದ್ದಳು. “ತಾಯೀ ಯಾಕ ಅಳಾಪ ಮಾಡತಿ? ಅದೇನೈತಿ ನಿನ್ನ ಮಕ್ಕಳ ಮುಂದ ಹೇಳಬಾರದ?” ಎಂದ ಗೌಡ. ಆದರೂ ತಾಯಿ ಬಾಯಿ ಬಿಡಲಿಲ್ಲ. ಬರೀ ದುಃಖ ಮಾಡಿದಳು. ಬಿಕ್ಕಿದಳು. ಕಣ್ಣೀರು ಸುರಿಸಿದಳು, ಬಾಯಿ ಬರಲೆಂದು ಬಂಡಾರೆಸೆದರು. ಒಂದೆರಡು ಸಾರಿ ಅಳುವ ಮುದುಕಿ ಹಾಗೆ ದನಿತೆಗೆದಳು. ಮತ್ತೆ ಕಣ್ಣೀರು ಸುರಿಸಿದಳು, ಬಿಕ್ಕಿದಳು. ಬಾಯಿ ಮಾತ್ರ ಬಿಡಲಿಲ್ಲ. ಗೌಡ ದಿಂಡುರುಳಿ ಕಾಲು ಹಿಡಿದ. ಹಿರಿಯರೂ ಹಿಡಿದರು. ಹರಕೆ ಕೂಡ ಹೊತ್ತರು. ಅಂತೂ “ಹರಕಿ ಹೊತ್ತವರ ಹೊತ್ತೀಗಿ ಆಗಾಕಿ” ಎಂಬ ತಾಯಿಯ ವರ್ಣನೆ ಇಂದು ಹುಸಿಯಾಯಿತು. +ಮೃಗಯಾ ವಿಹಾರ +ಚಹದಂಗಡಿಯ ಅದ್ದೂರಿಯ ಆರಂಭ ನೋಡಿದಿರಲ್ಲ. ವ್ಯಾಪಾರ ವೃದ್ಧಿಯಾಗಲಿಲ್ಲ. ಜನ ಆ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ. ತಿರುಗಾ ಮುರುಗಾ ಗುಡಸೀಕರನೇ ಹೋಗಿ ಚಹ ಕುಡಿಯುತ್ತಿದ್ದ. ಚತುಷ್ಟಯರು, ಅದೂ ಪುಕ್ಕಟ್ಟೆ ಸಿಕ್ಕರೆ ಆಗಾಗ ಒಂದೊಂದು ಗುಟುಕು ಕುಡಿಯುತ್ತಿದ್ದರು. ಅವರಿಗೆ ಸಿಕ್ಕುತ್ತಿದ್ದುದು ಕೂಡ ನಾಲ್ಕು ಜನಕ್ಕೆ ಕೂಡಿ ಒಂದು ಕಪ್ಪಿನಲ್ಲೇ ಹಂಚಿಕೊಂಡು ಕುಡಿದವರಿಗೆ ಅದೇನು ಚಟ ಹತ್ತೀತು? ಕುಡಿದರೆ ಅದು ನಶೆಯಾಗುವ ಬಾಬತ್ತಲ್ಲ. ಆದ್ದರಿಂದ ಅದು ಸಿಕ್ಕರೂ ಸೈ, ಬಿಟ್ಟರೂ ಸೈ; ಸಿಕ್ಕಾಗ ಉಬ್ಬಲಿಲ್ಲ; ಸಿಗದಾಗ ಸೊರಗಲಿಲ್ಲ, ಹಾಗಿದ್ದರು. +ವ್ಯಾಪಾರವಾಗಲಿಲ್ಲವಾದ್ದರಿಂದ ತಾವೇಕೆ ಇಲ್ಲಿರಬೇಕೆಂದು ಚಿಮಣಾಳಿಗೂ ಅನ್ನಿಸಲಿಲ್ಲ. ಬಸವರಾಜನಿಗೂ ಅನ್ನಿಸಲಿಲ್ಲ. ಆದರೆ ಗುಡಸೀಕರ ಹಾಗೂ ಚಿಮಣಾಳ ಸಂಬಂಧ ರಹಸ್ಯವಾಗಿ ಉಳಿಯಲಿಲ್ಲ. ಗುಡಸೀಕರ ಹಾಗೆ ಬಯಸಿದರೂ ಆಡಿಕೊಳ್ಳುವವರು ಆಡಿಕೊಂಡರು. ಬಾಯಿ ಸೋತು ಸುಮ್ಮನಾದರು. ಗುಡಸೀಕರನ ತಾಯಿಗೆ ಇದರಿಂದ ಚಿಂತೆಯಾಯಿತಷ್ಟೇ. ಒಂದೆರಡು ಸಲ ತಾನೇ ಬುದ್ಧಿ ಹೇಳಿ ನೋಡಿದಳು. ಆಗೆಲ್ಲ ಗುಡಸೀಕರ ಸಿಡಿಯುತ್ತಿದ್ದ. ಹಿರಿಯರಿಲ್ಲದ ಮನೆ, ಮಗ ಹಾಳಾದನಲ್ಲಾ ಎಂದು ಆ ಮುದುಕಿ ಕೊರಗಿತು. ಮಗನಿಗೆ ಬುದ್ದಿ ಹೇಳಿರೆಂದು ಗೌಡನಿಗೂ, ದತ್ತಪ್ಪನಿಗೂ ಕೈಮುಗಿದಳು. ಈಗವನು ತಮ್ಮನ್ನು ಮೀರಿದವನೆಂದು ಅವರು ಹೇಳುತ್ತಲೂ ತನ್ನ ನಶೀಬನ್ನೇ ಬೈದುಕೊಂಡು ಸುಮ್ಮನಾದಳು. +ಈಗ ಮೀಟಿಂಗಿನ ಸ್ಥಳ ಬದಲಾಗಿತ್ತು. ಸರಿರಾತ್ರಿಯ ತನಕ ಗುಡಿಸಲಲ್ಲೇ ಮೀಟಿಂಗ್ ಮಾಡಿ, ಚತುಷ್ಟಯರು ಮನೆಗಳಿಗೆ ಹೋಗುತ್ತಿದ್ದರು. ಬಸವರಾಜು ಮುಂಚಿನ ಪಂಚಾಯ್ತಿ ಆಫೀಸಿನಲ್ಲಿ ಒಬ್ಬನೇ ಮಲಗುತ್ತಿದ್ದ. ಬೆಳಿಗ್ಗೆ ಸೂರ್ಯೋದಯದ ಮುಂಚೆಯೇ ಎದ್ದು ಗುಡಿಸಲಿಗೆ ಹೋಗುತ್ತಿದ್ದ. ಅಷ್ಟರಲ್ಲೇ ಗುಡಸೀಕರ ಮನೆಗೆ ಹೋಗಿರುತ್ತಿದ್ದ. +ಗುಡಸೀಕರನಿಗೆ ಮುಂಚಿನ ಮೂರು ತಿಂಗಳು ಒಟ್ಟಾರೆ ನಿರಾಸೆಯಾಗಿತ್ತು. ಗೌಡನ ಬಗೆಗಿನ ಅಸಮಧಾನದಿಂದ ನಾಟಕವನ್ನಾಡಿಸಿದ್ದ ನಿಜ. ಆದರೆ ಅದರಲ್ಲಿ ಆ ಮೂಲಕ ಹಳ್ಳಿಗರ ಮನಸ್ಸನ್ನು ಗೆದ್ದು ತನ್ನ ಸುಧಾರಣೆಗಳನ್ನು ತರಬೇಕೆಂದು, ಹಳ್ಳಿಗರ ಕಲಾಭಿರುಚಿ ಸುಧಾರಿಸಬೇಕೆಂದು ಹಂಬಲವಿತ್ತು. ಚಹದಂಗಡಿ ಸುರುಮಾಡೋದಂದರೆ ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆಯೆಂದು ನಂಬಿದ್ದ. ಚಿಮಣಾ ಹರಿಜನಳೆಂಬುದು, ಚಿಮಣಾವೃತ್ತಿ ಹರಿಜನರದೆಂದು ಅವನಿಗೂ ತಿಳಿದ ವಿಚಾರವೇ. ಆದರೆ ಹರಿಜನಳಾದ ಲಗಮವ್ವ ಸೆರೆ ಕೊಟ್ಟರೆ ಕುಡಿಯುವ ಜನ, ಚಿಮಣಾ ಚಹ ಕೊಟ್ಟರೆ ಯಾಕೆ ಕುಡಿಯಬಾರದು? ಜನ ಕುಡಿಯಲಿಲ್ಲ. ಅದಕ್ಕೆ ಕಾರಣ ಗುಡಸೀಕರನ ಯೋಚನೆಯಂತಲ್ಲ; ಜನ ಆ ಚಟಕ್ಕೆ ಬೀಳಲಿಲ್ಲ. ಅಷ್ಟೇ. ಗುಡಸೀಕರನ ನಿರಾಸೆಗೆ ಇದೂ ಕಾರಣವಾಗಿತ್ತು. +ಜನಕ್ಕೆ ಬೇಡದ ಸುಧಾರಣೆಗಳನ್ನು ತಂದೇನು ಪ್ರಯೋಜನ? ಈ ಹುಂಬರ ಜೊತೆ ಎಷ್ಟಂತ ಕೆಸರಲ್ಲಿ ಗುದ್ದಾಡೋದು? ಎಂದೂ ಅನಿಸುತ್ತಿತ್ತು. ಅದಕ್ಕೆ ತಕ್ಕಂತೆ ಚತುಷ್ಟಯರೂ ನಿರೀಕ್ಷೆಯಷ್ಟು ನಡೆಯಬಲ್ಲವರಾಗಿರಲಿಲ್ಲ. ಆದರೆ ಬರಬರುತ್ತ ಹೊಸ ಆಶಾಕಿರಣ ಮೂಡತೊಡಗಿತ್ತು. ತನ್ನ ಹಾಗೂ ಚಿಮಣಾಳ ಸಂಬಂಧದ ಬಗ್ಗೆ ಜನ ಆಡಿಕೊಳ್ಳುವುದು ಅವನಿಗೂ ಗೊತ್ತಿತ್ತು. ಆದರೆ ಅನೇಕರು ಭಾವಿಸುವಂತೆ ಅವನಿಗೂ ಆ ಬಗ್ಗೆ ಅಭಿಮಾನ ಮೂಡಿತ್ತಷ್ಟೆ. ಅಲ್ಲದೆ ಯಾರೋ ಒಬ್ಬಿಬ್ಬರು ಈ ಬಗ್ಗೆ ಹಗುರಾಗಿ ಮಾತಾಡಿದಾಗ ಗೌಡ “ಗಂಡಸು ಮಾಡಿದ್ದರೂ ಮಾಡಿದ್ದಾನ ಬಿಡ್ರೊ” ಎಂದಿದ್ದನಂತೆ. ಅದು ಇವನ ಕಿವಿಗೆ ಬಿದ್ದು ಕಿವಿಯ ಬಳಿ ಒಂದೆರಡು ಕೊಂಬು ಮೂಡಿದ ಅನುಭವವಾಗಿತ್ತು. ಅವನ ಭುಜಕ್ಕೆ ಶಕ್ತಿ ಬಂದದ್ದು, ನಿಜ ಹೇಳಬೇಕೆಂದರೆ ಚಿಮಣಾಳಿಂದಲ್ಲ, ಬಸವರಾಜೂನಿಂದ. +ಅವನ ದುರ್ಬಲ ಕ್ಷಣಗಳಲ್ಲೆಲ್ಲ ಬಸವರಾಜು ಪಕ್ಕಕ್ಕಿರುತ್ತಿದ್ದ. ಅವನ ವ್ಯಕ್ತಿತ್ವದ ಖಾಲಿ ಸ್ಥಳವನ್ನು ಹೊಗಳಿಕೆಯಿಂದ ಭರ್ತಿಮಾಡಿದ್ದ. ಸೊಲುಗಳನ್ನು ಗೆಲುವಾಗಿಸುತ್ತಿದ್ದ. ಬಸವರಾಜು ಎಷ್ಟು ಕಲಿತಿದ್ದನೋ ಗೊತ್ತಿಲ್ಲ: ಅಂತೂ ಇಬ್ಬರೂ ಸಹಪಾಠಿಗಳಷ್ಟು ಹತ್ತಿರವಾದರು. ಹಳ್ಳಿ ಸುಧಾರಣೆಯ ಬಗ್ಗೆ ಇಬ್ಬರ ಆದರ್ಶ, ಅಭಿಪ್ರಾಯಗಳು ಒಂದೇ ಆಗಿದ್ದವು. ಅಥವಾ ಪರಸ್ಪರರು ಹೊಂದಾಣಿಕೆ ಮಾಡಿಕೊಂಡರೋ ಕೆಲವೇ ದಿನಗಳಲ್ಲಿ ಇಬ್ಬರೂ ಒಂದಾಗಿದ್ದರು. ಕುಡಿದಾಗಂತೂ ಇಬ್ಬರೂ ತಬ್ಬಿಕೊಳ್ಳುವುದೇನು, ಒಬ್ಬನ ಎಂಜಲು ಇನ್ನೊಬ್ಬನು ತಿನ್ನುವುದೇನು! ಈ ತನಕ ಗುಡಸೀಕರನಿಗೆ ಇಂಥ ಒಬ್ಬ ಸೇಹಿತನೂ ಸಿಕ್ಕಿದ್ದಿಲ್ಲ. +ಬಸವರಾಜುನಿಂದಾಗಿ ಈಗ ಗುಡಸೀಕರನಿಗೆ ಎಲೆಕ್ಷನ್ನಿನಲ್ಲಿ ಹೊಸ ಕುತೂಹಲ ಹುಟ್ಟಿತು. ಬಸವರಾಜು ಮಹಾ ಮಾತುಗಾರ. ಈ ಎಲೆಕ್ಷನ್ ಗೆಲವು ಹೇಗೆ ತಮ್ಮ ಆದರ್ಶಗಳ ಗೆಲುವಾಗುವುದೆಂದು ಭಾಷಣ, ಸಂಭಾಷಣ, ತರ್ಕಗಳಿಂದ ಖಾತ್ರಿಮಾಡಿದ. ಗಾಂಧೀಜಿಯವರಂಥ ಆದರ್ಶಗಳು ಗೌಡ, ದತ್ತಪ್ಪನಿಗೆ ಕನಸು ಮನಸ್ಸಿನಲ್ಲಿಯಾದರೂ ಹೊಳೆಯುವುದು ಸಾಧ್ಯವೆ? ಹೋಗಲಿ, ಆ ಹೆಸರಾದರೂ ಕೇಳಿಬಲ್ಲರೆ ಇವರು? ಒಬ್ಬನಿಗೊಂದು “ಸೀರಿಯಸ್ ಅಜಾರಿ” ಆಯಿತೆನ್ನೋಣ; ಕರಿಮಾಯಿಯ ಭಂಡಾರ ಬಳಿದುಕೊಂಡರೆ ಹೋಗುತ್ತದೋ? ಒಬ್ಬ ಬಸುರಿಯ ಹೆರಿಗೆ ಕಷ್ಟವಾಯಿತೆನ್ನೋಣ; ಕರಿಮಾಯಿ ಉಳಿಸಬಲ್ಲಳೋ? ಮೂಢನಂಬಿಕೆಗಳಿಂದ ಯಾರಾದರೂ ಬದುಕಿದ್ದು ಉಂಟೋ? ಛೇ ಛೇ ಇದೆಲ್ಲ ಆಗೋ ಮಾತಲ್ಲ, ಹೋಗೋ ಮಾತಲ್ಲ. ಊರೆಂದಮೇಲೆ ಒಂದು ಆಸ್ಪತ್ರೆ, ಒಂದು ಹೈಸ್ಕೂಲು ಬೇಡವೋ? ಹೆಬ್ಬೆಟ್ಟೊತ್ತುವ ಗೌಡನಿಂದ ಇವನ್ನು ತರುವುದು ಸಾಧ್ಯವೋ? ಬೆಳಗಾವಿಯನ್ನು ನೋಡಬಾರದೆ? ಇಂದಿದ್ದ ಬೆಳಗಾವಿ ನಾಳಿಗಿಲ್ಲ. ಆ ಥರಾ “ಡೆವಲಪ್” ಆಗ್ತಾ ಇದೆ. ಬೆಳಗಾವಿ ಎತ್ತ ಹೋಗುತ್ತಿದೆ, ಈ ಜನ ಎತ್ತ ಹೋಗುತ್ತಿದ್ದಾರೆ? ಜನಕ್ಕೇನು, ಹೇಳಿ ಕೇಳಿ ಮೂಢನಂಬಿಕೆಯವರು. ಮೊದಮೊದಲು ಡೆವಲಪ್ಪಿನ ಅಗತ್ಯ ತಿಳಿಯಲಿಕ್ಕಿಲ್ಲ. ಬರಬರುತ್ತ ಅವರಿಗೇ ಗೊತ್ತಾಗುತ್ತದೆ. ಹಾಗಂತ ಅವರಿಗೇ ಗೊತ್ತಾಗಲೆಂದು ಬಿಟ್ಟರೆ ಹೇಗೆ? ಗೊತ್ತಾಗೋ ಹಾಗೆ ಮಾಡಬೇಕು. ಈ ಎಲೆಕ್ಷನ್ ಗೆದ್ದರೆ ಇದನ್ನೆಲ್ಲ ತಾವು ಮಾಡಿ ತೋರುತ್ತೇವೆಂದು ಹೇಳಬೇಕು-ಇತ್ಯಾದಿ. +ಇಂಥ ಮಾತು ಕೇಳಿದರೆ ಗುಡಸೀಕರನಿಗೆ ಹೇಗಾಗಬೇಡ? ಆಳದಲ್ಲಿ ಹುದುಗಿದ ಆದರ್ಶಗಳನ್ನೆಲ್ಲ ಹೊಡೆದೆಬ್ಬಿಸಿ ಹೊರಕ್ಕೆ ತಂದ. ಸೊಲು ಆದರ್ಶವಾದಿಗಲ್ಲದೆ ಇನ್ನಾರಿಗೆ ಬರಬೇಕು? ಗಾಂಧೀಜಿ ಎಷ್ಟು ಸಲ ಸೋತಿಲ್ಲ? ಈಗ ಎಲೆಕ್ಷನ್ ಗೆಲ್ಲಲೇ ಬೇಕೆಂದು ತೀರ್ಮಾನಿಸಿದ. +ಬಸವರಾಜೂನ ಪೂರ್‍ವಾಶ್ರಮ ಏನಿತ್ತೋ ಗೊತ್ತಿಲ್ಲ. ಚಳುವಳಿಯಲ್ಲಿದ್ದವನೆಂದು ಅವನೇ ಹೇಳಿಕೊಂಡಿದ್ದನಷ್ಟೆ. ಈ ಊರಿನಲ್ಲಿ ಮಾತ್ರ ಪಸಂದಾಗಿ ಹೊಂದಿಕೊಂಡುಬಿಟ್ಟ. ಕಪ್ಪು ಚಾಳಿಸಿನೊಳಗಿಂದಲೇ ಜನರ ಗುಟ್ಟುಗಳನ್ನು ಗಮನಿಸಿದ್ದ, ದೌರ್ಬಲ್ಯಗಳನ್ನು ಪತ್ತೆಹಚ್ಚಿದ್ದ. ಅವರನ್ನು ಸಂತೋಷಗೊಳಿಸುವ ಮಾತು, ವಿಧಾನಗಳನ್ನು ಕಂಡುಕೊಂಡಿದ್ದ. ಎಲ್ಲರನ್ನೂ ದೊಡ್ಡವರೋ, ಚಿಕ್ಕವರೋ ಬಹುವಚನದಲ್ಲಿ ಮಾತಾಡಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಗುಡಸೀಕರನಿಗೆ ಗೊತ್ತಾಗದ ಒಂದು ರಹಸ್ಯ ದೌರ್ಬಲ್ಯ ಅವನಿಗೆ ತಿಳಿದಿತ್ತು! ಈ ಜನಗಳ ಜೀವಕೇಂದ್ರ ಕರಿಮಾಯಿ-ಎಂದು. +ಬಸವರಾಜೂನ ರೇಡವೇ ಜನಪ್ರಿಯವಾಗಿತ್ತು. ಹಾಗೇ ಅವನ ಉಡುಪೂ, ನಡೆನುಡಿಯೂ. ಮಾತುಗಾರ ಬೇರೆ. ಬೆಳಗಾವಿಯನ್ನು ರಸವತ್ತಾಗಿ ಕೇಳಿದವರ ಬಾಯಲ್ಲಿ ನೀರು ಸೋರುವ ಹಾಗೆ ವರ್ಣನೆ ಮಾಡುತ್ತಿದ್ದ. ಹೋಟಲಂತೆ, ತಮಾಷಾ ಅಂತೆ, ಸಿನಿಮಾ ಅಂತೆ, ಕಾಲೇಜು ಹುಡುಗಿಯರಂತೆ, ಇಂಗರೇಜಿ ಮಡ್ಡಮ್ಮಗಳಂತೆ-ಛೇ, ಛೇ ಇದನ್ನು ಕೇಳಿದ ಎಳೆಯರಿಗೆ ತಮ್ಮ ಊರು ಬೆಳಗಾವಿಯಾಗುವ ತನಕ ಕಾಯುವುದು ಅಸಾಧ್ಯವೆಂದು ತೋರಿತು. ಬರೀ ಭೂತಗಳ ಕಥೆ ಕೇಳಿದ್ದ ಜನಕ್ಕೆ ಬೆಳಗಾವಿ ಕಣ್ಣಮುಂದೆ ಥಳ ಥಳ ಹೊಳೆದಂತಾಗುತ್ತಿತ್ತು. ಹೆಚ್ಚೇನು ಆತ ತರುಣರಿಗೆ ಮಾದರಿಯಾದ. ನಿಂಗೂನಂಥ ನಿಂಗೂ ಕೂಡ ಮನಸ್ಸಿನಲ್ಲೇ ಇವನನ್ನು ಕೂಡುತ್ತಿದ್ದ. +ಬಸವರಾಜು ತನಗಾದ ವೀಡಿ ರೋಗದ ಬಗ್ಗೆ ಒಮ್ಮೆ ಮಾತಾಡಿದ. ಚತುಷ್ಟಯರು ವೀಡಿ ಅಂದರೆ ಬಹಳ ದೊಡ್ಡ ಮಂದಿಗೆ ಆಗುವ ರೋಗವೆಂದು ಬಗೆದು, “ಅಯ್ಯೋ ಆ ರೋಗ ನಮಗೆ ಬರಬಾರದೆ?” ಎಂದು ಹಳಹಳಿಸಿದರು. ಬೇಕೆಂದೇ ಕೆಮ್ಮಿ “ಯಾಕೋ ಕೆಮ್ಮುತ್ತಿ?” ಎಂದು ಯಾರಾದರೂ ಕೇಳಿದರೆ “ಹಿಂಗ, ನನಗ ಸೊಲ್ಪ ವೀಡಿ ಆಗೇತಪಾ” ಎಂದು ಸುಳ್ಳು ಸುಳ್ಳೇ ಹೇಳುತ್ತಿದ್ದರು. ಅಷ್ಟಕ್ಕೇ ಬಿಡದೆ, ಬಸವರಾಜು ಹೇಳಿದ ರೋಗಗಳನ್ನು ಎಂಟೆಂಟು ದಿನ ಅಭಿನಯಿಸುತ್ತಿದ್ದರು. +ಗುಡಸೀಕರನಂತೂ ಬಸವರಾಜುವನ್ನು ದುಡ್ಡಿನಷ್ಟೇ ಗತ್ಟೀಯಾಗಿ ನಂಬಿದ್ದ. ಆದ್ದರಿಂದ ಸಹಜವಾಗಿಯೇ ಬಸವರಾಜೂನಿಗೆ ಆ ಮನೆಯ ಬಳಕೆ ಜಾಸ್ತಿಯಾಯ್ತು. ವಾರದಲ್ಲಿ ಮೂರು ನಾಕು ಸಲ ಊಟಕ್ಕೆ ಹೋಗುತ್ತಿದ್ದ. ಮಗನ ಮೇಲಿನ ಇವನ ಪ್ರಭಾವ ನೋಡಿದ ಮುದುಕಿ “ಮದುವೆಯ ಬಗ್ಗೆ ನೀನಾದರೂ ಹೇಳಪ್ಪಾ!” ಎಂದು ಬಸವರಾಜನಿಗೇ ಹೇಳಿದಳು. ಇವನೂ ಹೇಳಿದ. ಏನೂ ಆಗಲಿಲ್ಲ. ಕೊನೆಗೆ ಹೋಗಲಿ, ಮನೆಯಲ್ಲಿ ಬೆಳೆದುನಿಂತ ತಂಗಿಯ ಮದುವೆಯನ್ನಾದರೂ ಮಾಡಲಿಕ್ಕೆ ಹೇಳಪ್ಪಾ” ಎಂದಳು. +ಅದೂ ನಿಜ. ಮದುವೆಯ ಅಗತ್ಯ ಗುಡಸೀಕರನಿಗಿಂತ ಗಿರಿಜಳಿಗೆ ಹೆಚ್ಚಾಗಿತ್ತು. ಕೊಯ್ಲಿಗೆ ಬಂದ ಫಸಲಿನಂತೆ ಬೆಳೆಯುವುದಕ್ಕೆ ಬಯಲೆನ್ನದೆ ಇಕ್ಕಟ್ಟೆನ್ನದೆ ಸಿಕ್ಕ ಸಿಕ್ಕಲ್ಲಿ ಅವಕಾಶವಾದಲ್ಲೆಲ್ಲ ನೋಡಿದವರ ಕಣ್ಣು ತುಂಬುವಂತೆ ಬೆಳೆದು ತುಂಬಿಕೊಂಡಿದ್ದಳು. ಆ ಹುಡುಗಿಗೆ ಮೊದಲೇ ಬೆಕ್ಕಿನ ಕಣ್ಣು ಬೇರೆ. ಆಕಾರದಲ್ಲಿ ಚಿಕ್ಕವು. ಅರೆದೆರೆದ ಆ ಮಾದಕ ಕಣ್ಣುಗಳಿಂದಾಗಿ ಸದಾ ಹರೆಯದ ನಶೆಯಲ್ಲಿದ್ದಂತೆ ತೋರುತ್ತಿದ್ದಳು. ಹುಡುಗರ ದೃಷ್ಟಿ ಕೂತರೂ ಸಾಕು, ಗಿಣಿ ಕೂತ ಜೋಳದ ತೆನೆಯಂತೆ ಮೈತೂಗಿ ತೂಗಿ ತುಳುಕಾಡುತ್ತಿದ್ದಳು. ಅದೆಂಥ ಹೊಸ ಹಂಬಲ ಮೈಯಲ್ಲಿ ಹುಟ್ಟಿಕೊಂಡಿತ್ತೋ, ಅಷ್ಟು ದೂರದಲ್ಲಿ ಹುಡುಗರು ಹಾದುಹೋಗುತ್ತಿದ್ದರೆ ಕಣ್ಣಿಗಿಂತ ಮುನ್ನ ಮೈಗೆ ಕಾಣಿಸಿ, ಮೈತುಂಬಾ ಮುಳ್ಳೆದ್ದು ಇಕ್ಕಟ್ಟಿನ ಆಸೆಗಳು ಒಡಮುರಿದು ಹರಿದಾಡಿ ಈ ಸಣ್ಣ ಹುಡುಗಿಯನ್ನು ನಡುಗಿಸಿ ಘಾಸಿಮಾಡುತ್ತಿದ್ದವು. ಬಸವರಾಜುವಿನ ಒಡನಾಟ ಆ ಮನೆಗೆ ಜಾಸ್ತಿಯಾಯಿತಲ್ಲ. ಸಹಜವಾಗಿಯೇ ಇವನ ಮೈಯ ಅತ್ತರೆಣ್ಣೆಯ ವಾಸನೆ ಅವಳ ಮೈ ಪುಳಕಕ್ಕೆ ಮಂದಾನಿಲದಂತೆ ಹಿತಕರವಾಗಿತ್ತು. ಇದೆಲ್ಲ ಅವಳ ಅರಿವಿಗೆ ಗೊತ್ತಿಲ್ಲದೆ ಮೈ ಕೊಬ್ಬಿಗೆ ಮಾತ್ರ ಗೊತ್ತಾಗಿ ಆದದ್ದು. +ಮೊದಲೇ ಹಾಡಲೋ ಹಾದರ ಮಾಡಲೋ ಎಂಬಂಥ ವಯಸ್ಸು. ಸ್ವಲ್ಪ ಹೆಚ್ಚಾಗಿಯೇ ನಗುತ್ತಿದ್ದಳು; ವಿನಾಕಾರಣ ಬಳುಕುತ್ತಿದ್ದಳು. ಈತ ತೋಟದ ಕಡೆ ಬಂದರೆ ಅವಳು ಬರುತ್ತಿದ್ದಳು. ಕಣ್ಣಿಂದ ತಿಳಿದವಳಂತೆ ನೋಡುತ್ತಿದ್ದಳು. ಒಂದು ದಿನ ಒಬ್ಬ ಹೆಣ್ಣಾಳನ್ನು ಕಳಿಸಿ ಇವನ ರೇಡವೇ ಇಸಿದುಕೊಂಡು ಕೇಳಿದಳು. ಬೇಟೆಗಾರನಿಗೆ ಪ್ರಾಣಿಗಳ ಸ್ವಭಾವ, ಹಂಗಾಮಿಗೆ ತಕ್ಕ ಅವುಗಳ ಚಲನವಲನ ತಿಳಿದಂತೆ ಅವನಿಗೆ ಅವಳ ಮೈಮನಸ್ಸಿನ ತುದಿಬುಡ ತಿಳಿದಿತ್ತು. ಜಾತ್ಯಾ ಬೇಡನಂತೆ ಅವನೂ ಹೊಂಚುತ್ತಿದ್ದ. +ಒಂದು ದಿನ ಮಧ್ಯಾಹ್ನ ಬಸವರಾಜು ಗುಡಸೀಕರನೊಂದಿಗೆ ಊಟಮಾಡಿ ಅವರ ಮನೆಯಲ್ಲಿಯೇ ಮಲಗಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಮುದ್ದೆ ಮಾಡಿದ ಕಾಗದದ ಉಂಡೆಯೊಂದು ಅವನ ಮೇಲೆ ಬಿತ್ತು. ತಕ್ಷಣ ಎದ್ದುಕೂತ, ಗುಡಸೀಕರನ ಕಡೆ ನೋಡಿದ. ಅವ ಪಲ್ಲಂಗದ ಮೇಲೆ ಗೊರಕೆ ಹೊಡೆಯುತ್ತಿದ್ದ. ಮೇಲಿದ್ದವನಿಗೆ ಈ ಕೆಳಗಿನ ವ್ಯಾಪಾರ ತಿಳಿಯುವಂತೆಯೂ ಇರಲಿಲ್ಲ. ಬಸವರಾಜು ಕಳ್ಲಬೆಕ್ಕಿನಂತೆ ಸುತ್ತ ಕಣ್ಣಾಡಿಸಿದ. ಜಿನೆಯ ಮೇಲೆ ಬರೀ ಮುಖ ಮಾತ್ರ ತೋರುತ್ತ ನಿಂತಿದ್ದ ಗಿರಿಜಾ ಕಿಲಕ್ಕನೇ ನಕ್ಕು ಕೆಳಗಿಳಿದಳು. ಬೇಟೆ ಸಿಕ್ಕಿತೆಂದುಕೊಂಡ. ಕೆಳಕ್ಕಿಳಿದುಬಂದ. ಕೆಳಗೆ ಹೊರಬಾಗಿಲಲ್ಲಿ ಗಿರಿಜಾ ನಿಂತಿದ್ದಳು. ಮುದುಕಿಯಿರಲಿಲ್ಲ. “ತೋಟದ ಕಡೆ ಹೋಗ್ತೀನೀಂತ ಗುಡಸೀಕರಗ ಹೇಳ್ರಿ” ಎಂದು ಹೇಳುತ್ತ ಕಣ್ಣು ಹೊಡೆದು ನಡೆದ. ಗಿರಿಜಾಳ ಎದೆ ನಗಾರಿಯಂತೆ ಬಡಿದುಕೊಳ್ಳಲಾರಂಭಿಸಿತು. +ನಾಗರಪಂಚಮಿ ಹಬ್ಬವಾಗಿ ಹೋಗಿತ್ತು. ಚಿಗುರಲೋ ಎಲೆಬಿಡಲೋ ಎಂಬಂತೆ ಎಲ್ಲ ಕಡೆ ಹಸಿರು ಹುಚ್ಚುಚ್ಚಾಗಿ ಹಸರಿತ್ತು. ಮೈಕೈ ಭಾರವಾಗಿ ಕಣ್ಣಂಚಿನಲ್ಲಿ ಕನಸು ಕಾಣುವ ಚಿಕ್ಕ ಪ್ರಾಯದ ಎಳೆಯರಂತೆ ಭೂಮಿ ಕಾಣುತ್ತಿತ್ತು. ಒಂದೇ ಒಂದು ದೇಟು ಮುಟ್ಟುವ ಮನಸ್ಸಾಗುವುದಿಲ್ಲ ಈಗ. ಎಸಳನ್ನು ಎಷ್ಟು ಹಿಡಿದರೆ ಅಷ್ಟು ಬಾಡುತ್ತದೆ. ಹುಲ್ಲಿನ ಮೇಲೆ ಕಾಲಿಟ್ಟು ನಡೆಯಬೇಕಲ್ಲಾ ಎಂಬ ಕೊರಗು. ಬೇಲಿಯ ಮೇಲಿನ ಬಣ್ಣಬಣ್ಣದ ಹೂಗಳೆದು ಕುಣಿದಾಡುವಂತೆ ಚಿಟ್ಟೆಗಳು ಹುಟ್ಟಿ ಹಾರಾಡುತ್ತಿದ್ದವು. ಹಸರಿನ ಈ ಸಮೃದ್ಧಿಯನ್ನು ನೋಡಿದರೆ ಈಗ ಕಲ್ಲೆದೆ ಮೃದುವಾಗುತ್ತದೆ. ಮನಸ್ಸು ಬೆರಗಾಗುತ್ತದೆ. “ಛೇ ಕರಿಮಾಯಿ ದೊಡ್ಡವಳು” ಎನಿಸುತ್ತದೆ. ಒಬ್ಬ ಜನಪದ ಕವಿ ಹಾಡಿದಂತೆ ಸಾಯುವುದೇ ನಿಜವಾದರೆ ಸಾವು ಈಗಲೆ ಇಲ್ಲೇ ಬರಲಿ -ಎನಿಸುತ್ತದೆ. +ಸೊಂಟದೆತ್ತರ ಇಂಥ ಬೆಳೆ ಹಸುರಿನಲ್ಲಿ ಗಿರಿಜಾ ಹಿಂಡನಗಲಿದ ಜಿಂಕೆಯಂತೆ, ಹೆಜ್ಜೆ ಸಪ್ಪಳಕ್ಕೂ ಕಣ್ಣಗಲಿಸಿ, ಹೆದರುತ್ತ ತೋಟದ ಕಡೆ ಹೊರಟಿದ್ದಳು. ಇನ್ನೂ ಕೈ ಮಾರುಹೊತ್ತಿತ್ತು. ಹೊಲದಿಂದ ಬರುವ ದನಕರುಗಳ ಕಾಲಧೂಳಿ ಸೂರ್ಯಕಿರಣದಲ್ಲದ್ದಿ ಕರಿಮಾಯಿಯ ಬಂಡಾರೆಸೆದಂತೆ ಕಾಣುತ್ತಿತ್ತು. ಮೇದು ಬಂದು ಗೂಡು ಸೇರುತ್ತಿದ್ದ ಗುಬ್ಬಿಗಳ ಹಿಂಡು ಗಿಡಗಿಡಕ್ಕೆ ಮರ ಮರಕ್ಕೆ ಗುಂಪು ಗುಂಪಾಗಿ ಮುತ್ತಿ, ತಮ್ಮ ಸ್ಥಳವನ್ನು ಇನ್ನೊಬ್ಬರು ಆಕ್ರಮಿಸಿದ್ದಕ್ಕೋ, ಹಸರಿನ ಸಂಭ್ರಮಕ್ಕೋ ಯದ್ವಾತದ್ವಾ ಕಿರುಚುತ್ತಿದ್ದವು. +***** +ಮುಂದುವರೆಯುವುದು +ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_410.txt b/Kannada Sahitya/article_410.txt new file mode 100644 index 0000000000000000000000000000000000000000..ef71c8282ec2b130006478974c94ab898db81086 --- /dev/null +++ b/Kannada Sahitya/article_410.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈಗ ಕವಿತೆ ಬರೆಯಲು ನಾನು ಹೊರಟಿಲ್ಲ ; +ಹೊರಟೀದ್ದು ಆಫೀಸಿಗೆ: ಉಂಡು ಅವಸರದಿಂದ- +ಸಿಕ್ಕರೆ ಬಸ್ಸು ಹಿಡಿದು, ಇಲ್ಲ, ಮೆಲ್ಲಗೆ ನಡೆದು ; +ಸಡಿಲಾಗಿರುವ ಕೋಟು ಪ್ಯಾಂಟುಗಳನ್ನು ಇದ್ದು – +ದರಲ್ಲಿ ಸರಿಪಡಿಸಿಕೊಂಡು. ಎಷ್ಟೋ ವರ್ಷಗಳ +ಹಿಂದೆ ಎಡಗಾಲ ಹಿಂಬಡ ಗಾಯ ಮಾದದ್ದು +ಈಗ ಮತ್ತೆ ನೋವು. ಮದುವೆಯಲಿ ಕಟ್ಟಿದ ವಾಚು +ಆಗೀಗ ಬಂದುಬಿದ್ದರೂ ಅದರಂತರಂಗದದ್ಭುತ – +ಸೂಕ್ಷ್ಮಯಂತ್ರಕ್ಕೆ ಸಾಗಿದ ನಾನು ಮಂತ್ರ ಮುಗ್ಧ. +ನನ್ನ ದಾರಿಗೆ ಅಡ್ಡ ಎಮ್ಮೆಗಳು (ನಮ್ಮೂರ ದೊಡ್ಡ +ಹೆಮ್ಮೆಗಳು) ಉದ್ದಕ್ಕೂ ಉಚ್ಚೆ ಹೊಯ್ಯುತ್ತ, ಸಗಣಿ +ಹಾಕುತ್ತ, ಅತ್ತಿತ್ತ ಸುಖವಾಗಿ ಬಾಲ ಜಾಡಿಸುತ್ತ ; +ಸೈಕಲ್ಲು, ಕಾರು, ಸ್ಕೂಟರು ಜಾರಿ ತಮತಮಗೆ ದಾರಿ +ಮಾಡಿಕೊಂಡು. ಚೀಲದ ತುಂಬ ಪುಸ್ತಕ ಭಾರ ಹೊತ್ತು +ಶಾಲೆಗೆ ನಡೆದ ಮಕ್ಕಳುತ್ಸಾಹಕ್ಕೆ, ಎಡಬಲದ +ಗಿಡಮರಗಳಲ್ಲಿ ಚೈತ್ರ ನಗುವ ಚಿಗುರು. +ಆಫೀಸಿನ ಕುರ್ಚಿ ಮೇಜುಗಳ ರೀತಿರಿವಾಜು +ಗಳಲ್ಲಿ ಫೈಲುಗಳು ; ಪತ್ರಕುತ್ತರ ಮತ್ತೆ ಸುತ್ತೋಲೆ ; +ಟೀಕೆ-ಟಿಪ್ಪಣಿ ಸರಣಿ ; ದೂರವಾಣಿಯಲಿ ದೂರುಗಳು. +ಸುಸೂತ್ರ ಸಾಗುತ್ತಿದ್ದಂತೆ ಕೆಂಪು ಪಟ್ಟಿಯಲಿ ಕಗ್ಗಂಟು- +ಹೀಗೆ ಇಪ್ಪತ್ತೆಂಟು ಗಲಿಬಿಲಿಯ ನಡುವೆ, ಬಿಟ್ಟೂ +ಬಿಡದೆ ಟೈಪ್‌ರೈಟರಿನ ಲಯಬದ್ಧ ನಡಿಗೆ ; ಕೊನೆಗೆ +ಕೆಳಗಿಂದ ಮೇಲಿನ ತನಕ ರುಜುವಾಗಿ, ಹೊರ ಜಗತ್ತಿಗೆ +ರವಾನೆ. (ಹೇಗಿದ್ದರೂ ಮುಗಿಸಬೇಕಾದ ಕೆಲಸ ತಾನೆ?) +ಹೊತ್ತು ಇಳಿಯುವ ಸಮಯ : ಬಾಗಿದ ಬೆನ್ನು ಎತ್ತಿ +ಹೊರಗಿನ ಗಾಳಿ ಬೆಳಕಿಗೆ ತೇಲಿ ಬರುವಾಗ +ಮೇದು ಮೆಲುಕಾಡಿಸುತ ಬರುವ ದನ-ಕರುಗಳು. +ಹುಡುಗನ ಹೆಗಲಲ್ಲಿ ಜೋತ ಟ್ರಾನ್ಸಿಸ್ಟರಿನ ಹಾಡು. +ಕಟ್ಟಿಗೆಯ ಹೊರೆ ಹೊತ್ತು ದಣಿದ ಹೆಜ್ಜೆಯ ಹೆಣ್ಣು +ಮಕ್ಕಳ ಹಣೆಯ ಬೆವರು. ಗುಡ್ಡವನ್ನಿಳಿದು +ಸಾಗಿದ ನೆರಳು. ಬಾನ ಮನಸಿಗೆ ಅವಿಸ್ಮರಣೀಯ +ನೆನಪುಗಳ ಮೆಲ್ಲ ತೇಲಿಸಿ ತರುವ ಬೆಳ್ಳಕ್ಕಿಸಾಲು. +ಆಟದ ಬಯಲಿನಲ್ಲಿ ಬರೀ ಕ್ರಿಕೆಟ್ಟು. +ಮನೆಯ ಮೆಟ್ಟಿಲು ಹತ್ತಿ ಹಾಗೆ ಹೊರಳಿದರೆ – +ದಿನದ ದುಡಿಮೆಯ ಕೆಂಪು, ಬಾನಿನಲಿ ಮೆಲ್ಲಗೆ +ನಂದಿ, ಒಂದೆರಡು ಅಸ್ಪಷ್ಟ ಚಿಕ್ಕೆಗಳು ಮೂಡಿ +ಗೂಡಿನಲಿ ಸ್ತಬ್ಧ ಹಕ್ಕಿಗಳು. +ಈ ದಿವಸ ಮಾಡಿ ಮಟ್ಟಿದ್ದೇನು? ಎದೆಯ ತಟ್ಟಿದ್ದೇನು? +ನಿನ್ನೆಗಳ ಇಂದು ಎಳತಂದು, ನಾಳೆಗುತ್ತರವ +ಹುಡುಕುವ ಉತ್ತರೋತ್ತರ ಕೆಲಸ. ಪುರಸತ್ತಿರದೆ +ಸುತ್ತುವದು ಹೀಗೆ ನಮ್ಮ ಸುತ್ತು : ಈ ಜಗತ್ತು – +ವಿವಿಧ ಛಂದಸ್ಸಿನಲಿ ಕಸರತ್ತು ಲಯವಾಗಿ, ಈಗೀಗ +ವಿರಳ ಸರಳ ರಗಳೆಯ ಹೊಕ್ಕು ಹೊರಬಂದು +ಮುಕ್ತಛಂದದ ಹೆಸರಿನಲ್ಲಿ ನಿದಾನ ಹೆಜ್ಜೆನಿಂದು. +***** +೧೯೮೦ +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- ಎಂದು ಕಿವಿ ನಂಬದಾಯ್ತು. ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ ಅದೇ ಅದೇ ಎಂದು ಖಾತ್ರಿಯಾಯ್ತು. ಮಬ್ಬುಗತ್ತಲೆಯನ್ನು ಭೇದಿಸಿ […] +ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_411.txt b/Kannada Sahitya/article_411.txt new file mode 100644 index 0000000000000000000000000000000000000000..abba779316204f5b847e37450d6db576eb03594e --- /dev/null +++ b/Kannada Sahitya/article_411.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲೇ ಹೋಗಲಿ-ಯಾರೇನೇ ತಪ್ಪು ಮಾಡಿದರೂ ‘ಕತ್ತೆ’ ಎಂಬ ಬೈಗುಳದ ಸುರಿಮಳೆ ಕೇಳಿ ಕೇಳಿ ‘ನಿಜವಾದ ಕತ್ತೆ’ ದೆಂಡಮಂಡಲವಾಗಿತ್ತು. +“ಕನ್ನಡ ಚಿತ್ರರಂಗ ಈಗ ಕೊಳಕು ಭಾಷೆಗೆ, ಕೆಟ್ಟ ಬೈಗುಳಗಳಿಗೆ ಹೆಸರಾಗಿದೆ. ಆಕ್ಷನ್ ಫಿಲಂಸ್ ಆರಂಭವಾದ ಮೇಲಂತೂ ಅಕ್ಕನ್, ಅಮ್ಮನ್ ಪದಗಳು ಎಲ್ಲರ ಬಾಯಲ್ಲಿ ನಕ್ಷತ್ರದಂತೆ ರಾರಾಜಿಸುತ್ತಿದೆ. ಆದರೂ ಬೈಗುಳಕ್ಕೆ ನನ್ನನ್ನೇಕೆ ಎಳೆದು ತರುತ್ತಾರೆ’ ಎಂದು ಪರಿತಪಿಸಿ -ಮಣ್ಣಿನಲ್ಲಿ ವಿಲಿವಿಲಿ ವದ್ದಾಡಿ ಹೊರಳಾಡುತ್ತಿತ್ತು ಕತ್ತೆ. +– ಎಂಕಣ್ಣ ದೂರ ನಿಂತೆ ಈ ಕತ್ತೆಯ ಸ್ವಗತ ಕೇಳಿದ. +“ಆಹಾ! ಎಂಥಾ ನಿತ್ಯ ಸತ್ತಯ ಹೇಳುತ್ತಿದೆ ಕತ್ತೆ” ಎಂದುಕೊಂಡ ಎಂಕ ಈ ದಿನಗಳಲ್ಲಿ “ಕತ್ತೆಯ ಮಾತೇ ವೇದವಾಕ್ಯವಾಗುತ್ತಿದೆ” ಎಂದು ತನ್ನಲ್ಲಿ ತಾನೆ ಗೊಣಗಿ ಅದನ್ನು ಹಿಂಬಾಲಿಸಿದ. +-ಕತ್ತೆಗೆ ಮಹಾ ಹಸಿವು ಆರಂಭವಾಗಿತ್ತು. ತನ್ನ ಊಟಕ್ಕಾಗಿ ಇಡೀ ಗಾಂಧಿನಗರ ಸುತ್ತಾಡಿತು. ಭಾರೀ ತಾರಾಗಣದ ಚಿತ್ರ ಮಾಡಿದ ಅನೇಕರು ಸಿ/ಓ ಪುಟ್‌ಪಾತ್ ಆಗಿದ್ದರು. ರೀಮೇಕ್ ಚಿತ್ರ ವಿತರಣೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಸಲುವಾಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ. ಮತ್ತೊಬ್ಬ ಕೋಟಿ ಕೋಟಿ ಕಳೆದುಕೊಂಡು ಲಂಗೋಟಿ ಹಾಕಿ ಅಲೆಯುತ್ತಿದ್ದ. ಮುಂದೆಲ್ಲಿ ಹೋಗುವುದು ಎಂದು ಕತ್ತೆ ಮೋಟುಗೋಡೆಯೊಂದನ್ನು ಒರಗಿ ನಿಮತು ಜಲಧಾರೆಯಿಂದ ನೆಲವನ್ನು ತೇವ ಮಾಡಿತು. +ಈ ದಾರುಣ ಸನ್ನಿವೇಶ ಕಂಡ ಎಂಕಣ್ಣ ಕತ್ತೆಗೆ ಹೇಳಿದ “ಎಲೈ ನನ್ನ ಪ್ರೀತಿ ಪಾತ್ರ ಕತ್ತೆಯೇ, ಚಿತ್ರ ರಿಚ್ ಆಗಿ ತೆಗೆವ ಹಂಬಲದಲ್ಲಿ ನಿರ್ಮಾಪಕರು ನೀರಿನಂತೆ ಹಣ ಸುರಿದು ದಿವಾಳಿ ಎದ್ದು ಹೋಗಿದ್ದಾರೆ. ಈಗ ಹಣ ಮಾಡುತ್ತಿರುವವರೆಂದರೆ ಆಕ್ಟರ್‍ಸ್ ಮಾತ್ರ. ಅದರಲ್ಲಿ ಅಗ್ರಗಣ್ಯರೆಂದರೆ ಪರಭಾಷಾ ನಟಿಯರು. ಅಂಥ ಕಡೆ ಏಕೆ ಹೋಗಬಾರದು” ಎಂದ. +-ತನ್ನ ಪಾಲಿಗೆ ಕೈ ಮರವಾದ ‘ಎಂದ’ ನ ಬಗ್ಗೆ ಕತ್ತೆಗೆ ಪ್ರೀತಿ ಉಕ್ಕಿ ಹರಿಯಿತು. +ಕತ್ತೆ ಸ್ಟಾರ್‍ ಹೋಟೇಲ್‌ಗಳತ್ತ ಹೆಜ್ಜೆ ಹಾಕಿತು. +ನಮ್ಮ ನಟ-ನಟಿಯರು ಕೈ ತುಂಬ ಸಂಭಾವನೆ ನೀಡಲು ಹಿಂದೆ ಮುಂದೆ ನೋಡುವ ಗಾಂಧೀನಗರಿಗರು ಪರಭಾಷಾ ನಟಿಯರಿಗೆ ‘ಸ್ಟಾರ್‍ ಟ್ರೀಟ್‌ಮೆಂಟ್ ನೀಡಿ ಅವರ ಅಸಿಸ್ಟೆಂಟ್‌ಗಳನ್ನು ರಾಣಿ ಮಹಾರಾಣಿಯರಂತೆ ಉಪಚರಿಸುತ್ತಿದ್ದುದನ್ನು ಕಂಡು ಕತ್ತೆ ಬೆಚ್ಚಿತು. +ಆಗಲೇ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆ ಕತ್ತೆಗೆ ನಿಜ ಎನಿಸಿದ್ದು. +ಕತ್ತೆಗೆ ಫೈವ್‌ಸ್ಟಾರ್‍ ಹೊಟೆಲಲ್‌ಇ ಎಂಟ್ರಿಯೂ ಸಿಗಲಿಲ್ಲ. +‘ಬಾಗಿಲಲ್ಲೇ ಸಪ್ಪಗೆ ನಿಂತಿತು ಕತ್ತೆ. ‘ಏ ಕತ್ತೆ, ಇಲ್ಲಿ ನಿಂತರೆ ಏನು ಪ್ರಯೋಜನ. ಈಗ ಎಲ್ಲ ಪ್ಯಾಲೇಸ್ ಹತ್ತ ಷೂಟಿಂಗ್‌ಗೆ ಹೊರಟಿದಾರೆ. ಫುಲ್ ಪ್ರೆಸ್ ಅಲ್ಲಿರುತ್ತೆ. ಅಂದ್ಮೇಲೆ ಬೊಂಬಾಟ್ ಊಟ ಗ್ಯಾರಂಟಿ ನಿಂಗೆ ಅಲ್ಲಿ’ ಎಂದ. +ಕತ್ತೆ ಅರಮನೆಯತ್ತ ನಡೆಯಿತು. ಜನ ತುಂಬಿ ತುಳುಕಿದ್ದರು. ಪ್ರೆಸ್‌ನವರು ಪೆನ್ನು-ಪೇಪರ್‍ ಹಿಡಿದಿದ್ದರು. ಕ್ಯಾಮರಾಗಳಿಗಂತೂ ಲೆಕ್ಕವಿರಲಿಲ್ಲ. ಹೀರೋಯಿನ್ ಡಾಲಿ ಕೋಚು ಗಾಡಿಯಲ್ಲಿ ಬಂದಿಳಿದಳು. +“ಎಲ್ಲರ ಕಣ್ಣ ಅವಳತ್ತ ನೆಟ್ಟಿತ್ತು. ಸೌಂದರ್ಯ ಸ್ಪರ್ಧೆಯ ಅಭ್ಯರ್ಥಿಯಂತಿದ್ದ ಅವಳ ಮೈ ಮಾಟಕ್ಕೆ ಎಲ್ಲಾ ಸುಸ್ತು. ಕ್ಯಾಮರಾಗಳು ‘ಕ್ಲಿಕ್-ಕ್ಲಿಕ್’ ಎಂದು ಕಣ್ಣಾಮುಚ್ಚಾಲೆಯಾಡಿದವು. ಪ್ರೆಸ್‌ನವರತ್ತ ಕಣ್ಣು ಹಾಯಿಸಿ ‘ಹಾಯ್ ಹಾಯ್’ ಎಂದಳು ಸುಂದರಿ. +“ಷಾಟ್ ರೆಡಿ” ಎಂದ ಕ್ಯಾಮರಾಮನ್. “ಈ ಷಾಟ್ ಆದ್ಮೇಲೆ ಊಟದ ಬ್ರೇಕ್” ಎಂದ ನಿರ್ದೇಶಕ ಪ್ರೆಸ್‌ನವರ ಬಳಿ ಬಂದು. +‘ಊಟದ ಬ್ರೇಕ್’ ಎಂದಾಗ ಕತ್ತೆಗೂ ಖುಶಿಯಾಯಿತು. +-ಹೈ ಹೀಲ್ಡ್ ಧರಿಸಿದ್ದ ಡಾಲಿ ನಾಯಕನೊಮದಿಗೆ ಕುಣಿಯಬೇಕಾದ ಪ್ರಸಂಗ. +-ನಾಲ್ಕು ಹೆಜ್ಜೆ ಹಾಕಲಿಕ್ಕಿಲ್ಲ ಡಾಲಿ ಎಡವಿಬಿದ್ದಳು. ಕಾಲು ಉಳುಕಿತು. ನಿರ್ಮಾಪಕ-ನಿರ್ದೇಶಕ ಎಲ್ಲ ಆಕಾಶವೇ ತಲೆಮೇಲೆ ಬಿದ್ದಂತೆ ಪರಿತಪಿಸಿದರು. ಪ್ರೆಸ್‌ನವರೂ ನುಗ್ಗಿದರು ಏನಾಯಿತೋ ಎಂದು ತಿಳಿಯಲು. ಪತ್ರಕರ್ತ ಶಿವನೂ ನಡೆದ ಅಲ್ಲಿಗೆ. ಈ ಶಿವ ‘ಡಾಲಿ’ಯ ಸುದೀರ್ಘ ಇಂಟರ್‌ವ್ಯೂ ಮಾಡಿದ್ದು ನೆನಪಿಟ್ಟುಕೊಂಡಿದ್ದ ಡಾಲಿ-ನೋವಿನಲ್ಲೂ ನಗೆ ತೇಲಿಸಿ ‘ಹಾಯ್’ ಎಂದಳು. ಶಿವ ಕರಗಿ ಹೋದ. +ನಿರ್ದೇಶಕರು ಮರು ಮಾತಾಡದೆ ‘ಪ್ಯಾಕಪ್’ ಎಂದರು. +ಪತ್ರಕರ್ತರು ಬಂದ ದಾರಿಗೆ ಸುಂಕವಿಲ್ಲವೆಂದು ಹೊರಟಾಗ ಪತ್ರಕರ್ತ ಶಿವ ನಾಪತ್ತೆ. +“ಅರೆ-ಸ್ಟಾಪ್‌ಬ್ಲಾಕ್‌ನಲ್ಲಿ ಈಗ ಎಲ್ಲಿ ಮಾಯವಾದ” ಎಂಬುದೇ ಅಂದಿನ ಬಿಸಿ ಬಿಸಿ ಚರ್ಚೆಯಾಗಿತ್ತು. ಆನಂತರ ತಿಳಿಯಿತು ಪರಭಾಷಾ ನಟಿಯ ಕಾಲಿಗೆ ಪೆಟ್ಟಾದದ್ದು ಕಂಡು-ಬಹುವಾಗಿ ನೊಂದು ಟ್ರೀಟ್‌ಮೆಂಟಿಗಾಗಿ ಆಸ್ಪತ್ರೆಗೆ ಕರೆದೊಯ್ದವರಲ್ಲಿ ಇವನೂ ಒಬ್ಬ ಎಂದು. ಕತ್ತೆ ಅಂದುಕೊಮಡಿತು ‘ಬಾಂಬ್‌ಬ್ಲಾಸ್ಟ್ ಆದಾಗ ಅಬ್ಬಯ್ಯನಾಯಿಡು ಸ್ಟುಡಿಯೋದಲ್ಲಿ ಎಷ್ಟು ಜನ ಸತ್ತರು. ಆಗಲೂ ಈ ರೀತಿ ಯಾರು ಪರಿತಪಿಸಲಿಲ್ಲವಲ್ಲ” – ಕತ್ತೆ ಅಲ್ಲಿಂದ ಸಪ್ಪಗೆ ತೆರಳಿತು. ಎಲ್ಲ ಸ್ಟುಡಿಯೋಗಳನ್ನೂ ಸುತ್ತಿ ಸುತ್ತಿ ಹಸಿವಿನಿಂದ ಬಳಲಿತು. ಇಲ್ಲಿನ ಪ್ರತಿಭಾವಂತ ಕನ್ನಡ ನಟ ನಟಿಯರ ಸ್ಥಿತಿಯೇ ನನ್ನದು ಎನಿಸಿತು ಕತ್ತೆಗೆ “ನಟ-ನಟಿಯರು ಅವಕಾಶಕ್ಕೆ ಕನಸಿ ಕೈ ಚಾಚುತ್ತಾರೆ. ನಾನೀಗ ಹಸಿವಿನಿಂದ ಬಳಲಿ ಊಟಕ್ಕೆ ಪರಿತಪಿಸುತ್ತಿರುವೆ’ ಎಂದುಕೊಂಡು ಕಡೆಗೆ ಚಾಮುಂಡೇಶ್ವರಿ ಸ್ಟುಡಿಯೋ ಬಳಿ ಬಂತು. +ಪುಣ್ಯಕ್ಕೆ ಸ್ಟುಡಿಯೋ ಬಳಿ ಎರಡು ಸಿನಿಮಾ ಡಬ್ಬ ಬಿದ್ದಿತ್ತು. ಕತ್ತೆ ಬಕಬಕ ತಿನ್ನತೊಡಗಿತು ಫಿಲಂ. ಇದನ್ನು ಕಂಡ ಮತ್ತೊಂದು ಹಸಿದ ಕತ್ತೆ ಬಂತು. +‘ಏ, ನನಗೂ ಹಸಿವು, ಒಂದಷ್ಟು ಫಿಲಂ ಕೊಡುವೆಯಾ ತಿನ್ನಲು’ ಎಂದಾಗ +“ಅಯ್ಯೋ ಫಿಲಂನ ಕೊನೆ ‘ಫ್ರೇಂ’ ಸಹ ತಿಂದು ಮುಗಿಸಿದೆ. ಐ ಯಾಮ್ ಸಾರಿ’ ಎಂದಿತು. +“ಹೋಗಲಿ-ಫಿಲಂ ತಿಂದೆಯಲ್ಲ, ಅದು ಹ್ಯಾಗನ್ನಿಸಿತು ಅದಾದ್ರು ಹೇಳು” +“ಫಿಲಂ ತಿಂದೆ. ಹೊಟ್ಟೆ ತುಂಬ್ತು ನಿಜ. ಆದರೆ ಈ ಫಿಲಂಗಿಂತ ಆ ಕಾದಂಬರಿಯೇ ಎಷ್ಟೋ ರುಚಿಯಾಗಿತ್ತು” ಎಂದು ಹೇಳುವುದನ್ನು ಕೇಳಿದ ಎಂಕನಿಗೆ ಕತ್ತೆಯ ಅಭಿರುಚಿಯ ಬಗ್ಗೆ ತುಂಬ ಅಭಿಮಾನವೆನ್ನಿಸಿತು. ‘ಈ ಕತ್ತೆಗಿರುವ ಸದ್ವಿವೇಕ ರೀಮೇಕ್ ನಿರ್ಮಾಪಕರಿಗಿರಬಾರದಿತ್ತೆ’ ಎಂದುಕೊಂಡು ಎಂದ ಸೀದಾ ಮನೆಯತ್ತ ನಡೆದ. +***** +(೨೫-೨-೨೦೦೦) +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […] +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […] +ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_412.txt b/Kannada Sahitya/article_412.txt new file mode 100644 index 0000000000000000000000000000000000000000..b2a43e71375e4e159906a7af954e35ef886b5b7c --- /dev/null +++ b/Kannada Sahitya/article_412.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಅಂಬಿ’ಗಂದು ಸನ್ಮಾನ +ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ +ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು ಪ್ರಚಾರವಾದಾಗ ಲಕ್ಷಾಂತರ ಮಂದಿ ಬಂದರು. +ಅವರನ್ನು ಕಂಟ್ರೋಲ್ ಮಾಡುವ ಕೆಪಾಸಿಟಿ ದಾವಣಗೆರೆಯ ಡಿ.ಸಿ. ಸಾಹೇಬರಾದ ಚಿತ್ರನಟ ಕೆ.ಶಿವರಾಮು ಅವರಿಗಿರಬೇಕಾಗಿತ್ತು. ಆ ನಿಟ್ಟಿನಲ್ಲಿ ಸಂಪೂರ್ಣ ಸೋತು ಮುಗ್ಗರಿಸಿದರು ಜಿಲ್ಲಾಧಿಕಾರಿ ಶಿವರಾಮು. +ಅದರಿಂದಾಗಿ ವೇದಿಕೆಯ ಮೇಲೆ ಜನಜಾತ್ರೆ. ಶಿವರಾಮು ವೇದಿಕೆಯ ಮೇಲೆ ಸಂಭ್ರಮಿಸುತ್ತಿದ್ದಾಗ ಪ್ರೇಕ್ಷಕಾಂಗಣದಲ್ಲಿ ಪತ್ರಕರ್ತರು ಪ್ರೆಸ್ ಫೋಟೋಗ್ರಾಫರ್‍ಸ್ ಪೊಲೀಸರ ದೌರ್ಜನ್ಯಕ್ಕೆ ಬಲಿಯಾಗಿ ಅವಮಾನಿತರಾಗಿ ಕತ್ತಿನ ಪಟ್ಟಿ ಹಿಡಿದು ಆಚೆಗೆ ದಬ್ಬಲ್ಪಟ್ಟರು ಅವರು ಹೊಲಸು ಬಾಯಿಗೆ ಸಿಲುಕಿ ‘ಥೂ-ಛೀ’ ಎಂದು ಅವಮಾನಿಸಲ್ಪಟ್ಟರು. +ವಜ್ರದ ಕಿರೀಟಧಾರಣೆ ವೇದಿಕೆ ಮೇಲೆ ಆಗುವ ಮುನ್ನ ಹಿರಿಯ ಪತ್ರಕರ್ತ ಸಿ. ಸೀತಾರಾಮ್ ಅವರ ಕತ್ತಿನ ಪಟ್ಟಿ ಹಿಡಿದೆಳೆದು ಅವಮಾನಿಸಿದ ಪೊಲೀಸ್ ಪೇದೆ. ‘ನನ್ನ ೩೪ ವರ್ಷ ಸರ್ವಿಸ್ನಲ್ಲಿ ಇಂಥ ಅವಮಾನವಾಗಿರಲಿಲ್ಲ’ ಎಂದರು ಸೀತಾರಾಂ. +ಪತ್ರಕರ್ತ ಗಣೇಶ್ ಕಾಸರಗೋಡು, ಬಾಬು ದಿನಕರ, ಪತ್ರಕರ್ತೆ ಅರುಣ ಮುಂತಾದವರನ್ನು ಕ್ಯಾರೆ ಎನ್ನದೆ ಲಾಠಿ ತಿರುವಿದರು ಪೊಲೀಸರು. ಒಳಗೆ ಹೋಗುವುದೇ ಹಿಂಸೆ ಎನ್ನುವಂಥ ಕಹಿ ಕಹಿ ಅನುಭವದಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿದವರು ಬಹುಮಂದಿ. +ಘನಂದಾರಿ ನಟರನ್ನು ಕಲರ್‌ಫುಲ್ ಆಗಿ ಕ್ಲಿಕ್ಕಿಸಲು ಹೋದ ಡಿ.ಸಿ. ನಾಗೇಶ್, ವೀರೇಶ್ ಮುಂತಾದ ಪ್ರೆಸ್ ಫೋಟೋಗ್ರಾಫರ್‍ಸ್ ಪೊಲೀಸರ ಪಾಲಿಗೆ ಕಾಲ ಕಸವಾಗಿದ್ದರು. +ಪತ್ರಕರ್ತರನ್ನು ಪರಮ ಆಸ್ಥೆಯಿಂದ ಕರೆದೊಯ್ದ ಪ್ರಚಾರಕರ್ತ ಸುಧೀಂದ್ರ-ವೆಂಕಟೇಶ್ ಅಲ್ಲಿನ ಅವ್ಯವಸ್ಥೆ ಕಂಡು ‘ಲಬೊಲಬೊ’ ಎಂದು ಬಾಯಿಬಡಿದುಕೊಳ್ಳುವ ಸ್ಥಿತಿ ಕಂಡು ಅವರ ಮುಖ ಕಪ್ಪಿಟ್ಟಿತ್ತು. +‘ನಾವು ಈವರೆಗೆ ೬೫೦ಕ್ಕೂ ಹೆಚ್ಚು ಸಿನಿಮಾ ಕಾರ್ಯಕ್ರಮ ನಡೆಸಿದ್ದೀವಿ. ಆದರೆ ಇದು ನಮ್ಮ ವೃತ್ತಿ ಜೀವನದ ಕಪ್ಪು ಚುಕ್ಕೆ. ಇನ್ನು ಮುಂದೆ ಇಂಥ ಕಾರ್ಯಕ್ರಮದ ಹೊಣೆ ನಾವು ಖಂಡಿತಾ ಹೊರುವುದಿಲ್ಲ” ಎಂದರು. +‘ದಾದು ಫಿರ್ಯಾದಿಲ್ಲದ ಜನ ಜಂಗುಳಿಯಿಂದಾಗಿ ಕಲ್ಲು-ಮಣ್ಣು-ಚಪ್ಪಲಿ ತೂರಾಟವೂ ಅತಿಯಾಗಿ ಅದೊಂದು ದರಿದ್ರ ಕಾರ್ಯಕ್ರಮವೆನಿಸಿತು. +‘ಏನಾದರಾಗಲಿ – ವಜ್ರದ ಕಿರೀಟಧಾರಣೆಯ ಫೋಟೋ ಆದರೂ ತೆಗೆದುಬಿಡೋಣ’ ಎಂದಾಗ ವೇದಿಕೆಗೆ ಆಹ್ವಾನ ಫೋಟೋಗ್ರಾಫರುಗಳಿಗೆ ಕಾರ್ಯಕರ್ತರಿಂದ ಅಂಬಿಯವರಿಂದ. ಅಲ್ಲಿಗೆ ತೆರಳಿದಾಗ ಡಿ.ಸಿ. ಸಾಹೇಬರೂ ಮೇಲಿದ್ದಾರೆ. +ಇನ್ನೇನು ಫೋಟೋ ಕ್ಲಿಕ್ಕಿಸಬೇಕು ‘ಯಾವೋನ್ರೀ ನಿಮ್ಮನ್ನ ಇಲ್ಲಿ ಬರ ಹೇಳಿದೋನು’ ಎಂದು ಮತ್ತೆ ಪೊಲೀಸರಿಂದ ಒದೆ. +ಡಿ.ಸಿ. ಸಾಹೇಬರು ಅಂದು ಅಲ್ಲಿ ಮೂಕ ಪ್ರೇಕ್ಷಕ. +ದುರಾಚಾರಿಗಳಂತೆ ನಡೆದುಕೊಂಡ ಪೊಲೀಸರನ್ನು ತೋರಿಸಿದರೂ ‘ಶಿವರಾಂ’ ಗುಮ್ಮನ ಗುಸುಕರಂತೆ ತೆಪ್ಪಗಿದ್ದರಂತೆ. +ಪತ್ರಕರ್ತರ ಮೇಲೆ ಕೈಮಾಡಿದ ಯಾರನ್ನು ಬೇಕಾದರೂ ‘ಸಸ್ಪೆಂಡ್’ ಮಾಡುವ ಶಕ್ತಿ ಜಿಲ್ಲಾಧಿಕಾರಿಗಿದ್ದರೂ ಏಕೋ ಅಂದವರು ತುಟಿಕ್-ಪಿಟಿಕ್ ಎನ್ನಲಿಲ್ಲ. +ಅಂಬಿ, ವಿಷ್ಣು, ಸುಮಲತಾ, ಅಭಿಷೇಕ್ ಗೌಡ, ತಾರಾ, ಜಯಂತಿ, ಪ್ರೇಮಾ, ಶ್ರೀರಕ್ಷಾ, ಸುಂದರರಾಜ್ ಮುಂತಾದವರ ಸಖ್ಯ ಶಿವರಾಮುಗೆ ಹಿತವೆನಿಸಿ ತಮ್ಮ ನಿಜವಾದ ಕರ್ತವ್ಯ ಮರೆತು ಹೀರೋ ಆಗಿ ಮೆರೆಯುವ ಯತ್ನ ಮಾಡಿದ್ದು ದಾವಣಗೆರೆಯಲ್ಲಾದ ದೊಡ್ಡ ದುರಂತ. ವಜ್ರದ ಕಿರೀಟ ಧಾರಣೆಯ ವಿಚಿತ್ರ ವರದಿ ಕೇಳಿದಾಗ ನನಗೆ ನೆನಪಾದದ್ದು ವಿಶ್ವಕನ್ನಡ ಸಮ್ಮೇಳನ. ಅಂದು ಈ ಆಕಾಶವಾಣಿ ಈರಣ್ಣ, ಜಗನ್ಮೋಹನ ಅರಮನೆಯ ಸಭಾಂಗಣವನ್ನು ಪ್ರವೇಶಿಸಲೆತ್ನಿಸಿದಾಗ ಪೊಲೀಸ್ ಪೇದೆಯೊಬ್ಬ ಬ್ಯಾಡ್ಜ್ ತೋರಿದರೂ ಲೆಕ್ಕಿಸದೆ ಹಿಡಿದೆಳೆದು ದಬ್ಬಿದ್ದ. +ಮರುಕ್ಷಣ ಅಲ್ಲೇ ಪೊಲೀಸರ ವರ್ತನೆ ಖಂಡಿಸಿ. ಆ ಕುರಿತೇ ‘ಚಿತ್ರಾ’ ಒಂದು ಬೀದಿ ನಾಟಕವಾಡಿ ಉಪವಾಸ ಕುಳಿತೆವು. ಒಳಗೆ ಮಾಸ್ಟರ್‍ ಹಿರಣ್ಣಯ್ಯನವರ ನಾಟಕ. ಅವರು ಉಪವಾಸ ಕುಳಿತ ಅಂಶ ತಿಳಿದು ನಾಟಕದಲ್ಲೇ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ- ಅವರ ಜನ್ಮ ಜಾಲಾಡಿ ನಾಟಕಾನಂತರ ನಮ್ಮೊಡನೆ ಬಂದು ಕುಳಿತರು. ಆಗ ರಾಮಾನುಜಂ ಪೊಲೀಸ್ ಹಿರಿಯ ಅಧಿಕಾರಿ ಅವರು ಬಂದು ‘ಧರಣಿ ನಿಲ್ಲಿಸಿ’ ಎಂದು ವಿನಂತಿಸಿದರೂ ಜಗ್ಗಲಿಲ್ಲ ನಾಟಕದ ಮಿತ್ರರು. +ಬೆಳಗ್ಗೆ ಚದುರಂಗ ಅವರಿಗೆ ಸುದ್ದಿ ಮುಟ್ಟಿತು. ಅವರು ಹಾಗೂ ಸಾಹಿತ್ಯ ಮಿತ್ರರು ರಾಮಕೃಷ್ಣ ಹೆಗಡೆ ಅವರಿಗೆ ಸುದ್ದಿ ಮುಟ್ಟಿಸಿದರು. ಆಗ ಹೆಗಡೆಯವರೊಂದಿಗೆ ರಾಚಯ್ಯನವರು ಇಡೀ ಮಂತ್ರಿಮಂಡಲ ಬಂದು ಕ್ಷಮೆ ಕೋರಿ ಆ ಪೇದೆಯನ್ನು ಸಸ್ಪೆಂಡ್ ಮಾಡಿರುವ ಅಂಶ ತಿಳಿಸಿದ ನಂತರ ಧರಣಿ ಮುಕ್ತಾಯ ಮಾಡಲಾಯಿತು. ಹಾಗೆ ಆಗಲಿಲ್ಲವಲ್ಲ-ದಾವಣಗೆರೆಯಲ್ಲಿ, ಹೆಗಡೆಯವರದು ಸೌಜನ್ಯ, ಶಿವರಾಮು ಅವರದು ದುರಹಂಕಾರ. ಈ ಕಾರಣಕ್ಕೆ ದೊಡ್ಡ ದೊಡ್ಡ ಅಧಿಕಾರದಲ್ಲಿರುವವರು ಸಿನಿಮಾ ಹೀರೋಗಳಾಗಿ ಪರಭಾಷಾ ನಟೀಮಣಿಯರೊಂದಿಗೆ ವಿವಿಧ ಪೋಷಾಕುಗಳಲ್ಲಿ ಕುಣಿಯುವುದನ್ನು ಸರಕಾರ ನಿಷೇಧಿಸಿರುವುದು. +ಸರ್ಕಾರದ ಕೆಲಸದಲ್ಲಿರುವ ಅಧಿಕಾರಿಗಳು ಕತೆ, ಕಾದಂಬರಿ ಬರೆಯಬಹುದಂತೆ, ಸಿನಿಮಾದಲ್ಲಿ ಅಭಿನಯಿಸಿದರೆ ತಪ್ಪೇನು? ಅಭಿನಯಿಸಲು ಅವಕಾಶವಿರಬೇಕು’ ಎಂಬ ವಾದ ಅಂಬಿ, ವಿಷ್ಣು ಮುಂತಾದವರು ಮುಂದೆ ಮಾಡಿ. ಕೆ.ಶಿವರಾಮು ಕೇಸ್ ರೆಕಮೆಂಡ ಮಾಡಿದ್ದಾರೆ. ಅದೇ ವೇಳೆ ಶಿವರಾಮು ಅಭಿನಯಿಸಿದ ‘ಸುಭಾಷ್ ಕ್ಯಾಸೆಟ್’ ಸಹಾ ಬಿಡುಗಡೆ ಆಯಿತಂತೆ. ‘ಪತ್ರಕರ್ತರ ಮೇಲೆ ಸೇಡು ತೀರಿಸಿಕೊಳ್ಳಲು ಶಿವರಾಮು ಪೊಲೀಸರನ್ನು ಬಿಟ್ಟಿದ್ದಾರೆ’ ಎಂಬುದು ಬಹುಮಂದಿಯ ಗುಮಾನಿ. +ಅಂದು ಅವಮಾನಿತರಾಗಿ ತಾವಿಳಿದುಕೊಂಡಿದ್ದ ಸ್ಥಳಕ್ಕೆ ಹಿಂತಿರುಗಿದ ಪತ್ರಕರ್ತರನ್ನು ಕ್ಯಾರೇ ಎನ್ನುವವರಿಲ್ಲದೆ ನಡೆದು ಹೋಗಬೇಕಾಗಿ ಬಂದದ್ದು ಕೆಟ್ಟ ಕಹಿನೆನಪಾಗಿ ಉಳಿಯಿತು ಬಹು ಮಂದಿಯ ಮನದಂತರಾಳದಲ್ಲಿ. +ಸಿನಿಮಾ ನಟ-ನಟಿಯರು ಕೂತಿದ್ದು, ನಿಂತಿದ್ದನ್ನು, ಹೂಸಿದ್ದು, ಕೆಮ್ಮಿದ್ದನ್ನು ಪತ್ರಕರ್ತರು ರಸಮಯವಾಗಿ, ಹಲವೊಮ್ಮೆ ಕಾವ್ಯಮಯವಾಗಿ ಬರೆದು ಚಿತ್ರರಸಿಕರಿಗೆ ಖುಶಿ ನೀಡುತ್ತಿರುತ್ತಾರೆ ಎಂಬುದನ್ನು ತುಂಬ ಚೆನ್ನಾಗಿ ಬಲ್ಲ ಅಂಬಿಗಾಗಲಿ, ವಿಷ್ಣುಗಾಗಲಿ, ಶಿವರಾಮುಗಾಗಲಿ, ಸುಮಲತಾಗಾಗಲಿ ‘ಛೇ ಹೀಗಾಗಬಾರದಿತ್ತು. ನಿಮಗೆ’ ಎಂದು ಅವರಿರುವ ಜಾಗಕ್ಕೆ ಹೋಗಿ ಹೇಳುವ ಸೌಜನ್ಯ ಈ ನಟ-ನಟಿಯರಿಗೆ ಇಲ್ಲದಿದ್ದ ಮೇಲೆ ಇವರಿಗೆ ಚಿನ್ನದ ಕಿರೀಟ ವಜ್ರದ ಕಿರೀಟ ಹಾಕಿದ ಸುದ್ದಿ ಬರೆಯ ಹೋಗಿ ಪೊಲೀಸ್ ಭಾಷೆಯಲ್ಲೇಕೆ ಬೈಸಿಕೊಳ್ಳಬೇಕು ಎನಿಸಿದ್ದರೆ ಖಂಡಿತಾ ಅದು ತಪ್ಪಲ್ಲ. +ಪತ್ರಕರ್ತರಿಗಾದ ಈ ಅವಮಾನ, ಚಿತ್ರನಟರಾದ ಕೆ.ಶಿವರಾಮು ಸಿನಿಮಾ ನಟರಾಗಿ ವರ್ತಿಸುವಾಗ ತಮ್ಮ ಕರ್ತವ್ಯ ಮರೆತ ಅಂಶವನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ಶ್ರೀಮತಿ ತೆರೇಸಾ ಭಟ್ಟಾಚಾರ್ಯ ಅವರೂ ಗಮನಿಸಿ ಏಕೆ ಹೀಗಾಯಿತೆಂದು ಕಂಡುಹಿಡಿಯಲು ತನಿಖಾ ಆಯೋಗವೊಂದನ್ನು ರಚಿಸಬೇಕಾದದ್ದು ಅತ್ಯಗತ್ಯ. +ವಜ್ರದ ಕಿರೀಟಧಾರಣೆ ಈಗೊಂದು ಫ್ಯಾಷನ್ನೇ ಆಗಿದೆ. ಮುಂದೆ ಲೋಕಸಭಾ ಸದಸ್ಯ ಶಶಿಕುಮಾರ್‍, ವಿಷ್ಣುವರ್ಧನ್, ಜಗ್ಗೇಶ್, ಶಿವರಾಜ್‌ಕುಮಾರ್‍, ಡಾ. ರಾಜ್‌ಕುಮಾರ್‍, ರವಿಚಂದ್ರನ್ ಮುಂತಾದವರಿಗೆಲ್ಲ ಅವರವರ ಅಭಿಮಾನಿಗಳು ವಜ್ರದ ಕಿರೀಟ ತೊಡಿಸುವ ಸನ್ನಾಹದಲ್ಲಿದ್ದಾರೆ ಎಂದು ತಿಳಿದುಬಂದಿದೆ. +ದಾವಣಗೆರೆಯ ಅಂಬಿ ಹುಟ್ಟುಹಬ್ಬ ಪತ್ರಕರ್ತರ ಪಾಲಿಗೊಂದು ಕರಾಳ ನೆನಪು. ಎಂದೊಂದು ಮಾಯದ ಗಾಯ. +ರೆಹಮಾನರ ‘ಯಜಮಾನ’ ೧೩೫ನೇ ದಿನದ ಕಹಿನೆನಪು ಆರುವ ಮುನ್ನ ಪತ್ರಕರ್ತರು ಮತ್ತೊಮ್ಮೆ ದಾವಣಗೆರೆಯಲ್ಲಿ ಪೆಟ್ಟು ತಿಂದು ಪೆಚ್ಚಾಗಿದ್ದಾರೆ. +ಕನ್ನಡ ಚಿತ್ರರಸಿಕರು ಬಯಸುವುದು ನಟ-ನಟಿಯರು ತಮ್ಮ ಪ್ರತಿಭೆ ಬೆಳಗುವ ಸದಭಿರುಚಿಯ ಒಳ್ಳೆಯ ಚಿತ್ರಗಳನ್ನು ಬೆಳ್ಳಿ ಕಿರೀಟ, ಚಿನ್ನದ ಕಿರೀಟ, ವಜ್ರದ ಕಿರೀಟಗಳು ಅವರ ಅಭಿನಯವನ್ನು ಪಳಪಳ ಹೊಳೆಸುವುದು ಸಾಧ್ಯವಿಲ್ಲ ಇಂಥ ಕಿರೀಟಾರೋಹಣ ಕಾಲ್‌ಷೀಟ್ ಪಡೆಯಲು ಅಧಿಕೃತ ಲಂಚವಾಗಬಹುದಷ್ಟೆ. +ಜಿಲ್ಲಾಧಿಕಾರಿಗಳಾದ ಶಿವರಾಮ್ ಅವರೇ, +ನಿಮ್ಮ ಅಭಿಮಾನಿಗಳೂ ನಿಮಗೊಂದು ವಜ್ರದ ಕಿರೀಟ ಹಾಕಲಿದ್ದಾರೆ ಎಂಬ ಸುದ್ದಿಯಿದೆ ನಿಜವೇ? +***** +(೧-೬-೨೦೦೧) +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […] +“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […] +ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_413.txt b/Kannada Sahitya/article_413.txt new file mode 100644 index 0000000000000000000000000000000000000000..3ad71705db3f24a3441a4cf7dd9483fcf0d1bd72 --- /dev/null +++ b/Kannada Sahitya/article_413.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” +ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. +“ಸುದ್ದಿ ಮಾಡು. ವರದಿ ಮಾಡಲಿಕ್ಕೇನಂತೆ? ನನಗದೇ ಕೆಲಸ ಎಂದಮೇಲೆ?” ಎನ್ನುತ್ತಿದ್ದೆ. ಅದೊಂದು ಲಘುನಗೆಯಲ್ಲಿ ಮುಕ್ತಾಯವಾಗುವ ಸಂಭಾಷಣೆ ಮಾತ್ರವಾಗಿತ್ತು. +ಒಂದು ತಿಂಗಳಿಂದ ಅವಳ ಜೊತೆಗಿದ್ದೇನೆ. ನನಗಿಂತ ಮುಂಚೆ ವೃಂದಾ ಇದ್ದಳು. ಅವಳಿಗಿಂತ ಮುಂಚೆ ಚಂಪಾ. ಹೀಗೆ ಒಬ್ಬರಲ್ಲಿ ಒಬ್ಬ ಸಂಬಂಧದ ಮನೆ ಹುಡುಗಿಯರನ್ನು ಒತ್ತಾಯದಿಂದ ತನ್ನ ಜೊತೆಗಿರಿಸಿಕೊಂಡು ಓದಿಸಿ ಕಳಿಸಿದವಳು ಚಿಕ್ಕಮ್ಮ. ವೃಂದಾ, ನನ್ನ ತಂಗಿ, ಓದಿ ಮುಗಿಯುತ್ತದೆ ಎನ್ನುವಾಗ ನನಗೆ ವರ್ಗವಾಗಿ ಬಂದಿದ್ದೆ. ಚಿಕ್ಕಪ್ಪನ ಮನೆಯಿದೆ ಎಂದ ಮೇಲೆ ಅಪ್ಪ ಬೇರೆ ಕಡೆ ಇರಲು ಒಪ್ಪುವವರೂ ಅಲ್ಲ. ಈ ಚಿಕ್ಕಮ್ಮ ಬಿಡುವವಳೂ ಅಲ್ಲ. ಅಂತೂ ಈ ಸಲ ಓದುವ ಮಕ್ಕಳ ಬದಲಿಗೆ ನಾನು. ನಾ ಬಂದಾಗ ವೃಂದಾನ ಓದು ಮುಗಿಯಲು ಇನ್ನೂ ವಾರವಿತ್ತು. ನನ್ನನ್ನು ಕಂಡದ್ದೇ “ಇನ್ನು ವರ್ಗವಾಗುವ ವರೆಗೂ ನೀನು ಇಲ್ಲಿಯೇ?” ಕೇಳಿದಳು ಬೆಚ್ಚಿದಂತೆ. +ವೃಂದಾಗೆ ಚಿಕ್ಕಮ್ಮನನ್ನು ಕಂಡರೇ ಆಗುತ್ತಿರಲಿಲ್ಲ. ಅದಕ್ಕೆ ಸ್ಪಷ್ಟ ಎದ್ದು ಕಾಣುವ ಕಾರಣವೂ ಇಲ್ಲ. ಸಹಿಸಲಿಕ್ಕೇ ಆಗದ ಕಿರಿಕಿರಿ ಕೊಡುತ್ತಾಳೆ ಅಂತ. ಕಿರಿಕಿರಿ ಎಂದರೆ ಊಟ-ತಿಂಡಿ ಪ್ರೀತಿಯ ಕಿರಿಕಿರಿಯಲ್ಲ. ಒಂದು ಬಗೆಯಲ್ಲಿ ಪ್ರೀತಿ ಹೆಚ್ಚಳದ ಕಿರಿಕಿರಿ. ಕತ್ತಲೆಯಾಗುವುದರೊಳಗೆ ಮನೆಯಲ್ಲಿರಬೇಕು ಎಂಬುದೇ ವೃದಾಗೆ ಅತ್ಯಂತ ದೊಡ್ಡ ಕಿರಿಕಿರಿಯಾದದ್ದು. ಕತ್ತಲು ಮಾಡಿಕೊಂಡು ಬರಲೇಬೇಕಾದ ಪ್ರಸಂಗಗಳಲ್ಲಿ ಚಿಕ್ಕಮ್ಮ ಸಿಟ್ಟುಗೊಳ್ಳದಿದ್ದರೂ-ವಿಹ್ವಲಳಾಗುತ್ತಿದ್ದುದು, “ನನಗೇನೂ ಆಗುವುದಿಲ್ಲ ಚಿಕ್ಕಮ್ಮ” ಎಂದರೂ “ಆಗುವುದು ನಿನಗಲ್ಲ, ನನಗೆ”-ಎನ್ನುತ್ತಿದ್ದುದು, ಮನೆಯಲ್ಲಿ ಚಿಕ್ಕಪ್ಪ ಇದ್ದರೂ ಕೆಲಸದ ಕಲ್ಯಾಣಿಯನ್ನು ತಾನು ಬರುವವರೆಗೂ ನಿಲ್ಲಿಸಿಕೊಳ್ಳುತ್ತಿದ್ದುದು-ಎಲ್ಲ ವಿವರಿಸುತ್ತಾ ವೃಂದಾ “ಆಕೆ ಹೀಗೇ ಅಂತೆ. ಇಲ್ಲಿದ್ದು ಹೋದವರೆಲ್ಲ; ನಿಧಾನ ಬಾಯಿಬಿಡುತ್ತಾರೆ…. ‘ವಿಚಿತ್ರ ಚಿಕ್ಕಮ್ಮ’ ಅಂತ” ಹೇಳಲು ಸುರುಮಾಡಿದರೆ ಹೇಳುತ್ತಾ ಹೋಗುವವಳು ವೃಂದಾ. “ಕಾಲೇಜಿನ ಯೂನಿಯನ್ ಡೇ ದಿನವಂತೂ ರಾತ್ರಿ ವಿಪರೀತ ತಡವಾಗಿಬಿಟ್ಟಿತು. ಗೊತ್ತಲ್ಲ ನಿನಗೇ? ಬೇಗ ಬಾ ಅಂದರೆ ಹೇಗೆ ಬರುವುದು? ಹೆದರಿ ಹೆದರಿ ಮನೆಗೆ ಬಂದೆ. ಚಿಕ್ಕಮ್ಮ ಮಲಗಿರಬಹುದು ಅಂತ ಅಂದುಕೊಂಡಿದ್ದರೆ, ಕೇಳು, ಕಲ್ಯಾಣಿಯೂ ಹೊರಟು ಹೋಗಿ ಗೇಟಿನಲ್ಲಿ ನಿಂತಿದ್ದಳು ಇವಳು ಒಬ್ಬಳೇ….ಭೂತದಂತೆ! ಸುಮ್ಮನೇ ಹೇಳುತ್ತಿಲ್ಲವೇ. ಆಕೆ ಒಂದು ಕ್ಷಣ ಆ ನಿನ್ನ ನಿಗೇಟಿವ್‌ನಲ್ಲಿ ಕಾಣುತ್ತಾರಲ್ಲ ಮನುಷ್ಯರು-ಹಾಗೇ ಕಂಡಳು! ಕಣ್ಣಲ್ಲಿ ಬೆಳಕೇ ಇಲ್ಲದ ಭೂತ! ನನ್ನನ್ನು ನೋಡಿದ್ದೇ, ಆ ಚರ್ಯೆ ಎಲ್ಲಿ ಮಾಯವಾಯಿತೋ; ತಕ್ಷಣ ಪಾಸಿಟಿವ್! “ಅಯ್ಯಬ್ಬ, ಅಂತೂ ಬಂದೆ!” ಎಂದಳು. ಒಳಗೆ ಬರುತ್ತ ಮತ್ತೆ “ಬಂದೆಯಲ್ಲ, ಅಂತೂ…” ನನಗೂ ರೇಗಿ “ಏನು ಚಿಕ್ಕಮ್ಮಾ, ಯಾರನ್ನಾದರೂ ಕಟ್ಟಿಕೊಂಡು ಹಾರುತ್ತೇನೆ ಅಂತ ಮಾಡಿದಿರಾ ಹೇಗೆ?”- +“ಅದು ಅಷ್ಟು ಸುಲಭ ಅಲ್ಲ ಬಿಡು”-ಎಂದಳು! ಅದಕ್ಕೇ ನಾನು ಹೇಳಿದ್ದು. ಇದು ವಿಚಿತ್ರದ ಚಿಕ್ಕಮ್ಮ ಅಂತ. ಈ ಚಿಕ್ಕಪ್ಪ ಬರೀ ಬೂಸು….ಪಾಪ ಜಾಸ್ತಿಯಾಯಿತು ಅವರು. ನಾನು ಅವಳ ಗಂಡ ಆಗಬೇಕಿತ್ತು. ಕುಣಿಸಿಕೊಡುತ್ತಿದ್ದೆ….” ಎಂದಳು. “ಸಧ್ಯ ಅಲ್ಲವಲ್ಲ….ದೇವರು ದೊಡ್ಡವ.” +“ಹಾಗೆಲ್ಲ ಹೇಳಬೇಡವೆ, ಅಷ್ಟು ಜೋಪಾನ ಮಾಡುವವರು ಯಾರಿರುತ್ತಾರೆ ಇವತ್ತು, ಹೇಳು.” +“ಯಾಕೆ ಇರಬೇಕು ಅಂತ? ಜೋಪಾನ ಅಂತೆ! ತನ್ನನ್ನು ಮಾಡಿಕೊಳ್ಳಲಿ. ನನ್ನನ್ನೇಕೆ?…. ಅದೇನು ಸಾಧಾರಣ ಜೋಪಾನವಲ್ಲವೇ, ಕೇಳು, ಬೇಕಾದರೆ ಇನ್ನಷ್ಟು ಖುಶಿಪಟ್ಟುಕೋ. ನಾನು ಬಂದ ದಿನದಿಂದ ನನ್ನ ಕೋಣೆಯಲ್ಲಿಯೇ ಆಕೆ ಮಲಗುವುದು. ಆ ತುದಿ ಮಂಚದಲ್ಲಿ. ಒಂದು ದಿನವಾದರೂ ಅವಳ ಕೋಣೆಗೆ ಹೋಗಿದ್ದರೆ ಹೇಳು….ನಾನೊಂದಷ್ಟು ಬೇಕಾದ ಹಾಗೆ ಮೈ ಮರೆತು ಬಿದ್ದುಕೊಳ್ಳಲೂ ಆಗದಂತೆ…. ಶ್ಯೆ! ಒಳ್ಳೇ, ಇನ್ಸ್‌ಪೆಕ್ಟರ್ ಆದಳಲ್ಲ!” +“ಹಾಗೇ ಆಗಬೇಕು ನಿನಗೆ. ಅಮ್ಮ ಅಷ್ಟು ಹೇಳಿದರೂ ನೀಟಾಗಿ ಮಲಗುವುದನ್ನು ಕಲಿಯಲಿಲ್ಲ ನೋಡು!” +“ತಡೆ ಇನ್ನೂ ಇದೆ. ನಾನೇನು ಸಣ್ಣವಳು ಅಂತ ಅವಳ ಮನಸ್ಸಿನಲ್ಲಿ ಬಹುಶಃ ಅಷ್ಟೂ ಅರ್ಥ ಆಗುವುದಿಲ್ಲವೆ ನನಗೆ ಹಾಗಾದರೆ? ಚಿಕ್ಕಪ್ಪನಾದರೂ ಏನು ತಿಳಿದುಕೊಳ್ಳಬೇಕು? ಇದೊಂದು ಪೀಡೆ ಯಾಕೆ ಬಂತಪ್ಪ ನಮ್ಮ ಮಧ್ಯೆ ಅಂತ ಅಂದುಕೊಳ್ಳುವುದಿಲ್ಲವೆ?….‘ಹೋಗಿ ಚಿಕ್ಕಮ್ಮ, ನನಗೆ ಹೆದರಿಕೆ ಇಲ್ಲ. ಒಬ್ಬಳೇ ಮಲಗಿ ಅಭ್ಯಾಸ ಇದೆ.’ ಅಂದರೂ ‘ಹೋಗುವುದಾ ಎಲ್ಲಿಗೆ? ನಾನೇನು ಈಗ ಈಗ ಮದುವೆಯಾದ ಮದುಮಗಳು ನೋಡು. ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುವುದಕ್ಕೆ’-ಎನ್ನುವಳು. ಒಮ್ಮೆಯಂತೂ…. ಅಯ್ಯಬ್ಬ ಈಗ ಎಣಿಸಿದರೂ ಮೈ ನಡುಗುತ್ತದೆ. ಗಂಟಲು ಪಸೆ ಆರುತ್ತದೆ….ನಿಜಕ್ಕೂ ನಾನಾಗಿದ್ದಕ್ಕೆ ಇಷ್ಟು ದಿನ ಕಳೆದೆ……ಹೇಗೋ ಏನೋ! ನೀನಾಗಿದ್ದರೆ….” +“ಹರಿಕಥೆ ಸಾಕು. ಏನಾಯಿತು ಹೇಳು.” +“ಏನು ಗೊತ್ತ? ಅಪರಾತ್ರಿ. ಚಿಕ್ಕಪ್ಪ ಚಿಕ್ಕಮ್ಮನನ್ನು ಮೆಲ್ಲ ಕರೆದದ್ದು ಕೇಳಿಸಿತು. ….ಆ ಸ್ವರ ಹೇಗಿತ್ತು ಅಂತಿ!…ನನಗೆ ಯಾಕಾದರೂ ನಿದ್ದೆ ಬಂದಿರಲಿಲ್ಲವೋ ದೇವರೇ! ಅವರು ಕರೆದ ರೀತಿ ಕೇಳಿ ಮೈಯೆಲ್ಲಾ ಬೆವರಿ…ಕಿವಿಗೆ ಹೊದಿಕೆ ತುಂಬಿಕೊಂಡು ಮಲಗಿಬಿಟ್ಟೆ. ಈ ಚಿಕ್ಕಮ್ಮ! ಓ ಎನ್ನಲೂ ಇಲ್ಲ. ಎದ್ದು ಹೋಗಲೂ ಇಲ್ಲ! ಚಿಕ್ಕಪ್ಪ ಊಳಗೆ ಬರುವ ಶಬ್ದ ಕೇಳಿಸಿತು. ನನಗೋ ಗಂಟಲು ಒಣಗಿ ನಿಂತಿದ್ದರೆ ಉಂಟಲ್ಲ, ಬಿದ್ದೇ ಬಿಡುತ್ತಿದ್ದೆನೇನೋ. ಮಲಗಿದ್ದ ಹೊತ್ತಿಗೆ ಬಚಾವು.” +“ಇರಲಿ ಮುಂದೆ ಹೇಳು.” +“ಏನು ಇರಲಿ?, ನಿನಗೆ ಹೇಗೆ ಗೊತ್ತಾಗಬೇಕು ನನ್ನ ಕಷ್ಟ? ಏನೇ ಹೇಳು ಅಕ್ಕ, ವಯಸ್ಸಿಗೆ ಬಂದ ಮಕ್ಕಳನ್ನು ಯಾರ ಮನೆಯಲ್ಲೂ ಬಿಡಬಾರದು…….” +ಓದಲು ಹೊರಟ ಆ ಪುಟ್ಟ ವೃಂದಾ ಎಲ್ಲಿ ಹೋದಳು? +ಅವಳ ಮಾತಿಗೆ ಬೇಕೆಂದೇ ಬೇರೆ ಮಹತ್ವ ಕೊಡದೆ ನಕ್ಕು “ಹೋಂ. ಅದಿರಲಿ ಮಾರಾಯ್ತಿ, ಏನಾಯಿತು ಹೇಳು ಒಮ್ಮೆ.” +“ನಗೆ…..ಯಾಕೆ, ನಿನ್ನ ಕರ್ಮಕ್ಕೆ! ನನ್ನ ಬಾಯಲ್ಲಿ ಮತ್ತೆ ಏನೂ ಬರುತ್ತದೆ!…..ಹ್ಞಂ. ಚಿಕ್ಕಮ್ಮ ಎದ್ದಳು. ಚಿಕ್ಕಪ್ಪನ ಹಿಂದೆ ನಡೆದಳು. ಹೋ…..ಹೋದಳು. ಇನ್ನು ಅಡ್ಡಿಲ್ಲ……” +“ಕವುಚಿ, ಆಚೆಗೊಂದು ಕಾಲು ಈಚೆಗೊಂದು ಕಾಲು ಹಾಕಿ ಬೇಕಾದ ಹಾಗೆ ಬಿದ್ದುಕೊಳ್ಳಬಹುದು ಅಂದುಕೊಂಡೆ…..” +“ಅಯ್ಯೋ, ಮಧ್ಯೆ ಮಾತಾಡಬೇಡ ಕೇಳೂ…..ನಿಂತು, ಇಬ್ಬರೂ ಏನೋ ಪಿಸಿಪಿಸಿ ಆತಾಡಿದರು. ಚಿಕ್ಕಪ್ಪ ಚಿಕ್ಕಮ್ಮನ ಕೈ ಹಿಡಿದರು. ಚಿಕ್ಕಮ್ಮ ಮೆಲ್ಲ ಕೈ ಬಿಡಿಸಿಕೊಂಡು ಅವರ ಹಿಂದೆಯೇ ನಡೆದಳು. ಚಿಕ್ಕಪ್ಪ ಬಾಗಿಲು ದಾಟಿದೊಡನೆ ಬಾಗಿಲು ಮುಚ್ಚಿ ಚಿಲಕ ಹಾಕಿ ಬಂದು ಮಲಗಿದಳು! ‘ವೃಂದಾ’ ಅಂತ ಮೆಲ್ಲ ಕರೆದಳು. ಖಂಡಿತಾ ನನಗೆ ಎಚ್ಚರವುಂಟಾ ಅಂತ ನೋಡಲಿಕ್ಕೆ. ಮಾತಾಡಿಯೇ ಬಿಟ್ಟೇನಾ ನಾನು?….ನಿದ್ದೆ ಬಂದವರಿಗಿಂತ ಜಾಸ್ತಿ ನಿದ್ದೆ ಮಾಡಿದೆ!….ಇದೇನು, ಒಮ್ಮೆಯೆಂದರೆ, ಒಮ್ಮೆ ಅಂತ ತಿಳಿಯಬೇಡವೇ….” +ಸಣ್ಣ ನಗೆಯ ನಡುವೆಯೇ ಕಂಪಿಸಿದಳು ವೃಂದಾ. +“ಇಂಥದ್ದನ್ನೆಲ್ಲ ಏನೂ ಕಾಣದೆಯೇ ಬೆಳೆದವರು ನಾವು….ಸಾಕಲ್ಲ? ಅಪ್ಪ ಅಮ್ಮನ ಹತ್ತಿರ ಇದನ್ನೆಲ್ಲ ಹೇಳುವುದು ಹೇಗೆ? ಹೇಳಿದರೆ ಪ್ರಾಯ ಬಂದದ್ದು ಹೌದು ನಿನಗೆ ಅಂತ ಬಂದ ಪ್ರಾಯ ಅಲ್ಲಿಯೇ ಕಂತಿ ಹೋಗುವ ಹಾಗೆ ಬೈಯ್ದಾರು! ಚಿಕ್ಕಪ್ಪನಿಗೆ ಹಿಂಸೆಯಾಗುತ್ತದೆ ಎಂದರೂ, ಅದೆಲ್ಲ ನಿನಗೇಕೆ, ಹೇಗೆ ಗೊತ್ತು…..ತಲೆಯಲ್ಲಿ ಇಂಥದ್ದನ್ನೆಲ್ಲ ಯೋಚಿಸುತ್ತೀಯಲ್ಲ ಕೊಳಕು! ಎಲ್ಲಿಂದ ಕಲಿತೆ? ಎಂದಾರು…..ಇಲ್ಲ, ಹೆಚ್ಚೆಂದರೆ ‘ಕಾಲೇಜು ಬಿಟ್ಟು ಮನೆಗೆ ಬಾ….” ಅಷ್ಟೆ. ಎಂತಲೇ ತುಟಿಪಿಟಿಕ್ಕೆನ್ನದೆ ದಿನಕಳೆದೆ…..” +“ಇಂತಹ ಚಿಕ್ಕಮ್ಮನ ಮನೆ ನಾನು ಬಿಡುತ್ತಿದ್ದಂತೆ ನೀನು ಬಂದೆಯಲ್ಲ! ಗ್ರಹಚಾರ” ಎಂದು ಹೇಳುವ ಬದಲು ಇಷ್ಟೆಲ್ಲ ಹೇಳಿದಳು ವೃಂದಾ. “ಇದನ್ನು ಅವಳ ಒಳ್ಳೆಯತನ ಎನ್ನುತ್ತೀಯಾ? ಖಂಡಿತ ಅಲ್ಲ ನನ್ನ ಅಕ್ಕ…..” ಎಂದು ನಾಟಕೀಯವಾಗಿ ಹೇಳಿ ಚಾಳಿಸಿದಳು. +“ನೀನು ಜೋರಾಗಿದ್ದೀ!”- +ನಾನು ಬಂದರೂ ವೃಂದಾ ಜೊತೆ ನಾನಿದ್ದರೂ ತುದಿ ಮಂಚ ಬಿಡಲಿಲ್ಲ ಚಿಕ್ಕಮ್ಮ. “ಪರವಾಗಿಲ್ಲ ಚಿಕ್ಕಮ್ಮ. ನೀವು ನಿಮ್ಮ ಕೋಣೆಗೆ ….”ಎನ್ನುವುದರೊಳಗೆ “ಏನು, ಈ ಪಿಡ್ಡಿ ಹೇಳಿಕೊಟ್ಟಳಾ ಹೀಗೆ ಹೇಳು ಅಂತ?….ನನ್ನ ಕೋಣೆ ಇರುತ್ತದೆ. ಎಲ್ಲಿಗೆ ಹೋಗುತ್ತದೆ?….” ಎಂದು ಮೃದುವಾಗಿ ಸುರುಮಾಡಿದವಳು “ನಾನು ಇಲ್ಲಿಯೇ, ಡೋಂಟ್ ವರಿ”-ಎಂದಳು. ನಿರ್ಧಾರ ಮಾಡಿಕೊಂಡವರ ಹಾಗೆ. (ವಿಶೇಷವಾಗಿ ಒತ್ತಿ ಹೇಳಬೇಕು ಅಂದಾಗೆಲ್ಲ ಹೀಗೇ ಚಿಕ್ಕಮ್ಮ; ಸುಲಭಕ್ಕೆ ಸಿಗುವ ಇಂಗ್ಲಿಷ್ ಶಬ್ದ ಪ್ರಯೋಗಿಸುತ್ತಾಳೆ ಎಂಬುದಕ್ಕೆ ಇದೊಂದು ಉದಾಹರಣೆ ಇರಲಿ) ನಿರ್ಧಾರ ಮಾಡಿಕೊಂಡವರ ಎದುರು ಚರ್ಚೆ ನಡೆಯುವುದಿಲ್ಲ. ಆದರೂ ಹೀಗೆ ಮನೆಯಲ್ಲಿ ನಮ್ಮಂಥವರನ್ನು ಉಳಿಸಿಕೊಳ್ಳುವುದೇಕೆ?….ಮತ್ತೆ ಉಸಿರುಗಟ್ಟಿಸುವುದೇಕೆ? +‘ಬೆಸ್ಟ್ ಆಫ್ ಲಕ್’-ಎನ್ನುತ್ತಾ ಹೊರಟು ಹೋದಳು ವೃಂದಾ. ಆಕೆ ಹೇಳಿದಂತೆ ಈಗ ನನ್ನ ಪಾಳಿ. ತಡವಾಗಿ ಬರುವಂತಿಲ್ಲ. ಎಲ್ಲಿಯೂ ಒಂದು ರಾತ್ರಿಯೂ ಉಳಿಯುವಂತಿಲ್ಲ. ಹಾಗೆಂತ ಸಿಟ್ಟು ಸೆಡ ಅನುಮಾನದ ಸುಳಿವು ಸಹ ಚಿಕ್ಕಮ್ಮನಲ್ಲಿ ಕಾಣಿಸುವುದಿಲ್ಲ. ಹಾಗೇನಾದರೂ ಇದ್ದಲ್ಲಿ ದಾರಿ ಸುಗಮವಾಗುತ್ತಿತ್ತು. ಎರಡು ಮಾತು ಚಕಮಕಿಗಳಲ್ಲಿ ಎಲ್ಲ ಮುಗಿಸಬಹುದಿತ್ತು. ಮನೆಗೆ ಹೋಗಿ ಚಿಕ್ಕಮ್ಮ ಹಾಗೆಂದಳು, ಹೀಗೆಂದಳು, ನಾನಿರಲಾರೆ ಅಲ್ಲಿ-ಅಂತ ಹೇಳಿ ನಂಬಿಸಲು ಸಾಧ್ಯವಿತ್ತು. ಆದರೆ ಹಾಗೆಲ್ಲ ಹಿಡಿತಕ್ಕೆ ಸಿಗದ ಚಿಕ್ಕಮ್ಮ, ವೃಂದಾ ಹೇಳಿದಂತೆ ಈಗಿರುವ ರೀತಿಯನ್ನು ಮನೆಯಲ್ಲಿ ಹೇಳಿದರೆ ಚಿಕ್ಕಮ್ಮನ ಕಾಳಜಿ ಕುರಿತೇ ಭಾಷಣ ಕೇಳಬೇಕಾದೀತು ಹೊರತು ನಮ್ಮ ಸ್ವಾತಂತ್ರ್ಯ ಹರಣದ್ದಲ್ಲ. +ನಾನೋ, ಒಮ್ಮೊಮ್ಮೆ ಮನೆಗೆ ಬರುವುದು ಅನಿವಾರ್ಯವಾಗಿ ತಡವಾಗಿಯೇ ಆಗುತ್ತಿತ್ತು. ಸಮಾರಂಭ, ಗೋಷ್ಠಿ, ಸಂಕಿರಣ, ಅವಘಡ-ಅದೂ ಇದೂ….ಚಿಕ್ಕಮ್ಮ ಹೇಳಿದಂತೆ ಎಷ್ಟೋ ಸಲ ‘ಆಗಹೋಗದ್ದೇ’. ವರದಿ ಎನ್ನುವುದೇ ಹಾಗೆ ತಾನೆ? ಇಷ್ಟವಿರಲಿ, ಇಲ್ಲದಿರಲಿ, ಅದು ಸುದ್ದಿಯೆಂದ ಮೇಲೆ ವರದಿ ಮಾಡಬೇಕು. ಯಾರೋ ಬರೆದುಕೊಟ್ಟ ಭಾಷಣವನ್ನು ಭಾಷಣಕಾರ ಅರ್ಥಾರ್ಥ ತಿಳಿಯದೆ ಓದಿದರೂ ಅದು ಓದಿದವರ ಮಾತೆಂದು ವರದಿ ಮಾಡಬೇಕು. ಪ್ರಶ್ನೆ ತರ್ಕಗಳೆಲ್ಲ ಆಮೇಲಿನವು. ಯಾವುದೋ ಮೂರನೇ ದರ್ಜೆ ಚರ್ಚೆ, ಸಂಕಿರಣ ಯಾವುದನ್ನೂ ಬಿಡುವಂತಿಲ್ಲ. ಒಮ್ಮೊಮ್ಮೆ ಯಾಕಾದರೂ ಈ ಕೆಲಸಕ್ಕೆ ಬಂದೆ? ಸುಮ್ಮನೆ ಮನೆಯಲ್ಲಿ ಕುಳಿತು ನನ್ನಷ್ಟಕ್ಕೇ ಏನಾದರೂ ಓದಿಕೊಂಡು ಬರೆದುಕೊಂಡು ಇದ್ದರೂ ನನ್ನ ಮಟ್ಟಿಗಾದರೂ ನಾನು ಅರ್ಥಪೂರ್ಣವಾಗಿರುತ್ತಿದ್ದೆನೇ-ಅಂತ ಅನಿಸುತ್ತಿತ್ತು. ಅಂದರೆ ಯಾವತ್ತೂ ಹೀಗೇ ಅಂತಲ್ಲ. ವರದಿಯೂ ಅರ್ಥಪೂರ್ಣವಾಗಲು ಸಾಧ್ಯ. ವರದಿಯಿಂದಲೂ ಅರ್ಥಪೂರ್ಣವಾದ ಬದಲಾವಣೆಯೋ, ಎಚ್ಚರವೋ ಘಟಿಸಲು ಸಾಧ್ಯ ಎಂಬುದೂ ಯಾವ ವರದಿಗಾರರ ಅನುಭವಕ್ಕೆ ಬರುವುದಿಲ್ಲ? ಹೀಗೆ ಎರಡು ಬಗೆಯ ಜಗ್ಗಾಟ ಸೆಳೆತಗಳಲ್ಲಿ ಸಾಗುತ್ತಿದ್ದ ಜೀವನವನ್ನು ಈ ವಿಚಿತ್ರ ಚಿಕ್ಕಮ್ಮ ಆವರಿಸಿದ್ದಾಳೆ. ರಾತ್ರಿ ಸಹಜವಾಗಿ ತಡವಾಗಿ ಬಂದರೂ ಗೇಟಿನ ಬಳಿ ನಿಂತೇ ಇರುತ್ತಾಳೆ. ವೃಂದಾ ಹೇಳಿದ್ದು ಸುಳ್ಳಲ್ಲ. ಥೇಟ್ ನಿಗೆಟಿವ್‌ನಲ್ಲಿ ಕಾಣುವ ಮನುಷ್ಯಾಕೃತಿಯಂತೆಯೇ. ನಿಸ್ತೇಜದ ಜೊತೆಗೆ ಎದ್ದು ಕಾಣುವ ವಿಹ್ವಲತೆ. ನಮ್ಮನ್ನು ಹೀಗೆ ಜೊತೆಯಲ್ಲಿ ಇರಿಸಿಕೊಳ್ಳುವುದು ಏಕೆ; ಅತಿಯಾದ ಜವಾಬ್ದಾರಿಯೆಂಬತೆ ನಲುಗುವುದೇಕೆ? ನನ್ನನ್ನು ನೋಡಿದ್ದೇ ಆ ಚರ್ಚೆಯೇ ಬದಲಾಗಿ ಅವಳು ಹಗುರವಾಗಿದ್ದು ಗೋಚರವಾಗುತ್ತದೆ.-ವೃಂದಾ ಇದನ್ನು ಕೂಡಾ ಹೇಳಿದ್ದಳಲ್ಲ! ಪ್ರೀತಿಯ ವೃಂದಾ, ನೀನು ಸೂಕ್ಷ್ಮಮತಿ ಆಗಿದ್ದು ಹೌದು ಅಂತ ಕಾಗದ ಬರೆದದ್ದಕ್ಕೆ “ನೀನು ಮಾತ್ರ ಮಂದಮತಿ. ತಿಳಕೊ. ನಾನು ಅಷ್ಟು ಹೇಳಿಯೂ, ಸಂಪಾದಿಸುವ ಶಕ್ತಿ ಇದ್ದೂ, ಅಪ್ಪ ಹೇಳಿದ್ದು ಅಂತ ಇನ್ನೂ ಅವರ ಮನೆಯಲ್ಲಿ ಇದ್ದೀಯಲ್ಲ! ಹಾಸ್ಟೆಲಿಗೆ ನಡೆ. ಅವರಿಬ್ಬರು ಅವರಷ್ಟಕ್ಕೆ ಇರಲಿ. ಏನೆಂದುಕೊಂಡಿದ್ದಾಳೆ ಚಿಕ್ಕಮ್ಮ? ಅವಳ ಮನೆಯಲ್ಲಿರುವ ನಾವು ಹಸುಗೂಸುಗಳೆಂದೇ?….” ವೃಂದಾಳ ಮಾತಿನಂತೆಯೇ ಪತ್ರವೂ, ಸುರುಮಾಡಿದರೆ ಮುಕ್ತಾಯ ಕಷ್ಟ. ಓದಲು ಬಿಡುವು ಬೇಕು. +…..ಹ್ಞಾಂ. ನನ್ನನ್ನು ನೋಡಿದ್ದೇ ಆ ಚರ್ಚೆಯೇ ಬದಲಾಗಿ ಹಗುರಾಗುತ್ತಿದ್ದಳು. ಒಳಗೆ ಬಂದರೆ ಚಿಕ್ಕಪ್ಪನೋ, ಸ್ವಸ್ಥ ನಿದ್ದೆ ಗೊರೆಯುವುದು ಕೇಳಿಸುತ್ತಿತ್ತು. ಚಿಕ್ಕಪ್ಪನ ನಿಶ್ಚಿಂತೆಯಲ್ಲಿ ಒಂದು ಪಾಲನ್ನೂ ಇವಳು ಸಂಸರ್ಗದಿಂದಲಾದರೂ ಪಡೆಯಲಿಲ್ಲವಲ್ಲ! +ಪಾಪ. ಚಿಕ್ಕಪ್ಪ ಒಂದು ರೀತಿಯಲ್ಲಿ ಎಮ್ಮೆ ತಮ್ಮಣ್ಣನೇ. ಊಟ ತಿಂಡಿ ಗಡದ್ದು ಆಗಿಬಿಟ್ಟರೆ ಮತ್ತೆ ಸುದ್ದಿಯಿಲ್ಲ. “ಮುಂಚಿನಿಂದಲೂ ಅಷ್ಟೆ. ರುಚಿರುಚಿಯಾಗಿ ಉಂಡು ತಿಂದು ಖುಶಿಪಡುವವ. ಅವನಿಗೆ ಅಟ್ಟು ಹಾಕದವರು ಪಾಪಿಗಳು…..” ಎನ್ನುತ್ತಿದ್ದರು ಅಜ್ಜಿ. ಒಳ್ಳೆಯ ಅಡುಗೆ ಮಾಡುವ ಹುಡುಗಿಯನ್ನೇ ಹುಡುಕಿ ಮಗನಿಗೆ ತಂದುಕೊಂಡು ಗೆದ್ದೆ ಎಂದವರು. ಚಿಕ್ಕಪ್ಪನ ಪ್ರಶ್ನೆಗಳಾದರೂ ಅಷ್ಟೆ. ಪಟ್ಟಿ ಮಾಡಬಹುದು. ಎಲ್ಲಿಯೂ ಅಧಿಕವಿಲ್ಲ. ಆಯ್ತಾ ಊಟ? ನಿದ್ದೆ ಬಂತಾ? ಸೊಳ್ಳೆ ಇತ್ತಾ? ಊಟಕ್ಕೆ ಬಾ. ತಿಂಡಿಗೆ ಬಾ. ಇನ್ನೊಂದು ಸ್ವಲ್ಪ ಹಾಕಿಕೋ ಏನಂತೆ ವರದಿಗಾರ್ತಿಯ ವಿಶೇಷ ವರದಿ?- ಹೀಗೇ. ಬೆಳಿಗ್ಗೆ ತಿಂಡಿ ತಿಂದು ಆಫೀಸಿಗೆ ಹೋದರೆ ಸಂಜೆಗೆ ಬರುವರು. ಏನಾದರೂ ಹೇಳಲು ಇದ್ದೇ ಇರುತ್ತದೆ. ಊರ ಮೇಲಿನ ವಿಚಾರ. ಹೇಳುವರು. ಚಿಕ್ಕಮ್ಮನೂ ಆಸ್ಥೆ ತೋರಿಸಿ ಕೇಳುವಳು. ಮನೆವಾರ್ತೆ ವಿಚಾರ ಚಿಕ್ಕಮ್ಮನಿಗೂ ಇರುತ್ತದೆ ಹೇಳಲು. ಮೊನ್ನೆ ತಂದ ಬೇಳೆ ಚೆನ್ನಾಗಿಲ್ಲ ಎಂದೋ, ಅಕ್ಕಿ ಬಹಳ ಚೆನ್ನಾಗಿದೆ ಅದನ್ನೇ ಇನ್ನೂ ಸ್ವಲ್ಪ ತಂದು ಬಿಡಿ, ಇಲ್ಲವಾದರೆ ಅಂಗಡಿಯಲ್ಲಿ ಖರ್ಚಾಗಿಹೋದೀತು ಎಂದೋ, ತೋಟ ಚೊಕ್ಕಮಾಡಲು ಬರುತ್ತೇನೆ ಎಂದಾತ ಬರಲೇ ಇಲ್ಲವೆಂದೋ, ಕಲ್ಯಾಣಿಗೆ ಸಂಬಳವೆಂದೋ…. +ಇಬ್ಬರೂ ಶಾಂತವಾಗಿ ಹೇಗೆ ಮಾತಾಡಿಕೊಂಡಿರುತ್ತಾರೆ. ಮಾತಿನ ಸಖ್ಯವೆಂಬುದು ಹೀಗೇ ಎಂದು ಮಾದರಿ ತೋರಿಸುವಷ್ಟು, ಅಪ್ಪ-ಅಮ್ಮ ಒಂದು ದಿನವಾದರೂ ಹೀಗೆ ಮಾತಾಡುತ್ತ ಕುಳಿತದ್ದನ್ನು ನಾನಂತೂ ಕಂಡಿರಲಿಲ್ಲ. ಅದೂ ಇದೂ ಪಟ್ಟಾಂಗ ಹೊಡೆದು ರಾತ್ರಿ ಊಟ ಮಾಡಿ ಹಾಸಿಗೆ ಮೂಸಿದರೆಂದರೆ ನಿದ್ದೆಯೇ ಚಿಕ್ಕಪ್ಪನಿಗೆ. ನಿದ್ದೆ ಅಂದುಕೊಳ್ಳುತ್ತೇನೆ. ವೃಂದಾ ಹೇಳಿದ ಪ್ರಕರಣ ಕೇಳಿದರೆ ಈ ನಿದ್ದೆ ಎಷ್ಟು ಹೊತ್ತಿಗೆ ಎಚ್ಚರಾಗುತ್ತದೇ, ಎಷ್ಟು ಹೊತ್ತಿಗೆ ಹಂಬಲವಾಗುತ್ತದೋ…..! ಅವಳು ಹೇಳಿದ್ದು ಸಧ್ಯ, ನನ್ನ ಅನುಭವಕ್ಕಿನ್ನೂ ಬಂದಿಲ್ಲ. ಬಂದು ತಿಂಗಳಷ್ಟೇ ಆಗಿದ್ದಕ್ಕೋ, ಅಥವಾ ನಾನು ದೊಡ್ಡವಳು ಎಂಬ ಹಿಂಜರಿಕೆಯೋ…..ಅಥವಾ…..ಮೈ ಮರೆತು ನಿದ್ದೆ ಬಂದ ಹೊತ್ತಿನಲ್ಲಿ…..ಏನಂದರೂ ನಾನಿಲ್ಲಿರುವುದು ಸರಿಯಲ್ಲ. ಉಪಾಯದಿಂದ ಜಾರಿಕೊಳ್ಳಬೇಕು. “ಚಿಕ್ಕಮ್ಮಾ, ಯಾಕಾದರೂ ಹೀಗೆ ಮಾಡಬೇಕು? ಜೊತೆಗಿರುವ ನಮ್ಮನ್ನು ಅಡಕತ್ತರಿಗೆ ಸಿಕ್ಕಿಸಿಡಬೇಕು? ಚಿಕ್ಕಪ್ಪ ಪಾಪದವರು. ಏನೂ ಹೇಳದೇ ಇರುತ್ತಾರೆ ನಿಜ. ಆದರೆ ನಿನ್ನದು ಜವಾಬ್ದಾರಿಯ ಗೀಳು; ಅತಿಯಾಯಿತು. ನಮಗೇನೂ ಸೂಕ್ಷ್ಮವಿಲ್ಲ ಅಂದುಕೊಂಡೆಯಾ? ಒಂದೋ ನೀನು ನಿನ್ನ ಕೋಣೆಗೆ ಹೋಗು; ಇಲ್ಲ ನಾನೇ ಹಾಸ್ಟೆಲಿಗೆ ಹೋಗುತ್ತೇನೆ….”ಎಂದು ಹೇಳಿಬಿಡಬೇಕು ಒಮ್ಮೆ. ಕಾದು, ಒಂದು ದಿನ ಹೇಳಿ, ಹೊರಟು ಬಿಡಬೇಕು. +-ಅಂದುಕೊಳ್ಳುತ್ತ ಹೇಳುವ ಒಕ್ಕಣೆಯನ್ನು ಮನದಲ್ಲಿಯೇ ರಚಿಸಿ ಅಳಿಸಿ ಹಾಕುತ್ತ ದಿನಗಳು ಕಳೆದು ಹೋದವು. ನಾಲ್ಕು ದಿನ ರಜೆ ಹಾಕಿ ಎಲ್ಲಿಗಾದರೂ ಹೋಗಿ ಬಂದರೆ ಹೇಗೆ? ಮನಸ್ಸು ತುಸು ಪ್ರಪುಲ್ಲವಾಗುತ್ತದೆ. ಹೇಳಬೇಕಾದ ಮಾತು ಹೆಚ್ಚು ಕಷ್ಟವೆನಿಸುವುದಿಲ್ಲ. ಮನೆಯಿಂದ ಹೊರಗಿದ್ದ ಕಾಲದ ಏಕಾಂತದಲ್ಲಿ ಚಿಂತಿಸುವ ಫಲವಾಗಿ ಅಪ್ಪ-ಅಮ್ಮನ ಹತ್ತಿರ ಹೇಳಲೂ ಧೈರ್ಯವಾಗುತ್ತದೆ, ಸುಲಭವೂ ಆಗುತ್ತದೆ…… +“ಚಿಕ್ಕಮ್ಮಾ, ರಜೆ ಹಾಕಿದ್ದೇನೆ. ನಾಕು ದಿನ ಒಂದು ಸಣ್ಣ ತಿರುಗಾಟಕ್ಕೆ ಹೋಗಿ ಬರುತ್ತೇನೆ.” ಎಂದೆ. +ತಕ್ಷಣ “ಎಲ್ಲಿಗೆ?” +“ಹೀಗೇ, ನನ್ನಷ್ಟಕ್ಕೇ ಒಂದು ಕ್ಯಾಮರಾ ಹಿಡಿದುಕೊಂಡು ಕಳಸ ಹೊರನಾಡು ಎಲ್ಲ ಸುತ್ತಿಬರುತ್ತೇನೆ. +“ಒಬ್ಬಳೇ?…” +ನನ್ನ ತಪ್ಪು ಕೂಡಲೇ ಅರಿವಾಯಿತು. ತಿಳಿದೂ ಜಾಣ್ಮೆಯ ಉತ್ತರ ಹೇಳಲಿಲ್ಲವಲ್ಲ. ಒಮ್ಮೊಮ್ಮೆ ಹೀಗೇ ತಾನೆ? ಮಿದುಳು ಕೆಲಸವನ್ನೇ ಮಾಡುವುದಿಲ್ಲ. ಅಥವಾ ವ್ಯತಿರಿಕ್ತವಾಗಿ ಕೆಲಸ ಮಾಡುತ್ತದೆ. ಇಲ್ಲವಾದರೆ ಸೀದಾ ಹುಡುಗಿಯೇನೂ ನಾನಲ್ಲ. ಸತ್ಯಂಭಟ್ಟೆಯಂತೆ ಯಾಕೆ ಪೂರ್ತಿ ನಿಜ ಹೇಳಬೇಕಿತ್ತು? +“ನಾನು ಬರುತ್ತೇನೆ ನಡೆ. ಒಬ್ಬಳೇ ಹೋಗುತ್ತಾಳಂತೆ….ಒಬ್ಬಳೇ….!” +“ಇಲ್ಲ ಇಲ್ಲ ಚಿಕ್ಕಮ್ಮ. ಸುಮ್ಮನೆ ಹೇಳಿದೆ. ಪುಕ್ಕಿ ನಾನೆಲ್ಲಿ ಒಬ್ಬಳೇ ಹೋಗುತ್ತೇನೆ? ನಾವು ನಾಲ್ಕೈದು ಜನ ಸ್ನೇಹಿತೆಯರು (ಸ್ನೇಹಿತರು ಎಂದರೆ ಮತ್ತೆ ‘ಬರುತ್ತೇನೆ’ ಎಂದಾಳು) ಒಟ್ಟಾಗಿ ಹೋಗಿಬರುವುದು. ಒಬ್ಬಳೇ ತಿರುಗುವ ಧೈರ್ಯ, ಸಧ್ಯ, ನನಗೆ?” +* +* +* +“ಬೇಗ ಬಾ. ನಾಲ್ಕು ದಿನಗಳಿಗಿಂತ ಹೆಚ್ಚು ಇರಬೇಡ.”-ಕೂಗಿ ಹೇಳಿದಳು ಚಿಕ್ಕಮ್ಮ. +ಇದು ಎಷ್ಟನೆಯ ಸಲವೋ. +ತಿರುವಿನಲ್ಲಿ ಆಟೋದಿಂದ ಇಣುಕಿದರೆ ಒಳಗೆ ಹೋಗದೆ ಗೇಟಿನ ಬಳಿ ನಿಂತೇ ಇದ್ದಳು. ಪ್ರೀತಿಯಿಂದ ಜೋಪಾನ ಮಾಡುವ ಚಿಕ್ಕಮ್ಮ. ಪ್ರೀತಿಯ ಚಿಕ್ಕಮ್ಮ, ಪ್ರೀತಿ ವಿಷ ಮಾಡಬೇಡವೆ….ದೂರ ಹೋಗುತ್ತಿದ್ದಂತೆ ಅವಳ ಬಗ್ಗೆ ಮನಸ್ಸು ಮೃದುಗೊಳ್ಳುತ್ತ ಹೋಯಿತು. ಒಂದೇ ಒಂದು ದಿನ ಬೇಸರ ಮಾಡಿಕೊಳ್ಳದೆ ಒಂದೂ ಬಿರು ನುಡಿಯದೆ ಒಂದು ದಿನವೂ ಬಸ್ಸು ತಪ್ಪಿಸದೆ ಹೊತ್ತುಹೊತ್ತಿಗೆ ಸರಿಯಾಗಿ ತಿಂಡಿ ಅಡಿಗೆ ಮಾಡಿ ಹಾಕಿದಳಲ್ಲ! ಕಾಯುವ ಕೆಲಸವೊಂದನ್ನು ಬಿಟ್ಟಿದ್ದರೆ… +ಮತ್ತೆ ಇಣುಕಿದೆ. ಇನ್ನೂ ನಿಂತೇ ಇದ್ದಳು. ಅರೆ! ತಬ್ಬಲಿ ಕರುವಿನ ಹಾಗೆ ಕಾಣುತ್ತಿದ್ದಾಳೆ! ಮನಸ್ಸು ತನ್ನ ಮೂಗಿನ ನೇರಕ್ಕೇ ಎಲ್ಲವನ್ನೂ ನೇಯುತ್ತಾ ಹೋಗುತ್ತಿಲ್ಲ ತಾನೆ? +* +* +* +ನಾಲ್ಕು ದಿನವೆಂಬುದು ನಾಲ್ಕು ಗಳಿಗೆಯಂತೆ ದಾಟುತ್ತಿದೆ. ಪ್ರಕೃತಿ ಸಾನ್ನಿಧ್ಯವೆಂಬುದೇ ಹಾಗೆಯಷ್ಟೆ. ಕಾಲಬಾಧೆಯಿಂದ ಮುಕ್ತವಾದದ್ದು. ಬಾಡಿದ ಜೀವಕ್ಕೆ ಹೊಸ ಉಸಿರು ಜೋಡಿಸುವಂತಹದು. ಮತ್ತೆ ಜಗತ್ತಿಗೆ ಮರಳಿ ಜೀವನದೆದುರು ನಿಲ್ಲಲು ಕೈಕಾಲಿಗೆ ತ್ರಾಣ ನೀಡುವಂಥದು. ಕಳಸ ಹೊರನಾಡು ಸುತ್ತಮುತ್ತಣ ಪ್ರಾಕೃತಿಕ ನಿಲುವೇ ಈ ರೀತಿಯದು! ಜೊತೆಗೆ ಕ್ಯಾಮರಾ ಇತ್ತು. ನೋಡಿ ಗ್ರಹಿಸುವುದಷ್ಟೇ ಅಲ್ಲ; ಮನಸ್ಸನ್ನೂ ಕ್ಯಾಮರಾ ಆಲಿಸುತ್ತದೆ ಎಂಬುದು ಅರಿವಾಗಲು ಅದರ ಜೊತೆಗೆ ಒಬ್ಬರೇ ತಿರುಗಾಟ ಹೊರಡಬೇಕು…..ವೃಂದಾ, ಹೀಗೆಲ್ಲ ಹೇಳಿದರೆ, ಏನೆಂದಾಳು? ‘ಸರಿಯೆ. ನನಗೂ ಒಂದು ಕ್ಯಾಮರಾ ತೆಗೆಸಿಕೊಡು ಮತ್ತೆ!’ ಎಂದಾಳು. ಹಾಂ ಹಾಂ ಹುಡುಗೀ, ಒಂದು ಕ್ಯಾಮರಾ ತೆಗೆದುಕೊಳ್ಳಲು ನಾನೆಷ್ಟು ಆಸೆಪಟ್ಟೆ. ಕೊಂಡುಕೊಳ್ಳಬೇಕಾದರೆ ನನಗೇ ಕೆಲಸ ಸಿಗಬೇಕಾಯಿತು……ಇನ್ನೂ ನಾನು ತೆಗೆದುಕೊಂಡಿದ್ದು ಅಪ್ಪನಿಗೆ ಗೊತ್ತಿಲ್ಲವೇ. ಗೊತ್ತಾದರೆ ಅದೇ ರಾಮಾಯಣವಾಗುತ್ತದೆ. ದುಡ್ಡೆಲ್ಲ ಫಿಲ್ಮಿಗೆ ಹಾಕಿ ದಂಡಮಾಡುತ್ತಾಳೆ, ಮದುವೆಗೆ ಉಳಿಸುವುದಿಲ್ಲ ಅಂತೆಲ್ಲ, ಗೊತ್ತಲ್ಲ? ವೃಂದಾ, ನಿನಗೆ ಹಾಗಲ್ಲ. ಕೆಲ ತಿಂಗಳು ಹೋಗಲಿ. ನಾನೇ ಒಂದು ಕ್ಯಾಮರಾ ತೆಗೆಸಿಕೊಡುತ್ತೇನೆ. ಒಂದು ಕಂಡಿಶನ್. ನೀನು ಸಂಪಾದನೆಗಿಳಿದ ಮೇಲೆ ನೀನು ಇನ್ನೊಬ್ಬಳಿಗೆ ತೆಗೆಸಿಕೊಡಬೇಕು……ಒಂದು ಹದದಲ್ಲಿ ಫೋಟೋ ತೆಗೆಯುವ ಅಭ್ಯಾಸ ಮಾಡಿಕೋಬೇಕು…….ಕ್ಯಾಮರಾ ಕೇಳುತ್ತಿತ್ತು, ನಗುತ್ತಿತ್ತು. ನಡುನಡುವೆ ಕ್ಲಿಕ್‌ಕ್ಲಿಕ್ ಎನ್ನುತ್ತಿತ್ತು. ದೃಶ್ಯ-ದೃಶ್ಯಾರ್ಥ ಗ್ರಹಿಸುವಂತೆ ಒಳಮನಸ್ಸಿನಲ್ಲಿ ಮಾತು-ಮಾತಿನ ಪದಾರ್ಥವನ್ನು ಗ್ರಹಿಸಿದೆ ಎನ್ನುವಂತೆ…… +ನಾಲ್ಕು ದಿನ ಹಾರಿದ್ದೇ ತಿಳಿಯಲಿಲ್ಲ. ದಿನಗಳು ಹಕ್ಕಿಯಂತೆ ಹಾರುತ್ತವಲ್ಲ! ರೆಕ್ಕೆ ಕಾಣಿಸದೆ, ಪಟಪಟ ಕೇಳಿಸದೆ. ದಿನಗಳು ಹಾರುವ ಪರಿಯೇ ಕಾವ್ಯ. ಕಾವ್ಯವೆಂದರೆ ಮತ್ತಿನ್ನೇನು? ದೈನಂದಿನ ಲೌಕಿಕದ ಒಡಲೇ. +* +* +* +ಮನೆ ತಲುಪಿದ ಮೇಲೆ ರೂಮೋ ಹಾಸ್ಟೆಲೋ ವ್ಯವಸ್ಥೆ ಮಾಡಿಕೊಳ್ಳುವುದು. ಚಿಕ್ಕಪ್ಪ ಚಿಕ್ಕಮ್ಮರೊಡನೆ ನಿಧಾನವಾಗಿ ಹೇಳಬೇಕಾದ್ದು ಹೇಳಿ ಪೆಟ್ಟಿಗೆ ಕಟ್ಟುವುದು. ಬೇಡವೆಂದರೆ ಕೇಳಲು ಸಣ್ಣ ಹುಡುಗಿಯೇನಲ್ಲವಲ್ಲ ನಾನು? ಯಾರ ಮನೆಯಲ್ಲಿದ್ದರೂ ಒಂದೋ ನಮ್ಮ ಸ್ವಾತಂತ್ರ್ಯ ಹಾನಿ ಇಲ್ಲ, ಅವರ ಸ್ವಾತಂತ್ರ್ಯ ಹಾನಿ ಅಂತ ಇಷ್ಟು ದೊಡ್ಡವರಾದ ನಿಮಗೂ ತಿಳಿಯುವುದಿಲ್ಲವೇನಪ್ಪಾ ಅಂತ ಅಪ್ಪನನ್ನೇ ಕೇಳಿ ತುಸು ಎಚ್ಚರ ಹುಟ್ಟಿಸಬೇಕು. ಎಚ್ಚರಾಗುವಂತೆ ಮಾತಾಡಲು ಇನ್ನೂ ಬರದಿದ್ದರೆ! +ಬಂದಿಳಿಯುವಾಗ ಸಂಜೆಯಾಗಿತ್ತು. +“ಬಂದರಲ್ಲ ಅಮ್ಮ!”-ಕಲ್ಯಾಣಿಯ ಸ್ವರ ಕೇಳಿಸಿತು. ಆಟೋದವನಿಗೆ ದುಡ್ಡು ಕೊಟ್ಟೂ ಇತ್ತ ತಿರುಗುತ್ತೇನೆ, ಚಿಕ್ಕಮ್ಮ. ಮೆಟ್ಟಿಲಿಳಿದು ಬರುತ್ತಿದ್ದಾಳೆ. ಬಾಗಿಲು ದಾರಂದಕ್ಕೆ ಎರಡೂ ಕೈ ಆನಿಸಿ “ಹೋ ಬಂದೆಯಾ?” ಎಂದರು ಚಿಕ್ಕಪ್ಪ. ಅವರ ಪಟ್ಟಿಯೊಳಗಿನ ಒಂದು ಪ್ರಶ್ನೆ! ನಗೆ ಬಂತು. ಅವರೂ ನಗುತ್ತಿದ್ದಾರೆ!….ವ್ಹಾರ್ರೆ ವ್ಹಾ! ಏನು ಸರದಾರ ನಗೆ! (ವೃಂದಾಳ ಮಾತು ಕೇಳಿ ಕೇಳಿ ಖಿಲಾಡಿಯಾಗಿದೆ ಮನಸ್ಸು. ತಿಳಿಯುವುದಿಲ್ಲವೆ ನನಗೆ? ಅದರ ಕುಚೋದ್ಯಕ್ಕೆ ಗಮನವೇ ಕೊಡಬಾರದು. ಏನಂತಹ ಸರದಾರ ನಗೆ ಇದೆ ಅದರಲ್ಲಿ? ಚಿಕ್ಕಪ್ಪ ಗೆಲುವಾಗಿದ್ದಾರೆ. ತುಸು ಕಣ್ಣಿಗೆದ್ದು ಕಾಣುವಂತೆ- ಅಷ್ಟೇ.) +“ಕಲ್ಯಾಣೀ, ಅವಳ ಬ್ಯಾಗು ತಗೋ. ಒಳಗಿಡು.” ಎಂದಳು ಚಿಕ್ಕಮ್ಮ. ಸಂಜೆಗತ್ತಲಿಗೆ ಮ್ಲಾನತೆಯ ಗುಣವಿದೆಯೇ?….ತಲೆ ಕೀಸಿ ಬಾಚಿಕೊಂಡು ಹೂ ಮುಡಿದು ನಿಂತ ಚಿಕ್ಕಮ್ಮ…..ಚಿಕ್ಕಮ್ಮನಾಗಿರಲೇ ಇಲ್ಲ!” ಬಾ….ಬಾ….ಅಂತೂ ಬಂದೆ!” ……ನನ್ನ ಕಣ್ಣು ತಪ್ಪಿಸುತ್ತಿದ್ದಾಳೆ! ಏನು, ಏನಿರಬಹುದು?…..ಏನಾಯಿತು ಚಿಕ್ಕಮ್ಮ…. +ತಪ್ಪಿಸಿಹೊರಳುತ್ತಿದ್ದ ಅವಳ ಕಣ್ಣು ನನ್ನನ್ನು ಚುರುಕಾಗಿ ದಾಟಿ ಹೋಗುತ್ತಿತ್ತು. ಅದು ಹಾದು ಹೋಗುವುದರೊಳಗೆ ಕಂಡ ಚೂರು ಚೂರಿನಲ್ಲಿಯೇ ದೃಷ್ಟಿ ನೆಟ್ಟು ನೋಡಿದೆ. ಅಲ್ಲಿ- ಚಿಕ್ಕಮ್ಮ ಇರಲೇ ಇಲ್ಲ! ಅಲ್ಲಿರುವವಳು ಅವಳಲ್ಲ…..ಚಿಕ್ಕಮ್ಮನಲ್ಲ!…..ಬಳಲಿದ ವೇಶ್ಯೆಯಂಥವಳು! ಇಷ್ಟು ದಿನ ಈಕೆ ನನಗೇಕೆ ಕಾಣಿಸಲಿಲ್ಲ? ಈ ನಾಲ್ಕೇ ದಿನಗಳಲ್ಲಿ ಪ್ರತ್ಯಕ್ಷಳಾದಳು ಎಲ್ಲಿಂದ? +ವರದಿಗಾರ್ತಿ ಗಡಬಡಿಸಿ ಎಚ್ಚರಾದಳು. +“ಬಾ….ಒಳಗೆ ಬಾ…..ತಿರುಗಾಟ ಚೆನ್ನಾಗಾಯ್ತ?”-ಕೈ ಹಿಡಿದು ಮೆಟ್ಟಲನ್ನೇರಿದಳು ಚಿಕ್ಕಮ್ಮ. “ಅಂತೂ……ಬಂದೆಯಲ್ಲ!” +“……….” +“ಯಾಕೆ, ಮಾತಾಡುತ್ತಿಲ್ಲ? ಆಯಾಸವ? ಜ್ಯೂಸ್ ಮಾಡಿಟ್ಟಿದ್ದೇನೆ, ಕುಡಿದು…..ಒಂದು ಸ್ನಾನ ಮಾಡಿ…..” ಆಕೆ ಹೇಳುತ್ತಾ ಒಳಬಂದಂತೆ, ವರದಿಗಾರ್ತಿ ತಟಸ್ಥ ಯೋಚಿಸುತ್ತಿದ್ದಳು. +ವರದಿ ಮಾಡುವ ಗಳಿಗೆ ಈಗ ಬಂದಿದೆ…..ಚಿಕ್ಕಮ್ಮಾ ಹೇಗೆ ಮಾಡಲಿ?…..ನಿಮ್ಮಿಬ್ಬರಲ್ಲಿ ಯಾರನ್ನು ಕುರಿತು?…….ಯಾರಿಗೆ? +‘ಪ್ರೀತಿಯ ವೃಂದಾ, ನಿನಗೆ ಸಿಕ್ಕಿದ್ದೆಲ್ಲ ನಿಗೆಟಿವ್ ಮಾತ್ರ. ಪೊಸಿಟಿವ್ ಕಂಡದ್ದು ನಾನು. ನಾನಿನ್ನು ಚಿಕ್ಕಮ್ಮನನ್ನು ಬಿಟ್ಟು ಹೋಗುವುದಿಲ್ಲ. ಕೊನೇಪಕ್ಷ ವರ್ಗವಾಗುವವರೆಗಾದರೂ. +-ಪ್ರೀತಿಯ ಅಕ್ಕ, ನೀನು ಮಂದಮತಿ. +-ನಾನಲ್ಲ, ನೀನು. +-ಅಲ್ಲ, ನೀನು! +***** +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […] +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […] +ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_414.txt b/Kannada Sahitya/article_414.txt new file mode 100644 index 0000000000000000000000000000000000000000..d3f8ca9b0768cc5431851b9ec4a39f2721b4e8e1 --- /dev/null +++ b/Kannada Sahitya/article_414.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್‍ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. +ಈಗಲ್ಲಿ ತೆರಳಿರುವವರು ರೆಹಮಾನ್ ಅವರು. ವಿಷ್ಣು ಶಶಿಕುಮಾರ್‍ ಈ ಚಿತ್ರದ ಅಪರೂಪದ ಜೋಡಿಗಳು. ಈ ಬಾರಿ ಹಲವು ಮತೀಯವಾದಿಗಳು ಸೆಟ್ ಮೇಲೆ ದಾಂಧಲೆ ಮಾಡಿ ನಟಿ ಪ್ರೇಮಾ ಕಣ್ಣೀರು ಹಾಕಲು ಕಾರಣರಾಗಿದ್ದಾರೆ. ಆಕೆ ಹೇಳಿಲ್ಲದ ಮಾತೊಂದನ್ನು ಆಕೆಯ ಮೇಲೆ ಆರೋಪಿಸಿ ಅನವಶ್ಯಕವಾಗಿ ಈ ಪ್ರಕರಣಕ್ಕೆ ‘ಏಸು ಸ್ವಾಮಿ’ಯನ್ನು ಎಳೆದು ತಂದಿದ್ದಾರೆ. +ಆ ಕಾರಣಕ್ಕೆ ಪತ್ರಕರ್ತರ ದಂಡು ಅಲ್ಲಿ ತೆರಳಿದಾಗ ‘ಪ್ರೇಮ’ ಬಿಕ್ಕಿ ಬಿಕ್ಕಿ ಅತ್ತರಂತೆ ಎಂಬ ಸುದ್ದಿ ಓದಿದಾಗ +ಹೌದು! +‘ಈ ಅಳು ಯಾವಾಗ ಬರುತ್ತದೆ ಮತ್ತು ಏಕೆ ಬರುತ್ತದೆ’ ಎಂದು ಮಿ. ಎಂಕಣ್ಣ ಚಿಂತಿಸುತ್ತ ಈ ಪದ್ಯ ಬರಲು ಕಾರಣನಾದ. +ಅಳು ಬರುವುದು ಯಾವಾಗ? +ತಾಯಿ-ಮಗುವನ್ನು ಬೈದಾಗ. +ಹೆಂಡತಿ ಅಳುವುದು ಯಾವಾಗ? +ಗಂಡ-ಡೈವರ್‍ಸ್ ಎಂದಾಗ. +ಓದುಗ ಅಳುವುದು ಯಾವಾಗ? +ತನ್ನ ಪ್ರೀತಿಯ ಲೇಖಕ ಸತ್ತಾಗ. +ಪ್ರೇಮಾ ಅಳುವುದು ಯಾವಾಗ? +ಚಿಕ್ಕಮಗಳೂರಿಗೆ ಹೋದಾಗ. +ಅಳು ನಿಲ್ಲುವುದು ಯಾವಾಗ? +ಹಾಸ್ಯ ಪ್ರಜ್ಞೆ ಬೆಳೆದಾಗ. +-ಎಂಬ ಪದ್ಯ ಬರೆದ ಎಂಕನು ನಾಣಿ-ಸೀನ-ಮೈನಾ-ನಾನಾ-ಮಂಕ, ಮಡಿಯ, ಮುಠ್ಠಾಳ ಮುಂತಾದವರನ್ನೆಲ್ಲಾ ಒಂದೆಡೆ ಕಲೆ ಹಾಕಿ ಕವಿತಾ ವಾಚನ ಮಾಡಿ ಬಿಸಿ ಬಿಸಿ ಚರ್ಚೆಗೂ ನಾಂದಿಯಾದ. ಅಲ್ಲಿ ಬಗೆ ಬಗೆ ಮಾತುಗಳು ಹೇಳಿಕೆಗಳು ಅಲೆ ಅಲೆಯಾಗಿ ತೇಲಿ ಬಂದವು. +ನಾಲ್ಕು ಗೋಡೆಯ ಮಧ್ಯೆ ಉಸಿರು ಕಟ್ಟಿದ ವಾತಾವರಣದಲ್ಲಿ ಬಂಧಿತವಾಗಿದ್ದ ಕ್ಯಾಮರಾವನ್ನು ಹೊರಾಂಗಣಕ್ಕೆ ತೆಗೆದುಕೊಂಡು ಹೋದ ಭೂಪ ಕಣಗಾಲ್ ಪುಟ್ಟಣ್ಣ. ಬೆಳ್ಳಿ ಮೋಡ ಸೆರೆ ಹಿಡಿಯಲು ಕಣಗಾಲ್ ಚಿಕ್ಕಮಗಳೂರಿಗೆ ತೆರಳಿದರು. ಅಂದಿನಿಂದ ಇಂದಿನವರೆಗೂ ಅನೇಕ ಐತಿಹಾಸಿಕ ಘಟನೆಗಳು ನಡೆದಿವೆ ಅಲ್ಲಿ. +ಕಲ್ಪನಾ ಮಿನುಗು ತಾರೆಯಾದದ್ದು ‘ಬೆಳ್ಳಿ ಮೋಡ’ದಿಂದ. ಆನಂತರವೇ ಚಿತ್ರರಂಗದಲ್ಲಿ ಕಣಗಾಲ್ ಮುಗಿಲೆತ್ತರಕ್ಕೆ ಜಿಗಿದದ್ದು. ಆದರೆ ಅವರು ಪಟ್ಟ ಪಾಡೇನು ಕಮ್ಮಿಯೇ. +ಫೋಟೋಗ್ರಾಫರಾಗಬೇಕೆಂದು ಮೈಸೂರಿಗೆ ಬಂದ ಪುಟ್ಟಣ್ಣನವರನ್ನು ಕಾಣಲು ಅವರ ಮನೆಯವರೊಮ್ಮೆ ಬಂದರಂತೆ. ನೋಡಿದರೆ ಅಲ್ಲಿ ಆತ ತೆಗೆಯುತ್ತಿದ್ದುದು ಹೆಣಗಳ ಫೋಟೋಗಳನ್ನು. ಆಗ ಮನೆಯವರು ಬಿಕ್ಕಿ ಬಿಕ್ಕಿ ಅತ್ತರಂತೆ. ‘ಈ ಸಂಪತ್ತಿಗೆ ಮೈಸೂರಿಗೇಕೆ ಬರಬೇಕಿತ್ತು’ ಎಂದು. +ಪುಟ್ಟಣ್ಣ ಅಂದು ಅಳಲಿಲ್ಲ. ಗುರಿ ಮುಟ್ಟುವ ಛಲ ಹೊಂದಿದ್ದರು. ಆರಂಭಕ್ಕೆ ಫೋಟೋಗಳಲ್ಲಿ ಹೆಣಕ್ಕೆ ಜೀವ ತುಂಬಿದ ವ್ಯಕ್ತಿ-ಕ್ರಮೇಣ ಸಿಲ್ಲಿಲಾಯಿಡ್ ಪ್ರಪಂಚದಲ್ಲಿ ಕಗ್ಗಲ್ಲನ್ನೂ ಸುಂದರ ಶಿಲ್ಪಿ ಮಾಡಿ ತೋರಿದರು. ಇಂದಿಗೂ, ಹೀರೋ, ಹೀರೋಯಿನ್, ವಿಲನ್, ಕಾಮಿಡಿಯನ್ ಆಗಿ ಮಿಂಚುತ್ತಿರುವವರು ಕಣಗಾಲರ ಕೊಡುಗೆಗಳೆ. +ಆ ಕಾಲದಲ್ಲಿ ನಾಗರಹೊಳೆಯಂಥ ಉತ್ತಮ ಮಕ್ಕಳ ಚಿತ್ರ ಬರುವುದು ಸಾಧ್ಯವಾದದ್ದು ಚಿಕ್ಕಮಗಳೂರಿನವರಿಂದ. +ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ ಮೊದಲ ಕನ್ನಡ ವರ್ಣ ಚಿತ್ರ ಅದಾಯಿತು. ಆನಂತರವೇ ಅಲ್ಲವೆ ಚಿತ್ರರಂಗದ ಒಂದು ಬ್ರಾಂಚ್ ಆಫೀಸ್ ಆದದ್ದು ಚಿಕ್ಕಮಗಳೂರು. +ಚಿಕ್ಕಮಗಳೂರು ಹೊರಾಂಗಣಕ್ಕೆ ಹೋದವರೆಲ್ಲ ಸಖತ್ ದುಡ್ಡು ಮಾಡಿದರೆಂದು ಹೇಳುವಂತಿಲ್ಲ. ಹಣ ಮಾಡಿದವರೂ ಇದ್ದಾರೆ-ಸೋತು ಸಪ್ಪಗಾಗಿ ಅತ್ತವರೂ ಇದ್ದಾರೆ. +ಪರಮ ದೋಸ್ತಿಗಳಾಗಿದ್ದ ದ್ವಾರಕೀಶ್-ವಿಷ್ಣು ಒಂದಾದ ಸಂದರ್ಭದಲ್ಲೂ ಚಿಕ್ಕಮಗಳೂರಿನಲ್ಲಿ ನಡೆದ ಹಗರಣ ಭಾರಿ ಸುದ್ದಿಯಾಯಿತು. ದ್ವಾರಕೀಶ್ ಆಡಿದ ಮಾತಿನ ಕೊಂಚ ತಿರುಚುವಿಕೆಯಿಂದಾಗಿ ಅವರು ಹೇಳಿದ್ದೇ ಒಂದು-ಗಾಂಧಿ ನಗರ ತಲುಪಿದ ಸುದ್ದಿಯೇ ಮೊತ್ತೊಂದು. +ಋಷಿ ಮೂಲ-ನದಿ ಮೂಲ ಕೆದಕಬಾರದಂತೆ. ಹೋಗಲಿ ಬಿಡಿ. ಅದೂ ಒಂದು ನೋವಿನ ಪ್ರಸಂಗಕ್ಕೆ ನಾಂದಿಯಾಗಿತ್ತು ಎಂಬುದು ನಿಜ. +ಇಂಥ ಪ್ರಸಂಗಗಳು ಚಿತ್ರರಂಗದಲ್ಲಿ ಮಾತ್ರವಲ್ಲ ದಿನನಿತ್ಯ ನಮ್ಮ-ನಿಮ್ಮ ಮನೆ ಅಂಗಳದಲ್ಲೂ ನಡೆಯುವಂಥದೇ. +ಮಕ್ಕಳು ಜಗಳವಾಡಿದಾಗೊಮ್ಮೆ ಆ ಮನೆ ಈ ಮನೆಯವರು ಜಗಳಕ್ಕಿಳಿದರು. ನನ್ನ ಹಾಗಂತ ಬೈದ-ಹೀಗಂತ ಬೈದ ಅಂತ ಒಬ್ಬ, ನಾನು ಹಾಗೆ ಅನ್ಲೇ ಇಲ್ಲ ನಾನು ಅಂದಿದ್ದೆ ಬೇರೆ. ಇವನು ಹೇಳ್ತಿರೋದೇ ಬೇರೆ ಎಂದರೂ ಜಗಳ ಹಣಾಹಣಿಯಾಗಿ ಅಳುವ ಮಟ್ಟ ತಲುಪಿತ್ತು ಒಮ್ಮೆ. +ಪ್ರೇಮಾ ಕೇಸಿನಲ್ಲಿ ಆಗಿರುವುದೂ ಅದೇ. ಪ್ರೇಮಾ ಖಾಸಗಿಯಾಗಿ ಯುವ ಪತ್ರಕರ್ತೆಯೊಬ್ಬರೊಂದಿಗೆ ಆಂತರ್ಯ ತೋಡಿಕೊಂಡು, ಇನ್‌ಫೆಂಟ್ ಚರ್ಚಿಗೆ ಹೋಗುವ ಅಂಶ, ಮದುವೆ ಮಾತು ಹಂಚಿಕೊಂಡರಂತೆ. ಅದರ ರೂಪ-ವಿರೂಪಗಳು ಪ್ರೇಮಾಳನ್ನು ಅಳುವ ಮಟ್ಟಕ್ಕೆ ತಂದಿದೆ. +ದೇವರೆಲ್ಲಾ ಒಂದೇ ಎಂದ ಮೇಲೆ ಯಾರು ಯಾವ ದೇವಸ್ಥಾನಕ್ಕೆ ಹೋದರೇನು? ಪ್ರೇಮ ಚರ್ಚಿಗೂ ಹೋಗುತ್ತಾರೆ. ರಾಘವೇಂದ್ರಸ್ವಾಮಿ ಗುಡಿಗೂ ಹೋಗುತ್ತಾರೆ. ಯಜಮಾನ ಮುಹೂರ್ತವಾದಾಗ ರಾಮಾಂಜನೇಯ ಗುಡ್ಡಕ್ಕೂ ಬಂದಿದ್ದರು. ಅದನ್ನೆಲ್ಲಾ ಚೆಕ್ ಮಾಡಲು ಮತಾಂಧರಿಗೇನು ಹಕ್ಕು? +ಕನ್ನಡದ ಹಾಸ್ಯ ಲೇಖಕ ಬೀಚಿ ಖ್ಯಾತ ಲೇಖಕರು ಸತ್ತಾಗ ಶ್ರದ್ಧಾಂಜಲಿ ಸಂದರ್ಭದಲ್ಲಿ ಹೇಗೆ ಮಾತನಾಡುವರೆಂಬುದನ್ನು ವಿಡಂಬಿಸಿ -ಅನಕೃ-ಮಾಸ್ತಿ ಮುಂತಾದವರನ್ನು ಕುರಿತು ಒಂದು ಲೇಖನ ಮಾಲೆಯನ್ನೇ ಬರೆದರು. +ಆ ಲೇಖನಗಳು ಅಚ್ಚಾದಾಗ ಅವರೆಲ್ಲ ಇನ್ನೂ ಬದುಕಿದ್ದರು. ಒಂದು ಬೆಳಗ್ಗೆ ನನ್ನ ಶಿವಮೊಗ್ಗ ಗೆಳೆಯ ಬಂದವನೇ ಕಣ್ಣೀರು ಹಾಕಿದ. +“ಯಾರಿಗೇನಾಯಿತು” ಎಂದೆ. +“ಮಾಸ್ತಿ ತೀರಿಕೊಂಡರಂತೆ ಹೆಡ್‌ಲೈನ್ಸ್‌ನಲ್ಲೇ ಬಂದಿದೆ” ಎಂದು ಪತ್ರಿಕೆ ಮುಂದೆ ಹಿಡಿದ. +“ಅಯ್ಯೋ ಅದು ಬೀಚಿ ಬರೆದ ಹಾಸ್ಯ ಬರಹ” ಎಂದರೂ ಅವನು ನಂಬಲಿಲ್ಲ. +ಮಾಸ್ತಿಯವರ ಮನೆಗೆ ಕರೆದೊಯ್ದಾಗ ಅವನ ಮನಸ್ಸಿಗೆಷ್ಟೋ ಶಾಂತಿ. +-ಅನಂತರ ಬರವಣಿಗೆ ಯಾರಿಗೂ ನೋವುಂಟು ಮಾಡಬಾರದು ಎಂಬುದು ಸಾರಸ್ವತ ಲೋಕದ ಚರ್ಚೆ ಆದಾಗ ಬೀಚಿ ಆ ಲೇಖನ ಮಾಲೆಗೆ ಫುಲ್‌ಸ್ಟಾಪ್ ಇಟ್ಟರು. +-ಎಂಬ ಮಾತು ಕೊನೆಯಲ್ಲಿ ನುಡಿದ ಮಿಸ್ಟರ್‍ ಎಂಕಣ್ಣ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಣ್ಣೀರು ಹಾಕುವಂತ ಸ್ಥಿತಿ ಇನ್ನಾದರೂ ನಿಲ್ಲಲಿ” ಎಂದ. ಪರಭಾಷಾ ನಟಿಯರ ಹಾವಳಿಯೇ ಕನ್ನಡ ಚಿತ್ರರಂಗದಲ್ಲಿ ಅತಿಯಾಗಿರುವಾಗ ಕೊಡಗಿನ ಬೆಡಗಿ ಪ್ರೇಮಾ ಅಚ್ಚ ಕನ್ನಡಿತಿ ಎಂಬುದನ್ನು ಎಲ್ಲ ಮನಗಂಡು ಅನವಶ್ಯಕ ದೊಂಬಿ, ಪ್ರತಿಭಟನೆಗಳಿಗೆ ಫುಲ್‌ಸ್ಟಾಪ್ ಹಾಕುವುದು ಅಗತ್ಯ ಎಂದಾಗ ಎಲ್ಲ ಆ ಮಾತಿಗೆ ‘ಜೈ’ ಎಂದದ್ದು ಇತ್ತೀಚೆಗೆ. +***** +(೨೮-೦೪-೨೦೦೦) +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […] +ಈ ಬಾರಿ ವಿಜಯದಶಮಿಯಂದು ೧೫-೧೬ ಸಿನಿಮಾಗಳ ಮುಹೂರ್ತ ನಡೆಯಲಿದೆ. ಎಂದರೆ ನೂರಾರು ಕಲಾವಿದರ ಬದುಕಿಗದು ಹೆದ್ದಾರಿ ಎಂಬುದು ಸಂತೋಷ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಅನೇಕ ಹೊಸ ಕತೆಗಳು, ಕಲಾವಿದರು ತೆರೆಗೆ ಬರುತ್ತಿದ್ದಾರೆ ಎಂಬುದು. […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_415.txt b/Kannada Sahitya/article_415.txt new file mode 100644 index 0000000000000000000000000000000000000000..7246279510dd42670700243c240f9d042ccb4d78 --- /dev/null +++ b/Kannada Sahitya/article_415.txt @@ -0,0 +1,208 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ಒಂದು : +ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ ‘ಕೇ’ ನೆನಪಿಗೆ ಬರಹತ್ತಿದ : ಅವನ ಹಾಗೇ ನನ್ನ ಬಗೆಗೂ ಯಾರೋ ಚಾಡಿ ಹೇಳುತ್ತಿರಬೇಕು. ಇಲ್ಲವಾದರೆ, ಇದ್ದಕ್ಕಿದ್ದಂತೆ ನಿನ್ನೆ ಬೆಳಿಗ್ಗೆ, ಆಫೀಸಿಗೆ ಹೋಗುವ ತಯಾರಿ ಮಾಡುತ್ತಿದ್ದ ಹೊತ್ತಿನಲ್ಲೇ ಕಂಪನಿಯ ಪರ್ಸೊನೆಲ್ ಆಂಡ್ ಎಡ್ಮಿನಿಸ್ಟ್ರೇಶನ್-ಮ್ಯಾನೇಜರರಿಂದ ಆ ದುಷ್ಟ ಆದೇಶ ಬರುತ್ತಿರಲಿಲ್ಲವೇನೋ ಎಂದೆನ್ನಿಸಿದಾಗ ಸಣ್ಣಗೆ ನಡುಗಿದ. ಒಂದು ಗಂಭೀರ ಆಪಾದನೆಯ ಕಾರಣದಿಂದ ನಿಮ್ಮನ್ನು ಕೂಡಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕಾಗಿ ಬಂದಿದೆ. ಯಾಕೆ ಎನ್ನುವುದು ಆದಷ್ಟು ಬೇಗ ತಿಳಿಸುತ್ತೇವೆ. ಆವರೆಗೆ ಆಫೀಸಿಗೆ ಬರಕೂಡದು ಎನ್ನುವುದು ಆದೇಶದ ಮಜಕೂರಾಗಿತ್ತು. ಜತೆಗೆ ಒಂದು ಸಲಹೆ ಕೂಡ : ಆರೋಪ ಸುಳ್ಳಾದ ಪಕ್ಷದಲ್ಲಿ ನಿಮಗೆ ಯಾವುದೇ ರೀತಿಯಿಂದ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಕೂಡಲೇ ಒಂದು ತಿಂಗಳ ರಜೆಯ ಬಗ್ಗೆ ಅರ್ಜಿ ಮಾಡುವುದು ಒಳ್ಳೆಯದು. +uಟಿಜeಜಿiಟಿeಜ‌ಅರ್ಜಿಯನ್ನೇನೋ ಕಳಿಸಿದ್ದ : ಇದ್ದಕ್ಕಿದ್ದ ಹಾಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ತಾನು ಮನೆಯಲ್ಲಿ ಇರಬೇಕಾಗಿ ಬಂದಿದ್ದರ ಹಿಂದಿನ ರಹಸ್ಯವನ್ನು ಕಾಪಾಡಿಕೊಳ್ಳುವ ಬೇರೆ ಉಪಾಯ ತಕ್ಷಣ ಹೊಳೆಯದೆ ಇದ್ದುದರಿಂದ. ಆದರೆ ತನಗೆ ಬೇಡವಾದ ರಜೆಗೆ ಕಾರಣವಾದದ್ದರ ಬಗ್ಗೆ ಎಷ್ಟೆಲ್ಲ ರೀತಿಯಿಂದ ವಿಚಾರಮಾಡಿ ತಲೆ ಕೆಡಿಸಿಕೊಂಡರೂ ಯಾವುದೂ ಬಗೆಹರಿಯಲಿಲ್ಲ. ಈ ವಿಪತ್ತು ಎರಗಿದ್ದು ತನ್ನ ಮೇಲೇ ತಾನೆ ಎನ್ನುವುದರ ಬಗ್ಗೆ ಕೂಡ ಕೂಡಲೇ ವಿಶ್ವಾಸ ಮೂಡಲಿಲ್ಲ. ಯಾಕೆಂದರೆ, ಇನ್ನು ಒಂದೆರಡು ತಿಂಗಳಲ್ಲಷ್ಟೇ, ಹೆಚ್ಚಿನ ತರಬೇತಿಗಾಗಿ ಅಮೆರಿಕೆಗೆ ಹೋಗುವ ಅವನ ಇಷ್ಟು ವರ್ಷಗಳ ಕನಸು ನಿಜವಾಗುವ ಹವಣಿಕೆಯಲ್ಲಿತ್ತು. ಅವನು ಸದ್ಯ ಬಹಳ ಖುಷಿಯಿಂದ ತೊಡಗಿಸಿಕೊಂಡದ್ದೇ ಈ ಪ್ರಯಾಣದ ಸಿದ್ಧತೆಯಲ್ಲಾಗಿತ್ತು. ತನ್ನ ಪ್ರಯಾಣದ ಸಿದ್ಧತೆಯೇ ಈ ಆಪತ್ತಿನ ಕಾರಣವಾಗಿರಲಿಕ್ಕಿಲ್ಲ ತಾನೇ ಎಂದು ಥಟ್ಟನೆ ಹೊಳೆದ ಒಂದು ವಿಚಾರ ಎಡೆಮಾಡಿಕೊಟ್ಟ ಅನುಮಾನ, ಹೊತ್ತು ಹೋದ ಹಾಗೆ ಗಟ್ಟಿಯಾಗಹತ್ತಿತು. ಕೊನೆಗೂ ಫಿರೋಜ್ ತನ್ನ ಬಗೆಗಿನ ವೈರವನ್ನು ಬಿಟ್ಟುಕೊಟ್ಟಿಲ್ಲ ಹಾಗಾದರೆ : ಧೂರ್ತ ರಾಜಕಾರಣಿಯಾದ ಈ ದುಷ್ಟ ಒಂದೂ ಮಗನೇ ಹೂಡಿದ ಒಳಸಂಚಿನ ಅಂಗವಿದು. ಆರೋಪವಾದರೂ ಏನು ಎನ್ನುವದು ಗೊತ್ತಾದರೆ ಎಲ್ಲವೂ ಸ್ಪಷ್ಟವಾಗಬಹುದಿತ್ತು. ಆದರೆ ಅದು ಗೊತ್ತಾಗಲು ಪರ್ಸೊನೆಲ್ ಮ್ಯಾನೇಜರರು ಕಳಿಸುತ್ತೇನೆಂದ ಪತ್ರದ ದಾರಿಯನ್ನು ಕಾಯುವುದು ಬಿಟ್ಟು ಬೇರೆ ಗತಿಯಿರಲಿಲ್ಲ. ಆದರೆ ಕಾಯುವದೇ ಅಸಾಧ್ಯವಾದಾಗ ನಾಗಪ್ಪನಿಗೆ ಯಾವುದೋ ಸೈಕಾಲೋಜೀ ಪುಸ್ತಕವೊಂದರಲ್ಲಿ ಓದಿದ್ದು ನೆನಪಾಗಹತ್ತಿತು : ಔಟಿe oಜಿ ಣhe gಡಿeಚಿಣesಣ ಠಿಡಿobಟems oಜಿ ಣhe humಚಿಟಿ miಟಿಜ is ಣhe sಣಡಿuಛಿಣuಡಿiಟಿg oಜಿ ಣime. ಆಫೀಸಿನ ಕೆಲಸದಲ್ಲಿ ತೊಡಗಿದ್ದಾಗ ಕಾಡಿರದ ಪ್ರಶ್ನೆ ಈಗ ಕೆಲಸವಿಲ್ಲದೇ ರಿಕಾಮಿ ಕುಳಿತವನ ಅರಿವಿನಲ್ಲಿ ಹಠಾತ್ತನೆ ಮೂಡಿಬಂದು ತಲ್ಲಣಗೊಳಿಸಹತ್ತಿತು. ಹಾಗೆಂದೇ, ಈ ಆಯ-ಆಕಾರಗಳಿಲ್ಲದ, ಗೊತ್ತು-ಗುರಿಯಿಲ್ಲದ ಹೊತ್ತಿಗೆ ಶಿಲ್ಪ ಕಡೆಯುವ, ಒಳಗಿನಿಂದ ಎದ್ದೆದ್ದು ಬರುತ್ತಿದ್ದ ವಿದ್ರೂಪ ಭಯಕ್ಕೆ ರೂಪ ಮೂಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಬೆಳಗಿನಿಂದ ರಾತ್ರಿಯ ತನಕ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತ ನಡೆದ ಮೂಡಿನಲ್ಲಿ ; ಅದು ದಾಖಲೆಯಾಗುತ್ತಿದ್ದ ಮಾತಿನ ಧಾಟಿಯಲ್ಲಿ ಒಳಗಿನ ನಡುಕವನ್ನು ಅಡಗಿಸುವ ಹೋರಾಟದ್ದೇ ಮೇಲುಗೈಯಾದಂತಿತ್ತು : +“ಟಿಪ್ಪಣಿ ಒಂದು : ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ ಎರಡನೇ ದಿನ. ನಸುಕಿನಲ್ಲಿ ಬೆಳಕು ಚಿಳಿ-ಮಿಳಿ ಕಣ್ಣುಬಿಡುತ್ತ ಹೊಸತೇ ಒಂದು ದಿನ ಹುಟ್ಟಿ ಬರುತ್ತಿದ್ದುದನ್ನು ನೋಡುತ್ತಿದ್ದ ಮುಹೂರ್ತದಲ್ಲಿ ಒಡಮೂಡಿದ್ದು : ನಾನು ಹೀಗೇ ವಿಚಾರಮಾಡುತ್ತ ಹೋದಲ್ಲಿ ಒಂದೋ ಹುಚ್ಚರ ಆಸ್ಪತ್ರೆಯಲ್ಲಿ ಇಲ್ಲವೇ ಆತ್ಮಹತ್ಯೆಯಲ್ಲಿ ಕೊನೆಗೊಳ್ಳಬಹುದು. ಇವು ಎರಡೂ ಬದುಕಿಗೆ ಎರೆವಾಗುವ ರೀತಿಗಳೇ. ಬದುಕಿಗೆ ಅರ್ಥವೇನು ಎಂದು ಕೇಳುತ್ತ ಕೂಡ್ರುವುದು ಏನು ಹುಡುಗಾಟದ ಲಕ್ಷಣವೊ, ಇಲ್ಲ, ಬದುಕಿನಲ್ಲಿ ವಿಶ್ವಾಸ ಕಳಕೊಂಡದ್ದರ ಲಕ್ಷಣವೋ ? ತುಂಬ ಲವಲವಿಕೆಯಿಂದ, ಆನಂದದಿಂದ, ಆಸ್ಥೆಯಿಂದ ಬದುಕುವದು, ಬದುಕಬೇಕು ಅನ್ನಿಸುವುದು ಎಲ್ಲ ಜೀವಕ್ರಿಯೆಯ ಗುಣಧರ್ಮ ಅಲ್ಲವೆ ? ಜೀವಿಸುವುದರಲ್ಲೇ ಅದಮ್ಯ ಉತ್ಸಾಹ ಇಟ್ಟುಕೊಂಡ ಉಳಿದ ಜೀವಕೋಟಿಗಳಲ್ಲಿ ಏಳದ ಪ್ರಶ್ನೆ ನನ್ನ ಬದುಕಿನಲ್ಲೇ ಏಳುವುದಕ್ಕೆ ಮುಖ್ಯ ಕಾರಣ ನಾನು ಇಷ್ಟು ದಿನ ಜಂಭ ಕೊಚ್ಚಿಕೊಂಡಂತೆ ನನ್ನ ದಾರ್ಶನಿಕ ದೃಷ್ಟಿಯಾಗಿರದೆ, ಬದುಕಿಗೆ, ಜೀವಕ್ರಿಯೆಗೆ ಮೂಲ ಸೆಲೆಯಾದ ಉತ್ಸಾಹದ ಅಭಾವವಾಗಿರಬಹುದು. ಬದುಕಿನಲ್ಲಿ ಅರ್ಥ ಹುಡುಕುವದೇ ತಪ್ಪೇನೋ. ಅರ್ಥ ಇದ್ದರಲ್ಲವೇ ಹುಡುಕುವದು ? ಅದು ನಾವು ಹುಟ್ಟಿಸಿಕೊಂಡದ್ದು. ಉತ್ಸಾಹವೇ ಇಲ್ಲದಿದ್ದಲ್ಲಿ ಸೃಜನಶೀಲತೆ ಹೇಗೆ ಸಾಧ್ಯ ? ಸೃಷ್ಟಿಕಾರ್ಯ ಹೇಗೆ ಸಾಧ್ಯ ? ಅರ್ಥ ಹೇಗೆ ಹುಟ್ಟಬೇಕು….” +“ಟಿಪ್ಪಣಿ ಎರಡು : ಬೆಳಗಿನ ಉಪಾಹಾರ ಮುಗಿಸಿಬಂದು ಆರಾಮ ಕುರ್ಚಿಯಲ್ಲಿ ಮೈ ಚೆಲ್ಲಿ ವಿರಮಿಸುವಾಗ ಹೊಳೆದದ್ದು : ಜೀವಶಕ್ತಿಯ ಮೂಲ ಸೆಲೆಗಳಲ್ಲಿ ಕಾಮಕ್ಕಿಂತ ಹೆಚ್ಚು ಬಲಶಾಲಿಯಾದದ್ದು, ತನ್ನ ಪ್ರಭುತ್ವಕ್ಕೆ ಅಧೀನವಾದ ಒಂದು ಭೌಗೋಲಿಕ ಪ್ರದೇಶದ ಅವಶ್ಯಕತೆಯೆಂದು ನಿಸರ್ಗ-ವಿಜ್ಞಾನಿಗಳಿಂದ ಈಗ ಗೊತ್ತಾಗಿದೆ. ಎಲ್ಲ ಪ್ರಾಣಿವರ್ಗಗಳಲ್ಲಿ_ಪಶು, ಪಕ್ಷಿ ಜಲಚರಗಳಲ್ಲಿ ಕೂಡ- ಈ ‘ಪ್ರದೇಶ-ಪ್ರವೃತ್ತಿ’ ಸ್ಪಷ್ಟವಾಗಿ ಕಂಡುಬಂದಿದೆಯಂತೆ. ಮಾನವನಲ್ಲೂ ಈ ಮೂಲಪ್ರವೃತ್ತಿಯೇ ಆಸ್ತಿಯ ಪ್ರೀತಿಯಾಗಿ, ಪ್ರಾಂತ-ದೇಹಗಳ ಪ್ರೀತಿಯಾಗಿ ವ್ಯಕ್ತಗೊಂಡಿದೆ ಎಂದು ಈ ತಜ್ಞರ ಊಹೆ. ಇರಬಹುದೇನೋ. ಆದರೆ ನನ್ನ ಈವರೆಗಿನ ಆಯುಷ್ಯದಲ್ಲಿ ಬಂದ ಅನುಭವಗಳನ್ನೇ ನಂಬಿ ಹೇಳುವುದಾದರೆ ಆಸ್ತಿಗಿಂತ ಹೆಚ್ಚು ಪ್ರಭಾವಶಾಲಿಯಾದ ಪ್ರೇರಕಶಕ್ತಿಯೆಂದರೆ, ಪ್ರತಿಯೊಬ್ಬ ವ್ಯಕ್ತಿಗೆ ತನ್ನಲ್ಲಿಯ ಕರ್ತೃತ್ವಶಕ್ತಿಯ, ಪುರುಷಾರ್ಥದ ಅಭಿವ್ಯಕ್ತಿಗೆ ಬೇಕೆನ್ನಿಸುವ ಕಾರ್ಯಕ್ಷೇತ್ರವೇ _ ಜಿieಟಜ oಜಿ ಚಿಛಿಣioಟಿ, ಈ ಕಾರ್ಯಕ್ಷೇತ್ರದಲ್ಲಿ, ಅದು ಎಷ್ಟೇ ಸೀಮಿತವಾದದ್ದಿರಲೊಲ್ಲದೇಕೆ. ತನ್ನ ಪ್ರತಿಭೆಯಿಂದ ಬೆಳಕು ಬೀರುವ, ಬೆಳಗಿ ನಿಲ್ಲುವ, ಪ್ರಭುತ್ವ ಪಡೆಯುವ ಅಭಿಲಾಷೆ. ಇದುವೇ ಮಾನವನ ಎಲ್ಲ ಚಟುವಟಿಕೆಗಳ ಹಿಂದಿನ ಮೂಲ ಪ್ರವೃತ್ತಿಯ ಬಲವಿದ್ದ ಪ್ರೇರಣೆಯೆಂದು ನಾನು ನಂಬುತ್ತೇನೆ….” +“ಟಿಪ್ಪಣಿ ಮೂರು : ಮಧ್ಯಾಹ್ನದ ಊಟದ ನಂತರ ಸಣ್ಣ ನಿದ್ದೆಯಾದ ಮೇಲೆ ಚಹದ ದಾರಿ ಕಾಯುತ್ತಾ ಕೂತಿದ್ದಾಗ ಅನ್ನಿಸಿದ್ದು : ನನ್ನೆಲ್ಲ ಕರ್ತೃತ್ವ ಶಕ್ತಿಯನ್ನು ನಾನು ಸದ್ಯ ಕೆಲಸ ಮಾಡುತ್ತಿದ್ದ ಈ ಕಂಪನಿಯನ್ನು ಕಟ್ಟುವುದರಲ್ಲಿ ತೊಡಗಿಸದೇ ಇದ್ದಲ್ಲಿ, ಇಲ್ಲವೇ ಹಾಗೇ ಕಟ್ಟಿ ಅದನ್ನು ಇಂದಿನ ಭರಭರಾಟೆಯ ಸ್ಥಿತಿಗೆ ತರುವುದರಲ್ಲಿ ನಾನು ಬಹುದೊಡ್ಡ ಭಾಗವಹಿಸಿದ್ದೇನೆ ಎಂಬ ಭ್ರಮೆಯನ್ನು ನಾನು ಮೊದಲಿನಿಂದಲೂ ಇಟ್ಟುಕೊಳ್ಳದೇ ಇದ್ದಲ್ಲಿ, ಇಂದಿನ ಈ ದುಃಖದಾಯಕ ಸ್ಥಿತಿಗೆ ಬರುತ್ತಿರಲಿಲ್ಲವೇನೋ…. ಈ ರೀತಿಯ ವಿಚಾರಕ್ಕೆ ಕೊನೆಯೆಲ್ಲಿ ? ಮನುಷ್ಯ, ದಾರಿಗಳ ಕೂಟಸ್ಥಾನದಲ್ಲಿ ನಿಂತಾಗ ಇದಿರು ತೆರೆದು ನಿಂತವುಗಳಲ್ಲಿ ಯಾವುದನ್ನು ಬೇಕಾದರೂ ಹಿಡಿದು ನಡೆಯುವ ಆಯ್ಕೆ ತನಗಿದೆ, ಆಯ್ಕೆಯ ಸ್ವಾತಂತ್ರ್ಯ ತನಗಿದೆ ಎಂಬ ಭಾವನೆಯನ್ನು ಆಂತರ್ಯದಲ್ಲಿ ಹುಟ್ಟಿಸಿಕೊಂಡಿರುವಾಗಲೂ ಕೊನೆಯಲ್ಲಿ ಅವನು ಹಿಡಿಯುವುದು, ಹಾಗೆ ಹಿಡಿಯುವ ಸಾಧ್ಯತೆ ಅವನಿಗಿರುವದು, ಒಂದೇ ಒಂದನ್ನು ಮಾತ್ರ. ಮತ್ತು ಹಾಗೆ ಪ್ರತ್ಯಕ್ಷವಾಗಿ ಹಿಡಿಯುವ ಕ್ರಿಯೆಯೇ ಅವನ ವ್ಯಕ್ತಿತ್ವವನ್ನೂ ನಿಶ್ಚಯಿಸುತ್ತದೆ. ನಮ್ಮ ಆಯ್ಕೆ ಬಾಹ್ಯ-ಪ್ರೇರಣೆಗೆ ನಾವು ಕೊಟ್ಟ ಜವಾಬು ಅಲ್ಲ. ತದ್ವಿರುದ್ಧವಾಗಿ, ನಾವು ಕೊಟ್ಟ ಜವಾಬು ನಮಗಾದ ಪ್ರೇರಣೆಗೆ, ತನ್ಮೂಲಕ ನಮ್ಮ ವ್ಯಕ್ತಿತ್ವದ ಸಾಧ್ಯತೆಗಳಿಗೆ ಆಕಾರ ಕೊಡುತ್ತದೆ ಎನ್ನಬೇಕು. ಟಾಲ್ಸ್ಟಾಯ್ ಅವರ ‘ಆeಚಿಣh oಜಿ ಟvಚಿಟಿ ಟಟಥಿಛಿh’ ಎಂಬ ಕತೆಯಲ್ಲಿ ಕ್ಯಾನ್ಸರ್ ಆಗಿ ಬದುಕುವ ಭರವಸೆ ಇಲ್ಲದೇ ಹಾಸಿಗೆ ಹಿಡಿದ ಇಲ್ಲಿಶ್ ತನ್ನ ಈವರೆಗಿನ ಆಯುಷ್ಯವನ್ನು ವಿಮರ್ಶಿಸಿಕೊಂಡಾಗ ಅದನ್ನು ಬೇರೊಂದು ರೀತಿಯಲ್ಲಿ ತಾನು ಬದುಕಬಹುದಾಗಿತ್ತಲ್ಲ ಎಂಬ ಹಳಹಳಿ ತುಂಬಿದ ನಿಲುಗಡೆಗೆ ಬರುತ್ತಾನೆ. ಕ್ಯಾನ್ಸರಿನಿಂದಾಗಿ ನಿಶ್ಚಿತವಾಗಿ ಬರಲಿದ್ದ ಸಾವಿಗಿಂತ ಹೀಗೆ ಆಯುಷ್ಯದ ಕೊನೆಯ ಗಳಿಗೆಯಲ್ಲಿ ಹುಟ್ಟುವ ಇಂತಹ ಭಾವನೆ ಹೆಚ್ಚು ದಾರುಣವಾದದ್ದೆಂದು ಟಾಲ್ಸ್ಟಾಯ್ ಅವರಿಗೆ ಸೂಚಿಸುವುದಿತ್ತೆಂಬಂತೆ ನೆನಪು….” +“ಟಿಪ್ಪಣಿ ನಾಲ್ಕು : ಮೂರುಸಂಜೆಯಲ್ಲಿ ಮಬ್ಬುಗತ್ತಲೆ ಕವಿಯುತ್ತಿರುವಾಗ ಅಮ್ಮನ ನೆನಪಿನಿಂದ ತುಂಬಿಬರುತ್ತಿದ್ದ ಕಣ್ಣುಗಳಿಂದ ಕಂಡದ್ದು : ಪ್ರತಿ ಕ್ಷಣ ಇಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳುವುದು ಶಕ್ಯವಿಲ್ಲದ ರೀತಿಯಲ್ಲೇ ಬಾಳಿನ ಹಾದಿಯನ್ನು ಸವೆಸುತ್ತೇವೆ. ಬಾಳಿನ ಹಾದಿ ಎಂದೆಂದೂ ಒಮ್ಮುಖವಾದದ್ದೇ ? ಒಮ್ಮೊಮ್ಮೆ ಹೀಗೂ ಅನ್ನಿಸಿದ್ದುಂಟು : ನಾವು ದಾರಿಗಳ ಕೂಟಸ್ಥಾನಕ್ಕೆ ಬರುವ ಮೊದಲೇ ನಮ್ಮನ್ನು ಪಥಿಕರನ್ನಾಗಿ ಸ್ವೀಕರಿಸಿದ ದಾರಿ ನಮ್ಮ ಬರವಿನ ಹಾದಿಯನ್ನೇ ಕಾಯುತ್ತಿರುತ್ತದೆ. ನಾನು ಈಗಿನ ಕಂಪನಿಯನ್ನು ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸ ಹಿಡಿದಿದ್ದರೆ ? ಇಲ್ಲ, ಕಂಪನಿಯ ಕೆಲಸವನ್ನು ಬಿಟ್ಟು ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದರೆ ? ಈ ದೇಶದಲ್ಲೇ ಹುಟ್ಟಿರದಿದ್ದರೆ ? ಒಬ್ಬಂಟಿಗನಾಗಿರುವ ಬದಲು ಮದುವೆಯಾಗಿ ಸಂಸಾರ ಹೂಡಿ ಮಕ್ಕಳನ್ನು ಹಡೆದಿದ್ದರೆ ? ಅಥವಾ, ನನ್ನಂತೆ ನನ್ನ ಅಪ್ಪನಾದವನೇ ಮದುವೆಯಾಗಿರದಿದ್ದರೆ ? ಅಥವಾ, ನಾನು ಈಗಿನ ಅಪ್ಪ-ಅಮ್ಮಂದಿರ ಬದಲು ಬೇರೆ ತಂದೆತಾಯಿಗಳ ಮಗನಾಗಿ ಹುಟ್ಟಿದ್ದರೆ ?…..ಹಾಸ್ಯಾಸ್ಪದ ವಿಚಾರವಲ್ಲವೆ ? ಈಗ ಅಪ್ಪನಾದವನಿಗೆ ಬೇರೆ ಹೆಣ್ಣು ಹೆಂಡತಿಯಾಗಬಹುದಿತ್ತು. ಹಾಗೇ ಈಗ ನನ್ನ ಅಮ್ಮನಾಗಿದ್ದವಳಿಗೆ ಬೇರೆ ಗಂಡು ಗಂಡನಾಗಬಹುದಿತ್ತು. ಆದರೆ ನನ್ನ ಹುಟ್ಟು ಮಾತ್ರ ಈ ಅಪ್ಪ ಈ ಅಮ್ಮ ಮದುವೆಯಾದುದರಿಂದಲೇ ಸಾಧ್ಯವಾಯಿತು ಎನ್ನುವುದು ಗಮನಿಸಿದಾಗ ; ಅಷ್ಟೇ ಏಕೆ, ನನ್ನ ಹುಟ್ಟಿಗೆ ಕಾರಣವಾದ ಗರ್ಭಧಾರಣೆಯ ಕ್ಷಣ ಕೂಡ ಒಂದು ತಪ್ಪಿ ಇನ್ನೊಂದಾಗಿದ್ದರೆ ನನ್ನ ಪಿಂಡವನ್ನು ನಿಶ್ಚಯಿಸಿದ ಬೀಜಾಣುಗಳೇ ಬೇರೆಯಾಗಿ ನನ್ನ ಬದಲು ಬೇರೆಯೇ ಒಂದು ಜೀವ ಹುಟ್ಟಬಹುದಿತ್ತಲ್ಲ ಎಂಬುದನ್ನು ನೆನೆದರೆ ಆಯ್ಕೆಯ ಮುಕ್ತತೆಯಲ್ಲಿದ್ದ ನಂಬುಗೆ ಸಡಿಲವಾಗಿ ಉಸಿರುಗಟ್ಟಿದಂತಾಗುತ್ತದೆ : ಕೋಟ್ಯಾನುಕೋಟಿ ಪುರುಷ-ರೇತಾಣುಗಳಲ್ಲಿ ಒಂದೇ ಒಂದು ಹಾಗೂ ಒಂದೇ ಒಂದು ಸ್ತ್ರೀ-ಅಂಡಾಣು, ಒಂದೆಡೆ ಬಂದ ದಿವ್ಯ ಕ್ಷಣದಲ್ಲೇ ನಿಶ್ಚಿತವಾಯಿತಲ್ಲವೇ, ಉತ್ಕ್ರಾಂತಿಕ್ರಮದಲ್ಲಿ ಬದುಕುವ ರೀತಿಗಳೊಂದಿಗೆ ನಿಸರ್ಗ ನಡೆಸುವ ಅಬ್ಜ ಅಬ್ಜ ಪ್ರಯೋಗಗಳಲ್ಲಿ ಒಂದು ಅನನ್ಯ ಪ್ರಯೋಗದ ಪ್ರತಿನಿಧಿಯಾಗಿ ನನ್ನ ಬದುಕಿನ ಆಯ್ಕೆ? ಆದ್ದರಿಂದಲೇ_ಕೌಂಡಿಣ್ಯಗೋತ್ರೋತ್ಪನ್ನ ಕೃಷ್ಣಶರ್ಮಣಃ ಜ್ಯೇಷ್ಟಪುತ್ರ ಸಾಂತಯ್ಯಶರ್ಮಣಃ ದ್ವಿತೀಯ ಪುತ್ರನಾದ ಈ ದಿವ್ಯ ಪಿಂಡ ನಾಗಪ್ಪನ ಹುಟ್ಟಿನ ಆಯ್ಕೆ ? ವಿಜ್ಞಾನದ ವಿದ್ಯಾರ್ಥಿಯಾದದ್ದಕ್ಕೆ ಸಾರ್ಥಕವಾಯಿತೋ ನಾಗಪ್ಪಾ. ನಿನ್ನ ಆ ದಿವ್ಯ-ಭವ್ಯ ವಿಕಾಸವಾದಕ್ಕೇ ಇನ್ನು ಜಯವಾಗಲಿ…..ನಗುವುದನ್ನು ಕಲಿಯೋ ಬೋಳೀಮಗನೇ_ಯಾವಾಗಲೂ ಮುಖಕ್ಕೆ ಗಂಟಿಕ್ಕೇ ಕೂಡ್ರಬೇಡ. ಅಂತಹ ಮಹಾ ಅನಾಹುತವೇನೂ ಘಟಿಸಿಲ್ಲ ಈಗ. ನಿನ್ನ ಆ ಮಹಾಮ್ಮಾಯೀ ನಿಸರ್ಗ ನಡೆಸುವ ಅಬ್ಜ ಅಬ್ಜ ಪ್ರಯೋಗಗಳಲ್ಲಿ ಕೆಲವಾದರೂ ವಿಫಲವಾಗದೇ, ಸೋಲದೇ ಉಳಿದಾವೇ !….” +“ಟಿಪ್ಪಣಿ ಐದು : ರಾತ್ರಿ ಹಾಸಿಗೆ ಸೇರುವ ಮೊದಲು ಕಣ್ಣುಗಳು ನಿದ್ದೆಯಿಂದ ಬಾಡುತ್ತಿದ್ದಾಗ ಧೇನಿಸಿದ್ದು : ವಿಷ್ಣುಸಹಸ್ರನಾಮಗಳನ್ನು ದಿನವೂ ಪಠಿಸುತ್ತಿದ್ದ ಅಪ್ಪ ಎಲ್ಲ ಬಿಟ್ಟು ಈ ಹೆಸರನ್ನೇ ನನಗಾಗಿ ಹೇಗೆ ಆರಿಸಿದನೋ. ಸ್ವತಃ ಅವನ ಹೆಸರಾದರೂ ಏನು ಮತ್ತೆ ! ಈ ಸಂಗತಿಯೂ ನನ್ನ ನೋವಿನ ಇತಿಹಾಸದಲ್ಲಿ ವಹಿಸಿದ ಪಾತ್ರವನ್ನು ನೆನೆದರೆ… +‘ಎಂತಹ ಕ್ಷುಲ್ಲಕ ಸಂಗತಿಗಳೂ ನನ್ನ ಜೀವನದ ಎಂತಹ ಮಹತ್ವದ ಘಟನೆಗಳಿಗೆ ಕಾರಣಗಳಾಗಿವೆ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಹತ್ತು ವರ್ಷಗಳ ಹಿಂದೆಯೇ ಒಮ್ಮೆ ಕಂಪನಿಯ ಕೆಲಸವನ್ನು ಬಿಟ್ಟು ಇಲ್ಲಿಯದೇ ಕಾಲೇಜೊಂದರಲ್ಲಿ ಪ್ರಾಧ್ಯಾಪಕನ ಕೆಲಸ ಹಿಡಿಯಬೇಕೆಂದು ಮಾಡಿದ ನಿಶ್ಚಯವನ್ನು ಗೆಳೆಯನೊಬ್ಬನ ಇದಿರು ಆಡಿತೋರಿಸಿದಾಗ ಗೆಳೆಯನ ಹೆಂಡತಿ ಗಬಕ್ಕನೆ ಬಾಯಿಹಾಕಿ, ‘ಯಾಕೆ? ಮ್ಯಾನೇಜರ್ ಆಗುವ ಛಾನ್ಸ್ ತಪ್ಪಿತೆ ?’ ಎಂದು ಕೇಳಿದ ಪ್ರಶ್ನೆ, ಪ್ರಶ್ನೆಗಿಂತ ಹೆಚ್ಚಾಗಿ ಅದನ್ನು ಕೇಳಿದ ರೀತಿ ಮುಂದಿನದೆಲ್ಲವನ್ನೂ ನಿಶ್ಚಯಿಸಿಬಿಟ್ಟಿತ್ತು. ಪ್ರೊಫೆಸರ್ ಆಗುವ ನಿರ್ಧಾರವನ್ನು ಬಿಟ್ಟು ಕೊಟ್ಟಿದ್ದೆ. (ಪ್ರೊಫೆಸರ್ ಎಂಬ ಉಪ-ಪದವಿ ನನ್ನ ಕೊರಳಿಗೆ ಗಂಟುಬಿದ್ದದ್ದು ಮಾತ್ರ ಆಗಿನಿಂದಲೇ ಎಂಬಂತೆ ನೆನಪು.) +“ಆಶ್ಚರ್ಯ : ಯಾವುದು ಯಾವುದನ್ನು ನಿಶ್ಚಯಿಸಿತ್ತು ? ಗೆಳೆಯನ ಹೆಂಡತಿಯ ಮಾತುಗಳಲ್ಲಿ, ಮಾತುಗಳಿಗಿಂತ ಹೆಚ್ಚಾಗಿ ಕಣ್ಣುಗಳಲ್ಲಿ, ಕಣ್ಣುಗಳಿಗಿಂತ ಹೆಚ್ಚಾಗಿ, ತುಟಿಗಳ ಮೂಲೆಯಲ್ಲಿ, ತುಟಿಗಳಿಗಿಂತ ಹೆಚ್ಚಾಗಿ, ಕೊರಳಿನ ಕೊಂಕಿನಲ್ಲಿ ವ್ಯಕ್ತವಾದ ‘ಏನೋ’ ನನ್ನ ಕೃತಿಗೆ ಕಾರಣವಾಗಿತ್ತೋ ? ಅಥವಾ ನನ್ನ ವ್ಯಕ್ತಿತ್ವದ್ದೇ ಆಪ್ತ ಅಂಗವಾದ ನಿರ್ಧಾರವನ್ನು ಗೆಳೆಯನ ಹೆಂಡತಿಯ ಮಾತುಗಳಿಂದ ಅರ್ಥಮಾಡಿಕೊಂಡಿದ್ದೇನೋ ? ಯಾವಯಾವುದೋ ಕಾರಣಗಳಿಗಾಗಿ ನಮ್ಮ ಕೈಯಿಂದ ಒದಗುವ ಕೃತಿಗಳ ನಡುವಿನ ಅವಕಾಶದಲ್ಲಿ ಜರಗುವುದು ಅರ್ಥದ ಹೆಸರಿನಲ್ಲಿ. ಅರ್ಥಪೂರ್ಣತೆಯ ಹೆಸರಿನಲ್ಲಿ ನಡೆಯುವ ಶಾಬ್ದಿಕವಾದ ಹಲುಬು. ಇದಕ್ಕೇ ಅಲ್ಲವೇ ನಾವು ಕೊಟ್ಟ ದೊಡ್ಡ ಹೆಸರು _ ಜೀವನದರ್ಶನ ! ನಮ್ಮ ನಮ್ಮ ಕೃತಿಗಳನ್ನು ನಾವೇ ಸಮರ್ಥಿಸಿಕೊಂಡ ನಾಗರಿಕ ರೀತಿ ! ಪ್ರೊಫೆಸರ್ ನಾಗನಾಥ್-ಜಿಂದಾಬಾದ್ ! ಹೇಳಲು ಮರೆತೆ : ಕಂಪನಿಯನ್ನು ಸೇರಿದ ಬಳಿಕ ನನ್ನನ್ನು ತನ್ನ ಕಣ್ಣುಗಳ ಹೊಳಪಿನಿಂದ, ಕಿಲಕಿಲ ನಗುವಿನಿಂದ, ಸೊಂಟದ ಕುಣಿತದಿಂದ ಮರುಳುಮಾಡಲು ಪಣ ತೊಟ್ಟಂತಿದ್ದ _ ಎಂ.ಡೀ. ಅವರ ಸೆಕ್ರೆಟರಿಯಾದ_ಮೇರಿಯ ಸಲಹೆಯ ಮೇರೆಗೆ ನನ್ನ ಹೆಸರನ್ನು ಬದಲಿಸಿಕೊಂಡಿದ್ದೆ. ಎಲ್ಲರ ಬಾಯಲ್ಲಿ ನಿಂತ ಹೆಸರು ಮಾತ್ರ ಪ್ರೊಫೆಸರ್ ನಾಗ್….ಪರಮಾಶ್ಚರ್‍ಯ : ನನ್ನ ಬದುಕಿನಲ್ಲಿ ಎಷ್ಟೆಲ್ಲ ಕ್ರಾಂತಿಕಾರಕ ಘಟನೆಗಳು ನಡೆದಿರುವಾಗ ಎಲ್ಲ ಬಿಟ್ಟು ಇದೇ ಥಟ್ಟನೆ ನೆನಪಿನಲ್ಲಿ ನಿಂತದ್ದೇಕೆ ? ವಿಚಾರಮಾಡಬೇಕು….” +“ಟಿಪ್ಪಣಿ ಆರು : ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪರಮ ಮಾಸ್ತರರು ಹಾಜರಿಯ ಹೊತ್ತಿಗೆ ಹೆಸರು ಕರೆಯುವ ರೀತಿಯಲ್ಲಿ ಹೇಳುವುದಾದರೆ ನನ್ನ ಹೆಸರು ನಾಗಪ್ಪಾ ಸಾಂತಯ್ಯಾಽಽ. ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ. ಸುಮಾರು ನಲವತ್ತು ವರ್ಷಗಳ ಕೆಳಗೆ. ಬೆಳೆದದ್ದು ಕೋಳೀಗಿರಿಯಣ್ಣನ ಕೇರಿಯಲ್ಲಿ. ನನ್ನ ಬಾಯಲ್ಲಿ ಕಾಯಂ ನಿಂತಿರುವ ಹತ್ತೆಂಟು ಬೈಗುಳಗಳು ಈ ಕೋಳೀಗಿರಿಯಣ್ಣನಿಂದಲೇ ಕೇಳಿ ಕಲಿತವುಗಳು. ಸಂದರ್ಭಕ್ಕೆ ತಕ್ಕಂತೆ ಚೆಂಗನೆ ಬಾಯಲ್ಲಿ ಪುಟಿಯುವ ಇವೆಲ್ಲವುಗಳಲ್ಲಿ ಬೋಳೀಮಗ, ಸೂಳೇಮಗ, ಇವು ನನಗೆ ಪ್ರಿಯವಾದವುಗಳು: ಸಿಟ್ಟು ಮಸ್ತಕಕ್ಕೆ ಏರಿದಾಗ ರಂಡೇಮಗನೇ, ಹಾದರಕ್ಕೆ ಹುಟ್ಟಿದವನೇ ಎನ್ನುವುದೂ ಉಂಟು. ನನ್ನಷ್ಟಕ್ಕೇ – ಎಲ್ಲರ ಮುಂದಲ್ಲ. ಸಿಟ್ಟು ಮಸ್ತಕಕ್ಕೇರುವ ಸಂದರ್ಭಗಳು ಇತ್ತಿತ್ತ ಹೆಚ್ಚಾಗುತ್ತಿವೆಯಾದ್ದರಿಂದ ಈ ಬೈಗಳಿಗೆ ಸಂಖ್ಯೆಗಳ ಖಾಸಗೀ ಭಾಷೆಯೊಂದನ್ನು ನಿರ್ಮಿಸಿಕೊಂಡಿದ್ದೇನೆ. ಉದಾ : ಒಂದು ಮಗನೇ ಅಂದರೆ ಬೋಳೀಮಗನೇ, ಎರಡೂ ಮಗನೇ ಅಂದರೆ ಸೂಳೇಮಗನೇ ಇತ್ಯಾದಿಯಾಗಿ ಹತ್ತೂ ಮಗನೇ ತನಕ. ಇವುಗಳಿಗೆ ನಾನು ‘ಸಾಂಖ್ಯದ ಸುಭಾಷಿತಗಳು’ ಎಂಬ ಹೆಸರೂ ಕೊಟ್ಟಿದ್ದೇನೆ ಆಗೀಗ ಭಾವನೆಗಳು ಉಕ್ಕಿಬಂದ ಕ್ಷಣಗಳಲ್ಲಿ ಈ ಸಂಕೇತ ಭಾಷೆ ಕುಸಿದು ಒಳಗಿನ ವಾಸ್ತವದ ದರ್ಶನವಾಗುವುದೂ ಉಂಟು ! ಆಫೀಸಿನ ಕೆಲಸ ಬಿಟ್ಟರೆ ನನಗೆ ಬಹಳ ಪ್ರಿಯವಾದದ್ದು ಸಾಹಿತ್ಯ. ವಿದ್ಯಾರ್ಥಿ ದೆಸೆಯಿಂದ ಕಲಿತದ್ದು ಮಾತ್ರ ವಿಜ್ಞಾನ. ಅಲ್ಲೂ ಕೂಡ ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿಯೂ ಆಸ್ಥೆಯಿದ್ದದ್ದು ಡಾರ್ವಿನ್ನನ ವಿಕಾಸವಾದದಲ್ಲಿ; ಫ್ರಾಯ್ಡ್, ಯುಂಗರ ಮನೋವಿಶ್ಲೇಷಣೆಯಲ್ಲಿ, ಮಾರ್ಕ್ಸ್, ರಾಯ್ ಅವರ ಬರವಣಿಗೆಯಲ್ಲಿ. ಲಂಗೋಟೀ ಗೆಳೆಯರನ್ನು ಎಷ್ಟರಮಟ್ಟಿಗೆ ಭಾವನಾತ್ಮಕವಾಗಿ ಹತ್ತಿರವಾದವರು ಇವರೆಲ್ಲ. ಸದ್ಯ, ಕೊನ್ರಾಡ್, ಲಾರೆಂಝ್, ಎರಿಕ್ ಬರ್ನ್ ಕೂಡ ಹತ್ತಿರವಾಗುತ್ತಿದ್ದಾರೆ. ನಾನು ಬದುಕಿನಲ್ಲಿ ಬಹಳಷ್ಟಕ್ಕೆ ಆಸೆಪಟ್ಟವನಲ್ಲ. ಹೆದರಿಕೊಂಡವನೂ ಅಲ್ಲ. ಹೆದರಿಕೆಯಾಗುತ್ತಿದ್ದದ್ದು ಮೂರಕ್ಕೆ : ಕಾಯದೆ; ಪೋಲೀಸು; ಬೆಂಕಿಯ ಅಪಘಾತಗಳಿಗೆ : ಅವು ಸಂಕೇತಿಸುವ ನಿಗೂಢ ವಾಸ್ತವಕ್ಕೆ ; ಅದರ ಅರ್ಥವಾಗದ ರಹಸ್ಯಮಯವಾದ ನುಡಿಕಟ್ಟಿಗೆ. ಯಾಕೆ ನಾನು ಹೆದರುತ್ತೇನೆ ಎನ್ನುವುದು ಗೊತ್ತಿದೆ, ಗೊತ್ತಿಲ್ಲ. ಬಹಳ ಭಾವುಕನಾಗಿ ಕಣ್ಣು ತುಂಬಿಬರುವದು : ನನ್ನ ಅಮ್ಮನನ್ನು ನೆನೆದಾಗ ; ಹನೇಹಳ್ಳಿಯ ಮಣ್ಣಿನ ವಾಸನೆ ಮೂಗನ್ನು ಅಡರಿದಾಗ ; ಅಲ್ಲಿಯ ಬೇಲಿ, ಗದ್ದೆಗಳ ಹಸಿರು, ಸಂಜೆ-ಮುಂಜಾವುಗಳ ಅರಿಸಿಣ ಬಣ್ಣದ ಬಿಸಿಲು ಕಣ್ಣು ಪರದೆಯ ಮೇಲೆ ಮೂಡಿ ನಿಂತಾಗ ; ಕಟ್ಟೆಯ ಅಶ್ವತ್ಥದ ಮೇಲೆ, ಗದ್ದೆಯಂಚಿನಲ್ಲಿ ಕೆಂಪಗೆ ಹೂತು ನಿಂತ ಹಂಗರಕದ ಮೇಲೆ ಕಾಗೆಗಳು ಕಲರವ ಎಬ್ಬಿಸಿದ್ದು ಕಿವಿಗಳಲ್ಲಿ ಮೊಳಗಿದಾಗ ; ಇನ್ನೂ ಕಂಡಿರದ ಅಣ್ಣ, ಕಳೆದುಹೋದ ತಂಗಿ ಅಚಾನಕವಾಗಿ ಬಂದು ಮನೆಯ ಕದ ತಟ್ಟುತ್ತಿದ್ದಾರೆ ಎಂದು ಭಾಸವಾದಾಗ, ನನಗೇ ಅರಿವಾಗದ ಹಾಗೆ ಅವುಡು ಕಚ್ಚಿದ ರಭಸಕ್ಕೆ ತುಟಿಗಳಿಂದ ರಕ್ತ ಚಿಮ್ಮುವ ಭಯವಾಗುವಷ್ಟರ ಮಟ್ಟಿಗೆ ಸಿಟ್ಟುಬರುತ್ತಿದ್ದುದು ಅಪ್ಪನ ಹೇಡಿತನವನ್ನು ನೆನೆದಾಗ…” +ಅರ್ಧಕ್ಕೇ ಏಕೆ ತಡೆದೆಯೋ ಎರಡೂ ಮಗನೇ ? ಅಪ್ಪ ಹೇಡಿಯಾಗಿದ್ದ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನೂ ನಿನಗೆ ಧೈರ್ಯವಾಗುತ್ತಿಲ್ಲವೇನೋ ? ನಿದ್ದೆ ಬಂತೇನೋ ? ಮಲಗಿಕೋ ಮಗೂ, ನಾಳೆ ಪರ್ಸೊನೆಲ್ ಮ್ಯಾನೇಜರರ ಪತ್ರ ಕಂಡಾಗ ನಿನ್ನ ನೀರಿನ ನಿಜವಾದ ಗುಣ ಗೊತ್ತಾದೀತು ಕಾದಿರು. +uಟಿಜeಜಿiಟಿeಜ- ಅಧ್ಯಾಯ ಎರಡು – +ನಾಗಪ್ಪ ಹೀಗೆಲ್ಲ ಯೋಚಿಸುತ್ತ, ಆಗೀಗ ಮನಸ್ಸು ಬಂದರೆ ಟಿಪ್ಪಣಿ ಮಾಡುತ್ತ ಕೂತದ್ದು ಚಿಕ್ಕಂದಿನಿಂದಲೂ ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರೀನಿವಾಸನ_ಈಗ ಶ್ರೀನಿವಾಸರಾವ್ ಆದವನ_ಶಿವಾಜೀ ಪಾರ್ಕಿನ ಮನೆಯಲ್ಲಿ. ನಾಲ್ಕು ಬೆಡ್‌ರೂಮುಗಳುಳ್ಳ ದೊಡ್ಡ ಫ್ಲ್ಯಾಟಿನಲ್ಲಿ ಅವನಿಗಾಗಿಯೇ ವ್ಯವಸ್ಥೆ ಮಾಡಿಕೊಟ್ಟ ಕೋಣೆಯಲ್ಲಿ. ಬೆಳಿಗ್ಗೆ ಎದ್ದವನೇ ನಿನ್ನೆ ತಾನು ಬರೆದದ್ದನ್ನು ಓದಿ ನೋಡಿದ. ವ್ಯಂಗ್ಯವಾಗಿ ಮುಗುಳುನಗುತ್ತ ಈ ಒಂದೂ ಮಗ ಬಹಳಷ್ಟಕ್ಕೆ ಹೆದರಿಕೊಂಡವನಲ್ಲವಂತೆ ಎಂದುಕೊಳ್ಳುತ್ತ ತನ್ನ ವಹಿ ಮುಚ್ಚಿ ಕಿಡಕಿಗೆ ಬಂದ. ಇದಿರಿಗೇ ಸಮುದ್ರ. ದಂಡೆಯಲ್ಲಿ, ಮನೆಯ ಕಾಂಪೌಂಡಿನಲ್ಲಿ ಊರಿನ ನೆನಪು ತರುತ್ತಿದ್ದ ಗಾಳಿ-ಮರಗಳು ; ಸಬದೂಲಿ, ಗೊಂಡೆ-ಹೂವಿನ ಗಿಡಗಳು ; ಬಸಲೆಯ ಹಂದರ, ಬಾಳೆಯ ಹಿಂಡು, ಒಂದೆರಡು ಅಡಕೆಯ ಸಸಿಗಳು. ಹೋದಲ್ಲೆಲ್ಲ ಹಳ್ಳಿಯನ್ನೇ ಎಬ್ಬಿಸಿ ನಿಲ್ಲಿಸುತ್ತಾನೆ. ಎರಡೂ ಮಗ. ದಿನವೂ ಪ್ರೆಸ್ಸಿಗೆ ಹೋಗುವ ಮೊದಲು ಗಂಜೀ ಊಟ ಮಾಡಿಯೇ ಹೋಗುತ್ತೇನೆಂದು ಅಭಿಮಾನದಿಂದಲೇ ಹೇಳುತ್ತಾನೆ ಮತ್ತೆ ! +ಎಲ್ಲರನ್ನು ಬಿಟ್ಟು ಶ್ರೀನಿವಾಸನ ಮನೆಯಲ್ಲಿ ತಳವೂರಿದ್ದು ಸ್ವತಃ ನಾಗಪ್ಪನಿಗೇ ಆಶ್ಚರ್ಯ_ಕಳೆದ ಇಪ್ಪತ್ತು ವರ್ಷಗಳಿಗೂ ಮಿಕ್ಕಿದ ಕಾಲದಿಂದ ಅವನ ಬಗ್ಗೆ ತಳೆಯುತ್ತ ಬಂದ, ದ್ವೇಷಕ್ಕೆ ಹತ್ತಿರವಾದ, ಅಸಡ್ಡೆಯನ್ನೂ ಮರೆತು : ‘ನಿನ್ನ ಅಫೀಸು-ಗೀಫೀಸು ಎಲ್ಲಾ ಮರೆತುಬಿಟ್ಟು, ಸುಖವಾಗಿ ಇಲ್ಲಿ ಬಂದು ಒಂದು ತಿಂಗಳು ಇದ್ದು ಬಿಡು. ಹೇಗಾದರೂ ರಜೆ ತೆಗೆದುಕೊಂಡಿದ್ದೀಯಲ್ಲ. ಮಹಾಬಲೇಶ್ವರ್, ಮಾಥೇರಾನ್ ಅಲ್ಲದಿದ್ದರೂ ಮುಂಬಯಿಯ ಸೆಖೆ ನಿನ್ನನ್ನು ಇಲ್ಲಿ ಬಾಧಿಸದು. ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ_ನನ್ನ ಬಗ್ಗೆ. ಬರೆ ಬರೆ. ಎಂತಹ ಭಿಡೆಯೂ ಬೇಡ. ಅಮ್ಮನ ಬಗ್ಗೆ ನೀನು ಬರೆದದ್ದನ್ನು ಓದಿದೆ_ನೀನೇ ಅದರ ಪತ್ತೆ ಹತ್ತಗೊಡದಿದ್ದರೂ, ಅಡ್ಡಿಯಿಲ್ಲ. ಬರೆಯುವ ಕಲೆ ನಿನಗಿದೆ. ನಾವೇನಪ್ಪ ಸಾಹಿತ್ಯದ ಗಂಧಗಾಳಿಯಿಲ್ಲದ ದಡ್ಡರು. ಬೇರೆಯವರು ಬರೆದದ್ದನ್ನು ಛಾಪಿಸುವಷ್ಟರ ಮಟ್ಟಿಗೇ ಶಬ್ದಗಳ ಸಂಬಂಧ. ಕನ್ನಡ ಕಲಿತದ್ದು ಮೆಟ್ರಿಕ್‌ವರೆಗಾದರೂ ಈಗ ಅದಕ್ಕೆ ಜಂಗುಹಿಡಿದಿದೆ. ನಮ್ಮಲ್ಲಿ ಕನ್ನಡ ಟೈಪ್ಸ್‌ಗಳಿದ್ದರೆ ನಿನ್ನ ಪುಸ್ತಕವನ್ನು ನಮ್ಮಲೇ ಛಾಪಿಸಬಹುದಿತ್ತು. ಏನಿಲ್ಲದಿದ್ದರೂ ನಿನ್ನ ಪುಸ್ತಕದ ಜ್ಯಾಕೆಟ್ಟನ್ನಾದರೂ ನಮ್ಮಲ್ಲೇ ಮಾಡಿಸೋಣ. ನಾಲ್ಕು ನಾಲ್ಕು ಬಣ್ಣಗಳಲ್ಲಿ ಮುದ್ರಿಸುವ ಬೇಕಾದರೆ, ಅದಕ್ಕೇನಂತೆ….’ ಇದರಲ್ಲಿ ಶ್ರೀನಿವಾಸನಿಗೆ ಪ್ರಾಮಾಣಿಕವಾಗಿ ಅನ್ನಿಸಿದ್ದೆಷ್ಟು. ನನ್ನನ್ನು ಕೆಣಕಲೆಂದೇ ಆಡಿದ್ದೆಷ್ಟು ಎಂದು ನಾಗಪ್ಪನಿಗೆ ಖಚಿತವಾಗಿ ತಿಳಿಯಲಿಲ್ಲ. ಅವನ ಅಮ್ಮನ ಬಗ್ಗೆ ತಾನು ಬರೆದ ಕತೆ ಓದಿದ ದಿನ ಸಿಟ್ಟಿನಿಂದ ಧಿಮಿಧಿಮಿ ಕುಣಿದುಬಿಟ್ಟಿದ್ದನೆಂದು ಸೀತಾರಾಮನಿಂದ ತಿಳಿದಿತ್ತು. ಬಹುಶಃ ಕಾದಂಬರಿಯ ವಿಷಯವನ್ನು ಸೀತಾರಾಮನೇ ಇವನಿಗೆ ಹೇಳಿರಬೇಕು. ಇಂಥ ಕಿಡಿಗೇಡಿತನದಲ್ಲಿ ಅವನು ನಿಷ್ಣಾತ ! +ಶ್ರೀನಿವಾಸ ಕಾದಂಬರಿ ಬರೆ ಎಂದು ಹೇಳಿದ್ದರಲ್ಲಿ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ತನ್ನ ಬಾಯನ್ನು ಮುಚ್ಚಿಸುವ ಹಿಕ್ಮತಿಯೇ ಅಡಗಿರಲಿಕ್ಕಿಲ್ಲ ತಾನೇ ಎಂಬ ಶಂಕೆಯೂ ಮೂಡಿತ್ತು, ನಾಗಪ್ಪನಲ್ಲಿ. ಆದರೂ ತಲೆ ತಿನ್ನುತ್ತಿದ್ದ. ತನ್ನ ಸೃಜನಶೀಲತೆಯನ್ನು ಹಿಂಡಿಹಾಕುತ್ತಿದ್ದ ಆಫೀಸಿನ ಸದ್ಯದ ರಾಜಕಾರಣದಿಂದ ಕೆಲವು ದಿನ ದೂರ ಉಳಿಯುವುದು, ದೂರ ಉಳಿದು ಕಂಪನಿಯ ಕೆಲಸಕ್ಕೆ ತನ್ನ ತಾತ್ವಿಕ ನಿಲುವು ಏನೆನ್ನುವುದನ್ನು ನಿಶ್ಚಯಿಸಿಕೊಳ್ಳುವುದು ಅವಶ್ಯವೆನಿಸಿದ ತನಗೆ ಅನಿರೀಕ್ಷಿತವಾಗಿ ಬಂದ ಈ ಆಹ್ವಾನವನ್ನು ನಿರಾಕರಿಸಬೇಕೆನ್ನಿಸಲಿಲ್ಲ. ಅಷ್ಟೇಕೆ_ಇಷ್ಟು ವರ್ಷ ಶ್ರೀನಿವಾಸನನ್ನು ನೇರವಾಗಿ ಸಂಧಿಸುವುದನ್ನು ತಪ್ಪಿಸುತ್ತ ಬಂದ ತಾನು_ಈಗ ಅವನು ಕರೆಯುವುದನ್ನೇ ಕಾಯುತ್ತ ಕುಳಿತವನ ಹಾಗೆ, ತುಂಬ ಹುರುಪಿನಿಂದಲೇ ಅವನ ಜತೆ ಹೋಗಲು ಒಪ್ಪಿಕೊಂಡಾಗ ಆಶ್ಚರ್ಯದಂತೆ ಸಂತೋಷವೂ ಆಗಿತ್ತು. ಸಹಜ ಸ್ಪೂರ್ತಿಯಿಂದ ನಡೆದ ಈ ಸ್ವೀಕಾರದ ಹಿಂದಿನ ಪ್ರೇರಣೆಯನ್ನು ಹುಡುಕುವ ಆತುರ ಕೂಡ ಅವನಿಗೆ ಆಗಲಿಲ್ಲ. ಮಹತ್ವದ ಸಂಗತಿಯೆಂದರೆ ಅವನಿಗೆ ಸದ್ಯ ಬರೆಯಬೇಕಾದದ್ದು ಶ್ರೀನಿವಾಸನನ್ನು ಅಂದರೆ ಶ್ರೀನಿವಾಸ ಹಾಗೂ ತನ್ನ ಸಂಬಂಧವನ್ನು ಕುರಿತು ಅವನು ಬಹಳ ಹಿಂದೆ ಯೋಚಿಸಿದ ಕಾದಂಬರಿಯಾಗಿರಲೇ ಇಲ್ಲ. ಈಗ ಬರೆಯಬೇಕಾದದ್ದು ತನ್ನ ಆಫೀಸನ್ನು ಕುರಿತೇ, ತನ್ನನ್ನು ಕುರಿತೇ : ಈ ರಾಜಕಾರಣದಿಂದಾಗಿ ಇಷ್ಟೊಂದು ಯಾತನೆಯನ್ನು ಯಾಕೆ ಅನುಭವಿಸುತ್ತಿದ್ದೇನೆ ? ಯಾತನೆಯ ಬೇರುಗಳವರೆಗೆ ಇಳಿದು ನೋಡಬೇಕು….. +ಅವನಿಗೆ ಅರಿಯಬೇಕಾದದ್ದು ತನ್ನ ಆಫೀಸಿನ ಕೆಲವು ವ್ಯಕ್ತಿಗಳೊಡನೆಯ ಸಂಬಂಧಗಳನ್ನು, ಮುಖ್ಯವಾಗಿ ಫಿರೋಜ್ ಬಂದೂಕವಾಲಾನೊಡನೆಯ ಸಂಬಂಧವನ್ನು. ಈ ಅಂತರ್ವೈಯಕ್ತಿಕ ಸಂಬಂಧಗಳಲ್ಲಿ ಪ್ರತಿಸಲ ತೆರೆದುಕೊಳ್ಳುತ್ತಿದ್ದುದು ತನ್ನ ವ್ಯಕ್ತಿತ್ವ ರೂಪಗೊಂಡದ್ದರ ಇತಿಹಾಸವೇ ? ಎಂಬ ಸಂಶಯ ಇತ್ತೀಚೆ ಬಲವಾಗಹತ್ತಿದೆ_ಮುಖ್ಯತಃ ಎರಿಕ್ ಬರ್ನನ್ ‘ಟ್ರೆನ್ಸೆಕ್ಷನಲ್’ ಎನೆಲಿಸಿಸ್ ಅಭ್ಯಾಸ ಮಾಡಿದಂದಿನಿಂದ : ನೀನು ತಲೆ ಉಬ್ಬಿಸಿಕೊಳ್ಳಬೇಡವೋ ಎರಿಕ್. ಇದು ಬರೀ ನನ್ನೊಳಗಿನ ಪ್ರೊಫೆಸರ್ ಮಾತನಾಡುವ ರೀತಿ ಅಷ್ಟೇ. ನನ್ನ ಅನುಭವದಲ್ಲಿ ಹುಟ್ಟಿದ್ದನ್ನೇ ನಿನ್ನ ಶಬ್ದಗಳಲ್ಲಿ ಎರಕ ಹೊಯ್ದೆನಷ್ಟೇ. ನಿನ್ನ ಲಂಗೋಟೀ ಗೆಳೆಯನೆಂಬಂತೆ ಮಾತನಾಡುತ್ತಿದ್ದೀನಲ್ಲವೆ ? ನನ್ನನ್ನು ದೂರಬೇಡ, ದೂರು ಈ ಸಮುದ್ರವನ್ನು, ಎಲ್ಲ ನೋವನ್ನೂ ಕ್ಷುಲ್ಲಕಗೊಳಿಸುವ ಅದರ ಉಲ್ಲಾಸದ ಉದ್ಘೋಷವನ್ನು…. +ಫಿರೋಜ್ ಮನಸ್ಸು ತುಂಬಿದ್ದರಿಂದಲೋ ಏನೋ ಶ್ರೀನಿವಾಸನಲ್ಲಿಯೂ ಅವನಲ್ಲಿಯೂ ಇದ್ದ ದೈಹಿಕ ಹೋಲಿಕೆ ಲಕ್ಷ್ಯಕ್ಕೆ ಬಂದು ನಾಗಪ್ಪ ಅಸ್ವಸ್ಥನಾದ. ಎಲ್ಲರೂ ಒಪ್ಪಿಕೊಳ್ಳುವಂತಹ ಹೋಲಿಕೆಯಲ್ಲ; ತನಗಷ್ಟೇ ಒಂದು ಅನಪೇಕ್ಷಿತ ರೀತಿಯಲ್ಲಿ. ಅನಪೇಕ್ಷಿತ ಕ್ಷಣದಲ್ಲಿ ಥಟ್ಟನೆ ಹೊಳೆದುಬಿಟ್ಟದ್ದು : ಯಾವುದೋ ಸಿನಿಮಾದಲ್ಲೋ, ನಾಟಕದಲ್ಲೋ ನೋಡಿದಂತಿದ್ದ ಕೊಲೆಯ ಆರೋಪಿಯ ನೆನಪು ತರುವಂತಹದ್ದೇನನ್ನೋ ಕಂಡಂತೆ ಆಗಿ ಮೈ ಜುಮ್ ಎಂದಿತ್ತು. ಈ ಅನ್ನಿಸಿಕೆ ಯಾರಿಂದಾಗಿ ಹುಟ್ಟಿ ಯಾರನ್ನು ಒಳಗೊಂಡಿತ್ತು ಎನ್ನುವುದು ಈಗ ಖಚಿತವಾಗಿ ಗೊತ್ತುಹಿಡಿಯುವುದು ಕಠಿಣವಾಗಿ ತೋರಿದರೂ ಫಿರೋಜನೇ ಇದಕ್ಕೆ ಮೂಲವಿರಬಹುದು ಎಂಬ ಸಂಶಯ ಮನಸ್ಸಿಗೆ ಹೆಚ್ಚು ಸಮಾಧಾನಕರವಾಗಿ ತೋರಿತು : ಬರೆಯಬೇಕು, ದಿನವೂ ಇಷ್ಟಿಷ್ಟನ್ನು. ಆದರೆ ಯಾರನ್ನೂ ನಿಂದೆಗಾಗಲೀ ಆರೋಪಕ್ಕಾಗಲೀ ಗುರಿಪಡಿಸಲಲ್ಲ. ಇವರೊಡನೆಯ ಸಂಬಂಧಗಳನ್ನು ಅರಿಯುವುದರ ಮೂಲಕ ನನ್ನನ್ನು ನಾನು ಅರಿತುಕೊಳ್ಳಲು. +“ಟಿಪ್ಪಣು ಏಳು : ನಿನ್ನೆ ಒಂದು ಮೋಜಿನ ಸಂಗತಿ ನಡೆಯಿತು….” +ತನ್ನನ್ನು ತಾನೇ ಅರಿತುಕೊಳ್ಳಬೇಕೆಂದು ಬರೆಯಲು ಹಿಡಿದ ಈ ಅಂತರ್ ವೈಯಕ್ತಿಕ ಸಂಬಂಧಗಳ ಇತಿಹಾಸದಲ್ಲಿ ಮೂಲಯೋಜನೆಯ ಪ್ರಕಾರ ನಿನ್ನೆ ಮೊನ್ನೆಯ ಘಟನೆಗಳಿಗೆ ಆಸ್ಪದವಿರಲಿಲ್ಲ. ಆದರೆ ತನಗೇ ಗೊತ್ತಾಗದಂತೆ ಯೋಜನೆಯಲ್ಲಿ ಆದ ಬದಲಿನ ಅರಿವು ನಾಗಪ್ಪನಿಗೆ ಬಂದದ್ದು ಇಂದು ಬರೆಯಲು ಆರಂಭಿಸಿದಮೇಲೇ. ಏಕೋ ನಿನ್ನೆಯ ಅನುಭವಗಳನ್ನು ಕುರಿತು ಬರೆಯುವ ಕುತೂಹಲ ಈಗ ಅನಾವರಣವಾಗಹತ್ತಿತ್ತು : ಯಾರು ಬಲ್ಲರು ? ಈ ಅನುಭವಗಳನ್ನು ನಿರ್ದಿಷ್ಟ ಕಾಲಖಂಡಗಳಲ್ಲಿ ವಿಂಗಡಿಸುವುದೇ ತಪ್ಪೇನೋ. ಸದ್ಯದ ಅನುಭವವೂ ನಾನು ಅನುಭವವನ್ನು ಸ್ವೀಕರಿಸುತ್ತ ಬಂದ ರೀತಿಯ ಮೇಲೆ ಬೆಳಕು ಚೆಲ್ಲಬಹುದೇನೋ_ಆದ್ದರಿಂದ ನಾನು ಇನ್ನು ಮುಂದೆ ಹಿಡಿಯಬೇಕಾದ ಹಾದಿಯ ಮೇಲೂ ಕೂಡ. ಬದುಕಿಗೆ ವಿಮುಖನಾಗುವದು ಹೇಡಿತನ, ಉತ್ಕ್ರಾಂತಿಕ್ರಮ ನನ್ನ ಬದುಕಿನ ರೀತಿಯ ಮುಖಾಂತರ ನಡೆಸುತ್ತಿದ್ದ ಪ್ರಯೋಗವನ್ನು ವಿಫಲಗೊಳ್ಳಲು ಬಿಡಲಾರೆ…. ದೇವರೇ, ಇದೇಕೆ ನಾನು ಹೀಗೆ ನಡುಗುತ್ತಿದ್ದೇನೆ ? ನಾವು ಬೇಡಿಬಂದವರ ಹುಟ್ಟು-ಸಾವುಗಳ ನಡುವಿನ ಬದುಕು ಮಾತ್ರ ನಮ್ಮ ವೈಯಕ್ತಿಕ ಜವಾಬ್ದಾರಿಯದು ಎಂಬ ಅರಿವಿಗೇ ಮೂಲಭೂತವಾದ ಭಯವೇ ಇದು ? +ಶಿವಾಜೀ ಪಾರ್ಕಿನ ಸಮುದ್ರತೀರ. ಓದಿ ಬೇಸರ ಬಂದದ್ದರಿಂದ ಮಳಲುದಂಡೆಯ ಮೇಲೆ ಬಂದು ಕುಳಿತಿದ್ದೆ. ನಿನ್ನೆ_ನಾನೊಬ್ಬನೇ. ಸದ್ಯ ಓದಲು ಹಿಡಿದ ಕೊನ್ರಾಡ್ ಲಾರೆಂಝ್ ತಲೆ ತುಂಬಿದ್ದ. (We ಜo ಟಿoಣ ಞಟಿoತಿ oಜಿ ಚಿ siಟಿgಟಚಿ ಚಿಟಿimಚಿಟ ತಿhiಛಿh is ಛಿಚಿಠಿಚಿbಟಚಿ oಜಿ ಠಿeಡಿsoಟಿಚಿಟ ಜಿಡಿieಟಿಜshiಠಿ ಚಿಟಿಜ ತಿhiಛಿh ಟಚಿಛಿಞs ಚಿggಡಿessioಟಿ.) ಓದುವಾಗ ಮಾತ್ರ ಫಿರೋಜ್ ಹಾಗೂ ಶ್ರೀನಿವಾಸ ತಿರುತಿರುಗಿ ಓದಿಗೆ ಅಡ್ಡಬಂದದ್ದು ನೆನಪಿಗೆ ಬಂದು ಕಿರಿಕಿರಿಯಾಗುತ್ತದೆ. ಶ್ರೀನಿವಾಸನ ಹೆಂಡತಿ ಇಷ್ಟೊಂದು ಸುಂದರಳೆಂಬ ಕಲ್ಪನೆಯೇ ನನಗಿರಲಿಲ್ಲ ಎಂಬ ವಿಚಾರ ಮನಸ್ಸನ್ನು ತಟ್ಟಿಹೋಗುತ್ತದೆ. ಸುಖಪುರುಷ ಬೋಳೀಮಗ ಅನ್ನಿಸಿತು. ಶ್ರೀನಿವಾಸನ ಇಡೀ ಇತಿಹಾಸವನ್ನು ಸ್ವಲ್ಪದರಲ್ಲಿ ಹಿಡಿಯುವುದಾದರೆ ಚಿಕ್ಕಂದಿನಿಂದ ಬಡತನದಿಂದಾಗಿ ಪಟ್ಟ ಅವಮಾನಗಳನ್ನೆಲ್ಲ ಮರೆಯಲು ಮಾಡಿದ ಪ್ರಚಂಡ ಹೋರಾಟ. ಅದೊಂದು ದೊಡ್ಡ ಸಾಹಸದ ಕತೆ. ಎಲ್ಲೋ ಒಂದು ಗೊತ್ತಾಗದ ಜಾಗದಲ್ಲಿ, ಗೊತ್ತಾಗದ ರೀತಿಯಲ್ಲಿ ಆತ ನನ್ನನ್ನು ಆಹ್ವಾನಿಸುತ್ತಾನೆ. +ದಂಡೆಯ ಮೇಲೆ ಕುಳಿತ, ನಿಂತ, ಓಡಾಡುತ್ತಿದ್ದ ಅಪರಿಚಿತ ಜನರಲ್ಲಿ ಒಬ್ಬ ಮುದುಕ ಅಥವಾ ಮುದುಕನಂತೆ ಕಾಣುವ ಒಬ್ಬ ವ್ಯಕ್ತಿ ನನ್ನ ಲಕ್ಶ್ಯ ಸೆಳೆದಿದ್ದ. ಧೋತರ, ನಿರಿಗೆಗಟ್ಟಿದ ಅಂಗಿ, ಮನೆಯಲ್ಲೇ ಒಗೆದು ಇಸ್ತ್ರಿ ಮಾಡುವ ಮೊದಲೇ ಹಾಕಿಕೊಂಡಿದ್ದ ಹತ್ತಿಬಟ್ಟೆಯ ಕೋಟು, ತಲೆಯ ಮೇಲೆ ಕರಿಯ ಟೊಪ್ಪಿಗೆ, ಕಾಣದಿದ್ದರೂ ಟೊಪ್ಪಿಗೆಯ ಒಳಗೆ ಚೆಂಡಿಕೆ ಇದ್ದೀತು ಎಂಬ ಅನುಮಾನದಿಂದಲೇ ಇರಬೇಕು, ಮುದುಕನನ್ನು ನೋಡ ನೋಡುತ್ತ ನನಗೆ ಅರಿವಾಗುವ ಮೊದಲೇ ನನ್ನ ಮೋರೆಯ ಮೇಲೆ ಮುಗುಳುನಗೆ ಮೂಡಿತ್ತು. ಹಾಗೆ ಮೂಡಿದ್ದರ ಅರಿವು ನನಗೆ ಬಂದದ್ದು ನನ್ನನ್ನೇ ನೋಡುತ್ತಿದ್ದ ಮುದುಕ ಏಕಾ‌ಏಕಿ ಗಲಿಬಿಲಿಗೊಂಡಾಗ. ಅದನ್ನು ಕಂಡು ನಾನು ನನ್ನ ಮೋರೆಯನ್ನು ಇನ್ನೊಂದೆಡೆ ತಿರುವಿದ್ದೇ ಸಕ್ಕನೆ ಹೊಳೆದುಹೋಗಿತ್ತು : ಅರೆ ! ನಾನು ಈ ವ್ಯಕ್ತಿಯನ್ನು ಈ ಮೊದಲು ಎಲ್ಲಿಯೋ ಕಂಡಿದ್ದೇನೆ ಎನ್ನುವುದು. ಎಲಾ ಇದರ. ಶ್ರೀನಿವಾಸನ ಮನೆಯಲ್ಲೇ ? ಇದೀಗ ಇಲ್ಲಿ ಬರುವಾಗ ಯಾರೋ ಹಿಂಬಾಲಿಸಿತ್ತಿದ್ದಾರೆ ಎಂಬ ಅನುಮಾನ ಬಂದು ಹಿಂದಿರುಗಿ ನೋಡಿದಾಗ ಕಳ್ಳತನದಿಂದ ನನ್ನತ್ತ ಬೆನ್ನುತಿರುವಿ ನಿಂತ ವ್ಯಕ್ತಿ ಇವನೇ ಇದ್ದಿರಬಹುದೇ ? ಧೋತರ ಉಟ್ಟಿದ್ದನೇ ? ಕೋಟು ಟೊಪ್ಪಿಗೆ ಹಾಕಿಕೊಂಡಿದ್ದನೇ ? ಯಾವುದೂ ನೆನಪಿಲ್ಲ. ನನ್ನ ಜಗತ್ತಿನಲ್ಲೇ ಮಗ್ನನಾದ ನಾನು ಯಾವುದನ್ನೂ ಸರಿಯಾಗಿ ಲಕ್ಷ್ಯಕ್ಕೆ ತಂದುಕೊಂಡಂತಿರಲಿಲ್ಲ. ಹೊರಗೆ ಹೋಗಬೇಕು ಅನ್ನಿಸಿತು. +ಮರುಗಳಿಗೆ ವೋಮೂನ ನೆನಪಾಯಿತು. ಚೋಟುದ್ದದ ಹುಡುಗ. ಬಂಡಾಯಗಾರ. ಅದು ಅವನ ವಯಸ್ಸಿನ ಗುಣ. ನನಗೆ ತುಂಬಾ ಮೆಚ್ಚುಗೆಯಾದದ್ದು ಅವನ ಆರೋಗ್ಯ. ಬರೆಯಬೇಕು ಒಂದು ದಿನ ವೋಮೂನ ಬಗ್ಗೆ. “ಸರ್,” ಎಂದಿದ್ದ ಒಂದು ದಿನ. “ನಿಮ್ಮ ಮೋರೆ ನೋಡಿದರೇನೇ ಗೊತ್ತಾಗಿಬಿಡುತ್ತದೆ_ನೀವು ಯಾವಾಗಲೂ ನಿಮ್ಮ ಬಗ್ಗೇ ವಿಚಾರ ಮಾಡ್ತಾ ಇರುತ್ತೀರಿ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.” ಎಲಾ ಒಂದೂ ಮಗನೇ ಅಂದುಕೊಂಡೆ. ಪರಿಚಯವಾಗಿ ಹತ್ತು ದಿನಗಳೂ ಆಗಿರಲಿಲ್ಲ. ಆಗ ವೋಮೂಗೆ ತನ್ನ ಮರಾಠಿ ಭಾಷೆಯ ಬಗ್ಗೆ ತುಂಬ ಅಭಿಮಾನವಿದ್ದಂತಿತ್ತು. ನಿಜ ಒಪ್ಪಿಕೊಳ್ಳಲೇ ? ನನಗೆ ಆ ಮಾತುಗಳಿಂದ ಬಹಳ ಸುಖವೆನ್ನಿಸಿತ್ತು. ಅದೇ ಭೇಟಿಯಲ್ಲೇ ಎಂದು ತೋರುತ್ತದೆ. “ವೋಮೂ ನಿನ್ನ ಹೆಸರನ್ನೇಕೆ ನೀನು ಬದಲಿಸಿಕೊಳ್ಳಬಾರದು ?” ಎಂದು ಕೇಳುವ ಹುಚ್ಚುತನದ ಉಪದ್ವ್ಯಾಪ ಮಾಡಿದ್ದೆ. “ಯಾಕೆ ? ಈಗ ಇದ್ದ ಹೆಸರು ನನ್ನನ್ನು ಕರೆಯಲು ಸಾಲದೆ ?” ಎಂದಿದ್ದ. ವೋಮೂನ ಉತ್ತರದಲ್ಲಿ ಸಿಟ್ಟಿಗಿಂತ ಹೆಚ್ಚಾಗಿ ಆತ್ಮ ವಿಶ್ವಾಸವಿತ್ತು ಎಂಬುದು ಈಗಿನ ಅನ್ನಿಸಿಕೆ. ಅಗ, ನಮ್ಮ ಪರಿಚಯವಾದ ಮೊದಲಲ್ಲಿ ಮಾತ್ರ ಐತಿಹಾಸಿಕ ಪರಿಸ್ಥಿತಿಯ ಜೋರಿನ ಮೇಲೆ ಮಾತನಾಡುತ್ತಿದ್ದಾನೆ ಒಂದೂ ಮಗ ಅನ್ನಿಸಿತ್ತು. ನಾಳೆ ಅವನ ಆಫೀಸಿಗೆ ಫೋನ್ ಮಾಡಿ ಕರೆಯಬೇಕು. ವೋಮೂ ಹರಿಜನರ ಹುಡುಗ ಎಂದು ಗೊತ್ತಾದಾಗ ಈ ಮನೆಯವರ ಪ್ರತಿಕ್ರಿಯೆ ಏನಾಗುತ್ತದೋ ನೋಡಬೇಕು…. +ತಿರುಗಿ ಮುದುಕನಿದ್ದ ಜಾಗದ ಕಡೆ ನೋಡಿದಾಗ ಅದೃಶ್ಯನಾಗಿದ್ದ : ನನ್ನ ಸಂಶಯ ಗಟ್ಟಿಯಾಯಿತು. ಅವನನ್ನು ಶ್ರೀನಿವಾಸನಲ್ಲೇ ನೋಡಿರಬೇಕು. ನನ್ನನ್ನು ಬೇಕೆಂದೇ ಹಿಂಬಾಲಿಸಿರಬೇಕು. ರಾತ್ರಿ ಶ್ರೀನಿವಾಸನನ್ನು ಕೇಳಬೇಕು. ಎಂದುಕೊಂಡು ಸಮುದ್ರದತ್ತ ಕಣ್ಣು ಹಾಯಿಸಿದೆ. ಸೂರ್ಯಾಸ್ತವನ್ನು ಇದೇ ಮೊದಲೊಮ್ಮೆ ನೋಡುತ್ತಿದ್ದೇನೆ ಎನ್ನುವ ರೀತಿಯಲ್ಲಿ ಪುಳಕಿತನಾಗಿ ಕಣ್ಣರಳಿಸಿದೆ. ಮರುಕ್ಷಣ, ಮತ್ತೆ ಆ ಮುದುಕ ಮನಸ್ಸಿನಲ್ಲಿ, ಎಂತಹದೋ ಅಸ್ಪಷ್ಟ ಭಯಕ್ಕೆ ಕಾರಣನಾಗುತ್ತಿದ್ದಾನೆ ಎನ್ನುವ ಅನ್ನಿಸಿಕೆಯಿಂದ ಅಸ್ವಸ್ಥನಾಗಿ ನನಗರಿವಾಗುವ ಮೊದಲೇ ಧಡಕ್ಕನೆ ಕುಳಿತಲ್ಲಿಂದ ಎದ್ದೇ ನಿಂತೆ. ಮುಟ್ಟಿ ನೋಡಿದರೆ, ಕಡಲು-ತೀರದ ತಂಪುಗಾಳಿಯಲ್ಲೂ ಶರ್ಟಿನ ಕಾಲರ್ ಒದ್ದೆಯಾಗುತ್ತಿದ್ದ ಭಾವನೆ ಬಂತು. ಯಾವುದನ್ನೂ ಸಹಜಸ್ಪೂರ್ತಿಯಿಂದ ಅನುಭವಿಸಿ ಸಂತೋಷಿಸುವ ಸಾಮರ್ಥ್ಯವನ್ನೇ ಕಳೆದುಕೊಂಡೆನೆ ?_ಅದೇ ಏಳುತ್ತಿದ್ದ ಅನ್ನಿಸಿಕೆಯನ್ನು ಹತ್ತಿಕ್ಕಿ ಆ ಮುದುಕ ಯಾರು ಎನ್ನುವುದನ್ನು ಈಗಿಂದೀಗ ಪತ್ತೆಹಚ್ಚಲೇಬೇಕು ಎನ್ನುವ ಜರೂರಿಯಿಂದ ಅಲ್ಲಿಂದ ಹೊರಟು ಸೀದ ಶ್ರೀನಿವಾಸನ ಮನೆಯತ್ತ ಹೆಜ್ಜೆ ಇಡಹತ್ತಿದೆ. ದೃಷ್ಟಿಗೆ ಬಿದ್ದ ಪ್ರತಿ ಹೊಸ ವಸ್ತು. ಸಂಧಿಸಿದ ಪ್ರತಿ ಹೊಸ ವ್ಯಕ್ತಿ ಹೀಗೇಕೆ ಒಮ್ಮಿಂದೊಮ್ಮೆಲೇ ಭಯಕ್ಕೆ ಕಾರಣವಾಗುತ್ತಿದೆ ಅನ್ನಿಸಿ ಕೊರಳ ಮೇಲಿನ ಬೆವರನ್ನೊರೆಸಿಕೊಂಡೆ : ನಾಲ್ಕು ದಿನ ಕ್ಷೌರ ಕಂಡಿರದ ಗಡ್ಡ. ಬಾಯಿ ತೆರೆದಾಗ ತಪ್ಪದೇ ಜಗ್ ಎಂದು ಕಣ್ಣಿಗೆ ಬಿದ್ದ ಕಪ್ಪುಗಟ್ಟಿದ ಹಲ್ಲು ಉಳಿದ ಹಲ್ಲುಗಳಿಂದ ತುಸು ಹೊರಗೆ ಚಾಚಿತ್ತು.ಕನ್ನಡಕದ ಹಿಂದೆ ಗುಳಿಬಿದ್ದ ಕಣ್ಣುಗಳು. ಅವಸರ ಅವಸರವಾಗಿ ಶ್ರೀನಿವಾಸನ ಮನೆಯತ್ತ ಹೆಜ್ಜೆ ಇಡಹತ್ತಿದೆ. ಆ ಮುದುಕನೇ ನನ್ನ ಬೆನ್ನು ಹತ್ತಿದ್ದಾನೆ, ನಾನು ಅವನಿಂದ ತಪ್ಪಿಸಿಕೊಳ್ಳುತ್ತಿದ್ದೇನೆ ಎನ್ನುವ ಹಾಗೆ ಎದೆ ಡವಗುಟ್ಟುತ್ತಿತ್ತು. ಸಮುದ್ರದಂಡೆಯನ್ನು ಬಿಟ್ಟು ಟಾರ್-ರಸ್ತೆಗೆ ಬಂದು ಶ್ರೀನಿವಾಸನ ಮನೆಯತ್ತ ಹೊರಳುವ ಓಣಿಯವರೆಗೂ ಕಣ್ಣುಹಾಯಿಸಿದೆ. ಮುದುಕ ಕಾಣಲಿಲ್ಲ. ಇದೀಗ ಓಣಿಯನ್ನು ಹೊಕ್ಕು ಕಣ್ಮರೆಯಾದವನು ಅವನೇ ಎಂಬ ಭರವಸೆಯಿಂದ ಫುಟ್-ಪಾಥಿನ ಮೇಲಿನ ಜನರ ಪರವೆ ಇಲ್ಲದೆ ಓಡೋಡಿಯೇ ಓಣಿಯನ್ನು ತಲುಪಿ, ಓಣಿಯ ಆ ತುದಿಯ ಮೇಲೆ ದೃಷ್ಟಿ ಚೆಲ್ಲುವಷ್ಟರಲ್ಲಿ, ಅದೇ ಆ ಕ್ಷಣದಲ್ಲಿ ಅವನು ಮತ್ತೆ ಅಡ್ಡಬೀದಿಯನ್ನು ಸೇರಿದನೆಂದು ಅನುಮಾನ ಬಂದಾಗ ಯಾವ ಭಿಡೆಯೂ ಇಲ್ಲದೇ ಓಡಹತ್ತಿದೆ. ಮುದುಕ ಕೊನೆಗೂ ಭೆಟ್ಟಿಯಾಗಲೇ ಇಲ್ಲ. ನಾನು ಓಡೋಡಿ ಬರುತ್ತಿದ್ದುದನ್ನು ಶ್ರೀನಿವಾಸನ ಮನೆಯಿದ್ದ ಆರು ಮಜಲೆಯ ಕಟ್ಟಡದಲ್ಲಿಯ ಅನೇಕ ಜನರು ಕಂಡದ್ದು ಲಕ್ಷ್ಯಕ್ಕೆ ಬಂದಾಗ ಗೊಂದಲಿಸಿ ಕಳ್ಳನಂತೆ ಕಾಂಪೌಂಡಿನ ಗೇಟು ನೂಕಿ ಒಳಹೊಕ್ಕೆ. ಕೋಣೆ ಸೇರಿದಾಗ ಧಾರಾಳವಾಗಿ ಬೆವತಿದ್ದೆ. ದಣಿದು ಮಂಚದ ಮೇಲೆ ಅಡ್ಡವಾದಲ್ಲೇ ಬೆಳಿಗ್ಗೆ ಬರೆಯಲು ಕೂತಾಗ ಬಾವಿಯಲ್ಲಿ ಮುಳುಗಿಸಿದ ಕೊಡಪಾನ ಎಬ್ಬಿಸುವ ನೀರಗುಳ್ಳೆಯಂತೆ ಗುಳು ಗುಳು ಸದ್ದುಮಾಡಿದ ಪ್ರಶ್ನೆ ಹಠಾತ್ತನೆ ಎದ್ದು ಬಂತು : ನಾನು ಯಾತರಿಂದ ಓಡುತ್ತಿದ್ದೇನೆ ? ಪರಾರಿಯಾಗುತ್ತಿದ್ದೇನೆ ? ಶ್ರೀನಿವಾಸನ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ ಹೇಳಿದಂತೆ ನನ್ನದನ್ನೂ ಹೇಳಬಹುದೇ ? ಯಾಕೆ ಧೈರ್ಯವಾಗುವದಿಲ್ಲ ? +ಯಾರೋ ಕದದ ಮೇಲೆ ಬಡೆದ ಸದ್ದು ಕೇಳಿ ಹಾಸಿಗೆಯಿಂದ ಎದ್ದು ದೀಪಹಾಕಿ ಕದ ತೆರೆದರೆ ಸ್ವಲ್ಪ ಹಲ್ಲು ತೋರಿಸಿ, ಒಂದು ಗಲ್ಲದಲ್ಲಿ ಗುಳಿ ಮೂಡಿಸಿ ಮೋಹಕವಾಗಿ ನಗುತ್ತ ನಿಂತ ಶ್ರೀನಿವಾಸನ ಎರಡನೆಯ ಮಗಳು-ಚೇತನಾ ! ಕಂಡ ಕೂಡಲೇ ತುಂಬ ತುಂಬ ಹರ್ಷಿತನಾದೆ. ಕೆಲಹೊತ್ತಿನ ಮೊದಲಷ್ಟೇ ಕಳಕೊಂಡ ಪ್ರಬುದ್ಧತೆಯನ್ನು ತಿರುಗಿ ಪಡೆದವನ ಹಾಗೆ ಸುಖವಾಗಿ ನಗುತ್ತ “ಬಾ ಚೇತನಾ, ಬಾ” ಎಂದು ಅವಳನ್ನು ಒಳಗೆ ಕರೆದು ಕುರ್ಚಿ ಕೊಟ್ಟೆ. ಬಚ್ಚಲುಮನೆಗೆ ಹೋಗಿ ತಣ್ಣಗಿನ ನೀರಿನಿಂದ ಮೋರೆ ತೊರೆದು ಹೊರಗೆ ಬಂದು ಚೇತನಳ ಇದಿರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ನಾನು ಬೇರೆಯೇ ವ್ಯಕ್ತಿಯಾಗಿದ್ದೆ : ಈಗ ಅರಿವಿಗೆ ಬಂತು : ಗಾಳಿವಿಹಾರಕ್ಕೆಂದು ಹೊರಡುವ ಮೊದಲಷ್ಟೇ ಫಿರೋಜ್ ಬಹಳ ವರ್ಷಗಳ ಹಿಂದೆ ಕೇಳಿದ_ನನ್ನನ್ನು ಮತ್ತೆ ಮತ್ತೆ ಕೆಣಕಿದ_ಪ್ರಶ್ನೆಯೊಂದರ ನೆನಪಿನಿಂದ ನನ್ನೊಳಗೆ ಎಚ್ಚೆತ್ತ ಕೋಳಿಗಿರಿಯಣ್ಣನ ಕೇರಿಯ ನಾಗಪ್ಪ ನಿದ್ದೆಹೋಗಿ, ಪ್ರೊ. ನಾಗನಾಥ ತಿರುಗಿ ಎಚ್ಚರವಾಗಿದ್ದ. ನಗುತ್ತ ಕೆಲಹೊತ್ತಿನ ಮೊದಲಷ್ಟೆ ನಡೆದ ಘಟನೆಯನ್ನು ಚೇತನಳಿಗೆ ಹೇಳಿದೆ, ಅದನ್ನು ಕೇಳಲೆಂದೇ ಅವಳು ಬಂದಿದ್ದಳೆಂಬ ಖಾತ್ರಿಯಿಂದ. ಚೇತನಾ ಬಿದ್ದು ಬಿದ್ದು ನಕ್ಕಳು. ಬದಿಯ ಕೋಣೆಯ ಬಾಲ್ಕನಿಯಿಂದ ಅವಳೂ ನೋಡಿದ್ದಳಂತೆ. ನಾನು ಓಡೋಡಿ ಬರುತ್ತಿದ್ದುದನ್ನು ಅವಳ ಮುಕ್ತ ಮನಸ್ಸಿನ ನಗುವಿನೊಂದಿಗೆ ನಾನೂ ಒಂದಾಗಿ ನಗುತ್ತಿರುವಾಗ ಚೇತನಾ ಅಂದಳು : “ಕಾಕಾ, ಅವನು ನಮ್ಮ ಅಡಿಗೆಯವನು. ರಜೆಯ ಮೇಲೆ ಊರಿಗೆ ಹೋದವನು ನಿನ್ನೆ ಸಂಜೆಗಷ್ಟೆ ತಿರುಗಿ ಬಂದಿದ್ದಾನೆ.” +ನಿನ್ನೆ ನಡೆದ ಈ ಮೋಜಿನ ಸಂಗತಿಯನ್ನು ಕುರಿತು ಬರೆಯಬೇಕೆಂದುಕೊಂಡದ್ದು ವಹಿಯ ಮೇಲೆ ಮೂಡಿರಲೇ ಇಲ್ಲ ಎಂಬುದು ಲಕ್ಷ್ಯಕ್ಕೆ ಬಂದು, ನಾಗಪ್ಪ ತನ್ನಷ್ಟಕ್ಕೇ ನಕ್ಕ. ತೆರೆದಿಟ್ಟ ವಹಿ ತೆರೆದೇ ಇತ್ತು. ನೆನಪಿಗೆ ಮೂಲ ಪ್ರಚೋದನೆಯಾದ ಈ ಮೊದಲಿನ ಟಿಪ್ಪಣಿಯನ್ನು ಇನ್ನೊಮ್ಮೆ ಓದಿ ನೋಡೋಣವೆಂದರೆ ವಹಿಯ ಮೇಲೆ ಮೂಡಿದ್ದು ಒಂಟಿ ಸಾಲಾಗಿತ್ತು ! ಇದನ್ನು ಯಾವಾಗ ಬರೆದೆ ಎಂದು ಚಕಿತನಾದವನ ಹಾಗೆ ಕಣ್ಣರಳಿಸಿದ. ಬರೆದ : +“ಟಿಪ್ಪಣಿ ಎಂಟು : ಹೊರಗೆ ಬರಲು ಯತ್ನಿಸಿದಷ್ಟೂ ಒಳಗೇ ಜಗ್ಗುತ್ತವೆ ಹಾಳು ನೆನಪುಗಳು. ಬೆನ್ನ ಹಿಂದೆ ಗುಟ್ಟಾಗಿ ಬೀಳುತ್ತಿದ್ದ ಹೆಜ್ಜೆಗಳ ಸುತ್ತ ಎದ್ದು ನಿಲ್ಲುತ್ತವೆ ನಿಗೂಢವಾದ ಪುರಾಣಗಳು : ನಾನೇನು ಹೆದರಿ ಓಡುತ್ತಿದ್ದೇನೊ ? ಏನು, ಓಡುತ್ತಿದ್ದುದರಿಂದಲೇ ಹೆದರಿಕೆಯಾಗುತ್ತದೆಯೋ ?…. ವಿಲ್ಯಮ್ ಜೇಮ್ಸ್‌ನನ್ನು ಇನ್ನೊಮ್ಮೆ ಓದಬೇಕು….” +uಟಿಜeಜಿiಟಿeಜ +– ಅಧ್ಯಾಯ ಮೂರು – +ಅರ್ಥವಾಗದ, ಒಂದು ತರದ ಅಪರಾಧಭಾವವನ್ನು ಹೋಲುವ ಹಳಹಳಿಯ ಕರಿ ನೆರಳು ಮನಸ್ಸನ್ನು ಕವಿದಾಗಲೂ ಖುಶಿಯ ಗೆರೆಗಳಲ್ಲಿ ಝಗಝಗಿಸಿ ಸುಖ ಕೊಡುವ ಕೆಲವು ಕ್ಷಣಗಳೂ ನಾಗಪ್ಪನ ಬದುಕಿನಲ್ಲಿವೆ. ಆಗೊಮ್ಮೆ ಈಗೊಮ್ಮೆ ಯಾವ ಕಾರಣವೂ ಇಲ್ಲದೇನೆ ಮೂಡಿಬಂದಾಗ ಕರುಳಿನ ಒಳ ಮೈಯಲ್ಲ ಬೆಚ್ಚಗಾದ ಭಾವನೆ. ಇವೊತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವ ಸಿದ್ಧತೆಯಲ್ಲಿದ್ದಾಗಲೇ ಅಮ್ಮನ ನೆನಪು : +ಅಮ್ಮ ಸತ್ತು ಈಗ, ಎಷ್ಟು, ಮೂವತ್ತು ವರ್ಷಗಳೇ ಆಗಿರಬೇಕು. ಇತ್ತೀಚೆ, ಬಹಳ ದಿನಗಳಿಂದ ಬಂದಿರದ ನೆನಪು ಇಂದೇ ಏಕೆ ಬಂದಿತೋ ! ಅಜ್ಜನ ಮನೆಯದೆಂದು ತೋರುವ ಅಂಗಳದಂಚಿನಲ್ಲಿಯ ಹತ್ತು ಪೂಟು ಎತ್ತರದ ಪಾಗಾರ, ಹೆಬ್ಬಾಗಿಲಲ್ಲಿ ಸೊಂಟದೆತ್ತರದ ಕಬ್ಬಿಣದ ಸರಳಿನ ಕಟಕಟೆ. ಒಂದು ಕೈಯಲ್ಲಿ ತೆಂಗಿನಕಾಯಿ, ಹೊಸರೆ, ವೀಳ್ಯದೆಲೆ, ಹೂಬತ್ತಿಗಳನ್ನು ಹೊತ್ತ ಹರಿವಾಣವನ್ನೂ ಇನ್ನೊಂದು ಕೈಯಲ್ಲಿ ನಾಲ್ಕು ವರ್ಷದ ತನ್ನ ಕೈಯನ್ನೂ ಹಿಡಿದು ದಾಟುತ್ತಿದ್ದ ಅಮ್ಮನ ಚಿತ್ರ. ಜಾಜೀಹೂವಿನ ಸರದ ವಾಸನೆ ಈಗ ಮತ್ತೆ ಮೂಗಿನಲ್ಲಿ ನಿಂತ ಭಾವನೆ. ಇದಿರಿನ ಮಠದಲ್ಲಿಯ ರಾಮದೇವರಿಗೆ ಆರತಿ ಕೊಡಲು ಹೋಗುತ್ತಿರಬೇಕು. ರಸ್ತೆಯಿಂದಲೇ ಕಾಣುವ ಗರ್ಭಗುಡಿಯಲ್ಲಿ ಹಣತೆ, ತೂಗು-ದೀಪಗಳ ಬೆಳಕಿನಲ್ಲಿ ಬೆಳಗಿ ನಿಂತ ಕಪ್ಪು ಶಿಲೆಯ ರಾಮ-ಸೀತೆಯರ ಈಗಲೂ ಕಣ್ಣಿಗೆ ಕಟ್ಟಿದಂತಹ ಸುಂದರ ಮೂರ್ತಿಗಳು. +ಅಮ್ಮನ ನೆನಪಿನೊಂದಿಗೆ ಈ ದೇವರ ಮೂರ್ತಿಗಳ ನೆನಪೂ ಮೂಡಿ ನಿಂತದ್ದು ಇದೇ ಮೊದಲೇನೋ. ಮಲಗಿದ್ದಲ್ಲಿಂದ ಏಳಬೇಕೆನ್ನಿಸಲಿಲ್ಲ. ಹಾಗೇ ಬಿದ್ದಿರೋಣ ಅನ್ನಿಸಿತು. ಮನಸ್ಸು ಬಹಳ ಖುಶಿಯಲ್ಲಿತ್ತು. ಈ ಖುಶಿಯ ಬೇರುಗಳಿಂದ ಹುಟ್ಟಿದೂರಿನ ಬಗ್ಗೆ ಬರೆಯಬೇಕು ಅನ್ನಿಸಿತು : ಹೌದು ಎಲ್ಲವನ್ನೂ ಅಲ್ಲಿಂದಲೇ ಆರಂಭಿಸಬೇಕು. ಬೇರುಗಳಿಂದ, ಬೇರಿಳಿದ ಮಣ್ಣಿನಿಂದ, ಚಿಕ್ಕಂದಿನ ಗೆಳೆಯರಿಂದ, ಗೆಳತಿಯರಿಂದ, ನನ್ನ ಆರೋಗ್ಯದ ಆಕರಗಳಾದ ಗಿರಿಯಣ್ಣ, ಹೊನ್ನಪ್ಪ, ಶೇಖ, ಫರೀದ, ಉತ್ತಮಿ, ಪಾರು, ದಾಮು, ಎಂಕು, ಮುರ್ಕುಂಡಿ, ದಿನ್ನಿ, ಬಸ್ತ್ಯಾಂವ್, ಕಾಣೀಗೌಡರಿಂದ ಫಿರೋಜ್, ಶ್ರೀನಿವಾಸರಿಂದ ದೂರವಾದ ಹಳ್ಳಿಯ ಕೊಂಪೆಯಿಂದ, ಶ್ರೀನಿವಾಸನ ಮನೆಯಲ್ಲೇ ಕುಳಿತು ಬರೆಯಬೇಕು…. +ಬಿದ್ದಲ್ಲೇ ಹೊಳೆಯಿತು : ನಾನು ಇಲ್ಲಿಗೆ ಬಂದು ಎರಡು ದಿನಗಳಾಗುತ್ತ ಬಂದರೂ ಈ ಮನೆಯಲ್ಲಿ ಶ್ರೀನಿವಾಸ, ಚೇತನರಿಬ್ಬರನ್ನು ಬಿಟ್ಟು ಯಾರ ಒಡನೆಯೂ ಮಾತನಾಡಿಲ್ಲ. ಮನೆಯಲ್ಲಿ ಯಾರು ಯಾರು ಇದ್ದಾರೆ ಎಂಬುದೂ ಸರಿಯಾಗಿ ಗೊತ್ತಿಲ್ಲ. ಶ್ರೀನಿವಾಸನಿಗೆ ಮೂರು ಮಕ್ಕಳು ಎಂದು ಗೊತ್ತಾದದ್ದೇ ನಿನ್ನೆ ಚೇತನಾ ಬಂದಾಗ. ಈಗ ಸ್ಕೂಲು ಕಾಲೇಜುಗಳಿಗೆ ರಜೆಯಾದ್ದರಿಂದ ಹಿರಿಯ ಮಗಳು ಹಾಗೂ ಕಿರಿಯ ಹುಡುಗ ಇಬ್ಬರೂ ಕುಮಟೆಗೆ ಸೋದರತ್ತೆಯ ಮನೆಗೆ ಹೋಗಿದ್ದಾರಂತೆ. ಶ್ರೀನಿವಾಸ ತಾನಾಗಿಯೇ ಇವರಾರ ಬಗ್ಗೆ ಏನೂ ಹೇಳಿರಲಿಲ್ಲ. ಆಶ್ಚರ್ಯವೆಂದರೆ ತಾನೂ ಏನನ್ನೂ ಕೇಳಿರಲಿಲ್ಲ. ಶ್ರೀನಿವಾಸನ ತಾಯಿ ಇನ್ನೂ ಬದುಕಿದ್ದಾಳೆಯೆ ? ಎಲ್ಲಿರುತ್ತಾಳೆ ? ಗೋಕರ್ಣದಲ್ಲೆ ? ಶ್ರೀನಿವಾಸನ ಆಗ್ರಹಕ್ಕೆ ಒಪ್ಪಿ ಇಲ್ಲಿಗೆ ಬಂದ ದಿನ ಕಟ್ಟಡದಲ್ಲಿಯ ಅನೇಕರ ಕುತೂಹಲಕ್ಕೆ ಕಾರಣನಾಗಿದ್ದೆ. ಒಂದು ಸೂಟ್‌ಕೇಸ್‌ನಲ್ಲಿ ಕೆಲವು ಪುಸ್ತಕಗಳನ್ನು, ಏಳು ದಿನಗಳ ಮಟ್ಟಿಗೆ ಸಾಕಾಗಬಹುದಾದಷ್ಟು ಬಟ್ಟೆಗಳನ್ನು ತಂದಿದ್ದೇನೆ. ಶ್ರೀನಿವಾಸನ ಆಕ್ರಮಣಶೀಲ ಒತ್ತಾಯಕ್ಕೆ ಒಪ್ಪದೇ ಇರುವದು ಸಾಧ್ಯವೇ ಆಗದೆ ಹೊರಟುಬಂದಿದ್ದರೂ ಎಂಟು ದಿನಗಳಿಂದ ಹೆಚ್ಚಿನ ಕಾಲ ಇಲ್ಲಿರುವ ಮನಸ್ಸಿಲ್ಲ…. +ಎಂಟು ದಿನಗಳ ಮಾತಿಗೆ ಬಂದದ್ದರಿಂದಲೇ ಇಲ್ಲಿಯ ಯಾರಲ್ಲೂ ತೊಡಗಿಸಿಕೊಳ್ಳುವ ಮನಸ್ಸಾಗಿಲ್ಲವೇನೊ ಎಂದು ಒಂದು ಕ್ಷಣ ತನ್ನ ನಿರಾಸಕ್ತಿಯನ್ನು ಸಮರ್ಥಿಸಿಕೊಂಡ, ನಾಗಪ್ಪ_ಎಂದಿನಂತೆಯೇ, ಅಪರಿಚಿತರ ಬಗ್ಗೆ ತನ್ನ ಸ್ವಭಾವ_ಶಿಲ್ಪದಲ್ಲೇ ನೆಲೆನಿಂತ ಭಯಕ್ಕೆ ಸಮೀಪವಾದ ಮುಜುಗುರ, ಸಂಕೋಚಗಳಿಂದಾಗಿ ಹೊಸಬರೊಂದಿಗೆ ಬೆರೆಯುವದೆಂದರೇನೆ ಹಿಂದೆಗೆಯುತ್ತಾನೆ. ಹಾಗೆ ನೋಡಿದರೆ ತನ್ನ ಈ ಸದ್ಯದ ನೌಕರಿ ತನ್ನ ಮೂಲಪ್ರಕೃತಿಗೆ ಒಗ್ಗುವಂತಹದಲ್ಲವೆಂದು ಗೊತ್ತಿದ್ದೂ ಅದಕ್ಕೆ ಅಂಟಿಕೊಂಡಿದ್ದೇನೆ ಎಂಬುದರ ಅರಿವು ನಾಗಪ್ಪನಿಗಿದೆ. ಶ್ರೀನಿವಾಸನ ಮನೆಯವರನ್ನು ಕುರಿತು ಆರಂಭವಾದ ವಿಚಾರ ತನ್ನ ನೌಕರಿಗೆ ಬಂದು ಮುಟ್ಟುವ ಭಯವಾಗಿ ಹಾಸಿಗೆಯಲ್ಲಿ ಎದ್ದೇ ಕುಳಿತ. ಅಡಿಗೆಯವನು ಮಾತ್ರ ತಿರುಗಿ ಕಣ್ಣಿಗೆ ಬಿದ್ದಿರಲೇ ಇಲ್ಲ ಎಂಬುದನ್ನು ನೆನೆದುಕೊಂಡ. ಪಾಪ ! ನಿನ್ನೆ ತಾನು ಅವನ ಹಿಂದೆ ಓಡೋಡಿ ಬಂದದ್ದನ್ನು ಕಂಡಿದ್ದರೆ ಅಥವಾ ಹಾಗೆಂದು ಚೇತನಳಿಂದ ಗೊತ್ತಾಗಿದ್ದರೆ ತನ್ನ ಬಗ್ಗೆ ಏನೆಲ್ಲ ಅವನು ಬಗೆಯುತ್ತಾನೊ ! ಶ್ರೀನಿವಾಸನ ಹೆಂಡತಿ ತನ್ನನ್ನು ಈವರೆಗೆ ಮಾತನಾಡಿಸಿಲ್ಲ. ಆದರೆ ಮೋರೆ ನೋಡಿದರೆ ತನ್ನ ಬಗ್ಗೆ ಶ್ರೀನಿವಾಸನಿಂದ ಬಹಳಷ್ಟು ತಿಳಿದಿದ್ದಾಳೆ ಎಂಬ ಸಂಶಯ, ಶ್ರೀನಿವಾಸನ ಮದುವೆಗೆ ತಾನು ಹೋಗಿರಲಿಲ್ಲ. ಊರಲ್ಲಿದ್ದೂ. ಶ್ರೀನಿವಾಸ ತನ್ನ ಬಗ್ಗೆ ಏನೇನು ಹೇಳಿರಬಹುದು ? ಚೇತನಳ ಕಣ್ಣುಗಳಲ್ಲೂ ಗೊತ್ತಿದೆ ಎಂಬಂತಹ ತುಂಟತನದ ಹೊಳಪಿರಲಿಲ್ಲವೆ ? ಮದುವೆಯಾಗದೇ ನೇಪಾಳೀ ಹೆಣ್ಣೊಬ್ಬಳನ್ನು ಇಟ್ಟುಕೊಂಡ ಈ ಬ್ರಹ್ಮಚಾರಿಯ ಬಗ್ಗೆ ಇವರಿಗೆಲ್ಲ ಇದ್ದಿರಬಹುದಾದ ಕುತೂಹಲದಲ್ಲಿ ತಾತ್ಸಾರವೂ ಅಡಗಿರಬಹುದೆ ?…. +ಹಾಸಿಗೆಯಿಂದ ಎದ್ದು ಕಿಟಕಿಗೆ ಬಂದಾಗ ‘ಆಹಾ !’ ಎನ್ನಿಸಿತು. ಚುಮುಚುಮು ಬೆಳಕಿನಲ್ಲಿ ತಂಪಾಗಿ ಕಣ್ಣುಬಿಡುತ್ತಿದ್ದ ಪರಿಸರ : ಸರಿಯಾಗಿ ಕಾಣದಿದ್ದರೂ ಸದ್ದಿನಿಂದಲೇ ತನ್ನ ಇರುವನ್ನು ಸ್ಪಷ್ಟಗೊಳಿಸುತ್ತಿದ್ದ ಸಮುದ್ರದ ನೀರು. ಊರಿನ ನೆನಪು ತರುತ್ತಿದ್ದ ಮಳಲು-ದಂಡೆ. ಹಿತ್ತಲು. ಕದ ಬಡೆದ ಸದ್ದು ಕೇಳಿಸಿದ್ದರಿಂದ ಹೋಗಿ ಬಾಗಿಲು ತೆರೆದೆ. ಚಹದ ಕಪ್ಪನ್ನು ಚಿಕ್ಕ ಟ್ರೇದಲ್ಲಿ ಹಿಡಿದು ನಿಂತ ಅಡಿಗೆಯವನು ಒಳಗೆ ಬಂದು ಟ್ರೇಯನ್ನು ಟೇಬಲ್ಲಿನ ಮೇಲಿಟ್ಟು ಮಾತನಾಡುವ ಕುತೂಹಲವನ್ನು ಕೂಡ ತೋರಿಸದೆ ಹಾಗೇ ಹೊರಟೇಬಿಟ್ಟ. ಗಿಡ್ಡ ಪಂಚೆ, ಬನೀನು, ಹೆಗಲ ಮೇಲೊಂದು ಹಳತಾದರೂ ಸ್ವಚ್ಛವಾದ ನೆಪ್‌ಕಿನ್. ತಲೆಗೆ ಚೆಂಡಿಕೆಯಿರಲಿಲ್ಲ ಎಂಬುದು ಚಹ ಕುಡಿಯುವಾಗ ಲಕ್ಷ್ಯಕ್ಕೆ ಬಂದು ಮನಸ್ಸಿನಲ್ಲೇ ನಕ್ಕ….. +ಊರಿನ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಕೊಂಡು ಬರೆಯಲು ಕೂತರೆ ಕಾಗದದ ಮೇಲೆ ಮೂಡಹತ್ತಿದ್ದು ತನ್ನ ಮತ್ತು ಫಿರೋಜನ ಮೊದಲ ಭೇಟಿಯ ನೆನಪೇ: ಕಳೆದ ಹದಿನೆಂಟು ವರ್ಷಗಳಿಂದಲೂ ಶನಿಯ ಹಾಗೆ ಕಾಡುತ್ತ ಬಂದ ಈ ವ್ಯಕ್ತಿ ತನ್ನ ಬಗ್ಗೆ ತೋರಿದ ನಿಷ್ಕಾರಣವಾದ ಕ್ರೌರ್ಯಕ್ಕೆ, ನಿಷ್ಟುರವಾದ ತಾತ್ಸಾರಕ್ಕೆ ಕಾರಣ ಹುಡುಕುತ್ತ ಹೋದರೆ ಈ ಮೊದಲ ಭೇಟಿಗೇ ಬಂದು ಮುಟ್ಟಬೇಕೇನೋ. ಹಾಗಾದರೆ ಈಗ ಇದರ ಬಗೆಗೇ ಬರೆಯಲು ಆರಂಭಿಸಿದ್ದಕ್ಕೆ ತನಗರಿವಿಲ್ಲದೇನೇ ತಾನು ತೊಡಗಿಸಿಕೊಂಡ ಈ ಮೂಲದ ಶೋಧವೇ ಕಾರಣವೆ ? ಮನುಷ್ಯ ಮೂಲದ ಶೋಧನೆಗೆ ತೊಡಗಿದಾಗ ಅಂತರ್ಮುಖನಾಗುತ್ತಾನೋ ಅಥವಾ ಅಂತರ್ಮುಖನಾದಾಗಲೇ ಮೂಲದ ಶೋಧನೆಗೆ ತೊಡಗುತ್ತಾನೋ ? ಇದೋ ಮತ್ತೆ ವಿಲ್ಯಮ್ ಜೇಮ್ಸ್ !…. +“ಟಿಪ್ಪಣಿ ಒಂಭತ್ತು : ನನ್ನೆಲ್ಲ ನೋವಿಗೆ ಫಿರೋಜನೇ ಕಾರಣನೆಂದು ತಿಳಿಯುವುದರಲ್ಲೇ ನಾನು ಸಮಾಧಾನಪಡುತ್ತಿಲ್ಲವಷ್ಟೆ ? ಯಾಕೋ ಫಿರೋಜನ ಬಗ್ಗೆ ಮಾತೆತ್ತಿದಾಗೆಲ್ಲ ಎಲ್ಲ ನನ್ನದೆ ತಪ್ಪು ಎಂಬ ನಿಲುಗಡೆಗೆ ಬರುತ್ತೇನೆ, ಫಿರೋಜನ ಹಾಗೆ ಮೋರೆಯ ಮೇಲೆ ಯಾವ ಭಾವನೆಗಳನ್ನೂ ಪ್ರಕಟಿಸದೇ. ಉಳಿದವರನ್ನೇ ಮಾತನಾಡಲು ಹಚ್ಚಿ ನಾನು ಮಾತ್ರ ಆಸ್ಥೆಯಿಂದ ಕೇಳುತ್ತಿದ್ದರೂ ನಿರ್ಲಿಪ್ತನಂತೆ ತೋರಿಸಿಕೊಳ್ಳುವ, ಆಗೊಮ್ಮೆ ಈಗೊಮ್ಮೆ ಮಾತನಾಡಿದ್ದೇ ಆದರೆ ಅತ್ಯಂತ ಆಳದಿಂದ ಬಂದ ಜ್ಞಾನವೇ ಹೆಪ್ಪುಗಟ್ಟಿ ಸಿದ್ದವಾದ ಮುತ್ತುಗಳನ್ನೇ ಉದುರಿಸುತ್ತಾನೋ ಎನ್ನುವ ಮೋಡಿಯಲ್ಲಿ ಮಹದ್‌ಗಾಂಭೀರ್ಯದಲ್ಲಿ ಒಂದೋ ಎರಡೋ ಮಾತುಗಳನ್ನಾಡುವ ತಾನು ಇದೀಗ ಮಾತನಾಡಿದ್ದನ್ನು ಮರುಗಳಿಗೆಯಲ್ಲೇ ಅಲ್ಲಗಳೆದು ಉಳಿದವರನ್ನು ಗೊಂದಲಗೆಡವಿ ತಾನು ಸದಾ ಅನೂಹ್ಯನಾಗೇ ಉಳಿಯುವ ಈ ನಾಗರಿಕ ಪ್ರಾಣಿಯನ್ನು ಹೊಟ್ಟೆಯೊಳಗಿಂದ ದ್ವೇಷಿಸುತ್ತೇನೆ. +“ಫಿರೋಜನ ವ್ಯಕ್ತಿತ್ವದ ವೈಖರಿಯೆಲ್ಲ ಪ್ರಕಟವಾಗುತ್ತಿದ್ದುದು ಅವನು ಸೇದುವ ಛಿoಡಿಡಿeಛಿಣioಟಿ ಮುಖಾಂತರ. ಎಲ್ಲವನ್ನು ಮುಚ್ಚಿಟ್ಟುಕೊಂಡೂ ಎಷ್ಟೆಲ್ಲವನ್ನು ಬಿಚ್ಚಿದೆನೆಂಬ ಭ್ರಮೆ ಹುಟ್ಟಿಸುವಲ್ಲಿ ಇವನಿಗೆ ಪೈಪ್ ಬಹಳ ದೊಡ್ಡ ಸಾಧನ. ಬಹಳ ಖೋಟಾ-ಮನುಷ್ಯ ಸೂಳೇಮಗ. ತಂಬಾಕಿನ ಡಬ್ಬಿಯನ್ನು ತೆರೆಯುವ ಠೀವಿಯೇನು ! ತಾನು ಸೇದುತ್ತಿದ್ದುದು ಪರದೇಶದಿಂದ ತರಿಸಿದ್ದ ಖಿhಡಿee ಓuಟಿs ಎಂಬ ಪ್ರಖ್ಯಾತ ಹೊಗೇಸೊಪ್ಪೇ ಎಂಬುದನ್ನು ಪ್ರದರ್ಶಿಸುವ ಆಢ್ಯ ಶೈಲಿಯೇನು ! ಪೈಪಿನ ಸೇದುವ ಕೊಳವೆಯಲ್ಲಿ ದಬ್ಬಣದಂತಹ ಉದ್ದ ಕಡ್ಡಿಯನ್ನು ಹಾಕಿ ಹಿಂದಕ್ಕೆ ಮುಂದಕ್ಕೆ ಜಗ್ಗಿ (ಹಲ್ಕಟ್ ಸೂಳೇಮಗ!) ಕೊಳವೆಯ ತುದಿಯನ್ನು ತುಟಿಗಳಲ್ಲಿ ಹಿಡಿದು ಗಾಳಿ ಊದಿ ಸ್ವಚ್ಛ ಮಾಡುವಾಗ ಮೂಗಿನ ಹೊರಳೆಗಳನ್ನು ಅರಳಿಸುತ್ತ, ಕಣ್ಣು ಮಿಟುಕಿಸುತ್ತ, ಈಗ ಸ್ವಚ್ಛವಾಯಿತು ಎಂಬ ಸಮಾಧಾನ ಪ್ರಕಟಿಸಿ ಕಾಜಿನ ‘ಆಶ್ ಟ್ರೇ’ದ ಅಂಚಿನ ಮೇಲೆ ಕುಟ್ಟಿ, ತಿರುಗಿ ತುಟಿಗಳಲ್ಲಿ ಹಿಡಿದು ಊದಿ, ಪೈಪಿನ ಬಾಯಲ್ಲಿ ತಂಬಾಕನ್ನು ತುಂಬಿ ಹೆಬ್ಬೆರಳನ್ನು ಹೆಟ್ಟಿ ಅದುಮುವ ಪರಿಯೇನು ! ಈ ಎಲ್ಲ ಸಂಭ್ರಮ ನಡೆಯುತ್ತಿರುವಾಗ ನಾವು ಈ ಒಂದೂ ಮಗನ ಚಂದ ಮೂತಿಯನ್ನು ನೋಡುತ್ತ ಕೂಡ್ರಬೇಕು. ಸ್ವತಃ ತಾನೇ ಸಂಪೂರ್ಣ ಮೌನ ಧರಿಸಿರುವಾಗೂ ತನ್ನ ವ್ಯಕ್ತಿತ್ವವೇ ತನ್ನ ಜೊತೆ ಮಾತನಾಡಲು ಬಂದವರ ಮೇಲೆ ಮೋಹಿನೀಪ್ರಭಾವವನ್ನು ಬೀರುತ್ತಿದೆಯೆಂಬ ರಮ್ಯಕಲ್ಪನೆಯೊಂದಿಗೆ ಸುಂದಾಡುತ್ತ_‘ನೀನು ಮಾತಾಡಲ್ಲ,’ ಎಂದು ಆಹ್ವಾನಿಸುವಂತೆ ತನ್ನ ಕಣ್ಣ ಮೂಲೆಯಿಂದ ನೋಡುತ್ತಾನೆ. ಯಾಕೋ ಮಾತನಾಡುವ ಮನುಷ್ಯ ನನ್ನನ್ನು ಹೆದರಿಸುತ್ತಾನೆ. ಫಿರೋಜ್ ಕೂಡ ಅಂದು ನನ್ನಲ್ಲಿ ಹೊಕ್ಕುಳ ಸುತ್ತಲೂ ನಿಷ್ಕಾರಣವಾಗಿ ಭಯದ ಅಲೆಗಳನ್ನು ಎಬ್ಬಿಸುತ್ತಿದ್ದ : ನಾನು ತನ್ನ ಪ್ರತಿಸ್ಪರ್ಧಿಯೆಂಬಂತೆ ನನ್ನ ಆಳ-ಅಗಲಗಳನ್ನು ಅಳೆಯುತ್ತ, ಕಾಡು-ಪ್ರಾಣಿಯೊಂದು ತನಗಿದಿರಾದ ಬೇಟೆಯ ಕಣ್ಣುಗಳಲ್ಲೇ ದೃಷ್ಟಿ ನೆಟ್ಟು ಅದು ಮಾಡಲಿದ್ದ ತಪ್ಪು ಚಾಲನೆಯ ಹಾದಿ ಕಾಯುವ ಗತ್ತಿನಲ್ಲಿ ಪ್ರಶ್ನೆ ಕೇಳಿದ. ನನ್ನ ಅಪ್ಪನನ್ನು ಕುರಿತು. ಅವನ ವೃತ್ತಿಯನ್ನು ಕುರಿತು : ಈಗ ಹಿಂದಿರುಗಿ ನೋಡಿದಾಗ ಅದು ಈಗಿನ ಕಂಪನಿಯಲ್ಲಿ ನನ್ನ ಇಡೀ ಭವಿಷ್ಯವನ್ನೇ ನಿರ್ಧರಿಸಿದ ಆತಂಕ-ಪ್ರಶ್ನೆಯೆಂದು ತೋರುತ್ತದೆ,” +ನನ್ನ ಹುಟ್ಟಿಗೆ ಕೈ ಹಾಕಬೇಡವೋ ಬೋಳೀಮಗನೇ. ಈ ಕಂಪನಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡದ್ದು ನನ್ನ ತೋಗ್ಯತೆಗಳನ್ನು ಗಮನಿಸಿಯೇ ಹೊರತು ಅಪ್ಪನ ಇತಿಹಾಸವನ್ನಲ್ಲ. ನನ್ನ ಚೆರಿತ್ರೆಗೆ ಕೈ ಹಾಕಿದರೆ ಭೂಗೋಳ ಶಾಸ್ತ್ರವೂ ಒಳಗೊಳ್ಳಬೇಕಾಗುತ್ತದೆಯೋ ಭೆಂಛೋದ್. ಗೊತ್ತಿಲ್ಲವೇನೋ ನಿನ್ನ ಉದ್ದ ಮೂಗಿನ ರಮ್ಯ ಪ್ರವಾಸಕಥನ. ಬಾ. ಪ್ರಸ್ತುತಕ್ಕೆ ಬಾ. ವರ್ತಮಾನಕ್ಕೆ ಬಾ. ಕುಸ್ತಿ ಆಡುವದೇ ಇದ್ದಲ್ಲಿ ಇಲ್ಲಿ ಆಡೋಣ_ಬಿಸಿಲು ಬಿದ್ದ ಈ ಅಂಗಳದಲ್ಲಿ. ಕತ್ತಲೆ ತುಂಬಿದ ಗುಹಗಳಲ್ಲಿ ಬೇಡ…..ಇದೇಕೆ ತಾನು ಫಿರೋಜನನ್ನು ಹೀಗೆ ಕಲ್ಪನೆಯಲ್ಲಿ ಆಹ್ವಾನಿಸುತ್ತ ಅವನು ಮಾಡಲಿರುವ ಚಾಲನೆಗಳನ್ನು ಊಹಿಸಿಕೊಳ್ಳುವುದರಲ್ಲೇ ತನ್ನ ಆಯುಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದೇನೆ ಎನ್ನುವುದು ಗೊತ್ತಾಗದೇ ದಣಿವು ಬಂದಂತೆನಿಸಿ ನಾಗಪ್ಪ ಕುರ್ಚಿ ಬಿಟ್ಟು ಎದ್ದ. ಕೋಣೆಯಲ್ಲಿ ಶತಪಥ ಹಾಕುತ್ತಿರುವಾಗ ಫಿರೋಜನ ಬಗ್ಗೆ ವ್ಯಕ್ತವಾದ ದ್ವೇಷಕ್ಕೆ ಪ್ರತಿಕ್ರಿಯೆ ಶುರುವಾಗಿ ಮನಸ್ಸಿನಲ್ಲಿತಪ್ಪು ಮಾಡಿದ ಭಾವನೆ : ಇದರಡಿಯಲ್ಲಿದ್ದುದು ನನ್ನ ಪುಕ್ಕಲುತನವೇ ?_ಅಪ್ಪನನ್ನು ಇದಿರಿಸುವ ಪುಕ್ಕಲುತನವೇ ? ಶ್ರೀನಿವಾಸನ ಮನೆಯ ಅಡುಗೆಯವನನ್ನು ನೋಡಿದಾಗ ಅನುಭವದ ಆಳದಲ್ಲಿ ಕಣ್ಣುಬಿಟ್ಟದ್ದು ಅಪ್ಪನ ನೆನಪೇ ? +ಎಂದೋ ಓದಿದ್ದರ ನೆನಪು : ಅಬ್ಜ ವರ್ಷಗಳ ವಿಕಾಸಕ್ರಮದ ಪರಂಪರೆಯಲ್ಲಿ ಬೆಳೆದುಬಂದ ದೇಹ ಹಾಗೂ ಗರ್ಭಾವಸ್ಥೆಯಲ್ಲಿ, ಅನಂತರದ ದೀರ್ಘಕಾಲದ ಶೈಶವದಲ್ಲಿ ಬದುಕಿನ ಬಗ್ಗೆ ಸುತ್ತಲಿನ ಪರಿಸರದ ಬಗ್ಗೆ ಕನಸುಗಳನ್ನು ಕಂಡ ಮನಸ್ಸು_ಇವುಗಳೊಂದಿಗೆ ಸುಸಜ್ಜಿತವಾದ ವ್ಯಕ್ತಿ ಜೀವಂತವಾದ ಒಂದು ಸಮಾಜದಲ್ಲಿ ಕಾಲಿರಿಸುತ್ತದೆ. ಮಾನವನಾಗಿ ಅರಳುತ್ತಾನೋ ಕಾಯಂ ಆಗಿ ಮುರುಟಿಹೋಗುತ್ತಾನೋ ಎನ್ನುವುದು ಕೊನೆಯಲ್ಲಿ ಈ ಸಾಮಾಜಿಕ ಸನ್ನಿವೇಶವನ್ನೇ ಅವಲಂಭಿಸಿದ್ದು : ಮಾನವನ ಮೂಲಸ್ವಭಾವದಲ್ಲೇ ಇದ್ದ ಯಾವ ಒಂದು ಮೂಲಭೂತ ಶಕ್ತಿಯನ್ನು ಇದಿರಿಸಬೇಕಾಗುತ್ತದೆ ಎನ್ನುವುದರ ಮೇಲೆ ನಿಂತದ್ದು. ಜೀವೋತ್ಕರ್ಷಿಯಾದ ಪ್ರೀತಿಯನ್ನೋ ? ಸಾವಿನ ಪ್ರತಿನಿಧಿಯಾದ ದ್ವೇಷವನ್ನೋ ? +ಮಾನವನ ಸಾಮಾಜಿಕ ಇತಿಹಾಸವನ್ನು ಈ ದೃಷ್ಟಿಕೋನದಿಂದ ಅಭ್ಯಾಸ ಮಾಡುವುದು ಶಕ್ಯವಿದೆ. ಆದರೆ ಸದ್ಯ ನಾನು ಅರಿಯಬೇಕಾದದ್ದು : ಶ್ರೀನಿವಾಸ ಹಾಗೂ ಫಿರೋಜ್ ಇವರು ನನ್ನನ್ನು ಇಷ್ಟೊಂದು ದ್ವೇಷಿಸಲು ಕಾರಣವೇನು ? ಹುಡುಕಬೇಕು. +uಟಿಜeಜಿiಟಿeಜ +– ಅಧ್ಯಾಯ ನಾಲ್ಕು – +ವಿಶಾಲವಾದ ಶಿವಾಜೀ ಪಾರ್ಕ್ ಮೈದಾನಿನ ಅಂಚಿನಲ್ಲಿ ತೆಂಗಿನ ಮರಗಳು ಒತ್ತಾಗಿ ಬೆಳೆದ ಹಿತ್ತಲೊಂದರಿಂದ ಹೊರಗೆ ಬಿದ್ದ ನಾಗಪ್ಪ ಆ ಹಿತ್ತಲು ಹೋಗುವುದರ ಮೊದಲಿಗಿಂತ ಹೆಚ್ಚು ಗಂಭೀರನಾಗಿದ್ದನಷ್ಟೇ ಅಲ್ಲ. ಅವನ ಮೋರೆಯ ಮೇಲಿನ ಗಾಂಭೀರ್ಯದಲ್ಲಿ ಈಗ ಒಂದು ಬಗೆಯ ಮ್ಲಾನತೆ, ಭಯ, ಕಾತರಗಳೂ ಸೇರಿಕೊಂಡಿದ್ದವು. ವಿಚಾರಗಳ ಗುಂಗಿನಲ್ಲಿದ್ದಾಗಲೇ ಅವನು ಮೈದಾನಿನ ಪಶ್ಚಿಮಕ್ಕಿದ್ದ ಕೆಡೆಲ್-ರೋಡಿಗೆ ಒಂದು ರಸ್ತೆಯನ್ನು ದಾಟುವ ಅವಕಾಶಕ್ಕಾಗಿ ಕಾಯಹತ್ತಿದ : ಎಡೆಬಿಡದೆ, ಇದಕ್ಕೆ ಕೊನೆಯೇ ಇಲ್ಲ ಎಂಬಂತೆ ಸಾಗಿದ ವಾಹನಗಳ ಓಡಾಟವನ್ನು ಗಮನಿಸಿಯೂ ಅದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯ ತೋರಿಸಲಿಲ್ಲ. ಪುರಸೊತ್ತು ಸಿಕ್ಕ ಕೂಡಲೇ ಯಾಂತ್ರಿಕವಾಗಿ ಪೆಡೆಸ್ಟ್ರಿಯನ್-ಕ್ರಾಸಿಂಗಿನ ಝೀಬ್ರಾ-ಗೆರೆಗಳ ಮೇಲೆ ಹೆಜ್ಜೆ ಇಡುತ್ತಿದ್ದಾಗ ಅವನ ಗುರುತು ಹಿಡಿದ ವ್ಯಕ್ತಿಯೊಂದು_ “ಹಲ್ಲೋ ಹಲ್ಲೋ, ನೀವು ? ಇಲ್ಲಿ ಮುಂಬಯಿಯಲ್ಲಿ ಹೇಗೆ ? ನೀವು ಮೊದಲು ಹೈದ್ರಾಬಾದಿನಲ್ಲೋ ಇನ್ನೆಲ್ಲೋ ಕೆಲಸಕ್ಕಿದ್ದಿರಲಿಲ್ಲವೇ ? ಈಗ ನೀವು ಕಾಮತ್ ವಕೀಲರ ಕಾಂಪೌಂಡಿನೊಳಗಿಂದ ಹೊರಬೀಳುವಾಗಲೇ ನೋಡಿದ್ದೆ. ಹೌದೋ ಅಲ್ಲವೋ ಎಂದು ಅನುಮಾನ ಬಂತು,” ಎಂದಿತು. ರಸ್ತೆಯನ್ನು ದಾಟುವ ಅವಸರದ ವೇಗಕ್ಕೆ ಅನುಗುಣವಾಗಿ ಆಡಿದ ವ್ಯಕ್ತಿಯ ಮಾತು ಮುಗಿಯುವುದರಲ್ಲಿ ಇಬ್ಬರೂ ರಸ್ತೆಯ ಇನ್ನೊಂದು ಅಂಚಿಗೆ ಬಂದು ತಲುಪಿದ್ದರು. ಆಕಸ್ಮಾತ್ತಾಗಿ ಭೆಟ್ಟಿಯಾದವನ ಪರಿಚಯ ಸರಿಯಾಗಿ ಸಿಗದಿದ್ದರೂ ಎಲ್ಲೋ ನೋಡಿದ ಮೋರೆ ಎನ್ನುವದಷ್ಟು ಹೊಳೆದು ಇಲ್ಲದ ಅನುಮಾನಕ್ಕೆ ಬಿದ್ದ. “ನಾನು ದೋಶಿ, ನೆನಪಿದೆಯೆ ? ನೀವು ವಡಾಳಾದಲ್ಲಿ ಹೊನ್ನಾವರರ ಮನೆಯಲ್ಲಿ…..ಟ್ಯೂಶನ್ ಕೊಡಲು ಬರುತ್ತಿದ್ದಾಗ….” +“ಓಹೋಹೋ….ದೋಶೀದೋಶೀ… ಇನ್‌ಕಮ್-ಟ್ಯಾಕ್ಸ್ ಆಫೀಸರ್….ಈಗ ತುಂಬ ಬದಲಾಗಿದ್ದೀರಿ…” +“ಹೌದು, ತುಂಬ ದಪ್ಪನಾಗಿದ್ದೇನೆ ಅಲ್ಲವೆ ? ಮದುವೆಯಾದದ್ದರ ಪರಿಣಾಮ. ಕೆಲವು ದಿನಗಳ ಹಿಂದೆ ಚೌಪಾಟಿಯ ಕೈವಲ್ಯಧಾಮವನ್ನು ಸೇರಿದ್ದೇನೆ, ಯೋಗಾಸನ ಕಲಿಯಲು. ಇನ್ನೊಂದು ಮಾತು : ನಾನೀಗ ಸರ್ಕಾರೀ ನೌಕರಿಯಲ್ಲಿಲ್ಲ. ಆದರೆ ದಂಧೆ ಅದೇ. ಈಗ ಇನ್‌ಕಮ್-ಟ್ಯಾಕ್ಸ್ ಪ್ರೆಕ್ಟೀಶನರ್.” ದೋಶಿಯವರ ಮಾತುಗಳಲ್ಲಿ ಉಮೇದು ಉತ್ಸಾಹಗಳು ತುಂಬಿದ್ದವು. ಗೊತ್ತಾಗುವ ಮೊದಲೇ ನಾಗಪ್ಪ ಬಹಿರ್ಮುಖನಾಗಹತ್ತಿದ. +“ಈಗ ಹೊರಟಿದ್ದೆಲ್ಲಿಗೆ… ನಾನು ಹೀಗೇ ಗಾಳಿ-ವಿಹಾರಕ್ಕೆಂದೇ ದಾದರ್ ನಿಂದ ನಡೆಯುತ್ತ ಬಂದೆ. ಮನೆಯಲ್ಲೊಬ್ಬನೇ. ಮನೆಯವರೆಲ್ಲ ಊರಿಗೆ ಹೋಗಿದ್ದಾರೆ. ನಿಮ್ಮದು ಬೇರೆ ಏನೂ ಕಾರ್ಯಕ್ರಮ ಇಲ್ಲದಿದ್ದರೆ ಸಮುದ್ರ ದಂಡೆಗೆ ಹೋಗಬಹುದಿತ್ತು, ಬರುತ್ತೀರಾ ?” ಎಂದು ಕೇಳಿದರು, ದೋಶಿ. +“ಹೋಹೋ, ಹೋಗೋಣವಲ್ಲ, ಅದಕ್ಕೇನು. ಎಷ್ಟು ವರ್ಷಗಳ ಮೇಲೆ ಭೆಟ್ಟಿಯಾಗಿದ್ದೀರಿ,” ನಾಗಪ್ಪನಲ್ಲೂ ಉತ್ಸಾಹ ಸೇರಿಕೊಂಡಿತು. ಇಬ್ಬರೂ ಸಮುದ್ರ ದಂಡೆಗೆ ಬಂದರು. ನಾಗಪ್ಪ ಮೊನ್ನೆ ಕೂತ ತಾಣವಲ್ಲವಿದು. ಕಡಲತೀರದ ಸ್ಮಶಾನದಿಂದ ದೂರವಾದ, ಗಾಳಿ-ಮರಗಳಿಂದಾಗಿ ಊರಿನ ನೆನಪನ್ನು ಕೆದಕುವ ಹೊಸ ಜಾಗವಾಗಿತ್ತು. ತಮ್ಮ ಪರಿಚಯವಾದ ಮೊದಲು ದಿನಗಳ ನೆನಪುಗಳನ್ನು ಮೆಲುಕಾಡಿಸಿದಾಗ ಅನೇಕ ಸಂಗತಿಗಳು ಮಾತಿನಲ್ಲಿ ಪುನಃ ಸೃಷ್ಟಿಯಾಗಹತ್ತಿದವು. ಅನಿವಾರ್ಯವಾಗಿಯೇ ಮಾತು ನಾಗಪ್ಪನ ನೌಕರಿಯತ್ತ ತಿರುಗಿತು. ಆಗಿನಿಂದಲೂ ಉಲ್ಲಸಿತನಾಗಿದ್ದ ನಾಗಪ್ಪ ಕೂಡಲೆ ಮ್ಲಾನಗೊಂಡ : ಇಬ್ಬರೂ ಒಮ್ಮೆಲೇ ಮಾತು ನಿಲ್ಲಿಸಿದರು. ಅನಿರೀಕ್ಷಿತವಾದ ಈ ಮೌನದಿಂದ ಪ್ರಶ್ನೆ ಕೇಳಿದ ದೋಶಿಯವರಿಗೇ ಮುಜುಗರವಾಯಿತು. ನಾಗಪ್ಪನ ಕರ್ರಿಯರ್ ಬಗ್ಗೆ, ವಿಖ್ಯಾತವಾದ ಇಂಗ್ಲಿಷ್ ಅಥವಾ ಅಮೇರಿಕನ್ ಮ್ಯಾನೇಜ್‌ಮೆಂಟ್ ಇದ್ದ ದೊಡ್ಡ ಕಂಪನಿಯೊಂದರಲ್ಲಿ ಅವನಿಗಿದ್ದ ನೌಕರಿಯ ಬಗ್ಗೆ ಕೇಳಿ ಅರಿತಿದ್ದ ದೋಶಿಯವರಿಗೆ ನಾಗಪ್ಪನ ಮೇಲೆ ತುಂಬ ಅಭಿಮಾನವಿತ್ತು. ಅಂತಹ ಅಭಿಮಾನದ ಭಾವನೆಯಿಂದಲೇ ಅವರು ಪ್ರಶ್ನೆ ಕೇಳಿದ್ದರು. ಆದರೆ ಅತಿ ಸಹಜವಾದ ಈ ಪ್ರಶ್ನೆಗೆ ಕೂಡಲೇ ಉತ್ತರ ಕೊಡುವುದು ಅಸಾಧ್ಯವಾಗಿ ತೋರಿದ ನಾಗಪ್ಪನಿಂದ ಯಾವ ಮಾತೂ ಹೊರಡದಾಯಿತು. ಆದರೂ ದೋಶಿ ತನ್ನ ಮೌನವನ್ನು ತಪ್ಪು ತಿಳಿದಾರು ಎಂಬ ಆತಂಕದಿಂದ_“ಎಲ್ಲ ಸರಿಯಾಗಿದ್ದರೆ ಇನ್ನೊಂದು ತಿಂಗಳಲ್ಲಿ ನಾನು ಹೆಚ್ಚಿನ ತರಬೇತಿಗಾಗಿ ಅಮೇರಿಕಾಕ್ಕೆ ತೆರಳಬೇಕಾಗಿತ್ತು. ಆದರೆ ನಮ್ಮ ಕಂಪನಿಯ ಒಬ್ಬ ಪಾರ್ಸೀ ಡೈರೆಕ್ಟರರ ಗಲೀಜು ಪೊಲಿಟಿಕ್ಸ್….”ನಾಗಪ್ಪನ ಮಾತು ಅರ್ಧಕ್ಕೇ ನಿಂತಿತ್ತು. ದೂರ ನೀರಂಚಿನಲ್ಲಿ ಸೂರ್ಯ ಕೆಂಪಿನ ಉಂಡೆಯಾಗಿ ಪ್ರಜ್ವಲಿಸುತ್ತ ಅಸ್ತಕ್ಕೆ ಸಾಗಿದ್ದ. ಆ ದಿವ್ಯ ಮುಹೂರ್ತಕ್ಕೆ ಕಾದು ನಿಂತ ರೀತಿ ಸಮುದ್ರ ತೆರೆಗಳನ್ನೆಬ್ಬಿಸುವುದನ್ನು ಕೂಡ ಮರೆತು ಸ್ತಬ್ಧವಾಗಿತ್ತು. ದಂಡೆಯ ಮೇಲೂ, ರಜೆಯ ದಿನ ಅಲ್ಲವಾಗಿದ್ದರಿಂದ, ಜನರ ಗದ್ದಲವಿರಲಿಲ್ಲ. ಸುತ್ತಲಿನ ಈ ನೀರವತೆಗೆ ಶ್ರುತಿ ಹಿಡಿಯುವಂತೆ ನಾಗಪ್ಪ ಅತ್ಯಂತ ತಗ್ಗಿದ ದನಿಯಲ್ಲಿ “I ಚಿm ಚಿ viಛಿಣim oಜಿ ಜiಡಿಣಥಿ ಠಿoಟiಣiಛಿs,” ಎಂದ. ದೋಶಿ, ಸಹಾನುಭೂತಿಯ ಧಾಟಿಯಲ್ಲಿ, “ನನಗೆಲ್ಲ ಅರ್ಥವಾಗುತ್ತದೆ. ನನಗಿದೇನೂ ಹೊಸತಲ್ಲ ಬಿಡಿ. ಇದು ಈ ಮನುಷ್ಯ-ಪ್ರಾಣಿ ಎಂಬುದು ಇದ್ದಲ್ಲೆಲ್ಲ ಇರುವುದೇ. ನಾನೂ ನನ್ನ ನೌಕರಿಯನ್ನು ಬಿಟ್ಟುಕೊಟ್ಟದ್ದು ಇಂತಹ ಒಂದು ಪರಿಸ್ಥಿತಿಯಲ್ಲೇ. ಇನ್ನೊಮ್ಮೆ ಭೆಟ್ಟಿಯಾದಾಗ ಎಲ್ಲ ಮಾತನಾಡೋಣ. ಧೈರ್ಯ ಬಿಡಬೇಡಿ. ಎಲ್ಲ ಸರಿಯಾಗುತ್ತದೆ ” ಎಂದರು. ನಾಗಪ್ಪನಿಗೂ ಆ ಮಾತುಗಳಿಂದ ಅಸಾಧಾರಣ ಧೈರ್ಯವೆನಿಸಿತು. ತುಂಬಾ ಭಾವನಾವಶನಾದವನ ಹಾಗೆ “ಥ್ಯಾಂಕ್ಯು” ಎಂದ. ಹೆಚ್ಚಿನದೇನೋ ಹೇಳಬೇಕೆಂದುಕೊಂಡದ್ದು ತನ್ನ ಈಗಿನ ಸ್ಥಿತಿಯಲ್ಲಿ ಸಾಧ್ಯವಿಲ್ಲವೆನಿಸಿತು. ಕಡಲುತೀರವನ್ನು ಬಿಟ್ಟು ಹೊರಡುವುದಾದಮೇಲೆ. “ಒಮ್ಮೆ ನಾನೇ ನಿಮ್ಮ ಮನೆಗೆ ಬಂದು ಭೆಟ್ಟಿಯಾಗುತ್ತೇನೆ. ನೀವು ಅಷ್ಟೊಂದು ಆತ್ಮೀಯತೆಯಿಂದ ಮಾತನಾಡಿಸಿ ತುಂಬ ಧೈರ್ಯ ಕುದುರಿಸಿದ್ದೀರಿ,” ಎಂದು ಹೇಳಿ ದೋಶಿಯವರಿಂದ ಅವರ ಹಿಂದೂ-ಕಾಲೊನಿಯೊಳಗಿನ ಮನೆಯ ಪತ್ತೆ ತೆಗೆದುಕೊಂಡ. ತಾನು ಸದ್ಯ ಒಂದು ಕಾದಂಬರಿಯನ್ನು ಬರೆಯುವ ಉದ್ದೇಶದಿಂದ ಎರಡು ತಿಂಗಳ ರಜೆಯನ್ನು ಪಡೆದಿದ್ದೇನೆಂದೂ, ಗೆಳೆಯರೊಬ್ಬರ ಮನೆಯಲ್ಲಿ ಒಂದು ವಾರ ಕಳೆಯಲಿದ್ದೇನೆಂದೂ, ಹೇಳುತ್ತ ಶ್ರೀನಿವಾಸನ ಹೆಸರು ಹೇಳಿದ್ದೇ, ದೋಶಿಯವರು “ಓಹ್!” ಎನ್ನುತ್ತ ತಮಗೆ ಶ್ರೀನಿವಾಸನ ಪರಿಚಯ ಚೆನ್ನಾಗಿದೆ, ಆದರೆ ಎಲ್ಲರನ್ನು ಬಿಟ್ಟು ಅವನಲ್ಲೇಕೆ ಎಂಬ ಭಾವವನ್ನು ಮೋರೆಯಮೇಲೆ ಪ್ರಕಟಿಸಿದರು. ಹಾಗೂ, “ಕಾದಂಬರಿಯೆ ? ಸಂತೋಷ ಸಂತೋಷ. ಅಂತೂ ನೀವು ಬರೆಯುವ ಹವ್ಯಾಸ ಬಿಟ್ಟಿಲ್ಲ. ‘ಕೆನರೀಸ್’ ಭಾಷೆಯಲ್ಲಿ ತಾನೇ ? ನಿಜ ಹೇಳಲೇ ? ಈ ಮನುಷ್ಯನ ವ್ಯಾವಹಾರಿಕ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇಂತಹದೇನಾದರೂ ದೇವರು ಕೊಟ್ಟಿದ್ದಿರಬೇಕು…. ಸಭ್ಯತೆಯ ಮುಖವಾಡದ ಹಿಂದೆಯೇ ಎಂತಹ ಕ್ರೌರ್‍ಯದ ಹಲ್ಲುಮಸೆತ ನೋಡಿ… ಕಾಡಿನಲ್ಲಿ ನಮ್ಮ ಪೂರ್ವಜರು ನಾಲ್ಕು ಕಾಲುಗಳ ಮೇಲೆ ಆಡಿತ್ತಿದ್ದದ್ದನ್ನೇ ಇಲ್ಲಿ ಎರಡು ಕಾಲುಗಳ ಮೇಲೆ ಆಡುತ್ತಿದ್ದೇವೆ.” ದೋಶಿಯವರಲ್ಲೂ ತನ್ನೊಡನೆ ಹಂಚಿಕೊಳ್ಳಲು ಹಾತೊರೆಯುವಂತಹ ಪ್ರಚಂಡ ಅನುಭವವಿದ್ದಂತೆ ತೋರಿತು : ಇದ್ದಕ್ಕಿದ್ದಂತೆ ಅವರು ತುಂಬ ಹತ್ತಿರದವರಾಗಿ ಕಂಡರು. ಹೊರಡುವ ಸಿದ್ಧತೆಯಲ್ಲಿ ಎದ್ದುನಿಂತವರು ತಾವಿನ್ನೂ ಮರಳು-ದಂಡೆಯಲ್ಲಿ ನಿಂತೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಇಬ್ಬರೂ ನಕ್ಕರು. ಹೀಗೆ ಆಕಸ್ಮಿಕವಾಗಿಯೇ ಆಗಲೊಲ್ಲದೇಕೆ_ಅನೇಕ ವರ್ಷಗಳ ಮೇಲೆ ಆದ ಈ ಭೇಟಿಯನ್ನು ವ್ಯರ್ಥವಾಗಲು ಬಿಡಬಾರದು. ತಾವಿಬ್ಬರೂ ತಿರುಗಿ ಬೆಟ್ಟಿಯಾಗಬೇಕು_ನಾಳೆಗೇ, ಇದೇ ತಾಣದಲ್ಲಿ ಎಂದು ದೋಶಿಯವರು ಮಾಡಿದ ಸೂಚನೆಗೆ ಒಪ್ಪಿಕೊಂಡು, ರಾಜರಸ್ತೆಗೆ ಬಂದವರೇ ಒಬ್ಬರನ್ನೊಬ್ಬರು ಬೀಳ್ಕೊಂಡು ತಮ್ಮತಮ್ಮ ಮನೆಯ ಹಾದಿ ಹಿಡಿದರು. +ದೋಶಿ ಕಣ್ಮರೆಯಾದ ಕೂಡಲೇ, ಅವರು ಅಷ್ಟೆಲ್ಲ ಆತ್ಮೀಯತೆಯಿಂದ ಮಾತನಾಡುತ್ತಿದ್ದಾಗ ತಾನು ಮಾತ್ರ ಅವರೊಡನೆ ಸುಳ್ಳಾಡಿದೆನಲ್ಲ ಎಂಬ ಅರಿವಿನಿಂದ ನಾಗಪ್ಪನ ಮನಸ್ಸು ಕಳವಳಕ್ಕೊಳಗಾಯಿತು : ಒಂದು ತಿಂಗಳ ರಜೆಯ ಮೇಲೆ ಇದ್ದದ್ದು ನಿಜ. ಆದರೆ ಕಾದಂಬರಿ ಬರೆಯಲೆಂದು ರಜೆ ಪಡೆದದ್ದಲ್ಲ. ಹಾಗೆ ನೋಡಿದರೆ ಈ ರಜೆಯನ್ನು ತಾನು ಪಡೆದದ್ದೇ ಅಲ್ಲ. ತನಗವರು ಕೊಟ್ಟದ್ದು. ಇದರ ನೆನಪಿನಿಂದಲೇ ನಾಗಪ್ಪನಿಗೆ ಕೊರಳು ಬಿಗಿದುಕೊಳ್ಳಹತ್ತಿದಾಗ ಮೊನ್ನೆ ಶ್ರೀನಿವಾಸ ಅಚಾನಕವಾಗಿ ‘ಸಂತೋಷಭವನ’ದಲ್ಲಿ ತನ್ನನ್ನು ಕಂಡು ಮಾತನಾಡಿಸಿದಾಗ ಥಟ್ಟನೆ ಹೊಳೆದ ಸುಳ್ಳನ್ನೇ ಈಗ ದೋಶಿಯವರ ಇದಿರೂ ಆಡಿದ್ದ… ‘ಕಾಡಿನಲ್ಲಿ ನಾಲ್ಕು ಕಾಲುಗಳ ಮೇಲೆ ಆಡುತ್ತಿದ್ದುದನ್ನೇ ಇಲ್ಲಿ ಎರಡು ಕಾಲುಗಳ ಮೇಲೆ ಆಡುತ್ತಿದ್ದೇವೆ’ : ಅರೆ! ದೋಶಿಯವರೂ ಕೂಡ ಕೊನ್ರಾಡ್ ಲಾರೆಂಝನನ್ನು ಓದಿರಬಹುದೆ ? ಅಥವಾ ಖುದ್ದು ಜೀವನದಲ್ಲಿ ಬಂದ ಅನುಭವವೇ ಹಾಗೆ ಆಡಲು ಹಚ್ಚಿರಬಹುದೇ ?… ಫಿರೋಜ್ ನಾಲ್ಕು ಕಾಲುಗಳ ಮೇಲೆ ನಿಂತು ಮೈಕೊಡವಿ ಹೂಂಕರಿಸುವ ಚಿತ್ರ ಕಣ್ಣ ಮುಂದೆ ನಿಂತೊಡನೆ ತಾನಿನ್ನೂ ರಾಜಬೀದಿಯ ಮೇಲೆ ಇದ್ದೇನೆ ಎನ್ನುವುದನ್ನೂ ಮರೆತು_ಥೂ ಕಾಡುಹಂದಿಯೇ ಎಂದು ಉಗುಳಿದ. ಮರುಗಳಿಗೆ, ತನ್ನ ಕೃತ್ಯದ ಬಗ್ಗೆ ತನಗೇ ಮುಜುಗರವಾಯಿತು. ತ್ವರಿತವಾಗಿ ಮನೆಯತ್ತ ಹೆಜ್ಜೆ ಹಾಕಹತ್ತಿದ. ಮನೆ ತಲುಪಿ ಕೋಣೆ ಹೊಕ್ಕು ಹುಶ್ ಎಂದು ಮಂಚದ ಮೇಲೆ ಒರಗಿದ ಕೂಡಲೇ ಸತ್ಯಸಂಗತಿಯನ್ನು ದೋಶಿಯವರಿಗೆ ನಾಳೆ ತಿಳಿಸಬೇಕೇ ? ಎಂಬ ಪ್ರಶ್ನೆ ಇದಿರಾಯಿತು. ಮನುಷ್ಯ ಹ್ಯಾಗೆ ಎನ್ನುವದು ಈಗಲೇ ಹೇಗೆ ಗೊತ್ತಾಗಬೇಕು ? ಈವರೆಗಿನ ಅನುಭವ ಕಲಿಸಿದ್ದೇನು ? ಮೋರೆಯಮೇಲೆ ಗೆಳೆಯನೆಂದು ತೋರಿಸಿಕೊಳ್ಳುತ್ತಿರುವಾಗಲೇ ಬೆನ್ನಲ್ಲಿ …ಬೇಡ.ಜನರ ಬಗ್ಗೆ ತನಗೆ ಸಹಜಸ್ಪೂರ್ತಿಯಿಂದ ಅನ್ನಿಸುತ್ತಿದ್ದ ಪ್ರೀತಿ-ವಿಸ್ವಾಸಗಳನ್ನು ಇಷ್ಟೊಂದು ಬೇಗ ಕಳೆದುಕೊಳ್ಳಬಾರದು. ಸದ್ಯಕ್ಕಂತೂ ದೋಶಿಯವರೆಂತಹರ ಗರಜು ಎಲ್ಲಕ್ಕಿಂತ ಹೆಚ್ಚಾಗಿ ತನಗೇ ಇದೆ… +ಗುಜರಾಥೀ ಮಾತೃಭಾಷೆಯವರಾದ ದೋಶಿ ಯಾವ ಭಿಡೆಯೂ ಇಲ್ಲದೇನೆ ‘ಹೊಡೆದು ಹೋಗುವ’ ಕೆಟ್ಟ ಉಚ್ಛಾರಗಳ ಇಂಗ್ಲೀಷು, ಅದಕ್ಕಿಂತ ಹೆಚ್ಚಾಗಿ ನಡುನಡುವೆ ಸೇರಿಸುತ್ತಿದ್ದ ‘ಝಾಲಾ-ಮೇಲಾ-ಸಾಲಾ’ ಪ್ರಧಾನವಾದ_ದೋಶಿ ಇದು ಮರಾಠೀ ಎಂದು ತಪ್ಪು ತಿಳಿದ_ವಿಚಿತ್ರಭಾಷೆ ಕೂಡ ಹಿಂದಿನಂತೆ ಮೈಮೇಲೆ ಮುಳ್ಳು ನಿಲ್ಲಿಸಲಿಲ್ಲ ಎಂಬುದು ಈಗ ಗಮನಕ್ಕೆ ಬಂದವನಂತೆ ಸುಖವಾಗಿ ನಕ್ಕ.” ಚೇತನಾ ಹೇಗೆ ಇನ್ನೂ ಬಂದಿಲ್ಲ ಎಂದುಕೊಳ್ಳುವಷ್ಟರಲ್ಲಿ ಚೇತನಾ ಹಾಜರ್ : ಅಗಳಿ ಹಾಕಿರದ ಕದ ದೂಡಿ ಒಳಗೆ ಬಂದವಳೇ ಮುತ್ತಿನಂತಹ ಹಲ್ಲುಗಳನ್ನು ಬೆಳಗಿಸುತ್ತ, ಗಲ್ಲದಲ್ಲಿ ಗುಳಿ ಮೂಡಿಸುತ್ತ, ಕಣ್ಣಿನಲ್ಲಿ ಹೊಳಪು ಮಿಂಚಿಸುತ್ತ ಕೇಳಿದಳು : “ಕಾಕಾ, ನೀವು ಅಪ್ಪನ ಬಗ್ಗೆ ಕಾದಂಬರಿ ಬರೆಯುತ್ತೀರಂತೆ ಹೌದೆ ? ಯಾಕೆ ?” ತುಸು ತಡೆದು, “ಅಮ್ಮ ಹೇಳಿದಳು,” ಎಂದಳು. ಸರಳ ಮನಸ್ಸಿನ ಮುಗ್ಧತೆಯ ಮೇಲೂ ಬಿದ್ದಂತಿದ್ದ ಹಿರಿಯರ ಧಾಟಿಯ ಛಾಯೆಯಲ್ಲಿ ಅಡಗಿದ್ದದ್ದು ಆತಂಕವೋ ? ಕುತೂಹಲವೋ ? ನಾಗಪ್ಪ ಕೂಡಲೇ ಉತ್ತರ ಕೊಡಲಿಲ್ಲ. ಸುಮ್ಮನೆ ನಕ್ಕ. +uಟಿಜeಜಿiಟಿeಜ +– ಅಧ್ಯಾಯ ಐದು – +“ಟಿಪ್ಪಣಿ ಹತ್ತು : ದೇವರೇ, ಈ ಯಾತನೆಗೆ ಕೊನೆಯೇ ಇಲ್ಲವೆ ? ಇದೇಕೆ ನೋವು ತಿಂದ ಜಾಗದಲ್ಲೇ ತಿರುತಿರುಗಿ ಪೆಟ್ಟು ಬೀಳುತ್ತದೆ ? ಅಪ್ಪ ಹಿಡಿದ ದಾರಿಯೊಂದೇ ನನಗಾಗಿಯೂ ತೆರೆದದ್ದೇ ?… ಇಲ್ಲ, ಇಷ್ಟೊಂದು ಸುಲಭವಾಗಿ ಧೈರ್ಯಗುಂದಬಾರದು. ದೋಶಿ ಅನ್ನಲಿಲ್ಲವೇ ?” +ನೋವು ತಿಂದ ಜಾಗದ ಉಲ್ಲೇಖದಿಂದ ಆರಂಭವಾದ ಬರವಣಿಗೆ ಗೊತ್ತಾಗುವ ಮೊದಲೇ ತಡೆದಿತ್ತು : ನೋವಿಗೆ ಕಾರಣವಾದದ್ದನ್ನು ನೆನಪಿಗೆ ತರುವ ಧೈರ್ಯ ತಕ್ಷಣ ಹುಟ್ಟಲಿಲ್ಲ. ಲಕ್ಷ್ಯವನ್ನು ಬೇಕೆಂದೇ ಬೇರೆ ಕಡೆಗೆ ಹರಿಯಿಸಲು ಪ್ರಯತ್ನಿಸಿದೆ. ಸಂಜೆ, ದೋಶಿಯವರು ಅಂದ ಒಂದು ಮಾತು ನೆನಪಾದಾಗ ಈ ಶ್ರೀನಿವಾಸ, ಫಿರೋಜರ ನೆನಪಿನಿಂದ ಕಾಡಿನಲ್ಲಿಯ ನಿಷ್ಪಾಪ ಪ್ರಾಣಿಗಳ ಹೆಸರನ್ನೂ ಕೆಡಿಸಿದೆನಲ್ಲ ಎಂದುಕೊಂಡು ತನ್ನಷ್ಟಕ್ಕೇ ಸುಖವಾಗಿ ನಕ್ಕ : ತಮ್ಮ ತಮ್ಮ ನಿಸರ್ಗದತ್ತ ಸ್ವಭಾವಗಳನ್ನು ದಾಟುವ ತಾಖತ್ತು ಅವುಗಳಿಗಿದೆಯೆ ? ಅದೇ ಮನುಷ್ಯನಿಗೆ ? ಅವನೂ ಬರೀ ಪ್ರವೃತ್ತಿಗಳ ಪಾತಳಿಯಲ್ಲೇ ಬದುಕುವವನೆ ? ಮನುಷ್ಯ ಜೀವನದ ಎಳೆತಗಳು ಅವುಗಳಿಗಿಂತ ಪುರಾತನವಾದ ಪಶುಪ್ರವೃತ್ತಿಗಳಿಂದಲೇ ವಿಕಾಸ ಹೊಂದಿರಬಹುದಾದರೂ ಮಾನವ ಕೋಟೆಗೇ ವಿಶಿಷ್ಟವಾದ ಎಳೆತಗಳೂ ಈ ವಿಕಾಸಕ್ರಮದಲ್ಲಿ ಹುಟ್ಟಿಕೊಂಡಿಲ್ಲವೇ ? ಪ್ರೀತಿ, ಆದರ, ಕಾಳಜಿ, ನಿಃಸ್ವಾರ್ಥ, ಇವೇ ಮೊದಲಾದ ಮಾನವೀಯ ಭಾವನೆಗಳಿಗೆ ಅರ್ಥವೇ ಇಲ್ಲವೆ ? ಅವನ ವಿವೇಕಕ್ಕೆ ? ನ್ಯಾಯಬುದ್ದಿಗೆ ? ನೀತಿಗೆ? +ಇಂತಹ ಮಾತುಗಳಿಗೆ ಗಿಲ್ಬರ್ಟ ಡಿಸೋಝಾ ಅರ್ಥವಿಲ್ಲದ ಸದ್ದಿನ ಆಡಂಬರವೆಂದು ದೊಡ್ಡದಾಗಿ ನಕ್ಕುಬಿಡುತ್ತಿದ್ದ. ಅuಣ ಣhಚಿಣ siಟಟಥಿ seಟಿಣಥಿmeಟಿಣಚಿಟiಣಥಿ ouಣ, ಎಂದು ಗದರಿಸಿಬಿಡುತ್ತಿದ್ದ. ಇದ್ದಕ್ಕಿದ್ದಂತೆ ಎಲ್ಲಾ ಬಿಟ್ಟು ಗಿಲ್ಬರ್ಟನ ಗದರಿಕೆಯ ಆಣಿಮುತ್ತುಗಳನ್ನು ಆಯ್ದು ಬರೆದಿಡುವ ಹುಕ್ಕಿ ಬಂದಿತು ನಾಗಪ್ಪನಿಗೆ. ತನ್ನ ಸದ್ಯದ ಮೂಡು ಎಡೆಮಾಡಿಕೊಟ್ಟ ಭಾಷೆಯಲ್ಲಿ. ಮುಗುಳುನಗುತ್ತ ಪೆನ್ನು ಕೈಗೆತ್ತಿಕೊಂಡ. ಗೆಳೆಯನ ಮೋರೆಯನ್ನು ಕಣ್ಣು ಮುಂದೆ ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದಾಗ ಒಡಮೂಡಿದ್ದು ಹುರಿ ಹಾಕಿದಂತಿದ್ದ ಅವನ ಗೇಣುದ್ದ ಮೀಸೆಗಳು; ಕುಡಿಗಳಲ್ಲಿ ಆಗೀಗ ಮಿನುಗುತ್ತಿದ್ದ ತುಂಟತನದ ನಗು; ಕಣ್ಣುಗಳಲ್ಲಿ ಅದಕ್ಕೆ ಒಪ್ಪಹಾಕುವ ಹೊಳಪು. +“ಟಿಪ್ಪಣಿ ಹನ್ನೊಂದು : ಗಿಲ್ಬರ್ಟ ಉವಾಚ : (೧) ನೀನು ಈ ಮಾನವ-ಪ್ರಾಣಿಯ ಸಾಧ್ಯತೆಗಳ ಬಗ್ಗೆ ಅವಾಸ್ತವವಾದ ಕಲ್ಪನೆ ಮಾಡಿಕೊಂಡಿರುವಿ. ಬದುಕಿನ ನಿಜವಾದ ಹೋರಾಟದ ಬಿಸಿ ನಿನಗೆ ತಾಕಲೇ ಇಲ್ಲ. ಎಲ್ಲವೂ ಆಯತ ಹೊತ್ತಿಗೆ ಕೈಗೆ ಬಂದ ‘ಆಯ್ತೋಬಾ’ ನೀನು. ಈ ಗಿಲ್ಬರ್ಟ ಕಳೆದ ಹತ್ತು ವರ್ಷಗಳ ತನ್ನ ಅನುಭವದಲ್ಲಿ ಕಂಡ ಮನುಷ್ಯನನ್ನು ಚಿತ್ರಿಸುವ ತಾಖತ್ತು ನಿನ್ನ ಪೆನ್ನಿಗಿದ್ದುದಾದರೆ ಬರೆಬರೆಯುವಾಗಲೇ ನೀನು ಗಟ್ಟಿಗನಾಗಬಹುದಿತ್ತು. ಮನುಷ್ಯಸ್ವಭಾವದ ನಿಷ್ಠುರ ಸತ್ಯವನ್ನು ಕಾಣುವ, ಕಂಡರೂ ಒಪ್ಪುವ ಧೈರ್ಯವೇ ನಿನ್ನಲ್ಲಿಲ್ಲ. (೨) ನಮ್ಮ ಎಲ್ಲ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿಯೊಂದೇ : ಸ್ವಾರ್ಥ. ತನ್ನೊಬ್ಬನ ಹಿತವನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಉಳಿದವರನ್ನು ಬಲಿಕೊಡಲು ಹಿಂದೆಗೆಯದ ಸ್ವಾರ್ಥ. (೩) ಮಾನವ-ಸಮಾಜದಲ್ಲಿಯ ಅಸಮಾನತೆ ನಿಮ್ಮ ಮಾರ್ಕ್ಸ್‌ವಾದಿಗಳು ತಿಳಕೊಂಡಂತೆ ಬರಿಯ ಪ್ರಾಪರ್ಟಿಯ ಹಂಚಿಕೆಯ, ಜೀವನೋಪಾಯಗಳ ಹಂಚಿಕೆಯ ಅಸಮಾನತೆಯಲ್ಲಿಲ್ಲ. ಕೀರ್ತಿಯ ಹೆಸರಿನ ಗಳಿಕೆಯ ಅಸಮಾನತೆಯಲ್ಲೂ ಇದೆ. ಸತ್ತೆಯ ಅಸಮಾನತೆಯಲ್ಲೂ ಇದೆ. ವಿಚಾರಮಾಡಿ ನೋಡು. ಸಮಾಜ ಹುಟ್ಟಿಸುವ ಸರ್ಪ್ಲಸ್ಸು ಬರಿಯ ವಿತ್ತಕ್ಕೆ ಸೀಮಿತವಾದದ್ದೇ ? ಅದರ ಮೂಲಭೂತವಾದ ಮಹತ್ವ ಬರಿಯ ಆರ್ಥಿಕವಾದದ್ದೇ ? ಒಬ್ಬ ಇನ್ನೊಬ್ಬನ ನೋವಿಗೆ ಕಾರಣವಾಗುವದಕ್ಕೆ ಬರೀ ಆಸ್ತಿಯೇ ಕಾರಣವೆ ? (೪) ಅಪಾ ತಮ್ಮಾ, ನನ್ನ, ನನ್ನವರ ದುಃಖದಂತಹ ದುಃಖವೇ ಇಲ್ಲ. ಯಾತನೆಯಂತಹ ಯಾತನೆಯೇ ಇಲ್ಲ ಎಂದು ತಿಳಿಯುವದೂ ಒಂದು ರೋಗವೇ. ನೋವಿನಂತಹ ನೋವನ್ನೂ ನಮ್ಮ ಅಹಂಕಾರದ ಅವಿರ್ಭಾವಕ್ಕೆ ಕಾರಣವಾಗಲು ಬಿಡಬಾರದು. (೫) ನಮ್ಮ ನಮ್ಮ ಅನುಭವದ ಅಳವಿಗೆ ಬಂದ ಸಾಮಾನ್ಯ ವ್ಯಕ್ತಿಗಳ ನೋವನ್ನು ನಮಗೆ ಶಕ್ಯವಿದ್ದ ರೀತಿಯಲ್ಲಿ ಕಡಿಮೆ ಮಾಡುವ ಬಯಕೆಯಿಂದ ಕಾರ್ಯಪ್ರವೃತ್ತರಾಗುವುದು ಶಕ್ಯವಿದ್ದರೆ… ಬಾ, ಅಂತಹ ಒಂದು_ಸುದ್ದಿಯಾಗದೇ, ಸದ್ದಿಲ್ಲದೇ ನಡೆಯುತ್ತಿದ್ದ ಒಂದು_ಸಣ್ಣ ಸಂಸ್ಥೆಯ ಕೆಲಸವನ್ನು ನಿನಗೆ ತೋರಿಸುತ್ತೇನೆ. ಅಲ್ಲಿ ಕಂಡವರ ನೋವನ್ನು, ಅದನ್ನು ಇದಿರಿಸುವಲ್ಲಿ ಅವರು ತೋರಿಸಿದ ಎದೆಗಾರಿಕೆಯನ್ನು ಚಿತ್ರಿಸುವ ತಾಖತ್ತು ನಿನಗೆ ಬಂದಾಗ ಬರೆ_ಕಾದಂಬರಿಯನ್ನೋ, ಕತೆಯನ್ನೋ. ಕನ್ನಡ ಸಾಹಿತ್ಯ ಚೆರಿತ್ರೆಯಲ್ಲಿ ನಿನ್ನ ಹೆಸರನ್ನುಳಿಸಲಿಲ್ಲ. ಸಾವನ್ನು ಗೆಲ್ಲಲು ಅವರು ನಡೆಸಿದ ಆರೋಗ್ಯವಂತ ಹೋರಾಟವನ್ನು ಉಳಿದವರಿಗೆ ತಿಳಿಸಲು, ಇಂತಹ ಒಂದು ಕೆಲಸ ಮುಂಬಯಿಯಂತಹ ಈ ಮಹಾನಗರಿಯಲ್ಲಿಯೇ ನಡೆಯುತ್ತಿದೆ ಎನ್ನುವುದನ್ನರಿಯುವ ಕುತೂಹಲವೆನ್ನಿಸಿದಾಗ ತಿಳಿಸು. ನಾನೇ ನಿನ್ನನ್ನಲ್ಲಿ ಕರೆದೊಯ್ಯುತ್ತೇನೆ…. ಯಾವಾಗಲೂ ಬದುಕಿನತ್ತ ಮುಖ ಮಾಡಿದ ಮನುಷ್ಯನ ನಡವಳಿಕೆಯೇ ಬೇರೆಯಾಗುತ್ತದೆಯೋ, ನಾಗಪ್ಪ,” +ಹಾಸಿಗೆಯಲ್ಲಿ ಬಿದ್ದಲ್ಲೇ ಅನ್ನಿಸಿತು: ಗಿಲ್ಬರ್ಟ ಇಂದು ಮುಂಬಯಿಯಲ್ಲಿರಬೇಕಾಗಿತ್ತು, ಅಂದರೆ ತನ್ನೆಲ್ಲ ದುಗುಡಗಳನ್ನು ಅವನಲ್ಲಿ ತೋಡಿಕೊಳ್ಳಲು ಬರುತ್ತಿತ್ತು. ಹಾಗೆ ನೋಡಿದಲ್ಲಿ ತನಗೆ ಎಷ್ಟೆಲ್ಲ ಜನ ಗೆಳೆಯರಿದ್ದಾರೆ ಅನ್ನಿಸಿದರೂ ಒಬ್ಬೊಬ್ಬರದೇ ಮೋರೆಯನ್ನು ಕಣ್ಣಮುಂದೆ ನಿಲ್ಲಸಿ ಯೋಚಿಸಿದರೆ ಯಾರೂ ಇಲ್ಲವೆಂದು ತೋರಿ ತಾನು ತೀರ ಒಬ್ಬೊಂಟಿ ಎಂಬ ಭಾವನೆ ಹುಟ್ಟುತ್ತಿತ್ತು. ಮೊನ್ನೆ ಆಫೀಸಿನಿಂದ ಫೋನ್ ಬಂದ ದಿನ ಹೀಗೇ ಆಗಿತ್ತು. ಹತ್ತಿರದವನೆಂದು ತಿಳಿದ ಸೀತಾರಾಮ ಕೂಡ: ಜೊತೆಯಾಗಿ ತಿನ್ನಲು ಕುಡಿಯಲು ಅಡ್ಡಿಯಿಲ್ಲ. ವೈಚಾರಿಕವಾಗಿ, ಭಾವಾತ್ಮಕವಾಗಿ ಹತ್ತಿರವಾದವರೆಲ್ಲ ತಾನು ಬರೆಯುವುದನ್ನು ನಿಲ್ಲಿಸಿದಂದಿನಿಂದ ದೂರವಾಗಿದ್ದಾರೆ. ಅಲ್ಲ, ಅವರೆಲ್ಲ ದೂರವಾಗಿದ್ದರಿಂದಲೇ ತಾನು ಬರೆಯುವದನ್ನು ನಿಲ್ಲಿಸಿದ್ದೇನೆ. ಗಿಲ್ಬರ್ಟ ಯಾರನ್ನೂ ಹೆಚ್ಚಾಗಿ ಹಚ್ಚಿಕೊಂಡವನಲ್ಲ. ಹಾಗಿದ್ದೂ, ಅಥವಾ ಹಾಗೆಂದೇ ಇರಬೇಕು, ಅನೇಕರಿಗೆ ಬೇಕಾದವನಾಗಿದ್ದ. ಅನೇಕ ವಿಷಯಗಳಲ್ಲಿ ತನಗೆ ತೀರ ವಿರುದ್ಧವಾದ ಪ್ರಕೃತಿಯವನು. ಕೆಥೋಲಿಕ್ ಪಂಥದವನಾದ ಇವನಿಗೆ ಪ್ರಾರ್ಥನೆ ಮಾನಸಿಕ ಸ್ಥೈರ್ಯಕ್ಕೆ ಬಲವಾದ ಆಧಾರ. ಟಾಯಿಮ್ಸ್ ಪತ್ರಿಕೆಯ ವಾರ್ತಾಹರನೆಂದು ಕೆಲಸ. ಸೀತಾರಮನ ಮುಖಾಂತರವೇ ಪರಿಚಯವಾಗಿತ್ತಾದರೂ ಸೀತಾರಾಮನಿಗಿಂತ ಹೆಚ್ಚು ಹತ್ತಿರದವನಾಗಿದ್ದ. ಮುಂಬಯಿಯ ಅಂಧೇರಿಯಲ್ಲಿ ಅಪಾಂಗರ ಸಲುವಾಗಿ ತೆರೆದ ‘ಚೆಶಾಯರ್ ಹೋಮ್’ ಸಂಸ್ಥೆ ಇವನ ಆಸ್ಥೆಯ ಕಾರ್ಯಕ್ಷೇತ್ರ. ಸದ್ಯ ರಾಣಿಯ ತವರುದೇಶವಾದ ನೇಪಾಳದ ಕಾಠಮಂಡೂಕ್ಕೆ ಬದಲಿಯಾಗಿದೆ. ಕೆಲವು ತಿಂಗಳ ಹಿಂದೆ ಏಕಾ‌ಏಕೀ ತನ್ನನ್ನು ಆರ್ ಆಂಡ್ ಡೀ ಮ್ಯಾನೇಜರ್ ಸ್ಥಾನದಿಂದ ವಜಾಮಾಡಿ ಮುಂಬಯಿಗೆ ವರ್ಗಮಾಡಿದ ಅವಸರದಲ್ಲಿ ತನ್ನ ಮನಸ್ಸಿನ ನೋವನ್ನು ತೋಡಿಕೊಂಡಾಗ Sಣoಠಿ ಣhಚಿಣ immಚಿಣuಡಿe ಟಿoಟಿseಟಿse ಎಂದು ಗದರಿದ ರೀತಿಗೆ ತಾನು ಥಕ್ಕಾಗಿ ನೋಡುತ್ತಿದ್ದಾಗ, ಅಷ್ಟೇ ನಿಷ್ಟುರವಾಗಿ, Iಣ ಜoes ಟಿoಣ go ತಿiಣh ಥಿouಡಿ ಚಿge, ಎಂದಿದ್ದ. ಬಂದ ನೆನಪಿನಿಂದ ನಾಗಪ್ಪನಿಗೆ ತನ್ನ ಅಂದಿನ ನಡತೆಯ ಬಗ್ಗೆ ಈಗ ಮುಜುಗರವಾಯಿತು. ದೋಶಿಗೂ ಈ ಸಂಸ್ಥೆಯನ್ನು ನೋಡುವ ಕುತೂಹಲವಿದ್ದರೆ ಅವರನ್ನೂ ಕರೆದೊಯ್ಯಬಹುದು. ಇನ್‌ಕಮ್ ಟ್ಯಾಕ್ಸ್ ಪ್ರೆಕ್ಟೀಶನರ್ ಎಂದಮೇಲೆ ಕಾರು ಇರಲಿಕ್ಕೇಬೇಕು. ನಾಳೆ ಕೇಳಿ ನೋಡಬೇಕು. +uಟಿಜeಜಿiಟಿeಜ +– ಅಧ್ಯಾಯ ಆರು – +“ಟಿಪ್ಪಣೆ ಹನ್ನೆರಡು : ಇಂದು ಬೆಳಿಗ್ಗೆ ನಾಲ್ಕು ಗಂಟೆಗೇ ಎಚ್ಚರವಾದದ್ದರಿಂದ ಎದ್ದು ಬರೆಯಲು ಕುಳಿತಿದ್ದೇನೆ. ಮನುಷ್ಯನ ನಡವಳಿಕೆಯ ಹಿಂದೆ ಕೆಲಸ ಮಾಡುತ್ತಿದ್ದ ಶಕ್ತಿಗಳು ಗಿಲ್ಬರ್ಟ ಹೇಳುವಷ್ಟು ಸರಳವಾಗಿವೆಯೇ ? ಗಿಲ್ಬರ್ಟ ನನ್ನ ಬಗ್ಗೆ ಮಾಡಿಕೊಂಡ ಕಲ್ಪನೆ ಕೂಡ ಬಹಳ ಸರಳವಾದದ್ದೇ. ನನ್ನೆಲ್ಲ ಯಾತನೆಗಳಿಗೆ ಕಾರಣವಾದದ್ದನ್ನು ಅಪ್ಪನ ತಲೆಗೆ ಸುತ್ತಿ ಪಾರಾಗಬಹುದಿತ್ತು. ಆದರೆ ಹಾಗೆ ಮಾಡಿ ಸಾಧಿಸಿದ್ದೇನು ?_ ಭೂತಕಾಲದಿಂದ ಪಲಾಯನ ! ಅಪ್ಪ ನನ್ನೊಂದಿಗೆ ನಡಕೊಂಡ ರೀತಿಗೇ ಆತನೇ ಸಂಪೂರ್ಣವಾಗಿ ಜವಾಬ್ದಾರನೇ ? ಇದರಲ್ಲೆಲ್ಲ ಪೂರ್ವಸಂಚಿತವಾದದ್ದೆಷ್ಟು ? ಸಂಕಲ್ಪದ ಬಲವನ್ನವಲಂಬಿಸಿದ್ದೆಷ್ಟು ? ಎದೆಗವುಚಿಕೊಂಡಲ್ಲೆ ಸುಡುತ್ತ ನನ್ನ ಬದುಕುವ ಇಚ್ಛಾಬಲವನ್ನೇ ಕುಗ್ಗಿಸಿಬಿಡುವ, ಯಾರೊಡನೆಯೂ ಹಂಚಿಕೊಳ್ಳಲಾಗದ, ಗುಟ್ಟಿನಂತಹ ಈ ದುಷ್ಟ ಸಂಶಯದಿಂದ ಮುಕ್ತನಾಗುವ ಬಗೆ ಗೊತ್ತಿದ್ದರೆ ! ಉಳಿದವರೊಡನೆ ನಡಕೊಳ್ಳುವ ಮತ್ತು ಅನುಭವವನ್ನು ಸ್ವೀಕರಿಸುವ ನನ್ನ ಸಂವೇದನಾಕ್ರಮವನ್ನೇ ನಿರ್ಧರಿಸಿಬಿಟ್ಟ ನನ್ನ ಬಾಲ್ಯದ ಅನುಭವವನ್ನು ಧೈರ್ಯವಾಗಿ ಇದಿರಿಸುವ ಗಟ್ಟಿತನ ನನ್ನಲ್ಲಿದ್ದಿದ್ದರೆ !… ಗಿಲ್ಬರ್ಟ ತಿಳಿದಂತೆ ನನ್ನಲ್ಲಿ ಇಲ್ಲದಿದ್ದದ್ದು ಮನುಷ್ಯಸ್ವಭಾವದ ನಿಷ್ಟುರಸತ್ಯವನ್ನು ಇದಿರಿಸುವ ಧೈರ್ಯವಲ್ಲ. ನನ್ನ ಹುಟ್ಟಿನ ಗಾಗು ನನ್ನ ಬಾಲ್ಯದ ಕಠೋರನಿಜವನ್ನು ಇದಿರಿಸಲು ಬೇಕಾದ ಧೈರ್ಯ… +“ಗಿಲ್ಬರ್ಟ ಬಹಳ ದಿನಗಳ ಹಿಂದೆ ಹೇಳಿದ ಮಾತುಗಳು ಸದ್ಯದ ಮನಃಸ್ಥಿತಿಯಲ್ಲಿ ವಿಚಿತ್ರರೀತಿಯಿಂದ ಪರಿಣಾಮಕಾರಿಯಾಗಿ ಕಾಡುತ್ತಿವೆ. ನನಗಿಂತ ಹೆಚ್ಚು ದುಃಖಿಗಳಾದ ಜನ ಜಗತ್ತಿನಲ್ಲಿಲ್ಲ ಎಂದು ತಿಳಿಯುವುದು ಹಾಸ್ಯಾಸ್ಪದವಾದೀತು. ನೋವನ್ನು ಆ ರೀತಿ ನೋಡುವದೇ ಅಸಹಜವಾದದ್ದೇನೋ. ಏಕೋ ಈ ಹೊತ್ತು ಎದ್ದದ್ದೇ ಹಿಂದೆ ಎಂದೂ ಅನ್ನಿಸಿರದಷ್ಟು ನಿಚ್ಚಳವಾಗಿ ಖಾತ್ರಿಯಾಗುತ್ತದೆ ; ಅಲ್ಲ ಹಿಂದೆ ಮತ್ತೆ ಮತ್ತೆ ಖಾತ್ರಿಯಾದದ್ದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವ ಧೈರ್ಯವಾಗುತ್ತದೆ; ನನ್ನ ಅಂಗಿಗೆ ಆ ದಿನ ರಾತ್ರಿ, ಗಾಢನಿದ್ದೆಯಲ್ಲಿದ್ದಾಗ, ಬೆಂಕಿ ಹತ್ತಿದ್ದು ಆಕಸ್ಮಿಕವಾಗಿ ಅಲ್ಲವೇ ಅಲ್ಲ. ಅಪ್ಪ ನನ್ನನ್ನು ಕೊಲ್ಲಲೆಂದೇ ಹಚ್ಚಿದ್ದ. ಇದಾದ ಹತ್ತೇ ದಿನಗಳಲ್ಲಿ ಅಪ್ಪ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಳ್ಳುವ ಮೊದಲ ಪ್ರಯತ್ನ ಮಾಡಿದ. ಆಗ ನನಗೇ ಬರೇ ಎಂಟು ವರ್ಷಗಳು. ಅಪ್ಪ ನನ್ನನ್ನೇಕೆ ಕೊಲ್ಲಲು ಬಯಸಿದ ? ನನ್ನನ್ನು ಕೊಂದು ತನ್ನನ್ನೂ ಕೊಂದುಕೊಳ್ಳುವ ಈ ಹಂಚಿಕೆಯ ಹಿಂದಿನ ಪ್ರೇರಣೆ ಯಾವುದಿರಬಹುದು ? ನನಗಿಂತ ಒಂದೇ ವರ್ಷದಿಂದ ಹಿರಿಯವಳಾದ ನನ್ನ ತಂಗಿ ಕಲ್ಯಾಣಿ ಮುಂಬಯಿಯ ಹೇಳಹೆಸರಿಲ್ಲದ ಜನಜಂಗುಳಿಯಲ್ಲಿ ಕಾಣೆಯಾಗಿ ಹೋದದ್ದೂ ಈ ಆತ್ಮಘಾತದ ಸಂಚಿನದೇ ಅಂಗವಾಗಿತ್ತೇ ? ಇದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ ಎಂದಿಗೂ ಆಗಲಾರದೇನೋ. ಅಣ್ಣನಿಗೆ ಗೊತ್ತಿರಬಹುದೆ ?…ನಿದ್ದೆ ಎಚ್ಚರಗಳಲ್ಲಿ ಧುತ್ ಎಂದು ಇದಿರಾದಾಗಲೆಲ್ಲ ತತ್ತರಿಸಲು ಹಚ್ಚಿದ, ಯಾರೊಡನಾದರೂ ಹಂಚಿಕೊಳ್ಳೋಣವೆಂದರೆ ಬಾಯಿ ತೆರೆಯಲೂ ಬಿಡದ ಭೀತಿಗೆ ಆಕಾರ ಕೊಡಲು ಕತೆಗಳನ್ನು ಬರೆದದ್ದು ಸಾಹಿತ್ಯದಲ್ಲಿ ಸ್ಥಾನ ಪಡೆಯುವುದಕ್ಕಲ್ಲ. ಅಷ್ಟು ದೊಡ್ಡ ಮಹತ್ವಾಕಾಂಕ್ಷೆ ಅವುಗಳಿಗೆ ಇಲ್ಲವೇ ಇಲ್ಲ. ನನಗೆ ಆಗಿನ ಕ್ಷಣಗಳಲ್ಲಿ ಅಪ್ಪ ಹಿಡಿದ ಹಾದಿಯಿಂದ ತಪ್ಪಿಸಿಕೊಳ್ಳುವುದೇ ಮುಖ್ಯವಾಗಿತ್ತು. ಬದುಕಿ ಉಳಿಯುವದೇ ಮುಖ್ಯವಾಗಿತ್ತು. ಯಾವುದೇ ರೀತಿಯ ಸಾಮಾಜಿಕ ಕಾಳಜಿ ಇಲ್ಲದ, ನಿಷ್ಟೆ ಇಲ್ಲದ ಇಂತಹ ಚಂದದ ಅರೆಗೊಡ್ಡು ಕತೆಗಳನ್ನು ಪತ್ರಿಕೆಗಳು ಬಹಿಷ್ಕರಿಸಬೇಕು ಇಲ್ಲವಾದರೆ ಹಾಗೆ ಪ್ರಕಟಿಸುವ ಪತ್ರಿಕೆಗಳನ್ನು ಓದುಗರೇ ಬಹಿಷ್ಕರಿಸುವಂತೆ ಚಳುವಳಿ ಎಬ್ಬಿಸಬೇಕಾದೀತು ಎಂಬ ಆಶಯದ ಸಂಪಾದಕೀಯ ಬರೆದ ಹುಬ್ಬಳ್ಳಿಯ ಒಂದು ಸಣ್ಣ ಪತ್ರಿಕೆಯ ಸಂಪಾದಕ ನನ್ನ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಿದ್ದ, ನನ್ನ ಬಹಳಷ್ಟು ಮಹತ್ವದ ಕತೆಗಳು ಪ್ರಕಟವಾದದ್ದೇ ತನ್ನ ಪತ್ರಿಕೆಯಲ್ಲಿ ಎಂಬುದನ್ನು ಮರೆತು. ಈ ಮೊದಲೇ ಕಳಿಸಿದ ಎರಡುಕತೆಗಳನ್ನು ಎರಡು ಬೇರೆ ಬೇರೆ ಪತ್ರಿಕೆಗಳ ಸಂಪಾದಕರು ಯಾವ ಕಾರಣವನ್ನೂ ಕೊಡದೆ ಹಿಂದೆ ಕಳಿಸಿದ್ದರು. ಆದರೂ ನನಗೆ ಕೆಡಕೆನಿಸಲಿಲ್ಲ. ಒಂದಕ್ಕೆ ಮಾತ್ರ ಮನಸ್ಸು ಇನ್ನೂ ಸಿದ್ಧವಾಗುವದಿಲ್ಲ : ಅವನ್ನು ಸುಟ್ಟು ಹಾಕಿಬಿಡಬೇಕು ಎನ್ನುವ ಬಲವಾದ ಅನ್ನಿಸಿಕೆಯನ್ನು ಆಚರಣೆಯಲ್ಲಿ ತರಲು ಕೇಳುವವರಿಲ್ಲದಾಗಲೂ ಬರಿಯ ನಮ್ಮ ಮನಸ್ಸಿನ ಸಮಾಧಾನಕ್ಕಾಗಿಯೇ ಹಾಡಿಕೊಳ್ಳಬಲ್ಲೆವು. ತಿಂಗಳುಗಟ್ಟಲೆ ಕಾಲ ಹಾಕಿ ಸುಂದರ ಚಿತ್ರ ಬರೆದು ಯಾರಿಗೂ ತೋರಿಸದೇನೇ ಹರಿದೊಗೆಯಬಲ್ಲೆವು ಎಂದೂ ಅನ್ನಿಸುತ್ತದೆ. ಆದರೆ ಶಬ್ದಗಳಲ್ಲಿ ಹಿಡಿದ ಅನುಭವ ಮಾತ್ರ ಇನ್ನೊಬ್ಬನಿಗೆ ಮುಟ್ಟಿದ ಹೊರತು ಮನಸ್ಸಿಗೇಕೆ ಸಮಾಧಾನವೆನ್ನಿಸುವದಿಲ್ಲ ? ಕತೆ ಬರೆಯುವುದರ ಮೂಲಕ ಅಲ್ಲದೇನೆ ಬೇರೆ ಯಾವುದೇ ರೀತಿಯಿಂದ ಉಳಿದವರೊಡನೆ ಮಾತನಾಡುವ ಕಲೆಯೇ ಗೊತ್ತಿರದ ನನ್ನ ಬಾಯನ್ನು ಮುಚ್ಚಿದ ಈ ಹಿಂಸೆಯ ಅರ್ಥ ನನಗಾಗುತ್ತಿಲ್ಲ. ಆದರೂ ಒಂದಿಲ್ಲ ಒಂದುದಿನ ಯಾರಾದರೂ ಓದಿ ಯಾರು ಎಂಬ ಭ್ರಮೆಯಿಂದಲೇ ಹತ್ತಾರು ಕತೆಗಳನ್ನು ಬರೆದು ಟ್ರಂಕಿನಲ್ಲಿ ಇಟ್ಟಿದ್ದೇನೆ. ಇಷ್ಟೊಂದನ್ನು ಧೈರ್ಯವಾಗಿ ಹೇಳಬಲ್ಲೆ : ಈ ಮೂರ್ಖ ಸಂಪಾದಕ ತಿಳಿದಂತೆ ನನ್ನ ಕತೆಗಳಲ್ಲಿ ಪ್ರಕಟವಾದ ಮೃತ್ಯುಪ್ರಜ್ಞೆಗೆ ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ಕಾರಣವಲ್ಲ. ಸತ್ಯ ಅಷ್ಟೊಂದು ಸರಳವಾಗಿದ್ದರೆ ಬಹುಶಃ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲವೇನೋ. ನಮ್ಮ ಹುಟ್ಟೇ ನಮ್ಮ ಸಾವಿಗೆ ಕಾರಣವಾಗುತ್ತಿದ್ದದ್ದು ಈ ಪ್ರದೇಶದಲ್ಲಿ ಮಾತ್ರವೇನೋ.” +ಈ ಬರವಣಿಗೆಯ ಧಾಟಿಯನ್ನು ಕೂಡ ಗಿಲ್ಬರ್ಟ Siಟಟಥಿ seಟಿಣimeಟಿಣಚಿಟiಣಥಿ ಎಂದೋ , ಇಲ್ಲ ‘immಚಿಣuಡಿe ಟಿoಟಿseಟಿse ಎಂದೋ ಕರೆಯುತ್ತಿದ್ದನೇನೋ ಎಂಬುದರ ಅರಿವು ಬಂದ ಕೂಡಲೇ ಬರೆಯುವ ಕೈ ತಂತಾನೆ ತಡೆದಿತ್ತು. ತನ್ನ ಬಗ್ಗೆ ತನಗೇ ಅನ್ನಿಸತೊಡಗಿದ ತೀವ್ರವಾದ ಅಸಮಾಧಾನದಿಂದ ತಡೆಫಡಿಸುತ್ತ ಕುಳಿತಲ್ಲಿಂದ ಎದ್ದು ಕಿಡಕಿಗೆ ಬಂದ : ನಾನು ಇದ್ದದ್ದೇ ಹಾಗೆ_seಟಿಣimeಟಿಣಚಿಟ ! ನಾನು ಇದ್ದದ್ದೇ ಹಾಗೆ_ immಚಿಣuಡಿe ! ಕಿಡಕಿಯ ಕಟ್ಟಿಗೆಯ ದಡಿಯ ಮೇಲೆ ಮುಚ್ಚಿದ ಮುಷ್ಟಿಯಿಂದ ಗುದ್ದುತ್ತ_I ಛಿಚಿಡಿe ಚಿ ಜಚಿmಟಿ, ಎಂದ. ಮರುಗಳಿಗೆ, ಈ ಸಿಟ್ಟಿಗೆ ಕಾರಣವಾದದ್ದು ಮನಸ್ಸಿನ ಮೂಲೆಯೊಂದರಲ್ಲಿ ಮೈಮುರಿದೆದ್ದ ಫಿರೋಜನ ನೆನಪೆಂದು ತಿಳಿದಾಗ ಇನ್ನಷ್ಟು ಕೆರಳಿ_ಥತ್ ಶನಿಯೇ ಎಂದುಕೊಂಡ. ಸಿಯ್ಟ್ಟನ್ನು ಕಳೆದುಕೊಳ್ಳುವ ಉಪಾಯವೆಂಬಂತೆ ಈಗಷ್ಟೇ ಕಣ್ಣುಬಿಡುವ ಸಿದ್ಧತೆಯಲ್ಲಿದ್ದಂತಿದ್ದ ಬೆಳಗುಜಾವದಲ್ಲಿ ತಂಪಾಗಿ ಬೀಸುತ್ತಿದ್ದ ಗಾಳಿಗೆ ಮೋರೆಯೊಡ್ಡಿದ. +ಅಪ್ಪ, ಅಮ್ಮರ ಬೆಗೆಗಿನ ಅನೇಕ ಸಂಗತಿಗಳು ನಾಗಪ್ಪನಿಗಿನ್ನೂ ಒಗಟಾಗಿಯೇ ಉಳಿದಿವೆ. ಗೊತ್ತಾದವುಗಳು ಕೂಡ, ಬೇರೆ ಬೇರೆ ಸಂಧರ್ಭಗಳಲ್ಲಿ ಇಷ್ಟಿಷ್ಟಾಗಿಯೇ ಗೊತ್ತಾದವುಗಳು. ಒಂದೊಂದೇ ಹೊಸ ಸಂಗತಿ ಬೆಳಕಿಗೆ ಬಂದಾಗ ಈ ಮೊದಲು ಅನುಭವಿಸಿದ ಸಂಕಟಗಳೆಲ್ಲ ಹೊಸ ರೂಪದಲ್ಲಿ ಹುಟ್ಟಿಬಂದು ನೋವು ಗೋಪುರ ಕಟ್ಟುತ್ತಿತ್ತು. ಫಿರೋಜ್ ಅತ್ಯಂತ ಸಹಜವಾಗಿ ಎಂಬಂತೆ (ಆ ಸಹಜತೆ ನಟಿಸಿದ್ದಾಗಿತ್ತು ಎಂದು ಗೊತ್ತಾದದ್ದು ತೀರ ತಡವಾಗಿ) ಅವನ ಅಪ್ಪನ ವೃತ್ತಿಯನ್ನು ಕುರಿತು ಪ್ರಶ್ನೆ ಕೇಳಿದಾಗಲೂ ಹೀಗೇ ಆಗಿತ್ತು. ಪ್ರಶ್ನೆಯ ಪ್ರಸ್ತುತತೆ ಕೂಡಲೇ ಹೊಳೆಯಲಿಲ್ಲ. ಬಾಯಿಂದ ಉತ್ತರ ಹೊರಡದೇ ಗೊಂದಲಕ್ಕೆ ಬಿದ್ದುದನ್ನು ಅಪಾರ್ಥ ಮಾಡಿಕೊಂಡು_“ನನ್ನ ಪ್ರಶ್ನೆಗೆ ಉತ್ತರ ಕೊಡುವದು ಕಷ್ಟವಾಗುತ್ತಿದ್ದರೆ ಬಿಟ್ಟುಬಿಡು. ಅದೇನು ಅಷ್ಟು ಮಹತ್ವದ ಸಂಗತಿಯಲ್ಲ. ಹೀಗೇ ಸಹಜ ಕೇಳಿದ್ದು,” ಎನ್ನುತ್ತ ಅವನತ್ತ ಲಕ್ಷ್ಯ ಕೊಡದೇ ಅದೇ ಆರಲು ಬಂದ ಪಾಯಿಪನ್ನು ಗಾಳಿ ಊದಿ ಹೊತ್ತಿಸುವುದರಲ್ಲಿ ಗರ್ಕನಾಗಿದ್ದ. ಅವನ ಈ ಉಪೇಕ್ಷೆಯಿಂದ ಕೆಣಕಲ್ಪಟ್ಟ ನಾಗಪ್ಪ, “ಅವನದು ಸಣ್ಣ ಚಹದಂಗಡಿಯಿತ್ತು, ನಮ್ಮ ಹಳ್ಳಿಯಲ್ಲಿ,” ಎಂದಿದ್ದ. ಫಿರೋಜ್ ಪಾಯಿಪನ್ನು ಸರಕ್ಕನೆ ಬಾಯಿಂದ ತೆಗೆದು ‘ಓಹ್’ ಎಂದು ಚಕಿತನಾದವನಂತೆ ಒಂದೇ ಕ್ಷಣದ ಮಟ್ಟಿಗೆ ತನ್ನತ್ತ ನೋಡಿ ತಿರುಗಿ ಪಾಯಿಪನ್ನು ತುಟಿಗಳ ನಡುವೆ ಹಿಡಿದಾಗ ಅವನ ತುಟಿಗಳ ಮೂಲೆಯಲ್ಲೆಲ್ಲೋ ತನ್ನ ಬಗ್ಗೆ ತಾತ್ಸಾರ ಮೂಡಿತ್ತು ಎನ್ನುವುದರ ನೆನಪಿನಿಂದಲೇ ನಾಗಪ್ಪ ಈಗ ಮತ್ತೆ ಕೆರಳಿ, ‘ಬೋಳೀಮಗನೇ, ನಿನ್ನ ಅಪ್ಪ, ಅಜ್ಜ ಗಳಿಸಿಟ್ಟ ಹಣದ ಮೇಲಾಗಲೀ, ನಿಮ್ಮ ಜಾತಿಯವರು ಕಟ್ಟಿಸಿಟ್ಟ ದೊಡ್ಡ ದೊಡ್ಡ ಧರ್ಮಾತ್ಮ ಸಂಸ್ಥೆಗಳ ಬಿಟ್ಟೀ ಹಣದಿಂದಾಗಲೀ ಕಲಿತನಲ್ಲವೋ : ಸಂತ ಮೆಹನತ್ತಿನಿಂದ. ಅಪ್ಪ ಬಡವನಾಗಿದ್ದರೂ ತುಂಬಾ ಸ್ವಾಭಿಮಾನಿಯಾಗಿದ್ದನೋ. ಯಾರ ಮುಂದೆಯೂ ದೀನನಾದವನಲ್ಲ,’ ಎಂದುಕೊಳ್ಳುತ್ತ ಹಲ್ಲುಕಡಿದ. ಈ ಸಿಟ್ಟು ಮೊದಲಿನಿಂದಲೂ ಇನ್ನಾವುದಕ್ಕೋ ತಳುಕು ಹಾಕಿಕೊಂಡಿತ್ತೆಂಬಂತೆ_ಒಂದುಕಾಲಕ್ಕೆ ತನ್ನ ಸಾಹಿತ್ಯದ ಹಿಂದಿನ ದೊಡ್ಡ ಪ್ರೋತ್ಸಾಹವಾಗಿದ್ದ ಆತ್ಮೀಯ ಗೆಳೆಯನೇ ಇಂದು ಅದರ ಬಾಯಿ ಮುಚ್ಚಿಸಿದ ಕ್ರೌರ್ಯಕ್ಕೆ ಬೆಂಬಲವಾದದ್ದು ನೆನಪಿಗೆ ಬಂದಾಗ ಕೊರಳ ಸೆರೆಗಳು ಉಬ್ಬಿಕೊಂಡವು : ಹುಬ್ಬಳ್ಳಿಯ ಸಣ್ಣ ಪತ್ರಿಕೆಯ ಹೆಸರಾಗಲೀ ಅದರ ಸಂಪಾದಕನ ಹೆಸರಾಗಲೀ ಬಾಯಲ್ಲಿ ಹುಟ್ಟಲಿಲ್ಲ. ಬೈದು ಬಿಡಬೇಕೆಂದರೆ ಸರಿಯಾದ ಬೈಗುಳ ಸಹ ತೋಚಲಿಲ್ಲ. ಗಿಲ್ಬರ್ಟನಿಗೆ ಪ್ರಾರ್ಥನೆ ಒದಗಿಸುತ್ತಿದ್ದದ್ದೇ ಸೃಷ್ಟಿಕಾರ್‍ಯ ತನಗೆ ಒದಗಿಸುತ್ತಿತ್ತೇನೋ. ಗಾಳಿಯೊಳಗಿನ ತಂಪು ಒಮ್ಮೆಲೇ ಕಡಿಮೆಯಾಯಿತೇ ? +ನಾಗಪ್ಪ ಕಿಡಕಿಯನ್ನು ಬಿಟ್ಟು ಈಚೆಗೆ ಬಂದ. +uಟಿಜeಜಿiಟಿeಜ +– ಅಧ್ಯಾಯ ಏಳು – +ಅಪ್ಪ ಬಡವನಾಗಿದ್ದರೂ ತುಂಬ ಸ್ವಾಭಿಮಾನಿಯಾಗಿದ್ದ ಎನ್ನುವುದರ ಬಗ್ಗೆಯೇ ಸಂಶಯ ಹುಟ್ಟಿತು ನಾಗಪ್ಪನಲ್ಲಿ. +ಅವನ ಪೂರ್ವಜರು ಮೂಲತಃ ಗೋವೆಯವರಂತೆ. ನಾಗಪ್ಪನ ತಂದೆಯೇ ಗೋವೆಯಿಂದ ಹೊರಬಿದ್ದು ಹನೇಹಳ್ಳಿಯಲ್ಲಿ ತಳವೂರಿದ ಮೊದಲಿಗ. ಗೋವೆಯಿಂದ ಹೊರಬಿದ್ದು ಹನೇಹಳ್ಳಿಗೆ ಬರಲು ಏನು ಕಾರಣವಾಯಿತು ? ಗೋವೆಯಲ್ಲಿ ತನ್ನವರು ಯಾರುಯಾರುದ್ದಾರೆ ? ಅಪ್ಪನಿಗೂ ಹನೇಹಳ್ಳಿಯ ತಮ್ಮ ಮನೆಯ ಮಾಲೀಕರಿಗೂ (ಇವರೂ ಗೋವೆಯವರೇ ಅಂತೆ) ಏನು ಸಂಬಂಧ_ಇವೇ ಮೊದಲಾದ ತನ್ನ ಮೂಲವನ್ನು ಕುರಿತ ಮೂಲಭೂತವಾದ ಪ್ರಶ್ನೆಗಳ ಬಗ್ಗೆ ನಾಗಪ್ಪ ಇಂದಿಗೂ ಬಹಳಷ್ಟು ಅರಿತವನಲ್ಲ. ಅರಿಯುವುದರ ಬಗೆಗಿನ ಅನಾಸ್ಥೆಯಲ್ಲಿ ಕುತೂಹಲದ ಅಭಾವಕ್ಕಿಂತ ಅವನಿಗೇ ಗೊತ್ತಿರದ ಒಂದು ಬಗೆಯ ಅಳುಕೇ ಹೆಚ್ಚಾಗಿದ್ದಂತಿತ್ತು. ಹನೇಹಳ್ಳಿ ದೊಡ್ಡ ಊರಲ್ಲವಾದರೂ ಹಳ್ಳಿಯ ಪ್ರತಿಷ್ಠಿತ ವರ್ಗದವರೊಡನೆ ಸಂಪರ್ಕ ಕಡಿಮೆಯಾಗಿತ್ತಷ್ಟೇ ಅಲ್ಲ, ಅವರಿಗೆ ತಮ್ಮ ಬಗ್ಗೆ ಒಂದು ರೀತಿಯ ಅನಾದರವಿತ್ತು ಎಂಬಂತಹ ಅಸ್ಪಷ್ಟ ಭಾವನೆಯೊಂದು ನಾಗಪ್ಪನಲ್ಲಿ ಚಿಕ್ಕಂದಿನಲ್ಲೇ ಬೇರೂರಿ ನಿಂತಿತ್ತು. ಅಪ್ಪ, ಅಮ್ಮ, ಅಪ್ಪನ ವಿಧವೆ ತಂಗಿ ಇವರೆಲ್ಲರ ಮುಖದ ಮೇಲೂ ಯಾರಿಗೋ ಹೆದರಿಕೊಂಡಂತಹ ಭಾವ ಕಂಡಂತೆ ನೆನಪು. ಈಗಲೂ ಹಿಂದಿನದಕ್ಕೆ ನೆನಪು ಕೈಚಾಚಿದಾಗ ನಿಲುಕುತ್ತಿದ್ದ ವಾಸ್ತವತೆ_ಕತ್ತಲಲ್ಲಿ ಇಷ್ಟಗಲ ತೆರೆದು ನಿಂತು ಬೆದರಿಸುವ ಎರಡು ದೊಡ್ಡ ಕಣ್ಣುಗಳಂತಹದು. ಇದಾವುದರೊಡನೆಯೂ ಸಂಬಂಧ ಹಚ್ಚಿಕೊಳ್ಳಲು ಅಸಮರ್ಥನಾದ ನಾಗಪ್ಪನಿಗೆ ತನ್ನ ಭೂತಕಾಲ ಒಡೆಯದ ಒಗಟಿಗಿಂತ ಹೆಚ್ಚಾಗಿ ಬೆನ್ನಟ್ಟಿಬರುವ ಕಾಡುಪ್ರಾಣಿಯ ತರಹದ ಕಪ್ಪುಶಕ್ತಿಯಾಗಿ ಪರಿಣಮಿಸಿದೆ ಎನ್ನುವುದನ್ನು ಅರಿತೂ ಅರಿಯದವನಂತಾಗಿದ್ದಾನೆ. ಮಸಕುಮಸಕಾಗಿ ತಿಳಿದ ಚೂರುಚೂರು ಸಂಗತಿಗಳೇ, ಸದ್ಯದ ವಿಚಿತ್ರ ಮನಃಸ್ಥಿತಿಯನ್ನು ಒಂದರೊಳಗೊಂದು ಹೆಣೆದುಕೊಳ್ಳುತ್ತ ನಿರ್ಮಿಸಿದ ಕನಸಿನಂತಹ ವಾತಾವರಣವೊಂದು ಫಿರೋಜ್ ಕೇಳಿದ ಪ್ರಶ್ನೆಯಿಂದಾದ ನೋವನ್ನು ನೂರುಪಟ್ಟು ಹೆಚ್ಚಿಸುತ್ತಿತ್ತು. ಬೇರೊಂದು ಕಾಲದಲ್ಲಿ ತಾನು ತುಂಬ ಅಭಿಮಾನಪಟ್ಟುಕೊಂಡ ತನ್ನ ಬಾಲ್ಯದ ಬಗ್ಗೆ, ಅಪ್ಪ_ಅಮ್ಮ, ಬರಿಯ ಕೇಳಿ ಗೊತ್ತಿದ್ದ ಅಣ್ಣ, ಕಾಣೆಯಾದ ತಂಗಿ_ಇವರೆಲ್ಲರ ಬಗ್ಗೆ ಈಗ ತೀವ್ರವಾದ ಅಸಮಧಾನ ಹುಟ್ಟುತ್ತಿತ್ತು. ಸಿಟ್ಟಿನ ಗಳಿಗೆಯಲ್ಲಿ ಅಪ್ಪನ ವೃತ್ತಿಯ ಬಗ್ಗೆ ಮುಚ್ಚುಮರೆಯಿಲ್ಲದೆಯೇ ಹೇಳಿಬಿಟ್ಟ ತನ್ನ ನೈತಿಕ ಧೈರ್ಯದ ಬಗ್ಗೆ ಆಗ ಅಭಿಮಾನ ಅನ್ನಿಸಿದರೂ ಫಿರೋಜ್ ಅದನ್ನು ತನ್ನನ್ನು ಹಣಿಯಲು ಉಪಯೋಗಿಸಿಕೊಂಡ ರೀತಿಯನ್ನು ಅರಿತಾಗ ಅದೆಲ್ಲದರ ಬಗ್ಗೆ ಜಿಗುಪ್ಸೆ ಹುಟ್ಟಿ ಸಿಡಿದುಬೀಳುತ್ತಾನೆ. +ತನ್ನ ಹುಟ್ಟಿನ ಬಗ್ಗೆ, ಅಪ್ಪ_ಅಮ್ಮರನ್ನು ಕುರಿತು ಹನೇಹಳ್ಳಿಯವರ ನಿಲುವಿನ ಬಗ್ಗೆ ನಾಗಪ್ಪನಿಗೆ ಮೊತ್ತಮೊದಲು ಸಂಶಯ ಹುಟ್ಟಿದ್ದು ಹಳ್ಳಿಯನ್ನು ಬಿಟ್ಟು ಕಮಟೆಗೆ ಹೋದಮೇಲೆ. ಹನೇಹಳ್ಳಿಯಲ್ಲಾಗ ಹಾಯಿಸ್ಕೂಲು ಇರಲಿಲ್ಲ. ಮೂರನೆ ಇಯತ್ತೆವರೆಗೆ ಕಲಿಸುವ ಆಂಗ್ಲೋ ವ್ಹರ್ನ್ಯಾಕ್ಯುಲರ್ ಸ್ಕೂಲ್ ಒಂದು ಮಗ್ಗುಲ ಹಳ್ಳಿಯಾದ ಬಂಕೀಕೊಡ್ಲದಲ್ಲಿತ್ತು. ಅಲ್ಲೇ ನಾಗಪ್ಪ ತನ್ನ ಇಂಗ್ಲಿಷ್ ಸಾಲೆಯ ಮೊದಲ ಮೂರು ವರ್ಷಗಳ ಶಿಕ್ಷಣವನ್ನು ಪಡೆದಿದ್ದ. ದತ್ತಮಾಸ್ತರರ ಬೆತ್ತದ ಬೆದರಿಕೆ ತಲೆಯ ಮೇಲೆ ಕಾಯಂ ನಿಂತಿದ್ದರೂ ಒಟ್ಟಿನಲ್ಲಿ ಆ ದಿನಗಳು ಅತ್ಯಂತ ಸುಖದ ದಿನಗಳೆಂದು ನೆನಪು ಮಾಡುವಂತಹವುಗಳಾಗಿದ್ದವು. ತಾನು ಅನುಭವವನ್ನು ಸ್ವೀಕರಿಸುವ ಒಟ್ಟೂ ರೀತಿಯನ್ನು ನಿರ್ಧರಿಸಿದ್ದೇ ತಾನು ಹನೇಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳೆಂದು ನಾಗಪ್ಪನಿಗೆ ಅನ್ನಿಸುತ್ತದೆ. ಇದೆಲ್ಲದರ ಮೇಲೆ ಕಪ್ಪು ನೆರಳು ಚಾಚಿದ ಘಟನೆಗಳು ಒಂದೊಂದಾಗಿ ನಡೆದದ್ದು ಕುಮಟೆಯ ಸಾಲೆಯ ಹಾಸ್ಟೆಲಿನಲ್ಲಿ ಇದ್ದಾಗ. ಶ್ರೀನಿವಾಸನ ತಮ್ಮನಾದ ಮಾಧವನ ಪರಿಚಯವಾದದ್ದೂ ಆ ದಿನಗಳಲ್ಲೇ. ಈಗ ನೆನಪು ಮಾಡಿದರೆ ಮಾಧವ ಹಾಗೂ ಅವನ ಗೆಳೆಯನಾದ ಗಜಾನನ ಇಬ್ಬರೂ ಕೂಡಿ ತನ್ನನ್ನು ಸತಾಯಿಸಿದ್ದು ಅವರುಮೊತ್ತಮೊದಲು ಕೇಳಿದಪ್ರಶ್ನೆಯಿಂದಲೇ ಎಂಬ ಅನ್ನಿಸಿಕೆ: ಅನೇಕ ವಂಶಗಳ ನಂತರ ಫಿರೋಜ್ ಕೇಳಿದ ಪ್ರಶ್ನೆಯ ಜಾತೀಯದೇ. ಮಾಧವ ಹಾಗು ಗಜಾನನ ತನಗಿಂತ ಮೂರು ಕ್ಲಾಸುಗಳಿಂದ ದೊಡ್ಡವರು. ತಾನು ನಾಲ್ಕನೇ ಇಯತ್ತೆಯಲ್ಲಿದ್ದಾಗ ಅವರು ಮೆಟ್ರಿಕ್‌ನಲ್ಲಿ. ಆ ಪ್ರಶ್ನೆ ತನ್ನ ತಾಯ ಜಾತಿಗೆ ಸಂಬಂಧಪಟ್ಟಿದ್ದಾಗಿತ್ತು. ತನ್ನ ತಾಯಿ ತಾನು ಇಷ್ಟುದಿನ ತಿಳಕೊಂಡಂತೆ ಬ್ರಾಹ್ಮಣ ಹೆಂಗಸಾಗಿರದೇ ಕಲಾವಂತರವಳಾಗಿದ್ದಳು ಎಂಬ ಸಂಶಯ ತನ್ನ ತಲೆಯಲ್ಲಿ ಹಾಕಿದವರು ಇವರೇ ! ಅವಳು ಸತ್ತು ಅದಾಗಲೇ ಐದು ವರ್ಷಗಳ ಮೇಲಾಗಿರಬೇಕು, ಆಗ. ಅವಳು ಯಾವ ಜಾತಿಯವಳಾಗಿದ್ದಳು ಎನ್ನುವುದಕ್ಕಿಂತ ಹೆಚ್ಚಾಗಿ ಅದನ್ನೆಲ್ಲ ಹೇಳಿ ತನ್ನನ್ನು ನೋಯಿಸುವುದರಲ್ಲಿ ಅವರು ಪಡುತ್ತಿದ್ದ ಸಂತೋಷದ ನೆನಪಿನಿಂದ ನಾಗಪ್ಪ ದಿಗ್ಭ್ರಮೆಗೊಳ್ಳುತ್ತಾನೆ : ಸಂತೋಷಕ್ಕಿಂತ ಹೆಚ್ಚಾಗಿ ಅದನ್ನು ವ್ಯಕ್ತಪಡಿಸುವ ಹೇಸಿಗೆ ತರುವ ರೀತಿಯಿಂದ : ಕೈಬೆರಳುಗಳಿಂದ ಸಂಭೋಗಕ್ರಿಯೆಯ ಸನ್ನೆಮಾಡುತ್ತ ಇಷ್ಟಗಲ ಹಲ್ಲುಕಿಸಿದು ಹಲ್ಕಟ್ಟಾಗಿ ನಗುತ್ತಿದ್ದರು. ಗಜಾನನ ಮಣಕಿಯ ಶ್ರೀಮಂತ ಜಮೀನುದಾರನ ಮಗ. ತಾನು ಶ್ರೀಮಂತ, ಜಿಲ್ಲೆಯಲ್ಲೇ ಪ್ರಖ್ಯಾತವಾವದ ಕುಟುಂಬದವನೆಂಬ ಜಂಭವೊಂದು ಅವನ ಪ್ರತಿಮಾತಿನಲ್ಲಿ, ಗತ್ತಿನಲ್ಲಿ ವ್ಯಕ್ತವಾಗುತ್ತಿತ್ತು. ನಾಗಪ್ಪ ಮುಗ್ಧ ಸರಳತೆಯನ್ನು ಹಾಗೂ ಮೆತ್ತಗಿನ ಸ್ವಭಾವವನ್ನರಿತ ಮೇಲಂತೂ ಅವರ ದುಷ್ಟಪ್ರವೃತ್ತಿ ಇನ್ನಷ್ಟು ಕ್ರೂರ ರೂಪ ತಾಳುತ್ತಿತ್ತು. ಮನೆಯಲ್ಲಿ ಅತ್ಯಂತ ಬಡವನಾಗಿದ್ದ ಮಾಧವನ ಗೆಳೆತನವನ್ನು ಗಜಾನನ ಕಟ್ಟಿಕೊಂಡದ್ದು ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು. ಆದರೆ ಈ ಮೈತ್ರಿಗೆ ತನ್ನನ್ನು ಹೀಗೆ ಕ್ರೂರವಾಗಿ ಛಳಿಸುವದೇ ಮೂಲಸ್ಪೂರ್ತಿಯಾಗಿತ್ತೇನೋ ಎಂಬ ಸಂಶಯ ನಾಗಪ್ಪನಿಗೆ. +ಹಾಸಿಗೆಯಲ್ಲಿ ಬಿದ್ದಲ್ಲೇ ಹಿಂದಿನ ನೆನಪುಗಳು ಮರುಕಳಿಸಹತ್ತಿದಾಗ ಮನಸ್ಸಿಗೆ ಬೇಜಾರಾಗಿ ಎದ್ದೇ ಕುಳಿತ. ಬಚ್ಚಲಮನೆಗೆ ಹೋಗಿ ಮೋರೆ ತೊಳೆದುಕೊಂಡು ಬಂದು ‘ಬೆಡ್-ಟೀ’ದ ಹಾದಿ ಕಾಯುತ್ತಿರುವಾಗ ಆದಿನ ಟೆಲಿಫೋನಿನ ಮೇಲೆ ಬಂದ ಆದೇಶದ ಮೇಲೇ ರಜೆಗೆ ಅರ್ಜಿಮಾಡಿ ಮನೆಯಲ್ಲಿ ಕುಳಿತುಬಿಟ್ಟಿದ್ದೇನಲ್ಲ ! ಇದೂ ಒಂದು ಫಿರೋಜನ ಪಿತೂರಿಯಾಗಿರಲಿಕ್ಕಿಲ್ಲವಲ್ಲ ! ಅನ್ನಿಸಿತು : ಯಾಕೆ ಎನ್ನುವುದನ್ನು ಬರೆದು ತಿಳಿಸುತ್ತೇನೆ ಎಂದು ಹೇಳಿದ್ದರೂ ನೆನ್ನೆಯವರೆಗಂತೂ ಪತ್ರ ಬಂದಿರಲಿಲ್ಲ. ನಿನ್ನೆ ಮಧ್ಯಾಹ್ನ ತಾನೇ ಖೇತವಾಡಿಗೆ ಹೋಗಿ ನೋಡಿಬಂದಿದ್ದ. ಆಜುಬಾಜಿನ ಮನೆಗಳ ಹೆಂಗಸರು ಕೆಲವರು ತನ್ನತ್ತ ವಿಚಿತ್ರ ರೀತಿಯಿಂದ ನೋಡಿದ್ದರೇ ಹೊರತು ಯಾರೂ ಮಾತನಾಡಿಸಿರಲಿಲ್ಲ. ಗಂಡಸರಾರೂ ಮನೆಯಲ್ಲಿಲ್ಲದ ವೇಳೆಯಾದ್ದರಿಂದ ಸಂಕೋಚಪಟ್ಟಿರಬೇಕು. ಅಥವಾ ತಾನು ಈ ವೇಳೆಯಲ್ಲಿ ಬರಬಹುದೆಂದು ಊಹಿಸಿರದ ಅವರಿಗೆ ಏನು ಕೇಳಬೇಕೆಂದು ಹೊಳೆಯದಿರಬಹುದು ಅನ್ನಿಸಿತು. ತಾನು ಕಳೆದ ಮೂರು ದಿನಗಳಿಂದ ಬರದೇ ಇದ್ದುದಕ್ಕೆ ಏನೆಲ್ಲ ಅರ್ಥ ಮಾಡಿಕೊಂಡಿದ್ದರೋ ಎಂದೂ ಅನ್ನಿಸಿತು. +ವರ್ಷದಲ್ಲಿ ಒಂದು ತಿಂಗಳು, ಕಂಪನಿಯ ನಿಯಮಗಳಿಗನುಸಾರವಾಗಿ, ಸಿಗುತ್ತಿದ್ದ ರಜೆಯನ್ನು ಕೂಡ ವರ್ಷ ವರ್ಷಕ್ಕೆ ತೆಗೆದುಕೊಂಡವನಲ್ಲ, ನಾಗಪ್ಪ. ಕಂಪನಿಯ ಕೆಲಸಕ್ಕೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡವನಿಗೆ ಈಗ ತಾನು ಕೇಳದೇ ಸಿಕ್ಕ ರಜೆಯಿಂದ ಮನಸ್ಸಿಗೆ ಹೇಗೋ ಹೇಗೋ ಆಗಹತ್ತಿತು. ಕೆಲಸವಿಲ್ಲದವನ ಮನಸ್ಸು, ಕಂಡದ್ದಕ್ಕೆಲ್ಲ ಅರ್ಥಹಚ್ಚಿ ಹೆದರುತ್ತಿತ್ತು : ಕೆಲವೇ ನಿಮಿಷಗಳ ಮೊದಲು ಅಸ್ಪಷ್ಟ ಅನುಮಾನವಾಗಿ ಹೊಳೆದದ್ದು ಈಗ, ಅಲ್ಲಗಳೆಯಲು ಆಗದಷ್ಟು, ಗಟ್ಟಿಮುಟ್ಟಾದ ವಾಸ್ತವತೆಯಾಗಿ ಕಣ್ಣಮುಂದೆ ನಿಂತಿತ್ತು : ಅರೆ ! ನಾನೇ ನನ್ನ ಭೋಳೇತನದಿಂದ ಕಂಪನಿಯ ಪರ್ಸೋನೆಲ್ ಮ್ಯಾನೇಜರ್ ಫೋನ್ ಮೇಲೆ ಹೇಳಿದ್ದನ್ನೇ ನಂಬಿ ಫಿರೋಜ್ ಹಾಗೂ ಅವನ ಬೇಹುಗಾರರು ರಚಿಸಿದ ಬೋನಿನಲ್ಲಿ ನನ್ನನ್ನು ಸಿಕ್ಕಿಕೊಂಡಿಲ್ಲವಷ್ಟೇ ! ಬಾಸ್‌ಗೆ ಕೂಡಾ ಫೋನ್ ಮಾಡಿಲ್ಲ. ಸಹೋದ್ಯೋಗಿಗಳೆಲ್ಲ ಏನೆಂದು ತಿಳಿಯುತ್ತಾರೋ….ನಾಸ್ತಾ ಮುಗಿಸಿದ್ದೇ ಆಫೀಸಿಗೆ ಫೋನ್ ಮಾಡಬೇಕೆಂದು ನಿಶ್ಚಯಿಸಿಕೊಂಡ. +ಕದ ಬಡೆದ ಸದ್ದು ಕೇಳಿಸಿದಾಗ ಅಡಿಗೆಯವನಿರಬೇಕೆಂದು ಬಗೆದು ದಡಬಡಿಸಿ ಎದ್ದು ಅಂಗಿಯ ಗುಂಡಿಗಳನ್ನೆಲ್ಲ ಸರಿಯಾಗಿ ಹಾಕಿಕೊಂಡು ಕದ ತೆರೆದರೆ ಕಣ್ಣಮುಂದೆ ನಿಂತವನು ಶ್ರೀನಿವಾಸನಾಗಿದ್ದ ! ನಿಷ್ಕಾರಣವಾಗಿ ಹಲ್ಲುಗಳನ್ನು ತೋರಿಸಿ ನಗುತ್ತ ಒಳಗೆ ಬಂದ. ಮೈಯಲ್ಲಿ ಖಾಕಿ ಬಣ್ಣದ ಚಡ್ಡಿಮಾತ್ರ. ಕೂದಲಿಲ್ಲದೇ ಬೋಳುಬೋಳಾದ, ಮೊಲೆಬಿಟ್ಟಂತೆ ಕಾಣುವ ಎದೆ ; ಹೊಂಡಬಿದ್ದ ಹೊಕ್ಕುಳವನ್ನು ಇನ್ನಷ್ಟು ಅಗಲವಾಗಿ ತೋರಿಸುವ ಅಸಹ್ಯವಾದ ಬೊಜ್ಜು ಬೆಳೆದ ಹೊಟ್ಟೆ. ದಿನವೂ ಅಡಿಗೆಯವನು ಮಾಡುತ್ತಿದ್ದ ಕೆಲಸವನ್ನು ಇಂದು ತಾನೇ ವಹಿಸಿಕೊಂಡಂತಿತ್ತು : ಕೈಯಲ್ಲಿ ಚಹದ ಕಪ್ಪನ್ನು ಹಿಡಿದು ಬಂದಿದ್ದ. ಒಳಗೆ ಬಂದವನೇ, “ ಇಂಥಾ ಸೆಖೆಯಲ್ಲೂ ಹೇಗಪ್ಪ ನೀನು ಯಾವಾಗಲೂ ಅಂಗಿ ಹಾಕಿಕೊಂಡೇ ಇರುತ್ತೀ,” ಎಂದ. ನಾಗಪ್ಪನಿಗೆ ಎದೆ ಧಸ್ ಎನ್ನಲಿಲ್ಲ. ‘ಇವನಿಗೂ ಗೊತ್ತಾಗಿಬಿಟ್ಟಿದೆಯೇ ನಾನು ಎದೆಗವಚಿ ಹಿಡಿದಲ್ಲೇ ನನ್ನನ್ನು ಸುಡುತ್ತಿದ್ದ ಗುಟ್ಟು ?’ ಎಂಬ ಅನುಮಾನ ಕೂಡ ಹುಟ್ಟಲಿಲ್ಲ. ಇಂತಹ ಪ್ರಶ್ನೆಯನ್ನು ಅವನು ಕೇಳಿದ್ದು ಇದೇ ಮೊದಲ ಸಲವಾಗಿರಲಿಲ್ಲ ! ಆದ್ದರಿಂದ ಹಿಂದೆ ಎಷ್ಟೊಂದು ಸಲ ಕೊಟ್ಟ ಜವಾಬನ್ನೇ ಯಾವ ಬೇಸರವಿಲ್ಲದೆ ಕೊಟ್ಟ : “ನನಗೆ ಚಿಕ್ಕಂದಿನಿಂದಲೂ ಅಂಟಿಕೊಂಡ ರೋಗವಿದು_ ಅoಟಿgeಟಿiಣಚಿಟ bಡಿoಟಿಛಿhiಚಿಟ ಣಡಿoubಟe, ತುಸು exಠಿose ಆದರೂ ಎದೆ ತುಂಬಿಬರುತ್ತದೆ. “ಇದೇಕೆ ಇವತ್ತು ನೀನೇ ಚಹ ತಗೊಂಡು ಬಂದೆ ?” ಎಂದು ಕೇಳಿದ ಪ್ರಶ್ನೆಗೆ ಶ್ರೀನಿವಾಸ.“ಅದೊಂದು ದೊಡ್ಡ ಕತೆಯೇ ಇದೆ. ಆಮೇಲೆ ಕೇಳುವಿಯಂತೆ.” ಎನ್ನುತ್ತ ವಿಚಿತ್ರವಾಗಿ ನಕ್ಕ. ನಾಗಪ್ಪನಿಗೆ ಆ ನಗು ಸೇರಲಿಲ್ಲ. ಚಹ ಕುಡಿಯುತ್ತ ಶ್ರೀನಿವಾಸನ ಮೋರೆಯನ್ನು ನೋಡುತ್ತಿರುವಾಗ, ಶ್ರೀನಿವಾಸ ತಾಲೀಮು ಮಾಡಿಕೊಂಡೇ ಬಂದಂತಿದ್ದ ಪ್ರಶ್ನೆಯನ್ನು ನಾಟಕೀಯವಾಗಿ ಕೇಳಿದ, “ನೀನು ಅಮೇರಿಕೆಗೆ ಹೋಗುವ ತಯಾರಿ ಎಲ್ಲಿಯವರೆಗೆ ಬಂತು ?” ಈಗ ಮಾತ್ರ ತನಗಾದ ಆಶ್ಚರ್ಯವನ್ನು ಮುಚ್ಚಿಕೊಳ್ಳುವುದು ನಾಗಪ್ಪನಿಗೆ ಸಾಧ್ಯವಾಗಲಿಲ್ಲ. ಬಾಲ್ಯದಿಂದಲೂ ಬಂದ ಅನುಭವ ಈಗ ಮತ್ತೆ ಚೀರಿ ಹೇಳಿತು : ನಿರ್ದೋಷಿಗಳ ಬಲಿ ಇಲ್ಲಿ ! ಬದುಕಿನಿಂದ ಬಹಳಷ್ಟನ್ನು ಬಯಸಿದವನಲ್ಲ, ದೇವರೇ ಅಮೇರಿಕೆಗೆ ಹೋಗುವ ಕನಸು ಉಳಿಯಲಿ. ನನ್ನವರೆನ್ನುವವರಲ್ಲಿ ತಲೆಯೆತ್ತಿ ನೋಡಲಾಗದಂತಹ ಪ್ರಸಂಗ ಮಾತ್ರ ತರಬೇಡ. ಶ್ರೀನಿವಾಸನಿಗೆ ಇದೆಲ್ಲ ಹೇಗೆ ಗೊತ್ತಾಯಿತು ? +“ನನಗೆ ಹ್ಯಾಗೆ ತಿಳಿಯಿತು ಎಂದು ನಿನಗೆ ಕುತೂಹಲ ಅಲ್ಲವೇ ? ನಿನ್ನೆ ನಿನ್ನ ಆಫೀಸಿಗೆ ಹೋಗಿದ್ದೆ. ದೊಡ್ಡದೊಂದು ಆರ್ಡರ್ ಬರುವುದಿತ್ತು. ಆದ್ದರಿಂದ ಸ್ವತಃ ನಾನೇ ಹೋಗಿದ್ದೆ. ಈ ಹೊತ್ತು ‘ಮಹಾರಾಷ್ಟ್ರ ದಿನ’ ದ ನಿಮಿತ್ತ ಪ್ರೆಸ್ಸಿಗೆ ರಜೆ. ಈ ಒಂದು ದಿನ ನಿನ್ನ ಕಾದಂಬರಿಗೆ ವಿರಾಮ ಕೊಡು. ಹೀಗೇ ಠಾಣಾದ ತನಕ ಹೋಗಿಬರೋಣ. ಪ್ರಿಂಟಿಂಗ್ ಮೆಶಿನರೀ ತಯಾರಿಸುವ ನಮ್ಮ ಹೊಸ ಕಾರಖಾನೆಯ ಬಿಲ್ಡಿಂಗ್ ಸಿದ್ಧವಾಗುತ್ತ ಇದೆ” ನಾಗಪ್ಪನಿಂದ ಉತ್ತರ ಬರುವ ಹಾದಿಯನ್ನೂ ಕಾಯದೇ “ಸ್ನಾನ ಮುಗಿಸಿದ್ದೇ ಹಾಲ್‌ಗೆ ಬಾ, ”ಎಂದ. ಹೋಗುಹೋಗುವಾಗ, “ನಿನ್ನ ಕಾದಂಬರಿಯ ವಹಿಯನ್ನು ಹಾಗೇ ಟೇಬಲ್ಲಿನ ಮೇಲೇ ಇಟ್ಟು ಹೋಗಬೇಡ. ಡ್ರಾ‌ಆರ್‍ದಲ್ಲಿಟ್ಟು ಬೀಗ ಹಾಕು. ಕೀಲಿಕೈ ಅಲ್ಲೇ ಇದೆ ನೋಡು” ಎಂದ. +ನಾಗಪ್ಪನಿಗೆ ಬೆನ್ನ ಹುರಿಯಲ್ಲೇ ತಣ್ಣಗಿನದೇನೋ ಹರಿದ ಅನುಭವ : ಇಲ್ಲ, ಇಡೀ ದಿನ ನನ್ನ ಬಗ್ಗೇ ವಿಚಾರಮಾಡುತ್ತ ಇದ್ದದ್ದಕ್ಕೇ ಇರಬೇಕು ಹೊರಗಿನಿಂದ ಬಂದ ಕ್ಷುಲ್ಲಕ ಇಷಾರೆಗಳಿಗೂ ಸಲ್ಲದ ಅರ್ಥಗಳು ಹುಟ್ಟುತ್ತವೆ. ನನ್ನ ಮನಸ್ಸೇ ಸರಿಯಾಗಿಲ್ಲ. ಶ್ರೀನಿವಾಸ ನಿನ್ನೆ ಆಫೀಸಿಗೆ ಹೋಗಿದ್ದ ಎಂದ ಮೇಲೆ ಯಾರಾದರೂ ಅವನಿಗೆ ಹೇಳಿರಬಹುದೇ ಇನ್ನೂ ನನಗೇ ಗೊತ್ತಾಗದೇ ಇದ್ದದ್ದನ್ನು ? ಕೇಳಿ ನೋಡೋಣವೇ ?_ನಾಗಪ್ಪನಿಗೆ ಧೈರ್ಯವಾಗಲಿಲ್ಲ. +ಬರವಣಿಗೆಯ ವಹಿಯನ್ನು ಸೂಟ್‌ಕೇಸಿನಲ್ಲಿಟ್ಟು ಬೀಗ ಹಾಕುತ್ತಿದ್ದಾಗ ತಟ್ಟನೆ ಒಂದು ವಿಚಾರ ಬಂತು : ನಾನು ಬರೆಯುತ್ತಿದ್ದುದ್ದು ಕಾದಂಬರಿ ಎಂಬುದನ್ನೇ ದೃಢವಾಗಿ ನಂಬಿದಂತಿದೆ, ಶ್ರೀನಿವಾಸ. ಬಹುಶಃ ನನ್ನ ಕಾದಂಬರಿಯ ಬಗ್ಗೆ ಹೇಳಿದ ಸೀತಾರಾಮನೇ ಅಮೇರಿಕೆಯ ಯೋಜನೆಯ ಬಗೆಗೂ ಹೇಳಿರಲಿಕ್ಕಿಲ್ಲವಷ್ಟೇ. ಆಫೀಸಿನ ಹೆಸರು ಹೇಳಿ ಥಾಪು ಹೊಡೆಯುತ್ತಿರಬೇಕು ಬೋಳೀಮಗ. ಏನಿಲ್ಲ, ಹೀಗೆ ಇಡೀ ದಿನ ನನ್ನ ಬಗ್ಗೇ ವಿಚಾರ ಮಾಡುತ್ತ ಕೂಡ್ರಬಾರದು. ಸಂಜೆ ದೋಶಿ ಭೆಟ್ಟಿಯಾದಾಗ ಅವರಿಗೆ ಸದ್ಯದ ಯಾತನೆಯನ್ನು ಬಿಚ್ಚಿ ಹೇಳಬೇಕು. ವೋಮೂನನ್ನು ಕಾಣದೇ ಬಹಳ ದಿನಗಳಾದವು. ಅವನ ಬಗ್ಗೆ ಬರೆಯಬೇಕೆಂದುಕೊಂಡದ್ದನ್ನು ಇಂದು ರಾತ್ರಿ ತಪ್ಪದೇ ಬರೆಯಬೇಕು. ನಾಳೆ ಸೀತಾರಾಮನಿಗೆ ಫೋನ್ ಮಾಡಿ ಗಿಲ್ಬರ್ಟನ ವಿಳಾಸ ಪಡೆದು ಪತ್ರ ಬರೆಯಬೇಕು. ಅವನು ಹೇಳೆದ ಚೆಶಾಯರ್ ಹೋಮನ್ನೂ ನೋಡಿ ಬರಬೇಕು, ಎಂದು ನಿಶ್ಚಯಿಸಿಕೊಂಡ. ತನ್ನ ಸದ್ಯದ ಮನಃಸ್ಥಿತಿಯಲ್ಲಿ ಈವರೆಗೆ ರಾಣಿಯ ನೆನಪೇ ಆಗದೇ ಇದ್ದದ್ದು ಲಕ್ಷ್ಯಕ್ಕೆ ಬಂದಾಗ ಒಂದು ಕ್ಷಣದ ಮಟ್ಟಿಗೆ ಕೆಡಕೆನಿಸಿತು. ಮರುಗಳಿಗೆ, ಬರಿಯ ದೇಹದ ಗರಜಿಗೆ ಹುಟ್ಟಿಸಿಕೊಂಡ ಸಂಬಂಧವಿದು ಎಂದು ತನ್ನ ಔದಾಸ್ಯವನ್ನು ಸಮರ್ಥಿಸಿಕೊಂಡ. ಅಫೀಸಿನಲ್ಲಿ ಬಾಸ್‌ನ ಸೆಕ್ರೆಟರಿಯಾದ ಮೇರಿ ತನ್ನಲ್ಲಿ ವಿಶೇಷ ಆಸ್ಥೆ ತೋರಿಸುತ್ತಿದ್ದಾಳೆ. ತನಗೆ ಮಾತ್ರ ಎಲ್ಲಿಲ್ಲದ ಸಂಕೋಚ, ಭಯ. ಹತ್ತಿರ ಬರುವುದೆಂದರೆ ಮೆಲ್ಲಗೆ ಬಿಚ್ಚಿಕೊಳ್ಳುವ ಕ್ರಿಯೆ. ತನ್ನಲ್ಲೋ ಬಿಚ್ಚುವ ಬದಲು ಮುಚ್ಚಿಕೊಳ್ಳುವಂತಹದೇ ಹೆಚ್ಚಾಗಿದೆ…ಹೊಸ ಸಂಬಂಧವೆಂದರೇನೇ ಹಿಂದೆಗೆಯುವ ತನಗೆ, ಮೇರಿಗೆ ತನ್ನ ಮೇಲೆ ಪ್ರೀತಿ ಇದೆ ಎನ್ನುವುದನ್ನು ನೆನೆಯಲೂ ಹೆದರಿಕೆ, ಇತ್ತಿತ್ತ. ನಾಳೆ ಮೇರಿಗೆ ಫೋನ್ ಮಾಡಿದರೆ ಹೇಗೆ ? ಆಫೀಸಿನ ಎಲ್ಲ ಹಕೀಕತ್ತು ತಿಳಿಯುತ್ತಿತ್ತು. ಹುಡುಗಿ ಅಪಾರ್ಥ ಮಾಡಿಯಾಳೆ ? ಮಾಡಿದರೆ ಮಾಡಲಿ. ಎಷ್ಟೊಂದಕ್ಕೆ ಹೆದರಿಕೊಂಡಿರಲಿ ? ಹೌದು. ಬಾಸ್‌ಗೆ ಫೋನ್ ಮಾಡುವ ಬದಲು ಮೇರಿಗೆ ಫೋನ್ ಮಾಡಬೇಕು. +ಬಚ್ಚಲುಮನೆಯಲ್ಲಿ ತಣ್ಣೀರಿನ ಶಾವರ್ ಕೆಳಗೆ ನಿಂತಾಗ ಎಲ್ಲರನ್ನೂ ಬಿಟ್ಟು ಮೇರಿ ತನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸಲು ಕಾರಣವೇನು ? ಹುಚ್ಚು ಹುಡುಗಿ ಎಂದುಕೊಂಡು ತನ್ನಷ್ಟಕ್ಕೆ ನಕ್ಕ. ಎಂದಿನಂತೆ, ಎದೆಗೆ ಹೊಟ್ಟೆಗೆ ಸಾಬೂನು ತಿಕ್ಕಿಕೊಳ್ಳುವಾಗ ಆ ಭಾಗಗಳನ್ನು ನೋಡುವ ಮನಸ್ಸಾಗದೇ ಛಾವಣಿಯ ಕೆಳಗೆ ದೃಷ್ಟಿ ತಿರುವಿದ : ಸುಟ್ಟ ಜಾಗದ, ನುಣುಪಾಗಿಯೂ, ಗಂಟು ಗಂಟಾದ ಚರ್ಮದ ಸ್ಪರ್ಶಕ್ಕೆ ಮನಸ್ಸು ಬಾಡಹತ್ತಿದಾಗ ಮೇರಿಯ ಸುಂದರ ಮೋರೆಯನ್ನು ಮುಂದೆ ನಿಲ್ಲಿಸಿಕೊಂಡ. ಕಣ್ಣುಗಳು ಹನಿಗೂಡುವ ಮೊದಲೇ ಷಾವರಿನ ನೀರನ್ನು ಮೋರೆಯ ಮೇಲೆ ಧಾರೆಯಾಗಿಸಿಕೊಂಡ. ದಿನಕ್ಕಿಂತ ಹೆಚ್ಚೇ ಹೊತ್ತು ನೀರಡಿಗೆ ನಿಂತ. +uಟಿಜeಜಿiಟಿeಜ +– ಅಧ್ಯಾಯ ಎಂಟು – +ಬ್ರೇಕ್‌ಫಾಸ್ಟಿಗೆಂದು ಹಾಲ್‌ಗೆ ಹೋದಾಗ ನಾಗಪ್ಪನಿಗೆ ಆಶ್ಚರ್ಯ ಕಾದಿತ್ತು : ಶ್ರೀನಿವಾಸ, ಶ್ರೀನಿವಾಸನ ಹೆಂಡತಿ, ಚೇತನಾ ಹಾಗು ಅಡಿಗೆಯವನು ಎಲ್ಲರೂ ಒಳ್ಳೆಯ ಉಡುಪನ್ನು ಧರಿಸಿ ಠಾಣಾಕ್ಕೆ ಹೋಗಲು ಸಿದ್ಧರಾಗಿ ನಿಂತಿದ್ದರು. ಪಿಕ್ನಿಕ್ಕಿಗೆ ಹೊರಟ ತರಹ ಬಹಳ ಖುಶಿಯಲ್ಲಿದ್ದರು. ನಾಗಪ್ಪ ತಬ್ಬಿಬ್ಬಾದ. ಇವರೆಲ್ಲರ ಜೊತೆಗೆ ಹೋಗುವುದರ ಕಲ್ಪನೆಯಿಂದಲೇ ಮನಸ್ಸು ಅಧೀರಗೊಂಡಿತು. ಶ್ರೀನಿವಾಸನ ಹೆಂಡತಿಯ ಕಣ್ಣುತುಂಬುವ ರೂಪಕ್ಕೂ ತನ್ನ ಅಧೀರತೆಗೂ ಸಂಬಂಧವಿರಬಹುದೆಂಬ ಅನ್ನಿಸಿಕೆಯನ್ನು ತಳ್ಳಿಹಾಕಲು ಯತ್ನಿಸಿದ. ಹದಿನೆಂಟು ವರ್ಷಗಳಿಂದ ಮಾಡುತ್ತಾ ಬಂದ ನೌಕರಿ ಒಂದು ಸುಖದಾಯಕ ಹಂತಕ್ಕೆ ಬರುತ್ತಿದ್ದಾಗ ಒದಗಿದ ಈ ದುರ್ಧರಪ್ರಸಂಗದಿಂದ ಮನಸ್ಸು ಗಾಸಿಗೊಂಡಾಗ ಈ ಪಿಕ್ನಿಕ್ ! ಹೇಗಾದರೂ ಇದರಿಂದ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿರುವಾಗ ಶ್ರೀನಿವಾಸನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ, “ನಡೆ, ಹೊರಡುವ. ಬೆಳಿಗ್ಗೆ ಎದ್ದಕೂಡಲೇ ನಮ್ಮ ಶಾರದೆಗೆ (ಶ್ರೀನಿವಾಸನ ಹೆಂಡತಿಯ ಈ ಹೆಸರನ್ನು ತಾನು ಕೇಳುತ್ತಿದ್ದದ್ದು ಇದೇ ಮೊದಲೋ ಅಥವಾ ಈ ಮೊದಲು ಕೇಳಿದ್ದೆನೊ ? ಸರಿಯಾಗಿ ನೆನಪಿಲ್ಲ) ಹುಕ್ಕಿ ಬಂದುಬಿಟ್ಟಿತು. ‘ಠಾಣಾಕ್ಕೆ ಹೋಗುವುದಾದರೆ ಎಲ್ಲರೂ ಕೂಡಿಯೇ ಹೋಗೋಣವಲ್ಲ. ಬ್ರೇಕ್‌ಫಾಸ್ಟಿಗೆ ಮಾಡಿದ ಇಡ್ಲಿ_ಚಟ್ಣಿ ಎಲ್ಲವನ್ನು ಕಟ್ಟಿಕೊಂಡು ಹೋಗಿ ಅಲ್ಲಿಯೇ ತಿನ್ನೋಣ. ಒಂದು ಸಣ್ಣ ಪಿಕ್ನಿಕ್ ಆದೀತು,’ ಎಂದಳು. ದೊಡ್ಡ ಥರ್ಮೊಸಿನಲ್ಲಿ ಬಿಸಿಬಿಸಿ ಕಾಫಿ ! ನಮ್ಮ ಅಚ್ಯುತನೂ ಎಷ್ಟು ಖುಷಿಯಲ್ಲಿದ್ದಾನೆ ನೋಡು,” ಎಂದ. ನಾಗಪ್ಪ ಆ ಗಳಿಗೆಯಲ್ಲಿ ನಿರಾಕರಿಸುವದು ಶಕ್ಯವಿರಲಿಲ್ಲ. ಶ್ರೀನಿವಾಸ ಅವನನ್ನು ಹೆಚ್ಚುಕಡಿಮೆ ಎಳದೇ ಒಯ್ಯುವವನಂತೆ ಒಯ್ದು ಕಾರಿನತ್ತ ದೂಡಿ ಮುಂದಿನ ಸೀಟಿನಲ್ಲಿ ಕೂಡ್ರಿಸಿದ. ಶಾರದೆ, ಚೇತನಾ ಹಾಗು ಅಚ್ಯುತ ಹಿಂದಿನ ಸೀಟಿನಲ್ಲಿ. ತಿಂಡಿಯ ಸರಂಜಾಮನ್ನು ಮೊದಲೇ ಡಿಕ್ಕಿಯಲ್ಲಿ ಇಟ್ಟಾಗಿತ್ತು. ಕಾಫಿ ತುಂಬಿದ ಹಂಡೆಯ ಆಕಾರದ ದೊಡ್ಡ ಥರ್ಮೊಸನ್ನು ಅಚ್ಯುತ ತನ್ನ ಕಾಲಬಳಿ ಇಟ್ಟಿಕೊಂಡಿದ್ದ. ಅಚ್ಯುತನನ್ನು ನೋಡುನೋಡುವಾಗ ತಾನು ಈವರೆಗೂ ನೋಡಿಯೇ ಇರದ ಅಣ್ಣನ ವಿಚಾರ ಮನಸ್ಸಿನಲ್ಲಿ ಹಾದುಹೋಗಿ ಮೈ ನವಿರಿಗೊಳಗಾಯಿತು. +ಕಾರು, ಟಿಳಕ, ಬ್ರಿಡ್ಜ್, ದಾದರ ಟ್ರ್ಯಾಮ್_ಟರ್ಮಿನಸ್, ಕಿಂಗ್ಸ್ ಸರ್ಕಲ್, ಸಾಯನ್‌ಗಳನ್ನು ದಾಟಿ ಪೂನಾಕ್ಕೆ ಹೋಗುವ ಹಾಯ್ವೇದ ಮೇಲೆ ಓಡುತ್ತಿತ್ತು. ಕಾರಿನ ತೀವ್ರಗತಿಗೆ ಅನುಗುಣವಾಗಿ ಕಾರಿನಿಂದ ಕಂಡ ಸುತ್ತಲಿನ ಭೂಪಟದ ವಿವರಗಳು ಒಂದೊಂದಾಗಿ ಕಣ್ಣ ಪರದೆಯ ಮೇಲೆ ಮೂಡುತ್ತಿದ್ದವು : ಮಾಸುತ್ತಿದ್ದವು ; ಮತ್ತೆ ಹೊಸ ವಿವರಗಳಿಗೆ ಎಡೆಮಾಡಿಕೊಡುತ್ತಿದ್ದವು : ಸಾಯನ್ನಿನ ಬೆಟ್ಟ ; ಬೆಟ್ಟದ ನೆತ್ತಿಯಲ್ಲಿ ನಿಂತ ಹಳೇಕೋಟೆಯ ಭಗ್ನ ಅವಶೇಷಗಳು ; ರಸ್ತೆಯ ಬಲಗಡೆಯಲ್ಲಿ ದೃಷ್ಟಿ ಹಾಯುವವರೆಗೂ ಹಬ್ಬಿಕೊಂಡ ದುರ್ಗಂಧ ಸೂಸುವ ಖಾಡಿ ; ಖಾಡಿಯ ಅಂಚಿನಲ್ಲಿಯ ಗುಡ್ಡಗಳ ಸಾಲು : ಮಗ್ಗಲಲ್ಲೇ ರಾಸಾಯನಿಕ ತಂತ್ರವಿಜ್ಞಾನದ ದೊಡ್ಡ ಪ್ರತೀಕಗಳಾಗಿ ಮೆರೆಯುವ ಪೆಟ್ರೋಲಿಯಂ ರಿಫೈನರಿ ; ಫರ್ಟಿಲೈಜರ್ಸ್, ಪೆಟ್ರೋಕೆಮಿಕಲ್ಸ್ ಉತ್ಪಾದಿಸುವ ಕಾರಖಾನೆಗಳು : ಅಡ್ಡತಿಡ್ಡವಾದ, ಅಂಕುಡೊಂಕಾದ ಸ್ಟೀಲ್ ಪೈಪುಗಳ ಕಪ್ಪು, ಕಂದುಬಣ್ಣಗಳ ಅಂದಗೇಡಿಯಾದ ರಾಶಿಯಂತೆ ತೋರುತ್ತ ತಮ್ಮ ಎತ್ತರದಲ್ಲಿ ಬದಿಯ ಗುಡ್ಡಗಳೊಡನೆ ಸ್ಪರ್ಧಿಸುತ್ತಿದ್ದವು. ಈ ಕಪ್ಪು ಗುಪ್ಪೆಯಿಂದ ಚೆಂಗನೆ ನೆಗೆದ ಉದ್ದೋ ಉದ್ದವಾದ ಹೊಗೆ_ಕೊಳವೆಗಳ ಹಾಗೆ ಕಪ್ಪಾಗಿ ಸೆಟೆದು ನಿಂತವುಗಳ ತುದಿಯಿಂದ ಹೊಮ್ಮುತ್ತಿದ್ದ ಬೆಂಕಿಯ ಜ್ವಾಲೆ ; ಹೊಗೆಯರಾಶಿ. ಅಲ್ಲಲ್ಲಿ ಭುಸ್ ಎಂದು ಹೊರಬರುವಾಗಲೇ ಮಂಜಾಗುತ್ತಿದ್ದ ಉಗಿ : ಮುಂಜಾವಿನ ಗಾಳಿಯಲ್ಲೂ ಗಂಧಕದ, ಗಂಧಕಾಮ್ಲದ ವಾಸನೆ ಹರಡಿತ್ತು. ಮೇಲೆ ಬಾಗಿ ನಿಂತ ಆಕಾಶದ ಬಣ್ಣವನ್ನು ಗುರುತಿಸುವುದೂ ಕಠಿಣವಾಗಿತ್ತು. ಹೈವೇದ ಎಡಬಲಗಳಲ್ಲೂ ಹಸಿರು ಗಿಜಿಗಿಜಿಸುವ ಖಾಡಿ, ನಡುನಡುವೆಯೇ ಊರ ನೆನಪು ತರುತ್ತಿದ್ದ ಉಪ್ಪಿನ ಆಗರಗಳು : ಮೂಡುವಷ್ಟರಲ್ಲಿ ಮುಳುಗುತ್ತಿದ್ದ ಪ್ರತಿಬಿಂಬಗಳೊಳಗಿಂದಲೇ ಹುಟ್ಟಿಬಂದಿತ್ತು ಸತತವಾಗಿ ಕೊರೆಯುತ್ತಿದ್ದ ಅರಿವು : ಇದರಲ್ಲೇನೋ ಬೇತು ಇದೆ. ಈ ಒಂದೂ ಮಗ ಹೇಳಿದಷ್ಟು ಸಹಜವಾದ ಪಿಕ್ನಿಕ್ ಅಲ್ಲವಿದು. ಬೆಳಿಗ್ಗೆ ಎದ್ದ ಕೂಡಲೇ ಹೆಂಡತಿಗೆ ಹುಕ್ಕಿ ಬಂದುಬಿಟ್ಟಿತಂತೆ. ಇವನ ಬೊಜ್ಜಿನಲ್ಲಿ ಎಂದಾದರೂ ಹುಟ್ಟುತ್ತಿರಬಹುದೇ ಇಂಹತ ಹುಕ್ಕಿ ? ಆಗಿನಿಂದಲೂ ವಟವಟ ಮಾತು ನಡೆಸಿದ್ದಾನೆ, ಹಿಂದಿನ ಸೀಟಿನಲ್ಲಿ ಕೂತ ಹೆಂಡತಿ ಮಗಳೊಡನೆ, ನಾನು ಮಗ್ಗಲಲ್ಲಿ ಕೂತಿರುವಾಗಲೂ : ಕಟ್ಟಿಗೆಯ ಬಾಯಾಗಿದ್ದರೆ ಒಡೆದೇ ಹೋಗುತ್ತಿತ್ತೇನೋ ! +ಶ್ರೀನಿವಾಸನ ಭರಭರಾಟೆಯಿಂದ ನಡೆದ ಛಾಪಖಾನೆಯ ದಂಧೆಯ ಬಗ್ಗೆ ಕೇಳಿ ತಿಳಿದ ನಾಗಪ್ಪನಿಗೆ ಅವನ ಪ್ರತಿಮಾತಿನಲ್ಲಿ, ಮಾತನಾಡುವ ರೀತಿಯಲ್ಲಿ ತುಂಬಿತುಳುಕುವ ಪ್ರಚಂಡ ಆತ್ಮವಿಶ್ವಾಸದಿಂದ ಮಾತ್ರ ಆಶ್ಚರ್ಯವಾಗದೇ ಉಳಿಯಲಿಲ್ಲ. ಇಪ್ಪತ್ತು ವರ್ಷಗಳ ಹಿಂದೆ ತಾನು ನೋಡಿದ ಶ್ರೀನಿವಾಸನೆಲ್ಲಿ, ಲಕ್ಷಗಟ್ಟಲೇ ಹಣ ಶೇಖರಿಸಿದ್ದಾನೆಂಬ ಪ್ರತೀತಿ ಗಳಿಸಿದ ಈಗಿನ ಶ್ರೀನಿವಾಸರಾವ್ ಎಲ್ಲಿ ! ಹೆಂಡತಿಯಲ್ಲಿ ಮಗಳಲ್ಲಿ ವ್ಯಕ್ತವಾಗುತ್ತಿದ್ದುದ್ದು ಕೂಡ ಇದೇ ಆತ್ಮವಿಶ್ವಾಸ. ತನ್ನಲ್ಲಿ ಅದು ಸದ್ಯಕ್ಕೆ ಇಲ್ಲದ್ದಕ್ಕೋ ಏನೋ ಆತ್ಮವಿಶ್ವಾಸವೇ ದೊಡ್ಡ ಮೌಲ್ಯವಾಗಿ ಪ್ರಕೃತಭಾವನೆಗಳ ಹರಹಿನ ಕೇಂದ್ರಸ್ಥಾನದಲ್ಲಿ ನಿಂತಿತು. ಗಿಲ್ಬರ್ಟ ಹಿಂದೊಂದು ದಿವಸ ಹರಿಜನರ ಬಗ್ಗೆ ಮಾತನಾಡುತ್ತಿದ್ದಾಗ ಅಂದಿದ್ದ : ಸಾವಿರಾರು ವರ್ಷಗಳಿಂದ ಈ ಜನರ ಮೇಲೆ ನಡೆಸುತ್ತ ಬಂದ ಅನ್ಯಾಯದ ಅತ್ಯಂತ ಕ್ರೂರ ಪರಿಣಾಮವೆಂದರೆ ನಾವು ಇವರ ಆತ್ಮವಿಶ್ವಾಸವನ್ನೇ ಕೊಂದುಬಿಟ್ಟದ್ದು. ಮಾತಿನ ಸಂದರ್ಭ ಮರೆತಿತ್ತು. ಆದರೆ ಆ ಮಾತು ಹಿಂದೆಂದೂ ಅನ್ನಿಸಿರದಷ್ಟು ಪರಿಣಾಮಕಾರಿಯಾಗಿ ಈಗ ಕಿವಿತುಂಬಿ ನಿಂತಿತು. +ಶ್ರೀನಿವಾಸನನ್ನು ತಾನು ಮುಂಬಯಿಯಲ್ಲಿ ಮೊತ್ತಮೊದಲು ಭೆಟ್ಟಿಯಾದ ಸಂದರ್ಭ ನೆನಪಿನಲ್ಲಿ ಮರುಕಳಿಸಹತ್ತಿತು. ಜೊತೆಗೆ ಇಷ್ಟು ದಿನ ನೆನೆಯಲು ಬಯಸಿರದ ಅನೇಕ ಸಂಗತಿಗಳೂ ಹೊರಗೆ ಬರಲು ಹವಣಿಸಿದಾಗ ಅಸ್ವಸ್ಥನಾದ… +ಅಪ್ಪ ಕೊನೆಗೂ ಬಾವಿಯಲ್ಲಿ ಹಾರಿಯೇ ಪ್ರಾಣ ಕಳೆದುಕೊಂಡಾಗ ನಾಗಪ್ಪನಿಗೆ ಹದಿಮೂರು ವರ್ಷ ಪ್ರಾಯ. ಕುಮಟೆಯ ಹೈಸ್ಕೂಲಿನಲ್ಲಿ ನಾಲ್ಕನೇ ಇಯತ್ತೆಯನ್ನು ಅದೇ ಮುಗಿಸಿದ್ದ. ಇನ್ನು ಮೂರುವರ್ಷ ಕಳೆದರೆ ಮೆಟ್ರಿಕ್. ಕ್ಲಾಸಿನಲ್ಲಿ ಅವನೇ ಮೊದಲಿಗ. ಸಾಲೆಯ ಹೆಡ್‌ಮಾಸ್ತರರು ವರ್ಗದ ಟೀಚರರು ಆಗಲೇ ಮೆಟ್ರಿಕ್ಕಿನಲ್ಲಿ ರ್‍ಯಾಂಕು ಗಳಿಸಿ ಸಾಲೆಗೆ ಕೀರ್ತಿ ತರುವ_ಅವನಿಗೇ ಇಲ್ಲದ_ಕನಸುಗಳನ್ನು ಕಾಣುತ್ತಿದ್ದರು. ಇನ್ನಾವುದೇ ರೀತಿಯಿಂದ ಉಳಿದವರಿಂದ ಬೇರೆಯಾಗಿ ನಿಲ್ಲುವ ತಾಖತ್ತಿಲ್ಲದ ಅವನಿಗೆ ತನ್ನ ಬುದ್ಧಿಶಕ್ತಿಯೊಂದೇ ಆತ್ಮವಿಶ್ವಾಸದ ಸೆಲೆಯಾದಂತಿತ್ತು. ರೂಪದಲ್ಲಾಗಲೀ ಮೈಕಟ್ಟಿನಲ್ಲಾಗಲೀ ಯಾವುದೇ ಬಗೆಯ ಆಕರ್ಷಕತೆ ಇಲ್ಲದವನಿಗೆ ಎದೆ ಹೊಟ್ಟೆಗಳ ಮೇಲಿನ ಸುಟ್ಟ ಕಲೆಯೊಂದು ಇನ್ನಷ್ಟು ಊನಗಂಡಕ್ಕೆ, ಉಳಿದವರಿಂದ ದೂರ ಉಳಿದು ಅಂತರ್ಮುಖಿಯಾಗುವುದಕ್ಕೆ ಕಾರಣವಾಯಿತು. ಬಿಚ್ಚುವುದಕ್ಕಿಂತ ಮುಚ್ಚಿಕೊಳ್ಳುವುದೇ ಒಂದು ಒದ್ಯೋಗವಾಗಿ, ಯಾರಾದರೂ ಕಂಡುಹಿಡಿದಾರೆ ? ಎಂಬಂತಹ ಭಯದ ಚಿಹ್ನೆಯೊಂದು ಮೋರೆಯಮೇಲೆ, ಕಣ್ಣುಗಳಲ್ಲಿ ನೆಲೆಸಹತ್ತಿತು. ಮುಚ್ಚಿಟ್ಟುಕೊಂಡಷ್ಟೂ ಹೆಚ್ಚು ಹೆಚ್ಚು ಬೆಚ್ಚಿಸುವುದಕ್ಕೇ ಶುರುಮಾಡಿತು. ಉಳಿದವರೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ರೀತಿಯ ಮೇಲೆ ಕಾಯಂ ಮುದ್ರೆಯೊತ್ತಿ ನಿಂತ ಈ ಸಂಗತಿ ಅವನನ್ನು ಚಿಕ್ಕಂದಿನಿಂದಲೇ ಒಂಟಿ, ಜೀವಿಯನ್ನಾಗಿಸಿತು : ವಾಸ್ತವದಲ್ಲಿ ಮಾಡಲಾಗದ್ದನ್ನು ಬರೇ ಹಗಲುಗನಸುಗಳಲ್ಲಿ ಕಟ್ಟಹತ್ತಿದ. ಆ ದಿನಗಳಲ್ಲಿ ಹುಟ್ಟಿಕೊಂಡ ಅಭ್ಯಾಸವೊಂದು ಇಂದಿಗೂ ಬಿಡಿಸಿಕೊಳ್ಳಲಾಗದ ಚಟದಂತೆ ಜೀವಕ್ಕೆ ಅಂಟಿಕೊಂಡು ನಿಂತಿತು : ಸಾಲೆಯ ಅಭ್ಯಾಸ ಹೋಮ್‌ವರ್ಕ ಎಲ್ಲ ಮುಗಿದಮೇಲೆ ಉಳಿದ ಹುಡುಗರು ಮಣಕೀ_ಗ್ರೌಂಡಿಗೆ ಆಡಲು ಹೋದರೆ ಇವನೊಬ್ಬನೇ ಯಾವುದಾದರೂ ಪುಸ್ತಕ ಓದುವ ನೆಪದಲ್ಲಿ ಕಾಟಿನ ಮೇಲೆ ಅಂಗತ್ತ ಮಲಗಿ ಎದೆಯವರೆಗೂ ಹೊದಿಕೆಯನ್ನೆಳೆದುಕೊಂಡಾಗ ತೆರೆದೇ ಇದ್ದ ಕಣ್ಣುಗಳಲ್ಲಿ ಸಾಧ್ಯವಾಗದ ಕನಸುಗಳು ! ಸಾಧ್ಯವಾಗಿರದ ಸಂಬಂಧಗಳು…..! ಸ್ಟೇಜಿನ ಮೇಲೆ, ಎಂಥ ಭಯವೂ ಇಲ್ಲದೇ, ಸ್ವತಃ ತಾನೇ ಬರೆದು ಕೊಟ್ಟ ಭಾಷಣಗಳನ್ನು ಬಾಯಿಪಾಠ ಮಾಡಿ ವಾಕ್‌ಸ್ಪರ್ಧೆಗಳಲ್ಲಿ ಮೊದಲನೇ ನಂಬರ ಗಿಟ್ಟಿಸುತ್ತಿದ್ದ ಬಾಬ್ಬೂಟೀ ಪೈ ; ನಾಟಕಗಳಲ್ಲಿ ಹೀರೋನ ಪಾತ್ರವನ್ನಾಡುತ್ತಿದ್ದ ರಮೇಶ ಶೆಟ್ಟಿ ; ಆಟಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಕಣ್ಣುತುಂಬುವ ಆರೋಗ್ಯವುಳ್ಳ ವಾಸುದೇವ ಕಿಣಿ ; ಅಂತೋನೀ ಫರ್ನಾಂಡಿಸ್… ಎಷ್ಟೊಂದು ಸುಲಭವಾಗಿ ಇವರೆಲ್ಲ ಉಳಿದವರೊಂದಿಗೆ ಬೆರೆಯಬಲ್ಲರು ! ಮುಖ್ಯವಾಗಿ ಸಾಲೆಯ ಸುಂದರ ಹುಡುಗಿಯರ ಮೇಲೆ ಛಾಪು ಹಾಕಬಲ್ಲರು ! ಬಂಗಾರಪಟ್ಟೆಯೆ ಕುಮಟೇಕರ್ ಸುಮನ ಗಜಾನನಿಗೆ ಒಲಿದದ್ದೇ ಅವನ ಝಗಝಗಿಸುವ ಮಾತಿನ ವೈಖರಿಗೆ ; ಅದಕ್ಕಿಂತ ಹೆಚ್ಚಾಗಿ ಹಾಗೆ ಮಾತನಾಡುವ ಅವನ ಧೈರ್ಯಕ್ಕೆ. ಕುಮಟೇಕರ್ ಸುಮನಳ ಒಯ್ಯಾರ ತುಂಬಿದ ಲಾವಣ್ಯ (ಅವಳೂ ಕಲಾವಂತ ಮನೆತನದವಳೇ ಅಂತೆ) ಹಾಗೂ ಅವಳೊಡನೆ ಆಗಲೀ, ಸಾಲೆಯ ಇನ್ನಾವ ಹುಡುಗಿಯರೊಡನೆ ಆಗಲೀ ಕೊನೆಗೂ ಮಾತನಾಡಲು ಆಗದ ಧೈರ್ಯ_ಎರಡೂ ಕೈಗೆ ಎಟುಕದ ವಾಸ್ತವತೆಯ ಸಂಕೇತವಾಗಿ ನಾಗಪ್ಪನ ಒಳಮನಸ್ಸಿನಲ್ಲಿ ಬಹಳ ಆಳಕ್ಕೆ ಬೇರು ಚಾಚಿದ್ದವು. ಜೊತೆಜೊತೆಗೇ ಆ ವಾಸ್ತವತೆಯ ಒಂದು ಭಾಗ ನೆನಪಿನಲ್ಲಿ ಸ್ಪಷ್ಟವಾಗಿ ಮೂಡಲು ನಿರಾಕರಿಸುತ್ತ ಹುಟ್ಟಿಸಿದ ಭಯ ಕೂಡ. ದಿನ ಕಳೆದಂತೆ ಕೈಗೆ ಎಟುಕದ ಕೈಹಾಕಿದರೆ ಹೆದರಿಸುವ ವಾಸ್ತವ ಜಗತ್ತಿಗಿಂತ ಹಗಲುಗನಸುಗಳಲ್ಲಿ ಹುಟ್ಟಿಬರುತ್ತಿದ್ದ ಜಗತ್ತು ಹೆಚ್ಚು ಪ್ರಿಯವಾಗಹತ್ತಿತು. ಹಿಂತಿರುಗಿ ನೋಡಿದಾಗ, ತನ್ನ ಬರೆಯುವ ಹವ್ಯಾಸ ಹುಟ್ಟಿದ್ದೇ ಈ ಹಗಲುಗನಸುಗಳನ್ನು ಮಾತಿನಲ್ಲಿ ಹಿಡಿದಿಡಲು ಹೊರಟಾಗ ; ಪ್ರತ್ಯಕ್ಷ ಬದುಕಿನಲ್ಲಿ ಸಾದ್ಯವಾಗಿರದ ಸಂಬಂಧಗಳನ್ನು ಹೀಗೆ ಬರೆಯುವುದರ ಮೂಲಕ ಸಾಧಿಸಲು ಹೊರಟಾಗ_ಎಂಬ ಅನುಮಾನ ನಾಗಪ್ಪನಿಗೆ. ಸಮಾಜದ ಆಶೋತ್ತರಗಳಿಗೆ ನಾಲಿಗೆ ಒದಗಿಸಲು, ಉಳಿದವರನ್ನು ತಿದ್ದಲು, ಕ್ರಾಂತಿ ಎಬ್ಬಿಸಲು ಇಂದಿನ ಸಾಹಿತ್ಯ ಸಿದ್ಧವಾಗಬೇಕು ಎಂಬಂತಹ ವೀರಾವೇಶದ ಮಾತುಗಳನ್ನಾಡುವ ಇಂದಿನ, ಇನ್ನೂ ಮೀಸೆಯ ಗೆರೆಯೂ ಮೂಡಿರದ, ಎಳೆ ವಿಮರ್ಷಕರ (ಹಾಗೆಂದು ಕರೆದುಕೊಳ್ಳುವವರ) ಮಾತುಗಳು ತನಗೆ ಅರ್ಥವಾಗದೇ ಇದ್ದುದಕ್ಕೆ ಬಹುಶಃ ಇದೇ ಕಾರಣವಿರಬೇಕೆ ಅನ್ನಿಸಿತು. ಉಳಿದವರನ್ನು ತಿದ್ದಲು ಹೊರಟ ಬರವಣಿಗೆಯೇ ಅಲ್ಲ ತನ್ನದು. ‘ನೀನು ಇಲ್ಲವೇ ಇಲ್ಲ’ ಎನ್ನುವಷ್ಟರ ಮಟ್ಟಿಗೆ ತನ್ನ ಹುಟ್ಟಿಗೆ, ತನ್ನ ಅಸ್ತಿತ್ವಕ್ಕೆ ನಿರಾಸಕ್ತವಾದ ;‘ನೀನು ಇದ್ದರೂ ಒಂದೇ, ಸತ್ತರೂ ಒಂದೇ’ ಎನ್ನುವ ರೀತಿಯಲ್ಲಿ ತನ್ನತ್ತ ಬೆನ್ನು ತಿರುವಿ ಮೂಕವಾಗಿ ನಿಂತ ಈ ವಿಶಾಲ ವಿಶ್ವಕ್ರಮದಲ್ಲಿ, ಹತ್ತಿರದ ಈ ಸಮಾಜದಲ್ಲಿ ತನ್ನ ಇರವಿಗೆ ಪ್ರಸುತತೆಯೇನು ಎಂದು ಕಂಡುಕೊಳ್ಳುವದೇ ತನಗೆ ಮುಖ್ಯವಾಗಿದೆ. ತನಗೀಗ ಮಹತ್ವದ್ದೆನ್ನಿಸುತ್ತಿದ್ದದ್ದು ತನ್ನ ಸಾಹಿತ್ಯದ ಸಾಮಾಜಿಕ ಪ್ರಸ್ತುತತೆಯಲ್ಲ. ಸಮಾಜದಲ್ಲಿಯ ತನ್ನ ಪ್ರಸ್ತುತತೆ_ ತನ್ನ ಹುಟ್ಟಿನ, ತನ್ನ ಇರವಿನ ಪ್ರಸ್ತುತತೆ_ನಾಗಪ್ಪನಿಗೆ ಆಶ್ಚರ್ಯ : ಯಾವ ಪ್ರಸ್ತುತತೆಯೂ ಇಲ್ಲಾವೆಂಬ ಮಾನಸಿಕ ನಿಲುಗಡೆಯನ್ನು ಈ ಮನಸ್ಸನ್ನು ಹೊತ್ತು ನಿಂತ ದೇಹ ಮಾತ್ರ ಅಲ್ಲಗಳೆಯುವಂತಿತ್ತು. ಅಂಗಿಗೆ ಬೆಂಕಿ ಹತ್ತಿದಾಗ ನೋವಿನಿಂದ ವಿಲಿವಿಲಿ ಒದ್ದಾಡಿದ ದೇಹದ ‘ಸಾಯಬಾರದು’ ಎಂಬ ಸಂಕಲ್ಪದ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಿರಬೇಕು ?’ ಎಂದು ಕೇಳಿಕೊಳ್ಳುವ, ಅರಿಯಬೇಕೆನ್ನುವ, ವಿವೇಕಪ್ರಜ್ಞೆ ತೀರ ಇತ್ತೀಚಿನದು, ಅಲ್ಲವೆ ? ಆದರೂ ತನ್ನನ್ನು ಇಂದು ಕಾಡುತ್ತಿದ್ದದ್ದು ತನ್ನ ದೇಹ ಅಂದು ಅನುಭವಿಸಿದ ಯಾತನೆಯ ನೆನಪಲ್ಲ. ತನ್ನ ಅಸ್ತಿತ್ವಕ್ಕೆ_ಅದನ್ನು ಅಳಿಸಿಯೇಬಿಡುತ್ತೇನೆ ಎನ್ನುವಷ್ಟರ ಮಟ್ಟಿಗೆ_ನಿಷ್ಟುರ ತಾತ್ಸಾರವನ್ನು ವ್ಯಕ್ತಪಡಿಸಿದ ಅಪ್ಪನ ಕೃತ್ಯದ ಹಿಂದಿನ ಪ್ರೇರಣೆ ಏನಿರಬಹುದು ? ಎಂಬ ಪ್ರಶ್ನೆ. ತನ್ನ ಬರವಣಿಗೆಯಲ್ಲೆಲ್ಲ ವ್ಯಕ್ತವಾದದ್ದು ಈ ಪ್ರೇರಣೆಯ ಹುಡುಕಾಟವೇ ಎಂದು ತನಗೆ ಇತ್ತಿತ್ತ ಅನ್ನಿಸಹತ್ತಿದೆ. ನೀನು ಸಾಯ್ ಸಾಯ್ ಸಾಯ್ ಎಂದು ತಿರುತಿರುಗಿ ಅಪ್ಪಣೆ ಕೊಡುವ ನೆನಪಿನ ವಿರುದ್ಧ ಹೋರಾಡುತ್ತ…ನಾಗಪ್ಪಾ ನಾಗಪ್ಪಾ ಬೋಳಿಮಗನೇ, ಬಂದು ಮುಟ್ಟಿದೆಯಲ್ಲೋ ತಿರುಗಿ ನಿನ್ನ ಮೂಲ ಪಾಠಕ್ಕೇ. ನಡುಗುತ್ತಿದ್ದೀಯಲ್ಲೋ ಅಂಜುಬುರುಕ. ಓಡ್ತಾ ಇದ್ದೀಯಲ್ಲೋ ಫಿರೋಜನ ಕ್ರೂರ ಹಲ್ಲುಮಸೆತಕ್ಕೆ ಹೆದರಿ…‘ +“ನಿನ್ನೆ ನಿಮ್ಮ ಹೆಡ್‌ಆಫೀಸಿಗೆ ಹೋದಾಗ ನಿಮ್ಮ ಡೆಪ್ಯುಟೀಮ್ಯಾನೇಜಿಂಗ್ ಡೈರೆಕ್ಟರ್ ರ ಪರಿಚಯವಾಯಿತು. ಪಾರ್ಸೀ ಅಲ್ಲವೆ ? ಹೈದ್ರಾಬಾದಿನಿಂದ ಬಂದಿದ್ದಾರಂತೆ. ತುಂಬ ಒಳ್ಳೆಯ ಮನುಷ್ಯ. ಇಷ್ಟು ದೊಡ್ಡ ಸ್ಥಾನದಲ್ಲಿದ್ದೂ ಎಳ್ಳಷ್ಟೂ ಗರ್ವವಿಲ್ಲ, ಅಲ್ಲವೆ ? ಎಂದು ಕೇಳಿದ ರೀತಿಗೆ. ಇದೀಗ ತನ್ನ ಮನಸ್ಸಿನಲ್ಲಿ ಫಿರೋಜ್ ತುಂಬಿರುವ ಹೊತ್ತಿಗೇ ಶ್ರೀನಿವಾಸನಿಗೆ ಈ ಪ್ರಶ್ನೆ ಹೊಳೆದದ್ದು ಹೇಗೆ ? ಈ ಆಕಸ್ಮಿಕ ಹೊಂದಾಣಿಕೆಗಿಂಗ ಹೆಚ್ಚಾಗಿ ಕಾಡಹತ್ತಿದ್ದು_‘ಫಿರೋಜ್ ಈಗ ಮುಂಬಯಿಯಲ್ಲಿ ಹೇಗೆ ?’ ಎಂಬ ಪ್ರಶ್ನೆ. ತಾನೀಗ ಮನೆಯಲ್ಲಿ ಕೂಡ್ರಲು ಕಾರಣವಾದದ್ದಕ್ಕೂ ಫಿರೋಜ್ ಮುಂಬಯಿಗೆ ಬಂದದ್ದಕ್ಕೂ ಸಂಬಂಧ ಇದ್ದಿರಬಹುದಲ್ಲವೆ ? ಸಂಶಯ ಹುಟ್ಟಿದೊಡನೆಯೇ ಎದೆಯ ಭಾಗ ಬೆವರಹತ್ತಿದ ಭಾಸವಾಗಹತ್ತಿತು… +ಹಾಯ್‌ವೇದ ಮೇಲೆ ವಾಹನಗಳು ವಿರಲವಾದ ಮುಂಜಾವಿನ ಹೊತ್ತಿನಲ್ಲಿ ವೇಗವಾಗಿ ಓಡುತ್ತಿದ್ದ ಕಾರಿನಲ್ಲಿಯ ಎಲ್ಲರೂ ಈಗ ಮಾತನ್ನು ಒಮ್ಮೆಲೇ ನಿಲ್ಲಿಸಿದ್ದರು. ಶ್ರೀನಿವಾಸನಿಗೂ ಈಗ ತನ್ನ ಡ್ರಾಯ್‌ವಿಂಗ್ ಪ್ರಾವೀಣ್ಯ ಪ್ರದರ್ಶಿಸುವ ಹುರುಪು ಬಂತೆಂದು ತೋರುತ್ತದೆ. ಗಾಡಿಯ ವೇಗ , ಅದರಿಂದ ಉಂಟಾಗಬಹುದಾದ ಗಂಡಾಂತರ ಇವುಗಳಿಗೆ ಹೆದರಿಯೂ ಆ ಹೆದರಿಕೆಯನ್ನೇ ಆನಂದಿಸುವವರ ಹಾಗೆ, ಕಾರು ಠಾಣಾದ ಕಡೆ ಹೊರಳುವ ರಸ್ತೆಯ ಮುರಕಿಗೆ ಬರುವ ಅಪೇಕ್ಷಿತ ಕ್ಷಣಕ್ಕಾಗಿ ಬ್ರೇಕ್ ಹಚ್ಚಲು ತುಸು ತಡವಾದ್ದರಿಂದ ಬ್ರೇಕ್ ಹಚ್ಚಿದ ರಭಸ ಬೇಕಾದದ್ದಕ್ಕಿಂತ ಹೆಚ್ಚಾಗಿ, ಎಲ್ಲರೂ ತಮ್ಮ ತಮ್ಮ ಮುಂದಿನ ಜಾಗಕ್ಕೆ ಅಪ್ಪಳಿಸುವ ಸ್ಥಿತಿ ಉಂಟಾಯಿತು. ಶ್ರೀನಿವಾಸನ ಹೆಂಡತಿ ಮುಂದಿನ ಸೀಟಿಗೆ ಅಪ್ಪಳಿಸಬಾರದೆನ್ನುವ ಹಾಗೆ ಚಾಚಿದ ಎರಡೂ ಕೈಗಳು ನಾಗಪ್ಪನ ಭುಜಗಳಲ್ಲಿ ಬಂದು ಊರಿದವು. ಎಲ್ಲರೂ ತಮ್ಮನ್ನು ಸಾವರಿಸಿಕೊಂಡು ಕೂತಮೇಲೆ ಕಾರು ಮುಂದೆ ಸಾಗುವ ಸಿದ್ಧತೆ ಮಾಡುತ್ತಿದ್ದಾಗ ಎಲ್ಲರೂ ಒಮ್ಮೆ ಖೋಽಽ ಎಂದು ನಕ್ಕು ಮತ್ತೆ ಮೌನ ಧರಿಸಿದ್ದರು. ಫಿರೋಜನ ಬಗ್ಗೆ ಶ್ರೀನಿವಾಸ ಆಡಿದ ನೆನಪುಗಳನ್ನು ನೆನಸುತ್ತ, ಭೆಂಛೋದ್ ಯಾವಾಗಲೂ ಬೇರೆಯವರ ಮೇಲೆ ಛಾಪು ಹೊಡೆಯುವುದರಲ್ಲಿ ಎತ್ತಿದ ಕೈ ಎಂದು ನಾಗಪ್ಪ ತಿರುಗಿ ಸಿಟ್ಟಾಗುವ ಹೊತ್ತಿಗೆ ಶ್ರೀನಿವಾಸ ತಾನು ಆಡುತ್ತಿದ್ದದ್ದು ತುಂಬ ಗುಟ್ಟಿನ ಮಾತು ; ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಕೇಳಿಸದಿರಲಿ ಎನ್ನುವ ರೀತಿ ದನಿ ತಗ್ಗಿಸಿ, “ನಿನ್ನೆ, ನೀನು ರಜೆಯ ಮೇಲಿರುವ ಕಾರಣ ತಿಳಿಯಿತು. ನೀನೇಕೆ ನನಗೇನೂ ಹೇಳಲಿಲ್ಲ ? ಕಾಮತರಿಗಿಂತ ಒಳ್ಳೆಯ ವಕೀಲರ ಗರಜು ನಿನಗಿದೆ,” ಎಂದ. ನಾಗಪ್ಪನಿಗೆ ಏನೊಂದೂ ಅರ್ಥವಾಗಲಿಲ್ಲ. ದಿಗ್ಭ್ರಾಂತನಾಗಿ ಶ್ರೀನಿವಾಸನ ಮೋರೆಯನ್ನೇ ನೋಡುತ್ತಿದ್ದಾಗ ಶ್ರೀನಿವಾಸನೇ ಮುಂದುವರಿಸುತ್ತ, “ನಿನ್ನ ಮನಸ್ಸಿಗಾಗುತ್ತಿದ್ದ ನೋವಿನ ಕಲ್ಪನೆಯನ್ನು ನಾನು ಮಾಡಿಕೊಳ್ಳಬಲ್ಲೆ. ಹಾಗೆಂದೇ ಈ ಪಿಕ್ನಿಕ್ಕಿನ ಯೋಜನೆ, ” ಎಂದ. ನಾಗಪ್ಪ ಇದನ್ನೆಲ್ಲ ಗ್ರಹಿಸುವ ಸ್ಥಿತಿಯಲ್ಲೇ ಇರಲಿಲ್ಲ. ಶಬ್ದಗಳು ಗಾಳಿಯಲ್ಲಿ ತೂರಿಬಂದು ಕಿವಿ ಹೋಗುತ್ತಿದ್ದವು, ಅಷ್ಟೇ. ತನ್ನ ಅಳವಿನಾಚೆಯ ಶಕ್ತಿಗಳು ಬೆನ್ನ ಹಿಂದೆ ನಿಗೂಢ ಸಂಚು ನಡೆಸಿವೆ ಎಂಬಂತಹ ಅನ್ನಿಸಿಕೆಯಿಂದ ಕೂತಲ್ಲೇ ತಾನು ಸಣ್ಣಗೆ ನಡುಗುತ್ತಿದ್ದುದರ ಅರಿವಾದಾಗ ನಡುಕವನ್ನು ತಡೆಯಲು ಸೀಟಿನ ಬೆನ್ನಿಗೆ ಕೈ ಹಾಕಲು ಪ್ರಯತ್ನಿಸಿದಾಗ ಅಚ್ಯುತನ ದೃಷ್ಟಿ ತನ್ನ ಮೇಲೇ ಊರಿದ್ದು ಲಕ್ಷ್ಯಕ್ಕೆ ಬಂದು ವಿಚಲಿತನಾದ. +uಟಿಜeಜಿiಟಿeಜ +– ಅಧ್ಯಾಯ ಒಂಬತ್ತು – +ನಾಳೆ ಮತ್ತೆ ಸಮುದ್ರದಂಡೆಯ ಮೇಲೇ ಭೆಟ್ಟಿಯಾಗೋಣ ಎಂದ ದೋಶಿಯವರು ಸಂಜೆ ಅಲ್ಲಿ ಹೋದಾಗ ಭೇಟಿಯಾಗಿರಲಿಲ್ಲ. ತನ್ನ ಭಯಗಳನ್ನು ಯಾರಲ್ಲಾದರೂ ತೋಡಿಕೊಳ್ಳಬೇಕು ಅನ್ನಿಸಿ ನಾಗಪ್ಪ ಮನಸ್ಸಿನಲ್ಲಿ ಚಡಪಡಿಸಿದ : ಬೆಳಿಗ್ಗೆ ಠಾಣಾಕ್ಕೆ ಹೋದಾಗ ಶ್ರೀನಿವಾಸ ಮಾತನಾಡಿಯೇ ಮಾತನಾಡಿದ. ಲೆಕ್ಕವಿಲ್ಲದಷ್ಟು ಹಣ ಮಾಡಿದಂತಿದೆ. ನಮ್ಮ ಕಂಪನಿಯಲ್ಲಿ ಹಲವರ ಪರಿಚಯವಿದ್ದಂತಿದೆ. ಅಷ್ಟೇ ಅಲ್ಲ. ಕೆಲವು ದೊಡ್ಡ ಅಧಿಕಾರಿಗಳ ಮೇಲೆ ದುಷ್ಟ ಹಿಡಿತವೂ ಇದ್ದಂತಿದೆ. ಅಥವಾ ನನಗೇ ಇಲ್ಲದ ಸಂಶಯವೋ ? ಇವನನ್ನು ನಂಬಬಹುದೆ ? ಬರೆಯುವ ವಹಿಯನ್ನು ಮೇಜಿನ ಖಣದಲ್ಲಿ‌ಇಡಲು ಹೇಳಿದ. ಯಾರಾದರೂ ಓದುತ್ತಾರೆಂಬ ಗುಮಾನಿಯೇ ? ಯಾರು ? ಚೇತನಾಳಿಗೆ ಕನ್ನಡ ಬರುವುದಿಲ್ಲ. ಅಚ್ಯುತ ? ಅವನಿಗೆ ಓದುಬರಹ ಬರುತ್ತದೆಯೇ ? ಅಥವಾ ಶಾರದೆ ? ಅವಳೂ ಕನ್ನಡ ಕಲಿತವಳಲ್ಲ. ಮೇಲಾಗಿ ನನ್ನ ಕೋಣೆಗೆ ಅವಳೇಕೆ ಬಂದಾಳು ? ಅಥವಾ ಸ್ವತಃ ಶ್ರೀನಿವಾಸನೇ ಓದಿರಬಹುದೆ ? ಇರಲಿಕ್ಕಿಲ್ಲ. ಓದಿದ್ದರೆ ನಾನು ಬರೆಯುತ್ತಿದ್ದದ್ದು ಕಾದಂಬರಿ ಅಲ್ಲ ಎನ್ನುವದು ಗೊತ್ತಾಗುತ್ತಿತ್ತು. ಥತ್ತೇರಿ ! ಈಗ ಹೊಳೆಯುತ್ತದೆ : ಇದು ತನ್ನ ಬಗ್ಗೆ ನಾನು ಬರೆಯುತ್ತಿದ್ದ ಕಾದಂಬರಿಯೆಂದು ತಿಳಿದೇ ಹೆದರಿದ್ದಾನೆ_ನಾಡೂ ಮಾಸ್ಕೇರಿಯ ಪದ್ಮನಾಭ ಕೇಣಿಗಳ ಜ್ಯೇಷ್ಠ ಚಿರಂಜೀವನಾದ ಶ್ರೀನಿವಾಸ ! ರೋಮ ವಿರಲವಾದ ಮೈಯಲ್ಲಿ ಬೊಜ್ಜೇ ತುಂಬಿ ; ಗಡ್ಡಮೀಸೆಗಳು ಕೂಡ ಸರಿಯಾಗಿ ಬೆಳೆಯದೇ ನುಣುಪು ನುಣುಪಾಗಿ ತಕತಕಿಸುವ ಈ ಅಂಜುಬುರುಕಾ ನನ್ನ ಬರವಣಿಗೆಯ ವಹಿಯನ್ನು ನೋಡಲೂ ಹೆದರಿಕೊಂಡಿದ್ದಾನೆ. ಇನ್ನಷ್ಟು ಹೆದರಿಸಬೇಕು ಪುರ್ ಪುರ್ ಪುರ್ ! ಎಷ್ಟು ದಿನವೆಂದು ಈತನ ಮನೆಯಲ್ಲಿ ಝಾಂಡ ಹಾಕಿರುವದು ? ಖೇತವಾಡಿಗೇ ಮರಳಿದರೆ ಹೇಗೆ ? ಇಲ್ಲಿದ್ದ ಮೂರು ದಿನಗಳಲ್ಲಿ ಒಂದು ಬಗೆಯ ಧೈರ್ಯವೆನ್ನಿಸಿದ್ದು ನಿಜ : ಮುಖ್ಯವಾಗಿ ಚೇತನಾಳ ಚೈತನ್ಯ ತುಂಬಿದ ಸಾನ್ನಿಧ್ಯದಲ್ಲಿ. ಅಚ್ಯುತನ ವರ್ತನೆ ಹೆಚ್ಚು ಹೆಚ್ಚು ಕುತೂಹಲಕ್ಕೆ ಕಾರಣವಾಗುತ್ತಿದೆ. ನನ್ನ ಹತ್ತಿರ ಏನನ್ನೋ ಮಾತನಾಡಲು ದಾರಿ ಕಾಯುವವನ ಹಾಗೆ ಕಾಣುತ್ತಾನೆ. ಶಾರದೆಯನ್ನು ಮಾತನಾಡಿಸುವ ಧೈರ್ಯ ಮಾತ್ರ ಇನ್ನೂ ಆಗುತ್ತಿಲ್ಲ. ಮಾತನಾಡಿಸದ್ದಕ್ಕೇ ಇರಬೇಕು ಅವಳು ಇನ್ನಷ್ಟು ಆಕರ್ಷಕವಾಗಿ ತೋರುತ್ತಿದ್ದಾಳೆ. ಅಣ್ಣನ ಬಗ್ಗೆ, ತಂಗಿಯ ಬಗ್ಗೆ ಬರೆಯಬೇಕೆಂದು ಕೂತರೆ ಏನೂ ತೋಚದೆ ಮನಸ್ಸೇ ಖಾಲಿಯಾದಂತೆನ್ನಿಸಿ ತೆರೆದಿಟ್ಟ ವಹಿ ತೆರೆದೇ ಉಳಿಯುತ್ತದೆ. +ಶ್ರೀನಿವಾಸನ ಮನೆಯ ಮಗ್ಗುಲಲ್ಲಿ ಕಾರು ಟ್ರಕ್ಕುಗಳನ್ನು ರಿಪೇರಿ ಮಾಡುವ ಗರಾಜು ಇದೆ. ಕಳೆದ ಹತ್ತು ಹನ್ನೆರಡು ವರ್ಷಗಳಿಂದಲೂ ನಡೆಯುತ್ತಿದ್ದ ಈ ಗರಾಜು ಇದ್ದದ್ದು ಇಂದೋ ನಾಳೆಯೋ ಯಾರಾದರೂ ಬಂದು ಕೆಡವಬಹುದೆಂಬ ಖಾಯಂ ಭಯದ ಮೇಲೆ ನಿಂತ ಹಂಗಾಮೀ ಚಪ್ಪರದಲ್ಲಿ. ಈ ಗರಾಜಿನಲ್ಲಿ ಕೆಲಸಮಾಡುವ ನಾಲ್ಕೈದು ಕುಟುಂಬಗಳು ವಾಸಿಸುತ್ತಿದ್ದ ಝೋಪಡಪಟ್ಟಿಗಳು ಶ್ರೀನಿವಾಸನ ಮನೆ ಮಗ್ಗುಲಲ್ಲೇ ಇದೆ. ಕಳ್ಳಭಟ್ಟಿಯ ಅಡ್ಡೆಯೂ ಅಲ್ಲಿದೆಯಂತೆ, ಹಾಗೆಂದೇ ಇರಬೇಕು ಅಲ್ಲಿಯ ಹೆಂಗಸರ, ಮುದುಕರ ಮಕ್ಕಳ ಮೋರೆಗಳ ಮೇಲೆಲ್ಲ ಬಡತನದ ದೈನ್ಯದೊಡನೆ ಏನನ್ನೋ ಬಚ್ಚಿಟ್ಟಂತಹ ಆತಂಕದ ಕಳೆ. ಜೊತೆಗೇ, ಆ ಝೋಪಡಪಟ್ಟಿಗಳು ಸಂಕೇತಿಸುವ ಹಂಗಾಮಿತನ ಅವುಗಳಲ್ಲಿಯ ನಿವಾಸಿಗಳ ಮೋರೆಗಳಿಗೂ ಮೆತ್ತಿಕೊಂಡಂತಿದೆ. ಅಲ್ಲಿಯ ಹನ್ನೆರಡು ಹದಿಮೂರು ವರ್ಷ ವಯಸ್ಸಿನ ಒಬ್ಬ ಚಿಕ್ಕ ಹುಡುಗಿ ನನ್ನ ಲಕ್ಷ್ಯ ಸೆಳೆದಿದ್ದಾಳೆ. ನಾನು ಬರುಹೋಗುವಾಗೆಲ್ಲ ನನ್ನನ್ನೇ ಎವೆಯಿಕ್ಕದೇ ನೋಡುತ್ತಾಳೆ : ಎಣ್ಣೆ ಕಾಣದ, ನೀರು ಕಾಣದ, ಕೆದರಿದ ಕೂದಲು. ಗರಾಜಿನ ಎಣ್ಣೆ ಕೂಡಿದ ಕಪ್ಪು ಬಳಿದ ಮೋರೆ. ರವಕೀ ಖಣದ ಚಿಂದಿಯಾದ ಪರಕರ. ಇಷ್ಟು ದೊಡ್ಡ ಕಣ್ಣುಗಳಲ್ಲಿ ಮಾತ್ರ ಎಲ್ಲಿಲ್ಲದ ಹೊಳಪು, ದೈನ್ಯ, ಭಯ, ಆಸೆ. ಕಳ್ಳಸರಾಯಿ ಮಾರುವುದರಲ್ಲಿ ಇವಳನ್ನೂ ಉಪಯೋಗಿಸುತ್ತಿರಬಹುದೇ ಎಂಬ ಸಂಶಯ. ಸಂಜೆ ಕಡಲು ತೀರದಿಂದ ಮನೆಗೆ ಹಿಂದಿರುಗುವಾದ ಕೆಡ್‌ಬರೀ ಚಾಕಲೇಟಿನ ಒಂದು ಪೆಕೆಟ್ ಕೊಡುವ ಹುಕ್ಕಿ ಬಂದಿತು. ಕೊಡುತ್ತ ಹೆಸರು ಕೇಳಿದಾಗ ‘ಸರಸ್ವತಿ’ ಎಂದಳು. ಚಾಕಲೇಟ್ ಸಿಕ್ಕ ಬಗ್ಗೆ ಸಂತೋಷ, ಕೃತಜ್ಞತೆ ಅಥವ ಒಳಗೆ ಓಡಿಹೋಗಿ ತಿನ್ನಬೇಕೆಂಬ ಹಪಾಪಿತನಾದ ಅವಸರ_ಇಂತಹ ಯಾವ ಭಾವನೆಯನ್ನೂ ಅದು ವ್ಯಕ್ತಪಡಿಸದೇ ನನ್ನ ಕಡೆಗೆ ಇಷ್ಟು ದಿನ ನೋಡುತ್ತಿದ್ದ ಕಣ್ಣುಗಳಿಂದ ನೋಡುತ್ತ ನಿಂತಳು : ಯಾಕೋ ಹಾಗೆ ಹತ್ತಿರದಿಂದ ನೋಡುವ ಕಣ್ಣುಗಳನ್ನು ನೋಡಿದಾಗ ಪೂರ್ವಜನ್ಮದಲ್ಲಿ ನಂಬಿಕೆ ಹುಟ್ಟಿ ನನ್ನಷ್ಟಕ್ಕೇ ನಗುತ್ತೇನೆ. ಆಗ ತಂಗಿಯ ಬಗ್ಗೆ ಬರೆಯಬೇಕು ಅನ್ನಿಸಿದ್ದಕ್ಕೆ ಬಹುಶಃ ಸರಸ್ವತಿಯೇ ಕಾರಣವಾಗಿರಬೇಕೆ. ನನ್ನ ತಂಗಿಯೂ ಹೀಗೇ ಝೋಪಡೀಪಟ್ಟಿಗಳಲ್ಲೋ, ಸೂಳೆಯರ ಕೇರಿಗಳಲ್ಲೋ, ತೀರ ಬಡತನದಲ್ಲಿ ಜೀವನ ನಡೆಸುತ್ತಿರಬಹುದೇ ಎಂಬ ಜೀವ ಹಿಂಡುವ ಸಂಶಯವೊಂದು ನನ್ನನ್ನು ಬಹಳ ವರ್ಷಗಳಿಂದ ಕಾಡುತ್ತ ಬಂದಿದೆ. ಅಪ್ಪ ಅದೆಂತಹ ಹೇಡಿತನದ ಕೆಲಸ ಮಾಡಿದ ! ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ದಾರಿಹೋಕರ ಪಾಲುಮಾಡುವಂತಹ ಹೀನ ಕೆಲಸಕ್ಕೆ ಕೈ ಹಾಕಬೇಕಾದ ಪರಿಸ್ಥಿತಿ ಯಾವುದಿತ್ತು ? ಇದೆಲ್ಲ ನನ್ನ ಕಲ್ಪನೆಯ ಆಚೆಯ ಸತ್ಯವಾಗಿಯೇ ಉಳಿದಿದೆ. ಅಪ್ಪನಿಗೆ ಕಲ್ಯಾಣಿ ಅಂದರೆ ಬಹಳ ಮುದ್ದಿನ ಮಗುವಾಗಿದ್ದಳು. ಅಮ್ಮನದೇ ಸುಂದರ ರೂಪ. ನಾನು ಮಾತ್ರ ಅಪ್ಪನ ಹಾಗೆ ! ಅಪ್ಪನ ಹಾಗೇ ಆತ್ಮಘಾತದ ವಿಚಾರಮಾಡಿದ್ದು ಎಷ್ಟು ಸರತಿ ! ಆದರೆ ಪ್ರತಿಸಾರೆ ತನಗಿನ್ನೂ ಅರ್ಥವಾಗಿರದ ಪ್ರಭಲವಾದ ಶಕ್ತಿಯೊಂದು ಬರೇ ಬೌದ್ಧಿಕವಾದ ಸಂಕಲ್ಪವನ್ನು ಮೆಟ್ಟಿನಿಂತು. ಬದುಕಿನತ್ತ ಮುಖಮಾಡಿ ನಿಲ್ಲುವಂತೆ ನಿಲ್ಲುವಂತೆ ಮಾಡುತ್ತದೆ ಎಂಬಂಥ ಅನುಭವ ಮತ್ತೆಮತ್ತೆ ಬಂದಿದೆ. ತಂಗಿಯ ನೆನಪಿನಿಂದ ಸರಸ್ವತಿ ನನಗೆ ಅಷ್ಟು ಪ್ರಿಯವಾಗುತ್ತಿದ್ದಾಳೆಯೇ ? ಅಥವಾ ಸರಸ್ವತಿಯ ಕಣ್ಣುಗಳಲ್ಲೂ ಮಾತಿಗೆ ನಿಲುಕದ ರೀತಿಯಲ್ಲಿ ಗೂಡು ಕಟ್ಟಿದ ಮ್ಲಾನತೆಯಿಂದಾಗಿಯೇ ತಂಗಿಯ ನೆನಪು ಮರುಕಳಿಸುತ್ತಿದೆಯೆ ? ಮುಂಬಯಿಯ ಗಿರ್ಗಾಂವದ ಸುತ್ತಲಿನ ಝೋಪಡಪಟ್ಟಿಗಳನ್ನು ಹೊಲಸು-ಊರುಕೇರಿಗಳನ್ನು ಲೆಕ್ಕವಿಲ್ಲದಷ್ಟು ಸರತಿ ಸುತ್ತಾಡಿಬಂದಿದ್ದೇನೆ. ಮುವ್ವತ್ತು ವರ್ಷಗಳ ಹಿಂದೆ ಕಳೆದುಹೋದ ತಂಗಿ ಫಕ್ಕನೆ ಕಣ್ಣಿಗೆ ಬಿದ್ದರೆ ! ಬಿದ್ದರೂ ಗುರುತು ಹೇಗೆ ಸಿಗಬೇಕು ? ಈಗಾಗಲೇ ಅವಳನ್ನು ಕಂಡರೂ ಕಂಡಿರಬಹುದು. ಆದರೆ ಅವಳನ್ನು ಕಂಡಿದ್ದೇನೆ ಎಂಬುದಕ್ಕೆ ಯಾವ ಇಷಾರೆಯೂ ಸಿಕ್ಕಿಲ್ಲ. ಒಂದು ದಿನ ಸಿಕ್ಕರೂ ಸಿಕ್ಕೀತು ಎಂಬ ವಿವೇಕಶೂನ್ಯವಾದ ಆಸೆಯೊಂದು ಮನಸ್ಸಿನ ಮೂಲೆಯೊಂದರಲ್ಲಿ ಮೈಮುದುಡಿ ಮಲಗಿದ್ದರ ಅಸ್ಪಷ್ಟ ಅರಿವು ನನಗಿದೆ. ಒಂದನ್ನೊಪ್ಪಿಕೊಳ್ಳಲೆ ? ನನ್ನನ್ನು ಆಗೀಗ ಎವೆಯಿಕ್ಕದ ಕಣ್ಣುಗಳಿಂದ ನೋಡುವ ಅಚ್ಯುತ ನನ್ನ ಅಣ್ಣನಿರಬಹುದೇ ಎಂಬ ಸಂಶಯ ನನ್ನಷ್ಟಕ್ಕೇ ನಗುವಂತೆ ಮಾಡಿದೆ. ‘ಸರಸ್ವತೀ ನಿಮ್ಮಮ್ಮನೆಲ್ಲಿ?’ ಎಂದು ಕೇಳಬೇಕೆಂದು ನಾಲಗೆಯ ತುದಿಯವರೆಗೆ ಬಂದ ಪ್ರಶ್ನೆಯನ್ನು ಅಪಾರ್ಥಮಾಡಿಕೊಂಡಾಳೆಂಬ ಭಯದಿಂದ ಕೇಳದೇ ನಿಗ್ರಹಿಸಿಕೊಂಡಿದ್ದೇನೆ_ಭಾರತೀಯ ಸಿನೇಮಾಗಳಲ್ಲಿ ಕೂಡ ಇಂತಹವುಗಳು ಜರುಗಲಾರವು ಎಂಬುದನ್ನು ಅರಿತೂ ಅಣ್ಣತಂಗಿಯರನ್ನು ಹುಡುಕಿ ತೆಗೆಯಲೆಂದೇ ಬದುಕಿರಬೇಕು ಎಂಬ ನನ್ನ ಅನ್ನಿಸಿಕೆಗೆ ಪುರಾವೆಗಳಿದ್ದರೂ ಬದುಕಿರುವಾಗೊಮ್ಮೆ ಅವರನ್ನು ಕಾಣಲೇಬೇಕೆಂಬ ನನ್ನ ಬಲವಾದ ಬಯಕೆಗೆ ಮಾತ್ರ ಪುರಾವೆಗಳೇ ಬೇಡವೇನೋ ! +ತಂಗಿ ಬದುಕಿ ಇದ್ದದ್ದೇ ಹೌದಾದರೆ ಅವಳು ಮುಂಬಯಿಯಲ್ಲೇ ಇದ್ದಾಳೆ_ಗಿರ್ಗಾಂವದ ಆಸುಪಾಸಿನ ಕೇರಿಗಳಲ್ಲೇ_ಎಂದು ನನಗನ್ನಿಸುವುದರ ಕಾರಣ ಅಪ್ಪ ಅವಳನ್ನು ಕಳೆದುಕೊಂಡದ್ದು ಈ ಭಾಗದ ಜನಸಂಧಣಿಯಲ್ಲಿ ಎಂಬುದೇ ಇರಬೇಕು. ಆದರೆ ಅವಳು ತುಂಬಾ ಬಡತನದಲ್ಲಿದ್ದಾಳೆಂದು ಯಾಕೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಅಂಗಿಗೆ ಬೆಂಕಿ ಹಚ್ಚಿ ನನ್ನನ್ನು ಕೊಲ್ಲಲು ಮನಸ್ಸು ಗಟ್ಟಿಮಾಡಿದಂತೆ ತಂಗಿಯನ್ನೂ ಕೊಲ್ಲಲು ಮನಸ್ಸು ಆಗದೇ ಇರುವುದಕ್ಕೆ ಏನು ಕಾರಣ ? ನನಗಿಂತ ಹೆಚ್ಚು ಮುದ್ದಿನವಳೆಂದೆ ? ಅಮ್ಮನನ್ನು ಹೋಲುತ್ತಿದ್ದಳೆಂದೇ ? ಅಮ್ಮನನ್ನು ಪ್ರೀತಿಸಿದಷ್ಟು ಅಪ್ಪ ಇನ್ನಾರನ್ನೂ ಪ್ರೀತಿಸಿದ್ದಿಲ್ಲ. ಅವಳು ಸತ್ತದ್ದೇ ಅಪ್ಪನಿಗೆ ಯಾತರಲ್ಲೂ ಆಸ್ಥೆಯೇ ಉಳಿಯಲಿಲ್ಲ. ಅದೆಲ್ಲದರ ಬಗ್ಗೆ ಈಗ ವಿಚಾರಮಾಡಿದಾಗ ಒಂದೊಂದೇ ಸಂಗತಿ ಸರಿಯಾದ ಬೆಳಕಿನಲ್ಲಿ ನಿಂತು ತನ್ನ ನಿಜ ಸ್ವರೂಪವನ್ನು ತೆರೆದು ತೋರಿಸುತ್ತಿದೆ ಎನ್ನುವ ಅನುಭವ : ಅಪ್ಪ ಹೊರಗಿನಿಂದ ಮಾತ್ರ ಮುಂಚಿನ ಹಾಗೇ ತೋರುತ್ತಿದ್ದರು. ಒಳಗಿನಿಂದ ಅವರು ಬೇರೆಯೇ ವ್ಯಕ್ತಿಯಾಗುತ್ತ ಹೋಗಿದ್ದರು ಎಂದು ಈಗ ತೋರುತ್ತದೆ. ಅಂಗಿಗೆ ಬೆಂಕಿ ಹತ್ತಿದ್ದರಿಂದ ಆದ ಪರಿಣಾಮವೆಂದರೆ ನನ್ನ ಹೊಟ್ಟೆ ಎದೆಗಳ ಮೇಲಿನ ಚರ್ಮ ಸುಟ್ಟ ಕಲೆಗಳು ಮಾತ್ರವೆ ? ಗಿಲ್ಬರ್ಟ ಹೇಳಿದ ಸಂಸ್ಥೆಗೆ ಒಮ್ಮೆ ಹೋಗಿಬರಬೇಕು. ಅವರು ತಮ್ಮತಮ್ಮ ದೈಹಿಕ ದುರ್ಭಾಗ್ಯವನ್ನು ಇದಿರಿಸುವ ಧೈರ್ಯವನ್ನು ಕುರಿತು ಗಿಲ್ಬರ್ಟನಿಗಿರುವ ದೊಡ್ಡ ಆದರದ ಬಗ್ಗೆ. ಸಹಾನುಭೂತಿಯ ಬಗ್ಗೆ ನನಗೆ ಸಂಶಯವೇ ಇಲ್ಲ. ಕೇಳಬೇಕಾದದ್ದಿಷ್ಟೇ: ಮನುಷ್ಯನ ಅಪಾಂಗತ್ವ ಬರಿಯ ದೈಹಿಕವಾದದ್ದೇ ? ತೋರಿಕೆಗೆ ಶಾರೀರಿಕವಾಗಿ ಸದೃಢನಾಗಿರುವ ವ್ಯಕ್ತಿಯ ಭಾವನಾಲೋಕದ ಅಂತಃಸ್ರಾವ ಕಣ್ಣಿಗೆ ಕಾಣುವದಿಲ್ಲವೆಂದ ಮಾತ್ರಕ್ಕೆ ಇಲ್ಲವೆಂದೆ ? ರೆಡಿಮೇಡ್ ಶರ್ಟ್, ಸೂಟು ಬೂಟುಗಳನ್ನು ಧರಿಸಿ ಎಲ್ಲರಂತೆ ‘ಕಾಣುವ’ ವ್ಯಕ್ತಿ ತನ್ನ ಅಂತರಂಗದ ಯಾತನೆಗಳಲ್ಲಿ ಉಳಿದವರಿಂದ ತೀರ ವಿಭಿನ್ನ… +ಬಹಳಷ್ಟು ಸಲ ಆದಂತೆ ಬರೆದಿಡಬೇಕೆಂದುಕೊಂಡ ಒಂದು ಮಾತೂ ಟಿಪ್ಪಣಿಯಾಗಿ ಮೂಡಿರಲಿಲ್ಲ. ಮೇಜಿನ ಖಣದಲ್ಲಿಟ್ಟ ವಹಿಯನ್ನು ಹೊರಗೇ ತೆಗೆದಿರಲಿಲ್ಲ ಎಂಬುದು ನಾಗಪ್ಪನ ಲಕ್ಷ್ಯಕ್ಕೆ ಬಂದದ್ದೂ ತೀರ ತಡವಾಗಿ ! +uಟಿಜeಜಿiಟಿeಜ +– ಅಧ್ಯಾಯ ಹತ್ತು – +ಕೊನೆಗೊಮ್ಮೆ, ನಾಗಪ್ಪ ದಾರಿಕಾಯುತ್ತಿದ್ದ ಅವನ ಕಂಪನಿಯವರ ಪತ್ರವನ್ನು ಶ್ರೀನಿವಾಸನೇ ರಾತ್ರಿ ಮನೆಗೆ ಬರುವಾಗ ತಂದ. ಅವನ ಪ್ರೆಸ್ಸಿನ ಕೆಲಸದ ಸಲುವಾಗಿ ತನ್ನ ಆಫೀಸಿಗೆ ಹೋದಾಗ ಪರ್ಸೊನೆಲ್ ಮ್ಯಾನೇಜರ್‍ನೇ ಕೊಟ್ಟನಂತೆ. ಈ ಬೋಳೀಮಗ ಆಜ್ಞಾಧಾರಕ ಬಾಲಕನಾಗಿ ತಗೊಂಡು ಬಂದನಂತೆ ! ಈ ಎಲ್ಲ ಪಿತೂರಿಯಲ್ಲಿ ಶ್ರೀನಿವಾಸನ ಕೈ ಇದ್ದದ್ದು ನಿರ್ವಿವಾದ ಹಾಗಾದರೆ ಎಂದೆನಿಸಿ, ಪತ್ರವನ್ನು ಕೈಗೆ ತೆಗೆದುಕೊಳ್ಳುವಾಗ ಸಿಟ್ಟು ಮಸ್ತಕಕ್ಕೇರಿ, ಕೋಳೀಗಿರಿಯಣ್ಣ ಮಂತ್ರಿಸಿಕೊಟ್ಟ ಎಲ್ಲ ಅಕ್ಷತೆಗಳನ್ನೂ ಶ್ರೀನಿವಾಸನ ತಲೆಯ ಮೇಲೆ ಸೇಸೆಯಿಕ್ಕಿದ. ಪತ್ರದೊಂದಿಗೆ ಕೋಣೆಗೆ ನಡೆದು ಕದವಿಕ್ಕಿ ಅಗಳಿ ಹಾಕಿದ. ಪತ್ರ ತೆರೆದು ಓದಿದ. ಓದಿದ್ದರ ಅರ್ಥವೇ ಆಗುವದಿಲ್ಲ ಎನ್ನುವವನ ಹಾಗೆ ಮತ್ತೆ ಮತ್ತೆ ಓದಿದ : “ಂ ಜeಠಿಚಿಡಿಣmeಟಿಣಚಿಟ eಟಿquiಡಿಥಿ is iಟಿsಣiಣuಣeಜ ಣo iಟಿvesಣigಚಿಣe ಚಿ ಛಿomಠಿಟಚಿiಟಿಣ iಟಿsiಟಿuಚಿಣiಟಿg ಥಿouಡಿ ಟಿಚಿme iಟಿ ಚಿ ಡಿeಛಿeಟಿಣ ಚಿಛಿಛಿiಜeಟಿಣ ಚಿಣ ಣhಚಿ ಜಿಚಿಛಿಣoಡಿಥಿ iಟಿ ತಿhiಛಿh ಣhಡಿee ತಿoಡಿಞeಡಿs ಟosಣ ಣheiಡಿ ಟives. ಖಿhe ಆ‌ಒ‌ಆ ತಿiಟಟ ಠಿeಡಿsoಟಿಚಿಟಟಥಿ ಛಿoಟಿಜuಛಿಣ ಣhis eಟಿquiಡಿಥಿ. Pಟeಚಿse geಣ ಡಿeಚಿಜಥಿ ಣo ಠಿಡಿoಛಿeeಜ ಣo ಊಥಿಜeಡಿಚಿbಚಿಜ ಚಿs ಥಿou geಣ ಣhe ಚಿiಡಿ-ಣiಛಿಞeಣ, ತಿhiಛಿh is beiಟಿg ಚಿಡಿಡಿಚಿಟಿgeಜ.” +ನಾಗಪ್ಪ, ಪ್ರತಿ ಶಬ್ದವೂ ಬಾಯಿಪಾಠವಾಗುವವರೆಗೆ, ಆ ಸಣ್ಣ ಪತ್ರವನ್ನು ಓದಿದ. ಓದಿದ್ದರ ಅರ್ಥವಾಗತೊಡಗಿದೊಡನೆ, ಎಂದಿನ ಪುಕ್ಕಲುತನದಿಂದ ಬೆವರೊಡೆಯುವುದನ್ನು ಕೂಡ ಮರೆತು, ಈವರೆಗೂ ತನಗೇ ಅರಿವಾಗಿರದ ಆಳದಿಂದ ಪುಟಿದೆದ್ದ ಪಾಶವೀ ಧೈರ್ಯದಿಂದ, ಮೈ ಸೆಟೆದುಕೊಂಡಿತು. ಫಿರೋಜ್ ತನಗಾಗಿ ಸಿದ್ಧಪಡಿಸಿದ ಈ ಬೋನು ಈ ಜನ್ಮದ್ದೇ ಅಲ್ಲ; ಆದರೆ ಮೂಲೆಮೂಲೆಗಳನ್ನು ತಾನು ಚೆನ್ನಾಗಿ ಬಲ್ಲೆನೆನ್ನುವ ಹಾಗೆ ಅದರ ಬಗೆಗಿನ ಭಯ ದೂರವಾಗಹತ್ತಿತು. ಬದುಕು ಸಾವುಗಳ ನಡುವಿನ ಆಯ್ಕೆಯ ನಿರ್ಣಾಯಕ ಕ್ಷಣಕ್ಕೆ ಸಿದ್ಧವಾಗಿಸುವಂತೆ ಒದಗಿಬಂದ ಸನ್ನಿವೇಶ ಅಚ್ಚರಿಯಾಗುವಷ್ಟು ಸಮಾಧಾನವನ್ನೊದಗಿಸಿತ್ತು; ದ್ವೇಷ, ರೋಷ, ಭಯ ಇವೇ ಮೊದಲಾದ ವಿಕಾರಗಳಿಂದ ಮನಸ್ಸು ವಿಚಲವಾಗಲಿಲ್ಲ. ಫಿರೋಜ್, ನೀನು ನನ್ನ ಕರಿಯರದ ಮೊದಲಿನಿಂದಲೂ ನನ್ನ ಬಗ್ಗೆ ತೋರಿಸುತ್ತ ಬಂದ ಕ್ರೌರ್ಯಕ್ಕೆ ಈಗ ಸೋಕ್ಷಮೋಕ್ಷವಾಗಿಬಿಡಲಿ. ಇದೋ ನಾನೂ ಸಿದ್ಧನಾಗಿ ನಿಂತಿದ್ದೇನೆ. ನಿನ್ನ ಈ ಡಿಪಾರ್ಟ್‌ಮೆಂಟಲ್ ಇನ್ಕ್ವಾಯರಿಯ ಹಿಂದಿನ ಬೇತು ನನಗೀಗ ಸಂಪೂರ್ಣವಾಗಿ ಗೊತ್ತಾಗಿದೆ. ಇದು ನನ್ನ ಕರಿಯರನ, ಆದ್ದರಿಂದ ಸಾವು-ಇರವಿನ, ಪ್ರಶ್ನೆ. ನಿನಗೋ ಅದೊಂದು ದುಷ್ಟ ಆಟ. ನಾನೇ ಸೋಲಬಹುದೋ ಭೆಂಛೋದ್ ! ಆದರೆ ನಿನ್ನ ಗೆಲುವಿನ ಹಿಂದಿನ ಕ್ರೌರ್ಯವನ್ನು ಎಲ್ಲರಿಗೂ ಜಾಹೀರುಪಡಿಸದೇ ಸಾಯಲಾರೆ. ಹೌದು. ಈ ಕೊನೆಯದಕ್ಕೂ ಸಿದ್ಧನಾಗಿದ್ದರಿಂದಲೇ ನಿನ್ನನ್ನು ಹೋರಲು ಹಿಂದೆ ಎಂದೂ ಅನ್ನಿಸದಷ್ಟು ಧೈರ್ಯ ಬಂದಿದೆ. +ಕುರ್ಚಿಯಲ್ಲಿ ಕುಳಿತದ್ದೇ ನಾಗಪ್ಪ ಎದೆ ಉಬ್ಬಿಸಿಕೊಂಡ. ಮತ್ತೆ ಮತ್ತೆ ತನಗೆ ಇಷ್ಟೊಂದು ಧೈರ್ಯ ಒಮ್ಮೆಗೆಲೇ ಎಲ್ಲಿಂದ ಬಂತು ? ತನ್ನ ಮನಸ್ಸು ಇಷ್ಟೊಂದು ಉಲ್ಲಾಸಗೊಂಡದ್ದೇಕೆ ಎಂದು ತನ್ನನ್ನೇ ಕೇಳಿಕೊಂಡ. ಜನ್ಮಾಂತರಗಳ ಪ್ರಾಣಿಬಲವೊಂದು ಮನಸ್ಸಿನ ಆಳದಲ್ಲೆಲ್ಲೋ ಸೆಲೆಯೊಡೆದಿರಬೇಕು_ಈ ನಿರ್ಣಾಯಕವಾದ ಮುಖಾಮುಖಿಗೆ ತನ್ನನ್ನು ಅಣಿಗೊಳಿಸಲೆಂದೇ ಎಂದುಕೊಂಡು, ಎದ್ದು ಕೋಣೆಯಲ್ಲಿ ಕುಣಿದುಬಿಡಬೇಕು ಎನ್ನುವಷ್ಟು ಖುಶಿಪಟ್ಟ. ಖುಶಿಯಿಂದ, ಧೈರ್ಯದಿಂದ, ಬುದ್ದಿ ಮನಸ್ಸುಗಳು ಸ್ವಚ್ಛಗೊಂಡು ಹರಿತವಾಗಿದ್ದವು. ಫಿರೋಜನನ್ನು ಇದಿರಿಸಲು ತಾನು ಏನು ಮಾಡಬೇಕು ಎನ್ನುವುದು ಮಾತ್ರ ಇವುಗಳನ್ನು ಮೀರಿದ, ಪ್ರವೃತ್ತಿಯ ನೆಲೆಯಲ್ಲೇ ನಿಚ್ಛಳವಾಗಹತ್ತಿತು : I eಟಿರಿoಥಿ ಣhis,ಠಿhiಡಿoz, I eಟಿರಿoಥಿ ಣhis ಣhoಡಿoughಟಥಿ_ ಎನ್ನುತ್ತ ಒಂದು ಬಗೆಯ ಉನ್ಮಾದದಿಂದೆಂಬಂತೆ ಪುಲಕಿತನಾಗಿ ಬಲತೊಡೆಯಮೇಲೆ ಅಂಗೈಯಿಂದ ಬಡಿದುಕೊಂಡ. ಸಂಶಯವೇ ಇಲ್ಲ. ಶ್ರೀನಿವಾಸನದೂ ಈ ಪಿತೂರಿಯಲ್ಲಿ ಕೈಯಿದೆ ಎಂದೆನ್ನಿಸಿದಾಗ ಒಂದೇ ಕ್ಷಣದ ಮಟ್ಟಿಗೆ ವಿಚಲಿತನಾದ. ಆದರೆ ಯಾವುದೇ ರೀತಿಯ ಭಯದಿಂದಲ್ಲ. ಪ್ರತಿ ಸಲ. ತಾನು ಜನರನ್ನು ಸುಲಭವಾಗಿ ನಂಬಿಬಿಡುತ್ತೇನಲ್ಲ ಎಂಬ ಅರಿವಿನಿಂದ : ಯಾವ ಒಂದು ಸಹಜಸ್ಫೂರ್ತಿಯಿಂದ ಇಂದಿನದೆಲ್ಲವನ್ನು ಮರೆತು, ಎಲ್ಲರನ್ನು ಬಿಟ್ಟು, ನಾನು ಈ ಶ್ರೀನಿವಾಸನಲ್ಲಿಗೆ ಬಂದೆ. ಆದರೆ ಈ ಒಂದೂ ಸಂಚಿನದೇ ಅಂಗವಾದಂತಿದೆ. ಆದಂತಿದೆ ಯಾಕೆ ?_ಆಗಿದೆ. ಈಗ ಎಲ್ಲ ಸ್ಪಷ್ಟವಾಗುತ್ತಿದೆ : ಆ ದಿವದ ಸಂತೋಷಭವನದಲ್ಲಿ ಕಾಫಿ ಕುಡಿಯುತ್ತಿರುವಾಗ ನನ್ನನ್ನು ಭೆಟ್ಟಿಯಾದದ್ದು ಆಕಸ್ಮಿಕವಾಗಿ ಅಲ್ಲವೇ ಅಲ್ಲ. ನನ್ನನ್ನು ಮನೆಗೆ ಕರೆದೊಯ್ಯುವುದನ್ನು ನಿಶ್ಚಯಿಸಿಯೇ ಬಂದಿರಬೇಕೆ. ಪರ್ಸೊನೆಲ್ ಮ್ಯಾನೇಜರನ ಫೋನ್ ಬಂದ ದಿನದ ಸಂಜೆಗೇ ಅದು. +ಅರರೇ ! ಶ್ರೀನಿವಾಸ ಆ ಹೊತ್ತೇ ಹೇಗೆ ತನ್ನನ್ನು ಭೆಟ್ಟಿಯಾಗಿ ಕರೆಯಲು ಬಂದ ಎಂಬುದರ ಬಗ್ಗೆ ತಾನು ಇಷ್ಟು ದಿವಸ ವಿಚಾರಮಾಡಲೇ ಇಲ್ಲವಲ್ಲ. ನಾಗಪ್ಪ ತನ್ನ ಧಡ್ಡತನವನ್ನು ಶಪಿಸಿಕೊಂಡ : ಅಡ್ಡಿಯಿಲ್ಲ. ನಾಡೂ ಮಾಸ್ಕೇರಿಯ ಶ್ರೀನಿವಾಸ, ಇಪ್ಪತ್ತು ವರ್ಷಗಳ ಹಿಂದಿನ ಆ ಘಟನೆಯನ್ನು ನೀನು ಇನ್ನೂ ಮರೆತಿಲ್ಲ ಎಂಬುದನ್ನು ಬಲ್ಲೆ. ಅದರಿಂದಾಗಿ ನೀನು ನನ್ನ ಬಗ್ಗೆ ತಳೆಯುತ್ತ ಬಂದ ದ್ವೇಷವನ್ನು ನಾನೂ ಮರೆತಿಲ್ಲವೊ_ಈ ಕೋಳೀಗಿರಿಯಣ್ಣನ ಕೇರಿಯ ‘ಭುಸ್’ ನಾಗಪ್ಪನೂ ಮರೆತಿಲ್ಲ. ನಿನ್ನನ್ನು ಕ್ಷಮಿಸಿಯೂ ಇಲ್ಲ. ಇದು ಇಂದು ನಮ್ಮಿಬ್ಬರಿಗೂ ಮತ್ತೆ ಸ್ಪಷ್ಟವಾದದ್ದು ಒಳ್ಳೆಯದೇ ಆಯಿತು. +ಶ್ರೀನಿವಾಸನಿಗೆ ಹಾವಿನಂತೆ ಹಗೆ ಕಾಯುವ ಛಲದ ಗುಣ ಅವನ ತಾಯಿಯಿಂದ ಬಂದದ್ದು. ನಾಗಪ್ಪ ಅವನ ತಾಯಿಯನ್ನು ಕುರಿತು ಬರೆದ ಕತೆ ಈ ಛಲವನ್ನು ಅರಿಯುವುದರ ಸಲುವಾಗಿಯೇ ಬರೆದದ್ದಾಗಿತ್ತು: ಶ್ರೀನಿವಾಸ ಇಂದು ಮುಂಬಯಿಯಲ್ಲಿ ತಮ್ಮ ಜಾತಿಯವರ ಸಮಾಜದಲ್ಲಿ ಗಳಿಸಿದ ಅವಾಸ್ತವವಾದ ಪ್ರತಿಷ್ಟೆ, ಅದನ್ನು ಗಳಿಸಲು ಅವನು ನಡೆಸಿದ ಪ್ರಚಂಡ ಹೋರಾಟ ಇವೆಲ್ಲವನ್ನು ಚೆನ್ನಾಗಿ ಬಲ್ಲ ನಾಗಪ್ಪನಿಗೆ ಝಗ್ಗನೆ ಹೊಳೆದು ಹೋದಂತಾಯಿತು : ಇದನ್ನೆಲ್ಲ ಅನುಭೋಗಿಸುವಾಗ ಶ್ರೀನಿವಾಸನನ್ನು ತನಗೇ ಗೊತ್ತಾಗದ ರೀತಿಯಲ್ಲಿ, ನನ್ನ ಬಗೆಗಿನ ಭಯ ಕಾಡುತ್ತಿರಬೇಕು. ಶ್ರೀನಿವಾಸ ನನ್ನ ಬಗ್ಗೆ ತಿಳಿಯುತ್ತ ಬಂದ ದ್ವೇಷ ಆಳವಾದ ಭಯದ ಮೇಲೆ ನಿಂತಿರಬೇಕು. ನೇತ್ರಾವತಿಯ ಆತ್ಮಹತ್ಯೆಗೆ ಕಾರಣವಾದ ಆ ದುರ್ಘಟನೆ, ಕೊರೋನರ್ಸ್ ಕೋರ್ಟಲ್ಲಿ ನಾನಿತ್ತ ಸಾಕ್ಷಿ : ಶ್ರೀನಿವಾಸನ ಭಯವನ್ನು ನಾನು ಮೊದಲಿನಿಂದಲೂ ಬಲ್ಲೆ. ನಾನು ಬರೆದ ಕತೆಗಳನ್ನು ಚಾಚೂ ತಪ್ಪದೆ ಯಾಕೆ ಓದುತ್ತಾನೆ ಎಂಬುದನ್ನೂ ಬಲ್ಲೆ… ಫಿರೋಜ್ ನನ್ನ ಬಗ್ಗೆ ವ್ಯಕ್ತಪಡಿಸುತ್ತ ಬಂದ ದ್ವೇಷದ ಅಡಿಗೂ ಇಂತಹ ಭಯವೇ ಅಡಗಿರಬಹುದೇ ? ಎಂತಹ ಭಯ ? ಫಿರೋಜನಿಗೆ ನಮ್ಮ ಕಂಪನಿಯ ಟೆಕ್ನಾಲಾಜಿಯನ್ನು ಕುರಿತಿರುವ ನಂಬಲಾಗದಷ್ಟು ಅಜ್ಞಾನ ನನಗೊಬ್ಬನಿಗೇ ಗೊತ್ತು. ಆದರೂ ಹಲವು ವರ್ಷ ಈತ ಟೆಕ್ನಿಕಲ್ ಡಾಯಿರೆಕ್ಟರ್ ! ಈಗ ಡೆಪ್ಯುಟೀ ಮ್ಯಾನೇಜಿಂಗ್ ಡಾಯಿರೆಕ್ಟರ್ ! ಧಡ್ಡ ಎರಡೂ ಮಗ. ಮೇಲಕ್ಕೇರಿದ್ದು ಬರೇ ರಾಜಕಾರಣಿಯ ಧೂರ್ತ ಕಪಟದಿಂದ. ಆದರೆ ತಮ್ಮ ತಮ್ಮ ಭಯಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಈ ಇಬ್ಬರು ಧೂರ್ತರು ಒಂದೆಡೆಯಲ್ಲಿ ಬಂದದ್ದು ಹೇಗೆ ? ನಾನು ಅಮೇರಿಕೆಗೆ ಹೋಗುವ ಕನಸು ನನಸಾಗಲಿದ್ದ ಮುಹೂರ್ತದಲ್ಲೇ ಹೇಗೆ ? ಅಥವಾ ಮುಹೂರ್ತವೇ ಈ ಇಬ್ಬರೂ ಒಂದೂ ಮಕ್ಕಳ ಗುಪ್ತ ಸಮಾಗಮಕ್ಕೆ ಸ್ಫೂರ್ತಿಯಾಗಿರಬಹುದೆ ? +ನಾಗಪ್ಪನಿಗೆ ಇದೆಲ್ಲ ಒಗಟಾಗಿಯೇ ಉಳಿಯಿತು. +ಆದರೆ ಇಬ್ಬರನ್ನೂ ಹೋರುವ ತನ್ನ ನಿರ್ಧಾರದ ಬಗ್ಗೆ ಮಾತ್ರ ಯಾವ ಸಂಶಯವೂ ಉಳಿಯಲಿಲ್ಲ. ಆ ನಿರ್ಧಾರ ಅವನ ಆಗಿನ ಮೂಡಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಅದು ಹುಟ್ಟಿಸಿದ ಹೊಸ ಧೈರ್ಯದಿಂದಲೇ ಊಟಕ್ಕೆ ಕೂತಾಗ ನಾಳೆ ಬೆಳಗ್ಗೆ ನಾಸ್ತಾ ಮುಗಿಸಿದ್ದೇ ಖೇತವಾಡಿಯ ಮನೆಗೆ ಹೋಗುವ ತನ್ನ ನಿಶ್ಚಯವನ್ನು ಶ್ರೀನಿವಾಸನಿಗೆ ತಿಳಿಸಿದ. ಅವನ ಅಪ್ಪಣೆ ಪಡೆದು ಕಂಪನಿಯ ಪರ್ಸೊನೆಲ್ ಮ್ಯಾನೇಜರ್ ನೋಶೀರ್ ಖಂಬಾಟನಿಗೆ ಅವನ ಮನೆಯ ನಂಬರಿಗೆ ಫೋನ್ ಮಾಡಿ, ಗಟ್ಟಿಯಾದ ಆತ್ಮವಿಶ್ವಾಸ ತುಂಬಿದ ದನಿಯಲ್ಲಿ ಹೈದ್ರಾಬಾದಿಗೆ ಹೋಗಲು ತಾನೂ ಸಿದ್ಧನಾಗಿದ್ದೇನೆಂದೂ, ವಿಮಾನದ ಟಿಕೆಟ್ಟನ್ನು ಖೇತವಾಡಿಯ ವಿಳಾಸಕ್ಕೇ ಕಳಿಸಬೇಕೆಂದೂ ತಿಳಿಸಿದ. ‘ನೀವೆಲ್ಲ ನನ್ನ ಸಲುವಾಗಿ ಮಾಡುತ್ತಿದ್ದುದರ ಬಗ್ಗೆ ತುಂಬ ಅಭಾರಿಯಾಗಿದ್ದೇನೆ,’ ಎಂದಾಗ ಖಂಬಾಟಾ ದಡಬಡಿಸಿದ್ದು ಕೇಳಿಸಿ, “ Iಣ is ಚಿಟಟ ಡಿighಣ, ಓಚಿushiಡಿ. I ಟooಞ ಜಿoಡಿತಿಚಿಡಿಜ ಣo ಣhis ಣಡಿiಠಿ ಣo ಊಥಿಜeಡಿಚಿbಚಿಜ. I ತಿiಟಟ eಟಿರಿoಥಿ iಣ” ಎಂದು ಹೇಳಿ ಟೆಲಿಫೋನ್ ಕೆಳಗಿಟ್ಟ. ತನ್ನ ದನಿಯಲ್ಲಿಯ ವ್ಯಂಗ್ಯಕ್ಕೆ ತಾನೇ ಖುಶಿಪಟ್ಟ. +ಮರಿದುನ ಬೆಳಿಗ್ಗೆ, ಟ್ಯಾಕ್ಸಿಯಲ್ಲಿ ಕುಳಿತು ಖೇತವಾಡಿಯ ಹಾದಿ ಹಿಡಿದಾಗ ಲಕ್ಷ್ಯಕ್ಕೆ ಬಂದಿತು, ಬೀಳ್ಕೊಳ್ಳುವಾಗ ಶ್ರೀನಿವಾಸನ ಹೆಂಡತಿಗೆ ‘ಬರುತ್ತೇನೆ’ ಎಂದು ಹೇಳಿದ್ದೇ ಅವಳನ್ನು ಮಾತನಾಡಿಸಿದ ಮೊದಲ ಸಂದರ್ಭವಾಗಿತ್ತು, ಎಂದು. ಆಮೇಲೆ, ವಿಷಾದ ತುಂಬಿದ ಅವಳ ಕಣ್ಣುಗಳು ; ಗಲ್ಲ ಚಿವುಟಿದಾಗ ಕಣ್ಣುಗಳಲ್ಲಿ ಹೊಳಪು ಮಿಂಚಿಸುತ್ತ ನಕ್ಕ ಚೇತನಾಳ ನಗು ; ಕೊನೆವರೆಗೂ ಬರೇ ನೋಡುತ್ತಲೇ ನಿಂತುಬಿಟ್ಟ ಅಚ್ಯುತನ ನಿಗೂಢ ಮೌನ ನೆನಪಿನಲ್ಲಿ ಮೂಡಿ ನಿಂತು ಬಹಳ ಅಂತರದವರೆಗೆ ಹಿಂಬಾಲಿಸಿದುವು. ಖೇತವಾಡಿಯನ್ನು ತಲುಪಿದಮೇಲೆ ಟ್ಯಾಕ್ಸಿಯವನನ್ನು ಬೀಳ್ಕೊಡುವಾಗ, ಮನೆಯಿದ್ದ ಖೇಮರಾಜ ಭವನದ ಮೂರು ಮಜಲುಗಳ ಕಟ್ಟಿಗೆಯ ಪಾವಟಿಗೆಗಳನ್ನು ಏರಿ ಹೋಗುವಾಗ : ಸಂಧಿಸಿದ ನೆರೆಹೊರೆಯವರನ್ನು ಕಣ್ಣುಗಳಿಂದಲೇ ವಂದಿಸುವಾಗ ತನ್ನೊಳಗೆ ಸ್ಥಾಯಿಯಾಗಿ ನಿಂತ ಆತ್ಮವಿಶ್ವಾಸದಿಂದ ತಾನೇ ಪುಳಕಿತನಾದ. ಅತ್ಯಂತ ಖುಷಿಯಿಂದ ಮನೆಯ ಬೀಗ ತೆರದು, ಕದ ದೂಡಿ ಒಳಗೆ ಕಾಲಿರಿಸಿದ. +uಟಿಜeಜಿiಟಿeಜ +– ಭಾಗ : ಎರಡು – +– ಅಧ್ಯಾಯ ಹನ್ನೊಂದು – +ಮನೆ ಹೊಕ್ಕವನೇ, ನಾಗಪ್ಪ, ಅದನ್ನು ಇದೇ ಮೊದಲ ಸಲ ನೋಡುತ್ತಿರುವವನ ಹಾಗೆ ಹೊಚ್ಚಹೊಸ ಆಸ್ಥೆಯಿಂದ, ಪ್ರೀತಿಯಿಂದ ನೋಡಿದ. ರಸ್ತೆಯ ಇನ್ನೊಂದು ಮಗ್ಗುಲಲ್ಲಿ ನಿಂತ ಚಾಳಿನಲ್ಲಿಯ ಜನರ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿದ. ಅಪೂರ್ವ ಸಂಗತಿಯೊಂದು ತನ್ನ ಹೊಸ ಮೂಡಿಗೆ ಕಾರಣವಾಗಿದೆಯೆಂಬ ಅಸ್ಪಷ್ಟ ಅರಿವು ಇದ್ದೂ, ಆ ಕಾರಣದ ಬಗ್ಗೆ ವಿಚಾರಮಾಡುವ ಕುತೂಹಲವನ್ನು ಹತ್ತಿಕ್ಕಿ, ಕೆಲಹೊತ್ತು ಕೋಣೆಯಲ್ಲಿಯ ಪುಸ್ತಕಗಳ ಮೇಲೆ ದೃಷ್ಟಿ ನೆಟ್ಟು ಕುಳಿತ. ಮನಸ್ಸು ಯಾವುದೇ ಒಂದು ನಿರ್ಧಿಷ್ಟ ಸಂಗತಿಯ ಬಗ್ಗೆ ವಿಚಾರಮಾಡಲು ನಿರಾಕರಿಸುತ್ತ ಸುನ್ನವಾಗಿತ್ತು. ನಡುವೆಯೇ ಏನೋ ಹೊಳೆದಂತಾಗಿ, ಕೂತಲ್ಲಿಂದ ಎದ್ದು ಸೂಟ್‌ಕೇಸಿನೊಳಗಿಂದ ಟಿಪ್ಪಣಿಗಳ ವಹಿಯನ್ನು ಹೊರತೆಗೆದ : ಹೌದು. ಹೈದ್ರಾಬಾದಿಗೆ ಹೋಗುವ ಮೊದಲು ಅವಕಾಶವಿದ್ದ ಕೆಲವು ದಿನಗಳಲ್ಲಿ ಬರೆದು ತೆಗೆಯಬೇಕು : ಫಿರೋಜ ಹಾಗೂ ಶ್ರೀನಿವಾಸ ಕೂಡಿ ಹೂಡಿದ ಈ ಸಂಚಿನ ಒಳಮರ್ಮವನ್ನು ; ಗೂಢಪ್ರೇರಣೆಯನ್ನು ಕುರಿತು ಹೊಳೆದದ್ದನ್ನೆಲ್ಲ ಟಿಪ್ಪಣಿ ಮಾಡಬೇಕು. ಯಾಕಂದರೆ ಈ ಒಳಗುಟ್ಟನ್ನು ಅರಿತಾಗಲೇ ನಾನು ಇದನ್ನೆಲ್ಲ ಇದಿರಿಸುವ ಹಾದಿ ಯಾವುದು ? ಕೈಕೊಳ್ಳಬೇಕಾದ ಉಪಾಯವೇನು ? ಎನ್ನುವದು ನಿಚ್ಚಳವಾದೀತು. ಮೊನ್ನೆ ಒಂದು ಪ್ರಕ್ಷುಬ್ಧ ಗಳಿಗೆಯಲ್ಲಿ ಹುಟ್ಟಿದ ಅಸ್ಪಷ್ಟ ಗುಮಾನಿ ಈಗ ಮೆಲ್ಲಗೆ ಹರಳುಗುಟ್ಟುತ್ತಿದ್ದ ಅನ್ನಿಸಿಕೆ : ಫಿರೋಜ್ ಶ್ರೀನಿವಾಸ ಇವರಿಬ್ಬರೂ ನನಗೆ ಯಾವುದೋ ಕಾರಣಕ್ಕಾಗಿ ಹೆದರಿಕೊಂಡಿದ್ದಾರೆ ಎಂಬುದೂ ಸುಳ್ಳಲ್ಲ…. +ತನ್ನ ಭಯವನ್ನು ಮರೆತು ಇವರಿಬ್ಬರ ಭಯದ ಮೂಲವನ್ನು ಅರಿಯುವ ಕುತೂಹಲ ಸುಖದಾಯಕವೆನಿಸಿತು, ನಾಗಪ್ಪನಿಗೆ : ನಾಳೆ ಬೆಳಿಗ್ಗೆ ಎದ್ದಕೂಡಲೇ ಬರೆಯಲು ಕೂಡ್ರಬೇಕು. ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ರಾತ್ರಿ, ರಾಣಿಯನ್ನು ಕಂಡು ಬರಬೇಕು. ಅವಳನ್ನು ಕಾಣದೇ ಈಗ ಎಂಟು ದಿನಗಳ ಮೇಲೆ ಆಯಿತು. ಎಷ್ಟೊಂದು ನೊಂದುಕೊಂಡಿದ್ದಾಳೋ ಹುಡುಗಿ….ರಾಣಿಯ ನೆನಪಿನಿಂದ ಮೈ ಬೆಚ್ಚಗಾಗುತ್ತಿದ್ದಂತೆನಿತು : ಚಪ್ಪಟೆ ಮೂಗು, ನಗುವಾಗ ಕುಳಿ ಬೀಳುತ್ತಿದ್ದ ಗಲ್ಲಗಳು (ಚೇತನಾಳ ಗಲ್ಲಗಳಲ್ಲೂ ಕುಳಿಗಳಲ್ಲವೇ)! ಸಪೂರಾದ ತುಟಿಗಳಿದ್ದ ಸಣ್ಣ ಬಾಯಿ, ಮೊಲೆ, ತೊಡೆಗಳು ಮಾತ್ರ ಹುಚ್ಚು ಹಿಡಿಸುವಂತಹವುಗಳು. ಎಲ್ಲರನ್ನು ಬಿಟ್ಟು ಈ ನೇಪಾಳೀ ಹೆಣ್ಣಿನ ಮೋಹಕ್ಕೆ ಬಲಿಯಾದದ್ದರ ಕಾರಣ ಮಾತ್ರ ಬೇರೆಯೇ ಆಗಿತ್ತು : ಗೊತ್ತಿದ್ದೂ ಸ್ಪಷ್ಟವಾಗಿ ಪ್ರಜ್ಞೆಯ ನೆಲೆಯಲ್ಲಿ ಒಪ್ಪಿಕೊಂಡಿರಲಿಲ್ಲ. ಅಷ್ಟೇ : ತನ್ನ ತಂಗಿ ಹೀಗೇ ಎಲ್ಲಾದರೂ ವೇಶ್ಯೆಯಾಗಿ ಬದುಕುತ್ತಿರಬಹುದೇ ? ಎನ್ನುವ ಅನುಮಾನ ದಿನ ಹೋದಂತೆ ಒಂದು ರೋಗದ ಲಕ್ಷಣ ತಳೆದು ಕಾಡಹತ್ತಿತ್ತು. ನಾಗಪ್ಪ ಅಸ್ವಸ್ಥನಾದ. ಕುರ್ಚಿಯಿಂದ ಎದ್ದು ರಸ್ತೆಯ ಬದಿಯ ಸರಳುಗಳಿಲ್ಲದ ಬೋಳುಕಿಡಕಿಗೆ ಬಂದು ನಿಂತ. ಮೂರನೇ ಮಜಲೆಯ ಆ ಕಿಡಕಿಯಿಂದ ಕೆಳಗಿನ ರಸ್ತೆಯನ್ನು ನೋಡುತ್ತಿರುವಾಗ ದೂರದ ನೆನಪೊಂದು ಮನಸ್ಸಿನ ಆಳದಲ್ಲೆಲ್ಲೋ ಮೈ ಕೊಡವುತ್ತಿದ್ದದ್ದು ಅರಿವಿಗೆ ಬರುವಷ್ಟರಲ್ಲಿ ಮೂಲೆಯ ಮನೆಯ ಅರ್ಜುನ್‌ರಾವ್ ಅಗಳಿ ಹಾಕಿರದ ಕದಗಳನ್ನು ದೂಡಿ ಒಳಗೆ ಬಂದ. +ಜ್ಯೋತಿಷ್ಯಚೂಡಾಮಣಿ ಮಾಪಣಕರರ ವಾರಭವಿಷ್ಯವೊಂದರಿಂದಾಗಿಯೇ ಸಾವಿರಾರು ಪ್ರತಿಗಳು ಒಂದೇ ದಿನದಲ್ಲಿ ಮಾರಿಹೋಗುವ ‘ವಜ್ರಧಾರಿ’ ವಾರಪತ್ರಿಕೆಯ ಸಂಪಾದಕನಾದ ಇವನು ತಾನೊಬ್ಬ ದೊಡ್ಡಬುದ್ದಿಜೀವಿ ಎಂದು ತಿಳಿದುಕೊಂಡಿದ್ದಾನೆ. ಭೆಟ್ಟಿಯಾದಾಗೊಮ್ಮೆ ಕಮ್ಯುನಿಜಮ್, ಎಂ,ಎನ್, ರಾಯ್ ಅವರ ರೆಡಿಕಲ್ ಹ್ಯುಮೆನಿಸಮ್ ಇವೆಲ್ಲವುಗಳ ಬಗ್ಗೆ ನಿಲ್ಲಿಸದೇ ಮಾತನಾಡುವ ಈತ ಖಟ್ಟ ಹಿಂದೂಮಹಾಸಭಾವಾದಿ. ಸಮಾಜದ ಬಗ್ಗೆ ಇವನು ಕಳಕಳಿಯನ್ನು ವ್ಯಕ್ತಪಡಿಸುವಾಗಿನ ಶಬ್ದಪ್ರಭುತ್ವ ದಂಗುಬಡಿಸುವಂಥದ್ದು. ಇವನೊಡನೆ ಮಾತನಾಡುವ ಮೂಡಿನಲ್ಲಿರಲಿಲ್ಲ. ನಾಗಪ್ಪ ಈಗಾಗಲೇ ಹತ್ತುಗಂಟೆ. ಇನ್ನೂ ಹೇಗೆ ಪ್ರೆಸ್ಸಿಗೆ ಹೋಗಿಲ್ಲವೆಂದು ಕೇಳಿದಾಗ ಮನೆಯಲ್ಲಿಂದು ಸತ್ಯನಾರಾಯಣ ಪೂಜೆ. ಆ ಕಾರಣ ಒಂದು ದಿನದ ರಜೆ ಪಡೆದಿದ್ದೇನೆ ಎಂದ. ಬೇರೆ ಯಾರಲ್ಲೂ ಬರುತ್ತೇನೆಂದು ಈಗಾಗಲೇ ಹೇಳಿರದಿದ್ದರೆ ತಮ್ಮಲ್ಲೇ ಊಟಕ್ಕೆ ಬರಬೇಕೆಂದು ಕೇಳಿಕೊಂಡ. ನಾಗಪ್ಪನಿಗೆ ಒಳಗೊಳಗೇ ನಗು. ಊಟದ ಆಮಂತ್ರಣವನ್ನು ಸ್ವೀಕರಿಸುವಾಗ ತುಟಿಗಳ ಮೂಲೆಯಲ್ಲಿ ಮೂಡಿದ ತುಂಟತನದ ಮುಗುಳುನಗೆಯನ್ನು ಕಂಡವನ ಹಾಗೆ, ತನಗೆ ಇದಾವುದರಲ್ಲೂ ವಿಶ್ವಾಸವಿಲ್ಲ. ಆದರೂ ಹೆಂಡತಿಯ ಮನಸ್ಸು ನೋಯಿಸುವ ಮನಸ್ಸಿಲ್ಲ ಎನ್ನುತ್ತ ಹಲ್ಲುಕಿಸಿದ, ಅರ್ಜುನ್‌ರಾವ್. ನಾಗಪ್ಪನಿಗೆ ಮೋಜೆನಿಸಿತು. ಅರ್ಜುನ್‌ರಾವ್ ಬರಿಯ ಔತಣವೀಯಲಷ್ಟೇ ಬಂದಂತೆ ತೋರಲಿಲ್ಲ. ಕುರ್ಚಿಯೊಂದರಲ್ಲಿ ಕುಂಡೆಯೂರುತ್ತ, ಸದ್ಯ ರಜೆಯ ಮೇಲೆ ಇದ್ದಂತಿದೆಯಲ್ಲವೆ ? ಎಂದು ಅತ್ಯಂತ ಸಹಜವಾದ ಕುತೂಹಲದಿಂದ ಕೇಳಿದಂತಿದ್ದ, ಪ್ರಶ್ನೆಯಲ್ಲಿಯ ಅಧಿಕಪ್ರಸಂಗ ನಾಗಪ್ಪನನ್ನು ತಟ್ಟದೇಹೋಗಲಿಲ್ಲ. ಆದರೂ ತಲೆಕೆಡಿಸಿಕೊಳ್ಳದೇ, ಹೌದು ಒಂದು ತಿಂಗಳು ರಜೆ ಪಡೆದದ್ದು ನಿಜ-ಎನ್ನುತ್ತಿರುವಾಗಲೇ, ಕಾದಂಬರಿಯನ್ನೂ ಬರೆಯಲು ಹಿಡಿದಿದ್ದೀರಂತೆ ಎಂದಾಗ ನಾಗಪ್ಪ ಚೆಕಿತನಾಗಿ ಕಣ್ಣರಳಿಸಿದ್ದನ್ನು ನೋಡಿ, “ಶ್ರೀನಿವಾಸರಾವ್ ಭೆಟ್ಟಿಯಾಗಿದ್ದ ಮೊನ್ನೆ ಪ್ರೆಸ್ಸಿನಲ್ಲಿ, ನೀವು ಅವನ ಮನೆಯಲ್ಲೇ ಕೂತು ಕಾದಂಬರಿ ಬರೆಯುತ್ತೀದ್ದೀರಂತೆ.” ಎಂದಾಗ ಮಾತ್ರ ನಾಗಪ್ಪನಿಗೆ ತನ್ನ ಅಸಮಾಧಾನವನ್ನು ತಡೆಯುವುದಾಗಲಿಲ್ಲ : “ಹೌದು. ಹೋದ ನಾಲ್ಕು ದಿನ ಅವನಲ್ಲೇ ಇದ್ದೆ. ಈಗ ಇಲ್ಲೇ ಕೂತು ಬರೆಯಬೇಕೆಂದುಕೊಂಡಿದ್ದೇನೆ. ನಿಮಗೆ ಕನ್ನಡ ಬರುತ್ತಿದ್ದರೆ ಓದಿ ತೋರಿಸುತ್ತಿದ್ದೆ. ಅಂದರೆ ಅದರಲ್ಲಿ ಬರುವ ಪಾತ್ರಗಳ ಗುರುತು ನಿಮಗೆ ಸಿಗಬಹುದಿತ್ತು. ಅದರಲ್ಲಿ ನೀವೂ ಬರುತ್ತೀರಿ ಎಂಬುದನ್ನು ಮೊದಲೇ ಹೇಳಿಬಿಡುತ್ತೇನೆ. ಯಾಕೆಂದರೆ ಕಾದಂಬರಿಗೆ ಮೂಲ ಪ್ರಚೋದನೆಯಾದ ಘಟನೆ : ಇದೇ ಮನೆಯಲ್ಲಿ ನಡೆದ ನೇತ್ರಾವತಿಯ ಆತ್ಮಘಾತ ! ಯಾವ ಒಂದು ಪಾತ್ರದ ಹೆಸರನ್ನೂ ಬದಲಿಸದೇ ಎಲ್ಲವನ್ನೂ ನಡೆದಂತೆಯೇ ಬರೆಯುತ್ತಿದ್ದದ್ದು ಕಾದಂಬರಿಯ ವೈಶಿಷ್ಟ್ಯ. ಶ್ರೀನಿವಾಸ, ಶ್ರೀನಿವಾಸ ಎಂದೇ ಬಂದಿದ್ದಾನೆ. ಅರ್ಜುನ್‌ರಾವ್ ಅರ್ಜುನ್‌ರಾವ್ ಎಂದೇ ಖೇತವಾಡಿಯ ಈ ಖೇಮರಾಜಭವನದ ಮೂರನೇ ಮಜಲೆಯ ಮೇಲಿನ ಮನೆ ನಂಬರು ೫೩ರಲ್ಲಿ ವಾಸಿಸುವ ಸದ್ಗೃಹಸ್ಥನಾಗಿ, ‘ವಜ್ರಧಾರಿ’ ಪತ್ರಿಕೆಯ ಸಂಪಾದಕರಾಗಿ ನೀವು ಅದರಲ್ಲಿ ಮೆರೆಯುತ್ತೀರಿ. ಯಥಾರ್ಥನಿರೂಪಣೆಯಲ್ಲಿ ಇದೊಂದು ಹೊಸ ಪ್ರಯೋಗ. ಇದನ್ನು ಬರೆಯಲು ಶ್ರೀನಿವಾಸನ ಮನೆ ಸರಿಯಾದ ಜಾಗವಲ್ಲ ಎನ್ನುವುದು ಅನುಭವಕ್ಕೆ ಬಂದದ್ದರಿಂದಲೇ ಇಲ್ಲಿಗೆ ತಿರುಗಿ ಬಂದೆ.” ಎಂದಾಗಿನ ತನ್ನ ಮಾತಿನಲ್ಲಿಯ ನಿಷ್ಠುರತೆಯ ಬಗ್ಗೆ, ಅದು ಅರ್ಜುನ್‌ರಾವನ ಮೇಲೆ ಮಾಡುತ್ತಿದ್ದ ಪರಿಣಾಮದ ಬಗ್ಗೆ ತಾನೇ ಖುಷಿಪಟ್ಟ. +ಕಾದಂಬರಿಯಲ್ಲಿ ತನ್ನ ಪಾತ್ರವೂ ಇದೆ ಎಂದು ಕೇಳಿದ ಅರ್ಜುನ್‌ರಾವ್ ತಬ್ಬಿಬ್ಬಾದ. ಕುರಿಯ ಪೆದ್ದು ತನದಿಂದ ಬೇ ಎಂದ. ಹೆಗ್ಗೋಡಗನ ಹಾಗೆ ಖೆಕ್ ಎಂದು ಹಲ್ಲುಕಿಸಿದ : “ಎಲ್ಲರನ್ನು ಬಿಟ್ಟು ನನ್ನನ್ನು ಯಾಕೆ ? ಅಂತೂ ಇಪ್ಪತ್ತು ವರ್ಷಗಳ ಹಿಂದಿನ ಆ ದುರ್ಘಟನೆಯನ್ನು ನೀವು ಮರೆತಿಲ್ಲವೆಂದಾಯಿತು. ನಾನಾದರೂ ಎಲ್ಲಿ ಮರೆತಿದ್ದೇನೆ ಶ್ರೀನಿವಾಸರಾವ್ ಗಟ್ಟಿ ಕುಳ ನೋಡಿ, ಎಲ್ಲವನ್ನೂ ಸುರಳೀತ ಮರೆತು ಮದುವೆಯಾಗಿ ಮಕ್ಕಳನ್ನು ಪಡೆದು ಸುಖರೂಪದಲ್ಲಿ ಇದ್ದಾನೆ. ಲಕ್ಷಗಟ್ಟಲೆ ಹಣ ಮಾಡಿದ್ದಾನಂತೆ. ಈಗ ಮ್ಯುನಿಸಿಪಲ್ ಇಲೆಕ್ಷನ್ನಿಗೆ ನಿಲ್ಲುತ್ತಾನಂತೆ. ಅದಕ್ಕೇ ಬಂದಿದ್ದ_ಪೋಸ್ಟರುಗಳನ್ನು, ಅಪೀಲುಗಳನ್ನು ನಮ್ಮಲ್ಲಿ ಛಾಪಿಸಲು. ಸ್ವಂತದ ಪ್ರೆಸ್ಸು ಇದ್ದರೂ ಇಂಥದ್ದನ್ನು ಛಾಪಿಸಲು ವ್ಯವಧಾನ ಇಲ್ಲವಂತೆ. ದಂಧೆ ಅಷ್ಟೊಂದು ಭರಭರಾಟೆಯಿಂದ ನಡೆದಿದೆಯಂತೆ. ನೋಡಿ ಒಬ್ಬೊಬ್ಬರ ಭಾಗ್ಯೋದಯದ ರೀತಿಯನ್ನು, ಇದೇ ಮನೆಯಲ್ಲಿ ನಿಮ್ಮ ಜೊತೆಯಲ್ಲಿರುವಾಗ ಚರ್ನೀರೋಡಿನ ಸರ್ಕಾರಿ ಛಾಪಖಾನೆಯಲ್ಲಿ ಒಬ್ಬ ಕ್ಲಾರ್ಕು, ಈಗ ?…ಏಕೋ, ಇದ್ದಕ್ಕಿದ್ದಂತೆ ಬೆಳಿಗ್ಗೆ ಇಲ್ಲಿಗೆ ಬರುವಾಗ ಇದ್ದ ತನಗೇ ಸಂಪೂರ್ಣ ಅರ್ಥವಾಗಿರದ ಗಟ್ಟಿಯಾದ ಆತ್ಮವಿಶ್ವಾಸ ಈಗ ಅರ್ಜುನ್‌ರಾವನ ಮಾತು ಕೇಳುತ್ತಿರುವಾಗ ಸಡಿಲವಾಗುತ್ತಿದೆ ಎಂಬ ಅನ್ನಿಸಿಕೆಯಿಂದ ಅಸ್ವಸ್ಥಗೊಂಡ : “ಈವತ್ತು ನಿಮ್ಮಲ್ಲಿ ಪೂಜೆಯೆಂದಮೇಲೆ ನಿಮಗೆ ಮನೆಯಲ್ಲಿ ಸಾಕಷ್ಟು ಕೆಲಸಗಳಿರಬೇಕು….” +ತನಗೀಗ ಸ್ನಾನಗೀನ ಮುಗಿಸಿ ಹೊರಗೆ ಹೋಗಬೇಕಾಗಿದೆ ಎಂದು ಹೇಳಿ ಅರ್ಜುನ್‌ರಾವನನ್ನು ಅಲ್ಲಿಂದ ಓಡಿಸುವ ಯೋಜನೆ ನಾಗಪ್ಪನದಾಗಿತ್ತು. ಆದರೆ ಅರ್ಜುನ್‌ರಾವ್ ಅವನ ಮಾತನ್ನು ಪೂರ್ತಿಯಾಗಲು ಬಿಟ್ಟರಲ್ಲವೆ ! “ಛೇ ಛೇ ಛೇ. ನನ್ನ ಇಬ್ಬರು ತಮ್ಮಂದಿರೂ ಅವರ ಹೆಂಡಂದಿರೂ ಬಂದಿದ್ದಾರೆ. ಪುರೋಹಿತರಂತೂ ಹನ್ನೆರಡರ ಮೊದಲು ಬರುವದಿಲ್ಲ. ನನಗೇನು ಕೆಲಸ ? ಬೆಳಿಗ್ಗೆ ಎದ್ದಕೂಡಲೇ ಯಾರಾದರೂ ಹರಟೆ ಹೊಡೆಯಲು ಸಿಕ್ಕರೆ ಎಷ್ಟು ಚೆನ್ನಾಗಿತ್ತು ಅನ್ನಿಸಿತ್ತು. ನೀವು ಸಿಕ್ಕಿರಿ. ಐನ ಪೂಜೆಯ ದಿನವೇ ವಾಪಸು ಬಂದಿರಿ. ನಿಮ್ಮ ನಾಸ್ತಾ ಆಗಿರದಿದ್ದರೆ… ಶ್ರೀನಿವಾಸನಲ್ಲೇ ಮುಗಿಸಿ ಬಂದಿದ್ದೇನೆ” ಎಂದು ನಾಗಪ್ಪ ಹೇಳಿದನಷ್ಟೇ: “ಹಾಗಾದರೆ ಒಂದೊಂದು ಕಪ್ಪು ಚಹಾ ತರಿಸುತ್ತೇನೆ. ನಿಮ್ಮ ನೆಪದಿಂದ ನನಗೂ ಸಿಕ್ಕೀತು,” ಎಂದು ಅಲ್ಲಿಂದಲೇ ತನ್ನ ಮಗಳ ಹೆಸರನ್ನು ಹಿಡಿದು ಕೂಗಿದಾಗ ಬಾಗಿಲಲ್ಲಿ ಬಂದು ನಿಂತ ತಮ್ಮನ ಹೆಂಡತಿಗೆ ಚಹ ಕಳಿಸಿಕೊಡುವಂತೆ ಕೇಳಿಕೊಂಡ. ಬಾಗಿಲಲ್ಲಿ ನಿಂತು ತನ್ನತ್ತಲೇ ನೋಡುತ್ತಿದ್ದಾಗ ಅವಳ ಮೋರೆಯ ಮೇಲೆ ಮೂಡಿದ ಭಾವಕ್ಕೆ ಅರ್ಥ ಹಚ್ಚುವ ಮನಸ್ಸಾಗಲಿಲ್ಲ ನಾಗಪ್ಪನಿಗೆ. ತುದಿಬುಡವಿಲ್ಲದೆ ಮಾತನಾಡುವ ಅರ್ಜುನರಾವನೊಡನೆ ಹರಟುವ ಉತ್ಸಾಹವಂತೂ ಅವನಿಗೆ ಎಳ್ಳಷ್ಟೂ ಇರಲಿಲ್ಲ. ಬರಿಯ ಬಾಯ್ತಿಂಡಿಯನ್ನು ತೀರಿಸಲೆಂದೇ ಮಾತನಾಡುವ ಈ ಸದ್ಗೃಹಸ್ಥನ ಆಸ್ಥೆಗಳೆಲ್ಲ ಮೇಲುಮೇಲಿನವು. ಆಳಕ್ಕೆ ಇಳಿದವನೇ ಅಲ್ಲ. ಈ ಮೂರೂ ಮಗ ! ಆದ್ದರಿಂದಲೇ ನಿರುಪದ್ರವಿ. ಯಾರೊಬ್ಬರ ಒಳಿತಿಗಾಗಿ ಶ್ರಮಿಸಿರಲಿಕ್ಕಿಲ್ಲ. ಆದರೆ ಕೆಡುಕನ್ನೂ ಇಚ್ಛಿಸಿದವನಲ್ಲ. ಮನಸ್ಸಿಲ್ಲದ ಮನಸ್ಸಿನಿಂದ, ಅದೇ ಬಂದು ತಲುಪಿದ ಬಿಸಿಬಿಸೀ ಚಹಕ್ಕೆ ತುಟಿ ಹಚ್ಚುತ್ತ ಅರ್ಜುನ್‌ರಾವನೊಡನೆ ಹರಟೆಹೊಡೆಯುವ ವಿಧಿಗೆ ತಲೆ ಒಡ್ಡಲು ಸಿದ್ಧನಾದ. ಕೆಲವೇ ಕ್ಷಣಗಳ ಮೊದಲು ನಿಷ್ಕಾರಣವಾಗಿ ತಲೆದೋರಿದ ಅಸ್ವಸ್ಥತೆ ಮಾಯವಾಗಿ ಬಿಗಿಗೊಂಡ ನರಗಳು ಸಡಿಲಾದಾಗ ಜೀವಕ್ಕೆ ಹಿತವೆನಿಸಹತ್ತಿತು. ಬಹುಶಃ ತನ್ನ ನರಗಳ ಆರೋಗ್ಯಕ್ಕೆ ಇಂಥ ಸಹವಾಸವೂ ಅಗತ್ಯವಾದದ್ದೇನೋ ಅನ್ನಿಸಿತು. +ಕೊನೆಗೊಮ್ಮೆ ಅರ್ಜುನ್‌ರಾವ ತನ್ನ ಮಾತಿನ ತಲಬನ್ನು ತೃಪ್ತಿಪಡಿಸಿಯೇ ಹೊರಟುಹೋದಮೇಲೆ ಬಟ್ಟೆ ಬದಲಿಸಿ ಬರೆಯಲು ಕೂತ. ವಹಿಯನ್ನು ತೆರೆಯುತ್ತಿರುವಾಗ ಇವರೆಲ್ಲ ಇದನ್ನು ನಾನು ಬರೆಯುತ್ತಿದ್ದ ಕಾದಂಬರಿ ಎಂದು ತಿಳಿದಿದ್ದಾರೆ ಎನ್ನುವದು ಲಕ್ಷ್ಯಕ್ಕೆ ಬಂದು, ‘ಎಲೈ ಒಂಬತ್ತಕ್ಕೆಹುಟ್ಟಿದ ನೀನೇ,’ ಎಂದು ಸಾಂಖ್ಯಭಾಷೆಯಲ್ಲಿ ವಹಿಯನ್ನೇ ಬೈದು, ನಕ್ಕ. +“ಟಿಪ್ಪಣಿ ಹದಿಮೂರು : ನನಗನ್ನಿಸುತ್ತದೆ : ಮನುಷ್ಯನ ಭಯದ ಹಲವಾರು ಮೂಲಗಳಲ್ಲಿ ಇದ್ದದ್ದನ್ನು ಕಳೆದುಕೊಳ್ಳುವ ಸಾಧ್ಯತೆಯೂ ಒಂದೇನೋ ಹನೇಹಳ್ಳೀಯ ಒಂದು ತೀರ ಬಡ ಕುಟುಂಬದಲ್ಲಿ ಹುಟ್ಟಿದ ನಾನು ಬದುಕಿನಲ್ಲಿ ಮುಂದೆ ಬರಬೇಕು ಎಂದು ನಡೆಸಿದ ಹೋರಾಟದ ಹುಮ್ಮಸ್ಸು ನೆನೆದರೇ ಮೈ ಜುಮ್ ಎನ್ನಿಸುವಂತಹದು. ಆದರೆ ಇಂದು, ಗಳಿಸಿದ ಸ್ಥಾನದಿಂದ ಕೆಳಗೆ ಇಳಿಯುವುದರ ಕಲ್ಪನೆಯೂ ನಡುಕ ಹುಟ್ಟಿಸುತ್ತದೆ. ನಮ್ಮ ನಮ್ಮ ಕ್ರಾಂತಿಕಾರಕತೆಯ ಬಿಸಿ ಕ್ರಮೇಣ ಕಡಿಮೆಯಾಗುವುದರ ಕಾರಣ ಕೂಡ ಇದೇ ಇರಬಹುದೇ ? ನನ್ನನ್ನು ಕಾಡುತ್ತಿದ್ದದ್ದು ನೌಕರಿಯನ್ನು ಕಳಕೊಳ್ಳುವ ಭಯವಲ್ಲ. ಯಾಕೆಂದರೆ ಹೊಟ್ಟೆಹೊರಕೊಳ್ಳಲು. ಉಪಜೀವಿಸಲು ಏನಾದರೊಂದನ್ನು ಮಾಡಿಕೊಂಡಿರುವ ಧೈರ್ಯ ನನಗಿದೆ. ಧೈಹಿಕ ಶ್ರಮಕ್ಕೆ ನಾನು ಎಂದೂ ಹಿಂದೆಗೆದವನಲ್ಲ, ಹಾಗಾದರೆ ನೌಕರಿಯ ಬಗ್ಗೆ ವಿಚಾರಮಾಡಿದಾಗಲೆಲ್ಲ ಕರುಳಲ್ಲಿ ಹುಟ್ಟುವ ನಡುಕಕ್ಕೆ ಅರ್ಥವೇನು ? ಸಮಾಜದ ಕಣ್ಣಿನಲ್ಲಿ ಕೆಳಗಿಳಿಯುವ ಭಯವೇ ? ಮನುಷ್ಯನ ಮನಸ್ಸಿನ ಸ್ವಾಸ್ಥ್ಯಕ್ಕೆ ಅವಶ್ಯಕವಾದ ಹಲವು ಸಂಗತಿಗಳಲ್ಲಿ ನಾವು ನಮಗರಿವಿಲ್ಲದೇನೇ ಬಯಸುವ ಸಾಮಾಜಿಕ ಮನ್ನಣೆಯೂ ಒಂದಾಗಿರಬಹುದೇ ? ಆಶ್ಚರ್‍ಯ : ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯ ಒಬ್ಬೊಬ್ಬರನ್ನೇ ನೆನೆದರೆ ಅಥವಾ ಈ ಚಾಳಿನವರನ್ನು, ನಮ್ಮ ಜಾತಿಯವರನ್ನು_ಉದಾಹರಣೆಗೆ ಈ ಅರ್ಜುನ್‌ರಾವನನ್ನು ಇಲ್ಲ ಶ್ರೀನಿವಾಸನನ್ನು ಕಣ್ಣಮುಂದೆ ನಿಲ್ಲಿಸಿಕೊಂಡರೆ ಇವರು ನನ್ನ ಬಗ್ಗೆ ಮಾಡಿಕೊಂಡಿರಬಹುದಾದ ಕಲ್ಪನೆಗಳಿಗೆ ನಾನು ದಾದು ಕೊಡಲಾರೆನೆನ್ನುವ ಧೈರ್ಯ ನನಗಿದೆ. ಆದರೆ ಹೀಗೆ ಕಣ್ಣಮುಂದೆ ಬಿಡಿಬಿಡಿಯಾಗಿ ನಿಂತ ಜೀವಂತ ವ್ಯಕ್ತಿಗಳನ್ನೇ ಮೀರಿನಿಂತ ಅಮೂರ್ತವಾದ ಶಕ್ತಿಯೊಂದು ನನ್ನನ್ನು ನಡುಗಿಸುತ್ತದೆ ಎನ್ನುವದು ಮಾತ್ರ ನಿಜ. ಫಿರೋಜ್, ಶ್ರೀನಿವಾಸರ ಭಯದ ಸ್ವರೂಪ ಕೂಡ ಇಂತಹದೇ ಆಗಿರಬೇಕು. ಅದಕ್ಕೆ ನಾನು ಮೂಲವಾಗಿರಬೇಕು. ಅಂತೆಯೇ ಈ ನಿರ್ಮೂಲನದ ಸಂಚು.” +ಫ್ರೊ, ನಾಗನಾಥ್ ಜಿಂದಾಬಾದ್ ! ನಾಗಪ್ಪಾ, ಒಂದೂ ಮಗನೇ, ಹೇಡಿತನವನ್ನು ಇಷ್ಟೊಂದು ನಯನಾಜೂಕಿನಿಂದ ಸಮರ್‍ಥಿಸಿಕೊಳ್ಳುವುದನ್ನು ಯಾರಿಂದ ಕಲಿತೆಯೋ, ನಿನ್ನ ಬೂರ್ಜ್ವಾ ಮನೋಧರ್ಮದ ಅಪ್ಪಟ ದಾಖಲೆಯಲ್ಲವೋ ಇದು : ಕಳಕೊಳ್ಳುವ ಭಯ ! ಹೆದರ್ಪುಕ್ಕಾ, ಬರೇ ಅವಿತುಕೊಳ್ಳುವ ತಾಣ ಹುಡುಕುತ್ತ ಓಡುತ್ತಿರಬೇಡ. ಎಲ್ಲ ಪರಾರಿಗೂ ಕೊನೆಯೆಂಬುದಿರಬೇಕು. ಒಮ್ಮೆಯಾದರೂ ಸ್ವಸ್ಥಾನಕ್ಕೆ ಮರಳುವ ಧೈರ್ಯ ಮಾಡಬೇಕಪ್ಪಾ, ನಾಗಪ್ಪಾ, ರಾತ್ರಿ ಮಾಡಿಕೊಂಡ ನಿರ್ಧಾರವನ್ನು ದಿನಬೆಳಗಾಗುವುದರಲ್ಲಿ ಹೀಗೆ ಸಡಿಲುಗೊಳ್ಳಲು ಬಿಡಬಾರದು. ಬಿಗಿ ಹಿಡಿ ಬಿಗಿಯಾಗು. ಗಟ್ಟಿಯಾಗು. ಕವಚಕುಂಡಲಗಳನ್ನು ಕಳಚು. ನೀನೇ ನಿನ್ನ ಸುತ್ತ ಬೆಳೆಯಿಸಿಕೊಂಡ ಚಿಪ್ಪನೊಡೆದು ಹೊರಕ್ಕೆ ಬರಬೇಕು. ತೆರೆ. ತೆರೆದುಕೋ… +uಟಿಜeಜಿiಟಿeಜ +– ಅಧ್ಯಾಯ ಹನ್ನೆರಡು – +ನಸುಕಿನಲ್ಲಿ, ಬೆಳಕು ಹರಿಯುವ ಮೊದಲೇ ನಾಗಪ್ಪ ಬರೆಯಲು ಕೂತಿದ್ದ. ಬೆಳನ ಜಾವದ ಈ ಮುಹೂರ್ತವೊಂದೇ ತನ್ನ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು ಎನ್ನುವ ಅನುಭವ ನಾಗಪ್ಪನಿಗೆ ಅನೇಕ ಸರತಿ ಬಂದಿದೆ. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ_ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಆಳದ ಭಾಗ ತನ್ನ ಮಟ್ಟಿಗಂತೂ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆಯೆಂದು ಮತ್ತೆ ಮತ್ತೆ ಅನ್ನಿಸಿದೆ. ಸೃಷ್ಟಿಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು ಎನ್ನುವ ಅನ್ನಿಸಿಕೆ ಸ್ವಂತ ಅನುಭವದಲ್ಲೇ ಹುಟ್ಟಿದ್ದು : ಕಾರ್ಲ ಯುಂಗನನ್ನು ಓದಿಕೊಂಡದ್ದರಿಂದಷ್ಟೇ ಅಲ್ಲ. ಬರವಣಿಗೆಯಂತೆ ಓದು ಕೂಡ ಸೃಷ್ಠ್ಯಾತ್ಮಕ ಕ್ರಿಯೆಯೇ. ಅದೇನೇ ಇದ್ದರೂ ಮನುಷ್ಯನಿಗೆ ತನ್ನ ಮನಸ್ಸಿನ ಆರೋಗ್ಯಕ್ಕೆ, ತನ್ಮೂಲಕ ಹುಟ್ಟುವ ಅವನ ಕ್ರಿಯೆಯ ಆರೋಗ್ಯಕ್ಕೆ ಮನಸ್ಸಿನ ಈ ಕೇಂದ್ರದ ಸಂಪರ್ಕ ಅತ್ಯಾವಶ್ಯಕ ಎಂಬ ಅನ್ನಿಸಿಕೆ ಕೂಡ ನಾಗಪ್ಪನ ಅನುಭವದಲ್ಲೇ ಹುಟ್ಟಿದ್ದು : +“ಟಿಪ್ಪಣೆ ಹದಿನಾಲ್ಕು : ಮನಸ್ಸಿನ ಈ ಕೇಂದ್ರಕ್ಕೆ ಜೀವವಿಕಾಸದ ದೀರ್ಘಕಾಲದ ಇತಿಹಾಸದಲ್ಲಿ ಹುಟ್ಟಿಕೊಂಡ ಪ್ರವೃತ್ತಿ-ಬಲವಿದೆ. ಹಗೆಯ ವಿರುದ್ಧ ಹೋರಾಡುವ, ಜೀವ ರಕ್ಷಿಸಿಕೊಳ್ಳುವ ಪ್ರಾಣಿಗಳ ನೈಸರ್ಗಿಕ ಜಾಣತನದಂತೆಯೇ ಮನುಷ್ಯನಿಗೇ ವಿಶಿಷ್ಟವಾದ ಸೃಜನಶೀಲತೆ, ನೈತಿಕತೆ ಇವು ಕೂಡ ಈ ಕೇಂದ್ರದಲ್ಲೇ ಜನಿಸಿದವುಗಳು. ಮನುಷ್ಯನ ಸಾಮಾಜಿಕ ಜೀವನದಲ್ಲಿಯ ಇಂದಿನ ಅಧೋಗತಿಗೆ ಮುಖ್ಯ ಕಾರಣ ಇದೇ ಎಂದು ನನ್ನ ನಂಬಿಕೆ : ಈ ಸೃಷ್ಟಿಗೆ ಮೂಲವಾದ, ನೀತಿಗೆ ಮೂಲವಾದ ಈ ಪ್ರವೃತ್ತಿ-ಬಲವಿದ್ದ ಮನಸ್ಸಿನ ಕೇಂದ್ರದ ಸಂಪರ್ಕ ಕಳಕೊಂಡದ್ದು. ಇಂದಿನ ರಾಜಕಾರಣಿ ಈ ದುರಂತಕ್ಕೆ ಒಳ್ಳೆಯ ದೃಷ್ಟಾಂತ : ರಾಜಕಾರಣದ ಭ್ರಷ್ಟಾಚಾರದ ಮೂಲ ಹುಡುಕಬೇಕಾದರೆ ಆಧುನಿಕ ಔದ್ಯೋಗೀಕರಣದಿಂದಾಗಿ ಒದಗಿದ ಸೃಜನಶೀಲತೆಯ, ಆದ್ದರಿಂದಲೇ ನೈತಿಕತೆಯ, ನಷ್ಟಕ್ಕೇ ಬರಬೇಕು. ಒಂದು ದಿನ ಇದೆಲ್ಲವನ್ನು ಕುರಿತು ಒಂದು ದೀರ್ಘಲೇಖನ ಬರೆಯಬೇಕು. ಹುಬ್ಬಳ್ಳಿಯ ಸಣ್ಣ ಪತ್ರಿಕೆಯ ಸಂಪಾದಕನ ಸಣ್ಣ ಮನಸ್ಸಿನ ಬರವಣಿಗೆಗೆ ಸಮರ್ಪಕವಾದ ಉತ್ತರವಾದೀತು.” +ರಸ್ತೆಯ ಬದಿಯ ಬೋಳು-ಕಿಡಕಿಯಿಂದ ಕಾಣುವ ದೃಶ್ಯ ನಿತ್ಯ ಪರಿಚಯ ಆದರೂ ಹೊತ್ತಾರೆ ಅದೇ ಕಣ್ಣು ಬಿಡುತ್ತಿದ್ದ ತಂಪು ಬೆಳಕಿನಲ್ಲಿ ಪ್ರತಿ ಸರತಿ ಹೊಸದಾಗಿಯೇ ಕಂಡಿದೆ. ಹೊಸತನ ಬರೇ ಹೊರಗಿನ ದೃಶ್ಯದ್ದಲ್ಲ ತಾನೆ ! ತನ್ನ ಮಟ್ಟಿಗಂತೂ ನೋಡುವ ದೃಷ್ಟಿಗೂ ಈ ನಸುಕಿನ ಬೆಳಕು ತಂಪುಗಳಿಗೂ ಅನ್ಯೋನ್ಯ ಸಂಬಂಧವಿದೆ : ಇದಿರಿನಲ್ಲೇ ನಾಲ್ಕು ಮಜಲುಗಳ ಚಾಳು. ಅದರಲ್ಲಿ ಪಾರಿವಾಳದ ಗೂಡುಗಳಂತಹ ಎರಡೆರಡು ಕೋಣೆಗಳ ಮನೆಗಳು. (ಕಿಡಕಿಯ ಬಳಿ ನಿಂತರೆ ಕಿವಿತುಂಬುವ ಪಾರಿವಾಳಗಳ ಗುಟುರು : ಮೂಗನ್ನಡರುವ ಅವುಗಳ ಹೇಲಿನ ವಾಸನೆ ಇವುಗಳಿಂದಾಗಿಯೇ ಪಾರಿವಾಳಗಳ ಗೂಡು ನೆನಪಿಗೆ ಬಂದಿರಬಹುದೆ ?) ಅವುಗಳಲ್ಲಿ ಗಿಜಿಗುಡುವ ಜನಸಮುದಾಯ : ಆಗೀಗ ಕಿಡಕಿಯ ಹತ್ತಿರ ಬಂದು ಫಕ್ ಎಂದು ಪರಿಚಯದ ನಗು ಮೂಡಿಸುವ ಮುಖಗಳು : ನಗುವಾಗ ಹೊಳಪು ಮಿಂಚಿಸುವ ಹೆಣ್ಣು ಕಣ್ಣುಗಳು ! ತಳ ಮಜಲೆಯಲ್ಲಿ ಭೈಯಾನ ಹಾಲು ಮಾರುವ ಅಂಗಡಿ ; ತೆರೆದಷ್ಟೇ ಶೇಗಡಿಯ ಉರಿಯುವ ಕೆಂಡಗಳ ಮೇಲೆ ಕಾವಲಿಗೆಯಲ್ಲಿ ಕಾಯುತ್ತ ಕೆನೆಗಟ್ಟುವ ಹಾಲು. ಬದಿಯ ಅಂಗಡಿಯಲ್ಲಿ ಗೆಜ್ಜೆ ಗಿಲಿಗಿಲಿಸುತ್ತ, ಹಾಡುತ್ತ ಬೆವರು ಸುರಿಸುತ್ತ, ಕಬ್ಬಿನ ಹಾಲು ಅರೆಯುವ ಮರಾಠಾ ಗಾಣಿಗ. ಇವೆಲ್ಲವುಗಳ ಆಚೆ, ನೋಡಿದ ಪ್ರತಿಸಲ ತನಗೇ ಅರ್ಥವಾಗಿರದ ಮಾಂತ್ರಿಕಬಲದಿಂದ ಕಾಡಿದ_ಕಮ್ಮಾರನ ಶೆಡ್ಡಿನಲ್ಲಿ_ಧಗಧಗ ಕಾದ ಕಬ್ಬಿಣದ ಕಿಡಿ ಕಾರುವ ಕೆಂಪು ಜ್ವಾಲೆ : ನಾಗಪ್ಪನ ದೃಷ್ಟಿ ಅರಿವಾಗುವ ಮೊದಲೇ, ಧಗಧಗನೆ ಕಾಯುವ, ಮೆತ್ತಗಾಗುವ ಲೋಹದ ಮೇಲೇ ಊರಿದಾಗ ಜೀವದ ಆಳದಲ್ಲಿ ಮಾತಿಗೆ ನಿಲುಕದ ಭಾವನೆಗಳು ಹುಟ್ಟುತ್ತಿದ್ದವು. ಮುಂದಿನ ನೋಟಕ್ಕೆ ಹಳ್ಳಿಯ ಮೆರಗು ತಂದ ಅಶ್ವತ್ಥದ ಗಿಡವೊಂದೇ ಮಾನವ ನಿರ್ಮಿತ ನಿರ್ಜೀವ ಅವ್ಯವಸ್ಥೆಯ ನಡುವೆ ತಲೆ ಎತ್ತಿ ನಿಂತ ಜೀವಕಳೆಯ ಕುರುಹಾಗಿತ್ತು. ನೇಸರು ಮೇಲೆ ಬಂದೊಡನೆ ಅದರ ಎಳೆಬಿಸಿಲಲ್ಲಿ ತನ್ನ ಆಂತರ್ಯದ ಹಸಿರನ್ನೆಲ್ಲ ಹೊರಚೆಲ್ಲುವ ಅಲೌಕಿಕ ಮುಹೂರ್ತನನ್ನೇ ಕಾಯುತ್ತ, ಈಗ, ಕಪ್ಪು ಮೌನದಲ್ಲಿ ನಿಂತ ಆ ಗಿಡ ನಾಗಪ್ಪನಿಗೆ ಬಹಳ ಪ್ರಿಯವಾದದ್ದು. ಮರವನ್ನೇ ನೋಡುತ್ತ ನಿಂತಾಗ ಮನಸ್ಸಿನ ಮೂಲೆಯಲ್ಲಿ ಟಿಪ್ಪಣೆಯೊಂದು ಮೂಡಹತ್ತಿತು : ಆಮೇಲೆ ಬರೆದಿಡಬೇಕು ಎಂದುಕೊಂಡ : ‘ಊರೇ ಉರಿಯುತ್ತಿರುವಾಗ ಗುಲಾಬಿ ಗಿಡದ ಮೇಲೆ ಕವಿತೆ ಬರೆಯುವುದು ಮೂರ್ಖತನವೇನೋ (ಹಾಗೆ ನೋಡಿದರೆ ಕವಿತೆ ಬರೆಯುವುದೇ !) ಆದರೆ ಊರಿಗೆ ಬೆಂಕಿ ಏಕೆ ಹತ್ತಿತು ಎಂಬ ಮೂಲಭೂತ ಪ್ರಶ್ನೆಗೆ ಬಂದಾಗ ಮಾತ್ರ ಗುಲಾಬಿ ಗಿಡವನ್ನು ಮನುಷ್ಯ ಪ್ರೀತಿಸುವುದನ್ನೇ ಮರೆತದ್ದರಿಂದ ಎಂದು ಹೊಳೆಯದೇ ಇರದು,’ ಮನುಷ್ಯ ನಿಸರ್ಗವನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ಹತ್ತಿದ ರೀತಿಯಿಂದಾಗಿ ಕಳೆದ ನಾಲ್ಕು ಶತಮಾನಗಳಲ್ಲಿ ನಾವು ನಮ್ಮನ್ನೇ ನೋಡುವ ದೃಷ್ಟಿ ಕೂಡ : ಮುಂಬಯಿಯಂಥ ನಗರಗಳಲ್ಲಂತೂ ದೇವರು ಹುಟ್ಟಿಸಿದ ಸೃಷ್ಟಿ ಕಣ್ಣಿಗೆ ಬೀಳುವುದೇ ಕಷ್ಟವಾಗಿದೆ. ಎಲ್ಲೆಲ್ಲೂ ಇಂದಿನ ಮಾನವ, ತಾನೇ ತನ್ನ ಅಹಂಕಾರದ ಮೇಲೆ, ಸ್ವಾರ್ಥದ ಮೇಲೆ, ನಿಲ್ಲಿಸಿದ ನಿರ್ಜೀವ ವಸ್ತುಗಳಿಂದಲೇ ಸುತ್ತುವರಿಯಲ್ಪಟ್ಟಿದ್ದಾನೆ. ಆದ್ದರಿಂದಲೇ ತನ್ನೊಬ್ಬನ ಸ್ವಾರ್ಥಕ್ಕಾಗಿ ಉಳಿದವರನ್ನೂ_ಅವರೂ ನಿರ್ಜೀವ ವಸ್ತುಗಳೆ ಎನ್ನುವ ಹಾಗೆ_ಉಪಯೋಗಿಸಿಕೊಳ್ಳಲು ತೊಡಗಿದ್ದಾನೆ… +ಬರೆಯುವ ಮೂಡಿಗೆ ಬರುವ ಉದ್ದೇಶದಿಂದ ಕಿಡಕಿಯ ಹತ್ತಿರ ಬಂದು ನಿಂತರೆ ತನಗೇ ಅರಿವಾಗದಂತೆ ಮನಸ್ಸಿನ ಆಜ್ಞಾತಕೇಂದ್ರವೊಂದು ಫಿರೋಜ್ ನಡೆಸಲಿದ್ದ ವಿಚಾರಣೆಯನ್ನು ಕುರಿತೇ ಧೇನಿಸುತ್ತಿದ್ದಂತಿತ್ತು : ತನಗೂ ಕಾರಖಾನೆಯಲ್ಲಿ ನಡೆದ ಅಪಘಾತಕ್ಕೂ ಸಂಬಂಧ ! ನಂಬುವ ಮಾತೆ ? ಅದು ಘಟಿಸಿದಾಗ ತಾನು ಹೈದ್ರಾಬಾದಿನಲ್ಲೇ ಇದ್ದಿರಲಿಲ್ಲ. ಮುಂಬಯಿಯ ಮುಖ್ಯ ಕಚೇರಿಗೆ ವರ್ಗವಾಗಿ ಆಗಲೇ ಮೂರು ತಿಂಗಳ ಮೇಲಾಗಿತ್ತು. ನಾಗಪ್ಪನ ಮೋರೆಯ ಮೇಲೆ ಅಪನಂಬಿಕೆಯ ಮುಗುಳುನಗೆ ಮೂಡಿತು. ಅದರ ಗರ್ಭದಲ್ಲೇ ಬಿಗಿದ ಮುಷ್ಟಿಯನ್ನು ಬಿಚ್ಚಿದ ಆತಂಕ : ಎಲ್ಲ ಬಿಟ್ಟು ಈ ಅಪಘಾತದಲ್ಲೇ ತನ್ನನ್ನು ಸಿಲುಕಿಸುವ ಉದ್ದೇಶವೇನು ? ಅದೂ ಈಗ ? ಸರಕಾರೀ ವಿಚಾರಣೆ ಮುಗಿದು ಮೃತರ ಕುಟುಂಬಗಳಿಗೆ ತಮ್ಮ ಕಂಪನಿಯಿಂದ, ಇನ್ಶೂರೆನ್ಸ್ ಕಂಪನಿಯಿಂದ ಸಿಗಬೇಕಾದ ಕಾಂಪನ್ಸೇಶನ್ ಕೂಡ ಕೊಡಿಸಿಯಾದ ಮೇಲೆ ! ಈ ಅಪಘಾತದಲ್ಲಿ ಯಾವುದೇ ದುಷ್ಟ ಒಳಸಂಚಾಗಲೀ, ಕಂಪನಿಯವರ ಅಜಾಗರೂಕತೆಯಾಗಲೀ, ಇರಲಿಲ್ಲ ಎಂಬಂತೆ ಫ್ಯಾಕ್ಟರಿ ಇನ್ಸ್ಪೆಕ್ಟರರೇ ಕೊಟ್ಟ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾದ ಮೇಲೆ ! ಅಪಘಾತಕ್ಕೆ ಕಾರಣವಾದದ್ದರಲ್ಲಿ ಕಂಪನಿಯವರ ಅಜಾಗರೂಕತೆಯ ಸಮಾವೇಶವಿಲ್ಲ ಎನ್ನುವುದರಲ್ಲಿ ನಾಗಪ್ಪನಿಗೆ ಮಾತ್ರ ಎಳ್ಳಷ್ಟೂ ವಿಶ್ವಾಸವಿರಲಿಲ್ಲ ; ವಿಶ್ವಾಸ ಇರಲಿಲ್ಲ ಎನ್ನುವುದು ಕಂಪನಿಯಲ್ಲಿ ಅನೇಕರಿಗೆ ಗೊತ್ತಿತ್ತು. +ಮಿಥಾಯ್ಲ್ ಇಥಾಯ್ಲ್ ಕೀಟೋನ್‌ನಿಂದ ಪೆರೋಕ್ಸಾಯ್ಡ್ ತಯಾರಿಸುವ ವಿಭಾಗದಲ್ಲಿ ನಡೆದ ಅನಾಹುತವಿದು.ಈ ಪೆರೋಕ್ಸಾಯ್ಡ್‌ದ ಉತ್ಪಾದನೆ ಇರಲಿ ಅದರ ಶೇಖರಣೆ ಹಾಗು ಸಾಗಾಟ ಕೂಡ ತುಂಬ ಗಂಡಾಂತರದ್ದು. ಯಾಕೆಂದರೆ, ಇದರ ಆಸ್ಪೋಟನಕ್ಕೆ ಬೆಂಕಿಯ ಸ್ಪರ್ಶವೇ ಬೇಕೆಂದಿಲ್ಲ. ಘರ್ಷಣೆಯಿಂದ ಇಲ್ಲವೇ ಒಮ್ಮೆಲೇ ಆದ ಅಪಘಾತದಿಂದ ತನ್ನಷಕ್ಕೇ ಸ್ಪೋಟಗೊಳ್ಳಬಹುದು. ಇದು ಈ ವಿಭಾಗದ ತಾಂತ್ರಿಕ ಅಧಿಕಾರಿಗಳಿಗೆ ಗೊತ್ತಿದ್ದೂ ಅಲ್ಲಿಯ ಕೆಲಸಗಾರರಿಗೆ ಈ ವಿಷಯದಲ್ಲಿ ಸಾಕಾಷ್ಟು ತರಬೇತಿಯನ್ನು ಕೊಟ್ಟಿರಲಿಲ್ಲ. ಪೆರೋಕ್ಸಾಯ್ಡ್ ಯಾವ ಒಂದು ಉಪಯೋಗಕ್ಕಾಗಿ ಮಾರಾಟವಾಗುತ್ತಿತ್ತೋ ಆ ಉಪಯೋಗಕ್ಕೆ ಸಾಕಷ್ಟು ನಿರುಪದ್ರವಿಯಾಗುವ ಹಾಗೆ ಥೆಲೇಟ್ ಪ್ಲೆಸ್ಟಿಸೈಝರಿನೊಂದಿಗೆ ಬೆರೆಸಿ, ಸ್ಪೋಟದ ಭಯ ಆದಷ್ಟು ಕಡಿಮೆಯಾಗಲೆಂದು ಪೋಲೀ‌ಎಥಿಲೀನದ ಬಾಟಲಿಗಳಲ್ಲಿ, ಕಾರ್‍ಬೊಯ್ಸ್‌ಗಳಲ್ಲಿತುಂಬಿಡುತ್ತಿದ್ದರು. ಪ್ಲೆಸ್ಟೀಸೈಝರಿನಿಂದ ಕ್ರಮೇಣ ಮುಕ್ತವಾದ ಪೆರೋಕ್ಸಾಯ್ಡ್ ವಾಯುವಿನ ಒತ್ತಡ ಒಳಗೆ ಬೆಳೆಯದ ಹಾಗೆ ಈ ಬಾಟಲಿ ರಚನೆ ಇರುತ್ತದೆ. ಹೀಗೆ ತುಂಬಿದ ಕಾರ್‍ಬೊಯ್ಸ್ ಹಾಗೂ ದೊಡ್ಡ ಬಾಟಲಿಗಳನ್ನು ಕಾರಖಾನೆ ಮುಖ್ಯ ಕಟ್ಟಡಗಳಿಂದ ದೂರವಾದ ಒಂದು ಜಾಗದಲ್ಲಿ ಸಿಮೆಂಟ್ ಕಾಂಕ್ರೀಟಿನಲ್ಲಿ ಕಟ್ಟಿಸಿದ ನೆಲಮನೆಯಲ್ಲಿ ಶೇಖರಿಸಿಡುತ್ತಾರೆ. ಗ್ರಾಹಕರಿಂದ ಆರ್ಡರ್ ಬಂದಾಗ ಅವು ಈ ನೆಲಮನೆಯಿಂದಲೇ ರವಾನೆಯಾಗುತ್ತವೆ. ಈ ವಿಷಯದಲ್ಲಿ ಕಾರಖಾನೆಯ ಅ ಟೆಕ್‌ನಿಕಲ್ ಮ್ಯಾನೇಜರ್ ಹಾಗೂ ಫ್ಯಾಕ್ಟರೀ ಮ್ಯಾನೇಜರರು ಸಾಕಷ್ಟು ಜಾಗರೂಕತೆಯನ್ನು ತೆಗೆದುಕೊಂಡಿದ್ದರು. ಆದರೆ ಈ ಜಾಗರೂಕತೆ ಹೆಚ್ಚಾಗಿ ಕಾರಖಾನೆಯ ಆಸ್ತಿಯನ್ನು ರಕ್ಷಿಸುವುದರ ಬಗ್ಗೆ ಆಗಿತ್ತೇ ಹೊರತು ಆ ವಿಭಾಗದಲ್ಲಿ ಕೆಲಸ ಮಾಡುವ ಕಾರ್‍ಮಿಕರ ಆರೋಗ್ಯ ಹಾಗೂ ಜೀವರಕ್ಷಣೆಯ ಬಗ್ಗೆ ಆಗಿರಲಿಲ್ಲ. ನಾಗಪ್ಪ ತನ್ನ ದುಗುಡ, ಅಸಮಧಾನಗಳನ್ನು ಅನೇಕ ಸಂದರ್ಭಗಳಲ್ಲಿ ತನ್ನ ಸಹೋದ್ಯೋಗಿಗಳ ಇದಿರು ವ್ಯಕ್ತಪಡಿಸಿದ್ದ : ಸಂಬಂಧಪಟ್ಟ ಮೇಲಾಧಿಕಾರಿಗಳು ಇವನ ಅಸಮಾಧಾನವನ್ನು ಕಿವಿಯಲ್ಲಿ ಹಾಕಿಕೊಳ್ಳುವ ಬದಲು ಇವನ ಬಾಯನ್ನೇ ಮುಚ್ಚುವ ಪ್ರಯತ್ನ ಮಾಡಿದ್ದರು. ಪ್ರಕರಣ ಡಿ.ಎಮ್.ಡಿ.ಅವರ ತನಕ ಹೋದಾಗ ನಿನಗೆ ಸಂಬಂಧವಿಲ್ಲದ ವಿಷಯಗಳಲ್ಲಿ ನಿನ್ನ ಹೊಲಸು ಬಾಯಿ ತೆರೆಯಬೇಡ ಎಂದು ಇವನನ್ನೇ ಗದರಿಸಿದ್ದರು. +ತಂತ್ರ ವಿಜ್ಞಾನದ ಪ್ರಾವೀಣ್ಯದಲ್ಲಿ ನಾಗಪ್ಪನನ್ನು ಸರಿಗಟ್ಟುವ ಇನ್ನೊಬ್ಬ ಇಡೀ ಕಾರಖಾನೆಯಲ್ಲೇ ಇಲ್ಲ ಎನ್ನುವ ಪ್ರತೀತಿ ಇದ್ದರೂನೂ ಈತ ತುಂಬಾ ಭಾವನಾಪ್ರಧಾನಿಯಾದವನು. ವ್ಯವಹಾರಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೊಂದು ಮೇಲಿನ ಅಧಿಕಾರಿಗಳಲ್ಲಿ ನೆಲೆಗೊಂಡಿತ್ತು. ಇವನು ವ್ಯಕ್ತಪಡಿಸಿದ ಭಯಗಳು ಕಾರ್ಮಿಕರ ಸಂಘದ ಪದಾಧಿಕಾರಿಗಳ ಕಿವಿಗೆ ಮುಟ್ಟಿದರಂತೂ ಅವರಿಂದಾಗಿ ಉದ್ಭವಿಸಬಹುದಾದ ತೊಂದೆರಗಳ ಕಲ್ಪನೆಯಿದ್ದ ಮ್ಯಾನೇಜ್‌ಮೆಂಟ್‌ಗೆ ಇವನ ‘ಧಡ್ಡತನದ ಅಧಿಕಪ್ರಸಂಗ’ ಸೇರದೇ ಇದ್ದದ್ದು ಸಹಜವಿತ್ತು. ಆದರೆ ನಾಗಪ್ಪನ ದೃಷ್ಟಿಯಲ್ಲಿ ಕಾರ್ಮಿಕರ ಜೀವಕ್ಕೆ ಅಪಾಯ ತರುವಂತೆ ಕೆಲಸ ಮಾಡುವ ರೀತಿ ಅನಿವಾರ್ಯವಾಗಿದ್ದಾಗಿರದೆ ಡಿ. ಎಮ್. ಡಿ ಹಾಗೂ ಅವರ ಚೇಲಾರ ತಿಳಿಗೇಡಿತನದ ಮೇಲೆ ನಿಂತದ್ದಾಗಿತ್ತು. ಇಂಗ್ಲೆಂಡ್, ಜರ್ಮನಿ ಹಾಗೂ ಅಮೇರಿಕೆಗಳಲ್ಲಿ ಇಂತಹ ಪೆರೋಕ್ಸಾಯಿಡ್ ವಿಷಯದಲ್ಲಿ ವಹಿಸಬೇಕಾದ ಎಚ್ಚರಿಕೆಯ ಉಪಾಯಗಳ ಬಗ್ಗೆ ಬರೆದ ಮೆನ್ಯು‌ಅಲ್ಸ್‌ಗಳನ್ನು ತರಿಸಿ ಅವುಗಳನ್ನು ಡಿ. ಎಮ್. ಡಿ. ಹಾಗೂ ಎಮ್. ಡಿ. ಇಬ್ಬರಿಗೂ ಕಳಿಸಿದ್ದ, ಕಳಿಸಿದ್ದನಷ್ಟೇ ಅಲ್ಲ. ಹಾಗೆ ಕಳಿಸಿದ್ದೇನೆ ಎನ್ನುವುದನ್ನು ನಮೂದಿಸಿ ಟಾಯಿಪ್ ಮಾಡಿದ ಮೆಮೋಗಳ ಜೆತೆ ಕಳಿಸಿದ್ದ. ಅದು ಕೈಗೆ ಸಿಕ್ಕ ದಿನ ಡಿ. ಎಮ್. ಡಿ. ಯವರ ಅವತಾರ ನೋಡುವ ಹಾಗಿತ್ತು : ತನ್ನನ್ನು ತಮ್ಮ ಕೆಬಿನ್ನಿಗೆ ಕರೆದು ಸಿಟ್ಟಿನಿಂದ ಬೈದ ರೀತಿಯನ್ನು ನೆನೆಯಲೂ ನಾಗಪ್ಪ ಹಿಂದೆಗೆಯುತ್ತಾನೆ. ತನ್ನ ಮೆಮೋ ನೇರವಾಗಿ ಎಂ. ಡಿ. ಅವರಿಗೇ ಬರೆದದ್ದಾಗಿತ್ತು. ಎನ್ನುವುದು ಆ‌ಒ‌ಆ ಅವರ ಸಿಟ್ಟಿಗೆ ಕಾರಣವಾದಂತಿತ್ತು : “ಆoಟಿ’ಣ ಣಡಿಥಿ ಣo be ಣoo smಚಿಡಿಣ. ಙou ಡಿeಠಿoಡಿಣ ಣo me ಚಿಟಿಜ ಟಿoಣ ಣo ಣhe ಒ‌ಆ. ಖemembeಡಿ ಣhಚಿಣ.”_ ಫಿರೋಜ್ ಗರ್ಜಿಸಿದ್ದ. ಆದರೆ ಪ್ರಕರಣ ಅಷ್ಟಕ್ಕೇ ಮುಗಿಯಲಿಲ್ಲ. ಫಿರೋಜ್ ಈತನನ್ನು ಬೈದು ಕಳಿಸಿದ್ದರ ಸುದ್ದಿ ಕಾರಖಾನೆಯ ತುಂಬ ಹರಡಿತು. ಅದು ಮೊದಲೇ ಸಿದ್ದವಾದ ಪಿತೂರಿಯ ಅಂಗವಾಗಿತ್ತು. ಸ್ವತಃ ಫ್ಯಾಕ್ಟರಿ ಮ್ಯಾನೇಜರರೇ ಈ ಸುದ್ದಿಗೆ ಕಾರಣವಾಗಿದ್ದರು ಎನ್ನುವದು ನಾಗಪ್ಪನಿಗೆ ತಿಳಿದದ್ದು ತೀರ ತಡವಾಗಿ. ತುಂಬ ನೊಂದುಕೊಂಡ : ಕಾರಖಾನೆಯ ಆಫೀಸರರಿಂದ ಹಿಡಿದು ಚೌಕೀದಾರ, ಪೇದೆಗಳು, ಎಲ್ಲ ತರಗತಿಯ ಕಾಮಗಾರರವರೆಗೆ ಖ&ಆ ಮ್ಯಾನೇಜರರು ಆ‌ಒ‌ಆ ಯವರಿಂದ ಚೆನ್ನಾಗಿ ಗದರಿಕೊಂಡರಂತೆ ಎನ್ನುವಂತಹ ಸುದ್ದಿ ಹರಡಿದ ಕೆಲವು ದಿನ ಫ್ಯಾಕ್ಟರಿಯಲ್ಲಿ ತಲೆ ಎತ್ತಿ ನಡೆಯುವುದೇ ಕಷ್ಟವಾಯಿತು. ನಾಗಪ್ಪನ ಸೂಕ್ಷ್ಮಮತಿಗೆ ಪೆಟ್ಟು ತಗಲಿದ್ದು ತನ್ನ ಬಗ್ಗೆ ಇವರೆಲ್ಲರಿಗೆ ತುಂಬ ಆದರ ಅಭಿಮಾನಗಳಿವೆ ಎಂದು ಬಗೆದ ಎಡ್ಮಿನಿಸ್ಟ್ರೇಟಿವ್ ಆಫೀಸಿನೊಳಗಿನ ಹುಡುಗಿಯರು ಕೂಡ ತನ್ನತ್ತ ವಿಚಿತ್ರವಾಗಿ ನೋಡಿ ಒಳಗೊಳಗೇ ನಗುತ್ತಾರೆ ಎಂಬ ಭಾವನೆ ಹುಟ್ಟಿದಾಗ ಟೆಲಿಫೋನ್ ಆಪರೇಟರ್ ರೀನಾ ಒಬ್ಬಳು ಮಾತ್ರ ಇದಕ್ಕೆಲ್ಲ ಅಪವಾದವಾಗಿದ್ದಳು : ಒಂದು ದಿನ ಬೆಳಿಗ್ಗೆ ಇಂಟರ್‍ಕಾಮಿನ ಮೇಲೆ : ‘ಆoಟಿ’ಣ ತಿoಡಿಡಿಥಿ ಞeeಠಿ ಥಿouಡಿ ಛಿooಟ ಚಿಟಿಜ ಞeeಠಿ smiಟಟiಟಿg. ಇveಡಿಥಿಣhiಟಿg ತಿiಟಟ be ಚಿಟಟ ಡಿighಣ” ಎಂದಿದ್ದಳು. ತೀರ ಅನಿರೀಕ್ಷಿತವಾಗಿ ಬಂದ ಈ ಆತ್ಮೀಯ ಮಾತುಗಳಿಂದ ನಾಗಪ್ಪನ ಕಣ್ಣು ತೇವಗೊಂದು ದನಿ ಗದ್ಗದಿತವಾಗಿತ್ತು. ಇದಿರಿನ ಕುರ್ಚಿಯಲ್ಲಿ ಅದೇ ಬಂದು ಕುಳಿತ ಜಲಾಲ್ ಹುಸೇನ ತನ್ನನ್ನೇ ನೋಡುತ್ತಿದ್ದಾನೆ ಎಂಬುದರ ಪರಿವೆ ಮಾಡದೇನೇ : “ಖಿhಚಿಟಿಞ ಥಿou, ಖiಟಿಚಿ. ಖಿhಚಿಟಿಞ ಥಿou so muಛಿh. Iಣ is so sತಿeeಣ oಜಿ ಥಿou ಚಿಟಿಜ I ಟಿeeಜ ಥಿouಡಿ….” I ಟಿeeಜ ಥಿouಡಿ gooಜ ತಿishes ಎನ್ನುವುದರಲ್ಲಿದ್ದ ನಾಗಪ್ಪನ ವಾಕ್ಯ ಅರ್ಧಕ್ಕೇ ಉಳಿದಿತ್ತು. ಬಹುಶಃ ಅದೇ ಆಗ ಆ‌ಒ‌ಆ ಆಫೀಸು ಹೊಕ್ಕಿರಬೇಕು ಇಲ್ಲ ಟೆಲಿಫೋನ್ ಕರೆ ಬಂದಿರಬೇಕು : ರೀನಾ ಇಂಟರ್‍ಕಾಮ್ ಕೆಳಗೆ ಇಟ್ಟುಬಿಟ್ಟಿದ್ದಳು. ನಾಗಪ್ಪನಿಗೂ ರಿಸೀವರ್ ಕೆಳಗಿಡುವಾಗ ತನ್ನ ವಾಕ್ಯ ಪೂರ್ತಿಯಾಗದೇ ಉಳಿದದ್ದಕ್ಕೆ ಕೆಡುಕೆನಿಸಿದರೂ ಒಂದು ಬಗೆಯ ಉತ್ಸಾಹ ಅವನ ಮೋರೆಯ ಮೇಲೆ ಸ್ಪಷ್ಟವಾಗಿ ಮೂಡಿತ್ತು. ಜಲಾಲನಿಂದ ಬಂದ ಪ್ರಶ್ನೆಯಲ್ಲಿಯ ಕೊಂಕು ಕೂಡ ಅಷ್ಟೇ ಸ್ಪಷ್ಟವಾಗಿತ್ತು : “ಬೆಳಗಾಗುತ್ತಲೇ ಸಿಹಿ ಬೇಡುವ …”ನಾಗಪ್ಪ ನೋವು ತುಂಬಿದ ದನಿಯಲ್ಲಿ, “ಜಲಾಲ್, ಪ್ಲೀಜ್, ಪ್ರತಿಯೊಂದಕ್ಕೂ ಅಪಾರ್ಥ ಹಚ್ಚಬೇಡ. ಕಳೆದ ಕೆಲವು ದಿನಗಳಿಂದ ನಾನು ಪಡುತ್ತಿದ್ದ ಮಾನಸಿಕ ಯಾತನೆ ನನಗೊಬ್ಬನೆಗೇ ಗೊತ್ತು. ಇಂದೇ ಮೊದಲೊಮ್ಮೆ ದಿನದ ಆರಂಭದಲ್ಲಿಯೇ ಸಹಾನುಭೂತಿಯ ಮಾತುಗಳನ್ನು ಕೇಳಿದ್ದು,” ಅಂದ. ತನ್ನ ದನಿಯಲ್ಲಿಯ ಮಾರ್ದವತೆಗೆ ತಾನೇ ಮುಜುಗರ ಪಟ್ಟ. ಜಲಾಲ್ ಹಿಂದೆಗೆಯಲಿಲ್ಲ : “ಮೇಲಾಗಿ ರೀನಾ ಬಹಳೇ ಸಿಹಿಯಾದ ಹುಡುಗಿ…” +ಜಲಾಲನ ಅಸೂಯೆ ತುಂಬಿದ ಈ ಮಾತುಗಳಿಂದ ತೆಲೆಕೆಡಿಸಿಕೊಳ್ಳುವ ಮನಸ್ಸಾಗದೇ ನಾಗಪ್ಪ ಕುರ್ಚಿಯಿಂದ ಎದ್ದು ಕ್ಯಾಬಿನ್ನಿನ ಕಿಡಕಿಗೆ ಬಂದ. ಹೊತ್ತಿಗೆ ಮೊದಲೇ ಬಂದ ನಾಗಪ್ಪ ದಿನದ ಕೆಲಸದತ್ತ ಲಕ್ಷ್ಯ ಹರಿಸಲು ಇನ್ನೂ ಮೂರು ಮಿನಿಟುಗಳಾದರೂ ಇದ್ದವು. ಅದಾಗಲೇ ಅವಸರ ಅವಸರವಾಗಿ ಲೆಬೋರೇಟರಿಯನ್ನು ಹೋಗುತ್ತಿದ್ದ ಸಹೋದ್ಯೋಗಿಗಳತ್ತ ನೋಡುತ್ತ ಸುಖವಾಗಿ ಮುಗುಳುನಕ್ಕ. ಕಿಡಕಿಯ ಕೆಳಗಿನ ದಾಸಾಳದ ಗಿಡದಲ್ಲಿ ಕೆಂಪಗೆ ಬಾಯಿ ತೆರೆದು ನಿಂತ ಹೂಗಳನ್ನು ಇದೇ ಮೊದಲಬಾರಿ ನೋಡುತ್ತಿದ್ದವನ ಹಾಗೆ ನೋಡುತ್ತ ನಿಂತ. ನಸುಕಿನಲ್ಲಿ ಮಾಣಿ ಹಾಕಿದ ನೀರಿನಿಂದ ಗಿಡ ಒದ್ದೆಯಾಗಿತ್ತು. ಸ್ವಚ್ಛವಾಗಿತ್ತು. ಬೆಳಗಿನ ಟಪಾಲು ತಂದ ಪೇದೆ ಕ್ಯಾಬಿನ್ ಹೊಕ್ಕ ಸದ್ದು ಕೇಳಿಸಿ ಈಚೆಗೆ ಬಂದ. ಟೇಬಲ್ಲಿನ ಮೇಲೆ ಕಾಗದ-ಪತ್ರಗಳ ದೊಡ್ಡ ರಾಶಿಯನ್ನೇ ಇಡುತ್ತ, ಅನೇಕ ದಿನಗಳ ಮೇಲೆ, ಪ್ರಥಮ ಬಾರಿ ಎನ್ನುವಂತೆ, ಅವನಿಗೆ ಸಲಾಮು ಹೊಡೆದು ಆದರ ವ್ಯಕ್ತಪಡಿಸುತ್ತ ಮುಗುಳುನಕ್ಕ. ರಾಶಿಯೊಳಗಿನ ಒಂದು ಪತ್ರವನ್ನು, ಅವನ ಲಕ್ಷ್ಯ ಸೆಳೆಯುವ ಹಾಗೆ ಎಲ್ಲಕ್ಕೂ ಮೇಲಿಡುತ್ತ ಅದರ ಮೇಲೆ ದಿನದ ಅಭ್ಯಾಸದಿಂದ ಪೇಪರ್‍ವೇಟ್ ಇಡುವಷ್ಟರಲ್ಲಿ_ಜಲಾಲ್ ಆ ದಪ್ಪವಾದ ಲಕ್ಕೋಟೆಯ ಮೇಲಿನ ಇಲೆಕ್ಟ್ರಿಕ್ ಟೈಪ್‌ರೈಟರ್ ಮೇಲೆ ಟೈಪ್ ಮಾಡಿದ ವಿಳಾಸದಿಂದಲೇ ಅದು ಒ‌ಆ ಯವರು ಹೆಡ್ ಆಫೀಸಿನಿಂದ ಬರೆದದ್ದು ಎಂದು ಗುರುತಿಸಿ_“ಓಹ್ !ಒ‌ಆ ಯವರ ಪತ್ರ Peಡಿsoಟಿಚಿಟ & ಛಿoಟಿಜಿiಜeಟಿಣiಚಿಟ ’ ಎಂಬ ಶರಾ ಬೇರೆ ಇದೆ.” ಎಂದ, ಪೇದೆಯ ಮೋರೆಯ ಮೇಲಿನ ಆದರಕ್ಕೆ ಇದೇ ಕಾರಣವಾಗಿರಬಹುದೆ ? ರೀನಾ ಅನಿರೀಕ್ಷಿತವಾಗಿ ಮಾತನಾಡಿಸಿದ್ದಕ್ಕೂ… ? ನಾಗಪ್ಪಾ ಸಾಶಂಕನಾದ> +ಒ‌ಆ ಯವರು ನಾಗಪ್ಪನ ಬಗ್ಗೆ ಇಟ್ಟುಕೊಂಡ ವಿಶೇಷ ಆಸ್ಥೆ ಫ್ಯಾಕ್ಟರಿಯಲ್ಲೆಲ್ಲ ಜನಜನಿತವಾಗಿತ್ತು. ಇದೇ ಕಾರಣವಾಗಿತ್ತು. ಪತ್ರದಲ್ಲಿ ಎಂತಹ ಸುದ್ದಿಯಿರಬಹುದೋ ! ಅನೇಕರ_ ಆ‌ಒ‌ಆ ಯವರನ್ನೂ ಹೊರತುಪಡಿಸದೇ_ಅಸೂಯೆಗೆ ಕಾರಣವಾಗಿತ್ತು. ಪತ್ರದಲ್ಲಿ ಎಂತಹ ಸುದ್ದಿಯಿರಬಹುದೋ ! ಇಲ್ಲಿಯ ಪ್ರಕರಣ ಅವರ ಕಿವಿಗೂ ಮುಟ್ಟಿರಬಹುದೆ ? ಅಥವಾ….ನಾಗಪ್ಪನ ಮೋರೆಯ ಮೇಲೆ ದುಗುಡದ ಭಾವನೆ ಪ್ರಕಟವಾಗುವ ಹೊತ್ತಿಗೆ ಪೇದೆ ಕೋಣೆಯಿಂದ ಹೊರಟು ಹೋಗಿದ್ದ. ಜಲಾಲನ ಲಕ್ಷ್ಯ ಮಾತ್ರ ಇನ್ನೂ ಆ ಪತ್ರದ ಮೇಲೇ ಇತ್ತು. ನಾಗಪ್ಪ ಆತಂಕ ತುಂಬಿದ ಉತ್ಸುಕತೆಯಿಂದ ಲಕ್ಕೋಟೆಯ ಬಾಯಿ ಹರಿದು ಪತ್ರವನ್ನೂ ಹೊರತೆಗೆದು ಓದಹತ್ತಿದ. ಓದುತ್ತ ಹೋದ ಹಾಗೆ ಅವನ ಮೋರೆಯ ಮೇಲೆ ಸಂತೋಷ ಅರಳುತ್ತಹೋಯಿತು. ಓದಿ ಮುಗಿಸಿದ ಕೂಡಲೇ ಜಲಾಲನು ಅಪ್ಪಿಬಿಡುವವನ ಹಾಗೆ ಅವನ ಹತ್ತಿರ ಹೋಗಿ_“ಗೆಳೆಯಾ, ಕೊನೆಗೊಮ್ಮೆ ನಾನು ದಾರಿಕಾಯುತ್ತಿದ್ದ ಖುಶಿಯಸುದ್ದಿ_ I ಚಿm goiಟಿg ಣo ಣhe U. S. ಜಿoಡಿ ಣಡಿಚಿiಟಿiಟಿg. ಅಷ್ಟೇ ಅಲ್ಲ, ಈ ವರ್ಷ ಹವಾಯಿಯಲ್ಲಿ ನಡೆಯುವ ಟೆಕ್ನಾಲಾಜಿ ಕಾನ್ಫರೆನ್ಸಿಗೆ ಹಿಂದುಸ್ಥಾನದ ಈ ಕಂಪನಿಯಿಂದ ನನ್ನನ್ನು ಆರಿಸಿದ್ದಾರೆ.” ಎಂದ. “ Woಟಿಜeಡಿಜಿuಟ, ಅoಟಿgಡಿಚಿಣs. ನೋಡೋಣ. ನಾನೂ ಓದಲೇ ?” ಜಲಾಲ ಪತ್ರಕ್ಕಾಗಿ ಕೈ ಮುಂದೆ ಮಾಡಿದ. +ನಾಗಪ್ಪನ ದುರ್ದೈವದ ಕತೆ ಇಲ್ಲೇ ಆರಂಭವಾಗಿತ್ತು. ಆನಂದಾತಿಶಯದ ಭರದಲ್ಲಿ, ಹಿಂದುಮುಂದಿನ ವಿಚಾರ ಮಾಡುವ ಮೊದಲೇ, ಆ ಪತ್ರವನ್ನು ಜಲಾಲನ ಕೈಯಲ್ಲಿತಾನಾಗಿಯೇ ಇರಿಸಿಬಿಟ್ಟ_ಲಕ್ಕೋಟೆಯ ಮೇಲೆ ‘Peಡಿsoಟಿಚಿಟ & ಅoಟಿಜಿiಜeಟಿಣiಚಿಟ’ ಎಂದು ಬರೆದದ್ದನ್ನೂ ಮರೆತು. ಇದಾದ ಕೆಲವು ವಾರಗಳಲ್ಲೆ ಖ&ಆ ಕೆಲಸದಿಂದ ಮುಂಬಯಿಯ ಹೆಡ್‌ಆಫೀಸಿಗೆ ಬದಲಿಯಾಗಿತ್ತು_‘ಒಚಿಟಿಚಿgeಡಿ, Sಠಿeಛಿiಚಿಟ ಂssigಟಿmeಟಿಣ’ ಎಂಬ, ತನಗಾಗಿಯೇ ಹುಟ್ಟಿಸಿದಂತಿದ್ದ, ಹೊಸ ಸ್ಥಾನಕ್ಕೆ, ಖುದ್ದು ಒ‌ಆ ಯವರ ಕೈಕೆಳಗೆ ಕಲಸ ಮಾಡುವ ಅನುವು ಒಂದೇ ಅಮಾಧಾನಕ್ಕೆ ಕಾರಣವಾಗಿತ್ತು. ಆದರೆ ಇಲ್ಲಿ ಬಂದಂದಿನಿಂದ ಒ‌ಆ ಯವರಿಗೆ ತನ್ನ ಬಗೆಗಿನ ಆಸ್ಥೆ ಕಡಿಮೆಯಾಗಿದೆಯೆ ? ಅಮೇರಿಕೆಯ ಯೋಜನೆ ಮುಂದೆ ಬೀಳುತ್ತಿದ್ದುದಕ್ಕೆ ಇದೇ ಕಾರಣವಿರಬಹುದೇ ? +ನಾಗಪ್ಪನಿಗೆ ಎಲ್ಲವೂ ಅಸ್ಪಷ್ಟ. +uಟಿಜeಜಿiಟಿeಜ +– ಅಧ್ಯಾಯ ಹದಿಮೂರು – +ಖೇತವಾಡಿಯ ಮುಂಜಾವಿನ ಚಟುವಟಿಕೆಗಳು ಆಗಲೇ ಆರಂಭವಾಗಿದ್ದವು. ಮನೆಮನೆಗೆ ಎಲ್ಯುಮಿನಿಯಮ್ ಹಂಡೆಗಳಲ್ಲಿ ಹಾಲನ್ನು ಹೊತ್ತು ಎಲ್ಯುಮಿನಿಯಮ್ಮಿನದೇ ಅಳತೆ-ಪಾತ್ರೆಯಿಂದ ಮಾರುವ ಬೈಯಾ ಜನ; ನ್ಯೂಸ್ ಪೇಪರ್ ಮಾರುವ ಹುಡುಗರು; ಖೇತರಾಜಭವನದ ತಳಮಜಲೆಯ ಉಡುಪಿ ಬ್ರಾಹ್ಮಣರ ಉಪಹಾರಗೃಹ; ಗಲ್ಲಿಯ ಬಾಯಲ್ಲಿ ನಿಂತ ಕಮ್ಯುನಿಸ್ಟ್ ಪಕ್ಷದ ಪ್ರಿಂಟಿಂಗ್ ಪ್ರೆಸ್ಸ್; ಇದಿರಿನ ಮನೆಯಲ್ಲಿ ದತ್ತಾತ್ರೇಯನ ಆಳೆತ್ತರದ ಚಿತ್ರದ ಇದಿರು ಕೂತು ಚಾಳಿಗೆ ಚಾಳನ್ನೇ ಎಚ್ಚರಿಸುವ ಭಜನೆಯ ತಯಾರಿಕೆಗೆ ತೊಡಗಿದ ಮುದುಕ; ನಿತ್ಯಪರಿಚಯದ ಅತಿ ನಸುಕಿನ ಸದ್ದು ಗದ್ದಲಗಳು. ನಾಗಪ್ಪನ ಮನಸ್ಸಿನ ಆಳದಲ್ಲಿನ್ನೂ ಜಲಾಲನಿಗೆ ಆ ಪತ್ರ ಕೊಟ್ಟ ಪ್ರಮಾದದ ನೆನಪು : ಕೊನೆಗೂ ತಾನು ವ್ಯವಹಾರ ಎಂಬುದನ್ನು ಕಲಿಯಲೇ ಇಲ್ಲ. ಈ ಜಗತ್ತಿನಲ್ಲಿ ಪ್ರತಿಭೆಯಿದ್ದರಷ್ಟೇ ಸಾಲದು. ಅದನ್ನು ತನಗೇ ಅನ್ಯಾಯವಾಗದಂತೆ ಪ್ರಕಟಿಸುವ ಚಾತುರ್‍ಯವೂ ಬೇಕು. ದಕ್ಷತೆಯೂ ಬೇಕು. ಇವೆರಡೂ ಅವನಲ್ಲಿರಲಿಲ್ಲ. ಆದ್ದರಿಂದಲೇ ಅವನ ಯೋಗ್ಯತೆಯ ಅರ್ಧದಷ್ಟೂ ಯೋಗ್ಯತೆ ಇರದ ಜಲಾಲನಂತವರೇ ಇಂದು ಕಾರಖಾನೆಯ ಉಚ್ಛಪದಾಧಿಕಾರಕ್ಕೆ ಏರಿಕೂತಿದ್ದಾರೆ. ಹಲವು ಸಾರೆ ಹೊಸ ಖ&ಆ ಕಲ್ಪನೆಯೊಂದು ಮನಸ್ಸಿನಲ್ಲಿ ಮೂಡಿದ್ದೇ ತಡ ಸೃಷ್ಟಿಶೀಲ ಕಲಾಕಾರನ ಉತ್ಸಾಹದಿಂದ ಸರೀಕರ ಇದಿರು ವಿವರಿಸಿಬಿಡುತ್ತಿದ್ದ_ಹೀಗೆ ವಿವರಿಸುವುದರ ವ್ಯಾವಹಾರಿಕಪರಿಣಾಮ ಏನಾಗಬಹುದೆಂಬುದರ ವಿಚಾರಮಾಡದೇನೇ. ಇಂತಹ ‘ಬ್ರಿಲ್ಲಿಯಂಟ್’ ಎನ್ನಬಹುದಾದ ಕಲ್ಪನೆಗಳು ಅವನಿಗಿಂತ ಬಹಳ ಮುಂಚಿತವಾಗಿ ಆ‌ಒ‌ಆ ಯವರಿಗೆ ಲೇಖೀರೂಪದಲ್ಲಿ ಮುಟ್ಟಿರುತ್ತಿದ್ದವು. ಸರಿಯಾದ ಅನುವು ಸಿಕ್ಕಾಗ ತಾನೇ ಅವುಗಳನ್ನು ಫಿರೋಜನಿಗೆ ಹೇಳಹೊರಟಾಗ ಉಳಿದವರ ಕಲ್ಪನೆಗಳನ್ನು ಕಳವು ಮಾಡಿದ ಆರೋಪಕ್ಕೆ ಗುರಿಯಾಗಿ ನೋವು ಉಂಡದ್ದರ ನೆನಪೂ ಈಗ ನಾಗಪ್ಪನಿಗೆ ಸಿಟ್ಟು ತರಿಸುವಂಥದ್ದು. ಎಲ್ಲಕ್ಕೂ ಮಿಗಿಲಾಗಿ ಫಿರೋಜ ತನ್ನನ್ನು ಚುಚ್ಚಿ ಮಾತನಾಡುವಾಗ ಪಡುತ್ತಿದ್ದ ವಿವೇಕಶೂನ್ಯವಾದ ಸುಖ ಮಾತ್ರ ಅವನಿಗಿನ್ನೂ ಅರ್ಥವಾಗಿಲ್ಲ : ಯಾಕೆಂದು ತನ್ನ ಬಗ್ಗೆ ಇವನಿಗೆ ಇಷ್ಟೊಂದು ದ್ವೇಷ….? +ತನ್ನ ಆನಂದಕ್ಕೆ ಸೃಷ್ಟಿಶೀಲತೆಯೊಂದೇ ನಿಜವಾದ ಮೂಲಸೆಲೆಯೆಂಬ ಅನುಭವ ನಾಗಪ್ಪನಿಗೆ ಮತ್ತೆ ಮತ್ತೆ ಬಂದಿದೆ. ಹಾಗೆಯೆ, ಅದರ ಫಲವಾಗಿ ಹುಟ್ಟಿಬಂದ ಕೃತಿಯ ಮೇಲೆ ತನ್ನ ಹೆಸರಿನ ಅಂಕಿತ ಬಿದ್ದಾಗಲೆ ಅದರ ಮೂಲಪ್ರೇರಣೆಯಿಂದ ತನ್ನ ಬಿಡುಗಡೆಯಾಗುತ್ತದೆ ಎಂಬ ಅರಿವೂ ಕೂಡ : ಜೀವನದ ಅರ್ಥಪೂರ್ಣತೆಯ ಹುಡುಕಾಟದಲ್ಲಿ, ಎಲ್ಲಕ್ಕೂ ಮಿಗಿಲಾಗಿ, ಈ ಸೃಷ್ಟಿಕ್ರಮದಲ್ಲೇ ತನ್ನ ಸ್ಥಾನವೇನು ? ಪ್ರಸ್ತುತತೆಯೇನು ? _ ಎನ್ನುವುದರ ಪ್ರಸ್ಥಾಪನೆಗೆ ಮಹತ್ವ ಇದೆಯಷ್ಟೇ ಅಲ್ಲ. ಇಂಥ ಪ್ರಸ್ಥಾಪನೆಗೆ ಸ್ವ-ಅಂಕಿತದ ಅಗತ್ಯವೂ ಇದೆಯೇನೋ ಎಂಬ ಅನುಮಾನ ಕೂಡ ಆಗೀಗ ಬಂದಿದೆ. ಆದರೆ ಅಂಥ ಅಂಕಿತದ ಮುದ್ರೆ ಬೀಳುವ ಅವಕಾಶ ತಪ್ಪಿದಾಗ ಅದಕ್ಕೆ ಹೊಣೆಯಾದ ಅನ್ಯಾಯದ ವಿರುದ್ಧ ಪ್ರತಿಭಟಿಸದೇ ಇರುವುದಕ್ಕೆ ಕಾರಣ ಮಾತ್ರ ಕೀರ್ತಿಯ ಬಗೆಗಿನ ನಿರಾಸಕ್ತಿಯಾಗಿರದೆ ಪ್ರತಿಭಟನೆಗೆ ಬೇಕಾದ ಪ್ರಭಲವಾದ ನೈತಿಕ ಧೈರ್ಯವೇ ತನ್ನ ಸ್ವಭಾವರಚನೆಯಲ್ಲಿ ಇಲ್ಲದ್ದಾಗಿರಬಹುದು ಎಂಬುದರ ಬಗ್ಗೆ ನಾಗಪ್ಪ ವಿಚಾರಮಾಡಿದವನಲ್ಲ. +ಖೇತವಾಡಿಯ ಅನ್ಯೋನ್ಯ ಅಂಗವಾದ ಗದ್ದಲ ಆಗಲೇ ಕಿವಿ ನೋಯಿಸುವ ಮಟ್ಟಕ್ಕೆ ಏರಿತ್ತು. ದತ್ತಭಕ್ತನ ಭಜನೆಯಂತೂ ಎಂತಹ ಕುಂಭಕರ್ಣನನ್ನೂ ಬಡಿದೆಬ್ಬಿಸುವಂತಹದು. ಇದಕ್ಕೆಲ್ಲ ಕಿವುಡನಾಗಿದ್ದ ನಾಗಪ್ಪನ ಮನಸ್ಸು ಒಂದನ್ನೇ ಕುರಿತು ಧೇನಿಸುತ್ತಿತ್ತು-ತಾನು ಅಂದು ಒ‌ಆ ಯವರಿಂದ ಬಂದ ಛಿoಟಿಜಿiಜeಟಿಣiಚಿಟ ಪತ್ರವನ್ನು ಜಲಾಲನಿಗೆ ಕೊಟ್ಟಿದ್ದನ್ನು ಕುರಿತು. ತನ್ನ ಮೋಹಕವಾದ ವ್ಯಕ್ತಿತ್ವ, ಅದಕ್ಕಿಂತ ಹೆಚ್ಚಾಗಿ ಯಾರನ್ನೂ ಮರುಳುಗೊಳಿಸುವ ಮೋಹಕವಾದ ಮುಗುಳುನಗೆ-ಇವುಗಳ ಹಿಂದೆ ಜಲಾಲ ಮೊದಲಿನಿಂದಲೂ ತನ್ನ ಭವಿಷ್ಯತ್ತಿಗೆ ಮಾರಕವಾದ ಅಸೂಯೆಯನ್ನೇ ಬೆಳೆಸಿಕೊಂಡು ಬಂದಿದ್ದ ಎಂಬುದರ ಮೇಲೆ ಝಗ್ಗನೆ ಬೆಳಕು ಬಿದ್ದಾಗ, ದೇವರೇ ಎಂದುಕೊಂಡ. ಜಲಾಲನಂತಹ ಸಹೋದ್ಯೋಗಿಯನ್ನು ಕೂಡ ನಂಬುವದು ತಪ್ಪಾದರೆ ಬದುಕಿನಲ್ಲಿ ಯಾವುದನ್ನು ನಂಬಬೇಕು ? ಪ್ರತಿಯೊಬ್ಬನನ್ನೂ ಅಪನಂಬಿಕೆಯಿಂದ ನೋಡುವದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು ? ಎಂದೂ ಅನ್ನಿಸಿತು. ಅಂತಃಸ್ಪೂರ್ತಿಯನ್ನು ಕಳಕೊಂಡ ಭಾವನೆಗಳ ಅರ್ಥವೇ ನಾಗಪ್ಪನಿಗೆ ಆಗುತ್ತಿರಲಿಲ್ಲ. ಬರೇ ಸ್ವಾರ್ಥವೇ ಮೊದಲಾದ ಭಾವನೆಗಳು ತಟ್ಟುತ್ತಿರಲಿಲ್ಲ. ತನ್ನ ಖ&ಆ ಕಲ್ಪನೆಗಳನ್ನು ಉಳಿದವರು ಕಳವು ಮಾಡಿದ್ದಾರೆಂಬುದರ ಬಗ್ಗೆ ಸಿಕ್ಕ ಪುರಾವೆಗಳ ಬಗೆಗಿನ ಉದಾಸೀನತೆಗೆ ಇದೂ ಒಂದು ಕಾರಣ-ಆ ಕೃತ್ಯದ ಅರ್ಥಹೀನತೆ ! ಸುತ್ತಲಿನ ಸದ್ದುಗದ್ದಲವನ್ನು ಕೇಳಿಯೂ ಕೇಳದವನ ಹಾಗೆ ಅಂತರ್ಮುಖಿಯಾದಾಗ ಹುಟ್ಟಿದ ಒಂದು ವಿಚಾರದಿಂದ ತಲ್ಲಣಗೊಂಡ : ಫಿರೋಜ್ ತನ್ನ ಬಗ್ಗೆ ತೋರಿಸುತ್ತ ಬಂದ ದ್ವೇಷಕ್ಕೆ ಜಲಾಲ ಸ್ಪೂರ್ತಿಯಾಗಿರಬಹುದೆ ? ಹಾಗಾದರೆ ಈ ಎಲ್ಲ ಹೊಸ ನಾಟಕಕ್ಕೆ ? +ಜಲಾಲನ ಬಗ್ಗೆ ಇಂತಹ ಸಂಶಯ ಈ ಮೊದಲು ಬಂದಿರಲಿಲ್ಲವೆಂದಲ್ಲ. ಆದರೆ ಅದು ಬಂದದ್ದು ಜಲಾಲ ಕಣ್ಣೆದುರಿಗೆ ಇಲ್ಲದಿದ್ದಾಗ ಮಾತ್ರ. ಯಾವಾಗಲೂ ಹಸನ್ಮುಖಿಯಾದ ಜಲಾಲನ ಮೋರೆ ಕಣ್ಣೆದುರಿಗೆ ಬಂದ ಕೂಡಲೇ ತನ್ನ ಸಂಶಯದಿಂದ ತನಗೇ ಮುಜುಗರವಾಗುತ್ತಿತ್ತು. ಏನಿದ್ದರೂ ಫಿರೋಜನ ಕ್ರೌರ್ಯದ ಹಿಂದಿನ ಪ್ರೇರಣೆಯನ್ನು ಅರಸುವಾಗ ಅದರಲ್ಲಿ ಜಲಾಲನ ಪಾತ್ರವೇನು ಎಂಬುದನ್ನರಿಯುವದೂ ಮಹತ್ವದ್ದೆಂದು ತೋರಿತು. ತನ್ನ ಹತ್ತಿರದ ಗೆಳೆಯನೆಂಬಂತೆ ನಡಕೊಳ್ಳುತ್ತಿರುವಾಗಲೂ ಒಳಗೊಳಗೇ ತನ್ನ ಭವಿಷ್ಯದ ವಿರುದ್ಧ ಹೂಡಿದ ಪಿತೂರಿಗೆ ಕಾರಣವಾದದ್ದು ಮಾತ್ರ ಆತ್ಮ ಸಂರಕ್ಷಣೆಯ ಪಶು-ಪ್ರವೃತ್ತಿಯ ನೆಲೆಯಲ್ಲಿ ಹುಟ್ಟಿದ್ದೆಂಬ ಅರಿವು ಬಂದಾಗ ಜಲಾಲನ ಬಗೆಗೂ ಮೊತ್ತಮೊದಲಿಗೆ ಜಿಗುಪ್ಸೆ ಹುಟ್ಟಿತು : ಖ&ಆ -ತನಗೆ ಅತ್ಯಂತ ಪ್ರಿಯವಾದ ಈ ಕಾರ್ಯಕ್ಷೇತ್ರದಲ್ಲಿ ಬೆಳಗಿನ ತನ್ನ ಪ್ರತಿಭೆ ಒಂದು ಆದರಣೀಯವಾದ ಘನತೆಯನ್ನು ಪಡೆಯುವುದರಲ್ಲಿದ್ದಾಗ ಒಮ್ಮೆಲೇ ಎರಗಿದ ಅನಾಹುತದಿಂದಾಗಿ ಹೈದರಾಬಾದವನ್ನು ಬಿಟ್ಟು ಮುಂಬಯಿಗೆ ಬರಬೇಕಾದ ಪ್ರಸಂಗ ! ಆದರೂ ಎದೆಗುಂದದೇ, ಇಲ್ಲಿ ಬಂದು ಆರು ತಿಂಗಳೊಳಗಾಗಿ, ತನಗೆ ವಹಿಸಿಕೊಟ್ಟ ಹೊಸ ಕ್ಷೇತ್ರದಲ್ಲಿ ತಾನು ತೋರಿಸಿದ ಉತ್ಸಾಹ, ಕರ್ತಬುಗಾರಿಗಳಿಂದಾಗಿ ಇಲ್ಲಿಯ ಸಹೋದ್ಯೋಗಿಗಳಿಂದ, ಡೈರೆಕ್ಟರರಿಂದ, ಕಂಪನಿಯ ಗ್ರಾಹಕರಿಂದ, ಪಡೆದ ಗೌರವದ ಬಗೆಗೂ ಫಿರೋಜ್ ತೋರಿಸುತ್ತ ಬಂದ ತಿರಸ್ಕಾರಕ್ಕೆ ಕಾರಣ ತಿಳಿಯದಾಗಿದೆ. ಎಲ್ಲ ಕಡೆಯಿಂದಲೂ ತನ್ನನ್ನು ಸುತ್ತುವರಿಯುತ್ತಿದ್ದ ಶಿಕಾರಿಯವರ ತಂಡದಲ್ಲಿ‌ಈಗ ಶ್ರೀನಿವಾಸನೂ ಸೇರಿಕೊಂಡಂತಿದೆ. ಫಿರೋಜ್, ಜಲಾಲ ಹಾಗೂಶ್ರೀನಿವಾಸ ಈ ಮೂವರ ಕ್ರೌರ್ಯಕ್ಕೆ ತನ್ನಂತಹ ನಿರುಪದ್ರವಿಯಾದವನು ಕಾರಣವಾಗಬೇಕಾದರೆ ಈ ಮೂವರನ್ನೂ ಒಟ್ಟಿಗೆ ತಂದ ಯಾವುದೋ ದುಷ್ಟ ಸಂಚಿಗೆ ತಾನು ತನಗೇ ಗೊತ್ತಿಲ್ಲದ ರೀತಿಯಲ್ಲಿ ಅಡ್ಡಗಾಲು ಹಾಕಿರಬಹುದೆ ? ಮೇರಿಗೆ ಫೋನ್ ಮಾಡಿ ಸಿನೇಮಾಕ್ಕೆ, ರಾತ್ರಿಯ ಊಟಕ್ಕೆ ಕರೆದರೆ ಹೇಗೆ ? ತನ್ನ ಬಗ್ಗೆ ಆದರ ಪ್ರೀತಿ ತೋರಿಸುತ್ತ ಬಂದ ಈ ಹುಡುಗಿ ಇಂತಹ ‘ಡೇಟಿ’ನ ಸೂಚನೆಯನ್ನು ಎಷ್ಟೊಂದು ಸರತಿ ಮಾಡಿದ್ದರೂ ತಾನೇ ಅದಕ್ಕೆ ಇನ್ನೂ ಧೈರ್ಯ ಮಾಡಿರಲಿಲ್ಲ. ಒಮ್ಮೆಯಂತೂ ಅವಳ ಈ ಸೂಚನೆಯ ಅರ್ಥ ತನಗಾಗುತ್ತಿಲ್ಲ ಎಂದು ನಟಿಸಿದಾಗ_ sತಿeeಣ iಟಿಟಿoಛಿeಟಿಣ ಎಂದು ಕಣ್ಣು ಮಿಟುಕಿಸುತ್ತ ನಕ್ಕಿದ್ದಳು. +ಸಂಕೋಚ-ಪ್ರವೃತ್ತಿಯವನಾದ ನಾಗಪ್ಪನಿಗೆ, ಡೇಟಿಂಗಿನಂಥ ನಿಷ್ಪಾಪವಾದ ಚಟುವಟಿಕೆ ಕೂಡ ದೊಡ್ಡ ಸಾಹಸವೆಂಬ ತಿಳುವಳಿಕೆಯಿಂದಾಗಿ, ಮೇರಿಗೆ ಫೋನ್ ಮಾಡುವ ಕಲ್ಪನೆಯಿಂದಲೇ ಎರಡೂ ಕಿವಗಳು ಬೆಚ್ಚಗಾದವು. ಸದ್ಯ. ಹೊಟ್ಟೆ ಚೆನ್ನಾಗಿ ಹಸಿದಿದೆ ; ಒಳ್ಳೇ ನಾಸ್ತಾದ ಗರಜಿದೆ ಎಂಬುದರ ಅರಿವು ಬಂದು ಬೆನ್‌ಹ್ಯಾಮ್-ಹಾಲ್ ಲೇನಿನಲ್ಲಿಯ ‘ಸಂತೋಷಭವನ’ಕ್ಕೆ ಹೋಗುವ ತಯಾರಿ ಮಾಡಹತ್ತಿದ. ಉತ್ತಪ್ಪ, ವಡೆಗಳ ನೆನಪಿನಿಂದಲೇ ಬಾಯಲ್ಲಿ ನೀರೂರಿತು. ‘ಸಂತೋಷಭನ’ಕ್ಕೆ ಹೋದಾಗ ಹತ್ತಿರದ ಸಾರ್ವಜನಿಕ ಟೆಲಿಫೋನ್ ಬೂಥಿನಿಂದಲೇ ಮೇರಿಗೆ ಫೋನ್ ಮಾಡಿದರಾಯಿತು ಎಂದುಕೊಂಡ. ಅರ್ಜುನ್‌ರಾವರ ಮನೆಯಲ್ಲಿ ಫೋನ್ ಇದ್ದರೂ ಅಲ್ಲಿಂದ ಎಂದೂ ಫೋನ್ ಮಾಡಿದವನಲ್ಲ. ಗರಜು ಬಿದ್ದಾಗ ಕೆಲವು ಗೆಳೆಯರು, ಆಫೀಸಿನವರು ಆಗೀಗ ಆ ನಂಬರಿಗೆ ಫೋನ್ ಮಾಡುತ್ತಿದ್ದರು. ಅಷ್ಟೇ. ತನ್ನ ಈಗಿನ ಸ್ಥಾನಬದ್ಧತೆಗೆ ಕಾರಣವಾದ ದುಷ್ಟ ಆದೇಶ ಬಂದದ್ದೇ ಅರ್ಜುನ್‌ರಾವರ ಫೋನಿನ ಮೇಲೆ ಎಂಬುದರ ಅಪ್ರಿಯವಾದ ನೆನಪು ಮರುಕಳಿಸುವ ಮೊದಲೇ ಹೊರಗೆ ಬೀಳುವ ತ್ವರೆಯಲ್ಲಿದ್ದವನ ಹಾಗೆ ಲಗುಬಗೆಯಿಂದ ಹೊಸಲು ದಾಟಿ ಕೋಣೆಯ ಕದವಿಕ್ಕಿ ಬೀಗ ಹಾಕಿದ. +uಟಿಜeಜಿiಟಿeಜ +– ಅಧ್ಯಾಯ ಹದಿನಾಲ್ಕು – +‘ಸಂತೋಷಭವನ’ವನ್ನು ಸಮೀಪಿಸುತ್ತಿದ್ದ ಹಾಗೆ ನಾಗಪ್ಪನ ಮನಸ್ಸು ನಿಷ್ಕಾರಣವಾಗಿ ಕಳವಳಕ್ಕೊಳಗಾಯಿತು. ಪ್ರತಿಸಲ ಖೇಮರಾಜಭವನದಿಂದ ಹೊರಬಿದ್ದು ಪ್ರಾರ್ಥನಾಸಮಾಜಕ್ಕೆ ಹೋಗುವ ಖೇತವಾಡಿ ಮೇನ್‌ರೋಡ್ ಸೇರಬೇಕಾದರೆ ಆರನೇ ಗಲ್ಲಿಯಿಂದ ಹೋಗುತ್ತಿದ್ದನಾದರೂ ಇವತ್ತು ಏಳನೇ ಗಲ್ಲಿಯಿಂದ ನಡೆದ. ಏಳನೇ ಗಲ್ಲಿಯ ತುದಿಯಲ್ಲೇ ಕಮ್ಯುನಿಸ್ಟ್ ಪಕ್ಷದ ಮುಖಪತ್ರವಾದ ‘ಪೀಪಲ್ಸ್ ಏಜ್’ ಎಂಬ ಪತ್ರಿಕೆಯನ್ನು ಛಾಪಿಸುತ್ತಿದ್ದ ಮುದ್ರಣಾಲಯ ಹಾಗೂ ಪಕ್ಷದ ಗಿರ್ಗಾಂವ್ ಶಾಲೆಯ ಆಫೀಸು ಇದೆ. ಹೈದರಾಬಾದಿನ ಕಾರಖಾನೆಯ ಕಾಮಗಾರರ ಆರೋಗ್ಯಕ್ಕಿರುವ ಅಪಾಯವನ್ನು ಪರ್ಯಾಯವಾಗಿ ಅಲ್ಲಿಯ ಕಾಮಗಾರ ಯೂನಿಯನ್ನಿನ ಸಂಚಾಲಕತ್ವ ವಹಿಸಿದ ಕಮ್ಯುನಿಸ್ಟರ ಲಕ್ಷ್ಯಕ್ಕೆ ತರಬೇಕೆಂದು ಎಂದೋ ಮಾಡಿಕೊಂಡ ಹುಂಬಗಾರಿಕೆಯ ವಿಚಾರ ಈಗ ಪ್ರಜ್ಞೆಯ ಆಳದಲ್ಲೆಲ್ಲೋ ತಲೆಯೆತ್ತಿರಬೇಕು : ಪಾರ್ಟಿಯ ಆಫೀಸನ್ನು ದಾಟುವಾಗ ಎದೆ ಡವಗುಟ್ಟಿದ ರೀತಿಗೆ ತಾನೇ ಆಶ್ಚರ್ಯಪಟ್ಟ. ನಡಿಗೆಯ ವೇಗವನ್ನು ಹೆಚ್ಚಿಸಿ ಮೇನ್‌ರೋಡ್ ಸೇರಿ ಪ್ರಾರ್ಥನಾಸಮಾಜದ ಕಡೆ ಹೊರಳಿದ. ತಾನು ಇಡಿಗ ಅನುಭವಿಸಿದ ಎದೆಗುದಿಗೆ ಕಾರಣ ಮೇರಿಗೆ ಫೋನ್ ಮಾಡುವ ಆತಂಕವಾಗಿರಲೂ ಬಹುದು ಎಂದೆನಿಸಿತು. ಏಕೆಂದರೆ ಕಮ್ಯುನಿಸ್ಟರ ಆಫೀಸಿನ ಹೊರಗೇ ಸಾರ್ವಜನಿಕ ಟೆಲಿಫೋನ್ ಬೂಥ್ ಇದೆ. ಇಷ್ಟು ತಿಂಗಳು ಅವಳ ಬಗ್ಗೆ ಒಂದು ರೀತಿಯಿಂದ ನಿರಾಸಕ್ತಿ ತೋರಿಸುತ್ತ ಬಂದ ತಾನು ಈಗ ಅವಳನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದು ಸರಿಯೇ ? ನಾಗಪ್ಪ, ಕೊನೆಗೂ ಮೇರಿಗೆ ಫೋನ್ ಮಾಡುವ ವಿಚಾರವನ್ನು ಬಿಟ್ಟುಕೊಟ್ಟ ; ಆದರೆ ಅವನು ಇದೀಗ ಸರ್ಥಿಸಿಕೊಂಡ ಕಾರಣಕ್ಕಾಗಿಯಲ್ಲ. ನಾನಾ ಚೌಕಿನತ್ತ ಹೋಗುವ ಬಸ್ಸು ದೂರದಲ್ಲಿ ಕಂಡಂತಾದೊಡನೆ ರಾಣಿ ಮನಸ್ಸು ತುಂಬ ಹತ್ತಿದ್ದಳು.ಆದರೆ ತನಗೇ ಇನ್ನೂ ಸ್ಪಷ್ಟವಾಗಿ ಅರಿವಿಗೆ ಬಂದಿರದ ಆತಂಕವೊಂದು ಇಂತಹ ಯಾವ ಒಂದು ಬಯಕೆಗೆ ಆಸ್ಪದ ಕೊಡದಾಯಿತು. ತಾನಿನ್ನು ಹೆದರಿಕೊಂಡಿದ್ದೇನೆ ಎಂಬಂತಹ ಭಾವನೆ ಇನ್ನಷ್ಟು ಕಳವಳಕ್ಕೆ ಕಾರಣವಾಯಿತು. ಪ್ರಾರ್ಥನಾಸಮಾಜದ ನಾಲ್ಕು ರಸ್ತೆಗಳ ಕೂಟಸ್ಥಾನಕ್ಕೆ ಬಂದವನೇ ನಾಗಪ್ಪ ಶೂನ್ಯ ಮನಸ್ಕನಾಗಿ ನಿಂತೇಬಿಟ್ಟ. ಮುಂದಿನ ಗಿರ್ಗಾಂವ್ ರೋಡ್ ದಾಟಿದರೆ ಬೆನ್‌ಹ್ಯಾಮ್-ಹಾಲ್-ಲೇನ್ ಐದೇ ಮಿನಿಟಿನ ಹಾದಿ. ಉತ್ತಪ್ಪ ವಡೆಗಳ ನೆನಪಿನಿಂದ ನೀರೊಡೆಯುವದು ಬಿಟ್ಟು ಬಾಯಿ ತನ್ನ ರುಚಿಯನ್ನೇ ಕಳಕೊಂಡುಬಿಟ್ಟಿದೆ ಅನ್ನಿಸಿತು. ಮುರಕಿಯಲ್ಲಿಯ ನ್ಯೂಸ್ ಪೇಪರ್ ಅಂಗಡಿಗೆ ಹೋಗಿ ಟೈಮ್ಸ್ ಅಫ಼್ ಇಂಡಿಯಾದ ಪತ್ರಿಕೆಯೊಂದನ್ನು ಕೊಂಡುಕೊಂಡ ; ದಿನವೂ ಬೆಳಿಗ್ಗೆ ಸಂತೋಷಭವನಕ್ಕೆ ನಾಸ್ತಾಕ್ಕೆ ಹೋಗುವಾಗಿನ ಪರಿಪಾಠ ವಿದು, ಪರಿಚಯದ ಹುಡುಗ. “ಐದಾರು ದಿನಗಳಾದವು. ರಾಯರನ್ನು ಕಾಣಲೇ ಇಲ್ಲ.” ಎಂದು ಪ್ರೀತಿಯಿಂದ ಮಾತನಾಡಿಸಿದ. ಈ ಆತ್ಮೀಯತೆ ತುಂಬಿದ ಸರಳ ಮಾತುಗಳು ಅನಿರೀಕ್ಷಿತ ರೀತಿಯಲ್ಲಿ ತಟ್ಟಿ ನಾಗಪ್ಪನನ್ನು ಅಲ್ಲಾಡಿಸಿಬಿಟ್ಟವು. ಹಣ ಕೊಡಲು ಪಾಕೀಟಿಗೆ ಕೈ ಹಾಕಿದಾಗ ಏನಾದರೂ ಹೇಳಬೇಕೆಂದರೆ ಬಾಯಿಂದ ಮಾತೇ ಹೊರಡದಾಯಿತು. ಕೊನೆಗೆ “ಮೈಯ್ಯಲ್ಲಿ ಚೆನ್ನಾಗಿರಲಿಲ್ಲ.” ಎಂದಿಷ್ಟೇ ಹೇಳಿ ಅಲ್ಲಿಂದ ಹೊರಟು ರಸ್ತೆ ದಾಟಿದ. ಈ ಪ್ರಕರಣದಲ್ಲಿ ತನ್ನ ನೌಕರಿಗೇನಾದರೂ ಸಂಚಕಾರ ಬಂದರೆ ಖೇತವಾಡಿಯ ಯಾವುದಾದರೊಂದು ಮೂಲೆಯಲ್ಲಿ ಹೀಗೆ ಪತ್ರಿಕೆ ಮಾರುವ ಇಲ್ಲ ಬರೀ ರದ್ದೀ ಮಾರುವ ಅಂಗಡಿಯನ್ನು ತೆರೆದು ಕೂತರಾಯಿತು ಎಂದುಕೊಂಡ. ಬರೆಯೆ ಚೇಷ್ಟೆಗೆ ಅಂದುಕೊಂಡ ಮಾತುಗಳೆಂದು ಅವು ಮನಸ್ಸಿನಲ್ಲಿ ಹುಟ್ಟಿದ ಕ್ಷಣದಲ್ಲಿ ಅನ್ನಿಸಿದರೂ, ಹೊತ್ತು ಹೋದ ಹಾಗೆ, ಅವು ಬರೆಯೇ ಚೇಷ್ಟೆಯ ಮಾತುಗಳಲ್ಲವೇ ಅಲ್ಲ ; ಅಷ್ಟೇಕೆ ಅವು ತನ್ನ ಮಾತುಗಳೇ ಅಲ್ಲ_ಯಾರೋ ಬಜಾಯಿಸಿದ ‘ಹುಕುಮ್’ ಎಂದೆನ್ನಿಸಹತ್ತಿದಾಗ ಗಂಭೀರನಾದ. ನಕ್ಕುಬಿಡಬೇಕೆಂದು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದಾಯಿತು. +ಬೆನ್‌ಹ್ಯಾಮ್-ಹಾಲ್-ಲೇನಿನ ಇಬ್ಬದಿಗಳಲ್ಲೂ ಸಾಲುಗಯ್ಟ್ಟಿ ಕುಳಿತು ಕಾಯಿಪಲ್ಲೆ, ಹಣ್ಣು ಹೂಗಳನ್ನು ಮಾರುವ ಮರಾಠೀ ಹೆಣ್ಣುಗಳು. ಕೆಂಪು ಟೋಪಿಯ ‘ವಸಯೀವಾಲೇ’ ಗಂಡಸರು ತಾವು ತಾವು ಮಾರುತ್ತಿದ್ದ ಸರಕಿನ ಹೆಸರು, ಧಾರಣೆಗಳನ್ನು ಒದರಿ ಹೇಳುತ್ತ ಆ ರಸ್ತೆಯಿಂದ ಹೋಗುವವರೆಲ್ಲ ತಮ್ಮ ಗಿರಾಕಿಗಳೇ ಎಂಬ ಸಂಭ್ರಮದಿಂದ ಅವರ ಲಕ್ಷ್ಯವನ್ನು ತಮ್ಮ ಕಡೆ ಸೆಳೆಯುತ್ತಿದ್ದರು. ಮಲ್ಲಿಗೆಜಡೆಗಳನ್ನು ಮಾರುತ್ತಿದ್ದ, ಕಿರಗಣೆ ಉಟ್ಟ, ಚಿಕ್ಕ ಹುಡುಗಿ ‘ದಾದಾ ದಾದಾ’ ಎಂದು ಇವನನ್ನು ಕರೆದಾಗ ಅವಳತ್ತ ದೃಷ್ಟಿ ಹರಿಯಿಸಿದ. ಸರಸ್ವತಿಯ ನೆನಪು ಬಂದು ವಿಚಾರಮಾಡುವ ಮೊದಲೇ ಜಡೆಯೊಂದನ್ನು ಕೊಂಡ. ಹಸಿ ಎಲೆಯೊಂದರಲ್ಲಿ ಕಟ್ಟಿಕೊಟ್ಟ ಚಿಕ್ಕ ಪೊಟ್ಟಣವನ್ನು ಕೈಯಲ್ಲಿ ಹಿಡಿದಮೇಲೇ ತನ್ನ ಕೃತ್ಯದ ಅರ್ಥವಾಯಿತೆನ್ನುವ ಹಾಗೆ ಈ ಮೊದಲಿನ ಕಳವಳವನ್ನು ಮರೆತು ಸುಖವಾಗಿ ಮುಗುಳುನಕ್ಕ. ಹೂವಿನ ಮಾದಕವಾದ ಕಂಪನ್ನು ಸೇವಿಸುತ್ತ ‘ಸಂತೋಷಭವನ’ ಹತ್ತಿರವಾಗುತ್ತಲೇ ಪುಡಿಕೆಯನ್ನು ಪ್ಯಾಂಟಿನ ಕಿಸೆಯಲ್ಲಿ ಹಾಕಿ ರೆಸ್ಟೋರಂಟ್ ಹೊಕ್ಕ… +‘ಸಂತೋಷಭವನ’ದ ಮಾಲಿಕನಾದ ಅಪ್ಪಾನಾಯಕನು ನಾಗಪ್ಪನ ಪರಿಚಯದವನು. ಅವನ ಜಿಲ್ಲೆಯವನೇ. ನಾಗಪ್ಪನನ್ನು ಕಂಡದ್ದೇ ತಡ ಕವಳ ತಿಂದ ಕೆಂಪುಬಾಯನ್ನು, ಎಲ್ಲ ಹಲ್ಲುಗಳನ್ನೂ ತೋರಿಸುವಂತೆ, ಕಿಸಿದು, ತಲೆಯಮೇಲಿನ ಗಾಂಧೀಟೋಪಿಯನ್ನೊಮ್ಮೆ ವಿನಾ ಕಾರಣ ತೆಗೆದು ತಿರುಗಿ ತಲೆಯಲ್ಲಿ ತೊಟ್ಟು : “ಐದಾರು ದಿನ ಇತ್ತಕಡೆ ಬರಲೇ ಇಲ್ಲ. ನಿನ್ನೆ ಶ್ರೀನಿವಾಸರಾವ್ ಭೇಟಿಯಾದಲೇ ತಿಳಿಯಿತು. ಒಂದು ತಿಂಗಳ ಕಾಲ ನೀನು ಅವನ ಮನೆಯಲ್ಲೇ ಇರುವವನಿದ್ದಿಯಂತೆ. ಆದರೆ ಅಕಸ್ಮಾತ್ ಹೈದರಾಬಾದಿಗೆ ಹೋಗಬೇಕಾಗಿ….” ನಾಗಪ್ಪನ ಮೋರೆ ಬಣ್ಣ ಕಳಕೊಳ್ಳಹತ್ತಿದ್ದನ್ನು ನೋಡಿ, ‘ಹೀಗೇ ಸಹಜವಾಗಿ ನಿನ್ನ ಬಗ್ಗೆ ಮಾತು ಬಂದಾಗ…ನೀನು ಟೇಬಲ್ ಹಿಡಿ_ತಿಂಡಿಗೆ ಆರ್ಡರ್ ಕೊಡು. ಅಲ್ಲಿಗೇ ಬರುತ್ತೇನೆ. ಮತ್ತು ಇದು ನೋಡು. ನಿನ್ನನ್ನು ಹುಡುಕಿಕೊಂಡು ಒಬ್ಬ ಹುಡುಗ ಬಂದಿದ್ದ. ಎರಡು ಸರತಿ ಬಂದು ಹೋದ_ನಿನ್ನೆ ಸಂಜೆ ಒಮ್ಮೆ, ಇಂದು ಬೆಳಿಗ್ಗೆ ಒಮ್ಮೆ.” ಎನ್ನುತ್ತ ಅಂಟು ಹಚ್ಚಿ ಬಾಯಿ ಮುಚ್ಚಿದ ಸಣ್ಣ ಲಕ್ಕೋಟೆಯನ್ನು ನಾಗಪ್ಪನ ಕೈಗೆ ಕೊಟ್ಟ. ನಾಗಪ್ಪ, ಕೆಲಹೊತ್ತು ಒಬ್ಬನೇ ಕೂಡ್ರುವ ಮನಸ್ಸಾಗಿ, ಕೆಳಗೆ ಅನೇಕ ಜಾಗಗಳು ಖಾಲಿ ಇದ್ದರೂ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಫ್ಯಾಮಿಲೀ ರೂಮು ಒಂದನ್ನು ಹೊಕ್ಕ. ಹೊಟೆಲಿನಲ್ಲಾಗ ವಿಶೇಷ ಗದ್ದಲವಿರಲಿಲ್ಲ. ಮೇಲಾಗಿ ಮಾಣಿಗಳೆಲ್ಲ ಪರಿಚಯದವರಾಗಿದ್ದರಿಂದ ಯಾರೂ ಇದಕ್ಕೆ ತಕರಾರು ಮಾಡಲಿಲ್ಲ. ತನ್ನ ಕರಿಯರ್‍ನಲ್ಲಿ ಒದಗಿದ ಈ ದುರ್ದರ ಪ್ರಸಂಗವನ್ನು ಶ್ರೀನಿವಾಸ ತನ್ನ ಪರಿಚಯದವರಿಗೆಲ್ಲ ಹೇಳುತ್ತ ಹೊರಟಿರಬಹುದೆ ? ಎಂಬ ಗುಮಾನಿಗೆ ಒಳಗಿನ ನಿರ್ಧಾರ ಕುಸಿಯಹತ್ತಿದ ಭಾವನೆ. ಆರ್ಡರ್ ತೆಗೆದುಕೊಳ್ಳಲು ಬಂದ ಮಾಣಿಗೆ ಉತ್ತಪ್ಪ ಕಾಫಿಗಳ ಆರ್ಡರ್ ಕೊಟ್ಟು ಅವನು ರೂಮಿನಿಂದ ಹೊರಟುಹೋದ ಕೂಡಲೇ ನಾಯಕ ಕೊಟ್ಟ ಲಕ್ಕೋಟೆಯ ಬಾಯಿ ತೆರೆಯಹತ್ತಿದ. ಎರಡೆರಡು ಸರತಿ ಬಂದೂ ಹೆಸರು ಕೊಡದೇ ಹೋದ ಈತ ಯಾರಿರಬಹುದು ? ಎಂದು ಆತಂಕಪಟ್ಟ. ಲಿಫಾಫೆ ತೆರೆದಾಗ ಎರಡು ಇಂಚು ಉದ್ದ, ಅಷ್ಟೇ ಅಗಲದ ಬಿಳಿಯ ಕಾಗದದ ಚೂರಿನಲ್ಲಿ ಟೈಪ್ ಮಾಡಿದ ಸಂದೇಶ : “ ಖಿhis is ಜಿಡಿom ಚಿ ಜಿಡಿieಟಿಜ ಚಿಟಿಜ ಚಿ ತಿeಟಟ-ತಿisheಡಿ. Pಟeಚಿse ಠಿhoಟಿe ಣoಜಚಿಥಿ ಚಿಜಿಣeಡಿ ೮ ಠಿ.m.oಟಿ ಓo.೫೪೮೭೯ ಜಿoಡಿ ಚಿಟಿ imಠಿoಡಿಣಚಿಟಿಣ messಚಿge.” +ಟೆಲಿಫೋನ್ ನಂಬರು ನೋಡಿದರೆ ಬಾಂದ್ರಾ, ಖಾರ್ ಅತ್ತಕಡೆಯದು. ಮೇರಿಯದಿರಬಹುದೆ ? ಅವಳು ಇರುತ್ತಿದ್ದದ್ದು ಎಲ್ಲಿ ಎಂಬುದನ್ನು ತಿಳಿಯುವಷ್ಟರಮಟ್ಟಿಗೆ ಕೂಡ ಅವನು ಅವಳ ಬಗ್ಗೆ ಆಸ್ಥೆ ತೋರಿಸಿರಲಿಲ್ಲ. ಬಾಂದ್ರಾದಲ್ಲೋ ತನ್ನ ಜಾತಿಯವರ ಕುಟುಂಬವೊಂದರಲ್ಲಿ ಪೇಯಿಂಗ್‌ಗೆಸ್ಟ್ ಆಗಿ ಇದ್ದಾಳೆ ಎಂಬಂತೆ ನೆನಪು. ಹಾಗೆ ನೋಡಿದರೆ ಅವನ ಅವಳ ಪರಿಚಯ ಎಷ್ಟು ದಿನದ್ದು ? ಏಳೆಂಟು ತಿಂಗಳಷ್ಟೇ. ಅದಕ್ಕಿಂತ ಮೊದಲು ಆಗೀಗ ಹೆಡ್ ಆಫೀಸಿಗೆ ಬಂದಾಗ ಒ‌ಆ ಯವರನ್ನು ಕಾಣಲು ಹೋದಾಗ ಆದರದಿಂದ ಮಾತನಾಡಿಸಿದ್ದ. ಅವಳ ಒಳ್ಳೇತನದ ಬಗ್ಗೆ, ವೇಷಭೂಷಣದ ಬಗ್ಗೆ, ಮಾತನಾಡಿ ನಗಿಸಿದ್ದ. ಒಂದು ಸಾರೆ ಮಾತ್ರ_ಮುಂಬಯಿಗೆ ವರ್ಗವಾಗಿ ಬಂದ ಕೆಲವು ದಿನಗಳಲ್ಲೇ ಇರಬೇಕು_ಇಂತಹ ಸುಂದರ ಕಣ್ಣುಗಳನ್ನು ಇನ್ನಾವ ಹುಡುಗಿಯಲ್ಲೂ ನೋಡಿಲ್ಲ ಎಂದಿದ್ದ. ಅದು ಬರಿಯ ಹೊಗಳಿಕೆಯ ಮಾತಾಗಿರಲಿಲ್ಲ. ಅವಳ ಮೇಲೆ ಛಾಪು ಹೊಡೆಯಬೇಕು ಎನ್ನುವ ವಿಶೇಷ ಉದ್ದೇಶವೂ ಅದರಲ್ಲಿರಲಿಲ್ಲ. ಮನಸ್ಸು ಆರ್ದ್ರವಾದ ಒಂದು ಕ್ಷಣದಲ್ಲಿ ಅವಳ ಸಾನ್ನಿಧ್ಯದಲ್ಲಿ ನಿಂತಾಗ ಸಹಜ ಸ್ಪೂರ್ತಿಯಿಂದ ಅನ್ನಿಸಿದ್ದನ್ನು ಹೇಳಿದ್ದು ಹುಡುಗಿಯ ಮೇಲೆ ತಾನೇ ಎಣಿಸಿರದ ಪರಿಣಾಮ ಮಾಡಿರಬೇಕು. ಆಗ ಹೊಗಳಲು ಧೈರ್ಯವಾಗಿರದ ಅವಳ ಸುಂದರ ತುಟಿಗಳ ಸುತ್ತ ಮುಗುಳು ನಗೆ ಅರಳಿದ್ದು, ಥಿou ಜಿಟಚಿಣಣeಡಿeಡಿ ಎಂದು ತುಂಟತನದಿಂದ ಕಣ್ಣು ಮಿಟುಕಿಸಿದ್ದು ನೆನಪಾಯಿತು. ಆ ನೆನಪಿನಿಂದಲೆ ಮನಸ್ಸು ಗೆಲುವಾಗಹತ್ತಿತು. ಮಾಣಿ, ಉತ್ತಪ್ಪ ಚೆಟ್ಣಿ ತಂದ. “ಕಾಫಿ ಈಗಲೇ ತರಲೇ ? ತುಸು ತಡೆದು ತರಲೆ ಸರ್ ?” ಎಂದು ಕೇಳಿದ. ‘ನಿಮ್ಮ ಮೆಚ್ಚಿಕೆಯ ವಡೆ ಬಿಸಿಬಿಸಿ ಇದೆ. ಒಂದು ಪ್ಲೇಟ್ ತರಲೇ ಸರ್ ?” ಎಂದು ಕೇಳಿದ. ನಾಗಪ್ಪನ ಗೆಲುವು ಅವನನ್ನೂ ತಟ್ಟಿರಬೇಕು. ನಾಗಪ್ಪ ಖುಷಿಯಿಂದ, “ಹೌದು, ವಡೆ ಹಾಗೂ ಕಾಫಿ ಒಟ್ಟಿಗೇ ತಾ.” ಎಂದ. ಮಾಣಿ ಹೊರಟುಹೋದ ಮೇಲೆ ಹುಟ್ಟಿದ ಸಂಶಯವೊಂದು ಹೊಸ ದುಗುಡಕ್ಕೆ ಕಾರಣವಾಯಿತು : ಆ ಚೀಟಿ ಮೇರಿಯದಾಗಿರದೆ ಇನ್ನೊಬ್ಬರದಾಗಿದ್ದರೆ ? ಮೇರಿಯದೇ ಆಗಿದ್ದರೆ ಅವಳಿಗೆ ಇಷ್ಟೊಂದು ತರಾತುರಿಯಲ್ಲಿ ನನಗೆ ಮುಟ್ಟಿಸಬೇಕಾದ ಸಮಾಚಾರ ಅದೇನಿರಬಹುದು ಚೀಟಿಯಲ್ಲಿ ತನ್ನ ಹೆಸರನ್ನು ತಿಳಿಸದೇ ಇರುವುದಕ್ಕೆ ಕಾರಣವೇನು ? ಇನ್ನೊಬ್ಬನ ಬಗ್ಗೆ ಚಿಂತೆ ವ್ಯಕ್ತಪಡಿಸುವಾಗಲೂ ತಾನು ಮಾತ್ರ ಈ ಉಪದ್ವ್ಯಾಪದಲ್ಲಿ ಸಿಕ್ಕಿಬೀಳದಿರುವಂತೆ ವಹಿಸಿದ ಎಚ್ಚರವೇ ? ದೇವರೇ ! ನಾವೆಲ್ಲ ಯಾರೂ ಯಾರನ್ನೂ ನಂಬರಾಗದಂಥ ಸ್ಥಿತಿಗೆ ಬರುತ್ತಿದ್ದೇವೆಯೇ ? ನಮ್ಮ ನಮ್ಮ ತಲೆ ಉಳಿಸಿಕೊಳ್ಳುವುದರಲ್ಲೇ ನಮ್ಮ ಕ್ರಿಯಾಶಕ್ತಿ ತನ್ನ ಸ್ಪೂರ್ತಿಯನ್ನೇ ಕಳಕೊಳ್ಳುತ್ತಿಲ್ಲವಷ್ಟೇ ? ಈ ಚೀಟಿ ಮೇರಿಯದೇ ಆಗಿದ್ದರೆ ನನ್ನ ಬಗ್ಗೆ ಇಷ್ಟೊಂದು ಕಾತರ ಇದ್ದೂ ತನ್ನ ಹೆಸರನ್ನು ತಿಳಿಸದೇ ಇರುವಂತಹ ಸಂದರ್ಭವೇನಿರಬಹುದು ? ಚೀಟಿಯನ್ನು ತನ್ನ ಕೋಣೆಗೆ ಕಳಿಸದೇ ಹೀಗೆ ಹೊಟೆಲ್ಲಿಗೆ ಕಳಿಸುವ ಉದ್ದೇಶವೇನು ? ಎಂಟು ಗಂಟೆಯ ನಂತರವೇ ಫೋನ್ ಮಾಡಲು ಹೇಳಿದ್ದು ಮನೆಯಲ್ಲಿ ತಾನು ನಿಶ್ಚಿತವಾಗಿ ಇರುವ ಹೊತ್ತಿಗೇ ಫೋನ್ ಬರಲಿ ಎಂಬ ಉದ್ದೇಶದಿಂದಿರಬೇಕು. +ಮಾಣಿ ವಡೆ, ಕಾಫಿ ತಂದಿಟ್ಟು ಹೋಗುವಷ್ಟರಲ್ಲಿ ಹೊಟೆಲ್ ಮಾಲಿಕ ನಾಯಕ ಒಳಗೆ ಬಂದ. ಕಿವಿಯ ಸಂದಿಯಲ್ಲಿ ಅತ್ತರ್ ಹಚ್ಚಿದ ಹತ್ತಿಯ ತುಂಡೊಂದನ್ನು ಸಿಕ್ಕಿಸಿಕೊಂಡಿದ್ದ. ತಲೆನೋವು ತರಿಸುವಂತಹ ಅದರ ವಾಸನೆಯಿಂದ ನಾಗಪ್ಪನಿಗೆ ಕಾಫಿಯ ರುಚಿಯೇ ತಿಳಿಯದಾಯಿತು. ರಂಗೇಲ ಎರಡೂ ಮಗ. ಹೊಟೆಲ್ಲಿನ ಗಲ್ಲೆಯಲ್ಲಿ ಕೂತು ಬರಹೋಗುವವರ ಮೋರೆಗಳನ್ನು ನೋಡುತ್ತ, ಗಿರಾಕಿಗಳಿಂದ ಬಿಲ್ಲು ಪಡೆದು ಹಣ ವಸೂಲು ಮಾಡಿ, ಚಿಲ್ಲರೆ ಹಣ ವಾಪಸ್ಸು ಕೊಟ್ಟು ಬಿಲ್ಲನ್ನು ನೆಟ್ಟಗೆ ನಿಂತ ದಬ್ಬಣವೊಂದಕ್ಕೆ ಚುಚ್ಚುತ್ತ ಕೂಡ್ರುವ ಈತನ ತಲೆಯಲ್ಲಿ ದುಡ್ಡಿನ ಪೆಟ್ಟಿಗೆಯಲ್ಲಿ ಶೇಖರಿಸುತ್ತಿದ್ದ ಹಣ, ಅದರಿಂದ ಕೊಂಡುಕೊಳ್ಳಬಹುದಾದ ಭೋಗವಸ್ತು_ಇವುಗಳನ್ನು ಬಿಟ್ಟು ಬೇರೆ ಯಾವುದಾದರೂ ವಿಚಾರ ತುಂಬಿರುವುದು ಶಕ್ಯವಿದೆಯೇ ? ನಾಗಪ್ಪನಿಗೆ ಸಂಶಯ. “ಚೀಟಿ ಕೊಟ್ಟ ಹುಡುಗನನ್ನು ನಾನು ಇತ್ತಕಡೆ ನೋಡಿದಂತಿಲ್ಲ. ಕ್ರಿಶ್ಚನ್ನನಿದ್ದಂತೆ ತೋರಿತು. ಚೀಟಿ ಯಾರು ಕಳಿಸಿದ್ದಾರೆ ಎಂದು ಕೇಳಿದಾಗ ನನಗೆ ಕೊಡಲು ಹಿಂದು ಮುಂದು ನೋಡುತ್ತ ‘ಇಲ್ಲ’ ಇನ್ನೊಮ್ಮೆ ಬರುತ್ತೇನೆ’ಂದ. ನಿನ್ನ ಪರಿಚಯವೂ ಅವನಿಗೆ ಇದ್ದಂತೆ ಇಲ್ಲ. ಯಾಕೆಂದರ ನಾನು ಹಾಕಿಕೊಟ್ಟ ಕುರ್ಚಿಯಲ್ಲಿ ಕುಳಿತು ಗಿರಾಕಿಗಳು ಒಬ್ಬೊಬ್ಬರೇ ಬಂದಂತೆ_‘ಅವರು ಬಂದರೆ ?’ ಎಂದು ಕೇಳುತ್ತಿದ್ದ, ನೇರವಾಗಿ. ‘ನಿನಗೆ ಅವರ ಪರಿಚಯವಿಲ್ಲವೇ ? ’ ಎಂದು ಕೇಳಿದಾಗ ಬಹಳ ಚಾಲಾಕಿನ ಉತ್ತರ_‘ಚೀಟಿ ಕೊಟ್ಟವರು ಅವರನ್ನು ಚೆನ್ನಾಗಿ ಬಲ್ಲರು.” +ಎರಡೂ ಮಗನೇ, ನಿನ್ನ ತಲೆಯ ಮೇಲೆ ಜಪ್ಪಿಬಿಡಬೇಕು ಅನ್ನಿಸುತ್ತದೆಯಲ್ಲವೊ ಎನ್ನುವಷ್ಟು ಬಂದ ಸಿಟ್ಟನ್ನು ನಾಗಪ್ಪ ಪ್ರಯತ್ನಪೂರ್ವಕವಾಗಿ ನುಂಗಿಕೊಂಡ. (ಇಷ್ಟು ಸಣ್ಣ ಚೂರು ಸಂಗತಿಯನ್ನೇ ದೋಸೇ ಹಿಟ್ಟಿನ ಹಾಗೆ ವಿಸ್ತರಿಸುವ ನೀನು ಹೊಟೆಲ್ ಮಾಲಿಕನಾಗಿ ಶೋಭಿಸುತ್ತೀ, ಬಿಡು !) ಚೀಟಿ ಬರೆದವಳು ಮೇರಿಯೇ ಇರಬೇಕು ಎಂಬ ಅನ್ನಿಸಿಕೆ ಗಟ್ಟಿಯಾಗುತ್ತಿರುವಾಗಲೇ ನಾಯಕ ಸಣ್ಣ ಬಾಂಬನ್ನೇ ಎಸೆದ : “ಶ್ರೀನಿವಾಸನ ಬಗ್ಗೆ ನೀನೇನೋ ಕಾದಂಬರಿ ಬರೆಯಲು ಹಿಡಿದಿದ್ದೀಯಂತೆ. ನಿನ್ನ ಗೆಳೆಯ ಸೀತಾರಾಮ ಎಲ್ಲ ಕಡೆಯಲ್ಲಿ ಸುದ್ದಿ ಹಬ್ಬಿಸಿದ್ದಾನೆ. ಶ್ರೀನಿವಾಸನಿಗೆ ಇದು ಗೊತ್ತಾಗಿದೆ. ಆದರೆ ಅದಕ್ಕೆ ಅವನು ಹೆದರಿಕೊಂಡಿಲ್ಲ. ‘ಬರೆಯಲಿ, ಯಾವ ಭಿಡೆಯೂ ಬೇಡ. ನನ್ನ ಮನೆಯಲ್ಲೇ ಕೂತು ಬರೆ’ ಎಂದು ಅವನೇ ನಿನಗೆ ಸೂಚಿಸಿದ್ದನಂತೆ ಹೌದೆ ? ಶ್ರೀನಿವಾಸನೇ ಹೇಳಿದ್ದು…” ಬಾಯಲ್ಲಿ ತುಂಬಿಕೊಂಡ ಕವಳದ ಎಂಜಲವನ್ನು ಸಿಂಕಿನಲ್ಲಿ ಉಗುಳಿ ಬರುವಷ್ಟರಲ್ಲಿ ನಾಗಪ್ಪ ಸಿಟ್ಟಿನಿಂದ ಹೊತ್ತಿಕೊಂಡಿದ್ದ. ಆದರೆ ಆ ಸಿಟ್ಟಿನ ಗುರಿ ಯಾರೆಂಬುದು ಸ್ಪಷ್ಟವಾಗಲಿಲ್ಲ : ಕಾದಂಬರಿಯ ಬಗ್ಗೆ ಸುದ್ದಿ ಹರಡುತ್ತ ನಡೆದ ಸೀತಾರಾಮನೋ ? ಆ ಸುದ್ದಿಗೆ ಹೆದರಿಲ್ಲವೆಂದು ನಟಿಸುವ ಅಂಜುಗುಳಿ ಶ್ರೀನಿವಾಸನೋ ? ಇಲ್ಲ, ಇಲ್ಲದ ಕಿತಾಪತಿಗೆ ಬಾಯಿ ಕಿಸಿಯುವ ಈ ಡೊಳ್ಳುಹೊಟ್ಟೆಯ ನಾಯಕನೋ ? ನಾಯಕ ಬಾಯಿ ಖಾಲಿ ಮಾಡಿಕೊಂಡು ಬಂದಿದ್ದರ ಉದ್ದೇಶ ಬಾಯಿ ಬಿಚ್ಚಹತ್ತಿತು : “ಶ್ರೀನಿವಾಸನ ಜತೆ ಹಗೆ ಕಟ್ಟಿಕೊಳ್ಳಬೇಡ. ತನ್ನ ವಿರುದ್ಧ ನಿಂತವರನ್ನು ಹಣಿಯಲು ಅವನು ಏನು ಮಾಡಲೂ ಹೇಸುವವನಲ್ಲ.” ಎಂದ ಕೆಲಹೊತ್ತಿನ ಮೇಲೆ :“ನನಗಿದಾವುದರಲ್ಲೂ ವಿಶ್ವಾಸವಿಲ್ಲ, ಮಾರಾಯಾ, ಹೇಳುತ್ತೇನೆಂದು ಸಿಟ್ಟಾಗಬೇಡ. ನಿನ್ನ ಬಗ್ಗೆ ಇದ್ದ ಅಭಿಮಾನದಿಂದಲೇ ಒಂದು ಮಾತು ಹೇಳಿಬಿಡುತ್ತೇನೆ : ಶ್ರೀನಿವಾಸ ಬರೇ ಹಣದ ಬಲದ ಮೇಲೇ ಆಗಲೊಲ್ಲದೇಕೆ_ಮುಂಬಯಿಯ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಒಂದು ಬಲಾಢ್ಯ ಸ್ಥಾನ ಗಳಿಸಿಕೊಂಡಿದ್ದಾನೆ. ಮಠದ ಸ್ವಾಮಿಗಳ ಮೇಲೆ, ಅವನ ಹತ್ತಿರದವರ ಮೇಲೆಲ್ಲ ಪ್ರಚಂಡ ವರ್ಚಸ್ಸು ಇವನದು. ವಡಾಳಾದ ಗಣೇಶೋತ್ಸವದ ಎಲ್ಲ ಜವಾಬ್ದಾರಿ‌ಈ ವರ್ಷ ತಾನೇ ಹೊತ್ತುಕೊಂಡಿದ್ದಾನೆ….ಹೇಳುವ ಉದ್ದೇಶ ಇಷ್ಟೇ : ಕಳೆದ ಕೆಲವು ದಿನಗಳಿಂದ ನಮ್ಮ ಸಮಾಜದ ವರ್ಚಸ್ಸುಳ್ಳ ಹಿರಿಯರಲ್ಲೆಲ್ಲ ನಿನ್ನ ಪೂರ್‍ವಜರನ್ನು ಕುರಿತು ಸಂಶಯ ಹುಟ್ಟಿಸುವಂತಹ ಒಂದು ವಿಚಿತ್ರ ಸುದ್ದಿ …”ನಾಗಪ್ಪನ ಮೋರೆ ಸಿಟ್ಟಿನಿಂದ ಕಪ್ಪಾಗುತ್ತಿದ್ದುದನ್ನು ನೋಡಿಯೂ ಹಿಂದೆಗೆಯದೇ ಒಂದು ಬಗೆಯ ಫಾಜೀಲ ಹಠದಿಂದ_“ನಿನ್ನ ಅಮ್ಮ, ಅಪ್ಪ ನಮ್ಮ ಜಾತಿಯವರೇ ಅಲ್ಲ ಎನ್ನುವಂತಹ…” +ನಾಗಪ್ಪ ಮುಂದೆ ಕೇಳುವ ಮನಸ್ಸಿಲ್ಲದೇ ಕಾಫಿ ಮುಗಿಸುವ ಮೊದಲೇ ಧಡಕ್ಕನೆ ಎದ್ದೇ ನಿಂತ. ಇದು ಉದ್ಧಟತನವೆಂದು ಬಗೆದು ಪ್ರಕ್ಷುಬ್ಧನಾದ ನಾಯಕ, “ಶ್ರೀನಿವಾಸರಾವ್ ನಮ್ಮೆಲ್ಲರ ಮುಂದೆ ಇದನ್ನೆಲ್ಲ ಪುರಾವೆ ಸಹಿತ ಸಿದ್ಧಪಡಿಸುವ ಪಣ ತೊಟ್ಟು ನಾಳೆಗೇ ಗೋವೆಗೆ ಹೋಗುವವನಿದ್ದಾನೆ….ಇದನ್ನೆಲ್ಲ ಹೇಳುತ್ತಿರುವುದು ನಿನ್ನ ಒಳಿತಿಗಾಗಿಯೇ…” ಎನ್ನುತ್ತಿರುವಾಗಲೇ ನಾಗಪ್ಪ, “ನೀವು, ನಿಮ್ಮ ದರಿದ್ರ ಎಸ್. ಬೀ. ಸಮಾಜ_ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲವೋ ನಾಯಕಾ. ನಿಮ್ಮ ಜಾತಿಯವನಾಗಿಹುಟ್ಟಿದ್ದರ ಬಗ್ಗೆ ನನಗೆ ಯಾವ ಅಭಿಮಾನವೂ ಇಲ್ಲ. ಈ ಕಾರಣಕ್ಕಾಗಿಯೇ ಸಮಾಜದ ಯಾವ ಒಂದು ಕಾರ್ಯಕ್ರಮದಲ್ಲಿಯೂ ನಾನು ಈವರೆಗೆ ಭಾಗವಹಿಸಿಲ್ಲ. ನಡೆಸಲಿ_ಶ್ರೀನಿವಾಸ, ನನ್ನ ಪೂರ್ವಜರನ್ನು ಕುರಿತು ಸಂಶೋಧನೆ. ಅದಕ್ಕೆಲ್ಲ ನಾನು ಹೆದರಿಕೊಂಡಿಲ್ಲ. ಬದಲು, ಶ್ರೀನಿವಾಸ ಹುಡುಕಿ ತೆಗೆದದ್ದನ್ನು ತಿಳಿಯಲು ಕುತೂಹಲವುಂಟಾಗಿದೆ. ಭೆಟ್ಟಿಯಾದಾಗ ನೀನೇ ಹೇಳಿಬಿಡು. ನಾನು ಹೀಗೆ ಅಂದೆನಂತ. ಇಷ್ಟೇ, ನನ್ನ ಕಾದಂಬರಿಯಲ್ಲಿ ಬರುವ ಅವನ ಪೂರ್ವೇತಿಹಾಸವನ್ನು ಇದಿರಿಸಲು ಮಾತ್ರ ಬೆನ್ನೆಲುಬಿಗೆ ತಾಕತ್ತು ಬರಲು ದಿನವೂ ಚಂಪೀ ಮಾಡಿಕೊಳ್ಳಲು ಹೇಳು .”ನಾಗಪ್ಪನ ಮಾತಿನಲ್ಲಿ ಅವನೇ ಬಯಸಿರದ ನಿಷ್ಠುರ ಸೇರಿಕೊಂಡಿತ್ತು. ನಾಯಕನ ಕಣ್ಣುಗಳು ಮತ್ತೆ ಫಾಜೀಲ ಕುತೂಹಲದಿಂದ ದೊಡ್ಡದಾದವು. ಯಾಕೆ ? ಅಂತಹದೇನಾದರೂ ಇದೆಯೇ ? ಎಂದು ಕೇಳುವ ರೀತಿಯಲ್ಲಿ ತುಟಿ ತೆರೆದು ಕುಳಿತದ್ದನ್ನು ನೋಡಿ ಹೇಸಿಗೆಪಟ್ಟು : “ಇನ್ನೊಂದು ಮಾತನ್ನು ಹೇಳಿಡುತ್ತೇನೆ ನಾಯಕಾ, ಈ ಕಾದಂಬರಿ ಬರೇ ಶ್ರೀನಿವಾಸನ ಬಗ್ಗೆ ಮಾತ್ರವಲ್ಲ. ಅವನ ಹೀನ ಕರಾಮತಿಗಳಿಗೆ ಬೆಂಬಲವಿತ್ತ ನಿಮ್ಮೆಲ್ಲರ ಬಗೆಗೂ ಇದೆ. ನಿಮ್ಮ ಎಸ್. ಬೀ. (ಎಸ್. ಓ. ಬೀ !) ಸಮಾಜದ ಬಗೆಗೂ ಇದೆ. ಮಠದ ಸ್ವಾಮಿಗಳ ಬಗೆಗೂ ಇದೆ….ನನ್ನ ಬಗ್ಗೆ ನೀನು ತೋರುತ್ತಾ ಬಂದ ಅಭಿಮಾನಕ್ಕೆ ತುಂಬ ಋಣಿಯಾಗಿದ್ದೇನೆ.” ಎಂದವನೇ ಮಾಣಿ ಮೊದಲೇ ತಂದಿಟ್ಟ ಬಿಲ್ಲನ್ನು ಎತ್ತಿಕೊಂಡು ನಾಯಕನನ್ನು ಕುರ್ಚಿಯಲ್ಲಿ ಕುಳಿತಲ್ಲೇ ಬಿಟ್ಟು ಕೆಳಗೆ ನಡೆದೇಬಿಟ್ಟ. ನಿಚ್ಚಣಿಕೆಯ ಮೆಟ್ಟಿಲ ಮೇಲೆ ಹೆಜ್ಜೆಗಳು ಬಯಸಿದ್ದಕ್ಕಿಂತ ಹೆಚ್ಚು ಸದ್ದು ಮಾಡಿದವು. ಕೌಂಟರಿನಲ್ಲಿ ಹಣ ತೆತ್ತು ಹೊಟೆಲ್ಲಿನಿಂದ ಹೊರಗೆ ಬಿದ್ದಾಗ ‘ಸಂತೋಷಭವನ’ದೊಂದಿಗಿನ ಸಂಬಂಧ ಇಲ್ಲಿಗೇ ಕಡಿಯಿತೇನೋ ಎಂದುಕೊಂಡ. +uಟಿಜeಜಿiಟಿeಜ +– ಅಧ್ಯಾಯ ಹದಿನೈದು – +ತನ್ನ ಹಲವಾರು ದುಃಖಗಳಿಗೆ ತನ್ನ ಸ್ವಭಾವರಚನೆಯಲ್ಲೇ ಬೆಳೆದುಬಂದ ಒಂದು ದಾರುಣವಾದ ಒಂಟಿತನ ಕಾರಣವಾಗಿದೆ ಎಂಬ ಅರಿವು ನಾಗಪ್ಪನಿಗೆ ಇದೆಯಾದರೂ ಅದರ ಬಗ್ಗೆ ಏನೂ ಮಾಡಲು ಆಗದವನಾಗಿದ್ದಾನೆ. ತನ್ನ ಬಾಲ್ಯದ ಬಗ್ಗೆ, ಅಪ್ಪ-ಅಮ್ಮರ ಬಗ್ಗೆ, ಜಾತಿಯ ಬಗ್ಗೆ, ಎದೆಯ ಹತ್ತಿರ ಅವುಚಿ ಹಿಡಿದಲ್ಲೇ ಸುಡುವ ಗುಟ್ಟಿನ ಬಗ್ಗೆ, ಅಣ್ಣ-ತಂಗಿಯರ ಬಗ್ಗೆ, ಪರ್‍ಯಾಯವಾಗಿ ಮಾತು ಬಂದರೂ, ಹಾಗೆ ಮಾತು ಬರಲು ಕಾರಣವಾದವರೊಂದಿಗಿನ ಸಂಬಂಧ ಕಡಿಯುತ್ತ ಬಂದಿದ್ದಾನೆ. ‘ಸಂತೋಷಭವನ’ದೊಡನೆಯ ಸಂಬಂಧವನ್ನು ಕಡಿಯುವ ನಿರ್ಧಾರ ಇಂತಹ ಅನೇಕ ನಿರ್ಧಾರಗಳ ಸಾಲಿನಲ್ಲಿ ಇತ್ತೀಚಿನದು., ಅಷ್ಟೇ. ಹಾಗೆ ನೋಡಿದರೆ, ನಾಗಪ್ಪನಿಗೆ ಗೆಳೆಯರೆಂದರೆ ಪ್ರಾಣ. ಅದರ ಸಲುವಾಗಿ ಏನನ್ನು ಮಾಡಲೂ ಸಿದ್ಧ : ಅಂತಹ ಉತ್ಕಟತೆ ನಾಗಪ್ಪನ ಭಾವನೆಗಳಿಗಿದೆ. ಆದರೆ ಅದಕ್ಕೆ ಪ್ರತಿಸ್ಪಂದಿಯಾಗುವಂತಹ ಭಾವನೆ ತಾನು ವಿಶ್ವಾಸವಿಟ್ಟವರಿಂದ ಪ್ರಕಟವಾಗದೆ ಇದ್ದಾಗ, ತನ್ನನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಲು ಅಷ್ಟೇ ಈ ಗೆಳೆತನದ ನಟನೆ ಎಂಬ ನಿಲುಗಡೆಗೆ ಬಂದು ವಿಷಾದಪಟ್ಟಿದ್ದಾನೆ. ಇದು ಬರಿಯೆ ತನ್ನೊಬ್ಬನದೇ ಅನುಭವ ಎಂಬಂತೆ ಒಳಗೊಳಗೇ ಅತ್ತಿದ್ದಾನೆ. ಈ ಶ್ರೀನಿವಾಸನೇ ! ಐದೇ ದಿನಗಳ ಹಿಂದೆ ಅವನು ತನ್ನನ್ನು ಭೆಟ್ಟಿಯಾದಾಗ, ರಜೆಯ ದಿನಗಳನ್ನು ತಮ್ಮಲ್ಲೇ ಕಳೆಯುವಂತೆ ಕೇಳಿಕೊಂಡಾಗ ಅವನ ಮೋರೆಯ ಮೇಲೆ ಮೂಡಿದ ಪ್ರಾಮಾಣಿಕತೆಯನ್ನು ನೆನೆದರೇ ನನ್ನ ಕಣ್ಣು ಆರ್ದ್ರವಾಗುವ ಅನ್ನಿಸಿಕೆ ನಾಗಪ್ಪನಿಗೆ. ಅವನ ಆ ಪ್ರಾಮಾಣಿಕತೆಯನ್ನು ನಂಬಿಯೇ ಹಿಂದಿನದೆಲ್ಲವನ್ನೂ ಮರೆತವನ ಹಾಗೆ ಯಾವ ಒಂದು ಅಡೆತಡೆಯಿಲ್ಲದೇನೆ ಅವನಲ್ಲಿ ಹೋಗಲು ಒಪ್ಪಿಕೊಂಡಿದ್ದ. ಆದರೆ ಅವನ ಆಗಿನ ಮುಖಚರ್ಯೆ ಕೂಡ ಮೋಸದ್ದಾಗಿತ್ತು ಎಂಬುದು ತಿಳಿದಾಗ ನಾಗಪ್ಪನಿಗೆ ತನ್ನ ಬಗ್ಗೆ ತನಗೇ ಕೆಡುಕೆನಿಸಿತು. ಜನರ ನಿಜ ಸ್ವಭಾವವನ್ನು ಅರಿಯುವ ತಾಕತ್ತೇ ತನಗಿಲ್ಲ. ಎಲ್ಲರನ್ನೂ ಸುಲಭವಾಗಿ ನಂಬಿಬಿಡುತ್ತೇನೆ, ಎಂದುಕೊಂಡ. ಇದೀಗಿನ ಸ್ಥಿತಿಯಲ್ಲಿ ಯಾರಲ್ಲಾದರೂ ಹೋಗಬೇಕು ಅನ್ನಿಸಿತು. ಮೇರಿಗೆ ಫೋನ್ ಮಾಡಲೇ ? ಕನಿಷ್ಠ ಅವಳ ದನಿಯನ್ನಾದರೂ ಕೇಳಿದರೆ ಮನಸ್ಸಿಗೆ ಸಮಾಧಾನವಾದೀತು ಅನ್ನಿಸಿತು. ಮರುಗಳಿಗೆ, ಚೀಟಿ ಕಳಿಸಿದವಳು ಮೇರಿಯೇ ಹೌದಾದರೆ. ಎಂಟು ಗಂಟೆಯ ನಂತರವೇ ಫೋನ್ ಮಾಡಲು ಹೇಳಿದ್ದಕ್ಕೆ ಕಾರಣವಿರಬೇಕು. ಆಫೀಸಿನ ಫೋನಿನ ಮೇಲೆ ಕೊಡಲು ಆಗದಂತಹ ಸುದ್ದಿಯೇನಾದರೂ ಇರಬೇಕು : ಮನೆಯ ಹಾದಿ ಹಿಡಿದ ನಾಗಪ್ಪನ ಮನಸ್ಸನ್ನು ಮೇರಿ ತುಂಬಹತ್ತಿದ್ದಳು : ಹಿಂದೊಮ್ಮೆ ಮೇರಿಗೇ ಹೇಳಿದಂತೆ ತನ್ನ ಲಕ್ಷ್ಯವನ್ನು ಮೊತ್ತಮೊದಲು ಸೆರೆಹಿಡಿದದ್ದೇ ಅವಳ ಮೋಹಕವಾದ ಕಣ್ಣುಗಳಾಗಿದ್ದವು_ಮುಖ್ಯವಾಗಿ ಅವುಗಳ ಆರ್ದ್ರವಾದ ಹೊಳಪು ಆಗಿತ್ತು. ಕಣ್ಣುಗಳ ಜೊತೆ ಅವಳ ಹೆಗಲ ಮೇಲೆ ಹರಡಿ ಬೀಳುವ ಲಕಲಕಿಸುವ ಕಪ್ಪು ಕೇಶರಾಶಿಯೂ ಈಗ ಸೇರಿಕೊಂಡಿತು. ಆದರೆ ಹುಡುಗಿಯರ ರೂಪಕ್ಕಷ್ಟೇ ಮರುಳಾಗುವ ವ್ಯಕ್ತಿತ್ವವೇ ಅಲ್ಲ ನಾಗಪ್ಪನದು. ಮನಸ್ಸಿಗೆ ತುಂಬ ಸುಖ ಕೊಡುವ ಮೇರಿಯ ರೂಪಕ್ಕಿಂತ ಹೆಚ್ಚಾಗಿ ನಾಗಪ್ಪನನ್ನು ಇದೀಗ ಪುಲಕಗೊಳಿಸಿದ್ದು ಅವಳು ತನ್ನ ಬಗ್ಗೆ ತೋರಿದ ಕಾಳಜಿಯೇ. ಅವಳ ಬಗೆಗಿನ ಈ ಪ್ರೀತಿಯ ಭಾವನೆಯಲ್ಲಿ (ನಾಗಪ್ಪನ ಮೈಮೇಲೆ ಮುಳ್ಳು ನಿಂತಾಗ ತಾನೇ ಆಶ್ಚರ್ಯಪಟ್ಟ.) ಕೃತಜ್ಞತೆಯ ಭಾವವೇ ದೊಡ್ಡದಾಗಿತ್ತು. ರಾತ್ರಿಯ ಎಂಟು ಗಂಟೆಯವರೆಗೆ ದಾರಿ ಕಾಯುವದನ್ನು ಬಿಟ್ಟು ಬೇರೆ ಏನು ಮಾಡಲೂ ತೋಚದೇ, ಯಾರಾದರೂ ಗೆಳೆಯರಲ್ಲಿ ಹೋದರೆ ಹೇಗೆ ಎಂಬ ವಿಚಾರ ಬಂದಾಗ ತನಗೆ ನಿಜವಾದ ಗೆಳೆಯರೇ ಇಲ್ಲ ಎಂಬ ಅರಿವಿನಿಂದ ಮನಸ್ಸು ಮುದುಡಿಕೊಂಡಿತು. ಹಲವಾರು ಹೆಸರುಗಳು, ಹಲವಾರು ಹೆಸರಿಲ್ಲದ ರೂಪಗಳು ಕಣ್ಣಿದಿರಿನಿಂದ ಹಾದುಹೋದವು. ರಾಣಿ ಕೂಡ. ಯಾರೂ ಬೇಡ ಎನ್ನಿಸಿತು. ಬದುಕು ಸಾವುಗಳ ನಿರ್ಣಯವಾಗುತ್ತಿರುವ ಗಳಿಗೆಯಲ್ಲಿ ಸಹವಾಸದ ಕಲ್ಪನೆಯೇ ದುಸ್ಸಹವಾಗಹತ್ತಿತು. +ವಿಚಾರಮಾಡುತ್ತಿರುವಾಗಲೇ ನಾಗಪ್ಪ ಪ್ರಾರ್ಥನಾಸಮಾಜಕ್ಕೆ ಬಂದು ತಲುಪಿದ್ದ. ಮುಖ್ಯ ರಸ್ತೆ ದಾಟಿ ಆ ಬದಿಯ ಫೂಟ್‌ಪಾಥ್ ಸೇರಿದ್ದೇ ತಡ : ನ್ಯೂಸ್‌ಪೇಪರ್ ಏಜೆಂಟಿನ ಅಂಗಡಿ ! ‘ಸಂತೋಷಭನ’ಕ್ಕೆ ಹೋಗುವ ಮೊದಲು ಇಲ್ಲಿ ಬಂದಾಗ ತನ್ನಲ್ಲಿ ಮೊಳೆತ ವಿಚಾರಕ್ಕೆ ನಾಗಪ್ಪನಿಗೆ ಈಗ ನಗು ಬಂತು. ಅಂಗಡಿ ತಲುಪುತ್ತಲೇ ಇದಿರಿನಲೇ ಇದ್ದ ಖಾಲಿ ಸ್ಟೂಲೊಂದರ ಮೇಲೆ ಕುಳಿತು ಅಂಗಡಿಯ ಮಾಲೀಕನಾದ ತುಕಾರಾಮನೊಡನೆ ಹರಟೆ ಹೊಡೆಯಲು ಉತ್ಸುಕನಾದ. ನಾಗಪ್ಪ ತನ್ನ ಅಂಗಡಿಯ ಬಾಗಿಲಲ್ಲಿ ಬಂದು ಕೂತದ್ದರ ನಿರಾಡಂಬರತೆಯಿಂದಲೇ ಹಿಗ್ಗಿದ ತುಕಾರಾಮ ಬಹಳ ಖುಶಿಯಿಂದ ಚಹ ತರಿಸಲೇ ಎಂದು ಕೇಳಿದ. ಬೇಡ, ಇದೀಗ ನಾಯಕರ ಚಹಾ ದುಕಾನಿನಲ್ಲಿ (ಸಂತೋಷದಭನ’ದ ಹೆಸರು ನೆನೆಯುವ ಮನಸ್ಸಾಗಲಿಲ್ಲ. ನಾಗಪ್ಪನಿಗೆ) ನಾಸ್ತಾ ಆಯಿತು ಎಂದು ಆಗ ಕೊಂಡುಕೊಂಡ ಪತ್ರಿಕೆಯನ್ನು ಓದಲೆಂಬಂತೆ ಬಿಚ್ಚಹತ್ತಿದ. “ಎಳೆನೀರಾದರೂ ?” ಎಂದು ತುಕಾರಾಮಾ ಕೇಳಿದಾಗ ಬೇಡವೆನ್ನುವ ಮನಸ್ಸಾಗದೇ “ಗ್ಲಾಸುಗಳಲ್ಲೇ ತರಿಸಿ, ಇಬ್ಬರೂ ಹಂಚಿ ಕುಡಿಯೋಣ.” ಎಂದು ಸೂಚಿಸಿದ. ಸಹಾಯದ ಹುಡುಗನಿಗೆ ಎರಡು ಸೀಯಾಳಗಳನ್ನು ತರುವಂತೆ ಕೈಸನ್ನೆಮಾಡಿ ಹಣ ಕೊಟ್ಟು ಅಲ್ಲಿಂದ ಓಡಿಸಿದ ತುಕಾರಾಮ. ಸೀಯಾಳ ತರಲು ಬೆನ್‌ಹ್ಯಾಮ್-ಹಾಲ್-ಲೇನಿಗೇ ಓಡಬೇಕು. +ಮೆಟ್ರಿಕ ಅನಂತರದ ವಿದ್ಯಾರ್ಥಿದೆಸೆಯ ದಿನಗಳನ್ನು ನಾಗಪ್ಪ ಖೇತವಾಡಿಯ ಎರಡು ಕೋಣೆಗಳ ಮನೆಯಲ್ಲೇ ಕಳೆದಿದ್ದ. ಕೆಮಿಕಲ್ ಟೆಕ್ನಾಲಾಜಿಯ ಕೊನೆಯ ಪರಿಕ್ಷೆ ಪಾಸಾದನಂತರ ನೌಕರಿಗಾಗಿ ಅಲೆದಾಡಿದ್ದ. ಶ್ರೀನಿವಾಸನೇ ಆಗಿನ ದಿನಗಳಲ್ಲಿ ಹತ್ತಿರದ ಗೆಳೆಯ. ಈ ನ್ಯೂಸ್‌ಪೇಪೆರ್ ಅಂಗಡಿ, ‘ಸಂತೋಷಭವನಗಳ ಪರಿಚಯ ಆಗಿನಿಂದಲೇ. ‘ಶೇರ್-ಏ-ಪಂಜಾಬ್’ ಮಾಂಸಾಹಾರಿ ಹೋಟೆಲ್ಲು, ಅದರ ಮಗ್ಗುಲಿನ ‘ಲೈಟ್ ಅಫ಼್ ಏಶಿಯಾ ಹೆರ್-ಕಟಿಂಗ್-ಸೆಲೂನು’ ಇವುಗಳ ಪರಿಚಯ ಕೂಡ. ಈ ಪರಿಸರದ ಅನೇಕರು ಆಗಿನ ದಿನಗಳಲ್ಲಿ ಶ್ರೀನಿವಾಸನ ಜಿಗರೀದೋಸ್ತರು. ಯಾವ ಒಂದು ಸಂಕೋಚ, ಆತ್ಮಪ್ರಜ್ಞೆಗಳ ಲವಲೇಶವೂ ಇಲ್ಲದೇ ಇವರ ಕೈಯಲ್ಲಿ ಕೈಯಿಟ್ಟು ಒಮ್ಮೊಮ್ಮೆ ಹೆಗಲ ಮೇಲೆ ಕೈಯಿಟ್ಟು ಮನಮೋಕಳೇ ಮಾತನಾಡುವ ರೀತಿಯನ್ನು ನಾಗಪ್ಪ ಥಕ್ಕಾಗಿ ನೋಡುತ್ತಿದ್ದ. ಶ್ರೀನಿವಾಸನಂತೆ ನಾಗಪ್ಪನೂ ಹಳ್ಳಿಯವನೇ. ಈಗಲೂ ಖೇತವಾಡಿಯ ಗಲ್ಲಿಗಲ್ಲಿಗಳು, ಪ್ರಾರ್ಥನಾಸಮಾಜ, ಠಾಕೂರದ್ವಾರ, ಗ್ರೆಂಟ್ ರೋಡ್, ಚರ್ನೀ ರೋಡ್, ಚೌಪಾಟೀ, ಧೋಬೀ-ತಲಾವ್ ಇವುಗಳೆಲ್ಲ ನಾಗಪ್ಪನ ಮಾನಸಿಕ ಪ್ರಪಂಚದ ಆತ್ಮೀಯ ಅಂಶಗಳು. ನಾಗಪ್ಪನಿಗೂ ಈ ತುಕಾರಾಮನಂತಹರೊಡನೆ ಮನಬಿಚ್ಚಿ ಮಾತನಾಡುವ ಆಸೆ. ಆದರೆ ಒಳಗೆಲ್ಲೋ ನಾಲಗೆಯನ್ನು ಬಿಗಿದು ಹಿಡಿಯುವ ಸಂಕೋಚ. ಮಾತಿನಿಂದ ಸಂಬಂಧ ಬೆಳೆಸುವ ಪ್ರಕೃತಿಯೇ ಅಲ್ಲ ತನ್ನದು.ಇವರೆಲ್ಲರ ಬಗೆಗೆ ಅನ್ನಿಸುತ್ತಿದ್ದ ಪ್ರೀತಿ ಪರ್ಯಾಯವಾಗಿ ತನ್ನ ಸಾಹಿತ್ಯದಲ್ಲಿ ಎಂದಾದರೂ ಮೂಡಿಬಂದೀತೇ ಹೊರತು ಪ್ರತ್ಯಕ್ಷ ಮುಖಾಮುಖಿಯಲ್ಲಿ ಪ್ರಕಟವಾಗುವಂತಹದಲ್ಲ. ಮೇಲಾಗಿ ಭಾಷೆಯೂ ಒಂದು ತೊಡಕಾಗಿತ್ತು. ಶ್ರೀನಿವಾಸನ ಮರಾಠೀ ಭಾಷೆ ತನ್ನದಕ್ಕಿಂತ ಕಚ್ಚಾ ಆಗಿದ್ದರೂ ಕೂಡ ಯಾವ ಒಂದು ಭಿಡೆಯಿಲ್ಲದೇನೇ ಕೊಂಕಣಿ ಶಬ್ದಗಳನ್ನು, ಕೆಲವೊಂದು ಸರತಿ ಕನ್ನಡ ಶಬ್ದಗಳನ್ನೂ ಬೆರಸಿ, ಕೇಳುವವರಿಗೆ ಮಾತ್ರ ತಾನು ಆಡುತ್ತಿದ್ದದ್ದು ಮರಾಠಿಯೇ ಎನ್ನುವ ಭ್ರಮೆ ಹುಟ್ಟಿಸುವಂತೆ ಮಾತನಾಡುವ ರೀತಿಯೇ ಬಲು ಮೋಜಿನದಾಗಿತ್ತು. ಮುಖ್ಯವಾಗಿ, ಮಾತನಾಡುವಾಗ ತನ್ನಿಂದ ತಪ್ಪುಗಳಾದಾವು ಎಂಬುದರ ಪರಿವೆ ಇಲ್ಲದ್ದೇ ತನಗೆ ಚೆನ್ನಾಗಿ ಬರದ ಭಾಷೆಯಲ್ಲಿ ಮಾತನಾಡುವಾಗಿನ ಧೈರ್ಯದ ಮೂಲವಾಗಿರಬೇಕು. ತನ್ನ ಮಾತಿನ ಮುಖಾಂತರ. ಮಾತಿನಲ್ಲಿ ವ್ಯಕ್ತವಾಗುವ ಅಸಾಧಾರಣ ಧೈರ್ಯದ ಮುಖಾಂತರ ಎಲ್ಲರ ಮೇಲೆ ಛಾಪು ಹೊಡೆಯುತ್ತಿದ್ದ. ಬಾಯ ಬಡಾಯಿಯೇ ದೊಡ್ಡದಾಗಿತ್ತಾದರೂ ಆಡಿದ್ದರ ಬಹುಭಾಗವನ್ನು ಮಾಡಿ ತೋರಿಸುವ ಎದೆಗಾರಿಕೆಯೂ ಅಷ್ಟೇ ದೊಡ್ಡದಾಗಿತ್ತು : ಯಾರನ್ನು ಮರೆಯಲು ತಾನು ಇಲ್ಲಿಗೆ ಬಂದು ಕುಳಿತಿದ್ದೆನೋ ಅವನ ಬಗ್ಗೆಯೇ ತಾನು ಇದೀಗ ವಿಚಾರಮಾಡುತ್ತಿದ್ದುದರ ಅರಿವು ಬಂದು ನಾಗಪ್ಪ ಬೇಚೈನುಗೊಂಡ. ತನ್ನ ಪ್ರೌಢಾವಸ್ಥೆಯ ಮಹತ್ವದ ಭಾಗವನ್ನು ಕಳೆದ ಈ ಖೇತವಾಡಿ, ಗಿರ್ಗಾಂವ್ ಇವೆಲ್ಲವುಗಳನ್ನು ಕುರಿತು ಒಂದು ದಿನ ಬರೆಯಬೇಕು. ಯಾಕೆ ಹಾಗೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಬಹುಶಃ ಇವೆಲ್ಲವುಗಳ ಬಗ್ಗೆ ಇಲ್ಲಿ ಕೂತ ಈ ಕ್ಷಣದಲ್ಲಿ ಅನ್ನಿಸುತ್ತಿದ್ದ_ಬೇರೆ ಯಾವ ಹೆಸರೂ ತಿಳಿಯದ್ದರಿಂದ ಪ್ರೀತಿಯೆಂದು ಕರೆಯಬಹುದಾದ_ಭಾವನೆಯನ್ನು ಯಾರ ಮುಂದೆಯೂ ‘ಆಡಿತೋರಿಸಲು’ ಆಗದ್ದಕ್ಕೇ ಇರಬೇಕು… +ಸೀಯಾಳಗಳನ್ನು ತಂದ ಹುಡುಗ ಒಂದನ್ನು ನಾಗಪ್ಪನ ಕೈಯಲ್ಲೂ ಇನ್ನೊಂದನ್ನು ತುಕಾರಾಮನ ಕೈಯಲ್ಲೂ ಕೊಟ್ಟು ಕುಡಿಯುವವರಿಗೆ ಸಂಕೋಚವಾಗದಿರಲಿ ಎಂಬಂತೆ ಬದಿಯ ಅಂಗಡಿಯಲ್ಲಿ ಚಹ ಕುಡಿದು ಬರುವ ನೆಪ ಹೇಳಿ ಅಲ್ಲಿಂದ ಹೊರಟುಹೋದ. ನಾಗಪ್ಪ, ತನ್ನ ಕೊಂಕಣಿ ಧಾಟಿಯ ಮರಾಠಿಯಲ್ಲಿ ತುಕಾರಾಮನ ದಂಧೆಯ ವಿಷಯ ಮಾತನಾಡಹತ್ತಿದ. ಬೆಳಿಗ್ಗೆ, ಬರೆಯೆ ಒಂದು ಜೋಕು ಆಗಿ ತೋರಿದ್ದು ಈಗ ನಿಜಕ್ಕೂ ಒಂದು ಗಂಭೀರ ನಿರ್ಧಾರದ ರೂಪ ತಾಳುತ್ತ ಬಂದಂತಿತ್ತು. ತುಕಾರಾಮನಿಂದ ಬೀಳ್ಕೊಂಡು ಮನೆಯ ಹಾದಿ ಹಿಡಿದಾಗ : ಹೌದು, ಈ ಪ್ರಕರಣದಲ್ಲಿ ತನ್ನ ನೌಕರಿಗೆ ಏನಾದರೂ ಸಂಚಕಾರ ಬಂದರೆ ಈ ಖೇತವಾಡಿಯ ಲೆಕ್ಕವಿಲ್ಲದ ಗಲ್ಲಿಗಳ ಮೂಲೆಯೊಂದರಲ್ಲಿ ಹೀಗೆ ನ್ಯೂಸ್ ಪೇಪರ್ ಮಾರುವ ಅಂಗಡಿಯನ್ನೋ ಸರ್ಕ್ಯುಲೇಟಿಂಗ್ ಲೈಬ್ರರಿಯನ್ನೋ ತೆರೆಯುತ್ತೇನೆ. ಹುಟ್ಟಿನ ಬಲದಿಂದ, ಹಣದ ಬಲದಿಂದ, ಅಷ್ಟೇಕೆ_ವಿದ್ವತ್ತಿನ ಬಲದ ಮೇಲೆ, ಪ್ರತಿಭೆಯ ಬಲದ ಮೇಲೆ ಸಮಾಜದಲ್ಲಿ ಗಳಿಸಿದ ಪ್ರತಿಷ್ಠೆಯನ್ನು ಕಳೆದುಕೊಳ್ಳುವ ಭಯವಿಲ್ಲದೇನೇ ‘ಯಾರೂ ಅಲ್ಲ’ವಾಗಿ ಬದುಕುವುದನ್ನು ಕಲಿಯುತ್ತೇನೆ. +ಮನೆ ತಲುಪಿ ಕೋಣೆಯ ಕದ ಮುಚ್ಚಿ ಆರಾಮ-ಕುರ್ಚಿಯಲ್ಲಿ ಒರಗಿದಲ್ಲೆ ಹೊತ್ತುಹೋದ ಹಾಗೆ ಈ ವಿಚಾರ ಎಷ್ಟೊಂದು ಭಾವನಾತ್ಮಕ ವಿಕೋಪಕ್ಕೆ ಹೋಯಿತೆಂದರೆ ಒಂದೇ ಒಂದು ಕ್ಷಣದ ಮಟ್ಟಿಗಾದರೂ ಅನ್ನಿಸಿಬಿಟ್ಟಿತು : ಹಾಳುಬಿದ್ದ ಈ ನೌಕರಿಯನ್ನು ನಾನಾಗಿಯೇ ಬಿಟ್ಟುಕೊಟ್ಟರೆ ಹೇಗೆ ? ಹೈದರಾಬಾದಿಗೆ ಹೋಗುವ ವಿಮಾನದ ಟಿಕೆಟ್ಟು ಬರುವ ಮೊದಲೇ ನನ್ನ ರಾಜೀನಾಮೆಯ ಪತ್ರ ಕಳಿಸಿದರೆ ಹೇಗೆ ? ಈಗಿನ ಒ‌ಆ ನಿವೃತ್ತರಾದ ಮೇಲೆ ಫಿರೋಜನೇ ಹೇಗಾದರೂ ಒ‌ಆ ಆಗುತ್ತಾನೆ. ಕರಿಯರದ ಕೊನೆಯವರೆಗೆ ಅವನೊಡನೆ ಹಗೆ ಕಟ್ಟಿ ಕೆಲಸ ಮಾಡುವುದಂತೂ ಶಕ್ಯವೇ ಇಲ್ಲ. ಆಳವನ್ನು ಅಲ್ಲಾಡಿಸಿಬಿಟ್ಟ ಭಯದ ಕ್ಷಣದಲ್ಲಿ ನ್ಯೂಸ್‌ಪೇಪರ್ ಅಂಗಡಿಯ ವಿಚಾರ ಮಾಡಿದ್ದೆನಾದರೂ ಅಂತಹ ಅತಿರೇಕಕ್ಕೆ ಕೈಹಾಕುವ ಗರಜಿಲ್ಲವೇನೋ. ಬೇರೆ ಕಂಪನಿಗಳಿಲ್ಲವೆ ? ಎಂದೂ ಅನ್ನಿಸಿತು. ಅಂತೂ ಈ ಎಲ್ಲ ಯಾತನೆಯಿಂದ ಮುಕ್ತನಾಗುವ ಉಪಾಯ ಕೊನೆಗೂ ತನ್ನ ಕೈಯಲ್ಲೇ ಇದೆ ಎಂಬ ಅರಿವಿನಿಂದಲೇ ಮನಸ್ಸಿಗೆ ನೆಮ್ಮದಿ ಅನ್ನಿಸಹತ್ತಿತು. ಆದರೂ ಅದು ಬಹಳ ಹೊತ್ತು ಬಾಳುವ ಜಾತಿಯದಾಗಿರಲಿಲ್ಲವೇನೋ : ಮನಸ್ಸು ಮತ್ತೆ ದುಗುಡಕ್ಕೊಳಗಾಯಿತು. ಈಗಿನ ಕಂಪನಿಯಲ್ಲಿ ಇಷ್ಟೊಂದು ವರ್ಷ ಕೆಲಸ ಮಾಡಿದ ಮೇಲೆ ತಾನು ಆಯ್ಕೆ ಮಾಡಿದ ಒಂದು ಕ್ಷೇತ್ರದಲ್ಲಿ ಗಳಿಸಿದ ಮನ್ನಣೆಯನ್ನು ಒಮ್ಮೆಲೆ ಬಿಟ್ಟುಕೊಟ್ಟು ಇನ್ನೊಂದು ಕಂಪನಿಯನ್ನು ಸೇರಲು ಯಾವ ಕಾರಣ ಕೊಡಲೀ ? ಕಾರಣ ಕೊಡಲೇಬೇಕೆ ? ಕಾರಣ ಕೊಡುವ ಅವಶ್ಯಕತೆಯೆಂದರೇನೆ ವ್ಯಕ್ತಿ ತನಗರಿವಿಲ್ಲದೇನೆ ತನ್ನ ಇಚ್ಛಾಶಕ್ತಿಯನ್ನು ಮೀರಿದ ಯಾವುದಕ್ಕೋ ಹೆದರಿಕೊಂಡಿದ್ದರ ಲಕ್ಷಣ ಅಲ್ಲವೆ ? ಮೇಲಾಗಿ, ಒಮ್ಮೆಲೇ ಎಲ್ಲವನ್ನೂ ತೊರೆದುಬಿಡುವ ನಿರ್ಧಾರ ಮೂಲತಃ ಇನ್ನಾವುದನ್ನೋ ಇದಿರಿಸುವಾಗ ಹುಟ್ಟಿದ ಭಯದಲ್ಲಿ ಹುಟ್ಟಿದ್ದು. ತಾನು ಬೇಡಿ ಬಂದಿರದ ಬದುಕಿನಲ್ಲಿ ಮನುಷ್ಯನ ಕೈಯಿಂದ ಒದಗಬಹುದಾದ ಒಂದೇ ಒಂದು ಸಾರ್ಥಕವಾದ ಕ್ರಿಯೆಯೆಂದರೆ ಇದೊಂದೇಯೇನೋ : ತಾನು ಬದುಕಿದ್ದ ಸಮಾಜದ ಎಲ್ಲ ಒತ್ತಡಗಳಿಗೆ ತನ್ನನ್ನು ಒಡ್ಡಿಕೊಂಡಾಗಲೂ ತಾನು ತಾನೇ ಆಗುವದು. ಫಿರೋಜ್-ಶ್ರೀನಿವಾಸ ಹಾಕಿದ ಸವಾಲಿಗೆ ಹೆದರಿ ಫಲಾಯನ ಹೇಳಲೇ ? ಹೇಡಿಯಾಗಲೇ ? ಈ ದುಷ್ಟಶಕ್ತಿಗಳಿತ್ತ ಆಹ್ವಾನವನ್ನು ನಿರಾಕರಿಸಿ ಸಂಕಲ್ಪ-ಬಲವಿಲ್ಲದ ತರಕಾರಿಯಾಗಲೇ ? ಇದೇ ಖೇತವಾಡಿಯ ಗಲ್ಲಿಯೊಂದರಲ್ಲಿ ಎಲ್ಲ ಭಿಡೆ ಬಿಟ್ಟು ದಿನಪತ್ರಿಕೆಗಳನ್ನು ಇಲ್ಲ ಬರೀ ರದ್ದಿ ಮಾರುವ ಅಂಗಡಿಯನ್ನು ತೆರೆದೇನು. ಆದರೆ ಫಿರೋಜ ಒಡ್ಡಿದ ಆಹ್ವಾನಕ್ಕೆ ತನ್ನ ಉತ್ತರ ಕೊಟ್ಟ ಮೇಲೆಯೇ. ನಾನೇ ಸೋಲಬಹುದು. ಆದರೆ ಕಾದುವುದನ್ನು ಬಿಟ್ಟುಕೊಟ್ಟಿಲ್ಲ. ಇಲ್ಲ. ರಾಜೀನಾಮೆಯ ಪ್ರಶ್ನೆಯೇ ಇಲ್ಲ. ಬಹುಶಃ ಮಾನಸಿಕ ಒತ್ತಡ ತರುವ ಈ ಎಲ್ಲ ಕುತಂತ್ರದ ಹಿಂದಿನ ಉದ್ದೇಶವೂ ಇದೇ ಇರಬಹುದೇನೋ. ನನ್ನ ಬದಲು ತನ್ನ ಚೇಲಾ ಜಲಾಲನನ್ನು ಅಮೇರಿಕೆಗೆ ಕಳಿಸುವ ಹಂಚಿಕೆಯೇನೋ. +ಮಧ್ಯಾಹ್ನದ ಊಟ ಮಾಡಿ ಬಂದದ್ದೇ ಆ ಬೆಂಕಿಯ ಅನಾಹುತದ ಎಲ್ಲ ವಿಚಾರಗಳನ್ನೂ ಬರೆದು ತೆಗೆಯಬೇಕು. ತನಿಖೆಯ ಹೊತ್ತಿಗೆ ಉಪಯೋಗಕ್ಕೆ ಬಂದೀತು. ಎಂದುಕೊಂಡವನೇ ನಾಗಪ್ಪ ಸ್ನಾನದ ತಯಾರಿಗೆ ನಡೆದ. ಇಂದಿನಿಂದ ಸಂತೋಷಭವನ ತನ್ನ ಪಾಲಿಗೆ ವಜಾ. ಸದ್ಯದ ಉಟಕ್ಕಂತೂ ಶೇರ್-ಏ-ಪಂಜಾಬಿಗೇ ಹೋದರಾಯಿತು. ಊಟ ಮುಗಿಸಿ ಬಂದ ನಂತರ ಗಡದ್ದಾಗಿ ಒಂದು ನಿದ್ದೆ ಮಾಡಬೇಕು. ಎದ್ದ ನಂತರ ಮೇರಿಗೆ ಫೋನ್ ಮಾಡುವ ಹೊತ್ತಿನ ತನಕ ಏನಾದರೂ ಬರೆಯಬೇಕು. ಇಂದು ರಾತ್ರಿ ರಾಣಿ ಮನೆಗೆ ಹೋದರೆ ಹೇಗೆ ಎಂಬ ವಿಚಾರ ಬಂದಾಗ ಯಾಕೋ ದೈಹಿಕ ಸುಖದ ಬಯಕೆಯೇ ಬತ್ತಿ ಹೋದಂತೆನಿಸಿತು. ಈಗ ಯಾವುದೂ ಬೇಡ. ಎಲ್ಲ, ಹೈದರಾಬಾದಿನಿಂದ ಬಂದಮೇಲೆಯೇ, ಎಲ್ಲದರ ಸೋಕ್ಷಮೋಕ್ಷವಾದ ಮೇಲೆಯೇ. +– ಅಧ್ಯಾಯ ಹದಿನೈದು – +ಖೇತವಾಡಿಯ ಈ ಅರವತ್ತು ವರ್ಷಗಳ ಮುದಿಮನೆ ಅಂದರೆ-ಕೂಡ್ರುವ ಕೋಣೆ, ಮಲಗುವ ಕೋಣೆ, ಹಾಗೂ ಸಣ್ಣ ಅಡಿಗೆಮನೆ. ಮಲಗುವ ಕೋಣೆ ಒಂದು ಮೂಲೆಯಲ್ಲಿಯ ಸಣ್ಣ ಮೋರಿಯೇ ಸಮಯಕ್ಕೆ ತಕ್ಕಂತೆ ನಾಣಿಗೆ ಮನೆಯೂ ಆಗುತ್ತಿತ್ತು. ನಾಗಪ್ಪನ ಹುದ್ದೆಯ ಅಂತಸ್ತಿನ ಪ್ರಕಾರ ಕನಿಷ್ಠ ಎರಡು ಮಲಗುವ ಕೋಣೆಗಳಿದ್ದ ಫ್ಲ್ಯಾಟು ಹಾಗೂ ಕಾರು ಎರಡೂ ಅವನಿಗೆ ದೊರಕಬೇಕಾಗಿದ್ದವು. ಫ್ಲ್ಯಾಟ್ ಸಿಗುವ ತನಕ ಮೊದಲ ಮೂರು ತಿಂಗಳಕಾಲ ಮುಂಬಯಿಯ ಹೊಟೆಲ್ಲೊಂದರಲ್ಲಿ ಉಳಕೊಳ್ಳುವ ಹಕ್ಕೂ ಇತ್ತು. ಆದರೆ ನಾಗಪ್ಪ ತನ್ನ ಎಂದಿನ ಸರಳತನದಿಂದ ಖೇತವಾಡಿಯ ಈ ಹಳೇ ಗೂಡಿಗೇ ಬಂದಿದ್ದ. ಹಾಗೆ ಬರುವಾಗ ಮಾತ್ರ ಈ ವರ್ಗಾವಣೆ ಏನೆಂದರೂ ತಾತ್ಪೂರ್ತಿಕವಾದದ್ದು ; ಫಿರೋಜನಿಗೆ ತನ್ನ ಬಗೆಗಿನ ಸಿಟ್ಟು ಕಡಿಮೆಯಾದದ್ದೇ, ಒಂದಲ್ಲ ಒಂದು ದಿನ, ಅವನು ತಿರುಗಿ ತನ್ನನ್ನು ಫೆಕ್ಟರಿಗೆ ಕರೆಯಿಸದಿರಲಾರನೆಂಬ ಆಸೆಯೊಂದು ಮನಸ್ಸಿನಲ್ಲಿ ಇಲ್ಲದಿರಲಿಲ್ಲ. ಅಂತಹ ಆಸೆಗೆ_ತನ್ನ ಹೊರತು ಆರ್ ಎಂಡ್ ಡೀ ಮ್ಯಾನೇಜರನ ಹುದ್ದೆಗೆ ಯೋಗ್ಯನಾದ ಇನ್ನೊಬ್ಬ ಕಂಪನಿಯಲ್ಲಿ ಇಲ್ಲವೇ ಇಲ್ಲವೆಂಬ ಅಹಂಭಾವ ಕಾರಣವಾಗಿತ್ತೆಂಬ ಅರಿವೂ ನಾಗಪ್ಪನಿಗೆ ಇಲ್ಲದಿಲ್ಲ. ಅದಕ್ಕೆ ಪೆಟ್ಟು ಬಿದ್ದಾಗ ಆಗೀಗ ತುಂಬ ಖಿನ್ನನಾಗಿದ್ದುಂಟು. +ತಿಂಗಳಿಗೆ ಕೇವಲ ಮುವ್ವತ್ತುರೂಪಾಯಿ ಬಾಡಿಗೆಯಿದ್ದ ಆ ಕೋಣೆಗಳನ್ನು ಕಳೆದ ಹಲವು ವರ್ಷಗಳಿಂದ ಶೇಖರಿಸುತ್ತ ಬಂದ ವಿರಲವಾದ ಪುಸ್ತಕಗಳ ಲಾಯಬ್ರರಿಯನ್ನಾಗಿ ಪರಿವರ್ತಿಸಿದ್ದ. ಹಳೆಯ ಗ್ರಂಥಗಳನ್ನು ಸಂಗ್ರಹಿಸುವ ಚಟ ನಾಗಪ್ಪನಿಗೆ ನೌಕರಿ ಹತ್ತಿದ ಮೊದಲಿನಿಂದಲೂ ಅಂಟಿದ್ದು. ಗ್ರೆಂಟ ರೋಡ್, ಮಹಮ್ಮದಲಿ ರೋಡ್, ಧೋಬಿತಲಾವ್‌ಗಳಲ್ಲಿಯ ಹಳೇ ಪುಸ್ತಕಗಳ ವ್ಯಾಪಾರಿಗಳಿಗೆಲ್ಲ ನಾಗಪ್ಪ ಹಳೆಯ ಗೆಳೆಯ. ಆಫೀಸಿನ ಕೆಲಸದ ಮೇಲೆ ಮುಂಬಯಿಗೆ ಬಂದ ಪ್ರತಿ ಸಾರೆ ನೂರಿನ್ನೂರು ರೂಪಾಯಿಗಳ ಪುಸ್ತಕಗಳನ್ನು ಕೊಂಡು ಬಾಂಬೂಗಳನ್ನು ಕತ್ತರಿಸಿ ತಾನೇ ರಚಿಸಿದ ತೀರ ಸರಳವಾದ ‘ಕಪಾಟು’ಗಳಲ್ಲಿ ಓರಣವಾಗಿ ಹಚ್ಚಿಟ್ಟಿದ್ದ. ಕಪಾಟಿನ ಹತ್ತಿರ ಎತ್ತರವಾದ ಒಂದು ಸ್ಟೂಲು. ಅದರ ಮೇಲೆ ಕೂತು ಹೊಸದಾಗಿ ತಂದ ಪುಸ್ತಕಗಳನ್ನು ಒಂದೊಂದಾಗಿ ಅರಿವೆಯ ಚಿಂದಿಯೊಂದರಿಂದ ಸ್ವಚ್ಛಮಾಡಿ, ಹಾಳೆಗಳ ವಾಸನೆ ನೋಡಿ ಜಾಗವಿದ್ದಲ್ಲಿ ಚಂದವಾಗಿ ಜೋಡಿಸಿ ಇಡುತ್ತಿದ್ದ. ಹಳೇ ಪುಸ್ತಕಗಳನ್ನು ಮೂಸಿನೋಡುವುದು ನಾಗಪ್ಪನಿಗೆ ಅತ್ಯಂತ ರೋಮಾಂಚಕಾರಿಯಾದ ಅನುಭವ : ಪ್ರತಿಯೊಬ್ಬ ವ್ಯಕ್ತಿಗೆ ಯಾವುದೇ ವಿವೇಕಪೂರ್ಣವಾದ ಕಾರಣ ಕೊಡಲು ಶಕ್ಯವಿಲ್ಲದ ಇಂತಹ ಚಟಗಳಿರುತ್ತವೆಯೇನೋ ಅಂದುಕೊಂಡು ತನ್ನಷ್ಟಕ್ಕೇ ನಗುತ್ತಿದ್ದ. ಈಗಲೂ ಸ್ನಾನಕ್ಕೆಂದು ಹೊರಟು ನಿಂತವನು, ವಿಚಾರಮಾಡುವ ಮೊದಲೇ ಸ್ಟೂಲನ್ನು ಹತ್ತಿ ಕೂತು ಕೈಗೆ ಎತ್ತಿಕೊಂಡ ಪುಸ್ತಕವೊಂದನ್ನು ಮೂಸಿ ನೋಡುತ್ತಿದ್ದಂತೆ ಅದರ ಹಳೆತ ವಾಸನೆ ಮಸ್ತಕಕ್ಕೇರಿದ್ದೇ ತಡ ನಾಗಪ್ಪ ಕೂತಲ್ಲೇ ಝಲ್ಲೆಂದು ನಡುಗಿದ : ಶ್ರೀನಿವಾಸ, ತಾನು ಯಾವುದರ ಬಗೆಗೆ ಕಾದಂಬರಿಯೊಂದನ್ನು ಬರೆಯುತ್ತಿದ್ದೇನೆಂದು ತಿಳಿದೇ ಹೆದರಿಕೊಂಡಿದ್ದನೋ ಆ ನೇತ್ರಾವತಿಯ ದುರ್ಮರಣ ಕಣ್ಣಮುಂದೆ ನಿಂತಂತಾಗಿ ಅವಸರ ಅವಸರವಾಗಿ ಸ್ಟೂಲಿನಿಂದ ಇಳಿದವನೇ ವಿರಾಮ-ಕುರ್ಚಿಯಲ್ಲಿ ಕುಸಿದು ಗಟ್ಟಿಯಾಗಿ ಕಣ್ಣು ಮುಚ್ಚಿದ : +ನೇತ್ರಾವತಿ : ಇಪ್ಪತ್ತೊಂದು ವರುಷದ ಹರೆಯದ ಹುಡುಗಿ. ಸುಂದರಳಲ್ಲ. ಹರೆಯ ತುಂಬಿ ಮುಸುಗುಡುವ ಮೈಯ ಮಾಟ. ನೋಡುವವರ ಕಣ್ಣುಗಳನ್ನು ತತ್‌ಕ್ಷಣ ಸೆರೆಹಿಡಿದು ನಿಲ್ಲಿಸುವ ಕಣ್ಣುಗಳಲ್ಲಿಯ ಮಾದಕ ಹೊಳಪು. ಮೇಲ್ದುಟಿಯಗುಂಟ ತೆಳ್ಳಗಿನ_ಹೆಣ್ಣಿಗೆ ಶೋಭಿಸದ_ರೋಮದ ಸಾಲು. ತುಟಿಗಳು ಮಾತ್ರ ಭಿಡೆ ತೊರೆದು ನೇರವಾಗಿ ಕಾಮಕೆರಳಿಸುವಂತಹವುಗಳು. ಮೊದಲ ಪರಿಚಯದಲ್ಲಿ ನೇತ್ರಾವತಿ ತನಗೆ ಎಳ್ಳಷ್ಟೂ ಸೇರಿರಲಿಲ್ಲ. ಬಹುಶಃ ಅವಳ ಅಕ್ಕನ ಬಗ್ಗೆ ಕೇಳಿ ತಿಳಿದಂತಹ ಸಂಗತಿಗಳಿಂದಾಗಿರಬೇಕು ; ಅವಳು ಮುಂಬಯಿಯ ಒಬ್ಬ ಶ್ರೀಮಂತ ವ್ಯಾಪಾರಿಯೊಬ್ಬನನ್ನು ಇಟ್ಟಿಕೊಂಡಿದ್ದು ಎಲ್ಲರಿಗೂ ‘ಉಘಡಾ-ಉಘಡೀ’ ತಿಳಿದ ಮಾತಾಗಿತ್ತು. ನೇತ್ರಾವತಿಯಲ್ಲಿ ಅನುರಾಗ ಹುಟ್ಟಿ ಶ್ರೀನಿವಾಸ ಅವಳನ್ನು ಮದುವೆಯಾಗುವ ಉದ್ದೇಶವನ್ನು ಜಾಹೀರುಪಡಿಸಿ ರಾಜಾರೋಷವಾಗಿ ಅವಳೊಡನೆ ತಿರುಗಾಡಹತ್ತಿದಮೇಲೆ ; ವೇಳೆ ಅವೇಳೆಯಲ್ಲಿ ರೂಮಿಗೂ ತರಹತ್ತಿದಮೇಲೆ ; ಚಾಳಿನಲ್ಲಿಯ ಎಲ್ಲರಿಗೂ ಅವಳ ಪರಿಚಯ ಮಾಡಿಕೊಡುತ್ತ ಅವಳನ್ನು ಹೊಗಳಹತ್ತಿದಮೇಲೆ ; ಗೆಳೆಯನೊಬ್ಬನ ಪ್ರೇಯಸಿ, ಅದಕ್ಕಿಂತ ಹೆಚ್ಚಾಗಿ ಅವನ ಅಗಲಿದ್ದ ಹೆಂಡತಿಯೆಂಬುದು ಸ್ಪಷ್ಟವಾಗುತ್ತ ಹೋದಹಾಗೆ ನೇತ್ರಾವತಿಯ ಬಗ್ಗೆ ತನ್ನ ಮನಸ್ಸು ಕ್ರಮೇಣ ಮಿದುವಾಗಹತ್ತಿತು. ಶ್ರೀನಿವಾಸನ ಜತೆಯಲ್ಲಿ ಗೋಲ ಪೀಠಾದಲ್ಲಿಯ ಅವರ ಮನೆಗೆ ಒಂದೆರಡು ಸರತಿ ತಾನೂ ಹೋಗಿದ್ದ. ನೇತ್ರಾವತಿಯ ಅಕ್ಕನ ಮಿಂಡನನ್ನು ಕಣ್ಣಾರೆ ಕಂಡಿದ್ದ. ನೇತ್ರಾವತಿಯನ್ನು ಮದುವೆಯಾಗಲು ಹೊರಟದ್ದು ಎಷ್ಟು ದೊಡ್ಡ ಸಾಹಸ ; ಅದನ್ನು ಕೈಕೊಂಡ ತಾನು ಎಷ್ಟು ದೊಡ್ಡ ಮನಸ್ಸಿನ ‘ಹೀರೋ’ ಎಂಬುದನ್ನು ಬಣ್ಣಿಸಿದ ಶ್ರೀನಿವಾಸನಿಂದಲೇ ತಿಳಿದ ವಿವರಗಳಿಷ್ಟು : ನೇತ್ರಾವತಿಯ ಅಕ್ಕ ಅನಸೂಯಾ (ಇವರು ಮೂಲತಃ ಉತ್ತರ-ಕನ್ನಡದ ಸಣ್ಣ ಹಳ್ಳಿಯಾದ ಧಾರೇಶ್ವರದವರು. ತಮ್ಮ ಜಾತಿಯವರೇ, ಅಂದರೆ ಸಾರಸ್ವತ ಬ್ರಾಹ್ಮಣರು.) ತನಗೆ ಒಪ್ಪಿಗೆಯಾಗಿರದ ಒಬ್ಬ ವಯಸ್ಸಾದ ಗಂಡಸಿನೊಡನೆ ಮದುವೆ ಮಾಡಿಸಲು ಹೊರಟ ತಂದೆ ತಾಯಿಗಳ ವಿರುದ್ಧ ಬಂಡೆದ್ದು ಮದುವೆಯ ಚಪ್ಪರದಿಂದಲೇ ಓಡಿಹೋದಳಂತೆ. ಆಗ ಅವಳಿಗೆ ಬರೇ ಹದಿನೆಂಟು ವರ್ಷ ಪ್ರಾಯ. ಮುಂದಿನದೆಲ್ಲ ದಿನನಿತ್ಯ ಪೇಪರುಗಳಲ್ಲಿ ಓದುವ ಸುದ್ದಿಗಳಂತಹದೇ ಕತೆ : ಓಡಿ ಬಂದದ್ದು ಮುಂಬಯಿಗೆ. ಸಿಕ್ಕಿಬಿದ್ದದ್ದು ಇಂತಹ ಹುಡುಗಿಯರನ್ನು ಸೂಳೇತನಕ್ಕೆ ಹಚ್ಚುವತಲೆಹಿಡುಕರ ಕೈಗೆ. ಅವರ ಕೈಯಿಂದ ತಪ್ಪಿಸಿಕೊಂಡ ಮೇಲೆ ‘ಗೆಳೆತನ’ ಬೆಳೆದದ್ದು ಸಜಾತೀಯನಾದ ಈ ಶ್ರೀಮಂತ ವ್ಯಾಪಾರಿಯೊಂದಿಗೆ. ಅವನ ಹೆಂಡತಿ ಟೀಬೀಯಿಂದಲೋ ಇನ್ನಾವುದೋ ಗುಣವಾಗದ ರೋಗದಿಂದಲೋ ಕಾಯಮ್ ಹಾಸಿಗೆ ಹಿಡಿದು ಬಿದ್ದವಳು, ಅನಸೂಯಾಗೆ ತಾನೇ ಬೇರೊಂದು ಮನೆ ಮಾಡಿಕೊಟ್ಟ. ಕಾಯದೆಯೊಂದು ಅಡ್ಡಬಂದದ್ದರಿಂದ ಅನಸೂಯಾ ಹೆಂಡತಿಯಾಗುವದು ಶಕ್ಯವಿರಲಿಲ್ಲ. ಆದರೂ ತನ್ನ ಹೆಂಡತಿಗೆ ಕಡಿಮೆಯಾದವಳಲ್ಲ ಎಂಬ ಭಾವನೆಯನ್ನು ಅವಳಲ್ಲಿ ಮೊಳೆಯಿಸಿದ ಈ ‘ಸದ್ಗೃಹಸ್ಥ’ ಅನಸೂಯಾಳ ಜೋಡಿಗೆ ಕೂತು ಮಾಡಿದ ಸತ್ಯನಾರಾಯಣ ಪೂಜೆಗೆ ಜಾತಿಯ ಬ್ರಾಹ್ಮಣ ಸುವಾಸಿನಿಯರನ್ನು ಕರೆಯಿಸಿ ಭೂರಿಭೋಜನ ಕೂಡ ಮಾಡಿಸಿದ್ದ. ಅನಸೂಯಾಳ ಮೈಮೇಲಿನ ಮಣಭಾರದ ಬಂಗಾರದ ದಾಗಿನೆಗಳಿಂದ ಎಷ್ಟೋ ಸುವಾಸಿನಿಯರ ಅಸೂಯೆ ಕೆರಳಿಸಿದ್ದ. ಮದುವೆಯಾಗಿರದ ಒಂದೇ ಒಂದು ಕಾರಣದಿಂದಲೇ ‘ಇಟ್ಟುಕೊಂಡವಳು’ಎಂಬ ಪದವಿಯನ್ನು ಆಗದವರ ಕೈಯಿಂದ ಪಡೆದ ಅನಸೂಯಾಳ ಒಂದೇ ಒಂದು ಹಂಬಲವೆಂದರೆ ನೇತ್ರಾವತಿಯ ಮದುವೆಯನ್ನಾದರೂ ಒಳ್ಳೆಯ ಹುಡುಗನೊಂದಿಗೆ ಮಾಡುವದಾಗಿತ್ತು. ಹಾಗೆಂದೇ ನೇತ್ರಾವತಿಯನ್ನು ಊರಿನಿಂದ ಕರೆಯಿಸಿ ಇನ್ನೂ ಮಕ್ಕಳಾಗಿರದ ತಾನು ಅವಳನ್ನು ಅಕ್ಕ ಎನ್ನುವುದಕ್ಕಿಂತ ಹೆಚ್ಚಾಗಿ ತಾಯಿ ಎಂಬಂತೆ ತೈನಾತಿ ಮಾಡಿದ್ದಳು. ಮುಂಬಯಿಯಲ್ಲೇ ತಮ್ಮ ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳ ಇದಿರಿಗೇ ತಾನು, ತನ್ನೊಡನೆ ‘ಮದುವೆಯಾಗಿರದ’ ಗಂಡ ಕೂಡಿ ಧಾರೆಯೆರೆದು ಕೊಡುವ ಹಂಬಲ ಅವಳದಾಗಿತ್ತು. ಇತ್ಯಾದಿ ಇತ್ಯಾದಿ. +ಅಂತಹ ಹಂಬಲ ನಿಜವಾಗಿಸಲು ಮುಂದಾದ ಶ್ರೀನಿವಾಸ ಆಗ ತಮ್ಮೆಲ್ಲರ ಕಣ್ಣಲ್ಲಿ ದೊಡ್ಡ ಹೀರೋ. ಅವನ ಸಾಹಸದ ಸಾಮಾಜಿಕ ಮಹತ್ವವನ್ನು ಯಾರೂ ಅಲ್ಲಗಳೆಯುವಂತಿರಲಿಲ್ಲ. ಇಂಥ ಶ್ರೀನಿವಾಸ, ಮದುವೆಗೆ ಇನ್ನೂ ಬರೀ ಮೂರು ತಿಂಗಳಿದೆ ಎನ್ನುವಾಗ ನೇತ್ರಾವತಿಗೆ ತಾನಿತ್ತ ಮದುವೆಯ ಭರವಸೆ, ಆ ಭರವಸೆಯೊಂದರ ಮೇಲೇ ಕಳೆದ ಒಂಭತ್ತು ತಿಂಗಳ ಕಾಲ ನಡೆಸಿದ ಮೇರೆಯರಿಯದ ಚೆಲ್ಲಾಟ ಇವೆಲ್ಲವುಗಳನ್ನೂ_ಇಂಥದ್ದು ನಡೆದಿರಲೇ ಇಲ್ಲ ಎನುವಷ್ಟರ ಮಟ್ಟಿಗೆ_ಮರೆತೇಬಿಟ್ಟು, ಅವಳ ದುರ್ಮರಣಕ್ಕೆ ಕಾರಣವಾದದ್ದು ಹೇಗೆ ? +ನಾಗಪ್ಪನಿಗೆ ಆ ಮುಂಜಾವು ನಿಚ್ಚಳವಾಗಿ ನೆನಪಿದೆ : ಈಗ ಲಾಯಬ್ರರಿ ಮಾಡಿದ ಈ ಕೋಣೆಯಲ್ಲೇ, ಅವನ ರೂಮಿನ ಇನ್ನೊಬ್ಬ ಪಾರ್ಟ್ನರ್ ಆಗಿದ್ದ ಗೋಪಾಲ ಇಬ್ಬರೂ ಅಭ್ಯಾಸದಲ್ಲಿ ತೊಡಗಿದ್ದರು. ಶ್ರೀನಿವಾಸ ನೇತ್ರಾವತಿಯನ್ನು ಮದುವೆಯಾಗುವ ಭರವಸೆಯಿಂದ ಹಿಂದೆಗೆಯಹತ್ತಿ ಅದಾಗಲೇ ಕೆಲವು ವಾರಗಳೇ ಕಳೆದಿದ್ದವು. ಕದ ತಟ್ಟಿದ ಸದ್ದು ಕೇಳಿಸಿದಾಗ ಗೋಪಾಲ ಎದ್ದು ಕದ ತೆರೆದರೆ : ನೇತ್ರಾವತಿ ! ಕೋಣೆಯಲ್ಲಿ ಕಾಲಿರಿಸಿದಾಗಿನ ಮೋರೆ ಯಾವ ಒಳಗುದಿಯನ್ನೂ ವ್ಯಕ್ತಪಡಿಸದೇ ನಿರ್ಭಾವವಾಗಿತ್ತು. ಇಷ್ಟೇ. ತಮ್ಮಿಬ್ಬರತ್ತ ನೋಡಿ ಒಂದೇ ಒಂದು ಕ್ಷಣದ ಮಟ್ಟಿಗೆ ಮಂದವಾಗಿ ಮುಗುಳುನಕ್ಕಿದ್ದಳು ಎಂಬಂತಹ ನೆನಪಿನಿಂದಲೇ ನಾಗಪ್ಪನಿಗೆ ಈಗ ಮೈ ಮೇಲೆ ಮುಳ್ಳು ನಿಂತವು : ಅವಳು ನಕ್ಕದ್ದು ಹೌದೇ ಆದರೆ ಅದೇ ಅವಳ ಕೊನೆಯ ನಗುವಾಗಿತ್ತು. ಶ್ರೀನಿವಾಸ ಒಳಗಿನ ಕೋಣೆಯಲ್ಲಿ ಇದ್ದೇ ಇದ್ದಾನೆ ಎನ್ನುವ ಭರವಸೆಯಿಂದಲೇ ಎಂಬಂತೆ ನೇತ್ರಾವತಿ ಅವನ ಬಗ್ಗೆ ಚಕಾರ ಮಾತೆತ್ತದೇ ನೇರವಾಗಿ ಅತ್ತಕಡೆ ನಡೆದಳು. ಎಂದಿನಂತೆ ಕದವನ್ನು ಮಾತ್ರ ಅಡ್ಡ ಮಾಡಿಕೊಳ್ಳಲಿಲ್ಲ. ಅವಳು ಆ ಕೋಣೆಯನ್ನು ಹೊಗುವಾಗಿನ ಕ್ಷಣದಲ್ಲಿ ಅವಳುಟ್ಟ ಸೀರೆ ಅಚ್ಚ ನೀಲಿ ಬಣ್ಣದ್ದಾಗಿತ್ತು ಎಂದು ಲಕ್ಷ್ಯಕ್ಕೆ ಬಂದದ್ದು ಈಗ ನೆನಪಿನಲ್ಲಿ ಫಕ್ಕನೆ ಮೂಡಿತು : ತೆಳುವಾದ ಜಾರ್ಜೆಟ್ ಸೀರೆ ! ನೇತ್ರಾವತಿ ಆ ಸೀರೆಯನ್ನು ಹಿಂದೆ ಎಂದೂ ಉಟ್ಟಿದ್ದು ನೆನಪಿರಲಿಲ್ಲ. ಎಂದಿಗಿಂತ ಹೆಚ್ಚು ಸುಂದರಳಾಗಿ ಕಂಡದ್ದಕ್ಕೇ ಇರಬೇಕು….ಅಲ್ಲ, ಯಾವ ಸ್ಪಷ್ಟ ಕಾರಣವೂ ಇಲ್ಲದೇನೇ ಅವಳು ಬಸುರಿಯಾಗಿರಬಹುದೇ ಎಂಬಂತಹ ಸಂಶಯ ಮನಸ್ಸಿನಲ್ಲಿ ಹಾದು ಹೋದದ್ದೂ ನೆನಪಾಯಿತು : ಅವಳ ಮೈಯ ಸಹಜ ಮಾದಕತೆಗೆ ಈಗ ಬೇರೆಯೇ ಒಂದು ಮೆರುಗು ಬಂದದ್ದನ್ನು ಒಳಮನಸ್ಸೆಲ್ಲೋ ನಮೂದಿಸಿರಬೇಕು. ಒಳಕೋಣೆಯಲ್ಲಿ ನಡೆಯುತ್ತಿದ್ದುದರ ಕಲ್ಪನೆ ತನಗಾಗಲೀ ಗೋಪಾಲನಿಗಾಗಲೀ ಬರುವುದು ಶಕ್ಯವಿರಲಿಲ್ಲ. ನೇತ್ರಾವತಿಯ ಈ ಆಗಮನ ಮಾತ್ರ ಎಂದಿನಂತಹದಲ್ಲ ಎಂಬ ಕಳವಳದ ಭಾವನೆ ಮಾತ್ರ ತಮ್ಮಿಬ್ಬರನ್ನೂ ಕಾಡದೆ ಇರಲಿಲ್ಲ. ಶ್ರೀನಿವಾಸ ಮೋರಿಯಲ್ಲಿ ನಿಂತು ಸ್ನಾನಮಾಡುತ್ತಿರಬೇಕು. ನೀರಿನ ಸದ್ದು ಎಂದಿಗಿಂತ ದೊಡ್ಡದಾಗಿಯೇ ಕೇಳಿಸುತ್ತಿತ್ತು. ಅದು ಉದ್ದೇಶಪೂರ್ವಕವಾದದ್ದಿರಬೇಕು. ನೇತ್ರಾವತಿ ಅವನು ಸ್ನಾನಮಾಡುತ್ತಿರುವಾಗಲೇ ಅವನೊಂದಿಗೆ ಮಾತನಾಡುತ್ತಿರಬೇಕು. ನೀರಿನ ಸದ್ದು ಕೇಳಿಸಹತ್ತಿ ಐದು ಮಿನಿಟುಗಳೂ ಕಳೆದಿರಲಿಕ್ಕಿಲ್ಲ ; ನೇತ್ರಾವತಿ ನಡುಬಾಗಿಲಲ್ಲಿ ಕಾಣಿಸಿಕೊಂಡಳು. ಅವಳ ಮತ್ತು ಶ್ರೀನಿವಾಸರ ನಡುವೆ ಅದೇನು ಮಾತುಕತೆಯಾಗಿತ್ತೋ. ಅವನನ್ನು ಮಾತನಾಡಿಸುವುದಕ್ಕಿಂತ ಹೆಚ್ಚಾಗಿ ಏನನ್ನೋ ಹೇಳಿ ಹೋಗಲೆಂದೇ ಬಂದಿರಬೇಕು : ಗೋಪಾಲ ಹಾಗೂ ತನ್ನನ್ನುದ್ದೇಶಿಸಿ : ನಿಮ್ಮ ನಿಮ್ಮ ತಂಗಿಯರ ಕಾಳಜಿಯನ್ನು ತೆಗೆದುಕೊಳ್ಳಿ. ಇಂತಹ ನೀಚ ಮನುಷ್ಯನ ನೆರಳು ಕೂಡ ಅವರ ಮೇಲೆ ಬೀಳದಿರಲಿ ಎಂದವಳೇ ತಿರುಗಿ ಒಳಗೆ ಹೋದಳು. ಹಾಗೆ ಹೋದದ್ದೇ ತಡ, ಮುಂದಿನ ಚಾಳಿನಿಂದ ಬೊಬ್ಬೆ : ನೇತ್ರಾವತಿ ಮೂರನೇ ಮಜಲೆಯ ಸರಳುಗಳಿಲ್ಲದ ಬೋಳುಕಿಡಕಿಯಿಂದ ಕೆಳಗೆ ಹಾರಿಕೊಂಡಿದ್ದಳು. ಬಂದ ನೆನಪಿನಿಂದ ನಾಗಪ್ಪ ಬೆವರಹತ್ತಿದ. ಹಳೆಯ ಪುಸ್ತಕವೊಂದನ್ನು ಮೂಸಿದ್ದೇ ಈ ನೆನಪಿಗೆ ಮೂಲವೇ ? ಅಥವಾ ಅದು ಮನಸ್ಸಿನಲ್ಲಿಯ ಇನ್ನಾವುದಕ್ಕೋ ಗಂಟುಹಾಕಿಕೊಳ್ಳುತ್ತಿದ್ದ ಕ್ಷಣಕ್ಕೆ ಪುಸ್ತಕದ ವಾಸನೆ ಆಕಸ್ಮಿಕ ನೆನಪಾಯಿತೇ ? ನಾಗಪ್ಪನಿಗೆ ತಿಳಿಯಲಿಲ್ಲ. ಎರಡು ಸಂಗತಿಗಳನ್ನು ಮಾತ್ರ ನಾಗಪ್ಪನಿಗೆ ನೆನಪಿನಿಂದ ತಳ್ಳಿಹಾಕುವುದು ಸಾಧ್ಯವಾಗಲಿಲ್ಲ : ಯಾವುದೋ ಉನ್ಮಾದದ ಭರದಲ್ಲಿ ಕೆಳಗೆ ಹಾರಿಕೊಂಡ ಆ ಮುಗ್ಧ ಜೀವ ಮುದ್ದೆಯಾಗಿ ಬಿದ್ದು ಪ್ರಾಣ ಹಾರಿಹೋಗುವ ಕೊನೆಯ ಕ್ಷಣದಲ್ಲಿ ಕೈಕಾಲು ಬಡೆದದ್ದು ಹಾಗೂ ಶ್ರೀನಿವಾಸ ಸ್ನಾನದ ನೀರಿನಿಂದ ಒದ್ದೆಯಾದ ಮೈಯಲೇ, ಸೊಂಟದಲ್ಲಿ ಟವೆಲೊಂದನ್ನು ಸುತ್ತಿಕೊಂಡು ಓಡೋಡಿಹೋಗಿ ಅರ್ಜುನ್‌ರಾವರ ಮನೆಯಿಂದ ಪೋಲೀಸರಿಗೆ ಫೋನ್ ಮಾಡಿದ್ದು….ಆಸ್ಪತ್ರೆ ಸೇರಿಸುವ ಮೊದಲೇ ನೇತ್ರಾವತಿ ಕೊನೆಯುಸಿರನ್ನೆಳೆದಿದ್ದಳು…. ಮುಂದೆ ಕೋರೋನರರ ಕೋರ್ಟಿನಲ್ಲಿ ತನ್ನದೇ ಪ್ರಮುಖ ಸಾಕ್ಷಿ : ನೇತ್ರಾವತಿಯ ಪ್ರಕ್ಷುಬ್ದಗೊಂಡ ಸಂಬಂಧಿಕರೆಲ್ಲ ಶ್ರೀನಿವಾಸನೇ ಅವಳನ್ನು ಹೊರಗೆ ದೂಡಿದ ಎಂದು ಆಡಿಕೊಂಡದ್ದು ತನ್ನ ಸಾಕ್ಷಿಯ ಮೇಲೆ ಪರಿಣಾಮ ಮಾಡುವದು ಶಕ್ಯವಿರಲಿಲ್ಲ. ನೇತ್ರಾವತಿ ಕಿಡಕಿಯ ದಡಿಯನ್ನೇರಿ ಕೆಳಗೆ ಹಾರಿಕೊಂಡದ್ದನ್ನು ಇದಿರು ಚಾಳಿನ ಇಬ್ಬರು ಹೆಂಗಸರು ಕಣ್ಣಾರೆ ನೋಡಿದ್ದರು. ಆದರೆ ತಾನು ಆತ್ಮಹತ್ಯೆಯ ನಿಶ್ಚಯ ಮಾಡಿಯೇ ಬಂದಿದ್ದೇನೆ ಎಂಬುದನ್ನು ನೇತ್ರಾವತಿ ಶ್ರೀನಿವಾಸನಿಗೆ ಹೇಳಿರಬೇಕು. ಅದನ್ನು ಆ ಕ್ಷಣದ ಮಟ್ಟಿಗಾದರೂ ತಪ್ಪಿಸುವುದು ಶ್ರೀನಿವಾಸನಿಗೆ ಶಕ್ಯವಿತ್ತು. ಆದರೆ ಶ್ರೀನಿವಾಸನ ಆ ದಿನದ ಹಲವು ಕೃತ್ಯಗಳನ್ನು ನೆನೆದರೆ ಅವಳು ಆತ್ಮಹತ್ಯೆ ಮಾಡುವುದೇ ಅವನಿಗೆ ಬೇಕಿತ್ತು ಎನ್ನುವುದು ಸ್ಪಷ್ಟವಾಗುತ್ತಿತ್ತು. ಆದ್ದರಿಂದಲೇ ಅದನ್ನು ತಪ್ಪಿಸುವಂತಹ ಯಾವ ಮುನ್ನೆಚ್ಚರಿಕೆಯನ್ನೂ ಅವನು ವಹಿಸಲಿಲ್ಲ. ಅವಳು ಹಾರಿಕೊಂಡಾಗ ಅವನ ಕೈಯಿಂದ ನಡೆದ ಮೊದಲನೇ ಕೃತ್ಯ : ತನ್ನ ಕೋಣೆಯಿಂದ ಹಾರಿ ಯಾರೋ ಜೀವ ತೆದುಕೊಂಡಿದ್ದಾರೆ ಎಂಬ ಸುದ್ದಿ ಕೊಡುತ್ತ ಪೋಲೀಸರಿಗೆ ಫೋನ್ ಮಾಡಿದ್ದು. ಇದು ಆತ್ಮಹತ್ಯೆ : ಕೊಲೆಯಲ್ಲ ಎಂಬುದನ್ನು ಸಿದ್ದಪಡಿಸುವುದೇ ಶ್ರೀನಿವಾಸನ ತತ್‌ಕ್ಷಣದ ಕಾಳಜಿಯಾಗಿತ್ತು. ನಾಗಪ್ಪನ ಸಾಕ್ಷಿಯ ಮುಖ್ಯ ಒತ್ತು ಈ ಒಂದು ಸಂಗತಿಯ ಮೇಲಿತ್ತು. ಕಾಯದೆಯ ದೃಷ್ಟಿಯಿಂದ ಇದು ಆತ್ಮಹತ್ಯೆಯಾಗಿ ತೋರಬಹುದಾದರೂ ನೈತಿಕವಾಗಿ ಶ್ರೀನಿವಾಸ ಇದಕ್ಕೆ ಸಂಪೂರ್ಣವಾಗಿ ಜವಾಬ್ದಾರನಾಗಿದ್ದಾನೆ ಎಂಬುದನ್ನು ಅಳು ತುಂಬಿದ ಉನ್ಮಾದದಿಂದ ಹೇಳುತ್ತಿರುವಾಗ ಸಾಕ್ಷಿಯ ಸ್ಥಾನದಲ್ಲಿ ನಾಗಪ್ಪ ಗಡಗಡ ನಡುಗುತ್ತಿದ್ದ. ಕೋರ್ಟಿನಲ್ಲಿ ನೆರೆದವರ ಮೇಲೆ ಇದರ ಪರಿಣಾಮವಾಗದೇ ಇರಲಿಲ್ಲ. ನಿರ್ವಿಕಾರವಾಗಿ ಕುಳಿತವರೆಂದರೆ ಇಂತಹ ಕೇಸುಗಳನ್ನು ಕೇಳಿ ಕೇಳಿ ಭಾವನೆಗಳಿಗೆ ಜೊಮ್ಮು ಹಿಡಿದವರಂತೆ ತೋರುತ್ತಿದ್ದ ಕೊರೋನರ್ ಹಾಗೂ ಶ್ರೀನಿವಾಸ, ನಾಗಪ್ಪನ ಸಾಕ್ಷಿಯ ಮುಂದಿನ ಮಾತುಗಳು ಆಡಿದ ನಾಗಪ್ಪನಿಗೇ ಆಶ್ಚರ್ಯವನ್ನುಂಟುಮಾಡಿದ್ದವು. ಯಾವ ಒಂದು ಪೂರ್ವ ಯೋಚನೆಯೂ ಇಲ್ಲದೇ_ಸಾಕ್ಷಿಯ ಸ್ಥಾನದಲ್ಲಿ ನಿಂತದ್ದಕ್ಕೇ ಒಳಗಿನಿಂದ ತಮ್ಮಿಂದ ತಾವೇ_ಹುಟ್ಟಿಬಂದಂತಿದ್ದ ಮಾತುಗಳನ್ನು ಕೇಳುವಾಗ ಎಲ್ಲರ ಹುಬ್ಬುಗಳೂ ಮೇಲಕ್ಕೇರಿದ್ದವು. ಶ್ರೀನಿವಾಸ ಕೊರೋನರರನ್ನೂ ಒಳಗೊಂಡು : +“ಶ್ರೀನಿವಾಸ ನೇತ್ರಾವತಿಯನ್ನು ಪ್ರೀತಿಸುತ್ತಾನೆ ಎನ್ನುವುದರ ಬಗ್ಗೆ ನನಗೆ ಮೊದಲಿನಿಂದಲೂ ಸಂಶಯವಿತ್ತು. ಈ ಸಂಶಯ ಹುಟ್ಟಿದ್ದರೆ ಮೊದಲಲ್ಲಿ ಯಾಕೆಂದು ತಿಳಿದಿರಲಿಲ್ಲ. ಸಂಶಯ ಗಟ್ಟಿಯಾಗುತ್ತಿದ್ದಂತೆ ಒಂದು ದಿನ ಫಕ್ಕನೆಂಬಂತೆ ಹೊಳೆದುಹೋಗಿತ್ತು. (ಅಂತೆಯೆ ಇರಬೇಕು ಅವಳು ಸಾಯುವ ಮೊದಲು ಗರ್ಭವತಿಯೆಂಬ ಸಂಶಯ ಬಂದದ್ದು. ಶ್ರೀನಿವಾಸ ಅವಳೊಡನೆ ಗೆಳೆತನ ಬೆಳೆಸಿದಂದಿನಿಂದ ತನಗರಿವಿಲ್ಲದೇನೇ ಅವಳ ಅಂಗಾಂಗಗಳನ್ನು ಬೇರೆಯ ಒಂದು ದೃಷ್ಟಿಯಿಂದ ತಾನು ನೋಡುತ್ತಿರಬೇಕು !), ಇವಳೊಡನೆಯ ಅವನ ಸಂಬಂಧಕ್ಕೆ ಎಂತಹುದೋ ಭೀತಿ ಕಾರಣವಾಗಿದೆಯೆಂದು_ಪ್ರೀತಿಯಲ್ಲ. ತನ್ನ ಸಂಭೋಗಶಕ್ತಿಯ ಬಗ್ಗೆ ಶ್ರೀನಿವಾಸನಿಗೆ ಮೊದಲಿನಿಂದಲೂ ಒಂದು ಬಗೆಯ ಅಧೈರ್ಯವಿತ್ತು. ಇಂತಹ ಒಂದು ಭಾವನೆಯನ್ನು ನನ್ನ ಹತ್ತಿರ ಅತ್ಯಂತ ಸೂಕ್ಷ್ಮವಾದ ರೀತಿಯಲ್ಲೊಮ್ಮೆ ಪ್ರಕಟಿಸಿದ್ದ. ಅವನು ಓದುತ್ತಿದ್ದ ಪುಸ್ತಕಗಳಿಂದಲೂ ಹಾಗೇ ಅನ್ನಿಸಿತ್ತು. ಚರ್ನೀರೋಡ್ ಹತ್ತಿರದ ಇಂತಹ ಗುಪ್ತ ಪ್ರಶ್ನೆಗಳಿಗೆ ಉತ್ತರ ಕೊಡುವ ಡಾಕ್ಟರರನ್ನು ಕಂಡಿದ್ದು ನೆನಪಿದೆ. ತನ್ನ ಪೌರುಷವನ್ನು ಪಣಕ್ಕೆ ಹಚ್ಚಿ ನೋಡುವ ಅವನ ಗುಂಗು ಎಷ್ಟೊಂದು ವಿಕೋಪಕ್ಕೆ ಹೋಗಿತ್ತೆಂದರೆ ಸೂಳೆಯ ಮನೆಗೆ ಹೋಗುವ ವಿಚಾರವನ್ನೂ ಮಾಡಿದ್ದ ಎಂಬುದು ನನಗೆ ಗೊತ್ತಿದೆ. ರೋಗದ ಭಯವೊಂದೇ ತಡೆಹಾಕಿತ್ತು….(ದೇವರೇ ಈಗ ನಿಚ್ಚಳವಾಗುತ್ತಿದೆಯಲ್ಲ !) ಶ್ರೀನಿವಾಸ ನೇತ್ರಾವತಿಯನ್ನು ಬರಿಯೆ ತನ್ನ ಈ ಭಯದ ನಿವಾರಣೆಗಾಗಿಯೇ ಉಪಯೋಗಿಸಿಕೊಂಡಿರಬೇಕು. ಮದುವೆಯ ಉದ್ದೇಶ ಅವನಿಗಿರಲಿಲ್ಲ. ಇಂತಹ ಅಪರಾಧಕ್ಕೆ ತಕ್ಕ ಶಿಕ್ಷೆಯಾಗದೇ ಹೋಗಬಾರದು…” ಮಾತು ಮುಗಿಸಿದಾಗ ನಾಗಪ್ಪನಿಗೆ ಕಣ್ಣಿಗೆ ಕತ್ತಲೆ ಕವಿದಂತಾಗಿತ್ತು. ಮುಂದಿನದೆಲ್ಲ ಮಾಮೂಲು ವ್ಯವಹಾರ. ಪೋಸ್ಟ್‌ಮಾರ್ಟಮ್ ರಿಪೋರ್ಟಿನಲ್ಲಿ ನೇತ್ರಾವತಿ ಮೂರು ತಿಂಗಳ ಗರ್ಭಿಣಿಯಿದ್ದುದರ ಉಲ್ಲೇಖವಿತ್ತು. ಶ್ರೀನಿವಾಸ ಅವಳೊಡನೆ ಸಂಭೋಗಮಾಡಿದ್ದ ಎಂಬುದಕ್ಕಿಂತ ಪುರಾವೆಯಮೇಲೆ ನಾಗಪ್ಪನ ಸಾಕ್ಷಿ ಹೊಸ ಬೆಳಕನ್ನು ಚೆಲ್ಲುವಂತಾದರೂ ಕಾಯದೆ ಶ್ರೀನಿವಾಸನೆಗೆ ಶಿಕ್ಷೆ ವಿಧಿಸುವುದರಲ್ಲಿ ಷಂಢವಾಗಿದೆ. ಕೋರ್ಟಿನ ಮುಂದಿದ್ದ ಪ್ರಶ್ನೆಯೊಂದೇ : ಇದು ಆತ್ಮಘಾತವೋ ಅಥವಾ ಕೊಲೆಯೋ ? ಆತ್ಮಘಾತವೆಂಬುದಕ್ಕೆ ಕಣ್ಣಾರೆ ಕಂಡವರದೇ ನಿರ್ವಿವಾದ ಸಾಕ್ಷಿಯಿದೆ. ಈ ದುರಂತಕ್ಕೆ ಕಾರಣವಾದ ಸಂಗತಿಗಳಿಗೆ ಸಮಾಜವೇ ತಕ್ಕ ಉಪಾಯಗಳನ್ನು ಯೋಜಿಸಬೇಕೇ ಹೊರತು ಈ ಕೋರ್ಟು ಏನು ಮಾಡಲೂ ನಿರುಪಾಯವಾಗಿದೆಯೆಂಬ ಉದ್ಗಾರಗಳೊಂದಿಗೆ, ಈ ಸಾವು ಆತ್ಮಹತ್ಯೆಯದು : ಶ್ರೀನಿವಾಸ ನಿರ್ದೋಷಿ ಎಂಬ ನಿಲುಗಡೆಯ ರಿಪೋರ್ಟಿನ ಮೇಲೆ ಸಹಿ ಮಾಡಿ ಕೆರೋನರ್ ಮುಂದಿನ ಕೇಸಿನ ತಯಾರಿಗೆ ತೊಡಗಿದಾಗ ಶ್ರೀನಿವಾಸ ಕೋರ್ಟಿನಿಂದ ಪಲಾಯನ ಹೇಳಿದ್ದ…. +ಶ್ರೀನಿವಾಸನ ಈ ದುಷ್ಟ ಕೃತ್ಯಕ್ಕೆ ಸಮಾಜ ವಿಧಿಸಿದ ಶಿಕ್ಷೆಯೆಂದರೆ ಈ ದುರ್ಘಟನೆ ನಡೆದ ಆರೇ ತಿಂಗಳಲ್ಲಿ ಮುಂಬಯಿಯ ನಾಲ್ಕು ಸಣ್ಣ ಹೊಟೆಲ್ಲುಗಳ ಮಾಲೀಕರಾದ ಶೇಷ ಕಾಮತರು ತಮ್ಮ ಏಳನೇ ಸುಕನ್ಯೆಯಾದ ಕಲ್ಯಾಣಿಯನ್ನು (ಮದುವೆಯ ಹೊತ್ತಿಗೆ ಶ್ರೀನಿವಾಸನಿಂದ ಶಾರದೆ ಎಂಬ ಹೆಸರು ಪಡೆದವಳನ್ನು) ಕೊಟ್ಟು ಭವ್ಯ ಹಾಲೊಂದರಲ್ಲಿ ಭರ್ಜರಿಯಾದ ರೀತಿಯಲ್ಲಿ ಕಲ್ಯಾಣಮಾಡಿ ಅವನ ಭರಭರಾಟೆಯ ದಿನಗಳಿಗೆ ಬುನಾದಿ ಹಾಕಿಕೊಟ್ಟದ್ದು. ದಾದರಿನ ಹಿಂದೂ ಕಾಲೋನಿಯಲ್ಲಿ ಆಗ ಮಾವನೇ ಕೊಂಡು ಕೊಟ್ಟ ಪ್ಲ್ಯಾಟು : ಮದುವೆಯಾದಮೇಲೆ ಶ್ರೀನಿವಾಸ ಖೇತವಾಡಿ ಬಿಟ್ಟಿದ್ದ. ಮಾವನೇ ತೆಗೆಸಿಕೊಟ್ಟ ಸಣ್ಣ ಪ್ರಿಂಟಿಂಗ್ ಪ್ರೆಸ್ : ಸರಕಾರೀ ನೌಕರಿಗೆ ರಾಜೀನಾಮೆ. ಎಲ್ಲರನ್ನು ಬಿಟ್ಟು ಶ್ರೀನಿವಾಸನನ್ನೇ ಅಳಿಯನನ್ನಾಗಿ ಮಾಡಿಕೊಂಡಿದ್ದರ ಹಿಂದಿನ ಗುಟ್ಟಿನ ಕತೆಯೂ ಪಕ್ಕ ಮೂಡಿಸಿಕೊಂಡು ಅಲ್ಲಲ್ಲಿ ಹಾರಿದ್ದು ನೆನಪಿಗೆ ಬಂದಾಗ_ಶಾರದೆಯ ಮುಗ್ಧ ಸೌಂದರ್ಯಕ್ಕೆ ಮಾರುಹೋದ ನಾಗಪ್ಪ ಅದನ್ನು ಮನಸ್ಸಿನಿಂದ ತೊಡೆದುಹಾಕುವಂತೆ ತಲೆ ಗಲಗಲ ಅಲ್ಲಾಡಿಸಿದ : ವಯಸ್ಸಿನ ಹದಿನೇಳನೇ ವರುಷದಲ್ಲೇ ಮೈಯಲ್ಲಿ ಹರೆಯದ ಸೊಕ್ಕು ತುಂಬಿ ತುಳುಕಾಡುತ್ತಿದ್ದ ಕಲ್ಯಾಣಿಯ ಮೇಲೆ ನೆರೆಮನೆಯ ತರುಣನೊಬ್ಬ ಶ್ರೀನಿವಾಸ ನೇತ್ರಾವತಿಯ ಮೇಲೆ ಮಾಡಿದಂತಹ ಪ್ರಯೋಗವನ್ನೇ ಮಾಡಿದ್ದನಂತೆ ! ಶ್ರೀನಿವಾಸನ ಮೊದಲ ಮಗಳು ಮದುವೆಯಾದ ಎಂಟನೇ ತಿಂಗಳಲ್ಲಿ ಹುಟ್ಟಿದ್ದರೂ ಸರಿಯಾಗಿ ಬೆಳೆದ ಮಗುವಾಗಿತ್ತಂತೆ. ಶಾರದೆಯ ಮೋರೆ ಇನ್ನೊಮ್ಮೆ ಕಣ್ಣುಮುಂದೆ ನಿಂತಾಗ ಈ ಕಂತೆ ಪುರಾಣದ ಬಗ್ಗೆ ಎಷ್ಟೊಂದು ಸಿಟ್ಟು ಬಂದಿತೆಂದರೆ ನಾಗಪ್ಪ ಕುರ್ಚಿಯಿಂದ ಎದ್ದವನೇ ನೇರವಾಗಿ ಮೋರಿಗೆ ಹೋಗಿ ಥೂ ಎಂದು ಬಲವಾಗಿ ಉಗುಳಿದ. ಇನ್ನು ಇಲ್ಲಿ ಬಹಳ ಹೊತ್ತು ಕೂಡ್ರದೆ ಸ್ನಾನ ಮುಗಿಸುತ್ತಲೇ ಹೊರಗೆ ಹೋಗಿ ಊಟಮಾಡಿ ಬರಬೇಕು ಎಂದುಕೊಂಡ. ಕ್ಷೌರಕ್ಕಾಗಿ ಗಡ್ಡದ ಮೇಲೆ ಸಾಬೂನಿನ ನೊರೆ ಎಬ್ಬಿಸುತ್ತಿದ್ದಾಗ, ಶ್ರೀನಿವಾಸನ ‘ಬಿಝಿನೆಸ್ಸು’ ಊರ್ಜಿತಾವಸ್ಥೆಗೆ ಬಂದು ಸಮಾಜದಲ್ಲಿ ಅವನ ವರ್ಚಸ್ಸು ಹೆಚ್ಚುತ್ತ ಹೋದಂತೆಲ್ಲ ನೇತ್ರಾವತಿಯ ಪ್ರಕರಣ ಒಂದು ದಂತಕತೆಯ ರೂಪ ಧರಿಸಿದ್ದು, ಶ್ರೀನಿವಾಸ ದೊಡ್ಡ ಹೀರೋ ಆಗಿ ಮೆರೆದದ್ದು ನೆನಪಿಗೆ ಬರಹತ್ತಿತು : ಶ್ರೀನಿವಾಸನೇ ಒಂದು ದಿನ ತನ್ನ ವರ್ತನೆಗೆ ಬಾಯಿ ಬಿಟ್ಟು ಹೇಳಿದ ಕಾರಣ ಇಷ್ಟು : ಈ ಇಡೀ ಸಂಬಂಧ ಒಂದು ಮೋಸದ ಮೇಲೆ ನಿಂತದ್ದೆಂದು ಗೊತ್ತಾದಾಗ ನೇತ್ರಾವತಿಗಿಂತ ಮೊದಲು ತಾನೇ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದನಂತೆ. ಆದರೆ ಈ ಯಃಕಶ್ಚಿತ ಜನರ ಸಲುವಾಗಿ ಇಂತಹ ವಿಕೋಪಕ್ಕೆ ಹೋಗುವ ಮನಸ್ಸಾಗದೇ ಪ್ರಭಾದೇವಿಯ ಸಿದ್ಧಿವಿನಾಯಕನ ಮೊರೆಹೊಕ್ಕನಂತೆ_ಮನಃಶಾಂತಿಗಾಗಿ !ನಡೆದ ಮೋಸ ಇದು_ಅನಸೂಯಾಳನ್ನು ಇಟ್ಟುಕೊಂಡವನು ತಮ್ಮ ಜಾತಿಯವನಾಗಿರದೇ ಅಂಕೋಲೆಯ ಕ್ಷೌರಿಕರ ಮನೆತನಕ್ಕೆ ಸೇರಿದವನಂತೆ. ಅವನು ಶ್ರೀಮಂತನಾದದ್ದು ಸ್ಮಗಲ್ ಮಾಡಿದ ಪರದೇಶದ ಸಾರಾಯಿಯ ಮಾರಾಟದಿಂದಂತೆ. ಇದು ತಿಳಿದಾಗಲೇ ಈ ಮದುವೆಯ ಸಂಬಂಧದ ಬಗ್ಗೆ ಮನಸ್ಸು ಮುರಿದಿತ್ತಂತೆ. ಆದರೆ ನೇತ್ರಾವತಿಯ ಮುಖವನ್ನು ನಂಬಿ, ಅವಳಿಗಿತ್ತ ಭರವಸೆಯನ್ನು ನಂಬಿ ಮನಸ್ಸು ಗಟ್ಟಿ ಮಾಡಿದ್ದನಂತೆ. ಆದರೆ ಮೇ ತಿಂಗಳಲ್ಲಿ ಆಗಲಿದ್ದ ಮದುವೆ ಮಾರ್ಚಿನಲ್ಲೇ ಆಗಬೇಕೆಂದು ಉತಾವಳಿ ಮಾಡಿದಾಗ…..ಎಂದು ಮುಂತಾಗಿ ಶ್ರೀನಿವಾಸ ನೇತ್ರಾವತಿಯ ಹೊಟ್ಟೆಯೊಳಗಿನ ಪಿಂಡದ ಜವಾಬ್ದಾರಿಯನ್ನು ಅನಸೂಯಾಳ ಮಿಂಡನ ಮೇಲೆ ಹೊರಿಸಿದ್ದ ! ಜನ ಈ ಹೊಸ ಕತೆಯನ್ನೂ ಬಾಯಿ ಚಪ್ಪರಿಸಿ ಕೇಳಿತ್ತು. ಜನ ನಂಬುವಂತೆ ಕತೆ ಕಟ್ಟುವುದರಿಂದಲೇ ವ್ಯಕ್ತಿ ತನ್ನ ಕೃತ್ಯದ ನೈತಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಾದರೆ…. +ನಡುವೆಯೇ ನಾಗಪ್ಪ ಮತ್ತೆ ನಡುಗಿದ : +ಹಳೆಯ ಪುಸ್ತಕವೊಂದನ್ನು ಮೂಸಿ ನೋಡಿದ ಒಂದು ಆಕಸ್ಮಿಕ ಘಟನೆಯೊಂದರಿಂದ ಹುಟ್ಟಿದ ನೆನಪು ತನ್ನನ್ನು ಇನ್ನಾವುದಕ್ಕೋ ಸಿದ್ಧಗೊಳಿಸಲೆಂದೇ ಹುಟ್ಟಿರಬೇಕು. ಮೊದಲಿನಿಂದಲೂ ಅದನ್ನು ಗಂಟು ಹಾಕಿಕೊಂಡೇ ಮೇಲೆ ಬಂದಿರಬೇಕು : ‘ಸಂತೋಷಭವನ’ದ ನಾಯಕ ಹೇಳಿದ ಮಾತು ಹಠಾತ್ತನೆ ಮೂಡಿಬಂದು ಇದಕ್ಕೆಲ್ಲ ಅರ್ಥ ಸೂಚಿಸಿತು : ‘ನಿನ್ನ ಅಪ್ಪ ಅಮ್ಮ ತಾವು ಇಂತಹ ಜಾತಿಯವರೆಂದು ಹೇಳಿ ಎಂತಹುದೋ ಮೋಸ ಮಾಡಿದ್ದಾರೆ ಎನ್ನುವ ಧಾಟಿಯ ಆರೋಪ. ನೇತ್ರಾವತಿಯ ಭಾವನ ಮೇಲೆ ಶ್ರೀನಿವಾಸ ಹೊರಿಸಿದ ಆರೋಪ ಇದಕ್ಕೆ ಕೊಂಡಿ ಹಾಕಿಕೊಂಡು ಆಗಿನಿಂದಲೂ ಹೊಳೆಯದೇ ಇದ್ದುದನ್ನು ಈಗ ಹೊಳೆಯಿಸಿ ಅದನ್ನು ಇದಿರಿಸುವಂತೆ ತನ್ನನ್ನು ಆಹ್ವಾನಿಸಿರಬೇಕು. +ನಾಗಪ್ಪ ಮೋರಿಯಲ್ಲಿ ನಿಂತು ತಂಬಿಗೆ ತುಂಬಿ ತುಂಬಿ ತಂಪುನೀರನ್ನು ತೆಲೆಯಮೇಲೆ ಸುರಿದುಕೊಳ್ಳುತ್ತ ನಿಂತ : ಅಂತೂ ತನ್ನ ವ್ಯಕ್ತಿತ್ವದ ನಿಜವಾದ ಸತ್ವ ತನಗೇ ಗೊತ್ತಾಗುವ ಮುಹೂರ್ತ ಒದಗಿಬರುತ್ತಿದೆ. ಬರಲಿ ಎಂದುಕೊಂಡ. +uಟಿಜeಜಿiಟಿeಜ +– ಅಧ್ಯಾಯ ಹದಿನೇಳು – +ಸ್ನಾನಕ್ಕೆ ನಿಂತಲ್ಲೇ, ಶ್ರೀನಿವಾಸನೂ ಈ ಪಿತೂರಿಯಲ್ಲಿ ಸಾಮೀಲಾದದ್ದರ ಕಾರಣಕ್ಕೆ ಅರ್ಥ ಹೊಳೆಯುತ್ತಿದೆ ಎನ್ನುವ ಅನ್ನಿಸಿಕೆ : ಕೊರೋನರರ ಕೋರ್ಟಿನಲ್ಲಿ ತಾನು ಆಡಿದ ಮಾತುಗಳಿಂದ ಅಭಿಮಾನಕ್ಕೆ ಬಿದ್ದ ಜಖಮ್ ಶಿಕಾರಿಯಾಡುವ ಶ್ವಾಪದ-ಪ್ರವೃತ್ತಿಯ ನೆಲೆಯಲ್ಲಿ ಸತ್ವ ಪಡೆಯುತ್ತ ಜೀವಂತವಾಗಿದ್ದಿರಬೇಕು. ಮಾನವನ ಆಕ್ರಮಣಶೀಲತೆ ಬೇರು ಬಿಟ್ಟದ್ದು ತನ್ನ ಪೂರ್ವಜರ ಬೇಟೆಯಾಡುವ ಅವಶ್ಯಕತೆಯಲ್ಲೇ. ಸ್ವತಃ ಅವನೂ ಕೂಡ ತನ್ನ ಇತಿಹಾಸದ ಆರಂಭದಲ್ಲಿ ಬೇಟೆಯಾಡಿಯೇ ಉಪಜೀವಿಸುತ್ತಿದ್ದ : ಇಷ್ಟೇ. ಆ ಬೇಟೆಯ ಉದ್ದೇಶ ಹೊಟ್ಟೆಪಾಡಾಗಿತ್ತು. ಆದರೆ ಶ್ರೀನಿವಾಸನ ಹಾಗೂ ಫಿರೋಜರ ಪಿತೂರಿಯ ಹಿಂದಿನ ಪ್ರೇರಣೆಗೆ ಉತ್ಕ್ರಾಂತಿ-ಕ್ರಮದಲ್ಲಿ ಯಾವ ಸ್ಥಾನವಿದೆ ? ಇಪ್ಪತ್ತು ವರ್ಷಗಳ ಹಿಂದೆ ನಾನು ಅವನ ಬಗ್ಗೆ ವ್ಯಕ್ತಪಡಿಸಿದ ಒಂದು ನಿಲುವಿನ ಕಾರಣದಿಂದ ನನ್ನನ್ನು ಮುಗಿಸಿಯೇಬಿಡುತ್ತೇನೆಂಬಂತಹ ಈ ಛಲಕ್ಕೆ ಸಮಾನವಾದ ಭಾವನೆ ಮಾನವಪೂರ್ವ ವಿಕಾಸಸ್ಥಿತಿಯಲ್ಲಿಲ್ಲ. ಇನ್ನೊಬ್ಬನನ್ನು ಧ್ವಂಸಗೊಳಿಸುವುದರಲ್ಲೇ ಸುಖ ಕಾಣುವ ಪ್ರಾಣಿ ತನ್ನ ಮೆದುಳಿನ ಬೃಹದಾಕಾರದ ಬಗ್ಗೆ ದುರಭಿಮಾನ ತಾಳುವ ಮನುಷ್ಯನೊಬ್ಬನೇ ಎಂದು ತೋರುತ್ತದೆ.ನನ್ನ ಕರಿಯರದ ಅಭ್ಯುದಯದ ಸಲುವಾಗಿ ಏನನ್ನೂ ಮಾಡಿರದ ಫಿರೋಜ್ ಅದನ್ನಿಂದು ಹಾಳುಮಾಡುವದರಲ್ಲಿ ಪಡುವ ಸುಖಕ್ಕೆ ಏನು ಅರ್ಥ ? ಒಬ್ಬ ಇನ್ನೊಬ್ಬನ ವಿನಾಶಕ್ಕೆ ಕಾರಣಗಾಗದ ಹಾಗೆ_ಬೇಟೆಯ ದಿನಗಳಲ್ಲಿ ಬೆಳೆಸಿಕೊಳ್ಳಬೇಕಾದ_ಆಕ್ರಮಣಶೀಲತೆಯನ್ನು ಹತ್ತಿಕ್ಕುವ ಉಪಾಯಗಳು ಮಾನವನಿಗೆ ವ್ಯಕ್ತಿಗತವಾಗಿ ಸಾಧಿಸಿಲ್ಲ. ಪ್ರಾಣಿವರ್ಗಕ್ಕೆ ಇವು ಸಾಧಿಸಿವೆಯಂತೆ. ಮನುಷ್ಯ ಮನುಷನದೇ ಧ್ವಂಸಕ್ಕೆ ಕಾರಣವಾಗುವ ದುಷ್ಟಶಕ್ತಿಯ ದಮನ ಸಾಮಾಜಿಕವಾಗಿ ಮಾತ್ರ ಸಾಧ್ಯವೆಂದು ತೋರುತ್ತದೆ. ಆದರೆ ಮಾನವ ಸಮಾಜ ಇನ್ನೂ ಆ ರೀತಿಯಿಂದ ವಿಕಾಸವಾಗುತ್ತಿಲ್ಲ…. +ಮತ್ತೆ ಇಂತಹ ಬರಿಯೆ ಮಿದುಳಿನಲ್ಲಿ ಹುಟ್ಟಿದ ವಿಚಾರಗಳಿಂದ ದೇಹದ ಇನ್ನಾವುದೋ ಕೇಂದ್ರದಲ್ಲಿ ತನ್ನನ್ನೂ ನಡುಗಿಸುತ್ತಿದ್ದ ಭಯವನ್ನು ಕಳಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂಬುದರ ಅರಿವು ನಾಗಪ್ಪನಿಗೆ ಬರದಿರಲಿಲ್ಲ. ಆ ಅರಿವು ಬಂದಕೂಡಲೇ ತನ್ನ ಪುಕ್ಕಲುತನದ ಬಗ್ಗೆ ತನಗೇ ಸಿಟ್ಟು ಬಂದಿತು : ಸೀತಾರಾಮನನ್ನು ಕಾಣಲು ಹೋಗಬೇಕು, ಎಷ್ಟು ದಿನವಾಯಿತು ಅವನನ್ನು ಕಾಣದೇನೆ. ಇಲ್ಲ, ಮೊದಲ ಭೇಟಿಯಲ್ಲೇ ಅಷ್ಟೊಂದು ಆತ್ಮೀಯತೆಯಿಂದ ಮಾತನಾಡಿಸಿದ ದೋಶಿಯವರನ್ನಾದರೂ ಕಂಡು ಬರಬೇಕು ಎಂಬ ವಿಚಾರವನ್ನು ಕೂಡ ಬಿಟ್ಟುಕೊಟ್ಟ. ಬೇಡ. ಮಾತನಾಡಿ ಪ್ರತಿಯೊಂದನ್ನೂ ಕೆಟ್ಟ ವಿಜ್ಞಾನವನ್ನಾಗಿ ಮಾಡಿ ಒಳಗಿನ ಭಯವನ್ನು ಕಳೆದುಕೊಳ್ಳುವ ಈ ದುರಭ್ಯಾಸ ಇನ್ನು ಬೇಡ. ಬಹುಶಃ ಮನುಷ್ಯತ್ವದ ಅಂತಿಮ ಲಕ್ಷಣವೊಂದೇ ಎಂದು ತೋರುತ್ತದೆ : ಅನ್ಯಾಯಕ್ಕೆ ಒಗ್ಗದೇ ಇರುವುದು; ಅದರ ವಿರುದ್ಧ ಹೋರಾಡುವುದು. ಸತ್ತರೂ ಅಡ್ಡಿಯಿಲ್ಲ; ಸೋಲನ್ನೊಪ್ಪಲಾರೆ…. +ತನ್ನ ನಿರ್ಧಾರದ ಅಭಿವ್ಯಕ್ತಿಗೀಗ ಮಂತ್ರೋಚ್ಛಾರದ ಧಾಟಿ ಬಂದದ್ದು ನೋಡಿ ಮುಜುಗರವಾಯಿತು. +ಸ್ನಾನ ಮುಗಿಸಿ ಬಟ್ಟೆ ಹಾಕಿಕೊಂಡವನೇ ಊಟಕ್ಕೆಂದು ಸೀದಾ ‘ಶೇರ್-ಏ-ಪಂಜಾಬ್’ ರೆಸ್ಟೋರಂಟಿಗೇ ಹೋದ. ಕೌಂಟರಿನ ಮೇಲೆ ಕೂತ ಶೇಖ ಅನ್ವರ್ ಎಂದಿನ ಗೆಳೆತನದ ನಗೆ ನಗುತ್ತ, “ಬಹಳ ದಿನಗಳಾದವು ಸಾಹೇಬರು ಇತ್ತ ಬರದೇ. ನೋಡಿ, ನಿನ್ನೆ ಸಂಜೆ ಒಬ್ಬ ಹುಡುಗ ನಿಮಗೊಂದು ಚೀಟಿ ಕೊಟ್ಟು ಹೋಗಿದ್ದಾನೆ. ಬಹಳ ಹೊತ್ತು ಹಾದಿ ನೋಡಿದ. ನೀವು ದಿನವೂ ಊಟಕ್ಕೆ ಇಲ್ಲೇ ಬರುತ್ತೀರಿ ಎಂದು ಯಾರೋ ಹೇಳಿದ್ದರಿಂದ ಇಲ್ಲಿ ಬಂದನಂತೆ. ಹೆಸರು ಹೇಳಲಿಲ್ಲ” ಎಂದ. ನಾಗಪ್ಪನ ಮನಸ್ಸು ತಿರುಗಿ ಕಳವಳಕ್ಕೊಳಗಾಯಿತು. ಮೂಲೆಯ ಒಂದು ಟೇಬಲ್ ಇದಿರು ಕೂಡುತ್ತಲೇ ಇದಿರು ಬಂದು ನಿಂತ ವೇಟರ್‍ಗೆ ಊಟದ ಆರ್ಡರ್ ಕೊಟ್ಟು ಲಿಫಾಫೆಯ ಬಾಯಿತೆರೆದು ಒಳಗಿನ ಚೀಟಿಯನ್ನು ಹೊರತೆಗೆದ. ಮುಂಜಾನೆ ‘ಸಂತೋಷಭವನ’ದಲ್ಲಿ ನೋಡಿದ ಚೀಟಿಯದೇ ಕಾರ್ಬನ್ ಪ್ರತಿ. ಇದು ಮೇರಿಯದೇ ಕೆಲಸ. ಚೀಟಿಯ ಮುಖಾಂತರ ತನ್ನನ್ನು ತಲುಪುವುದರಲ್ಲಿ ತೋರಿಸಿದ ಕಾಳಜಿಯಿಂದ ಕಣ್ಣು ತೇವಗೊಳ್ಳುತ್ತಿರುವಷ್ಟರಲ್ಲಿ ಇಷ್ಟೊಂದು ತರಾತುರಿಯಲ್ಲಿ ತನಗೆ ಮುಟ್ಟಿಸಲು ಬಯಸಿದ ಸಂದೇಶ ಅದೆಂತಹದಿರಬಹುದಪ್ಪ. ಎಂಬ ಆತಂಕಕ್ಕೊಳಗಾದ. ರಾತ್ರಿಯ ಎಂಟು ಗಂಟೆಯವರೆಗೆ ಕಾಯಬೇಕಾದ ಅವಶ್ಯಕತೆಯ ಒತ್ತಡ ತಡೆಯುವುದು ಅಸಾಧ್ಯವೆನಿಸಿತು. ಊಟದ ಬಿಲ್ಲು ತೆತ್ತು ಹೊಟೆಲಿನ ಹೊರಗೆ ಬಿದ್ದು ನಡೆಯುತ್ತ ಮನೆಯ ದಾರಿ ಹಿಡಿದಾಗ ಏನೇನು ಉಂಡೆ ಎಂಬುದೇ ನೆನಪಿಗೆ ಬರದಾಯಿತು. ಚಿರಪರಿಚಿತವಾದ ಲೆಮಿಂಗ್ಟನ್ ರೋಡ್ ಗುಂಟ ನಡೆಯುವಾಗ ಕಾಡಿದಷ್ಟು ತೀವ್ರವಾಗಿ ತನ್ನ ಒಂಟಿತನ ನಾಗಪ್ಪನನ್ನು ಹಿಂದೆಂದೂ ಕಾಡಿರಲಿಲ್ಲ. ಹಠಾತ್ತನೆ ಬಂದ ಒಂದು ವಿಚಾರಕ್ಕೆ ನಾಗಪ್ಪ ಫುಟ್‌ಪಾಥಿನ ಮೇಲೆ ಥಕ್ಕಾಗಿ ನಿಂತೇಬಿಟ್ಟ : ತಾನು ಆಫೀಸಿಗೇ ಹೋಗದೇ ಆರು ದಿನಗಳಾಗುತ್ತ ಬಂದರೂ ತನ್ನ ಬಗ್ಗೆ ಎಷ್ಟೊಂದು ಅಭಿಮಾನ. ಪ್ರೀತಿ ಇಟ್ಟುಕೊಂಡವರೆಂದು ತಾನು ತಿಳಿದ ಸಹೋದ್ಯೋಗಿಗಳು, ತನ್ನ ಕೈಕೆಳಗಿನ ಸಹಾಯಕರು ಇವರಲ್ಲೊಬ್ಬರೂ ತನಗೆ ಭೆಟ್ಟಿಯಾಗಲೂ ಈವರೆಗೆ ಬಂದಿರಲಿಲ್ಲ. ಅವರೆಲ್ಲ ತನ್ನ ಬಗ್ಗೆ ತೋರುತ್ತ ಬಂದ ಭಾವನೆಗಳು ಕೂಡ ಬರಿಯ ಸ್ವಾರ್ಥದ ಮೇಲೆ ನಿಂತವುಗಳಾಗಿದ್ದುವೇ ? ಬಂದ ಸಂಶಯದಿಂದ ಉಂಡದ್ದೆಲ್ಲ ಹೊರಬರುವ ಭಯವಾಯಿತು, ನಾಗಪ್ಪನಿಗೆ. ತಾನಿನ್ನೂ ಫುಟ್‌ಪಾಥಿನ ಮೇಲೆ ಇದ್ದೇನೆ ಎನ್ನುವುದರ ಅರಿವು ಬಂದು ತನ್ನನ್ನು ಸಾವರಿಸಿಕೊಳ್ಳುತ್ತ ಬದಿಯ ಎಲೆಯ ಅಂಗಡಿಗೆ ಹೋಗಿ, ‘ಬನಾರಸೀ ಮಸಾಲಾ ಪಾನ್’ ಕೊಂಡು ಬಾಯಲ್ಲಿಟ್ಟು ಅಗಿಯುತ್ತ ವೇಗವೇಗವಾಗಿ ಮನೆಯ ಕಡೆಗೆ ಹೆಜ್ಜೆ ಇಡಹತ್ತಿದ. ಇಲ್ಲ ಯಾರಾದರೂ ಬಂದಿರಬೇಕು. ತಾನು ಶ್ರೀನಿವಾಸನ ಮನೆಗೆ ಹೋದಾಗ ಬಾಗಿಲ ಬೀಗವನ್ನು ಕಂಡು ಹಿಂತಿರುಗಿ ಹೋಗಿರಬೇಕು. ನೆರೆಮನೆಯವರು ತನಗೆ ಹೇಳಲು ಮರೆತಿರಬೇಕು….ನಾಗಪ್ಪನ ಮನಸ್ಸು ಸತ್ಯಸಂಗತಿಯನ್ನು ಇದಿರಿಸಲು ಹಿಂದೆಗೆಯಹತ್ತಿತು; ಈಗಾಗಲೇ ತನ್ನನ್ನು ಸಸ್ಪೆಂಡ್ ಮಾಡಿದ್ದರ ಸುದ್ದಿ ಆಫೀಸಿನಲ್ಲೆಲ್ಲ ಹರಡಿರಬೇಕು. ಅದರ ಕಾರಣ ಕೂಡ. ಈ ವಿಚಾರ ನಾಗಪ್ಪನಿಗೆ ಹೊಳೆದೂ ಅದನ್ನು ಕೂಡಲೇ ಒಪ್ಪಲು ಸಿದ್ಧನಿರಲಿಲ್ಲ. ‘ಶೇರ್-ಏ-ಪಂಜಾಬ್’, ‘ಸಂತೋಷಭವನ’ಗಳಲ್ಲಿ ಊಟಕ್ಕೆ ಹೋಗುತ್ತಿದ್ದ ಸಮಾಚಾರ ಮೇರಿಗೆ ತನ್ನ ಸಹೋದ್ಯೋಗಿಗಳಿಂದಲೇ ತಿಳಿದಿರಬೇಕು…. +ಮಾಳಿಗೆಯ ಮೆಟ್ಟಿಲುಗಳನ್ನು ಹತ್ತಿ ಕೋಣೆಯತ್ತ ಸಾಗುವಾಗ, ಎಲ್ಲ ಗಂಡಸರು ಆಫೀಸಿನಲ್ಲಿ ಇರುವ ವೇಳೆಗೆ ತಾನೊಬ್ಬನೇ ಮನೆಯಲ್ಲಿರುತ್ತಿದ್ದುದನ್ನು ಕಂಡು ಚಾಳಿನ ಹೆಂಗಸರು ತನ್ನತ್ತ ಬೀರಿದ ದೃಷ್ಟಿಯಲ್ಲಿ ಮೂಡಿದ ಕುತೂಹಲದಲ್ಲಿ ಇಷ್ಟು ದಿನ ಆತ್ಮೀಯನಾದವನು ಈಗ ಒಬ್ಬ ಯಃಕಶ್ಚಿತನಾಗಿ ತಾನು ಅನುಭವಿಸುತ್ತಿದ್ದ ಯಾತನೆಯನ್ನು ಕುರಿತು ಒಂದು ಬಗೆಯ ಫಾಜೀಲವಾದ ಆಸ್ಥೆಯಿಂದ ಗುಮಾನಿ ಬಂದು ಮನಸ್ಸು ಹೇಸಿತು. ಇಂದಿನ ಯಾಂತ್ರಿಕ ಜೀವನದಿಂದಾಗಿ ದಡ್ಡು ಬಿದ್ದ ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಲು ಇವರು ಇತರರ ದುಃಖವನ್ನು ಕೂಡ ಉಪಯೋಗಿಸಿಕೊಳ್ಳಬಲ್ಲರೇನೋ : ಉಳಿದವರ ಯಾತನೆ ಕೂಡ ಇವರಿಗೆ ಮನರಂಜನನೆಯ ವಿಷಯವಾಗಬಲ್ಲುದೇನೋ. ಕೋಣೆಯ ಬೀಗ ತೆಗೆಯುವ ಹೊತ್ತಿಗೆ ಮಗ್ಗುಲ ಮನೆಯ ಹೆಂಗಸು ‘ಮೈಯಲ್ಲಿ ಹುಷರಿಲ್ಲವೆ ?’ ಎಂದು ಕೇಳಿದ್ದರಲ್ಲಿ ತನ್ನ ಆರೋಗ್ಯದ ಬಗೆಗಿನ ಕಾಳಜಿಗಿಂತ, ನೀನು ಯಾಕೆ ಆಫೀಸಿಗೆ ಹೋಗದೇ ಮನೆಯಲ್ಲೇ ಕೂತಿದ್ದೀ ಎನ್ನುವುದರ ಸುಳುಹು ನಮಗೆ ಹತ್ತಿದೆ ಎಂಬ ಸೂಚನೆಯೊಳಗಿನ ವ್ಯಂಗ್ಯ. ಅದರಿಂದಾಗಿ ತನಗಾಗುತ್ತಿದ್ದ ನೋವಿನಿಂದ ಅವಳು ಸುಖಪಡುವ ರೀತಿ_ಇವುಗಳಿಂದಾಗಿ ಜಿಗುಪ್ಸೆ ಹುಟ್ಟಿತು. ತನ್ನ ತಿರಸ್ಕಾರವನ್ನು ಮುಚ್ಚುವ ಪ್ರಯತ್ನ ಮಾಡದೇ_‘ಹೌದು, ಆದರೆ ಅದಕ್ಕೆ ಬೇಕಾದ ಔಷಧಿ ನಿಮ್ಮ ಹತ್ತಿರ ಇಲ್ಲ,” ಎಂದವನೇ ಕದ ತೆರೆದು ಒಳಗೆ ಹೋದ. ಈಗ ಗಡದ್ದಾಗಿ ನಿದ್ದೆ ಮಾಡಬೇಕು ಎಂಬ ವಿಚಾರದಿಂದ ಕದ ಮುಚ್ಚಿ, ಬಟ್ಟೆ ಬದಲಿಸಿ, ಕಾಟಿನ ಮೇಲೆ ಅಡ್ಡವಾದದ್ದೇ ಆ ಹೆಂಗಸಿನ ಪೆಚ್ಚುಬಿದ್ದ ಮೋರೆ ಕಣ್ಣಮುಂದೆ ಬಂದು, ಹಾಗೆ ಚುಚ್ಚಿ ಮಾತನಾಡಿ ಅವಳ ಬಾಯನ್ನು ಮುಚ್ಚಿಸಿದ ತನ್ನ ಧೈರ್ಯದ ಬಗ್ಗೆ ತಾನೇ ಖುಶಿಪಟ್ಟ. ಅವಳ ಪೇಚನ್ನು ಕಂಡು ಬದಿಯ ಮನೆಗಳ ಇನ್ನಿಬ್ಬರು ಹೆಂಗಸರು ಗುಸುಗುಸು ನಗುತ್ತ ಒಳಗೆ ಹೋದದ್ದೂ ನೆನಪಿಗೆ ಬಂದು ಇನ್ನಷ್ಟು ಖುಶಿಯಾಯಿತು. ಅರೆ ! ಇದೆಂತಹ ಖುಶಿಪಡುವ ರೀತಿ ಎಂದು ತನ್ನ ಬಗ್ಗೆ ತಾನೇ ಅಚ್ಚರಿಪಟ್ಟ. +ನಿದ್ದೆಯಿಂದ ಎಚ್ಚರವಾದಾಗ ಒಂದು ವಿಚಿತ್ರ ಸದ್ದಿನಿಂದ ತನಗೆ ಎಚ್ಚರವಾದದ್ದು ಎನ್ನುವದಷ್ಟೇ ನಾಗಪ್ಪನಿಗೆ ನೆನಪಿಗೆ ಬಂತು. ಕಣ್ಣು ತಿಕ್ಕಿಕೊಳ್ಳುತ್ತ ಗಡಿಯಾರ ನೋಡಿಕೊಂಡಾಗ ಬರೇ ಮೂರು ಗಂಟೆ. ಮೇರಿಗೆ ಫೋನ್ ಮಾಡಲು‌ಇನ್ನೂ ಐದು ಗಂಟೆಯ ಕಾಲ ಹಾದಿ ಕಾಯಬೇಕು. ಹಾಸಿಗೆಯಿಂದ ಎದ್ದು, ಮೋರೆ ತೊಳೆದು ಚಹಮಾಡಲು ಸ್ಟೋವ್ ಹೊತ್ತಿಸುವ ಮನಸ್ಸಾಗದೇ ಕೆಳಗೆ ಹೋಗಿ ಶ್ರೀಕೃಷ್ಣವಿಲಾಸದಲ್ಲೇ ಚಹ ಕುಡಿದು ಬಂದರಾಯಿತು ಎಂದುಕೊಂಡು ಉಡುಪು ತೊಡಹತ್ತಿದ. ಕನ್ನಡಿಯ ಇದಿರು ನಿಂತು ಕೂದಲು ಬಾಚಿಕೊಳ್ಳುತ್ತಿರುವಾಗ ಯಾವ ಸ್ಪಷ್ಟ ಕಾರಣವೂ ಇಲ್ಲದೇನೆ ಬಂದ ವಿಚಾರಕ್ಕೆ ದಿಗಿಲಾಯಿತು. ಬಹುಶಃ ನೇತ್ರಾವತಿಯ ಆತ್ಮಘಾತದ ನೆನಪು ಪ್ರಜ್ಞೆಯ ತಳದಲ್ಲಿ ಮೈ ಹೊರಳಿಸಿರಬೇಕು ; ಬದುಕುವ ಶೈಲಿಯಲ್ಲಿ ಆತ್ಮಹತ್ಯೆಯ ರೀತಿ ಕೂಡ ವ್ಯಕ್ತಿಯ ಅಂತರಂಗವನ್ನು ಪ್ರಕಟಿಸುತ್ತದೆಯೇನೋ ! ನೇತ್ರಾವತಿ ಮೂರು ಮಜಲು ಎತ್ತರದಿಂದ ಕೆಳಕ್ಕೆ ಹಾರಿಕೊಂಡದ್ದು, ಅಪ್ಪ ಬಾವಿಯಲ್ಲಿ ಮುಳುಗಿದ್ದು….ಯಾತನೆ ಪಡುವ ಮನಸ್ಸಿನ ಸಾಯುವ ಸಂಕಲ್ಪಕ್ಕೆ ದೇಹ ಪ್ರತಿಸ್ಪಂದಿಯಾಗುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದದ್ದೇ ? ಇಲ್ಲವಾದರೆ ಆತ್ಮಘಾತದ ಕ್ರಮದಲ್ಲಿ ಇಷ್ಟೊಂದು ಪರಿಗಳು ಏಕೆ ಇರುತ್ತಿದ್ದವು. ತಾನೇ ಆತ್ಮಹತ್ಯಗೆ ಮನಸ್ಸು ಮಾಡಿದ್ದೇ ಆದರೆ (ನಾಗಪ್ಪನ ಮೈಮೇಲಿನ ಕೂದಲು ನೆಟ್ಟಗೆ ನಿಂತವು) ಎರಡು ರೀತಿಗಳನ್ನು ಸರ್ವಥಾ ಆಯ್ಕೆ ಮಾಡುತ್ತಿರಲಿಲ್ಲ: ಒಂದು, ಕೊರಳಿಗೆ ನೇಣುಹಾಕಿಕೊಳ್ಳುವುದು ; ಇನ್ನೊಂದು ಮೈಗೆ ಬೆಂಕಿ….ನಾಗಪ್ಪನಿಗೆ ಈ ವಿಚಾರವನ್ನು ಪೂರ್ತಿಗೊಳಿಸುವದಾಗಲಿಲ್ಲ. ತಾನು ಸಾಯಲು ಬಯಸಿದ್ದೇ ಆದರೆ ನಿದ್ದೆಗುಳಿಗೆಗಳನ್ನು ತಿಂದೇ ತನ್ನ ಯಾತನೆಯನ್ನು ಕೊನೆಗೊಳಿಸಬಹುದು. ಈ ಅನಾರೋಗ್ಯಕರ ವಿಚಾರಗಳಿಂದ ತನ್ನನ್ನು ಬಿಡಿಸಿಕೊಳ್ಳಲೆಂಬಂತೆ, ಅವಸರ ಅವಸರವಾಗಿ, ಹೊರಗೆ ಹೋಗಬೇಕೆಂದು ಕದ ತೆರೆಯುತ್ತಿದ್ದಾಗ ಯುನಿಫಾರ್ಮ್ ಧರಿಸಿದ ಕಂಪನಿಯ ಪ್ಯೂನ್_ತನ್ನ ಬಗ್ಗೆ ತುಂಬ ಆದರ ಇಟ್ಟುಕೊಂಡ_ಪ್ರಭಾಕರ ಬಾಗಿಲಲ್ಲಿ ಬಂದು ಹಾಜರಾಗಿದ್ದ. ಎಂದಿನಂತೆ ಸೌಜನ್ಯ ತೋರಿಸಿ ನಮಸ್ಕರಿಸಿ ಕೈಯಲ್ಲಿ ತಂದ ಲಕ್ಕೋಟೆಯನ್ನು ನಾಗಪ್ಪನ ಕೈಯಲ್ಲಿ ಕೊಟ್ಟವನು ಅಲ್ಲಿಂದ ಕಾಲುಕೀಳುವ ತ್ವರೆಯಲ್ಲಿದ್ದಂತೆ ಕಂಡ. ಲಕ್ಕೋಟೆಯಲ್ಲಿದ್ದದ್ದು ಹೈದರಾಬಾದಿಗೆ ಹೋಗುವ ಟಿಕೆಟ್ಟೇ ಇರಬೇಕೆಂಬುದರ ಬಗ್ಗೆ ಯಾವ ಸಂಶಯವೂ ಇಲ್ಲದವನಂತೆ ನಾಗಪ್ಪ, ಅದನ್ನು ಪುಸ್ತಕದ ಕಪಾಟಿನಲ್ಲಿ ಒಂದೆಡೆ ಇಡುತ್ತ, “ತಡೆ ಪ್ರಭಾಕರ್, ನಾನು ಇದೀಗ ಚಹ ಕುಡಿಯಲಿಕ್ಕೆಂದು ಕೆಳಗೆ ಹೋಗುವವನಿದ್ದೆ. ಕೂಡಿಯೇ ಹೋಗೋಣ. ಜೊತೆಗೆ ಯಾರೂ ಇಲ್ಲದೇ ಬೇಸರ ಬಂದಿತ್ತು. ಆಯತ ಹೊತ್ತಿಗೇ ಬಂದಿ. ಬಾ. ಒಂದೊಂದು ಕಪ್ಪು ಚಹ ಕುಡಿಯೋಣ”ಎನ್ನುತ್ತ ಕದ ಮುಚ್ಚಿ ಬೀಗ ಹಾಕಿದ. ಈ ಅನಿರೀಕ್ಷಿತ ಆತ್ಮೀಯ ಆಹ್ವಾನದಿಂದ ಪ್ರಭಾಕರ ಸಂಕೋಚದಿಂದ ಮುದುಡಿ ಮುದ್ದೆಯಾದ. ಕಾರ್ರಿಡಾರಿನಲ್ಲಿ ನಡೆಯುವಾಗ, “ನೀನು ತಂದದ್ದು ಹೈದರಾಬಾದಿಗೆ ಹೋಗುವ ಟಿಕೆಟ್ ಇರಬೇಕು ಅಲ್ಲವೆ ? ಯಾವ ತಾರೀಖಿನದಂತೆ ?” ಎಂದು ಕೇಳಿದ ನಾಗಪ್ಪ. ಪ್ರಭಾಕರ ತನಗೆ ಗೊತ್ತಿದೆ ಎನ್ನುವುದನ್ನು ತೋರಿಸಬೇಕೋ ಬಾರದೋ ಎಂದು ಅನುಮಾನಿಸುತ್ತಿರುವಾಗ ನಾಗಪ್ಪನೇ, “ನಾಳೆಯದಿರಬೇಕು ಅಲ್ಲವೇ ?” ಎಂದು ಕೇಳಿದ. ಆಗ ಪ್ರಭಾಕರ ಬಾಯಿಬಿಟ್ಟು, “ನಾಳೆ ಸಂಜೆಯದಿರಬೇಕು. ಮಿಸ್ ಡಿಸೋಝಾ ಹಾಗಂದಂತೆ ಕೇಳಿಸಿತ್ತು,” ಎಂದ. ಮಿಸ್ ಡಿಸೋಝಾ ಪರ್ಸೊನಲ್ ಮ್ಯಾನೇಜರನ ಸೆಕ್ರೆಟರಿ, ಅವನ ಬಗ್ಗೆ ನಿಷ್ಕಾರಣವಾಗಿ ಅಸಡ್ಡೆ ತೋರುತ್ತ ಬಂದವಳು. ಇಬ್ಬರೂ ಕೆಲಹೊತ್ತು ಏನೂ ಮಾತನಾಡಲಿಲ್ಲ. +ಪ್ರಭಾಕರ್, ಸಾಹೇಬರ ಹಿಂದೆ, ಒಂದು ಮಾರಿನ ಅಂತರ ಇಟ್ಟುಕೊಂಡು ತಲೆ ಬಗ್ಗಿಸಿ ನಡೆಯಹತ್ತಿದ. ಮಾಳಿಗೆಯ ಮೆಟ್ಟಿಲುಗಳನ್ನು ಇಳಿಯುವಾಗ ಮೇರಿಯ ಬಗ್ಗೆ ಕೇಳಬೇಕೆಂದುಕೊಂಡು ನಾಲಗೆಯ ತುದಿಯವರೆಗೆ ಬಂದ ಪ್ರಶ್ನೆಯನ್ನು ನಾಗಪ್ಪ ತಡೆಹಿಡಿದ. ಪ್ರಭಾಕರ ತಾನಾಗಿಯೇ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಸಾಹೇಬರ ಜೊತೆ ಚಹಾ ಕುಡಿಯುವ ಕಲ್ಪನೆಯಿಂದಲೇ ನಾಲಗೆ ಒಣಗಿತ್ತು. ಸಾಹೇಬರ ಬಗ್ಗೆ ಅಫೀಸು ತುಂಬ ಹರಡಿದ ಸುದ್ದಿಯಿಂದ ; ಅದಕ್ಕಿಂತ ಹೆಚ್ಚಾಗಿ ನಿನ್ನೆ ಮೊನ್ನೆಯವರೆಗೆ ಅವರ ಬಗ್ಗೆ ತುಂಬ ಆದರವಿದೆ ಎಂದು ತೋರಿಸಿಕೊಂಡವರೇ ಈಗ ಒಮ್ಮೆಗೆಲೇ ಅವರ ಮೇಲೆ ಎರಗಿ ಬಂದ ಈ ಪೇಚು ಪ್ರಸಂಗದ ಬಗ್ಗೆ ಮಾತನಾಡುತ್ತ ಬಾಯಿ ಚಪ್ಪರಿಸುವುದನ್ನು ಕಂಡು ಪ್ರಭಾಕರ ರೋಸಿದ್ದ. ‘ಶ್ರೀಕೃಷ್ಣವಿಲಾಸ’ವನ್ನು ಹೊಕ್ಕು ತಾನು ಕೂತ ಟೇಬಲ್ಲಿಗೇ ಪ್ರಭಾಕರನನ್ನು ಕರೆದಾಗ ಅವನ ಸರಳ ಸ್ವಭಾವಕ್ಕೆ ಮನಸೋತ ಪ್ರಭಾಕರ_“ಸರ್, ಏನೂ ಹೆದರಬೇಡಿ. ದೊಡ್ಡ ಸಾಹೇಬರು ಊರಿನಲ್ಲಿದ್ದರೆ ಇದೆಲ್ಲ ಆಗುತ್ತಿರಲೇ‌ಇಲ್ಲ. ಹೈದರಾಬಾದಿನ ಪಾರ್ಸೀ ಸಾಹೇಬರು ಹಾಗೂ ಅವರ ಚೇಲಾ ಖಂಬಾಟಾ ಕೂಡಿ ಏನೋ ಪಿತೂರಿ ಮಾಡಿದ್ದಾರೆ.” ಎಂದ. ನಾಗಪ್ಪನಿಗೆ ಆಶ್ಚರ್ಯವಾಯಿತು. ಮ್ಯಾನೇಜಿಂಗ್ ಡೈರೆಕ್ಟರರು ಊರಲ್ಲಿಲ್ಲದ ಸುದ್ದಿಯನ್ನು ಮೊದಲ ಬಾರಿಗೇ ಕೇಳುತ್ತಿದ್ದ. ತಿನ್ನಲಿಕ್ಕೆ ಏನಾದರೂ ಬೇಕೋ ಎಂದು ಕೇಳಿದಾಗ ಪ್ರಭಾಕರ ಬೇಡ ಎಂದ. ಎರಡು ಕಪ್ಪು ಚಹಕ್ಕೆ ಆರ್ಡರ್ ಕೊಟ್ಟು_ದೊಡ್ಡ ಸಾಹೇಬರು ಎಲ್ಲಿಗೆ ಹೋಗಿದ್ದಾರೆ ಎಂದು ಕೇಳಿದಾಗ ಪ್ರಭಾಕರ ಆಶ್ಚರ್ಯ ವ್ಯಕ್ತಪಡಿಸಿದ. “ಅವರು ಅಮೇರಿಕೆಗೆ ಹೋದದ್ದು ತಮಗೆ ಗೊತ್ತೇ ಇಲ್ಲವೆ ? ಆಕಸ್ಮಾತ್ತಾಗಿ ಹೋಗಬೇಕಾಗಿ ಬಂತಂತೆ. ಈಗ ಮೂರು ದಿನಗಳಾದವು. ನಿಮ್ಮ ವಿರುದ್ಧ ನಡೆದ ಪಿತೂರಿಯ ಸುಳಿವು ಅವರಿಗೂ ಹತ್ತಿದೆ. ಆದರೆ ತುರ್ತು ಯಾವುದರಲ್ಲೂ ಸಿಲುಕಿಕೊಳ್ಳುವ ಮನಸ್ಸಿರಲಿಲ್ಲ ಅವರಿಗೆ. ಆದರೆ ನೀವು ಹೆದರುವ ಕಾರಣ ಏನೂ ಇಲ್ಲವೆಂದು ಸೆಕ್ರೆಟರಿಗೆ ಹೇಳಿ ಹೋಗಿದ್ದಾರಂತೆ.” ಇದೆಲ್ಲ ಇವನಿಗೆ ಹೇಗೆ ಗೊತ್ತು ಎಂಬಂತೆ ಹುಬ್ಬೇರಿಸಿದಾಗ, ಪ್ರಭಾಕರನೇ ಹೇಳಿದ_“ಆಗ ಕೊಟ್ಟ ಕವರಿನಲ್ಲಿ ನಿಮಗೊಂದು ಚೀಟಿಯಿದೆ, ಅದರ ಮೇಲೆ ಅವಳು ಸಹಿ ಮಾಡಿಲ್ಲ. ಯಾರಿಗೂ ಸಂಶಯ ಬರದಿರಲಿ ಎಂಬ ಉದ್ದೇಶದಿಂದ. ಆದರೆ ನನಗಷ್ಟೇ ಗೊತ್ತು. ನಾನೇ ಈ ಟಿಕೆಟ್ಟನ್ನು ಇಲ್ಲಿಗೆ ತರುವಂತೆ ಮಾಡಿದ ಖುಬಿ ಅವಳದೇ” ಎನ್ನುವಾಗ ಮೇರಿ ನಾಗಪ್ಪನ ಬಗ್ಗೆ ವ್ಯಕ್ತಪಡಿಸಿದ ಭಾವನೆಗಳಿಂದ ಪ್ರಭಾಕರ ತಾನೇ ಲಜ್ಜಿತನಾದ. +ನಾಗಪ್ಪನಿಗೆ ಕೂಡಲೇ ಮೇಲೆ ಹೋಗಿ ಮೇರಿ ಬರೆದ ಚೀಟಿ ಓದುವ ಕುತೂಹಲವಾಯಿತು. ಆಫೀಸಿನಲ್ಲಿ ಸದ್ಯ ಏನೇನು ನಡೆದಿದೆ ಎನ್ನುವುದನ್ನು ಅರಿಯುವ ಉದ್ದೇಶದಿಂದಲೇ ಪ್ರಭಾಕರನನ್ನು ಚಹಕ್ಕೆ ಕರೆದದ್ದು ಎಂಬುದನ್ನು ಕೂಡ ಮರೆತು ಚಹ ಕುಡಿದು ಮುಗಿಸುತ್ತಲೇ ಚಹದ ಹಣ ಕೊಟ್ಟು, ಟಿಕೆಟ್ಟು ತಂದು ಮುಟ್ಟಿಸಿದ್ದರ ಬಗ್ಗೆ ಆಭಾರ ಮನ್ನಿಸಿ, ಪ್ರಭಾಕರನನ್ನು ಬೀಳ್ಕೊಟ್ಟು ಲಗುಬಗೆಯಿಂದ ಕೋಣೆ ಸೇರಿ ಪ್ರಭಾಕರ ತಂದ ಲಕ್ಕೋಟೆಯ ಬಾಯಿ ತೆರೆದ. ಟಿಕೆಟ್ಟಿನೊಂದಿಗೆ ಇಟ್ಟಿದ್ದಾಳೆಂದ ಚೀಟಿಯನ್ನು ಹೊರತೆಗೆಯುವ ತವಕದಿಂದ ಟಿಕೆಟ್ಟನ್ನು ಹೊರತೆಗೆದ. ಅದರ ಜೊತೆ ಇಟ್ಟ ಸಣ್ಣ ಲಕ್ಕೋಟೆಯನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡು ಕಾಳಜಿಪೂರ್ವಕ ಅದನ್ನೂ ತೆರೆದ. ಕೈಗೆ ಬಂದ ಸಣ್ಣ ಚೀಟಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಿಕ್ಕ ಸಹಿ ಇಲ್ಲದ ಚೀಟಿಗಳದೇ ಇನ್ನೊಂದು ಪ್ರತಿಯಾಗಿತ್ತು ! ಆದರೆ ಈ ಚೀಟಿಯ ಕೊನೆಯಲ್ಲಿ ಟove- ಎಂಬುದನ್ನಷ್ಟೇ ಇಂಕ್‌ನಲ್ಲಿ ಬರೆದಿತ್ತು. ನಾಗಪ್ಪನಿಗೆ ಈ ಮೊದಲಿನ_ಎದೆಯನ್ನು ಡವಗುಟ್ಟಿಸುವ_ಕುತೂಹಲಕ್ಕೆ ಕಾರಣವಾದುದಕ್ಕೆ ವಿಪರ್ಯಸ್ತವಾದ ವಸ್ತುಸ್ಥಿತಿಯನ್ನು ನೋಡಿ ದೊಡ್ಡಕ್ಕೆ ನಕ್ಕುಬಿಡಬೇಕೆನ್ನಿಸಿತು. ಆರಾಮಕುರ್ಚಿಯಲ್ಲಿ ಕೂತು ಮುಂದಿನ ಸ್ಟೂಲಿನ ಮೇಲೆ ನಿಡಿದಾಗಿ ಕಾಲು ಚಾಚಿ ಮೂರೇ ಸಾಲುಗಳಿದ್ದ ಆ ಚೀಟಿಯನ್ನು ಇನ್ನೊಮ್ಮೆ ಓದಿ ಮೇರಿಯ ಬಗ್ಗೆ ಹಿಂದೆ ಎಂದೂ ಅನ್ನಿಸಿರದಷ್ಟು ಪ್ರೀತಿಯಿಂದ ಮಶಿಯಲ್ಲಿ ಬರೆದ ಅಕ್ಷರಗಳಿಗೆ ತುಟಿ ಹಚ್ಚಿದ. ತನಗೆ ಗೊತ್ತಾಗುವ ಮೊದಲೇ ಕಣ್ಣುಗಳು ಒದ್ದೆಯಾಗಿದ್ದವು. ತನ್ನವರೇ ಎನ್ನುವ ಆತ್ಮೀಯ ಜನವೇ ತನಗಿಲ್ಲ ಎಂಬಂಥ ನಿಲುಗಡೆಗೆ ಬಂದು ತಲುಪಿದ ಹೊತ್ತಿಗೇ ಮೇರಿ ತನ್ನ ಬಗ್ಗೆ ತೋರಿದ ಭಾವನೆಯಿಂದ ಮತ್ತೆ, ಬದುಕು ಬದುಕಲರ್ಹವೆನ್ನಿಸಹತ್ತಿತ್ತು. ನೇತ್ರಾವತಿಯ ದುರ್ಮರಣದ ನೆನಕೆಯ ನೆಪದಲ್ಲಿ ಮನಸ್ಸು ಇನ್ನಾವುದಕ್ಕೋ ಸಿದ್ಧವಾಗುತ್ತಿರುವ ಗಳಿಗೆಯಲ್ಲಿ ಬಂದು ಈ ಚೀಟಿ ತನ್ನ ಹೇಡಿತನದ ಬಗ್ಗೆ ತಾನೇ ಜಿಗುಪ್ಸೆ ಪಡುವಂತೆ ಮಾಡಿತು. ಇಲ್ಲ, ಬದುಕಿಗೆ ವಿಮುಖನಾಗಲಾರೆ. ಹೋರಾಟ ಬೇಡುವ ಸನ್ನಿವೇಶದಿಂದ ಪಲಾಯನ ಹೇಳಲಾರೆ….ಟಿಕೆಟ್ಟಿನ ಮೇಲಿನ ತಾರೀಖನ್ನೇ ನೋಡಿಲ್ಲ ಎನ್ನುವದು ನೆನಪಿಗೆ ಬಂದು ಎದ್ದು ಟಿಕೆಟ್ಟನ್ನು ತೆರೆದು ನೋಡಿದ. ಪ್ರಭಾಕರ ಹೇಳಿದಂತೆ ನಾಳೆ ಸಂಜೆಯದಾಗಿತ್ತು. ಇಂದು ರಾತ್ರಿ, ನಾಳೆ ಇಡೀ ದಿನ ಕೂತು ಬೆಂಕಿಯ ಅಪಘಾತವನ್ನು ಕುರಿತು ಬರೆಯಬೇಕು. ಇದೂ ಕೂಡ ಫಿರೋಜನೊಡನೆಯ ಮುಖಾಮುಖಿಯಲ್ಲಿ ಸಹಾಯ ಮಾಡೀತು, ಎಂದುಕೊಂಡ_ನೂರಾ ಒಂದನೇ ಸರತಿ. +uಟಿಜeಜಿiಟಿeಜ +– ಅಧ್ಯಾಯ ಹದಿನೆಂಟು – +ಕೊನೆಗೊಮ್ಮೆ, ಬೆಳಗ್ಗಿನಿಂದಲೂ ಕಾಯುತ್ತಿದ್ದ ಎಂಟು ಗಂಟೆಯ ಮುಹೂರ್ತ ಹತ್ತಿರವಾಗುತ್ತಿದ್ದ ಹಾಗೆ ಮನಸ್ಸು ತಿರುಗಿ ಕಳವಳಕ್ಕೆ ಒಳಗಾಯಿತು. ಕೆಳಗಿನ ರೆಸ್ಟೋರಂಟಿನಿಂದಲೇ ಫೋನ್ ಮಾಡಿದರಾಯಿತು ಎಂದುಕೊಂಡು ಹೊರಗೆ ಹೋಗುವ ಸಿದ್ಧತೆಗೆ ತೊಡಗಿದಾಗ ಮನಸ್ಸು ಸಲ್ಲದ ಸಂಶಯಕ್ಕೆ ಎಡೆಮಾಡಹತ್ತಿತು : ಮೇರಿಯನ್ನಾದರೂ ನಂಬಬಹುದಲ್ಲವೇ ? ದೇವರೇ . ಇದೇಕೆ ಹೀಗೆ ಮನುಷ್ಯನಲ್ಲಿಯ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದೇನೆ. ಮೇರಿ ನನ್ನ ಬಗ್ಗೆ ಪ್ರಕಟಿಸಿದ ಆತಂಕವನ್ನು ಕೂಡ ಅಪನಂಬಿಕೆಯಿಂದ ನೋಡುತ್ತಿದ್ದೇನಲ್ಲ… +ರೆಸ್ಟೋರಂಟಿಗೆ ಬಂದಾಗ ಅವನಿಗಿಂತ ಮೊದಲೇ ಬಂದ ಹುಡುಗಿಯೊಬ್ಬಳು ಮಾತನಾಡುತ್ತಿದ್ದಳು. ಸಿಂಧಿಯಿರಬೇಕು. ತುಂಬಾಲಾವಣ್ಯವತಿಯಾದ ಹುಡುಗಿ. ಅವಳು ಉಟ್ಟ ಅಚ್ಚ ನೀಲಿ ಬಣ್ಣದ ಜಾರ್ಜೆಟ್ ಸೀರೆ ಲಕ್ಷ್ಯಕ್ಕೆ ಬರದಿರಲಿಲ್ಲ. ಅದರೊಳಗಿಂದ ಕಾಣುವ ಹರೆಯ ಹೊರಸೂಸುವ ಬೆಳ್ಳಗಿನ ಮೈಯ ಮಾಟ. ಮೇರಿಯ ಮೈಕಟ್ಟೂ ಕೂಡ ತುಂಬ ಮಾದಕವಾದದ್ದು. ಗಂಡುಮೋರೆಗೆ ಶೋಭಿಸುವಂತಹ ಹರವಾದ ಮೂಗೊಂದೇ ಮೋರೆಯ ಅಂದವನ್ನು ತುಸು ಕೆಡಿಸಿತ್ತು. ಮೇರಿಯ ದೈಹಿಕ ಸೌಂದರ್ಯದ ಬಗ್ಗೆ ತಾನು ಹೀಗೆ ವಿಚಾರ ಮಾಡುತ್ತಿದ್ದದ್ದು ಇದೇ ಮೊದಲ ಸಾರಿಯೇನೋ ಎಂಬ ಅರಿವು ಮೂಡುತ್ತಿರುವ ಹೊತ್ತಿಗೆ ಹುಡುಗಿ ತನ್ನ ಮಾತನ್ನು ಮುಗಿಸಿದ್ದಳು. ಟೆಲಿಫೋನ್ ಬಿಟ್ಟುಕೊಡುವಾಗ_soಡಿಡಿಥಿ ಣo hಚಿve ಞeಠಿಣ ಥಿou ತಿಚಿiಣiಟಿg so ಟoಟಿg. ಎಂದು ಚಂದವಾಗಿ ನಕ್ಕು ಅಲ್ಲಿಂದ ಹೊರಬಿದ್ದಳು. ಟೆಲಿಫೋನ್ ಯಂತ್ರದ ತೂತಿನಲ್ಲಿ ಹಾಕಬೇಕಾದ ನಾಣ್ಯಗಳನ್ನು ಕೈಯಲ್ಲಿ ಸಿದ್ಧವಾಗಿ ಇರಿಸಿಕೊಂಡು, ಮೇರಿ ಕೊಟ್ಟ ನಂಬರನ್ನು ತಿರುಗಿಸುವಾಗ ಎದೆ ಡವಗುಟ್ಟುತ್ತಿತ್ತು. ಆ ಬದಿಯಿಂದ ‘ಹಲ್ಲೋ’ ಎಂದ ಹೆಣ್ಣುದನಿ ಕೇಳಿಸುತ್ತಲೇ ನಾಣ್ಯಗಳನ್ನು ಹಾಕಿ ನಡುಗುವ ಗೊಗ್ಗರುದನಿಯಲ್ಲಿ, ‘ಹಲ್ಲೋ ಮೇರಿ.’ ಎಂದ. ಆ ಬದಿಯಿಂದ ಹೆಲ್ಲೋ ಎಂದ ದನಿ ಮೇರಿಯದೇ ಎಂಬುದನ್ನು ಗ್ರಹೀತ ಹಿಡಿದೇ, ನಾಗಪ್ಪನ ಆಗಿನ ದನಿಯನ್ನು ಮೇರಿ ಕೇಳಿದ್ದೇ ಆಗಿದ್ದರೆ ಅವಳಿಗೆ ಈ ದನಿಯ ಗುರುತು ಸಿಗುತ್ತಿರಲಿಲ್ಲವೇನೋ. ಪುಣ್ಯಕ್ಕೆ ಫೋನ ಕರೆಗೆ ಉತ್ತರ ಕೊಟ್ಟವಳು ಮೇರಿಯ ಗೆಳತಿಯಾಗಿದ್ದಳು. ಮೇರಿ ಫೋನಿನ ಮೇಲೆ ಬರುತ್ತಲೇ, ಫೋನ್ ಮೇಲೆ ಕೇಳಿಸಿದ್ದು ಗಂಡುದನಿಯೆಂದು ತಿಳಿದೇ, “Is ಣhಚಿಣ ಓಚಿgಟಿಚಿಣh ?” ಎಂದು ಕೇಳಿದಳು. ನಾಗನಾಥ್ ಹೌದು ಎನ್ನುವಾಗ ದನಿಯಲ್ಲಿನ್ನೂ ಕಂಪನವಿತ್ತು. “ನಾಗನಾಥ್, ಒ‌ಆ ಯವರು ಅಮೇರಿಕೆಗೆ ಹೋಗುವಾಗ ತಾನು ಹಿಂತಿರುಗಿ ಬರುವ ತನಕ ಬಂದೂಕವಾಲಾರ ಮಾತಿಗೆ ಕೆರಳದೇ ನೀವು ಸ್ವಲ್ಪ ಸಮಾಧಾನದಿಂದ ನಡೆದುಕೊಳ್ಳಬೇಕು ಎಂದು ನಿಮಗೆ ತಿಳಿಸುವಂತೆ ಹೇಳಿ ಹೋಗಿದ್ದರು. ಎಲ್ಲ ಸರಿಹೋಗುತ್ತದೆ. ನಿಮ್ಮ ಮನಸ್ಸಿಗೆ ಆಗುತ್ತಿದ್ದ ನೋವಿನ ಕಲ್ಪನೆ ನನಗೆ ಸಂಪೂರ್ಣವಾಗಿ ಇದೆ. ಆದರೆ ಎದೆಗುಂದಬೇಡಿ.”ನಾಗಪ್ಪನಿಗೆ ಈ ಆತ್ಮೀಯ ಮಾತುಗಳಿಂದ ಎಷ್ಟೊಂದು ಹೃದಯ ತುಂಬಿತೆಂದರೆ ತನ್ನ ಬಾಯಿಂದ ಹಿಂದೆಂದೂ ಬಂದಿರದ ಶಬ್ದಗಳಲ್ಲಿ_“ ಖಿhಚಿಟಿಞ ಥಿou ಜಚಿಡಿಟiಟಿg.” ಎಂದು ಮೂಡಿದ ಉದ್ಗಾರಕ್ಕೆ ತಾನೇ ಮೊದಲು ಥಕ್ಕಾದ. ಮೇರಿ ಕೂಡ ಕೆಲ ಹೊತ್ತು ತನ್ನ ಕಿವಿಗಳನ್ನು ನಂಬದಾದಳು. ನಾಗಪ್ಪನ ಸದ್ಯದ ಮನಃಸ್ಥಿತಿಯ ಅರಿವು ಇದ್ದ ಅವಳೂ ಕೂಡ ಅದೇ ಆತ್ಮೀಯತೆಯಿಂದ, ಆದರೂ ಭಾವಪರವಶಳಾಗದೆ, “ಐisಣeಟಿ mಥಿ ಜeಚಿಡಿ ಜಿಡಿieಟಿಜ, ಒ‌ಆ ಇಲ್ಲಿಂದ ಹೊರಟುಹೋದ ಮೇಲೆ ಮಾತ್ರ ಪರಿಸ್ಥಿತಿ ಒಮ್ಮೆಲೇ ಬದಲಿಬಿಟ್ಟಿದೆ. ನನ್ನನ್ನು ಕೇಳಿದರೆ, ಒ‌ಆ ಅವರು ಅಮೇರಿಕಾಕ್ಕೆ ಹೋದದ್ದು ನಮಗೆ ತೋರಿದಷ್ಟು ಆಕಸ್ಮಿಕವಾದದ್ದಲ್ಲ ಅನ್ನಿಸುತ್ತದೆ. ಅದರ ಬಗ್ಗೆ ನಡೆದ ಪೂರ್ವ ತಯಾರಿ ಆ‌ಒ‌ಆ ಯವರಿಗೆ ಗೊತ್ತಿರಬೇಕು. ಇಲ್ಲಿ ಹಬ್ಬಿದ ಸುದ್ದಿ ಏನೆಂದರೆ ಒ‌ಆ ಯವರಿಗೆ ದೊಡ್ಡ ಬಡತಿಯ ಮೇಲೆ ನ್ಯೂಯಾರ್ಕ್ ಇಲ್ಲ ಹೊಂಕೊಂಗಿಗೆ ಬದಲಿಯಾಗಲಿದೆಯಂತೆ. ಅದಕ್ಕೆಂದೇ ಅವರನ್ನು ಹೀಗೆ ಗುಟ್ಟಾಗಿ ನ್ಯೂಯಾರ್ಕಿಗೆ ಕರೆದದ್ದು. ಬಂದೂಕವಾಲಾ ಅವರೇ ಮುಂಬಯಿಗೆ ಒ‌ಆ ಆಗಿ ಬರಬಹುದಿತ್ತು. ಆದರೆ ಎಂತಹುದೋ ದೊಡ್ಡ ಲಫಡಾದಲ್ಲಿ‌ಅವರ ಹೆಸರು ಸಿಕ್ಕಿಕೊಂಡಿದೆಯಂತೆ. ಅದಕ್ಕೇ, ಬೇರೆ ಯಾರನ್ನಾದರೂ sಛಿಚಿಠಿegosಣ ಮಾಡುವ ಹಂಚಿಕೆಯೆಂದು ತೋರುತ್ತದೆ. ಹಾಗೆಂದೇ ನಿಮ್ಮನ್ನು ಕುರಿತ ಈ ತನಿಖೆಯ ನಾಟಕ. ಅಸಿಸ್ಟೆಂಟ್ ಎಡ್ಮಿನಿಸ್ಟ್ರೇಶನ್ ಮ್ಯಾನೇಜರರೇ ಇದನ್ನು ನಿಮಗೆ ತಿಳಿಸೆಂದು ನನಗೆ ಸೂಚಿಸಿದ್ದು. ಒಳ್ಳೆಯ ಹುಡುಗ, ಗೊತ್ತಿದೆಯಲ್ಲ_ಖಂಬಾಟಾಗೂ ಅವನಿಗೂ ಹಾವು ಮುಂಗುಸಿ. ಯಾರು ಯಾರೆಲ್ಲ ಈ ಪಿತೂರಿಯಲ್ಲಿ ಸಾಮೀಲಾಗಿದ್ದಾರೆ. ಯಾರಿಗೂ ಗೊತ್ತಿಲ್ಲ. ಲಕ್ಷಗಟ್ಟಲೆ ರೂಪಾಯಿಗಳ ವ್ಯವಹಾರದಲ್ಲಿ ಏನೋ ಗೋಲ್‌ಮಾಲ್ ಆಗಿದೆಯಂತೆ. ಬಂದೂಕವಾಲಾ ಹಿಡಿದೆ‌ಉ ಅವರ ಅನೇಕ ಚೇಲಾರ ಕೈ ಇದರಲ್ಲಿದ್ದರೂ ಅದನ್ನು ಹೊರಗೆಳೆಯುವ ಧೈರ್ಯ ಒಬ್ಬರಿಗೂ ಇಲ್ಲ. ಎಲ್ಲರೂ ತಮ್ಮ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವವರೇ. ನಿಮ್ಮ ಬಗ್ಗೆ ಅನೇಕರಿಗೆ ಒಲ್ಲೇ ಮತವಿದ್ದರೂ ಒಬ್ಬರೂ ಧೈರ್ಯವಾಗಿ ನಿಮ್ಮ ರಕ್ಷಣೆಗೆ ಬರಲಾರರು. ಸ್ವತಃ, ಅಸಿಸ್ಟೆಂಟ್ ಎಡ್ಮಿನಿಸ್ಟ್ರೇಶನ್ ಮ್ಯಾನೇಜರ್ ಕೂಡ. ಇಷ್ಟೇ ಅಲ್ಲ, ಸನ್ನಿವೇಶದ ದುರ್ಲಾಭ ಪಡೆಯಲು ಹಾತೊರೆದವರೇ ಹೆಚ್ಚುಮಂದಿ. ಖುದ್ದು ನಿಮ್ಮ ಡಿಪಾರ್ಟ್‌ಮೆಂಟಿನವರ ನಡತೆಯೂ ಹೇಸಿಗೆ ತರಿಸುವಂತಹದು.” ನಾಗಪ್ಪನ ಬಾಯಿಂದ ನೋವು ತುಂಬಿದ ವಿಚಿತ್ರ ಸದ್ದು ಹೊರಬಿದ್ದದ್ದು ಕೇಳಿಸಿ “ಂಡಿe ಥಿou ಚಿಟಟ ಡಿighಣ, sತಿeeಣheಚಿಡಿಣ ? ಖಿಚಿಞe iಣ eಚಿsಥಿ. ನಿಮ್ಮನ್ನು ಸ್ವತಃ ಕಂಡು ಮಾತನಾಡಿಸುವದಿತ್ತು. ನಿಜ ಒಪ್ಪಿಕೊಳ್ಳುವುದೆಂದರೆ ನನಗೂ ಆ ಧೈರ್ಯವಿಲ್ಲ. ಬಂದೂಕವಾಲಾ ಎಂತಹ ಮನುಷ್ಯ ಎನ್ನುವದು ನಮಗೆಲ್ಲ ಗೊತ್ತೇ ಇದೆ. ಸ್ವಲ್ಪ ಸಂಶಯ ಬಂದರೂ ಹಗೆ ಕಾಯುವ ಪ್ರಾಣಿ. ಎಂತಹ ಲಫಡಾ ಪ್ರಕರಣವೋ ಯಾರಿಗೆ ಗೊತ್ತು. ಒ‌ಆ ಇಲ್ಲದ ಸಮಯವನ್ನು ಸಾಧಿಸಿ ಕಿತಾಪತಿ ನಡೆಸಿದ್ದಾನೆ. ನೀವು ಆದಷ್ಟು ಜಾಗರೂಕರಾಗಿರುವುದು ಒಳ್ಳೆಯದು. ಈ ತನಿಖೆ ಅಷ್ಟು ಸರಳವಾದದ್ದೆಂದು….”ಮೇರಿ ಒಮ್ಮೆಗೇ ತಡೆದಳು. ಬಾಗಿಲ ಗಂಟೆ ಬಾರಿಸಿದ್ದು ಫೋನ್ ಮೇಲೆ ನಾಗಪ್ಪನಿಗೂ ಕೇಳಿಸಿತು. ಊoಟಜ oಟಿ ಎಂದು ಅತಿ ಮೆಲ್ಲಕ್ಕೆ ಅಂದದ್ದೂ ಕೇಳಿಸಿತು. ಮೇರಿಯ ಗೆಳತಿ ಎದ್ದು ಹೋಗಿ ಕದ ತೆರೆದಿರಬೇಕು. ಬಂದದ್ದು ಯಾರೆಂದು ತಿಳಿಯದೇ ಮೇರಿಗೆ ಮುಂದೆ ಮಾತನಾಡುವ ಮನಸ್ಸಿರಲಿಲ್ಲವೆಂದು ತೋರುತ್ತದೆ….ಟೆಲಿಫೋನ್ ರಿಸೀವರ್ ಕೈಯಲ್ಲಿ ಹಿಡಿದೇ ಬಂದ ವ್ಯಕ್ತಿಗೆ_“ಔh ! iಣ is ಥಿou_gooಜ eveಟಿiಟಿg, ಒಡಿ, ಏhಚಿmbಚಿಚಿಣಣಚಿ. Whಚಿಣ ಚಿ ಠಿಟeಚಿsಚಿಟಿಣ suಡಿಠಿಡಿise” _ಎಂದು ನಾಗಪ್ಪನಿಗೆ ಸರಿಯಾಗಿ ಕೇಳಿಸುವಂತೆ ಅಂದು, ಇನ್ನೊಂದು ಕೊನೆಯಲ್ಲಿದ್ದವರು ಯಾರು ಎಂಬುದು ಖಂಬಾಟಾಗೆ ಗೊತ್ತಾಗದಿರಲಿ ಎನ್ನುವಂತೆ_“ಭ್ಯೆ ಆನ್ನೆತ್ತೆ. ಠನ್ಕ್ಸ್ ಫ಼ೊರ್ ಚಲ್ಲಿನ್ಗ್. ಆಲ್ಲ್ ಥೆ ಬೆಸ್ತ್,” ಎಂದವಳೇ ಟೆಲಿಫೋನ್ ಕೆಳಗಿರಿಸಿಬಿಟ್ಟಳು. +ಟೆಲಿಫೋನ್ ಬಿಟ್ಟು ದೂರ ಸರಿಯುವಾಗ ನಾಗಪ್ಪ ಧಾರಾಳವಾಗಿ ಬೆವೆತಿದ್ದನಾದರೂ ಒಳಗಿನ ಭಯವನ್ನು ಅರಿವಿಗೆ ತಂದುಕೊಳ್ಳುವ ಧೈರ್ಯ ಕೂಡಲೇ ಆಗಲಿಲ್ಲ. ಹೊಟೆಲ್ಲಿನಿಂದ ಹೊರಗೆ ಬಂದಾಗ ಕಾಲುಗಳು ಸೋತು, ನಡೆಯುವುದೇ ಅಸಾಧ್ಯವಾದಾಗ ಎಲ್ಲಾದರೂ ಕೂಡ್ರಬೇಕು ಅನ್ನಿಸಿ ರಸ್ತೆಯ ಇನ್ನೊಂದು ಮಗ್ಗುಲಲ್ಲಿಯೇ ಇರಾಣೀ ಚಹದಂಗಡಿಯನ್ನು ಹೊಕ್ಕು ಸ್ಪೆಶಲ್ ಚಹ ತರಿಸಿದ. ತನ್ನನ್ನು ಎನ್ನೆಟ್ ಎಂದು ಕರೆದ ಮೇರಿಯ ಜಾಣತನದ ನೆನಪಾಗಿ ನಗಬೇಕೆನಿಸಿದರೂ ಖಂಬಾಟಾ ಈ ಹೊತ್ತಿಗೆ ಮೇರಿಯ ಮನೆಯಲ್ಲಿ ಹೇಗೆ ಎಂಬ ಆತಂಕ ನಗಲು ಬಿಡಲಿಲ್ಲ. ಮೇರಿ ಎಲ್ಲಿರುತ್ತಾಳೆಂದು ಅರಿಯುವ ಪ್ರಯತ್ನ ಕೂಡ ತಾನು ಈವರೆಗೂ ಮಾಡಿಲ್ಲ. ಮೇರಿಯ ಬಗ್ಗೆ ವಿಚಾರ ಮಾಡುತ್ತ ತನ್ನನ್ನು ನಡುಗಿಸುತ್ತಿದ್ದುದನ್ನು ಮರೆಯುವ ಪ್ರಯತ್ನದಲ್ಲಿ ನಾಗಪ್ಪ ಸಫಲನಾಗಲಿಲ್ಲ : ತನ್ನ ಹೆಸರು ಸಿಕ್ಕಿಕೊಂಡ ಲಫಡಾದಲ್ಲಿ ನನ್ನನ್ನು ಸಿಕ್ಕಿಸುವ ಸಂಚು, ದೇವರೆ, ಎಲ್ಲರನ್ನು ಬಿಟ್ಟು ನನ್ನನ್ನು ಯಾಕೆ ?_ಲಫಡಾ ಎಂದರೇನೆ ಹೆದರುವ ನನ್ನನ್ನು ? ಇವನ ಒ‌ಆ ಆಗುವ ಮಹತ್ವಾಕಾಂಕ್ಷೆಗೆ ಅಡ್ಡ ಬರುವಂತಹ ಇದಿರಾಳಿ ನಾನಲ್ಲ. ಈ ನನ್ನ ನೌಕರಿಯಿಂದ ನಾನು ಬಹಳಷ್ಟನ್ನು ಬಯಸಿದವನಲ್ಲ. ಬಯಸಿದ್ದಾದರೂ ಏನೆನ್ನುವದು ನನಗೇ ಗೊತ್ತಿಲ್ಲವಾದರೂ ಈಗಿನದಕ್ಕಿಂತ ಮೇಲೆನ ಸ್ಥಾನಕ್ಕೆ ಏರಬೇಕೆನ್ನುವ ಹಂಬಲವಂತೂ ನನಗಿಲ್ಲ….‘ಇದು ತೀರ ಸಾದಾ ತನಿಖೆಯೆಂದು ತಿಳಿಯಬೇಡ. ಆದಷ್ಟು ಜಾಗರೂಕನಾಗಿರು’ ಎಂದು ಮೇರಿ ಇತ್ತ ಇಷಾರೆ ಇರಾಣೀ ಅಂಗಡಿಯ ಖಡಕ್ ಚಹಾದ ಬಿಸಿಯನ್ನೂ ಲೆಕ್ಕಿಸದೇ ಕರುಳಲ್ಲೇ ಚಳಿ ಹುಟ್ಟಿಸಿತು : ಇಂತಹದನ್ನೆಲ್ಲ ಗ್ರಹಿಸುವ ತಾಖತ್ತು ತನ್ನ ತೀರ ಸರಳವಾದ ಮನಸ್ಸಿಗೆ ಇಲ್ಲವೇ ಇಲ್ಲ. +ಊಟ ಮಾಡುವ ಮನಸ್ಸು ಆಗದೇ ಇರಾಣೀ ಅಂಗಡಿಯಿಂದ ಹೊಬಿದ್ದವನೇ ನಾಗಪ್ಪ ಖೇತವಾಡಿಯ ಗಲ್ಲಿಯೊಂದನ್ನು ಹಿಡಿದು ದಿಕ್ಕುದಿವಾಣ ಅರಿಯದೇ ಅಲೆಯಹತ್ತಿದ. ಆಗಲೇ ರಾತ್ರಿಯ ೮-೩೦ ಮೀರಿದ್ದರಿಂದ ಇಬ್ಬದಿಯ ಅಂಗಡಿಗಳೆಲ್ಲ ಮುಚ್ಚಿಕೊಳ್ಳತೊಡಗಿದ್ದವು. ಇಡೀ ಖೇತವಾಡಿಗೆ ಮೆತ್ತಿಕೊಂಡಂಥ ವರ್ಣಿಸಲಸಾಧ್ಯವಾದ ಗಬ್ಬುವಾಸನೆ. ಮ್ಯುನಿಸಿಪಾಲಿಟಿಯ ಕುರುಡು ದೀಪಗಳ ಬೆಳಕಿನಲ್ಲಿ ಕಣ್ಣಿಗೆ ಬೀಳದಿದ್ದರೂ ಕಾಲಡಿಗೆ ಇದೆ ಎಂದು ಎಚ್ಚರಿಸುವ ಹೊಲಸು ರಾಡಿ, ಹೆಂಗಸರ ಮಕ್ಕಳ ಗಜಬಜಾಟ ಕೇಳಿಸುತ್ತಿದ್ದ ಇಬ್ಬದಿಯ ಚಾಳುಗಳು : ತನ್ನ ಮನಸ್ಸಿನ ಯಾತನೆಯನ್ನು ಮರೆಯಲೆಂದೇ ಇವಲ್ಲವುಗಳ ಕಡೆ ಲಕ್ಷ್ಯ ಹರಿಯಿಸಲು ಎಷ್ಟೊಂದು ಪ್ರಯತ್ನಿಸಿದರೂ ಫಿರೋಜನ ಪಿತೂರಿಯಲ್ಲಿ ಅವೂ ಸಾಮೀಲಾಗಿವೆ ಎಂಬ ಭಾವನೆಯಿಂದ ಅವುಗಳ ಬಗ್ಗೆ ಬೇಸರಪಟ್ಟ. ಗಲ್ಲಿಯ ಕೊನೆಗೆ ಬರುತ್ತಿದ್ದಂತೆ ಹೊಳೆಯಿತು : ತುಸು ಮುಂದಕ್ಕೆ ಹೋಗಿ ಬಲಕ್ಕೆ ಹೊರಳಿದರೆ ತಾನು ‘ಗ್ರೆಂಟ್ ರೋಡ್ ಕೊರ್ನರ್’ಗೆ ಬರುತ್ತೇನೆ ಎನ್ನುವುದು. ಅಲ್ಲೇ ‘ಬಾನಾವಳೀ ಮೆಡಿಕಲ್ ಸ್ಟೋರ್ಸ್.’ ಅದರ ಮಾಲೀಕ ತನ್ನ ಪರಿಚಯದವ. ಡಾಕ್ಟರರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೂಡ ಔಷಧ ಕೊಡಬಹುದೇನೋ, ನೇರವಾಗಿ ಅಂಗಡಿಗೆ ಬಂದವನೇ ಕೌಂಟರಿನ ಮೇಲಿನ ಕಾಗದದ ತುಂಡಿನ ಮೇಲೆ ತನಗೆ ಬೇಕಾದ ಔಷಧದ ಹೆಸರನ್ನು ಬರೆದು ಬಾನಾವಳಿಯ ಕೈಯಲ್ಲಿಡುತ್ತ_“Iಣ is veಡಿಥಿ ಟಚಿಣe ಣo go ಣo ಣhe ಆoಛಿಣoಡಿ. ಠಿಟeಚಿse obಟige,” ಎಂದ. “ಬಹಳ ದಿನಗಳಾದವು ನಿಮ್ಮನ್ನು ನೋಡದೇ ! ಮೈಯಲ್ಲಿ ಹುಷಾರಿಲ್ಲವೆ ? ತುಂಬಾ ಇಳಿದು ಹೋಗಿದ್ದೀರಿ.” ಎನ್ನುತ್ತ ಚೀಟಿ ತೆರೆದು ಓದಿ ಹುಬ್ಬೇರಿಸಿದ. ಮರುಕ್ಷಣ ಏನೋ ಅರ್ಥವಾದವನ ಹಾಗೆ ಒಳಗೆ ಹೋಗಿ ನಾಗಪ್ಪ ಬೇಡಿದ ಔಷಧದ ಬಾಟಲಿಯೊಂದನ್ನು ಕಾಗದದಲ್ಲಿ ಹೊಂದಿಸಿ ಅವನ ಕೈಯಲ್ಲಿಡುತ್ತ_“ಖಿಚಿಞe iಣ eಚಿsಥಿ. ಮೊನ್ನೆ ಶ್ರೀನಿವಾಸರಾವ್ ಬಂದಾಗ ಹೇಳಿದರು. ಒಥಿ sಥಿmಠಿಚಿಣhies. ಇದನ್ನು ಕೇಳಿ ನಾಗಪ್ಪ ಎಷ್ಟೊಂದು ಗೊಂದಲಕ್ಕೊಳಗಾದನೆಂದರೆ ಹಣ ಕೊಡುವ ಮೊದಲೇ ಅಲ್ಲಿಂದ ಓಡುವವನು : ಐನ್‌ಹೊತ್ತಿಗೆ ಬಾನಾವಳಿ, “ಆದರ ಕಿಮ್ಮತ್ತು ಹತ್ತು ರೂಪಾಯಿ. ಬಿಲ್ ಕೊಡಲು ಸಾಧ್ಯವಿಲ್ಲ.” ಎಂದಾಗ ಹಣ ಕೊಟ್ಟು ಹೊರಗೆ ಬಿದ್ದ ನಾಗಪ್ಪನ ತಲೆಯಲ್ಲಿ ಒಂದೇ ಭಯದ ವಿಚಾರ ; ಇಡೀ ಬಾಟಲಿಯನ್ನು ಒಂದೇ ಪೆಟ್ಟಿಗೆ ಖಾಲಿ ಮಾಡುವ ಚಲ ಹುಟ್ಟದಿರಲಿ ದೇವರೇ…. +ಕೈಯಲ್ಲಿ ಹಿಡಿದದ್ದು ಬಾರ್ಬಿಚ್ಯುರೇಟ್ ನಿದ್ದೆಗುಳಿಗೆಗಳ ಬಾಟಲಿಯಾಗಿತ್ತು. ಯಾವುದೇ ರೀತಿಯಿಂದ ಅಡ್ಡಿಮಾಡದೇ, ಕೇಳಿದ ಬಾಟಲಿಯನ್ನು ತನ್ನ ಕೈಯಲ್ಲಿಡುತ್ತ,ಖಿಚಿಞಚಿ iಣ eಚಿsಥಿ ; ಶ್ರೀನಿವಾಸರಾವ್ ಎಲ್ಲ ಹೇಳಿದ್ದಾರೆ ಎನ್ನುವಾಗ ಬಾನಾವಳಿಗೆ ತನ್ನ ಬಗ್ಗೆ ಇರುವ ಭಾವನೆಯಲ್ಲಿ ಕಾಳಜಿಗಿಂತ ಹೆಚ್ಚಾಗಿ ಒಂದು ಬಗೆಯ ಕ್ರೂರ ಆನಂದವಿತ್ತೇ ಎಂಬ ಗುಮಾನಿ ಬಂದಾಗಂತೂ ಖೇಮರಾಜಭವನದ ಆ ಮನೆಯಲ್ಲಿ ಒಬ್ಬನೇ ಮಲಗುವದು ಅಸಾಧ್ಯವಾಗಿ ತೋರಿತು. ಕೈಯಲ್ಲಿ ಹಿಡಿದ ಬಾಟಲಿಯೊಂದೇ ಅವನಿಗರಿವಿಲ್ಲದೇನೇ ಮನೆಯತ್ತವೇ ಅವನನ್ನು ಎಳೆದೊಯ್ಯುತ್ತಿದ್ದ ಧೈರ್ಯಕ್ಕೆ ಕಾರಣವಾದಂತಿತ್ತು…. +ಖೇಮರಾಜಭವನವನ್ನು ಸಮೀಪಿಸುವಾಗ ವಿಲಕ್ಷಣ ಅನುಭವ : ನಡೆದ ದಣಿವಿಗೋ, ಅರಿವು ಇಲ್ಲದಿದ್ದರೂ ಹೊಟ್ಟೆ ಹಸಿದದ್ದಕ್ಕೋ, ಕಿಸೆಯಲ್ಲಿ ಹೊತ್ತುತಂದ ಬಾಟಲಿ ಎಬ್ಬಿಸುತ್ತಿದ್ದ ಕಳವಳಕ್ಕೋ ಅಥವಾ ಸ್ಪಷ್ಟವಾಗಿ ಒಪ್ಪಿಕೊಂಡಿರದಿದ್ದರೂ, ಮೇರಿ, ಖಂಬಾಟಾ, ಈಗ ಬಾನಾವಳಿ_ಇವರೆಲ್ಲರಿಂದಾಗಿ ಹುಟ್ಟಿದ, ಹೊಟ್ಟೆ ಹೊರಳಿಸುವ ಭಯಕ್ಕೋ_ಅಷ್ಟೊಂದು ಜನರಸದ್ದುಗದ್ದಲದಿಂದ ತುಂಬಿದ ಖೇತವಾಡಿಯ ಅಂದಗೇಡಿಯಾದ ಚಾಳುಗಳೆಲ್ಲ ನಿರ್ಜನವಾಗಿ ನಿಂತಂತೆ ತೋರಿತು. ಖೇಮರಾಜಭವನದ ಕಟ್ಟಿಗೆಯ ಪಾವಟಿಗೆಗಳುಳ್ಳ ನಿಚ್ಚಣಿಕೆಯನ್ನು ಏರುವಾಗಂತೂ ಯಾವುದೋ, ಪ್ಲೇಗಿನಂತಹ ರೋಗದ ಹಾವಳಿಯಿಂದ ಜನರೆಲ್ಲ ಮನೆಗಳನ್ನು ಖಾಲಿಮಾಡಿ ಆಗಲೇ ಓಡಿಹೋಗಿದ್ದಾರೆ ; ತಾನೊಬ್ಬನೇ ಹಿಂದೆ ಉಳಿದುಬಿಟ್ಟಿದ್ದೇನೆ ಎಂಬಂತಹ ಭಾಸವಾದಾಗ ತನ್ನಲ್ಲಿ ಹುಟ್ಟಿದ ಭಾವನೆಗೆ ನಾಗಪ್ಪನಿಗೆ ಹೆಸರು ಹೊಳೆಯಲಿಲ್ಲ. ಇಷ್ಟೇ. ಆ ಭಾವನೆಯ ಗುಂಗಿನಲ್ಲಿದ್ದಾಗಲೇ ಹಿಂದೆ ಎಂದೂ ಮಾಡಿರದ ಒಂದು ಬಾಲಿಶವಾದ ಚಟುವಟಿಕೆಯಲ್ಲಿ ತೊಡಗಿದವನಾಗಿ ಏರುತ್ತಿದ್ದ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಎಣಿಸಹತ್ತಿದ : ಮೊದಲ ಮಜಲೆಯ ಕೊನೆಯ ಮೆಟ್ಟಿಲಿಗೆ ಬಂದೊಡನೆ, ತನಗಷ್ಟೇ ಕೇಳಿಸುವಷ್ಟು ದೊಡ್ಡ ದನಿಯಲ್ಲಿ “ಹದಿಮೂರೂ,” ಎಂದೂ, ಎರಡನೇ ಮಜಲೆಯ ಕೊನೆಗೆ ಬಂದೊಡನೆ “ಇಪ್ಪತ್ತಾರೂ,” ಎಂದೂ ಅಂದವನು ಮೂರನೇ ಮಜಲೆಯನ್ನು ತಲುಪಿದೊಡನೆ “ಮೂವತ್ತೊಂಬತ್ತೂಽಽ” ಎಂದ. ಹಾಗೆ ಅಂದಾಗಿನ ದನಿ ಎಷ್ಟು ದೊಡ್ಡದಾಗಿತ್ತೆಂದರೆ ನಿಚ್ಚಣಿಕೆಯ ಇಬ್ಬದಿಯ ಮನೆಗಳ ಜನಕ್ಕೂ ಅದು ಸ್ಪಷ್ಟವಾಗಿ ಕೇಳಿಸಿರಬೇಕು. ಪುಣ್ಯಕ್ಕೆ, ಹಾಗೆ ಒದರಿದವರು ಯಾರು ಎಂಬುದನ್ನು ತಿಳಿಯಲು ಹೊರಗೆ ಬರುವಷ್ಟು ಕುತೂಹಲ ಮಾತ್ರ ಯಾರಿಗೂ ಆಗಲಿಲ್ಲ. ಇಷ್ಟೆಲ್ಲ ಜನ ತುಂಬಿದ ಚಾಳಿನಲ್ಲಿ ಇಂತಹ ವೈಚಿತ್ರ್ಯಗಳು ದಿನವೂ ನಡೆಯುವದೇ ! ಮೂಲೆಯ ಮನೆಯ ಅರ್ಜುನರಾವ್ ಮಾತ್ರ ಇವನನ್ನು ಸಂಧಿಸದೇ ಉಳಿಯಲಿಲ್ಲ. ಇವನ ಬರವಿನ ಹಾದಿಯನ್ನೇ ಕಾಯುತ್ತಿದ್ದವನ ಹಾಗೆ ಬಾಗಿಲಲ್ಲೇ ನಿಂತಿದ್ದ ; ಇವನ ಮೋರೆಯನ್ನು ನೋಡಿದ್ದೇ ತಡ ತಾನು ಅವನ ಹಾದಿಯನ್ನು ಕಾಯುತ್ತಿದ್ದುದಾದರೂ ಯಾಕೆ ಎಂಬುದನ್ನೂ ಕೂಡ ಮರೆತೇಬಿಟ್ಟವನ ಹಾಗೆ “ನಾಳೆ ಹೈದರಾಬಾದಿಗೆ ಹೋಗುತ್ತೀರಂತೆ….ಹೆಹೆಹೆ….” ಎಂದು ಹಲ್ಲು ಕಿಸಿದಾಗ ನಾಗಪ್ಪನೇ ಅವನ ಮುಂದಿನ ಮಾತುಗಳನ್ನು ಪೂರ್ತಿಗೊಳಿಸಿದ_ “ಬೆಳಿಗ್ಗೆ ಶ್ರೀನಿವಾಸರಾವ್ ಭೆಟ್ಟಿಯಾಗಿದ್ದ. ಅವನೇ ಹೇಳಿದ.” ಇದನ್ನು ಹೇಳುವಾಗ ನಾಗಪ್ಪ ಅರ್ಜುನ್‌ರಾವನ ಇದಿರು ನಿಂತಿರಲಿಲ್ಲ ; ತನ್ನಷ್ಟಕ್ಕೇ ಮಾತನಾಡುತ್ತ ತನ್ನ ಕೋಣೆಯ ಕಡೆಗೆ ಹೆಜ್ಜೆ ಇಡುತ್ತ ಸಾಗಿದ್ದ. ಕದ ತೆರೆದು ಕೋಣೆ ಸೇರಿದವನೇ ಬಟ್ಟೆ ಬದಲಿಸುವ ಮೊದಲೇ ಹಾಸಿಗೆಯಲ್ಲಿ ಅಡ್ಡವಾಗಿದ್ದ. +ಬೆಳಿಗ್ಗೆ ಎಚ್ಚರವಾದದ್ದು ಹನ್ನೊಂದು ಗಂಟೆಯ ನಂತರ. ಎದ್ದ ಕೂಡಲೇ ಹೊಟ್ಟೆಗೆ ಹಸಿವೆಯಾಗಿದೆ ಎಂಬ ಅರಿವು ಬಂದು ಹಾಸಿಗೆಯಲ್ಲಿ ಎದ್ದು ಕೂಡ್ರೋಣವೆಂದರೆ ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ ಎಂಬಂತಹ ಅನ್ನಿಸಿಕೆ. ಹಾಗೇ ಕೆಲಹೊತ್ತು ಬಿದ್ದಿರೋಣ ಎನ್ನುವ ಮನಸ್ಸಾಗಿ ತಿರುಗಿ ಹಾಸಿಗೆಯಲ್ಲಿ ಅಡ್ಡವಾದ. ಹೊತ್ತು ಹೋದಂತೆ ನೆನಪಿಗೆ ಬರಹತ್ತಿತು : ಬಾನಾವಳಿಯ ಅಂಗಡಿಯಿಂದ ಹೊರಬಿದ್ದಮೇಲೆ ಬಾಟಲಿಯನ್ನು ರಸ್ತೆಯಲ್ಲಿ ನಿಂತಲ್ಲೇ ತೆರೆದು ಐದು ಗುಳಿಗೆಗಳನ್ನು ಎಣಿಸಿ ನುಂಗಿದ್ದ_ಆ ಡೋಜು ದೊಡ್ಡದೆಂದು ಗೊತ್ತಿದ್ದೂ, ಈಗ ಸಂಶಯ : ನುಂಗಿದ್ದ ಗುಳಿಗೆಗಳು ಐದೇ ಆಗಿದ್ದವೋ ತಪ್ಪಿ ಇನ್ನೂ ಹೆಚ್ಚು ಆಗಿದ್ದುವೋ ! ತನ್ನ ಯಾತನೆಗೆ ಮೂಲ ಕಾರಣ ಯಾತನೆಯ ತೀವ್ರ ಅರಿವೇ ಆಗಿದ್ದರೆ ಆ ಅರಿವನ್ನೇ ನಾಶಮಾಡುವ ಈ ನಿದ್ದೆಯಂತಹ ಸಾವಿನಿಂದಲೇ ಅದಕ್ಕೆ ಕೊನೆಯೇನೋ. ನೇತ್ರಾವತಿ ಕೆಳಗೆ ಬಿದ್ದು ಸಾಯಲು ಬಯಸಿದ್ದಕ್ಕೆ ಅವಳ ನೈತಿಕ ‘ಪತನವೇ’ ಕಾರಣವಾಗಿರಬಹುದೆ ? ನಾಗಪ್ಪನಿಗೆ ಬಿದ್ದಲ್ಲೇ ತಿರುಗಿ ನಿದ್ದೆ ಹತ್ತಿತು. ಎಚ್ಚರವಾದಾಗ ಹಠಾತ್ತನೆ ನೆನಪಿನಲ್ಲಿ ನಿಂತದ್ದು ಯಾರಿಗೋ ತಾನು ತನ್ನ ವಯಸ್ಸನ್ನು ಕೂಗಿ ಹೇಳಿದ್ದು : “ಮುವ್ವತ್ತೊಂಬತ್ತೂಽಽ.” ಹೇಳಿದ್ದು ಮೇರಿಗೊ ? ಮೇರಿಗೆ ವಯಸ್ಸೆಷ್ಟು _ಇಪ್ಪತಾರು ? ಇಪ್ಪತ್ತೇಳು ? ಕೇಳಿ ನೋಡಬೇಕು. ಅಪ್ಪ ಸತ್ತಾಗ ತನಗೆ ವಯಸ್ಸು ಹದಿಮೂರು ! ತಾನು ಎಣಿಸಿದ್ದು ನಿಚ್ಚಣಿಕೆಯ ಮೆಟ್ಟಿಲುಗಳನ್ನು ಅಲ್ಲವೇ ಅಲ್ಲವಾಗಿತ್ತೇನೊ. ಕೆಳಗೆ ಹೋಗುವಾಗ ಇನ್ನೊಮ್ಮೆ ಎಣಿಸಿ ನೋಡಬೇಕು. ಹುಚ್ಚು ಕಲ್ಪನೆ ಎಂದು ನಕ್ಕುಬಿಡಬೇಕು. ಅನ್ನಿಸಿದರೂ ಈ ವಿವೇಕ ಶೂನ್ಯವಾದ ‘ಆಕಸ್ಮಿಕ’ ನಾಗಪ್ಪನ ಮನಸ್ಸಿನ ಮೇಲೆ ಎಷ್ಟೊಂದು ಪ್ರಬಲವಾದ ಪರಿಣಾಮ ಮಾಡಿತ್ತೆಂದರೆ, ಲೆಕ್ಕ ತಪ್ಪಿ ತೆಗೆದುಕೊಂಡ ಬಾರ್ಬಿಚ್ಯುರೇಟ್ ಗುಳಿಗೆಗಳ ದೊಡ್ಡ ಡೋಜಿನ ಪರಿಣಾಮವನ್ನೂ ಕ್ಷುಲ್ಲಕಗೊಳಿಸಿ ನಾಗಪ್ಪ ಸಂಪೂರ್ಣವಾಗಿ ಎಚ್ಚರವಾಗಿದ್ದ. ಸಂಜೆ ತಾನು ಕೈಗೊಳ್ಳಲಿದ್ದ ಪ್ರವಾಸದ ನೆನಪೂ ಬಂದು ಅದರ ಸಿದ್ಧತೆಗೆ ತೊಡಗುವುದಕ್ಕೆ ಮನಸ್ಸನ್ನು ಗಟ್ಟಿಮಾಡಿ ಹಾಸಿಗೆ ಬಿಟ್ಟು ಎದ್ದ. +uಟಿಜeಜಿiಟಿeಜ +– ಭಾಗ ಮೂರು – +– ಅಧ್ಯಾಯ ಹತ್ತೊಂಬತ್ತು – +ತನ್ನ ಸುತ್ತಲೂ ಬಿಗಿಗೊಳ್ಳುತ್ತಿದ್ದ ರಾಜಕೀಯದ ಮೊದಲ ಸುಸ್ಪಷ್ಟವಾದ ಕುರುಹು ಅನುಭವಕ್ಕೆ ಬಂದದ್ದು ಹೈದರಾಬಾದ್ ವಿಮಾನ-ನಿಲ್ದಾಣದಲ್ಲಿ ಇಳಿದಾಗಲೇ…. +ಅಂದು ರವಿವಾರ. ‘ಶೇರ್-ಏ-ಪಂಜಾಬ್’ ರೆಸ್ಟೋರಂಟಿನಲ್ಲಿ ಲೆಕ್ಕವಿಲ್ಲದಷ್ಟು ಸಂದಣಿ. ಪರಿಚಯದ ಜನ ಭೆಟ್ಟಿಯಾದರೂ ಆದರೇ. ತನ್ನ ಆಫೀಸಿನ ಜನ ಕೂಡ ಅಲ್ಲಿ ಬರುತ್ತಾರೆ. ಅಲ್ಲಿಯ ಚಿಕನ್-ಬಿರ್ಯಾಣಿ ಗಿರ್ಗಾಂವದ ಆ ಭಾಗದಲ್ಲೇ ಪ್ರಖ್ಯಾತ. ಅದರಲ್ಲೂ ಇತ್ತೀಚೆ ತಂಪು ಬಿಯರ್ ಬೇರೆ ಮಾರಲು ಶುರುಮಾಡಿದ್ದಾರೆ. ನಾಗಪ್ಪನಿಗೋ ಇಂದು ಯಾರನ್ನೂ ಭೇಟಿಯಾಗುವುದಿರಲಿಲ್ಲ. ಎಂತಲೇ, ಗ್ರೆಂಟ್ ರೋಡ್ ಮೂಲೆಯಲ್ಲಿಯ ‘ದರ್ಬಾರ್’ ಹೊಟೆಲ್ಲಿಗೇ ಹೋಗಿದ್ದ.‘ದರ್ಬಾರ್’ ಹೊಟೆಲ್ ಇದಿರಿಗೇ ಬಾನಾವಳೀ ಮೆಡಿಕಲ್ ಸ್ಟೋರ್ಸ್ : ರವಿವಾರವಾದ್ದರಿಂದ ಮುಚ್ಚಿತ್ತು.ಆದರೆ ಅದು ಕೆರಳಿಸಿದ ನೆನಪಿನಿಂದ ನಿನ್ನೆಯ ತನ್ನ ನಡೆತೆಯ ಬಗ್ಗೆ ತನಗೇ ನಾಚಿಕೆ ಎನ್ನಿಸಿತು : ಎಲ್ಲೋ ಆಳದಲ್ಲಿ, ಸತ್ವಪರೀಕ್ಷೆಯ ಸೋಲಿಗೆ ಹೆದರಿಕೊಂಡ ಮನಸ್ಸು ಸತ್ವಪರೀಕ್ಷೆಯ ಕ್ಷೇತ್ರದಿಂದಲೇ ಫಲಾಯನ ಹೇಳುವ ಸಿದ್ಧತೆಯಲ್ಲಿದ್ದಂತಿತ್ತು ಎನ್ನುವುದರ ಅಸ್ಪಸ್ಟ ಅರಿವು ನಾಗಪ್ಪನಿಗಿತ್ತು : ಬಾರ್ಬಿಚ್ಯುರೇಟ್ ಗುಳಿಗೆಗಳಿಗೆ ಶರಣುಹೋಗಬೇಕಾದ ಅವಶ್ಯಕತೆಯ ಅರ್ಥ ಹೊಳೆದಿತ್ತು, ಊಟಕ್ಕೆ ಕೂತಾಗ. ತನ್ನ ಬುದ್ದಿಶಕ್ತಿಗೆ ಈಗ ಎಂದಿಗಿಂತ ಹೆಚ್ಚಾಗಿ ತನ್ನ ಚುರುಕುತನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ತನ್ನನ್ನು ತಾನೇ ಎಚ್ಚರಿಸಿಕೊಂಡ. ಫಿರೋಜ್-ಶ್ರೀನಿವಾಸ-ಜಲಾಲರ ಗುಂಪಿಗಿರುವ ಬಲಾಢ್ಯವಾದ ರಾಜಕೀಯ ಸತ್ತೆಯ ವಿರುದ್ಧ ಹೋರಾಡಲು ಬೇಕಾದ ರಾಜಕೀಯ ಕುತಂತ್ರ ತನ್ನ ವ್ಯಕ್ತಿತ್ವದ ಅಳವಿನಾಚೆಯದಾದರೂ ಸತ್ಯ ತನ್ನ ಬದಿಗಿದೆ ಎಂಬ ಒಂದೇ ಒಂದು ಧೈರ್ಯ ನಾಗಪ್ಪನು ತನ್ನ ಊಟದ ರುಚಿಯನ್ನು ಕಳಕೊಳ್ಳದಂತೆ ಮಾಡಿತ್ತು. ಮಧ್ಯದಲ್ಲೇ, ತನ್ನ ಬಗ್ಗೆ ಪ್ರೀತಿಯುಳ್ಳ ಒ‌ಆ ಯವರೇ ಊರಲ್ಲಿಲ್ಲ ಎನ್ನುವುದರ ನೆನಪು, ಹಾಗೂ ಅವರನ್ನು ಬಿಟ್ಟರೆ ತನ್ನ ಪರವಾಗಿ ಮಾತನಾಡುವ ಧೈರ್ಯವಾಗಲೀ ಆಸ್ಥೆಯಾಗಲೀ ಇದ್ದವರು ಕಂಪನಿಯಲ್ಲಿ ಇನ್ನೊಬ್ಬರಿದ್ದಾರೆಯೆ ಎಂಬುದರ ಬಗ್ಗೆ ಹುಟ್ಟಿದ ಸಂಶಯ_ಇವುಗಳಿಂದಾಗಿ ಮನಸ್ಸು ಕುಗ್ಗುತ್ತದೆ : ಬೇಡಬೇಡವೆಂದರೂ, ಉಪಜೀವಿಕೆಯ ಕ್ಷೇತ್ರದಲ್ಲಿ ಮನುಷ್ಯ ಹೋರಾಡುವುದು ಸತ್ಯಕ್ಕಾಗಿರದೇ ಬರಿಯ ತಮ್ಮ ತಮ್ಮ ಸ್ಥಾನಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಎಂಬ ತೀರ್ಮಾನಕ್ಕೆ ಬಂದು ಮುಟ್ಟಿದ. ಅರಿತೋ, ಅರಿಯದೆಯೋ, ಎಲ್ಲರೂ, ಫಿರೋಜ್ ಹೂಡಿದ ಸಂಚಿನಲ್ಲಿ ಸೇರಿ, ತನ್ನನ್ನು ಸುತ್ತುವರಿದು ತಮ್ಮಟೆ, ಜಾಗಟೆಗಳನ್ನು ಬಾರಿಸುತ್ತ ತನ್ನನ್ನು ನೇರವಾಗಿ ಫಿರೋಜ್ ಗುರಿ ಹಿಡಿದು ಕುಳಿತ ಕೋವಿಯ ಇದಿರಿಗೇ ಬರುವ ಪಶುವನ್ನಾಗಿ ಮಾಡುತ್ತಿದ್ದಾರೆ ಅನ್ನಿಸಹತ್ತಿತು : ಈ ಚಿತ್ರ ಕಣ್ಣುಮುಂದೆ ನಿಂತದ್ದೇ ನಾಗಪ್ಪನ ಕಣ್ಣುಗಳು ಮತ್ತೆ ಆರ್ದ್ರಗೊಂಡಿದ್ದುವು: ವಿಮಾನ-ಪರಿಚಾರಿಕೆ ಇವನ ಹತ್ತಿರ ಬಂದು_ಖಿeಚಿ oಡಿ ಛಿoಜಿಜಿee ಠಿಟeಚಿse ? ಎಂದು ಕೇಳಿದಾಗ, ತನ್ನ ವಿಚಾರಗಳ ಗುಂಗಿನಿಂದ ಹೊರಬಂದು ಕಣ್ಣಿನಲ್ಲಿ ಕಲೆತ ನೀರಿನ ಪರದೆಯೊಳಗಿಂದ, ಮುಂದೆ ನಿಂತ ಸುಂದರ ಮೋರೆಯ ಪರಿಚಯ ಹಿಡಿದು_ಖಿeಚಿ ಠಿಟeಚಿse ಎಂದು ಹೇಳಲು ನಾಗಪ್ಪನಿಗೆ ಕೆಲವು ನಿಮಿಷಗಳೇ ಬೇಕಾದವು. ಮುಂದಿಟ್ಟ ಕಪ್ಪಿನಲ್ಲಿ ಚಹ-ಹಾಲು ಸುರಿಯುತ್ತಿರುವಾಗ, “ಚಹ ಮುಗಿಸಿ ಹಿಂದಿನ ಸೀಟಿಗೆ ಬನ್ನಿ, ಮಾತನಾಡೋಣ.”ಎಂದು ಗುಟ್ಟಿನಲ್ಲಿ ಹೇಳುವವಳಂತೆ ಹೇಳಿ, ಬಹಳ ಚಂದವಾಗಿ ನಕ್ಕು ಹಿಂದಿನ ಸಾಲಿಗೆ ಚಹ ಕೊಡಲು ಹೊರಟುಹೋದಳು. ನಾಗಪ್ಪ ತನ್ನ ಕಿವಿಗಳನ್ನು ತಾನೇ ನಂಬದಾದ : ಇಪ್ಪತ್ತು ವರ್ಷಗಳಲ್ಲಿ ನಡೆಯದೇ ಇದ್ದಷ್ಟು ಸಂಗತಿಗಳು ಈಗ ಒಮ್ಮೆಲೇ ಇಪ್ಪತ್ತೇ ದಿನಗಳಲ್ಲಿ ನಡೆಯುವ ಹೊಂಚು ಹಾಕಿ ಕೂತಿವೆಯೇನೋ, ಅನ್ನಿಸಿತು. ಇವಳು ಯಾರು ? ಇಷ್ಟೆಲ್ಲ ಪ್ರವಾಸಿಗಳು ಇರುವಾಗ ತನ್ನೊಡನೆಯೇ ಮಾತನಾಡುವ ಆತುರ ಇವಳಿಗೇಕೆ ? ನಾಗಪ್ಪ ಚಹ ಮುಗಿಸಿದ್ದೇ ಹಿಂತಿರುಗಿ ನೋಡಿದ : ಹುಡುಗಿ ಇನ್ನೂ ಉಳಿದ ಪ್ರಯಾಣಿಕರಿಗೆ ಚಹ ಕೊಡುವುದರಲ್ಲಿ ಮಗ್ನಳಾಗಿದ್ದಳು : ಬಹಳ ಆಕರ್ಷಕವಾದ ಮೈಕಟ್ಟು, ಬಣ್ಣ, ನಿಲುವು, ಉಟ್ಟ ಸೀರೆ ಮೈಸೂರ ಸಿಲ್ಕಿನದು. ಪರಿಚಾರಿಕೆಯರಿಗೆ ಇಂಡಿಯನ್ ಏರ್‍ಲೈನ್ಸ್ ಒದಗಿಸಿದ ಊನಿಫಾರ್ಮ್ ಸೀರೆಯಾಗಿದ್ದರೂ ಅವಳ ಗೌರವರ್ಣಕ್ಕೆ ಎದ್ದುಕಾಣುತ್ತಿತ್ತು. ಪೀಕಾಕ್ ಬ್ಲ್ಯೂ ಬಣ್ಣದ್ದು. ಮುಡಿ ಕಟ್ಟಿದ ಕೂದಲಿನ ಮುಚ್ಚುಮರೆಯಿಲ್ಲದ ಮೋಹಕತೆ ಮೇರಿಯ ಕೂದಲನ್ನು ನೆನಪಿಗೆ ತಂದಿತು. +ನಾಗಪ್ಪನ ಲಕ್ಷ್ಯ ಅತಿ ಹಿಂದಿನ ಸೀಟುಗಳತ್ತ ಹೋಯಿತು : ಕೊನೆಯ ಎರಡು ಸಾಲುಗಳು ಖಾಲಿಯಿದ್ದವು. ನಾಗಪ್ಪನಲ್ಲಿ ಅದೆಂತಹ ಖುಶಿ ತುಂಬಿದ ಧೈರ್ಯದ ಸಂಚಾರವಾಯಿತೋ : ತನ್ನ ಸೀಟಿನಿಂದ ಎದ್ದವನೇ ನೇರವಾಗಿ ಹಿಂದಿನ ಸೀಟಿನತ್ತ ನಡೆಯಹತ್ತಿದ. ಅರ್ಧಕ್ಕೇ ತಡೆದು ಏನೋ ನೆನಪಾದವನ ಹಾಗೆ ಮೊದಲು ಕೂತ ಜಾಗಕ್ಕೇ ಹಿಂತಿರುಗಿ ಬಂದು ಬ್ರೀಫ್‌ಕೇಸ್ ತೆರೆದು ಅದರೊಳಗಿಂದ, ಮನಸ್ಸು ಬಂದಾಗ ಟಿಪ್ಪಣಿಗಳನ್ನು ಬರೆದಿಡುತ್ತಿದ್ದ ನೋಟ್ ಬುಕ್ ತೆಗೆದುಕೊಂಡ. ಎಲ್ಲಕ್ಕೂ ಹಿಂದಿನ ಸೀಟೊಂದರಲ್ಲಿ ಕುಳಿತುಕೊಳ್ಳುವಹೊತ್ತಿಗೆ, ಪರಿಚಾರಿಕೆ ತನ್ನ ಪಾಲಿನ ಎಲ್ಲ ಪ್ರವಾಸಿಗರಿಗೂ ಚಹ ಕೊಟ್ಟು ಮುಗಿಸಿದ್ದಳು. ಬಗ್ಗಿ ನಡೆಯುತ್ತ ಚಹ ಸುರಿಯುತ್ತಿದ್ದವಳು ತನ್ನ ಕೆಲಸದಿಂದ ಬಿಡುವು ಪಡೆದು ನೆಟ್ಟಗೆ ನಿಂತದ್ದೇ ನಾಗಪ್ಪ ಕಣ್ಣಿಗೆ ಬಿದ್ದಾಗ, ಮೋಹಕವಾಗಿ ಮುಗುಳುನಗುತ್ತ ಹತ್ತಿರ ಬಂದು_“ಅಚಿಡಿe ಜಿoಡಿ ಚಿಟಿoಣheಡಿ ಛಿuಠಿ oಜಿ ಣeಚಿ ?” ಎಂದು ಕೇಳಿದಳು. “ಓo ಣhಚಿಟಿಞs” ಎಂದು ನಾಗಪ್ಪ ಉತ್ತರಿಸಿದಾಗ_“I ಚಿm ಚಿ ಜಿಡಿieಟಿಜ oಜಿಜಿ ಒಚಿಡಿಥಿ. I ತಿiಟಟ ರಿoiಟಿ ಥಿou sooಟಿ,” ಎಂದು ಅವಳು ಚಹದ ಪಾತ್ರೆಯೊಂದಿಗೆ ಕೆಬಿನ್ ಕಡೆಗೆ ಹೊರಟಾಗ ಆಗಿನಿಂದಲೂ ಕಾಡುತ್ತಿದ್ದ ರಹಸ್ಯ ಒಡೆದಂತಾಗಿ ಮನಸ್ಸಿಗೆ ನಿರಂಬಳತೆ ಎನಿಸಿತು : ಮರುಗಳಿಗೆ ತಾನು ಯಾರೆಂದು ಅವಳಿಗೆ ತಿಳಿದ ಬಗೆ ಹೇಗೆ ಎಂಬುದರ ಬಗ್ಗೆ ಕುತೂಹಲ ಹುಟ್ಟದೇ ಇರಲಿಲ್ಲ. ತನ್ನ ಹತ್ತಿರ ಬಂದು ಅವಳು ಕೂತಾಗ ಮಾತನ್ನು ಆರಂಭಿಸಲು ಒಂದು ಪ್ರಶ್ನೆಯಾದರೂ ಸಿಕ್ಕಿತು ಎಂದು ಸಂತೋಷವಾಯಿತು : ಪರಿಚಯವಿಲ್ಲದ ಹುಡುಗಿಯರೆಂದರೆ ನಾಗಪ್ಪನಿಗೆ ಬಹಳ ಸಂಕೋಚ. ಪರಿಚಾರಿಕೆ ತನ್ನ ಸದ್ಯದ ಕೆಲಸ-ಬೊಗಸೆಗಳಿಂದ ಬಿಡುವು ಸಿಕ್ಕಿದ್ದೇ, ಇವನ ಕಡೆಗೇ ಬರಹತ್ತಿದ್ದಳು : ದೂರದಿಂದಲೇ, ಇವನನ್ನು ಕಂಡ ಕೂಡಲೇ, ಸಿಹಿಯಾಗಿ ಮುಗುಳುನಗುತ್ತ ಸಮೀಪಿಸಿ_ಒಚಿಙ I ? ಎಂದು ಕೇಳಿ ಇವನ ಬದಿಯ ಕುರ್ಚಿಯಲ್ಲಿ ಕೂಡ್ರುತ್ತ : “I ಚಿm hಚಿಠಿಠಿಥಿ ಣo meeಣ ಥಿou, ಒಡಿ.ಓಚಿgಟಿಚಿಣh, ” ಎಂದಳು. “ನನ್ನ ಹೆಸರು ಡಾಯನಾ ಡ್ರಾಯ್ವರ್. ಮೇರಿಯ ಮಗ್ಗಲು-ಮನೆಯಲ್ಲಿರುತ್ತೇನೆ.” ಎಂದು ಇನ್ನೊಮ್ಮೆ ಚಂದವಾಗಿ ನಕ್ಕಳು. ಅವಳು ಹಾಗೆ ನಕ್ಕಾಗ, ವಿಮಾನ-ಪರಿಚಾರಿಕೆಯರ ಬಗ್ಗೆ ತಾನು ಯಾವಾಗಲೂ ಮಾಡುತ್ತಿದ್ದ ಜೋಕ್ ಹೇಳುವ ಕುತೂಹಲವಾಯಿತು.ಆದರೆ ಅದನ್ನು ಸದ್ಯ ತಡೆಹಿಡಿದು, “ಕ್ಷಮಿಸಿ ಮಿಸ್ ಡ್ರಾಯ್ವರ್…” “ಅಚಿಟಟ me ಆiಚಿಟಿಚಿ”“ಓಕೇ ಡಾಯನ್ನ್, ನಿನಗೆ ನಾನೇ ನಾಗನಾಥನೆಂದು ತಿಳಿದದ್ದು ಹೇಗೆ ?” ಎಂದು ಕೇಳಿದ. “ ಙouಡಿ sಚಿಜ sತಿeeಣ ಜಿಚಿಛಿe,” ಎಂದು ಡಾಯನಾ ನಕ್ಕಾಗ ನಾಗಪ್ಪ ಇನ್ನಷ್ಟು ಗೊಂದಲಕ್ಕೆ ಬಿದ್ದ. ಇದನ್ನು ಕಂಡು, “ಇಲ್ಲ, ನಿನ್ನೆ ನೀವು ಮೇರಿಗೆ ಫೋನ್ ಮಾಡಿದಾಗ ನಾನು ಅಲ್ಲೇ ಇದ್ದೆ. ಮೊದಲು ಫೋನ್ ತೆಗೆದುಕೊಂಡದ್ದೇ ನಾನು. ನೀವು ಈ ಫ್ಲ್ಯಾಟ್ ಮೇಲೆ ಇದ್ದೀರಿ ಎನ್ನುವುದು ತಿಳಿದು ನಿಮ್ಮ ಬಗ್ಗೆ ಕೇಳಿದಾಗ, ನಿಮ್ಮ ಬಗ್ಗೆ ಹೇಳುತ್ತ ನಿಮ್ಮ ವರ್ಣನೆ ಕೂಡ ಮಾಡಿದ್ದಳು.” ನಾಗಪ್ಪನಿಗೆ ಆಶ್ಚರ್ಯ : ಮೇರಿ ಬಾಯಿಂದ ಮಾಡಿದ ವರ್ಣನೆಯಿಂದಲೇ ನನ್ನ ಗುರುತು ಹಿಡಿಯುವಂತಹ ವೈಶಿಷ್ಟ್ಯ ತನ್ನಲ್ಲೇನಿದೆ ಎಂಬಂತಹ ಪ್ರಶ್ನೆಗೆ ನಾಗಪ್ಪ ಶಬ್ದಗಳನ್ನು ಹುಡುಕುತ್ತಿರುವಾಗ ಡಾಯನಾ ತಾನೇ ಹೇಳಿದಳು. “ಮೇರಿ ನಿಮ್ಮ ದೈಹಿಕ ವರ್ಣನೆ ಮಾಡುತ್ತ ಒಂದು ವಿಶೇಷ ಲಕ್ಷಣವನ್ನು ತೋರಿಸಿಕೊಟ್ಟಿದ್ದಳು : ನೀವು ನಡೆಯುವಾಗ ಆಗಾಗ ಎಡಗೈಯಿಂದ ಛಾತಿಯ ಬಲಭಾಗವನ್ನು ಮುಟ್ಟಿನೋಡ್ದುತ್ತೀರಿ.” ನಾಗಪ್ಪನಿಗೆ, ತನ್ನ ಅರಿವಿಗೆ ಬಂದಿರದ ಈ ಸಂಗತಿಯಿಂದ ಎಷ್ಟೊಂದು ಆಶ್ಚರ್ಯದ ಧಕ್ಕೆ ತಗಲಿತೆಂದರೆ ಅವನ ಬಾಯಿಂದ ಬಂದ ‘ಓo’ ಎಂಬ ಉದ್ಗಾರ ಬಯಸಿದ್ದಕ್ಕಿಂತ ದೊಡ್ಡದಾಯಿತು. ಡಾಯನಾ ‘ಸ್ವಲ್ಪ ಮೆಲ್ಲಗೆ’ ಎಂದು ಸೂಚಿಸುವವಳ ಹಾಗೆ ಕುರ್ಚಿಯ ಕೈಯ ಮೇಲೆ ಊರಿದ ನಾಗಪ್ಪನ ಹಸ್ತವನ್ನು ಮೃದುವಾಗಿ ಅಮುಕಿ, ತಾನು ಹೇಳುತ್ತಿದ್ದದ್ದು ದೊಡ್ಡ ಗುಟ್ಟಿನ ಸುದ್ದಿಯೆಂಬಂತೆ ಸನಿಯನ್ನು ತಗ್ಗಿಸಿ, “ನಿಮ್ಮನ್ನೆಲ್ಲ ಸ್ವಾಗತಿಸಲು ಬಾಗಿಲಲ್ಲಿ ನಿಂತಲ್ಲಿಂದಲೇ ಸಾಲುಗಟ್ಟಿ ಬರುತ್ತಿದ್ದ ಪ್ರಯಾಣಿಕರಲ್ಲಿ ನಿಮ್ಮನ್ನು ತಪ್ಪದೇ ಗುರುತಿಸಿದ್ದೆ : ವಿಮಾನವನ್ನು ಪ್ರವೇಶಿಸುವ ಮೊದಲು ಮೂರು ಸರತಿಯಾದರೂ ನೀವು ಛಾತಿಯನ್ನು ಮುಟ್ಟಿ ನೋಡಿರಬೇಕು. ನಿಜ ಹೇಳಲೇ ? ನಾನು ಮಾತ್ರ, ನೀವು ನೀವೇ ಎಂದು ಪತ್ತೆಹಚ್ಚಿದ್ದು ಮೇರಿ ಬಹಳವಾಗಿ ಮೆಚ್ಚಿಕೊಂಡಂತಿದ್ದ ನಿಮ್ಮ ಕಣ್ಣೊಳಗಿನ ಬುದ್ದಿಮತ್ತೆಯ ಹೊಳಪು ಹಾಗೂ ಅದರ ಆಳದಲ್ಲಿಂದ ಹೊರಸೂಸುವ ಮ್ಲಾನತೆಗಳಿಂದ. ನಾನೂ ಮೆಚ್ಚಿಕೊಂಡದ್ದು ಅವುಗಳನ್ನೇ,”ಎನ್ನುತ್ತ ಕುರ್ಚಿಯ ಮೇಲೆ ಇನ್ನೂ ಊರಿಯೇ ಇದ್ದ ನಾಗಪ್ಪನ ಕೈಯನ್ನು ಗಟ್ಟಿಯಾಗಿ ಅದುಮಿ ಹಿಡಿದಳು. ಕ್ಷಣದಲ್ಲಿ ಬಿಟ್ಟಳು : ಇದೆಲ್ಲ ಮೇರಿಯದೇ ಕೈವಾಡವೇ ? ನನ್ನ ಮನಃಸ್ಥಿತಿಯ ಅರಿವು ಇದ್ದ ಈ ಹುಡುಗಿ ತನ್ನ ಗೆಳತಿಯ ಮುಖಾಂತರ ನನ್ನನ್ನು ಖುಶಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಳೆಯೆ ? ದೇವರೇ, ಯಾವ ಜನ್ಮದ ಋಣಾನುಬಂಧವಿದು ! ನನ್ನವರೆನ್ನುವವರೇ ನನ್ನನ್ನು ಹಣಿಯಲು ಸಿದ್ಧರಾಗಿದ್ದಾಗ….ನಾಗಪ್ಪ ಒಮ್ಮೆಲೇ ಅಂತರ್ಮುಖಿಯಾದದ್ದನ್ನು ನೋಡಿ “ಯಾವಾಗಲೂ ಚಿಂತೆ ಮಾಡುತ್ತ ಕೂಡ್ರಬೇಡಿ, ನಾಗನಾಥ್.” ಎಂದಳು ಡಾಯನಾ. ಅವಳ ಆತ್ಮೀಯತೆಗೆ ಪುಲಕಿತನಾದ ನಾಗಪ್ಪ ಹೊರಬರಲು ಪ್ರಯತ್ನಿಸುತ್ತ, “ಥೆಂಕ್ಸ್ ಡಾಯನಾ. ಒಂದು ಹೇಳಲೆ ?_ಏರ್ ಹೊಸ್ಟೆಸ್ ಕುರಿತು ನಾನು ಬಹಳಷ್ಟು ಸಲ ಮಾಡಿದ ಜೋಕಿಗೆ ನೀನು ದೊಡ್ಡ ಅಪವಾದ.” ಎಂದು ತನ್ನ ಜೋಕನ್ನು ಹೇಳಿದ : I useಜ ಣo ಛಿಚಿಟಟ ಥಿou ಂiಡಿ-hosಣesses ಚಿs ಂiಡಿ-hosಣiಟes ಎಂಬುದಕ್ಕೆ ಡಾಯನಾಳಿಗೆ ದೊಡ್ಡಕ್ಕೆ ನಕ್ಕುಬಿಡಬೇಕು ಅನ್ನಿಸಿದ್ದರೂ ತಾವು ಇದ್ದ ಸನ್ನಿವೇಶವನ್ನು ನೆನೆದು, “ನೀವು ತುಂಬ ತುಂಟರಿದ್ದೀರಿ.” ಎನ್ನುವಷ್ಟರಲ್ಲಿ ಕೊಕ್‌ಪಿಟ್ಟಿನಿಂದ ಕರೆ ಬಂದದ್ದರಿಂದ ಇxಛಿuse me ಎಂದವಳೇ ಅಲ್ಲಿಂದ ಹೊರಟುಹೋದಳು. +ನಾಗಪ್ಪ ತನ್ನ ನೋಟ್ ಬುಕ್ ತೆರೆದು ಬರೆಯಹತ್ತಿದ : ಮೇರಿ ಹಾಗೂ ಡಾಯನಾ ನನ್ನ ಬಗ್ಗೆ ಮಾಡುತ್ತಿದ್ದುದನ್ನು ನೋಡಿ ಮಾನವತೆಯಲ್ಲಿ ನನಗಿದ್ದ ಭರವಸೆಗೆ ಮತ್ತೆ ಚಿಗುರು ಮೂಡುತ್ತಿದ್ದ ಭಾವನೆ. ಡಾಯನಾಳೊಡನೆ ಮಾತನಾಡುವಾಗಂತೂ ಹೈದರಾಬಾದಿನಲ್ಲಿ ನಡೆಯಲಿದ್ದದ್ದು ನನ್ನ ಕಲ್ಪನೆಯಲ್ಲಿ ಹುಟ್ಟಿದ್ದೆನ್ನುವಂತಹ ಭಾಸ….” +ಶ್ರೀನಿವಾಸ ಮತ್ತು ಫಿರೋಜ್ ಒಂದೆಡೆಯಲ್ಲಿ ಬಂದದ್ದಾದರೂ ಹೇಗೆ ? ಇದು ಇನ್ನೂ ಬಿಡಿಸಲಾಗದ ಒಗಟಾಗಿಯೇ ಉಳಿದಿದೆ…. +ನಾಗಪ್ಪ ಬರೆಯುವುದನ್ನು ಎಂದೋ ನಿಲ್ಲಿಸಿದ್ದ. ತೆರೆದೇ ಇದ್ದ ವಹಿ, ತೆರೆದೇ ಇದ್ದ ಪೆನ್ನು, ತೆರೆದೇ ಇದ್ದ ಕಣ್ಣುಗಳ ಇದಿರಿನಲ್ಲಿ ಮಾತಿನಲ್ಲಿ ಹಿಡಿಯಲಾಗದ ಚಿತ್ರಗಳು : ಹನೇಹಳ್ಳಿ, ಕುಮಟೆಯ ಹಾಸ್ಟೆಲ್ಲು. ಅಪ್ಪ ಹಾರಿದ ಬಾವಿ, ಶ್ರೀನಿವಾಸನ ಮನೆಯ ಹತ್ತಿರದ, ಝೋಪಡಪಟ್ಟಿಗಳು. ಹೆದರಿದ ಕಣ್ಣುಗಳಿಂದ ನೋಡುವ ಸರಸ್ವತಿ. ವೋಮೂ, ಸೀತಾರಾಮು. ಒಂದೇ ಒಂದು ಸಂಜೆಯ ಮಟ್ಟಿಗೆ ಭೆಟ್ಟಿಯಾಗಿ ಆತ್ಮೀಯ ಮಾತುಗಳನ್ನಾಡಿದ ದೋಶಿ. ಗಲ್ಲದಲ್ಲಿ ಕುಳಿ ಮೂಡಿಸಿ ನಗುವ ಮುದ್ದಿನ ಚೇತನಾ. ಇನ್ನೂ ಕಂಡಿರದ ಅಣ್ಣನಿರಬಹುದೇ ಎಂದು ಗುಮಾನಿ ಹುಟ್ಟಿಸಿದ ಶ್ರೀನಿವಾಸನ ಮನೆಯಲ್ಲಿಯ ಅಚ್ಯುತ. ಚಿಕ್ಕಂದಿನಲ್ಲೇ ಕಳೆದುಹೋದ ತಂಗಿ. ಮನೆ ಬಿಡುವ ಕೊನೆ ಗಳಿಗೆಯಲ್ಲಿ ಅರ್ಥವಾಗದ ರೀತಿಯಲ್ಲಿ ತನ್ನನ್ನು ಬಲವಾಗಿ ತಟ್ಟಿದ ಶ್ರೀನಿವಾಸನ ಹೆಂಡತಿ ಶಾರದೆ. ಜನ್ಮಾಂತರದಲ್ಲಿ ನಂಬಿಕೆ ಮೂಡಿಸುವ ಮೇರಿ. ಇದೀಗ ಇಷ್ಟೊಂದು ಅಕ್ಕರೆಯಿಂದ ಮಾತನಾಡಿಸಿದ ಡಾಯನಾ…. +“ಅದೆಂತಹ ಹಗಲುಗನಸಿನಲ್ಲಿ ಮುಳುಗಿದ್ದೀರಪ್ಪ !” ಡಾಯನಾಳ ಪ್ರಿಯವಾದ ಧ್ವನಿ ಕೇಳಿಸಿದ್ದೇ ನಾಗಪ್ಪ ವಾಸ್ತವ ಜಗತ್ತಿಗೆ ಇಳಿದಿದ್ದ. ಹೈದರಾಬಾದ್ ವಿಮಾನ-ನಿಲ್ದಾಣವನ್ನು ತಾವು ಸಮೀಪಿಸುತ್ತಿದ್ದೇವೆಂದೂ, ಕುರ್ಚಿಯ ಸೇಫ್‌ಟೀ ಬೆಲ್ಟುಗಳನ್ನು ಕಟ್ಟಿಕೊಳ್ಳಬೇಕೆಂದೂ ಮೈಕ್ ಮೇಲೆ ಬಂದದ್ದು ಡಾಯನಾಳ ಸಂಗಾತಿಯ ಧ್ವನಿಯಾಗಿತ್ತು. ನಾಗಪ್ಪನ ಮಗ್ಗಲ ಕುರ್ಚಿಯಲ್ಲಿ ತಾನೂ ಬೆಲ್ಟ್ ಕಟ್ಟಿಕೊಂಡು ಕುಳಿತ ಡಾಯನಾ ಒಮ್ಮೆಲೇ ಭಾವಪರವಶಳಾದವಳ ಹಾಗೆ “ಹೆದರಬೇಡಿ. ಮೇರಿ ನನಗೆ ಎಲ್ಲ ಹೇಳಿದ್ದಾಳೆ. ಯಾವಾಗಲೂ ನಿಮ್ಮ ಬಗ್ಗೆ ಮಾತನಾಡುತ್ತಿರುತ್ತಾಳೆ. ನಿಮ್ಮ ಬಗ್ಗೆ ಬಹಳ ಆದರವಿದೆ ಅವಳಿಗೆ….She ಟoves ಥಿou….” ಎನ್ನುತ್ತಿರುವಾಗ ವಿಮಾನ ನೆಲವನ್ನು ಮುಟ್ಟಿತ್ತು. “ಇನ್ನು ನಾನು ನನ್ನ ಡ್ಯೂಟಿಗೆ ಹೋಗಬೇಕು. ಇನ್ನೊಮ್ಮೆ ಭೆಟ್ಟಿಯಾಗುವ ಹೊತ್ತಿಗೆ ನೀವು ನಿಮಗೆ ಸಲ್ಲಬೇಕಾದ ಸ್ಥಾನಕ್ಕೆ ಬಂದು ಹಸನ್ಮುಖಿಗಳಾಗಿರುತ್ತೀರಿ ಎಂದು ಆಶಿಸುತ್ತೇನೆ…ಅಲ್ಲಿಯವರೆಗೆ….” ಎನ್ನುತ್ತ, ಪ್ರೀತಿ ಉಕ್ಕಿಬಂದವಳ ಹಾಗೆ ನಾಗಪ್ಪನ ಅಂಗೈಯನ್ನು ಒತ್ತಿ ತನ್ನ ಕೆಲಸಕ್ಕೆ ಹೊರಟುಹೋದಳು…. +ವಿಮಾನದ ಬಾಲದ ಕಡೆಯ ಬಾಗಿಲಲ್ಲಿ ಡಾಯನಾಳ ಸಂಗಾತಿ ನಿಂತಿದ್ದಳು. ನಾಗಪ್ಪ ತಾನು ಮೊದಲು ಕೂತ ಸೀಟಿಗೆ ಹೋಗಿ, ಬ್ರೀಫ್‌ಕೇಸನ್ನು ಕೈಗೆತ್ತಿಕೊಂಡು, ಡಾಯನಾ ನಿಂತ ಮುಂದಿನ ಬಾಗಿಲಿನಿಂದಲೇ ಹೊರಗೆ ಹೋಗುವದನ್ನು ನಿಶ್ಚಯಿಸಿ ಆ ಕಡೆಗೆ ನಡೆಯ ಹತ್ತಿದ : ಡಾಯನಾ ಕೈ ಮುಗಿದು ನಿಂತು ‘ಗುಡ್‌ಬಾಯ್’ ಎನ್ನುತ್ತ ಪಯಣಿಗರನ್ನು ಬೀಳ್ಕೊಡುತ್ತಿದ್ದಳು. ನಾಗಪ್ಪ ತನ್ನ ಸರದಿ ಬಂದದ್ದೇ, “ಗುಡ್‌ಬಾಯ್ ಡಾಯನಾ, ಈ ಸಂಜೆಯನ್ನು ನಾನೆಂದೂ ಮರೆಯಲಾರೆ.” ಎಂದು ಚಂದವಾಗಿ ನಕ್ಕು ಅವಳಿಂದ ಬೀಳ್ಕೊಂಡ. ನಿಚ್ಚಣಿಕೆಯ ಮೆಟ್ಟಿಲುಗಳನ್ನು ಇಳಿಯುವಾಗ, ಕಳೆದ ಏಳು ದಿನಗಳಲ್ಲಿ ತಾನು ಇಷ್ಟೊಂದು ಸುಖವಾಗಿ ನಕ್ಕದ್ದು ಇದೇ ಮೊದಲ ಸಲವೇನೋ ಎಂದು ಅನ್ನಿಸದೇ ಇರಲಿಲ್ಲ. ಆದರೆ ಕೊನೆಯ ಮೆಟ್ಟಿಲನ್ನು ಬಿಟ್ಟು ನೆಲಕ್ಕೆ ಕಾಲಿರಿಸಿದ್ದೇ, ಬೆನ್ನಹುರಿಯಲ್ಲಿ ಬರ್ಫಿನಂತಹದೇನೋ ಹರಿದ ಅನುಭವ : ತಾನು ಹೈದರಾಬಾದಿಗೆ ಬಂದ ಪ್ರತಿಸಲ ಪರ್ಸೊನೆಲ್ ಡಿಪಾರ್ಟ್‌ಮೆಂಟಿನ ಜನ ಯಾರಾದರೂ ಕಾರಿನೊಂದಿಗೆ ವಿಮಾನ-ನಿಲ್ದಾಣದಲ್ಲಿ ತನ್ನನ್ನು ಕಾಣಲು ಬಂದೇ ಬರುತ್ತಿದ್ದರು. ಈ‌ಅಲೂ ಯಾರಾದರೂ ಬಂದಿರಬಹುದಲ್ಲವೇ ? ಯಾಕೋ ಹಠಾತ್ತನೆ ಬಂದ ಈ ಸಂಶಯದಿಂದ ಕಾಲೇ ಸೋತುಬಂದವು : ಇಲ್ಲ, ವಿಮಾನ-ನಿಲ್ದಾಣದಲ್ಲಿ ಅವನನ್ನುಸ್ವಾಗತಿಸಲು ಕಂಪನಿಯಿಂದ ಯಾರೂ ಬಂದಿರಲಿಲ್ಲ. ತನ್ನ ಬಗ್ಗೆ ತುಂಬ್ ಆದರ ಇಟ್ಟುಕೊಂಡ ಸರ್ಕಾರ ಡ್ರೈವರ್ ಕಾರನ್ನಾದರೂ ತಂದಿರಬಹುದೆಂಬ ಎಣಿಕೆಯೂ ತಪ್ಪಾಯಿತು : ಕಂಪನಿಯವರು ಕಾರನ್ನು ಕೂಡ ಕಳಿಸಿರಲಿಲ್ಲ : ಫಿರೋಜ್ ಸಾರಿದ ಯುದ್ಧದ ಮೊದಲ ಕಹಳೆ ಸ್ಪಷ್ಟವಾಗಿ ಕೇಳಿಸಿತ್ತು. ಇವನು ಕಾರಿನ ಹಾದಿ ಕಾಯುತ್ತ ನಿಂತಾಗ ನಿಲ್ದಾಣದಲ್ಲಿದ್ದ ಐದಾರು ಟೆಕ್ಸಿಗಳೂ ಆಗಲೇ ಹೊರಠೋಗಿದ್ದುವು. ಈಗ ಒಟೋರಿಕ್ಷಾಗಳು ಮಾತ್ರ. ಒಟೋರಿಕ್ಷಾ ಒಂದನ್ನು ಕರೆದು ಒಳಗೆ ಕೂಡ್ರುವುದಕ್ಕೂ, ಇಂಡಿಯನ್ ಏರ್‍ಲೈನ್ಸ್‌ದ ಸ್ಟೇಶನ್ ವ್ಯಾಗನ್ನಿನಲ್ಲಿಡಾಯನಾ ಹತ್ತುವುದಕ್ಕೂ ಸರಿಯಾಯಿತು. ಡಾಯನಾ ಇವನು ರಿಕ್ಷಾ ಹತ್ತುವುದನ್ನು ಕಂಡಿದ್ದಳು. ಆದರೆ, ಕಂಡೂ ಕಾಣದವಳಂತೆ ಮುಖ ತಿರುವಿಸಿ ಸ್ಟೇಶನ್ ವ್ಯಾಗನ್ ಹತ್ತಿ ಕೂತಿದ್ದಳು : ರಿಕ್ಷಾದವನಿಗೆ ಕಂಪನಿಯ ಗೆಸ್ಟ್‌ಹೌಸಿನ ವಿಳಾಸ ಕೊಟ್ಟು ವಾಹನವನ್ನು ಓಡಿಸಲು ಹೇಳಿದ್ದೇ, ಅವನು ವಾಹನವನ್ನು ಸ್ಟಾರ್ಟ್ ಮಾಡಿ, ವಿನಾಕಾರಣ ಬಾರಿಸಿದ ಹಾರ್ನಿನ ಸದ್ದಿನಲ್ಲಿ ಬೇರೆ ಏನೋ ಕೇಳಿಸಿದಂತಾಗಿ ಮೈಮೇಲೆ ಮುಳ್ಳು ನಿಂತವು. +uಟಿಜeಜಿiಟಿeಜ +– ಅಧ್ಯಾಯ ಇಪ್ಪತ್ತು – +ಬಂಜಾರಾ ಹಿಲ್ಲಿನ ನೆತ್ತಿಯಲ್ಲಿ ನಿಂತ, ನಾಲ್ಕು ಮಲಗುವ ಕೋಣೆಗಳುಳ್ಳ ಒಂದು ಬಂಗಲೆಯನ್ನು ಕಂಪನಿಯ ಗೆಸ್ಟ್‌ಹೌಸ್ ಆಗಿ ಉಪಯೋಗಿಸಲಾಗುತ್ತಿತ್ತು. ಬಂಗಲೆಗೆ ಹೋಗುವ ರಸ್ತೆಯ ಇಬ್ಬದಿಯಲ್ಲಿ ಬೃಹದಾಕಾರದ ಬಂಡೆಗಳು, ಮಳೆಗಾಳಿಗಳಿಂದ ಉರುಟುರುಟಾಗಿ, ಬೋಳುಬೋಳಾದ, ಅಂತಹ ಬಂಡೆಗಳನ್ನು ನಾಗಪ್ಪ ಇನ್ನೆಲ್ಲೂ ನೋಡಿರಲಿಲ್ಲ. ಹೈದರಾಬಾದಿನ ವೈಶಿಷ್ಟ್ಯಗಳಲ್ಲೊಂದಾದ ಆ ಬಂಡೆಗಳಿಂದಲೇ ಗೆಸ್ಟ್‌ಹೌಸ್ ನಾಗಪ್ಪನಿಗೆ ಬಹಳ ಪ್ರಿಯವಾಗಿತ್ತು. ಮುಂಬಯಿಗೆ ವರ್ಗವಾದ ಕಳೆದ ಎಂಟು ತಿಂಗಳಲ್ಲಿ ನಾಲ್ಕು ಸಲವಾದರೂ ಹೈದರಾಬಾದಿಗೆ ಬಂದಿದ್ದ, ಬಂದ ಪ್ರತಿ ಸರತಿ ಅಲ್ಲಿದ್ದ ಎರಡು ಮೂರು ದಿನಗಳನ್ನು ಅತ್ಯಂತ ಸುಖದಲ್ಲಿ ಕಳೆದಿದ್ದ. ಬಂಗಲೆಯ ಕಾಂಪೌಂಡಿನ ಬೇಲಿಯಲ್ಲಿ ಕೆಂಪು ಗುಲಾಬಿ ಹಾಗೂ ಬಿಳಿ ಹೀಗೆ ಮೂರು ಮೂರು ಬಣ್ಣಗಳ ಹೂವುಗಳನ್ನು ಮೈತುಂಬ ಅರಳಿಸಿ ನಿಂತ ಆಳೆತ್ತರದ ಬೋಗನ್‌ವಿಲ್ಲಾ ಗಿಡಗಳು, ಸಂಪಿಗೆಯ ಮರಗಳು, ಬಾಗಿಲಲ್ಲೇ, ಚಪ್ಪರದ ಹಾಗೆ ಟೊಂಗೆಗಳನ್ನು ಹರಡಿ ನಿಂತ ದೇವದಾರು ಗಿಡ, ಬಂಗಲೆಯ ಹಿಂದೆ ಸಣ್ಣ ಹಳ್ಳ, ಕಣಿವೆಯ ಆಳದಲ್ಲಿ ಪ್ರಕಟಿಸುತ್ತ ಹರಿಯುತ್ತಿತ್ತು. ಕಣಿವೆಯ ಆಚೆಯ ಮೈ ಮತ್ತೆ ಬೋಳು ಬೋಳಾದ ದೊಡ್ಡ ಬಂಡೆಗಳಿಂದ ಆಚ್ಛಾದಿತವಾದ ಗುಡ್ಡವಾಗಿತ್ತು. ಹಿಂಬದಿಯ ಅಂಗಳದಷ್ಟು ಗಚ್ಚಿಯಲ್ಲಿ ಬೆತ್ತದ ಕುರ್ಚಿಯನ್ನು ಹಾಕಿಸಿ, ಟೀಪಾಯಿಯ ಮೇಲೆ ನಿಡಿದಾಗಿ ಕಾಲುಚಾಚಿ ತಂಪಾದ ಬಿಯರ್ ಕುಡಿಯುತ್ತ ಆಕಾಶದಲ್ಲಿಯ ಚಿಕ್ಕೆಗಳನ್ನು ನೋಡುತ್ತ ವಿರಮಿಸುವ ಕನಸು ಕಾಣುತ್ತ, ವಿಮಾನ-ನಿಲ್ದಾಣದಲ್ಲಾದ_ಅಪಮಾನಕ್ಕೆ ಕಡಿಮೆಯಿಲ್ಲದ_‘ಸ್ವಾಗತ’ವನ್ನು ಕೂಡ ಮರೆತು ತನ್ನಷ್ಟಕ್ಕೆ ಖುಶಿಯಲ್ಲಿದ್ದ ನಾಗಪ್ಪನ ಮನಸ್ಸು ಬಂಜಾರಾ ಹಿಲ್ಸ್ ಸಮೀಪಿಸುತ್ತಿದ್ದಂತೆ ಥಟ್ಟನೆ ಹುಟ್ಟಿದ ವಿಚಾರಕ್ಕೆ ಈಗ ಮತ್ತೆ ಕಳವಳಕ್ಕೊಳಗಾಯಿತು : ಗೆಸ್ಟ್‌ಹೌಸಿಗಾದರೂ ತಾನಿಂದು ಬರುವ ಸುದ್ದಿ ತಿಳಿಸಿರಬಹುದಲ್ಲವೆ ? ಕೃಷ್ಣ ಹಾಗೂ ಅವನ ಕೈಕೆಳಗಿನ ಮುತ್ತೂಸ್ವಾಮಿ ಗೆಸ್ಟ್‌ಹೌಸಿನ ದೇಖರೇಖೀ ನೋಡಿಕೊಳ್ಳುತ್ತಿದ್ದರು. ಮುತ್ತೂಸ್ವಾಮಿ ಒಳ್ಳೆಯ ಅಡಿಗೆ ಭಟ್ಟ ಕೂಡ. ಎರಡು ದಿನಗಳ ಮಾತಿಗೆ ಬಂದಾಗ ಕೂಡ ಪ್ರತಿ ಒಬ್ಬನಿಗೆ ಐದೈದು ರೂಪಾಯಿ ಭಕ್ಷೀಸು ಕೊಡದೇ ಹೋದವನಲ್ಲ ನಾಗಪ್ಪ : ಇಬ್ಬರಿಗೂ ಅವನ ಮೇಲೆ ತುಂಬಾ ಖುಶಿ. ವಿಸ್ಕೀ ಬಾಟಲಿಯನ್ನು ತರಿಸಿದಾಗಂತೂ ಒಂದೊಂದು ಪೆಗ್ಗನ್ನಾದರೂ ಕದ್ದು ಕುಡಿಯದೇ ಇರುತ್ತಿರಲಿಲ್ಲ ಎರಡೂ ಮಕ್ಕಳು. ಕೃಷ್ಣ ತುಂಬಾ ಹಲ್ಕಟ್ ಎರಡೂ ಮಗ. ತಾನು ಮೊದಲ ಬಾರಿ ಬಂದಾಗಲೇ ಹುಡಿಗಿಯರ ಬಗ್ಗೆ ವಿಚಾರಿಸಿದ್ದ. ಬಂಗಲೆಯಲ್ಲಿ ಇರಲು ತಾನೊಬ್ಬನೇ ಆಗ, ತಾನು ಪ್ರಕಟಿಸಿದ ಸಿಟ್ಟಿಗೆ ಮುಂದೆ ಆ ವಿಷಯದಲ್ಲಿ ತಿರುಗಿ ಚಕಾರ ಮಾತೆತ್ತಿರಲಿಲ್ಲ. ಆ ಸಂದರ್ಭ ನೆನಪಿಗೆ ಬಂದಾಗ ತನ್ನ ಕಳವಳದ ಮನಃಸ್ಥಿತಿಯಲ್ಲೂ ನಾಗಪ್ಪನಿಗೆ ನಗು ಬಂತು. ಗೆಸ್ಟ್‌ಹೌಸಿನತ್ತ ಹೊರಳುವ ಸಣ್ಣ ರಸ್ತೆಗೆ ಬಂದದ್ದೇ ರಿಕ್ಷಾದವನು ತಾನು ಸರಿಯಾದ ರಸ್ತೆಗೆ ಹೊರಳುತ್ತಿದ್ದೇನೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲೆಂಬಂತೆ_ಎಂಟನೇ ರಸ್ತೆ ಇದೇ ಅಲ್ಲವೇ ಸರ್ ಎಂದು ಕೇಳಿದ. ನಾಗಪ್ಪನಿಗೂ ಖಾತ್ರಿಯಿರಲಿಲ್ಲ. ಹಿಂದೆ ಬಂದ ಪ್ರತಿಸಲ ಕಂಪನಿಯ ಕಾರು ಇರುತ್ತಿತ್ತು. “ನಿನಗೆ ಖಾತ್ರಿಯಿಲ್ಲದಿದ್ದರೆ ಮುರಕಿಯಲ್ಲಿಯ ಪೆಟ್ರೋಲ್-ಪಂಪಿನಲ್ಲಿ ವಿಚಾರಿಸಿಕೊಂಡು ಬಾ.” ಎಂದ. ಅವನು ಹಾಗೇ ಮಾಡಿ ಬಂದ. ಅವರು ಹಿಡಿಯಲಿದ್ದ ರಸ್ತೆ ಸರಿಯಾಗಿತ್ತು. ಮುಂದಿನ ಐದೇ ಮಿನಿಟುಗಳಲ್ಲಿ ಗೆಸ್ಟ್‌ಹೌಸಿನ ಕಾಂಪೌಂಡನ್ನು ಒಟೋರಿಕ್ಷಾ ಹೊಕ್ಕಿತ್ತು. ಅದರ ಕಿವಿಗೆ ಅಪ್ಪಳಿಸುವ ಸದ್ದಿಗೆ ಬದಿಯ ಬಂಗಲೆಯೊಳಗಿನ ದೊಡ್ಡ ನಾಯಿಯೊಂದು ಸುತ್ತಲಿನ ಬಂಡೆಗಲ್ಲುಗಳಿಂದ ಮಾರ್ದನಿ ಎಬ್ಬಿಸುವಂತೆ ಗುಲ್ಲೆಬ್ಬಿಸಿತು. ಗೆಸ್ಟ್‌ಹೌಸಿನ ಬಾಗಿಲೂ ತೆರೆಯಿತು. ಕೃಷ್ಣನೂ ಹಲ್ಲುಕಿಸಿಯುತ್ತ, ಕೈ ಮುಗಿಯುತ್ತ ಹೊರಗೆ ಬಂದ. ನಾಗಪ್ಪನ ಸಂಶಯವೇ ನಿಜವಾಗಿತ್ತು : ಕೃಷ್ಣನಿಗೆ ನಾಗಪ್ಪ ಬರುವದರ ಸುದ್ದಿಯನ್ನು ಯಾರೂ ತಿಳಿಸಿರಲಿಲ್ಲ. ಗೆಸ್ಟ್‌ಹೌಸಿನಲ್ಲಿ ಸದ್ಯ ಯಾರೂ ಇಲ್ಲದ್ದರಿಂದ ಅಡಿಗೆಯ ಮುತ್ತೂಸ್ವಾಮಿಯೂ ಆ ದಿನ ರಜೆ ಪಡೆದಿದ್ದ. ನಾಗಪ್ಪನಿಗೆ ತನಗೆ ಬಂದ ಸಿಟ್ಟನ್ನು ತಡೆಯಲಾಗಲಿಲ್ಲ. +ರಿಕ್ಷಾದಿಂದ ತನ್ನ ಸಾಮಾನನ್ನು ಇಳಿಸಲು ಕೃಷ್ಣನಿಗೆ ಹೇಳಿದವನೇ, ರಿಕ್ಷಾದವನಿಗೆ ಹಣ ಕೊಡುವ ಮೊದಲೇ ಸೀದಾ ಒಳಗಿನ ಹಾಲಿಗೆ ನಡೆದು ಪರ್ಸೊನೆಲ್ ಆಫೀಸರನಿಗೆ ಫೋನ್ ಮಾಡೆಲೆಂದು ಡಿರೆಕ್ಟರಿಯಲ್ಲಿ ಅದರ ನಂಬರನ್ನು ಹುಡುಕಹತ್ತಿದ. ನಂಬರ್ ಸಿಕ್ಕು, ಫೋನ್ ಮಾಡಿದಾಗ ಫೋನ್ ಮೇಲೆ ಬಂದ ಹೆಣ್ಣಿಗೆ, ರಾಮಕೃಷ್ಣ ಮನೆಯಲ್ಲಿದ್ದಾರೆಯೇ ? ಎಂದು ಕೇಳಿದ. ಟೆಲಿಫೋನ್ ಮೇಲೆ ಹೆಣ್ಣು ದನಿ ಕೇಳಿಯೇ ನಾಗಪ್ಪ ತುಸು ಮೆತ್ತಗಾಗಿದ್ದ. ಫೋನಿನ ಇನ್ನೊಂದು ತುದಿಯಿಂದ ಬಂದ ಮಾತುಗಳನ್ನು ಕೇಳಿದ ಮೇಲಂತೂ ಸಿಟ್ಟಿನ ಜಾಗದಲ್ಲಿ ಬೇರೆಯೇ ಒಂದು ಭಾವನೆ ನೆಲೆಸಹತ್ತಿತು. ಇಲ್ಲ, ರಾಮಕೃಷ್ಣ ಊರಲ್ಲಿರಲಿಲ್ಲ. ಬಂದೂಕವಾಲರ ಜೊತೆ ಅಂದೇ ಸಂಜೆಯ ಪ್ಲೇನಿಗೆ ಮುಂಬಯಿಗೆ ಹೋಗಿದ್ದ. ಬರಲು ಮೂರು ದಿನಗಳಾದರೂ ಹಿಡಿದಾವು. ನಾಗಪ್ಪ ಸಂಪೂರ್ಣವಾಗಿ ಗೊಂದಲಿಸಿಹೋದ : ಸಂಜೆಯ ಪ್ಲೇನು ಎಂದರೆ ತಾನು ಇದೀಗ ಮುಂಬಯಿಯಿಂದ ಬಂದದ್ದೇ. ಅದೇ ತಿರುಗಿ ಮುಂಬಯಿಗೆ ಹೋಗುತ್ತದೆ. +***** +ಮುಂದುವರೆಯುವುದು +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […] +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_416.txt b/Kannada Sahitya/article_416.txt new file mode 100644 index 0000000000000000000000000000000000000000..fd6a5e860ea585bf2cb9b7ce8ea78e35718328ea --- /dev/null +++ b/Kannada Sahitya/article_416.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ ಮತ್ತು ಕನ್ನಡ ಚಳವಳಿಗಾರರು ಅಷ್ಟು ಗಂಭೀರವಾಗಿ ಪರಿಗಣಿಸಿದ ಹಾಗೆ ಕಾಣುತ್ತಿಲ್ಲ. ಕರ್ನಾಟಕಕ್ಕೆ, ಕನ್ನಡಕ್ಕೆ ಆ ಜಪಾನೀ ನೆಲೆಯಿಂದಾಗಿ ಆಗಲಿರುವ ಅಪಾಯವೇ ಕನ್ನಡಿಗರಿಗೆ ತಟ್ಟಿದಂತಿಲ್ಲ. +ಈಗ ಲಭ್ಯವಿರುವ ಹರಕು, ಮುರುಕು ಸುದ್ದಿಯ ಪ್ರಕಾರ ಜಪಾನಿ ಬಂಡವಾಳಿಗರು ಬೃಹತ್ ಪ್ರಮಾಣದ ಉಪನಗರವೊಂದನ್ನು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಿಡದಿ ಸುಮಾರಿಗೆ ಕಟ್ಟಲಿದ್ದಾರೆ. ಏನಿಲ್ಲವೆಂದರೂ ಈ ಉಪನಗರ ಅಂತಿಮವಾಗಿ ಸುಮಾರು ೧೦ ಸಾವಿರ ಎಕರೆ ಕಬಳಿಸಲಿದೆ ಎಂದು ತಜ್ಞರ ಅಂದಾಜಿದೆ. ಆದರೆ, ನಿಗೂಢ ಸಂಗತಿ ಎಂದರೆ ಇಡೀ ಯೋಜನೆಯ ವಿವರಗಳು ಸರ್ಕಾರದ ಹತ್ತಿರವೇ ಇರುವ ಹಾಗೆ ಕಾಣುತ್ತಿಲ್ಲ. ರೆವಿನ್ಯೂ ಅಧಿಕಾರಿಗಳಲ್ಲೂ ಈ ಬಗ್ಗೆ ಅಗಾಧ ಅಜ್ಞಾನವೇ ತುಂಬಿದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಮಹಾ ಅಸಂಬದ್ಧ ಉತ್ತರಗಳು ಬರುತ್ತವೆ. +ಬೆಂಗಳೂರು ಬೆಳೆಯುತ್ತಿರುವ ದೈತ್ಯಾಕಾರೀ ರೀತಿಯಿಂದಾಗಿ ಅದರ ಸುತ್ತಮುತ್ತಲ ಸುಮಾರು ೭೦-೮೦ ಕಿ.ಮೀ.ಗಳ ತನಕ ಉಪನಗರಗಳು ಇತ್ಯಾದಿಗಳು ಬೃಹದಾಕಾರವಾಗಿ ಬೆಳೆಯುತ್ತವೆ ಎಂಬ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಮೆಟ್ರೋಪಾಲಿಟನ್ ಬೆಂಗಳೂರು ಎಂಬ ಕಲ್ಪನೆಯೇ ಎಷ್ಟು ಭಯಾನಕ ಎಂದು ನಮಗೆ ನಿಜವಾಗಿ ಹೊಳೆಯುವುದು ೨೦-೨೫ ವರ್ಷಗಳ ನಂತರವೇ. ಅಥವಾ ಅಷ್ಟು ದೂರವೂ ಕಾಯಬೇಕಾದ ಅಗತ್ಯವಿಲ್ಲವೆಂದು ಕಾಣುತ್ತದೆ. ಮುಂದೆ ಅಷ್ಟು ಕ್ರಮಬದ್ಧವಾಗಿ ನಗರ ಬೆಳೆಯುತ್ತದೊ ಇಲ್ಲವೊ ಹೇಳುವುದು ಕಷ್ಟ. ಆದರೆ, ಕನ್ನಡ ಜನ ಮತ್ತು ಬೆಂಗಳೂರಿನ ಪರಿಸರದ ಆರೋಗ್ಯ ನಾಶವಾಗುವುದಂತೂ ಗ್ಯಾರಂಟಿ. +ಬೆಂಗಳೂರು ಮೈಸೂರು ರಸ್ತೆಯಲ್ಲಿ ಜಪಾನೀ ಟೌನ್‌ಶಿಪ್ ಬಂದರೆ ಆಗುವ ಅನಾಹುತಗಳು ಏನೇನು ಎನ್ನುವುದನ್ನು ಸದ್ಯಕ್ಕೆ ಚಿಕ್ಕದಾಗಿಯಾದರೂ ಲೆಕ್ಕಹಾಕಲು ಸಾಧ್ಯವಿದೆ. ಸಾವಿರಾರು ಎಕರೆಗಳ ಈ ಯೋಜನೆ ನಿಸ್ಸಂದೇಹವಾಗಿ ಕನ್ನಡೇತರ ಶ್ರೀಮಂತರಿಗೆ ಎಂಬ ಬಗ್ಗೆ ಅನುಮಾನ ಬೇಡ. ಏಕೆಂದರೆ, ಅಂತಾರಾಷ್ಟ್ರೀಯ ಮಟ್ಟದ ಉಪನಗರ ಇದಾಗಿ ರೂಪುಗೊಳ್ಳುತ್ತದೆಯಾದ್ದರಿಂದ ಅಲ್ಲಿ ಮನೆ ಮತ್ತು ಆಸ್ತಿ ಪಾಸ್ತಿ ಕೊಳ್ಳುವ ಶಕ್ತಿ ಕನ್ನಡದ ಯಾವ ವರ್ಗಗಳಿಗೂ ಇಲ್ಲ. ಆದರೆ, ಇಲ್ಲೊಂದು ಚಿಕ್ಕ ಸಮಸ್ಯೆಯೂ ತಲೆಹಾಕಿದೆ. ಈ ರೀತಿಯ ವಿವಿಧ ನಗರ ವಸತಿ ಮತ್ತು ಉಪನಗರಗಳ ಯೋಜನೆಗಳಿಗೆ ಬೆಂಗಳೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಸರ್‍ವೆ ಪ್ರಾರಂಭವಾಗಿದೆ. ಇಲ್ಲಿ ನಿಜವಾದ ಅಪಾಯವೇನೆಂದರೆ ಸರ್ಕಾರವೇ ಖುದ್ದಾಗಿ ನಿಂತು ಕಡಿಮೆ ಬೆಲೆಗೆ ಭೂಮಿಯನ್ನು ವಶಪಡಿಸಿಕೊಂಡು ನಂತರ ವಿಶೇಷ ವಸತಿಯೋಜನೆಗಳ ನೆಪದಲ್ಲಿ ಖಾಸಗಿ ಬೃಹತ್ ಬಂಡವಾಳಿಗರಿಗೆ ಮುಂದೆ ಕೊಟ್ಟುಬಿಡಬಹುದು ಎನ್ನುವುದು. ಸರ್ಕಾರದ ಪರಿಹಾರ ನೀಡಿಕೆ ಕ್ರಮದಲ್ಲಿ ರೈತವಿರೋಧಿಯಾದ ಅಂಶಗಳು ಸಾಕಷ್ಟಿವೆ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ದಾಖಲಾಗಿರುವ ಮಾರಾಟದ ಬೆಲೆಯ ಮೊತ್ತ ಎಷ್ಟಿರುತ್ತದೊ ಅದರ ಸರಾಸರಿ ಆಧಾರದ ಮೇಲೆ ಪರಿಹಾರವನ್ನು ನಿಗದಿಮಾಡುವ ಕ್ರಮ ಒಂದು. ಆಮೇಲೆ ಪರಿಹಾರ ಸಾಲದು ಎಂದು ರೈತ ಅಪೀಲು ಹೋಗಬಹುದಾದರೂ ಇಲ್ಲಿ ಅಡಕವಾಗಿರುವ ಲಂಚ, ರುಷುವತ್ತು ತರಲೆಗಳು ಊಹಾತೀತ. ಒಂದಕ್ಕೆ ಹತ್ತರಷ್ಟು ಪರಿಹಾರ ಕೊಟ್ಟರೂ ಅದು ಅಂತಿಮವಾಗಿ ಕೃಷಿಭೂಮಿ ಲೆಕ್ಕದಲ್ಲೇ ಹೊರತು ಸಿಕ್ಕಾಪಟ್ಟೆ ಬೆಲೆಬಾಳುವ ಪರಿವರ್ತಿತ ನಗರ ಭೂಮಿ ಲೆಕ್ಕದಲ್ಲಿ ಅಲ್ಲ. ಇಷ್ಟಾದರೂ ಈಗಾಗಲೆ ಸರ್ವೆ ಆಗುತ್ತಿರುವ ಬೆಂಗಳೂರು ಜಿಲ್ಲೆ ಹಳ್ಳಿಗಳಲ್ಲಿ ಅನೇಕ ರೈತರಿಗೆ ತಮಗೆ ಸಿಗಬಹುದಾದ ಪರಿಹಾರ ಧನದ ಬಗ್ಗೆ ರೋಮಾಂಚಕಾರೀ ಕಲ್ಪನೆಗಳು ಹುಟ್ಟಿಕೊಂಡಿವೆ. ಎಕರೆಗೆ ಒಂದು ಲಕ್ಷ ಸಿಗಬಹುದು ಎನ್ನುವ ಕಲ್ಪನೆಯೇ ಅವರಿಗೆ ಥ್ರಿಲ್ ಉಂಟುಮಾಡಿದೆ. ಬೆಂಗಳೂರು ಸುತ್ತಮುತ್ತ ಹಳ್ಳಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ಕೆಲಸ ತುಂಬ ಕಡಿಮೆ ಆಗಿಬಿಟ್ಟಿದೆ ಎನ್ನುವುದೂ ಕೂಡಾ ಸತ್ಯ. ಹೀಗಾಗಿ, ಬೀಳು ಬಿದ್ದಿರುವ ಜಮೀನುಗಳಿಗೆ ಎಕರೆಗೆ ಲಕ್ಷ ಸಿಗುತ್ತದೆ ಎಂಬ ಅಂಶ ಆಕರ್ಷಕವಾಗಿ ಕಾಣುತ್ತದೆ. ಆದರೆ, ನಗರದ ಭೂಮಿಯಲ್ಲಿ ಲಕ್ಷಕ್ಕೆ ೩೦-೪೦ ಅಡಿಗಳ ಸೈಟು ಕೂಡಾ ಬರುವುದಿಲ್ಲ ಎಂಬ ಅಂಶ ನಮ್ಮ ರೈತರಿಗೆ ಇನ್ನೂ ಆಳವಾಗಿ ಮನದಟ್ಟಾಗಬೇಕಾಗಿದೆ. ಇದು ಅರ್ಥವಾಗಿರುವ ಮತ್ತು ಕೃಷಿಯ ಬಗ್ಗೆ ಆಸಕ್ತಿ ಇರುವ ರೈತರು ಮಾತ್ರ ಇದರಿಂದ ಭೀತರಾಗಿದ್ದಾರೆ. ತಮ್ಮ ಈಗಿರುವ ಊರುಗಳಿಂದ ೩೦-೪೦ ಕಿ.ಮೀ. ಹೋದರೂ ಕೃಷಿಯೋಗ್ಯ ಜಮೀನು ಸಿಗುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ. ಈಗ ಸಿಗುತ್ತಿರುವ ಜಮೀನು ಏನಿದ್ದರೂ ಕೃಷಿಗೆ ಅಯೋಗ್ಯವಾದ ಜಮೀನು ಎಂಬ ಸತ್ಯವೂ ಅವರಿಗೆ ಗೊತ್ತಿದೆ. +ಭೂಮಿ ಮತ್ತು ವಸತಿಗೆ ಸಂಬಂಧಪಟ್ಟ ಯೋಜನೆಗಳೆಲ್ಲವೂ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಖಾಸಗಿ ಸಂಸ್ಥೆಗಳ ಕೀಲ್ ಮೇಲೆಯೇ ನಡೆಯುತ್ತವೆ. ಸರ್ಕಾರದ ಬಾಬತ್ತಿನಲ್ಲಿ ಭೂಮಿ ವಶಪಡಿಸಿಕೊಂಡು ಖಾಸಗಿಯವರಿಗೆ ಕೊಟ್ಟರೆ, ಆ ತಿಮಿಂಗಲಗಳು ನೇರವಾಗಿ ಮಾರ್ಕೆಟ್ ರೇಟ್ ಕೊಟ್ಟು ಕೊಳ್ಳುವ ಕೆಲಸ ತಪ್ಪುತ್ತದೆ. ಸಂಬಂಧಪಟ್ಟ ಮಂತ್ರಿಗಳಿಗೆ, ಸರ್ಕಾರಕ್ಕೆ ಒಂದಷ್ಟು ದುಡ್ಡು ದೊಡ್ಡದಾಗೇ ಚೆಲ್ಲಿದರೆ ಮುಗಿಯಿತು. ಒಂದು ಕೋಟಿ ಲಂಚ ಕೊಟ್ಟರೂ, ಐದು ಕೋಟಿ ಮಿಗುತ್ತದಲ್ಲ! ಇದು ಖಾಸಗಿಯವರ ಲೆಕ್ಕಾಚಾರ. +ಜಪಾನೀ ಟೌನ್‌ಶಿಪ್ ಬಂದರೆ, ಒಂದು ಪಕ್ಷ ಅವರು ನೇರವಾಗೇ ಹಣ ಕೊಟ್ಟುಕೊಳ್ಳುತ್ತಾರೆ ಎಂದು ಭಾವಿಸೋಣ. ಮೊದಲಿಗೆ, ಅನೇಕ ಹಳ್ಳಿಗಳು ಸಂಪೂರ್ಣ ನಿರ್ನಾಮವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಜಪಾನೀಯರ ಶಕ್ತಿ ಮತ್ತು ಹಣದ ಪ್ರಭಾವದ ಕಾರಣಕ್ಕಾಗಿ ಬೆಂಗಳೂರಿನ ಕನ್ನಡ ಮತ್ತು ಕನ್ನಡಿಗರ ಪ್ರಭಾವ ಪೂರ್ಣವಾಗಿ ಕುಗ್ಗಿ ಪಾತಾಳಕ್ಕೆ ಹೋಗಲಿದೆ. ಈ ಉಪನಗರದಲ್ಲಿ ಆ ಜನ ತಮ್ಮದೇ ಆದ ವಿದ್ಯೆ, ಮನರಂಜನೆ, ಸಂಸ್ಕೃತಿ ಬೆಳೆಸಿಕೊಳ್ಳುವುದರಿಂದ ಇಲ್ಲೆಲ್ಲ ಸಹಜವಾಗಿ ಕನ್ನಡವೇ ಇರುವುದಿಲ್ಲ. ಕರ್ನಾಟಕ ಸರ್ಕಾರದ ಈಗಿನ ಶಿಕ್ಷಣ ನೀತಿಯಿಂದಾಗಿ ಅವರ್‍ಯಾರೂ ಕನ್ನಡ ಕಲಿಯುವುದೂ ಇಲ್ಲ. ಈಗಿರುವ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಒಂದು ಹಳ್ಳಿ ಕಣ್ಮರೆಯಾದರೆ ಕನ್ನಡಕ್ಕೆ ಹತ್ತು ಗಾಯಗಳಾದಂತೆ. ಕೆ.ಎಸ್.ಆರ್.ಟಿ.ಸಿಯಲ್ಲಿ ಜವಾನರ ಅಥವಾ ಡ್ರೈವರ್‌ರ ಕೆಲಸಕ್ಕೆ ಕನ್ನಡದ ಪರೀಕ್ಷೆ ಕಡ್ಡಾಯ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುವ ಕನ್ನಡ ಹೋರಾಟಗಾರರು ಈ ಟೌನ್‌ಷಿಪ್‌ಗಳ ಅಪಾಯದ ಬಗ್ಗೆ ಮಾತೇ ಆಡದಿರುವುದು ಆಶ್ಚರ್ಯ. ಬೆಂಗಳೂರು, ಮೈಸೂರು ರಸ್ತೆಯಲ್ಲಾಗುವ ಈ ರೀತಿಯ ಟೌನ್‌ಷಿಪ್‌ಗಳಿಂದಾಗಿ ಕ್ರಮೇಣ ಮೈಸೂರು ಕೂಡಾ ತನ್ನ ಕನ್ನಡತನವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ, ಸಂಸ್ಕೃತಿಗಳು ತಮಗಿಂತ ಭೌತಿಕವಾಗಿ ಬಲಿಷ್ಠವಾಗಿರುವವರ ಮುಂದೆ ಸಾಮಾನ್ಯವಾಗಿ ಮಂಕಾಗಿ ಕ್ರಮ ಕ್ರಮೇಣ ಕರಗಿಹೋಗುತ್ತವೆ. ಆ ಬಗ್ಗೆ ಒಂದು ಪ್ರಜ್ಞಾಪೂರ್ವಕವಾದ ಚಳವಳಿ ಆದಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಇದಕ್ಕಾಗಿಯಾದರೂ ನಾವು ಈ ಬಗ್ಗೆ ದನಿ ಎತ್ತಬೇಕಾಗಿದೆ. +ಆದರೆ, ಇಲ್ಲಿ ಅಡಕವಾಗಿರುವ ಪ್ರಶ್ನೆಗಳು ನಿಜವಾಗಿಯೂ ಜಟಿಲವಾದದ್ದು. ಅಂತಾರಾಷ್ಟ್ರೀಯ ಬಂಡವಾಳವನ್ನು ಹಾತೊರೆದು ಕರೆಯುತ್ತಿರುವ ಈಗಿನ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ಇವನ್ನು ಪರೀಕ್ಷಿಸಬೇಕು. ಈಗ ನಾಡಿನ ಅಭಿವೃದ್ಧಿಗೆ, ಈಗಿರುವ ಅಭಿವೃದ್ಧಿ ಮಾದರಿಗಳ ಕಾರಣಕ್ಕಾಗಿ ಹೊರಗಿನ ಬಂಡವಾಳ ಬೇಕು. ಅಂಥ ಬಂಡವಾಳವನ್ನು ನಿರಾಕರಿಸಿ ನಾಡನ್ನು ಆರ್ಥಿಕವಾಗಿ ಕಟ್ಟುವ ಆರ್ಥಿಕ ಏಕಾಂತತೆ ಕಾರ್ಯಕ್ರಮಗಳು ಈಗ ತುಂಬ ಅಪ್ರಸ್ತುತ ಎಂಬಂತೆ ಕಾಣುತ್ತಿವೆ. ಹೀಗಾಗಿ, ಈ ಬಂಡವಾಳಕ್ಕೆ ಸಾಮಾಜಿಕ ಅಥವಾ ಸಾಂಸ್ಕೃತಿಕ ನಿಯಂತ್ರಣ ಖಂಡಿತವಾಗಿ ಬೇಕೇಬೇಕು. ಸಾಂಸ್ಕೃತಿಕ ನಿಯಂತ್ರಣವಿರದ ಬಂಡವಾಳ ಇಡೀ ಸಮಾಜವನ್ನೆ ನಿರ್ಮೂಲನ ಮಾಡುತ್ತದೆ. ಈಗಿನ ಆರ್ಥಿಕ ನೀತಿಯಲ್ಲಿ ಈ ಸಾಮಾಜಿಕ ಅಥವಾ ಸಾಂಸ್ಕೃತಿಕ ನಿಯಂತ್ರಣದ ಅಂಶವೇ ಇಲ್ಲ. ರಾಜಕೀಯ ನಿಯಂತ್ರಣ ಕೂಡ ಇಲ್ಲವಾಗಿದೆ. ಇದು ಎಲ್ಲೀತನಕ ಹೋಗಿದೆ ಎಂದರೆ ಈ ಜಪಾನಿ ಉಪನಗರದ ಇಡೀ ಯೋಜನೆಯನ್ನು ಖಾಸಗಿ ಕಂಪನಿಗಳೇ ಪೂರ್ಣವಾಗಿ ರೂಪಿಸಿ ನಾಮಕಾವಸ್ತೆ ರೀತಿಯಲ್ಲಿ ಸರ್ಕಾರದಿಂದ ಎಸ್ ಎನ್ನಿಸುತ್ತದೆ. ಈ ಅಪಾಯದಿಂದ ನಾವು ಪಾರಾಗಬೇಕು. ಆದ್ದರಿಂದ, ಜಪಾನೀ ಉಪನಗರದ ಕಲ್ಪನೆ ಏನಿದೆ, ಅದರಲ್ಲಿ ಕನ್ನಡ ಮತ್ತು ಕನ್ನಡಿಗರ ಹಿತರಕ್ಷಣೆ ಕಾಯುವ ನಿರ್ದಿಷ್ಟ ನಿಯಂತ್ರಕಗಳು ಇರದಿದ್ದರೆ ಆ ಇಡೀ ಯೋಜನೆಗೆ ಅವಕಾಶ ಕೊಡಕೂಡದು. +ಇದರರ್ಥ ಕರ್ನಾಟಕದಲ್ಲಿ ಹೊರಗಿನವರು ಬಂದು ಸೇರಲೇಬಾರದು ಎಂದಲ್ಲ. ಸುಬ್ಬಣ್ಣನವರೇ ತಮ್ಮ ಪತ್ರದಲ್ಲಿ ಟಿಬೆಟಿಯನ್ನರ ಪ್ರಸ್ತಾಪ ಮಾಡಿದ್ದಾರೆ. ಟಿಬೆಟಿಯನ್ನರು ತಮ್ಮತನ ಉಳಿಸಿಕೊಂಡೂ ಸ್ಥಳೀಕರ ಜತೆಯಲ್ಲಿ ಸೌಹಾರ್ದದಿಂದ ಇದ್ದಾರೆ. ಆದರೆ, ಏಷ್ಯಾದಲ್ಲಿ ಜಪಾನೀಯರು ಹಾಗಲ್ಲ. ಅವರು ಏಷ್ಯದ ಅಮೇರಿಕನ್ನರು ಎಂಬ ಬಗ್ಗೆ ಸಂಶಯವೇ ಬೇಡ. ದಕ್ಷಿಣ ಏಷ್ಯಾದ ಅನೇಕ ದೇಶಗಳನ್ನು ಈಗಾಗಲೆ ಅವರು ಕುಲಗೆಡಿಸಿಹಾಕಿದ್ದಾರೆ. ಥಾಯ್‌ಲೆಂಡನ್ನು ಸೂಳೆಗೇರಿಯನ್ನಾಗಿ ಮಾಡುವುದರಲ್ಲಿ ಜಪಾನೀಯರ ಪಾತ್ರ ತೀರಾ ದೊಡ್ಡದು. ಬಾಲ ವೇಶ್ಯಾವೃತ್ತಿಗಂತೂ ಅವರದು ವಿಶೇಷ ಪ್ರೋತ್ಸಾಹ. ಥಾಯ್‌ಲೆಂಡಿನ ವಿಮಾನ ನಿಲ್ದಾಣಗಳಲ್ಲಿ ಗುಂಪು ಪ್ರವಾಸ ಯೋಜನೆಯಲ್ಲಿ ಬರುವ ಹಾರ ಹಾಕಿಕೊಂಡ ಮುದುಕರು ಥಾಯ್ ವೇಶ್ಯೆಯರ ಜತೆ ವರ್ತಿಸುವುದನ್ನು ನೋಡಿಯೇ ತಿಳಿಯಬೇಕು. +ಹೀಗಾಗಿ, ನಾವು ಹೊರಗಿನ ಎಲ್ಲರ ಬಗ್ಗೆ ಸಾರಾಸಗಟಾಗಿ ವಿಷ ಕಕ್ಕಬಾರದು. ಆದರೆ, ಕನ್ನಡ ಮತ್ತು ಕರ್ನಾಟಕತ್ವಗಳನ್ನೆ ನಾಶಮಾಡುವ ಬೆಳವಣಿಗೆಯನ್ನು ಉಗ್ರವಾಗಿ ವಿರೋಧಿಸಲೇಬೇಕು. ಹಾಗೆ ನೋಡಿದರೆ, ಇದು ಬರೀ ಕರ್ನಾಟಕದ ಪ್ರಶ್ನೆ ಅಲ್ಲ. ಸುಬ್ಬಣ್ಣ ಬರೆಯುತ್ತಾರೆ-“ಅನೇಕ ರೀತಿಗಳಿಂದ ಈ ದೇಶ, ಕಳೆದ ೪೫ ವರ್ಷಗಳ ಕೆಲವೇ ಹೆಮ್ಮೆಯ ಗಳಿಕೆಗಳನ್ನು ನಾಶಮಾಡಲು ಹೊರಟಂತಿದೆ, ಈಚಿನ ದಿನಗಳಲ್ಲಿ ಗಟ್ಟಿಯಾದ ಜನಾಭಿಪ್ರಾಯ ರೂಪುಗೊಂಡು ಭಾರೀ ಪ್ರತಿಭಟನೆ ಬಾರದಿದ್ದರೆ, ನಮ್ಮ ಈಗಿನ ಸರ್ಕಾರ ರಾಷ್ಟ್ರವನ್ನು ‘ನಂಬಿಕೆ ಕ್ರಯ’ಕ್ಕೆ ಹಾಕಿ ಕೊಟ್ಟೇ ಬಿಡುತ್ತದೆ, ಸಂದೇಹವೇ ಇಲ್ಲ. +ಕನ್ನಡ ಉಳಿಯಲು, ಭಾರತ ಉಳಿಯಲು ಬಂಡವಾಳಶಾಹಿಗೆ ಸಾಂಸ್ಕೃತಿಕ, ಸಾಮಾಜಿಕ ನಿಯಂತ್ರಣ ಹಾಕಲೇಬೇಕಾಗಿದೆ. ಬಂಡವಾಳದ ಕ್ರಿಯಾಶೀಲತೆ ಕುಗ್ಗಿಸುವಂಥ ನೌಕರಶಾಹೀ ರೆಡ್ ಟೆಪಿಸಂ ಬೇಡ, ಸರಿ. ಆದರೆ, ಈ ನಾಡು ಒಂದು ಆರೋಗ್ಯಕರ ಸಮಾಜವಾಗಿ ಉಳಿಯಬೇಕು. ಅದಕ್ಕಾಗಿ ಕನ್ನಡಿಗರು ದನಿ ಎತ್ತಬೇಕಾಗಿದೆ. ಗುಟ್ಟಾದ, ಅಷ್ಟು ಗುಟ್ಟಲ್ಲದ ಡೀಲ್‌ಗಳಲ್ಲಿ ಕರ್ನಾಟಕ ನಾಶವಾಗದಂತೆ ನೋಡಿಕೊಳ್ಳಬೇಕಾಗಿದೆ. +***** +ಲಂಕೇಶ್ ಪತ್ರಿಕೆ ಆಗಸ್ಟ್ ೧೨, ೧೯೯೨ರಲ್ಲಿ ಪ್ರಕಟ +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […] +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […] +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_417.txt b/Kannada Sahitya/article_417.txt new file mode 100644 index 0000000000000000000000000000000000000000..9f58ccbb5cb62c884215320f0fe98d69202fd470 --- /dev/null +++ b/Kannada Sahitya/article_417.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. ಬರಗಾಲದ ಕಾಲ. ಹೆಂಗಸಿನ ಪಾದದ ಹಿಮ್ಮಡಿ ಒಡೆದು ಬಿರುಕು ಬಿಟ್ಟಂತಿದ್ದ ಕೆರೆಯಂಗಳದಲ್ಲಿ ನಡೆಯುತ್ತಿದ್ದೆವು. ಕಾಡುಗೊಲ್ಲರ ಹಟ್ಟಿಯೊಂದರಿಂದ ನಮ್ಮ ಪ್ರಯಾಣ. ನನ್ನ ಮಟ್ಟಿಗೆ ಅಲ್ಲಿ ಕಳೆದ ಸಂಜೆ ಅಪೂರ್ವವೆನಿಸಿತ್ತು. ಚರಿತ್ರೆಯಾಚೆಗಿರುವ ಸ್ಥಾವರಗಳಂತೆ ಕಾಣುತ್ತಿದ್ದ ಮುದುಕ ಮುದುಕಿಯರು ನನ್ನ ಬೆರಗನ್ನೂ ಕುತೂಹಲವನ್ನೂ ಹೆಚ್ಚಿಸಿದ್ದರು. ಆಧುನಿಕ ಮಧ್ಯಮ ವರ್ಗದವನ ಪರಕೀಯತೆಯ ಪರಿಣಾಮ ಈ ರಮ್ಯೀಕರಣ ಎಂದು ಒಳ ಮನಸ್ಸು ಮತ್ತೆ ಮತ್ತೆ ಹೇಳುತ್ತಿದ್ದರೂ, ಆ ಹಂಗಿಸುವಿಕೆಯನ್ನು ಮೀರಿದ ಆಕರ್ಷಣೆ ಈ ಜೀವನ ಕ್ರಮದಲ್ಲಿದೆ ಎಂದು ತೀವ್ರವಾಗಿ ಅನಿಸುತ್ತಿತ್ತು. ಆ ಗಣೆಯ ಸಂಗೀತದಲ್ಲೂ ಎಂಥದೋ ಮೋಡಿ. +ಎಲ್ಲಕ್ಕಿಂತ ಹೆಚ್ಚಾಗಿ ಅವರು ಹಾಡಿದ ಕಥನ ಕಾವ್ಯಗಳು ನನ್ನನ್ನು ವಿಶೇಷವಾಗಿ ಆಕರ್ಷಿಸಿದುವು. ಅಲ್ಲಿಯ ರೂಪಕಗಳಿಗಿರುವ ಶಕ್ತಿ ಅಪಾರ. ಕಣಿ ಹೇಳುವ ಕೊರವಂಜಿ ತನ್ನ ಕಣ್ಣಿಗೆ ಲೋಕದ ಸಮಸ್ತವನ್ನೂ ಆಹ್ವಾನಿಸುವ ಭಾಗ, ವಿಶೇಷವಾಗಿ ಮನಸ್ಸನ್ನು ಹಿಡಿದಿತ್ತು. ‘ಆಕಾಸುದ ವೇಣಿ ನೀ ಬಾರೆ ನನ್ನ ಕಣಿಗೆ’ ಎನ್ನುತ್ತಾಳೆ, ಆ ಕೊರವಂಜಿ ಕಥೆಯಲ್ಲಿ. ಸುತ್ತ ಹರಿದಿದ್ದ ಜನರ ಉಡುಪುಗಳು ಮಧ್ಯೆ ಮಧ್ಯೆ ಆ ಮಾಯಾಲೋಕವನ್ನು, ಆ ಪುರಾಣ ಲೋಕವನ್ನು ಕತ್ತರಿಸುತ್ತಿದ್ದವು. ಅಗ್ಗದ ಟೆರಿಲಿನ್ ಸೀರೆಗಳು. ಮಧ್ಯೆ ಮಧ್ಯೆ ಪ್ಲಾಸ್ಟಿಕ್ ಚೆಂಬು, ಗಡಿಗೆಗಳು, ಬಂಡವಾಳಶಾಹಿ ನಾಗರಿಕತೆ ಏಕೆ ಅಸಹನೀಯ? ಮುಖ್ಯವಾಗಿ, ಅದು ತನ್ನ ಹಿಂದಿನ ಜೀವನಕ್ರಮಗಳಿಗಿದ್ದ ರಂಜಕತೆಯನ್ನು, ಎಲ್ಲ ನಿಗೂಢ ಪ್ರಭಾವಳಿಯನ್ನು, ನಿರ್ನಾಮ ಮಾಡಿಬಿಡುತ್ತದೆ. ಹಿಂದಿನ ಜಗತ್ತುಗಳ ಜೋಗಿ ಜಂಗಮರು ಕಚಡಾ ಭಿಕ್ಷುಕರಾಗಿಬಿಡುತ್ತಾರೆ. ಯಾತ್ರೆಗಳು ತಮ್ಮ ಅರ್ಥ ಕಳೆದುಕೊಳ್ಳುತ್ತವೆ. ನಾಗರಿಕತೆಯ ಕನಸುಗಳು ಕರಗಿಕರಗಿ ಕುರೂಪಿ ವಾಸ್ತವವೊಂದು ಮಾತ್ರ ಉಳಿದು ಕೊಳ್ಳುತ್ತದೆ. +ಆ ಹಟ್ಟಿ, ಆ ಗುಡಿಸಲುಗಳನ್ನು ನೋಡುತ್ತಿದ್ದಂತೆ ಯೋಚಿಸುತ್ತಿದ್ದೆ: ಇವುಗಳಲ್ಲಿ ಎಷ್ಟೇ ಮೋಹಕತೆಯಿದ್ದರೂ, ಇವು ಉಳಿದುಕೊಳ್ಳಲಾರವು. ಇದ್ದಕ್ಕಿದ್ದಂತೆ ಮುದುಕನೊಬ್ಬ ಎದ್ದು ತನ್ನ ಕಂಬಳಿಯನ್ನು ಸರಿಪಡಿಸಿಕೊಳ್ಳುತ್ತ ಏನನ್ನೋ ಹೇಳಿದ. ಜನ ಗೊಳ್ಳನೆ ನಕ್ಕರು. ಅವನು ಏನು ಹೇಳಿದ? ಅವರು ಯಾಕೆ ನಕ್ಕರು? ಮತ್ತೆ ಕೇಳಲು ನಾಚಿಕೆಯಾಯಿತು. ಆದರೂ ಅವನ ಕನ್ನಡದ ಬನಿ, ರೀತಿ ಮೋಹಕವಾಗಿದ್ದುವು. ತಡೆಯಲಾಗದೆ ಪಕ್ಕದಲ್ಲಿದ್ದ ಕುಮಾರ್‌ನನ್ನು ಕೇಳಿದೆ: ‘ಏನು ಹೇಳಿದ ಆ ಮುದುಕ?’ ಕುಮಾರ್ ಸಂಜೆಯಿಂದ ಒಂದು ರೀತಿಯ ಒದ್ದಾಟದಲ್ಲಿದ್ದುದನ್ನು ಗಮನಿಸಿದ್ದೆ. ಅವನ ಬಗೆಗೂ ಜನ ಮುಖ ಸಿಂಡರಿಸಿಕೊಂಡಂತಿತ್ತು. ‘ಬಿಡಿ ಸಾರ್, ತರಲೆ ಮುದುಕ ಏನೋ ಹೇಳಿದ, ಅಂತ ಪಿಸುಗುಟ್ಟಿದ; ಆಟೊಮ್ಯಾಟಿಕ್ ವಾಚನ್ನು ನೋಡಿಕೊಂಡು ‘ಎಂಟಾಯಿತು ಸಾರ್, ಹೊರಡನ’ ಎಂದ. ಹಿಂದುಗಡೆಯಿಂದ ಇನ್ನೊಬ್ಬ ಗೆಳೆಯ ‘ಇವನ ಮೇಲೆ ಏನೋ ಜೋಕು ಹೊಡೆದಂತಿತ್ತು’ ಅಂದ ‘ಹೇಗೆ’? ಎಂದೆ. ‘ಜುಂಜ’ ಅನ್ನೋ ಹೆಸರು ಬಂದಂಗಿತ್ತು. ಕುಮಾರ್‌ನ ಮೊದಲ ಹೆಸರು ಜುಂಜ ಎಂದು ಅವನೇ ಸೇರಿಸಿದ. +ಕೆರೆಯಂಗಳದಲ್ಲಿ ನಡೆಯುತ್ತಿದ್ದಂತೆ ಗೆಳೆಯರ ಜತೆಗೆ ಮಾತು ಬಂಡವಾಳಶಾಹಿಪೂರ್‍ವದ ಸಮಾಜಗಳಲ್ಲಿನ ಬಡತನ, ಶೋಷಣೆಯ ಸ್ವರೂಪದ ಬಗೆಗೆ ಸಾಗಿತ್ತು. ‘ಆ ಸಮಾಜಗಳ ಬಡತನ ಹೆಚ್ಚು ಸಹನೀಯ ಅದರಲ್ಲೂ, ಭಾರತದಂಥ ದೇಶಗಳಲ್ಲಿ ಅದಕ್ಕೂ ಒಂದು ಸೊಗಸು, ಸಂಸ್ಕೃತಿ ಇರುತ್ತವೆ’ ಅಂತ ವಾದಿಸುತ್ತಿದ್ದೆ. ಗಂಗೆದೊಗಲಿನವರು, ಗೊಂದಲಿಗರು, ಜೋಗತಿಯರು, ಬುಡು ಬುಡಿಕೆಯವರು, ಬಹುರೂಪಿಗಳು ಆಧುನಿಕ ಬಂಡವಾಳಶಾಹಿ ಜಗತ್ತಿನ ದೃಷ್ಟಿಕೋನದಿಂದ ಭಿಕ್ಷುಕರಾಗಿ ಮಾತ್ರ ಕಾಣುತ್ತಾರೆ ಎಂದು, ಹಿಂದೆ ಹಟ್ಟಿಯಲ್ಲಿ ಅನ್ನಿಸಿದ್ದನ್ನೇ ಹೇಳಿದೆ. ನಗರದಲ್ಲಿ ಭಿಕ್ಷುಕನನ್ನು ಕಂಡರೆ ಬೆಚ್ಚುತ್ತೇವೆ. ಅವನು ಕೊಳಕಾಗಿದ್ದಷ್ಟೂ ಅಸಹ್ಯ ತೀವ್ರವಾಗುತ್ತ ಹೋಗುತ್ತದೆ. ಮಾನವ ಸಂವಾದ ಅಸಾಧ್ಯವಾಗುತ್ತ ಹೋಗುತ್ತದೆ. ಜೋಗಿ ಜಂಗಮರು ಬಂದರೆ ನಮ್ಮ ಊರುಗಳಲ್ಲಿ ಹಾಗನ್ನಿಸುವುದಿಲ್ಲ. ಬಡತನ, ಆಧುನಿಕ ಬಂಡವಾಳಶಾಹಿಯಲ್ಲಿ ಇಷ್ಟು ಅಸಹನೀಯ ಎಂದೇ ಅಲ್ಲಿ ಬಡವರ ಸಿಟ್ಟು ಜ್ವಾಲಾಮುಖಿಯಾಗುತ್ತದೆ. ಅವರ ಅವಮಾನದ ದಳ್ಳುರಿ ಸಮಾಜವನ್ನು ಸುಡುತ್ತದೆ ಎಂದೆ. +ಜತೆಗಿದ್ದವರು ನಮ್ಮ ಹಾಗೆಯೇ ಚಿಕ್ಕ ಊರುಗಳ ನೆನಪಿದ್ದ ನಗರಿಗರು. ಗ್ರಾಮ್ಯ, ಅರೆ ಗ್ರಾಮ್ಯದ ಬದುಕಿನಲ್ಲಿ ಬಾಲ್ಯ ಕಳೆದವರಾದ್ದರಿಂದಲೋ ಏನೋ, ಮಾತಿಗೆ ತಲೆ ಹಾಕುತ್ತಿದ್ದರು, ಕುಮಾರ್ ಮಾತ್ರ ಮಧ್ಯೆ ಮಧ್ಯೆ ಗುರುಗುಟ್ಟುತ್ತ ನಡೆಯುತ್ತಿದ್ದ. ನನ್ನ ಮಾತಿನಲ್ಲಿನ ತತ್ತ್ವ ಕಾಣೆಯಾಗಿ ಅವನಿಗೆ ಬರೀ ಹಳಹಳಿಕೆ ಕಂಡಿರಬೇಕು ಎಂದು ತಿಳಿಯಿತಾದರೂ, ನನ್ನ ಪಾಡಿಗೆ ನಾನು ಅರೆಸ್ವಗತ, ಅರೆಚರ್ಚೆಯನ್ನು ಮುಂದುವರಿಸಿದೆ. ನೀವು ಫೋಕ್ ಸಾಂಗ್ ಕೇಳಕ್ಕೆ ಜನ ಹಿಂಗೇ ಇರಬೇಕು ಅಂತೀರಾ, ಅಂದದ್ದಕ್ಕೆ ಚರ್ಚೆ ನಿಲ್ಲಿಸಿದೆವು. ಅದು ಹಾಗಲ್ಲ, ಹೀಗೆ ಎಂದು ಜತೆಯ ಗೆಳೆಯರೊಬ್ಬರು ವಿವರಿಸಲು ಶುರು ಮಾಡಿದರು. ನಾನು ಸುಮ್ಮನಾದೆ. +ಕೆರೆಯಂಗಳ ದಾಟಿ ಹೊಲಗಳ ಮಧ್ಯೆ ನಡೆಯುತ್ತಿದ್ದೆವು. ವ್ಯತ್ಯಾಸವೇ ಗೊತ್ತಾಗಲಿಲ್ಲ. ಹಸಿರೇ ಇರದ ನೆಲ ಬಿದ್ದಿತ್ತು. ಅತ್ತಿತ್ತ ತೋಡಿದ ಹಳ್ಳಗಳು. ಸುಮ್ಮನೆ ಕುತೂಹಲಕ್ಕೆ ಒಂದೆರಡು ಬೇಲಿ ಹಾಕಿದ್ದ ಜಮೀನೊಳಕ್ಕೆ ಹಾರಿ ಹೋದೆವು. ಬಾವಿಗಳಲ್ಲೂ ನೀರಿಲ್ಲ. ಒಂದೆರಡು ಬೋರ್‌ವೆಲ್‌ಗಳಲ್ಲೂ ಹ್ಯಾಂಡ್ ಪಂಪಿನಿಂದ ನೀರೆಳೆಯಲು ಪ್ರಯತ್ನಿಸಿದೆವು. ನೀರು ಬರಲಿಲ್ಲ. ಹಸಿರಿಲ್ಲದ ಒಣನೆಲದಲ್ಲಿ ನೀರವ ರಾತ್ರಿಯಲ್ಲಿ ಸುಮ್ಮನೆ ನಡೆಯುತ್ತ ಇದ್ದರೆ ಆಧ್ಯಾತ್ಮಿಕವೆಂಬಂತೆ ಕಾಣುವ ಶೂನ್ಯ ಆವರಿಸಿಬಿಡುತ್ತದೆ. ಹೊಲಗಳಲ್ಲಿ ಹಸಿರಿರಲೇ ಬೇಕು, ಬಾವಿಗಳಲ್ಲಿ ನೀರಿರಲೇಬೇಕು ಎನ್ನಿಸಿತು. +ಅಂತೂ ಎನ್.ಎಚ್-೪ ಸಿಕ್ಕಿತು. ಆಗಾಗ ಕಣ್ಣು ಕುಕ್ಕುವ ಬೆಳಕಿನಿಂದ ಬರುವ ಲಾರಿಗಳು. ಆ ಬೆಳಕಿನಲ್ಲಿ ಧಡಕ್ಕನೆ ಅತ್ತಿಂದಿತ್ತ ಓಡುವ ಇಲಿಗಳು. ಈ ಬರಗಾಲದಲ್ಲಿ ಅವಕ್ಕೆ ತಾನೇ ಏನು ಸಿಗುತ್ತದೆ? +ಲಾರಿಯೊಂದು ನಿಂತಿತು. ಅದರಲ್ಲೇ ನಾವೂ ತುಮಕೂರು ತಲುಪಬಹುದೆಂದು ಧಡಕ್ಕನೆ ನುಗ್ಗಿದೆವು. ಏನಾಗುತ್ತಿದೆ ಅಂತ ತಿಳಿಯುವ ಮೊದಲೇ ಲಾರಿಯಿಂದ ಇಳಿದ ನಾಲ್ಕೈದು ಜನ ಕುಮಾರನ ಕಡೆಗೆ ನುಗ್ಗಿದರು. ‘ಏನು, ಯಾಕೆ, ಯಾಕೆ’ ಅಂತ ನಾವು ಕುಮಾರನನ್ನು ಸುತ್ತುವರಿಯುವ ಹೊತ್ತಿಗೆ ‘ಯಾಕೆ ತರಲೆ’, ಅಂತ ಸರ್ದಾರ್‌ಜಿ ಲಾರಿಯನ್ನು ಓಡಿಸಿಯೇ ಬಿಟ್ಟ. ಬಂದಿದ್ದವರು ಕುಮಾರನ ನೆಂಟರೇ, ಹಟ್ಟಿಯವರೇ ಎಂಬುದು ಸ್ಪಷ್ಟವಾಗಿತ್ತು. ಕುಮಾರನೂ ಜೋರಾಗಿ ಕೂಗಾಡುತ್ತಿದ್ದ. ಒಂದೆರಡು ಏಟು ಬಿದ್ದ ಹಾಗಿತ್ತು.ಆ ನಾಕೈದು ಜನ ನಮ್ಮನ್ನು ದುರುಗುಟ್ಟಿಕೊಂಡು ನೋಡಿ, ನಾವು ಬಂದ ದಾರಿಯ ಹೊಲಗಳಿಗೇ ಇಳಿದು ನಡೆಯುತ್ತ ಹೋದರು. ಮೂರು ನಾಲ್ಕು ನಿಮಿಷಗಳತನಕ ಅವರ ಮಾತಿನ ಸದ್ದು ಕೇಳುತ್ತಿತ್ತು. +ಗಲಾಟೆಯ ತಲೆಬುಡ ತಿಳಿಯಲಿಲ್ಲ. ಯಾಕೋ ಇಲ್ಲಿ ಕಾಯುವುದೇ ಸರಿಯಿಲ್ಲ ಅನಿಸಿ, ಮುಂದಕ್ಕೆ ನಡೆಯುತ್ತಾ ಹೋಗೋಣ, ಯಾರಾದರೂ ಲಾರಿ ನಿಲ್ಲಿಸಿದರೆ ಹತ್ತಿಕೊಳ್ಳೋಣ ಅಂತ ನಡೆಯುತ್ತ ಹೊರಟೆವು. +ಮೌನವಾಗಿ ನಡೆಯುತ್ತಿದ್ದ ಕುಮಾರ ಮಾತು ಶುರುಮಾಡಿದ. ಕತೆ ಹೇಳಿದ. ಅವನನ್ನು ಹಿಡಿದು ತದುಕಿದವರು ಅವನ ಹಟ್ಟಿಯವರೇ, ಕುಲಸ್ಥರೇ. ಕಾರಣ-ಇವನು ತನ್ನ ಹೆಂಡತಿಗೆ ಹೆರಿಗೆ ಮಾಡಿಸಿದ ರೀತಿ. ಅವರಲ್ಲಿ ಹೆಂಗಸನ್ನು ಹೆರಿಗೆಗೆ ಹೊರಗೆ ಗುಡ್ಲು ಹಾಕಿ ಕೂರಿಸುವ ಅಮಾನುಷ ಪದ್ಧತಿ ಇದೆ. ಹೆಂಗಸು ನಂಜೇರಿ ಸತ್ತರೂ ಆಶ್ಚರ್ಯವಿಲ್ಲ. ತನ್ನ ಪ್ರಿಯ ಮಡದಿಗೆ ಹೀಗಾಗುವುದು ಜುಂಜಪ್ಪ ಉರುಫ್ ಕುಮಾರನಿಗೆ ಇಷ್ಟವಿರಲಿಲ್ಲ. ತಾನು ಹಾಗೆ ಮಾಡುವುದಿಲ್ಲ ಎಂದ. ಹಿರಿಯರಿಗೆ ಸವಾಲು ಹಾಕಿ ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ, ಹೆಂಡತಿಯನ್ನು ನೇರವಾಗಿ ತನ್ನ ಮನೆಗೇ ಕರೆದುಕೊಂಡು ಹೋದ. ಕುಲದ ಹಿರಿಯರಿಗೆ ಅದು ಪ್ರತಿಷ್ಠೆಯ ಪ್ರಶ್ನೆ, ಛಲದ ಪ್ರಶ್ನೆ. ಎಲ್ಲರೂ ಸೇರಿ ಪಂಚಾಯಿತಿ ಮಾಡಿದರು, ಹೆದರಿಸಿದರು. ಕುಮಾರ್ ಜಗ್ಗಲಿಲ್ಲ. ತಕ್ಷಣ ಹೆಂಡತಿಯನ್ನು ಕರೆತಂದು ತುಮಕೂರಿನಲ್ಲಿ ಸ್ನೇಹಿತರ ಮನೆಗೆ ಬಿಟ್ಟ. ತಾನು ಕೆಲಸದಲ್ಲಿದ್ದ ತುಮಕೂರಿನಲ್ಲೇ ಚಿಕ್ಕ ಮನೆ ಮಾಡಿ ಊರ ಕಡೆಗೆ ತಲೆ ಹಾಕುವುದೇ ಬಿಟ್ಟ. ಈವತ್ತೇ, ಗಲಾಟೆಯಾದ ಆರು ತಿಂಗಳ ನಂತರ, ಒಲ್ಲದ ಮನಸ್ಸಿನಿಂದ ನಮ್ಮ ಜತೆಗೆ ಬಂದಿದ್ದ. ಹಟ್ಟಿಯಲ್ಲಿ ಸಂಜೆ ಕಂಡಿದ್ದ ಸಿಡುಕು ನೋಟ, ಗುರುಗುಟ್ಟುವಿಕೆಯ ಅರ್ಥ ಹೊಳೆದುಹೋಯಿತು. ನಮ್ಮ ಗೆಳೆಯರ ಗುಂಪಿನಲ್ಲಿ ದೊಡ್ಡ ಸರಕಾರಿ ಅಧಿಕಾರಿಯೊಬ್ಬರಿದ್ದುದರಿಂದ ಗಲಾಟೆ ಆಗಲಿಲ್ಲ ಎಂದು ಅವನೇ ವಿವರಿಸಿದ. ಕೊನೆಗೆ ಉದ್ವಿಗ್ನನಾಗೇ ಹೇಳಿದ: ‘ಇಷ್ಟೆಲ್ಲಾ ಕೇಳಿದ ಮೇಲೂ ಈ ಕಾಡುಜನ ಹಂಗೇ ಗಣೆ ಊದಬೇಕು, ಕಥೆ ಹೇಳಬೇಕು, ಹಾಡಬೇಕು, ಅಂತ ಹೇಳ್ತೀರಾ?’ +ಮೌನವಾಗಿ ನಡೆಯುತ್ತಲೇ ಇದ್ದೆವು. ಬಂದ ಒಂದೆರಡು ಲಾರಿಗಳು ನಿಲ್ಲಲೇ ಇಲ್ಲ. ಜುಂಜಪ್ಪನ ಕಥೆಯ ಮಾದಕ ರಾಗ ಬಾಣಂತನಕ್ಕೆ ಹೆಂಗಸನ್ನು ಹೊರಗೆ ಹಾಕಿದ ಕ್ಷಣದಲ್ಲೇ ಹುಟ್ಟುತ್ತದೆಯೆ? ಒಂದೊನ್ನೊಂದು ಬಿಟ್ಟು ಇವು ಇರಲಾರವೆ? “ಆಕಾಸುದ ವೇಣಿ ಏಳು ಲೋಕದ ರಾಣಿ”ಯನ್ನು ಕರೆಯುವ ಕೊರವಂಜಿಯ ಕಥೆ ಇಂಥ ಉಗ್ರ ಕಟ್ಟುಪಾಡುಗಳಿಂದ ಮಾತ್ರ ಹುಟ್ಟುತ್ತದೆಯೆ? ಕುಮಾರ್ ಹೇಳುತ್ತಿದ್ದ: “ನಮ್ಮ ಜನ ‘ಡೆವಲಪ್’ ಆಗಬೇಕು. ಹೆಲ್ತ್ ವರ್ಕರ್‍ಸ್ ಗರ್ಭಿಣೀರನ್ನ ಬಲ್ವಂತವಾಗಿ ಎಳ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಜನ ‘ಮಾಡರ್ನ್’ ಆಗಬೇಕು.” +ನಾನು ಯೋಚಿಸಿದೆ: ಆಧುನಿಕ ಆಸ್ಪತ್ರೆ, ಶಾಲೆಕಾಲೇಜುಗಳು, ಇಲೆಕ್ಟ್ರಿಸಿಟಿ, ಬಸ್ಸುಗಳು ಬಂದ ಸಮಾಜದೊಳಗೂ ಆಕಾಸುದ ವೇಣಿ ಏಳು ಲೋಕದ ರಾಣಿಯನ್ನು ಕೊರವಂಜಿ ಕರೆಯಲಾರಳೆ? ಜುಂಜಪ್ಪನ ಕಥಾ ಲಹರಿ ಚಿಮ್ಮಲಾರದೆ? ಅಭಿವೃದ್ಧಿಯ ಈ ತರ್ಕ ಹೀಗೆ ಸಂಸ್ಕೃತಿಯ ಮೂಲ ಸೆಲೆಗಳನ್ನು ನಾಶಮಾಡಿ, ಬಂಡವಾಳಶಾಹಿ ಕುರೂಪವನ್ನು ಮಾತ್ರ ಸೃಷ್ಟಿಸಿ ಬಿಡುತ್ತದೆ. ಅಭಿವೃದ್ಧಿಯ ಪಥ ಏಕೆ ಕೆಲವು ಅತ್ಯುತ್ತಮ ಅಂಶಗಳಿಗೆ ಮಾರಕವಾಗಿ ಬಿಡುತ್ತದೆ? +ನಡೆಯುತ್ತ ನಡೆಯುತ್ತ ದಣಿವು ಹೆಚ್ಚುತ್ತಿದ್ದಂತೆ, ಈ ಪ್ರಶ್ನೆಗಳ ಚರ್ಚೆಗೆ ಪ್ರಯತ್ನಿಸಿದೆವು. “ಬಿಡಿ ಸಾರ್, ಬಿಡಿ. ಇವೆಲ್ಲಾ ಪ್ರಯೋಜನ ಇಲ್ಲ. ಮೊದಲು ಜನರ ಜೀವನ ಡೆವಲಪ್ ಆಗಲಿ” ಅಂತ ಒಂದೇ ರಾಗ ಹಿಡಿದು ವಾದಿಸುತ್ತಿದ್ದ ಜುಂಜಪ್ಪ ಉರುಫ್ ಕುಮಾರನ ದನಿಗೆ ಮಾತ್ರ ಶಕ್ತಿ ಏರುತ್ತ ಬರುತ್ತಿತ್ತು. ಯಾವ ಲಾರಿಗಳೂ ನಿಲ್ಲುವ ಹಾಗೆ ಕಾಣಲಿಲ್ಲ. +‘ನಾವು ನೀವು’ ವಾರಪತ್ರಿಕೆ ಇಷ್ಟಾರ್ಥ ಅಂಕಣದಲ್ಲಿ ಪ್ರಕಟ +***** +(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […] +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […] +ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_418.txt b/Kannada Sahitya/article_418.txt new file mode 100644 index 0000000000000000000000000000000000000000..f912c6ce5023a77735945757d31aed979e789fff --- /dev/null +++ b/Kannada Sahitya/article_418.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ +ಕನ್ನಡಕ್ಕೆ: ಎ. ಎನ್. ಪ್ರಸನ್ನ +ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ ಕಠಿಣ ಸಮಸ್ಯೆಗಳನ್ನು ಉಂಟುಮಾಡುವುದನ್ನು ಎಲ್ಲರೂ ಒಪ್ಪುತ್ತಾರೆ. ಮೂಲ ಕೃತಿಗೆ ಅನುವಾದವು ಎಷ್ಟು ಹತ್ತಿರ, ಎಷ್ಟು ನಿಷ್ಠೆಯಿಂದ ಇದೆ ಎಂಬ ಪ್ರಶ್ನೆಗಳನ್ನು ಎತ್ತಿ, ಉತ್ತರಗಳನ್ನು ಹುಡುಕುತ್ತ, ಮರು ಪ್ರಶ್ನೆಗಳನ್ನು ಎತ್ತುತ್ತ ವಾದವನ್ನು ನಿರಂತರವಾಗಿ ಮುಂದುವರಿಸಬಹುದು. ಅನುವಾದವೆಂಬ ಕ್ರಿಯೆಯ ಬಗ್ಗೆ ಇರುವ ಮೀಮಾಂಸೆಗಳು ನಾನಾ ರೀತಿಯ ಅಭಿಪ್ರಾಯಗಳನ್ನು ಮೂಡಿಸುತ್ತ, ಅಳಿಸುತ್ತ ಬಂದಿವೆ. ಒಂದು ರೀತಿಯಲ್ಲಿ ಇದು ಮುಗಿಯದ, ಒಣ ಚರ್ಚೆಯೇ ಸರಿ. ಈ ಚರ್ಚೆ ಅನುವಾದವಾಗಿರುವ “ಪಠ್ಯ”ದ ಕಾಣ್ಕೆಗಳನ್ನೂ, ನಾವು ಸ್ಪಂದಿಸಬೇಕಾದ ಅದರ ಅನುಭವಗಳನ್ನು ನಮ್ಮಿಂದ ದೂರವ ಮಾಡುತ್ತಲೂ ಇರುತ್ತದೆ. ಆದ್ದರಿಂದ ಅನುವಾದದ ಯಶಸ್ಸಿನ ಅಥವಾ ಸೋಲಿನ ಕಡೆ ಹೆಚ್ಚು ಗಮನ ಹರಿಸದೆ, [ಅದು ಬೇರೊಂದು ಸಂದರ್ಭದಲ್ಲಿ ಆಗಲಿ ಎಂದು ಆಶಿಸುತ್ತ] ಪ್ರಸನ್ನರು ಅನುವಾದಿಸಿರುವ ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ ಕೃತಿ ‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಸ್ವರೂಪದ ಬಗ್ಗೆ, ವ್ಯಾಪ್ತಿಯ ಕಡೆ ನನ್ನ ದೃಷ್ಟಿ ಈ ಮುನ್ನುಡಿಯಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ಮೊದಲೇ ಸೂಚಿಸಬಯಸುತ್ತೇನೆ. +ಕೆಲವು ಮೂಲಭೂತ ಅಂಶಗಳನ್ನು ಈ ಘಟ್ಟದಲ್ಲಿಯೇ ಇತ್ಯರ್ಥಮಾಡಿಕೊಳ್ಳುವುದು ಅಗತ್ಯ. ಮಾಂತ್ರಿಕ ವಾಸ್ತವತೆಯನ್ನು ಕೇವಲ ಸಾಹಿತ್ಯದ ಪ್ರಕಾರವಾಗಿ ನೋಡದೆ ಅದರ ಅನೇಕ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಳ ಮೂಲಕ ಗ್ರಹಿಸುವ ಅಗತ್ಯವಿದೆ. ಇದನ್ನು ಕೇವಲ ಸಾಹಿತ್ಯದ ಪ್ರಕಾರವಾಗಿ ಪರಿಗಣಿಸಿದರೆ ಇಲ್ಲಿ ಬರುವ ಅನೇಕ ಅತಾರ್ಕಿಕ, ಅತೀಂದ್ರಿಯ ಅಂಶಗಳನ್ನು ಸ್ವೀಕರಿಸುವ ನೆಲೆ ಯಾವುದಾಗಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಅಂಶಗಳನ್ನು ಒಪ್ಪದೆ ಇರುವ, ನಂಬದೆ ಇರುವ ವಿಚಾರವಾದಿಗಳು ಈ ಕಥನವನ್ನು ಹೇಗೆ ಸ್ವೀಕರಿಸಬೇಕು? ಆದ್ದರಿಂದ ಈ ಪ್ರಕಾರವನ್ನು ಬೇರೆ ರೀತಿಯಲ್ಲಿ ಅರಿಯಬೇಕು. +ಇಲ್ಲಿ ಬರುವ ‘ಮಾಯಾ’ ಪ್ರಪಂಚವನ್ನು ನಂಬಿಕೆಯ ನೆಲೆಯಿಂದ ಒಪ್ಪಿಕೊಳ್ಳಬೇಕೆ ಅಥವಾ ಕಾಲೆರಿಜ್ ಹೇಳುವ ಹಾಗೆ ವಿಲಿಂಗ್ ಸಸ್ಪೆನ್ಷನ್ ಆಫ್ ಡಿಸ್‌ಬಿಲೀಫ್ ಎಂಬ ಸೂತ್ರದ ಮೂಲಕ ನೋಡಬೇಕೆ? ಓದುಗನಾಗಿ ಈ ಕಥನಕ್ಕೆ ಸ್ಪಂದಿಸುವ ನೆಲೆ ಯಾವುದು? ಎಲ್ಲವನ್ನೂ ನಂಬಿ ಒಪ್ಪುವ ಓದುಗನಿಗೆ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ ಎಲ್ಲವನ್ನೂ ನಂಬಿ ಬಿಟ್ಟರೆ ಇದು ಮಾಂತ್ರಿಕ ವಾಸ್ತವತೆ ಆಗುವುದಿಲ್ಲ. ಅದು ಸಾಮಾನ್ಯ ವಾಸ್ತವತೆಯೇ ಆಗಿಬಿಡುತ್ತದೆ. +ನಂಬಿಕೆಯ ಅಥವಾ ಅಪನಂಬಿಕೆಯ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಸಾಹಿತ್ಯ ಪ್ರಕಾರವೆಂದು ಈ ರೀತಿಯ ಕಥನಗಳನ್ನು ಅರ್ಥೈಸಿಕೊಳ್ಳುವವರು ಇದನ್ನು ಸಾಂಕೇತಿಕ ನೆಲೆಯಿಂದ ನೋಡಬಹುದು. ಈ ಕಥನವನ್ನು ರೂಪಕವಾಗಿ ಸ್ವೀಕರಿಸಬಹುದು. ಆಗ ಮಾಂತ್ರಿಕ ವಾಸ್ತವತೆಯ ಕಥನಗಳು ಸಂಕೇತಗಳ ಮೂಲಕ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅರ್ಥಗಳನ್ನು ಕಟ್ಟಿಕೊಡುವ ಪಠ್ಯಗಳಾಗುತ್ತವೆ. ಓದುಗನ ನೆಲೆಯನ್ನು ನಿರ್ಧರಿಸುತ್ತಲೇ ಮಾಂತ್ರಿಕ ವಾಸ್ತವತೆ ತನ್ನ ಅರ್ಥವನ್ನು ಅನಾವರಣ ಮಾಡುತ್ತದೆ ಎಂದು ಹೇಳುವ ಅಗತ್ಯವಿರುವುದರಿಂದ ಇವೆಲ್ಲವನ್ನು ಇಲ್ಲಿ ನಾನು ಚರ್ಚಿಸಿರುವುದು. +ಒಂದು ಸಂದರ್ಶನದಲ್ಲಿ ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ನಂಬಿಕೆ ಇಲ್ಲದೆ ಹೋಗಿದ್ದರೆ ಈ ಮಾಂತ್ರಿಕ ವಾಸ್ತವತೆಯ ಕಥೆಯನ್ನು ನಾನು ಬರೆಯುತ್ತಿರಲಿಲ್ಲ. ನಂಬಿಕೆ ಇರುವುದರಿಂದಲೇ ನಾನು ಇದನ್ನು ಬರೆದಿರುವುದು” ಎನ್ನುತ್ತಾನೆ. ಅಂದರೆ ಮಾರ್ಕೆಜ್ ನಂಬುವ ವಾಸ್ತವತೆ ನಮ್ಮ ವಾಸ್ತವತೆಯೂ ಆಗುವ ಸಾಧ್ಯತೆ ಇರಬೇಕಾಗುತ್ತದೆ. ಹಾಗಾಗದಿದ್ದರೆ ಅವನ ಕಥನದ ಅನುಭವ ನಮಗೆ ದಕ್ಕುವುದಾದರೂ ಹೇಗೆ? ಅವನು ಬಳಸುವ ‘ನಂಬಿಕೆ’ ಎಂಬ ಮಾತಿನಲ್ಲಿ ಈ ರೀತಿಯ ಬರವಣಿಗೆಯ ಮಾರ್ಗವೂ ಸೇರಿಕೊಳ್ಳುತ್ತದೆ. ಮಾಂತ್ರಿಕ ವಾಸ್ತವತೆಯ ಅರ್ಥವನ್ನು ನಿರ್ಧರಿಸುವುದಕ್ಕೆ, ವ್ಯಾಖ್ಯಾನಿಸುವುದಕ್ಕೆ ಓದುಗನ ನೆಲೆಯ ಪ್ರಶ್ನೆ ಇತ್ಯರ್ಥವಾಗುವುದು ತೀರ ಅಗತ್ಯ. ಬಹುಶ: ಪ್ರಪಂಚದೆಲ್ಲ ಕಡೆ ಇದರ ಪೂರೈಕೆ ಸಕಾರಾತ್ಮಕವಾಗಿರುವುದಕ್ಕೆ ಮಾರ್ಕೆಜ್ ಗಳಿಸಿದ ಮನ್ನಣೆಯೇ ಸಾಕ್ಷಿ. +* * * +‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಕಥನದ ಅನೇಕ ಆಯಾಮಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಬಯಸುತ್ತೇನೆ. ಮಾರ್ಕೆಜ್‌ನ ಕಾದಂಬರಿಯನ್ನು ಸೂಕ್ಷ್ಮವಾಗಿ ಓದಿದಾಗ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ಹೊಳಹುಗಳು ಗೋಚರಿಸತೊಡಗುತ್ತವೆ. ಇಲ್ಲಿ ಚಿತ್ರಿತವಾಗಿರುವ ಅಧಿಕಾರಶಾಹಿ, ಯುದ್ಧ, ಮನುಷ್ಯ ಸಂಬಂಧಗಳ ಸಂಕೀರ್ಣ ನೆಲೆಗಳು ಸಾಮಾನ್ಯ ಮಟ್ಟದಲ್ಲಿ ಗ್ರಹಿಕೆಗೆ ಬರದಿದ್ದರೂ ನಮ್ಮ ಅನುಭವ ಅಥವಾ ಕಲ್ಪನೆಯನ್ನು ಮೀರಿದ ಸ್ತರದಲ್ಲೇನೂ ನೆಲೆಸಿರುವುದಿಲ್ಲ. ಅಂದರೆ ಮಾಂತ್ರಿಕ ವಾಸ್ತವತೆಯ ಜಗತ್ತು ಬೇರೊಂದು ಕ್ರಮದ ಓದನ್ನು, ಗ್ರಹಿಕೆಯನ್ನು ನಮ್ಮಿಂದ ಅಪೇಕ್ಷಿಸುತ್ತದೆ. ತನ್ಮೂಲಕ ಸಾಮಾನ್ಯ ವಾಸ್ತವದಂತೆ ಅರಳುತ್ತದೆ. ಹೀಗೆ ಬಾಹ್ಯ ಪ್ರಪಂಚವನ್ನು ಬಿಚ್ಚಿಡುತ್ತಲೇ ಮಾಂತ್ರಿಕ ವಾಸ್ತವತೆ ವ್ಯಕ್ತಿಗಳ ಒಳಪ್ರಪಂಚದ, ಅಂತರಂಗದ, ಬಯಕೆ, ಆಸೆ, ಹತಾಶೆ, ಕಲ್ಪನೆಗಳನ್ನೂ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಯಾವುದೇ ವ್ಯಕ್ತಿಯ ಬದುಕು, ಅದರ ಅನೇಕ ಒಳಸಂಗತಿಗಳು, ರಹಸ್ಯ ವಿಚಾರಗಳು, ಸಮಷ್ಟಿಯ ಬದುಕಿಗೆ ಪೂರಕವಾದ ವಿಷಯಗಳೇ ಹೊರತು ವಿರೋಧಿ ವಿಷಯಗಳಲ್ಲ ಎಂಬುದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡುವುದರಲ್ಲಿ ಮಾಂತ್ರಿಕ ವಾಸ್ತವತೆಯ ಯಶಸ್ಸನ್ನು ನಾವು ಕಾಣಬಹುದು. +ಮಾರ್ಕೆಜ್‌ಗಿಂತ ಬಹಳ ಹಿಂದೆಯೇ ಫ್ರಾನ್ಜ್ ಕಾಫ್ಕಾ ಇದನ್ನು ತನ್ನ ಕೃತಿಗಳಲ್ಲಿ ಮಾಡಿ ತೋರಿಸಿದ್ದ. ನನ್ನ ಪ್ರಕಾರ ಕಾಫ್ಕಾನ ಮಾದರಿಯೇ ಮಾರ್ಕೆಜ್‌ಗೆ ದಾರಿದೀಪ. ಇದನ್ನು ಮುಂದುವರೆಸಿ ಹೇಳುವುದಾದರೆ ಕಾಫ್ಕಾನಲ್ಲಿ ಯಾವ ರೀತಿಯ ಸಂಕಟ, ನೋವು, ಯಾತನೆ ಇದೆ ಎಂದರೆ, ಆ ಅನುಭವಗಳ ಮೂಲಕವೇ ಅವನ ಜಗತ್ತು ಒಂದು ‘ಧಾರ್ಮಿಕ’ ನೆಲೆಯನ್ನು ಕಂಡುಕೊಳ್ಳುತ್ತದೆ. ಅಂದರೆ ಕಾಫ್ಕಾನ ಹೊರಜಗತ್ತು ಕೂಡ ಆ ವ್ಯಕ್ತಿಗಳ ಅಂತರಂಗದ ಶುದ್ಧತೆಯನ್ನು, ಸಾಚಾತನವನ್ನು, ಶ್ರದ್ಧೆಯನ್ನು ಪರೀಕ್ಷಿಸುವ, ಬಹಿರಂಗಪಡಿಸುವ ಸಂಕೇತಗಳು. ಆ ಹೊರಜಗತ್ತಿನ ಜೊತೆ ಬಲವಂತವಾಗಿ ಮುಖಾಮುಖಿ ಮಾಡಬೇಕಾದ ವ್ಯಕ್ತಿ ತನ್ನ ಒಳಗಿನಿಂದಲೇ ತನ್ನ ಸತ್ಯವನ್ನು ನಿತ್ಯದ ಅನುಭವದ ಮೂಲಕ ಕಂಡುಕೊಳ್ಳುತ್ತಾನೆ. ಇದು ಸಾವಿನ ಮೂಲಕ ಆಗಬಹುದು ಅಥವಾ ರೂಪಾಂತರದ ಮೂಲಕ ಆಗಬಹುದು. ಆದರೆ ‘ಮನಸ್ಸಿನ ಧಾರ್ಮಿಕತೆ’ಯನ್ನು ಕಂಡುಕೊಳ್ಳುವುದು ಈ ಬಲವಂತದ ಮುಖಾಮುಖಿಯ ಮೂಲಕವೇ. ಕಾಫ್ಕಾನ ಜಗತ್ತಿನಲ್ಲಿ ಮೋಸ, ತಟವಟ, ಹಿಂಸೆ, ಕ್ರೌರ್ಯ, ಅಮಾನವೀಯತೆ, ಲೋಕದ ಇತಿಹಾಸದ, ನಾಗರಿಕತೆಯ ದಾರಿಯನ್ನು ಸೂಚಿಸುವ ಅಂಶಗಳು. ಇದಕ್ಕೆ ವಿರುದ್ಧವಾಗಿ ವ್ಯಕ್ತಿಯ ಸೆಣೆಸಾಟ, ಆಕ್ರೋಶ, ಸಂಕಟ, ಯಾತನೆ, ಸತ್ಯವನ್ನು ಅರಿಯುವ ‘ಧಾರ್ಮಿಕ’ ಕ್ರಿಯೆಯಾಗುತ್ತದೆ. ಕಾಫ್ಕಾನ ‘ಧಾರ್ಮಿಕ’ ನೆಲೆಯೇ ಮಾರ್ಕೆಜ್‌ನ ಮಾರ್ಗಕ್ಕೆ ಬುನಾದಿ. ಇದನ್ನು ನಾವು ಗಮನಿಸಬೇಕು. +ಆದರೆ ಮಾರ್ಕೆಜ್ ಕಾಫ್ಕಾನ ಉಗ್ರಲೋಕವನ್ನು, ಭೀಕರ ಪ್ರಪಂಚವನ್ನು ದಾಟಿ ಬರುತ್ತಾನೆ. ಸಂತೋಷ, ಉಲ್ಲಾಸ, ಸಂಭ್ರಮ, ಮಾರ್ಕೆಜ್‌ನ ಜಗತ್ತಿನ ಲಕ್ಷಣಗಳು. ಪ್ರೇಮ, ಪ್ರೀತಿ, ಬಯಕೆ, ಸಂಸಾರ ಈ ಜಗತ್ತಿನ ದ್ರವ್ಯಗಳು. ಇಲ್ಲಿ ಬರುವ ವ್ಯಕ್ತಿಗಳು, ಅವರ ವ್ಯವಹಾರಗಳು ಸಾಧಾರಣ ಬದುಕಿನ ಲಕ್ಷಣಗಳೇ. ಇಲ್ಲಿ ಯಾವುದೂ ಅಸಾಧಾರಣವಲ್ಲ, ಅಪರೂಪವಾದದ್ದಲ್ಲ. ಆದರೆ ಈ ವ್ಯಕ್ತಿಗಳ ವ್ಯಾಪಾರದ ಮೂಲಕ ಮಾರ್ಕೆಜ್ ಇನ್ನೂ ಅನೇಕ ಜಗತ್ತುಗಳನ್ನು, ಲೋಕಗಳನ್ನು ಕಟ್ಟುತ್ತಾನೆ. ಇವುಗಳ ವ್ಯಾಖ್ಯಾನದ ಅಗತ್ಯವಿದೆ. +ಒಂದು, ಮಾರ್ಕೆಜ್ ಆಧುನಿಕ ಕಾಲದಲ್ಲಿ ಒಂದು ಪುರಾಣವನ್ನು, ಐತಿಹ್ಯವನ್ನು ಕಟ್ಟುತ್ತಾನೆ. ಸಾಧಾರಣ ಜಗತ್ತಿನ ವ್ಯವಹಾರಗಳ ಮೂಲಕ, ದಿನನಿತ್ಯದ ಬದುಕಿನ ಕ್ರಿಯೆಗಳ ಮೂಲಕ, ಮಾರ್ಕೆಜ್ ಬೇರೊಂದು ಪ್ರಪಂಚವನ್ನು ನಮ್ಮ ಪ್ರಙಗೆ ತಂದೊಡ್ಡುತ್ತಾನೆ. ಅಂದರೆ ವಾಸ್ತವತೆಗೆ ಪೂರಕವಾಗಿ ‘ಅವಾಸ್ತವಿಕ’ ಬದುಕಿನ ಕ್ರಮವನ್ನು ಮಾರ್ಕೆಜ್ ನಮ್ಮ ಮುಂದಿಡುತ್ತಾನೆ. ಮಾರ್ಕೆಜ್‌ನ ಪಠ್ಯದಲ್ಲಿ ಆಗುವ ಈ ಸಮ್ಮಿಲನವೇ ಬಹಳ ಮುಖ್ಯವಾದದ್ದು – ಸಾಧಾರಣ ಮತ್ತು ಅಸಾಧಾರಣ, ಗೋಚರ ಮತ್ತು ಅಗೋಚರಗಳ ನಡುವಿನ ಸಂಬಂಧದ ಶೋಧನೆ. ಇದನ್ನು ಬೇರೊಂದು ರೀತಿಯಲ್ಲಿ ಹೇಳುವ ಅಗತ್ಯವಿದೆ. +ಆಧುನಿಕ ಯುಗದಲ್ಲಿ ಮಾರ್ಕೆಜ್ ಕಟ್ಟುತ್ತಿರುವುದು ಪೂರ್ವಸೂರಿಗಳ ಬದುಕಿನ ಕ್ರಮವನ್ನು. ಈ ಬದುಕಿನ ಮಾರ್ಗ ಈಗ ಇಲ್ಲದಿದ್ದರೂ ಇದು ಸ್ಮೃತಿಯಿಂದ ಮಾಸುವುದಿಲ್ಲ. ಒಂದಲ್ಲ ಒಂದು ನೆಲೆಯಲ್ಲಿ ಈ ಗತಕಾಲದ ಬದುಕು ನಮ್ಮೊಡನೆ ಇಂದಿಗೂ ಇರುತ್ತದೆ – ಅವಶೇಷಗಳ ಮೂಲಕ, ಅಲ್ಲಿ-ಇಲ್ಲಿ ಉಳಿದಿರುವ ವ್ಯಕ್ತಿಗಳ ಮೂಲಕ ಅಥವಾ ಖಂಡಿತವಾಗಿಯೂ ನಮ್ಮ ಸ್ಮೃತಿಯಲ್ಲೇ ಜೀವಂತವಾಗಿರುವ ಸಂಬಂಧಗಳಿಂದ. ಎಷ್ಟೇ ನವಾಧುನಿಕ ಜಗತ್ತು ಬಂದರೂ ಎಲ್ಲೋ ಒಂದು ಮೂಲೆಯಲ್ಲಿ ಭೂತಸ್ಮರಣೆ, ನೆನಪು ಮತ್ತು ಅನುಭವ ಮನುಷ್ಯಪ್ರಙಯಿಂದ ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ. ಎಲ್ಲ ಕಾಲದಲ್ಲೂ ಭೂತ-ಭವಿಷ್ಯಗಳ ಕಲ್ಪನೆಯನ್ನು, ಚಿಂತನೆಯನ್ನು, ಅನುಭವವನ್ನು ವರ್ತಮಾನದಲ್ಲಿ ಮನುಷ್ಯನ ಪ್ರಙ ಹಿಡಿಯುತ್ತಲೇ ಇರುತ್ತದೆ. ಭೂತಕಾಲದ ಐತಿಹ್ಯಗಳು ನಮಗೆ ವಿವಿಧ ಅರ್ಥಗಳನ್ನು ವಿವಿಧ ನೆಲೆಗಳಲ್ಲಿ ಕೊಡುತ್ತಲೇ ಇರುತ್ತವೆ. ಇದನ್ನು ಮಾರ್ಕೆಜ್ ಸೃಜನಶೀಲ ನೆಲೆಯಲ್ಲಿ ಶೋಧಿಸುತ್ತಾನೆ. ಇದನ್ನೇ ಯುಂಗ್ ಆರ್ಕಿಟೈಪ್ಸ್‌ನ ಪರಿಕಲ್ಪನೆಯ ಮೂಲಕ ಹಿಡಿಯಲು ಹೊರಟಿದ್ದು. ಯುಂಗ್ ಅದನ್ನು ಕಲೆಟ್ಕೀವ್ ಅನ್‌ಕಾನ್ಷಸ್ ಎಂದು ವರ್ಣಿಸಿದ. ಹಾಗೆ ನೋಡಿದರೆ ನಮ್ಮಲ್ಲೇ ಎಡಪಂಥೀಯ ಶಾಸ್ತ್ರದ ನೆಲೆಯಿಂದ ಕೊಸಾಂಬಿಯವರು ‘ಮಿಥ್ ಅಂಡ್ ರಿಯಾಲಿಟಿ’ ಎಂಬ ಕೃತಿಯಲ್ಲಿ ಇದನ್ನು ವಿವರಿಸುವ ಪ್ರಯತ್ನವನ್ನು ಮಾಡಿದರು. ಕ್ಯಾಸಿರೆರ್ ಇದನ್ನು ‘ಮೈಥೋಪೋಯಿಕ್ ಇಮ್ಯಾಜಿನೇಷನ್’ ಎಂದು ಬಣ್ಣಿಸುತ್ತಾನೆ. +ಎರಡನೆಯದಾಗಿ, ಮಾಂತ್ರಿಕ ವಾಸ್ತವತೆಯನ್ನು ಮ್ಯಾಜಿಕ್ ಮತ್ತು ರಿಯಲಿಸಮ್‌ಗಳನ್ನು ವಿರೋಧಾತ್ಮಕ ಚೌಕಟ್ಟಿನಲ್ಲಿ ಅರಿಯುವ ಕ್ರಮಕ್ಕೆ ವಿರುದ್ಧವಾದ ದೃಷ್ಟಿಕೋನದ ಕಲ್ಪನಾಶಕ್ತಿ ಎಂದು ತಿಳಿಯಬೇಕು. ಅಂದರೆ ವಾಸ್ತವದಲ್ಲೇ ಅಡಗಿರುವ ಮಾಂತ್ರಿಕತೆಯನ್ನು ಮತ್ತು ಮಾಂತ್ರಿಕ ಎಂದು ವರ್ಣಿಸಲ್ಪಡುವ ತಾಣದಲ್ಲಿರುವ ವಾಸ್ತವತೆಯನ್ನು ಗ್ರಾಹ್ಯಮಾಡಿಕೊಳ್ಳುವ ಹಾದಿ. ಕಣ್ಣಿಗೆ ಕಾಣುವ ವಾಸ್ತವ, ಭೌತಿಕ ಜಗತ್ತು ಮತ್ತು ಪದಾರ್ಥಗಳ ‘ಕಣ್ಣಿಗೆ ಗೋಚರಿಸದ’ ಅಂಶಗಳನ್ನು ಪ್ರಙಗೆ ಆವಿಷ್ಕಾರ ಮಾಡಿಕೊಡುವ ವಿಧಾನವಿದು. ಇದು ‘ಅವಾಸ್ತವ’ದ ಜಗತ್ತಲ್ಲ. ಆದರೆ ಭೌತಿಕ ಜಗತ್ತಿನ ಅನೇಕ ‘ಮಾಂತ್ರಿಕ’ ಅಂಶಗಳನ್ನು ಗುರುತಿಸುವ, ಅವುಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುವ ಸೂಕ್ಷ್ಮಪ್ರಙಯನ್ನು ಎಚ್ಚರಗೊಳಿಸುವ ಪರಿ ಇದು. ಇದು ಸಾಮಾನ್ಯ ಅರ್ಥದ ‘ಮ್ಯಾಜಿಕ್’ ಅಲ್ಲ, ನಾವು ಅರ್ಥಮಾಡಿಕೊಳ್ಳುವಂಥ ‘ಯಕ್ಷಿಣಿ’ ವಿದ್ಯೆ ಅಲ. ಙ್ಞನಕ್ಕೆ, ಪ್ರಙಗೆ ಮತ್ತೊಂದು ಹಂತವನ್ನು ಒದಗಿಸಿಕೊಡುವ ಅಪರೂಪದ ವಿಸ್ಮಯಕಾರಿ ಅರಿವಿದು. ಇಲ್ಲಿ ಯಾವುದೂ ಕಲ್ಪಿತವಾದದ್ದಲ್ಲ. ಎಲ್ಲವೂ ನಿಜ. ಏಕೆಂದರೆ ಎಲ್ಲವೂ ಭೌತಿಕ ಜಗತ್ತಿನ ಪರಿಮಿತಿಯೊಳಗೆ ಇದೆ. ಈ ದಿನನಿತ್ಯದ, ರೂಢಿಯಿಂದ ಅರ್ಥವಾಗುವ ಲೋಕವನ್ನು, ವ್ಯಕ್ತಿಯನ್ನು, ಅಂತರಂಗದಿಂದ ಕಾಣತೊಡಗಿದರೆ ದಕ್ಕುವ ‘ಮಾಂತ್ರಿಕ’ ಸತ್ಯ ಎಲ್ಲರಿಗೂ ಲಭ್ಯವಾಗುವ ಸಾಮಾನ್ಯ ವಿಷಯವೇ ಆಗಿಬಿಡುತ್ತದೆ. ಎಲ್ಲರೂ ನಂಬಬಹುದಾದ ಸತ್ಯ ಇದು. ಆದ್ದರಿಂದಲೇ ಮಾರ್ಕೆಜ್ ತನ್ನ ಪ್ರಪಂಚದ ಬಗ್ಗೆ ‘ನಂಬಿಕೆ’ಯ ಮಾತನಾಡುವುದು. +* * * +‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ವ್ಯಾಪ್ತಿಯ ಬಗ್ಗೆ ಇಲ್ಲಿ ಮಾತನಾಡುವುದು ಅತ್ಯವಶ್ಯಕ. ‘ಇತಿಹಾಸ’ ಸಾಮಾನ್ಯವಾಗಿ ಪ್ರಬಲವಾಗಿರುವ, ಶ್ರೀಮಂತವಾಗಿರುವ ದೇಶಗ, ನಾಗರಿಕತೆಗಳ, ವ್ಯಕ್ತಿಗಳ ಕಥನವೇ ಆಗಿರುತ್ತದೆ. ಅಧಿಕಾರ, ಸಾರ್ವಭೌಮಿತ್ವ ‘ಇತಿಹಾಸ’ದ ಸೃಷ್ಟಿಯನ್ನು ನಿಯಂತ್ರಿಸುವುದು ಸಾಮಾನ್ಯ ಸಂಗತಿ. ಆಧುನಿಕ ಜಗತ್ತಿನಲ್ಲಿ ಇವೆಲ್ಲವನ್ನೂ ಅಮಾನವೀಯವಾಗಿ ಪ್ರದರ್ಶಿಸಿ ಮೆರೆದಿರುವ ದೇಶ ಅಮೆರಿಕ. ಯಾವುದನ್ನೂ ಪರಿಗಣಿಸದೆ ಕೇವಲ ತನ್ನ ಹಿತವನ್ನು ಮಾತ್ರ ಕಾಪಾಡಿಕೊಂಡು ಬಂದಿರುವ ದೇಶ ಅಮೆರಿಕ, ಜಗತ್ತಿನ ನಾಯಕ ದೇಶ. ಲ್ಯಾಟಿನ್ ಅಮೆರಿಕದ ದೇಶಗಳು ಈ ಅಮೆರಿಕದ ಪೈಶಾಚಿಕ ಭೂಮಿಕೆಯಿಂದ ಎಲ್ಲ ರೀತಿಯಲ್ಲಿ ತತ್ತರಿಸಿ ಹೋಗಿವೆ – ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ. ಇಂದಿನ ಲ್ಯಾಟಿನ್ ಅಮೆರಿಕ ದೇಶಗಳ ಬವಣೆಗೆ ಅಮೆರಿಕವೇ ಕಾರಣ ಎನ್ನುವುದನ್ನು ಪ್ರಾಥಮಿಕ ಙ್ಞನ ಇರುವ ಎಲ್ಲರೂ ಒಪ್ಪುತ್ತಾರೆ. ಇಲ್ಲಿ ಅಮೆರಿಕವನ್ನು ದೂರಿಬಿಟ್ಟರೆ ಸಾಲದು. ಆಧುನಿಕ ಕಾಲದಲ್ಲಿ ಯೂರೋಪಿನ ಕಥೆ ಹೇಳುವುದೆಂದರೆ ಇದನ್ನೇ ಹೇಳಿದಂತೆ. ಪಾಶ್ಚಿಮಾತ್ಯ ಜಗತ್ತು ಬೇರೆ ದೇಶಗಳ, ಸಂಸ್ಕೃತಿಗಳ, ನಾಗರಿಕತೆ ಮೇಲೆ ನಡೆಸಿರುವ ದಬ್ಬಾಳಿಕೆಯ ಕಥನವೇ ಆಧುನಿಕ ಜಗತ್ತಿನ ‘ಇತಿಹಾಸ’. ಆದ್ದರಿಂದಲೇ ಆಫ್ರಿಕಾದ, ಲ್ಯಾಟಿನ್ ಅಮೆರಿಕದ ಬರಹಗಾರರು ಸಾಮಾನ್ಯವಾಗಿ ಜಗತ್ತು ಅರಿಯದ, ಎಲ್ಲೋ ಮುಳುಗಿಹೋಗಿರುವ, ಕಣ್ಣಿಗೆ ಕಾಣದ ತಮ್ಮ ಲೋಕಗಳ, ನಾಗರಿಕತೆಗಳ ಕಥನಗಳನ್ನು ಸೃಸ್ಟಿಸಿರುವುದು. +ಪಾಶ್ಚಿಮಾತ್ಯ ನಾಗರಿಕತೆ [ವಿಶೇಷವಾಗಿ ಬಂಡವಾಳಶಾಹಿ ನಾಗರಿಕತೆ] ವಿಙ್ಜನ, ಸಂಸ್ಕೃತಿ, ವಿಚಾರ, ಕಲೆ ತನ್ನ ಕೊಡುಗೆಗಳು ಎಂದು ಸ್ಥಾಪಿಸಿ ಅವುಗಳನ್ನು ಎಲ್ಲರ ಮೇಲೆ ಹೇರಿದೆ. ಆಂದರೆ ಇವೆಲ್ಲ ಪಶ್ಚಿಮದಿಂದ ಬಂದರೆ ಮಾತ್ರ ನಾಗರಿಕ ಸಂಕೇತಗಳು. ಇವುಗಳಿಗೆ ಪರ್ಯಾಯವಿಲ್ಲ. ಅಷ್ಟೇ ಅಲ್ಲ, ಬೇರೆ ದೇಶಗಳ ಕಲೆ, ವಿಙ್ಞನ ಇತ್ಯಾದಿಗಳು ‘ಅನಾಗರಿಕ’ ಆದಿವಾಸಿಗಳ ಬಾಲಿಶ ಸಂಗತಿಗಳು. ಆಧುನಿಕ ಪಾಶ್ಚಿಮಾತ್ಯ ಜಗತ್ತಿನ ಕೊಡುಗೆಗಳು ಮಾತ್ರ ಅಧಿಕೃತವಾದ, ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯಗಳು ಎಂದು ತಮ್ಮ ಯಜಮಾನಿಕೆಯನ್ನು ಮೆರೆದಿವೆ. ಇದಲ್ಲದೆ ದುರದೃಷ್ಟದಿಂದ ಪಾಶ್ಚಿಮಾತ್ಯ ನಾಗರಿಕತೆಯಿಂದ ಹೊರಗಿರುವ ಎಲ್ಲ ಪ್ರದೇಶಗಳ ಕಥನಗಳನ್ನು ಸೃಷ್ಟಿಸುವ ಅಧಿಕಾರವಿರುವುದು ಬಲಿಷ್ಠ ನಾಗರಿಕತೆಗೆ ಮಾತ್ರ. ಆದ್ದರಿಂದಲೇ ಅವು ಪಾಶ್ಚಿಮಾತ್ಯ ಸಮಾಜಗಳನ್ನು ಹೊರತುಪಡಿಸಿ ಇತರೆ ಸಮಾಜಗಳಬಗ್ಗೆ ‘ಅಧಿಕೃತ’ ಚತ್ರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು. +ಆಧುನಿಕ ನಾಗರಿಕತೆ ಕಾಣದ, ಅರ್ಥಮಾಡಿಕೊಳ್ಳದ ಅನೇಕ ದೇಶಗಳು, ಸಂಸ್ಕೃತಿಗಳು, ನಾಗರಿಕತೆಗಳು ತಮ್ಮ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಂಡಿವೆ, ತಮ್ಮ ಬದುಕನ್ನು ಕಾಪಾಡಿಕೊಂಡಿವೆ; ತಮ್ಮ ಕಾಲದ ಕಲ್ಪನೆಯನ್ನು ಉಳಿಸಿಕೊಂಡಿವೆ. ಆ ಸಮುದಾಯಗಳ ಪ್ರಙಯ ರೂಪುರೇಷೆಗಳೇ ಬೇರೆ; ತಮ್ಮನ್ನು ಕಂಡುಕೊಳ್ಳುವ ಕ್ರಮವೇ ಬೇರೆ. ಈ ಜಗತ್ತುಗಳು, ಸಮುದಾಯಗಳು ಆಕ್ರಮಣಕ್ಕೆ ಒಳಗಾಗಿ ಎಲ್ಲ ರೀತಿಯಲ್ಲೂ ನಾಶವಾಗುತ್ತಿವೆ. ಇತಿಹಾಸವೆಂದರೆ ಈ ಸಮುದಾಯಗಳ ಕಥನವೂ ಹೌದು. ಇವುಗಳನ್ನು ಪ್ರವೇಶಿಸಿ, ಒಳಸ್ವರೂಪವನ್ನು ಅರಿಯಬೇಕೆಂದರೆ ಬೇರೊಂದು ಮಾರ್ಗದ ಅಗತ್ಯವಿದೆ. ಪಾಶ್ಚಿಮಾತ್ಯ ದೇಶಗಳು ನಿರ್ಮಿಸಿರುವ ಪ್ರಙಯಿಂದ, ತಂತ್ರಙ್ಞನದಿಂದ ಇದು ಸಾಧ್ಯವಿಲ್ಲ. ಈ ಜಗತ್ತುಗಳ ‘ಮಾಂತ್ರಿಕತೆ’ಯನ್ನು ಹಿಡಿಯಲು ಬೇರೊಂದು ‘ವಾಸ್ತವ’ ಸಂವೇದನೆ, ಪ್ರಙ ಇರಬೇಕು. ಈಗ ಸಿದ್ಧಗೊಳಿಸಲ್ಪಟ್ಟಿರುವ ‘ವಾಸ್ತವತೆ’ಯ ಙ್ಞನ ಈ ‘ವಾಸ್ತವ’ವನ್ನು ಗ್ರಹಿಸಲಾರದು. ಇದಕ್ಕಾಗಿಯೇ ಮಾರ್ಕೆಜ್ ಈ ರೀತಿಯ ‘ಮಾಂತ್ರಿಕ ವಾಸ್ತವತೆ’ಯನ್ನು ಸೃಷ್ಟಿಸಿರುವುದು. +ಈ ಜಗತ್ತಿನ ಅಂತರಂಗದಲ್ಲೇನಿದೆ? ಈ ಸಮುದಾಯದ ಗರ್ಭದೊಳಗೆ ಅಡಗಿರುವ ಚೈತನ್ಯಗಳು ಯಾವ ರೀತಿಯವು? ಈ ಪ್ರಶ್ನೆಗಳಿಗೆ ಉತ್ತರ ಈ ಸಮುದಾಯಗಳ ದಿನನಿತ್ಯದ ಬದುಕಿನ ಕ್ರಮದೊಳಗಿನಿಂದಲೇ ಬರುತ್ತವೆ. ಈ ಅಙ್ಞತ ಜಗತ್ತಿನ ಲಕ್ಷಣಗಳನ್ನು ಮಾರ್ಕೆಜ್ ಚಿತ್ರಸಿರುವ ರೀತಿಯನ್ನು ಕೆಲವು ನಿದರ್ಶನಗಳ ಮೂಲಕ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಮಾರ್ಕೆಜ್‌ನ ಕಾದಂಬರಿಯ ಲೋಕದ ಒಳ ಮತ್ತು ಹೊರಗಿನ ಆವರಣಗಳು, ಅಲ್ಲಿನ ವ್ಯಕ್ತಿಗಳು ಬಹುಶ: ನಾವು ಎಂದೂ ನೇರವಾಗಿ ಕಂಡಿರದ, ಅನುಭವಿಸದ ಭಾವನೆಗಳನ್ನು, ಯೋಚನೆಯ ಲಹರಿಗಳನ್ನು ನಮ್ಮ ಮುಂದೆ ಸದ್ಯೋಜಾತವಾಗಿ ಪ್ರತ್ಯಕ್ಷಪಡಿಸುತ್ತವೆ. ನಮ್ಮಿಂದ ಬಹಳ ದೂರದಲ್ಲಿದ್ದರೂ, ನಮ್ಮ ಅನುಭವಗಳಿಗೆ ಭಿನ್ನವಾಗಿದ್ದರೂ, ಇವುಗಳು ನಾವು ಸ್ಪಂದಿಸಲಾಗದ ವಿಷಯಗಳಲ್ಲ. ಈ ಪ್ರಪಂಚವನ್ನು ಪರಿಚಯಮಾಡಿಕೊಳ್ಳುತ್ತ, ಈ ಪ್ರಪಂಚದ ಜನರನ್ನ ಹತ್ತಿರದಿಂದ ಕಾಣುತ್ತ, ನಾವು ಇವೆಲ್ಲದರ ಜೊತೆ ಸಂಭಾಷಣೆಯಲ್ಲಿ ತೊಡಗಬಹುದು; ನಂಟು ಬೆಳೆಸಬಹುದು. ಈ ಅಙ್ಞನ ಜಗತ್ತಿಗೆ ಪ್ರವೇಶ ಕಷ್ಟಸಾಧ್ಯ. +ಇವೆಲ್ಲವನ್ನೂ ಚಲನ ಚಿತ್ರ ಸಂಸ್ಕೃತಿ ಬೇರೊಂದು ವಿಶಿಷ್ಟ ರೀತಿಯಲ್ಲಿ ಅದ್ಭುತ ಪ್ರತಿಮೆಗಳ ಮೂಲಕ ನಮ್ಮ ಅನುಭವಕ್ಕೆ ತಂದುಕೊಟ್ಟಿದೆ. ವಾಸ್ತವ-ಅವಾಸ್ತವ, ತಾರ್ಕಿಕ-ಅತಾರ್ಕಿಕ, ಸಾಮಾನ್ಯ-ಅಸಾಮಾನ್ಯಗಳ ಅವಿನಾಭಾವ ಸಂಬಂಧವನ್ನು ಅನೇಕ ಚಲನಚಿತ್ರ ನಿರ್ದೇಶಕರು ತಮ್ಮ ಕೃತಿಗಳಲ್ಲಿ ಶೋಧಿಸಿದ್ದಾರೆ. ಉದಾಹರಣೆಗೆ ಫೆಲಿನಿ ತನ್ನ ‘೮ ೧/೨’ನಲ್ಲಿ, ಟಾರ್ಕೋವಸ್ಕಿ ‘ಸ್ಟಾಕರ್’, ‘ಸ್ಯಾಕ್ರಿಫೈಸ್’ ಚಿತ್ರಗಳಲ್ಲಿ, ಬರ್ಗ್‌ಮನ್ ‘ವೈಲ್ಡ್ ಸ್ಟ್ರಾಬೆರೀಸ್’ ಮತ್ತು ‘ಸೆವೆಂತ್ ಸೀಲ್’ಗಳಲ್ಲಿ ಈ ಶೋಧನೆಯನ್ನು ಅತ್ಯದ್ಭುತವಾಗಿ ಮಾಡಿದ್ದಾರೆ. ಕೇವಲ ‘ತಂತ್ರ’ವಾಗಿ ಇದನ್ನು ನಾವು ಗ್ರಹಿಸಬಾರದು. ಸಿನಿಮಾದ ‘ತಂತ್ರ’ ಬಳಕೆಯಾದರೂ, ಇದನ್ನು ಮೀರಿದ ತಾತ್ವ್ವಿಕ ನೆಲೆಯನ್ನು ನಾವು ಅರಿಯಬೇಕಾದದ್ದು ಅತ್ಯಗತ್ಯ. ಸಾಹಿತ್ಯ ಸೃಷ್ಟಿಯಲ್ಲೂ ನಾವು ‘ತಂತ್ರ’ವನ್ನು ಮೀರಿದ ತಾತ್ವಿಕತೆಯನ್ನು ಅರಿಯುವುದೇ ಮುಖ್ಯ. ಬರ್ಗ್‌ಮನ್ ಮುಳ್ಳುಗಳೇ ಇಲ್ಲದ ಗಡಿಯಾರವನ್ನು ತೋರಿಸುವಾಗ ಅಥವಾ ವ್ಯಕ್ತಿಯೊಬ್ಬ ತನ್ನ ಹೆಣವನ್ನು ತಾನೇ ಶವಪೆಟ್ಟಿಗೆಯಲ್ಲಿ ಕಂಡಾಗ ಕೇವಲ ‘ತಂತ್ರ’ವನ್ನು ಮಾತ್ರ ಬಳಸುತ್ತಿರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮಾವಲೋಕವನ್ನು ನಮ್ಮೆಲ್ಲರ ಗ್ರಹಿಕೆಗೆ, ಅನುಭವಕ್ಕೆ ಬಂದ ತಾತ್ವಿಕ ನೆಲೆಗಟ್ಟಿನ ಮೂಲಕ ಹತ್ತಿರ ತರುತ್ತಾನೆ. ಟಾರ್ಕೋವಸ್ಕಿ ‘ಸ್ಟಾಕರ್’ ಮತ್ತು ‘ಸ್ಯಾಕ್ರಿಫೈಸ್’ನಲ್ಲಿ ಚಿತ್ರಿಸುವ ಅತೀಂದ್ರಿಯ ಜಗತ್ತು ನಮ್ಮ ಅಂತರಂಗದ ಕಲ್ಪನಾಲೋಕವೇ ಆಗಿರುತ್ತದೆ. ಆದ್ದರಿಂದ ‘ತಂತ್ರ’ ಮತ್ತು ‘ತಾತ್ವಿಕತೆ’ ಮೇಳೈಸುವ ರೀತಿಯನ್ನು ನಾವು ಏಕಾಗ್ರತೆಯಿಂದ ಸ್ವೀಕಾರ ಮಾಡಬೇಕು. +ಈ ಜಗತ್ತನ್ನು ಕಥಾನಕದ ಮೂಲಕ ಆಧುನಿಕ ಪ್ರಪಂಚಕ್ಕೆ ತಿಳಿಸಿಕೊಡಬೇಕಾದವರು ಅದರ ‘ಒಳಗಿನವ’ರಾಗಿರಬೇಕು. ಹೊಗಿನಿಂದ ಬಂದ ಸಮಾಜಶಾಸ್ತ್ರ ಅಥವಾ ಮಾನವಶಾಸ್ತ್ರ ಪರಿಣತರಿಗೆ ಇದು ಅಸಾಧ್ಯ. ಅವರಿಗೆ ದಕ್ಕುವುದು ಅವರ ಮೂಗಿನ ನೇರದ ‘ಮಾಹಿತಿ’ಗಳು ಮಾತ್ರ. ಅವುಗಳನ್ನು ಬೇಕೆನಿಸಿದ ರೀತಿಯಲ್ಲಿ ತಿರುಚಿ ಒಂದು ಜೀವಂತ ಸಮುದಾಯವನ್ನು ಪುರಾತತ್ವ ಮ್ಯೂಸಿಯಮ್‌ನಲ್ಲಿ ಇರಬೇಕಾದ ವಸ್ತುಗಳ ಹಾಗೆ ಮಾಡಿಬಿಡುತ್ತಾರೆ. ಇದು ಅವರ ವಿಚಿತ್ರ ಶಿಸ್ತಿನ ಅಧ್ಯಯನದ ಫಲ. ತಮಗೆ ಹೊತಾದ ಎಲ್ಲ ಙ್ಞನಶಾಖೆಗಳನ್ನು, ಅನುಭವದ ಕ್ಷೇತ್ರಗಳನ್ನು, ಬದುಕಿನ ಪದರುಗಳನ್ನು ತಮ್ಮ ಸೈದ್ಧಾಂತಿಕ ಚೌಕಟ್ಟಿಗೆ ಸೇರಿಸಿಕೊಳ್ಳುವುದು ಪಶ್ಚಿಮದ ‘ತಙ್ಞ’ರ ಪರಿಪಾಠವಾಗಿದೆ. +ಮಾರ್ಕೆಜ್‌ನ ಕಾದಂಬರಿ ಈ ಎಲ್ಲ ಪೂರ್ವಾಗ್ರಹಗಳಿಗೆ ಒಂದು ಬಲವಾದ ಪ್ರತಿರೋಧ. ಆದ್ದರಿಂದಲೇ ಈ ಸಾಹಿತ್ಯ ಕೃತಿ ತನಗಿರುವ ಗಟ್ಟಿಯಾದ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಅಡಿಪಾಯದ ಬೆಂಬಲವನ್ನು ದಕ್ಕಿಸಿಕೊಂಡಿದೆ. ಆಧುನಿಕ ಪಶ್ಚಿಮಕ್ಕೆ ವಿಭಿನ್ನವಾದ ಬೇರುಗಳನ್ನು ಹೊಂದಿರುವ ಈ ಸಮುದಾಯ ಬೇರೊಂದು ಕಾಲಪ್ರಙಯನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡು ಚಲನಶೀಲವಾಗಿರುವುದನ್ನು ನಾವು ಗ್ರಹಿಸಬಹುದು. ಜೊತೆಗೆ ಈ ಸಮುದಾಯ ತನ್ನದೇ ಆದ ಕ್ರಿಯಾಶೀಲತೆಯಲ್ಲಿ ತೊಡಗಿರುವುದನ್ನು ನಾವು ಮನಗಾಣಬಹುದು. ಇವೆಲ್ಲವೂ ಮಾರ್ಕೆಜ್‌ನ ಕೃತಿಯ ಮುನ್ನೊಲವುಗಳು. ಆಧುನಿಕತೆ ಸಾಮಾನ್ಯವಾಗಿ ತಿರಸ್ಕರಿಸುವ ಜೀವಂತ ಲಕ್ಷಣಗಳನ್ನು ಮಾರ್ಕೆಜ್ ತನ್ನ ಕಾದಂಬರಿಯ ಮೂಲಕ ನಮ್ಮ ಅರಿವಿಗೆ ತರುತ್ತಾನೆ. ಅಷ್ಟೇ ಅಲ್ಲದೆ ಇಂಥ ಸಮುದಾಯಗಳ ಮೇಲೆ ಆಗಿರುವ ಆಕ್ರಮಣ, ಕ್ರೌರ್ಯ, ದಬ್ಬಾಳಿಕೆಯನ್ನೂ ನಮಗೆ ಗೋಚರಿಸುವಂತೆ ಮಾಡುತ್ತಾನೆ. ಕಾದಂಬರಿಯಲ್ಲಿ ಬರುವ ಕೆಲವು ನಿದರ್ಶನಗಳನ್ನು ಉಲ್ಲೇಖಿಸಿ ನನ್ನ ಮಾತುಗಳನ್ನು ಸ್ಪಸ್ಟಪಡಿಸುತ್ತೇನೆ. +” . . . . ಆಗಿನ ಕಾಲದಲ್ಲಿ ಮಕೋಂದೋ ಇಪ್ಪತ್ತು ಮನೆಗಳಿದ್ದ ಒಂದು ಸಣ್ಣ ಹಳ್ಳಿಯಾಗಿತ್ತು. ಅದು ಇದ್ದದ್ದು ಭಾರಿ ಗಾತ್ರದ ಇತಿಹಾಸಪೂರ್ವ ಮೊಟ್ಟೆಗಳಂತೆ ಬಿಳುಪಾದ ನುಣ್ಣನೆಯ ಕಲ್ಲುಗಳಿದ್ದ ತಿಳಿನೀರು ಹರಿಯುವ ನದಿಯ ದಡದಲ್ಲಿ. ಪ್ರಪಂಚ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈಮಾಡಿ ತೋರಿಸಬೇಕಾಗಿತ್ತು. . . . ” +ಇಲ್ಲಿ ಮಾರ್ಕೆಜ್ ಕಟ್ಟುತ್ತಿರುವ ಪ್ರಪಂಚ ಇಡೀ ವಿಶ್ವಕ್ಕೆ ಅನ್ವಯವಾಗುವಂಥದ್ದು. ಇತಿಹಾಸಪೂರ್ವ ನಾಗರಿಕತೆ ಎಲ್ಲ ಕಡೆಯೂ ಒಂದೇ. ಈಗಿನ ಕಾಲದ ವಿಚಾರ, ಗ್ರಹಿಕೆ, ಙ್ಞನ, ತಂತ್ರಙ್ಞನ ಇಲ್ಲದ ಕಾಲ. ಇದರರ್ಥ ಸ್ಪಷ್ಟ. ಮೂಲದಲ್ಲಿ ಯಾವ ನಾಗರಿಕತೆಯಾಗಲಿ, ಸಮಾಜವಾಗಲಿ ಒಂದೇ. ಇಲ್ಲಿ ಇಂದು ನಾವು ಕಾಣುವ ವ್ಯತಾಸಗಳಾಗಲಿ, ಬದಲಾವಣೆಗಳಾಗಲಿ ಇರುವುದಿಲ್ಲ. ಹೀಗಾಗಿ ಯಾವ ನಾಗರಿಕತೆಯೂ ಇನ್ನೊಂದಕ್ಕಿಂತ ಮೇಲಲ್ಲ, ಶ್ರೇಷ್ಠವಲ್ಲ. ವಿಶ್ವದ ಬಗ್ಗೆ ಅರಿವೇ ಇಲ್ಲದ ಕಾಲವಿದು. ಇತಿಹಾಸಪೂರ್ವ ಸ್ಥಿತಿಯಲ್ಲಿ ಜಗತ್ತಿನ ಯಾವ ಭಾಗಕ್ಕೂ ಹೆಚ್ಚಿನದೇನೂ ದಕ್ಕಿರಲಿಲ್ಲ. ಇಲ್ಲಿಂದ ಮಾರ್ಕೆಜ್ ತನ್ನ ಕಥನವನ್ನು ಪ್ರಾರಂಭಿಸುತ್ತಾನೆ. ಈ ಕಥನ ಕೊನೆಗೆ ನಮ್ಮ ಕಾಲದವರೆಗೂ ಬಂದು ನಿಲ್ಲುತ್ತದೆ. ಈ ಎರಡು ಕಾಲಘಟ್ಟಗಳ ನಡುವೆ ಸಂಭವಿಸಿರುವ ಬದಲಾವಣೆಗಳು ಮಾನವನ ನಾಗರಿಕತೆಯ ಅನೇಕ ಘಟ್ಟಗಳನ್ನು ಸೂಚಿಸುವ ಸಂಗತಿಗಳು. ಆದರೆ ಮಾರ್ಕೆಜ್‌ನ ಗಮನವಿರುವುದು ನಾವು ಅರಿಯದ ಸಮಾಜದ ಚಲನಶೀಲತೆಯ ಕಡೆಗೆ. +ಕಾದಂಬರಿಯ ಮತ್ತೊಂದು ವಿವರಣೆ ಹೀಗಿದೆ : +“ಮಾರ್ಚ್‌ನಲ್ಲಿ ಜಿಪ್ಸಿಗಳು ತಿರುಗಿ ಬಂದರು. ಈ ಸಲ ಅವರು ದೂರದರ್ಶಕ ಮತ್ತು ಒಂದು ಡ್ರಮ್ಮಿನ ಗಾತ್ರದ ಭೂತಗನ್ನಡಿಯನ್ನು ತಂದು, ಅವು ಆಮ್‌ಸ್ಟರ್‌ಡ್ಯಾಂನ ಯಹೂದಿಗಳು ಇತ್ತೀಚೆಗೆ ಕಂಡು ಹಿಡಿದಿದ್ದೆಂದು ಪ್ರದರ್ಶಿಸಿದರು. ಅವರು ಜಿಪ್ಸಿ ಹುಡುಗಿಯೊಬ್ಬಳನ್ನು ಹಳ್ಳಿ ಅಂಚಿನಲ್ಲಿ ನಿಲ್ಲಿಸಿದರು. ದೂರದರ್ಶಕವನ್ನು ಟೆಂಟ್ ಮುಂಭಾಗದಲ್ಲಿಟ್ಟರು. ಐದು ರಿಯಲ್ಸ್ ದುಡ್ಡಿಗೆ ದೂರದರ್ಶಕದಲ್ಲಿ ನೋಡಿ ಜಿಪ್ಸಿ ಹುಡುಗಿಯನ್ನು ಕೈಯಳತೆಯ ಅಂತರದಲ್ಲಿ ಇರುವ ಹಾಗೆ ನೋಡಬಹುದಾಗಿತ್ತು. ‘ವಿಜ್ಞಾನ ದೂರವನ್ನು ಅಳಿಸಿ ಹಾಕಿದೆ’ ಎಂದು ಮೆಲ್‌ಕಿಯಾದೆಸ್ ಘೋಷಿಸಿದ. ಇನ್ನು ಸ್ವಲ್ಪ ಕಾಲದಲ್ಲೇ ಮನೆಯಿಂದ ಆಚೆ ಹೋಗದೆಯೇ ಜಗತ್ತಿನಲ್ಲಿ ಎಲ್ಲಾದರೂ ಸರಿಯೆ, ಏನಾಗುತ್ತಿದೆಯೆಂದು ನೋಡಬಹುದು ಎಂದ. ಮಟಮಟ ಮಧ್ಯಾಹ್ನ ಉರಿ ಬಿಸಿಲಿನ ಸೂರ್ಯನಿರುವಾಗ ಅಗಾಧ ಭೂತಗನ್ನಡಿಯ ಪ್ರಯೋಗವನ್ನು ನಿಬ್ಬೆರಗಾಗಿಸುವ ರೀತಿಯಲ್ಲಿ ತೋರಿಸಿದ. ರಸ್ತೆಯ ಮಧ್ಯದಲ್ಲಿ ಅವರು ತಂದಿಟ್ಟ ಒಣಗಿದ ಹುಲ್ಲಿನ ಗುಪ್ಪೆಯ ಮೇಲೆ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಅದನ್ನು ಉರಿಸಿದ. ಆಯಸ್ಕಾಂತದ ಪ್ರಕರಣದಿಂದ ಇನ್ನೂ ಸಮಾಧಾನಗೊಳ್ಳದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಈ ಹೊಸ ಆವಿಷ್ಕಾರವನ್ನು ಯುದ್ಧದ ಉಪಕರಣವನ್ನಾಗಿ ಉಪಯೋಗಿಸುವುದಾಗಿ ಕಲ್ಪಿಸಿದ. ಅದನ್ನು ಒಪ್ಪದ ಮೆಲ್‌ಕಿಯಾದೆಸ್ ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಕೊನೆಗೆ ಆ ಆಯಸ್ಕಾಂತದ ಇಟ್ಟಿಗೆಗಳು ಮತ್ತು ಮೂರು ವಸಾಹತು ಕಾಲದ ನಾಣ್ಯಗಳಿಗೆ ಬದಲಾಗಿ ಭೂತಗನ್ನಡಿಯನ್ನು ಕೊಟ್ಟ. ಉರ್ಸುಲಾ ಭಯಗೊಂಡು ಅತ್ತಳು. ಸಣ್ಣ ಪೆಟ್ಟಿಗೆಯಲ್ಲಿದ್ದ ಆ ನಾಣ್ಯಗಳನ್ನು ಅವಳ ತಂದೆ ಇಡೀ ಜೀವನದಲ್ಲಿ ದುಂದು ಮಾಡದೆ ಉಳಿಸಿದ್ದು ಮತ್ತು ಅವಳು ಅದನ್ನು ತನ್ನ ಹಾಸಿಗೆಯ ಕೆಳಗೆ ಹೂತಿಟ್ಟು, ಉಪಯೋಗಿಸಲು ಸರಿಯಾದ ಸಮಯಕ್ಕಾಗಿ ಕಾದಿದ್ದಳು. ತನ್ನ ಜೀವನವನ್ನೇ ಪಣಕ್ಕಿಟ್ಟು ಅದರೊಂದಿಗೆ ನಡೆಸುವ ವಿವಿಧ ರೀತಿಯ ಪ್ರಯೋಗಳ ಆಲೋಚನೆಯಲ್ಲೇ ಮುಳುಗಿದ್ದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಅವಳನ್ನು ಸಮಾಧಾನಗೊಳಿಸುವ ಗೊಡವೆಗೆ ಹೋಗಲಿಲ್ಲ. ಶತ್ರುಗಳ ಮೇಲೆ ಗಾಜಿನ ಪರಿಣಾಮವನ್ನು ತೋರಿಸುವ ಪ್ರಯತ್ನದಲ್ಲಿದ್ದಾಗ ಅವನು ಸೂರ್ಯಕಿರಣಗಳು ಒಗ್ಗೂಡುವ ಸ್ಥಳದಲ್ಲಿ ನಿಂತಿದ್ದರಿಂದ ಮೈಯೆಲ್ಲ ಸುಟ್ಟು ಹೋಗಿ ಅದು ಗುಣವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವಳು ಇಂತಹ ಅಪಾಯಕಾರಿ ಆವಿಷ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಒಮ್ಮೆ ಅವನು ತಮ್ಮ ಮನೆಗೇ ಬೆಂಕಿಯಿಡಲು ಸಿದ್ಧನಾಗಿದ್ದ. ಅವನು ತನ್ನ ರೂಮಿನಲ್ಲಿ ಕುಳಿತು ಆ ಅವಿಷ್ಕಾರದ ಸಾಧ್ಯತೆಗಳನ್ನು ಲೆಕ್ಕ ಹಾಕುತ್ತಿದ್ದ. ಕೊನೆಗೆ ಅದನ್ನು ಉಪಯೋಸುವುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಅದರ ಬಗ್ಗೆ ತನಗಿರುವ ನಂಬಿಕೆಯನ್ನು ಕುರಿತಂತೆ ಒಂದು ಕಿರು ಹೊತ್ತಿಗೆಯನ್ನು ಹೊರತಂದ. ತಾನು ಅನೇಕ ಪ್ರಯೋಗಗಳನ್ನು ಕುರಿತು ಮತ್ತು ಅದರ ಬಗ್ಗೆ ಪುಟಗಟ್ಟಲೆ ವಿವರಣಾತ್ಮಕ ಚಿತ್ರಗಳನ್ನು ಬರೆದು ಒಬ್ಬ ವ್ಯಕ್ತಿಯ ಸಂಗಡ ಅದನ್ನು ಸರ್ಕಾರಕ್ಕೆ ಕಳಿಸಿಕೊಟ್ಟ. ಆ ವ್ಯಕ್ತಿ ಪರ್ವತಗಳನ್ನು ದಾಟಿ, ಕಂದರಗಳಲ್ಲಿ ದಾರಿ ತಪ್ಪಿ, ನದಿಗಳನ್ನು ದಾಟಿ ಕೊನೆಗೆ ನಿರಾಶನಾಗುವ ಮತ್ತು ಪ್ಲೇಗ್ ರೋಗಕ್ಕೆ ತುತ್ತಾಗುವ ಹಾಗೂ ಕಾಡು ಪ್ರಾಣಿಗಳಿಗೆ ಬಲಿಯಾಗುವ ಹಂತದಲ್ಲಿದ್ದಾಗ ಹೇಸರಗತ್ತೆಗಳ ಮೇಲೆ ಟಪಾಲು ಒಯ್ಯುವ ದಾರಿ ಕಂಡುಕೊಂಡ. ರಾಜಧಾನಿಯನ್ನು ತಲುಪುವುದೇ ದುಸ್ಸಾಧ್ಯವಾದ ಸಂಗತಿಯಾಗಿದ್ದರೂ, ಸರ್ಕಾರ ಆದೇಶ ಕೊಟ್ಟ ಕೂಡಲೇ ಆ ಹೊಸ ಆವಿಷ್ಕಾರದ ಪ್ರಯೋಗಗಳನ್ನು ಮಿಲಿಟರಿಯವರಿಗೆ ತೋರಿಸುವುದಲ್ಲದೆ ಸೌರಯುದ್ಧದ ಬಗ್ಗೆ ತರಬೇತಿ ಕೊಡುವುದಾಗಿ ಹೇಳಿದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಉತ್ತರಕ್ಕಾಗಿ ಕೆಲವು ವರ್ಷ ಕಾದ. ಕೊನೆಗೆ ಕಾಯುವುದರಿಂದ ಸುಸ್ತಾಗಿ ಮೆಲ್‌ಕಿಯಾದೆಸ್‌ಗೆ ತನ್ನ ಯೋಜನೆ ವ್ಯರ್ಥವಾದದ್ದನ್ನು ಹೇಳಿದ. ಆಗ ಜಿಪ್ಸಿತನ್ನ ಪ್ರಾಮಾಣಿಕತೆಯನ್ನು ಕುರಿತು ಸರಿಯಾದ ಪುರಾವೆ ಒದಗಿಸಿದ. ಭೂತಗನ್ನಡಿಯನ್ನು ಹಿಂದಕ್ಕೆ ತೆಗೆದುಕೊಂಡು, ಬದಲಿಗೆ ಚಿನ್ನದ ನಾಣ್ಯಗಳನ್ನು ಹಾಗೂ ಕೆಲವು ಪೋರ್ಚುಗೀಸ್ ನಕ್ಷೆಗಳನ್ನು ಅಲ್ಲದೆ ನೌಕಾಯಾನದಲ್ಲಿ ಉಪಯೋಗಿಸುವ ಕೆಲವು ಉಪಕರಣಗಳನ್ನೂ ಕೂಡ ಕೊಟ್ಟ. ಕೊಸೆ ಅರ್ಕಾದಿಯೋ ಬ್ಯುಂದಿಯಾ ಕಾಂಪಾಸ್ ಮತ್ತು ಸೆಕ್ಸ್‌ಟೆಂಟ್‌ಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ತನ್ನ ಕೈಯಿಂದಲೇ ಸನ್ಯಾಸಿ ಹೆರ್‌ಮನ್ ಸಿದ್ಧಪಡಿಸಿದ್ದನ್ನು ಬರೆದು ಕೊಟ್ಟ. ಕೊಸೆ ಅರ್ಕಾದಿಯೋ ತನ್ನ ಪ್ರಯೋಗಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂಬ ಕಾರಣದಿಂದ ಮನೆಯ ಹಿಂದೆ ಇದ್ದ ಒಂದು ರೂಮಿನಲ್ಲಿ ಇಡೀ ಮಳೆಗಾಲವನ್ನು ಒಬ್ಬನೇ ಕಳೆದ. . . . ” +ಮಾರ್ಕೆಜ್ ಈ ಸಮುದಾಯಗಳಲ್ಲಿ ಆದ ವೈಙ್ಞನಿಕ ಬದಲಾವಣೆಗಳ ಬಗ್ಗೆ ಗಮನಹರಿಸುತ್ತಿದ್ದಾನೆ. ಹಾಗೆಯೇ ವಿಙ್ಞನಕ್ಕೂ, ಪ್ರಭುತ್ವಕ್ಕೂ; ಸೈನ್ಯಕ್ಕೂ, ಯುದ್ಧಕ್ಕೂ ಇರುವ ಸಂಬಂಧವನ್ನು ತೋರಿಸುತ್ತಿದ್ದಾನೆ. ನಾವು ಯಾವ ಬದಲಾವಣೆಗಳನ್ನು ಆಧುನಿಕ ಕಾಲಕ್ಕೆ ಸಂಬಂಧಪಟ್ಟಂತೆ ಮಾತ್ರ ಗುರುತಿಸುತ್ತೇವೆಯೋ ಅದನ್ನು ಮಾರ್ಕೆಜ್ ಪುರಾತನ ಸಮಾಜಗಳಲ್ಲೆ ಗುರುತಿಸಿತ್ತಾನೆ. ವಿಙ್ಞನ, ತಂತ್ರಙ್ಞನ, ಆಧುನಿಕ ಕಾಲದ ಸೊತ್ತಲ್ಲ. ಆಯಾ ಸಮಾಜಗಳು ತಮ್ಮ ತಮ್ಮ ಸ್ಥಳದಲ್ಲೆ ಹೊಸ ಅರಿವನ್ನು ಙ್ಞನವನ್ನು ಪಡೆದುಕೊಂಡವು ಎನ್ನುವ ಸಂಗತಿ ಮಹತ್ತರವಾದದ್ದು. ಈ ಪ್ರಪಂಚದಿಂದಲೇ ಬರುವ ಮಾತು ಇದು : +“ಭೂಮಿ ಗುಂಡಗಿದೆ. ಕಿತ್ತಲೆಯ ಹಾಗೆ.” +ಸಾಮಾನ್ಯವಾಗಿ ಭೌತಿಕ ಜಗತ್ತಿನ ಬಗ್ಗೆ ಇರುವ ಙ್ಞನವನ್ನು ನಾವು ಪಶ್ಚಿಮದ ಕೊಡುಗೆ ಎಂದುಕೊಳ್ಳುತ್ತೇವೆ. ಆದರೆ ಆಧುನಿಕ ಜಗತ್ತು ಮನ್ನಣೆ ಕೊಡದ ಅನೇಕ ಸಂಸ್ಕೃತಿಗಳು ಙ್ಞನ ಇರುವ ಕೇಂದ್ರಗಳೇ ಆಗಿದ್ದವು ಎನ್ನುವುದನ್ನು ಸೂಚಿಸುವುದು ಕಡಿಮೆಯ ವಿಷಯವೇನಲ್ಲ. ಈ ರೀತಿ ಇಡೀ ಕಾದಂಬರಿಯಲ್ಲಿ ಮಾರ್ಕೆಜ್ ಪಶ್ಚಿಮದ ಅನೇಕ ಪೂರ್ವಗ್ರಹಗಳನ್ನು ಒಡೆಯುತ್ತ ಹೋಗುತ್ತಾನೆ. ಇದು ವಾಸ್ತವತೆಯೇ ಹೊರತು ನಂಬಲಾಗದ “ಮಾಯಾ” ಜಗತ್ತಲ್ಲ, ಯಕ್ಷಿಣಿ ಪ್ರಪಂಚವಲ್ಲ. ನಾವು ಗುರುತಿಸದ, ಸ್ವೀಕರಿಸದ ಇತಿಹಾಸವಿದು. ಮೇಲಿನ ವಾದವನ್ನು ಪುಷ್ಟೀಕರಿಸಲು ಕಾದಂಬರಿಯಿಂದ ಮತ್ತೊಂದು ಉದಾಹರಣೆ : +“ಲ್ಯಾಬೊರೇಟರಿಯ ಸಾಮಾನುಗಳನ್ನು ಬಿಚ್ಚಿಡಲು ಮಕ್ಕಳನ್ನು ಕರೆದ. ಮಧ್ಯಾಹ್ನದಿಂದ ಅವರ ಜೊತೆ ತನ್ನ ವೇಳೆಯನ್ನು ಕಳೆದ. ಪ್ರತ್ಯೇಕವಾಗಿದ್ದ ಆ ಚಿಕ್ಕ ರೂಮಿನ ಗೋಡೆಗಳ ಮೇಲೆ ವಿಚಿತ್ರವಾದ ನಕ್ಷೆಗಳು ಮತ್ತು ಡ್ರಾಯಿಂಗ್‌ಗಳು ಹರಡಿಕೊಳ್ಳುತ್ತಿದ್ದ ಹಾಗೆ ಅವನು ಅವರಿಗೆ ಓದುವುದನ್ನು, ಬರೆಯುವುದನ್ನು, ಲೆಕ್ಕ ಮಾಡುವುದನ್ನು ಕಲಿಸಿದ ಮತ್ತು ಪ್ರಪಂಚದ ಅದ್ಭುತಗಳ ಬಗ್ಗೆ ತನ್ನ ಕಲ್ಪನೆಯ ಮಿತಿಯನ್ನು ಅತಿಯಾಗಿ ವಿಸ್ತರಿಸಿ ತಿಳಿಸಿದ. ಇದರಿಂದ ಮಕ್ಕಳು ಆಫ್ರಿಕಾದ ದಕ್ಷಿಣದ ತುದಿಯ ಭಾಗದ ಜನರು ಅದೆಷ್ಟು ಬುದ್ಧಿವಂತರೆಂದರೆ ಅವರಿಗೆ ಕುಳಿತುಕೊಂಡು ಯೊಚಿಸುವುದೊಂದೇ ಕೆಲಸ ಮತ್ತು ಬರಿಗಾಲಲ್ಲಿ ಏಜಿಯನ್ ಸಮುದ್ರವನ್ನು ದಾಟಲು ದ್ವೀಪದಿಂದ ದ್ವೀಪಕ್ಕೆ ಹಾರುತ್ತ ಸಲೋನಿಕ್ ಬಂದರಿನ ತನಕ ಹೋಗಬಹುದು ಎನ್ನುವುದನ್ನು ಕಲಿತರು. ಹಾಗೆ ಕಳೆದ ಕಲಿಕೆಯ ವಿಭ್ರಮೆಯಂಥ ಸಮಯದ ನೆನಪುಗಳು ಹುಡುಗರ ಮನಸ್ಸಿನಲ್ಲಿ ನೆಲೆಗೊಂಡದ್ದು ಎಷ್ಟೆಂದg, ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಾಲು ನಿಂತ ತಂಡಕ್ಕೆ ಸೈನ್ಯದ ಅಧಿಕಾರಿ ಅಪ್ಪಣೆ ಕೊಡುವ ಒಂದು ಸೆಕೆಂಡಿನ ಮುಂಚೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಆ ದಿನ ಮಾರ್ಚ್ ತಿಂಗಳ ಒಂದು ಮಧ್ಯಾಹ್ನ ತನ್ನ ತಂದೆ ಹೇಳುತ್ತಿದ್ದ ಭೌತಶಾಸ್ತದ ಪಾಠವೊಂದನ್ನು ನಿಲ್ಲಿಸಿ, ಬಿಟ್ಟಕಣ್ಣು ಬಿಟ್ಟುಕೊಂಡು ಗಾಳಿಯಲ್ಲಿ ಕೈಯನ್ನು ಎತ್ತಿ ಹಿಡಿದು ದೂರದಿಂದ ಕೇಳಿಬರುತ್ತಿದ್ದ ಜಿಪ್ಸಿಗಳ ಹಾಡುಗಳು, ಪೀಪಿ-ತಮಟೆಗಳ ದನಿಯನ್ನು ಕೇಳಿಸಿಕೊಳ್ಳುತ್ತ ನಿಂತಿದ್ದನ್ನು ಮತ್ತೊಮ್ಮೆ ಪರಿಭಾವಿಸಿದ. ಅವರು ಹಳ್ಳಿಗೆ ಮತ್ತೆ ಮತ್ತೆ ಬರುತ್ತಿದ್ದರು. ಮೆಂಫಿಲ್ ಯೋಗಿಗಳು ಕಂಡು ಹಿಡಿದ ಇತ್ತೀಚಿನ ಹಾಗೂ ಚಕಿತಗೊಳಿಸುವಂಥದನ್ನು ಕುರಿತು ಅವರು ಪ್ರಚಾರ ಮಾಡುತ್ತಿದ್ದರು.” +ಮಾರ್ಕೆಜ್‌ನ ಕಾದಂಬರಿಯುದ್ದಕ್ಕೂ ಮತ್ತೊಂದು ಎಳೆ ಇದೆ. ಇದು ನೀತಿ ಸಂಹಿತೆಗೆ ಸಂಬಂಧಪಟ್ಟಿದ್ದು. ಇದನ್ನು ಒತ್ತಿ ಹೇಳುವ ಅಗತ್ಯವೇನೆಂದರೆ ನಾವು ಧರ್ಮ, ನೀತಿ, ಮಾನವೀಯ ಮೌಲ್ಯಗಳ ಬಗೆಗಿನ ವ್ಯಾಖ್ಯಾನಗಳಲ್ಲಿ ಆಧುನಿಕೋತ್ತರ ಸಮಾಜಗಳು, ಆದಿವಾಸಿಗಳ ಸಮಾಜಗಳು ಶಾಂತಿ, ಮಾನವೀಯತೆಗಳಿಲ್ಲದ ಬರ್ಬರ ಸಮಾಜಗಳೆಂದೇ ಪರಿಗಣಿಸಿ ಈ ಮೌಲ್ಯಗಳು ಆಧುನಿಕ ಕೂಸುಗಳೆಂದು ಪ್ರಚಾರ ಮಾಡುತ್ತಿರುತ್ತೇವೆ. ಆದರೆ ಎಷ್ಟೇ ಕ್ರೌರ್ಯ, ಹಿಂಸೆಗಳಿದ್ದರೂ ಇಂಥ ಸಮಾಜಗಳಲ್ಲಿ ಒಂದು ದೊಡ್ಡ ನೀತಿ ಸಂಹಿತೆ ಕೆಲಸ ಮಾಡುತ್ತಲೇ ಇತ್ತು ಎಂಬ ಸತ್ಯವನ್ನು ಮಾರ್ಕೆಜ್ ನಮಗೆ ದರ್ಶನ ಮಾಡಿಕೊಡುತ್ತಾನೆ. ಸಾವೆಂಬ ವಾಸ್ತವದ ಇದಿರು ಮತ್ತು ಈ ಜಗತ್ತಿನ ಹೊರಗೆ ಇರುವ ಲೋಕಗಳ ಬಗೆಗಿನ ಕಲ್ಪನೆಗಳಿಂದಾಗಿ ಈ ನಾಗರಿಕತೆಗಳು ಮಾನವೀಯ ಮೌಲ್ಯಗಳನ್ನು ದುಡಿಸಿಕೊಳ್ಳುತ್ತಿದ್ದವೆಂದು ತೋರಿಸುವುದೂ ಕಥನದ ದೊಡ್ಡ ಆಶಯ. ಈ ಭಾಗವನ್ನು ಗಮನಿಸೋಣ : +“ಹತ್ತು ನಿಮಿಷಗಳ ನಂತರ ತನ್ನಜ್ಜನಿಗೆ ಸೇರಿದ ಭರ್ಜಿ ಹಿಡಿದುಕೊಂಡು ಬಂದ. ಊರಿನ ಅಧ ಜನ ಹುಂಜದ ಕಾಳಗದ ಅಖಾಡಾದ ಬಳಿ ನೆರೆದಿದ್ದರು. ಅದರ ಬಾಗಿಲ ಹತ್ತಿರ ಪ್ರುಡೆನ್ಸಿಯೋ ಅವನಿಗಾಗಿ ಕಾದು ನಿಂತಿದ್ದ. ಅವನಿಗೆ ತನ್ನನ್ನು ರಕ್ಷಿಸಿಕೊಳ್ಳಲು ಏನೂ ಸಮಯವಿರಲಿಲ್ಲ. ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೋರಿಯಷ್ಟು ಬಲದಿಂದ ಆ ಪ್ರದೇಶದ ಚಿರತೆಗಳಿಗೆ ಗುರಿಯಿಟ್ಟು ಮುಗಿಸಿದ ಹಾಗೆ ಕೊಸೆ ಅರ್ಕಾದಿಯೋ ಬ್ಯುಂದಿಯಾ ಎಸೆದ ಭರ್ಜಿ ಅವನ ಎದೆಯನ್ನು ಸೀಳಿತ್ತು. . . . ಅದೊಂದು ರಾತ್ರಿ ಅವಳು ನಿದ್ದೆ ಬಾರದೆ ನೀರು ಕುಡಿಯುವುದಕ್ಕೆ ಎದ್ದು ಅಂಗಳಕ್ಕೆ ಹೋದಾಗ ಅಲ್ಲಿ ಮಡಕೆಯ ಪಕ್ಕದಲ್ಲಿ ಪ್ರುಡೆನ್ಸಿಯೋ ಅಗಿಲರ್‌ನನ್ನು ಕಂಡಳು. ಸಪ್ಪಗಿದ್ದ ಅವನು ಹುಲ್ಲಿನ ಕಟ್ಟಿನಿಂದ ಎದೆಯಲ್ಲಿ ಆದ ತೂತನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ. ಅವಳಿಗೆ ಹೆದರಿಕೆಯಾಗಲಿಲ್ಲ. ಅನುಕಂಪ ಮೂಡಿತು. ವಾಪಸು ಹೋಗಿ ಅವಳು ಕಂಡದ್ದನ್ನು ಗಂಡನಿಗೆ ಹೇಳಿದಳು. ಆದರೆ ಅವನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. “ಇದರರ್ಥ ಏನು ಅಂದ್ರೆ, ನಮ್ಗೆ ಮನಸ್ಸಿನ ಭಾರನ ತಡೆದುಕೊಳ್ಳಕ್ಕೆ ಆಗ್ತಾ ಇಲ್ಲ ಅಂತ” ಎಂದ. ಎರಡು ದಿನಗಳ ನಂತರ ಉರ್ಸುಲಾ ಬಾತ್ ರೂಮಿನಲ್ಲಿ ಹುಲ್ಲಿನ ಕಟ್ಟಿನಿಂದ ಎದೆಯ ಮೇಲೆ ಉಂಟಾಗಿದ್ದ ರಕ್ತದ ಕಲೆಗಳನ್ನು ಉಜ್ಜಿ ತೊಳೆಯುತ್ತಿದ್ದ ಪ್ರುಡೆನ್ಸಿಯೋನನ್ನು ಕಂಡಳು. ಇನ್ನೊಂದು ರಾತ್ರಿ ಅವನು ಮಳೆಯಲ್ಲಿ ಓಡಾಡುತ್ತಿದ್ದದ್ದನ್ನು ನೋಡಿದಳು. ಹೆಂಡತಿಯ ಭ್ರಮೆಗಳಿಂದ ಕಿರಿಕಿರಿಗೊಂಡ ಕೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿ ತೆಗೆದುಕೊಂಡು ಅಂಗಳಕ್ಕೆ ಹೋದ. ಅಲ್ಲಿ ಸೆಪ್ಪೆ ಮುಖದ ಸತ್ತವನಿದ್ದ. +“ನೀನು ನರಕಕ್ಕೆ ಹೋಗು. ಮತ್ತೆ ಮತ್ತೆ ನೀನು ವಾಪಸು ಬಂದರೆ ಅಷ್ಟು ಸಲವೂ ನಾನು ನಿನ್ನ ಕೊಂದು ಹಾಕ್ತಿನಿ.” +ಪ್ರುಡೆನ್ಸಿಯೋ ಹೋಗಲಿಲ್ಲ. ಅಲ್ಲದೆ ಕೊಸೆ ಅರ್ಕಾಡಿಯೋ ಬ್ಯುಂಡಿಯಾಗೆ ಭರ್ಜಿ ಬೀಸುವ ಧೈರ್ಯವಾಗಲಿಲ್ಲ. ಅನಂತರ ಅವನೆಂದೂ ನೆಮ್ಮದಿಯಿಂದ ನಿದ್ದೆ ಮಾಡಲಿಲ್ಲ. ಅವನು ಮಳೆಯಲ್ಲಿ ನಿಂತು ತೀರ ದೀನನಾಗಿ ತನ್ನ ಕಡೆ ಬೀರುತ್ತಿದ್ದ ನೋಟ, ಬದುಕಿರುವ ತನ್ನವರ ಬಗ್ಗೆ ಅತೀವ ಕಾಳಜಿ ಮತ್ತು ಹುಲ್ಲಿನ ಕಟ್ಟನ್ನು ನೀರಲ್ಲಿ ನೆನೆಸಲು ಆತಂಕದಿಂದ ಮನೆಯಲ್ಲಿ ಸುತ್ತಾಡುವ ರೀತಿ ಅವನನ್ನು ಹಿಂಸೆಗೆ ಗುರಿಪಡಿಸಿತ್ತು. “ಅವನು ತುಂಬ ಸಂಕಟ ಪಡ್ತಿರಬೇಕು. ಅವನೀಗ ತೀರ ಒಂಟಿಯಾಗಿದಾನೆ” ಎಂದು ಉರ್ಸುಲಾಗೆ ಹೇಳಿದ. ಅವಳಿಗೆ ಸತ್ತವನು ಮಡಿಕೆಯ ಮುಚ್ಚಳಗಳನ್ನು ತೆಗೆಯುತ್ತಿದ್ದಾಗ ಅವನೇನು ಹುಡುಕುತ್ತಿದ್ದಾನೆಂದು ಅರಿವಾದ ಮೇಲೆ ಮನೆಯಲ್ಲಿ ಎಲ್ಲಂದರಲ್ಲಿ ನೀರು ತುಂಬಿದ ಮಡಕೆಗಳನ್ನು ಇಟ್ಟಳು. ಒಂದು ದಿನ ತನ್ನ ರೂಮಿನಲ್ಲಿಯೇ ಅವನು ಗಾಯವನ್ನು ತೊಳೆದುಕೊಳ್ಳುತ್ತಿದ್ದಾಗ ಕೊಸೆ ಅರ್ಕಾಡಿಯೋ ಬ್ಯುಂಡಿಯಾಗೆ ತಡೆದುಕೊಳ್ಳಲಾಗಲಿಲ್ಲ.” +ಇಲ್ಲಿ ಅನೇಕ ವಿವರಗಳು “ಮಾಯಾ” ಪ್ರಪಂಚಕ್ಕೆ ಸೇರಿದವು ಎಂದು ತೋರಿದರೂ ಅವುಗಳ ಮೂಲ ಉದೇಶವನ್ನು ಯಾರೂ ಗಮನಿಸದೆ ಇರುವುದಿಲ್ಲ. ಮಾಕೆಜ್ ತನ್ನ ಕೃತಿಯಲ್ಲಿ ವಾಸ್ತವ-ಅವಾಸ್ತವ,-ಮಾಂತ್ರಿಕ ನೆಲೆಗಳ ಅನುಸಂಧಾನವನ್ನು ಮೊದಲಿನಿಂದ ಕೊನೆಯವರೆಗೂ ಮಾಡುತ್ತಲೇ ಇರುವುದನ್ನು ಕಾಣಬಹುದು. ಈ ಅನುಸಂಧಾನ ನಿಯಂತ್ರಿತವಾದದ್ದರಿಂದ ಎಲ್ಲೂ ಇದು ಅಸಂಭವನೀಯ ನೆಲೆಗೆ ಹೋಗುವುದಿಲ್ಲ. ಸಾಧ್ಯತೆಯ ಚೌಕಟ್ಟಿನಲ್ಲಿಯೇ ಇದು ನಡೆಯುತ್ತದೆ. +ಮಾರ್ಕೆಜ್ ಕೇವಲ ವೈಯಕ್ತಿಕ ಬದುಕಿನ ಚಿತ್ರಣವನ್ನ ಕಟ್ಟುವುದಿಲ್ಲ. ವ್ಯಕ್ತಿಗಳ ಒಳ ಬದುಕಿನ ಚಿತ್ರಣ ಕೊಡುವಾಗಲೂ ಅವನು ವ್ಯಕ್ತಿ-ಸಮಷ್ಟಿಯ ಸಾವಯವ/ಜೈವಿಕ ಸಂಬಂಧವನ್ನು ನಮಗೆ ತೋರಿಸಿಕೊಡುತ್ತಾನೆ. ಅವನ ಸಮುದಾಯ ಎಷ್ಟು ಆರೋಗ್ಯಪೂರ್ಣವಾದ್ದು ಎಂದರೆ ವ್ಯಕ್ತಿ ಮತ್ತು ಸಮಾಜದ ನಡುವೆ ಸಾಮರಸ್ಯವೇ ಮುಖ್ಯ. ಇದು ಬದುಕಿನಲ್ಲಿ ಮಾತ್ರವಲ್ಲ, ಸಾವಿನ ಸಂದರ್ಭದಲ್ಲೂ ಸತ್ಯ. ಈ ಭಾಗ ನೋಡಿ : +“. . . ಅವನು ಕತಾವುರೆ, ವಿಸಿಟೋಸಿಯೋನ್‌ಯ ಸೋದರ. ನಿದ್ದೆ ಬಾರದ ರೋಗಕ್ಕೆ ಹೆದರಿ ಮನೆಯಿಂದ ಓಡಿ ಹೋಗಿದ್ದ ಮತ್ತು ಅವನ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ವಿಸಿಟಾಸಿಯೋನ್ ಅವನಿಗೆ, “ಮತ್ತೆ ಬಂದದ್ದು ಯಾತಕ್ಕೆ” ಎಂದು ಕೇಳಿದ್ದಕ್ಕೆ ಅವನು ಅವನದೇ ಆದ ಸಮಾಧಾನದ ಉತ್ತರ ಕೊಟ್ಟ. +“ನಾನು ರಾಜನ ಅಪರಕರ್ಮ ಮಾಡಕ್ಕೆ ಬಂದಿದೀನಿ.” +ಅನಂತರ ಅವರು ಕೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿಗೆ ಹೋಗಿ ಅವರ ಕೈಲಾದಷ್ಟು ಅಲುಗಾಡಿಸಿದರು, ಕಿವಿಯಲ್ಲಿ ಕೂಗಿದರು, ಮೂಗಿನ ಹೊಳ್ಳೆಯ ಹತ್ತಿರ ಕನ್ನಡಿ ಇಟ್ಟರು. ಆದರೆ ಅವನನ್ನು ಎಚ್ಚರಗೊಳಿಸುವುದಕ್ಕೆ ಆಗಲಿಲ್ಲ. ಆ ಮೇಲೆ ಸ್ವಲ್ಪ ಸಮಯದ ನಂತರ ಮರಗೆಲಸದವನು ಶವಪಟ್ಟಿಗೆಗಾಗಿ ಅಳತೆ ತೆಗೆದುಕೊಳ್ಳುತ್ತಿದ್ದಾಗ ಕಿಟಕಿಯ ಮುಖಾಂತರ ಚಿಕ್ಕ ಹಳದಿ ಹೂಗಳ ಸಣ್ಣ ಮಳೆ ಬೀಳುತ್ತಿರುವುದನ್ನು ಕಂಡರು. ಇಡೀ ರಾತ್ರಿ ಮೌನವಾಗಿ ಊರಿನಲ್ಲಿ ಸುರಿಯಿತು ಮತ್ತು ಅವು ತಾರಸಿಗಳನ್ನು ಆವರಿಸಿದವು ಹಾಗೂ ಬಾಗಿಲುಗಳಿಗೆ ಮೆತ್ತಿಕೊಂಡವು ಮತ್ತು ಹೊರಗೆ ಮಲಗಿದ್ದ ಪ್ರಾಣಿಗಳಿಗೆ ಮೃದುಸ್ವರ್ಶ ಮಾಡಿದವು. ಆಕಾಶದಿಂದ ಅದೆಷ್ಟು ಹೂಗಳು ಬಿದ್ದಿದ್ದವೆಂದರೆ ಮಾರನೆ ದಿನ ಬೆಳಿಗ್ಗೆ ರಸ್ತೆಗಳಿಗೆಲ್ಲ ಮೆತ್ತನೆಯ ಕುಶನ್ ಹಾಸಿತ್ತು ಮತ್ತು ಸಲಿಕೆ ಮತ್ತು ಕುಂಟೆಗಳಿಂದ ಪಕ್ಕಕ್ಕೆ ತಳ್ಳಿ ಶವಯಾತ್ರೆಗೆ ಅನುಕೂಲ ಮಾಡಿಕೊಡಬೇಕಾಯಿತು.” +ಹಾಗೆಯೇ ಮಾರ್ಕೆಜ್ ವ್ಯಕ್ತಿಗಳ ಅನ್ಯೋನ್ಯ ಸಂಬಂಧವನ್ನು ಸೆರೆಹಿಡಿಯುವಾಗ ಪಾಕೃತಿಕ ಸಂಕೇತಗಳನ್ನೇ ಬಳಸುತ್ತಾನೆ. ಗಂಡು-ಹೆಣ್ಣಿನ ಗಾಢ ಸಂಬಂಧವನ್ನು ಸಂಭ್ರಮದ ರೂಪಕವಾಗಿಸಿಬಿಡುತ್ತಾನೆ. ಅವನ ವರ್ಣನೆ ನೋಡೋಣ : +“ಮೆಮೆಗೆ ಅವನು ಹಮ್ಮಿನಿಂದ ಬಿರಿದು ಹೋಗುತ್ತಿದ್ದಾನೆಂದು ಅರ್ಥವಾಯಿತು. ಅವಳ ಅವನಿಗೆ ಅಪಮಾನ ಮಾಡುವ ಬಗೆಯನ್ನು ಹತಾಶೆಯಿಂದ ಹುಡುಕಿದಳು. ಆದರೆ ಅವನು ಅವಳಿಗೆ ಕಾಲಾವಕಾಶವನ್ನೇ ಕೊಡಲಿಲ್ಲ. ಅವನು ಕೆಳದನಿಯಲ್ಲಿ, “ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಹುಡುಗಿಯೊಬ್ಳು ಒಬ್ಬ ಹುಡುಗನ್ನು ತೀರ ಇಷ್ಟಪಟ್ಟಿರೋದು ಇದೇನು ಮೊದಲ್ನೇ ಸಲ ಅಲ್ಲ” ಎಂದ. ಅವಳಿಗೆ ಕುಸಿದಂತಾಗಿ ಹೊಸ ಮಾಡಲ್‌ಗಳನ್ನು ನೋಡದೆ ಗರಾಜ್‌ನಿಂದ ಹೊರಟು ಹೋದಳು ಮತ್ತು ಆ ದಿನ ರಾತ್ರಿಯೆಲ್ಲ ಕೋಪಗೊಂಡು ಅಳುತ್ತಿದ್ದಳು. ಅವಳ ಬಗ್ಗೆ ಆಸಕ್ತಿ ಹೊಂದಲು ಪ್ರಾರಂಭಿಸಿದ್ದ ಅಮೆರಿಕದ ಕೆಂಗೂದಲ ಮನುಷ್ಯ ಎಳೆ ಮಗುವಿನಂತೆ ಕಂಡ. ಆಗ ಅವಳಿಗೆ ಮಾರಿಷಿಯೋ ಕಾಣಿಸಿಕೊಳ್ಳುತ್ತಿದ್ದಕ್ಕಿಂತ ಮುಂಚೆ ಹಳದಿ ಚಿಟ್ಟೆಗಳು ಬರುತ್ತಿದ್ದದ್ದು ನೆನಪಾಯಿತು. ಅವಳು ಅವುಗಳನ್ನು ಮುಖ್ಯವಾಗಿ ಗರಾಜ್ ಬಳಿ ನೋಡಿದ್ದಳು. ಪೇಂಟ್‌ನ ವಾಸನೆಯಿಂದ ಅವು ಮುತ್ತುತ್ತವೆ ಎಂದು ಅವಳು ತಿಳಿದುಕೊಂಡಿದ್ದಳು. ಒಂದು ಸಲ ಅವಳು ಸಿನಿಮಾಕ್ಕೆ ಹೋಗುವ ಮುಂಚೆ ತನ್ನ ತಲೆಯ ಮೇಲೆ ಹಾರಾಡುತ್ತಿದ್ದದ್ದನ್ನು ಕಂಡಿದ್ದಳು. ಆದರೆ ಮಾರಿಷಿಯೋ ಬಾಬಿಲೋನಿಯಾ ಭೂತದ ಹಾಗೆ ತನ್ನ ಬೆನ್ನು ಹತ್ತಿದಾಗ, ಗುಂಪಿನಲ್ಲಿದ್ದರೂ ಅವನನ್ನು ಗುರುತಿಸಲು ತನಗೆ ಮಾತ್ರ ಸಾಧ್ಯವಾದ ಮೇಲೆ, ಚಿಟ್ಟೆಗಳಿಗೂ ಅವನಿಗೂ ವಿಚಿತ್ರವಾದ ಸಂಬಂಧವಿದೆ ಎಂದು ಅವಳಿಗೆ ಗೊತ್ತಾಯಿತು. ಮಾರಿಷಿಯೋ ಬಾಬಿಲೋನಿಯಾ ಸಂಗೀತ ಗೋಷ್ಠಿಗಳಲ್ಲಿ, ಸಿನಿಮಾದಲ್ಲಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಯಾವಾಗಲೂ ಇರುತ್ತಿದ್ದ. ಅವಳು ಅವನು ಎಲ್ಲಿದ್ದಾನೆ ಎಂದು ಹುಡುಕಬೇಕಾಗಿರಲಿಲ್ಲ. ಏಕೆಂದರೆ ಅವನಿದ್ದ ಕಡೆ ಚಿಟ್ಟೆಗಳು ಯಾವಾಗಲೂ ಇರುತ್ತಿದ್ದವು. ಒಂದು ಸಲ ಅವ್ರೇಲಿಯಾನೋ ಸೆಗುಂದೋ ಅವುಗಳ ಹಾರಾಟದಿಂದ ಎಷ್ಟು ಕಸಿವಿಸಿಗೊಂಡಿದ್ದನೆಂದರೆ ಅವಳಿಗೆ ತನಗೆ ತಿಳಿದಿರುವ ಗುಟ್ಟನ್ನು, ಅವಳೇ ಮಾತು ಕೊಟ್ಟಂತೆ ಹೇಳಿಬಿಡಬೇಕು ಎನ್ನಿಸಿತು. ಆದರೆ ಅವನು ಎಂದಿನ ಹಾಗೆ ನಕ್ಕು, “ನಿಮ್ಮಮ್ಮನಿಗೆ ಗೊತ್ತಾದರೆ ಏನು ಹೇಳ್ತಾಳೆ?” ಎನ್ನುತ್ತಾನೆ ಎಂದುಕೊಂಡಳು. ಒಂದು ದಿನ ಬೆಳಿಗ್ಗೆ ಅವಳು ಗುಲಾಬಿ ಹೂಗಳನ್ನು ಒಪ್ಪಮಾಡುತ್ತಿದ್ದಾಗ ಫೆರ್ನಾಂಡ ಕೂಗಿಕೊಂಡಳು ಮತ್ತು ಮೆಮೆ ತಾನಿದ್ದ ಸ್ಥಳದಿಂದ ಆಚೆ ಹೋದಳು. ಅದು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋಗುವಾಗ ಕೈತೋಟದಲ್ಲಿ ನಿಂತ ಸ್ಥಳವಾಗಿತ್ತು. ಅವಳು ಮತ್ತೆ ಅದೇ ರೀತಿಯ ಮಾಂತ್ರಿಕ ಘಟನೆ ಜರುಗುವುದೆಂದು ಭಾವಿಸಿದಳು, ಏಕೆಂದರೆ ಒಮ್ಮೆಲೇ ಚಿಟ್ಟೆಗಳ ರೆಕ್ಕೆ ಬಡಿತದಿಂದ ಅವಳು ಕಳವಳಗೊಂಡಿದ್ದಳು. ಅವು ಇದ್ದಕ್ಕಿದ್ದ ಹಾಗೆ ಬೆಳಕಿನಿಂದ ಹುಟ್ಟು ಪಡೆದದ್ದಾಗಿ ಮೆಮೆಗೆ ತೋರಿತು ಮತ್ತು ಅವಳ ಹೃದಯ ಒಮ್ಮೆ ಪುಟಿಯಿತು. . . . ” +ಮಾರ್ಕೆಜ್ ಮತ್ತೊಂದು ಮುಖ್ಯವಾದ ವಿಷಯದ ಕಡೆ ನಮ್ಮ ಗಮನವನ್ನು ಸೆಳೆಯುತ್ತಾನೆ. ತಾನು ಬಣ್ಣಿಸುತ್ತಿರುವ ಸಮಾಜದಲ್ಲೇ ವೈಙ್ಞನಿಕ ಪ್ರಙ ಮತ್ತು ಆಧ್ಯಾತ್ಮಿಕ ಹುಡುಕಾಟ ಬೆಸೆದಿರುವುದನ್ನು ಅದ್ಭುತವಾಗಿ ವರ್ಣಿಸುತ್ತಾನೆ. ಇಂಥ ಸಮಾಜಗಳಲ್ಲಿ ದೇವರ ಬಗೆಗಿನ ಜಿಙ್ಞಸೆ ಮೂಢ ನಂಬಿಕೆಗಳಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಭಾವಿಸಲು ಆಧುನಿಕ ಪ್ರಪಂಚದ ದುರಹಂಕಾರವೇ ಹೊರತು ಸತ್ಯದ ಸಂಗತಿಯಲ್ಲ ಎಂಬ ಎಚ್ಚರವನ್ನು ಮಾರ್ಕೆಜ್ ನಮಗೆ ಕೊಡುತ್ತಾನೆ. ಎಲ್ಲ ರೀತಿಯ ವೈಙ್ಞನಿಕ ಚಿಂತನೆಗೆ ನಾವೇ ವಾರಸುದಾರರು ಎಂಬ ಕ್ಷುದ್ರ ಅಹಂಕಾರವನ್ನು ಇದು ತೊಡೆದು ಹಾಕುತ್ತದೆ. ಕಾದಂಬರಿಯಲ್ಲಿ ಬರುವ ಒಂದು ಭಾಗ ಹೀಗಿದೆ : +“ಕಾಲ ಅವನ ಹುಚ್ಚು ನಿರ್ಧಾರವನ್ನು ತಗ್ಗಿಸಿತ್ತಾದರೂ ಅವನ ಭಗ್ನಭಾವ ಹೆಚ್ಚಾಯಿತು. ಅದನ್ನು ಮರೆಯಲು ಅವನು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡ. ತನ್ನ ಅಪ್ರಯೋಜಕವಾದ ನಾಚಿಕೆಯನ್ನು ಮರೆಮಾಚುವುದಕ್ಕೆ ಇಡೀ ಜೀವನ ಹೆಂಗಸರ ಸಂಗವಿರದ ಮನುಷ್ಯನಾಗಿರಲು ಮನಸ್ಸು ಮಾಡಿದ. ಈ ಮಧ್ಯೆ ಮೆಲ್‌ಕಿಯಾದೆಸ್ ಮಕೋಂದೋದಲ್ಲಿ ಫಲಕಗಳ ಮೇಲೆ ಮುದ್ರಿಸಬಹುದಾದ ಎಲ್ಲವನ್ನೂ ಮುದ್ರಿಸಿದ ಮತ್ತು ಹಳೆಯ ಲ್ಯಾಬೊರೇಟರಿಯನ್ನು ಕೊಸೆ ಅರ್ಕಾದಿಯೋ ಬ್ಯುಂದಿಯಾನ ವಿಚಿತ್ರ ಆಲೋಚನೆಗಳಿಗೆ ಬಿಟ್ಟು ಕೊಟ್ಟ. ಅವನು ಅದನ್ನು ದೇವರು ಇರುವುದಕ್ಕೆ ವೈಜ್ಞಾನಿಕ ಪುರಾವೆ ಪಡೆಯಲು ಉಪಯೋಗಿಸಬೇಕೆಂದು ತೀರ್ಮಾನಿಸಿದ. ದೇವರು ಇದ್ದದ್ದೇ ಆದರೆ, ಒಂದು ಸಂಕೀರ್ಣ ಪ್ರಕ್ರಿಯೆಯಿಂದ ಮನೆಯ ವಿವಿಧ ಭಾಗಗಳಲ್ಲಿ ಒಂದರ ಮೇಲೊಂದು ಮೇಳೈಸಿದ ಚಿತ್ರಗಳನ್ನು ತೆಗೆಯುವುದರ ಮೂಲಕ, ಆದಷ್ಟು ಬೇಗ ದೇವರ ಛಾಯಾಚಿತ್ರ ತೆಗೆಯಬಹುದೆಂಬ ಭರವಸೆ ಹೊಂದಿದ್ದ. ಹಾಗಾಗದಿದ್ದರೆ ಅವನಿರುವ ನಂಬಿಕೆಗೆ ಇತಿಶ್ರೀ ಹೇಳಬೇಕೆಂದುಕೊಂಡ. ಮೆಲ್‌ಕಿಯಾದೆಸ್ ನಾಸ್ಟರ್‌ಡಾಮಸ್‌ನ ವ್ಯಾಖ್ಯಾನಗಳಲ್ಲಿ ಮತ್ತಷ್ಟು ಮುಳುಗಿದ. ರಾತ್ರಿ ಬಹಳ ಹೊತ್ತಿನ ತನಕ ಉಸಿರಾಡಲು ಕಷ್ಟಪಡುತ್ತ ಮೊದಲಿನ ಚುರುಕನ್ನು ಕಳೆದುಕೊಂಡು ಸೊರಗಿದ ಕೈಗಳಿಂದ ಬರೆಯುತ್ತಿದ್ದ. ಅದೊಂದು ದಿನ ಅವನಿಗೆ ಮಕಾಂದೋದ ಭವಿಷ್ಯ ಕಂಡಂತಾಯಿತು. ಗಾಜಿನ ಮನೆಗಳಲ್ಲಿದ್ದ ಅದರಲ್ಲಿ ಹೇಳಹೆಸರಿರಲಿಲ್ಲ. “ಅದೆಲ್ಲ ಶುದ್ಧ ತಪ್ಪು. ನಾನು ಕನಸು ಕಂಡ ಹಾಗೆ ಅದು ಗಾಜಿನ ಮನೆಗಳಲ್ಲ, ಐಸ್‌ನ ಮನೆಗಳು. ಅಲ್ಲದೆ ಯಾರಾದರೊಬ್ಬ ಬ್ಯುಂಡಿಯಾ ಯಾವಾಗಲೂ ಇದ್ದೇ ಇರುತ್ತಾನೆ” ಎಂದು ಅಬ್ಬರಿಸಿದ. . . . ” +ಹೀಗೆ ಅನೇಕ ಸ್ತರಗಳಲ್ಲಿ ಕಾದಂಬರಿಯ ಜಗತ್ತು ಅನಾವರಣಗೊಳ್ಳುತ್ತ ನಮ್ಮನ್ನು ತನ್ನ ಬಹುಮುಖಿ ನೆಲೆಗಳಿಗೆ ಕರೆದೊಯ್ಯುತ್ತದೆ. ಒಂದೊಂದು ನೆಲೆಯೂ ನಮಗೆ ಪ್ರತ್ಯಕ್ಷವಾಗತೊಡಗಿದಾಗ ನಾವು ಚಕಿತಗೊಳ್ಳುತ್ತೇವೆ. ಈ ಆಶ್ಚರ್ಯದ ನೆಲೆಗಳು ನಮಗೆ ಚನ್ನಾಗಿ ಪರಿಚಿತವಿರುವ ಆಧುನಿಕ ಜಗತ್ತಿನ ಹಿಂಸೆ, ಕ್ರೌರ್ಯ, ಶೋಷಣೆಗಳೊಡನೆ ಬೆಸೆದುಕೊಂಡುಬಿಡುತ್ತವೆ. ಅಂದರೆ ಪರಿಚಿತ ಮತ್ತು ಅಪರಿಚಿತ ನೆಲೆಗಳ ಸಮಾಗಮ ಕಥನದ ಉದ್ದಕ್ಕೂ ಆಗುತ್ತಲೇ ಹೋಗುತ್ತಿರುವುದನ್ನು ನಾವು ಕಾಣಬಹುದು. ಮಾರ್ಕೆಜ್ ನಮ್ಮ ಯುಗದ ಇತಿಹಾಸವನ್ನು ಎಷ್ಟು ನಿಕಟವಾಗಿ ಪರಿಚಯ ಮಾಡಿಕೊಡುತ್ತಾನೋ ಅಷ್ಟೇ ಆತ್ಮೀಯವಾಗಿ ನಾವು ಕಾಣದ ಲೋಕಗಳ ದರ್ಶನವನ್ನೂ ಮಾಡಿಸುತ್ತಾನೆ. ಆಧುನಿಕ ಪ್ರಪಂಚದ ರಕ್ತಪಾತ, ಸರ್ವಾಧಿಕಾರ, ಬಲಿಷ್ಠ ರಾಷ್ಟ್ರಗಳ ಅಟ್ಟಹಾಸ ನಮಗೆ ಎದಿರಾಗುತ್ತಲೇ ಇರುತ್ತವೆ. ಒಂದರ್ಥದಲ್ಲಿ ಆದಿಮ ರೂಪಕಗಳು ಹೊಸ ಸಂಕೇತಗಳೊಂದಿಗೆ ಬೆಸೆದುಕೊಳ್ಳುವುದೇ ಕಾದಂಬರಿಯ ಹಿರಿಮೆ. ಸಾಹಿತ್ಯದ ಸಂವೇದನೆ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಟ್ಟನ್ನು ಸಾಧಿಸಿಕೊಳ್ಳುವುದು ಒಂದು ಅಪ್ರತಿಮ ಸಾಧನೆ. ಇದೇ ಮಾರ್ಕೆಜ್‌ನ ಅದ್ಭುತ ಕೊಡುಗೆ ಕೂಡ. +ಸ್ಪ್ಯಾನಿಷ್‌ನಿಂದ ಇಂಗ್ಲಿಷ್‌ಗೆ ಬಂದ ಈ ಕಾದಂಬರಿ ಈಗ ಕನ್ನಡಕ್ಕೆ ಬಂದಿರುವುದು ಬಹಳ ದೊಡ್ಡ ಸಂಗತಿ. ನಮ್ಮಲ್ಲಿ ಈಗ ಸೃಜನಶೀಲ ಲೇಖಕರು ರೂಪಕಗಳ ಕಡೆಗೆ ವಾಲುತ್ತಿರುವುದು ಆಶ್ಚರ್ಯವೇನಲ್ಲ. ಆಧುನಿಕ ಪ್ರಪಂಚದ ಭೀಕರತೆಯನ್ನು ವ್ಯಕ್ತಪಡಿಸಲು ರೂಪಕಗಳ ಮಾರ್ಗ ಬಹಳ ಅಗತ್ಯ. ಈ ಕಾರಣಕ್ಕಾಗಿಯೇ ಅನೇಕ ದಲಿತ ಕೃತಿಗಳು ರೂಪಕಾತ್ಮಕವಾಗಿ ಹೊರಹೊಮ್ಮುತ್ತಿರುವುದು ಸ್ವಾಗತಾರ್ಹವಾದ ಸಂಗತಿ. ಇದನ್ನು ರಿವೈವಲಿಸಂ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸೃಜನಶೀಲತೆ ವಾಸ್ತವತೆಯ ದಬ್ಬಾಳಿಕೆಯನ್ನು ಎಂದಿಗೂ ಸಂಕೇತಗಳ ಮೂಲಕವೇ ಎದುರಿಸುತ್ತಿದೆ ಎನ್ನುವುದನ್ನು ಎಲ್ಲ ಸೂಕ್ಷ್ಮಙ್ಞರೂ ಬಲ್ಲರು. +ಈ ರೀತಿಯ ರೂಪಕೋತ್ಸವವೇ ಮಾರ್ಕೆಜ್‌ನ ಕಾದಂಬರಿಯಲ್ಲಿದೆ. ಎ. ಎನ್. ಪ್ರಸನ್ನರು ಮೇಲಿನ ಎಲ್ಲ ಸಂಕೀರ್ಣ ಆಯಾಮಗಳನ್ನು ಅರ್ಥೈಸಿಕೊಂಡು ಮಾಂತ್ರಿಕ ವಾಸ್ತವತೆಯ ಅನುಭವವನ್ನು ನಮಗೆ ಮೇಲ್ಮಟ್ಟದ ಸಂವೇದನೆಯ ಮೂಲಕ ತಮ್ಮ ಅನುವಾದದಲ್ಲಿ ದಕ್ಕಿಸಿಕೊಟ್ಟಿರುವುದು ಮೆಚ್ಚುಗೆಯ ಸಂಗತಿ. ಬಹಳ ಕಠಿಣವಾದ ಆಂಗ್ಲಭಾಷಾನುವಾದದ ಕ್ರಮವನ್ನು ಪ್ರಸನ್ನರು ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಂಡಿರುವ ರೀತಿ ಅನನ್ಯವಾದದ್ದು. +ಇಂಗ್ಲಿಷ್‌ನಲ್ಲಿರುವ ಅವನ ಕೃತಿಯನ್ನು ನಾವು ಅನೇಕ ಕಡೆ ಪ್ರಯಾಸದಿಂದಲೇ ಓದಿಕೊಳ್ಳಬೇಕಾಗುತ್ತದೆ. ಕಾದಂಬರಿಯಲ್ಲಿ ಇಂಗ್ಲಿಷ್ ವಾಕ್ಯಗಳು ಬಹಳ ಕಠಿಣವಾಗಿವೆ. ಈ ಇಂಗ್ಲಿಷ್ ವಾಕ್ಯಗಳನ್ನು ಕನ್ನಡದ ಲಯಕ್ಕೆ ಅನುಗುಣವಾಗಿ ತರುವುದು ಸುಲಭವಲ್ಲ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಪ್ರಸನ್ನರು ಹಲಕೆಲವು ಸೃಷ್ಟ್ಯಾತ್ಮಕ ಸ್ವಾತಂತ್ರ್ಯವನ್ನು ವಹಿಸಿರುವುದು ಎಲ್ಲರ ಗಮನಕ್ಕೆ ಬರುವಂತಿದೆ. ಕೆಲವರಿಗೆ ಪ್ರಸನ್ನರ ಪ್ರಯೋಗಗಳು ಒಂದೆರಡು ಕಡೆ ಅಸಮಾಧಾನವನ್ನು ಉಂಟುಮಾಡಬಹುದೇನೋ. ಆದರೆ ವಿನ್ಯಾಸದಲ್ಲಿ, ಕಲ್ಪನೆಯಲ್ಲಿ, ಅನುಭವದಲ್ಲಿ, ಗಾತ್ರದಲ್ಲಿ ಅಗಾಧವಾಗಿರುವ ಮಾರ್ಕೆಜ್‌ನ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಒಂದು ಮಹತ್ಸಾಧನೆ. ಮಾರ್ಕೆಜ್‌ನ ಲೋಕ ನಮಗೆ ಎಷ್ಟು ಮುಖ್ಯ, ಹತ್ತಿರ ಎನ್ನುವುದೇ ನಮ್ಮನ್ನು ಭಾಷಾಂತರದ ಸಮಸ್ಯೆಗಳನ್ನು ದಾಟಿ ಅದರ ಒಳಗೆ ಹೋಗುವಂತೆ ಮಾಡಬೇಕು. ಒಟ್ಟಿನಲ್ಲಿ ಭಾಷೆಯ ಸಮಸ್ಯೆಗಳು ಅನುಭವದ ಮಹತ್ವವನ್ನು ಗೌಣಗೊಳಿಸಬಾರದು. ಇಂಥ ಶ್ರೇಷ್ಠ ಅನುಭವವನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟ ಪ್ರಸನ್ನರು ಅಭಿನಂದನಾರ್ಹರು. +***** +ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ […] +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_419.txt b/Kannada Sahitya/article_419.txt new file mode 100644 index 0000000000000000000000000000000000000000..4618cde2e865e81ce93a0cf44ff68b27e54a2437 --- /dev/null +++ b/Kannada Sahitya/article_419.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ +ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- +ಎಂದು ಕಿವಿ ನಂಬದಾಯ್ತು. +ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- +ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ +ಅದೇ ಅದೇ ಎಂದು ಖಾತ್ರಿಯಾಯ್ತು. +ಮಬ್ಬುಗತ್ತಲೆಯನ್ನು ಭೇದಿಸಿ ನಮಾಜಿನ ಆವಾಜು +ಆಕಾಶಕ್ಕೇರಿ ಇಳಿದಾಗ, +ದೂರದಿಂದ ಧಾವಿಸಿ ಬರುತ್ತಿದ್ದ ರೈಲಿನ ಸಿಳ್ಳು +ದಿಗಂತದ ನಸುಗೆಂಪನ್ನು ತಿದ್ದಿ ತೀಡಿ +ದೀರ್ಘರೇಖೆಯನ್ನೆಳೆದಾಗ, +ಸಂಧಿಕಾಲಕ್ಕೆ ಪ್ರಯಾಣ ಸಮೀಪಿಸಿತ್ತು. +ನಗರದ ಕೋಳಿಗಳಿಗೆ +ಬೀಸಾಗಿ, ಪಟಪಟ ರೆಕ್ಕೆ ಬಡಿದು +ಕೊರಳೆತ್ತಿ ಕೂಗುವಭ್ಯಾಸ ಮರೆತೇ ಹೋಗಿದೆ. +ಎಡೆಬಿಡದೆ ತತ್ತಿ ಇಡುವುದೊಂದೇ ಅವಕ್ಕೆ +ಮನುಷ್ಯ ವಹಿಸಿಕೊಟ್ಟಿರುವ ಕುಟುಂಬ ಯೋಜನೆ. +ಅದಕ್ಕಾಗಿ ಪಂಜರದಲ್ಲೆ ಪೌಷ್ಟಿಕಾಹಾರ, ಜೋಪಾಸನೆ. +ಕೋಗಿಲೆಯೊಂದು ಮಾತ್ರ ಇದುವರೆಗೆ +ಯಾರ ಕೈಗೂ ಸಿಗದೆ +ಸ್ವಚ್ಛಂದ ಹಾಡಿ ಬದುಕುತ್ತಿರುವುದೇ ಆಶ್ಚರ್ಯ. +ಕೋಗಿಲೆ-ನಮಾಜು-ರೈಲು +ಕಲೆ-ಧರ್ಮ-ವಿಜ್ಞಾನದ ಪೈಲು +ಪರಸ್ಪರ ಸಂಧಿಸಿ, ಸ್ಪಂದಿಸಿ ದಿನವೂ +ಹೀಗೆ ಬೆಳಗಾದರೆ? – +ಎಂದು ಪ್ರಶ್ನೆಯ ಬೆತ್ತ ಹಿಡಿದು +ಬೆಳಗಿನ ವಿಹಾರಕ್ಕೆ ನಾನು ಹೊರಬಿದ್ದೆ. +***** +ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […] +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_42.txt b/Kannada Sahitya/article_42.txt new file mode 100644 index 0000000000000000000000000000000000000000..d00f4af62b195835d56ca5b4492ceac649f091bb --- /dev/null +++ b/Kannada Sahitya/article_42.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – +ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. +ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : +ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – +ಎಂಥ ಇಕ್ಕಟ್ಟಿನಲ್ಲು ಹೊರಬರುತ್ತದೆ ತುರಾಯಿ ಹಚ್ಚಿಕೊಂಡು. +ಗುಡ್ಡ-ಮರಡಿ-ಬಯಲು ಸ್ವಂತ ಸಾಮ್ರಾಜ್ಯ +ಹಿತ್ತಿಲದ ಮಾತು ಗೊತ್ತೇ ಇದೆ ; +ಅಂಗಳದ ಅಂಗುಲಂಗುಲ ಕೂಡ ಅದರದೇ ಗುತ್ತಿಗೆ. +ಹೂದೋಟದಲ್ಲಿ ಹೇಳಿಕಳಿಸಿದ ಹಾಗೆ ಹೊತ್ತಿಗೆ +ಮೊದಲೇ ಬಂದೆ ಡೇರೆ ಹೊಡೆದು ತಳವೂರುತ್ತದೆ- +ನೀರೆರೆದು ಬೆಳೆಸಿದ ಹೂವಿನ ಗಿಡಕ್ಕೆಸೆದು ಸವಾಲು ; +ಬೀಜದ ಕಸುವೋ, ಮಣ್ಣಿನ ಹಸಿವೋ – +ಮುಸುಗುಡುತ್ತದೆ ದನ ಮೇದು ಹೋದ ಮೇಲೂ. +ಕರುಣೆ ತೋರದೆ ಕುರುಪಿಯಿಂದ ಕೆತ್ತಿ ಕೆತ್ತಿ ತೆಗೆದು +ಹೊರಗೊಗೆದು ಹಸನಾಯಿತೆಂದು ಉಸಿರು ಬಿಡು – +ವಷ್ಟರಲ್ಲೇ ಕಷ್ಟದ ಮರುದಿನದ ಮುಖದಂತೆ +ಬ್ಲೇಡಿಗೆ ತಯಾರು. ನೀವಾರು, ನಿಮ್ಮ ಹೆಸರೇನು +ಕಸುಬಾವುದು-ಐದೆಸೆಯೆಲ್ಲ ಅದಕೆ ಗೊತ್ತು +ಕರಿಕೆ : ಕಜ್ಜಿಯ ತುರಿಕೆ, ಹುಲ್ಲು : ಕಾಮನಬಿಲ್ಲು +ಕಣ್ಮುಚ್ಚಿ ಬಿಟ್ಟೇ – +ಬಿಡುತ್ತದೆ ಬಾಣ : ಹೇಳಿ ಎಲ್ಲೆಲ್ಲ ಅದರ ತಾಣ? +ಇರಬಹುದು ಬಂಡೆಗಲ್ಲಿನ ಬೋಳುತಲೆ ಅಲ್ಲಲ್ಲಿ. ಅದರ +ತಳದಲ್ಲಿ ಮೆತ್ತಗೆ ಮಲಗಿರುತ್ತದೆ, ಪರೀಕ್ಷಿಸಿ ನೋಡಿ. +ಬೇಲಿದಾಟಿ ಒಳಗೆ ನುಗ್ಗುತ್ತದೆ ; ಕಾಲಕೆಳಗೇ ಬಂದು +ಜಗ್ಗುತ್ತದೆ. ಲಾನಿನ ಕ್ರಾಪು ಕತ್ತರಿಸಿದಾಗ ಮಗ್ಗುಲದಲ್ಲಿ +ಹಿಗ್ಗುತ್ತದೆ ; ಬರುಬರುತ್ತ ಒಗ್ಗಿ ಹೋಗುತ್ತದೆ. +ಮಳೆಗೆ ಹುಲ್ಲು ಮೊಳೆಯುವುದು ಮೂಲ ಪ್ರವೃತ್ತಿ, ನಿಸರ್ಗ. +ಕಳೆತೆಗೆದು ಬಿತ್ತಿ ಬೆಳೆಯುವದು ನಾಗರಿಕ ಮಾರ್ಗ. +ಮರುಭೂಮಿಯ ಮಾತುಬೇರೆ ; ಅಲ್ಲಿ ಮಳೆಯೂ ಇಲ್ಲ. +ಆದರೂ ದೂರ ಅಲ್ಲೊಂದು ಓಯಾಸಿಸ್ಸು ಉಂಟಲ್ಲ ಮಾರಾಯರೆ – +ಅದಕ್ಕೇ ಅಲ್ಲಿ ಒಂಟೆ ಮಲಗಿ ಮೆಲುಕಾಡಿಸುವದು. +***** +೧೯೮೦ +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +ಹವೆ ಹೊತ್ತಿಸುವ ಬಿಸಿ ಬಿಸಿಲು ಬೆಂಕಿ ಬೇಸಗೆ ಧಗೆ ಅಲವರಿಕೆಯಲ್ಲಿ ತಣ್ಣನೆ ಒರೆದಂಗಳಕ್ಕೆ ಮೈ ಚಾಚುವ ಹಿಗ್ಗು ಗಡಚಿಕ್ಕುವ ಧೋಮಳೆ ನಡುಕ ಒದ್ದೆ ಮುದ್ದೆಯ ನಡುವೆ ಒಳಕೋಣೆಯ ಬೆಚ್ಚನೆ ಮೂಲೆ ಲಾಟೀನ ಕೆಳಗೆ ಮಗ್ಗಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_420.txt b/Kannada Sahitya/article_420.txt new file mode 100644 index 0000000000000000000000000000000000000000..b9b3e5e0bb125cf48ea3b486662723673dfff9b8 --- /dev/null +++ b/Kannada Sahitya/article_420.txt @@ -0,0 +1,111 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ ಅವನ ಕಥೆಗಳು ಆಗಾಗ ಕಂಡುಬರುತ್ತಿದ್ದವು. ಅದೇ ಕಾಲಕ್ಕೆ ಸಂಜೆಯಾವಾಗಲಾದರೂ ಕುಳಿತು ಅವನ ಕೃತಿಗಳು, ಅದರ ಹಿನ್ನೆಲೆ ಇತ್ಯಾದಿ ಚರ್ಚೆ ಮಾಡುವುದು ನನಗೆ ಹಾಗೂ ವಿಮರ್ಶಕನೆಂದು ಹೆಸರು ಮಾಡುತ್ತಿದ್ದ ವಿಲಿಯಂ ಹೊವೆಲ್ಸ್‌ಗೆ ಪ್ರಿಯ ವಿಷಯವಾಗಿತ್ತು. ಅಂದು ಸಂಜೆ : ನಾನು ಮತ್ತು ಹೊವೆಲ್ಸ್ ಟ್ವೇನ್‌ನ ಆಗಮನಕ್ಕಾಗಿ ಕಾಯುತ್ತಿದ್ದೆವು. +ಟ್ವೇನ್ ಇನ್ನೂ ಬಂದಿರಲಿಲ್ಲ. +ಹೊವೆನ್ಸ್ ಟ್ವೇನ್‌ನನ್ನು ಪ್ರೀತಿಯಿಂದ ಅವನ ಹಳೆಯ ಹೆಸರಾದ ‘ಸ್ಯಾಮ್’ ಎಂದೇ ಕರೆಯುತ್ತಿದ್ದ. ಟ್ವೇನ್‌ಗೆ ಇದು ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಅವನೂ ಹೊವೆಲ್ಸ್‌ನನ್ನು ‘ಬಿಲ್’ ಎಂದು ಕರೆದು ಸೇಡು ತೀರಿಸಿಕೊಳ್ಳುತ್ತಿದ್ದ. ನನ್ನನ್ನು ಮಾತ್ರ ಇಬ್ಬರೂ ಔಪಚಾರಿಕವಾಗಿಯೇ ಸಂಬೋಧಿಸುತ್ತಿದ್ದರು. ಇಬ್ಬರಿಂದಲೂ ನಾನು ಸ್ವಲ್ಪ ದೂರ ಉಳಿದಿದ್ದೆನೆಂದೇ ಹೇಳಬೇಕು. +ಮೀಜಿನ ಮೇಲಿದ್ದ ಅಟ್ಲಾಂಟಿಕ್ ಕೈಗೆತ್ತಿಕೊಂಡು ತಿರುವ ತೊಡಗಿದೆ. ಎಡಗೈನಲ್ಲಿ ಹೊವೆಲ್ಸ್ ಆಗ ತಾನೇ ತಯಾರಿಸಿಕೊಟ್ಟಿದ್ದ ಕಾಫಿ ಇತ್ತು. ಸಂಜೆ ಏಳಕ್ಕೆ ಹೊವೆಲ್ಸ್‌ನ ಮನೆಗೆ ಬರುತ್ತೇನೆಂದಿದ್ದ ಟ್ವೇನ್ ಮಾತ್ರ ನಾಪತ್ತೆಯಾಗಿದ್ದ. +“ತಂಪಾಗಿ ಏನಾದ್ರೂ ಕೊಡ್ಲೇ…. ಷರಿ, ಬ್ರಾಂದಿ….?” ಹೊವೆಲ್ಸ್ ಕೇಳಿದ. +“ಬೇಡ….” ಮತ್ತೊಂದು ಲೋಟ ಕಾಫಿ ಬಗ್ಗಿಸಿಕೊಳ್ಳುತ್ತಾ ಉತ್ತರಿಸಿದೆ. +ಹೊವೆಲ್ಸ್ ಮತ್ತೆ ಒಳಹೋಗಿ ಕೆಟಲ್‌ನಲ್ಲಿ ಇನ್ನೊಂದಿಷ್ಟು ಕಾಫಿ ಕಾಯಿಸತೊಡಗಿದ. ನಾನು ಪತ್ರಿಕೆ ತಿರುವಿ ಹಾಕುತ್ತಿದ್ದೆ. ಅವರು ಅಡುಗೆ ಮನೆಯಿಂದ ಬರುತ್ತಿದ್ದ ಹಾಗೆ ನಾನು ತಲೆ ಎತ್ತಿ ಮಾತನಾಡತೊಡಗಿದೆ_ +“ಅಲ್ಲಾ ಏಳಕ್ಕೆ ಬರುತ್ತೇನೆಂದವ ಇನ್ನೂ ಬಂದೇ ಇಲ್ವಲ್ಲಾ ?” +“ಸ್ಯಾಮ್ ಹಾಗೆಲ್ಲಾ ತಡಮಾಡೋಲ್ಲ. ಅವನು ಏಳೂಮುಕ್ಕಾಲಾದರೂ ಬರಲಿಲ್ಲಾಂದ್ರೆ ಏನೋ ಒಂದು ಕಿತಾಪತಿ ಇರಲೇಬೇಕು.” +“ಇರಬಹುದು ಬೆಳಿಗ್ಗೆ ಭೇಟಿ ಆಗಿದ್ದಾಗ ತಡವಾದರೂ ಆಗಬಹುದೂನ್ನೋ ಸೂಚನೆ ಕೊಟ್ಟಹಾಗಿತ್ತು. ‘ಅಕಸ್ಮಾತ್ ನಾನು ತಡವಾದ್ರೆ ಸ್ಯಾಟರ್ಡೇ ಪ್ರೆಸ್ ಓದ್ತಾ ಕೂತಿರು’ ಅಂದಿದ್ದ”. +“ಹೌದಾ ? ಹಾಗಾದ್ರೆ ಅದರಲ್ಲೇ ಏನೋ ಕರಾಮತ್ತು ಇರಬೇಕು. ಈ ರೀತಿಯ ತರಲೆಗಳನ್ನು ಅವನು ಆಗಾಗ ಮಾಡ್ತಾಲೇ ಇರ್ತಾನೆ”. +ಹೊವೆಲ್ಸ್ ಮಾತನಾಡುತ್ತಲೇ ತನ್ನ ಕೋಣೆಯೊಳ ಹೊಕ್ಕ. ಸ್ಯಾಟರ್ಡೇ ಪ್ರೆಸ್ ತರುವುದಕ್ಕೆ ಎಂದು ನನಗೆ ಖಾತ್ರಿಯಿತ್ತು. ನನಗೂ ಟ್ವೇನ್‌ನ ಈ ಆಟದ ಹಿಂದಿನ ಉದ್ದೇಶವೇನಿರಬಹುದು ಎಂಬುದರ ಬಗ್ಗೆ ಕುತೂಹಲವಿತ್ತು. ಹೊವೆಲ್ಸ್ ಆಚೆ ಬರುತ್ತಿದ್ದ ಹಾಗೆ ನಾನು ನನ್ನ ಕಪ್‌ನಲ್ಲಿ ಮತ್ತೊಂದಿಷ್ಟು ಕಾಫಿ ಸುರಿದುಕೊಂಡು ಅವನ ಪಕ್ಕ ಹೋಗಿ ಕುಳಿತೆ. +ಹೊವೆಲ್ಸ್ ಪತ್ರಿಕೆ ಬಿಡಿಸಿದ. +“ಹಾಂ…. ಇಲ್ಲಿದೆ ನೋಡು_ ಒಥಿ ತಿಚಿಣಛಿh-ಚಿಟಿ iಟಿsಣಡಿuಛಿಣive ಟiಣಣಟe ಣಚಿಟe’…. ಇದೇ ಅವನು ಬರದೇ ಇರುವುದಕ್ಕೆ ಕಾರಣವಿರಬಹುದು.” +ಆ ಕಥೆ ಏನಿರಬಹುದೆಂದು ನನಗೆ ಬಹಳ ಕುತೂಹಲ ಉಂಟಾಯಿತು. +ಆದರೂ ಹೊವೆಲ್ಸ್‌ನ ಕೈಯಿಂದ ಪತ್ರಿಕೆ ಕಸಿದುಕೊಳ್ಳುವುದು ಸಭ್ಯಸ್ಥನ ಲಕ್ಷಣ ಅಲ್ಲ. ಹೊವೆಲ್ಸ್ ಓದುತ್ತಿದ್ದ ಪುಟಗಳತ್ತ ಓರೆನೋಟ ಬೀರುತ್ತಾ ಅವನ ಓದಿ ಮುಗಿಯುವುದನ್ನೇ ಕಾತರದಿಂದ ಕಾಯುತ್ತಾ ಕುಳಿತಿದ್ದೆ. +ಕಥೆ ಹೆಚ್ಚೇನೂ ಉದ್ದವಿರಲಿಲ್ಲ. ಒಂದು ಸಾವಿರ ಪದಗಳಿಗೂ ಕಡಿಮೆ ಇತ್ತೆನ್ನಬೇಕು. ಕಥೆಯನ್ನು ಓದಿ ಮುಗಿಸಿ, ಹೊವೆಲ್ಸ್ ಜೋರಾಗಿ ನಗತೊಡಗಿದ. +ನನಗೇನೂ ಆಶ್ಚರ್ಯವಾಗಲಿಲ್ಲ ; ಏಕೆಂದರೆ : +ಟ್ವೇನ್‌ನ ಕಥೆಗಳನ್ನು ಓದಿ ನಗದೇ ಇದ್ದವರು ಬಹಳ ವಿರಳ. +ಹೊವೆಲ್ಸ್ ನಗುತ್ತಲೇ: +“ಅಂತೂ ತನ್ನ ಕಥೆಯನ್ನು ನಾವು ಈ ದಿನವೇ ಓದಿ, ಅವನು ಬರೋಷ್ಟು ಹೊತ್ತಿಗೆ ಚರ್ಚಿಸಿ, ನಮ್ಮ ಅಭಿಪ್ರಾಯ ತಿಳಿಸೋಕ್ಕೆ ಸಿದ್ಧವಾಗಿರಬೇಕೂಂತ ಈ ಪ್ಲಾನ್ ಹಾಕಿದ ಹಾಗಿದೆ.” +ಎನ್ನುತ್ತಾ ಕಥೆಯನ್ನು ನನ್ನತ್ತ ಕಳ್ಳಿದ. ನಾನೂ ಕಥೆ ಓದಲಾರಂಭಿಸಿದೆ. +ಟ್ವೇನೆನ ಅತ್ಯುತ್ತಮ ಕಥೆಗಳಲ್ಲೊಂದು ಎಂದು ಹೇಳುವ ಹಾಗೇನೂ ಆ ಕಥೆ ಇರಲಿಲ್ಲ. ಈ ಬಗ್ಗೆ ಹೊವೆಲ್ಸ್ ಸಹ ನನ್ನ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ. ಇದೂ ಕೇವಲ ಮತ್ತೊಂದು ಅಣಕವಾಗಿತ್ತು ಅಷ್ಟೆ. ಈ ಬಾರಿ ಕೈ ಗಡಿಯಾರದ ರಿಪೇರಿಯವರು ಟ್ವೇನ್‌ನ ಗುರಿಗೆ ಸಿಕ್ಕಿದ್ದರು. ಹದಿನೆಂಟು ತಿಂಗಳ ಕಾಲ ಸರಿಯಾಗಿ ನಡೆದ ಗಡಿಯಾರ ನಂತರ ಕೆಟ್ಟು ಹೋದದ್ದು, ನಾಲ್ಕು ನಿಮಿಷ ತಡವಾಗಿ ನಡೆಯುತ್ತಿದೆಯೆಂದು ಗಡಿಯಾರದಂಗಡಿಗೆ ಕೊಂಡೊಯ್ದದ್ದು. ಅವನು ಏನನ್ನೋ ಮುಟ್ಟಿ ಆ ಗಡಿಯಾರ ; ತಿಂಗಳುಗಟ್ಟಲೆ ಮುಂದೆ ಹೋದದ್ದು_ಅಥವಾ ಹಿಂದೆ ಹೋದದ್ದು ಇತ್ಯಾದಿಗಳನ್ನು ತನ್ನ ವ್ಯಂಗ್ಯ ಭಾಷೆಯಲ್ಲಿ ದಾಖಲಿಸಿದ್ದ. +ನಾನೂ ಓದಿ ಮುಗಿಸಿದ ನಂತರ ಜೋರಾಗಿ ನಕ್ಕುಬಿಟ್ಟೆ. ಅವನ ಶೈಲಿಯೇ ಅಂಥದ್ದು : ಎಂತಹ ಸುಳ್ಳನ್ನು ಬೇಕಿದ್ದರೂ ಸಾವಿನ ಸುದ್ದಿ ಹೇಳುವವನ ಗಂಭೀರ ಮುಖಮುದ್ರೆ ಹೊತ್ತು ಹೇಳುತ್ತಿದ್ದ. ಕಥೆ ಹೆಣೆಯುವಾಗಲೂ ಅಷ್ಟೇ : ನೀವು ನಂಬಲೇಬೇಕು ಎಂದು ಒತ್ತಾಯ ಮಾಡುವಂತಹ ಶೈಲಿ. ಆದರೂ ಅದನ್ನೆಲ್ಲ ನಿಜವೆಂದು ನಂಬುವುದು ಕಷ್ಟವಾಗುತ್ತಿತ್ತು. ಇಂದಿಗೂ ಆ ಕಥೆ ಲಭ್ಯವಿದೆ. ಟ್ವೇನನ “Sಞeಣಛಿhs oಟಜ ಚಿಟಿಜ ಓeತಿ” ಪುಸ್ತಕದಲ್ಲಿ ಆ ಕಥೆ ಸೇರಿಸಿದ್ದ, ನಿಮಗೆ ಕಂಡುಬಂದರೆ ಖಂಡಿತವಾಗಿ ಓದಿ. +ನಾವುಗಳು ಆ ಕಥೆ ಚರ್ಚಿಸುತ್ತಿದ್ದಾಗಲೇ ಟ್ವೇನ್ ಬಂದ. +ಹೊವೆಲ್ಸ್ ಬೇಸರ ನಟಿಸುತ್ತಲೇ ಕೇಳಿದ : +“ಏನಯ್ಯಾ ಸ್ಯಾಮ್ ನಿನ್ನ ಆ ಕೆಟ್ಟ ಕಥೆ ನಮ್ಮ ಕೈಲಿ ಓದಿಸೊಕ್ಕೆ ನಿಂಗೆ ಬೇರ್‍ಯಾವ ದಾರೀನೂ ಸಿಗಲಿಲ್ವೇ ?” +ಟ್ವೇನ್ ಏನೂ ಅರ್ಥವಾಗದವನಂತೆ ಮುಖದ ಮೇಲೆ ಅಮಾಯಕ ಕಳೆ ಹೊತ್ತು ನಿಂತಿದ್ದ. ಅವನು ನಟಿಸುತ್ತಿದ್ದಾನೋ, ನಿಜವಾಗಿ ಚಕಿತನಾಗಿದ್ದಾನೋ ಹೇಳುವುದು ಕಷ್ಟವಿತ್ತು. ಕಡೆಗೂ ಅವನು ಬಾಯ್ದೆರೆದ : +“ಪ್ಯಾನ್ ಈ ಬಿಲ್ ಏನು ಹೇಳ್ತಾ ಇದ್ದಾನೇನ್ನೋದು ನಿಂಗೇನಾದ್ರೂ ಅರ್ಥವಾಯ್ತೇ ?” +“ಅದಿರಲಿ ಟ್ವೇನ್-ಈಗ ನೀನು ಯಾಕಿಷ್ಟು ತಡಮಾಡಿದೆ ಹೇಳು.” +“ತಡ ? ಈಗ ಏಳು ಗಂಟೆ ಅಲ್ವಾ ? ನೋಡು.” ಟ್ವೇನ್ ತನ್ನ ಗಡಿಯಾರ ತೋರಿಸಿದ. ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕೆವು. ಟ್ವೇನ್ ತಲೆಯ ಮೇಲಿನ ಟೋಪಿ ತೆಗೆದು ಗೂಟಕ್ಕೆ ನೇತು ಹಾಕಿ, ತಲೆ ಕೆರೆದುಕೊಳ್ಳುತ್ತಾ ಕುಳಿತುಕೊಂಡ : +“ನಿಮಗೇನಾದ್ರೂ ಹುಚ್ಚು ಹಿಡಿದಿದ್ಯೇನು ?” +ಹೊವೆಲ್ಸ್ ಕೂಡಲೇ ನಗು ನಿಲ್ಲಿಸಿದ : +“ಸ್ಯಾಮ್ ನೀನು ಸೀರಿಯಸ್ಸಾಗಿದ್ದೀ ತಾನೇ ? ನಾವು ಈಗ ತಾನೇ ನಿನ್ನ ಕಥೆ ಓದಿ, ಅದನ್ನೆ ಚರ್ಚಿಸ್ತಾ ಇದ್ವು. ನೀನು ನಮ್ಮ ಮೇಲೆ ಹಾಕಿದ ಪ್ರಾಕ್ಟಿಕಲ್ ಜೋಕ್ ಅಂತ ಇಬ್ರೂ….” +“ಯಾವ ಕಥೆ ?” +“ಅದೇ ಗಡಿಯಾರದ ಕಥೆ” +ಈ ಬಾರಿ ನಗುವ ಸರದಿ ಟ್ವೇನ್‌ನದಾಗಿತ್ತು. +“ಓಹ್ ಖಂಡಿತವಾಗಿಯೂ ನಾನು ಅಪಾಲಜೈಸ್ ಮಾಡಿಕೋಬೇಕು. ಇದು ಸಂಪೂರ್ಣ ಕಾಕತಾಳೀಯ. ನಾನು ಸುಮ್ಮನೆ ಮಾತಿನವರಸೆಗೆ ಸ್ಯಾಟರ್ಡೇ ಪ್ರೆಸ್ ಅಂತ ಹೇಳಿದ್ದೆ. ಆದರೆ ಆ ಕಥೇಲಿ ಬರೆದಿರೋ ಗಡಿಯಾರದ ವಿಷಯ ಮಾತ್ರ ಸಂಪೂರ್ಣ ನಿಜ. ಈಗ ನೋಡಿ ಆ ಗಡಿಯಾರ ಏಳು ಗಂಟೆ ತೋರಿಸ್ತಾ ಇದೆ. ನಾವು ಇಲ್ಲಿಂದ ಹೊರಡೋಷ್ಟು ಹೊತ್ತಿಗೆ ನಿಜವಾದ ಸಮಯ ಒಂಭತ್ತಾಗಿದ್ರೂ ಹನ್ನೆರಡು ತೊರಿಸಿಯಾತು. ಅದರಲ್ಲೇನೂ ಆಶ್ಚರ್ಯವಿಲ್ಲ. ಈ ಗಡಿಯಾರ ಓಡಾಡ್ದೇ ಇರೋ ರಿಪೇರಿ ಅಂಗ್ಡೀ ಇಲ್ಲ…. +ನಾವಿಬ್ಬರೂ ಆ ಗಡಿಯಾರದತ್ತ ಕುತೂಹಲದಿಂದ ನೋಡಿದೆವು. ಅನಂತರ ಬೇರೆ ವಿಷಯಗಳನ್ನು ಮಾತನಾಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ರಾತ್ರಿ ಹತ್ತಾಗುತ್ತಾ ಬಂದಂತೆ ನಾನು ಹೊತ್ತಾಯಿತೆಂದು ಎದ್ದೆ. ಟ್ವೇನ್ ಮತ್ತೆ ತನ್ನ ಗಡಿಯಾರ ನೋಡಿದ. ಅದು ಏಳೂವರೆ ತೋರಿಸುತ್ತಿತ್ತು. ಇಬ್ಬರೂ ನಮ್ಮ ಓವರ್‍ಕೋಟ್ ಧರಿಸಿ ಟೋಪಿ ಹಾಕಿಕೊಂಡೆವು. ಹೊರಗೆ ಲಘುವಾಗಿ ಹಿಮಪಾತವಾಗಿತ್ತು. +ಹೊರಬರುತ್ತಿದ್ದಂತೆ ನಾನು ಟ್ವೇನ್‌ಗೆ ಹೇಳಿದೆ :-“ಯಾಕೆ ಆ ಗಡಿಯಾರವನ್ನ ಇನ್ನೂ ಇಟ್ಕೊಂಡು ಪೇಚಿಗೆ ಸಿಕ್ಕಾಕೊಳ್ತಾ ಇದ್ದೀ ? ಅದನ್ನತ್ಲಾಗೆ ಮಾರಿ ಹೊಸ ಗಡಿಯಾರಾನಾದ್ರೂ ತಗೋಬಾರ್ದೇ ?” +“ಇಲ್ವೋ…. ಇದರಿಂದ ಸ್ವಲ್ಪ ಮೋಜು ಪಡೆಯೋಣಾಂತ ಇತ್ತು. ಆದ್ರೆ ನೀನು ಹೇಳಿದ್ದು ನಿಜ. ಈಗೀಗ ಪೇಚಿಗೆ ಸಿಕ್ಕೋ ಪರಿಸ್ಥಿತೀನೇ ಜಾಸ್ತಿಯಾಗಿದೆ. ಒಂದು ಕೆಲಸ ಮಾಡು-ಈ ಗಡಿಯಾರವನ್ನ ನಿಂಗೆ ಕೊಡ್ತೇನೆ. ನೀನು ಇದನ್ನ ರಿಪೇರಿ ಮಾಡಿಸ್ತೀಯೋ, ಮಾರ್ತೀಯೋ ಜವಾಬ್ದಾರಿ ನಿಂದು….ಸರೀನಾ ?” +ಕಡೆಗೂ ನನ್ನ ತಲೆಗೆ ಜವಾಬ್ದಾರಿಯನ್ನು ಕಟ್ಟಿ, ಟ್ವೇನ್ ಆರಾಮವಾಗಿ ಹೊರಟುಬಿಟ್ಟ. +ಟ್ವೇನ್ ಏನೋ ಗಡಿಯಾರ ಕೊಟ್ಟ. ನಾನು ಅದನ್ನು ರಿಪೇರಿ ಮಾಡಿಸಿಯೇ ಬಿಡುವ ಹುಮ್ಮಸ್ಸಿನಲ್ಲಿ ನನ್ನೊಂದಿಗೆ ಒಯ್ದೆ. ಆದರೆ ಅದನ್ನು ಒಯ್ದ ನಂತರ ನನಗೆ ಅದು ಸಾಮಾನ್ಯ ಗಡಿಯಾರವಲ್ಲ ಎಂದು ಅರಿವಾಗತೊಡಗಿತು. ಆ ಗಡಿಯಾರಕ್ಕೆ ಒಂದು ಪ್ರತ್ಯೇಕ ವ್ಯಕ್ತಿತ್ವವಿದೆಯೆಂದು ನನಗೆ ಭಾಸವಾಗತೊಡಗಿತು. ನನ್ನ ಬಳಿ ಬಂದಾಗಿನಿಂದ ಒಂದು ವಾರದ ಕಾಲ ಆ ಗಡಿಯಾರ ಸರಿಯಾಗಿಯೇ ಓಡಿತು. ನಾನು ಈಗೀಗ ನನ್ನ ಗಡಿಯಾರವನ್ನು ಬದಿಯಲ್ಲಿಟ್ಟು ಅದನ್ನೇ ದಿನವೂ ಕೈಗೆ ತೊಡುತ್ತಿದ್ದೆ. ರಾತ್ರಿ ಮಲಗುವಾಗ ನನ್ನ ಕೈ ಗಡಿಯಾರದ ಬದಿಯಲ್ಲೇ ಅದನ್ನೂ ಇಡುತ್ತಿದ್ದೆ. ಆದರೆ ಈ ಸುಖ ಶಾಂತಿ ನೆಲೆಸಿದ್ದು ಕೇವಲ ಒಂದು ವಾರ ಕಾಲ ಮಾತ್ರ. ವಾರದ ನಂತರ ಟ್ವೇನ್‌ನ ಗಡಿಯಾರ ಯಥಾಸ್ಥಿತಿಗೆ ಮರಳಿತು. ಅದನ್ನು ರಿಪೇರಿಗೆ ಒಯ್ಯುವ ಅನಿವಾರ್ಯತೆ ಕೂಡ ಉಂಟಾಯಿತು. ದುರಾದೃಷ್ಟವೆಂದರೆ ಅದೇ ರೀತಿಯ ರೋಗ ನನ್ನ ಗಡಿಯಾರಕ್ಕೂ ಅಂಟಿಕೊಂಡಿತ್ತು. ಗಡಿಯಾರದ ಟಿಕ್ ಟಿಕ್ ನಲ್ಲಾಗಬಹುದಾದ ಏರುಪೇರು-ಅಂಟುರೋಗವೆಂದು ನನಗೆ ಆ ದಿನದವರೆಗೂ ತಿಳಿದಿರಲಿಲ್ಲ. +ಈ ಏರುಪೇರು ಕಾಲಾತೀತತೆಯ ಒಂದು ಭಾವನೆಯನ್ನು ನನ್ನೊಳಗೆ ಉಂಟುಮಾಡಲು ಕಾರಣವಾಯಿತು. ಇದರ ಅಸ್ತಿತ್ವದ ಅನುಭವ ನನಗೆ, ಆ ಗಡಿಯಾರಗಳನ್ನು ರಿಪೇರಿಗೆಂದು ಹೊರಾಲಜಿಸ್ಟ್‌ನ ಬಳಿ ಕೊಂಡೊಯ್ದಾಗ ಅರಿವಾಯಿತು. ಎರಡೂ ಗಡಿಯಾರಗಳ ಸಮಯದ ಪ್ರಕಾರ ತೆರೆದಿರಬೇಕಿದ್ದ ಅವನ ಅಂಗಡಿ ಮುಚ್ಚಿತ್ತು. ಈ ವಿಚಿತ್ರ ಭಾವನೆ ನನ್ನಲ್ಲಿ ಭೀತಿ ಉಂಟುಮಾಡಿತ್ತು. ಎರಡು ದಿನಗಳ ಕಾಲ ನಾನು ಈ ರೀತಿಯ ತೊಳಲಾಟದಲ್ಲಿ ರಿಪೇರಿಯವನ ಅಂಗಡಿಯ ಮುಚ್ಚಿದ ಕದ ನೋಡುತ್ತಾ ಕಳೆದೆ. (ಅಥವಾ ಎರಡು ದಿನಗಳೆಂದು ನಾನು ಭಾವಿಸಿದ್ದೆ. ಆ ಕಾಲಮಾನದ ಕೇವಲ ಎರಡು ಘಂಟೆಗಳಾಗಿದ್ದಿರಬಹುದು ಇಲ್ಲವೇ ಎರಡು ವಾರಗಳೂ ಆಗಿರಬಹುದು. ಇಷ್ಟಕ್ಕೂ ನಿಖರವಾಗಿ ಎಷ್ಟು ಕಾಲ ಕಳೆಯಿತೆಂದು ಹೇಳಲು ನನ್ನಲ್ಲಿ ಸರಿಯಾದ ಗಡಿಯಾರವೇ ಇರಲಿಲ್ಲವಲ್ಲ !) +ಕಡೆಗೂ ಆ ಗಡಿಯಾರಗಳೆರಡೂ ರಿಪೇರಿಯವನ ಕೈ ಸೇರಿದವು. ಅವನು ಅದರ ಟಿಕ್, ಟಿಕ್ ಶಬ್ಧವನ್ನು ನಾಡಿ ಬಡಿತ ಪರೀಕ್ಷಿಸುವಂತೆ ಪರೀಕ್ಷಿಸಿದ. ಈ ಮೊದಲು ಯಾರ ಬಳಿ ರಿಪೇರಿಗೆ ಬಿಟ್ಟಿದ್ದೆವೆಂದು ಕೇಳಿದ. ಅನೇಕ ಸ್ಥಳಗಳಿಗೆ ಟ್ವೇನ್ ಒಯ್ದಿರಬಹುದೆಂದು ಹೇಳಿದೆ. ಅವನು ಮತ್ತೆ ಗಡಿಯಾರವನ್ನು ಪರೀಕ್ಷಿಸಿ ಎರಡನ್ನೂ ಒಂದು ಗಾಜಿನ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಟ್ಟು ಕೆಲಕಾಲದ ನಂತರ ಬರಹೇಳಿದ. ನಾನೂ ಅವನ ಮರ್ಜಿಗೆ ಬಿದ್ದದ್ದರಿಂದ ಅವನು ಹೇಳಿದ್ದಕ್ಕೆಲ್ಲ ತಲೆದೂಗಿದೆ. +ನಾನೀಗ ಗಡಿಯಾರ ರಹಿತನಾಗಿದ್ದದ್ದರಿಂದ ನನಗೆ ಸಮಯ ತಿಳಿಯುತ್ತಿರಲಿಲ್ಲ. ತಪ್ಪಾದ ಸಮಯ ತಿಳಿಯುವುದಕ್ಕಿಂತ ಸಮಯ ತಿಳಿಯದಿದ್ದುದೇ ವಾಸಿಯೇನೋ ! ಟ್ವೇನನಿಗೂ ಈ ಘಟನೆ ಸಾಕಷ್ಟು ಕಿರಿಕಿರಿ ಉಂಟುಮಾಡಿರಬೇಕು. ಏಕೆಂದರೆ ಸಾಧಾರಣವಾಗಿ ನಾವುಗಳು ಇಂಥ ಘಟನೆಗಳನ್ನು ಬೇಗ ಮರೆಯುತ್ತೇವೆ. ಆದರೆ ಟ್ವೇನ್ ಎಂಟು ವರ್ಷಗಳ ನಂತರ ಬರೆದ “ದ ಲವ್ಸ್ ಆಫ್ ಅಲೋಂಜೋ ಅಂಡ್ ರೊಸಾನಾ” ಕಥೆಯಲ್ಲಿಯೂ ಗಡಿಯಾರಗಳ ಬಗೆಗಿನ ತನ್ನ ಕೋಪ ತೋಡಿಕೊಂಡಿಲ್ಲ. ಆ ಕಥೆಯಲ್ಲಿ ಈ ವಾಕ್ಯವಿರುವುದನ್ನು ನೀವು ಗಮನಿಸಿರಬಹುದು : +“ಗಡಿಯಾರ ಮತ್ತೆ ತಪ್ಪು ತೋರಿಸ್ತಾ ಇದೆ. ಸಮಯ ಎಷ್ಟೂಂತ ಅಡಿಯಾರಕ್ಕೆ ಹೆಚ್ಚಿನಂಶ ತಿಳಿದಿರುವುದಿಲ್ಲ. ತಿಳಿದಿದ್ರೂನೂವೆ ಅದು ಸುಳ್ಳು ಹೇಳುತ್ತೆ, ಎರಡೂ ಒಂದೇ ಅಲ್ಲವೇ ?” +ಟ್ವೇನನ ಸಂಗತಿ ಹಾಗಿರಲಿ ಬಿಡಿ. ಅವನೇನೋ ತನ್ನ ಕೈ ಗಡಿಯಾರ ನನಗೆ ತೊಡಿಸಿ ತಾನು ಕೈ ತೊಳೆದುಕೊಂಡು ಬಿಟ್ಟ. ಅದರ ಪೀಕಲಾಟದಿಂದ ಒದ್ದಾಡಿದವನು ನಾನಲ್ಲವೇ? ? ಮೂರು ದಿನಗಳಿರಬಹುದು. ಈಗೀಗ ನಾನು ಹಳೆಯ ಕಾಲದವರ ಹಾಗೆ ನೆರಳಿನ ಉದ್ದ ನೋಡಿ ಸಮಯ ಹೇಳುವುದರಲ್ಲಿ ನಿಷ್ಣಾತನಾಗುತ್ತಿದ್ದರೂ, ಸೂರ್ಯಾಸ್ತ ಸೂರ್ಯೋದಯದ ಸಮಯಗಳ ಬಗ್ಗೆ ಸ್ವಲ್ಪ ಗೊಂದಲವಿತ್ತು. ಎರಡೂ ಸಮಯಗಳು ನನಗೆ ಏಕ ರೀತಿ ಕಾಣುತ್ತಿದ್ದುದರಿಂದ ದಿನಗಳ ಲೆಕ್ಕ ಯಾವಾಗಲೂ ತಪ್ಪುತ್ತಿತ್ತು) ಗಡಿಯಾರದಂಗಡಿಗೆ ಹೋದೆ. ನನ್ನ ಹಾಗೂ ಟ್ವೇನನ ಗಡಿಯಾರಗಳ ಬಗ್ಗೆ ವಿಚಾರಿಸಿದೆ. ಆ ಗಡಿಯಾರಗಳನ್ನ ಪ್ರತ್ಯೇಕವಾಗಿ ಎರಡು ಗಾಜಿನ ಪೆಟ್ಟಿಗೆಯಲ್ಲಿಟ್ಟಿದ್ದ. ಎರಡೂ ಪೆಟ್ಟಿಗೆಗಳನ್ನು ಮತ್ತೊಂದು ಗಾಜಿನ ಪೆಟ್ಟಿಗೆಯಲ್ಲಿಟ್ಟಿದ್ದ. ಅಂಗಡಿಯವ ನನ್ನನ್ನು ನೋಡಿದಾಕ್ಷಣ ಅರ್ಧ ದೇಹ ಬಗ್ಗಿಸಿ ನನಗೆ ವಂದಿಸಿದ. ನಂತರ ಮೃದುವಾದ, ಶೋಕಭರಿತ ದನಿಯಲ್ಲಿ ಹೇಳಿದ: +“ಮಿಸ್ಟರ್ ಪ್ಯಾನ್, ದಯಮಾಡಿ ನೀವು ಈ ಗಡಿಯಾರಗಳನ್ನ ತೆಗೆದುಕೊಂಡು ಹೋಗಿ ಇವಕ್ಕೆ ಯಾವ ಸಾಂಕ್ರಾಮಿಕ ರೋಗ ಅಂಟಿದೆಯೋ ತಿಳಿಯದು. ಆದರೆ ಒಂದೇ ಘಂಟೆಯಲ್ಲಿ ಇವು ಇತರ ಗಡಿಯಾರಗಳನ್ನೆಲ್ಲಾ ರೋಗ ಪೀಡಿತ ಮಾಡಲೆನ್ತಿಸಿದವು. ಅದೃಷ್ಟವಶಾತ್ ನಾನು ಬೇಗನೇ ನೋಡಿಕೊಂಡು ಇವನ್ನು ಪ್ರತ್ಯೇಕಿಸಿ ಇಟ್ಟೆ. ಮಿಕ್ಕವನ್ನು ಓವರ್‍ಹಾಲ್ ಮಾಡುವುದರಲ್ಲಿ ಈಗ ನನ್ನ ಸಮಯ ಕಳೆಯುತ್ತಿದೆ. ನನಗಂತೂ ಇವುಗಳ ಶಬ್ದದಿಂದ ನಿದ್ದೆಯೇ ಇಲ್ಲ. ಒಂದು ಗಡಿಯಾರ ಗಂಟೆಗೊಮ್ಮೆ ಟಿಕ್ ಎಂದರೆ, ಮತ್ತೊಂದು ಸೆಕೆಂಡಿಗೆ ನಾಲ್ಕು ಬಾರಿ ಟಿಕಿಸಿ ಇಲ್ಲಿನ ಶಾಂತಿಯನ್ನೇ ಹಾಳು ಮಾಡಿದೆ. ಇದರ ರೋಗ ಗುಣಪಡಿಸುವುದು ನನ್ನ ಕೈ ಮೀರಿದ್ದು” +ನಾನು ಮಧ್ಯೆ ಅನೇಕ ಬಾರಿ ಬಾಯಿ ಹಾಕಲು ಪ್ರಯತ್ನಿಸಿದರೂ, ಅವನು ಉರುಹೊಡೆದಿದ್ದಂತಿದ್ದ ಮೇಲಿನ ಸಾಲುಗಳನ್ನು ಮುಗಿಸುವವರೆವಿಗೂ ನನಗೆ ಅವಕಾಶ ಕೊಡಲೇ ಇಲ್ಲ. ಅವನು ಎರಡು ಪೆಟ್ಟಿಗೆಗಳನ್ನೂ ಗಾಜಿನ ದೊಡ್ಡ ಪೆಟ್ಟಿಗೆಯಿಂದ ತೆಗೆದು ನನಗೆ ಕೊಟ್ಟ.ನನಗೆ ಏನು ಮಾಡಬೇಕೋ ತೋರಲಿಲ್ಲ. ಎರಡನ್ನೂ ಒಯ್ದೆ. ಒಂದು ಸಂಜೆ ಟ್ವೇನನ ಗಡಿಯಾರವನ್ನು ಅವನಿಗೆ ವಾಪಸ್ ಮಾಡೋಣವೆಂದು ಹೋದೆ. ಅವನಿನ್ನೂ ಎದ್ದಿಲ್ಲವೆಂದು ಹೇಳಿದರು. ಆಗಲೇ ನನಗೆ ಅದು ಮುಂಜಾನೆ, ಸಂಜೆ ಅಲ್ಲ ಎಂಬ ವಾಸ್ತವ ಅರಿವಾದದ್ದು. ಸರಿ ಎಂದುಕೊಂಡು ಎರಡೂ ಗಡಿಯಾರಗಳನ್ನು ನನ್ನ ಮನೆಯಲ್ಲೇ ತಂದಿಟ್ಟುಕೊಂಡೆ. +ಆ ಗಡಿಯಾರಗಳು ಮನೆ ಹೊಕ್ಕದ್ದೇ ನನ್ನ ಯಾತನೆಗಳು ಸುರುವಾದವು. ನನಗಂತೂ ಶಾಂತಿಯೇ ಇಲ್ದವಾಯಿತು. ನಿದ್ದೆ ಸರಿಯಾಗಿ ಬರಲಿಲ್ಲವೆಂದು ಆರಾಮವಾಗಿ ಮಲಗಿದರೆ ಸ್ವಲ್ಪ ಸಮಯಕ್ಕೇ ವಿಪರೀತವಾಗಿ ಟಕಟಿಕಿಸಿ ನನ್ನನ್ನು ಎಬ್ಬಿಸಿಬಿಡುತ್ತಿದ್ದವು,. ನಾನು ಮೇರಿವಿಲಿಯಂಸ್ ಳನ್ನು ಡೇಟ್ ಮಾಡಿದರೆ ನನಗೆ ಗಡಿಯಾರದ ಶಬ್ದ ಕೇಳಿಸುತ್ತಿತ್ತು. ಗಡಿಯಾರಗಳು ಎಷ್ಟರ ಮಟ್ಟಿಗೆ ನನ್ನ ಜೀವನವನ್ನು ಆವರಿಸಿ ಬಿಟ್ಟಿದ್ದುವೆಂದರೆ ಅವು ನನ್ನ ಸಮಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ನನ್ನ ಪ್ರವರ್ತನೆಯ ಬಗ್ಗೆ ಕಾಳಜಿ ವಹಿಸುತ್ತಿವೆಯೇನೋ ಎನ್ನಿಸಿಬಿಬಿಟ್ಟಿತ್ತು. +ಇದೂ ಸಾಲದೆಂಬಂತೆ ಒಂದೊಂದು ಗಡಿಯಾರ ಪ್ರತ್ಯೇಕ ಸಮಯ ತೋರಿ ಅವುಗಳಲ್ಲಿ ವಾಸ್ತವಕ್ಕೆ ಹತ್ತಿರವಾದುದು ಯಾವುದೆಂದು ನಾನು ನಿರ್ಧರಿಸುವಷ್ಟರಲ್ಲೇ ನನ್ನ ಕೆಲಸದ ಸಮಯ ಮುಗಿದುಹೋಗುತ್ತಿತ್ತು. +ಜನರಂತೂ ಈಗೀಗ ನನ್ನನ್ನು ನೋಡಿ ನಗತೊಡಗಿದ್ದರು. ನಾನು ಕೆಲಸಕ್ಕೆ ಒಂದೆರಡು ಗಂಟೆಗಳ ಕಾಲ ಮುಂಚಿತವಾಗಿಯೋ ಅಥವಾ ತಡವಾಗಿಯೋ ಹೋಗುವುದು ಸಾಮಾನ್ಯವಿತ್ತು. ಅಲ್ಲಿ ನನ್ನ ಮೇಜಿನೆದುರು ಕುಳಿತು ಕೈಯಲ್ಲಿನ ಗಡಿಯಾರವನ್ನು ಅಲ್ಲಾಡಿಸುವುದು, ಅದಕ್ಕೆ ಶಾಪಹಾಕುವುದು ಅದರ ನಾಶಕ್ಕೆ ಯೋಜನೆಗಳನ್ನು ತಯಾರಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದೆ. ನನಗೆ ಕಾಲದ ಪರಿವೆಯೇ ಇರುತ್ತಿರಲಿಲ್ಲ. ನಾನು ಕಾಲವನ್ನೇ ಮರೆತಂತಿತ್ತು. ನನ್ನ ಸಹೋದ್ಯೋಗಿಗಳೆಲ್ಲಾ ನನಗೆ ‘ವಾಚ್ ಮೆನ್ಸ್ ಡಿಸೀಸ್’ ಬಂದಿದೆಯೆಂದು ಹಾಸ್ಯ ಮಾಡತೊಡಗಿದ್ದರು. +ನಾನೂ ಮ್ಯಾಕ್ ಬೆತ್ ನಾಟಕದಲ್ಲಿ ಲೇಡಿ ಮ್ಯಾಕ್ ಬೆತ್ ಅರಚುವಂತೆ “ouಣ ಜಚಿmಟಿ ತಿಚಿಣಛಿh! ಔuಣ I sಚಿಥಿ….ಊeಡಿe’s ಣhe smeಟಟ oಜಿ ಣime ಚಿgಚಿiಟಿ. ಂಟಟ ಣhe ಠಿeಡಿಜಿumes oಜಿ ಂಡಿಚಿbiಚಿ ತಿiಟಟ ಟಿoಣ ಡಿeಠಿಚಿiಡಿ ಣhis ಟiಣಣಟe ತಿಚಿಣಛಿh” ಇತ್ಯಾದಿ ಅಸಂಬಧ್ಧವಾಗಿ ಅರಚುತ್ತಿದ್ದೆ. ಕಡೆಗೆ ಒಂದು ದಿನ (ಅಥವಾ ರಾತ್ರಿ; ಸಮಯ ತಿಳಿದಿಲ್ಲ) ನನ್ನನು ಡಾಕ್ಟರ ಬಳಿ ಕರೆದೊಯ್ದರು. ಆದರೆ ಬಡಪಾಯಿ ಡಾಕ್ಟರಿಗೆ ಏನೂ ಅರ್ಥವಾಗಲಿಲ್ಲ. ಮನೋರೋಗ ಇರಬಹುದೆಂದು ಅವರು ಸೈಕಿಯಾಟ್ರಿಸ್ಟ್ ಬಳಿ ಕಳುಹಿಸಿದರು. ಸರಿ ಅವರ ಬಳಿ ಹೋದದ್ದೂ ಆಯಿತು. +ರಾಬರ್ಟ್ ಪ್ಯಾಜೆಟ್ ನನ್ನನ್ನ ಪ್ರಶ್ನಿಸಿದರು: +“ಮಿಸ್ಟರ್ ಪೈಯಾನ್ ನಿಮ್ಮನ್ನು ಏನು ಕಾಡ್ತಾ ಇದೆ?” +“ನನ್ನನ್ನ? ಅದಕ್ಕೆ ಬದಲು ಈ ವಾಚನ್ನು ಪ್ರಶ್ನಿಸಬಾರದು? ಅದನ್ನು ಕಾಡ್ತಾ ಇರೋದು ಏನೂಂತ. ಯಾಕೇಂದ್ರೆ ಸ್ರಿಯಾಗಿ ನಡೀದೇ ಹುಚ್ಚುಚ್ಚಾಗಿ ಪ್ರವರ್ತಿಸಿರೋವು ಈ ವಾಚುಗಳೇ” +ಅಂದಿನ ಸಂಭಾಷಣೆ ಹೀಗೇ ಮುಂದುವರೆಯಿತು. ಸೈಕಿಯಾಟ್ರಿಸ್ ಪ್ಯಾಜೆಟ್ ನನ್ನನ್ನು ಅನೇಕ ಪ್ರಶ್ನೆ ಕೇಳಿದರು. ನಾನು ವಾಚಿನ ಬಗ್ಗೆ ಉತ್ತರಿಸಿದೆ. ಕಡೆಗೂ ಅವರಿಗೇನೂ ಅರ್ಥವಾಗಲಿಲ್ಲವೋ ಅಥವಾ ಅವರಿಗೆ ಅರ್ಥವಾದದ್ದು ನನಗೆ ಗ್ರಾಹ್ಯವಾಗಲಿಲ್ಲವೋ ಅಂತೂ ಅಲ್ಲಿಂದ ಹೊರಬಿದ್ದದ್ದಂತೂ ಸತ್ಯ. +* * * * +ಈ ಎಲ್ಲ ಕಿರಿಕಿರಿಗಳಿಂದಲೂ ರೋಸಿ ಹೋಗಿ ನಾನು ಈ ಗಡಿಯಾರಗಳನ್ನು ನಾಶಪಡಿಸಲು ಅನೇಕ ಬಾರಿ ಪ್ರಯತ್ನಿಸಿದೆ. ಒಂದು ಸಂಹೆ ಮೊದಲ ಉಪ್ಪರಿಗೆಯಲ್ಲಿದ್ದ ಆಲಿವ್ಸ್ ರೆಸ್ಟೋರಾಗೆ ಹೋಗಿ ನಿಧಾನವಾಗಿ ಕಿಟಕಿಯಿಂದ ಎರಡೂ ಡಬ್ಬಗಳನ್ನು ಆಚೆ ಎಸೆದೆ. ದುರದೃಷ್ಟವಶಾತ್ ಅದು ಒಂದು ಮಗುವಿನ ಪೆರಾಂಬು ಲೇಟರ್ ನಲ್ಲಿ ಬಿದ್ದು ಮಗುವಿಗೆ ಏಟುಬಿತ್ತಂತೆ. ಗಡಿಯಾರದ ಪೆಟ್ಟಿಗೆಯ ಮೇಲೆ ನನ್ನ ಹೆಸರು ವಿಳಾಸಗಳನ್ನು ರಿಪೇರಿಯವ ನಮೂದಿಸಿದ್ದರಿಂದ ನಾನು ಸಿಕ್ಕಿಬಿದ್ದೆ. ಸಾಲದ್ದಕ್ಕೆ ದಂಡವನ್ನೂ ಕಟ್ಟಬೇಕಾಯ್ತು. +ಮಿಸಿಸಿಪಿಯಲ್ಲಿ ಮುಳುಗಿಸಿ ಬಿಡೋಣವೆಂದು ನಾನು ಬೋಟ್ ರೈಡ್ ಹೋದೆ. ಆಗ ನನ್ನಲ್ಲಿದ್ದ ಭಯವನ್ನು ಸೂಚಿಸಲೋ ಎಂಬಂತೆ ಗಡಿಯಾರ ಜೋರಾಗಿ ಟಿಕ್ ಟಿಕ್ ಶಬ್ದಮಾಡಿತು. ಅದು ನನ್ನ ಹೃದಯದ ಬಡಿತವನ್ನೇ ಹೋಲುತ್ತಿತ್ತು, ಈ ಶಬ್ದ ಸುತ್ತಮುತ್ತ ಇದ್ದವರ ಆಕರ್ಷಣೆಗೆ ಕಾರಣವಾದ್ದರಿಂದ ಮಿಸಿಸಿಪಿಯಲ್ಲಿ ಎಸೆಯಲು ಧೈರ್ಯ ಬರಲಿಲ್ಲ. ಅದನ್ನು ಹಾಗೇ ನನ್ನ ಓವರ್ ಕೋಟ್ ಜೇಬಿನಲ್ಲಿರಿಸಿ ಬೋಟ್ ಇಳಿದದ್ದಾಯಿತು. +ಮನೆಯಲ್ಲಿ ಒಂದು ತಣ್ಣನೆ ಹವೆ ಬೀಸುತ್ತಿದ್ದಾಗ ಬೆಂಕಿಹಾಕಿ ಮೈ ಕಾಯಿಸಿಕೊಳ್ಳುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಒಂದು ಮಿಂಚಿನ ಆಲೋಚನೆ ಹೊಳೆದು ಗಡಿಯಾರವನ್ನು ಬೆಂಕಿಗೆ ತಳ್ಳಿದೆ. ಉಹುಂ…ಅದೇನೋ ತಾನು ಚಿರಾಯು ಎನ್ನುವ ಹಾಗೆ ಹೊರಪುಟಿದು ತನ್ನ ಹೊಟ್ಟೆಯ ಮೇಲೆ ಮಲಗಿಕೊಂಡಿತು. ಅಲ್ಲಿ ನೋಡಿದರೆ ” ಮೇಡ್ ಇನ್ ಸ್ವಿಟ್ಜರ್ ಲೆಂಡ್ ಫ್ಯೆರ್ ಪ್ರೂಫ್ ಷಾಕ್ ರೆಸಿಸ್ಟೆಂಟ್” ಇತ್ಯಾದಿಗಳು ಬರೆದಿದ್ದವು. +ಅಂತಿಮ ಚಲನೆಯಾಗಿ ನಾನು ಆ ಗಡಿಯಾರವನ್ನು ಅದನ್ನು ತಯಾರಿಸಿದ ಸ್ವಿಟ್ಜರ್ ಲೆಂಡಿನ ಕಂಪೆನಿಗೆ ಅಂಚೆಯ ಮೂಲಕ ಕಳಿಸಿದೆ. ಅದರೆ ಅಲ್ಲೂ ನನ್ನ ಅದೃಷ್ಟ ಸರಿಯಿರಲಿಲ್ಲ.(ಅದೃಷ್ಟ ಸರಿಯಿದ್ದರೆ ಏನು ಮಾಡಿದರೂ ಸಮಂಜಸವಾಗುತ್ತದೆನ್ನುವುದಕ್ಕೆ ಟ್ವೇನ್ ನ ಟuಛಿಞ ಕಥೆ ಓದಿ) ಕಸ್ಟಮ್ಸ್ ನ ಜನ ನನ್ನ ಮೇಲೆ ಅನುಮಾನ ಪಟ್ಟು ನನ್ನನ್ನು ನಾನಾರೀತಿಯ ಕಿರುಕುಳಗಳಿಗೆ ಒಳಪಡಿಸಿದರು. ಕಡೆಗೂ ಕೈ ಗಡಿಯಾರಗಳು ನನಗೇ ವಾಪಸ್ಸಾದವು. +* * * * +ಮತ್ತೆ ಇತರ ಕೆಲವ್ಯಕ್ತಿಗಳನ್ನು ಭೇಟಿಯಾದ ನಂತರ ಹಾಗೂ ಇತರೆಡೆಗಳಿಗೆ ಹೋಗಿಬಂದನಂತರ ಮಾರ್ಕ್ ಟ್ವೇನ್ ನನ್ನು ವಿಲಿಯಂ ಹೊವೆಲ್ಸ್ ನನ್ನು ಭೇಟಿಯಾಗುವ ಭಾಗ್ಯ ನನಗೆ ಪ್ರಾಪ್ತವಾಯಿತು. ( ಕೆಲ ಸಮಯದ ನಂತರ ಅವರುಗಳನ್ನು ಭೇಟಿಯಾದೆ ಎಂದು ಬರೆಯಬಹುದಿತ್ತು. ಆದರೆ ನನಗೆ ಕಾಲದ ಅರಿವಿಲ್ಲದ್ದರಿಂದ ಅದನ್ನೂ ಭೌತಿಕ ಮೌಲ್ಯಮಾಪನಕ್ಕೆ ಒಳಪಡಿಸುವುದು ಅನಿವಾರ್ಯವಾಗಿದೆ.) ನಾನು ಅವರುಗಳನ್ನು ಭೇಟಿಯಾಗುವಷ್ಟರಲ್ಲಿ ಅವರುಗಳು ಎರಡು ಲೋಟ ಕಾಫಿ ಕುಡಿದು ಮೂರು ಕಥೆಗಳನ್ನು ಚರ್ಚಿಸಿ ಆಗಿತ್ತಂತೆ. +” ಏನಯ್ಯಾ ಫೈ‌ಆನ್ ತಡಮಾಡಿಬಿಟ್ಟೆ” ಟ್ವೇನ್ ಕೇಳಿದ. +“ತಡ? ? ತಡ ಅಂದ್ರೇನು ಡಿಫೈನ್ ಮಾಡು.” +“ತಲೆ ಗಿಲೆ ಕೆಟ್ಟಿದ್ಯಾ? ಏನು ಈ ಥರ ಹುಚ್ಚುಚ್ಚಾಗಿ ಮಾತಾಡ್ತಾ ಇದ್ದೀಯಾ?” ಹೊವೆಲ್ಸ್ ಕೇಳಿದ. +“ತಲೆ ಕೆಟ್ಟಿಲ್ಲ ಆದರೆ ವಾಚ್ ಕೆಟ್ಟಿದೆ” (ಹೊಟ್ಟೆ ಕಿಚ್ಚಿದೆ ಎಂದು ಹೇಳುವಷ್ಟು ಸಹಜವಾಗಿ ನಾನಂದೆ) ಇಬ್ಬರಿಗೂ ಗಡಿಯಾರ ನೋಡುತ್ತಿದ್ದಂತೆ ಅರ್ಥವಾಯಿತು. +” ಇನ್ನೂ ಇದರ ರಿಪೇರಿ ಆಗಿಲ್ವೇನಪ್ಪಾ ?” ಟ್ವೇನ್ ಚಕಿತನಾಗಿ ಕೇಳಿದ. ನಂತರ ಒಂದು ಕಾಫಿ ಕುಡಿಯುವಲ್ಲಿ ಆ ಗಡಿಯಾರವನ್ನು ಏನು ಮಾಡಬೇಕೆಂಬ ಚರ್ಚೆ ಮುಂದುವರೆಯಿತು. ಟ್ವೇನ್ ಕೇಳಿದ. +” ಅದಾ ಸರಿ. ನಿಂಗೆ ಈಗ ಸಮಯ ಹೇಗೆ ತಿಳೀತಿದೆ ?” +ನಾನು ನಕ್ಕುಬಿಟ್ಟೆ. +“ಸಮಯ? ಹಾಗಂದ್ರೆ? ಈಗ ನೀನು ಸಹಿಹಾಕಲು ಪ್ರಾರಂಭಿಸಿ ಮುಗಿಸುವಷ್ಟರಲ್ಲಿ ನಾನು ಟ್ಯಾಯ್ಲೆಟ್ಟಿಗೆ ಹೋಗಿಬರ್ತೇನೆ. ಒಂದು ಕಾಫಿ ಕುಡಿಯುವಾಗ, ನಾನೊಂದು ಸಿಗರೇಟ್ ಸೇದಿ ಮುಗಿಸುತ್ತೇನೆ. ಎಲ್ಲಕ್ಕೂ ಒಂದು ಕಾಮನ್ ಡಿನಾಮಿನೇಟರ್ ಹಾಕಿದರಾಯಿತಲ್ಲವೇ ?” +“ಅಂದ್ರೆ ಕಾಲವನ್ನು ವಿಸ್ತಾರದಿಂದ ಅಳೀತಾ ಇದ್ದೀಯಾ?” ಹೋವೆಲ್ಸ್ ಕೇಳಿದ +ನಾನು: “ಖಂಡಿತವಾಗಿಯೂ ಇಲ್ಲ. ಕಾಲದಂತಹ ವಸ್ತುವಿಗೆ ಕಾಲವೇ ಮಾಪಕ. ಆದ್ದರಿಂದ ಅದನ್ನು ಬೇರೆ ಕಾಲದಿಂದ ಅಳೀತಾ ಇದ್ದೀನಿ. ಈ ಗಡಿಯಾರ ಎಷ್ಟಾದರೂ ಒಂದು ವಿಸ್ತಾರದಲ್ಲಿ ಅಡಕವಾಗಿರೋ ಭೌತಿಕ ಸಾಧನ ತಾನೇ. ನಾವು ಒಂದೇ ಸಾಧನದ ಮೇಲೆ ಅವಲಂಬಿತರಾಗೋದು ಎಷ್ಟರ ಮಟ್ಟಿಗೆ ಸ್ವಾಗತಾರ್ಹ ? ನಾನಂತೂ ಎಲ್ಲವನ್ನೂ ಸಾಪೇಕ್ಷವಾಗಿ ನೋಡುತ್ತಿದ್ದೇನೆ.ಂಜಿಣeಡಿಚಿಟಟ eveಡಿಥಿಣhiಟಿg is ಡಿeಟಚಿಣive +ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಕಡೆಗೆ ಟ್ವೇನ್ ಹೇಳಿದ. +“ಪೈನ್ ನನಗೇಕೋ ಈ ಎಲ್ಲದಕ್ಕೂ ನಾನೇ ಕಾರಣ ಅನ್ನಿಸ್ತಾ ಇದೆ. ಎರಡೂ ಗಡಿಯಾರಗಳನ್ನು ನೀನು ನನಗೇ ಕೊಡು. ಅದಕ್ಕಿ ನಾನೊಂದು ಕಾರಣವನ್ನು ಹುಡುಕುತ್ತೇನೆ.” +“ಬೇಡ ಟ್ವೇನ್….. ನನಗೇಕೋ ಖ್ಯಾತ ಲೇಖಕನೊಬ್ಬನ ತಲೆ ಕೆಡಿಸಿದ ಅನ್ನೋ ಅಪಕೀರ್ತಿ ನನಗೆ ಬರಬಾರದು ನೋಡು.” +ಹೊವೆಲ್ಸ್ ತನ್ನ ಆಲೋಚನೆ ಮುಂದಿಟ್ಟ. +“ಇಬ್ಬರ ಗಡಿಯಾರಗಳನ್ನೂ ನಾಶ ಮಾಡುವ ಪ್ರಯತ್ನ ಮಾಡಬಾರದೇಕೆ ?”ನಾನು ಗಡಿಯಾರದ ನಾಶದಲ್ಲಿ ನಾನು ಮಾಡಿದ ವಿವರಗಳನ್ನೆಲ್ಲಾ ಅವರಿಗೆ ಹೇಳಿದೆ. ಎಲ್ಲ ಆದ ನಂತರ ಹೊವೆಲ್ಸ್ ಒಂದು ಸೊಟ್ಟ ನಗೆ ನಕ್ಕು ಹೇಳಿದ. +“ನೋಡು, ತಲೆತಲಾಂತರದಿಂದ ಗಮನಿಸಿ ನೋಡಿದರೆ ಮನುಷ್ಯ ತನ್ನ ತಪ್ಪುಗಳನ್ನು ಬಚ್ಚಿಡಲು, ಅಥವಾ ನಾಶಮಾಡಲು ಪ್ರಯತ್ನಿಸಿದಾಗ, ಯಾರಿಗೂ ತಿಳಿಯಬಾರದೆಂದುಕೊಂಡಾಗ ಅವನು ಮೊರೆ ಹೋಗುವುದು ಈ ಭೂಮಿತಾಯಿಯನ್ನು …. ಎಲ್ಲವನ್ನೂ ಹುಗಿದಿಡಬೇಕು. ಮುಂದೆ ಹುಗಿದದ್ದು ತಪ್ಪೆನಿಸಿದರೆ ಬಗೆಯಲೂ ಸಾಧ್ಯವಿರುತ್ತದೆ!” +ಹೌದೆಂದು ಇಬ್ಬರೂ ತಲೆಯಾಡಿಸಿದೆವು. +ನನ್ನ ಮನೆಯ ಹಿತ್ತಿಲಿನಲ್ಲಿ ಆರಡಿ ಆಳದ ಗುಂಡಿ ತೋಡಿ ಎರಡೂ ಗಡಿಯಾರಗಳಿಗೆ ಸಮಾಧಿ ಮಾಡಿದೆವು. ಅದೃಷ್ಟವಶಾತ್ ಅವು ಎದ್ದು ಬರಲಿಲ್ಲ. ಸಮಯ ತಿಳಿದುಕೊಳ್ಳಬೇಕಾದ ನಮ್ಮ ಯಾಂತ್ರಿಕ ಅವಶ್ಯಕತೆಗಾಗಿ ನಾವುಗಳು ಬೇರೆ ಗಡಿಯಾರಗಳನ್ನು ಕೊಂಡದ್ದೂ ಆಯಿತು. ಆದರೆ ಬಹಳ ವರ್ಷಗಳ ಕಾಲ ಅವು ನನ್ನನ್ನು ಕಾಡದೇ ಬಿಡಲಿಲ್ಲ. ಇದ್ದಕ್ಕಿದ್ದ ಹಾಗೆ ಟಿಕ್ ಟಿಕ್ ಶಬ್ದ ಕೇಳಿಸಿ ನನಗೆ ಮೈಯೆಲ್ಲಾ ನಡುಕವುಂಟಾಗುತ್ತಿತ್ತು. ಬಹಳಷ್ಟು ಜನ ಇದನ್ನು ನನ್ನ ಭ್ರಮೆ ಎಂದರು. ಇರಬಹುದು, ಎಷ್ಟೋ ಬಾರಿ ಹುಗಿದಿದ್ದ ಗಡಿಯಾರವನ್ನು +ಆಚೆಗೆ ಒಗೆದು ಅದು ಇನ್ನೂ ಹಾಗೇ ತಪ್ಪುತಪ್ಪಾಗಿ ನಡೆಯುತ್ತಿದೆಯೇನೋ ನೋಡಬೇಕೆಂದು ಆಸೆಯಾಗುತ್ತಿತ್ತು. ಆದರೆ ಹೊವೆಲ್ಸ್ ನನಗೆ ಮೊದಲೇ ತಾಕೀತು ಮಾಡಿದ್ದರಿಂದ ನಾನು ಆ ಧೈರ್ಯ ಮಾಡಲಿಲ್ಲ. +ಈ ಘಟನೆಗಳು ನಡೆದ ನಲವತ್ತು ವರ್ಷಗಳ ನಂತರ ಟ್ವೇನ್ ಮರಣಿಸಿದ. ಆ ವೇಳೆಗಾಗಲೇ ನಾವು ಭೇಟಿಯಾಗುವುದೂ ಸಾಕಷ್ಟು ಕಡಿಮೆ ಆಗಿತ್ತು. ಅಷ್ಟೊತ್ತಿಗಾಗಲೇ ಅವನು ಅಪಾರ ಸಂಪತ್ತು ಗಳಿಸಿ ಎಲ್ಲವನ್ನೂ ಕಳೆದುಕೊಂಡೂ ಬಿಟ್ಟಿದ್ದ. ಸಾಲಗಾರರಿಗೆ ಹಣ ವಾಪಸ್ ಮಾಡಲೆಂದು ಭಾಷಣಗಳ ಪ್ರಪಂಚ ಯಾತ್ರೆಯನ್ನೂ ಕೈಗೊಂಡ. +ಅವನು ಸತ್ತ ಐದು ವರ್ಷಗಳ ನಂತರ ನಾನು ನನ್ನ ಮನೆಯ ಹಿತ್ತಲನ್ನು ಬಗೆದೆ. ಆ ಗಡಿಯಾರಗಳ ಬಗೆಗಿದ್ದ ನನ್ನ ಕುತೂಹಲ ನನಗಿನ್ನೂ ತಣಿದಿರಲಿಲ್ಲ. ಈಗೀಗ ನನಗೆ ಶಬ್ದವೂ ಕೇಳಿಸುತ್ತಿರಲಿಲ್ಲವಾದ್ದರಿಂದ ( ನಿಜವಾಗಿ ಶಬ್ದ ಬರುತ್ತಿರಲಿಲ್ಲವೋ ಅಥವಾ ನಾನು ಆ ಶಬ್ದಕ್ಕೆ ಒಗ್ಗಿ ಹೋಗಿದ್ದೆನೋ ತಿಳಿಯದು) ನನಗೊಂದಿಷ್ಟು ಧೈರ್ಯವೂ ಬಂದಿತ್ತು. ಗಡಿಯಾರ ಈಗ ಹೊಡೆದುಕೊಂಡರೂ ನನಗೇನೂ ಆಗಲಾರದಷ್ಟು ಗಟ್ಟಿ ಹೃದಯದವನಾಗಿದ್ದೆನೇನೊ ಆರೂವರೆ ಅಡಿ ಆಳ ಮೂರಡಿ ಅಗಲ ಎರಡೂವರೆ ಅಡಿ ಉದ್ದದ ಹಳ್ಳ ಬಗೆದಾಗ ನನಗೆ ಮೊದಲ ಪೆಟ್ಟಿಗೆ ಸಿಕ್ಕಿತು. ಅದನ್ನು ನಾನು ಭದ್ರವಾಗಿ ಎತ್ತಿಟ್ಟುಕೊಂಡೆ. ನನಗೂ ಆ ವೇಳೆಗೆ ಸಾಕಷ್ಟು ಬಡತನ ಬಂದಿತ್ತೆಂದೇ ಹೇಳಬೇಕು. +ಗಡಿಯಾರಗಳನ್ನು ರೂಮಿಗೆ ತಂದು ಕಿವಿಯ ಬಳಿ ಇಟ್ಟೆ. ಟ್ವೇನನ ಗಡಿಯಾರ ಹೊಡೆದುಕೊಳ್ಳಲಿಲ್ಲ, ಬಹುಶಃ ಸುದೀರ್ಘ ಕಾಲ ಭೂತಳದಲ್ಲಿದ್ದುದರಿಂದ ಹಾಗೇನೋ, ಅಥವಾ ಟ್ವೇನ್ ಸತ್ತದಿನವೇ ಅದೂ ಹೊಡೆದುಕೊಳ್ಳುವುದು ನಿಂತಿತೋ….. ನನ್ನ ಗಡಿಯಾರ ಕಿವಿಯ ಬಳಿ ಇಟ್ಟಾಗ ಅದು ಕ್ಷೀಣವಾಗಿ ಹೊಡೆಯುತ್ತಿರುವಂತೆ ಭಾಸವಾಯಿತು. ಅದರ ಕ್ಷೀಣ ಧ್ವನಿ ನನಗೇಕೋ ಬಹಳವಾಗಿ ಸಾವಿನ ಭೀತಿ ತಂದೊಡ್ಡಿತು. ಅದೇ ವರ್ಷ ಫ್ಲಾರಿಡಾದಲ್ಲಿ ಟ್ವೇನನ ಅನೇಕ ವಸ್ತುಗಳ ಹರಾಜು ಆಯಿತು. ನಾನೂ ಟ್ವೇನನ ಗಡಿಯಾರವನ್ನೊಯ್ದು ಅಲ್ಲಿ ಇಟ್ಟಿದ್ದೆ, ಯಾರೋ ಮಹಾನುಭಾವ ಅದನ್ನು ೧೦,೦೦೦ ಡಾಲರ್ ಗಳಿಗೆ ಕೊಂಡ. +ಬದುಕಿದ್ದಾಗ ಅದನ್ನು ನಾಶಮಾಡಲು ಯತ್ನಿಸಿ ಅಸಫಲರಾಗಿ ಸೋತ ಅದೇ ಗಡಿಯಾರಕ್ಕೆ ಸತ್ತನಂತರ ಬಂದ ಬೆಲೆ ಈ ಡಾಲರುಗಳು! +ಫ್ಲಾರಿಡಾದಿಂದ ಹಿಂತಿರುಗುವಾಗ ನನಗೆ ಮೊದಲ ಹೃದಯಾಘಾತ ಆಯಿತು. +ಟ್ವೇನ್ ಬದುಕಿದ್ದಷ್ಟು ದಿನವೂ, ಈ ಕಥೆಯನ್ನು ನಡೆದಂತೆ ಬರೆಯಬೇಕೆಂದು ನಾನವನಿಗೆ ಅನೇಕ ಬಾರಿ ಸೂಚಿಸಿದ್ದೆ. ಆದರೆ ಟ್ವೇನನಿಗೆ ಜನ ತನ್ನ ಕಥೆಗಳನ್ನು ಲಘುವಾಗಿ ಪರಿಗಣಿಸುತ್ತಾರೆಂಬ ಭಾವನೆ ಬಲವಾಗಿ ಬೇರೂರಿತ್ತು. ‘ಕ್ರೆಡಿಬಲಿಟಿ ಇರೋದಿಲ್ಲ ಪೈನ್, ನೀನೇ ಬರಿ’ ಎಂದಿದ್ದ. ಕಡೆಗೆ ಅವನ ಜೀವನ ಚರಿತ್ರೆಯಲ್ಲೂ ಇದನ್ನೊಂದು ಘಟನೆಯಾಗಿ ಸೇರಿಸಲು ಟ್ವೇನ್ ಒಪ್ಪಲೇ ಇಲ್ಲ. ಅದಕ್ಕೇ ನಾನು ಇದನ್ನು ಒಂದು ಸ್ವತಂತ್ರ ಕಥೆಯಾಗಿ ಬರೆಯಬೇಕಾಯಿತು. +***** +“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ […] +ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […] +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_421.txt b/Kannada Sahitya/article_421.txt new file mode 100644 index 0000000000000000000000000000000000000000..1efc68bdec10ed011086bde08b32ed9d4eab5dd8 --- /dev/null +++ b/Kannada Sahitya/article_421.txt @@ -0,0 +1,89 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೊನೆಗೆ +ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ ಬರವಣಿಗೆಯ ರೀತಿಯಲ್ಲಿ ಎಷ್ಟು ನಿಜ ಹೇಳಲುಸಾಧ್ಯವೋ ಅಷ್ಟು ಹೇಳಿದ್ದೇನೆ. +ಇಲ್ಲಿ ಕಾಲಾನುಕ್ರಮ ಇಲ್ಲ. ಇದನ್ನು ಬರೆಯುವಾಗ ಮಾತುಗಳು ವಾಕ್ಯದ ರೂಪ ಪಡೆದ ಕ್ರಮ ಮಾತ್ರ ಇದೆ. ಬರೆದ ಅನುಕ್ರಮದಲ್ಲೆ ಈ ಬರೆವಣಿಗೆ ನಿಮ್ಮ ಎದುರಿನಲ್ಲಿದೆ. ನನ್ನ ಬಲ್ಲವರೊಡನೆ ಆಗಾಗ ಹೇಳಿಕೊಂಡರೆ ಹೇಗಿರುತ್ತದೋ ಹಾಗೆ ಓದುವವರು ತಮಗೆ ಬೇಕಾದಂತೆ ಬೇಕಾದ ಕ್ರಮದಲ್ಲಿ ಓದಿಕೊಳ್ಳಬಹುದು. ನಿಜವಾಗಿ ಇದಕ್ಕೆ ಕೊನೆ ಮೊದಲು ಇಲ್ಲ. +ತೀರ ಎಂದರೆ ತೀರ ಅಲ್ಪ ಪ್ರಮಾಣದಲ್ಲಿ ಒಂದೋ ಎರಡೋ ಪದ ಅಥವ ವಾಕ್ಯಗಳನ್ನು ತಿದ್ದಿರುವುದು ಮಾತ್ರ ಉಂಟು. ಮಾತು ಆಡುವಾಗ ತಿದ್ದುವುದು ಎಲ್ಲಿಂದ ಬಂತು? ಬರೆಯುವಲ್ಲಿ ನನಗೆ ದೊರೆಯುವ ತಿದ್ದುವ ಅವಕಾಶವನ್ನು ನಿರಾಕರಿಸಿದ್ದೇನೆ. +ಇದು ಚೆನ್ನಾಗಿದೆಯೋ? ಇಲ್ಲವೋ? ಇಷ್ಟ ಆದೀತೋ ಬೇರೆಯವರಿಗೆ? ಹೀಗೆಲ್ಲ ಆಗಾಗ ಯೋಚನೆ ಬರುತ್ತಿತ್ತು. ಈಗ ಇಲ್ಲ. ಇದು ಇರುವುದು ಹೀಗೆ. ನಾನು ಬರೆಯಬಹುದಾದದ್ದು ಹೀಗೆ. ನಿಮಗೆ ಏನೂ ಅನ್ನಿಸಬಹುದು. ಏನೂ ಹೇಳಲು ಆಗಿಲ್ಲ. ಹೇಳಬೇಕಾದದ್ದು ಹಾಗೇ ಉಳಿದೇ ಬಿಡುತ್ತದೆ ಅಂತ ನನಗನ್ನಿಸಿದೆ. +ಬೆಂಗಳೂರು +ಆಗಸ್ಟ್. ೧೯೯೬ +ಓ. ಎಲ್. ನಾಗಭೂಷಣ ಸ್ವಾಮಿ +ಬರವಣಿಗೆಯ ಮೊದಲನೆಯ ದಿನ +ನನ್ನ ಹಿಮಾಲಯದ ಅನುಭವಗಳನ್ನು ಕುರಿತು ಬರೆಯಬೇಕೆಂಬ ಆಸೆಯೂ ಇದೆ. ಅನುಭವಗಳನ್ನು ಬರೆಯಲಾಗದೆಂಬ ಅನುಮಾನವೂ ಇದೆ. ಅಥವಾ-ಬರೆಯಲಾರೆನೆಂಬ ಅಳುಕು ನನ್ನ ಬಗ್ಗೆಯೇ ಇರುವ ಅಳುಕೋ ತಿಳಿಯುತ್ತಿಲ್ಲ. ಆದರೆ ಮನಸ್ಸಂತೂ ಹಿಮಾಲಯದ ಬಗ್ಗೆ ನಾನು ಬರೆದ ಪುಸ್ತಕ ಹೇಗಿರಬಹುದೆಂದು ಅನೇಕ ಬಾರಿ ಕಲ್ಪಿಸಿಕೊಂಡಿದೆ. ಮನಸ್ಸಿನಲ್ಲೇ ಹಲವಾರು ವಾಕ್ಯಗಳನ್ನೂ ಅಧ್ಯಾಯದ ಹೆಸರುಗಳನ್ನೂ ಬರೆದುಕೊಂಡಿದ್ದೇನೆ. ಓದುವವರಿಗೆ ಒಬ್ಬರೇ ಕೂತು ಓದುವಾಗ ಏನನ್ನಿಸೀತು, ಗುರುತಿನವರು ನನ್ನ ಹತ್ತಿರ ಬಂದು ‘ನಿಮ್ಮ ಪುಸ್ತಕ ಓದಿದೆ’ ಅಂದಾಗ ಅವರಿಗೇನು ಅನ್ನಿಸುತ್ತಿರುತ್ತದೆ, ನನಗೆ ಆಗ ಏನನ್ನಿಸಬಹುದು – ಹೀಗೆಲ್ಲ ಅಂದುಕೊಂಡಿದ್ದೇನೆ. ಆದರೆ ಈಗ ಮಾತ್ರ ಬರೆಯಲು ತೊಡಗಿದ್ದೇನೆ. ಈಗ ಬರೆಯುತ್ತಿರುವ ರೀತಿ ಇದೆಯಲ್ಲ ಅದು ಮಾತ್ರ ನಾನು ಕಲ್ಪಿಸಿಕೊಂಡ ಹಾಗೆ ಇಲ್ಲವೇ ಇಲ್ಲ. +ಮೊದಲು ಅಂದುಕೊಂಡಿದ್ದೆ – ಹಿಮಾಲಯದ ನನ್ನ ಅನುಭವ ತಡೆಯಲಾರದಂತೆ ಒಮ್ಮೆಗೇ ಕೂತು ಬರೆದುಬಿಡುತ್ತೇನೆ ಅಂತ. ಅನುಭವ ಆದದ್ದು ಹೌದು. ಆದರೆ ಬರೆಯದೆಯೇ ಇರಲಾರೆ ಅನ್ನುವಂಥ ಒತ್ತಡ ಇಲ್ಲ. ಹದಿನೈದು ವರ್ಷಗಳ ಹಿಂದೆ ನಾನು ಕಥೆಗಳನ್ನೂ ಕವನಗಳನ್ನೂ ಬರೆದಾಗ, ಬರೆಯುವ ಮುನ್ನ ಮತ್ತು ಬರೆಯುವಾಗ ಮನಸ್ಸೆಲ್ಲ ಬಿಗಿದುಕೊಂಡಿರುತ್ತಿತ್ತು. ಭಾರವಾಗಿರುತ್ತಿತ್ತು. ಮುಳುಗಿರುತ್ತಿತ್ತು. ದೈಹಿಕವಾಗಿಯೂ ನೋವು ಅನ್ನುವಂಥ , ಖುಶಿ ಅನ್ನುವಂಥ ಒತ್ತಡ ಇರುತ್ತಿತ್ತು. ಈಗ ಹಾಗೇನೂ ಇಲ್ಲ. ಅನುಭವದ ತೀವ್ರತೆಯನ್ನು ಅಳೆಯುವುದಾದರೂ ಹೇಗೆ? ಕಾಲ ಕಳೆಯುತ್ತ ಹೋದಂತೆ ಅನುಭವ ಆಗುವ ರೀತಿಯೂ ಬದಲಾಗುತ್ತದೋ ಏನೋ. ಇನ್ನೂ ಒಂದು ಕಾರಣ ಇರಬಹುದು. ಬುದ್ಧಿಯು ಹೆಚ್ಚಾಗಿ ಹದಿನೆಂಟು ವಯಸ್ಸಿನ ಬೆರಗು ಮುಗ್ಧತೆಗಳು ಕಡಿಮೆಯಾಗಿರಬಹುದು. ಹಾಗೂ ಹೇಳಲಾಗುವುದಿಲ್ಲ. ತಿಮ್ಮೇಗೌಡರು ಆಗಾಗ ಹೇಳುತ್ತಿರುತ್ತಾರೆ – ‘ಸ್ವಾಮಿ, ನಿಮಗೂ ನಮ್ಮ ದರ್ಶಿನಿಗೂ ಕೆಲವು ವಿಷಯದಲ್ಲಿ ವ್ಯತ್ಯಾಸವೇ ಇಲ್ಲ. ’ ಅಂತ. ದರ್ಶಿನಿ ಅವರ ಪುಟ್ಟ ಮಗಳು. ಅನುಭವವನ್ನು ಮುಗ್ಧವಾಗಿಯೇ ಪಡೆದುಕೊಂಡಿರಬಹುದು. ಆದರೆ ಬರೆಯುವಾಗ ಬುದ್ಧಿ ಕಡಿವಾಣ ಹಾಕುತ್ತದೆಯೋ? ‘ಸುಮ್ಮನೆ ನಿಮಗೆ ಅನ್ನಿಸಿದ ಹಾಗೆ ಬರೆಯುತ್ತಾ ಹೋಗಿ. ನಿಮಗೆ ಬರೆಯಲು ಆಗುತ್ತದೆ. ಬರೆಯಲೇ ಬೇಕು’ ಅಂತ ಶಿವರುದ್ರಪ್ಪನವರೂ ಹೇಳಿದರು. ಆದರೂ ಈ ವಿಮರ್ಶೆಯ ಬುದ್ಧಿ ಎಲ್ಲೋ ಕೆಲಸ ಮಾಡುತ್ತಲೇ ಇರುತ್ತದೆ. ಬಂಧ, ವಿನ್ಯಾಸ, ಶಿಲ್ಪ, ಆಕೃತಿ, ಲಯ ಅಂತೆಲ್ಲ ಪಾಠ ಮಾಡಿ ಮಾಡಿ, ಬರೆದು ಬರೆದು, ಅವೇ ವಿಚಾರಗಳೇ ತೊಡಕಾಗುತ್ತಿವೆಯೆ? ಬರೆಯುತ್ತ ಬರೆಯುತ್ತ ಅನುಭವ ಅದು ತನ್ನಷ್ಟಕ್ಕೇ ತಿಳಿಯುತ್ತ ಹೋಗುತ್ತದೆ. ರೂಪ ಪಡೆಯುತ್ತ ಹೋಗುತ್ತದೆ ಅನ್ನುವ ಮಾತನ್ನು ಟೆಸ್ಟು ಮಾಡುವ ಆಸೆ ಇದೆಯೊ? ಹಾಗೆ ಇದ್ದರೂ ಗೊತ್ತಾಗಿ ಆಗಬೇಕಾದ್ದು ಏನು? ಯಾರಿಗೆ? ಓದುವವರಿಗೆ? ನನಗೆ? ನಾನು ಏನು ಬರೆಯುತ್ತೇನೋ ನೋಡುತ್ತೇನೆ. +ಅಲ್ಲ. ಹಿಮಾಲಯದ ಬಗ್ಗೆ ಬರೆಯುತ್ತ ಬರೆಯುವ ಕಷ್ಟಗಳನ್ನೇ ಯಾಕೆ ಸುಮ್ಮನೆ ಹೀಗೆ ಹೇಳುತ್ತಿದ್ದೇನೆ? ಅಹಂಕಾರವೋ? ನಾನು ಹಿಮಾಲಯವನ್ನು ನೋಡಿದೆ. ಹಿಮಾಲಯದಲ್ಲಿ ನನ್ನನೇ ನೋಡಿಕೊಂಡೆ. ನನ್ನ ಮಟ್ಟಿಗೆ ನನಗೆ ಕಂಡಷ್ಟೇ ಹಿಮಾಲಯ. ಈಗ ನನ್ನ ಬಿಟ್ಟು ಹಿಮಾಲಯ ಇಲ್ಲ. ರಾಜುನ ತಮಾಷೆ ಮಾಡುತ್ತಿದ್ದೆವು. ರೈಲಿನಲ್ಲಿ. ಟೀ ಅಂಗಡಿಯಲ್ಲಿ, ನಡೆಯುವಾಗ ನಡೆದು ನಡೆದು ಕೂತಾಗ, ಟೆಂಟಲ್ಲಿ ಮಲಗುವ ಮೊದಲು, ಮತ್ತೆ ಎದ್ದ ಕೂಡಲೇ ಯಾವಗಲೂ ಅಂದರೆ ಯಾವಾಗಲೂ ನೋಟ್ಸ್ ಮಾಡಿಕೊಂಡದ್ದೇ ಮಾಡಿಕೊಂಡದ್ದು. ಆಗ ಒಂದು ಸಾರಿ ರಾಜುಗೆ ಹೇಳಿದ್ದೆ – ‘ನನ್ನೊಳಗೆ ಎಷ್ಟು ಹಿಮಾಲಯ ಉಳಿದಿರುತ್ತೊ ಅಷ್ಟನ್ನೇ ಬರೆಯುತ್ತೇನೆ. ಕನ್ನಡದಲ್ಲಿ ಇದುವರೆಗೆ ಯಾರೂ ಬರೆದಿರದ ಥರಾ’ ಅಂತ. ಅಗೋ, ನನ್ನ ಕಳ್ಳ ಮನಸ್ಸು. ಬರೆಯಬೇಕು ಅನ್ನುವ ಆಸೆ ಮೊದಲಿನಿಂದಲೂ ಇತ್ತು. ಬರೆಯಲು ಆಗುವುದಿಲ್ಲ ಅನ್ನುವುದು ಹೆದರಿಕೆ ಇರಬೇಕು – ಅಕಸ್ಮಾತ್ ಚೆನ್ನಾಗಿ ಬರೆಯಲು ಆಗದಿದ್ದರೆ ಅಂತ. ‘ಚೆನ್ನಾಗಿ’ ಅಂದರೆ ಹೇಗೆ? ಹಿಮಾಲಯದ ಬಗ್ಗೆ ಬರೆಯುವುದಷ್ಟೇ ಅಲ್ಲ ನನ್ನ ಬಗ್ಗೆಯೂ ಬರೆದುಕೊಳ್ಳುತ್ತೇನೆ. ನನಗೆ ಆದಷ್ಟು. ಆಗಷ್ಟು ಈಗಷ್ಟು. ಹೇಗೆ ಹೇಗೋ ಹಾಗೆ. +“ರೈಲಿನಲ್ಲಿ ಕನ್ನಡ ರೌಡಿಂಗಳ್”, “ಐ ವಿಲ್ ಈಟ್ ಯು ಅಲೈವ್”, “ಯು. ಡಿ. ಎಲ್” ಇವು ಕೆಲವು ನಾನು ಬರೆಯಬೇಕೆಂದುಕೊಂಡಿದ್ದ ಕೆಲವು ಅಧ್ಯಾಯದ ಹೆಸರುಗಳು. ಈಗ ಹಾಗೆ ಬರೆಯಲಾರೆ. ಇನ್ನೊಂದು ಸಾರಿ ಅನ್ನಿಸಿತ್ತು – ನಿರೀಕ್ಷೆ, ಆತಂಕ, ಸಿದ್ಧತೆ, ರೈಲಿನಲ್ಲಿ, ದಾರಿಯಲ್ಲಿ, ಬೇಸ್ ಕ್ಯಾಂಪು, ಟ್ರೆಕಿಂಗಿನ ಮೊದಲನೆಯ ದಿನ ಇತ್ಯಾದಿಯಾಗಿ ಹೀಗೆ ಕ್ರಮವಾಗಿ ಬರೆಯೋಣ ಅಂತ. ಯಾಂತ್ರಿಕವಾಗಿರುತ್ತೆ. ಥೂ. ಬೇಡ. ಹಾಗನ್ನಿಸಿತು. ರಾಮುಗೆ, ಮಾಲವಿಕಾಗೆ, ಅವರಿಗೆ ಇವರಿಗೆ ಕಾಗದ ಬರೆದಹಾಗೆ ಬರೆಯೋಣ ಅನ್ನಿಸಿತು. ಅವರಿವರ ನೆನಪು ಅಲ್ಲಿ ತುಂಬ ಬಂದದ್ದು ನಿಜ. ಆದರೆ ಕಣ್ಣೆದುರಿಗೆ ಇಲ್ಲದವರಿಗೆ ಕಾಗದದ ರೂಪದಲ್ಲಿ ಅನುಭವಗಳನ್ನು ಬರೆಯುವ ಉಪಾಯ ಸುಳ್ಳು ಅನ್ನಿಸಿತು. ನನಗೆ ಆದದ್ದನ್ನು ನನಗೇ ಅಲ್ಲದೆ ಇನ್ನು ಯಾರಿಗೆ ಹೇಳಿಕೊಳ್ಳಲಿ? ನಾನೇ ನನ್ನ ಅತ್ಯುತ್ತಮ ಶ್ರೋತೃ. +ಈಗ, ಹಿಮಾಲಯದಲ್ಲಿ ಅಲೆದು ವಾಪಸ್ಸು ಬಂದು ಎರಡೂವರೆ ತಿಂಗಳಾದಮೇಲೆ, ಕುತೂಹಲದಲ್ಲಿ, ಆಸೆಯಲ್ಲಿ, ಯಾವುದೂ ಉಪಾಯ ಮಾಡದೆ ಬರೆಯಲು ಕೂತಿದ್ದೇನೆ. ಯಾವುದೂ ಉಪಾಯ ಮಾಡಬಾರದು ಅನ್ನುವುದೇ ಉಪಾಯವಾಗಿಬಿಡುತ್ತದೋ ಹೇಗೋ ನೋಡೋಣ. +ಬರವಣಿಗೆಯ ಎರಡನೆಯ ದಿನ +ನಿನ್ನೆ ಬರೆದದ್ದನ್ನು ಇವತ್ತು ಸ್ವಲ್ಪವೆ ತಿದ್ದಿ ಬರೆದೆ. ರಾತ್ರಿ ನಿದೆ ಬರುವ ಮೊದಲು ಚಂದ್ರಖಾನಿಯ ಬಗ್ಗೆ ಯೋಚನೆಗಳು ಬರುತ್ತಿದ್ದವು. ಚಂದ್ರಖಾನಿ ಹೀಗೆ ನಿರಾಸೆ ಮಾಡುತ್ತದೆ ಅಂದುಕೊಂಡಿರಲಿಲ್ಲ. ಹಿಮಾಲಯ ಟ್ರೆಕಿಂಗ್ ಹೀಗೆ ನಿರರ್ಥಕ ಅನ್ನುವ ಭಾವನೆ ಹುಟ್ಟಿಸುತ್ತದೆ ಅಂದುಕೊಂಡಿರಲಿಲ್ಲ. +ಚಂದ್ರಖಾನಿ ನಮ್ಮೆಲ್ಲರ ಆಸೆಯಾಗಿತ್ತು. ನಮ್ಮೆಲ್ಲರ ಪ್ರಯಾಣದ ಗುರಿ ಆಗಿತ್ತು. ಅದರ ಬಗ್ಗೆ ಏನೆಲ್ಲ ಕಥೆ ಕೇಳಿದ್ದೆವು. ಮತ್ತೆ ಕಥೆ ಹೇಳಿದವರು ಒಬ್ಬಿಬ್ಬರಲ್ಲ. ಸಾಗರದ ವಿಜಯವಾಮನ, ಚಿಕ್ಕಮಗಳೂರಿನ ಶ್ರೀನಿವಾಸ, ರುಕ್ಮಣಿಹಾಲ್‌ನ ರಮೇಶ, ಕೆನರಾ ಬ್ಯಾಂಕಿನ ಹರೀಶ, ಯೂತ್ ಹಾಸ್ಟೆಲ್‌ನ ಬೇಗ್, ಬೆಂಗಳೂರಿನ ಅಜ್ಜಂಪುರ್-ಎಷ್ಟೊಂದು ಜನ ಚಂದ್ರಖಾನಿಯ ಬಗ್ಗೆ ಎಷ್ಟೊಂದು ಥರ ವರ್ಣನೆ ಮಾಡಿದ್ದರು. ಅವರೆಲ್ಲರ ವರ್ಣನೆ ಕೇಳಿ ಮನಸ್ಸು ಏನೆಲ್ಲ ಚಿತ್ರ ಬರೆದುಕೊಂಡಿತ್ತು. ವಾಮನನಂತೂ ಬೇಸರವಿಲ್ಲದೆ, ಪ್ರತಿಬಾರಿಯೂ ಅದೇ ಮೊದಲನೆಯ ಬಾರಿ ಎಂಬಂತೆ, ಮೂರು ವರ್ಷದ ನಂತರವೂ ನಿನ್ನೆಯಷ್ಟೆ ಅಲ್ಲಿಂದ ಬಂದವನಂತೆ, ಚಂದ್ರಖಾನಿಯನ್ನು ಬಹಳ ಚೆನ್ನಾಗಿ ವರ್ಣನೆ ಮಾಡುತ್ತಾನೆ. ಕಣ್ಣೆದುರು ಸಾಕ್ಷಾತ್ತಾಗುವ ಹಾಗೆ: ಚಂದ್ರಖಾನಿಯಲ್ಲಿ ನೀವು ಕಳೆಯುವ ಕಾಲ ಇದೆಯಲ್ಲ ಅದು ನಿಮ್ಮ ಬದುಕಿನ ಅಪೂರ್ವ ಕ್ಷಣಗಳು. ನಿಮ್ಮನ್ನು ಮರೆತು, ಕಾಲವನ್ನು ಮರೆತು, ಮರೆತಿದ್ದೇವೆ ಅನ್ನುವುದನ್ನು ಮರೆತು, ಜೀವನವೆಂದರೆ ‘ಇದೇ’ ಎಂದು ಸತ್ಯ ಸಾಕ್ಷಾತ್ಕಾರವಾಗುವ ಜಾಗ ಅದು. ಅದಕ್ಕೆ ಮುಖ್ಯಕಾರಣ ಅಲ್ಲಿರುವ ಹಿಮ. ನೆಲವೆಲ್ಲ ಹಿಮ. ಆಕಾಶವೆಲ್ಲ ನೀಲಿ. ನಡೆಯಲಾರದೆ ನಡೆಯಬೇಕು. ನಿಲ್ಲಲಾಗದು ಕಾಲು ಕೊರೆಯುತ್ತದೆ. ನಡೆಯಲಾಗದು ಕಾಲು ಹೂತು ಹೋಗುತ್ತದೆ. ನಡೆಯಬೇಕು ಆಯಾಸವಾಗುತ್ತದೆ. ನಡೆದು ನಡೆದು ಮೈ ಬಿಸಿಯಾಗಿರುತ್ತದೆ. ಚಳಿಗೆ ಮೈ ನಡುಗುತ್ತಿರುತ್ತದೆ. ಅಲ್ಲಿ ದಾಟುವಾಗ ಒಂದೈವತ್ತು ಅಡಿ ದೂರ ಹಿಮದ ಮೇಲೆ ಜಾರಬೇಕು. ಬೇರೆ ದಾರಿಯೇ ಇಲ್ಲ. ಬೆನ್ನ ಮೇಲಿನ ಚೀಲದ ಭಾರ ಬ್ಯಾಲೆನ್ಸು ಮಾಡುತ್ತ, ಕೆಳಗೆ ಕ್ಷಣ ಕ್ಷಣವೂ ನಮ್ಮನ್ನು ನುಂಗುವಂತೆ ಮೇಲೆದ್ದು ಬರುವ ಹನ್ನೆರಡು ಸಾವಿರ ಅಡಿ ಪ್ರಪಾತಕ್ಕೆ ಅಯ್ಯೋ ಬಿದ್ದೇ ಬಿಡುತ್ತೇವಲ್ಲ ಅಂತ ಅಪಾರವಾಗಿ ಹೆದರುತ್ತ, ರುಂರುಂಯ್ಯನೆ ಜಾರಿಹೋಗುತ್ತಿರುವ ನಮ್ಮನ್ನು ತಡೆದು ನಿಲ್ಲಿಸಲು, ಪಕ್ಕಕ್ಕೆ ಎಳೆದು ಹಾಕಲು, ಪ್ರಪಾತದ ನಾಲ್ಕೇ ಅಡಿ ಈಚೆ ನಿಂತಿರುವ ಹದಿನೈದು ವರ್ಷದ ಹುಡುಗನನ್ನೇ ಪೂರ್ತಿಯಾಗಿ ನಂಬಿ, ನಾಲ್ಕೇ ಕ್ಷಣಗಳಲ್ಲಿ ಸಾವು ಬದುಕು ಸೌಂದರ್ಯ ಭಯ ಎಲ್ಲವನ್ನೂ ಯಾವುದು ಯಾವುದು ಅಂತ ಗೊತ್ತಾಗದೆ ಒಟ್ಟಾಗಿ ಅನುಭವಿಸುತ್ತ ಅನುಭವ ಆಗುತ್ತಿದೆ ಆಗುತ್ತಿದೆ ಅನ್ನುವಷ್ಟರಲ್ಲೆ ಮುಗಿದು ಹೋಗುವ ಆ ಕ್ಷಣಗಳ ಹುಮ್ಮಸ್ಸಿನಲ್ಲಿ ಮೈ ಮರೆಯಬೇಕು – ಅಂತೆಲ್ಲ ವಾಮನ ಅಂಗ ಭಂಗಿಗಳೊಡನೆ ವಿವರಿಸಿದ್ದ. ವಾಮನ ತುಂಬ ಚೆನ್ನಾಗಿ ಕತೆ ಹೇಳುತ್ತಾನೆ. +ಸಹಜವಾಗಿಯೇ, ಚಂದ್ರಖಾನಿ ನಮ್ಮೆಲರ ಅನುಭವದ ಕ್ಲೈಮ್ಯಾಕ್ಸ್ ಆಗುತ್ತಿದ್ದೆ ಅಂತ ಕಾಯುತ್ತಿದ್ದೆವು. ಇಲ್ಲ. ನಮಗೆ ನಿರಾಸೆ ಆಗುತ್ತದೆ ಅಂತ ಸ್ವಲ್ಪ ಸೂಚನೆ ಸಿಕ್ಕಿತ್ತು. ಆದರೂ ಆ ಸೂಚನೆಯನ್ನು ಪೂರ್ತಿ ನಂಬಿರಲಿಲ್ಲ. +ಆಗಿನ್ನೂ ದೆಹಲಿಯಲ್ಲಿದ್ದೆವು. ಯೂತ್ ಹಾಸ್ಟೆಲ್‌ನ ಮುಂದೆ, ಬೆಳಗಿನ ಆರೂವರೆಯ ಬಿರು ಬಿರು ಧಗ ಧಗ ಧಗೆಯಲ್ಲಿ ಗರಿಕೆ ಹುಲ್ಲೂ ಕಾದ ದಬ್ಬಳದಂತೆ ಸುಡುತ್ತ ಚುಚ್ಚುತ್ತಿರುವಾಗ, ನಮ್ಮನ್ನು ಊರು ಸುತ್ತಿಸಲು ಇನ್ನೇನು ಈಗ ಬಸ್ಸು ಬರುತ್ತದೆ ಅಂತ ಕಾಯುತ್ತಿದ್ದಾಗ ಆ ಸೂಚನೆ ಸಿಕ್ಕಿತು. ಕೆಲವು ಕನ್ನಡದ ಜನ ನಮಗಿಂತ ಮೊದಲೇ ಟ್ರೆಕಿಂಗ್ ಮುಗಿಸಿ ವಾಪಸ್ಸು ಹೋಗುತ್ತಿದ್ದವರು ಸಿಕ್ಕಿ ಹೇಳಿದರು. ‘ಚಂದ್ರಖಾನಿಯಲ್ಲಿ ಐಸು ಇಲ್ಲ.’ ನಾನು ಅದನ್ನು ಮೂರ್ತಿಗೆ ಹೇಳಿದೆ. ಜೋರಾಗಿ ನಕ್ಕುಬಿಟ್ಟ. ನನ್ನ ತಮಾಷೆ ಮಾಡಿದ- ‘ಹಿಮಾಲಯದಲ್ಲಿ ಐಸು ಇರಲ್ಲ ಅಂದರೇನು ಅರ್ಥ. ಹೋಗೋಲೋ. ಡೋಂಟ್ ಬಿ ಸಿಲ್ಲಿ. ಒಂಚೂರು ಐಸು ಇರುತ್ತೆ. ಅದು ಕರಗಿ ಮುಗಿದು ಹೋಗಿಬಿಡುತ್ತದೆ ಅಂದುಕೊಂಡೆಯಾ? ಅದು ಹಿಮಾಲಯಾ ಕಣಯ್ಯಾ. ಯಾವಾಗಲೂ ಐಸು ಫಾರಂ ಆಗುತ್ತಲೇ ಇರುತ್ತೆ’-ಅಂದ. ಸ್ವಲ್ಪ ಹೊತ್ತಾದ ಮೇಲೆ ಇನ್ನೂ ಕೆಲವರು ಅದೇ ಮಾತು ಹೇಳಿದರು. ಚಂದ್ರಖಾನಿಯಲ್ಲಿ ಐಸು ಇಲ್ಲ. ಮೂರ್ತಿ ಸ್ವಲ್ಪ ಅಳುಕಿದನೋ? ನಮಗೆಲ್ಲಿ ತಾತ್ವಿಕನ ಹಾಗೆ ಸಮಾಧಾನ ಹೇಳಿದ-‘ಲೆಟ್ ಅಸ್ ಗೋ ಅಂಡ್ ಸೀ ವಾಟ್ ಎವರ್ ದಿ ಗ್ರೇಟ್ ನೇಚರ್ ಹ್ಯಾಸ್ ಇನ್ ಸ್ಟೋರ್ ಫಾರ್ ಅಸ್. ಹಾಗೇ ಇರುತ್ತೆ ಹೀಗೇ ಇರುತ್ತೆ ಅಂತೆಲ್ಲ ಯಾಕೆ ಕಲ್ಪನೆ ಮಾಡಿಕೊಳ್ಳಬೇಕು. ಇರುವುದು ಇದ್ದ ಹಾಗೇ ಇರುತ್ತೆ’-ಅಂದ. ಮೂರ್ತಿಗೆ ಇನ್ನೂ ಒಂದು ನಂಬಿಕೆ. ವಾಮನ ಕೂಡ ಜೂನ್ ತಿಂಗಳಲ್ಲಿ ಬಂದಿದ್ದ. ಆಗ ತುಂಬ ಐಸು ಇತ್ತಂತೆ. ಅವನು ಯಾಕೆ ಸುಳ್ಳು ಹೇಳುತ್ತಾನೆ? ಮೂರ್ತಿ ಹೆಂಡತಿ ಧಾರಿಣಿಗೆ, ನಾನು ನನ್ನ ಹೆಂಡತಿ ಚಂದ್ರಳಿಗೆ ನಾನು ನೋಡದಿದ್ದರೂ ಚಂದ್ರಖಾನಿಯ ವೈಭವವನ್ನು ವರ್ಣಿಸಿ ವರ್ಣಿಸಿ ನಮ್ಮ ಜೊತೆಗೆ ಹೊರಡಿಸಿದ್ದೆವಲ್ಲ. ವಾಮನ ಹೇಳಿದ ಮಾತುಗಳನ್ನು ನಾವೇ ಕಂಡ ನೋಟಗಳಾಗಿ ಮಾಡಿಕೊಂಡಿದ್ದೆವಲ್ಲ. ಈಗ ಅನುಮಾನಿಸುವುದು ಹೇಗೆ? ‘ಅಯ್ಯಯ್ಯೋ,’ ನಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದ ಶ್ಯಾಮಾ ಘೋಷಣೆ ಮಾಡಿಬಿಟ್ಟಳು. ‘ಅಯ್ಯಯ್ಯೋ, ನಾನಂತೂ ಐಸು ನೋಡದೆ, ಮುಟ್ಟದೆ, ಬೆಂಗಳೂರಿಗೆ ವಾಪಸ್ಸೇ ಹೋಗಲ್ಲ.’ +ಇದೆಲ್ಲ ದೆಹಲಿಯ ೪೬ ಡಿಗ್ರಿ ಬಿಸಿಲಿನ ಬೇಸಗೆ ಮಾತು ಹೋಗಲಿ ಅಂದುಕೊಂಡರೆ ನಮ್ಮ ಬೇಸ್ ಕ್ಯಾಂಪು ರಾಯ್‌ಸನ್ ನಲ್ಲಿ ಕೂಡ ಅದನ್ನೇ ಹೇಳಿದರು- ಚಂದ್ರಖಾನಿಯಲ್ಲಿ ಈ ವರ್ಷ ಐಸು ಇಲ್ಲ. ಮೂರ್ತಿಯದು ಒಂದೇ ನಿರ್ಧಾರ- ಐ ಡೋಂಟ್ ಬಿಲೀವ್ ಇಟ್. ಅವನು ಸ್ವಲ್ಪ ಕೆರಳಿದರೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೆ. ಹೋಗಲಿ. ನಾವು ಚಂದ್ರಖಾನಿಗೆ ಹೋಗುವ ಬದಲಾಗಿ ಕೊಹಲಿಪಾಸ್‌ಗೆ ಹೋಗುವ ಗುಂಪನ್ನು ಸೇರೋಣವೇ ಅಂತ ಕೂಡ ಯೋಚನೆ ಮಾಡಿದೆವು. ಆದರೆ ನಮ್ಮೆಲ್ಲರಿಗೂ ಚಂದ್ರಖಾನಿ ಚಂದ್ರಖಾನಿ ಅಂತ ಬೇರೆ ಎಲ್ಲರೂ ಹೇಳಿದ್ದು ಕೇಳಿ ಕೇಳಿ ತಲೆಯಲ್ಲಿ ಅದೇ ಇತ್ತು. ಅಲ್ಲವೆ. ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ನಿರ್ಧಾರವೇ ಎಲ್ಲಿ ಆಗಿರುತ್ತದೆ. ಅದರ ಮೆಲೆ ಎಷ್ಟೊಂದು ಜನರ ಮನಸ್ಸು. ಕಣ್ಣೆದುರಿಗಿಲ್ಲದಿದ್ದರೂ ಅವರ ಮಾತು, ಕೆಲಸ ಮಾಡುತ್ತಿರುತ್ತದೆ. +ದಾರಿಯ ಉದ್ದಕ್ಕೂ ಸೂಚನೆಗಳು ಗಟ್ಟಿಯಾಗುತ್ತಿದ್ದವು. ಆದರೂ ನಮ್ಮದೇ ಒಂದು ತತ್ವ ಮಾಡಿಕೊಂಡಿದ್ದೆವು. ಅದಕ್ಕೆ ಮಾಂಟಿಕಚೋರ್‌ನ ಕ್ಯಾಂಪ್ ಲೀಡರ್‌ನ ಬೆಂಬಲವೂ ಇತ್ತು. ಏನೆಂದರೆ, ಚಳಿ ಜಾಸ್ತಿ ಆದರೆ ಹಿಮ ಫಾರಂ ಆಗುತ್ತೆ. ಮಾಂಟಿಕಚೋರ್ ಬರೀ ಏಳುವರೆ ಸಾವಿರ ಅಡಿ ಎತ್ತರದ ಜಾಗ. ಅಲ್ಲೆ ೪ ಡಿಗ್ರಿ ಇದೆ ಟೆಂಪರೇಚರು. ಹಾಗಾದರೆ ಚಂದ್ರಖಾನಿ ಹದಿಮೂರು ಸಾವಿರ ಅಡಿ ಎತ್ತರದ ಜಾಗ. ಅಲ್ಲಿ ಇನ್ನೂ ಜಾಸ್ತಿ ಚಳಿ ಇರುತ್ತೆ. ಅಂದರೆ ಹಿಮ ಇರುತ್ತೆ. ಖಂಡಿತ. ಅಲ್ಲದೆ ಮಾಂಟಿಕಚೋರ್ ನಮ್ಮ ನಡಿಗೆಯ ಎರಡನೆಯ ದಿನದ ತಂಗುದಾಣ, ಚಂದ್ರಖಾನಿಗೆ ಇನ್ನೂ ಐದು ಆರು ದಿನದ ನಡಿಗೆ ಆದಮೇಲೆ ತಲುಪುವುದು. ಹಿಮ ಖಂಡಿತ ಇರುತ್ತದೆ. ಜೊತೆಗೆ ಆ ಎರಡನೆಯ ದಿನ ನಡೆಯುತ್ತ ದೂರ ದೂರ ಬೆಟ್ಟಗಳಲ್ಲಿ ಬಿಳೀ ಬಿಳೀ ಪಟ್ಟಿಗಳು ಕಾಣುತ್ತಿದ್ದವು. ನಾವು ನಿಧಾನವಾಗಿ ಹಿಮದ ನಾಡೊಳಗೆ ಹೆಜ್ಜೆ ಇಡುತ್ತಿದ್ದೇವೆ ಅನ್ನಿಸುತ್ತಿತ್ತು. ಒಂದೊಂದಾಗಿ ಹೆಸರಿರುವ ಪರ್ವತಗಳು ಹಿಮ ಶಿಖರಗಳು-ಕಿರೀಟಗಳು-ದೂರದಲ್ಲಿ ಕಾಣುತ್ತಿದ್ದವು. ಚಂದ್ರಖಾನಿ ಮೋಸ ಮಾಡಲಾರದು ಅನ್ನುವ ಆಸೆ. +ನಿರಾಸೆಗೆ ಸಿದ್ಧವಾಗುತ್ತ ನಮ್ಮೆಲ್ಲರ ಒಂದು ಭಾಗದ ಮನಸ್ಸು ಇತ್ತು. ದಾರಿಯಲ್ಲಿ ಸಿಕ್ಕ ಹಳ್ಳಿಯ ಒಬ್ಬ ಮನುಷ್ಯ ಹೇಳಿದ ‘ಹಿಮಾಲಯ ಈ ವರ್ಷ ಒಣಗಿ ಹೋಗಿದೆ ಸೂಖಾ ಪಡಾ ಹೈ’ ಅಂತ. ನಿರಾಸೆಗೆ ಸಿದ್ಧರಾಗುವುದೇ ಬೇರೆ ನಿರಾಸೆಯನ್ನೇ ಎದುರಿಸುವ, ಪಡುವ ಕ್ಷಣ ಬೇರೆ. ಚಂದ್ರಖಾನಿಗೆ ನಾಳೆ ತಲುಪುತ್ತೇವೆ ಅನ್ನುವಾಗ ನಾಗರೂನಿಯಲ್ಲಿ ಎಷ್ಟೊಂದು ಉಲ್ಲಾಸ. ಚಂದ್ರಖಾನಿಯಲ್ಲಿ ಹಿಮ ಇಲ್ಲವೇ ಇಲ್ಲ ಅಂತ ಖಚಿತವಾಗಿ ತಿಳಿಯಿತು. ಆದರೂ ಸಂತೋಷ. ನಾವೇ ನಡೆದು ಹತ್ತಿ ಮುಗಿಸಿದೆವಲ್ಲ. ನಾಳೆಗೆ ಈ ನಡಿಗೆ ಮುಗಿಯುತ್ತದಲ್ಲ. ನಮ್ಮ ಬಗ್ಗೆಯೇ ಹೆಮ್ಮೆ. ಹದಿಮೂರು ದಿನಗಳಲ್ಲಿ ಅದೇ ಮೊದಲನೆಯ ಬಾರಿಗೆ ವಿಶಾಲವಾಗಿಯೂ ಸಮವಾಗಿಯೂ ಇರುವ ನೆಲ. ಹನ್ನೊಂದು ಸಾವಿರ ಅಡಿ ಎತ್ತರವೆ ಇದು. ಸುತ್ತಲೂ ಕಣಿವೆಗಳು. ಸಂಜೆಯ ಬಿಸಿಲು. ಹಿತವಾದ ಚಳಿಗಾಳಿ. ಆಕಾಶ ಓ ಇಲ್ಲೆ ಇದೆ. ನಾವು ಅಲ್ಲೆ ಇದ್ದೇವೆ. ಒಂದಷ್ಟು, ಎಷ್ಟೊ, ಬೆಟ್ಟಗಳ ಅಲೆ ಅಲೆ ತೆರೆಗಳ ಆಚೆ ಅಲಿ ರತ್ನ, ಅಲಿ ರತ್ನಿ, ಟೈಗರ್ಸ್ ಟೀತ್ ಶಿಖರಗಳು. ಅವುಗಳ ತುಂಬ ಹಿಮ ಹಿಮ. ಅಲ್ಲಿಗೂ ನಾವು ಹೋಗುವಂತಿದ್ದರೆ. +ಚಂದ್ರಖಾನಿಗೆ ಹೊರಟೆವು. ಹತ್ತಿದೆವು. ಇನ್ನು ಎರಡು ಸಾವಿರ ಅಡಿ ಅಷ್ಟೆ. ಬಲಗಡೆಗೆ ಗುಡ್ಡದ ಕಡಿದಾದ ಮೈ. ಎಡಗಡೆಗೆ ಪ್ರಪಾತ. ಹತ್ತು. ಎಡಕ್ಕೆ ತಿರುಗು. ನಾಲ್ಕು ಹೆಜ್ಜೆ ನಡೆ. ಹತ್ತು. ಹತ್ತು. ಇವೆಂಥ ಬಂಡೆಗಳೋ. ಎಷ್ಟು ಹತ್ತಿದ್ದೇವೆ. ಬರೀ ಐವತ್ತು ಅಡಿಯೆ. ಇನ್ನೂ ಹೋಗಬೇಕೇ. ಸಾವಿರದ? ಅಥವ ಎರಡು ಸಾವಿರದ? ಒಂಬೈನೂರ ಐವತ್ತು ಅಡಿಗಳೆ? ದೇವರೆ. ನಾಲ್ಕು ಹೆಜ್ಜೆ ನಡೆದರೆ ಉಸಿರಾಡುವುದೆ ಕಷ್ಟ ಅನ್ನಿಸುತ್ತದಲ್ಲ. ಅಯ್ಯೊ, ಇವರೆಲ್ಲ ಯಾಕೆ ಹೀಗೆ ಬೇಗ ಬೇಗ ಹೋಗುತ್ತಾರೆ. ಬೆನ್ನಮೇಲಿನ ಚೀಲದ ಭಾರ, ಬರೀ ಎಂಟು ಕೇಜಿಯೂ ಇಲ್ಲ. ಎಂಬತ್ತು ಕೇಜಿಯಾಗಿ ತೋರುತ್ತದಲ್ಲ. ಚಂದ್ರ ಸುಸ್ತಾಗಿಬಿಟ್ಟಿದ್ದಾಳೆ. ಕಾಲು ಎತ್ತಿ ಇಡುವುದೇ ಅವಳಿಗೆ ಕಷ್ಟ ಆಗುತ್ತಿದೆ. ಮುಖವೆಲ್ಲ ಸಪ್ಪೆ ಸಪ್ಪೆ. ‘ನಿಧಾನ ನಿಧಾನ ಹೋಗೋಣ ಪುಟ್ಟಿ.’ ಕೂರುವ ಆಸೆ. ಕೂತರೆ ಮುಗಿಯಿತು. ಎರಡು ನಿಮಿಷ ಕೂತರೆ ಮೈ ಮತ್ತೆ ನಡಿಗೆಗೆ, ಹತ್ತುವುದಕ್ಕೆ ಹೊಂದಿಕೊಳ್ಳಲು ಇನ್ನರ್ಧ ಗಂಟೆ ಬೇಡುತ್ತದೆ. ನಡೆಯಲೇ ಬೇಕು. ಇಗೋ ಇನ್ನೆರಡು ತಿರುವು ದಾಟಿದರೆ ತುದಿ ಬಂತು. ಚಂದ್ರಳ ಬೆನ್ನಮೇಲಿನ ಚೀಲ ಕೇಳಲೇ ನಾನು? ಆದರೆ ನನ್ನ ಚೀಲವೇ ಭಾರ ಆಗಿದೆ. ಗೌಡರು ಮತ್ತು ಮೂರ್ತಿ ಕೇಳಿಬಿಟ್ಟರು: ‘ಮೇಡಂ, ನಿಮ್ಮ ಚೀಲ ಕೊಡಿ ಅಥವ ಅದರಲ್ಲಿನ ಭಾರ ನಮಗೆಲ್ಲರಿಗೂ ಹಂಚಿ.’ ನನಗೆ ಬೇಜಾರಾಯಿತೊ. ಸಿಟ್ಟು ಬಂತೊ? +ತುದಿ ಬಂತೆ? ಬಂಡೆ. ಅಗೊ, ಅಲ್ಲಿ ನೋಡಿದರೆ ಒಂದರ್ಧ ಕಿಲೋಮೀಟರು ಬೆಟ್ಟದ ಬೆನ್ನಲ್ಲಿ ಸುಮ್ಮನೆ ಬಿದ್ದಿರುವ ಕಾಲುದಾರಿ. ಸದ್ಯ. ಪ್ರಪಾತ ಇಲ್ಲ. ಸಲೀಸಾಗಿ ನಡೆಯಬಹುದು. ಹೌದೆ? ಅಯ್ಯೊ. ಈ ತಿರುವಿನಲ್ಲಿ ಮತ್ತೆ ಕಡಿದಾದ ಗೋಡೆ. ಚಂದ್ರಖಾನಿ ಎಲ್ಲಿದೆ? ಈ ಗೋಡೆ ಹತ್ತಿ ಇಳಿದರೆ ಆಯಿತೆ? ಸೂರ್ಯ ಚುಚ್ಚುತ್ತಾನಲ್ಲ. ಸ್ವೆಟರು ತೆಗೆಯೋಣವೆ? ಬೇಡ. ತೆಗೆದರೆ ಆ ಭಾರ ಮತ್ತೆ ಬೆನ್ನ ಮೇಲಿನ ಚೀಲದಲ್ಲಿ ಹೊರಬೇಕು. ಮೈ ಮೇಲೇ ಇರಲಿ ಅದು. ಭಾರ ಗೊತ್ತಾಗುವುದಿಲ್ಲ. ಎಷ್ಟೊಂದು ಬೆವರು. ಬೆವರು. ಮೈಯೆಲ್ಲ ನೀರಾಗಿಬಿಟ್ಟಿದೆಯಲ್ಲ. ನಿಂತರೆ ಸ್ವಲ್ಪ, ತಣ್ಣಗೆ ಚಳಿಗಾಳಿಗೆ ಬೆವರು ಒಣಗುತ್ತದೆ. ಅಯ್ಯಯ್ಯೊ ನಿಂತರೆ ಆಗದು. ನಡೆ ನಡೆ. ಆಹಾ ಹೂವು. ಗರಿಕೆ ಹುಲ್ಲುಗಳ ನಡುವೆ ಎಷ್ಟೊಂದು ಪುಟ್ಟ ಪುಟ್ಟ ಹೂವು. ಹೆಸರು ಬುದ್ಧ ಕಾರುಣ್ಯ. ಎಷ್ಟೊಂದು ಮುದ್ದಾಗಿವೆ. ಇರಲಿ ಇರಲಿ. ಈ ಹಾಳು ಸೂರ್ಯ ಒಂಬತ್ತು ಗಂಟೆಗೇ ಹೀಗೇಕೆ ಉರಿಯುತ್ತಾನೆ? ಮೈ ಅಸಹ್ಯ ಆಗುವಷ್ಟು ಬೆವರು. ಎರಡು ಗಂಟೆ ಹೊತ್ತು ನಡೆದು ಎಷ್ಟು ದೂರ ಬಂದೆವು? ಇನ್ನೂ ಒಂದೂವರೆ ಕಿಲೋಮೀಟರ್ ನಡೆಯ ಬೇಕೆ? ಆಗಿದ್ದಾಗಲಿ ಕೂರೋಣವೇ? ಅವರೆಲ್ಲ ಆಗಲೇ ಮುಂದೆ ಹೋದರೇ. ಈ ಬಂಡೆಗಳಿಗೆ ಅಯ್ಯೊ ಕೊನೆಯೇ ಇಲ್ಲವೆ. ಇದೆಂಥ ವಿಕಾರವಾದ ಬಂಡೆ. ಹತ್ತು ಆನೆ ಗಾತ್ರ. ದೊಡ್ಡ ವಜ್ರಾಯುಧ ತೆಗೆದುಕೊಂಡು ಮನಸ್ಸಿಗೆ ಬಂದಂತೆ ಕೊಚ್ಚಿ ಹಾಕಿದ ಹಾಗೆ. ಒಂದು ಫೋಟೋ. ಇಗೊ ಇದು ಐಸ್ ಕ್ರೀಮಿನ ಕೋನ್ ಅನ್ನು ಚಮಚದಲ್ಲಿ ಸವರಿ ಕಿತ್ತ ಹಾಗೆ. ಇನ್ನೊಂದು ವಿಚಿತ್ರ ಕೋಡುಗಲ್ಲು. ಎಂಟು ಹತ್ತು ಕೊಂಬುಗಳು. ಮೈಯೆಲ್ಲ ತರಚಲು ತರಚಲು ಬಂಡೆ. ಇದು ಕಲ್ಲಿನ ಕೋಟೆಯ ಮಹಾದ್ವಾರದ ಹಾಗೆ. ಇದು ಗೋಡೆಯಂಥ ಬಂಡೆ. ಇವುಗಳ ನಡುವೆ ಸುತ್ತಿ ಸುತ್ತಿ ತಿರುಗಿ ಸುತ್ತಿ ಹತ್ತುತ್ತ ಇದೇನು ಈ ಬೆಟ್ಟದ ತುದಿಯಲ್ಲಿ, ಇಷ್ಟೊಂದು ಮೇಲೆ ಇಷ್ಟೊಂದು ವಿಶಾಲ ಳಾಲಿ ಜಾಗ. ಎಕರೆಗಟ್ಟಲೆ ಗರಿಕೆ ಹುಲ್ಲು. ಒಂದಷ್ಟು ದೂರದಲ್ಲಿ ಗುಮ್ಮಟಕಲ್ಲು. ಬಲಗಡೆ ಒತ್ತಾಗಿ ಬೆಳೆದ ಮರಗಳ ಕಾಡು. ಇಳಿಜಾರು… ಇದೇ …ಚಂದ್ರಖಾನಿಯೆ…ಐದೇ ಐದುಪೈಸೆಯಷ್ಟು ಐಸು ಇಲ್ಲ. ನಿರಾಸೆ. +ಬರವಣಿಗೆಯ ಮೂರನೆಯ ದಿನ +ಹಿಮಾಲಯದಲ್ಲಿ ಭಯವಿತ್ತು. ಆದರೆ ಭಯವೇ ಆಗಿಲ್ಲವೆಂಬ ನಟನೆಯೂ ಇತ್ತು. ಆದ ಸ್ವಲ್ಪ ಭಯವನ್ನು ಸಾವಿರ ಪಟ್ಟು ಹೆಚ್ಚು ಮಾಡಿ ಹೇಳಿಕೊಳ್ಳುವ ಉತ್ಪ್ರೇಕ್ಷೆಯೂ ಇತ್ತು. ಈಗ ನೆನಪಿನಲ್ಲಿ ಅವೆಲ್ಲ ಕ್ಷಣಗಳು ಮತ್ತೆ ಬಂದರೆ ಎಂದು. ಬರಲಿ ಎಂದು ಹಂಬಲಿಸುವ ಕ್ಷಣಗಳಾಗಿ ಉಳಿದುಕೊಂಡಿವೆ. +ನಾವು ಮಾಟಿಕಚೋರ್ ತಲುಪಿದಾಗ ಸಂಜೆ ಐದು ಗಂಟೆ. ಮಧ್ಯಾಹ್ನದ ದಾರಿಯೆಲ್ಲ ಕಡಿದು ಹಾಕಿದ ದೊಡ್ಡ, ದೊಡ್ಡ ಬೃಹತ್, ಅಸಹಾಯಕ ದೇವದಾರು ಮರಗಳ ಹೆಣಗಳ ನಡುವೆ ನಡೆದ ನೋವಿನ ದಾರಿ. ಕಡಿದು ಉರುಳಿಸಿದ ಮರಗಳು ಮನಸ್ಸಿಗೆ ನೋವು ತರುತ್ತವೆ. ದೊಡ್ಡ ದಿಮ್ಮಿಗಳನ್ನು ಹೊತ್ತ ಲಾರಿಗಳು ಮುಖ ಪಕ್ಕಕ್ಕೆ ತಿರುಗಿಸಿಕೊಳ್ಳುವಂತೆ ಮಾಡುತ್ತವೆ. ನಾವೆಲ್ಲರೂ – ಅಯ್ಯೊ, ಹೀಗೆ ಇಂಥಾ ಮರಗಳನ್ನು ಇಷ್ಟೊಂದು ಕಡಿದು ಹಾಕಿದ್ದಾರಲ್ಲ ಅಂತ – ಮಾತಾಡಿಕೊಂಡೆವು. ಚಡಪಡಿಸಿದೆವು. ಆಮೇಲೆ, ರಸ್ತೆಯ ಬಲ ಅಂಚಿಗೆ ಪ್ರಪಾತದ ಪಕ್ಕದಲ್ಲಿ ತನ್ನ ಮರದ ದೇಹವನ್ನು ಕಳೆದುಕೊಂಡ ಸಿಂಹಾಸನ ಆಕಾರದ ಮರದ ದೊಡ್ಡ, ಬೊಡ್ಡೆ ಕಂಡಾಗ ಅದರ ಮೇಲೆ ಕೂತು ಒಂದು ಫೋಟೋ ತೆಗೆಸಿಕೊಂಡೆ. +ನಿಧಾನವಾಗಿ ಮೋಡ ಕವಿಯುತ್ತಿತ್ತು. ನಮಗೆ ಕೊಟ್ಟ ‘ದಾರಿ ಪುಸ್ತಕ’ದಲ್ಲಿ ಹಳೆಯ ಫಾರೆಸ್ಟ್ ಬಂಗಲೆಯಲ್ಲಿ ನಮ್ಮ ವಸತಿ ಅಂತ ಬರೆದಿತ್ತು. ಕಡಿದ ಮರಗಳ ಕಾಡು ಇತ್ತು. ಕಡಿತಕ್ಕೆ ಸಿದ್ಧವಾದ, ನಿಬಿಡ ವೃಕ್ಷ ಸಮೂಹ ಇತ್ತು. ಬಂಗಲೆ ಇರಲಿಲ್ಲ, ಮೋಡ. ಮೋಡ ನನಗೆ ಯಾವಾಗಲೂ ಭಯ ತರುತ್ತದೆ. ಮೈಸೂರಿನ ಸರಸ್ವತೀ ಪುರಂ ರೈಲ್ವೇ ಗೇಟಿನ ಹತ್ತಿರ ಒಂದು ಮಧ್ಯಾಹ್ನ, ಜೋರು ಮಳೆ ಶುರುವಾಗುವ ಇನ್ನೆರಡೇ ಕ್ಷಣಗಳ ಮೊದಲು, ತಲೆಯಮೇಲೇ ಬಿದ್ದು ಬಿಡುವಂತಿರುವ ಭಾರವಾದ ಮುಕ್ಕಾಲು ಆಕಾಶ ತುಂಬಿದ ಮೋಡ, ನಿರ್ಜನ ರೈಲು ಕಂಬಿ, ನಿರ್ಜನ ರಸ್ತೆ, ಮೋಡಗಳ ನಡುವೆ ವಿಕಾರವಾಗಿ ಕಾಣುವ ತುಣುಕು ಸ್ವಚ್ಛ ನೀಲಿಯ ಆಕಾಶ, ಗಾಳಿಯೂ ಬೀಸದ ಸ್ತಬ್ಧ ಭಯ, ಚಡಪಡಿಕೆ, ಓಡಿ ತಟ್ಟನೆ ಬೇರೆ ಎಲ್ಲಾದರೂ ಸರಿ ಇರುವ ಆಸೆ. ಅವೆಲ್ಲದರ ಹಿಂದೆ ಮಗ ಎಲ್ಲಿ ಮಳೆಗೆ ಸಿಕ್ಕಿದನೋ ಎಂದು ಆತಂಕ ಪಡುವ, ಮನೆಯಲ್ಲಿ ಸುಮ್ಮನೆ ಅತ್ತ ಇತ್ತ ಬೆನ್ನ ಹಿಂದೆ ಕೈ ಕಟ್ಟಿ ಓಡಾಡುವ ಅಪ್ಪ, ಬೆದರಿ ಕಣ್ಣಲ್ಲಿ ನೀರು ತುಂಬಿ ಹೆದರಿ ಕುಳಿತ ಅಮ್ಮ ಇವರ ಚಿತ್ರಗಳೂ ನೆನಪಿಗೆ ಬರುತ್ತಿದ್ದವೇನೋ. ನನ್ನಿಂದಾಗಿ ಅವರಿಗೆ ಹೀಗೆಲ್ಲ ಭಯವೂ ಆತಂಕವೂ ಆಯಿತು. ನಾನು ಏನೋ ತಪ್ಪು ಮಾಡಿ ಬಿಟ್ಟೆ ಅನ್ನಿಸುತ್ತಿತ್ತು. ಈಗ ಅಪ್ಪ ಇಲ್ಲ. ಅಮ್ಮನಿಗೆ ನಾನು ಹಿಮಾಲಯದಲ್ಲಿ ಹೀಗೆ ನಡೆದಾಡಲು ಹೋಗುತ್ತೇನೆ ಅಂತ ಹೇಳಿಲ್ಲ. ಅದು ಮೈಸೂರು. ಇದು ಹಿಮಾಲಯ. ಆದರೂ ನಾನು ನಾನೇ ಅಲ್ಲವೇ. +ಉಳಿದಿದ್ದವರು ನಾವು ನಾಲ್ಕು ಜನ. ಶ್ರೀನಾಥ, ರಾಜು, ಚಂದ್ರ ಮತ್ತು ನಾನು. ಮೂರ್ತಿ ನಮಗಿಂತ ಸ್ವಲ್ಪ ಮುಂದೆ ಅಥವಾ ಹಿಂದೆ. ಉಳಿದ ಮೂವತ್ತದು ಜನ ಆಗಲೇ ಹೋಗಿಬಿಟ್ಟಿದ್ದರು. ನಾನೂ ಒಬ್ಬನೇ ಸ್ವಲ್ಪ ಬೇಗ ಬೇಗ ನಡೆದೆ. +ಕೆಂಪು – ಕರಿ ಮಣ್ಣಿನ ಹಾದಿ. ಇನ್ನೇನು ಬರಬಹುದಾದ ಮಳೆ. ಥಂಡಿ ಮಳೆಗತ್ತಲು. ಅಗೊ, ಅಲ್ಲೊಂದು ತಗಡಿನ ಚಾವಣಿ. ಇನ್ನೊಂದು ಮರದ ದಿಮ್ಮಿಗಳ ಗುಡಿಸಲು. ಬಲಗಡೆ ತಗ್ಗಿನಲ್ಲಿ ಸ್ವಲ್ಪ ದೊಡ್ಡ ದೊಡ್ಡ ಕೋಣೆಗಳ ಒಂದು ಕಟ್ಟಡ. ಎಡಗದೆ ಗುಡ್ಡದ ಮೇಲೆ ಒಂದು ಕಾಟೇಜು. ಅದಕ್ಕೆ ಒಂದು ಬೇಲಿ. ಚಿಕ್ಕ ಗೇಟು. ಆದರೆ ಇದೇನು. ನಮ್ಮ ಗುಂಪಿನ ಒಬ್ಬರೂ ಇಲ್ಲವಲ್ಲ. ಶ್ರೀನಾಥ, ರಾಜು, ಚಂದ್ರ ಹಿಂದೆ ಉಳಿದರು. ಕಾಣುತ್ತಿಲ್ಲ. ಮುಂದೆ ದಾರಿ ಕಾಡಿನೊಳಗೆ ದಟ್ಟವಾದ ಮರಗಳ ನಡುವೆ ಮರೆಯಾಗಿದೆ. ಯಾವ ಗುಡಿಸಲಿನಲ್ಲೂ ಯಾವ ಕಟ್ಟಡದಲ್ಲೂ ಜನರಿಲ್ಲ. ಅಲ್ಲ. ಎಷ್ಟೋ ವರ್ಷಗಳಿಂದ ನಿರ್ಮಾನುಷ ಅನ್ನುವ ಹಾಗಿದೆ. ಗೋಡೆಗಳ ಬಣ್ಣ ಕಳೆದಿದೆ. ಗಾರೆ ಉದುರಿದೆ. ಕೆಲವು ಇಟ್ಟಿಗೆಗಳು ಕಾಣುತ್ತಿವೆ. ಹಲ್ಲು ಕಿರಿಯುತ್ತಿವೆ. ಗುಡಿಸಲು ಬಾಗಿಲು ಹಾರು ಹೊಡೆದಿದೆ. ಕಾಟೇಜು ಯಾರೂ ತನ್ನೊಳಕ್ಕೆ ಬರದಹಾಗೆ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡಿದೆ. ಯಾರನ್ನಾದರೂ ಕೇಳಬೇಕೆಂದುಕೊಂಡೆ, ಯಾರೂ ಇಲ್ಲ. ಮುಂದೆ ಹೋಗಿರಬಹುದಾದ ಮೂರ್ತಿಯನ್ನು ಹಿಡಿಯದೇ ಹೋಗಿ? ಅಥವ ಹಿಂದೆ ನಡೆದು ಶ್ರೀನಾಥ ಅವರನ್ನು ಸೇರಲೇ? ಕೂಗು ಹಾಕಲೋ? ನಿರ್ಜನ, ನಿರ್ಮಾನುಷ. ನಿಶ್ಯಬ್ದ, ನಿಶ್ಚಲ. ನನ್ನ ಕನಸಿನಲ್ಲಿ ಆಗಾಗ ಕಾಣುವ ಹಳೆಯ ಮನೆಯ ಹಾಗೆ. ಕನಸಿನಲ್ಲಿ ಆವು ಓಡಬೇಕೆನಿಸಿದರೂ ಓಡಲು ಆಗುವುದಿಲ್ಲವಲ್ಲ, ಹಾಗೆ. ನಿಜದಲ್ಲೂ, ನಿಜದಲ್ಲೂ ಹಾಗೇ ಆಗುತ್ತಿದೆ. ಬೂಟಿನ ಕೆಳಗೆ ಸಣ್ಣ ಸಣ್ಣ ಉರುಟು ಕಲ್ಲುಗಳು ಇರುವುದು ಕಾಲಿಗೆ ತಿಳಿಯುತ್ತಿದೆ. ಬೆನ್ನಿನ ಮೇಲಿನ ಭಾರ ತಿಳಿಯುತ್ತಿದೆ. ಈ ಖಾಲಿ ಮನೆಗಳನ್ನು ನೋಡಬಾರದೆಂದರೂ ಕಣ್ಣು ಮುಚ್ಚಿಕೊಳ್ಳಲು ಆಗುತ್ತಿಲ್ಲ. ಎಚ್ಚರವಾಗಿರುವಾಗಲೇ ಕನಸಿನಲ್ಲಿ ಆಗುವಂಥ ಭಯ. ತಲೆಯ ಮೇಲೆ ಬಿದ್ದುಬಿಡುವಂತಿರುವ ಮೋಡಗಳು. ಮೈಗೆಲ್ಲ ಬೀಸುತ್ತಿರುವಂಥ ಗಾಳಿ. ಅರ್ಧ ನಿದ್ದೆಯಿಂದ ಉದ್ದೇಶಪೂರ್ವಕವಾಗಿ ಎದ್ದೇಳಬೇಕೆಂದು ಬಯಸುತ್ತಿರುವಾಗ ಇರುತ್ತದಲ್ಲ ಅಂಥ ಹಿಂಸೆ. ಸದ್ಯ. ಅಗೋ. ಎದುರುಗಡೆ ಕಾಡೊಳಗಿಂದ ಮೂರ್ತಿ ಬಂದ. ಅಗೊ. ಹಿಂದೆ ರಾಜು, ಶ್ರೀನಾಥರ ಮಾತು ಕೇಳಿಸಿತು. ಅಗೊ. ಎರಡು ಹನಿ ಮಳೆ ಬಿತ್ತು. ಅಸಹ್ಯ ನಿಶ್ಚಲತೆಗೆ ಕೊನೆ ಬಂತು. +ನಮ್ಮ ಕ್ಯಾಂಪಿನ ಸ್ಥಳವನ್ನು ಈ ವರ್ಷದಿಂದ ಬದಲಾಯಿಸಿದ್ದಾರಂತೆ. ಇನ್ನೂ ಮುಂದೆ ಹೋಗಬೇಕಂತೆ. ಬೆನ್ನ ಮೇಲಿನ ಬ್ಯಾಗು ಇಳಿಸಿ ರೇನ್ ಕೋಟು ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಬಂದ ಮಳೆ ಹೋಗಿಬಿಟ್ಟಿತು. ಮಾಟಿಕೊಚಾರ್ ಟೆಂಟುಗಳನ್ನು ತಲುಪಿದಾಗ ಚಳಿ ಜಾಸ್ತಿ ಆಗಿತ್ತು. ನನಗೆ ಕೊಟ್ಟ ನಾಲ್ಕು ಕಂಬಳಿಗಳನ್ನೂ ಹೊದ್ದು ಮಲಗಿಬಿಟ್ಟೆ. ನೆಲ ಕೊರೆಯುತ್ತಿತ್ತು. ಜೀನ್ಸ್ ದಾಟಿ ಸ್ವೆಟರು ದಾಟಿ ಜರ್ಕಿನ್ ದಾಟಿ ಅದರೊಳಗಿನ ಅರ್ಧ ಸ್ವೆಟರು ದಾಟಿ ಅಂಗಿ ದಾಟಿ ಬನಿಯನ್ ದಾಟಿ ಮೈ ಚರ್ಮ ದಾಟಿ ಮೂಳೆಗಳನ್ನು ಮುಟ್ಟಿ ಮೂಳೆಗಳಿಗೆಲ್ಲ ಯಾರೋ ಸುತ್ತಿಗೆ ತೆಗೆದುಕೊಂಡು ಮೊಳೆಗಳನ್ನು ಹೊಡೆಯುತ್ತಿದ್ದಾರೆ ಅನ್ನುವಂಥ ಚಳಿ. ಅಥವ ಆಯಾಸವೋ. ಕಣ್ಣು ಮುಚ್ಚಿದೆನೊ ನಿದ್ದೆ ಬಂದಿದ್ದಿತೋ – ಗಾಳಿ ಬಿರುಗಾಳಿ. ನಾನು ಮಲಗಿಲ್ಲ ಅಥವ ಏಳುವುದಿಲ್ಲ. ಇಲ್ಲಿ ಟೆಂಟು ಏನೂ ನನ್ನ ಕಾಪಾಡುವುದಿಲ್ಲ. ಈ ಗಾಳಿ ನಿಲ್ಲುವುದಿಲ್ಲವೋ ಟೆಂಟು ಹಾರಿ ಹೋಗುತ್ತದೋ ಹಗ್ಗಗಳು ಕಿತ್ತು ಹೋಗುತ್ತವೇನೋ. ಗೂಟಗಳು ಹಿಡಿದು ನಿಲ್ಲಿಸಲಾರವು. ಇಲ್ಲ. ನನ್ನ ಮೂಳೆಗೆ ಯಾರೂ ಸುತ್ತಿಗೆಯಿಂದ ಹೊಡೆಯುತ್ತಿಲ್ಲ. ಕಿತ್ತುಕೊಂಡು ಹಾರಿಹೋಗಲು ಬಯಸುವ ಟೆಂಟು, ಹಿಡಿದು ಇಟ್ಟುಕೊಳ್ಳಲು ಬಯಸುವ ಗೂಟ ಹಗ್ಗ. ಗಾಳಿ ಬೀಸಿದಂತೆಲ್ಲ ಪಟ ಪಟ ಪಟ ಶಬ್ದ. ಇಲ್ಲೇ ಒಳಗೆ ಮಲಗಿರಲೋ ಒಬ್ಬನೇ ಅಥವಾ ಹೊರಗೆ ಹೋಗಲೋ. +ಹೊರಗೆ ಬಂದರೆ ಥಳ ಥಳ ಥಳ ಸಂಜೆ ಬಿಸಿಲು. ನೀಲಿ ನೀಲಿ ಶುದ್ಧ ನೀಲಿ ಆಕಾಶ. ನಮ್ಮ ಕ್ಯಾಂಪಿನ ಸುತ್ತಲೂ ಇದ್ದ ಎತ್ತರವಾದ ದಟ್ಟ ಮರಗಳ ಎಲೆಗಳ ಮೇಲೆಲ್ಲ ಸವರಿಕೊಂಡು ಹೋಗುತ್ತಿರುವ ಬಿಳೀ ತೆಳು ಮೋಡಗಳ ಗುಂಪು. ಇಲ್ಲೊಂದು ಮೋಡದ ಮರಿ ಎಡಗಡೆ ಗುಡ್ಡ ಇಳಿದು ನಮ್ಮ ಟೆಂಟಿನ ಮೇಲೆ ಬರುತ್ತಿದೆ. ಇಗೋ ತಲೆಯ ಮೇಲೆ ತೆಳು ಬಿಳೀ ಮೋಡ ಚಾಪೆ ಸುರುಳಿ ಬಿಡಿಸಿದ ಹಾಗೆ ಹಾಸಿಕೊಳ್ಳುತ್ತ ಹೋಗುತ್ತಿದೆ. ಎದುರು ಕಣಿವೆಯಲ್ಲಿ ಬೇರೆ ಬೇರೆ ಆಕಾರಗಳ ಚೂರು ಚೂರು ಮೋಡಗಳು ಒಟ್ಟಾಗುತ್ತಿವೆ. ಕೆಲವು ಖಾಲಿ ಮೋಡಗಳು ಕೆಲವು ನೀರಿರುವ ಮೋಡಗಳು. ಸೂರ್ಯನ ಬಿಸಿಲಿಗೆ ಹೆಸರಿಸಲ್ಲದ ಬಣ್ಣಗಳು. ಸ್ವಲ್ಪ ಜೋರಾಗಿ ಹಾರಿದರೆ, ಕಣಿವೆ ಆಚೆ ತಲುಪಿಯೇ ಮುಟ್ಟಿಯೇ ಬಿಡಬಹುದು ಆ ಚೂಪು ಶಿಖರದ ಮೇಲಿನ ಹಿಮ. ಕಣ್ಣು ಕೋರೈಸುವಂತೆ ಇಳಿಬಿಸಿಲಿನ ಪ್ರತಿಫಲನ. +ಸಾರ್ ಸಾರ್ ಬೇಗ ಬನ್ನಿ ಸಾರ್ ಅಂತ ರಾಜು ಕೂಗದೆ ಇದ್ದಿದ್ದರೆ ಟೆಂಟಿನೊಳಗೇ ಇದ್ದುಬಿಡುತ್ತಿದ್ದೆ. ರಾಜು ಖುಷಿಯಾದ ಹಸುವಿನ ಕರು ಥರ ಇದ್ದರು. ಎಲ್ಲ ಜನ ಇಲ್ಲೇ ಇದ್ದಾರೆ. ಆಹಾ ಓಹೋ ಅಬ್ಬಾ ಛೇಛೇ ವಾ ಓ ಅಂತ ಉದ್ಗಾರಗಳನ್ನು ಬಿಟ್ಟರೆ ಬೇರೆ ಮಾತಿಲ್ಲ. ಸುಮ್ಮನೆ ಅತ್ತ ಇತ್ತ ಎಲ್ಲರೂ ಓಡಾಡುತ್ತಿದ್ದೇವೆ. ಅಲ್ಲಿ ನಿಂತು ಇಲ್ಲಿ ನಿಂತು ಎಲ್ಲೆಲ್ಲಿ ನಿಂತರೆ ಚೆನ್ನಾಗಿ ಕಾಣಿಸುತ್ತದೆನ್ನಿಸುತ್ತದೋ ಅದು ಯಾವುದನ್ನೂ ಬಿಡದೆ ಎಲ್ಲಕಡೆಯಿಂದಲೂ ಎಲ್ಲವನ್ನೂ ನೋಡಲೇ ಬೇಕೆಂಬ ಹಪಾ ಹಂಬಲ. ಎಲ್ಲಿ ಹೋದ ಶ್ರೀನಾಥ? ಎಲ್ಲಿ ಸ್ಟ್ಯಾಂಡು ಎಲ್ಲಿ ಕ್ಯಾಮರಾ ಅಂತ ಟೆಂಟಿನ ಒಳಕ್ಕೂ ಹೊರಕ್ಕೂ ಓಡಾಡುತ್ತಿದ್ದಾನೆ. ಕಾಣುತ್ತಿರುವುದೆಲ್ಲವನ್ನೂ ಶಾಶ್ವತವಾಗಿ ಫೋಟೋ ಆಗಿಸುವ ಆಸೆ ಅವನಿಗೆ. ಅಲ್ಲಿ ಆ ಎರಡು ಮರಗಳ ನಡುವಿನಿಂದ ಫೋಟೋ ತೆಗೆದರೆ ಚೆನ್ನ. ಇಲ್ಲ ಆ ಗುಡ್ಡ ಹತ್ತಬೇಕು ಅಂತ ಮೂರ್ತಿ. ಅಯ್ಯೋ ಸೂರ್ಯ ಹೋಗಿಬಿಡುತ್ತಾನೆ. ಆ ಲೆನ್ಸು. ಅಲ್ಲ. ಈ ಫಿಲ್ಟರ್. ಎಲ್ಲಿ ಆ ಸ್ಟ್ಯಾಂಡು. ಯಾವಾಗಲೂ ಸ್ಪೀಡು ಫೋಕಸ್ಸು ಅಪೆರ್ಚರು ಕಾಂಪೋಸಿಷನ್ನು ಅಂತೆಲ್ಲ ಕೂಡಿ ಕಳೆದು ಭಾಗಿಸಿ ಅತ್ಯಂತ ಕರಾರುವಾಕ್ಕಾಗಿ ಲೆಕ್ಕಾಚಾರದ ಅಂದರೆ ಸುಂದರವಾದ ಫೋಟೋ ತೆಗೆಯುವ ಶ್ರೀನಾಥ ತನ್ನ ಎಲ್ಲ ಲೆಕ್ಕಾಚಾರ ಮರೆತು ಸಿಕ್ಕಷ್ಟನ್ನು ಸಿಕ್ಕಹಾಗೆ ಕ್ಯಾಮರಾದಲ್ಲಿ ಹಿಡಿಯುವ ಆತುರದಲ್ಲಿ ಗುಡ್ಡ ಏರಿ ಓಟ. ಎಷ್ಟೊಂದು ಉದ್ವೇಗ. ಹಿಂದೆಯೇ ಮೂರ್ತಿ. ಇಬ್ಬರೂ ಮಾಯ ಆಗಿಬಿಟ್ಟರು. ಒಂದು ಸಿಗರೇಟು ಹಚ್ಚುವ ಮೊದಲೇ, ಶ್ರೀನಾಥ ಮತ್ತು ಮೂರ್ತಿಗೆ ತೃಪ್ತಿಯಾಗುವ ಮೊದಲೇ, ನಮ್ಮೆಲ್ಲರ ಆಹಾ ಓಹೋಗಳು ಗಾಳಿಯಲ್ಲಿ ಕರಗುವ ಮೊದಲೇ, ಸೂರ್ಯ ಮುಳುಗಿಬಿಟ್ಟಿದ. ಇದೆಲ್ಲ ಎರಡು ನಿಮಿಷವೂ ಇರಲಿಲ್ಲ. ಶ್ರೀನಾಥನೂ ಮೂರ್ತಿಯೂ ಬೇಜಾರಿನಿಂದ ಗುಡ್ದ ಇಳಿದು ಬರುತ್ತಿದ್ದರು. ಅನಂತ ನನ್ನದರಂಥದೇ ಒಂದು ತಗಡು ಕ್ಯಾಮರಾದಿಂದ ನಿಂತಲ್ಲೆ ಒಂದು ಫೋಟೋ ತೆಗೆದಿದ್ದ. ಸುಂದರ ದೃಶ್ಯ ಅವರವರ ಮನಸ್ಸಿನೊಳಗೆ ಅವರವರದೇ ರೀತುಯಲ್ಲಿ ಚಿತ್ರಗಳಾಗಿ ಮೂಡಿಕೊಳ್ಳುವುದರೊಳಗೇ ಟೀ ತಯಾರಾಗಿರುವ ಸುದ್ದಿ ತಿಳಿಯಿತು. ಹೋದ ಸೂರ್ಯ ಹೋಯಿತು. ಸೌಂದರ್ಯ. ಬಿಸಿ ಬಿಸಿ ಚಹಾದ ಆಸೆ ನಮ್ಮೆಲ್ಲರನ್ನೂ ತುಂಬಿಕೊಂಡುಬಿಟ್ಟಿತು. ಎರಡು ನಿಮಿಷ ಮರೆತಿದ್ದ ಚಳಿ ಇನ್ನೇನು ಸಿಗಲಿರುವ ಟೀಯ ನಿರೀಕ್ಷೆಯಲ್ಲಿ ಮೊದಲಿಗಿಂತ ಹೆಚ್ಚಾದಹಾಗೆ ಇತ್ತು. +ಶ್ರೀನಾಥಗೆ ಇವತ್ತೂ ಬೇಜಾರಾಗಿದೆ – ಮಾಟಿಕಚೋರ್ ನ ಒಳ್ಳೆಯ ಫೋಟೋ ತೆಗೆಯಲಾಗಲಿಲ್ಲ ಅಂತ. ಅನಂತ ತೆಗೆದ ಫೋಟೋ ಒಂದೇ ಈಗ ಸಾಕ್ಷಿ. ಮರ ಮೋಡ ಬೆಟ್ಟ ಎಲ್ಲ ಅದರಲ್ಲಿ ಇವೆ ಅನ್ನಿಸುತ್ತೆ. ಆದರೆ ನೋಡಿದರೆ ಪಿಚ್ಚೆನ್ನಿಸುತ್ತೆ. +ಬರವಣಿಗೆಯ ನಾಲ್ಕನೆಯ ದಿನ +ಮಾಟಿಕಚೋರ್ ಬಗ್ಗೆಯೇ ಇನ್ನೂ ಬರೆಯಬೇಕು ಅನ್ನಿಸುತ್ತದೆ. ಅಲ್ಲಿನ ಕ್ಯಾಂಪ್ ಲೀಡರ್ ಪುರುಷೋತ್ತಮ ನಮ್ಮನ್ನೆಲ್ಲ ಕುಲು ಕಣಿವೆಯ ದೀಪಗಳನ್ನು ನೋಡಲು ಕರೆದುಕೊಂಡು ಹೋದ. ಮಬ್ಬು ಬೆಳಕು ಮಂಕು ಬೆಳಕಾಗಿ ಪೂರ್ತಿ ಕತ್ತಲಾಗುವ ಹೊತ್ತಿಗೆ ಎರಡು ಕಿಲೋ ಮೀಟರ್ ನಡೆದು ಕಮರಿಯ ಹತ್ತಿರ ಹೋದೆವು. ಏಳೆಂಟು ಸಾವಿರ ಅಡಿ ಆಳದಲ್ಲಿ ಬಿಯಾಸ್ ನದಿ. ಕತ್ತಲಲ್ಲಿ, ಆಳದಲ್ಲಿ ಕುಲು ಊರಿನ ದೀಪಗಳು. ಬೆಳಕಿನ ಚುಕ್ಕೆಗಳು. ನಮ್ಮ ತಂಡದಲ್ಲಿದ್ದ ಯುವಕರು ಚಪ್ಪಳೆ ತಟ್ಟುತ್ತ ಗಟ್ಟಿಯಾಗಿ ಮಾತಾಡುತ್ತ ಗಲಾಟೆ ಮಾಡದೆ ಇದ್ದಿದ್ದರೆ, ಕೊಹಲಿ ಪಾಸ್‌ಗೆ ಹೊರಟ ತಂಡ ಹಾಡುತ್ತ ಕುಣಿಯುತ್ತ ಇರದಿದ್ದರೆ-ಅಲ್ಲ ಹೀಗೆ ಏಕೆ ಯುವಕರನ್ನು ಇತರರನ್ನು ಆಪಾದಿಸುವ ಹಾಗೆ ನಾನು ಬರೆಯಬೇಕು? ಒಬ್ಬೊಬ್ಬರ ಸಂತೋಷದ ಕಲ್ಪನೆಯೂ ಬೇರೆ ಬೇರೆ. ಸಂತೋಷ ಪಡುವ ರೀತಿಯೂ ಬೇರೆ. ಮೌನವು ಪ್ರಬುದ್ಧತೆಯ ಲಕ್ಷಣವೋ? ನಿಜವಾಗಲೂ? ಅಥವ ನನಗೆ ಹಾಗೆ ಕುಣಿದು ಕುಪ್ಪಳಿಸಲಾಗದ್ದಕ್ಕೆ ಹೀಗೆಲ್ಲ ಯೋಚನೆಯೋ? +ನೆಲ ಕಾಣದ ಆಕಾಶ ಕಾಣದ ಖಾಲಿಯೊಳಗೆ ಥಳ ಥಳ ದೀಪಗಳು. ಕತ್ತಲಲ್ಲಿ ಅರಳಿದ ಬೆಳಕಿನ ಹೂಗಳು. ಶ್ರೀನಾಥ ಯಾವ ಲೆನ್ಸು ಬಳಸಿದನೋ ಯಾವ ಯಾವ ಲೆಕ್ಕಾಚಾರ ಹಾಕಿದನೋ ಹೂದೀಪಗಳ ಅದ್ಭುತ ಫೋಟೋ ಬಂದಿದೆ. ಆ ಸ್ಲೈಡನ್ನು ತೆರೆಯ ಮೇಲೆ ನೋಡಿದರೆ-ಸದ್ಯ ಫೋಟೋದಲ್ಲಿ ಗಲಾಟೆ ಕೇಳುವುದಿಲ್ಲ-ಸುಂದರವಾಗಿದೆ. ಆದರೆ ನೆನಪಿನಲ್ಲಿ ಮಾತ್ರ ಸುಂದರ ದೃಶ್ಯದೊಡನೆಯೇ ಗಲಾಟೆಯ ಕಸಿವಿಸಿ ಕೂಡ ಮನಸ್ಸಿಗೆ ಬರುತ್ತಿದೆ. ಬಹಳ ಹೊತ್ತು ಅಲ್ಲಿರಲಿಲ್ಲ. +ನಮ್ಮ ಕಾಲಿನ ಹೆಜ್ಜೆ ಇಡುವಷ್ಟು ಜಾಗಕ್ಕೆ ಮಾತ್ರ ನಮ್ಮ ಟಾರ್ಚಿನ ಬೆಳಕು ಬಿಟ್ಟುಕೊಳ್ಳುತ್ತ ಒಬ್ಬರ ಹಿಂದೆ ಒಬ್ಬರು ಸಾಲಾಗಿ ಹಿಂದಿರುಗಿದೆವು. ಕಗ್ಗತ್ತಲ ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಮರದ ತುಂಡು ಆಯ್ದು ಹೊತ್ತು ನಡೆದೆವು. ಚಳಿ ತುಂಬ ಇದೆ. ಕರಡಿಗಳು ಇವೆಯಂತೆ. ಬೆಂಕಿ ಹಾಕಿಕೊಳ್ಳಬೇಕು. ಬಹುಶಃ ಎಲ್ಲರಿಗೂ ಆಯಾಸವಾಗಿತ್ತು. ಕತ್ತಲ ಕಾಡು ತುಂಬ ಮಾತು ಇರಲಿಲ್ಲ. ಸ್ವಲ್ಪ ಹೊತ್ತು. ಯಾರೋ ಜೋರಾಗಿ ನಕ್ಕರು. ಯಾರೋ ಮಾತಾಡಿದರು. ಮತ್ತೆ ಮೌನ. ಸ್ವಲ್ಪ ಹೊತ್ತು. ಹಿಂದಿ, ಮರಾಠಿ, ಕನ್ನಡ, ಇಂಗ್ಲೀಶ್ ಮಾತು ನಿಶ್ಯಬ್ದ. +ಬರವಣಿಗೆಯ ಐದನೆಯ ದಿನ +ಧಗಧಗನೆ ಬೆಂಕಿ ಉರಿಯುತ್ತಿತ್ತು. ನವೆಲ್ಲ ಬೆಂಕಿಯ ಸುತ್ತಲೂ ಕೂತಿದ್ದೆವು. ಬಿಸಿ ಬೋರ್ನ್‌ವಿಟಾ ಕುಡಿದೆವು. ಬೆಂಕಿ ಉರಿದಂತೆಲ್ಲಾ ಬದಲಾಗುವ ಬೆಳಕಿನಲ್ಲಿ ಮತ್ತು ಶಾಖದಲ್ಲಿ ನಮ್ಮೆಲ್ಲರ ಬಿಸಿಯೇರುವ ಹೊಳೆಯುವ ಮುಖಗಳು ನಮ್ಮ ನಮ್ಮ ಪರಿಚಿತ ಮುಖಗಳಂತೆಯೇ ಕಾಣುತ್ತಿರಲಿಲ್ಲ. ಗಂಟಲಲ್ಲಿ ಸುಡುವ ಬೋರ್ನ್‌ವಿಟಾ, ಕಿವಿ ಕೆನ್ನೆಯೆಲ್ಲ ಮುಚ್ಚಿದ ಟೋಪಿಗಳು. ನಮ್ಮೊಳಗಿನ ಮಾತುಗಳೂ ಬೆಚ್ಚಗಾಗಿ ಹಾಡಾಗಿ ನಗುವಾಗಿ ನಗೆಹನಿಯಾಗಿ ಕುಣಿತವಾಗಿ ಹೊರಬರಲು ತಯಾರಾಗುತ್ತಿದ್ದವು. ಬೆಂಕಿಯ ಬೆಳಕು ಹರಡಿರುವಷ್ಟು ಜಾಗ ಬಿಟ್ಟರೆ ಉಳಿದೆಲ್ಲ ಕಗ್ಗತ್ತಲು. ಇದು ಯಾವ ಊರು ಇದು ಯಾವ ಜಾಗ ಇದು ಯಾವ ನಾವು? ಇದನ್ನು ಮಾಟಿಕಚೋರ್ ಅಂತಲೇ ಯಾಕೆ ಕರೆಯಬೇಕು? ಈ ಬೆಂಕಿಯೂ ಬಿಸಿಯೂ ಸುತ್ತಲೂ ಕುಳಿತ ಮನುಷ್ಯರ ಮುಖಗಳೂ ಬೆಳಕಿನ ಮತ್ತು ಶಾಖದ ವರ್ತುಲ ದಲ್ಲಿ ನಮ್ಮನ್ನು ಎತ್ತಿ ಹಿಡಿದಿರುವ ನೆಲವೂ-ಇವು ಮಾತ್ರ ನಿಜ. ಸುತ್ತಲು ಕವಿದಿರುವ ಕತ್ತಲು ಮಾತ್ರ ನಿಜ. ಅದು ಕತ್ತಲು ಮಾತ್ರ. ನಮ್ಮೊಳಗಿರುವ ಮನುಷ್ಯ ಮನಸ್ಸು ಮಾತ್ರ ನಿಜ. ಅದು ಮನುಷ್ಯ ಮನಸ್ಸು ಮಾತ್ರ. +ಉದಾತ್ತ ಸ್ಥಿತಿಯಲ್ಲಿ ಎಷ್ಟು ಹೊತ್ತು ಇರಲು ಸಾಧ್ಯ. ಚಾವ್ಲಾ, ಸ್ವಲ್ಪ ಉಬ್ಬು ಹಲ್ಲಿನ, ಗುಂಡು ಮುಖದ, ದಪ್ಪ ಹೊಟ್ಟೆಯ, ಕುಳ್ಳು ದೇಹದ ಚಾವ್ಲಾ, ‘ನನ್ನ ಸ್ವಂತ ರಚಿತ ಕವನಗಳನ್ನು ಓದುತ್ತೇನೆ’ ಅಂತ ಘೋಷಿಸಿ ಅತೀ ಕ್ಷುದ್ರ ಪದ್ಯಗಲನ್ನು ಓದಿದ. ಹಾಳಾದ ನನ್ನ ವಿಮರ್ಶಕ ಬುದ್ಧಿ ಕವನವನ್ನು ವಿಮರ್ಶಿಸಿತೇ ಹೊರತು ಆ ಜಾಗದಲ್ಲಿ ಆ ಬೆಂಕಿ ಬೆಳಕಿನಲ್ಲಿ ಯಾರೋ ಮನುಷ್ಯ ಏನೋ ಹೇಳಲು ಬಯಸಿದ, ಅದಕ್ಕೆ ಅವನ ಕವನ ಬರೀ ಒಂದು ನೆಪ, ಅವನ ಬಯಕೆ ಮಾತ್ರ ನಿಜ ಅಂತ ಅರ್ಥ ಮಾಡಿಕೊಳ್ಳಲಿಲ್ಲ. ಇಂದೂರಿನ ಗುಪ್ತಾಜೀ ಕುಣಿದ. ಗಂಡಸಿನ ದೃಡತೆಯೂ ಇಲ್ಲ ಹೆಣ್ಣಿನ ಲಾಸ್ಯವೂ ಇಲ್ಲ. ಸಿನಿಮಾ ಡ್ಯಾನ್ಸಿನ ಕೆಟ್ಟ ಅನುಕರಣೆ. ಅದೇ ಇಂದೂರಿನ ಮೂನೂ, ಮೀನೂತಾಯಿ, ಆಶಾ ಬೋಂಸ್ಲೆಯ ಹಾಡನ್ನು ಸಾಧ್ಯವಾದಷ್ಟು ಅವಳದೇ ಧ್ವನಿಯಲ್ಲಿ ಹಾಡಿದಳು. ಅನುಕರಣೆಯ ಹಿಂದೀ ಸಿನಿಮಾ ಹಾಡು. ಅವಕ್ಕೆಲ್ಲ ಜನರ ಚಪ್ಪಾಲೆ, ಮೆಚ್ಚುಗೆ, ಈ ನರೋನಾ, ‘ವಹವ್ವಾ’ ಅಂತ ಮೆಚ್ಚಿದರೆ ಮೆಚ್ಚಿಕೊಳ್ಳಲಿ. ಅವನು ಸ್ವಲ್ಪ ಎಳಸು ಎಂದು ನೋಡಿದರೇ ತಿಳಿಯುತ್ತದೆ. ಆದರೆ ರಾಜೂನೂ ತಿಮ್ಮೇಗೌಡರೂ ಇಂಥ ಪದ್ಯ ಇಂಥ ಹಾಡು ಇಂಥ ಹುಣಿತ ಸುಖಿಸುತ್ತಿದ್ದಾರಲ್ಲ! ಆದರೆ ಈಗ ತಿಳಿಯುತ್ತಿದೆ. ಹೊತ್ತ ಭಾರ ನಡೆದ ಆಯಾಸ, ಚಳಿ, ನೋಡಿದ ಪ್ರತಿ ನಿಮಿಷ ವಿನೂತನ ದೃಶ್ಯಗಳು, ಸದಾ ಎಚ್ಚರವಾಗಿದ್ದ ಕಾಲು ಕಣ್ಣು-ನಮ್ಮೆಲ್ಲರ ಇಡೀ ಮೈ ಮನಸ್ಸು ಕಣ್ಣು ಬುದ್ಧಿ ಎಲ್ಲವನ್ನೂ ದಿನವಿಡೀ ಸುಮ್ಮನೆ ನೋಡುವುದಕ್ಕೆ‌ಏ ತೊಡಗಿಸಿಕೊಂಡಿದ್ದೇವಲ್ಲ ಎಲ್ಲದರ ಬಿಗಿ ಕಳೆಯುತ್ತ ರಿಲಾಕ್ಸ್ ಆಗುವಾಗ ಹಾಡು ಕುಣಿತ ಮಾತು ನಗು ಇವೆಲ್ಲ ಅನಿವಾರ್ಯವಾಗಿ ಬೇಕಾಗಿತ್ತು ಅಂತ. ಕವನ ದೈಹಿಕವಾಗಿಯೂ ಅನಿವಾರ್ಯ. ಹಾಡಲಾರದ ಶರ್ಮ, ಪಂಜಾಬಿನವನು, ನಗೆಹನಿ ಹೇಳಿದ. ನಾವೆಲ್ಲ ನಗಬೇಕಾಯಿತು. ನಗೆಹನಿ ಕೇಳಿದಾಗ ನಗುವುದು ಸಭ್ಯತೆಯ ಒಂದು ಲಕ್ಷಣ. ಆದರೂ ಎಲ್ಲೋ ಕೊರತೆ ಅನ್ನಿಸುತ್ತಿತ್ತು. ನಮ್ಮ ಮನಸ್ಸು ಹೃದಯ ತುಂಬಿ ಪಡೆವ ಮತ್ತು ಕೊಡುವ ರಂಜನೆಗೂ ಹಾಗೆ ರಂಜನೆ ಕೊಡುವುದು ಸಾಧ್ಯವಾಗಬಹುದು ಎಂಬ ಅರಿವೇ ಇಲ್ಲದೆ ಸುಮ್ಮನೆ ಸೆಕೆಂಡ್ ಹ್ಯಾಂಡ್ ರಂಜನೆ ಕೊಡುವುದಕ್ಕೂ ಸಾಧ್ಯವೇ ಇಲ್ಲವೇ? ಸಂತೋಷ ಕೂಟಗಳಲ್ಲಿ ಟ್ರೆಕಿಂಗ್‌ಗಳಲ್ಲಿ ಇಂಥ ಕೊರತೆ ಕಾಣುತ್ತದೆ. ಹೇಳಬೇಕಲ್ಲ ಅಂತ ಹೇಳಿದ್ದು. ಮೆಚ್ಚಿಸಬೇಕು ಅಂತ ಹಾಡಿದ್ದು. ಮೆಚ್ಚುವುದು ಸಭ್ಯತೆಯ ಲಕ್ಷಣ ಅಂತ ತಿಳಿದು ಮೆಚ್ಚಿದ್ದು ಎಲ್ಲ ಬರೀ ಸುಳ್ಳು ಅನ್ನಿಸುತ್ತದೆ. +ಅದು ಈಗಲೂ ನನ್ನ ಕಿವಿಗೆ ಕೇಳಿಸುವಂತೆ ಇದೆ. ಚಂದ್ರಾ ಒಂದು ಹಾಡು ಹೇಳಿದಳು. ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಅನ್ನುವ ಹಾಡು. ಚಂದ್ರಾ ಯಾವತ್ತೂ ಅಷ್ಟು ಚೆನ್ನಾಗಿ ಹಾಡಿರಲಿಲ್ಲ. ಅವತ್ತು ಸುಮ್ಮನೇ ಹೇಳಿದಳು. ಐ ಕುಡ್ ಫೀಲ್ ದಟ್ ಎವೆರಿ ಒನ್ ವಾಸ್ ರಪ್ಟ್. ಎಲ್ಲರೂ ಮೌನವಾಗಿದ್ದರು. ಅದು ಸಭ್ಯತೆಯ ಮೌನವಲ್ಲ. ಅದಕ್ಕೇ ಬೆಂಕಿ ಉರಿಯುವ ಶಬ್ದ ಕೂಡ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನಿಶ್ಚಲತೆ ಇತ್ತು. ಅದಕ್ಕೇ ನನಗೆ ತಲೆ ಎತ್ತಿ ಬೆಂಕಿಯ ಬೆಳಕಲ್ಲಿ ಯಾರ ಮುಖವನ್ನೂ ನೋಡಲು ಆಗಲಿಲ್ಲ. ಎಲ್ಲರೂ ಹಾಡನ್ನು ನಿಜವಾಗಿ ಕೇಳುತ್ತಿದ್ದರು. ಹಿಮಾಲಯದ ಘನ ಮೌನದಲ್ಲಿ ಕನ್ನಡ ಹಾಡು ಕನ್ನಡ ಹಾಡಾಗಿರಲಿಲ್ಲ. ಬರೀ ಹಾಡಾಗಿತ್ತು. ಸುಮ್ಮನೇ ಹಾಡಿದಳು. ಹಾಡು ಮೌನದಲ್ಲಿ ತನಗೆ ತಾನೇ ಪ್ರತಿಧ್ವನಿಯಾಗುತ್ತಿತ್ತು. ಅದನ್ನು ಚೆನ್ನಾಗಿದೆ ಎಂದು ಯಾರೂ ಹೇಳಬೇಕಾಗಿರಲಿಲ್ಲ. ಇತ್ತು. ನಮ್ಮನ್ನು ಪೂರ್ತಿ ತೊಡಗಿಸಿಕೊಂಡು ಹಾಡಿದರೆ, ಕೇಳಿದರೆ, ಹೇಗಿರುತ್ತದೆ ಅಂತ ತಿಳಿಯಿತು. ಆದರೆ ಹಾಡು ಹಾಡಲಾಗದ ನಾನು ಸುಮ್ಮನೆ ಕಲ್ಪಿಸಿಕೊಳ್ಳಬೇಕಷ್ಟೆ- ಹಾಡುತ್ತಿರುವಾಗ ಹಾಡುವ ಮನಸ್ಸು ಹೇಗಿರುತ್ತದೆ ಅಂತ. ಇನ್ನೂ ಒಂದು ಗೊತ್ತಾಯಿತು. ಹಾಡಿಗೆ ಭಾಷೆ ಬೇಡ. ಭಾಷೆಯ ಅರ್ಥ ಕೂಡ ಬೇಡ. ಅರ್ಥ ಆಗುತ್ತೆ-ಹಸಿವು ‘ಆಗು’ ವ ಹಾಗೆ, ಸಂತೋಷ ‘ಆಗು’ ವ ಹಾಗೆ. ಅವತ್ತು ಅಲ್ಲಿದ್ದ ಎಲ್ಲರಿಗೂ ಹಾಡು ಅರ್ಥ ಆಯಿತು. ಯಾಕೆಂದರೆ ಆಗ ನಾನು ಹಾಡು ಕೇಳುತ್ತ ಕನ್ನಡ ಗೊತ್ತಿರುವ ಚಂದ್ರಳ ಗಂಡ ಆಗಿರಲಿಲ್ಲ. ಅಲ್ಲಿದ್ದ ಸುಮ್ಮನೆ ಎಲ್ಲ ಕೇಳುವವರ ಹಾಗೆ ಕೇಳುವವನಷ್ಟೇ ಆಗಿದ್ದೆ. ನನಗೆ ಆದದ್ದು, ಎಲ್ಲರ ಜೊತೆ ಕೇಳುತ್ತ ಅವರಿಗೆಲ್ಲ ಏನು ಆಯಿತೋ ಅದೇ. +ಮತ್ತೆ ಅದೇ. ಮನುಷ್ಯನ ಮನಸ್ಸು ಒಂದೇ ಎತ್ತರದಲ್ಲಿ ಬಹಳ ಹೊತ್ತು ಇರುವುದಿಲ್ಲ. ನಾನು ಹಾಡನ್ನು ಇಂಗ್ಲೀಷಿನಲ್ಲಿ ಅವರಿಗೆಲ್ಲ ವಿವರಿಸಿದೆ. ಭಾಷೆಯ ಜಂಬ. ಶ್ರೀನಾಥನಿಗೆ ಖುಷಿ ಆಗಿತ್ತು. ‘ಆ ಮೀನೂ ತಾನೇ ಆಶಾ ಅಂದುಕೊಂಡಿದ್ದಾಳೆ ಮೇಡಂ. ನೀವು ಹಾಡಿ ಅವಳ ಜಂಬ ಇಳಿಯಿತು’ ಅಂದು ಖುಷಿಪಟ್ಟ. ಅಥವ ಅದು ಖುಷಿಯ ಕೆಳಗಿನ ಹಂತದ ವಿವರಣೆಯೊ, ನಮ್ಮ ಶುದ್ಧ ಅನುಭವವನ್ನು ನಮಗೆ ಪರಿಚಿತವಾದ ಹೆಸರಿರುವ ಭಾವನೆಗಳ ಸರಳ ರೂಪಕ್ಕೆ ಇಳಿಸುವ ಎಷ್ಟೊಂದು ಆತುರ. +ಹಿಮಾಲಯದ ಕಗ್ಗತ್ತಲಿನ ಬೆಂಕಿ, ಬೆಳಕು, ಶಾಖ, ಚಂದ್ರ ಹಾಡಿದ ಹಾಡು, ಹಾಡಿನ ಪದಗಳ ನಡುವೆ ಇದ್ದ ಮೌನ, ಅವನ್ನೆಲ್ಲ ಹಂಚಿಕೊಂಡ ನಲವತ್ತು ಮನಸ್ಸುಗಳು ಇನ್ನೂ ನನ್ನೊಳಗೆ ಇವೆಯಲ್ಲ. ಇದೇನು ಕಡಿಮೆಯೆ? +ಬರವಣಿಗೆಯ ಆರನೆಯ ದಿನ +ಯಾಕೋ ಹೀಗೆ ಬರೆಯುವುದು ಸರಿಹೋಗುತ್ತಿಲ್ಲ. ಈಗ ಇದುವರೆಗೆ ಬರೆದದ್ದನ್ನು ಓದಿದರೆ ಅನಗತ್ಯವಾಗಿ ತುಂಬ ಸುಂದರವಾಗಿ ಬರೆದೆನೇನೋ ಅನ್ನಿಸುತ್ತಿದೆ. ರಾಮು ಹೇಳಿದ್ದ-ನಿನ್ನ ಗದ್ಯ ತುಂಬ ಚೆನ್ನಾಗಿದೆ. ನೀನು ಬರೆಯಲ್ಲ ಅಷ್ಟೆ. ನೀನು ನಿನ್ನನ್ನೇ ಅನುಕರಿಸುವ ಅಪಾಯ ತಪ್ಪಿಸಿಕೋ-ಅಂತ. ತಿಮ್ಮೇಗೌಡರು ನಾನು ಬರೆದದ್ದನ್ನು ಓದಿದಮೇಲೆ ‘ತುಂಬ ಪೊಯೆಟಿಕ್ ಆಗಿದೆ’ ಅಂದಾಗ ರಾಮು ಹೇಳಿದ ಮಾತು ಜ್ಞಾಪಕ ಬಂತು. ಒಂದು ಸುಂದರವಾದ ವಾಕ್ಯ ರಚಿಸಿದ ಮೇಲೆ ಅದರ ಬಗ್ಗೆ ಮೋಹ ಹುಟ್ಟುತ್ತಲ್ಲ ಅದನ್ನು ತಪ್ಪಿಸಿಕೊಳ್ಳಬೇಕು. ಆಗುತ್ತಾದೋ ಇಲ್ಲವೋ ಗೊತ್ತಿಲ್ಲ. ಅಥವ ಹೀಗೆಲ್ಲ ಬರೆಯುತ್ತಿರುವುದೂ ಆತ್ಮ ವ್ಯಾಮೋಹದ ಒಂದು ಪರಿಯೋ? ಈಗ ಎಡಗೈಯಲ್ಲಿ ಒಂದು ಸೇಬು ಹಿಡಿದು ಕಚ್ಚಿ ತಿನ್ನುತ್ತಾ ಬರೆಯುತ್ತಿದ್ದೇನೆ. ಬ್ಯಾಂಕಿಗೆ ಹೋಗಬೇಕು. ಟಿ.ಪಿ ಅಶೋಕನಿಗೆ ಮತ್ತು ಅಮ್ಮನಿಗೆ ಕಾಗದ ಬರೆಯಬೇಕು. ‘ಪ್ರಜ್ಞಾಪ್ರವಾಹ ತಂತ್ರ’ದ ಬಗ್ಗೆ ಗಿರಡ್ಡಿ ಕಾಗದ ಬರೆಯುತ್ತಲೇ ಇದ್ದಾರೆ. ಮಾಡಲೇಬೇಕಾದ ಬೇರೆ ಕೆಲಸಗಳೂ ಇವೆ. ಆದರೆ ಇತ್ತೀಚಿಗೆ ಇದನ್ನೇ ಬರೆಯಬೇಕು ಅನ್ನಿಸುತ್ತಿದೆ. ಬೇಗ ಸಾಧ್ಯವಾದಷ್ಟು ಬೇಗ ಮುಗಿಸಬೇಕು. +ಬಿಂಗ್ಟಾ ಟಾಪಿನಲ್ಲಿ ಒಬ್ಬ ಮನುಷ್ಯ ಒಣಗಿದ ಪುಳ್ಳೆಗಳನ್ನು ಗುಪ್ಪೆ ಮಾಡಿ ಬೆಂಕಿ ಹಾಕಿ ಟೀ ಕಾಯಿಸುತ್ತಾ ಕುಳಿತಿದ್ದ. ಅಂದು ಬೆಳಗ್ಗೆ ಮಾಟಿಕಾಚೋರ್‌ನ ಕ್ಯಾಂಪ್ ಲೀಡರ್ ಪುರುಷೋತ್ತಮ ಜೋರು ಮಾಡಿ, ಹೆದರಿಸಿ, ಆತುರ ಮಾಡಿ ನಮ್ಮನ್ನೆಲ್ಲ ಬೇಗ ಹೊರಡಿಸಿದ್ದ. ಇವತ್ತು ಇಪ್ಪತ್ತೈದು ಕಿಲೋಮೀಟರ್ ನಡೆಯುವುದಿದೆ. ಬೇಗ ನಡೆಯದಿದ್ದರೆ ಸಂಜೆ ಆರು ಗಂಟೆಯಾದರೂ ನೀವು ಜಾರಿ ಹಳ್ಳಿ ತಲುಪಲು ಆಗುವುದಿಲ್ಲ ಅಂದ. ಅದು ನಮಗೇ ಹೇಳಿದ್ದು. ನಲವತ್ತು ಜನ ಗುಂಪಿನಲ್ಲಿ ಕೊನೆಯ ಮೊವರು ಯಾವಾಗಲೂ ನಾವೇ – ಶ್ರೀನಾಥ, ಚಂದ್ರ ಮತ್ತು ನಾನು. ಕೆಲವು ಬಾರಿ ನಮ್ಮ ಜೊತೆಗೆ ಅನಂತ ಅಥವ ರಾಜು ಅಥವ ತಿಮ್ಮೇಗೌಡ ಅಥವ ಶ್ಯಾಮಲಾ. +ಸೂರ್ಯ ಎದ್ದು ಮೈ ಮುರಿದು ಆಕಳಿಸುತ್ತ ಕಾಫಿ ಕುಡಿಯುವ ಹೊತ್ತಿಗೆ ಆಗಲೇ ನಾವು ಬ್ರಿಂಗ್ಟಾ ಗುಡ್ಡ ಏರಲು ತೊಡಗಿದ್ದೆವು. ನಮಗಿಂತ ಮುಂದಾಗಿ ಬಂದವರು ಕೂಡ ಇನ್ನೂ ಅಲ್ಲಲ್ಲೇ ಗುಡ್ಡದ ಮೇಲೆ ಹತ್ತಲು ಒದ್ದಾಡುತ್ತಿದ್ದರು. ಬಹಳ ಕಡಿದಾದ ಗುಡ್ಡ. ಮುಂದಕ್ಕೆ ಹೋಗಬೇಕು ಅಂದರೆ ಮೇಲಕ್ಕೇ ಏರಬೇಕು. ಆದರೆ ಹೆಜ್ಜೆ ಇಟ್ಟರೆ ಹಿಂದಕ್ಕೇ ಜಾರುವಂತಾಗುತ್ತದೆ. ಶ್ರೀನಾಥನನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ನಮ್ಮೆಲರ ಹಾಗೆ ಬೆನ್ನಮೇಲೆ ಅವನ ಚೀಲದ ಭಾರ ಅವನಿಗೂ ಇದೆ. ಜೊತೆಗೆ ಹೆಗಲಿಗೆ ಒಂದು ಬ್ಯಾಗು. ಅದರಲ್ಲಿ ಕ್ಯಾಮೆರಾ, ಲೆನ್ಸುಗಳು, ಫಿಲಂ ರೋಲುಗಳು,, ಫಿಲ್ಟರುಗಳು ಮತ್ತು ಫೊಟಾಗ್ರಫಿಯ ಒಂದು ದಪ್ಪನೆಯ ರೆಫರೆನ್ಸ್ ಪುಸ್ತಕ. ಕಂಕುಳು ಇನ್ನೊಂದರಲ್ಲಿ ಮೂರು ಕಾಲಿನ ಕ್ಯಾಮೆರಾ ಸ್ಟ್ಯಾಂಡು. ದೇವರೇ. ಸಹಾಯ ಮಾಡಬೇಕು ಅನ್ನಿಸಿದರೂ ಸಹಾಯ ಮಾಡುವುದಕ್ಕೆ ಮೈ ಮನಸ್ಸುಗಳು ಒಪ್ಪುವುದಿಲ್ಲ. ನನ್ನ ಎದು ಒಡೆದುಕೊಳ್ಳುವುದು ನನಗೇ ಕೇಳಿಸುತ್ತಿದೆ. ಎಷ್ಟು ಜೋರಾಗಿ ಹೊಡೆದುಕೊಳ್ಳುವುದು ಸಾಧ್ಯವಿದೆಯಲ್ಲ ಅದಕ್ಕೆ. ಬೆಳಗಿನ ಚಳಿ ಮೈಗೆ ತಗಲುತ್ತಲೇ ಇರಲಿಲ್ಲ. ಉಸಿರು ಬಿಸಿ ಬಿಸಿ. ಮೂಗಿನಲ್ಲಿ ಉಸಿರಾಡಿದರೆ ಸಾಕಾಗುವುದಿಲ್ಲ. ಬಾಯಿಯನ್ನೂ ತೆಗೆದು ಗಾಳಿಯನ್ನು ಒಳಗೆಳೆದುಕೊಳ್ಳಬೇಕು ಅನ್ನಿಸುತ್ತದೆ. ಹತ್ತುವುದು ಕಷ್ಟ. ನಿಂತು ಸುಧಾರಿಸಿಕೊಳ್ಳುವುದೂ ಕಷ್ಟ. ನಾವು ಎಷ್ಟುತಪ್ಪು ತಿಳಿದಿದ್ದೆವು. ನಮ್ಮ ಟ್ರೆಕಿಂಗಿನ ಆರಂಭದ ದಿನ ಜಾನಾಕ್ಕೆ ಏರಿದ ಏಳು ಕಿಲೋ ಮೀಟರಿನ ದಾರಿಯೇ ಕಡುಕಷ್ಟ ಅಂದುಕೊಂಡಿದ್ದೆವಲ್ಲ. ಮೆಟ್ಟಿಲು ಮೆಟ್ಟೀಲು ಏರುತ್ತ ಏರುವುದಕ್ಕೆ ಕೊನೆಯೇ ಇಲ್ಲವೆ ಎಂದು ಹೈರಾಣಾಗಿದ್ದೆವು. ಆಗಾಗ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತ ಈ ಹಾಳಾದ ತುಂಬ ಎತ್ತರದ ಮೆಟ್ಟಿಲುಗಳು ಇಲ್ಲದಿದ್ದರೇ ಹತ್ತುವುದು ತುಂಬ ಸುಲಭ ಅಂದುಕೊಂಡಿದ್ದೆವು. ಎರಡೇ ದಿನದ ಹಿಂದೆ. ದೂರ ದೂರ ಅಲ್ಲಲ್ಲಿ ಇರುವ ಮರಗಳ ನಡುವೆ ಒಣಮಣ್ಣಿನ ಸಣ್ಣ ಸಣ್ಣ ನುಣ್ಣನೆ ಕಲ್ಲುಗಳ ಸದಾ ಜಾರುವ ಭಯದ, ದಾರಿಯೇ ಇಲ್ಲದ ದಾರಿಯಲ್ಲಿ ಮೇಲೆ ಏರುವುದು ಇನ್ನೂ ಎಷ್ಟು ಕಷ್ಟ. ಆಗಲೇ ಒಂದಷ್ಟು ದೂರ ಏರಿದವರ ಮೇಲೆ ಅಸೂಯೆಯಾಗುತ್ತದೆ – ಅವರು ಆಗಲೇ ಅಷ್ಟು ಹತ್ತಿ ಮುಗಿಸಿಬಿಟ್ಟಿದ್ದಾರಲ್ಲ ಅಂತ. ಎಳೆ ಬಿಸಿಲು ಇತ್ತು. ಎಳೆ ನೆರಳುಗಳೂ ಇದ್ದವು. ಹಕ್ಕಿಗಳೂ ಇದ್ದವೋ ಏನೋ. ಏನೂ ನೋಡಬೇಕು ಅನ್ನಿಸಲಿಲ್ಲ. ಏನೂ ಕೇಳಬೇಕು ಅನ್ನಿಸಲಿಲ್ಲ. ಏರಿ ಏರಿ ಎದೆ ಬಡಿದುಕೊಳ್ಳುತ್ತದೆ. ಗಂಟಲು ಒಣಗಿಹೋಗುತ್ತದೆ. ಬೇಗ, ಸಾಧ್ಯವಾದಷ್ಟು ಬೇಗ ಈ ಏರು ಮುಗಿಯಬೇಕು ಅನ್ನಿಸುತ್ತಿತ್ತು. ಅಷ್ಟೆ. ಆದರೆ ಹೆಜ್ಜೆ ಹೆಜ್ಜೆಗೂ ಹತ್ತುವುದು ಮಾತ್ರ ತುಂಬ ನಿಧಾನ ನಿಧಾನ ಆಗುತ್ತಿತ್ತು. +ಬರವಣಿಗೆಯ ಏಳನೆಯ ದಿನ +ಇಂಗ್ಲೀಷಿನಲ್ಲಿ ಬ್ರೆತ್ ಲೆಸ್ ಅನ್ನುವ ಮಾತು ಇದೆ. ನಾವು ಬ್ರಿಂಗ್ಟಾ ತುದಿ ತಲುಪಿದಾಗ ಅಕ್ಷರಶಃ ಆ ಸ್ಥಿತಿಯಲ್ಲಿದ್ದೆವು. ಅದಿನ್ನೂ ನಮ್ಮ ನಡಿಗೆಯ ಮೂರನೆಯ ದಿವಸ. ಬದುಕಿನಲ್ಲಿ ಯಾವತ್ತೂ ಅಷ್ಟು ಎತ್ತರ ಅಷ್ಟು ಕಷ್ಟಪಟ್ಟು ಹತ್ತಿರಲಿಲ್ಲ. ಹತ್ತಬೇಕಾದ ಎತ್ತರಗಳು ಇನ್ನೂ ಬಹಳ ಇವೆ. ಇನ್ನೂ ಎಂಟು ದಿನ ನಡೆಯುವುದು ಇದೆ. ನಮ್ಮಲ್ಲೆ ಇಬ್ಬರ ಸಂಭಾಷಣೆ ಹೀಗಿತ್ತು: ‘ಎಂಥ ಕ್ಲೈಂಬು ಮಾರಾಯ ಇದು. ಚಡ್ದಿ ಹರಿಯುತ್ತೆ.’ ‘ಹರಿಯುವುದು ಚಡ್ಡಿ ಮಾತ್ರ ಅಲ್ಲ.’ +ಬರವಣಿಗೆಯ ಎಂಟನೆಯ ದಿನ +ಆ ಮಾತಿನ ಜೊತೆಗೆ ನಾವು ಬ್ರಿಂಗ್ಟಾ ಟಾಪನ್ನು ಹತ್ತಿ ಮುಗಿಸಿದೆವು. ಹತ್ತು ಸಾವಿರ ಅಡಿ ಎತ್ತರದಲ್ಲಿದ್ದೆವು. ಆವಾಗಿನ ಒಂದು ಕಾಲು ಗಂಟೆಯನ್ನು ಕುರುತು ಬರೆಯುವುದೇ ಕಷ್ಟ. ಸುಮಾರು ನಾಲ್ಕು ದಿನ ತೆಗೆದುಕೊಂಡು ಮನಸ್ಸಿನಲ್ಲಿ ಏನೇನೋ ಮಾತುಗಳನ್ನು ಹೇಗೆ ಹೇಗೋ ಜೋಡಿಸಿಕೊಂಡು ಹೀಗೆ ಮತ್ತೆ ಆರಂಭಿಸಿದ್ದೇನೆ. ಒಂದೇ ಕಾಲದಲ್ಲಿ ಬೇರೆ ಬೇರೆ ರೀತಿಯ ಅನುಭವಗಳನ್ನು ತೀವ್ರವಾಗಿ ಆಗುತ್ತಿದ್ದುದನ್ನು ಹೇಗೆ ಬರವಣಿಗೆಯಲ್ಲಿ ಹೇಳಬಹುದು? ಒಂದು ಸಾರಿಗೆ ಒಂದೇ ಅಕ್ಷರ ಬರೆಯಲು ಸಾಧ್ಯ. ಅಕ್ಷರದ ಅತಿ ಪರಮಾಣುವುವಿನಿಂದ ಅನುಭವದ ಅಖಂಡ ಸಂಕೀರ್ಣತೆಯನ್ನು ಹಿಡಿದು ಕೊಡುವುದೇ ಮೂರ್ಖತನವೇನೋ. +ಆ ತುದಿಯಿಂದ ಕಂಡ ನೋಟ ಬ್ರೆತ್ ಟೇಕಿಂಗ್. ಅದು ಸರಿಯಾಗಿ ನನ್ನ ಗಮನಕ್ಕೆ ಒದಗುವ ಮೊದಲೇ ಅಥವ ಒದಗುತ್ತಿರುವಾಗಲೇ ಮನಸ್ಸು ಶಿವಮೊಗ್ಗಕ್ಕೆ ಮೈಸೂರಿಗೆ ಸಾಗರಕ್ಕೆ ಮಂಡ್ಯಕ್ಕೆ ನನ್ನ ಜೊತೆ ಆಗ ಇಲ್ಲದಿದ್ದ ಇದ್ದಿದ್ದರೆ ಅನ್ನಿಸುವಂಥ ಗೆಳೆಯ ಗೆಳತಿಯರನ್ನು ಕಲ್ಪಿಸಿಕೊಂಡು ಎಲ್ಲ ಕಡೆಗೆ ಕ್ಷಣದ ಅರ್ಧ ಭಾಗದಲ್ಲಿ ಹೋಗಿಬಂತು. ಆದರೆ ಮೈ ಮಾತ್ರ- ಬೆನ್ನ ಮೇಲಿನ ಭಾರವನ್ನು ದೊಪ್ಪನೆ ನೆಲಕ್ಕೆ ಎಸೆದು, ಎರಡೂ ಕಾಲನ್ನು ಎರಡು ದಿಕ್ಕಿಗೆ ವಿಶಾಲವಾಗಿ ಚಾಚಿ ಕೋತುಕೊಂಡರೆ, ಹಾಗೇ ಬೆನ್ನನ್ನೂ ನಿಧಾನವಾಗಿ ನೆಲಕ್ಕೆ ಒರಗಿಸಿ ಮಲಗಬೇಕೆಂದು ಅನ್ನಿಸುತ್ತದೆ. ದೇಹದಲ್ಲಿ ಒಂದೊಂದೂ ಅವಯವಗಳು ಇರುವುದು, ಕೀಲುಗಳು ಇರುವುದು, ಸ್ಪಷ್ಟವಾಗಿ ಅರಿವಾಗುವಂತೆ ಇರುತ್ತದೆ. ಒಂದೊಂದೇ ಕ್ಷಣ ಕಳೆದ ಹಾಗೆ ಎದೆಯ ಬಡಿತ ನಿಧಾನವಾಗಿ ಕಡಿಮೆಯಾಗುತ್ತ ಮಾಮೂಲಿಗೆ ಬರುವುದನ್ನು, ಉಸಿರಿನ ಏದು ಕಡಿಮೆಯಾಗುತ್ತ ಆಗುತ್ತ ಉಸಿರಿಗೆ ಮೊದಲಿನ ಲಯ ವಾಪಸ್ಸು ಸಿಕ್ಕುವುದನ್ನು ಅನುಭವಿಸುವುದಕ್ಕೆ ತುಂಬ ಹಿತವಾಗುತ್ತದೆ. ಎಳೆಯ ಬಿಸಿಲು ಸ್ವಲ್ಪ ಸ್ವಲ್ಪ ಬಡಿಯುತ್ತಿತ್ತು. ಸೂರ್ಯ ಡ್ರೆಸ್ ಮಾಡಿಕೊಂಡು ರೆಡಿಯಾಗಿ ತನ್ನ ಕೆಲಸ ಶುರುಮಾಡಿದ್ದ. ಕಣ್ಣು ಮುಚ್ಚಿಕೊಂಡಿದ್ದರೂ ಬಿಸಿಲು, ಸೂರ್ಯನ ಶಾಖ ಕಣ್ಣಿನ ರೆಪ್ಪೆಯೊಳಗೆಲ್ಲ ನಿಧಾನವಾಗಿ ಬಣ್ಣಗಳನ್ನು ಮೂಡಿಸುತ್ತ ಮೈಯನ್ನು ಬೆಚ್ಚಗಾಗಿಸುತ್ತಿದ್ದವು. ಗಟ್ಟಿ ನೆಲ ಬೆನ್ನ ಕೆಳಗೆ ಹಿತವಾದ ನೋವನ್ನು ಒತ್ತಿ ಎತ್ತಿ ಹಿಡಿಯುತ್ತಿತ್ತು. ಕೂದಲಿಗೆ ತಲೆಗೆ ಅಂಗೈಗೆ ಬೆರಳುಗಳಿಗೆ ಮಣ್ಣಿನ, ಕಲ್ಲಿನ ಕಣಗಳು ತಗಲುತ್ತಿದ್ದವು. ಎಲ್ಲೋ ಸೊಂಟದ ಹತ್ತಿರ ಒತ್ತಿಕೊಳ್ಳುತ್ತಿರುವ ಮಲಗಿದ ಮೈಯ ಸಮತೋಲನ ಕೆಡಿಸುತ್ತಿರುವ ಒತ್ತಿ ಒತ್ತುತ್ತಿರುವ ಕಲ್ಲು ಹರಳುಗಳನ್ನು ಬೆರಳು ತೆಗೆದು ಎಸೆದ ತಕ್ಷಣ ಒತ್ತು ಕಡಿಂಯೆನಿಸುತ್ತ ಎಷ್ಟೊಂದು ಹಾಯೆನಿಸುತ್ತದೆ. ದೇಹದ ಸ್ತ್ಯಗಳು ಗೊತ್ತಾಗಬೇಕಾದರೆ ದೇಹವನ್ನು ನಿರ್ದಯವಾಗಿ ಬಳಸಿಕೊಳ್ಳಬೇಕು. ಸ್ವಲ್ಪ ಹೊತ್ತು ಮನಸ್ಸು ಬುದ್ಧಿ ಎಲ್ಲ ಖಾಲಿಯಾಗಿರುತ್ತದೆ. ಹಾಗೆ ಖಾಲಿಯಾಗಿದೆ ಅನ್ನಿಸುವುದೇ ಆರಂಭ. ಮನಸ್ಸು ಎಲ್ಲೆಲ್ಲೋ ಹೋಗಿಬಿಟ್ಟಿರುವುದು, ತಲೆಗೆ ಏನೇನೋ ಯೋಚನೆಗಳು ಬರುತ್ತಿರುವುದು ಗೊತ್ತಾಗುತ್ತದೆ. +ಹಾಗೆ ಕಣ್ಣು ಮುಚ್ಚಿಕೊಂಡಿದ್ದಾಗಲೂ ಪುಳ್ಳೆಗಳನ್ನೆಲ್ಲ ರಾಶಿ ಮಾಡಿ ಬೆಂಕಿ ಹಚ್ಚಿ ಟೀ ಕಾಯಿಸುತ್ತ ಕೂತಿದ್ದ ಮನುಷ್ಯ ನನ್ನ ಮನಸ್ಸಿನಲ್ಲಿದ್ದ. ತುದಿಗೆ ತಲುಪುತ್ತಿದ್ದ ಹಾಗೇ ಕಣ್ಣಿಗೆ ಬಿದ್ದವನೇ ಅವನು. ಅರ್ಧ ವರ್ತುಲಾಕಾರದಲ್ಲಿ ಕಣ್ಣು ಹರಿಯುವಷ್ಟು ದೂರ ಹರಡಿಕೊಂಡು ನಿಶ್ಚಲವಾಗಿ ಬಿದ್ದಿದ್ದ. ಹತ್ತು ಸಾವಿರ ಅಡಿ ಎತ್ತರದಿಂದ ಕಾಣುತ್ತಿದ್ದ ವಕ್ರ ನಿರಂತರ ನಿಶ್ಚಲ ಏರು ಇಳಿತಗಳ ನಿಶ್ಯಬ್ದ ವಕ್ರ ಆಕಾರ ವಕ್ರವಾಗಿ ಇದ್ದ ನದಿಯ ಗೆರೆಯ-ಗೊತ್ತಿಲ್ಲ ವಾಕ್ಯ ಹೇಗೆ ಮುಗಿಸಲಿ ಅಂತ. ಮೈ ಹಾಯಾಗುತ್ತಿದ್ದಾಗ ಟೀ ಮಾಡುತ್ತಿರುವ ಬೆಂಕಿಯ ಹೊಗೆ ಗಾಳಿಯ ಜೊತೆ ಬಂದು ಮುಖಕ್ಕೆ ತಗಲುತ್ತಿತ್ತು. ಟೀ ಕುಡಿಯ ಬೇಕು ಅನ್ನಿಸುತ್ತಿತ್ತು. ಶ್ರೀನಾಥ, ಅನಂತ, ಮೂರ್ತಿ, ರಾಜು ಅವರ ಮಾತುಗಳು, ಧಾರಿಣು ಚಂದ್ರ ಅವರ ನಗು, ಶ್ಯಾಮಲೆಯ ಉದ್ಗಾರ, ಹಿಂದಿ ಸಿನಿಮಾ ಶೈಲಿಯಲ್ಲಿ ಸುಸ್ತನ್ನು ಹೇಳಿಕೊಳ್ಳುವ ನರೋನಾನ ಉದ್ಗಾರ ಗೋಳಾಟಗಳು-ನಿಂತಿದ್ದಾರೋ? ಕೂತಿದ್ದಾರೋ? ಕಣ್ಣು ಮುಚ್ಚಿಕೊಂಡು ಕಣ್ಣು ಮುಚ್ಚುವ ಒಂದೆರಡು ಕ್ಷಣ ಮೊದಲು ಕಂಡ ಕಮರಿಯ ದೃಶ್ಯಗಳು ಕಣ್ಣಿಂದ ಇಳಿದು ಮನಸ್ಸಿನಲ್ಲಿ ಮೂಡಿಕೊಳ್ಳುತ್ತಿರುವಾಗ, ಮನಸ್ಸು ಎಲ್ಲೆಲ್ಲೋ ಹೋಗುತ್ತಿದೆ ಅನ್ನಿಸಿದಾಗ, ಟೀ ಹೊಗೆ ಮುಖಕ್ಕೆ ತಗಲುತ್ತಿದ್ದಾಗ, ಸುಮ್ಮನೆ ಕಾಲು ಚಾಚಿ ಬಿದ್ದುಕೊಂಡಿರುವ ನಾನು ಅವರಿಗೆಲ್ಲ ಹೇಗೆ ಕಾಣುತ್ತಿದ್ದೆನೋ. +ಈಗ ಅನ್ನಿಸುತ್ತಿದೆ. ಆ ಜಾಗಕ್ಕೆ ಬ್ರಿಂಗ್ಟಾ ಟಾಪ್ ಅನ್ನುವ ಹೆಸರು ಯಾಕೆ ಬಂತು? ಬ್ರಿಂಗ್ಟಾ ಅನ್ನುವುದು ಏನು? ಅಥವ ಮನುಷ್ಯನೋ? ಯಾರು ಅವನು? ಯಾರನ್ನಾದರೂ ಕೇಳಬೇಕಾಗಿತ್ತು. ಆಗ ಅಂತಹ ಬುದ್ಧಿ ಕುತೂಹಲ ಹುಟ್ಟಲೇ ಇಲ್ಲ. ನನಗೆ ಮಾತ್ರ ಅಲ್ಲ. ನನ್ನ ಜೊತೆ ಇದ್ದ ಯಾರಿಗೂ. ಈಗ ಆ ವಿವರಗಳನ್ನೆಲ್ಲ ಪತ್ತೆ ಹುಡುಕಿಕೊಂಡು ಹೋಗಬೇಕು ಅನ್ನಿಸುವುದಿಲ್ಲ. ‘ಬ್ರಿಂಗ್ಟಾ ಟಾಪ್’ ಅನ್ನುವುದು ಒಂದು ಹೆಸರು. ನಮಗೆ ಒಂದು ಅನುಭವ. ಹೆಸರು ಉಳಿಯುತ್ತದೆ. ಇತಿಹಾಸದ ವಿವರ ಮರೆತು ಹೋಗುತ್ತದೆ. ಉಳಿದುಕೊಂಡ ಹೆಸರು ಆದ ಅನುಭವಕ್ಕೆ ಸಂಕೇತವಾಗಿ ಮನಸ್ಸಿನಲ್ಲಿ ಸುಮ್ಮನೆ ಇದ್ದುಕೊಂಡಿರುತ್ತದೆ. +ಆಗ ಕುತೂಹಲ ಹುಟ್ಟಿದ್ದು ಟೀ ಮಾಡುವ ಮನುಷ್ಯನ ಬಗ್ಗೆ. ಬೆಳಗಿನ ಹೊತ್ತಿಗೇ ಬಂದು ಹತ್ತು ಸಾವಿರ ಅಡಿ ಹತ್ತಿ ಗುಡ್ಡದ ಮೇಲೆ ಕೂತು, ಟ್ರೆಕಿಂಗ್ ಬರುವ ಮಂದಿಗಾಗಿ ಟೀ ಮಾಡಿಕೊಂಡು ಕಾಯುತ್ತ ಇರುವ ಮನುಷ್ಯ ತುಂಬ ಮನಸ್ಸನ್ನು ಹಿಡಿದು ಬಿಟ್ಟ. ಅಲ್ಲೆ ಎಲ್ಲೊ ಹತ್ತಿರದ ಹಳ್ಳಿಯಂತೆ. ಟ್ರೆಕಿಂಗ್ ಋತುವಿನಲ್ಲಿ ಹೀಗೆ ಬಂದು ಸರಿಯಾದ ಜಾಗ ಹಿಡಿದು ಟೀ ಕಾಯಿಸಿಕೊಟ್ಟು ಸ್ವಲ್ಪ ಸಂಪಾದನೆ ಮಾಡಿಕೊಳ್ಳುತ್ತಾನಂತೆ. ಕುರಿ ಕಾಯುವುದು ಮತ್ತು ವ್ಯವಸಾಯ ಅವನ ಕೆಲಸವಂತೆ. ಇಂಥ ಜನ ದಿನವೂ ಒಬ್ಬಿಬ್ಬರು ಸಿಕ್ಕುತ್ತಿದ್ದರು. ಈ ಟ್ರೆಕಿಂಗ್ ಅವಧಿಯಲ್ಲಿ ಅವನಿಗೆ ಸ್ವಲ್ಪ ಕೈ ತುಂಬ ಕಾಸು ಆಗುತ್ತದೆಯಂತೆ. +ಅವನು ಎಷ್ಟು ನಿಶ್ಚಲವಾಗಿ ಕೂತಿದ್ದ ಮಾತು ಎಷ್ಟು ಕಡಮೆ ಆಡುತ್ತಿದ್ದ ಅಂದರೆ ಅವನೂ ಒಂದು ಬಂಡೆ. ಮೋಟು ಮರ ಅನ್ನುವ ಹಾಗಿದ್ದ. ಬಣ್ಣ ಕಳೆದುಕೊಂಡ ಕೋಟು ತೊಟ್ಟಿದ್ದ. ಜಿಡ್ಡು ಜಿಡ್ಡಾಗಿತ್ತು. ಒಳಗೆ ಒಂದು ಸ್ವೆಟರು ಹಾಕಿಕೊಂಡಿದ್ದ. ಬೆನ್ನು ನೆಟ್ಟಗೆ ಕಾಲು ಚಾಚಿ ಕೂತಿದ್ದ. ತಲೆಯ ಮೇಲೆ ಬಣ್ಣ ಬಣ್ಣದ ಆದರೆ ಕೊಳೆಯಾದ ಗುಂಡನೆ ಕುಲು ಟೋಪಿ ಇತ್ತು. ತೆಳ್ಳಗೆ ಇದ್ದ. ಭುಜಗಳ ಅಳತೆಯೂ ಚಿಕ್ಕದು. ಕೆನ್ನೆಗಳು ತೆಳ್ಳಗೆ, ಅವನ ಷರಾಯಿ ತೆಳ್ಳಗೆ ಕೊಳವೆಯ ಹಾಗೆ, ಮೈಯಲ್ಲಿ ಎಲ್ಲೂ ಮಾಂಸ ಇಲ್ಲ. ಚಕ್ಕೆ ಹಾಗೆ ಮೈ. ಮುಖ ಚಪ್ಪಟೆ ಹಲಗೆ. ಕೆನ್ನೆ ತುಂಬ ಎದ್ದು ಕಾಣುವ ಎರದು ಗೆರೆಗಳು. ಮೂಗಿನ ಹೊಳ್ಳೆಗಳಿಂದ ಹೊರಟು ತುಟಿ ಅಂಚು ಮುಟ್ಟಿ ದಾಟಿದ್ದವು. ಸಣ್ಣ ಕಣ್ಣು. ಪಕ್ಕದಲ್ಲಿ ರಟ್ಟಿನ ಡಬ್ಬದ ತುಂಬ ಬಿಸ್ಕತ್ತು ಪೊಟ್ಟಣಗಳು. ಎದುರಿಗೆ ಉರಿಯುತ್ತಿರುವ ಬೆಂಕಿ. ಗಾಳಿ ಬೀಸಿದಂತೆ ಎಲ್ಲ ಕಡೆ ಹರಡುವ ಹೊಗೆ. ಅವನ ಫೋಟೋ ಒಂದು ತೆಗೆದೆ. +ಮೂರ್ತಿ ಮತ್ತು ರಾಜುಗೆ ಹೊಸಬರನ್ನು ಮಾತಾಡಿಸುವುದು, ತಾವೂ ಮಾತಾಡುವುದು, ತುಂಬ ಇಷ್ಟದ ಕೆಲಸ. ರಾಜುಗೆ ಹಿಂದಿ ಬರುವುದಿಲ್ಲ. ಮೂರ್ತಿ ಮಾತಾಡಿಸಿ ಆ ಬೇರೆಯವರು ಉತ್ತರ ಹೇಳಲು ತೊಡಗಿದರೆ ತಕ್ಷಣ ರಾಜು ಜೇಬಿನಿಂದ ಪುಸ್ತಕ ತೆಗೆದು ಬರೆದುಕೊಳ್ಳುವುದೇ ಶುರು. ಮೂರ್ತಿಯ ಮಾತೂ ಹಾಗೇ. ತನ್ನ ಗಟ್ಟಿ ದನಿಯಲ್ಲಿ ಅವನು ಏನು ಹೇಳುತ್ತಿದ್ದ ಅನ್ನುವುದಕ್ಕಿಂತ ಅವನ ಗತ್ತು, ತಲೆ ಹಾಕುವ ರೀತಿ, ಕೈಗಳನ್ನು ಗಾಳಿಯಲ್ಲಿ ಆಡಿಸುವ ವಿಧಾನ ಇವುಗಳಿಂದ ಅವನ ಮಾತು ಬೇರೆ ಜನರಿಗೆ ಅರ್ಥವಾಗುತ್ತಿತ್ತು. ಟೀ ಕಾಯಿಸುವ ಮನುಷ್ಯ ನಮ್ಮನ್ನು ನೀವು ಯಾವ ಊರು ಅಂತ ಕೇಳಿದ. ಕರ್ನಾಟಕ ಅಂದೆವು. ಬೆಂಗಳೂರು ಅಂದೆವು. ಎರಡು ಸಾವಿರ ಕಿಲೋಮೀಟರ್ ದೂರ ಅಂದೆವು. ಅರ್ಥ ಆದಹಾಗೆ ಕಾಣಲಿಲ್ಲ. ಹೀಗೆ ಎಲ್ಲೆಲ್ಲಿಂದಲೋ ಎಷ್ಟೆಷ್ಟು ದೂರದಿಂದಲೋ ಗುಡ್ಡ ಹತ್ತಲು ಬರುವವರನ್ನು ಕಂಡು ಅವನಿಗೆ ಏನನ್ನಿಸುತ್ತದೋ. ನಡಯಲು ನಾವು ಪಡುವ ಕಷ್ಟ ಕಂಡು ಮರುಕವೋ ತಮಾಷೆಯೋ ನಿರ್ಲಕ್ಷ್ಯವೋ? ಇಲ್ಲಿಂದ ಜಾರಿಗೆ ತಲುಪಲು ಇನ್ನೂ ಇಪ್ಪತ್ತು ಕಿಲೋಮೀಟರ್ ನಡೆಯಬೇಕು. ನೀವು ಅಲ್ಲಿಗೆ ತಲುಪುವ ಹೊತ್ತಿಗೆ ಸೂರ್ಯ ಮುಳುಗಿರುತ್ತಾನೆ ಅಂದ. +ಅವನಾಗಿ ಕೇಳಿದ ಪ್ರಶ್ನೆ ಒಂದೇ – ಎಲ್ಲರೂ ಬಂದು ಆಯಿತೋ ಅಥವಾ ಹತ್ತುತ್ತಿರುವವರು ಇನ್ನೂ ಇದ್ದಾರೋ? +ಬರವಣಿಗೆಯ ಒಂಬತ್ತನೆಯ ದಿನ +ಆಗ ಮಧ್ಯರಾತ್ರಿ ಕಲೆದಿತ್ತು. ನಾವು ಕುಲು ಬಸ್ ಸ್ಟ್ಯಾಂಡಿನಲ್ಲಿದ್ದೆವು. ಜ್ಞಾಪಿಸಿಕೊಂಡರೆ ಈಗ ನಾನು ಅಲ್ಲೇ ಇದ್ದೇನೆ ಅನ್ನಿಸುತ್ತದೆ. +ಮನೆ ಬಿಟ್ಟು, ಕಾಲೇಜು ಬಿಟ್ಟು, ಮನೆ ಕಾಲೇಜು ಇರುವ ಶಿವಮೊಗ್ಗ ಬಿಟ್ಟು, ಬೆಂಗಳೂರು ತಲುಪಿ, ರೈಲು ಹತ್ತಿ, ಇದುವರೆಗೂ ಹೆಸರು ಮಾತ್ರವಾಗಿದ್ದ, ಮ್ಯಾಪಿನ ಚುಕ್ಕೆಗಳು ಮಾತ್ರವಾಗಿದ್ದ, ಊರುಗಳನ್ನೆಲ್ಲ ಒಂದಾದಮೇಲೊಂದು ದಾಟಿ, ದೆಹಲಿ ತಲುಪಿಬಿಟ್ಟೆವು. ನನ್ನ ಮೈ ನಲವತ್ತೆಂಟು ಡಿಗ್ರಿ ಸೆಂ. ಧಗೆಯನ್ನು ತಾಳಿಕೊಳ್ಳುತ್ತದೆ ಎಂದು ಗೊತ್ತೇ ಇರಲಿಲ್ಲ. ಮೈ ಪಟ್ಟ ಹಿಂಸೆಯನ್ನು ಮೈಯೇ ಹೇಳಲಾರದು. ಬುದ್ಧಿ ಹುಟ್ಟಿಸಿಕೊಂಡ ಭಾಷೆ ಇನ್ನೆನು ಹೇಳೀತು. ಮೈಯೊಳಗೆ ಹರಿಯುತ್ತಿರುವುದು ರಕ್ತವಲ್ಲ, ಧಗೆಯ ನದಿ; ದೆಹಲಿಯೆಲ್ಲ ಒಂದು ದೊಡ್ಡ ಬಾಣಲೆ, ನಾವು ಅದರಲ್ಲಿ ಹುರಿದು ಹೋಗುತ್ತಿರುವ ಕಡಲೇಕಾಯಿಗಳು ಹೀಗೆ ಏನು ಹೇಳಿದರೂ ಅದು ಉತ್ಪ್ರೇಕ್ಷೆ ಅನ್ನಿಸುತ್ತದೆ ಅಥವ ಏನೇನೂ ಅಲ್ಲ. ವರ್ಣನೆಯೇ ಅಲ್ಲ ಅನ್ನಿಸುತ್ತದೆ. ಅಲ್ಲಿ ಎರಡೂವರೆ ದಿನ ಕಳೆದದ್ದೆ ನಾಳಿದ್ದು ನಾಳೆ ಇವತ್ತು ಇನ್ನರ್ಧಗಂಟೆಗೆ ಇಗೋ ಈಗ ಈ ಹಾಳು ಊರು ಬಿಟ್ಟು ಹಿಮಾಲಯದ ತಂಪಿಗೆ ಹೋಗಿಬಿಡುತ್ತೇವೆ ಅನ್ನುವ ನಿರೀಕ್ಷೆಯಲ್ಲಿ. +ಬೆಳಿಗ್ಗೆ ಆರುಗಂಟೆಗೇ ಕುಲುಗೆ ಹೊರಡುವ ಬಸ್ಸನ್ನು ದೆಹಲಿಯಲ್ಲಿ ಹತ್ತಿ ಕುಳಿತಮೆಲೆ ಇಂದೊಂದು ಕ್ಷಣವೂ ಧಗೆ ಕಡಿಮೆಯಾಗುತ್ತಿದೆ ಎಂದು ನನ್ನನ್ನೇ ನಾನು ನಂಬಿಸಿಕೊಳ್ಳುತ್ತಿದ್ದೆ. ಹದಿನೆಂಟು ಗಂಟೆಗಳ ಪ್ರಯಾಣ ಎಷ್ಟು ದೀರ್ಘವಾಗಿರಬಹುದು. ಗಡಿಯಾರದಲ್ಲಿ ಬಿಸಿಲಿನ ಹೊತ್ತು ಏರುತ್ತಿದ್ದಾಗ ನಿಜವಾಗಲೂ ದೆಹಲಿಯಿಂದ ದೂರ ಬಂದು ಧಗೆ ಕಡಿಮೆ ಆಗಿದೆ ಅಲ್ಲವೆ ಅಂತ ಮಾತಾಡಿಕೊಳ್ಳುತ್ತ ಚಂಡೀಗಢಕ್ಕೆ ಬಂದೆವು. ತಿಮ್ಮೇಗೌಡರಿಗೆ ಹೆದರಿಕೆ ಇತ್ತಂತೆ. ಪಂಜಾಬಿನಲ್ಲಿ ಯಾರಾದರೂ ನಮ್ಮನ್ನು ಅಡ್ಡಹಾಕಿ ಕೊಂದುಬಿಡುತ್ತಾರೆ ಅನ್ನುವ ಹೆದರಿಕೆ. ಪಂಜಾಬಿನಲ್ಲೂ ಬಿಸಿಲ ಧಗೆ ಕಡಿಮೆ ಏನೂ ಇಲ್ಲ. ಮಧ್ಯಾಹ್ನ. ಯಾಕೋ ಈ ಪ್ರಯಾಣ ಮುಗಿಯುವುದೇ ಇಲ್ಲ. ಹೊರಗಡೆ ರಾಚುವ ಬಿಸಿಲು. ಸುಮ್ಮನೆ ಸುಮ್ಮನೇ ಒಂದೇ ಸಮ ಶೃತಿ ಮಾಡಿಟ್ಟ ಶಬ್ದದಲ್ಲಿ ಓಡುವ ಬಸ್ಸು. ಬರೀ ಬಯಲು. ರಾಜು ಏನಾದರೂ ಮಾಡಿ ಇಲ್ಲದ ಕುತೂಹಲ ಹುಟ್ಟಿಸಿಕೊಳ್ಳಲು ಒದ್ದಾಡುತ್ತಿದ್ದರು. ಅಲ್ಲೊಂದು ಇಲ್ಲೊಂದು ಗುಡ್ಡಗಳು. ತೂಕಡಿಕೆ. ಎಚ್ಚರ. ತೂಕಡಿಕೆ. ಗಂಟೆಗಳು ಮುಂದೆ ಹೋಗುತ್ತಲೇ ಇಲ್ಲ. ಎಚ್ಚರ. ಗಡಿಯಾರದ ಮುಳ್ಳನ್ನು ನೋಡುತ್ತ ಕುಳಿತರೂ ಅಷ್ಟೆ. ಬಸ್ಸಿನ ಕಿಟಿಕಿಯಾಚೆ ಬಯಲನ್ನು ನೋಡುತ್ತಾ ಕುಳಿತರೂ ಅಷ್ಟೆ. ಬಸ್ಸಿನೊಳಗೆ ಆಯಾಸದಲ್ಲಿ ಅರೆನಿದ್ರೆಯಲ್ಲಿ ಬಿಗಿದ ಬೇರೆ ಮುಖಗಳನ್ನು ನೋಡಿದರೂ ಅಷ್ಟೆ. ಕಿಲೋ ಮೀಟರ್ ಕಲ್ಲುಗಳನ್ನು ಕಾಯುತ್ತ ಕುಳಿತರೂ ಅಷ್ಟೆ. ದೂರದಲ್ಲಿ ಸಣ್ನ ಗುಡ್ಡಗಳಂತೆ ಕಾಣುತ್ತಿವೆ ಏನೋ. ಅಯ್ಯೋ ಆ ಗುಡ್ದಗಳೇನೂ ಚಂದ ಇಲ್ಲ. ಬರೀ ಬೋಳು. ಕಣ್ಣು ಮುಚ್ಚಿದರೂ ಕಣ್ಣೊಳಗೆಲ್ಲ ಬಿಸಿಲು ಮತ್ತು ಗುಡ್ಡ. ತೆರೆದರೂ ಅಷ್ಟೆ. ಮುಚ್ಚಿದ್ದೆ. ತಟ್ಟನೆ ಒಮ್ಮೆ ಬಸ್ಸು ನಿಂತಿತು. ಅರೆ ಈ ಯಾಕೆ ಮಧ್ಯೆ ಗುಡ್ಡಗಳ ಮಧ್ಯೆ ಅರೆ ಯಾಕೆ? ಯಾರು ಇವರು? ಎಲ್ಲರನ್ನೂ ಇಳಿಯಿರಿ ಅನ್ನುತ್ತಿದ್ದಾರಲ್ಲ. ಎಲ್ಲರೂ ಇಳಿದೇಬಿಡುತ್ತಿದ್ದಾರೆ. ನಾನು ತೂಕಡಿಸಬಾರದಿತ್ತು. ಆದರೆ ತಾನೇ ಏನಾಗುತ್ತಿತ್ತು. ಬಸ್ಸನ್ನು ಸುತ್ತುವರೆದಿದ್ದಾರೆ. ಒಂದೇ ಥರ ಉಡುಪು. ಗಡ್ದ. ಪೇಟ. ಕ್ರಿಪಾಣಿ. ಕೊಲ್ಲಲು ಬಂದಿದ್ದಾರೋ? ಇಲ್ಲ. ಸದ್ಯ. ಪಾಪ. ಇವರು ಈ ದಾರಿಯಲ್ಲಿ ಹೋಗುವವರಿಗೆಲ್ಲ ಪಾನಕ ಕೊಡುತ್ತಾರಂತೆ. ಬಸ್ಸು ನಿಂತ ತಕ್ಷಣ ಗುಡ್ದಗಳ ನಡುವೆ ಮಧ್ಯಾಹ್ನ ಬಿಸಿಲ ಮೌನ. ಜನಗಳ ಮಾತು ಕೂಡ ಬಿಸಿಲ ಮೌನವನ್ನು ಕಲಕುತ್ತಿಲ್ಲ. ಪಾನಕ ತಣ್ಣಗಿತ್ತು. +ಬಸ್ಸು ಬೆಟ್ಟ ಹತ್ತುತ್ತಿತ್ತು. ಪಾನಕ ನಿದ್ರೆಯನ್ನು ತರುತ್ತಿತ್ತು. ಇದೂ ಹಿಮಾಲಯದ ಭಾಗವೇ ಅಂತೆ. ರಾಜು ‘ಅಲ್ಲಿ ನೋಡಿ. ಅದು ನೋಡಿ, ಇದು ನೋಡಿ’ ಅನ್ನುತ್ತಿದ್ದಾರೆ. ಹಿಮಾಲಯ ಹೀಗೇ ಇರುವುದಾದರೆ ನಾವು ಯಾಕಾದರೂ ಬಂದೆವು. ತೀರ್ಥಹಳ್ಳಿಯ ಹತ್ತಿರ. ಆಗುಂಬೆಯಲ್ಲಿ. ಹುಲಿಕಲ್ಲಿನಲ್ಲಿ ಇನ್ನೂ ಒಳ್ಳೆಯ ಕಣ್ಣು ತುಂಬುವ ಬೆಟ್ತ ಕಾಡುಗಳಿವೆ. ಶಿವಾಲಿಕ ಶ್ರೇಣಿಯಂತೆ ಇದು. ತುಂಬ ಎತ್ತರ ಎತ್ತರದ ಬೋಳು ಸುರಿವ ಗುಡ್ಡ. ಒಣ ಮರ. ಎಚ್ಚರವಾದಾಗಲೆಲ್ಲ ಅವೇ ಗುಡ್ಡಗಳು. ಅಗೋ ಅಲ್ಲಿ ಬಲಗಡೆ ಗುಡ್ಡದ ಮೇಲೆ, ಎತ್ತರದಲ್ಲಿ ಕಾಣುವ ರಸ್ತೆಯ ಮೇಲೂ ಹೋಗಬೇಕೆ? ಎಷ್ಟು ಹೊತ್ತಿಗೆ ಅಲ್ಲಿಗೆ ತಲುಪೀತು ಬಸ್ಸು? ಅಲ್ಲೊಂದು ಸೇತುವ ಕಾಣುತ್ತಿದೆ. ಎತ್ತರ ಕಂಬಗಳ ಮೇಲೆ ಎರಡು ಬೆಟ್ಟಗಳನ್ನು ಕೂಡಿಸುವ ಸೇತುವೆ. ಅದು ಬರುವವರೆಗೆ ಕಣ್ಣು ಮುಚ್ಚಿಕೊಂಡಿರುತ್ತೇನೆ. ಅದು ಬಂತೇ? ಮಾಯವಾಯುತೇ? ಈ ಬೆಟ್ಟದ ಇಳಿಜಾರಿನಲ್ಲೂ ಮನೆಗಳಿವೆ. ಜಾರಿ ಬೀಳುವುದಿಲ್ಲವಲ್ಲ ಇವು ಎಂಥ ಆಶ್ಚರ್ಯ. ಎಚ್ಚರವಾದಾಗಲೆಲ್ಲ ನಾವು ಇನ್ನೂ ಇಲ್ಲೇ ಇದ್ದೇವೆ ಅನ್ನಿಸುತ್ತಿದೆ. ನಿಜವಾಗಲೂ ಈ ದಾರಿ ಮುಗಿದು, ಈ ಗುಡ್ಡಗಳು ಮುಗಿದು ಕುಲು ಬರುತ್ತದೋ ಇಲ್ಲವೋ. ಎಚ್ಚರವಾಗಿರುವುದು ಸುಳ್ಳೋ ನಿದ್ದೆ ಮಾಡಿದ್ದು ಸುಳ್ಳೋ. ನಿದ್ದೆ ಮಾಡುತ್ತಿರುವುದು ಇದು ಸುಳ್ಳೋ. ಮನಸ್ಸಿನಲ್ಲಿ ದಿಕ್ಕಿಲ್ಲದ ಯೋಚನೆಗಳು. +ಮಳೆಯ ವಾಸನೆ. ಮಳೆ ಮತ್ತು ಇಳಿಬಿಸಿಲು ಸೇರಿದ ಗಂಧ. ಇದೀ ಹಳ್ಳಿಯೂ ಬಿಸಿಲೂ ಸ್ನಾನ ಮಾಡಿತ್ತು. ಚೆನ್ನಾಗಿ ಎಚ್ಚರವಾಗಿತ್ತು. ಜನ ನಿರುಂಬಳವಾಗಿ ನೆಮ್ಮದಿಯಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಇಳಿದುಬಿಡಬೇಕು ಇಲ್ಲಿ ಅನ್ನಿಸಿತು. ಬಸ್ಸು ಹೊರಟಿತು. +ಇನ್ನೊಂದು ಗಲೀಜು ಊರು. ಚಾ ಕುಡಿಯಲೆಂದು ಬಸ್ಸು ನಿಂತಿತು. ಮಳೆ ನಿಂತಿಲ್ಲ. ಹೋಟೆಲ ಮಾಡಿನ ಅಂಚಿನಿಂದ ಧಾರೆಯಾಗಿ ಸುರಿಯುವ ನೀರು. ಎಲ್ಲರೂ ಎಲ್ಲರನ್ನೂ ಕೇಳಿದೆವು. ಕುಲು ಇಲ್ಲಿಂದ ಇನ್ನೆಷ್ಟು ದೂರ? +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […] +ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […] +ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_422.txt b/Kannada Sahitya/article_422.txt new file mode 100644 index 0000000000000000000000000000000000000000..20668628515db34eb8e1f912112724aff1506dd3 --- /dev/null +++ b/Kannada Sahitya/article_422.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾನಡ +ನೀನ್ಯಾಕೋ, ನಿನ್ನ ಹಂಗ್ಯಾಕೋ ಪ +ನಿನ್ನ ನಾಮದ ಬಲವೊಂದಿದ್ದರೆ ಸಾಕೊ ಅ +ಆ ಮರ ಈ ಮರ ಧ್ಯಾನಿಸುತಿರುವಾಗ +ರಾಮ ರಾಮ ಎಂಬ ನಾಮವೆ ಕಾಯ್ತೊ ೧ +ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ +ಬಾಲಕೃಷ್ಣನೆಂಬ ನಾಮವೆ ಕಾಯ್ತೊ ೨ +ಯಮನ ದೂತರು ಬಂದು ಅಜಾಮಿಳನೆಳೆವಾಗ +ನಾರಾಯಣನೆಂಬ ನಾಮವೆ ಕಾಯ್ತೊ ೩ +ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ +ಆದಿಮೂಲನೆಂಬ ನಾಮವೆ ಕಾಯ್ತೊ ೪ +ಪ್ರಹ್ಲಾದನ ಪಿತ ಬಾಧಿಸುತಿರುವಾಗ +ನಾರಸಿಂಹನೆಂಬ ನಾಮವೆ ಕಾಯ್ತೊ ೫ +ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ +ವಾಸುದೇವನೆಮಬ ನಾಮವೆ ಕಾಯ್ತೊ ೬ +ನಿನ್ನ ನಾಮಕೆ ಸರಿ ಯಾವುದು ಕಾಣೇನೊ +ಘನ ಮಹಿಮ ಸಿರಿ ಪುರಂದರವಿಠಲ ೭ +***** +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ರಾಗ — ನೀಲಾಂಬರಿ ತಾಳ — ಅಟ್ಟ ಇಷ್ಟು ದಿನ ಈ ವೈಕುಂಠ | ಎಷ್ಟು ದೂರವೊ ಎನ್ನುತಲಿದ್ದೆ || ದೃಷ್ಟಿಯಿಂದಲಿ ನಾನು ಕಂಡೆ | ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| ಎಂಟು – ಏಳನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_423.txt b/Kannada Sahitya/article_423.txt new file mode 100644 index 0000000000000000000000000000000000000000..307182def52b61a27565955b05cbd4258963976b --- /dev/null +++ b/Kannada Sahitya/article_423.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ +ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; +ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ +ಅಶಿವ ನುಡಿ ಎನ್ನ ಕಿವಿ ಸೇರದಿರಲಿ. +ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ +ಕರ್ತವ್ಯಪಾಲನೆಯ ಬುದ್ಧಿ ಬರಲಿ; +ಕಾರ್ಮೋಡ ಬಾನನಂಡಲೆವಂತೆ ಸಂಕಷ್ಟ +ಕೊರಚಾಡಿದರು ಎದೆಯು ಅಲುಗದಿರಲಿ. +ದೈತ್ಯದರ್ಪದ ದುರುಳ ದಾರುಣದ ಹೋರಟೆಗೆ +ಎಂದೆಂದು ನನ್ನ ತಲೆ ಬಾಗದಿರಲಿ; +ಸಾತ್ವಿಕರ ತಾತ್ವಿಕರ ಹಿರಿಜೀವದೌನ್ನತ್ಯ +ವಿಶ್ವಭಾವಾತ್ಮರಿಗೆ ನಮನವಿರಲಿ. +ಬಾನಿನಂಚಿನ ಮೋಡ ನಮ್ರತೆಯದೆನಗಿರಲಿ +ಮಾನಸದ ತಿಳಿಗೊಳದ ಶಾಂತಿಯಿರಲಿ; +ಮಣ್ಣ ಹುಡಿಗೂ ಮೆರುಗನಿತ್ತು ಮುದ ತಾಳುತಿಹ +ಹಸುಳೆಯಾಟದ ಮುಗ್ಧ ಹಂಬಲಿರಲಿ. +ಶಿವನ ಕವನವು ಭುವನ, ಲಾಸ್ಯ-ತಾಂಡವ ಮಿಲನ +ಪ್ರಕೃತಿಯೌಪಾಸನೆಯು ನಿತ್ಯವಿರಲಿ; +ನಾನು ಮಿಡಿಯುವ ಭಾವವೀಣೆ ತಂತಿಗಳೆಲ್ಲ +ದೇವ! ಜೀವಾಳದೋಂಕಾರಗುಡಲಿ. +***** +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +ಎಲ್ಲ ತಿಳಿಸುವ, ಎಲ್ಲ ತಿಳಿದಿರುವ, ಮಡಿಲ ಮೇಲಿನ ಗಣಕವೇ, ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ ಏನೇ ಬೇಡಿಕೆ, ಏನೇ ಹಂಬಲ, ಬೇಕಾದರು, ಏನೇ ಬೆಂಬಲ ಮೊರೆಹೋಗುವೆ ನಿನ್ನ, ನಾ ದುರ್ಬಲ! ಜೀವಾತ್ಮದ ಸಂಚಯದ, ಪರಮಾತ್ಮನ ಪರಿಚಯದ […] +ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_424.txt b/Kannada Sahitya/article_424.txt new file mode 100644 index 0000000000000000000000000000000000000000..c1e7c5376e7c0d143dc6425aae8930ce84b8b916 --- /dev/null +++ b/Kannada Sahitya/article_424.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾಗದದ ಪುಟ್ಟ ದೋಣಿಯ +ಈ ತುದಿಯಲ್ಲಿ ನಾನು +ಆ ತುದಿಯಲ್ಲಿ ನೀನು +ನಿನ್ನ ಕಣ್ಣ ನಿಮ್ನ ನೋಟದಲಿ +ಮುಳುಗಿದ ನನ್ನೀ ಮೌನ +ಒಳಕ್ಕೂ ಹೊರಕ್ಕೂ ನಮ್ಮಿಬ್ಬರ +ನಡುವೆ ತಿರುವು ಮುರಿವಿನ +ಡೊಂಕು ಡೊಂಕಿನ ನದಿಯ ಹಾದಿ- +ಯಲ್ಲಿ ದೂರತೀರದಯಾನ ಹುಚ್ಚಿನ +ಹೊಳೆಯಲ್ಲಿ ಮಂಥನದ ರಭಸಕ್ಹುಟ್ಟಿದ +ಬಿಳಿನೊರೆಯ ಹೊನಲಲ್ಲಿ ಹಾಯಿಗಡವಿಲ್ಲದ +ಮಧ್ಯಮದಲ್ಲಿ ನೂರೆಂಟು ದೋಣಿಯ +ಕದನವದಲ್ಲಿಂದ ದೂರ ದೂರವಿಲ್ಲಿ +ನಾನು-ನೀನು ದಡದ ಬದಿಯಲ್ಲಿ +ತೀರದ ಜೊತೆ ಜೊತೆಯಲ್ಲಿ +ದಂಡೆಯ ಸಮೀಪದಲ್ಲಿ ಆಗೊಮ್ಮೆ +ಈಗೊಮ್ಮೆ ಕಡಲ ತಳದ +ನಿಶ್ಚಲದಲ್ಲಿ ಮೋಹದ ಸುಳಿ +ಸೆಳೆಯುವಲ್ಲಿ ಹುಳು ಕಚ್ಚಿದೆಲೆಯಡಿಯ +ಮಸುಕಾದ ನೆರಳಲ್ಲಿ ದಡದಡಿಯ +ತಣ್ಣನ ಮಣ್ಣಲ್ಲಿ ಬಲಿತ +ಬೇರಿನ ನಡುವಲ್ಲಿ ಮೊನಚಾದ +ಹಲ್ಲಿಗೆ ತುತ್ತಾಗುವಲ್ಲಿ ಹೆಬ್ಬಾವು +ಬಿದ್ದ ಕವಲೊಡೆದ ಟೊಂಗೆಗಳಡಿಯಲ್ಲಿ +ಬಿರುಗಾಳಿಗೆ ಸಿಕ್ಕ ಹಕ್ಕಿಯಂತೆ +ನಡುಗಿ ನನ್ನೀ ಮನ ಕಿಟ್ಟೆಂದು +ಕೂಗಿದ ನಿಶ್ಯಬ್ದದಲ್ಲಿ ನಾನು-ನೀನು +ಸಾಗಿರೆ ಮುಂದೆ ದೋಣಿ ತಿರುಗಿದ +ತಿರುವಿನಾಚೆ ಕಾಣದಲೆಯೊಂದೆದ್ದು ಬಳಿಗೆ +ಬಂದು ನಿನಗೇತರ ಭಯವೋ +ನಿನಗೆಲ್ಲಿಯಾ ಸಾವೋ ಹರಿವ ನದಿಯ +ಯಕ್ಷಪ್ರಶ್ನೆಯೋ ಇದು ಶೇಷಪ್ರಶ್ನೆಯೋ +ತಿಳಿಯದನಾತಿಳಿದವನೀನೆಂಬರಿವಲ್ಲಿ +ನೋಡಲುನೀನಗುತಲಿಟ್ಟನಿನ್ನಕೈಬೆರಳ +ಸ್ಪರ್ಶಕ್ಕೆ ಉಕ್ಕುಕ್ಕಿ ಹರಿದ +ಪ್ರವಾಹದಲ್ಲಿ ಜಗದ ಜನ್ಮ +ಜನ್ಮಾಂತರದ ಹೆಜ್ಜೆಗುರುತುಗಳಳಿಸಿ ಯುಗ +ಯುಗಾಂತರದ ಹಾದಿಗಳು ಕೊಚ್ಚಿಹೊದಲ್ಲಿ +ಕೃಷ್ಣರಾಜಸಾಗರದ ಈ ಒಳಹಾದಿ- +ಯೊಂದುಳಿದು ಗುಪ್ತಗಾಮಿನಿಯಂತೆ +ಹರಿವ ನೀರಲ್ಲಿ ನಾನು-ನೀನು +ಒಂದಾಗಿ ಸೇರುವ ಸಂಗಮದಲ್ಲಿ +ನಮ್ಮಿಬ್ಬರ ಯಾನ ದೂರ +ದೂರಕೆ ದಿಗಂತದಲಿ ರವಿ +ಮುಳುಗುವ ದೂರ ತೀರಕೆ +***** +೪-೧೧-೨೦೦೩ +ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […] +– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_425.txt b/Kannada Sahitya/article_425.txt new file mode 100644 index 0000000000000000000000000000000000000000..5508c97295c6aa70bb8f77a70b597f076445b835 --- /dev/null +++ b/Kannada Sahitya/article_425.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪ್ರೇಮ ಜಪಮಣಿ ಕದ್ದು ಹಾಡು ಕೊಟ್ಟಿತು +ಜತೆಗೆ ಕವಿತೆಯನ್ನು ಕೂಡಾ +‘ಶಕ್ತಿ ಇಲ್ಲ’ ಎಂದು ಚೀರಿದೆ +ವ್ಯಾಕುಲನಾಗಿ ಗೋಗರೆದೆ +ಹೃದಯಕ್ಕೆ ನನ್ನ ಮೊರೆ ಕೇಳಲೇ ಇಲ್ಲ. +ಪ್ರೇಮದಿಂದಾಗಿ ನಾನು ಹಾಡುಗಾರನಾದೆ +ಸುತ್ತ ಚಪ್ಪಾಳೆಯ ಹೊಳೆ +ಪ್ರೇಮ ಕಬಳಿಸಿತು ಕೀರ್ತಿ +ನಾಚಿಕೆ ಮಾನ ಮರ್ಯಾದೆ +ಎಲ್ಲ ಹಾಗೇ ಕಿತ್ತೊಗೆಯಿತು +ಒಂದು ಕಾಲಕ್ಕೆ ನಾನು ಸಜ್ಜನ, ಶೀಲವಂತ +ಭದ್ರ ಬುಡವಿದ್ದ ಮಹಾಪರ್ವತ +ನಿನ್ನ ಬಿರುಗಾಳಿ ಎದುರು ತರಗೆಲೆ +ಹಾಗೆ ಹಾರದ ಪರ್ವತ ಎಲ್ಲಿದೆ, ಹೇಳು? +ನಾನು ಬೆಟ್ಟವೆ? ನಿನ್ನ ಪ್ರತಿಧ್ವನಿ ಹಿಡಿದೆ +ನಾನು ಜೊಳ್ಳೆ? ನಿನ್ನ ಬೆಂಕಿಯಲ್ಲಿ ಉರಿದು ಹೊಗೆಯಾದೆ +ನಿನ್ನ ಇರುವು ಕಂಡು, ನಾಚಿಕೆ ಉಕ್ಕಿ ನನ್ನಿರವು ಬಿಟ್ಟೆ +ಈ ಅಸ್ತಿತ್ವ ಹೀನ ಸ್ಥಿತಿಯಿಂದ ಲೋಕಾತ್ಮ ಹುಟ್ಟಿತು +ಮೇಲೆ ನೀಲಾಕಾಶದ ಸ್ವರ್ಗ, ಭೂಮಿ-ಕೆಳಗೆ ಕೂತ ಕುರುಡ ಭಿಕ್ಷಕ +ದೇಹದೊಳಗೆ ಅಡಗಿಕೂತ ಆತ್ಮ, ಭವಿಗಳ ನಡುವಿನ ಮಹಾಭಕ್ತನ ಹಾಗೆ +ನಿನ್ನ ನಾಮಸ್ಮರಣೆ ಎನ್ನುವುದು ಕಡಲ ಹಾಗೆ +ನನ್ನ ನಾಲಗೆಯ ಹಡಗು, ಆತ್ಮಕ್ಕೆ ಕಡಲಯಾನ +ನನಗೆ ಕಡಲ ವಾತ್ಸಲ್ಯಮಯ ಸ್ವರ್ಗದ ದಿವ್ಯದೃಷ್ಟಿ +ನಿದ್ರೆಯ ಜೊಂಪಿಂದ ಕಣ್ಣು ತೂಗಿತೆ? ಅದಕ್ಕೇಕೆ ದುಃಖ? +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಲೋಕದ ತುಂಬ ಮುಳ್ಳಿದ್ದರೂ ಸರಿ ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ ಸ್ವರ್ಗದಗಿರಣಿ ಸದಾ ಸೋಮಾರಿ ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ ಮುಳುಗಲಿ ಉಳಿದವರು ದುಃಖದಲ್ಲಿ ಹಾರಾಡಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_426.txt b/Kannada Sahitya/article_426.txt new file mode 100644 index 0000000000000000000000000000000000000000..03ad9b9ce3d0146ef6a1b630ecc609922a36c699 --- /dev/null +++ b/Kannada Sahitya/article_426.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ ಸೀರೆಯ ಸೆರಗಿನ ಮರೆಯಿಂದ ತನಗೆ ಕಂಡ ಅವಳ ದುಂಡಗಿನ ಬೆತ್ತಲೆ ಮೊಲೆಗಳು ನೆನಪಿಗೆ ಬಂದು, ಅವು ತನ್ನ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿಯೋ ಇಲ್ಲವೇ ತಾನು ಅವಳೆಡೆಗೆ ನೋಡುತ್ತಿದ್ದೇನೆ ಎಂಬ ಅರಿವು ಇದ್ದೂ ಬೇಕೆಂದೇ ತೋರಿಸಿದವುಗಳೋ ಎಂದುಕೊಳ್ಳುತ್ತ ಮೂಗಿನ ಹೊರಳೆಗಳನ್ನು ಅರಳಿಸಿದ. ಥತ್! ತನಗೇನಂತೆ, ತಾನು ಯಾರು-ದೇವಿ ಯಾರು! ಈ ಯಕಶ್ಚಿತಯಕಶ್ಚಿತ್ ಕೆಲಸದ ಹುಡುಗಿಯ ದೆಸೆಯಿಂದ ತಾನೇಕೆ ತನ್ನ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಳ್ಳಬೇಕು? ಅವಳು ಬೇಕೆಂದೇ ತೋರಿಸಿರಬಹುದಾದರೂ ನಾಲ್ಕು ದಿನಗಳ ಮಾತಿಗೆಂದು ಈ ಹಳ್ಳಿಯ ಮನೆಗೆ ಬಂದ ತಾನು ಅವುಗಳ ಗೊಡವೆಗೆ ಹೋಗುವುದು ಅಷ್ಟರೊಳಗೇ ಇದೆ! ಥತ್ ಎಂದು ಇನ್ನೊಮ್ಮೆ ಎಂದುಕೊಂಡವನೇ ಮಂಚದ ಮೇಲೆ ಅಂಗಾತ ಬಿದ್ದಲ್ಲೇ ಕಣ್ಣು ತೆರೆದ. ತಲೆಯಲ್ಲಿ ಬಂದುದರ ವಿಚಾರ ಮರೆಯಲೆಂಬಂತೆ ಮಾಡಿನ ಹಂಚುಗಳ ಮೇಲೆ ಕಣ್ಣು ಹಾಯಿಸಿದ. ಕಟಕಟೆಯ ದಡಿಯ ಮೇಲಿಟ್ಟ ಕಾಚಿನ ಬುರುಡೆಯ ದೀಪ ಹಂಚುಗಳ ಮೇಲೆ ಚೆಲ್ಲಿದ ಅರ್ಧಚಕ್ರಾಕಾರದ ಬೆಳಕಿನಲ್ಲಿ ಏನನ್ನೋ ಹುಡುಕುವವನಂತೆ ಕಣ್ಣರಳಿಸಿ ನೋಡಿದ. ಹೆದರಿದ: ಇರಬಹುದೆ? ತನಗೆ ಮಧ್ಯಾಹ್ನ ಬಾಲ ಕಂಡಂತಾದ ಜಾಗದಲ್ಲೇ ಏನೋ ಹಳದಿ-ಕಪ್ಪು ಬಣ್ಣದ್ದು…?…ಅಲ್ಲ…ಅಲ್ಲ…ಬರಿಯ ಭ್ರಮೆ. ಮಧ್ಯಾಹ್ನ, ಅರೆನಿದ್ದೆಯಲ್ಲಿದ್ದವನ ಕಿವಿಗೆ ದೇವಿ ಹೆದರಿದ ದನಿಯಲ್ಲಿ “ಅಮ್ಮಾ ಆ ದಿನ ಇಲ್ಲಿ ಬಂದದ್ದೇ ಈವತ್ತು ಕೊಟ್ಟಿಗೆಯ ಮಾಡಿನ ರೀಪುಗಳಲ್ಲಿ ಕಂಡಂತಾಯ್ತು. ಹೊಟ್ಟೆ ಬಾಲಗಳಷ್ಟೇ ಕಣ್ಣಿಗೆ ಬಿದ್ದುವು. ತನ್ನ ಹೆಜ್ಜೆಯ ಸುಳಿವು ಹತ್ತಿದ ಕೂಡಲೇ ಸರ್ ಸರ್ರೆಂದು ಹರಿದು ಹೋಗುತ್ತ ಒಮ್ಮೆ ಪುಸ್ ಎಂದು ಸದ್ದೂ ಮಾಡಿತು” ಎಂದು ಚಿಕ್ಕಮ್ಮನಿಗೆ ಹೇಳಿದ್ದು ಕೇಳಿಸಿ ಎಚ್ಚರಾದವನು ಮಾಡಿನ ಹಂಚುಗಳಲ್ಲಿ ನೋಡಿದ ಹಲ್ಲಿಯ ಬಾಲಕ್ಕೋ ಇಲಿಯ ಬಾಲಕ್ಕೋ ಇಲ್ಲದ ಅರ್ಥ ಹಚ್ಚಿ ಹೆದರಿರಬೇಕು ತಾನು! ಇಲ್ಲದಿದ್ದರೂ ಈ ಹಿತ್ತಿಲಲ್ಲಿ ಹಾವಿನ ಹಾವಳಿ ಬಹಳ ಇದೆಯಂತೆ: ಆಗ ಪುರುಷೋತ್ತಮ ಹೇಳಿರಲಿಲ್ಲವೆ? ಪುರುಷೋತ್ತಮ, ಅವನ ತಾಯಿ ಇದಕ್ಕೆಲ್ಲ ಹಚ್ಚಿದ ಅರ್ಥ ಸರಿಯಾದದ್ದೇ? ನಂಬಲು ಒಲ್ಲದವನಂತೆ ತಲೆ ಕೊಡವಿದ: ಚಿಕ್ಕಪ್ಪ ದೇವಿಯರ ನಡುವೆ ಅವರು ಕಲ್ಪಿಸಿಕೊಂಡಂತಹ ಸಂಬಂಧ ಇರುವುದು ಶಕ್ಯವೇ? ಅದೂ ಧಡಿಧಡೀ ಕಣ್ಣೆದುರಿಗೇ ತನ್ನ ಗಂಡ ಇನ್ನೊಬ್ಬಳೊಂದಿಗೆ-ಅದೂ ದೇವಿಯಂತಹ ಕೆಲಸದಾಕೆಯೊಂದಿಗೆ… ಚೇಛೇ ಛೇ! ಇಂತಹದರಲ್ಲಿ ಪುರುಷೋತ್ತಮನ ತಲೆ ಸುಪೀಕ ಎನ್ನುವುದು ಸುಳ್ಳಲ್ಲ; ಹೇಳ್ತಾ ಹೇಳ್ತಾ ಕೆಲಸದ ಹುಡುಗಿಯಾದರೇನಂತೆ! ಹ್ಯಾಗೆ ಇದ್ದಾಳೆ ಹೇಳು-ಕೈಚಿಟಿಕಿ ಹೊಡೆದರೆ ಚಿಮ್ಮುವಷ್ಟು ಮದ ತುಂಬಿದೆಯಲ್ಲವೇ ಮೈಯಲ್ಲಿ? ಎಂದು ಕಣ್ಣು ಮಿಟುಕಿಸಿ ಬಾಯಿ ಚಪ್ಪರಿಸಿದ ಹಾಳಾದವ. ಅವನ ತಾಯಿಯೋ-ಇನ್ನೊಂದು ಅವತಾರ! ದಿನವೂ ಭಟ್ಟರಿಂದ ಅನ್ನದ ನೈವೇದ್ಯ, ಪೂಜೆ ಪಡೆಯುತ್ತಿದ್ದ ದೇವರಿದ್ದ ಮನೆಯಲ್ಲಿ ನಡೆದ ಭ್ರಷ್ಟಾಚಾರದಿಂದಲೇ ಮನೆಯಲ್ಲಿ ತಿರುತಿರುಗಿ ಹಾವು ಹೋಗುತ್ತದಂತೆ. ಎಂತೆಂತಹ ಮಂತ್ರವಾದಿಗೂ ಬಗ್ಗುವುದಿಲ್ಲವಂತೆ. ಮುರ್ಕುಂಡೀ ದೇವಸ್ಥಾನದ ಗುನಗನಲ್ಲಿ, ಮ್ಹಾಂಕಾಳಮ್ಮನ ಗುಡಿಯ ಭಟ್ಟರಲ್ಲಿ ಕೇಳಿದಾಗ ಭ್ರಷ್ಟಾಚಾರದ್ದೇ ಹೇಳಿಕೆಯಾಯಿತಂತೆ (‘ಹಗಲಿಗೂ ಕತ್ತಲೆಯೆಂದು ದೇವರ ಕೋಣೆಯಲ್ಲೇ…ಥೂ ಥೂ ಹೇಳಲಿಕ್ಕೂ ಓಕರಿಕೆ ಬರ್ತದೆ ನೋಡ್…!’)…ಎಲ್ಲ ಚಾಡಿಖೋರರ ಕಲ್ಪನೆಯ ದಿವ್ಯಕತೆಗಳು. ಚಿಕ್ಕಮ್ಮನ ಆರೋಗ್ಯ ಮಾತ್ರ ತೀರ ಕೆಟ್ಟಿದೆ ಎನ್ನುವುದು ಸುಳ್ಳಲ್ಲ, ಹೊಟ್ಟೆಯಲ್ಲಿ ಹೊಕ್ಕುಳದ ಸುತ್ತಲೂ ಸದಾ ಉರಿಯುವ ನೋವು ಎಂದಳಲ್ಲ, ಬೆಳಿಗ್ಗೆ. ಕ್ಯಾನ್ಸರ್ ಗೀನ್ಸರ್ ಇರಬಹುದೇ? ಅಂತಹುದೇನಾದರೂ ಇದ್ದರೆ… ಛೇ, ಛೇ, ಇರಲಾರದು… ತನ್ನ ಇಲ್ಲದ ವಿಚಾರಗಳಿಗಾಗಿ ತನ್ನನ್ನೇ ಹಳಿದುಕೊಂಡ. ತನ್ನದು ಇಲ್ಲದ ಭಯ, ಭ್ರಮೆ ಎಂದುಕೊಂಡ. ತಾನು ಬಂದಂದಿನಿಂದಲೂ ಗಂಡಹೆಂಡಿರಿಬ್ಬರೂ ಎಷ್ಟೊಂದು ಗೆಲುವಾಗಿದ್ದಾರೆ. ಮಧ್ಯಾಹ್ನ ಊಟಕ್ಕೆಂದು ಚಿಕ್ಕಪ್ಪ ಅಂಗಡಿಯಿಂದ ಮನೆಗೆ ಬಂದಾಗಂತೂ ಹರಟೆ ಹೊಡೆಯುತ್ತ ತನ್ನನ್ನೂ ಚಿಕ್ಕಮ್ಮನನ್ನೂ ಎಷ್ಟುಂದುಎಷ್ಟೊಂದು ನಗಿಸಿರಲಿಲ್ಲ! ಆದರೂ ಚಿಕ್ಕಮ್ಮ ತುಂಬ ಕೃಶಳಾಗಿದ್ದು ನಿಜ. ನಕ್ಕರೂ ಗುಣಿ ಹೊಕ್ಕ ಕಣ್ಣುಗಳಲ್ಲಿ ಎಂತಹುದೋ ಹೆದರಿಕೆ ಇದ್ದಂತೆ ಇಲ್ಲವೇ? ಸಪೂರಾದ ಕೈಕಾಲುಗಳು, ಹೊಂಡಬಿದ್ದ ಗಲ್ಲ, ತುಸು ಬಗ್ಗಿದ ಬೆನ್ನು-ಏಕೋ ಅವಳನ್ನು ನೋಡಿದರೇ ಪಾಪ ಎನ್ನಿಸುತ್ತದೆ. ಮುಂಬಯಿಗೆ ಹೋದಮೇಲೆ ಅಪ್ಪ-ಅಮ್ಮರಿಗೆ ಹೇಳಬೇಕು. ಶಕ್ಯವಾದರೆ ಒಮ್ಮೆ ಮುಂಬಯಿಗೂ ಕರೆಯಿಸಿ ಅಲ್ಲಿಯ ಡಾಕ್ಟರರಿಗೆ ತೋರಿಸಬೇಕು…. ಚಿಕ್ಕಮ್ಮನ ಅನಾರೋಗ್ಯದ ವಿಚಾರ ಹುಟ್ಟಿಸಿದ ಅಸ್ವಸ್ಥತೆಯನ್ನು ಕಳೆಯಲೆಂಬಂತೆ, ಪುರುಷೋತ್ತಮ ದೇವಿಯ ಬಗ್ಗೆ ಹೇಳಿದ್ದನ್ನು ಮೆಲುಕುಹಾಕುತ್ತಾ ಕವುಚಿ ಮಲಗಿದ: ರಂಡೆ ಎಳ್ಳಷ್ಟೂ ನಾಚಿಕೆ ಇಲ್ಲದವಳಂತೆ. ಐದು ವರ್ಷಗಳ ಹಿಂದೆಯೇ ಲಗ್ನವಾಗಿತ್ತಂತೆ. ಲಗ್ನವಾದ ಕೆಲ ದಿನಗಳಲ್ಲೇ ಗಂಡ ಊರು ಬಿಟ್ಟು ಓಡಿ ಹೋದನಂತೆ. ಮೈಯ ಮೂಲೆಮೂಲೆಯಲ್ಲಿ ಮುಸುಮುಸು ಎನ್ನುತ್ತಿದ್ದ ಇವಳ ಪ್ರಾಯದ ಸೊಕ್ಕಿಗೆ ನಾಲಾಯಕನಾದವನಂತೆ…ಅದರಿಂದ ತನಗೇನಂತೆ! ಎಂತಂದುಕೊಂಡು ತಿರುಗಿ ಅಂಗಾತನಾದ. ಗೋಡೆಯ ಬದಿಗೆ ಮಾಡಿನ ಪಕಾಸುಗಳಿಂದ, ಹಗ್ಗದ ಜೋಲು-ಬುಟ್ಟಿಗಳಲ್ಲಿ ತೂಗುಬಿಟ್ಟ ಮೊಗೆಕಾಯಿಗಳ ಮೇಲೆ ಕಣ್ಣೂರಿದ. ಕಣ್ಣು ಮುಚ್ಚಿದ. ಮಗ್ಗುಲು ಸರಿದ: ಇಲ್ಲ, ನಿಜಕ್ಕೂ ಅವಳ ಆರೋಗ್ಯದಲ್ಲೇ ಎಂತಹುದೋ ಮಾದಕಶಕ್ತಿ ಇದೆ ಎನ್ನುವುದನ್ನು ಅವಳ ಮೇಲೇ ಉಪಕಾರ ಮಾಡುವವನಂತೆ ಒಪ್ಪಿಕೊಂಡು ತನಗೆ ಇದೀಗ ನೆನಪಿಗೆ ಬಂದುದನ್ನು ಸಮರ್ಥಿಸಿಕೊಂಡ: ಮಧ್ಯಾಹ್ನ, ಸ್ನಾನಕ್ಕೆಂದು ಬಚ್ಚಲು ಮನೆ ಹೊಕ್ಕಾಗ ಕದ ಅಡ್ಡಮಾಡಿಕೊಂಡು, ಮಸುಕುಮಸುಕು ಬೆಳಕನ್ನು ಒಳಗೆ ಬಿಡುತ್ತಿದ್ದ ಕಿಡಕಿಯೊಳಗಿಂದ ಹೊರಗೆ ನೋಡುತ್ತಿದ್ದಾಗ, ಕಿಡಕಿಯಿಂದ ತುಸು ದೂರದಲ್ಲಿ ತೆಂಗಿನಮರದ ಬುಡದಲ್ಲಿಯ ಕಲ್ಲುಮರಗಿಯಲ್ಲಿ ಅರಿವೆ ಒಗೆಯುತ್ತಿದ್ದ ದೇವಿ, ಒಗೆಯುವಾಗ ಒದ್ದೆಯಾಗಬಾರದೆಂದು ಸೀರೆಯನ್ನು ಮೇಲಕ್ಕೆತ್ತಿ ಗಂಡುಗಚ್ಚೆ ಹೊಡೆದದ್ದರಿಂದ ಬೆತ್ತಲೆಗೊಂಡ ಅವಳ ದುಂಡಗಿನ ನುಣುಪುನುಣುಪಾದ ತೊಡೆಗಳು ಕಣ್ಣಿಗೆ ಬಿದ್ದು, ಎದೆ ಝಲ್ಲೆಂದು ನಡುಗಿ, ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವೂ ಇಲ್ಲದವನಂತೆ, ಬಚ್ಚಲುಮನೆಯೊಳಗಿಂದ ಮಬ್ಬುಗತ್ತಲೆಯಲ್ಲಿ ನಿಂತ ತಾನು ಏನು ಹೊರಗಿನ ಬೆಳಕಿನಲ್ಲಿದ್ದ ದೇವಿಗೆ ಕಾಣಿಸಲಿಕ್ಕಿಲ್ಲ ಎಂಬ ಧೈರ್ಯದಿಂದಲೋ, ಕಂಡರೂ ಪರಿವೆ ಇಲ್ಲವೆಂಬಂಥ ಎಚ್ಚರಗೇಡಿತನದಿಂದಲೋ ಜಳಕ ಮಾಡುವುದನ್ನೂ ಮರೆತು ಕಿಡಕಿಯ ಹತ್ತಿರ ಸರಿದು ಕಿಡಕಿಯ ಸರಳುಗಳಿಗೆ ಹಣೆ ಆನಿಸಿ ನಿಂತಿದ್ದ. ಇವನು ಬಚ್ಚಲು ಮನೆ ಸೇರಿದ್ದರ ಸುಳುವು ಹತ್ತಿದಂತಿದ್ದ ದೇವಿ(ಸ್ನಾನಕ್ಕೆ ಬರಲು ಹೇಳಿದವಳೇ ಅವಳಲ್ಲವೆ!)ಒಗೆಯುವ ಕಲ್ಲಿನಿಂದ ಎದ್ದು ಕಿಡಕಿಯ ಹೊರಗಿನ ಬಾಳೆಯ ಹಿಂಡಿನವರೆಗೂ ಬಂದು-ಹಾಗೇಕೆ ನೋಡುತ್ತೀರಾ ಎನ್ನುವ ಧಾಟಿಯಲ್ಲಿ- “ಹಂಡೆಗೆ ನೀರು-ಗೀರು ಬೇಕಾಗಿತ್ತರಾ ಒಡೆಯಾ?” ಎಂದು ಕೇಳಿದಾಗಿನ ಅವಳ ಮೈಯ ವೈಯಾರದ ನೆನಪಾಗಿ…ಥೂ ಥೂಥೂ ತನಗಿಂದಾದುದಾದರೂ ಏನು? ನಾಲ್ಕು ದಿನಗಳ ಮಾತಿಗೆಂದು ಚಿಕ್ಕಪ್ಪನ ಮನೆಗೆ ಬಂದ ತಾನು ಎಲ್ಲವನ್ನೂ ಬಿಟ್ಟು ಅವರ ಮನೆಯ ಕೆಲಸದಾಕೆಯ ತಪ್ಪಿ ಕಣ್ಣಿಗೆ ಬಿದ್ದ ಮೊಲೆ ತೊಡೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೇನಲ್ಲ ಎಂದುಕೊಂಡವನೇ ಹಾಸಿಗೆಯಲ್ಲಿ ಎದ್ದೇ ಕುಳಿತ. ಯಾರ ಮೇಲಿನದೋ ಸಿಟ್ಟಿನಿಂದೆಂಬಂತೆ ವಿಚಾರಮಾಡುವ ಮೊದಲೇ ಪೂ ಎಂದು ದೀಪ ಆರಿಸಿಬಿಟ್ಟ. ಸುತ್ತಲೂ ಒಮ್ಮೆಲೆ ನೆಲೆಸಿದ ದಟ್ಟ ಕತ್ತಲೆಯನ್ನು ಕಂಡದ್ದೇ ತನ್ನ ಹುಚ್ಚುತನವನ್ನು ನೆನೆದು ಹೆದರಿದ, ಆದರೂ, ಜತೆಗಿಟ್ಟುಕೊಂಡ-ಮುಂಬಯಿಯಿಂದ ತಂದ-ಬ್ಯಾಟರಿಯ ನೆನಪಾಗಿ ಧೈರ್ಯ ಬಂತು. ಬ್ಯಾಟರಿಯ ಚಕ್ರ-ಚಕ್ರಾಕಾರದ ಬೆಳಕನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಬಿಟ್ಟು ನೋಡಿದ, ಕೆಳಗೆ, ಚಿಕ್ಕಮ್ಮ, ಚಿಕ್ಕಪ್ಪ, ದೇವಿ ಕೂಡ(?)ಎಲ್ಲ ನಿದ್ದೆ ಹೋಗಿರಬೇಕು. ಎಲ್ಲವೂ ಸ್ತಬ್ದ, ನಿಶ್ಯಬ್ದ. ಕಟಕಟೆಯ ಹೊರಗೆ, ನಕ್ಷತ್ರಗಳ ಬೆಳಕಿನಲ್ಲಿ ನೆರಳುನೆರಳಾಗಿ ತೋರುವ ಹಿತ್ತಿಲುಗಳಲ್ಲಿ ಹುಡುಕಿ ನೋಡಿದರೂ ಎಲ್ಲೂ ಬೆಳಕು ತೋರಲಿಲ್ಲ. ದೂರದ ಒಕ್ಕಲಕೇರಿಯೊಂದರಿಂದ ಗುಮ್ಮಟೆಗಳ ದನಿ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಈ ಬದಿಯ ಕೇರಿಯಲ್ಲೆಲ್ಲೋ ನಾಯಿ ಬೊಗಳಿತು: ಉತ್ತುಮಿಯ ಹಿತ್ತಿಲಲ್ಲಿ ಯಾರೋ ಹೊಕ್ಕಿರಬೇಕು ಎಂದುಕೊಂಡ. (ಈ ಹಳ್ಳಿಯಲ್ಲಿ ಉತ್ತುಮಿಯೊಬ್ಬಳೇ ಸೂಳೆಯೆ?) ‘ಅಬ್ಬ ರಾತ್ರಿಯಾದದ್ದೇ ತಿಳಿಯಲಿಲ್ಲವಲ್ಲ! +ತುಂಬ ಸೆಖೆಯಲ್ಲವೆ.ಗಾಳಿ ಎಲ್ಲಿ ಬೇಪತ್ತೆಯಾಯಿತೋ ಎನ್ನುತ್ತ ಅಂಗಾತ ಮಲಗಿದ. ಹೊತ್ತು ಸರಿದಂತೆ ಮೇಲಿನ ಮಾಡಿನಲ್ಲಿ ಕಂಡ ಬಾಲದ ನೆನಪಾಗಿ, ಬಾಲವಿದ್ದ ಉದ್ದನ್ನ ಜೀವವೊಂದು ಮಾಡಿನಿಂದ ಎದೆಯಮೇಲೇ ತೂಗುತ್ತಿದ್ದುದರ ಅನುಭವವಾಗಿ, ಹಾಸಿಗೆಯಲ್ಲಿ ಎದ್ದೇ ಕುಳಿತ. ಬ್ಯಾಟರಿಯ ಸ್ವಿಚ್ಚನ್ನೊತ್ತಿದ: ಏನೂ ಇರಲಿಲ್ಲ. ಸಾಯಲಿ. ಮಂಚವನ್ನೇ ಇಲ್ಲಿಂದ ಸರಿಸಿದರೆ ಹೇಗೆ? ಕೆಳಗೆ ಯಾರೋ ಗುಟ್ಟಾಗಿ ಕೆಮ್ಮಿದ ದನಿ, ಬಳೆಗಳ ಕಿಂಕಿಣ: ದೇವಿಯಲ್ಲವೇ? ಸತ್ತವಳಿಗೆ ಎಚ್ಚರವಿದೆಯೇನೋ, ತನಗಿನ್ನೂ ಎಚ್ಚರವಿದ್ದುದರ ಸುಳುವು ಹತ್ತಿಲ್ಲ ತಾನೇ! ಮಂಚ ಸರಿಸಿದರೆ ಸದ್ದಾಗಿ ಪೂರ ಎಚ್ಚರಗೊಳ್ಳುವಳೇನೋ. ದಪ್ಪ ದಪ್ಪ ಹಲಗೆಯ ಹಳೇ ಕಾಲದ ಮಂಚವನ್ನು ತನ್ನೊಬ್ಬನಿಂದ ಸರಿಸಲು ಆಗಬೇಕಲ್ಲ ಮೇಲಾಗಿ! ಹಳೇ ಕಾಲದ ಮನೆಯ ಈ ಅವಾಢವ್ಯವಾದ ಮಾಳಿಗೆ ಇಡೀದರ ಮೇಲೆ ತಾನೊಬ್ಬನೇ ಎಂಬುದರ ಅರಿವು ಬಂದದ್ದೇ ಸಣ್ಣಗೆ ನಡುಗಿದ. ದೇವಿ ಎದ್ದು ಮೇಲೆ ಬಂದರೆ! ಈ ಹಾಳು ಮಾಳಿಗೆಗೆ ಕದಗಳೂ ಇಲ್ಲ ಬೇರೆ. ಬಂದವಳೇ ತನ್ನ ಹಾಸಿಗೆ ಸೇರಿಬಿಟ್ಟರೆ?…ಸತ್ತವಳು ಕೆಮ್ಮುವುದೂ ನಿಂತಿತಲ್ಲ. ಓ! ಕೆಲಹೊತ್ತಿನ ಮೊದಲಷ್ಟೇ ಚಿಕ್ಕಪ್ಪನ ಕೋಣೆಯ ಕದ ತೆರೆದ ಸದ್ದು ಕೇಳಿಸಿರಲಿಲ್ಲವೇ?…ಹಾಳಾದವಳು ಅದಾಗಲೇ ಅವನಿದ್ದಲ್ಲಿಗೇ ಹೋದಳೇನೋ…ಥೂ ಥೂ ಥೂ…ಪುರುಷೋತ್ತಮ ಹೇಳಿದ್ದೇ ನಿಜವಿರಬಹುದೇ?…ಹೋಗಲಿ, ಹೋಗಿ ಸಾಯಲಿ, ತನಗೇನಂತೆ ಎಂದು ತಡಪಡಿಸುತ್ತ ತಿರುಗಿ ಹಾಸಿಗೆಯಲ್ಲೊರಗಿದ. ಒರಗಿ, ತನಗೆ ಇದೀಗ ಬಂದ ಸಿಟ್ಟಿನ ಬಗ್ಗೆ ತಾನೇ ಅಚ್ಚರಿಪಟ್ಟು, ಹಾಗಿರಲಾರದು-ಪುರುಷೋತ್ತಮನ ಮಾತು ನಿಜವಿರಲಾರದು ಎಂದುಕೊಂಡ. +ಮಾಡಿನಲ್ಲಿ ಸರಸರವೆಂದು ಸದ್ದೇ? ಸರಕ್ಕನೆ ಬ್ಯಾಟರಿಗೆ ಕೈಹಾಕಿ ಬೆಳಕು ತೂರಿದ. ಏನಾದರೂ ಕಾಣಿಸುತ್ತಿದೆಯೇ? ಅದೇನದು? ಅಲ್ಲಿ ಆ ಪಕಾಸಿನ ಮರೆಯಲ್ಲಿ? ಸಾಯಲಿ, ಇಲ್ಲಿಂದ ಏಳುವುದೇ ಒಳ್ಳೆಯದೇನೋ. ಹಾಸಿಗೆಯನ್ನೇ ಇಲ್ಲಿಂದ ಎತ್ತಿ ಒಯ್ದು ಹಾಲಿನ ಮಧ್ಯದಲ್ಲಿ ಹಾಕಿ ಮಲಗಿದರೆ ಹೇಗೆ? ಎಂದವನೇ ಎದ್ದ. ಅಬ್ಬ ಎಂತಹ ಸೆಕೆ. ಹಾಸಿಗೆ ಇಲ್ಲದೇನೇ ತಂಪು ನೆಲದ ಮೇಲೆ ಮಲಗಿದರೆ? ಬೇಡ, ಕೆಟ್ಟ ಹಾವಿನ ಭಯ ಬೇರೆ ಎನ್ನುತ್ತ ಕತ್ತಲೆಯಲ್ಲೇ ಹಾಸಿಗೆಯ ಸುರುಳಿ ಸುತ್ತಹತ್ತಿದ. +* +* +* +ದನಗಳ ಕೊಟ್ಟಿಗೆಯಲ್ಲಿ ಹಾವು ಕಂಡು ಹೆದರಿದ ದೇವಿಯ ಮಾತುಗಳು ನೆನಪಿಗೆ ಬಂದು ಮಲಗುವ ಕೋಣೆಯ ಕದ ಮುಚ್ಚುವ ಧೈರ್ಯವಾಗದೇ ಅವನ್ನು ತೆರೆದಿಟ್ಟೆ ಚಿಕ್ಕಮ್ಮ ಹಾಸಿಗೆಗೆ ಬಂದಲುಬಂದಳು. ಹಾಸಿಗೆಗೆ ಬೆನ್ನು ತಾಗಿಸಿದ್ದೇ ಇನ್ನೇನನ್ನೋ ನೆನೆದು ನಡುಗಿದಳು. ಮಧ್ಯಾಹ್ನ ಊಟವಾದ ಮೇಲೆ ತಿರುಗಿ ಅಂಗಡಿಗೆ ಹೊರಡುವಾಗ ಗಂಡ, ತನ್ನನ್ನು ಅಡುಗೆಮನೆಯಲ್ಲೊಬ್ಬಳೇ ಇದ್ದಾಗ ಸಂಧಿಸಿ, ಇವತ್ತು ಒಳ್ಳೇ ಖುಷಿಯಲ್ಲಿ ಇದ್ದಂತೆ ತೋರುತ್ತಿದೆಯಲ್ಲ; ಜೀವದಲ್ಲಿ ಈಗ ಹರುಷವೆನಿಸುತ್ತದೆಯೇ? ಎಂದು ಕೇಳುತ್ತ ಕಣ್ಣು ಮಿಟುಕಿಸಿದ್ದರ ನೆನಪು ಈಗ ಹಠಾತ್ತನೆ ಬಂದು ಗಡಗಡ ನಡುಗಿ, ಅಯ್ಯೋ ದೇವರೇ ಅವರು ಇವತ್ತು ನನ್ನ ಹತ್ತಿರ ಬಂದರೆ ನಾನು ಸತ್ತೇಹೋಗುತ್ತೇನೆ. ಎಂದುಕೊಂಡಳು. ಪಾಪ! ಹುಡುಗ ಅಪರೂಪಕ್ಕೆ ಊರಿಗೆ ಬಂದಾಗಲೂ ಹಾಸಿಗೆ ಹಿಡಿದು ಮಲಗಿರಬೇಕೇ ಎಂದುಕೊಂಡು ಗೆಲುವು ನಟಿಸಿ ಓಡಾಡಿದ್ದನ್ನೇ ಇವರು ತಪ್ಪು ತಿಳಿದರಲ್ಲ. ಹೊಟ್ಟೆಯಲ್ಲಿಂದ ವಿಪರೀತ ನೋವು…..ಮತ್ತೆ ಜ್ವರ ಬರುವಂತೆ ತೋರುತ್ತದೆ. ಅಂತಹಳನ್ನುಅಂತಹವಳನ್ನು…ಚಿಕ್ಕಮ್ಮನ ಮೈಮೇಲೆ ಮುಳ್ಳು ನಿಂತವು. ಗಂಡ ಆಚೆಯ ಕೋಣೆಯಲ್ಲಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತ ಕುಳಿತಿದ್ದ…ತನ್ನ ಬಳೆಗಳ ಸದ್ದನ್ನು ಅಪಾರ್ಥಮಾಡಿ ಸಣ್ಣಗೆ ಕೆಮ್ಮಿದರೆ? ‘ಬಂದೆ ಎಂದಂತೆ ಕೇಳಿಸಿತೆ? ಚಿಕ್ಕಮ್ಮ ನಡುಗುವ ಹೆಜ್ಜೆ ಇಡುತ್ತ, ಅರಿವಿಲ್ಲದೇನೇ ಕೋಣೆಯ ಕದ ಮುಚ್ಚಿ ಅಗಳಿ ಇಟ್ಟಳು…ದೇವಿಗೂ ಹೇಳಿದ್ದೇನೆ. ಇದು ಪಾಪವೇ ದೇವರೇ? ರೋಗದಿಂದ ಹಣ್ಣಾದ ನನ್ನನ್ನೇ ಕೂಡಬೇಕೆನ್ನುವುದು ಯಾವ ನ್ಯಾಯ. ನನ್ನ ಆರೋಗ್ಯ ಸರಿಯಾಗಿದ್ದಾಗ ಬೇಕಾದಷ್ಟು ಸುಖ ಕೊಡಲಿಲ್ಲವೇ? ಬೇರೆ ಮದುವೆಯಾಗಿ ಎಂದೆ. ಆ ಮಾತನಾಡಬೇಡ ಎನ್ನುತ್ತಾರೆ.(ಇನ್ನೊಂದು ಮದುವೆಯಾಗುವ ವಯಸ್ಸೇ ಇದು! ಕಾಯದೆಯ ಮಾತು ಬೇರೆ) ನನ್ನ ಮೇಲೆ ಅಷ್ಟು ಪ್ರೀತಿಯಂತೆ. ಬರೇ ದೇಹ ಸುಖಕ್ಕೆಂದಾದರೆ ಬೇರೆ ಯಾರನ್ನಾದರೂ…ನನ್ನ ಸೂಚನೆಗೇ ಕೆರಳಿ ಹಾರಾಡಿರಲಿಲ್ಲವೇ ಇದನ್ನು ಹೇಳಿದ ದಿನ! “ನನ್ನ ಮೇಲೆ ನನಗೆ ಅಷ್ಟೂ ತಾಬೆಯಿಲ್ಲ ಎಂದು ಬಗೆದೆಯಾ. ಇನ್ನು ನಿನ್ನ ದೇಹಕ್ಕೆ ಮುಟ್ಟಿದರೆ ಆಣೆ” ಎಂದರು. ಹೇಳಿದ ಎಂಟು ದಿನ ಮಾತ್ರ ದೂರ ಉಳಿದರು. ಮತ್ತೆ ಯಥಾಸ್ಥಿತಿ. ಮಕ್ಕಳು ಮನೆಯಲ್ಲಿದ್ದಾಗ ಅವರಾದರೂ ನನ್ನ ರಕ್ಷಣೆಗೆ ಉಪಯೋಗ ಬೀಳುತ್ತಿದ್ದರು. ಈಗ ಇಬ್ಬರೂ ಶಿಕ್ಷಣಕ್ಕೆಂದು ಮನೆಯಿಂದ ದೂರ…ನಾನೇ ಕೊನೆಗೆ ದೇವಿಯನ್ನು ಕೆಲಸದ ನೆವಮಾಡಿ ಮನೆಯಲ್ಲಿಟ್ಟುಕೊಂಡೆ. ಪಾಪ-ಪುಣ್ಯಗಳ ಪರಿವೆ ಇಲ್ಲದೇನೆ-ನಾಚಿಕೆ ಬಿಟ್ಟೇ, ದೇವಿಗೆ ಎಲ್ಲ ಹೇಳಿದೆ. ಆದರೇಕೋ ಅವಳೆಂದರೆ ಅವರಿಗೆ ಹೆದರಿಕೆ, ಲೆಕ್ಕ ಬರೆಯುವಾಗಲೂ ಕೋಣೆಯ ಕದಕ್ಕೆ ಅಗಳಿ ಇತ್ತೇ ಕೂತಿರುತ್ತಾರೆ. +ತಿರುಗಿ ಕೆಮ್ಮಿದ ಸದ್ದೇ? ದೇವಿಯ ಬಳೆಗಳ ಸದ್ದಲ್ಲವೇ? ಇವರ ಕೋಣೆಯ ಬದಿಗೇ ಹಾಸಿಗೆ ಹಾಕುತ್ತಿದ್ದುದನ್ನು ನೋಡಿದ್ದೆ. ತುಸು ಹೊತ್ತು ಅವಳಾದರೂ ಎಚ್ಚರವಿದ್ದರೆ ಅವರು ಕೋಣೆಯ ಹೊರಗೆ ಬರಲು ಅಳುಕಬಹುದಿತ್ತೇನೋ…ಚಿಕ್ಕಮ್ಮ ಕೋಣೆಯೊಳಗಿನ ದೀಪ ಆರಿಸಿದಳು. ಎಲ್ಲವೂ ಸ್ತಬ್ದ, ನಿಶ್ಯಬ್ದ. ಮಂಚದ ಬುಡಕ್ಕೆ ಏನೋ ಸದ್ದು. ಇಲ್ಲಿ ಇದ್ದೀತೇ? ಅದೆ! ಪುಸ್ ಎಂದಂತೆ ಕೇಳಿಸಿತಲ್ಲವೇ? ತಾನು ಆಗ ಗಂಡನ ಭಯದಿಂದ ಕೋಣೆಯ ಕದ ಮುಚ್ಚಿ ಅಗಳಿ ಇಟ್ಟುದುದರ ನೆನಪು ಬಂದಾಗಂತೂ ಚಿಕ್ಕಮ್ಮನಿಗೆ ಕೋಣೆಯೊಳಗಿನ ಕತ್ತಲೆ ಭಯಾನಕವಾಗಹತ್ತಿತು. ಹೊತ್ತುಹೋದಂತೆ ಮಂಚದಡಿಯಲ್ಲಿ ಪುಸ್ ಎಂದದ್ದು, ಉದ್ದುದ್ದ ಜೋಡುನಾಲಗೆ ಚಾಚುತ್ತ ಮೆಲ್ಲಗೆ ಮಂಚದ ಕಾಲಿನ ಮೇಲೆ ಹತ್ತಿ ಹತ್ತಿರ ಹತ್ತಿರ ಬರುತ್ತಿದ್ದ ಭಾಸವಾಗಿ, ಕೋಣೆಯ ಕದ ಮುಚ್ಚಿ ದೀಪ ಆರಿಸಿ ಮಲಗುವುದು ಶಕ್ಯವೇ ಇಲ್ಲವೆನಿಸಿ ಭಡಕ್ಕನೆ ಎದ್ದು ಕುಳಿತಳು. ಅದೆ! ಗಂಡನ ಕೋಣೆಯಲ್ಲಿಯ ಸದ್ದೇನೋ. ಬಾಗಿಲು ತೆರೆದು ಇತ್ತಲೇ ಬರುವರೇನೋ. ನನ್ನನ್ನು ಪೂರ ತಪ್ಪೇ ತಿಳಿಯುವರೇನೋ. ಬೇಡ ಇಲ್ಲಿ ಮಲಗುವುದೇ ಬೇಡ, ಅಲ್ಲೇ ಹೋಗ್ತೇನೆ, ಅಲ್ಲಿಗೆ ಹೋಗುವುದೇ ಒಳ್ಳೆಯದೇನೋ. ಸಂಜೆ ಅದೇ ವಿಚಾರ ಬಂದಿತ್ತು. ಹೇಗೆ ಮರೆತೇ ಹೋಯಿತೋ. ಅಲ್ಲಿ ಹೋದರಾದರೂ ಅವರಿಗೆ ತನ್ನ ಖುಷಿಗೆ ಮಾಡಿದ ಅಪಾರ್ಥದ ಅರಿವಾಗಬಹುದೇನೋ. ಬದುಕಬಹುದೇನೋ…. +ಚಿಕ್ಕಮ್ಮ ಭಡಕ್ಕನೆ ಹಾಸಿಗೆಯಿಂದ ಎದ್ದಳು. ಕತ್ತಲೆಯಲ್ಲೇ ಕೋಣೆಯ ಕದ ತೆರೆದಳು ಹೊರಗೆ ನಡೆದಳು. +* +* +* +ಹೆಂಡತಿಯ ಕೋಣೆಯ ಕದ ತೆರೆದ ಸದ್ದು ಕೇಳಿಸಿ ‘ಬಂದೆ’ ಎನ್ನುತ್ತ ಲೆಕ್ಕದ ಪುಸ್ತಕಗಳನ್ನು ಮುಚ್ಚಿಟ್ಟು, ದೀಪ ಆರಿಸಿ, ಕೋಣೆಯ ಕದ ತೆರೆದು, ನಡುವಿನ ಹಾಲಿನಲ್ಲಿ ಕಾಲಿಟ್ಟದ್ದೇ ಮನೆಯೆಲ್ಲ ಕತ್ತಲೆಯಲ್ಲಿ ಮುಳುಗಿದ್ದನ್ನು ಕಂಡು, ಚಿಕ್ಕಪ್ಪನಿಗೆ ಒಂದು ಕ್ಷಣ ಎದೆ ಧಸ್ ಎಂದಿತು. ಅಬ್ಬ ರಾತ್ರಿ ಸರಿದದ್ದೇ ತಿಳಿಯಲಿಲ್ಲವಲ್ಲ, ಹಾಳು ಲೆಕ್ಕ ಬರೆಯುವ ಗೊಂದಲದಲ್ಲಿ, ಎಷ್ಟೊಂದು ಹಾದಿ ನೋಡಿದಳೋ ಎಂದುಕೊಳ್ಳುತ್ತ ಹೆಂಡತಿಯ ಕೋಣೆ ಸೇರಿ, ಕದ ಮುಚ್ಚುವಾಗ ಒಳಜಗಲಿಯಮೇಲೆ ಮಲಗಿದ ದೇವಿಯ ಬಳೆಗಳ ಸದ್ದು ಕೇಳಿಸಿದರೂ ಅತ್ತ ಲಕ್ಷ್ಯ ಕೊಡದೇ ಅಗಳಿ ಇಟ್ಟು, ಇಷ್ಟು ಬೇಗ ದೀಪ ಆರಿಸಿಬಿಟ್ಟೆಯಾ ಎಂದು ಕೇಳುತ್ತ ಹಾಸಿಗೆಯನ್ನು ಸಮೀಪಿಸಿ, ಹಾಸಿಗೆಯಲ್ಲಿ ಬಳಸಿ ನೋಡಿದಾಗ ಹೆಂಡತಿ ಹಾಸಿಗೆಯಲ್ಲಿ ಇಲ್ಲದ್ದು ಗಮನಕ್ಕೆ ಬಂದು ಥೂ ಎಂದಿನದೇ ಹಾಡು ಎಂದುಕೊಳ್ಳುತ್ತ ತಲೆ ಕೆಡಿಸಿಕೊಂಡರು. ಆಗಿನಿಂದಲೂ ಇಲ್ಲದ ಆಸೆ ತೋರಿಸಿ ಈಗ ಹೇಳದೇ ಕೇಳದೇ ಹಾಳಾದವಳು ಪಾರ್ವತಿಯ ಮನೆಗೆ ಹೋಗಿರಬೇಕು ಮಲಗಲಿಕ್ಕೆ. ಆ ಹಾಳು ಬೋಳಿಗೂ ತಲೆಯಿಲ್ಲ. ಲಗ್ನವಾದ ಹೆಂಗಸು ಗಂಡನೊಂದಿಗೆ ಮಲಗದೇನೇ ಹೀಗೆ ಥತ್. ರೋಗವಂತೆ! ಹೊಟ್ಟೆನೋವಂತೆ ಮಣ್ಣಂತೆ ಮಸಣವಂತೆ! ಎಲ್ಲ ಠಕ್ಕು, ಎಂದುಕೊಳ್ಳುತ್ತ ಕಿಡಿಕಿಡಿಯಾದರು. ಬೇರೆ ಯಾರೊಡನೆಯಾದರೂ ಮಲಗಬಹುದಂತೆ, ಇದು ಶಕ್ಯವೆ?-ಇವಳಿಗಿದನ್ನು ಹೇಳಲು ಬಾಯಾದರೂ ಹೇಗೆ ಬಂತೋ ಅಂತೇನೆ. ಹಿರಿಯರು ದೇವರು ಮೆಚ್ಚುವ ಕೆಲಸವೇ ಇದು? ಯಾವ ಗರತಿಯು ಅನ್ನುವ ಮಾತೇ ಇದು? ನಾನೆಂದರೆ ಅಷ್ಟೊಂದು ಲಂಪಟನೆ? ಇಪ್ಪತ್ತು ವರ್ಷಗಳ ದಾಂಪತ್ಯದಲ್ಲಿ ಒಮ್ಮೆಯಾದರೂ ಇವಳಿಗೆ ಎರಡು ಬಗೆದಿದ್ದೇನೆಯೇ? ಇಪ್ಪತ್ತು ವರ್ಷ ಒಂದೇ ದೇಹಕ್ಕೆ ಹೊಂದಿಕೊಂಡಿದ್ದ ಮನಸ್ಸು ಒಮ್ಮೆಲೇ ಹೀಗೆ….ಆದರೂ ಒಮ್ಮೆ ಹೋಗಿದ್ದೆ ಉತ್ತುಮಿಯ ಮನೆಗೆ, ಮನಸ್ಸು ಗಟ್ಟಿಮಾಡಿ-ಹೀಗೇ ಬಯಸಿ ಬಂದಾಗ ಇವಳು ಹಾಸಿಗೆ ಬಿಟ್ಟು ಪಾರ್ವತಿಯ ಮನೆಗೆ‌ಓಡಿಹೋದ ಒಂದು ರಾತ್ರಿ, ಇವಳ ಮೇಲಿನ ಸಿಟ್ಟಿನಿಂದ, ಜಿದ್ದಿನಿಂದ. (ಒಳಗೆಲ್ಲೋ, ಒಮ್ಮೆ ಹೋಗಿಯೇ ನೋಡಿದರೇನಂತೆ ಇನ್ನೊಬ್ಬ ಹೆಣ್ಣಿನ ದೇಹ ಹೇಗಿರುತ್ತದೆಯೋ ಎಂದು, ಎಂದೆನಿಸಿರಲಿಲ್ಲವೆ?) ಉತ್ತುಮಿಯ ದಣಪೆಯಲ್ಲೇ ಧತ್ ಎಂದು ಕಣ್ಣಿಗೆ ಬಿದ್ದವನು ಅವಳ ದರಿದ್ರ ತಮ್ಮ ಸಂಕಪ್ಪ. ಎಲ್ಲಿಗೆ ಬಂದಿರಿ ದೇವರೂ ಎಂದು ಕೇಳಿದವನೇ ದನಪೆಯ ಕಲ್ಲಿನಿಂದ ಭಡಕ್ಕನೆ ಕೆಳಗೆ ಧುಮುಕಿ ನಿಂತಿದ್ದನಲ್ಲ! ಅವನು ‘ದೇವರೂ’ ಎಂದು ಕರೆದದ್ದು ಕೇಳಿದ್ದೆ ಅವನ ಪ್ರಶ್ನೆಗೆ ಉತ್ತರ ಕೊಡುವ ಮೊದಲೇ, ಅವನು ನನ್ನ ಬಗ್ಗೆ ಏನು ತಿಳಿಯುವನೋ ಎಂಬುದನ್ನು ಕೂಡ ಲೆಕ್ಕಿಸದೇ ಭರಭರನೆ ಮನೆಗೆ ಹಿಂತಿರುಗಿದ್ದೆ. ನಾನು ಬಹು ದೊಡ್ಡ ಮನುಷ್ಯ ಎಂದು ಗೌರವ ಇಟ್ಟುಕೊಂಡ, ಕಣ್ಣ ಮುಂದೆ ಆಡಿ, ಓಡಿ ದೊಡ್ಡವಳಾದ ಉತ್ತುಮಿಯ ಜತೆ…ಥೂ ಥೂ ನನಗೆ ಹೇಗಾದರೂ ಬುದ್ಧಿ ಬಂತೋ. ಇದಕ್ಕೆಲ್ಲ ಕಾರಣವಾದ ತಮ್ಮ ಹೆಂಡತಿಯ ಮೇಲೆ ಈಗ-ಅದೆಲ್ಲದರ ನೆನಪಿನಿಂದಲೇ ಚಿಕ್ಕಪ್ಪನಿಗೆ ಇನ್ನೊಮ್ಮೆ ಸಿಟ್ಟು ಬಂದಿತು…ಹೊರಗೆಲ್ಲೋ ಬಳೆಗಳ ಸದ್ದು, ಒಳಜಗಲಿಯ ಮೇಲೆ ದೇವಿ ಇದ್ದುದರ ನೆನಪು ಬಂದು ಅರೇ! ಆಗಿನಿಂದಲೂ ಅವಳನ್ನು ಹೇಗೆ ಮರೆತೆನೋ ಅನ್ನಿಸಿತು. ಇವಳನ್ನು ಮನೆಯಲ್ಲಿ ತಂದಿಟ್ಟುಕೊಂಡದ್ದು ಯಾಕೆಂದು ಗೊತ್ತಿಲ್ಲವೇ? ಊರಲ್ಲೆಲ್ಲ ನನ್ನ ಮಾನ ಹಾಳು. ನಾನು ಇವಳನ್ನು ಇಟ್ಟುಕೊಂಡಿದ್ದೇನಂತೆ. ಒಮ್ಮೊಮ್ಮೆ ಅವಳ ವಯ್ಯಾರ, ಮರುಕ ನೋಡಿ ಮನಸ್ಸು ಚಂಚಲವಾದಾಗ….ಆದರೂ ಎಂತಹುದೋ ಹೆದರಿಕೆ, ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ಮಾಡದೇ ಇದ್ದುದನ್ನು ಈಗ…. ಹೆಂಡತಿಯ ಒಪ್ಪಿಗೆಯಿಂದ ಹ್! ಎಂದು ಹಾಸಿಗೆಯಲ್ಲಿ ಎದ್ದೇ ಕುಳಿತರು ಚಿಕ್ಕಪ್ಪ, ಹೆಂಡತಿ ಆಗ ಒಮ್ಮೆಲೇ ಕೋಣೆ ಬಿಟ್ಟು ಹೊರಗೆ ಹೋದುದರ ಸರಿಯಾದ ಅರ್ಥ ಈಗ ಆಯಿತೆನ್ನುವವರಂತೆ ಕುಳಿತಲ್ಲೇ ನಡುಗಿದರು. ದೇವಿ ಈ ಮನೆಗೆ ಬಂದ ಮೆಲೆಮೇಲೆ ಇವಳು ಪಾರ್ವತಿಯ ಮನೆಗೆ ಹೀಗೆ ಹೊರಟುಹೋದದ್ದು ಇದೇ ಮೊದಲು! ಈಗ ತಿಳಿಯಿತು. ಬೆಳಗಿನಿಂದಲೂ ದೇವಿ ನಡೆಸಿದ ಒನಪು ವಯ್ಯಾರಗಳ ಅರ್ಥ ಈಗಾಯಿತು. ಇದೆಲ್ಲ ಇವರದೇ ಕಾರಸ್ಥಾನ. ಕತ್ತಲೆ ತುಂಬಿದ ಮನೆಯಲ್ಲಿ ಮಾಳಿಗೆಯ ಕೆಳಗೆ ನಾವಿಬ್ಬರೇ, ನಾನಿಲ್ಲಿ; ಹೊರಗೆ ಒಳಜಗಲಿಯಲ್ಲಿ ಈ ಕಳ್ಳ ಹಾದರಗಿತ್ತಿ! ಗಂಡ ಊರುಬಿಟ್ಟು ಓಡಿಹೋದಮೇಲೆ (ಅವನೊಬ್ಬ ಮಳ್ಳ ಹನುಮ!) ನಾಡೂ ಮಾಸ್ಕೇರಿಯ ಆದೇವಪ್ಪ ಇವಳನ್ನು ಇಟ್ಟುಕೊಂಡಿದ್ದಾನೆ ಎಂದು ಕೇಳಿದ್ದೆ. ಅವನನ್ನು ಬಿಟ್ಟು ಇಲ್ಲಿ ಯಾಕೆ….ದೇವಿಯ ವಿಚಾರದಿಂದಲೋ ಏನೋ ಚಿಕ್ಕಪ್ಪನಿಗೆ ತೊಡೆಗಳಲ್ಲೇ ನಡುಕ ಬಂದಂತಾಯಿತು. ಥೂ! ಈ ಕಳ್ಳ ಹಾದರಗಿತ್ತಿ ಮೆಲ್ಲನೆ ಎದ್ದು ಇಲ್ಲಿ ಬಂದುಬಿಟ್ಟರೆ…ಬಂದು ಕದ ಬಡಿದೇ ಬಿಟ್ಟರೆ….ನಾ ತಪ್ಪಿ ಕದ ತೆರೆದೇ ಬಿಟ್ಟರೆ….ಇಷ್ಟು ವರ್ಷ ಮಾಡದೇ ಇದ್ದುದನ್ನು ಈಗ… ಎಲ್ಲರನ್ನು ಬಿಟ್ಟು ಈ….ಅಂಗಡಿಯ ಗಲ್ಲೆಯ ಮೇಲೆ ಕೂತಾಗ ಕೊಟ್ಟಿಗೆಯಲ್ಲಿ ಹಾವು ನೋಡಿದ್ದನ್ನು ಹೇಳುವ ನೆವಮಾಡಿ…ಬಂದಿದ್ದಳಲ್ಲ. ಓಹ್! ಎಂದರು ಚಿಕ್ಕಪ್ಪ-ಬೇರೆ ಏನೋ ನೆನಪಾದಂತೆ. ಅರೆ! ಆಗಿನಿಂದ ಹೇಗೆ ಮರೆತೇಹೋಯಿತೋ! ಆಗ ಮೂಲೆಯಲ್ಲಿ ಸರಸರವೆಂದ ಸದ್ದಾದಗಲೂಸರಸರವೆಂದು ಸದ್ದಾದಾಗಲೂ ಹೇಗೆ ನೆನಪಾಗಲಿಲ್ಲವೋ. ಹೀಗೆ ಕದ ಮುಚ್ಚಿ ದೀಪ ತೆಗೆದು ಒಬ್ಬನೆ ಮಲಗುವುದು ಶಕ್ಯವಿಲ್ಲಪ್ಪ ಎಂದುಕೊಂಡು ಹಿಂದು ಮುಂದಿನ ವಿಚಾರ ಮಾಡದೇ ಕೋಣೆಯ ಕದ ತೆರೆದರು. ಒಳ ಜಗಲಿಯಲ್ಲಿ ದೇವಿ ಮಗ್ಗಲು ಸರಿಯುತ್ತ ಏನೋ ಅಂದಂತೆನಿಸಿತು. ಒಡೆಯಾ ಅಂದಳೇ? ಕೋಣೆ ತೆರೆದುದನ್ನು ತಪ್ಪು ತಿಳಿದಳೇ? ಎದ್ದು ಬರುವಳೇ? ಕತ್ತಲೆ ತುಂಬಿದ ನನ್ನ ಕೋಣೆಗೆ ನುಗ್ಗಿ….ಬೇಡಪ್ಪ ಬೇಡ. ದೇವರು ಮೆಚ್ಚುವ ಕೆಲಸ ಅಲ್ಲವಿದು. ಅಲ್ಲ ಅಲ್ಲ ಅಲ್ಲ ಎಂದುಕೊಂಡು( ಯಾರೋ ಹೌದೂ ಹೌದೂ ಹೌದೂ ಎನ್ನುವವರನ್ನು ಪ್ರತಿಭಟಿಸುವವರಂತೆ!)ಸಯಲೀಸಾಯಲೀ ಇಲ್ಲಿ ಮಲಗುವುದೇ ಬೇಡ. ಅಲ್ಲೇ ಹೋಗುತ್ತೇನೆ. ಅಲ್ಲೇ ಮಲಗ್ತೇನೆ ಎಂದು ಕಳ್ಳಹೆಜ್ಜೆ ಇಡುತ್ತ ತುಂಬಿದ ಕತ್ತಲೆಯಲ್ಲೇ ಕೋಣೆಯ ಹೊರಗೆ ನಡೆದರು. +* +* +* +ಅರೆನಿದ್ದೆಯಲ್ಲಿ ಎಚ್ಚರಗೊಂಡವಳ ಹಾಗೆ ದೇವಿ ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತಳು. ಸುತ್ತಲೂ ಕಣ್ತೆರೆದು ನೋಡಿದಳು. ಎಲ್ಲೆಲ್ಲೂ ಕತ್ತಲೆ. ಎಲ್ಲವೂ ಸ್ತಬ್ದ, ನಿಶ್ಯಬ್ದ, ಅಯ್ಯೋ ತನ್ನ ಹಾಳು ಎಚ್ಚರಗೇಡಿತನವೇ! ಹಾಳು ನಿದ್ದೆಯೆ! ಎಷ್ಟು ರಾತ್ರಿಯಾಯಿತೋ ಏನೋ, ತಾನು ಬರುವ ಹಾದಿ ನೋಡಿ ನೋಡಿ ಬೇಜಾರುಪಟ್ಟು ಮಲಕೊಂಡರೋ ಏನೋ!ಥೂ ಥೂ! ದೊಡ್ಡ ಒಡೆದೀರು ಅಮ್ಮನೋರಿಗೆ ನಿದ್ದೆ ಹತ್ತುತ್ತಲೇ ಎದ್ದು ಹೋಗೋಣಾಂತ ಮಾಡಿದ್ದೆ. ಅಮ್ಮನೋರಿಗೆ ಇನ್ನೂ ಎಚ್ಚರವಿರಬೇಕು ಎಂತ ತಿರುಗಿ ಅಡ್ಡವಾದಲ್ಲೇ ಪೂರ ನಿದ್ದೆ ಹತ್ತಿಬಿಡಬೇಕೆ?….ದೂರವೆಲ್ಲೋ ನಾಯಿ ಬೊಗಳಿದ್ದು, ಅದರ ಹಿಂದೆಯೇ ಯಾರೋ ಸುಮ್ಮನೆ ಬಾಯಿ ಮುಚ್ಚಿ ಬಿದ್ದಿರು ಎಂದದ್ದು ಕೇಳಿಸಿತು. ಅರೆ! ನಮ್ಮ ಸಂಕಪ್ಪಣ್ಣನ ದನಿಯಲ್ಲವೆ: ಉತ್ತುಮಿಯ ಮನೆಯಲ್ಲಿನ್ನೂ ಎಚ್ಚರವಿದ್ದಾರೆ. ರಾತ್ರಿ ಬಹಳ ಆಗಿಲ್ಲ ಹಾಗಾದರೆ! ತನಗೆ ಅಡ್ಡವಾದಲ್ಲೇ ತುಸು ಜೊಂಪು ಹತ್ತಿರಬೇಕು, ಅಷ್ಟೇ, ಓಹ್ ಸುಳ್ಳೇ ಹೆದರಿದೆ. ಈಗಲೂ ಹೊತ್ತಾಗಿಲ್ಲ ಹಾಗಾದರೆ, ಇನ್ನೂ ಎಚ್ಚರವಿರಬಹುದು ಹಾಗಾದರೆ. ತನ್ನ ಹಾದಿಯನ್ನೇ ಕಾಯುತ್ತಿರಬಹುದು ತನ್ನ ಸಣ್ಣ ಒಡೇದಿರು ಎಂದುಕೊಳ್ಳುವಾಗ ದೇವಿಯ ಮೈ ನವರಿಗೊಳಗಾಯಿತುನವಿರಿಗೊಳಗಾಯಿತು. ಏನೋ ನೆನಪಾದವಳಂತೆ ಸರಕ್ಕನೆ ರಟ್ಟೆಯನ್ನು ಮೂಗಿಗೆತ್ತಿ ಮೂಸಿ ನೋಡಿದಳು. ಹುಚ್ಚುಮುಂಡೇದು! ತನ್ನ ಬೆವರಿನ ವಾಸನೆ ತನಗೇ ಬಂದೀತೆ?-ದೇವಿ ಮನಸ್ಸಿನಲ್ಲೇ ನಕ್ಕಳು. ಆಗ ಮೂರು ಸಂಜೆಯ ಹೊತ್ತಿಗೆ ತಾನು ಸ್ನಾನ ಮಾಡುತ್ತಿದ್ದುದನ್ನು ಒಡತಿ ನೋಡಿ ಇಷ್ಟು ಹೊತ್ತು ಮಾಡಿ ಯಾಕೆ ಜಳಕ ಮಾಡ್ತೀಯೇ ದೇವೀ? ನೆಗಡೀ-ಗಿಗಡೀ ಆದೀತು ಎಂದಾಗ, ಮೈಯೆಲ್ಲ ಬೆವರಿನಿಂದ ಜಿಗುಟು ಜಿಗುಟು ಆಗಿದೆ ನೋಡಿ ಅಮ್ಮಾ. ಅಬ್ಬಾ ಎಂಥಾ ಸೆಕೆ ನೋಡಿ ಎಂದಾಗ ಒಡತಿಗೆ ಅರ್ಥ ಆಯ್ತೋ ಇಲ್ಲವೋ ಎಂದುಕೊಳ್ಳುತ್ತ ಕತ್ತಲೆಯಲ್ಲಿ ಕುಳಿತಲ್ಲೇ ನಾಚಿದಳು. ಆಗ ತಾನು ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದಾಗ ತನ್ನನ್ನು ನೋಡ್ತಾ ನೋಡ್ತಾ ತನ್ನ “ಇವು” ಕಣ್ಣಿಗೆ ಬಿದ್ದಾಗ ನಾಚಿದಾಗಲೇ(ನಾಚಿದಾಗ ಎಷ್ಟು ಚೆಂದ ಕಾಣ್ತಾರೆ ಅವರು!)ತನಗೆ ಗೊತ್ತಾಗಿತ್ತು. ನಾಣಿಗೆ ಮನೆಯ ಕಿಟಿಕಿಯೊಳಗಿನಿಂದ ಹಣಕಿ ನೋಡುವಾಗ, ನೋಡಿದ್ದು ತನಗೆ ತಿಳಿಯಿತು ಎಂತ ತಿಳಿದ ಕೂಡಲೇ ಹ್ಯಾಗೆ ನಾಚಿದರು! ಆಮೇಲೆ ಇಡೀ ದಿನ ತನ್ನ ಕಡೆ ನೋಡೋಕೂ ನಾಚ್ತಿದ್ರು. ದೀಪ ಹಚ್ಚುವ ಹೊತ್ತಿಗೆ ಮಾತ್ರ ಅದೇ ಜಳಕಮಾಡಿ, ಒಗೆದ ಸೀರೆ ಉಟ್ಟು ಬಂದ ತನ್ನನ್ನು ಮಿಕಿ ಮಿಕಿ ನೋಡುವಾಗ (ಅವರ ಕಣ್ಣುಗಳೇ ಚೆಂದ!) ತಾನು ನಾಚಿ, “ಅದೇನರಾ ಕೈಯೊಳಗೆ ಹಿಡಿದದ್ದು” ಎಂದು ಕೇಳಿದಾಗ ಕೈಯೊಳಗಿನ ಜಿಗಿಜಿಗಿಸುವ ನಳಿಗೆಯಿಂದ ತನ್ನ ಕಣ್ಣುಗಳ ಮೇಲೆ ಜಿಗ್ ಎಂದು ಬೆಳಕು ಬಿಟ್ಟು ತನ್ನನ್ನು ನಗಿಸಿದರಲ್ಲ ಆವಾಗಲೇ ತನಗೆ ತಿಳಿದಿತ್ತು. ಊಟವಾದ ಮೇಲೆ ಎಲ್ಲರೂ ಹಾಸಿಗೆಯಲ್ಲಿ ಒರಗಿದಾಗ ಮಾಳಿಗೆಯ ಮಾಡಿನ ಮೇಲೆ ಜಿಗ್ ಜಿಗ್ ಎಂದು ಬೆಳಕು ಬಿಟ್ಟದ್ದು ತನಗೆ ಯಾಕೆಂದು ಗೊತ್ತಿಲ್ಲವೇ ಎನ್ನುತ್ತ ಹಾಸಿಗೆಯಲ್ಲಿ ಎದ್ದೇ ನಿಂತಳು. ಒಳಗಿನ ಹಾಲಿನ ಆಚೆ ನಿಂತ ದೊಡ್ಡ ಒಡೆಯ ಒಡತಿಯರ ಕೋಣೆಗಳ ಕಡೆ ಕಣ್ಣು ಹಾಯಿಸುತ್ತ ಇವರದೂ ಒಂದು ವಿಚಿತ್ರವಪ್ಪ-ಎಲ್ಲೂ ಕೇಳಿಯೂ ಗೊತ್ತಿಲ್ಲದಂಥದ್ದು ಎನ್ನುತ್ತ- ಈಗ ಅದರ ವಿಚಾರವೂ ಬೇಡ ಎನ್ನುವವಳಂತೆ ಕಳ್ಳ ಹೆಜ್ಜೆ ಇಡುತ್ತ ಮಾಳಿಗೆಯ ಮೆಟ್ಟಿಲು ಏರಿದಳು, ಮೆಲ್ಲನೆ-ಒಂದೊಂದಾಗಿ. +* +* +* +ನಿದ್ದೆ ಎಚ್ಚರಗಳ ಗಡಿಸೀಮೆಯಲ್ಲಿದ್ದ ಅವನ ಕಿವಿಗೆ ‘ಒಡೆಯ’ ಎಂದು ಕರೆದಂತೆ, ಬಳೆಗಳ ಸದ್ದಾದಂತೆ, ಮಾಡಿನಲ್ಲೇ ಏನೋ ಚಿಂವ್ ಚಿಂವ್ ಎಂದು ಓಡಿದ್ದರ ಹಿಂದೆಯೇ ಏನೋ ಸರಸರ್ರೆನ್ನುತ್ತ ಪುಸ್ ಎಂದಂತೆ, ಮೊದಲಿನ ಸದ್ದೇ ಇನ್ನೊಂದಾದಂತೆ, ಇವೆರಡೂ ಒಂದಾದಂತೆ ಕೇಳಿಸಿ, ಕೇಳಿಸಿದ್ದಾದರೂ ಹೌದೋ ಅಲ್ಲವೋ ಎನ್ನುವ, ನಿದ್ದೆಯೋ ಎಚ್ಚರವೋ ಯಾವುದೂ ತಿಳಿಯದ ಸ್ಥಿತಿಯಲ್ಲಿ ಅವನು ಭಡಕ್ಕನೆ ಹಾಸಿಗೆಯಲ್ಲಿ ಎದ್ದು ಕುಳಿತು ಕೈಯಲ್ಲಿ ಹಿಡಿದೇ ಮಲಗಿದ ಬ್ಯಾಟರಿಯ ಕಣ್ಣು ಕುಕ್ಕಿಸುವ ಶುಭ್ರ ಬೆಳಕಿನ ಚಕ್ರವನ್ನು ಮೇಲಿನ ಹಂಚುಗಳ ಮೇಲೆ ತೂರಿ ಹೌಹಾರಿದವನ ಹಾಗೆ ‘ಹಾವು!’ ಎಂದ. “ಎಲ್ಲಿ? ಎಲ್ಲಿ?” ಎಂದಿತು ಮಾಳಿಗೆಯ ಬಲಗಡೆಯ ಮೂಲೆಯಲ್ಲಿಂದ…ಅವನ ಚಿಕ್ಕಮ್ಮನ ಹೆದರಿದ ದನಿ! “ಹೌದೆ ಹೌದೆ” ಎಂದು ಕೇಳಿತು ಎಡಬದಿಯ ಮೂಲೆಯಲ್ಲಿಂದ ಚಿಕ್ಕಪ್ಪನ ದನಿ!! ಕಾಲಬದಿಗೆ ಅದೇನು ಬಳೆಗಳ ಸದ್ದು? ದೇವಿಯೇ? ಅರೆ! ಎಂದ. ಬ್ಯಾಟರಿಯ ಸ್ವಿಚ್ಚನ್ನೊತ್ತಿಯೇ ಹಿಡಿದು ಕುಳಿತ. ಹಂಚುಗಳ ಮೇಲೆ ಮೂಡಿದ ಬೆಳಕಿನ ವರ್ತುಲದಲ್ಲಿ ಕಂಡಿರಬಹುದಾದ ಹಾವಿಗಿಂತ ಹೆಚ್ಚಾಗಿ ತನ್ನ ಸುತ್ತಲೂ ಕತ್ತಲೆಯಲ್ಲೇ ಸದ್ದಿಲ್ಲದೇ ಬಂದು ನೆರೆದ ಚಿಕ್ಕಮ್ಮ, ಚಿಕ್ಕಪ್ಪ, ದೇವಿಯರು ಅವನನ್ನು ಹೆದರಿಸಿದರು. ಚಿಕ್ಕಮ್ಮ ಚಿಕ್ಕಪ್ಪ ಹಾಸಿಗೆ ಇಲ್ಲದೇನೆ ಬರಿ ನೆಲದ ಮೇಲೆ ಮಲಗಿದ್ದರೇನೋ; ಈಗ ಎದ್ದು ಕೂತು ತನ್ನೆಡೆಗೆ ನೋಡುತ್ತಿದ್ದರು. ದೇವಿ ಹೌಹಾರಿದವಳ ಹಾಗೆ ನೋಡುತ್ತ ತನ್ನ ಕಾಲಬದಿಯ ಮಾಳಿಗೆಯ ಪ್ರವೇಶದ್ವಾರದ ಬಳಿಯಲ್ಲಿ ನಿಂತೇ ಇದ್ದಳು. ಅರೆ! ಇವರೆಲ್ಲ ಇಲ್ಲಿ ಯಾಕೆ? ಹೇಗೆ? ಏನೂ ತಿಳಿಯದೆ ತಲ್ಲಣಿಸಿದ. ತಾವಿದ್ದ ಪರಿಸ್ಥಿತಿಯ ಅರಿವು ಬಂದಂತೆ, ಚಿಕ್ಕಮ್ಮ “ದೀಪ ಹಾಗೇ ಹಿಡಿದಿರು ಮಗೂ, ಇದೊಂದು ತಿರುತಿರುಗಿ ಯಾಕೆ ಮನೆ ಹೊಕ್ಕುತ್ತದೆಯೋ. ಆಗ ನಮ್ಮ ಕೋಣಿಯಲ್ಲಿ ಮಂಚದ ಕೆಳಗೆ ಹರಿದಾಡಿದ್ದು ಕೇಳಿ ಹೆದರಿ ಇಲ್ಲಿ ಬಂದೆವು. ಈಗ ಇಲ್ಲೇ ಬಂತೇನೋ” ಎಂದಳು. ಹೆಂಡತಿಯ ಪ್ರಸಂಗಾವಧಾನವನ್ನು ಮೆಚ್ಚಿ, “ಹೌದಪ್ಪಾ ನಾವು ಮೇಲೆ ಬಂದಾಗ ನಿನಗೆ ಚಲೋ ನಿದ್ದೆಹತ್ತಿತ್ತು., ನಿನ್ನ ನಿದ್ದೆ ಹಾಳಾಗದಿರಲಿ ಎಂದು ಸದ್ದು ಮಾಡದೇ ಕತ್ತಲೆಯಲ್ಲೇ ಇಲ್ಲಿ ಬಂದು ಮಲಗಿದೆವು” ಎಂದರು ಚಿಕ್ಕಪ್ಪ. “ನಾಳೆ ಆ ಮಂತ್ರವಾದಿಗೆ ಇನ್ನೊಮ್ಮೆ ಹೇಳಿಕಳಿಸುತ್ತೇನೆ” ಎಂದರು. ದೇವಿಯೂ ನಡುಗುವ ದನಿಯಲ್ಲಿ “ನೀವಿಬ್ಬರೂ ಮೇಲೆ ಬರುತ್ತಲೇ ಅದು ನನ್ನ ಹಾಸಿಗೆಯ ಹತ್ತಿರ ಬಂದು ಪುಸ್ ಎಂದ ಹಾಗಾಯ್ತು ಒಡೆಯಾ. ಹೆದರಿ ನಾನೂ ಮೇಲೆ ಓಡಿ ಬಂದೆ” ಎಂದಳು. ಅವರೆಲ್ಲರ ದನಿಯಲ್ಲಿಯ, ಮೋರೆಯ ಮೇಲಿನ ಭೀತಿ ಕಂಡು ತಾನೂ ಹೆದರಿದ. ಬೆಳಕು ಬಿದ್ದ ಮಾಡಿನ ಹಂಚುಗಳಲ್ಲಿ ಏನೋ ಕಂಡಂತಾಗಿ, “ಹಾಗಾದರೆ, ಈಗ ಕೆಳಗೇ ಹೋಗುವುದು ಒಳ್ಳೆಯದೇನೋ, ಅದು ಇಲ್ಲೇ ಎಲ್ಲೋ ಮಾಡಿನಲ್ಲೇ ಹರಿದಾಡುತ್ತಿರಬೇಕು” ಎಂದಾಗ ಎಲ್ಲರೂ ಆ ಮಾತಿಗೆ ಒಪ್ಪಿ ಅವಸರವಸರವಾಗಿ ಕೆಳಗೆ ನಡೆದರು. ನಡುವಿನ ಹಾಲಿನಲ್ಲಿ ಮನೆಯಲ್ಲಿಯ ಎರಡೂ ಕಂದೀಲುಗಳನ್ನು ರಾತ್ರಿಯಿಡೀ ಹೊತ್ತಿಸಿಟ್ಟು ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಒರಗಿ ನಿದ್ದೆಯ ಶಾಸ್ತ್ರಮಾಡುತ್ತ ಬೆಳಗಾಗುವುದನ್ನೇ ಇದಿರು ನೋಡಹತ್ತಿದರು. +ಬೆಳಗಾಗುತ್ತಲೇ, ಇನ್ನೂ ಉರುಯುತ್ತಿದ್ದಉರಿಯುತ್ತಿದ್ದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ, ತಂಬಿಗೆ ಹಿಡಿದು ಗುಂದೆಗೆ ಹೋಗಿ ಹಿಂತಿರುಗಿ ಬರುವಾಗ ಹಾದಿಯಲ್ಲಿ ಹತ್ತುವ ಪುರುಷೋತ್ತಮನ ಮನೆ ಹೊಕ್ಕು, ಅವನನ್ನು ಮಾತನಾಡಿಸಿ, ತಿರುಗಿ ಚಿಕ್ಕಪ್ಪನ ಮನೆ ಸೇರುವ ಹೊತ್ತಿಗೆ, ಅವನ ರಜೆಯ ಕಾರ್ಯಕ್ರಮದಲ್ಲಿ ದೊಡ್ಡ ಬದಲಾಗಿತ್ತು. ಚಹ ಕುಡಿಯುವ ಹೊತ್ತಿಗೆ, “ಚಿಕ್ಕಮ್ಮಾ, ಪುರುಷೋತ್ತಮ ಈಗ ಕುಮಟೆಗೆ ಹೋಗುತ್ತಾನಂತೆ. ನಾನೂ ಈವತ್ತೇ ಅಕ್ಕನ ಮನೆಗೆ ಹೋಗುತ್ತೇನೆ ಆಗದೆ? ಹೇಗಾದರೂ ಪುರುಷೋತ್ತಮ ಜತೆ ಸಿಗುತ್ತಾನಲ್ಲ,” ಎಂದ ಮನೆಯಲ್ಲಿ ಹೊಕ್ಕ ಹಾವಿಗೆ ಪಾಪ, ಹುಡುಗ ಹೆದರಿದ್ದಾನೆ ಎಂಬುದನ್ನರಿತ ಚಿಕ್ಕಮ್ಮ ಹಾಗೆ ಮನೆಯಲ್ಲಿ ಹಾವು ಇದ್ದಾಗ ಅವನನ್ನು ನಿಲ್ಲಿಸಿಕೊಳ್ಳುವುದೂ ಸರಿಯಲ್ಲವೇನೋ ಎಂದು ಬಗೆದು ನಿಲ್ಲೆಂದು ಒತ್ತಾಯ ಪಡಿಸದೇ, “ಇನ್ನೆರಡು ದಿನ ನಿಂತರಾಗುತ್ತಿತ್ತು” ಎಂದಳು. ತಮ್ಮವೇ ಆದ ಯೋಚನೆಗಳ ಗುಂಗಿನಲ್ಲಿದ್ದ ಚಿಕ್ಕಪ್ಪ ಮಾತನಾಡಲಿಲ್ಲ. ಚಹ ಕುಡಿದು, ಉಡುಪು ಮಾಡಿ ಹೊರಡಲನುವಾದಾಗ ದಣಪೆಯವರೆಗೂ ಮುಟ್ಟಿಸಲು ಬಂದ ಚಿಕ್ಕಮ್ಮ-ಚಿಕ್ಕಪ್ಪರ ಮೋರೆಗಳ ಮೇಲೆ ಮೂಡಿದ ಭಾವನೆಗಳನ್ನು ತಿಳಿಸಲು ಪ್ರಯತ್ನಿಸಿ, ಆಗದೇ, ದಣಪೆ ತಲುಪಿದ್ದೇ ಏನಾದರೂ ಮಾತನಾಡಬೇಕು ಎನ್ನುವ ಇಚ್ಛೆಯಿದಿಯೆಂಬಂತೆಇಚ್ಛೆಯಿದೆಯೆಂಬಂತೆ, “ಆ ಮಂತ್ರವಾದಿಯನ್ನು ಆದಷ್ಟು ಬೇಗ ಕರೆಸಿ ಆ ಹಾವನ್ನು ತೆಗೆಯಿಸಿರಿ,” ಎಂದ. +“ಮಂತ್ರವಾದಿಯನ್ನು ಎಷ್ಟು ಸಲ ಕರೆಸಿದ್ದಾಯಿತು. ಏನೂ ಉಪಯೋಗವಿಲ್ಲ.” ಎಂದಳು ಚಿಕ್ಕಮ್ಮ. ಅವಳ ದನಿಯಲ್ಲಿ ಚಿಂತೆ ಇತ್ತೇ? +“ಹಾಗಾದರೆ ಆ ಮನವೇಲನಿಗೆ ಹೇಳಿ, ಇಲ್ಲವೇ ಬಂದೂಕ ಇದ್ದ ಶಂಕರರಾಯರಿಗೆ ಹೇಳಿ ಕೊಲ್ಲಿಸಿದರಾಗದೇ?” +“ಬಿಡ್ತು ಬಿಡ್ತು. ಹಾಗೆಲ್ಲ ಮಾತನಾಡಬಾರದಪ್ಪ, ಹಾವನ್ನು ಕೊಲ್ಲುವುದು ಬ್ರಹ್ಮಹತ್ಯೆಯಷ್ಟು ಪಾಪ” ಎಂದರು ಚಿಕ್ಕಪ್ಪ, ತೀವ್ರ ಅಸಮಧಾನದಅಸಮಾಧಾನದ ದನಿಯಲ್ಲಿ. +ಅದಾಗಲೇ ಅವರನ್ನು ಬೀಳ್ಕೊಟ್ಟು ಓಣಿಯಲ್ಲಿ ಕಾಲಿರಿಸಿದ ಅವನು ಚಿಕ್ಕಪ್ಪನ ಮಾತುಗಳನ್ನು ಮೆಲುಕುಹಾಕುತ್ತ ಓಣಿಯ ತುದಿಯನ್ನು ಸಮೀಪಿಸುತ್ತಿದ್ದಾಗ, ಮನೆಯಿಂದ ಹೊರಬಿದ್ದದ್ದೇ, ಅಂಗಳದಲ್ಲಿ ಕಂಡ ದೇವಿಯ ಮೋರೆ ಕಣ್ಣ ಮುಂದೆ ನಿಂತಂತಾಗಿ, ಅವಳು ತನ್ನ ಕಡೆಗೆ ನೋಡಿದ ನೋಟದಲ್ಲಿ ತನ್ನ ಹತ್ತಿರ ಏನನ್ನೋ ಮಾತನಾಡುವ ಬಯಕೆ ಇದ್ದಂತಿರಲಿಲ್ಲವೇ ಎಂದುಕೊಳ್ಳುತ್ತ, ಓಣೆಯಓಣಿಯ ಕೊನೆಯಲ್ಲಿ ರಾಜರಸ್ತೆಗೆ ಹೊರಳಿ ಕಾಣದಾದ. +***** +(೧೯೬೫) +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಸುವರ್ಣಮ್ಮನ ಮನೆಯ ಕೆಲಸದವಳು ಚಿಕ್ಕ. ಎಷ್ಟೊತ್ತಿಗೆ ಕಂಡರೂ ಅಡ್ಡಸೊಡ್ಡು ಹಾಕಿಕೊಂಡು ಚಪ್ಪೆ ಮುಖದಲ್ಲಿ ತಿರುಗುವವಳು. ದುಡ್ಡಿನ ತಾಪತ್ರಯವಂತೂ ಹೇಗೇ ಮಾಡಿದರೂ ಮುಗಿಯದವಳು. ಇಂತಿರುವಾಗ ಈ ದಿನ ತುಸು ಸಂತೋಷ ತೋರುತ್ತಿದ್ದಾಳೆ. “ಏನಾ! ಏನಾರೂ ಗಂಟ್ […] +“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. […] +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_427.txt b/Kannada Sahitya/article_427.txt new file mode 100644 index 0000000000000000000000000000000000000000..f71d3c3a9e3287266912de62df9f1bf1122d8440 --- /dev/null +++ b/Kannada Sahitya/article_427.txt @@ -0,0 +1,92 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ ಹಾಗೆ ನನ್ನ ಕೈಯಲ್ಲಿ ಇಪ್ಪತ್ತೈದು ರೂಪಾಯಿ ಇಡ್ತಾಳೆ. ‘ತಗೋ, ಖರ್ಚಿಗೆ ಆಗುತ್ತೆ’ ಅಂತ ನನ್ನ ಕೈ ಅದುಮಿದಾಳೆ. ನಾನು ಮುಗ್ಧನ ಹಾಗೆ ನಟಿಸಿದೆನಾ ಅಂತ ಈಗ ಅನ್ನಿಸ್ತಿದೆ. +ಅಕ್ಕ ಸಾಗರದ ಬಸ್ ನಿಲ್ದಾಣದಲ್ಲಿ ಇವತ್ತು ಸಂಜೆ ನಾಲ್ಕೂವರೆಗೆ ಸಿಗ್ತಾಳೆ. ಅವಳಿಗೆ ನನ್ನ ಮೊಟ್ಟ ಮೊದಲ ಕವನವನ್ನು ತೋರಿಸ್ಬೇಕು. ನನ್ನ ಹೋಮ್‌ವರ್ಕ್ ಪುಸ್ತಕದ ಹಾಳೆಯನ್ನೇ ಹರಿದು ಕವನ ಬರ್‍ದಿದೇನೆ. ದಾವಣಗೆರೆಯಲ್ಲಿ ನನ್ನ ಅಗ್ದಿ ಪ್ರಿಯ ಸ್ನೇಹಿತ ಗೊತ್ತಿಲ್ವ… ರಾಜು. ಅವನ ಮೇಲೆ. ಮೊದಲ ಪುಟದಲ್ಲಿ ‘ರಾಜುವೆಂದರೆ…’ಅಂತ ಆರಂಭ. ಎರಡನೆಯ ಪುಟದಲ್ಲಿ ‘ಜುಮ್ಮೆನ್ನುತ್ತದೆ ಮೈ….’ ಅಂತ. ಮೊದಲ ಪುಟದ ‘ರಾ’ ಅಕ್ಷರ ದೊಡ್ಡದಾಗಿದೆ. ಅದನ್ನು ಮೂರು ಬದಿಗಳಲ್ಲಿ ಕತ್ತರಿಸಿ ಕಿಟಕಿ ಥರ ಮಾಡಿದೇನೆ. ತೆರೆದರೆ ಎರಡನೆಯ ಪುಟದಲ್ಲಿ ದೊಡ್ಡದಾಗಿ ಬರೆದಿರೋ ‘ಜು’ ಕಾಣುತ್ತೆ. +ಗೆಳತಿಯರ ಜೊತೆ ಅಕ್ಕ ಬಸ್ಸಿನಲ್ಲಿ ಕೂತಿದಾಳೆ. ಅವಳ ಮುಖ ನೋಡಿದ ಕೂಡಲೇ ನನಗೆ ಒಂಥರ ಹಿತ. ಅವಳಿಗೆ ನಾಚುತ್ತ ಕವನ ತೋರ್‍ಸಿದೇನೆ. ಅವಳು ಹಾಗೇ ಓದಿದಾಳೆ. ‘ಚೆನ್ನಾಗಿದೆ ಕಣೋ, ಇನ್ನೂ ಬರಿ.ಬರೆದ ಕೂಡ್ಲೇ ನಂಕೊಡು’ ಅಂದಿದಾಳೆ. ಗೆಳತಿಯರಿಗೆ ನನ್ನ ತಮ್ಮ ಅಂದಿದಾಳೆ. ಬಸ್ಸು ಹೊರಟಿದೆ. +ಅಕ್ಕ ಶಿವಮೊಗ್ಗದಲ್ಲಿ ಇದಾಳೆ. ವಠಾರದಂಥ ಮನೆ. ಅಕ್ಕ ಅಲ್ಲಿ ಬಟ್ಟೆ ತೊಳೀತಾ ಇದಾಳೆ. ಅವಳ ಪುಟ್ಟ ಮಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ನೀರು ತುಂಬಿಸಿ ಸಣ್ಣ ತೂತಿನಿಂದ ಹಾರಿಸ್ತಾ ನಗ್ತಿದಾನೆ. ತುಂಬಾ ತುಂಟ. +ಅಕ್ಕ ದುರ್ಗಿಗುಡಿ ಹತ್ರ ಮನೆ ಮಾಡಿದಾಳೆ. ಮಗ ಪಕ್ಕದ ಮನೇಲಿ ಚಿಕನ್ ತಿನ್ನೋದಕ್ಕೆ ಹೋಗಿದಾನೆ. +ಅಕ್ಕ ಶಿರವಂತೆ ದೇವಸ್ಥಾನದಲ್ಲಿ ಇದಾಳೆ. ಎಷ್ಟು ಛೆಂದ ಸಿಂಗಾರ ಮಾಡಿದಾರೆ. ನಾನು ಹೊಸ ಪ್ಯಾಂಟು ಶರ್ಟು ಹಾಕಿಕೊಂಡು ಮೊಗಸಾಲೆಯಲ್ಲಿ ಕೂತಿದೇನೆ. ಮದುವೆ ಮುನ್ನಾ ದಿನದ ಊಟ ಗಡದ್ದು ಮಾಡಿದೇನೆ. ನಾಗಸ್ವರದವರು ತಯಾರಾಗಿದಾರೆ. ಒಳಗೆ, ಹೊರಗೆ ಗಲಾಟೆ. ಜೂನ್ ತಿಂಗಳ ಮೊದಲ ವಾರ. ದೇವಸ್ಥಾನವನ್ನೇ ಮುಳುಗಿಸಿಬಿಡೋ ಹಾಗೆ ಮಳೆ ಹೊಯ್ತಾ ಇದೆ. +ಎಲೆ ಅಡಿಕೆ ಹಾಕಿದ ನನಗೆ ಸುಣ್ಣ ಜಾಸಿ ಹಾಕಿಕೊಂಡದ್ದು ತಿಳಿದಿಲ್ಲ . ಸಣ್ಣಗೆ ತಲೆ ತಿರುಗ್ತಾ ಇದೆ. ಇಲ್ಲ ಹಾಗೇ ಬಿದ್ದಿದೇನೆ. ಅಕ್ಕ ಧಾವಿಸಿದಾಳೆ. ಅಲ್ಲಿ ದಿಬ್ಬಣ ಬರ್‍ತಾ ಇದೆ. ಇಲ್ಲಿ ನಾನು ಹೀಗೆ ಬಿದ್ದು ಅಕ್ಕನಿಗೆ ಗಾಬರಿ. ಅಮ್ಮ ಬಂದು ನನಗೆ ನೀರು ಚಿಮುಕಿಸಿದ್ದಾಳೆ. ನನಗೆ ಎಚ್ಚರವಾಗಿದೆ. ಕಣ್ಣು ಬಿಚ್ಚಿದರೆ ಅಕ್ಕ ಎಷ್ಟು ಮುದ್ದಾಗಿ ಕಾಣ್ತಿದಾಳೆ. ಅವಳಿಗೆ ನಾಳೆ ಬೆಳಗ್ಗೆಯಿಂದ ಎಂಥ ಹೊಸ ಬದುಕು ಸಿಗ್ತಾ ಇದೆ. ಅವಳು ಬೆಂಗಳೂರಿನಲ್ಲಿ ಎಷ್ಟು ಸುಖವಾಗಿ ಇರೋದಕ್ಕೆ ಹೋಗ್ತಾಳೆ. ನಾನು ಅವಳ ಮನೆಗೆ ಹೋದ್ರೆ ಬೆಂಗಳೂರು ನೋಡಬಹುದು. +ಮದುವೆಯ ಕ್ಷಣದಲ್ಲಿ ನಾನು, ಅಣ್ಣ, ಅಪ್ಪ, ಅಮ್ಮ, ತಂಗಿ ಎಲ್ಲರೂ ಒಂದೊಂದ್ಕಡೆ ಕೂತಿದೇವೆ. ಇಲ್ಲ. ಅಣ್ಣ ಅಲ್ಲಿ ಕಂಬಕ್ಕೆ ಒರಗಿ ನಿಂತಿದ್ದ. +ಅಕ್ಕ ಬೆಂಗಳೂರಿನಲ್ಲಿದಾಳೆ. ನಾನು ಅಪ್ಪ, ಅಮ್ಮ, ತಂಗಿ ಜೊತೆ ಪೊನ್ನಂಪೇಟೆಯಿಂದ ಬೆಂಗಳೂರಿಗೆ ಹೋಗಿದೇನೆ. ವೈಯಾಲಿಕಾವಲ್‌ನಲ್ಲಿ ಅವಳ ಮನೆ. ರಿಕ್ಷಾ ನಿಲ್ಲಿಸಿದ ಮೇಲೂ ನಮಗೆ ಮನೆ ಗೊತ್ತಾಗಿಲ್ಲ. ಕೊನೆಗೆ ಫೋನ್ ಮಾಡಿ ಹೋದೆವು. ಎಂಥ ಭವ್ಯ ಮನೆ. ಮೂರು ಕಾರು. ಬೈಕು. ಭಯಂಕರ ದೊಡ್ಡ ಡೆಕ್ ರೇಡಿಯೋ. ಅದರಲ್ಲಿ ಎಂಥ ಸ್ಪಷ್ಟ ದನಿ ಬರುತ್ತೆ. ಎಷ್ಟೆಲ್ಲ ಕ್ಯಾಸೆಟ್‌ಗಳು. ಎರಡು ಫೋನ್. ಭಾವನ ತಮ್ಮ ಯಾವಾಗ್ಲೂ ಸಿಂಗಾಪುರಕ್ಕೆ ಫೋನ್ ಮಾಡ್ತಿರ್‍ತಾನೆ. ಭಾವ ಯಾವಾಗ್ಲೂ ಸೂಟ್‌ಕೇಸ್ ಹಿಡಿದು ಹೋಗ್ತಿರ್‍ತಾರೆ. ಕೊನೆಗೆ ಮಲ್ಲೇಶ್ವರದಲ್ಲಿ ದೊಡ್ಡ ರೆಡಿಮೇಡ್ ಶಾಪ್. ಅಲ್ಲಿ ಅಕ್ಕ ನನಗೆ ಯೂನಿಫಾರ್ಮ್ ಕೊಡಿಸಿದಾಳೆ. +ಸಪ್ನಾದಲ್ಲಿ ಸಿನಿಮಾ ತೋರಿಸಿದಾಳೆ. ಕಾವೇರಿಯಲ್ಲಿ ಬುಲೆಟ್ ಟ್ರೈನ್ ಸಿನಿಮಾ ನೋಡಿ ಬೆರಗಾಗಿದೇನೆ. +ಅಕ್ಕ ಯಾವಾಗ್ಲೂ ನಗ್ತಾ ನಗ್ತಾ ತನ್ನ ಮೈದುನರನ್ನ , ಅತ್ತೇನ ನಗಿಸ್ತಾಳೆ. ನಮಗೆ ಛಲೋ ಊಟ ಹಾಕಿದಾಳೆ. ಮೆತ್ತಗಿನ ಹಾಸಿಗೆಯಲ್ಲಿ ಮಲಗಿಸಿದಾಳೆ. ಪೊಮೇರಿಯನ್ ನಾಯಿಗೆ ಸ್ನಾನ ಮಾಡಿಸ್ತಾಳೆ. +ಅಕ್ಕ ಬೆಂಗಳೂರಿನಲ್ಲಿ ಇದಾಳೆ. ಮಾಗಡಿ ರಸ್ತೆಯಲ್ಲಿ ಔಟ್‌ಹೌಸ್. ಚಿಕ್ಕ ಮನೆ. ಆದ್ರೂ ಎಷ್ಟು ದೊಡ್ಡ ರೂಮುಗಳು. ಅಕ್ಕನ ಮಗನಿಗೆ ಆಡೋದಕ್ಕೆ ಎಷ್ಟು ಜಾಗ ಇದೆ. ನಾನು ಬಂದಕೂಡಲೇ ನನ್ನ ಹಿಡ್ಕೊಂಡಿದಾನೆ. ಸ್ನಾನ ಮಾಡೋವಾಗ ನನ್ನ ಜನಿವಾರ ನೋಡಿಬಿಟ್ಟ. ಅದೆಂಥ ಆಕರ್ಷಣೆ ಅಂತ ಗೊತ್ತಿಲ್ಲ. ಮಾಮ, ನಂಕೊಡು ಅದರಲ್ಲಿ ಆಟ ಆಡ್ತೇನೆ ಅಂತ ಕೇಳಿದಾನೆ. ಮದುವೆಯ ಹೊತ್ತಿನಲ್ಲಿ ಹಾಕಿಕೊಂಡದ್ದು. ಅದಕ್ಕೆ ಅರ್ಥವೇ ಇಲ್ಲವೇನೋ ಅಂತ ಎಷ್ಟೋ ಸಲ ಅನ್ನಿಸಿದೆ. +ಅಕ್ಕ ಶಿರಸಿಗೆ ಬಂದಿದಾಳೆ. ಜಗಲಿಯಲ್ಲಿ ಮಲಗಿದಾಳೆ. ಹೊರಗೆ ದಟ್ಟ ಬಿಸಿಲು. ಗಾಜಿನ ಹೆಂಚಿನಿಂದ ತೂರಿಬಂದ ಬಿಸಿಲುಚೌಕ ಅವಳ ಪಕ್ಕದಲ್ಲೇ ಬಿದ್ದುಕೊಂಡಿದೆ. ಅವಳಿಗೆ ತಂಪು ಇಷ್ಟ. ಅವಳಿಗೆ ತಂಗಾಳಿ ಇಷ್ಟ. +ಅಕ್ಕ ಮಣಿಪಾಲ ಸೆಂಟರ್‌ನಲ್ಲಿ ಕೆಲಸ ಮಾಡ್ತಿದಾಳೆ. ಅಕ್ಕ ಲೂನಾದಲ್ಲಿ ಆಫೀಸಿಗೆ ಹೋಗ್ತಾಳೆ. ಅಕ್ಕನ ಮುಖದಲ್ಲಿ ಎಂಥ ಕಳೆ! ಅವಳಿಗೆ ಕೆಲಸ ಮಾಡೋದಕ್ಕೆ ಇರೋ ಆಸಕ್ತಿ ನೋಡಿ ನಾನು ಬೆರಗಾಗ್ತೇನೆ. +ಅಕ್ಕ ಈಗ ವಿಕ್ಟೋರಿಯಾ ಆಸ್ಪತ್ರೇಲಿ ಇದಾಳೆ. ನಾನು ಚಾಮರಾಜಪೇಟೆ ಆಫೀಸಿನಿಂದ ದಿನವೂ ಹೋಗ್ತೇನೆ. ಮಾತು, ಊಟ. ಆಸ್ಪತ್ರೆ ಜೋಕ್‌ಗಳನ್ನು ಅಕ್ಕ ಹೇಳಿ ನಗ್ತಾಳೆ. ನಾನು ಉಕ್ಕಿದ ಹಾಲನ್ನು ಸುಡ್ತಾ ಇರೋ ಹೀಟರ್ ಹಬ್ಬಿಸಿದ ವಾಸನೆ ಹೀರುತ್ತ ಅಕ್ಕನನ್ನು ನೋಡ್ತೇನೆ. ತಂಗಿ,ಭಾವ,ಅಣ್ಣ ಎಲ್ರೂ ಬರ್‍ತಿದಾರೆ. ಅಮ್ಮನಂತೂ ಅಲ್ಲೇ ಇರ್‍ತಾಳೆ. +ಹೊರಗೆ ಬಂದಾಗ ಅಮ್ಮ ಹೇಳ್ತಿದಾಳೆ. ಅಕ್ಕ ಬೈಯ್ಯೋದನ್ನು ಅಮ್ಮ ಬಾಯಿಮುಚ್ಚಿಕೊಂಡು ಸಹಿಸ್ತಾಳೆ. ‘ಎಂಥ ಮಾಡದು, ಅವಳಿಗೆ ಬೈಯ್ತಾ ಇದೀನಿ ಅಂತ್ಲೇ ಗೊತ್ತಾಗಲ್ಲ. ಈ ಔಷಧೀನೇ ಹಂಗಂತೆ. ಇರೋವಷ್ಟು ದಿನ ಅವಳ ಜೊತೆಗೆ ಇರ್‍ತೀನಲ್ಲ ಅನ್ನೋದೇ ನಂಗೆ ಸಮಾಧಾನ’ ಅಂತ ಬಿಕ್ಕುತ್ತಾಳೆ. +ಅಕ್ಕ ಈಗ ಕಿಡ್ವಾಯಿ ಆಸ್ಪತ್ರೇಲಿ ಇದಾಳೆ. ಒಂದೇ ಒಂದು ಡೋಸ್. ಕೇವಲ ಮೂವತ್ತು ಮಿಲಿ ಲೀಟರ್. ಒಂದೇ ಗುಟುಕು. ಎರಡೂವರೆ ಸಾವಿರ ರೂಪಾಯಿ. ಎಲ್ಲಾ ಟೆಸ್ಟುಗಳೂ ಮುಗಿದ ಮೇಲೆ, ಆ ರೂಮಿನ ಈಚೆ ನಾವು ನಿಂತಿದ್ದೇವೆ. ಕಟಕಟೆ ಥರ ಮರದ ಬೇಲಿ. ಆಚೆ ಅವಳು ನಮ್ಮನ್ನು ನೋಡ್ತಾನೇ ಅದನ್ನು ಒಂದೇ ಸಲ ಕುಡೀತಾಳೆ. ಅವಳು ಒಳಗೆ ಹೋದ ಮೇಲೆ ರೂಮಿನ ಬಾಗಿಲು ಮುಚ್ತಾರೆ. +ಇಪ್ಪತ್ತನಾಲ್ಕು ಗಂಟೆ ಅವಳು ಒಬ್ಬಳೇ ಇರಬೇಕು. ಅವಳು, ಅವಳ ಔಷಧಿ. ನಾಲ್ಕು ಗೋಡೆಗಳು. ಒಂದು ಮಂಚ. ಗಾಜಿನೀಚೆ ಅವಳನ್ನು ನೋಡುವ ವೈದ್ಯರು. ನರ್ಸುಗಳು. ಆ ದಿನವಿಡೀ ಅವಳ ಹತ್ರ ಯಾರಾದ್ರೂ ಹೋದ್ರಾ, ಮಾತಾಡಿಸಿದ್ರಾ ಗೊತ್ತಿಲ್ಲ. +ಅಕ್ಕ ಹೊರಗೆ ಬಂದಿದಾಳೆ. ಮುಖದಲ್ಲಿ ಯಾವ ಭಾವ ಇದೆ ಅಂತ ಗೊತ್ತಾಗ್ತಿಲ್ಲ. ಮಾರಾಯಾ, ಈ ಟ್ರೀಟ್‌ಮೆಂಟೂ ಮುಗೀತಲ್ಲ ಅಂತ ನಗ್ತಾಳೆ. +ಅಕ್ಕ ಮನೆಗೆ ಬಂದಿದಾಳೆ. ಹೊರರೂಮಿನಲ್ಲಿರೋ ಮಂಚದ ಮೇಲೆ ಕಾಲು ಚಾಚಿ ಕೂತಿದಾಳೆ. ಹೊರಗೆ ತರಕಾರಿ ಗಾಡಿ ಬಂದಾಗ ಇವಳನ್ನು ಕರೀತಾಳೆ. ಫ್ರೆಶ್ ತರಕಾರಿ ತಗೊಂಡ್ರೇನೇ ಅವಳಿಗೆ ತೃಪ್ತಿ. +ಅವಳಿಗೆ ಒಳ್ಳೇ ಹುಳಿ,ಸಾಗು,ಪೂರಿ ಇಷ್ಟ. +ಅವಳಿಗೆ ಒಳ್ಳೇ ಸಿನಿಮಾ ಇಷ್ಟ. ಒಳ್ಳೇ ಹಾಡು ಇಷ್ಟ. ಒಳ್ಳೇ ಚೂಡಿದಾರ ಇಷ್ಟ. ಅವಳಿಗೆ ತಮಾಷೆ ಇಷ್ಟ. ಅವಳಿಗೆ ಮಾತು ಇಷ್ಟ. +ಎದುರಿಗಿರೋ ಶೋಕೇಸಿನಲ್ಲಿ ಇಟ್ಟಿರೋ ಪುಟ್ಟ ಟಿವೀನ ನೋಡ್ತಿರ್‍ತಾಳೆ. ಪಕ್ಕದಲ್ಲೇ ಇರೋ ಫೋನಿನಲ್ಲಿ ಅಣ್ಣನ ಹತ್ರ ಮಾತಾಡ್ತಾಳೆ. ತಂಗಿ ಹತ್ರ ಮಾತಾಡ್ತಾಳೆ. ನನ್ನ ಗೆಳೆಯರನ್ನು ಮಾತಾಡಿಸಿ ಮೆಸೇಜು ತಗೋತಾಳೆ. ನಿನಗೆ ಇಂತಿಂಥವರು ಫೋನ್ ಮಾಡಿದ್ರು ಅಂತ ವರದಿ ಒಪ್ಪಿಸ್ತಾಳೆ. ಅವಳಿಗೆ ನನ್ನ ಬಗ್ಗೆ ಕಾಳಜಿ. +ನಾಟಿ ಕ್ಯಾಪ್ಸಿಕಂ ತಗಂಡ್ರೆ ಚೆನ್ನಾಗಿರುತ್ತೆ ಕಣೋ, ಹೈಬ್ರಿಡ್ ಬೇಡ. ಸುಮ್ನೆ ರುಚೀನೇ ಇರಲ್ಲ. ಚಿಕ್ಕ ಚಿಕ್ಕ ಕ್ಯಾಪ್ಸಿಕಂನಲ್ಲಿ ಮಸಾಲಾ ತುಂಬಿ ಗ್ರೇವಿಯಲ್ಲಿ ಕುದಿಸಿದ್ರೆ ಆಯ್ತು. ನಿಂಗೆ ಇಷ್ಟೆಲ್ಲ ಅಡುಗೆ ಮಾಡಕ್ಕೆ ಬರುತ್ತೆ ಅಂತೀಯ, ಕ್ಯಾಪ್ಸಿಕಂ ಮಸಾಲಾ ಬರಲ್ವ.ರಮ್ಯಾಂಗೂ ಎಷ್ಟೆಲ್ಲ ಅಡುಗೆ ಗೊತ್ತು. ಮೊನ್ನೆ ಅವರೇಕಾಯಿದು ಕೆಂಪು ಮೆಣಸಿನಕಾಯಿ ಮಸಾಲಾ ಮಾಡಿದ್ಲು, ಎಷ್ಟು ರುಚಿಯಾಗಿತ್ತು ಅಂತೀಯ… +ಮಧ್ಯಾಹ್ನ ಹನ್ನೆರಡೂವರೆ. ನಿಮ್ಹಾನ್ಸ್ ಔಟ್‌ಪೇಶೆಂಟ್ ವಿಭಾಗದಲ್ಲಿ ಅಕ್ಕ ಕೂತಿದಾಳೆ. ಎದುರಿಗೆ ಪಿ ಜಿ ಕೋರ್ಸಿನ ವೈದ್ಯ ಎನ್‌ಕ್ವೈರಿ ಮಾಡ್ತಿದಾನೆ. ‘ನನಗೆ ತಲೆನೋವು ಯಾಕೆ ಬರ್‍ತಿದೆ ಗೊತ್ತ?’ ಅಕ್ಕ ಅವನಿಗೆ ವಿವರಣೆ ನೀಡ್ತಿದಾಳೆ. ಅರೆ, ಅಕ್ಕ ಮಾತಾಡ್ತಿದಾಳೆ! ಎಷ್ಟು ಸ್ಪಷ್ಟವಾಗಿ ತನಗೆ ಯಾವ ಖಾಯಿಲೆ ಇದೆ ಅಂತ ಹೇಳ್ತಿದಾಳೆ. +ಎರಡೂವರೆ. ಅವಳು ರಿಕ್ಷಾದಲ್ಲಿ ಅಮ್ಮನ ಭುಜಕ್ಕೆ ಒರಗಿ ಕುಳಿತಿದಾಳೆ. ಕಿವಿಗೆ ಇನ್ನೂ ಹಿಯರಿಂಗ್ ಏಡ್ ಹಾಕಿಸಿಕೊಳ್ಳದ ಅಮ್ಮನಿಗೆ ಅವಳು ಮಾತಾಡ್ತಾ ಇರೋದು ಸರಿಯಾಗಿ ಕೇಳಿಸ್ತಿಲ್ಲ. ಮಗಳು ಮಾತಾಡಿದ್ದನ್ನೆಲ್ಲ ಅವಳು ಕೇಳಿಸಿಕೊಂಡ ಹಾಗೆ ತಲೆ ಆಡಿಸ್ತಾ ಇದಾಳೆ. ‘ಹೌದು ಭಾಗ್ಯ, ಹೌದು’ ಎಂದು ತಬ್ಬಿಬ್ಬಾಗಿ ಹೇಳ್ತಿದಾಳೆ. ನಾನು ಬಜಾಜ್ ಸ್ಕೂಟರಿನಲ್ಲಿ ರಿಕ್ಷಾದ ಪಕ್ಕದಲ್ಲೇ ಹೋಗ್ತಿದೇನೆ. ಸಿಗ್ನಲುಗಳು ಹಿಂದೆ ಹಿಂದೆ ಜಾರುತ್ತಿವೆ. ಮಳೆ ಬಂದ್ರೂ ಪರವಾ ಇಲ್ಲ. ರೈನ್‌ಕೋಟ್ ಇದೆ. ಅಕ್ಕ ನೆನೆಯಲ್ವಲ್ಲ, ಸಾಕು ಅಂದ್ಕೋತೇನೆ. +ಮೂರು ಗಂಟೆ. ಅಕ್ಕ ಮನೆಗೆ ಬಂದಮೇಲೆ ಒಂದೇ ಸಮ ಮಾತಾಡ್ತಿದಾಳೆ. ‘ನಾಟಿ ಕ್ಯಾಪ್ಸಿಕಂ ತಗೊಂಡು… ಮಸಾಲಾ… ಚಿಕ್ಕದು… ಸ್ವಲ್ಪ ಕುದಿಸಿ.. ನಾಟಿ ಕ್ಯಾಪ್ಸಿಕಂ… ಗೊತ್ತಾತಾ…. ಹಂಗೆ ಗ್ರೇವಿ ಕುದಿಸಿ… ಕ್ಯಾಪ್ಸಿಕಂ ಮಸಾಲಾ… ಗಾಡಿ ಬಂತು… ತಗಂಡು….’ +ಅವಳಿಗೆ ಇವತ್ತೇ ಕ್ಯಾಪ್ಸಿಕಂ ಮಸಾಲಾ ಮಾಡಿಕೊಡಬೇಕು. +ಮೂರೂವರೆ.ಅಕ್ಕ ನಿದ್ದೆ ಮಾಡ್ತಿದಾಳೆ. +ನಾಲ್ಕೂವರೆ. ಬಿಸಿಲು ಇಳೀತಾ ಇದೆ. ಅಕ್ಕನ ಮೇಲೆ ಬಿದ್ದ ಬಿಸಿಲಿಗೂ ಎಷ್ಟು ಸೌಂದರ್ಯ ಹಬ್ಬಿಕೊಂಡಿದೆ. ಅಮ್ಮ ಮಾತ್ರ ಮಂಚದ ಕೆಳಗೆ ಕೂತಿದಾಳೆ. ನಾನು ಅಲ್ಲೇ ಮಲಗಿದೇನೆ. +ಐದೂವರೆ. ಆರೂವರೆ. ಏಳೂವರೆ. +ಅಕ್ಕ ನಿದ್ದೆ ಮಾಡ್ತನೇ ಇದಾಳೆ. ಅವಳನ್ನು ಎಬ್ಬಿಸಬೇಕು. ರಮ್ಯಾ ಕಾಯ್ತಿದಾಳೆ. ಅವಳ ಹತ್ರ ಕ್ಯಾಪ್ಸಿಕಂ ಮಸಾಲೆ ಹೇಳಿಸ್ಕೋಬೇಕು. +ಎಂಟೂವರೆ. ಹತ್ತೂವರೆ. ಅಮ್ಮ ಗಾಬರಿಯಾಗಿದಾಳೆ. ಅಕ್ಕನನ್ನು ಮೆಲ್ಲಗೆ ತಟ್ಟಿದೇನೆ. ಅವಳನ್ನು ಹೂವಿನ ಹಾಗೆ ಮುಟ್ಟಿದೇನೆ. ಅವಳ ಕೆನ್ನೆಯನ್ನು ಮೆದುವಾಗಿ ಸವರಿದೇನೆ.‘ಅಕ್ಕ, ಅಕ್ಕಾ’ ಅಂತ ನೆರೆಮನೆಗೆ ಕೇಳದ ಹಾಗೆ ಕರೆದಿದೇನೆ. +ಅಕ್ಕ ಏಳ್ತಾ ಇಲ್ಲ. ಅಮ್ಮ ಬಿಡ್ತಾ ಇಲ್ಲ. +ಹನ್ನೊಂದೂವರೆ. ನಾನು ರಾಮಮೂರ್ತಿ ಮನೆಗೆ ಹೋಗಿ ಮಾರುತಿ ವ್ಯಾನ್ ತಂದಿದೇನೆ. ಭಾವನೂ ಬಂದಿದಾನೆ. ನಾನು, ಅಮ್ಮ, ಭಾವ ಮೂರೂ ಜನ ಅಕ್ಕನನ್ನು ಕರಕೊಂಡು ವ್ಯಾನಿನಲ್ಲಿ ಮಲಗಿಸಿದೇವೆ. ಆಗಲೂ ಅಕ್ಕ ಎದ್ದಿಲ್ಲ. +ಎರಡು ವರ್ಷದಿಂದ ಅಕ್ಕ ಈ ಥರ ಮಲಗಿರ್‍ಲಿಲ್ಲ. +ಅಕ್ಕನಿಗೆ ಮಳೆ ಇಷ್ಟ. ಅಕ್ಕನಿಗೆ ಸಮುದ್ರ ಇಷ್ಟ. ಅಕ್ಕ ಮದ್ರಾಸು ಬೀಚಿನಲ್ಲಿ ನೀರು ಹಾರಿಸ್ತಾ ಇರೋ ಫೋಟೋ ಅಮ್ಮನ ಹತ್ರ ಇದೆ. ಫಿಲ್ಮು ಹಾಳಾಗಿತ್ತೇನೋ. ಅಕ್ಕನ ಚಿತ್ರ ಪೂರಾ ಗುಲಾಬಿ ಬಣ್ಣಕ್ಕೆ ತಿರುಗಿದೆ. ಪರವಾ ಇಲ್ಲ. +ಅಲ್ಲಿ ಸಮುದ್ರ ಕಾಣುತ್ತೆ. ಅಲ್ಲಿ ಅಲೆ ಕಾಣುತ್ತೆ. ಅಲ್ಲಿ ಅಕ್ಕನ ನಗು ಕಾಣ್ಸುತ್ತೆ. +ಅವಳು ಕ್ಯಾಪ್ಸಿಕಂ ಮಸಾಲಾ ಮಾಡೋದು ಹೇಗೆ ಅಂತ ಹೇಳ್ತಿದಾಳೆ. ಮನೆಗೆ ಹೋದ ಕೂಡಲೇ ರಮ್ಯಾಗೆ ಹೇಳಬೇಕು. ಇವತ್ತೇ ಕ್ಯಾಪ್ಸಿಕಂ ಮಸಾಲಾ ಮಾಡಬೇಕು. ಅಕ್ಕನಿಗೆ ಎಷ್ಟು ಚೆನ್ನಾಗಿ ಅಡುಗೆ ಮಾಡಕ್ಕೆ ಬರುತ್ತೆ. ಆದ್ರೂ ಇವತ್ತು ರಮ್ಯಾಗೆ ಅವಳೇ ಎಲ್ಲಾ ಮಾಡೋದಕ್ಕೆ ಹೇಳಬೇಕು. ಬೇಕಾದ್ರೆ ನಾನು ನಾನು ಮಸಾಲೆನ ಕ್ಯಾಪ್ಸಿಕಂನಲ್ಲಿ ಹಗೂರಾಗಿ ತುಂಬ್ತೇನೆ. ಅಕ್ಕನಿಗೆ ಇಷ್ಟ ಆಗೋ ಹಾಗೆ. ಅವಳು ಕಣ್ಣರಳಿಸಿ ತಿನ್ನೋ ಹಾಗೆ ಮಾಡ್ತೇನೆ. ಅವಳಿಗೆ ಇವಳು ಮಾಡೋ ಟೊಮ್ಯಾಟೋ ಸಾರೂ ಇಷ್ಟ. ಅದರಲ್ಲಿ ರಾಗಿ ಮುದ್ದೇನ ಕರಗಿಸೋದು ಎಷ್ಟು ಚೆನ್ನಾಗಿರುತ್ತೆ ಕಣೋ ಅಂತ ಅಕ್ಕ ಒಂದ್ಸಲ ನನಗೆ ಹೇಳಿದಾಳೆ. +ಕ್ಯಾಪ್ಸಿಕಂ ಮಸಾಲಾ ಮಾಡೋದಿರ್‍ಲಿ, ತರಕಾರಿ ತಳ್ಳುಗಾಡಿ ಇನ್ನೂ ಬಂದಿಲ್ಲ. ಅಕ್ಕ ಮಲಗಿದ್ದಾಳೆ. ಅವಳೀಗ ಎಷ್ಟು ಛೆಂದ ನಿದ್ದೆ ಮಾಡ್ತಿದಾಳೆ. ಅವಳು ಎದ್ದು ನನ್ನ ನೋಡೋವಾಗ ನಾನು ನಗ್ತೇನೆ. ‘ಅಕ್ಕ, ಕ್ಯಾಪ್ಸಿಕಂ ಮಸಾಲಾ ರೆಡಿ’ ಅಂತ ಅವಳಿಗೆ ಅಚ್ಚರಿ ಹುಟ್ಟಿಸ್ತೇನೆ. +ನಾನು ಕೆಂಗೇರಿ ಉಪನಗರದಲ್ಲಿ ವಿನಾಯಕ ಭಟ್ಟನ ಮನೆಗೆ ಹೋಗಿದೇನೆ. ಆತನ ಜೊತೆ ಚಾ ಕುಡಿದು ಸಾಹಿತ್ಯದ ಚರ್ಚೆ ನಡೆಸಿದೇನೆ. ಇಬ್ಬರೂ ಸೇರಿ ಅಧ್ಯಯನದ ಪ್ರಾಜೆಕ್ಟ್ ತಗೊಂಡು ಮೂರ್‍ನಾಲ್ಕು ವರ್ಷ ಎಲ್ಲಾದ್ರೂ ಯಾರಿಗೂ ಗೊತ್ತಾಗದಂತೆ ಇದ್ದು ಬಿಡಬೇಕು. ಭಟ್ಟ ಹೇಳಿದ್ದಕ್ಕೆಲ್ಲ ನಾನು ಹೂ ಅಂದಿದೇನೆ. ರಿಂಗ್ ರಸ್ತೆಗೆ ಬರೋ ಹೊತ್ತಿಗೆ ಸಣ್ಣಗೆ ಮಳೆ ಹೊಯ್ಯುತ್ತಿದೆ. ಮಲೆನಾಡಿನ ಥರ ಬೆಂಗಳೂರೂ ಥಂಡಿಗೆ ಜಾರುತ್ತಿದೆ. ಅಲ್ಲಿಂದಲೇ ಫೋನ್ ಮಾಡಿದೇನೆ. ‘ಮಳೆ ಬರ್‍ತಾ ಇದೆ.ನಿಧಾನ ಬಾ. ಸ್ಕೂಟರ್ ಸ್ಕಿಡ್ ಆಗಿಬಿಡುತ್ತೆ ಹುಷಾರು’ ಅಂತ ಎಚ್ಚರಿಕೆ ಕೊಟ್ಟಿದಾಳೆ. +ಅವಳಿಗೆ ನಾನು ಜಾರಬಾರದು ಅನ್ನೋ ಕಾಳಜಿ. +ಅವಳಿಗೆ ನಾನು ಅವಸರ ಮಾಡಬಾರದು ಅನ್ನೋ ಎಚ್ಚರ. +ನಾನು ರವೀಂದ್ರ ಕಲಾಕ್ಷೇತ್ರದಲ್ಲಿದೇನೆ. ನಾನು ಹೇಗೋ ಪ್ರೆಸ್ ಅಂತ ಹೇಳಿ ಎರಡನೆಯ ಸಾಲಿನಲ್ಲೇ ಮೂರು ಸೀಟು ಗಿಟ್ಟಿಸಿದೇನೆ. ಹೆಂಡತಿಗೆ, ಮಗನಿಗೆ ಕಾರ್ಯಕ್ರಮದ ವಿವರ ನೀಡ್ತಾ ಇದೇನೆ. ಕಾರ್ಯಕ್ರಮ ತಡ ಆಗ್ತಿದೆ. ಮುಗಿದ ಕೂಡಲೇ ನಾನು ಮನೆಗೆ ಹೋಗಬೇಕು. ಅಕ್ಕನಿಗೆ ಒಂದೇ ಇಂಜೆಕ್ಷನ್ ಕೊಡಬೇಕು. ನರ್ಸ್ ಬರಲ್ಲ. ಹತ್ತಿರ ಇರೋ ನೆಂಟ ವೈದ್ಯೆಗೆ ಪುರುಸೊತ್ತಾಗಲ್ಲ. ನನಗೆ ಸ್ಕೂಟರಿನಲ್ಲಿ ಆಸ್ಪತ್ರೆಗೆ ಕರಕೊಂಡು ಹೋಗಕ್ಕಾಗಲ್ಲ. ಅಕ್ಕ ಈಗ ಎಷ್ಟು ದಪ್ಪಗಾಗಿದಾಳೆ. ಅವಳನ್ನು ಹೇಗೆ ಮೂರು ತಿರುವಿನ ಮೆಟ್ಟಿಲುಗಳಲ್ಲಿ ಇಳಿಸಿಕೊಂಡು, ಹೂವಿನಂತೆ ಎತ್ತಿಕೊಂಡು ಬರಬೇಕು…. +ಅಮ್ಮ ಈಗ ಅಕ್ಕನನ್ನು ಹಿಂದಿನಿಂದ ಅಪ್ಪಿಕೊಂಡಿದಾಳೆ. ಮುಂದಿನಿಂದ ನಾನು ಆವಳನ್ನು ಬೆನ್ನ ಮೇಲೆ ಹೊತ್ತುಕೊಂಡಿದೇನೆ. ಅವಳಿಗೆ ಮೂಳೆಗಳೇ ಇಲ್ಲವೇನೋ ಅನ್ಸುತ್ತೆ. +ಅವಳು ಒಂದು ಹೂವಿನ ಹಾಗೆ ಎಷ್ಟು ಮೆದುವಾಗಿದಾಳೆ. +ಅವಳಿಗೆ ದಿನಾಲೂ ಸ್ಟೆರಾಯ್ಡ್ ಕೊಡ್ತಾರೆ. +ಮಾರುತಿ ವ್ಯಾನ್ ಬರುತ್ತೆ. +ಆಸ್ಪತ್ರೆಯಲ್ಲಿ ಯಾರೂ ಇಲ್ಲ. ರಾತ್ರಿ ನನ್ನೊಳಗೆ ಇಳೀತಾ ಇದೆ. +ಅಕ್ಕ ಈಗ ಟಾಯ್ಲೆಟ್ ತೊಳೀತಿದಾಳೆ. ಅಕ್ಕ ಈಗ ರೂಮು ಗುಡಿಸ್ತಾ ಇದಾಳೆ. ತನ್ನ ಬಟ್ಟೇನೆಲ್ಲ ಮಡಚ್ತಾ ಇದಾಳೆ. +ಅವಳಿಗೆ ತಾನೇ ಎಲ್ಲ ಕೆಲಸ ಮಾಡ್ಕೋಬೇಕು. ಅವಳಿಗೆ ತನ್ನ ಖಾಸಗಿ ಸಂಗತಿಗಳಲ್ಲಿ ಬೇರೆ ಯಾರೂ ಬರೋದು ಇಷ್ಟ ಇಲ್ಲ. ಅವಳಿಗೆ ಗುಂಪು ಇಷ್ಟ. ಅವಳಿಗೆ ಖಾಸಗಿತನ ಇಷ್ಟ. ಅವಳಿಗೆ ಸ್ವಾತಂತ್ರ್ಯ ಇಷ್ಟ. ಅವಳಿಗೆ ಸ್ವಂತಿಕೆ ಇಷ್ಟ. +ಅಕ್ಕನಿಗೆ ಈಗ ಮಗನಿಗೆ ಹೋಮ್‌ವರ್ಕ್ ಮಾಡಿಸುವುದೇ ಖುಷಿ ಕೊಡೋ ಕೆಲಸ. ನಾನು ಈಗ ಮಗನಿಗೆ ಅತ್ತೆ ಹತ್ರಾನೇ ಹೋಮ್‌ವರ್ಕ್ ಮಾಡಿಸ್ಕೋ ಅಂದಿದೇನೆ. +ನಾನು ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ತಗೊಳ್ಲಿಕ್ಕೆ ಹೋಗಿದೀನಿ. ಮಗನೂ ಜೊತೆಗೆ ಬಂದಿದಾನೆ. ನಾನು ಕಂಪ್ಯೂಟರ್ ತಗೋಬೇಕು. ಇಂಟರ್‌ನೆಟ್ ಕಲೀಬೇಕು. ನಾನು ಕಂಪ್ಯೂಟರಿಗೆ ಒಂದು ಟೇಬಲ್ ತಗೋಬೇಕು. ಅಥವಾ ಇಲ್ಲಿರೋ ಹಳೇ ಮೇಜೇ ಸಾಕು. +ಸ್ಕೂಟರನ್ನ ಸರ್ವೀಸಿಗೆ ಕೊಟ್ಟಿದೀನಿ. ಮೂರು ದಿನದಲ್ಲಿ ಸ್ಕೂಟರ್ ರೆಡಿಯಾಗುತ್ತೆ. ಅಕ್ಕನಿಗೆ ಖುಷಿಯಾಗುತ್ತೆ. ಆಮೇಲೆ ಅವಳ ಸರ್ಜರಿ ಟೈಮಲ್ಲಿ ಓಡಾಡೋದು ಎಷ್ಟು ಸುಲಭ. ಕ್ಲಚ್ ಹಿಡಿದು ಗೇರ್ ಬದಲಿಸೋದು ಸಲೀಸು. ನಿಮ್ಹಾನ್ಸ್ ರಸ್ತೆಯ ಟ್ರಾಫಿಕ್ಕಿಗೆ ಹೆದರ್‍ಬೇಕಿಲ್ಲ. +ಅಕ್ಕ ಅಣ್ಣನ ಮಗಳ ಬರ್ಥ್‌ಡೇ ಪಾರ್ಟೀಗೆ ಬಂದಿದಾಳೆ. ಭರ್ಜರಿ ಸೀರೆ ಉಟ್ಟಿದಾಳೆ. ಅವಳ ನಗುವಿನಲ್ಲಿ ಎಂಥದೋ ಸ್ನಿಗ್ಧತೆ ಕಾಣ್ತಿದೆ. ಒಂದೇ ಕಡೆ ಕೂತು ಎಲ್ಲ ಸಡಗರಾನೂ ನೋಡ್ತಾ ನಗ್ತಿದಾಳೆ. ಅವಳಿಗೆ ಮಕ್ಕಳು ಅಂದ್ರೆ ಅಷ್ಟು ಇಷ್ಟ. +ಅವಳು ತಂಗಿ ಮಗಳನ್ನು ಎತ್ತಿ ಮೇಲೆ ಹಾರಿಸೋವಾಗ್ಲೇ ಬೆನ್ನು ಚುಳುಕ್ ಅಂತ ಹಿಡ್ಕೊಂಡಿದ್ದು. ಆಮೇಲೆ ಅವಳು ಯಾರನ್ನೂ ಎತ್ತಿಕೊಳ್ಳಲಿಲ್ಲ. +ನಾವೇ ಕೊನೆಗೆ ಅವಳನ್ನು ಮಗುವಿನ ಹಾಗೆ ಎತ್ತಿಕೋತಿದ್ವಿ. ಅದನ್ನ ವಿರೋಧಿಸಲಿಕ್ಕೆ ಅವಳಿಗೆ ಎಚ್ಚರವೇ ಇರ್‍ತಿರಲಿಲ್ಲ. +ಅಕ್ಕ ಈಗ ಮಾರುತಿ ವ್ಯಾನಿನಲ್ಲಿ ಮಲಗಿದಾಳೆ. +ನಾಳೆ ಬೆಳಗ್ಗೆ ಅವಳಿಗೆ ಕ್ಯಾಪ್ಸಿಕಂ ಮಸಾಲಾ ಜತೆಗೆ ಉಬ್ಬುರೊಟ್ಟಿ ಮಾಡಿಕೊಡಬೇಕು. +ಅಕ್ಕ ನರಳ್ತಿಲ್ಲ. ಅಕ್ಕ ಮಾತಾಡ್ತಿಲ್ಲ. ಅಕ್ಕ ನನ್ನನ್ನೇ ನೋಡ್ತಿದಾಳೆ. ಅಥವಾ ವ್ಯಾನಿನ ಛಾವಣಿಯನ್ನಾ… ಗೊತ್ತಿಲ್ಲ. +ಅಕ್ಕ ಈಗ ಸ್ಟ್ರೆಚರ್‌ನಲ್ಲಿ ಮಲಗಿದಾಳೆ. +ಅಕ್ಕ ಆಪರೇಶನ್ ಥಿಯೇಟರ್ ಒಳಗೆ ಹೋಗಿದಾಳೆ. ಅಕ್ಕ ನಾಲ್ಕು ತಾಸು ನನಗೆ ಕಾಣಿಸಿಲ್ಲ. ಅಕ್ಕ ಈಗ ಹೊರಗೆ ಬಂದಿದಾಳೆ. ಅವಳೀಗ ಯಾರನ್ನೋ ನೋಡ್ತಿದಾಳೆ. ನಾನು, ಭಾವ ರಾಘು ಕರದ್ರೆ ಕೇಳಿಸ್ಕೊಳ್ತಿಲ್ಲ. ಅವಳ ಭುಜ ಹಿಡಿದು ಮೆಲ್ಲಗೆ ತಟ್ಟೋದಕ್ಕೂ ಭಯ. +ಅಕ್ಕ ಈಗ ನಿಮ್ಹಾನ್ಸ್ ವಾರ್ಡಿನಲ್ಲಿ ಮಲಗಿದಾಳೆ. ಅವಳ ತಲೆಯೆಲ್ಲ ಬೋಳು. ಅವಳ ಬಾಯಿಯಲ್ಲಿ ಉಸಿರಾಡೋದಕ್ಕೆ ಒಂದು ಕೊಳವೆ ಇದೆ. ಅಮ್ಮ ಈಗ ಮಾತಾಡ್ತಿಲ್ಲ. ವೆರಾಂಡದಲ್ಲಿ ಲಗೇಜು ಬ್ಯಾಗಿನ ಪಕ್ಕ ಕೂತಿದಾಳೆ. ಬೆಳಗ್ಗೆ ರಾಘು, ವಾಣಿ ಇಬ್ರೂ ಮಕ್ಕಳನ್ನು ಪಕ್ಕದ ಮನೇಲಿ ಬಿಟ್ಟು ಬರೋದಕ್ಕೆ ಹೋಗಿದಾರೆ. +ಅಕ್ಕ ಅಲ್ಲೇ ಇದಾಳೆ. ಅವಳ ಬಟ್ಟಲುಗಣ್ಣುಗಳು ನನ್ನನ್ನೇ ನೋಡ್ತಾ ಇವೆ. ಅಕ್ಕ ಒಳಗೊಳಗೇ ನನ್ನ ಕವನ ಕೇಳ್ತಿದಾಳ? ಅಕ್ಕ ರಮ್ಯಾಗೆ ಕ್ಯಾಪ್ಸಿಕಂ ಮಸಾಲಾ ಮಾಡೋದಕ್ಕೆ ಕಲಿಸ್ತಿದಾಳ?ನನ್ನ ಮಗನಿಗೆ ಹೋಮ್‌ವರ್ಕ್ ಮಾಡಿಸ್ತಿದಾಳ? +ಅಕ್ಕ ಈಗ ಬ್ಯಾಟರಾಯನಪುರದ ಕ್ರೆಮಟೋರಿಯಂನಲ್ಲಿ ಮಲಗಿದಾಳೆ. +ವಿದ್ಯುತ್ ಚಿತಾಗಾರದಲ್ಲಿ ಇರೋ ಒಂದು ರಂಧ್ರದಲ್ಲಿ ನೋಡಿದರೆ… ಅಕ್ಕ ಹಾಗೆ ಯಾವ ಬೇಜಾರೂ ಇಲ್ದೆ ಚಟಚಟ ಸುಟ್ಟುಹೋಗ್ತಿದಾಳೆ. +ಆಫೀಸಿನಲ್ಲಿ ಆತ ಅವಳನ್ನು ಸುಟ್ಟಿದ್ದಕ್ಕೆ ದಾಖಲೆ ಬರೀತಾ ಇದಾನೆ. +ಫ್ರಿಜ್ಜಿನಲ್ಲಿ ಕ್ಯಾಪ್ಸಿಕಂ ಇದೆ. +ಚಿಕ್ಕವೇ. ನಾಟಿ. +ಅಕ್ಕನ ಮೆದುಳುಗಡ್ಡೆಗಳಿಗಿಂತ ಸ್ವಲ್ಪ ದೊಡ್ಡವು. +***** +ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕತೆ +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […] +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_428.txt b/Kannada Sahitya/article_428.txt new file mode 100644 index 0000000000000000000000000000000000000000..392c86ddb1c111a0f527f8a825c853eec8557f32 --- /dev/null +++ b/Kannada Sahitya/article_428.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ +ತಣ್ಣೆಳಲ ತಂಪಿನಲಿ ತಂಗಿರುವೆನು; +ಜೀವನದನಂತ ದುರ್‍ಭರ ಬವಣೆ ನೋವುಗಳ +ಕಾವುಗಳ ಮೌನದಲಿ ನುಂಗಿರುವೆನು. +ಗೆಳೆತನವೆ ಇಹಲೋಕಕಿರುವ ಅಮೃತ +ಅದನುಳಿದರೇನಿಹುದು – ಜೀವನ್ಮೃತ! +ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು +ತನ್ನಿಚ್ಛೆ ಪೂರೈಸುವವರ ಛಲವು +ಎಳ್ಳಿನೇಳನಿತಾದರೂ ಸ್ವಾರ್‍ಥ ಹೊಂದಿಹವು +ಎತ್ತಿ ಕಟ್ಟುವರದಕೆ ಮಮತೆ-ತೊಡವು. +ಗೆಳೆತನದ ಒಳತಿರುಳ ಬಲ್ಲ ಧರ್‍ಮಿ +ಕೇಳು: ನಿಜ ಗೆಳೆಯ ನಿಷ್ಕಾಮಕರ್‍ಮಿ! +ಇಲ್ಲಿ ವಂಚನೆಯಿಲ್ಲ, ಚಂಚಲತೆಯಿನಿತಿಲ್ಲ +ಮೇಲು ಕೀಳುಗಳೆಂಬ ಭೇದವಿಲ್ಲ; +ಅಹಮಿಕೆಯ ನೆವಮಿಲ್ಲ, ದ್ವೇಷ ಗುಣಮಣಮಿಲ್ಲ +ಸಣ್ಣತನ ಸಂಕೋಚ ಮೊದಲಿಗಿಲ್ಲ. +ಮನವು ಬಾನಗಲ, ಎದ ತಿಳಿಗೊಳದೊಲು +ಭಾವ ಶುದ್ಧ ಸ್ಫಟಿಕ – ಬೆಳದಿಂಗಳು! +ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು +ಇಲ್ಲೆಂಬ ಗಾದೆ ನುಡಿ ಕೇಳಿರುವೆನು, +ಗೆಳೆತನದ ಶುಚಿ ರುಚಿಯು ಇದಕು ಮಿಗಿಲಾಗಿಹುದು +ಎಂಬ ಸಾಹಸ ಮಾಡೆ ದೋಷವೇನು? +ಕಂಡಕಂಡವರೇನು ಬಲ್ಲರಿದನು +ಉಂಡವನು ಕಂಡಿಹನು ಇದರ ಹದನು. +ಹೇಗೊ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್‍ಪು +ಆಗು ಹೋಗುಗಳಿಂಗೆ ಬಾಗದಂತೆ, +ಸುಖಕೆ ಸಂತಸಬಟ್ಟು, ದುಃಖದಲಿ ಸಹಭಾಗಿ- +ಯಾಗೆ ಜೀವನ ರಸದ ಪಾಕದಂತೆ- +ಸರಸ ವಿರಸವನೆಲ್ಲ ಅಪ್ಪುಕಯ್ದು +ಬಾಳುವರು ಗಂಧದೊಲು ಜೀವ ತೆಯ್ದು! +ಬಾಳ ಪಾರಾವಾರದಲ್ಲಿ ಸಾರಾಸಾರ +ಸುವಿಚಾರ ದೋಣಿಯಲಿ ಯಾನಗೈದು +ತತ್ತ್ವನಿವಹದ ದ್ವೀಪ-ದೀಪಮಾಲೆಗಳಂತೆ +ಕಳೆಯರೊಲವಿನ ಬೆಳಕು ಸೂರೆಗೈದು +ಸೂಳ್ನುಡಿಯ ಸೈಪಿನಲಿ ಕರುಣೆಯೆರೆದು +ಹಿತವ ಕೋರುವರಂತರಂಗ ತೆರೆದು. +ಇನಿವಿರಿದು ಗೆಳೆತನದ ಗುಟ್ಟಿಹುದು ನಲ್ ಗೆಳೆಯ +ಬಿನ್ನಣದ ನುಡಿಯಲ್ಲ, ಎದೆಯ ಮೀಟಿ +ಜೀವ ಜೀವಕೆ ಇಂಬುಕಯ್ವವರು ನಾಲ್ವರಿರೆ +ಚತುರಂಗ ಬಲವಿದಕೆ ಯಾವ ಸಾಟಿ? +ಗಳೆತನವೆ ಚಿರಬಾಳ ಸಂಜೀವಿನಿ +ವಿಶ್ವದಂತಃಕರಣ ಮಂದಾಕಿನಿ! +ಮೆಲುಪು ತಣ್ಪಿನ ಕಂಪು ಮಲ್ಲಿಗೆಯ ಮೆಲ್ಲೆದೆಗೆ +ಒಲವು ರೇಶಿಮೆಯಳೆಯ ಪೋಣಿಸಿಹವು; +ಎನ್ನಿನಿಯ ಗೆಳೆಯರೆದೆ ಶೂನ್ಯ ಸಿಂಹಾಸನದಿ +ಬೆರಸಿ ಬೇರಿಲ್ಲದಿಹುದೊಂದ ಸೊಗವು- +ಹಿಂದುಮುಂದಿನ ಎಣಿಕೆ ಬೇರೆ ಇರಲಿ +ಇಂದಿಗಿದೆ ಸಿದ್ಧಾಂತ ಜೀವನದಲಿ. +***** +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_429.txt b/Kannada Sahitya/article_429.txt new file mode 100644 index 0000000000000000000000000000000000000000..649ecf56ceb3598f45ae875472838b6fa833d2ae --- /dev/null +++ b/Kannada Sahitya/article_429.txt @@ -0,0 +1,72 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವನನ್ನು ನಾನು ಹೆಚ್ಚು ವರ್ಣಿಸುವುದಿಲ್ಲ +ನೋಡಲು ಬಿಕುಷ್ಠೆಯಂತಿದ್ದ. ಬೆಳಿಗ್ಗೆ ಎದ್ದಕೂಡಲೆ ನೋಡಿದರೆ ಅವತ್ತಿಡೀ ಅನ್ನನೀರು ಹುಟ್ಟಲಿಕ್ಕಿಲ್ಲ. ಅಫಿಸಿನ ದೊಡ್ಡ ಕಿಟಕಿಯ ಕೆಳಗೆ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತಿರುತ್ತಿದ್ದ. ಒಳಗೆ ಬರುವವರೆಗೆ ಕಣ್ಣಿಗೆ ಹೊಡೆದು ಕಾಣುವಂತೆ. +ಹಾಗೆ ಕುಳಿತುಕೊಳ್ಳಲು ಅವ ಎಷ್ಟು ಹೊತ್ತಿಗೆ ಬರುತ್ತಾನೆ, ಕುಳಿತವ ಎಷ್ಟು ಹೊತ್ತಿಗೆ ಎದ್ದು ಹೋಗುತ್ತಾನೆ ಎಲ್ಲವೂ ರಹಸ್ಯದಂತಿತ್ತು. +ಅವನ ದೃಷ್ಟಿಯಿಂದ ಒಮ್ಮೊಮ್ಮೆ ಬದುದಿನ ಬಗ್ಗೆ ಆಸಕ್ತಿಯೇ ಕಮರಿ ಹೋಗುತ್ತಿತ್ತು. ಒಮ್ಮೊಮ್ಮೆ ಕೆನ್ನೆಗೆ ಕೊಟ್ಟು ಕಣ್ಣು ಕಾಣದ ಊರಿಗೆ ಓಡಿಬಿಡುವ ಅನಿಸುತ್ತಿತ್ತು. ಒಮ್ಮೊಮ್ಮೆ ವಿಷ ತೆಗೆದುಕೊಳ್ಳುವ ಅಂತಲೂ ಅನಿಸುತ್ತಿತ್ತು. +ಆದರೆ ನಾನು ಕೆಲಸಕ್ಕೆ ಹೋಗುತ್ತಲೇ ಇದ್ದೆ. ಆ ಕೆಲಸ ಬಿಡುವಂತಿರಲಿಲ್ಲ. ಬಿಟ್ಟರೆ ಬೇರೆಂತದೂ ನನಗಿರಲಿಲ್ಲ. ಆದ್ದರಿಂದ ನಾನವನನ್ನು ಸಹಿಸಬೇಕಿತ್ತು. ಅವನ ಇರವನ್ನು ಮರೆಯಬೇಕಿತ್ತು. ಅವನ ದೃಷ್ಟಿಯನ್ನು ಅಪ್ಪಿತಪ್ಪಿಯಾದರೂ ಸಂಧಿಸಿದಾಗ ಅದನ್ನು ದಾಟಿ ಮತ್ತೆ ನನ್ನ ಕೆಲಸದಲ್ಲಿ ಮಗ್ನವಾಗುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿತ್ತು. +ನಿದ್ರೆ ಬರುವ ಮುಂಚಿನ ಮಂಪರಿನಲ್ಲಿ ಕೂಡ ಅವ ಯಾರು ಯಾಕೆ ಅಲ್ಲಿರುತ್ತಾನೆ ಅವನನ್ನು ಓಡಿಸಲಿಕ್ಕೆ ಆಗುವುದಿಲ್ಲವೆ ಎಂತೆಲ್ಲ ಪ್ರಶ್ನೆ ಏಳುತ್ತಿತ್ತು. ಎಚ್ಚರಿದ್ದರೆ ಉತ್ತರ ಸಿಗುತ್ತಿತ್ತೋ ಏನೋ. ಆದರೆ ನಿಧಾನವಾಗಿ ನಿದ್ರೆ ಆವರಿಸುತ್ತಿತ್ತು. ಅವನನ್ನು ಮರೆಯುವ ತಾಣ ಇದೊಂದೇ ಎಂತ ನಿದ್ದೆಯೊಳಗೂ ಹೇಳಿಕೊಳ್ಳುತ್ತ ಒಂದು ರೀತಿಯಲ್ಲಿ ಅವನನ್ನು ಮರೆಯಲಾರದ ಸ್ಥಿತಿ ನನ್ನದಾಗಿತ್ತು. +ಕೆಲಸಕ್ಕೆ ಸೇರಿದ ಸಮಯದಲ್ಲಿ ಅವನ ಬಗ್ಗೆ ಯಾರೊಡನೆಯೂ ವಿಚಾರಿಸುವ ಅಧಿಕಕ್ಕೆ ನಾನು ಹೋಗಲಿಲ್ಲ. ಆದರೆ ಸೀಮಿತ ನನಗೆ ಪರಿಚಯವಾದಂತೆ ಒಂದು ದಿನ ಅವನ ಬಗ್ಗೆ ಒಂದರ ಮೇಲೊಂದು ಪ್ರಶ್ನೆ ಕೇಳಿದೆ. ಆಕೆ ಮೌನದ ಉತ್ತರವನ್ನೇ ಕೊಟ್ಟಳು. ಪುನಃ ಪುನಃ ಅವಳನ್ನು ಅಲ್ಲಾಡಿಸಿ ಕೇಳಿದಾಗ ಅತ್ತಿತ್ತ ನೋಡಿ ಪಿಸುಪಿಸುವಾಗಿ ‘ಯಾಕೆ? ಅವ ಇದ್ದರೆ ನಿಂಗೇನು?’-ಎಂದಳು. ’ಸತ್ಯ ಹೇಳು. ನಿಂಗೆ ರಗಳೆಯಾಗುವುದಿಲ್ಲವ?’-ಎಂತ ಕೇಳಿದೆ. +‘ರಗಳೆಯ? ಬೆಳಿಗ್ಗೆ ಎದ್ದು ಯಮದೂತನನ್ನು ಕಂಡಂತಾಗುತ್ತಿತ್ತು. ಆದರೆ ದಿನಾ ಕಾಣುತ್ತಿದ್ದರೆ ಯಮದೂತನೂ ನಮ್ಮಂತೆಯೇ ಅನಿಸುತ್ತದೆಯಲ್ಲವೆ? ಈಗೀಗ ಹಾಗೇ.’ +‘ಅಂದರೆ ಅವ ಅಲ್ಲಿ ಇದ್ದರೂ ಇಲ್ಲದಿದ್ದರೂ ಒಂದೇ ಎಂಬ ಸ್ಥಿತಿಗೆ ಬಂದು ಮುಟ್ಟಿದೆ ನೀನು’. +‘ಮುಟ್ಟಿದೆನೋ ಇಲ್ಲವೋ. ಆ ಬಗ್ಗೆ ಯೋಚಿಸುವುದೂ ಇಲ್ಲ’-ಎಂದವಳು ಮತ್ತೆ ಹೇಳಿದಳು. ‘ಅವನ ಬಗ್ಗೆ ಇವತ್ತು ನನ್ನ ಹತ್ತಿರ ಕೇಳಿದ್ದಾಯಿತು. ಇನ್ನು ಯಾವತ್ತೂ ಕೇಳಬೇಡ. ಅವನ ಹೆಸರು ಎತ್ತಬೇಡ’. +‘ಹೆಸರು? ನನಗೆ ತಿಳಿದಿದ್ದರಲ್ಲ!’ +‘ಅವನ ವಿಷಯವೆ ಬೇಡ ಎಂದೆನಲ್ಲ’-ಹಾಗೆ ಹೇಳಿ ಹೊರಟುಹೋದಳು ಅವಳ ಕತ್ತಿನ ನರ ನಡುಗುತ್ತಿದ್ದಂತೆ, ತುಟಿ ಕಚ್ಚಿಕೊಂಡು. +ಅವ ಇದ್ದರೆ ನಿಂಗೇನು ಎಂತ ಕೇಳಿದಳು. ಹೌದು ನಂಗೇನು? ಅವ ಸುಮ್ಮನೆ ಕುಳಿತಿರುತ್ತಿದ್ದ. ಕೂತಲ್ಲಿಂದ ಎದ್ದು ಸಹ ಬರುತ್ತಿರಲಿಲ್ಲ. ಆದರೆ ಮಿಸುಕಾಡದೆಯೂ ಮಾತಾಡದೆಯೂ ಕೇವಲ ತನ್ನ ಇರವಿನಿಂದಲೇ ಮನುಷ್ಯ ಹೇಗೆ ಹೀಕರಣೆ ಬರಿಸಬಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದ. ಅವನ ಒಂದು ದೃಷ್ಟಿ ಹಾಸಿ ಬಂದರೆ ಸಾಕು. ಪ್ರಪಂಚದ ಭವಿಷ್ಯಕ್ಕೆಲ್ಲ ಮುಸುಕು ಹಾಸಿದಂತೆ ಆಗುತ್ತಿತ್ತು. ಅದರಲ್ಲಿ ನನ್ನ ದಿನಗಳಂತೂ ಕಾಣುತ್ತಲೇ ಇರಲಿಲ್ಲ. +ಅವತ್ತು ರಾತ್ರಿ ನಿದ್ರೆಯಲ್ಲಿ ಕೀಳು ಹಿಡಿದವರಂತೆ ಕೂಗಿದ್ದೆ. ಸೀಮಿತ ನೇಣಿನಲ್ಲಿ ತೂಗಾಡಿದಂತೆ ಕನಸು. ಪಕ್ಕದಲ್ಲೇ ಅವ ನಿಂತಿದ್ದ. ಮುಂದಿನ ಸಲ ನೀನು ಎನ್ನುತ್ತಿದ್ದ. ನಾನು ಅಮ್ಮಾ ಎಂದಿದ್ದೆ. ಆದರೆ ನನ್ನ ಕೂಗು ಕನಸಿನ ಗೋಡೆಗೇ ಹೊಡೆದು ಮಾರ್ದನಿ ಇತ್ತಿತಾದ್ದರಿಂದ ಮನೆಯಲ್ಲಿನ ಯಾರಿಗೂ ಎಚ್ಚರಾಗಿರಲಿಲ್ಲ. +ಹೀಗೆ ಹೀಗೆ ಕನಸು ಬಿತ್ತು ಎಂತ ಹೇಳುವಾಗ ನಾನು ಉದ್ದೇಶಪೂರ್ವಕವಾಗಿ ನೇಣಿನ ಬಳಿ ನಿಂತ ಆ ಮನುಷ್ಯನ ಬಗ್ಗೆ ಬಿಟ್ಟಿದ್ದೆ. ಕನಸು ಕೇಳಿ ‘ಹಾಗಾದರೆ ಸೀಮಿತನಿಗೆ ಮತ್ತು ನಿನಗೆ ಆಯುಷ್ಯ ಜಾಸ್ತಿ’ ಎಂದರು ಎಲ್ಲ ನಗುತ್ತ. ‘ಕನಸಿನಲ್ಲಿ ಹೆಣ ಕಂಡರೆ ಹಣ ಸಿಗುತ್ತದೆಯಂತೆ. ಚಣ್ಣಮ್ಮ, ದುಡ್ಡು ಸಿಕ್ಕಿದರೆ ನಂಗೂ ನಾಕು ಪಾವಾಣೆ ಕೈ ಮೇಲೆ ಹಾಕಲು ಮರಿಬೇಡಿ’-ಎಂದಳು ಕೆಲಸದ ಚಿಣ್ಕಿ. +ಸೀಮಿತ ಎಷ್ಟು ಬಿಗಿಯಾಗಿ, ಅವನ ಕಡೆ ಕಾಣದೆ ಅವನು ಅಲ್ಲಿ ಇಲ್ಲವಂಬಂತೆಯೇ, ಇರುತ್ತಾಳೆ. ಸೀಮಿತ ಮಾತ್ರ ಅಲ್ಲ. ರಜಿ, ನರ್ತಕಿ, ಅನಂತರಾಯ ಮತ್ತುಳಿದವರೆಲ್ಲರೂ ಅಷ್ಟೆ. ಹಾಗೆ ಎಣಿಸಿದರೆ ಹಾಗೆ ಅಥವಾ ಆ ಪುರುಷನ ಬಗ್ಗೆ ಭಯಭಕ್ತಿ ವಿಧೇಯತೆಯಿಂದ ಇದ್ದಾರೆ ಎಂದರೆ ಹಾಗೇ ಕಾಣಿಸುತ್ತಿದ್ದರು. +ನನಗೊಬ್ಬಳಿಗೆ ಯಾಕೆ ಅವರ ಹಾಗೆ ಇರಲಿಕ್ಕಾಗುವುದಿಲ್ಲ? ಬದಲು ದಿನದಿಂದ ದಿನಕ್ಕೆ ಅವನ ಮೇಲಿನ ಗಮನ ಜಾಸ್ತಿಯಾಗುತ್ತಿತ್ತು. ಅವನ ಗುಟ್ಟು ರಟ್ಟು ಮಾಡಬೇಕೆಂಬ ಹಟ ಹುಟ್ಟುತ್ತಿತ್ತು. +ಅವರೆಲ್ಲರೂ ಅವನನ್ನು ದಾಟಿ ಹೋಗುವಾಗ ತಲೆಬಗ್ಗಿಸಿ ಹೋಗುತ್ತಿದ್ದರು. ಬಾಸ್ ಕೂಡ ಬಹಳ ಜತನದಿಂದ ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರು. ಅವ ಅವರ ಮುಖ ನೋಡಿ ಅಲ್ಲ, ಗೋಡೆ ನೋಡಿ ಉತ್ತರ ಕೊಡುತ್ತಿದ್ದ. +ನನು ಬಾಸ್ ಆಗಬೇಕಿತ್ತು. ‘ನಿವಾಳಿಸು ಇಲ್ಲಿಂದ’-ಎಂತ ಅವನ ಕುತ್ತಿಗೆಗೆ ಕೈ ಹಾಕುತ್ತಿದ್ದೆ. ಇಲ್ಲ, ಬಾಸ್ ಅವನನ್ನು ದೂಡುವುದಿರಲಿ, ದೂಡಿಸಲೂ ಇಲ್ಲ. ಅವನೊಂದಿಗೆ ದಿನಾ ಒಂದರ್ಧ ಗಂಟೆ ವಿನೀತರಾಗಿ ಕಳೆದು ತನ್ನ ಕೊಠಡಿಗೆ ಹೋಗುತ್ತಿದ್ದರು. +ದಿನಾ ನಾನಿದನ್ನೆಲ್ಲ ನೋಡುತ್ತಿದ್ದೆ. ನಾ ನೋಡುತ್ತಿದ್ದೇನೆ ಎಂತ ಅವನಿಗೂ ಗೊತ್ತಿತ್ತು. ಫಕ್ಕನೆ ಅವನು ನನ್ನತ್ತ ತಿರುಗುತ್ತಿದ್ದ. ನಾನೂ ಫಕ್ಕನೆ ಮುಖ ತಗ್ಗಿಸಿಕೊಳ್ಳುತ್ತಿದ್ದೆ. ಅಷ್ಟರೊಳಗೆ ಯಾವುದೋ ಒಂದು ಕೋನದಲ್ಲಿ ಅವನ ದೃಷ್ಟಿ ನನ್ನದರೊಂದಿಗೆ ಸೇರಿ ತ್ರಿಶೂಲದಂತೆ ಇರಿಯುತ್ತಿತ್ತು. ನನ್ನ ದೃಷ್ಟಿಯೂ ತ್ರಿಶೂಲದಂತಿದ್ದಿದ್ದರೆ! ಅವನ ಗುಟ್ಟನ್ನು ಸೀಳಿ ಬಯಲು ಮಾಡುತ್ತಿದ್ದೆ. +ಹನ್ನೊಂದು ಗಂಟೆಗೆ ಸರಿಯಾಗಿ ಅವನಿಗೆ ಕೂತಲ್ಲೇ ಉದ್ದದ ಬೆಳ್ಳಿಲೋಟದಲ್ಲಿ ಕಾಫಿ ಬರುತ್ತಿತ್ತು. ಕಾಫಿ ಬಂತೆ ಎಂದು ಆಫಿಸಿನ ಪ್ರಮುಖರೆಲ್ಲ, ಬಾಸ್ನಿಂದ ಹಿಡಿದು, ಬಂದು ಬಂದು ಕೇಳಿ ಹೋಗುತ್ತಿದ್ದರು. ಕೆಲವರಿಗೆ ಅವನಿಂದ ಉತ್ತರ ಕೂಡ ಸಿಗುತ್ತಿರಲಿಲ್ಲ. ಆದರು ಅವರು ತಪ್ಪದೆ ಕೇಳುತ್ತಿದ್ದರು. ಅವನಿಗೆ ಸಮೀಪವಾಗಲು ನಂಬರ್ ಪಾಂಚುಗಳಂತೆ ಯತ್ನಿಸುತ್ತಿದ್ದರು ಎಂತ ಸ್ಪಷ್ಟವಾಗಿ ಹೊಳೆಯುತ್ತಿತ್ತು. ಸೀಮಿತ, ನರ್ತಕಿ, ರಜನಿ ಯಾರೂ ಸಹ ಇದಕ್ಕೆ ಹೊರತಾಗಿರಲಿಲ್ಲ. ನನ್ನ ಆಶ್ಚರ್ಯ ದೊಡ್ಡದಾಗುತ್ತ ಇತ್ತು. ಆದರೆ ಅದನ್ನು ತಣಿಸಿಕೊಳ್ಳಲು ಅವನ ಬಗ್ಗೆ ಯಾರೊಡನೆ ಕೇಳಿದರೂ ತುಟಿಯ ಮೇಲೆ ಕೈಯಿಟ್ಟು ಸನ್ನೆ ಮಾಡುತ್ತಿದ್ದರು. ತಾವು ಹೆದರುವುದಲ್ಲದೆ ನನ್ನನ್ನೂ ಹೆದರಿಸುತ್ತಿದ್ದರು. ಅವರೆಲ್ಲ ಹೆದರುತ್ತಾರೆಂತ ನಾನೂ ಹೆದರುವುದು ಎಂದರೆ ಅರ್ಥವಿಲ್ಲ. +ಆದರೆ ನಾನು ಹೆದರುತ್ತಿದ್ದೇನೆ. ಯಾವುದು ನನ್ನನ್ನು ಹೆದರಿಸುತ್ತಿದೆ? ಅವನ ರೂಪವ, ಕರಿಬಣ್ಣವ, ಕೆಟ್ಟದೃಷ್ಟಿಯ, ಕರಿಬಣ್ಣದ ಮೇಳೆ ಮಿಟುಕುತ್ತು ಕುಳಿತಿದ್ದ ಚಿನ್ನದ ಸರ ಉಂಗುರಗಳ, ಅಥವ ಅವನ ತಲೆಗಿಂತಲೂ ಎತ್ತರದ ಬೆನ್ನಿದ್ದಸಿಂಹಾಸನದಂತೆ ಕಾಣುವ ಅವನ ಕುರ್ಚಿಯ? +ದಿನ ಹೋದಂತೆ ನನಗೆ ಅವನನ್ನು ಸಹಿಸುವುದೇ ಅಸಾಧ್ಯವಾಗುತ್ತ ಹೋಯಿತು. ಉಣ್ಣುವಾಗ ತಿನ್ನುವಾಗಲೆಲ್ಲ ಅವನ ಗಂಟು ಗಂಟು ಮುಖ ಮುರುಟಲು ಕೈಕಾಲು ಕತ್ತಲೆ ಬಣ್ಣ-ನೆನೆದರೆ ಸಾಕು ಎಲ್ಲ ಶೂನ್ಯವಾದಂತಾಗಿ ಯಾವುದೂ ಸೇರುತ್ತಿರಲಿಲ್ಲ. ಬಾಯಿ ರುಚಿಗೆಟ್ಟು ನಿದ್ದೆಗೆಟ್ಟು-ನನ್ನ ಅವಸ್ಥೆ ಶತ್ರುವಿಗೂ ಬೇಡ ಎನ್ನುವಂತಾಯಿತು. +ಯಾರೊಡನೆಯಾದರೂ ಅವನ ವಿಷಯ ಎತ್ತಿ ಮಾತಾಡುತ್ತ ಹೋದಂತೆ ಅದೆಲ್ಲ ಸ್ಪಷ್ಟವಾಗುತ್ತ ಹೋದೀತು. ಆದರೆ ಯಾರೊಡನೆ? +ಅವತ್ತೊಂದು ದಿನ ತಂದೆಯವರು ‘ಏನು ಕೆಲಸಕ್ಕೆ ಸೇರಿದ ಲಾಗಾಯ್ತು ತುಂಬ ಸಪೂರವಾದೆ. ಕೆಲಸ ಮಾಡಿ ಆಯಾಸವಾಗುತ್ತದ?’-ಎಂತ ಕೇಳಿದ್ದೇ ನನಗೆ ದುಗುಡ ಉಕ್ಕಿ ಬಂತು. ಎಲ್ಲ ಹೇಳಿ ಬಿಡಬೇಕು ಅಂತನಿಸಿತು. ಒಂದೇ ಸಲಕ್ಕೆ ಎಲ್ಲ ಹೇಳಿಬಿಡುವುದು ಸಾಧ್ಯವೇ ಆಗೆದೆ ನಿಧಾನವಾಗಿ ಶಬ್ದ ಶಬ್ದವಾಗಿ ಹೇಳುವ ಅಂತ ‘ಅಪ್ಪ ಒಂದು ಮಾತು ಹೇಳಬೇಕು ನಿಮ್ಮ ಹತ್ತಿರ’ ಎಂದೆ ‘ಹೇಳು ಮಗು’-ಎಂದರು. +‘ನೀವು ಯಾವತ್ತಾದರೂ ನನ್ನ ಆಫಿಸಿಗೆ ಬಂದಿದ್ದೀರ?’ +‘ಬರದೆ ಏನು? ನಿನ್ನ ಆಫಿಸೇನು ಯಾರೂ ಕಾಣದ್ದ?’ +‘ಬಂದವರು ಆ ಅವನನ್ನ…’ +‘ಛಿ ಛಿ ಒಳಗೆ ಹೋಗು. ಆ ವಿಷಯವೆಲ್ಲ ಯಾಕೆ ನಿನಗೆ? ಅವನು ನಿನ್ನ ಸುದ್ದಿಗೆ ಯಾವತ್ತಾದರೂ ಬಂದದ್ದುಂಟ? ಅವನಷ್ಟಕ್ಕೆ ಅವನು ಇದ್ದರೆ ನಿನಗೇನು? ನಿನ್ನ ಕೆಲಸಮಾಡಿ ಸಂಬಳ ತೆಗೆದುಕೊಳ್ಳುವುದು ಬಿಟ್ಟು ಊರ ಮೇಲಿನ ವಿಷಯಕ್ಕೆ ತಲೆಕೆಡಿಸಿಕೊಳ್ಳತಕ್ಕದ್ದಲ್ಲ’-ಅವರದಲ್ಲದ ಒರಟು ದನಿ. ದೊಡ್ಡ ಸ್ವರ. ತುಸು ಕಂಪನವೂ ಇತ್ತು. ನಾ ಸುಮ್ಮನೆ ನಿಂತೆ ಇದ್ದೆ. ಸ್ವಲ್ಪ ಹೊತ್ತಿನ ಮೇಲೆ ನನ್ನ ತಲೆ ತಡವುತ್ತ ಅವರು ‘ಸುಮ್ಮನೆ ಬೇಡದ್ದೆಲ್ಲ ತಲೆಗೆ ತುಂಬಿ ಕೊಳ್ಳಬೇಡ. ಕಾಲ ಹೀಗೆ ಇರುವುದಿಲ್ಲ’-ಎಂದವರು ‘ನಾ ಹೀಗೆಂದೆ ಎಂಬುದು ಗೋಡೆಗೂ ತಿಳಿಯಬಾರದು’-ಎಂದರು. ನನ್ನ ತಲೆಯ ಮೇಲೆ ಅವರ ಕಂಬನಿ ಉದುರಿದಂತಾಯಿತು. ಈ ಒಂದು ಕ್ಷಣ ನಾನು ಹೆದರಿಕೆಯ ಕುತೂಹಲದ ಗಡಿಯನ್ನು ದಾಟಿ ಬೆಪ್ಪುಬಡಿದವಳಂತಾದೆ. +ಊಟದ ಹೊತ್ತಿನಲ್ಲಿ ಅವನನ್ನು ದಾಟಿ ಹೋಗಲೇಬೇಕಿತ್ತು ನಾವು. ಹಾಗೆ ಹೋಗುವಾಗ ಎಲ್ಲರೂ ಬಗ್ಗಿ ಅವನೊಡನೆ ಕೇಳುತ್ತಿದ್ದರು. ‘ಊಟ ಬಂತೆ ತಮಗೆ?’ ಬಾಸ್ ಅಂತೂ ಇನ್ನಷ್ಟು ವಿನಯದಿಂದ ‘ಸಕಾಲದಲ್ಲಿ ಊಟ ಬಂತೆ? ಸರಿಯಾಗಿದೆಯಷ್ಟೆ?’ ಎಂತೆಲ್ಲ ಕೇಳುತ್ತಿದ್ದರು. ಹಾಗೆ ಕೇಳಿ ಅವನನ್ನು ಹಾದು ಮುಂದೆ ಹೋದದ್ದೇ ಅವರ ಕಣ್ಣುಗಳಲ್ಲಿ ವೇದನೆ ಹೆರೆಗಟ್ಟುತ್ತಿತ್ತು. ಯಾರ ಪ್ರಶ್ನೆಗೂ ಯಥಾ ಪ್ರಕಾರ ಆ ವ್ಯಕ್ತಿ ಉತ್ತರವನ್ನೇ ಕೊಡದೆ ಎದುರು ಮೇಜಿನ ಮೇಲೆ ಬೆಳ್ಳಿ ತಟ್ಟೆಯಲ್ಲಿಟ್ಟಿದ್ದ ಊಟವನ್ನು ಗೋಸಾಯಿಗುಬ್ಬನಂತೆ ಬಾಯಿಗೆ ತುಂಬಿಕೊಳ್ಳುವುದರಲ್ಲಿ ಮಗ್ನವಾಗುತ್ತಿದ್ದ. ದಿನವಿಡೀ ಈತ ಮಾಡುತ್ತಿದ್ದ ಕೆಲಸ ಇದೊಂದೇ ಆದುದರಿಂದ ಅವನ ಹೊಟ್ಟೆ ತುಂಬುವುದೂ ಮತ್ತೆ ಜೀರ್ಣವಾಗುವುದೂ ಈ ಒಂದು ಕೈ ಬಾಯಿ ಓಟದ ಕಾಯಕದಿಂದಲೇ ಎಂತ ನೆನೆಸಿ ನಗೆ ಬಂತು. ಆದರೆ ನಾನು ನಗಲಿಲ್ಲ. ಎಷ್ಟೋ ಹೊತ್ತಿನ ಮೇಲೆ, ಹಾಗೆ ನಗೆ ಬಂದಾಗ ನಾನು ನಗುವ ಧೈರ್ಯ ಮಾಡಲಿಲ್ಲ ಎಂಬ ಅರಿವಾಗಿ ತಲೆ ತಗ್ಗಿಸುವಂತಾಯಿತು. +ನಾನು ತಲೆತಗ್ಗಿಸಿದೆ ಅವರೆಲ್ಲರಂತೆ ಅವನೆದುರು ಬಗ್ಗಿ ವಿಚಾರಿಸದೆ ಸೆಟೆದುಕೊಂಡು ಅವನನ್ನು ಲೆಕ್ಕಕ್ಕೇ ಇಡದವರಂತೆ ಮುಂದೆ ಹೋದೆ. ಖಂಡಿತ ಒಂದು ದಿನ ಬಾಸ್ ನನ್ನನ್ನು ಕರೆಸಿ ‘ನೀನು ಅವನನ್ನು ವಿಚಾರಿಸುತ್ತಿರಬೇಕು. ಈ ಉದ್ಧಟತನ ಸಲ್ಲ’ ಎಂದೆಲ್ಲ ಬೈದಾರು. (ಆಗ ನಾನು ನನ್ನಿಂದಾದಷ್ಟು ಕಿರುಚಾಡಿ ‘ನಿಮ್ಮ ಕೆಲಸವೂ ನನಗೆ ಬೇಡ’ ಎಂತ ರಾಜೀನಾಮೆ ಪತ್ರಬರೆದು ಪಟ್ಟೆಂತ ಮೇಜಿನ ಮೇಲೆ ಕುಕ್ಕಿ-) ಅವನನ್ನು ದಾಟಿ ಹೋದ ಮೇಲೆ ಅಷ್ಟರವರೆಗೆ ನಿಂತೇ ಹೋದಂತಿದ್ದ ಹೃದಯ ನಡುಗುತ್ತಿತ್ತು. +ಇಲ್ಲ, ಬಾಸ್ ನನ್ನನ್ನು ಕರೆಯಲೇ ಇಲ್ಲ. ಹಾಗಾದರೂ ನಾನು ಹಗುರಾಗುವ ಸಾಧ್ಯತೆಯಿಲ್ಲ. ಬಹುಷಃ ನಾನೇ ಒಂದು ದಿನ ಸೋತು ಶರಣಾಗುತ್ತೇನೆ ಅಂತಿರಬಹುದು. ಅದು ಅಸಾಧ್ಯ ಎಂತ ಅವರಿಗೆ ತಿಳಿದಿಲ್ಲ. +ದಿನಗಳುರುಳಿದಂತೆ ನನಗನಿಸುತ್ತು ಇತ್ತು: ನಮ್ಮ ಉಸಿರು ಹೆಚ್ಚು ಬಿಸಿಯಾಗುತ್ತಿದೆ. ಜ್ವಾಲೆ ಉಗುಳುತ್ತಿದೆ. ನಮ್ಮನ್ನ ಪೂರ ಸುಡದೆ ಬರೀ ಕಾವಿನಿಂದ ಕರಕಾಗಿಸುತ್ತಿದೆ. ಅವನಂತೆಯೇ ನೆರಳಿಗಿಂತುಲೂ ಕತ್ತಲೆಗಿಂತಲೂ ಸಾವಿಗಿಂತಲೂ ಕರಾಳ ಮಾಡುತ್ತ ಇದೆ. ಅವನು ಹೇಗೆ ಸದ್ದು ಸುದ್ದಿಲ್ಲದೆ ನಮ್ಮನ್ನೆಲ್ಲ ಅವನಂತೆಯೇ ಪರಿವರ್ತಿಸಿಕೊಂಡು ಸೈನ್ಯ ಕಟ್ಟಿ ಯಾರ ಮೇಲೆಯೋ ಯುದ್ಧಕ್ಕೆ ನಮ್ಮನ್ನು ಕಳಿಸಿ ಗೆಲ್ಲುತ್ತಾನೆ. ಮತ್ತೆ ಇದಕ್ಕಿಂತಲೂ ದೊಡ್ಡ ಸಿಂಹಾಸನದಲ್ಲಿ ಕುಳಿತು ಇದಕ್ಕಿಂತಲೂ ದೊಡ್ಡ ಆಫಿಸನ್ನು ಆಳುತ್ತಾನೆ. ಯುದ್ಧದಲ್ಲಿ ಬದುಕಿ ಉಳಿದ ನಮ್ಮವರನ್ನೇ ಮತ್ತೆ ನೇಮಿಸಿಕೊಳ್ಳುತ್ತಾನೆ. ಮತ್ತೆ ಕರಕಾಗಿಸುವುದಕ್ಕೆ. ಸೈನ್ಯಕಟ್ಟುವುದಕ್ಕೆ, ಕಡೆಗೆ ಯಾರ ಮೇಲೋ ಛೂ ಬಿಡುವುದಕ್ಕೆ- +ಏನೆಲ್ಲ ಹೆಣೆಯುತ್ತಿತ್ತು ಮನಸ್ಸು, ಮನಸ್ಸು ಇರುವುದೇ ಹೆಣೆಯುವುದಕ್ಕೆ. ಕಂಡದ್ದಕ್ಕೆ ಕಾಣಬಾರದ್ದನ್ನು-ಎಲ್ಲವನ್ನೂ ಸೇರಿಸಿ ಮಾಲೆ ಮಾಡುವುದಕ್ಕೆ. ತಾನೇ ಕಟ್ಟಿದ ಮಾಲೆ ಮಾಲೆಯಲ್ಲ ಎಂತ ಬೆಚ್ಚಿ ಬೀಳುವುದಕ್ಕೆ. ಕೊನೆಗೊಂದು ದಿನ ಮಾಲೆಗೆ ಕತ್ತು ಕೊಟ್ಟು ನೇತಾಡುವುದಕ್ಕೆ. +ಹೀಗೇ- +ಹೇಗೇ ಎಣಿಸುತ್ತ ಹೋದರೆ ಒಂದು ದಿನ ನನ್ನ ತಲೆ ಕೆಡುವುದಿಲ್ಲವೆ? ನನ್ನ ತಲೆ ಕೆಡಬಾರದು. ಮತ್ತೆ ಸರಿಯಾದರೂ ಜನ ನನ್ನ ಭೂತವನ್ನೇ ನೆನೆಸುತ್ತಾರೆ. ನನ್ನ ಭವಿಷ್ಯದ ಸಮಾಧಿ ತೋರಿಸುತ್ತಾರೆ. ಜನರನ್ನು ಮೇರಿ ನಿಲ್ಲುವಂತಹ ತಾಕತ್ತು ಬರುವವರೆಗೂ ನನ್ನ ತಲೆ ಸರಿ ಇರಬೇಕು. +ಆದ್ದರಿಂದ ನನ್ನ ಒಳಗೊಳಗೆ ಇಳಿದು ಕತ್ತರಿಸುತ್ತ ಮುಂದುವರೆಯುವ ಪ್ರಶ್ನೆಗಳನ್ನು, ಉತ್ತರ ಸಿಗದಿದರೂ ಅಡ್ಡಿಲ್ಲ, ಗಟ್ಟಿಯಾಗಿ ಕೂಗಿ ಕೇಳಬೇಕು. +ಆ ಕ್ಷೌರಿಕನ ಹೆಂಡತಿ ಭೂಮಿ ತೋಡಿ ‘ರಾಜನ ಕಿವಿ ಕತ್ತೆ ಕಿವಿ’ ಎಂತ ಹೇಳಿದ್ದಳು ಆದರೆ ಅದನ್ನು ಮುಚ್ಚಿ ಅಲ್ಲಿ ನೆಟ್ಟ ಮರದಿಂದ ತಯಾರಿಸಿದ ನಗಾರಿಯೂ ‘ರಾಜನ ಕಿವಿ ಕತ್ತೆ ಕಿವಿ’ ಎಂದು ಊರಿಗೆಲ್ಲ ಸಾರಿ ಅವಳಿಗೆ ಕುತ್ತು ತಂದಿತ್ತು. +ಅಡ್ಡಿಲ್ಲ. ಅದು ಅಜ್ಜಿ ಕತೆ. ಅಜ್ಜಿ ಕತೆಯಲ್ಲಿ ಕಲ್ಲುಕಂಬಕ್ಕೂ ಜೀವವಿದೆ. ನಾಲಗೆಯಿದೆ. ನಾನಿಲ್ಲಿ ತೆಗೆದುಕೊಳ್ಳಬೇಕಾದ್ದು ಅವಳು ತನ್ನ ಮನಸ್ಸಿನಲ್ಲಿದ್ದುದನ್ನು ಹೊರಗೆ ಹಾಕಿದ ರೀತಿ ಮಾತ್ರ. +ನಾನೊಂದು ನಿರ್ಧಾರಕ್ಕೆ ಬಂದೆ. ಮನಸ್ಸು ಎಷ್ಟೋ ಹಗುರವಾಯಿತು. ಊಟದ ಸಮಯವಾಯಿತು. ಎಲ್ಲ ಎದ್ದರು. ಅವನಿಗೆ ಉಪಚಾರ ಮಾಡುತ್ತ ಊಟದ ಹಾಲಿಗೆ ಬಂದರು. ಅದನ್ನೆಲ್ಲ ನೋಡುತ್ತಿದ್ದಂತೆ ನನ್ನಲ್ಲಿ ಈ ಜಾಗದಿಂದಲೇ ಓಡಿಬಿಡಬೇಕು ಎನ್ನುವ ತವಕ ಮುಮ್ಮಡಿಯಾಗಿ ಬೆಳೆದಿತ್ತು. ಮನೆಗೆ ಹೋದ ಮೇಲೆ ಇಲ್ಲಿಯಾದರೂ ಗಟ್ಟಿಯಾಗಿ ಕೇಳಬೇಕೆಂತ ನಿರ್ಧಾರಮಾಡಿದ್ದರೂ ಅಷ್ಟರವರೆಗೆ ತಡೆದುಕೊಳ್ಳುವುದು ಸಾಧ್ಯವೇ ಇಲ್ಲವೆಂತ ಮಥಿಸುತ್ತಿದ್ದಂತೆ ನನ್ನ ಊಟ ಮುಗಿಯಿತು. ಖಾಲಿಯಾಗಿದ್ದ ಕ್ಯಾರಿಯರನ್ನು ಕಂಡು ದಾರಿ ಹೊಳೆದಂತಾಯಿತು. +ಕ್ಯಾರಿಯರನ್ನು ಹಿಡಿತು ಬಾತ್ರೂಮಿಗೆ ಹೋದೆ. ಬೋಲ್ಟ್ ಹಾಕಿದೆ. ಸುತ್ತ ಯಾರಿಲ್ಲವೆಂತ ಗೊತ್ತಿದ್ದರೂ ಅತ್ತಿತ್ತ ನೋಡಿದೆ. ಯಾರಿರಲಿಲ್ಲ. ಎದೆಡವಗುಟ್ಟುವ ಶಬ್ದ ಬಿಟ್ಟರೆ ಸುತ್ತಣ ಪ್ರಪಂಚದ ಎದೆ ಬಡಿತವೇ ನಿಂತಂತಿದ್ದ ನಿಶ್ಶಬ್ಧತೆ. +ನಡುಗುವ ಕೈಗಳಿಂದ ಕ್ಯಾಯಿಯರಿನ ಮುಚ್ಚಳ ತೆಗೆದೆ. ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ‘ಅವ ಯಾರು ಎಲ್ಲಿಯವ, ಎಲ್ಲಿಂದ ಬಂದ ಯಾಕೆ ಬಂದ, ಅವನನ್ನು ಆ ಕಲಿಪುರುಷನನ್ನು, ಒಂದು ನಾಯಿಯೆಂಬಂತೆ ಬಡಿದು ಓಡಿಸುವವರು ಯಾರೂ ಇಲ್ಲವೆ?’-ಎಂದು ಕೂಗಿದೆ. ಸ್ವರದಲ್ಲಿ ತ್ರಾಣವೇ ಕೂಡಿಬರಲಿಲ್ಲ. ಮೂರು ಬಾರಿ ಕೂಗಿ ಸಾಕಾಗಿ ಕ್ಯಾರಿಯರಿನ ಮುಚ್ಚಳ ಹಾಕಿ ದುಗುಡವೇ ಇಲ್ಲದ ಮುಖವಾಡದಿಂದ ಹೊರಗೆ ಬಂದೆ. ಮುಖವಾಡ ನಿಜವಾಗುತ್ತ ಇದೆ, ನಾನು ಹಗುರವಾಗುತ್ತ ಇದ್ದೇನೆ ಎಂತ ಅಂದುಕೊಂಡರೂ ಖಾಲಿಯಾಗಿದ್ದ ಕ್ಯಾರಿಯರು ಭಾರವಾಗಿದೆ ಅಂತ ಭಾಸವಾಗುತ್ತಿತ್ತು. +ಸೀಮಿತ ತನ್ನ ಪ್ರಿಯತಮನೊಂದಿಗೆ ಕುಳಿತಿದ್ದಳು, ಪರಸ್ಪರ ದಿಟ್ಟಿಸಿ ನೋಡುತ್ತ ಅವರಿಬ್ಬರೂ ತಮ್ಮ ಮುಂದಿನ ಊಟವನ್ನೇ ಮರೆತಿದ್ದರು, ಅವರ ಮುಖದ ತುಂಬ ತುಂಬಿದ್ದ ನೋವನ್ನು ನೋಡುತ್ತ ಹಂಚಿಕೊಳ್ಳುತ್ತ ಇನ್ನಷ್ಟು ನೋಯುತ್ತ ಇದ್ದಂತೆ ಕಾಣುತ್ತಿತ್ತು. ನರ್ತಕಿ ಕೈಬಳೆ ಸಹ ಕಿಣಿಗುಡದಂತೆ ಉಣ್ಣುತ್ತಿದ್ದಳು. ಉಳಿದವರು ಒಬ್ಬೊಬ್ಬರು ಒಂದೊಂದು ತರಹ. ಅಪರಾಧಿಗಳಂತೆ, ಕೈದಿಗಳಂತೆ. ಎಲ್ಲ ಕಳಕೊಂಡವರಂತೆ. ನಾಳೆಯೇ ಸಾವು ಬರುತ್ತದೆ ಎಂತ ತಿಳಿದವರಂತೆ. ಬಾಸ್ ಕೂಡ ಊಟ ದೂರ ಸರಿಸಿ ತಲೆ ತುರಿಸಿಕೊಳ್ಳುತ್ತ ಚಿಂತೆಯಲ್ಲಿ ಅದ್ದಿದಂತಿದ್ದರು. +ಅವರನ್ನೆಲ್ಲ ನೋಡುತ್ತಿದ್ದಂತೆ ನಾನೇ ಧೈರ್ಯಸ್ಥೆ ಅನಿಸಿತು. ಇವತ್ತು ನನಗೆ ಊಟ ಸೇರಿತು. ಮತ್ತು ಇವತ್ತು ನನ್ನ ಮನಸ್ಸಿನಲ್ಲಿದ್ದದ್ದು ಸ್ವಲ್ಪ ಹೊರಗೆ ಹೋಯಿತು. ಇವತ್ತಿಗೆ ನಾನೇ ವೀರ ರಾಣಿ. +ವೀರ ರಾಣಿಯಂತೆ, ಅವರೆಲ್ಲರಿಗೆ ಕಾಯದೆ ಊಟದ ಕೋಣೆ ಬಿಟ್ಟು ಆಫೀಸಿನ ಬಾಗಿಲು ಹೊಕ್ಕು ನನ್ನ ಕುರ್ಚಿಗೆ ತಲುಪಲು ಇನ್ನು ಕೇವಲ ಇಪ್ಪತ್ತು ಇಪ್ಪತ್ತೈದು ಹೆಜ್ಜೆಗಳೀವೆ. …ನಾ ಹೆಜ್ಜೆಯಿಡುತ್ತಿಲಿದ್ದೆ. +ಕ್ಯಾರಿಯರು ಭಾರವಾಗುತ್ತ ಇತ್ತು. ಒಂದೊಂದು ಹೆಜ್ಜೆಗೂ ಒಂದೊಂದು ತೂಕ ಹೆಚ್ಚಿದಂತೆ. ನಾನು ಕೈಯಿಂದ ಕೈಗೆ ಬದಲಿಸುತ್ತ ಮುನ್ನಡೆದರೂ ತಡೆಯದ ಮಣಭಾರ. +ರಾಣಿಯ ಕೆಚ್ಚೆಲ್ಲ ಕರಗಿ ನನಗೆ ಕಣ್ಣು ಕತ್ತಲೆ ಕಟ್ಟುವಂತಾಯಿತು. ಭಾರವಾಯಿತೆಂತ ಕ್ಯಾರಿಯರನ್ನು ಇಳಿಸುವಂತಿರಲಿಲ್ಲ. ಏನು ಮಾಡಲಪ್ಪ ಎಂದು ಅಳು ಬರುವಷ್ಟು ಅಸಹಾಯಕತೆಯಿಂದ ಯೋಚಿಸುತ್ತಿದ್ದಂತೆ ನನ್ನ ಕೈ ಸೋತು ಕ್ಯಾರಿಯರು ಜಾರಿತು. ಢಣಾರೆಂತ ನೆಲಕ್ಕೆ ಅಪ್ಪಳಿಸಿ ಮುಚ್ಚಳ ಹಾರಿ ಹೋಯಿತು. +ಮರುಕ್ಷಣದಲ್ಲಿಯೇ ನಾಲ್ಕೂ ಗೋಡೆಗಳಿಂದ ಪ್ರತಿಧ್ವನಿ ನಾನು ಕೂಗಿದ್ದಕ್ಕಿಂತ ನೂರು ಪಟ್ಟು ಜಾಸ್ತಿಯಾಗಿ ಬಂದು ಅಪ್ಪಳಿಸಿತು. ‘ಅವ ಯಾರು, ಎಲ್ಲಿಯವ, ಎಲ್ಲಿಂದ ಬಂದ, ಯಾಕೆ ಬಂದ. ಅವನನ್ನು ಆ ಕಲಿ ಪುರುಷನನ್ನು, ಒಂದು ನಾಯಿಯೆಂಬಂತೆ ಬಡಿದು ಓಡಿಸುವವರು ಯಾರೂ ಇಲ್ಲವೆ?’-ಒಂದು, ಎರಡು, ಮೂರನೆಯ ಸಲ ಅದು ಹಾಗೆ ಕೆಟ್ಟ ಸ್ವರದಿಂದ ಕಿರುಚುತ್ತಿದ್ದಂತೆ ನಾನು ಕುಸಿಯುವುದರಲ್ಲಿದ್ದೆ. +ನಾನವನೊಡನೆ ರಾಜಿ ಮಾಡಿಕೊಳ್ಳಲೇ ಬೇಕು. ಸಾವಿನಿಂದ ತಪ್ಪಿಸಿಕೊಳ್ಳಲು ಈ ರಾಜಿ ಬೇಕೇ ಬೇಕು. ಅದನ್ನು ಹೇಳಿದ್ದು ನಾನಲ್ಲ ಎನ್ನಬೇಕು, ಅದೆಲ್ಲ ನನಗೆ ಗೊತ್ತೇ ಇಲ್ಲ ಎನ್ನಬೇಕು. ನೀ ಹೇಗಿದ್ದರೂ ಸರಿ. ನೀ ಹೇಳಿದ್ದನ್ನೆಲ್ಲ ಮಾಡುತ್ತೇನೆ ಎಂತ ಹೇಳಬೇಕು. ಇನ್ನೂ ಮೈ ಮೇಲೆ ಏರಿ ಬಂದರೆ ಈ ಕ್ಯಾರಿಯರೇ ನನ್ನದಲ್ಲ ಎಂತ ಬಿಸಾಡಿ ಬಿಡಬೇಕು. +ಕುಸಿಯುತಿದ್ದ ನಾನು ಒಣಗಿದ ನಾಲಗೆಯಿಂದ ತುಟಿ ಸವರಿ ಶಕ್ತಿಯ ಭ್ರಾಂತಿ ಬರಿಸಿಕೊಂಡು ಹೀಗೆಲ್ಲ ಹೇಳಬೇಕು ಎಂತ ಮುಖವೆತ್ತಿದಾಗ ಆಹ್! ಅವನ ಕುರ್ಚಿ ಖಾಲಿಯಿತ್ತು! +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ […] +ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_43.txt b/Kannada Sahitya/article_43.txt new file mode 100644 index 0000000000000000000000000000000000000000..89de8d1224f7ba3d1a954ef31403d01027fc688c --- /dev/null +++ b/Kannada Sahitya/article_43.txt @@ -0,0 +1,79 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- +ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: +ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. +ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ +ಸಾಯಲಾರೆ ಶಿವನೆ ಬದುಕಲಾರೆ ಅಂತ ಚಡಪಡಿಸುತ್ತ +ಶಿವರಾತ್ರಿಯ ಸಮಯ ಸಂದರ್ಭಗಳ ಸಮನೋಡಿ +ಅಕ್ಕಪಕ್ಕ ಯಾರಿಲ್ಲದಿರಲು, ನಮ್ಮ ಶಿವದೇವರು +ಪಳಕ್ಕನೆ ಹುಣ್ಣುಕಳಚಿ ಕೆಳಕ್ಕೆಸೆದು +ಅಪರಧವೆನೆಗಿಲ್ಲ ಎಂದು ಗೀತಮಂ ಪಾಡುತ್ತ +ಕೈಲಾಸದಲ್ಲಿ ಸುಖವಿರ್ದರು. +ಸದರಿ ಹುಣ್ಣು ಮಣ್ಣಾಗಿ, ಮಣ್ಣಿನ ಉಂಡೆ ಭೂಲೊಕವಾಯಿತಯ್ಯಾ! +ಹುಣ್ಣೊಳಗಿನ ಸಣ್ಣ ಹುಳು ಜೀವರಾಶಿಗಳಾಗಿ, +ಬುದ್ಧಿಬೆಳೆದು ಮಾನವರಾಗಿ +ತಿನ್ನುವುದಕ್ಕೆ ಶಿವನ ಕತ್ತು ಎಲ್ಲಿದೆಯೆಂದು ಪರದಾಡತೊಡಗಿದರಯ್ಯಾ. +ಇಂತಿವರ ಹಸಿವು ಹಂಬಲವಾಗಿ +ಹಂಬಲವೆ ಮಂದಾರ ಮರವಾಗಿ +ಆಕಾಶದ ಸ್ಪೇಸಿನಾಚೆಯ ಕೈಲಾಸಕ್ಕೂ ಬೆಳೆದ ಮರ +ಭೂ-ಕೈಲಾಸಗಳನ್ನು ಏಕ ಮಾಡುವ ಏಕೈಕ ಮರ +ಅಲ್ಲಿ ಕೈಲಾಸದಲ್ಲಿ ಘಮಘಮಘಮ ಹೂ ಬಿಟ್ಟಿತಯ್ಯಾ. +ಶಿವದೇವರು ಬೀಸಿದ ಪರಿಮಳದ ಪವನಗಳ ಮೂಸಿ +“ಏನಿದು ಮಣ್ಣಿನ ವಾಸನೆ? +ಕೊಳೆತ ಗಾಯದ ಮೇಲೆ ಸುರಿದ ಮದ್ದಿನ ವಾಸನೆ; +ನನಗಿಷ್ಟವಿಲ್ಲ”ವೆಂದು ನಿಸ್ಸಂಶಯ ಹೇಳಿಬಿಟ್ಟರೇ! +ಏನು ಹಾಗೆಂದರೆ? ದೇವರಿಗೆ ದೇವರ ಜವಾಬ್ದಾರಿ +ಬೇಡವೆ? ಮಂದಾರ ಮರ ಮಣ್ಣಲ್ಲಿ ಬೆಳೆದದ್ದು +ನಿಜ, ಮಣ್ಣಿನ ಮೂಲದ ಹುಣ್ಣಿನ ವಾಸನೆ ಹೂಗಳಿಗೆ +ಬಂದರೆ ಅದೂ ಸಹಜ, ಮೂಸುವಾತ ದೇವನಾದರೂ. +ಮುಂದಿನ ಕತೆ ಕೇಳಿರಿ: +ಮಂದಾರ ಹೂವು ಕಾಯಾಗಿ ಹಣ್ಣಾಯಿತಂತೆ. +ಒಂದು ದಿನ ಪಾರ್ವತಿ ಲೀಲೆಯಲಿ ಮೈಮರೆತು +ಮಂದಾರ್ದ ಹಣ್ಣು ಹರಿದು ತಿಂದರೆ ಶಿವದೇವರು +ಹಣ್ಣು ತಿಂದೆಯೋ ಮಣ್ಣು ತಿಂದೆಯೋ ಅಂತ- +ಕೈ ತಟ್ಟಿ ಪಕಪಕ ನಗೋದೇ! +ಪಾರ್ವತಿಯ ಮೈಯಲಿ ಭೂಲೋಕದ ಮಣ್ಣು! +ದೇವರದ್ದೇ ಬೇರೆ ಬಿಡಿ; ಮೈಯ ಮಣ್ಣಲ್ಲಿ +ಮೂರ್ತಿಯ ಮಾಡಿ ಆಟವಾಡುವ ರೀತಿ. +ಇಲ್ಲಿ ನಮ್ಮ ಗತಿ? +ಮುಂದಿನ ಕತೆ ಎಂತಿಪ್ಪುದು ಕೇಳಿರಯ್ಯಾ: +ಪಾರ್ವತಿ ಹಣ್ಣು ತಿಂದದ್ದೇ +ದೇವಲೋಕಕ್ಕೂ ಬಂತು ಹಸಿವಿನ ಬಾಧೆ. +ಈಗ ತಗೊಳ್ಳಿ-ಭೂಮಿಯ ಮೇಲೆ ಬೆಳೆದದ್ದಕ್ಕೆಲ್ಲ +ಆಕಾಸವೇ ಹುರಿ;ಕೈಲಾಸದ ಕಡೆಗೇ ಮುಖ. +ನಮಗೆ ಗಾಳಿಯಿದ್ದ ಹಾಗೆ ಅವರಿಗೆ ನಮ್ಮ +ಭಯ ಭಕ್ತಿಯ ಧಗೆ. ಹೆಚ್ಚೇನು, ನಮ್ಮ ಯಾಗದ ಹೊಗೆ +ಹೋಗೋತನಕ ದೇವಲೋಕ ನಿರ್ಗತಿಕ. ಇಷ್ಟಾಗಿ +ಕೃಪೆದೋರುವ ನಾಟಕದ ಬಗೆ ಬೇರೆ. ಹ್ಯಾಗಿದೆ ನೋಡಿ! +ಈಗಲೂ ಶಿವದೇವರು, ಶಿವರಾತ್ರಿಯ ಸಮಯ, +ಅಂದರೆ ಮಾನವರಿಗೆ ಮೂಲಹಣ್ಣಿನ ನೆನಪಾಗುವ ದಿನ +ಅಕ್ಕಪಕ್ಕ ಸರಿಕ ದೇವತೆಗಳಿಲ್ಲದಾಗ ಕೆಳಗಿಣಿಕಿ +ನೋಡುವರಂತೆ. +ಮಾನವರ ಹಾಹಾಕಾರ ಕೇಳಿ ಮಮ್ಮಲ ಮರುಗಿ +ಮಂದಾರದ ತುಂಬ ಹೂಕಾಯಿ ಹಣ್ಣು ಬಿಡಿಸಿ +ಮನರಂಜನೆ ನೀಡುವರಂತೆ ಉಚಿತ. +ಅಥವಾ ಹೀಗೂ ಇರಬಹುದು” +ಮಂದಾರಮರ ಏರಿ ಯಾರೂ ಬಾರದ ಹಾಗೆ +ಬಿಗಿದ ಬೇಲಿ ಬಿಡಿಸಿದ ಎಲೆ ಹೂ ಕಾಯಿ, +ಶಿವರಾತ್ರಿಯ ಈ ಫಜೀತಿ, +ಈ ಕಥೆಯ ನೀತಿ. +***** +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […] +ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_430.txt b/Kannada Sahitya/article_430.txt new file mode 100644 index 0000000000000000000000000000000000000000..1dc98fe9619455f660bba3e5ba32b62e1d3bff79 --- /dev/null +++ b/Kannada Sahitya/article_430.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ ಎಂದು. ಇವಕ್ಕೆ ಹೋಲಿಸಿದಾಗ ಭಾರತೀಯ ಇಂಗ್ಲಿಷ್ ಸಾಹಿತ್ಯದ ಸಾಧನೆ ದೊಡ್ಡದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದೇಶ ಭಾಷೆಗಳ ಆಧುನಿಕ ಸಾಹಿತ್ಯ, ಪಶ್ಚಿಮದ ಅನುಕರಣೆ ಎಂಬ ಆರೋಪ ಮೊದಲಿನಿಂದ ಇದೆ. ಈ ವಿವಾದವನ್ನು ಮತ್ತೆ ಎತ್ತಿ ಬಾಂಬ್ ಹಾಕಿದವರು ಪ್ರಸಿದ್ಧ ಇಂಗ್ಲಿಷ್ ಲೇಖಕ ಸಲ್ಮಾನ್ ರಷ್ದಿ. ಮೇಲೆ ಹೇಳಿದ ವಿಚಾರಗಳನ್ನು ರಷ್ದಿ ಹೇಳಿದ್ದರಿಂದ ಈ ಜಗಳ ಪ್ರಾರಂಭವಾಗಿದೆ. ಈಚೆಗೆ ಹಲವು ತಿಂಗಳುಗಳಿಂದ ರಷ್ದಿ ಈ ರೀತ್ಯ ಅಭಿಪ್ರಾಯಗಳನ್ನು ಅಲ್ಲಲ್ಲಿ ಹೇಳುತ್ತಲೇ ಬಂದಿದ್ದರು. ಆರು ತಿಂಗಳ ಹಿಂದೆ ಅಮೇರಿಕಾದ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತಾ ಇದೇ ಅಭಿಪ್ರಾಯವನ್ನು ಹೇಳಿದಾಗ ಆ ಸಭೆಯಲ್ಲಿದ್ದ ಬಲ್ಲವರು ಸುಮ್ಮನಾದರು. ಈ ವಿಷಯವನ್ನು ಆ ವಿಶ್ವವಿದ್ಯಾನಿಲಯದಲ್ಲಿ ಪಿ‌ಎಚ್. ಡಿ. ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ಕನ್ನಡಿಗ ಚಂದನಗೌಡ ಅಪಾರ ವಿಸ್ಮಯದಿಂದ ನನಗೆ ಹೇಳಿದ್ದರು. ನಂತರ ಇದೇ ವಿಚಾರಗಳನ್ನು ರಷ್ದಿ ’ನ್ಯೂಯಾರ್ಕರ್’ ಪತ್ರಿಕೆಯಲ್ಲಿ ಬರೆದರು. ಶುರುವಾಯಿತು ಗುಲ್ಲು, ಗಲಭೆ. +ಎಲ್ಲ ನಿರೀಕ್ಷಿಸಿದ ಹಾಗೇ ನಡೆಯಿತು. ಸಹಜವಾಗಿಯೇ ದೇಶಭಾಷಾಭಿಮಾನಿಗಳು ಉರಿದುಬಿದ್ದರು. ಇಂಗ್ಲಿಷ್ ಪತ್ರಿಕೆಗಳಲ್ಲಿ, ಟೆಲಿವಿಷನ್‌ಗಳಲ್ಲಿ ಈ ಬಗ್ಗೆ ಭಾರೀ ಚರ್ಚೆ ಆರಂಭವಾಯಿತು. ಸಾಹಿತ್ಯದ ಚರ್ಚೆ ಸಮೂಹ ಮಾಧ್ಯಮಗಳಲ್ಲಿ ಬಂದಾಗ ಏನಾಗಬಹುದೋ ಅದೇ ಇಲ್ಲಿಯೂ ಆಯಿತು. ವಿಷಯಗಳು ಸರಳೀಕರಣಗೊಂಡು ಬಿಟ್ಟವು. ’ಟೈಂಸ್ ಆಫ್ ಇಂಡಿಯಾ’ ದವರು ದೇಶದ ಹಲ ಕಡೆಗಳಿಂದ ಸಾಹಿತಿಗಳನ್ನು ಸಂದರ್ಶಿಸಿ ಈ ಬಗೆಗೆ ಪ್ರತಿಕ್ರಿಯೆ ಕೇಳಿದರು. ಅಲ್ಲಿ ನನ್ನನ್ನು ಕೇಳಿದಾಗ ಹೇಳಿದ್ದೆ ’ರಷ್ದಿ ತುಂಬಾ ಪ್ರತಿಭಾವಂತ ಲೇಖಕ. ಮಜಾ ಎಂದರೆ ಆತ ಅನೇಕ ಸಾರಿ ತನ್ನ ಕಾದಂಬರಿಗಳ ಪಾತ್ರದ ಹಾಗೆಯೇ ವರ್ತಿಸುತ್ತಾರೆ. ಅವರ ಅನೇಕ ಪಾತ್ರಗಳಿಗೆ ವಾಸ್ತವ ಮತ್ತ್ಯ್ ಫ್ಯಾಂಟಸಿಗಳ ನಡುವೆ ವ್ಯತ್ಯಾಸವೇ ತಿಳಿಯದ ಸ್ಥಿತಿ ಇರುತ್ತದೆ. ರಷ್ದಿಗೆ ಈ ವಿವಾದದಲ್ಲೂ ಹೀಗಾಗಿದೆ. ಭಾರತೀಯ ದೇಶ ಭಾಷೆಗಳ ಸಾಹಿತ್ಯ್ದ ವಾಸ್ತವತೆಯ ಪರಿಚಯ ಅವರಿಗಿಲ್ಲ, ಭಾರತೀಯ ಇಂಗ್ಲಿಷೇ ದೊಡ್ಡದು ಎಂಬುದು ಅವರ ಫ್ಯಾಂಟಸಿ.’ +ಈ ಬಗ್ಗೆ ಎದ್ದ ವಿವಾದದಲ್ಲಿ ವಸ್ತುನಿಷ್ಠ ಚರ್ಚೆಗಿಂತ ಭಾವುಕ ಪ್ರತಿಕ್ರಿಯೆಗಳೇ ಹೆಚ್ಚಾಗಿದ್ದವು. ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೇಲಂತೂ ಅನೇಕ ಪ್ರತಿಭಾವಂತ ಸಾಹಿತ್ಯ ಚಿಂತಕರೇ ಹಾರಿಬಿದ್ದರು. ಭಾರತೀಯ ಇಂಗ್ಲಿಷ್ ಸಾಹಿತ್ಯ ಎಲಿಟಿಸ್ಟ್ ಸಾಹಿತ್ಯ, ಅದಕ್ಕೂ ಭಾರತದ ವಾಸ್ತವಕ್ಕೂ ಸಂಬಂಧವೇ ಇಲ್ಲ. ಈ ರೀತಿಯ ಆಕ್ರೋಶಪೂರಿತ ನಿಲುವುಗಳು ಪ್ರಕಟವಾದವು. ಇಂಗ್ಲಿಷಿಗೆ ಹೋಲಿಸಿದರೆ ಹಿಂದಿಯೂ ಸೇರಿದಂತೆ ಭಾರತದ ಭಾಷೆಗಳು ಅಧಿಕಾರಹೀನ ಭಾಷೆಗಳು. ಇಂಗ್ಲಿಷಿನಲ್ಲಿ ಬರೆದಾಗ ಬರುವ ಗ್ಲಾಮರ್, ಅಂತಸ್ತು, ಧಿಮಾಕು ದೇಶಭಾಷೆಗಳಲ್ಲಿ ಬರೆದಾಗ ಬರುವುದಿಲ್ಲ. ರಾತ್ರೋರಾತ್ರಿ ಇಲ್ಲಿ ದೊಡ್ಡ ಲೇಖಕರು ಸೃಷ್ಟಿಯಾಗುತ್ತಾರೆ. ಸೋಪನ್ನು, ಸೆಂಟನ್ನು, ಬ್ಲೇಡನ್ನು, ವಿಸ್ಕಿಯನ್ನು ಮಾರಾಟ ಮಾಡುವ ತಂತ್ರಗಳನ್ನು ಬಳಸಿ ಇಂಗ್ಲಿಷ್ ಸಾಹಿತ್ಯವನ್ನೂ ಮಾರುತ್ತಾರೆ. ಇಲ್ಲಿಯ ಒಂದು ವಿಶಿಷ್ಟ ತಂತ್ರ ಎಂದರೆ ಲೇಖಕ/ಲೇಖಕಿಯರಿಗೆ ಸಿಕ್ಕುವ ಗೌರವಧನದ ಮೊತ್ತವನ್ನೇ ಜಾಹೀರಾತಿನ ಸಾಧನವನ್ನಾಗಿ ಬಳಸಿಕೊಳ್ಳುವುದು. ಮಾರುಕಟ್ಟೆಯ ಎಲ್ಲ ವಿಕಟ ತಂತ್ರಗಳು ಭಾರತೀಯ ಇಂಗ್ಲಿಷ್ ಸಾಹಿತ್ಯವನ್ನು ’ಪ್ರಮೋಟ್’ ಮಾಡುವಾಗ ಬಳಕೆಯಾಗುತ್ತವೆ. +ಆದರೆ, ಈ ಅಂಶಗಳು ನಮ್ಮನ್ನು ವಾಸ್ತವದಿಂದ ದೂರ ತಳ್ಳಬಹುದು. ಏಕೆಂದರೆ, ಭಾರತೀಯ ಇಂಗ್ಲಿಷ್ ಸಾಹಿತ್ಯ್ದಲ್ಲೂ ಎರಡು ರೀತಿಯ ವರ್ಗೀಕರಣಗಳು ಮೊದಲಿನಿಂದ ಇವೆ. ಒಂದು ’ರೆಸಿಡೆಂಟ್ ನಾನ್-ಇಂಡಿಯನ್’ ಸಾಹಿತ್ಯ. ಎರಡು, ’ದೇಸಿ ಇಂಗ್ಲಿಷ್ ಸಾಹಿತ್ಯ’. ಮೊದಲನೆಯದಕ್ಕೆ ನೂರಾರು ಜನರ ಉದಾಹರಣೆ ಕೊಡಬಹುದು. ಈಚೆಗೆ ಬಂದ ವಿಕ್ರಂ ಸೇಠ್, ಶೋಭಾ ಡೇ, ಅರುಂಧತಿ ಇತ್ಯಾದಿ ಜನ. ಈ ಜನರ ಸಾಹಿತ್ಯ ಪ್ರಚಾರದ ಮೇಲೆ ನಿಂತಿರುತ್ತದೆ. ಥಳುಕಿನ ಬರೆವಣಿಗೆ. ಆದರೆ, ಇವರಲ್ಲೂ ತುಂಬ ಪ್ರತಿಭಾವಂತರಿದ್ದಾರೆ. ಉದಾಹರಣೆಗೆ, ಅಮಿತಾಭ್ ಘೋಷ್ ಯಾವುದೇ ಸಾಹಿತ್ಯ ಪರಂಪರೆಗೆ ಘನತೆ, ಶೋಭೆ ತಂದುಕೊಡುವ ಕಾದಂಬರಿಕಾರ. ಇನ್ನೊಂದು ಮಟ್ಟದಲ್ಲಿ ರಷ್ದಿಯ ಸಾಹಿತ್ಯವೂ ತುಂಬ ದೋಡ್ಡ ಮಟ್ಟದ ಸಾಧನೆಯೇ. ನಾವು ಒಪ್ಪಲಿ, ಒಪ್ಪದೇ ಇರಲಿ, ಇವರೆಲ್ಲ ಕಾದಂಬರೀ ಪ್ರಕಾರದಲ್ಲಿ ತುಂಬ ಆಕರ್ಷಕವಾದದ್ದನ್ನು ಸಾಧಿಸಿದ್ದಾರೆ. +ಅತೃಪ್ತಿ +ಇಷ್ಟಾದರೂ ಇವುಗಳ ಬಗ್ಗೆ ತೀವ್ರವಾದ ಅತೃಪ್ತಿಯನ್ನು ಕೆಲ ಸಾಹಿತ್ಯ ಚಿಂತಕರು ವ್ಯಕ್ತಪಡಿಸುತ್ತಾರೆ. ಈ ನೆಲದ ಜೀವನ, ರೀತಿ, ರಂಗು, ಚರಿತ್ರೆಯ ಚಲನೆ – ಈ ಯಾವುದೂ ಈ ’ರೆಸಿಡೆಂಟ್ ನಾನ್-ಇಂಡಿಯನ್’ ಸಾಹಿತ್ಯದಿಂದ ತಿಳಿಯುವುದಿಲ್ಲ ಎಂದು ಅವುಗಳನ್ನು ಟೀಕಿಸುತ್ತಾರೆ. ಸಾಹಿತ್ಯದ ಬಗೆಗಿನ ಒಂದು ನಿರ್ದಿಷ್ಟ ಪರಿಕಲ್ಪನೆಗೆ ಮುಗ್ಧವಾಗಿ ಅಂಟಿಕೊಂಡದ್ದರಿಂದ ಬರುವ ಹಠಮಾರೀ ತಿರಸ್ಕಾರ ಅದು. ಅಂದರೆ, ಸಾಹಿತ್ಯ ವಾಸ್ತವವನ್ನು ಪ್ರತಿನಿಧಿಕರಿಸಲೇ ಬೇಕು ಎಂಬ ತಾಂತ್ರಿಕ ಹಠಮಾರಿತನ ಇದು. ಸಾಹಿತ್ಯ ಜೀವನದ ಕನ್ನಡೀ. ಸಾಹಿತ್ಯ ಸಾಮಾಜಿಕ ಬದಲಾವಣೆಯ ಖಡ್ಗ. ಈ ರೀತಿಯ ತುಂಬಾ ಪ್ರಭಾವಶಾಲೀ ಘೋಷಣೆಗಳಿಂದ ಉಂಟಾಗುವ ಪ್ರತಿಕ್ರಿಯೆ ಇದು. +ಈ ಹಿನ್ನಲೆಯಲ್ಲಿ ಹೇಳುವುದಾದರೆ ಸಾಹಿತ್ಯದಲ್ಲಿ ಎರಡು ರೀತಿಯ ಮಾದರಿಗಳಿವೆ. ಒಂದು, ಪ್ರತಿನಿಧೀಕರಣದ ಮಾದರಿ. ಎರಡು, ಕಥನದ ಮಾದರಿ. ಪ್ರತಿನಿಧೀಕರಣದ ಮಾದರಿ ಸಾಹಿತ್ಯ ಜೀವನದ ಕನ್ನಡಿ ಎಂದು ನಂಬುವಂಥಾದ್ದು. ಇಲ್ಲಿ ಜೀವನದ, ಚರಿತ್ರೆಯ ಬದಲಾವಣೆಯ ಪ್ರತಿಮೆಗಳನ್ನು ಸಾಹಿತ್ಯ ಸೃಷ್ಟಿಸುತ್ತದೆ. ಮಾರ್ಕ್ಸ್‌ವಾದೀ ಸಾಹಿತ್ಯ ವಿಮರ್ಶೆ ಯಾವುದನ್ನು ’ಟೈಪ್’ ಎಂದು ಕರೆಯುತ್ತದೋ ಅಂಥದು ಇಲ್ಲಿ ಸಂರುದ್ಧವಾಗಿ ಸೃಷ್ಟಿಯಾಗುತ್ತದೆ. ಕಲೆ, ಜೀವನದ ಪ್ರತಿನಿಧಿಯಾಗಿರಬೇಕು ಎಂದಾಗ ಅಲ್ಲಿ ಸಾಹಿತ್ಯ ವೃತ್ತಪತ್ರಿಕೆಯ ಹಾಗೆ, ಚರಿತ್ರೆಯ ಗೆಜೆಟಿಯರ್‌ನ ಹಾಗೆ ಕೆಲಸ ಮಾಡತೊಡಗುತ್ತದೆ. ಪಾತ್ರವೊಂದು ಇಡೀ ತಲೆಮಾರಿನ ಪ್ರತೀಕವಾಗುತ್ತದೆ. ಶಿವರಾಮ ಕಾರಂತರ ರಾಮ, ಕುವೆಂಪು ಅವರ ಹೂವಯ್ಯ ಈ ರೀತಿಯ ಪಾತ್ರಗಳು. ಲಂಕೇಶರ ಬಸವರಾಜ, ಶಾಂತಿನಾಥ ದೇಸಾಯರ ನಾಯಕರು ಆ ರೀತಿಯ ತಲೆಮಾರಿನ ಸಮಗ್ರ ಪ್ರತಿನಿಧಿಗಳು. ಆದರೆ, ಕಥನದ ಮಾದರಿಗೆ ಆ ಹೊಣೆ ಇಲ್ಲ. ಅಲ್ಲಿ ಸಾಹಿತ್ಯ ಪ್ರತಿಭಾ ವಿಲಾಸಿ. +ಈ ಹಿನ್ನಲೆಯಿಂದ ಭಾರತೀಯ ಇಂಗ್ಲಿಷ್ ಸಾಹಿತ್ಯದ ಮೊದಲ ಮಾದರಿ ದುರ್ಬಲವಾದದ್ದು. ರಷ್ದಿಯನ್ನು ಬಿಟ್ಟರೆ ಉಳಿದವರಲ್ಲಿ ಭಾರತೀಯ ಚಾರಿತ್ರಿಕಾನುಭವವನ್ನು ಪ್ರತಿಮೆಗಳ ಮೂಲಕ ಮುಖಾಮುಖಿಯಾಗುವ ಪ್ರಯತ್ನ ಅಷ್ಟು ಪ್ರಮುಖವಾಗಿಲ್ಲ. ರಷ್ದಿಯಲ್ಲಿ ಮಾತ್ರ ಆ ಪ್ರಯತ್ನ ಉದ್ದಕ್ಕೂ ಇದೆ. ಆದರೆ, ಆತ ಅದನ್ನು ವಾಸ್ತವವಾದೀ ಮಾರ್ಗದಲ್ಲಿ ಮಾಡುವುದಿಲ್ಲ. ಹೀಗಾಗಿ, ಸಾಮಾನ್ಯ ಓದುಗರಿಗೆ ಈತ ಸಮಕಾಲೀನ ಭಾರತದ ಪ್ರತಿಕ್ರಿಯೆಯೊಂದನ್ನು ಶೋಧಿಸುತ್ತಿದ್ದಾನೆ ಎಂಬುದು ಅರ್ಥವಾಗುವುದು ಕಷ್ಟ. ರಷ್ದಿ ಕಥನ ಮಾರ್ಗದಲ್ಲಿ ಪ್ರತಿನಿಧೀಕರಣವನ್ನು ಮಾಡುತ್ತಿರುತ್ತಾರೆ. +ಭಿನ್ನ ಮಾದರಿ +ಭಾರತೀಯ ಇಂಗ್ಲಿಷ್ ಸಾಹಿತ್ಯವೆಂದರೆ ಬರೀ ’ರೆಸಿಡೆಂಟ್ ನಾನ್-ಇಂಡಿಯನ್’ ಮಂದಿ ಬರೆದ ಸಾಹಿತ್ಯ ಮಾತ್ರವಲ್ಲ. ಅದಕ್ಕಿಂತ ಭಿನ್ನವಾದ ಮಾದರಿ ಮೊದಲಿನಿಂದಲೂ ಅಲ್ಲಿತ್ತು. ರಾಜಾ ರಾವ್, ಆರ್. ಕೆ. ನಾರಾಯಣ್ ಮುಂತಾದವರು ಕನ್ನಡದಲ್ಲೋ, ತಮಿಳಿನಲ್ಲೋ ಬರೆಯಬಹುದಾಗಿದ್ದ ರೀತಿಯವರು. ಈ ಪರಂಪರೆಯನ್ನು ನಾನು ’ದೇಸಿ ಇಂಗ್ಲಿಷ್’ ಪರಂಪರೆ ಎಂದು ಕರೆಯುತ್ತೇನೆ. ಇತ್ತೀಚಿನೆ ವರ್ಷಗಳಲ್ಲಿ ಈ ರೀತಿಯ ಪರಂಪರೆ ಬೆಳೆಯುತ್ತ ಬರುತ್ತಿದೆ. ಉದಾಹರಣೆಗೆ, ಬೆಂಗಳೂರಿನ ಕನ್ನಡಿಗಾರದ ಮುಕುಂದರಾವ್ ಈ ಧಾರೆಯ ಪ್ರತಿಭಾವಂತ ಬರಹಗಾರ. ಅವರ ಇತ್ತೀಚಿನ ಕಾದಂಬರಿ ’ಡೆತ್ ಆಫ್ ಎನ್ ಆಯಾಕ್ಟಿವಿಸ್ಟ್’ ಕನ್ನಡದ್ದೂ ಆಗಬಹುದಾದ ಕೃತಿ. ಈ ನಾಡಿನ ಕ್ರಾಂತಿಕಾರಿ ಕತೆ, ದ್ವಂದ್ವ, ಸಾಮಾಜಿಕ, ರಾಜಕೀಯ ದಿಗ್ಭ್ರಮೆ ಈ ಎಲ್ಲ ಮುಕುಂದ ರಾವ್ ಕಾದಂಬರಿಯಲ್ಲಿ ಶೋಧಿತವಾಗಿವೆ. ಈ ರೀತಿಯ ಕಾದಂಬರಿಗಳ ಕಲಾತ್ಮಕ ಸಾಧನೆಗಳ ಬಗ್ಗೆ ಗಂಭೀರವಾದ ಚರ್ಚೆ ಸಾಧ್ಯವಿದೆಯಾದರೂ ಇವನ್ನು ಪರಕೀಯ ಅಥವ ಎಲಿಟಿಸ್ಟ್ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಶಶಿ ದೇಶಪಾಂಡೆ ಕೂಡಾ ಈ ರೀತಿಯ ದೇಸಿ ಲೇಖಕಿ. +ಹೀಗಾಗಿ, ಇಲ್ಲಿ ಏಳುವ ಪ್ರಶ್ನೆ ಎಂದರೆ: ಈ ರೀತಿಯ ದೇಸಿ ಇಂಗ್ಲಿಷ್ ಲೇಖಕರು ದೇಶ ಬಾಷೆಗಳಲ್ಲಿ ಯಾಕೆ ಬರೆಯಲಿಲ್ಲ ಎಂದು. ಇದಕ್ಕೆ ಉತ್ತರ ಸರಳವಲ್ಲ. ಸಮಾಜ ಶಾಸ್ತ್ರೀಯವಾಗಿ ಒಂದು ಪ್ರಾಥಮಿಕ ಮಟ್ಟದ ಉತ್ತರ ಸಾಧ್ಯವಿದೆ. ಇವತ್ತು ಮನೆಯಲ್ಲಿ, ಹೊರಗೆ, ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಬರೀ ಇಂಗ್ಲಿಷನ್ನೇ ಬಳಸುತ್ತಿರುವ ಹೊಸ ನಗರದ ಮಧ್ಯಮ ವರ್ಗವೊಂದು ಸೃಷ್ಟಿಯಾಗಿದೆ. ಈ ಜನಕ್ಕೆ ಇಂಗ್ಲಿಷೇ ಈಗ ಮಾತೃಬಾಷೆ. ಇದನ್ನು ನೈತಿಕವಾದ ಭಾಷೆಯಲ್ಲಿ ಟೀಕಿಸುವುದು ತಪ್ಪು. ಈ ವರ್ಗಕ್ಕೆ ಮನೆಯ ಕೌಟಂಬಿಕ ವ್ಯವಹಾರದ ಮಟ್ಟಿಗೆ ದೇಸಿ ಭಾಷೆ ಬಳಸಿದರೂ ಬೌದ್ಧಿಕ, ಸಾಹಿತ್ಯಕ ಅಭಿವ್ಯಕ್ತಿಗೆ ಇಂಗ್ಲಿಷನ್ನೇ ಆತ್ಮೀಯವಾಗಿ ಅವಲಂಬಿಸಿದೆ. ಈ ರೀತಿಯ ಎರಡು ವರ್ಗಗಳಿಂದ ದೇಸಿ ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದನ್ನು ಅಪರಾಧ ಎನ್ನುವುದು ತಪ್ಪು. +ಕೌಟಂಬಿಕ, ದೈನಂದಿನ ವ್ಯವಹಾರಗಳಲ್ಲಿ ಸುತ್ತಣ ಜನಸಮೂಹ ಬಳಸುವ ಭಾಷೆಗಳಿಗಿಂತ ಬೇರಾದ ಇಂಗ್ಲಿಷ್ ಭಾಷೆ ತನ್ನ ಪ್ರತಿಭೆಯಲ್ಲಿ ಎಷ್ಟು ಆಳವಾದದ್ದನ್ನು ಒಳಗೊಳ್ಳಬಹುದು ಎಂಬ ಪ್ರಶ್ನೆಯಂತೂ ಉಳಿದೇ ಉಳಿಯುತ್ತದೆ. ಸಾಹಿತ್ಯದಲ್ಲಿ ಭಾಷೆ ಮನೆಮಠ ಹಿತ್ತಲು ಗಡಂಗು ದೇವಾಲಯ ಸ್ಕೂಲು ಕೋರ್ಟುಗಳನ್ನು ಸಮಗ್ರವಾಗಿ ಒಳಗೊಳ್ಳುವ ಶಕ್ತಿ, ವ್ಯಾಪ್ತಿ ಪಡೆದಿರಬೇಕು. ಅದರಲ್ಲೂ ಕಾವ್ಯಕ್ಕೆ ಇದು ಅನಿವಾರ್ಯ. ಕಾವ್ಯದ ಶೈಲಿ ಎಂದರೆ ಸ್ಮೃತಿ ಪರಿಚಯ. ಈ ದೃಷ್ಟಿಯಿಂದ ದೇಸಿ ಇಂಗ್ಲಿಷಗರೂ ಕೂಡ ತುಂಬ ಆಳವಾದ, ಬಹುಮುಖಿಯಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಕಾವ್ಯ ಬರೆಯುವುದು ಕಷ್ಟ. ಈ ಸೌಭಾಗ್ಯ ಏನಿದ್ದರೂ ದೇಶ ಭಾಷೆಗಳಿಗಷ್ಟೇ ಮೀಸಲು. ಬೇಂದ್ರೆ, ಕಂಬಾರ, ಅಯ್ಯಪ್ಪ ಪಣಿಕ್ಕರ್, ಠಾಗೂರ್, ಅಡಿಗ ಈ ಪ್ರತಿಭೆಗಳು ಶುದ್ಧಾಂಗವಾಗಿ ದೇಶ ಭಾಷಾ ಸೃಷ್ಟಿಗರು. ಈಗ ಭಾರತೀಯ ಇಂಗ್ಲಿಷ್ ಕಾವ್ಯ ಹೆಚ್ಚೆಂದರೆ ಮಧ್ಯಮವರ್ಗದ ಖಾಸಗೀ ಭಾವಗೀತ. +ಇಷ್ಟಾದರೂ ದೇಶಭಾಷೆಗಳ ಮಟ್ಟಿಗೆ ಮೂಲಭೂತ ಪ್ರಶ್ನೆಯೊಂದು ಉಳಿದೇ ಉಳಿಯುತ್ತದೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕೆ. ಸಿ. ಭಟ್ಟಾಚಾರ್ಯ – ಇಂದು ಪ್ರಸಿದ್ಧ ತತ್ವಜ್ಞಾನಿ- ’ಸ್ವರಾಜ್ ಇನ್ ಐಡಿಯಾಸ್’ ಎಂಬ ಮುಖ್ಯ ಲೇಖನ ಬರೆದು ಭಾರತೀಯ ವೈಚಾರಿಕತೆಯನ್ನು ಇದರಲ್ಲಿ ಎಷ್ಟರ ಮಟ್ಟಿಗೆ ಸ್ವೋಪಜ್ಞತೆ ಇದೆ ಎಂಬ ಪ್ರಶ್ನೆ ಎತ್ತಿದ್ದರು. ಪರಕೀಯ ಪ್ರಭಾವಗಳಿಂದ ಮುಕ್ತವಾಗಿ ಸ್ವತಂತ್ರ ಮಾರ್ಗವೊಂದನ್ನು ನಿರ್ಮಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ್ದರು. +ಸಮಕಾಲೀನ ಸಾಹಿತ್ಯದ ಬಗೆಗೂ ಈ ರೀತಿಯ ಪ್ರಶ್ನೆಗಳು ಪ್ರಸ್ತುತವೇ. ಓಟ್ಟಾರೆಯಾಗಿ ನಮ್ಮ ಸಾಹಿತ್ಯ ಸಂಸ್ಕೃತಿಗಳ ಸಾಧನೆ ಅತಿ ದೊಡ್ಡದು ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ, ಸಾಹಿತ್ಯಕ್ಕೆ ವೈಚಾರಿಕ ಮಾರ್ಗಗಳಲ್ಲಿ ಪೂರ್ಣ ಸ್ವರಾಜ್ಯ ಸಿದ್ಧಿಸಿದೆಯೇ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ತ. ಸಾಹಿತ್ಯದಲ್ಲಿ ಶುದ್ಧ ಸ್ವರಾಜ್ಯ ಎಂಬುದೇ ಎಲ್ಲ, ಏನಿದ್ದರೂ ಅದು ಬಹುಮುಖೀ ಪರಕೀಯ ಪ್ರಭಾವಗಳ ನಿರಂತರ ಸಂಗರ್ಷ ಎಂಬ ನಿಲುವು ಕೂಡಾ ಇದೆ. +ಶುದ್ಧ ಸ್ವರಾಜ್ಯ ಮತ್ತು ಪ್ರಭಾವಗಳ ನಿರಂತರ ಸಂಗರ್ಷ ಎಂಬೆರಡು ಮಾದರಿಗಳ ಘರ್ಷಣೆಯಲ್ಲಿ ಸಮಕಾಲೀನ ಭಾರತೀಯ ಸಾಹಿತ್ಯದ ಅತಿ ಮುಖ್ಯ ವಾಗ್ವಾದ ಅಡಗಿದೆ. +***** +ಕನ್ನಡ ಪ್ರಭ, ವಾಗ್ವಾದ ಅಂಕಣ +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […] +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_431.txt b/Kannada Sahitya/article_431.txt new file mode 100644 index 0000000000000000000000000000000000000000..983b323d228514d49c4a12b4c27f90a097d31e6b --- /dev/null +++ b/Kannada Sahitya/article_431.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ ಶಬ್ದವೂ ಜನರ ಮಾತುಕತೆ ಕೆಮ್ಮು ನಗೆ ಎಲ್ಲವೂ ಸೇರಿಕೊಂಡು ಆ ಕತ್ತಲೆ ಕೇರಿಯಲ್ಲಿ ಅಗಾಧವಾದ ಜೀವನೋತ್ಸಾಹವನ್ನು ಕಟ್ಟುತ್ತಿತ್ತು. ಕುಲುಮೆಯ ಬೆಂಕಿ ಏರಿದಂತೆಲ್ಲ ಅಲ್ಲಿದ್ದವರ ಆಕೃತಿಗಳೆಲ್ಲ ಏರುತ್ತ ಇಳಿಯುತ್ತ ನಿರಂತರ ಯಾವುದಾವುದೋ ಸುಖಗಳಿಗಾಗಿ ಶ್ರದ್ಧೆಯಿಂದ ಕಾಯುತ್ತ ಕುಳಿತಿದ್ದಾರೆ ಎಂಬಂತೆ ಮಾಡಿತ್ತು. ಮುತ್ತಣ್ಣನ ಮೈಯೆಲ್ಲ ಬೆವರಿಂದ ಮೇಲೂ ಕೆಳಗೂ ಆಡುತ್ತಿದ್ದರೆ ಕುಡಲುಗಳು ಎಷ್ಟೆಷ್ಟು ಹರಿತವಾಗಿದೆ ಎಂದು ಜನ ಲೆಕ್ಕ ಹಾಕುತ್ತಿದ್ದರು. ಮುತ್ತಣ್ಣನ ಜೀವನದ ಯಾವ ಕಾಲದಲ್ಲೂ ಇವತ್ತಿನಷ್ಟು ಕುಲುಮೆ ಕೆಲಸವನ್ನು ಕಂಡಿದ್ದವನೇ ಅಲ್ಲ. ಈ ಕೆಲಸದಿಂದಾಗಿ ತನ್ನ ಮನೆಯಲ್ಲಿ ಬತ್ತ ಬಂದು ತುಂಬಿಕೊಳ್ಳುತ್ತದೆಂದು ಕನಸು ಹೆಣೆಯುತ್ತ ಎಲ್ಲರ ಕುಡಲುಗಳನ್ನು ಅಚ್ಚುಕಟ್ಟಾಗಿ ತಟ್ಟಿ ಹರಿತ ಮಾಡಿಕೊಡುತ್ತಿದ್ದ . ಕೇರಿಯ ಬಹುಪಾಲು ಜನ ತೀರ್ಮಾನಿಸಿಕೊಂಡಂತೆ ಕುಲುಮೆಯಲ್ಲಿ ಕುಡುಲು ತಟ್ಟಿಸಿಕೊಳ್ಳುವುದಕ್ಕೆ ಕಾಸು ಕೊಡುವ ಬದಲು ಇಂತಿಷ್ಟು ಬತ್ತ ಕೊಡುವುದೆಂದು ಮಾತಾಗಿತ್ತು. ನಾಳೆ ಮುಂಜಾವು ಕೇರಿ ಜನರೆಲ್ಲ ಬಳಗೆರೆ ಬಯಲಲ್ಲಿರುವ ಗದ್ದೆಗಳ ಬತ್ತವನ್ನು ಕೊಯ್ಲು ಮಾಡುವುದಿತ್ತು. ಕೇರಿ ಯಾವತ್ತೂ ಅದರ ಇತಿಹಾಸದಲ್ಲೇ ಇವತ್ತಿನಷ್ಟು ಸಂಭ್ರಮ , ಆಶಯ ನಂಬಿಕೆ ಲವಲವಿಕೆಗಳನ್ನು ಕಂಡಿರಲಿಲ್ಲ. ಅವರೆಲ್ಲರಿಗೂ ಚಿನ್ನದ ಬಣ್ಣದ ಬತ್ತದ ಕಾಳುಗಳು ಮಾಯಾಂಗನೆಯಾಗಿ ಬಂದು ಪ್ರತಿ ಮನೆ ಮನಗಳಲ್ಲಿ ತುಂಬಿಕೊಂಡು ದೊಡ್ಡ ಸೋಜಿಗದ ಸಂಗತಿಯಾಗಿ ಜನರ ಬತ್ತದ ಕನಸು ದೊಡ್ಡ ಬೆಟ್ಟವಾಗಿ ಕ್ಷಣಕ್ಷಣಕ್ಕೂ ಬೆಳೆಯತೊಡಗಿತು. ಕುಡುಲು ತಟ್ಟಿಸಲೇ ಬೇಕಾದ ಅನಿವಾರ್ಯತೆ ಇಲ್ಲದಿದ್ದವರು ಚಾವಡಿ ಕಲ್ಲಿನ ಮೇಲೆ ಕರ್ರಾ ಚರ್ರಾ ಜೀರ್ ಎಂದು ಮಸೆಯುತ್ತಾ ಮಾತನಾಡುತ್ತಾ , ಈಗ ನಿದ್ದೆಯನ್ನು ಕೈಬಿಡುವ ಮಟ್ಟಕ್ಕೆ ಹೋಗಿದ್ದರು. ಸಣ್ಣ ಹುಡುಗರು ಹಿರಿಯರ ಚಟುವಟಿಕೆಗಳಲ್ಲಿ ಪಾಲುಗೊಂಡು ತೂಕಡಿಕೆಯನ್ನು ತಳ್ಳುತ್ತಿದ್ದರು. ಹೆಂಗಸರು ಮೂಲೆ ಮುಡುಕಲಲ್ಲಿ ಧೂಳಿಡಿದು ಬಿದ್ದಿದ್ದ ಗುಡಾಣಗಳ ಮೈಸವರಿ ಪ್ರೀತಿಯಿಂದ ಮುಟ್ಟುತ್ತ ಬತ್ತ ತುಂಬಲು ‘ ಹೈಕ್ಲಾಸಗೆವೆ ’ ಎಂದುಕೊಳ್ಳುತ್ತಿದ್ದರು. ಯಾವುದೋ ಮುದುಕಿ ತನ್ನ ಮನೆಯವರಿಗೆಲ್ಲ ಉಗಿದು ಉಪ್ಪು ಹಾಕುತ್ತ ” ಆಳಾದೊವ್ಯೆ ಸಾವುರ್ ಸಲ ಯೇಳ್ದೆ: ಬ್ಯಾಡಾಕರಲ್ಲ.ಇಂತಾ ಗುಡಾಣ್‌ಗೋಳ ಆಳ್ ಮಾಡ್‌ಬ್ಯಾಡಿ ಮಾರ್ಯಬ್ಯಾಡಿ‌ಈ ಅಂತಾ , ನನ್ಮಾತ ಯಾರ್ ಕೇಳಾರು. ಮಣ್ಣುನ್ ಗುಡಾಣ್‌ಗೊಳ್ನೂ ಮಾರ್ಕ ತಿನ್ಕಂಡ್ರು. ಇವತ್ತು ಯಾರ್‌ತಕೋಗಿ ಒಂದ್ಗುಡಾಣ ಕೊಡ್ರವ್ವಾ ಬತ್ತಾ ತುಂಬ್ಕಬೇಕು ಅಂತ ಕೀಳುದು ” ಎಂದು ವಟಗುಟ್ಟುತ್ತಿದ್ದಳು. ಅವಳ ಆ ಸಿಟ್ಟಿಗೆ ಕಾರಣವಿತ್ತು. ಹಿಂದೆ ಅವಳ ತಾತಂದಿರು ದನಗಳನ್ನು ಕದ್ದು ಕೊಯ್ದು ತಿಂದು ಯಾವ ಸುಳಿವೂ ಇಲ್ಲದಂತೆ ಮಾಡಿ ಮಾಂಸದ ಮೂಳೆಗಳೆಲ್ಲವನ್ನೂ ದೊಡ್ಡ ದೊಡ್ಡ ಗುಡಾಣಗಳಲ್ಲಿ ತುಂಬಿ ಮನೆ ಹಿತ್ತಲ್ ಬಳಿ ಗುಂಡಿ ತೋಡಿ ಸಮಾಧಿ ಮಾಡಿಟ್ಟಿದ್ದರು. ದನಗಳ ಮಾಲೀಕರಿಂದ ತಪ್ಪಿಸಿಕೊಳ್ಳಲು ಈ ತಂತ್ರ ಬಳಸುತ್ತಿದ್ದು ಮಾನಮರ್ಯಾದೆಗಳನ್ನು ಹೊಟ್ಟೆ ಹಸಿವನ್ನು ಹೀಗೆ ಬಚ್ಚಿಡುತ್ತಿದ್ದರಂತೆ. ಒಮ್ಮೆ ಹೇಗೋ ಯಾವುದಕ್ಕೋ ಹಿತ್ತಿಲಲ್ಲಿ ಗುಂಡಿ ತೋಡುವಾಗ ಇವು ಸಿಕ್ಕಿ ಸುರಕ್ಷಿತವಾಗಿ ಹೊರತೆಗೆದು ನಂತರ ಅವನ್ನು ಮಾರಾಟ ಮಾಡಿ ಕೊಂಡಿದ್ದರು. ಮುದುಕಿಗೆ ಹಾಗೆ ಗುಡಾಣಗಳನ್ನು ಹೊರತೆಗೆದದ್ದು ತಮ್ಮ ಪೂರ್ವಿಕರ ಮಾನಮರ್ಯಾದೆಗಳನ್ನು ಹರಾಜು ಹಾಕಿದಂತೆ ಎನಿಸಿ ವಿಪರೀತ ದುಃಖ , ಸಿಟ್ಟು ಅಸಮಾಧಾನಗಳಿದ್ದರಿಂದ ; ಈಗ ಇವೆಲ್ಲದರಿಂದಾಗಿ ಆ ಗುಡಾಣಗಳ ನೆಲೆಯಲ್ಲಿ ; ಬತ್ತದ ಈ ಸಂದರ್ಭದಲ್ಲಿ ಮನೆ ಜನರನ್ನು ಬೈಯುತ್ತಿದ್ದಳು. ರಾತ್ರಿಯ ಆಕಾಶದ ತೋಟದಲ್ಲಿ ಆ ಜನರ ಕಣ್ಣುಗಳಿಗೆ ನಕ್ಷತ್ರಗಳು ಬತ್ತದ ಕಾಳುಗಳನ್ನು ಯಾರೋ ಒಣ ಹಾಕಿರುವಂತೆಯೋ ; ಬಿತ್ತನೆಗೆ ಚೆಲ್ಲಿದ್ದಾರೆ ಎಂಬಂತೆಯೋ ಕಾಣಿಸಲ್ಪಟ್ಟು ಇನ್ನಷ್ಟು ಸಂತಸದಿಂದ ಮುಂಜಾವಿನ ಕೆಲಸಕ್ಕಾಗಿ ಅಣಿಯಾಗತೊಡಗಿದರು . ಕುಲುಮೆ ಕಡೆಯಿಂದ ಬರುತ್ತಿದ್ದ ಧ್ವನಿಗಳು ಮುದುಕಿಯ ವಟಗುಟ್ಟುವಿಕೆಯಲ್ಲಿ ಕರಗುತ್ತಿದ್ದವು. ಜನ ಆ ಈ ಜಗುಲಿಯಿಂದ ಬಂದು ಒಂದೆಡೆ ಸೇರಿ ಮಾತನಾಡುತ್ತ ಇದ್ದಂತೆ ಬತ್ತ ಎಂಬ ಮಾಯಾಂಗನೆ ಬಗೆಬಗೆಯಾಗಿ ನರ್ತಿಸುತ್ತಿದ್ದಳು. ‘ ವೋದ್ ಸುಗ್ಗಿಲಲುವೆ ಅನ್ನವುಂಡಿದ್ದು ’ ಎಂದು ಯಾರೋ ಹೇಳುತ್ತಿದ್ದಾರೆ; ಇನ್ನರೋ ‘ ಇಲ್ಲ ಇಲ್ಲಾ ; ಗೌಡ್ರೆಡ್ತಿ ತಿಥೀಲಿ ಗಡದ್ದಾಗಿ ವುಂಡಿರ್ಲಿಲ್ವೆ ’ ಎನ್ನುತ್ತಿದ್ದ. ಮತ್ತೊಬ್ಬ ಉತ್ಸುಕತೆಯಿಂದ ಬಾಯಾಕಿ ; ಈಗಲೇ ಹೇಳದಿದ್ದರೆ ಮರೆತು ಹೋಗುತ್ತದೆನ್ನುತ್ತ‌ಆ ‘ ಅಯ್ಯೋ , ಅದ್ಯಾವ ಮಾತಂತಾ ಆಡೀರಿ ; ಬಿಸಾಕಿ ಅದಾ ಅತ್ತಾಗಿ , ಯಾವ್ ಅನ್ನಾವ ನೀವ್ ವುಂಡಿರುದು . ದಾಸೇಗೌಡ್ರು ಮನೇಲಿ ವುಂಡಿದ್ದೇ ; ನಾಯೇನೇಳನೆ ಅದುರ್ ಕತಿಯಾ ; ಅದೆಂತದೋ ಪಲಾವ್ನನ್ನಾ ಮಾಡಿದ್ರೂ… ಅದಾ ಬಾಳೆಲೆಗೆ ಹಾಕುದ್ರೆ … ಲಪ್ಪ ಲಪ್ಪಾ… ಅದೇನ್ ಗಮ್ಮನ್ನುದು ಅಂತೀಯ : ಅನ್ನ ಅಂಗೆ ಗಮ ಗಮಾ ಅಂತ ಹಬ್ಕಂದೂ ಇಡೀ ಗಂಜುಳದ್ ಕೊಟ್ಗೆನೆಲ್ಲ ಗಂದುದ್ ಮನೆ ಮಾಡ್ದಂಗ್ ಮಾಡ್ಬುಡ್ತು , ಅಂತೇ ಅನ್ವಾವುಂಡಿವಿನಿ. ನಿಂ ಜೀವುನ್ ಪೂರ್ತಾ ಅಂತೆದಾ ನಿವ್ ವುಣ್‌ಲಾರ್ರಿ ’ ಎಂದು ಹೇಳಿ ಸುಖ ಪಡತೊಡಗಿದ. ಅವನ ಆ ಸುಖಕ್ಕೆ ಬೇಸರಗೊಂಡ ಇನ್ನೊಬ್ಬ ಸಿಟ್ಟಿನಿಂದ ತಡೆಯುತ್ತಾ ‘ ಇರ್ಲಲೋ , ಅಂತೆದಾ ನೀನೊಬ್ನೆ ಅಲ್ಲಾ ಉಂಡಿರುನು. ನಾನು ಇದ್ಕೆ ನಾಕೊರ್ಸದಯಿಂದೆ ಚನ್ಪಟ್ಣ್ದೆಲಿ ವುಂಡಿದ್ದೇ ಕನಾ ’ ಎಂದ. ನಾಲ್ಕು ವರ್ಷದ ಹಳೆಯ ಮಾತನ್ನೋ ಸುಳ್ಳನ್ನೋ ಹೇಳುತ್ತಿದ್ದಾನೆಂದು ಅವರೆಲ್ಲ ಅವನನ್ನು ಗೇಲಿ ಮಾಡಿ ನಗಾಡಿ ಬಾಯಿ ಮುಚ್ಚಿಸಿದರು. ಅವರ ತಮಾಸೆಗಳಿಗೆ ಮತ್ತಷ್ಟು ಜನ ಬಂದು ಕೂಡಿಕೊಂಡರು. ಹೆಂಗಸರು ಮನೆಗಳಲ್ಲಿ ಬತ್ತ ತುಂಬಲು ಸಾಧನಗಳನ್ನು ಸಿದ್ಧಗೊಳಿಸುತ್ತಾ, ತಂದ ಬತ್ತದಲ್ಲಿ ಏನೆಲ್ಲ ತಿಂಡಿ ತೀರ್ಥಗಳ ಮಾಡಬಹುದೆಂದು ಕ್ಷಣಕಾಲ ಕಲ್ಪಿಸಿ ಏನೇನೋ ಲೆಕ್ಕಿಸುತ್ತಿದ್ದರು . ಹುಡುಗರು ನಿದ್ದೆಯ ಭುಜಗಳ ಮೇಲೆ ತಲೆಯಿಟ್ಟು ಬಿದ್ದಿದ್ದರು . ಜನ ಬೀಡಿಗಳ ಸುಟ್ಟು ಸುಟ್ಟು ಮುರಿಯುತ್ತಾ ತಮ್ಮ ಹೆಂಗಸರು ಹಬ್ಬಗಳಲ್ಲಿ ಅನ್ನವನ್ನು ಸರಿಯಾಗಿ ಮಾಡುವುದಿಲ್ಲ ಎನ್ನುತ್ತಾ ರುಚಿಯಾಗಿ ಅವರು ಏನನ್ನೂ ತಯಾರಿಸುವುದಿಲ್ಲವೆಂದು ಶಾಪ ಹಾಕುತ್ತಿದ್ದರು. ಈ ನಡುವೆ ಊರ ಬಜಾರಿ ಎನಿಸಿದ ತೋಪಮ್ಮ ; ಕೇರಿಯ ಮನೆಮನೆಯಲ್ಲೂ ರಾಗಿಹಿಟ್ಟನ್ನು ಸಾಲ ಮಾಡಿದ್ದವಳು ತರ್ಕಿಸುತ್ತ , ಬಂದ ಬತ್ತದಲ್ಲಿ ಒಂದು ಪಾವು ರಾಗಿಹಿಟ್ಟಿಗೆ ಬದಲಿಯಾಗಿ ಒಂದೊಂದು ಸೇರು ಬತ್ತವನ್ನೇ ಕೊಟ್ಟು ಎಲ್ಲ ಸಾಲಗಳಿಂದ ಮುಕ್ತಳಾಗಬೇಕೆಂದುಕೊಳ್ಳುತ್ತಿದ್ದಳು. ಈಗ ಇಡೀ ಕೇರಿ ನೂರಾರು ನೀಲಿ ನಕ್ಷೆಗಳಲ್ಲಿ ಬಿಸಿಯಾಗತೊಡಗಿತು. ಊರಿನ ಎಂಡದ ಛಾಂಪಿಯನ್ ಚಿಲ್ರೆಯ ಅಂದಾಜು ಹಾಕುತ್ತ ಹೇಗಾದರೂ ಮಾಡಿ ಐದು ಮೂಟೆ ಬತ್ತವನ್ನು ನಾಳೆ ಹೊಡೆದು ; ಅವನ್ನು ಮಾರಿ ಬಂದ ಹಣದಲ್ಲಿ ತೆಂಗಿನಕಾಯಿ ವ್ಯಾಪಾರವನ್ನು ಕೈಗೊಂಡು ನಂತರ ವಿಧವೆ ಜಾನಕವ್ವನನ್ನು ಬಲೆಗೆ ಕೆಡವಿಕೊಳ್ಳಬೇಕೆಂದು ಶಪಥ ಕೈಗೊಳ್ಳುತ್ತಿದ್ದ. ಬೆಂಡಾಗಿಹೋಗಿದ್ದ ವ್ಯರ್ಥ ಬದುಕಿಗೆ ಎಲ್ಲ ಸಂಪತ್ತೂ ಬಂದು ಇಳಿಯುತ್ತದೆನ್ನಿಸಿ ಅವ್ರೆಲ್ಲ ಮಲಗಲು ತೊಡಗಿದರು . ಕೆರೆ ಬಯಲು ಕಡೆಯಿಂದ ವಿಶಾಲ ಗದ್ದೆಗಳ ಮೇಲೆ ಬೀಸಿ ಬರುವ ತಂಗಾಳಿಯು ಘಮ್ಮನೆ ಬತ್ತದ ವಾಸನೆ ಅವರನ್ನು ಅಪ್ಪಿಕೊಳ್ಳತೊಡಗಿತು. +ಎರಡನೆ ಸಾಲು +ಊರ ಕೆರೆ ಬಯಲು, ಪ್ರತಿ ವರ್ಷವೂ ಹೂಳೆತ್ತದ ಮಣ್ಣು ತುಂಬಿಕೊಂಡು ಕೆರೆಯ ವಿಸ್ತಾರ ಬಯಲಿನಂತಾಗಿ , ಫಲಭರಿತ ಮೇಲು ಮಣ್ಣೆಲ್ಲ ಅಲ್ಲಿ ಬಂದ ಸಂಗ್ರಹವಾಗಿ : ಈಗದು ಉತ್ಕೃಷ್ಟ ಭೂಮಿಯಾಗಿಬಿಟ್ಟಿತ್ತು. ಒಳಗೆರೆಗೆ ಸಮೀಪದ ಗದ್ದೆಗಳ ಮಾಲೀಕರು ನಿಧಾನವಾಗಿ ಕೆರೆಯ ಒಳಭಾಗವನ್ನು ಗದ್ದೆಗಳಾಗಿ ಪರಿವರ್ತಿಸಿ ಆಕ್ರಮಿಸಿಕೊಂಡು ಅನುಭೋಗಿಸುತ್ತಿದ್ದರು.ಇದನ್ನೆಲ್ಲ ಸಹಿಸದ ಅದೇ ಜಾತಿಯ ಕೆಲವರು ಸಿಟ್ಟಾದರು. ಕೆರೆಯ ಹೊರಭಾಗದ ದೂರದ ಗದ್ದೆಯ ಮಾಲೀಕರಿಗೆ ನೀರೇ ಸಿಗದೆ ಫಸಲು ಕೈಹತ್ತುತ್ತಲೇ ಇರಲಿಲ್ಲ. ಹೀಗಾಗಿ ಈ ವಿಷಯವನ್ನು ಪ್ರಸ್ತಾಪಿಸಿ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಯಾರೋ ಒಂದು ಮೂಗರ್ಜಿಯನ್ನು ಬರೆಸಿಬಿಟ್ಟಿದ್ದರು. ಇಂಥ ಯಾವುದೇ ಸ್ಥಿತಿಗಳಿಗೆ ಶರವೇಗದಲ್ಲಿ ಪ್ರತಿಕ್ರಿಯಿಸುತ್ತಿದ್ದ ಆ ತಾಲ್ಲೂಕಿನ ತಹಶೀಲ್ದಾರರು ತಕ್ಷಣವೇ ಕಾರ್ಯೋನ್ಮುಖರಾಗಿ : ತಮ್ಮ ಎಲ್ಲೆಯಲ್ಲಿ ಎಷ್ಟು ಅಧಿಕಾರ ಚಲಾಯಿಸಬಹುದೋ ಅಷ್ಟನ್ನು ಚಲಾಯಿಸಿ ಸಂದೇಶವನ್ನು ಹೊರಡಿಸಿದ್ದರು. ದಕ್ಷನಾದ ಯುವಕ ಅಧಿಕಾರಿಗೆ ಇಂಥ ಸವಾಲು ಕೆಲಸಗಳನ್ನು ಸ್ವೀಕರಿಸುವುದೆಂದರೆ ಇಡೀ ಭಾರತಕ್ಕೆ ಸಾಮಾಜಿಕ ಆರ್ಥಿಕ ನ್ಯಾಯವನ್ನು ಕೊಡುವ ಕೆಲಸವಷ್ಟೇ ಪ್ರಮುಖ ಚಾರಿತ್ರಿಕ ಅನಿವಾರ್ಯ ಎಂಬಂತಾಗಿತ್ತು. ಕೆರೆಯ ಒಳಭಾಗವನ್ನು ಅನಧಿಕೃತವಾಗಿ ಬಳಸಿಕೊಂಡಿರುವವರ ಗದ್ದೆಗಳ ಫಸಲನ್ನು ಸರ್ಕಾರ ಈ ಬಾರಿ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ ಎಂತಲೂ , ಈ ಹಿಂದಿನ ಅಧಿಕಾರಿ ಈ ರೀತಿಯ ಅಕ್ರಮ ನಡವಳಿಕೆ ಬಗ್ಗೆ . ತಿಳಿವಳಿಕೆ ನೋಟೀಸು ಜಾರಿ ಮಾಡಿದ್ದರೂ ಈ ಜನ ಕೇಳಿಲ್ಲ ಎಂತಲೂ , ಹೀಗಾಗಿ; ಈ ವೇಳೆಯ ಬತ್ತವನ್ನು ಸರ್ಕಾರವೇ ಕಟಾವು ಮಾಡಿಕೊಳ್ಳುತ್ತದೆಂತಲೂ ನಿಯಮ ಜಾರಿಗೊಳಿಸಿಯೇಬಿಟ್ಟರು. ಹಾಗೆಯೆ ಕೆರೆಯ ಪುನರ್ನವೀಕರಣಕ್ಕೆ ಯೋಜನೆ ಸಿದ್ಧಗೊಳಿಸತೊಡಗಿದರು. ಹೀಗೆ ಬತ್ತ ಕೊಯ್ಲು ಮಾಡಲು ಬೇಕಾಗುವ ಕೆಲಸದಾಳುಗಳನ್ನು ಅದೇ ಊರ ಕೇರಿ ಜನರನ್ನು ಬಳಸಿಕೊಳ್ಳಲು ತಹಸೀಲ್ದಾರರು ತೀರ್ಮಾನಿಸಿ ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಬತ್ತವನ್ನು ಎಲ್ಲರೂ ಬಂದು ಕೊಯ್ಲು ಮಾಡಿ ಅವರ ಕೆಲಸದ ಸಾಮರ್ಥ್ಯ ಮತ್ತು ಸಂಖ್ಯೆಗನುಗುಣವಾಗಿ ಬತ್ತವನ್ನು ತೆಗೆದುಕೊಡು ಹೋಗಬಹುದೆಂದು ಹೇಳಿದರು. ಈ ವಿಷಯವನ್ನು ಆಗಲೇ ಊರಲ್ಲಿ ತಮಟೆ ಜೋಗಿಯ ಬಾಯಲ್ಲಿ ಸಾರಿಸಿಯೂ ಬಿಟ್ಟಿದ್ದರು ಹಾಗಾಗಿಯೇ ಇಡೀ ಹೊಲೆಗೇರಿ ಈ ಸುದ್ದಿ ಕೇಳಿ ಸರ್ವ ಸಿದ್ಧತೆಗಳಲ್ಲಿ ಮುಂಜಾವಿಗೆ ಕಾಯುವಂತಾಗಿದ್ದುದು. ಕೋಳಿಗಳು ಈ ಎಲ್ಲ ಸುದ್ದಿಯನ್ನೂ ಕೇಳಿ ತಿಳಿದುಕೊಂಡಿದ್ದಂತೆ ಕಂಡು ಬೇಗನೇ ಮುಂಜಾವು ತರಿಸಿ ಕೂಗಿಕೊಂಡು ಬೆಳಕು ಮಾಡಿದವು. ಕೆಲವರು ಕೋಳಿ ಕೂಗುವುದಕ್ಕೂ ಮೊದಲೇ ಎದ್ದು ಕುಳಿತು ಬೀಡಿ ಸೇದುತ್ತಿದ್ದರು. ಅವರ ಯಾವ ದಿನಗಳಲ್ಲೂ ಇಂಥಾ ದಿನ ಬಂದಿರಲಿಲ್ಲ. ಅವರವರ ಅನ್ನದ ಕನಸುಗಳಿಗೆ ಈಗ ನನಸಿನ ಬಣ್ಣ ಬಂದಿತ್ತು. ತಕ್ಷಣವೇ ಜಾರಿಯಾಗಿದ್ದ ಈ ಬಗೆಯ ಕಾನೂನಿಗೆ ಗದ್ದೆಗಳ ಮಾಲೀಕರು ಏನನ್ನೂ ಮಾಡಲಾರದಾಗಿ ತಮ್ಮಲ್ಲೂ ತಪ್ಪು ಇದ್ದುದರಿಂದಲೂ ಅಸಹಾಯಕರಾಗಿದ್ದರು. ಕೇರೆ ಏರಿ ಕೆಳಗಿನ ಗದ್ದೆಗಳ ಒಡೆಯರು ತಮಗೆ ಯಾವುದೇ ‘ ಲಾಸು ’ ಆಗಿಲ್ಲವೆಂದು ಸುಮ್ಮನಿದ್ದರು. ಬೆಳಕು ಚಳಿಯ ಬಟ್ಟೆಯನ್ನು ಬಿಚ್ಚಿ ಅದರ ಮೇಲೆ ಬಿಸಿಲನ್ನು ಹೊದಿಸತೊಡಗಿತ್ತು. ಜನರೆಲ್ಲ ಸಜ್ಜಾದರು. ಅವರಲ್ಲಿದ್ದ ಕುಡುಲಗಳುಶಬ್ಧಗೈಯತೊಡಗಿದವು. ಮುತ್ತಣ್ಣನು ಬತ್ತ ಬಂದು ಬೀಳುತ್ತದೆಂದು ಸುಖಪಡುತ್ತಾ ಎಲ್ಲರೂ ಬಯಲ ಕಡೆ ಹೊರಡುವ ಬಗ್ಗೆ ಆಟುರ ಮಾಡುತ್ತಿದ್ದ. ಪುಟ್ಟಿ , ಚಿಳ , ದುಬಟಿ , ರಗ್ಗು , ಹಳೆ ಸೀರೆಗಳನ್ನೆಲ್ಲ ಹಿಡಿದು ನಿಂತರು. ತೋಪಮ್ಮ ದೊಡ್ಡ ಗಂಟಲು ತೆಗೆದು ‘ ನಡೀರ್ಲೆ ಚಿನಾಲೀರಾ; ಇನ್ನೂ ಎನಾರಿ ಮಾತಾಡ್ತಾ ಇದ್ದೀರಿ . ಬಾಗ್ಲುಗ್ ಬಂದ ಬಾಗೈವಾ ನೋಡ್ತಾ ಕುಂತಿದ್ದಿರೆನೋ ’ ಎಂದು ಛೇಡಿಸುತ್ತ ಓಡಾಡುತ್ತಿದ್ದಳು. ಸಣ್ಣ ಹುಡುಗರು ಇನ್ನಿಲ್ಲದ ಉತ್ಸಾಹದಲ್ಲಿ ಅವರೂ ಕೂಡ ಬತ್ತ ತುಂಬಿಕೊಂಡು ಬರಲು ತಯಾರಾಗುತ್ತಿದ್ದರು. ಎಷ್ಟೋ ಜನ ತಂಗಳಿಟ್ಟು ತಿನ್ನುವುದನ್ನೂ ಮರೆತು ; ಅಂಗಡಿಗಳ ಬೆಲ್ಲದ ಬಿಸಿ ನೀರಿನಂತಹ ಟೀ ಹೀರಿ ನಿಂತಿದ್ದರು. ಅತಿ ವಯಸ್ಸಾದ ಮುದುಕರು ಇಂಥಾ ಕೆಲಸದಲ್ಲಿ ಭಾಗವಹಿಸಲು ದೇವರು ತಮಗೆ ಅವಕಾಶ ಕೊಡಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿದ್ದರು. ಕೇರಿಯಲ್ಲೀಗ ವಿಪರೀತ ಸದ್ದುಗಳು ಏರಿ ಜಾತ್ರೆಯೋ , ಪರಿಸೆಯೋ ಏರ್ಪಟ್ಟಿತೆನ್ನುವ ಹಾಗೆ ಕಾಣತೊಡಗಿತು. ಎಲ್ಲರೂ ಕೆರೆ ಬಯಲ ಕಡೆ ಹೊರಟರು. ಅವರ ಒಗ್ಗಟ್ಟು , ಗುಂಪು , ಕೈಲಿದ್ದ ಕುಡುಲು ಅವರ ಮುಖದಲ್ಲಿದ್ದ ಅಸಾಧ್ಯ sಸಾಹಸೀ ಕಳೆ ಎಲ್ಲವೂ ಮೇಲುಕೇರಿಯವರನ್ನು ತೆಪ್ಪಗಾಗಿಸಿದ್ದವು. ದಡ ದಡ ನಡೆದರು. ಹುಡುಗರು ಬಸ್ಸು ಬಿಡುವ ರೀತಿ ಅವರೆಲ್ಲರ ಮುಂದೆ ಓಡುತ್ತಿದ್ದರು. ಬಿಸಿಲು ಏರತೊಡಗಿತ್ತು. ಒಬ್ಬೊಬ್ಬರ ಕೈಯಲ್ಲೂ ಸಾಮಗ್ರಿಗಳಿದ್ದವು. ತೋಪಮ್ಮ ಎಲ್ಲರನ್ನೂ ಬಿರಬಿರನೆ ನಡೆಸುತ್ತಿದ್ದಳು. ಗಂಡಾಳುಗಳು ದೊಡ್ಡ ಹೆಜ್ಜೆಗಳಲ್ಲಿ ಕೆರೆಬಯಲನ್ನು ಮುಟ್ಟುತ್ತಿದ್ದರೆ ; ಅವರ ನಡುವೆ ಚಿಲ್ರೆಯು ಸಂದೇಶ ಕೊಡುವಂತೆ ಏನೇನೋ ಹೇಳುತ್ತಾ ಬರುತ್ತಿದ್ದ. ಕೆರೆ ಏರಿ ತಲುಪಿ ಅದರ ಮೇಲೆ ನಡೆಯತೊಡಗಿದರು. ಬಿಸಿಲು ಅವರ ಮೇಲೆ ಬಿದ್ದು ಅವರ ಕೈಲಿಡಿದ ವಸ್ತುಗಳ ಸಹಿತ ಏರಿಯ ಕೆಳಕ್ಕೆ ಬಿದ್ದು ಚಲಿಸುತ್ತಿತ್ತು. ಗದ್ದೆಗಳ ವಿಸ್ತಾರ ಬಯಲನ್ನೂ ; ಚಿನ್ನದ ಬಣ್ಣದ ಬತ್ತದ ಫಸಲನ್ನು ಕಣ್ಣು ತುಂಬಾ ನೋಡಿ ಕ್ಷಣಕಾಲ ಸ್ತಬ್ಧರಾಗಿ ನಿಂತರು. . ಈಗ ಅವರೆಲ್ಲರ ಮುಖಗಳಲ್ಲಿ ಎಷ್ಟೆಷ್ಟು ರಾಗಗಳು ಹರಿಯುತ್ತಿದ್ದವು ಎಂಬುದನ್ನು ಯಾರಿಂದಲೂ ಸೆರೆ ಹಿಡಿಯಲು ಆಗುತ್ತಿರಲಿಲ್ಲ. ಸಣ್ಣ ಹುಡುಗರು ಬತ್ತದ ಗೊನೆಗಳನ್ನು ಹಕ್ಕಿಗಳ ಹಾಗೆ ಮುಟ್ಟಿ ಖುಷಿಪಡುತ್ತಿದ್ದರು. ಇಷ್ಟರ ವೇಳೆಗಾಗಲೇ ಆ ತಹಸೀಲ್ದಾರರು ಪೇದೆಗಳ ಬೆಂಬಲ ಸಹಿತ ಅಲ್ಲಿಗೆ ಬಂದು ಒಂದು ಮರದಡಿ ನಿಂತಿದ್ದರು. ಗದ್ದೆಗಳ ಮಾಲೀಕರ ಸುಳಿವೆ ಅಲ್ಲಿ ಇರದಿದ್ದರೂ ದೂರದಲ್ಲಿ ಗದ್ದೆಗಳ ಹೆಂಗಸರು ನಿಂತು ಹಿಡಿ ಶಾಪ ಹಾಕುತ್ತಿದ್ದರು. ತೆಳ್ಳಗೆ ಬೀಸುವ ಗಾಳಿಗೆ ಬತ್ತದ ಗದ್ದೆಗಳು ವಾಲಾಡುತ್ತಿದ್ದಂತೆಯೇ ಆ ಜನರ ತೀವ್ರತರ ಆಶಯಗಳು ಕುಣಿಯತೊಡಗಿದವು. ಜನರನ್ನು ಉದ್ದೇಶಿಸಿ ಆ ಅಧಿಕಾರಿ ಹೇಳಿದ: ‘ ನೋಡಿ , ಯಾರೂ ಯಾವ ಗದ್ದಲ ಮಾಡದೆ ಬತ್ತ ಕೊಯ್ದು ಹಾಕಿ; ಒಂದೊಂದು ಕೆಲಸವನ್ನು ಹಂಚಿಕೊಂಡು ಮಾಡಿ , ಯಾವ ಗಲಭೆಗೂ ಹೆದರಬೇಡಿ , ಬತ್ತದ ಕೊಯ್ಲು ಇವತ್ತೇ ಮುಗಿಯಬೇಕು. ’ ಜನರು ತಹಸೀಲ್ದಾರರ ಈ ಮಾತುಗಳನ್ನು ಕೇಳಿದನಂತರ ಕಾರ್ಯೋನ್ಮುಖರಾದರು. ಎಲ್ಲರೂ ಕೆಸರಿನ ಗದ್ದೆಗಳಿಗೆ ಇಳಿದರು. ಕುಡುಲುಗಳನ್ನು ಚಾಣಾಕ್ಷತೆಯಿಂದ ಆಡಿಸುತ್ತ ಪರಪರ ಬರಬರ ಎನಿಸುತ್ತ ಕೈಕಡಗ ಬಳೆಗಳ ಸದ್ದಿನಲ್ಲಿ ಅಸಾಧ್ಯ ವೇಗದಿಂದ ಬತ್ತವನ್ನು ಕೊಯ್ಯತೊಡಗಿದರು. ಜನರ ತುಳಿತದ ಹೆಜ್ಜೆಗಳು ಸಾವಿರಾರು ಆಕೃತಿ ಕೆಸರಿನಲ್ಲಿ ಚಿತ್ರ ಬಿಡಿಸಿದಂತೆ ಮಾಡಿದವು. ಸಣ್ಣ ಹುಡುಗರು ಬತ್ತ ಕೊಯ್ಯಲು ಆಗದೆ ; ಅವರೆಲ್ಲ ಚಿಕ್ಕ ಚೀಲಗಳಿಗೆ ಬತ್ತವನ್ನು ಗೊನೆಯಿಂದ ಹೂರುತ್ತ ತುಂಬತೊಡಗಿದರು. ಬಗೆಬಗೆಯಾಗಿ ಕೆಲಸಗಳನ್ನು ಜನ ಆ ಕ್ಷಣದಲ್ಲೇ ಹಂಚಿಕೊಂಡರು. ಕೊಯ್ದ ಬತ್ತವನ್ನು ಸಾಲಾಗಿ ಹಾಕಿದ್ದನ್ನು ಎತ್ತಿಕೊಂಡು ಬಂದು ಒಂದೆಡೆ ಕೆಲವರು ಹಾಕುತ್ತಿದ್ದರೆ ; ಅವನ್ನು ಬಡಿಯಲು , ಚೀಲಗಳಿಗೆ ತುಂಬಲು , ಹುಲ್ಲನ್ನೆಲ್ಲ ಇನ್ನೊಂದೆಡೆ ರಾಶಿ ಹಾಕಲು ; ಹೀಗೆ ಎಲ್ಲ ಕೆಲಸವನ್ನು ಅತಿವೇಗದಿಂದ ಮಾಡತೊಡಗಿದರು. ಬೆವರು ಅವರ ಮೈಗಳಿಂದ ಇಳಿಯತೊಡಗಿತು . ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಒಂದೊಂದು ಪಾತಿ ಗದ್ದೆಗಳನ್ನು ಕೊಯ್ದು ಮುಗಿಸುತ್ತಿದ್ಡರು . ಚಿಲ್ರೆಯು ಎಲ್ಲರನ್ನು ನಿಭಾಯಿಸುವಂತೆ ಓಡಾಡುತ್ತಾ ; ‘ ತಿಕುದ್ ಬೆವುರಾ ವೊರೊಸೋಕು ಟೇಂ ಇಲ್ದಂಗೆ ಕೂದ್ ಬಿಸಾಕಿ . ಸಾಯೇಬ್ರು ಇವತ್ತೆ ಯಲ್ಲಾನು ಮುಗ್ಸಿ ಅಂತೇಳಿರುದಾ ಮರ್ತಕಂದ್ರಾ’ ಎಂದು ಅನವಶ್ಯಕವಾಗಿ ಬಾಯಿ ಹಾಕುತ್ತ ಇದು ಮೂಟೆ ಬತ್ತವನ್ನು ಕದಿಯಲು ಸಂಚುಹಾಕುತ್ತಿದ್ದ . ಬತ್ತವನ್ನು ಮೂಟೆಗೆ ತುಂಬುವವರು ತಮ್ಮ ಜೀವನದಲ್ಲಿ ಎಂದೂ ಇಷ್ಟೊಂದು ಬತ್ತವನ್ನು ತುಂಬಿಯೇ ಇರಲಿಲ್ಲವೆಂದು ಬೆರಗಾಗುತ್ತಿದ್ದರು. ಅಧಿಕಾರಿಯು ಇವರೆಲ್ಲರ ಅಸಾಧ್ಯ ಹುಮ್ಮಸ್ಸು ವೇಗ , ಗಿಜಿಗಿಜಿಗಳನ್ನು ನೋಡಿ ಆನಂದ ಪಡುತ್ತ ಒಂದು ಕೆಲಸದ ಮರದಡಿ ಕುಳಿತು ಜೊತೆಗಾರರ ಜೊತೆ ಏನೇನೋ ಮಾತನಾಡುತ್ತಿದ್ದರು. ಕೆಲವೇ ಗಂಟೆಗಳಲ್ಲಿ ಬತ್ತ ರಾಶಿರಾಶಿಯಾಗಿ ಬೀಳತೊಡಗಿತು. ಅಲ್ಲೇ ಒಂದೆಡೆ ಬತ್ತ ಬಡಿಯುತ್ತ ತೂರುತ್ತಾ ಮೂಟೆಗೆ ತುಂಬುತ್ತಾ ಸಾಲಾಗಿಡುತ್ತಾ ಬತ್ತದ ಗದ್ದೆಗಳ ಬರಿದು ಮಾಡುತ್ತಿದ್ದರು. ಹೆಂಗಸರು ಎಣೆಯಿಲ್ಲದ ಖುಷಿಯಲ್ಲಿ ಸೀರೆಯನ್ನು ತೊಡೆಯವರೆಗೂ ಎತ್ತಿಕಟ್ಟಿ ಯಾವ ಮುಜುಗರವೂ ಇಲ್ಲದಂತೆ ಕೊಯ್ಯುತ್ತಿದ್ದರು. ಈ ವೇಳೆಯಲಿ ಅವರ ಬದಿ ನೀರಾದ ತೊಡೆಗಳನ್ನು ನೋಡಿ ಸುಖ ಪಡಲು ಸಮಯವಿರಲಿಲ್ಲ. ಸಣ್ಣ ಹುಡುಗರು ಬತ್ತದ ಬುತ್ತಿಗಳನ್ನು ಮನೆ ಕಡೆ ಸಾಗಿಸತೊಡಗಿದ್ದರು. ಅಧಿಕಾರಿಗಳಿಗೆ ಆ ಬಗ್ಗೆ ಯಾವ ತಡೆಯೂ ಇದ್ದಂತೆ ಕಾಣಲಿಲ್ಲ. ಬಿಸಿಲು ವಿಪರೀತವಾಗುತ್ತಿತ್ತು. ಮತ್ತೆ ಕೆಲವರು ಬತ್ತವನ್ನು ಮನೆಗಳಿಗೆ ಕದ್ದುಕೊಂಡು ಹೋಗಿ ಬಚ್ಚಿಡತೊಡಗಿದರು. ಪೊಲೀಸರು ಜನರ ಇಂಥ ವೇಗದ ಕೆಲಸ ಕಂಡು ಒಳಗೊಳಗೇ ನಾಚಿಕೆಪಟ್ಟುಕೊಳ್ಳುತ್ತ ‘ ಚಾರ್ಜ್ ’ ಎಂದಾಕ್ಷಣವೇ ಲಾಟಿ ಬೀಸಿ ಹೊಡೆಯಲು ಕೂಡ ಅಷ್ಟೊಂದು ವೇಗದಲ್ಲಿ ತಾವು ನುಗ್ಗಲು ಆಗುವುದಿಲ್ಲ ಎಂದು ಬೆರಗಾಗುತ್ತಿದ್ದರು. ಗದ್ದೆಗಳ ಮಾಲೀಕರು ಎಲ್ಲೆಲ್ಲಿಗೆ ಹೋಗಿದ್ದಾರೆಂದು ಯಾರಿಗೂ ತಿಳಿಯಲಿಲ್ಲ. ಕೇರಿ ಜನರಿಗೆ ಒಳಗೊಳಗೇ ಕೊಂಚ ಆಳುಕಿತ್ತಾದರೂ , ಇವರೆಲ್ಲರ ಬೆಂಬಲಕ್ಕಾಗಿ ಕರೆತಂದಿದ್ದ ಪೇದೆಗಳ ರಕ್ಷಣೆಯಿಂದಾಗಿ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೇರಿಗಳ ಮನೆ ಜನ ಇಷ್ಟು ವೇಳೆಯೊಳಗೆ ಸಾಕಷ್ಟು ಬತ್ತವನ್ನು ಸಾಗಿಸುವಲ್ಲಿ ಸಫಲರಾಗುತ್ತಿದ್ದರು. ಹಾಗಿದ್ದರೂ ಬತ್ತದ ರಾಶಿ ಅಲ್ಲಿ ಬೆಳೆಯತೊಡಗಿತ್ತು. ತುಂಬಿದ್ದ ಗದ್ದೆಗಳು ಸಮಯ ಏರುತ್ತ ಹೋದಂತೆ ಖಾಲಿಯಾಗತೊಡಗಿದವು. ಬತ್ತ ಬಡಿದು ಒಂದೆಡೆ ಹಾಕಿದ ಹುಲ್ಲು ಈಗ ದೊಡ್ಡ ಬೆಟ್ಟದಂತೆ ಬಿದ್ದಿತ್ತು. +ಮೂರನೆಯ ಸಾಲು +ಆ ರಾತ್ರಿ ಕನಸು ಕಂಡಿದ್ದಂತೆಯೇ ಬತ್ತವೆಂಬ ಮಾಯಕಾತಿ ಅವರ ಅಡಿಯಾಳಾಗಿ ಬಿದ್ದಿದ್ದಳು. ಎಲ್ಲರ ಮೈ, ಬಟ್ಟೆಯೆಲ್ಲ ಬದಿಬಗ್ಗಡೆರಾಗಿ ಅವರ ರೂಪವೇ ಬದಲಾದಂತಾಗಿತ್ತು. ಗಂಡಸರ ರಟ್ಟೆಗಳು , ಹೆಂಗಸರ ಸೊಂಟಗಳು ಕೆಲಸದಿಂದ ದಣಿದಿದ್ದವು. ಈ ವೇಳೆ ಹಸಿವೆಂಬುದು ಅವರ ಬಳಿ ನಾಚಿಕೊಂಡು ಓಡಿಹೋಗಿತ್ತು. ಕೆಲಸ ತನ್ನ ಪಾಡಿಗೆ ತಾನು ಸಾಗುತ್ತಾ ಬಹುಪಾಲು ಗದ್ದೆಗಳನ್ನೆಲ್ಲ ಕೊಯ್ದು ಮುಗಿಸಿದಂತಾಗಿತ್ತು. ಹೊತ್ತು ಇಳಿಯತೊಡಗಿತ್ತು. ಜನ ಬತ್ತಗಳನ್ನು ಮನೆಗಳಿಗೂ ಸಾಗಿಸುತ್ತಿದ್ದರು. ಚಿಲ್ರೆಯು ಐದು ಮೂಟೆ ಬತ್ತವನ್ನು ಗೌಡರ ಕಬ್ಬಿನ ಗದ್ದೆಯೊಂದಕ್ಕೆ ಸಾಗಿಸಿ ವಿಜಯಶಾಲಿಯಂತೆ ನಿಂತಿದ್ದ. ಇಡೀ ಒಳಗೆರೆ ಬಯಲು ಬದಿಬಗ್ಗಡವಾಗಿ ವಿಸ್ತಾರವಾಗಿ ಬಿದ್ದುಕೊಂಡಿತ್ತು. ಇಷ್ಟೆಲ್ಲ ಆಗುತ್ತಿರುವಂತೆಯೇ , ಅವರೆಲ್ಲರ ಸ್ಥಿತಿಗಳನ್ನು ನಿಯಂತ್ರಿಸುವಂತೆ , ಮನುಷ್ಯನ ಎಲ್ಲ ಪ್ರಯತ್ನಗಳನ್ನು ಹಿಡಿದು ಆಳಬಲ್ಲೆ ಎಂಬಂತೆ ಇದ್ದಕಿದ್ದಂತೆ ಒಂದು ದೃಶ್ಯ ಎದುರಾಯಿತು. ದೂರದಿಂದ ಅಚಾನಕ್ ಆದ ಈ ದೃಶ್ಯಕ್ಕೆ ತಹಸೀಲ್ದಾರರು ಬೆಚ್ಚಿ : ಜನ ಈ ಹೊಸ ಆಗಮನಕ್ಕೆ ಅರ್ಥವಾಗದೆ ನಿಂತರು. ಜಿಲ್ಲಾಧಿಕಾರಿಗಳೂ, ಸರ್ಕಲ್ ಇನ್ಸ್‌ಪೆಕ್ಟರರೂ ; ಇತರೇ ಅಧಿಕಾರಿಗಳೂ ಮತ್ತು ಗದ್ದೆಗಳ ಮಾಲೀಕರು ಈಗ ಅಲ್ಲಿಗೆ ಬಂದವರಾಗಿದ್ದರು. ತಕ್ಷಣವೇ ಇಡೀ ಪರಿಸರವೇ ಬದಲಾಗಿಹೋಯಿತು. ಅಷ್ಟೊಂದು ಜೀವನೋತ್ಸಾಹಕ್ಕೆ ಯಾರೋ ಕೊರಳು ಹಿಸುಕಿದಂತಾಯಿತು. ಜಿಲ್ಲಾಧಿಕಾರಿಗಳು ಸಿಟ್ಟಿನಿಂದ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಗದ್ದೆಗಳ ಮಾಲೀಕರು ಸುಮ್ಮನೆ ನಿಂತು ಬತ್ತದ ರಾಶಿಯನ್ನು ನೋಡುತ್ತ ವಿಕಾರರಾಗುತ್ತಿದ್ದರು. ವಾದ ವಿವಾದ ಚರ್ಚೆ ಬಿಸಿಬಿಸಿ ಮಾತುಗಳು ಅಲ್ಲಲ್ಲಿ ಚೆಲ್ಲಾಡಿದವು . ರಕ್ಷಣೆಗೆಂದು ಬಂದಿದ್ದ ಪೇದೆಗಳು ಈಗಿನ ಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ಪೆಚ್ಚಾದರು. ತಹಸೀಲ್ದಾರರು ನಿರ್ಧಾರದ ದನಿಯಲ್ಲಿ ಬಾಯಿ ತೆಗೆದು ಎಂದರು ಆ ಜಿಲ್ಲಾಧಿಕಾರಿಗಳು ಸಾಕು ಬಾಯಿ ಮುಚ್ಚು ಎಂಬಂತೆ ಎಂದು ಗುಡುಗಿದರು. ಕೇರಿಯವರಿಗೆ ದಿಕ್ಕು ತೋಚದಂತಾಯಿತು. ‘ ನಿನ್ನ ಜನರ ಮೇಲಿನ ಪ್ರೀತಿಯಿಂದ ಇದನ್ನೆಲ್ಲ ಮಾಡಿ ಹಳ್ಳಿಗಳ ನೆಮ್ಮದಿಯನ್ನೇ ಹಾಳು ಮಾಡ್ತಾ ಇದ್ದೀಯ . ನನಗೆ ಗೊತ್ತು , ನಿನ್ನ ಮೇಲೆ ಏನು ಕ್ರಮ ತಗೋ ಬೇಕೂಂತ .’ ಎಂದು ಸಿಟ್ಟಿನಿಂದ ಎಲ್ಲ ಕಡೆ ಮುಖ ಕಿವಿಚಿದರು.ತಪ್ಪುಗಳ ಪಟ್ಟಿಯನ್ನು ತಹಸೀಲದಾರರ ಮೇಲೆ ಗೌಡರು ಹೇರತೊಡಗಿದರು. ತನ್ನ ಲಿಖಿತ ಒಪ್ಪಿಗೆ ಇಲ್ಲದೆ ಈ ತಹಸೀಲ್ದಾರನು ಅಧಿಕಾರದ ಎಲ್ಲೆಯನ್ನು ದಾಟಿ ಬತ್ತವನ್ನು ಕೊಯ್ಸಿದ್ದಾನೆಂದು ಜಿಲ್ಲಾಧಿಕಾರಿಗಳು ಕೂಗಾಡುತ್ತಿದ್ದರು. ತಹಸೀಲ್ದಾರರು ಈ ಕೆಲಸದ ಬಗ್ಗೆ ಲಿಖಿತವಾಗಿ ತಿಳಿಸಿದ್ದರೇ ಹೊರತು ಮೇಲಾಧಿಕಾರಿಗಳ ಒಪ್ಪಿಗೆ ಬರಲಿ ಎಂದು ಕಾಯುತ್ತಾ ಕುಳಿತಿರಲಿಲ್ಲ. ಮುಖ್ಯರಾಗಿ ಈ ತಹಸೀಲ್ದಾರನು ಹೊಲೆಯರ ಹೊಲೆಯರ ಜಾತಿಯವನೇ ಆಗಿದ್ದು , ಹೊಲೆಯರಿಗಾಗಿ ಈ ಕೆಲಸ ಮಾಡಿದ್ದಾನೆಂದು ಗದ್ದೆಗಳ ಮಾಲೀಕರು ಹೇಳತೊಡಗಿ ಆತನ ಜಾತಿಯನ್ನು ಬೈಯತೊಡಗಿದರು. ಗೌಡರು ಉತ್ಸಾಹಿತರಾಗಿ ಮುಂದೆ ನಿಂತು ಬಾಯಿತೆಗೆದು ಹೀಗೆ ಕೊಯ್ದ ಬತ್ತದಲ್ಲಿ ಅರ್ಧ ಪಾಲನ್ನು ಹೊಲೆಯರಿಗೆ ಕೊಡಲು ಕಾನೂನು ಎಲ್ಲಿದೆ ತೋರಿಸಿ ಎಂದು ಬಡಬಡಾಯಿಸುತ್ತ ಲಾ ಪಾಯಿಂಟ್ ಎಸೆಯುತ್ತಿದ್ದರು. ಬತ್ತದಲ್ಲಿ ಅರ್ಧಪಾಲು ಪಡೆಯುವುದರ ಜೊತೆಗೆ ಕದ್ದು ಈಗಾಗಲೇ ಮನೆಗಳಿಗೆ ಬತ್ತವನ್ನು ತುಂಬಿಕೊಂಡಿದ್ದಾರೆ ಎಂತಲೂ ಇದಕ್ಕೂ ಮುಖ್ಯವಾಗಿ ಆ ಹೊಲೆಯರು ಮೈಮರೆತು ಗದ್ದೆಗಳ ಕೊಯ್ಯುವಾಗ ಅಕ್ರಮಗೊಂಡಿಲ್ಲದ ಗದ್ಡೆಗಳ ಬತ್ತವನ್ನೂ ಕೊಯ್ದು ತುಂಬಿಕೊಂಡಿದ್ಡಾರೆ ಎಂತಲೂ ಗದ್ದೆಯನ್ನು ಕೊಯ್ಸಿರುವುದು ಜಾತಿಯ ಕೆಲಸ ಎಂತಲೂ ಇಷ್ಟಕ್ಕೆಲ್ಲ‌ಈ ತಹಸೀಲ್ದಾರನೆ ಜವಾಬ್ದಾರನೆಂದು ದೊಡ್ಡ ಗಲಭೆಯನ್ನೇ ಈಗ ಅಲ್ಲಿ ಸೃಷ್ಟಿಸಿದರು. ತಹಸೀಲ್ದಾರರಿಗೆ ಯಾವ ರೀತಿ ಉತ್ತರ ಕೊಡುವುದು ಎಂಬುದೇ ಈಗ ತಿಳಿಯದಂತಾಗಿ ಗೊಂದಲಗೊಂಡರು. ಇಡೀ ಬಯಲು ಕೆಸರಿನಿಂದ ವಿಕಾರವಾಗಿ ಹಾಸಿಕೊಂಡಿದ್ದು ಅವರನ್ನೆಲ್ಲ ನೋಡುತ್ತಿತ್ತು. ಜನ ಈಗ ಮಾಯವಾಗತೊಡಗಿದರು. ಸಂಜೆ ಸಮೀಪಿಸತೊಡಗಿತು. ಸಮಸ್ಯೆಗಳು ಬಾಲದಂತೆ ಬೆಳೆಯತೊಡಗಿದವು. ಒಳಗೆರೆಯಲ್ಲಿ ಅಕ್ರಮವಾಗಿ ಬತ್ತ ಬೆಳೆದಿದ್ದ ಗದ್ದೆಗಳ ಪೈಕಿಯವರಲ್ಲಿ ಮೂರು ಮಂದಿಯವು ಹೊಲೆಯರಿಗೆ ಸೇರಿದ್ದು, , ಅವನ್ನು ಕೊಯ್ಯದೆ ಜಾತಿ ಪ್ರೀತಿಯಿಂದ ಬಿಟ್ಟುಕೊಟ್ಟಿದ್ದರು. ಗೌಡರು ಈಗ ಆ ಗದ್ದೆಗಳನ್ನು ತೋರಿಸುತ್ತ ‘ ನೋಡಿ ಸ್ವಾಮಿ , ತಮ್ ಜಾತಿಯೋರ್ ಗದ್ದೆಗಳ ಕೊಯ್ದೆ ಯಂಗ್ ಬಿಟ್ಕೊಟ್ಟಿದ್ದರೂ ಅನ್ನೂದ ? ’ ಎನ್ನುತ್ತಾ ಈ ಅಧಿಕಾರಿಯೂ , ಈ ಹೊಲೆಯರೂ ಎಂತಹ ನೀಚ ಕೆಲಸ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳಿಗೆ ತೋರಿಸುತ್ತಿದ್ದರು. ಪೇದೆಗಳು ಸುಮ್ಮನೆ ನಿಂತಿದ್ದರು. ಸರ್ಕಲ್ ಇನ್ಸ್‌ಪೆಕ್ಟರು ಗಂಭೀರವಾಗಿ ಅತ್ತಿತ್ತ ಹೆಜ್ಜೆ ಹಾಕುತ್ತಿದ್ದರು. ತಮ್ಮ ಮೇಲೆ ಎಸಗಿರುವ ಇಂತ ದೂರ್ತ ಕ್ರಿಯೆಗಳಿಂದಾಗಿ ಈ ತಹಸೀಲ್ದಾರರನ್ನು ಕೂಡಲೆ ವಜಾ ಮಾಡಬೇಕಂತಲೂ, ಹೊಲೆಯರಿಗೆ ಯಾವುದಾದರೂ ಶಿಕ್ಷೆ ವಿಧಿಸಬೇಕಂತಲೂ ಪಟ್ಟು ಹಿಡಿಯತೊಡಗಿದರು. ಕತ್ತಲೆ ನಿಧಾನವಾಗಿ ಬರಲು ತೊಡಗುತ್ತಿತ್ತು. ಇದೆಲ್ಲಾ ರಾದ್ದಾಂತವಾಗುವ ಮುಂಚೆಯೆ ಗೌಡರು ಒಂದಾಗಿ ತಕ್ಷಣವೇ ಬೆಂಗಳೂರಿಗೆ ಹೋಗಿ ಅಲ್ಲಿನ ರಾಜಕೀಯ ಪಟುಗಳಿಗೆ ಪಟ್ಟು ಹಾಕಿ ಹಿಡಿದು ನಂತರ ಜಿಲ್ಲಾಧಿಕಾರಿಗಳನ್ನು ಕಂಡು ಜೊತೆಗೂಡಿಸಿಕೊಂಡು ಸಕಲ ಸಿದ್ಧತೆಗಳಿಂದ ಕೆರೆ ಬಯಲಿಗೆ ಬಂದಿದ್ದರು. ತಹಸೀಲ್ದಾರರು ಈ ಕಾರ್ಯಾಚರಣೆ ಬಗ್ಗೆ ‘ ಅಸ್ತು ’ ಎನ್ನುವ ಲಿಖಿತ ದಾಖಲೆ ಪಡೆದಿರಲಿಲ್ಲ ಅಷ್ಟೆ. ಆದರೆ ಇದನ್ನೇ ಮುಖ್ಯವಾಗಿ ಇಟ್ಟುಕೊಂಡು ; ಇದಕ್ಕೂ ಆಳದಲ್ಲಿರುವ ಬೇರೆ ಕಾರಣಗಳಿಂದ ಬಂದು ಎಲ್ಲ ಕ್ರಿಯೆಗಳನ್ನು ಬದಲಿಸಿ ಈಗ ಇದನ್ನೊಂದು ದೊಡ್ಡ ರೇಜಿಗೆ ಮಾಡಿಸಿ ಬಿಟ್ಟಿದ್ದರು. ಗೌಡರೆಲ್ಲರೂ ಕೂಡಿ ಅಧಿಕಾರಿಗಳಿಗೆ ಈಗ ಇನ್ನೊಂದು ನಿರ್ಣಯವನ್ನು ಇಟ್ಟರು. ಹೊಲೆಯರು ತಮ್ಮ ಮನೆಗಳಲ್ಲಿ ತುಂಬಿಕೊಂಡಿರುವ ಬತ್ತವನ್ನು ವಾಪಸ್ಸು ತರಿಸಬೇಕಂತಲೂ ; ತಮಗೆ ಆ ಬತ್ತವನ್ನು ಹಿಂತಿರುಗಿಸಿ ಕೊಡುವ ಮನಸ್ಸಿಲ್ಲದಿದ್ದರೆ ; ಆ ಬತ್ತವನ್ನೆಲ್ಲ ಲೆವಿ ಬತ್ತವೆಂದು ಲೆಕ್ಕ ಚುಕ್ತ ಮಾಡಿಕೊಳ್ಳಬಹುದೆಂದು ಹೇಳಿದರು . ಹಾಗೆಯೆ ಆ ಬತ್ತವನ್ನು ನೀರಾವರಿ ಕಂದಾಯಕ್ಕಾದರೂ ಸಮಮಾಡಿಕೊಳ್ಳಬಹುದೆಂದು ವಿವರಿಸಿದರು. ಅಧಿಕಾರಿಗಳು ಅವರ ಈ ಮಾತುಗಳಿಗೆ ಒಪ್ಪಿದರು. ಹೊಲೆಯರ ಬತ್ತದ ಕನಸು ಈಗ ಹರಿದ ಬೆಳ್ಳಕ್ಕಿಯ ರೆಕ್ಕೆ ಪುಕ್ಕ ಆಕಾಶದಿಂದ ಗಾಳಿಗೆ ಅನಾಥವಾಗಿ ಬೀಳುವಂತೆ ಆಗಿಬಿಟ್ಟಿತು . ಕೆರೆ ಏರಿ ಕೆಳಗಿದ್ದ ಗದ್ದೆಗಳ ಮಾಲೀಕರು ಈಗ ಅನ್ಯಾಯಕ್ಕೆ ಒಳಗಾದ ಗೌಡರ ಕಡೆ ಸೇರಿಕೊಂಡು ಒಂದಾದರು. ಮೂಗರ್ಜಿ ಬರೆದವರ ಪತ್ತೆಯೇ ಇರಲಿಲ್ಲ. ಕೇರಿ ಈಗ ತಲ್ಲಣದಿಂದ ಒದ್ದಾಡುವಂತಾಯ್ತು . ತಹಸೀಲ್ದಾರರೂ ಪೆಚ್ಚಾಗಿ ಇಡೀ ದೃಶ್ಯದಿಂದ ಮರೆಯಾಗಿದ್ದರು. +ಸೂರ್ಯ ಇನ್ನೂ ಮುಳುಗಿರಲಿಲ್ಲ. ಜನರ ಬತ್ತದ ಕನಸು ಇನ್ನೂ ಸತ್ತಿರಲಿಲ್ಲ. ಹೇಗಾದರೂ ಮಾಡಿ ಬತ್ತವನ್ನು ಬಚ್ಚಿಡುವ ತರಾತುರಿಯಲ್ಲಿ ವದ್ದಾಡುತ್ತಿದ್ದರು. ಮಡಕೆ , ಗುಡಾಣ, ತೊಂಬೆ , ಪುಟ್ಟಿಗಳಲ್ಲಿಟ್ಟು ಬತ್ತವನ್ನು ಸ್ಥಳಾಂತರಿಸುತ್ತಿದ್ದರು. ಈ ನಡುವೆ ಮಾಯಮ್ಮ ಒಂದು ಉಪಾಯ ಹೂಡಿ ; ಒಂದು ದೊಡ್ಡ ಹಂಡೆಯಲ್ಲಿ ಬತ್ತವನ್ನು ತುಂಬಿ ಬೇಯಿಸತೊಡಗಿದಳು. ಈ ಬತ್ತ ತಮ್ಮವು ಎಂದು ಹೇಳಿ ಹೇಗಾದರೂ ಉಳಿಸಿಕೊಳ್ಳಬಹುದೆಂದು ಅವಳ ಎಣಿಕೆಯಾಗಿತ್ತು. ಅಲ್ಲದೆ ಬೇಯಿಸಲು ಇಟ್ಟ ಬತ್ತವನ್ನು ಹೇಗೆ ವಾಪಸ್ಸು ಪಡೆಯುತ್ತಾರೆಂಬುದು ಅವಳ ಅಚಲ ನಂಬಿಕೆಯಾಗಿತ್ತು. ಇನ್ನಾರೋ, ಧೈರ್ಯದಿಂದೆದ್ದು ; ಬೂಟುಗಾಲಲ್ಲಿ ಪೇದೆಗಳು ಒಳನುಗ್ಗಿದರೆ ಅವರೆಲ್ಲ ಅಲ್ಲೇ ರಕ್ತ ಕಾರಿ ಬೀಳುತ್ತಾರೆ ಎಂದು ಎಣಿಸುತ್ತಿದ್ದರು. ಚಿಲ್ರೆಯ ಮನಸ್ಸೀಗ ಕುದಿಯತೊಡಗಿತ್ತು. ಊರಲ್ಲಿದ್ದ ಜ್ಞಾನೇಶ್ವರಿ ಯುವಕ ಸಂಘವು ಇದಕ್ಕೆ ಯಾವ ರೀತಿಯಲ್ಲೂ ಪ್ರತಿಭಟಿಸಲಾರದೆ ಸತ್ತು ಕುಳಿತಿತ್ತು. ಮಂಚವು- ಒಂದು ಮೂಟೆ ಬತ್ತವನ್ನು ಹಿತ್ತಲಿಗೆ ಎಳೆದು ತಂದು ಸಣ್ಣ ಗುಂಡಿಯೊಳಗೆ ಇಟ್ಟು ಮೇಲೆ ಅದಿದನ್ನು ಮುಚ್ಚಿ ಡವಗುಡುವ ಎದೆ ಬಡಿತವನ್ನು ಉಬ್ಬಸದ ಬಾಗೆಯಲ್ಲಿ ಹಿಡಿಯುತ್ತಾ ಬಂದು ಕುಳಿತಳು. ಜನರೆಲ್ಲ ಯಾವುದೋ ಒಂದು ಅಗಾಧವಾದುದನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆಂಬಂತೆ ಕಾಣಲ್ಪಟ್ಟಿತು. ಗುಡಾಣಗಳ ಮೇಲೆ ಸೀರೆಗಳನ್ನು ನೀರಿಗಜ್ಜಿ ಬಟ್ಟೆ ಒಣಹಾಕಿರುವಂತೆ ಮೆನೆ ಮಾಡಿ ಕಟ್ಟಿದ್ದರು. ಅವರವರ ಗುಡಿಸಲು ಗೂಡುಗಳಲ್ಲಿ ಬತ್ತವನ್ನು ಬಚ್ಚಿಟ್ಟುಕೊಳ್ಳಲು ತಾಬಿಲ್ಲದೆ ಆತಂಕಗೊಳ್ಳುತ್ತಿದ್ದರು. ಮಕ್ಕಳು ಹಿರಿಯರ ಈ ಪಾಡನ್ನು ಕಂಡು ಕಂಗಾಲಾಗಿದ್ದರೆ ಮೈನೆರೆದ ಹುಡುಗಿಯರು ವಿಪರೀತ ನಾಚಿಕೆ ಅಪಮಾನ ಭಯಗಳಿಂದ ಒಂದೆಡೆ ಕುಳಿತುಬಿಟ್ಟಿದ್ದರು. ಕಾಲೇಜು ಮೆಟ್ಟಿಲು ಹತ್ತಿದ್ದ ಕೇರಿಯ ಹುಡುಗರು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸರ್ಕಲ್ ಬಳಿ ಕುಳಿತು ಹರಟುತ್ತಿದ್ದರು. ಇಡೀ ಕೇರಿ ಜರ್ಜರಿತವಾಗತೊಡಗಿತು. ಯಃಕಶ್ಚಿತ್ ಒಂದಿಡಿ ಬತ್ತಕ್ಕಾಗಿ ತಾವೀಗ ತಲ್ಲಣಗೊಳ್ಳುತ್ತಿದ್ದೇವೆ ಎಂಬುದೇ ಮಾಯವಾಗಿ ಒಟ್ಟಾರೆ ತಮಗೆ ಬೇಕಾಗಿರುವ ಯಾವುದಾವುದೋ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂಬಂತೆ ಎಲ್ಲವೂ ವಿಸ್ತರಿಸಿಕೊಂಡಿತು. ಪೇದೆಗಳ ಸಹಿತ ಅಧಿಕಾರಿಗಳು ಬರತೊಡಗಿದರು . ಬತ್ತವನ್ನು ಕಿತ್ತುಕೊಳ್ಳುವ ಕಾರ್ಯಾಚರಣೆಗೆ ಸಜ್ಜಾಗತೊಡಗಿದರು. ಕತ್ತಲೆಯೋ, ರಾತ್ರಿಯೋ, ಇಲ್ಲವೇ ಸೂರ್ಯನೆ ಸತ್ತನೋ ಇಡೀ ಕೇರಿ ಕತ್ತಲೆಯ ಸಮುದ್ರದಲ್ಲಿ ಮುಳುಗಿತು. ಮನುಷ್ಯನ ಅದಮ್ಯ ಚೈತನ್ಯ , ಸಾಹಸ ಸಂಕಷ್ಟ ಹಾಗು ಆಶಯಗಳಾಗಲಿ , ಆತನ ಸೃಷ್ಟಿಶೀಲ ಮನಸ್ಸಿನ ಕನಸುಗಳಾಗಲಿ ; ಹೇಗೆ ಒಂದು ಕ್ಷುಲ್ಲಕ ರಾಜಕೀಯದಿಂದಲೋ ನಮ್ಮದೇ ಕ್ಷುದ್ರದೇವತೆಗಳಿಂದಲೋ ಅಪಮಾನದಿಂದ ಸಾಯುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಇಡೀ ಕೇರಿ ಈಗ ಬಿದ್ದುಕೊಂಡಿತ್ತು. ಹೊಲೆಯರು ಬಚ್ಚಿಟ್ಟಿರುವ ಬತ್ತವನ್ನು ಈಗಿಂದೀಗಲೇ ಹೊರಹಾಕಿಸಬೇಕೆಂತಲೂ‌ಈ , ಇಲ್ಲದಿದ್ದರೆ ಒಂದು ಕಾಳೂ ಸಿಗದಂತೆ ಮಾಯ ಮಾಡುತ್ತದೆಂದು ಎಲ್ಲರೂ ಒಪ್ಪಿ ತಕ್ಷಣ ಕೇರಿಗೆ ಬಂದರು. ಸ್ವತಃ ಜಿಲ್ಲಾಧಿಕಾರಿಗಳೇ ಬಂದಿರುವ ಕಾರಣ ಪೇದೆಗಳು ವೇಗವಾಗಿ ಕಾರ್ಯಾಚರಣೆಗೆ ನುಗ್ಗಬೇಕಾಗಿತ್ತು. ಅಲ್ಲದೆ ಸರ್ಕಲ್ ಇನ್ಸ್‌ಪೆಕ್ಟರ್ ಕೂಡ ಯಶಸ್ವಿಯಾಗಿ ಕಾರ್ಯ ಪಾಲಿಸಬೇಕಾಗಿತ್ತು. ಸದ್ಯದಲ್ಲೇ ಅವರಿಗೆ ಬಡ್ತಿ ಸಿಗುವುದಿದ್ದ ಕಾರಣ ಜಿಲ್ಲಾಧಿಕಾರಿಗಳ ಮುಂದೆ ಈ ಸಮಸ್ಯೆಯನ್ನು ನಿರ್ವಹಿಸಬೇಕಾಗಿತ್ತು. ಹಾಗಾಗಿ ಪೇದೆಗಳನ್ನು ಆರ್ಭಟಿಸುತ್ತ ‘ ಹೂಂ , ನುಗ್ಗಿ , ಎಲ್ಲೆಲ್ಲೆಲ್ಲಿ ಬಚ್ಚಿಟ್ಟಿದ್ದಾರೋ ಅದನ್ನೆಲ್ಲ ಹೊರಹಾಕಿ ಲಾರಿಗೆ ತುಂಬಿ ’ ಎಂದು ಆರ್ಡರ್ ಮಾಡುತ್ತಿದ್ದರು. ಜನ ಈ ಬಗೆಯ ಮುಖಾಮುಖಿಗೆ ಈಡಾಗಿ ನಡುಗಿದರು. ‘ ಹೂಂ; ಚಾರ್ಜ್ ’ ಎನ್ನುತ್ತಾ ಇನ್ಸ್‌ಪೆಕ್ಟರ್ ಸರ್ಕಾರಿ ಸಿಂಹದಂತೆ ಘರ್ಜಿಸತೊಡಗಿದರು. ಆ ಮುಂಜಾವು ರಕ್ಷಣೆಗೆಂದು ಬಂದಿದ್ದ ಪೇದೆಗಳು ಈಗ ಹೇಗೆ ಹಿಂಸಿಸಿ ಬತ್ತವನ್ನು ಕಿತ್ತುಕೊಳ್ಳುವುದೆಂದು ಹಿಂದು ಮುಂದು ನೋಡಿ ; ಕೊನೆಗೆ ಅಸಹಾಯಕರಾಗಿ ಅವರೂ ಕೂಡ ಆ ಕೇರಿ ಮನೆಗಳ ಒಳಕ್ಕೆ ದಾಳಿಯಿಡತೊಡಗಿದರು. ಕೆಲವು ಗಂಡಸರು ಅಡ್ಡಬಂದು ‘ ಸ್ವಾಮಿ ನಮ್ಮಟ್ಟಿವೊಳಕ್ಕೆ ಬೂಡ್ಸ್ ಕಾಲೆಲಿ ನುಗ್ಗಿ , ದೇವ್ರೂ ನಮ್ ಪಾಲ್ಗೆ ಇಲ್ದಂಗ್ ಮಾಡ್ಬೇಡಿ ’ ಎನ್ನುತ್ತಿದ್ದರು. ಪುಟ್ಟ ಹುಡುಗರು ಹೆದರಿ ಮರೆಯಾಗಿದ್ದರು. ಮುದುಕಿಯರು ಕಾಲು ಹಿಡಿದು ಬೇಡಲು ಬರುತ್ತಿದ್ದರು. ಯಾರೋ ಅಳುತ್ತಿದ್ದರು. ‘ ಹೂಂ ನುಗ್ಗಿ ’ ಎಂಬ ಧ್ವನಿ ಅಲ್ಲೆಲ್ಲ ಪ್ರತಿಧ್ವನಿಸುತ್ತಿತ್ತು. ಅಡೆತಡೆ ಹೆಚ್ಚಾದಂತೆ ಪೇದೆಗಳು ಅನಿವಾರ್ಯವಾಗಿ ಲಾಟಿ ರುಚಿ ತೋರಿಸತೊಡಗಿದರು. ಚಿಲ್ರೆಯು ಸಿಟ್ಟಾಗಿ ‘ ವಡ್ದು ಸಾಯ್ಸಬುಡಿ ಸ್ವಾಮಿ, ನಿಮ್ ಲಾಟಿ ಬೂಟು ಬಂದೂಕಿರೋದೆಲ್ಲ ನಮ್ಮಂತೋರ್ಗೆ ವಡುಕ್‌ತಾನೆ ಇರುದು , ವಡ್ದು ಇಲ್ಲೇ ಸಮಾಧಿ ಮಾಡಿ. ಆ ಬತ್ತುದ್ ಅಕ್ಕೀಲೆ ವಲ್‌ಗೇರಿ ತಿಥೀನೂ ಮಾಡ್ಬುಟ್ಟು ವಂಟೋಗಿ ’ ಎಂದು ಯಾತನೀಯ ಧ್ವನಿಯಲ್ಲಿ ಅಲ್ಲೆಲ್ಲ ಕುಣಿದಾಡಿದ. ಅವನ ಮಾತನ್ನು ಈಗ ಅವರಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. +ನಾಲ್ಕನೆಯ ಸಾಲು +ಕೆಲವೇ ಕ್ಷಣಗಳಲ್ಲಿ ಪೇದೆಗಳು ರಾಕ್ಷಸರಂತೆ ನುಗ್ಗಿ ನುಗ್ಗಿ ಬಚ್ಚಿಟ್ಟಿದ್ದ ಬತ್ತವನ್ನು ಹೊರಹಾಕತೊಡಗಿದರು . ತೋಪಮ್ಮ ತನ್ನ ಮನೆಗೆ ನುಗ್ಗಿದವರಿಗೆ ಸರಿಯಾದ ಶಾಸ್ತಿ ಮಾಡುತ್ತೇನೆಂದು ನಿಂತಿದ್ದಳು. ಇಡೀ ಊರಿಗೆ ಸೂಲಗಿತ್ತಿಯಾಗಿದ್ದ ಅವಳು ವಿಧವೆಯಾಗಿದ್ದುಕೊಂಡು ಎಲ್ಲರ ಸಾವು ನೋವುಗಳ ವೇಳೆಯಲ್ಲಿ ಸಮಾಧಾನಪಡಿಸುತ್ತ ಧೈರ್ಯ ತುಂಬುತ್ತಿದ್ದವಳ ಕಣ್ಣಲ್ಲಿ ಈಗ ನೀರು ಬರಲೋ ಬೇಡವೋ ಎಂಬಂತಾಗಿ ತುಳುಕುತ್ತಿತ್ತು. ಬೂಟುಗಾಲಿನನಡುವೆ ಉದುರಿದ್ದ ಬತ್ತಗಳು ಸೊರಗುಟ್ಟಿದವು. ಮಡಕೆ ಗುಡಾಣಗಳನ್ನು ಲಾಟಿಯಿಂದ ಹೊಡೆದು ಚಚ್ಚಿ ಉರುಳಿಸಿ ಮನೆ ತುಂಬ ಬತ್ತವನ್ನು ಚೆಲ್ಲಿ ದಡದಡ ಗರಬರ ಡಪ್‌ಡಪ್ ಎಂಬ ನಾನಾ ಸ್ವರಗಳನ್ನು ಹುಟ್ಟಿಸುತ್ತಾ; ಯಾರ ಮುಖವನ್ನು ನೋಡದೆ ಹುಚ್ಚರಂತೆ ಬತ್ತವಿಟ್ಟಿದ್ದ ಸ್ಥಳವನ್ನೆಲ್ಲ ಪತ್ತೆಮಾಡುತ್ತ ; ರೌದ್ರಾವತಾರವನ್ನು ತೋರತೊಡಗಿದರು. ಜನರ ಪ್ರಯತ್ನಗಳೆಲ್ಲ ಅಪಮಾನಿತವಾಗಿ ಹೊರಳಾಡಿ ವಿಷಾದವೆಂಬುದೀಗ ಅಲ್ಲಿ ನಲಿಯತೊಡಗಿತು. ಜಿಲ್ಲಾಧಿಕಾರಿಗಳು ‘ ಪಾರಾ ’ ದ ಸಮೇತ ಬಂದಿರುವುದರಿಂದ ತಮಗೆ ಜೈಲುವಾಸವೇ ಖಾಯಂ ಎಂದು ಹೆದರಿ ಗಂಡಸರು ಓಡಿಹೋದರು. ಹೆಂಗಸರು ಕಂಡಿದ್ದ ಕನಸೆಲ್ಲ ಗುಡಾಣ ಮಡಕೆಗಳು ನಜ್ಜುಗುಜ್ಜಾದಂತೆಯೇ ಪುಡಿಪುಡಿಯಾಗಿ ಬಿದ್ದವು. ಇಡೀ ಕೇರಿಯ ಏನೆಲ್ಲ ಸುಖಗಳನ್ನು ಧ್ವಂಸ ಮಾಡಿದಂತೆ ಆಯಿತು. ಇಷ್ಟಿದ್ದರೂ ಆ ಕಡೆ ಮಾಯಮ್ಮನ ಮನೆಯಲ್ಲಿ ಬತ್ತ ಬೇಯುತ್ತ ಅದರ ಗಮ್ಮನೆ ವಾಸನೆ ಅವರೆಲ್ಲರ ಕಾರ್ಯಾಚರಣೆಯನ್ನು ನಾಚಿಸುವಂತೆ ಸುಳಿಯುತ್ತ ಮೂಗುಗಳನ್ನು ಹಿಡಿಯುತ್ತಿತ್ತು. ಬತ್ತವನ್ನೂ ಹೊರಹಾಕುತ್ತ ಬಂದಂತೆಯೇ ಚಾಮಯ್ಯನ ಮನೆಯೊಳಗಿದ್ದ ತೆಂಗಿನಕಾಯಿಗಳನ್ನು ಹೊರಹಾಕಿದರು. ಮೊನ್ನೆ ತಾನೆ ಕದ್ದು ಆತ ಅವನ್ನು ತಂದಿಟ್ಟಿದ್ದ. ಯಾರೋ ಹೇಳುತ್ತಿದ್ದರು ‘ ನೋಡಿದ್ರಾ ಸ್ವಾಮಿ ಈ ಕಳ್ರು ಇನ್ನೂ ಏನೇನ ಕದ್ದು ಬಂದು ಒಳಗಿಟ್ಟಿದ್ದಾರೋ ಕಾಣವಲ್ಲಾ ’ ಎಂದೊಪ್ಪಿಸುತ್ತಿದ್ದರು. ಈಗ ಆ ಮನೆಗಳಲ್ಲಿ ಬೇರೆ ಬೇರೆ ತೆರನ ಶೋಧ ಆರಂಭವಾಯ್ತು. ಬತ್ತದ ಜೊತೆಗೆ ಅನುಮಾನಾಸ್ಪದವೆನಿಸುವ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳತೊಡಗಿದರು. ಗೌಡರ ತೋಟದಲ್ಲಿ ಚಾಮಯ್ಯ ತೆಂಗಿನಕಾಯಿಗಳನ್ನು ಕದ್ದದ್ದು ನಿಜವಾಗಿತ್ತು. ಆತನನ್ನು ಸೆರೆ ಹಿಡಿದರು. ಯಾರ್ಯಾರದೋ ಮನೆಯಲ್ಲಿ ಏನೇನೋ ಸಿಕ್ಕವು. ಹೊಲಗೇರಿಯ ಮೈಯನ್ನು ಬೆತ್ತಲೆ ಮಾಡಿದಂತಾಗಿತ್ತು. ‘ ಇನ್ನೂ ಏನೇನು ಬಚ್ಚಿಟ್ಟಿದ್ದೀರಿ ಹೊರಹಾಕಿ. ಇಲ್ದೇ ಇದ್ರೆ ಊರ್‌ನೇ ಅರೆಸ್ಟ್ ಮಾಡ್ಬೇಕಾಗುತ್ತದೆ. ಹೂತಿರೋ ಹೆಣಾನೆ ಪತ್ತೆ ಮಾಡಿ ಹೊರಕ್ಕೆ ತೆಗೆಯೋರು ನಾವು. ಹೂಂ ನೀವೆ ತಂದ್ರೆ ಸರಿ ’ ಎಂದು ದಪ್ಪ ಹೊಟ್ಟೆಯ ಪೇದೆ ಗುಡುಗಿದ. ಹೀಗೆ ಹೇಳಿದ್ದೇ ತಡ , ಮಂಚವ್ವ ಹಿತ್ತಲಲ್ಲಿಟ್ಟಿದ್ದ ಮೂಟೆ ಬತ್ತವನ್ನು ಉಬ್ಬಸದ ಉಸಿರಾಟದಲ್ಲಿ ಎಳೆದುಕೊಂಡು ಬಂದು ಅವರೆದುರು ಬಿಸಾಡಿ ಬಾಯಿಬಡಿದುಕೊಂಡು ಮರೆಯಾದಳು. ಮಾಯಮ್ಮ ಬತ್ತ ಬೇಯಿಸುತ್ತ ಕುಳಿತ ಕಡೆ ಪೇದೆ ಇನ್ನೂ ಬಂದಿರಲಿಲ್ಲ. ದುರಂತವೆಂದರೆ ಚಿಲ್ರೆಯು ಐದು ಮೂಟೆ ಬತ್ತವನ್ನು ಬಚ್ಚಿಟ್ಟಿದ್ದನ್ನೂ ಯಾರೋ ನೋಡಿಕೊಂಡಿದ್ದವರು ಆ ಸಂಜೆಯೇ ಅಪಹರಿಸಿಬಿಟ್ಟಿದ್ದರು. ಚಿಲ್ರೆಗೆ ಇದರ ಸುಳಿವೇ ಇರಲಿಲ್ಲ. ಯಾವುದಾವುದೋ ಕಾಲದ ಎಲ್ಲ ಬಗೆಯ ಕಳ್ಳತನಗಳನ್ನೂ ಈಗಲೇ ತನಿಖೆ ಮಾಡಬೇಕೆಂಬಂತೆ ಗೌಡರು ಈಗಲ್ಲಿ ಹುರಿಮೀಸೆ ಮೇಲೆ ಕೈಯಾಡಿಸಿ ಹೇಳುತ್ತಿದ್ದರು. ಕೇರಿಯ ಓದುವ ಹುಡುಗರು ಈ ಸ್ಥಿತಿಗೆ ಕೋಪಗೊಂಡು “ ಇವರೆಲ್ಲ ಹೀಗೆ ಮಾಡ್ಕೋ ಅಂತಾ ಯಾರೇಳಿದ್ರು, ಅನುಭವಿಸಲಿ ” ಎಂದು ಸುಮ್ಮನಾಗಿದ್ದರು. ಶೋಧನೆಯಲ್ಲಿ ತೊಡಗಿದ್ದ ಪೇದೆಗಳಲ್ಲಿ ಒಬ್ಬ ಹೊಲೆಯರವನೂ ಇದ್ದು ಆ ಸ್ಥಿತಿಯಲ್ಲಿ ಆತ ಏನನ್ನೂ ಮಾಡಲಾರದೆ ವಿಷಣ್ಣನಾಗಿ ಆ ಕಡೆ ಈ ಕಡೆ ಚಲಿಸುತ್ತಿದ್ದ. ಮಾಯಮ್ಮನ ಮನೆ ಒಳಕ್ಕೆ ಬಂದ ಪೇದೆ ಹುಡುಕಾಡಿ ಏನೂ ಸಿಗದಾಗ ಸಿಟ್ಟಿನಿಂದ ನುಗ್ಗಿ “ ಈ ಪ್ಲಾನ್ ಮಾಡ್ಕಂಡಿದ್ದೀಯೇನೆ ಮುದ್ಕೀ ” ಎಂದು ಹಂಡೆಯನ್ನು ಉರುಳಿಸಿಬಿಟ್ಟ. ಕಾಯ್ದ ಬೆಂದ ಬತ್ತದ ಹಂಡೆ ಉರುಳಿಕೊಂಡು ಬತ್ತವನ್ನು ಚೆಲ್ಲಿಕೊಂಡು ಸುವಾಸನೆಯನ್ನು ಬೀರುತ್ತ ನಿಂತಿತು. ಬೆಂದ ಬತ್ತದ ಹೊಗೆ ಗಮಲು ಅಲ್ಲೆಲ್ಲ ಕರಗತೊಡಗಿತು. ಮಾಯಮ್ಮ ಅಳತೊಡಗಿ ಬೈಯತೊಡಗಿದಳಾದರೂ ಆ ಬತ್ತವನ್ನು ಹೊಲಸು ನೆಲದ ಮೇಲೆ ಉರುಳಾಡಿಸಿದ್ದರಿಂದ ಅವನ್ನು ಪಡೆದುಕೊಳ್ಳಲೂ ಆಗದೆ ಅಸಹಾಯಕಳಾಗಿ ನಿಂತಳು. ಇದನ್ನೆಲ್ಲ ಕಂಡ ಕೆಲವರು ತಮ್ಮ ಮಕ್ಕಳು ಹಸಿದು ಸತ್ತು ಕೊಳೆತ ಹೆಣವದರೂ ಸರಿಯೇ ಈ ಬತ್ತ ಬೇಡ ಎಂಬಂತೆ ; ಬಚ್ಚಿಟ್ಟಿದ್ದ ಬತ್ತವನ್ನು ತಂದು ಒಪ್ಪಿಸತೊಡಗಿದರು. ಬತ್ತ ರಾಶಿಯಾಗಿ ಬೆಳೆಯಿತು. ಈ ಜನ ಇಷ್ಟೊಂದು ಬತ್ತವನ್ನು ಕದ್ದಿದ್ದರೇ ಎಂದು ಅಧಿಕಾರಿಗಳು ವಿಸ್ಮಯಪಡುತ್ತಾ, ತಮ್ಮ ಸಾಮರ್ಥ್ಯಕ್ಕೆ ಒಳಗೊಳಗೇ ಖುಷಿ ಪಡುತ್ತಿದ್ದರು. ಚಿಲ್ರೆಯು ಅಸಾಧ್ಯ ಸಿಟ್ಟಿನಿಂದ ಕೈಕಟ್ಟಿ ನಿಂತು ಎಲ್ಲವನ್ನೂ ನೋಡುತ್ತಿದ್ದ. ಅಷ್ಟರಲ್ಲಿ ತೋಪಮ್ಮನ ಕಡೆಯಿಂದ ಪೇದೆಯೊಬ್ಬ ಹೆದರಿ ಓಡಿಬರುತ್ತಿರುವುದನ್ನು ಕಂಡ. ತೋಪಮ್ಮನ ಮನೆಗೆ ನುಗ್ಗಿದವನನ್ನು ತಡೆಯಲು ಆಕೆ ಹೋರಾಡಿ ಕೊನೆಗೆ ತಕ್ಕ ಹೊಡೆತ ಕೊಟ್ಟಿದ್ದಳು. ಈ ನಾಲ್ಕಾರು ದಿನಗಳ ಹಿಂದೆ ದನ ಕೊಯ್ದಿದ್ದಾಗ ಮಾಂಸ ತಂದಿಟ್ಟುಕೊಂಡು ಕೆಲವಷ್ಟು ಉಂಡು ಉಳಿದ ಮಾಂಸವನ್ನೆಲ್ಲ ದೊಡ್ಡ ದೊಡ್ಡ ಮಾಲೆಯಂತೆ ತುಂಡರಿಸಿ ಒಣ ಹಾಕಿ ಕೊರಬಾಡಿಗಾಗಿ ತಯಾರು ಮಾಡುತ್ತಿದ್ದಳು. ಈ ಕೊರಬಾಡು ಸರಿಯಾಗಿ ಒಣಗದೆ ಕೀಡೆನೊಣಗಳಿಂದ ವಾಸನೆ ಹಿಡಿದು ಹಸಿಹಸಿಯಾಗಿದ್ದವು. ತೋಪಮ್ಮನಿಗೆ ತಕ್ಷಣವೇ ಹೊಡೆಯಲು , ತನ್ನ ಪ್ರತಿಭಟನೆಯನ್ನು ತೋರ್ಪಡಿಸಿಕೊಳ್ಳಲು ಸಿಕ್ಕಿದ್ದು ಆ ಹಸಿಯಾದ ಕೊಳೆತ ಮಾಂಸದ ಸರಗಳಷ್ಟೆ. ಅವನ್ನೇ ಅಂಬಿನಂತೆ ಮಾಡಿಕೊಂಡು ಮುಖಕ್ಕೆ ಬಡಿದು ಆ ವಾಸನೆಗೆ ಪೇದೆ ಓಡುವಂತೆ ಮಾಡಿದ್ದಳು. ಅಲ್ಲಿಂದ ಓಡಿಬಂದವಳು ದೂರದಲ್ಲಿ ನಿಂತಿದ್ದ ಜಿಲ್ಲಾಧಿಕಾರಿಗಳ ಬಳಿ ನುಗ್ಗಿ ಮುಖ ಮೋರೆ ನೋಡದೆ ಅದೇ ಮಾಂಸದಿಂದ ಬಿಳಿ ಬಟ್ಟೆಯ ಮೇಲೆ ಬಡಿದಳು . ಅಧಿಕಾರಿಗಳು ಪೆಚ್ಚಾಗಿ ಹೆದರಿ ವ್ಯಗ್ರಗೊಂಡು ಅಪಮಾನಿತರಾಗಿ ತಪ್ಪಿಸಿಕೊಂಡರು. ತಕ್ಷಣವೇ ಕೆಲವಾರು ಪೇದೆಗಳು ದಡಕ್ಕೆಂದು ನುಗ್ಗಿ ಬಂದು ಅಕೆಯನ್ನು ಹಿಡಿದು ಬಡಿದು ಕಟ್ಹಾಕಿದರು. ಅನಿರೀಕ್ಷಿತವಾದ ಈ ಘಟನೆ ಈಗ ಅಧಿಕಾರಿಗಳ ಸಿಟ್ಟನ್ನು ಇಮ್ಮಡಿಗೊಳಿಸಿ ತಮ್ಮ ಅಧಿಕಾರ ಅಂತಸ್ತು ಮಾನಮರ್ಯಾದೆಗಳ ಮೇಲೆ ನಡೆದ ಅತಿಕ್ರಮಣವೆಂದು ಭಾವಿಸುವಂತಾಯಿತು. ಸರ್ಕಲ್ ಇನ್ಸ್‌ಪೆಕ್ಟರರು ಲಾಟಿ ಚಾರ್ಜಿಗೆ ಅವಕಾಶ ಮಾಡಿಕೊಟ್ಟರು. ಈಗ ಸಿಕ್ಕಸಿಕ್ಕವರಿಗೆಲ್ಲ ಬಡಿಯತೊಡಗಿದಂತೆ ಕ್ಷಣಾರ್ಧದಲ್ಲಿ ಎಲ್ಲರೂ ಮಾಯವಾದರು. ಮನೆಮನೆಗಳೂ ಶೋಧದಿಂದ ಅಸ್ತವ್ಯಸ್ತವಾಗಿ ಒದ್ದಾಡತೊಡಗಿದವು +ಐದನೆಯ ಸಾಲು +ಇದೆಲ್ಲವೂ ನಮ್ಮ ಅರಿವನ್ನೂ ಮೀರಿ ಮತ್ತೊಂದು ಗಂಡಾಂತರವನ್ನೂ ತಂದಿಡತೊಡಗಿತು. ಯಃಕಶ್ಚಿತ್ ಒಂದು ಮುದುಕಿ ಹೀಗೆ ಬಂದು ಬಾಡಿನಿಂದ ಬಡಿದು ಹೊಲಸು ಮಾಡಿ ಅಪಮಾನ ಮಾಡಿದ್ದು ಸರ್ಕಲ್ ಇನ್ಸ್‌ಪೆಕ್ಟರ್‌ರ ತಲೆಯಲ್ಲಿ ಏನೇನೋ ಅನುಮಾನ ಹುಟ್ಟಿಸಿ , ಈ ಜನರೆಲ್ಲ ಪೂರ್ವಯೋಜಿತ ತೀರ್ಮಾನಗಳಂತೆ ಪ್ರತಿದಾಳಿ ಮಾಡಲು ತೊಡಗಿದ್ದಾರೆನ್ನಿಸಿ , ಇದರಲ್ಲಿ ಯಾವುದೋ ಕೈವಾಡ ಇದೆ ಎನ್ನಿಸಿಬಿಟ್ಟು , ಆ ಮುದುಕಿ ಹೊಡೆತ ನಕ್ಸಲೈಟ್ ದಾಳಿಯಂತೆ ಕಂಡುಬಂತು . ಆ ನಡುವೆ ಬೆಂಬಲ ಸಾಕ್ಷಿಯಾಗಿ ಮಾಲೀಕರು ಬಾಯಿತೆಗೆದು ‘ ಅದೇನೇನೋ ಸಂಗ ಕಟ್ಕಂಡವರೆ ಸ್ವಾಮಿ , ಜ್ಞಾನೇಶ್ವರಿ ಯುವಕ ಸಂಗ ಅಂತಾ, ಅವರ್ ಜಾತಿಯೋನು ಬೆಂಗ್ಳೂರಲ್ಲಿ ಓದ್‌ತಾವ್ನೆ . ವೋದ್‌ವರ್ಷ ಬಂದು ಈ ಸಂಗವ ಕಟ್ಕೊಟ್ಟು ನಮ್ಮೊಟ್ಟಿಗೆ ನುಗ್ಸುಕ್ಕೆ ಬಂದಿದ್ದ . ಬೆಂಗ್ಳೂರ್ ಪೇಟೇಲಿ ಅವುಂದು ಏನೇನೋ ಸ್ಟ್ರೈಕು ನಡ್ದವಂತೆ ’ ಎಂದು ಉರುಬಿದ . ಈ ಮಾತಿನಿಂದ ಅಧಿಕಾರಿಗಳಿಗೆ ಪ್ರಬಲ ಅನುಮಾನ ಬಂದು ಈ ಊರಿಗೂ ನಕ್ಸಲೈಟ್ ಚಳವಳಿ ನುಗ್ಗುತ್ತಿದೆ ಎನಿಸಿ ಈ ಬಗ್ಗೆ ಮತ್ತೊಂದು ಬಗೆಯ ವಿಚಾರಣೆಗಳಿಗಾಗಿ ಅವರೆಲ್ಲ ತಲೆಕೆಡಿಸಿಕೊಂಡರು. ಕತ್ತಲಾಗಿಬಿಟ್ಟಿತು. ಕೇರಿಯ ಸಂಘದ ಹುಡುಗರನ್ನು ಗೌಡರು ಹಿಡಿಸಿದರು. ಮಕ್ಕಳು ಕತ್ತಲಲ್ಲಿ ಕತ್ತಲಂತೆ ಅವಿತರು. ಬತ್ತದ ವಿಷಯ ಎತ್ತೆತ್ತಲೋ ಅವರನ್ನೆಲ್ಲ ಎಳೆದುಕೊಂಡು ಹೋಗಿ ಈ ಕೇರಿಯ ಜೀವನವೂ ಕೂಡ ಸಶಸ್ತ್ರ ಹೋರಾಟವಾದಿಗಳ ನೆಲೆಯೇನೋ ಎನಿಸಿ ಒಂದು ರಾಜಕೀಯ ಸಮಸ್ಯೆಯಾಗಿ ರೂಪಾಂತರಗೊಂಡಿತು. ಈ ಬಾರಿ ಲೋಕಲ್ ಚುನಾವಣೆಗಳಲ್ಲಿ ಸೋತಿದ್ದ ಕೆಲ ಗೌಡರು ಈ ವಿಷಯವನ್ನು ಮತ್ತೊಂದು ಕಡೆ ವಾಲಿಸುತ್ತ ; ಇತ್ತೀಚೆಗೆ ಇವರೆಲ್ಲ ಊರಿನ ಶಾಂತಿಯನ್ನೇ ಹಾಳು ಮಾಡಿ ಕೊಲೆ ಬೆದರಿಕೆ ಹಾಕುತ್ತಾರೆಂದು ಹೇಳತೊಡಗಿದರು. ಒಟ್ಟಿನಲ್ಲಿ ತೋಪಮ್ಮನ ಸಹಿತ ಮತ್ತೆ ಕೆಲವರನ್ನು ಹಿಡಿದು ವ್ಯಾನಿನಲ್ಲಿ ಹಾಕಿಕೊಂಡು ಚೆನ್ನಪಟ್ಟಣಕ್ಕೆ ನಡೆದೇಬಿಟ್ಟರು. ಈಗ ಇವರೆಲ್ಲ ದೊಡ್ಡ ಕ್ರೂರಿಗಳ ಹಾಗೆ ಅವರ ಕಣ್ಣಿಗೆ ಕಾಣಿಸತೊಡಗಿದರು. ಕೇರಿಯಲ್ಲಿದ್ದ ಬತ್ತವೆಲ್ಲ ಎಲ್ಲೆಲ್ಲೋ ಹೋಯಿತು. ಬತ್ತದ ಬಗ್ಗೆ ಕೇರಿಯವರಿಗೆ ತಲೆ ಕೆಡಿಸಿಕೊಳ್ಳುವ ಮನಸ್ಸು ಈಗ ಇರಲಿಲ್ಲ . ಜೀವನದ ವಿಷಣ್ಣ ದುಃಖ , ಅದರ ಬೇಟೆ , ಅದರ ಕ್ರೌರ್ಯ ಎಲ್ಲವೂ ಈಗ ಅವರನ್ನು ಹಿಸುಕತೊಡಗಿದವು. ಬಂದವರೆಲ್ಲ ಹೊರಟುಹೋದರು. ಮುಂದಿನ ಕ್ರಮಗಳಿಗಾಗಿ ಅಧಿಕಾರಿಗಳು ಸಜ್ಜಾದರು. ತೋಪಮ್ಮ ಯಾವ ಮಾತನ್ನೂ ಆಡದಂತೆ ತೀವ್ರತರ ಮೌನಿಯಾಗಿ ಆದದ್ದೆಲ್ಲ ಆಗೇ ಬಿಡಲಿ ಎಂಬ ಅಚಲ ಸ್ಥಿತಿಯಲ್ಲಿ ವ್ಯಾನು ಹತ್ತಿದ್ದಳು. ಚಿಲ್ರೆಯು ಲೆಕ್ಕ ಹಾಕುತ್ತಾ ನಾಳೆ ಬೆಳಿಗ್ಗೆ , ಕಬ್ಬಿನ ಗದ್ದೆಯಲ್ಲಿ ಬಚ್ಚಿಟ್ಟಿರುವ ಐದು ಮೂಟೆ ಬತ್ತವನ್ನು ಹೊಂಗನೂರಿನ ಸಾಬರಿಗೆ ಮಾರಿ ; ಇವರನ್ನೆಲ್ಲ ಜಾಮೀನಿನ ಮೇಲೆ ಬಿಡಿಸಿಕೊಂಡು ಬರೋಣ ಎಂದು ತೀರ್ಮಾನಿಸುತ್ತಿದ್ದ. ಕಳೆದ ರಾತ್ರಿಯ ಇದೇ ಹೊತ್ತಿನಲ್ಲಿ ಅವರೆಲ್ಲ ಕುಡುಲು ತಟ್ಟಿಸಲು ಓಡಾಡುತ್ತಿದ್ದ ಕ್ಷಣಗಳೀಗ ಅಲ್ಲಿ ಮೆಲ್ಲನೆ ಸುಳಿದಾಡುತ್ತಿದ್ದವು. ಬೆಳಕು ಮೂರ್ಛೆ ರೋಗಿ ಎಚ್ಚೆತ್ತು ಎದ್ದಂತೆ ಕೇರಿಯ ಮೇಲೆ ಇಳಿಯತೊಡಗಿತು. ಜನ ಕುಂತಲ್ಲೇ ಕುಳಿತು ಬೀಡಿ ಹಚ್ಚಿ ಏನೂ ಆಗಿಲ್ಲ ಎಂಬಂತೆ ಕುಳಿತಿದ್ದರು. ಕಾಗೆಗಳು ವರಗುಟ್ಟುತ್ತಿದ್ದವು. ಆ ರಾತ್ರಿ ಅವರೆಲ್ಲ ಊಟವಿಲ್ಲದೆ ಮಲಗಿದ್ದರಿಂದ ಅವರ ಹೊಟ್ಟೆ ಸಂಕಟವು ಎಳೆಬಿಸಿಲಿಗೆ ವಿಚಿತ್ರ ಅಪಮಾನದ ಎಳೆಗಳನ್ನು ಬಿಡುತ್ತಿತ್ತು . ಕೂಲಿಗೆ ಯಾರಾದರೂ ಕರೆಯುತ್ತಾರೆಂದು ಎಣಿಸಿದರೂ ಕೂಡ ಮೇಲುಕೇರಿಯವರು ಕೂಲಿಗೆ ಕರೆಯುವುದನ್ನು ಇದೆಲ್ಲ ನಡೆದಾದ ಮೇಲೆ ಬಿಟ್ಟು ಬಿಟ್ಟಿದ್ದರು. ಆ ರಾತ್ರಿಯೇ ಅವರು ತೀರ್ಮಾನಿಸಿಕೊಂಡಂತೆ ಇವರಿಗೆ ಬುದ್ಧಿ ಕಲಿಸಬೇಕೆಂದು ಒಂದು ಬಗೆಯ ಆರ್ಥಿಕ ದಿಗ್ಬಂಧನವನ್ನು ಹೇರಿದ್ದರು. ಊರು ಎಳೆ ಬಿಸಿಲಿಗೆ ಮೆಲ್ಲಗೆ ಮೈ ಸಡಿಲ ಮಾಡಿಕೊಳ್ಳುತ್ತಿತ್ತು. ಹೆಂಗಸರು ಮನೆಯ ತುಂಬ ತುಂಬಿಕೊಂಡ ಒಡೆದ ಮಡಕೆ ಚೂರುಗಳನ್ನು ಆಯ್ದು ಹೊರಹಾಕುತ್ತಿದ್ದರು. ಸುಮಾರು ಹೊತ್ತು ಕಳೆಯಿತು. ಇಡೀ ಊರು ಮೌನವಾಗಿತ್ತು. ಆಷ್ಟರಲ್ಲಿ ಪೇಟೆಯಿಂದ ಪೇದೆಯೊಬ್ಬ ಕೇರಿಗೆ ಬಂದ. ಜನ ಹೆದರಿದರು. ಈ ಪೇದೆ ಬತ್ತ ಕೊಯ್ಯುವಾಗ ರಕ್ಷಣೆಗೆಂದು ಬಂದವನಾಗಿದ್ದ. ಅವರಿವರನ್ನೂ ಕರೆದ. ಜಗುಲಿಯೊಂದರಲ್ಲಿ ಕುಳಿತರು. ಕಾತರ ಭಯ ನಾಚಿಕೆಗಳಿಂದ ಜನ ಏನೆಂದು ಕೇಳಿದರು. ಆ ರಾತ್ರಿ ವ್ಯಾನಿನಲ್ಲಿ ಅರೆಸ್ಟ್ ಮಾಡಿಕೊಂಡು ಹೋದವರಲ್ಲಿ ತೋಪಮ್ಮ ಯಾವುದೋ ರೀತಿಯಲ್ಲಿ ವ್ಯಾನಿನಿಂದ ಇಳಿದು ಕಣ್ಮರೆಯಾಗಿದ್ದಳಂತೆ. ಆಕೆ ಹೀಗೆ ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಅಧಿಕಾರಿಗಳು ಕಂಡು , ಆಕೆ ಇನ್ನಾವ ವಿಪರೀತ ತೊಂದರೆ ತಂದೊಡ್ಡುವಳೋ ಎಂದು ಕಂಗಾಲಾಗಿ ಈ ತಕ್ಷಣವೇ ಅವಳನ್ನು ಹುಡುಕಿ ಹಿಡಿದು ತರಬೇಕೆಂದು ಈಗ ಈ ಪೇದೆಯನ್ನು ಊರಿಗೆ ಕಳಿಸಿದ್ದರು. ಪೇದೆಯು ಮನಸ್ಸಿಲ್ಲದ ಮನಸ್ಸಿನಲ್ಲಿ ಬಂದು ಈ ರೇಜಿಗೆಗೆ ಮನನೊಂದು ತೋಪಮ್ಮ ಬಂದಿದ್ದರೆ ಕಳುಹಿಸಿಕೊಡಿ ಎಂದು ಕೇಳುತ್ತಿದ್ದ. ಬೆಂಗಳೂರಿನಲ್ಲಿ ಇರುವ ಆ ಓದೋ ಹುಡುಗನ ಬಗ್ಗೆ ಅಧಿಕಾರಿಗಳು ಏನು ಬೇಕಾದರೂ ಮಾಡಬಲ್ಲರೆಂದು ಹೇಳುತ್ತಿದ್ದ. ಒಂದು ರೀತಿ ಕೇರಿಯವರ ಪರವಾಗಿ ಅವನ ಅನುಕಂಪ ಇತ್ತು. ಚಿಲ್ರೆಯು ಆತನ ಮಾತನ್ನು ಆಲಿಸಿ ‘ ಈ ಜನಗೋಳ್ ನೋವ್ಗೆ ನೀವ್ಯಾಕೆ ಬೇಜಾರ್ ಮಾಡ್ಕಂಡೀರಿ ಬುಡಿ ಸ್ವಾಮಿ, ನಮ್ ನೋವ ನಾವೆ ಹಣ್‌ಮಾಡ್ಕ ತಿಂತೀವಿ ’ ಎನ್ನುತ್ತಿದ್ದ. ಜನರೆಲ್ಲ ಈಗಿನ ಈ ಪರಿಸ್ಥಿತಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಶಕ್ತಿಯನ್ನು ಪಡೆದುಕೊಂಡಿರಲಿಲ್ಲ. ಬತ್ತ ಎಂಬ ಮಾಯಾಂಗನೆ ಅವರೆಲ್ಲರ ಎದುರು ನರ್ತಿಸಿ ಏನೆಲ್ಲ ಮಾಡಿಬಿಡುತ್ತಾಳೆಂದು ತರ್ಕಿಸುವ ಸ್ಥಿತಿಯಲ್ಲಿ ಈಗವರು ಅಲ್ಲಲ್ಲೇ ಸ್ತಬ್ಧರಾಗಿ ಕೈ‌ಊರಿ ಕುಳಿತಿದ್ದರು. ಸುಸ್ತು ಸಂಕಟ ಹಸಿವು ಅವಮಾನ , ನೀರಸ ಕ್ಷಣಗಳು , ವ್ಯರ್ಥಗೊಳ್ಳುವ ಅವರೆಲ್ಲರ ಕನಸುಗಳು . ಈಗಲ್ಲಿ ಸುಮ್ಮನೆ ಸುಳಿದಾಡುತ್ತ ಅವರನ್ನೇ ಸಂತೈಸುವಂತೆ ಓಡಾಡುತ್ತಿದ್ದವು. ತೋಪಮ್ಮ ಇಲ್ಲಿಗೆ ಬಂದಿಲ್ಲವೆಂದು ತಿಳಿದು ಪೇದೆ ವಾಪಸ್ಸು ಹೊರಟುಹೋದ. ಈಗ ತೋಪಮ್ಮ ಇಡೀ ಕೇರಿಗೆ ಒಬ್ಬ ಅಸಾಧಾರಣ ಶಕ್ತಿಯಂತೆ ಕಾಣಲ್ಪಟ್ಟಳು. ಜನ ಅವಳ ಬರುವಿಕೆಗಾಗಿ ಮಾತ್ರ ತಮ್ಮ ಕನಸು ಮನಸುಗಳಲ್ಲಿ ಲೆಕ್ಕ ಹಾಕತೊಡಗಿದರು. ಸಮಯ ಹೊರಳುತ್ತಿತ್ತು. ಜನ ಅಲ್ಲಲ್ಲಿ ಕರಗುತ್ತಿದ್ದರು. ಆ ನಡುವೆ ಮಾಯಮ್ಮನ ಮೊಮ್ಮಗ ಹಸಿವು ತಾಳಲಾರದೆ , ಇನ್ನೂ ಒಲೆ ಮುಂದೆ ಚೆಲ್ಲಿಕೊಂಡು ಬಿದ್ದಿದ್ದ ಬೇಯಿಸಿದ ಬತ್ತವನ್ನು ಬಾಯಿಗೆ ತುಂಬಿಕೊಂಡು ಅಗಿದಗಿದು ಅರೆಯುತ್ತ ಅರೆಯುತ್ತ ರಸಹೀರುತ್ತ ಆ ಬೆಂದ ಬತ್ತದ ಅಕ್ಕಿ ರುಚಿಯು ಕುಡಿಯುತ್ತ ಹೊಟ್ಟು ಉಗಿಯುತ್ತ ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತೇನೆ ಎಂಬಂತೆ ನಿರಾತಂಕವಾಗಿ ತಿನ್ನುತ್ತಿದ್ದ. ಅವನ ಕಟಬಾಯಲ್ಲಿ ಬತ್ತದ ರಸ ಹರಿಯುತ್ತಿತ್ತು. ಇಡೀ ಊರು ಅಗಾಧವಾದ ಮೌನದಲ್ಲಿ ಏನೆಲ್ಲವನ್ನು ತನ್ನೊಳಗೆ ತುಂಬಿಕೊಂಡು ಯಾರ್‍ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿತ್ತು. ಕೆರೆ ಬಯಲ ಕಡೆಯಿಂದ ಗಾಳಿ ಬೀಸುತ್ತ ಆ ಜನರ ಮೇಲೆ ಹಾಯ್ದು ಬರುತ್ತಿತ್ತು. ಕಾಲ ಎಂಬುದು ತನ್ನೆಲ್ಲ ಸ್ಥಿತಿಗರ್ಭದ ಸತ್ಯಗಳನ್ನು ಹೊತ್ತುಕೊಂಡು ಈಗ ಬೆಳೆಯುತ್ತಲೇ ಇತ್ತು. +ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […] +೧ ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು […] +ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ . ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_432.txt b/Kannada Sahitya/article_432.txt new file mode 100644 index 0000000000000000000000000000000000000000..fd1b561423efe6f40ee17d0806b6d9f06bc756fb --- /dev/null +++ b/Kannada Sahitya/article_432.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಏನೋ ಸಾವೆನ್ನುವ +‘ಅದು’ ನಿರೀಕ್ಷಿಸುತ್ತಾ ಇರೋದು +ಎಲ್ಲೋ, ಮುಂದೆಂದೋ +ಈಗಂತೂ ಅಲ್ಲ. +ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, +ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ +ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ +ಒಣಗುವ ನಾಲಗೆಗೆ ಹಿತವಾಗಲೆಂದು ಗೆಳೆಯ ತಂದ ಕಿತ್ತಲೆ ಬುಟ್ಟಿ +‘ಅದು’ ನಿರೀಕ್ಷಿಸುತ್ತಾ ಇದೆ ಎಂದು ತಿಳಿಯೋದು +ಅಹಮಿನ ಭ್ರಮೆ +‘ಅದು’ ಇದೆ +ಸುಮ್ಮನೇ, ಬಯಸದೆ, ಬೇಡದೆ, +ಅದರ ಉದಾಸೀನಕ್ಕೆ ತಾನು ಸಲ್ಲುವ ಕ್ಷಣ +ಈಗಾದರೇನು, ನಾಳೆಯಾದರೇನು, +ನಿನ್ನೆಯು ಅದು ಹೀಗೆ ನಿರ್ಲಕ್ಷ್ಯದಲ್ಲಿ ಇತ್ತಲ್ಲ +ಎಂದು ತನ್ನ ಪಾಡಿಗೆ ಗುಲಾಬಿಯಂತೆ ಇವನೂ +ಇನ್ನೂ ಕೊಂಚ ಅರಳುತ್ತ ಇರುವಾಗ +ಕಿಟಕಿಯಾಚೆ ಕಾಮರೂಪಿ ಮೋಡಗಳ ಆಕಾಶ, +ಹುಳ ಕುಕ್ಕಿ ಹುಡುಕುವ ಆತುರದ ಹಸಿರು ಕೊಕ್ಕಿನ ಪುಟಾಣಿ ಹಕ್ಕಿ +ರೋಮಾಂಚಿತ ಕಚಕುಳಿಯ ಗುಬ್ಬಿ, +ಸೋರುವ ಸಿಂಬಳದ ಎಗ್ಗಿಲ್ಲದೆ ಚೆಂಡಾಡುವ ಚಡ್ಡಿಯ ಹುಡುಗ +ಕೂದಲನ್ನು ಕಟ್ಟುತ್ತಾ ಬಿಚ್ಚುತ್ತಾ ಗಂಡನಿಗೆ ಕಾಯುತ್ತ +ಹೊಸಿಲಿನ ಮೇಲೆ ನಿಂತ ಸೇಳೆಯ ಸೊಸ +ತನ್ನದೆನ್ನಿಸಿದ್ದ ಈ ಎಲ್ಲವಕ್ಕೂ +ಸಾವಕಾಶದ ಕಾಲದಲ್ಲಿ ತಾನು ಅನಗತ್ಯ ಎನ್ನುವುದು +ಹೊಳೆದು +ತೊಟ್ಟು ಕಳಚಿ +ಹೋದ. +***** +ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […] +ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – ಕೊಂಬೆಗಳೆಲ್ಲ […] +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_433.txt b/Kannada Sahitya/article_433.txt new file mode 100644 index 0000000000000000000000000000000000000000..dd445f8c3e78cb683ba93fc4a9c94047bb461c56 --- /dev/null +++ b/Kannada Sahitya/article_433.txt @@ -0,0 +1,220 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. ಅಣ್ಣಾಜಿ ತುಂಬ ಸ್ನೇಹದ ಧ್ವನಿಯಲ್ಲಿ, +“ಕೂತುಕೋ ಉಮ. ಒಂದು ಸೀರಿಯಸ್ಸಾದ ವಿಷಯ ನಿಮ್ಮಿಬ್ಬರಿಗೂ ಹೇಳೋದಿದೆ” ಎಂದು ಅವಳನ್ನು ಎದುರು ಕೂರಿಸಿಕೊಂಡು ತನಗೆ ವಿಶಿಷ್ಟವಾದ ರೀತಿಯಲ್ಲಿ ಕ್ಲಾಸ್ ತೊಗೊಂಡ. +“ಈವರೆಗೆ ಸಮಾಜ ಸೃಷ್ಟಿಸಿದ ಎಲ್ಲ ಉತ್ಪಾದನಾ ಸಂಬಂಧಗಳೂ ಮನುಷ್ಯನ ಸ್ವಾತಂತ್ರ್ಯವನ್ನು ಮಿತಗೊಳಿಸುವಂಥವು. ಉದಾಹರಣೆಗೆ ಗಂಡು ಹೆಣ್ಣಿನ ಸಂಬಂಧ ನೋಡುವ. ಉಳಿದ ಪದಾರ್ಥಗಳಂತೆಯೇ ಹೆಣ್ಣು ಕೂಡ ಒಂದು ಸ್ವತ್ತಾಗಿದೆ. ಆದ್ದರಿಂದಲೇ ಇದು ಸ್ವಂತದ ಹೆಣ್ಣು ಇದು ಪರ ಹೆಣ್ಣು ಎಂಬ ವಿಂಗಡಣೆಗಳ ಮುಖಾಂತರ ತನ್ನ ಸ್ವತ್ತನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಮನುಷ್ಯ ಫ಼್ಯೂಡಲ್ ಪದ್ಧತಿಯಲ್ಲೂ ಕ್ಯಾಪಿಟಲಿಸ್ಟ್ ಪದ್ಧತಿಯಲ್ಲೂ ಮಾಡಿಕೊಂಡಿದ್ದಾನೆ. ಈ ಎಲ್ಲ ಪದ್ಧತಿಗಳೂ ಮನುಷ್ಯನ ಸಹಜ ವಿಕಾಸವನ್ನು ತಡೆಗಟ್ಟುತ್ತವೆ. ಹಾಗೆಯೇ ನಮ್ಮ ಈ ಲಿಬಿಡೊ -ಈ ನಮ್ಮ ಕಾಮಜೀವನ -ಅನೈಸರ್ಗಿಕವಾದ ಕಟ್ಟುಪಾಡುಗಳಿಗೆ ಒಳಗಾಗುತ್ತದೆ. ಕೊರತೆಯ ಆಧಾರದ ಮೇಲೆ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ನಿಂತಿದೆ -ಕೃತಕವಾದ ಕೊರತೆ ಮತ್ತು ಶೋಷಣೆ. ಇದು ಕಾಮಜೀವನಕ್ಕೂ ಅನ್ವಯಿಸುತ್ತದೆ. ಈಗ ನೋಡಿ ಸಮೃದ್ಧಿಯಲ್ಲಿ ಮನುಷ್ಯನ ಹೊಟ್ಟೆ ಬಟ್ಟೆ ವಸತಿ ವಿರಾಮಗಳ ಅಗತ್ಯಗಳು, ಸಾಂಸ್ಕೃತಿಕ ಅಗತ್ಯಗಳು, ಪೂರೈಕೆಯಾಗುತ್ತ ಹೋದಂತೆ ಮನುಷ್ಯನ ಅಂತಿಮವಾದ ಬಿಡುಗಡೆಗೆ ಅವನು ಸಿದ್ಧನಾಗುತ್ತಾನೆ. ತಮ್ಮನ್ನು ತೀವ್ರವಾದ ನೋವು ಸಂಕಟಗಳಿಗೆ ಗುರಿ ಮಾಡುವ ಕಾಮಜೀವನಕ್ಕೆ ಸಂಬಂಧಪಟ್ಟ ನಿಷೇಧವನ್ನು ಹರಿದು ಗಂಡು ಹೆಣ್ಣು ಬಿಡುಗಡೆ ಪಡೆಯುತ್ತಾರೆ. ಮದುವೆಯಾದವಳಲ್ಲಿ ಮಾತ್ರ, ಅದೂ ನಿಯಮಕ್ಕನುಸಾರವಾಗಿ ಈ ದೇಹ ಕೆಲವೇ ಬಗೆಯ ಸುಖಗಳನ್ನು ಪಡೆಯಬಹುದೆಂಬ ಅಡಚಣೆಗಳು ಮಾಯವಾಗುತ್ತವೆ -ಆಸ್ತಿಯ ಅಗತ್ಯ ವರ್ಗರಹಿತ ಸಮಾಜದಲ್ಲಿ ಮಾಯವಾದಂತೆ. ಆಗ ಇಡೀ ದೇಹವೂ ಬಿಡುಗಡೆ ಹೊಂದಿ ಸುಖದ ಬುಗ್ಗೆಯಾಗುತ್ತದೆ. ಈ ಸುಖದ ಸಾಧನೆಯೇ ಮನುಷ್ಯನಿಗೆ ನೈತಿಕತೆಯನ್ನೂ ತರುತ್ತದೆ. ತಾನು ಭೋಗಿಸುವುದು ಅತ್ಯಂತ ಅಮೂಲ್ಯವಾದದ್ದು, ಸ್ವತಂತ್ರವಾದದ್ದು ಎನ್ನುವ ಧೋರಣೆಗಿಂತ ದೊಡ್ಡ ನೈತಿಕತೆ ಎಲ್ಲಿದೆ?” +“ನಿನ್ನ ಜೀವನಕ್ರಮವನ್ನು ಜಸ್ಟಿಫ಼ೈ ಮಾಡಿಕೊಳ್ಳೋಕೆ ನೀನು ಹೀಗೆ ವಾದಿಸುತ್ತಿ ಎಂದು ಹೇಳಬಹುದಲ್ಲ?” +ಕೃಷ್ಣಪ್ಪ ಉಮೆ ಅಲ್ಲಿರುವುದನ್ನು ಮರೆತು ಕಟುವಾಗಿ ಹೇಳಿದ್ದ. +“ನನ್ನ ವಿಷಯ ಬಿಟ್ಟು ಯೋಚಿಸು. ನೋಡು ಕೃಷ್ಣಪ್ಪ -ನೀನು ರೈತ ಜನಾಂಗದವನು. ನಿನ್ನ ಪೂರ್ವಿಕರು ಭೂಮಾಲೀಕರು. ಆದ್ದರಿಂದ ಹೆಣ್ಣಿನ ಬಗ್ಗೆ ಮೂಲತಃ ನೀನು ಫ಼್ಯೂಡಲ್” -ಅಣ್ಣಾಜಿ ಅರ್ಧ ಹಾಸ್ಯದಲ್ಲಿ ಹೇಳಿದ್ದ. +“ಸ್ವಚ್ಛಂದ ಜೀವನ ನಡೆಸಬಾರದು ಅಂತ ನಂಬೋದು, ಹೆಣ್ಣನ್ನ ಪವಿತ್ರ ಅಂತ ತಿಳಿಯೋದು ಫ಼್ಯೂಡಲ್ ಆದರೆ ಯಾಕಾಗಬಾರದು?” +“ಹೆಣ್ಣು ಯಾಕೆ ಪವಿತ್ರ ಹೇಳು? ಅವಳು ಸೊತ್ತಾದ್ದರಿಂದ. ಹೀಗೆ ಹೇಳೋವರೆ ಹೆಂಗಸರನ್ನ ಹೊಡೆಯೋವರು. ಅಡಿಗೆ, ಅಲಂಕಾರ, ಸಂಗೀತಕ್ಕೆ ಮಾತ್ರ ಹೆಂಗಸರು ಲಾಯಕ್ಕು ಅಂತ ತಿಳಿಯೋವರು. ತನ್ನ ಜೊತೆ ಸಂಭೋಗಕ್ಕೆ ಒಪ್ಪೊ ಹೆಣ್ಣು ಕಳಪೆಯವಳು ಅಂತ ಭಾವಿಸೋವರು….” +ಕೃಷ್ಣಪ್ಪನಿಗೆ ಅಣ್ಣಾಜಿಯ ಕೊನೆಯ ಮಾತಿನಿಂದ ಮರ್ಮಸ್ಥಳಕ್ಕೆ ಏಟು ಬಿದ್ದಂತೆ ನೋವಾಗಿತ್ತು. ಅಣ್ಣಾಜಿಯ ಎದುರು ಉಮೆ ಯಾವ ಕಲ್ಮಷವೂ ಇಲ್ಲದ ಹೆಣ್ಣಿನಂತೆ ಕೂತಿದ್ದಳು -ನಿಜ. ಆದರೆ ರಾತ್ರೆ ಅವಳು ತನ್ನ ಗಂಡನಿಗೂ ಮೈಯನ್ನು ತೆರಬೇಕಲ್ಲವೆ? ಚಿನ್ನದ ಹಲ್ಲಿನ ಚನ್ನವೀರಯ್ಯನಿಂದಲೂ ಅವಳ ದೇಹ, ಸುಖದ ಬುಗ್ಗೆಯಾಗುವುದೇ? ಅಣ್ಣಾಜಿಯಿಂದ ಆದಷ್ಟೆ? ಇಲ್ಲದಿದ್ದಲ್ಲಿ ಹೇಗೆ ಅವಳು ಗಂಡನಿಗೆ ಮೈ ಒಡ್ಡುತ್ತಾಳೆ? ಕೃಷ್ಣಪ್ಪನ ಇಡೀ ವ್ಯಕ್ತಿತ್ವ ಇಬ್ಬರಲ್ಲಿ ಒಂದು ಹೆಣ್ಣು ಒಡೆದುಕೊಳ್ಳಲಾರದು ಎಂದು ಪ್ರತಿಭಟಿಸಿತ್ತು. ಆದರೆ ಹೇಳಲಿಲ್ಲ. ಪ್ರಾಯಶಃ ಉಮೆ ಗಂಡನ ಜೊತೆ ಯಾಂತ್ರಿಕವಾಗಿದ್ದು, ಅಣ್ಣಾಜಿ ಜೊತೆ ಮಾತ್ರ ನಿಜವಾಗಿ ಅರಳಬಹುದು. ಹಾಗಿದ್ದಲ್ಲಿ ಅವಳು ಗಂಡನನ್ನು ಬಿಡಬೇಕು. ಉಮೆಯಿಲ್ಲದಿದ್ದಲ್ಲಿ ಅಣ್ಣಾಜಿಯ ಜೊತೆ ಹೀಗೆ ವಾದಿಸಬಹುದಿತ್ತು ಎಂದುಕೊಂಡು ಸುಮ್ಮನೇ ಕೂತ. +ಅವತ್ತು ಸಂಜೆ ಗೌರಿ ಮನೆಗೆ ಹೋದವನು ಇದನ್ನೇ ಚಿಂತಿಸುತ್ತಿದ್ದ. ತನಗೆ ಗೌರಿ ಬೇಕು -ಆದರೆ ಅವಳು ತನ್ನೊಡನೆ ಹಳ್ಳಿಗೆ ಬರುವವಳಲ್ಲ. ಮದುವೆಯಾಗದೆ ನನ್ನ ಜೊತೆ ಮಲಗೆಂದು ಕೇಳುವುದು ಅವಳನ್ನು ಒಂದು ಭೋಗದ ವಸ್ತುವಾಗಿ ಕಂಡಂತೆ. ಅದಕ್ಕವನು ಒಪ್ಪಿದರೂ ನಂತರ ಆಕೆ ಕೀಳೆಂದು ತಾನು ಯೋಚಿಸುವುದು ಖಂಡಿತ. ಈ ಬಗೆಯಲ್ಲಿ ಒದ್ದಾಡುತ್ತ ಕೃಷ್ಣಪ್ಪ ಗೌರಿಯ ಪ್ರಶ್ನೆಗಳಿಗೆ ಹಾ ಹೂ ಎಂದಷ್ಟೆ ಉತ್ತರಿಸಿ ಹಿಂದಕ್ಕೆ ಬಂದಿದ್ದ. ಮಾರನೇ ದಿನ ಬೆಟ್ಟಕ್ಕೆ ಹೋಗಿ ಬೈರಾಗಿಯ ಜೊತೆ ಕೂತ. ಅವನು ಅದೇ ಪುಸ್ತಕ ಓದುತ್ತಿದ್ದ. ಅವನನ್ನೇನು ಕೇಳುವುದು ಎಂದು ಬೇಸರವಾಯಿತು. ಅವನು ಅಡಿಗೆ ಮಾಡಲು ಪ್ರಾರಂಭಿಸಿದಾಗ ಎದ್ದು ನಿಂತ. ತನ್ನನ್ನು ಕೂತಿರುವಂತೆ ಕೇಳಲು ಬೈರಾಗಿಗೆ ಆಸೆಯಾಗಿರಬಹುದು. ಆದರೆ ಅವನ ನಿಯಮದ ಪ್ರಕಾರ ಕೇಳಲಾರದೆ ಸುಮ್ಮನಿದ್ದಾನೆ ಎಂದು ಅವನ ಮುಖದ ಮೇಲಿನ ಭಾವದಿಂದ ಅನುಮಾನವಾಯಿತು. ಹೀಗೆ ಪ್ರಯತ್ನಪೂರ್ವಕವಾಗಿ ಒಣಗುವ ಮಾರ್ಗ ತನ್ನದಲ್ಲವೆಂದು ಬೆಟ್ಟವನ್ನಿಳಿದ. +ಆದರೆ ವೀಲ್ ಚೇರಿನ ಮೇಲೆ ಅವನನ್ನು ಕೂರಿಸಿ ಅವನ ಹೆಂಡತಿ ನೂಕುವಾಗ ಕೃಷ್ಣಪ್ಪ ಯೋಚಿಸುತ್ತಾನೆ: ನಾನು ಹೆಂಡತಿಯನ್ನು ಹೊಡೆಯಲು ಹೋಗಿದ್ದೇನೆ. ಒಂದೇ ಉದ್ದೇಶಕ್ಕಾಗಿ ಬದುಕಿ ಅದರಲ್ಲೂ ಸಫಲನಾಗದೆ ಒಣಗುತ್ತಿದ್ದೇನೆ. ನಿಧಾನವಾಗಿ ಸಾಯುತ್ತಿದ್ದೇನೆ. ಯಾರೂ ನನ್ನ ಹತ್ತಿರ ಬಂದು ತಮ್ಮ ಪ್ರೇಮದ ಕಥೆಯನ್ನು ಹೇಳಿಕೊಳ್ಳುವುದಿಲ್ಲ; ಪಕ್ಷಾಂತರ ಮಾಡಿದವರ, ಮಾಡಲಿರುವವರ ಸುದ್ದಿಯನ್ನು ಮಾತ್ರ ತರುತ್ತಾರೆ. ಯಾಕೆ ನನಗೆ ಹೀಗಾಯಿತು? +ಮೈ ದುರ್ಬಲವಾದ್ದರಿಂದ ಇಂಥ ಯೋಚನೆಗಳು ಕಾಡುತ್ತವೆ ಎಂದು ರೇಗುತ್ತದೆ. +“ಏ ನಾಗೇಶ” ಎಂದು ಕರೆಯುತ್ತಾನೆ. ಯುವಜನಸಭಾದ ಕಾರ್ಯದರ್ಶಿ ನಾಗೇಶ ಎದುರು ನಿಂತು, “ಏನು ಗೌಡರೇ?” ಅನ್ನುತ್ತಾನೆ. “ಯಾವುದಾರೂ ಹುಡುಗೀನ್ನ ಪ್ರೀತಿ ಗ್ರೀತಿ ಮಾಡಿಲ್ವೇನೊ ನೀನು?” ಅಂದು ನಗುತ್ತಾನೆ. “ನಾನಾ ಗೌಡರೆ? ಅದಕ್ಕೆಲ್ಲಿ ಬಿಡುವಿದೆ ಹೇಳಿ. ಇಷ್ಟೂಂದು ದೇಶದ ಸಮಸ್ಯೆಗಳ ಮಧ್ಯೆ…” ನಾಗೇಶ ಹಾಸ್ಯದ ಸೋಂಕಿಲ್ಲದಂತೆ ಗಂಭೀರವಾಗಿ ಮಾತಾಡಲು ತೊಡಗಿದಾಗ “ಹೋಗಲಿ ಬಿಡು ಈ ಸ್ಟೇಟ್‌ಮಂಟ್ ಬರ್ಕೋ” ಎಂದ್ದು ಅವತ್ತಿಗೆ ಅಗತ್ಯವಾದ ಬೇರೆ ರಾಜಕಾರಣಿಗಳು ಗಮನಿಸುವುದಕ್ಕೆ ಹೆದರುವ ಮಾತುಗಳನ್ನು ಹೇಳುತ್ತಾನೆ. ನಾಗೇಶ ಪುಳಕಿತನಾಗಿ ಬರೆದುಕೊಳ್ಳುತ್ತಾನೆ. ಚಿಗುರು ಮೀಸೆ, ಚಿಗುರು ಗಡ್ಡಗಳ ನಾಗೇಶನ ಮಾಟವಾದ ಮುಖ, ಅವನು ಬೆನ್ನಿನ ತನಕ ಬೆಳೆಸಿದ ಕೂದಲುಗಳನ್ನು ಕೃಷ್ಣಪ್ಪ ಅರ್ಧ ಪ್ರೀತಿ ಅರ್ಧ ಹಾಸ್ಯಗಳಲ್ಲಿ ನೋಡುತ್ತಾನೆ. ಅವನ ವಯಸ್ಸಿನಲ್ಲಿ ತಾನೊಬ್ಬ ಮನುಷ್ಯ, ಇಂಥವ ಎಂದು ಅನ್ನಿಸಿಕೊಳ್ಳಲು ಪ್ರಾಯಶಃ ತಾನೂ ರಾಜಕೀಯಕ್ಕೆ ಇಳಿದಿದ್ದವನಲ್ಲವೆ? ಕಾಲನ್ನು ಮಡಿಸಲು ಪ್ರಯತ್ನ ಪಡುತ್ತ, ಗೌರಿ ದೇಶಪಾಂಡೆಗೆ ಬರುವಂತೆ ನಾಳೆ ಬರೆಸುವುದು ಎಂದುಕೊಳ್ಳುತ್ತಾನೆ. ಅವಳಿಗೆ ತನ್ನ ಮೇಲೆ ಇನ್ನೂ ಇಷ್ಟವಿದ್ದಿದ್ದಲ್ಲಿ ಅವಳೇ ಬರದೆ ಇರುತ್ತಿದ್ದಳೆ? ಡೆಲ್ಲಿಯಲ್ಲಿ ಈಗ ತಾಯಿ ಜೊತೆ ಇರುವಳಂತೆ. ಪ್ರತಿದಿನ ಕಾಗದ ಬರೆಸಬೇಕೆಂದುಕೊಂಡರೂ ತನ್ನ ಈ ಅವಸ್ಥೆಯನ್ನವಳು ನೋಡಕೂಡದೆಂದು ಮುಂದೂಡುತ್ತಾನೆ. +ಈಗ, ಪ್ರಾಯಶಃ ಸಾಯಬಹುದಾದ ಈಗ, ತಾನು ಇಡಿಯಾಗಿ ಉಳಿದಿದ್ದೇನೆಯೆ? ಎಂಬ ಪ್ರಶ್ನೆ ಅವನನ್ನು ಕಾಡುತ್ತಲೇ ಇರುತ್ತದೆ. +.. +.. +.. +ವೀಲ್ ಚೇರಿನ ಮೇಲೆ ಕೂತು ಹೀಗೆ ಯೋಚಿಸುತ್ತಿರುವ ಕೃಷ್ಣಪ್ಪನ ಕಣ್ಣೆದುರು ಅವನು ತೀವ್ರವಾಗಿ ದ್ವೇಷಿಸಿದ ಮಠದ ಪಾರುಪತ್ತೇದಾರನಾಗಿದ್ದ ನರಸಿಂಹಭಟ್ಟ, ದೊಡ್ಡ ಅಡಿಕೆ ತೋಟದ ಮಾಲೀಕ ಶಿವನಂಜಗೌಡ, ಪಿ. ಡಬ್ಲ್ಯೂ. ಡಿ. ಇಲಾಖೆಯಲ್ಲಿ ಲಕ್ಷಗಟ್ಟಲೆ ತಿಂದು ದೇಶದ ಮುಖ್ಯಮಂತ್ರಿಯಾದ ವೀರಭದ್ರಪ್ಪ, ದಪ್ಪ ಮುಖದ ವಾರಂಗಲ್ ಪೋಲೀಸ್ ಅಧಿಕಾರಿ ನಿಲ್ಲುತ್ತಾರೆ. ಕೃಶವಾದ ಕೈಕಾಲುಗಳ ಮಕ್ಕಳನ್ನು ಬಗಲಲ್ಲಿ ಹೊತ್ತ ಕೆದರಿದ ತಲೆಯ ಹೆಂಗಸರು, ಮಂಡಿತನಕ ಮಾಸಲು ಪಂಚೆಯುಟ್ಟ ರೈತರು ಇವರ ಮೇಲೆ ಆವೇಶದಿಂದ ನುಗ್ಗುತ್ತಾರೆ. ಚೂರುಚೂರೇ ಅವರನ್ನು ಹಿಂಸಿಸುತ್ತ ನಿಧಾನವಾಗಿ ಕೊಲ್ಲುತ್ತಾರೆ. ಅವರ ರಕ್ತ ತಂದು ತನ್ನ ಪಾರ್ಶ್ವವಾಯು ಬಡಿದ ಕಾಲಿಗೂ ಪಕ್ಕಕ್ಕೂ ತಿಕ್ಕುತ್ತಾರೆ. ಈ ರಕ್ತವಲ್ಲ ಕಣ್ರೋ -ಪಾರಿವಾಳದ ರಕ್ತ, ಬಿಸಿಯಾಗಿರಬೇಕು ಎಂದು ಯಾರೋ ಅನ್ನುತ್ತಾರೆ. ಕೃಷ್ಣಪ್ಪ ನಗುತ್ತಾನೆ. +ಹೀಗೆ ಕನಸು ಕಾಣುತ್ತ ಕೃಷ್ಣಪ್ಪನ ಕಣ್ಣುಗಳು ಕ್ರೂರವಾಗಿ ದುರುಗುಟ್ಟುವುದನ್ನು ಅಪ್ಪನಿಗೆ ಏನೋ ಹೇಳಲು ಬಂದ ಅವನ ಮಗಳು ಗೌರಿ ಕಂಡು ಹೆದರುತ್ತಾಳೆ. ಕೃಷ್ಣಪ್ಪ ತನ್ನ ಕಾಲನ್ನು ಈಗ ಎತ್ತಬಲ್ಲೆ ಎಂದು ತಿಳಿಯುತ್ತ ಇಡೀ ಮನಸ್ಸನ್ನು ತನ್ನ ಪಾದವಾಗಿ ಏಕಾಗ್ರಗೊಳಿಸುತ್ತಾನೆ. ಎತ್ತಲು ನೋಡುತ್ತಾನೆ. ಸೊಂಟದಿಂದ ಮೇಲಕ್ಕೆ ಈಗ ಎತ್ತಿಬಿಡುತ್ತೇನೆ ಎಂದು ತಿಳಿದ ಕಾಲು ಸ್ವಲ್ಪ ಪಾದದ ಉಂಗುಷ್ಠದಲ್ಲಿ ಮೇಲಕ್ಕೇರುತ್ತದೆ. ಕೃಷ್ಣಪ್ಪ ನಿಟ್ಟುಸಿರಿಟ್ಟು ಮತ್ತೆ ಇನ್ನೊಂದು ಹಗಲುಗನಸಿಗೆ ಮರಳುತ್ತಾನೆ. ಈಗ ರೈತರು ಕೊಲ್ಲುತ್ತಿಲ್ಲ. ಗಂಭೀರವಾಗಿ ಹೊಟ್ಟೆಡುಬ್ಬರಾದ ವೈರಿಗಳನ್ನು ಎದುರು ನಿಲ್ಲಿಸಿ ಶಿಸ್ತಿನಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ. +ಭಾಗ – ಎರಡು +ಒಂದು ಘಟನೆ ಮುಖ್ಯವಾಗಿ ಕೃಷ್ಣಪ್ಪನನ್ನು ಹಳ್ಳಿಗೆ ಹೋಗಿ ನೆಲೆಸುವಂತೆಯೂ ರೈತ ಸಂಘಟನೆಯಲ್ಲಿ ತೊಡಗುವಂತೆಯೂ ಮಾಡಿತು. ಅದು ಅಣ್ಣಾಜಿಯ ದಸ್ತಗಿರಿ ಮತ್ತು ಕೊಲೆ. +ಅಣ್ಣಾಜಿ ಮೈಕೈ ತುಂಬಿಕೊಂಡು ಅವನೇ ತಮಾಷೆ ಮಾಡುತ್ತಿದ್ದಂತೆ ಪೊಗದಸ್ತಾದ ಬೂರ್ಜ್ವಾನಂತೆ ಕಾಣಲು ಪ್ರಾರಂಭಿಸಿದ್ದ. ತನ್ನ ಎಲ್ಲ ಕಥೆಯನ್ನೂ ಉಮೆಗೆ ಹೇಳಿದ್ದ. ಅವನ ಜೊತೆ ತಾನೂ ಎಲ್ಲೆಂದರಲ್ಲಿಗೆ ಓಡಿಹೋಗುವುದಾಗಿ ಅವಳು ಹೇಳಿದ್ದಳು. ಇದನ್ನು ಅಣ್ಣಾಜಿ ಅವಳ ರೊಮಾಂಟಿಸಂ ಎಂದು ಕೃಷ್ಣಪ್ಪನ ಹತ್ತಿರ ತಮಾಷೆ ಮಾಡಿದ್ದರೂ ಈಕೆ ಗುಪ್ತವಾಗಿ ತನಗೆಂದು ತಿಜೋರಿಯಿಂದ ತೆಗೆದಿದ್ದ ಹಣ, ಅವಳ ಜೊತೆಗಿನ ತನ್ನ ವ್ಯವಹಾರಗಳು ಇಂಗ್ಲಿಷ್ ಕಲಿಯುವ ಅಮಲು ಇಳಿಯುತ್ತಿದ್ದಂತೆ ಚನ್ನವೀರಯ್ಯನಿಗೆ ತಿಳಿಯುವುದೆಂದೂ, ಆಮೇಲೆ ತಾವಿಬ್ಬರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಲೇ ಬೇಕಾಗುವುದೆಂದೂ ಅಣ್ಣಾಜಿಗೆ ಚಿಂತೆಯಾಗಿತ್ತು. ತನ್ನ ಪ್ರತಿಕ್ರಿಯೆ ಸೂಚಿಸದೆ ಕೃಷ್ಣಪ್ಪ ಅಣ್ಣಾಜಿಯ ಈ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಿದ್ದ. ಕೃಷ್ಣಪ್ಪನೂ ಆಪ್ತನೆಂದು ಗಟ್ಟಿಯಾದ ಮೇಲೆ ಈಚೆಗೆ ಉಮೆ ನಿಸ್ಸಂಕೋಚವಾಗಿ ಅವನಿದ್ದಾಗಲೇ ಅಣ್ಣಾಜಿಯ ಜೊತೆ ವ್ಯಹರಿಸುವುದು ನೋಡಿದರೆ ತನಗೆ ಪ್ರಿಯವಾದವನ ಜೊತೆ ಓಡಿಹೋಗುವವಳಂತೆ ತೋರುತ್ತಿದ್ದಳೇ ವಿನಾ, ತಾನು ಗಂಡನಿಗೆ ಮೋಸ ಮಾಡುತ್ತಿದ್ದೇನೆಂಬ ಯಾವ ಪಶ್ಚಾತ್ತಾಪವೂ ಅವಳಲ್ಲಿ ಕಾಣಿಸುತ್ತಿರಲಿಲ್ಲ. ಆದರೆ ಅವಳು ತನ್ನನ್ನು ಹಚ್ಚಿಕೊಂಡ ತೀವ್ರತೆಯಿಂದ ಅಣ್ಣಾಜಿಯ ಭಾವನೆಗಳೆಲ್ಲ ಗೊಂದಲಕ್ಕೊಳಗಾಗಿದ್ದಾವೆಂಬುದನ್ನು ಕೃಷ್ಣಪ್ಪ ಗಮನಿಸಿದ್ದ. ಅವಳು ಎದುರಿಗಿಲ್ಲದೆ ತನಗೆ ಪ್ರಿಯವಾದ ವಿಚಾರಗಳನ್ನೂ ಅಣ್ಣಾಜಿ ಮಾತಾಡಲಾರ. ರಾಜಕೀಯದ ಒಣ ವಿಚಾರಗಳೂ – ಉಮೆಗೆ ತಿಳಿಯಲಿ ಬಿಡಲಿ -ಅಣ್ಣಾಜಿ ಅವಳೆದುರು ಮಂಡಿಸುವ ರೀತಿ ಪ್ರಣಯದ ಕಾವಿನಿಂದ ತುಂಬಿರುವುದನ್ನು ಕಂಡು ಕೃಷ್ಣಪ್ಪ ಚಕಿತನಾಗಿದ್ದ. ಅಣ್ಣಾಜಿ ಜೊತೆ ಯಾವುದಾದರೂ ಹಳ್ಳಿಯಲ್ಲಿ ತಾನೂ ದುಡಿಯುವೆನೆಂದು ಉಮೆ ತಿಳಿದಿದ್ದಳು. ಅಣ್ಣಾಜಿ ಕೇರಳಕ್ಕೆ ಹೋಗುವುದೆಂದು ನಿರ್ಧರಿಸಿದ್ದ -ಟ್ಯುಟೋರಿಯಲ್ ಪ್ರಾರಂಭಿಸಲು. ಮನೆಯಲ್ಲಿ ಮರಗೆಲಸಕ್ಕೆ ಬರುತ್ತಿದ್ದ ಕೇರಳದ ಬಡಗಿಯೊಬ್ಬನಿಂದ ಆಗಲೇ ಉಮೆ ಅಷ್ಟಿಷ್ಟು ಮಲೆಯಾಳಂ ಕಲಿಯಲು ಸಹ ಪ್ರಾರಂಭಿಸಿದ್ದಳು -ಮಾರ್ಕೆಟ್ಟು ಅಂಗಡಿಗಳಲ್ಲಿ ಬೇಕಾಗುವಷ್ಟು. ಇನ್ನು ಹದಿನೈದು ದಿನಗಳಲ್ಲಿ ಅವರು ಓಡಿಹೋಗುವುದೆಂದು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳತೊಡಗಿದ್ದರು -ಉಮೆ ಅತ್ಯಂತ ಅಗತ್ಯವಾದ ತನ್ನ ಬಟ್ಟೆಗಳನ್ನು ಸಣ್ಣ ಟ್ರಂಕಲ್ಲಿ ತುಂಬಿ ಅಣ್ಣಾಜಿ ರೂಮಿನಲ್ಲಿ ಇಟ್ಟಿದ್ದಳು ಕೂಡ. ಪ್ರತಿನಿತ್ಯ ಕ್ಲಬ್ಬಿನಲ್ಲಿ ಇಸ್ಪೀಟ್ ಆಡಿ ಕುಡಿದು ಮಧ್ಯರಾತ್ರೆ ಕಳೆದ ಮೇಲೆ ಮನೆಗೆ ಬರುತ್ತಿದ್ದ ಚನ್ನವೀರಯ್ಯನಿಗೆ ತನ್ನ ಹೆಂಡತಿ ಬೇರೆ ಸ್ನೇಹಿತರ ಹೆಂಡಂದಿರಂತೆ ಗಲಾಟೆ ಮಾಡುವುದಿಲ್ಲವೆಂದು ಖುಷಿ; ತನ್ನ ಅಂಕೆಯಲ್ಲಿ ಇದ್ದಾಳೆಂದು ಹೆಮ್ಮೆ. +ಒಂದು ದಿನ ಮಧ್ಯಾಹ್ನ ಪೋಲೀಸ್ ಜೀಪು ಸೀದ ಬಂದು ನಿಂತಿತು. ಉಮೆಯ ಹತ್ತಿರ ಆಗ ಅಣ್ಣಾಜಿ ಮಾತಾಡುತ್ತ ಕೂತಿದ್ದ. ಬಾಗಿಲು ತಟ್ಟಿದ ಶಬ್ದವಾದಾಗ ಕೃಷ್ಣಪ್ಪನೆಂದು ತಿಳಿದು ಅಣ್ಣಾಜಿ ಬಾಗಿಲು ತೆರೆದ. ಎದುರು ದೈತ್ಯನಂತೆ ಡಿ.ಎಸ್.ಪಿ ಯೇ ಖುದ್ದು ನಿಂತಿದ್ದ. ಠಾಣೆಗೆ ಬರಬೇಕು ಎಂದ. ಉಮೆ ಗಾಬರಿಯಿಂದ ಎದ್ದು ನಿಂತಳು. “ಉಮ -ಹೆದರಬೇಡ. ಇವರೇನೋ ತಪ್ಪು ತಿಳಿದಂತಿದೆ. ಕೃಷ್ಣಪ್ಪನನ್ನು ಠಾಣೆಗೆ ಕಳಿಸು. ನನಗೆ ಜಾಮೀನು ಬೇಕಾಗಬಹುದು” ಎಂದು ಪೋಲೀಸರಿಗೆ ಇಂಪ್ರೆಸ್ ಆಗುವಂತೆ ಶುದ್ಧ ಇಂಗ್ಲಿಷಲ್ಲಿ ಮಾತಾಡಿ ಅಣ್ಣಾಜಿ ಹೊರಟ. +ಸ್ವಲ್ಪ ಹೊತ್ತಿನ ಮೇಲೆ ಬಂದ ಕೃಷ್ಣಪ್ಪನ ಹತ್ತಿರ ಉಮ ಅಳಲು ಪ್ರಾರಂಭಿಸಿದಳು. ಕೃಷ್ಣಪ್ಪ ಹೆಣ್ಣು ಅಳುವುದನ್ನು ಸಹಿಸಲಾರ. ಏನು ಹೇಳುವುದೆಂದು ತಿಳಿಯದ ಗೊಂದಲದಲ್ಲಿದ್ದ ಅವನಿಗೆ ಉಮ ಒಂದು ಸಾವಿರ ರೂಪಾಯನ್ನು ಕೊಟ್ಟು ಏನಾದರೂ ಮಾಡಿ ಅಣ್ಣಾಜಿಯನ್ನು ಬಿಡಿಸಿಕೊಂಡು ಬರುವಂತೆ ಹೇಳಿದಳು. ಕೃಷ್ಣಪ್ಪ ಠಾಣೆಗೆ ಹೋದಾಗ ಅಣ್ಣಾಜಿಯನ್ನು ವಾರಂಗಲ್‌ಗೆ ನೇರವಾಗಿ ಜೀಪಿನಲ್ಲಿ ಸಾಗಿಸುತ್ತಿರುವುದಾಗಿ ತಿಳಿಯಿತು. ಅಲ್ಲಿ ಕೋರ್ಟಿನಲ್ಲಿ ಅವನನ್ನು ಹಾಜರುಪಡಿಸುತ್ತಾರೆಂದು ಪೋಲೀಸ್ ಇನ್ಸ್‌ಪೆಕ್ಟರ್ ಹೇಳುತ್ತ, “ಆತನ ಮೇಲೆ ಕೊಲೆ ಪ್ರಯತ್ನದ ಆಪಾದನೆ ಇದೆ ಮಿಸ್ಟರ್ -ಜೋಕೆಯಾಗಿರಿ” ಎಂದ. +ಕೃಷ್ಣಪ್ಪ ಉಮೆಯನ್ನು ನೋಡಲು ಹಿಂದಕ್ಕೆ ಬಂದ. ಅಷ್ಟರಲ್ಲಾಗಲೇ ಅಣ್ಣಾಜಿಯ ಅರೆಸ್ಟ್ ವರ್ತಮಾನ ತಿಳಿದ ಚನ್ನವೀರಯ್ಯ ಮನೆಗೆ ಧಾವಿಸಿ ಹೆಂಡತಿಯನ್ನು ಸಂತೈಸುತ್ತಿದ್ದ. “ನೋಡಿ ಮಿಸ್ಟರ್ ಕೃಷ್ಣಪ್ಪ -ಆತ ರೆವಲೂಶನ್ ಮಾಡ್ತೀನಿ ಅಂತ ಏನೋ ಕೊಲೆ ಗಿಲೆಗೂ ಕೈ ಹಾಕಿದ್ದನಂತೆ. ಇಲ್ಲಿ ಅಂಡರ್‍ಗ್ರೌಂಡ್ ಇದ್ದನಂತೆ; ಥ್ಯಾಂಕ್ ಗಾಡ್ ಅಷ್ಟಕ್ಕೆ ಮುಗಿಯಿತಲ್ಲ ಹೇಳಿ. ಆದರೆ ನನ್ನ ವೈಫ಼್‌ಗೆ ಅವರ ಮೇಲೆ ತುಂಬ ರಿಗಾರ್ಡ್ಸ್ ನೋಡಿ -ಅವರ ನಾಲೆಜ್ ಕಂಡು. ನಿಮ್ಮ ಫ಼್ರೆಂಡ್‌ಗೇನಾದರೂ ಸಹಾಯ ಮಾಡಬೇಕೆನ್ನಿಸಿದರೆ ದಯಮಾಡಿ ವಾರಂಗಲ್‌ಗೆ ಹೋಗಿ ಬನ್ನಿ. ಖರ್ಚಿಗೆ ಈ ಐನೂರು ತಕೊಳ್ಳಿ. ಅಣ್ಣಾಜಿಗೆ ಒಂದು ತಿಂಗಳ ಸಂಬಳಾನೂ ಬಾಕಿ ಇತ್ತು. ಆದರೆ ದಯವಿಟ್ಟು ನನ್ನನ್ನು ಇನ್ವಾಲ್ವ್ ಮಾಡಬೇಡಿ. ನಾನು ಮಾಡೋದು ಬಿಸಿನೆಸ್ ನೋಡಿ -ತುಂಬ ಡೆಲಿಕೇಟು” ಎಂದ. ಕೃಷ್ಣಪ್ಪ ಆ ಹಣವನ್ನೂ ಪಡೆದು ರೈಲಿನಲ್ಲಿ ವಾರಂಗಲ್‌ಗೆಂದು ಹೊರಟಾದ ಮಹೇಶ್ವರಯ್ಯ ಪ್ರತ್ಯಕ್ಷರಾಗಿ ಬಿಡುವುದೆ? “ಹಾ ನಾನೂ ಬರುವೆನಯ್ಯ -ನಿನ್ನ ಜೊತೆ. ನನಗಷ್ಟು ತೆಲಗೂ ಬರತ್ತೆ” ಎಂದರು. +ಮಹೇಶ್ವರಯ್ಯನ ಕೂದಲು ಹಿಂದಿಗಿಂತ ಹೆಚ್ಚು ಉದ್ದವಾಗಿದ್ದು ಬೆಳ್ಳಗಾಗಿದ್ದವು. ಹಣೆಯ ಮೇಲಿನ ದೊಡ್ಡ ಕುಂಕುಮ ನೋಡಿದರೆ ಅವರು ತಮ್ಮ ದೇವೀ ಪೂಜೆಯ ಯಾವುದೋ ಮಂಡಳ ಪೂರೈಸಿ ಬಂದವರಂತೆ ಕಂಡರು. ಎರಡು ಫ಼ಸ್ಟ್ ಕ್ಲಾಸ್ ಟಿಕೆಟ್ಟುಗಳನ್ನು ಕೊಂಡರು. ಕೃಷ್ಣಪ್ಪ ಅಲ್ಲಿ ಇಲ್ಲಿ ಅಣ್ಣಾಜಿಗೆಂದು ಮಾಡಿದ್ದ ಸಾಲ -ಇನ್ನೂ ತೀರಿಸಲಾರದೆ ಉಳಿದದ್ದು -ತೀರಿಸಿದರು. ಕೃಷ್ಣಪ್ಪನನ್ನು ಖಾದಿ ಅಂಗಡಿಗೆ ಕರೆದೊಯ್ದು ಆರು ತೆಳುವಾದ ಪಂಚೆ ಕೊಂಡರು. ಜೊತೆಗೇ ಜುಬ್ಬಗಳಿಗೆ ಬಟ್ಟೆ, ಒಂದು ಉಣ್ಣೆಯ ಕೋಟಿಗೆ ಬಟ್ಟೆ ಕೊಂಡು ಹೊಲಿಸಲು ಹಾಕಿದರು. ತೋಳು ಎಷ್ಟು ಸಡಿಲವಿರಬೇಕು, ಕತ್ತಿನ ಪಟ್ಟಿ ಹೇಗಿರಬೇಕು, ಜುಬ್ಬ ಕೆಳಬರುತ್ತ ಹೇಗೆ ಅಗಲವಾಗಬೇಕು ಇತ್ಯಾದಿಗಳನ್ನು ಟೇಲರಿಗೆ ಸ್ಪಷ್ಟವಾಗಿ ವಿವರಿಸಿ ಕೃಷ್ಣಪ್ಪನಿಗೆ “ನೀನಿನ್ನು ಕಚ್ಚೆಪಂಚೆ ಉಡಬೇಕಯ್ಯ” ಎಂದರು. ಸಂಜೆ ರೈಲಲ್ಲಿ ಇಬ್ಬರೂ ವಾರಂಗಲ್ ಮಾರ್ಗವಾಗಿ ಪ್ರಯಾಣ ಮಾಡಿದರು. +ಎರಡು ದಿನಗಳ ಮೇಲೆ ವಾರಂಗಲ್ ತಲ್ಪಿ ಪೋಲೀಸ್ ಠಾಣೆಗೆ ಟ್ಯಾಕ್ಸಿಯಲ್ಲಿ ಅವಸರವಾಗಿ ಹೋಗಿ ಆರ್. ಎಲ್. ನಾಯಕರನ್ನು ಎಲ್ಲಿಟ್ಟಿದ್ದೀರಿ? – ಎಂದು ಕೇಳಿದಾಗ ಕೃಷ್ಣಪ್ಪ ಮತ್ತು ಮಹೇಶ್ವರಯ್ಯನನ್ನು ಕೂರಲು ಸಹ ಹೇಳದೆ ಪೋಲೀಸ್ ಅಧಿಕಾರಿಯೊಬ್ಬ – +“ನಿಮಗೇನು ಆಗಬೇಕು ಅವರು?” ಎಂದ. +“ನನ್ನ ಸ್ನೇಹಿತ” ಎಂದ ಕೃಷ್ಣಪ್ಪ. +“ಎಚ್ಚರಿಕೆಯಿಂದ ಉತ್ತರ ಕೊಡಿ. ಯಾವ ಹೆಸರಲ್ಲಿ ನಿಮಗೆ ಸ್ನೇಹಿತರಾದರು? ಅವರ ವಿಷಯ ನಿಮಗೆ ಏನೇನು ಗೊತ್ತು?” +“ಕೋರ್ಟಲ್ಲಿ ವಿಚಾರಣೆಯಾಗುತ್ತಲ್ಲ. ಈಗ ಯಾಕೆ?” +“ಆರ್. ಎಲ್. ನಾಯಕ್ ಎಂಬ ಹೆಸರಲ್ಲೇ ನಿಮಗೆ ಪರಿಚಿತರೋ ಅವರು?” +ಲೋಕಜ್ಞಾನ ಗೊತ್ತಿದ್ದ ಮಹೇಶ್ವರಯ್ಯ ಕೃಷ್ಣಪ್ಪನಿಗೆ ಮಾತಾಡಲು ಅವಕಾಶ ಕೊಡದೆ ಹೇಳಿದರು: +“ಆ ಹೆಸರಲ್ಲಿ ನೀವು ಅರೆಸ್ಟ್ ಮಾಡಿದ್ದರಿಂದ ಊಹಿಸಿ ಕೇಳಿದ್ದು ಅಷ್ಟೆ. ನಮ್ಮಲ್ಲಿ ಅವರು ಅಣ್ಣಾಜಿ ಎಂಬ ಹೆಸರಲ್ಲಿ ಇಂಗ್ಲಿಷ್ ಟ್ಯೂಟರ್ ಆಗಿ ಇವರಿಗೆ ಪಾಠ ಹೇಳುತ್ತಿದ್ದರು.” +“ಓಹೋ ಆತ ಯಾರು ಗೊತ್ತೇ ನಿಮಗೆ ಯಂಗ್ ಮ್ಯಾನ್? ತೆಲಂಗಾಣ ರೀಜನ್ನಿನಲ್ಲಿ ಜಮೀಂದಾರನನ್ನು ಕೊಲೆ ಮಾಡಲು ಕೆಲವು ಕಲ್ಪ್ರಿಟ್ಸನ್ನು ತಯಾರು ಮಾಡುತ್ತಿದ್ದ ಒಬ್ಬ ಸೋ ಕಾಲ್ಡ್ ಕಮ್ಯುನಿಸ್ಟ್ ಫಟಿಂಗ. ನೀನು ಖದ್ದರ್ ಹಾಕಿದ್ದರಿಂದ ವಾರ್ನ್ ಮಾಡ್ತಿದೇನೆ. ನಿನಗೆ ಅವನ ಗುರ್ತು ಅಂತಲೂ ಹೇಳಿಕೋಬೇಡ. ಅವನನ್ನು ಫ಼ಿನಿಶ್ ಮಾಡಿಯಾಯ್ತು. ನೋಡಿಲ್ಲವೆ?” ಎಂದು ಅವತ್ತಿನ ಇಂಗ್ಲಿಷ್ ಸುದ್ದಿಪತ್ರಿಕೆಯೊಂದನ್ನು ಕೃಷ್ಣಪ್ಪನಿಗೆ ಕೊಟ್ಟ. +ಪತ್ರಿಕೆಯಲ್ಲಿ ಅಣ್ಣಾಜಿ ಕಾವಿ ಬಟ್ಟೆ ತೊಟ್ಟ ಫ಼ೋಟೋದ ಕೆಳಗೆ ಕಾವಿಯಲ್ಲಿದ್ದ ಆಪಾದಿತನ ಸಾವು ಎಂದು ಶೀರ್ಷಿಕೆಯಿತ್ತು. ಕರ್ನಾಟಕದಲ್ಲಿ ಅಡಗಿದ್ದ ಈ ಆಪಾದಿತನನ್ನು ಪೋಲೀಸರು ಜೀಪಲ್ಲಿ ತರುವಾಗ ಒಂದು ಅರಣ್ಯದ ಮಧ್ಯೆ ಅವನ ಕೆಲವು ಹಿಂಬಾಲಕರು ಜೀಪನ್ನು ಅಟ್ಯಾಕ್ ಮಾಡಿದುದಾಗಿಯೂ, ಈ ಎನ್‌ಕೌಂಟರ್‍ನಲ್ಲಿ ಇಬ್ಬರು ಪೋಲಿಸರಿಗೆ ಗಾಯವಾದುದಾಗಿಯೂ, ಆರ್. ಎಲ್. ಸ್ವಾಮಿ ಅಲಿಯಾಸ್ ಅಣ್ಣಾಜಿ ಈ ಗುಂಡೇಟುಗಳ ಮಳೆಯಲ್ಲಿ ಸಿಕ್ಕಿಬಿದ್ದು ಸತ್ತುದಾಗಿಯೂ ಪೋಲೀಸ್ ಹೇಳಿಕೆ ಪ್ರಕಟವಾಗಿತ್ತು. ಈ ಸ್ವಾಮಿಯ ಅನುಯಾಯಿಗಳಲ್ಲಿ ಕೆಲವರು ಕರ್ನಾಟಕದಲ್ಲಿ ಇನ್ನೂ ಅಡಗಿರಬಹುದೆಂದೂ, ಕರ್ನಾಟಕ ಪೋಲೀಸರು ಅವರಿಗಾಗಿ ಅರಣ್ಯಪ್ರದೇಶದಲ್ಲಿ ಹುಡುಕಾಡುತ್ತಿರುವುದಾಗಿಯೂ ಅಚ್ಚಾಗಿತ್ತು. +ಕೃಷ್ಣಪ್ಪನ ಮುಖ ವಿವರ್ಣವಾಯಿತು. ಎದುರಿಗೆ ಕಾಕಿಬಟ್ಟೆ ತೊಟ್ಟು ಕೈಯಲ್ಲಿ ದೊಣ್ಣೆ ಹಿಡಿದಿದ್ದ ದಪ್ಪ ಮುಖದ ಅಧಿಕಾರಿಯನ್ನು ಕೆಕ್ಕರಿಸಿ ನೋಡುತ್ತ ನಿಂತ. +“ಕೊನೆ ಮಾತು ಓದಿದೆಯ? ಜೋಕೇಂದ ಇರು. ಅ ಸೂಳೇಮಗನ ಪರಿಚಯದವ ಅಂದ್ರೆ ನಿನ್ನನ್ನೂ ಅರೆಸ್ಟ್ ಮಾಡಬೇಕಾಗುತ್ತೆ” ದಪ್ಪ ಮುಖದ ಅಧಿಕಾರಿ ಹೇಳಿದ. +“ಕೊಲೆಗಡುಕ ಹಂದಿ ಸೂಳೇಮಗನೆ -” +ತಾನೇನು ಮಾಡುತ್ತಿದ್ದೇನೆಂದು ತಿಳಿಯದೆ ಕೃಷ್ಣಪ್ಪ ನುಗ್ಗಿ ಪೋಲೀಸ್ ಅಧಿಕಾರಿಯ ಕತ್ತನ್ನು ಹಿಡಿದ. ಇಬ್ಬರು ಕಾನ್‌ಸ್ಟೆಬಲ್‌ಗಳು ಓಡಿ ಬಂದು ಅವನನ್ನು ಎಳೆದರು. ಮಹೇಶ್ವರಯ್ಯ ಕೈ ಮುಗಿದು “ತುಂಬ ಕೋಪದ ಯುವಕ ಸ್ವಾಮಿ ಬಿಟ್ಟುಬಿಡಿ” ಎಂದು ತೆಲುಗಿನಲ್ಲಿ ಅಂಗಲಾಚಿದರು. ಚೇತರಿಸಿಕೊಂಡಿದ್ದ ಕೃಷ್ಣಪ್ಪ “ಈ ಕೊಳಕನ ಹತ್ತಿರ ಬೇಡ ಬಿಡಿ” ಎಂದ. ಪೋಲೀಸ್ ಅಧಿಕಾರಿ “ನಿನಗಿಷ್ಟು ಧಿಮಾಕೋ -ನೋಡುತ್ತೇನೆ. ಅಸಾಲ್ಟ್‌ಗೆ ಕೇಸು ಹಾಕುತ್ತೇನೆ. ಮ್ಯಾಜಿಸ್ಟ್ರೇಟ್ ಹತ್ತಿರ ನಿನ್ನ ಪ್ರೆಸೆಂಟ್ ಮಾಡಿ ವಿಚಾರಣೆಗೆ ಇಲ್ಲಿ ಇಳಿಸಿಕೋತೇನೆ” ಎಂದು ಎದ್ದುನಿಂತ. “ಈ ಕುಂಕುಮದ ಪೂಜಾರೀನ ಇಲ್ಲಿಂದ ಕರೆದುಕೊಂಡು ಹೋಗಿ. ಅವನು ಓಡಿಹೋಗದಂತೆ ಕಣ್ಣಿಟ್ಟಿರಿ. ಎಲ್ಲ ಛದ್ಮವೇಷದಲ್ಲಿರೋ ಕೊಲೆಗಡುಕರು” ಎಂದು ತನ್ನ ಪ್ಯಾಂಟನ್ನು ಮೇಲಕ್ಕೆತ್ತಿ ಜಗ್ಗಿ ಮೀಸೆ ಹುರಿಮಾಡಿಕೊಂಡ. +ಕಾನ್‌ಸ್ಟೆಬಲ್ ಒಬ್ಬ ಬಂದು ಮಹೇಶ್ವರಯ್ಯನನ್ನು ಹೊರಗೆ ತಳ್ಳಲು ಶುರುಮಾಡಿದ. ಮಹೇಶ್ವರಯ್ಯ “ನಾನೊಬ್ಬ ಲಾಯರನ್ನು ನೋಡ್ತೇನೊ. ಹೆದರಬೇಡ -ದೇವಿಯ ಸ್ತೋತ್ರ ಮಾಡುತ್ತಿರು” ಎಂದು ಹೇಳಿ ಹೊರಗೆ ಹೋದರು. +ಒಬ್ಬ ಇಲಿಯ ಮುಖದ ಕುಳ್ಳನೆಯ ಮ್ಯಾಜಿಸ್ಟ್ರೇಟ್ ಎದುರು ಕೃಷ್ಣಪ್ಪನನ್ನು ಪೋಲೀಸ್ ಅಧಿಕಾರಿ ನಿಲ್ಲಿಸಿದ. ತನ್ನ ಮೇಲೆ ಈತ ಅಸಾಲ್ಟ್ ಮಾಡಲು ಪ್ರಯತ್ನಿಸಿದ್ದನ್ನೂ ಸ್ವಾಮಿಯ ಸಂಗಡಿಗನಾಗಿದ್ದುದನ್ನೂ ಹೇಳಿ ವಿಚಾರಣೆಗೆ ಸ್ಟೇಶನ್ನಿಗೆ ಬಿಡಬೇಕೆಂದು ಕೋರಿದ. ಕೃಷ್ಣಪ್ಪ ಕಣ್ಣು ಕೆಕ್ಕರಿಸಿ ನೋಡುತ್ತ ಸುಮ್ಮನೇ ನಿಂತ. ಮ್ಯಾಜಿಸ್ಟ್ರೇಟಿನ ಒಪ್ಪಿಗೆ ಪಡೆದು ಅಧಿಕಾರಿ ಕೃಷ್ಣಪ್ಪನನ್ನು ಊರಿನ ಇನ್ನೊಂದು ಠಾಣೆಗೆ ಒಯ್ದು, ಠಾಣೆಯ ಹಿತ್ತಲಲ್ಲಿ ಇದ್ದ ಒಂದು ಕೋಣೆಯ ಎದುರು ನಿಲ್ಲಿಸಿ, ಅದರ ಬಾಗಿಲು ತೆರೆಯುವಂತೆ ಪಕ್ಕದಲ್ಲಿ ಇದ್ದ ಪೋಲೀಸನಿಗೆ ಹೇಳಿದ. ಬಾಗಿಲು ಕಿಂಯ್‌ಗುಡುತ್ತ ತೆರೆದುಕೊಂಡಿತು. +.. +.. +.. +ಆ ಕೋಣೆಯಲ್ಲಿ ಒಂದಾದರೂ ಕಿಟಕಿಯಿರಲಿಲ್ಲ. ಗಾಳಿಯಾಡಲು ಅವಕಾಶವಿಲ್ಲದ್ದರಿಂದ ಬೂಸಲು ನಾತ ಗಮ್ಮೆಂದು ಮೂಗಿಗೆ ಬಡಿಯಿತು. ಪೋಲೀಸ್ ಕಾನ್‌ಸ್ಟೆಬಲ್ ಕೃಷ್ಣಪ್ಪನನ್ನು ಒಳಗೆ ತಳ್ಳಿ, ಅವನ ಕಾಲಿನ ಬುಡಕ್ಕೆ ಒಂದು ಕಂಬಳಿಯನ್ನು ಎಸೆದ. ಬಾಗಿಲಿಂದ ಒಳಗೆ ಬಂದ ಬೆಳಕಲ್ಲಿ ಉಚ್ಚೆ ಕಕ್ಕಸಗಳಿಗೆಂದು ಇಟ್ಟಿದ್ದ ಒಂದು ತುಕ್ಕು ಹಿಡಿದ ಬೋಗಣಿಯನ್ನು ತೋರಿಸಿದ. ಅಂಥದೇ ಇನ್ನೊಂದು ತುಕ್ಕು ಹಿಡಿದ ಪಾತ್ರೆ ತೋರಿಸಿ ಅದರಲ್ಲಿ ಕುಡಿಯಲು ನೀರಿರುತ್ತದೆ ಎಂದ -ಉರ್ದುವಿನಲ್ಲಿ. “ಎರಡು ಪಾತ್ರೆಗಳೂ ಬೇರೆಬೇರೆ ಕೆಲಸಕ್ಕೆ -ನೆನಪಿಟ್ಟಿರು” ಎಂದು ಅಧಿಕಾರಿ ನಕ್ಕ. ಕಾನ್‌ಸ್ಟೆಬಲ್ ಕೃಷ್ಣಪ್ಪನ ಜೇಬುಗಳನ್ನು ಹುಡುಕಿ ಅದರಿಂದ ಸಾವಿರದ ಐನೂರು ರೂಪಾಯಿ, ಸಿಗರೇಟು, ಬೆಂಕಿಪೊಟ್ಟಣ, ಪೆನ್ನುಗಳನ್ನು ತೆಗೆದು ಅಧಿಕಾರಿಗೆ ಕೊಟ್ಟ. +ವಾರಂಗಲ್ ಸೆಖೆ ಅಸಹನೀಯವಾಗಿತ್ತು. ರೂಮೊಳಗೆ ಹೋಗುತ್ತಿದ್ದಂತೆ ಕೃಷ್ಣಪ್ಪನಿಗೆ ಅಲ್ಲಿನ ಧೂಳಿನಿಂದಾಗಿ ಉಸಿರು ಕಟ್ಟಿತು. ಒಳಗಿನ ಕ್ಷೀಣ ಬೆಳಕಿನಲ್ಲಿ ಜೇಡರ ಬಲೆ ಕಟ್ಟಿದ, ಒಲೆಯಂತೆ ಬೇಯುತ್ತಿದ್ದ ರೂಮನ್ನು ಸುತ್ತಲೂ ನೋಡುತ್ತಿದ್ದಂತೆ ಬಾಗಿಲು ಹಾಕಿಕೊಂಡಿತು. ಕಗ್ಗತ್ತಲು ಕವಿಯಿತು. +ಧೂಳಿನ ನೆಲದ ಮೇಲೆ ಕಂಬಳಿಯನ್ನು ಹಾಸಿ ಕೃಷ್ಣಪ್ಪ ಕೂರಲು ನೋಡಿದ. ಆದರೆ ಸೆಖೆಯಿಂದಾಗಿ ಕಂಬಳಿಯ ಮೇಲೆ ಕೂರುವುದು ಅಸಹನೀಯವೆನ್ನಿಸಿತು. ಆದರೆ ಕಾಲು ಬತ್ತಿ ಬಂದದ್ದರಿಂದ ಕಂಬಳಿ ಮೇಲೇ ಕೂತು, ಶರಟನ್ನು ಬಿಚ್ಚಿ ಮುಖ ಮೈಗಳನ್ನು ಒರೆಸಿಕೊಂಡ. ಸಿಗರೇಟ್ ಸೇದಬೇಕೆನ್ನಿಸಿತು. ಜೇಬಿನಿಂದ ಎಲ್ಲವನ್ನೂ ಪೋಲೀಸನು ತೆಗೆದಿದ್ದರೂ ಏನಾದರೂ ಇರಬಹುದೆಂಬ ಭರವಸೆಯಿಂದ ಪ್ರತಿ ಜೇಬನ್ನೂ ಮತ್ತೆ ಮತ್ತೆ ಹುಡುಕಿದ. +ಅವನಿಗೆ ಬಂದ ಮೊದಲನೇ ಯೋಚನೆ: ನಾನೀಗ ನನ್ನ ಬುದ್ಧಿಯ ಸ್ತಿಮಿತವನ್ನು ಕಳೆದುಕೊಳ್ಳಕೂಡದು. ತನ್ನನ್ನು ಗಕ್ಕನೆ ಕಬಳಿಸಿದ್ದ ಈ ಕ್ಷುದ್ರತೆಗೆ ಜಗ್ಗಕೂಡದು. ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಂಡು ತನ್ನ ಶಕ್ತಿಯನ್ನೆಲ್ಲ ಮುಂದಿನದನ್ನು ಎದುರಿಸಲು ಕಾಯ್ದುಕೊಳ್ಳಬೇಕು. ಚುಚ್ಚುವ ಕಂಬಳಿಯನ್ನೆ ಹಾಸಿಕೊಂಡು ಕಾಲು ಚಾಚಿ ಮಲಗಿದ. ಮೈ ಬೆವರುತ್ತಿದ್ದುದರಿಂದ ಬಾಯಾರಿಕೆಯಾಯಿತು. ನೀರಿದ್ದ ಪಾತ್ರೆ ಕಣ್ಣಿಗೆ ಕಾಣಲಿಲ್ಲ. ಅದರಲ್ಲಿದ್ದ ನೀರನ್ನು ಕುಡಿಯುವುದನ್ನು ನೆನೆಸಿಕೊಂಡರೇ ಹೇಸಿಗೆಯಾಯಿತು. +ಕಣ್ಣು ಮುಚ್ಚಲು ನೋಡಿದ. ಚೂರು ಹಂದಿದರೂ ಧೂಳೆದ್ದು ಮೂಗು ಕಟ್ಟುವಂತಾಗುತ್ತಿತ್ತು. ಬಾಗಿಲ ಸಂದಿಯಿಂದಾದರೂ ಒಂದು ಬೆಳಕಿನ ರೇಖೆ ಕಂಡೀತೋ ಎಂದು ಆಶಿಸಿದರೆ ಅದು ಒಂದೇ ಹಲಗೆಯ, ಭದ್ರವಾಗಿ ಮುಚ್ಚುವ ಚಿಕ್ಕ ಬಾಗಿಲಾಗಿತ್ತು. ಇಲ್ಲಿ ಇದ್ದರೆ ಹಗಲೋ ರಾತ್ರೆಯೋ ತಿಳಿಯುವುದು ಕೂಡ ಸಾಧ್ಯವಿರಲಿಲ್ಲ. ಕೃಷ್ಣಪ್ಪ ಜೈಲು ನೋಡುತ್ತಿರುವುದು ಇದೇ ಮೊದಲಲ್ಲ. ನಲವತ್ತೆರಡರಲ್ಲಿ, ಮತ್ತೆ ಮೈಸೂರಿನ ಬಿಡುಗಡೆಗೆ ನಲವತ್ತೇಳರಲ್ಲಿ ಅವನು ಜೈಲಿಗೆ ಹೋಗಿದ್ದ. ಆಗ ಜೈಲೆಂದರೆ ಗೆಳೆಯರೆಲ್ಲ ಒಟ್ಟು ಕೂಡಿ ಹಾಡುವ, ಅಡಿಗೆ ಮಾಡಿ ಊಟ ಮಾಡುವ ಜಾಗವಾಗಿತ್ತು. ಸಿಸ್ಟಮ್ಮನ್ನೆ ವಿರೋಧಿಸಿದಾಗ ಸರ್ಕಾರದ ವರ್ಗಲಕ್ಷಣ ಪತ್ತೆಯಾಗುತ್ತೆ ಎಂದು ಅಣ್ಣಾಜಿ ಹೇಳಿದ್ದು ಈ ಕತ್ತಲಲ್ಲಿ ಕೃಷ್ಣಪ್ಪನಿಗೆ ನೆನಪಾಯಿತು. ಒಂದು ಪ್ರಾಣಿಯನ್ನು ಕೊಲ್ಲುವಂತೆ ಅಣ್ಣಾಜಿಯನ್ನು ಕೊಂದಿದ್ದರು. ಒಂದು ಹೆಣ್ಣಿನ ಜೊತೆ ಸಂಸಾರ ಹೂಡಿ ಪ್ರಾಯಶಃ ಶಾಂತವಾಗಿ ಸಂಸಾರ ಹೂಡುವ ಕನಸು ಕಂಡಿದ್ದ ಅಣ್ಣಾಜಿ. ಕೃಷ್ಣಪ್ಪ ಇದನ್ನು ಯೋಚಿಸುತ್ತಿದ್ದಂತೆ ಅವನ ಮೈ ಕೋಪದಿಂದ ಬಿಸಿಯಾಯಿತು. ಕಂಬಳಿಯ ಮೇಲೆ ಮಲಗಿದ ತನ್ನ ಕಪ್ಪು ದೇಹ ಒಂದು ಭೀಕರ ಘಟಸರ್ಪವಾಗಿ ಅಣ್ಣಾಜಿಯನ್ನು ಕೊಂದವರನ್ನು ತನ್ನ ವಿಷದಲ್ಲಿ ಕಡಿದು ಸಾಯಿಸುವಂತಾಗಿದ್ದರೆ ಎಂದು ಕನಸನ್ನು ಕಾಣುತ್ತ ಮಲಗಿದ್ದಾಗ, ತನ್ನ ಮೈಯನ್ನೆಲ್ಲ ನೂರಾರು ಕಡೆಗಳಲ್ಲಿ ಕಡಿದಂತಾಗಿ ಎದ್ದು ಕೂತ. ಸೂಜಿಯಂತೆ ಮೈಯನ್ನೆಲ್ಲ ಚುಚ್ಚುತ್ತಿದ್ದವು ತಗಣಿಗಳೆಂದು ಅವನು ರಪ್ಪೆಂದು ಕೈಗಳನ್ನು ಉಜ್ಜಿಕೊಳ್ಳುವಾಗ ಸಿಕ್ಕಿಬಿದ್ದು ಪಿಚಕ್ಕಾದದ್ದರ ದುರ್ನಾತದಿಂದ ತಿಳಿಯಿತು. ಎದ್ದು ನಿಂತು ಮೈಯನ್ನೆಲ್ಲ ಉಜ್ಜಿಕೊಂಡ. ಕತ್ತಿನ ಮೇಲೆಲ್ಲೊ, ಕೈಗೆ ನಿಲುಕದ ಬೆನ್ನಿನ ಮೇಲೆಲ್ಲೊ ತಗಣಿಗಳು ಓಡಾಡುತ್ತಿದ್ದವು. ಬಿಚ್ಚಿದ ಶರಟಿನಿಂದ ಮೈಯನ್ನೆಲ್ಲ ಉಜ್ಜಿಕೊಳ್ಳುತ್ತ ನಿಂತ. +ಹೀಗೇ ಎಷ್ಟು ಹೊತ್ತಾಯಿತೊ. ಮೂಲೆಯಿಂದ ಚರಚರ ಶಬ್ದ ಕೇಳಿದಂತಾಯ್ತು. ತಟ್ಟೆಯ ಶಬ್ದವಿರಬೇಕು. ಅದನ್ನು ಪ್ರಾಯಶಃ ಒಂದೆರಡು ಇಲಿಗಳು ತಮ್ಮ ಮುಂಗಾಲುಗಳಿಂದ ಒತ್ತಿ ಕೆರೆಯುತ್ತಿವೆ. ಹೌದು ಚಿಲಿಚಿಲಿ ಶಬ್ದ ಬೇರೆ ಬರುತ್ತಿದೆ. ಹಿಂದೆ ಇಲ್ಲಿದ್ದ ಖೈದಿ ಬಿಟ್ಟ ಆಹಾರವಿರಬೇಕು -ಅದನ್ನು ತಿಂದು ಮುಗಿಸಿ ತಟ್ಟೆಯ ತಳವನ್ನು ಕಡಿಯುತ್ತಿವೆ -ಅಂಟಿಕೊಂಡ ಅಗಳುಗಳಿಗಾಗಿ. ಶಬ್ದ ಬರುತ್ತಿದ್ದ ದಿಕ್ಕನ್ನೆ ಏಕಾಗ್ರವಾಗಿ ನೋಡುತ್ತ ನಿಂತ. ಮೈಮೇಲಿನ ತಗಣಿಗಳೆಲ್ಲ ಉದುರಿಬಿದ್ದುವು. ಕಾಲಿನಿಂದ ಅವು ಮೇಲಕ್ಕೆ ಹತ್ತದಂತೆ ಉಜ್ಜಿಕೊಳ್ಳುತ್ತ ಕೃಷ್ಣಪ್ಪ ನಿಂತಿದ್ದ. ಚೂರು ಬೆಳಕಿದ್ದರೂ ಇಲಿಯ ಕಣ್ಣುಗಳು ಹೊಳೆಯಬಹುದಿತ್ತು. ಈ ಕೋಣೆಯಲ್ಲಿ ಈ ಇಲಿಗಳ ದೋರಿರಬಹುದು. ಕೃಷ್ಣಪ್ಪ ತಾನು ಓದಿದ್ದ ಕಥೆಗಳನ್ನೆಲ್ಲ ಹುಡುಕತೊಡಗಿದ -ಯಾವುದರಲ್ಲಿ ಹೀಗೊಬ್ಬ ಕೋಣೆಯಲ್ಲಿ ಹಗಲುರಾತ್ರೆಗಳನ್ನು ಕಳೆಯಬೇಕಾಗಿ ಬಂದ ಕಥೆಯಿದೆ ಎಂದು. ಕೌಂಟ್ ಅಫ಼್ ಮಾಂಟೆ ಕ್ರಿಸ್ಟೋ ಕಥೆಯಲ್ಲಿ ನಾಯಕ ತನ್ನ ಕೋಣೆಯಲ್ಲೊಂದು ತೂತು ಕೊರೆದು ಅದನ್ನು ಕ್ರಮೇಣ ದೊಡ್ಡ ಮಾಡುತ್ತ ತಪ್ಪಿಸಿಕೊಂಡದ್ದು ನೆನಪಾಯಿತು. ಅವನು ಯಾವುದರಲ್ಲಿ ತೂತು ಮಾಡಿದ, ಹೇಗದನ್ನು ಕಾವಲುಗಾರರಿಂದ ಮುಚ್ಚಿಟ್ಟ ಇತ್ಯಾದಿ ನೆನಪು ಮಾಡಿಕೊಳ್ಳುತ್ತ ನಿಂತ. ಇಲಿಯ ದೋರು ಇದ್ದಲ್ಲಿ ಅದನ್ನೆ ಅಗಲ ಮಾಡುತ್ತ ಹೋಗುವುದು. ಅದಕ್ಕೆ ಬೇಕಾದ ಆಯುಧ? ತಟ್ಟೆ ಸ್ಟೀಲಿನದು ಇರಬಹುದೆ? ಇರಲಾರದು. ಇದ್ದಲ್ಲಿ ಅದನ್ನು ಜಜ್ಜಿ ತೆಗೆಯುವ ಸಾಧನ ಮಾಡಬಹುದು. +ಕೃಷ್ಣಪ್ಪ ಸದ್ದಾಗುತ್ತಿದ್ದ ಮೂಲೆಗೆ ನಿಧಾನವಾಗಿ ನಡೆದ. ಕಾಲಿಗೆ ಮೆತ್ತಗಿದ್ದುದ್ದು ಸಿಕ್ಕಿ ನುಣುಚಿಕೊಂಡಂತಾಯ್ತು. ಮೈಯೆಲ್ಲ ಜುಮ್ಮೆಂದಿತು. ಇಲಿ ಎಂದು ಹೇಸಿಗೆಯಿಂದ ನಡುಗುತ್ತ ಗಾಬರಿಯಲ್ಲಿ ತಟ್ಟೆಯ ಮೇಲೆ ಕಾಲಿಟ್ಟದ್ದರಿಂದ ಅದು ಮಗುಚಿಕೊಂಡಿತು. ತಟ್ಟೆಯನ್ನು ಹುಡುಕಿ ಎತ್ತಿದ. ಅದು ನೂರು ಕಡೆ ನೆಗ್ಗಾಗಿ ಅಂಚುಗಳಲ್ಲಿ ಹರಿದುಕೊಂಡಿದ್ದ ಅಲ್ಯೂಮಿನಿಯಂ ತಟ್ಟೆಯಾಗಿತ್ತು. ಅದರಿಂದ ಹಳಸಿದ ನಾತ ಮೂಗಿಗೆ ಹೊಡೆದದ್ದರಿಂದ ಕೈಬಿಟ್ಟ. ಧೂಳಿನ ಮೇಲೆ ಅದು ತೊಪ್ಪೆಂದು ಬಿದ್ದಿತು. +ಹಿಂದೊಮ್ಮೆ ಆದಂತೆ ಬುದ್ಧಿಭ್ರಮಣೆಯಾಗದಂತೆ ಗಟ್ಟಿಯಾಗಿ ಉಳಿಯಬೇಕು ಎಂದುಕೊಂಡು ತಾನು ಇಲ್ಲಿಂದ ತಪ್ಪಿಸಿಕೊಳ್ಳಬಹುದಾದ ಉಪಾಯಗಳನ್ನು ಮತ್ತೆ ಯೋಚಿಸಲು ಪ್ರಾರಂಭಿಸಿದ. ನೂರಾರು ಉಪಾಯಗಳನ್ನು ಹುಡುಕುತ್ತ ಅವುಗಳ ಇತಿಮಿತಿಗಳನ್ನು ಅರಿತು ಚಿಂತಿಸಲು ಶುರು ಮಾಡಿದ. +ಬಾಗಿಲು ಕಿರ್ರೆಂದು ತೆಗೆಯುವ ಶಬ್ದ ಕೇಳಿದಂತಾಗಿ ಬಾಗಿಲ ಕಡೆ ತಿರುಗಿದ. ಅರ್ಧ ತೆಗೆದ ಬಾಗಿಲಿಂದ ಬೆಳಕು ಬರಲಿಲ್ಲ -ಅಂದರೆ ಕತ್ತಲಾಗಿದೆ ಎಂದು ಅರ್ಥ. ರಾತ್ರೆಯಾದ್ದರಿಂದ ಧಗೆ ಕಡಿಮೆಯಾಗಿರಬಹುದು. ಬಾಗಿಲಿಂದ ಸ್ವಲ್ಪವಾದರೂ ಒಳಬಂದ ಗಾಳಿಯನ್ನು ಆಸೆಯಿಂದ ಕೃಷ್ಣಪ್ಪ ನಿರೀಕ್ಷಿಸಿದ. +ಬಾಗಿಲ ಹೊರನಿಂತವನು ಉರ್ದುವಿನಲ್ಲಿ ಏನೋ ಹೇಳಿದ. ಕೃಷ್ಣಪ್ಪನಿಗೆ ಅದು ಅರ್ಥವಾಗಲಿಲ್ಲ. ಸುವರ್ ಎಂದು ಅವನು ಬಯ್ದದ್ದು ಮಾತ್ರ ಅರ್ಥವಾಯಿತು. ದಪ್ಪ ಮೋರೆಯ ಅಧಿಕಾರಿಯಲ್ಲ. ಯಾರೋ ಕೀರಲು ಧ್ವನಿಯ ಪೋಲೀಸ್ ಪೇದೆ. ಬೆಂಕಿ ಕಡ್ಡಿ ಗೀರಿ ಅವನು ರೂಮಿನಲ್ಲಿ ಏನೋ ಹುಡುಕುತ್ತ ಬೈಯುತ್ತಲೇ ನಿಂತ. ಸರಸರನೆ ಹೋಗಿ ತಟ್ಟೆಯನ್ನು ಎತ್ತಿ ಅದನ್ನು ಕೃಷ್ಣಪ್ಪನ ಮುಖಕ್ಕೆ ತಿವಿಯುತ್ತ ಮತ್ತಷ್ಟು ಬೈದ. ಪ್ರಾಯಶಃ ತಟ್ಟೆಯನ್ನು ಎತ್ತಿಕೊಳ್ಳಲು ಅವನು ಕೇಳಿರಬೇಕು. ಈ ಪೇದೆ ತೆಳ್ಳಗಿದ್ದ. ಒಣಗಿದ ಚೂಪುಮುಖದಲ್ಲಿ ದೊಡ್ಡ ಮೀಸೆಗಳನ್ನು ಬಿಟ್ಟಿದ್ದು ಅವನು ಗೀರಿದ ಬೆಳಕಿನಲ್ಲೂ ಕಂಡಿತು. +ಅವನು ಬಾಗಿಲು ಹಾಕಿ ಹೊರಟು ಹೋದ. ಸ್ವಲ್ಪ ಹೊತ್ತಿನ ಮೇಲೆ ಬಾಗಿಲು ತೆಗೆದು “ಏಯ್” ಎಂದ. ಕೃಷ್ಣಪ್ಪ ಬಾಗಿಲಿನ ಕಡೆ ಹೋದ. ಅವನು ತಟ್ಟೆಯನ್ನೊಡ್ಡಿ ನಿಂತಿದ್ದ. ಅದೇ ತಟ್ಟೆ. “ನನಗೆ ಊಟ ಬೇಡ”ವೆಂದು ಕೃಷ್ಣಪ್ಪ ಇಂಗ್ಲಿಷಲ್ಲಿ ಹೇಳಿದ. ಪೇದೆ ತಟ್ಟೆಯನ್ನು ರೂಮಿನೊಳಗೆ ಇಟ್ಟು ಬಾಗಿಲು ಹಾಕಿಕೊಂಡ. ಉರ್ದುವಿನಲ್ಲಿ ಏನೋ ಹೇಳುತ್ತ ಹೊರಟು ಹೋದ. +ತಟ್ಟೆಯನ್ನು ಹೊರಗೆಸೆಯುವಂತೆಯೂ ಇಲ್ಲ. ಅದರಲ್ಲಿ ಸುರಿದ ಅನ್ನ ಸಾಂಬಾರಿನ ವಾಸನೆಯಿಂದ ಕೃಷ್ಣಪ್ಪನಿಗೆ ವಾಂತಿ ಬರುವಂತಾಯಿತು. ಬಾಯಿ ಮೂಗುಗಳನ್ನು ಮುಚ್ಚಿಕೊಂಡು ಏನು ಮಾಡುವುದು ತಿಳಿಯದೆ ನಿಂತ. ಈ ಆಹಾರಕ್ಕೆ ಇಲಿಗಳು ನುಗ್ಗಿ ಗಲಾಟೆ ಮಾಡುತ್ತವೆ. ಹೇಸಿಗೆಯಿಂದ ಅದನ್ನು ಎತ್ತಿ ಹಿಂದಿನಂತೆಯೇ ಮೂಲೆಯಲ್ಲಿ ಇಟ್ಟು ಮತ್ತೆ ಕೋಣೆಯ ನಡುವೆ ನಿಂತ. ಹೆಜ್ಜೆಯ ಮೇಲೆ ಇನ್ನೊಂದು ಹೆಜ್ಜೆಯನ್ನು ಜಾಗರೂಕನಾಗಿ ಇಡುತ್ತ ರೂಮಿನ ಗೋಡೆಯನ್ನು ಮುಟ್ಟಿ ಬಳಚುತ್ತ ನಿಧಾನವಾಗಿ ನಡೆದ. +ಪ್ಲಾಸ್ಟರ್ ಅಲ್ಲಿ ಇಲ್ಲಿ ಬಿದ್ದು ತರಿ ತರಿಯಾದ ಗೋಡೆ. ತಗಣಿಗಳೆಲ್ಲ ಈ ಸಂದಿಯಲ್ಲಿ ಬೀಡು ಬಿಟ್ಟಿರಬಹುದು. ಬಳಚುತ್ತ ಹೋದಾಗ ನೀರು ಮತ್ತು ಕಕ್ಕಸಿನ ಬೋಗಣಿಗಳು ಸಿಕ್ಕವು. ನೀರಿನಿಂದ ಮುಖವನ್ನು ತೊಳೆದು ಮುಂದೆ ಹೋದ. ರೂಮಿನ ಇನ್ನೊಂದು ಕೊನೆಯಲ್ಲಿ ಸಿಮೆಂಟ್ ಕಟ್ಟಿದ ಒಂದು ದಿಣ್ಣೆಯಿತ್ತು. ಪ್ರಾಯಶಃ ಮಲಗಲೆಂದು ಈ ದಿಣ್ಣೆ. ಕಂಬಳಿಯಿಂದ ಅದನ್ನು ಒರೆಸಿದ. ಪಾತ್ರೆಯಲ್ಲಿ ಉಳಿದಿದ್ದ ನೀರಿನಿಂದ ಅದರ ಮೇಲ್ಭಾಗವನ್ನು ತೊಳೆದು ಅದರ ಮೇಲೆ ಕೂತ. ಮಲಗಲು ತಗಣಿಯ ಭಯ. ಮೂಲೆಯಲ್ಲಿ ಹಲವು ಇಲಿಗಳು ತಟ್ಟೆಗೆ ಮುತ್ತಿದ್ದವು. +ಹೀಗೆ ಕಾಲನ್ನು ಇಳಿಬಿಟ್ಟು ಕೂಡಲು ಇರುವುದರಲ್ಲಿ ಸ್ವಚ್ಛವಾದೊಂದು ಜಾಗ ಸಿಕ್ಕಿತೆಂದೇ ತನಗೆ ಸಮಾಧಾನವಾದ್ದನ್ನು ಗಮನಿಸಿ ಅವನಿಗೆ ಆಶ್ಚರ್ಯವಾಯಿತು. ಹೇಗೆ ಈ ದೇಹ ಒಗ್ಗಿಕೊಳ್ಳುತ್ತದೆ! ಹಾಗೇ ಜೊಂಪು ಹತ್ತುತ್ತಿದ್ದಾಗ ಹೊರಗೆ ಗದ್ದಲವಾದಂತೆ ಕೇಳಿಸಿತು. +ಬಳೆಯ ಶಬ್ದ, ಜೊತೆಗೆ ಬೂಟಿನ ಶಬ್ದ. ಗಂಡಸು ನಗುತ್ತ ಏನೋ ಉರ್ದುವಿನಲ್ಲಿ ಹಾಸ್ಯ ಮಾಡುತ್ತಾನೆ. ಸಿನಿಮಾ ಅನ್ನುವ ಶಬ್ದ ಕೇಳಿಸುತ್ತದೆ. ಮೋಜಿನಿಂದ ಗಂಡಸು ಮಾತಾಡುತ್ತಿದ್ದಾನೆ. ದಪ್ಪ ಮುಖದ ಅಧಿಕಾರಿಯ ಮಾತಿನಂತೆ ಕೇಳಿಸುತ್ತದೆ. ಅವನಾದರೆ, ಅವನಿಗೆ ಇಂಗ್ಲಿಷ್ ಬರುವುದರಿಂದ ತನ್ನ ಸಿಗರೇಟ್ ಪ್ಯಾಕನ್ನು ಕೊಡುವಂತೆ ಕೇಳಬಹುದು. ಕೃಷ್ಣಪ್ಪ ಆಲಿಸಿದ. ಯಾರೋ ತಪ್ಪಿಸಿಕೊಂಡು ಓಡಾಡುವ ಸದ್ದು. ಗಂಡಸು ಏನೋ ಕೂಗಿ ಹೇಳುತ್ತಾನೆ. ಹೆಂಗಸು ಅಳುತ್ತಿದ್ದಾಳೆ. ಈಗವಳು ತೆಲುಗಿನಲ್ಲಿ ಮಾತಾಡುತ್ತಿರುವುದರಿಂದ ಕೃಷ್ಣಪ್ಪನಿಗೆ ಅಲ್ಪಸ್ವಲ್ಪ ಅರ್ಥವಾಗುತ್ತದೆ. ತಾನು ನಿಜವಾಗಿಯೂ ಸಿನಿಮಾಕ್ಕೆ ಹೋಗಿದ್ದುದಾಗಿಯೂ ಜೊತೆಗೆ ಇದ್ದವನು ತನ್ನನ್ನು ನಿಜವಾಗಿಯೂ ಮುಂದಿನ ತಿಂಗಳು ಮದುವೆಯಾಗುವವನೆಂದೂ, ಅವನನ್ನು ಇನ್ನೊಬ್ಬ ಪೋಲೀಸ್ ಎಲ್ಲಿಗೆ ಕರೆದುಕೊಂಡು ಹೋದನೆಂದೂ, ಅವನನ್ನು ಇಲ್ಲಿಗೆ ಕರೆದು ತನ್ನಿ ಕರೆದು ತನ್ನಿ ಎಂದೂ ಅವಳು ಅಳುತ್ತ ಅಂಗಲಾಚುತ್ತಿದ್ದಳು. ಗಂಡಸು ನಗುತ್ತ ಏನೋ ಹೇಳಿದ ಉರ್ದುವಿನಲ್ಲಿ. ಕ್ಷಣ ಮೌನದ ನಂತರ ಹೆಂಗಸು ತೆಲುಗಿನಲ್ಲಿ ಬಿಡಿ ಬಿಡಿ ಬಿಡಿ ನನ್ನ ಬಿಡಿ ಎಂದು ಕಿರುಚತೊಡಗಿದಳು. ಕೃಷ್ಣಪ್ಪ ದಿನ್ನೆಯಿಂದೆದ್ದು ಬಾಗಿಲ ಬಳಿ ನಿಂತು ದಪದಪನೆ ಬಾಗಿಲು ಬಡಿಯುತ್ತ, +“ನೀವೇನು ರಾಕ್ಷಸರ? ಮನುಷ್ಯರಲ್ಲವಾ? -ಬಿಡಿ ಅವಳನ್ನು” ಎಂದು ಇಂಗ್ಲಿಷಿನಲ್ಲಿ ಕೂಗತೊಡಗಿದ. ಹೆಣ್ಣಿನ ರೋದನ ನಿಂತು ಗಂಡು ಗಟ್ಟಿಯಾಗಿ ಉಸಿರಾಡುವುದು ಕೇಳುತ್ತಿದ್ದಂತೆ ಕೃಷ್ಣಪ್ಪ ಜೋರಾಗಿ ಬಾಗಿಲನ್ನು ಒದೆಯುತ್ತ “ಬಾಗಿಲು ತೆಗೆಯಿರಿ -ತೆಗೆಯಿರಿ” ಎಂದು ಕಿರುಚಿದ. ಕಿರುಚುವಿಕೆ ತೀವ್ರವಾಗುತ್ತ ಹೋದಂತೆ ತನ್ನ ಅಬ್ಬರ ತನ್ನ ಕಿವಿಯನ್ನೆ ಅಡರಿ ಕಾಲುಗಳು ನಿರ್ಬಲವಾಗಿ ಕುಸಿದು ಕೂತ. ಕ್ರೋಧ ತಿರಸ್ಕಾರಗಳು ಕೂಡ ಮನುಷ್ಯನೆದುರು ಫಲಪ್ರದವಾಗುತ್ತವೇ ಹೊರತು ಇಂಥ ಕಡೆಯಲ್ಲವೆಂದು ತಿಳಿದು ಚಕಿತನಾದ. ಇದು ಅವನಿಗೆ ಹೊಸ ಅನುಭವ. ಇಂಥದನ್ನು ಆ ಬೈರಾಗಿಯಾಗಲೀ, ಪ್ರತಿ ಹಿಂಸೆಗೆ ಹಿಂಜರಿಯಬಾರದೆಂಬ ಅಣ್ಣಾಜಿಯಾಗಲೀ, ಗುಪ್ತ ಸಾಧನೆಯಿಂದ ಮುಕ್ತಿಗೆ ಸನ್ನಾಹ ಮಾಡುತ್ತಲೇ ಇರುವ ಮಹೇಶ್ವರಯ್ಯನಾಗಲೀ ಪ್ರಾಯಶಃ ಕಂಡಿರಲಾರರು. ಇನ್ನು ಹಗಲಾಗುವುದೇ ಇಲ್ಲ ಎನ್ನಿಸಿತು. ಅಥವಾ ಆದರೂ ತನಗೆ ತಿಳಿಯುವುದಿಲ್ಲ. ಇಲಿಗಳು ಖಾಲಿ ತಟ್ಟೆಯನ್ನು ಕೆರೆಯುತ್ತ ಸದ್ದು ಮಾಡತೊಡಗಿದ್ದವು. ಹೊತ್ತಿನ ಪರಿವೆ ಹೊರಟುಹೋಯಿತು. +ಪೇದೆಯೊಬ್ಬ ಬಾಗಿಲು ತೆಗೆದ. ಬೆಳಕಿಗೆ ಕೃಷ್ಣಪ್ಪನ ಕಣ್ಣುಗಳು ಒಗ್ಗಲು ಪ್ರಯತ್ನಿಸುತ್ತಿದ್ದಂತೆಯೇ ಇಬ್ಬರು ಪೇದೆಯರು ನುಗ್ಗಿ, ಅವನ ಕಣ್ಣಿಗೆ ಬಟ್ಟೆ ಕಟ್ಟಿ, ಅವನ ಕೈಯನ್ನು ಎಳೆಯುತ್ತ “ನಡಿ” ಎಂದರು ಉರ್ದುವಿನಲ್ಲಿ. ಕೃಷ್ಣಪ್ಪ ಅವರು ಎಳೆಯುತ್ತಿದ್ದ ದಿಕ್ಕಿನಲ್ಲಿ ನಡೆದ. ಒಂದು ಕುರ್ಚಿಯ ಮೇಲೆ ಅವನನ್ನು ಕೂರಿಸಲಾಯಿತು. ಬೆತ್ತ ಹೆಣೆದ ಕಬ್ಬಿಣದ ಕುರ್ಚಿ -ಕೈಗಳಿದ್ದ ಕುರ್ಚಿ. ಇದರಿಂದ ಭರವಸೆ ಹುಟ್ಟುತ್ತಿರಲಾಗಿ ಅವನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಲಾಯಿತು. +ಯಾವುದೋ ಲೋಕದಿಂದ ಇನ್ನೆಲ್ಲಿಗೋ ಬಂದವನಂತೆ ಕೃಷ್ಣಪ್ಪ ತನ್ನೆದುರಿಗಿದ್ದವರನ್ನು ಆಶ್ಚರ್ಯಪಡುತ್ತ ನೋಡಿದ. ಸಾಲಾಗಿ ಮೇಜಿನ ಮೇಲೆ ಮೂವರು ಕೂತಿದ್ದರು. ನುಣ್ಣನೆಯ ಕ್ಷೌರ ಮಾಡಿದ ಮುಖಗಳು. ತಲೆಯ ಮೇಲೆ ಪೀಕ್ಯಾಪ್, ಗರಿಗರಿ ಇಸ್ತ್ರಿ ಮಾಡಿದ ಸಮವಸ್ತ್ರ. ಮೂವರೂ ಹೂಗಳ ಚಿತ್ರವಿದ್ದ ಕಪ್ ಸಾಸರುಗಳಲ್ಲಿ ಟೀ ಕುಡಿಯುತ್ತಿದ್ದರು. ಮೇಜಿನ ಮೇಲೆ ನೀಲಿ ಉಣ್ಣೆಯ ಬಟ್ಟೆ ಹೊದಿಸಿ ಅದರ ಮೇಲೆ ಗಾಜನ್ನಿಡಲಾಗಿತ್ತು. ಮೂವರಲ್ಲಿ ಮಧ್ಯ ಕೂತವನು ಸುಸಂಸ್ಕೃತನಾದ ವಿದ್ಯಾವಂತನಂತೆ ಕಾಣುತ್ತಿದ್ದ -ಅವನು ಹಾಕಿದ ಕನ್ನಡಕದಿಂದಾಗಿ. ಎಡಕ್ಕೆ ಕೂತವನು ಒಳ್ಳೆಯ ಆಟಗಾರನಂತಿದ್ದ. ಬಲಕ್ಕಿದ್ದವನ ಮೀಸೆ ಬೆಳ್ಳಗಾಗಿತ್ತು; ಹಣೆಯ ಮಧ್ಯೆ ಸಣ್ಣ ಕುಂಕುಮವಿತ್ತು. +ಮಧ್ಯ ಕೂತವನು ಇಂಗ್ಲಿಷಿನಲ್ಲಿ ತುಂಬ ಸೌಜನ್ಯದಿಂದ +“ನಿಮಗೆ ಟೀ ತರಿಸಲೆ?” ಎಂದ. +ಕೃಷ್ಣಪ್ಪ ಈ ಮೂವರ ಬೆನ್ನ ಹಿಂದೆ ತೂಗುಹಾಕಿದ್ದ ನೆಹರೂ ಮತ್ತು ರಾಜೇಂದ್ರ ಪ್ರಸಾದ ಫ಼ೋಟೋಗಳನ್ನು ಗಮನಿಸುತ್ತ, +“ಬೇಡ. ನೀವು ನನ್ನನ್ನು ಇಲ್ಲಿ ಅನ್ಯಾಯವಾಗಿ ಸೆರೆ ಇಟ್ಟಿದ್ದೀರಿ. ಇದನ್ನು ಪ್ರತಿಭಟಿಸಿ ನಾನು ಉಪವಾಸ ಮಾಡುತ್ತಿದ್ದೇನೆ” ಎಂದ. ಇವರು ಮನುಷ್ಯರೆಂಬ ಆಸೆ ಹುಟ್ಟಿ ಪ್ರತಿಭಟನೆ ಮತ್ತೆ ಅವನಲ್ಲಿ ಅಂಕುರಿಸಿತು. +“ನೀವು ನಿರಪರಾಧಿ ಎಂದು ಸಾಬೀತಾದರೆ ಒಂದೇ ಒಂದು ನಿಮಿಷ ನಿಮ್ಮನ್ನಿಲ್ಲಿ ನಾವು ಇಟ್ಟುಕೊಳ್ಳುವುದಿಲ್ಲ. ದಯಮಾಡಿ ನಿಮಗೆ ಪರಿಚಯದವನಾಗಿದ್ದ ಅಣ್ಣಾಜಿ ಅಸ್ತ್ರಗಳನ್ನೆಲ್ಲ ಎಲ್ಲಿ ಬಚ್ಚಿಟ್ಟಿದ್ದಾನೆ ಹೇಳಿ.” +“ನನಗದೇನೂ ಗೊತ್ತಿಲ್ಲ.” +“ನೀವು ಮುಗ್ಧರಂತೆ ಕಾಣುತ್ತೀರಿ. ನಿಮ್ಮಂಥ ಆದರ್ಶವಾದಿಗಳನ್ನೆ ಹಿಡಿದು ಅಣ್ಣಾಜಿ ದೇಶಕ್ಕೆ ಘಾತಕವಾದ ಕೆಲಸ ಮಾಡುವುದು. ಈಗ ನೀವು ನಿಜ ಹೇಳಿದರೆ ನಾವು ನಿಮ್ಮನ್ನು ಬಿಟ್ಟುಬಿಡುತ್ತೇವೆ. ನೀವು ಓದಿ ಬೆಳೆದು ಮುಂದೆ ಬರಬೇಕೆಂಬುದೇ ನಮ್ಮ ಆಸೆ. ಈಗ ನಾನು ನೋಡಿ ಪೊಲಿಟಿಕಲ್ ಸೈನ್ಸ್ ಎಮ್.ಎ ಮುಗಿಸಿ ಈ ಕೆಲಸಕ್ಕೆ ಬಂದದ್ದು. ನನ್ನ ಎಡಕ್ಕಿರುವ ಈ ಜಂಟಲ್‌ಮನ್ ಕನ್ನಡಿಗರು. ವಾರಂಗಲ್ ಕನ್ನಡಿಗರಿಗೆ ಹಿಸ್ಟಾರಿಕಲಿ ಇಂಪಾರ್ಟೆಂಟ್ -ಗೊತ್ತಿದೆಯೆ -ರಾಮಪ್ಪ ಟೆಂಪಲ್ ವಿಷಯ? ಈ ಇನ್ನೊಬ್ಬರು ಫ಼ೇಮಸ್ ಕ್ರಿಕೆಟೀಯರ್ ಅಫ಼್ ದಿಸ್ ರೀಜನ್.” +ಈ ಮಾತುಗಳು ಕೃಷ್ಣಪ್ಪನಿಗೆ ಅತ್ಯಂತ ಹಿತಕರವಾಗಿದ್ದವು. ಅವನು ರಾಮಪ್ಪ ದೇವಸ್ಥಾನದ ವಿಷಯವನ್ನು ಮಧ್ಯೆ ನುಗಿಸಿದ ರೀತಿಯಂತೂ ನಾನೂ ನಿನ್ನಂತೆ ಮನುಷ್ಯನೆಂದು ಗುಪ್ತ ಸನ್ನೆಯಲ್ಲಿ ಹೇಳಿದಂತಿತ್ತು. ಕೃಷ್ಣಪ್ಪ ಹೇಳಿದ: +“ಅಣ್ಣಾಜಿಯನ್ನು ನಾನು ಪ್ರೀತಿಸುತ್ತಿದ್ದೆ. ಅವನನ್ನು ನಿಮ್ಮವರು ಕೊಂದಿದ್ದಾರೆ. ಅಣ್ಣಾಜಿ ಈ ನಾಗರೀಕತೆಯನ್ನು ಇನ್ನಷ್ಟು ಉಜ್ವಲಗೊಳಿಸುವ ಉದ್ದೇಶ ಇದ್ದವ……..” ಆಡಿದ ಮೇಲೆ ಇವರ ಸೌಜನ್ಯಕ್ಕೆ ಮರುಳಾಗಿ ತಾನು ಯಾಕೆ ಅಂತರಂಗದ ಮಾತನ್ನಾಡಿದೆನೆಂದು ಅವನಿಗೆ ಕಸಿವಿಸಿಯಾಯ್ತು. +“ಅದು ನಿಮ್ಮ ಅಭಿಪ್ರಾಯವಾಯ್ತು ಮಿಸ್ಟರ್ ಗೌಡ” ಕ್ರಿಕೆಟಿಯರ್ ಹೇಳಿದ. +ಕುಂಕುಮ ಹಚ್ಚಿದವನು ಆಕಳಿಸಿತ್ತ ಇದೆಲ್ಲ ಅಂಥ ಮಹತ್ವದ ವಿಷಯವಲ್ಲ ರೂಟೀನ್ ಅನ್ನುವಂತೆ ಆಪ್ತವಾಗಿ ಕನ್ನಡದಲ್ಲಿ ಹೇಳಿದ: +“ನಾನು ಗುಲ್ಬರ್ಗ ಕಡೆಯವನು. ನೀವು? ಶಿಮೊಗ್ಗ ಕಡೆಯವರ? ಈ ನನ್ನ ಕಲೀಗರು ತುಂಬ ಒಳ್ಳೆಯವರು. ಅಣ್ಣಾಜಿಯ ಕಾಂಟ್ಯಾಕ್ಟ್ಸ್ ಯಾರ್ಯಾರು ಇದ್ದರು, ಯಾರಿಗವರು ಕಾಗದ ಗೀಗದ ಬರೀತಿದ್ರು ಹೇಳಿಬಿಡಿ -ನಿಮ್ಮನ್ನ ಬಿಟ್ಟುಬಿಡ್ತಾರ್ರೀ.” +ಅವನು ರಾಗವಾಗಿ ಕೊನೆಮಾಡಿದ್ದ. ಕೃಷ್ಣಪ್ಪ ಮಾತಾಡದೆ ಸುಮ್ಮನಿರುವುದನ್ನು ಕಂಡು ಮಧ್ಯದವನು ಅಂದ -ತನ್ನ ಸುಶಿಕ್ಷಿತ ಇಂಗ್ಲಿಷಲ್ಲಿ: +“ಯಂಗ್ ಮ್ಯಾನ್ ನಿಮ್ಮ ಹಿತಕ್ಕಾಗಿಯೇ ಹೇಳ್ತಿರೋದು. ಅವನು ಯಾರ್ಯಾರಿಗೆ ಕಾಗದ ಬರೀತ ಇದ್ದ ತಿಳಿಸಿಬಿಡಿ. ಅವನಿಗೆ ವಿಮೆನ್ ಕಾಂಟ್ಯಾಕ್ಟ್ಸ್ ಇದ್ದರೂಂತ ನಮಗೆ ಗೊತ್ತು……” +“ಇಲ್ಲ -ನನಗೆ ಗೊತ್ತಿಲ್ಲ.” +“ಸುಮ್ಮನೇ ನೀವು ನಿಮ್ಮ ಸಫ಼ರಿಂಗನ್ನ ಪ್ರೋಲಾಂಗ್ ಮಾಡಿಕೋತೀರಿ. ಇಲ್ಲಿ ಬಾಯಿ ಬಿಡದೇ ಬಚಾವಾಗಿ ಹೋದವರು ಇಲ್ಲ. ನಮ್ಮ ಸ್ವಾರ್ಥಕ್ಕಾಗಿಯಲ್ಲ ನಾವು ನಿಮ್ಮನ್ನು ಕೇಳ್ತಿರೋದು. ಈ ದೇಶದ ಸುಭದ್ರತೇನ್ನ ಕಾಯೋ ಕೆಲಸ. ನೆಹರು ಏನು ಹೇಳಿದಾರೆ?” +ಮಧ್ಯದವನು ಭಾಷಣದ ಘನವಾದ ಧಾಟಿಯಲ್ಲಿ ಮಾತಾಡುವುದು ಕೇಳಿ ಕೃಷ್ಣಪ್ಪನಿಗೆ ಭರವಸೆ ಇನ್ನಷ್ಟು ಬೆಳೆಯಿತು. ಅವನನ್ನು ಕೋಪದಲ್ಲಿ ನೋಡುತ್ತ ವ್ಯಂಗ್ಯವಾಗಿ ಹೇಳಿದ: +“ನಿಮ್ಮ ಪೋಲೀಸರು ನಿನ್ನೆ ರಾತ್ರೆ ನನ್ನ ರೂಮಿನ ಹೊರಗೆ ಏನು ಮಾಡಿದರು ಗೊತ್ತ? ಗೊತ್ತ?” +ಕೃಷ್ಣಪ್ಪನ ಗಂಟಲು ಬಿಗಿದು ಬಂತು. ಎದುರಿಗಿದ್ದ ಮೂವರಿಗೆ ಮನುಷ್ಯಭಾವನೆಗಳಿರಬಹುದು ಎಂಬ ನಂಬಿಕೆ ಹುಟ್ಟಿಸುವಂತೆ ಇತ್ತು -ಅವರು ಮುಜುಗರದಿಂದ ಮುಖ ಚಿಕ್ಕದಾಗಿ ಮಾಡಿಕೊಂಡ ರೀತಿ. ಇದರಿಂದ ಆವೇಶಿತನಾಗಿ ಕೃಷ್ಣಪ್ಪ ಬಿಕ್ಕುತ್ತ ಹೇಳಿದ: +“ಒಂದು ಹೆಂಗಸನ್ನ, ಬಡಪಾಯಿಯನ್ನ ನಿಮ್ಮ ಈ ರಾಕ್ಷಸರು ರಾತ್ರೆ ಎಳೆದು ತಂದು….” +ಕೃಷ್ಣಪ್ಪ ಮುಂದೆ ಮಾತಾಡಲಾರದೆ ತಲೆ ತಗ್ಗಿಸಿದ. ಮಧ್ಯದವ ಹುಳಿಯಾಗಿ ನಕ್ಕು ಹೇಳಿದ: +“ಡೋಂಟ್ ಗೆಟ್ ಟೂ ಎಕ್ಸೈಟೆಡ್ ಯಂಗ್ ಮ್ಯಾನ್, ಬ್ರೂಟ್ಸ್ ಎಲ್ಲಾ ಕಡೆ ಇರ್ತಾರೆ. ಬ್ರೂಟ್ ಜನರನ್ನ ಹದ್ದಿನಲ್ಲಿಡೋಕೆ ನಮ್ಮ ಜನವೂ ಬ್ರೂಟ್ ಆಗಬೇಕಾಗುತ್ತೆ. ಈಗ ನೀವು ಹೇಳ್ತೀರೋ ಇಲ್ವೊ? ಛಾನ್ಸ್ ಕಳ್ಕೋತಿದೀರಿ. ಉಳಿದವರು ನಮ್ಮ ಹಾಗಲ್ಲ. ಬಾಯಿ ಬಿಡ್ಸೋಕೆ ಥರ್ಡ್‌ಡಿಗ್ರಿಗಳನ್ನೆಲ್ಲ ಬಳಸ್ತಾರೆ. ನಾವೀಗ ಒಂದು ಕಾನ್ಫರೆನ್ಸಿಗೆ ಹೋಗಬೇಕು. ಆಲ್‌ರೈಟ್” ಎಂದು ಕಣ್ಸನ್ನೆ ಮಾಡಿದ. ಪೇದೆ ಬಂದು ಕೃಷ್ಣಪ್ಪನನ್ನು ರೂಮಿನ ಹೊರಗೆ ಕರೆದುಕೊಂಡು ಬಂದು ಮತ್ತೆ ಕಣ್ಣಿಗೆ ಬಟ್ಟೆ ಕಟ್ಟಿದ. +ಹತ್ತು ಹನ್ನೆರಡು ಅಡಿ ಎತ್ತರದ ಗೋಡೆಯಿಂದ ಆವೃತವಾದ ಒಂದು ಅಂಗಳದಲ್ಲಿ ಕೃಷ್ಣಪ್ಪನನ್ನು ನಿಲ್ಲಿಸಿ ಕಣ್ಣಿನ ಬಟ್ಟೆ ಬಿಚ್ಚಲಾಯಿತು. ಎದುರಿಗೆ ದಪ್ಪ ಮುಖದವನಿದ್ದ. ಅವನು ತನಗಾಗಿ ಕಾಯುತ್ತಿದ್ದಂತೆ ಇತ್ತು. +“ಅದೇನು ನಿನ್ನೆ ರಾತ್ರೆ ಬಾಗಿಲು ಬಡೀತ ಇದ್ದಿ?” +ಕೃಷ್ಣಪ್ಪ ಸುಮ್ಮನಿದ್ದ. +“ನಿನ್ನ ಹತ್ತಿರ ಬಾಯಿ ಬಿಡಿಸೋದು ಹೇಗೆ ನನಗೆ ಗೊತ್ತು -ಏರೋಪ್ಲೇನ್ ಗೊತ್ತ? ಕಟ್ಟಿರೋ ಇವನ್ನ” ಎಂದು ಸಿಗರೇಟ್ ಹಚ್ಚಿ ಒಳಗೆ ಹೋದ. +ವರಾಂಡದಲ್ಲಿ ನಿಲ್ಲಿಸಿದ ಎರಡು ಗೂಟಗಳ ಮಧ್ಯೆ ಬಾವಿಗಿರುವಂತೆ ಒಂದು ದುಂಡನೆಯ ಕಬ್ಬಿಣದ ರಾಟೆಯಿತ್ತು. ಅದರಿಂದ ಇಳಿ ಬಿಟ್ಟ ಹಗ್ಗದ ಒಂದು ತುದಿಯಿಂದ ಕೃಷ್ಣಪ್ಪನ ಕೈಗಳನ್ನು ಬೆನ್ನಿನ ಹಿಂದೆ ತಂದು ಬಿಗಿಯಲಾಯಿತು. ಇನ್ನೊಂದು ತುದಿಯನ್ನು ಕೀರಲು ಧ್ವನಿಯ ಪೋಲೀಸ್ ಪೇದೆ ಹಿಡಿದುಕೊಂಡು, “ಸಾರ್” ಎಂದು ಕೂಗಿದ. +ದಪ್ಪ ಮೋರೆಯವ ಸಿಗರೇಟ್ ಸೇದುತ್ತ ಹೊರಗೆ ಬಂದ. ದಫ಼ೇದಾರ ಹಿಡಿದಿದ್ದ ಲೆಜರ್ ಗೆ ಸಹಿ ಹಾಕುತ್ತ – “ಎಸ್ -ಗೋ ಆನ್” ಎಂದ. ಕೀರಲು ಧ್ವನಿಯವ ಹಗ್ಗವನ್ನೆಳೆಯತೊಡಗಿದ. ಕೃಷ್ಣಪ್ಪನ ಹಿಂದಕ್ಕೆ ಕಟ್ಟಿದ ಕೈಗಳನ್ನು ಹಗ್ಗ ಮೇಲಕ್ಕೆ ಜಗ್ಗುತ್ತಿದ್ದಂತೆಯೇ ನಿಲ್ಲಿಸುವ ಸನ್ನೆ ಮಾಡಿ ದಪ್ಪ ಮುಖದವ – +“ಈಗಲೇ ಇಷ್ಟು ನೋವಾಗುತ್ತೆ. ಇನ್ನೂ ಎಳೆದರೆ ನಿನ್ನ ಕಣ್ಣುಗಳು ಮಿಂಚು ಕಾಣುತ್ತವೆ” ಎಂದು ನಗುತ್ತ “ಹೇಳಿ ಬಿಡು -ಪಾಪ ನೀನು ಊಟಾನೂ ಮಾಡಿಲ್ಲ” ಎಂದ. +ಕೃಷ್ಣಪ್ಪ ಮಾತಾಡಲಿಲ್ಲ. +ಅಧಿಕಾರಿಗೆ ಥಟ್ಟನೇ ಕಡುಕೋಪ ಬಂದಂತೆ ಕಂಡಿತು. “ಎಳಿ” ಎಂದ ಉರ್ದುವಿನಲ್ಲಿ. ಕೈಗಳನ್ನು ಮೇಲಕ್ಕೆ ಮೇಲಕ್ಕೆ ಎಳೆದಂತೆ ಅವು ಮುರಿದು ಹೋಗುತ್ತಾವೆನ್ನಿಸಿತು. ಕಣ್ಣುಗಳು ಕತ್ತಲೆ ಕಟ್ಟಿ ಬಂದವು. ತಾನು ಕುಸಿಯುತ್ತಿದ್ದಂತೆ ಕೃಷ್ಣಪ್ಪನಿಗೆ ಅನ್ನಿಸಿತು. +ಎಳೆಯುತ್ತಿದ್ದ ಹಗ್ಗ ಸಡಿಲವಾಯಿತು. ಹಾಯೆನಿಸಿತು. ಕೃಷ್ಣಪ್ಪ ಕಣ್ಣು ಮುಚ್ಚಿ ಮುಂದೆ ಮತ್ತೆ ಎಳೆಯುವುದನ್ನು ನಿರೀಕ್ಷಿಸುತ್ತಿದ್ದಂತೆ ಭಯ ಮರುಕಳಿಸಿತು. +ನಿರೀಕ್ಷೆಯಲ್ಲಿ ಅತ್ಯಂತ ಅಸಹನೀಯವೆನ್ನಿಸುವ ನೋವು ವರ್ತಮಾನದಲ್ಲಿ ಅನುಭವಿಸುವಾಗ ಅಷ್ಟು ಅಸಹನೀಯವಲ್ಲವೆನ್ನುವುದು ನಿಧಾನವಾಗಿ ಕೃಷ್ಣಪ್ಪನಿಗೆ ಮನದಟ್ಟಾಗುತ್ತ ಹೋಯಿತು. ಮುಂದೆ ಬರುವ ನೋವುಗಳನ್ನು ನಿರೀಕ್ಷಿಸದೆ ಸದ್ಯದಲ್ಲೆ ಮನಸ್ಸನ್ನು ತೊಡಗಿಸಿಟ್ಟುಕೊಳ್ಳುವುದು ಹೇಗೆ? ಮನಸ್ಸನ್ನು ತನ್ನ ಬಾಲ್ಯದ ದಿನಗಳಲ್ಲಿ ಹರಿಯಲು ಬಿಟ್ಟ. ತನಗೆ ಪ್ರಿಯವಾಗಿದ್ದ ಕೆಲವು ಮುಹೂರ್ತಗಳಲ್ಲಿ ಅದನ್ನು ನಿಲ್ಲಿಸಲು ನೋಡಿದ…… +ದನ ಕರುಗಳು ಕೊರಳಿನ ಗಂಟೆ ಶಬ್ದ ಮಾಡುತ್ತ ಎದುರಿಗೆ ಮೇಯುತ್ತಿವೆ. ತಾನು ಒಂದು ದೊಡ್ಡ ಹಲಸಿನ ಮರದ ಬುಡದಲ್ಲಿ ಕೂತಿದ್ದೇನೆ -ಕಂಬಳಿಯ ಮೇಲೆ. ಪೊದೆಯಿಂದ ಒಂದು ಕೆಂಬೂತ ಪಕ್ಷಿ ಹೊರಬಂದು ಕುಪ್ಪಳಿಸಿ ಕಣ್ಮರೆಯಾಗುತ್ತದೆ. ಇದು ಕಂಡರೆ ಸಿಹಿ ತಿನ್ನುತ್ತೇವೆಂದು ಅರ್ಥ. ಕೊಳಲನ್ನೆತ್ತಿಕೊಳ್ಳುತ್ತಾನೆ. ಹಸಿವಾಗುತ್ತಿರುವ ಅನುಭವವಾಗುತ್ತದೆ. ಕೈಯಲ್ಲಿ ಕತ್ತಿ ಹಿಡಿದು ಗೊರಬು ಹಾಕಿಕೊಂಡ ತನ್ನ ತಾಯಿ ದೂರದಿಂದ ಬರುವುದು ಕಾಣುತ್ತದೆ. ಅಮ್ಮನನ್ನು ನೋಡುತ್ತಿದ್ದಂತೆ ಅವಳಿಗೆ ತನ್ನ ಹಸಿವನ್ನು ಹೇಳಿಕೊಳ್ಳಬೇಕೆಂದು ಆತುರವಾಗುತ್ತದೆ. +ಎದುರು ನಿಂತ ಅಮ್ಮ ಮುಗುಳ್ನಗುತ್ತ “ಅದೆಂಥ ಹಸಿವೋ -ಬೆಳಗಿನ ಝಾವ ಗಂಜಿ ಊಟ ಮಾಡಿದ್ದಿಲ್ಲವ?” ಎಂದು ಸುಳ್ಳು ಕೋಪದಿಂದ ಬೈಯುತ್ತಾಳೆ. ಕೃಷ್ಣಪ್ಪ ಗೊಣಗುತ್ತಾನೆ. “ಅದೆಂಥ ಗಂಜಿ ಅದರಲ್ಲಿ ಮಣ್ಣಿತ್ತು” ತಾಯಿ ಎದುರಲ್ಲದೆ ಇನ್ನು ಯಾರ ಹತ್ತಿರ ಮಾವಯ್ಯನ ಹೆಂಡತಿ ಅತ್ತೆಯನ್ನು ಬಯ್ಯಲು ಸಾಧ್ಯ? ಅವಳು ತನಗೊಂದು, ಸ್ವಂತ ಮಕ್ಕಳಿಗೆ ಇನ್ನೊಂದು ಮಾಡುತ್ತಿದ್ದಳು. +ತಾಯಿ ಕೊಟ್ಟಿಗೆಗೆ ಸೊಪ್ಪು ತರಲೆಂದು ಹೊರಟವಳು ಮಗನ ಹತ್ತಿರ ಆದಷ್ಟು ಕಾಲ ನಿಂತಿರಬೇಕೆಂಬ ಆಸೆಯಿಂದ ಬೇಕೆಂದೇ ಏನೇನೋ ಹೇಳುತ್ತ, ಮಗನ ಹಸಿವನ್ನು ಕಿಚಾಯಿಸುತ್ತ ನಿಲ್ಲುತ್ತಾಳೆ. ಕೃಷ್ಣಪ್ಪನೂ ಕೋಪದಲ್ಲಿ ಗೊಣಗುತ್ತಿದ್ದಂತೆ ತಾಯಿ ತನ್ನ ಮಡಿಲನ್ನು ಬಿಚ್ಚುತ್ತಾಳೆ. ಬಾಳೆಯ ಕೊಟ್ಟೆಯಲ್ಲಿ ಕಟ್ಟಿದ ಹಲಸಿನ ಹಣ್ಣಿನ ಕಡುಬಿನ ಚೂರೊಂದನ್ನು ತೆಗೆದು ಇಕೊ ಎಂದು ಕೊಡುತ್ತಾಳೆ. ಕಡುಬಿಗೆ ಧಾರಾಳವಾಗಿ ಎಮ್ಮೆಯ ಕಾಯಿಸಿದ ತುಪ್ಪ ಹಚ್ಚಿದೆ. ನಿನ್ನೆ ಮಾಡಿದ್ದ ಕಡುಬು. ಇವತ್ತು ಅದು ಇನ್ನೆಷ್ಟು ರುಚಿ. ಅವಳ ಪಾಲಿನಲ್ಲಿ ಒಂದಷ್ಟನ್ನು ಬಚ್ಚಿಟ್ಟು ತಾಯಿ ಏಕಾಂತದಲ್ಲಿ ಮಗನಿಗೆ ಅದನ್ನು ಮಾರನೇ ದಿನ ತಂದುಕೊಡುತ್ತಿದ್ದಾಳೆ. ಅತ್ತೆಯ ಕಣ್ಣಿಗೆ ಬೀಳದಂತೆ ಬಚ್ಚಿಟ್ಟು ತಂದ ಕಡುಬನ್ನು ಇಸಕೊಳ್ಳುವಾಗ ತನಗಾದ ಸಂತೋಷವನ್ನು ಕೃಷ್ಣಪ್ಪ ತೋರಿಸಿಕೊಳ್ಳುವುದಿಲ್ಲ. ಪಕ್ಕದಲ್ಲಿಟ್ಟು, “ಹೂ, ಈ ಕಡುಬು ಸಮಾ ಬೆಂದಿಲ್ಲ” ಅನ್ನುತ್ತಾನೆ. ತಾಯಿಗೆ ಮಗನ ಬಡಿವಾರ ತಿಳಿಯುತ್ತದೆ. “ಧಿಮಾಕು ಮಾಡಬೇಡ ತಿನ್ನು” ಎಂದು ಮಗನ ಕಣ್ಣುಗಳು ಕಡುಬು ತಿನ್ನುವಾಗ ಹೊಳೆಯುವುದನ್ನು ನೋಡುತ್ತ ಅಲ್ಲಿ ನಿಲ್ಲುತ್ತಾಳೆ. +ಕಡುಬನ್ನು ಮುಕ್ಕುತ್ತಲೇ “ಹೋಯ್ ಹೋಯ್” ಎಂದು ಕೂಗುತ್ತ ಕೃಷ್ಣಪ್ಪ ಆ ಹಾಳು ಜೋಯಿಸರ ಮನೆಯ ದನದ ಬೆನ್ನಿನ ಹಿಂದೆ ಓಡುತ್ತಾನೆ. ತುಡುಗು ದನ, ಕಂಡವರ ಹೊಲ ನುಗ್ಗುತ್ತದೆ. +ಜೋಯಿಸರು ಪ್ರೈಮರಿ ಸ್ಕೂಲಿನಲ್ಲಿ ಉಪಾಧ್ಯಾಯರು. ಕೃಷ್ಣಪ್ಪ ದನಕಾಯಲು ಶುರುಮಾಡುವುದಕ್ಕಿಂತ ಮುಂಚೆ ಹತ್ತೊ ಹನ್ನೊಂದೊ ವರ್ಷಗಳಾಗುವ ತನಕ ಅವರ ಸ್ಕೂಲಿಗೆ ಹೋಗುತ್ತಿದ್ದ. ಮಕ್ಕಳಿಲ್ಲದ ಜೋಯಿಸರ ಹೆಂಡತಿ ರುಕ್ಮಿಣಿಯಮ್ಮನಿಗೆ ಕೃಷ್ಣಪ್ಪನೆಂದರೆ ಅಕ್ಕರೆ. ಏನೊ ನೆವ ಹೂಡಿ ಸುಮ್ಮನೆ ಅವನನ್ನು ನಿಲ್ಲಿಸಿಕೊಂಡು ಅದೂ ಇದೂ ಮಾತಾಡುತ್ತ ಕಣ್ತುಂಬ ನೋಡುತ್ತ ನಿಲ್ಲುವರು. ಚಕ್ಕುಲಿ ಕೋಡುಬಳೆ ಕೊಡುವರು. ಕೃಷ್ಣಪ್ಪನ ತಾಯಿ ಅವರ ಹತ್ತಿರ ತನ್ನೆಲ್ಲ ಸುಖ ದುಃಖ ತೋಡಿಕೊಳ್ಳುವುದು -ಎಲೆಯಡಿಕೆ ಜಗಿಯುತ್ತ. ಸಾಯಂಕಾಲ ಜೋಯಿಸರು ರಾಗವಾಗಿ ಭಾರತ ಓದುವುದನ್ನು ಕೇಳಿಸಿಕೊಳ್ಳಲು ಯಾರಿಲ್ಲದಿದ್ದರೂ ಕೃಷ್ಣಪ್ಪ ಚಾವಡಿಯಲ್ಲಿ ಹಾಜರು. “ನಿನ್ನ ಮಗನಿಗೆ ರಾಜಕಳೆಯಿದೆ” ಎನ್ನುವರು ಅವರು ಕೃಷ್ಣಪ್ಪನ ತಾಯಿಗೆ. ಕರ್ಣನ ವೃತ್ತಾಂತ ಕೇಳಿಸಿಕೊಳ್ಳುತ್ತ ಕೃಷ್ಣಪ್ಪನ ಕಣ್ಣುಗಳು ಒದ್ದೆಯಾಗುವುದನ್ನು ಜೋಯಿಸರು ಗಮನಿಸುವರು. “ಏಕಲವ್ಯನ ಕಥೆ ಹೇಳಲೇನೊ” ಎಂದು ಕೇಳುವರು. +ರುಕ್ಮಿಣಿಯಮ್ಮನವರು ಅಸಾಧ್ಯ ಮಡಿ. ಅವನ ಒಡ್ಡಿದ ಕೈಮೇಲೆ ಅಷ್ಟೆತ್ತರದಿಂದ ಅವರು ಕೋಡುಬಳೆ ಹಾಕುವುದು. ಬೇಲಿಯ ಮೇಲೆ ಸೀರೆ ಒಣಗಿ ಹಾಕಿದ್ದರೆ, ದೂರದಿಂದಲೇ ಕೃಷ್ಣಪ್ಪನನ್ನು ನೋಡಿ “ಏ ಕಿಟ್ಟ ಮಡಿ ಹರವಿದ್ದೇನೋ, ತೆಗೀತೀನಿ -ಬೇಲಿ ಮುಟ್ಟಬೇಡ”ವೆಂದು ಕೂಗುತ್ತ ಬಂದು ಸೀರೆಯನ್ನು ಎತ್ತಿಕೊಳ್ಳುವರು. ಒಮ್ಮೆ ಮುಟ್ಟಿದರೇನಾಗುತ್ತದೆಂದು ಕೃಷ್ಣಪ್ಪ ಅದನ್ನು ಮುಟ್ಟಿಕೊಂಡೆ ಒಳಬಂದುದನ್ನು ಕಂಡ ರುಕ್ಮಿಣಿಯಮ್ಮ ಅವನನ್ನು ಹೊಡೆಯಲೆಂದು ಓಡಿಬಂದು, ಮುಟ್ಟಿದರೆ ತಾನು ಸಂಪೂರ್ಣ ಮೈಲಿಗೆಯಾಗಿಬಿಡುತ್ತೇನೆಂದು ಅರಿತು, “ಫಟಿಂಗ” ಎಂದು ಎತ್ತಿದ ಕೈಯನ್ನು ಹಾಗೇ ಎತ್ತಿ ನಿಂತಿದ್ದನ್ನು ನೋಡಿ ಕೃಷ್ಣಪ್ಪ ನಗಲು ಪ್ರಾರಂಭಿಸಿದ್ದ. ರುಕ್ಮಿಣಿಯಮ್ಮ ತನ್ನ ನಗುವನ್ನು ತಡೆದುಕೊಂಡು ಹುಸಿ ಮುನಿಸಿನಿಂದ “ಸಮಾ ಮಾಡಿಸ್ತೀನಿ ಇರು ನಿನ್ನ ಅವ್ವನಿಗೆ ಹೇಳಿ, ಮನೆಗೆ ಹೋಗುವಾಗ ಬೆನ್ನಿಗೆ ಹಾಳೆ ಕಟ್ಕೋಬೇಕಾಗುತ್ತೆ” ಎಂದು ಕೃಷ್ಣಪ್ಪನ ಕೈಯಲ್ಲಿ ಆ ಸೀರೆ ಎತ್ತಿಸಿ ಬಾವಿಕಟ್ಟೆ ಬುಡದಲ್ಲಿರಿಸಿ, ನೀರು ಸೇದಿ ಹೊಯ್ದು, ಹಿಂಡಿ ಮತ್ತೆ ಹರವಿದ್ದರು……… +ಕೃಷ್ಣಪ್ಪ ಅಯ್ಯೋ ಎಂದು ಕೂಗಿ, ಇನ್ನೂ ಕೂಗಬೇಕೆನ್ನಿಸಿದ್ದನ್ನು ತಡೆದುಕೊಂದ. ಕೈಗಳನ್ನು ಮತ್ತೆ ಹಗ್ಗ ಎಳೆದು ಮುರಿಯತೊಡಗಿತ್ತು. ಈ ನೋವು ಎಷ್ಟೋ ಕಾಲ ಮುಂದುವರಿಯುತ್ತಲೇ ಇರುತ್ತದೆ ಅನ್ನಿಸುತ್ತಿದ್ದಾಗ ಸರಕ್ಕನೆ ಹಗ್ಗ ಸಡಿಲವಾಯಿತು. ಕಣ್ಣುಕತ್ತಲೆ ಕಟ್ಟಿಬಂದು ಕುಸಿದ. ಕೀರಲು ಧ್ವನಿಯ ಪೇದೆ ಬಾಯಿ ತೆರೆಸಿ ನೀರು ಹೊಯ್ಯುತ್ತಿದ್ದ. +ಅವನು ಚೇತರಿಸಿಕೊಳ್ಳಲು ತೊಡಗಿದಾಗ ಸಿನಿಮಾ ಸಂಗೀತದ ಅಲೆಯೊಂದು ಕಿವಿಯ ಮೇಲೆ ಬಿದ್ದು ಕೃಷ್ಣಪ್ಪ ಚಕಿತನಾದ. ಕಾಂಪೌಂಡು ಗೋಡೆಯಾಚೆಯೊಂದು ಹೋಟೇಲಿರಬೇಕು. ಅಲ್ಲಿಂದ ಈ ಸಿನಿಮಾ ಹಾಡು ಅಬ್ಬರಿಸಿ ಕೇಳಿಸುತ್ತಿದೆ. ಆವಾರಾ ಹೂ, ಹೂ….ಆವಾರಾ ಹೂ…ಎತ್ತಿನ ಬಂಡಿ ಚಲಿಸುವ ಶಬ್ದ. ಚಾವಟಿಯ ಏಟಿನ ಶಬ್ದ. ಹೊರಗೊಂದು ಜಗತ್ತು ಯಥಾಪ್ರಕಾರ ತನ್ನ ಚಲನೆಯಲ್ಲಿ ಮಗ್ನವಾಗಿದೆ. ಹೋಟೆಲಲ್ಲಿ ಕೂತು ಆರಾಮಾಗಿ ಕಾಫ಼ಿಗೆ ಆರ್ಡರ್ ಮಾಡಬಹುದು ಅಲ್ಲಿ. ಅಂಗಡಿಯಿಂದ ಬರ್ಕ್ಲೀ ಸಿಗರೇಟು ತರಿಸಿ ಹಚ್ಚಿ ಹೊಗೆ ಬಿಡಬಹುದು. ಎತ್ತಿನ ಬಂಡಿಯ ಶಬ್ದ ದೂರವಾಗುತ್ತಿದೆ. ಸಿಲೋನ್‌ನಿಂದ ಬರುವ ಹಾಡು ನಿಂತು ಆಸ್ಪ್ರೋ ಜಾಹೀರಾತು ಕೇಳುತ್ತಿದೆ. +ದಪ್ಪ ಮೋರೆಯವನು ಕಾಲುಗಳನ್ನು ಅಗಲಿಸಿ ನಿಂತು ಗಾಜಿನ ಲೋಟದಲ್ಲಿ ಕಾಫ಼ಿ ಕುಡಿಯುತ್ತಿದ್ದ. ಅದು ಮುಗಿಯುವುದನ್ನೇ ನೋಡುತ್ತಿದ್ದ ಪೇದೆಯೊಬ್ಬ ಕೈಗಳನ್ನು ಚಾಚಿ ತಯಾರಾಗಿದ್ದ. ಮುಗಿದ ಬಟ್ಟಲನ್ನು ಅನ್ಯಮನಸ್ಕನಾಗಿ ದಪ್ಪಮೋರೆಯವ ಎಡಗೈಯಲ್ಲಿ ಹಿಡಿದಾಗ ಬಲಭಾಗದಲ್ಲಿ ನಿಂತ ಪೇದೆ ಎಡಗಡೆ ಹೋಗಿ ಅದನ್ನು ಇಸಕೊಂಡು ಒಳಗೆ ಹೋದ. ತನ್ನ ಜೀವನವನ್ನು ಆಳುವ ಸರ್ವಶಕ್ತನಂತೆ ನಿಂತ ಅಧಿಕಾರಿಯನ್ನು ಕುಸಿದು ಕೂತ ಕೃಷ್ಣಪ್ಪ ಆಶ್ಚರ್ಯಪಡುತ್ತ ನೋಡಿದ. ಇವನಿಗೆ ತಾಯಿಯಿದ್ದಾಳ? ಇವನೂ ಒಮ್ಮೆ ಹುಡುಗನಾಗಿದ್ದನ? ಅನ್ಯಮನಸ್ಕನಾಗಿ ನಿಂತಿದ್ದ ಅಧಿಕಾರಿ ಸೊಂಟವನ್ನು ತುಸು ತಗ್ಗಿಸುತ್ತ ಹೂಸು ಬಿಟ್ಟ. ಉರ್ದುವಿನಲ್ಲಿ ಏನೋ ಹೇಳಿ ಕೃಷ್ಣಪ್ಪನ ಕಡೆ ನೋಡದೆ ಹೊರಟುಹೋದ. ಕೃಷ್ಣಪ್ಪನನ್ನು ಪೇದೆಯೊಬ್ಬ ಎಬ್ಬಿಸಿಕೊಂಡು ಹೋಗಿ ಎರಡು ಕುರ್ಚಿಗಳಿದ್ದ ಬರಿದಾದ ಒಂದು ರೂಮಿನಲ್ಲಿ ಒಂದು ಕುರ್ಚಿ ಮೇಲೆ ಕೂರಿಸಿದ. ಅಲ್ಯೂಮಿನಿಯಂ ತಟ್ಟೆಯಲ್ಲಿ ಉಪ್ಪಿಟ್ಟನ್ನೂ ಒಂದು ಲೋಟ ಕಾಫ಼ಿಯನ್ನೂ ಎದುರಿಗಿಟ್ಟು ಕಾಯುತ್ತ ನಿಂತ. +ಕೃಷ್ಣಪ್ಪನಿಗೆ ಅದನ್ನು ಕಂಡು ಹಸಿವು ಉಲ್ಬಣವಾಯಿತು. ಆದರೆ ತಾನು ಉಪವಾಸ ಮಾಡುತ್ತಿದ್ದೇನೆಂದು ಸುಸಂಸ್ಕೃತರಂತೆ ಕಂಡ ಅಧಿಕಾರಿಗಳ ಎದುರು ಹೇಳಿದ್ದರಿಂದ ಅದನ್ನು ತಿನ್ನುವಂತಿರಲಿಲ್ಲ. ಆಸೆಯನ್ನು ತಡೆದುಕೊಂಡು, ಅದು ಸಾಧ್ಯವಾದ್ದಕ್ಕೆ ಸಂತೋಷಪಡುತ್ತ ಕುರ್ಚಿಯ ಮೇಲೆ ಒರಗಿ ಕಣ್ಣುಮುಚ್ಚಿದ. ಇನ್ನೇನು ಜೊಂಪು ಹತ್ತಬೇಕು ಆಗ ಪೇದೆ ದಢದಢನೆ ತನ್ನ ಬೂಟ್ಸಿಗೆ ಹಾಕಿದ ಲಾಲದಿಂದ ಸಿಮೆಂಟ್ ನೆಲವನ್ನು ಕುಟ್ಟಿದ. ಕೃಷ್ಣಪ್ಪ ಗಾಬರಿಯಿಂದ ಎಚ್ಚರಾದ. ಈ ಗಾಬರಿ ಅವನಿಗೆ ತಿಳಿಯಿತಲ್ಲ ಎಂದು ಅವಮಾನವಾಗಿ ತಾನು ನಿದ್ದೆ ಹೋಗಕೂಡದೆಂದು ಕಷ್ಟವಾಗಿ ಕಣ್ಣು ಬಿಟ್ಟುಕೊಂಡು ಕೂತ. +ಗೌರಿ ದೇಶಪಾಂಡೆಯನ್ನು ನೆನಪು ಮಾಡಿಕೊಂಡ. ಅವಳು ಸಡಿಲವಾಗಿ ಜಡೆ ಹಾಕಿದ್ದಾಳೆ. ಕಿವಿಗಳ ಮೇಲಿನಿಂದ ಅವಳ ಕಪ್ಪು ತಲೆಕೂದಲು ಇಳಿದು ಎದೆಯ ಮೇಲೆ ಚೆಲ್ಲಿದೆ. ಅವಳು ತಂಬೂರಿ ಹಿಡಿದು ಹಾಡುತ್ತಿದ್ದಾಳೆ -’ಕಬೀರ ಹಾಡುತ್ತಾನೆ ಸಾಧುಗಳೆಲ್ಲ ಕೇಳಿರಿ’ ಎಂಬ ಕೊನೆಯ ಸಾಲನ್ನು ಏರಿಕೆಯಲ್ಲಿ ಹೇಳುತ್ತಿದ್ದಾಳೆ. ಈಗ ಕೃಷ್ಣಪ್ಪನಿಗೆ ತನ್ನ ಆಸೆಯಿಂದ ನಾಚಿಕೆಯಾಗುವುದಿಲ್ಲ. ಎದ್ದು ಬಂದು ತನ್ನ ಪಕ್ಕ ಕೂತವಳನ್ನು ಮೃದುವಾಗಿ ತಡವುತ್ತಿದ್ದಾನೆ. ಆಮೇಲೆ ಅದನ್ನು ಅಣ್ಣಾಜಿಗೆ ಹೇಳುತ್ತಾನೆ. ಅವನಿಗೆ ಖುಷಿಯಾಗುತ್ತದೆ. ಈ ಸಿಸ್ಟಮ್ಮನ್ನು ಬದಲು ಮಾಡುವ ಥಿಯರಿ ಬಗ್ಗೆ ಮಾತಾಡುತ್ತಾನೆ. ಸಮಾಜ ಹಿಂಸೆಯ ಮೇಲೇ ನಿಂತಿದೆ. ಇವೆಲ್ಲ ಕೇಂದ್ರೀಕೃತವಾಗಿ ಪೋಲೀಸ್ ಸಂಸ್ಥೆಯಾಗಿದೆ. ವೈಯಕ್ತಿಕವಾಗಿ ಈ ಪೋಲೀಸರನ್ನು ದ್ವೇಷಿಸಿ ಏನು ಪ್ರಯೋಜನ? ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆಂದು ತಿಳಿದು ಅದನ್ನು ಬದಲು ಮಾಡಬೇಕು. ಹೀಗೆ ಬದಲು ಮಾಡುವವರು ರೈತರು -ಕೂಲಿಗಾರರು. ದಪ್ಪ ಮುಖದ ಅಧಿಕಾರಿ ಕೂಡ ಬರಿಯ ಒಂದು ಸಾಧನ. ಆದರೆ ಅವನು ರಾತ್ರೆ ಯಾವಳೋ ಹೆಣ್ಣನ್ನು ಬಲಾತ್ಕಾರವಾಗಿ ಸಂಭೋಗಿಸುವಾಗ ಕೇಳಿಸಿಕೊಂಡ ಭೀಕರ ಶಬ್ದಗಳು ನೆನಪಾಗುತ್ತವೆ. ಕೃಷ್ಣಪ್ಪನ ನಿದ್ದೆ ಹಾರಿ ಕ್ರೂರವಾಗುತ್ತದೆ. +ಮಹೇಶ್ವರಯ್ಯ ಎಲ್ಲೋ ಹೊರಗೆ ತನ್ನನ್ನು ಇಲ್ಲಿಂದ ಪಾರು ಮಾಡುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಿಗೆ ಗೊತ್ತು ಏನು ಮಾಡಬೇಕೆಂದು. +ದೇಶದಲ್ಲಿ ಕ್ರಾಂತಿಯಾಗುತ್ತದೆ. ಈ ದಪ್ಪ ಮುಖದ ಅಧಿಕಾರಿಯನ್ನು ಶಿಕ್ಷಿಸುವ ಕ್ರಮಗಳನ್ನು ಯೋಚಿಸುತ್ತ ಕೃಷ್ಣಪ್ಪ ಸಂಕೀರ್ಣವಾದ ಒಂದು ಯಂತ್ರವನ್ನು ಸೃಷ್ಟಿಸುತ್ತ ಹೋಗುತ್ತಾನೆ. ಅದರಲ್ಲಿ ಒಂದರೊಳಗೊಂದು ಕಚ್ಚಿಕೊಂಡ ನೂರಾರು ಚಕ್ರಗಳು. ಬಗೆಬಗೆಯ ರೀತಿಯಲ್ಲಿ ಆ ಯಂತ್ರ ಈ ಅಧಿಕಾರಿಯನ್ನು ಹಿಡಿದು ಹಿಂಡುತ್ತದೆ. ಸಾಯಲು ಬಿಡದಂತೆ ಹಿಂಸಿಸುತ್ತದೆ. ಅದು ಗಾಣದಂತಿರುತ್ತದೆ. ಆಲೆಮನೆ ಜ್ಞಾಪಕವಾಯಿತು. ಧಾರಾಕಾರವಾಗಿ ಸುರಿಯುವ ಹಾಲು, ಅಡಿಕೆಯ ಸಿಪ್ಪೆಯಿಂದ ಬಣ್ಣಬಣ್ಣದ ಬೆಂಕಿ ಎದ್ದು ಕುದಿಸುತ್ತಿರುವ ಹಂಡೆ, ಈ ಹಂಡೆಯಿಂದ ಎತ್ತಿ ತಿನ್ನುವ ನೊರೆ. ಬೆಲ್ಲ…….. +ಮತ್ತೆ ಶಬ್ದವಾಗುತ್ತದೆ. ಉಪ್ಪಿಟ್ಟನ್ನು ಪೇದೆಯೇ ತಿಂದು ಅಲ್ಯೂಮಿನಿಯಂ ತಟ್ಟೆಯನ್ನು ಎತ್ತಿ ಕೆಳಗೆ ಹಾಕಿದ್ದ. ಕೃಷ್ಣಪ್ಪನನ್ನು ನೋಡಿ ಈಡಿಯಟ್ಟಿನಂತೆ ನಗುತ್ತ ನಿಂತಿದ್ದ. ಅವನ ಹಲ್ಲುಗಳು ಹುಳುಕಾಗಿ ಕರ್ರಗಾಗಿದ್ದವು. ಕೃಷ್ಣಪ್ಪನೇ ಉಪ್ಪಿಟ್ಟನ್ನು ತಿಂದವನೆಂದು ಮೇಲಿನವರು ಭಾವಿಸುವಂತೆ ಅವನು ಮಾಡಿದ್ದ. +ಏರೋಪ್ಲೇನ್ ಹತ್ತಿಸಲು ಮತ್ತೆ ಕರೆದುಕೊಂಡು ಹೋಗಬಹುದು ಎನ್ನಿಸಿತು. ಕೈಗಳನ್ನು ಹಿಂದಕ್ಕೆ ಕಟ್ಟಿ ಎಳೆಯುವಾಗ ಸಹನೆಗೂ ಒಂದು ತುದಿಯಿದೆ, ಆ ತುದಿ ದಾಟುತ್ತಿದ್ದಂತೆ ಒಂದೊಂದು ಅಂಗುಲವೂ ನೋವನ್ನು ಏರಿಸುತ್ತ ಹೋಗುತ್ತದೆ. ಕೃಷ್ಣಪ್ಪ ಭಯದಿಂದ ನಡುಗುತ್ತ ಕೂತ. ಈ ಸಾರಿ ತಾನದನ್ನು ತಾಳಲಾರದೆ ಅಣ್ಣಾಜಿ ಹಣ ಕಳಿಸುತ್ತಿದ್ದವರ ಹೆಸರನ್ನೆಲ್ಲ ಹೇಳಿ ಬಿಡಬಹುದು. +ಬೂಟ್ಸಿನ ಸಪ್ಪಳ ಕೇಳಿಸಿತು. +ಹಣೆಯ ಮಧ್ಯ ಕುಂಕುಮವಿಟ್ಟಿದ್ದ ಮೀಸೆಯ ಅಧಿಕಾರಿ ಒಳಗೆ ಬಂದು ಇನ್ನೊಂದು ಕುರ್ಚಿಯ ಮೇಲೆ ಕೂತ. ತನ್ನ ಪೀಕ್ ಕ್ಯಾಪನ್ನು ತೆಗೆದು ಬೆವರುತ್ತಿದ್ದ ಹಣೆಯನ್ನು ಒರೆಸಿಕೊಂಡ. ಕುಂಕುಮವೂ ಒದ್ದೆಯಾಗಿ ಮೂಗಿನ ಕೆಳಗೆ ಇಳಿಯುತ್ತಿತ್ತು. ಆ ಕುಂಕುಮವನ್ನು ಅಳಿಸದಂತೆ ಮೂಗನ್ನೂ ಕೆನ್ನೆಯನ್ನೂ ಕತ್ತನ್ನೂ ಒರೆಸಿಕೊಂಡ. +“ಈ ಹಾಳು ವಾರಂಗಲ್ ಸುತ್ತ ಕಲ್ಲಿನ ಬೆಟ್ಟಗಳಿವೆ ನೋಡಿ. ಆದ್ರಿಂದ ಭಯಂಕರ ಸೆಕೇರಿ. ಕಾಫ಼ಿ ತರಿಸಲ?” ಎಂದು ಕೇಳಿದ. +ಕೃಷ್ಣಪ್ಪ ಬೇಡವೆಂದು ತಲೆಯಾಡಿಸಿದ. +“ಶರಬತ್” +ಕೃಷ್ಣಪ್ಪ ಬೇಡವೆಂದ. +“ನೋಡ್ರಿ ನಾನಿಲ್ಲಿ ಬರಬಾರದು. ಇವೆಲ್ಲ ಲೋಯರ್ ಕೇಡರಿನ ಅಧಿಕಾರಿಗಳ ಕೆಲಸ. ಅವರ ಅಪ್ರೋಚ್ ಬ್ರೂಟಲ್ ಆಗಿರತ್ತೆ…..” +ಕೃಷ್ಣಪ್ಪನ ಗಮನ ತನ್ನ ಮಾತಿನ ಮೇಲಿಲ್ಲವೆಂಬುದನ್ನು ಗಮನಿಸಿ ಆತ, +“ನನ್ನ ಹೆಸರು ಗಜಾನನ ಜೋಷೀಂತಾರಿ” ಎಂದ. +ಕೃಷ್ಣಪ್ಪ ತುಟಿ ಬಿಗಿದು ಕೂತೇ ಇದ್ದದ್ದು ನೋಡಿ, +“ನಿಮ್ಮ ಹಿತೈಷಿಗಳಂತೆ -ಮಹೇಶ್ವರಯ್ಯ ಅಂತ ಮನೆಗೆ ಬಂದಿದ್ದರು. ಬೆಳಿಗ್ಗೆ ನಮ್ಮನೇಲೇ ಟಿಫ಼ನ್ ತಗೊಂಡರು. ಅದಕ್ಕೆ ನಾನೇ ಬಂದೆ ನಿಮ್ಮನ್ನು ನೋಡುವ ಅಂತ.” +ಮಹೇಶ್ವರಯ್ಯನ ಹೆಸರು ಕೇಳಿ ಅಪ್ರಯತ್ನವಾಗಿ ಕೃಷ್ಣಪ್ಪ ನಿಟ್ಟುಸಿರಿಟ್ಟು ಆತುರದಿಂದ ಮುಂದಿನಕ್ಕಾಗಿ ಕಾದ. ಜೋಷಿ ಅದನ್ನು ಗಮನಿಸಿ ತುಂಬ ಮೆದುವಾಗಿ ಹೇಳಿದ: +“ನಮ್ಮ ಡಿಪಾರ್ಟ್‌ಮೆಂಟೇ ಹೀಗೆ. ಯಾವಾಗ ರಿಟೈರ್ಡ್ ಆಗ್ತೀನಿ ಅಂತ ಕಾದಿದೀನಿ. ಆದ್ರೆ ನೋಡ್ರಿ ಇವತ್ತಿಗೂ ಪೂಜೆ ಮಾಡದೆ ನಾನು ಮನೆ ಬಿಡಲ್ಲ” +ಎಂದು ಮತ್ತೊಮ್ಮೆ ಕತ್ತನ್ನು ಒರೆಸಿಕೊಂಡು ಅಲ್ಲಿ ನಿಂತಿದ್ದ ಪೇದೆಗೆ ಹೋಗುವಂತೆ ಹೇಳಿ ಮುಂದುವರೆಸಿದ: +“ಕ್ರಿಮಿನಲ್ಸ್ ಜೊತೆ ಡೀಲ್ ಮಾಡಿ ಮಾಡಿ ನಾವೂನೂ ಅದೇ ಟೆಂಪರಮೆಂಟ್ಸ್‌ರವರಾಗಿಬಿಡ್ತೀವೀಂತ ಕಾಣುತ್ತೆ. ನೋಡ್ರಿ ನಿಮ್ಮಂಥ ಒಬ್ಬ ಐಡಿಯಲಿಸ್ಟ್ ಯಂಗ್ ಮ್ಯಾನ್ ಹತ್ರ ಡೀಲ್ ಮಾಡೋದು ಹೇಗೇಂತ ನಮಗೆ ತಿಳಿಯೋದೇ ಇಲ್ಲರಿ. ದೇಶದಲ್ಲಿ ಭಾರೀ ಅನ್ಯಾಯ ನಡೀತ ಇಲ್ವ ಅಂತ ನೀವು ಕೇಳ್ತೀರಿ. ಎಸ್. ನಾನು ಒಪ್ಪಿಕೋತೀನಿ. ಇಲ್ಲಿ ಕ್ರಾಂತಿಯಾಗಬೇಕೂಂತ ನಿಮಗೆ ಅನ್ನಿಸಿದ್ರೆ ತಪ್ಪೆ? ಒಂದು ಸೇಯಿಂಗೇ ಇದೆಯಲ್ಲ -ಇಪ್ಪತ್ತೈದು ವರ್ಷದೊಳಗೆ ಒಬ್ಬ ಕಮ್ಯುನಿಸ್ಟ್ ಆಗಿಲ್ಲದೇ ಇದ್ರೆ ಅವನು ಹಾರ್ಟ್‌ಲೆಸ್ ಇರಬೇಕು ಅಂತ. ಹಾಗೇನೇ ಇಪ್ಪತ್ತೈದು ವರ್ಷದ ಮೇಲೇನೂ ಅವನು ಕಮ್ಯುನಿಸ್ಟ್ ಆಗಿ ಉಳಿದ್ರೆ ಅವನು ಈಡಿಯಟ್ ಇರಬೇಕೂಂತ” +ಜೋಷಿ ಗಹಗಹಿಸಿ ನಗುತ್ತ ಕೃಷ್ಣಪ್ಪನೂ ತನ್ನ ಜೊತೆ ನಗುತ್ತಿದ್ದಾನೆಂದೇ ಭಾವಿಸಿದವನ ಹಾಗೆ ತೊಡೆಗಳನ್ನು ತಟ್ಟಿಕೊಳ್ಳುತ್ತ ಕೂತ. ಕೃಷ್ಣಪ್ಪ ಅವನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. +“ನಿಮಗೆ ಈ ಸೇಯಿಂಗ್ ಹೊಸದಿರಲಾರದು -ಅಲ್ವೆ? ವೆರಿ ಫ಼ನ್ನಿ, ವೆರಿ ವೆರಿ ಫ಼ನ್ನಿ.” +ಜೋಷಿ ನಗು ನಿಲ್ಲಿಸಿ ಕಣ್ಣಲ್ಲಿ ಉಕ್ಕಿದ ನೀರನ್ನು ಒರೆಸಿಕೊಂಡು ಹೇಳಿದ: +“ಗೌಡ್ -ನಿಮ್ಮ ಸರ್ನೇಮ್ ಅಲ್ವೇನ್ರಿ? ಧಾರವಾಡದ ಕಡೆ ಬ್ರಾಹ್ಮಣ ಗೌಡರೂ ಇದಾರ್ರೀ. ನೀವು ಹಿಂದೊಂದು ಕಾಲದಲ್ಲಿ ಜೈನರಾಗಿದ್ದವರಂತೆ. ನಾಮಧಾರಿಗಳಂತೆ -ಮಹೇಶ್ವರಯ್ಯ ಎಲ್ಲ ಹೇಳಿದರು. ವೆರಿ ಇಂಟರೆಸ್ಟಿಂಗ್, ವೆರಿ ವೆರಿ ಇಂಟರೆಸ್ಟಿಂಗ್. ಈ ಪ್ರದೇಶ ನೋಡ್ರಿ ನೈಜಾಮ್ ಆಳ್ವಿಕೇಲಿ ಇತ್ತಲ್ಲ ಹಾಗಾಗಿ ಇಲ್ಲಿನ ಪೋಲೀಸ್ ಜನರೆಲ್ಲ ಶುದ್ಧ ಬ್ರೂಟ್‌ಗಳು. ಅದಕ್ಕಾಗಿ ನಾನೇ ಬಂದೇರಿ. ಮಹೇಶ್ವರಯ್ಯನಿಗೆ ಹೇಳಿದೆ: ಡೋಂಟ್ ವರಿ, ಆ ಅಣ್ಣಾಜಿ ಇದ್ದನಲ್ಲ ಅವನಿಗೊಂದೆರಡು ಹೆಂಗಸರು ಕಾಂಟ್ಯಾಕ್ಟ್ಸ್ ಇದ್ದರಂತೆ ಮಹಾರಾಷ್ಟ್ರದಲ್ಲಿ. ಅವರ ಅಡ್ರೆಸ್‌ಗಳು ಸಿಕ್ಕರೆ ಸಾಕು ನಮಗೆ ಅಂತ.” +ಜೋಷಿ ಅಷ್ಟು ಮಾತಾಡಿ ಸುಮ್ಮನಾದ. ತೆಲುಗಿನಲ್ಲಿ ನೀರು ತರುವಂತೆ ಪೇದೆಯನ್ನು ಕೂಗಿದ. ಕೃಷ್ಣಪ್ಪನಿಗೆ “ನೀರಿಗೇನಂತೆ” ಎಂದು ಒಂದು ಗ್ಲಾಸು ಹೂಜಿಯ ತಣ್ಣನೆಯ ನೀರು ಕೊಟ್ಟು ತಾನೂ ಕುಡಿದ. +“ಈ ಇನ್ವೆಸ್ಟಿಗೇಶನ್‌ಗೆ ನಾನೇ ಮುಖ್ಯ ನೋಡ್ರಿ. ನಿಮ್ಮಿಂದ ಅಷ್ಟು ತಿಳಿದರೆ ಸಾಕು ಬಿಟ್ಟುಬಿಡ್ತೀವೀಂತ ಮಹೇಶ್ವರಯ್ಯನಿಗೆ ಹೇಳಿದೆ. ತುಂಬ ಇಂಟರೆಸ್ಟಿಂಗ್ ಮನುಷ್ಯ. ಅಂಥವರು ಸಿಕ್ಕಿದ್ದರಿಂದ ಯೂ ಆರ್ ಲಕ್ಕಿ. ಪಾಪ -ಅದ್‌ಹೇಗೆ ಆ ಅಣ್ಣಾಜೀಂತಿರಲ್ಲ ಅವನು ನಿಮಗೆ ಗಂಟುಬಿದ್ದನೋ. ನಾನು ನನ್ನ ಮಗನಿಗೆ ಹೇಳ್ತೀನಿ. ಅಯ್ಯ ಏನೇ ಮಾಡು. ಪೋಲೀಸರ ಕೈಗೆ ಮಾತ್ರ ಸಿಕ್ಕಿಹಾಕಿಕೊಬೇಡ ಅಂತ.” +ಕೃಷ್ಣಪ್ಪ ಮೆದುವಾದ ಧ್ವನಿಯಲ್ಲಿ ಹೇಳಿದ -ಇದೇ ತನ್ನ ಕೊನೆಯ ಮಾತು ಎನ್ನುವಂತೆ +“ನನಗೇನೂ ಗೊತ್ತಿಲ್ಲ.” +ಆಲ್‌ರೈಟ್ ಎಂದು ಜೋಷಿ ಎದ್ದುನಿಂತು ಅವನ ಪೀಕ್ ಕ್ಯಾಪ್ ಹಾಕಿಕೊಂಡು, +“ಹೇಳಬೇಕು ಅನ್ನಿಸಿದಾಗ ನನಗೆ ಹೇಳಿಕಳಿಸಿ. ಬಾಯಿ ಬಿಡದೆ ಇಲ್ಲಿಂದ ಹೊರಗೆ ಹೋದವರು ಇಲ್ಲಾರಿ. ನಾನು ಹೇಳ್ತಿರೋದು ಫ಼್ಯಾಕ್ಟ್. ನಿಮಗೆ ಹೆದರಿಸಲಿಕ್ಕಲ್ಲ.” +ಎಂದು ಅಂಗಿಯನ್ನು ಅಂಗಿಯನ್ನು ಜಗ್ಗಿ ಸರಿಮಾಡಿಕೊಂಡು ಹೋದ. ಪೇದೆ ಬಂದು ಅವನನ್ನು ಎಬ್ಬಿಸಿಕೊಂಡು ಮತ್ತೆ ಏರೋಪ್ಲೇನ್ ಏರಿಸುವ ಜಾಗಕ್ಕೆ ತಂದ. ಅಲ್ಲಿ ಒಬ್ಬನನ್ನು ಏರೋಪ್ಲೇನ್ ಏರಿಸುತ್ತ ದಪ್ಪ ಮುಖದ ಅಧಿಕಾರಿ ನಿಂತಿದ್ದ. ಹರಿದ ಅಂಗಿ ತೊಟ್ಟು ಪ್ಯಾಂಟ್ ಹಾಕಿದವನ ಕೈಗಳು ಏರುತ್ತಿದ್ದಂತೆ ಅವನು ಕಿರುಚಿಕೊಳ್ಳಲು ಶುರು ಮಾಡಿದ. ತೆಲುಗಿನಲ್ಲಿ ಅವನು ಬಡಬಡಿಸುತ್ತಿದ್ದಾಗ ಅಧಿಕಾರಿ ಅವನನ್ನು ಇಳಿಸಿ ಅವನು ಹೇಳಿದ್ದನ್ನು ಗುರುತು ಮಾಡಿಕೊಂಡು ದಫ಼ೇದಾರನೊಬ್ಬನ ಜೊತೆ ಅವನನ್ನು ಕಳಿಸಿದ. ಈ ದೃಶ್ಯವನ್ನು ನೋಡಲು ಕೃಷ್ಣಪ್ಪನನ್ನು ನಿಲ್ಲಿಸಿಕೊಂಡಿದ್ದವ ನಂತರ ಅವನನ್ನು ಎಲ್ಲೆಲ್ಲೊ ಬಳಸಿ, ಮೆಟ್ಟಲುಗಳನ್ನು ಹತ್ತಿಸಿ, ಇಳಿಸಿ ಹಲವು ರೂಮ್‌ಗಳ ಮೂಲಕ ಕರೆದುಕೊಂಡು ಹೋದ. ಕೊನೆಗೊಂದು ಹಾಲಿನ ಮುಖಾಂತರ ಅವನನ್ನು ಕರೆದುಕೊಂಡು ಹೋಗುವಾಗ ಅಲ್ಲಿ ಸಾದಾ ಬಟ್ಟೆಗಳನ್ನು ತೊಟ್ಟವರು ಮೇಜಿನ ಎದುರು ಕೂತು ಬರೆಯುತ್ತಿದ್ದುದನ್ನು ಕೃಷ್ಣಪ್ಪ ಕಂಡ. ಎಲ್ಲ ಸಾಮಾನ್ಯ ಕಛೇರಿಗಳಂತೆಯೇ ಇದೂ ಇತ್ತು. ಹಣೆಗೆ ವಿಭೂತಿ ತೊಟ್ಟು ಬೆಳ್ಳನೆಯ ಟೋಪಿ ಹಾಕಿಕೊಂಡವನೊಬ್ಬ ನಡುವಿನ ಮೇಜಿನ ಎದುರು ಕೂತು ಬರೆಯುತ್ತಿದ್ದ. ಶಾಯಿ ಹತ್ತಿದ ಟೇಬಲ್ ಕ್ಲಾತ್, ಒಂದು ಪಾತ್ರೆಯಲ್ಲಿ ಬೆಂದಿದ ಹಳಸಿದ ವಾಸನೆಯ ಹಿಟ್ಟಿನ ಗೋಂದು, ಅದರಲ್ಲಿ ಅದ್ದಿದ್ದ ದಪ್ಪನೆಯ ಕಡ್ಡಿ, ಗೋಡೆಯ ಮೇಲೆ ಬೋಸ್ ನೆಹರೂ ಪಟಗಳು, ಮೂಲೆಯಲ್ಲಿ ಬೀಡಿ ಸೇದುತ್ತ ನಿಂತ ಜವಾನರು, ಬೀಡಿ ಆರಿಸುವಾಗ ಗೋಡೆಗೆ ಹತ್ತಿದ ಕರಿಯ ಗುರುತುಗಳು, ಮೂಲೆಯಲ್ಲಿ ಒಟ್ಟಿದ ಮರಳಿನ ಮೇಲೆ ಬಾಯಿ ತೆರೆದುಕೊಂಡಿದ್ದ ನೀರಿನ ಹೂಜಿಗಳು, ಎಲ್ಲರೂ ಸಣ್ಣದನಿಯಲ್ಲಿ ಮಾಡುತ್ತಿದ್ದ ಗಿಜಿಗಿಜಿ ಶಬ್ದ, ತೆರೆದ ಕಪಾಟುಗಳಲ್ಲಿ ಪೇರಿಸಿಟ್ಟು ಹಳದಿ ಬಣ್ಣಕ್ಕೆ ತಿರುಗಿದ ಫ಼ೈಲುಗಳು -ಇವುಗಳನ್ನೆಲ್ಲ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಈ ಲಾಯದಂತೆ ಉದ್ದವಾಗಿದ್ದ ಹಾಲಿನಲ್ಲಿ ಮೇಜುಗಳ ನಡುವೆ ದಾರಿ ಮಾಡಿಕೊಳ್ಳುತ್ತ ಚಲಿಸಿದ. ಇದೇ ಡಿಸ್ಟ್ರಿಕ್ಟಿನ ಮುಖ್ಯ ಠಾಣೆಯಿರಬೇಕು. ಜೋಷಿಯೂ ಇಲ್ಲೇ ಎಲ್ಲೋ ಇದ್ದಾನೆ. ಮೇಲೆ ಎಷ್ಟೋ ರೂಮುಗಳಲ್ಲಿ ಅವನ ಮೇಲಿನವರೂ, ಮೇಲಿನ ಮೇಲಿನವರೂ ಇದ್ದಾರೆ. ಆ ರೂಮುಗಳಲ್ಲಿ ಫ಼್ಯಾನ್ ಇರುತ್ತವೆ. ಇದೇ ಕಟ್ಟಡದ ಒಂದು ರೂಮಲ್ಲಿ ತನ್ನ ವಿಚಾರಣೆಯನ್ನು ಮೂವರು ಅಧಿಕಾರಿಗಳು ಮಾಡಿದ್ದು. ಕ್ಷೌರ ಮಾಡಿದ ಮೂತಿಯನ್ನು ತಿರುವುತ್ತ, ಕನ್ನಡಕವನ್ನು ಮೂಗಿನ ಕೆಳಗೆ ಇಳಿಸಿಕೊಂಡು ಕಾಗದಗಳ ಮೇಲೆ ಲೇಖನಿಯಲ್ಲಿ ಏಕಾಗ್ರವಾಗಿ ಬರೆಯುತ್ತ ಕೂತ ಇವರೆಲ್ಲ ಬಡಗೃಹಸ್ಥರಂತೆ ಕಾಣುತ್ತಾರೆ. ಈ ಬಿಲ್ಡಿಂಗಿನಲ್ಲೇ ಎಲ್ಲೋ ಇನ್ನೊಂದು ಮೂಲೆಯಲ್ಲಿ ಆ ಅಂಗಳ ಇದೆ. ತನ್ನನ್ನು ಏರೋಪ್ಲೇನ್ ಹತ್ತಿಸಿದ ಜಾಗ. ಅಲ್ಲಿಯ ಕಿರುಚಾಟ ಈ ಸದ್ಗೃಹಸ್ಥರಂತೆ ತೋರುವ ಗುಮಾಸ್ತರ ಕಿವಿಗೆ ಬೀಳುವಂತೆ ಕಾಣುವುದಿಲ್ಲ. ಆದರೆ ಅಲ್ಲಿ ಹಿಂಸೆಯ ಮೂಲಕ ಪಡೆದ ವಿಷಯಗಳನ್ನು ಈ ಗುಮಾಸ್ತರೆಲ್ಲ ಸಾಲಾಗಿ ವಾಕ್ಯಗಳನ್ನಾಗಿ ಸಿದ್ಧಪಡಿಸುತ್ತಿರಬಹುದು -ನ್ಯಾಯಾಂಗದೆದುರು ಮಂಡಿಸಲು. +ಇಲ್ಲೆ ಎಲ್ಲೊ ಅಂಗಳವಿದೆ -ಆದರೆ ತನ್ನ ಕತ್ತಲಿನ ಕೋಣೆಯೆಲ್ಲಿದೆ? ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲಿನ ಹೆಜ್ಜೆ: ಈ ಬಿಲ್ಡಿಂಗಿನ ಮ್ಯಾಪೊಂದನ್ನು ಸಿದ್ಧಪಡಿಸುವುದು. ಮ್ಯಾಪನ್ನು ಸಿದ್ಧಪಡಿಸಿದರೆ ತಪ್ಪಿಸಿಕೊಂಡು ಹೋಗುವುದು ಸುಲಭವೆನ್ನುವ ಕಾರಣದಿಂದಲೇ ಮೊದಲ ಸಾರಿ ತನ್ನನ್ನು ಕರೆದುಕೊಂಡು ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿದ್ದು. ಇವತ್ತು ತಾನು ಜೋಷಿಯನ್ನು ನೋಡಿದ ರೂಮು, ನಂತರ ಬಂದ ಹಿಂಸೆಯ ಅಂಗಳ, ಅಲ್ಲಿಂದ ಹತ್ತಿ ಇಳಿದು ಹೊಕ್ಕ ರೂಮ್‌ಗಳು, ಆಮೇಲಿಂದ ಹೊಕ್ಕ ಈ ಲಾಯದಂಥ ಹಾಲು -ಕೃಷ್ಣಪ್ಪನಿಗೆ ಗಜಿಬಿಜಿಯಾಗಿಬಿಟ್ಟಿದ್ದವು. ಮುಂದಿನ ಸಾರಿ ಎಲ್ಲವನ್ನೂ ಸ್ಪಷ್ಟವಾಗಿ ನೆನಪಿಡುತ್ತ ಹೋಗಬೇಕೆಂದುಕೊಂಡ. ಲಾಯವನ್ನು ದಾಟುತ್ತಿದ್ದಂತೆ ಸ್ವಲ್ಪ ಆಕಾಶ ಕಂಡಿತು. ಈ ಆಕಾಶವನ್ನು ಒತ್ತಿಕೊಂಡು ಸುತ್ತಲೂ ನಿಂತ ಕಪ್ಪುಕಲ್ಲಿನ ಬೆಟ್ಟಗಳು ಕಂಡವು. ಈ ಕಲ್ಲುಗಳಿಂದ ಊರಿನ ಸೆಖೆ ಇಷ್ಟು ಅಸಹನೀಯವಾಗಿದೆ. ಪುರಾತನ ಕಾಲದ ದೇವಸ್ಥಾನವೆನ್ನುವ ರಾಮಪ್ಪ ದೇವಾಲಯಕ್ಕೆ ಈ ಬಂಡೆಗಳಿಂದಲೇ ಕಲ್ಲನ್ನು ಪಡೆದಿರಬಹುದು. +ಈ ಕಟ್ಟಡದ ಮುಂಭಾಗ ಚೂರು ಕಂಡಂತಾಗಿ ಕೃಷ್ಣಪ್ಪ ಚಕಿತನಾದ. ಇಷ್ಟೊಂದು ಕ್ಷುದ್ರವಾದ ಹಾಲುಗಳನ್ನೂ, ಚಿತ್ರಹಿಂಸೆಯ ಅಂಗಳವನ್ನೂ ಬದುಕಿನ ಜಂಜಾಟದಲ್ಲಿ ಸುಸ್ತಾದವರಂತೆ ಕಾಣುವ ಗುಳಿಬಿದ್ದ ಕಣ್ಣುಗಳ ಬಡಕಲು ಗುಮಾಸ್ತರನ್ನೂ ರಾಕ್ಷಸನಂತಿದ್ದ ದಪ್ಪ ಮುಖದ ಅಧಿಕಾರಿಯನ್ನೂ ಒಳಗೊಂಡ ಈ ಬೃಹತ್ ಕಟ್ಟಡದ ಮುಂಭಾಗ ಸುಂದರವಾಗಿತ್ತು. ಇಷ್ಟೊಂದು ಧಗೆಯಲ್ಲೂ ಹಸಿರಾದ ಹಸಿಯಾದ ಲಾನ್ ಇತ್ತು. ನೀರಿನ ಬುಗ್ಗೆಯಿತ್ತು. ಕೃತಕವಾಗಿ ಸೊಂಟವನ್ನು ಬಳುಕಿಸಿ ಕೊಡವೊಂದನ್ನು ಹಿಡಿದು ನಿಂತ ಹೆಣ್ಣಿನ ಶಿಲ್ಪವೊಂದರ ಮೇಲೆ ಈ ಬುಗ್ಗೆ ಚಿಮ್ಮುತ್ತಿತ್ತು. ಈ ಬಿಲ್ಡಿಂಗಿನ ಆಚೆ ಸೈಕಲ್ ರಿಕ್ಷಾಗಳು ಸಾಲಾಗಿ ಕಾಯುತ್ತಿದ್ದವು. ಯಾವ ಭಯವೂ ಇಲ್ಲದೆ ಎಲೆಯಡಿಕೆ ಜಗಿಯುತ್ತ ನಿಂತ ರೈತರು, ಕಚ್ಚೆಪಂಚೆಯನ್ನು ಎತ್ತಿ ಹಿಡಿದ ಪೇಟೆಯವರು ಓಡಾಡುತ್ತಿದ್ದರು. ಬಿಲ್ಡಿಂಗಿನ ಮುಂಭಾಗದ ದಿಕ್ಕನ್ನೂ ಈಗ ಮಧ್ಯಾಹ್ನವೆಂಬುದನ್ನೂ ಮನಸ್ಸಲ್ಲಿ ಗುರುತು ಹಾಕಿಕೊಂಡ. ಮೊದಲನೇ ಪಾಠ: ಸದ್ಯದ ನೋವು ನಿರೀಕ್ಷಿಸಿದ್ದಕ್ಕಿಂತ ಸಹ್ಯವಾಗಿರುತ್ತದೆ. ಎರಡನೇ ಪಾಠ: ಆ ಕತ್ತಲಿನ ಕೋಣೆಯಲ್ಲಿ ದೇಶಕಾಲಗಳು ಮರೆಯುತ್ತ ಹೋಗಬಹುದಾದ್ದರಿಂದ, ಕಾಲ ಮತ್ತು ಅವಕಾಶಗಳಲ್ಲಿ ತಾನು ಎಲ್ಲಿದ್ದೇನೆ ಎಂಬ ಪರಿವೆ ತನ್ನಿಂದ ಮಾಯವಾಗದಂತೆ ನೋಡಿಕೊಳ್ಳಬೇಕು. +ಹಸಿವಿನಿಂದಾಗಿ ಕಾಲುಗಳಲ್ಲಿ ಶಕ್ತಿಯಿರಲಿಲ್ಲ. ಅವನ ಜೊತೆಗಿದ್ದ ಮೈಲೆಕಜ್ಜಿ ತೂತುಗಳ ಮುಖದ ಪೇದೆ ಕ್ರೂರಿಯಂತೆ ಕಾಣದ್ದರಿಂದ ಅವನಿಗೆ ನೀರು ಬೇಕೆಂದು ಸನ್ನೆ ಮಾಡಿದ. ತಣ್ಣಗಿದ್ದ ನೀರನ್ನು ಅಲ್ಲೆ ಮೂಲೆಯಲ್ಲಿದ್ದ ಹೂಜಿಯಿಂದ ಪೇದೆ ಕೊಟ್ಟ. ಕಟ್ಟಡದ ಮುಂಭಾಗವನ್ನು ಇನ್ನಷ್ಟು ನೋಡಿ ತಣಿಯಲು ನೀರು ಕುಡಿಯುವ ನೆವದಿಂದ ಅಲ್ಲೆ ನಿಂತಿದ್ದ. ಪೇದೆ ಅವಸರ ಮಾಡಿ ಹೊರಡಿಸಿದ. ಅವನು ಈಗ ಹೊಕ್ಕು ಹೊರಟ ರೂಮುಗಳು ಖಾಲಿಯಾಗಿದ್ದವು. ಮತ್ತೆ ತಾನೆಲ್ಲಿದ್ದೇನೆಂದು ಗಲಿಬಿಲಿಯಾಯಿತು. ಎಲ್ಲೆಲ್ಲೊ ನಡೆದು ಕೊನೆಗೆ ನಿಂತಿದ್ದಾಗ ಅವನೆದುರಿಗಿದ್ದ ಬಾಗಿಲು ತನ್ನ ಕೋಣೆಯದೆಂದು ಗೊತ್ತಾಯಿತು. ಪೇದೆ ಅವನನ್ನು ಒಳಗೆ ಬಿಟ್ಟು ಬಾಗಿಲು ಹಾಕಿಕೊಂಡ. +.. +.. +.. +ತಗಣಿಗಳು ಮೈಯ ಮೇಲೆ ಹರಿದು ಕಚ್ಚಿದಾಗ ಆಶ್ಚರ್ಯವಾಗಲಿಲ್ಲ. ಮೈಯನ್ನು ಉಜ್ಜಿಕೊಳ್ಳುತ್ತ ಸಿಮೆಂಟ್‌ನ ಮಂಚದ ಮೇಲೆ ಕೂತ ಈ ತಗಣಿಗಳಿಂದಾದರೂ ಮೈಯ ಎಚ್ಚರ ಉಳಿಯುತ್ತದಲ್ಲ. ಊರಿನ ಹವಾಕ್ಕೆ ಒಗ್ಗಿರುವುದರಿಂದಲೋ ಏನೋ ಮೈ ಅಷ್ಟೇನೂ ಬೆವರುತ್ತಿಲ್ಲ. ಹಾಗೇ ಕೂತಿದ್ದಂತೆ ಕಣ್ಣುಗಳು ಬಾಡಿದವು. ಯಾರಾದರು ಥಟ್ಟನೆ ಎಬ್ಬಿಸಿಬಿಡುತ್ತಾರೆಂದು ದಿಗಿಲು ಪಡುತ್ತ, ಅಷ್ಟರೊಳಗೆ ದೇಹಕ್ಕೆ ಬೇಕಾದ ನಿದ್ದೆಯನ್ನೆಲ್ಲ ಪಡೆದುಬಿಡಬೇಕೆಂದು ಏಕಾಗ್ರನಾಗುತ್ತ, ಕಣ್ಣುಗಳನ್ನು ಮುಚ್ಚಿ ಗೋಡೆಗೆ ಒರಗಿದ. ತಗಣಿಗಳು ಇವೆ, ಅವು ಕಚ್ಚುತ್ತಲೇ ಇರುತ್ತವೆ, ಇದು ಅನಿವಾರ್ಯ ಎಂದು ತಿಳಿಯಲು ಯತ್ನಿಸುತ್ತಿದ್ದಂತೆ ಕೃಷ್ಣಪ್ಪನಿಗೆ ಗಾಢವಾದ ನಿದ್ದೆ ಬಂತು. +ಎಚ್ಚರಾದಾಗ ಇದು ಅದೇ ದಿನವೋ, ಮಾರನೇ ದಿನವೋ, ಹಗಲೋ, ರಾತ್ರೆಯೋ ತಿಳಿಯದೆ ಕಸಿವಿಸಿಯಾಯಿತು. ಮೂಗಿನ ಎರಡು ಸೊಳ್ಳೆಗಳಿಗೂ ಮೂಗು ಬಟ್ಟಿಟ್ಟುಕೊಂಡು, ತಲೆಗೆ ಸಣ್ಣದೊಂದು ಗಂಟು ಹಾಕಿ ಅದರಲ್ಲಿ ಸಂಪಿಗೆ ಮುಡಿದುಕೊಂಡು “ಮಡಿ ದೂರವಿರು” ಎನ್ನುತ್ತ ತನಗೆ ದೂರದಿಂದ ಕೋಡುಬಳೆ ಎಸೆಯುತ್ತಿದ್ದ ರುಕ್ಮಿಣಿಯಮ್ಮನ ನೆನಪಾಗಿ ಅವರ ಜೊತೆ ನಡೆದ ನಗಬಲ್ಲಂಥ ಯಾವುದಾದರೊಂದು ಘಟನೆಗಾಗಿ ಹುಡುಕುತ್ತ ಕೂತ. ಅವನು ಯೋಚಿಸಲು ಇಷ್ಟಪಡದೆ ಇದ್ದುದೊಂದು ನೆನಪಾಗಿ ಅವನನ್ನು ಕಾಡಿತು. +ಕೃಷ್ಣಪ್ಪ ಹೊಟ್ಟೆಯಲ್ಲಿರುವಾಗಲೇ ಅವನ ಅಪ್ಪ ಸತ್ತಿದ್ದು, ಬಾಲಕನಾಗಿದ್ದಾಗ ಕೃಷ್ಣಪ್ಪ ತನ್ನ ಅಪ್ಪ ಎಲ್ಲರಂತೆಯೇ ಮುದುಕನಾಗಿ ಸತ್ತಿರಬೇಕೆಂದು ಭಾವಿಸಿದ್ದ. ಆದರೆ ಮಹೇಶ್ವರಯ್ಯ ತನ್ನನ್ನು ದನಕಾಯುವುದರಿಂದ ಬಿಡಿಸಿ ಸ್ಕೂಲಿಗೆ ಸೇರಿಸಲು ಪೇಟೆಗೆ ಕರೆದುಕೊಂಡು ಹೋಗುವ ದಿನ ತಾಯಿ ಅವನನ್ನು ಊರ ಹೊರಗಿದ್ದ ಆಲದ ಮರದ ಕೆಳಗೆ ಕೂರಿಸಿಕೊಂಡು ಅಪ್ಪ ಸತ್ತದ್ದು ಹೇಗೆ ಎಂಬುದನ್ನು ಅಳುತ್ತ ವಿವರಿಸಿದ್ದಳು. ಅಪ್ಪ ಹಠಮಾರಿ. ಅವನಿಗೂ ದಾಯಾದಿಗಳಿಗೂ ಪಾಲಾಗಿದ್ದರೂ ಎಷ್ಟೋ ದಿನಗಳ ತನಕ ಒಂದು ಅಡಿಕೆ ತೋಟದ ಬಗ್ಗೆ ಜಗಳ ನಡೆದೇ ಇತ್ತು -ಅವನ ದೊಡ್ಡಪ್ಪನ ಮಗನ ಜೊತೆಗೆ. ಈ ಪುಟ್ಟಣ್ಣ ಗೌಡನಿಗೆ ತುಂಬ ಅಸೂಯೆ. ಹುಲ್ಲಿನ ಮೆದೆಗೆ ಬೆಂಕಿ ಹತ್ತಿಸುವುದು ಇತ್ಯಾದಿ ಕಿರುಕುಳ ಕೊಡುತ್ತಲೇ ಇದ್ದ. +ಅಪ್ಪ ಹಠಮಾರಿಯಾದ್ದರಿಂದ ಇದಕ್ಕೆಲ್ಲ ಜಗ್ಗಲಿಲ್ಲ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಅಲೆದೂ ಅಲೆದೂ ಅಂತೂ ಕೊನೆಗೆ ತೋಟದ ಹಕ್ಕು ತನ್ನದೆಂದು ಸ್ಥಾಪಿಸಿಕೊಂಡ. ಅದಾದ ಮಾರನೇ ದಿನ ಅಪ್ಪ ಮನೆಗೆ ಬರಲಿಲ್ಲ. ದನಕಾಯುವ ಹುಡುಗನೊಬ್ಬ ಭಯಂಕರವಾದೊಂದು ಕಥೆಯನ್ನು ತಂದ. ಹೋಗಿ ನೋಡಿದರೆ ಬಿದಿರು ಮೆಳೆಯೊಂದರ ಬುಡದಲ್ಲಿ ಅಪ್ಪನನ್ನು ಕಡಿದು ಚೂರು ಚೂರು ಮಾಡಿ ಬಿಸಾಕಿದ್ದರು. ಪೋಲೀಸ್ ಕೇಸಾಯಿತು. ಪುಟ್ಟಣ್ಣಗೌಡನಿಗೆ ಫಾಸಿಯಾಯಿತು. ಅದಾದ ಮೇಲೆಯೇ ಅವನ ಅಮ್ಮ ತನ್ನ ಅಣ್ಣನ ಮನೆ ಸೇರಿದ್ದು. +ಈ ಕಥೆ ಕೇಳಿದ ಮೇಲೆಯೇ ಕೃಷ್ಣಪ್ಪನಿಗೆ ಯಾಕೆ ಅತ್ತೆ ಸಿಟ್ಟು ಬಂದಾಗಲೆಲ್ಲ “ಅಪ್ಪನನ್ನು ತಿಂದು ಹುಟ್ಟಿದ ಶನಿ” ಎಂದು ತನ್ನನ್ನು ಬಯ್ಯುತ್ತಿದ್ದರು ಎಂದು ತಿಳಿದದ್ದು. +ಈ ಘಟನೆ ತನ್ನನ್ನು ಬಾಧಿಸದಂತೆ ನೋಡಿಕೊಂಡಿದ್ದ. ಯಾರಿಗೂ ತನ್ನ ಅಪ್ಪ ಕೊಲೆಯಾದ್ದನ್ನ ಹೇಳಿಕೊಳ್ಳಬೇಕೆಂದು ಅವನಿಗೆ ಅನ್ನಿಸಿದ್ದಿಲ್ಲ. ಮಹೇಶ್ವರಯ್ಯ ಕೂಡ ಅದನ್ನು ಕೇಳಿದ್ದಿಲ್ಲ -ಆದರೆ ತನ್ನ ಜೀವನವನ್ನು ಹುಟ್ಟಿದಾರಭ್ಯ ತಮಸ್ಸು ಕವಿದು ನಾಶ ಮಾಡಲು ಪ್ರಯತ್ನಿಸುತ್ತಿರುವುದಾಗಿಯೂ, ಅದನ್ನು ತಾನು ಛಲದಿಂದ ಗೆಲ್ಲುತ್ತ ಹೋಗಬೇಕೆಂದೂ ಕೃಷ್ಣಪ್ಪನಿಗೆ ಅಸ್ಪಷ್ಟವಾಗಿ ಅನ್ನಿಸಿದೆ. +ತನ್ನ ಅಪ್ಪನನ್ನು ಕೊಲ್ಲಬೇಕೆನ್ನಿಸುವಷ್ಟು ದ್ವೇಷ ಯಾಕೆ ಅವನ ದಾಯಾದಿಗೆ ಹುಟ್ಟಿತು? ಇಂಥ ದ್ವೇಷವನ್ನು ಬೇರವರಲ್ಲಿ ತಾನೂ ಹುಟ್ಟುವಂತೆ ಮಾಡುತ್ತಿರಬಹುದು. ಕೆಲವರನ್ನು ನೋಡಿದಾಗ ತಾನು ಕ್ಷುಲ್ಲಕ, ಕ್ಷುದ್ರ, ತಮಸ್ ಎಂದು ತಿಳಿದದ್ದೆಲ್ಲ ಅವರಲ್ಲಿ ಕ್ರೋಢೀಕರಿಸಿದಂತೆ ಕಾಣುತ್ತದೆ. ಹೀಗೆ ತಾನು ಕಂಡದ್ದೆಲ್ಲ ಇಲ್ಲಿ -ಈ ನೆಲದ ಧೂಳಿನಲ್ಲಿ, ಈ ಸೆಖೆಯಲ್ಲಿ, ಈ ತಗಣಿಗಳಲ್ಲಿ, ಈ ಗಾಳಿಯಿಲ್ಲದ ಕತ್ತಲಲ್ಲಿ -ಕೇಂದ್ರೀಕರಿಸಿದಂತೆ ಅನ್ನಿಸುತ್ತದೆ. ಇದನ್ನು ನಾನು ಗೆಲ್ಲಬಲ್ಲೆನೊ ಎಂದು ಕೃಷ್ಣಪ್ಪ ಅವಡು ಕಚ್ಚಿ ಎದ್ದು ನಿಂತ. +ಅಣ್ಣಾಜಿ ಹೇಳಿದ್ದ : ಕ್ಷುದ್ರತೇನ್ನ ಗೆಲ್ಲಬೇಕಾದ್ದು ನಿನ್ನ ಮನಸ್ಸಲ್ಲಿ ಅಲ್ಲ, ಹೊರಗಿನ ಪ್ರಪಂಚದಲ್ಲಿ. ಅದರ ಮೂಲ ಇರೋದು ಅಲ್ಲಿ. ಅವನು ಹೇಳಿದ್ದು ನಿಜವಿರಬಹುದು. ಆದರೆ ತಾನು ಈ ಸದ್ಯದಲ್ಲಿ ತನ್ನ ಮನಸ್ಸು ಅದರಿಂದ ನಾಶವಾಗದಂತೆ ಮೀರಿ ನಿಲ್ಲುವ ಉಪಾಯಗಳನ್ನು ಹುಡುಕಲೇಬೇಕಾಗಿದೆ. ಇಲ್ಲೇ ತಾನು ಪ್ರಾಯಶಃ ಸಾಯಬೇಕಾಗಿ ಬಂದರೆ ಅವಡು ಕಚ್ಚಿಕೊಂಡೇ ಸಾಯಬೇಕು. ಕೊನೆ ಘಳಿಗೆ ತನಕ ತನ್ನ ಮನಸ್ಸನ್ನು ಈ ತಮಸ್ಸು ಆವರಿಸದಂತೆ ಕಾಯ್ದುಕೊಳ್ಳಬೇಕು. +ಮಹೇಶ್ವರಯ್ಯ ಹೇಳುವರು : ಅವಧಾನಿಯಾಗಬೇಕು. ಸಿಕ್ಕಿಬೀಳಬಾರದು. ಬಳುಕುವ ಶಕ್ತಿ ಕಳೆದುಕೊಳ್ಳಬಾರದು. ಒಳಗೂ ಇರಬೇಕು, ಹೊರಗೂ ಇರಬೇಕು. ಹಣ್ಣನ್ನು ತಿನ್ನಲೂ ಬೇಕು, ನೋಡುತ್ತಲೂ ಇರಬೇಕು. ಹಗುರಾದ ಮೈ, ಬಲವಾದ ರೆಕ್ಕೆ, ಹರಿತವಾದ ಉಗುರು, ಚೂಪಾದ ಆಕಾಶಕ್ಕೆತ್ತಿದ ಕೊಕ್ಕು, ಅಪಾಯ ಅಷ್ಟು ದೂರ ಇದ್ದಾಗಲೂ ಅದು ತಿಳಿಯುತ್ತೆ. ಒಡನಾಡಿಗೆ ಹಾತೊರೆಯುವುದಿಲ್ಲ, ತನ್ನಷ್ಟಕ್ಕೆ ಹಾಡಿಕೊಳ್ಳುತ್ತದೆ. +ಹೀಗೆ ಯೋಚಿಸುತ್ತ ಸ್ವಲ್ಪ ಹೊತ್ತು ಕಳೆದ ಮೇಲೆ ಕಾಲದ ಪರಿವೆಯನ್ನು ತಾನು ಕಳೆದುಕೊಂಡೇ ಬಿಟ್ಟೆ ಎನ್ನಿಸಿತು. ಈ ರೂಮಿನ ಗೋಡೆಯ ಆಚೆ ಇನ್ನೊಂದು ರೂಮಿರಬೇಕು -ಬೀದಿಯಲ್ಲ. ಆ ಅಂಗಳದ ಆಚೆಯಿಂದ ಕೇಳುವಂತೆ ಇಲ್ಲಿಂದ ಏನೂ ಕೇಳಿಸುವುದಿಲ್ಲ. ಆ ದಪ್ಪ ಮೋರೆಯ ಅಧಿಕಾರಿ ತನ್ನನ್ನು ಮರೆತುಬಿಟ್ಟಿರಬೇಕು. ಕಣ್ಣೆದುರಿಗೆ ಇದ್ದಾಗಲೇ ಇನ್ನೇನು ಅತ್ಯಂತ ಕ್ರೂರವಾಗಿ ಅವನು ಮೇಲೆರಗಬಹುದು ಅನ್ನಿಸುತ್ತಿದ್ದಂತೆಯೇ ಅವನು ತನ್ನನ್ನು ಅಲಕ್ಷಿಸಿ ಇನ್ನೆಲ್ಲೋ ಗಮನ ಹರಿಸಿದ್ದು ನೆನಪಿಗೆ ಬಂದು ದಿಗಿಲಾಯಿತು. ಅವನು, ಜೋಷಿ, ಮತ್ತೊಬ್ಬ ತನ್ನನ್ನು ಮರೆತುಬಿಟ್ಟು ಬೇರೆ ಯಾರನ್ನೋ ಹುಡುಕುತ್ತಲೋ ಶಿಕ್ಷಿಸುತ್ತಲೋ ಇರಬಹುದು. ತನ್ನಲ್ಲೇನು ಹುರುಳಿಲ್ಲದ್ದರಿಂದ ಬಿಡುಗಡೆ ಮಾಡಬೇಕೆಂದು ನಿಶ್ಚಯಿಸಿ, ಮಾಡಿದ್ದೇವೆಂದು ತಿಳಿದಿರಬಹುದು. ಇನ್ನೊಮ್ಮೆ ಶಿಕ್ಷಿಸಲು ಹೊರಗೆ ಒಯ್ದಾರೆ ಎಂದು ಆಸೆಯಾಯಿತು. +ಎಷ್ಟು ಉಜ್ಜಿಕೊಂಡರೂ ಯಾವುದೋ ಮೂಲೆಯಿಂದ ತಗಣಿಗಳು ಕತ್ತಿನ ಪಟ್ಟಿ, ಕಂಕುಳ ಸಂದು, ತೊಡೆಯ ಸಂದುಗಳಲ್ಲಿ ಕಚ್ಚಿದುವು. ಈ ಕತ್ತಲಿನ ಕೊಣೆಯೊಂದು ಉದರವಿದ್ದಂತೆ, ಈ ಉದರದಲ್ಲಿ ತಾನು ಕ್ರಮೇಣ ಜೀರ್ಣವಾಗುತ್ತ ಹೋಗುತ್ತಿದ್ದಂತೆ ಭಾಸವಾಯಿತು. +ಈ ಬಗೆಯ ಯೋಚನೆ ಲೋಲುಪತೆ ಎಂದು ನಾಚಿಕೆಯಾಯಿತು. ಚಿತ್ರಹಿಂಸೆಯನ್ನು ಅತ್ಯಂತ ಸಂದಿಗ್ಧವಾಗಿ ನೆರವೇರಿಸುವ ಯಂತ್ರವನ್ನು ಕಲ್ಪಿಸುತ್ತ ಕೂತ. ಇದರಿಂದಲೂ ಸುಸ್ತಾಯಿತು. ಉಪವಾಸ ಮಾಡುತ್ತ ಎಷ್ಟು ದಿನಗಳಾದವೊ? ಮೂರೊ? ನಾಲ್ಕೊ? ಬಾಯಾರಿಕೆ ಪ್ರಾರಂಭವಾಗಿತ್ತು. ಕತ್ತಲಿನಲ್ಲಿ ಪರದಾಡುತ್ತ ಹೋಗಿ ಬೋಗುಣಿಯಲ್ಲಿ ಉಳಿದಿದ್ದ ನೀರಿನಿಂದ ಬಾಯನ್ನು ಒದ್ದೆ ಮಾಡಿಕೊಂಡ. +ತಾನೇನು ಮಾಡುತ್ತಿದ್ದೇನೆಂಬುದು ಪತ್ತೆಯಾಗದಂತೆಯೇ ಕೈಯ ಬೆರಳಿಂದ ನೆಲದ ಮೇಲಿನ ಧೂಳಿನಲ್ಲಿ ಅವನು ಸಮಯ ಮತದ ಸೃಷ್ಟಿ ಕ್ರಮದಲ್ಲಿ ಚಕ್ರವನ್ನು ಬರೆಯತೊಡಗಿದ್ದ. ಮಹೇಶ್ವರಯ್ಯ ಎದುರೇ ಕೂತು ವಿವರಿಸುತ್ತಿದ್ದವರಂತೆ ಭಾಸವಾಗುತ್ತಿತ್ತು. ಪ್ರಾಯಃ ಹಿಂದೊಮ್ಮೆ ಆದಂತೆ ಬುದ್ಧಿಭ್ರಮಣೆ ಆಗುತ್ತಿದೆ; ತಾನು ದೇವರನ್ನು ನಂಬುವುದಿಲ್ಲ ಎಂದುಕೊಳ್ಳುತ್ತಲೇ ಚಕ್ರವನ್ನು ಸೃಷ್ಟಿ ಮಾಡುತ್ತ ತಗಣಿಗಳನ್ನು ಮೈಯಿಂದ ಉಜ್ಜಿ ಕೊಲ್ಲುತ್ತ ಕೂತ. ಮೂಡಲು ಮುಖದ ತ್ರಿಕೋಣ ಮೊದಲು. ಮಧ್ಯೆ ಬಿಂದು. ಅದರ ಮೇಲೆ ಮೊದಲಿನ ತ್ರಿಕೋಣದ ಮಧ್ಯವನ್ನು ಭೇದಿಸಿ ಮೂಡಲ ಮುಖದ ಇನ್ನೊಂದು ತ್ರಿಕೋಣ. ಮೊದಲ ತ್ರಿಕೋಣಾಗ್ರದಿಂದ ಪಡುವಲು ಮುಖವಾಗಿ ಮತ್ತೊಂದು ತ್ರಿಕೋಣವ ಬರೆದು…….. ಮಹೇಶ್ವರಯ್ಯನ ಕಣ್ಣುಗಳು ಏಕಾಗ್ರವಾಗಿ ಹೊಳೆಯುತ್ತಿದ್ದವು. ಹಣೆಯ ಮೇಲೆ ಅಗಲವಾದ ಕುಂಕುಮ, ಒದ್ದೆಯಾದ ಉದ್ದನೆಯ ಕೂದಲು ಬೆನ್ನಿನ ಮೇಲೆ. ಕೆಂಪು ಅಂಚಿನ ಪಂಚೆಯನ್ನು ಕಚ್ಚೆಹಾಕಿ ಉಟ್ಟು, ಬತ್ತಲಾದ ಎದೆಯ ಮೇಲೆ ರುದ್ರಾಕ್ಷಿ ತೊಟ್ಟಿರುತ್ತಿದ್ದರು. +ಸಮಯಿಗಳಿಗೆ ಹೃದಯಕಮಲದಲ್ಲಿಯೇ ಪೂಜೆ -ಎಂದು ಮಹೇಶ್ವರಯ್ಯ ಹೇಳಿದ್ದರು. ಅಂಥ ಪೂಜೆಗೆ ಕೃಷ್ಣಪ್ಪ ಅಣಿಯಾಗುತ್ತಲಿದ್ದಾಗ ಮಹೇಶ್ವರಯ್ಯ ಚಿಂತಾಮಣಿ ಗೃಹವನ್ನು ವರ್ಣಿಸಿದ್ದರು. ಇದಕ್ಕೆ ಎಂಟು ಧಾತುಮಯವಾದ ಪ್ರಾಕಾರ, ಹನ್ನೊಂದು ರತ್ನಮಯವಾದ ಪ್ರಾಕಾರ, ಆರು ತತ್ವಮಯವಾದ ಪ್ರಾಕಾರ, ಹೀಗೆ ಒಟ್ಟು ಇಪ್ಪತ್ತೈದು ಪ್ರಾಕಾರಗಳು. ಒಂದಕ್ಕಿಂತ ಇನ್ನೊಂದು ಎತ್ತರ. ಯಾವುದೇ ಪ್ರಾಕಾರದಲ್ಲಿ ಪ್ರವೇಶ ಕಷ್ಟ……. +ತಾನು ಅಂಥ ಒಂದು ವ್ಯೂಹದಲ್ಲಿದ್ದೇನೆಂದು ಕೃಷ್ಣಪ್ಪ ಅರ್ಧ ಮತ್ತಿನಿಂದ ಅರ್ಧ ಹಾಸ್ಯದಿಂದ ಅಂದುಕೊಂಡ. ನಗಲು ಪ್ರಾರಂಭಿಸಿದ. ಮೂಲಾಗಾರ ಕಂದ ಮಧ್ಯದಲ್ಲಿ ಮದನಾಗಾರ ರೂಪವಾದ ತ್ರಿಕೋಣವಿದೆ. ಅಲ್ಲಿ ಊರ್ಧ್ವ ಮುಖವಾಗಿ ಸ್ವಯಂಭೂ ಲಿಂಗವಿದೆ. ಅದನ್ನು ಸರ್ಪಾಕಾರವಾಗಿ ಮೂರೂವರೆ ಸುತ್ತಿಕೊಂಡು ಇಂಪಾಗಿಯೂ ಅಸ್ಫುಟವಾಗಿಯೂ ಕುಂಡಲಿನೀ ಶಕ್ತಿ ಶಬ್ದ ಮಾಡುತ್ತಿದೆ. ಅಂಥ ಶಬ್ದ ನಗುತ್ತ ಹೊಟ್ಟೆ ಕುಲುಕುವಾಗ ತನ್ನಿಂದ ಹೊರಡುತ್ತಿದೆ ಎನ್ನಿಸಿತು. ಪರಮಶಿವ ಕಾಮೇಶ್ವರ, ಪಾರ್ವತಿ ಕಾಮೇಶ್ವರಿ ಇವರನ್ನು ಸಮಭಾವದಲ್ಲಿ ಇನ್ನು ಪೂಜಿಸುವುದು ಎಂದು ಸಿದ್ಧನಾದ. ಹೇ ಭಗವತಿ, ನಿನ್ನೊಡನೆ ಕೂಡದಿದ್ದರೆ ಆ ಪರಮಶಿವನು ಚರಿಸುವುದಕ್ಕೂ ಸಮರ್ಥನಲ್ಲ ಎಂದು ಧ್ಯಾನಿಸಿದ. ಸಮಯೆ ಎಂದು ದೇವಿಯನ್ನು ಕಣ್ಣೆದುರು ಕಟ್ಟಿಸಿಕೊಳ್ಳುತ್ತ ಹೋದ. ಮಹೇಶ್ವರಯ್ಯ ಬಾಯಿಪಾಠ ಮಾಡಿಸಿದ್ದ ಶ್ಲೋಕಗಳನ್ನು ಕಿರೀಟದಿಂದ ಕೆಳಗಿಳಿಯುತ್ತ ಗಟ್ಟಿಯಾಗಿ ಹಾಡತೊಡಗಿದ. ಹೊಳೆಯುವ ಕಿರೀಟ; ಅವಳ ಪಾರಿಜಾತಪುಷ್ಪದ ವಾಸನೆಯ ಕೂದಲು; ಮುಖದ ಕಾಂತಿ ಉಕ್ಕಿ ಹರಿಯುವುದಕ್ಕಾಗಿ ಇರುವ ದಾರಿಯಂತೆ ಕಾಣುವ ಅವಳ ಬೈತಲೆ; ಮನ್ಮಥನನ್ನು ಸುಟ್ಟ ಕಣ್ಣುಗಳು ತುಂಬಿಗಳಂತೆ ಮತ್ತವಾಗಿರುವ ಅವಳ ಮುಖಕಮಲ; ಮನ್ಮಥನ ಬಿಲ್ಲಿನಂತೆ ಹುಬ್ಬು; ಶೃಂಗಾರ-ವಿಸ್ಮಯ-ಭೀತಿ-ಹಾಸ್ಯಗಳನ್ನು ಮಿಂಚಬಲ್ಲ ಕಣ್ಣುಗಳು; ಅವಳ ಮೂಗುತಿ; ಅವಳ ಅಧರ; ನಾಲಿಗೆ ತಂಬೂಲ; ಕಂಠನಾಳ; ಕಂಠನಾಳದ ಮೂರು ರೇಖೆಗಳು; ಅವಳ ನಾಲ್ಕು ಕೈಗಳು; ಹಸ್ತ; ಸ್ತನ; ರೋಮಾವಳಿ; ಗಂಗಾನದಿಯ ಸ್ಥಿರವಾದ ಸುಳಿಯಂತಹ, ಶಿವನ ಕಣ್ಣಿಗೆ ತಪಸ್ಸಿನ ಸಿದ್ಧಿಯ ಬಿಲದ್ವಾರದಂತಿದೆ ಅವಳ ನಾಭಿ; ಅವಳ ಸ್ತನಭಾರದಿಂದ ಬಳಲಿದ ಮೆಲ್ಲಗೆ ಮುರಿಯುತ್ತಿದೆಯೋ ಎನ್ನುವಂತಿದ್ದ ನಡು; ಅದನ್ನು ರಕ್ಷಿಸಲಂತಿದ್ದ ತ್ರಿವಳಿ; ಲಘುವಾಗಿಯೂ ಅಗಲವಾಗಿಯೂ ಇರುವ ನಿತಂಬ; ಅವಳ ಪಾದಗಳು -ಎಲ್ಲವನ್ನೂ ನೆನೆಯುತ್ತ ಶ್ಲೋಕಗಳನ್ನು ನೆನಪು ಮಾಡಿಕೊಂಡು ಹಾಡುತ್ತ ಉನ್ಮತ್ತನಾಗಿ ಕೂತ. ಈ ತಗಣಿಗಳು, ಈ ಕತ್ತಲ ಕೋಣೆ, ಈ ಧೂಳು, ಎಲ್ಲವನ್ನೂ ನಿಕೃಷ್ಟವಾಗಿ ಕಂಡು ತಾನು ಗೆಲ್ಲುತ್ತಿದ್ದೇನೆ ಎನ್ನಿಸಿತು. ತನ್ನಿಂದ ಹೊರಡುವ ನಾದ ಸರ್ಪಾಕಾರವಾದ ಕುಂಡಲಿನಿಯದು ಎಂದು ತಿಳಿಯಲು ಏಕಾಗ್ರನಾಗಿ ತನ್ನೊಳಗೆ ಚಿತ್ತವನ್ನು ನಿಲ್ಲಿಸಲು ನೋಡಿದ. ಇಲ್ಲ -ಇದು ಬುದ್ಧಿಭ್ರಮಣೆಯಲ್ಲ ಎಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ರಗಳೆಯಾಗತೊಡಗಿದ್ದರಿಂದ ನಿಟ್ಟುಸಿರಿಟ್ಟು ಎದ್ದು ನಿಂತ. +ಶ್ರೀಚಕ್ರದಲ್ಲಿ ಮೂರು ರೇಖೆ ಕೂಡಿದ ಇಪ್ಪಲ್ಲನಾಲ್ಕು ಮರ್ಮಸ್ಥಾನಗಳಾದರೆ ಎರಡು ರೇಖೆ ಕೂಡಿದ ಇಪ್ಪತ್ತನಾಲ್ಕು ಸಂಧಿಸ್ಥಾನಗಳು. ಅಲ್ಲದೆ ಸೃಷ್ಟಿಕ್ರಮ ಮತ್ತು ಸಂಹಾರ ಕ್ರಮವೆಂದು ಎರಡು ಪ್ರಕಾರಗಳಿವೆ. ಸಂಹಾರಕ್ರಮದಲ್ಲಿ ಬರೆಯುವುದು ವಾಮಾಚಾರಿಗಳಾದ ಕೌಲಮತದವರದ್ದು. +ನನ್ನದು ಸಮಯಮತವಾದರೆ ದಪ್ಪ ಮುಖದ ಅಧಿಕಾರಿಯದು ಕೌಲಮತವಿರಬಹುದು. ಸಂಭೋಗ ಯಕ್ಷಿಣೀ ಸಿದ್ಧಿ, ಪರಸ್ತ್ರೀಗಮನ, ಮಕ್ಕಳ ನಾಲಿಗೆ ಕೊಯ್ಯುವ ಮಹಾ ಸಂಮೋಹನಾತಂತ್ರ ಇತ್ಯಾದಿ ವಾಮಮಾರ್ಗಗಳಿಂದ ದೇವಿಯನ್ನು ಪೂಜಿಸುತ್ತಿರುವ ಅವನು ಈ ತೆಲುಗುನಾಡಿನ ಪ್ರಸಿದ್ಧ ಕಾಪಾಲಿಕನಿರಬಹುದು. ಹೀಗೆ ಯೋಚಿಸುತ್ತ ಕೃಷ್ಣಪ್ಪನಿಗೆ ಮತ್ತೆ ನಗು ಉಕ್ಕಿ ಬಂತು. ಕತ್ತಲೆಯಲ್ಲಿ ಬಹುಬೇಗ ಸುಸ್ತಾಗಿ ಸಿಮೆಂಟ್ ಹಾಸಿಗೆ ಮೇಲೆ ಕೂತು ಕಣ್ಣುಮುಚ್ಚಿದ. ಬೆವರಿನಲ್ಲಿ ತೊಯ್ದು ತನ್ನ ಪಂಚೆ ಜುಬ್ಬಗಳು ಧೂಳಿನಲ್ಲಿ ಅಸಹ್ಯವಾದ್ದರಿಂದ ಅವುಗಳನ್ನು ಬಿಚ್ಚಿ ಎಸೆಯಬೇಕೆನ್ನಿಸಿತು. ಜುಬ್ಬವನ್ನು ಬಿಚ್ಚಿ ಅದನ್ನು ತಲೆಗಿಟ್ಟುಕೊಂಡು ಮಲಗಿದ. ತಳವಿಲ್ಲದ ಅಂತರಾಳದಲ್ಲಿ ತೇಲುತ್ತಿರುವಂತೆ ಅನ್ನಿಸಿತು. +.. +.. +.. +ಮತ್ತೆ ಎಷ್ಟು ಹೊತ್ತಾಯಿತೊ. ಪೇದೆಯೊಬ್ಬ ಬಂದು ಕೈಯನ್ನೆಳೆಯುತ್ತಿದ್ದ. ಕೃಷ್ಣಪ್ಪ ಎದ್ದು ಕೂತು ತಾನೆಲ್ಲಿದ್ದೇನೆಂಬ ನೆನಪು ಮಾಡಿಕೊಂಡ. ಅವನು ಎಳೆಯುತ್ತಲೇ ಇದ್ದುದರಿಂದ ಅವನು ಎಳೆದ ದಿಕ್ಕಿನಲ್ಲಿ ಹೋದ. ಉರ್ದುವಿನಲ್ಲಿ ಏನೋ ಬಯ್ಯುತ್ತಿದ್ದ ಅವನು ಕೀರಲು ದನಿಯ ಪೇದೆಯೆಂಬುದನ್ನು ಗಮನಿಸಿದ. +ಕೋಣೆಯ ಹೊರಗೂ ಕತ್ತಲಿತ್ತು. ಆದರೆ ರಾತ್ರೆಯ ಗಾಳಿ ಹಿತವಾಗಿತ್ತು. ಯಥೇಚ್ಛ ಗಾಳಿಯನ್ನು ಹೀರುತ್ತ ಕೃಷ್ಣಪ್ಪ ನಡೆದ. +ದೀಪಗಳಿಂದ ಅಂಗಳ ಪ್ರಕಾಶಮಾನವಾಗಿತ್ತು. ಏರೋಪ್ಲೇನ್ ಹತ್ತಿಸುವ ರಾಟೆಯಿಂದ ಇಳಿದಿದ್ದ ಹಗ್ಗ ಅಲ್ಲಾಡುತ್ತಿತ್ತು. ಒಂದು ಕುರ್ಚಿಯ ಮೇಲೆ ದಪ್ಪ ಮೋರೆಯ ಅಧಿಕಾರಿ ಕೂತು ಬಾಟಲಿನಿಂದ ರಮ್ಮನ್ನು ಗ್ಲಾಸಿಗೆ ಸುರಿದುಕೊಳ್ಳುತ್ತಿದ್ದ. ಅವನ ಕಾಲಿನ ಕೆಳಗೆ ಇಬ್ಬರು ಹೂಮುಡಿದಿದ್ದ ಹೆಂಗಸರು ಕೂತಿದ್ದರು. ಅವರ ಕೈಯಲ್ಲೂ ಗ್ಲಾಸುಗಳಿದ್ದುವು. ಇಬ್ಬರು ಉಟ್ಟಿದ್ದ ಸೀರೆಗಳೂ ದೀಪದಲ್ಲಿ ಮಿರುಗುತ್ತಿದ್ದುವು. ಅವರ ತುಟಿಗಳು ಕೆಂಪಾಗಿದ್ದವು. ಕಿವಿಯಲ್ಲಿ ಮಿರುಗುವ ಬೆಂಡೋಲೆಗಳಿದ್ದವು. ಕೈಗಳ ತುಂಬ ಹೈದರಾಬಾದಿನ ಪ್ರಸಿದ್ಧ ಕಲ್ಲಿನ ಬಳೆಗಳಿದ್ದವು. +ಉರ್ದುವಿನಲ್ಲೇನೋ ಅವನು ಹೇಳಿ ಗಹಗಹಿಸಿ ನಕ್ಕ. ಇಬ್ಬರು ಹೆಂಗಸರೂ ಒಬ್ಬರನ್ನೊಬ್ಬರು ಚೂಟಿಕೊಂಡು ಮುಗುಳ್ನಕ್ಕರು. ತನ್ನನ್ನೂ ಒಂದು ಕುರ್ಚಿಯ ಮೇಲೆ ಪೇದೆ ಕೂರಿಸಿದನೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. ದಪ್ಪ ಮುಖದ ಅಧಿಕಾರಿ ಕಾಲುಗಳನ್ನು ಚಾಚಿ ಆರಾಮಾಗಿ ಕೂತಿದ್ದರಿಂದ ಮಾನವೀಯವಾಗಿ ಕೃಷ್ಣಪ್ಪನಿಗೆ ಕಂಡ. +ಪ್ರಾಯಶಃ ಹಾಗೆಂದು ಅನ್ನಿಸಲು ಇನ್ನೊಂದು ಮುಖ್ಯ ಕಾರಣ ಅವನು ಈಗ ಕ್ಯಾಪ್ ಧರಿಸದ್ದರಿಂದ ಸಣ್ಣದಾಗಿ ಕತ್ತರಿಸಿದ ಅವನ ತಲೆ ಗೋಟಾಗಿದೆ ಎಂದು ಕೃಷ್ಣಪ್ಪನಿಗೆ ಕಾಣಿಸಿದ್ದು. ಮಗುವಾಗಿದ್ದಾಗ ತಲೆದೆಸೆಯಲ್ಲಿ ಬಟ್ಟೆಯನ್ನು ಉರುಟಾಗಿ ಸುತ್ತಿ ಮಧ್ಯದಲ್ಲಿ ತೂತುಬಿಟ್ಟು ಮಲಗಿಸುತ್ತಾರೆ -ತಲೆ ಹೀಗೆ ಗೋಟಾಗದಿರಲೆಂದು. ತನ್ನ ತಲೆ ಚೆಂದಾಗಿರುವ ಬಗ್ಗೆ ಅಮ್ಮ ಕೊಟ್ಟಿದ್ದ ವ್ಯಾಖ್ಯಾನ ಇದು. +“ಕುಡೀತೀಯ?” +ಇವನು ಕಾಪಾಲಿಕನೇ. “ಕುಡೀತೀಯ” ಎಂದು ಕೇಳುತ್ತಿದ್ದಾನೆ ಎಂಬ ಯೋಚನೆ ಬಂದಿದ್ದರಿಂದ ತನ್ನ ಕಠಿಣವಾದ ಮುಖ ಮೃದುವಾದ್ದನ್ನು ಅವನೂ ಗಮನಿಸಿರಬೇಕು. +“ನೀನು ಅಡ್ರೆಸ್‌ಗಳನ್ನು ಕೊಡದೇ ಇದ್ದರೆ ನನಗೆ ಪೀಕಲಾಟ ಗೊತ್ತ? ಆ ಜೋಷಿ ಇದಾನಲ್ಲ, ನನ್ನ ಇನೆಫ಼ಿಶಿಯಂಟ್ ಅಂತ ಕಾನ್ಫಿಡೆನ್ಸಿಯಲ್ ರಿಪೋರ್ಟಲ್ಲಿ ಬರೆದು ಬಿಡ್ತಾನೆ.” +ತನ್ನ ಮಾತಿಂದ ಅಧಿಕಾರಿ ಈ ಖುಷಿಯಾಗಿದ್ದ ಸಂದರ್ಭದಲ್ಲಿ ತೃಪ್ತನಾಗಬಹುದೆಂದು, ಕೃಷ್ಣಪ್ಪ +“ನನಗೇನೂ ಗೊತ್ತಿಲ್ಲ -ನಿಜವಾಗಿ” ಎಂದ. +“ಹಾಗಾದರೆ ಅವನೇನು ನಿನ್ನ ಅಕ್ಕನ ಗಂಡನ, ಅಥವಾ ಮಿಂಡನ? ಇಷ್ಟು ದೂರ ಬಂದಿದಿ ಅವನಿಗಾಗಿ?” +ಅಧಿಕಾರಿ ತನ್ನ ಕಾಲಿನ ಬುಡ ಕೂತವಳನ್ನು ಒದ್ದು ನಗತೊಡಗಿದ. +“ಅವನಿಗೆ ಭಾರಿ ಹೆಂಗಸರ ಹುಚ್ಚು ಅಂತ ಕೇಳಿದೇನೆ. ಇಲ್ಲಿಯಂತೆ ನಿಮ್ಮಲ್ಲೂ ಗುರುಗಳಿಗೆ ಸಪ್ಲೈ ಮಾಡಬೇಕ? ನೀನು ಅವನಿಗೆ ಪಿಂಪ್ ಕೆಲಸ ಮಾಡಿದೀಯ? ನನಗೇಂತ ತಂದಿದಾರೆ ನೋಡು ಈ ಇಬ್ರನ್ನ. ಫ಼ಸ್ಟ್ ಕ್ಲಾಸ್ ರಂಡೆಯರು ಇವರು. ಹೇಗೆ ಕಾಲೆತ್ತುತ್ತಾರೆ ಗೊತ್ತ? ನಿನ್ನ ಅಂಡು ಪಕಪಕ ಕುಣೀಬೇಕು -ಹಾಗೆ. ಇವರಲ್ಲಿ ಒಬ್ಬಳನ್ನು ತಗೊ -ನಂಗೆ ಅಡ್ರೆಸ್‌ಗಳನ್ನು ಕೊಡು. ಇಲ್ಲದಿದ್ರೆ ನನ್ನ ಪ್ರಮೋಶನ್‌ಗೆ ಸಂಚಕಾರವಾಗುತ್ತೆ. ನಿನಗೇನು ನನ್ನ ಕಷ್ಟ ಗೊತ್ತು? ನನಗೆ ಹತ್ತು ಮಕ್ಕಳು. ಟ್ವೆಂಟಿ ಫ಼ೋರ್ ಅವರ್ಸ್ ಡ್ಯೂಟಿ. ಆ ಜೋಷಿ ಕರೆದಾಗ ಇಲ್ಲಿ ಬಂದಿರಬೇಕು. ಜೋಷಿ ಮಂತ್ರಿಗಳಿಗೆ ಮಾತು ಕೊಟ್ಟಿದ್ದಾನೆ. ಆ ಮಂತ್ರಿ ದೊಡ್ಡ ದೈವಭಕ್ತ. ವಾರಕ್ಕೊಂದು ಸಾರಿ ತಿರುಪತಿಗೆ ಹೋಗ್ತಾನೆ. ಕಮ್ಯುನಿಸ್ಟರನ್ನ ನಿರ್ನಾಮ ಮಾಡ್ತೀನೀಂತ ಜೋಷಿ ಮಾತು ಕೊಟ್ಟುಬಿಟ್ಟು ನೋಡು ನನಗೂ ನಿನಗೂ ಹೀಗೆ ಪೀಕಲಾಟಕ್ಕೆ ಬಂದಿದೆ. ತಗೊ ಇವಳನ್ನು -ಹೂ” +ಅವನು ಬಾಗಿ ಹೆಂಗಸಿನ ಸೆರಗನ್ನು ಎಳೆದ. ರವುಕೆ ಬಿಚ್ಚಲು ಹೋದಾಗ ಅವಳು ಅವನನ್ನು ತಡೆದಳು. ಅವನು ತೂರಾಡುತ್ತ ಎದ್ದು ನಿಂತ. ಕೃಷ್ಣಪ್ಪ ಕೆಕ್ಕರಿಸಿ ನೋಡುತ್ತಿದ್ದುದನ್ನು ಕಂಡು ಅವನು : +“ನೋಡಿ ಈ ಬಡವ ಹೇಗೆ ರೋಫ಼್ ಹಾಕ್ತಿದಾನೆ -ಬಿಚ್ಚಿರೋ ಆ ಸುವರ್ ಬಟ್ಟೇನ್ನ” ಎಂದ ಇದ್ದಕ್ಕಿದ್ದಂತೆ. ಕೃಷ್ಣಪ್ಪ ಕೊಸರಿಕೊಂಡರೂ ಬಿಡದೆ ಇಬ್ಬರು ಪೇದೆಗಳು ಅವನನ್ನು ಹಿಡಿದುಕೊಂಡು ಬಟ್ಟೆಯನ್ನು ಬಿಚ್ಚಿ ನಗ್ನಗೊಳಿಸಿದರು. +“ಇವತ್ತು ನಿನ್ನಿಂದ ಹೇಗಾದರೂ ಪತ್ತೆ ಮಾಡು ಅಂದಿದಾನೆ ಜೋಷಿ. ನಾನು ನಿನಗೆ ಗೊತ್ತಿಲ್ಲ…..” +ಎಂದು ತೂರಾಡುತ್ತ ತನ್ನೆದುರು ಬಂದು ನಿಂತ. ಅವನು ಕೋಲಿನಿಂದ ಲಿಂಗವನ್ನು ಚುಚ್ಚುತ್ತ, ಹೆಂಗಸರ ಕಡೆ ನೋಡುತ್ತ +“ತರಡನ್ನ ಒಡೆದುಬಿಡ್ತೀನಿ ಹುಷಾರ್” ಎಂದು ಗಹಗಹಿಸಿ ನಕ್ಕ. +ಕೀರಲು ದನಿಯ ಪೇದೆ ಓಡಿಹೋಗಿ ಗ್ಲಾಸಿಗೆ ಇನ್ನಷ್ಟು ರಮ್ ಸುರಿದು ತಂದು ಅಧಿಕಾರಿಯನ್ನು ಮೆಲ್ಲನೆ ನಡೆಸಿಕೊಂಡು ಹೋಗಿ ಕುರ್ಚಿ ಮೇಲೆ ಕೂರಿಸಿದ. ತೇಗುತ್ತ ಕೂತ ಅಧಿಕಾರಿ ಗೆಲುವಿನ ಧ್ವನಿಯಲ್ಲಿ “ಏಯ್ ಅವನ ಬಾಯಿಗೆ ಉಚ್ಚೆ ಹೊಯ್ಯೊ” ಎಂದು ಇಂಗ್ಲಿಷಿನಲ್ಲಿ ಹೇಳಿದ. ಪೇದೆ ಸುಮ್ಮನೇ ನಿಂತದ್ದು ಕಂಡು ಉರ್ದುವಿನಲ್ಲಿ ಮತ್ತೆ ಕೂಗಿ ಹೇಳಿದ. ಒಬ್ಬ ಹೆಂಗಸು ಎದ್ದು ಬಂದು ಅವನ ತೊಡೆ ಮೇಲೆ ಕೂತು ಕೈಗಳಿಂದ ಅವನ ಕತ್ತುಬಳಸಿ ಏನೋ ಹೇಳಿದಳು. +“ಏಯ್ -” ಎಂದು ಅಧಿಕಾರಿ ಯಾರನ್ನೋ ಕರೆದ. ಮೈಕೈ ತುಂಬಿಕೊಂಡ ಹರೆಯದ ಒಬ್ಬ ಎದುರು ಬಂದು ನಿಂತ. ಅಧಿಕಾರಿ ನಗುತ್ತ ಏನೋ ಹೇಳಿದ. ಅವನು ಕೇಳದಿರಲು ತಾನೇ ಎದ್ದು ಹೋಗಿ ಮುದುಡಿ ಕೂತಿದ್ದ ಇನ್ನೊಬ್ಬಳನ್ನು ಎಬ್ಬಿಸಿ ಅವಳ ಬಟ್ಟೆಯನ್ನು ಬಿಚ್ಚಿದ. ಯುವಕನೂ ತನ್ನ ಬಟ್ಟೆಯನ್ನು ಬಿಚ್ಚಿದ. ಕೃಷ್ಣಪ್ಪ ಕಣ್ಣು ಮುಚ್ಚಿದ. ಓಡಲೆಂದು ಎದ್ದು ನಿಂತ. ಅಧಿಕಾರಿ ನುಗ್ಗಿ ಬಂದು ಕೃಷ್ಣಪ್ಪನನ್ನು ಹಿಡಿದುಕೊಂಡು ಅವನ ಕೈಕಾಲುಗಳನ್ನು ಕಟ್ಟಿಸಿ, ನೆಲದ ಮೇಲೆ ಮಲಗಿಸಿ, ತನ್ನ ಕೋಲಿನಿಂದ ಅವನ ಲಿಂಗವನ್ನು ಎತ್ತಿ ಹಿಡಿದು “ಫ಼್ಲಾಗ್ ಹಾಯಿಸ್ಟ್ ಮಾಡಿಸ್ತೀನಿ -ಸೆಲ್ಯೂಟ್” ಎಂದು ಅಬ್ಬರಿಸಿದ. ಎಲ್ಲರೂ ನಗಲು ಖುಷಿಯಾಗಿ, ಬೆತ್ತಲೆಯಾಗಿದ್ದ ಯುವಕನ ಅಂಡನ್ನು ಸವರುತ್ತ ತಟ್ಟುತ್ತ ನಿಂತ. ಕೃಷ್ಣಪ್ಪ ಬಿಟ್ಟ ಕಣ್ಣುಗಳನ್ನು ಮತ್ತೆ ಮುಚ್ಚಿ, ಅಧಿಕಾರಿ ನಗುವುದನ್ನೂ ಹುರಿದುಂಬಿಸುವುದನ್ನೂ ಕೇಳಿಸಿಕೊಂಡ. ಅಧಿಕಾರಿ ಮತ್ತೆ ಕೀರಲು ಧ್ವನಿಯ ಪೇದೆಯನ್ನು ಕೂಗಿ ಕರೆದು ಉಚ್ಚೆ ಹೊಯ್ಯುವಂತೆ ಹೇಳಿದ. ಕೃಷ್ಣಪ್ಪ ಗಾಬರಿಯಿಂದ ಕಣ್ಣು ಬಿಡಲು ಹೆಂಗಸಿನ ಮೇಲೆ ಬೆತ್ತಲೆ ಎಗರಿದ್ದ ತರುಣನೂ ಅವರನ್ನು ಬಗ್ಗಿ ನೋಡುತ್ತ ಕೇಕೆ ಹಾಕುತ್ತಿದ್ದ ಅಧಿಕಾರಿಯೂ ಕಂಡರು. ಅಧಿಕಾರಿ ಈ ದೃಶ್ಯ ನೋಡುತ್ತಲೇ ದೊಣ್ಣೆಯಿಂದ ಕೀರಲು ದನಿಯವನನ್ನು ನೂಕುತ್ತಿದ್ದ. +ಇಬ್ಬರು ಪೇದೆಗಳು ಬಂದು ಬಲಾತ್ಕಾರವಾಗಿ ಸಟ್ಟುಗ ಹಾಕಿ ತನ್ನ ಬಾಯಿ ಅಗಲಿಸಿದರು. ಅಧಿಕಾರಿಯ ಪ್ಯಾಂಟನ್ನು ಇನ್ನೊಬ್ಬಳು ಈಗ ಬಿಚ್ಚತೊಡಗಿದಳು. ಕೀರಲು ದನಿಯವ ತನ್ನ ಕಾಕಿ ಚಡ್ಡಿಯ ಗುಂಡಿ ಬಿಚ್ಚಿ ತನ್ನೆಡೆಗೆ ಏನೋ ಶಪಿಸುತ್ತ ಬಂದ. ತನ್ನ ಎದೆಯ ಮೇಲೆ ಕುಕ್ಕುರು ಕೂತ. ಒದ್ದಾಡದಿದ್ದಂತೆ ಇಬ್ಬರು ಪೇದೆಗಳು ಹಿಡಿದುಕೊಂಡದ್ದರಿಂದ ಕೃಷ್ಣಪ್ಪ ಸುಮ್ಮನಾದ. ಬಾಯಿಗೆ ಬೀಳಲಿರುವುದನ್ನು ನುಂಗದಂತೆ ಉಸಿರು ಕಟ್ಟಿದ. +ಅಧಿಕಾರಿ ಅಟ್ಟಹಾಸದಿಂದ ಕಿರುಚುತ್ತ, ಹುಡುಗನನ್ನು ಹುರಿದುಂಬಿಸುತ್ತ, ಬೆತ್ತಲಾಗಿ ನಿಂತ ಇನ್ನೊಬ್ಬ ಹೆಂಗಸನ್ನು ಹಿಸುಕುತ್ತಿದ್ದ. “ಆಯಿತಾ” ಎಂದು ಕೀರಲು ದನಿಯ ಪೇದೆಯನ್ನು ಕರೆದು ಕೇಳಿದ. ಪೇದೆ ಆಯಿತು ಎಂದು ಎದ್ದು ನಿಂತು ಗುಂಡಿ ಹಾಕಿಕೊಂಡ. ಅವನು ಉಚ್ಚೆಯನ್ನು ಹೊಯ್ಯಲಿಲ್ಲವೆಂಬುದು ಕೃಷ್ಣಪ್ಪನಿಗೆ ಆಶ್ಚರ್ಯವನ್ನುಂಟುಮಾಡಿತು. ಇದಾದ ನಂತರ ಅಧಿಕಾರಿ ತನ್ನನ್ನು ಮರೆತೇಬಿಟ್ಟು ಬೆತ್ತಲೆ ಹೆಂಗಸರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕುಡಿಯುತ್ತ ಕೂತ. ಕೃಷ್ಣಪ್ಪನಿಗೆ ಎಲ್ಲವೂ ಅಸ್ಪಷ್ಟವಾಗುತ್ತ ಹೋಯಿತು. +ಕಣ್ಣು ತೆರೆದಾಗ ಇಡೀ ಅಂಗಳದಲ್ಲಿ ಏನೋ ಮೃದುವಾಗಿ ಬಿರಿದುಕೊಳ್ಳುವ ಸಿದ್ಧತೆ ನಡೆಯುತ್ತಿದೆ ಎನ್ನಿಸುವಂತಿತ್ತು. ಕುರ್ಚಿ ಅಲ್ಲೇ ಇತ್ತು; ತ್ರೀ ಎಕ್ಸ್ ರಮ್ಮಿನ ಬಾಟಲಿ ಗ್ಲಾಸುಗಳೂ ಇದ್ದವು. ದೀಪಗಳನ್ನೆಲ್ಲ ಆರಿಸಿದ್ದರೂ ಅವು ಅಸ್ಪಷ್ಟವಾಗಿ ಕನಸಿನಲ್ಲಿ ಎಂಬಂತೆ ಕಾಣುತ್ತಿದ್ದವು. ಆಕಾಶದಲ್ಲಿ ಸ್ಫುಟವಾದ ನಕ್ಷತ್ರಗಳು ಮಂದವಾಗುತ್ತ ಹೋದವು. ಚಿಲಿಪಿಲಿ ಶಬ್ದ; ಏನೋ ಫಲವತ್ತಾಗುತ್ತಿರುವುದರ ಸೂಚನೆ; ಕೃಷ್ಣಪ್ಪ ದೀರ್ಘವಾಗಿ ಉಸಿರೆಳೆದುಕೊಂಡ. ಒಂದು ದೊಡ್ಡ ಸುಖ ತನಗೀಗ ಸಿಗುತ್ತದೆ ಎಂಬ ಆಶ್ವಾಸನೆ ಕೊಡುವಂಥ ವಾಸನೆಯನ್ನು ಗಮನಿಸಿದ. ಈ ಅಂಗಳದಲ್ಲಿ ಬೆಳೆದಿದ್ದ ಒಂದು ಗುಂಪು ಚೆಂಡು ಹೂವಿನ ಗಿಡಗಳು ಕಂಡವು. ಅಂಗಳದಲ್ಲಿ ಬೆಳೆದುಕೊಂಡ ಒಂದೊಂದು ಕಾಡುಗಿಡವನ್ನೂ ಕೃತಜ್ಞತೆಯಿಂದ ನೋಡುತ್ತ ಬಿರಿಯುವ ಮುಹೂರ್ತಕ್ಕಾಗಿ ಕಾದ. ಆಕಾಶ ಕೆಂಪಾಯಿತು. ಸೂರ್ಯನ ಕಿರಣಗಳು ಅಂಗಳವನ್ನು ಹೊಗುವುದನ್ನು ನಿರೀಕ್ಷಿಸಿದ. ತನ್ನ ಮೈಮೇಲೆ ಪಂಚೆ ಹೊದಿಸಿದ್ದರು -ಯಾರೊ -ಕೀರಲು ದನಿಯ ಪೇದೆ ಇದ್ದರೂ ಇರಬಹುದು. ಬೆಳಕು ಆಕಾಶವನ್ನೆಲ್ಲ ತೊಳೆಯುತ್ತ ಅರಳುತ್ತಿತ್ತು. +ಈ ಕ್ಷಣ ಆದಿ ಅಂತ್ಯವಿಲ್ಲದ್ದು; ಪ್ರಾಯಶಃ ತಾನೀಗ ಸತ್ತಿರಬಹುದು ಎಂದು ಅನ್ನಿಸಿತು. +.. +.. +.. +ಕತ್ತಕೆಯ ಕೋಣೆಗೆ ನೂಕಿದ ಮೇಲೆ, ಎಷ್ಟು ಹೊತ್ತಾಯಿತೆಂಬ ಪರಿವೆ ತನಗೆ ಮತ್ತೆ ಮರೆತು ಹೋಗಬಹುದೆಂದು ದಿಗಿಲಾಗಲು ಪ್ರಾರಂಭವಾದಾಗ, ಪೂರ್ವಸೂಚನೆಯಿಲ್ಲದೆ ಬಾಗಿಲು ತೆರೆಯಿತು. ಕೀರಲು ದನಿಯ ಪೇದೆ ಬಟ್ಟೆಗಳನ್ನು ಕೊಟ್ಟ. ಹೊರಗೆ ಕರೆದುಕೊಂಡು ಹೋದ. ಆಫ಼ೀಸಿನಲ್ಲಿ ಮಹೇಶ್ವರಯ್ಯ ಕಾದಿದ್ದರು. ಒಂದೂ ಮಾತಾದದೆ ಅವರು ಕಾರಿನಲ್ಲಿ ಕೂರಿಸಿಕೊಂಡು ಹೋದರು. ಹೋಟೆಲೊಂದರ ಎದುರು ಕಾರನ್ನು ನಿಲ್ಲಿಸಿ ರೂಮಿಗೆ ಅವನನ್ನು ಒಯ್ದರು. ಅಲ್ಲಿ ಅವರೇ ಅವನಿಗೆ ಸ್ನಾನ ಮಾಡಿಸಿ, ಹೊಸ ಅಂಗಿ ಪಂಚೆಗಳನ್ನು ಉಡಿಸಿ, ಕಿತ್ತಳೆ ರಸವನ್ನು ಕುಡಿಸಿದರು. +ನಿದ್ದೆ ಮಾಡಿ ಎದ್ದಾಗ ಸಂಜೆಯಾಗಿತ್ತು. ಮಹೇಶ್ವರಯ್ಯ ರೂಮಿಗೇ ಊಟ ತರಿಸಿದರು. ಗಾಜಿನ ಕಿಟಕಿಗಳ ಎದುರು ಕೂತು ಊರಿನ ಕ್ಷುದ್ರ ಬೀದಿಗಳನ್ನೂ, ಬಣ್ಣ ಕಳೆದುಕೊಂಡ ಕಟ್ಟಡಗಳನ್ನೂ ನೋಡುತ್ತ ಕೃಷ್ಣಪ್ಪ ಅನ್ನಕ್ಕಷ್ಟು ಮೊಸರು ಕಲಸಿಕೊಂಡು ತಿಂದ. ಮಹೇಶ್ವರಯ್ಯ ನಿಧಾನವಾಗಿ ತಮ್ಮ ಭಾವನೆಗಳನ್ನು ತೋರಗೊಡದಂತೆ ಕೃಷ್ಣಪ್ಪನ ಬಿಡುಗಡೆಯ ಕಥೆಯನ್ನು ಹೇಳಿದರು. +ಜೋಷಿಯಿಂದ ಪ್ರಯೋಜನವಿಲ್ಲೆಂದು ತಿಳಿದ ಮೇಲೆ ಮಹೇಶ್ವರಯ್ಯ ವಾರಂಗಲ್‌ನಲ್ಲಿ ನೆಲೆಸಿದ್ದ ಒಬ್ಬ ಪ್ರಸಿದ್ಧ ಕವಿಯ ಬಳಿ ಹೋದರು. ಮಹೇಶ್ವರ ಮತ್ತು ಪಾರ್ವತಿಯ ಲಗ್ನವನ್ನು ಕುರಿತು ಮಹಾಕಾವ್ಯ ಬರೆದಿದ್ದ ಈ ಕವಿ ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವನಾಗಿದ್ದ. ಕೀರ್ತಿವಂತ ವೈದಿಕ ಮನೆತನದಲ್ಲಿ ಹುಟ್ಟಿದವ. ಅಷ್ಟಾವಧಾನಿಗಳೆಂದರೆ ಇವರು ಹೆಸರಲ್ಲಿ ಮಾತ್ರವಲ್ಲ -ನಿಜದಲ್ಲೂ. ಈ ಕವಿಯೂ ದೈವಭಕ್ತ, ದೇವಿಯ ಉಪಾಸಕ, ರಸಿಕ ಎಂಬುದಷ್ಟೇ ಮಹೇಶ್ವರಯ್ಯನ ಆಸಕ್ತಿಗೆ ಕಾರಣವಾಗಿರಲಿಲ್ಲ. ಗೃಹಮಂತ್ರಿಗೆ ಈ ಕವಿ ಅಚ್ಚುಮೆಚ್ಚು. ಪಾರ್ವತಿ ಪರಿಣಯವನ್ನು ಅವಧಾನಿ ಗೃಹಮಂತ್ರಿಗೇ ಅರ್ಪಿಸಿದ್ದ. ಮಂತ್ರಿ ಆ ಮಹಾಕಾವ್ಯಕ್ಕೆ ಅತ್ಯುಚ್ಚ ಬಹುಮಾನಗಳನ್ನು ಕೊಡಿಸಿದ್ದ. +ಅವಧಾನಿ ರಾತ್ರೆಯಾದ ಮೇಲೆ ನಡೆಸುತ್ತಿದ್ದ ದರ್ಬಾರಿಗೆ ಮಹೇಶ್ವರಯ್ಯ ಒಂದು ದೊಡ್ಡ ಬಾಟಲು ವಿಸ್ಕಿ ತೆಗೆದುಕೊಂಡು ಹೋದರು. ಅವಧಾನಿ ಸುಶ್ರಾವ್ಯವಾಗಿ ತನ್ನ ಕವನಗಳನ್ನು ಪಠಿಸುತ್ತಿದ್ದ. ಸೇರಿದವರು ಮೆಚ್ಚುಗೆಯಿಂದ ತಲೆಹಾಕುತ್ತಿದ್ದರು. ತಾನು ಕರ್ನಾಟಕದಲ್ಲಿ ಅವಧಾನಿಯ ಅಭಿಮಾನಿಯೆಂದು ಹೇಳಿಕೊಂಡು ವಿಸ್ಕಿಯನ್ನು ಕೊಡಲಾಗಿ ಕವಿ ಹಸನ್ಮುಖಿಯಾಗಿ ಹೇಳಿದ: +“ನನ್ನ ಸುರಾಪಾನದ ಕೀರ್ತಿಯೂ ಕರ್ನಾಟಕದ ತನಕ ಹಬ್ಬಿದೆ ಎನ್ನಿ.” +ಮಹೇಶ್ವರಯ್ಯನೂ ಆತನೂ ಬಹಳ ಹೊತ್ತು ಸರ್ವಜ್ಞ ವೇಮನರ ಬಗ್ಗೆ ಮಾತನ್ನಾಡಿದರು. ಅವಧಾನಿ ರಾತ್ರೆ ಬೆಳೆದಂತೆ ಹುರುಪಾಗುತ್ತಾ ಹೋದ. ತನಗೆ ತಿಳಿದ ತೆಲುಗು ಸಾಲದೇ ಹೋದಾಗ ಮಹೇಶ್ವರಯ್ಯ ಸಂಸ್ಕೃತದಲ್ಲಿ ಮಾತಾಡಲು ತೊಡಗಿದರು. ಸಂಸ್ಕೃತ ತಿಳಿಯದ ಅವಧಾನಿಯ ಉಳಿದ ಅಭಿಮಾನಿಗಳ ಬಳಗ ಈ ಇಬ್ಬರ ಸಂಸ್ಕೃತ ಸಂಭಾಷಣೆಯಿಂದ ಪುಳಕಿತರಾಗಿ ವಿಸ್ಕಿಯನ್ನು ಹೀರಿದರು. ಬಾಟಲು ಮುಗಿಯುತ್ತಿದ್ದಂತೆ ಅವರಲ್ಲಿ ದೊಡ್ಡ ವ್ಯಾಪಾರಿಯೂ ವೈಶ್ಯ ಜನಾಂಗದವನೂ ಆಗಿದ್ದ ವೆಂಕಟರಮಣಯ್ಯ ಎಂಬಾತ ಕಾರಿನಲ್ಲಿ ಹೋಗಿ ಇನ್ನೊಂದು ಬಾಟ್ಲಿಯನ್ನು ತಂದ. ಅವರಿಗೆಲ್ಲ ಇದೊಂದು ಮಹತ್ವದ ರಾತ್ರೆ ಎನ್ನಿಸಿತ್ತು. ಬಹಳ ಹೊತ್ತಾದ ಮೇಲೆ ಅವಧಾನಿ ಮಹೇಶ್ವರಯ್ಯನನ್ನು ಬಂದ ಕಾರಣ ವಿಚಾರಿಸಿದ. ಮಹೇಶ್ವರಯ್ಯ ಮುಗ್ಧನಾದ ಕೃಷ್ಣಪ್ಪನ ಬಂಧನ ಹೇಳಲಾಗಿ ಅವಧಾನಿಯು ಈಗಿಂದೀಗಲೇ ಗೃಹಮಂತ್ರಿಗೆ ಫ಼ೋನ್ ಮಾಡುವ ನಿಶ್ಚಯ ಮಾಡಿ ಎದ್ದು ನಿಂತ. ವೆಂಕಟರಮಣಯ್ಯ ತನ್ನ ಕಾರಿನಲ್ಲಿ ಇಬ್ಬರನ್ನೂ ಮನೆಗೆ ಒಯ್ದು ಗೃಹಮಂತ್ರಿಗೆ ಲೈಟನಿಂಗ್ ಕಾಲ್ ಬುಕ್ ಮಾಡಿದ. ಅವಧಾನಿ ಫ಼ೋನೆತ್ತಿದಾಗ ಬಹಳ ವಿರಾಮವಾದ ಸಂಭಾಷಣೆ ಸುಮಾರು ಐದು ನಿಮಿಷ ನಡೆಯಿತು. ಗೃಹಮಂತ್ರಿ ಈಗೇನು ಬರೆಯುತ್ತಿದ್ದೀರೆಂದು ಅವಧಾನಿಗೆ ಕೇಳಿರಬೇಕು. ಅವಧಾನಿ ಸುಶ್ರಾವ್ಯವಾದ ಧ್ವನಿಯಲ್ಲಿ ತನ್ನ ಈಚೀಚಿನ ಪದ್ಯವನ್ನು ಹಾಡುತ್ತಿದ್ದಾಗ ವೆಂಕಟರಮಣಯ್ಯ ಹಿಗ್ಗುತ್ತ ತುದಿಗಾಲಿನ ಮೇಲೆ ನಿಂತಿದ್ದ. +ಮಹೇಶ್ವರಯ್ಯನಿಗೆ ಗಾಬರಿ. ಎಲ್ಲಿ ಅವಧಾನಿ ಕೃಷ್ಣಪ್ಪನ ಬಗ್ಗೆ ಮರೆಯುವನೋ ಎಂದು. ಪದ್ಯ ಮುಗಿಯುತ್ತಿದ್ದಂತೆ ಅವಧಾನಿಯನ್ನು ಹಗುರವಾಗಿ ಮುಟ್ಟಿ “ಹೆಸರು ಕೃಷ್ಣಪ್ಪ ಗೌಡ ಅಂತ” ಎಂದರು. ಅವಧಾನಿ ಇದೊಂದು ಸಾಮಾನ್ಯ ಸಂಗತಿ ಎನ್ನುವಂತೆ ಬಂಧನದ ವಿಷಯ ಹೇಳಿ ಏನನ್ನೋ ಕೇಳಿಸಿಕೊಳ್ಳುತ್ತ ತಾನು ಫ಼ೋನ್ ಮಾಡುವ ನಂಬರನ್ನೂ, ಅದು ಗೃಹಮಂತ್ರಿಗಳ ಪರಮ ಅಭಿಮಾನಿಗಳಾದ ವೆಂಕಟರಮಣಯ್ಯನದೆಂದೂ ತಿಳಿಸಿದ. ವೆಂಕಟರಮಣಯ್ಯ ಇದರಿಂದ ಹಿರಿಹಿರಿ ಹಿಗ್ಗಿದಂತೆ ಕಂಡಿತು. ಅವಧಾನಿ ಫ಼ೋನನ್ನು ಕೆಳಗಿಟ್ಟು ಇನ್ನು ಹತ್ತು ನಿಮಿಷಗಳ ಒಳಗಾಗಿ ನಿಮ್ಮ ಕೆಲಸವಾಗುತ್ತೆ ಎಂದು ಮಹೇಶ್ವರಯ್ಯನಿಗೆ ಹೇಳಿದ. ವೆಂಕಟರಮಣಯ್ಯ ಕಪಾಟಿನಿಂದ ಸ್ಕಾಚನ್ನು ತೆಗೆದು ಮೂವರಿಗೂ ಸುರಿದ. ಈಗಾಗಲೇ ಮಧ್ಯರಾತ್ರೆ ಕಳೆದಿತ್ತು. ಇವೆಲ್ಲ ತನ್ನ ಪಾಲಿಗೆ ಭೀಕರವಾಗಿದ್ದ ರಾತ್ರೆ ಹೊತ್ತಲ್ಲೇ ನಡೆದಿದ್ದೆಂದು ಕೃಷ್ಣಪ್ಪ ಆಶ್ಚರ್ಯಪಡುತ್ತ ಕೇಳಿಸಿಕೊಂಡ. ಹತ್ತು ನಿಮಿಷಗಳ ನಂತರ ಫ಼ೋನ್ ಬಂತು. ಜೋಷಿ ಫ಼ೋನಲ್ಲಿ ಸಿಗುತ್ತಿಲ್ಲವೆಂದು ಬೆಳಗಾದೊಡನೆ ಮಂತ್ರಿಗಳೇ ಖುದ್ದು ಅವನಿಗೆ ಫ಼ೋನ್ ಮಾಡುವುದಾಗಿಯೂ, ವೆಂಕಟರಮಣಯ್ಯನ ಮನೆಗೆ ಜೋಷಿಯಿಂದಲೇ ಫ಼ೋನ್ ಬರುವುದಾಗಿಯೂ ಮಂತ್ರಿಯ ಪಿ.ಎ ತಿಳಿಸಿದ. ಮಹೇಶ್ವರಯ್ಯ ವೆಂಕಟರಮಣಯ್ಯನ ಮನೆಯಲ್ಲೆ ರಾತ್ರೆ ಮಲಗಿದ್ದರು. ಬೆಳಗಾದ ಮೇಲೂ ಫ಼ೋನ್ ಬರಲಿಲ್ಲ. ವೆಂಕಟರಮಣಯ್ಯ ಸ್ನಾನ ಮಾಡಿ ಅಂಗಡಿಗೆ ಹೊರಟು ಹೋದ. ಅವಧಾನಿ ಏಳುವುದು ಮಧ್ಯಾಹ್ನದ ಮೇಲೆ. ಮಹೇಶ್ವರಯ್ಯ ದೇವಿಯನ್ನು ಮನಸ್ಸಿನಲ್ಲೆ ಸ್ಮರಿಸುತ್ತ ಕಾದರು. +“ಅಂತೂ ಕೊನೆಗೆ ಫ಼ೋನ್ ಬಂತು. ನಿನ್ನ ಬಿಡುಗಡೆಯಾಯ್ತು. ನೋಡು ಕೃಷ್ಣಪ್ಪ ಯಾವತ್ತೂ ರಾಜನ ಕಣ್ಣಿಗೆ ಬೀಳದಂತೆ ಬದುಕಬೇಕು …. ಆದರೆ ಅದು ನಿನ್ನ ಜಾಯಮಾನಕ್ಕೆ ಸಾಧ್ಯವಿಲ್ಲ. ನಿನ್ನ ಹಣೆಯಬರಹ …. ಬಿಡು – ಇನ್ನು ಆ ಮಾತೇ ಬೇಡ. ಸಂಜೆ ಹೋಗುವ” ಎಂದು ನಿಟ್ಟುಸಿರಿಟ್ಟರು. +***** +ಮುಂದುವರೆಯುವುದು +ಸಾವಿರದ ಶರಣವ್ವ ಕರಿಮಾಯಿ ತಾಯೆ ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ […] +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_434.txt b/Kannada Sahitya/article_434.txt new file mode 100644 index 0000000000000000000000000000000000000000..5eff5773d988a8d639390d0336c236ac1fa69893 --- /dev/null +++ b/Kannada Sahitya/article_434.txt @@ -0,0 +1,86 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +….ಫಟ್ಟೆಂದು ಹೊಡೆದಿತ್ತು ವಾಸನೆ! +ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು ಅನೀಟ ಎಂದು ಕರೆಸಿಕೊಳ್ಳುವ ತನ್ನ ನರ್ಸಿನ ಜತೆ ಡಾ.ಮುಕುಂದ , ಹದಿನೇಳು ವರ್ಷದ ಸುಂದರಿಯೊಬ್ಬಳಿಗೆ “ಸ್ಟಮಕ್ ವಾಷ್” ಕೊಡುವುದಕ್ಕೆ ಒಂದೈದು ನಿಮಿಷ ಮುಂಚೆ. ಏಸಿ ರೂಮಿನಲ್ಲಿ ನಡೆಯುತ್ತಿರುವ ಮೀಟಿಂಗಿನ ನಡುವೆ ಮೂಲಂಗಿ ಹುಳಿಯ ಡಬ್ಬಿ ತೆಗೆದಂತೆ, ಕೆಮಿಸ್ಟ್ರಿ ಲ್ಯಾಬಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅನಿಲ ತಯಾರಾದಾಗ ಬಂದಂತೆ, ಗಟ್ಟಿಯಾಗಿ ಮತ್ತು ತೀಕ್ಷ್ಣವಾಗಿ ಬಂದಿತ್ತು, ಆ ವಾಸನೆ. ಮೂಗಿನ ಹೊಳ್ಳೆಗಳನ್ನು ಭೇದಿಸಿ ನೇರವಾಗಿ ಮಿದುಳಿಗೇ ಬಡಿದಾಗ, ಈ ಮೂಗಿನ ಹೊಳ್ಳೆಯ ಕೂದಲುಗಳನ್ನೂ ಕತ್ತರಿಸಬೇಕಾಗಿರುವ ಸಭ್ಯ ಕೆಲಸಕ್ಕೆ ಸೇರಿದ್ದಕ್ಕೆ ದೂರಿಕೊಂಡ, ಮುಕುಂದ. ವಾಕರಿಕೆ, ಕಣ್ಣಲ್ಲಿ ನೀರು, ಏರಿದ ಕಿವಿಯ ಬಿಸಿ ಮುಂತಾದ ಕಾರಣಭರಿತ ವೈಜ್ಞಾನಿಕ ಪ್ರತಿಕ್ರಿಯೆಗಳ ಜತೆಗೆ ನಗುವೂ ಬಂದಿತು. ಎದುರು ಮಲಗಿದ್ದ ಬಿಳೀ ಸಪೂರ ಸುಂದರಿಯನ್ನೊಮ್ಮೆ ನೋಡಿದ. ಪ್ರಾಯಶಃ ತನ್ನ ಪ್ರಿಯಕರನಿಗೆ ಬುದ್ಧಿ ಕಲಿಸಲು ಒಂದು ನಾಲ್ಕು ವಿಟಮಿನ್ ಮಾತ್ರೆ ತೆಗೆದುಕೊಂಡು ಸುಳ್ಳು ಸುಳ್ಳೇ ಆತ್ಮಹತ್ಯೆಗೆಂದು ಪ್ರಯತ್ನಿಸಿ, ಈಗ ಪಟಪಟ ಕಣ್ಣುರೆಪ್ಪೆ ಮಿಟುಕಿಸಿಕೊಂಡು ಸುಳ್ಳು ಸುಳ್ಳೇ ಕೋಮಾದಲ್ಲಿರುವಂತೆ ನಟಿಸುತ್ತಿರುವ ಆ ಹುಡುಗಿಯ ಮುಂದೂ ನಗುವುದು ಡಾಕ್ಟರಾದ ತನಗೆ ಒಳ್ಳೆಯ “ಡೆಮೀನರ್’ ಅಲ್ಲವೆಂದು ಸ್ಕ್ರೀನಿನಿಂದ ಹೊರಗೆ ಬಂದು” ಅನೀಟಾ, ಆ ಡ್ರಿಪ್ ಹಾಕಿ ಬಾ. ಇಲ್ಲಿ ಆರ್ಡರ್ ಬರೆದಿದ್ದೇನೆ” ಎಂದು ಬಾಗಿಲು ತೆರೆದು ಹೊರಗೆ ಹೋಗಿ ಬೇರೆಲ್ಲಾದರೂ ಹೊಸಗಾಳಿ ಇದೆಯೇ ಎಂದು ಹುಡುಕಲು ಪ್ರಯತ್ನ ಮಾಡಲು ಪ್ರಯತ್ನ ಮಾಡುತ್ತಿದ್ದ. +” ಬಂದೇ” ಎಂದು ಬದುಕಿದೆಯಾ ಬಡಜೀವವೇ ಎಂದುಕೊಳ್ಳುತ್ತಾ ಹೊರಬಂದು” ಎಂತದದು ವಾಸನೆ” ಎಂದಳು, ನಗುತ್ತಾ. “ಎಂತದೋ, ಯಾರಿಗೆ ಗೊತ್ತು” ಎಂದ ಮುಕುಂದ. ” ನೀನಾ…..? ಮಧ್ಯಾಹ್ನ ಊಟಕ್ಕೆ ಏನು ತಿಂದಿದ್ದೀ?” ಕೇಳಿದಳು, ಯಾವ ಭಾವನೆಯೂ ಇಲ್ಲದೆ. ” ಸ್ಟುಪಿಡ್, ನಾನಲ್ಲ” ಎಂದು ಸ್ವಲ್ಪ ತೋರಿಕೆಗೆ ಸಿಟ್ಟು ಮಾಡಿದ, ಮುಕುಂದ. ” ನಾನೂ ಅಲ್ಲ, ಬಹುಶಃ ಆ ಸುಂದರಿಯೇ ಇರಬಹುದು” ಎಂದಳು, ಮತ್ತೆ ನಗುತ್ತಾ. ನಕ್ಕಾಗ ಈಕೆ ಚೆನ್ನಾಗಿ ಕಾಣುತ್ತಾಳೆ ಎಂದು ಸಾವಿರದ ಒಂದನೆಯ ಬಾರಿ ಅಂದುಕೊಂಡು ” ಗೊತ್ತಿಲ್ಲ, ಆದರೆ ಅದು ಅದರ ವಾಸನೆಯಾ?” ಕೇಳಿದ. “ಮತ್ತಿನ್ನೇನು. ಏನು ತಿಂದು ಬಂದಿದ್ದಳೋ? ” ವಾಸನೆ ತಡೆಯಲಾರದೇ ಕೇಸ್ ಪೇಪರ್‌ನಿಂದಲೇ ಮೂಗಿನ ಮುಂದೆ ಗಾಳಿಹಾಕಿಕೊಳ್ಳುತ್ತಾ ಬಡಬಡಿಸಿದಳು, ಅನೀಟಾ. +” ಮೆಲ್ಲಗೆ, ಮೆಲ್ಲಗೆ. ಕೇಳಿಸಿಕೊಂಡಾಳು” ಎಂದ, ಮತ್ತೊಮ್ಮೆ ನಗುತ್ತಾ, ಡಾ. ಮುಕುಂದ.” ಹೇಗೆ ಕೇಳಿಸಿಕೊಳ್ಳುತ್ತಾಳೆ, ಆಕೆ ಪೂರಾ ಔಟ್. ಆಲ್ಕೋಹಾಲ್ ಮತ್ತು ಔಷಧಗಳ ಕಾಂಬಿನೇಷನ್ ” ಕುತ್ತಿಗೆಗೆ ಕೈಯನ್ನು ಅಡ್ಡಡ್ಡ ಹಿಡಿದು ಸರಕ್ಕನೆ ಕೊಯ್ಯುವಂತೆ ಸರಿಸುತ್ತಾ ನಾಲಿಗೆಯನ್ನು ಹೊರಗೆ ತಂದು ಕಣ್ಣು ಮುಚ್ಚಿ ಸಾಯುವಂತೆ ನಟಿಸಿ ನಕ್ಕಳು. +” ಆಕೆ ಎಂಥದೂ ಸಾಯೋ ಔಷಧ ತೆಗೆದುಕೊಂಡಿಲ್ಲ. ಮತ್ತೆ ಎಂಥ ಕಾಂಬಿನೇಷನ್ ಆದರೂ, ಎಂಥ ಕೋಮಾದಲ್ಲಿದ್ದರೂ ಈ ವಾಸನೆಯಿಂದ ಏಳಲೇಬೇಕಲ್ವ. ಇನ್ನೊಂದು ಸ್ವಲ್ಪ ತೀಕ್ಷ್ಣವಾಗಿದ್ದರೆ ನಾವೆಲ್ಲಾ ಎಕ್ಸ್‌ಪ್ಲೋಡ್ ಆಗ್‌ಹೋಗ್ತಿದ್ವಿ. ಅದು ಎಕ್ಸ್‌ಪ್ಲೋಸೀವ್ ಗೊತ್ತಾ? ” ಕೇಳಿದ.” ಇಲ್ಲಪ್ಪಾ, ನನಗ್ಗೊತ್ತಿಲ್ಲ” ಅಂದಳು ಮತ್ತೊಂದು ಬೇರೆ ರೀತಿಯ ನಗೆಯನ್ನು ಕೊಟ್ಟು. +” ಓ. ನನಗೆ ಬಹಳ ಅನುಭವವಿದೆ. ನಾನು ಮೆಡಿಕಲ್ ಕಾಲೇಜಿನಲ್ಲಿದ್ದಾಗ ಸುಮಾರು ವಾರಕ್ಕೊಂದು ಇಂಥಾ ಕೇಸ್ ನೋಡ್ತಿದ್ವಿ. ನಮ್ಮೂರ್ಕಡೆ ಗಂಡಸರು ಬೆಳಗಾಗೆದ್ದು ಓಪನ್‌ಏರ್‌ಗೇ ಹೋಗೋದಿತ್ತು, ಆಗ” ಎಂದು ಹೇಳಿ, ಓಪನ್‌ಏರ್ ಅಂದರೆ ಏನು ಅನ್ನೋದನ್ನು ಚಿತ್ರಕವಾಗಿ ಅನೀಟಾ ಕಣ್ಣು ಮುಚ್ಚಿ ಹುಬ್ಬುಗಂಟು ಹಾಕುವತನಕ ವಿವರಿಸಿ” ಮತ್ತೆ, ರಿಫ್ಲೆಕ್ಸ್ ಬರಬೇಕಾದರೆ ಅವರುಗಳು ಸಿಗರೇಟ್ ಸೇದಲೇಬೇಕು. ಸರಿ, ಒಂದು ದಿನ ಯಾರೋ ಮೊದಲನೆಯಾತ ಸಿಗರೇಟ್ ಸೇದಿ ಎಸೆದು ಹೋಗಿದ್ದ. ಎರಡನೆಯಾತ ಬಂದು ಆ ಸಿಗರೇಟ್‌ನ ಮೇಲೇ ಕೂತ. ಸರಿ, ಮುಂದೆ ಗೊತ್ತಲ್ಲ, ಆತನಿಗೆ ಹತ್ತು ಪರ್ಸೆಂಟ್ ಸುಟ್ಟಗಾಯ, ಆಯಕಟ್ಟಿನ ಜಾಗದಲ್ಲಿ” ಮುಕುಂದ ಹೇಳಿದ. ಆತನಿಗೆ ಈ ರೀತಿ ಸ್ವಾನುಭವದ ಕಥೆಗಳನ್ನು ಹೇಳುವುದು ಬಹಳ ಇಷ್ಟ, ಅದೂ ಅನೀಟಾಳ ಮುಂದೆ. ಅನೀಟಾ ನಕ್ಕಳು, ಕಣ್ಣಲ್ಲಿ ನೀರು ಬರುವ ತನಕ ನಕ್ಕಳು….. ಡಾ.ಮುಕುಂದನೂ ನಕ್ಕ…. ಕೆಲಸದ ಈ ಕ್ಷಣಗಳನ್ನು ಮುಕುಂದ ಬಹಳ ಇಷ್ಟಪಡುತ್ತಿದ್ದ. ಇದೊಂದು ರೀತಿ ’ಸೆಕ್ಷುಯಲ್ ಟೆನ್‌ಶನ್’ ಬೆಳೆಸುತ್ತದೆಂದೂ, ಓರಗಿನ ಕೆಲಸಗಾರರ ನಡುವಿನ ಈ ರೀತಿಯ ಸಂಬಂಧ ಮ್ಯಾನೇಜ್‌ಮೆಂಟ್‌ನ ದೃಷ್ಟಿಯಿಂದ ಬಹಳ ಆರೋಗ್ಯಕರವೆಂದೂ ಬಹಳಬಾರಿ ತನ್ನ ಗೆಳೆಯರಿಗೆ ಹೇಳಿಕೊಳ್ಳುತ್ತಿದ್ದ. +“ಆದರೂ ಇದು ಅದೇನಾ” ಮತ್ತೆ ಕೇಳಿದಳು” ಅನೀಟಾ. ” ಇರಬಹುದು, ಇಲ್ಲದೆಯೂ ಇರಬಹುದು. ಆಪರೇಟಿಂಗ್ ರೂಮಿನಿಂದ ಏನಾದ್ರೂ ಗ್ಯಾಸ್ ಲೀಕಾಯ್ತೋ, ಅಥವಾ ಈ ಕ್ಲೀನ್ ಮಾಡೋರು ಏನಾದರೂ ಚೆಲ್ಲಿದರೋ ಏನೋ, ಆದರೂ ಬಹಳ ದಟ್ಟವಾಗಿದೆ.” ಎಂದು ” ಇರಲಿ, ನಮ್ಮ ಪೇಷೆಂಟು ಹೇಗಿದ್ದಾಳೋ ನೋಡೋಣ” ಎಂದುಕೊಂಡು ಸ್ಕ್ರೀನ್ ಸರಿಸಿ ಒಳಗೆ ಹೋದ. +ಅಲ್ಲಿ ಅವನಿಗೆ ಆಶ್ಚರ್ಯ ಬರುವಂತೆ ಹತ್ತು ನಿಮಿಷದ ಹಿಂದೆ ಕೋಮಾದಲ್ಲಿದ್ದಾಕೆ ಈಗ ಎದ್ದು ಕೂತಿದ್ದಳು. ಆಸ್ಪತ್ರೆ ಗೌನು ತೆಗೆದು ತನ್ನ ಬಟ್ಟೆ ಹಾಕಿಕೊಂಡು ಕೈಗೆ ಚುಚ್ಚಿದ್ದ ಡ್ರಿಪ್ಪನ್ನು ತಾನೇ ಕಿತ್ತೆಸೆದು ಹೊರಡಲನುವಾದಳು. ” ಏನಾಯ್ತು” ಎಂದ, ಮುಕುಂದ. +“ಏನೂ ಇಲ್ಲ, ನನಗೆ ಗುಣವಾಗಿದೆ, ನಾನಿನ್ನು ಮನೆಗೆ ಹೋಗಬೇಕು” ಅಂದಳು, ಸುಂದರಿ. +” ಅದು ಹೇಗೆ ಗುಣವಾಯ್ತು. ನಾವಿನ್ನೂ ಏನೂ ಮಾಡೇ ಇಲ್ಲ!” ಉಗುಳುನುಂಗಿದ, ಮುಕುಂದ. +” ನೀನೇನೂ ಮಾಡುವುದು ಬೇಡ. ನನಗೇನೂ ಆಗಿಲ್ಲ. ಮನೆಗೆ ಹೋಗಿ ಸಾಯ್ತೀನಿ, ಬೇಕಾದರೆ. ಈ ಆಸ್ಪತ್ರೆಯಲ್ಲಿರೋಲ್ಲ” ಅಂದಳು. +” ನೀನು ಹೋಗೋ ಹಾಗೆ ಇಲ್ಲ. ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದೀಯ. ನಾವು ಪೋಲೀಸ್‌ಗೆ ತಿಳಿಸಬೇಕು. ಅವರು ಬಂದು, ನಂತರ ಸೋಷಿಯಲ್ ವರ್ಕರುಗಳು, ಕೌನ್ಸೆಲರ್‌ಗಳು ಎಲ್ಲರನ್ನೂ ನೋಡುವ ತನಕ ನೀನು ಎಲ್ಲಿಗೂ ಹೋಗೋ ಹಾಗಿಲ್ಲ. ” ಮುಕುಂದ ಅಂದ. ಅವನ ಧ್ವನಿಯಲ್ಲಿ ಸ್ವಲ್ಪ ಹೆದರಿಕೆಯಿತ್ತು. +“ಟ್ರೈ ಮಿ, ಡಾಕ್ಟರ್. ನಾನು ಹೋಗುವವಳೇ. ನನ್ನ ಅಡ್ರೆಸ್ಸ್ ತಗೋ. ಪೋಲಿಸ್ನೋರ್ನ ಮನೇಗೇ ಕಳಿಸು” ಎಂದು ಎದ್ದು ನಿಂತಳು. +” ನನ್ನ ಮಾತು ಕೇಳು, ನೀನು ಹೋಗುವುದು ತಪ್ಪು. ಸಿಕ್ಕಾಪಟ್ಟೆ ಸೀರಿಯಸ್ಸಾಗಿದ್ದೀಯ. ಕುಡಿದ ಜ್ಞಾನದಲ್ಲಿ ಸಾಯುವ ಪ್ರಯತ್ನ ಮಾಡಿದ್ದೀಯ. ಏನು ತೆಗೆದುಕೊಂಡಿದ್ದೀಯೋ ಏನೋ. ಮನೆಗೆ ಹೋಗುವಹಾಗಿಲ್ಲ” ಎಂದು ಹೆದರಿಸಲು ಪ್ರಯತ್ನಪಟ್ಟ. +” ನಾನು ಅಷ್ಟೊಂದು ಕುಡಿದೂ ಇಲ್ಲ. ಮತ್ತು ಸಾಯುವಂತದ್ದನ್ನೇನನ್ನೂ ನಾನು ತೆಗೆದುಕೊಂಡೂ ಇಲ್ಲ. ನನ್ನನ್ನು ಈ ಆಸ್ಪತ್ರೆಯಲ್ಲಿ ನನ್ನ ಇಷ್ಟಕ್ಕೆ ವಿರುದ್ಧವಾಗಿ ಇಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ” ಎಂದವಳೇ ದಪದಪ ಹೊರಟೇಬಿಟ್ಟಳು. ಹೊರಗೆ ಕಾಯುತ್ತಿದ್ದ ಅವಳ ಅಮ್ಮನನ್ನು ಹೆದರಿಸಿದರೆ ಸ್ವಲ್ಪ ಹೊತ್ತು ಹುಡುಗಿಯನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಬಹುದೇನೋ ಎಂದು ಹೊರಗೆ ಹೋಗಿ ಅವಳ ಅಮ್ಮನನ್ನು ಹುಡುಕಿದ. ಆದರೆ ಅವನಿಗೆ ಆ ಅವಕಾಶವನ್ನೇ ಕೊಡದೆ, ಹೊರಗೆ ಹೋಗಿದ್ದ ಸುಂದರಿ ವಾಪಸ್ಸು ಅಮ್ಮನ ಜೊತೆ ಬಂದು, ಇಬ್ಬರೂ ಸೇರಿ” ಯೋ ಡಾಕ್ಟರೇ… ಒಬ್ಬ ಒಳ್ಳೆಯ ಲಾಯರನ್ನು ನೋಡಿಕೋ” ಎಂದು ಹೇಳಿ ಬಲಗೈನ ಮಧ್ಯದ ಬೆಟ್ಟನ್ನು ಆಕಾಶಕ್ಕೆ ಬಲವಾಗಿ ತೋರಿಸಿ ತುಟಿ ಕಚ್ಚಿ ಹೊರಗೆ ಹೋದರು. ಆಸ್ಪತ್ರೆಯ ಮ್ಯಾನೇಜ್‌ಮೆಂಟಿನ ಭಾಷೆಯ ಪ್ರಕಾರ ಹೇಗೆ ಮಿದುವಾಗಿ ವಿವರಿಸಿದರೂ ಇಲ್ಲೊಂದು ’ಅತೃಪ್ತ ಗ್ರಾಹಕ’ ಮನಸ್ಸು ಇದೆ ಎಂದು ಹೊಳೆದುಬಿಟ್ಟಿತು, ಮುಕುಂದನಿಗೆ. +ಬೆಪ್ಪನಂತೆ ನಿಂತಿದ್ದ, ಮುಕುಂದ. ಛೆ!.. ಎಂಥ ಕೆಲಸವಾಗಿಬಿಟ್ಟಿತು. ಹೊರಟೇಬಿಟ್ಟಳಲ್ಲ. ಏನು ಮಾಡಿದರೂ ತನಗೆ ಆಕೆಯನ್ನು ತಡೆದು ನಿಲ್ಲಿಸುವುದು ಸಾಧ್ಯವಿಲ್ಲವೆನ್ನುವುದು ಗೊತ್ತಿದೆ. ಅವಳನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದಕ್ಕೆ, ಅವಳು ಸಾಯಬಹುದು ಅನ್ನುವುದಕ್ಕಿಂತ ಅವಳು ಆಸ್ಪತ್ರೆಯಿಂದ ಹೊರಗೆ ಹೋಗಿ ತನಗೆ ಯಾವರೀತಿ ತೊಂದರೆ ಮಾಡಬಹುದು ಅನ್ನುವ ಹೆದರಿಕೆಯೇ ಬಲವಾಗಿರುವುದು ಆ ಕ್ಷಣದಲ್ಲೂ ಮುಕುಂದನಿಗೆ ಹೊಳೆಯದಿರಲಿಲ್ಲ. ತಾನು ಹುರುಪಿನಲ್ಲಿ ಏನೇನು ಮಾತಾಡಿದೆನೋ? ಏನೇನು ಕೇಳಿಸಿತೋ ಅವಳಿಗೆ? ನನ್ನ ಬುದ್ಧಿಗಿಷ್ಟು! ಸ್ಕ್ರೀನಿನ ಪಕ್ಕದಲ್ಲಿಯೇ ಆಕೆ ಇದ್ದಾಳೆ ಅನ್ನುವುದನ್ನು ಮರೆತು ಮಾತಾಡಿದೆನಲ್ಲ. ಏನು ಬಂದಿತ್ತು, ತನ್ನ ಮನಸ್ಸಿಗೆ. ಯಾವಾಗ ಆಕೆಗೆ ಜ್ಞಾನ ಬಂದಿರಬಹುದು? ಜ್ಞಾನ ಹೋಗಿದ್ದರೆ ತಾನೇ ವಾಪಸ್ಸು ಬರುವುದಕ್ಕೆ. ಯಾವ ಕೋಮಾದಲ್ಲಿದವಳು ಕಣ್ಣು ಪಿಳಿಪಿಳಿ ಬಿಡುತ್ತಾಳೆ, ಉಗುಳು ನುಂಗುತ್ತಾಳೆ, ಆಕಳಿಸಿ ಮೈಮುರಿಯುತ್ತಾಳೆ? ಅಷ್ಟೂ ಗೊತ್ತಾಗಬಾರದೇ ತನಗೆ? ಅನೀಟಾಳ ಮುಂದೆ ’ ಟೆನ್‌ಶನ್’ ಬೆಳೆಸೋಕೆ ಕೆಲವೊಂದು ಸಲ ಏನೇನೋ ಮಾತಾಡಿಬಿಡುತ್ತೇನೆ, ತಾನು. ಸ್ವಲ್ಪ ಯೋಚಿಸಬೇಕಾಗಿತ್ತು. ಲಾಯರ್‌ನ ಬೇರೆ ನೋಡ್ಕೋ ಅಂತಾಳೆ. ಏನ್ಗತೀನೋ ಏನೋ. ಛೆ! ಈ ಊರಲ್ಲಿ ಕೆಲಸಕ್ಕೇ ಬರಬಾರದಾಗಿತ್ತು. ಪೇಶೆಂಟುಗಳಿಗೆ ಯಾರು ತನ್ನ ಡಾಕ್ಟರು ಅನ್ನುವುದು ಗೊತ್ತಾಗದೇ ಇರುವ ಆಸ್ಪತ್ರೆಯಲ್ಲಿ ಕೆಲಸ ಹುಡುಕಬೇಕಾಗಿತ್ತು. +ಇರಲಿ, ಈಗಾಗಿದ್ದರೂ ಏನು ಮಹಾ! ಎಂಥದೋ ಕೆಟ್ಟ ವಾಸನೆ ಬಂತು. ಎಲ್ಲಿಂದ ಬಂತು ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ಕಾಯಿಲೆಯವಳಾಗಿದ್ದರೆ, ಈ ವಾಸನೆಯೆಲ್ಲಾ ಮುಖ್ಯವಾಗುತ್ತಿರಲಿಲ್ಲ, ಆಕೆಗೆ. ಕಾಯಿಲೆಯೆಂಥ ಬಂತು, ಸುಡುಗಾಡು. ಸಾಯೋರು ವಿಟಮಿನ್ ಮಾತ್ರೆ ನುಂಗುತ್ತಾರ? ಹುಚ್ಚು, ಹುಚ್ಚು. ತನ್ನ ಜೀವನ ಎಲ್ಲಾ ಬರೀ ಇಂಥ ಸುಖವಾಗಿರೋ ರೋಗಿಗಳನ್ನು ಶುಶ್ರೂಷೆ ಮಾಡುವುದೇ ಆಗಿಹೋಯಿತು, ಎಂದುಕೊಂಡು, ತಾನು ಈ ಕೆಲಸಕ್ಕೆ ಯಾಕೆ ಸೇರಬಾರದಾಗಿತ್ತು ಅನ್ನೋ ಕಾರಣಗಳಿಗೆ ಆದಿನ ಬಂದ ವಾಸನೆಯನ್ನೂ ಸೇರಿಸಿಕೊಂಡೂ ಆದಿನದ ಕೆಲಸ ಮುಗಿಸಿದ್ದ. ಅನೀಟಾ ಈ ಎಲ್ಲವನ್ನೂ ನೋಡಿಯೂ ನೋಡದಹಾಗೆ ಇರುವುದನ್ನು ನೋಡಿ ಸ್ವಲ್ಪ ಅನುಮಾನವಾಯಿತು. +-೨- +ಬೆಳಿಗ್ಗೆಯೇ ಆಸ್ಪತ್ರೆಯ ಅಡ್ಮಿನಿಸ್ಟ್ರೇಟರ್ ಮೆಕಾರ್ಥಿ ಫೋನ್‌ಮಾಡಿ, ಎರಡು ರೋಗಿಗಳ ನಡುವಿನ “ರಕ್ಷಿತ ಅವಧಿ”ಯಲ್ಲಿ ಒಂದು ಹದಿನೈದು ನಿಮಿಷ ಬಂದು ನೋಡು, ಎಂದು ಹೇಳಿದಾಗ, ಕೊಂಚ ಆತಂಕಗೊಂಡಿದ್ದ, ಮುಕುಂದ. ಏನಾದರೂ ತೊಂದರೆಯಾಗಬಹುದು ಎಂದುಕೊಂಡಿದ್ದರೂ, ವಾಸನೆಬಂದ ಹದಿನೈದು ದಿನಗಳ ಒಳಗೇ ಈ ರೀತಿ ಮೆಕಾರ್ಥಿಯಿಂದ ಕರೆ ಬರಬಹುದೆಂದು ಆತ ಊಹಿಸಿರಲಿಲ್ಲ. ಆತ ಕೇಳಬಹುದಾದ ಪ್ರಶ್ನೆಗಳನ್ನು ಊಹಿಸಿಕೊಂಡು, ಅದಕ್ಕೆ ತಾನು ಕೊಡಬೇಕಾದ ಉತ್ತರಗಳನ್ನು ಮನಸ್ಸಿನಲ್ಲೇ ತಾಳೆಹಾಕಿಕೊಳ್ಳುತ್ತಾ ಆಫೀಸಿನ ಮುಂದೆ ಟೈ ಸರಿಮಾಡಿಕೊಳ್ಳುತ್ತಾ ಕೂತಿದ್ದಾಗ, ಒಳಗಿಂದ ಅನಿಟಾ ಮೆಕಾರ್ಥಿಯ ಆಫೀಸಿನ ಬಾಗಿಲು ತೆಗೆದು, ಮೊದಲು ಬೆನ್ನು ಹೊರಗೆತಂದು ಹಿಂಭಾಗವನ್ನು ಲಯಬದ್ಧವಾಗಿ ಅಲ್ಲಾಡಿಸುತ್ತಾ ಒಳಗಿದ್ದ ಮೆಕಾರ್ಥಿಗೆ “ಹ್ಯಾವ್ ಅ ಗುಡ್ ಒನ್” ಅನ್ನುತ್ತ ತಿರುಗಿ, ಹೊರಗೆ ಕೂತಿರುವ ಮುಕುಂದನನ್ನು ನೋಡಿ ’ಹಾಯ್’ ಅನ್ನುತ್ತ ಹೋದಾಗ ಒಂದು ಕ್ಷಣ ಮೈ ಉರಿದುಹೋಯಿತು, ನಂತರ ಆ ನಗು ವಿಜಯದ ನಗೆಯೇನೋ ಅನ್ನುವ ಅನುಮಾನದಿಂದ ಸ್ವಲ್ಪ ಹೆದರಿಕೆಯೂ ಆಯಿತು. ಗೆಲ್ಲುವುದಕ್ಕೆ ಏನಾದರೂ ವಿಷಯವಿದೆಯೇ ಎನ್ನುವುದೂ ಅವನಿಗೆ ಹೊಳೆಯಲಿಲ್ಲ. ಆ ಘಟನೆಯಾದ ನಂತರದ ದಿನಗಳಲ್ಲಿ ತನ್ನ ಮತ್ತು ಅನೀಟಾಳ ಸಂಬಂಧ ಬರೀ ವೃತ್ತಿಪರವಾಗಿದ್ದು, ಅದರಲ್ಲಿ ಯಾವ ರೀತಿಯ ಟೆನ್‌ಶನ್ನೂ ಇಲ್ಲದಿರುವುದನ್ನು ತಾನೇ ಗಮನಿಸಿಕೊಂಡಿದ್ದ. +” ಕಮಿನ್, ಟೇಕ್ ಅ ಸೀಟ್” ಎಂದ, ಮೆಕಾರ್ಥಿ. ಈ ದಿನದ ಬಿಸಿಲು ಚೆನ್ನಾಗಿರುವುದೆಂದೂ, ತನಗೆ ಈ ದಕ್ಷಿಣದ ಹವಾ ಅಷ್ಟೊಂದು ಒಗ್ಗುತ್ತಿರಲಿಲ್ಲವೆಂದೂ, ತಾನು ಹುಟ್ಟಿಬೆಳೆದಿದ್ದೆಲ್ಲಾ ನ್ಯೂಯಾರ್ಕಿನಲ್ಲೆಂದೂ, ಸಣ್ಣ ಊರು ಶಾಂತವಾಗಿರುವುದರಿಂದ ಇಲ್ಲಿಗೆ ಬಂದನೆಂದೂ, ಹೇಳತೊಡಗಿದ. ಬೇಗ ವಿಷಯಕ್ಕೆ ಬಾರಯ್ಯಾ, ಮಹರಾಯ, ಪೀಠಿಕೆ ಜಾಸ್ತಿಯಾದಷ್ಟೂ ಮುಂದಿನ ಸಂಗತಿ ಕೆಟ್ಟದಾಗಿರುತ್ತದೆ ಅಂದುಕೊಂಡ, ಮುಕುಂದ. ಅವನ ಅನ್ಯಮನಸ್ಕತೆಯನ್ನು ಗಮನಿಸಿ ಮೆಕಾರ್ಥಿ ” ಸ್ವಲ್ಪ ತೊಂದರೆಯಾಗಿದೆ, ನೋಡು ಮುಕುಂದ್, ಅವತ್ತು ಏನಾಯಿತು ಅನ್ನೋದು ಮುಖ್ಯ ಅಲ್ಲ. ಆ ಹುಡುಗಿಯ ಅಮ್ಮ ಆಸ್ಪತ್ರೆಗೆ ಒಂದು ದೂರು ಕೊಟ್ಟಿದ್ದಾಳೆ. ಅದು ಬೋರ್ಡ್‌ಗೆ ಹೋಗುವ ಮುಂಚೆ ನಾವು ನಾವು ಸ್ವಲ್ಪ ವಿಷಯದ ಬಗ್ಗೆ ತಿಳಿದುಕೊಳ್ಳೋಣ, ಅಂತ. ಯಾರೊಬ್ಬರ ಮೇಲೂ ಬೆರಳು ಮಾಡಿ ತೋರಿಸುವುದು, ನಮ್ಮ ಉದ್ದೇಶವಲ್ಲ. ಆದ್ದರಿಂದ ಅಂದು ಎಮರ್ಜನ್ಸಿ ರೂಮಿನಲ್ಲಿದ್ದೋರನ್ನೆಲ್ಲಾ ಪ್ರಶ್ನೆ ಕೇಳಬೇಕಾಗಬಹುದು. ಇವತ್ತು ನಿನ್ನ ಸುಮ್ಮನೆ ವಿಷಯ ತಿಳಿಸೋಣ ಎಂದು ಕರೆಸಿದ್ದು. ಇಲ್ಲಿ ಕೆಲವೊಂದು ’ಗ್ರೌಂಡ್ ರೂಲ್ಸ್’ ಅನುಸರಿಸಬೇಕು. ರಿಸ್ಕ್ ಮ್ಯಾನೇಜ್‌ಮೆಂಟ್ ಹಾಗೂ ಅಡ್ಮಿನಿಸ್ಟ್ರೇಶನ್ ಬಿಟ್ಟು ಆಸ್ಪತ್ರೆಯ ಯಾವೊಂದು ಕೆಲಸಗಾರರ ಜತೆಗೂ ನೀನು ಈ ವಿಷಯದ ಬಗ್ಗೆ ಚರ್ಚೆ ಮಾಡಬಾರದು. ಬೇಕಾದಲ್ಲಿ ನಿನ್ನ ಹೇಳಿಕೆಗಳನ್ನು ಟೇಪ್ ಮಾಡಿಕೊಳ್ಳುತ್ತೇವೆ. ಈಗ ಹೇಳು, ನಿನಗೆ ಗೊತ್ತಿದ್ದಂತೆ ಆದಿನ ನಡೆದ ವಿಷಯವನ್ನು”. ಎಂದ , ಮೆಕಾರ್ಥಿ. +ತಾನು ತಿಳಿದಿರುವುದಕ್ಕಿಂತಾ ವಿಷಯ ಹದಗೆಟ್ಟಿರುವುದು ಮನನವಾಯಿತು, ಮುಕುಂದನಿಗೆ. ಹೆಚ್ಚೆಂದರೆ ಒಂದು ಸಣ್ಣ ದೂರು, ಮತ್ತು ಅದು ಸ್ಟಾಫ್ ಮೀಟಿಂಗಿನಲ್ಲಿ ಬಿದ್ದುಹೋಗಬಹುದೆನ್ನುವ ತನ್ನ ನಂಬಿಕೆ ಈಗಿನ ವಿದ್ಯಮಾನಗಳನ್ನು ನೋಡಿ ಸುಳ್ಳೆನ್ನಿಸಿತು. ಆದರೂ ಆ ವಾಸನೆಯ ಘಾಟು ಇಲ್ಲಿಯವರೆಗೂ ಬಂದಿರುವುದು ನೋಡಿ ತನಗೆ ತೀರ ಆಶ್ಚರ್ಯವಾಗದಿರುವುದನ್ನು ನೋಡಿಯೇ ಆಶ್ಚರ್ಯವಾಯಿತು. ಆದದ್ದಾಗಲಿ, ಎಂದು ಆ ದಿನ ನಡೆದದ್ದೆಲ್ಲಾ ಚಾಚೂ ತಪ್ಪದೆ ವಿವರಿಸಿದ. +” ಎಂಥ ಕಾಂಬಿನೇಷನ್‌ನ ಕೋಮ ಆದರೂ ಈ ವಾಸನೆಯಿಂದ ಏಳಲೇಬೇಕಲ್ವಾ, ಅಂದೆಯಂತೆ, ನೀನು?” ನೇರವಾಗಿ ವಿಷಯಕ್ಕೆ ಇಳಿದಿದ್ದ, ಮೆಕಾರ್ಥಿ. +” ಹೇಳಿರಬಹುದು, ನನಗೆ ಅಷ್ಟೊಂದು ನೆನಪಿಲ್ಲ” ಎಂದ, ಮುಕುಂದ. +” ಹೇಳಿರಬಹುದು, ಅಂದರೆ ಏನು, ನೀನೊಳ್ಳೆ ನಮ್ಮ ಹಳೆಯ ಪ್ರೆಸಿಡೆಂಟ್ ಮಾತಾಡಿದ ಹಾಗೆ ಮಾತಾಡುತ್ತೀಯಲ್ಲ” ಎಂದು ಕ್ಲಿಂಟನನ್ನು ನೆನಪಿಸಿದ. +” ಹೇಳಿದ್ದೆ, ಅನ್ನಿಸುತ್ತೆ” ಎಂದ, ಮುಕುಂದ. +“ಹೇಳಿದ್ದರೆ, ಅದೆಂಥ ವೃತ್ತಿಪರತೆ, ಈ ರೀತಿಯ ನಿನ್ನ ಬೇಜವಾಬ್ದಾರಿ ಮಾತುಗಳು ನಮ್ಮ ಆಸ್ಪತ್ರೆಯ ಸಾರ್ವಜನಿಕ ಸಂಬಂಧವನ್ನು ಯಾವಮಟ್ಟಿಗೆ ಇಳಿಸುತ್ತದೆ, ಅದು ಗೊತ್ತಾ. ಒಬ್ಬ ಜವಾಬ್ದಾರಿ ಇರುವ ವೈದ್ಯನಾಗಿ ನೀನು ಈ ರೀತಿ ಮಾತಾಡೋದು ತಪ್ಪಲ್ವಾ” ಕೆಣಕಿದ, ಮೆಕಾರ್ಥಿ. +” ನಿನಗೆ ಯಾರು ಹೇಳಿದ್ದು, ಅನೀಟಾ ತಾನೇ” +“ಇರಬಹುದು, ಇಲ್ಲವೇ ಆ ಹುಡುಗಿಯ ಅಮ್ಮ ಕೊಟ್ಟ ದೂರಲ್ಲಿದ್ದರೂ ಇರಬಹುದು. ಅದು ಮುಖ್ಯವಲ್ಲ. ನೀನು ಹಾಗೆ ಅಂದಿದ್ದೆ ಎಂದು ಹೊರಗೆ ಮೀಡಿಯಾದವರ ಕಿವಿಗೇನಾದರೂ ಬಿದ್ದರೆ, ನಮ್ಮ ಆಸ್ಪತ್ರೆಯ ಗತಿ ಏನಾಗಬಹುದು ಎಂಬುದನ್ನು ಯೋಚನೆ ಮಾಡಿದ್ದೀಯಾ. ಚಾನಲ್ ಒಂಬತ್ತರವರು ಈ ವಿಷಯದ ಬಗ್ಗೆ ಒಂದು ಪೀಸ್ ಮಾಡುತ್ತಿದ್ದಾರೆ. ಅದರಲ್ಲಿ ಏನೇನಿರುತ್ತೋ. ಮುಂದಿನ ವಾರದ ಹೆರಾಲ್ಡಲ್ಲಿ ಇದೇ ಕವರ್ ಸ್ಟೋರಿಯಂತೆ. ಈ ಹಾಳಾದ ಊರಲ್ಲಿ ಇದಕ್ಕಿಂತ ರಸವತ್ತಾದ ಸುದ್ದಿಯೇನು ಸಿಗಬೇಕು, ಹೇಳು. ಇಡೀ ದೇಶಕ್ಕೆ ದೇಶಾನೇ ಡಾಕ್ಟರುಗಳ ಅದಕ್ಷತೆಯ ಬಗ್ಗೆ ಮಾತಾಡುತ್ತಾ ಇರಬೇಕಾದರೆ ನಮ್ಮ ಸಣ್ಣ ಆಸ್ಪತ್ರೇನೂ ಆ ಪಟ್ಟಿಯಲ್ಲಿ ಸೇರ್ಕೋಬೇಕಾ, ಈಗ” ಕೊಂಚ ಖಿನ್ನನಾಗಿದ್ದ, ಮೆಕಾರ್ಥಿ. ಇದು ಮೀಡಿಯಾದವರ ತನಕ ಹೇಗೆ ಹೋಗುತ್ತದೆ, ಎಂದು ಒಂದು ಕ್ಷಣ ಅನ್ನಿಸಿದರೂ ಪ್ರೈಮರಿ ಸ್ಕೂಲಿನಲ್ಲಿ ಕೊಡುವ ಮಧ್ಯಾಹ್ನದ ಊಟದ ಮೆನುವನ್ನು ಮುಖಪುಟದಲ್ಲಿ ಹಾಕುವ ಈ ಲೋಕಲ್ ಪತ್ರಿಕೆಗಳಿಗೆ ಇದಕ್ಕಿಂತಾ ಹೆಚ್ಚಿನ ಸುದ್ದಿಯೇನು ಬೇಕು ಅನ್ನಿಸಿತು. +” ನಾನು ಹಾಗೆ ಹೇಳಿದ್ದು, ವೈದ್ಯನಾಗಿ ಅಲ್ಲ. ಅದೊಂದು ತರಾ ಪ್ರೊಫೆಶನಲ್ ಗಾಸಿಪ್. ಎಲ್ಲ ಕೆಲಸಗಳಲ್ಲೂ ಇದ್ದೇ ಇರುತ್ತದೆ. ಜೊತೆಯಲ್ಲಿನ ಕೆಲಸಗಾರರ ಜತೆಗಿನ ಸಂಬಂಧಗಳು ಸರಿಯಾಗಿರಬೇಕಾದರೆ ಕೆಲಸ ಮಾಡುವ ಜಾಗದಲ್ಲಿ ಇಂಥ ಗಾಸಿಪ್‌ಗಳು ಇರಲೇಬೇಕಾಗುತ್ತದೆ. ಇಷ್ಟಕ್ಕೂ ಆಕೆಗೆ ನಾನು ಕೊಟ್ಟ ಟ್ರೀಟ್‌ಮೆಂಟ್‌ನಲ್ಲಿ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ದೂರುಕೊಟ್ಟಿದ್ದರೆ ಏನೋ ಅನ್ನಬಹುದಾಗಿತ್ತು” ಎಂದು ಆಕ್ಷೇಪಿಸಿದ, ಮುಕುಂದ. +” ಇನ್ನುಮೇಲೆ, ಯಾವ ಪೇಷೆಂಟಿನ ಮೇಲಾದರೂ ಗಾಸಿಪ್ ಮಾಡೋ ಹಾಗಿದ್ರೆ, ಆ ವ್ಯಕ್ತಿ ಕೋಮಾದಲ್ಲಿದ್ದಾಳೋ ಇಲ್ಲವೋ ಅನ್ನೋದನ್ನು ಖಚಿತಪಡಿಸಿಕೋ” ಎಂದ, ಮೆಕಾರ್ಥಿ. +” ಆಕೆ ಕೋಮಾದಲ್ಲಿರಬೇಕಾಗಿತ್ತು…..” ಎಂದುಬಿಟ್ಟ, ಮುಕುಂದ. ನಂತರ ತಪ್ಪನ್ನರಿತುಕೊಂಡಂತೆ ” ನಾನೇನನ್ನುತ್ತಿದ್ದೇನೆ ಅನ್ನುವುದು ನಿನಗೆ ಗೊತ್ತಲ್ಲ” ಎಂದು ತಡವರಿಸಿದ. +ಮೆಕಾರ್ಥಿಯ ಹುಬ್ಬುಗಂಟು ಇನ್ನೂ ಬಿಗಿಯಾಗುತ್ತಿರುವಂತೆ ಇಬ್ಬರಿಗೂ ಆಶ್ಚರ್ಯವಾಗುವಂತೆ ಮೆಕಾರ್ಥಿಯ ಆಫೀಸಿನಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ಘಾಟುವಾಸನೆ ತುಂಬಿತು. ಇದ್ದವರು ಇಬ್ಬರೇ. ಬಲು ಕೆಟ್ಟವಾಸನೆ. ಇಬ್ಬರಿಗೂ ತಡೆಯಲಾಗಲಿಲ್ಲ. ತನ್ನ ಆಫೀಸಿನಿಂದ ಎಮರ್ಜನ್ಸಿ ರೂಮು ಎಷ್ಟು ದೂರದಲ್ಲಿದೆ, ಇದು ಅಲ್ಲಿಂದ ಹೊರಟು ಇಲ್ಲಿಗೆ ಬಂದಿದ್ದೋ ಅಥವಾ ಇಲ್ಲಿಂದ ಅಲ್ಲಿಗೆ ಹೋಗಿದ್ದೋ ಎಂದು ಮೆಕಾರ್ಥಿ ಯೋಚಿಸುತ್ತಿದ್ದರೆ, ಅಂದು ಮೊದಲು ವಾಸನೆ ಬಂದ ದಿನ ಮೆಕಾರ್ಥಿ ಎಮರ್ಜನ್ಸಿ ರೂಮಿನಲ್ಲಿಲ್ಲದಿದ್ದುದರಿಂದ ಈಗ ಬಂದ ವಾಸನೆ ತನ್ನ ಮೇಲಿನ ಅನುಮಾನವನ್ನು ಎಲ್ಲಿಗೆ ಏರಿಸಬಹುದು ಎಂಬುದನ್ನು ಮುಕುಂದ ಯೋಚಿಸುತ್ತಿದ್ದ. ಒಂದು ಕ್ಷಣ ಇಬ್ಬರಿಗೂ ತಮ್ಮ ಮೇಲೆಯೇ ಅನುಮಾನವಾಗಿ ಪೃಷ್ಠಗಳನ್ನು ಒಮ್ಮೆ ಕೂತಲ್ಲಿಂದ ಸರಿಸಿದರಾದರೂ ಮುಖದ ಮೇಲೆ ಯಾವ ಭಾವನೆಯನ್ನೂ ತೋರಿಸದೆ, ಮೂಗನ್ನೂ ತುರಿಸದಷ್ಟು ಸಭ್ಯರಾಗಿ ಕೂತಿದ್ದರು. ” ಈ ಏರ್‌ಕಂಡೀಶನಿಂಗ್ ಸಿಸ್ಟಮನ್ನು ಒಂದು ಬಾರಿ ಸರ್ವಿಸ್ ಮಾಡಿಸ್ಬೇಕು” ಎಂದ ಮೆಕಾರ್ಥಿ. ವಿಷಯಾಂತರ ಮಾಡಲು ಆತ ಮಾಡಿದ ಗರಿಷ್ಠಪ್ರಯತ್ನವದಾಗಿತ್ತು. ಮೆಲ್ಲಗೆ ಮುಕುಂದನಿಗೆ ” ಈಗ ನಿನಗೇನೂ ವಾಸನೆ ಬರಲಿಲ್ವಾ” ಅಂದ. ಮುಕುಂದ ಖಡಾಖಂಡಿತವಾಗಿ “ಇಲ್ಲ” ಅಂದಾಗ “ನನಗೂ ಇಲ್ಲ” ಅಂದ. ಸ್ವಲ್ಪ ಹೊತ್ತಾದ ಮೇಲೆ, ಈ ದಿನ ಮಾತಾಡಲು ಏನೂ ಉಳಿದಿಲ್ಲವೆಂದು ಹೇಳಿ ಮುಕುಂದನನ್ನು ಹೊರಗೆ ಕಳಿಸಿದ. ತಾನೂ ರೂಮಿನಿಂದ ಹೊರಗೆ ಬಂದ. +ಮುಕುಂದ ಕೆಲಸಕ್ಕೆ ಮರಳಿ ಹೋಗುವ ಮುನ್ನ ಕೆಫೆಟೇರಿಯಾಕ್ಕೆ ಹೋಗಿ ಒಂದು ಲೋಟ ಕಾಫಿ ಹಿಡಿದು ಕೂತ. ತಲೆ ಸಿಡಿಯುತ್ತಿತ್ತು. ವಿಷಯ ಎಲ್ಲಿಂದ ಎಲ್ಲಿಗೆ ಹೋಗುತ್ತಾ ಇದೆ. ಎಲ್ಲಿಂದ ಬರುತ್ತಿದೆಯೋ ಆ ದುರ್ವಾಸನೆ. ಆ ಸುಂದರಿಯಾ, ಪಕ್ಕದ ಮಂಚದ ಮೇಲೆ ಮಲಗಿದ್ದ ಆ ಮುದುಕನಾ, ಏಸಿ ಡಕ್ಟಿನ ಮೂಲಕ ಬೇರೆ ವಾರ್ಡಿಂದ ಬಂತಾ? ಅದು ಮನುಷ್ಯನ ಯಾವುದಾದರೂ ಅಂಗದಿಂದ ಬರುವ ವಾಸನೆಯೇ ಅಥವಾ ಆಸ್ಪತ್ರೆಯಲ್ಲೇ ಉದ್ಭವವಾಗುತ್ತಿರುವ ವಾಸನೆಯೇ? ಯಾರಿಗ್ಗೊತ್ತು, ಸಾವಿರಾರು ಜನ ಬಂದು ಹೋಗೋ ಜಾಗ, ಎಲ್ಲಿಂದ ಬಂದಿದೆಯೋ ಏನೋ? ದೊಡ್ಡದೊಡ್ಡ ಮೀಟಿಂಗಿನಲ್ಲಿ ಎಲ್ಲರೂ ಇದ್ದಾಗ ಬರದೇ, ತಾನು ಇದ್ದಾಗ ಮಾತ್ರ ಯಾಕೆ ಬರುತ್ತಿದೆ? ಬಂದದ್ದು ಬಂತು, ತಾನು ಸುಮ್ಮನಿರದೆ ಯಾಕೆ ಏನೇನೋ ಇನುಯೆಂಡೋಗಳಿರುವ ಜೋಕನ್ನು ಅಂದು ಮಾಡಬೇಕಾಗಿತ್ತು. ಆಕೆ ಕೋಮಾದಲ್ಲಿದ್ದಳು ಎಂದೇ ತಿಳಿಯೋಣ. ಹಾಗಾದಾಗಲೂ ರೋಗಿಗಳನ್ನು ತಮಾಷೆ ಮಾಡುವುದು ತನ್ನ ಹಿಪೋಕ್ರಾಟಿಕ್ ಪ್ರಮಾಣಕ್ಕೆ ಹೊರತಲ್ಲವಾ? +’ಛೆ! ಬಿಡು ಬಿಡು, ಮುಕುಂದಾ ಎಲ್ಲರೂ ಮಾತಾಡೇ ಆಡ್ತಾರೆ. ದಿನಬೆಳಗಾದರೆ, ಬರೇ ರೋಗಿಗಳ ಜತೆಗೇ ಇರೋ ನಿನ್ನಂಥವರ ಕಲ್ಪನಾಪ್ರಪಂಚ ಈ ಆಸ್ಪತ್ರೆ, ರೋಗಿಗಳನ್ನು ಬಿಟ್ಟು ಎಲ್ಲಿಗೆ ಹೋಗಲು ಸಾಧ್ಯ? ಇಷ್ಟು ಮಾತಾಡ್ತಾನಲ್ಲ, ಈ ಮೆಕಾರ್ಥಿ. ಈಗ ಅಡ್ಮಿನಿಸ್ಟ್ರೇಟರ್ ಆಗುವ ನಾಲ್ಕು ವರ್ಷ ಮುಂಚೆ ಯಾವುದೋ ಹುಡುಗಿ ಹಾಕಿದ ಕೇಸಿನಲ್ಲಿ ಗೆದ್ದಿದ್ದೆ ಎಂದು ಒಮ್ಮೆ ಪಾರ್ಟಿಯಲ್ಲಿ ಹೇಳಿಕೊಂಡಿರಲಿಲ್ಲವಾ? ಈ ಹುಡುಗಿಯರು ಹೊಟ್ಟೆನೋವು ಅಂತ ಬರ್ತಾರೆ, ಹೊಟ್ಟೆ ಅಮುಕಿ ನೋಡಿದರೆ ಡಾಕ್ಟರು ಎಲ್ಲೆಲ್ಲೋ ಮುಟ್ಟುತ್ತಾನೆ, ಅಂತ ಸೆಕ್ಶುಯಲ್ ಅಡ್ವಾನ್ಸ್‌ಮೆಂಟ್ ಅಂತ ಕೇಸ್ ಹಾಕ್ತಾರೆ. ಮುಖ್ಯ, ತಪ್ಪು ನಿನ್ನದು, ಮುಕುಂದ. ಆಕೆ ಕೋಮಾದಲ್ಲಿದ್ದಳೆ ಅನ್ನೋದನ್ನು ಖಚಿತಪಡಿಸಿಕೊಂಡು ಮಾತಾಡಬೇಕಾಗಿತ್ತು….. ಇಲ್ಲ ಬಿಡು…… ನೀ ಮಾಡಿದ್ದೇನೂ ತಪ್ಪಿಲ್ಲ. ಪ್ರಾಣ ಅಲ್ಲವೇ ನೀನು ಉಳಿಸ್ತಿರೋದು? ಒಂದು ಸ್ವಲ್ಪ ತಮಾಷೆ ಮಾಡಿದರೆ ಏನು ತಪ್ಪು?’- ತನ್ನ ಜತೆ ತಾನೇ ಮಾತಾಡಿಕೊಂಡಾಗ ಅದು ದುರಂತದ ಚಿಹ್ನೆ ಎಂದು ಎಲ್ಲಿಯೋ ಓದಿದ್ದ. +ಒಮ್ಮೆ ತಲೆ ಝಾಡಿಸಿಕೊಂಡು ಪ್ರಥಮಪುರುಷದಲ್ಲಿ ಯೋಚಿಸಲು ಮತ್ತೆ ಆರಂಭಮಾಡಿದ- ಅದು ಸರಿ, ಇಂದು ಈ ಮೆಕಾರ್ಥಿಯ ಆಫೀಸಿನಲ್ಲಿ ಎಲ್ಲಿಂದ ಬಂತು ಆ ವಾಸನೆ? ದರಿದ್ರ, ಈ ಆಸ್ಪತ್ರೆಯ ವೆಂಟಿಲೇಶನ್‌ನಲ್ಲಿಯೇ ಏನೋ ತೊಂದರೆಯಿದೆ ಅನ್ನಿಸುತ್ತೆ… ಅಥವಾ ತಾನೇ ಏನಾದರೂ….. ಛೆ! ಇರಲಾರದು… ಹಾಗೆ ತನಗೂ ಗೊತ್ತಾಗದ ಹಾಗೆ ಹೇಗೆ…. ಛೆ, ಛೆ, ಇಲ್ಲ… ಮುಕುಂದಾ.. ನಿನ್ನ ಮೇಲೆಯೇ ನೀನು ಅನುಮಾನ ಪಟ್ಟುಕೊಂಡರೆ ಹೇಗಪ್ಪಾ…. ಧೈರ್ಯವಾಗಿರು, ನೀನು ಹೇಳುವುದು ಸುಳ್ಳಾಗಿದ್ದರೂ ಅದರಲ್ಲಿ ನಿನಗೆ ನಂಬಿಕೆಯಿದ್ದರೆ ಅದು ಸುಳ್ಳಲ್ಲಪ್ಪಾ…..- ಬಹಳ ಹೊತ್ತು ಪ್ರಥಮಪುರುಷದಲ್ಲಿ ನಿಲ್ಲಲಾಗಲಿಲ್ಲ. +” ಯಾರಿರಬಹುದು, ನಿನಗೆ ಗೊತ್ತಾ” ಹಿಂದುಗಡೆಯ ಬೂತಿನಿಂದ ಯಾರೋ ಮಾತಾಡುತ್ತಾ ಇದ್ದರು. +” ನಾನಂತೂ ಅಲ್ಲಪ್ಪ” ಅನೀಟಾಳ ಧ್ವನಿ. +” ಅದ್‌ಹೇಗೆ ಅಷ್ಟು ಖಂಡಿತವಾಗಿ ಹೇಳುತ್ತೀಯ?” ಇನ್ನೊಬ್ಬಾಕೆ. +” ಛೀ! ಅದು ಗಂಡಸಿನ ಗುಣ”- ಅನೀಟಾ. +” ಓಹೋಹೋ… ಅದು ತುಂಬಾ ಸೆಕ್ಸಿಸ್ಟ್ ಹೇಳಿಕೆಯಾಗುತ್ತಮ್ಮ. ವಿಚಾರಣೆಯಲ್ಲಿ ಹಾಗೆ ಹೇಳಿಬಿಟ್ಟೀಯ, ಮತ್ತೆ” +” ಬರೀ ಅಷ್ಟೇ ಅಲ್ಲ. ಜೋರಾಗಿ ತೇಗೋದು, ಆಕಳಿಸೋದು, ಸೂರುಹಾರಿಹೋಗೋ ಹಾಗೆ ಸೀನೋದು, ಇವೆಲ್ಲ ಗಂಡುಗುಣಗಳೇ” ನಗುತ್ತಾ ಮುಂದುವರಿಸಿದಳು, ಅನೀಟಾ. +” ಹಾಗಾದ್ರೆ, ಇನ್ಯಾರು ಡಾ. ಮುಕುಂದೇ” +“ಯಾರಿಗೆಗೊತ್ತು, ಅಲ್ಲಿ ಇನ್ನೂ ಪಕ್ಕದಲ್ಲಿ ನಾಲ್ಕಾರು ಜನ ಗಂಡಸುರೋಗಿಗಳು ಇದ್ದರು, ಆದರೂ…. ಈ ಇಂಡಿಯನ್ ಅಡುಗೆಯಮೆಲೆ ನನಗೇನೋ ಅನುಮಾನ ನೋಡೂ….” ಎಂದು ಜೋರಾಗಿ ನಕ್ಕಳು, ಮತ್ತೊಮ್ಮೆ, ಅನೀಟಾ. +ಧಡ್ ಎಂದು ಎದ್ದು ನಿಂತು, ಹಿಂದೆತಿರುಗಿ ನೋಡಿ ತನ್ನ ಇರವನ್ನು ಅವರುಗಳಿಗೆ ಗೊತ್ತುಮಾಡಿಸಿದ. ಹೆದರುತ್ತಾರೆಂದು ತಿಳಿದವನಿಗೆ ಸ್ವಲ್ಪ ನಿರಾಶೆಯೇ ಆಯಿತು. ತಮ್ಮ ಪಾಲಿಗೆ ತಾವು ನಗುತ್ತಲೇ ಇದ್ದರು. ಮುಕುಂದನನ್ನು ನೋಡಿ ಮತ್ತೊಮ್ಮೆ “ಹಾಯ್” ಎಂದಳು. +-೩- +ಮುಕುಂದನಿಗೆ ಆಸ್ಪತ್ರೆಯ ಅಡ್ಮಿನಿಸ್ಟ್ರೇಷನ್‌ನಿಂದ ಒಂದು ನೋಟೀಸ್ ಬಂದಿತ್ತು. ಆ ಹುಡುಗಿಯ ಅಮ್ಮ ಈ ಆಸ್ಪತ್ರೆಯ ವಾತಾವರಣ ಆರೋಗ್ಯಕರವಲ್ಲವೆಂದೂ, ಅಂದು ಎಮರ್ಜನ್ಸಿರೂಮಿನಲ್ಲಿ ಬಂದ ವಾಸನೆಯ ಮೂಲವನ್ನು ಪತ್ತೆಹಚ್ಚದೇ ಇದ್ದರೆ, ಅದು ಮತ್ತೊಮ್ಮೆ ಬಂದು, ಅಕಸ್ಮಾತ್ ವಿಷವಾಯುವೇನಾದರೂ ಆಗಿದ್ದ ಪಕ್ಷದಲ್ಲಿ ಬರುವ ರೋಗಿಗಳನ್ನು ಯಾಕೆ ಕೊಲ್ಲುವುದಿಲ್ಲ ಅನ್ನುವುದಕ್ಕೆ ಆಸ್ಪತ್ರೆಯ ಅಧಿಕಾರಿಗಳು ಸರಿಯಾದ ಸಮಜಾಯಿಷಿ ಕೊಡಬೇಕು- ಎಂದು ಒಂದು ದೂರನ್ನು ಅಲಬಾಮ ರಾಜ್ಯದ ಆರೋಗ್ಯ ಇಲಾಖೆಗೆ ಕೊಟ್ಟಿದ್ದಳು. ಎರಡುವಾರಗಳಿಂದ ಸ್ಥಳೀಯ ಪತ್ರಿಕೆಗಳು ಈ ವಿಷಯವನ್ನು ಬಣ್ಣಬಣ್ಣವಾಗಿ ಬಿತ್ತರಿಸುತ್ತಿದ್ದವು. ಚಾನಲ್ ಒಂಭತ್ತರ ರಿಪೋರ್ಟರ್ ಯಾವುದೋ ಮುಖ್ಯ ಕಾರ್ಯಕ್ರಮವನ್ನು ಮೊಟಕುಮಾಡಿ ಮಧ್ಯಬಂದು” ಬ್ರೇಕಿಂಗ್ ನ್ಯೂಸ್” ಎಂದು ಅಕ್ಷರಗಳನ್ನು ಡಿಜಿಟಲ್ ಆಗಿ ಬದಲು ಮಾಡುತ್ತಾ ” ಬ್ರೇಕಿಂಗ್ ವಿಂಡ್” ಎಂಬ ಸುದ್ದಿಯನ್ನು ನಗುನಗುತ್ತಾ ಹೇಳಿದಳು. ಆ ಪದಗಳಿಗೆ ಹುಟ್ಟಬಹುದಾದ ಅಪಾರ್ಥದ ಕಲ್ಪನೆಯಿಲ್ಲದೆ ಬರೀ ಪ್ರಾಸಕ್ಕೋಸ್ಕರ ಉಪಯೋಗಿಸುತ್ತಿರುವ ರಿಪೋರ್ಟರ್‌ನ ಮೇಲೆ ಕೇಸ್ ಹಾಕಬೇಕು ಅಂದುಕೊಂಡ. ಮತ್ತೆ ಪ್ರಪಂಚಕ್ಕೆ ಇಷ್ಟೆಲ್ಲಾ ಕಷ್ಟವಿರಬೇಕಾದರೆ, ಅದನ್ನು ತೋರಿಸದೆ ಈ ಸಣ್ಣ ಆಸ್ಪತ್ರೆಯಲ್ಲಿ ಬಂದ ದುರ್ವಾಸನೆಯನ್ನು ಇಷ್ಟೊಂದು ಸ್ವಾರಸ್ಯಕರವಾಗಿ ತೋರಿಸುತ್ತಿರುವ ಟೀವಿಯವರ ಮೇಲೆ ಸಿಕ್ಕಾಪಟ್ಟೆ ಸಿಟ್ಟುಬಂತು, ಮುಕುಂದನಿಗೆ. ಆದರೆ ಮುಕುಂದನ ಹೆಸರು ವಿಶೇಷವಾಗಿ ಏನೂ ಪ್ರಸ್ತಾಪವಾಗಿರಲಿಲ್ಲ. ಕುರ್ಚಿಯ ತುದಿಯಲ್ಲಿ ಕೂತು ನೋಡುತ್ತಿದ್ದು, ತನ್ನ ಹೆಸರನ್ನು ಟೀವಿಯವರು ಹೇಳಲಿಲ್ಲ ಎಂದು ಸಮಾಧಾನಪಟ್ಟುಕೊಂಡ. +ಒಂದಾದಮೇಲೊಂದರಂತೆ ವಿಚಾರಣೆಗಳು ನಡೆದಿದ್ದವು. ಮೊದಲು ಆಸ್ಪತ್ರೆಯ ರಿಸ್ಕ್ ಮ್ಯಾನೇಜ್‌ಮೆಂಟ್‌ನವರು ಬಂದು ಮಾತಾಡಿದರು. ನಂತರ ಕೌಂಟಿಯ ಆರೋಗ್ಯ ಇಲಾಖೆಯವರು ಬಂದು ಪ್ರಾಥಮಿಕ ವಿಚಾರಣೆಗಳನ್ನು ಮುಗಿಸಿ, ಇನ್ನೊಂದೆರಡು ದಿನಗಳಲ್ಲಿ ರಾಜಧಾನಿಯಿಂದ ಆರೋಗ್ಯ ಇಲಾಖೆ ಇಬ್ಬರು ವಿಶೇಷ ಅಧಿಕಾರಗಳನ್ನು ವಿಚಾರಣೆಗೆ ಕಳಿಸಿಕೊಡುವುದಾಗಿ ಒಂದು ನೋಟೀಸನ್ನು ಕಳಿಸಿತ್ತು. ವಿಚಾರಣೆ ಇಡೀ ಆಸ್ಪತ್ರೆಯನ್ನು ಕುರಿತಾಗಿ ನಡೆದರೂ ಮುಕುಂದನಿಗೆ, ಎಲ್ಲರೂ ತನ್ನನ್ನೇ ತಪ್ಪಿತಸ್ಥನನ್ನಾಗಿ ನೋಡುತ್ತಿದ್ದಾರೆ ಎಂದನ್ನಿಸಿ, ತಲೆತಗ್ಗಿಸಿಕೊಂಡೇ ಓಡಾಡುತ್ತಿದ್ದ. ಈ ವಿಚಾರಣೆಗಳು ಮುಂದುವರೆದಂತೆಲ್ಲಾ ತನ್ನಮೇಲೆ ತನಗೆ ಅನುಮಾನ ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಸಣ್ಣ ಹುಳು ಎಲ್ಲಿಂದಲೋ ತನ್ನೊಳಗೆ ಹೊಕ್ಕು, ಎಲ್ಲಾ ಪಚನರಸಗಳಿಂದಲೂ ತಪ್ಪಿಸಿಕೊಂಡು ಸಣ್ಣ ಮತ್ತು ದೊಡ್ಡ ಕರುಳಿನ ಮಧ್ಯೆ ಎಲ್ಲೋ ಅಡಗಿಕೂತು, ಟುಸ್ಸೆಂದು ಬುಸುಗುಟ್ಟಿ ತನಗರಿವಿಲ್ಲದೆ ತನ್ನಸುತ್ತಲೂ ಶುರುವಾಗಿ ಎಲ್ಲೆಡೆ ಹರಡಿದಂತೆ ಭಾಸವಾಗತೊಡಗಿತ್ತು. ಹೆದರಿ ಒಬ್ಬನೇ ಟಾಯ್ಲೆಟ್ಟಿನಲ್ಲಿ ಬಟ್ಟೆ ಬಿಚ್ಚಿ, ತನ್ನ ದೇಹದ ವಿವಿಧ ಭಾಗಗಳನ್ನು ಮೂಸಿನೋಡಿ, ಅಂದಿನ ವಾಸನೆಯನ್ನು ಹೋಲಿಸಿನೋಡಿದ. ಮತ್ತೆ ಬಟ್ಟೆ ಹಾಕಿಕೊಳ್ಳಬೇಕಾದರೆ ಸೂಕ್ಷ್ಮವಾಗಿ ಗಮನಿಸಿದ- ಅಂಗಿ ಎಲ್ಲೋ ದಕ್ಷಿಣ ಅಮೆರಿಕಾದಲ್ಲಿ, ಪ್ಯಾಂಟು ಮೆಕ್ಸಿಕೋದಲ್ಲಿ ಮತ್ತು ಷೂಗಳು ಚೈನಾದಲ್ಲೂ ತಯಾರಾಗಿದ್ದವು.ಇವನು ಇಂಡಿಯಾದಲ್ಲಿ ತಯಾರಾಗಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಮೈಮೇಲೆ ಮೂರೆಳೆ ಜನಿವಾರವಿತ್ತು. ಈ ಅಲಬಾಮಾದ ಆಸ್ಪತ್ರೆಯ ಬಾತ್‌ರೂಮಿನಲ್ಲಿ ಕಕ್ಕಸ್ಸಿನ ಪಾಟ್ ಮತ್ತು ನೀರು ಬಿಟ್ಟರೆ ಬೇರೆ ಎಲ್ಲವೂ ಹೊರಗಿನದೇ ಅನ್ನಿಸಿತು. ಮೂಸಿನೋಡಿದಲ್ಲೆಲ್ಲಾ ಒಂದೇವಾಸನೆ ಬರುತ್ತಿತ್ತು. ಅದು ಇವನ ಮೈಯಿಂದ ಬಂದದ್ದೋ, ಹಾಕಿದ್ದ ಬಟ್ಟೆಯಿಂದ ಬಂದದ್ದೋ ಅಥವಾ ಕಕ್ಕಸಲ್ಲಿ ನಿಂತಿದ್ದರಿಂದ ತಿಳಿಯುತ್ತಿಲ್ಲವೋ ಗೊತ್ತಾಗದೇ ಕಂಗಾಲಾದ. ಛೆ! ಈ ವಾಸನೆಯನ್ನು ರೆಕಾರ್ಡ್ ಮಾಡುವಂಥದ್ದೇನಿಲ್ಲವಲ್ಲ ಎಂದು ಹಲುಬಿದ. +ಎಲ್ಲಾ ವಿಚಾರಣೆಗಳೂ ಸುಮಾರು ಒಂದೇ ರೀತಿ. ಅಂದು ಆಸ್ಪತ್ರೆಯಲ್ಲಿ ನಡೆದದ್ದೇನು ಎಂಬುದನ್ನು ಪ್ರತಿಯೊಬ್ಬರ ಬಾಯಿಂದಲೂ ಕೇಳುವುದು. ನಂತರ ಮನಸ್ಸಿಗೆ ಬಂದ ಪ್ರಶ್ನೆ ಕೇಳುವುದು-ಮುಕುಂದನ ಪ್ರಕಾರ,. ಬಟ್ಟೆ ಒಗೆದು ಎಷ್ಟು ದಿನವಾಗಿತ್ತು? ಮೈಗೆ, ಕಂಕುಳಿಗೆ ಡಿ‌ಓಡರೆಂಟ್ ಹಚ್ಚುತ್ತೀಯ? ತಲೆಗೆ ಎಂತ ಕ್ರೀಮ್ ಹಚ್ಚುವುದು? ಊಟ ಎಷ್ಟು ಹೊತ್ತಿಗೆ ಮಾಡಿದ್ದು? ಅಂದು ಬೆಳಿಗ್ಗೆ ಕಕ್ಕಸ್ಸಿಗೆ ಹೋಗಿದ್ದೆಯಾ, ಇತ್ಯಾದಿ. ಮೈಗೆ ಡಿ‌ಓಡೊರಂಟ್ ಹಚ್ಚುತ್ತೀಯ ಎಂಬ ಪ್ರಶ್ನೆಗೆ ಹೌದು ಎನ್ನುವ ಉತ್ತರ ಕೊಡಲಾಗಲಿಲ್ಲ, ಮುಕುಂದನಿಗೆ. ಯಾವುದೋ ಕೆಟ್ಟ ಟೀವಿಯ ಸೀರಿಯಲ್‌ನ ಪ್ರಭಾವ, ಹೌದು ಎಂದು ಎದೆ ತಟ್ಟಿ ಹೇಳುವಷ್ಟು ತನ್ನ ಗಂಡಸುತನ ಸೆಕ್ಯೂರ್ ಆಗಿಲ್ಲವೆಂದು ತಿಳಿದು” ಹಚ್ಚುವುದಿಲ್ಲ” ಎಂದು ಹೇಳಿದ್ದ. ನಂತರ ಈ ಒಂದು ವಿಷಯದಲ್ಲಿ ಅನೀಟ ಗೆದ್ದುಬಿಟ್ಟಳಲ್ಲಾ ಎಂದು ಮತ್ತೆ ಹಲುಬಿದ್ದ.ರಾಜಧಾನಿಯಿಂದ ಬರುವವರು ಇನ್ನೂ ಏನೇನೋ ಕೇಳಬಹುದು ಎಂದು ಆಸ್ಪತ್ರೆಯ ರಿಸ್ಕ್ ಮ್ಯಾನೇಜ್‌ಮೆಂಟ್‌ನವರು ಇವನನ್ನು ತಯಾರುಮಾಡುತ್ತಿದ್ದರು.ಆದಷ್ಟು ಹೌದು ಅಥವಾ ಅಲ್ಲ ಅನ್ನುವ ಉತ್ತರಗಳನ್ನು ಮಾತ್ರ ಕೊಡಬೇಕೆಂದೂ, ಇಲ್ಲಿ ಪ್ರಶ್ನೆಗಿರುವುದು ಆಸ್ಪತ್ರೆಯ ಮರ್ಯಾದೆಯೇ ಹೊರತು, ಮುಕುಂದನ ಗಂಡಸುತನದ ಸೆಕ್ಯುರಿಟಿಯಲ್ಲ ಎಂದು ಮತ್ತೊಮ್ಮೆ ಮನದಟ್ಟು ಮಾಡಿಹೇಳಿದರು. ಮತ್ತೆ ವಿಷಯ ತೀರ ಹದಗೆಟ್ಟರೆ ಅವರುಗಳು ಡೀ‌ಎನ್‌ಏ ಸ್ಯಾಂಪಲ್ಲುಗಳನ್ನೂ ಕೇಳಬಹುದು ಎಂದು ಹೇಳಿದಾಗ ಮುಕುಂದ ತಬ್ಬಿಬ್ಬಾದ. ಎಂಥ ಸ್ಯಾಂಪಲ್ಲು, ಎಲ್ಲಿಂದ ಡೀ‌ಎನ್‌ಏ ಹುಡುಕುತ್ತಾರೆ, ಗಾಳಿಯಲ್ಲಿ ಲೀನವಾಗಿಹೋಗಿರುವ ಆ ಅನಿಲಕ್ಕೆ ಡೀ‌ಎನ್‌ಏ ಅನ್ನುವುದೇನಾದರೂ ಇದೆಯೇ? ಇದ್ದರೂ ಅದನ್ನು ಆಸ್ಪತ್ರೆಯ ಕೆಲಸಗಾರರೆಲ್ಲರ ಡೀ‌ಎನ್‌ಏಗಳಿಗೆ ಹೇಗೆ ಹೋಲಿಸುತ್ತಾರೆ? ಛೆ! ಮುಕುಂದಾ ನೀನು ಕಾಲೇಜುನಲ್ಲಿದ್ದಾಗ ಸ್ವಲ್ಪ ಬೇಸಿಕ್ ರಿಸರ್ಚ್ ಮಾಡಬೇಕಾಗಿತ್ತು, ಕಣಯ್ಯ. ನೋಡು ಈಗ ಇಂಥ ಸಮಯದಲ್ಲಿ ನಿನ್ನನ್ನು ಯಾವ್ಯಾವೋನೋ ಕ್ಲರ್ಕ್‌ಗಳೆಲ್ಲಾ ತಮಗೆ ಗೊತ್ತಿರುವ ಪದಗಳನ್ನೆಲ್ಲಾ ಉಪಯೋಗಿಸಿ ನಿನ್ನನ್ನು ಯಾಮಾರಿಸುತ್ತಿದ್ದಾರೆ. ನೀನು ಹೆದರಬೇಡ, ಇವರೆಲ್ಲಾ ಕಥೆಕಟ್ಟುತ್ತಿದ್ದಾರೆ. ಧೈರ್ಯವಾಗಿರು, ಮುಕುಂದ- ಛೆ! ಮತ್ತೆ ಪರಕಾಯಪ್ರವೇಶ, ತಲೆ ಕೊಡವಿ ಬೈದುಕೊಂಡ. +ಇಷ್ಟರ ಮಧ್ಯೆ ಮುಕುಂದನ ಗ್ರಹಚಾರಕ್ಕೆ ಚಾನಲ್ ಒಂಭತ್ತರವರು ಇನ್ನೊಂದು ಬ್ರೇಕಿಂಗ್ ನ್ಯೂಸ್‌ನಲ್ಲಿ ಆ ಹುಡುಗಿಯನ್ನು ಹಾಗೂ ಅವಳ ಅಮ್ಮನನ್ನು ಸಂದರ್ಶನ ಬೇರೆ ಮಾಡಿಬಿಟ್ಟಿದ್ದರು. ನೀಟಾಗಿ ಮೇಕಪ್‌ಮಾಡಿಕೊಂಡು, ಡ್ರೆಸ್‌ಸೂಟ್ ಹಾಕಿಕೊಂಡು, ಕೂದಲು ಇಳಿಬಿಟ್ಟುಕೊಂಡು ಕತ್ತರಿಗಾಲು ಹಾಕಿ ಕೂತುಕೊಂಡು” ಹೌದು, ನಾನು ತಪ್ಪು ಮಾಡಿದ್ದೆ. ನನಗೆ ಬರಿ ಹದಿನೇಳು ವರ್ಷ. ಬುದ್ಧಿ ಕೆಟ್ಟು ಸಾಯಬೇಕೆಂದು ಅಮ್ಮನ ನಿದ್ದೆಮಾತ್ರೆ ತೆಗೆದುಕೊಂಡೆ. ಯಾರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ನನಗೆ ಇರೋದೆಲ್ಲಾ ಬರೇ ಮಸುಕುಮಸುಕು ನೆನಪು. ಕಣ್ಣು ಮಂಜಾಗುತ್ತಿತ್ತು. ನನಗೆ ವಾಂತಿಮಾಡಿಸಲು ಏನೋ ಕುಡಿಸುತ್ತಿದ್ದರು. ಆಗ ಇದ್ದಕ್ಕಿದ್ದಹಾಗೆ ಒಂದು ಕೆಟ್ಟವಾಸನೆ ಬಂತು. ಕೊಳೆತಹೆಗ್ಗಣದ ತರ. ಅದು ಏನೆಂದು ಹೇಳಲು ಗೊತ್ತಿಲ್ಲ. ಬಹಳ ಕೆಟ್ಟದಾಗಿತ್ತು. ಕಣ್ಣು ಬಿಟ್ಟಾಗ- ಮೊದಲೇ ಹೇಳಿದ್ದೆನಲ್ಲ, ಕಣ್ಣು ತುಂಬಾ ಮಂಜಾಗಿತ್ತು. ಯಾರದೋ ಹಿಂಭಾಗ ಕಾಣಿಸಿತು. ಬಿಳೀಕೋಟು ಇತ್ತು, ಅನ್ನಿಸುತ್ತೆ. ಆದರೆ ಒಂದು ಮಾತ್ರ ತುಂಬಾ ಚೆನ್ನಾಗಿ ನೆನಪಿದೆ ’ ಈ ವಾಸನೆಯಿಂದ ಎಂಥ ಸತ್ತವನೂ ಏಳಲೇಬೇಕು’ ಅಂದಿದ್ದು, ಪ್ರಾಯಶಃ ಗಂಡುಧ್ವನಿ ಅನ್ನಿಸುತ್ತೆ, ಆದರೆ ಮುಖಕಾಣಿಸಲಿಲ್ಲ. ಅಷ್ಟೇ ನೆನಪಲ್ಲಿರೋದು” ಅಂದಿದ್ದಳು. +” ಸೇಂಟ್‌ಮೇರಿಸ್ ಆಸ್ಪತ್ರೆ ತುಂಬಾ ತೊಂದರೆಯಲ್ಲಿದೆ. ಅಂದು ಅಲ್ಲಿಬಂದ ವಾಸನೆ, ಹದಗೆಡುತ್ತಿರುವ ಅಮೆರಿಕಾದ ಆಸ್ಪತ್ರೆಗಳಿಗೆ ಮೆಟಫರ್ ಇರಬಹುದೇ? ಆಸ್ಪತ್ರೆಯ ಅಧಿಕಾರಿಗಳು ನಮಗೆ ಸಂದರ್ಶನ ಕೊಡುತ್ತಿಲ್ಲ. ಎಮರ್ಜನ್ಸಿ ರೂಮನ್ನು ಫ್ಯುಮಿಗೇಟ್ ಮಾಡಿಸಿದ್ದಾರಂತೆ. ಈ ಘಟನೆಯಾದ ಮೇಲೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇಕಡಾ ಮೂವತ್ತರಷ್ಟು ಇಳಿದಿದೆ. ಸುತ್ತ ಮೂವತ್ತು ಮೈಲಿಯಲ್ಲಿ ಬೇರೆ ಆಸ್ಪತ್ರೆಯಿರದಕಾರಣ ಇದು ಊರಿನವರಿಗೆಲ್ಲ ತೊಂದರೆಯಾಗುವ ವಿಚಾರ. ಇನ್ನಾದರೂ ಇದಕ್ಕೆ ಸಂಬಂಧಪಟ್ಟವರು ಸರಿಯಾದ ಕ್ರಮ ಕೈಗೊಳ್ಳಬಹುದೆಂದು ನಾವು ಆಶಿಸಬಹುದೇ” ಎಂದು ವರದಿಗಾರ್ತಿ ದುಃಖಭರಿತವಾಗಿ ನಕ್ಕು, ಮೇಕಪ್ ಹೋಗದಹಾಗೆ ಕಣ್ಣೊರೆಸಿಕೊಳ್ಳುತ್ತಿರುವ ಆ ಹದಿನೇಳರ ಸುಂದರಿಯ ಉದ್ದಕೂದಲಿನ ಡ್ರೆಸ್‌ಸೂಟಿನಲ್ಲಿರುವ ಚಿತ್ರವನ್ನು ಕ್ಲೋಸ್‌ಅಪ್ಪಿನಲ್ಲಿ ಫ್ರೀಜ್ ಮಾಡಿ ಆ ಕ್ಲಿಪ್ಪನ್ನು ಮುಗಿಸಿದಳು.ನಂತರ ಮತ್ತೆ ಬಂದು ’ಇದೀಗ ಬಂದ ಸುದ್ದಿ’ಯಲ್ಲಿ ಆದಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ ಹೆಸರು ಡಾ. ಮೂಕುಂಡ್ ಎಂದು ತಿಳಿದುಬಂದಿದೆ ಎಂದು ಮತ್ತೊಮ್ಮೆ ನಕ್ಕಳು. +ಇನ್ನು ನಾನು ಸತ್ತೆ ಅಂದುಕೊಂಡ. +ಎಂತಾ ನೀಟಾಗಿ ಕೂತಿದ್ದಾಳೆ. ಯಾರೋ ಸೂಟ್ ಬೇರೆ ಕೊಡಿಸಿದ್ದಾರೆ. ಆ ಸೂಟ್‌ನೊಳಗಿರುವ ಮೈಯಿನ ಎಲ್ಲಾ ಉಬ್ಬುತಗ್ಗುಗಳಿಗೂ ವಂಕಿ, ಉಂಗುರಗಳನ್ನು ಚುಚ್ಚಿಕೊಂಡಿದ್ದಾಳೆ ಕಣ್ರೋ ಎಂದು ಕೂಗಿಕೊಂಡ. ಅಯ್ಯೋ ಬೋಳೀಮಕ್ಕಳಾ, ಅವಳು ತಿಂದಿದ್ದು ವಿಟಮಿನ್ ಮಾತ್ರೆ, ಅದರಿಂದ ಸಾಯುತ್ತಿರಲಿಲ್ಲ. ಮೇಲಾಗಿ ಆಕೆ ಆಸ್ಪತ್ರೆಯನ್ನು ತಾನಾಗೇ ಬಿಟ್ಟುಹೋಗಿದ್ದಾಳೆ, ಯಾವ ಜವಾಬ್ದಾರಿಯಿರುವ ರೋಗಿ ಮಾಡುವಕೆಲಸವಿದು, ಬನ್ರೋ ಬನ್ನಿ ನನ್ನ ಸಂದರ್ಶಿಸಿ, ಅವಳು ಹಾಕಿಕೊಂಡಿದ್ದಕ್ಕಿಂತ ನಾಲ್ಕರಷ್ಟು ಬೆಲೆಬಾಳುವ ಸೂಟು ಹಾಕುತ್ತೀನಿ, ನಾನೂ. ಬೇಕಾದರೆ ಡಿ‌ಓಡರೆಂಟನ್ನೂ ಹಚ್ಚುತ್ತೇನೆ. ಅವಳಿಗಿಂತ ಪ್ರೊಫೆಶನಲ್ ಆಗಿ ಉತ್ತರ ಹೇಳುತ್ತೇನೆ, ಬನ್ರೋ ಬನ್ನಿ ಎಂದು ಕೂಗಿಕೊಂಡ. +ಯಾಕೋ ಹೆದರಿಕೆಯಾಯಿತು. ರೂಮಿನಲ್ಲಿದ್ದ ಕಂಪ್ಯೂಟರ್ ಹಚ್ಚಿ ಅಲಬಾಮ ಮತ್ತು ಫಾರ್ಟ್ ಎಂದು ’ಗೂಗಲಿಸಿ’ದರೆ ಸಂಬಂಧಪಟ್ಟ ಇತರ ಶಬ್ದಗಳ ಪೈಕಿ ’ಮುಕುಂದ ’ ಎಂದೂ ಇರುವುದನ್ನು ನೋಡಿ ಹೌಹಾರಿಹೋದ. ಸಂದರ್ಶನ ನಡೆದ ಹದಿನೈದು ನಿಮಿಷದೊಳಗೆ ಇವನ ಹೆಸರು ಅಲಬಾಮಾದ ಅಪಾನವಾಯುವಿನ ಹೆಸರಿನೊಂದಿಗೆ ಸೇರಿಕೊಂಡು ಪ್ರಪಂಚದಾದ್ಯಂತ ಪಸರಿಸುತ್ತಿರುವುದನ್ನು ನೋಡಿ ಬೆದರಿಹೋದ. +ಮತ್ತೆ ಹದಿನೈದು ನಿಮಿಷಕ್ಕೆ ಮುಕುಂದ ಮತ್ತು ಅನೀಟ ಇಬ್ಬರೂ ರಾಜಧಾನಿಯವರುಗಳಿಂದ ವಿಚಾರಣೆ ಆಗುವವರೆಗೆ ಕೆಲಸಮಾಡಬಾರದೆಂದೂ, ಕಡ್ಡಾಯ ರಜೆಯ ಮೇಲೆ ಹೋಗಬೇಕೆಂದೂ, ಊರಿನ ಜನಗಳಿಗೆ ಆಸ್ಪತ್ರೆ, ಈ ವಿಷಯದ ಬಗ್ಗೆ ತೀವ್ರವಾದ ಕ್ರಮ ಕೈಗೊಳ್ಳುತ್ತಿದೆ ಎಂದು ತೋರಿಸುವುದಕ್ಕೆ ಇನ್ನೇನೂ ಮಾರ್ಗವಿಲ್ಲವೆಂದೂ ಹಾಗೂ ಇದರಿಂದಾಗುವ ತೊಂದರೆಗೆ ವಿಷಾದಿಸುತ್ತೇವೆಂದೂ ಮೆಕಾರ್ಥಿ ಇಬ್ಬರಿಗೂ ಒಂದೊಂದು ನೋಟೀಸು ಕಳಿಸಿದ. ಯಾವುದೇ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟರೆ ಅದರಿಂದಾಗುವ ಪರಿಣಾಮಕ್ಕೆ ಆಸ್ಪತ್ರೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೆಂದೂ ಮತ್ತು ಹಾಗೇನಾದರೂ ಆದ ಪಕ್ಷದಲ್ಲಿ ಇವರುಗಳ ಪರವಾಗಿ ಆಸ್ಪತ್ರೆ ಯಾವ ಲಾಯರ್‌ಗೂ ಫೀಸು ಕೊಡದಿರಬಹುದಾಗಿ ತೀರ್ಮಾನಿಸಬಹುದೆಂದು ಮಿದುವಾಗಿ ಎಚ್ಚರಿಸೂ ಇದ್ದರು. +ತಾನು ಅಮೆರಿಕಾದಲ್ಲಿರಬೇಕಾದರೆ ಕೆಲಸ ಮಾಡಲೇಬೇಕೆಂದೂ ಇಲ್ಲದಿದ್ದರೆ ವೀಸಾಕ್ಕೆ ತೊಂದರೆಯಾಗುತ್ತದೆಂದೂ ಹಳಹಳಿಸಿದ, ಮುಕುಂದ. ಹಾಗೇನೂ ಆಗುವುದಿಲ್ಲವೆಂದೂ ಆಸ್ಪತ್ರೆಯ ಲಾಯರ್‌ಗಳು ಸಮಾಧಾನಮಾಡಿದ್ದರು. +– ೪ – +ಇದಾಗಿ ಮೂರುವರ್ಷಗಳಾಗುತ್ತಾ ಬಂದಿವೆ. ನ್ಯೂಯಾರ್ಕಿನಲ್ಲಿ ಬಿಲ್ಡಿಂಗ್‌ಗಳು ಕುಸಿದುಬಿದ್ದಿವೆ. ಸದ್ದಾಮನ ಮಕ್ಕಳು ಸತ್ತಿದ್ದಾರೆ. ಆಲ್‌ಖೈಡ ಮಕಾಡೆ ಮಲಗಿದೆ ಅಂತ ಬುಷ್ ಹೇಳುತ್ತಿದ್ದಾನೆ, ಸದ್ದಾಮ್ ಹಾಗೂ ಬಿನ್‌ಲಾಡೆನ್ ಇನ್ನೂ ಜೀವಂತವಾಗಿರಬಹುದೆಂದು ಇನ್ನೂ ಅನುಮಾನವಿದೆ. ಕ್ಯಾಲಿಫೋರ್ನಿಯಾದ ಗವರ್ನರ್ ಚುನಾವಣೆಗೆ ಆರ್ನಾಲ್ಡ್ ಶ್ವಾರ್ಜ್‌ನೆಗರ್ ಹಾಗೂ ಸ್ಟ್ರಿಪ್ಪರ್ ಒಬ್ಬಳು ನಿಂತಿದ್ದಾಳೆ. ಎಕಾನಮಿ ಸುಧಾರಿಸುತ್ತಿದೆ. ಬುಷ್ ಮತ್ತೆ ಚುನಾವಣೆಗೆ ನಿಲ್ಲಬಹುದೆಂದು ಗುಮಾನಿಯಿದೆ. ಈ ಬಾರಿ ಅಲಬಾಮದಲ್ಲಿ ಸಿಕ್ಕಾಪಟ್ಟೆ ಬಿಸಿಲಂತೆ- ಹಾಗಂತ ಅಂತರ್ಜಾಲದಲ್ಲಿ ಓದುತ್ತಾನೆ, ಡಾ. ಮುಕುಂದ. +ಬಾಂಬೆಯಲ್ಲಿ ಮತ್ತೆ ಬಾಂಬ್ ಬಿದ್ದಿದೆ, ವೀರಪ್ಪನ್‌ನ ಹಿಡಿಯುತ್ತಾರಂತೆ, ಸಾಂಗ್ಲಿಯಾನ ರಿಟೈರ್ ಆಗಿದ್ದಾರಂತೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೂರ್ನಾಲ್ಕು ಕನ್ನಡ ಸಿನೆಮಾದವರಿಗೆ ಪ್ರಶಸ್ತಿ ಬಂದಿವೆ,ಮೂರ್ತಿರಾಯರು ಸತ್ತಿದ್ದಾರೆ, ಬೆಂಗಳೂರಲ್ಲಿ ಇನ್ನೂ ನಾಲ್ಕು ಫ್ಲೈ‌ಓವರ್ ಬರಬಹುದಂತೆ-ಹಾಗಂತ ಬೆಳಗಿನ ಪೇಪರಲ್ಲಿ, ಪೇಪರಂದ್ರೆ ಪೇಪರಲ್ಲಿ ಓದುತ್ತಾನೆ. +ಆತ ಈಗ ಬೆಂಗಳೂರಲ್ಲಿ ಪೇಪರ್ ಓದುವಂತಾಗಿರುವುದು ಮೂರುವರ್ಷದ ಹಿಂದೆ ಬಂದ ಘಾಟುವಾಸನೆಯಿಂದ ಎಂದು ಆತ ಬೆಂಗಳೂರಿಗೆ ಬಂದ ದಿನವೇ ಒಂಕೊಂಕಿಯಾದ ತಿಲಕವಿಟ್ಟ ಬೆಂಗಳೂರಿನ ಖಾಸಗಿಟೀವಿಯ ರಿಪೋರ್ಟರ್‌ಗಳು ಹೇಳಿದ್ದರು. ಆಗ ಆತನ ಸಂದರ್ಶನಕ್ಕೆ ಬಹಳ ಪ್ರಯತ್ನಪಟ್ಟಿದ್ದರೂ ಮುಕುಂದ ತಪ್ಪಿಸಿಕೊಂಡಿದ್ದ. ಈಗ ಮುಕುಂದ ಐಸಿ‌ಐಸಿ‌ಐ ಯಿಂದ ಸಾಲ ತೆಗೆದು, ಬೆಂಗಳೂರಲ್ಲಿ ಒಂದು ಹೈಟೆಕ್ ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾನೆ. ತಾನೇ ಎಲ್ಲಾ ಮೇಲ್ವಿಚಾರಣೆಯನ್ನೂ ಹೊತ್ತಿದ್ದಾನೆ. ಪ್ರಾಕ್ಟೀಸ್‌ನ ನಡುವೆಯೂ ದಿನಾ ಹೋಗಿ ನೋಡಿಕೊಂಡು ಬರುತ್ತಾನೆ. ಡಾ. ಮುಕುಂದ. ಎಮ್.ಬಿ.ಬಿ.ಎಸ್., ಎಮ್.ಡಿ. (ಯುನಿವರ್ಸಿಟಿ ಆಫ್ ಅಲಬಾಮ ಅಟ್ ಬರ್ಮಿಂಗ್‌ಹ್ಯಾಮ್) ಎನ್ನುವುದರ ಜತೆಗೆ ಯು ಎಸ್ ಎ ಅನ್ನೋದನ್ನು ಬ್ರಾಕೆಟ್ಟಲ್ಲಿ ಸೇರಿಸಿಬಿಡಪ್ಪ, ಎಂದು ಬೋರ್ಡು ಬರೆಯುವವನಿಗೆ ಹೇಳುತ್ತಾನೆ. ಪ್ರತಿಯೊಂದು ರೂಮಿನಲ್ಲೂ ಎಕ್ಸ್‌ಹಾಸ್ಟ್ ಹಾಕಿಸಿದ್ದಾನೆ. ಆದರೂ ನಂಬಿಕೆಯಿಲ್ಲದೆ ಪ್ರತಿರೂಮಿನಲ್ಲಿಯೂ ದೆವ್ವದಂತ ಕಿಟಕಿಗಳನ್ನಿಡಿಸಿದ್ದಾನೆ. ವಾಪಸ್ ಬೆಂಗಳೂರಿಗೆ ಬಂದಮೇಲೆ ತಾನು ತಂದಿದ್ದ ಸಾಮಾನುಗಳೆಲ್ಲವೂ ವಾಸನೆ ಬರುತ್ತಿದೆಯೆಂದು ಎಲ್ಲಾ ಬಟ್ಟೆಗಳನ್ನೂ ಹೊಸದಾಗಿ ಖರೀದಿಸಿದ್ದಾನೆ. ಆಗಾಗ ಮತ್ತೆ ವಾಸನೆ ಬರುತ್ತದೆ. ಗೆಳೆಯನ ಹತ್ತಿರ ಕೆಳಗಿಂದ ಮೇಲಿನ ತನಕ ಎಂಡೋಸ್ಕೋಪಿನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಗೆಳೆಯ ಎಲ್ಲಾ ಸರಿಯಾಗಿದೆ ಎಂದು ಹೇಳಿದಾಗ, ಮಿಷೀನ್ ಸರಿಯಾಗಿದೆಯಾ ಎಂದು ತಮಾಷೆಗೆ ಕೇಳಿದ್ದ. ಮೊನ್ನೆ ತಾನೆ ಅಮೆರಿಕಾದಿಂದ ತರಿಸಿದ್ದು ಅನ್ನುತ್ತಾನೆ, ಗೆಳೆಯ. +ಮುಕುಂದ ಅಮೆರಿಕಾದಿಂದ ಯಾಕೆ ಬಂದ ಎಂಬ ಪ್ರಶ್ನೆಗೆ ಹಲವಾರು ಊಹಾಪೋಹಗಳಿದ್ದು ಈಗ ಎಲ್ಲ ತಣ್ಣಗಾಗಿವೆ. ಕೆಲಸ ಕಳಕೊಂಡ, ಎಂದು ಒಂದು ಪತ್ರಿಕೆ ವರದಿಮಾಡಿದರೆ, ಅಲ್ಲಿನ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ಕೊಟ್ಟ ಎಂದು ಇನ್ನೊಂದು ಪತ್ರಿಕೆ ಹೇಳಿದೆ. ಒಬ್ಬ ಮಾಮೂಲಿ ಡಾಕ್ಟರು ಅಮೆರಿಕಾದಿಂದ ವಾಪಸ್ಸು ಬಂದರೆ ಈ ಪೇಪರ್ರು ಟೀವಿಯವರಿಗೆ ಯಾಕೆ ಇಲ್ಲದ ಆಸಕ್ತಿ ಎಂದು ಮುಕುಂದ ಆಗ ಆಶ್ಚರ್ಯಗೊಂಡಿದ್ದ. ಇಮ್ಮಿಗ್ರೇಷನ್‌ನವರು ತುಂಬಾ ತೊಂದರೆ ಕೊಟ್ಟರು, ಮುಕುಂದ ವಿಷಾನಿಲಗಳನ್ನು ತಯಾರಿಸುವ ಭಯೋತ್ಪಾದಕ ಎಂದು ಕೊಂಚ ದಿನ ಒಳಗೆಹಾಕಿ ಅವನ ಪಾಸ್‌ಪೋರ್ಟನ್ನೂ ಕಸಿದುಕೊಂಡಿದ್ದಾರಂತೆ, ಅಂತ ಇನ್ನು ಕೆಲವರು ಹೇಳಿದ್ದಾರೆ. ಮುಕುಂದ ಬೇಡದೇಬೇಡದೇ ಬಂದ ಜನಪ್ರಿಯತೆಯ ದೆಸೆಯಿಂದಲೇ ದೊಡ್ಡ ಡಾಕ್ಟರಾಗಿಬಿಟ್ಟ. ಮೊನ್ನೆ ಮೊನ್ನೆ ನಡೆಸಿಕೊಟ್ಟ ಟೀವೀ ಚಾನಲ್ಲೊಂದರ “ಫೋನ್ ಇನ್” ಕಾರ್ಯಕ್ರಮದಲ್ಲಿ ” ನೀವು ಅಂತ ಅಮೆರಿಕ ಬಿಟ್ಟು ಇಲ್ಲಿಗೆ ಯಾಕೆ ಬಂದ್ರೀ ಸಾರ್” ಎಂದು ಚಿಕ್ಕಬಳ್ಳಾಪುರದ ಒಬ್ಬ ಕಿಡಿಗೇಡಿಯ ಪ್ರಶ್ನೆಗೆ ” ಕನ್ನಡದ ಮಣ್ಣಿನ ವಾಸನೆ ನನ್ನನ್ನು ಇಲ್ಲಿಯತನಕ ಕರಕೊಂಡುಬಂತು, ” ಎಂದು ಉತ್ತರಕೊಟ್ಟಿದ್ದ. +ಮುಕುಂದನ ಆಸ್ಪತ್ರೆ ಕಟ್ಟಿಯಾದಮೇಲೆ ಯಾವ ಫಾರಿನ್ನಿನ ಆಸ್ಪತ್ರೆಯನ್ನೂ ಮೀರಿಸುತ್ತದೆ ಇಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. +ಅಲ್ಲಿ ಅಲಬಾಮದಲ್ಲಿ ಆ ಸುಂದರಿಯ ಕೇಸನ್ನು ಕೋರ್ಟಿನ ಹೊರಗೆ ಎಷ್ಟೋ ನೂರುಸಾವಿರ ಡಾಲರ್‌ಗಳಿಗೆ ಸೆಟಲ್ ಮಾಡಲಾಗಿದೆ ಎಂದು ಮುಕುಂದನಿಗೆ ಈಮೇಲ್ ಬಂದಿತ್ತು ಅನ್ನೋದನ್ನು ಅವನ ಬೆಂಗಳೂರಿನ ಸೆಕ್ರೆಟರಿ ಕದ್ದು ನೋಡಿದ್ದಾಳಂತೆ. +ಮೆಕಾರ್ಥಿ ಮತ್ತು ಅನೀಟಾ ಸ್ವಲ್ಪ ದಿನ ಜತೆಗಿದ್ದು ಮದುವೆಯಾಗಿ ಒಂದು ಮಗುವನ್ನು ಪಡೆದು, ಈಗ ಡೈವೋರ್ಸ್‌ಗೆ ಪ್ರಯತ್ನಪಡುತ್ತಿದ್ದಾರಂತೆ. +ಕೊನೆಯಲ್ಲಿ ಎಲ್ಲರೂ ಬಹುಕಾಲ ಸುಖವಾಗಿದ್ದರಂತೆ. +***** +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ಬೆಂಗಳೂರಲ್ಲಿ ಮನೆ ಕಟ್ಟಿಸಿದೆ; ಫೋನ್ ಹಾಕಿಸಿದೆ; ಎರಡು ಮಕ್ಕಳನ್ನೂ ಒಳ್ಳೆ ಸ್ಕೂಲಿಗೆ ಸೇರಿಸಿದೆ. ಇವುಗಳಿಂದಾಗಿ ಸಿಕ್ಕಿಬಿದ್ದಿರುವ ನಾನು ಸಿಟ್ಟು ಬಂದಾಗೆಲ್ಲ ‘ಹೋಗಯ್ಯ’ ಎಂದು ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಪ್ಪನಂತೆ ಬದುಕಲಾರೆ. ನಾನು ಕೆಲಸಕ್ಕೆ ಸೇರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_435.txt b/Kannada Sahitya/article_435.txt new file mode 100644 index 0000000000000000000000000000000000000000..62d96085d756f12d61d4678be27dba8bad75ff7e --- /dev/null +++ b/Kannada Sahitya/article_435.txt @@ -0,0 +1,74 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಅಂಚೆಯಾಳು ಬಂದನೇನು? +ತಂದನೇನು ಓಲೆಯ? +ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? +ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? +ಅವನ ಬರವ ಹಾರೈಸುತ +ಯೋಚನೆಯೊಡನೋಲವಿಸುತ +ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ +ದೂರ ಸಾರಿ ಹೋದ ಗೆಳೆಯರೊಲವಿಗಿಂತು ತಪಿಸುತ +ಖಿನ್ನನಾಗಿ ಬಿನ್ನನಾಗಿ ಮುದುಡಿಕೊಂಡು ಕುಳಿತಿಹೆ; +ನನ್ನ ನಾನೆ ಮರೆತಿಹೆ! +ನೆನಹು ಕೋದ ಜಪಮಣಿಯನು +ಎಣಿಸುತಿರುವ ವಿರಹಿಣಿ +(ತಾನೆ ತನ್ನ ಅರಗಿಣಿ!) +ಎಂತುಟಾಸೆವಟ್ಟು, ಮೂಗವಟ್ಟು ಕುಳಿತು ನೆನೆವಳೊ +ಅಂತುಟಾಸೆ ನನಗೆ ಅಂಚೆಯವನದೇಕೆ ಬಾರನೊ! +ಸುದ್ದಿಯೊಂದ ತಾರನೊ! +೨ +ಬಾಲ್ಯದೊಂದು ಚಿಕ್ಕ ಕೃತಿ +ಅದರ ಮಧುರ ವಿಸ್ಮೃತಿ +ಅಂಚೆಮನೆಯು ಇರದ ಹಳ್ಳಿ +(ಸುತ್ತಮುತ್ತು ಡಬಗಳ್ಳಿ) +ಅಲ್ಲಿ ವಾರಕ್ಕೊಮ್ಮೆ ಬಂದು +ಮುದ್ರಾಂಕಿತ ಪತ್ರ ತಂದು +ಹಂಚುತಿದ್ದ ಅಂಚೆಗಾರ; +ನಮ್ಮ ಊರಿಗವನು ದೇವದೂತ ವಿವಿಧ ಸುದ್ದಿಸಾರ- +ಖಾಕಿ ಚಣ್ಣ, +ಬಗಲ ಚೀಲ, +ಹೆಗಲಿನಿಂದ ಜೋತ ಕೊಡೆ, +ದೊಡ್ಡ ಹೆಜ್ಜೆ, ಬೀಸು ನಡೆ,- +ಅವನ ನಗೆಯ ಬಗೆಯ ಕಂಡು +ಕೈಯ ಚಾಚಿ ಪತ್ರ ಕೊಂಡು +ಓಡುತಿರಲು, ಮನೆಯ ತುಂಬ ಹರುಷದೊಂದು ಹಬ್ಬವು! +ಅಂದಿನಂದ ಬಿಸವಂದದ ದಿನಗಳಿನ್ನು ಬಾರವು +೩ +ಇಂದು ಯಾವ ಆಸರ? +ಶಾಂತಿಗಾಗಿ ಬಾಯಾರಿದೆ; ಬೇರೂರಿದೆ ಬೇಸರ! +ನಿದ್ದೆಯಿರದ ಆಕಳಿಕೆ +ಎತ್ತಲೂನು ಮಗ್ಗಲೂರಗುಡಲಾರದ ಬಳಲಿಕೆ! +ನನಗೆ ಮರಹು ಅಲಸಿಕೆ +ಎಡೆಗೊಂಡಿದೆ; ನಡುವೆ ಮೌನವೆಳೆದಂತಿದೆ ಜವನಿಕೆ. +ಗೆಳೆಯರೆಲ್ಲ ಶಪಿಸಿ ಬರೆಯಲವರ ಕೋಪತಾಪಕೆ +ಸಣ್ಣದೊಂದು ಓಲೆ ಕೂಡ ಬರೆಯನವರ ಶಮನಕೆ. +ಹೊತ್ತನೆಲ್ಲ ವ್ಯರ್ಥಗಳೆವ ಅರ್ಧಮರ್ಧ ಸಾಹಸಿ +ಅಯ್ಯೊ ನಾನು ಆಲಸಿ! +ಇನ್ನು ನನ್ನ ಮನ್ನಿಸಿ. +ಆದರೂನು ಕಾಯುತಿರುವ, +ಯಾರದಾದರೊಂದು ಓಲೆ +(ಇರಲಿ ಬರಿಯ ಎರಡು ಸಾಲೆ) +ಬಾರದೇನು? ತಾರದೇನು ಸ್ನೇಹಗೊಂಡ ಸೂತ್ರವ? +ಕಣ್ಣ ಮುಂದೆ ಕುಣಿಸದೇನು ಬಣ್ಣಗೊಂಡ ಪಾತ್ರವ? +ಲಿಪಿಯೋದ್ಭವರಾಗಿ ಇಳಿಸರೇನು ಮೌನಭಾರವ? +ಎಂದಿಗೇನು? +ಅಂದು ಇಂದು +ಅಂಚೆಯಾಳು ನನ್ನ ಬಂಧು. +ನನ್ನ ಆಸೆ ಒಂದೆ ಒಂದು: +ಓಲೆ ಬರಲಿ +ಬಾರದಿರಲಿ +ಅಂಚೆಯವನು ಮಾತ್ರ ದಿನವು +ನನ್ನ ಕಣ್ಣನೆದುರು ಬಂದು ನಕ್ಕಾದರು ಹೋಗಲಿ. +***** +ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. ***** +ಒಂದೊಂದು ಸಲ ನನಗೂ ನಿನಗೂ ನಡುವೆ ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು ಕೂತು, ಕೂತಲ್ಲಿಯೇ ನಮ್ಮನ್ನು ಹೂತು ಸುತ್ತಲೂ ಗೋಡೆ ಕಟ್ಟುತ್ತವೆ. ಎದ್ದ ಗೋಡೆಯ ತುಂಬ ಕೆಂಗಣ್ಣು […] +ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_436.txt b/Kannada Sahitya/article_436.txt new file mode 100644 index 0000000000000000000000000000000000000000..66931a29bafb2e688b4a4fb518c42ad234281ba3 --- /dev/null +++ b/Kannada Sahitya/article_436.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ +ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆ +ಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, +ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿ +ತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! +ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದ +ಬಾನಮುಡಿಗೇರಿ ಬೆಳಕಿನ ಗರ್ಭಗುಡಿಯಿಂದ +ಮಿಡಿಯಿತೊಂದದ್ಭುತೋಂಕಾರ ವೀಣಾರವಂ ! +ಗುಣಕೆ ಮತ್ಸರವುಂಟೆ ? ದೇಗುಲದ ಗಂಟೆಯುಲಿ +ಕಂಬ ಕಂಬವ ತುಂಬಿ ಮೈದುಂಬಿ ನಿಂತ ಬಗೆ +ನಿಂತೆ ; ನಿಂತೆನೆ ? ನಾದ ತಂತುವಾದೆನು ಕೊನೆಗೆ +ರಸ‌ಋಷಿಯ ಪದ್ಮಶಾಂತಿಯ ಪರ್‍ಣಶಾಲೆಯಲಿ +ಯುಗಯುಗಕು ಸಾಗಿರುವ ಜಗದ ರಾಮಾಯಣಂ +ನೂರು ಸೂರ್ಯೋದಯದ ಬಿಂಬ ಕವಿದರ್ಶನಂ! +ಕೀಲಿಕರಣ: ಎಂ ಎನ್ ಎಸ್ ರಾವ್ +ಕೀಲಿಕರಣ: ದೋಷ ತಿದ್ದುಪಡಿ: ಕಿಶೋರ್‍ ಚಂದ್ರ +ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […] +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […] +ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_437.txt b/Kannada Sahitya/article_437.txt new file mode 100644 index 0000000000000000000000000000000000000000..b88e03685bce61a5ecf8d0a1ffd25d35f1367d75 --- /dev/null +++ b/Kannada Sahitya/article_437.txt @@ -0,0 +1,126 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” +-ಗೀತೆ +ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ ಎದ್ದು ಕೂತ. ಎಷ್ಟು ದಿನ, ಎಷ್ಟು ದಿನವಂತ ಹೀಗೆ ಯಾಂತ್ರಿಕವಾಗಿ ತೋಡಿ ಸಂತೋಷಪಡುವುದಕ್ಕೂ ಅಸಾಧ್ಯವಾದ, ಜೀವ ಹಿಚುಕುವ ಬೇಸರವನ್ನು ತಾಳಿಕೊಂಡಿರುವುದು- ಎನ್ನುವ ಯೋಚನೆಯನ್ನು ಹೇಗೆ ಕವನದ ಸಾಲುಗಳಾಗಿ ಬರೆಯಬಹುದೆಂದು ತಲೆಕೆರೆದುಕೊಂಡ. ಹಾರ್ಲಿಕ್ಸ್, ಗ್ಲೂಕೋಸ್, ಮಲ್ಟಿವಿಟಮಿನ್ ಮಾತ್ರೆ, ಜೀವನವೆಷ್ಟು ದುಃಖಮಯ ಎನ್ನುವ ವೇದಾಂತ, ಸಂಜೆ ಇಸ್ಪೀಟು, ಬೀರು ಇಷ್ಟಿದ್ದರೆ ಸಾಕು- ಸತ್ತೂ ನೂರು ಶರದೃತುಗಳನ್ನು ನೋಡಿ ಮನೆಯಿಂದ ಲೈಬ್ರರಿಗೆ ಲೈಬ್ರರಿಯಿಂದ ಮನೆಗೆ ರ್ಯಾಲಿ ಸೈಕಲ್ಲಿನ ಮೇಲೆ ತಿರುಗುತ್ತಿರಬಹುದಲ್ಲವೆ? ಎಂದು ಯೋಚಿಸಿ….. ನಕ್ಕ. ಹೀಗೆಯೇ ರಾತ್ರಿ ಹನ್ನೆರಡು ಘಂಟೆಗೆ ‘ಕೋಟು ತೊಟ್ಟು ಚಪ್ಪಲಿ ಮೆಟ್ಟಿ’ ಹೊರಟರೆ ಎನ್ನಿಸಿ- ಹದಿನೈದು ರೂಪಾಯಿಗೆ ಕೊಂಡಿದ್ದ ಬುದ್ಧನ ಪ್ಲಾಸ್ಟರ್ ಆಫ್ ಪ್ಯಾರಿಸ್ ಪ್ರತಿಮೆ ನೋಡಿ- ಟೌನಿನಲ್ಲಿ ಈ ಹೊತ್ತಲ್ಲದ ಹೊತ್ತಿನಲ್ಲಿ ಯಾವ ಹೋಟೆಲಾಗಲೀ ಚಿತ್ರ ಮಂದಿರವಾಗಲೀ ತೆರದಿರುತ್ತವೆಯೋ ಎಂದು ಸುಮ್ಮನಾದ. ಲೈಬ್ರರಿಯಲ್ಲಿ- ಬೆಳಿಗ್ಗೆ, ಮಟಮಟ ಮಧ್ಯಾಹ್ನ, ಸಂಜೆ ಎನ್ನದೆ- ಮೂರುಹೊತ್ತು ಅಕ್ಷರಗಳಿಗೆ ಕಣ್ಣು ಹತ್ತಿಸಿ ಕೂತವ ಜೊತೆ ದಿನಂಪ್ರತಿ ತಾನೂ ಕೂತಿರುವುದರ ಚಿತ್ರ ಬರೆದರೆ ಅದಕ್ಕೆ “I hಚಿಜ ಟಿoಣ ಣhoughಣ ಜeಚಿಣh hಚಿಜ uಟಿಜoಟಿe so mಚಿಟಿಥಿ” ಎಂಬ ಶೀರ್ಷಿಕೆ ಕೊಟ್ಟರೆ ಹೇಗೆ, ಎಂದು ಸೀಗರೇಟು ಹಚ್ಚಿದ. ಕಿಟಕಿಯ ಕೊರೆಯುವ ಕಬ್ಬಿಣದ ಸರಳುಗಳನ್ನು ಹಿಡಕೊಂಡು ಸೀನಿದ. ಕತ್ತಲಿನ ಭಯಂಕರ ಮೌನದ ಶ್ವಾಸಕೋಶದಿಂದ ಗೊಂಟರು ಕಪ್ಪೆಗಳ ಈ ಆರ್ತತೆ (“ಗಿoiಛಿes oಜಿ ಜesiಡಿe ಜಿಡಿom ಣhe ಜeಠಿಣhs oಜಿ ಆಚಿಡಿಞಟಿess”) ಬರುತ್ತಿದೆ ಎನ್ನುವುದು ತಾನು ಬರೆಯಲಿರುವ ಕವನಕ್ಕೆ ಒಂದು ಒಳ್ಳೆಯ ಪ್ರತೀಕವಾದೀತೆಂದು ದೀಪ ಹೊತ್ತಿಸಿ ಕನ್ನಡಿಯಲ್ಲಿ ಮುಖ ನೋಡಿಕೊಂಡ. ಬೇಸರ, ಸಂಕಟ, ನೋವು, ಮೃತ್ಯು, (ಸಾವೂ ಕೂಡ) ಎಲ್ಲವೂ ಕವಿಯ ಕುಲುಮೆಯಲ್ಲಿ ಚೆಲುವಾಗಿತ್ತವಲ್ಲವೆ? ಅಭಿವ್ಯಕ್ತಿಯೆಂದರೆ ಮತ್ತೇನು?- ಎಂದು ಥೀಸಿಸ್‌ನಲ್ಲಿ ಬರೆಯಬೇಕೆಂದುಕೊಂಡು ಕಾಲುಗಂಟಿನ ಮೇಲೆ ಎದ್ದಿದ್ದ ಎಕ್ಸಿಮಾವನ್ನು ತುರಿಸಿ ಕೊಂಡ- ಯಾರದೋ ಎಂಜಲು ಅದು ಎನ್ನಿಸಿದರೂ ಯಾರಿಗೂ ಗೊತ್ತಾಗಲಿಕ್ಕಿಲ್ಲವೆಂದು ಸಮಾಧಾನಪಟ್ಟು ಮತ್ತೆ ಹಾಸಿಗೆಯ ಮೇಲೆ ಕುಳಿತ. ಬೆನ್ನು ತುರಿಸಿಕೊಂಡ. ಮತ್ತೆ ಕತ್ತಿನ ಬಳಿ ತುರಿಕೆಯಾಯಿತು. ‘ಅಚಿಟಿಜಟe iಟಿ ಣhe ಣhighs’ ಎಂಬ (ಯಾರ ಕವನದ?) ಒಂದು ಕವನದ ಸಾಲಿನ ನೆನೆಪಾಗಿ ಹೊಕ್ಕಳನ್ನು ಕೆರೆದುಕೊಳ್ಳುತ್ತ – ಹೊಕ್ಕಳ ಬಳ್ಳಿ ಗರ್ಭದಿಂದ ಹರಿಯುವುದೇ ದುರಂತ ಎನ್ನಿಸಲು ನಿತ್ಯವೂ ಹೊಂದೂ ಪತ್ರಿಕೆಯ ಅಡ್ವರ್ಟೈಸ್‌ಮೆಂಟಿನಲ್ಲಿ ಹೇಳುವಂತೆ ತುರಿಕೆಗೆ ಲೈಫ್‌ಬಾಯ್ ಸೋಪನ್ನು ನಾಳೆ ನೆನಪುಮಾಡಿ ತರಬೇಕೆಂದುಕೊಂಡ. ಅವನು ವಿಮರ್ಶಿಸಲೆಂದು ಓದುತ್ತಿದ್ದ ಕಾದಂಬರಿಯಲ್ಲಿ ಬರೆದಂತೆ ಈ ಊರಲ್ಲೂ ಸೂಳೆಯರು ಇದ್ದಾರೆಯೆ?-ಎಲ್ಲಿ?-ಥೂ! ಆದರೆ ಆ ಕಾದಂಬರಿಯಲ್ಲಿ ಕಲಾತ್ಮೆಕವಾಗಿಲ್ಲ- ಎಂದು ಗೊಣಗಿ, +ಲಘುವಾಗಿ ಏನನ್ನಾದರೂ ಕಲ್ಪಿಸತೊಡಗಿದರೆ ನಿದ್ದೆ ಬರಬಹುದೆಂದು ಪಾರ್ಕಿಗೆ ಅರುಂಧತಿಯ ಜೊತೆ ಹೋದ. ಅರುಂಧತಿಯ ಮೋರೆ ಲೈಬ್ರರಿಯಲ್ಲಿ ಮೊನ್ನೆ ಎದುರು ಕುಳಿತಿದ್ದವಳ ಬಟ್ಟಲು ಮುಖದಷ್ಟು ಚೆನ್ನಾಗಿಲ್ಲದಿದ್ದರೇನಂತೆ- ಅವಳ ಎದೆ ಮೃದುವಾಗಿ ಉಬಿ ಬೆಳೆದಿದೆ ಎಂದು ಸಮಾಧಾನಪಟ್ಟ. ಹಸಿರು ಹುಲ್ಲಿನ ಮೇಲೆ ಹಿತವಾದ ಬೆಳದಿಂಗಳು ಚೆಲ್ಲಿದಾಗ ಅವಲ ಕೋಮಲವಾದ ಮೈ ತಬ್ಬಿ ಮೃದು ಕೈಯನ್ನು ಮೃದುವಾಗಿ ಹಿಸುಕಿದರೆ- ಹುಟ್ಟಿದ ಮಕ್ಕಳಿಗೆ ಹಾರ್ಲಿಕ್ಸ್ ತರಲು ಸಂಬಳ ಸಾಲದು ಎನ್ನಿಸಿತು. ಹಾಗಾದರೆ ಅರುಂಧತಿ ಕಳುಹಿಸಿದ ಕೀಟ್ಸ-ಕವನಗಳ ಉಡುಗೊರೆಗೆ ಬದಲಾಗಿ ಸಂತಾನ ನಿಯಂತ್ರಣದ ಬಗ್ಗೆ ಒಂದು ವೈಜ್ಞಾನಿಕ ಗ್ರಂಥವನ್ನು ಕಳುಹಿಸಿದರೆ ಹೇಗೆ?. ಸುಖಕ್ಕೆ ಸುಖ- ಜೊತೆಗೆ ದೇಶಸೇವೆ, (ದೇಶಸೇವೆಯೇ ಈಶಸೇವೆ!). ಅರುಂಧತಿ ಈಗಲೇ ಪೆಚ್ಚು ಮೋರೆ- ಮಕ್ಕಳಾದ ಮೇಲೆ ಅಲಮೇಲಮ್ಮನಂತಾದರೆ- ಸಂತಾನ ನಿಯಂತ್ರಣದಲ್ಲಿ ತಪ್ಪೇನು ಎಂದು ಪಾರ್ಕಿನಲ್ಲಿ ಮತ್ತೆ ಅವಳನ್ನು ತಬ್ಬಿ ಬೆನ್ನು ಸವರಿದ. ಯಾವ ಪಾರ್ಕು ಉತ್ತಮ? ಎಲ್ಲದಕ್ಕೂ ಹಾಳು ಜನ ಬರುತ್ತಾರಲ್ಲಾ- ಸಂಜೆಯೇರಿದ ಮೇಲೆ ಅಶೋಕವನ ನಿರ್ಜನವಾಗಿರುತ್ತದಲ್ಲವೆ? ಆದರೆ ಅರುಂಧತಿಯ ಅಪ್ಪ ಅವಳಿಗೆ ವಾಕಿಂಗ್ ಹೋಗಲು ಬಿಟ್ಟಾರೆ? ಆ ಉದ್ದ ಮೂಗಿನ ಗೃಧ್ರ ಗೊತ್ತಾಗಿ ಮುದುವೆಮಾಡಿಕೋ ಎಂದು ಜಿಗಣೆ ಹಿಡಿದರೆ ಏನು ಸಾಯುವುದು?-ಥೂ ಆ ಹುಟ್ಟುವ ಚಿಳ್ಳೆ ಪಿಳ್ಳೆ- ಎಂದುಕೊಂಡು ಮತ್ತೆ ಅರುಂಧತಿಯನ್ನು ಕಾಲುಗಳಿಂದ ಬಿಗಿದು ಅವಳ ಕತ್ತಿನ ಮೇಲೆ ಬಾಯಿಟ್ಟು ಕಣ್ಣುಗಳನ್ನು ಮೃದುವಾಗಿ ಚುಂಬಿಸಿ ಯಾರಾದರು ನೋಡಿ ಬಿಟ್ಟಾರೋ ಎಂದು ಆಕಡೆ ಈ ಕಡೆ ನೋಡಿ, +ಯಾರೂ ಇಲ್ಲ- ಮಕ್ಕಳಾಗುವುದೂ ಇಲ್ಲ- ಕಣ್ಣು, ಕತ್ತು, ಮೃದು ಎದೆ, ತೊಡೆ, ಸೊಂಟ, ಹೊಕ್ಕಳು, ಜಘನ ಮುತ್ತಿಟ್ಟು- ಸವರಿ, ವೆಲ್ವೆಟ್ ಮೃದು ಬಟ್ಟೆ ಸರಿಸಿ, ಬೆತ್ತಲಾಗಿ, ಹಾರಿ ಹಾಗೇ- ಹಸಿರು ಹುಲ್ಲಿನ ಮೇಲೆ ಎಂಥ ಸರ್ಪ!…. ಅವನ ಕೈಗೆ ಸುತ್ತಿಯೇ- ಅಲ್ಲ ಅವಳ ಕಾಲಿಗೆ ಕಚ್ಚಿದೆ ಸುತ್ತಿ- ಸೊಂಟದ ಮೇಲೆ ನಿಧಾನ ತಣ್ಣಗೆ ಹರಿದು- ಅಲ್ಲ ಕೈಗೆ ಸುತ್ತಿ ಹೆಡೆಯೆತ್ತಿದಾಗ ತುಟಿ ಕಚ್ಚಿ ತಡವರಿಸದೆ ಹಲ್ಲಿನ ಬಾಯನ್ನು ಬಿಗಿಮುಷ್ಟಿಯಲ್ಲಿ ಹಿಡಿದೆಳೆದು, ನೆಲಕ್ಕೆ ಪಠಾರನೆ ಬಡಿದು,- ಹಾಸಿಗೆಯಲ್ಲಿ ಹೊರಳುತ್ತ- ನುಚ್ಚು ನೂರುಮಾಡಿ, ದೂರ ಬಿಸಾಕಿ, ಅರುಂಧತಿಯ ಎದುರು ಗಂಡುತನದ ಪೌರುಷ ತೋರಿಸುತ್ತಾ ನಿಂತಾಗ- ಅಯ್ಯೋ ಮತ್ತೆ ಅದೇ ಸರ್ಪ ಇಲ್ಲ… ಬರಲಿಲ್ಲ- ಯಾರೂ ಇಲ್ಲ- ಬೆಲ್ಟ್ ಬಿಚ್ಚಿ, ಸರ್ಜ್‌ಸೂಟ್ ಒಗೆದು, ಏನೂ ಆಗದಂತೆ ಯಾರಿಗೂ ಗೊತ್ತಾಗದಂತೆ, ಪಾರ್ಕಿನಲ್ಲಿ ಬೇಡ ಆಕಾಶದಲ್ಲಿ ತೇಲಿ ತೇಲಿ-ಥೂ ಮತ್ತೆ ಮೋಡದಲ್ಲೂ ಮಿಂಚು ಹಾವು ಸುಳಿ ಸುಳಿ…. ಪಳ್ ಪಳ್ ಎಂದು ಮಿಂಚಿ-ಗುಡುಗಿ- +‘ನೂರುಸಾರಿ ಕೊಂದಿದ್ದೇನೆ- ಚೂರು ಚೂರು ಮಾಡಿ ಒಗೆದಿದ್ದೇನೆ-ಆದರೂ ತಿರುಗಿ ಜೀವ ಬರುತ್ತದೆ- ಕಡಿಯದಂತೆ ಕಾಡುತ್ತದೆ- ಹಗಲುಗನಸಿನಲ್ಲೂ ಹೀಗೆ ನಾಗರಕಾಟಕ್ಕೆ ಮನೋವಿಜ್ಞಾನದಲ್ಲಿ ಏನೆನ್ನಬಗುದೆಂದು ಅಂಗಾತನೆ ಮಲಗಿ ರಾಜಣ್ಣ ಚಿಂತಾಕ್ರಾಂತನಾದ. “ಂಡಿe mಥಿ ಟuಟಿgs ಡಿeಚಿಟಟಥಿ ತಿeಚಿಞ” (ಕಣ್ಣು ಪಿಳಿ ಪಿಳಿ ಮಾಡಿ ಎದೆ ಮುಟ್ಟಿ ಹೃದಯದ ಹೊಡೆತ ಎಣೆಸಿ) ‘ಊಚಿve I bಟooಜ-ಠಿಡಿessuಡಿe ಣoo’ ಎಂದು ಅರುಂಧತಿಯ ಕಣ್ಣಿನ ಕರುಣರಸದ ತಂಪು ಬಿಂದುಗಳಿಂದ ತನ್ನ ಕೆನ್ನೆ ತೋಯಿಸಿ ಕೊಂಡ. +ಹಾವು ಸಾಯಬಾರದು- ಕೋಲು ಮುರಿಯಬಾರದು ಎಂದರೆ ಹೇಗೆ ಸಾಧ್ಯವಾದೀತು ಎಂದುಕೊಂಡು ಅರುಂಧತಿಯನ್ನು ಮತ್ತೆ ಹಾವು ಎಣೆಕಟ್ಟಿ ಕೊಳ್ಳುವಂತೆ ಮೈಗೆ ಮೈ ಬಿಗಿದು ಹಾಸಿಗೆಯಲ್ಲಿ ಹೊರಳಿದ. ನಿದ್ದೆ ಬರದಿರಲು ಕಾರಣ ಇನ್ ಸೋಮ್ನಿಯಾವೆ?- ಟಾಲ್‌ಸ್ಟಾಯಿಗೂ ಕೆಲವು ಕಾಲ ಹೀಗಾಗಿತ್ತಂತೆ ನಿಜವೆ? ಅವನ ಹಾಗೆ ಲೆಕ್ಕವಿರದಷ್ಟು ಪತ್ರಿಕೆಗಳಲ್ಲಿ ಅವನ ಫೋಟೋ ಅಚ್ಚಾಗಿ ಬಂದು ಎಲ್ಲರೂ ಬೆರಳುಮಾಡಿ ತನ್ನ ಕಡೆ- ಅರುಂಧತಿಯನ್ನು ಬಿಗಿದು ಬಿದ್ದುಕೊಂಡಾಗ ಯುಗದ ಮೇಲೆ ಯುಗ ಹೊರಳಿದರೂ ಪಾರ್ಕಿನಲ್ಲಿ ಕತ್ತಲಾದ್ದರಿಂದ ಯಾರಿಗೂ ಕಾಣದೆ- ಮೈ ನೂರು ಸಾವಿರ ಲಕ್ಷ ಕೋಟಿ ಕೋಟಿ ಹೊಸದಾಗಿ ಮರಳಿ ಹೊರಳಿ, ಎಲ್ಲ ಬೆರಳುಗಳೂ ಮೆಚ್ಚಿಕೆಯಲ್ಲಿ- ಲಕ್ಷಾಂತರ ಬೆರಳುಗಳು ಪೂರ್ವ ಪಶ್ಚಿಮ ದಕ್ಷಿಣ ಉತ್ತರ ಭೂಲೋಕ ಭುವರ್ಲೋಕ ಪಂಜರ ಹೆಣೆದು- ತಾನು ಮಹಾಕವಿ ರಾಜಣ್ನ ಎಲ್ಲೋ ಮಧ್ಯೆ- ಪಾರ್ಕಿನಲ್ಲಿ ಭಿಕ್ಷೆಗೆ ಬಂದ ಕುರುಡು ಮುದುಕನ ಸುಕ್ಕುಗಟ್ಟಿದ ಮುಖಕ್ಕೆ ಮೂರು ಕಾಸು ಭಿಕ್ಷೆ ಎಸೆದು (‘ಹೋಗಾಚೆ’)- ಕಾಮಪೂರ್ಣ ವಿರಾಮ ಏನಿರದ ವಾಕ್ಯದಂತೆ ಉದ್ದ ಉದ್ದ ಜೀವನದುದ್ದ ಹಾಳೆ ಹಾಳೆ ಹರಿದೂ ಕೊನೆಯಾಗದೆ- ಮೃದುವಾದ ತೊಡೆಯನು ಕಬ್ಬಿಣದಂತಹ ತೊಡೆಗಳಿಂದ ಅವಚಿ ಅವಚಿ- ಹಾಸಿಗೆಯ ಪಕ್ಕದಲ್ಲಿ ಹಾವು ಹರಿದರೆ ಕತ್ತರಿಸಿ, ತುಂಡರಿಸಿ, ಸೀಳಿ ಸೀಳಿ ಸಿಗಿದು, ಕೊಚ್ಚಿ, ಕಡೆದು, ಆ ಗೃಧ್ರ ಅಪ್ಪನ ಕಣ್ಣಿಗೆ ಮಣ್ಣೆರಚಿ- ಮುಖ ಅಡಿಯಾಗಿ ಮಲಗಿದರೆ ನಿದ್ದೆ ಬಂದೀತೆಂದು ರಗ್ಗನ್ನು ಎಳೆದುಕೊಂಡು ಕೌಂಚಿ ಮಲಗಿದ. ನಿದ್ದೆಯಿರದ ಗೊಂಟರು ಕಪ್ಪೆಗಳು ಗೊಟರು ಹಾಕುತ್ತಲೇ ಇದ್ದುವು. +* +* +* +ಬೆಳಿಗ್ಗೆ ಎಂಟು ಗಂಟೆಗೆ ಸಕ್ಕರೆ ಕಂಪನಿ ಶಿಳ್ಳೆ ಹೊಡೆಯಲು‌ಎದ್ದುಕೂತು ಮೈ ಮುರಿದುಕೊಂಡ. ಬ್ರಷ್ಷಿಗೆ ಪೇಸ್ಟ್ ಅಂಟಿಸುತ್ತಿದ್ದಂತೆ ಪ್ರಾತಃಕಾಲಕ್ಕಿಂತ ಮುಂಚೆ ಎಚ್ಚರವೂ ಅಲ್ಲ ನಿದ್ದೆಯೂ ಅಲ್ಲದ ಹೊತ್ತಲ್ಲದ ಹೊತ್ತಿನಲ್ಲಿ ಯಾವ ಮುಸುಕು ಮುಸುಕು ಏನು ಅಸ್ಪಷ್ಟವಾಗಿ ಆಡಿತ್ ಎಂದು ಹುಡುಕತೊಡಗಿದ. “ಅಲ್ಲ ನನ್ನ ಹೆಸರು ರಾಜಣ್ಣ” (ಯಾರಿರಬಹುದು) ನಕ್ಕಂತೆ ನೆನೆಪು- ಹಾಗೆಯೇ ಮಾಯವಾಗುತ್ತ ಮುಸುಕು ಮುಸುಕು ಮುಖ (ಯಾರಿರಬಹುದು) ಏನೆಂದಿತು? “ಹದಿನೈದರ ತನಕ ರಾಜಣ್ಣ, ಆಮೇಲೆ ಹೈಸ್ಕೂಲು ಸೇರಿದ ಮೇಲೆ ಖೋಜಣ್ಣ” ಇದರ ಅರ್ಥವೇನಿರಬಹುದು? ರಿಚರ್ಡ್ ಗ್ರಿನೋನ ಕಥೆಯನ್ನು ಓದಿದ್ದಕ್ಕೆ ಹಾಗಾಗಿರಬಹುದೆ? ಇವತ್ತೆ ಕ್ಷೌರ ಮಾಡಿಸಿಕೊಳ್ಳಲೊ- ಸಾಹಿತಿಗಳು ಕೂದಲು ಬಿಡುವುದು ಇತ್ತೀಚಿನ ಫ್ಯಾಷನ್ನು- ಹೀಗೆಯೇ ಇರಲಿ- ಎಂದು ಸ್ನಾನದ ಮನೆಗೆ ಹೋದ. +ಎರಡು ರೂಪಾಯಿ ಕೊಟ್ಟು ತಂದು ಓದಿದ “ಸೈಕಲಜಿ ಫಾರ್ ದಿ ಕಾಮನ್ ಮ್ಯಾನ್”ನಲ್ಲಿ ಬರೆದಿದ್ದಂತೆ ತಾನು ಹಾಗಾದರೆ ‘ಸ್ಪ್ಲಿಟ್ ಪರ್ಸನಾಲಿಟಿ’ ಇರಬಹುದೆ? ಎಂದು ಮೈಗೆ ಸೋಪು ಹಚ್ಚಿಕೊಳ್ಳುತ್ತ ಮಧ್ಯಾಹ್ನ ಲೈಫ್‌ಬಾಯ್ ಸೋಪು ಕೊಳ್ಳಬೇಕೆಂದು ಮತ್ತೆ ನೆನಪುಮಾಡಿಕೊಂಡ. ಹಾವಿನಂತೆಯೇ ಕಾಡಲು ಆ ಮಾತುಗಳು- “ಹದಿನೈದರ ತನಕ ರಾಜಣ್ಣ”- ಹೌದು ಪಾಠಗಳ ಮೇಲೆ ಅಷ್ಟು ಇಂಟರೆಸ್ಟ್ ಇರಲಿಲ್ಲ- “ಹೈಸ್ಕೂಲು ಸೇರಿದ ಮೇಲೆ”- ಇದ್ದಕ್ಕಿದ್ದಂತೆ ಎಷ್ಟು ಬುದ್ಧಿವಂತನಾದೆ? ಅವತ್ತು ಅಪ್ಪ ಮೈಮುರಿದು ಹೊಡೆದ ಮೇಲೆ ಬುದ್ಧಿ ಬಂದು ಹೆಡ್‌ಮಾಸ್ಟರರೂ ಆದರ್ಶವಾದಿ ತರುಣ ಎಂದು ಸರಸ್ವತೀ ಪೂಚೆಯ ದಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಎದಿರು ಹೊಗಳಿದಾಗ ಎಷ್ಟು ಮೈ ಉಬ್ಬಿತ್ತು? ಆಮೇಲೆ ಉಪನಯನವಾದ ಮೇಲೆ ಎರಡನೇ ಜನ್ಮ ಪಡೆದು ಬ್ರಹ್ಮಚರ್ಯದ ಅವಶ್ಯಕತೆಯನ್ನು ಹೆಣ್ಣುಮುಖದ ನಾಣಿಗೆ ಮನದಟ್ಟು ಮಾಡಿ ಅವನ ಸಂಗ ತೊರೆಯಲು ಪ್ರಯತ್ನಿಸಿದ್ದೂ ಆಗಲೆ- ಆದರೂ ಹುಡಗರೆಲ್ಲ ಎಷ್ಟು ಗೇಲಿಮಾಡುತ್ತಿದ್ದರು? ತನಗೊಂದು ಅಡ್ಡ ಹೆಸರು- ಕಲ್ಲುಗುಡ್ಡ- ನಾಣಿಯ ಜೊತೆ ಗುಟ್ಟಾಗಿ ಕೂಡುತ್ತಿದ್ದ ಜಾಗ, ಯಾರು ಪತ್ತೆಮಾಡಿದ್ದೊ! ಒಂದೂ ಆಟವಾಡುತ್ತಿರಲಿಲ್ಲ. ಪೋಲಿ ಮಾತುಗಳನ್ನು ಕಿವಿಗೂ ಹಾಕಿಕೊಳ್ಳುತ್ತಿರಲಿಲ್ಲ. ಒಬ್ಬಂಟಿಗನಾಗಿ ಸ್ವಾಮಿ ರಾಮಕೃಷ್ಣ, ವಿವೇಕಾನಂದ, ಶಿವಾನಂದರನ್ನು ಓದಿ ಊರ್ಧ್ವಾಭಿಮುಖ ಚೇತನಿಯಾಗಿ ಬೆಳೆಯಲು ವಿಶ್ವ ಪ್ರಯತ್ನ ಪಡುತ್ತಿದ್ದಾಗಲೂ ಆ ನಾಣಿಯಿಂದ ಅಂಟಿದ ಪಾಪ ಎಷ್ಟು ಕಾಡುತ್ತಿತ್ತು? ಅವನ ಬ್ರಹ್ಮಚರ್ಯ ಆದರ್ಶ ಜೀವನ ಮನಸಾರೆ ಹೊಗಳುತ್ತಿದ್ದ ಹೆಡ್ ಮಾಸ್ಟರಿಗೆ ಎರಡನೇ ಹೆಂಡತಿಯಿಂದ ಐವತ್ತನೆಯ ವಯಸ್ಸಿನಲ್ಲೂ ಯಾಕೆ ಮಗುವಾಯಿತು- ಹುಡುಗರು ಗುಸುಗುಸು ಮಾತನಾಡಿ ಹಾಸ್ಯ ಮಾಡುತ್ತಿದ್ದರೂ ಅವನು ಮಾತ್ರ ಗುರುದೇವೋಭವ ಎಂದು ಸುಮ್ಮನಾಗಿದ್ದ. ಹೆಡ್ ಮಾಸ್ಟರರ ಆದರ್ಶಮಯತೆಗಿಂತ ಹೆಚ್ಚು ಆಕರ್ಷಕಳಾಗಿದ್ದ ಅವರ ಮಗಳಾದ ಅರುಂಧತಿಗೆ ಆಗ ವಯಸ್ಸು ಹದಿಮೂರು, ಕಚ- ದೇವಯಾನಿ ಕಥೆ ಓದುತ್ತಿದ್ದ ಅವನಿಗೆ ತಾನು- ಅವಳು ಹಾಗೆ ಎನ್ನಿಸಿ ‘ಪದ್ಯ ಬರೆಯಲೇ’ ಎನ್ನಿಸುವಷ್ಟು ದುಃಖವಾಗಿತ್ತು. ಆದರೆ ‘ಭಟ್ಟಿ ವಿಕ್ರಮಾದಿತ್ಯ ವಿಜಯ’ ಕದ್ದು ಓದುತ್ತಿದ್ದ ಅರುಂಧತಿಗೆ ಮನೆಗೆ ಬರುತ್ತಿದ್ದ ರಾಜಣ್ಣನ ಬಗ್ಗೆ ಏನು ಏನೋ ಅನ್ನಿಸುತ್ತಿತ್ತು. ಪುಸ್ತಕಗಳ ನಡುವೆ ಅದಲು ಬದಲಾದ ಪತ್ರಗಳಲ್ಲಿ ಸೂಚಿತವಾದಂತೆ ಹೆಡ್ಮಾಸ್ಟರಿಲ್ಲದ ಒಂದು ದಿನ ಇಬ್ಬರೂ ಗುಟ್ಟಾಗಿ ಸಂಧಿಸಿದಾಗ ಗುರುಪುತ್ರಿ ಸಹೋದರಿ ಇದ್ದಂತೆ ಎಂದು ಬೋಧಿಸಿದ. “ನಿರ್ವ್ಯಾಜ ಪ್ರೇಮದಿಂದ ನಿನಗೆ ಮುತ್ತಿಡುತ್ತೇನೆ” ಎಂದು ಅವಳನ್ನು ತುಟಿಯ ಮೇಲೆ ಚುಂಬಿಸಿ ಸ್ವಂತ ಸಹೋದರಿಯಿಂದ ಎಂದೂ ಬಯಸದಿದ್ದ ಸುಖ ಪಡೆದ- ಆಗಾಗ ಸಮಯ ಸಿಕ್ಕಾಗ ಪಡೆಯುತ್ತಿದ್ದ. ಜೊತೆಗೆ ತಾನು ಕಾಮದ ಕೆಸರಿನಿಂದ ಅರುಂಧತಿಯನ್ನು ಮೇಲಕ್ಕೆತ್ತಿದ ಕಥೆಯನ್ನು, ಅದರಲ್ಲಿ ತಾನು ತೋರಿಸಿದ ಸಂಯಮವನ್ನು ಗೆಳೆಯರ ಇದಿರು ನೀರು ತುಂಬಿದ ಕಣ್ಣಿನಿಂದ ಹೇಳುತ್ತಿದ್ದಾಗ- ಆ ಸಂಜೆ- ಕ್ರಿಕೆಟ್ ಛಾಂಪಿಯನ್ ಕಿಟ್ಟಿ- ಹೋ ಹೋ ಎಂದು ಬಿದ್ದು ಬಿದ್ದು ನಕ್ಕು…. ಏನೆಂದಿದ್ದ? ಟರ್ಕಿ ಟವಲಿನಿಂದ ಮೈ ಒರೆಸಿಕೊಳ್ಳುತ್ತ ದೋಬಿ ಇನ್ನೂ ಯಾಕೆ ಬಟ್ಟೆ ತರಲಿಲ್ಲವೆಂದು ಯೋಚಿಸುತ್ತಿದ್ದ ರಾಜಣ್ಣನಿಗೆ ಪಕ್ಕನೆ ಕನಸಿನಲ್ಲಿ ನಕ್ಕಿದ ಮಸುಕು ಮಸುಕು ಮುಖ ಸ್ಪಷ್ಟವಾಯಿತು. +ಮೂರು ಮಕ್ಕಳ ತಂದೆಯಾಗಿ ಎಲ್ಲೋ ಕ್ಲಾರ್ಕ್ ಆಗಿರುವ ಕಿಟ್ಟುವೆಲ್ಲಿ? ಅವನೆಲ್ಲಿ? ಅವನು ವಿಶ್ವವಿದ್ಯಾಲಯದ ಪದವೀಧರನಾಗಿ, ಬಂಗಾರದ ಪದಕವನ್ನು ಪಡೆದು ಉದ್ದಾಮಸಾಹಿತಿಯಾಗುವ ಭವಿಷ್ಯವನ್ನು ಎದುರಿಗಿಟ್ಟುಕೊಂಡು ಈಗ ಇಲ್ಲಿ ಕನ್ನಡಿಯ ಎದಿರು ಕ್ರಾಪನ್ನು ಓರಣವಾಗಿ ಬಾಚಿಕೊಳ್ಳುತ್ತಿದ್ದಾನೆ. ಕಿಟ್ಟುವೆಲ್ಲಿ? ಅವನೆಲ್ಲಿ?… ಎಲ್ಲಿ ಎಂದು ಹುಡುಕಿ ಕೋಟಿನ ಜೇಬಿನಿಂದ ವಾಚು ತೆಗೆದ. +ನೋಡಿದಾಗ ಅದು ಹನ್ನೆರಡಕ್ಕೇ ನಿಂತತ್ತು. ಕೂಡಲೇ ಹಳೆಯ ಟ್ರಂಕಿನೊಳಗೆ ಹತ್ತು ವರ್ಷದಿಂದ ಮುಟ್ಟದ ಒಂದು ಹಳೆಯ ದುಂಡನೆಯ ವೆಸ್ಟ್ ಎಂಡ್ ಕೀಪ್‌ಸೇಕ್ ವಾಚಿದೆ ಎಂದು ನೆನಪಾಯಿತು. ಹಳೆಯ ವಸ್ತುಗಳನ್ನು ನೋಡಬೇಕೆನಿಸುವಾಗ ಅನ್ನಿಸುವ ಸಂತೋಷದಿಂದ ಅದನ್ನು ಹುಡುಕಿ ತೆಗೆದ. ಅದೂ ಹನ್ನೆರಡಕ್ಕೇ ಯಾಕೆ ನಿಂತಿದೆ ಎಂದು ಅಶ್ಚರ್ಯವಾಯಿತು. “ಕೀ ಕೊಟ್ಟುದಿದಕೆಷ್ಟು ಜನ್ಮದಾಚೆ” ಎಂದು ಕವನ ಒಂದರ ಸಾಲನ್ನು ಚಪ್ಪರಿಸುತ್ತ ಕೀ ಕೊಟ್ಟರೂ ಹಳೆಯ ವಾಚು ನಡೆಯಲಿಲ್ಲ. +ಮೇಜಿನ ಮೇಲಿದ್ದ ಡಾಕ್ಟರೇಟ್ ಥೀಸಿಸ್ಸನ್ನು ತೆಗೆದು ಬೀರುವೊಳಗಿಟ್ಟ. ಗಾಜಿನ ಹರಳೊಂದನ್ನು ಮೇಜಿನ ಮೇಲಿಟ್ಟು ಟ್ರಂಕಿನಿಂದ ಐಗ್ಲಾಸ್ ತೆಗೆದು ಕಣ್ಣಿಗೆ ಸಿಕ್ಕಿಸಿ ವಾಚನ್ನು ವಿಚಿತ್ರ ಸಂತೋಷದಿಂದ ಬಿಚ್ಚತೊಡಗಿದ. ಎಂಟು ಹತ್ತು ವರ್ಷಗಳಿಂದ ಮುಟ್ಟದಿದ್ದ ಹತಾರಿಗಳನ್ನು ಹಿಡಿಯುವುದೇ ಎಷ್ಟೋ ಖುಷಿಯಾಗಿ ವಾಚಿನ ಅವಯವಗಳ ವಿಚಿತ್ರ ಸಂಗದಲ್ಲಿ ಏಕಾಗ್ರಚಿತ್ತನಾದ. ಆಗ ಅವನ ಚಿತ್ತದ ಇನ್ನೊಂದು ಅಂಚು ಅರುಂಧತಿಗೂ ಅವನಿಗೂ ನಡುವೆ ನೆಡೆದಿದ್ದ ಪ್ರಣಯಪ್ರಸಂಗದ ಹಾಳೆಗಳನ್ನು ಓದತೊಡಗಿತು. +ಓದತೊಡಗಿತು- ಯಾಕೆಂದರೆ ನಡೆದದ್ದೆಲ್ಲ ಕಾಗದಗಳ ಮುಖಾಂತರವೆ. ಇಂಟರ್ ಮೀಡಿಯೆಟ್ ಕಾಲೇಜಿನ ಐನೂರಕ್ಕೂ ಮೇಲೆ ಸೇರುತ್ತಿದ್ದ ಚರ್ಚಾಗೋಷ್ಠಿಗಳಲ್ಲಿ ಕೈಚಪ್ಪಾಳೆ ಸೇವೆ ಪಡೆಯುತ್ತಿದ್ದ ಗುಂಗುರುಕೂದಲಿನ ಟೊಮ್ಯಾಟೋ ದೆಂಪಿನ ಕೆನ್ನೆಗಳ ಮುದ್ದು ಮುಖದ ರಾಜಣ್ಣನನ್ನು ಅರುಂಧತಿ ಕಣ್ಣಿನ ನೋಟದಲ್ಲಿ ಕುಡಿಯುತ್ತಿದ್ದಳು. ಅಜಾತಶತ್ರು- ಸದಾ ನಗುಮುಖ-ಆದರ್ಶ ಜೀವಿ-ಯಾರಿಗೂ ನೋವು ಮಾಡಲಾರದ ಕೋಮಲತೆ- ಸರ್ವಗುಣಸಂಪನ್ನ-ಪೋಲಿಗಳ ಕಾಟಕ್ಕೆ ಬೇಸರಗೊಂಡಿದ್ದ ವಿದ್ಯಾರ್ಥಿನಿಯರ ಕಣ್ಣು ಗೊಂಬೆ- ಇತ್ಯಾದಿ ಬಿರುದಾಂಕಿತನಾದ ರಾಜಣ್ಣ ಕವನ ಸಂಗ್ರಹಗಳ ನಡುವೆ ‘ಅಯ್ಯೋ ಹಾಳು ಸಮಾಜ ನಿಮ್ಮಿಬ್ಬರ ಕಾಮಕಲುಷಿತವಲ್ಲದ ಪ್ರೇಮವನ್ನು ಅರ್ಥಮಾಡಿಕೊಳ್ಳಲಾರದಲ್ಲ!, ಎಂದು ಅವನ ಮುದ್ದಾದ ತಿಳಿಗನ್ನಡದಲ್ಲಿ ಬರೆದಿಟ್ಟ ಕಾಗದಕ್ಕೆ ಪ್ರತಿಯಾಗಿ ಅವಳು- ‘ಹೌದಲ್ಲ’ ಎಂದು ಕಣ್ಣೇರಿಡುತ್ತಿದ್ದಳು. ‘ಕಂಯೂನಿಸ್ಟ’ನಾಗಲೇ ಎಂಬ ಅವನ ನವ್ಯರೀತಿಯಿಂದ ಅಭಿವ್ಯಕ್ತವಾಗುತ್ತಿದ್ದ ದುಗುಡಕ್ಕೆ “ನೀವು ಏನಾದರೂ ನಿಮ್ಮ ಹಿಂದೆ ನಾನಿರುತ್ತೇನೆ” ಎಂದು ಅವಳು ಹೆಣ್ಣು ಅಬಲೆಯಲ್ಲ ಎನ್ನುವ ಆಶ್ವಸನೆಯಿತ್ತಳು. ಇತ್ಯಾದಿ ಇತ್ಯಾದಿಗಳ ನಡುವೆ ಧೈರ್ಯ ಮಾಡಿ ಅನುಮಾನ ಪಡುತ್ತ ತಮ್ಮ ಗುರುದೆಸೆ ಕಳೆದುಕೊಂಡ ಹೆಡ್ಮಾಸ್ಟರರ ಮನೆಗೆ ಹೋದ. ಅವ್ಯಾಜಪ್ರೇಮದ ಸಂಕೇತವಾಗಿ ಶೆಲ್ಲಿಯ ಕವನಗಳನ್ನು ಓದತೊಡಗಿದ. ಆಗ ಬೊಗಸೆ ಕಣ್ಣುಗಳಿಂದ ಅವನನ್ನು ಕುಡಿಯುತ್ತಿದ್ದ ಅರುಂಧತಿಯನ್ನು ಸುಮ್ಮನೆ ನೋಡಲಾರದೆ ಕವನಸಂಗ್ರಹ ಕೈಜಾರಲು ಹಠಾತ್ತನೆ ಎದ್ದು ತಬ್ಬಿಕೊಂಡು ಅವಳು ನೋವಿನಿಂದ ‘ಹಾಯ್ ಎನ್ನುವಷ್ಟು ಅವಳ ಕೆಂಪು ತುಟಿಗಳನ್ನು ಯಾಕೆ ಕಚ್ಚಿದೆನೋ ಏನೋ! ಆಗ ಅವಳು ಭಯಚಕಿತ ಹರಿಣಿಯಂತೆ ಬಿಡಿಸಿಕೊಂಡು ಸೀರೆಯ ಸೆರಗನ್ನು ಸರಿಮಾಡಿಕೊಂಡು, ಕೆದರಿದ ಕೂದಲನ್ನು ಹಿಂದಕ್ಕೆ ತಳ್ಳಿ, ಕುಂಕುಮ ಅಳಿಸಿತೇ ಎಂದು ಎಚ್ಚರಿಕೆಯಿಂದ ಬೆರಳಟ್ಟು ನೋಡಿ ‘ಅಯ್ಯೋ ಅಣ್ಣ ನೋಡಿದರೆ ಏನು ಗತಿ’ ಎಂದಳು. ಆಗ ನಿರುಪದ್ರವಿ, ಅಜಾತಶತ್ರು. ಆದರ್ಶಜೀವಿ ಇತ್ಯಾದಿ ರಾಜಣ್ಣ ‘ಈ ಕಾಮದಿಂದ ಜೀವವಿಡೀ ಪಾರಾಗಲಾರದ ಈ ಪಾಪಿಯನ್ನು ಕ್ಷಮಿಸಿ’ ಎಂದು ಗದ್ಗದ ಕಂಠದಿಂದ ಬೇಡಿಕೊಂಡು ಅರುಂಧತಿಗೆ ಅವಮಾನ (ಜೊತೆಗೆ ಅಸಮಧಾನವೊ) ಆಗುವಂತೆ ಮಾಡಿದ. ಇತ್ಯಾದಿ ಇತ್ಯಾದಿಗಿಂತಾ ಹೆಚ್ಚೇನೂ ನಡೆಯದೆ ಕಾಲ ಸುಗಮವಾಗಿ ಕಳೆಯಿತ್ತಲ್ಲವೆ!….. +ಎಂದು ಯೋಚಿಸುತ್ತ ವಾಚಿನ ಒಂದೊಂದೇ ಮಳೆಯನ್ನು ಜೋಡಿಸುತ್ತಿದ್ದ ರಾಜಣ್ಣನಿಗೆ ತಮ್ಮ ಪ್ರಣಯ ಆಮೇಲೆ ಅನ್ನಮಯ ಕೋಶದಿಂದ ಆನಂದಮಯ ಕೋಶಕ್ಕೆ ಕಂಬಳಿ- ಹುಳ ಬಣ್ಣ ಬಣ್ಣದ ಚಿಟ್ಟೆಯಾಗುವಂತೆ ಬದಲಿಸಿತು ಎಂದು ಸಮಾಧಾನವಾಯಿತು. ಇವನು ಡಿಕನ್ಸ್, ವರ್ಡ್ಸ್‌ವರ್ತ್ ಇತ್ಯಾದಿ ಬರಹಗಾರರನ್ನು ಓದಿ‌ಅವಳಿಗೂ ಓದಿಸಿದ. ಗಂಡು ಹೆಣ್ಣುಗಳ ಮಿಲನದಿಂದ ಸಂತಾನ ಉಂಟಾಗುವುದು ಎಂಬ ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಅರಿತುಕೊಂಡು ಅರುಂಧತಿಯ ಜೊತೆ ಬರೆ ಕಲ್ಪನಾವಿಹಾರಿಯಾದ. ಅಲೆಯುವ ಕಣ್ಣುಗಳು ಒಮ್ಮೊಮ್ಮೆ ಅರುಂಧತಿಗಿಂತಲೂ ಚೆಲುವೆಯರು ಇದ್ದಾರೆ ಎಂದು ಗುರುತಿಸಿದರೂ ಅರುಂಧತಿಯಿಂದ ಪಡೆಯಲು ಸಾಧ್ಯವಾದಂತಹ ನಿರ್ವ್ಯಾಜ ಪ್ರೇಮ ಅವರಿಂದ ದೊರೆಯಲಾರದು ಎಂದು ಸುಮ್ಮನಾದ. ಎರಡು ವರ್ಷದ ಕೆಳಗೆ ಅವಳಿಂದ ದೂರವಾಗಿವ ದುಃಖಮಯ ಸನ್ನಿವೇಶ ಒದಗಿದಾಗ “ನಮ್ಮ ಪ್ರೇಮ ಪವಿತ್ರವಾದುದು. ಮದುವೆಯಾಗಿ ಅದನ್ನು ಸಾಂಸಾರಿಕ ಕೊಚ್ಚೆಗೆ ಎಳೆಯುವುದು ಬೇಡ” ಎಂದು ಬರೆದಿದ್ದ. ಆದರೂ ಕೆಲವೊಮ್ಮೆ ಅವಳು ಬೇರೆ ಯಾವ ಬಕರನನ್ನಾದರೂ ಮದುವೆಯಾಗುವಂತಹ ಕೆಳಮಟ್ಟಕ್ಕಿಳಿದರೆ ಏನು ಗತಿ ಎನ್ನುವ ಭಯ ಅವನಿಗೆ ಯಾಕೆ ಬರುತ್ತಿತ್ತೊ ಏನೊ! ಆದರೆ ಸಂಶಯಕೆ ಆಸ್ಪದ ಕೊಡದಂತೆ ಅವಳು, “ಹಾಗದರೆ ನಾವಿಬ್ಬರೂ ಹೀಗೆಯೇ ಮದುವೆಯಾಗದೆ ಒಂಟಿಯಾಗಿರೋಣ” ಎಂದು ಅಹಲ್ಯೆ, ದ್ರೌಪದಿ, ಸೀತೆ, ತಾರೆ, ಮಂಡೋದರಿಯರನ್ನು ಮೀರಿಸಿದ್ದಳು. ಆಮೇಲೆ ಅವರಿಬರ ನಡುವೆ ಮನಸ್ಸು ಆತ್ಮ ಅಂತರಾತ್ಮರಿಗೆ ಸಂಬಂಧ ಪಟ್ಟಂತೆ- ಪ್ರಕಟವಾದರೆ ಕೀಟ್ಸನ ಪ್ರಣಯಪರ್ತಗಳನ್ನೂ ಮೀರಿಸುವಂತಹ ಅನೇಕ ಕಾಗದಗಳು ಆಗಿಹೋದವು, ಇವೆಲ್ಲ ಆತ್ಮೀಯ ಗೆಳೆಯರ ಎದುರಿಗೆ ಭಾವನಾವೇಶದಿಂದ ಬಿಚ್ಚಿತೋರಿಸಿ ಸಂತೋಷಪಡುತ್ತಿದ್ದ. ಎಲ್ಲ ಮೆಚ್ಚಿಕೆಗೂ ಪಾರ್ತವಾಗಿದ್ದ ತನ್ನ ಇತ್ತೀಚಿನ ಕವನಸಂಗ್ರಹದಲ್ಲಿ ತಮ್ಮ ಪ್ರಣಯಕ್ಕೆ ಉದಾತ್ತ ಅಭಿವ್ಯಕ್ತಿಯನ್ನು ಕೊಟ್ಟಿದ್ದ. ವಾರಪತ್ರಿಕೆಯೊಂದು ವಿಮರ್ಶೆಯಲ್ಲಿ ಆ ಕವನಗಳ ಹಿಂದಿರುವ ಪ್ರೇಮ ಸ್ವರ್ಗೀಯವೆಂದು ಮೆಚ್ಚಿ ಎಲ್ಲರ ಮನೆಯಲ್ಲೂ ಇರಬೇಕಾದ ಪುಸ್ತಕವಿದು ಎಂದಿತ್ತು. +ವಾಚು ರಿಪೇರಿ ಮುಗಿಯುತ್ತಿದ್ದಂತೆ ಮನಸ್ಸು ಮತ್ತೆ ಹಿಂದೆ ಹಿಂದೆ ಹೈಸ್ಕೂಲಿಗೂ ಹಿಂದೆ ಹೋಗಿ ತಂದೆಯ ಕುಪಿತ ಮುಖವನ್ನು ನೋಡಿತು. “ಏನು ಮಾಡ್ತಿದಿಯೋ ಮುಂಡೇದೆ. ಕ್ಲಾಸಿಗೆ ಚಕ್ಕರ್ ಹಾಕಿ ಸೈಕಲ್ ರಿಪೇರಿ ಮಾಡ್ತ ಕೂತಿದೀಯಾ- ನಿನ್ನ ಮೂಳೆ ಪುಡಿಪುಡಿ ಮಾಡ್ದೆ ಇರ್ತೀನೀಂತ ತಿಳ್ದಿದಿಯಾ” ಎಂದು ಬೆನ್ನಿನ ಮೇಲೆ ಕತ್ತಿನ ಮೇಲೆ ಕಾಲಿನ ಮೇಲೆ ಸೊಂಟಕ್ಕೆ ‘ಅಯ್ಯೋ’ ಎನ್ನುವಷ್ಟು ಏಟು ಬಿದ್ದಿತು. ಆಮೇಲೆ ನಾನು ಈ ರಿಪೇರಿ ಕೆಲಸಕ್ಕೆ ಕೈಹಾಕಲಿಲ್ಲ ಅಲ್ಲವೇ ಎಂದು ಯೋಚಿಸಿ ತಲೆ ಕರೆದುಕೊಳ್ಳುತ್ತ ವಾಚನ್ನು ಕೈಗೆತ್ತಿಕೊಂಡ, ಆದರೂ ಹತ್ತು ವರ್ಷದ ಕೆಳಗಿದ್ದ ರಿಪೇರಿಯಲ್ಲಿನ ಆಸಕ್ತಿ ಇನ್ನೂ ತನ್ನಿಂದ ಹೋಗಿಲ್ಲವಲ್ಲ ಎಂದು ಸಮಾಧಾನ ಪಟ್ಟು ವಾಚಿಗೆ ಕೀ ಕೊಟ್ಟ. +ಕಿವಿಯ ಹತ್ತಿರ ಹಿಡಿದು ಕುಲುಕಿದ. ಹತ್ತು ವರ್ಷ ನಿಂತಿದ್ದ ವಾಚು ಮತ್ತೆ ನಡೆಯ ತೊಡಗಿತು. +ಇದ್ದಕ್ಕಿಂದಂತೆ ಒಂದು ದುಷ್ಟ ಯೋಚನೆ ಲಗ್ಗೆ ಹತ್ತಿ ನಿಧಾನ ಮನಸ್ಸಿನ ಒಳಗೆ ಕಳ್ಳಹೆಜ್ಜೆ ಹಾಕಿತು. “ಕೀಟ್ಸ್ ಕವಿಯ ‘ಓಡು’ಗಳನ್ನು ಓದುವುದಕ್ಕಿಂತಲೂ ವಾಚು ರಿಪೇರಿ ಮಾಡುವುದೇ ಹೆಚ್ಚು ಸಂತೋಷ ತರುತ್ತದಲ್ಲ. ಯಾಕೆ?” ಕಳ್ಳ ಹೆಜ್ಜೆ ಹಾಕುತ್ತ ಬಂದುದು ಮಂಗನಂತೆ ಪೀಠವನ್ನೂ ಏರಿ ಕೂತೇಬಿಟ್ಟಿತು. ಹೋಗೆಂದರೂ ಹೋಗಲಿಲ್ಲ. ಕಲಿತುಕೊಂಡಿದ್ದ ಮನೋವಿಶ್ಲೇಷಣೆಯ ಸಹಾಯದಿಂದ ಏನಿರಬಹುದೆಂದು ವಿಮರ್ಶಿಸಿದ. “ವಾಚು ರಿಪೇರಿಯಲ್ಲಿ ಖುಷಿಯಾಗುವವನು ರಾಜಣ್ಣನೆ?- ಆದರೆ ಅರುಂಧತಿಯ ಪವಿತ್ರ ಪ್ರೇಮದಲ್ಲಿ, ಎಂ. ಎ., ಪದವಿ ತಂದ ಸಾಹಿತ್ಯದಲ್ಲಿ ಆಸಕ್ತಿ ಇರುವವನು, ಅಜಾತಶತ್ರು, ನಿರುಪದ್ರವಿ ಇತ್ಯಾದಿ ಬಿರುದಾಂಕಿತನಾದ ಖೋಜಣ್ಣನಿರಬಹುದೆ?” ಆದರೆ- ಈ ಮನೋವಿಶ್ಲೇಷಣೆಯ ಮಾರ್ಗವನಾದರೂ ಒಪ್ಪುವುದು ಹೇಗೆ? ಅದು ಸಂಕೀರ್ಣವೂ ಜಟಿಲವೂ ಆದ ಮನುಷ್ಯನ ಚೇತನವನ್ನು ಅತಿ ಸುಲಭ ಮಾಡಿ ನೋಡುತ್ತದಲ್ಲವೆ?- ಎಂದು ಮತ್ತೊಂದು ವಾದ ಮುಂದೆ ಬಂದಿತು. +ವಾಚನ್ನು ಕೈಗೆ ಕಟ್ಟಿಕೊಂಡ. ‘ಟಿಕ್ ಟಿಕ್’ ಎಂದು ಅದು ಚೆನ್ನಾಗಿ ಸೆಕೆಂಡು ನಿಮಿಷ ಗಂಟೆ ಎಲ್ಲ ಮುಳ್ಳುಗಳಲ್ಲೂ ಸರಿಯಾಗಿ ಕೆಲಸಮಾಡುತ್ತಿತ್ತು. ಅಟೋ ಮ್ಯಾಟಿಕ್ ವಾಚುಗಳ ಯಂತ್ರ ಹೇಗಿರಬಹುದು ಎಂಬ ಯೋಚನೆ ಬಂದಿತು. ಲೈಬ್ರರಿಗೆ ಹೋಗಲು ಮನಸ್ಸಾಗಲಿಲ್ಲ. ಸೈಕಲ್ಲಿಗೆ ಓವರ್ ಆಯಿಲ್ ಮಾಡದೆ ಬಹಳ ದಿನವಾಯಿಯ್ತು ಎಂದು ನೆನಪಾಯಿತು. ಸ್ಪ್ಯಾನರನ್ನು ತೆಗೆದು ಸೈಕಲ್ಲಿನ ಪಾರ್ಟುಗಳನ್ನು ಬಿಚ್ಚುತ್ತ ಅದರಲ್ಲೆ ಏಕಾಗ್ರಚಿತ್ತನಾಗಿ ಕೂತುಬಿಟ್ಟ. +* +* +* +ಮಾರನೆ ದಿನ ಬೆಳಿಗ್ಗೆ ಸಕ್ಕರೆ ಕಂಪೆನಿ ಸೀಟಿ ಹಾಕುವುದಕ್ಕಿಂತಲೂ ಮುಂಚೆ ಎದ್ದು ಒಳಗಿನಿಂದ ನಿಧಾನವಾಗಿ ತನ್ನಲ್ಲಿ ಏನೋ ಪರಿವರ್ತನೆಯಾಗುತ್ತಿದೆಯಲ್ಲವೇ ಎಂದು ಯೋಚಿಸುತ್ತ ಕಾಲುಗಂಟಿನ ಮೇಲಿನ ಎಕ್ಸಿಮಾವನ್ನು ತುರಿಸಿಕೊಂಡ. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇನ್ಸ್‌ಪೆಕ್ಟರನ್ನು ಕಂಡಾಗ ನಮಸ್ಕಾರ ಎಂದು ಎಂದಿನಂತೆ ಹಲ್ಲು ಕಿರಿಯುವ ಮನಸ್ಸೇ ಆಗಲಿಲ್ಲ. ಆ ಅಲ್ಪನನ್ನು ಮೆಚ್ಚಿಸಿ ನನಗೇನಾಗಬೇಕಾಗಿದೆ ಎಂದು ಹಲ್ಲುಜ್ಜಿಕೊಳ್ಳುತ್ತ ಹಿತ್ತಲ ಬಾಗಿಲಲ್ಲಿ ನಿಂತಿದ್ದವನಿಗೆ ಅವರ ಹೆಂಡತಿ ಸ್ನಾನದ ಮನೆಗೆ ಹೋದುದು ಕಾಣಿಸಿತು. ನಿಂತಲ್ಲಿಂದಲೆ ಸ್ನಾನದ ಮನೆಯ ಒಳಭಾಗ ಕಾಣುವಂತಿದ್ದರೆ ಎಂದು ಆಕೆ ಬೆತ್ತಲೆಯಾಗುವ ಚಿತ್ರ ಕಲ್ಪಿಸಿಕೊಂಡು ಜೊಲ್ಲು ಸುರಿಸಿದ. ಇನ್ಸ್‌ಪೆಕ್ಟರರು ಡ್ಯೂಟಿಗೆ ಹೋದಾಗ ಆಕೆ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎನ್ನಿಸಿ ಸಂತಾನ ನಿಯಂತ್ರಣದ ಅವಶ್ಯಕತೆಯೂ ಇಲ್ಲ ಎಂದು ಸಮಾಧಾನಗೊಂಡ. ಅರುಂಧತಿಗಿಂತ ಎಲ್ಲ ಹೆಂಗಸರೂ ಯಾಕೆ ಚೆನ್ನಾಗಿ ಕಾಣಿಸುತ್ತಾರೆಂದು ಯೋಚಿಸುತ್ತ ನಿತ್ಯದಂತೆ ನುಣ್ಣಗೆ ಮುಖಕ್ಷೌರ ಮಾಡಿಕೊಂಡು, ಮೂತಿಯನ್ನು ಮಂಗನಂತೆ ಚೂಪುಮಾಡಿ ಕನ್ನಡಿಯಲ್ಲಿ ಸ್ವರೂಪ ನೋಡಿಕೊಳ್ಲತೊಡಗಿದ- ಇಷ್ಟು ದಿನಗಳ ತನಕವೂ ನನಗೆ ನಾನೇ ಮೋಸ ಮಾಡಿಕೊಂಡೆನಲ್ಲಾ ಎಂದು ಅತೀವವಾಗಿ ಸಂಕಟವಾಗಿ, ಕಾಫಿ ಕುಡಿದು, ಬಂದು ಬಿದ್ದಿದ್ದ ವಾರಪತ್ರಿಕೆಯಲ್ಲಿ ‘ಇಂದಿನ ನಾಗರಿಕತೆಗೆ ಬುದ್ಧನ ಸಂದೇಶ’ ಎಂಬ ತಾನು ಬರೆದ ಲೇಖನವನ್ನು ನೋಡದ. ಲೇಖಕರನ್ನು ಪರಿಚಯ ಮಾದಿಕೊಡುತ್ತ ಸಂಪಾದಕರು. “ಕನ್ನಡಿಗರಿಗೆ ಚಿರಪರಿಚಿತರಾದ ರಾಜಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ಇಂಗ್ಲಿಷ್ ಕನ್ನಡ ಸಂಸ್ಕೃತಗಳಲ್ಲಿ ಆಳವಾದ ಪಾಂಡಿತ್ಯವನ್ನು ಸಂಪಾದಿಸಿದ್ದಾರೆ….. ಸಧ್ಯಕ್ಕೆ ಡಾಕ್ಟರೇಟ್‌ಗೆ ಸುಪ್ರಸಿದ್ದ ಕನ್ನಡ ಸಾಹಿತಿ ಡಾಕ್ಟರ್ ದ್ವಾರಕನಾಥರಂತಹ ಮೇಧಾವಿಗಳ ಕೆಳಗೆ ಓದುತ್ತಿದ್ದಾರೆ…. ಸ್ನೇಹಶೀಲರೂ ಸಜ್ಜನರೂ ಆದ ರಾಜಣ್ಣನವರಿಗೆ ಉಜ್ವಲ ಭವಿಷವಿದೆ ಎಂದರೆ ತಪಾಗಲಾರದು. ಸಿರಗನ್ನಡಂಗೆಲ್ಗೆ…” ಇತ್ಯಾದಿ ಬರಿದಿದ್ದರು- ಲೇಖನವನ್ನು ಅರುಂಧತಿ ಓದಿ ಮೆಚ್ಚಿ ಕೊಳ್ಳಬಹುದಲ್ಲವೆ ಎನ್ನಿಸಿ ರಾಜಣ್ಣನಿಗೆ ಖುಷಿಯಾಯಿತು. +ಆದರೆ ಕೂಡಲೇ ಮತ್ತೊಂದು ಹಾಳು ಯೋಚನೆ ಹುಗಿದ ಹೆಣದ ಮೇಲಿನ ಕೆಮ್ಮಣ್ಣನ್ನು ನಾಯಿ ಕೆದರುವಂತೆ ಮನಸ್ಸನ್ನು ತೋಡಿತು. “ಇದು ನಿಜವಾಗಿ ನನ್ನ ಲೋಖನವೆ? ಅವರಿವರ ಎಂಜಲನ್ನು ಖೋಜಣ್ಣ ಜನಪ್ರಿಯವಾಗಲೆಂದು ಹೆರಕಿ ಬರೆದಿದ್ದಲ್ಲವೆ” ಎಂದು ಜಿಗುಪ್ಸೆಯಾಗಿ ಪತ್ರಿಕೆಯನ್ನು ತನ್ನ ಲೇಖನಗಳು ಅಚ್ಚಾಗಿದ್ದ ಇತರ ಪತ್ರಿಕೆಗಳ ಜೊತೆ ಜೋಪಾನವಾಗಿಟ್ಟ. ಟೈ ಗಂಟನ್ನು ನೀಟಾಗಿ ಹಾಕಿಕೊಂಡು ಆಕಾಶ ಬಣ್ಣದ ಸೂಟ್ ತೊಟ್ಟು ಸೈಕಲ್ ಹತ್ತಿ ಹೊರಟ. +ಆದರೆ ದಾರಿಯಲ್ಲಿ ಎಂದಿನಂತೆ “ರಸಾನುಭವ-ಕಾವ್ಯಸತ್ಯ-ಅನುಮಯ ಪ್ರಾಣಮಯ ವಿಜ್ಞಾನಮಯ ವಿವಿಧ ಕೋಶಾವಸ್ಥೆ-ಸತ್ಯ, ಸೌನ್ದರ್ಯ ಜನಪ್ರಿಯತೆ ಇಬ್ಸನ್ನಿನ ನಾಟಕಗಳಲ್ಲಿ ಪಾಪ-ಕಲ್ಪನೆ, ಮಹಾಯುದ್ಧವಾದರೆ ಮಾನವನ ಗತಿಯೇನು?” ಇತ್ಯಾದಿ ಯೋಚನೆಗಳ ಬದಲು “ಅರುಂಧತಿ ಎದೆ ಚೆನ್ನಾಗಿದೆ…. ಫ್ರಿವೀಲ್, ಆಕ್ಸೆಲ್, ಡಸ್ಟ್‌ಕ್ಯಾಪ್, ಬಾಲ್ಸ್, ಒಂದು ಪೋಲಿ ಜೋಕು, ಸೈಕಲ್ಲಿನ ಸ್ಟೋಕ್ಸ್ ಸಂಖ್ಯೆ ಕಡಿಮೆ ಮಾಡುವುದು ಸಾಧ್ಯವೆ; ಬ್ಯಾಲನ್ಸ್‌ವೀಲ್- ಹೇರ್‌ಸ್ಟ್ರಿಂಗ್ ಇನ್ನೂ ನಾಜೂಕಾಗಲಾರದೆ?” ಎಂಬ ಯೋಚನೆಗಳು ಯಾಕೆ ಬರುತ್ತಿದ್ದಾವೆಂದು ರಾಜಣ್ಣನಿಗೆ ಅರ್ಥವಾಗಲಿಲ್ಲ. +* +* +* +ಎಣ್ಣೆಗಪ್ಪು ಮೂತಿಯ ಹಸುವಿನಂತಹ ಮನಸ್ಸಿನ (ಪಾಪ ಅವನೂ ಖೋಜ!) ‘ಬೆಣ್ಣೆ’ ಎಂಬ ಅಡ್ಡ ಹೆಸರಿನ ಶಾಮಣ್ಣನ ನಮ್ರತೆಯನ್ನು ಸ್ವೀಕರಿಸುತ್ತ ಡ್ರಾಯಿಂಗ್ ರೂಮಿನಲ್ಲಿ ಕರಿಯ ಸೂಟು ತೊಟ್ಟು ಡಾಕ್ಟರ್ ದ್ವಾರಕನಾಥ, ಒ. ಂ..,ಆ. ಐiಣಣ. (ಐoಟಿಜoಟಿ) ಕಣ್ಣಿಗೆ ಕಟ್ಟುವಂತೆ ಕೂತಿದ್ದರು. +“ಸಾರ್ ಮೊನ್ನೆ ನಿಮ್ಮ ರೇಡಿಯೋ ಟಾಕ್ ತುಂಬ ತುಂಬ ಚೆನ್ನಾಗಿತ್ತು” ಎಂದು ಶಾಮಣ್ಣ ತನ್ನ ಪ್ರಾಮಾಣಿಕವಾದ ಮೆಚ್ಚಿಗೆಯನ್ನು ಗುರುವಿಗೆ ಒಪ್ಪಿಸುತ್ತಿದ್ದಂತೆ ರಾಜಣ್ಣ ಒಳಗೆ ಹೋಗಿ, ಸ್ಥಾನಮನಗಳಿಂದ ಭೂಷಿತರಾದವರ ಎದುರಿಗೆಲ್ಲ ಅಪ್ರಯತ್ನದಿಂದ ಅಥವಾ ತನ್ನ ಅಧೀನದಲ್ಲಿ ಇಲ್ಲದಿದ್ದ ದುಂಡು ಮುಖದ ಕೆಲವೊಂದು ಮಾಸಖಂಡಗಳ ವಿಚಿತ್ರವರ್ತನೆಯಿಂದ ಏರ್ಪಡುತ್ತಿದ್ದ ನಗುವಿನೊಡನೆ ‘ನಮಸ್ಕಾರ’ ಎಂದ. +ಡಾಕ್ಟರರು ನಗುಮುಖದಿಂದ ಸ್ವಾಗತಿಸಿ, ಕಣ್ಣುಗಳ ರೆಪ್ಪೆಯನ್ನು ಪಟಪಟನೆ ಹುಚ್ಚುಗೂಬೆಯಂತೆ ಬಡಿದು- +“ಏನು ಬದಲಾಯಿಸಿ ಬಿಟ್ಟಿದ್ದೀರಲ್ಲ- ಆರೋಗ್ಯವಿಲ್ಲವೆ? ನೆನ್ನೆ ಯಾಕೆ ಬರಲಿಲ್ಲ” ಎಂದರು. +“ಏನೂ ಇಲ್ಲ ಸಾರ್, ನೆನ್ನೆ ಸೈಕಲ್ ಒವರ್‌ಆಯಿಲ್ ಮಾಡಿದೆ. ವಾಚಿನ ಹೇರ್‌ಸ್ಟ್ರಿಂಗ್ ಕೆಟ್ಟೋಗಿತ್ತು. ರಿಪೇರಿ ಮಾಡ್ತಾ ಕೂತೆ. ಹಾಗೇ ಹೊತ್ತಾಯ್ತು ಕ್ಷಮಿಸಿ” ಎಂದು ಇನ್ನೂ ಏನೋ ಗಂಟಲಲ್ಲೇ ಉಳಿದು ರಾಜಣ್ಣ ಸುಮ್ಮನಾದ, ಔh! ಖಿhಚಿಣ is exಣಡಿemeಟಥಿ iಟಿಣeಡಿesಣiಟಿg! ನೋಡ್ರಿ ನಂಗೂ ಎಷ್ಟೋ ಸಾರಿ ಅನ್ಸಿದೆ: ಇಜuಛಿಚಿಣeಜ ಠಿeoಠಿಟe ನಲ್ಲಿ ಜigಟಿiಣಥಿ oಜಿ ಟಚಿbouಡಿ ಹೊರಟು ಹೋಗಿದೇಂತ, ಅದಕ್ಕೇ ಪಾಪ ಆ ಮುದ್ಕ ನೂಲು ತೆಗೀರಿ ಅಂತ ಅಷ್ಟು ಬಡ್ಕೋತಿದ್ದಿದ್ದು. ಃoಜಥಿ ಮತ್ತು Iಟಿಣeಟಟeಛಿಣ ಎರಡರಲ್ಲೂ hಚಿಡಿmoಟಿious ಜeveಟoಠಿmeಟಿಣ ಇರ್ಬೇಕ್ರಿ. ಇಲ್ದಿದ್ರೆ….” ಎಂದು ಡಾಕ್ಟರರು ಸೂಚಿಸಿದ ಮೆಚ್ಚಿಗೆಗೆ ಅಷ್ಟು ಹೊತ್ತೂ ಸುಮ್ಮನಿದ್ದ ಶಾಮಣ್ಣ ಕನ್ನಡಕ ತೆಗ್‌ಎದು ಕರ್ಚಿಫಿನಿಂದ ಒರಸುತ್ತ ಗಂಟಲು ಕೆರೆದುಕೊಂಡ- +‘ಅದನ್ನೇ ಅಲ್ಟೆ ಸಾರ್ ಲಾರೆನ್ಸ್ ಹೇಳೋದು. ನಂಗೂ ಹಾಗೇ ಅನ್ಸಿದೆ-” (ನಾಚಿಕೊಳ್ಳುತ್ತ) “ಅಲ್ಲದೆ ನಂಗೆ ಜಾತಕ ನೋಡಕ್ಕೂ ಬರುತ್ತೆ ಸಾರ್. Iಟಿ mಥಿ oಠಿiಟಿioಚಿಟಿ ಣhಚಿಣ is sಛಿieಟಿಛಿe siಡಿ” ಎಂದ. +“ಔh ಡಿeಚಿಟಟಥಿ. ಣhಚಿಣ is ತಿoಟಿಜeಡಿಜಿuಟ. I sಚಿಥಿ ಜo ಥಿou ಞಟಿoತಿ ಣhಚಿಣ I ಛಿooಞ veಡಿಥಿ ತಿeಟಟ?” ಎಂದು ದ್ವಾರಕನಾಥರು ಕಣ್ಣುಗಳ ಸುತ್ತಲಿನ ಪುಟ್ಟ ಪುಟ್ಟ ಮಾಂಸಖಂಡಗಳನ್ನು ಸಿಂಡರಿಸಿ ಮಾತಿಗೊಮ್ಮೆ ತೋರುಬೆರಳೆತ್ತಿ ಬಲಗೈಗೆ ಕಟ್ಟಿಕೊಂಡಿದ್ದ ವಾಚಿನ ಚಿನ್ನ ಚೈನನ್ನು ಬಿಚ್ಚುವುದು ಹಾಕುವುದು ಶುರುಮಾಡಿದರು. +ರಾಜಣ್ಣನಿಗೆ ಫಕ್ಕನೆ ಅವರ ವಾಚಿನ ಕಡೆ ಕಣ್ಣು ಹೋಯಿತು. “ಎಲ್ಲಿ ನಿಮ್ಮ ವಾಚ್ ನೋಡೋಣ ಕೊಡಿ ಸಾರ್” ಎಂದ. ಡಾಕ್ಟರಿಗೆ ಕೂಡಲೆ ಏನು ಮಾಡಬೇಕೋ ತೋಚದೆ ಕಂಗಾಲಾಗಿ ವಾಚನ್ನು ಬಿಚ್ಚಿಕೊಟ್ಟರು. ರಾಜಣ್ಣ ಅದರ ಮುಚ್ಚಳ ತೆಗೆದು ಏಕಾಗ್ರತೆಯಿಂದ ಅದನ್ನು ದೃಷ್ಟಿಸಿದ. ಸ್ವಲ್ಪ ತಡೆದ ಮೇಲೆ- ಉತ್ಸಾಹದಿಂದ, +“ಸರ್ ಇದರ ಮೆಕ್ಯಾನಿಸಂ ನಂಗೆ ತುಂಬ ಹೊಸದು. ಅಟೋಮ್ಯಾಟಿಕ್ ವೈಂಡಿಗ್ ಹೇಗಾಗುತ್ತದೆ ಈಗ ಗೊತ್ತಾಯ್ತು. ವಂಡರ್ ಫುಲ್-ವಂಡರ್ ಫುಲ್” ಎಂದ ಮತ್ತೆ ಏಕಾಗ್ರಚಿತ್ತನಾಗಿ ನೋಡತೊಡಗಿದ. +ಡಾಕ್ಟರರು ಪೈಪ್ ಹಚ್ಚಿ ಚಿಂತಾಕ್ರಾಂತರಾದರು. ಮತ್ತೆ ಇಲಿಯನೌ ಕಂಡ ತಕ್ಷಣ ಅರೆಮುಚ್ಚಿ ಕಾಯುತ್ತಿದ್ದು ಕಣ್ಣು ತೆರೆದು ಮೇಲೆ ಹಾರುವ ಬೆಕ್ಕಿನಂತೆ-ಥಟ್ಟನೆ- +“ಯಾಕೋ ಈಚೆಗೆ ನನಗೆ memoಡಿಥಿ ಜಿಚಿiಟ ಆಗ್ತಿದೇರಿ ವಾಚನ್ನು moಜeಡಿಡಿಟಿ ಠಿoeಣ ಒಬ್ಬ ಫೈನ್ ಇಮೇಜಾಗಿ ಉಪಯೋಗಿಸಿಕೊಂಡಿದಾನೆ- ಯಾರವನು? ನೆನಪಿದೆಯೋ!” ಎಂದರು. +ಶಾಮಣ್ಣ ಆ ಪ್ರಶ್ನೆಗೆ ಏನು ಉತ್ತರ ಕೊಟ್ಟನೋ ರಾಜಣ್ಣನಿಗೆ ಕೇಳಿಸಲೇ ಇಲ್ಲ. ವಾಚಿನಿಂದ ಮುಖವೆತ್ತಿ ಗಂಭೀರವಾಗಿದ್ದ ಡಾಕ್ಟರನ್ನು ನೋಡಿ- +“ಸಾರ್ ತಾವು ಯುರೋಪಿಗೆ ಹೋದಾಗ ಸ್ವಿಡ್ಸರ್ಲೆಂಡಿನ ವಾಚುಗಳನ್ನು ಹೇಗೆ ತಯಾರಿಸುತ್ತಾರೆ ನೋಡಿದ್ದೀರಾ ಸಾರ್? ಸ್ವಿಡ್ಸರ್ಲೆಂಡಿನ ಕೋಳಿಮೊಟ್ಟೆ. ಖಿhಚಿಣ is hoತಿ ತಿe ತಿeಡಿe ಣಚಿughಣ iಟಿ ಣhe miಜಜಟe sಛಿhooಟ – ಹಿ ಹಿ” ಎಂದು ಹಲ್ಲು ಕಿರಿದ. +ಡಾಕ್ಟರ್ ದ್ವಾರಕನಾಥರು ಆಶ್ಚರ್ಯದಿಂದ ರಾಜಣ್ಣನ ಕಡೆ ನೋಡಿದರು. ಯಾವಾಗಲೂ ಗಂಭೀರ ವಿಷಯಗಳನ್ನೇ ಚರ್ಚಿಸುತ್ತಿದ್ದ ಅವನ ಮುಖದಲ್ಲಿ ಏನೋ ಬದಲಾವಣೆಯಾಗಿದೆ ಎನ್ನಿಸಿತು. ರಾಜಣ್ಣನೂ ಹಾಗೆಯೇ ತನ್ನ ಬಗ್ಗೆ ಅನಾವಶ್ಯವಾಗಿ ಅಸೂಯೆ ಪಡುತ್ತಿದ್ದ ಶಾಮಣ್ಣನನ್ನೂ ಎಂದೂ ನೋಡದ ದೃಷ್ಟಿಯಲ್ಲಿ ನೋಡಿದ. +ಪಾಪ ಎನ್ನಿಸಿತು. ವಾಚುಗಳನ್ನು ಮಾರುವ ಒಂದು ಅಂಗಡಿಯನ್ನು ಇಟ್ಟಿದ್ದರೆ ಅವರು ತುಂಬಾ ಸುಖಿಗಳಾಗುತ್ತಿರಲಿಲ್ಲವೇ ಎಂದು ಕರುಳು ಮರುಗಿತು. ಥಿಂಕರ್ಸ್ ಕ್ಲಬ್, ಕಾಲೇಜು, ಲೈಬ್ರರಿ, ಪೇಪರಿನಲ್ಲಿ ಹೆಸು, ‘ಓ ಡಾಕ್ಟರ್ ನಮಸ್ಕಾರ, ಏಸ್ತೆಟಿಕ್ಸ್ ಸೆನ್ಸ್ ಎಲ್ಲ ಮಸಲತ್ತು ಮಾಡಿ ಅವರನ್ನು ಕೊಂದುಬಿಟ್ಟುವಲ್ಲ ಎಂದು ಮರುಕ ಹುಟ್ಟಿತು. “ಸಾರ್ ನೀವೊಂದು ವಾಚು ಮಾರುವ ಅಂಗಡಿ ಇಡಿ ಶಾಮಣ್ಣ ಕ್ಯಾನ್ವಾಸ್ ಮಾಡ್ತಾನೆ. ನಾನು ಪಕ್ಕದಲ್ಲಿ ರಿಪೇರಿ ಅಂಗಡಿ ಇಡುತ್ತೇನೆ. ಜನರ ಮೆಚ್ಚಿಗೆಗೇಂತ ಹಾಕಿಕೊಂಡಿರುವ ಈ ವೇಷ ಬಿಸಾಕೋಣ” ಎಂದು ಬಿಡಲೇ ಇನ್ನಿಸಿದರೂ ಧೈರ್ಯ ಸಾಕಾಗದೆ ಅಪ್ರಯತ್ನದಿಂದ ಮುಖದ ಮೇಲೆ ತಯಾರಾಗುತ್ತಿದ್ದ ಮಂದಹಾಸ ಮತ್ತೆ ತನ್ನಲ್ಲಿ ಉಂಟಾಗುತ್ತಿದ್ದ ಎಂದು ಅರಿವಾಯಿತು. ಮಂದಹಾಸದ ಜೊತೆಗೆ ಎತ್ತಿದ ಕತ್ತಿನಲ್ಲಿ ಗಾಂಭೀರ್ಯ, ಕಟ್ಟಿಕೊಂಡ ಕೈಗಳಲ್ಲಿ ದೈನ್ಯ, ತೀಕ್ಷ್ಣವಾದ ಕಣ್ಣುಗಳಲ್ಲಿ ಡಾಕ್ಟರರ ಜ್ಞಾನವನ್ನು ಹೇರಬೇಕೆಂದೆನಿಸುವ ಕಾತುರ ಹಿತಿರುಗಿತು. ಡಾಕ್ಟರರಿಗೂ ಚಿರಪರಿಚಿತ ಮುಖವನ್ನು ಮತ್ತೆ ಕಾಣುವಂತಾಯಿತಲ್ಲ ಎಂದು ಗೆಲುವಾಗಿ ಒಳಗಿನಿಂದ ಕಾಫಿ ತರಿಸಿ ಕುಡಿದು ಮೂವರೂ ಮತ್ತೆ ತತ್ವ ಜಿಜ್ಞಾಸೆಯಲ್ಲಿ ತೊಡಗಿ ಕಾಂಪೌಂಡಿನ ಒಳಗಿದ್ದ ಹೂದೋಟದಲ್ಲಿ ತಿರುಗತೊಡಗಿದರು. +ರಾಜಣ್ಣನೂ ಚಿಂತಾಕ್ರಾಂತನಾದ- ಆದರೆ ಎಂದಿನಂತಲ್ಲ. ಡಾಲಿಯಾ ಹೂಗಳು ತುಂಬಾ ಚೆನ್ನಾಗಿವೆಯಲ್ಲವೆ ಎಂದು ಡಾಕ್ಟರರು ಕೇಳಿದ್ದಕ್ಕೆ ಮುಖದ ಮಂದಹಾಸ ಹೌದೆನ್ನುತ್ತಿತ್ತು. ರಸಾನಂದ, ವಿವಿಧ ಕೋಶಾವಸ್ಥೆ, ಸೂಯೇಜ್ ಕಾಲುವೆಯ ಸಂಗತಿ ಎಲ್ಲದರ ಬಗ್ಗೆಯೂ ನಾಲಿಗೆ ಕಲಿತದ್ದನ್ನೆಲ್ಲಾ ಮಗ್ಗಿ ಹೇಳುವ ಪ್ರೈಮರಿ ಹುಡುಗನಂತೆ ಒಪ್ಪಿಸುತ್ತಿತ್ತು. ಆದರೆ ಡಾಕ್ಟರರು “ನನಗೆ ಸುಂದರಿಯಾದ ಒಬ್ಬ ಹುಡುಗಿಯನ್ನು ನೋಡಿದರೆ ಪೈನ್ತ್ ಮಾಡಬೇಕು ಎನ್ನಿಸುತ್ತೆ” ಅಂದಾಗ ರಾಜಣ್ಣನಿಗೆ ಯಾವುದೋ ಮಾತು ಗಂಟಲಲ್ಲೆ ಉಳಿದು ‘ಹೌದು’ ಎಂದುಬಿಟ್ಟ. ಕಲ್ಲುಬೆಂಚಿನ ಮೇಲೆ ಹೊಂಗೆ ಮರದ ತಂಪಾದ ನೆರಳಿನಲ್ಲಿ ಕೂತು ಎಂದಿನಂತೆ ಮಾತಣಾಡುತ್ತಿದ್ದಾಗ ಕೈ ಆಲ್ಸೆಶನ್ ನಾಯಿಯ ಮೈಯನ್ನು ತಡವುತ್ತಿದ್ದಂತೆ-ರಾಜಣ್ಣ ಡಾಕ್ಟರರ ಮಾತಿಗೆ ಹೂಗಟ್ಟಲು ಬೆಣ್ಣೆ ಶಾಮಣ್ಣನನ್ನು ಬಿಟ್ಟು ಯೋಚಿಸತೊಡಗಿದ. +ಅದೊಂದು ರೀತಿಯ ಕಾಳಗ, ಮನೋವಿಜ್ಞಾನಿಗಳಿಗೆ ಅರ್ಥವಾಗುವಂತಹುದು. ತಮಿಳು ಸಿನಿಮಾದಲ್ಲಿ ನಟ ಕನ್ನಡಿಯ ಎದಿರು ನಿಂತಾಗ ಬಿಂಬ ಪ್ರತಿಬಿಂಬಗಳ ನಡುವೆ ನಡೆಯುತ್ತದಲ್ಲ ಅಂಥದು- +“ಎಲ್ಲವೋ ಖೋಜಣ್ಣಾ- ನಿನ್ನ ಸಾಹಿತ್ಯವಿಮರ್ಶೆ, ಮುಖದ ಮೇಲಿನ ಮಂದಹಾಸ- ಸಾವಿರಾರು ಮೈಲಿ ಆಚಿನ ವಿಷಯಗಳಲ್ಲಿ ನಿನ್ನ ಆಸಕ್ತಿ ಎಲ್ಲವೂ ನಿಜವೇನೊ? ಬೇರೆಯವರ ಕಣ್ಣಿನಲ್ಲಿ ಆಕರ್ಷಕವಾಗಿ ಕಾಣಲೆಂದು ನನ್ನನ್ನು ಬಲಿಗೊಟ್ಟೆಯಲ್ಲ! ಸಾಮಾಜಿಕ ಗೌರವಕ್ಕಾಗಿ ನನ್ನನ್ನು ಇಷ್ಟು ದಿನ ಹುಗಿದುಬಿಟ್ಟೆಯಲ್ಲ! ಅರುಂಧತಿಗೆ ಮುತ್ತು ಕೊಡಲು ಪ್ರಯತ್ನಿಸಿದರೂ ನೀನು ಅಡ್ಡ ಬಂದಿಯಲ್ಲ! ವಾಚು ರಿಪೇರಿ ಮಾಡಲೂ ಬಿಡಲಿಲ್ಲವಲ್ಲ!- ಯಾವ ಸಂತೋಷಕ್ಕೆಂದು ಹೀಗೆ ಮಾಡಿದೆ!” +ರಾಜಣ್ಣ- ನೀನು ಸಣ್ಣವನು. ನಿನಗೆ ತಿಳುವಳಿಕೆಯಿಲ್ಲ. ಪ್ರಾಣಿತನದ ಮಣ್ಣಿನ ಮೇಲೆ ಬಿಟ್ಟ ಹೂವೇ ಸಂಸ್ಕೃತಿ, ಅದನ್ನು ನಾನು ಗಳಿಸಿಕೊಂಡಿದ್ದೇನೆ.” +“ಹೂವಲ್ಲ ಪಾಚಿ!” +“ಮುಚ್ಚು ಬಾಯ್! ನಿನ್ನ ಮಾತು ಕೇಳಿದ್ದರೆ ನಾನು ವಾಚು ರಿಪೇರಿ ಮಾಡಿ ಕೊಂಡಿರಬೇಕಿತ್ತು. ಅಪ್ಪ ಹೊಡೆದರೂ ನಿನಗೆ ಬುದ್ಧಿ ಇನ್ನೂ ಬಂದಿಲ್ಲವಲ್ಲ. ಎಷ್ಟು ದಿನ ಓದಿದರೂ ನಿನು ಬದಲಾಗಲ್ಲಿಲ್ಲವಲ್ಲ, ನಿನಗೆ ನಾಚಿಕೆಯಾಗುವುದಿಲ್ಲವೆ? ಇಷ್ಟು ದಿನ ಹೆಂಗಸರ ಪವಿತ್ರ ಪ್ರೇಮ. ದ್ವಾರಕನಾಥರಂತಹ ಜ್ಞಾನಿಗಳ ಸಹವಾಸದಲ್ಲೂ ನೀನು ಪಳಗಲಿಲ್ಲವೆ? ಥೂ ನಿನ್ನ ಮುಖಕ್ಕಿಷ್ಟು ಬೆಂಕಿಯಿಕ್ಕಿತು.” +“ಅಯ್ಯೋ ಹುಚ್ಚೆ? ಹೆಂಗಸರು ನೀನು ನಿರುಪದ್ರವಿಯದ್ದರಿಂದ- ಅರ್ಥಾತ್ ಅವರ ಪವಿತ್ರಾತ್ಮವನ್ನು ಮಾತ್ರ ಬಯಸುವನಾದ್ದರಿಂದ- ಏನೋ ಖುಷಿಗೆ ನಿನ್ನ ಜೊತೆ ಇರುತ್ತಾರೆ. ಒಳಗೊಳಗೇ ನಿನ್ನ ಬಗ್ಗೆ ಎಷ್ಟು ಜಿಗುಪ್ಸೆ ಪಡುತ್ತಾರೆ ಗೊತ್ತೇನು? ಇನ್ನು ಪಾಪ ದ್ವಾರಕನಾಥರು! ವ್ಯಾಪಾರಿಗಳಾಗಿದ್ದರೆ ಇನ್ನೂ ಎಷ್ಟು ಹರ್ಷಚಿತ್ತರಾಗಿರುತ್ತಿದ್ದರೋ…… ಇಲ್ಲಿ ನೋಡು- ನನ್ನ ಮಾತು ಕೇಳು….” +-ಇತ್ಯಾದಿ ಇತ್ಯಾದಿ ಆವನ ಮನಸ್ಸಿನಲ್ಲಿ ನಡೆಯುತ್ತಿದ್ದಂತೆ ಸೌಂದರ್ಯ ಸತ್ಯದ ಜಿಜ್ಞಾಸೆ ಅಂತಿಮ ಘಟಕ್ಕೆ ಬಂದಿತ್ತು. ಎಲ್ಲರಿಗೂ ಹಸಿವಾಗುತ್ತಿತ್ತು. ರಾಜಣ್ಣ ನಮಸ್ಕಾರ ಹೇಳಿ ಹೊರಟ. +* +* +* +ಮನೆಗೆ ಹಿಂತಿರುಗುವಾಗ ಲೈಫ್‌ಬಾಯ್ ಸೋಪು ಕೊಳ್ಳಲು ಮರೆಯದೆ ಹತ್ತು ವರ್ಷದ ಹಿಂದಿನಿಂದ ಹಾಳಾಗಿ ಬಿದಿದ್ದ ವಾಚನ್ನು ರಿಪೇರಿ ಮಾಡುವ ಹೊಡವೆಗೇ ಹೋಗದಿದ್ದರೆ ಚೆನ್ನಾಗಿತ್ತು ಎನ್ನಿಸಿತು. ಆದರೂ ಮಾಡಿನ ಹೆಂಚು ಕಿತ್ತು ಒಳಗೆ ಧುಮುಕುಚ ಮಂಗಗಳಂತೆ ಯೋಚನೆಗಳು ದಂಡುಕಟ್ಟಿ ಮನಸ್ಸಿನೊಳಗೆ ಇಳಿಯ ತೊಡಗಿದುವು. +ಅರುಂಧತಿಯ ಜೊತೆ ಕುಳಿತು ಕೀಟ್ಸ್ ಕವನ ಓದುವುದಕ್ಕಿಂತ ಅವಳನ್ನು ತಬ್ಬಿ ಮಲಗಿಕೊಳ್ಳುವುದೇ ಹೆಚ್ಚು ಸುಖವಲ್ಲವೆ? ನನ್ನ ಸ್ವಭಾವಕ್ಕೆ ಸೌಂದರ್ಯ ಅಧ್ಯಯನಕ್ಕಿಂತ ವಾಚು ರಿಪೇರಿಯೇ ಹೆಚ್ಚು ಒಳ್ಳೆಯದಲ್ಲವೆ? ಸೂಯೆಜ್ ನಾಲೆ ಏನಾದರೆ ನನಗೇನು?- ಪೋಲೀಸರ ಕೈಗೆ ಸಿಕ್ಕದಂತೆ ದ್ವಾರಕನಾಥರನ್ನು ಕೊಲ್ಲುವುದು ಸಾಧ್ಯವೆ?- ವಾಸುದೇವಾಚಾರ್ಯರ ಶಾಸ್ತ್ರೀಯ ಸಂಗೀತ ಆವಾರಾ ಸಂಗೀತಕ್ಕಿಂತ ಉತ್ತಮವೆಂದು ಮೊನ್ನೆ ಸಾಧಿಸಿದೆನಲ್ಲ ಅದು ನಿಜವಾಗಿ ನನಗನಿಸಿದ್ದೆ?- ರೋರಿಕ್ಕಿನ ಚಿತ್ರಗಳನ್ನು ನೋಡಿ ಹೋದ ಭಾನುವಾರ ಯಾಕೆ ತಲೆದೂಗಿದೆ?…. +ಮನೆಗೆ ಹಿಂತಿರುಗಿದವನೆ ಎಂದಿನಂತೆ ಅವನು ಬರೆಯುವ ಮೇಜಿನ ಎದಿರು ಕುಳಿತ. ಪೆನ್ನು ಹಿಡಿದುಕೊಂಡ. ಅಪ್ರಯತ್ನವಾಗಿ ಸಾಲುಗಳು ಹೀಗೆ ಹರಿದುವು- +“ಪ್ರಿಯ ಅರುಂಧತಿ, ನಿನ್ನಿಂದಲೇ ಈಹ ನಾನು ಬದುಕಬೇಕು… ಇನ್ನು ಮೇಲೆ ಹಿಂದಿನಂತೆ ಬೇಡ… ಎಲ್ಲ ಮೋಸ… ಅರ್ಪಿಸಿಕೊಳ್ಳಬೇಕು… Suಠಿeಡಿಜಿiಛಿiಚಿಟ ಆಗಿ ಬದುಕದೆ ನಿನ್ನ ಜೊತೆಗಾದರೂ “ಗಿiಣಚಿಟ ಡಿeಟಚಿಣioshiಠಿ” ಇಟ್ಟುಕೊಳ್ಳಬೇಕೆಂಬ ಬಯಕೆ. ರಾಜಣ್ಣನಿಗೆ ನಿನ್ನ ಮೇಲಿದ್ದ ಬಯಕೆಯನ್ನು ಕಂಡು ಹೆದರಿ ಖೋಜಣ್ಣ ಕಸಿದುಕೊಂಡ. ಅವನನ್ನು ನಾನು ದ್ವೇಷಿಸುತ್ತೇನೆ. ಎಲ್ಲರಂತೆ ನೀನೂ ಅವನನ್ನು ಪ್ರೀತಿಸಿ ಬೆಳೆಸಬೇಡ. ನಿನ್ನ ಜೊತೆಗೆ ಮಲಗಬೇಕೆಂದು ನನ್ಗೆ ವಿಪರೀತ ಆಸೆ… ವಾಚು ರಿಪೇರಿ ಮಾಡುವ ಅಂಗಡಿ ಇಡಲೆ…”- ‘ಸಾಯುತ್ತೇನೋ ಏನೊ?- ನನ್ನ ಶ್ವಾಸಕೋಶಗಳನ್ನು ಕ್ರೀಮಿಗಳು ಉಣ್ಣುತ್ತಿದ್ದಾವೆಂದು ಭಯ’ ಎಂದು ಅವಳ ಮನಸ್ಸು ಕರಗುವಂತೆ ಬರೆದು ಕೊನೆಯ ಮಾತುಗಳಾಗಿ ಎಲಿಯಟ್ಟನ +“ಖಿhe ಚಿತಿಜಿuಟ ಜಚಿಡಿiಟಿg oಜಿ ಚಿ momeಟಿಣs Suಡಿಡಿeಟಿಜeಡಿ, bಥಿ ಣhis ಚಿಟಿಜ ಣhis oಟಿಟಥಿ ತಿe hಚಿve exisಣeಜ” ಎಂದು ಬರೆಯಲೇ ಎನ್ನಿಸಿತು. ಥೂ! ಮತ್ತೆ ಖೋಜಣ್ಣ ರಾಜಣ್ಣನ ಅಭಿಪ್ರಾಯ ಆಕರ್ಷಕವಾಗುವಂತೆ ಮಾಡಲು ಯತ್ನಿಸುತ್ತಿದ್ದಾನಲ್ಲಾ ಎಂದು ನಾಚಿಕೆಯಾಯಿತು- +ಬರೆದ ಕಾಗದವನ್ನು ಹರಿದ. ಹಸಿವಾಯಿತು- ಊಟ ಮಾಡಿದ. ಸುಸ್ತಾಗಿತ್ತು- ಹಾಸಿಗೆಯ ಮೇಲೆ ಒರಗಿದ. ಮೈಕೈಯನ್ನೆಲ್ಲ ತುರಿಸಿಕೊಂಡ. ಮತ್ತೆ ಎದ್ದು ಇನ್ನೊಂದು ಕಾಗದ ಬರೆದ-ಹರಿದ- ಸಂಜೆಯಾಯಿತು. ಕಾಫಿ ಕುಡಿದ. ಶ್ರೀ… ಯವರು ಸಿಕ್ಕರು “ಸ್ವಾಮಿ ನಿಮ್ಮ ಇತ್ತೀಚಿನ ಕವನದಲ್ಲಿ ಒಳ್ಳೆಯ ಕಲ್ಪನೆಯಿದೆ. ಆದರೆ ಕವನದಲ್ಲಿ ಬಿಗಿ ಸಾಲದು. ನಿಮಗೆ ನಿಜವಾಗಿ ಉತ್ತಮ ಭವಿಷ್ಯವಿದೆ” ಎಂದು ತಾನು ಯಾಕೆ ಹಾಗೆಂದು ಬಿಟ್ಟೆನೆಂದು ತಲೆ ಕೆರೆದುಕೊಂಡ. ನಗಬೇಕೆನಿಸಿ ನಕ್ಕ. ಮನೆಗೆ ಹೋಗಿ ಊಟ ಮಾಡಿದ. ಹಾಸಿಗೆಯ ಮೇಲೆ ಒರಗಿದ. ನಿದ್ದೆ ಬರಲಿಲ್ಲ. ಆಕಳಿಸುತ್ತ ಎದ್ದು ಕೂತ. +ಅರುಂಧತಿ ಇರುವ ಊತಿಗೆ ಹೋಗುವ ರೈಲುಬಂಡಿ ರಾತ್ರಿ ಹನ್ನೆರಡಕ್ಕೆ ಹೊರಡುವುದು ಎಂದು ನೆನಪಾಯಿತು. ರೋಡಿನಲ್ಲಿ ಬ್ಯೂಕ್ ಕಾರು ಗಂಭೀರವಾಗಿ ಚಲಿಸಿತು. ಷಾಪಸಂದ್ ಗಾಡಿ ಕಟಕಟ ಎಂದು ಹೋಯಿತು. ನಕ್ಷತ್ರಗಳು ನಿಶ್ಚಲವಾಗಿ ಉರಿದರೂ ಅಧೋಲೋಕದ ಕೊಚ್ಚೆ ಕತ್ತಲಿನಿಂದ ಗೊಂಟರು- ಕಪ್ಪೆಗಳ ರಗಳೆ ಕರ್ಣಪಿಶಾಚಿಯಾಗಿ ಕಾಡುತ್ತಿತ್ತು. ರಾಜಣ್ನ ಸಿಗರೇಟು. ಹಚ್ಚಿ ಕೆಮ್ಮಿದ. ಎದೆ ಸವರಿಕೊಂಡು ಚಿಂತಿಸಿದ. ಪುಪ್ಫುಸ ಶ್ವಾಸಕೋಶಗಳಲ್ಲಿ ಸಿಗರೇಟಿನ ಹೊಗೆ ಏನು ಮಾಡುತ್ತದೆಂದು ರೀಡರ್ಸ್ ಡೈಜೆಸ್ಟ್‌ನಲ್ಲಿ ಬರೆದದ್ದು ನಿಜವೆ? ಂಡಿe mಥಿ ಐuಟಿgs ಚಿಟso ತಿeಚಿಞ? ಕೀಟ್ಸ್ ಪಾಪ ಅಷ್ಟು ಕೊರಗಿ ಸತ್ತ- ನಾನೂ ಹಾಗೆಯೇ ಎಲ್ಲಿಯಾದರೂ?…. +ಹುಚ್ಚಾಸ್ಪತ್ರೆಗೆ ಸೇರಿ, +ಓ ನನ್ನ ಬಿಡಿ ಬಿಡಿ ಡಾಕ್ಟರ್- ಯಾಕ್ರೀ ನನ್ನ ಹಿಂಗೆ ಹಿಂಸಿಸ್ತಿದೀರಿ? ನಾನು ಖಂಡಿತ ಸ್ಕಾಲರ್ ಅಲ್ಲ ಸಾರ್-ಪಾಪದವ ಸಾರ್-ವಾಚ್ ರಿಪೇರಿ ಮಾಡೋವ್ನು ಸಾರ್- ನೆಗಿಬೇಕೂಂತ ಅನ್ನಿಸ್ತದೆ, ಕಿರುಚಬೇಕೂಂತ ಅನ್ನಿಸ್ತದೆ, ನಿಮ್ಮ ದಗಾನ್ನೆಲ್ಲ ಕಂಡು ಗಹಗಹ ನಗಬೇಕೂಂತ ಅನ್ನಿಸ್ತದೆ- ಏನು ಮಾಡ್ತಿದಿರಿ? ನನ್ನನ್ನು ನನ್ನ ಪಾಡಿಗಷ್ಟು ಬಿಟ್ಬಿಡಿ-ಅಲ್ಲ ಡಾಕ್ಟರ್ ನಾನು ವಾಚ್ ರಿಪೇರಿ ಮಾಡಿದರೆ ನಿಮ್ದೇನು ಕಿತ್ಕೋತದೆ ಅಂತ-ರೇಗಬೇಡಿ-ಸುಮ್ನೆ ಅಂದೆ. ಹೊರಟ್ ಹೋಗಿ, ಹೂ ಹೇಳಿದ್ದು ಕೇಳಿಸ್‌ಲಿಲ್ವೇ?- ಹೊರಟ್ ಹೋಗಿ ಅಂದೆ. “ಅಯ್ಯೋ ಪಾಪ. ಹೇಗೆ ಪಾಪ ನರಳ್ತಿದಾನೆ ನೋಡಿ. ಸರಿಯಾಗಿ ಇದ್ದ. ಹೇಗೆ ತಲೇ ಕೊಡ್ತೊ! ಕನ್ನಡ ಸಾಹಿತ್ಯದ ತುಂಬ ಒಳ್ಳೆ ವಿದ್ಯಾರ್ಥಿ ಕಂಡ್ರೀ. ಗುಣವಾಗಬಹುದು ಅಲ್ವೆ? ಅಂತೂ ಕಷ್ಟ. ಇವನಿಗೇನು ಸ್ಕಿಸೋಫ್ರೇನಿಯಾನೇ? ಪಾಪ. ಪಾಪ.” ಆoಛಿಣoಡಿ, is iಣ ಣಡಿue mಥಿ ಟuಟಿgs ಚಿಡಿe ತಿeಚಿಞ? ಸತ್ತೋಗಿ ಬಿಡ್ತೀನಿ. ಕೀಟ್ಸ್‌ನ ಹಾಗೆ ಪಾಪ ಸತ್ತುಹೋಗಿ ಬಿಡ್ತೀನಿ. x-ಡಿಚಿಥಿ ತೆಗೆಸಲೆ? ಅಯ್ಯೋ ಕ್ರಿಮಿಗಳೇ-ಒಳಗೊಳಗೇ ಶ್ವಾಸಕೋಶಗಳ ಒಳಗೇ- ಯಾವ ಪೂರ್ವಜನ್ಮದ ಪಾಪ ಡಾಕ್ಟರ್-ಈಗೇನು ಮಾಡ್ಲಿ ಹೇಳಿ”. “ಏನೋ ರಾಜ? ಖೊ, ಖೊ, ಖೋ….ಜ. ರ, ರ, ರಾ, ಜ.” “ಕಿ, ಕಿ, ಕಿ, ಟ್ಟಿ.” ಖೊ, ಖೊ, ಖೋ…ಜ”. +ರಾಜ-ತಲೆಯಾಡಿಸಿದ. ಸಿಗರೇಟು ಬೂದಿ ಕೆಡವಿ ಮತ್ತೊಮ್ಮೆ ತಲೆಯಾಡಿಸಿದ. ಇಲ್ಲ-ಸಾಧ್ಯವಿಲ್ಲ. ಇಷ್ಟೆಲ್ಲ ಆದಮೇಲೆ ವಾಚು ರಿಪೇರಿ ಕೆಲಸ ಶುರು ಮಾಡಿದರೆ ಹುಚ್ಚಾಸ್ಪತ್ರೆಯೇ ಗತಿ-ಹಾಗಾದರೆ ಮುಕ್ತಿ? ಗ್ರೀಕರು ಹೇಳಿದಂತೆ ಇದಕ್ಕೂ ಒಂದು ಸುವರ್ಣಮಧ್ಯಮದ ದಾರಿಯಿಲ್ಲವೆ? ಇದೆಯೆ? +ಙes! ಲಾರೆನ್ಸ್ ಹೇಳುವ ಹಾಗೆ ಒಂದು viಣಚಿಟ ಡಿeಟಚಿಣioಟಿ shiಠಿ ಬೆಳೆಸ ಬೇಕು. (ಥೂ! ಮತ್ತೆ ಖೋಜಣ್ಣ qouಣe ಮಾಡತೊಡಗಿದ) ಹೌದು ಬೆಳೆಸಿಕೊಳ್ಳಬೇಕು. ಒಂದು ವ್ಯಕ್ತಿಯ ಜೊತೆಯಾದರೂ ದೇಶಾವರಿ ವೇಷ ಹಾಕದೆ ನಿಜಸ್ವರೂಪದಲ್ಲಿ ವ್ಯವಹರಿಸುವುದು. ಸಧ್ಯಕ್ಕೆ ಸ್ವಲ್ಪಕಾಲವಾದರೂ ಹೊರಗಿನ ಮಟ್ಟಿಗೆ ಈಗಿದ್ದ ಹಾಗೆ ಇರುವುದು. ಪರಿಸ್ಥಿತಿ ಇನ್ನೂ ವಿಪರೀತಕ್ಕಿಟ್ಟುಕೊಂಡಿಲ್ಲ. ಈಗಲೇ ನರಗಳು ಸಡಲಿ ಮನೋದೌರ್ಬಲ್ಯದಿಂದ ಹುಚ್ಚು ಹಿಡಿದೀತೆನ್ನುವ ಭಯ ಅಷ್ಟು ನಿಜವಲ್ಲ. ಆದರೂ ಏನಾದರೂ ಮಾಡಲೇಬೇಕು. ಏನು? ಠಿsಥಿಛಿho-ಚಿಟಿಚಿಥಿಟse ಮಾಡಿಸಿ ಕೊಂಡರೆ ಹೇಗೆ? ಅಥವಾ- +ಮತ್ತೊಂದು ಸಿಗರೇಟು ಹಚ್ಚಿ ಎಕ್ಸಿಮಾ ತುರಿಸಿಕೊಳ್ಳುತ್ತಿದ್ದಂತೆ ಏನೋ ಅಸ್ಪಷ್ಟವಾಗಿ ಎನ್ನಿಸಿ ಕೈ ಚಿಟಿಕೆ ಹೊಡೆದು ‘ಅದೇ ಸರಿ’ ಎಂದುಕೊಂಡ. +* +* +* +‘ನನ್ನ ಮೆಲೆ ನೂರು ಕಾರುಗಳು ಹರಿದವು. ರೈಲಿನ ಚಕ್ರಗಳು ನನ್ನ ಬೆನ್ನೆಲುಬನ್ನು ನುಚ್ಚುನೂರು ಮಾಡಿದವು. eಟಿಛಿಥಿಛಿಟoಠಿoeಜiಚಿ ಃಡಿiಣಚಿಟಿಟಿiಛಿಚಿ ಓದಿಸಿ ನನ್ನನ್ನು ಕೊಂದರು. ಇದು ಸಂಸ್ಕಾರವೆಂದರು. ಬಲಿಯಾದವನನ್ನು ಹೂಳಿದರು. ಬಲಿತು ಬಂದವನಿಗೆ ಜಯಮಾಲೆ ಹಾಕಿ ಹೊಗಳಿ ಹಾಡಿದರು. ತ್ಯಾಗಕ್ಕೆ ‘ಬೇಷ್’ ಎಂದು ಎಂ.ಎ. ಪದವಿ ಕೊಟ್ಟರು- ಇನ್ನು ಡಾಕ್ಟರೇಟ್…” +ಎಂದುಕೊಳ್ಳುತ್ತ ಸೂಟ್‌ಕೇಸಿಗೆ ಒಂದು ಟವಲ್, ಸೋಪ್‌ಬಾಕ್ಸ್, ಬ್ರಷ್, ಪೇಷ್ಟ್, ಬೂದುಬಣ್ಣದ ಸೂಟು, ಎರಡು ಬಿಳಿಶರ್ಟ್, ಮಜಿಂಟಾ ಟೈ, ಪಿರಮಿಡ್ ಕರ್ಚೀಫ್, ಹೇರ್‌ಆಯಿಲ್, ಸೇವಿಂಗ್‌ಸೆಟ್ ಯಾವುದನ್ನೂ ಮರೆಯದೆ ತುಂಬಿದ. ಡಾಕ್ಟರೇಟ್ ಥೀಸಿಸ್ಸು ಬೀರುವಿನೊಳಗಡ ಜೋಪಾನವಾಗಿದೆಯೇ ನೋಡಿಕೊಂಡ. ಹತ್ತು ವರ್ಷ ನಿಂತಿದ್ದು ನಡೆಯತೊಡಗಿದ ವಾಚನ್ನು ನೋಡಿದ. ಅರ್ಧಗಂಟೆ ನಡೆದರೆ ರೈಲ್ವೆಸ್ಟೇಷನ್ನು-ಹನ್ನೊಂದೂವರೆಗೆ ಎದ್ದು ನಿಂತ. ಬೂಟ್ಸ್ ಲೇಸು ಬಿಗಿದು, ಕನ್ನಡಿ ನೋಡಿ, ಕ್ರಾಪನ್ನು ತಿದ್ದಿ ಪ್ಲಾಸ್ಟರ್ ಆಫ್ ಪ್ಯಾರೀಸು ಬುದ್ಧನ ಕಡೆಗೊಮ್ಮೆ ಹೊರಳಿ- ಓದಿದ್ದ ಕವನವೊಂದನ್ನು ನೆನೆದು ಹೊಸಲು ದಾಟಿ, ಬಾಗಿಲಿಗೆ ಬೀಗ ಬಲವಾಗಿ ಹಾಕಿ (ಬೀಗ ಬಿದ್ದಿತೋ ಇಲ್ಲವೊ ಎಂದು ಇನ್ನೊಮ್ಮೆ ಪರೀಕ್ಷಿಸಿ) ಹೊರಟ….! “ಹೊರಟ ಹೊರಟೇ ಹೊರಟನೆತ್ತೊ!….” +ಬೆಳಗಿನ ಝಾವ-ಸ್ಟೇಷನ್ ತಲುಪಿ ಟ್ಯಾಕ್ಸಿಹತ್ತಿ ಹನ್ನೆರಡನೇ ಕ್ರಾಸಿನಲ್ಲಿದ್ದ ೩೬೪ನೇ ನಂಬರ್ ಮನೆಯ ಇದಿರು ಇಳಿದ. ತಟ್ಟನೆ ಒಳಗೆ ಹೋಗಲು ಹೆದರಿಕೆಯಾಯಿತು. ಯಾಕೆ ಬಂದೆಯೆಂದು ಹೆಡ್‌ಮಾಸ್ಟರರು (ಆ ಗೃಧ್ರ) ಕೇಳಿದರೆ ಏನು ಹೇಳಬೇಕೆಂದು ದಾರಿಯುದ್ದಕ್ಕೂ ಯೋಚಿಸುತ್ತಿದ್ದ ತನ್ನ ಹೆಡ್ಡತನವನ್ನು ಶಪಿಸಿಕೊಂಡು ಒಡ್ಡ ಧೈರ್ಯಮಾಡಿ ಒಳಗೆ ಹೋದ. +ನಾಯಿ ಬೊಗುಳಿತು. ಬಾಗಿಲು ತೆರೆಯಿತು. ನೊಸಲಿಗೆ ವಿಭೂತಿ ಧರಿಸಿ ಶಾಲು ಹೊದ್ದು ಮೂಗಿನಲ್ಲಿ ಯಾರು ಎನ್ನುತ್ತ ಕೈಯಿಂದ ನಸ್ಯ ಕೊಡವಿ ಹೆಡ್‌ಮಾಸ್ಟರರು ಬಾಗಿಲು ತೆರೆದರು. “ಔh ಛಿome iಟಿ” ಎಂದು ದೇಶಾವರಿ ನಕ್ಕು ರಾಜಣ್ಣನಿಗೆ ಕೂರಲು ಕುರ್ಚಿ ತೋರಿಸಿದರು. ರಾಜಣ್ಣನೂ ಅಗಲವಾಗಿ ನಗುತ್ತ “ಮನೇಲೆಲ್ಲ ಆರೋಗ್ಯವೇ?” ಎಂದು ಸುತ್ತಲೂ ಕಣ್ಣು ಹೊರಳಿಸಿದ. ಅವನು ಹೆದರಿದ್ದ ಹೆಡ್ಮಾಸ್ಟರರ ಪ್ರಶ್ನೆಗೆ ಸಮಯಸ್ಪೂರ್ತಿಯಿಂದ “ಇಲ್ಲಿಯೇ ವಾರಪತ್ರಿಕೆಯ ಸಂಪಾದಕರ ಹತ್ತಿರ ಕೆಲಸವಿತ್ತು ಬಂದೆ” ಎಂದು ನಿಭಾಯಿಸಿಕೊಂಡ. “ಊಟಕ್ಕೆ ಇಲ್ಲೇ ಇರಿ” ಎನ್ನುವ ಉಪಚಾರಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬೇದ ಎಂದ. +ಕಾಫಿ ಕುಡಿಯುತ್ತ ಮತ್ತೊಮ್ಮೆ ಸುತ್ತಲೂ ನೋಡಿದ. ಹೆಡ್ಮಾಸ್ಟರರು ಒಳಗೆ ಹೋದರು. ಅಂತೂ ಕೊನೆಗೆ ಅರುಂಧತಿ ಹೊರಬಂದಳು. ರಾಜಣ್ಣನ ಎದೆ ಜಗ್ಗೆಂದಿತು. ಅವಳ ಸೀರೆಯ ಸೆರಗಿನ ಮಾಸಿದ ಜರಿಯಿಂದ ಕಣ್ಣು ಕೀಳಲಾರದೆ ಕ್ಷಣ ತಬ್ಬಿಬ್ಬಾದ…. +ಅಂತೂ ಧೈರ್ಯಮಾಡಿ “ಈ ಕ್ರಾಸಿನ ಕೊನೆಯಲ್ಲಿ ನಿನಗಾಗಿ ಹತ್ತೂವರೆ ಗಂಟೆಗೆ ಕಾಯುತ್ತಿರುತ್ತೇನೆ -ಸಿಗುತ್ತೀಯಾ?” ಎಂದ. ಅವನ ಮೃದು ಕಂಠದಿಂದ ಎಂದೂ ಕೇಳದಿದ್ದ ಗೊಂಟರು ಕಪ್ಪೆಗಳ ಗೊಟರಿನಂತಹ ಗಡಸು ಗೊಗ್ಗರು ಧ್ವನಿ ಕೇಳಿ ಇದ್ದಕ್ಕಿದ್ದಂತೆ ಅರುಂಧತಿಗೆ ಭಯವಾಯಿತು. ಬೆಚ್ಚಿದ ಅವಳು ಉತ್ತರ ಕೊಡುವುದರೊಳಗೆ ಹೆಡ್ಮಾಸ್ಟರರು ಒಳಗಿನಿಂದ ಹೊರಬಂದರು; +“ನಮಸ್ಕಾರ” ಎಂದು ಅಗಲವಾಗಿ ನಕ್ಕು ಎದ್ದುನಿಂತ. +ಮತ್ತೆಂದು ಈಕಡೆ? ದೇವರು ನಡೆಸಿದರೆ ಎರಡು ತಿಂಗಳ ನಂತರ ನೀವು ಈ ಕಡೆ ಒಂದು ದಿನದ ಮಟ್ಟಿಗಾದರೂ ಬರಲೇಬೇಕಾಗಬಹುದು” ಎಂದು ನಸ್ಯವೇರಿಸಿ ಹೆಡ್ಮಾಸ್ಟರು ಅರುಂಧತಿಯ ಕಡೆ ನೋಡಿ ನಕ್ಕರು. ಅರುಂಧತಿ ಬಿಳಿಚಿ ಬೆವರಿ ಒಳಗೆ ಹೋದಳು. ರಾಜಣ್ಣನಿಗೂ ಏನೋ ಅನ್ನಿಸಿ, ಮೈಬೆವರಿ, ಕೂಡಲೇ ಅಲ್ಲಿಂದ ಹೊರಟು, ಬೀದಿಯ ತುದಿಗೆ ಬಂದು ಅರುಂಧತಿ ಕಾಲೇಜಿಗೆ ಬರುವುದನ್ನು ಕಾಯುತ್ತ ನಿಂತ. +ಜೀವದಲ್ಲಿ ಜೀವ ಹಿಡಿದು ವಾಚಿನ ಕಡೆ ಮತ್ತೆ ಮತ್ತೆ ನೋಡಿದ. ಅಂತೂ ಹತ್ತೂವರೆಯಾಯಿತು. ದೂರದಿಂದ ಅರುಂಧತಿ ಬರುವುದು ಕಾಣಿಸಿತು. ಆದರೆ ಗೆಳತಿಯರನ್ನು ಕೂಡಿಕೊಂಡು ತಾನು ಕಾಯುತ್ತಿರುವುದು ಕಂಡೂ ಕಾಣದವಳಂತೆ ಬರುತ್ತಿದ್ದಾಳೆ. ಮುಖವನ್ನು ಅತ್ತ ಇತ್ತ ತಿರುಗಿಸಿ ಕಪ್ಪು ಸೀರೆಯ ನಿರಿ ಚಿಮ್ಮಿಸಿ ನಗುತ್ತಾ ನಡೆಯುವುದು‌ಅವನ ಕರುಳಿಗೆ ಸೂಜಿಯಂತೆ ಚುಚ್ಚಿತು. ಎದೆ ಹಾರಿಕೊಳ್ಳುತ್ತಿದ್ದರೂ ಅವಳ ಬಳಿ ಹೋದ. ‘ನಮಸ್ಕಾರ’ ಎಂದು ಅಗಲವಾಗಿ ನಕ್ಕ. ಅರುಂಧತಿ ಬೆಚ್ಚಿ-(ಅಲ್ಲ ಹಾಗೆ ನಟಿಸಿ) ‘ಓ ನೀವಾ!’ ಎಂದು ಗೆಳತಿಯರಿಗೆ ‘ಚಿ miಟಿuಣe ಠಿಟeಚಿse’ ಎಂದು ಕೇಳಿ ರಾಜಣ್ಣನ ಬಳಿ ಬಂದಳು. ಉದ್ದುದ್ದ ಕಾಗದ ಬರೆಯುವುದು ಸಾಧ್ಯವಿದ್ದರೂ ಏಕೋ ಎದಿರುಬದಿರಾಗಿ ನಿಂತಾಗ ಇಬ್ಬರಿಗೂ ಬಾಯಿ ಕಟ್ಟಿಬಿಟ್ಟಿತು. +“ಏನು ಅರುಂಧತಿ ನಿನ್ನಿಂದ ಇತ್ತೀಚೆಗೆ ಕಾಗದವೇ ಇಲ್ಲ…” ಸರ್ವಾಂಗ ಬೆವರುತ್ತ ಕೇಳಿದ. +“ನಿಮ್ಮ ಹುಟ್ಟುಹಬ್ಬಕ್ಕೆಂದು ಕಳಿಸಿದ ಕೀಟ್ಸ್ ಸಿಕ್ಕಿತೆ?…” ಅರುಂಧತಿ ಗೆಳತಿಯರ ಕಡೆಗೊಮ್ಮೆ ತಿರುಗಿ ನಿಲ್ಲಿ ಎನ್ನುವಂತೆ ಸನ್ನೆ ಮಾಡಿ ಹೇಳಿದಳು. ರಾಜಣ್ಣನಿಗೆ ಬೆಂಕಿಯ ಮೇಲೆ ನಿಂತಂತೆನಿಸಿ- +“ಔh ಣhಚಿಟಿಞ ಥಿou!…”ಎಂದ. ಇದ್ದಕ್ಕಿದ್ದಂತೆ ಅವನ ಮುಖದಲ್ಲಿ ಎಂದಿನಂತೆ ಮಂದಹಾಸ ಮೂಡಿದ್ದನ್ನು ನೋಡಿ ಅರುಂಧತಿಗೆ ಹಗುರವೆನಿಸಿತು. ರಾಜಣ್ಣನಿಗೂ ತನ್ನ ಪ್ರಯತ್ನವಿಲ್ಲದೆ ಮುಖದ ಮಾಂಸಖಂಡಗಳಲ್ಲಿ‌ಆಗುತ್ತಿದ್ದ ಮಾರ್ಪಾಡುಗಳನ್ನು ಶಪಿಸಿಕೊಂಡು- +“ನಿನ್ನನ್ನು ಒಂದು ವಿಷಯ ಕೇಳಲು ಬಂದೆ” ಎಂದ +ಅರುಂಧತಿ ಮತ್ತೆ ಬೆಚ್ಚಿದಳು. ಹುಡುಗಿಯರು ಕಾಯುತ್ತಾ ನಿಂತಿರುವುದು ರಾಜಣ್ಣನಿಗೆ ಅಸಹನೀಯವಾಯಿತು. ‘ನಿನ್ನ ಗೆಳತಿಯರು ಹೋಗಲಿ ಬಿಡು, ನೀನು ನನ್ನ ಜೊತೆ ಬಾ’ ಎನ್ನಲೇ ಎಂದು ಎನ್ನಿಸಿದರೂ ಮಾತು ಗಂಟಲಲ್ಲೇ ಉಳಿಯಿತು. ಅರುಂಧತಿ ಬೆವರುತ್ತ ಯಾರಾದರೂ ನೋಡಿದರೆ ಏನು ಗತಿ ಎಂದು ಪಾಪಕಾರ್ಯ ಒಂದನ್ನು ಮಾಡುತ್ತಿರುವವಳಂತೆ ಅತ್ತ ಇತ್ತ ನೋಡಿದಳು. ಬಿಗಿಯಾಗಿ ಕಟ್ಟಿದ್ದ ಬಿಳಿಯ ಕುಪ್ಪಸ ಅವನನ್ನು ನಿಂದಿಸುವಂತೆ ಭಯದ ಉಸಿರಾಟಕ್ಕೆ ಏರಿಳಿಯುತ್ತಿತ್ತು. ಮರ್ಯಾದಸ್ಥಳಂತೆ ಅವಳು ಸೆರಗನ್ನು ಮೈ ಮುಚ್ಚುವಂತೆ ಎಳೆದು ಮತ್ತೆ ನೆಲ ನೋಡಿದಳು. ರಾಜಣ್ಣನ ಎದೆ ಕುಸಿಯಿತು. “ಎರಡು ಗಂಟೆಗೆ ನಿನಗೆ ಬಿಡುವಾದರೆ ಕಾಲೇಜು ಲೈಬ್ರರಿಯ ಹತ್ತಿರ ಸಿಗಲೆ?….”ಎಂದು ಅಂತೂ ಕೊನೆಗೆ ಉಗುಳು ನುಂಗುತ್ತ ಎಂದ. +ಯಾವುದರಿಂದಲೋ ಪಾರಾಧವಳಂತೆ ಅರುಂಧತಿ ‘ಹೂ’ ಎಂದು ತಿರುಗಿ ನೋಡದೆ ಹೊರಟುಬಿಟ್ಟಳು. +ರಾಜಣ್ಣನಿಗೆ ಸುಸ್ತಾಗಿಬಿಟ್ಟಿತು. ಏನು ಏನೋ ಶಂಕೆಗಳು-ಮತ್ತೆ ಯಾಕೆ ಹಾಗೆ ಕಾಗದ ಬರೆಯುತ್ತಾಳೆ? ಇವಳೂ ‘ರಾಜಣ್ಣ’ನನ್ನು ಒಪ್ಪಿಕೊಳ್ಳಲಾರಳೆ? ಇಲ್ಲ-‘ರಾಜಣ್ಣ’ ಎಂದೂ ಕಾಗದ ಬರೆದೇ ಇಲ್ಲ-ನಾನೇ ಅಲ್ಲವೆ ಇದಕ್ಕೆಲ್ಲ ಕಾರಣ? ಡಾಕ್ಟರಲ್ಲಿ, ಶ್ಯಾಮಣ್ಣನಲ್ಲಿ ಕೊನೆಗೆ ಅರುಂಧತಿಯಲ್ಲೂ-ಎಲ್ಲೆಲ್ಲೂ!-ರಾಜಣ್ಣನಿಗೆ ಎಲ್ಲೂ ಆಶ್ರಯವಿಲ್ಲವೇ?- ಬದುಕಿನಲ್ಲಿ ಎಂದೂ ಅನುಭವಿಸಿರಲಿಲ್ಲ ಎನ್ನಿಸುವಂತಹ ಯಾತನೆ ತನಗಾಗ ಆಗುತ್ತಿದೆ ಎಂದು ಮೈಯೆಲ್ಲ ನರಗಳಾಗಿ ಸಂಕಟಪಟ್ಟು, (ಚಹಾ ಕುಡಿಯುತ್ತ) ಎರಡು ಗಂಟೆಯವರೆಗೂ ಕಾದ. ಮನಸ್ಸನ್ನು ಒಂದು ನಿರ್ಧಾರಕ್ಕೆ ತಂದು ಬಿಗಿದುಕೊಂಡು ಲೈಬ್ರರಿ ಎದಿರು ನಿಂತ. +ಎರಡಾಯಿತು, ಎರಡೂಕಾಲಾಯಿತು. ಎರಡೂ ಇಪ್ಪತ್ತೈದು ಆಯಿತು. ಅರುಂಧತಿ ಮತ್ತೆ ಗೆಳತಿಯರ ಜೊತೆ ಕ್ಲಾಸಿನ ಕಡೆಗೆ ಹೋಗುತ್ತಿದ್ದಳು. ನಿರ್ಬಲವಾದ ಕಾಲುಗಳನ್ನು ಎಳೆದುಕೊಂಡು ಹೋಗಿ ಅವಳೆದುರು ನಿಂತ. ಬೆಚ್ಚಿ ಪೆಚ್ಚಾದರೂ ಏನೂ ನಡೆಯಲಿಲ್ಲವೆಂಬಂತೆ ನಕ್ಕು ಅರುಂಧತಿ ಹತ್ತಿರ ಬಂದಳು. “ಓ ಮರೆತೇ ಬಿಟ್ಟಿದ್ದೆ-veಡಿಥಿ Soಡಿಡಿಥಿ-ಈ ಕ್ಲಾಸಿಗೆ ಬಹಳ ದಿನದಿಂದ ಚಕ್ಕರ್ ಹೊಡೆದೂ ಹೊಡೆದೂ ಬೇಜಾರಾಗಿದೆ. ನೀವು ಈಗ್ಲೇ ಹೊರಡಬೇಕಾ?” ಎಂದು ಕತ್ತು ಕೊಂಕಿಸಿದಳು. ಅವನನ್ನು ದಿಟ್ಟಿಸಿ ನೋಡದಿದ್ದರೂ ಎತ್ತಿದ ಕಣ್ಣು, ನಗುತ್ತಿದ್ದ ಪುಟ್ಟ ಬಾಯಿ, ಕೊಂಕಿದ ಕತ್ತು, ಸೀರೆ ಸೆರಗನ್ನು ಬಲಭುಜದ ಮೇಲೆ ಎಳೆದುಕೊಳ್ಳುವ ಜಾಗರೂಕತೆ-ಎಲ್ಲದರ ಹಿಂದೆ ಯಾವುದೋ ಭಯ ಅವಳಲ್ಲಿ ಅರಳುತ್ತಿದೆ ಎಂದು ರಾಜಣ್ಣನಿಗೆ ಅನ್ನಿಸಿತು. +ಹೋಟೆಲಲ್ಲಿ ಕೂತು ಗಳಿಸಿದ್ದ ಶಕ್ತಿಯನ್ನೆಲ್ಲಾ ಗಂಟಲಿಗೆ ತಂದು ರಾಜಣ್ಣ “ಹಾಗಾದ್ರೆ ಸಂಜೆ ಅಶೋಕವನದಲ್ಲಿ ಒಬ್ಬಳೇ ಸಿಗ್ತೀಯಾ?” ಎಂದುಬಿಟ್ಟ. ಕಿವಿ ಗೊಯ್ ಎಂದು ಊರೆಲ್ಲ ಸುತ್ತತೊಡಗಿತು. +ತುಟಿ ನಡುಗಿದರೂ, ತೊಡೆ ಗುಡುಗುಟ್ಟಿದರೂ, ಮೈ ಬೆವರಿದರೂ (ಕೆಳಗೆ ಬೀಳದೆ) ಅರುಂಧತಿ ತಗ್ಗಿಸಿದ ಮುಖವನ್ನು ಎತ್ತಲೇ ಇಲ್ಲ. ಕಷ್ಟಪಟ್ಟು ಕಣ್ಣೀರನ್ನು ತಡೆದುಕೊಂಡಳು. ನಿಸ್ಸಹಾಯಕಳಾಗಿ, ಅಬಲೆಯಾಗಿ, ಗಡುಸು ಕಂಠದ ಹೊಸಬನೆದುರು ಏನು ಹೇಳಲೂ ತೋಚದೆ ತತ್ತರಿಸಿದಳು. ಐದಾರು ವರ್ಷಗಳ ಮೇಲೂ ರಾಜಣ್ಣ ಬದಲಾಯಿಸಲಿಲ್ಲವೆ? ಎಂದು ಹಿಂದಿನ ಘಟನೆಯೊಂದನ್ನು ನೆನೆದು ಕಣ್ಣುಕತ್ತಲೆ ಕಟ್ಟಿಬರಲು ಮರಕ್ಕೆ ಒರಗಿ ನಿಧಾನವಾಗಿ ಕಣ್ಣು ತೆರೆದು ರಾಜಣ್ಣನನ್ನು ಆರ್ತಳಾಗಿ ನೋಡಿದಳು. ಏನೋ ಹೇಳಲು ಹೊರಟು ಹೇಳಲಾರದೆ ಒಣಗಿದ ಗಂಟಲನ್ನು ಎಂಜಲು ನುಂಗಿ ಒದ್ದೆ ಮಾಡಿಕೊಂಡಳು. +ರಾಜಣ್ಣನ ದೈರ್ಯ ದ್ವಿಗುಣವಾಯಿತು. ಅರುಂಧತಿಯನ್ನು ಸೀಳುವಂತೆ ನೋಡಿದ. ಪ್ಯಾಕಿನಿಂದ ಸಿಗರೇಟು ತೆಗೆದು ಬೆಂಕಿಪೊಟ್ಟಣದ ಮೇಲೆ ಕುಟ್ಟಿ ಇನ್ನೂ ಗಡುಸಾಗಿ- +Iಜಿ ಥಿou ಜoಟಿ’ಣ ತಿಚಿಟಿಣ ಣo meeಣ me, ತಿhಥಿ ಜoಟಿ’ಣ ಥಿou sಚಿಥಿ so ಜಿಡಿಚಿಟಿಞಟಥಿ?” ಎಂದ. +ಅರುಂಧತಿ ಕೆಳತುಟಿಯನ್ನು ಬೆರಳಲ್ಲಿ ಕ್ಲಿಪ್ಪಿನಂತೆ ಹಿಡಿದು ಮಡಿಚಿ, ಕತ್ತು ತುರಿಸಿಕೊಂಡು ಧೈರ್ಯ ತಂದುಕೊಳ್ಳತೊಡಗಿದಳು. (ಯಾವಾಗಲೂ ಅವಳು ಹಾಗೆ ಮಾಡಿದಾಗ ರಾಜಣ್ಣನಿಗೆ ಅಸಹ್ಯವಾಗಿ ಬೇರೆ ಯಾರಾದರೂ ಹುಡುಗಿಯ ಹತ್ತಿರ ಓಡಿ ಹೋಗಬೇಕೆನಿಸುತ್ತಿತ್ತು). ಸಿಗರೇಟು ಹೊತ್ತಿಸಿ “ಹೂ….ಹೇಳು” ಎಂದ. ಅವನಿಂದ ತಪ್ಪಿಸಿಕೊಂಡು ಎತ್ತಲೋ ನೋಡುತ್ತಿದ್ದ ಅವಳ ಕಣ್ಣುಗಳನ್ನು ಹುಡುಕಿದ. ಹುಬ್ಬುಗಂಟಿನ ಕೆಳಗೆ ಅರೆಮುಚ್ಚಿದ ರೆಪ್ಪೆಗಳ ಹಿಂದೆ ತೀಕ್ಷ್ಣವಾದ ಅವನ ಕಣ್ಣುಗಳನ್ನು ನೋಡಲಾರದೆ ಮುಖ ತಗ್ಗಿಸಿಯೇ ಕಣ್ಣುಗಳನ್ನು ಅರ್ಧ ಮುಚ್ಚಿ ಉಗುರು ಕಚ್ಚುತ್ತ, ಅರುಂಧತಿ ಅಂತೂ ಪ್ರಯತ್ನಿಸಿ- +“ನಾನು ಹೇಗೆ ಅಲ್ಲಿ ನಿಮ್ಮನ್ನ ಒಬ್ಬಳೇ ನೋಡಲಿ?- ಜನ ಏನೆಂದು ಕೊಳ್ಳುತ್ತಾರೆ? +ಔh! ಥಿou ಜoಟಿ’ಣ ಞಟಿoತಿ hoತಿ ಚಿತಿಞತಿಚಿಡಿಜ, hoತಿ ಜiಜಿಜಿiಛಿuಟಣ iಣ is ಜಿoಡಿ ಚಿ ತಿomಚಿಟಿ” ಎಂದಳು. +“ಂಟಟಡಿighಣ- ಉooಜ bಥಿe ಣheಟಿ” ಎಂದು ನಕ್ಕು (ನಕ್ಕನೆ?) ರಾಜಣ್ಣ ಹೊರಟುಬಿಟ್ಟ. ಅರುಂಧತಿಯೂ ಮುಖ ತಿರುಗಿಸಿ ಹೋಗಿಯೇಬಿಟ್ಟಳು. +ಅವಳು ಕರೆದಾಳೋ ಏನೋ ಎಂದು ಆಸೆಯಾದರೂ ಅವನು ಹಿಂದಿರುಗಿ ನೋಡಲಿಲ್ಲ. +ಕ್ಲಾಸೊಳಗೆ ಹೋಗಿ ಕೂತಮೇಲೆ ಅರುಂಧತಿಗೆ ಹೃದಯವೆಷ್ಟೋ ಹಗುರವೆನಿಸಿರಬಹುದಲ್ಲವೆ ಎಂದು ರಾಜಣ್ಣನ ಹುಬ್ಬು ಗಂಟಿಕ್ಕಿತು. +* +* +* +ರಾತ್ರೆ ಬಹಳ ಹೊತ್ತು ಹಾಳು ಗೊಂಟರು ಕಪ್ಪೆಗಳ ಗೊಟರಿನಿಂದ ರಾಜಣ್ಣನಿಗೆ ನಿದ್ದೆ ಬರದೆ ಹಾಸಿಗೆಯಲ್ಲಿ ಹೊರಳಿದ. ಗಡಿಯಾರ ನೋಡಿದ. ಹನ್ನೆರಡು ತೋರಿಸುತ್ತಿತ್ತು. ಬರೇ ಹನ್ನೆರಡೇ ಎಂದು ಕಿವಿಗೆ ಹಿಡಿದ. ವಾಚು ನಿಂತಿತ್ತು! +ಸಿಗರೇಟು ಹೊತ್ತಿಸಿದ. ಈಗೇನು ಮಾಡಲಿ ಎಂದು ಎಕ್ಸಿಮಾ ತುರಿಸಿಕೊಂಡ. ‘ವಿಷ ಕುಡಿಯಲೆ?’ ಎನ್ನುವ ಯೋಚನೆಯೂ ಬಾರದೆ ಇರಲಿಲ್ಲ. ಆದರೆ ಅದು ತನ್ನ ಕೈಯಿಂದ ಸಾಧ್ಯವಿಲ್ಲ ಎಂದೂ ಅನ್ನಿಸದೆ ಇರಲಿಲ್ಲ…. +ತಾನೊಬ್ಬ ಭಗ್ನ ಪ್ರಣಯಿ ‘ಯಾರಂತೆ?’ ಎಂದು ಓದಿದ್ದ ಕಥೆಗಳನ್ನು ನೆನಪುಮಾಡಿಕೊಂಡ. ಲಾರೆನ್ಸಿನ ‘moಜeಡಿಟಿ ಐoveಡಿ’ ಕಥೆಯಂತೆ ಇದನ್ನು ಕುರಿತು ಒಂದು ಕಥೆ ಬರೆಯಬಹುದಲ್ಲವೇ ಎಂದು ಅನ್ನಿಸಿತು. ಹಾಗೆಯೇ ಯೋಚಿಸುತ್ತ ರಗ್ಗನ್ನು ಎಳೆದುಕೊಂಡು ಕೌಂಚಿ ಮಲಗಿದ. +***** +೧೮-೮-೧೯೫೬ +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […] +ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […] +ಅವನನ್ನು ನಾನು ಹೆಚ್ಚು ವರ್ಣಿಸುವುದಿಲ್ಲ ನೋಡಲು ಬಿಕುಷ್ಠೆಯಂತಿದ್ದ. ಬೆಳಿಗ್ಗೆ ಎದ್ದಕೂಡಲೆ ನೋಡಿದರೆ ಅವತ್ತಿಡೀ ಅನ್ನನೀರು ಹುಟ್ಟಲಿಕ್ಕಿಲ್ಲ. ಅಫಿಸಿನ ದೊಡ್ಡ ಕಿಟಕಿಯ ಕೆಳಗೆ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತಿರುತ್ತಿದ್ದ. ಒಳಗೆ ಬರುವವರೆಗೆ ಕಣ್ಣಿಗೆ ಹೊಡೆದು ಕಾಣುವಂತೆ. ಹಾಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_438.txt b/Kannada Sahitya/article_438.txt new file mode 100644 index 0000000000000000000000000000000000000000..3417d7cd902ac6a42a76b212801b52eb31e461ff --- /dev/null +++ b/Kannada Sahitya/article_438.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ ಸುಳಿಯದ ಸಮೀರ ಈಗ ಗೆಲುವಿಗೆ ಬೇಸತ್ತವನಂತೆ ಆಡತೊಡಗಿದ. ಮತ್ತು ಎಂದಿನಂತೆ ರಾಜಕಾರಣಿಗಳ ಗೊಡವೆಗೆ ಹೋಗಲಿಲ್ಲ. ಆಗುತ್ತಿರುವುದಷ್ಟೇ ನಿಜ ಎಂದುಕೊಂಡು ಭ್ರಮೆಯನ್ನೂ ಒಂದು ಆಗುವಿಕೆಯೆಂದು ಪರಿಗಣಿಸುವ ಸಮೀರನಿಗೆ ಯಾಕೋ ವಿನಾಕಾರಣ ವಿಚಿತ್ರ ಶಂಕೆಯೊಂದು ಬಾಧಿಸಿದಂತೆ ಅನಿಸತೊಡಗಿತು. ಸರಕ್ಕನೆ ನಿದ್ದೆಯಿಂದೆಚ್ಚೆತ್ತವನಂತೆ ಈಗಷ್ಟೇ ಅವನು ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದ. ತನ್ನ ಮೇಜರ್‌ನೊಂದಿಗೆ ಸಾಕಷ್ಟು ವಾದಿಸಿ, ನಂತರ ತನ್ನ ವಾದ ಮಾಡುವ ಪರಿ ಮತ್ತು ರಾಜಿನಾಮೆಯ ಇರಾದೆ ಇವುಗಳ ಪರಸ್ಪರ ಹೊಂದುವುದಿಲ್ಲ ಎಂಬುದರ ಅರಿವಾಗಿ “ನಾಳೆಯಿಂದ ನಾನು ಬರುವುದಿಲ್ಲ-ನಿಮಗೆ ಬೇಕಾಗಿರಲಿ ಇಲ್ಲದಿರಲಿ”-ಎಂದು ಸಾರಿ, ಆಫೀಸಿನ ತನ್ನ ಸ್ನೇಹಿತರನ್ನು ಕಾಣದೆ, ಇದೇನೂ ಮಹಾ ವಿಶೇಷವಲ್ಲ ಎಂಬುದನ್ನೇ ಸಾರುವವನಂತೆ ಕೆಫಿಟೇರಿಯದಲ್ಲಿ ವಾಡಿಕೆಯಂತೆ ಸತತ ಮೂರು ಕಪ್ ಚಹಾ ಕುಡಿದು-ಡಿಸ್‌ಪೇಚ್ ಸೆಕ್ಷೆನ್ನಿಗೆ ಹೋಗಿ ಶ್ರೀಲೇಖಾಳನ್ನು ಹೊರಕರೆದು ಹಸಿರುಗಿಡದ ಚಿಗುರೆಲೆಗಳ ಹಿಂದೆ “ಐ ಡಿಡ್ ಇಟ್” ಎಂದು ಅವಳ ಕೆನ್ನೆ ಚಿವುಟಿ, ಎಂತು ಪ್ರತಿಕ್ರಿಯಿಸಬೇಕೆಂಬ ತಬ್ಬಿಬ್ಬಿನಲ್ಲಿ ಅವಳನ್ನು ಬಿಟ್ಟು-ಹೊರಬಿದ್ದು-ಶಹರದ ಕಡೆ ಧಾವಿಸುತ್ತಿದ್ದ ಕಾರೊಂದರಲ್ಲಿ ಲಿಫ್ಟ್ ಪಡೆದು ದಾದರ್ ಟಿ.ಟಿ.ಯಲ್ಲಿಳಿದ. +ರಸ್ತೆಯ ತುಂಬ ಒಂದಿಷ್ಟು ಮಳೆ ನಿಂತಿತ್ತು. ಆಕಾಶದಲ್ಲಿಯೂ ವೇಳೆಗೆ ಮಂಕು ಹಿಡಿಸುವಂತೆ ಮೋಡಗಳು ಹೊಂದಿಕೊಂಡಿದ್ದವು. ಇನ್ನು ಮುಂದೆನು? “ಹೊಟ್ಟೆ ಹೊರಕೊಳ್ಳುವ ಚಾಕರಿ ಬೇಡ ಎಂದು ಬಿಟ್ಟಾಯಿತು ಮುಂದೇನು?” ಇತ್ಯಾದಿ ಸಹಜ ಪ್ರಶ್ನೆಗಳು ಏಳಲಿಲ್ಲ. ಸದ್ಯ ಪ್ರವೀಣ ಊರಲಿಲ್ಲ. ಔರಂಗಾಬಾದ್‌ಗೆ ಹೋಗಿದ್ದಾನೆ. ಇಲ್ಲವಾದರೆ ಅವನೊಂದಿಗೆ ಈ ಕುರಿತು ಮಾತಾಡುವ ಕಿರಿಕಿರಿ ಇರುತ್ತಿತ್ತು. ಪ್ರವೀಣನಿಗೋ ಪ್ರತಿ ಘಟನೆಗೂ ಪ್ರತಿ ಹೆಜ್ಜೆಗೂ ಪೂರ್ವನಿಯೋಜಿತ ಸಿದ್ಧತೆಗಳಿರಬೇಕು. ಸ್ಪಷ್ಟತೆ ಇರಬೇಕು. ಇಂಥ ಪ್ರಸಂಗಗಳೂ ಅನಿರೀಕ್ಷಿತವಾಗದಷ್ಟು ಎಲ್ಲ ಸಾಫುಸಪಾಟಾಗಿರಬೇಕು. ಅವನು ಸ್ವಪ್ನಗಳನ್ನು ಕಾಣುತ್ತಾನೋ ಇಲ್ಲವೋ ಎಂದು ಎಷ್ಟೋ ಸಲ ಸಮೀರನಿಗೆ ಶಂಕೆಯಾದುದುಂಟು. ಅವನ ಇಂಥ ಸಮೀಕರಣ ಮನೋವೃತ್ತಿ ಮತ್ತು ಕ್ಲೆರಿಟಿಮೆನಿಯಾದಿಂದಲೇ ಈತನಕ ಅವನು ಯಾವ ಪ್ರೇಮದಲ್ಲೂ ಬಿದ್ದ ಲಕ್ಷಣಗಳಿಲ್ಲ. ಆದರೆ ಅಪಘಾತಗಳ ಎದುರು ಆತ್ಮಹತ್ಯೆಗಳ ಎದುರು ಪ್ರವೀಣ ಪೆಚ್ಚಾಗುತ್ತಿದ್ದ. ಹದಿನೆಂಟು ವರುಷಗಳ ಗಂಡಹೆಂಡಿರ ಒಡನಾಟವೊಂದು ಮುರಿದು ಹೋಯಿತು ಎಂದರೆ ಅಂಥ ಸಂಗತಿಗಳನ್ನು ಎಂತು ಕುದುರಿಸಬೇಕೆಂದು ಪತ್ತೆ ಹತ್ತದೇ ಮೈಮುರಿದು ಬಿಡುತ್ತಿದ್ದ. ಸಮೀರನ ಖುಷಿಯ ಲವಲವಿಕೆಯ ನಿಲುವು ಪ್ರವೀಣನಿಗೆ ಅನಿಮಂತ್ರಿತವೆನಿಸುತ್ತಿತ್ತು. ಪ್ರವೀಣನ ಪ್ರಕಾರ ಸಮೀರನದು ಸುಳ್ಳುಪ್ರಪಂಚ. ಯಾವುದನ್ನು ಸ್ಪಷ್ಟ ಕುರುಹುಗಳಲ್ಲಿ ಸ್ಮಾರಕಗಳಾಗಿ ಇಡಲಾರೆವೋ ಅವೆಲ್ಲ ಸುಳ್ಳು ಎಂದವನ ವಾದ. ಸಮೀರನಿಗೂ ಪ್ರವೀಣನ ಇಂಥ ಗಣಿತ ಮನೋವೃತ್ತಿಯ ಕುರಿತು ವಿಶ್ಲೇಷಿಸುವುದೂ ಒಂದು ಅರ್ಥಹೀನ ಕೆಲಸ. ಅಂತೆಯೇ ಎಲ್ಲವನ್ನೂ ಬಿಟ್ಟುಬಿಡುತ್ತಿದ್ದ. ಕೆಣಕಲ್ಪಟ್ಟರೂ ಸುಮ್ಮನುಳಿಯುತ್ತಿದ್ದ. “ಎಲ್ಲವನ್ನು ಬಿಟ್ಟುಬಿಡೋ ಅವೆಲ್ಲ ತಂತಾನೇ ಬೆಳೆಯುತ್ತವೆ” ಎಂದವನು ಅಮೂರ್ತ ಪಂಡಿತನಂತೆ ಮಾತಾಡಿದರೆ ಪ್ರವೀಣ “ದುಡ್ಡು?” ಎನ್ನುತ್ತಿದ್ದ. ಅದಕ್ಕೆ ಸಮೀರ “ದುಡ್ಡನ್ನು ಬ್ಯಾಂಕಲ್ಲಿ ಬಿಟ್ಟುಬಿಡು. ಅದು ಅಲ್ಲಿ ಬೆಳೀತದೆ” ಎಂದುಬಿಡುತ್ತಿದ್ದ. ಇಷ್ಟೆಲ್ಲಾ ಆದರೂ ಗಿದದಂತೆ ಮರದಂತೆ ಉಳಿದ ಪ್ರಾಣಿಗಳಂತೆ ಹಾಯಾಗಿ ಉಳಿಯಲಿಕ್ಕೆ ಅಧೀರನಾಗುತ್ತಿದ್ದ. ಯಾಕೋ ನೆರವು ಅನಿವಾರ್ಯವಾದದ್ದನ್ನು ಮನಗಂಡು ಒಳಗೆಲ್ಲೋ ಅಧೀರನಾಗುತ್ತಿದ್ದ. ಯಾಕೋ ಈಗ ಪ್ರವೀಣನಿರದಿದ್ದುದೇ ಒಳ್ಳೆಯದಾಯಿತು ಎಂದನಿಸತೊಡಗಿತು ಅವನಿಗೆ. ದಾದರ್ ಸ್ಟೇಷನ್ನಿನ ಹೊರಗಿನ ಇರಾಣಿಯಲ್ಲಿ ಎರಡು ಕಪ್ ಚಹಾ ಕುಡಿದ. ಕುಡಿಯುವಾಗ ತಾನು ಕೆಲಸಕ್ಕೆ ಸೇರಿದ ದಿನಾಂಕ ಜ್ಞಾಪಿಸಿಕೊಳ್ಳಲು ಯತ್ನಿಸಿದ. ಯಾವಾಗಲೂ ತನ್ನ ಮಾರ್ಕುಗಳು ತಾರೀಖುಗಳು ಎಲ್.ಐ.ಸಿ. ಮುಂತಾದ ನಂಬರುಗಳು ಯಾಕೆ ತನಗೇ ನೆನಪಿಗೆ ಬರುವುದಿಲ್ಲ ಎಂದು ಅಚ್ಚರಿಗೊಂಡ. ತನಗೆ ಬರುತ್ತಿದ್ದ ಸಂಬಳವೂ ಅವನಿಗೆ ಸರಿಯಾಗಿ ಗೊತ್ತಿರಲಿಲ್ಲ. ಎಷ್ಟೋ ಸಲ ಹಣವಿದೆಯೆಂದು ಯಾರಿಗೋ ಚೆಕ್ ಬರೆದುಕೊಟ್ಟು ಅವರ ಚೆಕ್ ಬೌನ್ಸ್ ಆದದ್ದುಂಟು ಅಥವಾ ಹಣವಿಲ್ಲವೆಂದು ತಿಂಗಳಕೊನೆಯೆಂದು ಸುಮ್ಮನೆ ಅವನು ಒಂದೂಟ ಮಾಡಿದ್ದೂ ಉಂಟು. ಸದ್ಯ ತನ್ನ ಜನ್ಮ ದಿನಾಂಕವೊಂದು ನೆನಪಿದೆ, ಚಹಾ ಕುಡಿದು ಹೊರಬಿದ್ದು ಸೇತುವೆದಾಟಿ ಪಶಿಮಕ್ಕೆ ಬಂದು ತೀರಾ ಇಕ್ಕಟ್ಟಾದ ದಾದರ ತರಕಾರಿ ಮಾರ್ಕೆಟ್ಟಿನಲ್ಲಿ ನಡೆದ. ಅವನಿಗೆ ಯಾವಾಗಲೂ ತುಂಬಿ ಕಂಗೊಳಿಸುವ ತರಕಾರಿ ಮಾರುಕಟ್ಟೆಗಳಲ್ಲಿ ನಡೆಯುವದೆಂದರೆ ಖುಷಿ. ವಿಶಾಲವಾಗಿ ತುಂಬಿ ಯೌವನ ಆರೋಗ್ಯ ಸೂಸುವ ತರಕಾರಿ ಮಳಿಗೆಗಳ ಎದುರು ನಿಂತು ಬಟಾಣಿ, ಗೋಬಿ, ತೊಪ್ಪಲುಪಲ್ಲೆ, ನುಗ್ಗೀಕಾಯಿಗಳನ್ನು ನೋಡಿ ನೋಡಿ ಸಾಗುತ್ತಿದ್ದ. ಮೂಗಿಗೆ ಹಸಿ ತರಕಾರಿಯ ಕೊತ್ತಂಬರಿಯ ಘಾಟು-ಕಿವಿಗೆ ತಕ್ಕಡಿಯ ಕಟಕಟಸದ್ದುಗಳು-ಬಗ್ಗಿ ಬಗ್ಗಿ ಚೌಕಾಶಿ ಮಾಡುವ ತುಂಬಿದ ತುರುಬಿನ ಹೆಂಗಸರು-ಕಳೆದುಹೋದವರಂತೆ ನಿಂತ ಅವರ ಮಕ್ಕಳು-ತರಕಾರಿಗಳ ನಡುವೆಯೇ ಇಟ್ಟ ಗ್ಲಾಸಿನಿಂದ ಚಾ ಕುಡಿಯುವ ಭಯ್ಯಾಗಳು ಅವರ ನೆರೆತ ಕೂದಲುಗಳು-ಒಟ್ಟಾರೆ ಈ ಒಂದು ಹಸಿರು ವಾಣಿಜ್ಯ ಅವನಿಗೆ ವಿಲಕ್ಷಣವೆನಿಸುತ್ತಿತು. ಎಂಯ್ಹ ತಾಜಾತನಕ್ಕೂ ಅವನು ಮಾರುಹೋಗುತ್ತಿದ್ದ. ಅಂತೆಯೇ ಅವೇ ಅವೇ ಹೋಟಲುಗಳ ಅದೇ ಅದೇ ಚನಾಮಸಾಲಾ, ಆಲೂಮಟರ್, ಭರ್ತಾ, ಬುರ್ಜಿ, ದಪ್ಪರೋಟಿಗಳು-ಅಥವಾ ಉಡುಪಿ ಹೋಟಲುಗಳ ಸಿನೆಮಾದಂತಿರುವ ಸಕಲಕಲಾವಲ್ಲಭ ರೈಸ್‌ಪ್ಲೇಟ್‌ಗಳು ಅವನಿಗೆ ಬೇಸರ ಉಂಟುಮಾಡಿದ್ದವು. ಎಕ್ಸ್‌ಟ್ರಾ ಚಟ್ನಿ ಎಕ್ಸ್‌ಟ್ರಾ ಧಯೀ ಎಕ್ಸ್‌ಟ್ರಾ ಮಜ್ಜಿಗೆಗಳ ಲೋಕಕ್ಕೆ ಅವನು ಹೇಸಿಗೆಪಟ್ಟು ಹೋಗಿದ್ದ. ಹೀಗಾಗಿ ಅವನು ಆಗಾಗ ಠಾಣಾದ ಸರೋವರದ ಬದಿಗೆ ಯಾವುದೋ ಮರಾಠೀ ಮುದುಕನ ಮುರುಕು ಬಾಕಡಾದ ಅಂಗಡಿಯಲ್ಲಿ ಚಪಾತಿಗಳನ್ನೂ ಭಾಜಿಯನ್ನೂ ಕೊಂಡು ಮನೆಗೆ ಬರುತ್ತಿದ್ದ. ಅಥವಾ ಹಣ್ಣುಗಳನ್ನು ತಿಂದು ಹಾಲು ಕುಡಿಯುತ್ತಿದ್ದ. +ಸೇಲ್ಸ್‌ರೆಪ್ ಅಂದಮೇಲೆ ಕಾಲಿಗೆ ಗಾಲಿಗಳನ್ನು ಕಟ್ಟಿಸಿಕೊಂಡೇ ಬಂದವನಾಗಿರಬೇಕು ಎಂದು ಪ್ರಾರಂಭಿಕ ದಿನಗಳಲ್ಲಿ ಗಿರಿಗಿರಿ ತಿರುಗಿದವನು ಈಗಿತ್ತಲಾಗಿ ತೀರ ಅನ್ಯಮನಸ್ಕನಾಗಿ ತಿರುಗುತ್ತಿದ್ದ. ಊರಿಂದೂರಿಗೆ ಹೋಟೆಲುಗಳನ್ನು ಬದಲಾಯಿಸಿ, ಶೂಗಳನ್ನು ಬದಲಾಯಿಸಿ, ಕಿಸೆಯಲ್ಲಿ ಪಾಕೀಟು, ಬೆಲ್ಟುಗಳನ್ನು ಬದಲಾಯಿಸಿ, ಬೇಸತ್ತ. ಕೆಲವೊಮ್ಮೆಯಂತೂ ‘ಶೂ’, ಕೈಲಿ ಬ್ಯಾಗು, ಕಿಸೆಯಲ್ಲಿ ಪಾಕೀಟು, ಬೆಲ್ಟು ಎಲ್ಲ ಸೆರಿ ತಾನೊಂದು ಹದ ಮಾಡಿದ ಚರ್ಮದ ವ್ಯಾಪಾರಿಯೇನೋ ಎಂದೆನಿಸತೊಡಗಿತ್ತು ಅವನಿಗೆ. ಕೆಟ್ಟಕೆಟ್ಟ ಊರುಗಳಲ್ಲಿ ಕೆಟ್ಟ ಕೆಟ್ಟ ವೆಂಡರ್‌ಗಳೊಂದಿಗೆ ಜುಜುಬಿ ಮಾತುಕತೆ ಪುಸಲಾಯಿಸುವಿಕೆ-ಅನಾಮಿಕ ಹೋಟೆಲುಗಳಲ್ಲಿ ಕಮಟು ದಿಂಬುಗಳ ರಾತ್ರಿ-ಅಸಾಧ್ಯ ಸೆಖೆಯ ಥೇಟರುಗಳಲ್ಲಿ ಹಿಂದೆಂದೋ ನೋಡಿದ ಚಿತ್ರದ ಪೇಲವ ಮರು ಆಟ-ಕಾಡುವ ಹ್ಯಾಂಗೋವರ್‌ಗಳು. ಸದ್ಯ ಜನಪದ ಇರುವಲ್ಲಿ ಹುಡುಗಿಯರೂ ಇರುತ್ತಾರಲ್ಲ ಅಷ್ಟು ಸಾಕು-ಎನ್ನುತ್ತಿದ್ದ. ಊರು ಎಂಥದೇ ಇರಲಿ ಕಣ್ಣಿಗೆ ಬೀಳಲು ಒಂದೆರಡು ಕಂಗೊಳಿಸುವ ಸಿಹಿ ಹುಡುಗಿಯರು ಇದ್ದರೆ ಸಾಕು ಬದುಕಬಲ್ಲೆ ಎಂದುಕೊಳ್ಳುತ್ತಿದ್ದ. ನಂತರ ರಾತ್ರಿ ಅಸಾಧ್ಯ ಕಾಮೋದ್ರೇಕದ ನಡುವೆ ಶಾರ್ಟ್‌ಕಟ್ ಶಮನಕ್ಕೆ ಉದ್ಯುಕ್ತನಾದಾಗ ಹುಡುಗಿಯರ ಮೋರೆಗಳೇ ನೆನಪಾಗದೆ ಗೊಂದಲಗೊಳ್ಳುತ್ತಿದ್ದ. ಮಾತುಕತೆಗೆ ತೊಡಗಿದ ಎರಡೇ ನಿಮಿಷಗಳಲ್ಲಿ ಸರಸರ ಹಗ್ಗ ಹಿಡಿದು ಹುಡುಗಿಯರ ಕಣ್ಣುಗಳ ಮೂಲಕ ಹೃದಯದೊಳಗೆ ಇಳಿದುಬಿಡುತ್ತಿದ್ದ. ಪ್ರವೀಣನಿಗೆ ಇದು ಸರಿಬೀಳುತ್ತಿರಲಿಲ್ಲ. ಬೇಕಿದ್ದರೆ ಒಂದು ಹುಡುಗಿಯನ್ನು ಗಂಟು ಹಾಕಿಕೋ, ಅವಳೊಂದಿಗೆ ಏನು ಬೇಕೋ ಮಾಡಿಕೋ. ಜಗತ್ತಿನ ಎಲ್ಲಾ ಹುಡುಗಿಯರೊಂದಿಗಿನ ಈ ಪ್ರಕಾಂಡ ಪ್ರೇಮದ ಮರುಳಿಗೆ ಅರ್ಥವಿಲ್ಲ ಎನ್ನುತ್ತಿದ್ದ. ಆಗೆಲ್ಲ ಸಮೀರ ಅವನೆಡೆ ಕನಿಕರದಿಂದ ನೋಡುತ್ತಿದ್ದ. +ಸಮೀರನ ನಿರಂಬಳ ನಡವಳಿಕೆಯಿಂದ, ಕಣ್ಣಿನೊಳಗಿನ ಹೊಳಪಿಂದ, ಆಪ್ತ ಪ್ರಪಂಚಕ್ಕೇ ಧುಮುಕುವ ಎಗ್ಗಿಲ್ಲದ ಆತ್ಮೀಯತೆಯಿಂದ, ಮಂದಿ ಅವನನ್ನು ಹಚ್ಚಿಕೊಂಡಿದ್ದರು. ಅಥವಾ ಹಾಗೆಂದು ತಿಳಿದುಕೊಂಡಿದ್ದರು. ಎಷ್ಟೆಲ್ಲಾ ಮಂದಿಗೆ ಏನೆಲ್ಲಾ ವಾಗ್ದಾನ ಮಾಡಿ ಸಮೀರ ನಂತರ ಕಳೆದುಹೋಗುತ್ತಿದ್ದ. ಇದನ್ನರಿತ ಪ್ರವೀಣ ಅವನಿಗೆ “ಮಂದಿ ನಿನ್ನಿಂದ ಬಲವಾದ ಅಪೇಕ್ಷೆಯನ್ನು ಹೊಂದುತ್ತಾರೆ. ಅವನ್ನು ಈಡೇರಿಸಲಾಗದಿದ್ದಲ್ಲಿ ಯಾಕಾದರೂ ಅಪೇಕ್ಷೆಗಳನ್ನು ಎಬ್ಬಿಸುತ್ತೀ?” ಎಂದು ಭಾಷಣ ಕೊಡುವಾಗ ಈ ಮಾತಿನ ಹಿಂದೆ ಎಲ್ಲೋ ಸಣ್ಣ ಅಸೂಯೆಯ ಸೆಲೆ ತೋರಿ ಬಂದು ಸಮೀರನಿಗೆ ಅವನ ಕುರಿತು ಪಾಪ ಅನಿಸುತ್ತಿತ್ತು. ನಕ್ಕುಬಿಡುತ್ತಿದ್ದ. ಈ ಅಪೇಕ್ಷೆಗಳೇನೋ ಮಹಾ ಇರುತ್ತಿರಲಿಲ್ಲ. ಇವನು ಬರುತ್ತಾನೆಂದು ಅವರು ಮೀನುಗೀನು ತಂದು ಅಡಿಗೆ ಮಾಡಿಟ್ಟು ಕಾಯುವುದು. ಇವನಿಗೆ ಬೇಕಾದುದೆಂದು ಲೈಬ್ರರಿಯಲ್ಲಿ ಜಗಳಾಡಿ ಇವನಿಗಾಗಿ ಪುಸ್ತಕಗಳನ್ನು ತರುವುದು. ಪರೀಕ್ಷೆ ಮುಗಿಸಿದ ಮಕ್ಕಳು ಸಮೀರ ‘ಜಂಗಲ್ ಬುಕ್’ಗೆ ಒಯ್ಯುತ್ತಾನೆಂದು ಕಾಯುವುದು. ಅವರ ಹುಟ್ಟಿದ ಹಬ್ಬಕ್ಕೆ ಇವನಿಂದ ಗ್ರೀಟಿಂಗ್ಸ್‌ಗಾಗಿ ಕಾಯುವುದು. ಇವನು ಬಿಟ್ಟು ಬಂದ ಶರ್ಟ್‌ಗಳಿಗೆ ಗುಂಡಿ ಹೊಲಿದು ತೊಳೆದು ಇಸ್ತ್ರಿ ಮಾಡಿಟ್ಟು ಅದನ್ನು ಅರಸಿ ಇವನು ಬಂದಾನೆಂದು ಕಾಯುವುದು, ಇತ್ಯಾದಿ. ಹಾಗಂತ ಈ ಎಲ್ಲ ಮಂದಿಗೆ ಇವನನ್ನು ಹಚ್ಚಿಕೊಳ್ಳುವ ಮತ್‌ಲಬೀ ಕಡ್ಡಾಯವಿದ್ದಿದ್ದಿಲ್ಲ. ಅಂದರೆ ಅವರಿಗೆ ಮದುವೆಗೆ ಬಂದ ಮಗಳಿರಲಿಲ್ಲ ಅಥವಾ ಅವನು ಅವರ ಯಾರಿಗೂ ನೌಕರಿ ಕೊಡಿಸಬಹುದಾಗಿರಲಿಲ್ಲ. ಆದರೆ ‘ಬರುತ್ತೇನೆ’ ಎಂದು ಹೊರಬಿದ್ದ ಸಮೀರ ಮತ್ತೆ ಅವರಲ್ಲಿ ಹೋಗುವುದು ಇವನಿಗಾಗಿ ಹೊಂದಿಸಿಟ್ಟ ಭಾವನಾತ್ಮಕ ಆಟಿಗೆಗಳ ಪ್ರಪಂಚವನ್ನು ಅವರು ತೆಗೆದಿಟ್ಟ ನಂತರವೇ. ನಂತರ ಅವರಿಗೆ ತಬ್ಬಿಬ್ಬು. ಹೊಸ ಸ್ವೀಕಾರಗಳಿಗೆ ಬೇಸರ, ಎಲ್ಲೋ ತಾವು ಹಳತಾಗುತ್ತ ತಾಜಾತನ ಕಳೆದುಕೊಂದಂಥ ಭಾವ. “ಅವರು ನಿನ್ನಿಂದ ಅಪೇಕ್ಷೆಗಳನ್ನು ಹೊಂದುವುದಕ್ಕೂ ಮತ್ತು ನಾನು ಅವುಗಳನ್ನು ಈಡೇರಿಸುವುದಕ್ಕೂ ಸಂಬಂಧವೇ ಇಲ್ಲ. ಅವರು ನನಗೆ ಗೊತ್ತಿಲ್ಲದಂತೆ ನನ್ನಿಂದ ಅಪೇಕ್ಷೆಗಳನ್ನು ಇಟ್ಟುಕೊಳ್ಳುವ ಕ್ರಿಯೆಯಲ್ಲೇ ನಾನು ಅವರ ಅಪೇಕ್ಷೆಗಳನ್ನು ಈಡೇರಿಸಿದ್ದೇನೆ” ಎನ್ನುವ ಸಮೀರನ ಸರಣಿ ಪ್ರವೀಣನಿಗೆ ನಿಲುಕುತ್ತಿರಲಿಲ್ಲ. “ಇಂಥ ಅಪೇಕ್ಷೆಗಳನ್ನು ಈಡೇರಿಸುತ್ತ, ಗಣಿತಗಳಿಗೆ ಉತ್ತರಕೊಟ್ಟಂತೆ ಒಡನಾಡುತ್ತ ಹೋದರೆ ಇಡೀ ಸಂಬಂಧವನ್ನೆ ನಾನು ಸಂಕ್ಷಿಪ್ತಗೊಳಿಸಿದಂತಾಗಬಹುದು. ಇಷ್ಟಾಗಿಯೂ ನಾನು ಅವರನ್ನೆಲ್ಲ ಕಂಡೇ ಇರಲಿಲ್ಲ ಎಂದಿಟ್ಟುಕೋ, ಆಗ ಅವರ ಬದುಕು ಅಪೂರ್ಣವಿರುತ್ತಿತ್ತೇ? ಇಲ್ಲಲ್ಲ? ಅಂದ ಮೇಲೆ?” ಎಂದು ಬಿಡುತ್ತಿದ್ದ. ಕನಸುಗಳಲ್ಲಿ ಕಾಯುವಿಕೆಗಳಲ್ಲಿ ಇರುವುದಕ್ಕಿಂತ ಹೆಚ್ಚೇನೂ ಸುಖ ಈಡೇರುವಿಕೆಯಲ್ಲಿ ಇಲ್ಲದೇ ಇರಬಹುದು ಎಂದು ಸಮೀರನಿಗೆ ಅನಿಸುತ್ತಿತ್ತು. ತಾನು ಬೇಜವಾಬ್ದಾರಿ ಎಂದು ಎಲ್ಲ ಜನ ಜರೆಯುತ್ತಿದ್ದರೂ ವಿವಂಚಿತನಾಗದ ಸಮೀರ ಒಳಗೆಲ್ಲೋ ಈ ಐಹಿಕ ಜಗತ್ತಿನಲ್ಲಿ ಇರಬೇಕಾದ ಜವಾಬ್ದಾರಿಯ ಕಡ್ಡಾಯಕ್ಕೆ ಖಿನ್ನನಾಗುತ್ತಿದ್ದ. ಅದೇ ರೀತಿ ಮಂದಿ ಅವನನ್ನು ತಪ್ಪು ತಿಳಿದುಕೊಂಡಾಗ ಅವನ ಬಿಡಿ ನಡವಳಿಕೆಗಳಿಂದ ಅವನ ಆಶಯಗಳನ್ನು ತಪ್ಪಾಗಿ ಅಳೆಯುವಾಗ ಅವನಿಗೆ ತೀರ ಖೇದವೆನಿಸುತ್ತಿತ್ತು. +ಅವನು ಓಡಾಡುವ ಊರಲ್ಲೆಲ್ಲ ಅವನಿಗೆ ಒಡನಾಡಿಗಳು. ಮೊದಲು ಮೂರು ವರುಷ ಸೂರತ್ ಆನಂದ್ ಬರೋಡ. ಈಗ ಕಳೆದೆರಡು ವರುಷಗಳಿಂದ ಮುಂಬಯಿ. ಇಲ್ಲಿಯೂ ಎಷ್ಟೆಲ್ಲ ಕುಟುಂಬಗಳಲ್ಲಿ ಹೊಕ್ಕು ಹೊರಬಂದಿದ್ದಾನೆ. ಎಷ್ಟೇಲ್ಲಾ ಆಪರೇಷನ್ ಥೇಟರುಗಳ ಹೊರಗೆ ಕಾದಿದ್ದಾನೆ. ಎಷ್ಟೆಲ್ಲ ಮದುವೆಗಳಲ್ಲಿ ಐಸ್‌ಕ್ರೀಂ ಹಂಚಿದ್ದಾನೆ. ಒಮ್ಮೆ ಸಿಕ್ಕಾಗ ನಾಡಿದ್ದೇ ಬರುವೆ ಎಂದು ಹೇಳುತ್ತಾನೆ. ಮಕ್ಕಳಿಗೆ ಎಲ್ಲೋ ಕರೆದುಕೊಂಡು ಹೋಗುವೆ ಎನ್ನುತ್ತಾನೆ. ತನ್ನ ನಾನಾವಟಿಯಿಂದ ಯಾವುದೋ ಡಾಕ್ಟರು ಗೆಳೆಯನ ಮೂಲಕ ಯಾರಯಾರದೋ ಚೆಕಪ್ ಮಾಡಿಸುತ್ತೇನೆ ಅನ್ನುತ್ತಾನೆ. ನಂತರ ಕಳೆದುಹೋಗುತ್ತಾನೆ. ಇಲ್ಲಿ ಮಕ್ಕಳು ಕಾಯುತ್ತಾರೆ. ಮರೆತ ಎಂದು ಬೇಜಾರು ಪಡುತ್ತಾರೆ. ದೊಡ್ಡವರು ಬೇಜವಾಬ್ದಾರಿ ಮನುಷ್ಯ ಎಂದು ಆಡಿಕೊಂಡು ಊಟ ಮಾಡುತ್ತಾರೆ ಅವನು ಆಗ ಬೇರೆ ಯಾವುದೋ ಕುಟುಂಬದಲ್ಲಿ ಒಂದಾಗುತ್ತಿದ್ದಿರಬಹುದು. ಮತ್ತೆ ಇವರೆಲ್ಲರೂ ಯಾವುದೋ ಮದುವೆಯಲ್ಲಿ ಸೇರಿದಾಗ ಅವನು ತಮಗೆ ಜಾಸ್ತಿ ಆಪ್ತ ಎಂದು ಪೈಪೋಟಿ ನಡೆಸುತ್ತಾರೆ. ನಂತರ ದಣಿಯುತ್ತಾರೆ. ಸಮೀರ ಎಷ್ಟೋ ಸಲ ಅಬ್ಬರದಲ್ಲಿ “ನಾಳೆ ನಾನು ಸತ್ತರೆ ನನ್ನ ಪಾಲಿಗೆ ಈ ಜಗತ್ತೇ ಇಲ್ಲವಾಗುತ್ತದೆ ಅಂದಾಗ ಈ ಜಗತ್ತಿನ ಕೇಂದ್ರ ನಾನೇ. ನನಗೇ ಕೂತಲ್ಲಿ ಐಷಾರಾಮೌಗಳು ಬೇಕು. ಅದೃಷ್ಟ ಗಿದೃಷ್ಟಗಳೆಲ್ಲ ಸುಳ್ಳು ದರಿದ್ರ ಪದಗಳು” ಎಂದೆಲ್ಲ ನುಡಿದು ಸ್ನೇಹಿತರಿಗೆ ವಿಚಿತ್ರ ಅನಿಸುತ್ತಿದ್ದ ಅಥವಾ ಅವರೇ ಉಚ್ಚರಿಸಲು ಹೆದರುತ್ತಿದ್ದ ಸಂಗತಿಗಳನ್ನು ಅವರಿಗೆ ಆಡಿ ತೋರಿಸಿ-ಅವರ ಮುಗಿದು ಹೋದ ಸಾಧ್ಯತೆಗಳಿಗೆ ಅವರು ಜವಾಬ್ದಾರರಲ್ಲ ಎಂಬಂಥ ಮನವರಿಕೆ ಹುಟ್ಟಿಸಿ-ಅವರನ್ನು ಬಿಡುಗಡೆ ಮಾಡಿಬಿಡುತ್ತಿದ್ದ. ನಂತರ ಅವರೆಲ್ಲ ಹವೆಯಲ್ಲಿ ನಡೆದಂತೆ ನಡೆದು ಗಾಳಿಪಟಗಳಂತೆ ತಮ್ಮ ತಮ್ಮ ದಾರಗಳಗುಂಟ ತಮ್ಮ ತಮ್ಮ ಮನೆ ಸೇರುತ್ತಿದ್ದರು. “ಅರೇ ನಮ್ಮ ಸಮೀರ ಅಂದರೆ ಮಜಾ. ಅವನಿದ್ದರೆ ಹೊತ್ತು ಹೋಗುತ್ತದೆ” ಎಂದು ಅವನ ಅಭಾರ ಮನ್ನಿಸಿ ಕೃತಾರ್ಥರಾಗುತ್ತಿದ್ದರು. ಎಷ್ಟೋ ಜನ ತಮ್ಮ ಮನೆಮಂದಿಯೆಲ್ಲ ಸಮೀರನ ಪುಷ್ಕಳತೆಗೆ ಮಾರುಹೋಗುವುದನ್ನು ಸಹಿಸದೆ ಹೆದರಿ ಮತ್ತೆ ಅವನನ್ನು ಮನೆಗೆ ಕರೆಯದೆ ‘ಅವನು ಕುಡುಕ, ಅವನ ನಡತೆ ಸರಿಯಿಲ್ಲ’ ಎಂದು ಬಚಾವಾಗುತ್ತಿದ್ದರು. ಸಮೀರ ಮಾತ್ರ ಎಲ್ಲ ಕಡೆ ಹೊರ ಬಂದವ ತನಗೆ ತಾನೇ ಸಿಕ್ಕದೇ ನಿದ್ದೆ ಹೋಗುತ್ತಿದ್ದ. ಗೆಳೆಯರು ಬಂಧುಗಳು ಅದೂ ಇದೂ ಎಂಬ ಚಕ್ಕರ್‌ನಲ್ಲಿ ತನಗೆ ಏಕಾಂತವೇ ಸಿಗುವುದಿಲ್ಲ ಎಂದು ಉರ್ದುಕವಿಯಂತೆ ಹೇಳಿದರೂ ಏಕಾಂತ ಸಿಕ್ಕಾಗ ಆ ಏಕಾಂತ ಏಕ ಕಾಲಕ್ಕೆ ಒಡ್ಡುವ ಅನಂತ ಸಾಧ್ಯತೆಗಳಿಗೆ ಮತ್ತು ಶೂನ್ಯಕ್ಕೆ ಹೆದರಿ ಅರಗಿಸಿಕೊಳ್ಳಲಾರದೇ ಅಸ್ವಸ್ಥನಾಗುತ್ತಿದ್ದ. ಹೊರಬಿದ್ದು ಎಂದೂ ಹಾಯದ ಬೀದಿಗಳಲ್ಲಿ ಹಾಯುತ್ತಿದ್ದ. ಪಾನವಾಲರೊಡನೆ ಹರಟೆ ಹೊಡೆಯುತ್ತಿದ್ದ. ಬೀದಿ ಬದಿ ಕಾದ ಸೂಳೆಯರನ್ನು ಕರೆದು ಅವರಿಗೆ ಇರಾನಿ ಹೋಟೆಲುಗಳಲ್ಲಿ ಬನ್‌ಪಾವ್ ತಿನ್ನಿಸುತ್ತಿದ್ದ. ಅವರು ಬಾ ಎಂದು ಕರೆದರೆ ಇಂದಲ್ಲ ನಾಳೆ ಎನ್ನುತ್ತಿದ್ದ. ಹೀಗಾಗಿ ಮಾತಾಡುವಾಗ, ಘಟಿಸುವಾಗ, ಪುಟಿಯುವಾಗ ನಗುವಾಗ ತನಗೆ ಸಿಗುತ್ತಿದ್ದ ಸಮೀರನ ಹೊರತಾಗಿ ಬೇರೆ ಸಮೀರ ತನ್ನೊಳಗಿದ್ದಾನೆಯೆ? ಇದ್ದರೆ ಅವನೆಂಥವನು ಎಂದು ಗಲಿಬಿಲಿಗೊಳ್ಳುತ್ತಿದ್ದ. ಮತ್ತೆ ಎಷ್ಟೋ ತಿಂಗಳುಗಳ ನಂತರ ಒಡನಾಡಿಗಳ ಮನೆಗೆ ಹೋಗಿ ಆ ಪಲ್ಯ ಮಾಡಿ ಈ ಪಲ್ಯ ಮಾಡಿ ಎಂದು ಮಾಡಿಸಿ ಉಂಡು ಬರುತ್ತಿದ್ದ. ಒಮ್ಮೊಮ್ಮೆ ಬಾಯ್ತಪ್ಪಿ ಅಂದ ಮಾತಿಗೆ ಮತ್ತೊಬ್ಬರಿಗೆ ಬೇಸರ ಆಗಿರಬಹುದೇನೋ ಎಂದು ನಿದ್ದೆಗೆಟ್ಟು ಹಳಹಳಿಸಿ ನಂತರ ಮುಂದಿನ ಭೇಟಿಯಲ್ಲಿ ಅವರಿಗೆ ಇದರಿಂದ ಕಿಂಚಿತ್ ಬಾಧೆಯೂ ಆಗದಿದ್ದುದನ್ನು ಕಂಡು ವಿಚಿತ್ರ ನಿರಂಬಳ- ಆ ನಿರಂಬಳದಲ್ಲೂ ಅವರ ಜಾಗದಲ್ಲಿ ತಾನಿದ್ದರೆ ತನಗೆ ಬೇಸರವಾಗುತ್ತಿತ್ತಲ್ಲ. ಅಂದರೆ ತಾನೆಂದುಕೊಂಡಹಾಗೆ ಅವರು ತನ್ನನ್ನು ಬಗೆಯುತ್ತಿಲ್ಲ ಎಂಬ ನಿರಾಸೆಯಾಗಿ ಕೊರಗುತ್ತಿದ ಮತ್ತು ನಂತರ ಇಂಥ ಕೊರಗುಗಳೇ ತನ್ನ ವೈಶಿಷ್ಟ್ಯವೇನೋ ಎಂದು ಮತ್ತೆ ಪ್ರಸನ್ನವಾಗುತ್ತಿದ್ದ. ಪ್ರವೀಣ ಮಾತ್ರ ಇವನ ಆಸೆ ಬಿಟ್ಟವನಂತೆ ‘ನೋಡು ನಿನ್ನ ಸೇಲ್ಸ್‌ರೆಪ್ ಜಾಬಿನಿಂದ ನೀನೆಷ್ಟು ಅನಿಶ್ಚಿತನಾಗಿರುವೆ. ಕೆಲಸ ಬದಲಿಸು, ಎಲ್ಲ ಸರಿಹೋಗುತ್ತದೆ. ನೀನು ಬೆಳೆಯಲೂ ಬಹುದು’-ಎಂದ. ಈ ‘ಬೆಳವಣಿಗೆ’ ಯ ಪರಿಕಲ್ಪನೆಯ ಅರ್ಥ ಅವನಿಗಾಗಲಿಲ್ಲ. +ಆದರೂ ಇರಲಿ ಅಂತ ಒಂದೆರದು ತಿಂಗಳು ಬ್ಯಾಂಕು, ಎಕ್ಸಿಕ್ಯೂಟಿವ್, ಕಾಪಿರೈಟರ್ ಇತ್ಯಾದಿಗಳಿಗೆ ಅರ್ಜಿ ಹಾಕಿದ. ಸಂದರ್ಶನಗಳಿಗೆ ಹೋಗಿ ‘ನಿಮ್ಮಪ್ಪನ ಗಂಟೇನು ಹೋಗುತ್ತದೆ’ ಎನ್ನುವ ರೀತಿಯಲ್ಲಿ ಮಾತಾಡಿ ತಾನೇನೋ ಮಹಾಗೆಂಡೆ ಇದ್ದೇನೆ-ಎನೋ ಜುಜುಬಿ ನಿರುಪಾಯಕ್ಕೆ ನಿಮ್ಮ ಜಾಬ್‌ನ ಅವಶ್ಯಕತೆ ಇದೆ-ಎಂದೆಲ್ಲಾ ಹೇಳಿ ಅವರನ್ನು ಮುಜುಗರದಲ್ಲಿ ಮುಳುಗಿಸಿ ಬಂದ: ‘ಬಿಸಿನೆಸ್ ಮಾಡು’ ಎಂದವರಿಗೆಲ್ಲ ‘ಐ ಹೇಟ್ ಮನೀ’- ಎಂದ. ತನ್ನ ಸಹೋದ್ಯೋಗಿಗಳಿಗೆಲ್ಲ ತಾನು ಫುಲ್‌ಟೈಮ್ ಪೇಂಟರ್ ಆಗುತ್ತೇನೆ ಎಂದು ಹಲುಬಿದ. ಒಂದು ದಿನವಂತೂ ಒಂದಿಷ್ಟು ಎಣ್ಣೆ ಬಣ್ಣಗಳನ್ನು ತಂದು ಮೈ ಮೇಲೆ ದೇವಿ ಬಂದವನಂತೆ ಮನೆಯ ಒಳಗಡೆ ಬಾತ್‌ರೂಂ ಟೈಲ್, ಬಾಗಿಲು ಎಲ್ಲವುಗಳ ಮೇಲೆ ಮನಬಂದಂತೆ ಕುಂಚ ಎಳೆದು-ಮನೆಯ ಒಡೆಯನಿಂದ ಬೈಸಿಕೊಂಡು ಮನೆಯ ಪುನರ್ ವೈಟ್‌ವಾಶಿಂಗ್‌ಗೆಂದು ದಂಡತೆತ್ತ. ಆಪ್ತರ ಪಾರ್ಟಿಗಳಲ್ಲಿ ‘ಪ್ರೀತಿಸುವ ಸಾಮರ್ಥ್ಯ ಕಳಕೊಂಡವರಷ್ಟೆ ‘ನಿಮ್ಮರ್ಥ’ದಲ್ಲಿ ದೊಡ್ಡವರಾಗುತ್ತಾರೆ”-ಗಳಂಥ ಕೋಟೇಬಲ್ ಕೋಟ್‌ಗಳನ್ನು ಉದುರಿಸಿದ. ಪ್ರತೀ ಒಳ್ಳೆಯದೆಂದು ಅನಿಸಿಕೊಂಡ ಸಿನೇಮಾ ನೋಡಿದಾಗ “ಇದೆಂಥದ್ದು? ಇದರಪ್ಪನಂಥ ಪರಿಣಾಮ ನಾನು ಕೊಡಬಲ್ಲೆ”-ಎಂದನಿಸಿತು ಅವನಿಗೆ. ಸ್ಕ್ರಿಪ್ಟ್ ಬರೆದು ಮಾರಿ ದುಡ್ಡು ಮಾಡಿ ಬದುಕುವೆ ಎಂದು ಎಷ್ಟೋ ರಾತ್ರಿ ಮಲಗುವ ಮುನ್ನ ನಿರ್ಧರಿಸಿ ಮರುದಿನ ಮರೆತು ಹೋದ. ಒಂದು ದಿನ “ಈ ವಿಜಯ್ ತೆಂಡೂಲ್ಕರ್ ಗಿಂಡೂಲ್ಕರ್ ಎಲ್ಲ ಇಲ್ಲೇ ಉಳಿಯುತ್ತಾರೆ. ಆಚೆಗೆ ಹೋಗುವುದೇ ಇಲ್ಲ”-ಎಂದು ಹೇಳಿದಾಗ ಅವನ ಪಂಚರಂಗೀ ಗೆಳತಿಯೊಬ್ಬಳು “ಎಲ್ಲಿ ಫಾರಿನ್ನಿಗೋ?” ಎಂದು ಕೇಳಿ ಬಿಟ್ಟಾಗ “ಹೆತ್ತೇರಿಕೀ” ಎಂದು ಅವಳ ಬ್ಲೌಸಿನೊಳಗೆ ಕೈಹಾಕಿ ಅವಳನ್ನು ಮನೆಗೆ ಕಳಿಸಿದ. ಎಲ್ಲರಿಗೂ ಅವನು ಒಂದೆರಡು ದಿನಗಳ ಮಾತಿಗೆ ಎಲ್ಲಿಂದಲೋ ವಲಸೆ ಬಂದವನಂತೆ ಕಾಣುತ್ತಿದ್ದ ಅವನ ವರಸೆಯಿಂದ ಅವನ ಸಾಕಷ್ಟು ಸಮೀಪದ ಹುಡುಗಿಯರೂ ಭರವಸೆ ತೆಗೆದರು. ಮದುವೆಯ ಮಾತು ಬಂದರೆ ರೇಗಿದ. ಹುಡುಗಿಯರೊಂದಿಗೆ ಕಾಫೀ ಕಲಾ ಪ್ರದರ್ಶನ ಥೇಟರ್ ವರ್ಕ್‌ಶಾಪ್ ಒಂದೇ ಕೊಡೆಯೊಳಗೆ ಸಮುದ್ರ ನೋಡುತ್ತ ಒಂದೇ ಸುಟ್ಟ ಗೋವಿನ ಜೋಳ ಮೆಲ್ಲುತ್ತ ಕಣ್ಣಾಲಿಗಳಲ್ಲಿ ಪಿಸುಮಾತುಗಳ ಪ್ರಥಮ ಹಂತ ಮುಗಿದು ತೊಗಲುಗೊಂಬೆಯಾಟದ ಅವಸ್ಥೆ ಬಂದಾಗ ಅವರ ಕಿವಿಯಲ್ಲಿ “ಈಗ ನನ್ನ ಜಾಗದಲ್ಲಿ ಯಾರಿದ್ದರೂ ನಡೆಯುತ್ತಿತ್ತಲ್ಲವೆ ನಿನಗೆ? ನನ್ನ ಹೆಸರು ಹೇಳು ನೋಡುವಾ?” ಎಂದು ಕೇಳಿ ಆವೇಶ ಇಳಿಸಿಬಿಡುತ್ತಿದ್ದ. “ನಾನೊಬ್ಬ ದಕ್ಕಿದ ಗಂಡಾದದ್ದಕ್ಕೆ ನನ್ನೊಡನಿರುವೆಯೋ?” ಎಂದು ಗದ್ಗದಿತವಾಗಿ ಕೇಳುತ್ತಿದ್ದ. ವಿಶ್ ಮಾಡಲು ಬಂದ ಹುಡುಗಿಯೊಬ್ಬಳು ಅವಳ ಗೌನಿನೊಳಗೆ ತನ್ನ ಕೈ ಸರಿದದ್ದೆ ಜಗತ್ತಿನ ಜತೆ ತನ್ನ ಜನ್ಮದಿನವನ್ನೂ ಮರೆತುಬಿಟ್ಟಾಗ-‘ಈ ದರಿದ್ರ ಜಗತ್ತು ನನ್ನ ಅರ್ಹತೆಗೆ ತಕ್ಕುದೇ ಅಲ್ಲ”-ಎಂದು ಅತ್ತುಬಿಟ್ಟ. ಹೋಟೆಲೊಂದರಲ್ಲಿ ಆಶ್‌ಟ್ರೇದೊಳಗಿಂದ ಮುಗಿದ ತುಂಡುಗಳನ್ನು ಶೇಖರಿಸಿ ಕಿಸೆಯಲ್ಲಿಟ್ಟು ಸೇದುವ ಮುದಿ ವೇಟರನ್ನು ನೋಡಿದ ಮೇಲೆ ಸಿಗರೇಟನ್ನು ಬಿಟ್ಟುಬಿಟ್ಟ. ಮರುದಿನ ಈ ಕುರಿತು ಗೆಳೆಯರಲ್ಲಿ ಹೇಳುವಾಗ-ಹೀಗೆ ಹೇಳುವದರಿಂದ ಆ ವೃದ್ಧನ ಆಸ್ತಿತ್ವದ ಘನತೆಯನ್ನು ಕಳೆಯುತ್ತಿದ್ದೆನೆ ಅನಿಸಿಬಿಟ್ಟು ಸುದ್ದಿಯನ್ನು ಅರ್ಧಕ್ಕೇ ನಿಲ್ಲಿಸಿಬಿಟ್ಟ. ದೊಡ್ದದೊಡ್ಡ ಕನ್ನಡಿಗಳ ಇರಾಣಿ ಹೋಟೆಲುಗಳಲ್ಲಿ ಕೂತು ಬಿಯರ್ ಕುಡಿಯುವಾಗ ಗೊತ್ತಿದ್ದ ಗೊತ್ತಿರದ ಕಣ್ಣಿಗೆ ನಿದ್ದ ಬೀಳುತ್ತಿರುವ ಎಲ್ಲ ವ್ಯಕ್ತಿಗಳ ಮೇಲೆ ಪ್ರೀತಿ ಉಕ್ಕಿ ಹರಿದು ಗದ್ಗದಿತನಾದ. ನಂತರ ನಿವೃತ್ತ ಬಂಗಾಲಿ ಕವಿಯಂತೆ ಸೂರ್ಯಾಸ್ತ ನೋಡಿದ. +ಈವತ್ತು ರಾಜಿನಾಮೆ ಕೊಟ್ಟಿದ್ದು ಹೌದೋ ಅಲ್ಲವೋ ಎಂಬಂಥ ಅನುಮಾನ ಸಮೀರನಿಗೆ ಆಯಿತು. ರಾಜಿನಾಮೆ ಅಂಥ ಮಹತ್ವದ ಘಟನೆಯೇ ಅಲ್ಲ ಅಂತ ಅನಿಸುವದು ಎಂಥ ರೋಗದ ಲಕ್ಷಣ ಎಂದು ಚಿಂತಿತನಾದ. ರಸ್ತೆಗಳೆಲ್ಲ ಮಳೆಯಲ್ಲಿ ನೆನೆದಿದ್ದವು. ಮಕ್ಕಳ ಉಡುಪುಗಳನ್ನು ಮಾರುವ ಬೀದಿ ಅಂಗಡಿಯೊಂದು ಪೂರ್ತಿ ತೊಯ್ದುಹೋಗಿತ್ತು. ಜಗತ್ತು ಅತ್ಯಂತ ಸಂತ ಸನ್ನಿಯ ಸ್ಥಿತಿಯಲ್ಲಿ ಮುಂದುವರೆಯುತ್ತಿತ್ತು. ಬೂಟ್‌ಪಾಲೀಶ್ ಮಕ್ಕಳು ಮಳೆಗಾಲವಾದ್ದರಿಂದ ಪಾಲೀಶಿನ ಡಬ್ಬಿಗಳನ್ನು ಸಂದಿಗೊಂದಿಗಳಲ್ಲಿ ಅಡಗಿಸಿ ನಿರ್ಗತಿಕರಾಗಿ ನಿದ್ದೆ ಹೋಗಿದ್ದರು. ತನ್ನ ಮನಸ್ಸು ತನ್ನದೇ ಆಗಿ ನಿಲ್ಲುವುದು ಅಂದರೆ ಅಂದರೆ ಏನು? ಸಮೀರನಿಗೆ ದೀನ ಕುತೂಹಲ ಉಂಟಾಯಿತು. ಪೇಪರುಗಳಲ್ಲಿ ದೊಡ್ಡ ಸಾಧನೆ ಸಿದ್ಧಿ ಮಾಡಿದವರ, ವಿಖ್ಯಾತ ಸಾಧಕರ, ಲೇಖಕರ, ಸಂಗೀತಗಾರರ, ನಟರ, ಸಾಹಸಿಗಳ ವಯಸ್ಸು ಅವನನ್ನು ಆಕರ್ಷಿಸುತ್ತಿತ್ತು. ಅವರ ವಯಸ್ಸು ತನಗಿಂತ ಎಷ್ಟೋ ಹೆಚ್ಚಾಗಿದ್ದರೆ ಅವನಿಗೆ ನಿರುಂಬಳ ಅನಿಸುತ್ತಿತ್ತು. ತನಗಿನ್ನೂ ಅವಕಾಶವಿದೆ ಅನಿಸುತ್ತಿತ್ತು. ಕೊಲೆಗಾರರು ಕಳ್ಳರು ತನಗಿಂತ ಎಷ್ಟೋ ಸಣ್ಣವರಿದ್ದ ಸುದ್ದಿ ಓದಿದಾಗ ಅವನಿಗೆ ತಲ್ಲಣವೆನಿಸುತ್ತಿತ್ತು. ತಾನು ಹುಟ್ಟಿದಾಗ ಅವರ್‍ಯಾರೂ ಹುಟ್ಟಲಿಲ್ಲ. ತನ್ನೆದುರೇ ಹುಟ್ಟಿ ಅವರು ಹೀಗಾದರಲ್ಲ ಎನಿಸಿ ವಿಚಿತ್ರ ಹೆದರಿಕೆ ಅನಿಸುತ್ತಿತ್ತು. ಹೆರಿಗೆಯ ವೇಳೆಯಲ್ಲಿ ಅಸುನೀಗಿದ ಹೆಂಗಸರ ಕುರಿತು ಸಮೀರನಿಗೆ ಅತೀವ ದುಃಖವೆನಿಸುತ್ತಿತ್ತು. +ಮಳೆಯಲ್ಲಿ ನಿಂತ ಸಮುದ್ರವನ್ನು ನೋಡುವುದು ಸಮೀರನಿಗೆ ಅತಿ ಪ್ರೀತಿ. ನೋಡುವಾ ಎನಿಸಿ ದಾದರಿನಿಂದ ರೈಲು ಹಿಡಿದು ವಿಲೆಪಾರ್ಲೆಯಲ್ಲಿಳಿದ. ಜುಹೂ ಬೀಚಿಗೆ ಹೋಗುವ ಬಸ್ಸಿಗಾಗಿ ಕಾದ. ತುಂತುರು ಮಳೆಯಲ್ಲಿ ಸ್ಟಾಪಿನಲ್ಲಿ ಜನ ಒತ್ತಾಗಿ ನಿಂತಿದ್ದರು. ಮಳೆಯ ತೇವ ಮಬ್ಬು ಬೆಳಕುಗಳು ಸಮೀರನನ್ನು ಉದ್ರೇಕಿಸಿದವು. ಮೈ ಝುಮ್ಮೆನಿಸುವ ಹಳೆಯ ನೆನಪಿನ ಕ್ಷೀಣ ಪುಳಕಗಳು ರೋಮಾಂಚನಗಳು ಆಪ್ತ ವಾಸನೆಗಳು ಅವನನ್ನು ಹಿಡಿದವು. ಇಂಥ ಕೆಲವೇ ಕ್ಷಣಗಳಲ್ಲಿ ನೆನಪುಗಳು ಅವನಲ್ಲಿ ಪ್ರಜ್ವಲಿಸುತ್ತ ಬೆಳಗುತ್ತವೆ. ಬೇರೆಯೇ ಆದ ಅಮೀರ ಇಲ್ಲ. ಘಟನೆಗಳು ಸರಳವಾಗಿ ತನ್ನೊಳಗೆ ಬಂದು ಪುನಃ ಹಸಿರು ಹಳದಿ ಕೆಂಪು ಸಿಗ್ನಲ್ಲುಗಳ ಪಾಸ್‌ಬುಕ್ಕುಗಳ ಜಗತ್ತಿಗೆ ಮರಳಿ ಹೋಗುತ್ತವೆ. ಓದಿದ ಒಂದೆರಡು ಸಾಲುಗಳು, ಮುದ್ದಿಟ್ಟ ದೇವರಂಥ ಮಕ್ಕಳು, ಎಲ್ಲೋ ಮುರುಕು ಮೋಡದ ಮಳೆಯಲ್ಲಿ ನೆನೆದು ತಡವಾಗಿ ಮನೆ ಸೇರಿದಾಗ ಕೇಳಿಬಂದ ಹಾಡುಗಲೂ, ಸ್ನೇಹಿತ ದಂಪತಿಗಳಾದ ಹರ್ಷ ಮತ್ತು ವಿಭಾ ಗರ್ಭಪಾತದ ವಿಚಾರವನ್ನು ಬಿಟ್ಟುಕೊಟ್ಟು ಚೊಚ್ಚಲು ಮಗುವನ್ನು ಬರಮಾಡಿಕೊಳ್ಳಲು ನಿರ್ಧರಿಸಿದಾಗ ಮೂವರ ಕಣ್ಣಲ್ಲಿ ಒಡೆದು ಬಂದ ನೀರು-ಇವೆಲ್ಲ ಬೇರೆ ಬೇರೆಯಾಗಿಯೂ ಒಟ್ಟಾರೆ ಬೆಳೆಯುತ್ತ ಹೋಗುವ ಸಮೀರನಾಗುತ್ತಾನೆ. ಕ್ಯೂದಲ್ಲಿ ಅವನೆದುರು ಪುಟ್ಟ ಗರ್ಭಿಣಿಯೊಬ್ಬಳು ಗಂಡನೊಂದಿಗೆ ನಿಂತಿದ್ದಳು. ಅವಳಿಗೂ ಈ ಮಳೆಯಲ್ಲಿ ಬೀಚಿಗೆ ಹೋಗುವ ಆಸೆ ಬಂದಿರಬೇಕು. ಮಳೆಯಿಂದ ಆಕೆ ತೊಯ್ಯದಂತೆ ಗಂಡ ಅವಳನ್ನು ವಿವಿಧ ಬಗೆಬಗೆಯಾಗಿ ರಕ್ಷಿಸುತ್ತಿದ್ದ. ಅಷ್ಟರಲ್ಲಿ ಗರ್ಭಿಣಿ-ಭಿಕ್ಷುಕಿಯೊಬ್ಬಳು ಬೇಡುತ್ತ ಬಂದಳು. ಅವನೆದುರು ನಿಂತ ಗರ್ಭಿಣಿ ಆ ಭಿಕ್ಷುಕಿಯನ್ನು ಕರೆದು ದುಡ್ಡುಕೊಟ್ಟಳು. ಅವರೀರ್ವರೂ ಅತೀವ ಮಮತೆಯಿಂದ ಪರಸ್ಪರ ನೋಡಿದರು. ನಂತರ ಭಿಕ್ಷುಕಿ ತನ್ನ ಒರಟು ಕೈಯಿಂದ ಆ ಪುಟ್ಟ ಬಸುರಿಯ ಕೆನ್ನೆಯನ್ನು ಸವರಿ “ಪೆಹಲಾ ಹೈ ಕ್ಯಾ? ಡರಾನಾ ನಹೀಂ ಮೇರಾ ಚೌಥಾ ಹೈ” ಎಂದು ಅತೀವ ಖುಷಿಯಲ್ಲಿ ಹೇಳಿ ಹೋದಳು. ಜೋರಾಗಿ ಮಳೆ ಬಂತು. ತಪ ತಪ ಹೊಯ್ಯುತ್ತ ಮಳೆ ಅಪ್ಪಳಿಸುವ ರಸ್ತೆಯಲ್ಲಿ ಹಾರುತ್ತ ಹಾರುತ್ತ ಅವಳು ಇಲ್ಲವಾದಳು. +ಸ್ಟಾಪಿನ ಅತೀ ಸಮೀಪ ಬಂದ ಬಸ್ಸಿನಲ್ಲಿ ಎಲ್ಲರೂ ತುಂಬಿಕೊಂಡರು. ಯಾಕೋ ಸಮೀರ ಬಾಲ್ಯದ ತನ್ನ ಶಾಲೆಯನ್ನು ನೆನೆಸಿಕೊಂಡ. ಶಾಲೆಯ ಪ್ಯೂನ್ ಶಂಕರನಿಗೆ ಹೆಬ್ಬೆರಳುಗಳೇ ಇದ್ದಿರಲಿಲ್ಲ. ಆದರೂ ಅವನು ಚೋಟು ಕೈಗಳಲ್ಲೇ ನಕಾಶೆಗಳನ್ನು ತರುತ್ತಿದ್ದ ಚೋಟು ಕೈಗಳಿಂದಲೇ ಗಂಟೆ ಬಾರಿಸುತ್ತಿದ್ದ ಮತ್ತು ಶಾರದಾಪೂಜೆಯ ಭಜನೆಯಲ್ಲಿ ಎಲ್ಲರಿಗಿಂತ ಮಿಗಿಲಾಗಿ ಮೈಮರೆತು ಆವೇಶದಿಂದ ಕುಣಿಯುತ್ತಿದ್ದ. ಅವನ ಮೋರೆಯಲ್ಲಿ ತುಳುಕುತ್ತಿದ ಮೈಮರೆವಿನ ಕಳೆಯಲ್ಲಿ ಶಂಕರ ತೀರ ಬೆರೆಯೇ ಆಗಿ ಕಾಣುತ್ತಿದ್ದ. ಒಮ್ಮೆಯಂತೂ ಭಜನೆಯ ನಂತರ ಮೊಟ್ಟ ಮೊದಲ ಬಾರಿಗೆ ತನ್ನೊಂದಿಗೆ ಐದಾರು ಮಕ್ಕಳನ್ನೂ ಅಪ್ಪಿಕೊಂಡಿದ್ದ. ಅವನ ಮಕ್ಕಳು ಈಗ ಶಾಲೆಗೆ ಕಲಿಯಲು ಬಂದಿರಬಹುದೇನೋ. ಅವನು ರಿಟೈಯರ್ ಕೂಡ ಆಗಿರಬಹುದು. ಬಿಡುಗಡೆಗೊಳಿಸುತ್ತ ಹೋಗುವ ಕ್ಷಣಗಳೇ ತನ್ನನ್ನು ನಿಲ್ಲಿಸುತ್ತವೆ ಎಂದು ಸಮೀರನಿಗೆ ಅನಿಸಿತು. ಬಹುಶಃ ಬಿಡುಗಡೆಯನ್ನೇ ನಾವು ಸುಖವೆನ್ನುತ್ತೇವೆ. +ಜುಹೂ ಬೀಚಿನಲ್ಲಿ ಜನ ಇರಲಿಲ್ಲ. ಬರೀ ಮಳಲು ಕಡಲು ಮತ್ತು ಎಲ್ಲವನ್ನೂ ಎಡೆಬಿಡದೆ ಒಂದುಗೂಡಿಸುವ ಮಳೆ. ಯಾವ ಹೆಸರುಗಳಿಲ್ಲ ಈಗ. ಸ್ಮಾರಕಗಳಿಲ್ಲ. ಪುರಾವೆಗಳಿಲ್ಲ. ಇದ್ದಿದ್ದು ಧಾರೆ ಅಕಾರದಾಚೆಗಿನ ಧಾರೆ. ನನ್ನೊಳಗಿನ ಚಿಲುಮೆಗಳನ್ನು ಮೀಟಲು ಜಗತ್ತೇ ನಿಂತಿರುವಾಗ ಬರೀ ನೋಕರಿ ಚಾಕರಿ ಅಂಕಿತ ನಾಮಗಳ ಕ್ಷುಲ್ಲಕ-ಕೊಂಡಿಗಳ ಬಿಡುಗಡೆಯ ಭ್ರಮೆಯಲ್ಲಿ ನಾನೇಕೆ ಸಣ್ಣಗಾಗಲಿ? ಈಗ ಎಷ್ಟೆಲ್ಲಾ ರೈಲುಗಳು ತುಂಬಿ ಹೊರಡುತ್ತಿವೆ. ಎಷ್ಟೆಲ್ಲಾ ಒಲೆಗಳಲ್ಲಿ ಆಹಾರ ಬೇಯುತ್ತಿದೆ. ಎಷ್ಟೊಂದು ಆಪರೇಷನ್ ಥೇಟರುಗಳಲ್ಲಿ ಯಾಜ್ಞಿಕರಂತೆ ಬೆವರುತ್ತ ಡಾಕ್ಟರುಗಳು ಹೋರಾಡುತ್ತಿದ್ದಾರೆ. ಎಷ್ಟೊಂದು ಹುಡುಗಿಯರ ಮಗ್ಗುಲುಗಳಲ್ಲಿ ತಾಯ್ತನದ ಪುಲಕದ ಕುಡಿ ಮೂಡುತ್ತಿದೆ. ಸಮೀರ ತೆರೆಗಳ ನಡುವೆ ನಿಂತ. ಎದುರಿನ ದಟ್ಟ ಸಮುದ್ರದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿತ್ತು. ಎಲ್ಲ ಕಡೆಯಿಂದ ಮೋಡಗಳು ಅವನೆಡೆಗೇ ಬರುತ್ತಿದ್ದವು. ಖುಷಿ ಉಕ್ಕಿ ಬಂದಂತೆ “ಯೇ‌ಏ‌ಏ‌ಏ‌ಏ” ಎಂದು ಮೈಮರೆತು ಮನಮರೆತು ಕೂಗಿದ. +***** +ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […] +ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ […] +ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_439.txt b/Kannada Sahitya/article_439.txt new file mode 100644 index 0000000000000000000000000000000000000000..6a6c61177e3f250ee0302cb468de2db88c7fc935 --- /dev/null +++ b/Kannada Sahitya/article_439.txt @@ -0,0 +1,365 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ +ಕನ್ನಡಕ್ಕೆ: ಎ. ಎನ್. ಪ್ರಸನ್ನ +ಪಾತ್ರಗಳು +ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು. +ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು ವಿವರಿಸಲಾಗಿದೆ.. +ಹೊಸೆ ಅರ್ಕಾದಿಯೋ ಬ್ಯುಂದಿಯಾ +ಉರ್ಸುಲಾ ಇಗ್ವಾರಾನ್ +ಇವರಿಂದ +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ +ಹೊಸೆ ಅರ್ಕಾದಿಯೋ +ಅಮರಾಂತ +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ +ರೆಮಿದಿಯೋಸ್ ಮೊಸ್ಕೋತೆ +ಇವರಿಂದ +ಅವ್ರೇಲಿಯಾನೋ ಹೊಸೆ +[ಪಿಲರ್ ಟೆರ್ನೆಳಾಳಿಂದ] +೧೭ ಅವ್ರೇಲಿಯಾನೋಗಳು +[ಬೇರೆ ಬೇರೆಯವರಿಂದ] +ಹೊಸೆ ಅರ್ಕಾದಿಯೋ +ರೆಬೇಕ +ಅರ್ಕಾದಿಯೋ +[ಪಿಲರ್ ಟೆರ್ನೆಳಾಳಿಂದ] +ಅಮರಾಂತ +—— +ಅರ್ಕಾದಿಯೋ +ಸಾಂತ ಸೋಫಿಯಾ ಪಿಯದಾದ್ +ಇವರಿಂದ +ಸುಂದರಿ ರೆಮಿದಿಯೋಸ್ +ಅವ್ರೇಲಿಯಾನೋ ಸೆಗುಂದೋ +ಹೊಸೆ ಅರ್ಕಾದಿಯೋ ಸೆಗುಂದೋ +ಅವ್ರೇಲಿಯಾನೋ ಸೆಗುಂದೋ +ಫೆರ್ನಾಂಡ ದೆಲ್ ಕಾರ್ಪಿಯೋ +ಇವರಿಂದ +ರೆನಾಟ ರೆಮಿದಿಯೋಸ್ [ಮೆಮೆ] +ಹೊಸೆ ಅರ್ಕಾದಿಯೋ +ಅಮರಾಂತ ಉರ್ಸುಲಾ +ರೆನಾಟ ರೆಮಿದಿಯೋಸ್ +[ಮಾರಿಸಿಯೋ ಬಾಬಿಲೋನಿಯಾ] +ಇವರಿಂದ +ಅವ್ರೇಲಿಯಾನೋ +ಅಮರಾಂತ ಉರ್ಸುಲಾ +ಗ್ಯಾತ್ಸನ್ +[ಅವ್ರೇಲಿಯಾನೋ] +ಇವರಿಂದ +ಅವ್ರೇಲಿಯಾನೊ +* * * +೧ +ಎಷ್ಟೋ ವರ್ಷಗಳಾದ ಮೇಲೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಎದುರು ಗುಂಡಿಕ್ಕಿ ಕೊಲ್ಲಲು ಸಿದ್ಧರಾಗಿ ನಿಂತ ತಂಡದವರನ್ನು ನೋಡುತ್ತ, ಹಿಂದೆಂದೋ ಒಂದು ದಿನ ಮಧ್ಯಾಹ್ನ ತನ್ನ ತಂದೆ ಐಸ್ ನೋಡಲು ಕರೆದುಕೊಂಡು ಹೋದದ್ದನ್ನು ನೆನಪಿಸಿಕೊಂಡ. ಆಗಿನ ಕಾಲದಲ್ಲಿ ಮಕೋಂದೋ ಇಪ್ಪತ್ತು ಮನೆಗಳಿದ್ದ ಒಂದು ಸಣ್ಣ ಹಳ್ಳಿಯಾಗಿತ್ತು. ಅದು ಇದ್ದದ್ದು ಭಾರಿ ಗಾತ್ರದ ಇತಿಹಾಸಪೂರ್ವ ಮೊಟ್ಟೆಗಳಂತೆ ಬಿಳುಪಾದ ನುಣ್ಣನೆಯ ಕಲ್ಲುಗಳಿದ್ದ ತಿಳಿನೀರು ಹರಿಯುವ ನದಿಯ ದಡದಲ್ಲಿ. ಪ್ರಪಂಚದ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈ ಮಾಡಿ ತೋರಿಸಬೇಕಾಗಿತ್ತು. ಪ್ರತಿ ವರ್ಷವೂ ಜಿಪ್ಸಿಗಳ ಸಂಸಾರವೊಂದು ಹಳ್ಳಿಯ ಹತ್ತಿರ ಬೀಡು ಬಿಟ್ಟು ಪೀಪಿಗಳನ್ನು ಊದಿ, ತಮಟೆ ಬಡಿದು ಹೊಸ ಆವಿಷ್ಕಾರಗಳನ್ನು ತೋರಿಸುತ್ತಿತ್ತು. ಮೊದಲು ಅವರು ಆಯಸ್ಕಾಂತವನ್ನು ತಂದರು. ಭಾರಿ ಗಾತ್ರದ ಅಡ್ಡಾದಿಡ್ಡಿ ಬೆಳೆದ ಗಡ್ಡದ ಮತ್ತು ಒರಟು ಕೈಗಳಿದ್ದ ಒಬ್ಬ ಜಿಪ್ಸಿ ತಾನು ಮೆಲ್‌ಕಿಯಾದೆಸ್ ಎಂದು ತಿಳಿಸಿ, ಸಾರ್ವಜನಿಕ ಪ್ರದರ್ಶನವೊಂದನ್ನು ಮಾಡುತ್ತ ಅದು ಪ್ರಪಂಚದ ಎಂಟನೇ ಅದ್ಭುತವೆಂದೂ ಮತ್ತು ಅದನ್ನು ತಾನು ಮೆಸಿಡೋನಿಯಾದ ರಸವಾದಿಗಳಿಂದ ಕಲಿತದ್ದೆಂದೂ ಹೇಳಿದ. ಅವನು ಭಾರಿ ಗಾತ್ರದ ಲೋಹದ ಇಟ್ಟಿಗೆಗಳನ್ನು ಎಳೆದುಕೊಳ್ಳುತ್ತ ಮನೆಯಿಂದ ಮನೆಗೆ ಹೋದ. ಮನೆಯಲ್ಲಿದ್ದ ಪಾತ್ರೆ ಪಡಗ ಇತ್ಯಾದಿಗಳು ಉರುಳಿ ಬಿದ್ದದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲದೆ ಸ್ಕ್ರೂಗಳು ಹಾಗೂ ಮೊಳೆಗಳು ತೊಲೆಗಳಿಂದ ಹೊರ ಬರಲು ಪ್ರಯತ್ನಿಸಿ ಸೀಳಿದವು. ಎಷ್ಟೋ ದಿನಗಳ ಹಿಂದೆ ಕಳೆದು ಹೋದ ವಸ್ತುಗಳು ಅವುಗಳನ್ನು ಹುಡುಕುತ್ತಿದ್ದ ಸ್ಥಳಗಳಿಂದ ಹೊರಗೆ ಬಂದು ಕಾಣಿಸಿಕೊಂಡು ದಡಬಡಿಸಿ ಮೆಲ್‌ಕಿಯಾದೆಸ್‌ನ ಮಾಂತ್ರಿಕ ಇಟ್ಟಿಗೆಯ ಹಿಂದೆ ಹೋದವು. “ವಸ್ತುಗಳಿಗೆ ಜೀವವಿರುತ್ತೆ, ಅವುಗಳ ಆತ್ಮವನ್ನು ಎಚ್ಚರಿಸಬೇಕಷ್ಟೆ ಎಂದು ಜಿಪ್ಸಿ ಒರಟು ದನಿಯಲ್ಲಿ ಹೇಳಿದ. ಯಾವಾಗಲೂ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅಂಕೆಯಿಲ್ಲದ ಕಲ್ಪನಾಶಕ್ತಿ, ಸಹಜ ಪ್ರತಿಭೆ, ಪವಾಡ ಹಾಗೂ ಮಾಂತ್ರಿಕ ಅಂಶಗಳನ್ನೂ ಮೀರಿ ಹೋಗುತ್ತಿದ್ದರಿಂದ ಆ ಆವಿಷ್ಕಾರದಿಂದ ಭೂಮಿಯೊಳಗಿಂದ ಬಂಗಾರವನ್ನು ಹೊರಗೆ ತೆಗೆಯಬಹುದು ಎಂದು ಯೋಚಿಸಿದ. ಪ್ರಾಮಾಣಿಕ ಮನುಷ್ಯನಾದ ಮೆಲ್‌ಕಿಯಾದೆಸ್ ಅವನನ್ನು ಎಚ್ಚರಿಸುತ್ತ, “ಇದು ಆ ಕೆಲಸಕ್ಕೆ ಬರಲ್ಲ” ಎಂದ. ಆದರೆ ಆ ಸಮಯದಲ್ಲಿ ಜಿಪ್ಸಿಯ ಪ್ರಾಮಾಣಿಕತೆಯನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಪ್ಪಲಿಲ್ಲ. ಅವನು ಎರಡು ಆಯಸ್ಕಾಂತದ ಲೋಹದ ಇಟ್ಟಿಗೆಗಳನ್ನು ತನ್ನ ಹೇಸರಗತ್ತೆ ಮತ್ತು ಒಂದು ಜೊತೆ ಮೇಕೆಯನ್ನು ಕೊಟ್ಟು ಕೊಂಡ. ಮನೆಯ ಹಿಡುವಳಿ ಹೆಚ್ಚಿಸುವುದಕ್ಕೆ ಆ ಪ್ರಾಣಿಗಳನ್ನು ಅವಲಂಬಿಸಿದ್ದ ಅವನ ಹೆಂಡತಿ ಉರ್ಸುಲಾ ಇಗ್ವಾರಾನ್‌ಗೆ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಅವನು, “ಬಹಳ ಬೇಗ ನಮ್ಮ ಮನೆಯಲ್ಲಿ ಬಂಗಾರ ಸಿಗತ್ತೆ, ನೆಲಕ್ಕೂ ಹಾಸುವಷ್ಟು” ಎಂದ. ಅನಂತರ ಕೆಲವು ತಿಂಗಳು ತಾನು ಹೇಳಿದ್ದು ಸತ್ಯ ಎಂದು ತೋರಿಸಲು ಸಾಕಷ್ಟು ಕಷ್ಟಪಟ್ಟ. ಅವನು ಮೆಲ್‌ಕಿಯಾದೆಸ್ ಹೇಳುತ್ತಿದ್ದ ಮಂತ್ರಗಳನ್ನು ಪಠಿಸುತ್ತ ನದಿಯ ಪಕ್ಕದಲ್ಲಿ ಇಂಚಿಂಚು ಬಿಡದಂತೆ ಸುತ್ತಾಡಿದ. ಹಾಗೆ ಮಾಡಿದಾಗ ಅವನಿಗೆ ಸಿಕ್ಕ ಒಂದೇ ವಸ್ತುವೆಂದರೆ ಹದಿನೈದನೆ ಶತಮಾನಕ್ಕೆ ಸೇರಿದ, ಒಂದಕ್ಕೊಂದು ಅಂಟಿಕೊಂಡಿದ್ದ ತುಕ್ಕು ಹಿಡಿದ ಕವಚ ಮತ್ತು ಅದರೊಳಗೆ ಕಲ್ಲು ತುಂಬಿದ್ದ ಒಂದು ಬುರುಡೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಈ ಕೆಲಸಕ್ಕೆಂದು ಅವನ ಜೊತೆಗಿದ್ದ ನಾಲ್ವರು ಆ ಕವಚವನ್ನು ಬೇರ್ಪಡಿಸಿದಾಗ ಅವರಿಗೆ ಅದರೊಳಗೆ ಕಂಡದ್ದು ಪುಡಿ ಪುಡಿಯಾದ ಅಸ್ಥಿಪಂಜರ ಮತ್ತು ಅದರ ತಲೆಯಲ್ಲಿ ಇದ್ದ ಒಂದು ತಾಮ್ರದ ಪದಕ ಮತ್ತು ಕತ್ತಿನ ಸುತ್ತ ಇದ್ದ ಹೆಂಗಸಿನ ಕೂದಲು. +ಮಾರ್ಚ್‌ನಲ್ಲಿ ಜಿಪ್ಸಿಗಳು ತಿರುಗಿ ಬಂದರು. ಈ ಸಲ ಅವರು ದೂರದರ್ಶಕ ಮತ್ತು ಒಂದು ಡ್ರಮ್ಮಿನ ಗಾತ್ರದ ಭೂತಗನ್ನಡಿಯನ್ನು ತಂದು, ಅವು ಆಮ್‌ಸ್ಟರ್‌ಡ್ಯಾಂನ ಯಹೂದಿಗಳು ಇತ್ತೀಚೆಗೆ ಕಂಡು ಹಿಡಿದಿದ್ದೆಂದು ಪ್ರದರ್ಶಿಸಿದರು. ಅವರು ಜಿಪ್ಸಿ ಹುಡುಗಿಯೊಬ್ಬಳನ್ನು ಹಳ್ಳಿ ಅಂಚಿನಲ್ಲಿ ನಿಲ್ಲಿಸಿದರು. ದೂರದರ್ಶಕವನ್ನು ಟೆಂಟ್ ಮುಂಭಾಗದಲ್ಲಿಟ್ಟರು. ಐದು ರಿಯಲ್ಸ್ ದುಡ್ಡಿಗೆ ದೂರದರ್ಶಕದಲ್ಲಿ ನೋಡಿ ಜಿಪ್ಸಿ ಹುಡುಗಿಯನ್ನು ಕೈಯಳತೆಯ ಅಂತರದಲ್ಲಿ ಇರುವ ಹಾಗೆ ನೋಡಬಹುದಾಗಿತ್ತು. “ವಿಜ್ಞಾನ ದೂರವನ್ನು ಅಳಿಸಿ ಹಾಕಿದೆ” ಎಂದು ಮೆಲ್‌ಕಿಯಾದೆಸ್ ಘೋಷಿಸಿದ. ಇನ್ನು ಸ್ವಲ್ಪ ಕಾಲದಲ್ಲೇ ಮನೆಯಿಂದ ಆಚೆ ಹೋಗದೆಯೇ ಜಗತ್ತಿನಲ್ಲಿ ಎಲ್ಲಾದರೂ ಸರಿಯೆ, ಏನಾಗುತ್ತಿದೆಯೆಂದು ನೋಡಬಹುದು ಎಂದ. ಮಟಮಟ ಮಧ್ಯಾಹ್ನ ಉರಿ ಬಿಸಿಲಿನ ಸೂರ್ಯನಿರುವಾಗ ಅಗಾಧ ಭೂತಗನ್ನಡಿಯ ಪ್ರಯೋಗವನ್ನು ನಿಬ್ಬೆರಗಾಗಿಸುವ ರೀತಿಯಲ್ಲಿ ತೋರಿಸಿದ. ರಸ್ತೆಯ ಮಧ್ಯದಲ್ಲಿ ಅವರು ತಂದಿಟ್ಟ ಒಣಗಿದ ಹುಲ್ಲಿನ ಗುಪ್ಪೆಯ ಮೇಲೆ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಅದನ್ನು ಉರಿಸಿದ. ಆಯಸ್ಕಾಂತದ ಪ್ರಕರಣದಿಂದ ಇನ್ನೂ ಸಮಾಧಾನಗೊಳ್ಳದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈ ಹೊಸ ಆವಿಷ್ಕಾರವನ್ನು ಯುದ್ಧದ ಉಪಕರಣವನ್ನಾಗಿ ಉಪಯೋಗಿಸುವುದಾಗಿ ಕಲ್ಪಿಸಿದ. ಅದನ್ನು ಒಪ್ಪದ ಮೆಲ್‌ಕಿಯಾದೆಸ್ ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಕೊನೆಗೆ ಆ ಆಯಸ್ಕಾಂತದ ಇಟ್ಟಿಗೆಗಳು ಮತ್ತು ಮೂರು ವಸಾಹತು ಕಾಲದ ನಾಣ್ಯಗಳಿಗೆ ಬದಲಾಗಿ ಭೂತಗನ್ನಡಿಯನ್ನು ಕೊಟ್ಟ. ಉರ್ಸುಲಾ ಭಯಗೊಂಡು ಅತ್ತಳು. ಸಣ್ಣ ಪೆಟ್ಟಿಗೆಯಲ್ಲಿದ್ದ ಆ ನಾಣ್ಯಗಳನ್ನು ಅವಳ ತಂದೆ ಇಡೀ ಜೀವನದಲ್ಲಿ ದುಂದು ಮಾಡದೆ ಉಳಿಸಿದ್ದು ಮತ್ತು ಅವಳು ಅದನ್ನು ತನ್ನ ಹಾಸಿಗೆಯ ಕೆಳಗೆ ಹೂತಿಟ್ಟು, ಉಪಯೋಗಿಸಲು ಸರಿಯಾದ ಸಮಯಕ್ಕಾಗಿ ಕಾದಿದ್ದಳು. ತನ್ನ ಜೀವನವನ್ನೇ ಪಣಕ್ಕಿಟ್ಟು ಅದರೊಂದಿಗೆ ನಡೆಸುವ ವಿವಿಧ ರೀತಿಯ ಪ್ರಯೋಗಳ ಆಲೋಚನೆಯಲ್ಲೇ ಮುಳುಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಳನ್ನು ಸಮಾಧಾನಗೊಳಿಸುವ ಗೊಡವೆಗೆ ಹೋಗಲಿಲ್ಲ. ಶತ್ರುಗಳ ಮೇಲೆ ಗಾಜಿನ ಪರಿಣಾಮವನ್ನು ತೋರಿಸುವ ಪ್ರಯತ್ನದಲ್ಲಿದ್ದಾಗ ಅವನು ಸೂರ್ಯಕಿರಣಗಳು ಒಗ್ಗೂಡುವ ಸ್ಥಳದಲ್ಲಿ ನಿಂತಿದ್ದರಿಂದ ಮೈಯೆಲ್ಲ ಸುಟ್ಟು ಹೋಗಿ ಅದು ಗುಣವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವಳು ಇಂತಹ ಅಪಾಯಕಾರಿ ಆವಿಷ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಒಮ್ಮೆ ಅವನು ತಮ್ಮ ಮನೆಗೇ ಬೆಂಕಿಯಿಡಲು ಸಿದ್ಧನಾಗಿದ್ದ. ಅವನು ತನ್ನ ರೂಮಿನಲ್ಲಿ ಕುಳಿತು ಆ ಅವಿಷ್ಕಾರದ ಸಾಧ್ಯತೆಗಳನ್ನು ಲೆಕ್ಕ ಹಾಕುತ್ತಿದ್ದ. ಕೊನೆಗೆ ಅದನ್ನು ಉಪಯೋಸುವುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಅದರ ಬಗ್ಗೆ ತನಗಿರುವ ನಂಬಿಕೆಯನ್ನು ಕುರಿತಂತೆ ಒಂದು ಕಿರು ಹೊತ್ತಿಗೆಯನ್ನು ಹೊರತಂದ. ತಾನು ಅನೇಕ ಪ್ರಯೋಗಗಳನ್ನು ಕುರಿತು ಮತ್ತು ಅದರ ಬಗ್ಗೆ ಪುಟಗಟ್ಟಲೆ ವಿವರಣಾತ್ಮಕ ಚಿತ್ರಗಳನ್ನು ಬರೆದು ಒಬ್ಬ ವ್ಯಕ್ತಿಯ ಸಂಗಡ ಅದನ್ನು ಸರ್ಕಾರಕ್ಕೆ ಕಳಿಸಿಕೊಟ್ಟ. ಆ ವ್ಯಕ್ತಿ ಪರ್ವತಗಳನ್ನು ದಾಟಿ, ಕಂದರಗಳಲ್ಲಿ ದಾರಿ ತಪ್ಪಿ, ನದಿಗಳನ್ನು ದಾಟಿ ಕೊನೆಗೆ ನಿರಾಶನಾಗುವ ಮತ್ತು ಪ್ಲೇಗ್ ರೋಗಕ್ಕೆ ತುತ್ತಾಗುವ ಹಾಗೂ ಕಾಡು ಪ್ರಾಣಿಗಳಿಗೆ ಬಲಿಯಾಗುವ ಹಂತದಲ್ಲಿದ್ದಾಗ ಹೇಸರಗತ್ತೆಗಳ ಮೇಲೆ ಟಪಾಲು ಒಯ್ಯುವ ದಾರಿ ಕಂಡುಕೊಂಡ. ರಾಜಧಾನಿಯನ್ನು ತಲುಪುವುದೇ ದುಸ್ಸಾಧ್ಯವಾದ ಸಂಗತಿಯಾಗಿದ್ದರೂ, ಸರ್ಕಾರ ಆದೇಶ ಕೊಟ್ಟ ಕೂಡಲೇ ಆ ಹೊಸ ಆವಿಷ್ಕಾರದ ಪ್ರಯೋಗಗಳನ್ನು ಮಿಲಿಟರಿಯವರಿಗೆ ತೋರಿಸುವುದಲ್ಲದೆ ಸೌರಯುದ್ಧದ ಬಗ್ಗೆ ತರಬೇತಿ ಕೊಡುವುದಾಗಿ ಹೇಳಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಉತ್ತರಕ್ಕಾಗಿ ಕೆಲವು ವರ್ಷ ಕಾದ. ಕೊನೆಗೆ ಕಾಯುವುದರಿಂದ ಸುಸ್ತಾಗಿ ಮೆಲ್‌ಕಿಯಾದೆಸ್‌ಗೆ ತನ್ನ ಯೋಜನೆ ವ್ಯರ್ಥವಾದದ್ದನ್ನು ಹೇಳಿದ. ಆಗ ಜಿಪ್ಸಿತನ್ನ ಪ್ರಾಮಾಣಿಕತೆಯನ್ನು ಕುರಿತು ಸರಿಯಾದ ಪುರಾವೆ ಒದಗಿಸಿದ. ಭೂತಗನ್ನಡಿಯನ್ನು ಹಿಂದಕ್ಕೆ ತೆಗೆದುಕೊಂಡು, ಬದಲಿಗೆ ಚಿನ್ನದ ನಾಣ್ಯಗಳನ್ನು ಹಾಗೂ ಕೆಲವು ಪೋರ್ಚುಗೀಸ್ ನಕ್ಷೆಗಳನ್ನು ಅಲ್ಲದೆ ನೌಕಾಯಾನದಲ್ಲಿ ಉಪಯೋಗಿಸುವ ಕೆಲವು ಉಪಕರಣಗಳನ್ನೂ ಕೂಡ ಕೊಟ್ಟ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಾಂಪಾಸ್ ಮತ್ತು ಸೆಕ್ಸ್‌ಟೆಂಟ್‌ಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ತನ್ನ ಕೈಯಿಂದಲೇ ಸನ್ಯಾಸಿ ಹೆರ್‌ಮನ್ ಸಿದ್ಧಪಡಿಸಿದ್ದನ್ನು ಬರೆದು ಕೊಟ್ಟ. ಹೊಸೆ ಅರ್ಕಾದಿಯೋ ತನ್ನ ಪ್ರಯೋಗಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂಬ ಕಾರಣದಿಂದ ಮನೆಯ ಹಿಂದೆ ಇದ್ದ ಒಂದು ರೂಮಿನಲ್ಲಿ ಇಡೀ ಮಳೆಗಾಲವನ್ನು ಒಬ್ಬನೇ ಕಳೆದ. ಸಾಂಸಾರಿಕ ವಿಷಯಗಳಿಗೆ ಸಂಪೂರ್ಣ ಹೊರತಾಗಿದ್ದು ರಾತ್ರಿಯ ಹೊತ್ತಿನಲ್ಲಿ ಅಂಗಳದಲ್ಲಿ ನಿಂತು ಮೇಲಿನ ನಕ್ಷತ್ರಗಳ ಬೆನ್ನು ಹತ್ತಿದ್ದ. ನಡು ಮಧ್ಯಾಹ್ನವನ್ನು ಅರಿಯುವ ಸರಿಯಾದ ಕ್ರಮವನ್ನು ಸಿದ್ಧಪಡಿಸುವ ಕೆಲಸದಲ್ಲಿ ಅವನು ಸೂರ್ಯನ ಝಳಕ್ಕೆ ಸಿಕ್ಕು ಸಾಯುವುದರಲ್ಲಿದ್ದ. ತನ್ನ ಬಳಿಯಿದ್ದ ಉಪಕರಣಗಳನ್ನು ಬಳಸುವ ಮತ್ತು ಹೊಂದಿಸಿಕೊಳ್ಳುವ ರೀತಿಯಲ್ಲಿ ಪರಿಣತನಾದ ಮೇಲೆ, ಕಾಣದ ಸಮುದ್ರಗಳಲ್ಲಿ ನೌಕಾಯಾನ ಮಾಡುವ ಅರಿಯದ ಪ್ರದೇಶಗಳಲ್ಲಿ ಸಂಚರಿಸುವ ಮತ್ತು ಅದ್ಭುತ ವಸ್ತುಗಳೊಡನೆ ಸಂಬಂಧ ಏರ್ಪಡಿಸಿಕೊಳ್ಳುವ ಬಗೆಯನ್ನು ಅವನು ಮನೆಯಲ್ಲೇ ಕುಳಿತು ಅವಕಾಶವೊಂದನ್ನು ಪರಿಕಲ್ಪಿಸಿದ. ಅವನು ತನಗೆ ತಾನೇ ಮಾತನಾಡಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ. ಯಾರ ಬಗ್ಗೆಯೂ ಗಮನ ಕೊಡದೆ ಮನೆಯಲ್ಲಿ ನಡೆದಾಡುತ್ತಿದ್ದದ್ದು, ಉರ್ಸುಲಾ ಬೆನ್ನು ಬಗ್ಗಿಸಿ ತೋಟದಲ್ಲಿ ದುಡಿಯುತ್ತ, ಬಾಳೆ, ಗೆಡ್ಡೆ, ಗೆಣಸುಗಳನ್ನು ಬೆಳೆಯುತ್ತಿದ್ದದ್ದು ಆ ಅವಧಿಯಲ್ಲಿಯೇ. ಆದರೆ ಇದ್ದಕ್ಕಿದ್ದ ಹಾಗೆ ಯಾವ ಮುನ್ಸೂಚನೆಯೂ ಇಲ್ಲದೆ ಜ್ವರದ ತಾಪದ ಹಾಗೆ ಇದ್ದ ಅವನ ಚಟುವಟಿಕೆಗೆ ಅಡ್ಡಿ ಬಂತು. ಆಗ ಅವನು ಇನ್ನೊಂದು ಸಂಗತಿಯಿಂದ ಆಕರ್ಷಿತನಾದ. ತಾನು ಅರ್ಥಮಾಡಿಕೊಳ್ಳುತ್ತಿದ್ದ ರೀತಿಗೆ ಅಷ್ಟಾಗಿ ಬೆಲೆ ಕೊಡದೆ ಗಾಬರಿಗೊಂಡಂತೆ ಸಣ್ಣದಾಗಿ ಗುಣಿಗುಣಿಸುತ್ತ ಯಾವುದೋ ಮೋಡಿಗೆ ಸಿಕ್ಕ ಹಾಗೆ ಅವನು ಹಲವಾರು ದಿನಗಳನ್ನು ಕಳೆದ. ಕೊನೆಗೆ ಡಿಸೆಂಬರ್‌ನ ಮಂಗಳವಾರ ಊಟದ ಸಮಯದಲ್ಲಿ ತನ್ನೊಳಗಿದ್ದ ಎಲ್ಲ ಹಿಂಸೆಯ ಭಾರವನ್ನು ಹೊರಗೆ ಹಾಕಿದ. ದೀರ್ಘ ಸಮಯದ ಕಟ್ಟೆಚ್ಚರ ಮತ್ತು ಕಲ್ಪನೆಯ ಹುಚ್ಚಿನಿಂದ ಜರ್ಜರಿತನಾದ ತಮ್ಮ ತಂದೆ ತಾನು ಕಂಡು ಹಿಡಿದಿದ್ದನ್ನು ಉತ್ಸಾಹ ಬೆರೆತ ಗಾಂಭೀರ್ಯದಿಂದ ತಿಳಿಸಿದ್ದನ್ನು ಅವನ ಮಕ್ಕಳು ತಮ್ಮ ಜೀವನವಿಡೀ ನೆನಪಿಟ್ಟುಕೊಳ್ಳುವಂತೆ ಆಯಿತು: +“ಭೂಮಿ ಗುಂಡಗಿದೆ, ಕಿತ್ತಲೆಯ ಹಾಗೆ.” +ಉರ್ಸುಲಾ ತಾಳ್ಮೆ ಕಳೆದುಕೊಂಡು, “ನಿಮ್ಗೆ ಹುಚ್ಚು ಹಿಡೀಬೇಕು ಅಂತಿದ್ರೆ, ನಿಮ್ಮಷ್ಟಕ್ಕೆ ನೀವು ಹಿಡಿಸಿಕೊಳ್ಳಿ. ಆದರೆ ನಿಮ್ಮ ಜಿಪ್ಸಿ ಆಲೋಚನೆಗಳನ್ನ ಮಕ್ಕಳ ತಲೇಲಿ ತುರುಕಬೇಡಿ” ಎಂದು ಕೂಗಿದಳು. +ಅವಳು ಹತಾಶೆಯಿಂದ ವ್ಯಗ್ರಗೊಂಡು ಉಪಕರಣವೊಂದನ್ನು ಗೋಡೆಗೆ ಚಚ್ಚಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಸಮಾಧಾನದಿಂದಿದ್ದು ಮತ್ತೊಂದನ್ನು ನಿರ್ಮಿಸಿ, ಸ್ಥಳೀಯರನ್ನು ತನ್ನ ರೂಮಿಗೆ ಕರೆದು ಅವರ ಮುಂದೆ ಪ್ರದರ್ಶಿಸಿ ವಿವರಿಸಿದ. ಒಂದು ಸ್ಥಳದಿಂದ ಪೂರ್ವ ದಿಕ್ಕಿನಲ್ಲೇ ಯಾನ ಮಾಡಿದರೆ ಮತ್ತೆ ಅದೇ ಸ್ಥಳಕ್ಕೆ ತಲುಪುವುದಾಗಿ ಹೇಳಿ ಜೊತೆಗೆ ಅವರಿಗೆ ಅರ್ಥವಾಗದ ಅನೇಕ ಅಂಶಗಳನ್ನು ತಿಳಿಸಿದ. ಇಡೀ ಹಳ್ಳಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಲೆ ಕೆಟ್ಟಿದೆ ಎಂದು ಮನದಟ್ಟಾಯಿತು. ಇದನ್ನು ಸರಿಪಡಿಸಲು ಮೆಲ್‌ಕಿಯಾದೆಸ್ ಹಿಂತಿರುಗಿ ಬಂದ. ಅವನು ಸಾರ್ವಜನಿಕವಾಗಿ ಆ ವ್ಯಕ್ತಿಯ ಬುದ್ಧಿಶಕ್ತಿಯನ್ನು ಹೊಗಳಿದ. ಈಗಾಗಲೇ ಕಾರ್ಯರೂಪದಲ್ಲಿ ಸಿದ್ಧವಾದ ಸಂಗತಿಯನ್ನು ಕೇವಲ ಖಗೋಳ ಶಾಸ್ತ್ರದ ಆಲೋಚನೆಗಳಿಂದ ರೂಪಿಸಿದ್ದಾಗಿ ತಿಳಿಸಿದ್ದಲ್ಲದೆ ತನ್ನ ಮೆಚ್ಚುಗೆಯ ಕುರುಹಾಗಿ ಅವನಿಗೊಂದು ಕೊಡುಗೆ ಕೊಟ್ಟ. ಮುಂದೆ ಆ ಕೊಡುಗೆ ಇಡೀ ಹಳ್ಳಿಯ ಭವಿಷ್ಯದ ಮೇಲೆ ಅತೀವ ಪರಿಣಾಮವನ್ನು ಉಂಟುಮಾಡಿತು. ಅದು ರಸವಾದಿಗಳ ಲ್ಯಾಬೊರೇಟರಿ. +ಆ ವೇಳೆಗೆ ಮೆಲ್‌ಕಿಯಾದೆಸ್ ಆಶ್ಚರ್ಯವೆನಿಸುವ ವೇಗದಲ್ಲ್ಲಿ ವಯಸ್ಸಾದವನಾಗಿದ್ದ. ಅವನು ಮೊದಮೊದಲು ಅಲ್ಲಿಗೆ ಬಂದಾಗ ಸುಮಾರು ಹೊಸೆ ಅರ್ಕಾದಿಯೋ ಬ್ಯುಂದಿಯಾನ ವಯಸ್ಸಿನವನಂತೆ ಕಂಡಿದ್ದ. ಕುದುರೆಯೊಂದರ ಕಿವಿ ಹಿಡಿದು ಕೆಳಕ್ಕುರುಳಿಸುವಂಥ ಅಗಾಧ ಶಕ್ತಿಯನ್ನು ಅರ್ಕಾದಿಯೋ ಬ್ಯುಂದಿಯಾ ಇನ್ನೂ ಉಳಿಸಿಕೊಂಡಿದ್ದ. ಆದರೆ ಜಿಪ್ಸಿ ಬಿಡದ ಕಾಯಿಲೆಗಳಿಗೆ ಸಿಕ್ಕು ಕೃಶನಾಗಿದ್ದ. ವಾಸ್ತವವಾಗಿ ಅದು ಲೆಕ್ಕವಿಲ್ಲದಷ್ಟು ಸಲ ಅವನು ಪ್ರಪಂಚ ಸುತ್ತುವಾಗ ಉಂಟಾದ ಅನೇಕ ಬಗೆಯ ಕಾಯಿಲೆಗಳ ಪರಿಣಾಮವಾಗಿತ್ತು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಲ್ಯಾಬೊರೇಟರಿಯನ್ನು ನಿರ್ಮಿಸಲು ಸಹಾಯ ಮಾಡುವಾಗ ಅವನೇ ಹೇಳಿದ ಹಾಗೆ, ಸಾವು ಅವನ ಪ್ಯಾಂಟನ್ನು ಮೂಸಿ ನೋಡುತ್ತ ಎಲ್ಲಂದರಲ್ಲಿ ಹಿಂಬಾಲಿಸಿತ್ತು. ಅವನು ಮನುಷ್ಯ ಸಮುದಾಯಕ್ಕೆ ಆಗೀಗ ಆಕ್ರಮಿಸುವ ಪ್ಲೇಗ್ ಮುಂತಾದ ಹಾನಿಕಾರಕ ರೋಗಗಳಿಂದ ತಪ್ಪಿಸಿಕೊಂಡಿದ್ದ. ಪರ್ಶಿಯಾದಲ್ಲಿನ ಚರ್ಮ ರೋಗ, ಮಲಯಾದಲ್ಲಿ ಒಸಡು ರೋಗ, ಅಲೆಗ್ಸಾಂಡ್ರಿಯಾದ ಕುಷ್ಠ ರೋಗ, ಜಪಾನ್‌ನಲ್ಲಿ ಉಂಟಾದ ತೀವ್ರ ನಿಶ್ಯಕ್ತಿ, ಮಡಗಾಸ್ಕರ್‌ನ ಪ್ಲೇಗ್ ಮತ್ತು ಸಿಸಿಲಿಯ ಭೂಕಂಪ ಮತ್ತು ಮೆಗಲಾನ್ ಕೊಲ್ಲಿಯಲ್ಲಿ ಉಂಟಾದ ನೌಕಾಘಾತ ಇವುಗಳಿಂದ ಪಾರಾಗಿದ್ದ. ನಾಸ್ಟರ್‌ಡಾಮಸ್‌ನ ಸೂತ್ರವನ್ನು ಹೊಂದಿದವನಂತೆ ಕಾಣುತ್ತಿದ್ದ. ಆ ವಿಚಿತ್ರ ವ್ಯಕ್ತಿ ವಿಷಾದದಿಂದ ಕೂಡಿ ಮಂಕಾಗಿದ್ದ ಏಷ್ಯಾದವನಂತೆ ಕಾಣುತ್ತಿದ್ದ ಅವನಿಗೆ ವಸ್ತುಗಳ ಮತ್ತೊಂದು ಪಕ್ಕದಲ್ಲಿ ಏನಿದೆ ಎನ್ನುವುದರ ಅರಿವಿರುವ ಹಾಗೆ ತೋರುತ್ತಿತ್ತು. ಅವನು ಹರಡಿದ ರೆಕ್ಕೆಯಂತಿದ್ದ ಹ್ಯಾಟ್ ಮತ್ತು ಶತಮಾನಗಳ ಕಿಮಟು ಹಿಡಿದ ಹಾಗಿದ್ದ ವೆಲ್‌ವೆಟ್‌ನ ಸೊಂಟಪಟ್ಟಿಯನ್ನು ತೊಟ್ಟುಕೊಂಡಿರುತ್ತಿದ್ದ. ಅವನಲ್ಲಿ ಅಪಾರ ಪ್ರಬುದ್ಧತೆ ಮತ್ತು ಅತೀವ ನಿಗೂಢತೆ ಇದ್ದರೂ ಮಾನವೀಯತೆಯ ಮಿಡುಕಿತ್ತು ಮತ್ತು ಅವನ ನೆಲಕ್ಕಂಟಿದ ಜಾಯಮಾನ ದಿನನಿತ್ಯದ ಸಣ್ಣ ಸಮಸ್ಯೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು. ಮುದಿತನದ ಕಾಯಿಲೆಗಳಿಂದ ಗೋಳಾಡುತ್ತಿದ್ದರೂ ಸಣ್ಣ ಸಣ್ಣ ಆರ್ಥಿಕ ತೊಂದರೆಗಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ. ಅವನು ನಗುವುದನ್ನು ನಿಲ್ಲಿಸಿ ಬಹಳ ವರ್ಷಗಳಾಗಿತ್ತು. ಏಕೆಂದರೆ ಅವನ ಊದಿಕೊಂಡ ಒಸಡುಗಳು ಹಲ್ಲುಗಳನ್ನು ಹೊರಗೆ ಬರುವಂತೆ ಮಾಡಿತ್ತು. ಆ ಉಸಿರುಗಟ್ಟಿಸುವ ಮಟಮಟ ಮಧ್ಯಾಹ್ನದಲ್ಲಿ ಜಿಪ್ಸಿ ತನ್ನೆಲ್ಲ ಗುಟ್ಟುಗಳನ್ನು ತಿಳಿಸಿದಾಗ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅದು ಆತ್ಮೀಯ ಸ್ನೇಹದ ಆರಂಭವೆಂದು ಖಾತ್ರಿಯಾಯಿತು. ಮಕ್ಕಳು ಅವನ ಅದ್ಭುತ ಕಥೆಗಳಿಂದ ಖುಷಿಯಾಗಿದ್ದರು. ಆಗ ಐದು ವರ್ಷಕ್ಕಿಂತ ಹೆಚ್ಚಿಗೆ ಇರದ ಅವ್ರೇಲಿಯಾನೋ, ಆ ದಿನ ಮಧ್ಯಾಹ್ನ ಲೋಹದ ಕಿಟಕಿಗೆ ಒರಗಿಕೊಂಡು ಕುಳಿತು, ಅದರಿಂದ ತೂರಿ ಬರುವ ನಲುಗುವ ಬೆಳಕು ತನ್ನ ಒಳದನಿಯನ್ನು ಉದ್ದೀಪಿಸಿ, ವಿಷಣ್ಣ ಕನಸುಗಳ ಎಲ್ಲೆಗಳನ್ನು ಕುರಿತು ಅವನು ಹೇಳುತ್ತಿದ್ದ ನೋಟವನ್ನು ಜೀವನ ಪರ್ಯಂತ ನೆನಪಿಟ್ಟುಕೊಂಡಿದ್ದ. ಹಾಗೆ ಮಾಡುವಾಗ ಅವನ ಹಣೆಯ ಮೇಲೆ ಬೆಂಕಿಯಿಂದ ಕರಗಿದ ಗ್ರೀಸ್ ಹರಿಯುತ್ತಿತ್ತು. ಅವನ ಅಣ್ಣ ಹೊಸೆ ಅರ್ಕಾದಿಯೋ ಆ ಮಹತ್ವಪೂರ್ಣ ದೃಶ್ಯವನ್ನು ಅನುವಂಶೀಯವಾದ ನೆನಪು ಎನ್ನುವಂತೆ ತನ್ನ ಸಂತತಿಯವರಿಗೆ ತಿಳಿಸುತ್ತಿದ್ದ. ಆದರೆ ಉರ್ಸುಲಾಗೆ ಆ ನೆನಪಿನ ಬಗ್ಗೆ ಕೆಟ್ಟೆನಿಸಿತ್ತು. ಅವಳು ಆ ರೂಮನ್ನು ಪ್ರವೇಶಿಸುತ್ತಿದ್ದ ಹಾಗೆ ಮೆಲ್‌ಕಿಯಾದೆಸ್ ಅಜಾಗರೂಕತೆಯಿಂದ ಪಾದರಸದ ರಾಸಾಯನಿಕ ತುಂಬಿದ್ದ ಫ್ಲಾಸ್ಕನ್ನು ಒಡೆದಿದ್ದ. +“ಅದಕ್ಕೆ ದೆವ್ವದ ವಾಸನೆ ಇದೆ” ಎಂದಳು. +“ಇಲ್ಲವೇ ಇಲ್ಲ” ಎಂದು ಮೆಲ್‌ಕಿಯಾದೆಸ್ ಅವಳನ್ನು ಸರಿಪಡಿಸಿ, “ಈಗಾಗಲೇ ದೆವ್ವಕ್ಕೆ ಗಂಧಕದ ವಾಸನೆ ಇದೆ ಅಂತ ತಿಳ್ಕೊಂಡಿದೀವಿ, ಆದ್ರೆ ಇದಕ್ಕೆ ಕೊಂಚ ಕಿಮಟು ವಾಸನೆ” ಎಂದ. +ಅವನು ಎಂದಿನ ಉಪದೇಶದ ಹಾಗೆ ರಸಗಂಧಕದ ಗುಣಗಳ ಬಗ್ಗೆ ವಿವರಿಸುತ್ತ ಹೋದಾಗ ಉರ್ಸುಲಾ ಅದಕ್ಕೆ ಗಮನ ಕೊಡದೆ ಮಕ್ಕಳನ್ನು ಪ್ರಾರ್ಥನೆಗೋಸ್ಕರ ಕರೆದುಕೊಂಡು ಹೋದಳು. ಮೆಲ್‌ಕಿಯಾದೆಸ್‌ನ ನೆನಪಿಗೆ ಹೊಂದಿಕೊಂಡ ಹಾಗೆ ಒಳಗಿಳಿದ ಆ ವಾಸನೆ ಜೀವನವಿಡೀ ಅವಳ ಮನಸ್ಸಿನಲ್ಲಿತ್ತು. +ಲ್ಯಾಬೊರೇಟರಿ ಮೂಲದಲ್ಲಿ ಹಳೆಯ ನೀರಿನ ಪೈಪ್ ಆಗಿತ್ತಷ್ಟೆ. ಅಲ್ಲಿ ಸ್ಪರ್ಶ ಮಣಿಯ ಮರುರೂಪದ ನೀಳ ಕತ್ತಿನ ಗಾಜಿನ ಬೀಕರ್[ಕೊಕ್ಕು ಪಾತ್ರೆ[ಗಳು, ಫನಲ್[ಲಾಳಿಕೆ]ಗಳು, ಮಡಕೆಗಳು, ರೆಟಾರ್ಟ್[ಭಟ್ಟಿ ಪಾತ್ರೆ]ಗಳು ಹಾಗೂ ಶೋಧಕಗಳಿದ್ದವು. ಯಹೂದಿ ಮೇರಿ ವಿವರಿಸಿದ ರೀತಿಯಲ್ಲಿ ಜಿಪ್ಸಿಗಳು ನವೀನ ಮಾದರಿಯ ಭಟ್ಟಿ ಇಳಿಸುವ ಸಲಕರಣೆಯನ್ನು ರೂಪಿಸಿದ್ದರು. ಈ ಎಲ್ಲ ಉಪಕರಣಗಳೊಂದಿಗೆ ಮೆಲ್‌ಕಿಯಾದೆಸ್ ಏಳು ಗ್ರಹಗಳಿಗೆ ಅನ್ವಯವಾಗುವ ಹಾಗೆ ಏಳು ಬಗೆಯ ಲೋಹಗಳು, ಮೋಸಸ್ ಹಾಗೂ ರೋಸಿಮಸ್ಸರ ಬಂಗಾರದ ಮೊತ್ತವನ್ನು ದ್ವಿಗುಣಗೊಳಿಸುವ ಸೂತ್ರ, ಸ್ಪರ್ಶಶಿಲೆಗಳ ನಿರ್ಮಾಣವನ್ನು ಕೈಗೊಳ್ಳುವವರಿಗೆ ವ್ಯಾಖ್ಯಾನಿಸಲು ಅನುಕೂಲವಾಗಲು, ಟಿಪ್ಪಣಿ ಮತ್ತು ನಕ್ಷೆಗಳನ್ನು ಬಿಟ್ಟು ಹೋದ. ಬಂಗಾರ ದ್ವಿಗುಣಗೊಳಿಸುವ ಸೂತ್ರದ ಸರಳತೆಗೆ ಮಾರುಹೋಗಿ, ಹೂತಿಟ್ಟಿದ್ದ ನಾಣ್ಯಗಳನ್ನು ಹೊರಗೆ ತೆಗೆದು, ಸಾಧ್ಯವಾದಷ್ಟು ಹೆಚ್ಚಿಗೆ ಮಾಡಲು ಬಿಡುವಂತೆ ಉರ್ಸುಲಾಳನ್ನು ಕೆಲವು ವಾರ ಓಲೈಸಿದ. ಅವನು ಪಟ್ಟು ಹಿಡಿದಿದ್ದಕ್ಕೆ ಎಂದಿನಂತೆ ಉರ್ಸುಲಾ ಒಪ್ಪಿದಳು. ಅನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪಾತ್ರೆಯಲ್ಲಿ ಮೂರು ನಾಣ್ಯಗಳನ್ನು ಹಾಕಿ, ತಾಮ್ರದ ಚೂರು, ಹರಿದಳ, ಗಂಧಕ ಮತ್ತು ಸೀಸದಿಂದ ಮಿಶ್ರಣ ಮಾಡಿದ. ಅವುಗಳನ್ನೆಲ್ಲ ಹರಳೆಣ್ಣೆಯಲ್ಲಿ ಗಟ್ಟಿಯಾದ ದ್ರವವಾಗುವ ತನಕ ಕುದಿಸಿದ. ಅದು ಬಂಗಾರಕ್ಕಿಂತ ಹೆಚ್ಚಾಗಿ ಕಂದು ಬಣ್ಣದ ಪಾಕವಾಯಿತು. ಆ ಒಂದು ಅಪಾಯಕಾರಿ ಮತ್ತು ಹತಾಶೆಯ ಭಟ್ಟಿ ಇಳಿಸುವ ಪ್ರಕ್ರಿಯೆಯಲ್ಲಿ, ಅವು ಏಳು ಗ್ರಹಗಳ ಲೋಹದೊಂದಿಗೆ ಕರಗಿ ಪಾದರಸದ ಜೊತೆಯಲ್ಲಿ ಗಟ್ಟಿಯಾಗಿ ಬೆರೆಯಿತು. ಉರ್ಸುಲಾಳಿಗೆ ಪಿತ್ರಾರ್ಜಿತವಾಗಿ ದೊರೆತ ಬೆಲೆಯುಳ್ಳದ್ದೆಲ್ಲ, ಮೂಲಂಗಿಯ ಎಣ್ಣೆ ಕಡಿಮೆ ಇದ್ದಿದ್ದರಿಂದ ಹಂದಿಯ ಕೊ&;ಛಿoಠಿಥಿ;ನಲ್ಲಿ ಕುದಿಸಿದಾಗ ಸುಟ್ಟು, ದೊಡ್ಡ ಚಕ್ಕೆಗಳಾಗಿ ಮಡಿಕೆಯ ತಳಕ್ಕೆ ಅಂಟಿಕೊಂಡವು. +ಜಿಪ್ಸಿಗಳು ವಾಪಸು ಬಂದಾಗ ಉರ್ಸುಲಾ ಇಡೀ ಹಳ್ಳಿಯನ್ನು ಅವರ ವಿರುದ್ಧ ಎತ್ತಿ ಕಟ್ಟಿದಳು. ಆದರೆ ಭಯಕ್ಕಿಂತ ಕುತೂಹಲ ದೊಡ್ಡದು. ಅವರು ಕಿವುಡುಗೊಳಿಸುವಷ್ಟು ಶಬ್ದ ಮಾಡುತ್ತ ಎಲ್ಲ ರೀತಿಯ ಸಂಗೀತ ವಾದ್ಯ ನುಡಿಸುತ್ತಿದ್ದಾಗ ದಳ್ಳಾಳಿಯೊಬ್ಬ ಅವರು ಕಂಡು ಹಿಡಿದ ಅದ್ಭುತವೊಂದರ ಪ್ರದರ್ಶನದ ಬಗ್ಗೆ ಸಾರಿದ. ಪ್ರತಿಯೊಬ್ಬರೂ ಆ ಟೆಂಟ್‌ಗೆ ಹೋಗಿ ಸುಕ್ಕಿಲ್ಲದ ಮತ್ತು ಹೊಳೆಯುವ ಹಲ್ಲುಗಳಿದ್ದ, ಚೇತರಿಸಿಕೊಂಡು ಈಗ ಹರೆಯದವನಂತಿದ್ದ ಮೆಲ್‌ಕಿಯಾದೆಸ್‌ನನ್ನು ಒಂದು ಸೆಂಟ್ ಕೊಟ್ಟು ನೋಡಿದರು. ಈ ಮೊದಲು ಉಬ್ಬಿದ ಒಸಡುಗಳ ಗುಳಿ ಬಿದ್ದ ಕೆನ್ನೆಗಳ ಮತ್ತು ನಡುಗುತ್ತಿದ್ದ ತುಟಿಗಳಿದ್ದ ಮೆಲ್‌ಕಿಯಾದೆಸ್‌ನನ್ನು ನೋಡಿ ನೆನಪಿದ್ದವರಿಗೆ, ಆ ಜಿಪ್ಸಿಯ ಅಲೌಕಿಕ ಶಕ್ತಿಯ ಬಗ್ಗೆ ಭಯ ಉಂಟಾಯಿತು. ಮೆಲ್‌ಕಿಯಾದೆಸ್ ತನ್ನ ಹಲ್ಲುಗಳನ್ನು ಒಸಡುಗಳಿಂದ ಹೊರಗೆ ತೆಗೆದು ಒಂದು ಕ್ಷಣ ತೋರಿಸಿದಾಗ ಆ ಭಯ ತೀರ ಹೆಚ್ಚಾಯಿತು [ಆ ಒಂದು ಕ್ಷಣ ಅವನು ಹಿಂದಿನ ವರ್ಷಗಳ ಹಾಗೆ ದೈನ್ಯಾವಸ್ಥೆಯಲ್ಲಿದ್ದ]. ಅವನು ಮತ್ತೆ ಅದನ್ನು ಇಟ್ಟುಕೊಂಡು, ಗಳಿಸಿದ ಯೌವನವನ್ನು ಮೆರೆಸಿ ನಕ್ಕ. ಮೆಲ್‌ಕಿಯಾದೆಸ್‌ನ ಜ್ಞಾನ ತಡೆಯಲಾರದ ಮಟ್ಟ ತಲುಪಿದೆ ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೂಡ ಭಾವಿಸಿದ. ಆದರೆ ಜಿಪ್ಸಿ ಹುಸಿ ಹಲ್ಲುಗಳು ಕೆಲಸ ಮಾಡುವ ರೀತಿಯನ್ನು ವಿವರಿಸಿದಾಗ ಸಂತೋಷಗೊಂಡ. ಅವನಿಗೆ ಅದು ಸರಳವೂ ಅಸಾಧಾರಣವಾಗಿಯೂ ಕಂಡು ಬಂದು, ತಾನು ಮಾಡುತ್ತಿದ್ದ ರಸವಾದಿಗಳ ಪ್ರಯೋಗಗಳಲ್ಲಿ ಎಲ್ಲ ಆಸಕ್ತಿಯನ್ನು ಇದ್ದಕ್ಕಿದ್ದ ಹಾಗೆ ಕಳೆದು ಕೊಂಡ. ಅವನ ಮನಸ್ಸು ಕೆಟ್ಟು ಹೊಸ ಸಂದಿಗ್ಧದಲ್ಲಿ ಸಿಲುಕಿತು. ಹೊತ್ತಿಗೆ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಇಡೀ ದಿನ ಮನೆಯಲ್ಲಿ ಸುಮ್ಮನೆ ಓಡಾಡುತ್ತ ಕಳೆಯುತ್ತಿದ್ದ. ಅವನು ಉರ್ಸುಲಾಗೆ, “ಪ್ರಪಂಚದಲ್ಲಿ ನಂಬಲು ಸಾಧ್ಯವಾಗದಂಥ ಸಂಗತಿಗಳು ನಡೀತಿವೆ. ಅಲ್ಲಿ ಹೊಳೆಯಾಚೆ ಎಲ್ಲ ರೀತಿಯ ಮಾಂತ್ರಿಕ ಉಪಕರಣಗಳಿವೆ. ನಾವಿಲ್ಲಿ ಕತ್ತೆಗಳ ಥರ ಇದೀವಿ” ಎಂದ. ಮಕೋಂದೋ ಅಸ್ತಿತ್ವಕ್ಕೆ ಬಂದ ದಿನದಿಂದ ಅವನನ್ನು ನೋಡಿದವರಿಗೆ ಅವನೆಷ್ಟು ಬದಲಾಗಿದ್ದಾನೆಂದು ಆಶ್ಚರ್ಯಗೊಂಡರು. ಹರೆಯದ ಅಧಿಕಾರದಿಂದ ಜನರಿಗೆ, ಮಕ್ಕಳು ಹಾಗೂ ಪ್ರಾಣಿಗಳನ್ನು ಬೆಳೆಸುವುದಕ್ಕೆ ತಕ್ಕ ಸೂಚನೆಗಳನ್ನು ಕೊಡುತ್ತಿದ್ದ. ಅಲ್ಲದೆ ಎಲ್ಲರ ಜೊತೆ ಕೆಲಸದಲ್ಲಿ ಜೊತೆಗೂಡುತ್ತಿದ್ದ. ಅವನ ಮನೆ ಇಡೀ ಹಳ್ಳಿಯಲ್ಲಿ ಒಳ್ಳೆಯ ಮನೆಯಾದ್ದರಿಂದ ಇತರರು ಅದೇ ರೀತಿಯಲ್ಲಿ ಕಟ್ಟಿದ್ದರು. ಅದರಲ್ಲಿ ಒಪ್ಪವಾಗಿ ಬೆಳಕು ಬೀಳುವ ಪಡಸಾಲೆ, ಚೆಂದದ ಹೂಗಳಿರುವ ತಾರಸಿಯ ಹಾಗಿರುವ ಊಟದ ಮನೆ, ಎರಡು ಮಲಗುವ ರೂಮುಗಳು, ಭಾರಿ ಮರವಿರುವ ಅಂಗಳ, ಅಂದದ ತೋಟ, ಕುರಿ, ಮೇಕೆ, ಹಂದಿಗಳ ಸಹ ಬಾಳ್ವೆಗೊಂದು ನೆಮ್ಮದಿಯ ಸ್ಥಾನವಿತ್ತು. ಆ ಮನೆಯಲ್ಲಿ ಮತ್ತು ಇತರ ಎಲ್ಲ ಕಡೆ ನಿಷಿದ್ಧವಾಗಿದ್ದ ಪ್ರಾಣಿಯೆಂದರೆ ಕಾದಾಡುವ ಹುಂಜಗಳು. +ಉರ್ಸುಲಾಗೆ ತನ್ನ ಗಂಡನಷ್ಟೇ ಕೆಲಸ ಮಾಡುವ ಸಾಮರ್ಥ್ಯವಿತ್ತು. ಚುರುಕಾದ ಸಣ್ಣ ಆಕೃತಿಯ ಮುರುಟಿಗೊಳ್ಳದ ನರಗಳ, ಕಠೋರಳಾದ, ಎಂದೂ ಯಾವ ಕ್ಷಣದಲ್ಲೂ ಹಾಡೊಂದನ್ನು ಗುಣಿಗುಣಿಸದ ಆ ಹೆಂಗಸು ಬೆಳಿಗ್ಗೆಯಿಂದ ಸರಿ ರಾತ್ರಿಯವರೆಗೂ ಗಂಜಿ ಹಾಕಿದ ಒಳಲಂಗದ ಸಣ್ಣನೆ ಪಿಸುಗುಟ್ಟುವಿಕೆಯ ಜೊತೆ ಎಲ್ಲ ಕಡೆಗೂ ಇರುವ ಹಾಗೆ ಕಾಣುತ್ತಿದ್ದಳು. ಅವಳಿಂದಾಗಿ ನಡೆದಾಡುವ ನೆಲ, ಸುಣ್ಣ ಬಳಿಯದ ಗೋಡೆಗಳು, ಅವರೇ ತಯಾರು ಮಾಡಿದ ಒರಟು ಮರದ ಸಾಮಾನು ಸರಂಜಾಮುಗಳು ಯಾವಾಗಲೂ ಶುಭ್ರವಾಗಿರುತ್ತಿದ್ದವು. ಅವರು ಬಟ್ಟೆಯನ್ನು ಇಡುತ್ತಿದ್ದ ಪೆಟ್ಟಿಗೆ ಹದವಾದ ತುಳಸಿಯ ವಾಸನೆಯನ್ನು ಬೀರುತ್ತಿತ್ತು. +ಇಡೀ ಹಳ್ಳಿಯಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾನಷ್ಟು ಸಾಹಸಪೂರ್ಣ ಮನುಷ್ಯ ಮತ್ತೊಬ್ಬನಿರಲಿಲ್ಲ. ಅವನು ಮನೆಗಳಿಗೆ ಕೊಟ್ಟ ಸ್ಥಳಗಳು ಹೇಗಿತ್ತೆಂದರೆ ಯಾರೇ ಆಗಲಿ ಸಮನಾದ ಪ್ರಯತ್ನದಿಂದ ನೀರನ್ನು ಪಡೆಯಬಹುದಾಗಿತ್ತು. ಒಳ್ಳೆಯ ಪರಿಜ್ಞಾನದಿಂದ ರಸ್ತೆಗಳನ್ನು ಸಾಲುಗಟ್ಟಿಸಿದ ರೀತಿಯಿಂದ ಬೇಸಿಗೆಯಲ್ಲಿ ಇತರ ಮನೆಗಳಿಗಿಂತ ಹೆಚ್ಚು ಸೂರ್ಯನ ಶಾಖ ತಟ್ಟುತ್ತಿರಲಿಲ್ಲ. ಮುನ್ನೂರು ಜನರಿರುವ ಮಕೋಂದೋ ಹಿಂದೆಂದೂ ಇರದ ರೀತಿಯಲ್ಲಿ ಸುವ್ಯವಸ್ಥಿತವಾಗಿ ಮತ್ತು ಕಷ್ಟಪಟ್ಟು ದುಡಿಯುವವರ ಹಳ್ಳಿಯಾಗಿತ್ತು. ಆ ಹಳ್ಳಿಯಲ್ಲಿ ಮೂವತ್ತು ವರ್ಷ ದಾಟಿದವರು ಮತ್ತು ಸತ್ತವರು ಯಾರೂ ಇರಲಿಲ್ಲ. +ಅವನು ಆ ಹಳ್ಳಿ ಹುಟ್ಟಿದಾಗಿಂದ ಬಲೆಗಳನ್ನು ಮತ್ತು ಪಂಜರಗಳನ್ನು ನಿರ್ಮಿಸಿದ್ದ. ಅಲ್ಪ ಕಾಲದಲ್ಲಿಯೇ ಅವನು ತನ್ನ ಮನೆಯಲ್ಲಲ್ಲದೆ ಎಲ್ಲರ ಮನೆಯಲ್ಲಿಯೂ ಕನೇರಿ ಹಕ್ಕಿ, ಜೇನು ಹುಳುಗಳನ್ನು ತಿನ್ನುವ ಹಕ್ಕಿ, ರಾಬಿನ್ ಹಕ್ಕಿಮುಂತಾದವುಗಳನ್ನು ತುಂಬಿದ್ದ. ಅನೇಕ ಬಗೆಯ ಪಕ್ಷಿಗಳಿಂದ ಉಂಟಾಗುತ್ತಿದ್ದ ವಾದ್ಯ ಗೋಷ್ಠಿಯಿಂದ ರೇಜಿಗೆಗೊಳ್ಳುತ್ತಿದ್ದ ಉರ್ಸುಲಾ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳಬಾರದು ಎನ್ನುವಂತೆ ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳುತ್ತಿದ್ದಳು. ಮೊದಲ ಬಾರಿ ಮೆಲ್‌ಕಿಯಾದೆಸ್‌ನ ತಂಡದವರು ಬಂದು, ತಲೆನೋವಿಗೆ ಗಾಜಿನ ಗುಂಡೊಂದನ್ನು ಮಾರಲು ಪ್ರಯತ್ನಿಸಿದಾಗ, ಅವರೆಲ್ಲರಿಗೂ ಅರೆನಿದ್ದೆಯಲ್ಲಿ ಮುಳುಗಿದ್ದ ಹಳ್ಳಿಯೊಂದನ್ನು ಕಂಡ ಅನುಭವವಾಗಿತ್ತು. ಅಲ್ಲದೆ ಅವರು ಹಕ್ಕಿಗಳ ಉಲಿಯಿಂದ ಅಲ್ಲಿಗೆ ಬರುವ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತೆಂದು ಒಪ್ಪಿಕೊಂಡರು. +ಆಯಸ್ಕಾಂತಗಳಿಂದ ಉಂಟಾದ ಉಮೇದು, ಖಗೋಳ ಶಾಸ್ತ್ರದ ಲೆಕ್ಕಾಚಾರಗಳು, ಲೋಹಪರಿವರ್ತನೆಯ ಕನಸುಗಳು ಮತ್ತು ಪ್ರಪಂಚದ ಅದ್ಭುತಗಳನ್ನು ಕಂಡು ಹಿಡಿಯುವ ತವಕದಲ್ಲಿ ಅವನಿಗೆ ಸಾಮೂಹಿಕ ಪ್ರಜ್ಞೆಯಲ್ಲಿನ ತುಡಿತ ಸ್ವಲ್ಪದರಲ್ಲಿಯೇ ಕಾಣೆಯಾಯಿತು. ಶುಭ್ರ ತೊಡಿಗೆಯ ಚಟುವಟಿಕೆಯ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈಗ ಸೋಮಾರಿಯ ಹಾಗೆ ಕಾಣುತ್ತ, ಉಡುಪಿನ ಬಗ್ಗೆ ಗಮನವಿಲ್ಲದವನಾಗಿದ್ದ. ಅವನ ಅಡ್ಡಾದಿಡ್ಡಿ ಬೆಳೆದ ಗಡ್ಡವನ್ನು ಉರ್ಸುಲಾ ಅಡಿಗೆ ಮನೆಯ ಚಾಕು ಉಪಯೋಗಿಸಿ, ಕಷ್ಟಪಟ್ಟು ಕತ್ತರಿಸಿದಳು. ಅನೇಕರು ಅವನು ಯಾವುದೊ ವಿಲಕ್ಷಣ ಶಕ್ತಿಯ ಪ್ರಭಾವಕ್ಕೆ ಸಿಲುಕಿದ್ದಾನೆಂಬ ಅಭಿಪ್ರಾಯಕ್ಕೆ ಬಂದಿದ್ದರು. ಅವನಿಗೊಂದು ರೀತಿಯ ಹುಚ್ಚು ಹಿಡಿದಿದೆ ಎಂದು ನಂಬಿದವರೂ ಕೂಡ, ತನ್ನ ಉಪಕರಣಗಳಿಂದ ಸ್ಥಳವೊಂದನ್ನು ತೆರವು ಮಾಡಿಕೊಳ್ಳಲು ಬಂದು, ಸುತ್ತಲಿದ್ದ ಗುಂಪಿಗೆ ಮಕೋಂದೋ ಮಹತ್ತರ ಆವಿಷ್ಕಾರಗಳನ್ನು ಮಾಡಲು ಅವಕಾಶ ಕೊಡಿ ಎಂದು ಕೇಳಿದಾಗ, ಅವರು ಮಾಡುತ್ತಿದ್ದ ಕೆಲಸ ಮತ್ತು ಸಾಂಸಾರಿಕ ವಿಷಯಗಳನ್ನು ಬಿಟ್ಟು ಬಂದು ಅವನಿಗೆ ನೆರವಾಗುತ್ತಿದ್ದರು. +ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಆ ಪ್ರದೇಶದ ಭೌಗೋಳಿಕ ಜ್ಞಾನ ಸ್ವಲ್ಪವೂ ಇರಲಿಲ್ಲ. ಪೂರ್ವಕ್ಕೆ ಬೇಧಿಸಲಾಗದ ಪರ್ವತ ಶ್ರೇಣಿ ಇದೆಯೆಂದು ಮತ್ತು ಅದರ ಆಚೆ ಪುರಾತನ ಪಟ್ಟಣವಾದ ರಿಯೋ‌ಅಕ ಇದೆಯೆಂದು ಗೊತ್ತಿತ್ತು. ಹಿಂದೆ ಅಲ್ಲಿ ಅವನ ಅಜ್ಜ ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೇಳಿದ ಹಾಗೆ ಸರ್ ಫ್ರಾನ್ಸಿಸ್ ಡ್ರೇಕ್ ಮೊಸಳೆಗಳನ್ನು ಕೋವಿಯಿಂದ ಬೇಟೆಯಾಡಲು ಹೋಗಿ, ಅನಂತರ ಅವುಗಳೊಂದನ್ನು ರಿಪೇರಿ ಮಾಡಿ ಹುಲ್ಲು ತುಂಬಿ ಎಲಿಜ಼ಬೆತ್ ರಾಣಿಗೆ ಕೊಟ್ಟಿದ್ದ. ಹಿಂದೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಸಂಗಾತಿಗಳು, ಹೆಂಡಿರು ಮಕ್ಕಳು, ಪ್ರಾಣಿಗಳು ಮತ್ತು ಎಲ್ಲ ಬಗೆಯ ಸಾಂಸಾರಿಕ ಉಪಕರಣಗಳ ಜೊತೆ, ಸಮುದ್ರಕ್ಕೆ ಹೋಗುವ ದಾರಿಯನ್ನು ಹುಡುಕಲು ಪರ್ವತಗಳನ್ನು ದಾಟಿದ್ದ ಮತ್ತು ಇಪ್ಪತ್ತಾರು ತಿಂಗಳಾದ ಮೇಲೆ ಅವನು ಆ ಉದ್ದೇಶಿತ ಹುಡುಕಾಟ ಕೈಬಿಟ್ಟು ಹಿಂತಿರುಗಿ ಹೋಗುವ ಪ್ರಮೇಯ ಉಂಟಾಗದಿರಲೆಂದು, ಮಕೋಂದೋವನ್ನು ಅಸ್ತಿತ್ವಕ್ಕೆ ತಂದ. ಇದರಿಂದ ಅವನು ಬಂದ ಮಾರ್ಗದಲ್ಲಿ ಆಸಕ್ತಿ ಹೊಂದಿರಲಿಲ್ಲ. ಏಕೆಂದರೆ ಅವನಿಗೆ ಭೂತಕಾಲಕ್ಕೆ ಹೋಗಲು ಮಾತ್ರ ಸಾಧ್ಯವಾಗುತ್ತಿತ್ತು. ಅಲ್ಲಿಂದ ದಕ್ಷಿಣಕ್ಕೆ ಹಸಿರಿನಿಂದ ಕೂಡಿದ ಜೌಗು ಪ್ರದೇಶವಿತ್ತು ಮತ್ತು ಆ ಜೌಗಿನ ವಿಸ್ತಾರಕ್ಕೆ ಎಲ್ಲೆ ಎನ್ನುವುದೇ ಇರಲಿಲ್ಲ. ಪಶ್ಚಿಮದಲ್ಲಿ ಜೌಗು ಪ್ರದೇಶದ ಜೊತೆ ಸಮುದ್ರದ ವಿಸ್ತಾರವಿದ್ದು ಅದರಲ್ಲಿ ಮೃದು ಚರ್ಮದ ತಿಮಿಂಗಿಲ ಜಾತಿಯ ಪ್ರಾಣಿಗಳಿದ್ದವು. ಅವಕ್ಕೆ ಹೆಣ್ಣಿನ ತಲೆ ಹಾಗೂ ಮುಂಡಗಳಿದ್ದು ತಮ್ಮ ಚೆಲುವಾದ ವಕ್ಷಸ್ಥಳಗಳಿಂದ ನಾವಿಕರನ್ನು ಆಕರ್ಷಿಸುತಿದ್ದವು. ಜಿಪ್ಸಿಗಳು ಆ ಮಾರ್ಗದಲ್ಲಿ ಆರು ತಿಂಗಳು ಕ್ರಮಿಸಿ ಹೇಸರಗತ್ತೆಗಳ ಮೇಲೆ ಟಪಾಲು ಸಾಗಿಸುವ ಸ್ಥಳವನ್ನು ತಲುಪಿದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಪ್ರಕಾರ ಆಧುನಿಕ ಸಂಸ್ಕೃತಿಯ ಸಂಪರ್ಕವಿರುವ ಮಾರ್ಗವೆಂದರೆ ಉತ್ತರಕ್ಕಿರುವ ಮಾರ್ಗ. ಅದ್ದರಿಂದ ಅವನು ದಾರಿ ತೆರವು ಮಾಡಿಕೊಡುವ ಉಪಕರಣಗಳನ್ನು ಮತ್ತು ಬೇಟೆಯಾಡುವ ಆಯುಧಗಳನ್ನು ಮಕೋಂದೋ ಅಸ್ತಿತ್ವಕ್ಕೆ ಬಂದಾಗ ಇದ್ದ ಅದೇ ಜನರಿಗೆ ಕೊಟ್ಟ. ಅಲ್ಲದೆ ದಿಕ್ಕು ಸೂಚಿಸುವ ಉಪಕರಣ ಮತ್ತು ನಕ್ಷೆಗಳನ್ನು ಗೋಣಿ ಚೀಲದಲ್ಲಿ ಹಾಕಿಬಿಟ್ಟು ಎಗ್ಗಿಲ್ಲದ ಸಾಹಸದಲ್ಲಿ ತೊಡಗಿದ. +ಪ್ರಾರಂಭದ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂಥ ಯಾವ ಅಡಚಣೆಯೂ ಉಂಟಾಗಲಿಲ್ಲ. ನದಿಯ ದಡದ ಕಲ್ಲು ಬಂಡೆಗಳ ಪಕ್ಕದಲ್ಲಿ ಹಿಂದೆ ಯೋಧನ ಕವಚ ಸಿಕ್ಕಿದ್ದ ಸ್ಥಳ ತಲುಪಿ ಅಲ್ಲಿಗೆ ಕಾಣುತ್ತಿದ್ದ ಕಾಡು ಕಿತ್ತಲೆ ಮರಗಳ ಜಾಡಿನಲ್ಲಿದ್ದ ಕಾಡಿಗೆ ಹೋದರು. ಮೊದಲನೆ ವಾರದ ಕೊನೆಗೆ ಅವರು ಒಂದು ಜಿಂಕೆಯನ್ನು ಕೊಂದು ಬೇಯಿಸಿದರು. ಆದರೆ ಅದರ ಅರ್ಧದಷ್ಟನ್ನು ಮಾತ್ರ ತಿಂದು, ಉಳಿದಿದ್ದನ್ನು ಮುಂದಿನ ದಿನಗಳಿಗೆ ಇಡುವುದು ಎಂದು ಯೋಚಿಸಿದರು. ಈ ಮುನ್ನೆಚ್ಚರಿಕೆಯಿಂದ ಅವರು ನೀಲಿ ಬಣ್ಣದ ಮಾಂಸ ಮತ್ತು ಒಗರಾಗಿರುವ ಗಿಣಿಯನ್ನು ತಿನ್ನುವ ಅಗತ್ಯವನ್ನು ಮುಂದೂಡಿದರು. ಅನಂತರ ಹತ್ತು ದಿನ ಅವರಿಗೆ ಸೂರ್ಯನ ಮುಖದರ್ಶನವಾಗಲಿಲ್ಲ. ಉಲ್ಕಾಪಾತದ ಬೂದಿಯ ಹಾಗೆ ಕಾಲು ಕೆಳಗಿನ ನೆಲ ಮೃದುವಾಗಿ ಒದ್ದೆಯಾಗಿತ್ತು. ಸುತ್ತಲೂ ಒತ್ತಾಗಿ ಗಿಡ ಗಂಟೆಗಳು ಹಬ್ಬಿದ್ದವು. ಅಲ್ಲದೆ ಹಕ್ಕಿಗಳ ಉಲಿ, ಕೋತಿಗಳ ಕೀರಲು ಧ್ವನಿ ಇನ್ನಷ್ಟು ಮತ್ತಷ್ಟು ದೂರವಾಗಿದ್ದವು. ಅವರಿಗೆ ಇಡೀ ಪ್ರಪಂಚ ಎಂದೂ ಮುಗಿಯದ ವಿಷಾದದಂತೆ ಕಂಡಿತು. ಸಾಹಸವನ್ನು ಕೈಗೊಂಡ ಅವರಿಗೆ ಸ್ವರ್ಗವೆನಿಸುವ ಆ ತೇವದ ಸ್ಪರ್ಶ ಮತ್ತು ಅಗಾಧ ಮೌನದಲ್ಲಿ ಗತಕಾಲದ ನೆನಪುಗಳು ತುಂಬಿ ಬಂದು ಪರವಶವಾದರು. ಅವರ ಬೂಟುಗಳು ಹೊಮ್ಮುತ್ತಿದ್ದ ಎಣ್ಣೆಯ ಹರಹಿನಲ್ಲಿ ಹೂತುಗೊಳ್ಳುತ್ತ, ಅವರ ಮಚ್ಚುಗಳು ಕೆಂಪು ಲಿಲ್ಲಿ ಹೂಗಳನ್ನು ಹಾಗೂ ತಾಪ ಸಹಿಸುವ ಓತಿಕ್ಯಾತದಂತಹ ಜಂತುಗಳನ್ನು ಧ್ವಂಸಮಾಡುತ್ತಿದ್ದಂತೆ, ಮೂಲ ಪಾಪಕ್ಕಿಂತ ಮುಂಚಿನ ದಿನಕ್ಕೆ ಹೋಗುತ್ತಿದ್ದರು. ಇಡೀ ಒಂದು ವಾರ ಮಾತನಾಡದೆ ನಿದ್ದೆಯಲ್ಲಿ ನಡೆದವರಂತೆ ವಿಷಾದ ತುಂಬಿದ ಜಗತ್ತಿನಲ್ಲಿ ಬೆಳಕು ಹೊಮ್ಮಿಸುವ ಹುಳುಗಳ ಪ್ರತಿಫಲಿತ ಕ್ಷೀಣ ಬೆಳಕಿನಲ್ಲಿ ಮುಂದೆ ಹೋದರು. ಅವರ ಎದೆಗೂಡು ಉಸಿರುಗಟ್ಟಿಸುವ ರಕ್ತದ ವಾಸನೆಯಿಂದ ತುಂಬಿ ಹೋಗಿತ್ತು. ಅವರಿಗೆ ವಾಪಸು ಬರಲಾಗಲಿಲ್ಲ. ಏಕೆಂದರೆ ಅವರು ತೆರವು ಮಾಡಿಕೊಂಡು ಹೋದ ಮಾರ್ಗ ಬಹು ಬೇಗನೆ ಅವರ ಕಣ್ಣೆದುರೇ ಹೊಸ ಬೆಳೆಯಿಂದ ಮುಚ್ಚಿ ಹೋಗುವಂತಿತ್ತು. ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆಗಲಿ ಬಿಡಿ. ನಮ್ಮ ಬುಡವನ್ನೇ ಕಳೆದುಕೊಳ್ಳದಿರೋದು ಮುಖ್ಯ” ಎಂದ. ತನ್ನಲ್ಲಿದ್ದ ಕೈವಾರ[ಕಾಂಪಾಸ್] ನೋಡಿಕೊಂಡು ಸುತ್ತಲಿದ್ದ ಇತರರಿಗೆ ಆ ಪ್ರದೇಶದಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಕಾಣದ ಉತ್ತರಕ್ಕೆ ಹೋಗಲು ಮಾರ್ಗದರ್ಶನ ಕೊಟ್ಟ. ಅದೊಂದು ನಕ್ಷತ್ರಗಳಿಲ್ಲದ ಹೆಪ್ಪುಗಟ್ಟಿದ ರಾತ್ರಿ. ಆದರೆ ಆ ಕತ್ತಲೊಳಗೂ ಹೊಸದಾದ ತಿಳಿಗಾಳಿ ತುಂಬಿತ್ತು. ನಡೆದು ಸುಸ್ತಾಗಿ ಹಾಸಿಗೆಗಳನ್ನು ಅಣಿಮಾಡಿಕೊಂಡು ಆ ಎರಡು ವಾರದಲ್ಲಿ ಅವರು ಮೊದಲ ಸಲ ಮಲಗಿ ಗಾಢ ನಿದ್ದೆ ಮಾಡಿದರು. ಅವರು ಎದ್ದಾಗ ಸೂರ್ಯನಾಗಲೇ ಆಕಾಶದಲ್ಲಿ ಎತ್ತರದಲ್ಲಿದ್ದ. ಅವರಿಗೆ ಆಶ್ಚರ್ಯದಿಂದ ಮಾತುಗಳೇ ಹೊರಡಲಿಲ್ಲ. ಅವರ ಎದುರಿಗೆ ಸೊರಗಿ ಹುಡಿಯಾದ ತೆಂಗಿನ ಮರಗಳು ಮತ್ತು ಜರ್ರ್ರ್ರಿ ಗಿಡಗಳಿಂದ ಸುತ್ತುವರಿದಿದ್ದ ಮೌನದ ಮುಂಜಾವಿನಲ್ಲಿ ಜೀರ್ಣವಾದ ಸ್ಪೇನಿನ ವ್ಯಾಪಾರಿ ಹಡಗೊಂದು ಕಾಣಿಸಿತು. ಅದು ಒಂದು ಪಕ್ಕಕ್ಕೆ ವಾಲಿಕೊಂಡು ಇನ್ನೂ ಸರಿಯಾಗಿ ನಿಂತಿದ್ದ ಅದರ ಮರದ ಕಂಬಗಳಿಂದ ಚಿಂದಿಯಾದ ಹಾಯಿಗಳು ನೇತಾಡುತ್ತಿದ್ದವು. ಹಾಯಿ ಕಟ್ಟಿದ್ದ ಹಗ್ಗಗಳ ಮೇಲೆ ಗಿಡ-ಬಳ್ಳಿಗಳು ಬೆಳೆದಿದ್ದವು. ಪಾಚಿಗಟ್ಟಿ ಮತ್ತು ಮುದ್ದೆಯಾದ ಚಿಪ್ಪಿನ ಪ್ರಾಣಿಗಳಿದ್ದ ಆ ಹಡಗನ್ನು ದಡದ ಕಲ್ಲುಗಳಿಗೆ ಕಟ್ಟಲಾಗಿತ್ತು. ಕಾಲದ ಪ್ರಭಾವದಿಂದ ಮತ್ತು ಹಕ್ಕಿಗಳ ಬಳಕೆಯಿಂದ ಸಂರಕ್ಷಿಸಲ್ಪಟ್ಟ ಇಡೀ ಹಡಗು ತನ್ನದೇ ಆದ ಏಕಾಂತ ಮತ್ತು ವಿಸ್ಮೃತಿಯನ್ನು ತುಂಬಿಕೊಂಡ ಹಾಗೆ ಕಾಣುತ್ತಿತ್ತು. ಆ ಸಾಹಸಿಗರು ಎಚ್ಚರಿಕೆಯಿಂದ ನಡೆಸಿದ ಹುಡುಕಾಟದಲ್ಲಿ ದೊರಕಿದ್ದು ಅಗಾಧ ಪ್ರಮಾಣದ ಹೂಗಳು ಮಾತ್ರವಲ್ಲದೆ ಬೇರೆ ಏನೂ ಇರಲಿಲ್ಲ. +ಹಡಗು ಸಿಕ್ಕಿದ್ದರಿಂದ ಸಮುದ್ರ ಸಮೀಪದಲ್ಲಿದೆ ಎಂಬ ಅರಿವಿನಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಉತ್ಸಾಹ ಉಕ್ಕಿತು. ಲೆಕ್ಕವಿಲ್ಲದಷ್ಟು ತ್ಯಾಗ ಮತ್ತು ಸಂಕಷ್ಟಗಳ ಬೆಲೆ ತೆತ್ತು ಹುಡುಕಿದರೂ ಸಿಗದ ಸಮುದ್ರ ಮತ್ತು ನಿಭಾಯಿಸಲಾಗದ ವಸ್ತುವಾಗಿ, ಹುಡುಕದೆಯೂ ಸಿಕ್ಕ ಸಮುದ್ರ, ತನ್ನ ವಿಧಿಯ ಹುಚ್ಚಾಟವೆಂದು ಭಾವಿಸಿದ. ಅನೇಕ ವರ್ಷಗಳ ನಂತರ ಎಂದಿನಂತೆ ಟಪಾಲು ಸೇವೆ ಪ್ರಾರಂಭವಾದ ಮೇಲೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆ ಪ್ರದೇಶದಲ್ಲಿ ಹಾದು ಹೋದ. ಆಗ ಅವನಿಗೆ ಕಂಡದ್ದು, ಗಸಗಸೆ ಗಿಡಗಳ ವಿಸ್ತಾರದ ನಡುವೆ ಸುಟ್ಟು ಹೋಗಿದ್ದ ಹಡಗಿನ ಹೊರ ಚೌಕಟ್ಟು ಮಾತ್ರ. ತನ್ನ ತಂದೆ ಹೇಳಿದ್ದು ಕೇವಲ ಅವರ ಕಲ್ಪನೆಯ ಫಲವಲ್ಲ ಎಂದು ಅರಿವಾದ ಅವನಿಗೆ ಆ ಹಡಗು ಭೂಭಾಗಕ್ಕೆ ತಲುಪಿದ್ದು ಹೇಗೆ ಎಂದು ಸೋಜಿಗವಾಯಿತು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹಡಗಿದ್ದ ಸ್ಥಳದಿಂದ ನಾಲ್ಕು ದಿನಗಳ ಪ್ರಯಾಣದ ನಂತರ ಸಮುದ್ರವನ್ನು ತಲುಪಿದ. ಆದರೆ ಬೂದಿಮಯವಾಗಿ ಕೊಳಕಾಗಿದ್ದ ಸಮುದ್ರವನ್ನು ಕಂಡು ಅದು ಇಷ್ಟೊಂದು ಅಪಾಯ ಮತ್ತು ಸಾಹಸವನ್ನು ಅಪೇಕ್ಷಿಸುವ ಮಟ್ಟದಲ್ಲಿಲ್ಲ ಎನ್ನಿಸಿ ಅವನ ಕನಸುಗಳು ಪುಡಿಯಾದವು. +“ದೇವರೇ, ಏನು ಗತಿ! ಮಕೋಂದೋ ನೀರಿನಿಂದ ಸುತ್ತುವರೆದಿದೆ.” +ತನ್ನ ಸಾಹಸಪೂರ್ಣ ಪ್ರಯಾಣದಿಂದ ಹಿಂತಿರುಗಿದ ನಂತರ ಸುಮ್ಮನೆ ಬರೆದ ನಕ್ಷೆಗಳಿಂದ ಸ್ಫೂರ್ತಿಗೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಮಕೋಂದೋ ಒಂದು ಪರ್ಯಾಯ ದ್ವೀಪವೆಂಬ ಆಲೋಚನೆ ಬಹಳ ದಿನಗಳ ತನಕ ಇತ್ತು. ಕೊಂಚವೂ ಸಾಮಾನ್ಯ ಜ್ಞಾನವಿಲ್ಲದೆ ಆ ಪ್ರದೇಶವನ್ನು ಆರಿಸಿಕೊಂಡದ್ದಕ್ಕಾಗಿ ಅವನು ಅವುಗಳನ್ನು ತನಗೆ ತಾನೆ ಶಿಕ್ಷೆ ಕೊಡುವ ರೀತಿ ಎನ್ನುವ ಹಾಗೆ ರೋಷದಿಂದ, “ನಾವೆಂದೂ ಎಲ್ಲಿಗೂ ಹೋಗಕ್ಕಾಗಲ್ಲ. ಇಡೀ ಜೀವನ ವಿಜ್ಞಾನದ ಅನುಕೂಲಗಳು ಸಿಗದೆ ನಾವಿಲ್ಲೆ ಕೊಳೆತು ಹೋಗ್ತೇವೆ” ಎಂದು ಉರ್ಸುಲಾಗೆ ಹೇಳಿದ. ಆ ನಿಜ ಸಂಗತಿ ಅನೇಕ ತಿಂಗಳು ಲ್ಯಾಬೊರೇಟರಿ ಆಗಿದ್ದ ಅವನ ಚಿಕ್ಕ ರೂಮಿನಲ್ಲೆ ಸುತ್ತಾಡುತ್ತಿತ್ತು. ಅನಂತರ ಮಕೋಂದೋವನ್ನೇ ಒಳ್ಳೆಯ ಪ್ರದೇಶಕ್ಕೆ ಕೊಂಡೊಯ್ಯುವ ಆಲೋಚನೆ ಅವನಲ್ಲಿ ಹುಟ್ಟಿತು. ಆ ವೇಳೆಗಾಗಲೇ ಉರ್ಸುಲಾ ಅವನು ತಾಪಯುಕ್ತವಾಗಿ ರೂಪಿಸುತ್ತಿದ್ದ ವಿನ್ಯಾಸವನ್ನು ನಿರೀಕ್ಷಿಸಿದ್ದಳು. ಅವಳು ಕಾರ್ಯನಿರತವಾದ ಇರುವೆಯ ಹಾಗೆ ಇಡೀ ಹಳ್ಳಿಯ ಹೆಂಗಸರನ್ನು ತಮ್ಮ ಗಂಡಂದಿರ ಅಭಿಪ್ರಾಯವನ್ನು ವಿರೋಧಿಸುವಂತೆ ಮುಂಚೆಯೇ ತಯಾರು ಮಾಡಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತನ್ನ ಯೋಜನೆ ಯಾವ ಪ್ರತಿರೋಧಗಳಿಂದ, ಯಾವ ಗಳಿಗೆಯಲ್ಲಿ ಅಥವಾ ಯಾವ ನೆಪ, ನಿರಾಸೆ ಮತ್ತು ತಪ್ಪಿಸಿಕೊಳ್ಳುವ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎನ್ನುವುದು ತಿಳಿಯದೆ, ಕೊನೆಗೆ ಅದು ಕೇವಲ ತನ್ನ ಭ್ರಮೆಯಲ್ಲದೆ ಮತ್ತೇನೂ ಅಲ್ಲ ಎಂದುಕೊಂಡ. ಅವನು ಆ ದಿನ ಬೆಳಿಗ್ಗೆ ಹಿಂದುಗಡೆಯ ತನ್ನ ರೂಮಿನಲ್ಲಿ ಲ್ಯಾಬೊರೇಟರಿಯ ವಸ್ತುಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತ, ಊರು ಬಿಡುವ ತನ್ನ ಯೋಜನೆಯನ್ನು ಗುಣುಗುಣಿಸುತ್ತಿದ್ದಾಗ ಉರ್ಸುಲಾ ಅವನ ಕಡೆ ಮುಗ್ಧ ಕಣ್ಣುಗಳಿಂದ ನೋಡಿದಳಲ್ಲದೆ, ಅವನ ಬಗ್ಗೆ ಅನುಕಂಪವಾಯಿತು. ಅವನು ಮಾಡುತ್ತಿದ್ದ ಕೆಲಸವನ್ನು ಮುಗಿಸುವುದಕ್ಕೆ ಬಿಟ್ಟಳು. ತನಗೆ ಹಳ್ಳಿಯ ಜನರ ಬೆಂಬಲವಿಲ್ಲ ಎನ್ನುವುದು ಅವನಿಗೆ ತಿಳಿದಿದೆ ಎಂದು ಗೊತ್ತಿದ್ದ ಅವಳು [ಅವನು ಹಾಗೆಂದು ಸಣ್ಣಗೆ ಹೇಳಿಕೊಳ್ಳುತ್ತಿದ್ದನ್ನು ಕೇಳಿಸಿಕೊಂಡಿದ್ದಳು] ಅವನು ಪೆಟ್ಟಿಗೆಗಳಿಗೆ ಮೊಳೆ ಹೊಡೆದು ಅದರ ಮೇಲೆ ಮಸಿಯಿಂದ ಹೆಸರು ಬರೆಯುವುದಕ್ಕೆ ಅಡ್ಡಿ ಮಾಡದೆ ಸುಮ್ಮನಿದ್ದಳು. ಅವನು ಬಾಗಿಲಿಂದ ಆಚೆ ಅವುಗಳನ್ನು ತೆಗೆದುಕೊಂಡು ಹೋಗಲು ಶುರು ಮಾಡಿದಾಗ ಅವನೇನು ಮಾಡುತ್ತಿದ್ದಾನೆಂದು ಕೇಳುವ ಧೈರ್ಯ ಮಾಡಿದಳು. ಅವನು ಕಹಿ ಬೆರೆತ ಧ್ವನಿಯಲ್ಲಿ, “ಯಾರಿಗೂ ಹೋಗೋದು ಬೇಕಿಲ್ಲವಾಗಿದೆ. ಆದ್ರೆ ನಮ್ಮಷ್ಟಕ್ಕೆ ನಾವು ಹೋಗೋಣ” ಎಂದ. ಉರ್ಸುಲಾ ಉದ್ವೇಗಗೊಳ್ಳಲಿಲ್ಲ. +“ನಾವು ಹೋಗೋದಿಲ್ಲ. ನಾವು ಇಲ್ಲೇ ಇರೋದು. ಏಕೆಂದರೆ ಇಲ್ಲೇ ನಮಗೊಬ್ಬ ಮಗ ಹುಟ್ಟಿದ್ದು” ಎಂದಳು. +“ಇಲ್ಲಿ, ಈ ತನಕ ಯಾರೂ ಸತ್ತಿಲ್ಲ. ಊರಿನಲ್ಲಿ ಯಾರೇ ಆದ್ರೂ ಸಾಯದಿದ್ರೆ, ಆ ಊರು ನಮ್ಮದಾಗಲ್ಲ.” +ಉರ್ಸುಲಾ ಸಣ್ಣಗೆ ದೃಢವಾಗಿ, “ಉಳಿದೋರೆಲ್ಲ ಇಲ್ಲಿ ಇರೋದಕ್ಕೆ ನಾನು ಸಾಯಬೇಕಾದ್ರೆ, ನಾನು ಸಾಯ್ತೀನಿ” ಎಂದು ಹೇಳಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಹೆಂಡತಿ ಅಷ್ಟು ಗಟ್ಟಿ ಮನಸ್ಸು ಮಾಡಿದ್ದಾಳೆ ಎಂದು ಭಾವಿಸಿರಲಿಲ್ಲ. ತಾನು ಭರವಸೆ ಕೊಡುತ್ತಿರುವುದು ನಂದನವನದಂತಹ ಪ್ರದೇಶವೆಂದೂ ಅಲ್ಲಿ ಮಂತ್ರದಂಥ ನೀರನ್ನು ಸಿಂಪಡಿಸಿದರೆ ಸಾಕು, ಮರಗಿಡಗಳು ಬೇಕೆಂದಾಗ ಫಲ ಬಿಡುತ್ತವೆಂದೂ ಮತ್ತು ಎಲ್ಲ ರೀತಿಯ ನೋವುಗಳನ್ನು ಉಪಶಮನ ಮಾಡುವುದಕ್ಕೆ ಸೂಕ್ತ ಉಪಕರಣಗಳಿವೆ ಎಂದು ತಾನು ಕಲ್ಪಿಸಿದ್ದನ್ನು ಪ್ರಯೋಗಿಸಿ ಅವಳಿಗೆ ಮೋಡಿ ಮಾಡಲು ನೋಡಿದ. ಆದರೆ ಉರ್ಸುಲಾ ಅವನು ಪುಸಲಾಯಿಸಿದ್ದಕ್ಕೆ ಸೊಪ್ಪು ಹಾಕಲಿಲ್ಲ. +“ನಿಮ್ಮ ಹುಚ್ಚುಚ್ಚು ಲೆಕ್ಕಾಚಾರಾನೆಲ್ಲ ಬಿಟ್ಟು ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳೋದು ಒಳ್ಳೇದು … ಅವರಿರೋ ಸ್ಥಿತೀನ ನೋಡಿ, ಕತ್ತೆಗಳ ಥರ ಓಡಾಡಿಕೊಂಡಿದಾರೆ” ಎಂದಳು. +ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಳ ಮಾತುಗಳನ್ನು ಅಕ್ಷರಃ ತೆಗೆದುಕೊಂಡ. ಕಿಟಕಿಯಿಂದ ಆಚೆ ನೋಡಿದ ಅವನಿಗೆ ಬಿಸಿಲು ಬಿದ್ದ ತೋಟದಲ್ಲಿ ಬರಿಗಾ;ಲಲ್ಲಿದ್ದ ಮಕ್ಕಳು ಕಾಣಿಸಿದರು. ಉರ್ಸುಲಾ ಹೇಳಿದಂತೆ ಆ ಕ್ಷಣದಿಂದ ಅವರು ಅಸ್ತಿತ್ವಕ್ಕೆ ಬಂದ ಹಾಗೆ ಭಾವಿಸಿದ. ಅವನಲ್ಲೇನೋ ಉಂಟಾಗಿ ಕಾಲದ ನೆಲೆಯಿಂದ ಬುಡಮೇಲು ಮಾಡಿತು. ಅಲ್ಲದೆ ಅವನನ್ನು ನೆನಪಿನ ಉಗ್ರಾಣಕ್ಕೆ ಸೆಳೆದುಕೊಂಡು ಹೋಯಿತು. ಬಾಕಿ ಇರುವ ತನ್ನ ಜೀವಮಾನದಲ್ಲಿ ಆ ಊರನ್ನು ಬಿಟ್ಟು ಹೋಗದೆ ಕ್ಷೇಮವಾಗಿ ಇರಬಹುದಾದ್ದರಿಂದ ಉರ್ಸುಲಾ ಮನೆಯ ಕಸ ಗುಡಿಸುವುದಕ್ಕೆ ಪ್ರಾರಂಭಿಸುತ್ತಿದ್ದ ಹಾಗೆ ಅವನು ತನ್ನಲ್ಲೇ ಐಕ್ಯನಾಗಿ ನಿಂತ. ಮಕ್ಕಳ ಬಗ್ಗೆ ಯೋಚಿಸುತ್ತಿದ್ದ ಹಾಗೆ ಅವನ ಕಣ್ಣುಗಳು ಹನಿಗೂಡಿದವು. ಅವನು ತನ್ನ ಮುಂಗೈನಿಂದ ಕಣ್ಣೊರೆಸಿಕೊಂಡು ದೀರ್ಘವಾಗಿ ಉಸಿರುಬಿಟ್ಟ. +“ಆಗಲಿ ನೋಡೋಣಂತೆ, ಪೆಟ್ಟಿಗೆಯಿಂದ ಸಾಮಾನುಗಳನ್ನ ಹೊರಗೆ ತೆಗೆಯಕ್ಕೆ ನನಗೆ ಸಹಾಯ ಮಾಡಿ ಅಂತ ಹೇಳು ಅವರಿಗೆ” ಎಂದ. +ದೊಡ್ಡವನಾದ ಹೊಸೆ ಅರ್ಕಾದಿಯೋಗೆ ಆಗ ಹದಿನಾಲ್ಕು ವರ್ಷ. ದಪ್ಪಗೂದಲಿನ ಚೌಕು ಮುಖದ ಅವನಿಗೆ ಅಪ್ಪನ ಗುಣವಿತ್ತು. ದೈಹಿಕ ಸಾಮರ್ಥ್ಯ ಮತ್ತು ಪ್ರಗತಿಯ ಬಗ್ಗೆ ಅವನಿಗೆಷ್ಟೇ ತುಡಿತವಿದ್ದರೂ ಕಲ್ಪನಾಶಕ್ತಿ ಕಡಿಮೆ ಇತ್ತು. ಅವನು ಹುಟ್ಟಿದ್ದು ಅವರು ಪರ್ವತಗಳನ್ನು ದಾಟುತ್ತಿದ್ದ ಕಷ್ಟದ ಕಾಲದಲ್ಲಿ, ಮಕೋಂದೋ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ. ಅವನಿಗೆ ಪ್ರಾಣಿಯ ಸ್ವರೂಪ ಇರದೆ ಇದ್ದದ್ದಕ್ಕೆ ದೇವರಿಗೆ ನಮಿಸಿದ್ದರು. ಮಕೋಂದೋದಲ್ಲಿ ಹುಟ್ಟಿದ ಮೊದನೆ ಮಗು ಅವ್ರೇಲಿಯಾನೋ. ಮಾರ್ಚ್‌ಗೆ ಅವನಿಗೆ ಆರು ವರ್ಷವಾಗುತ್ತದೆ. ಅವನು ಮೌನಿ ಮತ್ತು ಅಂತರ್ಮುಖಿಯಾಗಿದ್ದ. ಅವನು ಅಮ್ಮನ ಗರ್ಭದಲ್ಲಿ ಇರುವಾಗಲೇ ಅತ್ತಿದ್ದ ಮತ್ತು ಹುಟ್ಟಿದಾಗ ಕಣ್ಣು ಬಿಟ್ಟುಕೊಂಡಿದ್ದ. ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಿದ್ದಾಗ ಅವನು ಕತ್ತನ್ನು ಅತ್ತಿತ್ತ ಅಲ್ಲಾಡಿಸುತ್ತ ಸುತ್ತ ಇದ್ದವರನ್ನು ಮತ್ತು ವಸ್ತುಗಳನ್ನು ಕುತೂಹಲದಿಂದ ನೋಡುತ್ತಿದ್ದ. ತನ್ನನ್ನು ನೋಡಲು ಅವರಿವರು ತುಂಬ ಹತ್ತಿರ ಬಂದಾಗ ಅವನು, ಮಳೆಯ ಹೊಡೆತಕ್ಕೆ ಸಿಕ್ಕು ಇನ್ನೇನು ಬೀಳುವ ಹಾಗಿದ್ದ ತೆಂಗಿನ ಗರಿಗಳನ್ನು ನೋಡುತ್ತಿದ್ದ. ಉರ್ಸುಲಾಗೆ ಆ ನೋಟದ ಸಾಂದ್ರತೆ, ಅವ್ರೇಲಿಯಾನೋ ಮೂರು ವರ್ಷದವನಾಗಿದ್ದಾಗ ಅವನು ಅಡುಗೆ ಮನೆಗೆ ಬಂದು ತಾನು ಮಾಡುತ್ತಿದ್ದ ಸಾರಿನ ಪಾತ್ರೆಯನ್ನು ಸ್ಟೋವ್‌ನಿಂದ ಎತ್ತಿ ಟೇಬಲ್ ಮೇಲೆ ಇಡುವಾಗ ಮತ್ತೆ ನೆನಪಾಯಿತು. ಬಾಗಿಲಲ್ಲೇ ಇದ್ದ ಮಗು ಗಲಿಬಿಲಿಗೊಂಡು, “ಅದೀಗ ಚೆಲ್ಲುತ್ತೆ” ಎಂದ. ಪಾತ್ರೆಯನ್ನು ಭದ್ರವಾಗಿ ಟೇಬಲ್ಲಿನ ಮಧ್ಯದಲ್ಲಿ ಇಟ್ಟಿದ್ದರೂ ಮಗು ಆ ರೀತಿ ಹೇಳಿದ ಕೂಡಲೇ ಯಾವುದೋ ಒಳಶಕ್ತಿ ಅದನ್ನು ತಳ್ಳುತ್ತಿರುವಂತೆ ಅದು ಅಂಚಿನ ಕಡೆ ಜರುಗಿ ನೆಲದ ಮೇಲೆ ಬಿದ್ದು ಒಡೆದು ಹೋಯಿತು. ದಿಗಿಲುಗೊಂಡ ಉರ್ಸುಲಾ ಗಂಡನಿಗೆ ಹೇಳಿದಳು. ಆದರೆ ಅವನು ಅದೊಂದು ಸಹಜವಾದ ಸಂಗತಿ ಎಂದು ವ್ಯಾಖ್ಯಾನಿಸಿದ. ಅವನು ಯಾವಾಗಲೂ ಇದ್ದದ್ದು ಹಾಗೆಯೇ. ಮಕ್ಕಳ ಬಗ್ಗೆ ಎಳ್ಳಷ್ಟೂ ಗಮನವಿರಲಿಲ್ಲ. ಏಕೆಂದರೆ ಅವನು ಬಾಲ್ಯ ಒಂದು ಮಾನಸಿಕ ಅಸಂಪೂರ್ಣತೆಯ ಅವಧಿ ಎಂದು ಪರಿಗಣಿಸಿದ್ದ. ಅಲ್ಲದೆ ಯಾವಾಗಲೂ ತನ್ನದೇ ಆದ ಭ್ರಮಾತ್ಮಕ ಆಲೋಚನೆಗಳಲ್ಲಿ ಮುಳುಗಿರುತ್ತಿದ್ದ. +ಲ್ಯಾಬೊರೇಟರಿಯ ಸಾಮಾನುಗಳನ್ನು ಬಿಚ್ಚಿಡಲು ಮಕ್ಕಳನ್ನು ಕರೆದ. ಮಧ್ಯಾಹ್ನದಿಂದ ಅವರ ಜೊತೆ ತನ್ನ ವೇಳೆಯನ್ನು ಕಳೆದ. ಪ್ರತ್ಯೇಕವಾಗಿದ್ದ ಆ ಚಿಕ್ಕ ರೂಮಿನ ಗೋಡೆಗಳ ಮೇಲೆ ವಿಚಿತ್ರವಾದ ನಕ್ಷೆಗಳು ಮತ್ತು ಡ್ರಾಯಿಂಗ್‌ಗಳು ಹರಡಿಕೊಳ್ಳುತ್ತಿದ್ದ ಹಾಗೆ ಅವನು ಅವರಿಗೆ ಓದುವುದನ್ನು, ಬರೆಯುವುದನ್ನು, ಲೆಕ್ಕ ಮಾಡುವುದನ್ನು ಕಲಿಸಿದ ಮತ್ತು ಪ್ರಪಂಚದ ಅದ್ಭುತಗಳ ಬಗ್ಗೆ ತನ್ನ ಕಲ್ಪನೆಯ ಮಿತಿಯನ್ನು ಅತಿಯಾಗಿ ವಿಸ್ತರಿಸಿ ತಿಳಿಸಿದ. ಇದರಿಂದ ಮಕ್ಕಳು ಆಫ್ರಿಕಾದ ದಕ್ಷಿಣದ ತುದಿಯ ಭಾಗದ ಜನರು ಅದೆಷ್ಟು ಬುದ್ಧಿವಂತರೆಂದರೆ ಅವರಿಗೆ ಕುಳಿತುಕೊಂಡು ಯೋಚಿಸುವುದೊಂದೇ ಕೆಲಸ ಮತ್ತು ಬರಿಗಾಲಲ್ಲಿ ಏಜಿಯನ್ ಸಮುದ್ರವನ್ನು ದಾಟಲು ದ್ವೀಪದಿಂದ ದ್ವೀಪಕ್ಕೆ ಹಾರುತ್ತ ಸಲೋನಿಕ್ ಬಂದರಿನ ತನಕ ಹೋಗಬಹುದು ಎನ್ನುವುದನ್ನು ಕಲಿತರು. ಹಾಗೆ ಕಳೆದ ಕಲಿಕೆಯ ವಿಭ್ರಮೆಯಂಥ ಸಮಯದ ನೆನಪುಗಳು ಹುಡುಗರ ಮನಸ್ಸಿನಲ್ಲಿ ನೆಲೆಗೊಂಡದ್ದು ಎಷ್ಟೆಂದg, ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಾಲು ನಿಂತ ತಂಡಕ್ಕೆ ಸೈನ್ಯದ ಅಧಿಕಾರಿ ಅಪ್ಪಣೆ ಕೊಡುವ ಒಂದು ಸೆಕೆಂಡಿನ ಮುಂಚೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಆ ದಿನ ಮಾರ್ಚ್ ತಿಂಗಳ ಒಂದು ಮಧ್ಯಾಹ್ನ ತನ್ನ ತಂದೆ ಹೇಳುತ್ತಿದ್ದ ಭೌತಶಾಸ್ತ್ರದ ಪಾಠವೊಂದನ್ನು ನಿಲ್ಲಿಸಿ, ಬಿಟ್ಟಕಣ್ಣು ಬಿಟ್ಟುಕೊಂಡು ಗಾಳಿಯಲ್ಲಿ ಕೈಯನ್ನು ಎತ್ತಿ ಹಿಡಿದು ದೂರದಿಂದ ಕೇಳಿಬರುತ್ತಿದ್ದ ಜಿಪ್ಸಿಗಳ ಹಾಡುಗಳು, ಪೀಪಿ-ತಮಟೆಗಳ ದನಿಯನ್ನು ಕೇಳಿಸಿಕೊಳ್ಳುತ್ತ ನಿಂತಿದ್ದನ್ನು ಮತ್ತೊಮ್ಮೆ ಪರಿಭಾವಿಸಿದ. ಅವರು ಹಳ್ಳಿಗೆ ಮತ್ತೆ ಮತ್ತೆ ಬರುತ್ತಿದ್ದರು. ಮೆಂಫಿಲ್ ಯೋಗಿಗಳು ಕಂಡು ಹಿಡಿದ ಇತ್ತೀಚಿನ ಹಾಗೂ ಚಕಿತಗೊಳಿಸುವಂಥದನ್ನು ಕುರಿತು ಅವರು ಪ್ರಚಾರ ಮಾಡುತ್ತಿದ್ದರು. +ಆ ಜಿಪ್ಸಿಗಳು ಹೊಸಬರು. ತಮ್ಮ ಭಾಷೆ ಮಾತ್ರ ತಿಳಿದಿದ್ದ ಹದಿವಯಸ್ಸಿನ ಗಂಡು-ಹೆಣ್ಣುಗಳು. ಸುಂದರವಾಗಿದ್ದ ಅವರ ಮೈಚರ್ಮ ಎಣ್ಣೆ ಸವರಿದಂತಿತ್ತು ಮತ್ತು ಅವರ ಕೈಗಳು ಸಾಕಷ್ಟು ಚುರುಕಾಗಿದ್ದವು. ಅವರ ಹಾಡು ಕುಣಿತಗಳು ಸಂತೋಷದ ಉನ್ಮಾದವನ್ನು ಹುಟ್ಟು ಹಾಕಿತು. ಎಲ್ಲ ಬಗೆಯ ಬಣ್ಣ ಹಚ್ಚಿದ್ದ ಗಿಣಿಗಳು ಇಟಲಿಯ ಇಂಪಾದ ರಾಗವನ್ನು ಹಾಡುತ್ತಿದ್ದವು. ಅಲ್ಲದೆ ಟಾಂಬರಿನ್ ನಾದಕ್ಕೆ ನೂರು ಚಿನ್ನದ ಮೊಟ್ಟೆ ಇಡುವ ಕೋಳಿಯೊಂದಿತ್ತು. ಜೊತೆಗೆ ಮನಸ್ಸಿನಲ್ಲಿರುವುದನ್ನು ಓದಲು ಕಲಿತಿದ್ದ ಕೋತಿಯಿತ್ತು. ಯಾರೊಬ್ಬರ ಕೆಟ್ಟ ನೆನಪುಗಳನ್ನು ಮರೆಸುವಂಥ ಮೆಷಿನ್ ಹಾಗೂ ಸಮಯದ ಪರಿವೆ ಅಳಿಸುವಂಥ ಒಂದು ಪೋಲ್ಟೀಸ್ ಇತ್ತು. ಅಲ್ಲದೆ ಇತರೆ ಸಾವಿರ ಆವಿಷ್ಕಾರಗಳನ್ನು ಕಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವೆಲ್ಲವನ್ನೂ ತಾನು ನೆನಪಿಟ್ಟುಕೊಳ್ಳುವಂತೆ ಮನಸ್ಸಿನ ಮೆಷಿನ್ ಕಂಡು ಹಿಡಿಯಬೇಕೆಂಬ ಆಲೋಚನೆ ಬಂದಿರಬೇಕು. ಅವರು ಚಿಟಿಕೆ ಹೊಡೆಯುವುದರಲ್ಲಿ ಹಳ್ಳಿಯನ್ನು ಬದಲಾಯಿಸಿಬಿಟ್ಟರು. ಮಕೋಂದೋ ಮೂಲದವರಿಗೆ ಆ ಉತ್ಸಾಹದ ಜಾತ್ರೆಯ ಗೊಂದಲದಲ್ಲಿ ಅವರದೇ ರಸ್ತೆಗಳಲ್ಲಿ ಕಳೆದು ಹೋದಂತಾಯಿತು. +ಜನದಟ್ಟಣಿಯಲ್ಲಿ ಕಳೆದು ಹೋಗದಂತೆ ಒಂದೊಂದು ಕೈಯಲ್ಲಿ ಒಂದೊಂದು ಮಗುವನ್ನು ಹಿಡಿದುಕೊಂಡು ಹೋಗುತ್ತ ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಂಗಾರದ ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದ ದೊಂಬರಾಟದವರನ್ನು ಮತ್ತು ಆರು ಕೈಗಳಿಂದ ಆಡುತ್ತಿದ್ದ ಗಾರುಡಿಗನಿಗೆ ಡಿಕ್ಕಿ ಹೊಡೆದ. ಇದ್ದ ಗುಂಪಿನ ಜನರ ವಿಶ್ವಾಸ ಮತ್ತು ಗೊಬ್ಬರ ಮಿಶ್ರಣದ ಉಸಿರುಗಟ್ಟಿಸುವ ವಾಸನೆಯಲ್ಲಿ ಹುಚ್ಚನ ಹಾಗೆ ಅವನು ಎಲ್ಲಂದರಲ್ಲಿ ಅಲೆದಾಡಿದ. ಅವನು ಎಣೆಯಿಲ್ಲದ ಗುಟ್ಟುಗಳನ್ನು ಮತ್ತು ಅಸಂಬದ್ಧ ದುಃಸ್ವಪ್ನಗಳನ್ನು ತಿಳಿಸಲು ಮೆಲ್‌ಕಿಯಾದೆಸ್‌ನನ್ನು ಹುಡುಕುತ್ತ್ತಿದ್ದ. ತನ್ನ ಭಾಷೆಯನ್ನು ತಿಳಿಯದ ಅನೇಕ ಜಿಪ್ಸಿಗಳನ್ನು ಅವನ ಬಗ್ಗೆ ಕೇಳಿದ. ಕೊನೆಗೆ ಅವನು ಮೆಲ್‌ಕಿಯಾದೆಸ್ ಟೆಂಟ್ ಹಾಕಿಕೊಳ್ಳುತ್ತಿದ್ದ ಸ್ಥಳಕ್ಕೆ ಬಂದ ಮತ್ತು ಅಲ್ಲಿ ಮಿತಭಾಷಿಯಾದ ಅರ್ಮೇನಿಯಾದವನು ಅದೃಶ್ಯವಾಗುವಂತಹ ದ್ರವವೊಂದನ್ನು ಸ್ಪಾನಿಷ್ ಭಾಷೆಯಲ್ಲಿ ಮಾರಾಟ ಮಾಡುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ನೋಡುತ್ತಿದ್ದ ಗುಂಪಿನ ಮಧ್ಯೆ ನುಸುಳಿಕೊಂಡು ಅವನ ಹತ್ತಿರ ಹೋಗುತ್ತಿದ್ದಂತೆ, ಅವನು ಒಂದು ಗ್ಲಾಸಿನ ತುಂಬ ಇದ್ದ ತೆಳು ಹಳದಿ ಬಣ್ಣದ ವಸ್ತುವೊಂದನ್ನು ಒಂದೇ ಗುಟುಕಿಗೆ ಕುಡಿದ. ಅನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗೆ ತನ್ನ ಪ್ರಶ್ನೆ ಕೇಳಲು ಸಾಧ್ಯವಾಯಿತು. ಆ ಜಿಪ್ಸಿ ಕ್ರಿಮಿನಾಶಕ ವಸ್ತುವಿನ ಕಲಸು ಮಾಡುವ ಮೊದಲು ಅವನನ್ನು ಭಯ ಹುಟ್ಟಿಸುವ ನೋಟದಿಂದ ಬಿಗಿದು ಕಟ್ಟಿದ. ಆಗ ಮೇಲೆದ್ದ ಹೊಗೆಯಲ್ಲಿ ಅವನ ಧ್ವನಿ ಪ್ರತಿಫಲಿತವಾಯಿತು: “ಮೆಲ್‌ಕಿಯಾದೆಸ್ ಸತ್ತು ಹೋಗಿದ್ದಾನೆ.” ಅವರಿವರು ಕರೆದ ಕಡೆ ಹೋಗಲು ಗುಂಪು ಚದುರುವ ತನಕ ಕೇಳಿದ ಸುದ್ದಿಯಿಂದ ವಿಚಲಿತಗೊಂಡು ದಹಿಸುತ್ತಿದ್ದ ಸಂಕಟವನ್ನು ನಿಗ್ರಹಿಸುತ್ತ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಕ್ರಿಮಿನಾಶಕ ವಸ್ತುವಿನ ಕಲಸು ಪೂರ್ತಿಯಾಗಿ ಆವಿಯಾಗುವ ತನಕ ಅಲ್ಲೆ ನಿಂತಿದ್ದ. ಸಿಂಗಪೂರ್‌ನ ಸಮುದ್ರದ ತೀರದಲ್ಲಿ ಜ್ವರದ ತಾಪಕ್ಕೆ ತುತ್ತಾಗಿ ಮೆಲ್‌ಕಿಯಾದೆಸ್ ಸತ್ತನೆಂದು ಇತರೆ ಜಿಪ್ಸಿಗಳು ಹೇಳಿದರಲ್ಲದೆ ಅವನ ದೇಹವನ್ನು ಜಾವಾ ಸಮುದ್ರದಾಳಕ್ಕೆ ಎಸೆಯಲಾಯಿತೆಂದು ತಿಳಿಸಿದರು. ಆದರೆ ಹುಡುಗರಿಗೆ ಆ ಸುದ್ದಿಯಲ್ಲಿ ಆಸಕ್ತಿ ಇರಲಿಲ್ಲ. ಟೆಂಟ್‌ನ ಹೊರಗೆ ಪ್ರಚುರಪಡಿಸಿದಂತೆ ಮೆಂಫಿಲ್ ಯೋಗಿಗಳು ಮಾಡಿದ್ದ ಸಾಲಮನ್ ರಾಜನದೆಂದು ಹೇಳಲಾಗಿದ್ದ ವಿಶೇಷವನ್ನು ತೋರಿಸಬೇಕೆಂದು ತಮ್ಮ ತಂದೆಯನ್ನು ಒತ್ತಾಯಿಸಿದರು. ಅವರು ಎಷ್ಟು ಬಲವಂತಮಾಡಿದರೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮೂವತ್ತು ರೇಲ್ಸ್ ಕೊಟ್ಟು ಅವರನ್ನು ಟೆಂಟ್‌ನ ಮಧ್ಯ ಭಾಗಕ್ಕೆ ಕರೆದುಕೊಂಡು ಹೋದ. ಅಲ್ಲಿ ದೈತ್ಯಾಕಾರದ ತಲೆ ಬೋಳಿಸಿದ ಎದೆಯ ತುಂಬ ಕೂದಲಿದ್ದ ಮನುಷ್ಯನೊಬ್ಬನಿದ್ದ. ಮೂಗಿಗೆ ತಾಮ್ರದ ಮೂಗುತಿ ;ತ್ತು ಮೊಣಕಾಲಿಗೆ ಕಬ್ಬಿಣದ ಚೈನ್ ಹಾಕಿದ್ದ ಅವನು ದೊಡ್ಡ ಪೆಟ್ಟಿಗೆಯೊಂದನ್ನು ಕಾಯುತ್ತಿದ್ದ. ಆ ಮನುಷ್ಯ ಪೆಟ್ಟಿಗೆಯನ್ನು ತೆಗೆದಾಗ ಅದು ದೀರ್ಘವಾಗಿ ವಿಚಿತ್ರ ಶಬ್ದ ಮಾಡಿತು. ಅದರೊಳಗೆ ಅಸಂಖ್ಯಾತ ಸೂಜಿ ಮೊನೆಗಳಿದ್ದ ಒಂದು ಭಾರಿ ಗಾತ್ರದ ಪಾರದರ್ಶಕ ವಸ್ತುವಿದ್ದು, ಅದರ ಮೇಲೆ ಬಿದ್ದ ಸಂಧ್ಯಾ ಕಿರಣಗಳು ಬಣ್ಣದ ಚಿಕ್ಕೆಗಳಾಗಿ ತುಂಡಾಗುತ್ತಿದ್ದವು. ಮಕ್ಕಳು ತಕ್ಷಣವೇ ಅದರ ಬಗ್ಗೆ ವಿವರಣೆ ಕೇಳುತ್ತಾರೆಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ತಲೆ ಕೆಡಿಸಿಕೊಳ್ಳದೆ ಪಿಸುಗುಟ್ಟಿದ: +“ಅದು ಪ್ರಪಂಚದ ಅತಿ ದೊಡ್ಡ ವಜ್ರ.” +“ಅಲ್ಲ, ಅದು ಐಸ್” ಎಂದು ಜಿಪ್ಸಿ ಪ್ರತಿಯಾಗಿ ಹೇಳಿದ. +ಹೊಸೆ ಅರ್ಕಾದಿಯೋ ಬ್ಯುಂದಿಯಾ ಅರ್ಥವಾಗದೆ ಆ ವಸ್ತುವಿನ ಕಡೆ ಕೈ ಚಾಚಿದ. ಆದರೆ ಆ ಧಡಿಯ ಅದನ್ನು ದೂರ ಜರುಗಿಸಿದ. “ಅದನ್ನು ಮುಟ್ಟೋದಕ್ಕೆ ಮತ್ತೆ ಐದು ರೇಲ್ಸ್” ಎಂದ. ಅಷ್ಟು ಕೊಟ್ಟು ಹೊಸೆ ಅರ್ಕಾದಿಯೋ ಬ್ಯುಂದಿಯಾ ಐಸ್ ಮೆಲೆ ಕೈಯಿಟ್ಟ. ಕೆಲವು ನಿಮಿಷ ಹಾಗೆಯೇ ಇದ್ದ ಅವನಿಗೆ ಆ ನಿಗೂಢವಾದದ್ದರ ಸ್ಪರ್ಶದಿಂದ ಅವನ ಹೃದಯ ಹರ್ಷಾತಿರೇಕಗಳಿಂದ ತುಂಬಿ ಬಂತು. ಏನು ಹೇಳಬೇಕೆಂದು ತಿಳಿಯದೆ ಮಕ್ಕಳಿಗೆ ಆ ಅನುಭವ ಆಗಲೆಂದು ಮತ್ತೆ ಹತ್ತು ರೇಲ್ಸ್ ಕೊಟ್ಟ. ಚಿಕ್ಕವನಾದ ಹೊಸೆ ಅರ್ಕಾದಿಯೋ ಅದನ್ನು ಮುಟ್ಟಲು ಒಪ್ಪಲಿಲ್ಲ. ಆದರೆ ಅವ್ರೇಲಿಯಾನೋ ಒಂದು ಹೆಜ್ಜೆ ಮುಂದಿಟ್ಟು, ಅದರ ಮೇಲೆ ಕೈಯಿಟ್ಟವನು ತಕ್ಷಣವೇ ಹಿಂದಕ್ಕೆ ತೆಗೆದುಕೊಂಡ. ‘ಅದು ಕುದೀತಿದೆ\’ ಎಂದು ಚಕಿತಗೊಂಡು ಹೇಳಿದ. ಆದರೆ ಅವನ ತಂದೆ ಅವನನ್ನು ಸರಿಪಡಿಸಿದ. ಎದುರಿಗಿದ್ದ ಪವಾಡಕ್ಕೆ ದೊರಕಿದ ಪುರಾವೆಗೆ ಮಾರುಹೋಗಿ ತನ್ನ ಪ್ರಯತ್ನಗಳಿಗೆ ಉಂಟಾದ ಅಡಚಣೆ ಮತ್ತು ಮೆಲ್‌ಕಿಯಾದೆಸ್‌ನ ದೇಹ ನಾಯಿನರಿಗಳಿಗೆ ಆಹಾರವಾದದ್ದನ್ನು ಮರೆತ. ಇನ್ನೊಂದು ಐದು ರೇಲ್ಸ್ ಕೊಟ್ಟು ಪವಿತ್ರ ಗ್ರಂಥಗಳ ಮೇಲೆ ಕೈಯಿಟ್ಟು ಪ್ರಮಾಣ ಮಾಡುವವನಂತೆ ಹೇಳಿದ: +“ಇದು ನಮ್ಮ ಕಾಲದಲ್ಲಿ ಆಗಿರೋ ಅತ್ಯಂತ ಶ್ರೇಷ್ಠವಾದ ನಿರ್ಮಾಣ.” +೨ +ಹದಿನಾರನೆ ಶತಮಾನದಲ್ಲಿ ದರೋಡೆಕಾರ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಣ ಮಾಡಿದಾಗ ಮೊಳಗಿದ ಗಂಟೆಗಳಿಂದ ಮತ್ತು ಫಿರಂಗಿಗಳ ಶಬ್ದದಿಂದ ಉರ್ಸುಲಾ ಇಗ್ವಾರಾನಳ ಮುತ್ತಜ್ಜಿಯ ಅಮ್ಮ ತನ್ನ ಮೇಲೆ ಹಿಡಿತ ಕಳೆದುಕೊಂಡು ಎಷ್ಟು ಭಯಗೊಂಡಿದ್ದಳೆಂದರೆ ಅವಳು ಉರಿಯುತ್ತಿದ್ದ ಸ್ಟೋವ್ ಮೇಲೆ ಕುಳಿತು ಬಿಟ್ಟಳು. ಅದರಿಂದ ಉಂಟಾದ ಸುಟ್ಟ ಗಾಯ ಅವಳನ್ನು ಇಡೀ ಜೀವನ ಪರ್ಯಂತ ಕೆಲಸಕ್ಕೆ ಬಾರದವಳನ್ನಾಗಿ ಮಾಡಿತು. ಅವಳಿಗೆ ದಿಂಬು ಹಾಕಿಕೊಂಡು ಒಂದು ಕಡೆ ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಅವಳ ನಡಿಗೆಯಲ್ಲೂ ವಿಚಿತ್ರ ಬದಲಾವಣೆ ಉಂಟಾಗಿತ್ತೆಂದು ಕಾಣುತ್ತದೆ. ಏಕೆಂದರೆ ಅವಳು ಹೊರಗೆಲ್ಲೂ ಹೆಜ್ಜೆ ಇಡಲಿಲ್ಲ. ಎಲ್ಲ ಬಗೆಯ ಸಾರ್ವಜನಿಕ ಚಟುವಟಿಕೆಯನ್ನು ತೊರೆದಳು. ಅವಳಿಗೆ ತನ್ನ ಮೈಯಿಂದ ಸುಟ್ಟ ವಾಸನೆ ಹೊರಡುತ್ತದೆ ಎಂಬ ತೀವ್ರವಾದ ಭಾವನೆಯಿತ್ತು. ಬೆಳಕಿರುವಾಗ ಅವಳು ಅಂಗಳದಲ್ಲಿ ಕುಳಿತಿರುತ್ತಿದ್ದಳು. ಏಕೆಂದರೆ ಇಂಗ್ಲಿಷರು ಮತ್ತು ಅವರ ಭಯಂಕರ ನಾಯಿಗಳು ಕಿಟಕಿಯಿಂದ ತೂರಿ ಬಂದು, ಕಾದ ಕಬ್ಬಿಣದ ಬರೆ ಹಾಕುತ್ತಾರೆಂಬ ಕನಸು ಬೀಳುವುದೆಂದು ಅವಳು ಮಲಗುವ ಧೈರ್ಯ ಮಾಡುತ್ತಿರಲಿಲ್ಲ. ವ್ಯಾಪಾರಿಯಾದ ಅವಳ ಗಂಡನಿಂದ ಅವಳಿಗೆ ಇಬ್ಬರು ಮಕ್ಕಳಿದ್ದರು. ಅವನು ತನ್ನ ಸಂಪತ್ತಿನ ಅರ್ಧ ಭಾಗವನ್ನು ಅವಳ ಭಯ ನಿವಾರಣೆಗೆ ಮತ್ತು ಔಷಧೋಪಚಾರಗಳಿಗೆ ವೆಚ್ಚ ಮಾಡಿದ್ದ. ಕೊನೆಗೆ ತನ್ನ ಉದ್ಯೋಗವನ್ನೂ ಬಿಟ್ಟು, ಸಂಸಾರವನ್ನು ಸಮುದ್ರದಿಂದ ದೂರ ಶಾಂತಿಪೂರ್ಣ ಇಂಡಿಯನ್ನರು ಇರುವ ಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋದ. ಅಲ್ಲಿ ತನ್ನ ಹೆಂಡತಿಗೆ ಅವಳ ಕನಸಿನ ದರೋಡೆಕಾರರು ಬಾರದಿರುವಂತೆ ಕಿಟಕಿಗಳಿರದ ಬೆಡ್ ರೂಮನ್ನು ಕಟ್ಟಿಸಿದ. +ಆ ಹಳ್ಳಿಯ ಮೂಲೆಯಲ್ಲಿ ಕೆಲವು ಕಾಲ ತಂಬಾಕು ಬೆಳೆಯುವ ದಾನ್ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಂಬ ಸ್ಥಳೀಯ ಮನುಷ್ಯನೊಬ್ಬನಿದ್ದ. ಉರ್ಸುಲಾಳ ಮುತ್ತಜ್ಜನ ಅಪ್ಪ ಅವನ ಜೊತೆ ಹೊಂದಾಣಿಕೆ ಮಾಡಿಕೊಂಡ ಕೆಲವೇ ವರ್ಷಗಳಲ್ಲಿ ಇಬ್ಬರೂ ಸ್ಥಿತಿವಂತರಾದರು. ಅನೇಕ ಶತಮಾನಗಳ ನಂತರ ಸ್ಥಳೀಯ ಪ್ಲಾಂಟರ್‌ನ ಮರಿಮಗ ಅರಗೊನೀಸ್ ವ್ಯಾಪಾರಿಯ ಮರಿಮಗಳನ್ನು ಮದುವೆಯಾದ. ಆದ್ದರಿಂದ ಪ್ರತಿ ಬಾರಿಯೂ ಉರ್ಸುಲಾಗೆ ಗಂಡನ ಹುಚ್ಚು ವಿಚಾರಗಳಿಂದ ತಲೆ ಕೆಟ್ಟಾಗ, ಮುನ್ನೂರು ವರ್ಷದ ವಿಧಿಯ ಆಟವನ್ನು ಆಲೋಚಿಸುತ್ತ ಸರ್ ಫ್ರಾನ್ಸಿಸ್ ಡ್ರೇಕ್ ರಿಯೋ‌ಅಕವನ್ನು ಆಕ್ರಮಿಸಿದ ಆ ದಿನವನ್ನು ಶಪಿಸುತ್ತಾಳೆ. ಅದು ಅವಳಿಗೆ ಕೊಂಚ ಸಮಾಧಾನ ಕೊಡುವ ರೀತಿ. ಆದರೆ ಸಾಯುವ ತನಕ ಇರುವ ಪ್ರೇಮಕ್ಕಿಂತ ತೀಕ್ಷ್ಣವಾದ ಅನುಬಂಧ ಅವರಲ್ಲಿತ್ತು. ಅವರಿಬ್ಬರು ಸಂಬಂಧಿಗಳಾಗಿದ್ದರು. ಒಳ್ಳೆಯ ಅಭ್ಯಾಸ ಮತ್ತು ದುಡಿತದಿಂದ ಆ ಪ್ರದೇಶದಲ್ಲಿನ ಅತ್ಯುತ್ತಮ ಹಳ್ಳಿಗಳಲ್ಲಿ ಒಂದು ಎಂದು ಹೆಸರು ಮಾಡಿದ ವಂಶಜರಿದ್ದ ಆ ಪುರಾತನ ಹಳ್ಳಿಯಲ್ಲಿ ಅವರಿಬ್ಬರು ಒಟ್ಟಿಗೆ ಬೆಳೆದರು. ಅವರು ಹುಟ್ಟಿದಾಗಲೇ ಅವರಿಬ್ಬರ ಮದುವೆಯನ್ನು ನಿರೀಕ್ಷಿಸಬಹುದಾಗಿದ್ದರೂ ತಾವು ಒಬ್ಬರನ್ನೊಬ್ಬರು ಮದುವೆಯಾಗಬೇಕೆಂಬ ಅಭಿಲಾಷೆಯನ್ನು ಅವರು ಪ್ರಕಟಿಸಿದಾಗ ಅದನ್ನು ತಪ್ಪಿಸಲು ಕೆಲವು ಸಂಬಂಧಿಗಳು ಪ್ರಯತ್ನಿಸಿದರು. ಶತಮಾನಗಳಿಂದ ಎರಡು ಸಮುದಾಯದ ಆರೋಗ್ಯವಂತರಾದ ಅವರಿಗೆ, ತಾವು ಉಡದಂಥ ಪ್ರಾಣಿಗಳ ಹುಟ್ಟಿಗೆ ಕಾರಣವಾಗುತ್ತೇವೆಂಬ ಭಯವಿತ್ತು. ಅದಕ್ಕಾಗಲೇ ಒಂದು ಭಯಂಕರವಾದ ನಿದರ್ಶನವಿತ್ತು. ಉರ್ಸುಲಾಳ ಚಿಕ್ಕಮ್ಮ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಚಿಕ್ಕಪ್ಪನನ್ನು ಮದುವೆಯಾಗಿದ್ದಳು. ಅವರ ಮಗ ಜೀವನವಿಡೀ ದೊಗಲೆ ಪೈಜಾಮ ಹಾಕಿಕೊಂಡು ಬ್ರಹ್ಮಚಾರಿಯಾಗಿಯೇ ನಲವತ್ತೆರಡು ವರ್ಷ ಕಳೆದು ರಕ್ತ ಸೋರಿ ಸತ್ತಿದ್ದ. ಅವನಿಗೆ ಹುಟ್ಟುವಾಗಲೇ ತುದಿಯಲ್ಲಿ ಸಣ್ಣ ಕೂದಲ ಗೊಂಚಲಿರುವ ಒಂದು ಬಾಲವಿದ್ದು ಅದರ ಜೊತೆಗೇ ಬೆಳೆದಿದ್ದ. ಯಾವ ಹೆಂಗಸಿಗೂ ನೋಡಲು ಬಿಡದಿದ್ದ ಹಂದಿಯ ಬಾಲದಂತಿದ್ದ ಅದನ್ನು ಕೈಗತ್ತಿಯಿಂದ ಕತ್ತರಿಸಿ ಸ್ನೇಹಿತನೊಬ್ಬ ಉಪಕಾರ ಮಾಡಿದ. ಹತ್ತೊಂಬತ್ತು ವರ್ಷದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಂದೇ ಒಂದು ಕೊಂಕು ಮಾತಿನಿಂದ ಅದನ್ನು ಉಡಾಯಿಸಿ, “ಬಾಲವಿದ್ದರೇನಂತೆ, ಮಾತಾಡಿದರೆ ಸಾಕು. ಉಳಿದದ್ದು ಬೇಕಿಲ್ಲ” ಎಂದ. ಬಾಣ, ಬಿರುಸು, ವಾದ್ಯ ಗೋಷ್ಠಿಗಳಿಂದ ಕೂಡಿದ ಸಂಭ್ರಮದಲ್ಲಿ ಅವರಿಬ್ಬರೂ ಮದುವೆಯಾದರು. ಅದು ಮೂರು ದಿನಗಳ ತನಕ ನಡೆಯಿತು. ಉರ್ಸುಲಾಳ ತಾಯಿ ಅವಳನ್ನು ಕೆಟ್ಟ ಮಕ್ಕಳ ವಿಷಯದಲ್ಲಿ ಹೆದರಿಸದಿದ್ದರೆ, ಅವರು ಆಗಿನಿಂದಲೇ ಸಂತೋಷವಾಗಿರುತ್ತಿದ್ದರು. ಮದುವೆಯನ್ನು ಸಾಂಗಮಾಡುವುದನ್ನೂ ಒಪ್ಪದಿರುವಂತೆ ಅವಳಿಗೆ ಉಪದೇಶಿಸಿದ್ದಳು. ಮಲಗಿರುವಾಗ ತನ್ನ ದಡೂತಿ ಗಂಡ, ಹಟದಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಾನೆಂಬ ಭಯದಿಂದ, ಅವಳು ಮಲಗುವ ಮುಂಚೆ ತನ್ನ ತಾಯಿ ಹಾಯಿಬಟ್ಟೆಯಿಂದ ಹೊಲಿದುಕೊಟ್ಟಿದ್ದ ಒಳ‌ಉಡುಪನ್ನು ತೊಡುತ್ತಿದ್ದಳು. ಮತ್ತು ಅದರ ಜೊತೆ ಕುಣಿಕೆ ಇರುವ, ಮುಂಭಾಗವನ್ನು ಮುಚ್ಚುವ ಅಡ್ಡಡ್ಡವಾದ ಚರ್ಮದ ಪಟ್ಟಿಯನ್ನು ಹಾಕಿಕೊಳ್ಳುತ್ತಿದ್ದಳು. ಇದೇ ರೀತಿಯಲ್ಲಿ ಅವರು ಹಲವಾರು ತಿಂಗಳನ್ನು ಕಳೆದರು. ಹಗಲಲ್ಲಿ ಅವನು ಕಾಳಗದ ಹುಂಜಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು ಅವಳು ತಾಯಿಯ ಜೊತೆ ಕಸೂತಿ ಹಾಕುತ್ತಿದ್ದಳು. ರಾತ್ರಿ ಒಬ್ಬರನ್ನೊಬ್ಬರು ಸಂಕಟದ ತುಡಿತದಲ್ಲಿ ಎಳೆದೆಳೆದು ಹೊರಳಾಡುತ್ತಿದ್ದರು. ಇದು ಸಂಭೋಗಕ್ಕೆ ಪರ್ಯಾಯ ಎನ್ನುವ ಹಾಗೆ ತೋರಿದರೂ, ಜನರಿಗೆ ಅವರಲ್ಲೇನೋ ಅಸಹಜವಾದದ್ದಿದೆ ಎಂಬ ಸೂಚನೆ ಸಿಕ್ಕು, ಗಂಡ ಷಂಡನಾದದ್ದರಿಂದ ಮದುವೆಯಾಗಿ ಒಂದು ವರ್ಷವಾದರೂ ಉರ್ಸುಲಾ ಇನ್ನೂ ಕನ್ಯೆಯಾಗಿಯೇ ಉಳಿದಿದ್ದಾಳೆ ಎನ್ನುವ ವದಂತಿ ಹಬ್ಬಿತು. +“ನೋಡು, ಜನ ಏನು ಮಾತಾಡಿಕೊಳ್ತಿದಾರೆ” ಎಂದು ಅವನು ಶಾಂತನಾಗಿ ಹೇಳಿದ. +“ಅವರು ಬೇಕಾದ್ದನ್ನು ಹೇಳಲಿ. ಅದು ನಿಜ ಅಲ್ಲ ಅಂತ ನಮಗೆ ಗೊತ್ತು” ಎಂದಳು ಅವಳು. +ಅದೇ ರೀತಿಯಲ್ಲಿಯೇ ಅವರು ಇನ್ನೂ ಆರು ತಿಂಗಳು ಹೊಸೆ ಅರ್ಕಾದಿಯೋ ಬ್ಯುಂದಿಯಾ ಪ್ರುಡೆನ್ಸಿಯೋ ಅಗುಲರ್ ವಿರುದ್ಧ ಹುಂಜದ ಕಾಳಗದಲ್ಲಿ ಗೆಲ್ಲುವ ತನಕ ಕಳೆದರು. ಸೋತ ಪ್ರುಡೆನ್ಸಿಯೋ ತನ್ನ ಹುಂಜದ ರಕ್ತದಿಂದ ರೋಷಗೊಂಡು ತಾನು ಹೇಳುವುದು ಅಲ್ಲಿ ನೆರೆದಿರುವ ಎಲ್ಲರಿಗೂ ಕೇಳಿಸಲಿ ಎನ್ನುವಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾನಿಂದ ದೂರ ಸರಿದು ನಿಂತ. +“ಅಭಿವಂದನೆ! ಗೆದ್ದಿರೋ ಹುಂಜ ನಿಮ್ಮ ಹೆಂಡತೀಗೆ ದೊಡ್ಡ ಉಪಕಾರ ಮಾಡ್ಬಹುದು” ಎಂದ. +ಹೊಸೆ ಅರ್ಕಾದಿಯೋ ಬ್ಯುಂದಿಯಾ ಹುಂಜವನ್ನು ಸಮಾಧಾನದಿಂದ ಎತ್ತಿಕೊಂಡು ಅಲ್ಲಿದ್ದವರೆಲ್ಲರಿಗೆ, “ನಾನು ಮತ್ತೆ ಬರ್ತೀನಿ” ಎಂದು ಹೇಳಿ, ಪ್ರುಡೆನ್ಸಿಯೋ ಕಡೆ ತಿರುಗಿ, “ಮನೆಗೆ ಹೋಗಿ ಆಯುಧ ತೊಗೊಂಡು ಬಾ. . . ನಾನು ನಿನ್ನನ್ನ ಮುಗಿಸಿ ಬಿಡ್ತೀನಿ” ಎಂದ. +ಹತ್ತು ನಿಮಿಷಗಳ ನಂತರ ತನ್ನಜ್ಜನಿಗೆ ಸೇರಿದ ಭರ್ಜಿ ಹಿಡಿದುಕೊಂಡು ಬಂದ. ಊರಿನ ಅಧ ಜನ ಹುಂಜದ ಕಾಳಗದ ಅಖಾಡಾದ ಬಳಿ ನೆರೆದಿದ್ದರು. ಅದರ ಬಾಗಿಲ ಹತ್ತಿರ ಪ್ರುಡೆನ್ಸಿಯೋ ಅವನಿಗಾಗಿ ಕಾದು ನಿಂತಿದ್ದ. ಅವನಿಗೆ ತನ್ನನ್ನು ರಕ್ಷಿಸಿಕೊಳ್ಳಲು ಏನೂ ಸಮಯವಿರಲಿಲ್ಲ. ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೋರಿಯಷ್ಟು ಬಲದಿಂದ ಆ ಪ್ರದೇಶದ ಚಿರತೆಗಳಿಗೆ ಗುರಿಯಿಟ್ಟು ಮುಗಿಸಿದ ಹಾಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಸೆದ ಭರ್ಜಿ ಅವನ ಎದೆಯನ್ನು ಸೀಳಿತ್ತು. ಆ ದಿನ ರಾತ್ರಿ ಜನರೆಲ್ಲ ಸತ್ತು ಬಿದ್ದ ಹೆಣವನ್ನು ಕಾದು ಕುಳಿತಿದ್ದಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಬೆಡ್‌ರೂಮಿನಲ್ಲಿ ಮಾಮೂಲಿನಂತೆ ಉರ್ಸುಲಾ ಚರ್ಮದ ಪಟ್ಟಿಯ ಒಳ‌ಉಡುಪನ್ನು ಹಾಕಿಕೊಳ್ಳುತ್ತಿದ್ದಳು. ಅವನು ಅವಳ ಕಡೆ ಭರ್ಜಿ ತೋರಿಸಿ, “ತೆಗಿ ಅದನ್ನ” ಎಂದು ಅಬ್ಬರಿಸಿದ. ಆಗ ಉರ್ಸುಲಾಗೆ ಅವನ ಉದ್ದೇಶದ ಬಗ್ಗೆ ಅನುಮಾನವಾಗಲಿಲ್ಲ. “ಏನಾಗುತ್ತೋ ಅದಕ್ಕೆ ನೀನೆ ಜವಾಬ್ದಾರ” ಎಂದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿಯನ್ನು ನೆಲಕ್ಕೆ ನೆಟ್ಟ. “ನೀನು ಬಾಲ ಇರೋವನ್ನು ಹೆತ್ತರೆ, ಬಾಲ ಇರೋವನ್ನೇ ನಾವು ಬೆಳೆಸೋಣ. ಆದರೆ ನಿನ್ನಿಂದಾಗಿ ಈ ಊರಿನಲ್ಲಿ ಇನ್ನು ಯಾರೂ ಸಾಯೋದು ಬೇಡ” ಎಂದ. ಅಂದು ಚಂದ್ರನಿದ್ದ ಜೂನ್ ತಿಂಗಳ ಚೆಂದದ ರಾತ್ರಿ. ಅವರು ಬೆಡ್‌ರೂಮಿನಲ್ಲಿ ಪ್ರುಡೆನ್ಸಿಯೋನ ಸಂಬಂಧಿಗಳ ಅಳಲನ್ನು ತುಂಬಿಕೊಂಡು ಸುಳಿದಾಡುತ್ತಿದ್ದ ತಂಗಾಳಿಯನ್ನು ಗಮನಿಸದೆ, ಇಡೀ ರಾತ್ರಿ ಎಚ್ಚರವಿದ್ಡು ಹಾಸಿಗೆಯಲ್ಲಿ ಲಲ್ಲೆಯಾಡುತ್ತಿದ್ದರು. +ಅದನ್ನು ಪರಸ್ಪರ ಗೌರವದ ಸೆಣೆಸಾಟವೆಂದು ಪರಿಗಣಿಸಿದರೂ ಅವರಿಬ್ಬರ ಮನಸ್ಸಿನಲ್ಲಿ ಒಂದು ರೀತಿಯ ನೋವು ಉಳಿದಿತ್ತು. ಅದೊಂದು ರಾತ್ರಿ ಅವಳು ನಿದ್ದೆ ಬಾರದೆ ನೀರು ಕುಡಿಯುವುದಕ್ಕೆ ಎದ್ದು ಅಂಗಳಕ್ಕೆ ಹೋದಾಗ ಅಲ್ಲಿ ಮಡಕೆಯ ಪಕ್ಕದಲ್ಲಿ ಪ್ರುಡೆನ್ಸಿಯೋ ಅಗಿಲರ್‌ನನ್ನು ಕಂಡಳು. ಸಪ್ಪಗಿದ್ದ ಅವನು ಹುಲ್ಲಿನ ಕಟ್ಟಿನಿಂದ ಎದೆಯಲ್ಲಿ ಆದ ತೂತನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ. ಅವಳಿಗೆ ಹೆದರಿಕೆಯಾಗಲಿಲ್ಲ. ಅನುಕಂಪ ಮೂಡಿತು. ವಾಪಸು ಹೋಗಿ ಅವಳು ಕಂಡದ್ದನ್ನು ಗಂಡನಿಗೆ ಹೇಳಿದಳು. ಆದರೆ ಅವನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. “ಇದರರ್ಥ ಏನು ಅಂದ್ರೆ, ನಮ್ಗೆ ಮನಸ್ಸಿನ ಭಾರನ ತಡೆದುಕೊಳ್ಳಕ್ಕೆ ಆಗ್ತಾ ಇಲ್ಲ ಅಂತ” ಎಂದ. ಎರಡು ದಿನಗಳ ನಂತರ ಉರ್ಸುಲಾ ಬಾತ್ ರೂಮಿನಲ್ಲಿ ಹುಲ್ಲಿನ ಕಟ್ಟಿನಿಂದ ಎದೆಯ ಮೇಲೆ ಉಂಟಾಗಿದ್ದ ರಕ್ತದ ಕಲೆಗಳನ್ನು ಉಜ್ಜಿ ತೊಳೆಯುತ್ತಿದ್ದ ಪ್ರುಡೆನ್ಸಿಯೋನನ್ನು ಕಂಡಳು. ಇನ್ನೊಂದು ರಾತ್ರಿ ಅವನು ಮಳೆಯಲ್ಲಿ ಓಡಾಡುತ್ತಿದ್ದದ್ದನ್ನು ನೋಡಿದಳು. ಹೆಂಡತಿಯ ಭ್ರಮೆಗಳಿಂದ ಕಿರಿಕಿರಿಗೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿ ತೆಗೆದುಕೊಂಡು ಅಂಗಳಕ್ಕೆ ಹೋದ. ಅಲ್ಲಿ ಸೆಪ್ಪೆ ಮುಖದ ಸತ್ತವನಿದ್ದ. +“ನೀನು ನರಕಕ್ಕೆ ಹೋಗು. ಮತ್ತೆ ಮತ್ತೆ ನೀನು ವಾಪಸು ಬಂದರೆ ಅಷ್ಟು ಸಲವೂ ನಾನು ನಿನ್ನ ಕೊಂದು ಹಾಕ್ತಿನಿ.” +ಪ್ರುಡೆನ್ಸಿಯೋ ಹೋಗಲಿಲ್ಲ. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಭರ್ಜಿ ಬೀಸುವ ಧೈರ್ಯವಾಗಲಿಲ್ಲ. ಅನಂತರ ಅವನೆಂದೂ ನೆಮ್ಮದಿಯಿಂದ ನಿದ್ದೆ ಮಾಡಲಿಲ್ಲ. ಅವನು ಮಳೆಯಲ್ಲಿ ನಿಂತು ತೀರ ದೀನನಾಗಿ ತನ್ನ ಕಡೆ ಬೀರುತ್ತಿದ್ದ ನೋಟ, ಬದುಕಿರುವ ತನ್ನವರ ಬಗ್ಗೆ ಅತೀವ ಕಾಳಜಿ ಮತ್ತು ಹುಲ್ಲಿನ ಕಟ್ಟನ್ನು ನೀರಲ್ಲಿ ನೆನೆಸಲು ಆತಂಕದಿಂದ ಮನೆಯಲ್ಲಿ ಸುತ್ತಾಡುವ ರೀತಿ ಅವನನ್ನು ಹಿಂಸೆಗೆ ಗುರಿಪಡಿಸಿತ್ತು. “ಅವನು ತುಂಬ ಸಂಕಟ ಪಡ್ತಿರಬೇಕು. ಅವನೀಗ ತೀರ ಒಂಟಿಯಾಗಿದಾನೆ” ಎಂದು ಉರ್ಸುಲಾಗೆ ಹೇಳಿದ. ಅವಳಿಗೆ ಸತ್ತವನು ಮಡಿಕೆಯ ಮುಚ್ಚಳಗಳನ್ನು ತೆಗೆಯುತ್ತಿದ್ದಾಗ ಅವನೇನು ಹುಡುಕುತ್ತಿದ್ದಾನೆಂದು ಅರಿವಾದ ಮೇಲೆ, ಮನೆಯಲ್ಲಿ ಎಲ್ಲಂದರಲ್ಲಿ ನೀರು ತುಂಬಿದ ಮಡಕೆಗಳನ್ನು ಇಟ್ಟಳು. ಒಂದು ದಿನ ತನ್ನ ರೂಮಿನಲ್ಲಿಯೇ ಅವನು ಗಾಯವನ್ನು ತೊಳೆದುಕೊಳ್ಳುತ್ತಿದ್ದಾಗ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಡೆದುಕೊಳ್ಳಲಾಗಲಿಲ್ಲ. +“ಆದದ್ದಾಯ್ತು. . ನಾವು ಈ ಊರು ಬಿಟ್ಟು ಹೋಗ್ತೀವಿ. ಎಷ್ಟು ದೂರ ಆಗುತ್ತೋ ಅಷ್ಟು. ಮತ್ತೆ ನಾವು ವಾಪಸು ಬರಲ್ಲ. ಈಗ ಸಮಾಧಾನದಿಂದ ಹೋಗು.” +ಅವರು ಪರ್ವತಗಳನ್ನು ದಾಟಲು ಹೊರಟಿದ್ದು ಈ ಕಾರಣಕ್ಕಾಗಿ. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅನೇಕ ಸ್ನೇಹಿತರು, ಅವನಂತೆಯೇ ಹರೆಯದವರು ಈ ಸಾಹಸದಿಂದ ಪುಳಕಿತರಾಗಿ ಹೆಂಡತಿ ಮಕ್ಕಳ ಸಮೇತ ಮನೆಮಾರುಗಳನ್ನು ಬಿಟ್ಟು, ಗಂಟು ಮೂಟೆ ಕಟ್ಟಿಕೊಂಡು, ಯಾರೂ ಭರವಸೆ ಕೊಟ್ಟಿರದ ಪ್ರದೇಶದ ಕಡೆ ಹೊರಟರು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾನು ಹೊರಡುವ ಮುಂಚೆ ಭರ್ಜಿಯನ್ನು ಅಂಗಳದಲ್ಲಿ ನೆಟ್ಟ ನಂತರ, ಹೀಗೆ ಮಾಡಿದರೆ ಪ್ರುಡೆನ್ಸಿಯೋಗೆ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದ ಒಂದೊಂದಾಗಿ ಹುಂಜಗಳ ಹೊಟ್ಟೆಯನ್ನು ಸೀಳಿದ. ಉರ್ಸುಲಾ ತಾನು ಮದುವಣಗಿತ್ತಿಯಾಗಿ ತೊಟ್ಟಿದ್ದ ಉಡುಪಿನ ಜೊತೆಗೆ ಒಂದಿಷ್ಟು ಪಾತ್ರೆ ಪಡಗ ಮತ್ತು ಪಿತ್ರಾರ್ಜಿತವಾಗಿ ಬಂದ ಬಂಗಾರದ ನಾಣ್ಯಗಳಿದ್ದ ಕಿರುಪೆಟ್ಟಿಗೆ ಮಾತ್ರ ತೆಗೆದುಕೊಂಡಳು. ಅವರು ಯಾವುದೇ ಕಾರ್ಯಸೂಚಿಯನ್ನು ನಿಗದಿಪಡಿಸಿಕೊಂಡಿರಲಿಲ್ಲ. ತನಗೆ ಗೊತ್ತಿದ್ದ ಜನರನ್ನು ಕಾಣಲು ಬಯಸದೆ ಮತ್ತು ಯಾವ ಕುರುಹನ್ನು ಬಿಡಲು ಇಷ್ಟಪಡದೆ ಅವರು ರಿಯೋ‌ಅಕಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಹೋಗಲು ಪ್ರಯತ್ನಿಸಿದರು. ಅದೊಂದು ಅಸಂಗತವಾದ ಪಯಣ. ಹದಿನಾಲ್ಕು ತಿಂಗಳ ನಂತರ ಕೋತಿಯ ಮಾಂಸ ಮತ್ತು ಬೇಯಿಸಿದ ಹಾವು ತಿಂದು ಹೊಟ್ಟೆ ಕೆಟ್ಟ ಉರ್ಸುಲಾ ಎಲ್ಲ ರೀತಿಯಲ್ಲಿ ಸಾಮಾನ್ಯ ಮನುಷ್ಯನ ಅಂಗಗಳನ್ನು ಹೊಂದಿದ ಗಂಡು ಮಗುವಿಗೆ ಜನ್ಮ ಕೊಟ್ಟಳು. ತಾನು ಮಲಗಿದ್ದ ಹಾಸಿಗೆಯನ್ನು ಇಬ್ಬರು ಭುಜದ ಮೇಲೆ ಹೊತ್ತುಕೊಂಡು ಸಾಗಿದಂತೆ ಅವಳು ಅರ್ಧದಾರಿಯನ್ನು ಸವೆಸಿದ್ದಳು. ಏಕೆಂದರೆ ಅವರ ಕಾಲುಗಳು ಊತುಕೊಂಡಿದ್ದಲ್ಲದೆ, ಉಬ್ಬಿದ ರಕ್ತನಾಳಗಳು ಗುಳ್ಳೆಗಳ ಹಾಗೆ ತುಂಬಿಕೊಂಡಿದ್ದವು. ಮಕ್ಕಳ ತಳಕ್ಕಿಳಿದ ಹೊಟ್ಟೆಯನ್ನು ಮತ್ತು ಕಾಂತಿ ಹೀನ ಕಣ್ಣುಗಳನ್ನು ನೋಡಿದರೆ ಕನಿಕರ ಉಂಟಾದರೂ ಅವರು ಪ್ರಯಾಣವನ್ನು ದೊಡ್ಡವರಿಗಿಂತ ಸಮರ್ಥವಾಗಿ ನಿಭಾಯಿಸಿದ್ದರು. ಅವರಿಗೆ ಅದು ತಮಾಷೆಯಾಗಿ ಕಂಡಿತ್ತು. ಅವರು ದಾಟುವುದಕ್ಕೆ ಹೊರಟು ಸುಮಾರು ಎರಡು ವರ್ಷಗಳ ನಂತರ ಒಂದು ದಿನ ಬೆಳಿಗ್ಗೆ ಪರ್ವತ ಶ್ರೇಣಿಯ ಪಶ್ಚಿಮ ಇಳಿಜಾರುಗಳನ್ನು ನೋಡಿದ ಮೊದಲ ಮನುಷ್ಯರಾದರು. ಮೋಡದ ತುದಿಗಳಿಂದ ಅವರು ಪ್ರಪಂಚದ ಮತ್ತೊಂದು ಕಡೆ ಹಬ್ಬಿದ ನೀರು ಜಿನುಗುವ ಜೌಗು ವಿಸ್ತಾರವನ್ನು ನೋಡಿದರು. ಅವರಿಗೆ ಸಮುದ್ರ ಸಿಗಲಿಲ್ಲ. ದಾರಿಯಲ್ಲಿ ತಮಗೆ ಭೇಟಿಯಾದ ಕೊನೆಯ ಇಂಡಿಯನ್ನರಿಂದ ದೂರವಾಗಿ ಜೌಗಿನ ಪ್ರದೇಶದಲ್ಲಿ ಹಲವು ತಿಂಗಳು ಸಾಗಿದ ನಂತರ ಒಂದು ರಾತ್ರಿ ಕೊರೆಯುವ ಗಾಜಿನ ಹಾಗೆ ಹರಿಯುವ ನದಿಯ ನೀರಿನ ದಡದಲ್ಲಿ ಬೀಡುಬಿಟ್ಟರು. ವರ್ಷಗಳ ನಂತರ ಎರಡನೆ ಆಂತರಿಕ ಯುದ್ಧದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ರಿಯೋ‌ಅಕದವರನ್ನು ಚಕಿತಗೊಳಿಸುವುದಕ್ಕೋಸ್ಕರ ಅದೇ ಮಾರ್ಗದಲ್ಲಿ ಆರು ದಿನ ಪ್ರಯಾಣ ಮಾಡಿದ ಮೇಲೆ ಅದು ಹುಚ್ಚುತನವೆಂದು ಅರ್ಥವಾಗಿತ್ತು. ಆದರೆ ಆ ದಿನ ನದಿಯ ದಡದಲ್ಲಿ ಬೀಡು ಬಿಟ್ಟಾಗ ಜೊತೆಯಲ್ಲಿದ್ದವರ ಮುಖದಲ್ಲಿ ಅಪಘಾತಕ್ಕೆ ಸಿಕ್ಕ ಹಡಗಿನ, ಅನ್ಯಮಾರ್ಗವಿರದವರಿಗೆ ಇರುವ ಛಾಯೆಯಿತ್ತು. ದಿನಗಳು ಕಳೆಯುತ್ತಿದ್ದಂತೆ ಅಂಥವರ ಸಂಖ್ಯೆ ಹೆಚ್ಚಾಗಿತ್ತು. ಅವರೆಲ್ಲರೂ ವಯಸ್ಸು ಹೆಚ್ಚಾಗಿ ಸಾಯಲು ಸಿದ್ಧರಿದ್ದರು. ಅವರು ಹಾಗೆಯೆ ಮಾಡಿದರು ಕೂಡ. ಆ ದಿನ ರಾತ್ರಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾವಿದ್ದ ಸ್ಥಳದಲ್ಲಿ ಕನ್ನಡಿ ಗೋಡೆಗಳಿರುವ ನಗರವೊಂದು ಉದ್ಭವಗೊಂಡಂತೆ ಕನಸು ಕಂಡ. ಅದು ಎಂಥ ನಗರವೆಂದು ಕೇಳಿದ. ಅದಕ್ಕೆ ಅವರು ತಿಳಿಸಿದ ಹೆಸರನ್ನು ಅವನೆಂದೂ ಕೇಳಿರಲಿಲ್ಲ ಮತ್ತು ಅದಕ್ಕೊಂದು ಅರ್ಥವೂ ಇರಲಿಲ್ಲ. ಆದರೆ ಅದಕ್ಕೆ ಅಲೌಕಿಕ ಶಕ್ತಿಯ ಪ್ರತಿಧ್ವನಿ ಇತ್ತು. ಅದು ಮಕೋಂದೋ. ಮಾರನೆಯ ದಿನ ತನ್ನ ಜನರಿಗೆ ಎಂದಿಗೂ ತಮಗೆ ಸಮುದ್ರ ಸಿಗುವುದಿಲ್ಲ ಎಂದು ತಿಳಿಸಿದ. ಅವನು ಅವರಿಗೆ ನದಿಯ ಪಕ್ಕದ ತಂಪಾದ ಸ್ಥಳದಲ್ಲಿ ಮರಗಳನ್ನು ಕಡಿದು ತೆರವು ಮಾಡಲು ಅಪ್ಪಣೆ ಕೊಟ್ಟ. ಅವರು ಅಲ್ಲಿ ಮಕೋಂದೋವನ್ನು ಅಸ್ತಿತ್ವಕ್ಕೆ ತಂದರು. +ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಐಸ್ ಕಂಡು ಹಿಡಿಯುವ ತನಕ ತಾನು ಕನಸಿನಲ್ಲಿ ಕಂಡ ಕನ್ನಡಿ ಮನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಅದರ ಆಳದ ಕಲ್ಪನೆ ತನಗಾಯಿತೆಂದು ಭಾವಿಸಿದ. ಸ್ವಲ್ಪ ದಿನದಲ್ಲಿ ಅವರಿಗೆ ನೀರಿನಂಥ ಸಾಮಾನ್ಯ ವಸ್ತುವಿನಿಂದ ದೊಡ್ಡ ಪ್ರಮಾಣದ ಐಸ್ ಬ್ಲಾಕುಗಳನ್ನು ತಯಾರಿಸಲು ಸಾಧ್ಯವಾಗುವುದೆಂದು ಮತ್ತು ಅದರಿಂದ ಹಳ್ಳಿಯಲ್ಲಿ ಹೊಸ ಮನೆಗಳನ್ನು ಕಟ್ಟಬಹುದೆಂದು ಭಾವಿಸಿದ. ಬಾಗಿಲುಗಳ ಹಿಡಿಕೆ ಮತ್ತು ತಿರುಪುಗಳು ಶಾಖದಿಂದ ಸುರುಟಿ ಹೋಗದೆ ಕುದಿತದ ಮಕೋಂದೋ ಆಗಿರದೆ ತಂಪಾದ ಪಟ್ಟಣವಾಗುವುದೆಂದು ತಿಳಿದ. ಐಸ್ ಫ್ಯಾಕ್ಟರಿಯನ್ನು ನಿರ್ಮಿಸುವ ಪ್ರಯತ್ನವನ್ನು ಅವನು ಮುಂದುವರಿಸದೇ ಇರುವುದಕ್ಕೆ ಅವನಿಗೆ ತನ್ನ ಮಕ್ಕಳ, ಅದರಲ್ಲೂ ಆರಂಭದಿಂದಲೂ ರಸವಾದದಲ್ಲಿ ಆಸಕ್ತಿಯಿದ್ದ ಅವ್ರೇಲಿಯಾನೋನ ವಿದ್ಯಾಭ್ಯಾಸದ ಬಗ್ಗೆ ಉತ್ಸುಕನಾಗಿದ್ದ. ಲ್ಯಾಬೊರೇಟರಿಯ ಧೂಳು ಹೊಡೆದಿದ್ದರು. ಮೆಲ್‌ಕಿಯಾದೆಸ್‌ನ ಟಿಪ್ಪಣಿಗಳನ್ನು ಯುಕ್ತವಾಗಿ, ಸಮಾಧಾನವಾಗಿ, ಹೊಸತೆಂಬ ಉಮೇದಿಲ್ಲದೆ ಪರಾಮರ್ಶಿಸಿ, ಶಾಂತ ರೀತಿಯಿಂದ ಮಡಿಕೆಯ ತಳದಲ್ಲಿ ಅಂಟಿಕೊಡಿದ್ದ ಉರ್ಸುಲಾಳ ಚಿನ್ನವನ್ನು, ಅದರ ಜೊತೆಗಿದ್ದ ರದ್ದಿಯಿಂದ ವಿಂಗಡಿಸಿದರು. ದೊಡ್ಡವನಾದ ಹೊಸೆ ಅರ್ಕಾದಿಯೋ ಇದರಲ್ಲಿ ಭಾಗವಹಿ;ಸಲಿಲ್ಲ. ತನ್ನ ತಂದೆ ನೀರಿನ ಪೈಪ್ ಕುರಿತು ಮೈಮನಸ್ಸುಗಳನ್ನು ತೊಡಗಿಸಿಕೊಂಡಿದ್ದಾಗ ವಯಸ್ಸಿಗಿಂತ ಹೆಚ್ಚಿಗೆ ಬೆಳೆದಿದ್ದ ಅವನು ಬೆರಗು ಬಡಿಸುವಂಥ ಹರೆಯದವನಾಗಿದ್ದ. ಆಗಲೇ ಅವನ ಧ್ವನಿ ಗಡುಸಾಗಿತ್ತು. ಮೇಲ್ದುಟಿಯ ಮೇಲೆ ಮೀಸೆ ಚಿಗುರೊಡೆದಿತ್ತು. ಒಂದು ದಿನ ರಾತ್ರಿ ಅವನು ಮಲಗಲು ಬಟ್ಟೆ ಕಳಚುತ್ತಿದ್ದಾಗ ಉರ್ಸುಲಾ ಅವನ ರೂಮಿಗೆ ಹೋದ ತಕ್ಷಣ ಅತೀವ ಸಂಕೊಚ ಮತ್ತು ನಾಚಿಕೆ ಉಂಟಾಯಿತು. ಅವಳು ತನ್ನ ಗಂಡನೊಬ್ಬನನ್ನು ಬಿಟ್ಟು ಬತ್ತಲಾಗಿದ್ದ ಇನ್ನೊಬ್ಬನನ್ನು ಕಂಡದ್ದು ಆಗಲೇ. ಅಲ್ಲದೆ ಅವನು ಜೀವನ ನಡೆಸಲು ಸನ್ನದ್ಧನಾಗಿ ಅತಿಯಾದ ಆಕಾರ ಹೊಂದಿದವನಂತೆ ಕಂಡ. ಅಲ್ಲದೆ ಮೂರನೆ ಬಾರಿ ಗರ್ಭಿಣಿಯಾದ ಅವಳಿಗೆ ಮದುವೆಯಾದ ಹೊಸತರಲ್ಲಿದ್ದ ಭಯ ಮತ್ತೆ ಆವರಿಸಿತು. +ಸುಮಾರು ಆ ಸಮಯಕ್ಕೆ ಹೊಲಸು ನಾಲಗೆಯ, ಆಕರ್ಷಕವಾಗಿದ್ದವಳೊಬ್ಬಳು ಮನೆಗೆಲಸಕ್ಕೆಂದು ಬಂದಳು. ಅವಳಿಗೆ ಕಾರ್ಡುಗಳಿಂದ ಭವಿಷ್ಯ ಓದುವುದು ತಿಳಿದಿತ್ತು. ಉರ್ಸುಲಾ ತನ್ನ ಮಗನ ಬಗ್ಗೆ ಕೇಳಿದಳು. ತನ್ನ ಸಂಬಂಧಿಗೆ ಹಂದಿಯ ಬಾಲವಿರುವ ಹಾಗೆ, ಅವನಿಗಿದ್ದ ಅಗಾಧ ಆಕಾರ ಅಸಹಜವೆಂಬ ಭಾವನೆ ಅವಳಿಗಿತ್ತು. ಆ ಹೆಂಗಸು ಫಳಾರನೆ ಗಾಜು ಒಡೆದ ಹಾಗೆ ನಕ್ಕಿದ್ದು ಎಲ್ಲ ಕಡೆ ಪ್ರತಿಧ್ವನಿಸಿತು. “ಹಾಗಲ್ಲ. ಅವನಿಗೆ ತುಂಬಾ ಅದೃಷ್ಟ ಇದೆ” ಎಂದಳು. ಅವಳು ತನ್ನ ಮುನ್ಸೂಚನೆಯನ್ನು ಸ್ಥಿರಪಡಿಸುವುದಕ್ಕಾಗಿ ಕಾರ್ಡುಗಳನ್ನು ತಂದು ಅಡುಗೆ ಮನೆ ಪಕ್ಕದ ಉಗ್ರಾಣದಲ್ಲಿ ಹೊಸೆ ಅರ್ಕಾದಿಯೋನ ಜೊತೆಗೂಡಿ ಬಾಗಿಲು ಹಾಕಿಕೊಂಡಳು. ಅವಳು ತೋಚಿದ್ದನ್ನು ಹೇಳುತ್ತ ಮರಗೆಲಸದ ಬೆಂಚಿನ ಮೇಲೆ ಕಾರ್ಡುಗಳನ್ನು ಇಟ್ಟಳು. ಪಕ್ಕದಲ್ಲಿ ಸುಮ್ಮನೆ ನಿಂತಿದ್ದ ಆ ಹುಡುಗನಿಗೆ ಬೇಸರವಾಯಿತು. ಇದ್ದಕ್ಕಿದ್ದ ಹಾಗೆ ಅವಳು ಅವನನ್ನು ಮುಟ್ಟಿದಳು. ಅವಳಿಗೆ, “ಯಜಮಾನ್ರೇ” ಎಂದಷ್ಟೇ ಹೇಳಲು ಸಾಧ್ಯವಾದದ್ದು. ಹೊಸೆ ಅರ್ಕಾದಿಯೋಗೆ ತನ್ನ ನರನಾಡಿಗಳಲ್ಲಿ ಎಂಥದೋ ನೊರೆ ತುಂಬಿಕೊಳ್ಳುತ್ತಿದೆ ಎನ್ನಿಸಿ ಹೆದರಿಕೆಯಿಂದ ಅಳುಬರುವಂತಾಯಿತು. ಅವಳು ಬೇರೆ ಬಗೆಯಲ್ಲಿ ವರ್ತಿಸಲಿಲ್ಲ. ಇಡೀ ರಾತ್ರಿ ಹೊಸೆ ಅರ್ಕಾದಿಯೋ ಅವಳನ್ನು ಹುಡುಕುತ್ತಿದ್ದ. ಏಕೆಂದರೆ ಅವಳ ಕಂಕುಳದಿಂದ ಹೊಮ್ಮಿದ ವಾಸನೆ ಅವನ ಚರ್ಮದಾಳಕ್ಕೂ ಇಳಿದಿತ್ತು. ಅವನು ಅವಳ ಜೊತೆ ಯಾವಾಗಲೂ ಇರಬೇಕೆಂದು ಇಷ್ಟಪಟ್ಟ. ಅವಳು ತನ್ನ ತಾಯಿಯಂತೆ ಇರಬೇಕೆಂದೂ ಮತ್ತು ತಾವಿಬ್ಬರೂ ಉಗ್ರಾಣದಿಂದ ಹೊರಗೆ ಹೋಗಬಾರದೆಂದು ಅಲ್ಲದೆ ಅವಳು ತನ್ನನ್ನು, “ಯಜಮಾನ್ರೇ” ಎಂದು ಕರೆಯಬೇಕೆಂದು ಬಯಸಿದ. ಒಂದು ದಿನ ತಡೆಯಲಾಗದೆ ಅವಳನ್ನು ಹುಡುಕಿಕೊಂಡು ಅವಳ ಮನೆಗೆ ಹೋದ. ಒಂದೂ ಮಾತಾಡದೆ, ಏನೂ ಅರ್ಥವಾಗದವನಂತೆ ಸುಮ್ಮನೆ ಹಾಲ್‌ನಲ್ಲಿ ಕುಳಿತಿದ್ದ. ಆ ಕ್ಷಣ ಅವನಿಗೆ ಅವಳು ಬೇಕು ಎನ್ನಿಸಲಿಲ್ಲ. ವಾಸನೆ ಮೂಡಿಸಿದ್ದ ಕಲ್ಪನೆಗಿಂತ ಅವಳು ತೀರ ಬೇರೆಯಾಗಿ, ಒಂದು ರೀತಿಯಲ್ಲಿ ಬೇರೊಬ್ಬ ವ್ಯಕ್ತಿಯ ಹಾಗೆ ಕಂಡಳು. ಅವನು ಕಾಫಿ ಕುಡಿದು ಖಿನ್ನನಾಗಿ ಹೊರಬಿದ್ದ. ಆ ದಿನ ರಾತ್ರಿ ಎಚ್ಚರವಾದಾಗ ಉಂಟಾದ ಭಯದಲ್ಲಿ ತೀರ ಆತಂಕಗೊಂಡು ಅವಳು ಬೇಕೆನ್ನಿಸಿತು. ಆದರೆ ಅವಳು ಉಗ್ರಾಣದಲ್ಲಿ ಇದ್ದಂತೆ ಇರದೆ ಆ ದಿನ ಮಧ್ಯಾಹ್ನ ಇದ್ದಂತೆ ಇರಬೇಕೆಂದು ಬಯಸಿದ. +ಅವನ ತಾಯಿಯ ಜೊತೆ ಇದ್ದ ಅವಳು ಕೆಲವು ದಿನಗಳ ನಂತರ ಅವನನ್ನು ತನ್ನ ಮನೆಗೆ ಕರೆದಳು. ಕಾರ್ಡುಗಳನ್ನು ತೋರಿಸುವ ನೆಪದಿಂದ ಬೆಡ್‌ರೂಮಿಗೆ ಕರೆದುಕೊಂಡು ಹೋದಳು. ಅಲ್ಲಿ ಅವನ ಜೊತೆ ತೀರ ಸಲಿಗೆಯಿಂದ ನಡೆದುಕೊಂಡದ್ದರಿಂದ ಪ್ರಾರಂಭದಲ್ಲಿ ಅವನಿಗೆ ನಡುಕ ಉಂಟಾದರೂ ಕ್ರಮೇಣ ಮರುಳುಗೊಂಡ. ಅವನಿಗೆ ಸಂತೋಷಕ್ಕಿಂತ ಹೆದರಿಕೆ ಹೆಚ್ಚಾಯಿತು. ಆ ದಿನ ರಾತ್ರಿ ಬಂದು ತನ್ನನ್ನು ನೋಡುವಂತೆ ಹೇಳಿದಳು. ಅದು ತನಗೆ ಸಾಧ್ಯವಿಲ್ಲ ಎಂದು ಗೊತ್ತಿದ್ದರಿಂದ ಅಲ್ಲಿಂದ ತಪ್ಪಿಸಿಕೊಂಡರೆ ಸಾಕೆಂದು ಅವನು ಒಪ್ಪಿಕೊಂಡ. ಆದರೆ ಆ ದಿನ ಕುದಿತದ ರಾತ್ರಿಯಲ್ಲಿ ತನ್ನ ಕೈಯಲ್ಲಿ ಆಗದಿದ್ದರೂ ಅವಳನ್ನು ಕಾಣಲೇ ಬೇಕು ಎಂದು ತವಕಿಸಿದ. ಕತ್ತಲಲ್ಲಿ ತನ್ನ ತಮ್ಮನ ಶಾಂತವಾದ ಉಸಿರಾಟವನ್ನು, ಪಕ್ಕದ ರೂಮಿನಲ್ಲಿದ್ದ ತನ್ನ ತಂದೆಯ ಒಣ ಕೆಮ್ಮನ್ನು, ಅಂಗಳದಲ್ಲಿದ್ದ ಕೋಳಿಗಳ ಆಸ್ತಮಾವನ್ನು, ಸೊಳ್ಳೆಗಳ ಗುಯ್ ಗುಟ್ಟುವಿಕೆಯನ್ನು, ತನ್ನ ಹೃದಯದ ಬಡಿತವನ್ನು, ತನಗೆ ಈವರೆಗೆ ಗೊತ್ತಿರದ ಪ್ರಪಂಚದ ಶಬ್ದಗಳನ್ನು ಕೇಳಿಸಿಕೊಳ್ಳುತ್ತ, ಮಲಗಿದ್ದವನೆದ್ದು, ತಡವಿ ನೋಡಿ ಬಟ್ಟೆ ಹಾಕಿಕೊಂಡು ರಸ್ತೆಗಿಳಿದ. ಅವಳು ಹೇಳಿದಂತೆ ಬಾಗಿಲನ್ನು ಸುಮ್ಮನೆ ಹಾಕಿರದೆ ಅಗುಳಿ ಹಾಕಿರಲೆಂದು ಅವನ ಅಂತರಾಳದ ಅಪೇಕ್ಷೆಯಾಗಿತ್ತು. ಆದರೆ ಅದು ತೆರೆದಿತ್ತು. ಅವನು ಬೆರಳ ತುದಿಯಿಂದ ತಳ್ಳಿದ. ಅದರ ತಿರುಗಣಿಗಳು ತಿರುಗಿದಾಗ ಉಂಟಾದ ವಿಚಿತ್ರ ನರಳುವಿಕೆ ಅವನೊಳಗೆ ಪ್ರತಿಧ್ವನಿಸಿ ಹೆಪ್ಪುಗಟ್ಟಿತು. ಮನೆಯೊಳಗೆ ಅಡ್ಡಲಾಗಿ ಕಾಲಿಟ್ಟು ಶಬ್ದ ಮಾಡದಂತೆ ಪ್ರಯತ್ನಿಸುತ್ತ ನಡೆದ ಕ್ಷಣದಿಂದ ಅವನಿಗೆ ಆ ವಾಸನೆ ಬಡಿಯಿತು. ಅವನು ಆ ಹೆಂಗಸಿನ ಮೂವರು ಅಣ್ಣತಮ್ಮಂದಿರ ಕಾಣದ ಹಾಸಿಗೆಯ ದಾರಿಯಲ್ಲಿ ಮತ್ತು ಆ ಹಾಲ್‌ನ ಕತ್ತಲಲ್ಲಿ ಏನನ್ನೂ ನಿರ್ಧರಿಸಲಾಗದೆ, ಬೆಡ್‌ರೂಮಿನ ಬಾಗಿಲು ತಳ್ಳಲು ಜಾಗರೂಕತೆ ವಹಿಸಿ, ಹಾಸಿಗೆಯ ಬಗ್ಗೆ ತಪ್ಪು ಮಾಡಬಾರದೆಂದು ಮುಂದೆ ನಡೆದ. ಅವನಿಗೆ ಅದು ಸಿಕ್ಕಿತು. ಅವನು ಕಲ್ಪನೆಗಿಂತಲೂ ಕೆಳಮಟ್ಟದಲ್ಲಿದ್ದ ಹಾಸಿಗೆಯ ಹಗ್ಗಗಳಿಗೆ ತಾಕಿಸಿಕೊಂಡ. ಅದುವರೆಗೂ ಗೊರಕೆ ಹೊಡೆಯುತ್ತಿದ್ದವನೊಬ್ಬ ಮಗ್ಗುಲಾಗಿ, “ಅವತ್ತು ಬುಧವಾರ” ಎಂದ. ಅವನು ಬೆಡ್‌ರೂಮಿನ ಬಾಗಿಲನ್ನು ತಳ್ಳಿದಾಗ ಅದರ ಬಾಗಿಲು ಸಮವಾಗಿರದ ಬಾಗಿಲ ಮೇಲೆ ಉಜ್ಜುವುದನ್ನು ಅವನಿಗೆ ತಡೆಯಲಾಗಲಿಲ್ಲ. ಸಂಪೂರ್ಣ ಕತ್ತಲಿದ್ದರಿಂದ ಹಳೆಯದೆಲ್ಲ ಒತ್ತರಿಸಿ ಬಂದದ್ದರ ಜೊತೆಗೆ ದಿಕ್ಕಿನ ಪ್ರಜ್ಞೆ ಕಳೆದು ಹೋಗಿದೆ ಎಂದು ಅವನಿಗೆ ಮನವರಿಕೆಯಾಯಿತು. ಆ ಇಕ್ಕಟ್ಟಾದ ರೂಮಿನಲ್ಲಿ ಮಲಗಿದ್ದವರೆಂದರೆ ತಾಯಿ, ಇನ್ನೊಬ್ಬ ಮಗಳು, ಅವಳ ಗಂಡ ಮತ್ತು ಅವರ ಇಬ್ಬರು ಮಕ್ಕಳು ಹಾಗೂ ಅಲ್ಲಿ ಇರದೆ ಹೋಗಿರಬಹುದಾದ ಆಕೆ. ಎಲ್ಲ ಕಡೆ ಆ ವಾಸನೆ ತನ್ನ ಚರ್ಮದ ಮೇಲಿರುವಷ್ಟು ಖಚಿತವಾಗಿ ಇರದಿದ್ದರೆ ಆ ದಿಕ್ಕಿನಲ್ಲಿ ಹೋಗಬಹುದಿತ್ತು. ಅವನು ಬಹಳ ಹೊತ್ತಿನ ತನಕ ತಾನು ಹೇಗೆ ಇಂಥ ಸಂದಿಗ್ಧ ಕೂಪಕ್ಕೆ ಸಿಕ್ಕಿಕೊಂಡೆ ಎಂದುಕೊಳ್ಳುತ್ತಿದ್ದಂತೆ, ಕತ್ತಲಲ್ಲಿ ಕೈಯೊಂದು ಬೆರಳುಗಳನ್ನು ಹರಡಿ ಆಡಿಸುತ್ತ ಅವನ ಮುಖವನ್ನು ಸ್ಪರ್ಶಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಅವನಿಗೆ ತಿಳಿಯದಂತೆ ಅವನು ಅದನ್ನು ನಿರೀಕ್ಷಿಸುತ್ತಿದ್ದ. ಅವನು ಆ ಕೈಗೆ ಒಪ್ಪಿಸಿಕೊಳ್ಳುತ್ತ ತೀರ ಬಳಲಿಕೆಯಿಂದ ಆ ಸ್ಥಳಕ್ಕೆ ಹೋದ ಮೇಲೆ ಅವನ ಬಟ್ಟೆಗಳನ್ನು ಕಳಚಿದ ನಂತರ, ಅವನನ್ನು ಆಲೂಗಡ್ಡೆಯ ಚೀಲದ ಹಾಗೆ ಅತ್ತಿತ್ತ ಓಲಾಡಿಸುತ್ತ ತಳ್ಳಿದ ಅ ತಳವಿರದ ಕತ್ತಲಲ್ಲಿ, ಆ ಹೆಂಗಸಿನ ವಾಸನೆ ಇರಲಿಲ್ಲ ಮತ್ತು ಕೈಗಳು ನಿರುಪಯುಕ್ತವಾಗಿದ್ದವು. ಆದರೆ ಅಮೋನಿಯಾ ವಾಸನೆ ಇತ್ತು. ಅವನು ಅವಳ ಮುಖವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಅವನಿಗೆ ಉರ್ಸುಲಾಳ ಮುಖ ಎದುರಾಯಿತು. ಗೊಂದಲದಲ್ಲಿ ಸಿಲುಕಿದ ಅವನಿಗೆ ಬಹಳ ದಿನಗಳಿಂದ ಬಯಸಿಯೂ ಅದು ತನ್ನಿಂದ ಎಂದಿಗೂ ಸಾಧ್ಯವಿಲ್ಲ ಎಂದುಕೊಂಡದ್ದು ಲಭಿಸಿದೆ ಎಂಬ ಅರಿವಿದ್ದರೂ ತನ್ನ ತಲೆ ಎಲ್ಲಿದೆ, ಕಾಲುಗಳು ಎಲ್ಲಿವೆ ಅಥವಾ ಯಾರ ತಲೆ, ಯಾರ ಕಾಲು ಗೊತ್ತಾಗದೆ, ತಾನೇನು ಮಾಡುತ್ತಿದ್ದೇನೆಂದು ತಿಳಿಯಲಿಲ್ಲ. ಮೂತ್ರ ಪಿಂಡಗಳಲ್ಲಿ ಉಂಟಾಗುತ್ತಿದ್ದ ನುಣುಪು ಚಲನೆಗಳಲ್ಲಿ, ಕರುಳುಗಳ ಹೊರಳಾಟದಲ್ಲಿ, ಭಯ ಮತ್ತು ದಿಗ್ಭ್ರಮೆಯಿಂದ ಓಟ ಕೀಳಬೇಕೆನ್ನುವ ಹಾಗೂ ಅದೇ ವೇಳೆಗೆ ಎಲ್ಲ ಕಳೆದು ಹೋದ ಮೌನದಲ್ಲಿ ಮತ್ತು ಹೆದರಿಕೆಯ ಏಕಾಂತದಲ್ಲಿಯೇ ಎಂದೆಂದಿಗೂ ಇರಬೇಕೆನ್ನುವ ಸ್ಥಿತಿಯಲ್ಲಿದ್ದ. +ಅವಳ ಹೆಸರು ಪಿಲರ್ ಟೆರ್‍ನೆರಾ. ಗುಳೆ ಹೊರಟು ಮಕೋಂದೋವಿಗೆ ಬಂದವರಲ್ಲಿ ಅವಳೂ ಒಬ್ಬಳು. ಅವಳ ಮನೆಯವರು ಅವಳ ಮೇಲೆ ಅತ್ಯಾಚಾರ ಮಾಡಿದವನಿಂದ ದೂರವಿಡಲು ಅವಳನ್ನು ಎಳೆದುಕೊಂಡು ಬಂದಿದ್ದರು. ಆದರೆ ಅವನು ಅವಳಿಗೆ ಇಪ್ಪತ್ತೆರಡು ಆಗುವವರೆಗೂ ಸುಮ್ಮನಿದ್ದ ಮತ್ತು ಅವಳ ಜೊತೆಗಿನ ಸಂಬಂಧವನ್ನು ಬಹಿರಂಗಗೊಳಿಸಲು ಮನಸ್ಸು ಮಾಡಿರಲಿಲ್ಲ. ಏಕೆಂದರೆ ಅವನೊಬ್ಬ ಬೇರೆ ರೀತಿಯ ಮನುಷ್ಯ. ಆದರೆ ತನ್ನ ಸಂಬಂಧ ಒಂದು ನೆಲೆಗೆ ಬಂದ ಮೇಲೆ ಕೊನೆಯ ತನಕ ಅವಳ ಹಿಂದೆಯೇ ಇರುತ್ತೇನೆ ಎಂದು ಭರವಸೆ ಕೊಟ್ಟಿದ್ದ. ಭೂಮಿಯಿಂದ ಇಲ್ಲವೆ ಸಮುದ್ರದಿಂದ ಮೂರು ದಿನ, ಮೂರು ತಿಂಗಳು, ಮೂರು ವರ್ಷದಲ್ಲಿ ಬರುವನೆಂದು ತನ್ನ ಕಾರ್ಡುಗಳು ಆಶ್ವಾಸನೆ ಕೊಟ್ಟಂತೆ ಅವಳು ಗಿಡ್ಡ:ಎತ್ತರ, ಕೆಂಪು;ಕೆಂಚು ಕೂದಲಿನವರಲ್ಲಿ ಹುಡುಕುತ್ತ ಅವನಿಗಾಗಿ ಕಾದು ಸೋತಿದ್ದಳು. ಕಾಯುವುದರ ಜೊತೆ ಅವಳು ತನ್ನ ತೊಡೆಗಳ ಬಲ, ಮೊಲೆಗಳ ದೃಢತೆ ಮತ್ತು ಮೃದುವಾದ ನಡತೆಯನ್ನು ಕಳೆದುಕೊಂಡಿದ್ದಳು. ಆದರೆ ಹೃದಯದ ಹುಚ್ಚಾಟವನ್ನು ಹಾಗೆಯೇ ಉಳಿಸಿಕೊಂಡಿದ್ದಳು. ಆ ಆಟದಿಂದ ಹುಚ್ಚೇರಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪ್ರತಿ ರಾತ್ರಿಯೂ ಆ ರೂಮಿನ ನಿಗೂಢತೆಯಲ್ಲಿ ಅವಳನ್ನೇ ಅನುಸರಿಸುತ್ತಿದ್ದ. ಅವಳಿಟ್ಟ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೆಲವು ಸಲ ಅದರ ಬಾಗಿಲು ಹಾಕಿರುವುದು ಕಂಡುಬರುತ್ತಿತ್ತು. ತಾನು ಒಮ್ಮೆ ಬಾಗಿಲು ಬಡಿಯಲು ಧೈರ್ಯ ಮಾಡಿದರೆ ಕೊನೆಯ ತನ;ಕ ಬಡಿಯಬೇಕೆಂದು ಅವನಿಗೆ ಗೊತ್ತಿತ್ತು. ಸ್ವಲ್ಪ ಸಮಯವಾದ ಮೇಲೆ ಅವನಿಗಾಗಿ ಅವಳು ಬಾಗಿಲು ತೆಗೆಯುತ್ತಿದ್ದಳು. ಹಗಲಿನಲ್ಲಿ ಕನಸು ಕಾಣಲು ಮಲಗಿ, ಹಿಂದಿನ ದಿನ ರಾತ್ರಿ ನಡೆದದ್ದನ್ನು ನೆನಪಿಸಿಕೊಳ್ಳುತ್ತ ಗುಟ್ಟಾಗಿ ಖುಷಿಪಡುತ್ತಿದ್ದ. ಆದರೆ ಅವಳು ಮನೆಗೆ ಬಂದು ಗೆಲುವಿನಿಂದ ಹರಟುತ್ತ ತನ್ನ ಬಗ್ಗೆ ಉಪೇಕ್ಷೆಯಿಂದಿರುವಾಗ ಅವನು ತನ್ನ ಉದ್ವೇಗವನ್ನು ಮುಚ್ಚಿಡಬೇಕಾದ ಪ್ರಯತ್ನ ಮಾಡಬೇಕಾಗಿರಲಿಲ್ಲ. ಏಕೆಂದರೆ ಆ ಹೆಂಗಸಿನ ಸ್ಫೋಟಕ ನಗುವಿಗೆ ಬಾತು ಕೋಳಿಗಳು ಗಾಬರಿಯಿಂದ ಕಾಲು ಕೀಳುವುದಕ್ಕೂ ಮತ್ತು ಅವಳಲ್ಲಿದ್ದ ಅಗೋಚರ ಶಕ್ತಿಯೊಂದು ಅವನೊಳಗಿನ ಉಸಿರಾಟ ಹಾಗೂ ಹೃದಯದ ಬಡಿತವನ್ನು ನಿಯಂತ್ರಿಸುವ ಬಗೆ ಹೇಗೆಂದು ಕಲ್ಪಿಸಿಕೊಳ್ಳುವುದಕ್ಕೂ ಸಮಯವಿರಲಿಲ್ಲ. ಅದು ಅವನಿಗೆ ಗಂಡಸರು ಏಕೆ ಸಾಯಲು ಹೆದರುತ್ತಾರೆ ಎಂದು ತಿಳಿಯಲು ಅವಕಾಶ ಮಾಡಿತ್ತು. ಅವನು ಎಷ್ಟರಮಟ್ಟಿಗೆ ತನ್ನೊಳಗೇ ಸೇರಿ ಹೋಗಿದ್ದನೆಂದರೆ ಉಳಿದವರೆಲ್ಲ ತನ್ನ ತಂದೆ ಮತ್ತು ತಮ್ಮ ರದ್ದಿಯಿಂದ ಉರ್ಸುಲಾಳ ಚಿನ್ನವನ್ನು ಪ್ರತ್ಯೇಕಿಸಿದ ಸುದ್ದಿಯನ್ನು ಹೇಳಿ ಹುಟ್ಟಿಸಿದ್ದ ಸಂತೋಷ ಎಂಥದೆಂದು ಕೂಡ ಅವನಿಗೆ ಅರ್ಥವಾಗಿರಲಿಲ್ಲ. +ಅವರು ಯಶಸ್ವಿಯಾಗಿದ್ದರು. ಅಪಾರ ಶ್ರಮವಹಿಸಿ ಅವರು ಪಟ್ಟು ಹಿಡಿದಿದ್ದರಿಂದ ಉರ್ಸುಲಾಳಿಗೆ ಸಂತೋಷವಾಗಿತ್ತು. ಜನರು ಲ್ಯಾಬೊರೇಟರಿ ನುಜ್ಜಾಗುವಂತೆ ನುಗ್ಗುತ್ತಿದ್ದರೆ ಅವಳು ರಸವಾದವನ್ನು ಕಂಡು ಹಿಡಿದಿದ್ದಕ್ಕೆ ದೇವರಿಗೆ ನಮಿಸಿದಳು. ಅದರ ಸಂಭ್ರಮದ ಆಚರಣೆಗೆ ಪಟಾಕಿಯನ್ನು ತಂದು ಕೊಟ್ಟರು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಆಗಷ್ಟೇ ಕಂಡು ಹಿಡಿದಂತೆ ಮರಳಿ ಪಡೆದ ಬಂಗಾರವನ್ನು ನೋಡಲು ಅನುವುಮಾಡಿಕೊಟ್ಟ. ಎಲ್ಲರಿಗಿಂತ ಕೊನೆಗೆ ಇತ್ತೀಚಿನ ದಿನಗಳಲ್ಲಿ ಲ್ಯಾಬೊರೇಟರಿಯಲ್ಲಿ ಕಾಣಿಸಿಕೊಳ್ಳದಿದ್ದ ಹಿರಿಮಗನ ಮುಂದೆ ನಿಂತ. ಹಳದಿಯಂಥ ವಸ್ತುವನ್ನು ಅವನ ಕಣ್ಣು ಮುಂದಿಟ್ಟು, “ಇದು ಹೇಗೆ ಕಾಣುತ್ತೆ ನಿಂಗೆ” ಎಂದ. ಹೊಸೆ ಅರ್ಕಾದಿಯೋ ಪ್ರಾಮಾಣಿಕವಾಗಿ ಉತ್ತರಿಸಿದ, “ನಾಯಿ ಹೇಲಿನ ಹಾಗಿದೆ.” +ಅವನ ತಂದೆಯ ಬಲವಾದ ಹೊಡೆತಕ್ಕೆ ರಕ್ತ ಮತ್ತು ಕಣ್ಣೀರು ಎರಡೂ ಕಾಣಿಸಿ ಕೊಂಡಿತು. ಆ ದಿನ ರಾತ್ರಿ ಕತ್ತಲಲ್ಲಿ ಪಿಲರ್ ಟೆರ್‍ನೆರಾ ಬಾಟಲಿ ಮತ್ತು ಹತ್ತಿ ಹುಡುಕಿ ಊದಿದ್ದಕ್ಕೆ ಕಾವು ಕೊಟ್ಟಳು. ಅವನಿಗೆ ಕಿರಿಕಿರಿಯಾಗದಂತೆ ತನಗೆ ಇಷ್ಟವಾದ ಎಲ್ಲ ಬಗೆಯಲ್ಲಿ ನಡೆದುಕೊಂಡು ಸಂಗಸುಖದಲ್ಲಿ ಅವನಿಗೆ ನೋವುಂಟಾಗದಂತೆ ನೋಡಿಕೊಂಡಳು. ತಮಗೇ ತಿಳಿಯದ ಪರಿಸ್ಥಿತಿಯಲ್ಲಿ ಅವರು ಪರಸ್ಪರ ಪಿಸುಗುಡುತ್ತಿದ್ದರು. +“ನಿನ್ನ ಜೊತೆ ನಾನೊಬ್ಬನೇ ಇರಲಿಕ್ಕೆ ಇಷ್ಟ. ಇಷ್ಟರಲ್ಲಿ ಎಲ್ರಿಗೂ ಹೇಳಿ ಬಿಡ್ತೀನಿ. ಹೀಗೆ ಕದ್ದು-ಮುಚ್ಚಿ ಭೇಟಿಯಾಗೋದನ್ನ ನಿಲ್ಲಿಸಬಹುದು.” +ಅವಳು ಅವನ ಉದ್ವೇಗವನ್ನು ಕಡಿಮೆ ಮಾಡಲು ಹೋಗಲಿಲ್ಲ. +“ಹಾಗಾದರೆ ತುಂಬ ಒಳ್ಳೇದು…ನಾವಿಬ್ಬರೇ ಇದ್ರೆ ಲೈಟ್ ಉರಿಯೋದಕ್ಕೆ ಬಿಟ್ಟು ಬಿಡೋಣ. ಯಾಕೆಂದರೆ ಯಾರೂ ಅಡ್ಡಿ ಬರದ ಹಾಗೆ ಒಬ್ಬರನ್ನೊಬ್ಬರು ನೋಡಬಹುದು. ನನಗಿಷ್ಟ ಬಂದಷ್ಟು, ನಂಗೆ ಬೇಕಾದಷ್ಟು ನಾನು ಸುಖಿಸಬಹುದು. ನೀನು ನನ್ನ ಕಿವೀಲಿ ನಿನಗೆ ಅನ್ನಿಸಿದ್ದನ್ನೆಲ್ಲ ಹೇಳಬಹುದು.” +ತಂದೆಯ ಮೇಲೆ ಉಂಟಾದ ತೀವ್ರ ರೋಷ ಆ ಸಂಭಾಷಣೆ ಮತ್ತು ಅಂಕೆಯಿಲ್ಲದ ಪ್ರೀತಿಯ ಸಾಧ್ಯತೆ ಅವನಲ್ಲಿ ಧೈರ್ಯವನ್ನು ಹುಟ್ಟಿಸಿತ್ತು. ಅವನು ಯಾವುದೇ ಸಿದ್ಧತೆ ಮಾಡಿಕೊಳ್ಳದೆ ದಿಢೀರನೆ ತಮ್ಮನಿಗೆ ಹೇಳಿದ. ಪ್ರಾರಂಭದಲ್ಲಿ ಅವ್ರೇಲಿಯಾನೋಗೆ ತನ್ನ ಅಣ್ಣನ ಸಾಹಸದಲ್ಲಿ ತೊಂದರೆ ಮತ್ತು ಅಪಾಯ ಕಂಡುಬಂತು. ಆದರೆ ಅದರಲ್ಲಿರುವ ಸಂಭ್ರಮ ಅವನಿಗೆ ಅರ್ಥವಾಗಲಿಲ್ಲ. ಕ್ರಮೇಣ ಅವನು ಆತಂಕಕ್ಕೆ ಒಳಗಾದ. ಅಪಾಯದ ವಿವರಗಳ ಬಗ್ಗೆ ಯೋಚಿಸಿದ. ತನ್ನಣ್ಣನ ಯಾತನೆ ಮತ್ತು ಸುಖದಲ್ಲಿ ತನ್ನನ್ನು ಗುರುತಿಸಿಕೊಂಡ. ಅದರಿಂದ ಅವನಿಗೆ ಭಯ ಮತ್ತು ಸಂತೋಷ ಉಂಟಾಯಿತು. ಕಾದ ಕಲ್ಲಿದ್ದಲ ಹಾಗಿರುವ ಹಾಸಿಗೆಯಲ್ಲಿ ಒಬ್ಬನೇ ಮಲಗಿ ತನ್ನಣ್ಣನಿಗಾಗಿ ಕಾಯುತ್ತ ಬೆಳಗಿನಜಾವದವರೆಗೂ ಎಚ್ಚರವಾಗಿರುತ್ತಿದ್ದ. ಅನಂತರ ಮಾತಾಡಿಕೊಳ್ಳುತ್ತ ಏಳಬೇಕಾದ ಸಮಯಕ್ಕೆ ಏಳುತ್ತಿದ್ದರು. ಅದರಿಂದ ಅವರಿಬ್ಬರಿಗೂ ನಿದ್ದೆಯ ಮಂಪರು ಇರುತ್ತಿತ್ತು. ರಸವಾದ ಮತ್ತು ಅಪ್ಪನ ಜ್ಞಾನದ ಬಗ್ಗೆ ನಿರಾಸಕ್ತಿ ಮೂಡಿ ಏಕಾಂತವನ್ನು ಬಯಸಿದರು. ‘ಈ ಹುಡುಗರಿಗೆ ತಲೆ ಕೆಟ್ಟಿದೆ. ಹೊಟ್ಟೇಲಿ ಹುಳು ಇರಬೇಕು\’ ಎಂದು ಉರ್ಸುಲಾ ಗಂಧಕಮೂಲಿಕೆಯ ಮಾಲ್ಟ್ ಮಾಡಿಕೊಟ್ಟಳು. ಅವರು ಅದನ್ನು ಕುಡಿದು ಒಂದೇ ದಿನ ಹನ್ನೊಂದು ಸಲ ಹಿತ್ತಲಿಗೆ ಹೋದರು. ಬಿದ್ದ ಗುಲಾಬಿ ಬಣ್ಣದ ಹುಳುಗಳನ್ನು ಅವರು ತುಂಬ ಉತ್ಸಾಹದಿಂದ ಎಲ್ಲರಿಗೂ ತೋರಿಸಿದರು. ಇದರಿಂದ ಅವರಿಗೆ ಬೇರೆ ಕಡೆ ಇದ್ದ ಮನಸ್ಸು ಮತ್ತು ತೂಕಡಿಕೆ ಕುರಿತಂತೆ ಉರ್ಸುಲಾಗೆ ಮೋಸಮಾಡಲು ಅನುಕೂಲವಾಯಿತು. ತನ್ನದೇ ಎನ್ನುವಂತೆ ತನ್ನಣ್ಣನ ಅನುಭವವನ್ನು ಅವ್ರೇಲಿಯಾನೋ ಜೀವಿಸುತ್ತಿದ್ದ. ಹಾಗೊಂದು ದಿನ ಅವನು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದಂತೆ ಮಧ್ಯೆ ತಡೆದು, “ಹೇಗನ್ನಿಸುತ್ತೆ ಆಗ?” ಎಂದ. ಹೊಸೆ ಅರ್ಕಾದಿಯೋ ತಕ್ಷಣ ಉತ್ತರಿಸಿದ: +“ಅದು ಭೂಕಂಪದ ಹಾಗೆ.” +ಯಾವುದೋ ಜನವರಿ ಗುರುವಾರ ಬೆಳಗಿನ ಜಾವ ಎರಡು ಗಂಟೆಗೆ ಅಮರಾಂತ ಹುಟ್ಟಿದಳು. ಯಾರೊಬ್ಬರೂ ಬರುವುದಕ್ಕೆ ಮುಂಚೆ ಉರ್ಸುಲಾ ಜಾಗರೂಕತೆಯಿಂದ ಮಗುವನ್ನು ನೋಡಿದಳು. ಅವಳು ಹಗುರಾಗಿ ಒದ್ದೊದ್ದೆಯಾಗಿದ್ದಳು. ಆದರೆ ಎಲ್ಲ ಅಂಗಗಳು ಮನುಷ್ಯರಿಗೆ ಇರುವ ಹಾಗಿದ್ದವು. ಅವ್ರೇಲಿಯಾನೋಗೆ ಮನೆ ತುಂಬ ಜನರು ಸೇರುವ ತನಕ ಮಗು ಕುರಿತು ಗಮನವಿರಲಿಲ್ಲ. ಗೊಂದಲ ಮುತ್ತಿ ಹನ್ನೊಂದು ಗಂಟೆಯಿಂದಲೇ ಹಾಸಿಗೆಯಲ್ಲಿಲ್ಲದ ತನ್ನಣ್ಣನನ್ನು ಹುಡುಕಿಕೊಂಡು ಹೊರಟ. ಇದ್ದಕ್ಕಿದ್ದ ಹಾಗೆ ಹೊರಟ ಅವನಿಗೆ ಪಿಲರ್ ಟೆರ್‍ನೆರಾಳ ಬೆಡ್‌ರೂಮಿನಿಂದ ಅವನನ್ನು ಹೊರಗೆ ಸೆಳೆಯುವುದು ಹೇಗೆ ಎಂದು ಯೋಚಿಸಲೂ ಸಮಯವಿರಲಿಲ್ಲ. ಸಾಕಷ್ಟು ಗಂಟೆಗಳ ಕಾಲ ಅವಳ ಮನೆಯನ್ನು ಸುತ್ತು ಹಾಕಿ ಶಿಳ್ಳೆ ಹೊಡೆದು ಕೊನೆಗೆ ಬೆಳಗಾಗುವುದು ಹತ್ತಿರವಾಗುತ್ತಿದ್ದಂತೆ ಮನೆಗೆ ಹೋಗುವ ಒತ್ತಡ ಮೂಡಿತು. ತಾಯಿಯ ರೂಮಿನಲ್ಲಿ ಹುಟ್ಟಿದ ಮಗುವಿನ ಜೊತೆ ಮುಗ್ಧತೆ ತುಳುಕುತ್ತಿದ್ದ ಮುಖದ ಹೊಸೆ ಅರ್ಕಾದಿಯೋನನ್ನು ಕಂಡ. +ಉರ್ಸುಲಾ ನಲವತ್ತು ದಿನಗಳ ವಿಶ್ರಾಂತಿಯನ್ನು ಪೂರೈಸುತ್ತಿದ್ದ ಹಾಗೆಯೇ ಜಿಪ್ಸಿಗಳು ವಾಪಸು ಬಂದರು. ಅವರು ಐಸ್ ತಂದ ಅದೇ ಗಾರುಡಿಗ ಮತ್ತು ದೊಂಬರಾಟದವರಾಗಿದ್ದರು. ಮೆಲ್‌ಕಿಯಾದೆಸ್‌ನ ತಂಡದವರಂತೆ ಪ್ರಗತಿಯ ಹರಿಕಾರರಾಗಿರದೆ ತಮಾಷೆ ಒದಗಿಸುವವರೆಂದು ಬಹಳ ಬೇಗನೆ ತೋರಿಸಿಕೊಂಡರು. ಅವರು ಐಸ್ ತಂದರು. ಮನುಷ್ಯ ಜೀವನಕ್ಕೆ ಅದರ ಪ್ರಯೋಜನದ ಬಗ್ಗೆ ಪ್ರಚಾರ ಕೊಡದೆ ಸರ್ಕಸ್ಸಿನ ಕುತೂಹಲಕರ ವಸ್ತುವೆನ್ನುವ ರೀತಿಯಲ್ಲಿ ನಡೆದುಕೊಂಡರು. ಈ ಸಲ ಇತರ ಕುಶಲ ವಸ್ತುಗಳ ಜೊತೆಯಲ್ಲಿ ಹಾರುವ ಜಮಖಾನವನ್ನು ತಂದಿದ್ದರು. ಅವರು ಅದನ್ನು ಮನರಂಜನೆಯ ವಸ್ತುವೆಂದಲ್ಲದೆ ಸಾರಿಗೆ ಅಭಿವೃದ್ಧಿಗೊಳಿಸುವ ಸಾಧನವನ್ನಾಗಿ ಪ್ರಸ್ತುತಪಡಿಸಲಿಲ್ಲ. ಜನರೆಲ್ಲ ಹಳ್ಳಿಯ ಮನೆಗಳ ಮೇಲೆ ಹಾರುವ ಅವಕಾಶಕ್ಕಾಗಿ ತಮ್ಮ ಮನೆಯಲ್ಲಿ ಹೂತಿಟ್ಟಿದ್ದ ಕೊನೆಯ ಚಿನ್ನದ ತುಂಡುಗಳನ್ನು ಅಗೆದು ತೆಗೆದರು. ಸಂತೋಷ ತರುವ ಸಾಮೂಹಿಕ ಅಶಿಸ್ತಿನ ಆವರಣದಲ್ಲಿ ಹೊಸೆ ಅರ್ಕಾದಿಯೋ ಮತ್ತು ಪಿಲರ್ ಟೆರ್‍ನೆರಾ ನಿರಾತಂಕವಾಗಿ ಹಲವು ಗಂಟೆಗಳನ್ನು ಕಳೆದರು. ಆ ಗುಂಪಿನಲ್ಲಿ ಸಂತೋಷದಿಂದ ಇದ್ದವರೆಂದರೆ ಆ ಪ್ರೇಮಿಗಳು. ಅವರಿಗೆ ಗುಟ್ಟಾಗಿ ಕಳೆದ ರಾತ್ರಿಗಳಲ್ಲಿ ಕೇವಲ ಸಂತೋಷಕ್ಕಿಂತ ಪ್ರೀತಿಯೇ ಹೆಚ್ಚು ಆಳವಾದ ಆರಾಮು ಕೊಡುವ ಅನುಭವವೇನೋ ಎನ್ನುವ ಅನುಮಾನ ಉಂಟಾಯಿತು. ಆದರೆ ಪಿಲರ್ ಟೆರ್‍ನೆರಾ ತನ್ನ ಸಂಗದಲ್ಲಿ ಹೊಸೆ ಅರ್ಕಾದಿಯೋ ತೋರಿಸಿದ ಉತ್ತೇಜನದಿಂದ ಸಂದರ್ಭ ಮತ್ತು ರೀತಿಗಳ ಗೊಂದಲದಲ್ಲಿ ಸಿಕ್ಕು ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದಳು. +“ನೀನೀಗ ನಿಜಕ್ಕೂ ಗಂಡಸು\’ ಎಂದು ಅವನಿಗೆ ಹೇಳಿದಳು. ಅವಳ ಮಾತಿನ ಅರ್ಥ ತಿಳಿಯದೆ ಹೋದದ್ದರಿಂದ ಅವಳು ಬಿಡಿಸಿ ಹೇಳಿದಳು. +“ನೀನು ಅಪ್ಪನಾಗ್ತೀಯ.” +ಹೊಸೆ ಅರ್ಕಾದಿಯೋಗೆ ಕೆಲವು ದಿನ ಮನೆಯಿಂದ ಹೊರಗೆ ಹೋಗುವ ಧೈರ್ಯವಾಗಲಿಲ್ಲ. ಅಡುಗೆ ಮನೆಯಿಂದ ಅವಳ ಮಾದಕ ನಗೆ ಕೇಳಿಸಿದರೆ ಸಾಕು ಉರ್ಸುಲಾಳ ದಯೆಯಿಂದ ಅಲ್ಲಿನ ಕುಶಲ ವಸ್ತುಗಳಿಗೆ ಮರುಹುಟ್ಟು ಬಂದದ್ದರಿಂದ ಲ್ಯಾಬೊರೇಟರಿಗೆ ಓಡಿ ಹೋಗಿ ತಲೆ ತಪ್ಪಿಸಿಕೊಳ್ಳುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಂಕೆ ತಪ್ಪಿದ ಮಗನನ್ನು ಸಂತೋಷದಿಂದ ಬರಮಾಡಿಕೊಂಡು ತಾನು ಕೊನೆಗೂ ಕೈಗೊಂಡಿದ್ಡ ಸ್ಪರ್ಶಮಣಿಗಳನ್ನು ಹುಡುಕುವ ಕೆಲಸದಲ್ಲಿ ಅವನನ್ನು ತೊಡಗಿಸಿದ. ಒಂದು ಮಧ್ಯಾಹ್ನ ಲ್ಯಾಬೊರೇಟರಿ ಕಿಟಕಿಯ ಎತ್ತರದಲ್ಲಿ ಜಿಪ್ಸಿಯನ್ನು ಕೂರಿಸಿಕೊಂಡು ಹಾರಿ ಹೋಗುತ್ತಿದ್ದ ಹಾರುವ ಜಮಖಾನದ ಬಗ್ಗೆ ಅವನಿಗೆ ಉತ್ಸಾಹ ಬಂತು. ಅನೇಕ ಹಳ್ಳಿಯ ಹುಡುಗರು ಅದರ ಕಡೆ ಕೈ ಬೀಸಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ‘ಅವರು ಕನಸು ಕಾಣಲಿ. ವೈಜ್ಞಾನಿಕ ಸವಲತ್ತುಗಳಿಂದ ಕೆಟ್ಟದಾಗಿರೋ ಜಮಖಾನ ಬಿಟ್ಟು ನಾವು ಅವರಿಗಿಂತ ಚೆನ್ನಾಗಿ ಹಾರಾಡೋಣ\’ ಎಂದ. ಆಸಕ್ತಿಯ ಸೋಗು ಹಾಕಿದ್ದ ಹೊಸೆ ಅರ್ಕಾದಿಯೋಗೆ ಸ್ಪರ್ಶಮಣಿಯ ಶಕ್ತಿ ಏನೆಂದು ಅರ್ಥವಾಗಲಿಲ್ಲ. ಅವನಿಗೆ ಅದು ಸರಿಯಾಗಿ ಮಾಡಿರದ ಬಾಟಲ್ ಥರ ಕಾಣುತ್ತಿತ್ತು. ಅವನಿಗೆ ತನ್ನ ಮಾನಸಿಕ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನಿಗೆ ತನ್ನ ತಂದೆ ಪ್ರಯತ್ನಗಳಲ್ಲಿ ಸೋಲನ್ನು ಕಂಡಾಗ ಆಗುತ್ತಿದ್ದಂತೆ ಅವನಿಗೂ ಮನಃಕ್ಲೇಶ ಉಂಟಾಯಿತು. ರಸವಾದವನ್ನು ಮನಸ್ಸಿಗೆ ತೀರ ಹಚ್ಚಿಕೊಂಡಿದ್ದಾನೆ ಎಂದು ಭಾವಿಸಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನನ್ನು ಲ್ಯಾಬೊರೇಟರಿ ಕೆಲಸದಿಂದ ಮುಕ್ತಗೊಳಿಸಿದ. ಅವ್ರೇಲಿಯಾನೋಗೆ ತನ್ನ ಅಣ್ಣನ ಪರಿಸ್ಥಿತಿಗೆ ಸ್ಪರ್ಶಮಣಿ ಮೂಲವಲ್ಲವೆಂದು ಗೊತ್ತಿತ್ತು. ಆದರೆ ಈ ವಿಷಯದ ಬಗ್ಗೆ ಅವನ ನಂಬಿಕೆಯನ್ನು ಗಳಿಸದೆ ಹೋದ. ಅವನು ಹಿಂದಿದ್ದ ತನ್ನ ಸ್ವಪ್ರೇರಣೆಯನ್ನು ಕಳೆದುಕೊಂಡಿದ್ದ. ಸ್ನೇಹಿತನಾಗಿ ಮಾತಿಗೆ ಲಾಯಕ್ಕಾಗಿದ್ದ ಅವನು ಅಂತರ್ಮುಖಿ ಮತ್ತು ಪ್ರತಿಧೋರಣೆಯ ವ್ಯಕ್ತಿಯಾಗಿದ್ದ. ಏಕಾಂತದಲ್ಲಿರಲು ತವಕಿಸುತ್ತ ಪ್ರಪಂಚದ ವಿರುದ್ಧ ದ್ವೇಷದಿಂದ ಸಿಡಿದು, ಅದೊಂದು ರಾತ್ರಿ ಹಾಸಿಗೆಯಿಂದ ಎದ್ದವನು, ಪಿಲರ್ ಟೆರ್‍ನೆರಾಳ ಮನೆಗೆ ಹೋಗದೆ ಜಾತ್ರೆಯ ಸಂಭ್ರಮದಲ್ಲಿ ಸೇರಿಕೊಳ್ಳಲು ಹೋದ. ಅಲ್ಲಿದ್ದ ಎಲ್ಲ ಬಗೆಯ ವಿಲಕ್ಷಣ ಯಂತ್ರಗಳಲ್ಲಿ ಸುತ್ತು ಹಾಕಿ ಯಾವುದರಲ್ಲೂ ಆಸಕ್ತಿ ಹೊಂದದೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಗುರುತಿಸಿದ. ಅವಳು ಮಗುವಿನ ಹಾಗಿದ್ದು ಸರಗಳನ್ನು ಹಾಕಿಕೊಂಡಿದ್ದ ಹರೆಯದ ಜಿಪ್ಸಿ ಹುಡುಗಿ. ಹೊಸೆ ಅರ್ಕಾದಿಯೋ ತನ್ನ ಇಡೀ ಜೀವನದಲ್ಲಿ ಅಂಥ ಚೆಲುವೆಯನ್ನು ನೋಡಿರಲಿಲ್ಲ. ಅವಳು ತನ್ನ ತಂದೆ ತಾಯಿಗೆ ಅವಿಧೇಯನಾಗಿದ್ದರಿಂದ ಹಾವಾಗಿ ಪರಿವರ್ತನೆ ಹೊಂದಿದ ಮನುಷ್ಯನ ವಿಷಾದಪೂರ್ಣ ಅವಸ್ಥೆಯನ್ನು ನೋಡುತ್ತಿದ್ದವರ ಗುಂಪಿನಲ್ಲಿ ಇದ್ದಳು. +ಹೊಸೆ ಅರ್ಕಾದಿಯೋ ಆ ಕಡೆ ಗಮನ ಕೊಡಲಿಲ್ಲ. ಹಾವಿನ ಮನುಷ್ಯನೊಂದಿಗೆ ದುಃಖಪೂರ್ಣ ಪ್ರಶ್ನಾವಳಿ ಜರುಗುತ್ತಿದ್ದಂತೆ ಗುಂಪಿನಲ್ಲಿ ಅವನು ದಾರಿ ಮಾಡಿಕೊಂಡು ಜಿಪ್ಸಿ ಹುಡುಗಿಯ ಹಿಂದೆ ಬಂದು ಅವಳ ಬೆನ್ನಿಗೆ ಒತ್ತಿಕೊಂಡು ನಿಂತ. ಅವಳು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಹೊಸೆ ಅರ್ಕಾದಿಯೋ ಮತ್ತಷ್ಟು ಜೋರಾಗಿ ಅವಳ ಬೆನ್ನಿಗೆ ಒತ್ತಿದ. ಆಗವಳಿಗೆ ಅವನ ಸ್ಪರ್ಶದ ಅನುಭವವಾಯಿತು. ಅವಳು ಅಲ್ಲಾಡದೆ ಆಶ್ಚರ್ಯ ಮತ್ತು ಭಯದಿಂದ ಆತುಕೊಂಡು ನಂಬಲಾಗದೆ ನಿಂತು ಕೊನೆಗೆ ಮುಖ ತಿರುಗಿಸಿ ಅವನ ಕಡೆ ಮೋಹಕ ನಗುವಿನಿಂದ ನೋಡಿದಳು. ಆ ಘಳಿಗೆಯಲ್ಲಿ ಇಬ್ಬರು ಜಿಪ್ಸಿಗಳೂ ಹಾವಿನ ಮನುಷ್ಯನನ್ನು ಬೋನಿನೊಳಗೆ ಹಾಕಿ ಅವನನ್ನು ಟೆಂಟ್‌ನೊಳಕ್ಕೆ ತೆಗೆದುಕೊಂಡು ಹೋದರು. ಆ ಪ್ರದರ್ಶನವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಹೇಳಿದಳು: ಮಹನೀಯರೆ ಮತ್ತು ಮಹಿಳೆಯರೆ, ನಾವೀಗ ನೋಡಬಾರದ್ದನ್ನು ನೋಡಿದ ಶಿಕ್ಷೆಗಾಗಿ, ನೂರೈವತ್ತು ವರ್ಷಗಳಿಂದ ಪ್ರತಿ ರಾತ್ರಿ ಈ ಸಮಯಕ್ಕೆ ಸರಿಯಾಗಿ ಹೆಂಗಸೊಬ್ಬಳು ತನ್ನ ತಲೆಯನ್ನು ಕತ್ತರಿಸಿಕೊಳ್ಳಲೇಬೇಕಾದಂಥ ಒಂದು ಘೋರವಾದದ್ದನ್ನು ತೋರಿಸಲಿದ್ದೇವೆ. ಹೊಸೆ ಅರ್ಕಾದಿಯೋ ಮತ್ತು ಜಿಪ್ಸಿ ಹುಡುಗಿ ತಲೆ ಕತ್ತರಿಸುವುದನ್ನು ನೊಡಲಿಲ್ಲ. ಅವಳ ಟೆಂಟ್‌ಗೆ ಹೋಗಿ ಬಟ್ಟೆಗಳನ್ನು ಕಳಚುತ್ತ ಅತೀವ ಆತಂಕದಲ್ಲಿ ಪರಸ್ಪರ ಮುತ್ತಿಟ್ಟರು. ತಾನು ಗಂಜಿ ಮಾಡಿದ ಲೇಸ್‌ಗಳಿದ್ದ ಬಟ್ಟೆಯನ್ನು ಅವಳು ಬಿಚ್ಚಿದಾಗ ಹೆಚ್ಚು ಕಮ್ಮಿ ಅವಳ ಮೈಮೇಲೆ ಏನೂ ಇರಲಿಲ್ಲ. ಸಣ್ಣ ಆಕೃತಿಯ ಅವಳಿಗೆ ಪುಟ್ಟ ಮೊಲೆಗಳಿದ್ದವು. ಅವಳ ಕಾಲುಗಳು ಹೊಸೆ ಅರ್ಕಾದಿಯೋನ ಕೈಗಳಿಗೆ ಸಮನಾಗಿರಲಿಲ್ಲ. ಅವಳ ಪುಟ್ಟ ಆಕಾರ, ಹದವಾದ ಕಾವು ಮತ್ತು ತಕ್ಷಣದ ತೀರ್ಮಾನಗಳು ಅದನ್ನು ಸರಿದೂಗಿದವು. ಆದರೂ ಹೊಸೆ ಅರ್ಕಾದಿಯೋ ಅವಳಿಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ಅವರಿದ್ದದ್ದು ಜಿಪ್ಸಿಗಳು ವ್ಯಾಪಾರಕ್ಕಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗುವ ಒಂದು ಬಗೆಯ ಎಲ್ಲರ ಬಳಕೆಯ ಟೆಂಟ್ ಆಗಿತ್ತು. ಜೊತೆಗೆ ಚದುರಂಗದಾಟಕ್ಕೆ ಹಾಸಿಗೆಯನ್ನು ಪಣಕ್ಕಿಡುತ್ತಿದ್ದರು. ಮಧ್ಯದಲ್ಲಿ ಇಳಿ ಬಿಟ್ಟಿದ್ದ ದೀಪ ಸುತ್ತಲೆಲ್ಲ ಬೆಳಕು ಬೀರಿತ್ತು. ಮುದ್ದಾಟದ ನಡುವೆ ಏನು ಮಾಡಬೇಕೆಂದು ತಿಳಿಯದೆ ಹೊಸೆ ಅರ್ಕಾದಿಯೋ ಬೆತ್ತಲೆ ಮೈ ಚಾಚಿದರೆ, ಅವಳು ಅವನನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಮಾಂಸಲವಾಗಿದ್ದ ಜಿಪ್ಸಿ ಹೆಂಗಸೊಬ್ಬಳು ಗಂಡಸೊಬ್ಬನ ಜೊತೆ ಬಂದಳು. ಅವನು ಅಲೆಮಾರಿಯೂ ಆಗಿರಲಿಲ್ಲ ಮತ್ತು ಆ ಹಳ್ಳಿಯವನೂ ಆಗಿರಲಿಲ್ಲ. ಹಾಸಿಗೆಯ ಬಳಿ ಬಂದ ಅವರಿಬ್ಬರೂ ಬಟ್ಟೆ ಬಿಚ್ಚಲು ಪ್ರಾರಂಭಿಸಿದರು. ಅವಳು ವಿಶೇಷ ಉದ್ದೇಶವಿರದೆ ಹೊಸೆ ಅರ್ಕಾದಿಯೋನ ದೊಡ್ಡ ಗಾತ್ರದ ಗುಪ್ತಾಂಗವನ್ನು ಕನಿಕರ ತುಂಬಿದ ನೋಟದಿಂದ ನೋಡಿದಳು. +“ದೇವರು ಈಗಿರೋ ಹಾಗೇನೇ ಇಟ್ಟಿರಲಿ” ಎಂದು ಕಣ್ಣರಳಿಸಿದಳು. +ಹೊಸೆ ಅರ್ಕಾದಿಯೋನ ಸಂಗಾತಿ ತಮ್ಮಷ್ಟಕ್ಕೆ ತಮ್ಮನ್ನು ಬಿಡಲು ಅವರಿಗೆ ಹೇಳಿದಳು. ಅವರು ಹಾಸಿಗೆ ಹತ್ತಿರ ನೆಲದ ಮೇಲೆ ಮಲಗಿದರು. ಅವರ ಉದ್ವೇಗ ಹೊಸೆ ಅರ್ಕಾದಿಯೋನ ಮೇಲೆ ಪ್ರಭಾವ ಬೀರಿತು. ಪ್ರಥಮ ಸಂಗದಲ್ಲಿ ಹುಡುಗಿಯ ಮೂಳೆಗಳು ಕೊಂಡಿಗಳನ್ನು ಕಳಚಿಕೊಂಡಂತಾಗಿ ಆಟದ ವಸ್ತುಗಳಿದ್ದ ಪೆಟ್ಟಿಗೆಯ ಹಾಗೆ ಶಬ್ದ ಮಾಡಿದವು. ಅವಳ ಚರ್ಮ ಸೀಳುವಂತೆ ಬೆವರು ಮೂಡಿ ಕಣ್ಣಲ್ಲಿ ನೀರು ಬಂದು ಇಡೀ ದೇಹ ನೋವಿನ ಮುಲುಗಾಟವನ್ನು ಹೊಮ್ಮಿಸಿತಲ್ಲದೆ ಎಂಥದೋ ಮಣ್ಣಿನ ವಾಸನೆ ಸೂಸಿತು. ಅವಳು ಆಘಾತವನ್ನು ದೃಢವಾಗಿ ಧೈರ್ಯದಿಂದ ಸಹಿಸಿಕೊಂಡದ್ದು ಮೆಚ್ಚಬೇಕಾದ ಸಂಗತಿ. ಹೊಸೆ ಅರ್ಕಾದಿಯೋಗೆ ಗಾಳಿಯಲ್ಲಿ ತೇಲಿದಂತಾಗಿ, ಪೋಲಿ ಬಡಬಡಿಕೆಗಳು ಹೃದಯದಿಂದ ಪುಟಿದೆದ್ದು ಅವಳ ಕಿವಿಯನ್ನು ಸೇರಿದ ಮೇಲೆ ಮತ್ತೆ ಅವು ಅವಳ ಬಾಯಿಂದ ಅವಳದೇ ಭಾಷೆಯಲ್ಲಿ ಹೊರಬಂದವು. ಆ ದಿನ ಗುರುವಾರ. ಶನಿವಾರ ರಾತ್ರಿ ಹೊಸೆ ಅರ್ಕಾದಿಯೋ ತಲೆಗೆ ಕೆಂಪು ಬಟ್ಟೆ ಸುತ್ತಿಕೊಂಡು ಆ ಜಿಪ್ಸಿಯ ಜೊತೆ ಹೊರಟ. +ಅವನು ಕಾಣದೇ ಹೋದದ್ದನ್ನು ಗಮನಿಸಿದ ಉರ್ಸುಲಾ ಹಳ್ಳಿಯಲ್ಲೆಲ್ಲ ಹುಡುಕಿದಳು. ಜಿಪ್ಸಿ ಕ್ಯಾಂಪಿನಲ್ಲಿ ಉಳಿದದ್ದೆಲ್ಲ ಒಂದು ರದ್ದಿ ಗುಂಡಿ ಮತ್ತು ಅಲ್ಲಲ್ಲಿ ಹೊಗೆಯಾಡುತ್ತಿದ್ದ ಬೆಂಕಿ ಒಟ್ಟು ಮಾಡಿದ ಸ್ಥಳಗಳು. ಅಳಿದುಳಿದ ವಸ್ತುಗಳಲ್ಲಿ ಮಣಿಗಳನ್ನು ಹುಡುಕುತ್ತಿದ್ದವನೊಬ್ಬ, ತಾನು ಹಿಂದಿನ ರಾತ್ರಿ ಅವನನ್ನು ಹಾವಿನ ಮನುಷ್ಯನಿದ್ದ ಟೆಂಟನ್ನು ತಳ್ಳುತ್ತಿದ್ದ ತಿರುಗಾಟದವರ ಸಂಗಡ ನೋಡಿದ್ದಾಗಿ ಹೇಳಿದ. ‘ಅವನು ಜಿಪ್ಸಿ ಆಗಿ ಬಿಟ್ಟಿದಾನೆ\’ ಎಂದು ಅವನು ಕಾಣದೆ ಹೋದದ್ದರ ಬಗ್ಗೆ ಕಿಂಚಿತ್ ಆತಂಕ ತೋರಿಸಿರದ ಗಂಡನಿಗೆ ಕೂಗಿ ಹೇಳಿದಳು. +ಸಾವಿರ ಸಲ ಗಾರೆಯನ್ನು ಅರೆದು ಮತ್ತೆ ಬಿಸಿ ಮಾಡಿ ಅರೆದು ಮಾಡುತ್ತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಹಾಗಾಗಿದ್ರೆ ಬಹಳ ಒಳ್ಳೇದು. ಅದರಿಂದಲಾದ್ರೂ ಅವನು ಮನುಷ್ಯನಾಗೋದನ್ನ ಕಲೀತಾನೆ” ಎಂದ. +ಜಿಪ್ಸಿಗಳು ಎಲ್ಲಿಗೆ ಹೋದರೆಂದು ಉರ್ಸುಲಾ ಕೇಳಿದಳು. ಅವರಿವರು ಹೇಳಿದ ಕಡೆ ಹೋಗುತ್ತ ಅವಳು ಇನ್ನೂ ಅವರನ್ನು ತಲುಪಲು ಸಾಧ್ಯವಿದೆ ಎಂದುಕೊಂಡಳು. ಅವಳು ಹಳ್ಳಿಯಿಂದ ಬಹಳ ದೂರ ಹೋಗುತ್ತಿದ್ದಂತೆ ವಾಪಸು ಹೋಗುವುದನ್ನು ಮರೆತು ಬಿಟ್ಟಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಬೆಳಿಗ್ಗೆ ಎಂಟರ ತನಕ ತನ್ನ ಹೆಂಡತಿ ಇಲ್ಲದಿರುವುದು ತಿಳಿಯಲಿಲ್ಲ. ಗೊಬ್ಬರ ಹಾಸಿನಲ್ಲಿ ಇತರೆ ವಸ್ತುಗಳನ್ನು ಬೆಚ್ಚಗಾಗಿಸಲು ಹಾಕಿ, ಅಳುತ್ತಿದ್ದ ಅಮರಾಂತಳಿಗೆ ಏನಾಗಿದೆ ಎಂದು ನೋಡಲು ಹೋದಾಗಲೇ ಅವನಿಗೆ ಗೊತ್ತಾದದ್ದು. ಕೆಲವೇ ಗಂಟೆಗಳಲ್ಲಿ ಇತರೆ ಆಯುಧಗಳಿಂದ ಸಿದ್ಧರಾದ ಜನರ ಗುಂಪನ್ನು ಒಟ್ಟು ಮಾಡಿದ. ಅಮರಾಂತಳನ್ನು ನೋಡಿಕೊಳ್ಳುತ್ತೇನೆಂದು ಬಂದವಳಿಗೆ ವಹಿಸಿಕೊಟ್ಟು ಉರ್ಸುಲಾಳನ್ನು ಹುಡುಕಾಡುತ್ತ ಎಲ್ಲೆಂದರಲ್ಲಿ ಅಲೆದಾಡಿದ. ಅವರ ಜೊತೆ ಅವ್ರೇಲಿಯಾನೋ ಹೋದ. ಕೆಲವು ಇಂಡಿಯನ್ನರು ಅವರಿಗೆ ಅರ್ಥವಾಗದ ಭಾಷೆಯಲ್ಲಿ ಸನ್ನೆ ಮಾಡುತ್ತ ತಾವು ಯಾರನ್ನೂ ನೋಡಿಲ್ಲವೆಂದರು. ಮೂರು ದಿನಗಳ ವ್ಯರ್ಥ ಪ್ರಯತ್ನವಾದ ಮೇಲೆ ಅವರು ಹಳ್ಳಿಗೆ ಹಿಂತಿರುಗಿದರು. +ಕೆಲವು ವಾರಗಳ ತನಕ ತನಗೆ ವಿರಹದ ಭಾವ ಮುತ್ತುವುದಕ್ಕೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವಕಾಶ ಮಾಡಿಕೊಟ್ಟ. ತಾಯಿಯ ಹಾಗೆ ಅಮರಾಂತಳಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಿ ದಿನಕ್ಕೆ ನಾಲ್ಕು ಸಲ ಊಟ ಮಾಡಿಸುವುದಕ್ಕಾಗಿ ಕರೆದುಕೊಂಡು ಹೋಗಿ ರಾತ್ರಿ ಉರ್ಸುಲಾಗೆ ಹಾಡಲು ಬಾರದಿದ್ದ ಹಾಡುಗಳನ್ನು ಹಾಡುತ್ತಿದ್ದ. ಕೆಲವು ಸಂದರ್ಭಗಳಲ್ಲಿ ಪಿಲರ್ ಟೆರ್‍ನೆರಾ ಉರ್ಸುಲಾ ಬರುವ ತನಕ ಮನೆಗೆಲಸವನ್ನೆಲ್ಲ ಮಾಡುವುದಾಗಿ ಮುಂದೆ ಬಂದಳು. ಜರುಗಿದ ದುರದೃಷ್ಟದಿಂದ ಅವ್ರೇಲಿಯಾನೋನ ಸ್ವಭಾವಜನ್ಯ ಶಕ್ತಿ ಹೆಚ್ಚು ಜಾಗೃತವಾಗಿತ್ತು. ಅವಳು ಬರುವುದನ್ನು ಕಂಡಾಗ ಅವನಲ್ಲಿ ಅತೀಂದ್ರಿಯ ಶಕ್ತಿ ಮಿನುಗಿಂದಾಯಿತು. ತನ್ನಣ್ಣ ತಪ್ಪಿಸಿಕೊಂಡಿರುವುದಕ್ಕೂ ಮತ್ತು ತನ್ನ ತಾಯಿ ಕಾಣೆಯಾಗಿರುವುದಕ್ಕೂ ವಿವರಿಸಲಾಗದ ರೀತಿಯಲ್ಲಿ ಇವಳೇ ಕಾರಣ ಎಂದು ತಿಳಿಯಿತು. ಅವಳನ್ನು ಮಾತಾಡಿಸದೆ, ತೀವ್ರ ಪ್ರಕೋಪದಿಂದ ನಡೆದುಕೊಂಡು ಮತ್ತೆ ಮನೆಗೆ ಬಾರದೆ ಇರುವ ಹಾಗೆ ಮಾಡಿದ. +ಕಾಲ ಎಲ್ಲವನ್ನೂ ಸರಿದೂಗಿಸುತ್ತದೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಅವನ ಮಗನಿಗೆ ಲ್ಯಾಬೊರೇಟರಿಗೆ ಹೋಗಿ ಧೂಳು ಹೊಡೆದು ನೀರಿನ ಪೈಪ್ ಸರಿಮಾಡಿ ಗೊಬ್ಬರದ ಹಾಸಿನಲ್ಲಿ ಅನೇಕ ತಿಂಗಳು ನಿದ್ದೆ ಹೊಡೆಯವುದಕ್ಕೆ ಬಿಟ್ಟಿದ್ದ ವಸ್ತುಗಳನ್ನು ಮತ್ತೆ ಹೊಂದಿಸುತ್ತ ತೊಡಗಿಸಿಕೊಂಡದ್ದು ಯಾವಾಗ ಎಂದು ಅವರಿಬ್ಬರಿಗೂ ತಿಳಿದಿರಲಿಲ್ಲ. ಬಟ್ಟಿಯ ತೊಟ್ಟಿಯಲ್ಲಿ ಪಾದರಸದ ಆವಿ ತುಂಬಿಕೊಂಡಿದ್ದ ಚಿಕ್ಕ ರೂಮಿನಲ್ಲಿ ಅಮರಾಂತಳೂ ಕೂಡ ತಂದೆ ಮತ್ತು ಅಣ್ಣ ತನ್ಮಯರಾಗಿ ಮಾಡುತ್ತಿದ್ದ ಕೆಲಸವನ್ನು ಕುತೂಹಲದಿಂದ ನೋಡಿದಳು. ಉರ್ಸುಲಾ ಹೋಗಿ ಎಷ್ಟೋ ತಿಂಗಳಾದ ಮೇಲೆ ಕೆಲವು ವಿಚಿತ್ರ ಸಂಗತಿಗಳು ಜರುಗಲು ಶುರುವಾಯಿತು. ಬಹಳ ದಿನಗಳ ಹಿಂದೆ ಪೆಟ್ಟಿಗೆಯಲ್ಲಿ ಇಟ್ಟಿದ್ದ ಖಾಲಿ ಫ್ಲಾಸ್ಕ್ ಜರುಗಿಸಲಾರದಷ್ಟು ಭಾರವಾಗಿತ್ತು. ಟೇಬಲ್ ಮೇಲೆ ಇಟ್ಟಿದ್ದ ಪಾತ್ರೆಯಲ್ಲಿನ ನೀರು ಯಾವ ಉರಿಯೂ ಇಲ್ಲದೆ ಕುದಿಯುವುದಕ್ಕೆ ಪ್ರಾರಂಭಿಸಿ, ಅರ್ಧ ಗಂಟೆಯಲ್ಲಿ ಪೂರ್ತಿಯಾಗಿ ಆವಿಯಾಯಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಅವನ ಮಗ ವಿವರಿಸಲಾಗದೆ ಬೆರಗಿನಿಂದ ನೋಡಿ, ಅದು ಆ ವಸ್ತುವಿನಿಂದ ಉಂಟಾದದ್ದು ಎಂದು ವ್ಯಾಖ್ಯಾನಿಸಿದರು. ಒಂದು ದಿನ ಅಮರಾಂತಳಿದ್ದ ತೊಟ್ಟಿಲು ತನ್ನಷ್ಟಕ್ಕೆ ಜರುಗಲು ಪ್ರಾರಂಭಿಸಿದಾಗ ಅದನ್ನು ತಡೆ ಹಿಡಿಯಲು ಗಾಬರಿಗೊಂಡು ಅವಸರದಿಂದ ಅವ್ರೇಲಿಯಾನೋ ಬಂದರೂ, ಅದು ಇಡೀ ರೂಮಿನಲ್ಲಿ ಒಂದು ಸುತ್ತು ಹಾಕಿತು. ಆದರೆ ಅವನ ತಂದೆ ಅದರಿಂದ ವಿಚಲಿತನಾಗಲಿಲ್ಲ. ತೊಟ್ಟಿಲನ್ನು ಅದರ ಸ್ಥಾನದಲ್ಲಿಟ್ಟು ಟೇಬಲ್ಲಿಗೆ ಅದನ್ನು ಕಟ್ಟಿದ. ಅವನಿಗೆ ಬಹಳ ದಿನಗಳಿಂದ ಕಾದಿದ್ದ ಸಂಗತಿ ಇನ್ನೇನು ಎದುರಾಗಲಿದೆ ಎನ್ನಿಸಿತು. ಆ ಸಂದರ್ಭದಲ್ಲಿ ಅವ್ರೇಲಿಯಾನೋಗೆ ಅವನು ಹೇಳಿದ್ದು ಕೇಳಿಸಿತು: +“ನೀನು ದೇವರಿಗೆ ಹೆದರದಿದ್ರೆ ಪರವಾಗಿಲ್ಲ, ಲೋಹಗಳಿಂದಾಗಿ ಅವನಿಗೆ ಹೆದರು.” +ಇದ್ದಕ್ಕಿದ್ದ ಹಾಗೆ ಕಾಣೆಯಾಗಿ ಎರಡು ತಿಂಗಳಾದ ಮೇಲೆ ಉರ್ಸುಲಾ ವಾಪಸು ಬಂದಳು. ಅವಳು ಹೆಚ್ಚು ಉತ್ಸಾಹದಿಂದ ಹಳ್ಳಿಯಲ್ಲಿ ಇರುವವರಿಗೆ ಗೊತ್ತಿರದ ಹೊಸ ಬಟ್ಟೆ ತೊಟ್ಟು ಬಂದಿದ್ದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಆ ಅನಿರೀಕ್ಷಿತವನ್ನು ತಡೆದುಕೊಳ್ಳುವುದಕ್ಕೆ ಆಗಲಿಲ್ಲ. “ಇದೇನಿದು….ಹೀಗಾಗತ್ತೆ ಅಂತ ನಂಗೆ ಗೊತ್ತಿತ್ತು” ಎಂದ. ನಿಜಕ್ಕೂ ಅವನು ಅದನ್ನು ನಂಬಿದ್ದ. ಏಕೆಂದರೆ ದೀರ್ಘಕಾಲ ವಸ್ತುಗಳನ್ನು ಪರಿಪರಿಯಾಗಿ ಹೊಂದಿಸುತ್ತ ತನ್ನಷ್ಟಕ್ಕೆ ತಾನು ಕೂಡಿಹಾಕಿಕೊಂಡಿದ್ದಾಗ ಅವನ ಬಹಳ ದಿನದ ಬಯಕೆಯ ಪವಾಡ, ತತ್ವ ಶಾಸ್ತ್ರಜ್ಞರ ಹಾಗಿರಲಿಲ್ಲ. ಲೋಹಗಳು ಜೀವಿಸುವ ಹಾಗೆ ಅವುಗಳ ಉಸಿರಾಟವನ್ನು ಸರಳಗೊಳಿಸುವುದಾಗಲಿ, ಬಾಗಿಲಿನ ತಿರುಗಣಿ ಮತ್ತು ಬೀಗಗಳು ಬಂಗಾರವಾಗಿ ಪರಿವರ್ತಿತವಾಗುವುದಾಗಲಿ ಆಗಿರಲಿಲ್ಲ. ಈಗಷ್ಟೆ ಆದಂತೆ ಆಗಲೆಂದು ಅವನ ಹೃದಯದಾಳದ ಕೋರಿಕೆಯಿತ್ತು: ಅದು ಉರ್ಸುಲಾ ವಾಪಸು ಬರುವುದು. ಆದರೆ ಅವಳು ಅವನ ಉತ್ಸಾಹದಲ್ಲಿ ಭಾಗಿಯಾಗಲಿಲ್ಲ. ಒಂದು ಗಂಟೆಯ ಹೊತ್ತು ಎಲ್ಲಿಗೋ ಹೋಗಿ ಬಂದವಳಂತೆ ಅವಳು ಅವನಿಗೊಂದು ಸಾಂಪ್ರದಾಯಿಕ ಮುತ್ತು ಕೊಟ್ಟು ಹೇಳಿದಳು: +“ಬಾಗಿಲ ಹೊರಗೆ ನೋಡು.” +ಹೊಸೆ ಅರ್ಕಾದಿಯೋ ಬ್ಯುಂದಿಯಾ ಹೊರಗೆ ಬಂದು ಜನರ ಭಾರಿ ಗುಂಪನ್ನು ಕಂಡು ಉಂಟಾದ ಅತೀವ ಆಶ್ಚರ್ಯದಿಂದ ಹೊರಬರಲು ಅವನಿಗೆ ಸಾಕಷ್ಟು ಸಮಯ ಹಿಡಿಯಿತು. ಅವರು ಜಿಪ್ಸಿಗಳಾಗಿರಲಿಲ್ಲ. ಅವರು ತಮ್ಮಂತೆ ಉದ್ದ ಕದಲಿನ ಕಪ್ಪು ಚರ್ಮದ ತಮ್ಮ ಭಾಷೆಯನ್ನೇ ಆಡುವ ಮತ್ತು ತಮ್ಮ ಹಾಗೆಯೇ ನೋವು ಕಂಡ ಗಂಡಸರು, ಹೆಂಗಸರಾಗಿದ್ದರು. ಅವರು ತಿನ್ನುವ ಪದಾರ್ಥದ ಮೂಟೆಗಳನ್ನು ಹೊತ್ತಿದ್ದರು. ಪೀಠೋಪಕರಣ ಹಾಗೂ ಪಾತ್ರೆ ಪಡಗ ಮತ್ತು ಮನೆಬಳಕೆಯ ಸಾಮಾನುಗಳಿರುವ ಎತ್ತಿನ ಗಾಡಿಗಳಿದ್ದವು. ಜೊತೆಗೆ ಹೆಚ್ಚು ಗಡಿಬಿಡಿ ಇರದೆ ನಿತ್ಯ ಬಳಕೆಯ ಸರಳ ಶುದ್ಧವಾದ ಮಣ್ಣಿನ ಸಾಮಾನುಗಳು. ಅವರು ಎರಡು ದಿನಗಳ ನಡಿಗೆಯ ದೂರದ ಜೌಗು ಪ್ರದೇಶ ಆಚೆಯ ಭಾಗದಿಂದ ಬಂದವರು. ಅಲ್ಲಿ ಪ್ರತಿ ದಿನವೂ ಟಪಾಲು ಬರುವ ಊರುಗಳಿದ್ದವು. ಅಲ್ಲದೆ ಒಳ್ಳೆಯ ಜೀವನಕ್ಕೆ ಬೇಕಾಗುವ ವಸ್ತುಗಳ ಬಗ್ಗೆ ಅವರಿಗೆ ಪರಿಚಯವಿತ್ತು. ಉರ್ಸುಲಾಗೆ ಜಿಪ್ಸಿಗಳು ಸಿಕ್ಕಿರಲಿಲ್ಲ. ಆದರೆ ಅವಳು ಪ್ರಯೋಗಗಳಿಂದ ತಲೆ ಕೆಡಿಸಿಕೊಂಡಿದ್ದ ತನ್ನ ಗಂಡ ಕಂಡು ಹಿಡಿಯಲು ಸಾಧ್ಯವಾಗದೇ ಹೋದದ್ದನ್ನು ಪತ್ತೆ ಮಾಡಿದ್ದಳು. +೩ +ಪಿಲರ್ ಟೆರ್‍ನೆರಾಳ ಮಗನನ್ನು ಅವನು ಹುಟ್ಟಿದ ಎರಡು ವಾರಗಳ ನಂತರ ಅವನ ತಾತಂದಿರ ಮನೆಗೆ ತರಲಾಯಿತು. ತನ್ನ ವಂಶದ ಕುಡಿಯೊಂದು ದಿಕ್ಕಿಲ್ಲದೆ ಅಲೆಯುವುದನ್ನು ಸಹಿಸಿಕೊಳ್ಳಲಾಗದ ಹೊಸೆ ಅರ್ಕಾದಿಯೋನ ಬಲವಂತಕ್ಕೆ ಉರ್ಸುಲಾ ಗೊಣಗುಟ್ಟಿಕೊಂಡೇ ಒಪ್ಪಿಕೊಂಡಳು. ಆದರೆ ಮಗುವಿಗೆ ಎಂದಿಗೂ ನಿಜಾಂಶ ತಿಳಿಯಬಾರದು ಎನ್ನುವ ಷರತ್ತು ಹಾಕಿದ್ದ. ಮಗುವಿಗೆ ಹೊಸೆ ಅರ್ಕಾದಿಯೋ ಎಂಬ ಹೆಸರಿಟ್ಟಿದ್ದರೂ ಗೊದಲಕ್ಕೆ ಅವಕಾಶವಿರದ ಹಾಗೆ ಕೇವಲ ಅರ್ಕಾದಿಯೋ ಎಂದು ಕರೆಯತೊಡಗಿದ್ದರು. ಅ ದಿನಗಳಲ್ಲಿ ಊರಿನಲ್ಲಿ ಎಷ್ಟೊಂದು ಚಟುವಟಿಕೆ ಮತ್ತು ಮನೆಯಲ್ಲಿ ಕೆಲಸ ಕಾರ್ಯಗಳು ಇದ್ದುವೆಂದರೆ ಮಕ್ಕಳ ಆರೈಕೆಯ ಬಗ್ಗೆ ಗಮನ ಕಡಿಮೆಯಾಗಿತ್ತು. ಅವುಗಳನ್ನು ನೋಡಿಕೊಳ್ಳುವುದಕ್ಕೆ ಕೆಲವು ವರ್ಷಗಳ ಹಿಂದೆ ಬುಡಕಟ್ಟಿನವರಿಗೆ ಹಬ್ಬಿದ್ದ, ಮರೆವಿನ ರೋಗದಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ತನ್ನ ಅಣ್ಣನ ಜೊತೆ ಬಂದಿದ್ದ ಇಂಡಿಯನ್ ಹೆಂಗಸು ವಿಸಿಟಾಸಿಯೋನ್‌ಗೆ ಒಪ್ಪಿಸಲಾಗಿತ್ತು. ಅವರಿಬ್ಬರೂ ಸೌಮ್ಯವಾಗಿದ್ದು ಸಹಾಯ ಮಾಡಲು ಎಷ್ಟು ಉತ್ಸುಕರಾಗಿದ್ದರೆಂದರೆ, ಉರ್ಸುಲಾ ಮನೆಗೆಲಸವನ್ನು ಅವರಿಗೆ ಒಪ್ಪಿಸಿದ್ದಳು. ಇದರಿಂದಾಗಿ ಅರ್ಕಾದಿಯೋ ಮತ್ತು ಅಮರಾಂತಳಿಗೆ ಸ್ಪ್ಯಾನಿಷ್‌ಗಿಂತ ಗುಜರಾತಿ ಭಾಷೆಯನ್ನು ಮಾತನಾಡುವುದಕ್ಕೆ ಸಾಧ್ಯವಾಯಿತು. ಅಲ್ಲದೆ ರುಚಿಕರ ಪ್ರಾಣಿಗಳ ವ್ಯವಹಾರದಲ್ಲಿ ಮುಳುಗಿ ಹೋಗಿ, ಪುರುಸೊತ್ತಿರದ ಉರ್ಸುಲಾಗೆ ತಿಳಿಯದ ಹಾಗೆ, ಹಲ್ಲಿಯ ರಸ ಮತ್ತು ಜೇಡರ ಮೊಟ್ಟೆಗಳನ್ನು ತಿನ್ನುವುದನ್ನು ಕಲಿತಿದ್ದರು. ಉರ್ಸುಲಾಳ ಸಂಪರ್ಕಕ್ಕೆ ಬಂದವರು ಆ ಊರಿನ ಫಲವತ್ತಾದ ಭೂಮಿ ಮತ್ತು ನೀರಿನ ಸೌಕರ್ಯವನ್ನು ಕುರಿತು ಸುದ್ದಿ ಹಬ್ಬಿಸಿದರು. ಹೀಗಾಗಿ ಈ ಮೊದಲು ಹಳ್ಳಿಯಾಗಿದ್ದದ್ದು ಅಂಗಡಿ-ಮುಂಗಟ್ಟು, ಸ್ಟೋರು, ವರ್ಕ್ ಶಾಪ್‌ಗಳಿಂದ ಚಟುವಟಿಕೆಯ ಊರಾಯಿತು. ಅದರ ಮುಖಾಂತರ ಖಾಯಂ ಮಾರ್ಗವಾಗಿ ಅರಬರು ದೊಗಲೆ ಪ್ಯಾಂಟು ಮತ್ತು ಕಿವಿಯಲ್ಲಿ ರಿಂಗ್‌ಗಳನ್ನು ಮತ್ತು ಗಾಜಿನ ಮಣಿಗಳನ್ನು ಇಟ್ಟುಕೊಂಡು ಬಂದರು. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಒಂದು ನಿಮಿಷವೂ ವಿಶ್ರಾಂತಿ ಇರಲಿಲ್ಲ. ತನ್ನ ಕಲ್ಪನೆಯ ಪ್ರಪಂಚಕ್ಕಿಂತ ಅದ್ಭುತವೆನಿಸಿದ ವಾಸ್ತವಿಕತೆಯಿಂದ ಬೆರಗುಗಂಡು, ರಸವಾದದ ಲ್ಯಾಬೊರೇಟರಿಯ ಬಗ್ಗೆ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ. ತಿಂಗಳುಗಟ್ಟಲೆ ಅಂಕಿ ಅಂಶಗಳೊಡನೆ ಶ್ರಮಿಸಿ ಒಟ್ಟು ಮಾಡಿದ್ದ ವಸ್ತುಗಳನ್ನು ತೀವ್ರವಾಗಿ ಅಲಕ್ಷಿಸಿದ. ಅವನು ಮತ್ತೆ ಈ ಮೊದಲಿನ ದಿನಗಳಲ್ಲಿ ನಿರ್ಧರಿಸುತ್ತಿದ್ದ ಊರಿನ ರಸ್ತೆಗಳ ವಿನ್ಯಾಸ ಮತ್ತು ಹೊಸ ಮನೆಗಳು ಕಟ್ಟುವ ಸ್ಥಳಗಳ ಜೊತೆಗೆ, ಯಾರೊಬ್ಬರಿಗೂ ಇತರ ಎಲ್ಲರಿಗೂ ದೊರಕದ ಸವಲತ್ತುಗಳು ಸಿಗದ ಹಾಗೆ ಕ್ರಿಯಾಶೀಲನಾದ. ಹೊಸದಾಗಿ ತಲೆ ಎತ್ತುತ್ತಿದ್ದವುಗಳ ಬಗ್ಗೆ ಅವನೆಷ್ಟು ಅಧಿಕಾರ ರೂಢಿಸಿಕೊಂಡಿದ್ದನೆಂದರೆ ಅವನೊಂದಿಗೆ ಚರ್ಚಿಸದೆ ಅಡಿಪಾಯವನ್ನಾಗಲೀ, ಗೋಡೆಗಳನ್ನಾಗಲೀ ಕಟ್ಟುತ್ತಿರಲಿಲ್ಲ. ಅಲ್ಲದೆ ಭೂಮಿಯ ವಿತರಣೆ ಅವನಿಗೆ ಮಾತ್ರ ಸಂಬಂಧಿಸಿದ್ದು ಎಂದು ನಿರ್ಧಾರವಾಗಿತ್ತು. ಹಿಂದೆ ಅಲೆಮಾರಿ ತಂಡವಾಗಿದ್ದು ಈಗ ಅದೃಷ್ಟ ಮತ್ತು ಅವಕಾಶಗಳ ಸುವ್ಯವಸ್ಥೆಯ ಜೊತೆ ಡೊಂಬರಾಟದ ಜಿಪ್ಸಿಗಳು ಬಂದಾಗ ಅವರನ್ನು ಸ್ವಾಗತಿಸಲಾಯಿತು. ಏಕೆಂದರೆ ಹೊಸೆ ಅರ್ಕಾದಿಯೋ ಅವರ ಜೊತೆ ಬರುತ್ತಾನೆಂಬ ತಿಳುವಳಿಕೆ ಇತ್ತು. ಆದರೆ ಅವನು ಬರಲಿಲ್ಲ. ಅಷ್ಟೇ ಅಲ್ಲ, ಉರ್ಸುಲಾ ಆಲೋಚಿಸಿದ ಹಾಗೆ ತಮ್ಮ ಮಗನ ಬಗ್ಗೆ ಹೇಳಲು ಶಕ್ಯವಿದ್ದ ಒಬ್ಬನೇ ಒಬ್ಬನಾದ ಹಾವಿನ ಮನುಷ್ಯನೂ ಅವರೊಂದಿಗಿರಲಿಲ್ಲ. ಆದ್ದರಿಂದ ಜಿಪ್ಸಿಗಳು ಬಿಡಾರ ಹೂಡುವುದಕ್ಕಾಗಲೀ ಮತ್ತೆಂದೂ ಬರುವುದಕ್ಕಾಗಲೀ ಅವಕಾಶ ಕೊಡಲಿಲ್ಲ. ಕಾರಣ ಅವರು ಕಾಮ ವಿಕಾರ ಮತ್ತು ವಕ್ರ ಬುದ್ಧಿಯನ್ನು ತರುತ್ತಾರೆಂದು ನಂಬಿದರು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಮ್ಮ ಹಳ್ಳಿ ಅಷ್ಟೊಂದು ಉದ್ಧಾರವಾಗುವುದಕ್ಕೆ, ತನ್ನ ಪುರಾತನ ತತ್ವ ಜ್ಞಾನ ಮತ್ತು ಆಶ್ಚರ್ಯ ಹುಟ್ಟಿಸುವ ಆವಿಷ್ಕಾರಗಳಿಂದ ಉಪಕಾರ ಮಾಡಿದ ಮೆಲ್‌ಕಿಯಾದೆಸ್ ತಂಡಕ್ಕೆ ಮಾತ್ರ, ಯಾವಾಗಲೂ ಬಾಗಿಲು ತೆರೆದೇ ಇರುತ್ತದೆ ಎನ್ನುವುದನ್ನು ಬಾಯಿ ಬಿಟ್ಟು ಹೇಳಿದ್ದ. ಆದರೆ ಅಲೆಮಾರಿಗಳ ಪ್ರಕಾರ, ಮನುಷ್ಯ ಜ್ಞಾನದ ಮಿತಿ ಮೀರಿದ್ದರಿಂದ ಮೆಲ್‌ಕಿಯಾದೆಸ್ ತಂಡದವರು ಈ ಭೂಮಿಯ ಮೇಲೆಯೇ ಇಲ್ಲ, ಎಂದು. +ಸಧ್ಯಕ್ಕೆ ಅದ್ಭುತರಮ್ಯಗಳ ಲೋಕದಿಂದ ಬಿಡುಗಡೆ ಹೊಂದಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಸ್ವಲ್ಪ ಸಮಯದಲ್ಲಿಯೇ ಒಂದು ಗೊತ್ತಾದ ಕ್ರಮ ಮತ್ತು ಕೆಲಸವನ್ನು ವ್ಯವಸ್ಥೆಗೊಳಿಸಿದ. ಅದರಲ್ಲಿ ಒಂದಕ್ಕೆ ಮಾತ್ರ ಪರವಾನಗಿ ಕೊಟ್ಟ. ಅದು ಆರಂಭದಿಂದಲೂ ಜೊತೆಗಿದ್ದು ತಮ್ಮ ಸುಮಧುರ ಕಂಠದಿಂದ ಅವನಿಗೆ ಗೆಲುವು ತಂದು ಕೊಟ್ಟಿದ್ದ ಪಕ್ಷಿಗಳಿಗೆ ಪಂಜರದಿಂದ ಬಿಡುಗಡೆ. ಅವುಗಳ ಜಾಗದಲ್ಲಿ ಸಂಗೀತ ಹೊಮ್ಮಿಸುವ ಗಡಿಯಾರವನ್ನು ಪ್ರತಿಯೊಂದು ಮನೆಗೂ ತಂದಿಟ್ಟ. ಅವು ಅರಬರು ಗಿಣಿಗಳಿಗೆ ಪ್ರತಿಯಾಗಿ ಕೊಟ್ಟ ಕುಸುರಿ ಕೆಲಸ ಮಾಡಿದ ಮರದ ಗಡಿಯಾರಗಳು. ಅವುಗಳನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಷ್ಟರಮಟ್ಟಿಗೆ ಸಂಯೋಜಿಸಿದನೆಂದರೆ ಪ್ರತಿ ಅರ್ಧಗಂಟೆಗೊಂದು ಸಲ ಇಡೀ ಊರಿನಲ್ಲಿ ಒಂದಕ್ಕೊಂದು ಮೇಳೈಸಿ ಹೊಮ್ಮುವ ನಾದತರಂಗ ತಾರಕಕ್ಕೇರುವುದಲ್ಲದೆ, ಸರಿಮಧ್ಯಾಹ್ನದ ಸಮಯಕ್ಕೆ ವಾಲ್ಟ್ಜ್ ಸಂಗೀತಕ್ಕೆ ಸರಿಸಮನಾಗಿತ್ತು. ಆಗಿನ ವರ್ಷಗಳಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ರಸ್ತೆಗಳಲ್ಲಿ ಗೇರುಬೀಜಕ್ಕೆ ಬದಲಾಗಿ ಬಾದಾಮಿ ಮರಗಳನ್ನು ನೆಡುವುದಕ್ಕೆ ತೀರ್ಮಾನಿಸಿದ್ದ. ಜೊತೆಗೆ ಚಿರಂಜೀವಿಗಳಾಗುವುದರ ಬಗೆಯನ್ನು ಕಂಡು ಹಿಡಿದಿದ್ದರೂ ಅದನ್ನು ಯಾರಿಗೂ ಹೇಳಿರಲಿಲ್ಲ. ಅನೇಕ ವರ್ಷಗಳ ನಂತರ ಮಕೋಂದೋದಲ್ಲಿ ಜಿಂಕ್ ಶೀಟ್ ತಾರಸಿಯ ಮರದ ಮನೆಗಳಾದ ಮೇಲೆ, ಅಲ್ಲಲ್ಲಿ ಅರ್ಧಂಬರ್ಧ ಕಡಿದು ಹಾಕಿದ ಬಾದಾಮಿ ಮರಗಳಿದ್ದರೂ, ಅವುಗಳನ್ನು ನೆಡಿಸಿದವರು ಯಾರೆಂದು ಯಾರಿಗೂ ತಿಳಿದಿರಲಿಲ್ಲ. ತನ್ನ ತಂದೆ ಊರನ್ನು ಒಂದು ಕ್ರಮದಲ್ಲಿ ಇಡುತ್ತಿದ್ದರೆ ಮತ್ತು ತನ್ನ ತಾಯಿ ದಿನಕ್ಕೆ ಎರಡು ಸಲ ಮರದ ಕಡ್ಡಿಗಳಿಗೆ ಜೋಡಿಸಿ ಮನೆಯಿಂದ ಹೋಗುತ್ತಿದ್ದ ಬೇಯಿಸಿದ ಮಾಂಸದ ತುಂಡು ಹಾಗೂ ಮೀನುಗಳನ್ನು ಮಾರಿ ಸಂಪತ್ತನ್ನು ಹೆಚ್ಚಿಸುತ್ತಿದ್ದg, ಅವ್ರೇಲಿಯಾನೋ ಆಗೀಗ ಕೇಳುವವರಿಲ್ಲದಂತಿದ್ದ ಲ್ಯಾಬೊರೇಟರಿಗೆ ಹೋಗಿ ಬೆಳ್ಳಿಗೆ ಸಂಬಂಧಿಸಿದ ಕುಶಲ ಕೆಲಸವನ್ನು ತನ್ನದೇ ಪ್ರಯೋಗಗಳಿಂದ ಕಲಿಯುತ್ತಿದ್ದ. ಅವನು ಬೆಳೆಯುತ್ತಿದ್ದ ಗತಿಯೂ ಎಷ್ಟು ಹೆಚ್ಚಿತ್ತೆಂದರೆ, ಅತಿ ಬೇಗನೆ ಅವನ ಅಣ್ಣನ ಬಟ್ಟೆಗಳು ಅವನಿಗೆ ಸರಿಹೋಗದೆ ತಂದೆಯ ಬಟ್ಟೆಗಳನ್ನು ತೊಟ್ಟುಕೊಳ್ಳಬೇಕಾಯಿತು. ಆದರೆ ವಿಸಿಟಾಸಿಯೋನ್ ಹೊಲಿಗೆ ಬಿಚ್ಚಿ ಪ್ಯಾಂಟು ಮತ್ತು ಶರಟುಗಳನ್ನು ಹೊಲಿಯಬೇಕಾಗಿತ್ತು. ಏಕೆಂದರೆ ಅವ್ರೇಲಿಯಾನೋ ಬೇರೆಯವರಂತೆ ಬೊಜ್ಜು ಬೆಳೆಸಿರಲಿಲ್ಲ. ಅವ್ರೇಲಿಯಾನೋ ತನ್ನ ತಾರುಣ್ಯದಿಂದಾಗಿ ಮೊದಲಿದ್ದ ಮೃದು ಧ್ವನಿಯನ್ನು ಕಳೆದುಕೊಂಡಿದ್ದ ಮತ್ತು ಅದು ಅವನನ್ನು ಸಾಕಷ್ಟು ಮೌನಿಯಾಗಿ ಹಾಗೂ ಏಕಾಂತ ಬಯಸುವಂತೆ ಮಾಡಿತ್ತು. ಆದರೆ ಇನ್ನೊಂದು ರೀತಿಯಲ್ಲಿ ಅವನ ಕಣ್ಣುಗಳಿಗೆ ಬಾಲ್ಯದಲ್ಲಿ ಇದ್ದ ಗಂಭೀರತೆಯನ್ನು ಮತ್ತೆ ತಂದು ಕೊಟ್ಟಿತ್ತು. ಅವನು ಲ್ಯಾಬೊರೇಟರಿಯಲ್ಲಿ ಬೆಳ್ಳಿಗೆ ಸಂಬಂಧಿಸಿದ ಪ್ರಯೋಗಗಳಲ್ಲಿ ಎಷ್ಟೊಂದು ತನ್ಮಯನಾಗಿದ್ದನೆಂದರೆ ಊಟಕ್ಕೆ ಕೂಡ ಹೋಗುತ್ತಿರಲ್ಲಿಲ್ಲ. ಅವನು ಕೇವಲ ತನ್ನಷ್ಟಕ್ಕೇ ಇದ್ದು ಬಿಡುತ್ತಿದ್ದದ್ದನ್ನು ಕಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಹುಶಃ ಅವನಿಗೆ ಹೆಣ್ಣಿನ ಅವಶ್ಯಕತೆ ಇರಬಹುದೆಂದು ತಿಳಿದು ಅವನಿಗೆ ಮನೆಯ ಬೀಗದ ಕೈ ಮತ್ತು ಒಂದಿಷ್ಟು ಹಣ ಕೊಟ್ಟ. ಅವ್ರೇಲಿಯಾನೋ ಅದನ್ನು ಮ್ಯೂರಿ‌ಏಟಿಚ್ ಆಸಿಡ್‌ನಿಂದ ಲ್ಯಾಬೊರೇಟರಿಯ ಬೀಗದ ಕೈಗಳಿಗೆ ಬಂಗಾರದ ಹೊರಪದರ ಕೊಟ್ಟು ಅಂದವಾಗಿಸಲು ಉಪಯೋಗಿಸಿದ. ಅವನ ಅತಿರೇಕಗಳು ಅರ್ಕಾದಿಯೋ ಮತ್ತು ಅಮರಾಂತರಿಗೆ ಹೋಲಿಸಿದರೆ ಲೆಕ್ಕಕ್ಕೆ ಇಡವ ಹಾಗಿರಲಿಲ್ಲ. ಅವರಿನ್ನೂ ಇಂಡಿಯನ್‌ರ ಗಡಿಯಾರಗಳನ್ನು ಬಚ್ಚಿಟ್ಟುಕೊಳ್ಳುವುದು ಮತ್ತು ಸ್ಪ್ಯಾನಿಷ್ ಬೇಡವೆಂದು ಹಟತೊಟ್ಟು ಗುಜರಾತಿ ಭಾಷೆಯನ್ನು ಮಾತ್ರ ಮಾತನಾಡುವುದರಲ್ಲಿ ಮಗ್ನರಾಗಿದ್ದರು. “ನೀವೇನೂ ಗೊಣಗುಟ್ಟೋದು ಬೇಡ” ಎಂದ ಉರ್ಸುಲಾ, “ಮಕ್ಕಳು ಅಪ್ಪನ ಹುಚ್ಚುತನದಿಂದ ಕಲೀತಾರೆ” ಎಂದಳು. ಅವಳು ತನ್ನ ಅದೃಷ್ಟವನ್ನು ಹಳಿಯುತ್ತಿದ್ದಳು. ಏಕೆಂದರೆ ಮಕ್ಕಳ ನಡವಳಿಕೆ ಹಂದಿಯ ಬಾಲದಷ್ಟೆ ಭಯವಾದದ್ದೆಂದು ಅವಳಿಗೆ ನಂಬಿಕೆಯಾಗಿತ್ತು. ಅವ್ರೇಲಿಯಾನೋನ ರೀತಿ ಅವಳನ್ನು ಅನಿಶ್ಚಯತೆಯಿಂದ ಬಿಗಿದು ಹಾಕಿತ್ತು. +“ಯಾರೋ ಬರ್ತಿದಾರೆ” ಎಂದ. +ಅವನು ಹಾಗೆ ಭವಿಷ್ಯ ನುಡಿದಾಗ, ಅವಳು ಯಾವಾಗಲೂ ಮಾಡುವಂತೆ ಅದನ್ನು ಮನೆಯಾಕೆಯ ಸಹಜ ತರ್ಕಕ್ಕೆ ಒಳಪಡಿಸಿ, ಛೇದಿಸಲು ಪ್ರಯತ್ನಿಸಿದಳು. ಯಾರಾದರೂ ಬರುವುದು ಸಾಮಾನ್ಯವಾಗಿತ್ತು. ಪ್ರತಿದಿನ ಯಾವ ರೀತಿಯ ಸಂಶಯಕ್ಕೆ ಅಥವ ನಿಗೂಢ ಆಲೋಚನೆಗಳಿಗೆ ಆಸ್ಪದವಿಲ್ಲದ ಹಾಗೆ ಡಜನ್‌ಗಟ್ಟಲೆ ಜನರು ಮಕೋಂದೋಗೆ ಬರುತ್ತಾರೆ. ಹೀಗಿದ್ದರೂ ಎಲ್ಲ ತರ್ಕವನ್ನು ಮೀರಿ, ಅವ್ರೇಲಿಯಾನೋ ತನ್ನ ಭವಿಷ್ಯದ ಬಗ್ಗೆ ನಂಬಿಕೆ ಹೊಂದಿದ್ದ. +“ಯಾರು ಅಂತ ನಂಗೊತ್ತಿಲ್ಲ” ಎಂದವನು ಮತ್ತೆ, “ಯಾರಾದರೂ ಸರಿಯೆ, ಅವರಿನ್ನೇನು ಬರ್ತಿದಾರೆ.” +ನಿಜಕ್ಕೂ, ಆ ಭಾನುವಾರ ರೆಬೇಕ ಬಂದಳು. ಅವಳಿಗಾಗ ಕೇವಲ ಹನ್ನೊಂದು ವರ್ಷ. ಅವಳು ತನ್ನೊಂದಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಯಾರದೋ ಕಾಗದವೊಂದನ್ನು ತಲುಪಿಸಲು ತುಂಬ ಕಷ್ಟಪಟ್ಟು ಗುಪ್ತ ವ್ಯವಹಾರ ಮಾಡುವವರ ಜೊತೆಗೆ ಮನಾರ್ನಿಂದ ಪ್ರಯಾಣ ಕೈಗೊಂಡಿದ್ದಳು. ಆದರೆ ಅಂತಹ ಅಪೇಕ್ಷೆ ಹೊಂದಿದ್ದ ವ್ಯಕ್ತಿ ಯಾರೆಂದು ಅವರು ಹೇಳುತ್ತಿರಲಿಲ್ಲ. ಅವಳ ಬಳಿ ಇದ್ದ ಸಾಮಾನುಗಳೆಂದರೆ ಒಂದು ಸಣ್ಣ ಟ್ರಂಕ್, ಕೈಯಿಂದ ಬರೆದ ಹೂಗಳ ಚಿತ್ರವಿದ್ದ ತುಯ್ದಾಡುವ ಚಿಕ್ಕ ಕುರ್ಚಿ ಮತ್ತು ಟೊಳ ಟೊಳ ಶಬ್ದ ಮಾಡುತ್ತಿದ್ದ ಅವಳ ತಂದೆ ತಾಯಿಯ ಮೂಳೆಗಳಿದ್ದ ಒಂದು ಕ್ಯಾನ್‌ವಾಸ್ ಬ್ಯಾಗ್. ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಬರೆದ ಕಾಗದ ಆರ್ದ್ರ ಮಾತುಗಳಿದ್ದ ತುಂಬಿತ್ತು. ಎಲ್ಲೋ ಬಹಳ ದೂರದಲ್ಲಿದ್ದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಮೇಲೆ ಪ್ರೀತಿ ಇದ್ದವನೊಬ್ಬ ಬರೆದಿದ್ದರಲ್ಲಿ, ಅನಾಥಳಾದ ಉರ್ಸುಲಾಳ ಸಂಬಂಧಿ ಮತ್ತು ತನ್ಮೂಲಕ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಸಂಬಂಧಿ, ಮೋಕ್ಷ ಹೊಂದಿದ ಗೆಳೆಯ ನಿಕನೋರ್ ಉಲ್ಲಾ ಹಾಗೂ ಅವನ ಮಡದಿ ಮಾಂಟಿಲ್ಲರ ಮಗಳು ರೆಬೇಕಳನ್ನು ಮಾನವೀಯತೆಯ ದೃಷ್ಟಿಯಿಂದ ಕಳಿಸಿದ್ದಾಗಿಯೂ ಮತ್ತು ಅವಳ ಬಳಿ ಇರುವ ಅವಳ ತಂದೆ ತಾಯಿಯ ಪಾರ್ಥಿವ ವಸ್ತುಗಳಿಗೆ ಕ್ರೈಸ್ತ ಸಂಸ್ಕಾರ ದೊರಕುವುದೆಂಬ ಆಶಯ ವ್ಯಕ್ತಪಡಿಸಿದ್ದ. ಆ ಹೆಸರುಗಳು ಮತ್ತು ಅದಕ್ಕೆ ಸಹಿ ಹಾಕಿದವನ ಹೆಸರು ಸ್ಪಷ್ಟವಾಗಿತ್ತು. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗಾಗಲೀ ಉರ್ಸುಲಾಗಾಗಲೀ ಆ ಹೆಸರಿನ ಸಂಬಂಧಿಗಳು ತಮಗಿದ್ದರೆಂದು ನೆನಪಾಗಲಿಲ್ಲ. ಅಲ್ಲದೆ ಆ ಕಾಗದ ಬರೆದವನು ಮತ್ತು ಅದಕ್ಕಿಂತ ಹೆಚ್ಚಾಗಿ ಮನಾರೆ ಎನ್ನುವ ಹಳ್ಳಿ ಇರುವುದು ಕೂಡ. ಆ ಹುಡುಗಿಯಿಂದ ಬೇರೆ ಇನ್ನಾವ ವಿಷಯವನ್ನು ಪಡೆಯುವುದು ಅಸಾಧ್ಯವಾಗಿತ್ತು. ಅವಳು ಬಂದ ಸಮಯದಿಂದ ಬಾಯಲ್ಲಿ ಬೆರಳಿಟ್ಟುಕೊಂಡು ಎಲ್ಲರನ್ನೂ ಬಿಡುಗಣ್ಣಿನಿಂದ ನೋಡುತ್ತ ಅವರೆಲ್ಲ ತನಗೇನು ಕೇಳುತ್ತಿದ್ದಾರೆ ಎನ್ನುವುದನ್ನು ಲೆಕ್ಕಿಸದೆ ತುಯ್ದಾಡುವ ಕುರ್ಚಿಯಲ್ಲಿ ಕುಳಿತಳು. ಅವಳು ಹೆಚ್ಚು ಉಪಯೋಗಿಸಿದ್ದ ಕಪ್ಪು ಬಣ್ಣ ಹಾಕಿದ ಅಡ್ಡ ಪಟ್ಟಿಯಿದ್ದ ಬಟ್ಟೆ ತೊಟ್ಟುಕೊಂಡು ಚರ್ಮದ ಬೂಟುಗಳನ್ನು ಹಾಕಿಕೊಂಡಿದ್ದಳು. ಅವಳ ಕಿವಿಗಳ ಹಿಂದಕ್ಕೆ ಕೂದಲನ್ನು ಕಪ್ಪು ರಿಬ್ಬನ್‌ನಿಂದ ಕಟ್ಟಿತ್ತು. ಬೆವರಿನಿಂದ ಮಾಸಿದ ಚಿತ್ರಗಳಿದ್ದ ಗಿಡ್ಡ ಅಂಗಿಯನ್ನು ಉಟ್ಟಿದ್ದಳು. ದೃಷ್ಟಿ ದೋಷ ನಿವಾರಣೆಗೆಂದು ಬಲಗೈಗೆ ಮಾಂಸಾಹಾರಿ ಪ್ರಾಣಿಯ ಹಲ್ಲಿದ್ದ ಚರ್ಮದ ಕಡಗ ಹಾಕಿಕೊಂಡಿದ್ದಳು. ಹಸಿರಿನ ಅಂಶವಿದ್ದ ಮೈ ಚರ್ಮ, ಡ್ರಮ್ಮಿನ ಹಾಗೆ ಬಿರುಸಾಗಿದ್ದ ಹೊಟ್ಟೆ ಇವುಗಳು ಅವಳ ಆರೋಗ್ಯ ಸರಿಯಿಲ್ಲವೆಂದು ಸಾರುತ್ತಿದ್ದವು. ಜೊತೆಗೆ ಹಸಿವಿನಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯವಳಾಗಿ ಕಾಣುತ್ತಿದ್ದಳು. ಅವರು ಅವಳಿಗೆ ತಿನ್ನಲಿಕ್ಕೆ ಕೊಟ್ಟಾಗ ಪ್ಲೇಟನ್ನು ಮಂಡಿಯ ಮೇಲಿಟ್ಟುಕೊಂಡು ಕುಳಿತಳು. ಅವಳು ಕಿವುಡಿಯೇನೋ ಎಂದು ಕೂಡ ಅನುಮಾನಿಸಿದರು. ಆದರೆ ಇಂಡಿಯನ್‌ರು ತಮ್ಮ ಭಾಷೆಯಲ್ಲಿ ನೀರೇನಾದರೂ ಬೇಕೆಂದು ಕೇಳಿದಾಗ, ಆ ಧ್ವನಿಯನ್ನು ಗುರುತಿಸುವಂತೆ ನೋಡಿ ಅವಳು ಹೌದೆಂದು ತಲೆ ಹಾಕಿದಳು. +ಅವರು ಅವಳನ್ನು ತಮ್ಮಲ್ಲಿ ಇರಿಸಿಕೊಂಡರು. ಏಕೆಂದರೆ ಅದನ್ನು ಬಿಟ್ಟು ಅವರೇನೂ ಮಾಡುವಂತಿರಲಿಲ್ಲ. ಅವರು ಅವಳನ್ನು ರೆಬೇಕ ಎಂದು ಕರೆಯಲು ನಿರ್ಧರಿಸಿದರು. ಏಕೆಂದರೆ ಆ ಕಾಗದದ ಪ್ರಕಾರ ಅದು ಅವಳ ತಾಯಿಯ ಹೆಸರಾಗಿತ್ತು. ಅಲ್ಲದೆ ಅವ್ರೇಲಿಯಾನೋ ತಾಳ್ಮೆ ವಹಿಸಿ ಎಲ್ಲ ಸಂತರ ಹೆಸರನ್ನು ಓದಿ ಹೇಳಿದರೂ ಅವಳಿಂದ ಪ್ರತಿಕ್ರಿಯೆ ಸಿಗಲಿಲ್ಲ. ಯಾರೊಬ್ಬರೂ ಅಲ್ಲಿಯ ತನಕ ಮಕೋಂದೋದಲ್ಲಿ ಸತ್ತಿರಲಿಲ್ಲವಾದ್ದರಿಂದ ಅಲ್ಲಿ ಸ್ಮಶಾನವಿರಲಿಲ್ಲ. ಆದ್ದರಿಂದ ಹೂಳಲು ಸರಿಯಾದ ಸ್ಥಳಕ್ಕಾಗಿ ಕಾದು ಅವರು ಮೂಳೆಗಳ ಚೀಲವನ್ನು ಹಾಗೆಯೇ ಇಟ್ಟರು. ಅದು ಬಹಳ ಕಾಲದ ತನಕ ಓಡಾಡುವವರಿಗೆಲ್ಲ ಅಡ್ಡವಾಗುತ್ತಿತ್ತು ಮತ್ತು ವಿಚಿತ್ರವಾಗಿ ಕರಕಲು ಶಬ್ದ ಮಾಡುತ್ತ ಯಾರೂ ನಿರೀಕ್ಷಿಸದೇ ಇರುವ ಸ್ಥಳಗಳಲ್ಲೆಲ್ಲ ಇರುತ್ತಿತ್ತು. ರೆಬೇಕ ಬಂದು ಬಹಳ ದಿನಗಳಾಗಿ ಕ್ರಮೇಣ ಮನೆಯವಳಾಗಿ ಬಿಟ್ಟಳು. ಅವಳು ಬೆರಳು ಚೀಪುತ್ತ ಮನೆಯ ಯಾವುದೋ ಒಂದು ಮೂಲೆಯಲ್ಲಿ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿರುತ್ತಿದ್ದಳು. ಗಡಿಯಾರಗಳ ಸಂಗೀತವಲ್ಲದೆ ಬೇರೇನೂ ಅವಳ ಗಮನ ಸೆಳೆಯುತ್ತಿರಲಿಲ್ಲ. ಅರ್ಧಗಂಟೆಗೊಂದು ಸಲ ಕೇಳಿಸುತ್ತಿದ್ದ ಅದರ ನೆಲೆಯನ್ನು ಗಾಳಿಯಲ್ಲೆಲ್ಲೋ ಹುಡುಕುತ್ತ ಬೆದರುಗಣ್ಣಿನಿಂದ ನೋಡುತ್ತಿದ್ದಳು. ಕೆಲವು ದಿನಗಳವರೆಗೆ ಅವಳು ಏನನ್ನಾದರೂ ತಿನ್ನುವಂತೆ ಮಾಡುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಅವಳು ಹಸಿವೆಯಿಂದ ಸಾಯಲಿಲ್ಲವೇಕೆ ಎಂದು ಅವರಿಗೆ ಇಂಡಿಯನ್‌ರು ಬರುವ ತನಕ ತಿಳಿಯದ ಸಂಗತಿಯಾಗಿತ್ತು. ಅವರಿಗಾದರೆ ಎಲ್ಲ ತಿಳಿದಿತ್ತು. ಅವರು ಇಡೀ ಮನೆಯಲ್ಲಿ ಕಳ್ಳಹೆಜ್ಜೆಯಿಟ್ಟು ಓಡಾಡಿ, ರೆಬೇಕ ಮನೆಯ ಅಂಗಳದ ತೇವದ ಮಣ್ಣು ಮತ್ತು ಉಗುರಿನಿಂದ ಗೋಡೆಯಲ್ಲಿ ಕೆರೆದ ಹೆಕ್ಕಳವನ್ನು ಮಾತ್ರ ತಿನ್ನುತ್ತಾಳೆಂದು ಕಂಡು ಹಿಡಿದರು. ಅವಳನ್ನು ಬೆಳೆಸಿದ ತಂದೆ ತಾಯಿಯರೋ ಅಥವಾ ಯಾರೇ ಆದರೂ ಅವಳು ಹೀಗೆ ಗುಟ್ಟಾಗಿ ಮತ್ತು ಅಪರಾಧ ಪ್ರಜ್ಞೆಯಿಂದ ಯಾರಿಗೂ ಕಾಣದ ಹಾಗೆ ಮಾಡುತ್ತಿದ್ದಕ್ಕಾಗಿ ಬೈಯುತ್ತಿದ್ದದ್ದು ಇದರಿಂದ ಸ್ಪಷ್ಟವಾಯಿತು. ಅಂದಿನಿಂದ ಅವಳ ಮೇಲೆ ಅವರು ಹೆಚ್ಚಿನ ನಿಗಾ ಇಟ್ಟರು. ಅಂಗಳವನ್ನು ಸೆಗಣಿಯಿಂದ ಸಾರಿಸಿ, ಗೋಡೆಗೆ ಮೆಣಸಿನ ಪುಡಿ ಬಳಿದು, ಅವಳ ದುರಭ್ಯಾಸವನ್ನು ತಪ್ಪಿಸಲು ನೋಡಿದರು. ಆದರೆ ಅವಳು ಹೇಗೋ ಮಣ್ಣನ್ನು ಹುಡುಕುವುದರಲ್ಲಿ ಜಾಣತನವನ್ನು ತೋರಿಸುತ್ತಿದ್ದಳು. ಇದರಿಂದ ಉರ್ಸುಲಾ ಇನ್ನೂ ಹೆಚ್ಚಿನ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ತಟ್ಟೆಯೊಂದರಲ್ಲಿ ಕಿತ್ತಲೆ ಹಣ್ಣಿನ ರಸದ ಜೊತೆ ಭೇದಿಯ ಔಷಧಿ ಹಾಕಿ, ಇಡೀ ರಾತ್ರಿ ಮಂಜು ಬೆರೆಯಲು ಬಿಟ್ಟು, ಮಾರನೆಯ ದಿನ ಖಾಲಿ ಹೊಟ್ಟೆಯಲ್ಲಿದ್ದ ಅವಳಿಗೆ ಕೊಟ್ಟಳು. ಮಣ್ಣು ತಿನ್ನುವುದಕ್ಕೆ ಅದು ಔಷಧಿಯೆಂದು ಅವಳಿಗೆ ಯಾರೂ ಹೇಳಿರದಿದ್ದರೂ ಖಾಲಿ ಹೊಟ್ಟೆಯಲ್ಲಿ ಕಹಿ ಪದಾರ್ಥ ಹೊಟ್ಟೆಗೆ ಹೋದರೆ ಜಠರ ಸರಿಯಾಗಿ ಕೆಲಸ ಮಾಡುವುದೆಂದು ಅವಳ ಅನ್ನಿಸಿಕೆ. ಮಣ್ಣು ತಿನ್ನುವ ದುರಭ್ಯಾಸ ಅದರಿಂದ ಹೋಗುವುದೆಂದು ಉರ್ಸುಲಾಗೆ ಯಾರೂ ಹೇಳಿರಲಿಲ್ಲ. ಆದರೆ ಕಡ್ಡಿಯಂತಿದ್ದರೂ ರೆಬೇಕಳ ಪ್ರತಿರೋಧ ಎಷ್ಟಿತ್ತೆಂದರೆ ಅವಳನ್ನು ಕಟ್ಟಿ ಹಾಕಿ ಆ ಔಷಧಿಯನ್ನು ಕುಡಿಸಬೇಕಾಯಿತು. ಆವೇಶ ಭರಿತಳಾಗಿ ಅರಚುವುದನ್ನೋ, ಒದೆಯುವುದನ್ನೋ, ಉಗುಳುವುದನ್ನೋ ಒಂದು ತಪ್ಪಿದರೆ ಮತ್ತೊಂದನ್ನು ಮಾಡುತ್ತಿದ್ದ ಅವಳಿಂದ ಅವರು ತಪ್ಪಿಸಿಕೊಳ್ಳಬೇಕಾಯಿತು. ಇದನ್ನು ಕಂಡು ಜಿಗುಪ್ಸೆಗೊಂಡ ಇಂಡಿಯನ್‌ರ ಪ್ರಕಾರ, ಅವರ ಭಾಷೆಯಲ್ಲಿ ಆ ಮಾತುಗಳೆಲ್ಲ ಕಲ್ಪಿಸಿಕೊಳ್ಳಲೂ ಅಸಹ್ಯವಾದಂಥವು. ಉರ್ಸುಲಾಗೆ ಅದು ಗೊತ್ತಾದ ಮೇಲೆ ಅವಳು ಹೊಡೆಯುವುದಕ್ಕೆ ಶುರುಮಾಡಿದಳು. ಅವಳು ಕೊಟ್ಟ ಭೇದಿಯ ಔಷಧಿಯೋ ಹೊಡೆಯುತ್ತಿದ್ದದ್ದೋ ಅಥವಾ ಎರಡೂ ಸೇರಿ ಉಂಟಾದ ಪರಿಣಾಮವೋ ಹೇಗೋ, ನಿಜ ಸಂಗತಿಯೆಂದರೆ ಒಂದೆರಡು ವಾರಗಳಲ್ಲಿ ರೆಬೇಕ ಗುಣಹೊಂದುವ ಸೂಚನೆ ಕೊಟ್ಟಳು. ಹಿರಿಯಕ್ಕಳಂತೆ ಅವಳು ಅರ್ಕಾದಿಯೋ ಹಾಗೂ ಅಮರಾಂತಳೊಂದಿಗೆ ಆಟವಾಡುತ್ತಿದ್ದಳು. ತಟ್ಟೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ಹೊಟ್ಟೆ ತುಂಬ ಊಟಮಾಡುತ್ತಿದ್ದಳು. ಅವಳು ಇಂಡಿಯನ್‌ರ ಭಾಷೆಯನ್ನು ಮಾತನಾಡುವಷ್ಟೇ ಸಲೀಸಾಗಿ ಸ್ಪ್ಯಾನಿಷ್ಷನ್ನು ಮಾತಾಡುತ್ತಾಳೆಂದು ಕ್ರಮೇಣ ಗೊತ್ತಾಯಿತು. ಅವಳಿಗೆ ಕೈಗೆಲಸ ಮಾಡಲು ತುಂಬ ಉತ್ಸಾಹ ಇದೆಯೆಂದೂ ಮತ್ತು ಅವಳೇ ಸೃಷ್ಟಿಸಿದ ತಮಾಷೆ ಪದಗಳಿಂದ ಗಡಿಯಾರದ ವಾಲ್ಟ್ಜ್ ಸಂಗೀತದ ಜೊತೆಗೆ ಹಾಡಲು ಸಾಧ್ಯ ಎನ್ನುವುದು ಕೂಡ. ಅವಳನ್ನು ಇಡೀ ಸಂಸಾರದ ಒಬ್ಬ ಸದಸ್ಯೆಯೆಂದು ಪರಿಗಣಿಸಲು ಬಹಳ ಕಾಲ ಹಿಡಿಯಲಿಲ್ಲ. ಅವಳು ಉರ್ಸುಲಾಗೆ ಆಕೆಯ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಅಕ್ಕರೆಯವಳಾದಳು. ಅವಳು ಅರ್ಕಾದಿಯೋ ಮತ್ತು ಅಮರಾಂತರನ್ನು ತಮ್ಮ, ತಂಗಿಯೆಂದೂ, ಅವ್ರೇಲಿಯಾನೋನನ್ನು ಅಂಕಲ್ ಎಂದೂ ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅಜ್ಜನೆಂದೂ ಕರೆಯುತ್ತಿದ್ದಳು. ಹೀಗಾಗಿ ಇತರರಂತೆ ಅವಳು ರೆಬೇಕ ಬ್ಯುಂದಿಯಾ ಎನ್ನುವ ಹೆಸರಿಗೆ ಯೋಗ್ಯಳಾದಳು. ಅವಳಿಗೆ ದೊರಕಿದ ಅದೊಂದನ್ನೇ ಅವಳು ಸಾಯುವ ತನಕ ಗೌರವದಿಂದ ಉಳಿಸಿಕೊಂಡಿದ್ದಳು. +ರೆಬೇಕಳಿಗೆ ಮಣ್ಣು ತಿನ್ನುವ ದುರಭ್ಯಾಸ ವಾಸಿಯಾದ ಮೇಲೆ ಒಂದು ದಿನ ಅವಳು ಇತರ ಮಕ್ಕಳ ಜೊತೆ ಮಲಗಿದ ನಂತರ ಅವರೊಂದಿಗೆ ಮಲಗಿದ್ದ ಇಂಡಿಯನ್ ಹೆಂಗಸು ಮೂಲೆಯಿಂದ ಬಿಟ್ಟು ಬಿಟ್ಟು ಬರುತ್ತಿದ್ದ ವಿಚಿತ್ರ ಶಬ್ದ ಕೇಳಿ ಅಕಸ್ಮಾತ್ ಎಚ್ಚರಗೊಂಡಳು. ಯಾವುದಾದರೂ ಪ್ರಾಣಿ ರೂಮಿನೊಳಗೆ ಬಂತೋ ಹೇಗೆ ಎಂದು ಗಾಬರಿಗೊಂಡು ನೋಡಿದಾಗ, ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದ ರೆಬೇಕ ಬೆರಳು ಚೀಪುತ್ತಿರುವುದು ಕಾಣಿಸಿತು. ಆ ಕತ್ತಲೆಯಲ್ಲಿ ಅವಳ ಕಣ್ಣುಗಳು ಬೆಕ್ಕಿನ ಕಣ್ಣುಗಳ ಹಾಗೆ ಹೊಳೆಯುತ್ತಿದ್ದವು. ಅವಳ ದುರದೃಷ್ಟಕ್ಕೆ ಮಮ್ಮಲ ಮರುಗಿದ ವಿಸಿಟಾಸಿಯೋನ್‌ಗೆ ಆ ಕಣ್ಣುಗಳಲ್ಲಿ ತೀರ ಕೆಟ್ಟ ಕಾಯಿಲೆಯ ಸೂಚನೆ ಕಾಣಿಸಿತು. ಆ ಕಾಯಿಲೆ ಒಡ್ಡಿದ ಭಯ, ರಾಜಕುಮಾರಿ ಮತ್ತು ರಾಜಕುಮಾರರಾಗಿದ್ದ ಅವರ ಪುರಾತನ ಸಾಮ್ರಾಜ್ಯವನ್ನು ಅವಳು ಮತ್ತು ಅವಳ ಸಹೋದರ ಎಂದೆಂದಿಗೂ ತ್ಯಜಿಸುವಂತೆ ಮಾಡಿತ್ತು. ಅದು ನಿದ್ದೆ ಬಾರದ ರೋಗ. +ಇಂಡಿಯನ್ ಕತಾವುರೆ ಬೆಳಿಗ್ಗೆಯೇ ಮನೆಯಿಂದ ಹೊರಗೆ ಹೋಗಿದ್ದ. ಅವನ ತಂಗಿ ಮನೆಯಲ್ಲಿಯೇ ಉಳಿದಿದ್ದಳು. ಏಕೆಂದರೆ ಪ್ರಪಂಚದ ಯಾವ ಮೂಲೆ ಹೊಕ್ಕರೂ ಆ ದರಿದ್ರ ಕಾಯಿಲೆ ಬೆನ್ನಟ್ಟುವ ವಿಧಿಯಾಟವನ್ನು ನಂಬುವ ಅವಳ ಹೃದಯ ಅವಳಿಗೆ ಹೇಳಿತ್ತು. ಯಾರಿಗೂ ವಿಸಿಟಾಸಿಯೋನಳ ಆತಂಕ ಅರ್ಥವಾಗಲಿಲ್ಲ. “ನಾವು ಮಲಗದಿದ್ರೆ ಒಳ್ಳೇದೇ ಆಯ್ತು” ಎಂದು ತಮಾಷೆ ಮಾಡಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆ ರೀತಿಯಿಂದ ನಾವು ಜೀವನದಲ್ಲಿ ಮತ್ತಷ್ಟನ್ನ ಪಡೀಬಹುದು” ಎಂದ. ಆದರೆ ಆ ಇಂಡಿಯನ್ ಹೆಂಗಸು ಆ ಕಾಯಿಲೆಗೆ ಸಂಬಂಧಿಸಿದ ಭಯಾನಕವಾದದ್ದನ್ನು ವಿವರಿಸಿದಳು. ದೇಹಕ್ಕೆ ದಣಿವಾಗುವುದೇ ಅರಿವಾಗುವುದಿಲ್ಲವಾದ್ದರಿಂದ, ನಿದ್ದೆ ಬರುವ ಸಾಧ್ಯತೆಯಿಲ್ಲದೆ, ಅದಕ್ಕಿಂತ ಹೆಚ್ಚು ಕಠೋರವಾದ ಪರಿಣಾಮ ಉಂಟಾಗುತ್ತದೆ; ಅದು ನೆನಪಿನ ನಾಶ. ಅವಳ ಮಾತಿನ ಅರ್ಥವೇನೆಂದರೆ ಅದರ ಪ್ರಭಾವಕ್ಕೆ ಒಳಗಾದವನಿಗೆ ಬಾಲ್ಯದ ನೆನಪು ಅಳಿಸಿ ಹೋಗಲು ಪ್ರಾರಂಭವಾಗುತ್ತದೆ. ಅನಂತರ ಹೆಸರುಗಳು ಮತ್ತು ವಸ್ತುಗಳ ಪರಿಗಣನೆ, ಕೊನೆಗೆ ಜನರ ಗುರುತು, ಅಲ್ಲದೆ ತನ್ನ ಬಗ್ಗೆಯೇ ಅರಿವು ಕಡಿಮೆಯಾಗುವುದರ ಜೊತೆಗೆ ಭೂತಕಾಲವೇ ಇಲ್ಲದೆ ಹೋಗುವ ಪೆದ್ದನಾಗುತ್ತಾನೆ. ಹೊಸೆ ಅರ್ಕಾದಿಯೋ ಬ್ಯುಂದಿಯಾ ನಗುತ್ತ ಇದೊಂದು ಇಂಡಿಯನ್‌ರ ಮೂಢನಂಬಿಕೆಯಿಂದ ಹುಟ್ಟಿಕೊಂಡ ಕಾಯಿಲೆ ಎಂದು ತಿಳಿದ. ಆದರೆ ಕ್ಷೇಮವಾಗಿರಲು ಬಯಸಿದ ಉರ್ಸುಲಾ ರೆಬೇಕಳನ್ನು ಇತರೆ ಮಕ್ಕಳಿಂದ ದೂರವಿರಿಸಿದಳು. +ಕೆಲವು ವಾರಗಳದ ಮೇಲೆ, ವಿಸಿಟಾಸಿಯೋನ್ ತಿಳಿಸಿದ ಭಯ ಕರಗಿತೆಂದು ತೋರಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದ. ಎಚ್ಚರದಿಂದಿದ್ದ ಉರ್ಸುಲಾ ವಿಷಯವೇನೆಂದು ಕೇಳಿದಳು. ಅದಕ್ಕೆ, “ನಾನು ಪ್ರುಡೆನ್ಸಿಯೋ ಬಗ್ಗೆ ಯೋಚ್ನೆ ಮಾಡ್ತಿದೀನಿ” ಎಂದ. ಅವರಿಬ್ಬರೂ ಅರೆಗಳಿಗೆ ಕಣ್ಣು ಮುಚ್ಚಲಿಲ್ಲ. ಆದರೆ ಮಾರನೆಯ ದಿನ ಎಷ್ಟು ಹಗುರೆನಿಸಿತ್ತೆಂದರೆ ಕಳೆದ ಕೆಟ್ಟ ರಾತ್ರಿಯನ್ನು ಮರೆತು ಬಿಟ್ಟಿದ್ದರು. ಇಡೀ ರಾತ್ರಿ ಉರ್ಸುಲಾಳ ಹುಟ್ಟು ಹಬ್ಬಕ್ಕೆ ಕೊಡಬೇಕೆಂದು ಪದಕವೊಂದನ್ನು ಮಾಡುತ್ತ ಲ್ಯಾಬೊರೇಟರಿಯಲ್ಲಿ ಕಳೆದಿದ್ದರೂ ಕೂಡ ತಾನು ಆರಾಮಾಗಿದ್ದೇನೆಂದು ಊಟದ ಸಮಯದಲ್ಲಿ ಅವ್ರೇಲಿಯಾನೋ ಹೇಳಿz. ಅವರಿಗೆ ಮೂರು ದಿನವಾದರೂ ಮಲಗಬೇಕಾದ ವೇಳೆಯಲ್ಲಿ ನಿದ್ದೆ ಬರುತ್ತಿಲ್ಲವೆಂದು ತೀವ್ರವಾಗಿ ಅನ್ನಿಸಲೇ ಇಲ್ಲ. ಅನಂತರ ಅವರಿಗೆ ನಿದ್ದೆ ಇಲ್ಲದೆ ತಾವು ಐವತ್ತು ಗಂಟೆಗಳನ್ನು ಕಳೆದದ್ದು ಅರಿವಾಯಿತು. +“ಮಕ್ಕಳು ಕೂಡ ಮಲಗಿಲ್ಲ” ಎಂದು ವಿಧಿಯನ್ನು ನೆಚ್ಚಿದ ಇಂಡಿಯನ್ ಹೆಂಗಸು, “ರೋಗ ಮನೆಯೊಳಗೆ ಹೊಕ್ಕ ಮೇಲೆ ಯಾರೂ ತಪ್ಪಿಸಿಕೊಳ್ಳುವಂತಿಲ್ಲ” ಎಂದಳು. +ಅವರಿಗೆ ನಿಜವಾಗಲೂ ನಿದ್ದೆ ಬಾರದ ರೋಗ ಬಡಿದಿತ್ತು. ತನ್ನ ತಾಯಿಯಿಂದ ಸಸ್ಯಗಳ ಔಷಧವನ್ನು ತಿಳಿದಿದ್ದ ಉರ್ಸುಲಾ ಯಾವುದೋ ಕಷಾಯ ಮಾಡಿ ಎಲ್ಲರಿಗೂ ಕುಡಿಯಲು ಕೊಟ್ಟಳು. ಆದರೆ ಅವರಿಗೆ ನಿದ್ದೆ ಬರಲಿಲ್ಲ. ಅಲ್ಲದೆ ನಿಂತುಕೊಂಡೇ ಕನಸು ಕಾಣುತ್ತ ಇಡೀ ದಿನ ಕಳೆದರು. ಅಂತಹ ಭ್ರಾಮಕ ಸ್ಥಿತಿಯಲ್ಲಿ ಅವರು ತಮ್ಮ ಕನಸುಗಳಲ್ಲಿನ ಚಿತ್ರಗಳನ್ನು ಕಂಡದ್ದಷ್ಟೆ ಅಲ್ಲದೆ ಇತರರ ಕನಸುಗಳ ಚಿತ್ರಗಳನ್ನೂ ಕಂಡರು. ಅದೊಂದು ರೀತಿ ಮನೆಯಲ್ಲಿ ಬರುವ ಜನರಿಂದ ತುಂಬಿರುವ ಹಾU. ಅಡುಗೆ ಮನೆಯಲ್ಲಿ ತುಯ್ದಾಡುವ ಕುರ್ಚಿಯಲ್ಲಿ ಕುಳಿತ ರೆಬೇಕ, ತನ್ನಂತೆಯೇ ಕಾಣುವ ಬಿಳಿ ಶರಟು ಹಾಕಿಕೊಂಡು ಅzರ ಕಾಲರನ್ನು ಬಂಗಾರದ ಗುಂಡಿಗಳಿಂದ ಮುಚ್ಚಿದವನೊಬ್ಬ, ಗುಲಾಬಿ ಹೂ ಗುಚ್ಛವೂಂದನ್ನು ತನಗಾಗಿ ತರುತ್ತಿರುವ ಕನಸು ಕಂಡಳು. ಅವನ ಜೊತೆ ಬಂದ ಹೆಂಗಸು ಗುಲಾಬಿ ಹೂವೊಂದನ್ನು ತೆಗೆದು ಅವಳ ಕೂದಲಿಗೆ ಸಿಕ್ಕಿಸಿದಳು. ಅವರು ರೆಬೇಕಳ ತಂದೆ-ತಾಯಿಯೆಂದು ಉರ್ಸುಲಾಗೆ ತಿಳಿಯಿತು. ಅವರನ್ನು ಗುರುತು ಹಿಡಿಯಲು ಅವಳೆಷ್ಟೇ ಪ್ರಯತ್ನಪಟ್ಟರೂ ಅವರನ್ನು ಇದುವರೆಗೂ ತಾನು ನೋಡಿಲ್ಲ ಎನ್ನುವ ನಂಬಿಕೆ ಅವಳಿಗೆ ಖಚಿತವಾಯಿತು. ಈ ಮಧ್ಯೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನನ್ನು ತಾನೇ ಕ್ಷಮಿಸದಾದ. ಏಕೆಂದರೆ ಮನೆಯಲ್ಲಿ ಬೇಯಿಸಿದ ಮಾಂಸ ಊರಿನಲ್ಲಿ ಇನ್ನೂ ಮಾರಾಟವಾಗುತ್ತಿತ್ತು. ಮಕ್ಕಳು ಹದಿವಯಸ್ಸಿನವರು ಮತ್ತು ಪ್ರಾಯಕ್ಕೆ ಬಂದವರು ಖುಷಿಯಿಂದ, ನಿದ್ದೆ ಬಾರದ ಸ್ಥಿತಿಯ ಹಸಿರು ಹುಂಜ ಮತ್ತು ವಿಶೇಷವಾದ ಪಿಂಕ್ ಮೀನಿನ ರುಚಿಯನ್ನು ಸವಿದರು. ಇದರಿಂದಾಗಿ ಸೋಮವಾರದ ಬೆಳಗು ಎಲ್ಲರನ್ನು ಎಚ್ಚರದಲ್ಲಿ ಕಂಡಿತು. ಪ್ರಾರಂಭದಲ್ಲಿ ಯಾರಿಗೂ ಅದು ವಿಶೇಷವೆನಿಸಲಿಲ್ಲ. ಅದಕ್ಕೆ ವಿರುದ್ಧವಾಗಿ ಮಾಡುವುದಕ್ಕೆ ಮಕೋಂದೋದಲ್ಲ್ಲಿ ಬೇಕಾದಷ್ಟು ಇದ್ದದ್ದರಿಂದ ನಿದ್ದೆ ಬರುತ್ತಿಲ್ಲವೆಂದು ಸಂತೋಷವಾಯಿತು. ಅವ;ರೆ; ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆಂದರೆ ಬಹಳ ಬೇಗನೆ ಅವರಿಗೆ ಮಾಡಲು ಏನೂ ಉಳಿಯಲಿಲ್ಲ. ಅಲ್ಲದೆ ಬೆಳಗಿನ ಜಾವದ ಮೂರು ಗಂಟೆಗೆ ಗಡಿಯಾರಗಳಿಂದ ಹೊರಡುವ ವಾಲ್ಟ್ಸ್ ಸಂಗೀತದ ನಾದದ ಸ್ವರಗಳನ್ನು ಎಣಿಸುತ್ತ ಕೈಕಟ್ಟಿ ನಿಂತಿರುವುದನ್ನು ಕಾಣಬಹುದಿತ್ತು. ದಣಿವಿನಿಂದ ಅಲ್ಲದಿದ್ದರೂ ಕೇವಲ ಹಳೆಯ ನೆನಪಿನಿಂದ ನಿದ್ದೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಅವರು ಗುಂಪುಗೂಡಿ ಕೊನೆಯಿಲ್ಲದೆ ಮಾತನಾಡುತ್ತ, ಮತ್ತೆ ಮತ್ತೆ ಅದೇ ಜೋಕುಗಳನ್ನು ಗಂಟೆಗಟ್ಟಲೆ ಹೇಳುತ್ತ, ಬಲಿಸುವುದಕ್ಕಾಗಿ ಎಳೆಯದರಲ್ಲೆ ಬೀಜ ತೆಗೆದ ಹುಂಜದ ಕೊನೆಯಿಲ್ಲದ ಆಟವಾಡುತ್ತ ಕಳೆಯುತ್ತಿದ್ದರು. ಆ ಕಥೆಯಲ್ಲಿ ನಿರೂಪಕ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತಿರಾ ಎಂದದ್ದಕ್ಕೆ, ಅವರು ಹೌದು ಎಂದು ಉತ್ತರ ಕೊಟ್ಟರೆ, ನಿರೂಪಕ ತಾನು ಅವರನ್ನು ಹೌದು ಎಂದು ಹೇಳಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಇಲ್ಲ ಎಂದು ಉತ್ತರ ಕೊಟ್ಟರೆ ನಿರೂಪಕ ತಾನು ಅವರನ್ನು ಇಲ್ಲ ಎಂದು ಹೇಳಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಅವರು ಮೌನವಾಗಿದ್ದರೆ ನಿರೂಪಕ ತಾವು ಅವರನ್ನು ಮೌನವಾಗಿರಲು ಕೇಳಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದದ್ದಕ್ಕೆ, ಯಾರೂ ಅಲ್ಲಿಂದ ಹೊರಡುವ ಹಾಗಿರಲಿಲ್ಲ, ಏಕೆಂದರೆ ನಿರೂಪಕ ಅವರಿಗೆ ಹೊರಡಿ ಎನ್ನಲಿಲ್ಲವೆಂದೂ, ಆದರೆ ಅಂತಹ ಹುಂಜದ ಕಥೆ ಹೇಳಬೇಕೆನ್ನುತ್ತೀರಾ ಎಂದು ಉದ್ರಿಕ್ತರಾಗುತ್ತ, ಇಡೀ ರಾತ್ರಿಗಳನ್ನು ಕಳೆಯುತ್ತಿದ್ದರು. +ಇಡೀ ಊರಿಗೆ ನಿದ್ದೆ ಬಾರದ ರೋಗ ತಗುಲಿದೆ ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ತಿಳಿದ ಮೇಲೆ ಅವನು ಸಂಸಾರಗಳ ಮುಖ್ಯಸ್ಥರನ್ನು ಒಟ್ಟು ಮಾಡಿ ತಾನು ಅದರ ಬಗ್ಗೆ ತಿಳಿದುಕೊಂಡಿರುವುದನ್ನು ವಿವರಿಸಿದ. ಅವರೆಲ್ಲರೂ ಆ ಜೌಗು ಪ್ರದೇಶದ ಇತರೆ ಊರುಗಳಿಗೆ ಅದು ಹಬ್ಬದ ಹಾಗೆ ಕೈಗೂಳ್ಳುವ ಕ್ರಮದ ಬಗ್ಗೆ ಒಮ್ಮತಕ್ಕೆ ಬಂದರು. ಅದಕ್ಕಾಗಿ ಅವರು ಗಿಣಿಗಳಿಗೆ ಬದಲಾಗಿ ಅರಬರು ಕೊಟ್ಟಿದ್ದ ಗಂಟೆಗಳನ್ನು ಮೇಕೆಗಳ ಕೊರಳಿನಿಂದ ತೆಗೆದರು. ಅವರು ಆ ಗಂಟೆಗಳನ್ನು ಊರಿನ ಮುಂಬಾಗಿಲಿನಲ್ಲಿ ಪಹರೆಯವರ ವಿನಂತಿ ಮತ್ತು ಉಪದೇಶಗಳನ್ನು ಕೇಳದೆ ಊರೊಳಗೆ ಪ್ರವೇಶ ಮಾಡಲೇಬೇಕೆಂದು ಒತ್ತಾಯಿಸುವವರ ಉಪಯೋಗಕ್ಕೆಂದು ಕಟ್ಟಿದರು. ಮಕೋಂದೋದ ರಸ್ತೆಗಳಲ್ಲಿ ಓಡಾಡುವ ಅಪರಿಚಿತರು ಗಂಟೆ ಬಾರಿಸುತ್ತ ಹೋಗಬೇಕಿತ್ತು. ಏಕೆಂದರೆ ರೋಗಿಗಳಿಗೆ ಅವರು ಆರೋಗ್ಯವಂತರೆಂದು ತಿಳಿಯಬೇಕಾಗಿತ್ತು. ಊರಿನಲ್ಲಿರುವ ಅವರು ಏನನ್ನಾದರೂ ಕುಡಿಯುವುದಕ್ಕಾಗಲೀ, ತಿನ್ನುವುದಕ್ಕಾಗಲೀ ನಿಷೇಧವಿತ್ತು. ಏಕೆಂದರೆ ರೋಗ ಬಾಯಿಯ ಮುಖಾಂತರ ಹರಡುತ್ತದೆ ಎನ್ನುವುದರ ಬಗ್ಗೆ ಅನುಮಾನವಿರಲಿಲ್ಲ. ಅಲ್ಲದೆ ಎಲ್ಲ ತಿಂಡಿ-ತೀರ್ಥಗಳು ನಿದ್ದೆ ಬಾರದ ರೋಗದಿಂದಾಗಿ ಕಲುಷಿತಗೊಂಡಿದ್ದವು. ಈ ವಿಧಾನದಿಂದ ಅವರು ರೋಗವನ್ನು ಆ ಊರಿನ ಪರಿಧಿಯಷ್ಟಕ್ಕೇ ಸೀಮಿತಗೊಳಿಸಿದರು. ಈ ಕ್ರಮ ಎಷ್ಟೊಂದು ಯಶಸ್ವಿಯಾಯಿತೆಂದರೆ ಆಗಿನ ತುರ್ತು ಪರಿಸ್ಥಿತಿಯನ್ನು ಸಹಜವೆಂದು ಪರಿಗಣಿಸಲಾಯಿತು. ಜೀವನದ ಲಯ ಮತ್ತೆ ಸರಿಹೋಗುವ ವ್ಯವಸ್ಥೆಯಾಯಿತಲ್ಲದೆ ನಿದ್ದೆ ಮಾಡುವಂಥ ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಅನಂತರ ಯಾರೂ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ. +ಕೆಲವು ತಿಂಗಳ ಕಾಲ ನೆನಪು ಮಾಸದಂತೆ ರಕ್ಷಿಸಿಕೊಳ್ಳುವ ಸೂತ್ರವೂಂದನ್ನು ಕಂಡು ಹಿಡಿದವನು ಅವ್ರೇಲಿಯಾನೋ. ಅವನು ಅದನ್ನು ಕಂಡು ಹಿಡಿದದ್ದು ಆಕಸ್ಮಿಕವಾಗಿ. ನಿದ್ದೆ ಬಾರದ ಸ್ಥಿತಿಗೆ ಒಳಗಾದ ಮೊದಲಿಗರಲ್ಲಿ ಒಬ್ಬನಾದ ಅವನು ಬೆಳ್ಳಿ ಸಂಬಂಧಿತ ಕೆಲಸದಲ್ಲಿ ಸಂಪೂರ್ಣ ಪರಿಣತಿ ಗಳಿಸಿದ. ಒಂದು ದಿನ ಅವನು ಲೋಹಗಳನ್ನು ಹದ ಮಾಡುವ ಸಣ್ಣ ಅಡಿಗಲ್ಲನ್ನು ಹುಡುಕುತ್ತಿದ್ದ, ಅವನಿಗೆ ಅದರ ಹೆಸರು ನೆನಪಾಗಲಿಲ್ಲ. ಅವನ ತಂದೆ ಅದಕ್ಕೆ “ಅಡಿಗಲ್ಲು” ಎಂದು ಹೇಳಿದರು. ಅವ್ರೇಲಿಯಾನೋ ಸಣ್ಣ ಚೀಟಿಯ ಮೇಲೆ ‘ಅಡಿಗಲ್ಲು\’ ಎಂದು ಬರೆದು ಅದಕ್ಕೆ ಅಂಟಿಸಿದ. ಈ ವಿಧಾನದಿಂದ ಇನ್ನು ಮುಂದೆ ಅದನ್ನು ಮರೆಯವುದಿಲ್ಲವೆಂದು ಅವನಿಗೆ ಖಚಿತವಾಯಿತು. ಅವನಿಗೆ ಅದು ಮರೆವಿನ ಮೊದಲ ದಾಖಲಾತಿ ಎಂದು ತಿಳಿದಿರಲಿಲ್ಲ. ಏಕೆಂದರೆ ಆ ವಸ್ತುವಿನ ಹೆಸರು ನೆನಪಿಟ್ಟುಕೊಳ್ಳುವುದು ಕಠಿಣವಾಗಿತ್ತು. ಆದರೆ ಕೆಲವು ದಿನಗಳ ನಂತೆ ಲ್ಯಾಬೊರೇಟರಿಯಲ್ಲಿನ ಹೆಚ್ಚು ಕಡಿಮೆ ಪ್ರತಿಯೊಂದು ವಸ್ತುವಿನ ಹೆಸರನ್ನು ನೆನಪಿಸಿಕೊಳ್ಳುವುದೂ ಕಷ್ಟವೆಂದು ಗೊತ್ತಾಯಿತು. ಅನಂತರ ಅವನು ಒಂದೊಂದಕ್ಕೂ ಅದರ ಮೇಲೆ ಆಯಾ ಹೆಸರನ್ನು ಬರೆದ. ಇದರಿಂದ ಅವನು ಮಾಡಬೇಕಾದದ್ದು ಏನೆಂದರೆ ಅದರಲ್ಲಿದ್ದದ್ದನ್ನು ಓದುವುದು ಮಾತ್ರ. ಅವನ ತಂದೆ ತಮ್ಮ ಬಾಲ್ಯದ ಅತಿ ಮುಖ್ಯವಾದ ಘಟನೆಗಳನ್ನು ಮರೆತೆನೆಂದು ಗಾಬರಿಯಾದಾಗ ಅವ್ರೇಲಿಯಾನೋ ತನ್ನ ವಿಧಾನವನ್ನು ವಿವರಿಸಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದನ್ನು ಇಡೀ ಮನೆಗೆ ಜಾರಿಗೊಳಿಸಿದ. ಆನಂತರ ಇಡೀ ಹಳ್ಳಿಯಲ್ಲಿ ಎಲ್ಲರೂ ಹಾಗೆ ಮಾಡಲು ಒತ್ತಾಯಿಸಿದ. ಇಂಕ್ ಬ್ರಷ್‌ನಿಂದ ಪ್ರತಿಯೊಂದಕ್ಕೂ ಅದರ ಹೆಸರು ಬರೆದ. ಟೇಬಲ್, ಕುರ್ಚಿ, ಬಾಗಿಲು, ಗೋಡೆ, ಹಾಸಿಗೆ, ತಟ್ಟೆ. ಅವನು ಕೊಟ್ಟಿಗೆಗೆ ಹೋಗಿ ಪ್ರಾಣಿಗಳ ಹಾಗೂ ಗಿಡಗಳ ಹೆಸರನ್ನು ಬರೆದ. ಹಸು, ಮೇಕೆ, ಹಂದಿ, ಕೋಳಿ, ಮರಗೆಣಸು, ಬಾಳೆಹಣ್ಣು. ನೆನಪು ಅಳಿಸಿ ಹೋಗುವ ವಿವಿಧ ಸಾಧ್ಯತೆಗಳನ್ನು ಲೆಕ್ಕಹಾಕುತ್ತಿದ್ದ ಅವನಿಗೆ ಮುಂದೊಂದು ದಿನ ವಸ್ತುಗಳ ಮೇಲೆ ಬರೆದ ಹೆಸರುಗಳಿಂದ ಅವುಗಳನ್ನು ಗುರುತಿಸಬಹುದಾದರೂ ಅವುಗಳ ಉಪಯೋಗ ಯಾರಿಗೂ ನೆನಪಾಗದಿರಬಹುದು ಎಂದುಕೊಂಡ. ಅನಂತರ ಅವನು ಮತ್ತಷ್ಟು ವಿಶದವಾಗಿ ವ್ಯಕ್ತಪಡಿಸಿದ. ಅವನು ಹಸುವೊಂದಕ್ಕೆ ತಗುಲಿ ಹಾಕಿದ ಬರಹ, ಮಕೋಂದೋದವರಿಗೆ ನೆನಪಿನ ನಾಶದ ವಿರುದ್ಧ ಹೋರಾಡಲು ಅತ್ಯುತ್ತಮ ಪುರಾವೆ ಒದಗಿಸಿತು. ಇದು ಹಸು, ಅದು ಹಾಲು ಕೊಡಬೇಕಾದರೆ ಪ್ರತಿ ದಿನ ಬೆಳಿಗ್ಗೆ ಹಾಲು ಕರೆಯಬೇಕು. ಕಾಫಿ ಪುಡಿಯೊಂದಿಗೆ ಬೆರೆಸಿ ಕಾಫಿ ಮಾಡಲು ಹಾಲನ್ನು ಕಾಯಿಸಬೇಕು. ಈ ರೀತಿ ಅವರು ಜಾರಿ ಹೋಗುತ್ತಿದ್ದ ವಾಸ್ತವದಲ್ಲಿ ಸೆರೆ ಹಿಡಿದ ಪದಗಳಿಂದಾಗಿ ಬದುಕುತ್ತಿದ್ದರು. ಆದರೆ ಅವುಗಳ ಮೌಲ್ಯವನ್ನು ಮರೆತ ಕೂಡಲೆ ಅದು ತಪ್ಪಿ ಹೋಗುತ್ತಿತ್ತು. +ಜೌಗು ಪ್ರದೇಶಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಅವರು ‘ಮಕೋಂದೋ\’ ಎಂಬ ಬೋರ್ಡ್ ಹಾಕಿದರು ಮತ್ತು ಮುಖ್ಯ ರಸ್ತೆಯಲ್ಲಿ ‘ದೇವರಿದ್ದಾನೆ\’ ಎಂದು ಮತ್ತೊಂದು. ಪ್ರತಿಯೊಂದು ಮನೆಯಲ್ಲಿಯೂ ವಸ್ತುಗಳ ಹೆಸರು ಮತ್ತು ಅವುಗಳ ಭಾವಗಳ ಸೂತ್ರಗಳನ್ನು ಬರೆಯಲಾಗಿತ್ತು. ಇಡೀ ವ್ಯವಸ್ಥೆಗೆ ಎಷ್ಟೊಂದು ಎಚ್ಚರ ಮತ್ತು ನೈತಿಕ ಸ್ಥೈರ್ಯ ಬೇಕಿತ್ತೆಂದರೆ ಅವರಲ್ಲಿ ಅನೇಕರು ಕಲ್ಪಿತ ವಾಸ್ತವಕ್ಕೆ ಒಳಗಾಗಿದ್ದರು. ಅದು ಕೂಡ ಅವರೇ ನಿರ್ಮಿಸಿಕೊಂಡದ್ದು. ಅದರ ಆಚರಣೆ ಕಷ್ಟವಾದರೂ ಅದರಿಂದ ಅನುಕೂಲವಿತ್ತು. ಅದರ ನಿಗೂಢತೆಯನ್ನು ಜನಪ್ರಿಯಗೊಳಿಸಲು ಕಾರ್ಡುಗಳಿಂದ ಭವಿಷ್ಯವನ್ನು ಓದಿ ತಿಳಿಸುತ್ತಿದ್ದಂತೆ, ಭೂತವನ್ನು ಓದುವ ತಂತ್ರವನ್ನು ಪರಿಕಲ್ಪಿಸಿಕೊಂಡ ಪಿಲರ್ ಟೆರ್‍ನೆರಾಳ ಕೊಡುಗೆ ತುಂಬ ಹೆಚ್ಚಿಗೆ ಇತ್ತು. ನಿದ್ದೆ ಬಾರದವರು ಇಂತಹ ಕಾರ್ಡುಗಳಿಂದ ಕಟ್ಟಿದ ಅನಿರ್ದಿಷ್ಟವಾದ ಪರ್ಯಾಯ ಪ್ರಪಂಚಲ್ಲಿ ಇರತೊಡಗಿದರು. ಅದರಲ್ಲಿ ತಂದೆಯೊಬ್ಬನನ್ನು ಏಪ್ರಿಲ್‌ನಲ್ಲಿ ಬಂದ ಕಪ್ಪಗಿನ ಮನುಷ್ಯನೆಂದೂ, ತಾಯಿಯನ್ನು ಎಡಗೈಗೆ ಬಂಗಾರದ ಕಡಗ ಹಾಕಿಕೊಂಡಿದ್ದ ಹೆಂಗಸೆಂದೂ, ಅಲ್ಲದೆ ಹುಟ್ಟಿದ ದಿನವನ್ನು ಹಿಂದಿನ ಮಂಗಳವಾರ ಗುಲ್ಮ ಮರದಲ್ಲಿ ಬಣ್ಣದ ಗರಿಗಳ ಪಕ್ಷಿ ಹಾಡಿದ ದಿನವೆಂದೂ ನೆನಪಿಸಿಕೊಳ್ಳಲಾಗುತ್ತಿತ್ತು. ಕ್ರಮೇಣ ಈ ಸಾಧಾರಣ ವಿಧಾನಗಳು ನಿಷ್ಫಲವಾಗುತ್ತಿದ್ದಂತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹಿಂದೆ ತಾನು ಜಿಪ್ಸಿಗಳ ಅದ್ಭುತ ಆವಿಷ್ಕಾರಗಳನ್ನು ನೆನಪಿನಲ್ಲಿ ಇಟ್ಟುಕೂಳ್ಳಲು ಉದ್ದೇಶಿಸಿದ್ದ ನೆನಪಿನ ಮೆಷಿನ್ ನಿರ್ಮಿಸಲು ನಿರ್ಧರಿಸಿದ. ಪ್ರತಿದಿನ ಬೆಳಿಗ್ಗೆ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಆ ತನಕ ಪಡೆದುಕೊಂಡಿರುವ eನವನ್ನೆಲ್ಲ ಪುನರಾವಲೋಕನ ಮಾಡುವ ಸಾಧ್ಯತೆಯ ಸೂತ್ರವನ್ನು ಆ ಉಪಕರಣ ಹೊಂದಿತ್ತು. ಅವನು ಅದನ್ನು ತಿರುಗಣಿಯಂತೆ ಸುತ್ತುವ ಪದಕೋಶವನ್ನು, ಅಕ್ಷದ ಮೇಲಿನ ವ್ತಕ್ತಿಯೊಬ್ಬ ಸನ್ನೆ ಕೋಲು ಆಡಿಸಿದಾಗ, ಅತ್ಯಲ್ಪ ಕಾಲದಲ್ಲಿ ಜೀವನದ ಅಗತ್ಯ ಅಂಶಗಳೆಲ್ಲ ಅವನ ಕಣ್ಣ ಮುಂದೆ ಹಾದು ಹೋಗುವ ಹಾಗೆ ಪರಿಕಲ್ಪಿಸಿದ. ಅವನು ಅಂತಹ ಸುಮಾರು ಹದಿನಾಲ್ಕು ಸಾವಿರದಷ್ಟನ್ನು ಬರೆಯಲು ಸಫಲನಾದಾಗ ಜೌಗು ಪ್ರದೇಶದ ರಸ್ತೆಯಲ್ಲಿ ಹಗ್ಗದಿಂದ ಕಟ್ಟಿದ್ದ ಉಬ್ಬಿದ ಸೂಟ್‌ಕೇಸನ್ನು ಹೊತ್ತುಕೊಂಡು, ಕಪ್ಪು ಬಟ್ಟೆ ಹೊದಿಸಿದ, ಸಣ್ಣಗೆ ಗಂಟೆ ಶಬ್ದ ಮಾಡುತ್ತಿದ್ದ ಗಾಡಿಯೊಂದನ್ನು ಎಳೆಯುತ್ತಿದ್ದ ವಯಸ್ಸಾದ ವಿಚಿತ್ರ ಮನುಷ್ಯನೊಬ್ಬ ಕಾಣಿಸಿಕೊಂಡ. ಅವನು ನೇರವಾಗಿ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಮನೆಗೆ ಹೋದ. +ವಿಸಿಟಾಸಿಯೋನ್ ಬಾಗಿಲು ತೆರೆದಾಗ ಅವನನ್ನು ಗುರುತಿಸಲಿಲ್ಲ ಮತ್ತು ಮರೆವಿನ ಮರಳಿನಲ್ಲಿ ಕುಸಿದು ಹೋಗುತ್ತಿದ್ದ ಆ ಊರಿನಲ್ಲಿ ಯಾವುದನ್ನೂ ಮಾರುವಂತಿಲ್ಲ ಎನ್ನು?ಜಜಿ;ದನ್ನು ಅರಿಯದ ಅವಳು ಅವನು ಏನನ್ನೋ ಮಾರಲು ಬಂದವನು ಎಂದು ತಿಳಿದಳು. ಅವನು ವ;ಪ್ಪಿನಿಂದ ಕುಗ್ಗಿಹೋದ ವ್ಯಕ್ತಿಯಾಗಿದ್ದ. ಅವನ ಧ್ವನಿ ಉಡುಗಿ ಅಸ್ಪಷ್ಟವಾಗಿದ್ದರೂ ಮತ್ತು ಅವನ ಕೈಗಳಿಗೆ ವಸ್ತುಗಳಿರುವುದು ಅರಿವಾಗದಿದ್ದರೂ ಅವನು ಜನರಿಗೆ ನಿದ್ದೆ ಬರುವ ಹಾಗೂ ನೆನಪುಗಳಿರುವ ಪ್ರದೇಶದಿಂದ ಬಂದವನೆಂದು ಸುಸ್ವಷ್ಟವಾಗಿತ್ತು. ಅವನು ಹಜಾರದಲ್ಲಿ ಕಪ್ಪು ಬಣ್ಣದ ಹ್ಯಾಟ್‌ನಿಂದ ಗಾಳಿ ಬೀಸಿಕೊಳ್ಳುತ್ತ ಗೋಡೆಗಳ ಮೇಲೆ ಅಂಟಿಸಿದ ಗುರುತಿನ ವಿವರಗಳನ್ನು ಕನಿಕರದಿಂದ ಓದುತ್ತ ಕುಳಿತಿದ್ದನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾ ನೋಡಿದ. ಹಿಂದೆಂದೋ ತಾನು ಕಂಡಿರಬಹುದಾದ ಮತ್ತು ಈಗ ಅವನ ನೆನಪಿಲ್ಲದೆ ಹೋದರೂ ಅವನಲ್ಲಿ ಹೆಚ್ಚಿನ ಆತ್ಮೀಯತೆಯನ್ನು ವ್ಯಕ್ತಪಡಿಸಿದ. ಆದರೆ ಆಗಂತುಕನಿಗೆ ಅವನ ಕಷ್ಟದ ಅರಿವಿತ್ತು. ಅವನಿಗೆ ತನ್ನನ್ನು ತಾನೇ ಮರೆತಂತೆ ಅನ್ನಿಸಿತು. ಅದು ವಾಸಿಯಾಗದ ಹೃದಯದಾಳದ ಮರೆವಲ್ಲ. ಅದು ಬೇರೆ ರೀತಿಯ ಮರೆವು. ಹೆಚ್ಚು ಕ್ರೂರ ಹಾಗೂ ಮಾರ್ಪಡಿಸಲಾಗದ್ದು. ಅವನಿಗೆ ಅದು ತಿಳಿದಿತ್ತು. ಏಕೆಂದರೆ ಅದು ಸಾವಿನ ಮರೆವು ಎಂದು ಅನಂತರ ಅವನಿಗೆ ಗೊತ್ತಾಯಿತು. ಎಂತೆಂಥದೋ ವಸ್ತುಗಳನ್ನು ಒತ್ತೊತ್ತಿ ಇಟ್ಟಿದ್ದ ಸೂಟ್‌ಕೇಸನ್ನು ತೆಗೆದು ಅದರೊಳಗಿದ್ದ ಕೆಲವು ಫ್ಲಾಸ್ಕ್‌ಗಳಿದ್ದ ಸಣ್ಣ ಪೆಟ್ಟಿಗೆಯನ್ನು ಹೊರತೆಗೆದ. ಅವನು ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗೆ ತೆಳು ಬಣ್ಣದೊಂದನ್ನು ಕುಡಿಯಲು ಕೊಟ್ಟ. ತಕ್ಷಣವೇ ಅವನ ನೆನಪಿನಲ್ಲಿ ಬೆಳಕು ಹೊಳೆಯಿತು. ಅಳು ಉಕ್ಕಿ ಅವನ ಕಣ್ಣುಗಳು ಹನಿಗೂಡುವುದಕ್ಕೆ ಮೊದಲೆ ವಸ್ತುಗಳ ಮೇಲೆ ಬರೆದ ಹೆಸರುಗಳು, ಗೋಡೆಗಳ ಮೇಲಿನ ಅರ್ಥವಿಲ್ಲದ ಬರಹ ಇವುಗಳಿಂದ ನಾಚಿ ತಾನು ಅಸಂಗತವಾದ ರೂಮಿನಲ್ಲಿರುವುದನ್ನು ಗಮನಿಸಿದ ಮತ್ತು ಸಂತೋಷದ ಝಳಪಿನಿಂದ ಹೊಸಬನನ್ನು ಗುರುತಿಸಿದ. ಅವನು ಮೆಲ್‌ಕಿಯಾದೆಸ್ ಆಗಿದ್ದ. +ನೆನಪು ವಾಪಸು ಬಂದದ್ದನ್ನು ಮಕೋಂದೋ ಆಚರಿಸುತ್ತಿದ್ದ ಹಾಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಮೆಲ್‌ಕಿಯಾದೆಸ್ ತಮ್ಮ ಹಳೆಯ ಸ್ನೇಹಕ್ಕಂಟಿದ ಧೂಳನ್ನು ಕೊಡವಿದರು. ಆ ಜಿಪ್ಸಿಗೆ ಆ ಊರಿನಲ್ಲೇ ಇರುವ ಮನಸ್ಸಿತ್ತು. ಅವನು ನಿಜವಾಗಿಯೂ ಸಾವನ್ನು ಮುಟ್ಟಿ ಬಂದಿದ್ದ. ಅವನು ಹಿಂತಿರುಗಿ ಬಂದದ್ದೇಕೆಂದರೆ ಅವನಿಗೆ ಏಕಾಂತ ಸಹಿಸುವುದು ಅಸಾಧ್ಯವಾಗಿತ್ತು. ತನ್ನ ತಂಡದಿಂದ ನಿರಾಕರಿಸಲ್ಪಟ್ಟು ಜೀವನಕ್ಕೆ ಪ್ರಾಮಾಣಿಕನಾದ ಅವನು ಸಾವು ಕಾಣದ ಊರೊಂದರಲ್ಲಿ ವಿಶಿಷ್ಟ ಲ್ಯಾಬೊರೇಟರಿಯ ಪ್ರಕ್ರಿಯೆಗಳಲ್ಲಿ ಸಂಪೂರ್ಣ ತೊಡಗಿಕೊಳ್ಳುವುದಕ್ಕೆ, ಪ್ರಪಂಚದಲ್ಲಿ ಎಲ್ಲೋ ಮೂಲೆಯಲ್ಲಿರುವ ಸ್ಥಳದಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಂಥದೊಂದು ಆವಿಷ್ಕಾರದ ಬಗ್ಗೆ ಕೇಳಿರಲಿಲ್ಲ. ಅವನು ಮತ್ತು ಅವನ ಇಡೀ ಸಂಸಾರ ಕೊನೆಯಿಲ್ಲದ ಕಾಲದುದ್ದಕ್ಕೂ ಮಿರುಗುವ ಬಣ್ಣದ ಲೋಹಕ್ಕೆ ಅಂಟಿಕೊಂಡಿದ್ದವರು. ಅದರಿಂದ ಅವನು ದಂಗು ಬಡಿದು ಮೂಕನಾದ. ಆ ದಿನ ಹಳೆಯ ರೀತಿಯಲ್ಲಿ ಮಾಡಿದ ಛಾಯಾಚಿತ್ರದಲ್ಲಿ, ಹೊಳೆವ ಬಿಳಿಗೂದಲ ಹೊಸೆ ಅರ್ಕಾದಿಯೋ ಬ್ಯುಂದಿಯಾ, ತಾಮ್ರದ ಗುಂಡಿಯಿಂದ ಶರಟಿಗೆ ಕಾಲರ್ ಹಾಕಿಕೊಂಡು ಸೌಮ್ಯ ಬೆರೆತ ಬೆರಗಿನ ಭಾವವನ್ನು ಪ್ರಕಟಿಸಿದ್ದನ್ನು ನೋಡಿ ಉರ್ಸುಲಾ ನಗುತ್ತ, ಅದನ್ನು ‘ಬೆದರಿದ ಜನರಲ್\’ ಎಂದು ವಿವರಿಸಿದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಭಾವಚಿತ್ರ ತೆಗೆದ ಆ ಡಿಸೆಂಬರ್‌ನ ದಿನ ನಿಜಕ್ಕೂ ಬೆದರಿದ್ದನೇಕೆಂದರೆ ಅವನ ಹೆಸರು ಲೋಹದ ಫಲಕದ ಮೇಲೆ ಉಳಿದು ನಿಧಾನವಾಗಿ ಜನರು ಸೊರಗಿ ಹೋಗುತ್ತಾರೆಂದು. ಆದರೆ ಪದ್ಧತಿಯಲ್ಲಿ ತಿರುಗು ಮುರುಗು ಮಾಡಿದ ಉರ್ಸುಲಾ ಅವನ ತಲೆಯೊಳಗಿಂದ ಈ ವಿಷಯ ತೊಲಗುವಂತೆ ಮಾಡಿದಳಲ್ಲದೆ ಹಳೆಯ ಕಹಿಯನ್ನೆಲ್ಲ ಮರೆತು ಮೆಲ್‌ಕಿಯಾದೆಸ್‌ನನ್ನು ಮನೆಯಲ್ಲಿ ಇರುವುದಕ್ಕೆ ಬಿಡಲು ನಿರ್ಧರಿಸಿದಳು. ಆದರೆ ಅವಳು ಮನೆಯ ಭಾವ ಚಿತ್ರ ತೆಗೆಯುವುದಕ್ಕೆ ಅನುಮತಿ ಕೊಡಲಿಲ್ಲ. ಏಕೆಂದರೆ (ಅವಳ ಮಾತಿನ ಪ್ರಕಾರ) ಅವಳು ತನ್ನ ಮೊಮ್ಮಕ್ಕಳ ದೃಷ್ಟಿಯಲ್ಲಿ ನಗೆಪಾಟಲಾಗುವುದು ಬೇಡವಾಗಿತ್ತು. ಆ ದಿನ ಬೆಳಿಗ್ಗೆ ಅವರಿಗೆ ಒಳ್ಳೆಯ ಬಟ್ಟೆ ತೊಡಿಸಿ, ಮುಖಕ್ಕೆ ಪೌಡರ್ ಹಚ್ಚಿ ಮೆಲ್‌ಕಿಯಾದೆಸ್‌ನ ಅದ್ಭುತ ಕ್ಯಾಮೆರಾದ ಎದುರು ಅಲ್ಲಾಡದೆ ಎರಡು ನಿಮಿಷ ನಿಂತುಕೊಳ್ಳಲು ಅನುವಾಗುವಂತೆ ಒಂದೊಂದು ಚಮಚ ಸಿರಪ್ ಕುಡಿಯಲು ಕೊಟ್ಟಿದ್ದಳು. ಇಡೀ ಸಂಸಾರದ ಇದ್ದ ಒಂದೇ ಒಂದು ಛಾಯಾಚಿತ್ರದಲ್ಲಿ ಕಪ್ಪು ವೇಷವನ್ನು ಹಾಕಿಕೊಂಡ ಅವ್ರೇಲಿಯಾನೋ, ಅಮರಾಂತ ಮತ್ತು ರೆಬೇಕರ ನಡುವೆ ನಿಂತಿದ್ದ. ವರ್ಷಗಳ ನಂತರ ಅವನು ಗುಂಡಿಕ್ಕುವ ತಂಡದೆದುರು ನಿಂತಾಗ ಅದೇ ಠೀವಿ, ಗತ್ತು ಮತ್ತು ನೋಟವನ್ನು ಹೊಂದಿದವನಾಗಿದ್ದ. ಆದರೂ ಅವನಿಗೆ ತನ್ನ ದುರ್ವಿಧಿಯ ಸುಳಿವು ಸಿಕ್ಕಿರಲಿಲ್ಲ. ಅವನೊಬ್ಬ ಪರಿಣಿತ ಅಕ್ಕಸಾಲಿಗನಾಗಿದ್ದ. ಅವನು ಸೂಕ್ಷ್ಮತರ ಕೆಲಸಕ್ಕೆ ಇಡೀ ಜೌಗು ಪ್ರದೇಶದಲ್ಲೆಲ್ಲ ಹೆಸರುವಾಸಿಯಾಗಿದ್ದ. ವರ್ಕ್‌ಶಾಪಿನಲ್ಲಿ ಮೆಲ್‌ಕಿಯಾದೆಸ್‌ನ ಸಂಗಡ ಇದ್ದ ಅವನು ಉಸಿರಾಡುತಿದ್ದದ್ದೂ ಕೇಳಿಸುತ್ತಿರಲಿಲ್ಲ. ಅವನ ತಂದೆ ಮತ್ತು ಮೆಲ್‌ಕಿಯಾದೆಸ್‌ರಿಂದ ಫ್ಲಾಸ್ಕ್‌ಗಳು, ಟ್ರೇಗಳು ಹಾಗೂ ಚೆಲ್ಲಿದ ಆಸಿಡ್ ಮತ್ತು ಬೆಳ್ಳಿಯ ರಾಸಾಯನಿಕಗಳು ಹೊಸ ತಿರುವುಗಳನ್ನು ಪಡೆಯುತ್ತ, ಪ್ರತಿಕ್ಷಣವೂ ಬೇರೆಯದಕ್ಕೆ ಹೊರಳುವ ಸದ್ದು ಗದ್ದಲದ ನಡುವೆ, ನಾಸ್ಟರ್‌ಡಾಮಸ್‌ನ ಭವಿಷ್ಯ ನುಡಿಗಳ ವ್ಯಾಖ್ಯಾನ ಮಾಡುತ್ತಿದ್ದರು. ತಾನು ಮಾಡುತ್ತಿದ್ದ ಕೆಲಸದ ಬಗ್ಗೆ ಸಮರ್ಪಣಾ ಮನೋಭಾವದಿಂದ ಮತ್ತು ಗಮನವಿಟ್ಟು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳಿಂದ ಅವ್ರೇಲಿಯಾನೋಗೆ ಸ್ವಲ್ಪ ಕಾಲದಲ್ಲಿಯೇ ರುಚಿಕರವಾದ ಮಾಂಸದ ತಿನಿಸುಗಳನ್ನು ಮಾರಿ ಸಂಪಾದಿಸುತ್ತಿದ್ದ ಉರ್ಸುಲಾಗಿಂತ ಹೆಚ್ಚು ಹಣ ಸಂಪಾದಿಸಲು ಸಾಧ್ಯವಾಯಿತು. ಆದರೆ ಬೆಳೆದು ದೊಡ್ಡವನಾದ ಅವನಿಗೆ ಹೆಣ್ಣಿನ ಸಂಗ ಇಲ್ಲದಿರುವುದು ವಿಚಿತ್ರವೆನಿಸಿತು. ನಿಜ, ಅವನಿಗೆ ಯಾರೂ ಇರಲಿಲ್ಲ. +ಕೆಲವು ತಿಂಗಳಿನ ನಂತರ ಪುರಾತನ ಅಲೆಮಾರಿ ಹಾಗೂ ಆಗಾಗ ಮಕೋಂದೋ ಮೂಲಕ ತಾನು ಸಂಯೋಜಿಸಿದ ಹಾಡುಗಳನ್ನು ಹಂಚುತ್ತ ಹಾದು ಹೋಗುತ್ತಿದ್ದ ಸುಮಾರು ಇನ್ನೂರು ವರ್ಷದ ಫ್ರಾನ್ಸಿಸ್ಕೋ ಕಾಣಿಸಿಕೊಂಡ. ಅವನು ಮನಾರ್‌ನಿಂದ ಜೌಗು ಪ್ರದೇಶದ ಅಂಚಿನ ನಡುವೆ ನಡೆದ ಮಾರ್ಗದಲ್ಲಿದ್ದ ಅನೇಕ ಊರುಗಳಲ್ಲಿ ನಡೆಯುತ್ತಿದ್ದುದ್ದನ್ನು ವಿಸ್ತಾರವಾಗಿ ಹೇಳಿದ. ಇದರಿಂದ ಯಾರಿಗಾದರೂ ಸಂದೇಶ ಕಳಿಸಬೇಕಾದಲ್ಲಿ ಅಥವಾ ಸಾರ್ವಜನಿಕರಿಗೆ ತಿಳಿಸಬೇಕಾದ ಘಟನೆಯಿದ್ದಲ್ಲಿ, ಹಾಗೆ ಮಾಡಬೇಕೆನ್ನುವರು ಎರಡು ಸೆಂಟ್ ಕೊಟ್ಟು ಅದನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಹೇಳಿದ. ಹೀಗೆಯೇ ಉರ್ಸುಲಾ ತನ್ನ ಮಗ ಹೊಸೆ ಅರ್ಕಾದಿಯೋನ ಬಗ್ಗೆ ಏನಾದರೂ ಹೇಳುತ್ತಾನೆಂಬ ನಿರೀಕ್ಷೆಯಿಂದ ಅವನ ಹಾಡುಗಳನ್ನು ಕೇಳುತ್ತಿದ್ದಾಗ ತನ್ನ ತಾಯಿಯ ಸಾವಿನ ಬಗ್ಗೆ ತಿಳಿದದ್ದು. ಅವನು ಅದನ್ನು ಕರೆದಿದ್ದ, ಏಕೆಂದರೆ ಹಿಂದೊಂದು ಸಲ ಅವನು ಆಶು ಸ್ವರ್ಧೆಯಲ್ಲಿ ದೆವ್ವವೊಂದನ್ನು ಸೋಲಿಸಿದ್ದ. ಯಾರಿಗೂ ಹೆಸರು ಗೊತ್ತಿರದಿದ್ದ ಅದು ನಿದ್ದೆ ಬಾರದ ರೋಗದ ದಿನಗಳಲ್ಲಿ ಮಕೋಂದೋದಿಂದ ಕಾಣೆಯಾಗಿತ್ತು. ಅನಂತರ ಅವನು ಒಂದು ರಾತ್ರಿ ಕತಾವುರೆಯ ಅಂಗಡಿಯಲ್ಲಿ ಕಾಣಿಸಿಕೊಂಡ. ಪ್ರಪಂಚದಲ್ಲಿ ಏನಾಗಿದೆ ಎಂದು ತಿಳಿಯುವುದಕ್ಕಾಗಿ ಇಡೀ ಊರು ಅವನು ಹೇಳುವುದನ್ನು ಕೇಳಲು ಹೋಯಿತು. ಆ ಸಂದರ್ಭದಲ್ಲಿ ಹೆಂಗಸೊಬ್ಬಳು ಅವನ ಜೊತೆ ಬಂದಿದ್ದಳು. ಅವಳೆಷ್ಟು ದಡೂತಿ ಹೆಂಗಸೆಂದರೆ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿದ್ದ ಅವಳನ್ನು ನಾಲ್ಕು ಜನ ಇಂಡಿಯನ್ನರು ಹೊತ್ತುಕೊಂಡು ಬಂದಿದ್ದರು. ಜೊತೆಗೆ ಅವಳಿಗೆ ಬಿಸಿಲಿಗೆ ಕೊಡೆ ಹಿಡಿದು, ಎಲ್ಲೋ ದೃಷ್ಟಿ ನೆಟ್ಟ, ಹರೆಯದ ಐರೋಪ್ಯ ಹಾಗೂ ನೀಗ್ರೋ ಮಿಶ್ರ ಜನಾಂಗದ ಹುಡುಗಿಯೊಬ್ಬಳಿದ್ದಳು. ಆ ರಾತ್ರಿ ಅವ್ರೇಲಿಯಾನೋ ಕತಾವುರೆಯ ಅಂಗಡಿಗೆ ಹೋದ. ಸುತ್ತ ವೃತ್ತಾಕಾರದಲ್ಲಿದ್ದವರ ಮಧ್ಯೆ ಕುಳಿತ ಅವನು ಗೋಸುಂಬೆಯಂತೆ ಕಂಡ. ಅವನು ಗಯಾನಾದಲ್ಲಿ ಸರ್ ವಾಲ್ಟರ್ ರ್‍ಯಾಲಿ ಕೊಟ್ಟಿದ್ದ ಅಕಾರ್ಡಿಯನ್ ಬಾರಿಸುತ್ತ, ಹಳೆಯದಾದ, ಈಗ ಚಾಲ್ತಿಯಲ್ಲಿ ಇರದ ರಾಗದಲ್ಲಿ ಸುದ್ದಿಯನ್ನು ಹಾಡುತ್ತಿದ್ದ. ಅದರ ಲಯಕ್ಕೆ ಅನುಗುಣವಾಗಿ ನಡೆಯುತ್ತಿದ್ದ ಅವನ ಭಾರಿ ಪಾದಗಳಲ್ಲಿ ಪೆಟ್ಲುಪ್ಪಿನಿಂದಾಗಿ ಬಿರುಕುಗಳಿತ್ತು. ಜನರು ಬಂದು ಹೋಗಿ ಮಾಡುತ್ತಿದ್ದ ಹಿಂದಿನ ಬಾಗಿಲ ಎದುರು ತುಯ್ದಾಡುವ ಕುರ್ಚಿಯಲ್ಲಿ ಮೌನವಾಗಿ ಕುಳಿತ ಹೆಂಗಸು ಗಾಳಿ ಬೀಸಿಕೊಳ್ಳುತ್ತಿದ್ದಳು. ಕಿವಿಯಲ್ಲಿ ಗುಲಾಬಿ ಹೂ ಸಿಕ್ಕಿಸಿಕೊಂಡ ಕತಾವುರೆ ನೆರೆದವರಿಗೆ ಕಬ್ಬಿನ ಹಾಲನ್ನು ಕೊಡುತ್ತ ಆ ಸಂದರ್ಭದ ಲಾಭ ಪಡೆದು, ಜನರ ಬಳಿ ಹೋಗಿ ಯುಕ್ತವಲ್ಲದ ಜಾಗಗಳ ಮೇಲೆಲ್ಲ ಕೈ ಇಡುತ್ತಿದ್ದ. ಮಧ್ಯ ರಾತ್ರಿಯ ಹೊತ್ತಿಗೆ ಸೆಖೆ ತಡೆಯದಂತಾಯಿತು. ತಮ್ಮ ಸಂಸಾರಕ್ಕೆ ಸಂಬಂಧಿಸಿದ ಯಾವುದನ್ನೂ ಕೇಳಿಸಿಕೊಳ್ಳದೆ ಅವ್ರೇಲಿಯಾನೋ ಕೊನೆಯ ತನಕ ಸುದ್ದಿಗಳನ್ನು ಕೇಳಿಸಿಕೊಂಡ. ಅವನು ಹೊರಡಲೆದ್ದಾಗ ಆ ಹೆಂಗಸು ಕೈಯಿಂದ ಅವನಿಗೆ ಸನ್ನೆ ಮಾಡಿದಳು. +‘ನೀವೂ ಒಳಗೆ ಹೋಗಿ, ಅದಕ್ಕೆ ಇಪ್ಪತ್ತು ಸೆಂಟ್ ಅಷ್ಟೇ\’ ಎಂದಳು ಅವ್ರೇಲಿಯಾನೋ ಅವಳು ಹಿಡಿದುಕೊಂಡಿದ್ದ ಪೆಟ್ಟಿಗೆಗೆ ಒಂದು ನಾಣ್ಯ ಎಸೆದು ಏಕೆಂದು ತಿಳಿಯದೆ ರೂಮಿನೊಳಗೆ ಹೋದ. ಚಿಕ್ಕ ಮೊಲೆಗಳಿದ್ದ ಹರೆಯದ ಹ;ಡುಗಿಯೊಬ್ಬಳು ಹಾಸಿಗೆಯಲ್ಲಿ ಬೆತ್ತಲಾಗಿದ್ದಳು. ಅವ್ರೇಲಿಯಾನೋಗಿಂತ ಮುಂಚೆ ಆ ರಾತ್ರಿ ಅರವತ್ತು ಜನ ಆ ರೂಮನ್ನು ಹಾದು ಹೋಗಿದ್ದರು. ಬಹಳಷ್ಟು ಬಳಕೆಯಾಗಿ, ಬೆವರು ಬಿಸಿಯುಸಿರು ಸೇರಿಕೊಂಡು ರೂಮೊಳಗಿನ ಗಾಳಿ ಹೊಲಸಾಗಿತ್ತು. ಒದ್ದೆಯಾಗಿದ್ದ ಶೀಟನ್ನು ಎತ್ತಿ ಅವ್ರೇಲಿಯಾನೋಗೆ ಒಂದು ಕಡೆ ಹಿಡಿಯಲು ಹೇಳಿದಳು. ಅದು ಕ್ಯಾನ್‌ವಾಸ್ ತುಂಡಿನಷ್ಟು ಭಾರವಾಗಿತ್ತು. ಅವರು ಅದನ್ನು ಕೊನೆಯಿಂದ ತಿರುಗಿಸಿ ಸಹಜ ಭಾರ ಬರುವವರೆಗೂ ಹಿಂಡಿದರು. ಅವರು ಹಾಸಿದ್ದನ್ನು ತಿರುಗಿಸಿದರು. ಇನ್ನೊಂದು ಕಡೆಯಿಂದ ನೀರು ಜಿನುಗಿತು. ಅವ್ರೇಲಿಯಾನೋಗೆ ಹೀಗೆ ಮಾಡುವ ಕ್ರಿಯೆ ಮುಗಿಯುವುದಿಲ್ಲವೇನೋ ಎಂಬ ಆತಂಕ ಉಂಟಾಯಿತು. ಅವನಿಗೆ ಪ್ರೇಮಿಸುವ ಬಗ್ಗೆ ಅದರ ಯಾಂತ್ರಿಕ ಸೂತ್ರಗಳು ಗೊತ್ತಿತ್ತು. ಆದರೆ ಅವನಿಗೆ ಉಂಟಾದ ಮಂಡಿಯ ದುರ್ಬಲತೆಯಿಂದ ನಿಂತಿರಲು ಸಾಧ್ಯವಾಗಲಿಲ್ಲ. ಅಲ್ಲದೆ ಮುಖದ ಮೇಲೆ ದಪ್ಪ ಮೊಡವೆಗಳಿದ್ದರೂ ಒಳಗಿನಿಂದ ಉಕ್ಕಿ ಬಂದ ಮರುಕವನ್ನು ಹೊರಗೆ ಹಾಕುವ ಒತ್ತಡವನ್ನು ಅವನಿಗೆ ತಡೆಯಲಾಗಲಿಲ್ಲ. ಹಾಸಿಗೆಯನ್ನು ಸರಿ ಮಾಡಿದ ಮೇಲೆ ಹುಡುಗಿ ಬಟ್ಟೆ ಕಳಚಲು ಹೇಳಿದಾಗ ಗೊಂದಲಗೊಂಡು ಹೇಳಿದ: “ಅವರು ಒಳಗೆ ಬರುವಂತೆ ಮಾಡಿದ್ರು. ತಟ್ಟೇಲಿ ಇಪ್ಪತ್ತು ಸೆಂಟ್ಸ್ ಹಾಕಲು ಹೇಳಿ ಅವಸರ ಪಡಿಸಿದ್ರು.” ಹುಡುಗಿಗೆ ಅವನ ಗೊಂದಲ ಅರ್ಥವಾಯಿತು. ಅವಳು ಮೃದುವಾಗಿ, “ನೀನು ವಾಪಸು ಹೋಗೋವಾಗ ಮತ್ತೆ ಇಪ್ಪತ್ತು ಸೆಂಟ್ಸ್ ಹಾಕಿದ್ರೆ ಇನ್ನೂ ಸ್ವಲ್ಪ ಹೊತ್ತು ಇಲ್ಲಿರಬಹುದು” ಎಂದಳು. ಅವ್ರೇಲಿಯಾನೋ ಬಟ್ಟೆ ಕಳಚಿದ. ಆದರೆ ಬೆತ್ತಲೆ ಸ್ಥಿತಿಯನ್ನು ತನ್ನ ಸೋದರನೊಂದಿಗೆ ಹೋಲಿಸಿಕೊಳ್ಳಬೇಕಾದ ಆಲೋಚನೆಯನ್ನು ದೂರ ತಳ್ಳಲಾಗಲಿಲ್ಲ. ಆ ಹುಡುಗಿ ಎಷ್ಟೇ ಪ್ರಯತ್ನಿಸಿದರೂ ಅವನು ಹೆಚ್ಚು ಹೆಚ್ಚು ವಿಮನಸ್ಕನಾದ ಮತ್ತು ತೀವ್ರ ಒಬ್ಬಂಟಿತನವನ್ನು ಅನುಭವಿಸಿದ. ‘ನಾನು ಇನ್ನೊಂದು ಇಪ್ಪತ್ತು ಸೆಂಟ್ಸ್ ಕೊಡುತ್ತೇನೆ\’ ಎಂದು ಕಂಗೆಟ್ಟು ಹೇಳಿದ. ಅವಳು ಅವನಿಗೆ ಮೌನವಾಗಿ ವಂದಿಸಿದಳು. ಅವಳ ಬೆನ್ನು ಒರಟಾಗಿತ್ತು. ಚರ್ಮ ಮೂಳೆಗೆ ಒತ್ತಿಕೊಂಡಿತ್ತು. ಅಸಾಧ್ಯ ಸುಸ್ತಿನಿಂದ ಕಷ್ಟಪಟ್ಟು ಉಸಿರಾಡುತ್ತಿದ್ದಳು. ಎರಡು ವರ್ಷಗಳ ಹಿಂದೆ ಅಲ್ಲಿಂದ ಬಹಳ ದೂರದಲ್ಲಿ ಬಂದ ಅವಳು ಉರಿವ ಮೇಣದ ಬತ್ತಿಯನ್ನು ಆರಿಸದೆ ಮಲಗಿದ್ದಳು. ಸುತ್ತಲೂ ಬೆಂಕಿ ಹೊತ್ತಿಕೊಂಡು ಅವಳಿಗೆ ಎಚ್ಚರವಾಯಿತು. ಅವಳನ್ನು ಬೆಳೆಸಿದ ಅಜ್ಜಿಯೊಡನೆ ಇದ್ದ ಮನೆ ಸುಟ್ಟ್ಟು ಬೂದಿಯಾಯಿತು. ಅಂದಿನಿಂದ ಅವಳ ಅಜ್ಜಿ ಅವಳನ್ನು ಊರಿಂದೂರಿಗೆ ಕರೆದುಕೊಂಡು ಹೋಗಿ, ಸುಟ್ಟು ಹೋದ ಮನೆಗಾದ ಮೌಲ್ಯವನ್ನು ಸರಿದೂಗಿಸಲು, ಇಪ್ಪತ್ತು ಸೆಂಟ್ಸ್ ಕೊಟ್ಟವರ ಜೊತೆ ಮಲಗುವಂತೆ ಮಾಡುತ್ತಿದ್ದಳು. ಆ ಹುಡುಗಿಯ ಲೆಕ್ಕಾಚಾರದಂತೆ ಇನ್ನೂ ಹತ್ತು ವರ್ಷ ಪ್ರತಿ ದಿನ ರಾತ್ರಿ ಎಪ್ಪತ್ತು ಜನ ಗಂಡಸರನ್ನು ನಿಭಾಯಿಸಬೇಕಾಗಿತ್ತು. ಜೊತೆಗೆ ಪ್ರಯಾಣದ ವೆಚ್ಚ, ಇಬ್ಬರ ಊಟ-ತಿಂಡಿ ಹಾಗೂ ತುಯ್ದಾಡುವ ಕುರ್ಚಿಯನ್ನು ಹೊರುವ ಇಂಡಿಯನ್‌ರಿಗೆ ಕೊಡಬೇಕಾದದ್ದು, ಇವುಗಳನ್ನು ತೂಗಿಸಬೇಕಾಗಿತ್ತು. ಆಕೆ ಎರಡನೆ ಸಲ ಬಾಗಿಲು ಬಡಿದಾಗ ಏನೂ ಮಾಡದೆ ಆಳು ಬಂದಂತಾಗಿ ಅವ್ರೇಲಿಯಾನೋ ರೂಮಿನಿಂದ ಆಚೆ ಹೊರಟ. ಆ ಹುಡುಗಿಯ ಬಗ್ಗೆ ಅಪೇಕ್ಷೆ ಮತ್ತು ಮರುಕದಿಂದ ಅವನು ಆ ರಾತ್ರಿ ಇಡೀ ನಿದ್ದೆ ಮಾಡಲಿಲ್ಲ. ಅವಳನ್ನು ಪ್ರೀತಿಸುವ ಮತ್ತು ರಕ್ಷಿಸುವ ಅತೀವ ಬಯಕೆ ಉಂಟಾಯಿತು. ನಿದ್ದೆ ಬರದೆ ಮತ್ತು ಜ್ವರದ ತಾಪದಿಂದ ಸೊರಗಿ ಶಾಂತಚಿತ್ತನಾಗಿ ಬೆಳಗಿನ ಸಮಯಕ್ಕೆ ಅವಳ ಅಜ್ಜಿಯಿಂದ ಅವಳನ್ನು ಬಿಡುಗಡೆ ಮಾಡುವುದಕ್ಕೆ ಮತ್ತೆ ಪ್ರತಿ ರಾತ್ರಿ ಎಪ್ಪತ್ತು ಜನರಿಗೆ ಕೊಡುವ ತೃಪ್ತಿಯನ್ನು ತಾನು ಅನುಭವಿಸುವುದೆಂದು ಅವಳನ್ನು ಮದುವೆಯಾಗಲು ನಿರ್ಧರಿಸಿದ. ಆದರೆ ಬೆಳಿಗ್ಗೆ ಹತ್ತು ಗಂಟೆಗೆ ಅವನು ಕತಾವುರೆಯ ಅಂಗಡಿಗೆ ಹೋದಾಗ ಅವಳು ಊರುಬಿಟ್ಟು ಹೊರಟು ಹೋಗಿದ್ದಳು. +ಕಾಲ ಅವನ ಹುಚ್ಚು ನಿರ್ಧಾರವನ್ನು ತಗ್ಗಿಸಿತ್ತಾದರೂ ಅವನ ಭಗ್ನಭಾವ ಹೆಚ್ಚಾಯಿತು. ಅದನ್ನು ಮರೆಯಲು ಅವನು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡ. ತನ್ನ ಅಪ್ರಯೋಜಕವಾದ ನಾಚಿಕೆಯನ್ನು ಮರೆಮಾಚುವುದಕ್ಕೆ ಇಡೀ ಜೀವನ ಹೆಂಗಸರ ಸಂಗವಿರದ ಮನುಷ್ಯನಾಗಿರಲು ಮನಸ್ಸು ಮಾಡಿದ. ಈ ಮಧ್ಯೆ ಮೆಲ್‌ಕಿಯಾದೆಸ್ ಮಕೋಂದೋದಲ್ಲಿ ಫಲಕಗಳ ಮೇಲೆ ಮುದ್ರಿಸಬಹುದಾದ ಎಲ್ಲವನ್ನೂ ಮುದ್ರಿಸಿದ ಮತ್ತು ಹಳೆಯ ಲ್ಯಾಬೊರೇಟರಿಯನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾನ ವಿದಿತ್ರ ಆಲೋಚನೆಗಳಿಗೆ ಬಿಟ್ಟು ಕೊಟ್ಟ. ಅವನು ಅದನ್ನು ದೇವರು ಇರುವುದಕ್ಕೆ ವೈಜ್ಞಾನಿಕ ಪುರಾವೆ ಪಡೆಯಲು ಉಪಯೋಗಿಸಬೇಕೆಂದು ತೀರ್ಮಾನಿಸಿದ. ದೇವರು ಇದ್ದದ್ದೇ ಆದರೆ, ಒಂದು ಸಂಕೀರ್ಣ ಪ್ರಕ್ರಿಯೆಯಿಂದ ಮನೆಯ ವಿವಿಧ ಭಾಗಗಳಲ್ಲಿ ಒಂದರ ಮೇಲೊಂದು ಮೇಳೈಸಿದ ಚಿತ್ರಗಳನ್ನು ತೆಗೆಯುವುದರ ಮೂಲಕ, ಆದಷ್ಟು ಬೇಗ ದೇವರ ಛಾಯಾಚಿತ್ರ ತೆಗೆಯಬಹುದೆಂಬ ಭರವಸೆ ಹೊಂದಿದ್ದ. ಹಾಗಾಗದಿದ್ದರೆ ಅವನಿರುವ ನಂಬಿಕೆಗೆ ಇತಿಶ್ರೀ ಹೇಳಬೇಕೆಂದುಕೊಂಡ. ಮೆಲ್‌ಕಿಯಾದೆಸ್ ನಾಸ್ಟರ್‌ಡಾಮಸ್‌ನ ವ್ಯಾಖ್ಯಾನಗಳಲ್ಲಿ ಮತ್ತಷ್ಟು ಮುಳುಗಿದ. ರಾತ್ರಿ ಬಹಳ ಹೊತ್ತಿನ ತನಕ ಉಸಿರಾಡಲು ಕಷ್ಟಪಡುತ್ತ ಮೊದಲಿನ ಚುರುಕನ್ನು ಕಳೆದುಕೊಂಡು ಸೊರಗಿದ ಕೈಗಳಿಂದ ಬರೆಯುತ್ತಿದ್ದ. ಅದೊಂದು ದಿನ ಅವನಿಗೆ ಮಕೋಂದೋದ ಭವಿಷ್ಯ ಕಂಡಂತಾಯಿತು. ಗಾಜಿನ ಮನೆಗಳಿದ್ದ ಅದರಲ್ಲಿ ಬ್ಯುಂದಿಯಾ ಮನೆತನದ ಹೇಳಹೆಸರಿರಲಿಲ್ಲ. “ಅದೆಲ್ಲ ಶುದ್ಧ ತಪ್ಪು. ನಾನು ಕನಸು ಕಂಡ ಹಾಗೆ ಅದು ಗಾಜಿನ ಮನೆಗಳಲ್ಲ. ಐಸ್‌ನ ಮನೆಗಳು. ಅಲ್ಲದೆ ಯಾರಾದರೊಬ್ಬ ಬ್ಯುಂದಿಯಾ ಯಾವಾಗಲೂ ಇದ್ದೇ ಇರುತ್ತಾನೆ” ಎಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಅಬ್ಬರಿಸಿದ. ಉರ್ಸುಲಾ ಓವನ್ ಇಟ್ಟುಕೊಂಡು ಬೇಯಿಸಿದ ಮಾಂಸದ ತಿನಿಸಿನ ವ್ಯವಹಾರವನ್ನು ವಿಸ್ತರಿಸಿಕೊಂಡು ದುಂದುವೆಚ್ಚವಾಗುತ್ತಿದ್ದ ಆ ಮನೆಯಲ್ಲಿ ವಿವೇಕ ಉಳಿಸಿಕೊಳ್ಳಲು ಸೆಣೆಸುತ್ತಿದ್ದಳು. ಬುಟ್ಟಿಗಟ್ಟಲೆ ಮಾಂಸ, ಬ್ರೆಡ್ ಮತ್ತು ಎಂಥೆಂಥದೋ ತಿನಿಸುಗಳು ಆ ಜೌಗು ಪ್ರದೇಶದ ರಸ್ತೆಗೆ ಬಂದಕೊಡಲೆ ಕೆಲವೇ ಗಂಟೆಗಳಲ್ಲಿ ಕಾಣೆಯಾಗುತ್ತಿತ್ತು. ಉರ್ಸುಲಾಗೆ ವಿಶ್ರಾಂತಿ ಪಡೆಯಲು ಹಕ್ಕಿದೆ ಎನ್ನುವಷ್ಟು ವಯಸ್ಸಾಗಿದ್ದರೂ ಅವಳು ಸಾಕಷ್ಟು ಚಟುವಟಿಕೆಯಿಂದಿದ್ದಳು. ತನ್ನ ಉದ್ಯಮದಲ್ಲಿ ನಿರತಳಾಗಿದ್ದ ಅವಳು ಒಂದು ದಿನ ಮಧ್ಯಾಹ್ನ ಇಂಡಿಯನ್ ಹೆಂಗಸು ನಾದಿದ ಹಿಟ್ಟಿಗೆ ಸಿಹಿ ಬೆರೆಸಲು ಸಹಾಯ ಮಾಡುತ್ತಿದ್ದಾಗ ವಿಮನಸ್ಕಳಾಗಿ ಅಂಗಳದ ಕಡೆ ನೋಡಿದಳು. ಅವಳಿಗೆ ಸಂಜೆ ಸೂರ್ಯನ ಬೆಳಕಲ್ಲಿ ಕಸೂತಿ ಮಾಡುತ್ತಿದ್ದ ಇಬ್ಬರು ಹರೆಯದ, ಸುಂದರವಾದ ಅಪರಿಚಿತ ಹುಡುಗಿಯರು ಕಂಡರು. ಅವರು ರೆಬೇಕ ಮತ್ತು ಅಮರಾಂತ. ತಮ್ಮ ಅಜ್ಜಿಗಾಗಿ ದು:ಖ ಸೂಚಕ ಉಡುಪನ್ನು ಕಟ್ಟುನಿಟ್ಟಾಗಿ ಮೂರು ವರ್ಷ ಧರಿಸಿದ್ದ ಅವರು ಅದನ್ನು ತೆಗೆದ ಮೇಲೆ ಹೊಳೆಯುವ ಬಟ್ಟೆಗಳು ಅವರಿಗೆ ಬೇರೆಯೇ ಸೊಬಗನ್ನು ತಂದುಕೊಟ್ಟಿದ್ದವು. ನಿರೀಕ್ಷೆಗೆ ವ್ಯತಿರಿಕ್ತವಾಗಿ ರೆಬೇಕ ಹೆಚ್ಚು ಸುಂದರಳಾಗಿದ್ದಳು. ಅವಳಿಗೆ ತೆಳು ಕಂದು ಬಣ್ಣ ಮತ್ತು ದೊಡ್ಡ ಸೌಮ್ಯ ಕಣ್ಣುಗಳು ಹಾಗೂ ಅಗೋಚರ ದಾರದಿಂದ ಕಸೂತಿ ಮಾಡುತ್ತಿದ್ದ ಮಾಂತ್ರಿಕ ಕೈಗಳಿದ್ದವು. ಚಿಕ್ಕವಳಾದ ಅಮರಾಂತಳಿಗೆ ಅಷ್ಟೊಂದು ಲಾಸ್ಯವಿರಲಿಲ್ಲ. ಆದರೆ ಆಂತರ್ಯದಲ್ಲಿ ಅವಳ ಅಜ್ಜಿಯ ಬಿಗುವಿನಿಂದ ಕೂಡಿದ ಸಹಜವಾದ ವಿಶೇಷತೆ ಇತ್ತು. ಅವರ ಪಕ್ಕದಲ್ಲಿ ಆಗಲೇ ತನ್ನ ತಂದೆಯ ಭೌತಿಕ ಕ್ಷಮತೆಯನ್ನು ತೋರುತ್ತಿದ್ದ ಅರ್ಕಾದಿಯೋ ಮಗುವಿನ ಹಾಗೆ ಕಂಡ. ಅವನು ಓದು, ಬರಹ ಹೇಳಿಕೊಡುತ್ತಿದ್ದ ಅವ್ರೇಲಿಯಾನೋನ ಜೊತೆಗೆ ಬೆಳ್ಳಿಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಪ್ರಾರಂಭಿಸಿದ್ದ. ಉರ್ಸುಲಾಗೆ ಮನೆ ಜನರಿಂದ ತುಂಬುತ್ತಿದೆಯೆಂದೂ ಮತ್ತು ತನ್ನ ಮಕ್ಕಳು ಮದುವೆಯಾಗಿ ಅವರಿಗೇ ಮಕ್ಕಳಾಗುವ ಸ್ಥಿತಿಯಲ್ಲಿದ್ದಾರೆಂದೂ, ಅವರೆಲ್ಲ ಸ್ಥಳದ ಅಭಾವದಿಂದ ಚದುರಿಹೋಗಬಹುದೆಂದು ಅರಿವಾಯಿತು. ಅನಂತರ ಅವಳು ವರ್ಷಗಟ್ಟಲೆ ಕಷ್ಟಪಟ್ಟು ಕೂಡಿಟ್ಟ ಹಣ ಮತ್ತು ಗಿರಾಕಿಗಳ ಹೊಂದಾಣಿಕೆಯಿಂದ ಮನೆಯನ್ನು ವಿಸ್ತರಿಸುವುದನ್ನು ಕೈಗೊಂಡಳು. ಆಗೀಗ ಬಂದು ಹೋಗುವವರಿಗೆ ಮತ್ತು ದೈನಂದಿನ ಬಳಕೆಗೆ ಅದಕ್ಕಿಂತ ಹೆಚ್ಚು ಅನುಕೂಲವಾಗಿ ತಂಪಾಗಿರುವ ಒಂದು ಸ್ಥಳ ಹಾಗೂ ಅತಿಥಿಗಳ ಜೊತೆ ಸೇರಿ, ಒಟ್ಟಿಗೆ ಹನ್ನೆರಡು ಜನ ಊಟ ಮಾಡಲು ಸಾಧ್ಯವಾಗುವಂತೆ ಟೇಬಲ್ ಇರುವ ಡೈನಿಂಗ್ ರೂಮು, ಕಿಟಕಿಗಳಿರುವ ಒಂಬತ್ತು ಬೆಡ್‌ರೂಮುಗಳು, ವಿಸ್ತಾರದ ಕಟಾಂಜನದಲ್ಲಿ ಜರ್ರ್ರಿ ಗಿಡ ಮತ್ತು ಏಕದಳ ಗಿಡಗಳಿರುವ ಕುಂಡಗಳಿದ್ದು ಮಧ್ಯಾಹ್ನದ ಉರಿಬಿಸಿಲಿನಿಂದ ರಕ್ಷಣೆ ಹೊಂದಿದ ಗುಲಾಬಿ ಹೂವಿನ ಒಳಾಂಗಣಗಳಿದ್ದವು. ಪಿಲರ್ ಟೆರೆರಾ ಒಳಗೆ ಕುಳಿತು ಹೊಸೆ ಅರ್ಕಾದಿಯೋನ ಭವಿಷ್ಯವನ್ನು ಹೇಳಿದ್ದ ಉಗ್ರಾಣವನ್ನು ಕೆಡವಿಸಿದಳು. ಅದರ ಬದಲಿಗೆ ಆಹಾರದ ಕಾಳುಕಡ್ಡಿ ಎಂದಿಗೂ ಕಡಿಮೆಯಾಗಬಾರದೆಂದು ಅದರ ಎರಡರಷ್ಟು ದೊಡ್ಡದನ್ನು ಕಟ್ಟಿಸಿದಳು. ಅವಳು ಮರದ ನೆರಳಿನಲ್ಲಿ ಹೆಂಗಸರಿಗೊಂದು ಮತ್ತು ಗಂಡಸರಿಗೊಂದು ಬಚ್ಚಲು ಮನೆಯನ್ನು ಕಟ್ಟಿಸಿದಳು. ಹಿತ್ತಲಲ್ಲಿ ದೊಡ್ಡದಾದ ಕುದುರೆ ಲಾಯ, ಬೇಲಿಹಾಕಿದ ಕೋಳಿಗೂಡು, ಆಕಳುಗಳಿಗೆ ಕೊಟ್ಟಿಗೆ ಮತ್ತು ಹಾರಾಡುವ ಪಕ್ಷಿಗಳು ಕುಳಿತು ವಿಶ್ರಾಂತಿ ಪಡೆಯಲು ಒಂದು ಹೊರಗಿನ ಜಾಗವನ್ನು ಕೂಡ. ತನ್ನ ಗಂಡನ ಭ್ರಾಮಕ ಸ್ಥಿತಿಯನ್ನು ತಾನು ಪಡೆದವಳಂತೆ, ಡಜನ್ ಗಟ್ಟಲೆ ಗಾರೆಯವರು ಮತ್ತು ಮರಗೆಲಸದವರನ್ನು ಉಪಯೋಗಿಸಿಕೊಂಡು ಯಾವ ಮಿತಿಗಳನ್ನೂ ಲಕ್ಷಿಸದೆ, ದೀಪದ ಮತ್ತು ಶಾಖದ ಉಗಮ ಸ್ಥಾನಗಳನ್ನು ನಿಗದಿ ಪಡಿಸಿದಳು. ಇವೆಲ್ಲದರಿಂದ ಪುರಾತನ ಕಟ್ಟಡ ಸಾಮಾನು ಸರಂಜಾಮು ಹಾಗೂ ಉಪಕರಣಗಳಿಂದ ತುಂಬಿ ಹೋಯಿತು. ಜೊತೆಗೆ ಎಲ್ಲೆಂದರಲ್ಲಿ ತಮ್ಮ ಜೊತೆ ಕೊಂಡೊಯ್ಯುತ್ತಿದ್ದ ಟೊಳಗೊಟ್ಟುವ ಮೊಳೆಗಳ ಮೂಟೆಯಿಂದ ಸುಸ್ತಾಗಿ ತಮ್ಮ ತಂಟೆಗೆ ಬರಬೇಡಿರೆಂದು ಹೇಳುವ ಬೆವರಿಳಿವ ಕೆಲಸಗಾರರಿಂದ ತುಂಬಿತ್ತು. ಗಾರೆ ಮತ್ತು ಸುಣ್ಣ ತುಂಬಿದ ಗಾಳಿಯನ್ನು ಉಸಿರಾಡುವ ತೊಂದರೆಯಲ್ಲಿ ಭೂಮಿಯ ಗರ್ಭದಿಂದ ಇಡೀ ಊರಿಗೆ ದೊಡ್ಡದಾದ ಮತ್ತು ಆ ಜೌಗು ಪ್ರದೇಶದಲ್ಲಿ ಹಿಂದೆಂದೂ ಇರದಂಥ ಅತ್ಯಂತ ತಂಪಾದ ಮನೆ ನಿರ್ಮಾಣವಾಗುತ್ತಿರುವ ಸಂಗತಿ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಎಲ್ಲರಿಗಿಂತ ಹೆಚ್ಚಾಗಿ ಅನಾಹುತಗಳ ನಡುವೆ ದೈವೇಚ್ಛೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಏನೂ ಅರ್ಥವಾಗಲಿಲ್ಲ. ಮನೆಯ ಮುಂಭಾಗಕ್ಕೆ ನೀಲಿ ಬಣ್ಣವನ್ನು ಬಳಿಯಬೇಕೆಂದು ತಿಳಿಸಲು ಉರ್ಸುಲಾ, ಅವನನ್ನು ಭ್ರಾಮಕ ಸ್ಥಿತಿಯಿಂದ ಹೊರಗೆಳೆದು ಹೇಳಿದಳು. ಅವಳು ಅವನಿಗೆ ಅಧಿಕೃತವಾದ ದಾಖಲೆಯನ್ನು ತೋರಿಸಿದಳು. ತನ್ನ ಹೆಂಡತಿ ಏನು ಹೇಳುತ್ತಿದ್ದಾಳೆಂದು ತಿಳಿಯದೆ ಆ ಕಾಗದಕ್ಕೆ ಮಾಡಿದ ಸಹಿಯನ್ನು ಪರೀಕ್ಷಿಸಿದ. +ಅವನು,”ಯಾರಿವ್ನು?” ಎಂದು ಕೇಳಿದ. +“ಮ್ಯಾಜಿಸ್ಟ್ರೇಟ್, ಅವನು ಸರ್ಕಾರ ಕಳಿಸಿದ ಅಧಿಕಾರಿ ಅಂತಾರೆ” ಎಂದಳು ಉರ್ಸುಲಾ. ಮ್ಯಾಜಿಸ್ಟ್ರೇಟ್ ದಾನ್ ಅಪೋಲಿನರ್ ಮೊಸ್ಕೋತೆ ಮಕೋಂದೋಗೆ ಸದ್ದಿಲ್ಲದೆ ಬಂದಿದ್ದ. ಅವನು ಗಿಣಿಯನ್ನು ಕೊಟ್ಟು ಸಾಕಷ್ಟು ದೋಚಿದ ಅರಬರು ಕಟ್ಟಿಸಿದ ಹೊಟೆಲ್ ಜಾಕೊಬ್‌ನಲ್ಲಿ ಉಳಿದುಕೊಂಡಿದ್ದ. ಮಾರನೆಯ ದಿನ ಅವನು ಬ್ಯುಂದಿಯಾರ ಮನೆಯಿಂದ ಎರಡು ಬ್ಲಾಕ್‌ಗಳು ಆಚೆಯ ರಸ್ತೆಯಲ್ಲಿ ಒಂದು ರೂಮನ್ನು ಬಾಡಿಗೆ ಹಿಡಿದ. ಜಾಕೊಬ್‌ನಿಂದ ಖರೀದಿಸಿದ ಕುರ್ಚಿ ಮತ್ತು ಟೇಬಲ್‌ನ್ನು ಅಲ್ಲಿ ಇಟ್ಟು, ರಿಪಬ್ಲಿಕ್‌ನ ಫಲಕವನ್ನು ಗೋಡೆಯ ಮೇಲೆ ಮೊಳೆ ಹೊಡೆದು ತೂಗುಹಾಕಿದ ಮತ್ತು ಬಾಗಿಲ ಮೇಲೆ ‘ಮ್ಯಾಜಿಸ್ಟ್ರೇಟ್\’ ಎಂದು ಬರೆದ. ಅವನು ಹೊರಡಿಸಿದ ಮೊದಲನೆ ಆರ್ಡರ್ ಎಂದರೆ ರಾಷ್ಟ್ರೀಯ ಸ್ವಾತಂತ್ರ್ಯದ ಸಮಾರಂಭದ ಆಚರಣೆಗಾಗಿ ಎಲ್ಲಾ ಮನೆಗಳಿಗೂ ಬಿಳಿ ಬಣ್ಣ ಬಳಿಸಬೇಕು ಎಂದು. ಅದರ ಪ್ರತಿಯನ್ನು ಹಿಡಿದುಕೊಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾ ಬಂದಾಗ ಅವನು ತನ್ನ ಚಿಕ್ಕ ಆಫೀಸಿನಲ್ಲಿ ಮಧ್ಯಾಹ್ನದ ನಿದ್ದೆ ಮಾಡುತ್ತಿದ್ದದ್ದು ಕಾಣಿಸಿತು. ಅವನನ್ನು “ಇದನ್ನು ನೀನು ಬರೆದಿದ್ದಾ?” ಎಂದು ಕೇಳಿದ. ಸಾಕಷ್ಟು ಅನುಭವಸ್ಥನಾಗಿ ಮೆತ್ತಗಿದ್ದ ಒರಟು ಬಣ್ಣದ ದಾನ್ ಅಪೋಲಿನರ್ ಮೊಸ್ಕೋತೆ, “ಹೌದು” ಎಂದ. “ನಿಂಗ್ಯಾರು ಕೊಟ್ಟ್ರು ಅಧಿಕಾರ?” ಎಂದು ಮತ್ತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೇಳಿದ. ದಾನ್ ಅಪೋಲಿನರ್ ಮೊಸ್ಕೋತೆ ಟೇಬಲ್ ಡ್ರಾನಿಂದ ಕಾಗದವೊಂದನ್ನು ತೆಗೆದು ಅವನಿಗೆ ತೋರಿಸಿ, “ನಾನು ಈ ಊರಿಗೆ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದೀನಿ” ಎಂದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರ ಕಡೆ ನೋಡಲೂ ಇಲ್ಲ. +“ನಮ್ಮ ಊರ್‍ನಲ್ಲಿ ನಾವು ಕಾಗದದ ತುಂಡಿನಿಂದ ಆರ್ಡರ್ ಮಾಡೋದಿಲ್ಲ” ಎಂದು ಸಮಾಧಾನದಿಂದ ಹೇಳಿ, “ನಿಮಗೆ ಇದು ಸರಿಯಾಗಿ ತಿಳಿದಿರ್‍ಲಿ. ಅಲ್ದೆ ನಮ್ಗೆ ಯಾರೂ ಜಡ್ಜ್‌ಗಳು ಬೇಕಾಗಿಲ್ಲ. ಯಾಕಂದ್ರೆ ನ್ಯಾಯ ಸಿಗಬೇಕಾದದ್ದು ಇಲ್ಲಿ ಯಾವ್ದೂ ಇಲ್ಲ” ಎಂದ. +ಅವನು ದಾನ್ ಅಪೋಲಿನರ್ ಮೊಸ್ಕೋತೆಯನ್ನು ನೋಡುತ್ತ ಧ್ವನಿ ಏರಿಸದೆ ತಾವು ಹೇಗೆ ಹಳ್ಳಿಯನ್ನು ಹುಟ್ಟು ಹಾಕಿದ್ದು, ಭೂಮಿಯ ವಿತರಣೆ ಮಾಡಿದ್ದು, ರಸ್ತೆಗಳನ್ನು ನಿರ್ಮಿಸಿದ್ದು ಮತ್ತು ಸರಕಾರಕ್ಕೆ ತೊಂದರೆ ಕೊಡದೆ ಮತ್ತು ಯಾರಿಂದಲೂ ತೊಂದರೆಗೆ ಸಿಲುಕದೆ ಅಗತ್ಯವಾದ ಅಭಿವೃದ್ಧಿಯನ್ನು ಮಾಡಿಕೊಂಡಿದ್ದನ್ನು ವಿವರಿಸಿದ. +“ನಮ್ಮೂರ್‍ನಲ್ಲಿ ನಾವು ಎಷ್ಟು ಶಾಂತಿಯಿಂದ ಇದ್ದೇವೆಂದರೆ ಇಲ್ಲಿ ಯಾರಿಗೂ ಸಹಜವಾದ ಸಾವು ಉಂಟಾಗಿಲ್ಲ”. ಎಂದ. ಅಲ್ಲದೆ, “ನಿಮಗೆ ಕಾಣೋ ಹಾಗೆ, ನಮ್ಗಿನ್ನೂ ಸ್ಮಶಾನ ಅನ್ನೋದೇ ಇಲ್ಲ.” ಅಲ್ಲಿ ಸರಕಾರ ಸಹಾಯ ಮಾಡಲಿಲ್ಲವೆಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅದಕ್ಕೆ ವಿರುದ್ದವಾಗಿ ಶಾಂತಿಯುತವಾಗಿರಲು ಅವರನ್ನು ಅವರಷ್ಟಕ್ಕೆ ಬಿಟ್ಟಿದ್ದಕ್ಕೆ ಸಂತೋಷಪಟ್ಟಿದ್ದರು. ಮತ್ತು ಅವರನ್ನು ಹಾಗೆಯೇ ಬಿಡುತ್ತಾರೆಂದು ತಾನು ಭಾವಿಸಿದ್ದಾಗಿ ಹೇಳಿದ. ಏಕೆಂದರೆ ಅವರು ಊರನ್ನು ಹುಟ್ಟು ಹಾಕಿದ್ದು ಹೊರಗಿನವನೊಬ್ಬ ಬಂದು ಏನು ಮಾಡಬೇಕೆಂದು ಹೇಳಲಿ, ಎಂದಲ್ಲ. ಬಿಳಿಯ ಪ್ಯಾಂಟು ಹಾಕಿಕೊಂಡು ಜಾಕೆಟ್ ತೊಟ್ಟಿದ್ದ ದಾನ್ ಅಪೋಲಿನರ್ ಅವನ ಮಾತಿನ ಅವಧಿಯುದ್ದಕ್ಕೂ ತನ್ನ ಸಮಚಿತ್ತವನ್ನು ಕಳೆದುಕೊಳ್ಳಲಿಲ್ಲ. +“ನೋಡಿ ನೀವು ಎಲ್ಲರ ಹಾಗೆ ಇಲ್ಲಿ ಇರೋದಕ್ಕೆ ಇಷ್ಟಪಟ್ಟರೆ ಸಂತೋಷ” ಎಂದು ಹೇಳಿ ಮುಂದುವರೆಸಿದ ಹೊಸೆ ಅರ್ಕಾದಿಯೋ ಬ್ಯುಂದಿಯಾ, “ಆದರೆ ನೀವು ಇಲ್ಲಿ ಮನೆಗಳಿಗೆ ನೀಲಿ ಬಣ್ಣ ಬಳಿಯ ಬೇಕೆಂದು ಜನಗಳಿಗೆ ಒತ್ತಾಯಿಸಿ ಎಲ್ಲ ಏರುಪೇರು ಉಂಟುಮಾಡೋ ಹಾಗಿದ್ರೆ ಎಲ್ಲಿಂದ ಬಂದ್ರೋ ಅಲ್ಲಿಗೆ ಗಂಟು ಮೂಟೆ ಕಟ್ಟಿಕೊಂಡು ಹೊರಡಿ. ಯಾಕಂದ್ರೆ ನನ್ನ ಮನೆ ಕೊಕ್ಕರೆಯ ಹಾಗೆ ಬೆಳ್ಳಗಿರುತ್ತೆ.” +ದಾನ್ ಅಪೋಲಿನರ್ ಮೊಸ್ಕೋತೆ ಬಿಳುಚಿಕೊಂಡ. ಅವನು ಒಂದು ಹೆಜ್ಜೆ ಹಿಂದಕ್ಕಿಟ್ಟು ಅವಡುಗಚ್ಚಿ, “ನನ್ನ ಹತ್ತಿರ ಆಯುಧ ಇದೆ” ಎಂದ. +ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವನು ಕುದುರೆಗಳನ್ನು ಹಿಡಿದೆಳೆದು ಉರುಳಿಸುತ್ತಿದ್ದ ಶಕ್ತಿ ಕೈಗಳಿಗೆ ಯಾವಾಗ ಮರುಕಳಿಸಿತೆಂದು ತಿಳಿಯಲಿಲ್ಲ. ಅವನು ದಾನ್ ಅಪೋಲಿನರ್ ಮೊಸ್ಕೋತೆಯ ಕತ್ತಿನಪಟ್ಟಿ ಹಿಡಿದು ತನ್ನ ಕಣ್ಣುಗಳ ಎತ್ತರಕ್ಕೆ ಹಿಡಿದೆತ್ತಿದ. +“ನಾನಿಷ್ಟೇ ಮಾಡಿದೀನಿ, ಹೀಗೆ ನಿಮ್ಮನ್ನೆತ್ತಿಕೊಂಡು ಸುತ್ತಬಹುದು. ಸಾಯಿಸಿ, ಜೀವಮಾನದುದ್ದಕ್ಕೂ ನಿಮ್ಮನ್ನು ನಾನು ಹೊರೋದು ಬೇಡ.” +ಆ ರೀತಿ ಕತ್ತಿನ ಪಟ್ಟಿಯನ್ನು ಹಿಡಿದು ಅವನನ್ನು ರಸ್ತೆಯ ಮಧ್ಯಕ್ಕೆ ಎಳೆದುಕೊಂಡು ಹೋಗಿ ನಿಲ್ಲಿಸಿದ. ಒಂದು ವಾರದ ನಂತರ ಬರಿಗಾಲಿನಿಂದ ಆರು ಜನ ಬಂದೂಕು ಧಾರಿಗಳಾದ ಸೈನಿಕರ ಸಮೇತ ವಾಪಸು ಬಂದ. ಮತ್ತು ಅವನ ಜೊತೆಗೆ ಎತ್ತಿನ ಗಾಡಿಯಲ್ಲಿ ಹೆಂಡತಿ ಮತ್ತು ಏಳು ಜನ ಹೆಣ್ಣು ಮಕ್ಕಳಿದ್ದರು. ಅನಂತರ ಬಂದ ಇನ್ನೆರಡು ಗಾಡಿಗಳಲ್ಲಿ ಪೀಠೋಪಕರಣ, ಇತರೆ ಸಾಮಾನು ಮತ್ತು ಪಾತ್ರೆ ಪಡಗಗಳಿದ್ದವು. ಅವನು ತನ್ನ ಸಂಸಾರವನ್ನು ಹೊಟೆಲ್ ಜಾಕೊಬ್‌ನಲ್ಲಿ ತಂಗಲು ಬಿಟ್ಟು, ಮನೆಯೊಂದನ್ನು ಹುಡುಕಲು ತೊಡಗಿದ ಮತ್ತು ಸೈನಿಕರ ರಕ್ಷಣೆಯೊಂದಿಗೆ ಮತ್ತೆ ತನ್ನ ಆಫೀಸು ತೆರೆದ. ಮಕೋಂದೋದ ಸಂಸ್ಥಾಪಕರು, ಆಕ್ರಮಣಕಾರರನ್ನು ಹೊಡೆದೋಡಿಸಲು, ತಮ್ಮ ಮಕ್ಕಳ ಜೊತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಹೇಳಿದಂತೆ ಕೇಳಲು ಸಿದ್ಧರಾದರು. ಆದರೆ ಅವನು ಅದರ ವಿರುದ್ಧವಾಗಿದ್ದ. ಏಕೆಂದರೆ ಅವನು ಹೇಳಿದ ಹಾಗೆ ಯಾರಿಗೇ ಆಗಲಿ ಮನೆಯವರ ಎದುರು ತೊಂದರೆ ಕೊಡುವುದು ಗಂಡಸುತನವಲ್ಲ. ಅಲ್ಲದೆ ದಾನ್ ಅಪೋಲಿನರ್ ಹೆಂಡತಿ ಮಕ್ಕಳ ಜೊತೆ ವಾಪಸು ಬಂದಿದ್ದ. ಆದ್ದರಿಂದ ಇಡೀ ಪ್ರಕರಣವನ್ನು ಅವನು ಹಿತವಾಗಿ ಮುಕ್ತಾಯ ಮಾಡಲು ನಿರ್ಧರಿಸಿದ. +ಅವ್ರೇಲಿಯಾನೋ ಅವನ ಜೊತೆ ಹೋದ. ಆ ವೇಳೆಗೆ ಅವನು ತುದಿಗೆ ಮೇಣ ಹಚ್ಚಿದ ಕಪ್ಪು ಮೀಸೆ ಬಿಡಲು ಪ್ರಾರಂಭಿಸಿದ್ದ ಮತ್ತು ಅವನಿಗೆ ಯುದ್ಧzಲ್ಲಿ ವಿಶಿಷ್ಟವೆನಿಸುವ ಗಡಸು ಧ್ವನಿ ಇತ್ತು. ಆಯುಧಗಳಿಲ್ಲದೆ, ಗಾರ್ಡ್‌ಗಳನ್ನು, ಲಕ್ಷಿಸದೆ ಅವರು ಮ್ಯಾಜಿಸ್ಟ್ರೇಟ್ ಆಫೀಸಿಗೆ ಹೋದರು. ದಾನ್ ಅಪೋಲಿನರ್ ಮಸ್ಕೊಟೆ ತಾಳ್ಮೆ ಕಳೆದುಕೊಳ್ಳಲಿಲ್ಲ. ಅವನು ಅಲ್ಲಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಅವರನ್ನು ಪರಿಚಯಿಸಿದ. ಅವಳಲ್ಲೊಬ್ಬಳು ತನ್ನ ತಾಯಿಯ ಹಾಗೆ ಕಪ್ಪಗಿದ್ದು ಹದಿನಾರರ ಆಂಪೆರೋ ಮತ್ತು ನಸುಗೆಂಪು ಬಣ್ಣದ ಹಸಿರುಗಣ್ಣಿನ ಒಂಬತ್ತರ ಚೆಲುವಿನ ಹುಡುಗಿ ರೆಮಿದಿಯೋಸ್, ಅವರು ಸುಂದರವಾಗಿದ್ದು ಹಾಗೂ ಒಳ್ಳೆಯ ನಡತೆಯವರಾಗಿದ್ದರು. ಗಂಡಸರು ಬಂದ ಕೂಡಲೆ ಅವರ ಪರಿಚಯವಾಗುವುದಕ್ಕಿಂತ ಮುಂಚೆಯೇ ಕುಳಿತು ಕೊಳ್ಳುವುದಕ್ಕೆ ಕುರ್ಚಿಗಳನ್ನು ಕೊಟ್ಟು ನಿಂತುಕೊಂಡಿದ್ದರು. +“ಒಳ್ಳೇದು, ನೀವು ಇಲ್ಲಿ ಇರಬಹುದು. ಆದರೆ ಬಂದೂಕು ಹಿಡಿದುಕೊಂಡ ದಾಂಡಿಗರಿಂದಲ್ಲ, ನಿಮ್ಮ ಹೆಂಡತಿ ಮಕ್ಕಳ ಕಾರಣದಿಂದ”. +ದಾನ್ ಅಪೋಲಿನರ್ ಮಸ್ಕೆತೆ ರೋಷಗೊಂಡ. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. “ನಾವು ಎರಡು ನಿಬಂಧನೆಗಳನ್ನು ಮಾತ್ರ ಮಾಡ್ತೇವೆ” ಎಂದು ಮುಂದುವರಿಸುತ್ತ, “ಮೊದಲನೇದು ಪ್ರತಿಯೊಬ್ಬರೂ ತಮಗಿಷ್ಟವಾದ ಬಣ್ಣವನ್ನು ತಮ್ಮ ಮನೆಗೆ ಬಳಿಸಬಹುದು. ಎರಡನೇದು, ಸೈನಿಕರು ಇಲ್ಲಿಂದ ಜಾಗ ಖಾಲಿ ಮಾಡಬೇಕು. ನಾವಿಲ್ಲಿ ಒಂದು ಗೊತ್ತಾದ ಕ್ರಮವನ್ನ ನಿಮಗೆ ಗ್ಯಾರೆಂಟಿ ಕೊಡ್ತೀವಿ” ಎಂದ. ಮ್ಯಾಜಿಸ್ಟ್ರೇಟ್ ಬಲಗೈಯನ್ನು ಎತ್ತಿ, “ಹಾಗಾದರೆ ಮಾತು ಕೊಡುತ್ತೀರಾ?” ಎಂದ. +“ಶತ್ರುವಿನ ಮಾತು” ಎಂದ ಹೊಸೇ ಆರ್ಕೆಡೊ ಬ್ಯುಂದಿಯಾ ಮುಂದುವರಿದು ಕಹಿಯಾಗಿ, ” ಯಾಕಂದ್ರೆ ನಾನು ನಿನಗೆ ಒಂದು ವಿಷಯ ಹೇಳಲೇಬೇಕು. ನೀನು ಮತ್ತು ನಾನು ಶತ್ರುಗಳು.” +ಆ ದಿನ ಮಧ್ಯಾಹ್ನವೇ ಸೈನಿಕರು ಊರನ್ನು ಬಿಟ್ಟು ಹೋದರು. ಸ್ವಲ್ಪ ದಿನಗಳ ನಂತರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವರಿಗೆ ಒಂದು ಮನೆ ಹುಡುಕಿಕೊಟ್ಟ. ಆದರೆ ಅವ್ರೇಲಿಯಾನೋನನ್ನು ಬಿಟ್ಟು ಉಳಿದವರೆಲ್ಲ ನೆಮ್ಮದಿಯಿಂದ ಇದ್ದರು. ವಯಸ್ಸಿನ ಕಾರಣದಿಂದ ತನ್ನ ಮಗಳಾಗಬಹುದಾಗಿದ್ದ ಮ್ಯಾಜಿಸ್ಟ್ರೇಟ್‌ನ ಕಿರಿಯ ಮಗಳು ರೆಮಿದಿಯೋಸ್‌ಳ ರೂಪ ಅವನ ದೇಹದ ಯಾವುದೋ ಭಾಗವನ್ನು ಕೊರೆಯುತ್ತಿತ್ತು. ಅದೊಂದು ಇಂದ್ರಿಯ ಸಂಬಂಧಿತ ಭಾವನೆ. ಅದು ನಡೆಯುವಾಗ ಶೂನಲ್ಲಿ ಸೇರಿಕೊಂಡ ಕಲ್ಲಿನ ಚೂರಿನಂತೆ ಅವನನ್ನು ಕಾಡುತ್ತಿತ್ತು. +೪ +ಕೊಕ್ಕರೆಯ ಹಾಗೆ ಬಿಳಿಯಾದ ಹೊಸ ಮನೆಯ ಉದ್ಘಾಟನೆ ನೃತ್ಯ ಸಮಾರಂಭದಿಂದ ಆಯಿತು. ಅದೊಂದು ಮಧ್ಯಾಹ್ನ ಹರೆಯದವರಾಗಿ ಬದಲಾಗಿದ್ದ ರೆಬೇಕ ಮತ್ತು ಅಮರಾಂತರನ್ನು ಕಂಡ ಉರ್ಸುಲಾಗೆ ಆಲೋಚನೆಯೊಂದು ಬಂದಿತ್ತು. ಬಂದು ಹೋಗುವವರನ್ನು ಎದುರುಗೊಳ್ಳಲು ಆ ಹುಡುಗಿಯರಿಗೆ ಸರಿಯಾದ ಸ್ಥಳ ಇರಬೇಕು ಎನ್ನುವುದೇ ಹೊಸದಾಗಿ ಮನೆ ಕಟ್ಟುವುದಕ್ಕೆ ಮುಖ್ಯ ಕಾರಣ ಎನ್ನಬಹುದು. ಮನೆಯ ರಿಪೇರಿ ಕೆಲಸ ನಡೆಯದ್ದಿದ್ದಾಗ ವೈಭವಕ್ಕೆ ಏನೂ ಕಡಿಮೆಯಾಗಬಾರದೆಂದು ಅವಳು ಜೀತದಾಳಿನ ಹಾಗೆ ಕೆಲಸ ಮಾಡುತ್ತಿದ್ದಳು ಮತ್ತು ಅದು ಮುಗಿಯುವ ವೇಳೆಗೆ ಅಲಂಕಾರಕ್ಕೆ ಅಗತ್ಯವಾದ ಟೇಬಲ್‌ಗಳು ಹಾಗೂ ಇಡೀ ಊರಿನ ಜನರು ನಿಬ್ಬೆರಗಾಗುವಂತೆ, ಹರೆಯದವರ ಉತ್ಸಾಹ ಉಕ್ಕಿಸುವಂತೆ ಪಿಯಾನೋಗೆ ಆರ್ಡರ್ ಕೊಟ್ಟಳು. ಅವರು ಅದನ್ನು ಬಿಡಿಭಾಗಗಳಾಗಿ ಇತರೇ ವಸ್ತುಗಳಾದ, ವಿಯನ್ನಾದ ಪೀಠೋಪಕರಣ, ಬೊಹಿಮಿಯಾದ ಹರಳು, ಇಂಡಿಯಾ ಕಂಪನಿಯ ಟೇಬಲ್, ಹಾಲೆಂಡಿನ ಟೇಬಲ್ ಕ್ಲಾತ್ ಮತ್ತು ವಿವಿಧ ಬಗೆಯ ದೀಪ, ಕ್ಯಾಂಡಲ್ ಸ್ಟಿಕ್ಕರ್‌ಗಳು ಪರದೆಯ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬಿ ತಲುಪಿಸಿದರು. ಇವುಗಳನ್ನೆಲ್ಲಾ ಆಮದುಪಡಿಸಿದ ಕಂಪನಿ ಪಿಯಾನೋವನ್ನು ಸಂಘಟಿಸಿ ಕೊಡಲು ಇಟಾಲಿಯಿಂದ ಪರಿಣಿತ ಪಿಯತ್ರೋ ಕ್ರೆಪ್ಸಿಯನ್ನು ಕಳುಹಿಸಿದ್ದರು. ಅವನು ಪಿಯಾನೋ ಕೊಂಡವರಿಗೆ ಟ್ಯೂನ್ ಮಾಡುವ ರೀತಿ, ಅದು ಕೆಲಸ ಮಾಡುವ ಬಗೆ ಮತ್ತು ಆರು ಕಾಗದದ ಸುರುಳಿಯಲ್ಲಿ ಮುದ್ರಿಸಿದ ಆಧುನಿಕ ಸಂಗೀತಕ್ಕೆ ಸರಿಯಾಗಿ ಡ್ಯಾನ್ಸ್ ಮಾಡುವುದನ್ನು ಹೇಳಿಕೊಡಬೇಕಾಗಿತ್ತು. +ಕೆಂಗೂದಲ ಹರೆಯದ ಚೆಲುವ ಪಿಯತ್ರೋ ಕ್ರೆಪ್ಸಿ ಒಳ್ಳೆಯ ನಡತೆಯವನಾಗಿದ್ದ. ತಾನು ತೊಡುವ ಬಟ್ಟೆಯ ಬಗ್ಗೆ ಎಷ್ಟು ಗಮನ ಉಳ್ಳವನಾಗಿದ್ದರೆಂದರೆ ಉಸಿರು ಗಟ್ಟಿಸುವ ಉರಿಬಿಸಿಲಿನಲ್ಲಿ ಕೂಡ ಕಪ್ಪನೆಯ ಕೋಟು ಹಾಕಿಕೊಂಡು ಬೆವರು ಸುರಿಸುತ್ತ ಕೆಲಸ ಮಾಡುತ್ತಿದ್ದ. ಅವನು ಸಭ್ಯತೆಯ ಕಾರಣದಿಂದ ಮನೆಯವರಿಂದ ಸಾಕಷ್ಟು ದೂರವಿದ್ದ. ಅವ್ರೇಲಿಯಾನೋ ಬೆಳ್ಳಿಯ ಕೆಲಸದಲ್ಲಿ ತನ್ಮಯನಾಗುವ ರೀತಿಯಂತೆಯೇ ನಡುಮನೆಯಲ್ಲಿ ಕೆಲವು ವಾರಗಳ ಕಾಲ ಬಾಗಿಲು ಹಾಕಿಕೊಂಡು ಕಳೆದ. ಒಂದು ದಿನ ಬೆಳಿಗ್ಗೆ ಬಾಗಿಲು ತೆಗೆಯದೆ, ಮಾಂತ್ರಿಕವಾದದ್ದನ್ನು ನೋಡಲು ಯಾರನ್ನೂ ಕರೆಯದೆ, ಅವನು ಪಿಯಾನೋದಲ್ಲಿ ಕಾಗದದ ಸುರುಳಿಯಲ್ಲಿದ್ದ ಮೊದಲಿನದನ್ನು ನುಡಿಸಿದ. ಅದರ ಸಂಮೋಹನ ಸಂಗೀತಕ್ಕೆ ಕಿರಿಕಿರಿಯನ್ನು ಉಂಟುಮಾಡುವ ಮರಗೆಲಸದ ಶಬ್ದ ಹಾಗೂ ಹೊಡೆತಗಳು ಸುಮ್ಮನಾದವು. ಅವರೆಲ್ಲರೂ ನಡುಮನೆಗೆ ಓಡಿದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನಿಗಂತೂ ಮಿಂಚು ಹೊಡೆದ ಹಾಗೆ ಕಂಡಿತು. ಅದು ಸಂಗೀತದ ಮಾಧುರ್ಯದಿಂದಲ್ಲ, ಪಿಯಾನೋದ ಕೀಗಳು ತಮ್ಮಷ್ಟಕ್ಕೆ ಕೆಲಸ ಮಾಡುತ್ತಿದ್ದ ರೀತಿಗಾಗಿ. ಅವನು ಕಾಣಿಸಿಕೊಳ್ಳದೆ ನುಡಿಸುವಾತನ ಛಾಯಾಚಿತ್ರ ತೆಗೆಯುವ ಉದ್ದೇಶದಿಂದ ಮೆಲ್‌ಕಿಯಾದೆಸ್‌ನ ಕ್ಯಾಮೆರಾವನ್ನು ಅಣಿಗೊಳಿಸಿದ. ಆ ದಿನ ಇಟಲಿಯವನು ಅವರ ಜೊತೆ ಊಟಮಾಡಿದ. ಬಡಿಸುತ್ತಿದ್ದ ರೆಬೇಕ ಮತ್ತು ಅಮರಾಂತರಿಗೆ ಉಂಗುರ ಹಾಕಿಕೊಳ್ಳದ, ನೀಳ ಕೈಯಿನ, ಚೆಲುವನಾದ ಅವನು ಪಾತ್ರೆಗಳನ್ನು ನಿಭಾಯಿಸುತ್ತಿದ್ದ ರೀತಿಯಿಂದ ಕಿರಿಕಿರಿ ಉಂಟಾಯಿತು. ನಡುಮನೆಯ ಪಕ್ಕದ ಹಜಾರದಲ್ಲಿ ಹೇಗೆ ನರ್ತಿಸಬೇಕೆಂದು ಪಿಯತ್ರೋ ಕ್ರೆಪ್ಸಿ ಅವರಿಗೆ ಹೇಳಿ ಕೊಟ್ಟ. ತನ್ನ ಮಕ್ಕಳು ಪಾಠ ಕಲಿಯುತ್ತಿರುವಾಗ ಒಂದು ಕ್ಷಣವೂ ರೂಮಿನಿಂದ ಕದಲದೆ ನೋಡುತ್ತಿದ್ದ ಉರ್ಸುಲಾಳ ಎದುರು ಅವರನ್ನು ಮುಟ್ಟದೆ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವುದನ್ನು ಕಲಿಸಿ ಕೊಟ್ಟ. ಅಂತಹ ದಿನಗಳಲ್ಲಿ ಪಿಯತ್ರೋ ಕ್ರೆಪ್ಸಿ ಬಿಗಿಯಾದ ಪ್ಯಾಂಟು ತೊಟ್ಟು, ನರ್ತನಕ್ಕೆ ಅಗತ್ಯವಾದ ಶೂ ಹಾಕಿಕೊಂಡಿರುತ್ತಿದ್ದ, ಹೊಸೆ ಅರ್ಕಾದಿಯೋ ಬ್ಯುಂದಿಯಾ, “ನೀನು ತುಂಬ ಯೋಚನೆ ಮಾಡಬೇಕಾಗಿಲ್ಲ. ಅವನು ಯೋಗ್ಯ” ಎಂದು ಅವಳಿಗೆ ಹೇಳಿದ. ಆದರೆ ಅವಳು ಕಲಿಕೆ ಮುಗಿದು ಇಟಲಿಯವನು ಮಕೋಂದೋ ಬಿಡುವ ತನಕ ಎಚ್ಚರಿಕೆಯಿಂದ ಇದ್ದಳು. ಅನಂತರ ಅವರು ಪಾರ್ಟಿಯನ್ನು ವ್ಯವಸ್ಧೆಗೊಳಿಸಲು ಪ್ರಾರಂಭಿಸಿದರು. ಅದರಲ್ಲಿ ಊರಿನ ಸಂಸ್ಥಾಪಕರ ಮನೆಯವರು ಇರುವಂಥ ಪಟ್ಟಿಯನ್ನು ಉರ್ಸುಲಾ ಸಿದ್ಧಪಡಿಸಿದಳು. ಆದರೆ ಆ ವೇಳೆಗೆ ತಂದೆ ಯಾರೆಂದು ಅರಿಯದವರಿಂದ ಇನ್ನಿಬ್ಬರು ಮಕ್ಕಳಾಗಿದ್ದ ಪಿಲರ್ ಟೆರ್‍ನೆರಾಳ ಸಂಸಾರ ಮಾತ್ರ ಅದರಲ್ಲಿತ್ತು. ಅದೊಂದು ಸ್ನೇಹ ಭಾವದ ಘನವಾದ ಪಟ್ಟಿಯಾಗಿದ್ದು ಅದರಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಊರಿನ ಸಂಸ್ಥಾಪನೆಗಾಗಿ ಹೊರಡುವ ಮುಂಚಿನ ಹಳೆಯ ಗೆಳೆಯರಿದ್ದರು. ಅವ್ರೇಲಿಯಾನೋ ಮತ್ತು ಆರ್ಕೆಡಿಯಾ ಚಿಕ್ಕವರಾಗಿದ್ದ ಕಾಲದಿಂದಲೂ ಒಡನಾಡಿಗಳಾಗಿದ್ದ ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಬ್ಬರ ಜೊತೆಗೆ, ರೆಬೇಕ ಮತ್ತು ಅಮರಾಂತರ ಸಂಗಡ ಕಸೂತಿ ಮಾಡಲು ಬರುತ್ತಿದ್ದ ಅವರ ಹೆಣ್ಣುಮಕ್ಕಳು ಕೂಡ ಇದ್ದರು. ಕೇವಲ ಇಬ್ಬರು ಪೋಲೀಸರನ್ನು ಇಟ್ಟುಕೊಂಡು ಆಡಳಿತ ನಿರ್ವಹಿಸುವ ಕೆಳಮಟ್ಟಕ್ಕೆ ಇಳಿದ ದಾನ್ ಅಪೋಲಿನರ್ ಮೊಸ್ಕೋತೆ ಕೂಡ ಅದರಲ್ಲಿ ಸೇರಿದ್ದ. ಮನೆಯ ಖರ್ಚಿಗೆ ನೆರವಾಗಲು ಅವನ ಇಬ್ಬರು ಹೆಣ್ಣು ಮಕ್ಕಳು ಹೊಲಿಗೆ ಅಂಗಡಿ ತೆರೆದು ಅದರಲ್ಲಿ ಹೂವಿನ ಮತ್ತು ಇತರೇ ಸೂಕ್ಷ್ಮ ರೀತಿಯ ವಿನ್ಯಾಸಗಳನ್ನು ಮಾಡುತ್ತಿದ್ದರು. ಅಲ್ಲದೆ ಆರ್ಡರ್‌ಗೆ ತಕ್ಕಹಾಗೆ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದರು. ಆದರೆ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದುದಲ್ಲz, ಸುಂದರವಾಗಿದ್ದು, ನರ್ತನ ಮಾಡುವುದರಲ್ಲಿ ಪಳಗಿದ್ದರೂ ಕೂಡ ಪಾರ್ಟಿಗಳಿಗೆ ಅವರನ್ನು ಪರಿಗಣಿಸುತ್ತಿರಲಿಲ್ಲ. +ಉರ್ಸುಲಾ ಮತ್ತು ಹುಡುಗಿಯರು ಪೀಠೋಪಕರಣ ಮತ್ತು ಬೆಳ್ಳಿಯ ಸಾಮಾನುಗಳ ಕಟ್ಟನ್ನು ಬಿಚ್ಚಿ ಬೋಳಾದ ಗೋಡೆಗಳಿಗೆ ಹೊಸ ಜೀವ ಬರುವಂತೆ ಗುಲಾಬಿ ಹೂವುಗಳು ತುಂಬಿರುವ ದೋಣಿಗಳಿರುವ ಹುಡುಗಿಯರ ಚಿತ್ರಗಳನ್ನು ನೇತುಹಾಕಿದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ದೈವದ ಇರುವಿಕೆಯ ಹುಡುಕಾಟದಲ್ಲಿ ಜೊತೆಗೆ ಅವನಿಲ್ಲ ಎಂದು ಮನದಟ್ಟಾಗಿಸಿಕೊಂಡು ಪಿಯಾನೋದ ಭಾಗಗಳನ್ನು ಬಿಡಿಸಿ ಅದರೊಳಗೆ ಮಾತ್ರಿಕ ಶಕ್ತಿ ಎಲ್ಲಿ ಅಡಗಿದೆ ಎಂದು ಕಂಡು ಹಿಡಿಯಲು ಪ್ರಯತ್ನಿಸಿದ. ಪಾರ್ಟಿಗೆ ಎರಡು ದಿನ ಮುಂಚೆ ಅಳಿದುಳಿದ ಕೀಗಳು ಮತ್ತು ಸುತ್ತಿಗೆಗಳು ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ ಸುರಳಿ ಸುತ್ತುವ ತಂತಿಗಳಲ್ಲಿ ಬೆರೆತು ಹೋದ ಮೇ, ಆ ಸಾಧನವನ್ನು ಮತ್ತೆ ಮೊದಲಿನಂತೆ ಮಾಡುವುದರಲ್ಲಿ ಶಕ್ತನಾದ. ಆಗಿನ ದಿನಗಳಲ್ಲಿ ಆಶ್ಚರ್ಯ ಹುಟ್ಟಿಸುವ ಹೆಚ್ಚಿನ ಸಂಗತಿಗಳಿರಲಿಲ್ಲ. ಆದರೆ ಗೊತ್ತಾದ ದಿನಕ್ಕೆ ಸರಿಯಾಗಿ ದೀಪಗಳನ್ನು ಹೊತ್ತಿಸಲಾಗಿತ್ತು. ಇನ್ನೂ ತೇವದ ಮತ್ತು ಬಿಳಿ ಬಣ್ಣದ ವಾಸನೆ ಇದ್ದ ಮನೆಯ ಪ್ರವೇಶ ಮಾಡಲಾಯಿತು. ಸಂಸ್ಥಾಪಕರ ಮಕ್ಕಳು ಮೊಮ್ಮಕ್ಕಳು ಅಂಗಳದಲ್ಲಿ ಜರ್ರ್ರಿ ಗಿಡಗಳನ್ನು, ಪ್ರಶಾಂತವಾದ ರೂಮುಗಳನ್ನು ಹಾಗೂ ಗುಲಾಬಿ ಹೂವಿನ ತೋಟವನ್ನು ನೋಡಿದರು. ಅವರು ನಡುಮನೆಯಲ್ಲಿ ಬಿಳಿಯ ಬಟ್ಟೆಯನ್ನು ಹೊದಿಸಿದ ತಮಗೆ ತಿಳಿಯದ ಉಪಕರಣದ ಎದುರು ಬಂದು ಸೇರಿದರು. ಅವರಲ್ಲಿ ಜೌಗು ಪ್ರದೇಶದ ಊರುಗಳಲ್ಲಿ ಆಗಲೇ ಜನಪ್ರಿಯವಾಗಿದ್ದ ಪಿಯೊನೋದ ಪರಿಚಯವಿದ್ದವರಿಗೆ ಕೊಂಚ ನಿರಾಸೆ ಆಯಿತು. ಉರ್ಸುಲಾಗೆ ಹೆಚ್ಚಿನ ನಿರಾಸೆಯಾಯಿತು. ಏಕೆಂದರೆ ಅಮರಾಂತ ಮತ್ತು ರೆಬೇಕ ನರ್ತಿಸಲು ಸಾಧ್ಯವಾಗುವಂತೆ ಕಾಗದದ ಸುರುಳಿಗಳನ್ನು ಪಿಯಾನೋದಲ್ಲಿ ಅನುವು ಮಾಡಿಟ್ಟಾಗ ಅದು ಕೆಲಸ ಮಾಡಲಿಲ್ಲ. ಅಷ್ಟು ಹೊತ್ತಿಗಾಗಲೆ ಹೆಚ್ಚು ಕಡಿಮೆ ಕುರುಡನಾಗಿದ್ದ ಮೆಲ್‌ಕಿಯಾದೆಸ್ ಕಾಲಾತೀತವಾದ eನದಿಂದ ಅದನ್ನು ಸರಿಪಡಿಸಲು ತೊಡಗಿದ. ಕೊನೆಗೆ ಆಕಸ್ಮಿಕವಾಗಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅದರಲ್ಲಿ ಯಾವುದೋ ಒಂದಕ್ಕೆ ಚಾಲನೆ ಕೊಟ್ಟಾಗ ಅದರಿಂದ ಮೊದಲು ದೊಡ್ಡದಾದ ಮತ್ತು ಅನಂತರ ಮಿಳಿತಗೊಂಡ ಸ್ವರಗಳ ಸಂಗೀತ ಹೊರಟಿತು. ಅದು ಕ್ರಮವಿಲ್ಲದೆ ಜೋಡಣೆಯಾದ ತಂತಿಗಳ ನಾದವಾಗಿತ್ತು. ಆದರೆ ಸಮುದ್ರವನ್ನು ಹುಡುಕುತ್ತ ಪರ್ವತಗಳನ್ನು ಹತ್ತಿಳಿದ ಇಪ್ಪತ್ತೊಂದು ಜನರ ಸಂತತಿಯವರು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅಲ್ಲದೆ ಬೆಳಗಿನ ತನಕ ನರ್ತನ ನಡೆದಿತ್ತು. +ಪಿಯತ್ರೋ ಕ್ರೆಪ್ಸಿ ಪಿಯಾನೋ ರಿಪೇರಿ ಮಾಡಲು ವಾಪಸು ಬಂದ. ರೆಬೇಕ ಮತ್ತು ಅಮರಾಂತ ಅದರ ತಂತಿಗಳನ್ನು ಕ್ರಮದಲ್ಲಿಡಲು ಸಹಾಯ ಮಾಡುವುದರ ಜೊತೆ ಅದರ ನಾದದಲ್ಲಿ ತಮ್ಮ ನಗುವನ್ನು ಸೇರಿಸಿದರು. ಅದು ಎಷ್ಟೊಂದು ಹಿತವಾಗಿ ಮತ್ತು ಯುಕ್ತವಾಗಿತ್ತೆಂದರೆ ಉರ್ಸುಲಾ ಅವರ ಮೇಲಿನ ಪರಿವೀಕ್ಷಣೆಯನ್ನು ಕೈಬಿಟ್ಟಳು. ಅವನು ಮತ್ತೆ ಹೊರಡುವ ಸಂದರ್ಭದಲ್ಲಿ ಪರಿಷ್ಕೃತಗೊಂಡ ಪಿಯಾನೋ ಜೊತೆಗೆ ವಿದಾಯದ ನರ್ತನವನ್ನು ಏರ್ಪಡಿಸಲಾಗಿತ್ತು ಮತ್ತು ಅದರಲ್ಲಿ ರೆಬೇಕಳ ಆಧುನಿಕ ನರ್ತನವನ್ನು ಪ್ರದರ್ಶಿಸಿದ. ಅರ್ಕಾದಿಯೋ ಮತ್ತು ಅಮರಾಂತ ಲಾಸ್ಯದಲ್ಲಿ ಅವರನ್ನು ಸರಿಗಟ್ಟಿದರು. ಆದರೆ ಬಾಗಿಲಿನ ಹತ್ತಿರ ನಿಂತು ನೋಡುತ್ತಿದ್ದ ಕೆಲವರು ಅರ್ಕಾದಿಯೋನ ಹಿಂಭಾಗ ಹೆಂಗಸಿನ ಹಾಗೆ ಇದೆ ಎಂದು ಹೇಳಿದ್ದರಿಂದ ಇಡೀ ಸಮಾರಂಭಕ್ಕೆ ಅಡ್ಡಿಯಾಯಿತು. ಪಿಲರ್ ಟೆರ್‍ನೆರಾ ಅವರನ್ನು ತರಾಟೆಗೆ ತೆಗೆದುಕೊಂಡು ಜಗಳವಾಡುತ್ತ, ಕೂದಲು ಕಿತ್ತುತ್ತಿದ್ದಳು. ಮಧ್ಯ ರಾತ್ರಿಯ ಸಮಯಕ್ಕೆ ಪಿಯತ್ರೋ ಕ್ರೆಪ್ಸಿ ಚಿಕ್ಕದಾದ ಭಾವಪೂರ್ಣ ಭಾಷಣದ ನಂತರ ಮತ್ತೆ ಬರುವುದಾಗಿ ಮಾತು ಕೊಟ್ಟು ಹೊರಟ. ರೆಬೇಕ ಬಾಗಿಲ ತನಕ ಅವನ ಜೊತೆ ಹೋದಳು. ಮತ್ತು ವಾಪಸು ಬಂದು ದೀಪವಾರಿಸಿದ ನಂತರ ಅವಳು ಅಳುವುದಕ್ಕೆ ತನ್ನ ರೂಮಿಗೆ ಹೋದಳು. ಅವಳ ಅಳು ಅನೇಕ ದಿನಗಳ ಕಾಲ ಮುಂದುವರಿಯಿತು. ಅದಕ್ಕೆ ಕಾರಣ ಅಮರಾಂತಳಿಗೂ ಕೂಡ ತಿಳಿಯಲಿಲ್ಲ. ಅವಳ ಏಕಾಂತ ವಾಸ ಅಸಹಜವಾಗಿರಲಿಲ್ಲ. ಅವಳು ಆತ್ಮೀಯವಾಗಿ ಕಂಡರೂ ಒಂಟಿಯಾಗಿ ನಿಗೂಢವಾಗಿದ್ದಳು. ಅವಳು ಗಟ್ಟಿ ಮೈಯಿನ ಯುವತಿಯಾಗಿದ್ದಳು. ಆದರೆ ತಾನು ಆ ಮನೆಗೆ ಬಂದಾಗ ಇದ್ದ ಕೈಗಳು ಮುರಿದು ಹೋದರೂ ರಿಪೇರಿ ಮಾಡದ ಕುರ್ಚಿಯನ್ನು ಈಗ ಉಪಯೋಗಿಸಬೇಕೆಂದು ಅವಳು ಒತ್ತಾಯ ಮಾಡುತ್ತಿದ್ದಳು. ಆ ವಯಸ್ಸಿನಲ್ಲಿಯೂ ಸಹ ಅವಳಿಗೆ ಬೆರಳು ಚೀಪುವ ಅಭ್ಯಾಸ ಇತ್ತೆಂದು ಯಾರೂ ಕಂಡು ಹಿಡಿದಿರಲಿಲ್ಲ. ಈ ಕಾರಣದಿಂದ ಅವಳು ಬಚ್ಚಲು ಮನೆಯ ಬಾಗಿಲು ಹಾಕಿಕೊಳ್ಳುವುದನ್ನು ಮತ್ತು ಗೋಡೆಗೆ ಮುಖಮಾಡಿ ಮಲಗುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಳೆ ಬಿದ್ದ ದಿನ ಅಂಗಳದಲ್ಲಿ ಗೆಳತಿಯರ ಜೊತೆ ಕಸೂತಿ ಹಾಕುತ್ತ ಕುಳಿತ ಅವಳಿಗೆ ಮಾತಿನ ಎಳೆ ತಪ್ಪಿ ಹೋಗಿ, ಒದ್ದೆ ಮಣ್ಣು ಮತ್ತು ತೋಟದ ಮಣ್ಣಿನಲ್ಲಿದ್ದ ಎರೆ ಹುಳುಗಳನ್ನು ಕಂಡಾಗ ಹಳೆಯ ನೆನಪುಗಳು ಉಕ್ಕಿ ಬಂದು ಅವಳ ಗಲ್ಲದ ಮೇಲೆ ಉಪ್ಪು ನೀರು ಇಳಿಯುತಿತ್ತು. ಇತ್ತೀಚೆಗೆ ಕಿತ್ತಲೆ ಹಣ್ಣಿನ ರಸದ ರುಚಿಗೆ ಮಾರುಹೋದ ಅವಳಿಗೆ ಅಳು ಬಂದಾಗ ಅದರ ಅಪೇಕ್ಷೆ ಉಕ್ಕೇರುತಿತ್ತು. ಅವಳು ಮತ್ತೆ ಮಣ್ಣನ್ನು ತಿನ್ನಲು ಪ್ರಾರಂಭಿಸಿದಳು. ಅವಳು ಕೇವಲ ಕುತೂಹಲದಿಂದ ಹಾಗೆ ಮಾಡಿದ್ದಳು. ತೀವ್ರ ಅಪೇಕ್ಷೆಗೆ ಕೆಟ್ಟ ರುಚಿ ಮದ್ದು, ನಿಜ. ಆದರೆ ನಿಜವಾಗಿಯೂ ಬಾಯಿಯಲ್ಲಿ ಮಣ್ಣು ಇರುವುದನ್ನು ಅವಳಿಗೆ ತಡೆಯಲಾಗುತ್ತಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಹೆಚ್ಚುತ್ತಿದ್ದ ಆತಂಕದಿಂದ, ಮೂಲ ಖನಿಜಗಳ ರುಚಿ ತಂದು ಕೊಡುವ, ಮೊದಲಿನ ಆಹಾರದ ಸಮಾಧಾನವನ್ನು ಪಡೆಯಲು ತನ್ನ ಪ್ರಯತ್ನವನ್ನು ಮುಂದುವರಿಸಿದಳು. ಸಂತೋಷ ಮತ್ತು ರೇಜಿಗೆಯಿಂದ ಗೊಂದಲಗೊಂಡ ಅವಳು, ಇಷ್ಟಿಷ್ಟೆ ಮಣ್ಣನ್ನು ಜೇಬಿನಲ್ಲಿ ತುಂಬಿಕೊಂಡು ಯಾರಿಗೂ ಕಾಣದ ಹಾಗೆ ತಿನ್ನುತ್ತಿದ್ದಳು. ಹಾಗೆ ಮಾಡುತ್ತಿದ್ದಾಗ ತನ್ನ ಗೆಳತಿಯರಿಗೆ ಅವಳು ಇತರೆ ಗಂಡಸರ ಬಗ್ಗೆ ಮಾತನಾಡುತ್ತ, ಗೋಡೆಯ ಸುಣ್ಣ ತಿನ್ನುವುದನ್ನು ಬಿಟ್ಟು ಬಿಡುವುದಕ್ಕೆ ಅವರು ಅರ್ಹರಲ್ಲ ಎಂದು ಹೇಳುತ್ತಿದ್ದಳು. ಕೈಗಳ ತುಂಬ ಮಣ್ಣು ತುಂಬಿಕೊಂಡಿದ್ದನ್ನು ತೋರಿಸಲು ತಕ್ಕವನಾದ ಮನುಷ್ಯ ತೀರ ಅಪರೂಪವಾಗಿದ್ದು, ಅಂಥವನು ಪ್ರಪಂಚದ ಬೇರೆ ಕಡೆಯಲ್ಲಿ ಚರ್ಮದ ಶೂಗಳನ್ನು ಹಾಕಿಕೊಂಡು ನಡೆಯುವ ನೆಲ ಅವಳಿಗೆ ಅವನ ರಕ್ತದ ಲವಣದ ರುಚಿಯನ್ನು ರವಾನಿಸುತ್ತಿದೆಯೇನೋ ಎನ್ನುವಂತಿತ್ತು. ಅದು ಅವಳ ನಾಲಗೆಯಲ್ಲಿ ಆ ರುಚಿಯನ್ನು ಉಳಿಸಿ ಸಮಾಧಾನ ತರುತ್ತಿತ್ತು. ಒಂದು ಮಧ್ಯಾಹ್ನ ಆಂಪೆರೋ ಮೊಸ್ಕೋತೆ ಮನೆಯನ್ನು ನೋಡಲು ಅನುಮತಿ ಕೇಳಿದಳು. ಅವಳ ಅನಿರಿಕ್ಷಿತವಾದ ಉದ್ದೇಶದಿಂದ ಉತ್ಸಾಹವಿಲ್ಲದೆ ಕೊಂಚ ಬಿಗುವಿನಿಂದಲೆ ಅಮರಾಂತ ಮತ್ತು ರೆಬೇಕ ಅವಳನ್ನು ಉಪಚರಿಸಿದರು. ಬದಲಾದ ತಮ್ಮ ಮನೆಯನ್ನು ಅವಳಿಗೆ ತೋರಿಸಿದರು. ಹಾಗೂ ಪಿಯಾನೋವನ್ನು ಕೇಳಿಸಿದರು. ಅಲ್ಲದೆ ಅವಳಿಗೆ ಕಿತ್ತಲೆ ಹಣ್ಣಿನ ರಸ ಮತ್ತು ಬಿಸ್ಕತ್ತುಗಳನ್ನು ಕೊಟ್ಟರು. ಆಂಪರೋ ಮಸ್ಕೆತೆ ಅಲ್ಲಿ ಇದ್ದಷ್ಟು ಸಮಯ ಘನತೆಯಿಂದ ನಡೆದುಕೊಂಡು ಉರ್ಸುಲಾಳ ಮೇಲೆ ಒಳ್ಳೆಯ ಪ್ರಭಾವ ಬೀರಿದಳು. ಎರಡು ಗಂಟೆಗಳ ಸಮಯ ನಡೆಯುತ್ತಿದ್ದ ಪರಸ್ಪರ ಮಾತುಗಳು ಮುಗಿಯುತ್ತಿದ್ದ ಹಾಗೆ ಅಮರಾಂತಳ ಗಮನ ಬೇರೆ ಕಡೆ ಇದ್ದಾಗ ಅವಳು ರೆಬೇಕಳಿಗೆ ಒಂದು ಕಾಗದ ಕೊಟ್ಟಳು. ಅದರ ಮೇಲಿದ್ದ ಕುಮಾರಿ ರೆಬೇಕ ಬ್ಯುಂದಿಯಾ ಎಂಬ ಹಸಿರು ಬಣ್ಣದಲ್ಲಿ ಬರೆದ ಅಕ್ಷರಗಳನ್ನು ನೋಡಿದ ಅವಳಿಗೆ, ಪಿಯಾನೋದ ಕಾರ್ಯ ವೈಖರಿಯನ್ನು ಬರೆದು ತಿಳಿಸಿದ ಪದಗಳು ಇದ್ದ ರೀತಿಯಲ್ಲಿಯೇ ಕಂಡಿತು. ಅವಳು ಅದನ್ನು ಮಡಚಿ ಎದೆಯ ಬಳಿ ಇಟ್ಟುಕೊಂಡು ಆಂಪೆರೋ ಮಸ್ಕೋತೆ ಕಡೆ ಕೃತಜ್ಞತೆಯಿಂದ ನೋಡಿದಳು ಹಾಗೂ ಅದಕ್ಕಾಗಿ ತೃಪ್ತಿಯನ್ನು ವ್ಯಕ್ತಪಡಿಸಿದಳು. +ಆಂಪೆರೋ ಮಸ್ಕೋತೆ ಮತ್ತು ರೆಬೇಕ ಬ್ಯುಂದಿಯಾರಲ್ಲಿ ಉಂಟಾದ ದಿಢೀರ್ ಸ್ನೇಹದಿಂದ ಅವ್ರೇಲಿಯಾನೋನಲ್ಲಿ ಆಸೆಗಳು ಮರುಹುಟ್ಟು ಪಡೆದವು. ರೆಮಿದಿಯೋಸ್‌ಳ ನೆನಪು ಅವನನ್ನು ಕಾಡುವುದನ್ನು ಬಿಟ್ಟಿರಲಿಲ್ಲ. ಆದರೆ ಅವನಿಗೆ ಅವಳನ್ನು ಕಾಣುವ ಅವಕಾಶ ಸಿಕ್ಕಿರಲಿಲ್ಲ. ಅವನು ಊರಿನಲ್ಲಿ ತನ್ನ ಸ್ನೇಹಿತರಾದ ಮ್ಯಾಗ್ನಿಫಿಕೋ ವೀಸ್‌ಬಾಲ್ ಹಾಗೂ ಗೆರಿನೆಲ್ಡೊ ಮಾರ್ಕೆಜ್ (ಇವರು ಇದೇ ಹೆಸರಿನ ಸಂಸ್ಥಾಪಕರ ಮಕ್ಕಳು) ಜೊತೆಯಲ್ಲಿ ಓಡಾಡುವಾಗ ಹೊಲಿಗೆ ಅಂಗಡಿಯ ಕಡೆ ನೋಡುತ್ತಿದ್ದ ಅವನಿಗೆ ಅವಳ ಅಕ್ಕಂದಿರು ಮಾತ್ರ ಕಾಣುತ್ತಿದ್ದರು. ಅವನಿಗೆ ಆಂಪೊರೋ ಮೊಸ್ಕೋತೆ ಮನೆಗೆ ಬಂದಿದ್ದು ಒಳ್ಳೆಯ ಸೂಚನೆಯಂತೆ ಕಂಡಿತು. ಅವ್ರೇಲಿಯಾನೋ ತನ್ನಷ್ಟಕ್ಕೆ ಮೆಲು ಧ್ವನಿಯಲ್ಲಿ, “ಇವಳ ಜೊತೆ ಅವಳು ಬರುತ್ತಾಳೆ.” ಎಂದುಕೊಂಡ. “ಅವಳು ಬರುತ್ತಾಳೆ” ಎಂದು ಹಲವಾರು ಸಲ ತೀರ ನಂಬಿಕೆಯಿಂದ ತನಗೆ ತಾನೇ ಹೇಳಿಕೊಂಡದ್ದಕ್ಕೆ, ಒಂದು ದಿನ ಮಧ್ಯಾಹ್ನ ಅವಳು ತನ್ನ ಕರೆಯನ್ನು ಮನ್ನಿಸಿದ್ದಾಳೆ ಎಂದು ಅವನಿಗೆ ಖಚಿತವಾಯಿತು. ಅದರಂತೆಯೇ ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಮಗುವಿನಂತಹ ಧ್ವನಿ ಕೇಳಿಸಿತು. ಅವನು ಕತ್ತೆತ್ತಿ ನೋಡಿದಾಗ ಬಾಗಿಲ ಹತ್ತಿರ ಬಿಳಿ ಶೂ ಮತ್ತು ತಿಳಿಗೆಂಪಿನ ಉಡುಗೆ ತೊಟ್ಟಿದ್ದ ಅವಳನ್ನು ಕಂಡು ಅವನ ಹೃದಯ ನಿಂತಂತಾಯಿತು. +ಆಂಪೆರೋ ಮಸ್ಕೋತೆ, “ನೀನು ಅಲ್ಲಿ ಹೋಗುವಂತಿಲ್ಲ ರೆಮೆದಿಯೋಸ್, ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಹಜಾರದಲ್ಲಿ ನಿಂತು ಹೇಳಿದಳು. +ಆದರೆ ಅವಳಿಗೆ ಉತ್ತರಿಸಲು ಅವ್ರೇಲಿಯಾನೋ ಅವಕಾಶ ಕೊಡಲಿಲ್ಲ. ಅವನು ಬೋಗುಣಿಯಿಂದ ಹೊರಗೆ ಬಂದ ಸಣ್ಣ ಮೀನನ್ನು ಹಿಡಿದು ಕೊಂಡು, “ಒಳಗೆ ಬನ್ನಿ” ಎಂದ. +ಒಳಗೆ ಹೋದ ರೆಮಿದಿಯೋಸ್ ಅವನನ್ನು ಮೀನಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದಳು. ಆಸ್ತಮಾ ಹೆಚ್ಚಾದ ಕಾರಣದಿಂದ ಅವ್ರೇಲಿಯಾನೋ ಅವಳಿಗೆ ಉತ್ತರ ಕೊಡಲಿಲ್ಲ. ಅವಳು ತನ್ನ ತಂದೆಗೆ ತೋರಿಸುತ್ತಿದ್ದ ಗೌರವದಂತೆ ಪ್ರತಿ ಪ್ರಶ್ನೆಗೆ ಮುಂಚೆ ‘ಸರ್\’ ಎನ್ನುತ್ತಿದ್ದಳು. ಅವನು ಆ ಹೊಳಪು ಕಣ್ಣುಗಳ ಮಿರುಗುವ ಮೈ ಬಣ್ಣದ ಅವಳ ಪಕ್ಕದಲ್ಲಿ ಇರಬೇಕೆಂದು ತೀವ್ರವಾಗಿ ಬಯಸಿದ್ದ. ಮೂಲೆಯಲ್ಲಿ ಡೆಸ್ಕಿನ ಮೇಲೆ ಕುಳಿತ ಮೆಲ್‌ಕಿಯಾದೆಸ್ ಬೇರೆಯವರಿಗೆ ಅರ್ಥವಾಗದ್ದನ್ನು ಏನನ್ನೋ ಬರೆಯುತ್ತಿದ್ದ. ಸಣ್ಣ ಮೀನೊಂದನ್ನು ಕೊಡುತ್ತೇನೆ ಎಂದು ಅವಳಿಗೆ ಹೇಳಲು ಮಾತ್ರ ಅವ್ರೇಲಿಯಾನೋಗೆ ಸಾಧ್ಯವಾಯಿತು. ಅವಳಿಗೆ ಗಾಬರಿಯಾಗಿ ಸಾಧ್ಯವಾದಷ್ಟು ವೇಗವಾಗಿ ವರ್ಕ್‌ಶಾಪ್‌ನಿಂದ ಓಡಿದಳು. ಅವ್ರೇಲಿಯಾನೋ ಆ ದಿನ ಮಧ್ಯಾಹ್ನ ಅವಳನ್ನು ಭೇಟಿಯಾಗಬೇಕೆಂದು ಅಲ್ಲಿಯ ತನಕ ಕಾಯ್ದಿಟ್ಟುಕೊಂಡಿದ್ದ ತಾಳ್ಮೆಯನ್ನು ಕಳೆದುಕೊಂಡ. ಇದರಿಂದಾಗಿ ಅವನು ಕೆಲಸವನ್ನು ನಿರ್ಲಕ್ಷಿಸಿದ. ಮನಸ್ಸನ್ನು ಕೇಂದ್ರೀಕರಿಸುವ ಪ್ರಯತ್ನದಲ್ಲಿ ಅವಳು ಕಾಣಲಿ ಎಂದು ತೀವ್ರವಾಗಿ ಬಯಸಿದ. ಆದರೆ ಅವಳು ಉತ್ತರಿಸಲಿಲ್ಲ. ಅವನು ಅವಳನ್ನು ಅವಳ ಅಕ್ಕಂದಿರ ಅಂಗಡಿಯಲ್ಲಿ, ಅವರ ಮನೆಯ ಕಿಟಕಿಯ ಹತ್ತಿರ, ಹಾಗೂ ಅವಳ ತಂದೆಯ ಆಫೀಸಿನಲ್ಲಿ ಕಾಣಲು ಪ್ರಯತ್ನಿಸಿದ. ಆದರೆ ಅವನಲ್ಲಿ ಮಡುಗಟ್ಟಿದ ಅವಳ ಆಕಾರವನ್ನು ಏಕಾಂತದಲ್ಲಿ ಮಾತ್ರ ಕಾಣಲು ಸಾಧ್ಯವಾಯಿತು. ರೆಬೇಕಳ ಜೊತೆ ಪಿಯಾನೋದ ಸಂಗೀತವನ್ನು ಕೇಳುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದ. ಪಿಯತ್ರೋ ಕ್ರಿಪ್ಸಿ ಹೇಗೆ ನರ್ತಿಸಬೇಕೆಂದು ಕಲಿಸಿದ್ದರಿಂದ ಅವಳು ಆ ಸಂಗೀತವನ್ನು ಕೇಳುತ್ತಿದ್ದಳು. ಆದರೆ ಸಂಗೀತ ಮತ್ತು ಅದರೊಂದಿಗೆ ಪ್ರತಿಯೊಂದೂ ರೆಮಿದಿಯೋಸಳನ್ನು ನೆನಪಿಸುತ್ತಿದ್ದರಿಂದ ಅವ್ರೇಲಿಯಾನೋ ಅದನ್ನು ಕೇಳುತ್ತಿದ್ದ. +ಇಡೀ ಮನೆ ಪ್ರೇಮದಿಂದ ತುಂಬಿ ಹೋಗಿತ್ತು. ಕೊನೆ ಮೊದಲಿಲ್ಲದ ಕಾವ್ಯದಿಂದ ಅವ್ರೇಲಿಯಾನೋ ಅದನ್ನು ವ್ಯಕ್ತಪಡಿಸಿದ್ದ. ಅವನು ಅದನ್ನು ರೆಮಿದಿಯೋಸ್ ಕಾಣಿಸಿಕೊಂಡಳೇನೋ ಎನ್ನುವಂತೆ ಮೆಲ್‌ಕಿಯಾದೆಸ್ ಕೊಟ್ಟ ಚರ್ಮದ ಹಾಳೆಯಲ್ಲಿ, ಬಚ್ಚಲು ಮನೆ ಗೋಡೆಯಲ್ಲಿ, ಹಾಗೂ ಕೈ ಮೇಲೆ ಬರೆಯುತ್ತಿದ್ದ: ಮಧ್ಯಾಹ್ನ ಎರಡು ಗಂಟೆಯ ನಿದ್ದೆಗಣ್ಣಿನ ರೆಮಿದಿಯೋಸ್, ಮೃದುವಾದ ಗುಲಾಬಿ ಉಸುರಿನ ರೆಮಿದಿಯೋ;ಸ್, ಚಿಕ್ಕ ಹುಳುಗಳ ಆಂತರ್ಯದ ರೆಮಿದಿಯೋಸ್, ಬೆಳಗಿನ ಹೊಗೆಯಾಡುವ ಬ್ರೆಡ್‌ನಲ್ಲಿನ ರೆಮಿದಿಯೋಸ್, ಎಲ್ಲಂದರಲ್ಲಿರುವ ರೆಮಿದಿಯೋಸ್ ಹಾಗೂ ಎಂದೆಂದಿಗೂ ಇರುವ ರೆಮಿದಿಯೋಸ್. ರೆಬೇಕ ಕಸೂತಿ ಹಾಕುತ್ತ ತನ್ನ ಪ್ರಿಯತಮನಿಗಾಗಿ ಮಧ್ಯಾಹ್ನ ನಾಲ್ಕು ಗಂಟೆಗೆ ಕಾದಿರುತ್ತಿದ್ದಳು. ಅವಳಿಗೆ ಅಂಚೆಯವನ ಹೇಸರಗತ್ತೆ ಎರಡು ವಾರಕ್ಕೊಂದು ಸಲ ಬರುತ್ತೆಂದು ಗೊತ್ತಿತ್ತು. ಆದರೂ ಎಂದಾದರೊಂದು ದಿನ ಅದು ತಪ್ಪಾಗಿ ಬರುವುದೆಂಬ ನಂಬಿಕೆಯಿಂದ ಯಾವಾಗಲೂ ಕಾದಿರುತ್ತಿದ್ದಳು. ಆದರೆ ಅದಕ್ಕೆ ವಿರುದ್ಧವಾಗಿ ಬರಬೇಕಾದ ದಿನ ಹೇಸರಕತ್ತೆ ಬರಲಿಲ್ಲ. ನಿರಾಸೆಯಿಂದ ಹುಚ್ಚಿಯಂತಾಗಿ ರೆಬೇಕ ಮಧ್ಯರಾತ್ರಿಯಲ್ಲಿ ಎದ್ದು ತೋಟದಲ್ಲಿನ ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಗಪಗಪನೆ ಮುಕ್ಕಿದಳು. ನೋವು ಹಾಗೂ ರೋಷದಿಂದ ಅಳುತ್ತ ಎರೆಹುಳುಗಳನ್ನು ಮತ್ತು ಆಮೆಚಿಪ್ಪುಗಳನ್ನು ಜಗಿದಳು. ಅನಂತರ ಬೆಳಗಿನ ಜಾವದ ತನಕ ವಾಂತಿ ಮಾಡಿದಳು. ಅವಳಿಗೆ ತೀವ್ರವಾದ ಜ್ವರ ಬಂದು ಪ್ರಜ್ಞೆ ತಪ್ಪಿತು. ಹೃದಯ ಭಾರವಾಯಿತು. ಉರ್ಸುಲಾ ಗಾಬರಿಗೊಂಡು ಅವಳ ಪೆಟ್ಟಿಗೆಯನ್ನು ಬಲವಂತದಿಂದ ತೆಗೆದಾಗ ಅದರ ತಳದಲ್ಲಿ ನಸುಗೆಂಪು ರಿಬ್ಬನ್‌ನಿಂದ ಕಟ್ಟಿದ ಸುವಾಸನೆಯ ಹದಿನಾರು ಕಾಗದಗಳು ಹಾಗೂ ಒಣಗಿದ ಹೂ ಮತ್ತು ಎಲೆಗಳಲ್ಲದೆ ಮುಟ್ಟಿದರೆ ಪುಡಿಯಾಗುವ ಚಿಟ್ಟೆಗಳು ಹಳೆಯ ಪುಸ್ತಕದಲ್ಲಿ ಕಂಡವು. +ಅವ್ರೇಲಿಯಾನೋಗೆ ಮಾತ್ರ ಅಂಥ ನಿರಾಸೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿತ್ತು. ಆ ದಿನ ಮಧ್ಯಾಹ್ನ ಉರ್ಸುಲಾ ಉನ್ಮತ್ತಳಾಗುತ್ತಿದ್ದ ರೆಬೇಕಳನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಅವ್ರೇಲಿಯಾನೋ ತನ್ನ ಸ್ನೇಹಿತರಾದ ಮ್ಯಾಗ್ನಿಫಿಕೋ ವೀಸ್‌ಬಾಲ್ ಮತ್ತು ಗೆರಿನೆಲ್ಡೊ ಮಾರ್ಕೆಜ್‌ರ ಜೊತೆ ಕತಾವುರತೆಯ ಅಂಗಡಿಗೆ ಹೋದ. ಅದನ್ನು ಆಗಲೇ ಮರದ ರೂಮುಗಳಿಂದ ಅಭಿವೃದ್ಧಿಗೊಳಿಸಲಾಗಿತ್ತು. ಅದರಲ್ಲಿ ಒಣಗಿದ ಹೂಗಳ ವಾಸನೆಯ ಹೆಂಗಸೊಬ್ಬಳು ವಾಸಮಾಡುತ್ತಿದ್ದಳು. ಅಲ್ಲಿ ಗುಂಪೊಂದು ಅಕಾರ್ಡಿಯನ್ ಮತ್ತು ಡ್ರಮ್ಮುಗಳನ್ನು ಉಪಯೋಗಿಸಿಕೊಂಡು ಸಾಕಷ್ಟು ವರ್ಷಗಳ ಕಾಲ ಮಕೋಂದೋದಲ್ಲಿ ಕಾಣದ ಫ್ರಾನ್ಸಿಸ್ಕೋನ ಹಾಡುಗಳನ್ನು ನುಡಿಸುತ್ತಿದ್ದರು. ಆ ಮೂವರು ಸ್ನೇಹಿತರು ಕಸಿಮಾಡಿದ ಕಬ್ಬಿನ ರಸವನ್ನು ಕುಡಿದರು. ಅವ್ರೇಲಿಯಾನೋನ ಒಡನಾಡಿಗಳಾದ ವೀಸ್‌ಬಾಲ್ ಮತ್ತು ಮಾರ್ಕೆಜ್ ಪ್ರಾಪಂಚಿಕ ವಿಷಯದಲ್ಲಿ ನುರಿತವರಾಗಿದ್ದರು. ಅವರು ತೊಡೆಯ ಮೇಲೆ ಹೆಂಗಸರನ್ನು ಕೊಡಿಸಿಕೊಂಡು ನಿಧಾನವಾಗಿ ಕುಡಿಯತೊಡಗಿದರು. ಅವರಲ್ಲಿ ಸೊರಗಿದ ಮತ್ತು ಬಂಗಾರದ ಹಲ್ಲನ್ನು ಕಟ್ಟಿಸಿಕೊಂಡಿದ್ದವಳೊಬ್ಬಳು ಅವ್ರೇಲಿಯಾನೋನನ್ನು ನೇವರಿಸಿದಳು. ಅದು ಅವನನ್ನು ನಡುಗುವಂತೆ ಮಾಡಿತು. ಅವನು ಅವಳನ್ನು ದೂರ ಸರಿಸಿದ. ಅವನಿಗೆ, ತಾನು ಕುಡಿದಷ್ಟೂ ರೆಮಿದಿಯೋಸ್‌ಳ ನೆನಪು ಹೆಚ್ಚುವುದೆಂದು ಗೊತ್ತಾಯಿತು. ಆದರೆ ಅದಕ್ಕಿಂತ ಉತ್ತಮವಾಗಿ ಅವಳ ನೆನಪಿನ ನೋವನ್ನು ತಡೆಯಲು ಅವನಿಗೆ ಸಾಧ್ಯವಾಗಲಿಲ್ಲ. ಅವನಿಗೆ ತಾನು ಯಾವಾಗಿನಿಂದ ತೇಲುತ್ತಿದ್ದೇನೆ ಎಂದು ತಿಳಿಯಲಿಲ್ಲ. ತನ್ನ ಸ್ನೇಹಿತರು ಮತ್ತು ಹೆಂಗಸರು ಹೊಳೆಯುವ ಬೆಳಕಲ್ಲಿ ತೇಲುತ್ತ ಅದೇನೋ ಪದಗಳನ್ನು ಉಚ್ಛರಿಸುತ್ತ, ಮುಖಭಾವಕ್ಕೆ ಸಂಬಂಧವಿಲ್ಲದ ಸನ್ನೆಗಳನ್ನು ಮಾಡುತ್ತಿದ್ದದ್ದು ಕಾಣಿಸಿತು. ಕ್ಯಾಡಿಲಿನೋ ಅವನ ಹೆಗಲ ಮೇಲೆ ಕೈ ಹಾಕಿ, “ಹನ್ನೊಂದಾಗುತ್ತಿದೆ” ಎಂದು ಹೇಳಿದ. ಅವ್ರೇಲಿಯಾನೋ ಕತ್ತು ತಿರುಗಿಸಿ ಕಿವಿಯಲ್ಲಿ ಹೂ ಇಟ್ಟುಕೊಂಡಿದ್ದ ಕಳೆಗೆಟ್ಟ ಒಂದು ಮುಖವನ್ನು ನೋಡಿದ. ಆಗ ಅವನಿಗೆ ಮರೆವಿನ ದಿನಗಳಲ್ಲಿ ಆದ ಹಾಗೆ ನೆನಪು ಅಳಿಸಿಹೋಯಿತು. ಅಂದೊಂದು ಬೆಳಗಿನ ಜಾವ ತೀರ ಹೊಸದಾದ ರೂಮಿನಲ್ಲಿ, ಕೂದಲನ್ನು ಕೆಳಗೆ ಬಿಟ್ಟುಕೊಂಡು, ಬರಿಗಾಲಲ್ಲಿ, ಕೈಯಲ್ಲೊಂದು ದೀಪ ಹಿಡಿದುಕೊಂಡು ಪಿಲರ್ ಟೆರ್‍ನೆರಾ ನಿಂತಿದ್ದನ್ನು ಕಂಡು ನಂಬದೆ ಆಶ್ಚರ್ಯಗೊಂಡ ಅವನು ಅದನ್ನು ಮರಳಿ ಪಡೆದ. +“ಅವ್ರೇಲಿಯಾನೋ” +ಅವ್ರೇಲಿಯಾನೋ ತಲೆ ಎತ್ತಿದ. ಅವನಿಗೆ ತಾನು ಅಲ್ಲಿಗೆ ಬಂದದ್ದು ಹೇಗೆ ಎಂದು ತಿಳಿಯಲಿಲ್ಲ. ಆದರೆ ತನ್ನ ಗುರಿ ಏನು ಎನ್ನುವುದು ತಿಳಿದಿತ್ತು. ಏಕೆಂದರೆ ಅವನು ಅದನ್ನು ಚಿಕ್ಕಂದಿನಿಂದ ಹೃದಯದಾಳದಲ್ಲಿ ಇಟ್ಟುಕೊಂಡಿದ್ದ. +ಅವನು, “ನಾನು ನಿನ್ನ ಜೊತೆ ಮಲಗಲು ಬಂದಿದ್ದೇನೆ.” ಎಂದ. +ಅವನ ಬಟ್ಟೆಯೆಲ್ಲ ವಣ್ಣು ಮತ್ತು ವಾಂತಿಯಿಂದ ಮಲಿನಗೊಂಡಿತ್ತು. ತನ್ನ ಇಬ್ಬರು ಮಕ್ಕಳ ಜೊತೆ ಒಂಟಿಯಾಗಿದ್ದ ಪಿಲರ್ ಟೆರ್‍ನೆರಾ ಅವನಿಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ. ಅವನನ್ನು ಹಾಸಿಗೆಗೆ ಕರೆದುಕೊಂಡು ಹೋದಳು. ಒದ್ದೆ ಬಟ್ಟೆಯಿಂದ ಅವನ ಮುಖವನ್ನು ಒರೆಸಿ, ಬಟ್ಟೆಯನ್ನು ಕಳಚಿದಳು. ಅನಂತರ ತನ್ನ ಬಟ್ಟೆಯನ್ನು ತೆಗೆದು, ಒಂದು ಪಕ್ಷ ಮಕ್ಕಳು ಎದ್ದರೆ ತಮ್ಮನ್ನು ನೋಡದಿರಲಿ ಎಂದು ಸೊಳ್ಳೆ ಪರದೆಯನ್ನು ಇಳಿಬಿಟ್ಟಳು. ಅವಳು ತನ್ನನ್ನು ಬಿಟ್ಟ ಗಂಡಸರಿಂದ, ಕಾರ್ಡುಗಳ ಗೊಂದಲದಲ್ಲಿ ಮನೆಗುರುತು ಮರೆತ ಲೆಕ್ಕವಿಲ್ಲದಷ್ಟು ಗಂಡಸರಿಂದ ಸೋತು ಹೋಗಿ, ತನ್ನ ಜೊತೆ ಇರುವ ಗಂಡಸಿಗಾಗಿ ಕಾಯುತ್ತಿದ್ದಳು. ಕಾದಿರುವ ಅವಧಿಯಲ್ಲಿ ಅವಳ ಮೈ ಚರ್ಮ ಸುಕ್ಕಾಗಿತ್ತು, ಮೊಲೆಗಳು ಸುರುಟಿದ್ದವು. ಮತ್ತು ಅವಳ ಹೃದಯದ ಕಾವು ನಂದಿಹೋಗಿತ್ತು. ಆ ಕತ್ತಲಲ್ಲಿ ಅವಳು ಅವ್ರೇಲಿಯಾನೋಗಾಗಿ ತಡಕಾಡಿ ಅವನ ಹೊಟ್ಟೆಯ ಮೇಲೆ ಕೈಯಿಟ್ಟು ತಾಯಿಯ ಹಾಗೆ ಮೃದುವಾಗಿ ಅವನ ಕೆನ್ನೆಯ ಮೇಲೆ ಮುತ್ತಿಟ್ಟಳು. “ನತದೃಷ್ಟ ಮಗುವೇ” ಎಂದು ಅವಳು ಪಿಸುನುಡಿದಳು. ಅವ್ರೇಲಿಯಾನೋ ನಡುಗಿದ. ಶಾಂತಚಿತ್ತನಾಗಿ, ಕೊಂಚವೂ ನಲುಗದ ಆಲೋಚನೆಯಿಂದ ಮಡುಗಟ್ಟಿದ ದುಃಖದಿಂದ ಆಚೆಗೆ ಬಂದ. ಅವನಿಗೆ ಇಸ್ತ್ರಿ ಮಾಡಿದ ಬಟ್ಟೆ ಹಾಕಿಕೊಂಡು, ಪ್ರಾಣಿಯ ವಾಸನೆ ಸೂಸುವ ರೆಮಿದಿಯೋಸ್ ಜೌಗು ಪ್ರದೇಶದಂತೆ ಬದಲಾದದ್ದು ಕಂಡಿತು. ಅವನು ತಿಳಿದೆದ್ದಾಗ ಅಳುತ್ತಿದ್ದ. ಮೊದಲು ಬಿಡಿಬಿಡಿಯಾದ ಬಿಕ್ಕುಗಳಿದ್ದವು ಅನಂತರ ಒಳಗಿನ ಎಲ್ಲವನ್ನೂ ಹೊರಗೆ ಹಾಕಿದ. ಅವಳು ಅವನ ಕೂದಲಲ್ಲಿ ಬೆರಳಾಡಿಸಿ ಕಾದಳು. ಅನಂತರ ಪಿಲರ್ ಟೆರ್‍ನೆರಾ, “ಯಾರವಳು” ಎಂದು ಕೇಳಿದಳು. ಅವ್ರೇಲಿಯಾನೋ ಅವಳಿಗೆ ಯಾರೆಂದು ತಿಳಿಸಿದ. ಬೇರೆ ಸಮಯದಲ್ಲಿ ಕೊಕ್ಕರೆಗಳನ್ನು ಹೆದರಿಸುವಂತಿದ್ದ ಅವಳು ಈಗ ಮಕ್ಕಳು ಕೂಡ ಎಚ್ಚರವಾಗದ ಹಾಗೆ ನಕ್ಕಳು. “ಅವಳನ್ನು ಉದ್ದೀಪನಗೊಳಿಸಬೇಕು” ಎಂದು ಅಣಕಿಸಿದಳು. ಆದರೆ ಆ ಅಣಕಿನಲ್ಲಿ ಅವ್ರೇಲಿಯಾನೋಗೆ ಆಗಾಧವಾದ ಹೃದಯವಂತಿಕೆ ಕಾಣಿಸಿತು. ಅವನು ರೂಮಿನಿಂದ ಹೊರಗೆ ಹೊರಟಾಗ ತನ್ನ ಗಂಡಸುತನದ ಬಗ್ಗೆ ಇದ್ದ ಅನುಮಾನ ಮತ್ತು ಅನೇಕ ತಿಂಗಳುಗಳ ಕಾಲದ ಹೃದಯದ ಭಾರವನ್ನು ಹೊರಗೆ ಹಾಕಿದ. ಪಿಲರ್ ಟೆರ್‍ನೆರಾ ಅವನಿಗೆ ಮಾತು ಕೊಟ್ಟಳು. +“ನಾನು ಆ ಹುಡುಗಿಯ ಹತ್ತಿರ ಮಾತಾಡ್ತೀನಿ. ನಾನು ಅವಳಿಗೆ ಏನು ತಿನ್ನಲು ಕೊಡ್ತೀನಿ, ನೋಡ್ವಂತೆ” ಎಂದಳು. +ಅವಳು ತನ್ನ ಮಾತನ್ನು ಉಳಿಸಿಕೊಂಡಳು. ಆದರೆ ಅದು ಕೆಟ್ಟ ಗಳಿಗೆಯಾಗಿತ್ತು. ಮನೆ ಹಳೆಯ ದಿನಗಳ ಶಾಂತಿಯನ್ನು ಕಳೆದುಕೊಂಡಿತ್ತು. ತನ್ನ ಕೂಗಾಟದಿಂದ ಗುಟ್ಟಾಗಿ ಇಟ್ಟುಕೊಳ್ಳಲು ಸಾಧ್ಯವಾಗದೆ ಹೋದ ರೆಮಿದಿಯೋಸ್‌ಳ ಮೋಹದ ಬಗ್ಗೆ ತಿಳಿದಾಗ ಅಮರಾಂತಳಿಗೆ ಅತೀವವಾದ ಜ್ವರ ಬಂದಿತ್ತು. ಅವಳು ಕೂಡ ಪ್ರೇಮದ ಏಕಾಂತದಲ್ಲಿ ನರಳುತ್ತಿದ್ದಳು. ಅವಳು ಬಚ್ಚಲ ಮನೆಯಲ್ಲಿ ಬಾಗಿಲು ಹಾಕಿಕೊಂಡು ತನ್ನೊಳಗಿನ ತಳಮಳಕ್ಕೆ ಹೊರದಾರಿ ಹುಡುಕಲು ಭಾವಪೂರ್ಣವಾದ ಕಾಗದಗಳನ್ನು ಬರೆಯುತ್ತಿದ್ದಳು. ಅವುಗಳನ್ನು ಪೆಟ್ಟಿಗೆಯ ತಳದಲ್ಲಿ ಬಚ್ಚಿಡುತ್ತಿದ್ದಳು. ಉರ್ಸುಲಾಗೆ ಕಾಯಿಲೆ ಬಿದ್ದ ಇಬ್ಬರು ಹುಡುಗಿಯರನ್ನು ನೋಡಿಕೊಳ್ಳುವ ಶಕ್ತಿ ಇರಲಿಲ್ಲ. ಅದೆಷ್ಟೋ ಹೊತ್ತಿನ ತನಕ ಪ್ರಶ್ನೆಗಳನ್ನು ಕೇಳಿದರು. ಅಮರಾಂತಳ ನಿತ್ರಾಣದ ಕಾರಣ ತಿಳಿದುಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಏನೋ ಹೊಳೆದು, ಬಲವಂತವಾಗಿ ಪೆಟ್ಟಿಗೆಯನ್ನು ತೆಗೆದಳು. ಅಲ್ಲಿ ಕಂಬನಿಯಿಂದ ಇನ್ನೂ ಒದ್ದೆಯಾಗಿದ್ದ ಪಿಯತ್ರೋ ಕ್ರೆಪ್ಸಿಗೆ ಕಳುಹಿಸಿದ ನಸುಗೆಂಪು ರಿಬ್ಬನ್‌ನಿಂದ ಕಟ್ಟಿದ ಹಾಗೂ ತಾಜಾ ಹೂವಿನ ಜೊತೆಯಲ್ಲಿದ್ದ ಕಾಗದಗಳನ್ನು ಕಂಡಳು. ರೋಷದಿಂದ ಅಳುತ್ತಾ ಪಿಯಾನೋವನ್ನು ಕೊಂಡುಕೊಳ್ಳಬೇಕೆಂದು ತನಗೆ ಹೊಳೆದ ಆ ದಿನಗಳನ್ನು ಶಪಿಸಿದಳು. ಆನಂತರ ಅವಳು ಕಸೂತಿ ತರಗತಿಗೆ ನಿರ್ಬಂಧ ಹಾಕಿದಳು. ಮತ್ತು ಯಾರೂ ಸಾಯದಿದ್ದರೂ ಕೂಡ ಅವರಿಬ್ಬರು ಹೆಣ್ಣು ಮಕ್ಕಳ ಆಸೆ ಕೊನೆಗೊಳ್ಳುವ ತನಕ ವಿಸ್ತೃತವಾದ ಸೂತಕವನ್ನು ಆಚರಣೆಗೆ ತಂದಳು. ಪಿಯತ್ರೋ ಕ್ರೆಪ್ಸಿಯ ಸಂಗೀತದ ವಾದ್ಯಗಳನ್ನು ರಿಪೇರಿ ಮಾಡುವ ಸಾರ್ಮಥ್ಯವನ್ನು ಮೆಚ್ಚಿಕೊಂಡಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನ ಬಗ್ಗೆ ತನ್ನ ಮೊದಲಿನ ಭಾವನೆಯನ್ನು ಬದಲಾಯಿಸಿದರೂ ಕೂಡ ಯಾವುದೇ ಉಪಯೋಗಕ್ಕೆ ಬರಲಿಲ್ಲ. ಪಿಲರ್ ಟೆರ್‍ನೆರಾ ಅವ್ರೇಲಿಯಾನೋಗೆ ರೆಮಿದಿಯೋಸ್ ಮದುವೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆಂದು ಹೇಳಿದರೂ ಸಹ ಆ ಸುದ್ದಿ ತನ್ನ ತಂದೆತಾಯಿಗಳಿಗೆ ಹೆಚ್ಚಿನ ತೊಂದರೆ ಉಂಟುಮಾಡುವುದೆಂದು ಅವನಿಗೆ ತೋರಿತ್ತು. ಔಪಚಾರಿಕತೆಯ ಮಾತುಕತೆಗೆಂದು ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತು ಉರ್ಸುಲಾರನ್ನು ನಡುಮನೆಗೆ ಕರೆದಾಗ ತಮ್ಮ ಮಗ ಹೇಳಿದ್ದು ಕೇಳಿ ಕಲ್ಲಿನಂತಾದರು. ಹೊಸೆ ಅರ್ಕಾದಿಯೋ ಬ್ಯುಂದಿಯಾನಿಂದ ಹುಡುಗಿಯ ಹೆಸರನ್ನು ಕೇಳಿ ಕೆಂಪಾಗಿ, “ಪ್ರೀತಿ ಅನ್ನೋದು ಒಂದು ರೋಗ” ಎಂದು ಕೂಗಾಡಿ, “ಊರಿನಲ್ಲಿ ಎಷ್ಟೊಂದು ಚೆಂದದ ಹುಡುಗಿಯರು ಇರೋವಾಗ ನನ್ನ ಶತ್ರು ಮಗಳನ್ನೇ ಮದುವೆಯಾಗಬೇಕು ಅಂತ ನಿನಗನ್ನಿಸಿದೆ” ಎಂದ. ಆದರೆ ಉರ್ಸುಲಾಗೆ ಒಪ್ಪಿಗೆ ಆಯಿತು. ಅವಳು ಮೊಸ್ಕೋತೆ ಅಕ್ಕತಂಗಿಯರನ್ನು ಅವರ ನಾಜೂಕು, ಒಳ್ಳೆಯ ನಡತೆ, ನಾಚಿಕೆ, ರೂಪ, ಕೆಲಸದ ಸಾಮರ್ಥ್ಯ ಇವುಗಳಿಗಾಗಿ ಮೆಚ್ಚಿಕೊಂಡಳು. ಅಲ್ಲದೆ ತನ್ನ ಮಗನ ಬಗ್ಗೆ ಹೆಮ್ಮೆ ಆಯಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾ ತನ್ನ ಹೆಂಡತಿಯ ಉತ್ಸಾಹಕ್ಕೆ ವಶನಾಗಿ ಒಂದು ಷರತ್ತನ್ನು ಹಾಕಿದ. ತನಗೆ ಬೇಕಾಗಿದ್ದ ರೆಬೇಕಳನ್ನು ಪಿಯತ್ರೋ ಕೆಪ್ಸಿ ಮದುವೆಯಾಗಬೇಕು ಮತ್ತು ಅಮರಾಂತಳಿಗೆ ಆದ ನಿರಾಶೆಯ ಉಪಶಮನಕ್ಕೆ ಅವಳನ್ನು ಉರ್ಸುಲಾ ಆ ಪ್ರದೇಶದ ರಾಜಧಾನಿಗೆ ಸುತ್ತಾಡಲು ಅವಳಿಗೆ ಸಮಯವಾದಾಗ ಕರೆದುಕೊಂಡು ಹೋಗಬೇಕು. ಈ ವಿಷಯದ ಬಗ್ಗೆ ತಿಳಿದ ಕೂಡಲೇ ರೆಬೇಕಳ ಆರೋಗ್ಯ ಸುಧಾರಿಸಿತು. ಅವಳು ತನ್ನ ಪ್ರಿಯಕರನಿಗೆ ಯಾವ ಮಧ್ಯವರ್ತಿಗಳ ಸಹಾಯವೂ ಇಲ್ಲದೇ ತಾನು ತನ್ನ ತಂದೆತಾಯಿಯರ ಅಭಿಪ್ರಾಯವನ್ನು ಒಪ್ಪಿಕೊಂಡಿರುವುದಾಗಿ ಹೇಳಿ ಪತ್ರ ಬರೆದು ಅಂಚೆಗೆ ಹಾಕಿದಳು. ಅಮರಾಂತ ಈ ನಿರ್ಧಾರವನ್ನು ಒಪ್ಪಿಕೊಂಡಿರುವಂತೆ ನಟಿಸಿದಳು ಮತ್ತು ಸ್ವಲ್ಪ ಸ್ವಲ್ಪವಾಗಿ ಜ್ವರದಿಂದ ಸುಧಾರಣೆ ಹೊಂದಿದಳು. ಆದರೆ ರೆಬೇಕ ತನ್ನ ಹೆಣದ ಮೇಲೆ ಮಾತ್ರ ಮದುವೆಯಾಗುತ್ತಾಳೆ ಎಂದು ತನಗೆ ತಾನೇ ಹೇಳಿಕೊಂಡಳು. +ಅನಂತರದ ಶನಿವಾರ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಪ್ಪು ಸೂಟು, ಮಿರುಗುವ ಕಾಲರ್, ಮತ್ತು ಮೊದಲ ಬಾರಿಗೆ ರಾತ್ರಿ ಪಾರ್ಟಿಯಲ್ಲಿ ಹಾಕಿಕೊಂಡ ಜಿಂಕೆ ಚರ್ಮದ ಶೂಗಳನ್ನು ತೊಟ್ಟು ರೆಮಿದಿಯೋಸ್ ಮೊಸ್ಕೋತೆಯನ್ನು ಕೇಳಲು ಅವರ ಮನೆಗೆ ಹೋದ. ಏಕಕಾಲಕ್ಕೆ ಉಂಟಾದ ಸಂತೋಷ ಮತ್ತು ಆತಂಕದಿಂದ ಮ್ಯಾಜಿಸ್ಟ್ರೇಟ್ ಮತ್ತು ಅವನ ಹೆಂಡತಿ ಅವರನ್ನು ಬರಮಾಡಿಕೊಂಡರು. ಏಕೆಂದರೆ ಅವರಿಗೆ ಅವನ ಅನೀರಿಕ್ಷಿತ ಆಗಮನದ ಕಾರಣ ಗೊತ್ತಿರಲಿಲ್ಲ. ಅವರಿಗೆ ಅವನು ವಧುವಿನ ಹೆಸರಿನ ಗೊಂದಲದಲ್ಲಿ ಸಿಲುಕಿರಬಹುದು ಎನ್ನಿಸಿತು. ಈ ತಪ್ಪನ್ನು ನಿವಾರಿಸುವ ಉದ್ದೇಶದಿಂದ ಇನ್ನೂ ಮಲಗಿದ್ದ ರೆಮಿದಿಯೋಸ್‌ಳನ್ನು ಎಬ್ಬಿಸಿ ಅವಳನ್ನು ಹಜಾರಕ್ಕೆ ಎತ್ತಿಕೊಂಡು ಬಂದಿದ್ದಳು. ಅವರು ಅವಳನ್ನು ಮದುವೆ ಆಗಬೇಕೆಂದು ನಿರ್ಧಾರ ಮಾಡಿರುವುದು ನಿಜವೇ ಎಂದು ಕೇಳಿದಾಗ, ಅವಳು ಹೂಂಕರಿಸಿ ತನಗೆ ಅವರು ನಿದ್ದೆ ಮಾಡಲು ಮಾತ್ರ ಬಿಟ್ಟರೆ ಸಾಕು ಎಂದೆನಿಸಿತ್ತು. ಅವರ ಸಂಕಟವನ್ನು ಅರ್ಥಮಾಡಿಕೊಂಡ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಅವ್ರೇಲಿಯಾನೋನ ಸಂಗಡ ವಿಷಯವನ್ನು ಸ್ವಷ್ಟಪಡಿಸಿಕೊಳ್ಳಲು ಹೋದ. ಅವನು ವಾಪಸು ಬಂದಾಗ ಮೊಸ್ಕೋತೆಯ ಮನೆಯವರು ಬಟ್ಟೆ ಬದಲಾಯಿಸಿ ಪೀಠೋಪಕರಣಗಳನ್ನು ಸರಿಯಾಗಿಟ್ಟು ಮತ್ತು ವಾಜ್‌ಗಳಲ್ಲಿ ಹೂಗಳನ್ನಿಟ್ಟು ಹಿರಿಯ ಹೆಣ್ಣು ಮಕ್ಕಳ ಜೊತೆ ಕಾದಿದ್ದರು. ಇಡೀ ಸಂದಭ ಉಂಟುಮಾಡಿದ ಮುಜುಗರ ಮತ್ತು ಬಿಗಿಯಾದ ಕಾಲರ್ ಕೊಡುತ್ತಿದ್ದ ತೊಂದರೆಗಳ ನಡುವೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾವು ಪ್ರಸ್ತಾಪ ಮಾಡುತ್ತಿರುವುದು ರೆಮಿದಿಯೋಸ್‌ಳ ಬಗ್ಗೆ ಎನ್ನುವುದನ್ನು ಸ್ಥಿರಪಡಿಸಿದ. “ಇದಕ್ಕೆ ಏನೂ ಅರ್ಥವಿಲ್ಲ” ಎಂದ ದಾನ್ ಅಪೋಲಿನರ್ ಮೊಸ್ಕೋತೆ, “ನಮಗೆ ಇನ್ನೂ ಆರು ಜನ ಮದುವೆ ಆಗಬೇಕಾದ ಹೆಣ್ಣುಮಕ್ಕಳಿದಾರೆ. ಜಂಟಲ್‌ಮನ್ ಆದ ಮತ್ತು ಕಷ್ಟಪಟ್ಟು ಕೆಲಸ ಮಾಡುವ ನಿಮ್ಮ ಮಗನನ್ನು ಮದುವೆ ಆಗಲು ಅವರಲ್ಲಿ ಯಾರೇ ಆದರೂ ಒಪ್ತಾರೆ. ಆದರೆ ಅವ್ರೇಲಿಯಾನೋ ಇನ್ನೂ ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವ ರೆಮಿದಿಯೋಸ್‌ಳನ್ನು ಇಷ್ಟಪಟ್ಟಿದಾನೆ” ಎಂದ. ವಿಚಿತ್ರವಾದ ರೆಪ್ಪೆಗಳಿದ್ದ ಅವನ ಹೆಂಡತಿ ಅವನ ತಪ್ಪಿಗೆ ಛೀಮಾರಿ ಹಾಕಿದಳು. ಅವರು ಹಣ್ಣಿನ ಹೋಳುಗಳನ್ನು ತಿಂದು ಮುಗಿಸುವ ಹೊತ್ತಿಗೆ ಅವ್ರೇಲಿಯಾನೋನ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಶ್ರೀಮತಿ ಮೊಸ್ಕೋತೆ ಉರ್ಸುಲಾಳ ಸಂಗಡ ಪ್ರತ್ಯೇಕವಾಗಿ ಮಾತನಾಡಬೇಕೆಂದು ಬಯಸಿದಳು. ಗಂಡಸರ ವಿಷಯದಲ್ಲಿ ತನ್ನನ್ನು ಸಿಕ್ಕಿ ಹಾಕಿಸುತ್ತಿದ್ದಾರೆಂದು ವಿರೋಧ ವ್ಯಕ್ತಪಡಿಸುತ್ತಿದ್ದ ಉರ್ಸುಲಾ ಏನೆಂದು ತಿಳಿಯದೆ ಮಾರನೆಯ ದಿನ ಅವರ ಮನೆಗೆ ಹೋದಳು. ಅರ್ಧ ಗಂಟೆಯಾದ ಮೇಲೆ ವಾಪಸು ಬಂದ ಅವಳು ರೆಮಿದಿಯೋಸ್ ಇನ್ನು ದೊಡ್ಡವಳಾಗಿಲ್ಲ ಎಂಬ ಸುದ್ದಿಯನ್ನು ತಂದಳು. ಅವ್ರೇಲಿಯಾನೋ ಅದನ್ನು ಗಂಭೀರವಾದ ಅಡಚಣೆ ಎಂದು ಪರಿಗಣಿಸಲಿಲ್ಲ. ಅವನು ಸಾಕಷ್ಟು ಕಾದಿದ್ದ ಅಲ್ಲದೆ ತನ್ನ ವಧು ಸಿದ್ಧವಾಗುವವರೆಗೂ ಕಾಯಲು ಸಿದ್ಧನಿದ್ದ. +ಮೆಲ್‌ಕಿಯಾದೆಸ್ ಸತ್ತದ್ದು ಹೊಸದಾಗಿ ಉಂಟಾದ ಅವರ ಸಾಮರಸ್ಯಕ್ಕೆ ಅಡ್ಡಿ ಉಂಟುಮಾಡಿತ್ತು. ಅವರಿಗೆ ಅಂಥ ಘಟನೆಯೊಂದರ ನಿರೀಕ್ಷೆ ಇತ್ತು. ಆದರೆ ಸಂದರ್ಭದ ನಿರೀಕ್ಷೆ ಇರಲಿಲ್ಲ. ಅವನು ವಾಪಸು ಬಂದ ಕೆಲವು ತಿಂಗಳುಗಳಾದ ಮೇಲೆ ಅವನ ಮುದಿತನದ ವೇಗ ಎಷ್ಟು ಹೆಚ್ಚಾಗುತ್ತಿತ್ತು ಎಂದರೆ ಅವನನ್ನು ಕೆಲಸಕ್ಕೆ ಬಾರದವನಂತೆ, ಬೆಡ್‌ರೂಮಿನಲ್ಲಿ ತಿರುಗಾಡುವ ನೆರಳುಗಳಂತೆ, ಕಾಲು ಎಳೆದುಕೊಂಡು ಹಳೆಯ ಒಳ್ಳೆಯ ದಿನಗಳನ್ನು ನೆನಪಿಸಿಕೊಂಡು ಗಟ್ಟಿಯಾಗಿ ಹೇಳಿಕೊಳ್ಳುತ್ತ ಮತ್ತು ಎಂದಾದರೊಂದು ಒಂದು ದಿನ ಹಾಸಿಗೆಯಲ್ಲಿ ಸಾಯುವ ತನಕ ಯಾರೂ ಯೋಚನೆ ಮಾಡದ, ನೆನಪಿಸಿಕೊಳ್ಳದ ತಾತ ಮುತ್ತಾತಂದಿರಂತೆ ಪರಿಗಣಿಸಿದರು. ಪ್ರಾರಂಭದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಛಾಯಾಚಿತ್ರ ತೆಗೆಯುವ ಉಪಕರಣದ ನಾವೀನ್ಯತೆ ಮತ್ತು ನಾಸ್ತರ್ಡಾಮಸ್‌ನ ಭವಿಷ್ಯ ವಾಣಿಯ ಬಗ್ಗೆ ಉತ್ಸಾಹಗೊಂಡು ಅವನ ಕೆಲಸದಲ್ಲಿ ಸಹಾಯ ಮಾಡಿದ್ದ. ಆದರೆ ಸ್ವಲ್ಪ ಸ್ವಲ್ಪವಾಗಿ ಅವನ ಜೊತೆ ಮಾತುಕತೆ ಕಷ್ಟವಾಗುತ್ತಿದ್ದಂತೆ ಅವರನ್ನು ಏಕಾಂತಕ್ಕೆ ಬಿಟ್ಟು ಬಿಟ್ಟ. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಕಿವಿ ಕೇಳುತ್ತಿರಲಿಲ್ಲ. ಅಲ್ಲದೆ ತಾನು ಯಾವುದೋ ಕಾಲದ ಮನುಕುಲದವರ ಜೊತೆ ಮಾತನಾಡುತ್ತಿದ್ದೇನೆ ಎಂಬಂತೆ ಎದುರಿಗಿದ್ದವರ ಜೊತೆ ಮಾತನಾಡಿ ಅವರಲ್ಲಿ ಗೊಂದಲ ಉಂಟುಮಾಡುತ್ತಿದ್ದ. ಕೇಳಿದ ಪ್ರಶ್ನೆಗಳಿಗೆ ಹಲವು ಭಾಷೆಗಳ ಮಿಶ್ರಣದಲ್ಲಿ ಉತ್ತರಿಸುತ್ತಿದ. ಅವನು ಜನರ ಮಧ್ಯೆ ನಡೆಯುತ್ತಿದ್ದರೂ ಕೂಡ ಗಾಳಿಯಲ್ಲಿ ತಡಕಾಡುತ್ತಾ, ಸಾಮಾನುಗಳಿಗೆ ಎಡವದೆ ಸಲೀಸಾಗಿ ನಡೆದಾಡುತ್ತ, ಯಾವುದೋ ಸ್ವಭಾವಜನ್ಯವಾದ ಮುನ್ನರಿವುಳ್ಳ ಶಕ್ತಿ ಇದ್ದವನ ಹಾಗೆ ತೋರುತ್ತಿದ್ದ. ಅದೊಂದು ರಾತ್ರಿ ಹಾಸಿಗೆಯ ಪಕ್ಕದಲ್ಲಿ ಗ್ಲಾಸಿನ ನೀರಿನಲ್ಲಿ ಇಟ್ಟಿದ್ದ ಕಟ್ಟಿಸಿಕೊಂಡ ಹಲ್ಲನ್ನು ಹಾಕಿಕೊಳ್ಳಲು ಮರೆತ ಮತ್ತು ಅನಂತರ ಅವನು ಅದನ್ನು ಎಂದೂ ಹಾಕಿಕೊಳ್ಳಲಿಲ್ಲ. ಉರ್ಸುಲಾ ಮನೆಯನ್ನು ದೊಡ್ಡದಾಗಿ ಮಾಡಿದಾಗ ಅವನಿಗಾಗಿ ಅವ್ರೇಲಿಯಾನೋನ ವರ್ಕ್‌ಶಾಪ್‌ನ ಪಕ್ಕದಲ್ಲಿ ರೂಮೊಂದನ್ನು ಕಟ್ಟಿಸಿದಳು. ಅದು ಮನೆಯ ಗದ್ದಲದಿಂದ ದೂರವಾಗಿದ್ದು ಚೆನ್ನಾಗಿ ಬೆಳಕು ಬೀಳುವಂತಿತ್ತು. ಅದರಲ್ಲಿದ್ದ ಧೂಳಿನಿಂದ ಕೂಡಿ ಗೆದ್ದಲು ಹತ್ತಿದ್ದ ಪುಸ್ತಕಗಳನ್ನು ಯಾರಿಗೂ ತಿಳಿಯದನ್ನು ಬರೆದ ಕಾಗದಗಳ ಕಟ್ಟನ್ನು ಅವಳೇ ಒಪ್ಪಮಾಡಿದಳು. ಅಲ್ಲಿದ್ದ ಕಟ್ಟಿಸಿದ ಹಲ್ಲು ಇಟ್ಟಿದ್ದ ನೀರಿನ ಗ್ಲಾಸ್‌ನಲ್ಲಿ ಹುಟ್ಟಿದ ಯಾವುದೋ ಗಿಡದ ಹಳದಿ ಹೂಗಳಿದ್ದವು. ಹೊಸ ಜಾಗ ಮೆಲ್‌ಕಿಯಾದೆಸ್‌ಗೆ ಪ್ರಿಯವಾಗಿತ್ತು. ಏಕೆಂದರೆ ಅವನು ಯಾರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ, ಡೈನಿಂಗ್ ರೂಂನಲ್ಲಿಯೂ ಸಹ. ಅವನು ಅವ್ರೇಲಿಯಾನೋನ ವರ್ಕ್‌ಶಾಪ್‌ಗೆ ಮಾತ್ರ ಹೋಗುತ್ತಿದ್ದ. ಅಲ್ಲೆ ಗಂಟೆಗಟ್ಟಲೆ ಯಾವುದೋ ನಿಗೂಢವಾದದ್ದನ್ನು ತಾನು ತಂದುಕೊಂಡಿದ್ದ ಮೆದುವಾದ ಚರ್ಮದ ಹಾಳೆಯ ಮೇಲೆ ಬರೆಯುತ್ತಿದ್ದ. ಅಲ್ಲಿ ದಿನಕ್ಕೆ ಎರಡು ಸಲ ವಿಸಿಟಾಸಿಯೋನ್ ತಂದು ಕೊಟ್ಟ ಊಟ ಮಾಡುತ್ತಿದ್ದ ಮತ್ತು ಕೊನೆಯ ದಿನಗಳಲ್ಲಿ ಹಸಿವು ಇಂಗಿಹೋಗಿ ಕೇವಲ ತರಕಾರಿಯನ್ನು ತಿನ್ನುತ್ತಿದ್ದ. ಅವನ ಚರ್ಮದ ಮೇಲೆ ಉಪಯೋಗಿಸದೆ ಬಿಟ್ಟ ಹಳೆಯ ಕಾಲದ ವಸ್ತುವಿನ ಮೇಲೆ ಮೆತ್ತಿಕೊಳ್ಳುವ ಹಾಗೆ ಲೇಪವೊಂದು ಉಂಟಾಯಿತು. ಮತ್ತು ಅವನ ಉಸಿರಾಟ ಮಲಗಿದ ಪ್ರಾಣಿಯ ವಾಸನೆಯಂತೆ ಕಂಡಿತ್ತು. ಅವ್ರೇಲಿಯಾನೋ ಕವನ ಬರೆಯುವ ತನ್ಮಯತೆಯಲ್ಲಿ ಮೆಲ್‌ಕಿಯಾದೆಸ್‌ನನ್ನು ಮರೆತ. ಆದರೆ ಒಂದು ಸಂದರ್ಭದಲ್ಲಿ ಮೆಲ್‌ಕಿಯಾದೆಸ್ ತನಗೆ ತಾನೇ ಹೇಳಿಕೊಳ್ಳುತ್ತಿದುದ್ದರ ಅರ್ಥ ತನಗೆ ಆಯಿತು ಎಂದುಕೊಂಡ. ಅವನು ಅದರ ಬಗ್ಗೆ ಗಮನಕೊಟ್ಟ. ಆದರೆ ವಾಸ್ತವವಾಗಿ ಆ ಕಬ್ಬಿಣದ ಕಡಲೆಯಂತಿದ್ದ ಪಂಕ್ತಿಗಳಲ್ಲಿ ಅವನಿಗೆ ಎದ್ದು ಕಾಣುತ್ತಿದ್ದ ಪದ ಎಂದರೆ ಇಕ್ವಿನೋ, ಇಕ್ವಿನೋ, ಇಕ್ವಿನೋ ಹಾಗೂ ಅಲೆಗ್ಜಾಂಡರ್ ವಾನ್ ಹೊಂಬೊಲ್ಡ್ ಎಂಬ ಹೆಸರು. ಅವ್ರೇಲಿಯಾನೋಗೆ ಅವನ ಬೆಳ್ಳಿಗೆ ಸಂಬಂಧಿತ ಕೆಲಸದಲ್ಲಿ ಅರ್ಕಾದಿಯೋ ಸಹಾಯ ಮಾಡಲು ತೊಡಗಿದಾಗ ಕೊಂಚ ಹತ್ತಿರದವನಾದ. ಮೆಲ್‌ಕಿಯಾದೆಸ್ ಅವನು ಪಡುತ್ತಿದ್ದ ಶ್ರಮದ ಮಧ್ಯೆ ಮಾತನಾಡಿಸಲು ಆಗಾಗ ಸ್ಪ್ಯಾನಿಷ್ ಪದಗಳನ್ನು ಉಪಯೋಗಿಸುತ್ತಿದ್ದ. ಆದರೆ ಅವು ವಾಸ್ತವಕ್ಕೆ ದೂರವಾಗಿದ್ದವು. ಅದೊಂದು ದಿನ ಅವನು ಭಾವಾತಿರೇಕಕ್ಕೆ ಒಳಗಾz. ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಿದ್ಧರಾದ ತಂಡದ ಎದುರು ನಿಂತಾಗ ಅವನಿಗೆ ಅರ್ಥವಾಗದಿದ್ದ, ಮೆಲ್‌ಕಿಯಾದೆಸ್ ಗಟ್ಟಿಯಾಗಿ ಹೇಳಿದ, ಅನೇಕ ಪುಟಗಳಲ್ಲಿದ್ದ, ಲಯಬದ್ಧವಾದ ಹಾಡುಗಳನ್ನು ತಾನು ನಡುಗುತ್ತ ಕೇಳಿಸಿಕೊಂಡಿದ್ದು ನೆನಪಾಗುತ್ತದೆ.. ಅನಂತರ ಬಹಳ ದಿನಗಳಾದ ಮೇಲೆ ನಸುನಕ್ಕ ಅವನು ಸ್ವಾನಿಷ್‌ನಲ್ಲಿ ಹೇಳಿದ : “ನಾನು ಸತ್ತ ಮೇಲೆ ನನ್ನ ರೂಮಿನಲ್ಲಿ ಮೂರು ದಿನಗಳ ತನಕ ಪಾದರಸವನ್ನು ಹೊತ್ತಿಸಿರಿ.” ಅರ್ಕಾದಿಯೋ ಅದನ್ನು ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಹೇಳಿದ ಮೇಲೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಂದ ಹೆಚ್ಚಿನ ವಿವರವನ್ನು ಪಡೆಯಲು ನೋಡಿದ. ಆದರೆ ಅವನಿಗೆ ಸಿಕ್ಕಿದ್ದು ಒಂದೇ ಒಂದು ಉತ್ತರ : “ನಾನು ಅಮರತ್ವವನ್ನು ಕಂಡುಕೊಂಡಿದ್ದೇನೆ.” ಮೆಲ್‌ಕಿಯಾದೆಸ್‌ನ ಉಸಿರಾಟದಲ್ಲಿ ವಾಸನೆ ಪ್ರಾರಂಭವಾದ ಮೇಲೆ ಅರ್ಕಾದಿಯೋ ಗುರುವಾರದ ಬೆಳಿಗ್ಗೆ ಸ್ನಾನ ಮಾಡಿಸಲು ಅವನನ್ನು ನದಿಗೆ ಕರೆದುಕೊಂಡು ಹೋಗುತ್ತಿದ್ದ. ಅದರಿಂದ ಅವನಿಗೆ ಕೊಂಚ ಉತ್ತಮವಾದ ಹಾಗೆ ಕಂಡಿತು. ಅವನು ಬಟ್ಟೆ ಕಳಚಿ ಹುಡುಗರ ಜೊತೆ ನೀರಿಗೆ ಇಳಿಯುತ್ತಿದ್ದ ಮತ್ತು ಅವನ ನಿಗೂಢವಾದ ಗ್ರಹಣ ಶಕ್ತಿ ಆಳವಾದ ಮತ್ತು ಅಪಾಯದ ಸ್ಥಳಗಳಿಂದ ದೂರವಿರುವಂತೆ ಮಾಡುತ್ತಿತ್ತು. ಅದೊಂದು ಸಲ ಅವನು, “ನಾವು ನೀರಿನಿಂದಲೇ ಬಂದದ್ದು” ಎಂದ. ಅದೊಂದು ದಿನ ರಾತ್ರಿ ಅವನು ಬಹಳ ಕಷ್ಟಪಟ್ಟು ಪಿಯಾನೋವನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದದ್ದನ್ನು ಬಿಟ್ಟರೆ ಯಾರೂ ಅವನನ್ನು ನೋಡಿ ಬಹಳ ದಿನಗಳಾಗಿತ್ತು. ಅವನು ಅರ್ಕಾದಿಯೋ ಜೊತೆ ನದಿಗೆ ಹೋಗುತ್ತಿದ್ದಾಗ ಕಂಕುಳಲ್ಲಿ ಸೋರೆ ಬುರುಡೆ ಮತ್ತು ಟವಲಿನಲ್ಲಿ ತಾಳೆ ಎಣ್ಣೆಯ ಸೋಪನ್ನು ಇಟ್ಟುಕೊಂಡು ಹೋಗುತ್ತಿದ್ದ. ಅದೊಂದು ಗುರುವಾರ ಅವನನ್ನು ಕರೆಯುವುದಕ್ಕೆ ಮುಂಚೆ ಅವ್ರೇಲಿಯಾನೋಗೆ ಅವನು ಹೇಳಿದ್ದು ಕೇಳಿಸಿತ್ತು. “ನಾನು ಸಿಂಗಪೂರ್‌ನ ಮರಳಿನ ರಾಶಿಯಲ್ಲಿ ಜ್ವರದಿಂದ ಸತ್ತಿದ್ದೇನೆ”. ಆ ದಿನ ಅವನು ನೀರಿನೊಳಗೆ ಸುಳಿ ಇರುವ ಕಡೆಗೆ ಹೋದ ಮತ್ತು ಮಾರನೆಯ ದಿನ ಕೆಲವು ಮೈಲಿಗಳ ಆಚೆ ನೀರಿನ ತಿರುವಿನಲ್ಲಿ ಕಾಣುವ ತನಕ ಯಾರಿಗೂ ಸಿಕ್ಕಿರಲಿಲ್ಲ. ಅವನ ಹೊಟ್ಟೆಯ ಮೇಲೆ ರಣಹದ್ದೊಂದು ಕುಳಿತಿತ್ತು. ಉರ್ಸುಲಾ ತನ್ನ ತಂದೆ ಸತ್ತಿದ್ದಕ್ಕಿಂತ ಹೆಚ್ಚಾಗಿ ದುಃಖಿತಳಾದಳು. ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನನ್ನು ಹೂಳುವುದನ್ನು ವಿರೋಧಿಸಿದ. ಅವನು, “ಅವನು ಅಮರ. ಅಲ್ಲದೆ ತನ್ನ ಪುನರುತ್ಥಾನದ ಸೂತ್ರವನ್ನು ತಾನೇ ಹೇಳಿದ್ದಾನೆ” ಎಂದ. ಅವನು ಮರೆತು ಹೋದ ವಾಟರ್ ಪೈಪನ್ನು ತಂದ ಮತ್ತು ಒಂದು ಕೆಟಲ್ ಒಳಗೆ ಪಾದರಸವನ್ನು ದೇಹದ ಪಕ್ಕದಲ್ಲಿ ಕುದಿಯಲು ಇಟ್ಟ. ಅದು ಕೊಂಚ ಕೊಂಚವಾಗಿ ನೀಲಿ ಗುಳ್ಳೆಗಳನ್ನು ಎಬ್ಬಿಸುತ್ತಾ ತುಂಬಿಕೊಂಡಿತು. ಮುಳುಗಿ ಸತ್ತ ಮನುಷ್ಯನೊಬ್ಬನನ್ನು ಹೂಳದಿದ್ದರೆ ಅದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದನ್ನು ನೆನಪಿಸಲು ದಾನ್ ಅಪೋಲಿನರ್ ಮೊಸ್ಕೋತೆ ಪ್ರಯತ್ನಪಟ್ಟ. ಆದರೆ, “ಬೇಕಿಲ್ಲ ಯಾಕೆ ಅಂದ್ರೆ ಅವನು ಬದುಕಿದ್ದಾನೆ” ಎನ್ನುವುದು ಹೊಸೆ ಅರ್ಕಾದಿಯೋನ ಉತ್ತರವಾಗಿತ್ತು. ಅವನು ಹಚ್ಚಿಟ್ಟಿದ್ದ ಪಾದರಸ ಎಪ್ಪತ್ತೆರಡು ಗಂಟೆಗಳ ಕಾಲ ಉರಿದು ಅದರ ಹೊಗೆ ತುಂಬಿ ದೇಹ ಉಬ್ಬಲು ಪ್ರಾರಂಭಿಸಿ ಮನೆಯೆಲ್ಲ ಮಾರಕ ಹನಿಗಳಿಂದ ತುಂಬಿ ಹೋಗಿತ್ತು. ಆಗ ಮಾತ್ರ ಅವನು ಹೂಳುವುದಕ್ಕೆ ಅನುಮತಿ ಕೊಟ್ಟ. ಆದರೆ ಸಾಮಾನ್ಯ ರೀತಿಯಲ್ಲಲ್ಲ. ಮಕೋಂದೋಗೆ ಉಪಕಾರ ಮಾಡಿದವರಿಗೆ ಕಾಯ್ದಿಟ್ಟ ರೀತಿಯಲ್ಲಿ. ಅದು ಆ ಊರಿನಲ್ಲಿ ನಡೆದ ಮತ್ತು ಅತ್ಯಂತ ಹೆಚ್ಚು ಜನರು ಸೇರಿದ ಮೊದಲನೆ ಹೂಳುವಿಕೆಯಾಗಿತ್ತು. ಒಂದು ಶತಮಾನದ ನಂತರ ಮಹಾನ್ ತಾಯಿಯ ಅಂತಿಮ ಯಾತ್ರೆ ಅದನ್ನು ಮೀರಿಸಿತ್ತು. ಮುಂದೆ ಸ್ಮಶಾನವಾಗಲಿದ್ದ ಸ್ಥಳದ ಮಧ್ಯದಲ್ಲಿ ಅವನನ್ನು ಹೂಳಿದರು ಮತ್ತು ಅವನ ಬಗ್ಗೆ ಗೊತ್ತಿದ್ದ ಒಂದೇ ಒಂದು ಸಂಗತಿಯಾದ ಮೆಲ್‌ಕಿಯಾದೆಸ್ ಎಂಬ ಹೆಸರನ್ನು ಕಲ್ಲಿನ ಮೇಲೆ ಬರೆದರು. ಅವನಿಗಾಗಿ ಒಂಬತ್ತು ದಿನಗಳ ಜಾಗರಣೆ ಮಾಡಿದರು. ಇದಕ್ಕಾಗಿ ಜನರು ಸೇರಿ ಕಾಫಿ ಕುಡಿಯುವ, ಜೋಕುಗಳನ್ನು ಹೇಳುವ ಮತ್ತು ಇಸ್ಪೀಟು ಆಡುವ ಗದ್ದಲದಲ್ಲಿ ಅಮರಾಂತ ಪಿಯತ್ರೋ ಕ್ರೆಪ್ಸಿಗೆ ತನ್ನ ಪ್ರೇಮದ ಬಗ್ಗೆ ತಿಳಿಸಿ ಹೇಳುವ ಅವಕಾಶ ಸಿಕ್ಕಿತು. ಆದರೆ ಅವನು ಕೆಲವೇ ವಾರಗಳ ಹಿಂದೆ ರೆಬೇಕಳಿಗೆ ಕೊಟ್ಟ ವಾಗ್ದಾನದ ವಿಧಿಗಳನ್ನು ಪೂರೈಸಿದ್ದ. ಅರಬ್ಬರು ಗಿಳಿಗಳಿಗೆ ಬದಲಾಗಿ ಅನೇಕ ವಹಿವಾಟುಗಳನ್ನು ಮಾಡಿದ್ದ ಸ್ಥಳದಲ್ಲಿ ಸಂಗೀತ ವಾದ್ಯಗಳು ಮತ್ತು ಆಟದ ಸಾಮಾನುಗಳ ಅಂಗಡಿಯನ್ನು ತೆರೆದಿದ್ದ. ಜನರು ಅದನ್ನು ಟರ್ಕಿಗಳ ರಸ್ತೆ ಎಂದು ಕರೆದರು. ತಲೆಯ ಮೇಲೆ ಗುಂಗುರುಗಳಿದ್ದ ಚರ್ಮದ ಟೋಪಿಯನ್ನು ಹಾಕಿಕೊಂಡು, ಹೆಂಗಸರು ತಡೆಯಲಾಗದೆ ನಿಟ್ಟುಸಿರು ಬಿಡುವಂತೆ ಮಾಡುತ್ತಿದ್ದ. ಇಟಲಿಯವನು ಅಮರಾಂತಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲದ ಚಂಚಲ ಮನಸ್ಸಿನ ಹುಡುಗಿ ಎಂದು ಭಾವಿಸಿದ. +“ನಂಗೊಬ್ಬ ತಮ್ಮನಿದಾನೆ. ಅವ್ನು ಅಂಗಡೀಲಿ ನಂಗೆ ಸಹಾಯ ಮಾಡ್ತಾನೆ” ಎಂದ. +ಅಮರಾಂತ ಅವಮಾನಿತಗೊಂಡಳು ಮತ್ತು ತಾನು ಸತ್ತು ಬಾಗಿಲಿಗೆ ಅಡ್ಡವಾಗಿ ಬಿದ್ದರೂ ಸರಿಯೇ ತನ್ನ ಸಹೋದರಿಯ ಮದುವೆಯನ್ನು ತಪ್ಪಿಸುವುದಾಗಿ ಪಿಯತ್ರೋ ಕ್ರೆಪ್ಸಿಗೆ ಹೇಳಿದಳು. ಅವಳ ನಾಟಕೀಯ ವರಸೆಯನ್ನು ಕಂಡ ಇಟಲಿಯವ ಅದನ್ನು ರೆಬೇಕಳಿಗೆ ಹೇಳದೇ ಇರಲಾಗಲಿಲ್ಲ. ಇದೇ ಕಾರಣದಿಂದಾಗಿಯೇ ಉರ್ಸುಲಾ ಕೆಲಸದಿಂದಾಗಿ ಮುಂದೆ ಹಾಕುತ್ತಿದ್ದ ಅಮರಾಂತಳ ವಿವಾಹ ಒಂದೇ ವಾರದೊಳಗೆ ಸಿದ್ಧವಾಯಿತು. ಅಮರಾಂತ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಆದರೆ ರೆಬೇಕಳಿಗೆ ವಿದಾಯ ಹೇಳುವಾಗ ಅವಳ ಕಿವಿಯಲ್ಲಿ ಪಿಸುಗುಟ್ಟಿದಳು. +“ನೀನು ತುಂಬಾ ಆಸೆ ಇಟ್ಟುಕೊಳ್ಳಬೇಡ. ಅವರು ನನ್ನನ್ನು ಈ ಭೂಮಿಯ ಕೊನೇ ತನಕ ದಬ್ಬಿದರೂ ನಾನು ಮದುವೇನ ತಪ್ಪಿಸಲಿಕ್ಕೆ ಯಾವುದಾದರೊಂದು ದಾರಿ ಹುಡುಕಿಯೇ ಹುಡುಕ್ತೀನಿ. ಕೊನೆಗೆ ನಿನ್ನನ್ನ ಕೊಲ್ಲಬೇಕಾಗಿ ಬಂದರೂ ಸರಿಯೇ.” +ಉರ್ಸುಲಾ ಮನೆಯಲ್ಲಿ ಇರದಿದ್ದರಿಂದ ಒಂದು ರೂಮಿನಿಂದ ಮತ್ತೊಂದು ರೂಮಿಗೆ ಕಾಣದೆ ನಡೆದಾಡುವ ಮೆಲ್‌ಕಿಯದೆಸ್‌ನಿಂದಾಗಿ ಆ ಮನೆ ತೀರಾ ದೊಡ್ಡದಾಗಿ ಮತ್ತು ಬಿಕೋ ಎನ್ನಿಸುತ್ತಿತ್ತು. ಇಂಡಿಯನ್ ಹೆಂಗಸು ಬೇಕರಿಯನ್ನು ನೋಡಿಕೊಂಡರೆ ರೆಬೇಕ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಸಂಜೆಯಾದೊಡನೆ ಸುಗಂಧವನ್ನು ಹರಡುತ್ತಾ, ಯಾವುದಾದರೊಂದು ಆಟದ ಸಾಮಾನನ್ನು ಉಡುಗೊರೆಯಾಗಿ ತರುತ್ತಿದ್ದ ಪಿಯತ್ರೋ ಕ್ರೆಪ್ಸಿಯನ್ನು ಅವನ ವಧು ನಡುಮನೆಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆಗೆದು ಎದುರುಗೊಳ್ಳುತ್ತಿದ್ದಳು. ಅದೊಂದು ಅನಗತ್ಯವಾದ ಸಂರಕ್ಷಣೆಯಾಗಿತ್ತು. ಏಕೆಂದರೆ ಆ ಇಟಲಿಯವನು ಎಷ್ಟು ಗೌರವಪೂರ್ಣವಾಗಿ ನಡೆದುಕೊಳ್ಳುತ್ತಿದ್ದನೆಂದರೆ ಇನ್ನೊಂದು ವರ್ಷದಲ್ಲಿ ತನ್ನ ಹೆಂಡತಿಯಾಗುವವಳ ಕೈಯನ್ನು ಕೂಡ ಮುಟ್ಟುತ್ತಿರಲಿಲ್ಲ. ಅವನು ತರುತ್ತಿದ್ದ ಸಾಮಾನುಗಳಿಂದ ಮನೆಯೆಲ್ಲಾ ತುಂಬಿ ಹೋಗಿತ್ತು. ಕೀ ಕೊಟ್ಟರೆ ಕುಣಿದಾಡುವ ಹುಡುಗಿ, ಮ್ಯೂಜಿಕ್ ಬಾಕ್ಸ್‌ಗಳು, ನೆಗೆದಾಡುವ ಕೋತಿಗಳು, ಓಡುವ ಕುದುರೆಗಳು, ವಾದ್ಯ ನುಡಿಸುವ ವಿದೂಷಕರು: ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಮೆಲ್‌ಕಿಯಾದೆಸ್‌ನ ಸಾವಿನಿಂದ ಉಂಟಾಗಿದ್ದ ಮಂಕನ್ನು ನಿವಾರಿಸಿ ಅವನನ್ನು ಮತ್ತೆ ರಸವಾದಿಯಾಗುವಂತೆ ಮಾಡಿದ್ದು, ಪಿಯತ್ರೋ ಕ್ರೆಪ್ಸಿ ತಂದ ಯಾಂತ್ರಿಕ ಪ್ರಾಣಿಗಳನ್ನು ಕುರಿತ ಗ್ರಂಥ. ಅವನು ಆ ದಿನಗಳಲ್ಲಿ ಹೊಟ್ಟೆ ಬಿರಿದ ಪ್ರಾಣಿಗಳು ಹಾಗೂ ಪೆಂಡ್ಯುಲಮ್ ಸೂತ್ರವನ್ನು ಉಪಯೋಗಿಸಿ ಉಪಕರಣಗಳನ್ನು ಪರಿಪೂರ್ಣಮಾಡುವ ತನ್ನದೆ ಪ್ರಪಂಚದಲ್ಲಿ ಇರುತ್ತಿದ್ದ. ಅವ್ರೇಲಿಯಾನೋ ರೇಮಿಡಿಯೋಸ್‌ಗೆ ಓದು ಬರಹ ಕಲಿಸುವ ಸಲುವಾಗಿ ವರ್ಕ್‌ಶಾಪನ್ನು ನಿರ್ಲಕ್ಷಿಸಿದ. ಮೊದಮೊದಲು ಚಿಕ್ಕವಳಾದ ಅವಳು ಪ್ರತಿ ದಿನ ಮಧ್ಯಾಹ್ನ ತಾನು ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು, ಬಂದು ಹೋಗುವವರನ್ನು ಎದುರುಗೊಳ್ಳಲು ನಡುಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ, ಆಟದ ಸಾಮಾನುಗಳನ್ನು ಇಷ್ಟಪಡುತ್ತಿದ್ದಳು. ಆದರೆ ಅವ್ರೇಲಿಯಾನೋನ ತಾಳ್ಮೆ ಕೊನೆಗೂ ಗೆದ್ದಿತು. ಅವಳು ಅನೇಕ ಗಂಟೆಗಳ ಕಾಲ ಪದಗಳ ಅರ್ಥವನ್ನು ಅಭ್ಯಾಸ ಮಾಡುತ್ತಾ, ಬಣ್ಣದ ಪೆನ್ಸಿಲ್‌ನಲ್ಲಿ ಅಂಗಳದಲ್ಲಿ ಹಸು ನಿಂತಿರುವ ಮನೆ ಹಾಗೂ ಬೆಟ್ಟಗಳ ಹಿಂದಿನ ಸೂರ್ಯನ ಕಿರಣಗಳನ್ನು ಹಳದಿ ಬಣ್ಣದಲ್ಲಿ ಬರೆಯುತ್ತಾ ಕಾಲ ಕಳೆಯುತ್ತಿದ್ದಳು. +ರೆಬೇಕ ಮಾತ್ರ ಅಮರಾಂತಳ ಬೆದರಿಕೆಯಿಂದ ಅಸುಖಿಯಾಗಿದ್ದಳು. ಅವಳ ಸ್ವಭಾವ, ಧಿಮಾಕು ತಿಳಿದಿತ್ತು. ಅಲ್ಲದೆ ಅವಳ ಸಿಟ್ಟಿನ ಭಯವಿತ್ತು. ಅವಳು ಮನಸ್ಸು ಗಟ್ಟಿಮಾಡಿ ಇಡೀ ರಾತ್ರಿ ಮಣ್ಣು ತಿನ್ನದೇ ಬೆರಳು ಚೀಪುತ್ತಾ ಕಳೆಯುತ್ತಿದ್ದಳು. ಈ ಅನಿಶ್ಚಯಕ್ಕೊಂದು ಪರಿಹಾರ ಹುಡುಕಬೇಕೆಂದು ತನ್ನ ಭವಿಷ್ಯವನ್ನು ಓದಲು ಪಿಲರ್ ಟೆರ್‍ನೆರಾಳನ್ನು ಕರೆದಳು. ಮಾಮೂಲಿನ ಏರುಪೇರುಗಳ ನಂತರ ಪಿಲರ್ ಟೆರ್‍ನೆರಾ ಹೇಳಿದಳು: +“ನಿನ್ನ ತಂದೆತಾಯೀನ ಹೂಳುವ ತನಕ ನಿಂಗೆ ಒಳ್ಳೆಯದಾಗೋದಿಲ್ಲ.” +ರೆಬೇಕ ನಡುಗಿದಳು, ಚಿಕ್ಕ ಹುಡುಗಿಯಾಗಿದ್ದ ತಾನು ಒಂದು ಟ್ರಂಕ್, ತುಯ್ದಾಡುವ ಕುರ್ಚಿ ಮತ್ತು ಒಳಗೆ ಏನಿದೆ ಎಂದು ತಿಳಿಯದ ಮೂಟೆಯನ್ನು ತೆಗೆದುಕೊಂಡು ಈ ಮನೆಗೆ ಬಂದದ್ದನ್ನು ಕನಸಿನಲ್ಲಿ ಎನ್ನುವಂತೆ ನೆನಪಿಸಿಕೊಂಡಳು. ಅವಳಿಗೆ ಕಾಲರ್‌ಗೆ ಬಂಗಾರದ ಗುಂಡಿ ಹಾಕಿಕೊಂಡು ನೆತ್ತಿಯ ಮೇಲೆ ಕೂದಲು ಕಡಿಮೆ ಇದ್ದ ಬಿಳಿಬಟ್ಟೆಯ ಮನುಷ್ಯನೊಬ್ಬ ನೆನಪಾz. ಅಲ್ಲದೆ ಸುಗಂಧಲೇಪಿತ, ವಜ್ರಗಳನ್ನು ಧರಿಸಿದ್ದ ತರುಣಿಯೊಬ್ಬಳು ನೆನಪಾದಳು. ಅವಳ ಜೊತೆಗೆ ಅದರುವ ಕೈಗಳ, ಒಬ್ಬರಿಗೊಬ್ಬರಿಗೆ ಅಜಗಜಾಂತರವಿದ್ದ ಮನುಷ್ಯನೊಬ್ಬ, ಅವಳಿಗೆ ಹೂ ಮುಡಿಸುತ್ತಿದ್ದ ಮತ್ತು ಮಧ್ಯಾಹ್ನದ ಸಮಯದಲ್ಲಿ ಅವಳನ್ನು ಊರಿನ ರಸ್ತೆಗಳಲ್ಲಿ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ. +“ನಂಗೇನೂ ತಿಳಿಯೋದಿಲ್ಲ” ಎಂದಳು. +ಪಿಲರ್ ಟೆರ್‍ನೆರಾ ಏನೂ ಸಂಬಂಧವಿಲ್ಲದಂತೆ, “ನನಗೂ ಅಷ್ಟೆ. ಆದರೆ ಕಾರ್ಡುಗಳು ಹಾಗೆ ಹೇಳುತ್ವೆ” ಎಂದಳು. +ರೆಬೇಕ ಅದರ ನಿಗೂಢತೆಯಲ್ಲಿ ಎಷ್ಟು ಮುಳುಗಿದ್ದಳೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅದನ್ನು ತಿಳಿಸಿದಳು. ಕಾರ್ಡುಗಳ ಭವಿಷ್ಯವನ್ನು ನಂಬಿದ್ದಕ್ಕಾಗಿ ಅವಳನ್ನು ಬೈದ. ಆದರೆ ಅವನು ಮೌನವಾಗಿ ಮನೆಯ ಟ್ರಂಕು, ಕಪಾಟು, ಹಾಸಿಗೆಯ ಕೆಳಗೆ ಮೂಳೆಗಳ ಮೂಟೆಯನ್ನು ಹುಡುಕಿದ. ಮನೆಯನ್ನು ಮತ್ತೆ ಕಟ್ಟಿದ ಮೇಲೆ ತಾನು ಅದನ್ನು ನೋಡದೆ ಇರುವುದನ್ನು ನೆನಪಿಸಿಕೊಂಡ. ಅವನು ಗಾರೆಯವರನ್ನು ಕರೆಸಿ ಗುಟ್ಟಾಗಿ ಕೇಳಿದ. ಅವರಲ್ಲಿ ಒಬ್ಬ ಕೆಲಸಕ್ಕೆ ಅಡ್ಡಿ ಬರುತ್ತಿದ್ದರಿಂದ ಅದನ್ನು ಬೆಡ್‌ರೂಂ ಗೋಡೆಯಲ್ಲಿ ಸೇರಿಸಿ ಕಟ್ಟಿದ್ದಾಗಿ ಹೇಳಿದ. ಕೆಲವು ದಿನ ಗೋಡೆಗೆ ಕಿವಿ ಹಚ್ಚಿ ಕೇಳಿಸಿಕೊಂಡ ಮೇಲೆ ಕ್ಲಿಕ್ ಕ್ಲಿಕ್ ಶಬ್ದ ಕೇಳಿಸಿತು. ಆ ಗೋಡೆಯನ್ನು ಒಡೆದಾಗ ಅಲ್ಲಿ ಮೂಳೆಗಳ ಮೂಟೆ ಇತ್ತು. ಅವರು ಆ ದಿನವೇ ಸ್ಮಶಾನದಲ್ಲಿ ಮೆಲ್‌ಕಿಯಾದೆಸ್‌ನನ್ನು ಹೂಳಿದ ಪಕ್ಕದಲ್ಲಿ ಕಲ್ಲು ನೆಡದೆ ಹೂಳಿದರು. ಆಗ ಪ್ರುಡೆನ್ಸಿಯೋನ ನೆನಪಿನ ಭಾರದಿಂದ ಇದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವನಿಂದ ಮುಕ್ತನಾಗಿ ಮನೆಗೆ ಹಿಂತಿರುಗಿದ. ಆನಂತರ ಅಡುಗೆ ಮನೆಯಲ್ಲಿದ್ದ ರೆಬೇಕಳ ಹಣೆಗೆ ಮುತ್ತಿಟ್ಟ. +“ನಿನ್ನ ತಲೆಯಿಂದ ಕೆಟ್ಟ ಯೋಚನೆಗಳನ್ನು ತೆಗೆದು ಹಾಕು. ಇನ್ಮೇಲೆ ನೀನು ಸುಖವಾಗಿ ಇರ್‍ತೀಯಾ” ಎಂದು ಹೇಳಿದ. +ಅರ್ಕಾದಿಯೋ ಹುಟ್ಟಿದ ಮೇಲೆ ಉರ್ಸುಲಾ ಮನೆಗೆ ಪಿಲರ್ ಟೆರ್‍ನೆರಾಳಿಗೆ ಒಡ್ಡಿದ ನಿರ್ಬಂಧ ರೆಬೇಕಳ ಸ್ನೇಹದಿಂದ ತೆರವಾಯಿತು. ಅವಳು ಯಾವ ಸಮಯದಲ್ಲಾದರೂ ಅವಳ ಮನೆಗೆ ಬರಬಹುದಾಗಿತ್ತು. ಅಲ್ಲಿ ಅವಳು ತುಂಬಾ ಕಷ್ಟಕರ ಕೆಲಸಗಳಲ್ಲಿ ತನ್ನೆಲ್ಲ ಶಕ್ತಿಯನ್ನು ತೊಡಗಿಸಿಕೊಂಡಳು. ಕೆಲವು ಸಲ ಅವಳು ವರ್ಕ್‌ಶಾಪ್‌ಗೆ ಹೋಗಿ ಅರ್ಕಾದಿಯೋಗೆ ಛಾಯಾಚಿತ್ರ ತೆಗೆಯುವ ಉಪಕರಣದ ಪ್ಲೇಟುಗಳನ್ನು ಒಪ್ಪವಾಗಿಡಲು ಸಹಾಯ ಮಾಡುತ್ತಿದ್ದಳು. ಕೊನೆಗೆ ಅದು ಅವನನ್ನು ಗೊಂದಲಕ್ಕೆ ಸಿಲುಕಿಸುತ್ತಿತ್ತು. ಆ ಹೆಂಗಸಿನಿಂದ ಅವನಿಗೆ ಕಿರಿಕಿರಿಯಾಗುತ್ತಿತ್ತು. ಅವಳ ಕಂದು ಮೈ ಬಣ್ಣ, ಹೊಗೆಯ ವಾಸನೆಯ ಉಸಿರಾಟ ಮತ್ತು ವಿಚಿತ್ರ ನಗು ಅವನ ಏಕಾಗ್ರತೆಗೆ ಭಂಗವನ್ನು ಉಂಟುಮಾಡುಡುತ್ತ್ತಿತ್ತು ಮತ್ತು ವಸ್ತುಗಳಿಗೆ ಮೈ ಕೈ ತಾಕಿಸಿಕೊಳ್ಳುತ್ತಿದ್ದ. ಒಮ್ಮೆ ಅವ್ರೇಲಿಯಾನೋ ಅತೀವ ತಾಳ್ಮೆಯಿಂದ ಬೆಳ್ಳಿಯ ಕೆಲಸವನ್ನು ಮಾಡುತ್ತಿದ್ದುದನ್ನು ಮೆಚ್ಚುಗೆಯಿಂದ ಬಗ್ಗಿ ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಆ ಡಾರ್ಕ್ ರೂಂನಲ್ಲಿ ಪಿಲರ್ ಟೆರ್‍ನೆಲಾಳನ್ನು ನೋಡುವುದಕ್ಕೆ ಮುಂಚೆ ಅರ್ಕಾದಿಯೋ ಡಾರ್ಕ್ ರೂಮಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಅವ್ರೇಲಿಯಾನೋ ಕಣ್ಣೆತ್ತಿ ನೋಡಿದಾಗ ಅವಳ ಅಲೋಚನೆ ಬೆಳಂ ಬೆಳಗಿನಂತೆ ಸ್ಪಷ್ಟವಾಗಿ ಕಂಡಿತು. +“ಅದೇನು ಹೇಳು” ಎಂದ. +ಅವಳು ಬೇಸರಗೊಂಡು ತುಟಿ ಕಚ್ಚಿದಳು. +“ನೀನು ಯುದ್ಧದಲ್ಲಿ ಎತ್ತಿದ ಕೈ. ನೀನು ಕಣ್ಣಿಟ್ಟ ಕಡೆ ಗುಂಡು ಹಾಕ್ತಿಯಾ” ಎಂದಳು. +ಅವಳ ಭವಿಷ್ಯದಿಂದ ಅವನಿಗೆ ನಿರಾಳವಾಯಿತು ಅವನು ಏನೂ ಆಗಿಲ್ಲ ಎನ್ನುವಂತೆ ಮತ್ತೆ ಮೊದಲಿನ ಹಾಗೆ ತನ್ನ ಕೆಲಸದಲ್ಲಿ ಮಗ್ನನಾದ. ಅವನ ಧ್ವನಿಯಲ್ಲಿ ದೃಢತೆ ಇತ್ತು. +“ನಾನು ಅವನನ್ನು ಗುರುತು ಹಿಡಿತೀನಿ. ಅವನಿಗೆ ನನ್ನ ಹೆಸರು ಗೊತ್ತು.” +ಹೊಸೆ ಅರ್ಕಾದಿಯೋ ಬ್ಯುಂದಿಯಾಗೆ ಅವನು ಹುಡುಕುತ್ತಿದ್ದದ್ದು ಸಿಕ್ಕಿತ್ತು. ಅವನು ಗಡಿಯಾರವನ್ನು ಕುಣಿಯುವ ಹುಡುಗಿಯ ಬೊಂಬೆಗೆ ತಗುಲಿ ಹಾಕಿದ. ಅದು ನಿಲ್ಲದೆ ಮೂರು ದಿನಗಳ ಕಾಲ ಅದರ ಸಂಗೀತದ ಲಯಕ್ಕೆ ನರ್ತಿಸಿತು. ಅವನು ಮಾಡುತ್ತಿದ್ದ ಇತರೆ ಕೆಲಸಗಳಿಗಿಂತ ಅದನ್ನು ಕಂಡು ಹಿಡಿದಿದ್ದರಿಂದ ಅವನಿಗೆ ಉತ್ಸಾಹ ಉಂಟಾಯಿತು. ಅವನು ಊಟ, ನಿದ್ದೆಯನ್ನು ಬಿಟ್ಟು ಕೇವಲ ರೆಬೇಕಳ ಕಟ್ಟೆಚ್ಚರ ಮಾತ್ರ ಅವನನ್ನು ಸುಧಾರಣೆಯಾಗದಂಥ ಚಿತ್ತ ಭ್ರಮಣೆಯಿಂದ ತಡೆಯಿತು. ಅವನು ಇಡೀ ರಾತ್ರಿ ರೂಮಿನಲ್ಲಿ ತನ್ನಷ್ಟಕ್ಕ್ಕೆ ತಾನು ಮಾತನಾಡಿಕೊಳ್ಳುತ್ತ, ಪೆಂಡ್ಯುಲಂ ಸೂತ್ರವನ್ನು, ಎತ್ತಿನ ಗಾಡಿ, ಕುಂಟೆ ಮತ್ತು ಚಲನೆಯಲ್ಲಿರುವ ಯಾವುದಕ್ಕೇ ಆದರೂ ಅಳವಡಿಸುವುದು ಹೇಗೆಂದು ವಿವರಿಸುತ್ತಿದ್ದ. ಎಳ್ಳಷ್ಟೂ ನಿದ್ದೆ ಇಲ್ಲದೆ ಜ್ವರದಿಂದ ಎಷ್ಟು ಸುಸ್ತಾಗಿದ್ದನೆಂದರೆ ಅದೊಂದು ಬೆಳಿಗ್ಗೆ ತನ್ನ ಬೆಡ್‌ರೂಮಿಗೆ ಬಂದ ಬಿಳಿಯ ಗಡ್ಡದಾತನನ್ನು ಗುರುತು ಹಿಡಿಯಲಿಲ್ಲ. ಅವನು ಪ್ರುಡೆನ್ಸಿಯೋ ಆಗಿದ್ದ. ಅವನು ಸತ್ತವರಿಗೂ ಕೂಡ ವಯಸ್ಸಾಗುತ್ತದೆಂದು ತಿಳಿದು ಹಳೆಯ ನೆನಪಿನಿಂದ ಬೆದರಿದ. “ಪ್ರುಡೆನ್ಸಿಯೋ ನೀನು ಬಹಳ ದೂರದಿಂದ ಬಂದಿದೀ” ಎಂದ. ಅವನು ಸತ್ತು ಬಹಳ ವರ್ಷಗಳಾದ ಮೇಲೆ ಬದುಕಿದ್ದವರ ಮೇಲಿನ ಅಪೇಕ್ಷೆ ಎಷ್ಟು ತೀವ್ರವಾಗಿತ್ತೆಂದರೆ, ಇನ್ನೊಬ್ಬರೊಡನೆ ಒಡನಾಟದ ಅಗತ್ಯ ಎಷ್ಟಿತ್ತೆಂದರೆ, ಇತರೆ ಸತ್ತವರ ಸಾಮೀಪ್ಯ ಸಾವಿನೊಡನೆ ಎಷ್ಟು ಭಯಾನಕವಾಗಿತ್ತೆಂದರೆ, ಪ್ರುಡೆನ್ಸಿಯೋ ಕೊನೆಗೆ ತನ್ನ ಪ್ರಮುಖ ಶತ್ರುವನ್ನು ಪ್ರೀತಿಸುವಂತಾಗಿದ್ದ. ಅವನು ಸಾಕಷ್ಟು ಸಮಯವನ್ನು ಹುಡುಕಾಟದಲ್ಲಿ ಕಳೆದ. ರಿಯೋ‌ಅಕದಲ್ಲಿ ಹಾಗೂ ಮೇಲ್ಕಣಿವೆಯಲ್ಲಿ ಸತ್ತವರು ಮತ್ತು ಜೌಗುಪ್ರದೇಶದಿಂದ ಬಂದವರ ಬಗ್ಗೆ ಕೇಳಿದ. ಆದರೆ ಮೆಲ್ಕಿಯಾದೆಸ್ ಸಾವಿನ ನಕ್ಷೆಯ ಮೇಲೆ ಒಂದು ಕಪ್ಪು ಚುಕ್ಕೆಯನ್ನು ಇಡುವ ತನಕ ಮಾಕಾಂದೋ ಸಾವನ್ನು ಅರಿಯದ ಊರಾದ್ದರಿಂದ ಅವನ ಬಗ್ಗೆ ಯಾರು ಏನನ್ನು ಹೇಳಲು ಸಾಧ್ಯವಾಗಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾ, ಪ್ರುಡೆನ್ಸಿಯೋ ಅಗಿಲಾರ್ ಜೊತೆ ಬೆಳಗಿನ ತನಕ ಮಾತನಾಡಿದ. ಎಚ್ಚರವಾಗಿದ್ದರಿಂದ ಕೆಲವು ಗಂಟೆಗಳ ನಂತರ ಸುಸ್ತಾದ ಅವನು ಅವ್ರೇಲಿಯಾನೋನ ವರ್ಕ್‌ಶಾಪ್‌ಗೆ ಹೋಗಿ, “ಇವತ್ತು ಯಾವ ದಿನ” ಎಂದ. ಅವ್ರೇಲಿಯಾನೋ, “ಮಂಗಳವಾರ” ಎಂದು ಹೇಳಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾ, “ನಾನು ಹಾಗೇ ಅಂದುಕೊಂಡಿದ್ದೆ. ಆದರೆ ತಕ್ಷಣ ನಂಗೆ ಗೊತ್ತಾಯ್ತು. ಇವತ್ತಿನ್ನೂ ಸೋಮವಾರ ಅಂತ. ಆಕಾಶವನ್ನ ನೋಡು, ಗೋಡೆಗಳನ್ನು ನೋಡು, ಜರ್ರ್ರಿ ಗಿಡಗಳನ್ನು ನೋಡು, ಇವತ್ತು ಕೂಡ ಸೋಮವಾರ.” ಅವನ ಹುಚ್ಚುತನದ ಬಗ್ಗೆ ಅರಿವಿದ್ದ ಅವ್ರೇಲಿಯಾನೋ ಅವರ ಬಗ್ಗೆ ಗಮನ ಕೊಡಲಿಲ್ಲ. ಮಾರನೆಯ ದಿನ ಬುಧವಾರ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಮತ್ತೆ ವರ್ಕ್‌ಶಾಪಿಗೆ ಹೋದ. ಅವನು, “ಇದೆಲ್ಲ ಕುಲಗೆಟ್ಟು ಹೋಗಿದೆ” ಎಂದು ಹೇಳಿ, “ಗಾಳೀನ ನೋಡು. ಸೂರ್ಯನ ಬೆಳಕನ್ನು ನೋಡು, ಎಲ್ಲಾ ನಿನ್ನೆ ಮೊನ್ನೆ ಥರ ಇದೆ. ಇವತ್ತು ಕೂಡ ಸೋಮವಾರ” ಎಂದ. ಆ ದಿನ ರಾತ್ರಿ ಅವನು ಪ್ರುಡೆನ್ಸಿಯೋ ಅವ್ರೇಲಿಯಾನೋಗಾಗಿ, ಮೆಲ್‌ಕಿಯಾದೆಸ್‌ಗಾಗಿ, ರೇಬೇಕಾಳನ್ನು ಹೆತ್ತವರಿಗಾಗಿ, ತನ್ನ ತಂದೆತಾಯಿಗಾಗಿ ಮತ್ತು ಸಾವಿನಲ್ಲಿ ಈಗ ಒಬ್ಬಂಟಿಯಾಗಿರುವ ತನಗೆ ನೆನಪಿಗೆ ಬಂದ ಎಲ್ಲರಿಗಾಗಿ ಅಳುತ, ಅಂಗಳದಲ್ಲಿ ಕುಳಿತುಕೊಂಡಿದ್ದನ್ನು ಪಿಯತ್ರೋ ಕ್ರೆಪ್ಸಿ ಕಂಡ. ಅವನು ಬಿಗಿಯಾಗಿ ಕಟ್ಟಿದ ಹಗ್ಗದ ಮೇಲೆ ಹಿಂಗಾಲುಗಳಲ್ಲಿ ನಡೆಯುವ ಯಾಂತ್ರಿಕ ಕರಡಿಯನ್ನು ಅವನಿಗೆ ಕೊಟ್ಟ. ಆದರೆ ಅವನ್ನು ಮುತ್ತಿಕೊಂಡ ಭಾವನೆಯಿಂದ ಬಿಡಿಸಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ಹಿಂದೆ ಹೇಳಿದ್ದ ಮನುಷ್ಯರು ಹಾರಾಡುವುದಕ್ಕೆ ಸಹಾಯ ಮಾಡುವಂಥ ಪೆಂಡ್ಯುಲಮ್ ನಿರ್ಮಿಸುವ ಸಾಧ್ಯತೆ ಏನಾಯಿತೆಂದು ಅವನನ್ನು ಕೇಳಿದ. ಅದಕ್ಕೆ ಅವನು ಪೆಂಡ್ಯುಲಮ್ ಯಾವುದನ್ನೇ ಆದರೂ ಗಾಳಿಯಲ್ಲಿ ಎತ್ತಿ ಹಿಡಿಯುವುದಲ್ಲದೆ ತನ್ನನ್ನೇ ಎತ್ತುವುದಕ್ಕೆ ಆಗುವುದಿಲ್ಲ. ಅದ್ದರಿಂದ ಅದು ಸಾಧ್ಯವಿಲ್ಲ, ಎಂದು ಉತ್ತರಿಸಿದ. ಗುರುವಾರ ಅವನು ಉತ್ತ ನೆಲದಂತೆ ನೋವಿನ ಮುಖದಿಂದ ವರ್ಕ್‌ಶಾಪ್‌ನಲ್ಲಿ ಕಾಣಿಸಿಕೊಂಡ. ಅವನು ಬಿಕ್ಕಳಿಸುತ್ತಾ, “ಕಾಲದ ಮೆಷಿನ್ ಕೈಕೊಟ್ಟಿದೆ. ಉರ್ಸುಲಾ ಮತ್ತು ಅಮರಾಂತ ಕೂಡ ಎಲ್ಲೊ ಹೋಗಿದಾರೆ” ಎಂದ. ಅವನು ಬೈದು ಅದನ್ನು ನಿರ್ಲಕ್ಷಿಸಿದ. ಸಮಯ ಗತಿಸಿದ್ದನ್ನು ಸೂಚಿಸಲು ಏನಾದರೂ ವ್ಯತ್ಯಾಸ ಕಾಣುವುದೇ ಎಂದು ವಸ್ತುಗಳನ್ನು ನಿರೀಕ್ಷಿಸುತ್ತಾ ಆರು ಗಂಟೆ ಕಳೆದ. ಅವನು ಹಾಸಿಗೆಯಲ್ಲಿ ಕಣ್ಣು ಬಿಟ್ಟುಕೊಂಡು ಮಲಗಿ ಪ್ರುಡೆನ್ಸಿಯೋ, ಮೆಲ್‌ಕಿಯಾದೆಸ್ ಮತ್ತು ಸತ್ತ ಎಲ್ಲರನ್ನು ಕರೆಯುತ್ತಾ ಅವರು ತನ್ನ ಸಂಕಟವನ್ನು ಅರ್ಥಮಾಡಿಕೊಳ್ಳು?ಜಜಿ;ರೆಂದು ಆ ರಾತ್ರಿ ಕಳೆz. ಆದರೆ ಯಾರೂ ಬರಲಿಲ್ಲ. ಶುಕ್ರವಾರ ಎಲ್ಲರಿಗಿಂತ ಮುಂಚೆ ಎದ್ದು ಹೆ;ರಗಿನ ಪ್ರಕೃತಿಯನ್ನು ನೋಡಿದ ಅವನಿಗೆ ಆ ದಿನ ಸೋಮವಾರ ಎನ್ನುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಅವನು ಒಂದು ಬಾಗಿಲಿನಿಂದ ಕಂಬಿಯನ್ನು ಸೆಳೆದುಕೊಂಡು ಇನ್ನಿಲ್ಲದ ಶಕ್ತಿಯಿಂದ ಹೊಸದಾದ ಲ್ಯಾಬೋರೇಟರಿಯ ಉಪಕರಣಗಳು, ಛಾಯಾಚಿತ್ರದ ಉಪಕರಣ, ಬೆಳ್ಳಿ ಕೆಲಸದ ವರ್ಕ್‌ಶಾಪ್ ಎಲ್ಲವನ್ನೂ ದೆವ್ವ ಹಿಡಿದವನ ಹಾಗೆ ಸ್ವಲ್ಪವೂ ಅರ್ಥವಾಗದ ಭಾಷೆಯಲ್ಲಿ ಏನೇನೋ ಕೂಗಾಡುತ್ತಾ ಎಲ್ಲವನ್ನೂ ಚಚ್ಚಿಹಾಕಿದ. ಅವನು ಮನೆಯ ಇತರೆ ಭಾಗವನ್ನು ನಾಶಮಾಡುವುದರಲ್ಲಿದ್ದಾಗ ಅವ್ರೇಲಿಯಾನೋ ಅಕ್ಕಪಕ್ಕದವರನ್ನು ಸಹಾಯಕ್ಕಾಗಿ ಕೂಗಿ ಕರೆದ. ಅವನನ್ನು ಹಿಡಿದೆಳೆಯುವುದಕ್ಕೆ ಹತ್ತು ಜನ, ಬಿಗಿದು ಕಟ್ಟುವುದಕ್ಕೆ ಹದಿನಾಲ್ಕು ಜನ ಬೇಕಾಯಿತು. ಇಪ್ಪತ್ತು ಜನ ಏನನ್ನೋ ಹೇಳುತ್ತಾ ಬಾಯಲ್ಲಿ ಜೊಲ್ಲು ಸುರಿಸುತ್ತಿದ್ದ ಅವನನ್ನು ಎಳೆದುಕೊಂಡು ಹೋಗಿ ಅಂಗಳದ ಮರದ ಹತ್ತಿರ ಬಿಟ್ಟುಹೋದರು. ಉರ್ಸುಲಾ ಮತ್ತು ಅಮರಾಂತ ವಾಪಸು ಬಂದಾಗ ಮಳೆಯಲ್ಲಿ ತೊಯ್ದು ಹೋಗಿ ಮುಗ್ಧನ ಹಾಗೆ ಕಾಣುತ್ತಿದ್ದ ಅವನನ್ನು ಕೈಕಾಲುಗಳನ್ನು ಸೇರಿಸಿ ಕಟ್ಟಿಹಾಕಿದ್ದರು. ಅವನನ್ನು ಮಾತನಾಡಿಸಿದಾಗ ಅವರಿಗೆ ತಿಳಿಯದ ಹಾಗೆ ಏನನ್ನೋ ಹೇಳುತ್ತಾ ಅವರನ್ನು ಗುರುತಿಸಲಾಗದೆ ನೋಡಿದ. ಉರ್ಸುಲಾ ಹಗ್ಗದ ಗುರುತುಗಳಾಗಿದ್ದ ಅವನ ಮುಂಗೈ ಮತ್ತು ಮಂಡಿಗಳನ್ನು ಬಿಚ್ಚಿ, ಸೊಂಟಕ್ಕೆ ಕಟ್ಟಿದ್ದನ್ನು ಮಾತ್ರ ಹಾಗೆಯೇ ಬಿಟ್ಟಳು. ಅನಂತರ ಅವರು ಮಳೆ, ಬಿಸಿಲು ಅವನ ಮೇಲೆ ಬೀಳದಿರಲಿ ಎಂದು ತೆಂಗಿನ ಗರಿಗಳ ಚಪ್ಪರ ಕಟ್ಟಿದರು. +೫ +ಮಾರ್ಚ್ ತಿಂಗಳ ಒಂದು ಭಾನುವಾರ ಫಾದರ್ ನಿಕನೋರ್ ನಡುಮನೆಯಲ್ಲಿ ವ್ಯವಸ್ಥೆಗೊಳಿಸಿದ ಸ್ಥಳದಲ್ಲಿ ಅವ್ರೇಲಿಯಾನೋ ಬ್ಯುಂದಿಯಾ ಮತ್ತು ರೆಮಿದಿಯೋಸ್‌ಳ ಮದುವೆಯಾಯಿತು. ರೆಮಿದಿಯೋಸ್ ದೊಡ್ಡವಳಾದ ಮೇಲೆ ಕೂಡ ಹುಡುಗುತನದ ಅಭ್ಯಾಸಗಳನ್ನು ಬಿಡದಿದ್ದರಿಂದ ಮೊಸ್ಕೋತೆ ಮನೆಯಲ್ಲಿ ನಾಲ್ಕು ವಾರಗಳ ಕಾಲ ಚರ್ಚೆಯಾಗಿ ಕೊನೆಗೆ ಹೀಗೆ ನೆರವೇರಿತು. ಅವಳ ತಾಯಿ ಅವಳಿಗೆ ಹರೆಯಕ್ಕೆ ಬಂದ ಮೇಲೆ ಆಗುವ ಬದಲಾವಣೆಗಳನ್ನು ತಿಳಿಸಿ ಹೇಳಿದ್ದರು. ಫೆಬ್ರವರಿಯ ಒಂದು ಮಧ್ಯಾಹ್ನ ಕೂಗುತ್ತಾ ಓಡಿಬಂದ ಅವಳು ಅವ್ರೇಲಿಯಾನೋನ ಸಂಗಡ ಹಜಾರದಲ್ಲಿ ಕುಳಿತು ಮಾತನಾಡುತ್ತಿದ್ದ ತನ್ನ ಅಕ್ಕಂದಿರಿಗೆ ತನ್ನ ಒಳ‌ಉಡುಪಿಗೆ ಚಾಕಲೇಟ್ ರೀತಿಯ ಅಂಟು ಕಲಸು ಮೆತ್ತಿಕೊಂಡಿದ್ದನ್ನು ತೋರಿಸಿದಳು. ಒಂದು ತಿಂಗಳಿನ ನಂತರ ಮದುವೆ ಎಂದು ಒಪ್ಪಲಾಯಿತು. ಅವಳಿಗೆ ಸ್ನಾನ ಮಾಡುವುದು ಹೇಗೆ, ಬಟ್ಟೆ ಹಾಕಿಕೊಳ್ಳುವುದು ಹೇಗೆ ಅಲ್ಲದೆ ಮನೆಗೆಲಸದ ಪ್ರಾಥಮಿಕ ಅಂಶಗಳನ್ನು ಕಲಿಸಿಕೊಡುವುದಕ್ಕೆ ಏನೂ ಸಮಯ ಸಾಕಾಗುವಂತಿರಲಿಲ್ಲ. ಹಾಸಿಗೆಯಲ್ಲಿ ಉಚ್ಚೆ ಹುಯ್ಯುವುದನ್ನು ತಪ್ಪಿಸಲು ಬಿಸಿ ಇಟ್ಟಿಗೆಯ ಮೇಲೆ ಉಚ್ಚೆ ಹೊಯ್ಯುವಂತೆ ಮಾಡಿದರು. ದಾಂಪತ್ಯದ ಗುಪ್ತ ವಿಷಯಗಳ ಬಗ್ಗೆ ಅವಳಿಗೆ ಮನದಟ್ಟು ಮಾಡುವುದಕ್ಕೆ ಸಾಕಷ್ಟು ಸಮಯ ಹಿಡಿಯಿತಾದರೂ, ಅದರಿಂದ ಬೆರಗಾಗಿ ತಬ್ಬಿಬ್ಬಾದ ಅವಳು, ಮೊದಲ ರಾತ್ರಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಎಲ್ಲರ ಜೊತೆ ಮಾತನಾಡಲು ಇಷ್ಟಪಟ್ಟಳು. ಇದರಿಂದಾಗಿ ಪ್ರಾಪಂಚಿಕ ವಿಷಯಗಳ ಬಗ್ಗೆ ಚಿಕ್ಕವಳಾದರೂ ಮದುವೆಯ ಸಮಾರಂಭದ ಹೊತ್ತಿಗೆ ಅವಳ ಅಕ್ಕಂದಿರಷ್ಟೆ ತಿಳುವಳಿಕೆ ಪಡೆದಿದ್ದಳು. ಸಂಗೀತದ ಬ್ಯಾಂಡುಗಳು, ಪಟಾಕಿಗಳ ಸಂಭ್ರಮದಲ್ಲಿ ಹೂವಿನಿಂದ ಉದ್ದಕ್ಕೂ ಅಲಂಕೃತವಾದ ರಸ್ತೆಯಲ್ಲಿ ದಾನ್ ಅಪೋಲಿನರ್ ಮೊಸ್ಕೋತೆ ತನ್ನ ಮಗಳ ಕೈ ಹಿಡಿದು ಕರೆದುಕೊಂಡು ಬಂದ. ಅವಳು ಕಿಟಕಿಯಲ್ಲಿ ನಿಂತು ಶುಭ ಕೋರಿದವರಿಗೆಲ್ಲ ನಸುನಕ್ಕು ಕೈ ಬೀಸಿ ಕೃತಜ್ಞತೆ ತಿಳಿಸಿದಳು. ವರ್ಷಗಳ ತರುವಾಯ ತನ್ನನ್ನು ಗುಂಡಿಕ್ಕಿ ಕೊಲ್ಲುವ ತಂಡದವರ ಎದುರು ನಿಂತಾಗ ಹಾಕಿಕೊಂಡಿದ್ದ ಕಪ್ಪು ಡ್ರೆಸ್ ಮತ್ತು ಲೋಹದ ಪಟ್ಟೆಗಳಿದ್ದ ಚರ್ಮದ ಶೂ ಹಾಕಿಕೊಂಡಿದ್ದ ಅವ್ರೇಲಿಯಾನೋ ತೀರಾ ಗಂಭೀರನಾಗಿದ್ದ ಮತ್ತು ಬಾಗಿಲಿನ ಹತ್ತಿರ ವಧುವನ್ನು ಎದುರುಗೊಂಡಾಗ ಅವನ ಗಂಟಲು ತುಂಬಿ ಬಂದಿತ್ತು. ಅವಳು ತುಂಬಾ ವಿವೇಚನೆಯಿಂದ ನಡೆದುಕೊಂಡಳಲ್ಲದೇ ಉಂಗುರವನ್ನು ತೊಡಿಸುವ ಪ್ರಯತ್ನದಲ್ಲಿ ಅವ್ರೇಲಿಯಾನೋ ಅದನ್ನು ಕೆಳಗೆ ಬೀಳಿಸಿದರೂ ಗಾಂಭೀರ್‍ಯವನ್ನು ಕಳೆದುಕೊಳ್ಳಲಿಲ್ಲ. ಆಗ ಉಂಟಾದ ಗೊಂದಲದಲ್ಲಿ ಉಂಗುರ ನೆಲಕ್ಕೆ ಬಿದ್ದು ಉರುಳುವ ಮುಂಚೆ ಅವನು ತನ್ನ ಕಾಲಿನಿಂದ ಅದನ್ನು ತಡೆದು ನಾಚಿಕೆಯಿಂದ ಹಿಂತಿರುಗಿಸುವ ತನಕ ಅವಳು ಮೆಹಂದಿಯಿಂದ ಸಿಂಗರಿಸಿದ ತನ್ನ ಕೈಯನ್ನು ಚಾಚಿ ಹಾಗೆಯೇ ಹಿಡಿದಿದ್ದಳು. ಆ ಚಿಕ್ಕ ಹುಡುಗಿ ಸಮಾರಂಭದಲ್ಲಿ ಏನಾದರೂ ತಪ್ಪು ಮಾಡುವಳೇನೋ ಎಂದು ಅವಳ ತಾಯಿ ಹಾಗೂ ಅಕ್ಕಂದಿರು ಭಯದಿಂದ ಎಷ್ಟು ಆತಂಕಗೊಂಡಿದ್ದರೆಂದರೆ ಕೊನೆಗೆ ಮುತ್ತಿಕ್ಕಿಸಿಕೊಳ್ಳಲು ಅವರೇ ಅವಳನ್ನು ಎತ್ತಿ ಹಿಡಿಯಬೇಕಾಯಿತು. ಆ ದಿನದಿಂದ ಯಾವುದೇ ಕಷ್ಟದ ಸಂದರ್ಭದಲ್ಲಿಯೂ ತಾಳ್ಮೆ ಹಾಗೂ ಜವಾಬ್ದಾರಿಯ ಭಾವನೆ ಅವಳಲ್ಲಿದ್ದದ್ದು ವ್ಯಕ್ತವಾಯಿತು. ಅವಳು ತಾನೇ ಮುಂದುವರೆದು ಮದುವೆಯ ಕೇಕಿನ ದೊಡ್ಡ ತುಂಡನ್ನು ಪ್ಲೇಟ್‌ನಲ್ಲಿ ಫೋರ್ ಜೊತೆ ಇಟ್ಟುಕೊಂಡು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಹತ್ತಿರ ಹೋದಳು. ತೆಂಗಿನ ಗರಿಗಳ ನೆರಳಿನಲ್ಲಿ ಮರಕ್ಕೆ ಕಟ್ಟಿಹಾಕಿ ಬಿಸಿಲು ಮಳೆಯಿಂದ ಬಣ್ಣಗೆಟ್ಟು ಮರದ ಸ್ಟೋಲಿನ ಮೇಲೆ ಕುಳಿತಿದ್ದ ಭಾರಿ ಆಕಾರದ ಮುದುಕ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೃತಜ್ಞತೆಯಿಂದ ನಸುನಕ್ಕು, ತಿಳಿಯಲಾರದ ಏನನ್ನೋ ಹೇಳುತ್ತ, ಕೇಕ್ ತಿಂದ. ಸೋಮವಾರ ಬೆಳಗಿನವರೆಗೂ ನಡೆದ ಆ ಗದ್ದಲದ ಸಮಾರಂಭದಲ್ಲಿ ಅತ್ಯಂತ ಅಸುಖಿಯಾಗಿದ್ದವಳೆಂದರೆ ರೆಬೇಕ ಬ್ಯುಂದಿಯಾ. ಅವಳಿಗೆ ಆಶಾಭಂಗವಾಗಿತ್ತು. ಉರ್ಸುಲಾ ವ್ಯವಸ್ಥೆ ಮಾಡಿದಂತೆ ಅವಳ ಮದುವೆ ಆ ದಿನವೇ ನಡೆಯಬೇಕಿತ್ತು. ಆದರೆ ಶುಕ್ರವಾರ ಅವನ ತಾಯಿ ಸಾಯುವ ಸ್ಥಿತಿಯಲ್ಲಿದ್ದಾಳೆ ಎಂದು ಕಾಗದ ಬಂದು ಮದುವೆಯನ್ನು ಮುಂದಕ್ಕೆ ಹಾಕಲಾಯಿತು. ಕಾಗದ ಬಂದ ಒಂದು ಗಂಟೆಯ ನಂತರ ಪಿಯತ್ರೋ ಕ್ರೆಪ್ಸಿ ಊರಿಗೆ ಹೊರಟ. ಶನಿವಾರ ರಾತ್ರಿ ಬಂದ ಅವನ ತಾಯಿ ದಾರಿಯಲ್ಲಿ ಅವನಿಗೆ ಸಿಗಲಿಲ್ಲ. ಅವ್ರೇಲಿಯಾನೋನ ಮದುವೆಯಲ್ಲಿ ಆಕೆ ತನ್ನ ಮಗನ ಮದುವೆಗೆಂದು ಸಿದ್ಧಮಾಡಿಕೊಂಡಿದ್ದ ದು:ಖದ ಹಾಡೊಂದನ್ನು ಹಾಡಿದಳು. ಪಿಯತ್ರೋ ಕ್ರೆಪ್ಸಿ ತನ್ನ ಮದುವೆಯ ಹೊತ್ತಿಗೆ ಬರಬೇಕೆಂಬ ಪ್ರಯತ್ನದಲ್ಲಿ ಒಂದಾದ ನಂತರ ಒಂದರಂತೆ ಐದು ಕುದುರೆಗಳನ್ನು ಕಟ್ಟಿಸಿಕೊಂಡು ಪ್ರಯಾಣ ಮಾಡಿ, ಭಾನುವಾರ ರಾತ್ರಿ ಹರಡಿ ಬಿದ್ದಿದ್ದ ಕಸ ಎತ್ತಿಹಾಕಲು ಬಂದ. ಆಮೇಲೆ ಕೂಡ ಆ ಕಾಗದ ಬರೆದವರು ಯಾರೆಂದು ಕಂಡುಹಿಡಿಯಲಾಗಲಿಲ್ಲ. ಉರ್ಸುಲಾ ಮತ್ತೆ ಮತ್ತೆ ಕೇಳಿ ಹಿಂಸೆ ಕೊಟ್ಟಿದ್ದಕ್ಕೆ ರೋಷಗೊಂಡು ಅಳುತ್ತಾ ಅಮರಾಂತ ಮರಗೆಲಸದವರು ಇನ್ನೂ ಬಿಚ್ಚದ ಮದುವೆಯ ಮಂಟಪದ ಎದುರು ತಾನು ನಿರಪರಾಧಿ ಎಂದು ಆಣೆ ಇಟ್ಟು ಹೇಳಿದಳು. +ಮದುವೆಯನ್ನು ಅಧಿಕೃತಗೊಳಿಸಲು ಜೌಗು ಪ್ರದೇಶದಿಂದ ದಾನ್ ಅಪೋಲಿನರ್ ಮೊಸ್ಕೋತೆ ಕರೆದುಕೊಂಡು ಬಂದಿದ್ದ ವಯಸ್ಸಾಗಿದ್ದ ಫಾದರ್ ನಿಕನೋರ್ ರೇಯ್ನಾ ತನ್ನ ಆಡಳಿತ ಇಲಾಖೆಯವರ ಕೃತಘ್ನತೆಯಿಂದ ರೋಸಿ ಹೋಗಿದ್ದ. ಡೊಳ್ಳು ಹೊಟ್ಟೆಯ ಸುಕ್ಕಾದ ಚರ್ಮದ ಕಡ್ಡಿಯಂತಿದ್ದ ಅವನ ಮುಖದಲ್ಲಿ ದೈವಿಕ ಕಳೆಯಿತ್ತು. ಅದು ಒಳ್ಳೆಯತನದಿಂದ ಬಂದಿರದೆ ಸರಳತೆಯಿಂದ ಬಂದಿತ್ತು. ಅವನು ಮದುವೆ ಸಮಾರಂಭ ಮುಗಿದ ಕೊಡಲೆ ಚರ್ಚಿಗೆ ವಾಪಸು ಹೋಗಲು ಯೋಜಿಸಿದ್ದ. ಆದರೆ ಮಕೋಂದೋದವರ ವಿಲಕ್ಷಣ ನಡವಳಿಕೆಯಿಂದ ಸೋಜಿಗಗೊಂಡ. ಅವರು ಅನೇಕ ತೊಂದರೆಗಳ ಮಧ್ಯೆ ಸಹಜ ನ್ಯಾಯಕ್ಕೆ ಒಳಗಾಗಿ ಅಭಿವೃದ್ಧಿ ಹೊಂದುತ್ತಿದ್ದರು. ಅವರು ತಮ್ಮ ಮಕ್ಕಳಿಗೆ ಅಧಿಕೃತ ನಾಮಕರಣ ಮಾಡುತ್ತಿರಲಿಲ್ಲ ಮತ್ತು ಹಬ್ಬಗಳ ಪವಿತ್ರತೆಯನ್ನು ಗಮನಿಸುತ್ತಿರಲಿಲ್ಲ. ದೇವರ ಅಗತ್ಯ ಅಲ್ಲಿ ಇರುವಷ್ಟು ಬೇರೆಲ್ಲಿಯೂ ಇಲ್ಲವೆಂದು ಭಾವಿಸಿ, ಉಪಪತ್ನಿಯರಿಗೆ ನ್ಯಾಯ ದೊರಕಿಸುವ ಮತ್ತು ಸಾಯಲಿರುವವರಿಗೆ ಸಂಸ್ಕಾರ ಮಾಡುವುದಕ್ಕೆಂದು ಒಂದು ವಾರ ಅಲ್ಲಿರಲು ನಿರ್ಧರಿಸಿದ. ಆದರೆ ಯಾರೂ ಅವನಿಗೆ ಗಮನ ಕೊಡಲಿಲ್ಲ. ಪಾದ್ರಿ ಇಲ್ಲದೆ ತಾವು ಅದೆಷ್ಟೋ ವರ್ಷ ಕಳೆದು ಆತ್ಮಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ದೈವದೊಡನೆ ನೇರವಾಗಿ ಮಾಡುತ್ತಿದ್ದುದಾಗಿಯೂ ಹಾಗೂ ಮೂಲ ಪಾಪದ ಕೆಡುಕನ್ನು ತೊರೆದಿರುವುದಾಗಿಯೂ ಅವರು ಹೇಳುತ್ತಿದ್ದರು. ಹೊರಗಡೆ ಅವರಿಗೆ ಉಪದೇಶ ಮಾಡಿ ಸುಸ್ತಾದ ಫಾದರ್ ನಿಕನೋರ್ ಧರ್ಮ ಶ್ರದ್ಧೆ ಇಲ್ಲದ ಕಡೆಗೆ ದೈವವನ್ನು ಗೌರವಿಸಲು ರೋಮ್‌ನಿಂದ ಜನರು ಬರುವಂತಾಗಲೆಂದು ಪ್ರಪಂಚದಲ್ಲೇ ದೊಡ್ಡದಾದ ಮನುಷ್ಯಾಕಾರದ ಸಂತರು ಮತ್ತು ಗಾಜಿನ ಕಿಟಕಿಗಳಿರುವ ಚರ್ಚ್ ಕಟ್ಟಬೇಕೆಂದು ತೀರ್ಮಾನಿಸಿದ. ಅವನು ತಾಮ್ರದ ಬೊಗಸೆಯನ್ನು ಹಿಡಿದು ದೇಣಿಗೆಗಾಗಿ ಹೊರಟ. ಜನರೇನೊ ಸಾಕಷ್ಟು ಹಣ ಕೊಟ್ಟರು. ಆದರೆ ಅವನಿಗೆ ಇನ್ನೂ ಹೆಚ್ಚಿಗೆ ಬೇಕಾಗಿತ್ತು. ಏಕೆಂದರೆ ಚರ್ಚಿನ ಗಂಟೆ ನೀರಲ್ಲಿ ಮುಳುಗಿದವನನ್ನು ಮೇಲಕ್ಕೆ ಎತ್ತುವಷ್ಟು ದೊಡ್ಡದಾಗಿರಬೇಕಿತ್ತು. ಅವನ; ಧ್ವನಿ ಉಡುಗುವ ತನಕ ಬಿನ್ನವಿಸಿಕೊಂಡ. ಅವನ ಮೈ ಮೂಳೆಗಳು ಅದರಿಂದ ತುಂಬಿ ಹೋಯಿತು. ಬಾಗಿಲಿಗಾಗುವಷ್ಟು ಹಣ ಒಟ್ಟುಗೂಡಿಸಲು ಸಾಧ್ಯವಾಗದಿದ್ದಕ್ಕೆ ಒಂದು ಶನಿವಾರ ತೀರ ಹತಾಶೆಗೊಳಗಾದ. ನಿದ್ದೆ ಬಾರದ ದಿನಗಳಲ್ಲಿ ಅದೊಂದು ಭಾನುವಾರ ಚೌಕದಲ್ಲಿದ್ದ ಸ್ಥಳವನ್ನು ಉತ್ತಮಗೊಳಿಸಿ, ಒಂದು ಸಣ್ಣ ಗಂಟೆಯನ್ನು ಹಿಡಿದುಕೊಂಡು, ಊರಿನಲ್ಲಿ ತಿರುಗಿ ಜನರನ್ನು ಸಾಮೂಹಿಕ ಪ್ರಾರ್ಥನೆಗೆ ಬನ್ನಿರೆಂದು ಕರೆದ. ಕೆಲವರು ಕುತೂಹಲದಿಂದ ಮತ್ತು ಕೆಲವರು ಹಳೆಯ ನೆನಪಿನಿಂದ ದೇವರು ತನ್ನ ವೈಯಕ್ತಿಕ ಅವಮಾನವೆಂದು ಪರಿಗಣಿಸುವುದಿಲ್ಲವೆಂದು ಹೋದರು.. ಇದರಿಂದಾಗಿ ಎಂಟು ಗಂಟೆಯ ಹೊತ್ತಿಗೆ ಇಡೀ ಊರಿನ ಅರ್ಧ ಜನರು ಚೌಕದ ಬಳಿ ಸೇರಿದಾಗ, ಫಾದರ್ ನಿಕನೋರ್ ಜನರು ಹೆಚ್ಚಾಗಿ ಬಿನ್ನವಿಸಿಕೊಂಡಿದ್ದರಿಂದ ಕುಗ್ಗಿದ ಧ್ವನಿಯಲ್ಲಿ ಸುವಾರ್ತೆಗಳನ್ನು ವಿವರಿಸಿದ. ಎಲ್ಲ ಮುಗಿದ ಮೇಲೆ ನೆರೆದವರು ಚದುರಲು ಪ್ರಾರಂಭಿಸಿದಾಗ ಅವನು ಕೈಗಳನ್ನು ಎತ್ತಿ ಗಮನಸೆಳೆದು, “ಒಂದು ನಿಮಿಷ .. ನಾವೀಗ ದೇವರಿದ್ದಾನೆ ಎನ್ನುವುದಕ್ಕೆ ಪುರಾವೆಯನ್ನು ನೋಡೋಣ” ಎಂದ. +ಸಾಮೂಹಿಕ ಪ್ರಾರ್ಥನೆಯ ಸಭೆಗೆ ಸಹಾಯ ಮಾಡಿದ ಹುಡುಗನೊಬ್ಬ ಒಂದು ಕಪ್ಪಿನಲ್ಲಿ ಹೊಗೆಯಾಡುತ್ತಿದ್ದ ಚಾಕಲೇಟ್ ತಂದುಕೊಟ್ಟಿದ್ದನ್ನು ಉಸಿರಾಡುವುದಕ್ಕೆ ಬಿಡದೆ ಕುಡಿದ. ಅನಂತರ ಅವನು ಕರ್‌ಚೀಫಿನಿಂದ ತುಟಿ ಒರೆಸಿಕೊಂಡು, ಕೈ ಅಗಲಿಸಿ, ಕಣ್ಣು ಮುಚ್ಚಿದ. ಆ ಕೂಡಲೆ ಫಾದರ್ ನಿಕನೋರ್ ನೆಲದ ಮೇಲಿಂದ ಆರು ಇಂಚು ಮೇಲೆ ಹೋದ. ಅದು ಎಲ್ಲರಿಗೂ ಒಪ್ಪಿಗೆಯಾಗುವ ಕ್ರಮವಾಯಿತು. ಅವನು ಮನೆಗಳ ಮುಂದೆ ನಿಂತು ಚಾಕಲೇಟ್ ಕುಡಿದು ಮೇಲೇಳುವ ಪ್ರದರ್ಶನ ಮಾಡುತ್ತ ಹೋಗುತ್ತಿದ್ದಂತೆ ಅವನ ಸಹಾಯಕ ಚೀಲದಲ್ಲಿ ಎಷ್ಟು ಹಣ ಸಂಗ್ರಹಿಸಿದನೆಂದರೆ ಒಂದೇ ತಿಂಗಳಲ್ಲಿ ಅವನು ಚರ್ಚ್ ಕಟ್ಟುವ ಕೆಲಸವನ್ನು ಪ್ರಾರಂಭಿಸಿದ. ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಬಿಟ್ಟರೆ ಬೇರೆ ಯಾರೂ ಈ ಪ್ರದರ್ಶನದ ಹಿಂದಿರುವ ದೈವಿಕ ಮೂಲವನ್ನು ಅನುಮಾನಿಸಲಿಲ್ಲ. ಅವನು ಮುಖಮುದ್ರೆಯನ್ನು ಬದಲಿಸದೆ ತಾನಿದ್ದ ಮರದ ಹತ್ತಿರ ಆ ಪ್ರದರ್ಶನವನ್ನು ನೋಡಲು ನೆರೆದ ಜನಸಂದಣಿಯನ್ನು ನೋಡಿದ. ಅವನು ನಿಂತ ಕುರ್ಚಿಯ ಮೇಲೆ ಕೊಂಚ ಸೆಟೆದು, ಫಾದರ್ ನಿಕನೋರ್ ಕುಳಿತ ಕುರ್ಚಿಯೊಡನೆ ಮೇಲೇರಿದ್ದನ್ನು ನೋಡಿ ಭುಜ ಕೊಡವಿದ. +ಹೊಸೆ ಅರ್ಕಾದಿಯೋ ಬ್ಯುಂದಿಯಾ ಏನನ್ನೋ ಹೇಳಿದ. +ಫಾದರ್ ನಿಕನೋರ್ ಕೈಗಳನ್ನೆತ್ತಿದಾಗ ಕುರ್ಚಿಯ ನಾಲ್ಕು ಕಾಲುಗಳು ಒಂದೇ ಸಮಯಕ್ಕೆ ಮತ್ತೆ ನೆಲಕ್ಕೆ ಊರಿದವು. +ಮತ್ತೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಏನನ್ನೋ ಹೇಳಿದ. +ಇದರಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಮಾತನಾಡುವ ಭಾಷೆ ಲ್ಯಾಟಿನ್ ಎಂದು ಗೊತ್ತಾಯಿತು. ಫಾದರ್ ನಿಕನೋರ್ ಮಾತ್ರ ಅವನ ಜೊತೆ ಮಾತಾಡಲು ಸಾಧ್ಯವಿದುದ್ದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ಅನುಮಾನಿಸಿದ ಅವನ ಮನಸ್ಸಿನೊಳಗೆ ನಂಬಿಕೆಯನ್ನು ತೂರಿಸಲು ಪ್ರಯತ್ನಿಸಿದ. ಅವನು ಪ್ರತಿ ದಿನ ಮಧ್ಯಾಹ್ನ ಮರದ ಪಕ್ಕದಲ್ಲಿ ಕುಳಿತು ಲ್ಯಾಟಿನ್‌ನಲ್ಲಿ ಉಪದೇಶ ಮಾಡುತ್ತಿದ್ದ. ಆದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಒತ್ತಿ ಹೇಳುವ ಉಪಾಯ ಮತ್ತು ಚಾಕಲೇಟಿನಿಂದ ಆಗುವ ಬದಲಾವಣೆಗಳನ್ನು ಮತ್ತೆ ಮತ್ತೆ ತಿರಸ್ಕರಿಸುತ್ತ, ಛಾಯಾಚಿತ್ರದ ಉಪಕರಣದಿಂದ ತೆಗೆದ ದೇವರ ಭಾವಚಿತ್ರ ಮಾತ್ರ ಪುರಾವೆಯಾಗುತ್ತೆಂದು ತಗಾದೆ ಮಾಡಿದ. ಫಾದರ್ ನಿಕನೋರ್ ಕೆಲವು ಮಾದರಿಗಳು, ಚಿತ್ರಗಳು ಮತ್ತು ಕ್ರಿಸ್ತನ ಮುಖವಿರುವ ಬಟ್ಟೆಯನ್ನು ತಂದು ತೋರಿಸಿದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ಅವೆಲ್ಲ ಕುಶಲ ವಸ್ತುಗಳೆಂದು ತಿರಸ್ಕರಿಸಿದ್ದಲ್ಲದೆ ಅವುಗಳಿಗೆ ವೈeನಿಕ ಬುನಾದಿ ಇಲ್ಲವೆಂದು ಹೇಳಿದ. ಅವನೆಷ್ಟು ಬಿಗಿಯಾಗಿದ್ದ್ದನೆಂದರೆ ಫಾದರ್ ನಿಕನೋರ್ ಅವನಿಗೆ ಉಪದೇಶ ಹೇಳುವುದನ್ನು ಬಿಟ್ಟ್ಟು ಕೇವಲ ಮಾನವೀಯ ಭಾವನೆಯಿಂದ ಅವನ ಬಳಿ ಹೋಗುತ್ತಿದ್ದ. ಆಗ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಾನೇ ಮುಂದಾಗಿ ವಿವೇಚನಾಪೂರ್ಣ ಉಪಾಯಗಳಿಂದ ಅವನ ನಂಬಿಕೆಗಳನ್ನು ದೂರಮಾಡಲು ಪ್ರಯತ್ನಿಸಿದ. ಅದೊಂದು ಸಂದರ್ಭದಲ್ಲಿ ಫಾದರ್ ನಿಕನೋರ್ ಚದುರಂಗದಂಥದನ್ನು ತಂದು ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಆಟಕ್ಕೆ ಕರೆದಾಗ ಅವನು ಒಪ್ಪಲಿಲ್ಲ. ಏಕೆಂದರೆ ಅವನ ಪ್ರಕಾರ ಇಬ್ಬರು ಶತ್ರುಗಳು ಪರಸ್ಪರ ಒಪ್ಪಿಕೊಳ್ಳುವಂಥ ನಿಯಮಾವಳಿಗಳು ಇರುವುದಕ್ಕೆ ಸಾಧ್ಯ ಎನ್ನುವುದು ಅವನಿಗೆ ಅರ್ಥವಾಗುವಂತಿರಲಿಲ್ಲ. ಆಟವನ್ನು ಆ ರೀತಿ ಆಡಿದ್ದನ್ನು ಕಂಡಿರದ ಫಾದರ್ ನಿಕನೋರ್ ಮತ್ತೆ ಅದನ್ನು ಆಡಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಸರಳತೆಗೆ ಬೆರಗಾಗಿ ಅವರು ಅವನನ್ನು ಮರಕ್ಕೆ ಕಟ್ಟಿ ಹಾಕಲು ಹೇಗೆ ಸಾಧ್ಯವಾಯಿತು ಎಂದು ಕೇಳಿದ. +ಅವನು, “ಏಕೆಂದರೆ ನಾನೊಬ್ಬ ತಲೆ ತಿರುಕ” ಎಂದು ಉತ್ತರಿಸಿದ. +ಅನಂತರ ತನ್ನ ನಂಬಿಕೆಯ ಬಗ್ಗೆ ವಿಶ್ವಾಸ ಹೊಂದಿದ್ದ ಫಾದರ್ ಮತ್ತೆ ಅವನ ಬಳಿ ಹೋಗದೆ ಚರ್ಚ್ ಕಟ್ಟುವುದನ್ನು ಶೀಘ್ರಗೊಳಿಸಲು ತನ್ನನ್ನು ತೊಡಗಿಸಿಕೊಂಡ. ರೆಬೇಕಳಿಗೆ ತನ್ನ ಆಸೆಗಳು ಮರುಹುಟ್ಟು ಪಡೆದ ಹಾಗೆ ಕಾಣಿಸಿತು. ಅವಳ ಭವಿಷ್ಯ ಅದರ ಕೆಲಸ ಪೂರೈಸುವುದನ್ನು ಅವಲಂಬಿಸಿತ್ತು. ಏಕೆಂದರೆ ಒಂದು ಭಾನುವಾರ ಅವನು ಮನೆಯವರೆಲ್ಲರ ಜೊತೆ ಊಟ ಮಾಡುತ್ತ ಕುಳಿತಾಗ ಫಾದರ್ ನಿಕನೋರ್ ಚರ್ಚ್ ಕಟ್ಟುವುದು ಮುಗಿದ ಮೇಲೆ ಅಲ್ಲಿನ ಧಾರ್ಮಿಕ ವಿಧಿಗಳ ಮಹತ್ವವನ್ನು ಕುರಿತು ಹೇಳಿದಾಗ ಅಮರಾಂತ, “ರೆಬೇಕ ಎಲ್ಲರಿಗಿಂತ ಅದೃಷ್ಟವಂತೆ” ಎಂದಳು. ಅವಳು ಹೇಳಿದ್ದು ಏನೆಂದು ರೆಬೇಕಳಿಗೆ ಅರ್ಥವಾಗದಿದ್ದಾಗ ತನ್ನ ಮುಗ್ಧ ನಗುವಿನಿಂದ ಅವಳು “ಚರ್ಚನ್ನು ನಿನ್ನ ಮದುವೆಯಿಂದ ಉದ್ಘಾಟನೆ ಮಾಡ್ತೀಯಾ” ಎಂದು ವಿವರಿಸಿದಳು. +ರೆಬೇಕ ಯಾವುದೇ ರೀತಿಯ ಟೀಕೆಯನ್ನು ಮುಂಚೆಯೇ ತಡೆ ಹಿಡಿಯಲು ಪ್ರಯತ್ನಿಸಿದಳು. ಚರ್ಚ್ ಕಟ್ಟುತ್ತಿದ್ದರ ಪ್ರಗತಿ ನೋಡಿದರೆ ಅದು ಮುಗಿಯಲು ಇನ್ನೂ ಹತ್ತು ವರ್ಷ ಬೇಕಾಗಿತ್ತು. ಫಾದರ್ ನಿಕನೋರ್ ಅದಕ್ಕೆ ಒಪ್ಪಲಿಲ್ಲ. ಅದರಲ್ಲಿ ನಂಬಿಕೆ ಇಟ್ಟವರ ಔದಾರ್ಯ ಅವನನ್ನು ಆಶಾವಾದಿಯನ್ನಾಗಿ ಮಾಡಿತ್ತು. ರೋಷಗೊಂಡು ಸುಮ್ಮನಾದ ರೇಬೇಕಾ ಊಟ ಮುಗಿಸಲಿಲ್ಲ. ಉರ್ಸುಲಾಗೆ ಅಮರಾಂತಳ ಆಲೋಚನೆ ಯುಕ್ತವೆಂದು ತೋರಿ ಕೆಲಸದ ಗತಿ ಹೆಚ್ಚಾಗಲೆಂದು ಸಾಕಷ್ಟು ಹಣವನ್ನು ಕೊಟ್ಟಳು. ಆ ರೀತಿಯ ಕೊಡುಗೆ ಮತ್ತೊಂದು ಲಭಿಸಿದರೆ ಮುಂದಿನ ಮೂರು +ವರ್ಷದಲ್ಲಿ ಚರ್ಚ್ ಸಿದ್ಧವಾಗುವುದೆಂದು ಫಾದರ್ ನಿಕನೋರ್ ಭಾವಿಸಿದ. ಅಂದಿನಿಂದ ರೆಬೇಕ ಅಮರಾಂತಳಿಗೆ ಏನೂ +ಹೇಳಲಿಲ್ಲ. ತಾನು ಆಸಕ್ತಿ ವಹಿಸಿ ಮಾಡಿದ ಪ್ರಯತ್ನಕ್ಕೆ ಅದಕ್ಕಿರಬೇಕಾದ ಮುಗ್ಧತೆ ಇರಲಿಲ್ಲವೆಂದು ಅವಳಿಗೆ ಖಚಿತವಾಗಿತ್ತು. “ನಾನದನ್ನು ಗಂಭೀರವಾಗಿ ಮಾಡಿರ್‍ಲಿಲ್ಲ” ಎಂದು ಅಮರಾಂತ ಆ ರಾತ್ರಿ ನಡೆದ ತೀವ್ರವಾದ ವಾಗ್ವಾದದಲ್ಲಿ ಹೇಳಿದಳು. “ಇದರಿಂದಾಗಿ ನಾನು ನಿನ್ನನ್ನು ಇನ್ನು ಮೂರು ವರ್ಷ ಕೊಲ್ಲುವಂತಿಲ್ಲ” ಎಂದಳು. ಆ ಸವಾಲನ್ನು ರೆಬೇಕ ಒಪ್ಪಿದಳು. +ಪಿಯತ್ರೋ ಕ್ರೆಪ್ಸಿಗೆ ಹೊಸದಾಗಿ ಮದುವೆಯನ್ನು ಮುಂದೆ ಹಾಕಿದ್ದು ತಿಳಿದಾಗ ನಿರಾಸೆಯಾಯಿತು. ಆದರೆ ರೆಬೇಕ ಅವನ ಬಗ್ಗೆ ಇಟ್ಟಿದ್ದ ನಿಷ್ಠೆಯ ಅಂತಿಮ ಪುರಾವೆಯನ್ನು ತೋರಿಸಿದಳು. “ನೀನು ಯಾವಾಗ ಹೇಳಿದರೆ ಆಗ ಓಡಿ ಹೋಗೋಣ” ಎಂದಳು. ಅವಳ ಹಾಗೆ ಅವನು ಪುಟಿದೇಳುವ ಸ್ವಭಾವದವನಾಗಿರಲಿಲ್ಲ. ಅವಳ ಮಾತಿಗೆ ಗೌರವ ಕೊಡಬೇಕಲ್ಲದೆ ಹುಚ್ಚಾಟ ಮಾಡಬಾರದೆಂದು ತಿಳಿಸಿದ. ಅನಂತರ ರೆಬೇಕ ಹೆಚ್ಚು ಧೈರ್ಯ ತೆಗೆದುಕೊಳ್ಳಲು ಪ್ರಾರಂಭಿಸಿದಳು. ಜೋರಾಗಿ ಗಾಳಿ ಬೀಸಿ ನಡುಮನೆಯಲ್ಲಿ ದೀಪ ಆರಿ ಹೋದಾಗ ಕತ್ತಲಲ್ಲಿ ಪ್ರೇಮಿಗಳಿಬ್ಬರೂ ಮುತ್ತಿಡುವುದನ್ನು ಉರ್ಸುಲಾ ನೋಡಿ ಬಿಟ್ಟಳು. ಪಿಯತ್ರೋ ಕ್ರೆಪ್ಸಿ ಅವಳಿಗೆ ಆಧುನಿಕ ದೀಪಗಳ ಕನಿಷ್ಠ ಗುಣಮಟ್ಟದ ಬಗ್ಗೆ ಗೊಂದಲಗೊಂಡ ವಿವರಣೆಯನ್ನು ಕೊಟ್ಟ. ಅಲ್ಲದೆ ಒಳ್ಳೆಯ ದೀಪಗಳನ್ನು ವ್ಯವಸ್ಥೆಗೊಳಿಸಲು ಅವಳಿಗೆ ಸಹಾಯ ಮಾಡಿದ. ಆದರೆ ಎಣ್ಣೆ ಕೈ ಕೊಡುತ್ತಿತ್ತು ಅಥವಾ ಬತ್ತಿ ಸರಿ ಇರುತ್ತಿರಲಿಲ್ಲ. ರೆಬೇಕ ಅವನ ತೊಡೆಯ ಮೇಲೆ ಕುಳಿತಿದ್ದನ್ನು ಉರ್ಸುಲಾ ಕಂಡಳು. ಈ ಸಲ ಅವಳು ಯಾವ ವಿವರಣೆಯನ್ನೂ ಒಪ್ಪಲಿಲ್ಲ. ಬೇಕರಿಯ ಜವಾಬ್ದಾರಿಯನ್ನು ಇಂಡಿಯನ್ ಹೆಂಗಸಿಗೆ ಬಿಟ್ಟುಕೊಟ್ಟಳು. ಆ ಹದಿ ವಯಸ್ಸಿನವರು ಭೇಟಿಯಾದಾಗ ಎದುರಿಗೇ ತುಯ್ದಾಡುವ ಕುರ್ಚಿಯಲ್ಲಿ ಕುಳಿತಿರುತ್ತಿದ್ದಳಲ್ಲದೆ ಅವಳು ತಾನು ಹುಡುಗಿಯಾಗಿದ್ದ ರೀತಿಯ ಹಳೆ ವರಸೆಗಳಿಗೆ ಆಸ್ಪದ ಕೊಡುತ್ತಿರಲಿಲ್ಲ. ಭೇಟಿಯ ಸಮಯದಲ್ಲಿ ಕುಳಿತು ಬೇಸರದಿಂದ ಆಕಳಿಸುತ್ತಿದ್ದ ಉರ್ಸುಲಾಳನ್ನು ನೋಡಿ ರೆಬೇಕ, “ಪಾಪದ ಅಮ್ಮ” ಎಂದು ತೋರಿಕೆಯ ರೋಷವನ್ನು ವ್ಯಕ್ತಪಡಿಸುತ್ತಿದ್ದಳು. “ಅವಳು ಸತ್ತ ಮೇಲೆ ಕೊಡೊ ಸನ್ಮಾನ ತೊಗೊಳ್ಳೋದಕ್ಕೆ ಆ ಕುರ್ಚಿಯಲ್ಲೇ ಕುತ್ಕೊಂಡು ಹೋಗ್ತಾಳೆ.” ಮೂರು ತಿಂಗಳ ಅವಧಿಯಲ್ಲಿ ಉಸ್ತುವಾರಿಯಲ್ಲಿ ನಡೆದ ಪ್ರೇಮ ಮತ್ತು ತಾನು ಹೋಗಿ ನೋಡುತ್ತಿದ್ದ ಕಟ್ಟಡದ ಕೆಲಸದ ಆಮೆ ನಡಿಗೆಯ ಪ್ರಗತಿ ಇವುಗಳಿಂದ ಬೇಸತ್ತು ಪಿಯತ್ರೋ ಕ್ರೆಪ್ಸಿ ಚರ್ಚ್ ಕಟ್ಟಿ ಮುಗಿಸಲು ಬೇಕಾದ ಹಣವನ್ನು ತಾನೇ ಕೊಟ್ಟ. ಅಮರಾಂತಳೇನೊ ತಾಳ್ಮೆ ಕಳೆ;ದುಕೊಳ್ಳಲಿಲ್ಲ. ಕಸೂತಿ ಮಾಡುವುದಕ್ಕೆ ಬರುತ್ತಿದ್ದ ಹುಡುಗಿಯರ ಜೊತೆ ಮಾತಾಡುತ್ತ ಹೋಗಿ ಹೊಸ ದಾರಿಗಳನ್ನು ಹುಡುಕಲು ತೊಡಗಿದಳು, ಎಲ್ಲಕ್ಕಿಂತ ಹೆಚ್ಚು ಸರಿಯಾದದ್ದು ಎನಿಸುವ ಉಪಾಯ ಒಂದು ತಪ್ಪಿನಿಂದ ಹಾಳಾಯಿತು. ಅದೇನೆಂದರೆ ರೆಬೇಕಳ ಬೆಡ್‌ರೂಮಿನ ಬೀರುವಿನಲ್ಲಿ ಮದುವೆಯ ಬಟ್ಟೆಗಳ ಜೊತೆ ಇಟ್ಟಿದ್ದ ನುಸಿ ಗುಳಿಗೆಗಳನ್ನು ತೆಗೆದು ಬಿಟ್ಟಿದ್ದಳು. ಅವಳು ಅವುಗಳನ್ನು ಚರ್ಚ್ ಕಟ್ಟಡ ಸಿದ್ಧವಾಗುವುದಕ್ಕೆ ಎರಡು ತಿಂಗಳು ಮುಂಚೆ ಮಾಡಿದ್ದಳು. ಆದರೆ ಮದುವೆ ಹತ್ತಿರ ಬರುತ್ತಿದ್ದರಿಂದ ರೆಬೇಕ ಎಷ್ಟು ತಾಳ್ಮೆಗೆಟ್ಟಿದ್ದಳೆಂದರೆ ಅಮರಾಂತ ಭಾವಿಸಿದ್ದಕ್ಕಿಂತ ಮುಂಚೆಯೇ ಮದುವೆಯ ಉಡುಪುಗಳನ್ನು ಸಿದ್ಧಗೊಳಿಸಿಕೊಳ್ಳುವುದೆಂದು ತೀರ್ಮಾನಿಸಿದಳು. ಅವಳು ಉಡುಪುಗಳನ್ನು ತೆಗೆದು ಮೊದಲು ಪೇಪರ್, ಅನಂತರ ಅದರ ಮೇಲೆ ಸುತ್ತಿದ್ದ್ದ ಬಟ್ಟೆಯನ್ನು ಬಿಚ್ಚಿದಾಗ ಮದುವೆಯ ಬಟ್ಟೆಯ ದಾರ, ಹೊಲಿಗೆಗಳನ್ನಲ್ಲದೆ ಕಿತ್ತಲೆ ಬಣ್ಣದ ಉಡುಪುಗಳನ್ನು ಕೂಡ ಹುಳುಗಳು ತೂತು ಕೊರೆದಿದ್ದವು. ಅವಳಿಗೆ ಮುಷ್ಟಿಯಷ್ಟು ನುಸುಗುಳಿಗೆಯನ್ನು ಸುತ್ತಿಟ್ಟಿದ್ದರ ಖಾತರಿ ಇದ್ದರೂ ನಡೆದ ಅನಾಹುತ ಎಷ್ಟು ಸಹಜವಾಗಿತ್ತೆಂದರೆ ಅವಳು ಯಾರನ್ನೂ ತೆಗಳುವ ಹಾಗಿರಲಿಲ್ಲ. ಮದುವೆಗೆ ಒಂದು ತಿಂಗಳಿಗಿಂತ ಕಡಿಮೆ ಇತ್ತು. ಆದರೆ ಒಂದು ವಾರದೊಳಗೆ ಹೊಸ ಬಟ್ಟೆಗಳನ್ನು ಹೊಲಿಸಿ ಕೊಡುವುದಾಗಿ ಆಂಪೆರೋ ಮೊಸ್ಕೋತೆ ಆಶ್ವಾಸನೆ ಕೊಟ್ಟ. ಆ ದಿನ ಮಧ್ಯಾಹ್ನ ಮಳೆ ಬರುತ್ತಿದ್ದ ಸಮಯದಲ್ಲಿ ಹೊಲಿಸಿ ಪರೀಕ್ಷೆಗಾಗಿ ಆಂಪೆರೋ ರೆಬೇಕಳಿಗೆ ಹೆಣೆದ ಬಟ್ಟೆಗಳನ್ನು ತಂದಾಗ ಅಮರಾಂತಳಿಗೆ ಇನ್ನೇನು ಪ್ರಜ್ಞೆ ತಪ್ಪುವ ಹಾಗಾಯಿತು. ಅವಳಿಗೆ ಗಂಟಲಿನೊಳಗೆ, ಬೆನ್ನ ಹುರಿಯಲ್ಲಿ ಮಂಜು ಇಳಿದಂತಾಯಿತು. ಅನೇಕ ತಿಂಗಳ ಕಾಲ ಅವಳು ಆ ವೇಳೆಗಾಗಿ ಹೆದರಿದ್ದಳು. ಒಂದು ವೇಳೆ ರೆಬೇಕಳ ಮದುವೆ ತಪ್ಪಿಸಲು ತಾನು ಕಲ್ಪಿಸಿಕೊಳ್ಳವಂಥ ಪ್ರಯತ್ನಗಳನ್ನು ಮಾಡಿ ಸೋತರೆ ಕೊನೆ ಗಳಿಗೆಯಲ್ಲಿ ಅವಳಿಗೆ ವಿಷ ಕೊಡುವ ಧೈರ್ಯ ತನಗೆ ಬಂದೇ ಬರುತ್ತೆಂದು ತಿಳಿದಿದ್ದಳು. ಆ ಮಧ್ಯಾಹ್ನ ರೆಬೇಕ ಬಟ್ಟೆ ತೊಟ್ಟು ಸೆಖೆಯಿಂದ ಉಸಿರುಗಟ್ಟಿದಂತಾಗಿ ಒದ್ದಾಡುತ್ತಿರುವಾಗ ತೀರ ತಾಳ್ಮೆಯಿಂದ ಆಂಪೆರೋ ಮೊಸ್ಕೋತೆ ಅಲ್ಲಲ್ಲಿ ಸೂಜಿಗಳನ್ನು ನೆಡುತ್ತಿದ್ದಾಗ, ಅಮರಾಂತ ತನ್ನ ಕಸೂತಿ ಕೆಲಸದಲ್ಲಿ ತುಂಬ ತಪ್ಪುಗಳನ್ನು ಮಾಡಿದಳಲ್ಲದೆ, ಸೂಜಿಯಿಂದ ಬೆರಳು ಚುಚ್ಚಿಕೊಂಡಳು. ಆದರೂ ಆ ದಿನ ಮದುವೆಗೆ ಮುಂಚಿನ ಕೊನೆಯ ಶುಕ್ರವಾರವೆಂದು ಮತ್ತು ಕಾಫಿಗೆ ವಿಷ ಬೆರೆಸಿ ಕೊಡುವ ವಿಧಾನವನ್ನು ಅನುಸರಿಸುವುದೆಂದು ಕೊರೆಯುವ ಮನಸ್ಸಿನಿಂದ ನಿಧರಿಸಿದಳು. +ಅನಿರೀಕ್ಷಿತವಾದ ಮತ್ತೊಂದು ದೊಡ್ಡ ಘಟನೆ ಜರುಗಿ ಮತ್ತೆ ಅದೆಷ್ಟೋ ಸಮಯ ಮುಂದಕ್ಕೆ ಹಾಕಬೇಕಾಯಿತು. ಮದುವೆಗೆ ಒಂದು ವಾರ ಇರುವುದಕ್ಕೆ ಮುಂಚೆ ನಡುರಾತ್ರಿ ಹೊಟ್ಟೆಯಲ್ಲಿ ಏನೋ ಸಿಡಿದು ಎಚ್ಚರಗೊಂಡ ರೆಮಿದಿಯೋಸ್ ತಾನು ಕುಡಿದ ಬಿಸಿ ಮಾಂಸದ ಸಾರನ್ನು ಕಾರಿಕೊಂಡು, ಒದ್ದೆ ಮುದ್ದೆಯಾಗಿ, ಅನಂತರ ಮೂರು ದಿನಗಳಾದ ಮೇಲೆ ತನ್ನ ರಕ್ತದಿಂದಲೇ ವಿಷ ಉಣಿಸಿಕೊಂಡು ಸತ್ತಳು. ಇದರಿಂದ ಅಮರಾಂತ ಸಂದಿಗ್ಧಕ್ಕೊಳಪಟ್ಟಳು. ರೆಮಿದಿಯೋಸ್‌ಳ ಸಾವಿಗೆ ತಾನು ಕಾರಣನೆನ್ನುವ ಅಪರಾಧಿ ಭಾವನೆ ಮುತ್ತಿ ರೆಬೇಕಳಿಗೆ ತಾನು ವಿಷ ಹಾಕದ ಹಾಗೆ ಬೇರೇನಾದರೂ ಭಯಾನಕವನ್ನು ಮಾಡಲು ದೇವರನ್ನು ಪರಿಪರಿಯಿಂದ ಕೇಳಿಕೊಂಡಿದ್ದ್ಟಳು. ಅವಳು ಅಂಥದೊಂದು ತಡೆಯನ್ನು ಅಪೇಕ್ಷಿಸಿರಲಿಲ್ಲ. ರೆಮಿದಿಯೋಸ್ ಮನೆಗೆ ಗೆಲುವನ್ನು ತಂದಿದ್ದಳು. ಅವಳು ಗಂಡನ ಜೊತೆ ವರ್ಕ್‌ಶಾಪ್‌ನ ಪಕ್ಕದ ರೂಮಿನಲ್ಲಿದ್ದು ಅದನ್ನು ತನ್ನ ಚಿಕ್ಕಂದಿನ ಗೊಂಬೆಗಳಿಂದ ಸಿಂಗರಿಸಿದ್ದಳಲ್ಲದೆ ಅವಳ ಚುರುಕುತನ ಬೆಡ್‌ರೂಮಿನ ನಾಲ್ಕು ಗೋಡೆಯಿಂದಾಚೆ ಆರೋಗ್ಯಪೂರ್ಣ ಹವೆಯಂತೆ ಅಂಗಳದ ಗಿಡಗಳ ಜೊತೆ ಹಬ್ಬಿತ್ತು. ಅವಳು ಬೆಳಗಾಗುತ್ತಲೇ ಹಾಡಲು ಶುರು ಮಾಡುತ್ತಿದ್ದಳು. ರೆಬೇಕ ಮತ್ತು ಅಮರಾಂತರ ವಾಗ್ವಾದದ ನಡುವೆ ಬಾಯಿ ಹಾಕಲು ಧೈರ್ಯ ವಹಿಸುತ್ತಿದ್ದವಳೆಂದರೆ ಅವಳೊಬ್ಬಳೇ. ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ನೋಡಿಕೊಳ್ಳುವುದರಲ್ಲಿ ಅವಳು ಸುಸ್ತಾಗಿದ್ದಳು. ಅವನಿಗೆ ಊಟ ಕೊಡುವುದು, ದಿನದ ಅಗತ್ಯಗಳನ್ನು ಪೂರೈಸುವುದು, ಸೋಪಿನಿಂದ ತೊಳೆದು ಬ್ರಷ್ ಮಾಡುವುದು, ತಲೆ ಬಾಚುವುದು ಮತ್ತು ಗಡ್ಡ ಗಂಟಾಗದಂತೆ ನೋಡಿಕೊಳ್ಳುವುದು, ತೆಂಗಿನ ಗರಿಗಳನ್ನು ಒಪ್ಪವಾಗಿಡುವುದು ಮತ್ತು ಅದರ ಮೇಲೆ ಅತಿರೇಕದ ವಾತಾವರಣಕ್ಕೆಂದು ನೀರು ಸೋರದ ಕ್ಯಾನ್‌ವಾಸ್ ಹಾಕುವುದನ್ನು ಮಾಡುತ್ತಿದ್ದಳು. ಅವಳು ಅಂತಿಮ ತಿಂಗಳುಗಳಲ್ಲಿ ಅವನ ಜೊತೆ ಲ್ಯಾಟಿನ್ ಭಾಷೆಯಲ್ಲಿ ರೂಢಿಗತವಾದದ್ದನ್ನು ಮಾತನಾಡುವಷ್ಟು ಶಕ್ತಳಾಗಿದ್ದಳು. ಅವ್ರೇಲಿಯಾನೋ ಮತ್ತು ಪಿಲರ್ ಟೆರ್‍ನೆರಾರ ಮಗನನ್ನು ಮನೆಗೆ ಕರೆದುಕೊಂಡು ಬಂದು ಅವ್ರೇಲಿಯಾನೋ ಹೊಸೆ ಎಂದು ಹೆಸರಿಟ್ಟಾಗ ಅವನನ್ನು ತನ್ನ ಹಿರಿಯ ಮಗನೆಂದು ಕಾಣುವುದಾಗಿ ರೆಮಿದಿಯೋಸ್ ನಿರ್ಧರಿಸಿದ್ದಳು. ಅವಳ ತಾಯ್ತನದ ಭಾವನೆ ಉರ್ಸುಲಾಳನ್ನು ಬೆರಗುಗೊಳಿಸಿತ್ತು. ಅವ್ರೇಲಿಯಾನೋ ಅವಳಲ್ಲಿ ತನ್ನ ಬದುಕಿಗೊಂದು ಅರ್ಥವನ್ನು ಕಂಡುಕೊಂಡಿದ್ದ. ಅವನು ಇಡೀ ದಿನ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರೆಮಿದಿಯೋಸ್ ಅವನಿಗೆ ಕಾಫಿ ತಂದು ಕೊಡುತ್ತಿದ್ದಳು. ಅವರಿಬ್ಬರೂ ಪ್ರತಿ ದಿನ ಸಂಜೆ ಅರ್ಕಾದಿಯೋ ಮೊಸ್ಕೋತೆಯ ಮನೆಗೆ ಹೋಗುತ್ತಿದ್ದರು. ಅವನು ಮಾವನ ಜೊತೆ ಎಂದೂ ಮುಗಿಯದ ಚದುರಂಗದಂಥ ಆಟವಾಡುತ್ತಿದ್ದ. ರೆಮಿದಿಯೋಸ್‌ಳ ಅಕ್ಕಂದಿರು ಮತ್ತು ತಾಯಿಯ ಜೊತೆ ಉಪಯುಕ್ತ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಬ್ಯುಂದಿಯಾ ಮನೆಯವರ ಜೊತೆಗೆ ಅರ್ಕಾದಿಯೋ ಮೊಸ್ಕೋತೆಗಿದ್ದ ಸಂಬಂಧ ಊರಿನಲ್ಲಿ ಅವನ ಅಧಿಕಾರವನ್ನು ಭದ್ರಗೊಳಿಸಿತು. ಆಗಾಗ ಆ ಪ್ರದೇಶದ ರಾಜಧಾನಿಗೆ ಹೋಗಿ ಬರುತ್ತಿದ್ದ ಅವನು, ಸರ್ಕಾರ ಸ್ಕೂಲೊಂದನ್ನು ಕಟ್ಟಿಸುವಂತೆ ಮಾಡಲು ಸಮರ್ಥನಾದ ಮತ್ತು ತನ್ನ ವಿದ್ಯಾಭ್ಯಾಸದಲ್ಲಿ ತನ್ನ ತಾತನಷ್ಟೇ ಉತ್ಸಾಹ ಹೊಂದಿದ್ದ ಅರ್ಕಾದಿಯೋನನ್ನು ಅದಕ್ಕೆ ಉಸ್ತುವಾರಿಯಾಗುವಂತೆ ಮಾಡಿದ. ರಾಷ್ಟ್ರೀಯ ಸ್ವಾತಂತ್ರೋತ್ಸವದ ಹೊತ್ತಿಗೆ ಬಹುತೇಕ ಮನೆಗಳಿಗೆ ನೀಲಿ ಬಣ್ಣ ಬಳಿಯುವಂತೆ ಮತ್ತೆ ಮತ್ತೆ ಹೇಳಿ ಪುಸಲಾಯಿಸಿ ಯಶಸ್ವಿಯಾದ. ಫಾದರ್ ನಿಕನೋರ್ ಒತ್ತಾಯಿಸಿದಂತೆ ಕತಾವುರೆಯ ಅಂಗಡಿಯನ್ನು ಹಿಂದುಗಡೆ ರಸ್ತೆಗೆ ಬದಲಾಯಿಸಿದ ಮತ್ತು ಊರಿನ ಮಧ್ಯದಲ್ಲಿ ಅವ್ಯವಹಾರಗಳನ್ನು ಮಾಡುತ್ತಿದ್ದ ಸಂಸ್ಥೆಗಳನ್ನು ಮುಚ್ಚಿಸಿದ. ಅದೊಂದು ಸಲ ಬಂದೂಕುಧಾರಿ ಪೋಲೀಸರ ಜೊತೆ ಬಂದು ಅವರಿಗೆ ವ್ಯವಸ್ಥೆಯ ಪಾಲನೆಯನ್ನು ಒಪ್ಪಿಸಿಕೊಟ್ಟ. ಆಗ ಊರಿನಲ್ಲಿ ಯಾರೂ ಬಂದೂಕುಧಾರಿಗಳು ಇರಬಾರದೆಂಬ ಒಪ್ಪಂದವನ್ನು ನೆನಪಿಸಿಕೊಳ್ಳಲಿಲ್ಲ. ಅವ್ರೇಲಿಯಾನೋ ತನ್ನ ಮಾವನ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡ. ‘ನೀನು ಅವನಷ್ಟೇ ದಡೂತಿಯಾಗ್ತೀಯ\’ ಎಂದು ಅವನ ಸ್ನೇಹಿತರು ಹೇಳುತ್ತಿದ್ದರು. ಅವನ ನಿಧಾನಗತಿಯ ಜೀವನ ಶೈಲಿಯಿಂದ ಗಲ್ಲದ ಮೇಲಿನ ಮೂಳೆಗಳು ಉಬ್ಬಿ ಕಣ್ಣಿಗೆ ಹೆಚ್ಚಗೆ ಹೊಳಪು ತಂದಿತಷ್ಟೇ ಹೊರತು ಮೈ ಭಾರ ಹೆಚ್ಚಿಸಲಿಲ್ಲ. ಅಥವಾ ಅವನ ಸ್ವಭಾವವನ್ನು ಬದಲಿಸಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಏಕಾಂತ ಧ್ಯಾನದಿಂದ ಅವನ ತುಟಿಯಂಚು ಮತ್ತು ನಿರ್ಧಾರಗಳು ಕಠಿಣವಾದವು. ಅವನು ಮತ್ತು ಅವನ ಹೆಂಡತಿ ಪರಸ್ಪರ ಸಂಸಾರಗಳಲ್ಲಿ ಎಷ್ಟೊಂದು ತೀವ್ರವಾದ ಆತ್ಮೀಯತೆ ಬೆಳೆಸಲು ಸಾಧ್ಯವಾಯಿತೆಂದರೆ ರೆಮಿದಿಯೋಸ್ ತನಗೆ ಮಗುವಾಗಲಿದೆ ಎಂದು ಹೇಳಿದಾಗ ರೆಬೇಕ ಮತ್ತು ಅಮರಾಂತ ಗಂಡು ಮಗುವಾದರೆ ನೀಲಿ ಬಣ್ಣದ ಅಥವಾ ಹೆಣ್ಣಾದರೆ ನೇರಳೆ ಬಣ್ಣದ ಉಣ್ಣೆ ಬಟ್ಟೆಗಳನ್ನು ಹೆಣೆಯುವುದಕ್ಕಾಗಿ ಪರಸ್ಪರ ಜಗಳವಾಡುವುದಿಲ್ಲವೆಂದು ಹೇಳಿದರು. ಕೆಲವು ವರ್ಷಗಳಾದ ನಂತರ ಅರ್ಕಾದಿಯೋ ಗುಂಡಿಕ್ಕುವ ತಂಡದ ಎದುರು ನಿಂತಾಗ ನೆನಪಿಸಿಕೊಂಡವರಲ್ಲಿ ಅವಳು ಕೊನೆಯ ವ್ಯಕ್ತಿಯಾಗಿದ್ದಳು. +ಉರ್ಸುಲಾ ಸೂತಕವನ್ನು ಘೋಷಿಸಿ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ತೀರ ಅಗತ್ಯವಾದ ಕಾರಣಗಳಿಗಲ್ಲದೆ ಯಾರೂ ಹೊರಗೆ ಹೋಗಿಬರದಂತೆ ಮಾಡಿದಳು. ಒಂದು ವರ್ಷದ ತನಕ ಯಾರೂ ಗಟ್ಟಿಯಾಗಿ ಮಾತಾಡಬಾರದೆಂದು ನಿರ್ಬಂಧಿಸಿ ನಿಬಂಧನೆ ಮಾಡಿ ಅವಳ ದೇಹವನ್ನು ಛಾಯಾಚಿತ್ರ ಉಪಕರಣವಿದ್ದಲ್ಲಿ ಕಪ್ಪು ರಿಬ್ಬನ್ ಕಟ್ಟಿದ ರೆಮಿದಿಯೋಸ್ ಭಾವಚಿತ್ರ ಮತ್ತು ಪಕ್ಕದಲ್ಲಿ ಸದಾ ಉರಿಯುವ ಎಣ್ಣೆಯ ದೀಪವನ್ನು ಇಟ್ಟಳು. ಆರದಂತೆ ನೋಡಿಕೊಳ್ಳುವ ಮುಂದಿನ ಜನಾಂಗದವರಿಗೆ ಬಿಳಿ ಬೂಟು ಸ್ಕರ್ಟ್ ತೊಟ್ಟುಕೊಂಡು ತಲೆಗೆ ಪಟ್ಟಿಯನ್ನು ಕಟ್ಟಿಕೊಂಡ ಹುಡುಗಿಯನ್ನು ನೋಡಿ ಅವಳಿಗೂ ಮತ್ತು ಅವಳ ಮುತ್ತಜ್ಜಿಗೂ ಹೋಲಿಕೆಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯವಾಗುವಂತಿತ್ತು, ಅವ್ರೇಲಿಯಾನೋ ಹೊಸೆಯ ಯೋಗಕ್ಷೇಮವನ್ನು ಅಮರಾಂತ ನೋಡಿಕೊಳ್ಳುತ್ತಿದ್ದಳು. ಅವನು ತನ್ನ ಏಕಾಂತದಲ್ಲಿ ಭಾಗಿಯಾಗಲು ಮತ್ತು ರೆಬೇಕಳ ಕಾಫಿಯಲ್ಲಿ ವಿಷ ಬೆರೆಸುವ ಆಲೋಚನೆಯಿಂದ ಮುಕ್ತಳಾಗಲು ಅವನನ್ನು ಮಗನಾಗಿ ದತ್ತು ತೆಗೆದುಕೊಂಡಳು. ಸಾಯಂಕಾಲದ ಹೊತ್ತು ಹ್ಯಾಟ್‌ಗೆ ಒಂದು ಕಪ್ಪು ರಿಬ್ಬನ್ ಸುತ್ತಿಕೊಂಡು ಪಿಯತ್ರೋ ಕ್ರೆಪ್ಸಿ, ಕೈಗಳುದ್ದದ ತನಕ ಕಪ್ಪು ಡ್ರೆಸ್ ಹಾಕಿಕೊಂಡು ಒಳಗಿಂದೊಳಗೆ ರಕ್ತ ಕಾರಿ ಸಾಯುವಂತಿದ್ದ ರೆಬೇಕಳ ಮೌನ ಭೇಟಿಗೆ ಬರುತ್ತಿದ್ದ. ಮದುವೆಯ ದಿನ ಗೊತ್ತುಪಡಿಸಿಕೊಳ್ಳುವ ವಿಷಯವೇ ತೀರ ಅಸಂಬದ್ಧವೆಂದು ತೋರಿ, ಸಧ್ಯದ ಸಂಬಂಧವೇ ನಿರಂತರವೆನಿಸಿ, ಬಸವಳಿದ ಅವರ ಪ್ರೇಮದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕೇವಲ ಹಿಂದಿನ ದಿನಗಳಲ್ಲಿ ಪರಸ್ಪರ ಮುತ್ತಿಕ್ಕಲು ದೀಪವಾರಿಸುವ ಉಪಾಯ ಹುಡುಕುತ್ತಿದ್ದ ಅದೇ ಪ್ರೇಮಿಗಳನ್ನು, ಸಾವಿನ ಇಷ್ಟಕ್ಕೆ ಬಿಟ್ಟು ಬಿಟ್ಟಿದ್ದ್ದರು. ಎಲ್ಲ ನೀತಿ ಮತ್ತು ಸಂಪೂರ್ಣ ನೈತಿಕ ನಿರ್ನಾಮದಿಂದ ರೆಬೇಕ ಮತ್ತೆ ಮಣ್ಣು ತಿನ್ನಲು ಪ್ರಾರಂಭಿಸಿದಳು. +ಇದ್ದಕ್ಕಿದ್ದಂತೆ ಸೂತಕದ ಅವಧಿ ಮುಂದುವರೆದು ಹೆಣಿಗೆ ದಿನಗಳು ಮತ್ತೆ ಪ್ರಾರಂಭವಾದಾಗ ರಣ ಬಿಸಿಲಿನ ಮಧ್ಯಾಹ್ನದ ಎರಡು ಗಂಟೆಗೆ ಮುತ್ತಿದ್ದ ನಿಶ್ಯಬ್ದವನ್ನು ಮುರಿದು ಯಾರೋ ಮುಂಬಾಗಿಲನ್ನು ತಳ್ಳಿದರು. ಅದರ ರಭಸ ಎಷ್ಟಿತ್ತೆಂದರೆ ಅಂಗಳದಲ್ಲಿ ಹೆಣೆಯುತ್ತ ಕುಳಿತಿದ್ದ ಅಮರಾಂತ ಮತ್ತು ಅವಳ ಗೆಳತಿಯರು, ಬೆಡ್‌ರೂಮಿನಲ್ಲಿ ಬೆರಳು ಚೀಪುತ್ತ ಕುಳಿತಿದ್ದ ರೆಬೇಕ, ಅಡುಗೆ ಮನೆಯಲ್ಲಿದ್ದ ಉರ್ಸುಲಾ, ವರ್ಕ್‌ಶಾಪ್‌ನಲ್ಲಿದ್ದ ಅವ್ರೇಲಿಯಾನೋ ಮತ್ತು ಒಂಟಿ ಮರದ ಕೆಳಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಎಲ್ಲರಿಗೂ ಭೂಕಂಪದಿಂದ ಮನೆ ಬೀಳುತ್ತಿದೆ ಎನ್ನಿಸಿತು. ದೈತ್ಯಾಕಾರದ ಮನುಷ್ಯನೊಬ್ಬ ಬಂದಿದ್ದ. ಬಾಗಿಲಿನಿಂದ ಅವನ ಭುಜಗಳು ಹಾಯುವಂತಿರಲಿಲ್ಲ. ಅವನು ಕೋಣದಂಥ ಕತ್ತಿನಲ್ಲಿ ಒಂದು ಮೆಡಲ್ ಹಾಕಿಕೊಂಡಿದ್ದ. ಅವನ ಎದೆ ಮತ್ತು ಕೈಗಳು ಬಗೆ ಬಗೆಯ ಹಚ್ಚೆಯಿಂದ ತುಂಬಿಹೋಗಿತ್ತು. ಅವನ ಬಲಗೈಯಲ್ಲಿ ತಾಮ್ರದ ಕಡಗವಿತ್ತು, ಹೊರಗಿನ ಉಪ್ಪುಪ್ಪು ಗಾಳಿಯಿಂದ ಮೈ ಚರ್ಮ ಕಂದಾಗಿತ್ತು, ಚಿಕ್ಕದಾಗಿ ಕತ್ತರಿಸಿದ ಕೂದಲಿತ್ತು, ಕಬ್ಬಿಣದ ವಸಡುಗಳ ಮುಖದಲ್ಲಿ ವಿಷಾದದ ಕಿರುನಗೆ ಇತ್ತು. ಹಾಕಿಕೊಂಡಿದ್ದ ಬೆಲ್ಟ್, ಕುದುರೆಗೆ ಕಟ್ಟಿದ ಎರಡರಷ್ಟು ದಪ್ಪವಿತ್ತು ಮತ್ತು ಬೂಟುಗಳಿಗೆ ಕಬ್ಬಿಣ ಲಾಳಗಳಿದ್ದು ನಡೆದರೆ ನೆಲ ಅದುರುತ್ತಿತ್ತು. ಅವನು ಕೈಯಲ್ಲಿ ನೇತಾಡುವ ಬ್ಯಾಗ್‌ಗಳನ್ನು ಹಿಡಿದು ನಡುಮನೆ, ಹಜಾರ ದಾಟಿ ಗಿಡಗಳಿದ್ದ ಅಂಗಳಕ್ಕೆ ಹೋಗಿ ಅಮರಾಂತ ಮತ್ತು ಅವಳ ಗೆಳತಿಯರಿಗೆ ಸೂಜಿಗಳನ್ನು ಗಾಳಿಯಲ್ಲಿ ಹಿಡಿದಂತೆಯೇ ಮರಗಟ್ಟುವಂತೆ ಮಾಡಿದ. ಬೆಡ್‌ರೂಮಿನ ಪಕ್ಕದಲ್ಲಿ ಹಾದು ಹೋದವನನ್ನು ಕಂಡ ರೆಬೇಕಳಿಗೆ, “ಹಲ್ಲೊ” ಎಂದ. ತೀರ ಗಮನವಿಟ್ಟು ಬೆಳ್ಳಿಯ ಕೆಲಸದಲ್ಲಿ ತೊಡಗಿದ್ದ ಅವ್ರೇಲಿಯಾನೋಗೆ, “ಹಲ್ಲೊ” ಎಂದ. ಅವನು ಎಲ್ಲೂ ನಿಲ್ಲಲಿಲ್ಲ. ಪ್ರಂಪಚದ ಆ ಕಡೆಯಿಂದ ಶುರುವಾದ ಅವನ ನಡೆದಾಟ, ನೇರವಾಗಿ ಅಡುಗೆ ಮನೆಗೆ ಹೋಗಿ ನಿಂತಾಗ ಕೊನೆಯಾಯಿತು. ಅವನು, “ಹಲ್ಲೊ” ಎಂದ. ಬಿಟ್ಟ ಬಾಯಿ ಬಿಟ್ಟ ಹಾಗೆ ನಿಂತುಕೊಂಡ ಉರ್ಸುಲಾ ಅವನ ಕಡೆ ನೋಡಿ, ಅಳು ಉಕ್ಕಿ ಅವನ ಕುತ್ತಿಗೆಯ ಸುತ್ತ ಕೈ ಹಾಕಿ ಸಂತೋಷದಿಂದ ಅತ್ತಳು. ಅವನು ಹೊಸೆ ಅರ್ಕಾದಿಯೋ. ಅಲ್ಲಿಂದ ಅವನು ಹೋದಾಗ ಎಷ್ಟು ಬಡವನಾಗಿದ್ದನೋ ವಾಪಸು ಬಂದಾಗಲೂ ಅಷ್ಟೇ ಬಡವನಾಗಿದ್ದರಿಂದ ಅವನ ಕುದುರೆ ಬಾಡಿಗೆ ಎರಡು ಪೇಸೋವನ್ನು ಅವಳು ಕೊಡಬೇಕಾಯಿತು. ಅವನು ಆಡಿದ ಸ್ಪ್ಯಾನಿಷ್ ಭಾಷೆ ನಾವಿಕರ ಧಾಟಿಯದಾಗಿತ್ತು. “ಎಲ್ಲಿಗೆ ಹೋಗಿದ್ದಿ” ಎಂದು ಅವರು ಕೇಳಿದ್ದಕ್ಕೆ, “ಎಲ್ಲೋ ದೂರ” ಎಂದು ಉತ್ತರಿಸಿದ. ಅವರು ತೋರಿಸಿದ ಕಡೆ ಹಾಸಿಗೆ ಉರುಳಿಸಿ ಮೂರು ದಿನ ಮಲಗಿದ. ಅವನು ಎದ್ದ ಮೇಲೆ ಹದಿನಾರು ಹಸಿ ಮೊಟ್ಟೆಗಳನ್ನು ತಿಂದು ನೇರವಾಗಿ ಕತಾವುರೆಯ ಅಂಗಡಿಗೆ ಹೋದಾಗ ಅಲ್ಲಿ ಅವನ ಅಗಾಧ ಆಕಾರ ಹೆಂಗಸರಲ್ಲಿ ಕುತೂಹಲದಿಂದ ಕೂಡಿದ ಭಯ ಹುಟ್ಟಿಸಿತು. ಅವನಿಗೆ ಹಾಡು ಹಾಕಲು ಹೇಳಿ ಎಲ್ಲರಿಗೂ ಮದ್ಯ ಕೊಡಿಸಿದ. ಐದು ಜನರ ಜೊತೆ ಒಟ್ಟಿಗೆ ಕುಸ್ತಿ ಮಾಡುತ್ತೇನೆಂದು ಹೇಳಿದಾಗ ಅವರು, “ಹಾಗೆ ಮಾಡುವಂತಿಲ್ಲ”ಎಂದರು. ಅವನ ಕೈಯನ್ನೂ ಜರುಗಿಸಲು ಆಗುವುದಿಲ್ಲವೆಂದು ಅವರಿಗೆ ಖಾತ್ರಿಯಾಗಿತ್ತು. ಶಕ್ತಿ ಮತ್ತು ಪವಾಡಗಳ ಬಗ್ಗೆ ನಂಬಿಕೆ ಇರದ ಕತಾವುರೆ ಅವನಿಗೆ ತನ್ನ ಕೌಂಟರನ್ನು ಜರುಗಿಸಲು ಸಾಧ್ಯವಿಲ್ಲ ಎಂದು ಹನ್ನೆರಡು ಪೇಸೋ ಬೆಟ್ ಕಟ್ಟಿದ. ಹೊಸೆ ಆರ್ಕೆಡೊ ಅದನ್ನು ಅದರ ಸ್ಥಳದಿಂದ ಕಿತ್ತು ತಲೆಯ ಮೇಲಿಟ್ಟುಕೊಂಡು ಬಂದು ರಸ್ತೆಯಲ್ಲಿಟ್ಟ. ಅದನ್ನು ವಾಪಸು ತರುವುದಕ್ಕೆ ಹನ್ನೊಂದು ಜನರು ಬೇಕಾಯಿತು. ಅವನು ಪಾರ್ಟಿಯ ಭರದಲ್ಲಿ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಅನೇಕ ಭಾಷೆಗಳಲ್ಲಿ ಬರೆದಿದ್ದ ಪೂರ್ತಿ ಹಚ್ಚೆಗಳಿದ್ದ ತನ್ನ ಮರ್ಮಾಂಗವನ್ನು ತೋರಿಸಿದ. ಅವನನ್ನು ಮುತ್ತಿ ಜಮಾಯಿಸಿದ ಹೆಂಗಸರಿಗೆ, “ಯಾರು ಎಲ್ಲರಿಗಿಂತ ಹೆಚ್ಚು ಕೊಡ್ತೀರಿ” ಎಂದು ಕೇಳಿದ. ಹೆಚ್ಚು ಹಣವಿದ್ದವಳೊಬ್ಬಳು ಇಪ್ಪತ್ತು ಪೇಸೋ ಕೊಡುತ್ತೇನೆಂದಳು. ಅನಂತರ ಅವನು ಒಂದು ಸಲಕ್ಕೆ ಹತ್ತು ಪೇಸೋವಂತೆ ಲಾಟರಿ ಹಾಕಲು ಸೂಚಿಸಿದ. ಏಕೆಂದರೆ ತುಂಬ ಬಯಸುವ ಹೆಂಗಸೊಬ್ಬಳು ಒಂದು ರಾತ್ರಿಗೆ ಎಂಟು ಪೇಸೋ ಪಡೆಯುತ್ತಿದ್ದಳು. ಆದರೆ ಅವರೆಲ್ಲರಿಗೆ ಅದು ಒಪ್ಪಿಗೆಯಾಯಿತು. ಹದಿನಾಲ್ಕು ಕಾಗದದ ಚೀಟಿಯಲ್ಲಿ ಅವರ ಹೆಸರುಗಳನ್ನು ಬರೆದು ಒಂದು ಹ್ಯಾಟ್‌ನಲ್ಲಿ ಹಾಕಿದರು. ಮತ್ತು ಒಬ್ಬೊಬ್ಬರೂ ಒಂದೊಂದು ಚೀಟಿ ತೆಗೆದರು. ಕೊನೆಯ ಎರಡು ಚೀಟಿಗಳು ಉಳಿದಾಗ ಅವು ಯಾರವೆಂದು ತಿಳಿಯಿತು. +“ತಲಾ ಐದು ಪೇಸೋ ಹೆಚ್ಚಿಗೆ ಕೊಡಿ. ನಂಗೆ ಇಬ್ಬರೂ ಬೇಕು” ಎಂದ ಹೊಸೆ ಅರ್ಕಾದಿಯೋ. +ಅವನು ಜೀವನ ಮಾಡುತ್ತಿದ್ದದ್ದು ಅದೇ ರೀತಿ. ಅವನು ಪ್ರಪಂಚವನ್ನು ಅರವತ್ತ್ಯೆದು ಸಲ ಸುತ್ತಿ, ದೇಶವಿರದ ವ್ಯಕ್ತಿ ಎಂದು ನಾವಿಕರ ಗುಂಪಿನ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದ. ಆ ರಾತ್ರಿ ಅವನ ಜೊತೆ ಮಲಗಿದ ಹೆಂಗಸರು, ಹಿಂದೆ ಮುಂದೆ, ಕಾಲು ತುದಿಯಿಂದ ಕುತ್ತಿಗೆಯ ತನಕ ಒಂದಿಷ್ಟೂ ಬಿಡದೆ ಮೈಯೆಲ್ಲ ಹಚ್ಚೆ ಹುಯಿಸಿಕೊಂಡಿದ್ದ ಅವನನ್ನು, ಇತರರು ನೋಡಲಿ ಎಂದು ಬೆತ್ತಲೆಯಾಗಿ ಹಜಾರಕ್ಕೆ ಕರೆದುಕೊಂಡು ಬಂದರು. ಅವನಿಗೆ ಮನೆಯವರ ಜೊತೆ ಸೇರಿ ಒಬ್ಬನಾಗುವುದರಲ್ಲಿ ಜಯ ಸಿಕ್ಕಲಿಲ್ಲ. ಇಡೀ ದಿನ ಮಲಗಿ ರಾತ್ರಿ ಕೆಂಪು ದೀಪದ ಸ್ಥಳದಲ್ಲಿ ತನ್ನ ಶಕ್ತಿಯ ಬಗ್ಗೆ ಬಾಜಿ ಕಟ್ಟುತ್ತಿದ್ದ. ಅಪರೂಪದ ಸಂದರ್ಭಗಳಲ್ಲಿ ಉರ್ಸುಲಾ ಅವನನ್ನು ಟೇಬಲ್ ಬಳಿ ಕುಳಿತುಕೊಳ್ಳುವಂತೆ ಮಾಡಿದಾU, ಅವನು ಮುಖ್ಯವಾಗಿ ದೂರದ ದೇಶದಲ್ಲಿ ತನ್ನ ಸಾಹಸವನ್ನು ಕುರಿತು ಹೇಳುವಾಗ, ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದ. ಅವನಿದ್ದ ನೌಕೆ ಒಂದು ಸಲ ಅಪಘಾತಕ್ಕೆ ಒಳಗಾಗಿತ್ತು. ಎರಡು ವಾರ ಜಪಾನ್ ಸಮುದ್ರದಲ್ಲಿ ಎಲ್ಲೆಂದರಲ್ಲಿ ಹೋಗಿ ಸೂರ್ಯನ ತಾಪಕ್ಕೆ ಸಿಕ್ಕು ಉಪ್ಪುಪ್ಪಾಗಿ ಬೆಂದು ಹೋದ ಜೊತೆಗಾರರ ದೇಹವನ್ನೇ ಅವನು ತಿನ್ನುತ್ತಿದ್ದಾಗ ಸಿಹಿ ಬೆರೆತ ವಿಚಿತ್ರ ರುಚಿ ಕಂಡಿತ್ತು. ನಡುಮಧ್ಯಾಹ್ನದ ಪ್ರಕಾಶದಲ್ಲಿ ಒಂದು ದಿನ ಬಂಗಾಳ ಕೊಲ್ಲಿಯಲ್ಲಿ ಕೊಂದ ಮೊಸಳೆಯ ಹೊಟ್ಟೆಯಲ್ಲಿ ಹೆಲ್‌ಮೆಟ್, ಮನುಷ್ಯನೊಬ್ಬನ ಆಯುಧ, ಬಕಲ್‌ಗಳು ಸಿಕ್ಕಿದ್ದವು. ಕ್ಯಾರಿಬಿಯನ್‌ನಲ್ಲಿ ಬಿರುಗಾಳಿಗೆ ಸಿಕ್ಕು ಚಿಂದಿಯಾದ ಹಾಯಿಗಳು, ಸಮುದ್ರ ಜಂತುಗಳು ತಿಂದಿದ್ದ ಪಟಸ್ತಂಭವಿತ್ತು. ಜೊತೆಗೆ ಇನ್ನೂ ಗಾಡೆಲೋಪ್‌ನ ದಾರಿಯನ್ನು ಹುಡುಕುತ್ತಿದ್ದ ವಿಕ್ಟರ್ ಹ್ಯೂಸ್‌ನ ನೌಕೆಯ ನಕಲಿನ ದೆವ್ವದಾಕಾರವನ್ನು ನೋಡಿದ್ದ. ಹೊಸೆ ಅರ್ಕಾದಿಯೋ ಬರೆಯದೇ ಇದ್ದ, ಅವನ ಸಾಹಸ ಮತ್ತು ದುಸ್ಸಾಹಸಗಳ ಕಾಗದಗಳನ್ನು ಓದುತ್ತಿರುವರೇನೋ ಎನ್ನುವಂತೆ, ಉರ್ಸುಲಾ ಅವುಗಳನ್ನು ಹೇಳಿಕೊಂಡು ಟೇಬಲ್‌ನಲ್ಲಿ ಕುಳಿತು ಅಳುತ್ತಿದ್ದಳು. “ಮಗನೆ, ನಿನಗಾಗಿ ಇಲ್ಲಿ ಮನೆಯಲ್ಲಿ ಅಷ್ಟೊಂದಿದೆ… ಮಿಕ್ಕ ಹಂದಿಗಳಿಗೆ ಹಾಕುವಷ್ಟು” ಎಂದು ಬಿಕ್ಕುತ್ತಿದ್ದಳು. ಆದರೆ ಜಿಪ್ಸಿಗಳು ಕರೆದುಕೊಂಡು ಹೋದ ಅದೇ ಹುಡುಗ ಈಗ ಊಟಕ್ಕೆ ಅಧ ಹಂದಿ ತಿನ್ನುವ ಹಾಗಾಗಿದ್ದಾನೆ ಮತ್ತು ಅವನು ಹೂಸಿದರೆ ಹೂಗಳು ಅದುರುತ್ತವೆಂದು ಅವಳಿಗೆ ತಿಳಿದಿರಲಿಲ್ಲ. ಸಂಸಾರದ ಇತರರಿಗೂ ಹೆಚ್ಚು ಕಡಿಮೆ ಹೀಗೆಯೇ ಆಯಿತು. ಅಮರಾಂತ ಅವನ ಲೈಂಗಿಕ ದಾಹದ ಬಗ್ಗೆ ತನ್ನ ಜಿಗುಪ್ಸೆಯನ್ನು ಮುಚ್ಚಿಡಲಾಗಲಿಲ್ಲ. ಪರಸ್ಪರ ಸಂಬಂಧದ ಮೂಲವನ್ನರಿಯದ ಅವರ ವಿಶ್ವಾಸವನ್ನು ಪಡೆಯುವ ಅರ್ಕಾದಿಯೋ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರಲಿಲ್ಲ. ಬಾಲ್ಯದಲ್ಲಿ ತಾವಿಬ್ಬರೂ ಒಟ್ಟಿಗೆ ರೂಮಿನಲ್ಲಿ ಮಲಗುತ್ತಿದ್ದ ದಿನಗಳನ್ನು ಮರುಜೀವಿಸಲು ಅವೆಲಿಯಾನೋ ಪ್ರಯತ್ನಿಸಿz. ಆದರೆ ಸಮುದ್ರ ಸಂಬಂಧಿತ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕಾದ ಲೆಕ್ಕವಿಲ್ಲದಷ್ಟು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒತ್ತಡದಿಂದ ತುಂಬಿ ಹೋಗಿ ಅರ್ಕಾದಿಯೋ ಅವನೆಲ್ಲ ಮರೆತು ಬಿಟ್ಟಿದ್ದ. ಅದರ ಮೊದಲ ಪ್ರಭಾವಕ್ಕೆ ಒಳಗಾದವಳೆಂದರೆ ರೆಬೇಕ. ಅವನು ತನ್ನ ಬೆಡ್ ರೂಮು ದಾಟಿ ಹೋದ ದಿನ ಅವನ ಗೊರಕೆ ಇಡೀ ಮನೆಯಲ್ಲಿ ಕೇಳುವಂತಿದ್ದು ಪಿಯತ್ರೋ ಕೆಪ್ಸಿ ಕೇವಲ ಸೊಗಸುಗಾರನೆಂದು ಭಾವಿಸಿದಳು. ಅವಳು ಯಾವುದೇ ಕಾರಣದಿಂದ ಅವನ ಹತ್ತಿರ ಹೋಗಲು ಪ್ರಯತ್ನಿಸುತ್ತಿದ್ದಳು. ಯಾವುದೋ ಸಂದರ್ಭದಲ್ಲಿ ಅವಳ ದೇಹದ ಕಡೆ ನಾಚಿಕೆಯಿಲ್ಲದೆ ನೋಡಿ, “ತಂಗಿ, ನೀನೂ ಕೂಡ ಹೆಣ್ಣು” ಎಂದ. ರೆಬೇಕಳಿಗೆ ಮೈಮೇಲಿನ ಸ್ತಿಮಿತ ತಪ್ಪಿಹೋಯಿತು. ಅವಳು ಮೊದಲಿನ ರೀತಿಯಲ್ಲೇ ಮಣ್ಣು ಮತ್ತು ಗೋ;ಡೆಯ ಹೆಕ್ಕಳವನ್ನು ತಿನ್ನಲು ಪ್ರಾರಂಭಿಸಿದಳು. ಜೊತೆಗೆ ಅದೆಷ್ಟು ಆತಂಕದಿಂದ ಬೆರಳು ಚೀಪುತ್ತಿದ್ದಳೆಂದರೆ, ಹೆಬ್ಬೆಟ್ಟು ಮರಗಟ್ಟಿ ಹೋಯಿತು. ಅವಳು ಹಸಿರು ಬಣ್ಣದಂಥದನ್ನು ವಾಂತಿ ಮಾಡಿದ್ದರಲ್ಲಿ ಸತ್ತ ಜಿಗಣೆಗಳಿದ್ದವು. ರಾತ್ರಿಯಲ್ಲಿ ಎಚ್ಚರದಿಂದಿದ್ದು ಜ್ವರದಿಂದ ನಡುಗುತ್ತ, ತೀರ ಉದ್ರೇಕಗೊಳ್ಳದಂತೆ ತನ್ನೊಳಗೇ ಹೊಡೆದಾಡುತ್ತ, ಬೆಳಗಿನ ಹೊತ್ತು ಹೊಸೆ ಅರ್ಕಾದಿಯೋ ಇಡೀ ಮನೆ ಅದುರುವಂತೆ ಬಂದು ಮನೆಯಲ್ಲಿ ಮಲಗುವ ತನಕ ಕಳೆಯುತ್ತಿದ್ದಳು. ಒಂದು ಮಧ್ಯಾಹ್ನ ಎಲ್ಲರೂ ಸಣ್ಣ ನಿದ್ದೆಯಲ್ಲಿದ್ದಾಗ ತಡೆಯಲಾಗದೆ ಅವನ ಬೆಡ್‌ರೂಮಿಗೆ ಹೋದಳು. ಅವನು ತೊಲೆಗೆ ನೇತುಹಾಕಿದ್ದ ಹಡಗಿನ ಮೂಲೆಗೆ ತಗುಲಿ ಹಾಕುವುದನ್ನು ಹಾಸಿಗೆ ಮಾಡಿ ಅದರ ಮೇಲೆ ಸಣ್ಣ ಚಡ್ಡಿಯಲ್ಲಿ ಮೈ ಚಾಚಿದ್ದ. ಅವನ ಅಗಾಧವಾದ ಬೆತ್ತಲೆಯ ಆಕಾರವನ್ನು ನೋಡಿ ವಾಪಸು ಹೋಗುವ ಮನಸ್ಸಾಯಿತು. ಆದರೆ, “ನೀವಿದೀರಿ ಅಂತ ಗೊತ್ತಿರ್‍ಲಿಲ” ಎಂದು ಸಣ್ಣಗೆ ಯಾರೂ ಎದ್ದೇಳದ ಹಾಗೆ ಹೇಳಿದಳು. “ಇಲ್ಲಿ ಬನ್ನಿ” ಎಂದ. ಅವಳು ಹಾಗೆಯೇ ಮಾಡಿದಳು. ಹೊಸೆ ಅರ್ಕಾದಿಯೋ ಬೆರಳ ತುದಿಯಿಂದ ಅವಳ ಮೊಳಕಾಲು, ಮೀನಕಂಡ, ಹಾಗೂ ತೊಡೆಯನ್ನು ತಟ್ಟುತ್ತ, “ಚಿಕ್ಕ ತಂಗಿ, ಚಿಕ್ಕ ತಂಗಿ” ಎಂದು ಮುಲುಗುಟ್ಟುತ್ತಿರುವಾಗ ಅವಳು ಬೆವರಿನ ಕೊರೆತದಿಂದ, ಕರುಳುಗಳಲ್ಲೇನೋ ಗಂಟು ಹಾಕಿದಂತಾಗಿ, ಹಾಸಿಗೆ ಹತ್ತಿರ ನಿಂತಳು. ಬಿರುಗಾಳಿಯಂಥ ಶಕ್ತಿಯೊಂದು ತನ್ನ ಸೊಂಟವನ್ನೆತ್ತಿ ಬಗೆದು ಒಳಗಿನದೆಲ್ಲವನ್ನೂ ಸೂರೆ ಹೊಡೆದು, ಹಕ್ಕಿಯಂತೆ ಜಾಡಾಯಿಸಿದಾಗ, ಸಾಯುವುದನ್ನು ತಪ್ಪಿಸಿಕೊಳ್ಳಲು ಅವಳು ಅತೀವ ಶ್ರಮ ಪಡಬೇಕಾಯಿತು. ಬ್ಲಾಟಿಂಗ್ ಪೇಪರಿನಂತೆ ಚಿಮ್ಮಿದ ರಕ್ತವನ್ನು ಹೀರಿಕೊಂಡ ಆವಿ ಹೊಮ್ಮಿಸುತ್ತಿದ್ದ ಹಾಸಿಗೆಯಲ್ಲಿದ್ದ ಅವಳು ತಾನು ತಡೆದುಕೊಳ್ಳಲಾಗದಂಥ ನೋವಿನ, ವಿವರಿಸಲಾಗದ ಸಂತೋಷದಲ್ಲಿ ಕೊಚ್ಚಿ ಹೋಗುವ ಮುಂಚೆ ಜನ್ಮ ತಳೆದದ್ದಕ್ಕಾಗಿ ದೇವರಿಗೆ ವಂದಿಸಿದಳು. +ಮೂರು ದಿನಗಳ ನಂತರ ಐದು ಗಂಟೆಯ ಪ್ರಾರ್ಥನೆಯ ಸಮಯದಲ್ಲಿ ಅವರು ಮದುವೆಯಾದರು. ಹಿಂದಿನ ದಿನ ಹೊಸೆ ಅರ್ಕಾದಿಯೋ ಪಿಯತ್ರೋ ಕ್ರೆಪ್ಸಿಯ ಅಂಗಡಿಗೆ ಹೋಗಿದ್ದ. ಸಂಗೀತ ವಾದ್ಯದ ಪಾಠ ಮಾಡುತ್ತಿದ್ದ ಅವನು ಪಕ್ಕಕ್ಕೆ ಕರೆದು ಮಾತನಾಡಿಸಲಿಲ್ಲ. “ನಾನು ರೆಬೇಕಳನ್ನು ಮದುವೆ ಆಗ್ತಿದೀನಿ” ಎಂದು ಅವನಿಗೆ ಹೇಳಿದ. ಪಿಯತ್ರೋ ಕ್ರೆಪ್ಸಿ ಬಿಳುಚಿಕೊಂಡು ವಾದ್ಯವನ್ನು ವಿದ್ಯಾರ್ಥಿಯೊಬ್ಬನಿಗೆ ಕೊಟ್ಟು ತರಗತಿಯನ್ನು ಮುಕ್ತಾಯ ಮಾಡಿz. ಅನಂತರ ಅವರು ಸಂಗೀತ ವಾದ್ಯ ಮತ್ತು ಯಾಂತ್ರಿಕ ಬೊಂಬೆಗಳಿದ್ದ ರೂಮಿನಲ್ಲಿ ಇಬ್ಬರೇ ಇದ್ದಾಗ ಪಿಯತ್ರೋ ಕ್ರೆಪ್ಸಿ ಹೇಳಿದ: +“ಅವಳು ನಿನ್ನ ತಂಗಿ” +“ನಂಗೆ ಅದು ಬೇಕಿಲ್ಲ” +ಪಿಯತ್ರೋ ಕ್ರೆಪ್ಸಿ ಸುವಾಸನೆ ಬೀರುತ್ತಿದ್ದ ಕರ್ಚೀಫ್‌ನಿಂದ ಹುಬ್ಬನ್ನು ಒರೆಸಿಕೊಂಡ. +“ಅದು ಸಹಜವಲ್ಲ” ಎಂದು ಮುಂದುವರೆಸಿ,” ಅಲ್ದೆ ಅದು ಕಾನೂನಿಗೆ ವಿರುದ್ಧವಾದ್ದು.” +ಹೊಸೆ ಅರ್ಕಾದಿಯೋಗೆ ವಾಗ್ವಾದಕ್ಕಿಂತ ಹೆಚ್ಚಾಗಿ ಪಿಯತ್ರೋ ಕ್ರೆಪ್ಸಿ ಬಿಳುಚಿಕೊಂಡಿದ್ದರಿಂದ ಅಸಹನೆಯುಂಟಾಯಿತು. +“ಅದನ್ನೆಲ್ಲ ಬಿಟ್ಟು ಹಾಕಿ… ರೆಬೇಕಳನ್ನು ಏನೂ ಕೇಳ್ಬೇಡಿ ಅಂತ ಹೇಳೋದಕ್ಕೆ ಬಂದಿದೀನಿ” ಎಂದ. +ಪಿಯತ್ರೋ ಕ್ರೆಪ್ಸಿಯ ಕಣ್ಣುಗಳು ಹನಿಗೂಡಿದ್ದು ಕಂಡ ಅವನ ಗಡಸು ಧ್ವನಿ ಮೆತ್ತಗಾಯಿತು. +“ಇಲ್ನೋಡಿ. ನಿಮ್ಗೆ ಆ ಮನೆಯವ್ರು ಇಷ್ಟವಿರೋದಾದ್ರೆ ಅಮರಾಂತ ಇದಾಳೆ” ಎಂದು ಬೇರೆಯದೇ ಧ್ವನಿಯಲ್ಲಿ ಹೇಳಿದ. +ಫಾದರ್ ನಿಕನೋರ್ ಭಾನುವಾರದ ತನ್ನ ಉಪದೇಶದಲ್ಲಿ ಹೊಸೆ ಅರ್ಕಾದಿಯೋ ಮತ್ತು ರೆಬೇಕ ಅಣ್ಣ ತಂಗಿಯರಲ್ಲವೆಂದು ಹೇಳಿದರು. ಅಂಥ ಅವಮರ್ಯಾದೆಯನ್ನು ಎಂದೂ ಕ್ಷಮಿಸದ ಉರ್ಸುಲಾ ಚಚ್ನಿಂದ ಅವರು ಬಂದ ಮೇಲೆ ಮನೆಯೊಳಗೆ ಕಾಲಿಡದಂತೆ ಮಾಡಿದಳು. ಅವಳ ಮಟ್ಟಿಗೆ ಅವರು ಸತ್ತ ಹಾU. ಅವರು ಸ್ಮಶಾನದಿಂದ ಕೊಂಚ ದೂರದಲ್ಲಿ ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಹೊಸೆ ಅರ್ಕಾದಿಯೋನ ಹಾಸಿಗೆ ಬಿಟ್ಟರೆ ಬೇರೆ ಯಾವ ಪೀಠೋಪಕರಣಗಳೂ ಇರಲಿಲ್ಲ. ಮದುವೆಯ ದಿನ ರಾತ್ರಿ ರೆಬೇಕಳ ಚಪ್ಪಲಿಯಲ್ಲಿದ್ದ ಚೇಳು ಅವಳ ಕಾಲನ್ನು ಕಚ್ಚಿತ್ತು. ಅದರಿಂದ ಅವಳ ಮಾತು ಉಡುಗಿತ್ತು. ಆದರೆ ಇಡೀ ರಾತ್ರಿಯ ಕಾಮಕೇಳಿಯನ್ನು ಅದು ನಿಲ್ಲಿಸಲಿಲ್ಲ. ಒಂದೇ ರಾತ್ರಿ ಎಂಟು ಸಲ ಕೂಗಿಕೊಂಡಿದ್ದಕ್ಕಾಗಿ ಊರಿನವರೆಲ್ಲ ಎಚ್ಚರವಾಗಿ ಅಕ್ಕಪಕ್ಕದವರು ಬೆರಗಾಗಿದ್ದರು. ಮತ್ತೆ ಮಾರನೆ ದಿನ ಮಧ್ಯಾಹ್ನದ ಮಲಗುವ ಸಮಯದಲ್ಲೂ ಮೂರು ಸಲ ಹಾಗೆಯೇ ಆಗಿದ್ದಕ್ಕೆ, ಅಷ್ಟೊಂದು ಪ್ರೇಮಾವೇಶ ಸತ್ತವರ ಶಾಂತಿಯನ್ನು ಕಲಕದಿರಲಿ ಎಂದು ಪ್ರಾರ್ಥಿಸಿದರು. +ಅವ್ರೇಲಿಯಾನೋ ಮಾತ್ರ ಅವರ ಬಗ್ಗೆ ಆಸ್ಥೆ ವಹಿಸಿ, ಅವರಿಗೆ ಕೆಲವು ಪೀಠೋಪಕರಣಗಳನ್ನು ತಂದು ಕೊಟ್ಟಿದ್ದಲ್ಲದೆ, ಹೊಸೆ ಅರ್ಕಾದಿಯೋಗೆ ವಾಸ್ತವದ ಆರಿವಾಗಿ ಮನೆಯಂಗಳದ ಪಕ್ಕದ ಯಾರಿಗೂ ಸೇರಿರದ ಸ್ಥಳದಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ತನಕ ಸಹಾಯವಾಗಲೆಂದು ಒಂದಿಷ್ಟು ಹಣ ಕೊಟ್ಟ. ಆದರೆ ಅಮರಾಂತಳಿಗೆ ತಾನು ಕನಸು ಕಂಡಿರದಂಥ ಸಮಾಧಾನ ದೊರಕಿದರೂ ರೆಬೇಕಳ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಪಿಯತ್ರೋ ಕ್ರೆಪ್ಸಿ ತನಗುಂಟಾದ ಅವಮಾನವನ್ನು ಹೇಗೆ ನಿವಾರಿಸಬೇಕೆಂದು ತಿಳಿಯದೆ, ತನ್ನ ಸೋಲನ್ನು ಮರೆತು ಶಾಂತಚಿತ್ತನಾಗಿ, ಉರ್ಸುಲಾ ಆಸಕ್ತಿವಹಿಸಿದ್ದರಿಂದ ಪ್ರತಿ ಮಂಗಳವಾರ ರಾತ್ರಿ ಅವರ ಮನೆಯಲ್ಲಿ ಊಟ ಮಾಡುವುದನ್ನು ಮುಂದುವರಿಸಿದ. ಅವರ ಮನೆಯ ಗೌರವ ಸೂಚಕವಾಗಿ ಅವನಿನ್ನೂ ಹ್ಯಾಟ್‌ಗೆ ಕಪ್ಪನೆ ರಿಬ್ಬನ್ ಕಟ್ಟಿಕೊಂಡಿರುತ್ತಿದ್ದ. ಅವನು ಉರ್ಸುಲಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲು ಪೋರ್ಚುಗೀಸ್‌ನ ಪ್ರಖ್ಯಾತ ಶಿಲೆ, ಟರ್ಕಿಯ ಮುರಬ್ಬ ಹಾಗೂ ಯಾವುದೋ ಸಂದರ್ಭದಲ್ಲಿ ಮನೀಲಾದ ಶಾಲ್ ಮುಂತಾದ ಬೆಲೆ ಬಾಳುವ ಉಡುಗೊರೆಗಳನ್ನು ಕೊಟ್ಟು ಸಂತೋಷಪಡುತ್ತಿದ್ದ. ಅಮರಾಂತ ಅವನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಅವಳಿಗೆ ಅವನ ಅಗತ್ಯಗಳು ಮುಂಚೆಯೇ ತಿಳಿದಿರುತ್ತಿತ್ತು. ಅಂಗಿಯ ತೋಳಿನಲ್ಲಿನ ದಾರಗಳನ್ನು ಎಳೆದು ತೆಗೆಯುತ್ತಿದ್ದಳು. ಅವನ ಇನಿಷಿಯಲ್ಸ್‌ಗಳನ್ನು ಹಾಕಿ ಒಂದು ಡಜನ್ ಕರ್ಚೀಫ್‌ಗೆ ಕಸೂತಿ ಹಾಕುತ್ತ ಹಜಾರದಲ್ಲಿ ಕುಳಿತಾಗ ಅವಳ ಜೊತೆಗೆ ಇರುತ್ತಿದ್ದ. ಅವಳೊಬ್ಬಳು ಹುಡುಗಿ ಎಂದುಕೊಂಡಿದ್ದ ಪಿಯತ್ರೋ ಕ್ರೆಪ್ಸಿಗೆ ಅವಳ ಬಗ್ಗೆ ತಿಳುವಳಿಕೆ ಉಂಟಾಯಿತು. ಅವಳ ನಡತೆಯಲ್ಲಿ ಅಷ್ಟು ನಯವಂತಿಕೆ ಕಾಣದಿದ್ದರೂ ಅವಳಿಗೆ ವಸ್ತುಗಳ ಬಗ್ಗೆ ಒಳ್ಳೆಯ ಅಭಿರುಚಿಯಿತ್ತು ಅಲ್ಲದೆ ನಿಗೂಢವಾದ ಮಾಧುರ್ಯವಿತ್ತು. ಪಿಯತ್ರೋ ಕ್ರೆಪ್ಸಿ ಒಂದು ಮಂಗಳವಾರ ಯಾರಿಗೂ ಅನುಮಾನ ಬಾರದಿರುವಂತೆ, ತನ್ನನ್ನು ಮದುವೆಯಾಗೆಂದು ಅವಳನ್ನು ಕೇಳಿದ. ಇದು ಈಗಲ್ಲದಿದ್ದರೆ, ಸಧ್ಯದಲ್ಲಿ ಆಗಲಿ ಎಂದ. ಅವಳು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಲಿಲ್ಲ. ಲಜ್ಜೆಯಿಂದ ಕಿವಿ ಕೆಂಪಾಗಿ, ಅದು ಕಡಿಮೆಯಾಗುವ ತನಕ ಸುಮ್ಮನಿದ್ದು, ಅನಂತರ ಪ್ರಬುದ್ಧತೆ ಪಡೆದ ಧ್ವನಿಯಿಂದ, “ಓಹೋ ಅದಕ್ಕೇನು ಪಿಯತ್ರೋ ಕ್ರೆಪ್ಸಿ….. ಆದರೆ ನಾವಿಬ್ರೂ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡ ಮೇಲೆ…. ಅವಸರದ ಕೆಲಸಗಳು ಒಳ್ಳೇದಲ್ಲ” ಎಂದು ಹೇಳಿದಳು. +ಉರ್ಸುಲಾಗೆ ಗೊಂದಲವಾಯಿತು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ ಎಲ್ಲರಿಗೂ ತಿಳಿದಿದ್ದಂತೆ ರೆಬೇಕಳ ಜೊತೆ ಹೊಂದಿದ್ದ ಸಾಕಷ್ಟು ಲಂಬಿಸಿದ್ದ ಸಂಬಂಧದಿಂದ, ಅವನ ನಿರ್ಧಾರ ನೈತಿಕ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದೋ ಎಂದು ಅವಳಿಗೆ ತಿಳಿಯಲಿಲ್ಲ. ಅವಳ ಅನುಮಾನ ಯಾರಿಗೂ ಸರಿತೋರದ ಕಾರಣ, ಕೊನೆಗೆ ಅದು ನಿಜ ಸ್ಥಿತಿಯೆಂದು ಒಪ್ಪಿಕೊಂಡಳು. ಕೊನೆಗೆ ಮನೆಯ ಯಜಮಾನ ಅವ್ರೇಲಿಯಾನೋ, “ಮದುವೆ ವಿಷಯ ಮಾತಾಡುವುದಕ್ಕೆ ಈಗ ಸಮಯ ಸರಿಯಿಲ್ಲ” ಎಂದು ಅಸ್ವಷ್ಟವಾಗಿ ಹೇಳಿ ಅವಳನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದ. +ಉರ್ಸುಲಾಗೆ ಕೆಲವು ತಿಂಗಳ ನಂತರ ಆ ಅಭಿಪ್ರಾಯ ಅರ್ಥವಾಯಿತು. ಮದುವೆಯ ವಿಷಯಕ್ಕೆ ಮಾತ್ರವಲ್ಲ. ಯುದ್ಧವಿಲ್ಲದ ಬೇರೆ ಯಾವುದಕ್ಕಾದರೂ ಅವ್ರೇಲಿಯಾನೋಗೆ ಪ್ರಾಮಾಣಿಕವಾಗಿ ಹೇಳಲು ಸಾಧ್ಯ ಎಂದು ತಿಳಿಯಿತು. ಅವನಿಗೂ ಕೂಡ ಗುಂಡಿಕ್ಕುವ ತಂಡದೆದುರು ನಿಂತಾಗ, ಅವನನ್ನು ಆ ಸ್ಥಿತಿಗೆ ತಂದ ಸೂಕ್ಷ್ಮವಾದ ಹಾಗೂ ಕೈ ಮೀರಿದ ಘಟನಾವಳಿಗಳು, ಆಕಸ್ಮಿಕಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ. ರೆಮಿದಿಯೋಸ್ ಸತ್ತದ್ದರಿಂದ ಅವನು ಭಾವಿಸಿದಂತೆ ಹತಾಶನಾಗಿರಲಿಲ್ಲ. ಆದರೆ ಅದೊಂದು ರೀತಿಯ ವಿಚಿತ್ರ ಕಿರಿಕಿರಿಯಂತಿದ್ದು ಕ್ರಮೇಣ ನಿರಾಸಕ್ತಿಯ ಏಕಾಂತದುನ್ಮಾದಕ್ಕೆ ಬದಲಾಗಿ, ಹಿಂದೆ ಹೆಂಗಸಿನ ಸಂಗ ಇರದಿರುವ ಕಾಲದಲ್ಲಿ ಇದ್ದಂತೆ ಇರತೊಡಗಿದ. ಅನಂತರ ಮತ್ತೆ ಕೆಲಸದಲ್ಲಿ ತೀವ್ರವಾಗಿ ಮಗ್ನನಾz. ಆದರೆ ಮಾವನೊಡನೆ ಆಟವಾಡುತ್ತಿದ್ದ ರೂಢಿಯನ್ನು ಮುಂದುವರೆಸಿದ. ದುಃಖದಲ್ಲಿ ಮುಳುಗಿದ್ದ ಆ ಮನೆಯಲ್ಲಿ ಪ್ರತಿ ಸಂಜೆಯ ಮಾತುಕತೆ ಅವರಿಬ್ಬರ ಸ್ನೇಹವನ್ನು ಭದ್ರವಾಗಿಸಿತು. ಅವನ ಮಾವ, “ಇನ್ನೊಂದು ಸಲ ಮದುವೆಯಾಗು ಅವ್ರೇಲಿಯಾನೋ… ನೀನು ಆರಿಸಿಕೊಳ್ಳಲಿಕ್ಕೆ ನನಗಿನ್ನೂ ಆರು ಹೆಣ್ಣು ಮಕ್ಕಳಿದ್ದಾರೆ” ಎಂದ. ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ಸಲ, ಆಗಿಂದಾಗ್ಗೆ ಮಾಡುತ್ತಿದ್ದ ತಿರುಗಾಟದ ನಂತರ, ದಾನ್ ಅಪೋಲಿನರ್ ಮೊಸ್ಕೋತೆ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಉದಾರವಾದಿಗಳು ಯುದ್ಧ ಹೂಡುವುದಕ್ಕೆ ಮನಸ್ಸು ಮಾಡಿದ್ದರು. ಆ ದಿನಗಳಲ್ಲಿ ಅವ್ರೇಲಿಯಾನೋಗೆ ಸಂಪ್ರದಾಯವಾದಿಗಳು ಮತ್ತು ಉದಾರವಾದಿಗಳ ನಿಲುವಿನ ವ್ಯತ್ಯಾಸದ ಬಗ್ಗೆ ಗೊಂದಲವಿದ್ದುದರಿಂದ ಅವನ ಮಾವ ಅವುಗಳ ಸ್ಥೂಲ ವ್ಯತ್ಯಾಸದ ಪಾಠ ಹೇಳಿದರು. ಉದಾರವಾದಿಗಳು ಕೆಟ್ಟವರೆಂದೂ, ಮುಕ್ತರಾದವರೆಂದೂ, ಪಾದ್ರಿಗಳನ್ನು ನೇತು ಹಾಕಬೇಕೆಂದಿದ್ದಾರೆಂದೂ, ಮದುವೆ ಹಾಗೂ ವಿವಾಹ ವಿಚ್ಛೇದನಗಳನ್ನು ಜಾರಿಗೆ ತರಬೇಕೆಂದಿದ್ದಾರೆಂದೂ, ನ್ಯಾಯ ಸಮ್ಮತವಾದ ಮಕ್ಕಳಿಗಿರುವ ಹಕ್ಕುಗಳನ್ನು ಹಾದರಕ್ಕೆ ಹುಟ್ಟಿದ ಮಕ್ಕಳಿಗೂ ಮಾನ್ಯವಾಗುವಂತೆ ಉದ್ದೇಶಿಸಿದ್ದಾರೆಂದೂ, ಸ್ವತಂತ್ರ ರಾಜ್ಯಗಳಾಗಿ ದೇಶವನ್ನು ತುಂಡರಿಸುವುದರ ಮೂಲಕ ಅತ್ಯುನ್ನತ ಅಧಿಕಾರದಿಂದ ದೂರಮಾಡಬೇಕೆಂದಿದ್ದಾರೆಂದೂ ತಿಳಿಸಿದ. ಇದಕ್ಕೆ ಪ್ರತಿಯಾಗಿ ದೇವರಿಂದ ನೇರವಾಗಿ ಅಧಿಕಾರ ಪಡೆಯುವ ಸಂಪ್ರದಾಯವಾದಿಗಳು, ಸಾರ್ವಜನಿಕ ನಿಯಮ ಹಾಗೂ ಸಂಸಾರದ ನೈತಿಕತೆ ಹೊಂದಿರುವ ವ್ಯವಸ್ಥೆಯ ಉದ್ದೇಶವುಳ್ಳವರೆಂದು ಹೇಳಿದ. ಅವರು ಕ್ರೈಸ್ತನಲ್ಲಿ ನಂಬಿಕೆಯನ್ನು, ಅಧಿಕಾರದ ತತ್ವಗಳನ್ನು ರಕ್ಷಿಸುವರೆಂದೂ, ದೇಶವನ್ನು ಸ್ವತಂತ್ರ ರಾಜ್ಯಗಳಾಗಿ ತುಂಡಾಗುವುದಕ್ಕೆ ಅನುಮತಿ ಕೊಡುವರಲ್ಲವೆಂದೂ ತಿಳಿಸಿದ. ಮಾನವೀಯ ಭಾವನೆಗಳಿಂದ ಅವ್ರೇಲಿಯಾನೋಗೆ ಮಕ್ಕಳ ಹಕ್ಕಿನ ಬಗ್ಗೆ ಉದಾರವಾದಿಗಳ ದೃಷ್ಟಿಕೋನ ಕುರಿತು ಸಹಾನುಭೂತಿ ಉಂಟಾಯಿತಾದರೂ ಕೈಕೈ ಮಿಲಾಯಿಸಲು ಸಾಧ್ಯವಾಗದಂಥ ವಿಷಯಗಳಿಗಾಗಿ ಜನರು ಯುದ್ಧ ಹೂಡುವುದರ ಅತಿರೇಕ ಅರ್ಥವಾಗಲಿಲ್ಲ. ಅವನ ಮಾವ, ನ್ಯಾಯವಾದಿಯ ಸಂಗಡ ಬಂದೂಕು ಹಿಡಿದ ಆರು ಜನ ಸೈನಿಕರನ್ನು, ರಾಜಕೀಯದ ಬಗ್ಗೆ ಉತ್ಸಾಹವಿಲ್ಲದ ಊರೊಂದರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಳಿಸಿಕೊಟ್ಟಿದ್ದು ಉತ್ಪ್ರೇಕ್ಷೆ ಎನ್ನಿಸಿತು. ಅವರು ಅಲ್ಲಿಗೆ ಹೋದದ್ದಷ್ಟೇ ಅಲ್ಲದೆ ಮನೆ ಮನೆಗೆ ಹೋಗಿ, ಬೇಟೆಯ ಆಯುಧಗಳು, ಅಡುಗೆ ಮನೆ ಚಾಕುಗಳನ್ನೂ ಸಹ ಮುಟ್ಟುಗೋಲು ಹಾಕಿಕೊಂಡ ನಂತರ, ಇಪ್ಪತ್ತೊಂದಕ್ಕಿಂತ ಹೆಚ್ಚಿಗೆ ಇದ್ದ ಸಂಪ್ರದಾಯವಾದಿ ಅಭ್ಯರ್ಥಿಗಳ ಹೆಸರಿರುವ ನೀಲಿ ಬಣ್ಣದ ಓಟಿನ ಚೀಟಿ ಹಾಗೂ ಉದಾರವಾದಿ ಅಭ್ಯರ್ಥಿಗಳ ಹೆಸರಿರುವ ಕೆಂಪು ಬಣ್ಣದ ಓಟಿನ ಚೀಟಿಗಳನ್ನು ಹಂಚಿದರು. ಚುನಾವಣೆಗಿಂತ ಮುಂಚೆ ಮದ್ಯದ ವ್ಯಾಪಾರದ ನಿಷೇಧ ಹಾಗೂ ಒಂದೇ ಮನೆಯವರಲ್ಲದೆ ಮೂರು ಜನ ಒಟ್ಟಾಗಿ ಸೇರುವುದರ ವಿರುದ್ಧದ ಕಟ್ಟಳೆಯನ್ನು ದಾನ್ ಅಪೋಲಿನರ್ ಖುದ್ದಾಗಿ ಓದಿದ. ಯಾವ ಅಹಿತಕರ ಘಟನೆಯೂ ಇಲ್ಲದೆ ಚುನಾವಣೆ ನೆರವೇರಿತು. ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ಆರು ಜನ ಸೈನಿಕರ ಮೇಲ್ವಿಚಾರಣೆಯಲ್ಲಿ ಮರದ ಓಟಿನ ಪೆಟ್ಟಿಗೆಯನ್ನು ಚೌಕದಲ್ಲಿ ಇಡಲಾಗಿತ್ತು. ಓಟು ಮಾಡುವುದು ಮುಕ್ತವಾಗಿತ್ತು ಮತ್ತು ಅವ್ರೇಲಿಯಾನೋ ತನ್ನ ಮಾವನ ಜೊತೆ ಇದ್ದು, ಯಾರೊಬ್ಬರೂ ಎರಡನೇ ಸಲ ಓಟು ಮಾಡದಂತೆ ನೋಡಿಕೊಂಡ. ಮಧ್ಯಾಹ್ನ ನಾಲ್ಕು ಗಂಟೆಗೆ ಚೌಕದಲ್ಲಿ ಡ್ರಮ್ ಬಾರಿಸಿ ಮತ ಚಲಾವಣೆಯ ಕಾಲ ಮುಗಿದಿದ್ದನ್ನು ಪ್ರಚುರ ಪಡಿಸಿ ಮತ ಪೆಟ್ಟಿಗೆಗೆ ದಾನ್ ಅಪೋಲಿನರ್ ಸಹಿ ಮಾಡಿ ಗುರುತು ಹಾಕಿ, ಸೀಲ್ ಹಾಕಿದ. ಆ ದಿನ ರಾತ್ರಿ ಅವನು ಅವ್ರೇಲಿಯಾನೋ ಜೊತೆಗೆ ಆಟವಾಡುತ್ತಿದ್ದಾಗ ಓಟುಗಳ ಎಣಿಕೆಗಾಗಿ ಪೆಟ್ಟಿಗೆಯ ಸೀಲನ್ನು ಒಡೆಯಲು ನ್ಯಾಯವಾದಿಗೆ ಆeಪಿಸಿದ. ಅಲ್ಲಿ ನೀಲಿ ಬಣ್ಣದಷ್ಟೆ ಕೆಂಪು ಬಣ್ಣದವುಗಳಿದ್ದವು. ಆದರೆ ನ್ಯಾಯವಾದಿ ಕೆಂಪು ಬಣ್ಣದ ಹತ್ತನ್ನು ಮಾತ್ರ ಬಿಟ್ಟು ಉಳಿದದ್ದಕ್ಕೆ ನೀಲಿ ಬಣ್ಣದವುಗಳಿಂದ ಸರಿ ಮಾಡಿದ. ಮಾರನೆ ದಿನ ಅವರು ಮತ್ತೆ ಪೆಟ್ಟಿಗೆಯನ್ನು ಹೊಸದಾಗಿ ಸೀಲ್ ಮಾಡಿ ಎಲ್ಲಕ್ಕಿಂತ ಮುಂಚೆ ಅದನ್ನು ಪ್ರಾಂತೀಯ ಮುಖ್ಯ ಸ್ಥಳಕ್ಕೆ ಕಳಿಸಿಕೊಟ್ಟರು. ಅವ್ರೇಲಿಯಾನೋ, “ಉದಾರವಾದಿಗಳು ರೊಚ್ಚಿಗೇಳ್ತಾರೆ” ಎಂz. ದಾನ್ ಅಪೋಲಿನರ್ ಆಟವಾಡುತ್ತಿದ್ದರ ಕಡೆ ಗಮನಕೊಟ್ಟ. ಅವನು, “ಓಟಿನ ಚೀಟಿ ಬದಲಾಯಿಸಿದ್ದಕ್ಕೆ ನೀನು ಹೇಳ್ತಿರೋದಾದ್ರೆ, ಅವ್ರು ಮಾಡಲ್ಲ” ಎಂದ. “ಅವ್ರು ತಗಾದೆ ಮಾಡದೆ ಇರ್‍ಲಿ ಅಂತ ನಾವು ಸ್ವಲ್ಪ ಕೆಂಪು ಚೀಟಿಗಳನ್ನು ಬಿಟ್ಟಿದೀವಿ.” ವಿರೋಧ ಪಕ್ಷದಲ್ಲಿ ಇರುವುದರ ಅನಾನುಕೂಲ ಅವ್ರೇಲಿಯಾನೋಗೆ ಗೊತ್ತಾಯಿತು. “ನಾನು ಉದಾರವಾದಿ ಆಗಿದ್ದಿದ್ರೆ ಓಟಿನ ಚೀಟಿ ವಿಷಯಕ್ಕೆ ಜಗಳಕ್ಕೆ ಹೋಗ್ತಿದ್ದೆ” ಎಂದ. ಅವನ ಮಾವ ಕನ್ನಡಕದ ಮೇಲುಗಡೆಯಿಂದ ಅವನನ್ನು ನೋಡಿದ. +ಅವನು, “ಅದೆಲ್ಲ ಇಲ್ಲ-, ನೀನು ಉದಾರವಾದಿಯಾಗಿದ್ರೆ, ನನ್ನ ಅಳಿಯ ಆಗಿದ್ರೂ ಕೂಡ, ನಿಂಗೆ ಮತ ಪತ್ರ ಬದಲಾಯಿಸಿದ್ದು ಗೊತ್ತಾಗ್ತಿರ್‍ಲಿಲ್ಲ” ಎಂದ. +ಊರಿನಲ್ಲಿ ಚುನಾವಣೆ ಫಲಿತಾಂಶ ಘೋಷಿಸಿದ್ದರಿಂದ ಆಕ್ರೋಶ ಉಂಟಾಗದೆ ಸೈನಿಕರು ಆಯುಧಗಳನ್ನು ಹಿಂತಿರುಗಿಸದೆ ಇದ್ದರಿಂದ ಉಂಟಾಗಿತ್ತು. ಹೆಂಗಸರ ಗುಂಪೊಂದು ಅಡುಗೆ ಚಾಕುಗಳನ್ನು ಹಿಂತಿರುಗಿಸುವಂತೆ ಅವನ ಮಾವನಿಗೆ ಹೇಳಲು ಅವ್ರೇಲಿಯಾನೋನನ್ನು ಕೇಳಿಕೊಂಡರು. ಆದರೆ ದಾನ್ ಅಪೋಲಿನರ್ ಮೊಸ್ಕೋತೆ ಉದಾರವಾದಿಗಳು ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆನ್ನುವುದರ ಪುರಾವೆಗಾಗಿ ಸೈನಿಕರು ಅದನ್ನು ತೆಗೆದುಕೊಂಡಿದ್ದಾರೆಂದು ಅವನಲ್ಲಿ ವಿಶ್ವಾಸವಿಟ್ಟು ಗುಟ್ಟಾಗಿ ವಿವರಿಸಿದ. ಆ ಮಾತಿನಲ್ಲಿದ್ದ ತಿರಸ್ಕಾರ ಅವನನ್ನು ಬೆರಗಾಗಿಸಿತು. ಅವನೇನೂ ಹೇಳಲಿಲ್ಲ. ಆದರೆ ಅದೊಂದು ರಾತ್ರಿ ಗೆರಿನೆಲ್ಡೊ ಮಾರ್ಕೆಜ್ ಮತ್ತು ಮ್ಯಾಗ್ನಿಫಕೊ ವೀಸ್‌ಬಾಲ್ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಅವನು ಉದಾರವಾದಿಯೋ ಸಂಪ್ರದಾಯವಾದಿಯೋ ಎಂದು ಕೇಳಿದ್ದಕ್ಕೆ ಅವ್ರೇಲಿಯಾನೋ ಅನುಮಾನಿಸಲಿಲ್ಲ. +“ನಾನೇನಾದ್ರೂ ಆಗಬೇಕಿದ್ರೆ, ಉದಾರವಾದಿಯಾಗ್ತೀನಿ. ಏಕೆಂದರೆ ಸಂಪ್ರದಾಯವಾದಿಗಳು ಕುತಂತ್ರಿಗಳು” ಎಂದ. +ಮಾರನೆ ದಿನ ಸ್ನೇಹಿತರ ಒತ್ತಾಯದಿಂದ ಪಿತ್ತಜನಕಾಂಗದಲ್ಲಿ ನೋವಿನ ಶುಶ್ರೂಷೆಗೆಂಬ ಸೋಗಿನೊಂದಿಗೆ ಡಾಕ್ಟರ್ ಅಲಿರಿಯೋ ನೋಗ್ವೇರಾ ಬಳಿಗೆ ಹೋದ. ಅವನಿಗೆ ಕಪಟೋಪಾಯ ಅರ್ಥವಾಗಲಿಲ್ಲ. ಡಾಕ್ಟರ್ ಆಲಿರಿಯೊ ಕೆಲವು ವರ್ಷಗಳ ಹಿಂದೆ ಔಷಧಿ ಪೆಟ್ಟಿಗೆ ಮತ್ತು ಯಾರಿಗೂ ನಂಬಿಕೆಯಾಗದ ವೈದ್ಯಕೀಯ ಉದ್ದೇಶದಿಂದ ಬಂದಿದ್ದ. ವಾಸ್ತವವಾಗಿ ಅವನೊಬ್ಬ ಆಷಾಡಭೂತಿ ಆಗಿದ್ದ. ಪ್ರತಿಷ್ಠೆ ಇಲ್ಲದ ಡಾಕ್ಟರ್ ಎಂಬ ಅವನ ಮುಗ್ಧ ಮುಖದ ಹಿಂದೆ ಉಗ್ರವಾದಿಯೊಬ್ಬ ಅಡಗಿದ್ದ. ಅಲ್ಲಿ ಐದು ವರ್ಷಗಳ ಕಾಲ ಕಾರ್ಯಕರ್ತನ ಮಟ್ಟದಲ್ಲಿ ಇದ್ದದ್ದರಿಂದ ಉಂಟಾಗಿದ್ದ ಕಲೆಗಳನ್ನು ಅವನ ಕಾಲಿನ ಬೂಟುಗಳು ಮರೆ ಮಾಡಿದ್ದವು. ಸಂಯುಕ್ತ ರಾಷ್ಟ್ರವಾದಿಗಳ ಮೊದಲನೆ ಆಂದೋಳನದಲ್ಲಿ ಸೆರೆ ಸಿಕ್ಕ ಅವನು ತಾನು ಎಲ್ಲಕ್ಕಿಂತ ಹೆಚ್ಚು ದ್ವೇಷಿಸುತ್ತಿದ್ದ ನಿಲುವಂಗಿಯನ್ನು ತೊಟ್ಟು ಮರೆಮಾಚಿಕೊಂಡು ಕುರಾಶೊಗೆ ಪಲಾಯನ ಮಾಡಿದ. ಅಲ್ಲಿಂದ ತಲೆತಪ್ಪಿಸಿಕೊಂಡು ಅನೇಕ ವರ್ಷಗಳನ್ನು ಕಳೆದ ನಂತರ ಕ್ಯಾರಿಬಿಯಾದಲ್ಲಿ ತಲೆಮರೆಸಿಕೊಂಡವರನ್ನು ಕುರಾಶೋಗೆ ತರುತ್ತಾರೆಂಬ ಸುದ್ದಿಯನ್ನು ಕೇಳಿ ಕಳ್ಳ ಸಾಗಾಣೆಕಾರರ ಹಡಗಿನಲ್ಲಿ ಬೂಟುಗಳಲ್ಲಿ ಸಕ್ಕರೆ ಗುಳಿಗೆಗಳನ್ನು ಹಾಗೂ ತಾನೇ ಕಳ್ಳ ರುಜು ಮಾಡಿದ ಲೀಪ್ ಜಿಗ್ ವಿಶ್ವವಿದ್ಯಾಲಯದ ಡಿಪ್ಲಮೋ ಸರ್ಟಿಫಿಕೇಟ್ ಹಿಡಿದುಕೊಂಡು ರಿಯೋ‌ಅಕ ತಲುಪಿದ. ಅವನು ನಿರಾಶೆಯಿಂದ ತತ್ತರಿಸಿದ. ಸಿಡಿಮದ್ದಿನ ಹಾಗೆ ಸ್ಫೋಟಿಸುವುದೆಂದು ತಲೆ ಮರೆಸಿಕೊಂಡಿದ್ದ ಸಂಯುಕ್ತ ರಾಷ್ಟ್ರವಾದಿಗಳು ರೂಪಿಸಿದ್ದು, ಚುನಾವಣೆಯಲ್ಲಿ ಭ್ರಮೆಯಾಗಿ ಕರಗಿಹೋಯಿತು. ಅವನು ನಿರಾಸೆಯಿಂದ ಅತ್ತ. ಸೋಲಿನಿಂದ ಘಾಸಿಗೊಂಡು, ಕ್ಷೇಮವಾದ ಸ್ಥಳಕ್ಕಾಗಿ ಕಾತರಿಸಿ, ಮುದಿತನವನ್ನು ಎದುರು ನೋಡುತ್ತ, ಢೋಂಗಿ ಹೋಮಿಯೋಪತಿ ಡಾಕ್ಟರಾದ ಅವನು ಮಕೋಂದೋದಲ್ಲಿ ಆಶ್ರಯ ಪಡೆದ. ಚೌಕದ ಒಂದು ಭಾಗದಲ್ಲಿ ಬಾಟಲುಗಳಿಂದ ತುಂಬಿದ ಸಣ್ಣ ರೂಮನ್ನು ಬಾಡಿಗೆ ಹಿಡಿದು, ಬೇರೆಲ್ಲವನ್ನೂ ಪ್ರಯತ್ನಿಸಿ ಸೋತ ತೀವ್ರ ಪ್ರಮಾಣದ ಕಾಯಿಲೆಯವರು, ಸಕ್ಕರೆ ಗುಳಿಗೆಗಳಲ್ಲಿ ಸಮಾಧಾನ ಹೊಂದುತ್ತಿದ್ದರಿಂದ ಅನೇಕ ವರ್ಷ ಬದುಕಿದ್ದ. ಅವನೊಳಗಿದ್ದ ಹೋರಾಟದ ಪ್ರವೃತ್ತಿ ದಾನ್ ಅಪೋಲಿನರ್ ಮೊಸ್ಕೋತೆ ಪ್ರಮುಖನಾಗಿರುವ ತನಕ ಸುಪ್ತವಾಗಿತ್ತು. ಅವನು ಹಳೆಯದನ್ನು ನೆನಪಿಸಿಕೊಳ್ಳುತ್ತ ಆಸ್ತಮ ವಿರುದ್ಧ ಹೋರಾಡುತ್ತ ಕಾಲ ಕಳೆದ. ಚುನಾವಣೆ ಹತ್ತಿರಕ್ಕೆ ಬಂದಿದ್ದು ಮತ್ತೆ ಬುಡಮೇಲು ಮಾಡುವ ಗೋಜಲಿಗೆ ಅವನನ್ನು ತಳ್ಳಿತು. ಅವನು ರಾಜಕೀಯದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲದ ಯುವಜನರನ್ನು ಸಂಪರ್ಕಿಸಿ ಗುಟ್ಟಾಗಿ ಪ್ರಚೋದನೆ ಉಂಟುಮಾಡಲು ಪ್ರಯತ್ನಿಸಿದ. ಓಟಿನ ಪೆಟ್ಟಿಗೆಯಲ್ಲಿ ಕಂಡು ಬಂದ ಕೆಂಪು ಓಟಿನ ಚೀಟಿಗಳನ್ನು ಕುರಿತು ದಾನ್ ಅಪೋಲಿನರ್ ಮೊಸ್ಕೋತೆಯ ಬಗ್ಗೆ ಯುವಜನರಲ್ಲಿ ಕುತೂಹಲ ಉಂಟಾಗುವಂತೆ ಮಾಡಿದ್ದು ಅವ್ರೇಲಿಯಾನೋನ ಯೋಜನೆಯ ಒಂದು ಭಾಗ. ಚುನಾವಣೆ ಕೇವಲ ಒಂದು ತಮಾಷೆ ಎಂದು ತಿಳಿಸುವ ಸಲುವಾಗಿ ತನ್ನ ಶಿಷ್ಯರಿಗೆ ಮತ ಚಲಾಯಿಸಲು ಹೇಳಿದ. ಅವನು, “ಹಿಂಸೆಯೊಂದೇ ಸರಿಯಾದ ಮಾರ್ಗ” ಎಂದು ಹೇಳುತ್ತಿದ್ದ. ಅವ್ರೇಲಿಯಾನೋನ ಅನೇಕ ಸ್ನೇಹಿತರಿಗೆ ಸಂಪ್ರದಾಯವಾದಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವ ಅಲೋಚನೆ ಇದ್ದರೂ ಯಾರಿಗೂ ಅಂಥ ಯೋಜನೆಯಲ್ಲಿ ಅವನನ್ನು ಸೇರಿಸಿಕೊಳ್ಳುವ ಧ್ಯೆರ್ಯ ಬಾರದೇ ಇರುವುದಕ್ಕೆ, ಮ್ಯಾಜಿಸ್ಟ್ರೇಟ್ ಜೊತೆಗಿದ್ದ ಅವನ ಬಾಂಧವ್ಯವಲ್ಲದೆ ಅವನ ಏಕಾಂತ ಮತ್ತು ನುಣುಚಿಕೊಳ್ಳುವ ಸ್ವಭಾವ ಕಾರಣವಾಗಿತ್ತು. ಅದೂ ಅಲ್ಲದೆ ತನ್ನ ಮಾವನ ಸೂಚನೆಯಂತೆ ಅವನು ನೀಲಿ ಮತ ಹಾಕಿದ್ದನೆಂದು ತಿಳಿದ ವಿಷಯವಾಗಿತ್ತು. ಆದ್ದರಿಂದ ಅವನು ತನ್ನ ರಾಜಕೀಯ ಭಾವನೆಗಳನ್ನು ವ್ಯಕ್ತಪಡಿಸಿದ್ದು ಆಕಸ್ಮಿಕವಾಗಿ ಮತ್ತು ಇಲ್ಲದಿದ್ದ ಹಲ್ಲಿನ ನೋವಿನ ನಿವಾರಣೆಗೆ ಎಂದು ಡಾಕ್ಟರ್ ಹತ್ತಿರ ಬರುವಂತೆ ಮಾಡಿದ್ದು ಕೇವಲ ಕುತೂಹಲ ಮತ್ತು ವಿಚಿತ್ರವಾದ ನಡತೆಯಾಗಿತ್ತು. ಅವನು ಕರ್ಪೂರದ ವಾಸನೆ ತುಂಬಿಕೊಂಡ ಗುಹೆಯಂತಿದ್ದ ಸ್ಥಳದಲ್ಲಿ ಉಸಿರಾಡಿದಾಗ ಪುಪ್ಫಸದಿಂದ ಶೀಟಿ ಹೊಡೆದಂತೆ ಕೇಳಿಸುತ್ತಿದ್ದ ಕೊಳಕು ಮನುಷ್ಯನ ಎದುರು ನಿಂತುಕೊಂಡಿದ್ದ. ಬೇರೆ ಯಾವುದೇ ಪ್ರಶ್ನೆಯನ್ನು ಕೇಳುವುದಕ್ಕೆ ಮುಂಚೆ ಕಿಟಕಿಯ ಹತ್ತಿರ ಕರೆದುಕೊಂಡು ಹೋಗಿ ಡಾಕ್ಟರ್ ನೋಗ್ವೇರಾ ಅವನ ಕಣ್ಣಿನ ಕೆಳರೆಪ್ಪೆಯನ್ನು ಪರೀಕ್ಷಿಸಿದ. ಅವರು ಆಗಲೆ ತಿಳಿಸಿ ಹೇಳಿದ್ದರ ಹಿನ್ನೆಲೆಯಲ್ಲಿ, “ಅಲ್ಲಲ್ಲ” ಎಂದು ಅವ್ರೇಲಿಯಾನೋ ಹೇಳಿz. ಅವನು ಬೆರಳಿನಿಂದ ತನ್ನ ಲಿವರ್ ಒತ್ತಿ ತೋರಿಸಿ, “ಇಲ್ಲಿ ನೋವು. ನನಗೆ ನಿದ್ದೆ ಮಾಡಕ್ಕೆ ಬಿಡ್ತಿಲ್ಲ”ಎಂದ. ಅವನು ತುಂಬ ಸೆಖೆ ಎಂಬ ಕಾರಣ ಹೇಳಿ ಕಿಟಕಿಯನ್ನು ಮುಚ್ಚಿದ ಮತ್ತು ಸರಳವಾದ ರೀತಿಯಲ್ಲಿ ಸಂಪ್ರದಾಯವಾದಿಗಳನ್ನು ಕೊಲ್ಲುವುದು ರಾಷ್ಟ್ರ ಭಕ್ತಿಯ ಕರ್ತವ್ಯ ಎಂದು ವಿವರಿಸಿದ. ಕೆಲವು ದಿನಗಳ ಕಾಲ ಅವ್ರೇಲಿಯಾನೋ ತನ್ನ ಅಂಗಿಯ ಜೇಬಿನಲ್ಲಿ ಗುಳಿಗೆಗಳಿರುವ ಸಣ್ಣ ಶೀಸೆಯನ್ನು ಇಟ್ಟುಕೊಂಡಿರುತ್ತಿದ್ದ. ಪ್ರತಿ ಎರಡು ಗಂಟೆಗೊಂದು ಸಲ ಅಂಗೈಯಲ್ಲಿ ಮೂರು ಗುಳಿಗೆಗಳನ್ನು ಇಟ್ಟುಕೊಂಡು ಬಾಯಿಗೆ ಹಾಕಿಕೊಂಡು ನಾಲಿಗೆಯ ಮೇಲೆ ನಿಧಾನವಾಗಿ ಕರಗಲು ಬಿಡುತ್ತಿದ್ದ. ಹೋಮಿಯೋಪತಿಯಲ್ಲಿ ಅವನಿಗಿದ್ದ ನಂಬಿಕೆಯನ್ನು ದಾನ್ ಅಪೋಲಿನರ್ ಮೊಸ್ಕೋತೆ ಗೇಲಿ ಮಾಡುತ್ತಿದ್ದ. ಆದರೆ ಆ ಯೋಜನೆಯಲ್ಲಿ ಇದ್ದವರು ಯಾರೇ ಆಗಲಿ ತಮ್ಮ ರೀತಿ ಇರುವವರನ್ನು ಗುರುತಿಸುತ್ತಿದ್ದರು. ಇದರಲ್ಲಿ ಹೆಚ್ಚು ಕಡಿಮೆ ಸಂಸ್ಥಾಪಕರ ಮಕ್ಕಳೆಲ್ಲರೂ ಸೇರಿಕೊಂಡಿದ್ದರೂ ಸಹ ಯಾವ ರೀತಿಯ ಕ್ರಮವನ್ನು ತಾವು ರೂಪಿಸುತ್ತಿರುವುದೆಂದು ಖಚಿತವಾಗಿ ತಿಳಿದಿರಲಿಲ್ಲ. ಅವನಿಗೆ ಸಂಪ್ರದಾಯವಾದಿಗಳನ್ನು ನಿರ್ಮೂಲ ಮಾಡುವ ತುರ್ತಿನ ಬಗ್ಗೆ ಮನದಟ್ಟಾಗಿದ್ದರೂ ಇಡೀ ಯೋಜನೆ ಭಯ ಹುಟ್ಟಿಸಿತ್ತು. ಡಾಕ್ಟರ್ ನೋಗ್ವೇರಾ ವೈಯಕ್ತಿಕವಾಗಿ ಕೊಲೆ ಮಾಡುವ ರಹಸ್ಯ ಹೊಂದಿದ್ದ. ಅವನ ವ್ಯವಸ್ಥೆಯ ಕ್ರಮದಲ್ಲಿ ಕಾರ್ಯವನ್ನು ಸರಪಳಿಯಂತೆ ಹೊಂದಾಣಿಕೆ ಮಾಡುತ್ತ, ಇಡೀ ದೇಶವನ್ನು ಆವರಿಸಿ ಒಂದೇ ಬಾರಿಗೆ ಸಂಪ್ರದಾಯವಾದಿಗಳ ಬೇರನ್ನೇ ಕಿತ್ತೊಗೆಯುವ ಹಾಗೆ ಅದರ ಆಡಳಿತದ ಎಲ್ಲಾ ಕಾರ್ಯಕರ್ತರನ್ನು ಅವರ ಸಂಸಾರವನ್ನು ಮಕ್ಕಳ ಸಮೇತ ಅಳಿಸಿ ಹಾಕುವುದಿತ್ತು. ದಾನ್ ಅಪೋಲಿನರ್ ಮೊಸ್ಕೋತೆ, ಅವಳ ಹೆಂಡತಿ ಮಕ್ಕಳು ಅವನ ಪಟ್ಟಿಯಲ್ಲಿ ಇದ್ದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. +ಅವ್ರೇಲಿಯಾನೋ ಉದ್ವೇಗವಿಲ್ಲದೆ, “ನೀವು ಉದಾರವಾದಿಗಳೂ ಅಲ್ಲ, ಏನೂ ಅಲ್ಲ… ಕೊಲೆಗಾರರು ಅಷ್ಟೇ” ಎಂದ. +ಡಾಕ್ಟರ್ ಅಷ್ಟೇ ಸಮಾಧಾನದಿಂದ, “ಹಾಗಿದ್ರೆ ಆ ಬಾಟಲ್ ವಾಪಸು ಕೊಡಿ. ನಿಮಗದು ಬೇಕಿಲ್ಲ” ಎಂದ. +ಆರು ತಿಂಗಳ ನಂತರ ಡಾಕ್ಟರ್, ತಾನು ಕೆಲಸ ಮಾಡುವವನಲ್ಲ ಏಕೆಂದರೆ ಭವಿಷ್ಯವಿಲ್ಲದ, ಎದೆಗಾರಿಕೆ ಇಲ್ಲದ ಭಾವನಾತ್ಮಕ ವ್ಯಕ್ತಿ ಎಂದು ಪರಿಗಣಿಸಿ ತನ್ನನ್ನು ಕೈಬಿಟ್ಟಿದ್ದಾನೆಂದು ತಿಳಿಯಿತು. ಅವನು ತಮ್ಮ ಗುಟ್ಟನ್ನು ರಟ್ಟು ಮಾಡುತ್ತಾನೆ ಎಂಬ ಭಯದಿಂದ ಅವನ ಮೇಲೆ ಕಣ್ಣಿಟ್ಟಿದ್ದರು. ತಾನು ಬಾಯಿ ಬಿಡುವುದಿಲ್ಲವೆಂದು ಅವರನ್ನು ಅವ್ರೇಲಿಯಾನೋ ಶಾಂತಗೊಳಿಸಿದ. ಆದರೆ ಮೊಸ್ಕೋತೆ ಸಂಸಾರವನ್ನು ಅವರು ಕೊಲ್ಲಲು ಹೋದಾಗ ಅವನು ಬಾಗಿಲಲ್ಲೆ ನಿಂತಿದ್ದ. ಅವನ ಖಚಿತ ನಿರ್ಧಾರದಿಂದ ಅದನ್ನು ಅನಿರ್ದಿಷ್ಟ ಕಾಲ ಮುಂದೆ ಹಾಕಬೇಕಾಯಿತು. ಆ ದಿನಗಳಲ್ಲಿಯೇ ಉರ್ಸುಲಾ ಪಿಯತ್ರೋ ಕ್ರೆಪ್ಸಿ ಮತ್ತು ಅಮರಾಂತರ ಮದುವೆಯ ಬಗ್ಗೆ ಅವನ ಅಭಿಪ್ರಾಯವನ್ನು ಕೇಳಿದ್ದು. ಅವನು ಅಂತಹ ವಿಷಯಗಳನ್ನು ಅಲೋಚಿಸುವುದಕ್ಕೆ ಕಾಲ ಸರಿಯಾಗಿಲ್ಲ ಎಂದು ಉತ್ತರಿಸಿದ ಒಂದು ವಾರದ ತನಕ ಶರಟಿನೊಳಗೆ ಹಳೆಯ ರೀತಿಯ ನಾಟಿ ಪಿಸ್ತೂಲನ್ನು ಇಟ್ಟುಕೊಂಡು ಒಡಾಡುತ್ತಿದ್ದ ಮತ್ತು ತನ್ನ ಸ್ನೇಹಿತರ ಮೇಲೆ ಕಣ್ಣಿಟ್ಟಿದ್ದ. ಮಧ್ಯಾಹ್ನದ ಸಮಯದಲ್ಲಿ ಹೊಸೆ ಅರ್ಕಾದಿಯೋ ಮತ್ತು ರೆಬೇಕರ ಜೊತೆ ಕಾಫಿ ಕುಡಿಯುತ್ತಿದ್ದ ಮತ್ತು ತಮ್ಮ ಮನೆಯನ್ನು ಸರಿಯಾಗಿಡಲು ಪ್ರಾರಂಭಿಸಿದ್ದ. ಏಳು ಗಂಟೆಯ ನಂತರ ಮಾವನ ಜೊತೆ ಡಾಮಿನೋ ಆಟವಾಡುತ್ತಿದ್ದ. ಊಟದ ಸಮಯದಲ್ಲಿ ಈಗಾಗಲೇ ಹೆಚ್ಚಿಗೆ ಬೆಳೆದವನಾಗಿದ್ದ ಮತ್ತು ಇನ್ನೇನು ಶುರುವಾಗುವುದರಲಿದ್ದ ಯುದ್ಧದಿಂದ ಉತ್ಸಾಹಗೊಂಡಿದ್ದಂತೆ ಕಂಡ ಅರ್ಕಾದಿಯೋ ಜೊತೆ ಹರಟೆ ಹೊಡೆಯುತ್ತಿದ್ದ. ಅರ್ಕಾದಿಯೋನ ಸ್ಕೂಲಿನಲ್ಲಿ ಅವನಿಗಿಂತ ಹೆಚ್ಚಿಗೆ ವಯಸ್ಸಾಗಿ ಮಾತನಾಡಲು ಸರಿಯಾಗಿ ಬರದ ವಿದ್ಯಾರ್ಥಿಗಳ ಮೇಲೆ ಉದಾರವಾದಿಗಳ ಪ್ರಭಾವ ಹೆಚ್ಚಾಗಿತ್ತು. ಫಾದರ್ ನಿಕನೋರ್‌ನ್ನು ಶೂಟ್ ಮಾಡುವ, ಚರ್ಚನ್ನು ಶಾಲೆಯಾಗಿ ಪರಿವರ್ತಿಸುವ ಮತ್ತು ಮುಕ್ತ ಪ್ರೇಮದ ಮಾತುಗಳು ಚಲಾವಣೆಗೆ ಬಂದಿತ್ತು. ಅವ್ರೇಲಿಯಾನೋ ಅವನ ಆವೇಗವನ್ನು ಕಡಿಮೆ ಮಾಡಲು ಪ್ರಯತ್ನಿಸಿದ. ವಿವೇಕ ಮತ್ತು ಯುಕ್ತತೆಯನ್ನು ರೂಢಿಸಿಕೊಳ್ಳಲು ಹೇಳಿದ. ಅವನು ವಿಚಾರಕ್ಕೆ ವಾಸ್ತವ ಪ್ರಜ್ಞೆಗೆ ಕುರುಡಾಗಿದ್ದರಿಂದ, ಅವ್ರೇಲಿಯಾನೋ ಸಾರ್ವಜನಿಕವಾಗಿ ಅವನ ರೀತಿಯನ್ನು ಖಂಡಿಸಿದ. ಆನಂತರ ಅವ್ರೇಲಿಯಾನೋ ಸುಮ್ಮನೆ ಕಾದ. ಡಿಸೆಂಬರ್‌ನ ಮೊದಲನೆ ವಾರದಲ್ಲಿ ವರ್ಕ್‌ಶಾಪಿಗೆ ನುಗ್ಗಿ ಬಂದ ಉರ್ಸುಲಾ ಕೂಗಿದಳು. +“ಯುದ್ಧ ಶುರುವಾಯ್ತು!” +ವಾಸ್ತವವಾಗಿ ಯುದ್ಧ ಪ್ರಾರಂಭವಾಗಿ ಆಗಲೇ ಮೂರು ತಿಂಗಳಾಗಿತ್ತು. ನಿಜಕ್ಕೂ ಸೈನಿಕಶಾಸನವನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿತ್ತು. ಅದನ್ನು ಮುಂಚೆಯೇ ತಿಳಿದ ವ್ಯಕ್ತಿಯೆಂದರೆ ದಾನ್ ಅಪೋಲಿನರ್ ಮೊಸ್ಕೋತೆ. ಆದರೆ ಅವನು ಸೈನಿಕ ತುಕಡಿ ಹೊರಡುವ ತನಕ ಆ ಸುದ್ದಿಯನ್ನು ಹೆಂಡತಿಗೂ ಹೇಳಲಿಲ್ಲ. ಅವರು ನಿಶ್ಯಬ್ದವಾಗಿ ಹೇಸರಗತ್ತೆಗಳನ್ನು ಹೂಡಿ ಎಳೆದು ತಂದ ಎರಡು ಲಘು ಫಿರಂಗಿಗಳನ್ನು ಊರಿಗೆ ತಂದು ಸ್ಕೂಲನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡರು. ಬೆಳಿಗ್ಗೆ ಆರು ಗಂಟೆ ಕರ್ಫ್ಯೂ ವಿಧಿಸಲಾಯಿತು. ಮೊದಲಿಗಿಂತ ಹೆಚ್ಚು ತೀವ್ರವಾಗಿ ಒಂದೊಂದಾಗಿ ಮನೆಗಳನ್ನು ಶೋಧಿಸಿದ್ದಲ್ಲz, ಈ ಬಾರಿ ಕೃಷಿಯ ಉಪಕರಣಗಳನ್ನೂ ತೆಗೆದುಕೊಂಡು ಹೋದರು. ಡಾಕ್ಟರ್ ನಿಕನೋರ್‌ನನ್ನು ಹೊರಗೆಳೆದು, ಚೌಕದ ಮರಕ್ಕೆ ಕಟ್ಟಿಹಾಕಿ, ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೆ ಶೂಟ್ ಮಾಡಿದರು. ಫಾದರ್ ನಿಕನೋರ್ ತನ್ನ ನೆಲದಿಂದೇಳುವ ಯಾಂತ್ರಿಕ ಶಕ್ತಿಯಿಂದ ಮತ್ತು ಬಂದೂಕಿನ ತುದಿಯಿಂದ ತಲೆಯನ್ನು ಬಗೆದು ತೋರಿಸುವ ಕ್ರಿಯೆಗಳಿಂದ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ. ಉದಾರವಾದಿಗಳ ಉತ್ಸಾಹವನ್ನು ಸದ್ದಿಲ್ಲದ ಉಗ್ರತೆಯೆಂದು ನಂದಿಸಲಾಯಿತು. ಕಳೆಗುಂದಿ, ನಿಗೂಢತೆಯಿಂದ ಕೂಡಿದ ಅವ್ರೇಲಿಯಾನೋ ಮಾವನ ಜೊತೆ ಆಟವಾಡುವುದನ್ನು ಮುಂದುವರಿಸಿದ. ದಾನ್ ಅಪೋಲಿನರ್ ಮೊಸ್ಕೋತೆಗೆ ಈಗ ಊರಿನಲ್ಲಿ ಸಿವಿಲ್ ಮತ್ತು ಮಿಲಿಟರಿ ನಾಯಕನೆಂಬ ಹೆಸರಿದ್ದರೂ, ಅವನು ಮತ್ತೆ ಪ್ರಮುಖನೆಂದು ಅವನಿಗೆ ತಿಳಿದಿತ್ತು. ಸೈನ್ಯದ ಕ್ಯಾಪ್ಟನ್ ನಿರ್ಧಾರ ತೆಗೆದುಕೊಂಡ ನಂತರ ಪ್ರತಿದಿನ ಬೆಳಿಗ್ಗೆ ಅವನು ಸಾರ್ವಜನಿಕ ನಿಯಮಗಳನ್ನು ರಕ್ಷಿಸುವುದಕ್ಕೆ ತೆರಿಗೆ ವಸೂಲುಮಾಡುತ್ತಿದ್ದ. ಅವನ ಅಧಿಕಾರದ ವಲಯದಲ್ಲಿದ್ದ ನಾಲ್ವರು ಸೈನಿಕರು ತನ್ನ ಮನೆಯ ಹುಚ್ಚು ನಾಯಿಯಿಂದ ಕಡಿಸಿಕೊಂಡ ಹೆಂಗಸೊಬ್ಬಳನ್ನು ಎಳೆದು ತಂದು, ಬಂದೂಕಿನ ತುದಿಯಿಂದ ಚುಚ್ಚಿ ಕೊಂದರು. ಒಂದು ಭಾನುವಾರ ಅವ್ರೇಲಿಯಾನೋ ಗೆರಿನೋಲ್ಡೋನ ಮನೆಗೆ ಹೋಗಿ ಎಂದಿನ ಧಾಟಿಯಲ್ಲಿ ಸಕ್ಕರೆಯಿಲ್ಲದ ಕಾಫಿ ಕೇಳಿದ. ಅವರಿಬ್ಬರೂ ಅಡುಗೆ ಮನೆಯಲ್ಲಿ ಇಬ್ಬರೇ ಇದ್ದಾಗ ಹಿಂದೆಂದೂ ಕೇಳದಿದ್ದ ಅಧಿಕಾರ ಯುಕ್ತ ಧ್ವನಿಯಲ್ಲಿ ಅವ್ರೇಲಿಯಾನೋ, “ಹುಡುಗರನ್ನು ರೆಡಿ ಮಾಡಿಕೋ… ನಾವು ಯುದ್ಧಕ್ಕೆ ಹೊರಟಿದ್ದೀವಿ” ಎಂz. ಗೆರಿನೆಲ್ಡೊ ಮಾರ್ಕೆಜ್ ಅವನನ್ನು ನಂಬಲಿಲ್ಲ. +“ಯಾವ ಆಯುಧಗಳಿಂದ?” ಅವನು ಕೇಳಿದ. +“ಅವರದ್ದು” ಎಂದು ಅವ್ರೇಲಿಯಾನೋ ಉತ್ತರಿಸಿದ. +ಮಂಗಳವಾರ ನಡುರಾತ್ರಿಯ ಹುಚ್ಚೆದ್ದ ಕಾರ್ಯಾಚರಣೆಯಲ್ಲಿ ಅವ್ರೇಲಿಯಾನೋ ಬ್ಯುಂದಿಯಾನ ನೇತೃತ್ವದಲ್ಲಿ ಚಾಕು ಚೂರಿ ಹಿಡಿದ ಮೂವತ್ತು ವರ್ಷದೊಳಗಿರುವ ಇಪ್ಪತ್ತೊಂದು ಜನ ರಕ್ಷಣಾದಳದವರನ್ನು ತಬ್ಬಿಬ್ಬಾಗಿಸಿ ಅವರಿಂದ ಆಯುಧಗಳನ್ನು ವಶಪಡಿಸಿಕೊಂಡು ಹೊರಗಿನಂಗಳದಲ್ಲಿ ಅವರ ಕ್ಯಾಪ್ಟನ್ ಮತ್ತು ಆ ಹೆಂಗಸನ್ನು ಕೊಂದ ನಾಲ್ಕು ಜನ ಸೈನಿಕರನ್ನು ಕೊಚ್ಚಿ ಹಾಕಿದರು. +ಅದೇ ದಿನ ರಾತ್ರಿ ಗುಂಡಿಕ್ಕುವ ತಂಡದ ಶಬ್ದ ಕೇಳುತ್ತಿದ್ದಾಗ ಅರ್ಕಾದಿಯೋನನ್ನು ಊರಿನ ಸಿವಿಲ್ ಮತ್ತು ಮಿಲಿಟರಿ ನಾಯಕನೆಂದು ಹೆಸರಿಸಲಾಯಿತು. ಮದುವೆಯಾದ ವಿರೋಧಿಗಳಿಗೆ ಅವರಷ್ಟಕ್ಕೆ ಅವರನ್ನು ಬಿಟ್ಟ ತಮ್ಮ ಹೆಂಡತಿಯರಿಂದ ಬೀಳ್ಕೊಡುಗೆ ಪಡೆಯಲೂ ಸಮಯವಿರಲಿಲ್ಲ. ಭಯದಿಂದ ಮುಕ್ತರಾದ ಜನರ ಚಪ್ಪಾಳೆ ಸಂಭ್ರಮದೊಡನೆ ಮನಾರ್‌ಗೆ ಹೊರಟಿದ್ದಾನೆ ಎಂಬ ವರದಿಯಿದ್ದ ಆಂದೋಳನದ ಜನರಲ್ ವಿಕ್ಟೋರಿಯೋ ಮೆದೀನಾನ ಸೈನ್ಯಕ್ಕೆ ಸೇರಲು ಹೊರಟರು. ಹೊರಡುವ ಮುಂಚೆ ಅವ್ರೇಲಿಯಾನೋ ದಾನ್ ಅಪೋಲಿನರ್ ಮೊಸ್ಕೋತೆಯನ್ನು ಹೊರಗೆ ಕರೆದು, “ಸಮಾಧಾನದಿಂದಿರಿ ಮಾವಯ್ಯ, ಹೊಸ ಸರ್ಕಾರ ನಿಮ್ಮ ಮತ್ತು ನಿಮ್ಮ ಮನೆಯವರ ಕ್ಷೇಮಕ್ಕೆ ಗ್ಯಾರಂಟಿ ಕೊಡುತ್ತೆ” ಎಂದ. ಬಗಲಿಗೆ ಬಂದೂಕು ಉದ್ದನೆ ಶೂ ಹಾಕಿಕೊಂಡಿದ್ದ ಪ್ರತಿ ರಾತ್ರಿ ಒಂಬತ್ತರ ತನಕ ಆಟವಾಡುತ್ತಿದ್ದ ಸಂಚುಕೋರನನ್ನು ಗುರುತು ಹಿಡಿಯುವುದಕ್ಕೆ ದಾನ್ ಅಪೋಲಿನರ್ ಮೊಸ್ಕೋತೆಗೆ ಕಷ್ಟವಾಯಿತು. +“ಇದು ಹುಚ್ಚಾಟ” ಎಂದು ಚಕಿತಗೊಂಡು ಹೇಳಿದ. +“ಹುಚ್ಚಲ್ಲ” ಎಂದು ಮುಂದುವರಿದ ಅವ್ರೇಲಿಯಾನೋ, “ಯುದ್ಧ… ಅಲ್ದೆ, ಇನ್ಮೇಲೆ ನನ್ನನ್ನ ಅವ್ರೇಲಿಯಾನೋ ಅಂತ ಕರೀಬೇಡಿ. ನಾನೀಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ.” +೬ +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮುವ್ವತ್ತೆರಡು ದಂಗೆಗಳನ್ನು ವ್ಯವಸ್ಥೆಗೊಳಿಸಿದ ಮತ್ತು ಎಲ್ಲದರಲ್ಲೂ ಸೋತ. ಅವನಿಗೆ ಹದಿನೇಳು ಜನ ಹೆಂಗಸರಿಂದ ಹದಿನೇಳು ಗಂಡು ಮಕ್ಕಳಾಗಿದ್ದರು ಮತ್ತು ಕೊನೆಯವನಿಗೆ ಮುವ್ವತ್ತೈದು ವರ್ಷವಾಗುವ ಮುಂಚೆ ಅವರೆಲ್ಲರನ್ನು ಒಬ್ಬೊಬ್ಬರನ್ನಾಗಿ ಹಿಡಿದು ಕೊಲ್ಲಲಾಯಿತು. ಅವನ ಮೇಲೆಯೇ ನಡೆದ ಹದಿನಾಲ್ಕು ಹತ್ಯೆಯ ಪ್ರಯತ್ನ ಎಪ್ಪತ್ಮೂರು ಸಲ ಸೈನಿಕರು ಹೊಂಚು ಹಾಕಿ ಕೊಲ್ಲಲು ಮಾಡಿದ ಪ್ರಯತ್ನದಿಂದ ಮತ್ತು ಗುಂಡಿಕ್ಕುವ ತಂಡದವರಿಂದ ಪಾರಾಗಿದ್ದ. ಅವನು ತನ್ನ ಆಫೀಸಿನಲ್ಲಿ ಕಾಫಿಯಲ್ಲಿ ಬೆರೆಸಿದ, ಕುದುರೆಯೊಂದನ್ನು ಸಾಯಿಸಲು ಸಾಕಾಗುವಂಥ ವಿಷಕ್ಷಾರವನ್ನು ಕುಡಿದು ಬದುಕುಳಿದ. ಅವನು ಗಣರಾಜ್ಯದ ಅಧ್ಯಕ್ಷರ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ನಿರಾಕರಿಸಿದ. ಅವನು ಕ್ರಾಂತಿ ಸೈನ್ಯದ ಪ್ರಧಾನ ಸೈನ್ಯಾಧಿಕಾರಿಯ ಮಟ್ಟಕ್ಕೆ ಬೆಳೆದ. ಅವನ ಕಾರ್ಯವಿಸ್ತಾರ ಈ ಕೊನೆಯಿಂದ ಮತ್ತೊಂದು ಕೊನೆಯ ತನಕ ಹಬ್ಬಿತ್ತು. ಅವನು ಸರ್ಕಾರ ಎಲ್ಲರಿಗಿಂತ ಹೆಚ್ಚು ಭಯಗೊಂಡಿದ್ದ ವ್ಯಕ್ತಿಯಾಗಿದ್ದ. ಅವನು ಯಾರಿಗೂ ತನ್ನ ಫೋಟೋ ತೆಗೆಯಲು ಬಿಡುತ್ತಿರಲಿಲ್ಲ. ಯುದ್ಧ ಮುಗಿದ ಮೇಲೆ ಕೊಟ್ಟ ಜೀವನ ಪರ್ಯಂತ ಪಿಂಚಣಿಯನ್ನು ಅವನು ಒಪ್ಪಲಿಲ್ಲ. ಕೊನೆಯ ದಿನಗಳ ತನಕ ಅವನು ಮಕೋಂದೋದ ತನ್ನ ವರ್ಕ್‌ಶಾಪ್‌ನಲ್ಲಿ ತಯಾರಿಸುತ್ತಿದ್ದ ಸಣ್ಣ ಚಿನ್ನದ ಮೀನುಗಳಿಂದ ಜೀವನ ನಡೆಸುತ್ತಿದ್ದ. ಅವನು ಯಾವಾಗಲೂ ತಂಡದ ಮುಖ್ಯಸ್ಥನಾಗಿ ಹೋರಾಟ ನಡೆಸುತ್ತಿದ್ದರೂ ಇಪ್ಪತ್ತು ವರ್ಷದ ಜನರ ಹೋರಾಟವನ್ನು ಕೊನೆಗೊಳಿಸಿದ ನೀರ್ಲಾಂದಿಯಾ ಒಪ್ಪಂದಕ್ಕೆ ಸಹಿ ಮಾಡಿದ ಸಂದರ್ಭವನ್ನು ಬಿಟ್ಟರೆ ಅವನಿಗೆ ವಿಶೇಷವಾದ ಆಘಾತವಾಗಿರಲಿಲ್ಲ. ಅವನು ತನಗೆ ತಾನೆ ಎದೆಗೆ ಗುಂಡಿಕ್ಕಿಕೊಂಡಾಗ ಅದು ಯಾವ ಪ್ರಮುಖ ಅಂಗಕ್ಕೆ ಹಾನಿಮಾಡದೆ ಬೆನ್ನಿನ ಮೂಲಕ ಆಚೆ ಬಂದಿತ್ತು. ಇವೆಲ್ಲದರ ಕೊನೆಗೆ ಉಳಿದದ್ದು, ಅವನ ಹೆಸರಿನ ರಸ್ತೆಯೊಂದು ಮಾತ್ರ. ಆದರೆ ವಯಸ್ಸಾಗಿ ಸಾಯುವ ಮುಂಚೆ ತಾನು ಆ ದಿನ ಬೆಳಿಗ್ಗೆ ಇಪ್ಪತ್ತೊಂದು ಜನರೊಡನೆ ಜನರಲ್ ವಿಕ್ಟೋರಿಯೋನ ಸೈನ್ಯಕ್ಕೆ ಸೇರಲು ಹೊರಟಾಗ ಆಂಥದೇನನ್ನೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ. +ಅವನು ಹೊರಡುವ ಮುಂಚೆ ಅರ್ಕಾದಿಯೋಗೆ ಹೇಳಿದ್ದಿಷ್ಟೆ: “ಮಕೋಂದೋ ನೋಡಿಕೊಳ್ಳೋದನ್ನ ನಿಂಗೆ ಬಿಡ್ತಿದೀವಿ. ಒಳ್ಳೆ ರೀತೀಲಿ ಕೊಡ್ತಿದೀವಿ. ಸಾಧ್ಯವಾದ್ರೆ ನಾವು ವಾಪಸು ಬಂದಾಗ ಇದಕ್ಕಿಂತ ಚೆನ್ನಾಗಿರೋ ಹಾಗೆ ಮಾಡು.” +ಅರ್ಕಾದಿಯೋ ಆ ಸೂಚನೆಗೆ ವೈಯಕ್ತಿಕ ವ್ಯಾಖ್ಯಾನ ಕೊಟ್ಟ. ಅವನು ಸೈನ್ಯಾಧಿಕಾರಿಗಳಿಗಿರುವಂತೆ ಹೆಣಿಗೆ ಹಾಕಿದ ಮತ್ತು ಭುಜಕೀರ್ತಿ ಇರುವ ಸಮವಸ್ತ್ರವನ್ನು ಮೆಲ್‌ಕಿಯಾದೆಸ್‌ನ ಪುಸ್ತಕಗಳಿಂದ ಸ್ಫೂರ್ತಿಗೊಂಡು ರೂಪಿಸಿದ ಮತ್ತು ಕೊಂದು ಹಾಕಿದ ಕ್ಯಾಪ್ಟನ್‌ನ ಬಂಗಾರದ ಕಟ್ಟು ಹಾಕಿದ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಅವನು ಎರಡು ಫಿರಂಗಿಗಳನ್ನು ಊರ ಮುಂಬಾಗಿಲಲ್ಲಿ ಇಟ್ಟು, ತನ್ನ ಪ್ರತಿಪಾದನೆಗಳಿಂದ ಉತ್ತೇಜಿತರಾದ ಹಳೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ತೊಡುವಂತೆ ಹೇಳಿ, ಹೊರಗಿನವರಿಗೆ ಬಿಗಿಯಾದ ಬಂದೋಬಸ್ತ್‌ನಲ್ಲಿ ಇದೆ ಎಂಬ ಅಭಿಪ್ರಾಯ ಮೂಡುವುದಕ್ಕಾಗಿ ರಸ್ತೆಗಳಲ್ಲಿ ತಿರುಗಾಡುವಂತೆ ಮಾಡಿದ. ಅದರಿಂದ ತಪ್ಪೆನಿಸುವ ಎರಡು ಅಂಶಗಳಿದ್ದವು. ಸರ್ಕಾರ ಆ ಸ್ಥಳದ ಮೇಲೆ ಆಕ್ರಮಣ ನಡೆಸಲು ಹತ್ತು ತಿಂಗಳ ತನಕ ಧೈರ್ಯವಹಿಸಲಿಲ್ಲ ಮತ್ತು ಹಾಗೆ ಮಾಡಿದಾಗ ಅದು ಎಷ್ಟು ದೊಡ್ಡ ಸೈನಿಕರ ತಂಡವನ್ನು ಕಳಿಸಿತೆಂದರೆ ಪ್ರತಿರೋಧವನ್ನು ಅರ್ಥ ಗಂಟೆಯಲ್ಲಿ ಅಡಗಿಸಲಾಯಿತು. ತನ್ನ ಆಡಳಿತದ ಮೊದಲನೆ ದಿನದಿಂದಲೇ ಕಟ್ಟಳೆಗಳನ್ನು ಹೊರಡಿಸುವ ಬಗ್ಗೆ ತನಗಿರುವ ಬಲವನ್ನು ಅರ್ಕಾದಿಯೋ ತೋರಿಸಿಕೊಂಡ. ಪ್ರತಿ ದಿನ ನಾಲ್ಕು ಕಟ್ಟಳೆಗಳನ್ನು ಜಾರಿಗೊಳಿಸುತ್ತಿದ್ದ ಮತ್ತು ತಲೆಯೊಳಗೆ ಬಂದದ್ದೆಲ್ಲವನ್ನೂ ವ್ಯವಸ್ಥೆಗೊಳಿಸುತ್ತಿದ್ದ. ಹದಿನೆಂಟು ವರ್ಷ ದಾಟಿದವರಿಗೆ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದ. ಸಂಜೆ ಆರರ ನಂತರ ರಸ್ತೆಯಲ್ಲಿ ಓಡಾಡುವ ಪ್ರಾಣಿಗಳು ಸಾರ್ವಜನಿಕ ಸ್ವತ್ತುಗಳೆಂದು ಘೋಷಿಸಿದ. ಅಲ್ಲದೆ ವಯಸ್ಸಾದವರಿಗೆ ತೋಳಿನ ಸುತ್ತ ಕೆಂಪು ಪಟ್ಟಿ ಕಟ್ಟಿಕೊಳ್ಳಬೇಕೆಂದು ವಿಧಿಸಿದ. ಫಾದರ್ ನಿಕನೋರ್‌ನನ್ನು ಪಾದ್ರಿಯ ಆಡಳಿತದ ವಲಯದಲ್ಲಿ ಪ್ರತ್ಯೇಕವಾಗಿರಿಸಿ, ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಹೇಳುವುದನ್ನು ಅಥವಾ ಗಂಟೆ ಬಾರಿಸುವುದನ್ನು ಉದಾರವಾದಿಗಳ ವಿಜಯಕ್ಕಲ್ಲದೆ ಉಳಿದಂತೆ ನಿಷೇಧಿಸಿದ. ತನ್ನ ಗುರುಗಳ ಬಗ್ಗೆ ಯಾರೂ ಅನುಮಾನಿಸಬಾರದೆಂದು ಗುಂಡಿಕ್ಕುವ ತಂಡವನ್ನು ಚೌಕದಲ್ಲಿ ವ್ಯವಸ್ಥೆಗೊಳಿಸಿದ ಮತ್ತು ಅಲ್ಲಿ ನಿಲ್ಲಿಸಿದ ಒಂದು ಬೆದರು ಗೊಂಬೆಗೆ ಅವರಿಂದ ಗುಂಡು ಹೊಡೆಸಿz. ಪ್ರಾರಂಭದಲ್ಲಿ ಯಾರೂ ಅವನನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಎಷ್ಟಾಗಲಿ ಅವರೆಲ್ಲ ಹರೆಯಕ್ಕೆ ಬರುತ್ತಿದ್ದ ಆಡುವ ಹುಡುಗರಾಗಿದ್ದರು. ಆದರೆ ಒಂದು ದಿನ ಅರ್ಕಾದಿಯೋ ಕತಾವುರೆಯ ಅಂಗಡಿಗೆ ಹೋದಾಗ ಗುಂಪಿನಲ್ಲಿದ್ದ ತುತ್ತೂರಿ ಊದುವನೊಬ್ಬ ಅವನನ್ನು ತಮಾಷೆಯೊಂದಿಗೆ ಬರಮಾಡಿದ್ದು ಗಿರಾಕಿಗಳು ನಗುವಂತೆ ಮಾಡಿತು. ಅರ್ಕಾದಿಯೋ ಅಧಿಕಾರಿ ಅಗೌರವ ತೋರಿಸಿದ್ದಕ್ಕಾಗಿ ಅವನಿಗೆ ಗುಂಡಿಟ್ಟು ಕೊಲ್ಲಿಸಿದ. ವಿರೋಧಿಸಿದ ಜನರನ್ನು ಸ್ಕೂಲಿನಲ್ಲಿ ಕಟ್ಟಿದ್ದ ಗೂಟಗಳಿಗೆ ಕಟ್ಟಿ ಕೇವಲ ಬ್ರೆಡ್ ಮತ್ತು ನೀರು ಕೊಟ್ಟಿದ್ದ. ಪ್ರತಿ ಬಾರಿ ಅವನ ಹೊಸದಾದ ಅತಿರೇಕದ ಕೆಲಸದ ಬಗ್ಗೆ ತಿಳಿದಾಗ ಉರ್ಸುಲಾ “ನೀನೊಬ್ಬ ಕೊಲೆಗಾರ” ಎಂದು ಅವನ ಮುಖಕ್ಕೆ ರಾಚುತ್ತಿದ್ದಳು. “ಅವ್ರೇಲಿಯಾನೋಗೆ ಇವೆಲ್ಲ ಗೊತ್ತಾದರೆ ನಿನ್ನನ್ನ ಶೂಟ್ ಮಾಡ್ತಾನೆ ಅದರಿಂದ ನಂಗೆ ಹಿಡಿಸಲಾರದಷ್ಟು ಸಂತೋಷವಾಗತ್ತೆ” ಎನ್ನುತ್ತಿದ್ದಳು. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ. ಅರ್ಕಾದಿಯೋ ಅನಗತ್ಯವಾದ ಭರಾಟೆಯಿಂದ ಹಿಡಿತವನ್ನು ಬಿಗಿ ಮಾಡುವುದನ್ನು ಮುಂದುವರಿಸಿ ಮಕೋಂದೋ ಅಲ್ಲಿಯವರೆಗೆ ಕಂಡರಿಯದಷ್ಟು ಕ್ರೂರ ಆಡಳಿತಗಾರನಾದ. ಯಾವುದೋ ಸಂದರ್ಭದಲ್ಲಿ ದಾನ್ ಅಪೋಲಿನರ್ ಮೊಸ್ಕೋತೆ, “ಈಗ ಆಗಿರೋ ವ್ಯತ್ಯಾಸವನ್ನು ಅನುಭವಿಸಲಿ. ಇದು ಉದಾರವಾದಿಗಳ ಸ್ವರ್ಗ” ಎಂದ. ಅರ್ಕಾದಿಯೋಗೆ ಇದು ತಿಳಿಯಿತು. ಅವನು ಸೈನಿಕರೊಂದಿಗೆ ಹೋಗಿ ಅವನ ಮನೆಯ ಸಾಮಾನು ಸರಂಜಾಮನ್ನು ಚಿಂದಿ ಮಾಡಿ ಹೆಣ್ಣು ಮಕ್ಕಳಿಗೂ ತದಕಿದ. ಅಲ್ಲದೆ ದಾನ್ ಅಪೋಲಿನರ್ ಮೊಸ್ಕೋತೆಯನ್ನು ದರದರ ಎಳೆದ. ಉರ್ಸುಲಾ ಅವನ ವಿರುದ್ಧ ಕೂಗಿ ಅಬ್ಬರಿಸುತ್ತ ಕೈಯಲ್ಲಿ ಚಾವಟಿ ಹಿಡಿದು ಕೇಂದ್ರ ಕಾರ್ಯಾಗಾರಕ್ಕೆ ಬಂದಾಗ ಅರ್ಕಾದಿಯೋ ಗುಂಡಿಕ್ಕುವ ತಂಡಕ್ಕೆ ತಾನೇ ಆರ್ಡರ್ ಕೊಡಲು ಸಿದ್ಧನಾಗುತ್ತಿದ್ದ. +“ನಿಂಗೆಷ್ಟು ಧೈರ್ಯ, ಸೂಳೆ ಮಗನೆ!” ಎಂದು ಅಬ್ಬರಿಸಿದಳು. +ಅರ್ಕಾದಿಯೋ ಪ್ರತಿಕ್ರಿಸುವ ಮುಂಚೆಯೇ ಒಂದು ಸಲ ಬಾರಿಸಿದಳು. “ಇದಕ್ಕೆ ನಿಂಗೆಷ್ಟು ಧೈರ್ಯ…. ನೀನು ಕೊಲೆಗಡುಕ… ನನ್ನನ್ನು ಕೊಂದು ಬಿಡು. ಪಾಪಿಯ ಮಗ ನೀನು. ನಿನ್ನಂಥ ರಾಕ್ಷಸನ್ನ ಬೆಳೆಸಿದೆ ಅಂತ ನಾಚ್ಕೆ ಪಡೋದು ತಪ್ಪುತ್ತೆ” ಎಂದು ಕೂಗಿದಳು. ಅವನನ್ನು ಅಂಗಳದ ತನಕ ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಚಾವಟಿಯಿಂದ ಬಾರಿಸಿದಳು. ಅಲ್ಲಿ ಅವನು ಬಸವನ ಹುಳುವಿನ ಹಾಗೆ ಸುರುಳಿ ಸುತ್ತಿ ಉರುಳಿದ. ಹಿಂದಿನ ದಿನ ತಮಾಷೆಗಾಗಿ ಬೆದರುಗೊಂಬೆಗೆ ಗುಂಡು ಹೊಡೆದು ಚೂರು ಚೂರು ಮಾಡಿದ ಅದೇ ಕಂಬಕ್ಕೆ ಕಟ್ಟಿ ಹಾಕಿದ್ದ ದಾನ್ ಅಪೋಲಿನರ್ ಮೊಸ್ಕೋತೆಗೆ ಪ್ರಜ್ಞೆ ತಪ್ಪಿತ್ತು. ಉರ್ಸುಲಾ ತಮ್ಮ ಬೆನ್ನು ಹತ್ತುವಳೆಂಬ ಭಯದಿಂದ ತಂಡದ ಹುಡುಗರು ಕಾಲು ಕಿತ್ತರು. ಆದರೆ ಉರ್ಸುಲಾ ಅವರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಅವಳು ಚಿಂದಿಯಾದ ಸಮವಸ್ತ್ರದಲ್ಲಿ ರೋಷದಿಂದ ಕುದ್ದು ನರಳುತ್ತಿದ್ದ ಅರ್ಕಾದಿಯೋನನ್ನು ಅಲ್ಲಿಯೇ ಬಿಟ್ಟಳು. ಕಟ್ಟಿದ್ದ ದಾನ್ ಅಪೋಲಿನರ್ ಮೊಸ್ಕೋತೆಯನ್ನು ಬಿಚ್ಚಿ ಮನೆಗೆ ಕರೆದುಕೊಂಡು ಹೋದಳು. ಕೇಂದ್ರ ಕಾರ್ಯಾಗಾರವನ್ನು ಬಿಡುವ ಮುಂಚೆ ಅಲ್ಲಿದ್ದ ಕೈದಿಗಳಿಗೆ ಬಿಡುಗಡೆ ಮಾಡಿದಳು. +ಆ ಸಮಯದಿಂದ ಊರನ್ನು ಆಳಿದವಳು ಅವಳು. ಭಾನುವಾರದ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಮರುಸ್ಥಾಪಿಸಿದಳು, ಕೆಂಪು ಪಟ್ಟಿ ಕಟ್ಟಿಕೊಳ್ಳುವುದನ್ನು ನಿಲ್ಲಿಸಿದಳು. ಅಲ್ಲದೆ ಹುಚ್ಚುಚ್ಚಾದ ಕಟ್ಟಳೆಗ;ನ್ನು ವಜಾ;iಡಿದಳು. ಎಷ್ಟು ಶಕ್ತಿ ಇದ್ದರೂ ಅವಳು ತನ್ನ ದುರದೃಷ್ಟಕ್ಕಾಗಿ ಕಣ್ಣೀರಿಟ್ಟಳು. ಅವಳೆಷ್ಟು ಏಕಾಂಗಿಯಾಗಿದ್ದಳೆಂದರೆ, ಮರದ ಕೆಳಗಿದ್ದು ಮರೆತು ಹೋದ ಗಂಡನ ಜೊತೆಯನ್ನು ಬಯಸಿದಳು. “ನೋಡಿ ನಾವೆಲ್ಲಿಗೆ ಬಂದಿದೀವಿ” ಎಂದು ಜೂನ್ ತಿಂಗಳ ಮಳೆ ಚಪ್ಪರವನ್ನು ಕೆಳಗುರುಳಿಸುವುದೆಂಬ ಭಯ ಹುಟ್ಟಿಸಿದಾಗ ಹೇಳಿ, “ಖಾಲಿ ಮನೆ ಕಡೆ ನೋಡಿ. ಮಕ್ಕಳೆಲ್ಲ ಎಲ್ಲಂದರಲ್ಲಿ ಚದುರಿ ಹೋಗಿ, ಈಗ ಮತ್ತೆ ನಾವಿಬ್ಬರೇ, ಮೊದಲಿದ್ದ ಹಾಗೆ” ಎಂದಳು. ಯಾವುದರ ಅರಿವಿರದ ಕೂಪದಲ್ಲಿ ಮಳುಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ, ಅವಳ ಆಲೋಚನೆಗಳಿಗೆ ಕಿವುಡಾಗಿದ್ದ. ಅವನು ತನ್ನ ಹುಚ್ಚುತನದ ಪ್ರಾರಂಭದ ದಿನಗಳಲ್ಲಿ, ತನ್ನ ದೈನಂದಿನ ಅಗತ್ಯಗಳನ್ನು ಪಟಪಟನೆ ಲ್ಯಾಟಿನ್ ಪದಗಳಲ್ಲಿ ಹೇಳುತ್ತಿದ್ದ. ಅಮರಾಂತ ತಂದು ಕೊಟ್ಟ ಊಟ ಮಾಡುತ್ತ ಅವಳಿಗೆ ತನ್ನನ್ನು ಹೆಚ್ಚು ಕಾಡುವುದೇನು ಎನ್ನುವುದನ್ನು ಸ್ವಷ್ಟ ಹಾಗೂ ಸರಳವಾಗಿ ಹೇಳುತ್ತಿದ್ದ. ಅವಳು ಕೊಡುತ್ತಿದ್ದ ಚೀಪುವ ವಸ್ತು ಮತ್ತು ಸಾಸುವೆ ಮಸಾಲೆ ಲೇಪವನ್ನು ಸುಮ್ಮನೆ ತೆಗೆದುಕೊಳ್ಳುತ್ತಿದ್ದ. ಆದರೆ ಉರ್ಸುಲಾ ತನ್ನ ವಿಚಾರಗಳನ್ನು ತಿಳಿಸಲು ಹೋಗುವಷ್ಟರಲ್ಲಿ ಅವನು ವಾಸ್ತವದಿಂದ ಎಲ್ಲ ಸಂಪರ್ಕವನ್ನು ಕಳೆದುಕೊಂಡಿದ್ದ. ಅವನನ್ನು ಸ್ಟೂಲಿನ ಮೇಲೆ ಕೂಡಿಸಿ ಇಷ್ಟಿಷ್ಟೆ ಸ್ನಾನಮಾಡಿಸುತ್ತ, ಸಂಸಾರದ ವಿಷಯವನ್ನು ತಿಳಿಸುತ್ತಿದ್ದಳು. “ಅವ್ರೇಲಿಯಾನೋ ಯುದ್ಧಕ್ಕೆ ಹೋಗಿ ನಾಲ್ಕು ತಿಂಗಳಾಯ್ತ. ಅವನ ಬಗ್ಗೆ ಏನೂ ತಿಳಿದಿಲ್ಲ” ಎಂದು ಅವನ ಬೆನ್ನಿಗೆ ಸೋಪು ಹಚ್ಚಿ ಉಜ್ಜುತ್ತ ಹೇಳುವಳು. “ಹೊಸೆ ಅರ್ಕಾದಿಯೋ ನಿಮಗಿಂತ ಎತ್ತರವಾಗಿ ಭಾರಿ ಮೈಕಟ್ಟಿನವನಾಗಿ ವಾಪಸು ಬಂದಿದ್ದಾನೆ. ಮೈ ಮೇಲೆಲ್ಲ ಹಚ್ಚೆ. ಆದರೆ ಅವನು ನಾವೆಲ್ಲ ನಾಚ್ಕೆ ಪಡೋ ಹಾಗೆ ಮಾಡಿದಾನಷ್ಟೆ”. ಕೆಟ್ಟ ಸುದ್ದಿಯಿಂದ ಅವನಿಗೆ ಬೇಸರವಾಯಿತೆಂದು ಅವಳಿಗನ್ನಿಸಿತು. ಅನಂತರ ಅವಳು ಅವನಿಗೆ ಸುಳ್ಳು ಹೇಳಲು ನಿರ್ಧರಿಸಿದಳು. ಅವನ ಮಲದ ಮೇಲೆ ಬೂದಿ ಎರಚಿ ಸಲಿಕೆಯಿಂದ ಅದನ್ನು ಎತ್ತಿ ಹಾಕುವಾಗ, “ನೀನು ನಾನು ಹೇಳಿದ್ದನ್ನ ನಂಬೋದಿಲ್ಲ… ಹೊಸೆ ಅರ್ಕಾದಿಯೋ, ರೆಬೇಕ ಮದುವೆಯಾಗಲಿ ಅಂತ ದೇವರ ಇಷ್ಟವಿತ್ತು. ಈಗವರು ಸಂತೋಷವಾಗಿದ್ದಾರೆ.” ಅವಳು ತೋರಿಕೆಯ ಮಾತುಗಳ ಬಗ್ಗೆ ಎಷ್ಟು ಪ್ರಾಮಾಣಿಕಳಾಗಿದ್ದಳೆಂದg, ಸುಳ್ಳುಗಳಿಂದ ತನಗೆ ತಾನೆ ಸಮಾಧಾನ ಪಟ್ಟುಕೊಂಡಳು. ಅವಳು, “ಅರ್ಕಾದಿಯೋ ಈಗ ಗಂಭೀರವಾಗಿದ್ದಾನೆ, ತುಂಬ ಧೈರ್ಯಶಾಲಿ. ಅಲ್ದೆ ಯೂನಿಫಾರಂನಲ್ಲಿ ತುಂಬ ಚೆನ್ನಾಗಿ ಕಾಣ್ತಾನೆ.” ಅದೆಲ್ಲ ಸತ್ತವನ ಮುಂದೆ ಹೇಳಿದಂತಾಯಿತು. ಏಕೆಂದರೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಆಗಲೆ ಯಾವುದೂ ಕಾಡದಂಥ ಸ್ಥಿತಿಯಲ್ಲಿದ್ದ. ಅವಳು ಹೇಳುತ್ತಿದ್ದ ಪ್ರತಿಯೊಂದಕ್ಕೂ ಅವನು ಶಾಂತವಾಗಿರುವಂತೆ, ಅಲಕ್ಷ್ಯದಿಂದಿರುವಂತೆ ಕಾಣುತ್ತಿದ್ದ. ಅವನು ಸ್ಟೂಲ್‌ನಿಂದ ಜರುಗಲೇ ಇಲ್ಲ. ಕಾಣದಾಚೆಯ ಶಕ್ತಿಯೊಂದು ಅವನನ್ನು ಮರಕ್ಕೆ ಹಾಕಿದಂತೆ, ಯಾವ ಬಂಧವೂ ಬೇಕಿರz, ಬಿಸಿಲು-ಮಳೆಗೆ ತೆರೆದುಕೊಂಡು ಅಲ್ಲಿಯೇ ಇದ್ದ. ಮಳೆ ಬೀಳುವುದು ಮುಗಿಯದೆ ಆಗಸ್ಟ್‌ನ ಹಬ್ಬದಲ್ಲಿ ಉರ್ಸುಲಾಳಿಗೆ ತನಗೆ ಸತ್ಯವೆಂದು ತೋರಿದ ಸುದ್ದಿಯನ್ನು ಅವನಿಗೆ ತಿಳಿಸಲು ಸಾಧ್ಯವಾಯಿತು. +ಅವಳು “ನಾವಿನ್ನೂ ಅದೃಷ್ಟಶಾಲಿಗಳು ಅಂದ್ರೆ ನೀವು ನಂಬ್ತೀರಾ?….. ಅಮರಾಂತ ಮತ್ತು ಇಟಲಿಯ ಪಿಯಾನೋದವನು ಮದುವೆ ಆಗ್ತಿದ್ದಾರೆ” ಎಂದಳು. +ಉರ್ಸುಲಾ ನೋಡಿಕೊಂಡಂತೆ ಅಮರಾಂತ ಮತ್ತು ಪಿಯತ್ರೋ ಕ್ರೆಸ್ಪಿ ಅವಳ ಸ್ನೇಹ ಗಾಢವಾಯಿತು. ಈಗವಳಿಗೆ ಅವರಿಬ್ಬರ ಭೇಟಿಯ ಮೇಲೆ ಕಣ್ಣಿಸುವುದು ಅನಗತ್ಯವೆನಿಸಿತು. ಇಟಲಿಯವನು ಸಂಜೆಯ ಸಮಯಕ್ಕೆ ಗುಂಡಿಗೆ ಹೂ ಸಿಕ್ಕಿಕೊಂಡು ಬಂದು ಅಮರಾಂತಳಿಗೆ ಪೆತ್ರಾರ್ಚ್‌ನ ಸಾನೆಟ್ಟುಗಳನ್ನು ಅನುವಾದ ಮಾಡುತ್ತಿದ್ದ. ಅವರು ಮುಂಭಾಗದಲ್ಲಿ ಸುತ್ತಲಿನ ಹೂ ಹಸಿರಿನ ಇಕ್ಕಟ್ಟಿನಲ್ಲಿ ಕುಳಿತು, ಯುದ್ಧದ ಕೆಟ್ಟ ಸುದ್ದಿಗಳನ್ನು ಅಲಕ್ಷಿಸಿ, ಸೊಳ್ಳೆಗಳು ಅವರಿಗೆ ನಡುಮನೆಗೆ ಹೋಗುವಂತೆ ಮಾಡುವ ತನಕ ಅವನು ಓದುತ್ತಿದ್ದ ಮತ್ತು ಅವಳು ಲೇಸಿನ ಹೊಲಿಗೆ ಮಾಡುತ್ತಿದ್ದಳು. ಅಮರಾಂತಳ ಸೂಕ್ಷ್ಮತೆ ಮತ್ತು ಮಾಧುರ್ಯ ಅವನೊಳಗೆ ಕಾಣದ ನೇಯ್ಗೆಯನ್ನು ಹೆಣೆಯುತ್ತಿದ್ದವು. ಎಂಟು ಗಂಟೆಗೆ ಹೊರಡಬೇಕಾದ್ದರಿಂದ ಅವನು ತನ್ನ ಉಂಗುರವಿರದ ಬೆರಳುಗಳಿಂದ ಅವುಗಳನ್ನು ಅತ್ತ ಸರಿಸುತ್ತಿದ್ದ. ಅವರ ಹತ್ತಿರ ಪಿಯತ್ರೋ ಕ್ರೆಸ್ಪಿಗೆ ಇಟಲಿಯಿಂದ ಬಂದ ಒಂದು ಫೋಟೋ ಆಲ್ಬಂ ಇತ್ತು. ಅದರಲ್ಲಿ ನಿರ್ಜನ ಪಾರ್ಕ್‌ನಲ್ಲಿ ಕುಳಿತ ಪ್ರೇಮಿಗಳು, ಹೃದಯ ಭೇದಿಸಿದ ಬಾಣ, ಬಂಗಾರದ ರಿಬ್ಬನ್ ಕಟ್ಟಿ ಹಿಡಿದ ಪಾರಿವಾಳ ಮುಂತಾದವುಗಳ ಕಾರ್ಡುಗಳಿದ್ದವು. ಅವನು ಕಾರ್ಡುಗಳನ್ನು ನೋಡುತ್ತ, “ನಾನು ಫ್ಲಾರೆನ್ಸ್‌ನಲ್ಲಿರೋ ಈ ಪಾರ್ಕ್‌ಗೆ ಹೋಗಿದೀನಿ. ಅಂಗೈಯಲ್ಲಿ ಕಾಳುಗಳನ್ನು ಹಿಡಿದುಕೊಂಡರೆ ಪಕ್ಷಿಗಳು ಬಂದು ತಿನ್ನುತ್ವೆ” ಎನ್ನುತ್ತಾನೆ. ಒಂದೊಂದು ಸಲ ವೆನಿಸ್ಸಿನ ವಾಟರ್ ಕಲರ್ ನೋಡಿದಾಗ ಅದರ ಹಂಬಲ ನುಗ್ಗಿ ಬಂದು ಅಲ್ಲಿನ ಹಸಿ ಮಣ್ಣು, ಮೀನಿನ ವಾಸನೆ ಹೂವಿನ ಸುಗಂಧವಾಗಿ ಪರಿವರ್ತಿತವಾಗುತ್ತಿತ್ತು. ಅಮರಾಂತ ನಿಟ್ಟುಸಿರು ಬಿಟ್ಟು ಸರ್ವನಾಶವಾದ ಪುರಾತನ ಪಟ್ಟಣಗಳ ಅವಶೇಷಗಳಿರುವ ಪ್ರದೇಶದಲ್ಲಿ, ಮಗುವಿನಂತೆ ಮಾತಾಡುವ ಚೆಲುವಾದ ಗಂಡು ಹೆಣ್ಣುಗಳನ್ನು ಕುರಿತು ಕನಸು ಕಾಣುತ್ತಿದ್ದಳು. ಅದನ್ನು ಹುಡುಕುತ್ತ ಸಮುದ್ರವನ್ನು ದಾಟಿ ರೆಬೇಕಳ ಮೋಹ ಪರವಶತೆಯ ಗೊಂದಲದಲ್ಲಿದ್ದ ಪಿಯತ್ರೋ ಕ್ರೆಸ್ಪಿಗೆ ಪ್ರೇಮ ದೊರಕಿತು. ಅಭಿವೃದ್ಧಿ ಸಂತೋಷದ ಜೊತೆಗೂಡಿತು. ಅವನ ಅಂಗಡಿ ಬೆಳೆದು ಇಡೀ ಬ್ಲಾಕನ್ನು ಆಕ್ರಮಿಸಿತ್ತು ಮತ್ತು ಕ್ಯಾರಿಲೋನ ವಾದ್ಯಗೋಷ್ಠಿಯ ಜೊತೆ ಗಂಟೆಯನ್ನು ತಿಳಿಸುವ ಫ್ಲಾರೆನ್ಸ್‌ನ ಬೆಲ್ ಟವರ್‌ನ ಮರುನಿರ್ಮಾಣದ ಭ್ರಮಾ ಕೇಂದ್ರವಾಗಿತ್ತಲ್ಲz, ಸರೆಂಟೋದ ಮ್ಯೂಸಿಕ್ ಬಾಕ್ಸ್ಸ್‌ಗಳು ಹಾಗೂ ತೆಗೆದಾಗ ಪಂಚಸ್ವರದ ಸಂಗೀತವನ್ನು ಹೊಮ್ಮಿಸುವ ಚೀನದ ಕಾಂಪ್ಯಾಕ್ಟ್‌ಗಳು ಮತ್ತು ಬಯಸಿದ ರೀತಿಯ ವಾದ್ಯದುಪಕರಣಗಳು ಮತ್ತು ಯಾಂತ್ರಿಕ ಗೊಂಬೆಗಳಿದ್ದವು. ಅವನ ತಮ್ಮ ಬ್ರುನೋ ಕ್ರೆಸ್ಪಿ ಅಂಗಡಿ ನೋಡಿಕೊಳ್ಳುತ್ತಿದ್ದ. ಏಕೆಂದರೆ ಪಿಯತ್ರೋ ಕ್ರೆಪ್ಸಿಗೆ ಸಂಗೀತ ಪಾಠಶಾಲೆಯನ್ನು ನಡೆಸುವುದಕ್ಕಷ್ಟೆ ಸಮಯ ಸಾಕಾಗುತ್ತಿತ್ತು. ಅವನಿಂದಾಗಿ ಥಳಕಿನಿಂದ ಮಿರುಗುತ್ತ ಟರ್ಕಿಗಳ ರಸ್ತೆ ಯಾರಿಗೇ ಆದರೂ ಅರ್ಕಾದಿಯೋನ ಹುಚ್ಚಾಟ ಮತ್ತು ಯುದ್ಧದ ಭೀಕರತೆಯನ್ನು ಮರೆಸುವಂಥ ಸಂಗೀತ ಸುಧೆ ಒದಗಿಸಿತು. ಉರ್ಸುಲಾ ಭಾನುವಾರದ ಪ್ರಾರ್ಥನಾ ಸಭೆಯನ್ನು ಮತ್ತೆ ಪ್ರಾರಂಭಿಸಲು ಆರ್ಡರ್ ಮಾಡಿದಾಗ ಪಿಯತ್ರೋ ಕ್ರೆಪ್ಸಿ ಚರ್ಚ್‌ಗೆ ಜರ್ಮನಿಯ ಹಾರ್ಮೋನಿಯಂ ಒಂದನ್ನು ಕೊಡುಗೆಯಾಗಿ ಕೊಟ್ಟ ಮತ್ತು ಮಕ್ಕಳ ಸಮೂಹ ಗೀತೆಯನ್ನು ವ್ಯವಸ್ಥೆಗೊಳಿಸಿದ. ಅಲ್ಲದೆ ಫಾದರ್ ನಿಕನೋರ್‌ನ ಮತಾಚರಣೆಗಳನ್ನು ಉಜ್ವಲಗೊಳಿಸುವಂಥ ಗ್ರೆಗೇರಿಯದ ರೆಪರ್ಟರಿಯನ್ನು ನಿರ್ಮಿಸಿದ. ಅವನು ಅಮರಾಂತಳಿಗೆ ಗಂಡನಾಗುವುದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅವರು ಭಾವತೀವ್ರvಗೆ ಒಳಗಾಗದೆ ಸಹಜ ಪ್ರೇಮದ ಸೆಳವಿಗೆ ತಮ್ಮನ್ನು ತಾವು ಬಿಟ್ಟು ಕೊಟ್ಟು ಮದುವೆಯ ದಿನಾಂಕವನ್ನು ಮಾತ್ರ ಗೊತ್ತು ಮಾಡಬೇಕಾದ ಹಂತ ತಲುಪಿದ್ದರು. ಅವರು ಯಾವ ಅಡೆತಡೆಗಳನ್ನು ಎದುರಿಸಲಿಲ್ಲ. ರೆಬೇಕಳ ಮದುವೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕುತ್ತ ಅವಳ ವಿಧಿಯನ್ನು ತಿರುಚಿದ್ದಕ್ಕಾಗಿ ತನ್ನನ್ನೇ ತಾನು ಹಳಿದುಕೊಂಡ ಉರ್ಸುಲಾ ಮತ್ತಷ್ಟು ದುಃಖಕ್ಕೆ ಸಿದ್ಧಳಿರಲಿಲ್ಲ. ಮನಸ್ಸು ನೋಯಿಸುತ್ತಿದ್ದ ಯುದ್ಧ, ಅವ್ರೇಲಿಯಾನೋ ಇಲ್ಲದೇ ಇರುವುದು, ಅರ್ಕಾದಿಯೋನ ದೌರ್ಜನ್ಯ ಹಾಗೂ ಹೊಸೆ ಅರ್ಕಾದಿಯೋ ಮತ್ತು ರೆಬೇಕರನ್ನು ಹೊರಹಾಕಿದ್ದರಿಂದ, ರೆಮಿದಿಯೋಸ್‌ಳ ಸಾವಿನ ಶೋಕದ ತೀವ್ರತೆ ಕಡಿಮೆಯಾಗಿತ್ತು. ಇನ್ನೇನು ಮದುವೆ ಜರುಗಲಿದ್ದುದರಿಂದ ಅವ್ರೇಲಿಯಾನೋ ಹೊಸೆ ತನ್ನಲ್ಲಿ ಪುತ್ರ ಸದೃಶ ಭಾವನೆಗಳನ್ನು ಹುಟ್ಟಿಸಿದ್ದಾಗಿ ಪಿಯತ್ರೋ ಕ್ರೆಪ್ಸಿ ತಿಳಿಸಿ, ಅವನನ್ನು ಅವರ ಹಿರಿಯ ಮಗನಂತೆ ಕಾಣುವುದಾಗಿ ಹೇಳಿದ. ಎಲ್ಲವೂ ಸರಳವಾಗಿ ಸಾಗುತ್ತಿದೆ ಎಂದು ಅಮರಾಂತ ಭಾವಿಸುವಂತಾಯಿತು. ಆದರೆ ರೆಬೇಕಳಂತೆ ಕೊಂಚವೂ ಆತಂಕವನ್ನು ತೋರ್ಪಡಿಸಿಕೊಳ್ಳಲಿಲ್ಲ. ಅವಳು ಟೇಬಲ್ ಕ್ಲಾತ್‌ಗಳನ್ನು ಡ್ರೈ ಮಾಡಿದಷ್ಟೇ, ವಿಶೇಷವಾದ ಲೇಸ್‌ಗಳನ್ನು ಹೊಲಿದಷ್ಟೇ ಹಾಗೂ ನವಿಲುಗಳ ಕಸೂತಿ ಮಾಡಿದಷ್ಟೇ ತಾಳ್ಮೆಯಿಂದಿದ್ದ ಪಿಯತ್ರೋ ಕ್ರೆಪ್ಸಿಗೆ, ಹೃದಯದೊತ್ತಡವನ್ನು ಇನ್ನು ತಡೆದುಕೊಳ್ಳಲು ಅಸಾಧ್ಯವಾಗುವ ತನಕ ಕಾದಳು. ಅಕ್ಟೋಬರ್‌ನ ದುರ್ವಿಧಿಯ ಮಳೆಯೊಂದಿಗೆ ಆ ದಿನ ಬಂತು. ಅವಳ ತೊಡೆಯ ಮೇಲಿದ್ದ ಹೊಲಿಗೆಯ ಬುಟ್ಟಿಯನ್ನು ತೆಗೆದುಕೊಳ್ಳುತ್ತ, “ನಾವು ಮುಂದಿನ ತಿಂಗಳು ಮದುವೆಯಾಗೋಣ” ಎಂದ. ಅವನ ಕೈಗಳ ತಣ್ಣನೆಯ ಸ್ವರ್ಶದಿಂದ ಅವಳು ಕಂಪಿಸಲಿಲ್ಲ. ಅವಳು ಎಳೆಯ ಪ್ರಾಣಿಯಂತೆ ಮೆತ್ತಗೆ ಕೈ ಎಳೆದುಕೊಂಡು ಮತ್ತೆ ತನ್ನ ಕೆಲಸ ಪ್ರಾರ;ಂಭಿಸಿದಳು. +ಅವಳು ನಗುತ್ತ, “ಪೆದ್ದನ ಹಾಗೆ ಆಡ್ಬೇಡ ಪಿಯತ್ರೋ ಕ್ರೆಸ್ಪಿ, ನಾನು ಸತ್ತರೂ ನಿನ್ನ ಮದುವೆ ಆಗಲ್ಲ” ಎಂದಳು. +ಪಿಯತ್ರೋ ಕ್ರೆಸ್ಪಿ ತನ್ನ ಮೇಲಿನ ಹಿಡಿತ ಕಳೆದುಕೊಂಡ. ಹತಾಶನಾಗಿ ತನ್ನ ಬೆರಳುಗಳನ್ನು ತಿರುಚಿಕೊಂಡು ಅತ್ತ. ಆದರೆ ಅವಳನ್ನು ಕರಗಿಸಲಾಗಲಿಲ್ಲ. ಅಮರಾಂತ, “ನಿನ್ನ ಸಮಯಾನ ಹಾಳು ಮಾಡಿಕೊಳ್ಬೇಡ” ಎಂದಷ್ಟೇ ಹೇಳಿದಳು. “ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸೋದಾದರೆ, ಇನ್ನೊಂದು ಸಲ ಈ ಮನೆಯೊಳಗೆ ಕಾಲಿಡಬೇಡ” ಎಂದಳು. ಉರ್ಸುಲಾ ಅವಮಾನದಿಂದ ತನಗೆ ಹುಚ್ಚು ಹಿಡಿಯುವುದೆಂದು ತಿಳಿದಳು. ಪಿಯತ್ರೋ ಕ್ರೆಪ್ಸಿ ಇನ್ನಿಲ್ಲದಷ್ಟು ರೀತಿಯಲ್ಲಿ ಕೇಳಿ ನೋಡಿದ. ಅವನು ಕಲ್ಪಿಸಲು ಅಸಾಧ್ಯವಾದ ಮಟ್ಟದ ತೇಜೋವಧೆಯನ್ನು ಅನುಭವಿಸಿದ. ಅವನು ಅದೊಂದು ಮಧ್ಯಾಹ್ನ ಅವಳ ಮಡಿಲಲ್ಲಿ ತಲೆಯಿಟ್ಟು ಅತ್ತ. ಅವನನ್ನು ಸಮಾಧಾನಪಡಿಸುವುದಕ್ಕೆ ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಅವನು ಮಳೆಯ ದಿನಗಳಲ್ಲಿ ಛತ್ರಿ ಹಿಡಿದುಕೊಂಡು ಮನೆಯ ಹತ್ತಿರ ತಿರುಗಾಡುತ್ತ ಅಮರಾಂತಳ ಬೆಡ್‌ರೂಮಿನ ದೀಪ ಬೆಳಗುವುದಕ್ಕಾಗಿ ಕಾಯುತ್ತಿz. ಅಂತಹ ಸಂದರ್ಭದಲ್ಲಿ ಎಂದೂ ಇಲ್ಲದಷ್ಟು ಸೊಗಸಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದ. ಅವನ ನೊಂದ ಸಾಮ್ರಾಟನ ಮುಖಭಾವಕ್ಕೆ ಯಾವುದೋ ವಿಚಿತ್ರ ವರ್ಚಸ್ಸು ಬಂದಿತ್ತು. ಹಿಂದೆ ಅಂಗಳದಲ್ಲಿ ಅವಳ ಜೊತೆ ಹೊಲಿಗೆ ಮಾಡುತ್ತಿದ್ದವರಿಗೆ ಅವಳನ್ನು ಪ್ರೇರೇಪಿಸುವಂತೆ ಕೇಳಿಕೊಂಡ. ತನ್ನ ವ್ಯಾಪಾರವನ್ನು ಕಡೆಗಣಿಸಿದ. ಅವನು ತನ್ನ ಅಂಗಡಿಯ ಹಿಂಭಾಗದಲ್ಲಿ ಇಡೀ ದಿನ ಅವಳಿಗಾಗಿ ಆವೇಶ ಪೂರ್ಣ ಕಾಗದಗಳನ್ನು ಬರೆದು, ಹೂವಿನ ಪಕಳೆಗಳು ಮತ್ತು ಒಣಗಿದ ಚಿಟ್ಟೆಗಳನ್ನು ಅಮರಾಂತಳಿಗೆ ಕಳಿಸಿಕೊಡುತ್ತಿದ್ದರೆ, ಅವಳು ಅವನ್ನು ಬಿಚ್ಚಿ ನೋಡದೆ ಹಿಂದಿರುಗಿಸುತ್ತಿದ್ದಳು. ಕೊನೆಗೆ ಅವನು ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಜಿಥರ್ ನುಡಿಸುತ್ತಿದ್ದ. ಅವನೊಂದು ರಾತ್ರಿ ಹಾಡಿದ. ಇಡೀ ಭೂಮಂಡಲದಲ್ಲಿ ಪ್ರೇಮವನ್ನು ಅವನಷ್ಟು ಅನುಭವಿಸಿದವರು ಬೇರೆ ಯಾರಿಲ್ಲ ಎಂದು ನಂಬುವ ಹಾಗೆ ಜಿಥರ್ ಜೊತೆಗೂಡಿ ಹಾಡಿದಾಗ ಮಕೋಂದೋ ಸೋಜಿಗಗೊಂಡು ಎಚ್ಚರಗೊಂಡಿತು. ಆಗ ಪಿಯತ್ರೋ ಕ್ರೆಪ್ಸಿ ಅಮರಾಂತಳದನ್ನು ಬಿಟ್ಟು ಊರಿನಲ್ಲಿ ಎಲ್ಲ ಕಿಟಕಿಗಳಲ್ಲಿ ದೀಪ ಬೆಳಗಿದ್ದನ್ನು ಕಂಡ. ನವೆಂಬರ್ ಎರಡನೆ ತಾರೀಖು, ಆಲ್ ಸೋಲ್ಸ್ ಡೇ ದಿನ ಅವನ ತಮ್ಮ ಅಂಗಡಿಯ ಬಾಗಿಲು ತೆಗೆದಾಗ ಎಲ್ಲ ದೀಪಗಳು ಉರಿಯುತ್ತಿದದ್ದನ್ನು, ಎಲ್ಲ ಮೂಸಿಕ್ ಬಾಕ್ಸ್‌ಗಳು ತೆಗೆದದ್ದನ್ನು, ಎಲ್ಲ ಗಡಿಯಾರಗಳು ಶಬ್ದಮಾಡುತ್ತಿದ್ದುದನ್ನು ಮತ್ತು ಈ ಎಲ್ಲ ಹುಚ್ಚೆದ್ದ ವಾದ್ಯಗೋಷ್ಠಿಯ ಮಧ್ಯೆ ಕುಳಿತ ಪಿಯತ್ರೋ ಕ್ರೆಪ್ಸಿ, ಬ್ಲೇಡ್‌ನಿಂದ ತನ್ನ ಮಣಿಕಟ್ಟನ್ನು ಸೀಳಿಕೊಂಡು, ಕೈಯನ್ನು ಸಾಂಬ್ರಾಣಿಯ ಬೋಗುಣಿಯಲ್ಲಿ ತುರುಕಿದ್ದನ್ನು ಕಂಡ. +ಉರ್ಸುಲಾ ರಾತ್ರಿಯ ಜಾಗರಣೆ ತಮ್ಮ ಮನೆಯಲ್ಲಿ ನಡೆಯುವುದೆಂದು ಆಜ್ಞೆ ಹೊರಡಿಸಿದಳು. ಫಾದರ್ ನಿಕನೋರ್ ಧಾರ್ಮಿಕ ಸಮಾರಂಭ ಮತ್ತು ಪವಿತ್ರವಾದ ಸ್ಥಳದಲ್ಲಿ ಹೂಳುವುದರ ವಿರುದ್ಧವಾಗಿದ್ದ. ಆದರೆ ಉರ್ಸುಲಾ ಅವನಿಗೆ ಸರಿಸಾಟಿಯಾಗಿ ನಿಂತು, “ಒಂದು ರೀತೀಲಿ ನೀವಾಗಲಿ, ನಾನಾಗಲೀ ಅವನನ್ನು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಅವನೊಬ್ಬ ಋಷಿ” ಎಂದದ್ದಲ್ಲದೆ, “ಹಾಗಾದ್ರೆ ನಿಮ್ಮ ಇಷ್ಟಕ್ಕೆ ವಿರೋಧವಾಗಿ ಅವನನ್ನು ಮೆಲ್‌ಕಿಯಾದೆಸ್‌ನ ಗೋರಿ ಪಕ್ಕದಲ್ಲಿ ಹೂಳ್ತೀನಿ” ಎಂದಳು. ಅವಳು ಇಡೀ ಊರಿನ ಬೆಂಬಲದೊಂದಿಗೆ ಅದ್ದೂರಿಯ ಶವ ಸಂಸ್ಕಾರವನ್ನು ಮಾಡಿದಳು. ಅಮರಾಂತ ರೂಮಿನಿಂದ ಹೊರಗೆ ಬರಲಿಲ್ಲ. ಅವಳಿಗೆ ತನ್ನ ಹಾಸಿಗೆಯಲ್ಲಿ ಉರ್ಸುಲಾಳ ಅಳು, ಮನೆಗೆ ನುಗ್ಗಿ ಬಂದ ಅಸಂಖ್ಯಾತರ ನಡಿಗೆ ಹಾಗೂ ಪಿಸುಮಾತುಗಳು, ಶೋಕಿಸುವವರ ಮುಲುಗಾಟ ಕೇಳಿಸಿತು. ಆ ನಂತರ ತುಳಿತಕ್ಕೆ ಸಿಕ್ಕ ಹೂಗಳ ವಾಸನೆಯ ಮೌನ ಆವರಿಸಿತು. ಅವಳು ಬಹಳ ಸಮಯದ ತನಕ ಪಿಯತ್ರೋ ಕ್ರೆಪ್ಸಿಯ ಸಂಜೆಯ ಸುಗಂಧವನ್ನು ಆಸ್ವಾದಿಸುತ್ತಿದ್ದಳು. ಆದರೆ ಯಾವುದೇ ಭಾವಾವೇಶಕ್ಕೆ ಒಳಗಾಗದ ಶಕ್ತಿ ಅವಳಲ್ಲಿತ್ತು. ಉರ್ಸುಲಾ ಅವಳನ್ನು ಅಲಕ್ಷಿಸಿದಳು. ಅಮರಾಂತ ಅಡುಗೆ ಮನೆಗೆ ಹೋಗಿ ಒಲೆಯ ಕೆಂಡದಲ್ಲಿ ಕೈಯಿಟ್ಟಾಗ ಅದೆಷ್ಟು ಘಾಸಿಯಾಯಿತೆಂದರೆ ಅವಳಿಗೆ ಯಾವುದೇ ನೋವು ಉಂಟಾಗದೆ ಸುಟ್ಟ ಮಾಂಸದ ಕಮರು ವಾಸನೆ ಹರಡಿದಾಗ ಕೂಡ ಉರ್ಸುಲಾ ಅವಳ ಕಡೆ ಕರುಣೆಯಿಂದ ನೋಡಲಿಲ್ಲ. ಅದು ಅವಳು ತನ್ನ ಪಶ್ಚಾತ್ತಾಪಕ್ಕೆ ಮಾಡಿಕೊಂಡ ಮೂರ್ಖಶಮನ. ಅವಳು ಅನೇಕ ದಿನ ಕೈಯನ್ನು ಮೊಟ್ಟೆಯ ಲೋಳೆ ಇರುವ ತಂಬಿಗೆಯಲ್ಲಿ ಇಟ್ಟುಕೊಂಡು ಮನೆಯಲ್ಲಿ ಓಡಾಡುತ್ತಿದ್ದಳು. ಗಾಯ ವಾಸಿಯಾದ ಮೇಲೆ ಅದರ ಗುರುತುಗಳನ್ನು ಅವಳ ಹೃದಯದ ಮೇಲೆ ಬಿಟ್ಟು ಹೋಗಿದ್ದವು. ಆ ದುರಂತದ ಹೊರಗೆ ಕಾಣುವಂತಿದ್ದ ಕುರುಹೆಂದರೆ ಸುಟ್ಟಿದ್ದ ಕೈ ಸುತ್ತ ಅವಳು ಕಟ್ಟಿಕೊಂಡಿರುತ್ತಿದ್ದ ಕಪ್ಪನೆ ಬ್ಯಾಂಡೇಜ್ ಪಟ್ಟಿ ಮತ್ತು ಅವಳು ಸಾಯುವ ತನಕ ಅದನ್ನು ಕಟ್ಟಿಕೊಂಡಿದ್ದಳು. +ಅರ್ಕಾದಿಯೋ ಪಿಯತ್ರೋ ಕ್ರೆಸ್ಪಿಗೆ ಅಧಿಕೃತ ಸಂತಾಪದ ಕಟ್ಟಳೆಯನ್ನು ಹೊರಡಿಸಿ ಅಪರೂಪದ ಉದಾರತೆಯನ್ನು ವ್ಯಕ್ತಪಡಿಸಿದ. ಎಲ್ಲೆಲ್ಲೋ ತಿರುಗುತ್ತಿದ್ದ ಕುರಿ ಹಿಂತಿರುಗಿತೆಂದು ಉರ್ಸುಲಾ ಭಾವಿಸಿದಳು. ಆದರೆ ಅವಳ ಎಣಿಕೆ ತಪ್ಪಾಗಿತ್ತು. ಅವಳು ಅರ್ಕಾದಿಯೋನನ್ನು ಅವನು ಯೂನಿಫಾರಂ ಹಾಕಿಕೊಂಡ ಕಾಲದಿಂದ ಮುಂಚೆಯೇ ಕಳೆದುಕೊಂಡಿದ್ದಳು. ಅವಳು ಯಾವುದೇ ವಿಶೇಷ ಅಥವಾ ತಾರತಮ್ಯವಿಲ್ಲದೆ ರೆಬೇಕಳನ್ನು ಬೆಳೆಸಿದಂತೆ ಅವನನ್ನು ಮಗನಾಗಿ ಬೆಳೆಸಿದೆನೆಂದು ತಿಳಿದುಕೊಂಡಿದ್ದಳು. ಇಷ್ಟಿದ್ದರೂ ನಿದ್ದೆ ಬಾರದ ಅವಧಿಯಲ್ಲಿ, ಉರ್ಸುಲಾಳ ಜನ ಹಿತದ ಚಟುವಟಿಕೆಗಳಲ್ಲಿ, ಹೊಸೆ ಅರ್ಕಾದಿಯೋನ ಉನ್ಮಾದದ ಅವಧಿಯಲ್ಲಿ, ಅವ್ರೇಲಿಯಾನೋನ ರಸವಾದದ ಪರವಶತೆಯಲ್ಲಿ ಮತ್ತು ರೆಬೇಕ ಹಾಗೂ ಅಮರಾಂತರ ಸೆಣೆಸಾಟದಲ್ಲಿ ಅವನೊಬ್ಬ ಭಯಗೊಂಡವನಲ್ಲದೆ ಏಕಾಂತದಲ್ಲಿದ್ದವನಾಗಿದ್ದ. ಅವ್ರೇಲಿಯಾನೋ ಅಪರಿಚಿತನಿಗೆ ಮಾಡುವಂತೆ ಇತರ ವಿಷಯಗಳ ಬಗ್ಗೆ ಯೋಚಿಸುತ್ತ ಅವನಿಗೆ ಓದುವುದನ್ನು ಮತ್ತು ಬರೆಯುವುದನ್ನು ಹೇಳಿಕೊಟ್ಟಿದ್ದ. ವಿಸಿಟಾಸಿಯೋನ್‌ಗೆ ತೆಗೆದುಕೊಳ್ಳಬಹುದಾದಂಥ ತನ್ನ ಬಟ್ಟೆಗಳನ್ನು ಅವನಿಗೆ ಕೊಟ್ಟಿದ್ದ. ಅರ್ಕಾದಿಯೋ ತುಂಬ ದೊಡ್ಡದಾದ ಶೂಗಳಿಂದ, ತೇಪೆ ಹಾಕಿದ ಪ್ಯಾಂಟ್‌ಗಳಿಂದ, ಹೆಂಗಸಿನಂಥ ಹಿಂಭಾಗದಿಂದ ಚಿಂತೆಗೀಡಾಗಿದ್ದ. ವಿಸಿಟಾಸಿಯೋನ್ ಮತ್ತು ಕತಾವುರೆ ಜೊತೆ ಅವರ ಭಾಷೆಯಲ್ಲಿ ಮಾತನಾಡುತ್ತಿದ್ದುದಕ್ಕಿಂತ ಚೆನ್ನಾಗಿ ಬೇರೆ ಯಾರ ಸಂಗಡವೂ ಸಾಧ್ಯವಾಗುತ್ತಿರಲಿಲ್ಲ. ಮೆಲ್‌ಕಿಯಾದೆಸ್‌ಗೆ ಮಾತ್ರ ಅವನ ಬಗ್ಗೆ ನಿಜವಾದ ಕಾಳಜಿಯಿದ್ದು, ಗ್ರಹಿಸಲು ಅಸಾಧ್ಯವಾದ ಪಠ್ಯವನ್ನು ಕೇಳುವಂತೆ ಮಾಡುತ್ತಿದ್ದನಲ್ಲದೆ, ಛಾಯಾಚಿತ್ರ ತೆಗೆಯುವ ಕಲೆಗಾರಿಕೆಯ ಬಗ್ಗೆ ತಿಳಿಸಿ ಹೇಳುತ್ತಿದ್ದ. ಅವನು ಗುಟ್ಟಾಗಿ ಅತ್ತಿದ್ದೆಷ್ಟು ಮತ್ತು ಎಲ್ಲವನ್ನು ನಿರ್ಲಕ್ಷಿಸಿ ಮೇಲ್ಕಿಯಾದೆಸ್‌ನನ್ನು ಮತ್ತೆ ಅಸ್ತಿತ್ವಕ್ಕೆ ತರಲು ಅವನ ಬರಹಗಳನ್ನು ವ್ಯರ್ಥವಾಗಿ ಅಭ್ಯಸಿಸಿದ್ದನ್ನು ಯಾರೂ ಕಲ್ಪಿಸಿಕೊಳ್ಳಲಿಲ್ಲ. ಅವನನ್ನು ಗಮನಕ್ಕೆ ತೆಗೆದುಕೊಂಡು ಗೌರವ ಕೊಡುತ್ತಿದ್ದ ಸ್ಕೂಲು ಮತ್ತು ಲೆಕ್ಕವಿಲ್ಲದಷ್ಟು ಕಟ್ಟಳೆಗಳ ಅಧಿಕಾರ ಹಾಗೂ ಯೂನಿಫಾರಂ, ಅವನನ್ನು ಹಿಂದಿನ ಕಹಿಯ ಭಾರದಿಂದ ಬಿಡುಗಡೆ ಮಾಡಿತ್ತು. ಅದೊಂದು ದಿನ ರಾತ್ರಿ ಕತಾವುರೆಯ ಅಂಗಡಿನಲ್ಲಿ, “ನಿನ್ನ ಹೆಸರಿನ ಕೊನೇಲಿ ಇದೆಯಲ್ಲ, ಅದಕ್ಕೆ ನಿಂಗೆ ಯೋಗ್ಯತೆ ಇಲ್ಲ” ಎಂದು ಯಾರೋ ಒಬ್ಬ ಹೇಳುವ ಧೈರ್ಯ ಮಾಡಿದ. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಅರ್ಕಾದಿಯೋ ಅವನನ್ನು ಕೊಲ್ಲಿಸಲಿಲ್ಲ. +“ನನ್ನ ಹೆಚ್ಚುಗಾರಿಕೆ ಅಂದರೆ, ನಾನೊಬ್ಬ ಬ್ಯುಂದಿಯಾ ಅಲ್ಲ” +ಅವನ ತಂದೆ ಯಾರೆಂಬ ಗುಟ್ಟು ಗೊತ್ತಿದ್ದವರು ಅವನಿಗೆ ಅದು ತಿಳಿದಿದೆ ಎಂದುಕೊಂಡರು. ಆದರೆ ಅವನಿಗೆ ಗೊತ್ತಿರಲಿಲ್ಲ. ಕತ್ತಲ ಕೋಣೆಯಲ್ಲಿ ಅವನ ರಕ್ತ ಕುದಿಯುವಂತೆ ಮಾಡಿದ ಅವನ ತಾಯಿ ಪಿಲರ್ ಟೆರ್‍ನೆರಾ ಮೊದಲು ಹೊಸೆ ಅರ್ಕಾದಿಯೋ ಮತ್ತು ಅನಂತರ ಅವ್ರೇಲಿಯಾನೋಗೆ ಆಗಿದ್ದಂತೆ ಅವನಿಗೆ ತಡೆಯಲಾಗದ ಹುಚ್ಚು ಹಿಡಿಸಿದ್ದಳು. ಅವಳು ತನ್ನ ಸೊಬಗನ್ನು ಮತ್ತು ಮೋಹಕ ನಗುವನ್ನು ಕಳೆದುಕೊಂಡಿದ್ದರೂ ಅವನು ಅವಳನ್ನು ಹುಡುಕುತ್ತ ಅವಳ ಹೊಗೆಯಂಥ ವಾಸನೆಯಿಂದ ಕಂಡು ಹಿಡಿಯುತ್ತಿದ್ದ. ಯುದ್ಧಕ್ಕೆ ಸ್ವಲ್ಪ ಕಾಲದ ಮುಂಚೆ ಒಂದು ಮಧ್ಯಾಹ್ನ ತನ್ನ ಹಿರಿಯ ಮಗನಿಗಾಗಿ ಸ್ಕೂಲಿಗೆ ಬರಲು ಎಂದಿಗಿಂತ ತಡವಾಯಿತು. ಅರ್ಕಾದಿಯೋ ರೂಢಿಯಾದಂತೆ ಮಧ್ಯಾಹ್ನದ ನಿದ್ದೆ ಮಾಡುವ ಮುಂಚೆ ವಸ್ತುಗಳನ್ನು ವ್ಯವಸ್ಥೆಗೊಳಿಸಿದ ರೂಮಿನಲ್ಲಿ ಅವಳಿಗಾಗಿ ಕಾಯುತ್ತಿದ್ದ. ಮಗು ಅಂಗಳದಲ್ಲಿ ಆಟವಾಡುತ್ತಿದ್ದರೆ ಪಿಲರ್ ಟೆರ್‍ನೆರಾ ಆ ಮೂಲಕವೇ ಹಾದುಹೋಗಬೇಕೆಂದು ತಿಳಿದ ಅವನು, ಆತಂಕದಿಂದ ಅದುರುತ್ತ ಹಾಸಿಗೆಯಲ್ಲಿ ಕಾಯುತ್ತಿದ್ದ. ಅವಳು ಬಂದಳು. ಅರ್ಕಾದಿಯೋ ಅವಳ ಸೊಂಟವನ್ನು ಹಿಡಿದು ಹಾಸಿಗೆಗೆ ಎಳೆಯಲು ಪ್ರಯತ್ನಿಸಿದ. ಅವಳು ಬೆದರಿ, “ನನ್ನ ಕೈಲಾಗಲ್ಲ… ನನ್ನ ಕೈಲಾಗಲ್ಲ…. ನಿಂಗೊತ್ತಿಲ್ಲ, ನಿನ್ನನ್ನ ಸಂತೋಷಪಡಿಸೋದು ನಂಗೆಷ್ಟು ಇಷ್ಟ ಅಂತ. ಆದರೆ ನಂಗೆ ದೇವರು ಸಾಕ್ಷಿ. ನನ್ನ ಕೈಲಾಗಲ;” ಎಂದಳು. ಅರ್ಕಾದಿಯೋ ವಂಶಪಾರಂಪರ್ಯವಾಗಿ ಬಂದ ಅಗಾಧ ಶಕ್ತಿಯಿಂದ ಅವಳ ಸೊಂಟ ಹಿಡಿದೆಳೆದಾಗ ಅವಳ ಸ್ವರ್ಶದಿಂದ ಇಡೀ ಪ್ರಪಂಚ ಮಾಯವಾದಂತಾಯಿತು. “ದೊಡ್ಡ ಗೌರಮ್ಮನ ಥರ ಆಡ್ಬೇಡ . . ಇಷ್ಟಕ್ಕೂ ಊರ್‍ನೊರಿಗೆಲ್ಲ ಗೊತ್ತು, ನೀನೊಬ್ಬಳು ಹಾದರಗಿತ್ತಿ ಅಂತ” ಎಂದ. ಅವಳು ತನ್ನ ದುರ್ವಿಧಿ ಉಂಟುಮಾಡಿದ ಜಿಗುಪ್ಸೆಯನ್ನು ತಡೆದುಕೊಂಡಳು. +ಅವಳು, “ಮಕ್ಕಳಿಗೆ ಗೊತ್ತಾಗಿ ಬಿಡತ್ತೆ… ಇವತ್ತು ರಾತ್ರಿ ನೀನು ಬಾರ್‌ನ ಬಾಗಿಲು ಹಾಕಿರದಿದ್ದರೆ ಸಾಕು” ಎಂದು ಪಿಸು ನುಡಿದಳು. +ಆ ದಿನ ರಾತ್ರಿ ಅರ್ಕಾದಿಯೋ ಜ್ವರದಿಂದ ತಾಪದ ಹಾಗೆ ಕಾಯುತ್ತ ಹಾಸಿಗೆಯಲ್ಲಿ ನಿದ್ದೆ ಮಾಡದರೆ ಬೆಳಗಿನ ಜಾವದಲ್ಲಿ ಕೇಳಿ ಬರುತ್ತಿದ್ದ ಮಿಡತೆ ಮತ್ತು ಪಕ್ಷಿಗಳ ಧ್ವನಿಯಲ್ಲಿ ಕಾದ. ಇದ್ದಕ್ಕಿದ್ದ ಹಾಗಿ ಆತಂಕ ಬದಲಾಗಿ ರೋಷಗೊಳ್ಳುತ್ತಿದ್ದಂತೆ ಬಾಗಿಲು ತೆರೆಯಿತು. ಕ್ಲಾಸ್ ರೂಮಿನಲ್ಲಿ ಅತ್ತಿತ್ತ ಬೆಂಚುಗಳಿಗೆ ಎಡವಿಕೊಂಡು ನಡೆದಾಡುತ್ತ ಕೊನೆಗೆ ಆ ನೆರಳುಗಳ ನಡುವೆ ಭಾರಿ ಮೈಯೊಂದು ಮತ್ತು ತನ್ನದಲ್ಲದ ಹೃದಯವೊಂದು ಒತ್ತೊತ್ತಿ ಬಿಡುತ್ತಿದ್ದ ಗಾಳಿಯನ್ನು ಉಸಿರಾಡುತ್ತಿದ್ದನ್ನು, ಅರ್ಕಾದಿಯೋ ಕೆಲವು ತಿಂಗಳ ನಂತರ ಗುಂಡಿಕ್ಕುವ ತಂಡದ ಎದುರು ನಿಂತಾಗ ಮರುಜೀವಿಸಿದ. ಅವನು ಕೈ ಚಾಚಿದಾಗ ಕತ್ತಲಲ್ಲಿ ಎತ್ತೆತ್ತಲೋ ಆಡುತ್ತಿದ್ದ, ಒಂದು ಬೆರಳಿಗೆ ಎರಡು ಉಂಗುರವಿದ್ದ ಕೈ ಸಿಕ್ಕಿತು. ಅವನು ಅದರಲ್ಲಿನ ನಾಳಗಳನ್ನು ಸ್ವರ್ಶಿಸಿದ. ಕೊಂಚ ತೇವಗೊಂಡ ಅಂಗೈಯಲ್ಲಿದ್ದ ಆಯುಷ್ಯ ರೇಖೆ ಹೆಬ್ಬೆರಳಿನ ಹತ್ತಿರ ಸಾವು ಸೂಚಿಸಿ ತುಂಡಾಗಿತ್ತು. ಆಗ ಅವನಿಗೆ ತಾನು ಕಾಯುತ್ತಿದ್ದವಳು ಇವಳಲ್ಲವೆಂದು ತಿಳಿಯಿತು. ಏಕೆಂದರೆ ಅವಳಲ್ಲಿ ಹೊಗೆಯ ವಾಸನೆ ಇರಲಿಲ್ಲ. ಹೂವಿನ ಸುಗಂಧವಿತ್ತು. ಗಂಡಸಿನಂಥ ತನ್ನ ಮೊಲೆತೊಟ್ಟುಗಳನ್ನು ಕಿಚ್ಚೆಬ್ಬಿಸಿದ್ದಳು. ಅವಳಲ್ಲಿ ಅನುಭವವಿಲ್ಲದ ಉತ್ಸಾಹಭರಿತ ಮಾಧುರ್ಯವಿತ್ತು. ಕನ್ಯೆಯಾಗಿದ್ದ ಅವಳಿಗೆ ಸಾಮಾನ್ಯವಲ್ಲದ ಸಾಂತ ಸೋಫಿಯಾ ದೆಲಾ ಪಿಯದಾದ್ ಎಂಬ ಹೆಸರಿತ್ತು. ಅವಳು ಮಾಡುತ್ತಿದ್ದುದ್ದನ್ನು ಮಾಡಲು ಪೀಲರ್ ಟೆರ್‍ನೆರಾ ಅವಳಿಗೆ ಐವತ್ತು ಪೇಸೋ ಕೊಟ್ಟಿದ್ದಳು. ಅದು ಅವಳು ತನ್ನ ಇಡೀ ಜೀವಮಾನದಲ್ಲಿ ಉಳಿಸಿದ ಅರ್ಥದಷ್ಟು. ತನ್ನ ತಂದೆಯ ಸಣ್ಣ ಕಿರಾಣಿ ಅಂಗಡಿನಲ್ಲಿ ಕೆಲಸ ಮಾಡುತ್ತಿದ್ದ ಅವಳನ್ನು ಅನೇಕ ಬಾರಿ ಗಮನಿಸಿದ್ದರೂ ಸರಿಯಾಗಿ ನೋಡಿರಲಿಲ್ಲ. ಏಕೆಂದರೆ ಯುಕ್ತವಾದ ಸಮಯದಲ್ಲಿ ಮಾತ್ರವಲ್ಲದೆ ಉಳಿದಂತೆ ಇಲ್ಲದಿರುವಂತಿರುವ ಗುಣ ಅವಳಲ್ಲಿತ್ತು. ಆದರೆ ಆ ದಿನದಿಂದ ಅವನು ಅವಳ ಬೆಚ್ಚನೆ ಕಂಕುಳಲ್ಲಿ ಬೆಕ್ಕಿನ ಹಾಗೆ ಹುದುಗಿಕೊಂಡಿರುತ್ತಿದ್ದ. ಅವಳು ತಂದೆ ತಾಯಿಯ ಒಪ್ಪಿಗೆ ಪಡೆದು ಮಧ್ಯಾಹ್ನ ಮಲಗುವ ಹೊತ್ತಿನಲ್ಲಿ ಹೋಗುತ್ತಿದ್ದಳು. ಪಿಲರ್ ಟೆರ್‍ನೆರಾ ಅವಳ ತಂದೆ ತಾಯಿಗೆ ತಾನು ಉಳಿಸಿದ ಇನ್ನರ್ಧವನ್ನು ಕೊಟ್ಟಿದ್ದಳು. ಆನಂತರ ಸರ್ಕಾರದ ಸೇನೆ ಅವರು ಪ್ರೇಮಿಸಿದ ಸ್ಥಳವನ್ನು ಕೆಡವಿದ ಮೇಲೆ ಅವರು ಡಬ್ಬ ಮತ್ತು ಮೂಟೆಗಳಿದ್ದ ಸ್ಟೋರಿನ ಹಿಂಭಾಗವನ್ನು ನೋಡಿಕೊಂಡರು. ಸರಿ ಸುಮಾರು ಅರ್ಕಾದಿಯೋನನ್ನು ಮಿಲಿಟರಿ ಮತ್ತು ಸಿವಿಲ್ ನಾಯಕನನ್ನಾಗಿ ನೇಮಿಸುವ ಹೊತ್ತಿಗೆ ಅವರಿಗೊಬ್ಬಳು ಮಗಳಿದ್ದಳು. +ಈ ವಿಷಯವನ್ನು ತಿಳಿದ ಸಂಬಂಧಿಗಳೆಂದರೆ ಆ ಕಾಲದಲ್ಲಿ ಒಡನಾಟದಿಂದ ಆತ್ಮೀಯತೆಯನ್ನು ಪಾಲಿಸಿಕೊಂಡಿದ್ದ ಹೊಸೆ ಅರ್ಕಾದಿಯೋ ಮತ್ತು ರೆಬೇಕ. ಹೊಸೆ ಅರ್ಕಾದಿಯೋ ಸಂಸಾರದ ನೊಗಕ್ಕೆ ಗೋಣು ಕೊಟ್ಟಿದ್ದ. ರೆಬೇಕಳ ದೃಢ ಸ್ವಭಾವ, ಬೆಂಬಿಡದ ಮಹತ್ವಾಕಾಂಕ್ಷೆ ಗಂಡನ ಅಗಾಧ ಶಕ್ತಿಯನ್ನು ಮೀರಿ ಸೋಮಾರಿ ಹಾಗೂ ಲಂಪಟನಾದ ಅವನನ್ನು ಸಿಕ್ಕಾಪಟ್ಟೆ ಕೆಲಸ ಮಾಡುವ ಪ್ರಾಣಿಯನ್ನಾಗಿ ಪರಿವರ್ತಿಸಿತ್ತು. ಅವರು ತಮ್ಮ ಮನೆಯನ್ನು ಸರಳ ಮತ್ತು ಶುಭ್ರವಾಗಿಟ್ಟಿದ್ದರು. ರೆಬೇಕ ಬೆಳಿಗ್ಗೆ ಮುಂಬಾಗಿಲು ತೆರೆದಾಗ ಸ್ಮಶಾನದಿಂದ ಬೀಸಿ ಬರುವ ಗಾಳಿ ಕಿಟಕಿಗಳಿಂದ ತೂರಿ ಬಂದು, ಬಾಗಿಲು ಮುಖಾಂತರ ಹಾದು ಹೋಗಿ, ಸುಣ್ಣ ಬಳಿದ ಗೋಡೆ ಮತ್ತು ಪೀಠೋಪಕರಣಗಳ ಮೇಲೆ ಸತ್ತವರ ಕಲೆಗಳನ್ನು ಉಂಟುಮಾಡುತ್ತಿದ್ದವು. ಅವಳ ಮಣ್ಣು ತಿನ್ನುವ ಬಯಕೆ, ತಂದೆ-ತಾಯಿಯ ಟೊಳ್ಳೆನ್ನುವ ಮೂಳೆಗಳು, ಪಿಯತ್ರೋ ಕ್ರೆಪ್ಸಿಯ ನಿರುತ್ಸಾಹವನ್ನು ಕಂಡು ತಾಳ್ಮೆಗೆಡುತ್ತಿದ್ದ ಅವಳ ರಕ್ತ, ಎಲ್ಲವೂ ನೆನಪಿನ ಮೂಲೆಯನ್ನು ಸೇರಿತ್ತು. ಅವಳು ಯುದ್ಧದ ಮುಜುಗರದಿಂದ ಬಿಡಿಸಿಕೊಂಡು ಅಲಮಾರಿನಲ್ಲಿದ್ದ ಪಿಂಗಾಣಿ ಮಡಿಕೆಗಳು ಅದುರಲು ಪ್ರಾರಂಭಿಸುವ ತನಕ ಇಡೀ ದಿನ ಕಿಟಕಿಯ ಹತ್ತಿರ ಕುಳಿತು ಕಸೂತಿ ಕೆಲಸ ಮಾಡುತ್ತಿದ್ದಳು. ಅನಂತರ ಎದ್ದು ಮೊದಲು ಬೇಟೆ ನಾಯಿಗಳು ಅನಂತರ ಭಾರಿ ಹಿಮ್ಮಡಿ ಮೊಳೆಗಳಿದ್ದ ಪಾದರಕ್ಷೆ ತೊಟ್ಟು ಡಬಲ್ ಬ್ಯಾರಲ್ ಬಂದೂಕು ಹಿಡಿದು ಒಮ್ಮೊಮ್ಮೆ ಜಿಂಕೆಯನ್ನು ಹೊತ್ತುಕೊಂಡು ಅಥವಾ ಯಾವಾಗಲೂ ಹತ್ತಾರು ಮೊಲ ಹಾಗೂ ಬಾತುಕೋಳಿಗಳನ್ನು ತರುವ ಅವನು ಕಾಣಿಸಿಕೊಳ್ಳುವ ಮುಂಚೆ ಅಡುಗೆಯನ್ನು ಬಿಸಿ ಮಾಡುತ್ತಿದ್ದಳು. ಒಂದು ದಿನ ಅರ್ಕಾದಿಯೋ ತನ್ನ ಆಳ್ವಿಕೆಯ ಪ್ರಾರಂಭದ ದಿನಗಳಲ್ಲಿ ಅವರ ಮನೆಗೆ ಅನಿರೀಕ್ಷಿತವಾಗಿ ಬಂದಿದ್ದ. ಅವನು ಆ ಮನೆಯನ್ನು ಒಟ್ಟಾಗಿನಿಂದ ನೋಡಿರಲಿಲ್ಲ. ಆ ವರ್ಷ ಅವನೆಷ್ಟು ಸ್ನೇಹಪರ ಮತ್ತು ಹತ್ತಿರದವನೆಂದು ಕಂಡನೆಂದರೆ ಅವರು ಅವನನ್ನು ಊಟಕ್ಕೆ ಕರೆದರು. +ಅವರೆಲ್ಲ ಕಾಫಿ ಕುಡಿಯುತ್ತಿದ್ದಾಗಷ್ಟೆ ಅರ್ಕಾದಿಯೋ ತಾನು ಅಲ್ಲಿಗೆ ಬಂದ ಉದ್ದೇಶವನ್ನು ತಿಳಿಸಿದ್ದು. ಹೊಸೆ ಅರ್ಕಾದಿಯೋ ವಿರುದ್ಧ ಅವನಿಗೆ ಆಪಾದನೆ ಬಂದಿತ್ತು. ಅವನು ತನ್ನ ಭೂಮಿಯಲ್ಲಿ ಉಳಿವುದನ್ನು ಪ್ರಾರಂಭಿಸಿದ ನಂತರ ಅಕ್ಕಪಕ್ಕದ ಭೂಮಿಗೆ ಹೋಗಿ ಕಟ್ಟಡ ಹಾಗೂ ಬೇಲಿಗಳನ್ನು ಕೆಡವಿ ಬಲವಂತವಾಗಿ ಆಕ್ರಮಿಸಿಕೊಂಡಿದ್ದಾನೆಂದು ಹೇಳಲಾಗಿತ್ತು. ಅವನು ಹಾಳುಗೆಡವದಿದ್ದ ರೈತರಿಂದ ಪ್ರತಿ ಶನಿವಾರ ತನ್ನ ನಾಯಿ ಮತ್ತು ಭಾರಿ ಬಂದೂಕು ಹಿಡಿದು ಕರ ವಸೂಲು ಮಾಡುತ್ತಿದ್ದ. ಏಕೆಂದರೆ ಅವರ ಭೂಮಿಯ ಬಗ್ಗೆ ಅವನಿಗೆ ಆಸಕ್ತಿ ಇರಲಿಲ್ಲ. ಅವನು ಅದನ್ನು ನಿರಾಕರಿಸಲಿಲ್ಲ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಸಂಸ್ಥಾಪನೆಯ ಕಾಲದಲ್ಲಿ ವಿತರಣೆ ಮಾಡಿದ್ದನ್ನು ತಾನು ಅತಿಕ್ರಮಿಸಿದ ಭೂಮಿಯ ಮೇಲಿನ ಹಕ್ಕಿಗೆ ಆಧಾರ ಮಾಡಿಕೊಂಡಿದ್ದ. ಅಲ್ಲದೆ ತನ್ನ ಸಂಸಾರಕ್ಕೆ ಸೇರಿದ ಭೂಮಿಯನ್ನು ಕೊಟ್ಟುಬಿಟ್ಟದ್ದರಿಂz, ಆಗಿನಿಂದಲೂ ತಮ್ಮ ತಂದೆ ಹುಚ್ಚುಚ್ಚಾಗಿ ಆಡುತ್ತಿದ್ದರೆಂದು ಪ್ರಮಾಣಿಸಲು ಸಾಧ್ಯವಿದೆ ಎಂದು ಅವನ ಭಾವನೆಯಿತ್ತು. ಯಾವುದೇ ನ್ಯಾಯ ಒದಗಿಸಲು ಅರ್ಕಾದಿಯೋ ಬಂದಿಲ್ಲವಾದ್ದರಿಂದ ಅದೊಂದು ಅನಗತ್ಯವಾದ ಆಪಾದನೆ ಎಂದು ತೋರಿತು. ಅವನು ಹೊಸೆ ಅರ್ಕಾದಿಯೋಗೆ ಒಂದು ರಿಜಿಸ್ಟರ್ ಮಾಡುವ ಆಫೀಸ್ ಸ್ಥಾಪಿಸಿ ತಾನು ಅತಿಕ್ರಮಿಸಿದ ಭೂಮಿಯನ್ನು ನ್ಯಾಯಸಮ್ಮತವಾಗುವಂತೆ ಮಾಡುವುದಕ್ಕೆ ಒಂದು ಷರತ್ತು ಹಾಕಿ ಅದರಂತೆ ಸ್ಥಳೀಯ ಸರ್ಕಾರಕ್ಕೆ ಕಾಣಿಕೆಯನ್ನು ಪಡೆಯಲು ತಾನು ವಹಿಸಿಕೊಟ್ಟಿರುವುದಾಗಿ ವ್ಯವಸ್ಥೆ ಮಾಡು ಎಂದು ಸೂಚಿಸಿದ. ಅವರು ಒಪ್ಪಂದವನ್ನು ಮಾಡಿಕೊಂಡರು. ಅನೇಕ ವರ್ಷಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಸ್ತಿಯ ಪತ್ರಗಳನ್ನು ನೋಡಿದಾಗ, ಬೆಟ್ಟ ಮತ್ತು ತನ್ನ ಜಮೀನಿನ ನಡುವೆ, ಸ್ಮಶಾನವನ್ನೂ ಒಳಗೊಂಡಂತೆ, ದಿಗಂತದವರೆಗಿನ ಭೂಮಿಯೆಲ್ಲ ಅವನ ಹೆಸರಲ್ಲಿತ್ತು. ಅಲ್ಲದೆ ಅರ್ಕಾದಿಯೋ ತನ್ನ ಹನ್ನೊಂದು ತಿಂಗಳ ಅವಧಿಯ ಆಳಿಕೆಯಲ್ಲಿ ಜನರಿಂದ ಕಾಣಿಕೆಗಳನ್ನು ವಸೂಲು ಮಾಡುತ್ತಿದ್ದನಲ್ಲದೆ ಹೊಸೆ ಅರ್ಕಾದಿಯೋನ ಸ್ಮಶಾನದಲ್ಲಿ ಸತ್ತವರನ್ನು ಹೂಳುವುದಕ್ಕೂ ಶುಲ್ಕ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬಂತು. +ಇಡೀ ಊರಿಗೆ ಗೊತ್ತಿದ್ದ ವಿಷಯ ಉರ್ಸುಲಾಳಿಗೆ ತಿಳಿಯಲು ಅನೇಕ ತಿಂಗಳುಗಳು ಬೇಕಾಯಿತು. ಏಕೆಂದರೆ ಅವಳ ಯಾತನೆಯನ್ನು ಹೆಚ್ಚಿಸಬಾರದೆಂದು ಜನರು ಅದನ್ನು ಅವಳಿಂದ ಮುಚ್ಚಿಟ್ಟಿದ್ದರು. ಪ್ರಾರಂಭದಲ್ಲಿ ಅವಳಿಗೆ ಅನುಮಾನ ಉಂಟಾಗಿತ್ತು. ತನ್ನ ಗಂಡನ ಬಾಯಲ್ಲಿ ಕುಂಬಳಕಾಯಿ ರಸವನ್ನು ಚಮಚದಿಂದ ಹಾಕಲು ಪ್ರಯತ್ನಿಸುತ್ತ, “ಅರ್ಕಾದಿಯೋ ಮನೆ ಕಟ್ಟಿಸ್ತಿದಾನೆ” ಎಂದು ವಿಚಿತ್ರ ಹೆಮ್ಮೆಯಿಂದ ಹೇಳಿದಳು. ಆದರೂ ತನಗೆ ತಿಳಿಯದೆ ನಿಟ್ಟುಸಿರು ಬಿಡುತ್ತ, “ಅದ್ಯಾಕೋ ಗೊತ್ತಿಲ್ಲ. ಇದರಲ್ಲೇನೋ ನಂಗೆ ಅಡ್ಡ ವಾಸನೆ ಹೊಡೀತಿದೆ” ಎಂದಳು. ಅನಂತರ ಅರ್ಕಾದಿಯೋ ಮನೆ ಕಟ್ಟಿದ್ದಲ್ಲದೆ ವಿಯನ್ನಾದ ಪೀಠೋಪಕರಣಗಳಿಗೆ ಆರ್ಡರ್ ಕೊಟ್ಟಿರುವುದು ಗೊತ್ತಾದಾಗ ಅವನು ಸಾರ್ವಜನಿಕರ ಹಣವನ್ನು ಉಪಯೋಗಿಸುತ್ತಿರುವುದು ಖಾತ್ರಿಯಾಯಿತು. ಆ ದಿನ ಭಾನುವಾರ ಪ್ರಾರ್ಥನೆ ಮುಗಿದ ಮೇಲೆ ತನ್ನ ಆಫೀಸರ್‌ಗಳ ಜೊತೆ ಕಾರ್ಡ್ಸ್ ಆಡುತ್ತಿದ್ದ ಅವನನ್ನು ನೋಡಿ, “ನಮ್ಮ ಮನೆತನಕ್ಕೆ ನೀನೊಂದು ಪೀಡೆ” ಎಂದು ಅಬ್ಬರಿಸಿದಳು. ಅವನು ಅವಳನ್ನು ಕಣ್ಣೆತ್ತಿ ನೋಡಲಿಲ್ಲ. ಆಗಲೇ ಅವಳಿಗೆ ಅವನು ಆರು ತಿಂಗಳ ಮಗು ಮತ್ತು ಈಗ ಮತ್ತೆ ಬಸುರಾಗಿರುವ ಸಾಂತ ಸೋಫಿಯಾ ದೆಲಾ ಪಿಯದಾದ್ ಜೊತೆ ಮದುವೆಯಿಲ್ಲದೆ ವಾಸ ಮಾಡುತ್ತಿದ್ದದ್ದು ತಿಳಿದದ್ದು. ಅವಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಇದ್ದಲ್ಲಿಗೇ, ಸಧ್ಯದ ಸ್ಥಿತಿಯನ್ನು ತಿಳಿಸಿ ಬರೆಯಲು ನಿರ್ಧರಿಸಿದಳು. ಆದರೆ ಶೀಘ್ರಗತಿಯಲ್ಲಿ ಉಂಟಾಗುತ್ತಿದ್ದ ಘಟನೆಗಳು ಅವಳನ್ನು ಹಾಗೆ ಮಾಡದಂತೆ ಮಾಡಿ ಆ ಆಲೋಚನೆ ಬಂದದ್ದಕ್ಕೆ ಪರಿತಪಿಸುವಂತಾಯಿತು. ಯುದ್ಧ ಅಲ್ಲಿಯ ತನಕ ಯಾವುದೋ ಅಸ್ಪಷ್ಟವಾಗಿ ದೂರದ ವಿಷಯವನ್ನು ನಿರೂಪಿಸುವ ಪದವಾಗಿದ್ದದ್ದು ವಾಸ್ತವದ ನಿಜಸ್ಥಿತಿಯಾಯಿತು. ಫೆಬ್ರವರಿ ಕೊನೆ೦i;ಲ್ಲಿ ವಯಸ್ಸಾದ ಹೆಂಗಸೊಬ್ಬಳು ಕಸಬರಿಕೆಗಳನ್ನು ಹೇರಿಕೊಂಡ ಕತ್ತೆಯ ಸವಾರಿ ಮಾಡುತ್ತ ಮಕೋಂದೋಗೆ ಬಂದಳು. ಪಾಪದ ಪ್ರಾಣಿಯಂತೆ ಕಂಡ ಅವಳನ್ನು ಆಗಿಂದಾಗ್ಗೆ ಜೌಗು ಪ್ರದೇಶದಿಂದ ಸಾಮಾನುಗಳನ್ನು ಮಾರಲು ಬರುವರಲ್ಲಿ ಒಬ್ಬರೆಂದು ಯಾವ ಪ್ರಶ್ನೆಯನ್ನೂ ಕೇಳದೆ ಕಾವಲುಗಾರರು ಮುಂದೆ ಹೋಗಲು ಬಿಟ್ಟರು. ಅವಳು ನೇರವಾಗಿ ಸಿಪಾಯಿಗಳ ಕಟ್ಟಡಕ್ಕೆ ಹೋದಳು. ಹಿಂದೆ ಕ್ಲಾಸ್ ರೂಮಾಗಿದ್ದು ಈಗ ಸುತ್ತಿಟ್ಟ ಹಾಸಿಗೆ ಚಾಪೆಗಳಿದ್ದ, ಎಲ್ಲಂದರಲ್ಲಿ ಬಂದೂಕು ಮತ್ತು ಬೇಟೆಯ ಶಾಟ್‌ಗನ್‌ಗಳು ಹರಡಿ ರಕ್ಷಣ ಸ್ಥಳವಾಗಿ ಪರಿವರ್ತಿತವಾದ ಜಾಗದಲ್ಲಿ ಅವಳನ್ನು ಅರ್ಕಾದಿಯೋ ಬರಮಾಡಿಕೊಂಡ. ಆ ಮುದುಕಿ ತನ್ನ ಗುರುತು ತಿಳಿಸುವುದಕ್ಕಿಂತ ಮೊದಲು ಸೆಟೆದು ನಿಂತು ಸೆಲ್ಯೂಟ್ ಮಾಡಿದಳು. +“ನಾನು ಕರ್ನಲ್ ಗ್ರಿಗೇರಿಯೋ ಸ್ಟಿವೆನ್ಸನ್” +ಅವನು ಕೆಟ್ಟ ಸುದ್ದಿಯನ್ನು ತಂದಿದ್ದ. ಅವನ ಪ್ರಕಾರ ಉದಾರವಾದಿಗಳ ವಿರೋಧದ ಅಂತಿಮ ಕೇಂದ್ರಗಳನ್ನು ನೆಲಸಮ ಮಾಡಲಾಗಿತ್ತು. ಹೋರಾಡುತ್ತಲೇ ಹಿಂತಿರುಗುತ್ತ ರಿಯೋ‌ಅಕ ಬಳಿ ಇದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಬಿಟ್ಟು ಬಂದಾಗ ಅವನು ಅರ್ಕಾದಿಯೋಗೆ ಒಂದು ಸಂದೇಶವನ್ನು ಕಳಿಸಿದ್ದ. ಉದಾರವಾದಿಗಳ ಆಸ್ತಿ ಮತ್ತು ಜೀವ ರಕ್ಷಣೆಯ ಷರತ್ತನ್ನು ಹಾಕಿ ಯಾವ ಪ್ರತಿರೋಧವೂ ಇರದೆ ಶರಣಾಗಿ ಊರನ್ನು ಒಪ್ಪಿಸಬೇಕು. ನೋಡಿದರೆ ಮರುಕ ಬರುವ ಹಾಗಿದ್ದ ತಲೆಮರೆಸಿಕೊಂಡಿದ್ದ ಸಂದೇಶ ತಂದವನನ್ನು ಅರ್ಕಾದಿಯೋ ತೀಕ್ಷಣವಾಗಿ ನೋಡಿದ. +ಅವನು, “ಅದೇನಿದ್ರೂ ನೀವು ಅಷ್ಟಿಷ್ಟನ್ನಾದರೂ ಬರವಣಿಗೇಲಿ ತಂದಿರಬೇಕಲ್ಲ” ಎಂದ. +ಆಗಂತುಕ, “ಅದು ಬೇಡ ಅಂತ, ಆ ಥರದ್ದೇನೂ ನಾನು ತಂದಿಲ್ಲ. ಸಧ್ಯದ ಪರಿಸ್ಥಿತೀಲಿ ಅನುಮಾನ ಬರುವಂಥದೇನನ್ನೂ ಇಟ್ಟುಕೊಳ್ಳಲಿಕ್ಕೆ ಆಗಲ್ಲ ಅನ್ನೋದು, ಯಾರಿಗೂ ತಿಳಿಯತ್ತೆ” ಎಂದ. +ಅವನು ಮಾತನಾಡುತ್ತಿದ್ದ ಹಾಗೆಯೇ ಒಳಗೆ ಕೈ ಹಾಕಿ ಚಿನ್ನದ ಸಣ್ಣ ಮೀನೊಂದನ್ನು ತೆಗೆದ. ಅವನು, “ಇದು ಸಾಕು ಅಂತ ಕಾಣತ್ತೆ” ಎಂದ. ಅದೊಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಯಾರಿಸಿದ ಚಿನ್ನದ ಸಣ್ಣ ಮೀನುಗಳಲ್ಲಿ ಒಂದೆಂದು ಅರ್ಕಾದಿಯೋಗೆ ಕಂಡಿತು. ಆದರೆ ಅಂಥದನ್ನು ಯುದ್ಧಕ್ಕೆ ಮುಂಚೆ ಯಾರೇ ಆದರೂ ಕೊಂಡಿರಬಹುದಿತ್ತು ಅಥವಾ ಕದ್ದಿರಬಹುದಾಗಿತ್ತು ಮತ್ತು ಅದಕ್ಕೆ ಅಭಯ ವಸ್ತುವಾಗುವ ಯೋಗ್ಯತೆ ಇರಲಿಲ್ಲ. ತನ್ನನ್ನು ಗುರುತಿಸಲಿ ಎಂದು ಸಂದೇಶ ತಂದವನು ಮಿಲಿಟರಿ ರಹಸ್ಯವನ್ನು ಮುರಿದಿದ್ದ. ಅವನು ಕುರಾಶೋಗೆ ಹೋಗಿ ಅಲ್ಲಿ ಕ್ಯಾರಿಬಿಯಾದ ಎಲ್ಲ ಕಡೆಯಿಂದ, ದೇಶ ಬಿಟ್ಟು ಬಂದವರನ್ನು ಸೇರಿಸಿಕೊಂಡು ಜೊತೆಗೆ ಆಯುಧ ಹಾಗೂ ಇತರ ಸಾಮಗ್ರಿಗಳನ್ನು ಕೂಡಿಸಿಕೊಂಡು, ವರ್ಷದ ಕೊನೆಯ ವೇಳೆಗೆ ಅವರ ಮೇಲೆ ಎರಗುವ ಪ್ರಯತ್ನದಲ್ಲಿರುವ ತನ್ನ ಧ್ಯೇಯವನ್ನು ತಿಳಿಸಿದ. ಆ ಯೋಜನೆಯಲ್ಲಿ ನಂಬಿಕೆಯಿಟ್ಟ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ, ಬೇರೆ ಯಾವುದೇ ಅರ್ಥವಿಲ್ಲದ ತ್ಯಾಗಕ್ಕೆ ಆ ವೇಳೆಯಲ್ಲಿ ಒಪ್ಪಿಗೆ ಇರಲಿಲ್ಲ. ಆದರೆ ಅರ್ಕಾದಿಯೋ ಅದಕ್ಕೆ ಕಿವಿಗೊಡಲಿಲ್ಲ. ಅವನು ತಾನು ಯಾರೆಂಬ ಪುರಾವೆ ಒದಗಿಸುವ ತನಕ ಖೈದಿಯನ್ನು ಬಂದಿಯಾಗಿಟ್ಟಿದ್ದ ಮತ್ತು ಸಾಯುವವರೆಗೂ ಊರನ್ನು ರಕ್ಷಿಸಲು ನಿರ್ಧರಿಸಿದ. +ಅವನು ಬಹಳ ಕಾಲ ಕಾದಿರಬೇಕಾಗಿರಲಿಲ್ಲ. ಉದಾರವಾದಿಗಳ ಸೋಲಿನ ಸುದ್ದಿ ಹೆಚ್ಚು ಹೆಚ್ಚು ನಿಖರವಾಯಿತು. ಮಾರ್ಚ್ ಕೊನೆಯ ವೇಳೆಗೆ ಅಕಾಲದಲ್ಲಿ ಬಿದ್ದ ಮಳೆಯ ಬೆಳಗಿನ ಜಾವ ಹಿಂದಿನ ವಾರಗಳ ಉದ್ರಿಕ್ತ ಭರಿತ ಶಾಂತ ವಾತಾವರಣವನ್ನು ಸೀಳಿಕೊಂಡು ಕಹಳೆ ಮತ್ತು ಚರ್ಚ್ ಗೋಪುರವನ್ನು ಉರುಳಿಸಿದ ಫಿರಂಗಿಯ ಶಬ್ದಗಳು ಕೇಳಿ ಬಂದವು. ವಾಸ್ತವವಾಗಿ, ವಿರೋಧಿಸಬೇಕೆಂಬ ಅರ್ಕಾದಿಯೋನ ನಿರ್ಧಾರ ಹುಚ್ಚುತನವಾಗಿತ್ತು. ಅವನ ಹತ್ತಿರ ಐವತ್ತು ಜನರು ಮಾತ್ರ ಇದ್ದು, ಒಬ್ಬೊಬ್ಬರ ಬಳಿ ಇಪ್ಪತ್ತು ಸಿಡಿಮದ್ದುಗಳ ಸರಕಿತ್ತು. ಆದರೆ ಅವರಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಕೇಳಿ ಉತ್ಸುಕರಾದ ಅವನ ಹಳೆಯ ವಿದ್ಯಾರ್ಥಿಗಳಲ್ಲಿ, ಅಸಫಲಗೊಳ್ಳುವ ಉದ್ದೇಶಕ್ಕೆ ಬಲಿದಾನದ ನಿರ್ಧಾರವಿತ್ತು. ಬೂಟುಗಳ ಶಬ್ದ, ಪರಸ್ಪರ ವಿರೋಧಿ ಅಪ್ಪಣೆಗಳು, ಫಿರಂಗಿ ಶಬ್ದಕ್ಕೆ ನಡುಗಿದ ಭೂಮಿ, ಎತ್ತೆತ್ತಲೋ ಗುಂಡಿಕ್ಕಿದ ಶಬ್ದ ಮತ್ತು ಅರ್ಥವಿಲ್ಲದೆ ಮೊಳಗುತ್ತಿದ್ದ ಕಹಳೆಯ ನಡುವೆ ಕರ್ನಲ್ ಸ್ವಿವೆನ್ಸನ್ ಆಗಿರಬಹುದಾದವನು ಅರ್ಕಾದಿಯೋಗೆ, “ಇಲ್ಲಿ ಬಂದಿಖಾನೆಯಲ್ಲಿ ನನ್ನನ್ನು ಹೆಂಗಸಿನ ಬಟ್ಟೆಯಲ್ಲಿ ಅಗೌರವವಾಗಿ ಸಾಯುವಂತೆ ಮಾಡಬೇಡಿ” ಎಂದು ಅವಕಾಶಕ್ಕೆ ಕಾದು ಹೆಳಿದ. ಅಲ್ಲದೆ, “ನಾನು ಸಾಯಬೇಕು….. ಹೋರಾಡುತ್ತ ಸಾಯಬೇಕು”ಎಂದ. ಅವನಿಗೆ ಒಪ್ಪಿಸಲು ಸಾಧ್ಯವಾಯಿತು. ಅರ್ಕಾದಿಯೋ ಅವನಿಗೆ ಒಂದು ಆಯುಧ ಮತ್ತು ಇಪ್ಪತ್ತು ಸಿಡಿಮದ್ದುಗಳನ್ನು ಕೊಡಲು ಅಪ್ಪಣೆ ಕೊಟ್ಟ ಮತ್ತು ಆ ಮನೆಯ ಜೊತೆ ಮುಖ್ಯ ಕೇಂದ್ರವನ್ನು ರಕ್ಷಿಸಿಕೊಳ್ಳಲು ಐದು ಜನರನ್ನು ಬಿಟ್ಟು ಉಳಿದವರ ಜೊತೆ ಪ್ರತಿರೋಧಿಸಲು ಹೊರಟ. ಅವನಿಗೆ ಜೌಗು ಪ್ರದೇಶಕ್ಕೆ ಹೋಗುವ ದಾರಿಯನ್ನು ತಲುಪಲಾಗಲಿಲ್ಲ. ಅಡ್ಡ ತಡೆಗಳನ್ನೆಲ್ಲ ಕಿತ್ತೊಗೆಯಲಾಗಿತ್ತು ಮತ್ತು ರಕ್ಷಣೆಗಾರರು ಹೊರಬಂದು ರಸ್ತೆಗಳಲ್ಲೆ ಹೊಡೆದಾಡುತ್ತಿದ್ದರು. ಮೊದಲು ಅವರು ತಮ್ಮ ಬಳಿ ಇದ್ದ ಬಂದೂಕಿನ ಗುಂಡುಗಳನ್ನು ಉಪಯೋಗಿಸಿದರು. ಅನಂತರ ಬಂದೂಕಿಗೆದುರಾಗಿ ಪಿಸ್ತೂಲುಗಳನ್ನು ಮತ್ತು ಕೊನೆಗೆ ಕೈಕೈ ಮಿಲಾಯಿಸಿದರು. ಸೋಲು ಸನ್ನಿಹಿತವೆಂದು ಕಂಡಾಗ ಕೆಲವು ಹೆಂಗಸರು ದೊಣ್ಣೆ ಮತ್ತು ಅಡಿಗೆ ಮನೆ ಚಾಕುಗಳನ್ನು ಹಿಡಿದು ರಸ್ತೆಗಿಳಿದರು. ಆ ಗೊಂದಲದಲ್ಲಿ ಅವನಿಗೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಎರಡು ಪಿಸ್ತೂಲುಗಳನ್ನು ಹಿಡಿದು ನೈಟ್‌ಗೌನ್ ಹಾಕಿಕೊಂಡು ಹುಚ್ಚಿಯಂತೆ ತನ್ನನ್ನು ಹುಡುಕುತ್ತಿದ್ದ ಅಮರಾಂತ ಕಂಡಳು. ಅವನು ಹೋರಾಟದಲ್ಲಿ ಆಯುಧವಿಲ್ಲದಂತೆ ಆಗಿದ್ದ ಸೈನಿಕನೊಬ್ಬನಿಗೆ ತನ್ನ ಬಂದೂಕು ಕೊಟ್ಟು, ಮನೆಗೆ ಕರೆದುಕೊಂಡು ಹೋಗಲು ಅಮರಾಂತಳ ಜೊತೆ ಹತ್ತಿರದ ರಸ್ತೆಗೆ ಹೊರಟ. ಉರ್ಸುಲಾ ಪಕ್ಕದ ಮನೆಯ ಎದುರು ಫಿರಂಗಿಯಿಂದ ಉಂಟಾದ ಹಳ್ಳವನ್ನು ಲೆಕ್ಕಿಸದೆ ಬಾಗಿಲ ಹತ್ತಿರ ನಿಂತು ಕಾಯುತ್ತಿದ್ದಳು. ಮಳೆ ನಿಲ್ಲುತ್ತಿದ್ದರೂ ರಸ್ತೆಗಳು ಕರಗಿದ ಸೋಪಿನಂತೆ ಜಾರುವಂತಿದ್ದವು ಮತ್ತು ಆ ಕತ್ತಲಲ್ಲಿ ಅಂತರಗಳನ್ನು ಊಹಿಸಬೇಕಾಗಿತ್ತು. ಅಮರಾಂತಳನ್ನು ಉರ್ಸುಲಾ ಬಳಿ ಬಿಟ್ಟು ಮೂಲೆಯಲ್ಲಿ ನಿಂತು ನಿಲ್ಲಿಸದೆ ಗುಂಡು ಹೊಡೆಯುತ್ತಿದ್ದ ಇಬ್ಬರು ಸೈನಿಕರನ್ನು ಎದುರಿಸಲು ಹೋದ. ಅನೇಕ ವರ್ಷ ಕಪಾಟಿನಲ್ಲಿ ಇಟ್ಟಿದ್ದ ಹಳೆಯ ಪಿಸ್ತೂಲುಗಳು ಉಪಯೋಗಕ್ಕೆ ಬರಲಿಲ್ಲ. ಉರ್ಸುಲಾ ತನ್ನ ದೇಹದಿಂದ ಅರ್ಕಾದಿಯೋನನ್ನು ರಕ್ಷಿಸುತ್ತ ಮನೆಯ ಕಡೆ ಹಿಡಿದೆಳೆದಳು. +“ದೇವರನ್ನ ನೆನೆಸಿಕೊಂಡು ಬಾ. ಈ ಹುಚ್ಚಾಟ ಇನ್ನು ಸಾಕು.” +ಸೈನಿಕರು ಅವರ ಕಡೆ ಗುರಿ ಇಟ್ಟರು. +ಅವರಲ್ಲೊಬ್ಬ, “ಅವನನ್ನು ಕೈ ಬಿಟ್ಟು ಬಿಡಿ….. ಇಲ್ದಿದ್ರೆ ನಾವು ಜವಾಬ್ದಾರರಲ್ಲ” ಎಂದು ಕೂಗಿದ. +ಅರ್ಕಾದಿಯೋ ಉರ್ಸುಲಾಳನ್ನು ಪಕ್ಕಕ್ಕೆ ತಳ್ಳಿ ಶರಣಾಗತನಾದ. ಸ್ವಲ್ಪ ಸಮಯದ ನಂತರ ಗುಂಡು ಹೊಡೆಯುವುದು ನಿಂತು ಗಂಟೆಗಳು ಮೊಳಗುವುದಕ್ಕೆ ಪ್ರಾರಂಭವಾಯಿತು. ಅರ್ಧ ಗಂಟೆಯ ಒಳಗೆ ಪ್ರತಿರೋಧವನ್ನು ನೆಲಸಮ ಮಾಡಲಾಗಿತ್ತು. ಆ ಆಕ್ರಮಣದಲ್ಲಿ ಅರ್ಕಾದಿಯೋನ ಸಂಗಡಿಗರು ಯಾರೂ ಉಳಿದಿರಲಿಲ್ಲ. ಆದರೆ ಸಾಯುವ ಮುಂಚೆ ಅವರು ಮುನ್ನೂರು ಸೈನಿಕರನ್ನು ಕೊಂದಿದ್ದರು. ಕೊನೆಯದಾಗಿ ಉಳಿದದ್ದು ಶಕ್ತಿಯುತ ಕೇಂದ್ರವಾದ ಸಿಪಾಯಿಗಳ ವಾಸಸ್ಥಾನ. ತಮ್ಮ ಮೇಲೆ ಆಕ್ರಮಣವಾಗುವುದಕ್ಕಿಂತ ಮುಂಚೆ ಕರ್ನಲ್ ಗ್ರಿಗೇರಿಯೋ ಸ್ಟಿವನ್ಸನ್ ಆಗಿರಬಹುದಾದವನು ಖೈದಿಗಳನ್ನು ಬಿಡುಗಡೆ ಮಾಡಿದ ಮತ್ತು ತಮ್ಮ ಸಂಗಡಿಗರಿಗೆ ಹೊರಗೆ ರಸ್ತೆಗೆ ಹೋಗಿ ಕಾದಾಡುವಂತೆ ಅಪ್ಪಣೆ ಕೊಟ್ಟ. ಅವನು ಇಪ್ಪತ್ತು ಸಿಡಿಮದ್ದುಗಳನ್ನು ಇಟ್ಟುಕೊಂಡಿದ್ದ ಸಿಪಾಯಿಗಳಿಂದ ಆಯಕಟ್ಟು ಸ್ಥಳಗಳು ಚೆನ್ನಾಗಿ ರಕ್ಷಿತವಾಗುತ್ತಿದೆ ಎಂದು ಭಾವಿಸಲು ಕಾರಣವಾಗಿತ್ತು. ಆಕ್ರಮಣಕಾರರು ಫಿರಂಗಿಯಿಂದ ಅದನ್ನು ಚೂರು ಚೂರು ಮಾಡಿದರು. ಆ ಕಾರ್ಯಾಚರಣೆಯನ್ನು ನಿರ್ವಹಿಸಿದ ಕ್ಯಾಪ್ಟನ್ ಆ ರದ್ದಿಯಲ್ಲಿ ಯಾರೂ ಇಲ್ಲದಿರುವುದಕ್ಕೆ ಮತ್ತು ಚಿಂದಿಯಾದ ಖಾಲಿ ಬಂದೂಕನ್ನು ಬಿಗಿಯಾಗಿ ಹಿಡಿದುಕೊಂಡು ಒಳ‌ಉಡುಪಿನಲ್ಲಿ ಸತ್ತ ಒಬ್ಬ ಮನುಷ್ಯನನ್ನು ಕಂಡು ಚಕಿತನಾದ. ಅವನಿಗೆ ಹೆಂಗಸಿನ ಹಾಗೆ ತಲೆಗೂದಲಿತ್ತು. ಅವನು ಕುತ್ತಿಗೆಯ ಹತ್ತಿರ ಅದನ್ನು ಬಾಚಣಿಕೆಯಿಂದ ಹಿಡಿದು ನಿಲ್ಲಿಸಿದ್ದ ಮತ್ತು ಅವನ ಕತ್ತಿಗೆಯಲ್ಲಿದ್ದ ಚೈನ್‌ನಲ್ಲಿ ಚಿನ್ನದ ಸಣ್ಣ ಮೀನೊಂದಿತ್ತು. ತನ್ನ ಬೂಟುಗಾಲಿಂದ ಉರುಳಿಸಿ ಅವನ ಮುಖದ ಮೇಲೆ ಬೆಳಕು ಬಿಟ್ಟಾಗ ಕ್ಯಾಪ್ಟನ್‌ಗೆ ತಬ್ಬಿಬ್ಬಾಯಿತು. ಅವನು, “ದೇವರೇ” ಎಂದು ಸೋಜಿಗಗೊಂಡು ಕೂಗಿದ. ಉಳಿದವರು ಅವನ ಬಳಿ ಬಂದರು. +“ನೋಡಿ ಈ ಮನುಷ್ಯ ಸಿಕ್ಕಿದ್ದೆಲ್ಲಿ … ಇವನು ಗ್ರಿಗೇರಿಯೋ ಸ್ಟಿವನ್ಸನ್” +ಬೆಳಿಗ್ಗೆ ಅವಸರದ ಸೈನಿಕ ನ್ಯಾಯಾಸ್ಥಾನದ ವಿಚಾರಣೆಯ ನಂತರ ಅರ್ಕಾದಿಯೋನನ್ನು ಸ್ಮಶಾನದ ಗೋಡೆಗೆ ಒರಗಿಸಿ ಗುಂಡಿಕ್ಕಲಾಯಿತು. ತನ್ನ ಜೀವಿತದ ಕೊನೆ ಎರಡು ಗಂಟೆಯಲ್ಲಿ ಬಾಲ್ಯದಿಂದಲೂ ತನಗೆ ಕಾಡಿದ್ದ ಭಯ ಮಾಯವಾದದ್ದು ಹೇಗೆ ಎಂದು ಅವನಿಗೆ ಅರ್ಥವಾಗಲಿಲ್ಲ. ನಿರುದ್ವೇಗದಿಂದ ಇತ್ತೀಚಿನ ತನ್ನ ಪರಾಕ್ರಮವನ್ನು ಕುರಿತು ಕೊಚ್ಚಿಕೊಳ್ಳುವುದರ ಬಗ್ಗೆಯೂ ಯೋಚಿಸದೆ, ತನ್ನ ಮೇಲಿನ ಆಪಾದನೆಗಳನ್ನು ಕೇಳಿಸಿಕೊಂಡ. ಅವನು ಉರ್ಸುಲಾ ಬಗ್ಗೆ ಯೋಚಿಸುತ್ತ ಆ ಸಮಯದಲ್ಲಿ ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಜೊತೆ ಮರದ ಕೆಳಗೆ ಕುಳಿತು ಕಾಫಿ ಕುಡಿಯುತ್ತಿರಬೇಕು ಎಂದುಕೊಂಡ. ಅವನು ಇನ್ನೂ ಹೆಸರಿಲ್ಲದ ತನ್ನ ಎಂಟು ತಿಂಗಳ ಮಗಳು ಮತ್ತು ಆಗಸ್ಟ್‌ನಲ್ಲಿ ಹುಟ್ಟಲಿರುವ ಮಗುವಿನ ಬಗ್ಗೆ ಯೋಚಿಸಿದ. ಹಿಂದಿನ ದಿನ ಮಾರನೆ ದಿನಕ್ಕೆಂದು ಜಿಂಕೆಯೊಂದಕ್ಕೆ ಉಪ್ಪು ಸವರುವ ಮುಂಚೆ ಬಿಟ್ಟು ಬಂದ ಸಾಂತ ಸೋಫಿಯಾ ದೆಲಾ ಪಿಯದಾದ್ ಅವನಿಗೆ ನೆನೆಪಾದಳು. ಅವಳ ಭುಜದ ತನಕ ಇಳಿಬೀಳುವ ತಲೆಗೂದಲು ಮತ್ತು ಕೃತಕವೇನೋ ಎನ್ನಿಸುವಂತಿದ್ದ ಅವಳ ರೆಪ್ಪೆಗಳು ಅವನನ್ನು ಕಾಡಿತು. ಅವನು ನಿರ್ಭಾವದಿಂದ ತನ್ನ ಜನರ ಬಗ್ಗೆ ಯೋಚಿಸುತ್ತ, ತನ್ನ ಜೀವನದ ಲೆಕಾಚಾರವನ್ನು ಮುಕ್ತಾಯಗೊಳಿಸುತ್ತ ತಾನು ತೀರ ದ್ವೇಷಿಸುತ್ತಿದ್ದವರನ್ನು ನಿಜವಾಗಲೂ ಎಷ್ಟು ಪ್ರೀತಿಸುತ್ತಿದ್ದೆ ಎನ್ನುವುದು ಅವನಿಗೆ ತಿಳಿಯುತ್ತ ಬಂತು. ಮಿಲಿಟರಿ ವಿಚಾರಣೆಯ ಅಧ್ಯಕ್ಷರು ತಮ್ಮ ಅಂತಿಮ ಭಾಷಣ ಪ್ರಾರಂಭಿಸಿದಾಗ ಎರಡು ಗಂಟೆ ಕಳೆದಿದೆ ಎಂದು ಅವನಿಗೆ ಗೊತ್ತಾಯಿತು. ಅಧ್ಯಕ್ಷರು, “ಒಂದು ಪಕ್ಷ ಆಪಾದಿತನ ಮೇಲಿನ ಖಚಿತಗೊಂಡ ಆಪಾದನೆಗಳ ಸ್ವರೂಪ ತೀವ್ರವಾಗಿರದಿದ್ದರೂ ಅವನ ಬೇಜವಾಬ್ದಾರಿತನ ಮತ್ತು ದೋಷಪೂರ್ಣ ಧಾರ್ಷದಿಂದ ತನ್ನ ಕೆಳಗಿನವರ ಸಾವಿಗೆ ಕಾರಣನಾಗಿದ್ದಷ್ಟಕ್ಕೇ ಅವನಿಗೆ ಮರಣದಂಡನೆ ವಿಧಿಸಲು ಸಾಕಾಗುತ್ತದೆ” ಎಂದ. ಮುರಿದು ಬಿದ್ದ ಸ್ಕೂಲ್‌ನಲ್ಲಿ ಎಲ್ಲಿ ತನಗೆ ಅಧಿಕಾರದ ರಕ್ಷಣೆಯಿತ್ತೋ ಮತ್ತು ಆ ರೂಮಿನ ಸ್ವಲ್ಪ ದೂರದಲ್ಲೇ ಪ್ರೇಮದ ಅನಿಶ್ಚಿತತೆಯ ಅರಿವಾಗಿತ್ತೋ ಅಲ್ಲಿ ಸಾವಿನ ಔಪಚಾರಿಕತೆ ಅಸಂಬದ್ಧವೆನಿಸಿತು. ಸಾವಿನ ಬಗ್ಗೆ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಜೀವನದ ಬಗ್ಗೆ ಆಲೋಚನೆಯಿತ್ತು. ಆದ್ದರಿಂದ ಅವನು ತಮ್ಮ ನಿರ್ಧಾರವನ್ನು ತಿಳಿಸಿದಾಗ ಅವನಿಗೆ ಉಂಟಾದ ಭಾವನೆ ಭಯವಲ್ಲ: ಮನೋವ್ಯಥೆ. ತನ್ನ ಕೊನೆಯ ಕೋರಿಕೆಯನ್ನು ಕೇಳುವ ತನಕ ಅವನು ಮಾತಾಡಲಿಲ್ಲ. +ಅವನು ಸದೃಢ ದನಿಯಲ್ಲಿ, “ನನ್ನ ಮಗಳಿಗೆ ಉರ್ಸುಲಾ ಅಂತ ಹೆಸರಿಡಕ್ಕೆ ನನ್ನ ಹೆಂಡತೀಗೆ ತಿಳಿಸಿ” ಎಂದವನು ಮಾತು ನಿಲ್ಲಿಸಿ, ಮತ್ತೆ ಅದನ್ನೇ ಹೇಳಿದ: “ಉರ್ಸುಲಾ, ಅವಳ ಅಜ್ಜಿಯ ಹಾಗೆ, ಅವಳಿಗೆ ಇನ್ನೂ ಹೇಳಿ: ಹುಟ್ಟಲಿರೋ ಮಗು ಗಂಡಾದರೆ ಅದಕ್ಕೆ ಹೊಸೆ ಅರ್ಕಾದಿಯೋ ಅಂತ. ಅಂಕಲ್ ಹಾಗಲ , ಅಜ್ಜನ ಹಾಗೆ. +ಅವನನ್ನು ದಂಡನೆಗೆ ಗುರಿಪಡಿಸುವ ಗೋಡೆಯ ಬಳಿ ಕರೆದುಕೊಂಡು ಹೋಗುವ ಮುಂಚೆ ಫಾದರ್ ನಿಕನೋರ್ ಅವನಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ. ಅರ್ಕಾದಿಯೋ, “ನಾನು ಪರಿತಾಪ ಪಡುವಂಥದೇನೂ ಇಲ್ಲ” ಎಂದು ಹೇಳಿ ಒಂದು ಕಪ್ ಬ್ಲಾಕ್ ಕಾಫಿ ಕುಡಿದು ಗುಂಡಿಕ್ಕುವ ತಂಡದವರ ಅಪ್ಪಣೆಗೆ ಒಪ್ಪಿಸಿಕೊಂಡ. ದಿಢೀರನೆ ಕೊಲ್ಲುವುದರಲ್ಲಿ ನಿಷ್ಣಾತನಾದ ಆ ತಂಡದ ನಾಯಕನ ಹೆಸರು ಕ್ಯಾಪ್ಟನ್ ಕಾರ್ನಿಸಿರೋ, ಅಂದರೆ ಕೊಲೆಗಾರ ಎಂದು ಅದರ ಅರ್ಥ. ಹಾಗೆ ಇದ್ದದ್ದು ಕಾಕತಾಳೀಯವಾಗಿತ್ತು. ನಿಲ್ಲದೆ ಸುರಿಯುತ್ತಿದ್ದ ಸಣ್ಣ ಮಳೆಯಲ್ಲಿ ಸ್ಮಶಾನದ ಕಡೆ ಹೊರಟಾಗ ದಾರಿಯಲ್ಲಿ ಅರ್ಕಾದಿಯೋ ದಿಗಂತದಲ್ಲಿ ಬುಧವಾರದ ಉಜ್ವಲ ಬೆಳಗನ್ನು ಕಂಡ. ಆ ಮಂಜಿನಲ್ಲಿ ಅವನ ಮನೋವ್ಯಥೆ ಮಾಯವಾಗಿ ಅದರ ಸ್ಥಳದಲ್ಲಿ ಕುತೂಹಲ ಮೂಡಿತು. ಅವನಿಗೆ ಗೋಡೆಗೆ ಬೆನ್ನನ್ನು ತಗುಲಿಸಿ ನಿಲ್ಲಲು ಅವರು ಆeಪಿಸಿದಾಗ, ಬಾಗಿಲನ್ನು ಪೂರ್ತಿ ತೆಗೆದು ಒದ್ದೆ ಕೂದಲಲ್ಲಿ ನೇರಳೆ ಬಣ್ಣದ ಹೂಗಳ ಬಟ್ಟೆ ಹಾಕಿಕೊಂಡಿದ್ದ ರೆಬೇಕ ಕಾಣಿಸಿದಳು. ಅವಳು ತನ್ನನ್ನು ಗುರುತಿಸಲು ಸಾಧ್ಯವಾಗುವ ಹಾಗೆ ಪ್ರಯತ್ನಿಸಿದ. ಗೋಡೆಯ ಕಡೆ ಹಾಗೆಯೇ ನೋಡಿದ ರೆಬೇಕ ಮರಗಟ್ಟಿ, ಮಾತಿಲ್ಲದೆ, ಪ್ರತಿಕ್ರಿಯಿಸಲೂ ಸಾಧ್ಯವಾಗದೆ ಅರ್ಕಾದಿಯೋಗೆ ವಿದಾಯ ಸೂಚಿಸಿದಳು. ಅರ್ಕಾದಿಯೋ ಕೂಡ ಅವಳಿಗೆ ಹಾಗೆಯೇ ಮಾಡಿದ. ಆ ಸಮಯದಲ್ಲಿ ಹೊಗೆಯುಗುಳುವ ಬಂದೂಕುಗಳು ಅವನ ಕಡೆ ಗುರಿ ಇಟ್ಟಿದ್ದವು ಮತ್ತು ಅವನಿಗೆ ಮೇಲ್‌ಕಿಯಾದೆಸ್ ತರಿಸಿದ್ದ ಪೋಪ್ ಗುರುವಿನ ನಿರೂಪಣೆಯ ಮಾತುಗಳು ಕೇಳಿಸಿತು ಹಾಗೂ ಇನ್ನೂ ಕನ್ಯೆಯಾಗಿದ್ದ ಸಾಂತ ಸೋಫಿ ದೆಲಾ ಪಿಯದಾದ್ ಕ್ಲಾಸ್ ರೂಮಿನಲ್ಲಿ ನಡೆದು ಬಂದು ಕರಗಿದ ಹೆಜ್ಜೆ ಸಪ್ಪಳ ಕೇಳಿಸಿತು. ಅಲ್ಲದೆ ರೇಮಿಡಿಯೋಸ್‌ಳ ಶವದ ಮೂಗಿನ ಹೊಳ್ಳೆಗಳಲ್ಲಿದ್ದ ಅಂಥದೇ ಕೊರೆಯುವ ಬಿಗಿತ ತನ್ನ ಮೂಗಿನಲ್ಲೂ ಇರುವಂತೆ ತೋರಿತು. ಅವನು, “ಅಯ್ಯೋ ದೇವರೆ, ಇದೇನಾಯಿತು. ಒಂದು ವೇಳೆ ಹೆಣ್ಣು ಮಗು ಹುಟ್ಟಿದರೆ ಅದಕ್ಕೆ ರೆಮಿದಿಯೋಸ್ ಅಂತ ಹೆಸರಿಡಿ ಅನ್ನೋದನ್ನ ಹೇಳಕ್ಕೆ ಮರೆತು ಬಿಟ್ಟೆ” ಎಂದು ಯೋಚಿಸುವಷ್ಟಾಯಿತು. ಅನಂತರ ಎಲ್ಲವೂ ಒಟ್ಟೊಟ್ಟಿಗೆ ಒಟ್ಟುಗೂಡಿ ಅಂದರೆ ತನ್ನ ಜೀವಮಾನದಲ್ಲಿ ಅತೀವ ಯಾತನೆಗೆ ಒಳಪಡಿಸಿದ ಎಲ್ಲ ಭಯವನ್ನು ಮತ್ತೆ ಅನುಭವಿಸಿದ. ಕ್ಯಾಪ್ಟನ್ ಗುಂಡು ಹೊಡೆಯಲು ಅಪ್ಪಣೆ ಕೊಟ್ಟ. ತನ್ನ ತೊಡೆಗಳಿಗೆ ಕಾವು ಹುಟ್ಟಿಸಿದ ದ್ರವ ಎಲ್ಲಿಂದ ಇಳಿದು ಬರುತ್ತಿದೆ ಎನ್ನುವುದು ಅರ್ಥವಾಗದೆ ಎದೆ ಸೆಟೆಸಿ ಕತ್ತೆತ್ತುವುದಕ್ಕೂ ಅವನಿಗೆ ಸಮಯ ಸಾಲದೇ ಹೋಯಿತು. +ಅವನು, “ಸೂಳೆ ಮಕ್ಕಳು…. ಉದಾರವಾದಿ ಪಾರ್ಟಿ ಚಿರಾಯುವಾಗಲಿ” ಎಂದ. +೭ +ಮೇ ತಿಂಗಳಿಗೆ ಯುದ್ಧ ಮುಗಿಯಿತು. ದಂಗೆ ಪ್ರಾರಂಭಿಸಿದವರಿಗೆ ನಿರ್ದಾಕ್ಷಿಣ್ಯವಾದ ಶಿಕ್ಷೆಗೆ ಗುರಿಪಡಿಸಲಾಗುವುದೆಂದು ಸರ್ಕಾರ ಅಬ್ಬರದ ಘೋಷಣೆ ಹೊರಡಿಸುವ ಎರಡು ವಾರಗಳ ಮುಂಚೆ ದೆವ್ವ ಬಿಡಿಸುವ ಇಂಡಿಯನ್‌ನಂತೆ ಮರೆಮಾಚಿಕೊಂಡು, ಇನ್ನೇನು ಪಶ್ಚಿಮದ ಸರಹದ್ದನ್ನು ತಲುಪುವುದರಲ್ಲಿದ್ದಾಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸೆರೆ ಸಿಕ್ಕ. ಅವನ ಜೊತೆ ಯುದ್ಧಕ್ಕೆ ಹೋದ ಇಪ್ಪತ್ತೊಂದು ಜನರಲ್ಲಿ ಹದಿನಾಲ್ಕು ಜನ ಹೋರಾಟದಲ್ಲಿ ಸತ್ತರು, ಆರು ಜನ ಗಾಯಗೊಂಡರು ಮತ್ತು ಸೋಲಿನ ಕೊನೆಯ ಕ್ಷಣದ ತನಕ ಜೊತೆಗಿದ್ದವನೆಂದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್. ಅವನನ್ನು ಸೆರೆ ಹಿಡಿದಿದ್ದನ್ನು ಮಕೋಂದೋದಲ್ಲಿ ವಿಶೇಷ ಘೋಷಣೆಯೊಂದಿಗೆ ಪ್ರಚಾರ ಮಾಡಲಾಯಿತು. ಉರ್ಸುಲಾ ತನ್ನ ಗಂಡನಿಗೆ, “ಅವನಿನ್ನೂ ಬದುಕಿದಾನೆ. ಅವನ ಶತ್ರುಗಳು ಅವನನ್ನು ಕ್ಷಮಿಸಲಿ ಅಂತ ನಾವು ದೇವರಿಗೆ ಕೇಳಿಕೊಳ್ಳೋಣ” ಎಂದಳು. ಅವಳು ಮೂರು ದಿನ ಅತ್ತ ನಂತರ ಒಂದು ಮಧ್ಯಾಹ್ನ ಅಡುಗೆ ಮನೆಯಲ್ಲಿ ಹಾಲಿನ ಸಿಹಿ ಪದಾರ್ಥವೊಂದನ್ನು ಕದಡುತ್ತಿದ್ದಾಗ ತನ್ನ ಮಗನ ಧ್ವನಿ ಸ್ವಷ್ಟವಾಗಿ ಕೇಳಿಸಿತು. “ಅದು ಅವ್ರೇಲಿಯಾನೋ” ಎಂದು ಕೂಗುತ್ತ ತನ್ನ ಗಂಡನಿಗೆ ತಿಳಿಸಲು ಮರದ ಕಡೆ ಓಡಿದಳು. “ಅದು ಹೇಗೆ ಪವಾಡ ಆಯ್ತೊ ಗೊತ್ತಿಲ್ಲ. ಆದೆ ಅವನು ಬದುಕಿದಾನೆ. ಇಷ್ಟರಲ್ಲೆ ನಾವು ಅವನನ್ನು ನೋಡ್ತೀವಿ” ಎಂದಳು. ಅವಳು ಅದನ್ನು ನಿಜವೆಂದೇ ತಿಳಿದುಕೊಂಡಳು. ಅವಳು ಮನೆಯ ನೆಲವನ್ನೆಲ್ಲ ತಿಕ್ಕಿ ಶುಚಿಗೊಳಿಸಿ, ಪೀಠೋಪಕರಣಗಳ ಸ್ಥಾನಗಳನ್ನು ಬದಲಾಯಿಸಿದಳು. ಒಂದು ವಾರದ ನಂತರ ಯಾವುದೇ ಘೋಷಣೆಯ ಬೆಂಬಲವಿಲ್ಲದೆ ಬಂದ ಗಾಳಿಸುದ್ದಿ, ಭವಿಷ್ಯ ನುಡಿದಿದ್ದಕ್ಕೆ ನಾಟಕೀಯ ಖಾತರಿಯನ್ನು ಒದಗಿಸಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಮರಣದಂಡನೆ ವಿಧಿಸಲಾಗಿತ್ತು ಮತ್ತು ಜನರು ಪಾಠ ಕಲಿಯುವಂತೆ ಅದನ್ನು ಮಕೋಂದೋದಲ್ಲಿ ಜಾರಿಗೊಳಿಸುವುದಿತ್ತು. ಒಂದು ಸೋಮವಾರ ಬೆಳಿಗ್ಗೆ ಹತ್ತು ಮೂವತ್ತಕ್ಕೆ ಅವ್ರೇಲಿಯಾನೋ ಹೊಸೆಗೆ ಅಮರಾಂತ ಬಟ್ಟೆ ಹೊಲಿಯುತ್ತಿದ್ದಾಗ ಅವಳಿಗೆ ದೂರದ ಸೈನಿಕರ ಶಬ್ದ ಮತ್ತು ಕಹಳೆಯ ಮೊಳಗು ಕೇಳುವ ಒಂದು ಸೆಕೆಂಡಿನ ಮುಂಚೆ ರೂಮಿಗೆ ಧಾವಿಸಿ ಬಂದ ಉರ್ಸುಲಾ, “ಅವನನ್ನು ಕರ್‍ಕೂಂಡು ಬರ್‍ತಿದಾರೆ” ಎಂದು ಕೂಗಿದಳು. ಸೈನಿಕರು ಬಂದೂಕಿನ ತುದಿಯಿಂದ ಒತ್ತೊತ್ತಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಶ್ರಮಿಸಿದರು. ಉರ್ಸುಲಾ ಮತ್ತು ಅಮರಾಂತ ಮೂಲೆಗೆ ಓಡಿ, ಜನರ ಮಧ್ಯೆ ದಾರಿ ಮಾಡಿಕೊಂಡು ಹೋಗಿ ಅವನನ್ನು ನೋಡಿದರು. ಅವನು ತಿರುಪೆಯವನಂತೆ ಕಂಡ. ಬಟ್ಟೆ ಹರಿದು ಹೋಗಿ, ಗಂಟು ಕಟ್ಟಿದ ತಲೆಗೂದಲು ಮತ್ತು ಗಡ್ಡಗಳಿದ್ದ ಅವನು ಬರಿಗಾಲಲ್ಲಿದ್ದ. ಸುಡುತ್ತಿದ್ದ ಧೂಳಿನ ಕಡೆ ಅವನ ಗಮನವಿರಲಿಲ್ಲ. ಸವಾರಿ ಮಾಡುತ್ತಿದ್ದ ಅಧಿಕಾರಿಯ ಕುದುರೆಯ ತಲೆಗೆ ಕಟ್ಟಿದ ಹಗ್ಗಕ್ಕೆ ಅವನ ಎರಡೂ ಕೈಗಳನ್ನು ಹಿಂಬದಿಗೆ ಕಟ್ಟಿತ್ತು. ಅವನ ಜೊತೆಗೆ ಸೋತ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಎಳೆದು ತಂದಿದ್ದರು. ಅವರಿಬ್ಬರು ಬೇಸರಗೊಂಡಿರಲಿಲ್ಲ. ಅವರು ಸೈನಿಕರ ವಿರುದ್ಧ ಮಾಡುತ್ತಿದ್ದ ಘೋಷಣೆಗಳಿಂದ ವಿಚಲಿತರಾದಂತೆ ಕಂಡರು. +ಆ ಗೊಂದಲದ ನಡುವೆ ಉರ್ಸುಲಾ, “ಮಗನೇ” ಎಂದು ಕೂಗಿದಳು. ತನ್ನನ್ನು ತಡೆಯಲು ಪ್ರಯತ್ನಿಸಿದ ಸೈನಿಕನ ಕಪಾಳಕ್ಕೆ ಬಾರಿಸಿದಳು. ಅಧಿಕಾರಿಯ ಕುದುರೆ ಹಿಂಗಾಲುಗಳ ಮೇಲೆ ನಿಂತುಕೊಂಡಿತು. ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ನಿಂತ. ಬಳಸುತ್ತಿದ್ದ ತನ್ನ ತಾಯಿಯ ಕೈಗಳಿಂದ ತಪ್ಪಿಸಿಕೊಂಡು ನೆಟ್ಟ ದೃಷ್ಟಿಯಿಂದ ಅವಳನ್ನೇ ನೋಡಿದ. +ಅವನು, “ಈಗ ಮನೆಗೆ ಹೋಗಮ್ಮ. ಜೈಲಿನಲ್ಲಿ ನನ್ನನ್ನು ನೋಡಕ್ಕೆ ಅಧಿಕಾರಿಗಳಿಂದ ಅನುಮತಿ ತೊಗೊಂಡು ಬಾ” ಎಂದ. +ಅವನು ಏನು ಮಾಡಬೇ;ಕೆಂದು ನಿರ್ಧರಿಸಲಾಗದೆ ಎರಡು ಹೆಜ್ಜೆ ಉರ್ಸುಲಾಳ ಹಿಂದೆ ನಿಂತಿದ್ದ ಅಮರಾಂತಳ ಕಡೆ ನೋಡಿದ. ಅನಂತರ ನಗುತ್ತ “ನಿನ್ನ ಕೈಗೆ ಏನಾಗಿದೆ?” ಎಂದು ಕೇಳಿದ. ಅವಳು ಕಪ್ಪು ಬ್ಯಾಂಡೇಜ್ ಇದ್ದ ಕೈ ಮೇಲೆತ್ತಿ, “ಸುಟ್ಟಿದೆ” ಎಂದು ಹೇಳಿ ಕುದುರೆಗಳು ಬೀಳಿಸದಿರಲಿ ಎಂದು ಉರ್ಸುಲಾಳನ್ನು ಪಕ್ಕಕ್ಕೆ ಕರೆದುಕೊಂಡು ಹೋದಳು. ಸೈನಿಕರು ಮುಂದೆ ಹೊರಟರು. ಒಂದು ವಿಶೇಷ ರಕ್ಷಣಾದಳದವರು ಖೈದಿಗಳನ್ನು ಸುತ್ತುವರಿದು ಅವರನ್ನು ಜೈಲಿಗೆ ಕರೆದುಕೊಂಡು ಹೋದರು. +ಮುಸ್ಸಂಜೆಯಲ್ಲಿ ಉರ್ಸುಲಾ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಜೈಲಿನಲ್ಲಿ ಭೇಟಿ ಮಾಡಿದಳು. ಅವಳು ದಾನ್ ಅಪೋಲಿನರ್ ಮೊಸ್ಕೋತೆಯ ಮುಖಾಂತರ ಅನುಮತಿ ಪಡೆಯಲು ಪ್ರಯತ್ನಿಸಿದ್ದಳು. ಆದರೆ ಎಲ್ಲ ಕಡೆ ಮಿಲಿಟರಿ ಇದ್ದ ಕಾರಣ ಅವನು ತನ್ನ ಅಧಿಕಾರವನ್ನು ಕಳೆದುಕೊಂಡಿದ್ದ. ಫಾದರ್ ನಿಕನೋರ್ ತೀವ್ರ ಜ್ವರದಿಂದ ಹಾಸಿಗೆಯಲ್ಲಿದ್ದ. ಮರಣದಂಡನೆಗೆ ಗುರಿಯಾಗದ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ತಂದೆತಾಯಿ ಅವನನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಸೈನಿಕರು ಬಂದೂಕು ತುದಿಯಿಂದ ಅವರನ್ನು ಹೊರಗಟ್ಟಿದರು. ಯಾರೇ ಮಧ್ಯೆ ಪ್ರವೇಶಿಸುವ ಅಸಾಧ್ಯತೆಯನ್ನು ಮನಗಂಡು, ತನ್ನ ಮಗನಿಗೆ ಮುಂಜಾನೆ ಗುಂಡಿಕ್ಕುತ್ತಾರೆಂದು ಖಚಿತಗೊಂಡ ಉರ್ಸುಲಾ ಅವನಿಗೆ ಕೊಡಬೇಕೆಂದಿದ್ದ ವಸ್ತುಗಳನ್ನು ಸುತ್ತಿಕೊಂಡು ಒಬ್ಬಳೇ ಜೈಲಿಗೆ ಹೋದಳು. +“ನಾನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಅಮ್ಮ” ಎಂದು ಹೇಳಿದಳು. +ಕಾವಲುಗಾರರು ಅವಳ ದಾರಿಗಡ್ಡವಾದರು. “ಏನಾದ್ರೂ ಸರಿ ನಾನು ಹೋಗೋಳೆ” ಎಂದು ಅವರಿಗೆ ಎಚ್ಚರಿಕೆ ಕೊಟ್ಟಳು. ಅವಳು, “ನಿಮ್ಗೆ ಶೂಟ್ ಮಾಡಿ ಅಂತ ಆರ್ಡರ್ ಇದ್ರೆ ಈಗ್ಲೆ ಶುರು ಮಾಡಿ” ಎಂದಳು. ಅವಳು ಕಾವಲುಗಾರನೊಬ್ಬನನ್ನು ಪಕ್ಕಕ್ಕೆ ತಳ್ಳಿ, ಈ ಮೊದಲು ಕ್ಲಾಸ್ ರೂಮು ಆಗಿದ್ದಲ್ಲಿಗೆ ಹೋದಳು. ಅಲ್ಲಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡಿದ್ದ ಸೈನಿಕರು ಆಯುಧಗಳಿಗೆ ಎಣ್ಣೆ ಸವರುತ್ತಿದ್ದರು. ಸಮವಸ್ತ್ರ ಹಾಕಿಕೊಂಡು, ದಪ್ಪ ಕನ್ನಡಕದ, ಕೆಂಚು ಮುಖದ ಅಧಿಕಾರಿಯೊಬ್ಬ ಅವರಿಗೆ ಸುಮ್ಮನಿರಲು ಸನ್ನೆ ಮಾಡಿದ. ಉರ್ಸುಲಾ “ನಾನು ಕರ್ನಲ್ ಅವ್ರೇಲಿಯಾನೋನ ಬ್ಯುಂದಿಯಾನ ಅಮ್ಮ” ಎಂದು ಮತ್ತೆ ಹೇಳಿದಳು. +ಅವನು ಸ್ನೇಹಿತನ ಹಾಗೆ ಸಣ್ಣಗೆ ನಗುತ್ತ, “ನೀವು ಹೇಳಿದ್ದು…. ನೀವು ಮಿಸ್ಟರ್ ಅವ್ರೇಲಿಯಾನೋ ಬ್ಯುಂದಿಯಾನ ಅಮ್ಮ ಅಂತ ಇರ್‍ಬೇಕು” ಎಂದು ಅವಳನ್ನು ಸರಿಪಡಿಸಿದ. +ಉರ್ಸುಲಾಗೆ ಅವನ ಮಾತಿನಲ್ಲಿ ಮಲೆನಾಡು ಜನರಲ್ಲಿ ಬೇರೂರಿದ್ದ ಧೋರಣೆಯನ್ನು ಗಮನಿಸಿದಳು. +ಅವಳು ಒಪ್ಪಿಕೊಳ್ಳುತ್ತ, “ನೀವು ಹೇಳಿದ ಹಾಗೆ ಮಿಸ್ಟರ್.. ನಾನು ಅವನನ್ನ ನೋಡೋಕಾದ್ರೆ ಸಾಕು.” +ಸಾಯಲಿರುವ ಖೈದಿಗಳ ಭೇಟಿಯನ್ನು ಮೇಲಿನ ಅಪ್ಪಣೆ ಪ್ರಕಾರ ನಿಷೇಧಿಸಿದ್ದರೂ ಆ ಅಧಿಕಾರಿ ಅವಳಿಗೆ ಹದಿನೈದು ನಿಮಿಷಗಳ ಭೇಟಿಗೆ ಅವಕಾಶ ಕೊಡುವ ಜವಾಬ್ದಾರಿ ವಹಿಸಿದ. ಉರ್ಸುಲಾ ಅವನಿಗೆ ಗಂಟಿನಲ್ಲಿ ಏನಿದೆ ಎಂದು ತೋರಿಸಿದಳು. ಶುಭ್ರವಾದ ಬಟ್ಟೆ, ತನ್ನ ಮಗ ಮದುವೆಯಲ್ಲಿ ಹಾಕಿಕೊಂಡಿದ್ದ ಬೂಟು ಮತ್ತು ಅವನು ವಾಪಸು ಬರುತ್ತಾನೆಂದು ತಾನು ಭಾವಿಸಿದ ದಿನ ಮಾಡಿಟ್ಟಿದ್ದ ಸಕ್ಕರೆ ಮಿಠಾಯಿಯನ್ನು ತೋರಿಸಿದಳು. ಬಂದೀಖಾನೆಯನ್ನಾಗಿ ಉಪಯೋಗಿಸಿದ ರೂಮಿನಲ್ಲಿ ಕಂಕುಳಲ್ಲಿ ಗಾಯವಾದ್ದರಿಂದ ಕೈಗಳನ್ನು ಅಗಲಿಸಿ ಮಂಚದ ಮೇಲೆ ಮೈ ಚಾಚಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಉರ್ಸುಲಾ ಕಂಡಳು. ಅವರು ಅವನಿಗೆ ಶೇವ್ ಮಾಡಿಕೊಳ್ಳಲು ಬಿಟ್ಟಿದ್ದರು. ಕೊನೆಯಲ್ಲಿ ಕೊಂಚ ತಿರುಚಿದ್ದ ಅವನ ದಪ್ಪ ಮೀಸೆ ಕೆನ್ನೆಯ ಮೂಳೆಯನ್ನು ಎದ್ದು ತೋರಿಸುತ್ತಿದ್ದವು. ಅವನು ಅಲ್ಲಿಂದ ಹೊರಟಾಗ ಇದ್ದದ್ದಕ್ಕಿಂತ ಕಳೆಗುಂದಿದ್ದ್ದ, ಕೊಂಚ ಎತ್ತರವಾಗಿದ್ದ, ಅಲ್ಲದೆ ಎಂದಿಗಿಂತಲೂ ಹೆಚ್ಚು ಏಕಾಂತದಲ್ಲಿ ಇದ್ದಂತೆ ಕಂಡಿತು. ಅವನಿಗೆ ಮನೆ ಬಗ್ಗೆ ಎಲ್ಲ ವಿವರಗಳೂ ಗೊತ್ತಿತ್ತು: ಪಿಯತ್ರೋ ಕ್ರೆಪ್ಸಿಯ ಆತ್ಮಹತ್ಯೆ, ಅರ್ಕಾದಿಯೋನ ಹುಚ್ಚಾಟದ ಆಳ್ವಿಕೆ, ಮರದ ಕೆಳಗೇ ಇರುವ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಎದೆಗಾರಿಕೆ ಮತ್ತು ಅವ್ರೇಲಿಯಾನೋ ಹೊಸೆಯನ್ನು ಬೆಳೆಸುವುದಕ್ಕೆ ಅಮರಾಂತ ತನ್ನ ಕನ್ಯತ್ವದ ವೈಧವ್ಯವನ್ನು ಮುಡುಪಾಗಿಟ್ಟಿರುವುದು ಅವನಿಗೆ ತಿಳಿದಿತ್ತು, ಅಲ್ಲದೆ ಅವನು ಈಗ ಮಾತನಾಡುವುದರ ಜೊತೆಗೇ ಓದುವುದನ್ನು ಮತ್ತು ಬರೆಯುವುದನ್ನು ಕಲಿತಿರುವುದು ಕೂಡ ತಾನು ರೂಮೊಳಗೆ ಕಾಲಿಟ್ಟಾಗಿನಿಂದ ಮಗನ ಪ್ರಬುದ್ಧತೆ, ಅವನ ಆಧಿಪತ್ಯದ ಪ್ರಭೆ ಮತ್ತು ಅವನ ಚರ್ಮದಿಂದ ಹೊರಡುತ್ತಿದ್ದ ವಿಧಾಯಕ ಶಕ್ತಿಯ ಮಿರುಗು ಉರ್ಸುಲಾಳ ಅನುಭವಕ್ಕೆ ಬಂತು. ಅವನಿಗೆ ಎಲ್ಲವೂ ತಿಳಿದಿರುವುದರಿಂದ ಅವಳಿಗೆ ಆಶ್ಚರ್ಯವಾಯಿತು. ಅವನು, “ನಿಂಗೆ ಗೊತ್ತಿz. ಲಾಗಾಯ್ತಿನಿಂದ್ಲೂ ನಾನೊಬ್ಬ ಮಂತ್ರವಾದಿ” ಎಂದು ಜೋಕ್ ಮಾಡಿದ. ಅನಂತರ ಗಂಭೀರನಾಗಿ, “ಇವತ್ತು ಬೆಳಿಗ್ಗೆ ಅವರು ನನ್ನನ್ನ ಇಲ್ಲಿಗೆ ತಂದಾಗ, ಇದೆಲ್ಲ ಆಗಿ ಹೋಗಿರೋದು ಅಂತ ಅನ್ನಿಸ್ತು” ಎಂದ. ವಾಸ್ತವವಾಗಿ ಅವನ ಪಕ್ಕದಲ್ಲಿ ಜನರ ಗುಂಪು ಹುಯಿಲೆಬ್ಬಿಸುತ್ತಿದ್ದಾಗ ಅವನು ಬೇರೆ ಆಲೋಚನೆಗಳ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುತ್ತಿದ್ದ, ಊರು ಬದಲಾಗಿರುವ ರೀತಿಗೆ ಬೆರಗುಗೊಂಡಿದ್ದ. ಬಾದಾಮಿ ಮರದ ಎಲೆಗಳು ಉದುರಿದ್ದವು. ಮನೆಗಳಿಗೆ ಮೊದಲು ನೀಲಿ ನಂತರ ಕೆಂಪು ಬಣ್ಣ ಬಳಿದು ಕೊನೆಗೆ ಹೇಳಲಾರದಂಥ ಬಣ್ಣವಾಗಿತ್ತು. +ಉರ್ಸುಲಾ, “ನೀನು ಏನು ಅಂದ್ಕೊಂಡಿದ್ದೆ?” ಎಂದು ನಿಟ್ಟುಸಿರು ಬಿಟ್ಟು, “ಕಾಲ ಸರಿದು ಹೋಗತ್ತೆ” ಎಂದಳು. +ಅವ್ರೇಲಿಯಾನೋ, “ಅದರ ರೀತಿ ಹಾಗೇನೇ” ಎಂದು ಒಪ್ಪಿದ. “ಆದರೆ ಹೀಗಲ್ಲ.” ಎಂದ. +ಹೀಗೆ ಬಹಳ ಸಮಯದಿಂದ ನಿರೀಕ್ಷಿಸಿದ ಪರಸ್ಪರ ಪ್ರಶ್ನೆಗಳನ್ನು ಮತ್ತು ಎದುರು ನೋಡುತ್ತಿದ್ದ ಉತ್ತರಗಳನ್ನು ಕೂಡ ತಯಾರು ಮಾಡಿಟ್ಟುಕೊಂಡಿದ್ದ ಭೇಟಿ ಮಾಮೂಲಿನ ದೈನಂದಿನ ಮಾತುಕತೆಯಲ್ಲಿ ಮಂಕಾಯಿತು. ಕಾವಲುಗಾರ ಭೇಟಿ ಮುಗಿಯಿತೆಂದು ಹೇಳಿದಾಗ ಅವ್ರೇಲಿಯಾನೋ ಮಂಚದ ಕೆಳಗಿಂದ ಬೆವರಂಟಿದ ಕಾಗದಗಳನ್ನು ಹೊರಗೆ ತೆಗೆದ. ಅವು ಅವನು ಬರೆದ ಕವನಗಳು, ರೆಮಿದಿಯೋಸ್‌ಳಿಂದ ಸ್ಫೂತಿ ಪಡೆದ ಕವನಗಳು. ಅವನು ಅಲ್ಲಿಂದ ಹೊರಟಾಗ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಜೊತೆಗೆ ಆಗಾಗ ಯುದ್ಧ ನಿಂತಾಗ ಬರೆದವೂ ಇದ್ದವು. ಅವನು, “ಇವನ್ನ ಯಾರೂ ಓದಲ್ಲ ಅಂತ ಮಾತುಕೊಡು” ಎಂದ. ಉರ್ಸುಲಾ ಮಾತುಕೊಟ್ಟು ಅವನಿಗೆ ಮುತ್ತಿಟ್ಟು ವಿದಾಯ ಹೇಳಲು ಎದ್ದು ನಿಂತಳು. +ಅವಳು, “ನಿನಗಾಗಿ ನಾನೊಂದು ರಿವಾಲ್ವರ್ ತಂದಿದೀನಿ” ಎಂದು ಪಿಸುಗುಟ್ಟಿದಳು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕಾವಲುಗಾರನಿಗೆ ನೋಡಲು ಆಗುವುದಿಲ್ಲ ಎನ್ನುವುದನ್ನು ಗಮನಿಸಿ, ಅವನು ಕೆಳದನಿಯಲ್ಲಿ, “ಅದರಿಂದ ನನಗೇನೊ ಉಪಯೋಗವಾಗಲ್ಲ… ಇರ್‍ಲಿ, ಅದನ್ನು ಇಲ್ಲಿ ಕೊಡು. ನೀನು ಹೊರಗೆ ಹೋಗುವಾಗ ಹುಡುಕಿದರೆ….” ಉರ್ಸುಲಾ ಕುಪ್ಪಸದೊಳಗಿಂದ ಅದನ್ನು ತೆಗೆದು ಮಂಚದ ಮೇಲಿನ ಹಾಸಿಗೆಯ ಕೆಳಗಿಟ್ಟಳು. ಅವನು ಶಾಂತ ರೀತಿಯಿಂದ, “ನೀನೇನೂ ನಂಗೆ ಹೇಳ್ಬೇಡ” ಎಂದು ಒತ್ತುಕೊಟ್ಟು ಹೇಳಿದ. “ನೀನು ನನ್ನನ್ನ ಯಾವಾಗಲೋ ಶೂಟ್ ಮಾಡಿದಾರೆ ಅನ್ನೋ ಥರ ಇರು.” ಉರ್ಸುಲಾ ಅಳುವುದನ್ನು ತಡೆ ಹಿಡಿಯಲು ತುಟಿ ಕಚ್ಚಿದಳು. +ಅವಳು, “ಆ ಗಾಯಕ್ಕೆ ಸ್ವಲ್ಪ ಕಾವು ಕೊಡು” ಎಂದಳು. +ಅವಳು ಮಧ್ಯದಲ್ಲಿ ಒಮ್ಮೆ ತಿರುಗಿ ರೂಮಿನಿಂದ ಹೊರಗೆ ಹೋದಳು. ಬಾಗಿಲು ಹಾಕುವ ತನಕ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯೋಚಿಸುತ್ತ ನಿಂತಿದ್ದ. ಅವನಿಗೆ ಚಿಕ್ಕಂದಿನಿಂದಲೂ ಮುಂದಾಗುವುದರ ಸೂಚನೆ ತನಗೆ ಉಂಟಾಗುವುದೆಂಬ ಅರಿವು ಮೂಡಿದಾಗಿನಿಂದಲೂ, ತನ್ನ ಸಾವಿನ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ಅನುಮಾನವಿಲ್ಲದ ಬದಲಾವಣೆಗೆ ಆಸ್ಪದವಿಲ್ಲದಂಥ ಸೂಚನೆ ಸಿಗುತ್ತದೆ ಎಂದುಕೊಂಡಿದ್ದ. ಆದರೆ ಸಾಯುವುದಕ್ಕೆ ಇನ್ನು ಕೆಲವೇ ಗಂಟೆಗಳಿದ್ದರೂ ಅಂಥ ಕುರುಹು ಕಂಡಿರಲಿಲ್ಲ. ಅದೊಂದು ಸಲ ಸುಂದರಿಯಾದ ಹೆಣ್ಣೊಬ್ಬಳು ಅವನಿದ್ದ ತುಕುರಿಂಕ ಕ್ಯಾಂಪ್‌ಗೆ ಬಂದು ಕಾವಲುಗಾರರಿಗೆ ಅವನನ್ನು ಭೇಟಿಮಾಡಲು ಅನುಮತಿ ಕೇಳಿದಳು. ಅವರು ಅವಳನ್ನು ಒಳಗೆ ಬಿಟ್ಟರು. ಏಕೆಂದರೆ ಕೆಲವು ಅತಿರೇಕದ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಪ್ರಖ್ಯಾತ ಯೋಧರ ಬಳಿಗೆ ವಂಶದ ಕುಡಿಗಳನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ ಕಳಿಸುತ್ತಿದ್ದ ಸಂಗತಿ ಅವರಿಗೆ ತಿಳಿದಿತ್ತು. ಆ ರಾತ್ರಿ ಆ ಹುಡುಗಿ ಅವನ ರೂಮಿಗೆ ಬಂದಾಗ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮಳೆಯಲ್ಲಿ ಕೊಚ್ಚಿ ಹೋದವನ ಬಗ್ಗೆ ಕವನವೊಂದನ್ನು ಬರೆಯುತ್ತಿದ್ದ. ಅವನು ಆ ಕಾಗದವನ್ನು ತನ್ನ ಕವನಗಳನ್ನು ಇಟ್ಟಿದ್ದ ಬೀಗ ಹಾಕಿದ ಡ್ರಾ ಕಡೆ ತಿರುಗಿ ಅವಳಿಗೆ ಬೆನ್ನು ಮಾಡಿದ. ಆಗಲೇ ಅವನಿಗೆ ಅದರ ವಾಸನೆ ಬಡಿದದ್ದು. ಅವನು ತಲೆ ತಿರುಗಿಸದೆ ಡ್ರಾದೊಳಗಿದ್ದ ಪಿಸ್ತೂಲನ್ನು ತೆಗೆದುಕೊಂಡ. +ಅವನು, “ದಯವಿಟ್ಟು ಶೂಟ್ ಮಾಡಬೇಡಿ” ಎಂದ. +ಕೈಯಲ್ಲಿ ಪಿಸ್ತೂಲ್ ಹಿಡಿದು ತಿರುಗಿದಾಗ ಆ ಹುಡುಗಿ ಏನು ಮಾಡಬೇಕೆಂದು ತಿಳಿಯದೆ ತನ್ನಲ್ಲಿದ್ದದ್ದನ್ನು ಕೆಳಗಿಳಿಸಿದ್ದಳು. ಇದೇ ರೀತಿಯಲ್ಲಿ ಅವನು ಹನ್ನೊಂದರಲ್ಲಿ ನಾಲ್ಕು ಬಗೆಯ ಬಲೆಗಳನ್ನು ತಪ್ಪಿಸಿಕೊಂಡಿದ್ದ. ಇದಕ್ಕೆ ವಿರುದ್ಧವಾಗಿ ಅದೊಂದು ರಾತ್ರಿ ಕ್ರಾಂತಿಕಾರಿಗಳ ಕೇಂದ್ರಕ್ಕೆ ಎಂದೂ ಸಿಕ್ಕಿಹಾಕಿಕೊಳ್ಳದೆ ಬಂದವನೊಬ್ಬ ಅವನ ಆತ್ಮೀಯ ಗೆಳೆಯ ಕರ್ನಲ್ ಮ್ಯಾಗ್ನಿಷಿಕೊ ವೀಸ್‌ಬಾಲ್‌ನನ್ನು ತಿವಿದು ಕೊಂದಿದ್ದ. ಬೆವರು ಸುರಿಸಿ ಜ್ವರದಿಂದ ವಾಸಿಯಾಗಲಿ ಎಂದು ಅವನು ಕೊಟ್ಟ ಹಾಸಿಗೆಯಲ್ಲಿ ಮಲಗಿದ್ದ, ಅದೇ ರೂಮಿನಲ್ಲಿ ಕೆಲವೇ ಗಜಗಳ ದೂರದಲ್ಲಿ ಮಲಗಿದ್ದ ಕರ್ನಲ್ ಅವ್ರೇಲಿಯಾನೋಗೆ ಅದು ಗೊತ್ತಾಗಲೇ ಇಲ್ಲ. ಅವನು ತನಗಾಗುತ್ತಿದ್ದ ಮುನ್ಸೂಚನೆಗಳನ್ನು ಒಂದು ಕ್ರಮದಲ್ಲಿಡಲು ಸೋತಿದ್ದ. ಅವು ಇದ್ದಕ್ಕಿದ್ದ ಹಾಗೆ ಅಲೌಕಿಕವಾದ ಸರಳತೆಯ ತರಂಗಗಳಾಗಿ ಆ ಕ್ಷಣದ ಅಪ್ಪಟವಾದ ನಂಬಿಕೆಯ ಹಾಗೆ ಬಂದರೂ ಅವುಗಳನ್ನು ಗ್ರಹಿಸುವುದು ಸಾಧ್ಯವಾಗುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವು ಎಷ್ಟು ಸಹಜವಾಗಿರುತ್ತಿದ್ದವು ಎಂದರೆ ಅದು ಪೂರ್ಣಗೊಂಡ ಮೇಲೆ ಅವುಗಳನ್ನು ಗುರುತಿಸಬೇಕಾಗುತ್ತಿತ್ತು. ಅನೇಕ ಸಲ ಅವು ಮೂಢನಂಬಿಕೆಗಳ ತುಣುಕುಗಳಲ್ಲದೆ ಬೇರೇನೂ ಆಗುತ್ತಿರಲಿಲ್ಲ. ಆದರೆ ಅವರು ಅವನಿಗೆ ಮರಣ ದಂಡನೆ ವಿಧಿಸಿ, ಅವನ ಕೊನೆಯ ಕೋರಿಕೆ ಏನೆಂದು ತಿಳಿಸಲು ಕೇಳಿದಾಗ, ಅವನಿಗೆ ಉತ್ತರ ಕೊಡಲು ಪ್ರೇರೇಪಿಸಿದ ಮುನ್ಸೂಚನೆಯನ್ನು ಅರಿಯಲು ಯಾವ ತೊಂದರೆ ಆಗಲಿಲ್ಲ. +ಅವನು, “ನಾನು ತೀರ್ಪನ್ನು ಮಕೋಂದೋದಲ್ಲಿ ಜಾರಿಗೊಳಿಸಬೇಕು ಅಂತ ಕೇಳಿಕೊಳ್ತೀನಿ” ಎಂದ. +ಮಿಲಿಟರಿ ವಿಚಾರಣೆಯ ಅಧ್ಯಕ್ಷರಿಗೆ ಕೋಪ ಬಂತು. ಅವರು, “ನಿನ್ನ ಜಾಣತನ ತೋರಿಸಬೇಡ. ಇದೆಲ್ಲ ಇನ್ನಷ್ಟು ಸಮಯ ಸಿಕ್ಕಲಿ ಅಂತ ಮಾಡಿದ ಟ್ರಿಕ್ಕು” ಎಂದ. ಕರ್ನಲ್, “ಅದನ್ನ ಪೂರೈಸೋದು ಬಿಡೋದು ನಿಮಗೆ ಬಿಟ್ಟಿದ್ದು, ಆದರೆ ಅದು ನನ್ನ ಕೊನೆ ಆಸೆ” ಎಂದ. +ಅಂದಿನಿಂದ ಮುನ್ಸೂಚನೆಗಳು ಅವನಿಗೆ ಕೈ ಕೊಟ್ಟಿದ್ದವು. ಆ ದಿನ ಉರ್ಸುಲಾ ಜೈಲಿನಲ್ಲಿ ಅವನನ್ನು ಭೇಟಿಯಾದಾಗ ಸಾಕಷ್ಟು ಯೋಚಿಸಿದ ನಂತರ ಅವನು ಬಹುಶ: ಆ ವೇಳೆಯಲ್ಲಿ ತನ್ನ ಸಾವಿನ ಘೋಷಣೆ ಆಗುವುದಿಲ್ಲ ಏಕೆಂದರೆ ಅದು ಯಾವುದೇ ಆಕಸ್ಮಿಕವಲ್ಲದೆ ಕೇವಲ ಜಾರಿಗೊಳಿಸುವವರ ಇಷ್ಟವನ್ನು ಅವಲಂಬಿಸುತ್ತದೆ ಎಂದು ತೀರ್ಮಾನಿಸಿದ. ಅವನು ಇಡೀ ರಾತ್ರಿ ಗಾಯಗಳ ನೋವಿನಿಂದ ಎಚ್ಚರವಾಗಿದ್ದ. ಬೆಳಗಾಗುವುದಕ್ಕೆ ಸ್ವಲ್ಪ್ಲ ಸಮಯದ ಮುಂಚೆ ಅವನಿಗೆ ಹೆಜ್ಜೆ ಸಪ್ಪಳ ಕೇಳಿಸಿತು. ಅವನು ‘ಅವರು ಬರುತ್ತಿದ್ದಾರೆ\’ ಎಂದು ತನಗೆ ತಾನೆ ಹೇಳಿಕೊಂಡು ಯಾವ ಕಾರಣವೂ ಇಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಬಗ್ಗೆ ಯೋಚಿಸಿದಾಗ ಅದೇ ಕ್ಷಣದಲ್ಲಿ ಮಂಕು ಬೆಳಕಿನ ಮರದ ಕೆಳಗಿದ್ದವನು ಅವನ ಬಗ್ಗೆ ಯೋಚಿಸುತ್ತಿದ್ದ. ಅವನಿಗೆ ಭಯವಾಗಲೀ ಹಳೆಯ ನೆನಪುಗಳ ಒತ್ತಡವಾಗಲಿ ಉಂಟಾಗಲಿಲ್ಲ. ಆದರೆ ಈ ಕೃತಕವಾದ ಸಾವು ತಾನು ಪೂರೈಸದೇ ಬಿಟ್ಟ ಎಷ್ಟೋ ವಿಷಯಗಳನ್ನು ನೋಡದಂತೆ ಮಾಡುತ್ತದೆ ಎನ್ನುವ ಆಲೋಚನೆ ಬಂದು ರೋಷ ಉಕ್ಕಿತು. ಬಾಗಿಲು ತೆರೆಯಿತು ಮತ್ತು ಕಾವಲುಗಾರನೊಬ್ಬ ಕಾಫಿಯ ಲೋಟ ಹಿಡಿದುಕೊಂಡು ಬಂದ. ಮಾರನೆ ದಿನವೂ ಅದೇ ಸಮಯಕ್ಕೆ ಕಂಕುಳಲ್ಲಿನ ಗಾಯದಿಂದ ತೀವ್ರ ಯಾತನೆ ಪಡುತ್ತಿರುವಾಗ ಹಾಗೆಯೇ ರೀತಿ ಆಯಿತು. ಗುರುವಾರ ಅವನು ಕಾವಲುಗಾರರ ಜೊತೆ ಸಕ್ಕರೆ ಮಿಠಾಯಿ ಹಂಚಿಕೊಂಡ ಮತ್ತು ತನಗೆ ಬಿಗಿಯಾಗಿದ್ದ ಶುಭ್ರ ಬಟ್ಟೆ ಮತ್ತು ಚರ್ಮದ ಬೂಟುಗಳನ್ನು ಹಾಕಿಕೊಂಡ. ಶುಕ್ರವಾರ ಸಹಿತ ಅವರು ಅವನನ್ನು ಕೊಂದಿರಲಿಲ್ಲ. +ವಾಸ್ತವವಾಗಿ ಅವರಿಗೆ ತೀರ್ಪನ್ನು ಜಾರಿಗೊಳಿಸುವ ಧೈರ್ಯವಾಗಿರಲಿಲ್ಲ. ಊರಿನಲ್ಲಿದ್ದ ದಂಗೆಯ ಲಕ್ಷಣ ಮಿಲಿಟರಿ ಜನರಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಮುಗಿಸುವುದರಿಂದ ಕೇವಲ ಮಕೋಂದೋದಲ್ಲಿ ಅಲ್ಲದೆ ಇಡೀ ಜೌಗುಪ್ರದೇಶದಲ್ಲಿ ರಾಜಕೀಯ ಪರಿಣಾಮ ಉಂಟುಮಾಡುವುದೆಂದು ಯೋಚಿಸುವಂತೆ ಮಾಡಿತು. ಆದ್ದರಿಂದ ಅವರು ಅಲ್ಲಿನ ರಾಜಧಾನಿಯ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ಮಾಡಿದರು. ಅವರು ಉತ್ತರಕ್ಕಾಗಿ ಇನ್ನೂ ಕಾದಿದ್ದಾಗ ಶನಿವಾರ ರಾತ್ರಿ ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಕೆಲವು ಅಧಿಕಾರಿಗಳ ಜೊv, ಕತಾವುರೆ ಬಳಿಗೆ ಹೋದ. ಕೇವಲ ಒಬ್ಬಳೇ ಒಬ್ಬ ಹೆಂಗಸು ಒಂದು ರೀತಿ ಹೆದರಿಸಿದ ಮೇಲೆ ಅವನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಲು ಒಪ್ಪಿದಳು. ಅನಂತರ ಅವಳು, “ಸಾಯ್ತಾನೆ ಅಂತ ಗೊತ್ತಿರೋ ಮನುಷ್ಯನ ಜೊತೆ ಮಲಗಕ್ಕೆ ಯಾರಿಗೂ ಇಷ್ಟ ಇರಲ್ಲ” ಎಂದು ಬಾಯಿ ಬಿಟ್ಟು ಹೇಳಿದಳು. ಜೊತೆಗೆ, “ಅದು ಹ್ಯಾಗೆ ಆಗತ್ತೆ ಅಂತ ಗೊತ್ತಿಲ್ಲ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಶೂಟ್ ಮಾಡುವ ಆಫೀಸರ್‌ನ, ಅಲ್ದೆ ತಂಡದ ಇತರೆ ಸೈನಿಕರನ್ನು ಒಬ್ಬೊಬ್ಬರನ್ನಾಗಿ, ಯಾರೂ ತಪ್ಪಿಸಿಕೊಳ್ಳಲಿಕ್ಕೆ ಆಗ್ದೆ, ಭೂಮಿ ಮೇಲೆ ಎಲ್ಲೇ ಬಚ್ಚಿಟ್ಟುಕೊಂಡರೂ ಈಗಲ್ಲದಿದ್ರೆ ಆಮೇಲೆ ಕೊಂದು ಹಾಕ್ತಾರೆ” ಎಂದಳು. ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಅದನ್ನು ಇತರೆ ಅಧಿಕಾರಿಗಳಿಗೆ ಹೇಳಿದ. ಅವರು ಮೇಲಿನವರಿಗೆ ತಿಳಿಸಿದರು. ಭಾನುವಾರ, ಯಾರೂ ಬಾಯಿ ಬಿಟ್ಟು ಹೇಳದಿದ್ದರೂ, ಮಿಲಿಟರಿ ಕಾರ್ಯಾಚರಣೆ ಅಂದಿನ ದಿನಗಳ ಭಾವತೀವ್ರತೆಯ ಶಾಂತ ಸ್ಥಿತಿಯನ್ನು ಕಲಕದಿದ್ದರೂ ಅಧಿಕಾರಿಗಳಿಗೆ ಮರಣ ದಂಡನೆಯನ್ನು ಜಾರಿಗೊಳಿಸುವುದನ್ನು ಮುಂದೆ ಹಾಕಲು ಯಾವುದೇ ನೆಪವನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಿದ್ಧ ಎನ್ನುವುದು ಇಡೀ ಊರಿಗೆ ತಿಳಿದಿತ್ತು. ಸೋಮವಾರ ಟಪಾಲ್‌ನಲ್ಲಿ ಅಧಿಕೃತವಾದ ಆರ್ಡರ್ ಬಂತು. ಇಪ್ಪತ್ನಾಲ್ಕು ಗಂಟೆಯೊಳಗೆ ಮರಣ ದಂಡನೆಯನ್ನು ಜಾರಿಗೊಳಿಸಬೇಕು. ಆ ದಿನ ರಾತ್ರಿ ಅಧಿಕಾರಿಗಳು ಹೆಸರಿನ ಚೀಟಿಗಳನ್ನು ಬರೆದು ಟೋಪಿಯಲ್ಲಿ ಹಾಕಿದರು ಮತ್ತು ಚೀಟಿ ಎತ್ತಿದಾಗ ಕ್ಯಾಪ್ಟನ್ ರಾಕ್ ಕಾರ್ನಿಸಿರೋಗೆ ದುರ್ವಿಧಿ ಕಾದಿದೆ ಎನ್ನುವುದನ್ನು ಸೂಚಿಸುವ ಅವನ ಹೆಸರಿತ್ತು. ಅವನು ಕಹಿಯಾಗಿ, “ದುರದೃಷ್ಟಕ್ಕೆ ಯಾವುದೇ ಮುಲಾಜಿಲ್ಲ” ಎಂದ. ಜೊತೆಗೆ, “ನಾನೊಬ್ಬ ಹಲ್ಕಾ ನನ್ಮಗ. ಹಲ್ಕಾ ನನ್ಮಗನಾಗೇ ಸಾಯ್ತೀನಿ” ಎಂದ. ಬೆಳಗಿನ ಜಾವ ಐದು ಗಂಟೆಗೆ ಅವನೊಂದು ತಂಡವನ್ನು ಆರಿಸಿ ಅಂಗಳದಲ್ಲಿ ವ್ಯವಸ್ಥೆಗೊಳಿಸಿ ದಂಡನೆಗೆ ಗುರಿಯಾದ ಮನುಷ್ಯನನ್ನು ಪೂರ್ವಸೂಚನೆ ಕೊಡುವಂತೆ ಮಾತಿನಲ್ಲಿ ಎಬ್ಬಿಸಿದ. +ಅವನು, “ಬ್ಯುಂದಿಯಾ, ನಮ್ಮ ಟೈಂ ಬಂದಿದೆ. ಹೋಗೋಣ ಏಳಿ” ಎಂದ. +ಕರ್ನಲ್, ” ಸರಿ ಹಾಗಾದರೆ . . ನಾನು ಗಾಯದ ಗುಳ್ಳೆಗಳು ಒಡೀತಿರೋ ಕನಸು ಕಾಣ್ತಿದ್ದೆ” ಎಂದು ಉತ್ತರಿಸಿದ. +ಅವ್ರೇಲಿಯಾನೋನನ್ನು ಶೂಟ್ ಮಾಡುತ್ತಾರೆಂದು ಗೊತ್ತಾದ ಮೇಲೆ ರೆಬೇಕ ಬೆಳಗಿನ ಜಾವ ಮೂರು ಗಂಟೆಗೆ ಎದ್ದಳು. ಅವಳು ಬೆಡ್‌ರೂಮಿನ ಕತ್ತಲೆಯಲ್ಲೆ ಕುಳಿತಿದ್ದ ಮಂಚ ಹೊಸೆ ಅರ್ಕಾದಿಯೋನ ಗೊರಕೆಯಿಂದ ಅಲ್ಲಾಡುತ್ತಿದಂತೆ ಅರ್ಧ ತೆರೆದ ಕಿಟಕಿಯಿಂದ ಸ್ಮಶಾನದ ಕಡೆ ನೋಡುತ್ತಿದ್ದಳು. ಅವಳು ಇಡೀ ವಾರ ಬೇರೆ ಬೇರೆ ಸಂದರ್ಭಗಳಲ್ಲಿ ಪಿಯತ್ರೋ ಕ್ರೆಪ್ಸಿಯ ಕಾಗದಗಳಿಗಾಗಿ ಬೆಂಬಿಡದೆ ಕಾಯುತ್ತಿದ್ದ ಹಾಗೆ ಕಾಯುತ್ತಿದ್ದಳು. ಹೊಸೆ ಅರ್ಕಾದಿಯೋ ಅವಳಿಗೆ, “ಅವನನ್ನ ಇಲ್ಲಿ ಶೂಟ್ ಮಾಡಲ್ಲ. ಆ ತಂಡದಲ್ಲಿ ಯಾರ್‍ಯಾರು ಇದ್ರು ಅಂತ ಯಾರಿಗೂ ಗೊತ್ತಾಗದಂತೆ ಸೈನಿಕರ ವಸತಿಯಲ್ಲೆ ಶೂಟ್ ಮಾಡಿ, ಅಲ್ಲೆ ಹೂತು ಹಾಕ್ತಾರೆ” ಎಂದು ಹೇಳಿದ. ಅವಳಿಗೆ ಬರುವ ದಾರಿ ಯಾವುದೆಂದು ಮುಂಚೆಯೇ ತಿಳಿದಂತಿದ್ದು, ವಿದಾಯ ಹೇಳಲು ಬಾಗಿಲು ತೆರೆಯುತ್ತೇನೆಂದು ಖಚಿತವಾಗಿದ್ದಳು. ಹೊಸೆ ಅರ್ಕಾದಿಯೋ, “ಹೆದರಿಕೊಂಡಿರೋ ಆರು ಜನ ಸೈನಿಕರ ಜೊತೇಲಿ, ಅಲ್ಲದೆ ಊರಿನ ಜನ ಎಲ್ಲಾದಕ್ಕೂ ತಯಾರು ಅಂತ ಗೊತ್ತಿರ್‍ಬೇಕಾದ್ರೆ ಅವನನ್ನ ರಸ್ತೇಲಿ ಕರ್‍ಕೊಂಡು ಬರಲ್ಲ” ಎಂದು ಮತ್ತೆ ಹೇಳಿದ. ತನ್ನ ಗಂಡನ ಮಾತನ್ನು ಒಪ್ಪದೆ ರೆಬೇಕ ಕಿಟಕಿಯ ಹತ್ತಿರ ಇದ್ದಳು. +ಅವಳು, “ಅವರೆಷ್ಟು ಪೆದ್ದರು ಅಂತ ನಿಂಗೇ ಗೊತ್ತಾಗತ್ತೆ” ಎಂದಳು. +ಮಂಗಳವಾರ ಬೆಳಿಗ್ಗೆ ಐದು ಗಂಟೆಗೆ ಹೊಸೆ ಅರ್ಕಾದಿಯೋ ಕಾಫಿ ಕುಡಿದು ನಾಯಿಗಳನ್ನು ಹೊರಗೆ ಬಿಟ್ಟ ಮೇಲೆ ರೆಬೇಕ ಕಿಟಕಿಯ ಬಾಗಿಲು ಮುಚ್ಚಿ, ತಾನು ಕೆಳಗೆ ಬೀಳದ ಹಾಗೆ ಮಂಚದ ಅಂಚನ್ನು ಹಿಡಿದುಕೊಂಡಳು. ಅವಳು, “ಅವನನ್ನ ಕರೆದುಕೊಂಡು ಬರ್‍ತಿದಾರೆ” ಎಂದು ನಿಟ್ಟುಸಿರಿಟ್ಟು, “ಅವನೆಷ್ಟು ಚೆನ್ನಾಗಿದಾನೆ” ಎಂದಳು. ಹೊಸೆ ಅರ್ಕಾದಿಯೋ ಕಿಟಕಿಯಿಂದ ನೋಡಿ ಮುಂಜಾವಿನ ಬೆಳಕಿನಲ್ಲಿ ಕಂಪಿಸುತ್ತಿದ್ದ ಅವನನ್ನು ಕಂಡ. ಅವನಾಗಲೇ ಗೋಡೆಗೆ ಬೆನ್ನು ತಗುಲಿಸಿದ್ದ ಮತ್ತು ಕಂಕುಳಿನ ಗಾಯ ಕೆಳಗಿಳಿಸಲು ಬಿಡದಿದ್ದರಿಂದ ಕೈಗಳನ್ನು ಕುಂಡಿಯ ಮೇಲೆ ಇಟ್ಟುಕೊಂಡಿದ್ದ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಮನುಷ್ಯ ಎಷ್ಟು ಕುಗ್ಗಿ ಹೋಗ್ತಾನೆ” ಎಂದವನು, “ಎಷ್ಟು ಕುಗ್ಗಿ ಹೋಗ್ತಾನೆ ಅಂದ್ರೆ, ನರಪೇತಲರೂ ಕೂಡ ಅವನನ್ನ ಕೊಲ್ಲಬಹುದು. ಅದಕ್ಕೆ ಅವನೇನೂ ಮಾಡಕ್ಕಾಗಲ್ಲ” ಎಂದ. ಅವನು ಎಷ್ಟು ರೋಷದಿಂದ ಮತ್ತೆ ಅದನ್ನೇ ಹೇಳಿದನೆಂದರೆ ಅದು ಉರಿಯ ಹಾಗೆ ಕಂಡಿತು ಮತ್ತು ಅದು ಕ್ಯಾಪ್ಟನ್ ರೋಕ್ ಕಾರ್ನಿಸಿರೋ ಅಂತಃಕರಣ ಮಿಡಿಯಿತು. ಏಕೆಂದರೆ ಪ್ರಾರ್ಥಿಸುತ್ತಿದ್ದಾನೆ ಎಂದು ಅವನು ತಿಳಿದುಕೊಂಡ. ತಂಡದವರು ಗುರಿ ಇಟ್ಟಾU, ಆ ರೋಷ ತೀವ್ರವಾದ ಕಹಿಯಾದ ವಸ್ತುವಿನಂತಾಗಿ, ನಾಲಗೆ ಸತ್ತು, ಕಣ್ಣು ಮುಚ್ಚುವಂತೆ ಮಾಡಿತು. ಆಗ ಬೆಳಗಿನ ಬೆಳ್ಳಿ ಬೆಳಕು ಕಾಣೆಯಾಯಿತು ಮತ್ತು ಅವನು ತಾನು ಮತ್ತೆ ಚಡ್ಡಿ ಹಾಕಿಕೊಂಡು, ಕತ್ತಿನ ಸುತ್ತ ಟೈ ಕಟ್ಟಿಕೊಂಡವನಂತೆ ಕಂಡ ಹಾಗೂ ಒಂದು ಅಮೋಘವಾದ ಮಧ್ಯಾಹ್ನ, ತನ್ನ ತಂದೆ ಟೆಂಟ್‌ನೊಳಕ್ಕೆ ಕರೆದುಕೊಂಡು ಹೋದ ಮೇಲೆ ಐಸ್ ನೋಡಿದ್ದನ್ನು ಕಂಡ. ಅವನಿಗೆ ಗಟ್ಟಿಯಾದ ಕೂಗು ಕೇಳಿಸಿದಾಗ ತಂಡದವರಿಗೆ ಅದು ಕೊನೆಯ ಅಪ್ಪಣೆ ಎಂದುಕೊಂಡ. ಅವನು ಹೊಳೆಯುವ ಗುಂಡುಗಳು ಧಾವಿಸಿ ಬರುವುದನ್ನು ನಿರೀಕ್ಷಿಸಿ ತೀವ್ರಭಾವದಿಂದ ಕಣ್ಣು ಬಿಟ್ಟಾಗ ಕಂಡದ್ದು, ಗಾಳಿಯಲ್ಲಿ ಕೈಗಳನ್ನು ಮೇಲಕ್ಕೆ ಎತ್ತಿದ್ದ ರಾಕ್ ಕಾರ್ನಿಸಿರೋ ಮತ್ತು ಭಾರಿ ಶಾಟ್ ಗನ್ನಿನ ಗುಂಡು ಹೊಡೆಯಲು ಸಿದ್ಧನಾಗಿ ರಸ್ತೆ ದಾಟುತ್ತಿದ್ದ ಹೊಸೆ ಅರ್ಕಾದಿಯೋ. +ಕ್ಯಾಪ್ಟನ್ ಹೊಸೆ ಅರ್ಕಾದಿಯೋಗೆ, “ಶೂಟ್ ಮಾಡಬೇಡಿ., ದೇವರ ಅನುಗ್ರಹದ ಹಾಗೆ ನೀವು ಬಂದಿದೀರಿ” ಎಂದ. +ಅಲ್ಲೇ ಇನ್ನೊಂದು ಯುದ್ಧ ಶುರುವಾಯಿತು. ಕ್ಯಾಪ್ಟನ್ ರಾಕ್ ಕಾರ್ನಿಸಿರೋ ಮತ್ತು ಅವನ ಆರು ಜನ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಜೊತೆ ರಿಯೋ‌ಅಕದಲ್ಲಿ ಮರಣ ದಂಡನೆಗೆ ಗುರಿಯಾದ ಕ್ರಾಂತಿಕಾರಿ ಜನರಲ್ ವಿಕ್ಟೋರಿಯಾ ಮೆದೀನಾನ ಬಿಡುಗಡೆಗಾಗಿ ಹೊರಟರು. ಅವರು ಮಕೋಂದೋ ಕಂಡು ಹಿಡಿಯಲು ಹೊಸೆ ಅರ್ಕಾದಿಯೋ ಬ್ಯುಂದಿಯಾ ಪರ್ವತಗಳನ್ನು ದಾಟಿದ ಜಾಡು ಹಿಡಿದು ಹೊರಟರೆ ಸಮಯ ಉಳಿಸಬಹುದೆಂದು ಆಲೋಚಿಸಿದರು. ಆದರೆ ಒಂದು ವಾರದೊಳಗೆ ಅದು ಅಸಾಧ್ಯವಾದ ಕೆಲಸವೆಂದು ಅವರಿಗೆ ಮನದಟ್ಟಾಯಿತು. ಆದ್ದರಿಂದ ಅವರು ಗುಂಡಿಕ್ಕುವ ತಂಡದವರ ಬಳಿ ಇದ್ದ ಅಲ್ಪ ಸ್ವಲ್ಪ ಮದ್ದುಗುಂಡುಗಳೊಂದಿಗೆ ಅಪಾಯಕಾರಿ ಆದ ಬೆಟ್ಟ ಗುಡ್ಡಗಳ ಮಾರ್ಗದಲ್ಲಿ ಹೋಗಬೇಕಾಗಿತ್ತು. ಅವರು ಊರಿನ ಹತ್ತಿರ ಬಿಡಾರ ಹೂಡುತ್ತಿದ್ದರು ಮತ್ತು ಅವರಲ್ಲೊಬ್ಬ ಮರೆಮಾಚಿಕೊಂಡು ಬಂಗಾರದ ಸಣ್ಣ ಮೀನನ್ನು ಹಿಡಿದುಕೊಂಡು ಹಾಡೆ ಹಗಲಿನಲ್ಲಿ ತಲೆಮರೆಸಿಕೊಂಡಿದ್ದ ಉದಾರವಾದಿಗಳನ್ನು ಸಂಪರ್ಕಿಸಲು ಹೋಗುತ್ತಿದ್ದ. ಅವರು ಮಾರನೆಯ ದಿನ ಬೆಳಿಗ್ಗೆ ಬೇಟೆಯಾಡುವುದಕ್ಕೆ ಹೋಗಿ ವಾಪಸು ಬರುತ್ತಿರಲಿಲ್ಲ. ಪರ್ವತಗಳ ಒಂದು ತುದಿಯಿಂದ ರಿಯೋ‌ಅಕವನ್ನು ಕಂಡಾಗ ಜನರಲ್ ವಿಕ್ಟೋರಿಯೋ ಮೆದೀನಾನನ್ನು ಶೂಟ್ ಮಾಡಲಾಗಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಂಗಾತಿಗಳು ಅವನನ್ನು ಕ್ಯಾರಿಬಿಯನ್ ತೀರದ ಜನರಲ್ ಮಟ್ಟದ ಕ್ರಾಂತಿಕಾರಿ ಸೈನಿಕರ ಪ್ರಧಾನನೆಂದು ಘೋಷಿಸಿದರು. ಅವನು ಹುದ್ದೆಯನ್ನು ಒಪ್ಪಿಕೊಂಡ ಆದರೆ ಬಡ್ತಿಯನ್ನು ನಿರಾಕರಿಸಿz. ಅಲ್ಲದೆ ಸಂಪ್ರದಾಯವಾದಿಗಳು ಅಧಿಕಾರದಲ್ಲಿರುವ ತನಕ ಅದನ್ನು ಒಪ್ಪಿಕೊಳ್ಳುವುದಿಲ್ಲವೆಂಬ ನಿಲುವು ತೆಗೆದುಕೊಂಡ. ಅವರು ಮೂರು ತಿಂಗಳಲ್ಲಿ ಸಾವಿರ ಜನರಿಗೆ ಆಯುಧಗಳನ್ನು ಒದಗಿಸುವುದರಲ್ಲಿ ಯಶಸ್ವಿಯಾದರು. ಆದರೆ ಅವರನ್ನೆಲ್ಲ ನಿರ್ನಾಮ ಮಾಡಲಾಯಿತು. ಬದುಕುಳಿದವರು ಪೂರ್ವದ ಗಡಿಯನ್ನು ತಲುಪಿದರು. ಅವರ ಬಗ್ಗೆ ಕೇಳಿ ಬಂದ ಸಂಗತಿಯೆಂದರೆ ಅವರು ಆಂಟಿಲೆಸ್‌ದ ದ್ವೀಪಗಳಿಂದ ಬಂದು ಕಾಬೊದೆಲಾವೆಲ್ಲಾದಲ್ಲಿ ಇದ್ದಾರೆ ಎಂದು. ಅನಂತರ ಸರ್ಕಾರದಿಂದ ಎಲ್ಲ ಕಡೆ ಟೆಲಿಗ್ರಾಂ ಮೂಲಕ ಸಂದೇಶವೊಂದನ್ನು ಕಳಿಸಲಾಯಿತು ಮತ್ತು ರಾಷ್ಟ್ರವ್ಯಾಪಿಯಾದ ಪ್ರಕಟಣೆಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸಾವಿನ ಬಗ್ಗೆ ಉತ್ಸಾಹದ ಹೇಳಿಕೆ ಇತ್ತು. ಆದರೆ ಎರಡು ದಿನಗಳ ನಂತರ ಮುಂಚಿನದಕ್ಕಿಂತ ಮುಂದಾಗಿ ಆನೇಕ ಟೆಲಿಗ್ರಾಂಗಳು ದಕ್ಷಿಣ ಪ್ರಾಂತಗಳಲ್ಲಿ ದಂಗೆ ಎದ್ದಿರುವುದನ್ನು ತಿಳಿಸಿದವು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಪ್ರಗಾಥೆ ಶುರುವಾದದ್ದು ಹೀಗೆ. ಏಕಕಾಲದಲ್ಲಿ ಮತ್ತು ಪರಸ್ಪರ ವ್ಯತಿರಿಕ್ತವಾದ ಸುದ್ದಿಗಳು ಅವನು ವಿಲಾನುವಾದಲ್ಲಿ ಗೆದ್ದನೆಂದೂ, ಗಾಳಮಾಯದಲ್ಲಿ ಸೋತನೆಂದೂ, ಮೋಟಿಲೋ ಇಂಡಿಯನ್‌ರಿಂದ ನಾಶಗೊಂಡನೆಂದೂ, ಜೌಗು ಪ್ರದೇಶದಲ್ಲಿ ಸತ್ತನೆಂದು ಮತ್ತು ಉರುಮಿತದಲ್ಲಿ ಮತ್ತೆ ಎದ್ದನೆಂದೂ ತಿಳಿಸಿದವು. ಆ ವೇಳೆಯಲ್ಲಿ ಕಾಂಗ್ರೆಸ್‌ನಲ್ಲಿ ಭಾಗವಹಿಸಲು ಮಾತುಕತೆ ನಡೆಸುತ್ತಿದ್ದ ಉದಾರವಾದಿ ನಾಯಕರು ತಮ್ಮ ಪಾರ್ಟಿಯನ್ನು ಪ್ರತಿನಿಧಿಸದ ಅವನನ್ನು ‘ಸಾಹಸಿ\’ ಎಂದು ಹೆಸರಿಸಿದರು. ರಾಷ್ಟ್ರೀಯ ಸರ್ಕಾರ ಅವನನ್ನು ದರೋಡೆಕೋರರ ಪಟ್ಟಿಯಲ್ಲಿ ಸೇರಿಸಿ ಅವನ ತಲೆ ಒಪ್ಪಿಸಿದವರಿಗೆ ಐದು ಸಾವಿರ ಪೇಸೋ ಘೋಷಿಸಿತ್ತು. ಹದಿನಾರು ಸೋಲಿನ ತರವಾಯ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎರಡು ಸಾವಿರ ಇಂಡಿಯನ್ನರು ಮತ್ತು ರಕ್ಷಣಾದಳದವರೊಡನೆ ನಿದ್ದೆ ಮಾಡುತ್ತಿದ್ದ ರಿಯೋ‌ಅಕವನ್ನು ತ್ಯಜಿಸಿ, ಆಶ್ಚರ್ಯಗೊಳ್ಳುವಂತೆ ಗಾಜಿರಾಗೆ ಹೋದ. ಅಲ್ಲಿ ತನ್ನ ಕೇಂದ್ರ ಸ್ಥಾನವನ್ನು ಸ್ಥಾಪಿಸಿ ಆಳ್ವಿಕೆಯ ವಿರುದ್ಧ ಪೂರ್ಣ ಯುದ್ಧವನ್ನು ಸಾರಿದ. ಸರ್ಕಾರದಿಂದ ಅವನಿಗೆ ಬಂದ ಮೊದಲನೆ ಟೆಲಿಗ್ರಾಂನಲ್ಲಿ ಅವನು ತನ್ನ ಸೈನಿಕರೊಡನೆ ಪೂರ್ವದ ಗಡಿಗಳಿಗೆ ಹೋಗದಿದ್ದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ನಲವತ್ತೆಂಟು ಗಂಟೆಗಳಲ್ಲಿ ಶೂಟ್ ಮಾಡುವುದಾಗಿ ತಿಳಿಸಿತ್ತು. ಆಗ ದಂಡ ನಾಯಕನಾಗಿದ್ದ ಕರ್ನಲ್ ರೋಕ್ ಕಾರ್ನಿಸಿರೋ ಗಾಬರಿಯಿಂದ ಟೆಲಿಗ್ರಾಮನ್ನು ನೋಡಿ ಅವನಿಗೆ ಕೊಟ್ಟ. ಅವನು ಅದನ್ನು ಸಂತೋಷದಿಂದ ಓದಿದ. +ಅವನು, “ಎಷ್ಟು ಚೆನ್ನಾಗಿದೆ. ಈಗ ಮಕೋಂದೋದಲ್ಲೊಂದು ಟಲಿಗ್ರಾಫ್ ಆಫೀಸ್ ಇದೆ” ಎಂದ ಆಶ್ಚರ್ಯದಿಂದ. +ಅವನ ಉತ್ತರ ಖಚಿತವಾಗಿತ್ತು. ಇನ್ನು ಮೂರು ತಿಂಗಳಲ್ಲಿ ಮಕೋಂದೋದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಸ್ಥಾಪಿಸಲು ನಿರೀಕ್ಷಿಸಿದ್ದ. ಅವನಿಗೆ ಆ ವೇಳೆಯಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಜೀವಂತವಾಗಿರುವುದು ಕಂಡು ಬರದಿದ್ದರೆ, ಆ ಸಮಯದಲ್ಲಿ ಜನರಲ್‌ಗಳಿಂದ ಪ್ರಾರಂಭಿಸಿ, ಸೆರೆ ಹಿಡಿದ ಎಲ್ಲ ಆಫೀಸರ್‌ಗಳನ್ನು ತಾನು ಶೂಟ್ ಮಾಡುವುದಾಗಿಯೂ ಮತ್ತು ಯುದ್ಧದ ಉಳಿದ ಕಾಲದಲ್ಲಿ ಹಾಗೆಯೇ ಮಾಡುವಂತೆ ತನ್ನ ಕೆಳಗಿನವರಿಗೆ ಅಪ್ಪಣೆ ಕೊಡುವುದಾಗಿಯೂ ಹೇಳಿದ. ಅವನು ವಿಜೇತನಾಗಿ ಮೂರು ತಿಂಗಳ ನಂತರ ಮಕೋಂದೋವನ್ನು ಪ್ರವೇಶಿಸಿದಾಗ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನಿಂದ ಅವನಿಗೆ ಪ್ರಥಮ ಆಲಿಂಗನ ಸಿಕ್ಕಿತು. +ಮನೆಯ ತುಂಬ ಮಕ್ಕಳಿದ್ದರು. ಉರ್ಸುಲಾ ಸಾಂತ ಸೋಫಿಯಾ ದೆಲಾ ಪಿಯದಾದ್‌ಳನ್ನು ಅವಳ ಮೊದಲನೆ ಮಗಳು ಮತ್ತು ಅರ್ಕಾದಿಯೋನನ್ನು ಶೂಟ್ ಮಾಡಿದ ಐದು ತಿಂಗಳ ನಂತರ ಹುಟ್ಟಿದ ಇಬ್ಬರು ಅವಳಿ ಮಕ್ಕಳ ಜೊತೆ ಸೇರಿಸಿಕೊಂಡಿದ್ದಳು. ಅವನ ಇಷ್ಟಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗುವಿಗೆ ರೆಮಿದಿಯೋಸ್ ಎಂದು ಹೆಸರಿಟ್ಟಳು. ಅವಳದು, “ಅವನ ಮನಸ್ಸಿನಲ್ಲಿ ಇದ್ದದ್ದು ಇದೇ ಅಂತ ನಂಗೆ ಸರಿಯಾಗಿ ಗೊತ್ತು” ಎನ್ನುವ ತಾಕೀತು. “ನಾವು ಅವಳನ್ನು ಉರ್ಸುಲಾ ಅಂತ ಕರೆಯಲ್ಲ. ಯಾಕೆಂದರೆ ಆ ಹೆಸರಿನೋರು ತುಂಬ ಕಷ್ಟ ಅನುಭವಿಸಬೇಕಾಗುತ್ತೆ”. ಅವಳ ಮಕ್ಕಳಿಗೆ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಅವ್ರೇಲಿಯಾನೋ ಸೆಗುಂದೋ ಎಂದು ಹೆಸರಿಟ್ಟರು. ಅಮರಾಂತ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದಳು. ಅವಳು ಹಜಾರದಲ್ಲಿ ಮರದ ಸಣ್ಣ ಕುರ್ಚಿಗಳನ್ನು ಹಾಕಿ ಅಕ್ಕಪಕ್ಕ ಸಂಸಾರದ ಮಕ್ಕಳನ್ನು ಸೇರಿಸಿ ಒಂದು ಶಿಶುಶಾಲೆಯನ್ನು ತೆರೆದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಬ್ಬರ ಮತ್ತು ವಾದ್ಯಗಳೊಂದಿಗೆ ವಾಪಸು ಬಂದಾಗ ಮಕ್ಕಳ ಸಮೂಹ ಗೀತೆ ಅವರನ್ನು ಸ್ವಾಗತಿಸಿತು. ಕ್ರಾಂತಿಕಾರಿ ಅಧಿಕಾರಿಯಂತೆ ಬಟ್ಟೆ ತೊಟ್ಟಿದ್ದ ಅಜ್ಜನ ಹಾಗೆ ಎತ್ತರವಿದ್ದ ಅವ್ರೇಲಿಯಾನೋ ಹೊಸೆ ಅವನಿಗೆ ಮಿಲಿಟರಿ ಗೌರವ ಸೂಚಿಸಿದ. +ಎಲ್ಲ ಸುದ್ದಿಗಳು ಒಳ್ಳೆಯದಾಗಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹೊರಟು ಒಂದು ವರ್ಷದ ಮೇಲೆ ಹೊಸೆ ಅರ್ಕಾದಿಯೋ ಮತ್ತು ರೆಬೇಕ ಅರ್ಕಾದಿಯೋ ಕಟ್ಟಿಸಿದ ಮನೆಯಲ್ಲಿದ್ದರು. ದಂಡನೆ ಜಾರಿಗೊಳಿಸುವುದನ್ನು ತಡೆಯುವುದಕ್ಕೆ ಅವನು ಮಧ್ಯೆ ಪ್ರವೇಶಿಸಿದ್ದು ಯಾರಿಗೂ ಗೊತ್ತಿರಲಿಲ್ಲ. ಜೌಕದ ಬಳಿಯ ಮೂಲೆಯ ಸ್ಥಾನದಲ್ಲಿ, ರಾಬಿನ್ ಹಕ್ಕಿಗಳ ಗೂಡುಗಳಿದ್ದ, ಬಾದಾಮಿ ಮರದ ನೆರಳಲ್ಲಿದ್ದ ಹೊಸ ಮನೆಯೊಳಗೆ, ಭೇಟಿಗಾಗಿ ಬರುವವರಿಗೆ ಸತ್ಕರಿಸುವ ದೊಡ್ಡ ಬಾಗಿಲು ಮತ್ತು ಬೆಳಕಿಗಾಗಿ ನಾಲ್ಕು ಕಿಟಕಿಗಳಿದ್ದ ಮನೆಯನ್ನು ವ್ಯವಸ್ಥೆಗೊಳಿಸಿದರು ಮೊಸ್ಕೋತೆಯ ಇನ್ನೂ ಮದುವೆಯಾಗದ ನಾಲ್ಕು ಹೆಣ್ಣು ಮಕ್ಕಳು ಸೇರಿದಂತೆ ರೆಬೇಕಳ ಹಳೆಯ ಸ್ನೇಹಿತರು. ಕೆಲವು ವರ್ಷಗಳಿಂದ ನಿಂತು ಹೋಗಿದ್ದ ಕಸೂತಿ ಕೆಲಸಗಳನ್ನು ಮತ್ತೊಮ್ಮೆ ಬೆಗೊನಿಯಾ ಗಿಡಗಳಿದ್ದ ಮುಂಬಾಗಿಲ ಬಳಿ ಪ್ರಾರಂಭಿಸಿದರು. ಒತ್ತುವರಿ ಮಾಡಿಕೊಂಡ ಭೂಮಿಯಿಂದ ಹೊಸೆ ಅರ್ಕಾದಿಯೋ ಲಾಭಗಳಿಸುವುದು ಮುಂದುವರೆಯಿತು. ಅದರ ಒಡೆತನವನ್ನು ಸಂಪ್ರದಾಯವಾದಿ ಸರ್ಕಾರ ಮಾನ್ಯ ಮಾಡಿತ್ತು. ಪ್ರತಿ ಮಧ್ಯಾಹ್ನ ಅವನು ಬೇಟೆ ನಾಯಿಗಳು ಮತ್ತು ಡಬಲ್ ಬ್ಯಾರಲ್ ಶಾಟ್‌ಗನ್ ಜೊತೆ ಕುದುರೆಯ ಜೀನಿನ ಮೇಲೆ ಮೊಲಗಳ ಮಾಲೆ ತರುವುದನ್ನು ನೋಡಬಹುದಿತ್ತು. ಬಿರುಗಾಳಿಯ ಭಯವಿದ್ದ ಒಂದು ಸೆಪ್ಟೆಂಬರ್‌ನ ಮಧ್ಯಾಹ್ನ ಎಂದಿಗಿಂತ ಮುಂಚೆ ಮನೆಗೆ ಬಂದ. ಊಟದ ಮನೆಯಲ್ಲಿದ್ದ ರೆಬೇಕಳನ್ನು ನೋಡಿ ನಸುನಕ್ಕು, ಅಂಗಳದಲ್ಲಿ ನಾಯಿಗಳನ್ನು ಕಟ್ಟಿ ಹಾಕಿ, ಅನಂತರ ಉಪ್ಪು ಸವರಲು ಮೊಲಗಳನ್ನು ಅಡುಗೆ ಮನೆಯಲ್ಲಿ ಇಳಿಬಿಟ್ಟು, ಬಟ್ಟೆ ಬದಲಾಯಿಸಲು ಮಲಗುವ ಕೋಣೆಗೆ ಹೋದ. ಆ ಮೇಲೆ ರೆಬೇಕ ತನ್ನ ಗಂಡ ಬೆಡ್‌ರೂಮಿಗೆ ಹೋದ ಮೇಲೆ ತಾನು ಚಿಲಕ ಹಾಕಿಕೊಂಡ ಬಚ್ಚಲು ಮನೆಯಲ್ಲಿ ಇದ್ದೆನೆಂದೂ ಹಾಗೂ ಯಾವುದೇ ಶಬ್ದ ಕೇಳಲಿಲ್ಲವೆಂದು ಹೇಳಿಕೆ ಕೊಟ್ಟಳು. ಆ ಹೇಳಿಕೆಯನ್ನು ನಂಬಲು ಕಷ್ಟವಾಗಿದ್ದರೂ ಬೇರೆ ಇನ್ನು ಯಾವ ಸಾಧ್ಯತೆ ಇರಲಿಲ್ಲ ಮತ್ತು ತನ್ನನ್ನು ಸಂತೋಷ?ಜಜಿ;ಗಿಟ್ಟಿದ್ದವನನ್ನು ರೆಬೇಕ ಕೊಲೆ ಮಾಡಲು ಯಾವ ಉದ್ದೇಶವೂ ಕಾಣಲಿಲ್ಲ. ಬಹುಶಃ ಮಕೋಂದೋದಲ್ಲಿ ಬಗೆಹರಿಯದೆ ಹೋದ ರಹಸ್ಯ ಅದೊಂದೇ. ಹೊಸೆ ಅರ್ಕಾದಿಯೋ ಮಲಗುವ ಕೋಣೆಯ ಬಾಗಿಲು ಹಾಕಿಕೊಂಡ ಕೂಡಲೆ ಮನೆಯಲ್ಲಿ ಪಿಸ್ತೂಲಿನಿಂದ ಹೊಡೆದ ಧ್ವನಿ ಪ್ರತಿಧ್ವನಿಸಿತು. ರಕ್ತದ ಹನಿಯೊಂದು ಮುಚ್ಚಿದ ಬಾಗಿಲ ಕೆಳಗಿನಿಂದ ಹೊರಬಂದು ಹಜಾರವನ್ನು ದಾಟಿ, ರಸ್ತೆಗೆ ಹೋಗಿ ಸಮವಿರದ ಜಗಲಿಗಳ ಮೇಲೆ ನೇರವಾಗಿ ಮುಂದೆ ಹೋಗಿ, ಮೆಟ್ಟಲುಗಳನ್ನಿಳಿದು, ದಿಬ್ಬಗಳನ್ನು ಹತ್ತಿ, ಟರ್ಕಿಗಳ ರಸ್ತೆಯಲ್ಲಿ ಹೋಗಿ ತಿರುವಿನಲ್ಲಿ ಬಲಕ್ಕೆ ತಿರುಗಿ, ಮತ್ತೆ ಎಡಕ್ಕೆ ಹೋಗಿ, ಬ್ಯುಂದಿಯಾ ಮನೆಯ ಹತ್ತಿರ ಸಮಕೋನ ಮಾಡಿ, ಮುಚ್ಚಿದ ಬಾಗಿಲ ಕೆಳಗೆ ಹೋಗಿ, ಅಂಗಳ ದಾಟಿ ಜಮಖಾನಗಳಿಗೆ ಕಲೆಯಾಗದಿರಲೆಂದು ಗೋಡೆಯ ಅಂಚಿನಲ್ಲೆ ಮತ್ತೊಂದು ಹಜಾರಕ್ಕೆ ಹೋಗಿ, ಡೈನಿಂಗ್ ಟೇಬಲ್‌ನ್ನು ತಪ್ಪಿಸಲು ದೊಡ್ಡ ವಕ್ರರೇಖೆ ಮಾಡಿಕೊಂಡು ಮಂಟಪದ ಬೆಗೋನಿಯಾ ಗಿಡಗಳ ಪಕ್ಕದಲ್ಲಿ ಹೋಗಿ, ಅವ್ರೇಲಿಯಾನೋ ಹೊಸೆಗೆ ಗಣಿತದ ಪಾಠವನ್ನು ಹೇಳಿಕೊಡುತ್ತಿದ್ದ ಅಮರಾಂತಳಿಗೆ ಕಾಣದಂತೆ ಅವಳ ಕುರ್ಚಿಯನ್ನು ದಾಟಿ ಉಗ್ರಾಣದ ಮುಖಾಂತರ ಅಡುಗೆ ಮನೆಯಲ್ಲಿ ಬ್ರೆಡ್ ಮಾಡಲು ಮೂವತ್ತಾರು ಮೊಟ್ಟೆಗಳನ್ನು ಒಡೆಯುವುದಕ್ಕೆ ಸಿದ್ಧವಾಗುತ್ತಿದ್ದ ಉರ್ಸುಲಾಳ ಬಳಿಗೆ ಬಂದಿತು. +ಉರ್ಸುಲಾ, “ಓಹ್ ದೇವರೆ!” ಎಂದು ಕೂಗಿದಳು. +ಅವಳು ರಕ್ತದ ಜಾಡನ್ನು ಹಿಡಿದು ಹಿಂದಕ್ಕೆ ಅದರ ಮೂಲವನ್ನು ಹುಡುಕುತ್ತ ಉಗ್ರಾಣದ ಮುಖಾಂತರ ಹೊರಟು ಬೆಗೊನಿಯಾ ಗಿಡಗಳ ಪಕ್ಕದಲ್ಲಿ ಮೂರು, ಮೂರು : ಆರು, ಆರು, ಮೂರು : ಒಂಬತ್ತು ಎಂದು ಹೇಳುತ್ತಿದ್ದ ಅವ್ರೇಲಿಯಾನೋ ಹೊಸೆ ಇದ್ದಲ್ಲಿ ಮತ್ತು ಊಟದ ಮನೆಯನ್ನು ಹಾಗೂ ಹಜಾರವನ್ನು ದಾಟಿ ನೆಟ್ಟಗೆ ರಸ್ತೆಗಿಳಿದಳು. ಅನಂತರ ಅವಳು ಮೊದಲು ಬಲಕ್ಕೆ ಆ ಮೇಲೆ ಎಡಕ್ಕೆ ತಿರುಗಿ, ತಾನು ಬೇಕರಿ ವಸ್ತುಗಳನ್ನು ಮಾಡುವಾಗ ಹಾಕಿಕೊಳ್ಳುವ ಕೆಲಸದ ಉಡುಗೆಯಲ್ಲಿ, ಮನೆಯಲ್ಲಿ ಉಪಯೋಸುವ ಚಪ್ಪಲಿಗಳನ್ನು ಹಾಕಿಕೊಂಡಿದ್ದನ್ನು ಮರೆತು, ಟರ್ಕಿಗಳ ರಸ್ತೆ ಸೇರಿ ಚೌಕಕ್ಕೆ ಬಂದು, ತಾನು ಅಲ್ಲಿಯ ತನಕ ಹೋಗಿರದ ಮನೆಯ ಬಾಗಿಲು ಒಳಗೆ ಹೋಗಿ, ಅವಳು ಮಲಗುವ ಕೋಣೆಯ ಬಾಗಿಲನ್ನು ತಳ್ಳಿ ತೆರೆದಳು. ಅವಳಿಗೆ ಸುಟ್ಟ ಸಿಡಿಮದ್ದಿನ ವಾಸನೆಯಿಂದ ಉಸಿರುಗಟ್ಟಿದಂತಾಯಿತು. ಆಗ ತಾನೆ ಮಂಡಿಯ ತನಕ ಚರ್ಮದ ಬೂಟನ್ನು ತೆಗೆದು ನೆಲದ ಮೇಲೆ ಬೋರಲಾಗಿದ್ದ ಹೊಸೆ ಅರ್ಕಾದಿಯೋನನ್ನು ಕಂಡಳು. ಅವಳಿಗೆ ಅವನ ಕಿವಿಯಿಂದ ಹೊರಗೆ ಸೂಸುತ್ತಿದ್ದು ಈಗ ನಿಂತಿದ್ದ ರಕ್ತದ ಜಾಡಿನ ಮೂಲ ಕಾಣಿಸಿತು. ಅವರಿಗೆ ಅವನ ಮೈಮೇಲೆ ಬೇರೆ ಯಾವ ಗಾಯ ಕಾಣಲಿಲ್ಲ ಅಥವಾ ಆಯುಧವನ್ನು ಪತ್ತೆ ಹಚ್ಚಲಾಗಲಿಲ್ಲ. ಅಲ್ಲದೆ ಅವರಿಗೆ ಮೃತದೇಹದಿಂದ ವಾಸನೆಯನ್ನೂ ತೆಗೆಯಲಾಗಲಿಲ್ಲ. ಅವರು ಮೊದಲು ಮೂರು ಸಲ ಅದನ್ನು ಸೋಪಿನಿಂದ ತೊಳೆದರು ಮತ್ತು ಬ್ರಶ್‌ನಿಂದ ಉಜ್ಜಿದರು. ಅನಂತರ ಉಪ್ಪು ಮತ್ತು ದ್ರಾಕ್ಷಾರಸದಲ್ಲಿ ಉಜ್ಜಿದ ಮೇಲೆ ಬೂದಿ ಹಾಗೂ ನಿಂಬೆ ಹಣ್ಣಿನಿಂದ ತಿಕ್ಕಿದರು. ಕೊನೆಗೆ ಅವನನ್ನು ಒಂದು ಡ್ರಮ್ಮು ಉಪ್ಪಿನ ನೀರಿನಲ್ಲಿಟ್ಟು ಹಾಗೆಯೇ ಆರು ಗಂಟೆ ಕಾಲ ಬಿಟ್ಟರು. ಅವರು ಅವುಗಳನ್ನು ಎಷ್ಟು ಉಜ್ಜಿದರೆಂದರೆ ಅವನ ಮೈ ಮೇಲಿನ ಹಚ್ಚೆ ಮಂಕಾಗಲು ಶುರುವಾಯಿತು. ಅವನನ್ನು ಹದಗೊಳಿಸಲು ಮೆಣಸು, ಜೀರಿಗೆ ಕಾಳು, ಗುಲ್ಮ ಜಾತಿ ಎಲೆಗಳಿಂದ ಕೂಡಿ ಇಡೀ ದಿನ ಕುದಿಸಲು ಯೋಚಿಸುವ ಹೊತ್ತಿಗೆ ಅವನ ದೇಹ ಕೊಳೆಯಲಾರಂಭಿಸಿತ್ತು. ಮತ್ತು ಅವರು ಅವಸರದಿಂದ ಅವನನ್ನು ಹೂಳಬೇಕಾಯಿತು. ಅವರು ಅವನನ್ನು ಏಳು ಅಡಿ ಉದ್ದ, ನಾಲ್ಕು ಅಡಿ ಅಗಲದ ವಿಶೇಷ ಶವ ಪೆಟ್ಟಿಗೆಯಲ್ಲಿಟ್ಟು ಕಬ್ಬಿಣದ ಪಟ್ಟಿ ಮತ್ತು ಸ್ಟೀಲ್ ಬೋಲ್ಟ್‌ಗಳಿಂದ ಭದ್ರಗೊಳಿಸಿದರು. ಇಷ್ಟಾಗಿಯೂ ಶವಯಾತ್ರೆ ಹೊರಟ ರಸ್ತೆಗಳಲ್ಲಿ ದುರ್ವಾಸನೆಯನ್ನು ಗ್ರಹಿಸಬಹುದಾಗಿತ್ತು. ದೇಹ ಊದಿಕೊಂಡು ಬಿಗಿಯಾಗಿದ್ದು, ಫಾದರ್ ನಿಕೊನರ್ ಹಾಸಿಗೆಯಲ್ಲಿ ಮಲಗಿಕೊಂಡೇ ಅವನಿಗೆ ಆಶೀರ್ವಾದ ಮಾಡಿದ. ಅದರ ಮುಂದಿನ ತಿಂಗಳುಗಳಲ್ಲಿ ಸ್ಮಶಾನದ ಸುತ್ತ ಗೋಡೆ ಕಟ್ಟಿ ಮಧ್ಯದಲ್ಲಿ ಬೂದಿ, ಮರದ ಪುಡಿ, ಸುಣ್ಣ ಇವುಗಳನ್ನು ಒತ್ತಿಟ್ಟಿದ್ದರೂ ಅನೇಕ ವರ್ಷಗಳ ಕಾಲ ಬಾಳೆ ತೋಟದ ಕಂಪನಿಯ ಎಂಜಿನಿಯರುಗಳು ಸ್ಮಶಾನವನ್ನು ಕಾಂಕ್ರೀಟ್‌ನಿಂದ ಮುಚ್ಚುವ ತನಕ ಅದರಿಂದ ಪುಡಿಯ ವಾಸನೆ ಹೊಡೆಯುತ್ತಲೇ ಇತ್ತು. ಅವರು ಅವನ ದೇಹವನ್ನು ತೆಗೆದುಕೊಂಡು ಹೋದ ಕೂಡಲೆ ಉರ್ಸುಲಾ ಬಾಗಿಲು ಹಾಕಿಕೊಂಡಳು. ಬದುಕಿದ್ದರೂ ಸತ್ತಂತಿದ್ದ ಅವಳು ಜಗತ್ತಿನ ಎಲ್ಲ ಆಕರ್ಷಣೆಯ ಬಗ್ಗೆ ಸಂಪೂರ್ಣ ನಿರ್ಲಕ್ಷಗೊಂಡಳು. ಅವಳು ತೀರ ಮುದುಕಿಯಾದ ಮೇಲೆ ಹಳೆಯ ಬೆಳ್ಳಿ ಶೂ, ಚಿಕ್ಕ ಹೂಗಳಿಂದ ಮಾಡಿದ ಹ್ಯಾಟ್ ಹಾಕಿಕೊಂಡು ರಸ್ತೆಯಲ್ಲಿ ಕಾಣಿಸಿಕೊಂಡಳು. ಆ ದಿನಗಳಲ್ಲಿ ಊರಿನಲ್ಲಿ ಅಲೆಮಾರಿ ಯಹೂದಿ ಹಾದು ಹೋಗಿ ಎಷ್ಟು ಉರಿಬಿಸಿಲು ಉಂಟಾಗಿತ್ತೆಂದರೆ, ಸಾಯುವುದಕ್ಕಾಗಿ ಹಕ್ಕಿಗಳು ಕಿಟಕಿಯ ಬಾಗಿಲುಗಳನ್ನು ಒಡೆದು ರೂಮುಗಳಿಗೆ ಬರುತ್ತಿದ್ದವು. ಅವಳು ಬದುಕಿದ್ದಂತೆ ಕೊನೆಯ ಸಲ ಯಾರಾದರೂ ಕಂಡಿದ್ದೆಂದರೆ ತನ್ನ ಮನೆಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಒಂದೇ ಸಲಕ್ಕೆ ಗುಂಡಿಟ್ಟು ಕೊಂದಾಗ. ಅವಳ ಸೇವಕಿ ಮತ್ತು ವಿಶ್ವಾಸದ ಆರ್ಗೆನೀಡಳನ್ನು ಬಿಟ್ಟರೆ ಅನಂತರ ಬೇರೆ ಯಾರಿಗೂ ಅವಳ ಸಂಪರ್ಕವಿರಲಿಲ್ಲ. ಅದೊಂದು ಸಲ ತನ್ನ ಸಂಬಂಧಿ ಎಂದು ಹೇಳಿಕೊಳ್ಳುತ್ತಿದ್ದ ಬಿಷಪ್‌ಗೆ ಕಾಗದಗಳನ್ನು ಬರೆಯುತ್ತಿದ್ದಳೆಂದು ಗೊತ್ತಾಯಿತು. ಆದರೆ ಅವಳಿಗೆ ಪ್ರತ್ಯುತ್ತರವೇನಾದರೂ ಬಂತೇ ಹೇಗೆ ಎಂದು ತಿಳಿಸಲಿಲ್ಲ. ಊರು ಅವಳನ್ನು ಮರೆತು ಬಿಟ್ಟಿತು. +ಜಯಭೇರಿ ಹೊಡೆದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹಿಂದಿರುಗಿದ್ದರೂ ಇದ್ದ ಪರಿಸ್ಥಿತಿಯಿಂದ ಉತ್ಸಾಹಗೊಂಡಿರಲಿಲ್ಲ. ಸರ್ಕಾರದ ತುಕಡಿಗಳು ಯಾವ ವಿರೋಧವೂ ಇಲ್ಲದೆ ಬಿಟ್ಟುಹೋಗಿದ್ದರು ಮತ್ತು ಇದರಿಂದ ಉದಾರವಾದಿ ಜನ ಸಮುದಾಯದಲ್ಲಿ ವಿಜಯದ ಭ್ರಮೆ ಆವರಿಸಿ ಎಲ್ಲವನ್ನೂ ನಾಶಮಾಡುವುದು ಸರಿಯಲ್ಲವೆಂದು ಕಂಡಿತಾದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಎಲ್ಲರಿಗಿಂತ ಚೆನ್ನಾಗಿ ತಿಳಿದಿದೆ ಎಂದು ಕ್ರಾಂತಿಕಾರರಿಗೆ ಗೊತ್ತಿತ್ತು. ಆ ವೇಳೆಯಲ್ಲಿ ತನ್ನ ಆeವರ್ತಿಯಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚಿಗೆ ಜನರು ಮತ್ತು ಕಡಲ ತೀರದ ಎರಡು ರಾಜ್ಯಗಳು ಹಿಡಿತದಲ್ಲಿದ್ದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತಾವು ಸಮುದ್ರದ ವಿರುದ್ಧ ಇದ್ದ ಹಾಗೆ ಭಾವಿಸುತ್ತಿದ್ದ ಮತ್ತು ತೀರ ಗೊಂದಲಗೊಂಡು ಫಿರಂಗಿಯಿಂದ ಕೆಳಗುರುಳಿಸಿದ ಚರ್ಚನ್ನು ಮರುಸ್ಥಾಪಿಸಲು ಅಪ್ಪಣೆಕೊಟ್ಟ. ಆಗ ಕಾಯಿಲೆ ಬಿದ್ದಿದ್ದ ಫಾದರ್ ನಿಕನೋರ್ ಹಾಸಿಗೆಯಿಂದ, “ಇದ ಅರ್ಥವಿಲ್ಲದ್ದು. ಕ್ರೈಸ್ತನ ಬಗ್ಗೆ ನಂಬಿಕೆ ಇದ್ದೋರು ಚರ್ಚ್ ಕೆಡವ್ತಾರೆ. ಗಾರೆ ಕೆಲಸದೋರು ಅದನ್ನ ಕಟ್ತಾರೆ.” ಇವುಗಳಿಂದ ತಪ್ಪಿಸಿಕೊಳ್ಳುವ ಹೊರದಾರಿಗಾಗಿ ಯಾವುದಾದರೊಂದು ಕಾರಣವನ್ನು ಹುಡುಕುತ್ತ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಊಟದ ಸಮಯದಲ್ಲಿ ಇತರ ದಂಡನಾಯಕರ ಜೊತೆ ಚರ್ಚಿಸುತ್ತ, ಟೆಲಿಗ್ರಾಫ್ ಆಫೀಸಿನಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದ ಮತ್ತು ಪ್ರತಿ ಬಾರಿಯೂ ಯುದ್ಧ ನಿರ್ಣಾಯಕವಾಗದ ಸ್ಥಿತಿಯಲ್ಲಿದೆ ಎಂಬ ಖಚಿತ ಅಭಿಪ್ರಾಯ ಹೊಂದಿರುತ್ತಿದ್ದ. ಉದಾರವಾದಿಗಳ ಜಯದ ಬಗ್ಗೆ ಹೊಸ ಸುದ್ದಿಗಳು ಬಂದಾಗ ಅವನ್ನು ಉತ್ಸಾಹದ ಹೇಳಿಕೆಗಳೊಂದಿಗೆ ಆಚರಿಸಲಾಗುತ್ತಿತ್ತು. ಆದರೆ ಅವನು ಅದರ ವಾಸ್ತವದ ಪ್ರಮಾಣವನ್ನು ನಕ್ಷೆಯ ಮೇಲೆ ಗುರುತಿಸುತ್ತಿದ್ದ ಮತ್ತು ಅವನ ಸೈನಿಕರು ಕಾಡಿನೊಳಗೆ ನುಗ್ಗುತ್ತ ಮಲೇರಿಯಾ ಹಾಗೂ ಸೊಳ್ಳೆ ವಿರುದ್ಧ ರಕ್ಷಿಸಿಕೊಳ್ಳುತ್ತಿದ್ದಾರೆಂದು ಮನಗಂಡ. ಅವನು ತನ್ನ ಅಧಿಕಾರಿಗಳಿಗೆ, “ನಾವು ಸುಮ್ಮನೆ ಸಮಯಾನ ಹಾಳು ಮಾಡ್ತಿದೀವಿ.” ಎಂದು ತಕರಾರು ಹೂಡಿ, “ಕಾಂಗ್ರೆಸ್‌ನಲ್ಲಿ ಸೀಟಿಗೆ ಅಂತ ಸೂಳೆ ಮಕ್ಕಳು, ಕಾಲು ಹಿಡೀತಿರೋವಾಗ ನಾವು ಸಮಯಾನ ಹಾಳು ಮಾಡ್ತಿದೀವಿ” ಎಂದ. ಸಾವನ್ನು ಎದುರು ನೋಡುತ್ತ ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ರೂಮಿನಲ್ಲೆ ಎಚ್ಚರವಾಗಿದ್ದು, ಲಾಯರುಗಳನ್ನು ಕಲ್ಪಿಸಿಕೊಳ್ಳುತ್ತಿದ್ದ. ಅವರು ಕಪ್ಪು ಉಡುಗೆ ತೊಟ್ಟು ಅಧ್ಯಕ್ಷರ ಅರಮನೆಯಿಂದ ಹೊರಟು ಮಂಜಿನಂತೆ ಕೊರೆಯುವ ಮುಂಜಾವಿನಲ್ಲಿ ಕೋಟ್ ಕಾಲರಿನಿಂದ ಕಿವಿಯನ್ನು ಮುಚ್ಚಿಕೊಂಡು, ಕೈಗಳನ್ನು ಉಜ್ಜುತ್ತ, ಪಿಸುಗುಟ್ಟುತ್ತ, ಮಂಕು ಬಡಿದ ಮುಂಜಾವಿನ ಕೆಫೆಗಳಲ್ಲಿ ಅಧ್ಯಕ್ಷರು ಹೌದು ಎಂದದ್ದಕ್ಕೆ ಅರ್ಥವೇನು, ಇಲ್ಲ ಎಂದದ್ದಕ್ಕೆ ಅರ್ಥವೇನು ಮತ್ತು ಅಧ್ಯಕ್ಷರು ಬೇರೆ ಏನಾದರೂ ಹೇಳಿದಾಗ ಅದು ಏನೆಂದು ಅವರು ಊಹಿಸುತ್ತಿದ್ದರು. ತೊಂಬತ್ತೈದು ಡಿಗ್ರಿ ಉಷ್ಣಾಂಶದಲ್ಲಿ ಸೊಳ್ಳೆಗಳನ್ನು ಓಡಿಸುತ್ತ, ಭಯಭರಿತ ಬೆಳಗು ಹತ್ತಿರವಾಗುತ್ತಿದ್ದಂತೆ ತಾನು ಸಮುದ್ರಕ್ಕೆ ನೆಗೆಯಿರಿ ಎಂದು ಜನರಿಗೆ ಅಪ್ಪಣೆಕೊಡಬೇಕಾದದ್ದನ್ನು ಯೋಚಿಸುತ್ತಿದ್ದ. +ಒಂದು ಅನಿಶ್ಚಯದ ರಾತ್ರಿಯಲ್ಲಿ ಪಿಲರ್ ಟೆರ್‍ನೆರಾ ಸೈನಿಕರ ಜೊತೆ ಹಾಡುತ್ತಿದ್ದಾಗ ತನ್ನ ಭವಿಷ್ಯವನ್ನು ಅವಳ ಕಾರ್ಡಿನಲ್ಲಿ ಓದಿ ಹೇಳಲು ಕೇಳಿದ. ಅವಳು ಮೂರು ಸಲ ಕಾರ್ಡುಗಳನ್ನು ಹರವಿ, ಎತ್ತಿ, “ನಿನ್ನ ಬಾಯಿ ಬಗ್ಗೆ ಜೋಪಾನ” ಎಂದಷ್ಟೇ ಹೇಳಿದಳು. “ಹಾಗಂದ್ರೆ ಏನು ಅಂತ ನಂಗೊತ್ತಿಲ;. ಆದ್ರೆ ಇರೋದು ಸ್ಪಷ್ಟ ಇದೆ. ಬಾಯಿ ಜೋಪಾನ.” ಎರಡು ದಿನಗಳ ನಂತರ ಸೇವಕನಿಗೆ ಯಾರೋ ಕಪ್ಪು ಕಾಫಿ ಇದ್ದ ಮಗ್ ಕೊಟ್ಟರು. ಅವನು ಅದನ್ನು ಬೇರೆಯವನಿಗೆ ರವಾನಿಸಿದ. ಅವನು ಮತ್ತೊಬ್ಬನಿಗೆ. ಹೀಗೆ ಕೈಯಿಂದ ಕೈಗೆ ಬದಲಾಗಿ ಕೊನೆಗೆ ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆಫೀಸನ್ನು ತಲುಪಿತು. ಅವನು ಕಪ್ಪು ಕಾಫಿಯನ್ನು ಕೇಳಿರಲಿಲ್ಲ. ಆದರೆ ಅದು ಅಲ್ಲಿದ್ದದ್ದರಿಂದ ಕರ್ನಲ್ ಕುಡಿದ. ಅದರಲ್ಲಿದ್ದ ವಿಷದ ಪ್ರಮಾಣ ಒಂದು ಕುದುರೆಯನ್ನು ಕೊಲ್ಲಲು ಸಾಕಾಗಿತ್ತು. ಅವನನ್ನು ಮನೆಗೆ ಕರೆದುಕೊಂಡು ಹೋದಾಗ ಬಾಗಿ ಬಿಗಿದುಕೊಂಡಿದ್ದ ಮತ್ತು ನಾಲಗೆ ಹಲ್ಲುಗಳಿಂದ ಚಾಚಿಕೊಂಡಿತ್ತು. ಉರ್ಸುಲಾ ಜೊತೆಜೊತೆಯಾಗಿ ಅವನ ಸಾವಿನ ಜೊತೆ ಹೋರಾಡಿದಳು. ಅವನಿಗೆ ವಾಂತಿಮಾಡುವ ಔಷಧಿಯಿಂದ ಹೊಟ್ಟೆ ಖಾಲಿ ಮಾಡಿ, ಬೆಚ್ಚನೆ ರಗ್ಗುಗಳಿಂದ ಹೊದಿಸಿ, ಎರಡು ದಿನ ಮೊಟ್ಟೆ ಕೊಟ್ಟು ಮಂಜುಗಟ್ಟುತ್ತಿದ್ದ ಅವನ ಮೈ ಮೊದಲಿನ ಉಷ್ಣಾಂಶವನ್ನು ಮತ್ತೆ ಪಡೆಯುವಂತೆ ಮಾಡಿದಳು. ನಾಲ್ಕನೆ ದಿನದ ಹೊತ್ತಿಗೆ ಅವನು ಅಪಾಯದಿಂದ ಪಾರಾಗಿದ್ದ. ಅವನ ಇಚ್ಛೆಗೆ ವಿರುದ್ಧವಾಗಿ, ಉರ್ಸುಲಾ ಮತ್ತು ಅವನ ಅಧಿಕಾರಿಗಳು ಒತ್ತಾಯಿಸಿದ್ದರಿಂದ ಇನ್ನೊಂದು ವಾರ ಅವನು ಹಾಸಿಗೆಯಲ್ಲಿದ್ದ. ಆಗಲೇ ಅವನಿಗೆ ತನ್ನ ಕವನಗಳನ್ನು ಸುಟ್ಟು ಹಾಕಿಲ್ಲ ಎಂದು ಗೊತ್ತಾಗಿದ್ದು. ಉರ್ಸುಲಾ ಅವನಿಗೆ, “ನಾನು ಅವಸರ ಮಾಡಬಾರದು ಅಂತಿದ್ದೆ. ಅವತ್ತು ರಾತ್ರಿ ಒಲೆ ಹೊತ್ತಿಸಲಿಕ್ಕೆ ಹೋದಾಗ ಅವರು ದೇಹಾನ ತರೋವರ್‍ಗೂ ಕಾಯೋದು ಒಳ್ಳೇದು ಅಂತ ನಂಗೆ ನಾನೇ ಹೇಳ್ಕೊಂಡೆ” ಎಂದು ವಿವರಿಸಿದಳು. ಗುಣಮುಖನಾಗುವ ಪ್ರಕ್ರಿಯೆಯಲ್ಲಿದಾಗ ರೆಮಿದಿಯೋಸ್‌ಳ ಧೂಳು ಹಿಡಿದ ಬೊಂಬೆಗಳಿಂದ ಸುತ್ತುವರಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಕವನಗಳನ್ನು ಓದುತ್ತ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ. ಅವನು ಮತ್ತೆ ಬರೆಯಲು ಪ್ರಾರಂಭಿಸಿದ. ಅನೇಕ ಗಂಟೆಗಳ ಕಾಲ, ಭವಿಷ್ಯವಿರದ ಯುದ್ಧದ ಕೌತುಕದ ಅಂಚಿನಲ್ಲಿ ಸಮತೋಲವಿರಿಸಿಕೊಳ್ಳುತ್ತ ಸಾವಿನ ದಡದ ತನ್ನ ಅನುಭವಗಳನ್ನು ಲಯಬದ್ಧ ಕಾವ್ಯದಲ್ಲಿ ರೂಪಿಸಿದ. ಆ ಮೇಲೆ ಅವನಿಗೆ ಮುಂದಿನದನ್ನು ಮತ್ತು ಹಿಂದಿನದನ್ನು ಪರೀಕ್ಷಿಸಲು ಸಾಧ್ಯವಾಗುವಷ್ಟು ಸ್ಪಷ್ಟವಾದ ಆಲೋಚನೆಗಳು ಬಂದವು. ಒಂದು ರಾತ್ರಿ ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಕೇಳಿದ: +“ಹಳೆ ಸ್ನೇಹಿತ ನೀನು. ಒಂದು ವಿಷಯ ಹೇಳು: ನೀನು ಯಾಕೆ ಹೋರಾಟ ಮಾಡ್ತಿದೀಯ?” +“ಇನ್ನೇನು ಕಾರಣ ಇರಕ್ಕೆ ಸಾಧ್ಯ? ಮಹಾನ್ ಉದಾರವಾದಿ ಪಾರ್ಟಿಗಾಗಿ” ಎಂದು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಹೇಳಿದ. +“ನೀನೇ ಅದೃಷ್ಟವಂತ. ಯಾಕೆ ಅಂತ ನಿನಗ್ಗೊತ್ತಿದೆ. ನನ್ನ ವಿಷಯ ಹೇಳೋದಾದ್ರೆ ನಂಗೆ ಈಗಷ್ಟೆ ಗೊತ್ತಾಗ್ತಿದೆ. ನಾನು ಪ್ರತಿಷ್ಠೆಗೋಸ್ಕರ ಹೋರಾಡ್ತಿದೀನಿ” ಎಂದ ಅವನು. +“ಅದು ಕೆಟ್ಟದ್ದು” ಎಂದ ಕರ್ನಲ್ ಗೆರಿನೊಲ್ಡೊ ಮಾರ್ಕೆಜ್. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವನು ಹೇಳಿದ್ದು ತಮಾಷೆಯಂತೆ ಕಂಡಿತು. ಅವನು, “ಏನೇ ಆದ್ರೂ ಯಾಕೆ ಹೋರಾಡ್ತಿರೋದು ಅಂತ ಗೊತ್ತಿಲ್ದೆ ಇರೋದಕ್ಕಿಂತ ಒಳ್ಳೇದು.” ಎಂದು ಅವನ ಕಣ್ಣಲ್ಲಿ ಕಣ್ಣಿಟ್ಟು ನಗುತ್ತ ಹೇಳಿದ: +“ಅಥವಾ ನಿನ್ನ ಹಾಗೆ. ಯಾರಿಗೂ, ಯಾವ ಅರ್ಥ ಇರದಿರೋದಕ್ಕೆ ಹೋರಾಡೋದು.” +ದೇಶದ ಒಳಭಾಗದ ಆಯುಧ ಹೊಂದಿದ ಗುಂಪುಗಳನ್ನು ಸಂಪರ್ಕಿಸಲು ಪಾರ್ಟಿಯ ನಾಯಕರು ಅವನನ್ನು ದರೋಡೆಕೋರ ಎಂದು ಸಾರ್ವಜನಿಕವಾಗಿ ಹೆಸರಿಸಿದ್ದನ್ನು ಸರಿಮಾಡುವ ತನಕ ಅವನ ಪ್ರತಿಷ್ಠೆ ತಡೆ ಹಿಡಿಯಿತು. ಆದರೂ ಆ ರೀತಿಯ ಸೂಕ್ಷ್ಮತೆಯನ್ನು ದೂರ ಮಾಡಿದ ಕೂಡಲೆ ಯುದ್ಧದ ವಿಷವೃತ್ತವನ್ನು ಭೇದಿಸುವುದು ಸಾಧ್ಯವೆಂದು ಅವನಿಗೆ ಗೊತ್ತಿತ್ತು. ಗುಣಮುಖವಾಗುವ ದಿನಗಳು ಅವನಿಗೆ ಎಲ್ಲದರ ಪರಾಮರ್ಶೆಗೆ ಕಾಲಾವಕಾಶ ಒದಗಿಸಿತ್ತು. ಅನಂತರ ಅವನು ಉರ್ಸುಲಾ ಹೂತಿಟ್ಟಿದ್ದರಲ್ಲಿ ಉಳಿದಿದ್ದ ಮತ್ತು ಉಳಿಸಿದ್ದ ಹಣವನ್ನು ತನಗೆ ಕೊಡುವಂತೆ ಮಾಡುವುದರಲ್ಲಿ ಯಶಸ್ವಿಯಾದ. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕನನ್ನಾಗಿ ಮಾಡಿ, ಒಳಪ್ರದೇಶದಲ್ಲಿರುವ ಕ್ರಾಂತಿಕಾರಿಗಳನ್ನು ಸಂಪರ್ಕಿಸಲು ಹೋದ. +ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಆತ್ಮೀಯನಾಗಿದ್ದಷ್ಟೇ ಅಲ್ಲದೆ ಉರ್ಸುಲಾ ಅವನನ್ನು ಮನೆಯವನಂತೆ ಭಾವಿಸಿದ್ದಳು. ಸಂಕೋಚದ ಸ್ವಭಾವದ ಒಳ್ಳೆಯ ನಡತೆಯವನಾದ ಅವನು ಸರ್ಕಾರಕ್ಕಿಂತ ಯುದ್ಧಕ್ಕೆ ಹೆಚ್ಚು ಹೊಂದಿಕೊಳ್ಳುವವನಾಗಿದ್ದ. ಅವನ ರಾಜಕೀಯ ಸಲಹೆಗಾರರು ಸೈದ್ಧಾಂತಿಕ ಜಾಲದಲ್ಲಿ ಅವನನ್ನು ಸಿಲುಕಿಸುತ್ತಿದ್ದರು. ಆದರೆ ಅವನು ಬಂಗಾರದ ಸಣ್ಣ ಮೀನುಗಳನ್ನು ಮಾಡುತ್ತಾ ವಯಸ್ಸಾದ ಮೇಲೆ ಸಾಯಬೇಕೆಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕನಸು ಕಂಡ ಹಾಗೆ, ಮಕೋಂದೋಗೆ ಗ್ರಾಮೀಣ ಶಾಂತತೆಯ ವಾತಾವರಣವನ್ನು ಕೊಟ್ಟ. ಅವನು ತನ್ನ ತಂದೆತಾಯಿಯ ಮನೆಯಲ್ಲಿದ್ದರೂ ವಾರಕ್ಕೆ ಎರಡು, ಮೂರು ಬಾರಿ ಉರ್ಸುಲಾಳ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ. ಅವನು ಅವ್ರೇಲಿಯಾನೋ ಹೊಸೆಗೆ ಆಯುಧಗಳ ಬಳಕೆಗೆ ನಾಂದಿಯಿಟ್ಟು ಪ್ರಾರಂಭಿಕ ಮಿಲಿಟರಿ ಆದೇಶಗಳನ್ನು ಕಲಿಸಿಕೊಟ್ಟು, ಉರ್ಸುಲಾ ಒಪ್ಪಿಗೆ ಪಡೆದು ಅವನೊಬ್ಬ ಮನುಷ್ಯನಾಗಲಿ ಎಂದು ಕೆಲವು ತಿಂಗಳ ಕಾಲ ಸೈನಿಕರ ವಾಸಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ಎಷ್ಟೋ ವರ್ಷಗಳ ಕೆಳಗೆ ಅವನನ್ನು ಬಹಳ ಚಿಕ್ಕವನಾಗಿರುವಾಗ ಅಮರಾಂತಳ ಬಗ್ಗೆ ತನ್ನ ಪ್ರೇಮವನ್ನು ಪ್ರಕಟಿಸಿದ್ದ. ಆ ದಿನಗಳಲ್ಲಿ ಅವಳು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಏಕಮುಖ ಮೋಹದಿಂದ ಎಂತಹ ಭ್ರಮೆಯಲ್ಲಿದ್ದಳೆಂದರೆ ಅವನನ್ನು ನೋಡಿ ನಕ್ಕು ಬಿಟ್ಟಿದ್ದಳು. ಗೆರಿನೆಲ್ಡೊ ಮಾರ್ಕೆಜ್ ಕಾದಿದ್ದ. ಒಂದು ಸಂದರ್ಭದಲ್ಲಿ ಅವನು ಜೈಲಿನಿಂದ ತನ್ನ ತಂದೆಯ ಇನಿಯಲ್ಸ್ ಇರುವ ಒಂದು ಡಜನ್ ಕರ್ಚಿಫನ್ನು ಕಸೂತಿ ಮಾಡಿಕೊಡಬೇಕೆಂದು ಒಂದು ಕೋರಿಕೆ ಕಳಿಸಿದ್ದ. ಅವನು ಅವಳಿಗೆ ಹಣ ಕಳಿಸಿದ. ಒಂದು ವಾರದ ನಂತರ ಅಮರಾಂತ ಹಣದ ಜೊತೆ ಒಂದು ಡಜನ್ ಕರ್ಚಿಫ್ ಅವನಿಗಾಗಿ ತಂದಳು ಮತ್ತು ಅವರು ಕೆಲವು ಗಂಟೆಗಳ ಕಾಲ ಹಿಂದಿನದನ್ನು ಕುರಿತು ಮಾತನಾಡಿದರು. ಅವಳು ಹೊರಟಾಗ ಗೆರಿನೆಲ್ಡೊ ಮಾರ್ಕೆಜ್, “ನಾನು ಇಲ್ಲಿಂದ ಆಚೆ ಹೋದ ಮೇಲೆ ನಿನ್ನನ್ನ, ಮದುವೆಯಾಗ್ತೀನಿ” ಎಂದ. ಅಮರಾಂತ ನಕ್ಕಳು ಆದರೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಾಗ ಅವನನ್ನು ಕುರಿತು ಯೋಚಿಸುತ್ತಿದ್ದಳು ಮತ್ತು ಪಿಯತ್ರೋ ಕ್ರೆಪ್ಸಿಯ ಬಗ್ಗೆ ಇರುವ ಮೋಹಕ್ಕೆ ಜೀವ ತುಂಬಲು ಪ್ರಯತ್ನಿಸುತ್ತಿದ್ದಳು. ಖೈದಿಗಳನ್ನು ಭೇಟಿಮಾಡುವ ದಿನವಾದ ಶನಿವಾರಗಳಲ್ಲಿ ಅವಳು ಗೆರಿನೆಲ್ಡೊ ಮಾರ್ಕೆಜ್‌ನ ತಂದೆತಾಯಿಗಳ ಮನೆಯ ಮುಂದೆ ನಿಂತುಕೊಳ್ಳುತ್ತಿದ್ದಳು ಮತ್ತು ಅವರ ಜೊತೆ ಜೈಲಿಗೆ ಹೋಗುತ್ತಿದ್ದಳು. ಅಂಥ ಒಂದು ಶನಿವಾರ ಆ ಸಂದರ್ಭಕ್ಕೆಂದು ಕಸೂತಿ ಮಾಡಿದ ಕರ್ಚೀಫ್‌ನಲ್ಲಿ ಅವಳನ್ನು ಅಡುಗೆ ಮನೆಯಲ್ಲಿ ಉತ್ತಮವಾದ ಬಿಸ್ಕತ್‌ಗಳನ್ನು ಎತ್ತಿಕೊಳ್ಳಲು ಅವುಗಳಿಗಾಗಿ ಕಾಯುತ್ತ ಒಲೆಯ ಹತ್ತಿರ ನಿಂತಿದ್ದು ಮತ್ತು ಅವುಗಳನ್ನು ಕಸೂತಿ ಮಾಡಿದ ಕರ್ಚಿಫ್‌ನಲ್ಲಿ ಸುತ್ತಿಕೊಂಡ ಅಮರಾಂತಳನ್ನು ಕಂಡು ಉರ್ಸುಲಾಗೆ ಸೋಜಿಗವಾಯಿತು. +ಅವಳು, “ಅವನನ್ನ ಮದ್ವೆ ಮಾಡ್ಕೋ. ಇನ್ನೊಬ್ಬ ಅಂಥೋನು ಸಿಗೋದು ಕಷ್ಟ” ಎಂದಳು. +ಅಮರಾಂತ ಅಸಂತೋಷ ವ್ಯಕ್ತಪಡಿಸಿದಳು. +ಅವಳು, “ನಾನೇನು ಗಂಡಸರನ್ನ ಹುಡುಕಿಕೊಂಡು ತಿರುಗಬೇಕಾದ್ದಿಲ್ಲ” ಎಂದು ಹೇಳಿ ಮುಂದುವರಿಸಿ, “ಈ ಬಿಸ್ಕತ್‌ಗಳನ್ನು ಗೆರಿನೆಲ್ಡೋಗೆ ತೊಗೊಂಡು ಹೋಗ್ತಿದೀನಿ. ಇಷ್ಟರಲ್ಲೆ ಅವನನ್ನ ಶೂಟ್ ಮಾಡ್ತಾರಲ್ಲ ಅಂತ ಅಯ್ಯೋ ಪಾಪ ಅನ್ಸತ್ತೆ” ಎಂದಳು. +ಅವಳು ಯೋಚಿಸದೆ ಹಾಗೆ ಹೇಳಿದ್ದಳ. ಆದರೆ ಆ ಸಮಯದಲ್ಲಿ ಕ್ರಾಂತಿಕಾರಿ ಸೈನಿಕರು ರಿಯೋ‌ಅಕ ಒಪ್ಪಿಸದಿದ್ದರೆ ಗೆರಿನೆಲ್ಡೊ ಮಾರ್ಕೆಜ್‌ನನ್ನು ಶೂಟ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿ ಬೆದರಿಸಿತ್ತು. ಇದರಿಂದ ಭೇಟಿಯ ಸಂದರ್ಭಗಳು ನಿಂತು ಹೋಯಿತು. ಅವಳಿಗೆ ರೆಮಿದಿಯೋಸ್ ಸತ್ತಾಗ ಆದಂತೆ ಮತ್ತೊಂದು ಸಲ ತನ್ನ ಅಜಾಗರೂಕತೆಯ ಮಾತುಗಳು ಇನ್ನೊಂದು ಸಾವಿಗೆ ಕಾರಣವಾಗಿದೆ ಎನ್ನುವುದು ತುಂಬಿ ಬಂದು ಅಪರಾಧಿ ಭಾವನೆ ಮುತ್ತಿ ಬಾಗಿಲು ಹಾಕಿಕೊಂಡು ಅತ್ತಳು. ಅವಳ ತಾಯಿ ಸಾಂತ್ವನ ಮಾಡಿದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ದಂಡನೆಯನ್ನು ತಡೆಯಲು ಏನಾದರೂ ಮಾಡುವನೆಂಬ ಭರವಸೆ ಕೊಟ್ಟಳು ಮತ್ತು ಯುದ್ಧ ಮುಗಿದ ಮೇಲೆ ಗೆರಿನೆಲ್ಡೊ ಮಾರ್ಕೆಜ್‌ನನ್ನು ಆಕರ್ಷಿಸಲು ತಾನೇ ಮುಂದಾಗುತ್ತೇನೆಂದು ಮಾತು ಕೊಟ್ಟಳು. ಅವಳು ತನ್ನ ವಾಗ್ದಾನವನ್ನು ಕಲ್ಪಿಸಿಕೊಂಡ ಸಮಯಕ್ಕಿಂತ ಮುಂಚೆಯೇ ಪೂರೈಸಿದಳು. ಗೆರಿನೆಲ್ಡೊ ಮಾರ್ಕೆಜ್ ಸಿವಿಲ್ ಮತ್ತು ಮಿಲಿಟರಿ ನಾಯಕ ಎನ್ನುವ ಹೊಸದಾದ ಹುದ್ದೆಯೊಂದಿಗೆ ತನ್ನ ಮನೆಗೆ ಬಂದಾಗ ಅವಳು ಅವನನ್ನು ಮಗನಂತೆ ಬರಮಾಡಿಕೊಂಡಳು. ಅವನು ಹೆಚ್ಚು ಸಮಯವಿರುವಂತೆ ಹೊಗಳಿಕೆಯ ಮಾತುಗಳನ್ನು ಹೇಳುತ್ತಿದ್ದಳು. ಅಮರಾಂತಳನ್ನು ಮದುವೆಯಾಗುತ್ತೇನೆಂದು ಹೇಳಿದ್ದು ಅವನಿಗೆ ನೆನಪಾಗಲಿ ಎಂದು ಮನಸಾರೆ ಪ್ರಾರ್ಥಿಸಿದಳು. ಅವಳ ಬೇಡಿಕೆಗಳಿಗೆ ಉತ್ತರ ದೊರಕಿತು. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮಧ್ಯಾಹ್ನದ ಊಟಕ್ಕೆ ಬಂದಾಗ ಬೆಗೋನಿಯಾ ಗಿಡಗಳಿರುವ ಹೊರಾಂಗಣದಲ್ಲಿ ಅಮರಾಂತಳ ಜೊತೆ ಚದುರಂಗದ ರೀತಿಯ ಚೀನೀಯರ ಆಟವನ್ನು ಆಡುತ್ತಿದ್ದ. ಉರ್ಸುಲಾ ಅವನಿಗೆ ಹಾಲು, ಕಾಫಿ, ಬಿಸ್ಕತ್ತು ತಂದುಕೊಟ್ಟು ಅವರಿಗೆ ತೊಂದರೆಯಾಗದಿರಲಿ ಎಂದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಅಮರಾಂತ ನಿಜವಾಗಲೂ ತನ್ನ ಹೃದಯದಲ್ಲಿ ಹರೆಯದ ಉತ್ಕಟತೆಯನ್ನು ಮರೆತ ಬೂದಿಯಾಳದಲ್ಲಿ ಮತ್ತೆ ಕಿಡಿ ಹೊತ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದಳು. ಅವಳು ತಡೆಯಲಸಾಧ್ಯವಾದ ಆತಂಕದಿಂದ ಅವನು ಊಟಕ್ಕೆ ಬರುವ ದಿನಗಳಿಗಾಗಿ, ಮಧ್ಯಾಹ್ನದ ಚೀನೀ ಚದುರಂಗದಾಟಕ್ಕಾಗಿ ಕಾಯುತ್ತಿದ್ದಳು ಮತ್ತು ಅವನಿಗೆ ಗೊತ್ತಾಗದಂತೆ ಬೆರಳುಗಳು ಅದುರುತ್ತ ಕಾಯಿಗಳನ್ನು ನಡೆಸುತ್ತಿದ್ದ ಹಾಗೆ ಸಮಯ ಹಾರಿ ಹೋಗುತ್ತಿತ್ತು. ಆದರೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವಳನ್ನು ಮದುವೆಯಾಗುವ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಅವಳು ತಿರಸ್ಕರಿಸಿದಳು. +ಅವಳು “ನಾನು ಯಾರನ್ನೂ ಮದ್ವೆ ಆಗಲ್ಲ, ಅದರಲ್ಲೂ ನಿನ್ನನ್ನು. ನೀನು ಅವ್ರೇಲಿಯಾನೋನ ಎಷ್ಟು ಪ್ರೀತಿಸ್ತಿದೀಯ ಅಂದ್ರೆ, ಅವನನ್ನ ಮದ್ವೆ ಮಾಡಿಕೊಳಕ್ಕೆ ಆಗಲ್ಲ ಅಂತ ನನ್ನನ್ನ ಮದ್ವೆ ಮಾಡ್ಕೋ ಬೇಕು ಅಂತ ಇದೀಯ” ಎಂದಳು. +ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ತಾಳ್ಮೆ ಇದ್ದ ವ್ತಕ್ತಿ, ಅವನು, “ನಾನು ಕೇಳ್ತಾನೇ ಇರ್‍ತೀನಿ, ಈಗಲ್ಲದಿದ್ದರೆ ಸಧ್ಯದಲ್ಲೆ ನಿನ್ನನ್ನ ಒಪ್ಪಿಸ್ತೀನಿ” ಎಂದ. ಅವನು ಮನೆಗೆ ಬರುವುದನ್ನು ಮುಂದುವರಿಸಿದ. ಅವಳು ಬೆಡ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡು, ಕಣ್ಣೀರು ಉಕ್ಕದಂತೆ ಶ್ರಮಿಸುತ್ತ ಅವನು ಉರ್ಸುಲಾಗೆ ಹೇಳುವ ಯುದ್ಧದ ಬಗ್ಗೆ ಇತ್ತೀಚಿನ ಸುದ್ದಿ ಕೇಳಬಾರದೆಂದು ಕಿವಿಯಲ್ಲಿ ಬೆರಳು ಹಾಕಿಕೊಳ್ಳುತ್ತಿದ್ದಳು. ಅವಳಿಗೆ ಅವನನ್ನು ನೋಡಬೇಕೆಂದು ಜೀವ ಬಿಡುತ್ತಿದ್ದರೂ ಹೊರಗೆ ಹೋಗಿ ಅವನನ್ನು ಭೇಟಿ ಮಾಡದಷ್ಟು ಶಕ್ತಿಯಿತ್ತು. +ಆ ಸಮಯದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಎರಡು ವಾರಕ್ಕೊಂದು ಸಲ ಮಕೋಂದೋಗೆ ವಿವರವಾದ ವರದಿಯನ್ನು ಕಳಿಸುತ್ತಿದ್ದ. ಆದರೆ ಊರು ಬಿಟ್ಟು ಹೋಗಿ ಎರಡು ತಿಂಗಳಾದ ಮೇಲೆ ಉರ್ಸುಲಾಗೆ ಒಂದೇ ಒಂದು ಸಲ ಬರೆದ. ಒಬ್ಬ ವಿಶೇಷ ದೂತ ಸೀಲ್ ಮಾಡಿ ಒಳಗೆ ಕರ್ನಲ್ ಬರೆದ ಕಾಗದವಿದ್ದ ಕವರನ್ನು ಮನೆಗೆ ತಂದುಕೊಟ್ಟ. ಅದರಲ್ಲಿ, ‘ಅಪ್ಪನನ್ನು ಸರಿಯಾಗಿ ನೋಡ್ಕೋ. ಯಾಕೆಂದ್ರೆ ಅವ್ನು ಸಾಯ್ತಾನೆ’ ಎಂದಿತ್ತು. ಉರ್ಸುಲಾಗೆ ಗಾಬರಿಯಾಯಿತು. ಅವಳು, “ಅವ್ರೇಲಿಯಾನೋಗೆ ಗೊತ್ತಿರೋದ್ರಿಂದ ಅವನು ಹಾಗೆ ಹೇಳ್ತಾನೆ.” ಎಂದು ಹೇಳಿದಳು. ಅವನು ಎಂದಿನಂತೆ ಭಾರವಾಗಿದ್ದ, ಅಲ್ಲದೆ ಬಾದಾಮಿ ಗಿಡದ ಕೆಳಗೆ ಸುದೀರ್ಘ ಕಾಲ ಕಳೆದು, ಮೈ ಭಾರವನ್ನು ತನಗೆ ಇಷ್ಟ ಬಂದ ಹಾಗೆ ಏಳು ಜನ ಎತ್ತದ ಹಾಗೆ ಹೆಚ್ಚಿಸಿಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಪಡೆದಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅವಳು ಇತರರ ಸಹಾಯ ಪಡೆದು ಅವನ ಬೆಡ್‌ರೂಮಿನ ಹಾಸಿಗೆಗೆ ಎಳೆದು ತರಬೇಕಾಯಿತು. ಎಳೆ ನಾಯಿಕೊಡೆಗಳ, ಹಳೆಯ ಮತ್ತು ಹೊರಗಿನ ಸಾಂದ್ರತೆಯ ವಾಸನೆ ಗಾಳಿ, ಮಳೆ ಬಿಸಿಲಿನ ಹೊಡೆತಕ್ಕೆ ಸಿಕ್ಕ ಮುದುಕ ಉಸಿರಾಡುತ್ತಿದ್ದ ಬೆಡ್‌ರೂಮಿನ ಗಾಳಿಯಲ್ಲಿ ಸೇರಿಕೊಂಡಿತು. ಮಾರನೆಯ ದಿನ ಅವನು ಹಾಸಿಗೆಯಲ್ಲಿ ಇರಲಿಲ್ಲ. ಅವನ ಶಕ್ತಿ ತೀರ ಕುಂದಿರದಿದ್ದರೂ ಹೊಸೆ ಅರ್ಕಾದಿಯೋ ಬ್ಯುಂದಿಯಾ ತಡೆಯುವ ಸ್ಥಿತಿಯಲ್ಲಿರಲಿಲ್ಲ. ಅವನು ಬಾದಾಮಿ ಮರದ ಹತ್ತಿರ ವಾಪಸು ಹೋಗಿದ್ದ. ಇದು ಅವನ ಬಯಕೆಗೆ ಕಾರಣವಾಗಿರದೆ ದೇಹದ ಅಭ್ಯಾಸದ ಬಲ ಕಾರಣವಾಗಿತ್ತು. ಉರ್ಸುಲಾ ಅವನನ್ನು ಊಟ ಹಾಕಿ ನೋಡಿಕೊಂಡಳು. ಅವ್ರೇಲಿಯಾನೋ ಕುರಿತ ಸುದ್ದಿ ತಿಳಿಸುತ್ತಿದ್ದಳು. ಆದರೆ ವಾಸ್ತವವಾಗಿ ಬಹಳ ಕಾಲದ ತನಕ ಅವನ ಜೊತೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾದ ವ್ಯಕ್ತಿಯೆಂದರೆ ಪ್ರುಡೆನ್ಸಿಯೋ ಅಗಿಲಾರ್. ಸಾವಿನ ಭಾವನೆಯಿಂದ ಜರ್ಜರಿತನಾದ ಅವನ ಜೊತೆ ಮಾತನಾಡಲು ಪ್ರುಡೆನ್ಸಿಯೋ ಅಗಿಲಾರ್ ದಿನಕ್ಕೆ ಎರಡು ಸಲ ಬರುತ್ತಿದ್ದ. ಅವರು ಹುಂಜಗಳ ಕಾದಾಟದ ಬಗ್ಗೆ ಮಾತನಾಡುತ್ತಿದ್ದರು. ಭಾರಿ ಹುಂಜಗಳನ್ನು ಹುಟ್ಟಿಸುವ ಫಾರಮ್ ಒಂದನ್ನು, ಗೆಲ್ಲುವ ಸುಖಕ್ಕಾಗಿ ಮತ್ತು ತೀರ ಬೇಸರ ತರುವ ಭಾನುವಾರಗಳಂದು ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಮಾತನಾಡುತ್ತಿದ್ದರು. ಪ್ರುಡೆನ್ಸಿಯೋ ಅವನನ್ನು ಶುಚಿಗೊಳಿಸುತ್ತಿದ್ದ, ಊಟ ಮಾಡಿಸುತ್ತಿದ್ದ ಮತ್ತು ಯುದ್ಧದಲ್ಲಿ ಕರ್ನಲ್ ಆಗಿರುವ ತನಗೆ ಗೊತ್ತಿರದ ಅವ್ರೇಲಿಯಾನೋ ಎನ್ನುವನೊಬ್ಬನ ಬಗ್ಗೆ ತುಂಬ ಒಳ್ಳೆಯ ಸುದ್ದಿಗಳನ್ನು ತರುತ್ತಿದ್ದ. ಹೊಸೆ ಅರ್ಕಾದಿಯೋ ಬ್ಯುಂದಿಯಾ ಒಬ್ಬನೇ ಇರುವಾಗ ಕೊನೆಯಿರದ ರೂಮುಗಳ ಕನಸು ಕಾಣುತ್ತ ಸಮಾಧಾನಗೊಳ್ಳುತ್ತಿದ್ದ. ಅವನು ಮಂಚದಿಂದ ಎದ್ದು ಬಾಗಿಲು ತೆಗೆದು ಅಂಥದೇ ರೂಮಿನಲ್ಲಿ ಅದೇ ಕಬ್ಬಿಣದ ಹಿಂಬದಿ ಇರುವ ಮಂಚ, ಅದೇ ಹಗ್ಗದ ಕುರ್ಚಿ ಮತ್ತು ಗೋಡೆಯ ಮೇಲೆ ವರ್ಜಿನ್ ಆಫ್ ಪೆಲ್ಪ್ ಚಿತ್ರವಿರುವ ಕನಸು ಕಂಡ. ಆ ರೂಮಿನಿಂದ ಅವನು ಅದೇ ರೀತಿ ಇರುವ ಇನ್ನೊಂದು ರೂಮಿಗೆ ಹೋಗುತ್ತಾನೆ ಮತ್ತು ಅದೇ ರೀತಿ ಇರುವ ಮತ್ತೊಂದಕ್ಕೆ. ಹೀಗೆಯೇ ಮುಗಿಯದ ತನಕ ಹೋಗುವಂತೆ ಕನಸು ಕಂಡ. ಪ್ರುಡೆನ್ಸಿಯೋ ಅಗಿಲಾರ್ ಭುಜದ ಮೇಲೆ ಕೈ ಇಡುವ ತನPವನು ರೂಮಿಂದ ರೂಮಿಗೆ ಸಮಾನಾಂತರದ ಕನ್ನಡಿಗಳು ಇರುವ ಕಡೆ ಹೋಗಲು ಇಷ್ಟಪಟ್ಟ. ಅನಂತರ ಅವನು ರೂಮಿಂದ ರೂಮಿಗೆ ನಡೆದುಕೊಂಡು ಬಂದ ರೀತಿಯಲ್ಲೆ ಹಿಂದಕ್ಕೆ ಹೋಗಿ, ವಾಸ್ತವದ ರೂಮಿನಲ್ಲಿ ಪ್ರುಡೆನ್ಸಿಯೋನನ್ನು ಕಾಣುತ್ತಾನೆ. ಆದರೆ ಒಂದು ರಾತ್ರಿ ಅವನನ್ನು ಹಾಸಿಗೆಗೆ ಕರೆದುಕೊಂಡು ಹೋಗಿ ಎರಡು ವಾರಗಳ ನಂತರ ಪ್ರುಡೆನ್ಸಿಯೋ ಅಗಿಲಾರ್ ಮಧ್ಯದಲ್ಲಿ ರೂಮೊಂದರಲ್ಲಿ ಅವನ ಭುಜವನ್ನು ಮುಟ್ಟಿದ್ದಕ್ಕೆ, ಅದು ವಾಸ್ತವದ ರೂಮೆಂದು ಅವನು ಅಲ್ಲೆ ಶಾಶ್ವತವಾಗಿ ಇದ್ದು ಬಿಟ್ಟ. ಅದರ ಮಾರನೆ ದಿನ ಬೆಳಿಗ್ಗೆ ಉರ್ಸುಲಾ ಅವನಿಗೆ ಬೆಳಗಿನ ಉಪಹಾರವನ್ನು ತರುತ್ತಿರುವಾಗ ಹಾಲ್‌ನಲ್ಲಿ ಅವಳಿಗೊಬ್ಬ ಮನುಷ್ಯ ಕಂಡ. ಅವನು ಕುಳ್ಳಗೆ, ದಪ್ಪಗೆ, ಕಪ್ಪು ಸೂಟ್ ಹಾಕಿಕೊಂಡು, ಹ್ಯಾಟ್ ಕೂಡ ಕಪ್ಪಾಗಿತ್ತು ಮತ್ತು ಅವನು ಅದನ್ನು ಕಣ್ಣಿನ ಹತ್ತಿರಕ್ಕೆ ಎಳೆದುಕೊಂಡಿದ್ದ. ಉರ್ಸುಲಾ, “ದೇವರೇ ಇದೇನು, ನಾನು ಅವನ್ನ ಮೆಲ್‌ಕಿಯಾದೆಸ್ ಅಂತ ಪ್ರಮಾಣ ಮಾಡಿ ಹೇಳ್ತೀನಿ” ಎಂದುಕೊಂಡಳು. ಅವನು ಕತಾವುರೆ, ವಿಸಿಟೋಸಿಯೋನ್‌ಯ ಸೋದರ. ನಿದ್ದೆ ಬಾರದ ರೋಗಕ್ಕೆ ಹೆದರಿ ಮನೆಯಿಂದ ಓಡಿ ಹೋಗಿದ್ದ ಮತ್ತು ಅವನ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ವಿಸಿಟಾಸಿಯೋನ್ ಅವನಿಗೆ, “ಮತ್ತೆ ಬಂದದ್ದು ಯಾತಕ್ಕೆ” ಎಂದು ಕೇಳಿದ್ದಕ್ಕೆ ಅವನು ಅವನದೇ ಆದ ಸಮಾಧಾನದ ಉತ್ತರ ಕೊಟ್ಟ. +“ನಾನು ರಾಜನ ಅಪರಕರ್ಮ ಮಾಡಕ್ಕೆ ಬಂದಿದೀನಿ.” +ಅನಂತರ ಅವರು ಹೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿಗೆ ಹೋಗಿ ಅವರ ಕೈಲಾದಷ್ಟು ಅಲುಗಾಡಿಸಿದರು, ಕಿವಿಯಲ್ಲಿ ಕೂಗಿದರು, ಮೂಗಿನ ಹೊಳ್ಳೆಯ ಹತ್ತಿರ ಕನ್ನಡಿ ಇಟ್ಟರು. ಆದರೆ ಅವನನ್ನು ಎಚ್ಚರಗೊಳಿಸುವುದಕ್ಕೆ ಆಗಲಿಲ್ಲ. ಆ ಮೇಲೆ ಸ್ವಲ್ಪ ಸಮಯದ ನಂತರ ಮರಗೆಲಸದವನು ಶವಪಟ್ಟಿಗೆಗಾಗಿ ಅಳತೆ ತೆಗೆದುಕೊಳ್ಳುತ್ತಿದ್ದಾಗ ಕಿಟಕಿಯ ಮುಖಾಂತರ ಚಿಕ್ಕ ಹಳದಿ ಹೂಗಳ ಸಣ್ಣ ಮಳೆ ಬೀಳುತ್ತಿರುವುದನ್ನು ಕಂಡರು. ಇಡೀ ರಾತ್ರಿ ಮೌನವಾಗಿ ಊರಿನಲ್ಲಿ ಸುರಿಯಿತು ಮತ್ತು ಅವು ತಾರಸಿಗಳನ್ನು ಆವರಿಸಿದವು ಹಾಗೂ ಬಾಗಿಲುಗಳಿಗೆ ಮೆತ್ತಿಕೊಂಡವು ಮತ್ತು ಹೊರಗೆ ಮಲಗಿದ್ದ ಪ್ರಾಣಿಗಳಿಗೆ ಮೃದುಸ್ವರ್ಶ ಮಾಡಿದವು. ಆಕಾಶದಿಂದ ಅದೆಷ್ಟು ಹೂಗಳು ಬಿದ್ದಿದ್ದವೆಂದರೆ ಮಾರನೆ ದಿನ ಬೆಳಿಗ್ಗೆ ರಸ್ತೆಗಳಿಗೆಲ್ಲ ಮೆತ್ತನೆಯ ಕುಶನ್ ಹಾಸಿತ್ತು ಮತ್ತು ಸಲಿಕೆ ಮತ್ತು ಕುಂಟೆಗಳಿಂದ ಪಕ್ಕಕ್ಕೆ ತಳ್ಳಿ ಶವಯಾತ್ರೆಗೆ ಅನುಕೂಲ ಮಾಡಿಕೊಡಬೇಕಾಯಿತು. +೮ +ಅಮರಾಂತ ತುಯ್ದಾಡುವ ಹಗ್ಗದ ಕುರ್ಚಿಯಲ್ಲಿ ಕುಳಿತು, ಮಾಡುತ್ತಿದ್ದ್ದ ಕೆಲಸವನ್ನು ನಿಲ್ಲಿಸಿ, ಅದನ್ನು ತೊಡೆಯ ಮೇಲಿಟ್ಟುಕೊಂಡು, ಗಲ್ಲಕ್ಕೆ ಸೋಪು ಹಚ್ಚಿಕೊಂಡ ಅವ್ರೇಲಿಯಾನೋ ಹೊಸೆ ಮೊಟ್ಟ ಮೊದಲನೆ ಸಲ ಶೇವ್ ಮಾಡಿಕೊಳ್ಳಲು ರೇಜರನ್ನು ಆಡಿಸುತ್ತಿದ್ದದ್ದನ್ನು ನೋಡಿದಳು. ಅವನ ಮೊಡವೆಗಳಲ್ಲಿ ರಕ್ತ ಸೋರಿತು ಮತ್ತು ಅವನು ಮೀಸೆಗೆ ಅಂದವಾದ ಆಕಾರ ಕೊಡಲು ಹೋಗಿ ಮೇಲ್ದುಟಿಯನ್ನು ಕತ್ತರಿಸಿಕೊಂಡ. ಅವೆಲ್ಲ ಮುಗಿದ ಮೇಲೆ ಅವನು ಮೊದಲಿನಂತೆಯೇ ಕಂಡ. ಆದರೆ ಹೆಚ್ಚಿಗೆ ಶ್ರಮ ತೆಗೆದುಕೊಂಡ ಈ ಪ್ರಕ್ರಿಯೆ ಆ ಕ್ಷಣದಿಂದ ತನಗೆ ಹೆಚ್ಚಿಗೆ ವಯಸ್ಸಾಗುತ್ತಿದೆ ಎಂಬ ಭಾವನೆಯನ್ನು ಅಮರಾಂತಳಲ್ಲಿ ಮೂಡಿಸಿತು. +ಅವಳು, “ನಿನ್ನ ವಯಸ್ನಲ್ಲಿ ಅವ್ರೇಲಿಯಾನೋ ಹೇಗೆ ಕಾಣ್ತಿದ್ನೋ ಹಾಗೇನೇ ಕಾಣ್ತಿದೀಯ. ಈಗ್ನೋಡು ನೀನೊಬ್ಬ ಗಂಡಸು” ಎಂದಳು. +ಅವನು ಹಾಗೆ ಬದಲಾಗಿ ಬಹಳ ದಿನಗಳಾಗಿತ್ತು. ಅದೆಷ್ಟೋ ದಿನಗಳ ಹಿಂದೆ ಅವನು ಇನ್ನೂ ಮಗು ಎಂದು ತಿಳಿದ ಅಮರಾಂತ ಯಾವಾಗಲು ಮಾಡುತ್ತಿದ್ದ ಹಾಗೆ ಬಾತ್ ರೂಮಿನಲ್ಲಿ ಅವನೆದುರು ಬಟ್ಟೆ ಕಳಚುತ್ತಿದ್ದಳು. ಅವನನ್ನು ಬೆಳೆಸುವುದನ್ನು ಪಿಲರ್ ಟೆರ್‍ನೆರಾ ತನಗೆ ವಹಿಸಿಕೊಟ್ಟಾಗಿಂದಲೂ ಅವಳು ಹಾಗೆ ಮಾಡುತ್ತಿದ್ದಳು. ಮೊದಲನೆ ಸಲ ಅವಳನ್ನು ನೋಡಿದಾಗ ಅವನ ಗಮನ ಸೆಳೆದ ಒಂದೇ ಅಂಶವೆಂದರೆ ಅವಳ ಮೊಲೆಗಳ ನಡುವೆ ಇದ್ದ ಹೆಚ್ಚಿನ ಆಳ. ಅವನು ಎಷ್ಟು ಮುಗ್ಧನಾಗಿದ್ದನೆಂದರೆ ಅವಳಿಗೆ ಏನಾಗಿದೆ ಎಂದು ಕೇಳಿದ್ದ. ಅಮರಾಂತ ತನ್ನ ಬೆರಳುಗಳ ತುದಿಯಿಂದ ಮೊಲೆಗಳೊಳಗೆ ಒತ್ತಿ, “ಅವರು ತುಂಡು ಮಾಡಿ ಹಾಕಿದ್ದಾರೆ” ಎಂದು ಉತ್ತರಿಸಿದಳು. ಅದಾದ ನಂತರ ಪಿಯತ್ರೋ ಕ್ರೆಪ್ಸಿಯ ಆತ್ಮಹತ್ಯೆಯಿಂದ ಸುಧಾರಿಸಿಕೊಂಡ ಮೇಲೆ ಮತ್ತೆ ಅವ್ರೇಲಿಯಾನೋನ ಸಂಗಡ ಸ್ನಾನ ಮಾಡುವಾಗ ಅವಳು ಅಷ್ಟೊಂದು ಗಮನ ಕೊಡಲಿಲ್ಲ. ಆದರೆ ಕಂದು ಮೊಲೆತೊಟ್ಟಿನ ಸಿರಿಮೊಲೆಗಳ ನೋಟದಿಂದ ಅವನು ವಿಚಿತ್ರವಾಗಿ ಕಂಪಿಸಿದ. ಅವನು ಅವಳನ್ನು ದಿಟ್ಟಿಸುತ್ತಾ, ಇಂಚಿಂಚಾಗಿ ಅವಳ ಸಖ್ಯದ ಮಾಂತ್ರಿಕತೆಯನ್ನು ಕಂಡುಕೊಂಡ ಮತ್ತು ಅವಳ ಮೈ ಚರ್ಮ ನೀರಿಗೆ ಸೋಂಕಿದಾಗ ನಲುಗುವಂತೆ ತನ್ನ ಚರ್ಮವೂ ನಲುಗುವ ಹಾಗೆ ಪರಿಕಲ್ಪಿಸಿದ. ಚಿಕ್ಕ ಮಗುವಾಗಿದ್ದ ಕಾಲದಿಂದಲೂ ತನ್ನ ಹಾಸಿಗೆಯನ್ನು ಬಿಟ್ಟ ಅಮರಾಂತಳ ಹಾಸಿಗೆಯಲ್ಲಿ ಮಲಗಿ ಕತ್ತಲೆಯ ಭಯದಿಂದ ಪಾರಾಗುವ ಅಭ್ಯಾಸ ಅವನಿಗಿತ್ತು. ಆದರೆ ತನ್ನ ಬೆತ್ತಲೆ ಅರಿವಾದ ದಿನದಿಂದ ಅವಳ ಸೊಳ್ಳೆ ಪರದೆಯೊಳಗೆ ನುಸುಳುವುದಕ್ಕೆ ಕತ್ತಲೆಯ ಭಯ ಕಾರಣವಾಗಿರದೆ, ಮುಂಜಾವಿನ ಹೊತ್ತಿನಲ್ಲಿ ಅಮರಾಂತಳ ಬಿಸಿಯುಸಿರನ್ನು ಅನುಭವಿಸಬೇಕೆಂಬ ತೀವ್ರವಾದ ಅಪೇಕ್ಷೆಯಾಗಿತ್ತು. ಅವಳು ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನನ್ನು ನಿರಾಕರಿಸಿದ ಸಮಯದಲ್ಲಿ ಒಂದು ದಿನ ಬೆಳಗಿನ ಜಾವದಲ್ಲಿ ಅವ್ರೇಲಿಯಾನೋಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಿಸಿ ಎಚ್ಚರವಾಯಿತು. ಅವನಿಗೆ ಅಮರಾಂತಳ ಬೆರಳುಗಳು ಆತಂಕದ ಬೆಚ್ಚಗಿನ ಕಂಬಳಿ ಹುಳುಗಳಂತೆ ಅವನ ಹೊಟ್ಟೆಯ ಮೇಲೆ ಹುಡುಕಾಟ ನಡೆಸುತ್ತಿದ್ದದ್ದು ಅರಿವಿಗೆ ಬಂತು. ಮಲಗಿದವನಂತೆ ತೋರಿಸಿಕೊಂಡು ಹೆಚ್ಚು ಅನುಕೂಲವಾಗಲೆಂದು ಭಂಗಿ ಬದಲಾಯಿಸಿದ ಮತ್ತು ಅವನಿಗೆ ಕಪ್ಪು ಪಟ್ಟಿಯಿಲ್ಲದ ಕೈಯೊಂದು ಅವನ ಆತಂಕದ ಸಮುದ್ರದೊಳಗೆ ಮೀನು ಡೈವ್ ಹೊಡೆದ ಹಾಗೆ ಭಾಸವಾಯಿತು. ಅವರು ತಮಗೆ ತಿಳಿದಿದ್ದದ್ದನ್ನು ಗಮನಕ್ಕೆ ತೆಗೆದುಕೊಳ್ಳದಂತೆ ಕಂಡರೂ ಒಬ್ಬರಿಗೆ ತಿಳಿದದ್ದು ಮತ್ತೊಬ್ಬರಿಗೆ ತಿಳಿದಿದೆ ಎಂದು ಗೊತ್ತಿತ್ತು. ಅಂದಿನ ರಾತ್ರಿಯಿಂದ ಅವರು ಒಬ್ಬರನ್ನೊಬ್ಬರು ಅತಿಕ್ರಮಿಸುವುದರಲ್ಲಿ ಸಹಭಾಗಿಗಳಾಗಿದ್ದರು. ಅವ್ರೇಲಿಯಾನೋ ಹೊಸೆಗೆ ಚೌಕದಲ್ಲಿದ್ದ ಗಡಿಯಾರದ ಹನ್ನೆರಡು ಗಂಟೆ ಹೊಡೆದದ್ದನ್ನು ಕೇಳದ ಹೊರತು ಮಲಗುವುದಕ್ಕೆ ಆಗುತ್ತಿರಲಿಲ್ಲ ಮತ್ತು ಹೆಚ್ಚಾಗುತ್ತಿದ್ದ ವೇದನೆಯಿಂದ ಅವನು ನಿದ್ದೆಯಲ್ಲಿ ನಡೆದು ಬಂದು ಸೊಳ್ಳೆ ಪರದೆಯ ಒಳಗೆ ನುಸುಳುವ ತನಕ ಒಂದು ಕ್ಷಣವೂ ಅವಳಿಗೆ ಸಮಾಧಾನವಿರುತ್ತಿರಲಿಲ್ಲ. ಅನಂತರ ಅವರು ಬೆತ್ತಲೆ ಮಲಗಿ ಸಾಕೆನಿಸುವಷ್ಟು ಪರಸ್ಪರ ನೇವರಿಸುತ್ತಿದ್ದರಲ್ಲದೆ ಮನೆಯ ಮೂಲೆ ಮೂಲೆಗಳಿಗೆ ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗುತ್ತಿದ್ದರು ಮತ್ತು ದಿನದ ಯಾವುದೇ ಸಮಯದಲ್ಲಾದರೂ ಬೆಡ್‌ರೂಮಿನ ಬಾಗಿಲು ಹಾಕಿಕೊಂಡು ಎಂದಿಗೂ ಉದ್ವೇಗ ಇಳಿಯದ ಸ್ಥಿತಿಯಲ್ಲಿರುತ್ತಿದ್ದರು. ಒಂದು ದಿನ ಮಧ್ಯಾಹ್ನ ಉರ್ಸುಲಾ ಉಗ್ರಾಣಕ್ಕೆ ಹೋದಾಗ ಮುತ್ತಿಕ್ಕುವುದರಲ್ಲಿದ್ದ ಅವರನ್ನು ಇನ್ನೇನು ಕಂಡುಬಿಡುತ್ತಿದ್ದಳು. ಅವಳು ಸಹಜವಾಗಿ, “ನಿನ್ನ ಚಿಕ್ಕಮ್ಮನನ್ನು ತುಂಬ ಪ್ರೀತಿಸ್ತೀಯಲ್ವಾ?” ಎಂದದ್ದಕ್ಕೆ ಅವ್ರೇಲಿಯಾನೋ ಹೊಸೆ ಹೌದೆಂದು ಉತ್ತರಿಸಿದ. ಅವಳು, “ಅದು ನಿಂಗೆ ಒಳ್ಳೇದು” ಎಂದು ಹೇಳಿ ಬ್ರೆಡ್‌ಗೆ ಬೇಕಾದ ಹಿಟ್ಟನ್ನು ಅಳೆದು ಅಡುಗೆ ಮನೆಗೆ ಹೋದಳು. ಆ ಘಟನೆ ಅಮರಾಂತಳನ್ನು ಅವಳ ವಿಕಲ್ಪದಿಂದ ಹೊರಗೆ ತಂದಿತು. ಅವಳಿಗೆ ತಾನು ಅತಿರೇಕಕ್ಕೆ ಹೋಗಿರುವೆನೆಂದೂ ಮಗುವಿನ ಜೊತೆ ಮುತ್ತಿಡುವ ಆಟವಾಡುತ್ತಿಲ್ಲವೆಂದೂ, ವಯಸ್ಸು ಮೀರಿದ ಉದ್ರೇಕದಲ್ಲಿ ಹೊರಳಾಡುತ್ತಿದ್ದೇನೆಂದು ತಿಳಿಯಿತು. ಅವಳು ಅದನ್ನು ಹಠಾತ್ ನಿಲ್ಲಿಸಿದಳು. ಆ ವೇಳೆಗೆ ಮಿಲಿಟರಿ ಟ್ರೈನಿಂಗ್ ಮುಗಿಸುತ್ತಿದ್ದ ಅವ್ರೇಲಿಯಾನೋ ಹೊಸೆಗೆ ವಾಸ್ತವದ ಅರಿವಾಯಿತು ಮತ್ತು ಅವನು ಸೈನಿಕರ ಸ್ಥಳದಲ್ಲಿ ಮಲಗಲು ಪ್ರಾರಂಭಿಸಿದ. ಶನಿವಾರಗಳಂದು ಅವನು ಇತರೆ ಸೈನಿಕರ ಜೊತೆ ಕತಾವುರೆಯ ಅಂಗಡಿಗೆ ಹೋಗುತ್ತಿದ್ದ. ಅವನು ತನ್ನ ದಿಢೀರ್ ಏಕಾಂತಕ್ಕಾಗಿ, ಮುಂಚಿತವಾಗಿ ಬಂದ ತಾರುಣ್ಯಕ್ಕೆ ಜೀವರಸವಿಲ್ಲದ ಹೂಗಳ ವಾಸನೆಯ ಹೆಂಗಸರನ್ನು ಕತ್ತಲಲ್ಲಿ ಆದರ್ಶೀಕರಿಸುತ್ತ ಸಾಂತ್ವನವನ್ನು ಹುಡುಕುತ್ತಿದ್ದ ಮತ್ತು ಅತೀವ ತುಡಿತದಿಂದ ಅಮರಾಂತಳ ಹಾಗೆ ಅವರು ಬದಲಾದಂತೆ ಕಲ್ಪಿಸಿಕೊಳ್ಳುತ್ತಿದ್ದ. +ಸ್ವಲ್ಪ ಸಮಯ ಕಳೆದ ಮೇಲೆ ಯುದ್ಧದ ಬಗ್ಗೆ ಪರಸ್ಪರ ವಿರುದ್ಧವಾದ ವರ್ತಮಾನಗಳು ಬರಲು ಪ್ರಾರಂಭವಾಯಿತು. ಕ್ರಾಂತಿಕಾರರ ಪ್ರಗತಿಯನ್ನು ಸರ್ಕಾರ ಒಪ್ಪಿಕೊಂಡರೂ ಮಕೋಂದೋದಲ್ಲಿದ್ದ ಅಧಿಕಾರಿಗಳಿಗೆ ಶಾಂತಿಯ ಮಾತುಕತೆ ಪ್ರಾರಂಭವಾಗಲಿದೆ ಎನ್ನುವ ಗುಪ್ತ ವರದಿಗಳು ಬಂದಿತ್ತು. ಏಪ್ರಿಲ್ ಒಂದರ ಸಮಯಕ್ಕೆ ವಿಶೇಷ ಬೇಹುಗಾರನೊಬ್ಬ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಬಳಿಗೆ ಬಂದು ತನ್ನ ಗುರುತು ಹೇಳಿಕೊಂಡ. ಅವನು ಪಾರ್ಟಿಯ ನಾಯಕರು ಒಳ ಪ್ರದೇಶದ ಕ್ರಾಂತಿಕಾರ ನಾಯಕರ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಯುದ್ಧ ನಿಲ್ಲಿಸುವುದರ ಬದಲಿಗೆ ಕಾಂಗ್ರೆಸ್‌ನಲ್ಲಿ ಅಲ್ಪ ಸಂಖ್ಯಾತರನ್ನು ಪ್ರತಿನಿಧಿಸುವಂತೆ, ಇನ್ನೇನು ಮೂರು ಕ್ಯಾಬಿನೆಟ್ ಹುದ್ದೆಯನ್ನು ಕೊಡುವ ಏರ್ಪಾಡು ಆಗಲಿದೆ ಹಾಗೂ ಅಸ್ತ್ರಗಳನ್ನು ವಿಸರ್ಜಿಸುವ ಕ್ರಾಂತಿಕಾರರಿಗೆ ಕ್ಷಮೆ ಕೊಡಲಾಗುತ್ತದೆ ಎನ್ನುವುದನ್ನು ದೃಢಪಡಿಸಿದ. ಬೇಹುಗಾರ ಯುದ್ಧ ನಿಲ್ಲಿಸುವುದರ ಬಗ್ಗೆ ಸಹಮತವಿಲ್ಲದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಗುಪ್ತವಾದ ಆರ್ಡರನ್ನು ತಂದಿದ್ದ. ಕರ್ನಲ್ ಗೆರೆನೆಲ್ಡೊ ಮಾರ್ಕೆಜ್ ತನ್ನಲ್ಲಿದ್ದವರಲ್ಲಿ ಅತ್ಯುತ್ತಮವಾದ ಐದು ಜನರನ್ನು ಆರಿಸಿಕೊಂಡು ಅವರ ಜೊತೆ ದೇಶವನ್ನು ಬಿಡಲು ಸಿದ್ಧನಾಗಬೇಕಾಯಿತು. ಆ ಆರ್ಡರನ್ನು ಅತ್ಯಂತ ಗುಪ್ತವಾಗಿ ನೆರವೇರಿಸಲಾಗುತ್ತಿತ್ತು. ಈ ಏರ್ಪಾಡು ಪ್ರಕಟಣೆಯಾಗುವುದಕ್ಕೆ ಒಂದು ವಾರದ ಮುಂಚೆ ಮತ್ತು ವೈರುಧ್ಯತೆಯಿಂದ ಕೂಡಿದ ಗಾಳಿಮಾತುಗಳ ಮಧ್ಯೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಕರ್ನಲ್ ರಾಕ್ ಕಾರ್ನಿಸಿರೋ ಸೇರಿ ಹತ್ತು ಜನ ನಂಬಿಕಸ್ಥ ಅಧಿಕಾರಿಗಳ ಜೋತೆಯಲ್ಲಿ ಮಧ್ಯ ರಾತ್ರಿಯ ನಂತರ ಮಕೋಂದೋಗೆ ನುಸುಳಿ ಕಾವಲುಗಾರರನ್ನು ಕಳಿಸಿ, ಅಸ್ತ್ರಗಳನ್ನು ಹೂತು ಹಾಕಿ, ಅವರ ಖಾತೆಗಳನ್ನು ನಾಶಮಾಡಿದ, ಮುಂಜಾವಿನ ಹೊತ್ತಿಗೆ ಮತ್ತು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮತ್ತು ಅವನ ಐದು ಜನ ಅಧಿಕಾರಿಗಳ ಜೊತೆ ಊರಿನಿಂದ ಹೊರಟಿದ್ದರು. ಅದೆಷ್ಟು ಶೀಘ್ರ ಮತ್ತು ಗುಪ್ತವಾಗಿತ್ತೆಂದರೆ ಕೊನೆಯ ಕ್ಷಣದ ತನಕ ಉರ್ಸುಲಾಗೆ ಅದರ ಬಗ್ಗೆ ಗೊತ್ತಾಗಲಿಲ್ಲ. ಯಾರೋ ಒಬ್ಬ ಅವಳ ಬೆಡ್‌ರೂಮಿನ ಕಿಟಕಿಯನ್ನು ತಟ್ಟಿ ಪಿಸುದನಿಯಲ್ಲಿ, “ನೀವು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ನೋಡ್ಬೇಕು ಅಂತಿದ್ರೆ ಈಗಿಂದೀಗ ಬಾಗಿಲ ಹತ್ತಿರ ಬನ್ನಿ” ಎಂದ. ಉರ್ಸುಲಾ ಹಾಸಿಗೆಯಿಂದ ಚೆಂಗನೆದ್ದು ರಾತ್ರಿ ಉಡುಪಿನಲ್ಲೇ ಬಾಗಿಲಿಗೆ ಹೋದಳು ಮತ್ತು ಅವಳಿಗೆ ಮಾತಿಲ್ಲದೆ ಧೂಳೆಬ್ಬಿಸಿ ಊರು ಬಿಡುತ್ತಿದ್ದ ಕುದುರೆ ಸವಾರರನ್ನು ಮಾತ್ರ ನೋಡಲು ಸಾಧ್ಯವಾಯಿತು. ಮಾರನೆಯ ದಿನ ಅವಳಿಗೆ ಅವ್ರೇಲಿಯಾನೋ ಹೊಸೆ ತನ್ನ ತಂದೆಯ ಜೊತೆಯಲ್ಲಿ ಹೋಗಿದ್ದಾನೆಂದು ತಿಳಿದು ಬಂತು. +ಸರ್ಕಾರ ಜಂಟಿ ಹೇಳಿಕೆಯನ್ನು ಪ್ರಕಟಿಸಿ ಹತ್ತು ದಿನಗಳಾದ ನಂತರ ಮತ್ತು ವಿರೋಧಿಗಳು ಯುದ್ಧ ಮುಗಿಯಿತೆಂದು ಘೋಷಿಸಿದ ಮೇಲೆ ಪಶ್ಚಿಮದ ಗಡಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ದಂಗೆ ಎದ್ದಿರುವ ಸುದ್ದಿ ಬಂತು. ಅವನ ಚಿಕ್ಕ ಗಾತ್ರದ ಮತ್ತು ಅಸಮರ್ಪಕ ಶಸ್ತ್ರ ಹೊಂದಿದ ಸೈನಿಕರನ್ನು ಒಂದು ವಾರದೊಳಗೆ ಚದುರಿಸಲಾಯಿತು. ಆದರೆ ಆ ವರ್ಷದಲ್ಲಿ ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳು ದೇಶದ ಜನತೆಗೆ ತಮ್ಮಿಬ್ಬರಲ್ಲಿ ಹೊಂದಾಣಿಕೆ ಇದೆ ಎಂದು ತಿಳಿಯಪಡಿಸಲು ಪ್ರಯತ್ನಿಸುತ್ತಿದ್ದಾಗ ಅವನು ಏಳು ಬಾರಿ ದಂಗೆ ಏಳಲು ಯತ್ನಿಸಿದ. ಒಂದು ರಾತ್ರಿ ಅವನು ರಿಯೋ‌ಅಕ ಮೇಲೆ ಹಡಗಿನಿಂದ ಗುಂಡಿನ ಮಳೆ ಸುರಿಸಿದ ಮತ್ತು ಕಾವಲುಗಾರನನ್ನು ಹಾಸಿಗೆಯಿಂದ ಹಿಡಿದೆಳೆದ ಮತ್ತು ಪ್ರತೀಕಾರಕ್ಕಾಗಿ ಊರಿನ ಹದಿನಾಲ್ಕು ಜನ ಹೆಸರುವಾಸಿ ಉದಾರವಾದಿಗಳಿಗೆ ಗುಂಡಿಕ್ಕಿದ. ಅವನು ಎರಡು ವಾರದ ತನಕ ಗಡಿಯಲ್ಲಿನ ಕಸ್ಟಮ್ಸ್ ಕೇಂದ್ರವನ್ನು ಸ್ವಾಧೀನದಲ್ಲಿ ಇಟ್ಟಿಕೊಂಡಿದ್ದ ಮತ್ತು ಅಲ್ಲಿಂದ ಇಡೀ ದೇಶಕ್ಕೆ ಯುದ್ಧದ ಕರೆ ಕೊಟ್ಟ. ಅವನ ಮತ್ತೊಂದು ಸಾಹಸವಾದ ರಾಜಧಾನಿಯ ಹೊರವಲಯದಲ್ಲಿ ಸಾವಿರ ಮೈಲಿಗಳಿಗಿಂತ ಹೆಚ್ಚು ಕೃಷಿ ಮಾಡದ ಪ್ರದೇಶವನ್ನು ದಾಟಿ ಯುದ್ಧವನ್ನು ಘೋಷಿಸುವ ಹುಚ್ಚು ಪ್ರಯತ್ನ ವ್ಯರ್ಥವಾಯಿತು. ಒಂದು ಸಂದರ್ಭದಲ್ಲಿ ಅವನು ಮಕೋಂದೋದಿಂದ ಹದಿನೈದು ಮೈಲಿಗಳ ದೂರದಲ್ಲಿದ್ದರೂ ಸರ್ಕಾರ ಗಸ್ತು ತಿರುಗುವುದನ್ನು ಏರ್ಪಡಿಸಿದ್ದರ ಕಾರಣ ಪರ್ವತದಲ್ಲಿ ಅಡಗಿಕೊಳ್ಳಬೇಕಾಯಿತು. ಅದು ಅನೇಕ ವರ್ಷಗಳ ಹಿಂದೆ ಅವನ ತಂದೆ ಸ್ಪೇನ್ ಯುದ್ಧ ನೌಕೆಯ ಪಳೆಯುಳಿಕೆಗಳನ್ನು ಕಂಡ ಪ್ರದೇಶಕ್ಕೆ ಸಮೀಪದಲ್ಲಿತ್ತು. +ಸುಮಾರು ಆ ಸಮಯದಲ್ಲಿ ವಿಸಿಟಾಸಿಯೋನ್ ಸತ್ತಳು. ನಿದ್ದೆ ಬಾರದ ಸ್ಥಿತಿಯ ಭಯದಿಂದ ಸಿಂಹಾಸನವನ್ನು ತೊರೆದು ಬಂದ ಅವಳಿಗೆ ಸಹಜವಾಗಿ ಸಾಯುವ ಸಂತೋಷ ಲಭಿಸಿತು. ಹಾಸಿಗೆಯ ಕೆಳಗೆ ಹೂತಿಟ್ಟಿದ್ದ ಇಪ್ಪತ್ತು ವರ್ಷದ ಕೂಲಿ ಹಣವನ್ನು ತೋಡಿ ಹೊರಗೆ ತೆಗೆಯಬೇಕೆಂದು ಮತ್ತು ಅದನ್ನು ಯುದ್ಧ ಮುಂದುವರಿಸುವುದಕ್ಕಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಕಳಿಸಬೇಕೆಂದು ಅವಳ ಅಂತಿಮ ಇಚ್ಛೆಯಾಗಿತ್ತು. ಆದರೆ ಉರ್ಸುಲಾ ತೋಡುವ ಗೋಜಿಗೆ ಹೋಗಲಿಲ್ಲ. ಏಕೆಂದರೆ ಆ ದಿನಗಳಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪ್ರಾಂತೀಯ ರಾಜಧಾನಿಯ ಬಳಿ ಭೂಮಿಗೆ ಇಳಿಯುವಾಗ ಕೊಲ್ಲಲ್ಪಟ್ಟನೆಂಬ ವದಂತಿ ಇತ್ತು. ಇದರ ಅಧಿಕೃತ ಪ್ರಕಟಣೆಯನ್ನು ಎರಡು ವರ್ಷದೊಳಗೆ ಇದು ನಾಲ್ಕನೇ ಬಾರಿ ನಿಜವೆಂದು ಪರಿಗಣಿಸಲಾಗಿತ್ತು. ಏಕೆಂದರೆ ಅದಾದ ಆರು ತಿಂಗಳ ಕಾಲ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಬಗ್ಗೆ ಏನೂ ಕೇಳಿಬಂದಿರಲಿಲ್ಲ. ಉರ್ಸುಲಾ ಮತ್ತು ಅಮರಾಂತ ಕಳೆದ ಅವಧಿಗೆ ಹೊಸದಾದ ದುಃಖಸೂಚಕವನ್ನು ಸೇರಿಸಿಕೊಂಡಾಗ ಇದ್ದಕ್ಕಿದ್ದಂತೆ ಅನಿರೀಕ್ಷಿತ ಸುದ್ದಿ ಬಂತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬದುಕಿದ್ದಾನೆ ಆದರೆ ಸರ್ಕಾರಕ್ಕೆ ತೊಂದರೆ ಕೊಡುವುದನ್ನು ನಿಲ್ಲಿಸಿದ್ದಾನೆ ಮತ್ತು ಅವನು ಕ್ಯಾರಿಬಿಯಾದ ಇತರ ಗಣತಂತ್ರಗಳಾಗಿ ಜಯ ಪಡೆದ ಸಂಯುಕ್ತ ರಾಷ್ಟ್ರದವರ ತತ್ವ ಒಪ್ಪಿ ಅವರ ಜೊತೆ ಸೇರಿದ್ದಾನೆ ಮತ್ತು ಅವನು ತನ್ನ ದೇಶದಿಂದ ದೂರ, ಮತ್ತಷ್ಟು ದೂರದಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಾನೆ, ಎಂದು. ಆ ಸಮಯದಲ್ಲಿ ಅವನಿಗೆ ಮಧ್ಯ ಅಮೆರಿಕದ ಸಂಯುಕ್ತರಾಷ್ಟ್ರವಾದಿ ಶಕ್ತಿಗಳನ್ನು ಒಗ್ಗೂಡಿಸಿ ಅಲಸ್ಯದಿಂದ ಪಟಗೋನಿಯಾವರೆಗಿನ ಸಂಪ್ರದಾಯವಾದಿ ಆಳ್ವಿಕೆಗಳನ್ನು ನಿರ್ನಾಮ ಮಾಡಬೇಕೆಂಬ ಆಲೋಚನೆ ಇತ್ತು. ಅವನು ಅಲ್ಲಿಂದ ಹೊರಟ ಮೇಲೆ ಅವನಿಂದ ನೇರವಾಗಿ ಮೊದಲ ಬಾರಿಗೆ ಉರ್ಸುಲಾಳನ್ನು ತಲುಪಿದ ವಸ್ತುವೆಂದರೆ ಕ್ಯೂಬಾದ ಸ್ಯಾಂತಿಯಾಗೋದಿಂದ ಬಂದ ಮಾಸಲಾಗಿದ್ದ ಒಂದು ಪತ್ರವಾಗಿತ್ತು. +ಅವಳು “ನಮಗೆ ಅವನೆಂದಿಗೂ ದಕ್ಕಲ್ಲ” ಎಂದು ಅದನ್ನು ಓದಿದ ಉರ್ಸುಲಾ ಹೇಳಿದಳು.” ಅವನು ಈ ದಾರಿ ಹಿಡಂಡು ಹೋದ್ರೆ, ಕ್ರಿಸ್‌ಮಸ್ ಕಳೆಯೋದಕ್ಕೆ ಅವನ್ಗೆ ಆಗೋದೇ ಇಲ್ಲ.” +***** +ಮುಂದುವರೆಯುವುದು +ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_44.txt b/Kannada Sahitya/article_44.txt new file mode 100644 index 0000000000000000000000000000000000000000..f287b940959c65d417ef005ea85abf4321e84856 --- /dev/null +++ b/Kannada Sahitya/article_44.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಏಕಿನಿತು ಮರುಗುತಿಹೆ, ಕೊರಗಿ ಸಣ್ಣಾಗುತಿಹೆ +ಬಯಕೆ-ನಂದನ ಮುಳ್ಳು ಬೇಲಿಯಾಯ್ತೆ? +ಎದೆಯ ತಿಳಿಗೊಳದಮಲ ಕಮಲ ದಲ ಹಾಸಿನಲಿ +ಅಣಕು ನುಡಿಗಳ ವಿಕಟ ನಾಟ್ಯವಾಯ್ತೆ? +ಜೀವನದಗಾಧಮಯ ಹೋರಾಟದಲ್ಲೊಂದು +ಬಾಣ ನಟ್ಟರೆ ಅದಕೆ ನರಳಬಹುದೆ? +ಇದಕಿಂತಲೂ ಘೋರ ಎಡರೆದ್ದು ಬಡಿಯಲಿವೆ +ನಡೆಯಲಿವೆ, ಅದನರಿಯದೇನು ಬಗೆದೆ? +ಒಮ್ಮೆ ತಲೆಗೊಟ್ಟಿರಲು ಹಿಂಜರಿಯದಿರು ಮನವೆ +ದೋಷ ನೂರಾರದಕೆ ಅಪ್ಪಳಿಸಲಿ; +ಗೋಡೆಗೊಗೆದಿಹ ಚೆಂಡು ಹಿನ್ನೆಗದು ಬರುವಂತೆ +ಹುಸಿಯಾಟ ಗೆಲ್ಲುವದೆ ಬಾಳಿನಲ್ಲಿ? +ನಿನ್ನ ದಾರಿಯ ನೀನು ಹುಡುಕುತಿರು ಪಯಣದಲಿ +ಹಲವು ಮನಗಳ ತಣಿಪ ಆಸೆ ಬೇಡ; +ನಿನ್ನ ಗುರಿಯದೊ ದೂರ, ಸೇರಲೆಳಸುವ ಧೀರ +ಕರ್ತವ್ಯಚ್ಯುತನಾದರಯ್ಯೊ ಕುರುಡ. +ಬಾಳು ಚಕ್ರವ್ಯೂಹ ಕೋಟೆಗಿಂತಲು ಕಠಿನ +ಜೇಡಬಲೆಯಂತ ಬಲು ಜಟಿಲಕುಟಿಲ; +ಆ ಬಲೆಗೆ ಅಂಟಿರುವ ಮಂಜುಹನಿಯೊಲು ತೊಳಗು +ನೊಣವಾಗಿ ನುಗ್ಗಿದರೆ ಜೀವ ವಿಫಲ. +ಏಳು ಮೇಲೇಳು ತಿಳಿವೆಳಕಿನೆಡೆ ಕೈ ನೀಡು +ನಿನ್ನ ಬಗೆ- ಬೊಗಸೆಯಲಿ ಒಲವು ಸುರಿದು +ಮೊಗದ ದುಗುಡದ ಮೋಡ ಮಿಂಚು ನಗೆ ತಳೆಯುವದು +ತಣಿಸುವದು ಎದೆಗುದಿಗೆ ಮಳೆಯನೆರೆದು. +***** +೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […] +– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_440.txt b/Kannada Sahitya/article_440.txt new file mode 100644 index 0000000000000000000000000000000000000000..a91025bbb01dd094fb4226aee1f321afdb9f7433 --- /dev/null +++ b/Kannada Sahitya/article_440.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. ಬೀಳಬಹುದಾದ ಮಳೆಯ ಭಯಕ್ಕೆ ಇಡೀ ಓಣಿಗೇ ಓಣಿ ನಿರ್ಮಾನುಷವಾಗಿತ್ತು. ಬೀದಿಯ ಮೂಲೆಯಲ್ಲಿ ನಾಯಿ ಮುಗಿಲಿಗೆ ಮುಖ ಚಾಚಿ ಊಳಿಡಲಾರಂಭಿಸಿತ್ತು. ಅನೇಕ ಕೆಳಸಗಳಿದ್ದರೂ ನಾನು ಮನೆಯೊಳಗೇ ಉಳಿದಿದ್ದುದು ಅನ್ನಪೂರ್ಣಗೆ ಖುಷಿತಂದಿತ್ತು. ಮಳೆ ಬರುವಂಥ ಭ್ರಮೆ ದಿನನಿತ್ಯ ಇರಲಿ ಎಂದು ಆಶಿಸುತ್ತಲೇ ತಿನ್ನಲು ಒಂದಿಷ್ಟು ಕುರುಕುಲು ತಿಂಡಿ ಮಾಡಿ ಕೊಟ್ಟಿದ್ದಳು. ಶಾಲಾ ವಾರ್ಷಿಕೋತ್ಸವದ ಆಟ ಪಾಠಗಳಲ್ಲಿ ಭಾಗವಹಿಸಿ ದಣಿದಿದ್ದ ಮಕ್ಕಳು ಅದುವರೆಗೆ ನಿದ್ರಾಮಂಪರಿನಲ್ಲಿದ್ದು ಆ ಘಳಿಗೆಗೆ ಸ್ವಲ್ಪ ನಿದ್ರಾವಶವಾಗಿಬಿಟ್ಟಿದ್ದವು. ಅವುಗಳ ಪಕ್ಕದಲ್ಲಿ ತೆರೆದಂತೆ ಇರುವ ತೆರೆದ ಪುಸ್ತಕಗಳ ಪುಟಗಳು ಗಾಳಿಗೆ ಪಟಪಟ ಸದ್ದು ಮಾಡುತ್ತ ಕವುಚಿಕೊಳ್ಳ ತೊಡಗಿದ್ದವು. ಗುಡುಗು ಮಿಂಚುಗಳ ಆರ್ಭಟಕ್ಕೆ ವಿದ್ಯುದ್ದೀಪಗಳು ನಂದಿ ಹೋಗಿದ್ದರಿಂದ ಮೂಲೆ ಸೇರಿದ್ದ ಚಿಮಣಿ ದೀಪಗಳನ್ನು ಹುಡುಕಿ ತೆಗೆದು ಧೂಳು ಕೊಡುವುತ್ತಿದ್ದಾಗ ವಿದ್ಯುಚ್ಛಕ್ತಿ ಬಂದು ಮತ್ತೆ ಹೋಯಿತು. ಅವಳಿಗೆ ದೀಪ ಹಚ್ಚುವುದು ಅನಿವಾರ್ಯವಾಗಿಬಿಟ್ಟಿತ್ತು. ಚಿಮಣಿಗಳು ಬೆಳಗಲು ಹೆಚ್ಚು ಹಠ ಮಾಡುತ್ತಿರುವಂತೆ ಕಂಡಿತು. ಆದರೆ ಆ ಹಠ ಆಕೆಯ ಎದುರು ನಡೆಯಲಿಲ್ಲ. ಚಿಮಣಿ, ಹಠ ಮಣಿಸುವುದರಲ್ಲಿ ನಿಷ್ಣಾತಳಾಗಿದ್ದ ಆಕೆ ಆ ಕಾರ್ಯದಲ್ಲಿ ಅಂತೂ ಯಶಸ್ವಿಯಾದಳು. ಕಡ್ಡಿಪೊಟ್ಟಣದಲ್ಲಿ ಒಂದೇ ಒಂದು ಕಡ್ಡಿ ಇದ್ದುದರಿಂದ ವಿದ್ಯುಚ್ಛಕ್ತಿ ಬಂದರೂ ಚಿಮಣಿಗಳು ಹಾಗೇ ಉರಿಯುತ್ತಿರಬೇಕೆಂದು ನಿರ್ಧರಿಸಿದೆವು. ಮನುಷ್ಯರ ನಿಯಂತ್ರಣದಲ್ಲಿ ದೀಪಗಳೂ, ದೀಪಗಳ ನಿಯಂತ್ರಣದಲ್ಲಿ ಮನುಷ್ಯರೂ ಇಲ್ಲವೆಂಬುದು ತಿಳಿದೂ, ಬೆಳಕಿನ ಕೊರತೆ ಮತ್ತು ಅವಾಂತರಕ್ಕೆ ಪಕ್ಕಾಗಿ ಕುರುಕುಲು ತಿಂಡಿಯ ನಂತರ ಆಕೆ ಇದ್ದಕ್ಕಿದ್ದಂತೆ ಭಾರತದ ಆರ್ಥಿಕ ವ್ಯವಸ್ಥೆ ಬಗ್ಗೆ ಸಿಡಿಮಿಡಿಗುಟ್ಟತೊಡಗಿದಳು. ಕೇವಲ ಪದವಿಪೂರ್ವ ಶಿಕ್ಷಣ ಪಡೆದಿದ್ದರೂ ಪ್ರತಿಭಾನ್ವಿತ ಆರ್ಥಿಕ ತಜ್ಞೆಯಂತೆ ಮಾತಾಡತೊಡಗಿದ ಆಕೆಯನ್ನು ಪಡೆದ ನಾನೇ ಧನ್ಯ ಎಂದುಕೊಂಡೆ. ಸಾಮಾಜಿಕ ಅಸಮಾನತೆಗೆ ಆರ್ಥಿಕ ವ್ಯವಸ್ಥೆಯೇ ಕಾರಣವೆಂದು ಆಕೆಯೂ, ಜಾತಿ ವ್ಯವಸ್ಥೆ ಕಾರಣವೆಂದು ನಾನೂ-ವಾದಿಸುತ್ತ ಕ್ರಮೇಣ ಮೊಂಡು ಹಠಕ್ಕೆ ಬಿದ್ದ ನಾವು ರಾಷ್ಟ್ರೀಯ ಮಟ್ಟದಿಂದ ಕುಟುಂಬ ಮಟ್ಟಕ್ಕೆ ಇಳಿದುಬಿಟ್ಟೆವು. ಪರರ ಕಣ್ಣು ಕುಕ್ಕಿಸುವಂಥ ಸಂಬಳ ಪಡೆಯುತ್ತಿದ್ದರೂ ತಿಂಗಳ ಕೊನೆ ದಿನಗಳಲ್ಲಿ ಚಿಕ್ಕಾಸಿಗೆ ಪರದಾಡುತ್ತಿರುವುದಕ್ಕೆ ಕಾರಣಗಳನ್ನು ಹುಡುಕತೊಡಗಿದೆವು. ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದೆವು. ತಮಾಷೆಯಾಗಿಯೇ ಮಾತಿನ ಜರಡಿಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಹಾಕಿ ಹಿಡಿಯ ತೊಡಗಿದ್ದು. ಆದರೆ ಕ್ರಮೇಣ ಜರಡಿಯ ರಂಧ್ರಗಳು ದೊಡ್ಡದಾಗಿ ಮಾತುಗಳಿಗೆ ಯಾವ ಅರ್ಥವೂ ದೊರೆಯದೆ ಹೋಯಿತು. ಸ್ಕೂಲು ಬಿಟ್ಟ ಮೇಲೆ ಕ್ಲಬ್ಬು ಗಿಬ್ಬು ಅಂತ ಹೋಗದೆ ಮನೇಲಿದ್ರೆ ಒಂದಿಷ್ಟು ಉಳಿಸಿ ನಾವೂನು ಆರ್ಥಿಕವಾಗಿ ತಲೆ ಎತ್ತಬಹುದು ಕಣ್ರಿ ಎಂದು ಆಕೆಯೂ, ಕಡಲೆಕಾಯಿ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರ್‍ತದೆ. ಅದ್ಕೆ ಕಡಿಮೆ ಬೆಲೆಯ ಸೂರ್ಯಕಾಂತಿ ಎಣ್ಣೆ ಬಳಸೂಂತ ಹೇಳೋದು-ರುಚಿಗೆ ತಕ್ಕಂತೆ ನಮ್ಮ ಆಹಾರದ ರೀತಿ ವಿಧಾನಗಳನ್ನು ಬದಲಾವಣೆ ಮಾಡ್ಕೋಬೇಕು…. ಎಂದು ನಾನೂ ಬಡಬಡಿಸತೊಡಗಿದೆನು. ಆಕೆ ಒಮ್ಮೆಗೆ ಕೆರಳಿ ನಿಂತು ಇಷ್ಟೆಲ್ಲ ಉಪದೇಶ ನೀಡೋ ನೀವು ಸಿಗರೇಟು ಸೇದೋದು ಬಿಟ್ಟಿದ್ದೀರಾ. ಬಿಯರ್ ಕುಡಿಯೋದು ಬಿಟ್ಟಿದ್ದೀರಾ ಮಕ್ಳೀಗೆ ಒಳ್ಳೆ ಎಜುಕೇಷನ್ ಕೊಡಿಸೋಕಾಗ್ತಿಲ್ಲ ನಿಮ್ಗೆ…. ಹೋದ ಯುಗಾದಿಯಲ್ಲಿ ನೀವು ನನ್ಗೆ ಸೀರೆ ಕೊಡಿಸಿದ್ದು…. ನಾನು ಸೀರೆ ಹೊಲ್ಕೊಳ್ಳೋದು ಎಂದಾದ್ರು ನಿಮ್ ಕಣ್ಗೆ ಬಿದ್ದಿದಿಯಾ…. ಎಂದು ಮುಸಿಮುಸಿ ಅಳುತ್ತ ಹಾಸಿಗೆಯಲ್ಲಿ ಬೋರಲು ಮಲಗಿದಳು. ಮೂರನೆ ಹೆರಿಗೆ ನಂತರ ಕುಟುಂಬದ ಆರ್ಥಿಕ ಸುಧಾರಣೆಗೆ ಕಠಿಣ ಕ್ರಮ ಕೈಗೊಂಡಿರುವ ಆಕೆ ಮಗುವಿನಂತೆ ನಿದ್ದೆ ಸವಿಯ ತೊಡಗಿದಳು. ನನ್ನನ್ನು ನಾನು ಬಯ್ದುಕೊಳ್ಳುತ್ತ ಆಕೆಯ ಹೊಂಬಣ್ಣದ ಹಣೆಗೆ ಮುತ್ತು ಕೊಟ್ಟು ಯಾವುದೋ ಕಾದಂಬರಿಯಲ್ಲಿ ಮುಳುಗಿದೆ. +ಸೊಳ್ಳೆಯ ಕಡಿತಕ್ಕೆ ಮಕ್ಕಳು ಮಗ್ಗುಲು ಬದಲಾಯಿಸಿದ್ದುದರಿಂದ ಏಕಾಗ್ರತೆಯಿಂದ ಓದಲಾಗಲಿಲ್ಲ. ಮಬ್ಬು ಬೆಳಕಿನಲ್ಲಿ ಸೊಳ್ಳೆ ಪರದೆ ಹುಡುಕಿದ್ದೂ; ಕಟ್ಟಿದ್ದೂ ದೊಡ್ಡ ಸಹವಾಸವೇ. ಸಿಡಿಮಿಡಿಗುಟ್ಟುತ್ತಲೇ ನಿದ್ದೆ ಹೋಗಿದ್ದ ಆಕೆಯನ್ನು ಪರದೆಯೊಳಕ್ಕೆ ಕಷ್ಟಪಟ್ಟು ಉರುಳಿಸಿದೆ. ಇನ್ನು ನಿರಾತಂಕವಾಗಿ ಒಂದು ಸೀಗರೇಟು ಸೇದಬಹುದೆನಿಸಿತು. ಆಗಲಿಲ್ಲ, ಖಾಲಿ ಸಿಗರೇಟು ಪ್ಯಾಕು ಅಣಕಿಸುತ್ತಿರುವಂತೆ ಗೋಚರಿಸಿತು. ಮನೆಯ ಮುಂದಿದ್ದ ಮರ ಮಳೆಗಿಂತ ಕತ್ತಲೆಯಲ್ಲಿಯೇ ಹೆಚ್ಚು ತೊಯ್ದು ತಪ್ಪಟೆಯಾಗಿತ್ತು! ಅದರಲ್ಲಿ ಕಾಯಂ ವಾಸಕ್ಕಿದ್ದ ಪಕ್ಷಿಗಳು ತಮ್ಮ ಗೂಡುಗಳನ್ನು ತಾವೆ ಗುರುತಿಸಲಾಗದೆ ಬೆದರಿ ಅರಚತೊಡಗಿ ಆ ವಾತಾವರಣಕ್ಕೆ ಭಯಾನಕತೆಯ ಲೇಪ ಹಚ್ಚತೊಡಗಿದ್ದವು. ಕಾದಂಬರಿ ಓದುವ ತಾಳ್ಮೆಯನ್ನು ವಾತಾವರಣ ಅಪಹರಿಸಿದ್ದರಿಂದ ವಿಚಿತ್ರ ನೆನೆಗುದಿಯಲ್ಲಿ ಬೇಯತೊಡಗಿರುವಾಗಲೇ ಬಾಗಿಲು ತಟ್ಟುವ ಸದ್ದು ಕೇಳಿ ಬಂತು. ಅದು ಕೇಳಿಸಿದ ಮೊದಲ ಕ್ಷಣ ಭಯವಾಯಿತು. ಬಾಗಿಲು ತಟ್ಟುವುದರಲ್ಲಿ ಹೆಸರು ವಾಸಿಯಾದವರ ಒಂದು ದೊಡ್ಡ ಪಟ್ಟಿಯೇ ಕಣ್ಣ ಮುಂದೆ ಸುಳಿಯಿತು. ಅವರಾರೂ ಇರಲಿಕ್ಕಿಲ್ಲ ಎನಿಸಿತು. ಯಾರದು? ಎಂದೆ. ಯಾವುದೋ ಅಸ್ಪಷ್ಟ ಧ್ವನಿ ಕೇಳಿಸಿತು. ಅಂತಃಕರಣಕ್ಕೆ ಹತ್ತಿರ ಸ್ಪಂದಿಸಿತು. ಮೆಲ್ಲಗೆ ಬಾಗಿಲು ಬಳಿಗೆ ಹೋಗಿ ಕಿವಿ ಅಂಟಿಸಿದೆ. ಮುಲುಕುತ್ತಿರುವಂಥ ನರಳುತ್ತಿರುವಂಥ ಸದ್ದು. ಹೆಂಡತಿ ಕಡೆ ತಿರುಗಿ ನೋಡಿದೆ. ಪರದೆಯೊಳಗೆ ಆಕೆ ತಾನು ಎಚ್ಚರ ಇರುವಂತೆ ಸೂಚನೆ ನೀಡಿದಳು. ಗಟ್ಟಿ ಧೈರ್ಯ ಕ್ರೋಢೀಕರಿಸಿ ಚಿಲಕ ಸರಿಸಿದೆ. ತೆಂಗಿನಕಾಯಿ ಹೊಡೆದಂತೆ ಬಾಗಿಲು ಹೋಳಾಯಿತು. ಕತ್ತಲ ಮೊಟ್ಟಯಂತೆ ಇದ್ದ ಯುವಕ ಒಳ ನುಸುಳಿದ. ಸುಮಾರು ಇಪ್ಪತ್ತೈದರ ಪ್ರಾಯದ ಆತನೆ ಬಾಗಿಲು ಹಾಕಿದ. ಕೆದರಿದ ತಲೆಯ ಕುರುಚಲು ಗಡ್ಡದ ಫಳ ಫಳ ಹೊಳೆವ ಕಣ್ಣುಗಳ ಆತನನ್ನು ನಖಶಿಖಾಂತ ನೋಡಿದೆ. ದಪ್ಪನೂಲಿನ ಜುಬ್ಬಾ, ಕೊಳೆಯಿಂದ ಮಾಡಲ್ಪಟ್ಟಂತಿದ್ದ ಜೀನ್ಸ್ ಪ್ಯಾಂಟು. ನನ್ನತ್ತ ಒಂದು ಕ್ಷಣ ದಿಟ್ಟಿಸಿ ನೋಡಿ “ನೇನೆವರೋ ಗುರ್ತುಪಟ್ಟಾರಾ! (ನಾನು ಯಾರೆಂದು ಗುರ್ತು ಹಿಡಿದಿರಾ!) ಎಂದ. ಅಪಾದ ಮಸ್ತಕ ನೋಡಿದೆ. “ಲೇದು” ಎಂದು (ಇಲ್ಲ) ಅಂದೆ. “ನೇನಂಡಿ ಸಾರ ಅಶೋಕ್” (ನಾನು ಸಾರ್ ಅಶೋಕ್) ಅಂದ. ಮನದಾಳದಿಂದ ಆಕೃತಿಯೊಂದು ಎದ್ದು ಮೂಡಿತು. ತರಗತಿಯ ಮೊದಲ ಸಾಲಿನಲ್ಲಿ ಮಾತು ಮೈ ತುಂಬ ಕಿವಿ ಮುಡಿದು ಶ್ರದ್ಧೆಯಿಂದ ಪಾಠ ಆಲಿಸುತ್ತಿದ್ದ ಹಾಗೂ ಪ್ರತಿಯೊಂದು ಪ್ರಶ್ನೆಗೂ ಚೂಟಿಯಾಗಿ ಉತ್ತರಿಸುತ್ತಿದ್ದ ಜಾಣ ಹುಡುಗ ಅಶೋಕ್. ಸದಾ ಸಂಕೋಚದಿಂದ ಮುದುಡಿಕೊಂಡಿರುತ್ತಿದ್ದ ಅಶೋಕ್; ನನ್ನಂಥ ಮೇಷ್ಟ್ರುಗಳಿಗೆ ಹೆದರಿ ಮೊಟ್ಟೆ ಉದುರಿಸುತ್ತಿದ್ದ ಅಶೋಕ್, ಆಗ ಪರಮ ಬ್ಯಾಚುಲರಾಗಿದ್ದ ನನ್ನ ಎಷ್ಟೋ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಶೋಕ್, ಮಧ್ಯಮ ತರಗತಿ ಕುಟುಂಬದ ಕನಸುಗಳ ನಿರಾಳದಲ್ಲಿ ಸದಾ ಬಚ್ಚಿಟ್ಟುಕೊಂಡಿರುತ್ತಿದ್ದ ಅಶೋಕ್. “ದೊಡ್ಡ ಡಾಕ್ಟರಾಗಬೇಕೋ ಮುಂದೆ” ಎಂದಾಗ “ಹ್ಹೂ ಸಾರ್” ಎನ್ನುತ್ತಿದ್ದ ಅಶೋಕ್. “ದೊಡ್ಡ ಇಂಜಿನಿಯರಾಗಬೇಕೋ” ಎಂದಾಗ “ಹ್ಹೂ ಸಾರ್” ಎನ್ನುತ್ತಿದ್ದ ಅಶೋಕ್. ನನ್ನ ನಿರೀಕ್ಷೆ ಮೀರಿ ಅಂಕಗಳಿಸಿ ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನನಗೆ ಅಪಾರ ಸಂತೋಷವುಂಟು ಮಾಡಿದವನು ಅವನು. ಸಹೋದ್ಯೋಗಿಗಳಿಗೂ ಮಿತ್ರರಿಗೂ ಸಿಹಿ ಹಂಚಿ ಸಂತೋಷ ಹಂಚಿಕೊಂಡವನು. ಅವನನ್ನು ಮನೆಗೆ ಕರೆದೊಯ್ದು “ಚೂಡರಾಬಾಬು” (ನೋಡು ಬಾಬು) ಎಂದು ಮಾತು ಆರಂಭಿಸಿ ಕಾಲೇಜು ಶಿಕ್ಷಣವನ್ನು ಹೇಗೆ ನಿಭಾಯಿಸಬೇಕೆಂದು ಸುದೀರ್ಘವಾಗಿ ವಿವರಿಸಿದೆನು. ನನ್ನ ಮಾತುಗಳನ್ನು ಕವಲೆತ್ತಿನಂತೆ ಶ್ರದ್ಧೆಯಿಂದ ಆಲಿಸುತ್ತಿರುವನೆಂದು ಖಚಿತಪಡಿಸಿಕೊಂಡು ಸ್ವಯಂ ಪಾಕವನ್ನು ನನ್ನ ಕೈಯಾರೆ ಬಡಿಸಿ ಅವನು ಊಟ ಮಾಡುತ್ತಿರುವುದನ್ನು ಕಣ್ತುಂಬ ನೋಡಿ ಸಂತೋಷಪಟ್ಟೆನು. +uಟಿಜeಜಿiಟಿeಜ +ಕೆಲವು ದಿನಗಳ ನಂತರ ಅವನು ಮುಖ ಇಳಿಬಿಟ್ಟುಕೊಂಡು ಬಂದು “ಕಾಲೇಜು ಚದುಕೋಡಾನಿಕಿ ಮಾ ನ್ನಾನ್ನಗಾರು ಒಪ್ಪುಕೋಲೇದು ಸಾರ್. ದಯಚೇಸಿ ಮೀರೊಚ್ಚಿ ನಚ್ಚ ಚಪ್ಪಂಡಿ” (ಕಾಲೇಜು ಓದುವುದಕ್ಕೆ ನನ್ನ ತಂದೆ ಒಪ್ಪಲಿಲ್ಲ ಸಾರ್. ನೀವು ಬಂದು ಒಪ್ಪುವಂತೆ ಹೇಳಿ) ಎಂದು ಅವನು ಕಣ್ಣೀರು ಕರೆದಾಗ ನಾನು ಆ ಕೂಡಲೆ ಅವರ ಮನೆಗೆ ಹೋದೆನು. ತುಸು ದೊಡ್ಡದಾದ ಹಳೇ ಕಾಲದ ಮನೆ ಅದಾಗಿದ್ದರೂ ಹೊಸ ಮನೆಗಳಿಗಿಂತ ಹೆಚ್ಚು ಬಂದೋಬಸ್ತಾಗಿತ್ತು. ಗೋಡೆಯ ತುಂಬ ಮಹಾತ್ಮ ಗಾಂಧೀಜಿಯಿಂದ ಹಿಡಿದು ಕಂದಕೂರಿ ವೀರೇಶಲಿಂಗಂ ಪಂತುಲುವರೆಗೆ ಹತ್ತಾರು ವರ್ಣ ಚಿತ್ರಗಳನ್ನು ನೇತುಹಾಕಿ ಅಲಂಕರಿಸಲಾಗಿತ್ತು. ಇನ್ನೊಂದು ಬದಿಗೆ ವಂಶಾವಳಿ ಹಿರಿಯರ ವರ್ಣಚಿತ್ರಗಳಿದ್ದರೆ ಇನ್ನೊಂದು ಕಡೆ ವಿಷ್ಣುವಿನ ದಶಾವತಾರಗಳನ್ನು ವರ್ಣಿಸುವ ಚಿತ್ರಗಳಿದ್ದವು. ಕೋಣೆಯೊಳಗಿಂದ ಕೆಲವು ಬಾಲಕಿಯರು ಕೂಚುಪುಡಿ ನೃತ್ಯ ಅಭ್ಯಾಸ ಮಾಡುವುದು ಕೇಳಿಬರುತ್ತಿತ್ತು. ಅಡುಗೆ ಮನೆಯಿಂದ ಪಾಕದ ಪರಿಮಳ ಸ್ವಾಗತಿಸುತ್ತಿರುವ ರೀತಿಯಲ್ಲಿ ತಾವು ಹಿಡಿದಿದ್ದ ಪುಸ್ತಕದಿಂದ ತಲೆ ಎತ್ತಿ “ಪಂತುಲುಗಾರು ರಂಡಿ ರಂಡೀ” (ಪಂತುಲುರವರೆ ಬನ್ನಿ ಬನ್ನಿ) ಎಂದು ಸ್ವಾಗತಿಸಿದರು. ಪ್ರಥಮ ನೋಟಕ್ಕೇ ತಿಳಿಯಿತು ಅವರು ಕಟ್ಟಾ ಸಂಪ್ರದಾಯವಾದಿಗಳೂಂತ. ಕುಚುಪುಡಿ ನೃತ್ಯದ ಸತತ ಅಭ್ಯಾಸದಿಂದ ಬಳುಕುತ್ತಿದ್ದ ಮೈಯ ಬೊಗಸೆಗಂಗಳ ತರುಣಿಯೋರ್ವಳು ನಿಂಬೆ ಪಾನಕವಿದ್ದ ಲೋಟ ತಂದುಕೊಟ್ಟಳು. ಕಣ್ಣಿಗೂ ನಾಲಿಗೆಗೂ ಹಾಯಿನಿಸಿತು. ಪರಸ್ಪರ ಉಭಯಕುಶಲೋಪರಿ ನಂತರ ಅಶೋಕನ ಕಾಲೇಜು ವಿದ್ಯಾಭ್ಯಾಸ ಕುರಿತು ಪ್ರಸ್ತಾಪಿಸಿದೆ. ತಮ್ಮ ಪೂರ್ವಜರು ಓರಂಗಲ್ಲು ಪ್ರತಾಪರುದ್ರ ಗಜಪತಿಯ ಆಸ್ಥಾನದಲ್ಲಿ ರಾಜಪುರೋಹಿತರಾಗಿದ್ದರು ಎಂಬಲ್ಲಿಂದ ಪ್ರಾರಂಭಿಸಿದ ಸ್ವಾತಂತ್ರ್ಯೋತ್ತರ ಪ್ರಜಾಪ್ರಭುತ್ವ ಸರಕಾರದ ಭೂಸುಧಾರಣಾ ಕಾಯದೆ ಭೂಮಿಯ ಬಹು ಭಾಗವನ್ನು ನುಂಗಿರುವವರೆಗೆ ಸುದೀಘವಾಗಿ ವಿವರಿಸಿದರು. ಉಳಿದಿರುವ ಭೂಮಿ ನೇಗಿಲು ಕಾಣದೆ ಬೀಳು ಬಿದ್ದಿರುವವರೆಗೆ ಹೇಳಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸೂಚ್ಯಕವಾಗಿ ತಿಳಿಸಿದರು. ವೈದಿಕ ಕಲಿತು ಕುಟುಂಬಕ್ಕೆ ಮಗ ಆಸರೆಯಾಗಲಿ ಎಂಬುದೆ ಮನೋಭಿಲಾಷೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಸ್ವಲ್ಪ ದೂರದ ಚಿತ್ತಾರದ ಕಂಬಕ್ಕಾತು ನಿಂತಿದ್ದ ಅಶೋಕನ ಆತಂಕಪೂರ್ಣ ಮುಖ ನನ್ನ ಮನಸ್ಸನ್ನು ಮತ್ತಷ್ಟು ಬಿಗಿ ಮಾಡಿತು. ನನ್ನ ಸಾಹಿತ್ಯ ಭಾಷೆಯ ನೂರುಪಟ್ಟುಗಳನ್ನು ಒಂದರ ಹಿಂದೆ ಒಂದರಂತೆ ಪ್ರಯೋಗಿಸಿ ರಾಯರನ್ನು ಒಂದು ಹದಕ್ಕೆ ತಂದೆ. ತುಳಸಿಕಟ್ಟೆಯ ಮುಂದೆ ಅಶೋಕ ಕಣ್ಣೀರು ತುಂಬಿ ಗದ್ಗದಿತನಾದನು. ಅವನ ಬೆನ್ನು ತಟ್ಟಿ ಧೈರ್ಯ ತುಂಬಿ ಸಾರ್ಥಕ ಭಾವದೊಡನೆ ಮನೆಗೆ ಮರಳಿದೆನು. ಅಶೋಕ್ ಗುಡಿವಾಡದ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದನ್ನು ಖಚಿತಪಡಿಸಿಕೊಂಡೆ. ಅಲ್ಲಿನ ಕವಿ ಮಿತ್ರ ಜೂಗಂಟೆ ಸತ್ಯಮೂರ್ತಿಗೆ ಪತ್ರ ಬರೆದು ಅಶೋಕ್ ಎಂಬ ವಿದ್ಯಾರ್ಥಿ ಬಗ್ಗೆ ಆಸ್ಥೆವಹಿಸಬೇಕೆಂದು ಕೋರಿದೆ. ಪ್ರಥಮ ಶ್ರೇಣಿಯಲ್ಲಿ ಪಾಸಾದ ಅವನು ತನ್ನ ಎರಡನೆ ವರ್ಷದ ವ್ಯಾಸಂಗಕ್ಕೆ ಎರಡು ಸಹಸ್ರ ರೂಪಾಯಿ ಬೇಕಾಗಿದೆ ಎಂದು ಬಂದು ಪ್ರಾರ್ಥಿಸಿದ. ಆಗ ನೂರೆಂಟು ಖರ್ಚಿನಲ್ಲಿ ಮುಳುಗಿಹೋಗಿದ್ದ ನನ್ನ ಕಿಸೆಯಲ್ಲಿ ಐವತ್ತು ರೂಪಾಯಿ ಸಹ ಇರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಯೋರ್ವನ ಭವಿಷ್ಯ ಕಮರದಿರಲೀ ಎಂಬ ಉದ್ದೇಶದಿಂದ ಅವರಿವರನ್ನು ಸಾಲ ಕೇಳಿ ನೋಡಿದೆ. ಸಿಗಲಿಲ್ಲ. ಅದಕ್ಕೆ ಕೆಲಕಾಲ ಮುಂಚೆ ಗೃಹಸ್ಥಾಶ್ರಮ ಪ್ರವೇಶಿಸಿದ ನನ್ನ ಕೈಬೆರಳಿನಲ್ಲಿ ಹೊಕ್ಕ ಮನೆಗೆ ಹೊನ್ನ ಉಂಗುರವಿತ್ತು. ಅದನ್ನು ಒತ್ತೆ ಇಟ್ಟುಕೊಂಡು ಅಷ್ಟು ಹಣ ಕೊಡುವ ಮಹಾನುಭಾವ ಯಾರೂ ಸಿಕ್ಕಲಿಲ್ಲ. ಧರ್ಮಪತ್ನಿಗೆ ಹೇಳಿಕೊಂಡರಾಯಿತೆಂದು ನಿರ್ಧರಿಸಿ ಮಾರಿದೆ. ಎರಡು ಸಾವಿರದ ಆರು ಮುಕ್ಕಾಲು ರೂಪಾಯಿ ಬಂದಿತು. ಅವನಿಗೆ ನಾಲ್ಕು ಬುದ್ಧಿ ಮಾತು ಹೇಳಿ ಎರಡು ಸಹಸ್ರ ರೂಪಾಯಿ ಕೊಟ್ಟು ಉಳಿದ ಆರು ಮುಕ್ಕಾಲು ರೂಪಾಯಿಯಲ್ಲಿ ಒಂದು ಚಹ ಕುಡಿದು ಒಂದೂವರೆ ಪ್ಯಾಕು ಸಿಗರೇಟು ಕೊಂಡೆ. +ಗುಡಿವಾಡ ನನ್ನ ಕಾರ್ಯಕ್ಷೇತ್ರದಿಂದ ತುಂಬ ದೂರವಿದ್ದರೂ ನನ್ನ ಪ್ರಿಯ ವಿದ್ಯಾರ್ಥಿಯ ವ್ಯಾಸಂಗ ನಡವಳಿಕೆಯನ್ನು ಸ್ಥೂಲವಾಗಿ ಗಮನಿಸುತ್ತಿದ್ದೆವು. ರಾಜ್ಯ ಸಂಗೀತ ನಾಟಕ ಅಕಾಡೆಮಿಯ ವಿಶೇಷ ಪ್ರಶಸ್ತಿ ಸ್ವೀಕರಿಸುವಾಗ ಅಷ್ಟಾವಧಾನಿ ಶಿವರಾಮರಾಯರು ಅರ್ಧಾಂಗವಾಯು ಪೀಡಿತರಾದ ದುರದೃಷ್ಟಕರ ಸಂಗತಿ ಅಶೋಕನ ಶಿಕ್ಷಣಕ್ಕೆ ಪ್ರಮುಖ ಅಡಚಣೆಯಾದರೆ ಎಂದು ಮೊದಲಿಗೆ ನಾನು ಆತಂಕಪಟ್ಟಿದ್ದುಂಟು. ಆದರೆ ರಾಯರ ಹಿರಿಯ ಮಗಳು ಅಲುಮೇಲಮ್ಮ ತನ್ನ ಮಗಳು ಮೀನಾಕ್ಷಿಯನ್ನು ಕಟ್ಟಿ ಹಾಕುವ ನಿಮಿತ್ತ ತಮ್ಮನ ಶಿಕ್ಷಣದ ಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಳು. ಆಕೆಯ ಗಂಡನ ವಂಶಾವಳಿಯಲ್ಲಿ ಎಲ್ಲೋ ಒಂದು ಕಡೆ ಇರುವ ಇಚ್ಚಿತ್ತ ರೋಗ ಮಗಳಲ್ಲೂ ಮರುಕಳಿಸಬಹುದೆಂದು ರಾಯರು ನೊಂದು ಕೊಳ್ಳುತ್ತಲೇ ಹಾಸಿಗೆಗೆ ಬೆನ್ನು ಪಾಲು ಮಾಡಿದ್ದರು. ಆ ಒಳಗೆ ನನಗೆ ವಿವಾಹವಾಗಿತ್ತಲ್ಲ! ತೆಲುಗಿನ ಗಂಧಕ್ಕೆ ಹೆದರಿ ವರ್ಗಾವಣೆ ಮಾಡಿಸಿಕೊಳ್ರಿ ಉಸಿರುಗಟ್ಟಿದಂಗಾಗ್ತತೆ ಎಂದು ದಿನಂಪ್ರತಿ ಗೋಳಾಡುತ್ತಿದ್ದಳಲ್ಲ! ನನ್ನ ಮನವಿಯನ್ನು ಅನುಲಕ್ಷಿಸಿ ಘನ ಸರಕಾರವು ಕರ್ನೂಲು ಜಿಲ್ಲೆಯ ಸದರಿ ಊರಿಗೆ ವರ್ಗಾವಣೆ ಮಾಡಿತ್ತಲ್ಲ! ಬಹುದೂರದ ಹೊಸ ಊರಿನಲ್ಲಿ ಹಳೆ ಊರಿನ ನೂಲಿನ ಕವಚದಿಂದ ಬಿಡಿಸಿಕೊಳ್ಳಲಿಕ್ಕೆ ತುಸು ಹಿಂಸಾತ್ಮಕ ಸಮಯವೇ ಹಿಡಿದಿತ್ತು. ಒಡಲ ನೂಲಿನ ಗೂಡಿನ ಕಳಚುವಿಕೆಯ ಜೊತೆಗೆ ಅಶೋಕನ ನೆನಪು ಕ್ರಮೇಣ ಕುಬ್ಜಗೊಂಡು ಇದೆಯೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಉಳಿದಿತ್ತು; ಬೀಜದೊಳಗಿನ ವೃಕ್ಷದಂತೆ; ಹಾಲಿನೊಳಗಿನ ಬೆಣ್ಣೆಯಂತೆ. ಭಾಷಣ: ಖಾಸಗಿ ಮಾತುಗಳಲ್ಲಿ ಆಗಾಗ್ಗೆ ಅಶೋಕನ ಬಗ್ಗೆ ಪ್ರಸ್ತಾಪಿಸುತ್ತ ಉಪಾಧ್ಯಾಯ ಜೀವನದ ಸಾರ್ಥಕತೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆನು. ಪ್ರತಿಭೆಯ ಬೆಳಕಿನಲ್ಲಿ ಪೂರ್ವಾಶ್ರಮ ಗೌಣವಾಗಿದ್ದರೇನಂತೆ; ಅಶೋಕ್ ಮಹಾನ್ ವ್ಯಕ್ತಿಯಾಗಿಯೋ ಮಹಾನ್ ತಜ್ಞನಾಗಿಯೋ ನಿಷ್ಕಾಮಕರ್ಮಯೋಗಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರಾಯಿತೆಂದುಕೊಂಡು ನಿಶ್ಚಿಂತೆಯಿಂದ ಇದ್ದೆನು. uಟಿಜeಜಿiಟಿeಜಮತ್ತೊಮ್ಮೆ ಆಗಂತುಕನನ್ನು ಅಪಾದಮಸ್ತಕ ನೋಡಿ ಅಶೋಕನೇ ಇವನೆಂದು ಖಚಿತಪಡಿಸಿಕೊಂಡೆನು. ಅವನು ಒಂದೆರಡು ದಿನಗಳಿಂದ ಮುಖ ತೊಳೆಯದಿರುವುದಷ್ಟೇ ಅಲ್ಲ ಊಟ ಸಹ ಮಾಡಿರಲಿಕ್ಕಿಲ್ಲ ಅನ್ನಿಸಿತು. ತಲೆಗೂದಲು ಎಣ್ಣೆ ನೀರು ಕಾಣದೆ ಗಂಟುಗಂಟಾಗಿ ಇಳಿಬಿದ್ದಿದ್ದವು. ಅವನ ಅವಸ್ಥೆ ಕುರಿತು ಕೇವಲ ದಿಗ್ಭ್ರಮೆಗೊಂಡರಾಯಿತೆ! ಕರುಣೆಯ ಸೆಳೆವಿನಲ್ಲಿ ಕೊಚ್ಚಿ ಹೋಗುತ್ತಲೆ ವಾಸ್ತವದ ದಡ ತಲುಪಿದೊಡನೆ “ಅಶೋಕಾ….ಅಶೋಕಾ” ಎಂದು ಕೈ ಕುಲಿಕಿ ಕುರ್ಚಿಯಲ್ಲಿ ಕುಳ್ಳಿಸಿರಿ “ಚೆಪ್ಪೆವಯ್ಯಾ ಚೆಪ್ಪು…. ನೀ ಕಥ ಏಮಿಟಿ ಚಪ್ಪವಯ್ಯಾ” (ಹೇಳಯ್ಯಾ ಹೇಳು…. ನಿನ್ನ ಕಥೆ ಏನು ಹೇಳಯ್ಯಾ) ಎಂದು ಪರಮವಿಧೇಯ ವಿದ್ಯಾರ್ಥಿಯಂತೆ ಅವನ ಎದುರಿಗೆ ಕುರ್ಚಿ ಎಳೆದುಕೊಂಡು ಕೂತೆನು. “ಸಾರ್ ಮನ ಸೊಸೈಟಿ ಪಾಡೈ ಪೋಯಿಂದಿ” (ಸಾರ್ ನಮ್ಮ ಸಮಾಜ ಹಾಳಾಗಿಹೋಗಿದೆ) ಎಂದು ಆರಂಭಿಸಿದ. ಮಾವೋ ಲೆನಿನ್ಲಾಂಟಿವಾಳ್ಳು ಮನ ದೇಶಂಲೋ ಅವತರಿಂಚಾಲಿ… (ಮಾವೋ, ಲೆನಿನ್ ಅಂಥಹವರು ನಮ್ಮ ದೇಶದಲ್ಲಿ ಅವತರಿಸಬೇಕಾಗಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ) ಅವತರಿಂಚೇ ಅವಕಾಶಲು ಚಾಲಾ ವುನ್ನಾಯಿ. ಮೇಮು ದಾನಿಕೋಸಂ ಎದುರು ಚೂಸ್ತುನ್ನಾಮು ಎಂದು ಆಕಾಶದಿಂದ ಮಳೆ ಸುರಿದಂತೆ ಹೇಳಿದ. ಮಾತಿನುದ್ದಕ್ಕೂ ಮಾವೋ, ಮಾರ್ಕ್ಸ್, ಏಂಗೆಲ್ಸ್ ಮುಂತಾದವರ ಸೂಕ್ತಿಗಳನ್ನು ಧಾರಾಳವಾಗಿ ಬಳಸಿದ. ಚೀನಾ, ರಷ್ಯಾ, ಕ್ಯೂಬಾ ಗೀಬಾ ಅಂತ ಅನೇಕ ದೃಷ್ಟಾಂತಗಳನ್ನು ಪೋಣಿಸಿದ. ಅವನು ತೆಲುಗು ಭಾಷೆ ಮಾತ್ರವಲ್ಲದೆ ಇಂಗ್ಲೀಷಿನಲ್ಲೂ ಪ್ರೌಢಿಮೆ ಸಾಧಿಸಿರುವುದು ಕಂಡು ಎಷ್ಟು ಹೆಮ್ಮೆಯಾಯಿತೋ ಅಷ್ಟೇ ಬೇಸರವಾಯಿತು – ದಿಢೀರ್ ಸಮಾಜ ಬದಲಾವಣೆಯ ಹುಚ್ಚು ಹಿಡಿದಿರುವುದು ಕಂಡು. ನೀರು ಕೇಳಿದ ತಂದುಕೊಟ್ಟೆ, ಗಟಗಟ ಕುಡಿದು ಒಂದು ಕ್ಷಣ ಧೀಘ್ರವಾಗಿ ಉಸಿರಾಡಿದ. ಮತ್ತೇರಿದಂತೆ ಕಂಡ. ಆತನ ಕಣ್ಣ ಕೆಂಪಿನಲ್ಲಿ ಸಿಟ್ಟು ಅವಸರ ನಿರಾಸೆ ಸಮಸಮನಾಗಿದ್ದವು. ಅವನಿಗೆ ರುಚಿಸುವಂಥ ಯಾವ ಮಾತನ್ನೂ ಆಡಲಾರೆನೆನ್ನಿಸಿತು. ಪ್ರತಿಯಾಗಿ ಒಂದು ನಿಟ್ಟುಸಿರುಬಿಡದೆ ಮತ್ತೇನು ಮಾಡಲಿ? ಅವನ ವಿಚಾರಗಳಿಗೆ ಮೆಚ್ಚುಗೆ ಸೂಚಿಸುವುದಾಗಲೀ; ವಿರೋಧ ಸೂಚಿಸುವುದಾಗಲೀ ಆಗದೆ ವಿಚಿತ್ರ ಸಂಕಟದಲ್ಲಿ ಬೇಯ ತೊಡಗಿದೆನು. ಯಾವ ಆಲೋಚನೆಯೂ ಸ್ಪಷ್ಟ ಮಾತಿನ ರೂಪ ಪಡೆಯದೆ ಗಂಟಲಲ್ಲಿ ಕಮರಿದಾಗಲೇ ನನ್ನ ಅಸಹಾಯಕತೆ ನನಗೆ ಅರ್ಥವಾದದ್ದು. ಇದು ದೌರ್ಬಲ್ಯವೆಂದರೂ ಸರಿಯೇನೋ! +ಶಿಕ್ಷಕನೊಳಗೆ ಮಾತೃ ಕರುಳು ಇರುತ್ತದೆನ್ನುವುದಕ್ಕೆ ನಾನೇ ಸಾಕ್ಷಿ ನೋಡಿ. ನನ್ನೊಳಗೆ ಮಾತೃ ಕರುಳನ್ನು ಜಾಗೃತಗೊಳಿಸಿದ್ದು ಅವನ ದೇಹ ಹೊರಸೂಸುತ್ತಿದ್ದ ಕೊಳೆ ವಾಸನೆಯೆ! ಅದೇ ಹೊತ್ತಿಗೆ ಅವನು “ಸಾರ್ ರೆಂಡು ರೋಜುಲನುಂಡಿ ಏಮೀ ತಿನಲೇದು, ಆಕಲಿ” (ಸಾರ್ ಎರಡು ದಿನಗಳಿಂದ ಏನೂ ತಿಂದಿಲ್ಲ ಹಸಿವು) ಎಂದು ಹೇಳಿದೊಡನೆ ಮತ್ತಷ್ಟು ಎಚ್ಚರ ಗೊಂಡೆನು. “ಒಕ್ಕ ನಿಮಿಷಮು ಉಂಡು” (ಒಂದು ನಿಮಿಷ ಇರು) ಅಂತ ಹೇಳಿ ಅಡುಗೆ ಮನೆಗೆ ಹೋದೆನು. ಅಡುಗೆಮನೆಯನ್ನೇ ಬಾರ್ಸಿಲೋನ ಒಲಂಪಿಕ್ಸ್ ಗ್ರವಂಡು ಮಾಡಿಕೊಂಡು ಅಂತರ್ರಾಷ್ಟ್ರೀಯ ಕ್ರೀಡಾಪಟುಗಳಂತೆ ಎಗರಾಡುತ್ತಿದ್ದ ಹತ್ತಾರು ಇಲಿಗಳು ನನ್ನ ಪ್ರವೇಶದಿಂದ ಬೇಸರ ಮತ್ತು ಆತಂಕ ವ್ಯಕ್ತಪಡಿಸುತ್ತ ಎಲ್ಲಿ ಬೇಕೆಂದರಲ್ಲಿ ಕಿಮಕ್ಕೆನ್ನದೆ ಅಡಗಿಕೊಂಡು ಬಿಟ್ಟವು. ನನಗೆ ವಿಚಿತ್ರ ಧೈರ್ಯ ಬಂದು ಅಲ್ಲಿದ್ದ ಎಲ್ಲ ಪಾತ್ರೆಗಳನ್ನು ಎತ್ತೆತ್ತಿ ನೋಡಿ ಅವು ಖಾಲಿ ಇರುವುದನ್ನು ಖಚಿತಪಡಿಸಿಕೊಂಡೆನು. ಪ್ರತಿ ಖಾಲಿ ಪಾತ್ರೆ ಮಾಡುತ್ತಿದ್ದ ಸದ್ದಿಗೂ ಅವನ ದೃಷ್ಟಿ ತೀಕ್ಷ್ಣವಾಗಿ ಸ್ಪಂದಿಸುತ್ತಿತ್ತು. ನನ್ನ ಪ್ರಿಯ ವಿದ್ಯಾರ್ಥಿಯ ಹಸಿವೆಯನ್ನು ಹಿಂಗಿಸದೆ ಇರಲಿಕ್ಕಾದೀತೆ! ಸೀದಾ ಧರ್ಮಪತ್ನಿ ಮಲಗಿದ್ದ ಸೊಳ್ಳೆ ಪರದೆ ಬಳಿಗೆ ಹೋದೆನು. ಪರದೆ ಎತ್ತಿ ನೋಡಿದೆ. ಆಕೆ ಕಳ್ಳನಿದ್ದೆ ಮಾಡುತ್ತಿದ್ದುದಂತೂ ಸ್ಪಷ್ಟವಾಗಿತ್ತು! ಅನ್ನಪೂರ್ಣಽ ಅನ್ನಪೂರ್ಣಽ ಎಂದು ಚಿನ್ನದ ಓಲೆಗಳಿದ್ದ (ಕಳೆದ ತಿಂಗಳು ಅರಿಯರ್‍ಸ್ ಬಂದಿದ್ದಾಗ ಮಾಡಿಸಿದ್ದು) ಕಿವಿಯಲ್ಲಿ ಪಿಸುಗುಟ್ಟಿದೆ ‘ಏನ್ರಿ’ ಎಂದಳು. “ಎದ್ದೇಳು ಕೆಲಸ ಇದೆ ಕಣೇ!” ಅಂದೆ. ಯಾಕೆ ಅಂದಳು “ನನ್ನ ಓಲ್ಡ್ ಸ್ಟೂಡೆಂಟೊಬ್ಬ ತುಂಬ ಹಸಿದು ಬಂದಿದ್ದಾನೆ ಅದ್ಕೆ” ಅಂದೆ. ‘ನನ್ನಿಂದ ಸಾಧ್ಯ ಇಲ್ಲ. ಬೇಕಿದ್ರೆ ನೀವೆ ಮಾಡ್ಕೊಡಿ ಹೋಗಿ…. ನನಗೆ ಸೊಂಟ ನೋವು’ ಎಂದು ಮಗ್ಗುಲು ಬದಲಾಯಿಸಿ ಮಲಗಿದಳು. ಒತ್ತಾಯಿಸಲಿಕ್ಕಾದೀತೆ? ಪಿಸಿಪಿಸಿ ಮಾತು ಅವನಿಗೆ ಕೇಳಿಸಿರಲಿಕ್ಕಿಲ್ಲೆಂದು ಖಚಿತಪಡಿಸಿಕೊಂಡೆ. ಅಶೋಕನಿಗೆ ಪುಸ್ತಕಗಳನ್ನು ನೋಡುತ್ತಿರಲು ಹೇಳಿ ಅಡುಗೆ ಮನೆ ಪ್ರವೇಶಿಸಿದೆ. ಸೆಲ್ಫ್‌ನಲ್ಲಿ ಒಂದೇ ರೀತಿಯ ಅಲ್ಯೂಮಿನಿಯಂ ಡಬ್ಬಿಗಳು. ಗಂಡಸಾದರೆ ನೀನು ನಮ್ಮೊಳಗೇನಿದೆ ಗುರುತಿಸಬಲ್ಲೆ ಏನು! ಎಂದು ಸವಾಲು ಹಾಕುವಂತಿದ್ದವು. ಒಂದೊಂದು ಡಬ್ಬಿಯೊಳಗೂ ಒಂದೊಂದು ವಿಧದ ಪದಾರ್ಥಗಳಿದ್ದವು ಎರಡು ದಿನ ಉಪವಾಸವಿರುವಂಥ ಪುಷ್ಕಳ ಭೋಜನ ಮಾಡಲೆಂದು ಅರ್ಧ ಸೇರು ಅಕ್ಕಿ ಪಾತ್ರೆಗೆ ಸುರುವಿ ತೊಳೆಯತೊಡಗಿದೆ. ಅಷ್ಟರೊಳಗೆ ಅನ್ನಪೂರ್ಣ ಬಂದು ಉಸ್ತುವಾರಿ ವಹಿಸಿಕೊಳ್ಳುತ್ತ ವರ್ತಮಾನದ ಸೂಕ್ಷ್ಮತೆಗಳ ಕುರಿತು ಗೊಣಗಲಾರಂಭಿಸಿದಳು. ನಾನೂ ಮಾತಾಡತೊಡಗಿದರೆ ಅವನು ಕೇಳಿಸಿಕೊಂಡಾನೆಂದೂಹಿಸಿ ಅಲ್ಲಿಂದ ಮೆಲ್ಲಗೆ ಕಾಲು ಕಿತ್ತೆನು. +ಸೆಲ್ಫ್‌ನಿಂದ ಹತ್ತಾರು ಪುಸ್ತಕಗಳನ್ನು ಕಿತ್ತು ಮುಂದೆ ಹರವಿಕೊಂಡು ಕೂತಿದ್ದ. ಹತ್ತಾರು ಪುಸ್ತಕಗಳನ್ನು ಒಂದೇ ಬಾರಿಗೆ ಓದಲು ಪ್ರಯತ್ನಿಸುತ್ತಿರುವಂತೆ ಕಂಡ. ಅವನ ಕಣ್ಣಾಲಿಗಳು ಸರಪರ ಹರಿದಾಡುತ್ತಿದ್ದವು. ಪ್ರತಿ ಕ್ಷಣಕ್ಕೊಮ್ಮೆ ಗಡ್ಡ ಅಥವಾ ತನ್ನ ದೇಹದ ಭಾಗವನ್ನು ತುರಿಸಿಕೊಳ್ಳುತ್ತಿದ್ದ. ಅಷ್ಟೇ ತೀಕ್ಷ್ಣವಾಗಿ ನನ್ನತ್ತ ದಿಟ್ಟಿಸುತ್ತಿದ್ದನೂ ಸಹ. ಇದರಿಂದ ನನಗೆ ಇರುಸು ಮುರುಸು. ತನ್ನ ಅನಿರೀಕ್ಷಿತ ಆಗಮನದಿಂದ ನನಗೆ ಬೇಸರವಾಗಿರಬಹುದೆಂಬ ಆತಂಕವೂ ಇತ್ತು. “ಸಾರ್ ನಾನು ಬಂದಿದ್ರಿಂದ ನಿಮ್ಗೆ ತೊಂದ್ರೆ ಆಯ್ತೋ ಏನೋ….” ಜೇಬಿನಿಂದ ಒಂದು ಚುಟ್ಟ ಕೀಳುತ್ತ “ಇಫ್ ಯು ಡೋಂಟ್ ಮೈಂಡ್….” ಅಂದ. ಅಲ್ಲೇ ಇದ್ದ ಕಡ್ಡಿ ಪೊಟ್ಟಣದಿಂದ ಹಚ್ಚಿಕೊಂಡ…. ಅವನ ಕೈಗಳು ವಿಚಿತ್ರವಾಗಿ ಕಂಪಿಸುತ್ತಿದ್ದವು….. ಆ ಚುಟ್ಟದಿಂದ ಎರಡು ಧಂ ಎಳೆದ. ಹೊಗೆ ದಟ್ಟವಾಗಿ ಕೋಣೆ ಆವರಿಸಿತು. “ನಿಮ್ಗೆ ಬೇಸರವಾಗಿದೆ. ದಯವಿಟ್ಟು ಕ್ಷಮಿಸಿ. ಇಲ್ಲಿಗೆ ಬಾರದೆ ನನಗೆ ಬೇರೆ ದಾರಿಯೇ ಇರಲಿಲ್ಲ….” ಅಂದ. “ದಯವಿಟ್ಟು ಕ್ಷಮಿಸಿ” ಎಂಬ ಶಬ್ದಗಳನ್ನು ಇನ್ನೂ ಉಚ್ಚರಿಸಬಲ್ಲನಾತ. ಆತನ ಭುಜ ಅದುಮಿ ನೀನು ನನಗೆ ತಮ್ಮನಿದ್ದ ಹಾಗೆ ಅಂದೆ. ನಾವಿಲ್ಲಿರೋದು ನಿನಗೆಂಗೆ ಗೊತ್ತಾಯ್ತು ಅಂದೆ… ನಮಗೆ ಎಲ್ಲ ಗೊತ್ತಾಗ್ತಿರ್‍ತದೆ ಅಂದ. ಇಲ್ಲೆಲ್ಲ ನಂ ಪಾರ್ಟಿ ವರ್ಕರ್‍ಸ್ ಇದ್ದಾರೆ ಅಂದ. ಅವರೆಲ್ಲ ಪೋಲೀಸ್ರ ಕಣ್ತಪ್ಪಿಸಿ ಅಂಡರ್ ಗ್ರೌಂಡ್ ಸೇರ್‍ಕೊಂಡಿದಾರೆ ಅಂದ. ಮತ್ತೆ ನನ್ನ ಕಡೆ ನೋಡಿದ. ನಾನು ನಿರ್ವಿಕಾರದಿಂದ ಇದ್ದೆ. ಯಾಕೆ ಹೀಗೆಲ್ಲ ಅಂದೆ. ಹೋರಾಟ ಅಂದ. ಬೂರ್ಜ್ವಾ ವ್ಯವಸ್ಥೆ ವಿರುದ್ಧ ಉಗ್ರ ಹೋರಾಟ ಅಂದ. ಅವನು ಮಾತಾಡುತ್ತಿರಲಿಲ್ಲ. ಸ್ಫೋಟಿಸುತ್ತಿರುವನೆನ್ನಿಸಿತು. ಗಾಬರಿಯಾಯಿತು. ಅವನನ್ನು ಕುರಿತು ಕೇಳಬೇಕೆಂದಿದ್ದ ಎಷ್ಟೋ ಪ್ರಶ್ನೆಗಳು ಹಾಗೇ ಉಳಿದವು. ಅವುಗಳನ್ನು ಚಿವುಟಿದೆ ನಿರ್ದಾಕ್ಷಿಣ್ಯದಿಂದ. ಅದೇ ಸಮಯಕ್ಕೆ ವಿದ್ಯುಚ್ಛಕ್ತಿ ಬಂತು. ದೀಪಗಳು ವಿಶೇಷ ಕಾಂತಿಯಿಂದ ಬೆಳಗತೊಡಗಿದವು. ಸಾರ್ ದಯವಿಟ್ಟು ಲೈಟಾಫ್ ಮಾಡಿ…. ಚಿಮಣಿ ದೀಪ ಸಾಕು…. ನಾನು ಪ್ರತಿಕ್ರಿಯಿಸುವ ಮೊದಲೇ ತಾನೇ ಆಫ್ ಮಾಡಿದ. ನಾನಿಲ್ಲಿರೋದು ಪೋಲೀಸ್ರಿಗೆ ತಿಳಿದ್ರೆ ನಿಮ್ಗೆ ಅಪಾಯ ಅಂದ. ಅಶೋಕ್ ನೀನು ಏನು ಹೇಳ್ತಿರೋದು ಅಂದೆ…. ಹೌದು ಸಾರ್ ಇದ್ರಲ್ಲಿ ಆಶ್ಚರ್ಯ ಪಡೋದೇನೂ ಇಲ್ಲ. ನನ್ ಮೇಲೆ ಪೋಲೀಸ್ರು ಒಂದು ಸುಳ್ಳು ಕೊಲೆ ಕೇಸ್ ಹೊರ್‍ಸಿ ಬಂಧಿಸಿದ್ರು…. ಪೊಲೀಸರೆಂದರೆ ಬಾಲ್ಯದೆಸೆಯಿಂದಲೇ ಹೆದರುವ ನಾನು ನಿಜಕ್ಕೂ ಹೆದರಿದೆ. ಕಿಟಕಿ, ಬಾಗಿಲು ಭದ್ರಪಡಿಸಿ ಬಂದೆ. ಚಿಮಣಿ ದೀಪದ ಬೆಳಕಿನಲ್ಲಿ ಅವನ ದೇಹದ ನೆರಳು ಗೋಡೆ ಮೇಲೆಲ್ಲ ವ್ಯಾಪಿಸಿದ್ದು ಭಯ ತರುವಂತಿತ್ತು. ಒಂದು ಕಾಲದಲ್ಲಿ ಪ್ಯಾಂಟು ಬದಲಾಯಿಸಲೂ ಅರಿಯದ ಶಿಷ್ಯೋತ್ತಮ ಈಗ ಸಮಾಜವನ್ನು ಅಮೂಲಾಗ್ರ ಬದಲಾಯಿಸಲು ಹೋರಾಡುತ್ತಿರುವುದನ್ನು ಹೇಗೆ ಸಂಬಾಳಿಸುವುದೋ ತಿಳಿಯದಾಯಿತು. ಎಲ್ಲರನ್ನೂ ಒಂದು ಕಡೆಯಿಂದ ಬೂರ್ಜ್ವಾ ಎಂದುಕೊಳ್ಳುತ್ತ ಬರುತ್ತಿರುವ ಈ ಮಹಾಶಯ ತನ್ನ ಹಣೆಗೆ ಈ ಪಟ್ಟಿ ಕಟ್ಟಲಾರ ಬಹುಶಃ!…. ಪೊಲೀಸರಿಗೆ ಬೇಕಾಗಿರುವ ಅವನು ಹಾಗೆ ಎಲ್ಲಿ ಪರಿಭಾವಿಸಿಯಾನೋ ಎಂದು ನಾನು ಒಂದು ಕ್ಷಣ ಒಳಗಿದ್ದೇ ಇನ್ನೊಂದು ಕ್ಷಣ ಪಡಸಾಲೆಗೆ ಬರುತ್ತ ಮತ್ತೊಂದು ಕ್ಷಣ ಮಲಗಿದ್ದ ಮಕ್ಕಳ ಹೂಗೆನ್ನೆಗೆ ಮುದ್ದಿಸುತ್ತ ಮಗದೊಂದು ಕ್ಷಣ ಆಧುನಿಕ ಸಾಹಿತ್ಯ ಸಮಾಜಾಭಿಮುಖವಾಗುತ್ತಿರುವುದರ ಕುರಿತು ಬಡಬಡಿಸುತ್ತ ಬಾಯಾರತೊಡಗಿದೆ. ಅಡುಗೆ ಮನೆಗೆ ಹೋಗುತ್ತಲೆ ಹೆಂಡತಿ ತನ್ನ ಬಾಯಿಯನ್ನು ತಪ್ಪದೆ ನನ್ನ ಕಿವಿಯಲ್ಲಿ ಇಟ್ಟು ಮಥಿಸುತ್ತಿದ್ದಳು. ಎಂಥೆಂಥ ಸ್ಟೂಡೆಂಟ್ಸ್ ಇದಾರಲ್ರೀ ನಮ್ಗೆ…. ಅಯ್ಯೋ ಶಿವ್ನೆ…. ಪೊಲೀಸ್ರ ಕಣ್ಣಿಗೆ ಬಿದ್ರೆ ನಮ್‌ಗತಿ ಏನು…. ಇತ್ಯಾದಿ…. ಇತ್ಯಾದಿ. ಅವಕ್ಕೆಲ್ಲ ಏನಂತ ಉತ್ತರಿಸಲಿ! ಪಲ್ಯ ಹೀಗಿರಲಿ : ಚಟ್ನಿ ಹಾಗಿರಲಿ. ತುಪ್ಪ ಇದೆಯೋ ಇಲ್ಲವೋ ಎಂದು ತಪಶೀಲು ನಡೆಸಿದೆ. ಕುಕ್ಕರ್ ಹೆಚ್ಚು ಸದ್ದು ಮಾಡದ ಹಾಗೆ ನೋಡಿಕೊಳ್ಳುವಷ್ಟರಲ್ಲಿ ಸಾಕು ಸಾಕಾಗಿಹೋಯಿತು. ಅಡುಗೆ ಆಗುವುದರೊಳಗೆ ಅವನು ಸ್ನಾನನಾದ್ರು ಮಾಡಬಹುದಲ್ಲ! ಸೀದ ಹೊರಗಡೆ ಬಂದವನೆ ಅಶೋಕ್ ಸ್ನಾನ ಮಾಡುಬಾರಪ್ಪ ಅಂದೆ. ಬೇಡ ಸಾರ್ ಹತ್ತಿರದಲ್ಲೆಲ್ಲೊ ಪೊಲೀಸ್ ವಿಝಲ್ ಕೇಳಿಸ್ತಾ ಇದೆ. ಅದೂ ಅಲ್ದೆ ಬೇರೆ ಬಟ್ಟೆ ಇಲ್ಲ…. ಅಂದ. ನಿನ್ನ ರಕ್ಷಿಸೋ ಜವಾಬ್ದಾರಿ ನನ್ನದು. ಹಾಗೆಲ್ಲ ಯೋಚಿಸಬೇಡ ಎದ್ದೇಳು ಎಂದು ಎಬ್ಬಿಸಿದೆ. ಬಾತ್ರೂಮಿಗೆ ಕರೆದೊಯ್ದು ಟವಲ್ಲು, ಸೋಪು, ನೀರು ಬ್ರಷ್ ಎಲ್ಲ ಪರಿಚಯಿಸಿದೆ. ಮೆಲ್ಲಗೆ ಅಡುಗೆ ಮನೆಗೆ ಬಂದು ಶಾಂಪೂ ಎಲ್ಲಿದೆಯೇ ಅಂದೆ. ಪಂಚಾಯ್ತಿ ನಡೆಸಿ ತಂದುಕೊಟ್ಟೆ. ಶಾಂಪೂ ಹಾಕಿ ತಲೆ ಸ್ನಾನ ಮಾಡು ಅಶೋಕ್, ಫ್ರೆಷ್ ಆಗ್ತೀಯಾ ಎಂದೆ…. ಸ್ನಾನದ ನಂತರ ಅವನಿಗೆ ತೊಡಲು ಒಂದು ಜೊತೆ ಬಟ್ಟೆ ಬೇಕಲ್ಲ! ಯಾವುದಾದ್ರೂ ಹಳೇ ಪ್ಯಾಂಟು ಹಳೇ ಷರ್ಟು ಕೊಡ್ರಿ ಎಂದು ಅವಳು ಚಿಟಿಪಿಟಿ ಆಡುತ್ತಿದ್ದರೂ ಲೆಕ್ಕಿಸದೆ ಕಳೆದ ತಿಂಗಳು ಹೊಲಿಸಿದ್ದ ಪ್ಯಾಂಟು ಷರ್ಟು, ಒಂದು ಬಳಸದೆ ಇದ್ದ ಹೊಸ ಅಂಡರ್‌ವೇರೂ ಬನಿಯನ್ನೂ ಎಲ್ಲ ತಂದು ಅದೇ ತಾನೆ ಸ್ನಾನ ಮುಗಿಸಿದ ಅಶೋಕನಿಗೆ ಕೊಟ್ಟೆ, ಬೇಡಬೇಡವೆಂದು ಅವನು ಮೊದಲು ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡ. ನಾನು ಕೊಟ್ಟ ಬಾಚಣಿಗೆಯಿಂದ ಬಾಚಿಕೊಂಡ. ಅವನು ಸೌಮ್ಯತೆಯಿಂದ ಮಾಡಲ್ಪಟ್ಟಂತೆ ಕಂಡ. ಸಾರ್ ನನ್ನ ಬಿಟ್ಟ ಬಟ್ಟೆಗಳನ್ನು ಬೆಳಕು ಹರಿಯುವುದರೊಳಗಾಗಿ ಸುಟ್ಟುಬಿಟಿ…. ಇಲ್ಲಾಂದ್ರೆ ನಿಮ್ಗೆ ತೊಂದ್ರೆ! ಮೆಲುದನಿಯಲ್ಲಿ ಪಟಪಟ ನುಡಿದ. ನಾನು ಕೊಟ್ಟ ಕನ್ನಡಿಯನ್ನು ಟೇಬಲ್ ಮೇಲೆ ಬೋರಲು ಮಲಗಿಸಿದ : ಬದುಕಿನಿಂದಲೇ ಕನ್ನಡಿಯನ್ನು ದೂರ ಇಟ್ಟವನಂತೆ. ಶ್ರೀಮತಿಗೆ ಹೇಳಿದರೆ ಗುಟ್ಟಾಗಿ ಬಟ್ಟೆ ಸುಡೋದೆಂದರೆ ರಹಸ್ಯವಾಗಿ ಹೆಣ ಸುಟ್ಟಂತೆಯೇ ಎನ್ನದೆ ಇರಳು. ನಾನೇ ಹೋಗಿ ರಕ್ತದ ಕಲೆಗಳು ಇರಬಹುದಾದ ಅವನ ಬಟ್ಟೆಗಳನ್ನು ಗಂಟು ಕಟ್ಟಿಟ್ಟು ಬಂದೆ. +uಟಿಜeಜಿiಟಿeಜ‌ಅಡುಗೆ ರೆಡಿ ಎಂದು ಇಡೀ ಮನೆ ಹೇಳುತ್ತಿತ್ತು. ಅಡುಗೆ ಮನೆ ಪ್ರವೇಶಿದೆ. ಕ್ರಿಮಿನಲ್ಲಿಗೆ ಊಟ ಹಾಕಿ ಮತ್ತೊಂದು ಅಪರಾಧ ಮಡೋದಿಲ್ಲ ಕಣ್ರೀ ಎಂದಳು. ನನ್ನ ಸಂತೋಷದಲ್ಲಿ ಭಾಗಿಯಾಗೋದು ಕ್ರೈಂ ಹೇಗಾಗುತ್ತೆ ಅಂದೆ. ಹೀಗೆ ನನ್ನ ಕಿವಿಗಳನ್ನು ಅವಳೂ ಅವಳ ಕಿವಿಗಳನ್ನು ನಾನೂ ಗುತ್ತಿಗೆ ಹಿಡಿದವರಂತೆ ಚರ್ಚಿಸಿದೆವು. ಅಂತೂ ಆಕೆ ಊಟ ಬಡಿಸಲು ಒಪ್ಪಿದಳು. ನಾನು ಕರೆಯಲು ಅವನು ಬಂದು ಎಲೆ ಮುಂದೆ ಕೂತ. ಒಂದೊಂದು ಸೆಕೆಂಡು ಒಂದೊಂದು ಯುಗಗಳಾಗಿದ್ದವು ಅವನ ಪಾಲಿಗೆ. ಬಡಿಸುವ ಕೆಲಸದಲ್ಲಿ ಆಕೆಗೆ ನಾನು ಸಹಕರಿಸಿದೆನು. ಅನ್ನ ಕಂಡಿದ್ದನೋ ಇಲ್ಲವೋ ಎಂಬಂತೆ ಅವನು ಉಣ್ಣುತ್ತಿದ್ದುದು ನನ್ನ ಕಣ್ಣಾಲಿಗಳನ್ನು ತೇವಗೊಳಿಸಿತು. ನಮ್ಮ ಅಂತಃಕರಣವೇ ಅಶೋಕನ ರೂಪದಲ್ಲಿ ಹಸಿದಿದೆ ಎನ್ನಿಸಿತು. ಅದನ್ನು ತಣಿಸುವ ದಿಸೆಯಲ್ಲಿ ನಮ್ಮದೊಂದು ಸಣ್ಣ ಪ್ರಯತ್ನವಷ್ಟೆ! ಇಂಥ ಸಂತೋಷಕ್ಕೆ ಸಾಟಿಯಾದ ವಸ್ತು ಯಾವುದುಂಟು! ನಾವು ನೀಡಿ ನೀಡಿ ದಣಿಯಲಿಲ್ಲ. ಆದರೆ ಅವನು ಸ್ವಲ್ಪ ಹುಳಿ ಇದ್ದ ಮಜ್ಜಿಗೆ ಅನ್ನಕ್ಕೆ ಬೆರೆಸಿ ಉಂಡು ತೃಪ್ತಿಯ ಡೇಗುಡೇಗಿದ. ಆ ಸದ್ದು ಕೋಣೆ ತುಂಬಿ ಮಾರ್ಮಲೆಯಿತು. ಆ ಸದ್ದಿನೊಳಗೆ ನಮ್ಮಿಬ್ಬರನ್ನು ಕುರಿತ ಕೃತಜ್ಞತೆಯ ಛಾಯೆ ಇತ್ತು. ಜಗತ್ತನ್ನೇ ಗೆಲ್ಲುವೆನೆಂಬ ಆತ್ಮವಿಶ್ವಾಸ ಅವನ ಕಣ್ಣುಗಳಲ್ಲಿ ಮಿನುಗಲಾರಂಭಿಸಿತ್ತು. ನಾವು ಬಡಿಸಿದ ಆಹಾರದಿಂದಲಾದರೂ ಅವನು ಸತ್ಕಾರ್ಯ ಮಾಡುವಂತಾಗಲಿ ಎಂದು ಮನಸ್ಸಿನಲ್ಲಿ ಹಾರೈಸಿದೆನು. +ಬಗಲ ಚೀಲದಿಂದ ಒಂದು ಪುಸ್ತಕ ತೆಗೆದು ನನಗಿತ್ತ “ನಾನು ಬರೆದ ಕಥೆಗಳು ಸಾಧ್ಯವಾದರೆ ಓದಿ” ಎಂದು. ಗೌರಿ ಎಂಬ ಪೆನ್‌ನೇಮಿನಿಂದ ಬರಿತಿದೀನಿ ಅಂದ. ನಾನು ಗೌರಿ ಬರೆದ ಕಥೆಗಳನ್ನು ಬಹುಪಾಲು ಪತ್ರಿಕೆಗಳಲ್ಲಿ ಓದಿರುವೆನು. ಗೌರಿಯ ಸಮಾಜಾಭಿಮುಖ ನಿಲುವುಗಳು ನನಗೆ ಯಾವತ್ತು ಇಷ್ಟವೇ. ನಾನು ಓದಿರುವುದಷ್ಟೇ ಅಲ್ಲ ಹಲವರಿಂದ ಓದಿಸಿರುವೆನು ಕೂಡ. ನಾನು ಕತೆಗಳನ್ನು ಬರೆದರೆ ಗೌರಿ ಥರವೇ ಬರೆಯಬೇಕೆಂದು ನಿಶ್ಚಯಿಸಿದ್ದುಂಟು. ಕತೆಗಾರ್ತಿಯನ್ನು ಸಂಪರ್ಕಿಸಿ ಅನುವಾದಕ್ಕೆ ಪರವಾನಗಿ ಪಡೆಯಲು ಹಿಂದೊಮ್ಮೆ ಪ್ರಯತ್ನಿಸಿದ್ದುಂಟು. ಸಾಧ್ಯವಾಗಿರಲಿಲ್ಲ. ಮಹಿಳೆಯ ಹೆಸರಿನ ಕವಚದೊಳಗೆ ಗಂಡಸೊಂದಿದೆ ಎಂಬ ಸುಳಿವು ನನಗೆ ಸಿಕ್ಕಿತ್ತು. ಕಥೆಯ ಭಾಷೆಯ ಹಂದರದಲ್ಲಿ ಹೆಣ್ಣಿನ ಸಹಜ ಕೋಮಲ ಹೃದಯವಿರಲಿಲ್ಲವಾದರೂ ಹೊಸ ಅನುಭವವನ್ನು ಪ್ರತಿಯೊಂದು ಕಥೆ ಕೊಡುತ್ತಿದ್ದವು. ಅಂಥ ಕಥೆಗಳನ್ನು ಬರೆದ ಕತೆಗಾರ ಬೇರೆ ಯಾರೂ ಅಲ್ಲ ನನ್ನ ಮೆಚ್ಚಿನ ವಿದ್ಯಾರ್ಥಿ! ಆ ಕ್ಷಣ ನನಗಾದ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದೋ ತಿಳಿಯಲಿಲ್ಲ. ಪ್ರೀತಿಯಿಂದ ಬರಸೆಳೆದು ಅಪ್ಪಿಕೊಂಡೆ. ಬೆನ್ನು ತಟ್ಟಿದೆ. ನನ್ನ ಉತ್ಸಾಹದ ಬಗ್ಗೆ ಅವನಿಗೆ ಯಾವುದೇ ಕುತೂಹಲವಿರಲಿಲ್ಲ. ಯಂತ್ರಮಾನವನಂತೆ ನಿಂತಿದ್ದ. ಹುಲಿಬಾಯಿಯಿಂದ ತಪ್ಪಿಸಿಕೊಂಡು ಬಂದ ಜಿಂಕೆಯಂತೆ ಗಾಬರಿಯನ್ನು ದೇಹದಾದ್ಯಂತ ಪ್ರಕಟಿಸುತ್ತಿದ್ದ. ಇಂಥ ಶಿಷ್ಯನನ್ನು ಪಡೆದ ನಾನೇ ಧನ್ಯ ಎಂಬಂತೆ ಧರ್ಮಪತ್ನಿಯತ್ತ ನೋಡಿದೆ. ಹೊರಡಲು ಸಜ್ಜಾಗಿದ್ದ ಅಶೋಕ ನನ್ನ ಕಡೆಗೊಮ್ಮೆ ನನ್ನಾಕೆ ಕಡೆಗೊಮ್ಮೆ ದೃಷ್ಟಿ ಬೀರಿದ. ಬೆಕ್ಕು ಇಲಿಗಳ ಕಡೆ ನೋಡುತ್ತದಲ್ಲ ಹಾಗೆ! ನನ್ನಿಂದ ಮತ್ತೇನನ್ನೋ ಅಪೇಕ್ಷಿಸಲು ಸನ್ನದ್ಧನಾಗಿದ್ದಾನೆನ್ನಿಸಿತು. ನನ್ನ ಹತ್ತಿರ ಅದೆಂಥ ಸಂಕೋಚ! ಐವತ್ತು ಕೇಳಿದರೆ ನೂರು ಕೊಟ್ಟೇನು! ಅಷ್ಟರಲ್ಲಿ ಅವನೆ “ಮತ್ತಷ್ಟು ತೊಂದ್ರೆ ಕೊಡ್ತಿರೋದ್ಕೆ ಕ್ಷಮೆ ಇರಲಿ. ನನ್ಗೆ ವ್ಯಕ್ತಿಗಳಿಗಿಂಥ ಸಂಘಟನೆ ಮುಖ್ಯ, ಪಾರ್ಟಿ ಮುಖ್ಯ, ಹೋರಾಟ ಮುಖ್ಯ” ಅಂದ. ಅವನು ಮಾತಾಡೋ ರೀತಿಗೆ ನನಗೆ ಭಯ ಮತ್ತು ಬೇಸರ ಉಂಟಾದವು. ಅಷ್ಟೆ ಅಲ್ಲದೆ ಮನದ ಮೂಲೆಯಲ್ಲಿ ಸಂತೋಷದ ಎಳೆಯೂ…. ಸುಪ್ರಸಿದ್ಧ ಮೌನಿಯಾಗಬಹುದೆಂದಿದ್ದೆ. ಆದರೆ ಎ.ಕೆ.೪೭ ರೈಫಲ್ ಸ್ಫೋಟಿಸಿದಂತೆ ಮಾತಾಡುತ್ತಿರುವವನಲ್ಲ! +ಮತ್ತೆ ಅವನು ಬಾಯಿತೆರೆದ “ನನಗೀಗ ಐದು ಸಾವಿರ ರೂಪಾಯಿ ಬೇಕಾಗಿದೆ…. ಸಂಘಟನೆ ಕೆಲಸಗಳಿಗಾಗಿ…. ಐದು ಹತ್ತು ನಿಮಿಷದಲ್ಲಿ ಜೋಡಿಸಿ ಕೊಡಲೇಬೇಕು….” ಸವಿ ತೆಲುಗು ಭಾಷೆಯಲ್ಲಿ ಆತ ನುಡಿದದ್ದು ಕೇಳಿ ದಿಙ್ಞೂಢರಾದೆವು. “ಅಶೋಕ್ ಅಷ್ಟೊಂದು ನಮ್ ಹತ್ತಿರ ಎಲ್ಲಿದೆ!….” ಎಂದು ಮತ್ತೇನನ್ನೋ ನಿವೇದಿಸಿಕೊಳ್ಳುವುದರಲ್ಲಿದ್ದೆ. “ನಗದು ಹಣ ಇರದಿದ್ರೆ ಅಷ್ಟು ಮೊತ್ತದ ಒಡವೆ ಗಿಡವೆ ಏನಾದ್ರೂ ಸರಿ….” ಎಂದು ದೃಷ್ಟಿ ಬೀರಿ ನನ್ನಾಕೆಯ ಬಾಯಿ ಕಟ್ಟಿದ. ಆಕೆ ಆಗಲೆ ಬಾಯಿ ಕಳೆದುಕೊಂಡಿದ್ದಳು. ನಾವೀರ್ವರು ಪರಸ್ಪರ ಮುಖ ನೋಡಿಕೊಂಡೆವು. “ಅಶೋಕ್ ನಮ್ ಪರಿಸ್ಥಿತೀನ ಹೇಗೆ ವಿವರಿಸಲಿ?” ಎಂದೆ ಕಣೀರು ತುಂಬಿಕೊಂಡು. “ಅರ್ಥ ಆಗುತ್ತೆ ಸಾರ್. ನಿಮ್ಗೆ ಸರಕಾರಿ ನೌಕರೀ ಇದೆ. ಕಡಿಮೆ ಶ್ರಮದಿಂದ ಹೆಚ್ಚಿಗೆ ಸಂಪಾದಿಸುತ್ತಿರೋ ಹಗಲು ಲೂಟಿಗಾರರ ಪೈಕಿ ನೀವೂ ಒಬ್ರೂ…. ಎಂದು ಮತ್ತೇನನ್ನೋ ಹೇಳುವುದರಲ್ಲಿದ್ದ. ನಾನು “ಅರ್ಥ ಆಯ್ತು ಬಿಡು…. ಎಲ್ಲ ಅರ್ಥ ಆಯ್ತು….” ಎಂದೆ. ಪ್ರತಿಭಟಿಸಿದರೆ ಪ್ರಯೋಜನವಿಲ್ಲವೆನಿಸಿತು. ಮೊನ್ನೆ ಬಂದಿದ್ದ ಸಂಬಳದ ಹಣ ತರಲು ಹೆಂಡತಿಗೆ ಸೂಚಿಸಿದೆ. ಆಕೆ ಭಯದಿಂದಲೇ ತಂದುಕೊಟ್ಟಳು. ಎರಡು ಸಾವಿರದ ಆರುನೂರಾ ಮುವ್ವತ್ತಾರು ರೂಪಾಯಿ ಐವತ್ತೈದು ಪೈಸೆ ಇತ್ತು. ಮತ್ತೆ ದುರುಗುಟ್ಟಿದ. ನಿಮ್ಮ ಶ್ರೀಮತಿಯವರ ಕೈಯಲ್ಲಿರೋ ಆ ಎರಡು ಚಿನ್ನದ ಬಳೆ ಕೊಟ್ರೆ ಸರಿಹೋಗುತ್ತೆ ಅಂದ. ಬಿಚ್ಚಿಕೊಡೇ ಅಂದೆ. ಇಲ್ಲ ಅಂದಳು. ಕೊಡ್ತಿಯೋ ಇಲ್ಲೋ ಎಂದು ಗದರಿದೆ. ನಾನೂ ಪ್ರಯತ್ನಿಸಿದೆ. ಬಿಚ್ಚಿ ಕೊಟ್ಟೆವು. ಉದ್ವಿಗ್ನತೆ ಆ ಕ್ಷಣ ಶಮನವಾಯಿತು. ಗದ್ಗದಿತನಾದೆ. ಅಶೋಕ್ ಯಾವ ಮಾತನ್ನೂ ಅರ್ಥಮಾಡಿಕೊಳ್ಳದ ಸ್ಥಿತಿಯಲ್ಲಿರೋ ನನ್ನ ಪ್ರೀತಿಯ ಅಶೋಕ್ ಎಂದು ಗಟ್ಟಿಯಾಗಿ ಅಪ್ಪಿಕೊಂಡೆ. ಅವನೂ ಕಣೀರು ತಂದುಕೊಂಡನೆಂದು ಕಾಣುತ್ತೆ. “ಸ್ವಲ್ಪ ಹೊತ್ತಿನಲ್ಲಿ ಮುಂಗೋಳಿ ಕೂಗಬಹುದು…. ಹೊರಟುಹೋಗು” ಅಂದೆ. ಬೀದಿಯ ಕತ್ತಲಲ್ಲಿ ಕರಗಿ ಹೋದ. ಅವನು ಬಿಟ್ಟು ಹೋದ ಮನೆಯ ನೀರವತೆಯಲ್ಲಿ ನಾವು ನಿಟ್ಟುಸಿರನ್ನೂ ಇಡಲಿಲ್ಲ. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […] +(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […] +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_441.txt b/Kannada Sahitya/article_441.txt new file mode 100644 index 0000000000000000000000000000000000000000..28d62687944968249ffe07598e8f35313927fc4d --- /dev/null +++ b/Kannada Sahitya/article_441.txt @@ -0,0 +1,237 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು ಉರಿಯೂತ ಕೂತಿದ್ದಳು. ಅವಳು ಕುಳಿತಿದ್ದರೂ ಸಪೋರ್ಟಿಗಾಗಿ ತನ್ನ ಚಕಳದ ಕಯ್ಯನ್ನು ನೆಲಕ್ಕೆ ಚೆಲ್ಲಿದ್ದಳು. ಸಾಕವ್ವನ ಚರುಮಕ್ಕೂ ಮೂಳೆಗೂ ಹೊಂದಾಣಿಕೆ ತಪ್ಪಿತ್ತಾದ್ದರಿಂದ ಮಯ್ಯ ಚರುಮಗಳು ಸ್ವತಂತ್ರವಾಗಿ ಅಲ್ಲಾಡುತ ತಮ್ಮಷ್ಟಕ್ಕೆ ತಾವಿದ್ದುವು. ಅವಳ ನಡುವಾಗಿದ್ದ ಆಸರೆಗೋಲು ತಬ್ಬಲಿಯಾಗಿ ಮುಂದೆ ಬಿದ್ದಿತ್ತು. ಆ ಕೋಲಿಗೆ, ನೊಣಗಳು ಸಾಕವ್ವನನ್ನೂ ಕೇರು ಮಾಡದೆ ಗುಂಪುಕಟ್ಟಿ ಧಾಳಿ ಮಾಡುತ್ತಿದ್ದವು. +ಮುಖ್ಯ ಅವಳ ಖಾಸ ಹುಂಜವೊಂದು ನೆನ್ನೆ ಚಂದಗಾಣವಾಗಿ ಹಟ್ಟಿ ಬಿಟ್ಟದ್ದು ಇಂದಾದರೂ ಬಾರದೆ ಚಕಿತಗೊಳಿಸಿತ್ತು. ಅದು ದೇವರಿಗೆ ಬುಟ್ಟುದ್ದಾದ್ದರಿಂದ ಅಂಥ ಅಪಶಕುನಕ್ಕೇನೂ ಎಡೆ ಇರಲಿಲ್ಲ. ರಾತ್ರಿ ಎಲ್ಲೋ ಕುಂತದೆ ಈಗಲ್ಲದಿದ್ದರೂ ಇನ್ನೊಂದು ಗಳಿಗೆಗೆ ಬತ್ತದೆ ಎಂಬೊ ಆಸೆ ನೆನ್ನೆ ತುಂಬಾ ಅವಳ ಸುತ್ತಾಡಿತ್ತು. ಹಾಗೂ ಮನೆ ದೇವತೆ ತನ್ನ ದುಡ ಪರಿಕಿಸುತಿರಬಹುದೆನ್ನಿಸಿ ಆಗ ಸಾಕವ್ವನ ಹಟವೂ ಹೆಚ್ಚುತ್ತಿತ್ತು. ಕೈಲಾಗದ ಮುದುಕಿ ತಾನು ಬವಣೆ ಪಡುತ್ತಿದ್ದರೂ ತನ್ನ ಮಕ್ಕ ಮೊಮ್ಮಕ್ಕ ಸೊಸೇರೂ ಇಡೆನ ಅನ್ನದಿರೋದ ಕಂಡು ಅವಳ ದುಕ್ತಿ ಒಳಗಿಂದ ಉಕ್ಕಿ ಬರುತ್ತಿತ್ತು. ಸಾಕವ್ವ ಆ ರಾತ್ರೀಲಿ ಎಡವಿ ತಡವರಿಸಿ ಕೊಕ್-ಕೊಕ್ ಎಂದು ಬೀದಿ ಬೀದೀಲಿ ಕರ್‍ದು ಅತ್ತು ಊರೆಲ್ಲ ಮುಳುಗಿದ ಮೇಲ ಹಟ್ಟಿಗೆ ಬಂದು ಉಸ್ಸೋ ಎಂದು ಕಾಲುನೀಟಿ ಕೂತುಗೊಂಡಳು. ಯಾರೂ ಇದ್ಯಾಕ ಅನ್ನಲಿಲ್ಲ. ಅವಳು ಆ ರೀತಿಯಾಗಿ ಇರಲಿ ನಿದ್ರಾದೇವಿ ಬೇಜಾರಲಿ ಬಂದು ಸಾಕವ್ವನ ಕಣ್ಣುಗಳ ಸವುರಿ ಮಾಯವಾದಳು. +ಊರು ಕಣ್ಬುಡುವ ಮೊದಲು ಕಣ್ಣುಬಿಟ್ಟ ಸಾಕವ್ವನ ಜೀವ ಹುಂಜನ ಕಾಣಲು ಪತರುಗುಟ್ಟಿತು. ಯಾವ ಮಾಯದಲ್ಲಾದರೂ ಹುಂಜನು ರಾತ್ರೀನೆ ಬಂದಿರಬಹುದಾ ಅನ್ನಿಸಿ ಕಣ್ಬೆಳಕು ಕಾಣುವವರೆಗೂ ಕಣ್ಣೋಡಿಸಿದಳು. ಕಾಣದೆ, ಹಟ್ಟಿ ತುಂಬಾ ’ಬಾ…ಬಾ, ಕೊ….ಕೊ’ ಎನ್ನುತ್ತಾ ನಡೆದಾಡಿದಳು. ಹಟ್ಟೀಯ ಬಲಮೂಲೆ ನೆರಕೇಲಿ ಮಲುಗಿದ್ದ ಅವಳ ದೊಡ್ಡ ಮಗ ಕಾಳಣ್ಣನಿಗೆ ಅವರವ್ವನ ಕೊರಕೊರದಿಂದಾಗಿ ನಿದ್ದೆ ಮುರುದು ತಡೆಯಲಾರದೆ ’ಅವ್ವಾ ಹೊತ್ಮೂಡ್ಲಿ ಈಗ ಮಲಿಕ್ಕೊ’ ಅಂದನು. ಸಾಕವ್ವನ ಸುಮ್ಮನಿದ್ದ ನರವಾಗಿದ್ದ ನರಗಳೆಲ್ಲಾ ಎದ್ದು ನೆಗೆದಾಡತೊಡಗಿದವು. ಸಾಕವ್ವ ’ಏನಂದೆ ಕಂದಾ! ಹೊತ್ಮೂಡ್ಲಿ ಎಂದ್ಯ, ಹೊತ್ಮೂಡಿ ಏಡು ಮಾರು ಬಂದ್ರೂನು ನೀನು ಏಳ್ದಿದ್ದಕ್ಕಲ್ವ ನನ್ನ ಹಟ್ಟಿ ಮೂರು ಪಾಲಾದ್ದು….’ ಎಂದು ಮಾತು ಮುಗುಸಿ ಹಣೆ ಚಚ್ಚಿಕೊಳ್ಳುವುದನ್ನು ಮುಂದುವರೆಸಿದಳು. +ಇನ್ನು ಮಾತಾಡಿದರೆ ಮಾತು ಬೆಳೆಯುತ್ತದೆ ಅಂದುಕೊಂಡು ಕಾಳಣ್ಣನ ದಿಕ್ಕಿಂದ ಮಾತು ಏಳಲಿಲ್ಲ. ಅವುನು ಮಲುಗಿದಂಗೆ ಮಾಡಿದನು. ಅವ್ವ ಅಣ್ಣಂದಿರ ಮಾತಿಗೆ ಕಿರುಮನೆಯ ಎರಡನೆ ಮಗ ಸಣ್ಣಯ್ಯನೂ ಕಣ್ಬಿಟ್ಟು ಹೆಡ್ತಿ ಪಿಸುಗುಟ್ಟಲು ಕಣ್ಮುಚ್ಚಿದನು. ಸಣ್ಣಯ್ಯನ ಮೂರು ಮಕ್ಕಳು ಒಂದರ ಕಾಲ ಇನ್ನೊಂದರ ಮೇಲಾಕಿ ಬಿದ್ದಿದ್ದವು. ಅವುಗಳ ಹೊದ್ದಿದ್ದ ಹೊಸ ದುಪ್ಪಟಿ ಮೂವರನ್ನೂ ಹೊದ್ದುಕೊಳ್ಳಲು ತನ್ನ ಶಕ್ತ್ಯಾನುಸಾರ ಯತ್ನಿಸುತ್ತಿತ್ತು. ಇನ್ನೊಂದು ಕೈಗೂಸು ಅವ್ವ ಚಲುವಮ್ಮನ ಎದೆ ಹೊಟ್ಟೆಗಂಟಿ ಬೆಚ್ಚಗಿತ್ತು. +ಇತ್ತ ನಡುಮನೇಲಿ ಸಾಕವ್ವನ ದೊಡ್ಡಮಗಳು ಗೌರಮ್ಮನ ರೋಗಿಷ್ಟ ಮಗ ಗೋಡೆಗಂಟಿಕೊಂಡು ಬಿಳಿ ದುಪ್ಪಟಿ ಹಾಸ್ಕೊಂಡು ಅದೇ ದುಪ್ಪಟಿಯ ಹೋದ್ಕೊಂಡು ಮಲುಗಿತ್ತು. ಅದರ ಪಕ್ಕವೆ ಅದರವ್ವ ಗೌರಮ್ಮ ಅವುಳುದ್ದ ಅವಳಗಲದ ಚಾಪೇಲಿ ಒಂದು ಹಳೆ ಸೀರೆ ಹೊದ್ದು ಒಂದು ಕಯ್ಯ ಮಗನ ಮೇಲಾಕಿ ಮಲುಗಿದ್ದಳು. ಅಲ್ಲೇ ಇನ್ನೊಂದು ಮೂಲೇಲಿ ಹಾಸಿದ್ದ ಹಳೆ ಮಂದಲಿಗೆ ಮೇಲೆ ಗೌರಮ್ಮನ ತಂಗಿ ಪುಟ್ಟಗೌರಿ, ಅವಳಿಗಂಟಿ ಗೌರಮ್ಮನ ಕಿರೀಮಗ ಮೂರನೆ ಕ್ಲಾಸಿನ ಶಿವೂ ಇಬ್ಬುರೂನು ಒಂದು ದುಪ್ಪಟಿ ಹೊದ್ದು ಮಲುಗಿದ್ದರು. +ಶಿವೂನ ಅವ್ವ ಗೌರಮ್ಮನ ಗಂಡನು ಊರೂರು ಅಲೆಯಲಾರಂಭಿಸಿದಲಾಗಾಯ್ತು ಅವುಳು ತನ್ನ ತೌರಿಗೆ ಬಂದು ನೆಲೆಗೊಂಡಿದ್ದಳು. ಅವಳ ಗಂಡನೊ ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಬಂದು ಮೊಖ ತೋರಿಸಿ ಪುಡಿಗಾಸ ಕೊಟ್ಟು ಮಾಯವಾಗುತ್ತಿದ್ದನು. ಇಲ್ಲಿ ಗೌರಮ್ಮ ಕೂಲಿನಾಲಿಗೆ ಅದ್ದಿನಂತ್ ಕಾಯ್ತ ಸಿಕ್ಕಿದ್ದು ತಂದು ತನ್ನ ಇರೋ ಏಡು ಹೈಕಳ ಹೊಟ್ಟೆಗಾಕುತ ಒಡಬಾಳ ಪಾಡುತ್ತಿದ್ದಳು. ತಂಗಿ ಪುಟಗೌರಿ ಕಿರಿಯವಳು ಮದುವೆಗೆ ಬಂದು ಅಣಿಯಾಗಿ ನಿಂತಿದ್ದಳು. ಅವಳ ಕಯ್ಯಿಗೆ ಬಂದ ಕೂಲಿ ಅವುಳು ಅವಳವ್ವನ ಬಾಯಿಗಾಗುತ್ತಿತ್ತು. ಕೂಲಿ ಸಿಗದೆ ಅವಳು ಕೈಚೆಲ್ಲಿ ಕುಂತಲ್ಲಿ, ಶಿವೂನ ಹರಿದ ಅಂಗಿ ಚಡ್ಡಿ ಬ್ಯಾಗು ಹೊಲಿಯೋದು ಆ ಬಟ್ಟ ವಗ್ದು ಮಡ್ಸಿ ತಲೆಗಿಟ್ಟು ಇಸ್ತ್ರಿ ಮಾಡೋದು ಮಾಡುತ್ತಿದ್ದಳು. ದಿನಾಲು ಶಿವೂನ ಮೊಖ ಕರಾಪು ಬಾಚಿ ಕೂದಲಿಗೆ ಕುಪ್ಪೆ ಕೂರಿಸಿ ಹಣೆಗೆ ಕಪ್ಪಿಟ್ಟು ಇಸ್ಕೂಲಿಗೆ ರೇಡಿ ಮಾಡುತ್ತಿದ್ದಳು. +ಇನ್ನು ಉಳಿದವನು ಗುರುಸಿದ್ದು, ಸಾಕವ್ವನ ಕಿರೀಮಗ. ಅವನ ಪಾಲಿಗೇ ನಡುಮನೆ ಸೇರಿದ್ದುದು, ಅವುನು ಮನೆಗೆ ನೆಂಟನಂತಿದ್ದು ಮಾರಿಗುಡೀನ ತನ್ನ ವಾಸಸ್ಥಾನ ಮಾಡಿಕೊಂಡಿದ್ದನು. ಊರೂರು ಸುತ್ತುತ್ತ ಹಾಲಿ ಗಾರೆ ಕೆಲಸ ಮಾಡುತ್ತಿದ್ದನು. ರೇಷ್ಮೆಗೂಡಿನ ಯಾಪಾರ ಮಾಡಿ, ಚಿಲ್ಲರೆ ಅಂಗಡಿ ಇಟ್ಟು, ದನದ ದಳ್ಳಾಳಿಯಾಗಿ ಈಗ ಗಾರೆ ಕೆಲಸದಲ್ಲಿ ನಿಂತಿದ್ದನು. ಕೈಲಿ ಕಾಸಿದ್ದಾಗ ಅವ್ವನ ಎಲೆ ಅಡುಕೆಗೂ ಕೊಡುತ್ತಿದ್ದನು. ಏಡು ಬೇಳೆ ಪೈರಿನಿಂದಲೂ ಅವನಿಗೆ ಗುಂಪು ನಾಟಕ ಅನ್ನೋವು ತಲೆಗಂಟಿ ಈಗ ದಾನಸೂರಕರ್ಣದಲ್ಲಿ ಕರ್ಣನ ಮಗನ ಪಾರ್ಟು ಮಾಡುತ್ತಿದ್ದನು. ಅವನು ಮಾಮೂಲಿಯಾಗಿ ಮಾರೀಗುಡಿಯಲ್ಲಿ ಮಲುಗಿದ್ದನು. +ಬೆಳುಕು ಕತ್ತಲಿಗೆ ಬೆರೆತುಕೊಳ್ಳುತ್ತಿದ್ದ ಆಗ, ಹೊರಬಂದು ಸಾಕವ್ವ ತನ್ನ ಹುಂಜ ನಿಲ್ಲುತ್ತಿದ್ದ ಕೂರುತ್ತಿದ್ದ ಜಾಗವ ಕಣ್ತುಂಬಿ ನೋಡಿದಳು. ಅಂಥದೇನೂ ಕಾಣದೆ ಅವುಳು ಹೀಗೆ ನಾಕಾರು ಸಲ ಎಡತಾಕುತಿರಲು ಬೆಳಕಾಯ್ತು. ಒಳಗಿರೋ ಕೋಳಿಗಳಾರು ತನ್ನ ಹುಂಜನ ತರೆತರಬಹುದೆಂದು ಪಂಜರವ ಎತ್ತಲು ಇದ್ದಬದ್ದ ಕೋಳಿಗಳು ಎಂದಿನಂತೆ ಉತ್ಸಾಹದಿಂದಲೆ ಹಾರುತ ಹೊರಹೋದವು. ಆವುದರ ಮೊಖದಲ್ಲು ದುಕ್ಕ ದುಗುಡ ಕಾಣದೆ ಸಾಕವ್ವನಿಗೆ ಎತ್ತಿ ಕುಕ್ಕಿದಂತಾಯ್ತು. ಅಯ್ಯೋ ಪಾಪಿ ನನ್ಮಕ್ಳಾ ಎಂದು ಹತ್ತಾರು ಸಲ ಅಂದುಕೊಂಡಳು. +ಆಗಲೆ ಎದ್ದು ಎರದನೆ ಮಗ ತೊಟ್ಟೀಲಿ ಹಲ್ಲುಜ್ಜುತ್ತಿದ್ದನು. ಸಣ್ಣಯ್ಯ, ಅವ್ವ ಆ ಕಡೆ ಬಂದರೆ ಈ ಕಡೆಗೆ ಮೊಖ ತಿರುವುತ್ತ, ಅವ್ವ ಈ ಕಡೆ ಬಂದರೆ ಆ ಕಡೆಗೆ ಮೊಖ ತಿರುವುತ್ತ ಯಾವ ಪಟ್ಟಿಗೂ ಸಿಗದೆ ತಾನು ತನ್ನ ಕೆಲಸ ಅನ್ನುವಂತಿದ್ದನು. ಸಾಕವ್ವ ಒಂದು ಸಲ ತೊಟ್ಟಿಗೆ ಕ್ಯಾಕರಿಸಿ ಉಗುದು ಹೊರಬಂದು ಅಂಗಳದಲ್ಲಿ ನಿಂತಳು. +ಅಂಗಳದಲ್ಲಿ ನಿಂತಂಥ ಸಾಕವ್ವನ ಕಣ್ಮುಂದೆ ಅವಳ ಹುಂಜನ ಅಂದ ಚಂದವು ಓಡಾಡಿತು. ಯಾರೋ ಪಾಪಗೇಡಿಗಳು ದೇವುರುದಿಂಡರ ಲಕ್ಕಿಸದೆ ತನ್ನ ಹುಂಜನ ಮುರುದಿರಬೇಕೆಂದು ಅನ್ನಿಸುತ್ತ, ಅದು ಹೊತ್ತೇರಿದಂತೆ ದುಡವಾಗತೊಡಗಿತು. ಸಾಕವ್ವ ತನಗಾಗದವರು ಯಾರಾರೆಂದು ಒಂದೊಂದಾಗಿ ನೆಪ್ಪಿಡಿಯತೊಡಗಿದಳು. ಅವುಳ ಸವತಿ ಕೆಂಪಮ್ಮ ಮೂಡಿನಿಂತಳು. ಸಾಕವ್ವನ ಗಂಡನನ್ನು ತನ್ನ ಕಿರುಬೆರಳಲಿ ಕುಣಿಸೀಕುಣ್ಸಿ ಮುಪ್ಪಾಗಿದ್ದ ಕೆಂಪಮ್ಮನ ತಿಪ್ಪೆ ದಿಕ್ಕಿಗೆ ಸಾಕವ್ವ, ಹಿಂದಕ್ಕೆಳೆಯುತ್ತಿದ್ದ ಕಾಲೆಳೆದುಕೊಂಡು ನಡೆದಳು. +ಸಾಕವ್ವ ಆ ತಿಪ್ಪೇನ ಒಂದು ಕಡೆಯಿಂದ ಒಂದು ಚೂರೂ ಬುಡದೆ ನೋಡೂ ಏನೂ ಕಾಣದೆ, ಅಲ್ಲೊಂದು ಇಲ್ಲೊಂದು ಸಿಕ್ಕಂಥ ತುಪ್ಪಟ ಪುಕ್ಕಗಳ ಕಣ್ಣಿಗಂಟಿಸಿ ನೋಡೂ ಅವು ಅವಳ ಹುಂಜನದಾಗಿರದೆ ಆ ತಿಪ್ಪೆ ಅವಳ ಹಠಕ್ಕೆ ಸವಾಲೊಡ್ಡೆ ನಿಂತಿತ್ತು. ಕೈ ಬುಡದೆ ಸಾಕವ್ವ ’ಎಲ್ಲ್ಗೋದೈ ನನ್ನ ಸವುತಿ! ಸಿಕ್ತೀಯ ಸಿಕ್ತೀಯ’ ಅನ್ನುತ್ತ ಊರುಗೋಲಿಂದ ತಿಪ್ಪೇನೆ ಬುಡಮೇಲು ಮಾಡಿ ಕೆದುಕಿದಳು. ಹಾಗೂ ಏನೂ ಸುಳುವಾಗದೆ ಸುಸ್ತಾಗಿ ’ಥೂ ನನ್ನ ಸವುತಿ….ಮಾಯಕಾತಿ, ಅಷ್ಟು ಸುಲಭವಾಗಿ ನಿನ್ನ ಮರ್ಮ ಬುಟ್ಟುಕೊಟ್ಟಯಾ’ ಎಂದು ತಿಪ್ಪೆಗೆ ಉಗುದು ಮುಂದಿನದಕ್ಕೆ ಸಾಗಿದಳು. +ಹತ್ತಾರು ತಿಪ್ಪೇನ ಮುಗಿಸುವಲ್ಲಿ ಸಾಕವ್ವನ ತ್ರಾಣ ಅನ್ನೋದು ಏರುತ್ತಿದ್ದ ಬಿಸುಲಿಗೆ ಒಣುಗಿ ಗಾಳಿ ಅಲ್ಲಾಡಿದರೆ ಅವುಳೂ ಅಲ್ಲಾಡುವಂತಾಯ್ತು. ಆಗ ಅಲ್ಲಿಗೆ ಕಸಹೊತ್ತು ಬಂದ ಪುಟ್ಟಿ ’ಇದೇನಮ್ಮ ಇಷ್ಟೊತ್ತಲಿ…’ ಎಂದು ಕೇಳಿದಳು. ಅದಕೆ ಸಾಕವ್ವ ’ತಿಪ್ಗ ಬಮಿದಿದ್ದಿಕಾ ಕೂಸು ಅಷ್ಟಿಯಾ’ ಅಂದಳು. ಪುಟ್ಟಿ ’ಅಷ್ಟಿಯಾ’ ಅಂದು ನಗಾಡ ಕಸ ಸುರುದು ಹೋದಳು. ಪುಟ್ಟಿಯ ಧಿಮಾಕು ಗಣ್ಯೆ ಸಾಕವ್ವನ ಮೊಖಕ್ಕೊಡದಿತ್ತು. ಪುಟ್ಟಿ ಅಂಬೋಳು ಕಣ್ಗೆ ಮರೆಯಾಗುವವರ್ಗೂ ತಿಪ್ಗ ಕುಂತವರಂತೆ ಕುಂತಿದ್ದು ಆಮೇಲ ಮುಂದಿನದಕ್ಕೆ ಬಂದಳು. +ಹೊತ್ತುನೊಂತೆ ಎದ್ದವಳೆ ತಿಪ್ಪೆ ಕಸ ಕಡ್ಡೀಯ ಕಣ್ತುಂಬಾ ನೋಡಿ, ಅವು ಕಣ್ಣಿಗಚ್ಚೊತ್ತಿ ಸಾಕವ್ವ ಯಾವ ದಿಕ್ಕು ನೋಡಿದರೂ ಕಸಕಡ್ಡಿಗಳು ಬಂದು ಪಾರ್ಟು ಮಾಡುತ್ತಿದ್ದವು. ಮುಂದೆ ನಡೆಯಲು ತೊಡೆ ಬಂಡಾಯವೆದ್ದು ನಿಂತಾಗ ಸಾಕವ್ವ ’ನನ್ನ ಮನೆ ದೇವ್ರ ಸತ್ಯ ಇದ್ರ ನನ್ನುಂಜ ಹಟ್ಟಿಗೋಗಿರಲಿ, ಇಲ್ಲದಿದ್ರ ಇಲ್ಲ’ ಎನ್ನುತ ಅನ್ನುತ್ತಾ ಊರದಿಕ್ಕ ತೊಡೆ ಎಳೆದಳು. +ಸಾಕವ್ವ ಎತ್ತ ಹೋಗಿದ್ದಳು ಏನು ಮಾಡಿದಳು ಎಂಬುದು ಚಿನಾಲಿ ಪುಟ್ಟಿಯಿಂದಾಗಿ ಪ್ರಚುರಗೊಂಡು ಹೋಗಿಬರೋರು ಕುಂತವರು ಎಂದೂ ಮಾತಾಡಿಸದವರೂ ಏನವ್ವೊ ಏನಮ್ಮೊ ಅನ್ನುತ್ತಿದರು. ನನ್ನುಂಜ ಕಪ್ಪ, ನನ್ನುಂಜಕಾ ನನಕಂದ ಎನ್ನುತ್ತ ಸಾಕವ್ವ ಬರುತ್ತಿದ್ದಳು. ಕೇಳಿದವರು, ಅವುಳು ಮರೆಯಾದ ಮೇಲ ನಗಾಡ್ತ ಹೋಗುತ್ತಿದ್ದರು. ಹೀಗೆ ಆಗುತ್ತಿತ್ತು. +ಹಾಗೂ ಹೀಗೂ ಸಾಕವ್ವ ಹಟ್ಟಿ ಅಂಗಳಕ್ಕೆ ಮುಟ್ಟಿದಳು. ಅಸ್ತುಲ ಮೇಲ ಅವಳ ಮಗಳ ಮಗ ಚಿವೂ ನಿಂತಿದ್ದನು. ಸಾಕವ್ವ ’ಬಂತಾ ನನಕಂದಾ’ ಎಂದು ಶಿವೂನ ಕೇಳಿದಳು. ಶಿವೂ ’ಏನಮ್ಮಾ’ ಅಂದಿತು. ಶಿವೂ ಬಾಯಿಂದ ಆ ವಾಕ್ಯ ಸಾಕವ್ವನಲ್ಲಿ ದುಕ್ಕ ಕೋಪ ಅನ್ನೋವು ಉಕ್ಕಿದವು. ’ಅಯ್ಯೋ ನನ್ನ ಮಗಳ ಮಗ್ನೇ……ನಾನು ಬಂತಾ ಅಂತ ಕೇಳಿದ್ರ ಏನಮ್ಮಾ ಅಂತಿಯಲ್ಲೊ’ ಎಂದು ಅಳುತ್ತ ಅಂಗಳದಲ್ಲೆ ಕೂತಳು. ಆ ಹೈದನಿಗೆ ಗಲಿಬಿಲಿ ಎದ್ದು ಅದರವ್ವನಲ್ಲಿಗೆ ಓಡಿತು. +ದೊಡ್ಡ ಮಗಳು ಗೌರಮ್ಮ ಬಂದು ನೋಡಿದರೆ – ಅವ್ವ ಅಂಗಳದೊಳಗ ಮುಳುಗಿ ತನ್ನ ಸುತ್ತಗೂ ಮಣ್ಣೂ ಧೂಳೂ ಬಾಚುತ್ತಿದ್ದಳು. ಮಣ್ಣು ಬೊಗಸೆಯಾಗಲು ಅದನ್ನು ಹೂಪಟಾಕಿಯಂತೆ ಎರುಚಿ ’ನನ್ನ ಕೋಳಿ ತಿಂದವರ ಮನೆ ಮಣ್ಣಾಗ್ಲೋ….ನನ್ನ ಮನೆ ದೇವ್ರ ಸತ್ಯ ಇದ್ದುದೇ ಉಂಟಾದ್ರೆ ನನ್ನ ಕೋಳಿ ಮುರ್‍ದವರ ಮನೆ ಮುರ್‍ದಾಗಲೋ’ ಅನ್ನುತ್ತ ಒಂದು ಬೈಗುಳ ಬಯ್ಯೋದು ಒಂದು ಸಲ ಧೂಳು ಎರಚೋದು ಮಾಡ್ತ ನಾಕದಿಕ್ಕೂ ಧೂಳು ಬಾಣ ಬುಡುತ್ತಿದ್ದಳು. ಕ್ರಮಬದ್ಧವಾಗಿ ಒಂದೊಂದು ಸಲ ಆ ಧೂಳ ಮೇಲ ಬಿದ್ದು ಒರಳಾಡುವಳು. ಎದ್ದು ನಟುಕೆ ಮುರಿದಳು. ಬಾಚಿ ಧೂಳ ತಗುದು ಎರಚಿದಳು. ಮಗಳು ತಾಳಲಾರದೆ ಬಂದು ಅವ್ವನ ಕಯ್ಯ ಹಿಡುದು ’ಸಾಕು ಏಳವ್ವ, ವೋದ್ದು ತಿರ್‍ಗಾ ಬರ್‍ದಾ’ ಎಂದು ಎತ್ತಿದಳು. ಸಾಕವ್ವ ಕಯ್ಯ ಕಿತ್ತೊಗೊಂಡು ಇನ್ನೊಂದು ಸಲ ಅಂಗಳ ತುಂಬುವಂತೆ ಮಣ್ಣೆರುಚಿದಳು. ಅಲ್ಲಿಗೆ ಕಿರಿಮಗಳೂ ಬಂದು ಅವ್ವನ ಒಂದೊಂದು ಕಯ್ಯ ಒಬ್ಬೊಬ್ಬರು ಹಿಡಿದು ಎತ್ತಿ ಏಳಿಸಿ ನಡೆಸುತ ಹಟ್ಟಿಗೆ ತಂದರು. ಸಾಕವ್ವನ ಇರಬಹುದಾದ ಮಯ್ಯಿಕಯ್ಯಿ ದೇಹವು ಮಣ್ಣು ಧೂಳು ತೊಪ್ಪೆಯಾಗಿ ಅವಳು ಆ ದೇಹವ ಭೂಮಿಗಿಳಿಬಿಟ್ಟು ಕೂತಳು. +-೨- +ಮಗಳು ಗೌರಮ್ಮ ತಂದಿಟ್ಟ ಗಡುಗೇಲಿ ನೀರು ಕುಡುದಾದ ಮೇಲ ಸಾಕವ್ವನ ದೇಹಕ್ಕೆ ಉಸುರು ಕೂಡಿಕೊಂಡಿತು. ಸಾಕವ್ವ ಮಗಳ ತಲ ಸವುರೂತ ’ನೀನು ತಣ್ಣಗಿರು ನನಕಂದ, ಕಡಗಾಲ್ಕು ನೀನೆ ನನಗಾಗೋಳು, ನನ್ನ ಇರೋ ಆಸ್ತಿನೆಲ್ಲ ನಿನ್ನ ಕಿರಿಮಗನ್ಗೆ ಬರ್‍ದು ಸತ್ತೋಯ್ತೀನಿ….’ ಎಂದು ದುಕ್ಕದ ರಾಗ ಬೆರುಸಿ ಹಾಡತೊಡಗಿದಳು. ಅವ್ವನ ಈ ರಾಗ ಈಗ ನಿಲ್ಲಬಹುದು ಇನ್ನೊಂದು ಗಳಿಗೇಗೆ ನಿಲ್ಲಬಹುದು ಎಂದು ಕಾದು ಕಾದು ನಿಲ್ಲದಿರಲು ಎರಡನೆ ಮಗ ಸಣ್ಣಯನಿಗೆ ತಡೆದುಕೊಳ್ಳಲಾಗಲಿಲ್ಲ. ಹೆಂಡುತಿ ಸನ್ನೆ ಮಾಡಿದರೂ ದಕ್ಕದೆ ’ಏನವ್ವ ನೀ ಅನ್ನೋದು’ ಎಂದು ಹೊರಕ್ಕೆ ನೆಗೆದು ಬಂದನು. +ಸಣ್ಣಯ್ಯ ಅನ್ನೋನು ಪೀಚಲಾಗಿ ಕಟುವಾಗಿದ್ದನು. ಅವನ ಕಯ್ಯಿ ಕಾಲುಗಳು ಕಡ್ಡಿಯಂತೆ ಒಣಗಿಕೊಂಡಿದ್ದೂ ನಾರಿನಂತೆ ಗಟ್ಟಿಯಾಗಿದ್ದವು. ಮಕ್ಕಳಿಲ್ಲದ ಅಣ್ಣನಾಸ್ತಿಗೂ ಕಣ್ಣಾಕಿದ್ದವನಿಗೆ ಅವ್ವನ ಮಾತುಗಳು ನೇರವಾಗಿ ಎದೆಗೇ ಬಂದು ಒದೆಯುತ್ತಿದ್ದವು. ಅವನು ಹೊರಗೆಲ್ಲಾ ಜೋರೊತ್ತಾಗಿದ್ದರೂ ಹೆಡ್ತಿ ಎದುರಾ ಮೆದುವಾಗಿರುತ್ತಿದ್ದನು. ಅಂಥವನೇ ಈಗ ಹೆಡ್ತಿಯ ಕಣ್ಸನ್ನೆಯನ್ನೂ ಲಕ್ಕಿಸದೆ ಕೇಲುತಲೆ ಅವ್ವನ ಎದುರಾ ರಾವುಳಾಸುರನಂತೆ ನಿಂತಿದ್ದನು. +ಸಾಕವ್ವನ ಮಂಜುಗಣ್ಣೊಳಗ ಮಗ ಸಣ್ಣಯ್ಯ ರಾವುಳಾಸುರನಂತೆ ಮೂಡಿ ನಿಂತಿದ್ದನು. ನೆನ್ನಿಂದಲೂ ಹುಂಜನೊಡನೆ ಹೆಣಬಾಳು ಪಟ್ಟು ಸುಸ್ತಾಗಿದ್ದ ಸಾಕವ್ವನ ಗಂಟಲಲ್ಲಿ ಬಡಪಟ್ಟಿಗೆ ಮಾತುಗಳು ಹುಟ್ಟಲಿಲ್ಲ. ಗಡುಗೇಲಿ ನಾನು ಕೀರು ಕುಡುದು ಮಗನ ದಿಕ್ಕ ಕಣ್ಣ ಮೆಡರಿಸಿ ’ಕೇಳವ್ನು ನೀ ಯಾರ?’ ಅಂದಳು. ಸಣ್ಣ, ಕಡ್ಡಿ ಮುರುದಂತೆ ’ನಾನು ಅಕ್ಕುದಾರ’ ಅಂದ. ಸಾಕವ್ವಗೂ ಕಮ್ಮಿ ಕಾನೂನು ಗೊತ್ತಿರಲಿಲ್ಲ. ’ಏನಂದೆ ಇನ್ನೊಂದ್ಸಲ ಅನ್ನು….ಅಕ್ಕುದಾರನಾ ನೀನು? ಹುಟ್ಟುದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರ್‍ಸಿ ಕಚ್ಚಕಟುಕೊಂಡು ಗೇದು ಸಂಪಾದ್ಸಿವ್ನಿ ಕನೊ ಭೂಪತಿ. ಆಸ್ತಿ ನನ್ನ ಸ್ವಾರ್ಜತ ಸ್ವಾರ್ಜತ…..’ ಅಂದಳು. ಸಣ್ಣಯ್ಯನಿಗೆ ಒಂದು ಚಣ ಅದೂ ದಿಟ ಅನ್ನಿಸಿ ದಿಗಿಲುಂಟಾಯ್ತು. ಈಗ ದನೀನ ವದ್ದೆ ಮಾಡಿ ’ಹಂಗಾರ ನನ್ನ ಇರೋ ನಾಕೈಕಳ ನಿನ್ನ ಕೈಯಾರ ಬೀದ್ಗ ತಳ್ಳು ಮತ್ತ…’ ಎಂದು ಅಂದು ಮಕ್ಕಳನ್ನು ಎಳೆದೆಳೆದು ತಂದು ಅವ್ವನ ಮಡುಲಿಗಿಟ್ಟು ಪಟ್ಟು ಬದಲಿಸಿ ನಿಂತನು. +ಸಣ್ಣಯನ ಮಾತು ವರ್‍ಸೆ ಈಗ ಮೆದುವಾಗಿದ್ದರೂ ಹುಂಜನಿಂದಾಗಿ ದಿಕ್ಕೆಟ್ಟವಳಾಗಿದ್ದ ಸಾಕವ್ವಗೆ ಜೋರತ್ತು ಮಾಡಬೇಕೆನ್ನೊ ಒಳಗುದಿ ಎದ್ದೆದ್ದು ಕುಣಿಯುತ್ತಿತ್ತು. ಮಕ್ಕಳು ಅನ್ನೋ ಮಾತ ಮರೆಸಿ ಸಾಕವ್ವನೂ ವರ್‍ಸೆ ಬದಲಿಸಿ-’ಅಲ್ಲೋ ಮನತಾನಸ್ಥ ನನ್ ಮಗನೆ…ನಿನ್ನ ಪಾಲ್ಗೆ ಹಂಚಾಕ್ಸದೆ ಹುಲ್ಲಾಕ್ಸಿದ್ದೀಯಲ್ಲೊ..ಹೊಟ್ಟಗ ತಣ್ಣೀರ ಬಟ್ಟೆ ಕಟ್ಕೊಂಡು ತೊಟ್ಟಿ ಹಟ್ಟಿ ಕಟ್ಸಿದ್ದನಲ್ಲೊ…….ನೋಡ್ದವರು ಮೂಗ್ಗೆ ಬೆರಳಿಟ್ಟು….’ ಏರಿಳಿಯುತ್ತಿದ್ದ ಮಾತುಗಳು ಕೊನೆಗಾಣದೆ ಸಣ್ಣಯ್ಯನ ನಿಂತ ಕಾಲುಗಳು ನೆಲಕ್ಕಿಳಿಯುತ್ತಿದ್ದವು. ಅವ್ವ ಆಂತೊಕೊಂಡು ಹಟ್ಟೀಯ ಒಂದು ಮೂಲೆ ಹಿಡಿದು ಸ್ಟಾರ್ಟು ಮಾಡಿ ನಿಧಾನವಾಗಿ ಕಣ್ಣು ಚಲಿಸುತ ಅಲ್ಲಲ್ಲಿ ನೆಡುತ ಕಂಡದ್ದು ವರ್ಣಿಸುತ್ತ ರಾಗವಾಗಿ ದನಿ ಎತ್ತರಿಸಿ ಹಾಡುತ್ತಿದ್ದಳು. +ಒಂದು ಕಾಲದಲ್ಲಿ ಪೂರ್ತವೆ ಹಂಚು ಹೊದ್ದು ಮೆಡುಗಾರಿಕೆ ಮಾಡಿದ್ದ ಆ ಹಟ್ಟೀಯ ಹಂಚು ಕಯ್ಯಾಡಿಸಿದಾಗ ಕಮ್ಮಿ ಬೀಳೋ ಹೆಂಚುಕೆ ಬದುಲು ಹಂಚು ತರಲಿ ಕಯ್ಲಾಗದೆ ಮುಂದಿನ ವರುಷಕ್ಕೆ ಹಂಚಾಕಿಸಿದರಾಯ್ತು ಅಂದುಕೊಂಡು, ಆ ಖಾಲಿಗೆ ಹುಲ್ಲೂ ತೆಂಗಿನ ಗರೀನ ಕವುಚಿ ಈಗ ಹಂಚೂ ಹುಲ್ಲೂ ಅನೂನ್ಯವಾಗಿದ್ದವು. ಹಟ್ಟೀಯ್ ಹೊತ್ತು ನಿಂತಿದ್ದ ಕಂಬ ಕಮಾನು ತೊಲಗಳು ಕುಗ್ಗಿ ಬಗ್ಗಿ ತಮ್ಮ ನೆರಳಡಿ ಉಸುರಾಡುತ್ತಿದ್ದ ಜೀವಿಗಳ ಬಗ್ಗೆ ದಯ ತೋರುತ್ತ ನಿಂತಿದ್ದವು. +ಹಟ್ಟೀನ ಕಣ್ಗೆ ತುಂಬಿಕೊಂಡಂಥ ಸಾಕವ್ವ ಕುಂತಲ್ಲೆ ಕುಸುದು, ಕಡ್ಡಿಯಂತೆ ಎದುದು ನಿಂತಿದ್ದ ಮಗ ಸಣ್ಣಯ್ಯನ ಕಡೆಗೆ ಕಣ್ಣಮೊನೆಗೆ ಸಾಣೆ ಹಿಡಿದು ನೋಡುತ್ತ ತನ್ನೇಡು ಕೈಗಳಿಂದಲೂ ನೆಲವ ತಾರಿಸಿ ಆ ಕೈಗಳ ಚಟಕ್ಕನೆ ಮಗನದಿಕ್ಕ ಚಾಚಿ ಅಲ್ಲಾಡಿಸುತ್ತ ’ಎಂಥ ರೂಪ್ಗೆ ತಂದ್ರಪ್ಪ ನನ್ನ ಹಟ್ಯ’ ಎಂದು ದುಕ್ಕವ ತುಂಬಿಕೊಂಡು ನೋಡಿದಳು. ಮಗನಿಗೂ ಆ ರೀತಿ ಅವ್ವನ ನೋಡಲಾಗಲಿಲ್ಲ. ಸಣ್ಣಯ್ಯ ’ಅದ್ಕ ನಾ ಯಾನ್ನ ಮಾಡ್ಲವ್ವ’ ಅಂದನು. ಸಾಕವ್ವ ಒಂದು ಸಲ ಕ್ಯಾಕರಿಸಿ ತೊಟ್ಟಿಗೆ ಉಗುದು ಒಂದೇ ಮಾತು ’ಕೆರ್‍ಗೆ ಬೀಳು’ ಅಂದಳು. ಸಣ್ಣ, ಹೊಟ್ಟ ಒಳಗ ಕುಣಿದಾಡುತ್ತಿದ್ದ ಮಾತುಗಳಿಗೆ ಬೀರುಗುಣಿಕೆ ಹಾಕಿ ’ನಿನ್ನೊಂದ್ಗ ಮಾತಾಡು ಕೀಮಿಲ್ದಿಯ’ ಅಂದು ತನ್ನ ಪಾಲು ಕಿರುಮನೆ ದಿಕ್ಕುಗ ಮೊಖ ಇಟ್ಟನು. +ಸಣ್ಣಯ್ಯ ಇನ್ನೂ ಮೊಖ ಇಟ್ಟಿದ್ದನೊ ಇಟ್ಟಿರಲಿಲ್ಲವೊ ಕಿರುಮನೆಯಿಂದ ಬಾಣದಂತೆ ಸಣ್ಣನ ಹೆಂಡತಿ ಹೊರಬಂದು ಅತ್ಯಮ್ಮನಿಗೆ ಸವಾಲಿನಂತೆ ನಿಂತಳು. ಚೆಲುವಮ್ಮ ಮುವ್ವತ್ತಾಗಿಲ್ಲದಿದ್ದರೂ ನಾಕು ಮಕ್ಕಳ ತಾಯಿ. ಇದ್ದುದರಲ್ಲಿ ಹೊಟ್ಟ ಬಟ್ಟಗ ನೇರವಾಗಿದ್ದವರ ಮನೆಯಿಂದ ಕಾಲಿರಿಸಿದವಳು. ಚೆಲುವಮ್ಮನ ತೌರಿಂದ ತಾಯಿ ಕದೇಯ ಒಳ ಸರಬರಾಜು ಒಂಟು, ಅದಕ್ಕೇನೆ ಹೆಡ್ತಿ ಮುಂದೆ ಸಣ್ಣ ಬಾಲ ಮುದುರುವವರೂ ಇದ್ದರು. ಯಾರಾರು ಸುತ್ತಿ ಬಳಸಿ ಕೇಳಿದರೆ ’ವೂ ಕಯ್ಯೋ ನಾ ಉಣ್ತಾ ಇರೋದು ನಮ್ಮತ್ತೆ ಮನೇದೆ’ ಎಂದು ರೇಗುತ್ತಿದ್ದನು. ಅಣ್ಣನಿಗೆ ಮಕ್ಕಳಾಗದು ಎಂಬುದು ದಿನಗಳಿದಂತೆ ದಿಟವಾಗುತ್ತ ಸಣ್ಣಯ್ಯನೂ ಹುಮ್ಮಸ್ಸಿನಿಂದ ದೇವರ ಮೇಲ ಭಾರ ಹಾಕಿ ಒಂದಾದಮೇಲೊಂದರಂತೆ ನಾಕು ಮಕ್ಕಳು ಮಾಡಿದ್ದನು. ಕೊನೆಯದು ಕೈ ಕೂಸು. +ಆ ಕೈಗೂಸು ಬೆಟ್ಟು ಚೀಪುತ್ತ ಪೆಕರು ಪೆಕರಾಗಿ ನೋಡ್ತ, ಅತ್ತೆಗೆ ಸವಾಲಾಗಿ ನಿಂತಿದ್ದ ಚಲುವಮ್ಮನ ಕಂಕುಳಲಿ ಆಡುತ್ತಿತ್ತು. ಚಲುವಮ್ಮ ಆ ಕೂಸನ್ನು ಒಂದು ಕಂಕುಳಿಂದ ಇನ್ನೊಂದು ಕಂಕುಳಿಗೆ ಕುಕ್ಕರಿಸಿ ’ಅದೇನತ್ತಮ್ಮ ನೀವು ಮಾತೆತ್ತಿದರ ನನ್ನಟ್ಟಿ ನನ್ನಟ್ಟಿ ನನ್ನಾಸ್ತಿ ನನ್ನಾಸ್ತಿ ಅಂತೀರಲ್ಲ…’ ಅಂದು ಅತ್ಯಮ್ಮನ ಉತ್ತರಕ್ಕೆ ಕಾದಳು. ಸಾಕವ್ವ ಹಿಡುತವಾಗಿ ’ಎದೇಕಾನಮ್ಮಿಯೆಣ್ಣ ನನ್ನಟ್ಟಿ ನನ್ನಾಸ್ತಿ’ ಅಂದಳು. ಅದರಲ್ಲೆಕಾ ಬಿಕನಾಸಿ ನೀನೂವೆ ಬಿದ್ದಿರೋದು ಎಂಬೊ ದನಿ ಆ ಮಾತಿನಿಂದ ಹೊರಟು ಅದು ಚೆಲುವಮ್ಮನ ಕೆಣುಕಿತು. ಚೆಲುವಮ್ಮ ಕಂಕುಳಲ್ಲಿದ್ದ ಕೂಸ ಗಂಡನ ಹೆಗುಲಿಗೆ ಬಿಸಾಕಿ ಅತ್ಯಮ್ಮನ ಮುಂದ ಕೈ‌ಆಡಿಸುತ್ತ ’ಅವೈ….ನಾನೂವಿ ಅದ್ನೆ ಕೇಳೋದು ಕನ್ಯತ್ತಮ್ಮ….ಎಷ್ಟು ಇಟ್ಟೀವ್ರಿ….ಅಂತ’ ಎಂದು ಕೆಕ್ಕರಿಸಿಕೊಂಡು ಕೇಳಿದಳು. +ಮಾತಾಡಿ ಮಾತಾಡಿ ಸಾಕವ್ವನ ಹೊಟ್ಟ ಒಳಗಲ ದ್ರವ ಮಂಗರಮಾಯವಾಗಿದ್ದ ಪ್ರಯುಕ್ತ ಗಡುಗೇಲಿದ್ದ ನೀರ ಒಂದು ಗುಟುಕಿಗೆ ಕ್ಡುದು ’ನಿನ್ನ ಕಣ್ಣು ಕುಂಡ?’ ಅಂದಳು.ಅತ್ತಮ್ಮನ ಮಾತು ಸೊಸಮುದ್ದಿಯ ಮಯ್ಯ ರೋಷ ಉಕ್ಕಿಸಿತು. ಚಲುವಮ್ಮ ಅಂದಳು-’ನನ್ನ ಕಣ್ಯಾತಕಮ್ಮ ಕುಂಡೂ…ನಾನುವಿ ಕಂಡಿವ್ನಿಕಣಾ ತಕ್ಕಳ್ಳಿ….ಪರದೇಸಿ ನಿಂತ ಥರ ಇರೋ ಈ ಹಟ್ಟಿ ಕಂಡಿಲ್ವಾ…..ಮಳ ದೇವರು ಕಣ್ಣುಬುಟ್ಟರೂ ಬೆಳೆಕಾಣ್ದ ನಾಕು ಎಕ್ರ ಹೊಲ ಕಂಡಿಲ್ವಾ….ನಿಮ್ಮ ಇರೊ ಮೂರು ಗಂಡ್ಮಕ್ಕಳ ತಲಗೆರಡು ಎಕ್ರನಾರು ಹಂಚಿ ಮತ್ತ ನೋಡವು..’ ಅನ್ನುತ್ತಾ ಅತ್ತೆ ಮುಂದ ಕೂತುಬುಟಳು. ಗಂಡ ಸಣ್ಣಯ್ಯ ಹೆಡ್ತಿ ಕಯ್ಯ ಹಿಡಿದೆಳೆಯುತ್ತ ’ನೀ ಏಳಮ್ಮಿ…ನೀ ನಡಿಯಮ್ಮಿ’ ಎಂದು ತೊದಲುತ್ತಿದ್ದನು. ಚಲ್ವಮ್ಮ ಗಂಡನಿಗೆ ಕೇರು ಮಾಡಾದೆ ಕಯ್ಯ ಕೊಸರಿ ಮತ್ತೂ ಪಟ್ಟಾಗಿ ಕೂತಳು. ಸಾಕವ್ವ ನಿಧಾನವಾಗಿ ಆದರೆ ಕಟುಕಾಗಿ ’ನನ್ನಾಸ್ತಿ ಅಂಗೈಯಗಲಾನೆ ಇರ್ಲಿಕಾ ಗರ್ತಿ…ಅದರಲ್ಲೇನೆ ನೀನೂವಿ ಉಣ್ತಿರೋದು’ ಅಂದಳು. ಚಲುವಮ್ಮನಿಗೆ ತನ್ನ ಕತ್ತು ಕತ್ತರಿಸಿ ಮುಂದಿಟ್ಟಂತಾಯ್ತು. ಅವಳು ನೆಲವ ಕುಟ್ಟಿ ತಟ್ಟಿ ಎದ್ದು ಬೆಂಕಿ ಕಕ್ಕುವಳಂತೆ ’ಅತ್ತೆಮ್ಮೊ ನೀವು ಹಿಂಗೇ ಅಂತಾ ಇರಿ. ನಾನು ಹುಚ್ಚತ್ತಿದರ ಹುಚ್ಚುಮುಂಡೆ. ತಲ ಒಳ್ಗಲ ಹು‌ಆ ಪತರಗುಟ್ತವ. ಒಂದಲ್ಲಾ ಒಂಜಿನ ನಿಮ್ಮ ಹಟ ಬಿಂಕಿ ಹತ್ಸುಬುಟ್ಟು ನಿಮ್ಮ ಹೊಲ್ಕ ಕೈಯ್ಯ ಬೀಸ್ಕಂಡು ಮೇಲುಕೂ ಕೆಳುಕು ಉಸುರು ಬುಡ್ತ ಕಿರುಮನೆಗೆ ಬಿರುಗಾಳಿಯಂತೆ ನುಗ್ಗಿದಳು. ಅವಳ ಕೈಗೂಸು ಅಜ್ಜಿಯ ಸುತ್ತ ಆಡುತ್ತಿತ್ತು. +ಯಾಕಾರು ಮಾತೆತ್ತಿದೆನೊ ಎಂದು ಸಣ್ಣಯ್ಯ ನಿಟ್ಟುಸಿರು ಬುಡುವುದ ಬಿಟ್ಟು ಬೇರೇನೂ ತೋಚದೆ ನಿಂತಿದ್ದನು. ಹೆಡ್ತಿ ಚಲುವಮ್ಮ ಈಗಾಡಿದ ಮಾತು ಅವನ ತಲೆಗೂ ಸಿವುರಾಗಿತ್ತು. ಅವ್ವ ಢಮಾರ್ ಅನ್ನಲು ನೆಲವ ಕುಟ್ಟುತ್ತ ತಟ್ಟುತ್ತ ರೆಡಿಯಾಗುತ್ತಿದ್ದಳು. ಉಸುರು ಅನ್ನೋದ ಹಿಡಿದು ಮಗ ನಿಂತಿದ್ದನು. ಕೂಸು ತನ್ನಜ್ಜಿ ಸುತ್ತ ತವುದಾಡುತ್ತಿತ್ತು. +ಸಾಕವ್ವ ನೆಲ ಸವುರುವುದ ಕುಟ್ಟುದ ನಿಲ್ಸಿ ’ಕೇಳ್ದೇನೋ ಗ್ರಾಸ್ತ ನಿನ್ನೆಡ್ತಿ ಮಾತ…’ ಎಂದು ಒಂದು ಸಲ ಚೀರಿದಳು. ಆ ಚೀರು ಹಟ್ಟೀನ ಒಂದು ಸಲ ಕಿತ್ತುಕೊಂಡು ಇಡೀ ಹಟ್ಟೀನ ಒಂದು ಸಲ ಅಲ್ಲಾಡಿಸಿತು. ಮಗನಿಗೆ ಬಾಯಿ ಬರಲಿಲ್ಲ. ದುಕ್ಕವೇ ಬಾಯಿಬುಟಗೊಂಡು ಕುಂತಥರ ಅವ್ವ ಕೂತಿದ್ದಳು. ಮಗನ ದಿಕ್ಕಿಂದ ಮಾತು ಹುಟ್ಟದಿರಲು ಇನ್ನೊಂದು ಸಲ ಅವ್ವ ’ಕೇಳ್ದೆನೋ ಗ್ರಾಸ್ತ ನಿನ್ನೆಡ್ತಿ ಮಾತ’ ಎಂದು ಕೂಗಿದಳು. ಸಣ್ಣಯ್ಯ ಬಾಯಿ ಕಟ್ಟಿದವನಾಗಿ ’ಸುಂಕಿರವ್ವ….ಸುಂಕಿರು’ ಅಂದನು. ಸಾಕವ್ವನ ಕ್ಯಾಣ ಅದಕ್ಕೂ ಎದ್ದಿತು. ’ನಿನ್ನ ಹೆಡ್ತಿ ಸುಂಕಿರ್‍ಸಕ ಆಗ್ದವ, ನನ್ನ ಸುಂಕಿರ್‍ಸಕ ಬಂದ್ಯಾ ನನ್ನ ಮಗ್ನೇ, ಸಭಾಸ್…ಸಭಾಸ್. ಅವುಳೇನಾರು ಈವತ್ತು ನನ್ನ ಹಟ್ಟೀಲಿ ಇದ್ರ ಅವುಳು ಅವಳಪ್ಪನ್ಗ ಹುಟ್ಟಿದ ಮಗಳಲ್ಲ…ಅಷ್ಟಿಯಾ ನಾ ಹೇಳೊದು…..ಅಷ್ಟಿಯಾ ನಾ ಹೇಳೊದು….’ ಎಂದು ಇಪ್ಪತ್ತು ಹೇಳುದ್ದನ್ನು ಹೇಳುತ್ತ ಹೇಳತೊಡಗಿದಳು. +ಅತ್ಯಮ್ಮನ ಬಾಯಿಂದ ಆ ವಾಕ್ಯ ಬಂದುದೇ ತಡ ಕಿರುಮನೆಯಲ್ಲಿ ತಡಾಬಡ ಸದ್ದು ಎದ್ದಿತ್ತು. ಸಣ್ಣಯ್ಯನಿಗೆ ನಿಲ್ಲಕೂ ಆಗದೆ ಹೂತ ಕಾಲು ಕಿತ್ತು ಕಿರುಮನೆದಿಕ್ಕ ನಡುದನು. ನಡುಮನೆಯ ವಸ್ತುಲಲ್ಲಿ ತಂಗಿ ಗೌರಮ್ಮ ಕಣ್ತುಂಬಾ ನೀರು ತುಂಬಿ ನಿಂತಿದ್ದವಳು ಅಣ್ಣಯ್ಯನ ಮೊಖ ಕಾಣುತ್ತಲೆ ಫಳಾರನೆ ಕಣ್ಣೀರ ಚೆಲ್ಲಿ ’ಅಣ್ಣೊ, ಅವ್ವ ಹೆಂಗಾರು ಪೇಚ್ಕಳ್ಲಿ. ನಾನೇನ ಇಲ್ಗ ಆಸ್ತಿಗ ಬಂದಿದ್ದನಣ್ಣ. ಅವ್ವ ಬರ್‍ಕೊಡ್ತೀನಿ ಅಂದ್ರೂ ನಾನು ಬರಸ್ಕಂಡನಾ’ ಅಂದಳು. ಗೌರಮ್ಮನ ಹಿರಿಮಗ ಹುಟ್ಟಿದಲಾಗಯ್ತು ಬಿಳುಚಿಕೊಂಡಿರುವಂಥವನು ತಲ ತುಂಬಾ ಬಿಳಿ ದುಪ್ಪಟ್ಟಿ ಹೊದ್ದು ನಡುಮನೆ ಗೋಡೆಗೆ ಮೊಖ ಹಾಕಿ ಕೂತವನು ಕಷ್ಟದಿಂದ ತಿರುಗಿ ತನ್ನವ್ವ ಮಾವನ ಕಡೆಗೆ ನೋಡಿದನು. ನಡುಮನೆ ದೀಪಾಲೆ ಕಂಬದ ಬಳಿಯ ಮಸಿ ತೊಡೆಯೂತಲಿದ್ದ ಕಿರಿ ತಂಗಿ ಪುಟಗೌರಿ ಯಾವ ದಿಕ್ಕೂ ತಿರುಗೂ ನೋಡದೆ ಅಣ್ಣಾನಿಗೆ ಚುಚ್ಚುವಂತೆ ’ನಾನು ಯಾವೊತ್ತು ಈ ಹಟ್ಟೀ ಬುಟ್ಟು ಕಡ್ದು ಹೊಂಟೋದನೊ ಸಿವ್ನಾ….ಅಂತಿವಿನಿ’ ಎಂದು ಮಾತೆಸೆದು ಮಸೀ ಕೆರೆಯತೊಡಗಿದಳು. ಸಣ್ಣಯ್ಯ ಗೌರವ್ವಮ್ಮನಿಗೆ ’ನೀನು ಸುಂಕ ಒಳಕ್ಕ ನಡೆಯವ್ವ….’ ಅಂದವನೆ ಕಿರುಮನೆಗೆ ಬಿರುಸಾಗಿ ಬಂದನು. +ಇತ್ತ ಹೊರಬಾಗಿಲು ತಳ್ಳಿಕೊಂಡು ಕಿರಿಮಗ ಗುರುಸಿದ್ದು ಒಳಬಂದನು. ಬಂದವನೆ ಕಣ್ಗೆ – ಅವ್ವ ಭೂಮಿಗಂಟಿ ಕುಂತ ಥರ, ಅಕ್ಕ ವಸ್ತುಲಿಗಂಟಿ ನಿಂತ ಥರ, ಕಿರುಮನೇಲಿ ತಡಬಡ ಗುಸುಪಿಸು, ಕಾಳಣ್ಣನ ನೆರುಕೇಲಿ ಸದ್ದಿಲ್ಲದ್ದು – ಕಂಡು, ಬಂದವನು ನಿಲ್ದೆ ಹಿಂದುಕೆ ತಿರುಗಿದನು. ಸಾಕವ್ವ, ಮಗ ಬಂದುದು ಕಂಡರೂ ಅವನೇ ಏನವ್ವ ಎಂದು ಕೇಳಲಿ ಅಂದುಕೊಂಡಿದ್ದು ಈಗ ಮಗ ಬಂದವನು ಮಂಗರಮಾಯ ಆಗುತ್ತಿರುವುದನು ಕಂಡು ಸಾಕವ್ವ ’ಗುರುಸಿದ್ದೂ’ ಎಂದು ಕರೆಯುವಷ್ಟರಲ್ಲಿ ಅವುನು ಅಂಗಳಕ್ಕಿಳಿದು ’ಬಂದಿ ತಡೆಯವೈ’ ಅಂದು ತಿರುಗೂ ನೋಡದೆ ಮರೆಯಾದನು. +ಇಲ್ಲಿ ಕಿರುಮನೆಯಲ್ಲಿ ಹೆಡ್ತಿ ಚಲುವಮ್ಮ ಸಾಮಾನು ಸಂಜಾಮು ಕಟ್ಟೋದು ಗಂಡ ಸಣ್ಣಯ್ಯ ಕಿತ್ತುಕಿತ್ತು ಇಡೋದು. ಅವುಳು ಹಣೆ ಚಚ್ಚಿಕೊಳ್ಳೋದು ನಿಂತಾಗ ಇವುನು ಹಣೆ ಚಚ್ಚಿಕೊಳ್ಳೋದು ನಡೀತಾ ಇತ್ತು. ಅವರ ಹಸುಗೂಸು ಅಜ್ಜಿ ಹತ್ತಿರ ಆಡುತ್ತಿದ್ದರ, ಇನ್ನೊಂದೆಲ್ಲೊ ಹೊರಕ್ಕೋಗಿದ್ದು ಉಳಿದವೆರಡು ಬೆಪ್ಪಾಗಿ ಅಪ್ಪ ಅವ್ವರ ಕಿತ್ತಾಟ ನೋಡ್ತ ಕೂತಿದ್ದವು. ಇದುವರಗೂ ಗಲುಗು ಗದ್ದಲಗಳನ್ನು ಬಾನಿಗಂಚುತ್ತಿದ್ದ ಹಟ್ಟಿಯು ಈಗ ತಲ್ಲಣಗೊಂಡು ಕೇವಲ ನಡುಗುವಂತಿತ್ತು. +ಆಗ ಮಾರಿಗೊಂದು ಹೆಜ್ಜೆ ಇಡುತ ಹಿರಿಮಗ ಕಾಳಣ್ಣ ಒಳ ಬಂದನು. ಅವ್ವನ ಕಂಡು ಏನೋ ಆಗಿದೆ ಅನ್ನಿಸಿ ಏನವ್ವಾ ಅಂದರೂ ಆ ಅವ್ವ ಬಿಟ್ಟಂಥ ಕಣ್ಬಾಯ ಮುಚ್ಚದೆ ಅಥವಾ ತಗೆಯದೆ ಕೂತಿರಲು, ಸರಸರ ತನ್ನ ನೆರುಕೆಗೆ ಬಂದನು. ಬಂದವನ ಕಿವಿಗೆ ಅವುನು ಉಸ್ಸೊ ಎಂದು ಕೂರುವ ಮೊದಲು, ಹೆಂಡತಿ ಕೂತಿದ್ದವಳು ಆದುದ್ದ ಒಂದೂ ಬುಡದೆ ತುಂಬಿದಳು. ಕಾಳಣ್ಣ ತನ್ನ ದೊಡ್ಡ ಘಟವನ್ನು ಹಿಡಿಮಾಡಿ ಕೂತನು. ಬೇಕಾದರೆ ಸುತ್ತಾ ನಾಕು ಗ್ರಾಮಕ್ಕೆ ತಿಳುವಳಿಕೆ ಹೇಳಿ ಸೈ ಅನ್ನಿಸಿಕೊಂಡರೂ ತನ್ನ ಹಟ್ಟೀಲಿ ಕ್ಯಾಬಿನೈ ಆಗುತ್ತಿತ್ತು. ಹೆಡ್ತಿಗೆ ಏನ್ಮಾಡಿದ್ದೀಯಾ ಎಂದು ಕೇಳಿದನು. ಹೆಡ್ತಿ ’ಟೀನೀರು ಕಾಯ್ಸಿವ್ನಿ, ನೆನ್ನ ಸಂತ ಕಳ್ಳಪುರಿ ಒಂದಿಷ್ಟವೆ’ ಅಂದಳು. +ಆಗಲೆ ಚಲುವಮ್ಮ ಸಣ್ಣಯ್ಯನಿಮ ಕೊಸರಾಡಿ ಕಿತ್ತುಕೊಂಡು ತನ್ನ ಬಟ್ಟಬರೆ ತುಂಬಿದ್ದ ತೌರ ಟ್ರಂಕ ಎಡಗೈಲಿ ಹಿಡುಕೊಂಡು ಬಲಗೈಲಿ ಅವಳ ಎರಡನೆ ಮಗನ ಎಳುಕೊಂಡು ಕಿರುಮನೆಯಿಂದ ಬರುತ್ತಿದ್ದಳು. ಆ ಹೈದ ಬುಡವ್ವೊ ಬುಡವ್ವೊ ಎಂದು ಅವ್ವನಿಂದ ಕಿತ್ತುಕೊಳ್ಳುತ್ತಿತ್ತು. ಚಲುವಮ್ಮ ರೋಷಗೊಂಡು ಆ ಹೈದನ ತಳ್ಳಿ ಆಮೇಲ ಟ್ರಂಕ ಭಾರಕ್ಕೂ ಜಗ್ಗದೆ ಅದರಜ್ಜಿ ಪಕ್ಕ ಆಡುತ್ತಿದ್ದ ಕೂಸನ್ನು ಎತ್ತಿ ರಭುಸವಾಗಿ ಕಂಕುಳಿಗೆ ಒಂದುಸಲ ಕುಕ್ಕರಿಸಿಕೊಂದಳು. ಆ ಕೂಸಿಗೆ ಗಕ್ಕಿಟ್ಟಂತಾಗಿ ಚೀರಿತು. ಅವಳ ಹಿಂದೆ ನಿಂತು ಗಂಡ ಸಣ್ಣಯ್ಯ ’ಯಾನಮ್ಮೀ ನೀ ಮಾಡೋದು…..ಯಾನಮ್ಮೀ ನೀ ಮಾಡೊದು’ ಅನ್ನುತ್ತ, ಬೆಬಗರಿಯುವುದ ಬಾಕಿ ಉಳಿಸಿಕೊಂಡು ನಿಂತಿದ್ದನು. +ಕಾಳಣ್ಣ ಒಳಗಿದ್ದವನು ಹೊರಬಂದು ನಿಲ್ಲಲು ಎಲ್ಲವೂ ಚಣ ಅಲ್ಲಲ್ಲೆ ನಿಂತಿತು. ಕಾಳಣ್ಣ ಎಲ್ಲರನ್ನೂ ಒಂದು ಸಲ ನೋಡಿ, ಕಿರುಮನೆ ದಿಕ್ಕು ಬೆರುಳು ಮಾಡಿ ಚಲುವಮ್ಮನಿಗೆ – ’ನೀ ಮೊದ್ಲು ಒಳಕ್ಕೋಗು ಇವ್ಳಾ’ ಅಂದನು. ಚಲುವಮ್ಮ ಹಿಡಿದಿದ್ದ ಟ್ರಂಕ ನೆಲಕೆ ದಬ್ಬನಿಟ್ಟು ತಾನು ಕೊಸಕ್ಕನೆ ಕೂತು, ಕೂಸ ಆಡಲು ಕೆಳಬಿಟ್ಟು ’ಅಲ್ಲ ಕನ್ನಿ ಬಾವಯ್ಯ…. ಈ ಮನೇಲಿ ನಾ ಏನಂದ್ರೂ ತಪ್ಪಾಯ್ತದಲ್ಲ….ನಾನು ಇರ್‍ಬೇಕ ಸಾಯ್ಬೇಕ….’ ಎಂದು ಸ್ರುಗ ಮೊಖಕ್ಕೆ ಮುಚ್ಚುಕೊಂಡು ಗೋಳೆಂದಳು. ಚಲುವಮ್ಮನ ಅಳುಕಂಡು ಅವಳ ಎರಡನೆ ಮಗನೂ ಬಾಯಿತಗುದು ಅವ್ವನ ಅಳುಗೆ ತನ್ನ ದನೀ ಕೂಡಿಸಿತು. ಸಾಕವ್ವ ಕೈಯಾಡಿಸೂತ ’ಅವ್ವವ್ವಾ….ಈ ಘನಗರ್ತಿ ಮಾತ್ ನೋಡ್ರವ್ವ…’ ಅಂದು ಚಲುವಮ್ಮನ ದಿಕ್ಕು ನಟುಕೆ ಮುರಿದಳು. ಬಚ್ಚಲ ದಿಕ್ಕಿಗೆ ತವುಯುತ್ತಿದ್ದ ಕೈಗೂಸ ಗೌರಮ್ಮ ಎತ್ತುಕೊಂದಳು. ಚಲುವಮ್ಮನ ಪಕ್ಕದಲ್ಲಿದ್ದ ಟ್ರಂಕ ಸಣ್ಣಯ್ಯ ಕೈಲಿಡಿದು ಕಿರುಮನೆಗೆ ನಡೆಯುತಲೆ ಚಲುವಮ್ಮ ಸೊರಗುಟ್ಟುತ್ತ ಎದ್ದು ಗಂಡ ಮತ್ತು ಟ್ರಂಕ ಅನುಸರಿಸಿ ನಡುದು ಕಿರುಮನೆಯಲೆ ಕುಕ್ಕರಬಡಿಸಳು. +ಅಷ್ಟಾಯ್ತು. ಅಲ್ಲಿಗೆ ಕಾಳಣ್ಣನಿಗೆ ನಿಲ್ಲಕಾಗದೆ ಮನೆ ತುಂಬೆಲ್ಲ ಒಂದ್ಸಲ ಕಣ್ಣ ಕೆಂಪಗಾಡಿಸಿ “ಅಲ್ಲಾ ಕನ್ರಮ್ಮೇ…..ಹಟ್ಟಿಯಮ್ಮಗಳೆಲ್ಲ ಎತ್ತಾಗು ಹೋಗ್ದೇನೆ ಗುಡ್ಡಾಕ್ಕಂಡಿದ್ದೀರಲ್ಲ…..ನಿಂಗ ಉಣ್ಣಾಕ ಬಾನಿಂದ ಇಳ್ದು ಬಂದದಾ….’ ಅಂದನು. ಯಾರ ಬಾಯಿಂದೂ‌ಒ ಮಾತು ಹೊರಡದೆ ಕೊನೆಗೆ ತಂಗಿ ಗೌರಮ್ಮ ’ಕೆಲ್ಸಕ ಕರದ್ರಲ್ವಣ್ಣ ವೋಗದು. ನಾವೂನು ಮೇಲ್ಬದ್ದು ಮೇಗಲ ಕೇರಿನೆಲ್ಲ ತಿರಕಂಡು ಬಂದ್ವು. ನೀ ಯಾರ ಅನ್ನೋರಿಲ್ಲ’ ಅಂದಳು. ಕಾಳಣ್ಣ ನಿಂತವನು ನಿಂತಿದ್ದನು. +ಆಗ ಕಿರುಮನೆಯಿಂದ ಚಲುವಮ್ಮ ಕೈಲಿ ಕುಡ್ಲು ಹಿಡಿದು ಹೊರಬಂದು ಕಾಳಣ್ಣನ ಹೆಡ್ತಿಗೆ ’ಅಕ್ಕಯ್ಯ…ಬನ್ನೀ, ಸೌದುಗಾರು ಹೋಗಿದ್ದು ಬರೋವು’ ಅಂದಳು. ಅದಕ್ಕ ಕಾಳಣ್ಣನ ಹೆಡ್ತಿ ’ಅಯ್ಯೋ ತಡೀ ತಾಯಿ, ಇವ್ರು ಈಗ ತಾನೆ ಬಂದ್ರು. ಉಣ್ಣಾಕಿಕ್ಕುಬುಡ್ತೀನಿ. ಸೌದಗೇನ ಸಂಜೆಗೋದ್ರೂ ಒಂದಿಶ್ಟು ತರಬೌದು…’ ಅಂದು ಗಂಡನಿಗ ’ಇನ್ನು ಬನ್ನಿ ಮತ್ತ’ ಅಂದಳು. ಕಾಳಣ್ಣ ಅಲ್ಲೆ ನಿಂತು ’ಅವ್ವಗ ತಂದ್ಕೊಡು’ ಅಂದನು. ಕಾಳಣ್ಣನ ಹೆಡ್ತಿ ಒಳಗಿಂದ ಒಂದು ಬೋಸೀಲಿ ಟೀನೀರು. ಒಂದು ಮೊರದಲಿ ನಾಕು ಹಿಡಿ ಪುರಿ ತಂದು ಸಾಕವ್ವನ ಮುಂದಿಟ್ಟಳು. ಸಾಕವ್ವ ’ಅಯ್ಯೊ ನನ್ಗ ಬ್ಯಾಡಕಾ…..ನನ ಕಂದ’ ಅಂದಳು. ಕಾಳಣ್ಣ ’ಸುಮ್ಮನ ಕುಡಿಯವ್ವ ಮತ್ತ’ ಅಂದನು. ಕಾಳಣ್ಣನ ಹೆಡ್ತಿ ’ಅವ್ರು ಕುಡುದ್ರು ಕಣ….ನೀವು ಕುಡೀರಿ ಅತ್ಯಮ್ಮ’ ಮದಳು. +ಸಾಕವ್ವ ಮೂರು ಪುರೀನ ತಗುದು ಚಿಕ್ಕವನ ಕೂಸಿನ ಮುಂದಿಟ್ಟು ನಾಕು ಪುರಿ ತಗುದು ತನ್ನ ಬಾಯ್ಗೆ ಹಾಕ್ಕೊಂಡು ’ಗೌರಿ ತಕ್ಕೊ….ಆ ನಿನ್ನ ಹಿರೀಗಂಡ್ಗೇಡು ಕೊಡು’ ಅಂದಳು. ಗೌರಮ್ಮ ಒಂದು ಹಿಡಿ ಪುರಿ ಈಸ್ಕಂಡು ತನ್ನ ಹಿರಿಮಗನಿಗೆ ನೀಡಿದಳು. ಆ ಹೈದ ತೊಗಟ ತೆಗದ ಕಡ್ಡಿಯಂತಿದ್ದ ತನ್ನ ಕೈ ನೀಡಿತು. +ಗೌರಮ್ಮನ ಆ ಹಿರೀ ಹೈದ ಕೊಟ್ಟದ್ದ ಈಸ್ಕಂಡು ತಿಂದ್ಕಂಡು ಅದರಷ್ಟಕ್ಕೆ ಅದಿತ್ತು. ಅದಕ್ಕೆ ಇದ್ದಂಥ ಕಾಯುಲೆ ಯಾವ ಕಾಲಕ್ಕು ವಾಸಿಯಾಗುವುದಲ್ಲ ಎಂದು ಅದ ನೋಡಿದವರು ಅದರೊಡನೆ ಅದರ ಅವ್ವನೂ ಅಂದುಕೊಂಡಿದ್ದರು. ಅದೂನು ಅಂತಲೇ ಅಂದ್ಕೊಂಡಿತ್ತು. ಅದು ಯಾವಾಗಲೂ ಒಂದು ಬಿಳಿದುಪ್ಪಟ್ಟಿಯ ತಲ ಮುಚ್ಚುವಂತೆ ಹೊದ್ದುಕೊಂಡಿರುತ್ತಿದ್ದು ಅದನ್ನು ಒಂದು ಚಣವೂ ಬಿಟ್ಟಿರುತ್ತಿರಲಿಲ್ಲ. ಅದಕ್ಕೇ ಅದರ ಚಿಕ್ಕಮಾವ ಗುರುಸಿದ್ದು ಆ ಹೈದನಿಗೆ ದುಪ್ಟಿ ಕಮೀಷನರು ಎಂದು ಕರೆಯುತ್ತಿದ್ದು ಈಗ ಅದೇ ಹೆಸರು ನಿಂತಿತ್ತು. ಅದರ ಹುಟ್ಟ ಹೆಸರು ಆ ಹೈದಗು ನೆಪ್ಪಿದ್ದಂತೆ ಕಾಣದು. ಆ ಹೈದ ಈ ಲೋಕದಿಂದ ಎಂದೋ ಚುಕ್ತವಾದದ್ದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಅದರಷ್ಟಕ್ಕೆ ಅದು ಕೂತಿರುತ್ತಿತ್ತು. ಉಳಿದ ಯಾಪಾರಗಳು ಅವರಷ್ಟಕ್ಕೆ ಅವು ನಡೆಯೂತ ಹೋಗುತ್ತಿದ್ದವು. ದೀಪಾಲೆ ಕಂಬದ ಬಳಿಯ ಮಸೀನ ಪುಟಗೌರಿ ಪೂರ್ತ ತೊಡುದು ಬೆಳ್ಳಗೆ ಕಾಣುತ್ತಿತ್ತು. +– ೩ – +ನಡೊತ್ತಿನಲಿ ಕೈಲಿ ಸ್ಕೂಲುಪ್ಪಿಟ್ಟು ಹಿಡುದು ಇಸ್ಕೋಲು ಮುಗುಸಿ ಶಿವೂ ಬಂದನು. ಮೇಲ ಉರಿಯೋ ಸೂರ್ಯ ಕ್ರೂರವಾಗಿ ನೆಲಕ್ಕೆ ಕೆಂಡ ಉಗುಳುತ್ತಿದ್ದನು. ಆ ಝ್ಹಳಕ್ಕೆ ಹಟ್ಟಿ ಸುಸ್ತಾಗಿ ಬೆವುತು ಮಲುಗಿತ್ತು. ಸಾಕವ್ವ ಕುಂತಲ್ಲೆ ತೂಕಡಿಸಿಕೊಂಡು ವಾಲಾಡುತ್ತಿದ್ದಳು. ದೊಡ್ಡ ಮಾವ ಕಾಳಣ್ಣ ತನ್ನ ನೆರುಕೆ ಬಾಗುಲಿಗೆ ತಲ ಹಾಕ್ಕೊಂಡು ಒಳಕ್ಕ ಕಾಲಾಕಿಕೊಂಡು ಗೊರಕೆ ವಡೀತ ಮಲುಗಿದ್ದನು. ಮಾವನ ತಲಮಾವನ ಹೆಡ್ತಿ ತೊಡ ಮೇಲಿತ್ತು. ಅವಳು ಮಾವನ ತಲೇನ ಬಗುದು ಬಗುದು ನೋಡ್ತ ಹೇನು ಬೇಟೆಯಲ್ಲಿ ಮುಳುಗಿದ್ದಳು. ನಡುಕಲ ಮಾವ ಸಣ್ಣಯ್ಯ ಎಲ್ಲೋ ಹೋಗಿದ್ದನು. ಅವನ ಎರಡು ಹೈಕಳು ಅಂಗಳದಲ್ಲೇ ಬಿದ್ದುಕೊಂಡಿದ್ದವು. +ಅತ್ತ, ಕಿರ್‍ಮನೆಯೊಳಗೆ ಚಲುವಮ್ಮ ಮಲೀಕಂಡು. ತನ್ನ ಕೂಸ ತಟ್ಟಿ ತಟ್ಟಿ ಮಲುಗಿಸುತ್ತಿದ್ದಳು. ಅವಳ ತಲೆ ದೆಸೆಯಲ್ಲಿ ಕೂತು ಅವಳ ಎರಡನೆ ಹೈದ ಬೋಸಿಯಲ್ಲಿ ಮಿಕ್ಕಿದ್ದ ಉಳುಕೆ ಅಂಬಲಿಗೆ ನಾಲುಗೆ ಅರ್ಪಿಸಿತ್ತು. ಇತ್ತ ನಡು ಮನೇಲಿ ಶಿವೂ ಅವ್ವ ಗೌರಮ್ಮ ನೆಲಕ್ಕೆ ಸೆರುಗ ಹಾಸ್ಕೊಂಡು ತನ್ನ ಹಿರೀಮಗನ ಪಕ್ಕ ಮಲುಗಿದ್ದಳು. ಶಿವೂ ಅಣ್ಣ ದುಪ್ಟಿಕಮೀಷನರು ಬಿಳಿದುಪ್ಪಟಿ ಹೊದ್ದುಕೊಂಡು ಅಲ್ಲಾಡದೆ ಕುಂತಿದ್ದು ಗೋಡೆ ನೋಡುತಲಿತ್ತು. +ಆ ನಡುಮನೆ ಬೆಳುಕಲ್ಲಿ ಶಿವೂ ಚಿಕ್ಕಮ್ಮ ಪುಟಗೌರಿ ಕುಕ್ಕರಗಾಲಲ್ಲಿ ಕೂತು ಲಂಗದ ಮೇಲಕ್ಕ ಸೀರೇನ ಎತ್ತಿಕಟ್ಟಾಕ್ಕೊಂಡು ಒಂದು ಗಳಾಸ್ನಲ್ಲಿ ತುಟೀಯ ಹಿಂದಕೂ ಮುಂದಕೂ ಮಾಡಿ ’ನವುಲು ಬರೀತೀನಿ ನೋಡ್ಕ’ ಅಂದಳು. ಶಿವು ಎಷ್ಟಾಗುತ್ತೊ ಅಷ್ಟೂ ಕಣ್ಣಗಲಿಸಿ ಅಲ್ಲೆ ಕೂತಿತು. +ನೀಲಿ ಕಲುಸಾದ ಮೇಲ ಪುಟಗೌರಿ ಶಿವೂ ಕೈಲಿದ್ದ ಸ್ಕೂಲುಪ್ಪಿಟ್ಟು ನೋಡಿ ’ತಿಂದ್ಕ ಅದ’ ಅಂತಲೆ ಶಿವೂ ’ನಿಂಗೂ ವಸೆಬೇಕ’ ಅಂದನು. ಅದಕ್ಕವಳು ’ಬ್ಯಾಡ…ನಿಮ್ಮಣ್ಣನ್ಗು ವಸಿಕೊಟ್ಟು…ನೀನೊಸಿತಿಂದ್ಕ’ ಅಂದಳು. ಶಿವೂ ಆ ಉಪ್ಪಿಟ್ಟನ್ನು ಎರಡು ಭಾಗ ಮಾಡಿ ಒಂದೊಂದು ಕೈಲು ಒಂದೊಂದು ಹಿಡುದು ಅದರಣ್ಣ ದುಪ್ಟಿ ಕಮೀಷನರ ಬಳಿಗೆ ಬಂದು ಒಂದು ಕಯ್ಯ ನೀಡಿ ಅಣ್ಣೋ ಅಣ್ಣೋ ಅಂತು. ಆ ಅಣ್ಣ ಕುಂತೇ ಇದ್ದು ಎಷ್ಟೋ ಹೊತ್ತು ಆದಮೇಲ ತಮ್ಮನ ದಿಕ್ಕ ತಿರುಗಿ ಕಯ್ಯ ನೀಡಿತು. +ಈಚಲ ಕಡ್ಡೀಗೆ ನೀಲಿ ಅಜ್ಜುಕೊಂಡು ಪುಟಗೌರಿ ನವುಲ ಕಾಲಿಂದ ಆರಂಭಿಸಿದಳು. ಪುಟಗೌರಿಯ ಕೈಗಳಿಗೆ ತನ್ನ ಕಣ್ಣು ಕೊಟ್ಟುಬಿಟ್ಟಿದ್ದ ಶಿವೂ ’ಅಯ್ಯೊ ಚಿಕ್ಕಿ ಎಲ್ಲಾರು ಮೊದ್ಲು ಬರ್ದಾರ’ ಎಂದು ಬೆರುಗಿಂದ ಅಂದನು. ಪುಟಗೌರಿ ಗೋಡೇಲಿ ಕಯ್ಯ ಆಡಿಸುತ್ತ ’ನೀ ಸುಂಕಿರಪ್ಪ ನಾ ಬರೆಯಗಂಟ’ ಅಂದು ಯಾವುದೊ ಪದ ಕುರುಕುತ್ತ ಕಯ್ಯ ಆಡಿಸಿದಳು. ಶಿವೂ ಸುಂಕಾಗಿ ಕೈಲಿದ್ದ ಉಪ್ಪಿಟ್ಟು ಮುಗ್ಸಿ ಪುಟಗೌರಿಯ ಬೆರಳುಗಳು ಆಡಿದ ಕಡೆ ತನ್ನ ಕಣಾದಿಸುತ್ತಲಿದ್ದು ಆಮೇಲ ನೆಲದಲಿ ಸಿಲೋಟ ಇಟ್ಟು ಆಮೇಲ ತನ್ನ ಇಡೀ ದೇಹವ ಅದರ ಮೇಲಕೆ ದಬ್ಬಾಕಿ ಆಮೇಲ ತನೂವಿ ನವುಲ ತಲೆಯಿಂದ ಆರಂಭಿಸಿ ಬಳಪ ಒಡಾಡಿಸಿದನು. +ಹೀಗಾಗುತ್ತ ಎಷ್ಟೊ ಹೊತ್ತಾದ ಮೇಲ ಪುಟಗೌರಿ ’ನೊಡಪ್ಪು ಈಗ’ ಅಂತಲೆ, ತಲೇನ ಸಿಳೋಟಲ್ಲಿ ಮುಳುಗಿಸಿ ನವುಲು ಬರೀತಿದ್ದ ಶಿವೂ ತಲವ ಎತ್ತಿ ನೋಡಿದರೆ, ನಡುಮನೆ ಗೂಡ ಬಲಪಕ್ಕದಲ್ಲಿ ನೀಲಿಲಿ ಮೂಡಿದ್ದ ನವುಲು ಶಿವೂನ ನೋಡ್ತ ಕುಣೀತಿತ್ತು. ಶಿವೂಗೆ ತಡಕೊಳ್ಳಕ್ಕಾಗದೆ ’ವುಜ್ಜೋ ಎಷ್ಟು ಚಂದಾಗದೆ..’ ಎಂದು ಚಪ್ಪಾಳೆ ತಟ್ಟಲು ಅವನ ಆ ಚಪ್ಪಾಳೆ ಗಲುಗು ಹಜಾರದಲ್ಲಿ ತೂಕಡಿಸ್ತ ವಾಲಾಡ್ತ ಕೂತಿದ್ದ ಸಾಕವ್ವನ ಎಚ್ಚರ ಮಾಡಿತು. ಅವಳು ಕಣ್ಣು ಬುಡುದೇನೆ ವಾಲಾಡ್ತಾನೆ, ’ಯಾರಮ್ಮೀ ಕೂಸ ಒಳ್ಗಾ’ ಅಂದಳು. ಪುಟಗೌರಿ ’ನಾನುಕವೈ’ ಅಂದಳು. ಸಾಕವ್ವ ’ನಡುಮನ ಗೂಡಲಿ’ ಒಂದೆಲ ಅಡ್ಕ ಇದ್ರ ವಸಿ’ ಎಂದು ವಾಲಾಡಿದಳು. ಪುಟಗೌರಿ ’ಇಲ್ಲಿ ಇಲ್ಲಕವೈ’ ಅನ್ನುತ್ತಿದ್ದಂತೆ ಶಿವೂ ನಡುಗೇಲಿ ಸಡಗರ ತುಂಬಿ ಅಜ್ಜಿ ಹತ್ತಿರಕ್ಕೆ ಬಂದು ’ಅಮ್ಮಯ್ ಪುಟಗೌರಿ ಚಿಕ್ಕಿ ನವುಲು ಬರ್ದವಳೆ ನೋಡು ಬಾ…’ ಅಂತು. ಸಾಕವ್ವ ಕಣ್ಬುಟ್ಟು ’ತಗಾ ಅದ್ಯಾರೊ ಒಬ್ಬಳು ಕುಟ್ಟೊ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ…’ ಅಂದು ಮತ್ತೂ ಕಣ್ಮುಚ್ಚಿ ನಿದ್ದೆ ತುಂಬಿಕೊಂಡು ವಲಾಟಕ್ಕೆ ಒಳಾಗಾದಳು. ಅವ್ವನ ಮಾತುಗಳು ಪುಟಗೌರಿ ಕಿವಿಗೆ ಚಿವುಟಲು ಅವುಳು ’ವೂಂ ಕವ್ವೊ ಇಲ್ಲಿ ಬತ್ತ ಕುಟ್ಟಾಕ ಗುಡ್ಡಾಕಿ ಮಡ್ಗದ’ ಎಂದು ಮಾತೆಸೆದು ಇನ್ನೊಂದು ಪಕ್ಕದಲ್ಲಿ ನವುಲು ಬರೆಯಲು ಕಣ್ಣಂದಾಜು ಇಡುತ ನಿಂತಳು. +ಹೀಗಾಗುತ್ತ ಕೊನೆಗೆ ಸಾಕವ್ವನ ಕಣ್ಗಳಿಂದ ನಿದ್ದೆ ಅನ್ನೋದು ನೆಗುದು ಹೋಯಿತು. ನೋಡುತಾಳೆ – ಬಾನಿಂದ ಕತ್ತಲ ಹನಿಗಳು ಭೂಮಿಗೆ ಉದುರುತ್ತಿದ್ದವು. ಮೊಮ್ಮಗೂಸು ಶಿವೂ ಅಲ್ಲಿ ಇದ್ದಬದ್ದ ಬೆಳುಕನ್ನು ಕಣ್ಗೆ ತುಂಬುಕೊಂಡು ಪುಸ್ತಕ ಸಿಲೋಟ ಕಣ್ಗಂಟಿಸಿ, ನೂರು ರೂ. ಗೆ ವರ್ಷಕ್ಕೆ ಹನ್ನೆರಡು ರೂ. ಬಡ್ಡಿಯಂತೆ ಎರಡು ವರ್ಷಕ್ಕೆ ಎಷ್ಟು ಬಡ್ಡಿ ಎಂದು ಬಾಯಲ್ಲಿ ಹೇಳ್ತ ಲೆಕ್ಕ ಮಾಡುತ್ತಿತ್ತು. ಹಿಂದಲ ನೆಪ್ಪಿಗೆ ಸಾಕವ್ವ ಬಿದ್ದು, ಶಿವೂನ ಕರೆದು ’ನೋಡಪ್ಪು ಆಗ ನಿಮ್ಮವ್ವ ನಿಂಗ ಏಡು ತಿಂಗಳ ಬಾಣ್ತಿ….ನಾನು ಕೊಳ್ಳಗಾಲದಿಂದ ಹನ್ನೇದು ರೂಪಾಯಿ ಕೊಟ್ಟು ತಂದಿದ್ನಲ್ಲ, ಆ ದೊಡ್ಡ ಚಲುಗವ ರತುನವ್ವನ ಹಟ್ಟೇಲಿ ಆರು ರೂಪಾಯ್ಗ ಅಡು ಇಟ್ಟಿವ್ನಿ.ಈಗ್ಗ ಅಸ್ಲು ಬಡ್ಡಿ ಸೇರಿ ಎಷ್ಟಾದ್ದು ಹೇಳುಮತ್ತ….’ ಅಂದಳು. ಶಿವೂ ಹೇಳ್ತೀನಿ ತಗಾ ಅನ್ನೋ ಮೊಖ ಮಾಡಿ ಕೂಡ್ದ ಕಳ್ದ ಸಿಗಲಿಲ್ಲ. ಆಗ ಮಿಂಚಿದಂತೆ ಶಿವೂ ’ಬಡ್ಡಿ ಎಷ್ಟ’ ಅಂದ. ಸಾಕವ್ವ ’ಅಷ್ಟೂ ಗೊತ್ತಿಲ್ವಾ ನಿಂಗ. ರುಪಾಯ್ಗ ತಿಂಗಳ್ಗ ಒಂದಾಣಿ ಬಡ್ಡಿ’ ಅಂದಳು. ಶಿವೂ ಹಾಗೂ ಹೀಗೂ ಮಾಡೂ ದಕ್ಕದೆ ’ಹೋಗಮ್ಮೋ, ನಾ ಓದ್ಕಬೇಕು….’ ಎಂದು ಸಾಕವ್ವನ ಕೈಕೊಸರಿ ಎದ್ದು ಮೊದಲಿದ್ದಲ್ಲಿಗೆ ಬಂದನು. +ಈಗ ಶಿವೂ ಪುಸ್ತಕಕೆ ಕಣ್ಣಾಕಲು, ಕಣ್ಣಾಕಿದರೆ ಆಗಲೆ ಕತ್ತಲು ಅನ್ನೋದು ಇದ್ದಬದ್ದ ಬೆಳುಕನ್ನೆಲ್ಲ ನೆಲಕೆ ತುಳುದಬುಟ್ಟಿತ್ತು. ಕಿರುಮನೇಲಿ ಮಾತ್ರ ಆಗ ಹಚ್ಚಿದ ದೀಪದ ಬೆಳಕು ಕೊಣಮಿಣಿ ಕೊಣಮಿಣಿ ಅಂತ ಕಿರುಮನೇಲಿ ವಸ್ತುಲ ಕಡುದು ಹೊರಕ್ಕೆ ಮೊಖ ಹಾಕಿ ಒಳಕ್ಕೋಗದು, ಒಳಕ್ಕೆ ಮುಖ ಹಾಕಿ ಹೊರಕ್ಕೋಗದು, ಮಾಡ್ತಿತ್ತು. ಶಿವೂ ಕುಂತಲ್ಲಿಂದಲೆ ’ಸೊಳ್ಳ ಹತ್ಸವೂ’ ಅಂದನು. ಒಳಗಿಂದ ಗೌರಮ್ಮ ’ತಾಡಪ್ಪು, ಚಿಕ್ಕಿ ನಾಳಕ ಕಂಬ್ಳಕ ಬತ್ತೀನಿ ಅಂದ್ಬುಟ್ಟು ದುಡ್ಡ ಈಸ್ಕ ಬರಾಕ ವೋಗೌಳೆ…..ಬಂದ್ಮೇಲ ಕೊಡ್ತೀನಿ’ ಅಂದಳು. ಚಲುವಮ್ಮ ’ಅಯ್ಯೋ ಎಲ್ಲಿದ್ದದು ಅತ್ಗಮ್ಮ….ಸಿವೂ ಬಾಪ್ಪು ಇಲ್ಲೆ ಓದ್ಕ….’ ಅನ್ನುತ್ತಲೆ ಶಿವೂ ಸಿಲೋಟು ಪುಸ್ತಕದೊಡನೆ ಕಿರುಮನೆಗೆ ಬಂತು. ಅದರವ್ವ ಖಾಲಿ ಸೊಳ್ಳ ಹಿಡುದು ನಡುಮನೆಗೆ ನಡೆದಳು. ಪುಟಗೌರಿ ಬರಿಕಯ್ಯ ಬೀಸುತ್ತ ಒಳಬಂದಳು. +– ೪ – +ಅಲ್ಲೊಂದು ಇಲ್ಲೊಂದು ಹೊಗೆಯಾಡಿದವರ ಮನೆಗಳ ಹಿಟ್ಟುನ ಮಡುಕೆ ಸದ್ದುಗಳು ಏಳ್ತ ಬೀಳ್ತ ಬಂದು ಸಾಕವ್ವನ ಕಿವೀಲಿ ನಿಂತು ಕರೆಯೋಲೆ ನೀಡಿದುವು. ಸಾಕವ್ವ ಶಿವೂನ ಕರೆದಳು. ಶಿವೂ ಬಂತಲೆ ’ಬಾಪ್ಪು ವಸಿ ನನ್ನುಂಜನ ನೋಡ್ಕಂಡು ಬರೋವು’ ಅಂದಳು. ಶಿವೂ ಆ ಊ‌ಒ ಅಂದು ’ಹುಂಜ ಇದ್ದಿದ್ದ್ರ ಬಂದಿರೋದು….ಈಗ ಕತ್ಲಲ್ಲಿ ನಂಗ ಹೆದ್ರಕ…ಹೋಗಮ್ಮೊ’ ಅಂದನು. ಸಾಕವ್ವ ಕಾಲು ನೀಟಿ ಕೂತವಳು ಅಂದಳು: +’ಅದ್ಯಾಕ ನಾ ಇಲ್ವ?’ +’ನೀ ಇದ್ರ?’ +’ಯಮದವರೂ ಓಡೋಯ್ತರ!’ +ಶಿವೂಗೆ ಅದನ್ನು ತನ್ನ ಕಣ್ಣುಗಳಿಗೆ ತಂದುಕೊಳ್ಳಲು ಸಿಗಲಿಲ್ಲ. ಬೆಪ್ಪಗಣ್ಣು ಬುಟ್ಟು ನೋಡಿತು. ಸಾಕವ್ವ ಅಂದಳು: +’ಅವರ್‍ಗ ಆಲ್ದ ಮರ್‍ದ ಗಾತ್ರ ಮೀಸ…..ದಾರಂದದಗಲ ಹಲ್ಲು….’ +’ಅವ್ರು ನಿನ್ನ ಎಳ್ಕೊಂಡೋದ್ರ….’ +’ಅಯ್ ತಗತಗಾ…ನನ್ನ್ಯಾಕ ಎಳ್ಕೊಂಡುವೋದೀರಿ ಮೂದೇವ್ಗಳ….ನಾನೇ ಬತ್ತೀನಿ ನಡೀರಿ ಅಂತೀನಿ’ +’ಆಮೇಲ…’ +’ಆಮೇಲ ಅವರ್‍ಗಿಂತ ಮೊದ್ಲು ನಾನೀಯ ಯಮಧರ್ಮರಾಜ್ನ ತವುಕವೋಯ್ತೀನಿ…..’ +ಸಾಕವ್ವನ ಬಾಯಿಂದ ಮಾತುಗಳು ಬರುತ್ತಿದ್ದಂತೆ….ಅವಳ ಸುಕ್ಕಿಂದ ಮಾಡಿದ ಅಲ್ಲಾಡುವ ಚರ್ಮ, ಅವಳ ಮೊಖದ ಹಲ್ಲಿಲ್ಲದ ಬಾಯಿ, ತಲೇಯ ನರಕೂದಲು ಮಾಯವಾದುವು. ಸಾಕವ್ವನೊಳಗ ಪುಟಗೌರಿ ಚಿಕ್ಕಿ ಮೂಡಿದಳು. +’ಯಮಧರ್ಮರಾಜ ಏನ್ಮಾಡೀನು….?’ +’ಅವ್ನಾ….? ನಮ್ಮ ಹಟ್ಟೀ ಗಾತ್ರದ ಸಿಮ್ಮಾಸನದ ಮೇಲ ಕೂತ್ಗಂಡು….ಯಮದೂತರು ಕರ್‍ಕ ಬತ್ತಾರಲ್ಲ…..ಅವರ್‍ಗ ಸೀಕ್ಸ ಕೊಡ್ತಾನ….’ +’ಅದ್ಕೂನೂ ನಿಂಗ ಹೆದ್ರಕ ಆಗಲ್ವಾ….?’ +’ಅಯ್…ನರ ಲೋಕದಲಿ ನಾನು ಪಟ್ಟಂಥ ಕಷ್ಟಕ ಆ ಸೀಕ್ಸ ಎಲ್ಗಾದ್ದು ತಗಾ…..ಅವ್ನ ಜೊತಲೂ ಅದ್ನೆ ಅಂತೀನಿಕನಾ…..’ +ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕೂತ ದೇವಕನ್ನಿಕ ಆದಳು. +’ಅವ್ನು….ಅದ್ಕೇನಂದನು?’ +’ಅದ್ಕ ಅವ..ಆಯ್ತು ಮುದ್ಕಿ, ನಿನ್ನ ಧೈರಕ ಮೆಚ್ದೆ. ಏನ್ ವರ ಬೇಕು ಕೇಳ್ಕ ಅಂತಾನ.’ +ಬಿಳಿ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕೂತ ದೇವಕನ್ನಿಕೆಯು ತನ್ನ ಕಿರುಬೆರುಳಲಿ ಭೂಲೋಕನ ಆಡಿಸತೊಡಗಿದಳು. +’ವರ ಕೇಳ್ಕ ಅಂದ್ಮೇಲ…’ +ಅದ್ಕ ನಾನು, ನೋಡು ಸ್ವಾಮಿ…..ನನ್ನ ಮೊಂಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರಕೊಂಡು….ಆಷ್ಟು ಸಾಕು ಅಂತೀನಿ.’ +ಶಿವೂ ಧೇನಿಸುತ್ತ ಕೂತಿತ್ತು. +ಶಿವೂನ ಧ್ಯಾನವ ಸಾಕವ್ವ ಮುರುದು, ’ಈಗ ನನ್ನುಂಜನ ನೋದ್ಕಂಬ ರವ್ ಬಾ ಕೂಸು’ ಅಂದಳು. ಶಿವೂ ಎದ್ದಿತು. ಸಾಕವ್ವ ’ನಿಮ್ಮವ್ವನತವು ಒಂದುಗಳಾಸ ಈಸ್ಕಬಾ’ ಅಂದಳು. ಶಿವೂ ಅವ್ವ ಗಳಾಸ ಕೈಲಿಡುದು ಬಂದು ’ಅವ್ವೊ ಅದ್ಯಾಕ ಈ ಕತ್ಲಲಿ ಎದ್ದುಬಿದ್ದು ಬಂದಾಯಿ….ಹೋದ್ದು ಹೋಯ್ತು ಅಂದ್ಕಂಡು ಸುಂಕಿರು’ ಅಂದಳು. ಸಾಕವ್ವ ನೆಲಕ್ಕೆ ಕೈಕೊಟ್ಟು ಮೇಲೇಳುತ್ತ ಊರುಗೋಲು ಹಿಡುದು ’ನೀ ಸುಂಕ ಗಳಾಸ್ ಕೊಡುಮತ್ತ ಹೋದ್ದು ಹೋದ್ದಂತೆ ಎಲ್ಗೊ, ಅದು ಹೋಗ್ಲಿ…ಆಮೇಲ ತೋರಿಸ್ತೀನಿ. ಈ ನನ್ನ ಮನದೇವರ್‍ಗ ಮೆಣಸಿಕಾಯ ಹೊಗ ಕೊಟ್ಟು ನನ್ನ ಹಳ ಕೆರದಲ್ಲಿ ಚಾರಮಾರ ಬಾರಿಸ್ದೆ ಬುಟ್ಟಾನ….’ ಎಂದು ಗಳಾಸು ಹಿಡುಕಂಡು ನಿಂತಿದ್ದ ಶಿವೂ ಕೈಯ್ಯ ಹಿಡುಕಂಡು ಸಾಕವ್ವ ಕೋಲು ಊರುತ್ತ ಗವ್ವೋ ಅನ್ನುತ್ತಿದ್ದ ಕತ್ತಲಿಗೆ ಬಿದ್ದರು. +ಆ ಕತ್ತಲಲ್ಲಿ ಸಾಕವ್ವ ಊರುಗೋಲು ಊರ್‍ಕೊಂಡು ಶಿವೂ ಕಯ್ಯ ಹಿಡ್ಕೊಂಡು ಎದುರಾದ ಹಟ್ಟಿ ಮುಂದ ನಿಲ್ಲಿತ್ತಿದ್ದಳು, ನಿಂತು ಉಸುರ ಬಲವಾಗಿ ಎಳುದು ನೋಡುತ್ತಿದ್ದಳು, ನೋಡಿ ಮುಂದಕೆ ನಡೆಯೋದ ಮಾಡುತ್ತಿದ್ದಳು. ಹೀಗೆ ಹತ್ತು ಹಟ್ಟಿಗಳಾದವು, ಇಪ್ಪತ್ತು ಹಟ್ಟಿಗಳಾದವು, ಯಾರಾರು ’ಯಾರೋ’ ಅಂದರೆ ಸಾಕವ್ವ ’ನಾನುಕಪ್ಪ’ ಅನ್ನೋದು, ’ಯಾಕಮ್ಮೊ’ ಅಂದರೆ ’ಇಲ್ಲೆಕಪ್ಪೊ’ ಅನ್ನುತ್ತ ನಡೆಯುವುದಾಗುತ್ತಿತ್ತು. ಕಾಲು ಸೇದುವವರೆಗೂ ನಿಂತು ಸವುತಿ ಕೆಂಪಮ್ಮನ ಹಟ್ಟೀವಾಸನೆಯನ್ನು ಹೀರಿದರೂ ಏನೂ ಮೂಗಿಗೆ ಸೋಂಕದೆ ಸಾಕವ್ವ ಪೇಚಿಕೊಂಡು ಮುನ್ನಡೆದಳು. ಹೀಗಾಗುತಿರಲು ಒಂದು ಬಲವಾದ ವಾಸನೆಯು ಸಾಕವ್ವನನ್ನು ಒಂದು ಹಟ್ಟೀ ಬಾಗುಲಿಗೆ ಎಳುದು ತಂದು ನಿಲ್ಲಿಸಿತು. +ಅದು ಪರ್ವತಯ್ಯ ಅಂಬೋರ ಹಟ್ಟೀ, ಪರ್ವತಯ್ಯಗೂ ಸಾಕವ್ವಗೂ ಸುತ್ತೂ ಬಳಸಿ ನಂಟಾಗಬೇಕಿತ್ತು. ಸಾಕವ್ವ ದಾರಂದ ತಟ್ಟಿ ’ಅಮ್ಮೇ ತಾಯಿ…..ಯಾರವ್ವ ಒಳ್ಗ’ ಅಂದಳು. ಪರ್ವತಯ್ಯನ ಹೆಡ್ತಿ ದೇವೀರಮ್ಮ ಬಾಗುಲು ತಗುದು ’ಬನ್ಯಮ್ಮ ಒಳಕ್ಕ…..ಏನ್ ಬಂದ್ರಿ’ ಅಂದಳು. ಸಾಕವ್ವ ಉಸುರೆಳೆದು ಒಳಬಂದಾಗ ಪರ್ವತಯ್ಯ ಉಣ್ತಾ ಕೂತಿದ್ದನ್ನು. ಸಾಕವ್ವ ದೇವೀರಮ್ಮಗೆ ’ತಾಯೆ, ಮಾರಿಹಬ್ಬದ್ದು ಅರಪಾವು ಅಕ್ಕಿ ಉಳ್ದಿತ್ತು. ಅದ ನನ್ನ ಮೊಂಗೂಸ್ಗ ಬೇಯಿಸಿವ್ನಿ. ನಮ್ಮ ಕೇರೀಲಿ ಯಾರವ್ವ ಹಿಟ್ಟ ಮಾಡ್ಕಂಡು ಉಣ್ಣೋರು. ಅದ್ಕ ನಿಮ್ಮಟ್ಗ ಏಡು ಉದ್ಕದ ನೀರ್‍ಗ ಬಂದಿವ್ನಿ ಕನವ್ವಾ’ ಅಂದಳು. ದೇವೀರಮ್ಮ ಶಿವೂ ಕೈಲಿದ್ದ ಗಳಾಸಿಗೆ ಒಂದಿಷ್ಟು ಉದುಕ ತಂದೂದಳು. ಸಾಕವ್ವ ’ಬತ್ತೀನಿ ನನ ಕಂದ’ ಅಂದುಬುಟ್ಟು ಹೊರಬಂದ ಮೇಲ ಗಮುಗುಟ್ಟುತ್ತಿದ್ದ ಗಳಾಸ ಮೂಗಿಗೆ ಹಿಡಿದಳು. ಆಮೇಲ ಉದುಕದಲ್ಲಿದ್ದ ತುಂಡು ತಗುದು ಶಿವೂಗೆ ಕೊಟ್ಟು ’ತಿಂದು, ಬಾಡ ಏನ ನೋಡು ಕೂಸು’ ಅಂದಳು. ಶಿವೂ ಅದ ನೋಣೆದು ’ಬಾಡಲ್ಲಕಮ್ಮಯ್ ಅಣಬ’ ಅಂತು. ಸಾಕವ್ವ ಎಲೆಲಾ ಅಂದುಕೊಂಡು ಇನ್ನುಳಿದ ಹಟ್ಟಿಗಳ ವಾಸನೇಯ ಜಪ್ತಿ ಮುಂದುವರಿಸಿ, ಸುಸ್ತಾಗಿ ಕೊನೆಗೂ ಹಟ್ಟಿ ಮುಟ್ಟಿದಳು. +ಅಲ್ಲಿ ಹಟ್ಟಿ ಸೂರಡಿಯಲ್ಲಿ ಚಲುವಮ್ಮ ಮತ್ತು ನೆರೆಮನೆ ಕಾಳಕ್ಕ ನಿಂತಿದ್ದರು. ಸಾಕವ್ವ ಶಿವೂ ಒಳಹೋಗಲು ಆಮೇಲ ಕಾಳಕ್ಕ ’ಅತ್ತಿಗೆಮ್ಮೋರ, ಒಂದು ಬದುಕ ಕೇಳ್ತೀನಿ…ಇಲ್ಲ ಅನ್ನಬೇಡಿ’ ಅಂದಳು. ಆಗ ಕಾಳಕ್ಕ ’ಏನು ಅಲ್ಲಕನ್ನಿ ಅತ್ಗಮ್ಮ, ಒಲ ಮೇಲ ಹಿಟ್ಗ ಇಟ್ಟು ಬಂದೀನಿ. ಅಸಿಟು ಸಾಲ್ದೀಯ ತೆಳ್ಳಗಾಗದೆ. ಒಂದ್ಪಾವು ಅಸಿಟ್ಟು ಕೊಟ್ಟಿರಿ. ನಾಳ ಮಿಲ್ಲು ಮಾಡಸ್ಕಂಡು ಬಂದ್ಮೇಲ ಕೊಟ್ಟುಬುಡ್ತೀನಿ’ ಅಂದಳು. ಚಲುವಮ್ಮ ಹಣೆಮುಟ್ಟುಗೊಂಡು ’ನನ್ನ ಕಣ್ಣಾಣ್ಗೂ ಇಲ್ಲಕಾ ತಾಯಿ. ಅದ್ದರ ನಾನು ಇಲ್ಲ ಅಂತಿದ್ನಾ’ ಅಂದಳು. ಕಾಳಕ್ಕನ ಮೊಖದ ರೀತಿ ಆ ಕತ್ಲಲ್ಲಿ ಕಾಣಿಸುತ್ತಿರಲಿಲ್ಲ. ಚಲುವಮ್ಮ ದಾರಂದವ ಮುಚ್ಚಿ ಒಳಬಂದಳು. +ಸಾಕವ್ವ ಮಾಮೂಲಿ ಜಾಗದಲ್ಲಿ ಕೂತಿದ್ದು ’ಕೊನ್ಗೂ ಸಿಗಲಿಲ್ವಲ್ಲಪ್ಪಾ ಸಿವ್ನೆ….ಅದ ಸಾಕಾಕ ನಾ ಎಷ್ಟು ಪಾಡುಪಟ್ಟಿದ್ನಪ್ಪ ದೇವ್ರೇ…..ಅಯ್ಯೋ ನನ್ನ ಮನೆ ದೇವ್ರೇ, ಹಾಳು ಮುರುಮಗ್ನೇ….ನೀನು ಕಣ್ಣ ಬುಟ್ಗಂಡು ಕೂತಿದ್ದೀಯೋ…..ಇಲ್ಲಾ, ಕಣ್ಣ ಮುಚ್ಗಂಡು ಕೂತಿದ್ದೀಯೋ….’ ಎಂದು ಪೇಚಿಕೊಳ್ಳುತ್ತಿದ್ದಳು. ಗಳಾಸಲ್ಲಿದ್ದ ಉದುಕವನ್ನು ರೋಗಿಷ್ಟ ಹೈದನ ನಾಲುಗರುಚಿ ಪಟ್ಟುಗೊಂಡು ನೆಕ್ಕುತ್ತಿತ್ತು. +– ೫ – +ರೋಗಿಷ್ಟ ಹೈದನ ನಾಲುಗ ರುಚಿಪಟ್ಟುಕೊಂಡು ನೆಕ್ಕುತ್ತಿರುವಾಗ್ಗೆ ಹೊರುಗಿನ ಕತ್ತಲಿಂದ ಕಾಳಣ್ಣ ಒಳುಗಿನ ಕತ್ತಲಿಗೆ ಬಂದನು. ಹಟ್ಟಿ ಗವುಗುಡುತ್ತಿತ್ತು. ಕಾಳಣ್ಣ ಬೆನ್ನ ಮೇಲಿದ್ದ ಗೋಣಿಚೀಲದ ಹೊರೇನ ಹಜಾರದ ಒಲೆ ಮುಂದ ಇಳುಕಿ ಕುಗ್ಗಿದ ದನೀಲಿ ಹೆಂಡ್ತೀಯ ಕರೆದನು. ಮೂಟೆ ಹೊತ್ತ ಭಾರಕ್ಕೆ ಸಣ್ಣಗೆ ಬೆವುತೂ ಇದ್ದನು. ಕಿರುಮನೆ ದೀಪದ ಬೆಳಕು ಇಣುಕಿ ನೋಡಿ ಒಳಕ್ಕೋತು. ಬಂದು ನಿಂತ ಹೆಡ್ತಿಗೆ ಕಾಳಣ್ಣ ’ಒಲ ಮುಂದ ತರಗ ಕತು….ಒಂದಿಷ್ಟು ಬೆಳುಕ ಮಾಡು’ ಅಂದನು. ಅವಳು ಜೋಳದ ತರುಗನ್ನು, ಕಿರುಮನೇಲಿ ಜೀವ ಇಟಕೊಂಡು ಉರಿಯುತ್ತಿದ್ದ ಸೊಳ್ಳಿಂದ ಉರಿಮಾಡಿಕೊಂಡು ತಂದು, ಆ ಉರಿಗೆ ಕಸಕಡ್ಡಿ ತರುಗು ತುಂಬಲು ಅಲ್ಲಿ ಹೊಗೆಯೊಡನೆ ಬೆಳುಕೆದ್ದಿತು. ಆ ಬೆಳುಕಿಂದ ಹಟ್ಟೀ, ಹಟ್ಟೀ ಒಳಗಲ ಜನ ಒಂದೇ ಸಲಕ್ಕೆ ಕಾಣುವಂತಯ್ತು. +ಕಾಳಣ್ಣ ಚೀಲದ ಅರ್ಧದಷ್ಟನ್ನು ಎದ್ದಿದ್ದ ಬಿಂಕಿ ಹತ್ತಿರದಲಿ ನೆಲಕ್ಕೆ ಸುರಿಯಲಿ ಕಡಲೆಕಾಯಿ ಚಲ್ಲಿಕೊಂಡು ಒಂದು ಗುಡ್ಡೆ ಆಯ್ತು. ಅಲ್ಲೆ ಸಾಕವ್ವ ಗೋಡೆಗೊರಗಿ ಕಾಲುನೀಟಿ ಕೂತು ತಲೆ ಸುತ್ತಲೂ ಜೊಯ್ಯೋ ಎನ್ನುತ್ತಿದ್ದ ಸೊಳ್ಳೆಗಳೊಡನೆ ಹೋರಾಡುತ್ತಿದ್ದಳು. ಕುಂತ ಅವ್ವನ ಮೊಖಕ್ಕೆ ಇಲ್ಲೆದ್ದ ಬೆಳಕೋಗಿ ಬೀಳುತ್ತಿತ್ತು. ಆ ಬೀಳುತ್ತಿದ್ದ ಬೆಳುಕನ್ನು ಆ ಮೊಖ ಹೀರುತ್ತ ಸಾಕವ್ವ ಉರಿಯುತ್ತ ಕುಂತಂತೆ ಕಾಣುತ್ತಿದ್ದಳು. ಕಾಳಣ್ಣ ಬಾಯಿಗೆರಡು ಕಾಳಿಟ್ಟು, ’ಅವ್ವೊ ಬಾ…..ಅಲ್ಯಾಕ ಕುಂತಿದ್ದಿ’ ಅಂತಲೆ ಸಾಕವ್ವ ’ಬಾಪ್ಪು ಸಿವೂ’ ಎಂದು ಕಯ್ಯಿಗೆ ಕರೆದಳು. +ಇಳಿಯದೇರುತ್ತಿದ್ದ ಬಿಂಕಿ ಮುಂದಕ್ಕೆ ಬಂದು ಸಾಕವ್ವ ಶಿವೂ ಕೂತರು. ಆ ಬಿಂಕಿ ಉರಿ ಮ್ಹೂಮತಾಯ ನಾಲುಗೆಯಂತೆ ಹೊತೆ ಕಕ್ಕುತ್ತ ಸೊಳ್ಳೆ ಕ್ರಿಮಿ ಕೀಟಾದಿಗಳ ಉಸುರು ಕಟ್ಟಿಸುತ್ತ ಅಲ್ಲಿಂದೆದ್ದು ಹಟ್ಟಿಯ ನಾಕಾ ಮೂಲಕೂ ಚಾಚುತ್ತಿತ್ತು. ಕಾಳಣ್ಣನ ಹೆಡ್ತಿ ತರಲೆಪುರುಳೇನ ಉರಿಗೆ ತಳ್ಳುತ್ತ ನಡುಮನೆಗೆ ’ಬನ್ರವ್ವಾ ಅದೇನ್ ಮಾಡೀರಿ’ ಅಂದಳು. ಅಲ್ಲಿಂದ ಗೌರಮ್ಮ ಪುಟಗೌರೀರು ಬಂದರು. ಪುಟಗೌರಿ ಮೊಖಕ್ಕೆ ಆ ಬಿಂಕಿ ಬೆಳುಕು ಬಿದ್ದು ಅವಳ ಮೊಖದಿಂದಲೇ ಬೆಳುಕು ಅನ್ನೋದು ಹುಟ್ಟಿ ಉಳಿದ ಕಡೆಗೆ ಹೊಂಟಂತಿತ್ತು. ಅವರೆಲ್ಲರೂ ಕಡಲೆಕಾಯಿ ಗುಡ್ಡೆಗೆ ಕಯ್ಯಾಕುತ್ತ ಸಿಪ್ಪೇನ ಬಿಂಕಿಗೆ ಎಸೆಯುತ್ತಿದ್ದರು. +ಗಂಡನ ಕಣ್ಸನ್ನೆ ತಿವಿಯಲು ಕಾಳಣ್ಣನ ಹೆಡ್ತಿ ಬಿಂಕಿ ಉರುಬುತ್ತಿದ್ದವಳು ಅಲ್ಲಿಂದ ಮೊಖ ತಗುದು ಚಲುವಮ್ಮಗೆ ’ತಾಯೆ ಬಾ ನೀನೂವಿ’ ಅಂದಳು. ಚಲುವಮ್ಮ ’ಐಕ ಮನಿಕಂಡವಕನಾ ಬುಡಿ ಅಕ್ಕಯ್ಯಾ’ ಅಂದಳು. ಕಾಳಣ್ಣನ ಹೆಡ್ತಿ ’ಅದೊಳ್ಳೆ ಸರಿಕನಾ, ಐಕಳ ಆಳ್ಸಕಂಡು ಬವ್ವ’ ಅಂದು ಎದ್ದು ಕಿರುಮನೆಗೆ ಬಂದು ಚಲುವಮ್ಮನ ಎರಡನೆ ಹೈದನ ಎಬ್ಬಿಸಿ ಅದರ ಕೈ ಹಿಡುದುಕೊಂಡು ಬಂದಳು. +ಚಲುವಮ್ಮ ಮಲುಗಿದ್ದ ಕೂಸಿಗೆ ದುಪ್ಪಟಿ ಸರಿ ಮಾಡಿ ಉಳಿದೆರಡು ಪಿಸುಗುಟ್ಟಿ ಎಬ್ಬಿಸಿ ಕಣ್ಣುಜ್ಜುತ್ತಿದ್ದ ಅವುಗಳ ಒಂದೊಂದು ಕಯ್ಯ ಹಿಡುದುಕೊಂಡು ಬಂದು ಕಾಳಣ್ಣನ ಹೆಡ್ತಿ ಪಕ್ಕ ಕೂರಿಸಿದಳು. ಚಲುವಮ್ಮ ಕೂತವಳು ಮತ್ತೆದ್ದು ಕಿರುಮನೆಯಲ್ಲಿ ಉರಿಯುತ್ತಿದ್ದ ಸೊಳ್ಳು ತಂದು ಪೆಟ್ಟಿಗೆ ಮೇಲಿಟ್ಟಳು. ಗೌರಮ್ಮ ’ಅದ್ಯಾಕ ತಗೀರಿ’ ಅಂತಲೆ ಚಲುವಮ್ಮ ’ಇರ್‍ಲಿ ಬುಡಿ’ ಎಂದು ಕಯ್ಯಿ ಬಾಯಾಡಿಸಲು ಕೂಡಿದಳು. +ಆ ಬಿಂಕಿ ಹೊಗೆಯಾಗ್ತ ಬೆಳುಕಾಗ್ತ ಸುತ್ತ ಕುಂತವರ ಮೇಲ ಚಲ್ಲಾಡುತ್ತಿತ್ತು. ಪೆಟ್ಟಿ ಮೇಲಿಟ್ಟಿದ್ದ ಸೊಳ್ಳು ತನ್ನ ಬೆಳುಕನ್ನು ಅವರ ಬೆನ್ನಿಗೆ ತನ್ನ ಶಕ್ತ್ಯಾನುಸಾರ ಮುಟ್ಟಿಸುತ್ತಿತ್ತು. ಆಗ ಒಳಬಂದ ಸಣ್ಣಯ್ಯ ಚಿಲುಕ ಹಾಕಿ ಕಡಲಕಾಯ ಎಡುದೂ ಎಡುದೂ ಕಾಳು ಮಾಡುತ್ತಿದ್ದ ತನ್ನ ದೊಡ್ಡ ಹೈದನಪಕ್ಕದಲ್ಲಿ ಕೂತು ಬಿಂಕಿಗೆ ಕಯ್ಯ ಹಿಡಿದು ’ಏನಪ್ಪ ಸಳಿ ಸಿವ’ ಅಂದನು. +ಆಗಾಗಲೇ ಎಲ್ಲರ ಕಯ್ಯನುಕೂಲಕ್ಕಾಗಿ ಕಡಲೆಕಾಯಿದು ಎರುಡು ಗುಡ್ಡವಾಗಿದ್ದೊ. ಅಲ್ಲಿಂದ, ರೇಷ್ಮೆ ಹುಳುಗಳ ತಟ್ಟೆಗೆ ಸೊಪ್ಪಾಕಿದಂಥ ಸದ್ದು ಹುಟ್ಟುತ್ತಿತ್ತು. ಇಲ್ಲಿ ಅಕಸ್ಮತ್ತು ಸದ್ದು ನಿಂತಲ್ಲಿ ಹೊರಗೀನ ಕಪ್ಪುಗಳ ವಟವಟ ಕಿವಿ ಮುಟ್ಟುತ್ತಿತ್ತು. ಹೊರಗೊಂದು ನಾಯಿ ಬೊಗುಳುದ್ದೇ ಬೊಗಳುತ್ತಿತ್ತು. ಆ ಎಲ್ಲವನ್ನೂ‌ಒ ಮಾರಿಗುಡಿ ಹಾರ್ಮನಿ ದನಿ ಒಡಲಿಗೆ ಹಾಕಿಕೊಳ್ಳುತ್ತಿತ್ತು. +ಸಣ್ಣಯ್ಯ: ಮಳಗಿಳ ಬಂದದೇನ +ಕಾಳಣ್ಣ: ಯಾವುದರಿಂದಯ್ಯ ಮಳ ಬರಾದು. ಮಳ ಬಂದದಂತ ಮಳ. +ಸಾಕವ್ವ: ಈ ಸುಡಗಾಡೂರ್ಗ ಮಳ ಬೇರೆ ಕೇಡು ತಕ್ಕ. +ಕಾಳಣ್ಣ: ಅಯ್ಯ, ನಾನೂವಿ ಸುಮಾರು ಊರ ಸುತ್ತದೋನು. ಆ ಎತ್ತಪ್ಪನೋರು ಕಟ್ಸೊರೋ ದನದ ಹಟ್ಟಿ ನೋಡುದ್ರ ಕಣ್ಣು ಕಳ್ಕತ್ತವಲ್ಲಯ್ಯ. +ಸಣ್ಣಯ: ನಾ ನೋಡಿಲ್ವಲ್ಲಣ್ಣ ಅದ. ನಡೀತ ಇದ್ರೂವಿ ಮುಗೀದು ಬಡ್ಡಿ ಮಗಂದು. +ಕಾಳಣ್ಣ: ನಮ್ಮವ್ವ ಅಂಥದೇನಾದ್ರೂ ಕಟ್ಟಿಸಿದ್ದರ ಇನ್ನೆಂಗಾಡ್ತಿಬ್ಲೊ. +ಕಾಳಣ್ಣನ ಮಾತು ಕೇಳಿ ನಗೆ ಎದ್ದುದು ಸುಮಾರು ಹೊತ್ತು ಅಲ್ಲಿ ಸಂತೋಷದಿಂದ ಇತ್ತು. +ಆಗ ಶಿವೂ ಕಡಲಕಾಯ ಬಿಂಕಿಗೆಸೆದು ಸುಟ್ಟುಗೊಂಡು ನಿಂತಿದ್ದನು. ಮಗನ ಮಾತಿಗೆ ಸಾಕವ್ವ ’ನೀವಿದ್ದೀರಲ್ಲಪ್ಪ…..ವುಲಿಯಂಗ ಮೂರ್‍ಜನ ಗಂಡ್ಮಕ್ಳ, ಕಟ್ಸಿ’ ಅಂದಳು. ದಾರಂದ ಕುಟ್ಟಿದ ಸದ್ದು ಬಂದು ಇವರ ಮಾತು ಅಲ್ಲಿಗೇ ನಿಂತು ’ಅತ್ಗಮ್ಮೋರ’ ಅನ್ನೊ ದನಿ ಹೊರುಗಿಂದ ಬಂದಿತು. ಕಾಳಣ್ಣನ ಹೆಡ್ತಿದಾರಂದ ತಗುದು ’ಯಾರ’ ಅಂತಲೆ ಕಾಳಕ್ಕನ ದನಿಯು ’ನಾನು’ ಅಂತು. ಕಾಳಕ್ಕ ಆ ಕತ್ತಲಲ್ಲಿ ಕಾಣಿಸುತ್ತಿರಲಿಲ್ಲ. ಅವಳ ದನಿಯು – ’ಅತ್ಗಮ್ಮೋರ, ನನ್ಗಂಡು ಅಸ್ಕಂಡು ಅಳ್ತ ಮಲುಗದೆ. ಮೂರು ಜಿನದಿಂದಲೂ ಕಳಕಂಬಳ್ಕ ಕರೆಯೋರು ಯಾರೂ ದಿಕ್ಕಿಲ್ಲ. ಏನಾರೂ ಇದ್ರ ಒಂದಿಷ್ಟು ಕೊಡಿ’ ಎಂದಿತು. ಅಲ್ಲಿಂದ ಕಾಳಣ್ಣನ ಹೆಡ್ತಿ ಬಂದು, ಕರಗುತ್ತಿದ್ದ ಕಡಲಕಾಯ ಗುಡ್ಡದಿಂದ ಸೆರಗ್ಗ ನಾಕು ಬೊಗಸ ಹಾಕ್ಕೊಂಡು ಎದ್ದಳು. ಸಾಕವ್ವ ಕೈಸನ್ನೆ ಮಾಡಿ ಸೊಸ ಕರೆದು ಅವಳ ಮಳ್ಳಿಂದ ಒಂದು ಬೊಗಸ ತಗುದು ಗುಡ್ಡಕ್ಕಾಕಿದಳು. ಅಮೇಲ ಕಾಳಣ್ಣನ ಹೆಡ್ತಿ ಬಿರಬಿರನೆ ಹೊರನಡುದು ಬರಿಸೆರುಗಲ್ಲಿ ಒಳಬಂದಳು. +ಅಲ್ಲಿದ್ದವರು ಬಾಯಾಡಿಸುತ್ತ ಯಾವುದನ್ನೂ ಗಮನಿಸದೆ ಇದ್ದರು. ಕಡಲೆಬೀಜ ಹೊಟ್ಟೆಗೆ, ಸಿಪ್ಪ ಬಿಂಕಿಗೆ ಬೀಳ್ತಾ ಇದ್ವು. ಆ ರೀತಿಯಲ್ಲಿ ಇದ್ದಾಗ- +ಕಾಳಣ್ಣ: ಆ ಎತ್ತಪ್ಪನೋರ ದನದ ಹಟ್ಟಿ ಇರ್ಲಿ. ಅಲ್ಲಿರೊ ದನದ ಎಮ್ಮೆ ತಾನೆ ಏನಯ್ಯ! +ಸಣ್ಣಯ್ಯ: ಒಂದೊಂದುವಿ ಆನಥರ ಹಟ್ಟಿದಪ್ಪ ಅವ. +ಸಾಕವ್ವ: ಅಂಥ ಒಂದು ಎಮ್ಮ ಸತ್ರೀಗಪ್ಪ…..ನಮ ಕೇರಿ ದರಿದ್ರನಾರು ಒಂಜಿನ ಹಿಂಗ್ತದ. +ಗೌರಮ್ಮ: ಅವೈ ಸುಂಕಿರ್ತು ವಸಿಯಾ. ನೀನು ಮೂರ್‍ಕಾಸ್ನ ಕೋಳೋದ್ದಕ್ಕೇ ಅಷ್ಟು ಪಾಡುಪಟ್ಟೆ. ಇನ್ನು ಅವರ್ಗ ಎಮ್ಮೋದ್ರ ಇನ್ನೆಂಗಾದ್ದು. +ಕಾಳಣ್ಣನ ಹೆಡ್ತಿ: ಸರಿಯಾಗಂದಿಕಾ ಅತ್ಗಮ್ಮ +ಕಾಳಣ್ಣ: ಎತ್ತಪ್ಪನೇನ ದುಡುದು ಬೆವರಿಳಿಸಿ ರಗತ ಬಸುದು ಸಂಪಾದ್ನ ಮಾಡಿದ್ದನ ತಗಾ. ಹೋದ್ರ ಅವನ್ದೇನೋದ್ದು…….ಗುಡ್ಡ ಹಾಕಿರೊ ಬಡ್ಡಿ ದುಡ್ನಲ್ಲಿ ಒಂದು ಸಿವುರುಕನ. +ಚಲುವಮ್ಮ: ಸಿವಸಿವಾ ಅವುರ ಮಗಳ ಮದುವೆ ಇನ್ನೂವಿ ನನ್ನ ಕಣ್ಣೊಳಗ ಕುಂತದ ಕಣ್ರವ. ಬೋಂದಿ ಕಾಳ ಸಾಡುಮಕ್ರೀಲಿ ಇಕ್ಕದು ಎಲ್ಲಾರು ಉಂಟಾ! ಕೈ ನೀಡಿದವರ್ಗ ಒಂದೊಮು ಬೊಗಸ…..ಇಷ್ಟು…ಇಷ್ಟು….ಒಂದು ಬೊಗಸ. +ಕಾಳಣ್ಣನ ಹೆಡ್ತಿ: ನಮ್ಮ ಪುಟಗೌರಿ ಮದುವಾನು ಅಂಗೇ ಮಾಡವು ತಕ್ಕಳ್ಳಿ. +ಸಣ್ಣಯ್ಯ: ಆ ಮಟ್ಟಕ ಮಾಡಾಕ ನಂಗ ಅದ್ದ ಅತ್ತಿಗವ್ವ. ನಮ್ಮ ಕೈಲಿ ಸಾಗೊ ಅಷ್ಟು……ನಾಕ್ ಜನ ಸರಿ ಸರಿ ಅನ್ನಂಗ ಮಾಡವು ತಕ್ಕಳ್ಳಿ. +ಪುಟಗೌರಿ ಬಿಂಕಿ ಝಳಕ್ಕೆ ತಿಳಿಯಾಗಿ ಬೆವುರೂತ ಕೂತಿದ್ದಳು. +ಸಾಕವ್ವ, ಮಕ್ಕಳ ಮಾತುಗಳ ಮೆಲುಕು ಹಾಕ್ತ ಬಾಯಾಡಿಸುತ್ತ ’ಅಷ್ಟು ಮಾಡ್ರಪ್ಪ ನನ್ನ ಕಂದ್ಗಳಾ…..ನಾನು ಕಣ್ಮುಚ್ಚೊ ಒಳ್ಗೇನೆ ಆ ನನ್ನೇಡು ಐಕಳ್ಗುವಿ ಒಂದಾರಿ ತೋರ್ಸಿ’ ಅಂದಳು. ಅವ್ವನ ಮಾತಿಗೆ ಸಣ್ಣಯ್ಯ ’ಅವ್ನೀಗ ನಮ್ಮ ಕೈಲಿ ಮದ್ವ ಮಾಡಸ್ಕಳವಕವ್ವ! ಯಾರಾರು ನಿಂತಿರೋರ ಕಟ್ಗಂಡು ಬತ್ತಾನ ತಕ್ಕ’ ಅಂದನು. ಕಾಳಣ್ಣ ಶಿವೂಗೆ ’ಐಲೊ, ಆ ಚಿಕ್ಕ ಮಾವನ್ನೂವಿ ಕರ್ಕಂಬಾ ಮತ್ತ, ಹಾರ್ಮೋನಿ ಸದ್ದಿರೊತಾವು ಇರ್ತಾನ. ಅವುನೂ ಏಡು ತಿನ್ಲಿ’ ಅಂದನು. ಶಿವೂ ’ಈ ಕತ್ಲಲ್ಲಿ ನಾ ವೋದನ’ ಅಂತು. ಪುಟಗೌರಿ ’ಬಾಪ್ಪು ಅಲ್ಲಿ ನಾ ನಿಂತ್ಗತ್ತೀನಿ…ನೀನು ಕರ್ಕಂಬರೈ’ ಆಗಲು ಇಬ್ಬರೂ ಎದ್ದರು. ಆಗ, ಗೋಡೆಗೆ ಮೊಖ ಹಾಕಿ ಕುಂತು ಕುಂತು ಬೆಂಡಾಗಿದ್ದ ದುಪ್ಟಿ ಕಮಿಷನರು ನಡೆಯುವುದ ರುಜುವಾತುಪಡಿಸುತ ತೂರಾಡುತ್ತ ಅಲ್ಲಿಗೆ ಬಂತು. ಮುಂದಿಟ್ಟ ಕಡಲೆಬೀಜಗಳನ್ನು ಒಂದೊಂದನೆ ತಗುದು ನಿಧಾನವಾಗಿ ಬಾಯಿಗಿಟ್ಟುಕೊಳ್ಳಲಾರಂಭಿಸಿತು. +ಪುಟಗೌರಿ ಶಿವೂ ಕತ್ತಲಿಗಿಳುದು ಅದರಲ್ಲಿ ಹತ್ತುತ್ತಾ ಇಳೀತಾ ನಡೆದರು. ಕಣ್ಣಂದಾಜಲ್ಲೆ ಕಲ್ಲು ಮಣ್ಣು ಬದೀನ ದಾಟುಕೊಂಡು ಮಾರಿಗುಡಿ ತಿರುವಲ್ಲಿ ಪುಟಗೌರಿ ನಿಂತಳು. ಮಾರೀಗುಡೀಲಿ ಆಗ ನಾಟಕದ ಪದ ಮಾತು ನಡೀತಾ ಇರಲಿಲ್ಲ. ಚಿನ್ನಸ್ವಾಮಿ ಅಂಬೋದ್ನು ಹಾರ್ಮನಿ ಮುಂದ ಆರ್ಭಟಿಸಿಕೊಂಡು ’ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಆ….ಧರೆಯೊಳ್…’ ಎಂಬ ಸಿನಿಮಾ ಪದವ ಕುಟ್ಟುತ್ತಿದ್ದನು. ಹಾರ್ಮನಿ ಮೇಸ್ತ್ರು ಆವೇಶದಿಂದ ತಲತೂಗಾಡಸ್ತ ಬಾರಿಸುತ್ತಿದ್ದರು. ಅವರು ಕಚ್ಚಿದ್ದ ಬೀಡಿ ಕೆಟ್ಟೋಗಿದ್ದರೂ ಅದೂ ಬಾಯಲ್ಲೆ ಪದವ ಆಡುತ್ತಿತ್ತು. ತಬಲದ ಹೈದ ಇನ್ನೂ ಕಲಿಕೇದು, ಇನ್ನು ಉಗಿಸ್ಕಂಡನು ಅಂದುಬುಟ್ಟು ಮೆಲ್ಲಮೆಲ್ಲಗೆ ತಪ್ಪು ತಪ್ಪು ಕುಟ್ಟುತ್ತಿತ್ತು. +ಮಾರಿಗುಡಿಯ ತೊಲೆಗೆ ಕಟ್ಟಿದ್ದ ಲಾಟೀನಿನಿಂದ ನೆಗೀತಾ ಇದ್ದ ಬೆಳಕು ಅದರ ಕೆಳಗಿದ್ದ ಹತ್ತಾರು ಜನರ ಮೇಲೆ ಬೀಳುತ್ತಿತ್ತು. ಅದರಾಚೆಗೆ ಮಸಕು ಕತ್ತಲಾವರಿಸಿದ್ದು ಅದರಾಚೆಗೆ ಮೊಖ ಕಾಣಿಸದಂಥ ಕತ್ತಲು ನಿಂತಿತ್ತು. ಅಲ್ಲಿಂದ ಏಳುತಲಿದ್ದ ಬೀಡಿ ಹೊಗ ಹಾಡುವವನ ಆರ್ಭಟಕ್ಕೆ ತಕ್ಕಂತೆ ಅಲ್ಲಿದ್ದವರ ತಲ ಮೇಲ ನಲೀತಾ ಇತ್ತು. ಹಾಡುತ್ತಿದ್ದ ಚಿನ್ನಸ್ವಾಮಿ ಮಾರಿಗುಡಿಯೇ ವಾಲಾಡುವಂತೆ ಹಾಡುತ್ತಿದ್ದನಾದ್ದರಿಂದ ಅಲ್ಲಿದ್ದ ಜನವೂ ವಾಲಾಡ್ತ ಪದಕ್ಕೆ ತಕ್ಕಂತೆ ತಮ್ಮ ದೇಹವನ್ನು ತಾಳ ಕುಟ್ಟುತ್ತಿದ್ದರು. ಪುಟಗೌರೀನು ನಾಕು ಹೆಜ್ಜೆ ಮುಂದೆ ಬಂದು ನಿಂತಿದ್ದಳು. +ಮಾವನ ಬೆರಳಿಡುದು, +ಶಿವೂ: ಮಾವೊ ಹಿಟ್ಟುಂಡ್ಕಂಡು ಬರುವಂತೆ ಬಾ. +ಗುರುಸಿದ್ದು: ನೀ ನಡ ನಾ ಬತ್ತೀನಿ +ಶಿವೂ: ಬಾ ಮಾವ ವೋಗವು +ಗುರುಸಿದ್ದು: ತಾಡು ವೋಗವು +ಶಿವೂ: ಬಾ ಮಾವ +ಗುರುಸಿದ್ದು: ತಾಡು +ಇದು ನಡೆದಿತ್ತು. ಇದು ಬುಟ್ಟರೆ ಹಾಡಿಗೆ ಹೆಜ್ಜೆ ಇಟುಗೊಂಡು ಮಾರಿಗುಡಿ ವಾಲಾಡುತ್ತಿತ್ತು. ಹಾಡ್ತ ಇದ್ದ ಖುಷಿಗಾರ ಚಿನ್ನಸ್ವಾಮಿ ಮೀಸ ಕೆಳಗ ನಗು ತಂದುಕೊಂಡು ಕಣ್ಣ ಮೆಡ್ಡರಿಸಿ ಗುರುಸಿದ್ದೂಗೆ ಬೆರಳು ತೋರಿಸುತ್ತ ’ಹೋಗೊ ಹೋಗೆಲೊ ಶಿಕಂಡೀ’ ಎಂದು ಪದವ ಅಲ್ಗೆ ನಿಲ್ಸಿದನು. ಅವುನು ನಿಲ್ಲುಸೂವ ಮೊದ್ಲೆ ಎಲ್ರ ಬಾಯಿಂದೂ ನಗು ಅನ್ನೋದು ಗುಲ್ಲಂದ್ಕಂಡು ಎದ್ದಿತು. ಗುರುಸಿದ್ದೂನು ನಗಾಡ್ತಲೆ ಶಿವೂನು ಕೈಹಿಡಿದು ಎದ್ದನು. +ಆಮೇಲ ಮುಂದ್ ಮುಂದ ಗುರುಸಿದ್ದು, ಹಿಂದ್ ಹಿಂದ ಪುಟಗೌರಿ ಶಿವೂ ನಡೆದರು. ಗುರುಸಿದ್ದು ಮುಂದಾದ ಮೇಲ ಪುಟಗೌರಿ ಶಿವೂ ಕಿವಿಗೆ ಬಗ್ಗಿ ’ಅದ್ಯಾರಪ್ಪ ಶಿವೂ, ಪದ ಹೇಳ್ತಾ ಇದ್ದೋರು’ ಎಂದು ಕೇಳಿದಳು. ಅದಕ್ಕೆ ಶಿವೂ ’ಅದೀಯಾ ಚಿನ್ನಸೋಮಣ್ಣ ಚಿನ್ನಸೋಮಣ್ಣ ಅಂತಾರಲ್ಲ ಅವ್ನು’ ಅಂದನು. ಪುಟಗೌರಿ, ಅವ್ನೂ ಅವ್ನ ಪದ ಎರಡನ್ನೂ ಕಣ್ಮುಂದಿರಿಸಿಕೊಂಡು ನಡೆದಳು. +ಗುರುಸಿದ್ದೂ ಬಂದಾಗ ಹುರಿದ ಕಡಲೆಕಾಯಿ ಸಣ್ಣ ಗುಡ್ಡವೊಂದು ರೆಡಿಯಾಗಿತ್ತು. ಅಲ್ಲಿಗೆ ಗುರುಸಿದ್ದೂನ ಕೈ ಬೀಳಲು ಅವನ ಕಯ್ಯಿ ಕಟ್ಟಿದಂಥ ವಾಚು ಬಿಂಕಿ ಬೆಳುಕಿಗೆ ಫಳಾರಂತು. ಎಲ್ಲರ ಕಣ್ಣೂ ಅದರ ಮೇಲ ಬಿದ್ದವು. ಕೆಲವರ ಬಾಯಾಡುವುದೂ ಚಣ ನಿಂತಿತು. ಗುರುಸಿದ್ದೂನ ಕಯ್ಯಾಡಿದ ಕಡೆ ಶಿವೂನ ಕಣ್ಣಾಡುತ್ತಿತ್ತು. ಕಾಳಣ್ಣ ’ಯಾರ್‍ದಯ್ಯ ಗಡಿಯಾರ’ ಅಂತಲೆ ಗುರುಸಿದ್ದು ’ನಂದಿಯ’, ತಕ್ಕಂಡಿ’ ಅಂದನು. ಸಣ್ಣಯ್ಯ ’ಯೂ ತಕ್ಕತ್ತನಾ ಇವ…ಜೂಜಾಡ್ತ ಸಾಲ ಏರ್‍ಕಂಡು ಇವ್ನ ಸೈಕಲ್ಲೆ ವಜವಾಗ್ನಿಲ್ಲ….. ಆ ಥರ ಇವನ್ಗೂ ಯಾರ್‍ದೋ ವಜವಾಗಿರಬೇಕು’ ಎಂದನು. ಗುರುಸಿದ್ದ್ ಕಡ್ಲೆಕಾಯ ಬಾಯಿಗಿಡುತ ’ಸುಂಕಿರಣ್ಣೊ’ ಎಂದು ಆಮೇಲ ಮಾತಿನ ದಾರಿ ತಿರುಗಿಸಿದನು- ’ಅಣ್ಣೊ ನೆನ್ನ ತಗಡೂರ್‍ಗ ವೋಗಿದ್ದಿ. ಅಲ್ಲಿ ನಮ್ಮವರು ಸಿವಬಸಪ್ನ ಹೋಟಲ್ಗ ನುಗ್ಗುದ್ದೂ ಅಂದ್ರ…..ಸಿವಸಿವಾ ಆ ಪಾಟಿ ಜನ…ನಾವೇನ ಕಾಸ ಕೊಟ್ಟವೊ ಕಲ್ಲ ಕೊಟ್ಟವೊ ಕಾಫಿ ತಿಂಡಿ ಕೊಡ್ರಿ ಅನ್ನೋರು. ಸಿವಬಸಪ್ಪ ಅನ್ನೋವ ಬೆವುತೋದ. ಆಮೇಲ ಪೊಲೀಸ್ನವರು ಇಳುದ್ರು. ನಾವು ಕೊಡ್ಸತೀವಿ ಸುಂನಿರಿ ಸುಂನಿರಿ ಅನ್ನೋರು. ಜನ ಅನ್ನೋದು ಪೋಜು ನೋಡೊ ಥರ ನಿಂತಿರೋದು. ತಕ್ಕಳಪ್ಪ, ನಾನ್ಯಾಕ ಸುಂಕಿರೋದು ಅಂದುಬುಟ್ಟು ನಾನೂವಿ ಕಾಸ ಬಿಸಾಕಿ ’ದೋಸಾ ಟೀ ಕೊಡ್ರಿ’ ಅಂದೆ. ಸಿವಬಸಪ್ಪ ಅನ್ನೋನು ನನ್ನೇ ದುರಗುಟ್ಕಂಡು ನೋಡ್ತ ತಂದ್ಕೊಡನು…’ ಎಂದು ಎಲ್ಲರನ್ನೂ ನೋಡಿದನು. ಎಲ್ಲರೂ ಗುರುಸಿದ್ದೂ ಮಾತಿಗೆ ಕಿವಿಕೊಟ್ಟು ಕಿವಿಗೆ ಮುಟ್ಟಿದ್ದನ್ನು ಕಣ್ಣಲ್ಲಿ ಮೂಡಿಸಿಕೊಳ್ತ ಬಾಯಾಡಿಸುತ್ತಿದ್ದರು. ಗುರುಸಿದ್ದು ವಾಚ ನೋಡ್ಕಂಡು ’ತಾಳಪ್ಪೊ, ನನ್ನ ಪಾರ್ಟು ಬರೋ ಟೈಮಾಯ್ತೇನ….’ ಎಂದು ಮೇಲೆದ್ದನು. ಸಣ್ಣಯ್ಯ ’ತಾಳುಡ, ಬೆಲ್ಲಿದ್ದರ ಟೀ ಕಾಯ್ಸವು’ ಅಂದನು. ಗುರುಸಿದ್ದು ಕೈಯಾಡಿಸಿ ನಡೆಯಲು ಪುಟಗೌರಿ-’ಹೋಟ್ಲ ಟೀ ಕುಡಿಯಾವ….ಹಟ್ಟೀ ಗೊಡ್ಡ ಕಾಫಿ ಕುಡ್ದಾನ…’ ಅಂದು ಅವನ ಹಿಂದೇನೆ ಹೋಗಿ ಚಿಲುಕ ಹಾಕಿ ಬಂದು ಕುಂತಳು. +ಆಗ ಶಿವೂ ತಿಂತಾ ತಿಂತಾನೆ ತೂಕಡಿಸುತ್ತಿತ್ತು. ಅದರ ಮಾವ, ಶಿವೂನ ಎಚ್ಚರವಿರಿಸಲು ’ಲೋ ಸಿವು’ ಅನ್ನಲು ಶಿವೂ ಕಣ್ಬುಡ್ತು. ಆಗ ಮಾವ ನಿನ್ನ ಕೈಲಿ ಹತ್ ಪೈಸ ಕೊಡ್ತೀನಿ…ಊರೊಳ್ಗ ಹಾಲ ಬುಡ್ಸಕಬಾ ಮತ್ತ. ಆಗಲೀಗ ನಿನ್ನ ಬುಟ್ರ ಇನ್ನೊಬ್ಬ ಧೀರ ಇಲ್ಲಕಯ್ಯ’ ಅಂದನು. ಶಿವೂ ’ವು ಹೋಗು ಮಾವೊ. ಊರೊಳಗಲ ನಾಯ್ಗಳು ನನ್ನ ಕಂಡ್ತೂ ಅಂತ್ರ ದಬ್ಬಕತ್ತವ….’ ಎಂದು ಕಣ್ಮುಚ್ಚಿ ಬಾಯಾಡಿಸಿದನು. ಉಳಿದವರು ಅವ್ನ ಮಾತು ರೀತಿಗೆ ನೆಗಾಡತೊಡಗಿದರು. +ಚಲುವಮ್ಮ ಒಂದು ಎತ್ತೊಲೆ ತಂದ ಅದರ ಮೇಲೊಂದು ದೊಡ್ಡ ಬೋಸಿ ಇಟ್ಟು ಅದರೊಳಕ ಮೂರು ತಪ್ಪಲಿ ನೀರೂದು ಅಲ್ಲಿಗೆ ಏಡಾಚ್ಚು ಬೆಲ್ಲ ಹಾಕಿ ಆಮೇಲ ಹತ್ತು ಪೈಸೇದ ಟೀಸೊಪ್ಪು ಸುರ್‍ದು ಎತ್ತೂಲೆಗೆ ಬಿಂಕಿ ಇಟ್ಟಳು. ಭೂಮತಾಯ ವಚ್ಚೊರಿ ಮೊಗ್ಗಲಿಂದ ಇನ್ನೊಚ್ಚರಿ ಮೊಗ್ಗಲಿಗೆ ಹೊರಳಿ ಉಸ್ಸೊ ಎಂದು ಮಲುಗಿದಳು. +-೬- +ಆ ಹೊತ್ತಿನಲ್ಲಿ ಒಂದು ಕೈ ಬಂದು ಸಾಕವ್ವನ ಹಟ್ಟಿಗೆ ಚಿಲುಕವನ್ನು ಹಾಕಿತು. ಅದು ಪೋಲೀಸ್ ಕಾನ್‌ಸ್ಟೇಬಲ್ ರೇವಣ್ಣನವರ ಕೈಯ್ಯಾಗಿತ್ತು. ಕಳೆದಾರು ತಿಂಗಳ ಲಾಗಾಯ್ತಿನಿಂದಲೂ ಸಾಹುಕಾರ್ ಎತ್ತಪ್ಪನವರು ಇನ್ಸ್‌ಪೆಕ್ಟರ್ ಸಾಹೇಬರಿಗೆ ಹೇಳಿಕೊಂಡೇ ಬರುತ್ತಿದ್ದರು. ವಾರ ಹದಿನೈದು ದಿನ ಅನ್ನದೆ ಅವರ ಮಿಲ್ಲಿನ ಕಡಲೇಕಾಯಿ ಲಾಟಿನಲ್ಲಿ ಮುವ್ವತ್ತು ನಲವತ್ತು ಸೇರಷ್ಟು ಕಳ್ಳತನ ಆಗುತಲಿತ್ತು. ಆಸಾಮಿ ಹಿಡಿಯುವ ಎಲ್ಲಪಟ್ಟುಗಳೂ ಮುಗುದು ಆಸಾಮಿ ಸಿಗುತ್ತಿರಲಿಲ್ಲ. ಮಾಲು ಮಾತ್ರ ನಾಪತ್ತೆಯಾಗುತ್ತಿತ್ತು. ಎತ್ತಪ್ಪನವರೂ ಮತ್ತೂ ಇನ್ಸ್‌ಪೆಕ್ಟರಿಗೆ ‘ಏನ್ ಸಾಹೇಬರೆ ಆಗದು ಆಗ್ತಾನೇ ಇದೆ’ ಅಂದಾಗ ‘ಸುಮ್ಕಿರಿ ಸಾವ್ಕಾರ್ರೇ ಅಲ್ಲೊಬ್ಬ ಪೀಸ್ಯ ಡ್ಯೂಟಿಗೆ ಹಾಕುವ ಅಂದಿದ್ದರು’ ಆಡ್ದ ನುಡಿಗೆ ತಪ್ಪದೆ ಅಚರು ಪೀಸಿ ರೇವಣ್ಣನನ್ನು ರವಾನಿಸಿದ್ದರು. +ಪೀಸಿ ರೇವಣ್ಣ ಎಲ್ಲ ರೀತೀಲು ರಿಟೈರ್ಡ್‌ಗಾಗಿ ಕಾಯುತ್ತಿದ್ದನು. ಅವನು ದೇವರು ಕೊಟ್ಟಿದ್ದ ಎರಡು ಕಡ್ಡಿ ಕೈಕಾಲುಗಳನ್ನು ಅಲ್ಲಾಡಿಸುತ್ತಾ ಬೀಡಿ ಸೇದುತ ಕೆಮ್ಮುತ್ತ ತೂಕಡಿಸುತ ಸ್ಟೇಷನ್ನಲ್ಲೆ ಕೂತಿರುತ್ತಿದ್ದನು. ಅದು ಬಿಟ್ಟು ಅವನನ್ನು ಯಾರೂ ಎಲ್ಲಿಗೂ ಕಳಿಸಿದ್ದೂ ಇಲ್ಲ ಇವನು ಹೋಗಿದ್ದೂ ಇಲ್ಲ. ಈರ್ವರು ಹೆಂಡೀರು ಮತ್ತು ಹತ್ತೊ ಹನ್ನೊಂದೊ ಮಕ್ಕಳು ಇದ್ದು ಅದೇ ಅವನ ಮೆರಿಟ್ಟಾಗಿತ್ತು. ಇವನ ಹೊಟ್ಟೆಗೆ ಹೊಡೆದರೆ ಅದು ಅವನ ಹೆಡ್ತಿ ಮಕ್ಕಳ ಹೊಟ್ಟೆಗೆ ಬೀಳುತ್ತದೆ ಅಂದುಕೊಂಡು ಎಲ್ಲರೂ ಅನುಸರಿಸಿಕೊಂಡು ಬರುತ್ತಿದ್ದರು. ಹೀಗಿರಲು ಒಂದು ದಿನ ಸಾಹೇಬರು ಸ್ಪೆಷಲ್ ಡ್ಯೂಟಿಗೆ ನಿಯಮಿಸಿರುವುದ ತಿಳುಸಿ ‘ಹೋಗೋ ಭೋಸುಡಿ ಮಗ್ನೆ’ ಅಂದಾಗ ರೇವನ್ಣನನ್ನು ರೇವಣ್ಣನಿಗೇ ನಂಬಲಾಗಲಿಲ್ಲ. ಅಪರಿಚಿತ ಬದುಕಿಗೆ ಕೈಹಾಕಿದ ಸಂತೋಷ ಭಯಗಳಾದುವು. ಏನಾಗದಿದ್ದರೂ ಒಂದಂತು ಆಗುತ್ತಿತ್ತು-ಹೆಂಡೀರು ಮಕ್ಕಳ ಕಾಟದಿಂದ ಅವುನು ಅತೀತನಾಗುತ್ತಿದ್ದನು. +ಇಲ್ಲಿ ರೇವಣ್ಣನವರು ಎರಡೊತ್ತು ಉಂಡುಕೋತ ತಮ್ಮ ಶಕ್ತಿಯನ್ನು ಬೆಳುಸಿಕೋತ ತಮ್ಮ ಕಾರ್ಯಾಚರಣೆಯನ್ನು ಆತ್ಮವಿಶ್ವಾಸದಿಂದ ಆರಂಭಿಸಿದರು. ಅವರಿಗಿದ್ದ ಕೇವಲ ಆತ್ಮವಿಶ್ವಾಸವೂ ಒಂದಲ್ಲ ಒಂದು ದಿನ ಫಲ ನೀಡಿತು. ಊರುಮಲುಗಿ ಮಾರಿಗುಡಿ ಚಾವುಡಿಗಳು ಕಣ್ಬಿಟ್ಟಿದ್ದಂಥ ಆ ಟೈಮಲ್ಲಿ ರೇವಣ್ಣನವರು ಕಂಬಳಿ ಹೊದ್ದು ಕಾಣದೆ ಕುಳಿತಿರಲು, ದಪ್ಪಗೆ ಎತ್ತರಕೆ ಇದ್ದ ಒಂದು ಆಸಾಮಿ ಬಂತು. ಚೀಲಕ ಕಡಲೆಕಾಯಿ ತುಂಬಿತು, ಮುಂದಕೆ ನಡೀತು. ಅದಾಗು ರೇವಣ್ಣನವರಿಗೆ ಆಸಾಮಿ ಹಿಡಿಯಲು ಕಯ್ಯಿಕಾಲು ಬರಲಿಲ್ಲ ಕೂಗಲು ಬಾಯಿ ಬರಲಿಲ್ಲ. ಹಾಗಾಗಿ ರೇವಣ್ಣನವರು ತಮ್ಮ ಕಾಲನ್ನು ಕಣ್ಣು ಮಾಡಿಕೊಂಡು ಫಾಲೊ ಮಾಡಿದರು. ಆಸಾಮಿ ಒಂದು ಹಟ್ಟಿಗೆ ನುಗ್ಗಿತು. ಹಿಡುದು ರಂಪ ಎಬ್ಬಿಸದ ತಮ್ಮ ವಿವೇಕಕ್ಕೆ ರೇವಣ್ಣನವರು ತಲೆದೂಗುತ್ತ ಆ ಹಟ್ಟಿ ಎದುರಿನ ಜಗುಲೀಲಿ ಬೊಗುಳುತ್ತಿದ್ದ ನಾಯಿಗೆ ಸಮಾಧಾನ ಪಡಿಸುವ ಪ್ರಯತ್ನ ಪಡುತ ಕೂತರು. +ರೇವಣ್ಣನವರು ಕುಂತಿದ್ದರೂ ಅವರ ಪೋಲೀಸು ವಿವೇಕ ಓಡಾಡುತ್ತಿತ್ತು. ಈಗ ಹೇಗೂ ಮಾಲು ಆಸಾಮಿಗೆ ದುಕಾ ಇಲ್ಲ. ಇದರೊಟ್ಟಿಗೆ ಈ ಕಳ್ಳತನದ ಹಿಂದಿರುವ ಜಾಲವನ್ನೂ ಪತ್ತೆ ಹಿಡುದು ಒಂದೇ ಸಲಕ್ಕೆ ಢಂ ಅನ್ನಿಸುವ ಮನಸ್ಸಾಯ್ತು. ಅದಕ್ಕಾಗಿ ಆ ಹಟ್ಟಿಗೆ ಹೋಗುವವರು ಬರುವವರ ಮೇಲ ನಿಗಾ ಇಟ್ಟು ಕೂತರು. ಕುಂತಿರುವಲ್ಲಿ, ಪಾಯಿಂಟ್ ಒನ್-ಒಬ್ಬ ಪೀಚಲವನು ಹಟ್ಟಿ ಹೊಕ್ಕ ಮೇಲೆ, ಒಂದು ಹೆಂಗಸು ಬಹುಶಃ ಪ್ರಾಯ ಮೀರಿರದ್ದು ಬಂದು ಬಾಗುಲ ಬಳಿ ಆ ಹಟ್ಟಿಗೆ ಸಂಬಂಧಪಟ್ಟಂಥ ಹೆಂಗುಸಿನ ಜೊತೆ ಮಾತಾಡಿತು. ಈ ಹೆಂಗಸು ಆ ಹೆಂಗುಸಿಗೆ ಕನಿಷ್ಠ ಒಂದು ಸೇರಷ್ಟು ಕಡಲೆಕಾಯಿ ಕೊಟ್ಟಿರಬಹುದು. ಪಾಯಿಂಟ್ ಟು-ಒಂದು ಪ್ರಾಯಕ್ಕೆ ಕಾಲಿಟ್ಟ ಹುಡುಗಿ ಇನ್ನೊಂದು ಹುಡುಗ ಎಂದು ನಡುಗೆಯಿಂದ ತಿಳಿಯಬಹುದು. ಅವರು ಮಾರಿಗುಡಿಕಡೆ ಬಂದು ಪುನಃ ಇನ್ನೊಂದು ವ್ಯಕ್ತಿಯೊಡನೆ ಆ ಹಟ್ಟಿ ಹೊಕ್ಕರು. ಆ ವ್ಯಕ್ತಿ ಅಲ್ಲೊಂದು ಗಂಟೆ ಟೇಮಿಗೆ ಹೊರಬಂದು ತಿರುಗಾ ಮಾರಿಗುಡಿ ಕಡೆಗೆ ನಡೀತು. ಆ ವ್ಯಕ್ತಿ ಬೀಡಿ ಹಚ್ಚಿದಾಗ ಕಂಡುಬಂದ ಚಹರೆ ಪ್ರಕಾರ ಅವನ ಎಡುದ ಕೈಗೆ ವಾಚುಕಟ್ಟಿತ್ತು. ಈ ಕಳ್ಳತನದ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿರುವ ಚಹರೆ ಆ ಮೊಖದಲ್ಲಿತ್ತು. ಇದನ್ನು ರೇವಣ್ಣನವರು ಮನಸ್ಸಲ್ಲೆ ನಾಕುಸಲ ನೋಟ್ ಮಾಡಿಕೊಂಡರು. ಇದಾದಮೇಲ ಯಾವ ಪಾಯಿಂಟು ಜರುಗದಿದ್ದರೂ ಮುಂದಿನೆ ಪಾಯಿಂಟಿಗಾಗಿ ರೇವಣ್ಣನವರು ಕಾದರು. +ಮೊದಲು ಬೊಗಳುತ್ತಿದ್ದ ನಾಯಿ ಈಗ ಬಂದು ರೇವಣ್ಣನವರ ಕಾಲು ನೆಕ್ಕುತ್ತ ಕೂತಿತ್ತು. ಮಾರಿಗುಡೀಲಿ ಪದ ನಗು ಕೇಕೆ ಹೋಗಿ ಸಾಮೂಹಿಕ ಗೊರುಕೆ ಹೊರಡುತ್ತಿತ್ತು. ಕಣ್ಮುಚ್ಚದ ರೇವಣ್ಣನವರಿಗೆ ನಿದ್ದೆ ಅನ್ನೋದು ಹಗ್ಗ ಕಟ್ಟಿ ಎಳೀತಾ ಇತ್ತು. ಕೊನೆಗೆ ಬುದ್ದಿ ಕೈಲಿರುವಾಗಲೇ ಎದ್ದು ಆ ಹಟ್ಟಿಗೆ ಚಿಲುಕ ಹಾಕಿ ಮೊದಲಿದ್ದಲ್ಲಿಗೆ ಬಂದು ಕೂತು ಕಣ್ಮುಚ್ಚಿದರು. ಅಷ್ಟಕ್ಕೇ ನಿದ್ದೆ ಅನ್ನೋದು ಎಲ್ಲಿಗೋ ಎದ್ದು ಹೋಗಿತ್ತು. ರೇವಣ್ಣನವರು ಆ ಚಳಿಯ ಹೊಡುತಕ್ಕೆ ತಮ್ಮ ಕೈಕಾಲುಗಳ ಟಕಟಕಗುಟ್ಟಿಸುತ್ತಿದ್ದರು. ಮೀಸಬುಟ್ಟ ತಾವೇ ಗಂಡ್ಸೆಂದು ಬೀಗುವ ಜೊತ ಪೀಸಿಗಳು, ಬಾಯಿಬಿಟ್ಟರೆ ಬಯ್ಯುವ ಸಾಹೇಬರು ನಾಳೆ ಹೇಗೆ ಈ ರೇವಣ್ಣನವರನ್ನು ನೋಡಬಹುದೆಂಬ ಕನುಸಿಗೆ ಕಾವು ಕೊಡುತ್ತ ಚಳಿಯನ್ನೂ ತಮ್ಮನ್ನೂ ಮರೆಯುತ್ತ ಕೂತಿದ್ದರು. +ಯಾವಾಗ ಅಲ್ಲೊಂದೆಳೆ ಇಲ್ಲೊಂದೆಳೆ ಬೆಳಕು ಬೀಳಲು ಆರಂಭಿಸಿತೊ ಆವಾಗ ರೇವಣ್ಣನವರು ನಾಯಿ ಜೊತೇಲಿ ತಡಬಡಾಯಿಸಿ ಎದ್ದು ಹಾರುತ ಸಾಹುಕಾರರ ಆಳಿನ ಗುಡುಸಲಿಗೆ ಬಂದರು, ಆಳನ್ನು ಎಬ್ಬಿಸಿ ‘ಇನ್ನು ಮಲುಗವ್ನೆ ಮಗಾ…ಓಡೋ ಬೋಸುಡಿಕೆ. ಪೋಲೀಸ್ ರೇವಣ್ಣನೋರು ಮಾಲು ಕಳ್ಳ ಎರಡ್ನೂ ಹಿಡ್ದವರೆ ಅಂತ ಸಾಹೇಬರಿಗೆ ಹೇಳಿ ಜರೂರ್ ಕರ್ಕಬಾ’ ಎಂದು ಓಡಿಸಿದರು. ಪುನಹ ಕುಳಿತಿದ್ದಲ್ಲಿಗೆ ಬಿರುಸಾಗಿ ಬಂದು, ಚಿಲುಕ ಅಲುಗಾಡದಿರುವುದ ಗಟ್ಟಿಮಾಡಿಕೊಂಡು ಜೀಪಿನ ಸದ್ದಿಗಾಗಿ ಧ್ಯಾನಸ್ಥರಾದರು. +-೭- +ಕಣ್ಬೆಳಕು ಬರುವುದೂ ಜೊರ್ರೊ ಎಂದು ಜೀಪು ಇಳಿಯುವುದೂ ಕೂಡಿಕೊಂಡವು, ರೇವಣ್ಣನವರು ಬಟ್ಟೆ ನೀಟುಮಾಡಿಕೊಂಡು ಪಕ್ಕದಲ್ಲಿದ್ದ ಪೇಟವ ಧರಿಸಿ ಅಟೆನ್‌ಷನ್‌ನಲ್ಲಿ ನಿಂತುಕೊಂಡರು. ಜೀಪು ನಿಲ್ಲುತಲೆ ಹಿಂದುಗಡೆಯಿಂದ ಇನ್ಸ್‌ಪೆಕ್ಟರು ಚಟಕಪಟಕ ಪೋಲೀಸರು ಜಂಪ್ ಮಾಡಿದರು. ಮುಂದುಗಡೆಯಿಂದ ಇನ್ಸ್‌ಪೆಕ್ಟರು ಇಳಿದರು. ಜೀಪಿನ ಸದ್ದಿಗೆ ಒಂದೆರಡು ಹಟ್ಟಿಗಳು ತಂತಮ್ಮ ನಿಂತಿದ್ದ ತಲೆ ಇಣುಕಿಸಿದವು. +ಇನ್ಸ್‌ಪೆಕ್ಟರು ಇಳುದ ಮೇಲ ಅಟೆನ್‌ಷನ್‌ನಲ್ಲಿ ನಿಂತಿದ್ದ ರೇವಣ್ಣನವರು ಸೆಲ್ಯೂಟ್ ಹೊಡೆದರು. ಸಾಹೇಬರು ರೇವಣ್ಣನವರ ಕಡೆಗೆ, ಹುಳು ಹಿಡುದು ತಂದ ತನ್ನ ಮರಿ ನೋಡುವ ಕೋಳಿಯಂತೆ ನೋಡಿದರು. ದಫೇದಾರ ರೇವಣ್ಣನವರಿಗೆ ‘ಸಭಾಷ್ ಮಗ್ನೆ…ನಿನ್ನ ಕುಟುಕು ಜೀವ ಬದುಕುದ್ದಕ್ಕೂ ಸಾರ್ಥಕ ಆಯ್ತು’ ಅಂದರು. ಜೊತೆ ಪೀಸಿಗಳು ಕಣ್ಗಳಲ್ಲೆ ತಮ್ಮ ಸಖೇದಾಶ್ಚರ್ಯ ಸೂಸುತ್ತಿದ್ದರು. ರೇವಣ್ಣನಿಗೆ ಏನೂ ತೋಚದೆ ಪುಳಕಿತನಾಗಿ ನಿಂತನು. ಇನ್ಸ್‌ಪೆಕ್ಟರು ‘ಹೂಂ ಏನಯ್ಯ ಮುಂದೆ’ ಅನ್ನಲು, ರೇವಣ್ಣ ‘ಮಾಸ್ವಾಮಿ, ಮಾಲು ಆಸಾಮಿ ಎರಡೂನು ಆ ಹಟ್ಟಿ ಒಳಗೇ ಅವೆ. ಹಟ್ಟಿಗೆ ಚಿಲುಕ ಹಾಕ ಅದ ನೋಡ್ತ ರಾತ್ರ ಪೂರ್ತ ನಾನು ಕಣ್ಮುಚ್ಚಿಲ್ಲ’ ಅಂದನು. +ಆಗ ದಫೇದಾರಿ ಮತ್ತು ನಾಕು ಪೀಸಿಗಳು ದಪದಪ ನಡುದು ಆ ಹಟ್ಟಿ ದಾರಂದಕ್ಕೆ ಕೈಗಳಿಂದ ಬಡಿಯತೊಡಗಿದರು. ಅಷ್ಟಕ್ಕೆ ಹತ್ತಾರು ಜನ ದೂರ ದೂರದಲ್ಲೆ ನಿಂತು ಕಣ್ಣುಜಿಬುರು ತೊಡೀತ ನೋಡುತ್ತಿದ್ದರು. ಆ ಸದ್ದುಗಳು ಮಲುಗಿದ್ದ ಸಾಕವ್ವನಿಗೆ ಗುದ್ದಲು ‘ಯಾವ್ ಮುರಮಗ್ನ ಅವ್ಞ ಆ….ದಾರಂದ್ಕ ಆಪಾಟಿ ಬಡೀತಾನಲ್ಲ ಅವ್ನ ಕೈಸೇದೋಗ….’ ಅನ್ನುತ್ತ ಎದ್ದು ಬಂದು ಬಾಗುಲ ತಗದು ನೋಡುತ್ತಾಳೆ ಯಮದೂತರಂತೆ ಪೋಲೀಸರು ನಿಂತಿದ್ದರು. ಅವಳ ಜೀವ ಝಗ್ ಅಂದೋಯ್ತು. ನಡುಗುತ್ತಾ ‘ಏನ್ ಸೋಮ್ಗಳಾ’ ಅಂದಳು. ಅವುಳ ಆ ಮಾತು ಅವಳನ್ನು ಲಕ್ಕಿಸದೆ ನುಗ್ಗಿದ ಪೋಲೀಸರ ಬೂಟುಗಳ ಶಬುದದಲ್ಲಿ ಅಪ್ಪಚ್ಚಿಯಾಯ್ತು. +ಇನ್ಸ್‌ಪೆಕ್ಟರು ನಿಧಾನವಾಗಿ ಒಳಬಂದು ಎಲ್ಲವನ್ನೂ ಒಂದ್ಸಲ ಅವಲೋಕಿಸಿದರು. ಇಡೀ ಹಟ್ಟೀನ ಕಣ್ಣಿಗೆ ಸಿಕ್ಸಿಕೊಂಡು ಆಮೇಲ ಸಾಕವ್ವನಿಗೆ ‘ಯೇ ಮುದ್ಕಿ ಎಲ್ಲಿ ನಿನ್ಮಕ್ಕಳು…’ ಎಂದು ಗಡುಸಿಗೆ ದನಿ ತುಂಬಿ ಅಂದರು. ಸಾಕವ್ವ ಥರಗುಟ್ಟುತ್ತ ‘ಮಲ್ಗವರೆ ಮಾಸೋಮಿ’ ಅಂದಳು. ಕಾಳಣ್ಣನ ಹೆಡ್ತಿಗೂ ಎಚ್ಚರವಾಗಿ ನೆರುಕೆ ಕಿಂಡೀಲಿ ಕಂಡದ್ದು ಕಂಡು ಗಂಡನ ಎಬ್ಬಿಸಲೂ ಕೈ ಬರದೆ ಅಲ್ಲೆ ತಪರ್ಸಾಡ್ತ ಕೂತಳು. +ಇಲ್ಲಿ ಕಿರುಮನೆಯಿಂದ ಸಣ್ಣಯ್ಯ ಕತ್ತನ್ನು ಇಣುಕಿಸಿದವನು ಅದನು ಹಿಂದಕ್ಕೆಳೆಯಲೊ ಮುಂದಕ್ಕೆಳೆಯಲೊ ಎಂದು ದೇಹವ ಕಿರುಮನೇಲಿಟ್ಟು ತಲೆಯ ಹೊರಗಿಟ್ಟು ನಿಂತನು. ಅವನ ತಲೆಕಂಡ ದಫೇದಾರಿ ‘ಅವ್ನು ಇಣುಕೋದ ನೋಡ್ರಪ್ಪ ಇಣುಕೋದ ಆ ಆ ಹೊರಕ್ಕ ಬಾರೋಲೇ’ ಎಂದನು. ಹಗ್ಗ ಕಟ್ಟಿ ಎಳೆದಂತಾಗಿ ಸಣ್ಣಯ್ಯ ತಡಬಡಾಯಿಸಿ ಬಂದು ಚಕ್ಕನೆ ನಿಂತನು. ಸಣ್ಣಯ್ಯನ ಕೂಸು ಕಿರುಚ ಆರಂಭಿಸಿತು. ಚಲುವಮ್ಮ ಆ ಕೂಸ ಒಂದು ಕೈಲಿ ತಟ್ಟೋದು ಇನ್ನೊಂದು ಕೈಲಿ ಜೀವಹಿಂಡುಕೊಳ್ಳೋದು ಮಾಡತ ಬೆವರುತ್ತಿದ್ದಳು. ಸಣ್ಣಯ್ಯನನ್ನು ಸುಡುವಂತೆ ನೋಡಿ ಇನ್ಸ್‌ಪೆಕ್ಟರು ರೇವಣ್ಣನಿಗೆ ಕಣ್ಣಿಂದಲೆ ಮೀಟಿದರು. ರೇವಣ್ಣ ‘ಇವ್ನಲ್ಲ ಮಾಸ್ವಾಮಿ’ ಅಂದನು. ದಫೇದಾರಿ ನೆಲವ ಬಡಿಯುತ್ತ ಕಾಳಣ್ಣನ ನೆರುಕೇಗೆ ನುಗ್ಗಿದನು. +ಅಲ್ಲಿ ಕಾಳಣ್ಣ ಚಿಂತಿಲ್ಲದೆ ಮಲಗಿದ್ದನು; ಹೆಡ್ತಿ ಪತರಗುಟ್ಟುತ್ತಿದ್ದಳು, ಮಲಗಿದ್ದವನ ಕಂಡು ದಫೇದಾರಿ ಮೊಸ ಮೊಸ ಉಸುರು ಬುಡ್ತ ಕಾಳಣ್ಣನಿಗೆ ಲಾಟೀಲಿ ತಿವುದನು. ಕಾಳಣ್ಣನ ಹೆಡ್ತಿ ದುಕ್ಕಳಿಸಿ ಅಳತೊಡಗಿದಳು. ಯಾವಾಗ ದಫೇದಾರಿ ಬೂಟ ನೆಲಕ್ಕೆ ಬಡುದನೊ ಆವಾಗ ಅವುಳು ದುಕ್ಕವನ್ನು ಗಂಟಲಲ್ಲೆ ಮಡುಗಿಕೊಂಡಳು. ಕಾಳಣ್ಣ ಗಕ್ಕರಿಸಿಕೊಂಡು ಎದ್ದು ಕುಂತವನಿಗೆ ಕಣ್ಣಿಗೆ ಹೊಡುದಂತೆ ಪೋಲೀಸು ಹಟ್ಟಿ ತುಂಬಾ ನಿಂತಿದ್ದನು. +ಕಯ್ಯಿಬಾಯಿ ಬರದ ಕಾಳಣ್ಣ ಬುಟ್ಟಕಣ್ಣುಬುಟ್ಟು ನೋಡುವುದ ಮಾಡುತ್ತಿದ್ದನು. ದಫೇದಾರಿ ಕೈಕೋಲನು ಕಾಳಣ್ಣನ ಚೊಗದ ಕಾಲರಿಗೆ ಸಿಕ್ಸಿ ತಿರುಚಿ ಹಿಡುತವಾಗಿ ಮೇಲೆತ್ತುತ್ತ ಹಲ್ಮುಡಿ ಕಚ್ಚಿ ‘ಮಗ ಕುಂತವ್ನೆ…ಏಳಲೇ’ ಅಂದನು. ಅವುನು ಏಳುತ್ತಲೆ ಕಾಲರಿಗೆ ಸಿಕ್ಸಿದ್ದ ಕೈಕೋಲಲ್ಲೆ ತಳ್ತ ಇನ್ಸ್‌ಪೆಕ್ಟರ ಮುಂದೆ ತಂದು ನಿಲ್ಲಿಸಿದನು. ರೇವಣ್ಣ ಆನಂದಪರವಶನಾಗಿ ‘ಇವ್ನೇನೆ ಮಾಸ್ವಾಮಿ’ ಅಂದನು. ಸುತ್ತ ಇದ್ದ ಪೀಸಿಗಳು ತೋಳುಗಳ ಬೀಸ್ತ ಹಲ್ಮುಡಿ ಕಚ್ಕೊಂಡು, ಕಾಳಣ್ಣನ ಮೇಲ ಇನ್ನೇನು ನೆಗುದು ಬಿದ್ದರು ಅಂಬುವಂತೆ ನಿಂತರು. ಕಾಳಣ್ಣನ ಎದಗುಂಡುಗೆಯೊಳಗಿಂದ ನಡುಕ ಅನ್ನೋದು ಹುಯ್ಲೋ ಅಂದುಕೊಂಡು ಬಂತು. +ಬಹಳ ಹೊತ್ತಿನವರೆಗೂ ಇನ್ಸ್‌ಪೆಕ್ಟರು ತಮ್ಮ ತಿವಿಯುವ ಕಣ್ಣುಗಳನ್ನು ಕಾಳಣ್ಣನ ಕಣ್ಗಳಿಗೆನೆಟ್ಟು ಕೊರೆಯುತ್ತಿದ್ದು ಆಮೇಲ ‘ಏನ್ಲೇ…ಎಷ್ಟು ದಿನ್ದಿಂದ ಈ ಕಸುಬ ಮಾಡ್ತ ಇದ್ದಿ’ ಎಂದು ಗುಡುಗಿದರು. ಕಾಳಣ್ಣನಿಗೆ ನಿಲ್ಲಾಕೆ ಕಾಲು ವದುರುವುವು ಮಾತಾಡಕೆ ಪದಗಳು ಕಲಸಿಕೊಳ್ಳುವುವು. ದಫೇದಾರಿ ಕೈಕೋಲು ಸಿಕ್ಸಿಕೊಂಡು ನಿಂತಿದ್ದವನು ಆ ಕೋಲಲ್ಲಿ ಒಳುಗೇ ತಿರುಚಿ ತಿವುದು ಕಾಳಣ್ಣನ ಕತ್ತುಗೆ ಚುರುಕು ಮುಟ್ಟಿಸಿದನು. ಕಾಳಣ್ಣ ಮುಗ್ಗರಿಸಿ ‘ಮಾಸೋಮಿ’ ಎಂದು ನಿಂತನು. +ಇನ್ಸ್‌ಪೆಕ್ಟರು ಮೀಸೆ ಕುಣಿಸ್ತ- +‘ಕಡಲೆ ಕಾಯ್ಮೂಟೆ ಎಲ್ಲಿಟ್ಟಿದ್ದಿ….?’ +‘ಮಾಸೋಮಿ’ +‘ಬೊಗುಳು.’ +‘ಇಲ್ಲ ಮಾಸೋಮಿ.’ +‘ಹೇ…’ಘರ್ಜಿಸಿದರು. +‘ಇಲ್ಲ ಮಾಸೋಮಿ’ ನಡುಕ ಬಂದು ನಡುಗಿತು. +‘ನಾವೇ ಹುಡ್ಕೋ ಮೊದ್ಲು ನೀನೆ ತೋರುಸ್ದೊ ಬಚಾವಾದೆ ಮಗ್ನೆ…’ +‘ಮಾಸೋಮಿ’ ಬಾಯಿಂದ ಮಾತು ಬೆವುತು ಬಂತು. +‘ನಾವೇ ಹುಡ್ಕಿ ತಂದ್ರೆ, ನಿನ್ನ ಹೆಂಡ್ತ್ಯ ಹರಾಜ್ ಹಾಕ್ತಿ ಏನ್ಲೇ…!’ ಹಿಂದ್ಲಿಂದ ಎಕ್ಕತ್ತಿಗೆ ಚುರುಕು ಮುಟ್ಟಿತು. +‘…..’ +‘ಬೊಗುಳು….’ +‘ಇಲ್ಲ ಮಾಸೋಮಿ.’ +ಕಪಾಳಕ್ಕೊಂದು ಏಟು ಫಟೀರನೆ ಬಿತ್ತು. +ಕಾಳಣ್ಣನ ಕಣ್ಗಳಿಗೆ ಕತ್ತಲು ಕಟ್ಟಿಕೊಂಡು ಕೆಳಗೆ ಕೂತುಬುಟ್ಟನು. ಕೂತವನಿಗೆ ದಫೇದಾರಿ ಬಲವಾಗಿ ತಿವುದು ನಿಂತು ಇನ್ಸ್‌ಪೆಕ್ಟರಪ್ಪ ಅಪ್ಪಣೆಗೆ ಕಾದನು. ಮಾಸ್ವಾಮಿಗಳು ಒಂದ್ಸಲ ಕಣ್ಸನ್ನೆ ಮಾಡುದ್ದೇ ತಡ, ದಫೇದಾರಿಯಾದಿಯಾಗಿ ನಾಕಾರು ಪೋಲೀಸರು ಕಾಳಣ್ಣನ ನೆರುಕೆಗೆ ಬಿರುಗಾಳಿಯಂತೆ ನುಗ್ಗಿದರು. ಒಬ್ಬ ಪೋಲೀಸು ಕಾಳಣ್ಣನಿಗೆ ಒದ್ದುಕೊಂಡು ಸೇನಾನಿಯಂತೆ ನಿಂತನು. +ಪೋಲೀಸರು ನೆರುಕೆಗೆ ನುಗ್ದಾಗ ಉಂಟಾದ ಗಾಳಿ ರಭುಸಕ್ಕೆ ಕಾಳಣ್ಣನ ಹೆಡ್ತಿ ತೂರಾಡಿ ಹೋದಳು. ಅವಳು ಪೋಲೀಸರ ಚುಚ್ಚುಗಣ್ಗಳಿಗೆ ಸಿಕ್ಕಿವದ್ದಾಡಿ ಸೆರುಗ ಬಾಯಿಗೆ ತುರುಕಿ ಹೊರಬಂದು ನಡೆಯಾಕು ಆಗ್ದೆ ನಿಂತು, ನಿಲ್ಲಾಕು ಆಗ್ದೆ ನಿಂತಲ್ಲೆ ಕುಂತುಬುಟ್ಟಳು. ಅಲ್ಲಿನ ಗದ್ದಲಕ್ಕೆ ನಡು ಮನೆಯಿಂದ ಹಜಾರಕ್ಕೆ ನೆಗುದು ಬಂದ ಶಿವು ಬಲೆಗೆ ಸಿಕ್ಕಿಕೊಂಡಂತಾಗಿ ನಿಂತಿತು. ನಡುಮನೆ ಒಳಗೆ ಅಕ್ಕ ಗೌರಮ್ಮ ತಂಗಿ ಪುಟಗೌರೀನ ನೋಡೋದು, ತಂಗಿ ಪುಟಗೌರಿ ಅಕ್ಕ ಗೌರಮ್ಮನ ನೋಡೋದು ಮಾಡ್ತ, ಮಾಡಲೇನು ತಿಳೀದೆ ನಡುಗೋದು ಮಾಡ್ತ, ನಡುಮನೆಯಿಂದ ಕೋಣೆಗೆ, ಕೋಣೆಯಿಂದ ನಡುಮನೆಗೆ ಎಟತಾಕುತ್ತಿದ್ದರು. +-೮- +ಹೊರುಗ ಹತ್ತಾಗಿ ಇಪ್ಪತ್ತಾಗಿ ಸೇರುತ್ತಿದ್ದ ಜನ. ಭೂಮಿಗೆ ಬೆಳಕು ಬೀಳುತ್ತಿದ್ದಂತೆಲ್ಲ ಹುಟ್ಟುಕೊಂಡು ಡ್ರೈವರಿಗೆ ಕೇರುಮಾಡದೆ ನಿಲ್ಲುತ್ತಿದ್ದರು. ಕೆಲುವರು ಸಾಸ ಮಾಡಿ ಹಟ್ಟಿಬಾಗುಲ ಹತ್ತಿರಕ್ಕೂ ಬಂದು ತಮ್ಮ ಕಣ್ಣು, ಸಾಧ್ಯವಾದರೆ ತಲೆಯನ್ನೂ ಒಳಕ್ಕೂ ತುರುಕುತ್ತಿದ್ದರು. ಒಂದ್ಸಲ ಇನ್ಸ್‌ಪೆಕ್ಟರು ಅವರನ್ನು ಕೆಕ್ಕರಿಸಿಕೊಂಡು ನೋಡಲು ಆ ನೋಟಕ್ಕೆ ಆ ಜನ ಹಿಂಜಿಗಿಯಿತು. ಸೇನಾನಿಯಂತೆ ಕಾಳಣ್ಣನ ಪಕ್ಕ ನಿಂತಿದ್ದ ಪೋಲೀಸು ಲಾಟೀ ಬೀಸ್ತ ಆ ಜನದ ಮೇಲ ನೆಗುದನು. ಬಾಗುಲಲಿ ನಿಂತ ಜನ ಗುಂಪಿಗೆ ಬಿದ್ದಿತು. ಆ ಹಟ್ಟಿ ಮುಂದ ಪೋಜಿನಂತೆ ನೆರೆದಿದ್ದ ಜನಕಂಡು ಆಪೀಸಿಯ ಎದೆ ಧಸಕ್ಕೆಂದರೂ ಕಾಕಿಬಟ್ಟೆ ಮಹಿಮೆ ಜನರನ್ನು ತಳ್ತ ‘ಇಲ್ಲೇನು ಕೋತಿ ಕುಣೀತಾ ಇದ್ದಾದೇನ್ರಯ್ಯ…ಮಾಡೋ ಕೆಲ್ಸ ಮಾಡೋಗಿ’ ಎನ್ನುತ್ತ ಜನರನ್ನು ಹಿಂಜಿಗಿಸುತ್ತಿತ್ತು. +ಆಗ ಗುಂಪು ತನ್ನಷ್ಟಕ್ಕೆ ಏಡುಭಾಗವಾಗಿ ಒಡೆದು ದಾರಿಬಿಟ್ಟುಗಂತು. ಆ ದಾರೀಲಿ ಕತ್ತಿಗೆ ಶಾಲು ಹೊದ್ದು ಕೈಗೆ ಸಿಕರೋಟು ಹಿಡುದು ಎತ್ತಪ್ಪನವರು ಯಾವ ರೇಖೆಯನ್ನೂ ಮೊಖದಲ್ಲಿ ಹೆಚ್ಚುಕಮ್ಮಿ ಮಾಡದೆ ನಡೆದು ಬಂದರು. ಸೋಸಿತೆಗುರೂ ಒಂದು ಸಟುಗ ರಕ್ತಮಾಂಸ ಸಿಕ್ಕದ ರೇವಣ್ಣನ ಕಂಡಾಗ ಎತ್ತಪ್ಪನವರು ‘ಇದಾ ಕಳ್ನ ಹಿಡುಯೋ ಮುಸುಡ್ಯ’ ಅಂದುಕೊಂಡಿದ್ದು ಇದೀಗ ಅವರನ್ನು ಅವರೇ ನಂಬದಂತಾಗಿತ್ತು. ಶ್ರೀ ಎತ್ತಪ್ಪನವರನ್ನು ಕಂಡ ಪೋಲೀಸು ಸಲ್ಯೂಟು ಹೊಡೆದು ಅವರನ್ನು ಬಾಗುಲವರೆಗೂ ಮುಟ್ಟಿಸಿ ಬಂದು ಕುಣಿದಾಟ ಮುಂದುವರಿಸಿದನು. +ಒಳುಗೆ ಕಾಳಣ್ಣ ಕಣ್ಣು ಪಿಳಿಪಿಳಿ ಬುಡ್ತ ದೇಹವ ಕುಗ್ಗಿಸಿ ಕುಂತಿದ್ದನು. ಅವನ ಹೆಡ್ತಿ ಕಣ್ಣಿಗೆ ಮಂಕ ಅಂಟಿಸಿಕೊಂಡು ಕೂತಿದ್ದಳು. ಸಣ್ಣಯ್ಯ ಭೂಮಿಗೆ ನೆಟ್ಟ ಒಣಕಲ ಕಡ್ಡಿಯಂತೆ ನಿಂತಿದ್ದನು. ಬಲೆಗೆ ಸಿಕ್ಕ ಶಿವು ಮಿಲಮಿಲ ಅಂತಿತ್ತು. ಸಾಕವ್ವ, ಕುಗ್ಗಿ ಕುಂತಿದ್ದ ಮಗನದಿಕ್ಕ ಉಸುರಾಟದೊಡನೆ ಇಂಚಿಂಚು ತವುಯುತ್ತಿದ್ದಳು. ಕಾಳಣ್ಣನ ನೆರುಕೆ ತಡಬಡಾಯಿಸುತ್ತಿತ್ತು. ಹೊರುಗೆ ಜನ ಹೆಚ್ಚಿದಂತೆ ಪೋಲೀಸನ ಕುಣಿತವೂ ಹೆಚ್ಚುತ್ತಿತ್ತು. +ದಫೇದಾರಿ ಮುಂದಾಳ್ತನದಲ್ಲಿ ಕಾಳಣ್ಣನ ಮೂರಂಕಣದ ನೆರುಕೆಗೆ ಸಿಕ್ಸಿದ್ದ ಫೋಟೋದಲ್ಲಿ ಮಲೆಮಾದೇಶ್ವರಸ್ವಾಮಿ ಹುಲಿವಾಹನದ ಮೇಲ ಕುಂತು ಕಣ್ಮುಚ್ಚಿದ ಭಂಗಿಯಲ್ಲಿ ಕಿರುನಗೆ ಸೂಸುತ್ತಿದ್ದನು. ಫೋಟೋದ ಕೆಳುಗೊಂದು ಈಭೂತಿ ಹಲುಗೆ ಅದರೊಳಗೊಂದೆರಡು ಈಭೂತಿ ಉಂಡೆ ಇದ್ದವು. ಹಗ್ಗದುರೀಲಿ ಒಂದು ತೇಪೆ ಸೀರೆ ಎರುಡು ರವುಕೆ ಒಂದೆರಡು ಚೊಗನಿಕ್ಕರು, ಒಂದು ಇಪ್ಪತ್ತು ಕಿಂಡಿ ಪಂಚೆ ಇನ್ನೊಂದುಕಾಂಫಿ ತೋಟದ ಕಂಬಳಿ ಮಂಕು ಹಿಡುದು ನೇತಾಡುತ್ತಿದ್ದವು. ಮೂಲೇಲಿದ್ದ ರಾಗಿಕಲ್ಲು ಸೋಂಬೇರಿಯಾಗಿ ಮಲಗಿತ್ತು; ಅದರ ಮೇಲೊಂದು ಖಾಲಿಪುಟ್ಟಿ ಕುಂತಿತ್ತು. ನಡುಗೋಡೆಗೆ ಸೇರಿಕೊಂಡು ಒಂದು ಎತ್ತೊಲೆ ಆ ಎತ್ತೊಲೆಮೇಲೆ ಈಭೂತಿ ಕಟ್ಟು ಬಳಿದಿಟ್ಟಿದ್ದ ಹಿಟ್ಟು ಉದುಕದ ಮಡಕೆ. ಅಲ್ಲೇ ನೀರುತುಂಬಿದ್ದೆರಡು ಅರುವೆ ಅಲ್ಲಿಂದ ಕೈಗೆಟುಕೊ ದೂರದಲ್ಲಿ ಉಣ್ಣೊಹರೋಣ ಗಳಾಸುಗಳು ಜೊತೆಯಾಗಿ ಮಲಗಿದ್ದವು. ಗೋಡೆಗೊರಗಿ ವಿಶ್ರಮಿಸಿದ್ದ ದೊಡ್ಡ ಅಳಗದ ಹೊಟ್ಟೇಲಿ ಅರ್ಧ ಸೇರಷ್ಟು ಹುರುಳಿ ಕಾಳೂ ಆ ಆಳುಗದ ಮೇಲೆ ಒಂದೆರಡು ಮಡಕೆಗಳು ಒಂದರ ಮೇಲೊಂದು ನಿಂತೊ ಕುಂತೊ ಇದ್ವು. ನೆಲ ಬಗುದು ತಗುದರೂ ಮಾಲು ಏಳದು ಎಂಬ ಸ್ಥಿತಿಯನ್ನು ಪೋಲೀಸರು ಮುಟ್ಟಲು ದಫೇದಾರಿ ಮುಂದಾಳ್ತನದಲ್ಲಿ ಪೀಸಿಗಳು ಹೊರಬಂದರು. +ದಫೇದಾರಿ ಕಂಡದ್ದನ್ನು ಸಾಹೇಬರೆದುರು ತೋಡಿಟ್ಟು ಹಜಾರದಲ್ಲಿ ನೆಗಾಡ್ತ ಹುಡುಕುತ್ತಿದ್ದ ಪೋಲೀಸರ ಕೂಡಿಕೊಂಡನು. ಒಬ್ಬ ಪೀಸಿ ಸೌದೆಯ ಸರುಸಿ ನೋಡುತ್ತಿದ್ದನು. ಇನ್ನೊಬ್ಬ ಹಜಾರದ ಪೆಟ್ಟಿಗೆಯ ಉಲ್ಟಾ ಮಾಡಿದನು. ಅಲ್ಲಿ ಎಮ್ಮೆದನಕ್ಕೆ ಮೇವಾಕುವ ಚಣುಗದಲ್ಲಿ ಬೂದಿಕಸ ತುಂಬಿತ್ತು. ಅಲ್ಲಿಗೆ ಲಾಟೀ ಒಳಕೆಟ್ಟು ತಗುದು ಮತ್ತೊಬ್ಬ ಪೀಸಿ ಪರೀಕ್ಷಿಸುತ್ತಿದ್ದನು. ಆ ಪರೀಕ್ಷೆಗೆ ಬೂದಿ ನೊಣಗಳು ಹೆದುರಿ ಹಟ್ಟಿ ತುಂಬಾ ಹಾರಾಡತೊಡಗಿದವು. ಆ ಚಣುಗ ಹತ್ತಿ ರೇವಣ್ಣನವರು ತೊಲೆ ಮೇಲಿದ್ದ ಸಾಡನ್ನು ಅಲ್ಲಾಡುಸಿ ಇಳಿದರು. ಒಬ್ಬ ನೀರು ಕಾಯ್ಸುವ ಅಳುಗದ ಮುಚ್ಚಳ ಎತ್ತಿ ಮೊಖಹಾಕಿ ಮೊಖ ತಗುದನು. ಆಮೇಲ ಎಲ್ಲರೂ ಒಕ್ಕೆಡೆ ಸೇರಿ ಕಿರುಮನೆ ಎದುರಲ್ಲಿ ಅಡ್ಡಡ್ಡ ನೇತಾಕಿದ್ದ ದೊಡ್ಡ ತೊಂಬದೊಳಕ್ಕೆ ನಿಗುರಿನಿಗುರಿ ನೋಡಿಯೂ ಕಾಣಿಸದೆ ಒಬ್ಬ ಪೀಸಿ ರೇವಣ್ಣನವರನ್ನು ಹೆಗುಲಿಗೆ ಕೂರಿಸಿ ನೋಡೆಂದರು. ಆತೊಂಬೇಲಿ ಹಿಂದಲ ಕಾಲದ ಕತ್ತಲು ತುಂಬಿದ್ದು ಅಲ್ಲಾಡ್ಸಿದಾಗ ಹೊರಬರುತ್ತಿತ್ತು. ಅದರೊಳಗ ಗವೀಲಿ ಹುದುಗಿದ್ದಂತೆ ಸುತ್ತಿಗೆ ಕಡಗೋಲು ಎಲುಕೊಟ್ಟು ಗೋಣೀ ಚೀಲಾದಿಗಳು ತುಂಬಿದ್ದವು. ರೇವಣ್ಣನವರು ತೊಂಬದೊಳಕ್ಕ ಲಾಟಿ ಇಟ್ಟು ಮೇಲಿಂದ ಕೆಳುಕ್ಕೆ ಕೆಳಗಿಂದ ಮೇಲುಕ್ಕೆ ಎಡದಿಂದ ಬಲುಕ್ಕೆ ಬಲದಿಂದ ಎಡುಕ್ಕೆ ಅಲ್ಲಾಡ್ಸಿದರು. ಅದು ಲೊಳ ಲೊಳ ಎಂದು ಮಾತಾಡಿತು. ರೇವಣ್ಣನವರು ಏನೂ ಇಲ್ಲ ಅನ್ನುವ ಮೊದ್ಲೆ ಹೊತ್ತಿದ್ದ ಪೀಸಿ ಅವುರನ್ನು ನೆಲಕ್ಕೆ ಕುಕ್ಕಿದನು. ರೇವಣ್ಣನವರು ‘ಬಂದೆ ಸ್ವಾಮಿ’ ಎಂದು ದಫೇದಾರರಿಗೆ ಅಂದು ಹಿಂಜರ್‍ಕೊಂಡು ಇನ್ಸ್‌ಪೆಕ್ಟರ್ ಕಣ್ತಪ್ಪಿಸಿ ಹೊರಬಂದರು. +ಹೊರುಗೆ ಜನಸಾಗರ, ಆ ಜನಸಾಗರದ ತಡಗಟ್ಟುತ್ತಿದ್ದ ಜೊತೆ ಪೀಸಿಗೆ ಕಯ್ಯಾಡಿಸಿ ರೇವಣ್ಣನವರು ಬೀಡಿ ಹಚ್ಚಿಕೊಂಡು ನಡುಗೇಗೆ ಠೀವಿ ಅಂಟುಸಿಕೊಂಡು ಹಟ್ಟಿ ಹಿಂದಕ್ಕೆ ಬಂದರು. ಗೋಡೆ ಸಂದೀಲಿ ಮಾಲು ಸುರ್‍ದಿರಬಹುದಾ ಎಂಬ ಅನುಮಾನ ಅವರ ತಲೇಲಿ ಮಿಂಚಾಡಿತ್ತು. ಈ ಮಿಂಚಿನೋಟ್ಗೇ ಅವರಿಗೆ ಎತ್ತಿ ಕುಕ್ಕಿಸಿಕೊಂಡ ರಭುಸಕ್ಕೆ ಒಂದಾದ್ದು ಡಿಮಾಂಡ್ ಮಾಡುತ್ತಿತ್ತು. ಆ ವೋಣೀ ಉದ್ದಕ್ಕೂ ನಡುದೂ ನಡುದೂ ಅಂಥ ಯಾವ ಸುಳುವೂ ಇಲ್ದೇನೆ ನಡುದಾಡಿದ ಸುಸ್ತಿಗೆ ಕಣ್ಣು ಮಂಜ್ಗಟ್ಟಿ ಆ ವೋಣಿಯಲ್ಲಿ ಒಂದಾಮಾಡಲು ರೇವಣ್ಣನವರು ಕೂತರು. +ಅಲ್ಲಲ್ಲೆ ಗೋಡೆಗಂಟಿಕೊಂಡು ತಲೆಮಾತ್ರವ ಇಣುಕಿಸಿ ನೋಡುತ್ತಿದ್ದ ಹೆಂಗಳೆಯರು, ರೇವಣ್ಣನವರ ಠೀವಿ ಕಂಡು ಅದೆ ಅಂದುಕೊಂಡು ಪೋಣಿಗಿಣುಕಿ ಆ ಸ್ಥಿತಿಯಲ್ಲಿ ರೇವಣ್ಣನವರನ್ನು ಕಂಡರು. ಆಗ ಅವರುಗಳ ಬಾಯಿಂದ ನಗು ಅನ್ನೋದು ಉಕ್ಕೇರಲು ಸೆರಗು ಮುಚ್ಚಿ ಅದ ಅದುಮುತ್ತ ಮರೆಯಾಗುತ್ತಿದ್ದರು. ಯಾರಾರು ‘ಏನ ಅದು’ ಅಂತ ಕೇಳಿದರೆ ಅವರಿಗೆ ಹುಸುಕೋಪ ಬಂದೂ ಕೇಳ್ದವರಿಗೆ ‘ನೀನೇ ನೋಡದ’ ಅನ್ನುತ್ತಿದ್ದರು. ನೋಡ್ದವಳು ಅವಳೂ ಅವರಂತೇನೆ ಆಗುತ್ತಿದ್ದಳು. ಒಬ್ಬಳು ಸೆರುಗ ಬಾಯೊಳಕ್ಕೆ ತುರುಕಿಕೊಂಡಷ್ಟೂ ನಗು ಒದ್ದುಕೊಂಡು ಬಂದು ಜೋರಾಗಿ ಕೀಕೀಕೀ ಮಾಡಿ ಸುತ್ತಲಿದ್ದ ಹೆಂಗಳೆಯರು ನಗುನೊಡನೆ ವೀರಾವೇಶದಿಂದ ಹೊರಡುವಂತಾಯ್ತು. ಇತ್ತ ರೇವಣ್ಣನವರು ತಮ್ಮ ತೊಡೆಗಳ ನಡುಗಿಗೆ ಮನಸ್ಸಿಂದ ಬಲ ರವಾನಿಸಿ ಎದ್ದು ಹೆಜ್ಜೆ ಇಟ್ಟರು. +ರೇವಣ್ಣನವರು ಒಂದು ಕಾರ್ಯಕ್ರಮದಲ್ಲಿ ಇರುವಾಗ್ಗ್ಯೇ ಇಲ್ಲಿ ಕಿರುಮನೆ ಜಪ್ತಿ ನಡೆಯುತ್ತಿತ್ತು. ಪೋಲೀಸರು ಆ ಬಾಗುಲ ಹಿಡುಸದಂಥವರು ಒಳನುಗ್ಗಿದಾಗ ಕಿರುಮನೇಲಿ ಕತ್ತಲು ಕಟ್ಟಿಕೊಂಡಿತು. ಚೆಲುವಮ್ಮ ಬೆದರಿಕೊಂಡು ಅಳುತ್ತಿದ್ದ ಮಕ್ಕಳು ಚೀರುವುದರೊಳಗಾಗಿ ಹೊರಕ್ಕೆಳೆದುಕೊಂಡು ಬಂದು ಕುಕ್ಕರ ಬಡಿದಳು. ಇನ್ಸ್‌ಪೆಕ್ಟರು ದುರುಗುಟ್ಟಿ ನೋಡುತ್ತಿದ್ದರು. ಚೆಲುವಮ್ಮ ದೊಡ್ಡ ಜೀವ ಸಣ್ಣ ಜೀವ ಎರಡೂವೆ ನಾ ಮುಂದು ತಾ ಮುಂದು ಎಂದು ಹೊರಹೋಗಲು ಒಂದರ ಮೇಲೊಂದು ಬಿದ್ದು ನುಗ್ಗುತ್ತಿದ್ದವು. ಚೆಲುವಮ್ಮ, ಕಿರುಮನೇಲಿ ತನ್ನ ಪರಾಣಗಳಿಗಾಗಿ ಜಖಂ ಅನ್ನು ಕಣ್ಣಿಂದ ನೋಡಬೇಕಾದ ತಲತಗ್ಸಿ ತನ್ನ ಕೂಸ ಎದೆಗವುಚಿಕೊಂಡು ತಟ್ಟ ತೊಡಗಿದಳು. ಅವಳ ಹಿಂದು ಮುಂದಿದ್ದ ಹೈಕಳು ಜೋರಾಗಿ ಅಳಲು ಗೋರಂಜ ಸಾಲ್ದೆ ಸೊರಗುಟ್ಟುತ್ತಿದ್ದವು. +ಪೋಲೀಸರು ಕಷ್ಟಪಟ್ಟು ಹೊಕ್ಕಂಥ ಆ ಕಿರುಮನೇಲಿ ಅಂಥ ಎರಡು ಮನೆಗಾಗುವಷ್ಟು ಸಾಮಾನು ಸರಂಜಾಮುಗಳು ಅಡುಗಿದ್ದವು. ಪೀಸಿ ದಫೇದಾರರು ಹಬ್ಬದ ಸಡಗರದೊಡನೆ ಅಲ್ಲಿದ್ದವುಗಳ ಎತ್ತಿಕುಟ್ಟಿ ಒಡೆದು ನೋಡತೊಡಗಿದರು. ನೋಡ್ದ ಕಡೆಗೆ ಒಂದಲ್ಲಾ ಒಂದು ಚಂಬು ಚಲುಗ ಹರೋಣಗಳಾಸುಗಳಿದ್ದುವು. ಒಂದರ ಮೇಲೊಂದು ಜೋತಿದ್ದ ದಪ್ಪದಪ್ಪ ಮಡಕೆಗಳಲ್ಲಿ ಒಂದರಲ್ಲಿ ಆರೇಳು ಸೇರಷ್ಟು ಜೋಳ, ಇನ್ನೊಂದರಲ್ಲಿ ಅಸಿಟ್ಟನ್ನು ತಟ್ಟಿಡಲಾಗಿತ್ತು. ನಡುಮಧ್ಯದಲ್ಲಿ ಬೇಕಾಬಿಟ್ಟಿ ಬಿದ್ದಿದ್ದ ಟ್ರಂಕಲ್ಲಿ ಆತುರಾತುರವಾಗಿ ತುರುಕಿದ್ದಂತೆ ಬಟ್ಟೆಬರೆಗಳು ಉಸುರು ಕಟ್ಟಿಕೊಂಡಿದ್ದವು. ಉಳಿದ ಬಟ್ಟೆಬರೆ ದುಪ್ಪಟ್ಟಿಗಳು ಹಗ್ಗದುರೀಲಿ ಜೋಡಿಸಿಕೊಂಡು, ಮೊರಗೆರಸಿ ವಂದರಿಗಳು ಗೋಡೆಗಂಟಿಕೊಂಡು ಇದ್ದವು. ಕೆಳಗೊಂದು ಚಾಪೆ ಹಾಸ್ಕೊಂಡು ಮಲುಗಿತ್ತು. ಮಂದಲಿಗೆಯೊಂದು ಸುತ್ಕೊಂಡು ನಿಂತಿತ್ತು. ತನ್ನ ಸುತ್ತ ಒಂದೆರಡು ಹರೋಣಗಳಾಸು ಚಂಬುಗಳೊಡನಿದ್ದ ಕಂಚೀನ ಅಂಡೇಲಿ ನೀರು ತುಂಬಿತ್ತು. ಗೋಡೆ ಮೊಳೆಗಳಲ್ಲಿ ದೋಸಕಲ್ಲು ಸೀಸಗಳನ್ನು ನೇತಾಕಿದ್ದು ಒಂದರಲ್ಲಿ ಅರಸೀಸೆಯಷ್ಟು ಸೀಮೆ ಎಣ್ಣೆ ಇತ್ತು. ಪೀಸಿಯೊಬ್ಬ ತೊಂಬದ ಮಣ್ಮುಚ್ಚಳವ ಕಿತ್ತು ಬಿಸುಟು ಕೈಹಾಕಲು ಬೂದಿ ಬೆರೆಸಿಟ್ಟಿದ್ದ ಬಿತ್ತಣದ ಜೋಳದ ಕಾಳ್ಗಳು ಪೀಸಿ ಕೈಯಿಂದ ನೆಗುದು ಬಿದ್ದವು. ಆ ನಾಕೂ ಜನರೂ ಬುಡುತ್ತಿದ್ದ ಬಿರುಸಾದ ಉಸುರಾಟಗಳು ಅವರವರನ್ನೆ ತಳ್ಳುತ್ತಿದ್ದು ಅವರೆಲ್ಲರೂ ಒಬ್ಬೊಬ್ಬರಾಗಿ ನಿಧಾನವಾಗಿ ಹೊರಬಂದರು. +ಬಂದವರು ಒಂದು ಚಣವೂ ನಿಲ್ದೆ ತತರಪತರ ನಡುಮನೆಗೆ ನುಗ್ಗಬೂಡಗಿದರು. ಸಾಕವ್ವ ಜೀವ ಕೈಲಿಡಿದುಕೊಂಡು ‘ಸ್ವಾಮ್ಗಳೊ…ದೇವ್ರಮನಬಂದ್ಯೋ, ಬೂಟ್ಗಾಲಲ್ಲಿ’ ಎಂದು ಕೈ ನೀಟಿದಳು. ದಫೇದಾರಿ ಒಂದ್ಸಲ ತೊಟ್ಗಾಲ ನೆಲಕ್ಕುದ್ದಿ ‘ಹೇ..ಬಾಯ್ಮುಚ್ಕೊಂಡು ಬಿದ್ದಿರು. ದುಸರ ಮಾತಾಡಿದ್ರ ಬಾಯ್ಗೆ ಬೂಟ ಎಟ್ತೀನಿ.’ ಅಂದು ಕೆಕ್ಕರಿಸಿಕೊಂಡು ನಡುಮನ್ಗೆ ನುಗ್ಗಿದನು. ಸಾಕವ್ವ ಬಾಯ್ಬುಟುಗೊಂಡು ಕಣ್ಗುಡ್ಡೆಗಳ ಅಲುಗಾಡಿಸ್ದೆ ಕುಂತಳು. +ನಡುಮನೆ ಒಳಗಿದ್ದ ಅಕ್ಕ ತಂಗೀರು ಉಸುರುಬುಡ್ದೆ ಹೊರಬಂದು ಕಿರುಮನೆ ದಿಕ್ಕ ಮೊಖ ಹಾಕಿ ಉಸುರು ಬುಟ್ಟು ನಿಂತರು. ದುಪ್ಪಟ್ಟಿ ಹೊದ್ದು ಗೋಡೆ ನೋಡ್ತ ಕೂತಿದ್ದ ದುಪ್ಟಿ ಕಮಿಷನರು ಅವೈ ಅವೈ ಅನ್ನುತ್ತ, ತ್ರಾಣ ಕೂಡಿಸಿ ಎದ್ದು ನಡೆಯುತ ಬಂದು ನಿಧಾನವಾಗಿ ಮುಂಡಿಗೆಗೊರಗಿ ನೆಲಕೆ ಕಯ್ಯಿಳಿಸಿತು. +-೯- +ಹಟ್ಟಿ ಮುಂದಲ ಜನಪ್ರವಾಹಕ್ಕೆ ಇನ್ನೂ ಹತ್ತು ಜನರು ಸೇರಿಕೊಂಡರೇನೊ, ಆ ಗುಂಪು ಭಾಗ ಮಾಡಿಕೊಂಡು ಒಬ್ಬ ಮುಂದುಮುಂದಕೆ ನುಗ್ಗುತ್ತಿದ್ದನು. ಜನ ತಡಗುಟ್ಟುತ್ತಿದ್ದ ಪೀಸಿ ಅವನನ್ನು ಹಿಂದಹಿಂದಕೆ ತಳ್ಳುತ್ತಿದ್ದನು. ಕೊನೆಗವನು ‘ನಾನೂವಿ ಈ ಹಟ್ಯವ್ನೆ ಸ್ವಾಮೆ ಬುಡಿ’ ಅಂದನು. ಈ ಪೀಸಿ ಗಬಕ್ಕನೆ ಅವನ ತೋಳ ಹಿಡುದು. ‘ನೀನೆ ಬೇಕಾಗಿದ್ದವ್ನು ಬಾ ಬಾ ಎಂದು ಎಳುದು, ಎದೆಕೂಡಿಸಿಕೊಳ್ಳುತ್ತಿದ್ದ ರೇವಣ್ಣನಿಗೆ ಒಪ್ಪಿಸಿದನು. ರೇವಣ್ಣನು ಮನದಲ್ಲೆ ಗುರುಸಿದ್ದೂನ ಚಹರೆಯನ್ನು ನಾಕುಸಲ ನೋಟ್’ ಮಾಡಿಕೊಂಡಿದ್ದರಿಂದ ಪತ್ತೆಸಿಕ್ಕಿ ಗುರುಸಿದ್ದೂನ ತೋಳ ಹಿಡುದು ಒಳತಂದರು ರೇವಣ್ಣನು ಗುರುಸಿದ್ದೂನ ಸಾಹೇಬರ ಮುಂದಕ ತಳ್ಳಿ ‘ಇವ್ನೆ ಮಾಸ್ವಾಮಿ ರಾತ್ರಿ ಬಂದು ಹೋದವನು’ ಎಂದು ನಿಂತನು. ಇನ್ಸ್‌ಪೆಕ್ಟರು ಒಂದು ಸಲ ಕಣ್ಣಲ್ಲೆ ಗುದ್ದರಿಸಿದರು. +‘ನೀನೇನಾ ರಾತ್ರಿ ಬಂದು ಹೋದವನು?’ +‘ಅಹುದು ಸ್ವಾಮಿ.’ +‘ಯಾಕ್ ಬಂದಿದ್ದೆ?’ +‘ಹಿಟ್ಟುಣ್ಣಾಕೆ ಸ್ವಾಮಿ.’ +‘ಆಮೇಲೆ ಎಲ್ಲಿಗೆ ಹೋದೆ?’ +‘ಮಾರಿಗುಡಿಗೆ ಮಲುಗಾಕೆ ಸ್ವಾಮಿ.’ +‘ಹೊತ್ಕಂಡು ಹೋದ ಕಡ್ಲೆಕಾಯ ಏನ್ಮಾಡ್ದೆ?’ +‘ಇಲ್ಲ ಸ್ವಾಮಿ.’ +ಇನ್ಸ್‌ಪೆಕ್ಟರ ತಲ ಚಿಟ್ಟೋ ಅಂತು. +ಇನ್ಸ್‌ಪೆಕ್ಟರು ತಿರುಗಾಡುತ್ತಿದ್ದವರು ನಿಂತು ಪುಟಗೌರಿ ಕಡೆ ಬೆರಳು ತೋರು ‘ಹೇ ಹುಡ್ಗಿ. ಬಾ ಇಲ್ಲಿ’ ಅಂದರು. ಪುಟಗೌರಿ ಕಣ್ಣೆತ್ತಿನೋಡಿ ಕಣ್ಣ ಇಳುಸಿ ನಿಂತಂತೆ ನಿಂತಳು. ಸಾಹೇಬರು ಈಗ ಗುಡುಗಿಕೊಂಡರು. ಪುಟಗೌರಿ ಬಂದು ನಿಂತು ನಡುಗಿದಳು. +‘ಲೇ ಹುಡ್ಗಿ….ನಿಜ ಹೇಳು ನಿಂಗೇನು ಮಾಡೊಲ್ಲ’ +ಪುಟಗೌರಿ ತುಟಿಕಚ್ಚಿಕೊಂಡಳು. +‘ಕಡ್ಲೆಕಾಯ ಮೂಟೆ ಎಲ್ಲಿ?’ +ಪುಟಗೌರಿ ಬಾಯಿಬಿಡಲಿಲ್ಲ. +‘ಮಾತಾಡು….’ +ಪುಟಗೌರಿ ಬಾಯ್ಗ ಸೆರಗುತುರುಕಿಕೊಂಡಳು. +ಇನ್ಸ್‌ಪೆಕ್ಟರ ರೂಲುಗೋಲು ಪುಟಗೌರಿ ಗಲ್ಲವನ್ನು ಸವರುತ್ತಿತ್ತು. ಪುಟಗೌರಿ ಮಾತುಗಳು ಹೊಟ್ಟ ಒಳ್ಗ ಅವುತುಕೊಳ್ಳುತ್ತಿದ್ದವು. ಗುರುಸಿದ್ದು ಇನ್ಸ್‌ಪೆಕ್ಟರ ದುರುಗುಟ್ಟಿ ನೋಡುತ್ತಿದ್ದನು. ಸಾಹೇಬರು ರೂಲು ಗೋಲನ್ನು ಪುಟಗೌರಿ ಗಲ್ಲದಿಂದ ತಗುದು ಗುರುಸಿದ್ದೂನ ಕಣ್ದಿಕ್ಕ ಚಾಚಿ ‘ಮಗ ನೋಡದ್ ನೋಡು ನೋಡದ. ಕಣ್ಗುಡ್ಡೆ ಮೀಟಾಕ್ತೀನಿ…ಹೇ’ ಎಂದು ಹಲ್ಲ ನೋರುಗುಟ್ಸಿದರು. ಗುರುಸಿದ್ದೂ ನೋಟಕ್ಕೆ ಸಾಹೇಬರ ಒಂದೆರಡು ರೋಮಗಳು ಅಳುಕುಪಟ್ಟಿದ್ದವು. ಸಾಹೇಬರು ಸಿಕರೋಟು ಹಚ್ಚಿದರು. +ನಡುಮನೆಗೆ ನುಗ್ಗಿದ ಪೀಸಿಗಳಿಗೆ ಆ ಕಡೆಗೊಂದು ಗಿಣಿ ಈ ಕಡೆಗೊಂದು ಗಿಣಿ ನಡು ಮಧ್ಯೆ ಕುಂತ ಕೃಷ್ಣ ಪರಮಾತ್ಮನ ಗೊಂಬೆ ಎದುರುಗೊಂಡಿತು. ಆ ಗೊಂಬೆಗಳ ಉದ್ದಕ್ಕೂ ಬಳೆಮಾಲೆಯ ನಲೀವಂತೆ ಸಿಂಗರಿಸಿತ್ತು. ಪಕ್ಕದಲಿ ದೀಪಾಲೆ ಕಂಬವೊಂದಿದ್ದು ಆದೀಪಾಲೆ ಕಂಬದ ಮೇಲೊಂದು ದೀಪವಿದ್ದು ಆ ದೀಪದೊಳಗ ಎಣ್ಣೆ ಇತ್ತೊ ಇಲ್ವೊ ಯಾರೂ ನೋಡಲಿಲ್ಲ. ಕೆಳಗೊಂದು ಮುಚ್ಚಳದ ಬಿದುರು ಪುಟ್ಟೀಲಿ ಒಂದೆರಡು ಲಂಗಸೀರೆ ರವುಕೆ ಸಿವೂನ ಅಂಗಿಚಡ್ಡಿ ಮಡಿಸಿಡಲಾಗಿತ್ತು. ಗೋಡೇಲಿ ಜೋಡಿಸಿದ್ದ ಬೊಂಬಿನ ಮೇಲೊಂದು ಪುಟ್ಟಿ ಆ ಪುಟ್ಟೀಲಿ ಸೇರು ಪಾವು ಇದ್ವು. ಬೊಂಬಿನ ಉಳಿದೆಡೆ ದುಪ್ಟಿ ಹರಿದಿದ್ದ ಹಳೆ ಸೀರೆ ಮತ್ತು ಹೊಸ ಚೀಟಿ ಸೀರೆ ಹಾಗೂ ಪಂಚೆ ಚೊಗ ಮುಂತಾಗಿದ್ದವು. ನೀರಳಗ ತನ್ನ ಸುತ್ತಲೂ ಗಳಾಸು ಚೊಂಬು ಹರೋಣ ತಟ್ಟೆಯ ಓತುಕೊಂಡಿತ್ತು. ಮುಂದೆ ಬಾಗುಲಿಲ್ಲದ ಕೋಣೇಲಿ ಒಂದು ಮಜ್ಜುಗೆ ಕಡೆಯೊ ಕಂಬ ಒಂಟಬಡ್ಕ ಸುಂಟ್ರಗಾಳಿಯಂತೆ ನಿಂತಿತ್ತು. ಮೇಲಿಂದ ಹಗ್ಗಕಟ್ಟಿ ಇಳಿಬಿಟ್ಟಿದ್ದ ನೆಲುನಲ್ಲಿ ಬಟ್ಟೇಲಿ ಬಾಯಿ ಕಟ್ಟುಗೊಂಡು ಎಣ್ಣೆ ಇಲ್ದ ಎಣ್ಣೆ ಗಡ್ಗ, ತುಪ್ಪ ಇಲ್ದ ತುಪ್ಪದ ಗಡ್ಗ ಒಂದರ ಮೇಲೊಂದು ತೂಕಡಿಸುತ್ತಿದ್ದವು. ಆ ನೆಲು ಉದ್ದಕ್ಕು ಅರಸಿನದ ಬಟ್ಟೇಲಿ ಬಾಯಿ ಕಟ್ಟಿದ್ದ ಹರಕೆ ಕಾಸುಗಳು ನೇತಾಡುತ್ತಿದ್ದವು. ಅದರ ಕೆಳಗೇನೆ ಒಂದೆರಡು ದೇವುರ ಪೋಟೋ ಮೊಳೆಗೊಡದಿದ್ದು ಆಗಾಗ್ಗೆ ಊದು ಬತ್ತಿ ಸಿಕ್ಸಿದ್ದ ಗುರ್ತು ನಿಂತಿತ್ತು. ಒಲೆಯ ಕೆಳುಗೆ ಮೇಲೆ ಅಕ್ಕಪಕ್ಕ ಆಮಡುಕು ಗೋಡೆಯ ದೊಡ್ಡ ಮೊಳೇಲಿ ನೂಲೊರಾಟೆಯ ಕತ್ತಿಗೆ ಹಗ್ಗ ಬಿಗುದು ನೇಣಾಕಿತ್ತು, ಕೋಣೆಯಿಂದ ಪೋಲೀಸರು ಕಣ್ಣುಮೇಲು ಮಾಡಿಕೊಂಡು ನಡುಮನೆಗೆ ಬಂದರು. +ಇನ್ನು ನಡುಮನೆಯ ಅಟ್ಲು ನೋಡುವುದು ಉಳುದಿತ್ತು. ಎಲ್ಲವೂ ದಪ್ಪದಪ್ಪವಾಗಿದ್ದ ಮೀಸೆ ಹೊಟ್ಟೆ ಕೈಕಾಲು ಇಟ್ಟುಕೊಂಡಿದ್ದ ಪೀಸಿಯೊಬ್ಬ ನಡುಮನೆ ದಾರಂದಕ್ಕೆ ಕಾಲುಕೊಟ್ಟು ಅಟ್ಲುಗೆ ಹತ್ತಿದನು. ಅಲ್ಲಿ ಇಲಿಪಿಕ್ಕ ಇಲ್ಲಣಗು ಹಳೇ ಚಾಪೆಗಳ ನಡುವೆ ಜಾಯಕಾಯ ಪಟ್ಟಿಯೊಂದಿತ್ತಷ್ಟೆ. ಅದ ಕೆಳಕ್ಕೊಗದು ಪೀಸಿಯು ಹೊಟ್ಟ ಕಲುಸ್ತ ಇಳಿದು ಬೊಸ ಬೊಸ ಉಸುರುಬುಡ್ತ ನಿಂತನು. ಜಾಯಕಾಯ ಪೆಟ್ಟೀಲಿ ನಡೆಯದ ಮತ್ತು ಸವಕಲು ಕಾಸುಗಳು ಚೆಲ್ಲಿಕೊಂಡಿದ್ದವು. ದಫೇದಾರಿ ಪೀಸಿಗಳು ಕೈಚೆಲ್ಲಿ ಇನ್ನೊಂದ್ಸಲ ಕಣ್ಲೆ ಜಪ್ತಿಮಾಡಿ ಹೊರಬಂದರು. ಯಾವ ಜಪ್ತಿಗೂ ಸಿಗದ ಗೋಡೆ ಮೇಲಿನ ನೆಲವುಗಳು ಕುಣಿಯುತ್ತಿದ್ದವು. +ದಫೇದಾರಿ ಪೀಸಿಗಳು ಬಂದು ನಿಂತ ಥರದಲ್ಲೆ ಇನ್ಸ್‌ಪೆಕ್ಟರಿಗೆ ಇಲ್ಲ ಅನ್ನಿಸಿತು. ದಫೇದಾರಿ ಕಂಡದ್ದನ್ನೆಲ್ಲ ಕಣ್ಣಿಂದ ತಗ್ದು ಸಾಹೇಬರ ಮುಂದಿಟ್ಟನು. ಅಟ್ಟಲು ಹತ್ತಿಳಿದಿದ್ದಂಥ ಪೀಸಿ ಮೇಲಕೂ ಕೆಳಕೂ ತಿದಿಯೊತ್ತುತ್ತಿದ್ದನು. ಸಾಹೇಬರು ಕಣ್ಣಿಂದಲೇ ರೇವಣ್ಣನನ್ನು ಸೆಳ್ದುಕೊಂಡರು. ರೇವಣ್ಣ ಬಂದು ನಡುಗುತ್ತಿದ್ದ ತೊಡೆಗಳಿಗೆ ಕಯ್ಯ ಜೋಡಿಸಿಕೊಂಡು ಅಟೆನ್‌ಷನ್‌ನಲ್ಲಿ ನಿಂತನು. +‘ಎಲ್ಲಯ್ಯಾ…?’ +‘ಮಾಸ್ವಾಮಿ ನಮ್ಮ ತಾಯಾಣ್ಗೂ….’ +‘ನಾನು ಖುದ್ದು ನೋಡ್ದೆ…’ +‘ಬೇಕೂಫ ಸರಿಯಾಗಿ ಹೇಳು…’ +‘ಸರಿಯಾಗೆ ನೋಡ್ದೆ ಮಾಸ್ವಾಮಿ…ಇವ್ನು ಒಂದ್ಮೂಟೆ ಹೊತ್ಕೊಂಡು…’ +‘ನೀನೆಲ್ಲಿ ಸಾಯಕ್ ಹೋಗಿದ್ದೆ…?’ +‘ನಾನು ಕಣ್ಮುಚ್ದೆ ಕಾಯ್ಕಂಡೇ ಇದ್ದಿ ಬುದ್ದೀ’ +‘ಮತ್ತೇನಾಯ್ತು ಅದು…’ +‘ಮಾಸ್ವಾಮಿ…’ +‘ಮನೆಯವರೆಲ್ಲ ಸೇರಿ ಒಂದಕ್ಕೆರಡು ಅಂತ ತಿಂದ್ರೂನೂವೆ ಮೂಟೆ ಮುಗಿತದೇನಯ್ಯ…’ +‘ಮಾಸ್ವಾಮಿ…’ +‘ಥೂ…ತೊಲಗು’ +ರೇವಣ್ಣನವರ ಕಡ್ಡಿಕೈಕಾಲುಗಳು ಒಂದಕ್ಕೊಂದು ಬಡ್ದುಕೊಂಡವು. +ಅಷ್ಟೊತ್ತಿಗೆ ಹಾಗೂ ಹೀಗೂ ಹತ್ತಾರು ಜನವೂ ಒಳಬಂದು ಗಪ್‌ಚಿಪ್ ನಿಂತಿದ್ದರು. ಸಾಹುಕಾರರಿಗೂ ಏನೂ ತೋಚದಾಗಿ ಹೊಟ್ಟ ಒಳಗ ಬಿಂಕಿ ಇಟ್ಕೊಂಡ ರಾಕ್ಷಸರು ಈ ಜನ ತಿಂದಿರಲೂ ಬಹುದಾ ಅನ್ನಿಸಿತು. ಇನ್ಸ್‌ಪೆಕ್ಟರು ರೂಲು ದೊಣ್ಣೇಲಿ ಕಾಳಣ್ಣನ ಗಲ್ಲ ಎತ್ತಿ ‘ಈ ಸಲ ಬದುಕ್ದೆ ನನ್ ಮಗ್ನೆ. ನೀನು ಎದ್ಗಳಿಗೆ ಚೆನ್ನಾಗಿತ್ತು. ಇನ್ನೊಂದ್ಸಲ ಏನಾರು ಚೂರು ಸುಳುವು ಸಿಕ್ತೊ. ನಿನ್ನ ಚಮ್ಡ ಸುಲ್ದು ಬುಡ್ತೀನಿ’ ಎಂದು ಹೂಂಕರಿಸಿದರು. +ಆ ಹೂಂಕಾರವು ಚಣುಗದ ಬಳಿ ನೆಲ ತುಳಿಯುತ್ತಿದ್ದ ರೇವಣ್ಣನಿಗೆ ಬಂದು ಗುದ್ದಿತು. ರೇವಣ್ಣ, ದೇಹ ಮನಸು ಆತ್ಮಗಳ ಶಕ್ತಿಯನ್ನೆಲ್ಲ ಸಮ್ಮಿಳನಗೊಳಿಸಿ ಒಂದ್ಸಲ ಆ ನೆಲಕ್ಕೆ ಎರಡೂ ಕಾಲುಗಳಿಂದಲೂ ಗುದ್ದಲು ಅವನ ಭಾರಕ್ಕೊ ಅವನ ಬೂಟುಗಳ ಭಾರಕ್ಕೊ ಅಲ್ಲಿ ಶಬುದದೊಡನೆ ನೆಲ ಕುಸುದು ಹಳ್ಳ ಉಂಟಾಯ್ತು ರೇವಣ್ಣ ‘ಈ ನೆಲ ಯಾಕೊ ಅನುಮಾನ ಮಾಸ್ವಾಮಿ…ಸೌಂಡ್ ಮಾಮೂಲಿ ಇಲ್ಲ’ ಎಂದು ಎರಡೂ ಕೈಲೂ ಹಳ್ಳದ ಮನ್ಣು ತೋಡಲು ಅಲ್ಲಿಂದ ಹಟ್ಟೀಯ ನಾಕಾದಿಕ್ಕೂ ಇಲಿಬಿಲಗಳು ಹೊರುಟಿದ್ದವು. ಒಂದೆರಡು ಇಲಿಗಳು ಹೊರುಕ್ಕೆ ನೆಗುದು ಓಡಾಡಿ ಹೋದುವು. ರೇವಣ್ಣನವರು ಒಂದು ಬಿಲದೊಳಕ್ಕೆ ಕಯ್ಯ ಸಲೀಸಾಗಿ ತುರುಕಿ ಹಿಂದಕ್ಕೆಳೆಯಲು ಅವರ ಕೈಲಿ ಹತ್ತಾರು ಕಡ್ಲೆ ಬೀಜಗಳು ಇದ್ದು ದೈವಸಾಕ್ಷಾತ್ಕಾರವಾದಂತಾಗಿ ‘ಸಿಕ್ತು ಮಾಸ್ವಾಮಿ’ ಎಂದು ಕೈಚಾಚಿ ರೇವಣ್ಣನವರು ಕೂಗಿದರು. ಮಾಸ್ವಾಮಿಗಳು ನೋಡಿ ‘ಅವ್ನೆಲ್ಲ ಗಂಟು ಮೂಟೆ ಕಟ್ಟಿ ಹೊತ್ಗೊ…ನಿನ್ನ ಹೆಂಡ್ತಿಮಕ್ಕಳ್ಗೆ ಕೊಡೊವಂತೆ’ ಅಂದರು ರೇವಣ್ಣನವರ ಕೈಗೆ ನಡುಕ ಬಂದು ಕಡ್ಲೆ ಬೀಜಗಳು ನೆಲ ಕಂಡು ಖುಷಿಗೊಂಡು ರೇವಣ್ಣನವರು ಆ ಇಲಿ ಬಿಲಗಳ ನೋಡ್ತ ಕಣ್ಣು ಗುಡ್ಡೇನ ಆ ಬಿಲದೊಳಕ್ಕೆ ನೆಟ್ಟು ಅಲ್ಲಿಂದ ಕಣ್ಣು ಎತ್ತದೆ ನಿಂತರು. +ಅಟ್ಟಲು ಹತ್ತಿಳಿದಿದ್ದ ಆ ದಪ್ಪಪೀಸಿ ಇನ್ನೂ ನಗರುತ್ತಿದ್ದರು. ಇನ್ಸ್‌ಪೆಕ್ಟರು ‘ಸಾವ್ಕಾರ್ರೇ ಕಳ್ತನ ಹಿಡುಯೋದು ನನ್ಮೇಲೆ ಇರ್ಲಿ’ ಅಂದು, ಕಾಳಣ್ಣನ ಕಣ್ಲೆ ತಿಂದು ಹೊರಡಲು ತಿರುಗಿದರು. ಆಗ ಸಾಕವ್ವ ಸುಮ್ಮನಿರಲಾರದೆ ‘ಮಾಸೋಮ್ಯೊ’ ಅಂದಳು. ಇನ್ಸ್‌ಪೆಕ್ಟರು, ಅವರೊಡನೆ ದಫೇದಾರಿ ಪೀಸಿಗಳು ತಿರುಗಿ ನೋಡಿದರು. +‘ಮಾಸೋಮಿ…’ +‘ಏನ್ ಮುದ್ಕಿ…’ +‘ನನ್ನ ಕೋಳಿವುಂಜ ಮೊನ್ನಜಿನ ಚಂದಗಾಣವಾಗಿ ಹಟ್ಟಿಬುಡ್ತು ನನ್ನೊಡ್ಯ’ +‘ಏನಾಯ್ತು’ +‘ಇನ್ನೂವಿ ಹಟ್ಟಿ ಮುಟ್ಟಿಲ್ಲ ನನ್ನಪ್ಪ’ +ಇನ್ಸ್‌ಪೆಕ್ಟರಿಗೆ ನಗುಬಂತು. +‘ಹುಂಜ ಯಾವ ರೀತಿ ಇತ್ತು ಮುದ್ಕಿ…’ +‘ತಾಳಿ ನನ್ನಪ್ಪ…’ +ಸಾಕವ್ವ ಎದ್ದು ಕೋಲನ್ನೂ ಮರತು ಕಲ್ಲಲ್ಲೆ ನಡುದು ಪಂಜರ ಎತ್ತಿದಳು. ಕೊಕ್ಕರಿತಿದ್ದ ಹುಂಜ, ಕೋಳಿ, ಮರಿಗಳು ನೆಗೆಯುತ್ತ ನೆಗೆಯುತ, ಹೊರಬಂದ್ವು. ಸಾಕವ್ವ ಒಂದು ದಪ್ಪನೆ ಹುಂಜನ ತೋರಿಸಿ ಅಂದಳು : +‘ಅದೂನು ಇದ್ರ ಜೊತೇದೆ ಬುದ್ದಿ…’ +‘ಭೇಷ್ ಚೆನ್ನಾಗದೆ ಮುದ್ಕಿ ಈ ಹುಂಜ ಹಿಡ್ಕೊಡು….ಇದನ್ನ ಅದ ಹುಡುಕ್ಕೊಂಡು ಬರಾಕೆ ಕಳಿಸ್ತೀನಿ’ +‘ಅಷ್ಟು ಮಾಡಿ ನನ್ನಪ್ಪ…ನನ್ನ ಹೊಟ್ಟ ಕಟ್ಕೊಂಡು ಅದ ಸಾಕಿದ್ದಿ ನನ್ನೊಡ್ಯ…’ +ನಗು ಅನ್ನೋದು ಅಲ್ಲಿಂದ ಎದ್ದು ಬಿದ್ದೂ ನಗಾಡತೊಡಗಿತು. +ಅದು ಸಾಕವ್ವನಿಗೆ ನಿಧಾನವಾಗಿ ಅರುವಾಯ್ತು. ಆ ಮೇಲ ಅವುಳು ಅಯ್ಯೊ ಅಯ್ಯೋ ಅಂದುಕೊಂಡದ್ದು ಯಾರ್‍ಗೂ ಕೇಳಿಸಲಿಲ್ಲ. ಕಾಳಣ್ಣ ಕುಂತವ್ನು ಎದ್ದು ಸಣ್ಣಯ್ಯ ನಿಂತವ್ನು ನಡ್ದು ಆ ಹುಂಜನ ಹಿಡಿಯಲು ತೊಡುಗಲು ಅವುರೊಟ್ಟಿಗೆ ಉಳುದವರೂ ಕೂಡಿಕೊಂಡರು. ಸಾಹುಕಾರರು ಒಂದು ರೂಪಾಯ ನೋಟ ತಗುದು ಮಡುಚಿ ಸಾಕವ್ವನಿಗೆ ‘ತಗೋ ಮುದ್ಕಿ…ಎಲೆ ಅಡುಕೇಗೆ ಅಂದರು. ಸಾಕವ್ವ ಅಯ್ಯೋ…ಬ್ಯಾಡಿ ಸ್ವಾಮಿ, ಅಯ್ಯೋ..ಬ್ಯಾಡಿ ನನ್ನಪ್ಪ’ ಅನ್ನುತ್ತ ಈಸಿಕೊಂಡಳು. ಇತ್ತ ಆ ಹುಂಜನ ಹಿಡಿಯಲು ಒಂದು ಗುಂಪೇ ಆಗಿ, ಆ ಹುಂಜ ನಡುದರೆ ಈ ಗುಂಪೂ ನಡೀತ ಆಹುಂಜ ನೆಗುದರೆ ಈ ಗುಂಪೂ ನೆಗೀತ ಹಟ್ಟಿ ತುಂಬಾ ನೆಗುದಾಡಿ ಕುಣಿದಾಡಿ ಕೊನೆಗೆ ಹುಂಜ ಸಿಕ್ಕಿತು. ಹುಂಜನ ಕಾಲುಗೆ ಹಗ್ಗಬಿದ್ದು ಅದು ಜೀಪಿಗೆ ಬಿತ್ತು. ಆ ಜೀಪು ಧೂಳೆಬ್ಬಿಸುತ್ತ ಬರ್ರೋ ಅಂತು. ಜೀಪು ಬುಟ್ಟೋದ ಧೂಳು ಬೀದಿ ಒಳಗೆ ಆಡುತ್ತಿತ್ತು. +***** +ಕೀಲಿಕರಣ: ಅಧ್ಯಾಯ ೧ ರಿಂದ ೫: ಶಿವಕುಮಾರ್ ಜಿ ವಿ, ಅಧ್ಯಾಯ ೬ ರಿಂದ ೯: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಒಂದೆರಡು ಮಾತುಗಳು ‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ […] +[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […] +ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_442.txt b/Kannada Sahitya/article_442.txt new file mode 100644 index 0000000000000000000000000000000000000000..b0097a313c363c88c6e1339efc7a5914d536eeee --- /dev/null +++ b/Kannada Sahitya/article_442.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಿರಿಯರ ಹಿರಿತನ +ಅರಿವಾಗುವುದು +ಹಿರಿಯರಾಗಿ +ನಡೆದುಕೊಳ್ಳುವುದರಲ್ಲಿ +ಮಾತ್ರವಲ್ಲ +ಹೆರರನ್ನೂ +ಹಿರಿಯರಾಗಿ +ನಡೆಸಿಕೊಳ್ಳುವುದರಲ್ಲಿ. +***** +ನಿಮ್ಮ ಬಿಡುವಿನ ವೇಳೆಯಲ್ಲಿ ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ. ಇದರಿಂದ ಹೆಚ್ಚು ಕನ್ನಡ ಬರಹಗಳು ಡಿಜಿಟಲೈಸ್ ಆಗುತ್ತವೆ. ವಿವರಗಳಿಗೆ ಸಂಪರ್‍ಕಿಸಿ: kannadasahithya1 at gmail.com 9441063342 +ಮಾತು ಬಲವರೆಲ್ಲ ಮೇಧಾವಿ ಗಳಲ್ಲ; ಮೌನ ತಳೆದವರೆಲ್ಲ ಮೂದೇವಿ ಗಳಲ್ಲ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_443.txt b/Kannada Sahitya/article_443.txt new file mode 100644 index 0000000000000000000000000000000000000000..1271e69af97c829dd293a7adf74eba77d02b5406 --- /dev/null +++ b/Kannada Sahitya/article_443.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು +ಮುದ್ದೆಯಾಗಿದೆ ಜೀವ ನೋವನುಂಡು; +ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ +ಬೇಳುವೆನೊ-ಏನೊಂದನರಿಯೆ ನಾನು. +ಬಾಂದಳದ ಪೆಂಪಿನಲಿ ಕಂಡ ನೀನು; +‘ಉದಯವಾಯಿತು’ ಎಂದುಕೊಂಡೆ ನಾನು. +ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ ಹಿಡಿದು +ಉಣ್ಣೆ ಮುಗಿಲಿಗೆ ಹೊನ್ನ ಬಣ್ಣವೆರಚಿ, +ಅಳಿದ ಆಶಾಂಕುರಕೆ ಒಲವಿನಂಜಲಿಯೆರೆದು +ದಯಮಾಡು, ಓ ಬೆಳಕೆ ! ದಿಕ್ಕು-ಸೂಚಿ; +ಬಂದುಬಿಡು, ಎದೆಯ ಕದ ತೆರೆದಿರುವೆನು +ಮೈಯೆಲ್ಲ ನವಿರೆದ್ದು ನಿಂತಿರುವೆನು. +ನಸುಕಿನಲಿ ಮೂಡಣದ ನೆಲಬಾನಿನಂಚು – ತುಟಿ +ಚುಂಬಿಸಿಹ ಬಿಂಬಿಸಿಹ ಚೆಲ್ವ ಬೆಳಕೆ, +ಅಚ್ಚ ನೀಲಿಯ ಬಾನ ಕೆನ್ನೆಯಲ್ಲಿ ರಾಜಿಸಿಹ +ಚೆಂಬೆಳಕೆ ಬಾ ಬಾರ ಬೆಂಬಲಕ್ಕೆ- +ಕಣ್ಣ ಕೋರಯಿಸಿರುವ ದಿವ್ಯ ಬೆಳಕೆ +ಹಾರಯಿಸಿ ಹಾರಯಿಸಿ ಕಂಡ ಬೆಳಕ. +ಮಗುವಿನೆಳನಗೆಯಲ್ಲಿ, ಮುಗುದೆಯರ ಕಣ್ಣಿನಲಿ +ಮಾಮಹಿಮರೆಂಬುವರ ಮುಖಬಿಂಬದಿ, +ಒಲಿದ ಎದೆಯೊಲವಿನಲಿ, ಚಿಕ್ಕೆಗಳ ಮಿನುಗಿನಲಿ +ಹುಣ್ಣಿಮೆಯ ಚಂದಿರನ ಮಧುಹಾಸದಿ- +ನಿನ್ನ ಆನಂದವನೆ ತೇಲಿಸಿರುವೆ, +ನಿನ್ನಮಿತ ಕಾಂತಿಯನೆ ಕೀಲಿಸಿರುವೆ. +ಬಾಳಜಾಜಿಯ ಬಳ್ಳಿ ಕುಡಿಚಾಚಿ ಹಂದರವ +ಬಳಸಿ ಮೇಲೇರುತಿದೆ ಸೊಗವ ಬಯಸಿ; +ಮೊಗ್ಗೆ ಕೈಮುಗಿದಿಹವು, ಹೂವರಳಿ ನಗುತಿಹವು +ಮೆಲ್ಲೆಲರ ಮೈಗೆ ನರುಗಂಪ ಪೂಸಿ. +ಏನಿದೇನಿದು ಹೂವು ಜಗುಳಿತೇಕೆ? +ಹೂವ ಹುಳು ಕೊರೆಯುತಿರೆ ಬಾಳಲೇಕೆ? +ಇಂತಿಂತು ಮಂಪರದಿ ತಲ್ಲಣಿಸುತಿರೆ ಮನವು +ತಾನೆ ತನ್ನಳವಿನಲಿ ಮುದುಡಿ ಕೂತು, +ಚಂಚಲದ ಮಂಚದಲಿ ಕುಳಿತಿರುವ ಚಿತ್ತವಿದು +ಗಾಳಿಯಲಿ ಹರಿಬಿಟ್ಟ ಊರ್ಣ ತಂತು- +ಚಿತ್ತದಲಿ ಮೊಳೆಸು ನೀ ಸ್ವ-ತ್ವ ಬೀಜ, +ಮತ್ತೆ ಹೊರಹೊಮ್ಮುವುದು ಸುಪ್ತ ತೇಜ. +ಎಣ್ಣೆ ತೀರಿದ ಮೇಲೆ ಆರಿ ಹೋಗುವ ದೀಪ +ಕಣ್ಣ ಮಿಟುಕಿಸುವಾಟ ಹೊಲ್ಲ ಸಾಕು; +ಯುಗಯುಗಾಂತ್ಯದ ವರೆಗೆ ಜಗವ ಬೆಳಗಿಸಬಲ್ಲ +ಎಲೆ ಚಿರಂತನ ಬೆಳಕೆ! ನೀನೆ ಬೇಕು. +ತಿಮಿರ ದೋಷಗಳೆಲ್ಲ ಹಿಂದಾಗಲಿ +ನಿನ್ನ ಭವ್ಯತೆಯರಿವು ಇಂದಾಗಲಿ. +ಹೃದಯದಲಿ ಝಗಝಗಿಸಿ, ಕಿಲ್ಮಷವ ಸುಟ್ಟುರಿಸಿ +ಬದುಕ ಸಿಂಗರಿಸ ಬಾ ನಿಜದ ಬೆಳಕೆ, +ಮನ್ಮನೋಮಂದಿರಕೆ ಓ ಪರಾತ್ಪರ ಬೆಳಕೆ +ತುಂಬಿ ಬಾ ಸಚ್ಚಿದಾನಂದ ಬೆಳಕೆ- +ಕಣ್ಣಿದ್ದು ಕಾಣದಿಹ ಜೀವ ಪಥಕೆ +ಅವತರಿಸು ಸರ್ವ ಮಂಗಳದ ಬೆಳಕೆ. +***** +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […] +– ಎಡ್ವಿನ್ ಮುಯಿರ್ ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ ಏಳು ದಿನಗಳ ಯುದ್ಧ ಕೊನೆಯಾಗಿ ಇನ್ನೇನು ಒಂದುವರ್ಷ ಕಳೆಯುವುದರ ಒಳಗೆ ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ ಹೊತ್ತಿನಲ್ಲಿ ಬಂದೇಬಿಟ್ಟವು ಅವು ಅಪರೂಪದ ಕುದುರೆಗಳು ಅಷ್ಟರಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_444.txt b/Kannada Sahitya/article_444.txt new file mode 100644 index 0000000000000000000000000000000000000000..1c92f9f63e1afc492993e3c01e1e13789e8cf1f6 --- /dev/null +++ b/Kannada Sahitya/article_444.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತರಗೆಲೆಯನೂ ಬೀಳಿಸದಿಹ +ಮೇ ತಿಂಗಳ ಮುದಿಯ ಗಾಳಿ +ಏದಿರುವುದು ತರಗು ಪೇಟೆ +ಕೂಲಿಯಾಳ ಒಡಲ ಹೋಲಿ. +***** +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_445.txt b/Kannada Sahitya/article_445.txt new file mode 100644 index 0000000000000000000000000000000000000000..394428618821d1260847efa2ee9cc56e98d45ca5 --- /dev/null +++ b/Kannada Sahitya/article_445.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ ಹಾಗೆ ಎತ್ತಲೋ ನೋಡಿದಂತೆಲ್ಲ ಆತ ಅವಳ ದೃಷ್ಟಿಯನ್ನು ಅರಸ ತೊಡಗಿದ. +ಮಳೆ ಸುರಿಯುತ್ತಿತ್ತು. ಆತ ಮಾತಾಡುತ್ತಿದ್ದ. ಆಕೆ ಮಳೆಯನ್ನು ಸಂಗೀತವೆಂಬಂತೆ ಆಲಿಸುತ್ತಿದ್ದಳು. ನಡುನಡುವೆ ಆತ “ನಾನು ಹೇಳಿದ್ದು ಕೇಳಿಸಿತ?” ಎಂದರೆ ಹೂಂ ಎಂದಳು. ಪುಣ್ಯಕ್ಕೆ “ಹಾಗಾದರೆ ಏನು ಹೇಳಿದ್ದು ನಾನೀಗ?” ಎಂದು ಆತ ಕೇಳಲಿಲ್ಲ. ಕೇಳಿದ್ದರೆ ಆತನಿಗೆ ಒಂದು ಬರಿಯ ಮುಗುಳುನಗೆ, ಕೃತಕಹೂವಿನ ಪಕಳೆಯಂತಹ ನಗೆ, ಸಿಗುತ್ತಿತ್ತೇನೋ. +ಸಮಯ ಕಳೆಯುತ್ತಿತ್ತು. ಆತ “ಇಲ್ಲೇ ದೇವಸ್ಥಾನಕ್ಕೆ ಹೋಗಿಬರುವನ?” ಎಂದ. ಆಟೋ ಬಂತು. ಅವರನ್ನು ಹತ್ತಿಸಿಕೊಂಡು ಹೊರಟಿತು. ಪಕ್ಕದಲ್ಲೇ ಕುಳಿತುಕೊಂಡ ಆತ ಹತ್ತಿರ ಸರಿದ ಆಂತನಿಸಿ ಅಕೆ ತನ್ನ ಬದಿಗೆ ಇನ್ನಷ್ಟು ಒತ್ತರಿಸಿದಳು. ಹೆಚ್ಚು ದೂರ ಸರಿಯಲು ಅದೇನು ಬೆಂಚ್ ಅಲ್ಲವಲ್ಲ. ಅದು ಬೆಂಚಲ್ಲವಾದರೂ, ಆಕೆ ಸರಿದ ರೀತಿಗೆ, ಆತನಿಗೆ ಮತ್ತಷ್ಟು ಹತ್ತಿರ ಬರಲು ಧೈರ್ಯವಾಗಲಿಲ್ಲ. +ಮಾತಿನ ಪ್ರಕೃತಿ ಎಷ್ಟೋ ಸಲ ವಿಚಿತ್ರವೆನಿಸುತ್ತದೆ. ಅದು ಮಾತಾಡದೆ ಕುಳಿತವರೆದುರು ತನ್ನ ಗಾಡಿಯನ್ನು ಒಮೊಮ್ಮೆ ಜೋರಾಗಿ ಓಡಿಸುತ್ತದೆ. ಎದುರಿಗಿರುವ ಮೌನವನ್ನು ತನಗೆ ಕಂಡಂತೆ ಅರ್ಥಮಾಡಿಕೊಳ್ಳುತ್ತ. ಇಲ್ಲಿ ಆಕೆಯ ಮೌನವನ್ನು ಅವಳ ಸಂಕೋಚ ಪ್ರವೃತ್ತಿ ಎಂದುಕೊಂಡನಾತ. ಆ ಸಂಕೋಚವನ್ನು ಓಡಿಸಬೇಕೆಂದು ಛಲ ತೊಟ್ಟಂತೆ ಮತ್ತಷ್ಟು ಮಾತಾಡತೊಡಗಿದ. ತನ್ನ ಹೆಂಡತಿ, ಪ್ರಿಯತಮೆಯರ ಕುರಿತು ಹೇಳತೊಡಗಿದ. ಒಬ್ಬಳ ನೀಳಮೂಗಿನ ಆಕರ್ಷಣೆ, ಮತ್ತೊಬ್ಬಳ ನಡೆ, ಇನ್ನೊಬ್ಬಳ ಸುಂದರ ಧಿಮಾಕು ಮತ್ತು ಏನೆಂದೇ ಗುರುತಿಸಲಾಗದ….. ಈ ಈಕೆ. +ಮಾತಿನೆದುರು ಮಳೆ ದಿಟ್ಟಿಸುತ್ತ ಕುಳಿತ ಅವಳು. ಖಾಲಿ ಮಳೆ ಸುರಿಯುತ್ತಿತ್ತು. ಅವಳ ಕಿವಿಯಲ್ಲಿ ಗುಂಜಾರವ ತುಂಬಿತ್ತು. ಆಕೆ ಸಂಪೂರ್ಣ ಧ್ಯಾನಸ್ಥಳಂತೆ ಕುಳಿತಿದ್ದಳು. “ಕೇಳಿದೆಯ? ನಾನೇನೆಂದೆ ಕೇಳಿಸುತ್ತದೆಯೆ?” – ಆತ ಅವಳ ಕಿವಿಯತ್ತ ಬಗ್ಗಿ ಆಟೋ ಸದ್ದನ್ನು ಸೀಳಿದಂತೆ ಕೇಳಿದ. ಆತನಿಗೆ ಅವಳು ಉತ್ತರಿಸಬೇಕಿರಲಿಲ್ಲ. ಹೇಗೂ ತನ್ನದು ಎಚ್ಚರಗೊಂಡ ಮನಸ್ಸು ಎಂದು ತಿಳಿದುಕೊಂಡವನಾತ. ಹುಡುಗಿಯರಿಂದ ಹುಡುಗಿಯರಿಗೆ ಹಾರಿಯೂ ಒಂದೆಡೆ ನೆಲೆಗೊಳ್ಳದ ಮನಸ್ಸು. ಒಂದೆಡೆ ನೆಲೆಗೊಂಡರೂ ಬಿಟ್ಟು ಹಾರುವ ಮನಸ್ಸು. ಸತ್ಯಗಳೆಂದರೆ ಇವೇ, ಮತ್ತು ಇವನ್ನೆಲ್ಲ ತಾನು ಸಾಕ್ಷಾತ್ಕರಿಸಿಕೊಂಡಿರುವಂತೆ ಮಾತಾಡುತ್ತಿದ್ದ. +ಒಂದೇ ನದಿಗಾಗಿ ಸಮುದ್ರ ಎಂದೂ ಮೊರೆಯುವುದಿಲ್ಲ. ಸೇರಬಯಸುವ ನದಿಗಳೆಲ್ಲ ಬರಲಿ, ಸೇರಲಿ. ಸಮುದ್ರದ ಗುಣ ಪುರುಷಗುಣ. (ಸಮುದ್ರವೇ ತಾನು, ತಾನೇ ಸಮುದ್ರ ಎಂಬಂತೆ) ಮುಂತಾಗಿ ನುಡಿಯುತ್ತ ನದಿಗಳನ್ನೆಲ್ಲ ಹೆಂಗಸರಿಗೆ ಪರೋಕ್ಷವಾಗಿ ಹೋಲಿಸುತ್ತ ಸಮುದ್ರ ನದಿ ಕಲ್ಪನೆಗಳನ್ನೆಲ್ಲ ಎಲ್ಲೆಂದರಲ್ಲಿ ಎಳೆದು ತನ್ನ ಥಿಯೆರಿಗಳಿಗೆ ಆಧಾರಕೊಡಲು ಹೊರಟ. ಆತನ ಮಾತುಗಳನ್ನು ಕೇಳುತ್ತಿದ್ದರೆ ಸಮುದ್ರ ಎಂದೂ ಹೆಣ್ಣಾಗಿರಲು ಸಾಧ್ಯವೇ ಇಲ್ಲ; ಗಂಡು, ನದಿಯಾಗುವುದೂ ಸಾಧ್ಯವಿಲ್ಲ. ಅಷ್ಟೇ ಅಲ್ಲ, ನದಿಯಾಗಿರುವುದು ಸಮುದ್ರ ಆಗಿರುವುದಕ್ಕಿಂತ ಯಾವತ್ತೂ ಕಡಿಯೆಯೇ ಅಂತನಿಸಬೇಕು ಹಾಗೆ. +ಹುಸಿ, ನಿಜ, ಭ್ರಮೆ ಎಲ್ಲವನ್ನೂ ಕಲೆಸಿ ಮಾತಾಡುವವರೆದುರು ಸತ್ಯ ನಿಷ್ಠರರತೆಯನ್ನು ಧಡಕ್ಕನೆ ಎಸೆದು ತಬ್ಬಿಬ್ಬುಗೊಳಿಸಲು, ಕನಿಕರದಿಂದ, ಮನಸ್ಸು ಬರುವುದಿಲ್ಲ. “ನಾನು ನಿಮ್ಮೊಂದಿಗೆ ಬರಲಾರೆ” – ಎಂಬಂತಹ ಕಾಣಲು ಸಣ್ಣದಿರುವ, ಸತ್ಯವನ್ನೂ! ಈತನೋ ತಾನೆಂದರೆ ವಾಸ್ತವದ ಬದುಕಿನ ತಿರುಳಿಗೇ ಕೈಹಾಕಿದವ. ಸತ್ಯ ಕಂಡವ. ಆದರೂ ಸುಳ್ಳುಗಳನ್ನು ಬಿಡಲಾರದವ. ಮುಕ್ತಮನದವ. ಜಗತ್ತೆಲ್ಲ ಹೀಗೆಯೇ ತನ್ನಂತೆಯೇ. ಆದರೆ ತನ್ನಂತಾಗಲು ಧೈರ್ಯ ಸಾಲದೆ ಇರುವವರಿಂದ ತುಂಬಿಕೊಂಡಿದೆ ಮುಂತಾಗಿ ಅರಳು ಹುರಿದಂತೆ ಒಂದೇಸವನೆ ಹೇಳುತ್ತಲೇ ಇದ್ದ. +ಇವನೆದುರು, ಆಹ! ಮಳೆ! ಏಕಾಂಗವೀರನಂತೆ. ಮೌನವಾಗಿ ಸುರಿಯುತ್ತ ಮೌನವಣಕಿಸುವ ಮಳೆ. ಅವನ ಮಾತುಗಳಿಗೆ ಅಡ್ಡ ಹಾಕಿದ ನೀಲಮಣಿಗಳ ಪರದೆಯಂತೆ ಪಿಳಿಗುಡುತ್ತ ಇಳಿಯುವ ಮಳೆ. ಅದರಾಚೆ ಇಣುಕುವ ಯಕ್ಷಲೋಕದ ಶ್ಯಾಮಲತೆ. ಮಂದಕಿರಣಗಳ ಕಿರೀಟದ ಮುಖವೆಲ್ಲಿ? ಕಣ್ಣೆಲ್ಲಿ?… ಏನೂ ಬಯಲುಗೊಳಿಸದ ಮಸುಕುಕವಿಸಿದ ಮಳೆ. +ದೇವಸ್ಥಾನ ಬಂತು. ಬೇಡ, ಮುಂದೆ ಹೋಗುವ ಎಂದ. ಸಿನೆಮಾ ಟಾಕೀಸು ಬಂತು. ಬೇಡ ಮುಂದೆ ಹೋಗಲಿ ಎಂದ. ಪಾರ್ಕು ರೆಸ್ಟುರಾ ಬಂತು. ಬೇಡ ಅಲ್ಲವೆ? ಹೋಗಲಿ ಮುಂದೆ ಅಂದ. ಆಟೋ ಓಡಿತು. ಅವನ ಮಾತಿನ ಗಾಡಿಯಂತೆಯೇ. ಹೀಗೆಯೇ ಇದು ಓಡುತ್ತಿರಬೇಕು. ಎಲ್ಲಿಯೂ ನಿಲ್ಲದೆ ಅಲ್ಲವೆ? – ಎಂದು ಕೇಳಿದ. ಈ ಮಾತನ್ನು ತಾನು ಇದೇ ಪ್ರಥಮಸಲ ಕೇಳುತ್ತಿದ್ದೇನೋ ಎಂದು ತನಗೇ ಅನಿಸುವಂತಹ ಹಸಕು ದನಿಯಲ್ಲಿ. ಆಕೆ ಕಣ್ಣು ತೆಗೆಯದೆ ಮಳೆ ನೋಡುತ್ತಿದ್ದಳು. ಉತ್ತರಿಸಲಿಲ್ಲ. ಬಿಸಿಲಿರದಿದ್ದರೂ ಬೆಳಕಿತ್ತು. ಆಕಾಶದಲ್ಲಿ ಸೂರ್ಯಚಂದ್ರರು ಇದ್ದರೂ ಇರಲಿಲ್ಲ. ಇರುವುದೆಲ್ಲ ಘನಶ್ಯಾಮಸುಂದರ ಮೇಘಗಳು. ಪದ ಜೋಡಿಸಿ ರಾಗ ಕಟ್ಟುವ ದಟ್ಟ ಮೇಘಗಳು. +ಆಟೋ ಓಡುತ್ತಿತ್ತು. ಇನ್ನು ವಾಪಾಸು ಬರಲಿಕ್ಕೇ ಇಲ್ಲವೆಂಬಂತಹ ನಂಬಿಕೆಯ ಮೂಳೆಯನ್ನು ಕಚ್ಚಿಕೊಂಡು ಓಡುವಂತೆ. +ಇಲ್ಲಿ ಇಳಿಯುವನ? ಆತ ಕೇಳಿದ. ನೋಡಿದರೆ ಎದುರು ಪ್ರವಾಸಿ ಬಂಗಲೆ ಇತ್ತು. ಮೊತ್ತಮೊದಲಿಗೆ ಎಂಬಂತೆ ಆಕೆ ಅವನನ್ನು ನೋಡಿದಳು. ಕೆಳಗಿಳಿದಳು. ಹಸಿರೇ ಹಸಿರಿನ ನಡುವೆ ನಡುವೆ ನಿಂತ ಸುಂದರ ಬಂಗಲೆ. ಏನೆಲ್ಲಾ ಕಣ್ಣಾಮುಚ್ಚಾಲೆ ಆಟಗಳು ಕತೆಗಳು ಗೊತ್ತಿದ್ದೂ ಹೇಳಲಾರದೆ ಹೊಟ್ಟೆಪಾಡಿಗೆ ಸುಮ್ಮನಿರುವ ಪ್ರಾಮಾಣಿಕ ಸರಕಾರಿ ನೌಕರನಂತೆ ಬಿಮ್ಮಗೆ ನಿಂತಿತ್ತು. ….ಅಲ್ಲಿಂದ ಹೊರಗೊಂದು ಖಾಲಿ ಆಟೋ ಬರುವುದು ಅವಳಿಗೆ ಕಾಣಿಸಿತು. +ಆಟೋಕ್ಕೆ ದುಡ್ಡು ಕೊಟ್ಟು ಆತ ಇತ್ತ ತಿರುಗಿದರೆ +ಆಕೆ ಮಾಯವಾಗಿದ್ದಳು! +* * * * +ರಾತ್ರಿ ಪತಿಯೊಂದಿಗೆ ಮಳೆಯ ಅಂತರಂಗದ ಕುರಿತು ತೇವಭಾರದ ದನಿಯಲ್ಲಿ ತರ್ಕಿಸುತ್ತ ಏನೂ ಸ್ಪಷ್ಟವಾಗದ ಸುಖದಲ್ಲಿ ನರಳಿದಳು ಅವಳು. ಆಕೆಯ ತರ್ಕದುದ್ದಕ್ಕೂ ಆ ಆತನ ನೆರಳು ಕೂಡ ಇರಲಿಲ್ಲ. ಬದಲು ಅಷ್ಟು ಸುರಿದೂ ಸೆಖೆ ತಣಿಸಲಾರದೆ ಸೋತು ನಗುನಗುತ ನಿಂತು ತಂಪುಣಿಸುವ ಮಳೆಯ ಕುರಿತೇ ಎಲ್ಲ. ಈ ನಿಗೂಢವನ್ನು ಒಳಬಗೆದು ಹೇಳಲು ತಾನಂತೂ ಅಸಮರ್ಥನೆಂದ ಪತಿಯನ್ನು ಪ್ರೀತಿಯಿಂದ ತಬ್ಬಿಕೊಂಡು ಮಲಗಿದಳಾಕೆ; ಮೋಡಗಳಾಚೆಯ ಶ್ಯಾಮಲಲೋಕದಲ್ಲಿನ ಕಂಡೂಕಾಣದ ಕೇಳಿಯೂ ಕೇಳದ ಗುರುತಿಸಿಯೂ ಗುರುತಿಸಲಾಗದ ಕಣ್ಣು ನಗೆ ದನಿಯನ್ನು ಅರಸುವ ಕನಸಿನ ಮಾರ್ದವತೆಯನ್ನು ಉಳಿಸಿಕೊಂಡೇ ಬದುಕುವ ಸಿದ್ಧತೆಯಂತೆ. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_446.txt b/Kannada Sahitya/article_446.txt new file mode 100644 index 0000000000000000000000000000000000000000..772ec0d3d6cb3e516788d8fe06b2550e9b5cac2e --- /dev/null +++ b/Kannada Sahitya/article_446.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಂಗಳೂರಲ್ಲಿ ಮನೆ ಕಟ್ಟಿಸಿದೆ; ಫೋನ್ ಹಾಕಿಸಿದೆ; ಎರಡು ಮಕ್ಕಳನ್ನೂ ಒಳ್ಳೆ ಸ್ಕೂಲಿಗೆ ಸೇರಿಸಿದೆ. ಇವುಗಳಿಂದಾಗಿ ಸಿಕ್ಕಿಬಿದ್ದಿರುವ ನಾನು ಸಿಟ್ಟು ಬಂದಾಗೆಲ್ಲ ‘ಹೋಗಯ್ಯ’ ಎಂದು ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಪ್ಪನಂತೆ ಬದುಕಲಾರೆ. ನಾನು ಕೆಲಸಕ್ಕೆ ಸೇರುವ ತನಕ ಅಮ್ಮ ರೇಷ್ಮೆಸೀರೆ ಕಂಡಿರದದ್ದಕ್ಕೆ, ನಾವು ಅರ್ಧ ಹೊಟ್ಟೆಯಲ್ಲೆ ಬೆಳೆದದ್ದಕ್ಕೆ, ವಯಸ್ಸಾದಾಗ ಅಪ್ಪ ನಮ್ಮ ಗೌರವ ಕಳೆದುಕೊಂಡದ್ದಕ್ಕೆ, ಅಪ್ಪನ ಈ ಸ್ವಾತಂತ್ರ್ಯಪ್ರಿಯತೆ, ಹಠಮಾರಿತನಗಳೂ ಬಹು ಮುಖ್ಯ ಕಾರಣ. ನೋಡಲು ಅಪ್ಪನಂತಿದ್ದರೂ ಸ್ವಭಾವದಲ್ಲಿ ನಾನು ಬೇರೆ. ಆದರೂ ಹೆಂಡತಿಯ ಜೊತೆ ಜಗಳವಾಡುವುದಕ್ಕೆ ಮುಂಚೆ ಅಪ್ಪನ ಅವಗುಣಗಳನ್ನು ಮರೆತು ಬೇಕೆಂದೇ ಅವರ ಸ್ವಾಭಿಮಾನವನ್ನು ಹೊಗಳುತ್ತೇನೆ. ಅರ್ಥಾತ್ ನಿನ್ನಿಂದಾಗಿ ನನ್ನಲ್ಲಿ ಅಪ್ಪನ ಈ ಗುಣ ಇಲ್ಲದಂತಾಯ್ತು ಎನ್ನೋದನ್ನ ಪರೋಕ್ಷವಾಗಿ ಅವಳಿಗೆ ಮನದಟ್ಟು ಮಾಡುತ್ತೇನೆ. ಎಲ್ಲ ಸೌಕರ್ಯಗಳನ್ನೂ ಮಕ್ಕಳಿಗಾಗಿ, ಹೆಂಡತಿಗಾಗಿ ಸಂಪಾದಿಸಲು ಮಾಡಬೇಕಾದ್ದನ್ನೆಲ್ಲ ಮಾಡಿ, ಕೊನೆಯಲ್ಲಿ ಹೆಂಡತಿಯನ್ನೆ ದೂರಿ, ನೀನು ಮೆಚ್ಚುವ ಈ ಸಾಮಾಜಿಕ ಪ್ರತಿಷ್ಠೆ ಕಸದ ಸಮ ಎಂದು ಅಟ್ಟಹಾಸದಿಂದ ಕೂಗಾಡಿ ನನ್ನ ಆತ್ಮಕ್ಕಷ್ಟು ಬೆಚ್ಚಗೆ ಶಾಖ ಕೊಟ್ಟುಕೊಳ್ಳುತ್ತೇನೆ. +ಆದರೆ ನಾನು ಎಂಥ ದುರ್ಬಲ ಮನುಷ್ಯನೆಂದರೆ ಹೆಂಡತಿಗೆ ಹೀಗೆ ನನ್ನನ್ನು ರೂಪಿಸಲು ಪ್ರೇರಣೆ ಕೊಡುವವನೂ ನಾನೇ. ಮದುವೆಯಾಗುವಾಗ ತೆಳ್ಳಗೆ ಉದ್ದಗೆ ಕಾಣುತ್ತಿದ್ದ ಅವಳಿಗೆ ಈ ಎಲ್ಲ ಆಸೆಯಿರಲಿಲ್ಲ: ಯಾವ ಹೆಣ್ಣಿಗೂ ಇರಲ್ಲ. ಪ್ರಾಯಶಃ ಅವಳು ನನ್ನನ್ನು ಉಪಯೋಗಿಸಿಕೊಂಡಳು ಎನ್ನುವುದಕ್ಕಿಂತ ಹೆಚ್ಚಿನ ಸತ್ಯ ನಾನೇ ಅವಳನ್ನು ಹೀಗೆಲ್ಲ ನನ್ನಿಂದ ಮಾಡಿಸಿಕೊಳ್ಳುತ್ತ ಹೋದೆ ಎಂಬುದೇ ಯಾಕಿರಬಾರದು? ಮನುಷ್ಯನ ಮನಸ್ಸಿಗಿರುವ ದ್ರೋಹದ ಸಾಧ್ಯತೆ ಆಗಾಧವಾದ್ದು. +ಇವೆಲ್ಲ ನನಗೆ ಗೊತ್ತಾಗುತ್ತೆ. ಗೊತ್ತಾದರೂ ಇರುವಂತೆಯೇ ಇರುತ್ತೇನೇ ಹೊರತು ಬದಲಾಗಲ್ಲ. ಯಾರೂ ಬರಿಯ ತಿಳುವಳಿಕೇಂದ ಬದಲಾಗಲ್ಲ. +ನಾನು ಬಾಲಕನಾಗಿದ್ದಾಗ ಪರಿಶುದ್ಧನಾಗಿದ್ದೆ ಎಂದು ಕೆಲವೊಮ್ಮೆ ಅಂದುಕೊಳ್ಳುತ್ತೇನಲ್ಲ ಅದು ನಿಜವೋ ಸುಳ್ಳೋ ನನಗೆ ತಿಳಿಯುವ ಆಸೆ. ನನ್ನ ಹೆಂಡತಿ ಜೊತೆ ಇವನ್ನೆಲ್ಲ ಚರ್ಚಿಸಲಾರೆ. ನಾನು ದುಂದು ಖರ್ಚು ಮಾಡದಂತೆ, ನಿತ್ಯ ಕುಡಿಯದಂತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳೋದರಲ್ಲೆ ಅವಳ ಶಕ್ತಿ ವ್ಯಯವಾಗುತ್ತೆ. ‘ನೀನಿಲ್ಲದಿದ್ದರೆ ನಾನು ಉದಾತ್ತನಾಗಿರುತ್ತಿದ್ದೆ, ಸಾಹಸಿಯಾಗುತ್ತಿದ್ದೆ, ಕವಿಯಾಗುತ್ತಿದ್ದೆ’ ಇತ್ಯಾದಿ ನನ್ನ ಅಂತರ – ಪಿಶಾಚತ್ವದ ವ್ಯಸನಗಳನ್ನೆಲ್ಲ ಕತ್ತರಿಸಲು ನಾಲಗೆಯನ್ನು ಇನ್ನಷ್ಟು ಹರಿತ ಮಾಡಿಕೊಳ್ಳುತ್ತ ಹೋಗುವ ಯತ್ನದಲ್ಲೆ ಅವಳು ತಾನು ಹುಡುಗಿಯಾಗಿದ್ದಾಗಿನ ಲವಲವಿಕೆಯನ್ನೆಲ್ಲ ಕಳೆದುಕೊಂಡಿದ್ದಾಳೆ. ನಮ್ಮ ಜಗಳ ಹೇಗಿರುತ್ತದೆಂದರೆ ಆಡುತ್ತ ಆಡುತ್ತ ಇಬ್ಬರೂ ಹಲ್ಕಗಳಾಗುತ್ತೇವೆ. ಇಬ್ಬರಿಗೂ ಫೋನು, ಮನೆ, ಕಾರು ಇತ್ಯಾದಿಯ ಬಗ್ಗೆ ರೋಸಿ ಹೋಗಿರುತ್ತೆ, ಅವಳಿಗೂ ಗೊತ್ತು: ನಾನು ಅವಳ ಜೊತೆ ಜಗಳವಾಡುವುದೆಲ್ಲ ಒಂದು ಬಗೆಯ ಆತ್ಮಹಿಂಸೆ ಅಂತ. ಅವಳಿಗೆ ನನ್ನ ಬಗ್ಗೆ ಕನಿಕರ ಹುಟ್ಟಿದ ದಿನ ನಾನು ಬರಿ ಹೊಗೆ ತುಂಬಿದ ಒಲೆಯಾಗಿಬಿಟ್ಟಿರುತ್ತೇನೆಂದು ನನಗೆ ದಿಗಿಲು. ನನಗಿಂತ ಬಡವನಾದ ಯಾರನ್ನಾದರೂ ಅವಳು ಪ್ರೀತಿಸಿದ್ದೇ ಆದಲ್ಲಿ ನನಗೆ ಅವಳ ಬಗ್ಗೆ ಗೌರವ ಹುಟ್ಟುತ್ತಿತ್ತೋ ಏನೋ. ಆದರೆ ಯಾರೂ ಪ್ರೀತಿಸಲಾರದಂತೆ ನಾವು ಒಬ್ಬರನ್ನೊಬ್ಬರು ಅಸಹ್ಯಪಡಿಸಿಕೊಂಡಿದ್ದೇವೆ. +ನಾನು ಬಾಲಕನಾಗಿದ್ದಾಗ ಪವಿತ್ರನಾಗಿದ್ದೆನೆ ಎಂದು ತಿಳಿಯಲು ಆಸೆಯಾಗುತ್ತೆ ಎಂದನೆಲ್ಲ, ಯಾವಾಗ ಹಾಗನ್ನಿಸುತ್ತೆ ಎಂದರೆ ನನ್ನ ಹೆಂಡತಿ ಯಾವಾಗಲೋ ಒಮ್ಮೊಮ್ಮೆ – ಈಚೆಗೆ ಅದೋ ಕಮ್ಮಿ – ಹಾಡುತ್ತ ಕೂತಾಗ. ಬಹಳ ಮಧುರವಾಗಿ ಹಾಡುತ್ತಾಳೆ. ಆಗ ನನಗೆ ಸಂಕಟವಾಗುತ್ತೆ. ಯಾಕೆ ಇಬ್ಬರೂ ಒಬ್ಬರನ್ನೊಬ್ಬರು ಹೀಗೆ ಗಲೀಜು ಮಾಡಿಕೊಂಡೆವು ಅನ್ನಿಸುತ್ತೆ. ಅಥವಾ ಹೀಗೂ ಇರಬಹುದೆ? ಒಳ್ಳೆ ಕಂಠವಿದೆ, ಅದು ಶಬ್ದ ಮಾಡತ್ತೆ, ಹಾಡಾಗಿ ನನ್ನ ಕಿವಿ ಸೇರತ್ತೆ – ಹೊರತಾಗಿ, ಅವಳ ಸಂಗೀತ ಸೂಚಿಸುವಂಥದ್ದು ನಿಜವಾಗಿಯೂ ಅವಳ ಒಳಗಿಲ್ಲದಿದ್ದರೆ? +ಜೀವದ ಬೇರು ಅಲುಗಿಸುವಂಥದ್ದು ಏನೂ ಆಗುತ್ತಿಲ್ಲವಲ್ಲ ಎನ್ನುವ ನನ್ನ ಈ ದುಃಖವೂ ನನ್ನ ಜೀವನ ಕ್ರಮದ ದ್ರಾಬೆತನವನ್ನು ಮುಚ್ಚಿಕೊಳ್ಳಲೆಂದೋ, ಅಥವಾ ಇನ್ನಷ್ಟು ಪ್ರತಿಷ್ಠಿತ ವ್ಯಕ್ತಿಯಾಗಲು ಅವಶ್ಯವಾದ ಅಹಂಕಾರವನ್ನು ಜೀವಂತವಾಗಿ ಉಳಿಸಿಕೊಳ್ಳಲೆಂದೊ ನಾನು ಹೂಡಿರುವ ಉಪಾಯವಾಗಿದ್ದರೆ? ಈ ಮನೋಸೂಕ್ಷ್ಮದಿಂದ ಕೋಧ ಏನೂ ಪ್ರಯೋಜನವಿಲ್ಲ. ಯಾಕೆಂದರೆ ನಾನು ಇದ್ದಂತೆಯೇ ಇರುತ್ತೇನೆ. ಮಾಡೋದನ್ನೆಲ್ಲ ಮಾಡುತ್ತಲೇ ಹೋಗುತ್ತೇನೆ. ಆಫೀಸಿನಲ್ಲಿ ನನ್ನನ್ನು ನೋಡಿದರೆ ಗೊತ್ತಾಗುತ್ತೆ; ಎಷ್ಟು ಸಭ್ಯ, ಎಷ್ಟು ಪ್ರಾಮಾಣಿಕ, ಜವಾನರ ಬಗ್ಗೆಯೂ ಎಷ್ಟು ಕರುಣೆ – ಆದರೆ ಎಲ್ಲ ಮೇಲಕ್ಕೇರುವ ಉಪಾಯ. +ಯಾಕೆ ಮೇಲಕ್ಕೇರಬಾರದು? ನನ್ನ ಬಗ್ಗೆ ನಾನು ಅಸಹ್ಯಪಟ್ಟುಕೊಳ್ಳುವ ಈ ಮನೋಸೂಕ್ಷ್ಮ ಒಳ್ಳೆಯ ಊಟವನ್ನು ಜೀರ್ಣಿಸಿಕೊಳ್ಳುತ್ತ ಕಣ್ಣುಮುಚ್ಚಿ ಕೂತಾಗ ಇರಲ್ಲವಲ್ಲ. ಆದರೆ ನಾನು ಸುಖಿ ಕೂಡ ಅಲ್ಲವಲ್ಲ. +ಹೀಗೆ ಎಡಬಿಡಂಗಿಯಾಗಿಬಿಟ್ಟ ನನಗೆ ಕೊನೆ ಪಕ್ಷ ಬಾಲಕನಾಗಿದ್ದಾಗ ತತ್ಪರತೆ ಸಾಧ್ಯವಿತ್ತೆ ಎಂದು ಹಂಬಲಿಸುತ್ತೇನೆ. ಅಪ್ಪ ಸತ್ತು ಆರು ವರ್ಷವಾಯ್ತು. ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗಿದ್ದೆ. ಅಮ್ಮ ಹಳ್ಳಿಯಲ್ಲೆ ಇದ್ದಾಳೆ. ನನ್ನ ಜೊತೆ ಬಂದಿರಲು ಒಪ್ಪಲಿಲ್ಲ. ‘ನನಗೆ ಇಲ್ಲೇ ಸುಖ’ ಎಂದು ಅಮ್ಮ ಹೇಳಿದ್ದನ್ನು ನನ್ನ ಹೆಂಡತಿ ಮೊದಲು ಒಪ್ಪದಂತೆ ನಟಿಸಿ, ಅಮ್ಮನಿಂದ ‘ಇಲ್ಲ, ನಿಜವಾಗಿ, ನಾನ್ಯಾಕೆ ನಿಮ್ಮ ಸುಖಕ್ಕೆ ಅಡ್ಡಿಯಾಗಬೇಕು’ ಇತ್ಯಾದಿ ನಮ್ಮನ್ನು ನೋಯಿಸುವ ಬೋಗಾರು ದುಃಖದ ಮಾತನ್ನಾಡಿಸುವಂತೆ ಜುಲುಮೆ ಮಾಡಿ, ತನ್ಮೂಲಕ ನನಗೆ ಮುಜುಗರವಾಗದಂತೆ ಅಮ್ಮ ಸ್ವಂತ ಇಚ್ಛೆಯಿಂದಲೇ ಹಳ್ಳಿಯಲ್ಲಿರಬೇಕು – ಹೀಗೆ ಏಪಾರ್ಟು ಮಾಡಿದ ನನ್ನ ಹೆಂಡತಿಯ ಘಾಟಿತನ ಕೂಡ ನನ್ನಿಂದಲೇ ಅವಳು ಕಲಿತಿದ್ದಿರಬಹುದು. ನನಗೆ ಹೇಸಿಗೆಯಾದರೂ, ಬೇಕೆನ್ನಿಸುವುದನ್ನು ಅವಳು ಸಾಧಿಸುವ ಕ್ರಮ ಹೀಗೆ. ಡ್ರಿಂಕ್ಸ್ ಕೊಡಬೇಕು; ಇತ್ಯಾದಿಗಳೆಲ್ಲ ಅಮ್ಮ ಮನೇಲಿ ಬಂದಿದ್ದರೆ ಕಷ್ಟ ಎಂದು ಇವಳಿಗೂ ಗೊತ್ತು, ಅಮ್ಮನಿಗೂ ಗೊತ್ತು – ಎಂದು ನನಗೂ ಗೊತ್ತು. ಒಟ್ಟಿನಲ್ಲಿ ಬೆಳೀತ ಬೆಳೀತ ನಾನು ಪಡಪೋಸಿಯಾಗಿಬಿಟ್ಟೆ. ಈ ಆತ್ಮಜ್ಞಾನದಿಂದಲೂ ಪ್ರಯೋಜನವಿಲ್ಲೆಂದು ನಾನು ಮತ್ತೆ ಹೇಳಬೇಕಾಗಿಲ್ಲ. ನನ್ನ ಬಾಸ್ ಇಂಥ ವಿಮರ್ಶೆಯನ್ನು ಮಾಡಿಕೊಳ್ಳುತ್ತ ವ್ಹಿಸ್ಕಿ ಚಪ್ಪರಿಸಿದ್ದೇವೆ – ಗೋಲ್ಫ ಕ್ಲಬ್ಬಿನಲ್ಲಿ. +ಅಪ್ಪನ ಶ್ರಾದ್ಧಕ್ಕೆಂದು ಹಳ್ಳಿಗೆ ಹೋಗಿದ್ದವನು ಹೆಂಡತಿ ಮಕ್ಕಳನ್ನು ಮನೆಯಲ್ಲೆ ಬಿಟ್ಟು ಬಾಲಕನಾಗಿದ್ದಾಗ ನಾವಿದ್ದ ಹದಿನೈದು ಮೈಲಿಯಾಚೆಯ ಹಳ್ಳಿಗೆ ಕಾರು ಬಿಟ್ಟುಕೊಂಡು ಹೋದೆ. ಇವತ್ತಿಗೂ ಬದಲಾಗದ ಕಾಡೊಳಗಿನ ಧೂಳು ರಸ್ತೆಯಲ್ಲಿ ಶರದೃತುವಿನ ಬೋಳು ಮರಗಳನ್ನು, ಕೆಂಪು ಹೂಗಳನ್ನು ಕುತೂಹಲದಿಂದ ನೋಡುತ್ತ ಅವಸರವಿಲ್ಲದೆ ಡ್ರೈವ್ ಮಾಡಿದೆ. ಎಂಟೋ ಹತ್ತೋ ವರ್ಷಗಳ ಹುಡುಗನಾಗಿದ್ದಾಗ ನಡೆದ ಒಂದು ಘಟನೆ ನೆನಪಾಗಿ ಕೇಳಿದಾಗ ಆಗುವಂತೆ ಸಂಕಟವಾಯಿತು. +ಅಮ್ಮನಿಗೆ ಖಾಹಿಲೆ – ಒಣಗಿದ ಗಂಜಿ ಬಟ್ಟಲು, ಔಷಧಿ ಸೀಸೆಗಳ ಮಧ್ಯೆ ಸದಾ ಮಲಗೇ ಇರುತ್ತಿದ್ದಳು. “ಕಿಟ್ಟು ನಿನ್ನ ಅಪ್ಪಯ್ಯ ಏನು ಮಾಡ್ತಿದಾರೆ ನೋಡಿ ಓಡಿ ಬಾ” ಎಂದು ಒಂದು ಭಾನುವಾರ ನರಳುತ್ತ ಗೊಣಗಿದಳು. ಅಮ್ಮನ ಜೊತೆ ಆಗ ಅಜ್ಜಯ್ಯ ಅಜ್ಜಿ ಇದ್ದರು. ಸಾಯಂಕಾಲವಾದೊಡನೆ ಮುಂಡಾಸು ಸುತ್ತಿ ತಾಳ ಮದ್ದಲೆಗೆ ಕೂರುತ್ತಿದ್ದ ಅಜ್ಜಯ್ಯ. ಒಗೆದ ಅಂಗಿ ಚಡ್ಡಿ ಹಾಕಿಕೊಂಡು ಹೊರಟುಬಿಟ್ಟೆ. ಅಪ್ಪಯ್ಯನನ್ನು ನೋಡಿ ಬಾ ಎಂದರೆ ಹಲಸಿನ ಊರಿಗೆ ಬಾ ಅಂತ. ಅಪ್ಪಯ್ಯ ಹಲಸಿನ ಊರಿನ ಗೋವಿಂದರಾಯರ ಮನೇಲಿ ಲೆಖ್ಖಪತ್ರ ನೋಡಲು ಹೋಗುತ್ತಿದ್ದರು. ಗೋವಿಂದರಾಯರು ಅವರ ಸ್ನೇಹಿತರು. ಅಪ್ಪ ಜಗಳವಾಡಿ ಕುಂಸಿಯ ಪೋಸ್ಟ್‌ಮಾಸ್ಟರಿಕೆ ಬಿಟ್ಟಿದ್ದ ಕಾಲ ಅದು. +ಕಾಲೆದುರು ಸಿಕ್ಕಿದ ಕಲ್ಲನ್ನು ಹಾರಿಸುತ್ತ, ಅದು ಹಾರಿದ ದಿಕ್ಕಿಗೆ ಓಡುತ್ತ ಹೋದನೆಂದು ಕಾಣುತ್ತೆ. ಚೆನ್ನಾಗಿ ನೆನಪಿರೋದು: ನಡುವೆ ಶಾಲೆ ಸಿಕ್ಕಿತು ಎಂದು. ಶಾಲೆಯ ಮಣ್ಣು ಜಗುಲಿಯ ಮೇಲೆ ನುಣುಪಾದ ಧೂಳು. ಈ ಧೂಳಿನಲ್ಲಿ ಪುಟಾಣಿ ಗುಂಡಿಗಳನ್ನು ಮಾಡಿ ಅಡಗಿದ ಗುಬ್ಬಚ್ಚಿ ಎನ್ನೋ ಹುಳ. ಈ ಹುಳವನ್ನು ಕೈಮೇಲೆ ಬಿಟ್ಟುಕೊಂಡರೆ ಅದು ಓಡಾಡುವಾಗ ಸುಖವಾದ ಕಚಗುಳಿ. ಪುಟಾಣಿ ಗುಂಡಿಯ ಸುತ್ತ ಬೆರಳಿನಿಂದ ಕೆದಕುತ್ತ ನಾವು ಬಾಲಕರು. “ಕಾಶೀಗ್ಹೋಗೋ ದಾರಿ ತೋರ್ಸು, ಕಾಶೀಗ್ಹೋಗೋ ದಾರಿ ತೋರ್ಸು” ಎಂದರೆ ಕಂದು ಬಣ್ಣದ ದಪ್ಪ ಚರ್ಮದ ಗುಬ್ಬಚ್ಚಿ ಹುಳ ಹೊರಗೆ ಬಂದು ಹಿಂದೆ ಹಿಂದೆ ಹಿಂದೆ ನಡೀತಿದ್ದದ್ದನ್ನ ನೋಡೋದು ಬಹಳ ಖುಷಿ ನಮಗೆ. +ಗುಬ್ಬಚ್ಚಿ ಜೊತೆಗೆ ಆಡಿ ಮುಂದೆ ಹೋದೆ. ಕಾಡಲ್ಲಿ ಅನಾಮತ್ತಾಗಿ ಬಾಯಿ ತೆರೆದ ಅಬ್ಬರಿ. ಅಬ್ಬರಿ ತಳ ನೋಡಿ ಮುಂದೆ ಹೋದೆ. ಗದ್ದೆ ಸಿಕ್ಕಿತು. ಗದ್ದೆಯ ಬಲಕ್ಕೆ ನವಿಲು ಕಲ್ಲಿನ ಗುಡ್ಡ, ನವಿಲುಗಳು ಕೇಕೆ ಹಾಕೋದು ಬೆಳಿಗ್ಗೆ, ಸಂಜೆ, ರಾತ್ರೆ ನಮ್ಮ ಮನೆಯೊಳಕ್ಕೂ ಕೇಳಿಸುತ್ತ ಇದ್ದರೂ ಅಮ್ಮ ಅಲ್ಲಿಗೆ ಹೋಗಲು ಎಂದೋ ಬಿಟ್ಟೇ ಇರಲಿಲ್ಲ. ಅವು ಬಹಳ ಚಂದಾಗಿ ಕುಣಿಯುತ್ತವೆಂದು ಗರಿ ಮಾಡಲು ಬಂದ ಆಳೊಬ್ಬ ಹೇಳಿದ್ದ – ನವಿಲನ್ನು ತಿನ್ನೋ ಜಾತಿಯವ. ಸಾಯಂಕಾಲ ಗೋವಿಂದರಾಯರ ಮನೇಂದ ಹಿಂದಕ್ಕೆ ಬರೋವಾಗ ಮರದ ಬುಡದಲ್ಲಿ ಅವಿತುಕೊಂಡು ಕೂತು ನವಿಲು ಕುಣಿಯೋದನ್ನ ನೋಡೋದು; ಬಿದ್ದ ಗರೀನ್ನ ಎತ್ತಿಕೊಂಡು ಬಂದು ಮರೀ ಹಾಕಕ್ಕೆ ಪುಸ್ತಕದ ಒಳಗೆ ಇಡೋದು – ಅಮ್ಮನಿಗೆ ಗೊತ್ತಾಗದ ಹಾಗೆ – ಎಂದುಕೊಂಡು ಮುಂದೆ ಹೋದೆ. +ಇವತ್ತು ಕಾರನ್ನು ನಿಲ್ಲಿಸಿ ಆ ದಾರೀಲೇ ನನಗೆ ಪ್ರಿಯವಾಗಿದ್ದ ನೀಲಿಯಂಗಿ, ಪ್ಯಾಂಟ್ ತೊಟ್ಟು, ಕತ್ತಿಗೆ ಸಿಲ್ಕ್ ಸ್ಕಾರ್ಫನ್ನು ಸಡಿಲವಾಗಿ ಸುತ್ತಿಕೊಂಡು ನಡೆದೆ. ಗೋವಿಂದರಾಯರ ವಿಧವೆ ಜಾನಕಮ್ಮನ ನೋಡಿ ಹಿಂದಕ್ಕೆ ಬರೋವಾಗ ಮತ್ತೆ ನವಲು ಕಲ್ಲಿನ ಗುಡ್ಡಕ್ಕೆ ಹೋಗೋದು, ಹೊತ್ತಾಗಿ ಹೆಂಡತಿ ರೇಗಿದರೂ ಚಿಂತೆಯಿಲ್ಲ ಎಂದುಕೊಂಡೆ. +ಸಾರ ದಾಟಿದೆ. ಬೇಲಿ ದಾಟಿದೆ. ಕೆಂಪು ಹೂಗೊಂಚಲುಗಳು ಬಿಟ್ಟ ಗುಡ್ಡದ ದಾಸವಾಳದ ಗಿಡಗಳು ಈಗಲೂ ಇವೆ. ಒಗರು ಸಿಹಿ ಬೆರೆತ ಪುಟಾಣಿ ಹಣ್ಣುಗಳು ಬಿಡುವ ಗಿಡ. ಈ ಹಣ್ಣು ಕೆಂಪಾದರೆ, ಕಾಕೆ ಹಣ್ಣು ಕಪ್ಪು – ಬಲು ರುಚಿ. ಈಗ ಇಷ್ಟು ಕಾಕೆ ಹಣ್ಣುಗಳು ಗಿಡದಲ್ಲಿ ಉಳಿದಿರೋದು ನೋಡಿದರೆ ಪ್ರಾಯಶಃ ಆಸುಪಾಸಿನಲ್ಲಿ ಮಕ್ಕಳೇ ಇಲ್ಲವೆಂದು ಕಾಣುತ್ತೆ. ಜಾನಕಮ್ಮನಿಗೆ ಸಂತಾನವಿಲ್ಲದ್ದರಿಂದ ಚಿಕ್ಕಮಕ್ಕಳು ಎಲ್ಲಿ ಬರಬೇಕು? +ಹೆಂಚು ಹೊದೆಸಿದ ಸಾಮಾನ್ಯ ದೊಡ್ಡದಾದ ಮಹಡಿಮನೆ ಎಂದು ಈಗ ಅನ್ನಿಸೋದು. ಆಗ ಬೃಹದಾಕಾರದ ಮನೆ ಎನ್ನಿಸಿತ್ತು. ನಾನು ಅಲ್ಲಿ ರಾತ್ರೆ ಕೆಲವೊಮ್ಮೆ ಮಲಗಿರುತ್ತಿದ್ದಾಗ ಜಾನಕಮ್ಮ ಹೇಳುತ್ತಿದ್ದ ಭಟ್ಟಿವಿಕ್ರಮಾದಿತ್ಯನ ಕಥೆಗಳಿಗೆ ತಕ್ಕುದಾದ ಮನೆ. ದೆವ್ವದ ಕಥೆಗಳು ನಿಜವೆನ್ನಿಸುವ ಅಟ್ಟಗಳು. ಕತ್ತಲೇ ಮೂಲೆಗಳು, ನಾಗಂದಿಗೆಗಳು, ಚಿತ್ರ ಕೆತ್ತಿದ ತೊಲೆಗಳು ಆ ಮನೆಗಿದ್ದುವು. ಮಹಡಿ ಮೇಲೆ ಜಾನಕಮ್ಮ ಮಲಗುತ್ತಿದ್ದ ಕೋಣೆಯಂತೂ ರವಿವರ್ಮನ ಚಿತ್ರಗಳು, ದಪ್ಪ ಕಾಲಿನ ಅಗಲವಾದ ಎತ್ತರವಾದ ಮಂಚ, ಊದುಬತ್ತಿ, ಗಂಧದ ವಾಸನೆ – ಇತ್ಯಾದಿಗಳಿಂದಾಗಿ ಕಥಾನಾಯಿಕೆಯರು ನೂಲಿನೇಣಿಯಿಂದ ಚಂದದ ರಾಜಕುಮಾರನನ್ನು ಒಳಗೆ ಬಿಟ್ಟು ಕೊಳ್ಳುವ, ಅಥವಾ ಗುಪ್ತಪ್ರಣಯಿಯನ್ನು ಹಗಲೆಲ್ಲ ಗಿಣಿರೂಪದಲ್ಲಿ ಸಾಕಿಕೊಳ್ಳುವ ಶಯ್ಯಾಗಾರದಂತಿತ್ತು. +ಕುಣಿಯುತ್ತ ನಡುಮನೆಗೆ ಹೋಗಿ ಕಂಗಾಲಾದೆ. ಅಲ್ಲೊಂದು ಹೆಳವ ಮೂಕ ಹೆಂಗಸು. ಜೋತುಬಿದ್ದ ಗದ್ದದ ಬೆಳ್ಳಗಿನ ಅಗಲವಾದ ಮುಖ, ಈ ಮುಖದ ಗಾತ್ರಕ್ಕೆ ಪುಟ್ಟದೆನ್ನಿಸುವ ಮೂಗು, ಇಷ್ಟು ದೊಡ್ಡ ಕುಂಕುಮ, ತಲೆ ತುಂಬ ಗುಂಗುರು ಕೂದಲಿನ ರಾಶಿ – ಬೇ ಬೇ ಬೇ ಎಂದು ಅದು ಕೂಗಿತ್ತು. ಅದು ಯಾವತ್ತೂ ಅಲ್ಲೇ ನಡುಮನೆಯಲ್ಲೇ ಇರೋದು ಎಂದು ಗೊತ್ತಿದ್ದೂ ಹೆದರಿದ್ದೆ. ಜಾನಕಮ್ಮನ ನಾದಿನಿ, ಕಲ್ಯಾಣಿ – ಅದರ ಹೆಸರು. ಕಲ್ಯಾಣಿ ಹೆಳವಿ ಮೂಕಿಯಾದ್ದರಿಂದ ಗುಡ್ಡೆಕೊಪ್ಪದ ಚೊಟ್ಟೆ ಕೈಯ ನಾಗಪ್ಪನಿಗೆ ಶಾಸ್ತ್ರಕ್ಕೆಂದು ಎರಡನೇ ಹೆಂಡತಿಯಾಗಿ ಮದುವೆಯಾಗಿತ್ತು. ಮೂಲೆಯಲ್ಲೊಂದು ಬೋಗುಣಿಯಲ್ಲಿ ಒದ್ದೆ ಬಟ್ಟೆ. ಯಾವತ್ತೂ ಕಲ್ಯಾಣಿ ನಡುಮನೇನ್ನ ಒರೆಸುತ್ತ ತೆವಳುತಿರುತ್ತೆ. ಅಥವಾ ಮೂಲೆಯಲ್ಲಿ ಕೂತಿರುತ್ತೆ – ಸಿಂಬೆ ಸುತ್ತಿದ ಹಾವಿನ ಹಾಗೆ. ಅದರ ಈ ಕಾಯಕದ ಫಲವಾಗಿ ಸಿಮೆಂಟಿನ ನಡುಮನೆ ನೆಲ ಮುಖ ಕಾಣಿಸುವಂತೆ ಫಳಫಳ ಹೊಳೆಯುತ್ತಿರುತ್ತೆ. ಅವತ್ತು ಕಲ್ಯಾಣಿ ಬೇ ಬೇ ಬೇ ಎಂದು ಕೂಗಲು ಕಾರಣ ನನ್ನ ಧೂಳಿನ ಕಾಲುಗಳು. ನಾನು ಹೊರಗೆ ಹೋಗಿ ಕಾಲು ತೊಳೆದು ಒಳಗೆ ಬಂದೆ. +ಕಲ್ಯಾಣಿ ತೆವಳುತ್ತ ನನ್ನ ಹತ್ತಿರ ಬಂತು. “ಅಪ್ಪಯ್ಯ ಎಲ್ಲಿ” ಎಂದೆ. ಅದಕ್ಕೆ ಕೇಳಿಸದಿದ್ದರೂ ಗೊತ್ತಾಗಿರಬೇಕು. ಗೋಸುಂಬೆಯಂತೆ ಅದರ ಬಿಳುಚಿದ ಮುಖ ಕೆಂಪಾಯಿತು. ಖುಷಿಯಲ್ಲಿ ಮುಖವನ್ನೆಲ್ಲ ವಿಕಾರ ಮಾಡಿಕೊಂಡು ನನ್ನನ್ನು ಬಚ್ಚಲು ಮನೆಯ ಕಡೆ ತಳ್ಳಲು ಪ್ರಾರಂಭಿಸಿತು. ಅದು ತಳ್ಳಿತು – ನಾನು ಹೋದೆ. ಮಧ್ಯಾಹ್ನವಾದ ಮೇಲೆ ಬಚ್ಚಲು ಮನೇಲಿ ಅಪ್ಪಯ್ಯ ಯಾಕೆ ಇರಬೇಕೊ ತಿಳಿಯಲಿಲ್ಲ. ಅಡುಗೆ ಮನೆತನಕ ನನ್ನನ್ನು ತಳ್ಳುತ್ತ ತೆವಳುತ್ತ ಬಂದ ಕಲ್ಯಾಣಿ ‘ಇನ್ನು ಮುಂದೆ ನೀನೊಬ್ಬನೇ ಹೋಗು, ನಾನು ಬರಲ್ಲ’ ಎಂದು ಕಣ್ಣು ಮೂತಿ ಕೈಗಳನ್ನೆಲ್ಲ ಹೊರಳಿಸಿ ಸನ್ನೆಮಾಡಿ, ನನಗರ್ಥವಾಯಿತೆಂದು ಸಮಾಧಾನದಿಂದ ತಲೆ ಹಾಕಿ ನಡುಮನೆಗೆ ಹೋಯಿತು. ನನ್ನ ಹೆಜ್ಜೆ ಗುರುತು ಬಿದ್ದಲ್ಲಿ ನೆಲವನ್ನು ಒರೆಸಲು ಮತ್ತೆ ಅದು ಪ್ರಾರಂಭಿಸಿರಬೇಕು. +ನಾನು ಬಚ್ಚಲಿಗೆ ಹೋಗುತ್ತಿದ್ದಂತೆ ಚೊಂಬಿನಿಂದ ನೀರು ತುಂಬಿ ಸುರಿಯುತ್ತಿದ್ದ ಸದ್ದು ಕೇಳಿಸಿತು. ಹಾಗೇ ಅಪ್ಪಯ್ಯ ನಗೋದು ಕೇಳಿಸಿತು. ಮನೇಲಿ ಅಪ್ಪಯ್ಯ ನಗೋದನ್ನ ನಾನು ಕೇಳಿದ್ದೇ ಇಲ್ಲ. ಅಮ್ಮನ ಜೊತೆ ಮಾತಾಡುವಾಗೆಲ್ಲ ಉರಿ ಮೂತಿಯೇ. ಬಚ್ಚಲೊಳಗೆ ಹೋಗಿ ನೋಡಿದರೆ ಅಪ್ಪ ಬೆತ್ತಲೆ ಸ್ನಾನ ಮಾಡುತ್ತಿದ್ದಾರೆ; ಜಾನಕಮ್ಮ ಬೆನ್ನಿಗೆ ಸೀಗೆ ಉಜ್ಜುತ್ತಿದ್ದಾರೆ. ನನ್ನ ನೋಡಿದ್ದೇ ಜಾನಕಮ್ಮ ಎದ್ದು ಬಂದರು. ನನ್ನನ್ನು ಮುದ್ದಿಡುತ್ತ ಅಡಿಗೆ ಮನೆಗೆ ಕರೆದುಕೊಂಡು ಹೋಗಿ ರವೆ‌ಉಂಡೆ, ಕೋಡುಬಳೆ ಕೊಟ್ಟರು. ಎರಡು ಚಡ್ಡಿಯ ಜೋಬುಗಳಲ್ಲೂ ಕೋಡುಬಳೆ ತುಂಬಿಸಿದರು. “ಅಪ್ಪಯ್ಯನಿಗೆ ಉಷ್ಣವಾಗಿತ್ತು” ಅಂದರು; “ಅಮ್ಮನಿಗೆ ಹುಷಾರಿಲ್ಲವಲ್ಲ, ಅದಕ್ಕೇ ನಾನು ತಲೆಗೆ ಎಣ್ಣೆ ಸ್ನಾನ ಮಾಡಿಸಿದೆ” ಅಂದರು. ನನ್ನನ್ನು ಅವರ ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಕಿಟಿಕಿಯಿಂದ ನವಿಲುಕಲ್ಲು ಗುಡ್ಡ ತೋರಿಸುತ್ತ, “ಮರಿ, ನಿನಗೆ ಆ ಗುಡ್ಡದ ಮೇಲೆ ಹೋಗಲು ಇಷ್ಟವಾ?” ಎಂದರು. “ಅಪ್ಪಯ್ಯ ಸ್ನಾನ ಮಾಡುತ್ತ ಇದ್ರು ಅಂತ ಅಮ್ಮನಿಗೆ ಹೇಳಬೇಡ ಆಯ್ತ? ಹೇಳಿದ್ರೆ ಅವರ ಜ್ವರ ಜಾಸ್ತಿ ಆಗತ್ತೆ” ಎಂದರು. ಎಲ್ಲದಕ್ಕೂ ನಾನು ಹು ಹು ಹು ಎನ್ನುತ್ತ ಹೊರಗೆ ಓಡಿಹೋಗುವಾಗ ಕಲ್ಯಾಣಿ ನಕ್ಕಿತು. ಸಿಂಬಿ ಸುತ್ತಿದ ಹಾವಿನಂತೆ ಕೂತು ಆಪ್ತವಾಗಿ ಹತ್ತಿರ ಕರೆಯಿತು. ನಾನು ನಿಲ್ಲದೆ ಓಡಿದೆ. ತೋಟದಲ್ಲಿ ಆಡಿಕೊಂಡಿದ್ದೆ-ಸಾಯಂಕಾಲವಾಗೋತನಕ. +ನಾನು ನೋಡಿದ್ದರ ಅರ್ಥ ಆಗ ನನಗೆ ಆಗಿರಲಿಲ್ಲ ಎಂದು ಈಗ ಅಂದುಕೊಳ್ಳುತ್ತೇನೆ. ಅಂದುಕೊಳ್ಳುತ್ತೇನೆ-ಅಷ್ಟೆ. ಗಂಡ ಮನೇಲಿ ಇಲ್ಲದಿದ್ದಾಗ ಅಪ್ಪಯ್ಯನ ಜೊತೆ ಜಾನಕಮ್ಮ ಏನು ಮಾಡುತ್ತಿದ್ದರು ಎಂದು ನನಗೆ ಮೊದಲು ಹೊಳೆದದ್ದು ಗುಡ್ಡದ ಮೇಲೆ ಒಂದು ದಿನ ಕನ್ಯಾಮಾಸದ ನಾಯಿ ಜೋಡಿ ನೋಡಿದಾಗಲೊ? ಅವು ಜೋಡಿಯಾಗಲಿ ದೇವರೇ ಎಂದು ಪ್ರಾಥಿಸುತ್ತ ಆಸೆಯಿಂದ ನೋಡುತ್ತ ನಿಂತದ್ದು ನೆನಪಾಗುತ್ತದೆ. ಅವು ಗಂಟು ಹಾಕಿಕೊಂಡಾದ ಮೇಲೆ ನನಗೆ ನಡೆದದ್ದೆಲ್ಲ ನೆನಪಾಗಿ ಓಹೋ, ಹೀಗೋ? ಎಂದು ಗೊತ್ತಾಯಿತೋ? ಹೀಗೆ ಗೊತ್ತಾಗಲು ವರ್ಷ ಬೇಕಾಯಿತೊ? ಅಥವಾ ಆಗಲೇ ಗೊತ್ತಾಗಿತ್ತೋ – ಈಗ ಹೇಗೆ ಹೇಳಲಿ? +ಆಮೇಲೆ ಬಹಳ ವರ್ಷವಾದ ಮೇಲೆ ಅಪ್ಪಯ್ಯನ ಜೀವನಕ್ರಮ ಸರಿ ಎಂದು ಅವರ ಧೈರ್ಯವಿಲ್ಲದ ನಾನು ವಾದಿಸಿದ್ದೆ. ನೋಡಿ, ಜೇವನ ಸಫಲವಾಗಲು ಒಳದಾರಿಗಳು ಯಾವತ್ತೂ ಇದ್ದೇ ಇವೆ ಎಂದಿದ್ದೆ. ಆದರೆ ಇವೆಲ್ಲ ನಾನು ಈಗ ಹೇಳೋದು ಅಪ್ರಕೃತ, ಯಾಕೆಂದರೆ ಮತ್ತೆ ನಾನು ಜಾನಕಮ್ಮನ ಮನೆಗೆ ಅಪ್ಪನ ಶ್ರಾದ್ಧ ಮುಗಿಸಿ – ಬೇಕೆಂದೇ ಒಂಟಿಯಾಗಿ ಹೋದಾಗ ನನ್ನ ಮನಸ್ಸಿನಲ್ಲಿದ್ದುದು ಇಷ್ಟೆ: ಬಾಲಕನಾಗಿದ್ದಾಗ ನಾನು ಹೇಗೆ ಇದ್ದೆ? ತತ್ಪರತೆ ನನಗೆ ಸಾಧ್ಯವಿತ್ತೆ? ನನ್ನ ಹೆಂಡತಿಯನ್ನು ಮೀರಿ ನಿಲ್ಲಲು ಎಂದರೆ ನನ್ನ ನೌಕರಿ ಜೀವನವನ್ನೂ ಮೀರಲು ಬೇರ್ಪಡಿಸಿ ಹೇಳೋದು ಬೇಡವಲ್ಲ. +ಆ ನಡುಮನೆಯಲ್ಲೆ ಅದೇ ಕಲ್ಯಾಣಿ ಇತ್ತು. ಈಗ ಮುದಿಯಾಗಿತ್ತು. ತಲೆ ಬೋಳಿಸಿದ್ದರಿಂದ ಸುಕ್ಕುಸುಕ್ಕಾಗಿ ಬತ್ತಿದ ಅದರ ಮುಖ ಗಂಡಸಿನದೋ ಹೆಂಗಸಿನದೋ ತಿಳಿಯದಂತೆ ವಿಕಾರವಾಗಿತ್ತು. ಚೊಟ್ಟೆ ಕೈಯ ಶಸ್ತ್ರದ ಗಂಡ ತೀರಿರಬೇಕು. ಈಗಲೂ ಒರೆಸುತ್ತ ತೆವಳುತ್ತ ಇತ್ತು. ನನ್ನ ಗುರುತು ಅದಕ್ಕೆ ಹತ್ತಿದಂತೆ ಕಾಣಲಿಲ್ಲ. ‘ಜಾನಕಮ್ಮ’ ಎಂದು ಕರೆಯುತ್ತ ಮಹಡಿ ಹತ್ತಿದೆ. +ಅಪ್ಪಯ್ಯ ಈ ಜಾನಕಮ್ಮನಿಂದ ತೃಪ್ತಿಪಡೆದಿರಬೇಕು ಎಂದು ಒಮ್ಮೆ ಅಂದುಕೊಂಡರೆ ಇನ್ನೊಮ್ಮೆ ಏನು ತೃಪ್ತಿಯೋ ಎಂದು ಹೇಳಿಕೊಳ್ಳುತ್ತೇನೆ. ಮದುವೆಗೆ ಮುಂಚೆ ಕಾಮವೆಂದರೆ ಭರ್ಜರಿ ಸಂಗತಿಯೆಂದು ನಾನು ತಿಳಿದಿದ್ದೆ. ಆದರೆ ಕ್ರಮೇಣ ಕಾಮ ನನಗೆ ನಿದ್ದೆ ಬರುವುದಕ್ಕಿಂತ ಮುಂಚಿನ ಅಗತ್ಯವಾಗಿ ಕೊನೆಗೊಂಡಿದೆ. ಇವಳನ್ನಲ್ಲದೆ ನಾನು ಬೇರೆ ಹೆಣ್ಣನ್ನು ಮೋಹಿಸಿಲ್ಲವೆಂದಲ್ಲ. ಆದರೆ ತೊಡೆಗಳ ನಡುವ ಈಗ ಕಾಮ ಪಳಗಿದೆ. ಅಪ್ಪಯ್ಯನಿಗೂ ಹಾಗೇ ಪಳಗಿರಬೇಕು. ನಾನು ಮನೆ ಸೇರುವ ಮುಂಚೆ ಅವರೇ ಸೇರಿ, ಅಮ್ಮನ ಹತ್ತಿರ ನನ್ನ ಯಾಕೆ ಕಳಿಸಿದ್ದು ಎಂದು ಜಗಳವಾಡಿ, ಯಾಕೆ ಇಷ್ಟು ಹೊತ್ತಾಯ್ತೆಂದು ಅಮ್ಮ ನನ್ನನ್ನು ಬೈದು, ಅಪ್ಪ ನನ್ನನ್ನು ಹೊಡೆದು, ಹೊತ್ತಾಯ್ತೆಂದು ಓಡಿ ಬರುವಾಗ ಬಿದ್ದು ಮಂಡಿ ತರಿಯಿತೆಂದು ನಾನು ಅತ್ತು, ಕೆಲವು ದಿನ ಜಾನಕಮ್ಮನ ಮನೆಗೆ ಹೋಗೋದನ್ನ ಅಪ್ಪ ಬಿಟ್ಟು, ಮತ್ತೆ ಹೋಗಲು ಶುರು ಮಾಡಿ, ಕೊನೆಕೊನೆಯಲ್ಲಿ ಗೋವಿಂದರಾಯರು ಸತ್ತಮೇಲೆ ಜಾನಕಮ್ಮನ ಜೊತೆ ಏನೂ ಇಲ್ಲವೆನ್ನುವ ಹಾಗೆ ಇದ್ದು, ಅವರನ್ನು ನೋಡುವುದನ್ನೂ ಕ್ರಮೇಣ ನಿಲ್ಲಿಸಿ, ಅಮ್ಮನ ಪರಚಾಟ ಕಿವಿಮೇಲೆ ಹಾಕಿಕೊಳ್ಳದೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದರು. ಜೀವನವೇ ಇಷ್ಟು ಎಂದು ನಾನು ಈ ಕಾರಣದಿಂದ ತೀರ್ಮಾನಕ್ಕೆ ಬಂದಿದ್ದರೂ ಜಾನಕಮ್ಮನನ್ನು ಮತ್ತೆ ನೋಡಲು ಮಹಡಿ ಹತ್ತುತ್ತಿದ್ದಾಗ ಪ್ರೀತಿಯ ಇನ್ನೇನೋ ಸಾಧ್ಯತೆ ಕಾಣುತ್ತೇನೆಂದು ನಾನು ಆಸೆ ಪಟ್ಟಿರಲಿಲ್ಲ ಎಂದು ಹೇಗೆ ಹೇಳಲಿ? ನಾನು ಯಾವುದಕ್ಕಾಗಿಯೋ ಇನ್ನೂ ಹುಡುಕುತ್ತಿದ್ದೇನೆಂಬುದಂತೂ ನಿಜ. ಹೆಂಡತಿಯನ್ನು, ನೌಕರಿ ಜೀವನವನ್ನು, ನನ್ನ ವಿಷಾದಪೂರ್ಣ ತೀರ್ಪುಗಳನ್ನು ಮೀರುವ ಹಂಬಲ-ಅಥವಾ ಚಟ-ನನಗಿಲ್ಲದಿದ್ದರೆ ಈ ಶ್ರಾದ್ಧೋತ್ತರ ಯಾತ್ರೆಯನ್ನು ನಾನು ಕೈಗೊಳ್ಳುತ್ತಿರಲಿಲ್ಲ. +ಜಾನಕಮ್ಮನಿಗೆ ಕೂಡಲೇ ಗುರುತು ಸಿಕ್ಕಿತು. ಈಗ ಅಷ್ಟೇನೂ ರಮ್ಯವೆನ್ನಿಸದ ಶಯ್ಯಾಗಾರದಲ್ಲಿ ಕೂತು ಹಲ್ಲಿಲ್ಲದ ಬಾಯಲ್ಲಿ ಎಲೆಯಡಿಕೆ ಜಗಿಯುತ್ತಿದ್ದ ಜಾನಕಮ್ಮ, “ಬಾರೋ ಕಿಟ್ಟಣ್ಣ, ಯಾವಾಗ ಬಂದದ್ದು? ಕಾಫಿ ಮಾಡ್ತೇನೆ” ಎಂದು ಕೆಳಗಿಳಿದರು. ನಾನೂ ಅವರ ಹಿಂದೆ ಹೋದೆ. ಕರ ಹಾಕಿ ಸಾರಿಸಿ ರಂಗೋಲೆ ಬಿಟ್ಟು ಶುಭ್ರವಾಗಿದ್ದ ಅಡಿಗೆ ಮನೆಯಲ್ಲಿ ಮಣೆ ಮೇಲೆ ಕೂತೆ. ಅಮ್ಮನ ಯೋಗಕ್ಷೇಮ ಕೇಳಿದರು. ಎಷ್ಟು ಮಕ್ಕಳು, ಹೆಂಡತಿ ಏನು ಕಲಿತಿದ್ದಾಳೆ, ಏನು ಸಂಬಳ, ಮನೆ ಕಟ್ಟಿಸಿದ್ದೀಯಂತೆ, ಕಾರಿದೆಯಂತೆ-ಇತ್ಯಾದಿ ವಿಚಾರಿಸಿಕೊಂಡರು. ಸ್ನಾನದ ಮನೆಯಲ್ಲಿ ನಾನು ಪತ್ತೆ ಹಚ್ಚಿದ್ದು, ರಂಪವಾದದ್ದು, ಆಮೇಲೂ ಹಾಗೇ ಸಾಗಿಸಿಕೊಂಡು ಹೋದದ್ದು, ಕ್ರಮೇಣ ಕಳಚಿಕೊಂಡದ್ದು- ಏನೂ ಅವರನ್ನು ಬಾಧಿಸುತ್ತಿರುವಂತೆ ತೋರಲಿಲ್ಲ. ಈಗಲೂ ಲಕ್ಷಣವಾದ ಹೆಂಗಸು. ಗಂಟು ಕಟ್ಟಿದ ಬಿಳಿಕೂದಲು, ಬಿಳಿಸೀರೆ, ಕೈಗೆ ಒಂದೊಂದು ಬಂಗಾರದ ಬಳೆ, ಕತ್ತಿಗೆ ಒಂದೆಳೆ ಚೈನು-ವೈಧವ್ಯದಲ್ಲೂ ಅಮ್ಮನಿಗಿಂತ ಈಕೆ ಗೆಲುವಾಗಿದ್ದಂತೆ ಕಂಡಿತು. ನಾನು ಅದೂ ಇದೂ ಮಾತಾಡಿ ಹೊರಟು ನಿಂತಾಗ ಆಳಿಗೆ, “ಎರಡು ಬಾಳೆಗೊನೆ ತಗೊಂಡು ಹೋಗಿ ಕಾರಿನಲ್ಲಿಟ್ಟು ಬಾ” ಎಂದರು. “ಅಮ್ಮನಿಗೆ ಬಾಳೆ ಹಣ್ಣೆಂದರೆ ಇಷ್ಟ. ಕೊಡು. ನಿನ್ನ ಮಕ್ಕಳಿಗೆ ಈ ಹಲಸಿನ ಹಣ್ಣಿನ ಚಟ್ಟು ಕೊಡು” ಎಂದು ಕಾಗದದಲ್ಲಿ ಸುತ್ತಿದ ಪೊಟ್ಟಣ ಕೊಟ್ಟರು ಬೇಲಿಯ ತನಕ ಬಂದು ಕಳುಹಿಸಿದರು. +ಸಂಜೆ ಹೊತ್ತಾದ್ದರಿಂದ ನಾನು ಬೇಗ ಬೇಗ ನವಿಲು ಕಲ್ಲುಗುಡ್ಡದ ತಪ್ಪಲಿಗೆ ನಡೆದೆ. ಕಾರು ನಿಲ್ಲಿಸಿದ್ದಲ್ಲಿ ಬಾಳೆಗೊನೆ ತಗೊಂಡು ಹೋಗಿ ಕಾದಿರು ಎಂದು ಆಳಿಗೆ ಹೇಳಿದೆ. +ಅವತ್ತಿನಿಂದ ಇವತ್ತೂ ನವಿಲುಕಲ್ಲಿನ ಗುಡ್ಡದಡಿ ಕೂರಬೇಕೆನ್ನಿಸಿತ್ತು. ಅವತ್ತು ಓಡುತ್ತೋಡುತ್ತ ಬಿದ್ದು ಮಂಡಿ ತರಿಸಿಕೊಂಡು ಮರದ ಸಂದಿ ಅವಿತು ನಿಂತಿದ್ದೆ. ಬಹಳ ಹೊತ್ತು ನಿಂತೇ ಇದ್ದ ಮೇಲೆ ನಾಲ್ಕೋ ಐದೊ ನವಿಲುಗಳು ಕುಪ್ಪಳಿಸುತ್ತ ಗುಡ್ಡ ಇಳಿದು ಗದ್ದೆಗೆ ಬಂದಿದ್ದವು. ಸೋಜಿಗದಿಂದ ನಾನು ನೋಡುತ್ತ ನಿಂತಾಗ ನನ್ನ ಕಣ್ಣೆದುರೇ ಎಗ್ಗಿಲ್ಲದೆ ಕುಣಿದಿದ್ದವು. ತುದಿಗಾಲ ಮೇಲಿನ ಬೆರಗಿನಲ್ಲೆನ್ನುವಂತೆ ನಿಂತು, ಅಷ್ಟೂ ರೆಕ್ಕೆ ಪುಕ್ಕಗಳನ್ನು ಬಿಚ್ಚಿ ಹರಡಿ, ಬಾವುಟದಂತೆ ಎತ್ತಿ ನೆಟ್ಟಗೆ ನಿಲ್ಲಿಸಿ, ಒಂದೊಂದು ಗರಿಯ ಒಂದೊಂದು ಕಣ್ಣೂ ಕಂಪಿಸುವಂತೆ, ಜಂಬದಿಂದ ಕತ್ತನ್ನೂ ಕಿರೀಟವನ್ನೂ ಎತ್ತಿ ಕುಣಿದಿದ್ದುವು. ಕುಣಿಯುವಾಗ ಗಾಳಿಹೊಕ್ಕ ಬಿದಿರು ಹಿಂಡಿಲಿನಂತೆ ತತ್ತರಿಸುತ್ತ ಕೇಕೆ ಹಾಕಿದ್ದವು. ನಾನು ಯಾವ ಸೋಜಿಗದಿಂದ ಎಷ್ಟು ತತ್ಪರನಾಗಿ ನೋಡುತ್ತ ಗುಡ್ಡ, ಗದ್ದೆ, ಕಲ್ಯಾಣಿ, ಜಾನಕಮ್ಮ, ಅಪ್ಪಯ್ಯ, ಅಮ್ಮ, ತರಿದ ಮಂಡಿ, ಬಚ್ಚಲು ಎಲ್ಲವನ್ನೂ ಮರೆತೆ ಎನ್ನುವುದು ಈಗಲೂ ಮರುಕಳಿಸೀತೆ ಎಂದು ಆಸೆ ಪಡುತ್ತ ನಡೆದೆ. ಅದೇ ಮರದ ಹಿಂದೆ ಅವಿತು ನಿಂತೆ. ಸಿಗರೇಟ್ ಹಚ್ಚಿ ಕಾದೆ. +ಮತ್ತೆ ನವಿಲುಗಳು ಬಂದವು. ಕುಣಿದು ಹೋದವು. ರೈತರಿಗೆ ಈ ನವಿಲುಗಳೊಂದು ಪೀಡೆಯಿರಬೇಕು. ಅವು ಕುಣಿಯುವಾಗ ಗರಿ ಕಳಚಿಬಿದ್ದಿತ್ತು. ನನ್ನ ಮಗಳಿಗೆಂದು ಆ ಗರಿಗಳನ್ನು ಆರಿಸಿದೆ. +ಅವತ್ತೂ ಆರಿಸಿದ್ದೆ. ಈಗ ನೆನಪಾಗುತ್ತೆ. ಥಟ್ಟನೇ ಅನುಮಾನವಾಗುತ್ತೆ. ಇವತ್ತು ಅವು ಕುಣಿದಾಗ ನಾನು ಮೈಮರೆಯದೇ ಇದ್ದುದಕ್ಕೆ ವಯಸ್ಸು ಕಾರಣವಲ್ಲವೆ? ಕಣ್ಣಿನಲ್ಲಿ ಹಿಂದಿದ್ದ ಹೊಳಪು ಈಗ ಇಲ್ಲವಲ್ಲ ಎಂದುಬಿಟ್ಟೇನು. ಆದರೆ ಅವತ್ತು ನಾನು ನಿಜವಾಗಿ ತತ್ಪರವಾಗಿ ನೋಡಿದೆನೊ. ಅಥವಾ ಬಿದ್ದ ಗರಿಯನ್ನು ಪುಸ್ತಕದಲ್ಲಿ ಮರಿ ಹಾಕಲು ಇಡಲು ಎತ್ತಿಕೊಳ್ಳಲೆಂದು ತವಕದಲ್ಲಿ ಕಾದೆನೊ? ಈಗ ತಿಳಿಯಲ್ಲ. ಈ ಜೀವನದಲ್ಲಿ ಯಾವ ಕಾಲವೂ ಪವಿತ್ರವಲ್ಲ ಎನ್ನುವ ತೀರ್ಮಾನಕ್ಕೆ ಬರಲು ಕೂಡ ಇಷ್ಟವಾಗಲ್ಲ. ಈ ನಲವತ್ತರ ಪ್ರಾಯದ ನಾನು ಹಿಂದಿನದನ್ನು ಹೇಗಾದರೂ ಮರುಕಳಿಸಿಕೊಂಡೇನು? ಈಗಿವ ನನಗೂ, ಯಾವತ್ತಿನದೋ ಕಾಲದ ಆ ಬಾಲಕನಿಗೂ ಏನು ಸಂಬಂಧ? ಆಗಲೂ ನಾನು ಹೀಗೇ ಇದ್ದೆ ಎಂದು ಹೇಳೊದು ಸತ್ಯವೊ, ಸುಳ್ಳೊ, ಈಗಿನ ವಿಷಾದವನ್ನು ಪರಿಹರಿಸಿಕೊಳ್ಳುವ ಉಪಾಯವೊ, ಈ ಮನಸ್ಸಿನ ಸೂಕ್ಷ್ಮ ದ್ರೋಹವೋ-ನಾನು ಮುಟ್ಟಿದ್ದು ಯಾವುದೂ ಪವಿತ್ರವಾಗಿ ಉಳಿದಿಲ್ಲವೆನ್ನುವ ಯಾತನೆ ಮಾತ್ರ ನಿಜ. +ಈಗ, ಹೀಗೆ ಹೇಳಿಕೊಳ್ಳುವಾಗ ಅಲ್ಲ; ಹೇಳಿಕೊಳ್ಳಲಾಗದಂತೆ ನೋಯುತ್ತ, ಕಾರಿನ ಬಾಗಿಲು ತೆಗೆದು ಒಳಗೆ ಕೂರುತ್ತಿದ್ದಾಗ ಅನ್ನಿಸಿತ್ತಲ್ಲ ಆ ಯಾತನೆ- ಅದು ನಿಜ. +ಬಾಳೆಗೊನೆ ತೆಗೆದುಕೊಂಡು ಮನೆಗೆ ಬಂದೆ. ಗಂಡನಿಗೆ ತಾನೆಂದರೆ ಎಷ್ಟು ಇಷ್ಟವಿತ್ತೆಂದು ಅಮ್ಮ ನನ್ನ ಹೆಂಡತಿಗೆ ವಿವರಿಸುತ್ತಿದ್ದಳು. ಹೊತ್ತಾಗಿ ಬಂದೆನೆಂದು ಹೆಂಡತಿ ಸಿಟ್ಟಾಗಿದ್ದಳು. ಪುಸ್ತಕದಲ್ಲಿ ಗುರ್ತಿಗಿಡಲು ಚೆನ್ನಾಗಿದೆ ಅಂತ ನವಿಲು ಗರಿ ನೋಡಿ ನನ್ನ ಎಂಟು ವರ್ಷದ ಮಗಳು ಖುಷಿಪಟ್ಟಳು. +ಡಿಸೆಂಬರ್, ೧೯೭೨ ಮೈಸೂರು +ಕೀಲಿಕರಣ: ಸೀತಾಶೇಖರ, ಚೀನಿ +‘ಅಯ್ಯೋ, ನಿನ್ ಸೊಲ್ಲಡ್ಗ, ಸುಮ್ನಿರೋ, ಯಾಕಿ ಪಾಟಿ ವಟ್ಟುರ್ಸ್ಕಂದಿಯೇ, ನನ್ನಾ” : ವತಾರಿಂದ್ಲು. ಇದೇ ಗೋಳಾಗದಲ್ಲಾ’ ’ ಎಂದು ಮಗ ಹೂವನಿಗೆ ಶಾಪ ಹಾಕಿ ಕಣ್ಣು ವಂಡರಿಸಿ ಜೋರು ಸ್ವರದಲ್ಲಿ ಕೂಗಿ ಕೊಂಡಳು. ಹೂವ […] +ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ […] +ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_447.txt b/Kannada Sahitya/article_447.txt new file mode 100644 index 0000000000000000000000000000000000000000..de1a865de0cda85632b5abe1ff32888bbf212a76 --- /dev/null +++ b/Kannada Sahitya/article_447.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು ಅಲ್ಲಾಡ ತೊಡಗಿವೆ. ಚಲನಚಿತ್ರ ಮಾಧ್ಯಮಕ್ಕೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂಬುದನ್ನು ಮರೆತು ತಾಂತ್ರಿಕ ಪ್ರಗತಿಯನ್ನು ಮೂಢನಂಬಿಕೆಗಳನ್ನು ಬಿತ್ತಲು ಬಳಸಿಕೊಳ್ಳಲಾಗುತ್ತಿದೆ. +ಇಂಥ ವೇಳೆ ಕಣಗಾಲ್ ಪುಟ್ಟಣ್ಣ ಹಾಗೂ ಎನ್. ಲಕ್ಷ್ಮೀನಾರಾಯಣ್ ಅಂಥವರು ನೆನಪಾಗುತ್ತಾರೆ. ಈ ಇಬ್ಬರಿಗೂ ಕನ್ನಡ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅಪಾರ ಒಲವಿತ್ತು. ಕಥೆ, ಕಾದಂಬರಿಗಳನ್ನು ಅವರು ಚಿತ್ರ ಮಾಡುವ ಮನ ಮಾಡಿದಾಗ ಸಾರಸ್ವತ ಲೋಕದ ಮಂದಿಯೊಂದಿಗೆ ಚರ್ಚೆ, ವಾಗ್ವಾದ, ಸಂವಾದ ನಡೆಸಿ ಚಿತ್ರಕಥೆಗೊಂದು ರೂಪ ಕೊಡುತ್ತಿದ್ದರು ಅವರು. ಪರಭಾಷಾ ನಟ-ನಟಿಯರಿಗೆ ನಿರ್ದೇಶಕರಿಗೆ ಕಣಗಾಲರು ಮಾದರಿ ಎನ್ನುವಂತಹ ದಿನಗಳು ಅವು. +ಕು.ರಾ.ಸೀ., ಕಣಗಾಲ್ ಪ್ರಭಾಕರಶಾಸ್ತ್ರಿ, ವಿಜಯ ನಾರಸಿಂಹ, ಉದಯಶಂಕರ್‍ ಮುಂತಾದವರು ಚಿತ್ರಗೀತೆಗಳನ್ನು ಬರೆಯತೊಡಗಿದಾಗ ಆ ಸಾಲುಗಳಲ್ಲಿ ಲಿರಿಕಲ್ ಕ್ವಾಲಿಟೀಸ್ ಕಾಣಬಹುದಿತ್ತು. ಆದರೀಗ ಕನ್ನಡದ ಅ-ಆ-ಇ-ಈ ಓದಲೂ ಬಾರದ ಮಂದಿ ಸಾಹಿತ್ಯದ ರಚನೆಗಿಳಿಯುವ ದಿನ ಬಂದಿದೆ. ಹಾಕಿದ್ದೇ ಮಟ್ಟು-ಹಾಡಿದ್ದೇ ರಾಗ ಎಂದಾದ ಮೇಲಂತೂ ಪ್ರಾಸದ ಸಲುವಾಗಿ ಎಲ್ಲ ಭಾಷೆಗಳ ಸಾಲುಗಳನ್ನು ಹಾಡುಗಳಿಗೆ ಅಟಕಾಯಿಸಿ ಆಗ ಕೇಳಿ ಅಲ್ಲೇ ಮರೆಯಬಹುದಾದಂಥ ಗೀತೆಗಳನ್ನು ಹೇರಲಾಗುತ್ತಿದೆ. ಕನ್ನಡ ಚಿತ್ರರಂಗದ ಉದ್ಧಾರದ ಹೆಸರಿನಲ್ಲಿ ಕನ್ನಡದ ಕಗ್ಗೊಲೆ ನಡೆಯುತ್ತಿದೆ. +ಕಣಗಾಲರ ‘ಗೆಜ್ಜೆಪೂಜೆ’ ಎಂ.ಕೆ. ಇಂದಿರಾ ಅವರ ಕೃತಿಯಾಧಾರಿತ ಚಿತ್ರ. ಅಂಥ ವಸ್ತು ಈಗಿನ ನಿರ್ದೇಶಕರ ತೆಕ್ಕೆಗೆ ಬಂದಲ್ಲಿ ಅದೊಂದು ಸೆಕ್ಸ್ ಚಿತ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಸೂಕ್ಷಜ್ಞತೆ, ನವಿರು ಭಾವನೆಗಳಿಗೆ ಕಣಗಾಲ್, ಎನ್ನೆಲ್ ಮುಂತಾದವರು ಹೆಚ್ಚು ಮಹತ್ವವಿತ್ತರು ಗೀತಪ್ರಿಯ, ಎಂ.ಆರ್‍.ವಿಠಲ್, ಆರ್‍. ನಾಗೇಂದ್ರರಾವ್, ಸಿದ್ದಲಿಂಗಯ್ಯ ಮುಂತಾದವರು. ಅಂಥ ಟ್ರೆಂಡ್ ಮುಂದುವರೆಸಿ ಚಿತ್ರದ ಮೂಲಕ ಜನಜಾಗೃತಿಗೂ ನೆರವಾಗುತ್ತಿದ್ದರು. ಈಗ ಎಲ್ಲಿ ನೋಡಿದರೂ ಅಂಥ ಭಾವನೆಗಳಿಗೆ ಎಳ್ಳುನೀರು ಬಿಟ್ಟವರೇ ಕಾಣುತ್ತಿದ್ದಾರೆ. ಎಲ್ಲೋ ಅಲ್ಲೊಬ್ಬ-ಇಲ್ಲೊಬ್ಬ ಸುನಿಲ್‌ಕುಮಾರ್‍ ದೇಸಾಯಿಯಂಥವರನ್ನು ಕಾಣಬಹುದಷ್ಟೆ. +ಕೊಂಚ ಕಾಮಿಡಿ ಸೆನ್ಸ್ ಇರುವ ಎಸ್. ನಾರಾಯಣ್ ಅಂಥ ನಿರ್ದೇಶಕರು ಹಣ ಬಾಚಿಕೊಳ್ಳುವುದೇ ಗುರಿಯಾದಾಗ ರೀಮೇಕ್ ರಾಜನೆಂದು ಹೆಸರಾಗ ಹೊರಟರು. ಒಂದೆರಡು ಚಿತ್ರಗಳಲ್ಲಿ ಜನ ತಮ್ಮ ಡೈಲಾಗ್‌ಗೆ ಚಪ್ಪಾಳೆ ತಟ್ಟಿ-ಶಿಳ್ಳೆ ಹಾಕಿದಾಗ ನಾಯಕನಾಗ ಹೊರಟು ಬಿಡುವು ಸಿಕ್ಕಾಗ ಮೆಗಾ ಟೀವಿ ಧಾರಾವಾಹಿ ಮಾಡುವೆ ಎನ್ನುತ್ತ-ಟೆಲಿಫೋನ್ ಮೂಲಕ ಡೈಲಾಗ್ ಡಿಕ್ಟೇಟ್ ಮಾಡುತ್ತ ತಮ್ಮ ಜವಾಬ್ದಾರಿ ಮರೆತರು. ಕೋಡ್ಲು ರಾಮಕೃಷ್ಣರೂ ರೀಮೇಕ್‌ಗೆ ಅಡಿಕ್ಟಾಗಿ ತನ್ನತನ ಸಂಪೂರ್ಣ ಕೈಬಿಟ್ಟರು. +ನಾಗಾಭರಣರಿಗೆ ಒಳ್ಳೆ ಕಾನ್‌ಸೆಪ್ಟ್‌ಗಳ ಸಲುವಾಗಿ ಲೇಖಕರ ಬಳಗ ಬೇಕು. ಅಂತಿಮವಾಗಿ ಅದೊಂದು ರೂಪು ಪಡೆಯುತ್ತ ಹೋದಾಗ ‘ಯಾರು ಬೇಕಿಲ್ಲ’ ಎಂಬಂತಾಗಿ ಕೂತಿರುವುದು ಒಂದು ದುರ್ದೈವ. ಇಂಥ ವೇಳೆ ಯಾವ ಗುಂಪಿಗೂ ಸೇರದೆ ತಮ್ಮದೇ ಧಾಟಿಯಲ್ಲಿ ಚಿಂತಿಸುವ ಗಿರೀಶ್ ಕಾಸರವಳ್ಳಿ ಒಂದು ದ್ವೀಪವಾಗಿ ಹೋಗಿದ್ದಾರೆ. ಒಂದು ರೀತಿ ಹಾಗಾಗಿರುವುದೇ ಒಳಿತೇನೋ ಅನಿಸುತ್ತದೆ. ತಮ್ಮ ಮನಸ್ಸಿಗೊಪ್ಪುವ ವಿಭಿನ್ನ ಕಥಾನಕವನ್ನಾಯ್ದು – ಸೃಜನಶೀಲತೆಗೆ ಹೆಚ್ಚು ಒತ್ತು ನೀಡುವ ಅವರ ಪ್ರಯತ್ನದಲ್ಲಿ ‘ಹೋಮ ವರ್ಕ್’ಗೆ ಹೆಚ್ಚು ಪ್ರಾಧಾನ್ಯ ಇದೆ. ಹಣ ಹಾಕುವವರೊಬ್ಬರು ಸಿಕ್ಕಿದರೆಂದು ‘ದಿಢೀರ್‍’ ಚಿತ್ರ ನಿರ್ಮಾಣಕ್ಕೆಂದೂ ಅವರು ಇಳಿಯುವುದಿಲ್ಲ. ಪಾತ್ರಗಳ ಆಯ್ಕೆಗೆ ಅವರು ಹೆಚ್ಚು ಗಮನ ನೀಡುವುದರಿಂದಾಗಿ ಹೊಸ ಪ್ರತಿಭೆಗಳು ಬೆಳಕಿಗೆ ಬರುವುದು ಸಾಧ್ಯ. +ಎಂ.ಎಸ್. ರಾಜಶೇಖರ್‌ಗೆ ಸದಭಿರುಚಿಯ ಚಿತ್ರ ತೆರೆಗೀಯುವ ಹಂಬಲವಿದೆ. ಅಂಥ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ. ಆದರೆ ರೀಮೇಕ್ ಪ್ರವಾಹ ಎದುರಾದಾಗ ತನ್ನ ಕಾಲಮೇಲೆ ತಾನು ನಿಂತು ಎದುರು ಈಜು ಹೊಡೆಯಲು ಹಿಂತೆಗೆದು ಪ್ರವಾಹದೊಂದಿಗೆ ಈಜ ತೊಡಗಿದ್ದಾರೆ. +ಹಿಂದೆ ಕಾರ್ನಾಡ್, ಕಾರಂತ್, ಎಂ.ಎಸ್. ಸತ್ಯು, ಜಿ.ವಿ. ಅಯ್ಯರ್‍, ವಿ.ಆರ್‍.ಕೆ. ಪ್ರಸಾದ್, ಕಂಬಾರ, ಲಂಕೇಶ್, ಪಟ್ಟಾಭಿರಾಮ ರೆಡ್ಡಿ ಮುಂತಾದವರು ಚಿತ್ರ ತೆಗೆಯುತ್ತಾರೆ ಎಂದರೆ ಅದರಲ್ಲಿ ಭಾಗವಹಿಸುವ ಆಕಾಂಕ್ಷೆ ಕಲಾವಿದರಲ್ಲಿ ಅತಿಯಾಗಿರುತ್ತಿತ್ತು. ಅದೇ ರೀತಿ, ಕಣಗಾಲ್, ಎನ್ನೆಲ್ ಅವರ ಚಿತ್ರಗಳಲ್ಲಿ ಭಾಗವಹಿಸಲು ಕಲಾವಿದರು ಮುಂದಾಗುತ್ತಿದ್ದರು. ‘ಕಾಡು’ ಚಿತ್ರದಲ್ಲಿ ಭಾಗವಹಿಸಬೇಕೆಂದು ಕಾರ್ನಾಡ್ ನನ್ನನ್ನೊಮ್ಮೆ ಕೇಳಿದರು. ಆಗ ನಾನು ಆಕಾಶವಾಣಿ ಕಲಾವಿದನಾಗಿದ್ದೆ. ಆಕಾಶವಾಣಿ ನಿರ್ದೇಶಕರ ಅನುಮತಿ ಬೇಕೆಂದಾಗ ಕಾರ್ನಾಡರೇ ಬಂದು ಪರವಾನಿಗೆ ಪಡೆದರು. ಅಲ್ಲಿ ಹಣ ಮುಖ್ಯವಾಗಿರಲಿಲ್ಲ. ಆ ಬ್ಯಾನರ್‌ನಲ್ಲಿ ಅಭಿನಯಿಸುವುದೊಂದು ಹೆಮ್ಮೆ ಎನಿಸಿತ್ತು ನನಗೂ. ಅದೇ ವೇಳೆ ‘ಎನ್ನೆಲ್’ ತಮ್ಮ ಚಿತ್ರದಲ್ಲೂ ಒಂದು ಪಾತ್ರವಿದೆ ಎಂದರು. ಎರಡೂ ಕ್ಲ್ಯಾಶ್ ಆದುದರಿಂದ ನಾನು ಎನ್ನೆಲ್ ಚಿತ್ರದಲ್ಲಿ ಮಾಡಲಾಗಿಲಿಲ್ಲ. ಆದರೂ ಅವರು ಇರುವವರೆಗೆ ನಮ್ಮೆಲ್ಲ ಕಾರ್‍ಯಕ್ರಮಕ್ಕೆ ಬರುತ್ತಿದ್ದರು. ಪ್ರೀತಿ, ವಿಶ್ವಾಶ ಉಳಿಸಿಕೊಂಡರು. ಕಣಗಾಲರು, ವೀರಾಸ್ವಾಮಿ ಮುಂತಾದವರು ತೋರಿದ ಪ್ರೀತಿ ನಾನು ಇಂದಿಗೂ ಮರೆಯಲಾರೆ. ಬಂಗಾರದ ಮನುಷ್ಯ ಶತದಿನೋತ್ಸವವಾದಾಗ ಆಕಾಶವಾಣಿ ಈರಣ್ಣನಾನೇ ಮಾತನಾಡಬೇಕೆಂಬ ಪ್ರೀತಿ ತೋರಿದರು ಕೆ.ಸಿ.ಎನ್. ಗೌಡರು. ಅದೇ ಪ್ರೀತಿ ತೋರಿದವರು ಎನ್. ವೀರಾಸ್ವಾಮಿ. ನಾನೊಬ್ಬ ನರೇಟರ್‍ ಆಗಿ ರೂಪುಗೊಂಡದ್ದೇ ಅವರ ಪ್ರೀತಿಯಿಂದ. +ಈಗ ಪ್ರೀತಿಯ ಸರೋವರ ಬಗ್ಗಡವಾಗಿದೆ. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಫಿಲಂ ಚೇಂಬರ್ಸ್ ಎಲ್ಲೆಡೆ ಹಮ್ಮು-ಬಿಮ್ಮುಗಳು ಅತಿಯಾಗಿ ‘ಅಹಂ’ – ಎಗೋ ಎಲ್ಲರನ್ನೂ ಕಾಡುತ್ತಿದೆ. ಪ್ರಜಾಪ್ರಭುತ್ವ ಮಾಯವಾಗಿ ಡಿಕ್ಟೇಟರ್‌ಷಿಪ್ ತಲೆ ಎತ್ತುತ್ತಿದೆ. +ಈಗ ಚಿತ್ರರಂಗದ ಉದ್ಧಾರ ಯಾರಿಗೂ ಬೇಕಿಲ್ಲ. +‘ನಾನುದ್ಧಾರವಾದರೆ ಸಾಕು’ ಎಂಬಂಶವೇ ಪ್ರಧಾನವಾಗಿ ಒಬ್ಬರನ್ನೊಬ್ಬರು ತುಳಿಯುವ ನಯವಂಚಕತನ ಎಲ್ಲೆಲ್ಲೂ ತಲೆಯೆತ್ತಿದೆ. ಪರಭಾಷಾ ನಟೀಮಣಿಯರಿಗೆ ಮೊದಲ ಮನ್ನಣೆ ನೀಡುವ ನಿರ್ಮಾಪಕ-ನಿರ್ದೇಶಕರು ಅತಿಯಾಗಿದ್ದಾರೆ. ಕಣಗಾಲರಂತೆ ನಮ್ಮಲ್ಲಿಯೂ ಪ್ರತಿಭೆಗಳನ್ನು ಕೆತ್ತಿ ಸುಂದರ ಶಿಲ್ಪಿ ಕಡೆಯಬಲ್ಲ ನಿರ್ದೇಶಕರ ಅಭಾವ ಅತಿಯಾಗಿದೆ. +ಹಣವೊಂದೇ ಪ್ರಧಾನ ಎಂಬ ದಿನ ಹೋಗಿ – ಒಳ್ಳೆ ಚಿತ್ರ ಮಾಡಬಯಸುವವರನ್ನು ದುರ್ಬೀನು ಹಾಕಿ ಹುಡುಕಬೇಕಿದೆ. +ಮುಂಚಿನ ಪಾರ್ಟಿಗಳಿಗೂ ಈಗಿನ ಪಾರ್ಟಿಗಳಿಗೂ ಸಂಬಂಧವೇ ಇಲ್ಲ. ಈಗೆಲ್ಲಾ ಮೆಕಾನಿಕಲ್, ಮೆಚ್ಚಿದರೆ ಸಂತೋಷ. ಇಲ್ಲವಾದಲ್ಲಿ ‘ದಂಡಂ ದಶಗುಣಂ ಭವೇತ್’ ಎನ್ನುವಂಥ ದಿನ. ಇಂಥ ಸಂದರ್ಭ ಕುರಿತು ಚಿಂತಿಸುವಾಗ ‘ಎಲ್ಲಿ ಹೋದವು ಈ ದಿನ’ ಎನಿಸುತ್ತದೆ. ಮತ್ತೆ ಅಂಥ ದಿನ ಬಂದೀತೆ….? +***** +(೧೭-೮-೨೦೦೧) +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_448.txt b/Kannada Sahitya/article_448.txt new file mode 100644 index 0000000000000000000000000000000000000000..3e907d67cdb60d9c56fbda3749dd1fd90e1acb68 --- /dev/null +++ b/Kannada Sahitya/article_448.txt @@ -0,0 +1,699 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧. ಪ್ರಾರ್ಥನೆ +ಓಂ ಪ್ರಥಮದಲ್ಲಿ +ಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದು +ನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿ +ಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ. +ನಾವು ಕನಸುಗಳು, +ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವ +ಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ, +ಆದಿಮ ಕಾಲದಿಂದ ಹಾಂಗೇ ಉಳಿದು ಬಂದಿರುವ ಕನಸುಗಳು- +ಮಹಾಶಿವರಾತ್ರಿಯಂದು, ಸಂಜೆ ಸಾಯಂಕಾಲವಾದೇಟ್ಗೆ +ಯಕ್ಷಿಗುಡಿಯಲ್ಲಿ ಸೇರಿ, +ಸಾವಳಗಿ ಶಿವನ ಜಡೆಯಂಥ ಅಮಾವಾಸ್ಯೆ ಅಂಧಂತಮಸ್ಸಿನಲ್ಲಿ +ಚಂದಮುತ್ತನೆಂಬ ಹೆಸರಾಂತ ಕಲಾವಿದನ ಕಥೆಯ +ನಾವು ಹೇಳಿ ಶಿವನು ಕೇಳಿ +ಜಾಗರಣೆ ಮಾಡುತ್ತೇವೆ; ಭಕ್ತಿಯಿದ್ದವರು ಬನ್ನಿರಯ್ಯಾ. +ಮೆಲುಕಾಡಿಸುವ ಎದುರು ಬಸವನ ಮ್ಯಾಲೆ +ಕುಂತಾಲಿಸುವ ಹಂಪಿಯ ವಿರೂಪಾಕ್ಷನ ಪಾದ +ಮತ್ತು ಪಂಪಮ್ಮನ ಶ್ರೀಪಾದಂಗಳ ಹೊತ್ತ +ಚಂದ ಮುತ್ತಾ ನಿನ್ನ ಪಾದಕ್ಕೂ ಶರಣು. +ಸಾವಳಗಿ ಮಠದ ಸಿದ್ಧರಾಮೇಶ್ವರ ಸ್ವಾಮಿಗಳ ಶ್ರೀಪಾದಂಗಳ ಹೋತ್ತು +ವಿಶ್ವಕರ್ಮ ಕುಲದ +ತಂದೆ ಕಂಬಾರ ಬಸವಣ್ಣೆಪ್ಪ ಮತ್ತು +ತಾಯಿ ಚನ್ನಮ್ಮ ಅವರ ಪಾದಂಗಳಿಗೆ ನಮಿಸಿ +ಕವನ ಮಾಡಿ ಹಾಡುತ್ತೇವೆ. +ಶಿವನ ಕಾಣದಿದ್ದವರೆಲ್ಲ +ಕಂಡವನ ಕತೆಯ ಕೇಳ ಬನ್ನಿರಯ್ಯಾ. +ಹೇಳುವವರು ಸಾವಿರ ಬಾರಿ +ಕೇಳುವವರು ಸಾವಿರ ಬಾರಿ +ಶಿವಶಿವಾ ಎಂದು ಹೇಳಿ ಕೇಳಿದರೆ +ಕರ್ಮ ಪರಿಹಾರ ಸಂಕಲ್ಪಸಿದ್ಧಿ ಎಂದು +ಸ್ವಯಂ ಶಿವಲಿಂಗನ ಭಾಷೆಯಿದೆ ಬನ್ನಿರಯ್ಯಾ. +ಸಾವಿರ ಬಾರಿ ಚಂದಮುತ್ತನ ಕಥೆಯ +ಹೇಳಿದ್ದೇವೆ ಕೇಳಿದ್ದೇವೆ ಶಿವಾ, +ಸಾವಿರ ಬಾರಿ ಚಂದಮುತ್ತನ ಹಾಡ +ಬಾಳಿದ್ದೇವೆ ಬದುಕಿದ್ದೇವೆ ಶಿವಾ, +ಬರುವ ಜನ ಬಾಳಲೆಂದು ಬದುಕಲೆಂದು +ಇನ್ನೊಮ್ಮೆ ರಾಗ ರಚನೆ ಕಟ್ಟಿ +ಕವಿಮಾಡಿ ಪದ ಹಾಡುತ್ತೇವೆ,- +ಸಾವಳಗಿ ಶಿವಲಿಂಗ ಮೆಚ್ಚಿ ಹೌಂದು ಹೌಂದೆನುವಂತೆ, +ಭಕ್ತಾದಿಗಳ ಹೃದಯಗಳಲ್ಲಿ ಆಳವಾಗಿಳಿವಂತೆ +ಇಳಿದಿದ್ದು ಹೊಳೆವಂತೆ. +ನಮ್ಮ ಹಾಡು ಹೂಪತ್ರಿಯಾಗಿ ಸುರಿಯಲಿ ಸ್ವಾಮಿ +ನಿನ್ನ ಶ್ರೀಪಾದಂಗಳ ಮ್ಯಾಲೆ, +ಭಕ್ತರ ಹೃದಯಂಗಳ ಮ್ಯಾಲೆ. +೨ . ಇಂತಿದು ಪ್ರಸ್ತಾವನೆ +ಶಿವಲೋಕವೆಂಬ ಬೆಳಕಿನ ಮಿರಿಲೋಕ, ಅಖಂಡವಾಗಿದ್ದ ಆದಿಮಕಾಲದಲ್ಲಿ ಜಪತಪ ಮಾಡಿಕೊಂಡು ಶಿವದೇವರು ಏಕಾಂಗಿ ಸುಖವಿದ್ದರು. ಆರೂ ಅನಂತಕಾಲ ಜಪತಪ ಮಾಡಿ ಮಾಡಿ ಬೇಸರವಾಗಿ ವಿನೋದಕ್ಕೆಂದು ತಮ್ಮ ನಡಿನಲಿ ಕಟ್ಟಿಕೊಂಡಿದ್ದ ಅಮೃತಗಿಂಡಿಯಲ್ಲಿ ಮುಖ ನೋಡಿಕೊಂಡಾಗ ಆಹಾ ತಾನೆಂಥ ಚೆಲುವನೆಂದು ಘನಾನಂದವಾಗಿ ಅದೇ ಮಾದರಿಯಲ್ಲಿ ತಮ್ಮ ವಾಮಾಂಗವ ಕಿತ್ತು ಇನ್ನೊಂದು ಮೂರ್ತಿಯ ಮಾಡಿ ಆದಿಮಾಯಿಯೆಂದು ನಾಮಕರಣವ ಕೂಗಿ ಅವಳೊಂದಿಗೆ ಕ್ರೀಡಿಸಿದರು. ಸೀಳಿಕೊಂಡ ಗಾಯದ ಮ್ಯಾಲೆ ಅಮೃತವ ಸುರಿದುಕೊಂಡು ಮಾಯಿಗೆ ನೀಡಿ ನೀನೂ ಸುರಿದುಕೊ ಎಂದರೆ ಅವಳ ಕೈಜಾರಿ ಕೆಳಗೆ ಚೆಲ್ಲಿಕೊಂಡುದರಿಂದ ಶಿವದೇವರು ಕೋಪಗೊಂಡು ಅಮೃತವ ವಿನಿಯೋಗಿಸುವ ವಿವೇಕ ಮತ್ತು ವಯಸ್ಸು ಬೆಳೆಯುವ ತನಕ ಸುಮ್ಮನಿರೆಂದು ಹೇಳಿ ಒಳಮನೆಯಲ್ಲಿ ಅಮೃತದ ಗಿಂಡಿಯ ಭದ್ರವಾಗಿಟ್ಟು,-“ಎಲೌ ಆದಿಮಾಯಿಯೇ, ನೀನು ಬೇಕೆನಿಸಿದಂತೆ ಆಡಿಕೊಂಡಿರು. ಆದರೆ ಅಂಧಂತಮಸ್ಸಿನ ಒಳಮನೆಯ ಬಾಗಿಲನ್ನು ಮಾತ್ರ ತೆರೆಯಬ್ಯಾಡೆಂ”ದು ತಾಕೀತು ಮಾಡಿ ಜಪಕ್ಕೆ ಕುಂತರು. +ಇಂತೀರೀತಿ ಶಿವದೇವರು ಕಣ್ಣುಮುಚ್ಚಿರುವಲ್ಲಿ ಆತುರ ತಾಳದ ಆದಿಮಾಯಿಯು ಒಳಮನೆಯ ಬಾಗಿಲು ತೆಗೆದಳು ನೋಡು- +ಒಳಗೆ ಹಿಡಿದಿಟ್ಟ ಅಂಧಂತಮಸ್ಸು ಭುಸ್ಸೆಂದು ಹೊರನುಗ್ಗಿಬೆಳಕಿನ ಲೋಕಲೋಕಾಂತರವ ವ್ಯಾಪಿಸತೊಡಗಿತು. ಶಿವದೇವರಿಗಿದು ಗೊತ್ತಾಗಿ ಉಳಿದಿರುವಷ್ಟು ಲೋಕವನ್ನಾದರೂ ಕಾಪಾಡಿಕೊಳ್ಳೋಣವೆಂದು ಕತ್ತಲಾವರಿಸಿದಷ್ಟು ಶಿವಲೋಕವ ಸೀಳಿ ಕೆಳಕ್ಕೆ ತಳ್ಳಿದರು. ಕಾಪಾಡು ಶಿವನೇ ಎಂದು ಕಿರಿಚುತ್ತ ಇನ್ನೂ ಒಳಮನೆಯಲ್ಲೇ ಇದ್ದ ಆದಿಮಾಯಿಯೂ ಅಂಧಂತಮಸ್ಸಿಗಂಟಿದ ಲೋಕದೊಡನೆ ಕೆಳಕ್ಕೆ ಬಿದ್ದಳು. +ಕತ್ತರಿಸಿ ಬಿದ್ದ ಕೀಳರ್ಧ ಲೋಕವೇನಾಯಿತೆಂಬುದು ಎಲ್ಲಿಯೂ ಕಾಣಬರಲಿಲ್ಲವಾಗಿ ಶಿವದೇವರು ತಮ್ಮ ಹಣೆಗಣ್ಣಿನ ಒಂದು ಕಿಡಿಗೆ ಸೂರ್ಯನೆಂದು ನಾಮಕರಣವ ಕೂಗಿ ಆದಿಮಾಯಿಯ ಶೋಧಿಸಿಕೊಂಡು ಬಾ ಎಂದು ಹೇಳಿ ಕಳಿಸಿದರು. ಅವನು ಶೋಧನೆ ಮಾಡಿ ಮಾಡಿ ದಣಿದು ವಿಶ್ರಾಂತಿ ತಗೊಂಡು ಮತ್ತೆ ಶೋಧನೆ ಮಾಡುತ್ತಿದ್ದ. ಇಂತಿರುವಲ್ಲಿ ಅವನು ಹುಡುಕಿದ್ದು ಹಗಲಾಗಿ ದಣಿವಾರಿಸಿಕೊಂಡದ್ದು ರಾತ್ರಿಯಾಯಿತು. ಇಂತೀರೀತಿ ದಿನವಾರ ಋತುಮಾನ ಮಾಸ ವರುಷಂಗಳಾಗಿ, ಯುಗಜುಗಂಗಳಾಗಿ ಕಾಲನ ವ್ಯವಹಾರ ನಿರಂತರ ನಡೆಯಿತು. +ಇತ್ತ ಅಂಧಂತಮಸ್ಸಿನ ಕೀಳರ್ಧ ಶಿವಲೋಕದಲ್ಲಿದ್ದ ಆದಿಮಾಯಿ ನೋಡಿಕೊಂಡರೇನಿದೆ? ಮ್ಯಾಲೆ ನೋಡಿದರೆ ಬಾನಾಯಿತು, ಕೆಳಗೆ ನೋಡಿದರೆ ತಾನಾಯಿತು. ಶಿವನಿಂದ ಸೀಳಿಕೊಂಡ ಗಾಯವಿನ್ನೂ ಹಾಂಗೇ ಉರಿಯುತ್ತಿದೆ. ಶಿವನೇ ಇನ್ನೆಂದಿಗೆ ನಿನ್ನೊಂದಿಗೆ ಒಂದಾದೇನೆಂದು ಮ್ಯಾಲೆ ನೋಡಿ ತನ್ನಲ್ಲಿ ತಾ ಮಿಡುಕಿ ಬಡವಿಯಾದಳು. ಬಗೆಬಗೆಯ ಶೋಕಂಗಳ ಶೋಕಿಸುತ್ತ ಯುಗಯುಗಾಂತರ ಕಳೆದು ಅಮೃತ ಕುಡಿಯದ ಅವಳ ದೇಹ +ಕುಸಿದು ಅಸುನೀಗಿ ಬಿದ್ದಲ್ಲಿ ನೋಡು ಶಿವಾ, +ಮಾಯಿಯ ಉಬ್ಬಿದವಯವಂಗಳ +ಗಿರಿಬೆಟ್ಟ ಪರ್ವತಂಗಳಾಗಿ, +ಬೆವರುಜಲ ಕಣ್ಣೀರು +ಹೊಳೆಹಳ್ಳ ಮಳೆಗಳಾಗಿ, +ಅವಳುಸಿರು ಗಾಳಿಯಾಗಿ, +ಮರ್ತ್ಯಲೋಕ ಮೊದಲಾಯಿತೆಂಬಲ್ಲಿ ಗತಿಸಿಹೋದವು +ಆರುಮೂರು ಒಂಬತ್ತು ಅನಂತಕಾಲಂಗಳು. +ಆಮೇಲೆ ಆದಿಮಾಯಿ ಧರಣಿಮಂಡಳ ಮಧ್ಯದಲ್ಲಿ ಪುಣ್ಯಕೋಟಿ ಎಂಬ ಹಸುವಿನ ಅವತಾರ ತಾಳಿ ಇರುವೆ ಮೊದಲು ಆನೆ ಕಡೆಯಾಗಿ ಒಟ್ಟು ಚೌರ್‍ಯಾಂಸಿ ಲಕ್ಷ ತಿರ್ಯಕ್ ಜಂತುಜಾಲಕ್ಕೆ ಜನನ ನೀಡಿದಳು. ಅದು ಹೆಂಗೆಂದರೆ: +ಆದಿಯಲ್ಲೊಂದು ಕಾಡು +ಕಾಡಿನಲ್ಲೊಂದು ಗವಿ +ಗವಿಯಲ್ಲೊಂದು ಪಡ್ಡೆ ಕರು ಪುಣ್ಯಕೋಟಿ +ಅಂದರೆ ನಮ್ಮ ಕಥಾನಾಯಕಿ, +ಸಂತಾನವಿಲ್ಲದ ಸಂತಾಪದಿಂದ +ಮೌನದಿಂದ ತುಂಬಿದ ಹಗಲುಗಳಿಂದ +ನಿದ್ರೆಯಿಂದ ತುಂಬಿದ ರಾತ್ರಿಗಳಿಂದ +ಬೋರಾಗಿ ಬೇಸರಗೊಂಡು ಮಲಗಿರಲಾಗಿ +ಸದರಿ ಕರುವಿಗೊಂದು ಕನಸಾಯ್ತು. +ಆಕಾಶ ನೀಲಿಮದಲ್ಲಿ +ಮಾಯದ ಬೆಳ್ಳಿಯ ಗಿಂಡಿ, ಫಳ್ಳನೆ ಹೊಳೆದು +ಬೆಳ್ದಿಂಗಳ ಹಾಲು ಸುರಿದು ಮರೆಯಾಯ್ತು. +ಆದಿಮದ ಬೆದೆ ಕೆರಳಿ +ಚಿತ್ತವೈಕಲ್ಯವುಂಟಾಗಿ ಚಡಪಡಿಸಿ +ಎಚ್ಚೆತ್ತಳು ಹೆಣ್ಣು ಪುಣ್ಯಕೋಟಿ. +ಆಮೇಲಾಮೇಲೆ ಕಾಡಿನ ಕಥೆಗೆ +ಮಬ್ಬು ಕವಿಯಿತು ನೋಡು: +ಕೆಂಗಣ್ಣಿಂದ ತುಂತುರು ಹನಿ ಉದುರಿಸುತ್ತ +ಮೈಮರೆತು ಮ್ಯಾಲೆ ನೋಡುತ್ತ +ಬೆಳ್ಳಿಗಿಂಡಿಯ ಪಡೆವ ಯೋಗ ಹ್ಯಾಗೆ ಒದಗೀತೆಂದು +ಅಂತರಂಗದ ಒಳಗೊಳಗೇ ಚಿಂತಿಸುತ್ತ +ಏಕಾಂತ ಕುಂತಳು ಕಾಂತೆ +ಕೊಂಬಿಂದ ಗವಿಯ ಗೋಡೆಯ ಮ್ಯಾಲೆ ಗೀರುತ್ತ. +ಏನೇನೊ ಗೀಚಿದಳು: +ಹೂಹಣ್ಣು ಹೆರುವ ತರುಮರ ಬರೆದಳು. +ಚಿಲಿಪಿಲಿ ಹಕ್ಕಿಯ ಬರೆದಳು. +ಮ್ಯಾಲಿನ ಮಿರಿಲೋಕದ ಆಕಾಶವೆಂಬ ಗೋಮಾಳದಲ್ಲಿ +ಬೆಟ್ಟದೆತ್ತರ ಹೋರಿಯ ಚಿತ್ರ ಚಿತ್ತಾರ ಬರೆದು +ಶಿವಭಕ್ತಿ ಶಿವಾಚಾರ ಮಾಡಿದಳು. +ಶಿವಾಚಾರ ಮಾಡಿದ್ದೇ ಆಯ್ತು ನೋಡು: +ಹೋರಿಯ ಚಿತ್ರ ಚಿತ್ತಾರದಲ್ಲಿ +ಆಕಾಶ ನಂದೀಶನ ಆವೇಶ ಅವತಾರವಾಗಿ +ಹಣೆಯಲ್ಲಿ ಕಿಡಿಗಣ್ಣಿನ ಜೋಗಿಜಂಗಮ ಹೋರಿ +ಗಲಿರು ಗಲಿರು ಅಂತ ಜಂಗವ ನುಡಿಸುತ +ಕಣ್ಣಿಂದ ಕೆಂಗಿಡಿಗಳ ಕಾರುತ, ಅರಳಿದಳ್ಳೆಗಳಿಂದ ಹೊಗೆಯ ಉಗುಳುತ +ಲಾಲು ಕೆದರಿ ಬೆಟ್ಟದೆತ್ತರ ಧೂಳೆಬ್ಬಿಸಿ +ಢುರುಕಿ ಹೊಡೆಯುತ ಹೊಂಚುತ ಹೊಂಚುತ ಏಕಾ‌ಏಕಿ +ಮಿಂಡೆದ್ದ ಮಣಕಿನ ಮೈಮ್ಯಾಲೇರಿ ಹೋ ಹಾರಿ +ಮೈಯಂತ ಮೈಮುರಿದು +ನಡಿನಲ್ಲಿದ್ದ ಬೆಳ್ಳಿಗಿಂಡಿಯ ಹಾಲು ಮೈತುಂಬ ಸುರಿದು +ಆಕಾಶವನಡರಿ ಮಟಾಮಾಯವಾಯಿತು! +ಮೈ ಅದುರಿ ಗಮ್ಮಂತ ಬೆವರಿ +ಸಳಸಳ ಮೈಜಲವಿಳಿದು ಸ್ಮೃತಿಗೆ ಬಂದಳು ಮಹಾತಾಯಿ. +ಚೆಲ್ಲಿದ ಹಾಲು ಮಡಕೆಯಲಿ ಕೂಡಿಟ್ಟು +ಹೆಪ್ಪು ಹಾಕಿ ನೆಲವಿನ ಮ್ಯಾಲಿಟ್ಟು +ಕಾದು ಕುಂತಳು. +ಈ ಮಧ್ಯೆ ತರುಮರ ಬೆಳೆಗಳಿಗೆ ತಾಯಾಗಿ +ಪುಣ್ಯಕೋಟಿ ಹಸುವಾಗಿ ಹಸಿರುಧರ್ಮ ಹಬ್ಬಿಸಿದಳು. +ಒಂದಕ್ಕಿನ್ನೊಂದು ಹೀಗೇ ನೂರೊಂದು ಜೀವರಾಶಿಯ ಪಡೆದು +ಚಿಲಿಪಿಲಿ ಪ್ರಪಂಚವ ಕಟ್ಟಿ ಹೆಸರಿಟ್ಟಳು. +ಆಮೇಲಾಮೇಲೆ ಚೌರಾಂಸಿ ಲಕ್ಷ ತಿರ್ಯಕ್ ಜಂತುಜಾಲ ಜನನವಾಗಿ ಎಲ್ಲಾ ಜೀವರಾಶಿಗೆ ಹಸಿವೆ ಹಾಹಾಕಾರವಾಗಿ ನಮ್ಮೀ ಧರಣಿ ಗೋಳು ಬೀಸುವ ಗಿರಣಿಯಾದ ಪ್ರಸ್ತಾವದಲ್ಲಿ ಆದಿಮಾಯಿ ತಾನೇನು ಮಾಡಿದಳೆಂದರೆ- +ಮಕ್ಕಳ ಕಾಪಾಡಲು ಹಾಲು ನೆತ್ತರು ಸುರಿದು ಸುಸ್ತಾಗಿ, ಮೈ ಬರಿದಾಗಿ ಹನ್ನೆರಡಾಳುದ್ದದ ಪಾತಾಳ ಜಲಬಾವಿಯಲ್ಲಿ ಜಲಸಮಾಧಿಗೊಂಡಳೆಂಬಲ್ಲಿ ಹತ್ತು ಅನಂತಕಾಲಗಳು ಸಂದವು. +ಇತ್ತಲಾ ಶಿವದೇವರು ಜಪತಪವೆಂದು ಮಿರಿಲೋಕದಲ್ಲಿ ಕುಂತಿರಲಾಗಿ ಹಣೆಯ ಬೆವರು ಹನಿ ಭೂಲೋಕದ ಮ್ಯಾಲೆ ಬಿದ್ದು ಅದರಿಂದೋರ್ವ ನರಮಾನವನ ಸೃಷ್ಟಿ ಮಾಡಿ ತಿಂದುಂಡು ಸುಖವಾಗಿರೆಂದು ಹೇಳಿ ಕಣ್ಣು ಮುಚ್ಚಿದರು. ಆದರೆ ನರಮಾನವನಿಗೆ ಒಂಟಿ ಜೀವನದಿಂದ ಬೋರಾಗಿ ದೊಡ್ಡದೇವರ ನೆನೆಯಲು ಶಿವದೇವರು ಪ್ರಸನ್ನ ಪ್ರತ್ಯಕ್ಷರಾದರು. ನರಮಾನವನು ಕೈಮುಗಿದು,- +“ಎಲಾ ತಂದೆಯೇ, ಹಟ್ಟಿಯಲ್ಲಿ ಹೆಣ್ಣಿಲ್ಲ, +ಕೊಟ್ಟಿಗೆಯಲ್ಲಿ ದನಕರುಗಳಿಲ್ಲ. +ಇರು ಎಂದರೆ ಒಬ್ಬನೇ ಹೆಂಗಿರಲಿ? +ಇದಕ್ಕೇನಾದರೂ ಆಧಾರ ಮಡಿಕೊಳ್ಳಬ್ಯಾಡವೆ?” +-ಎಂದ.ಇದಕ್ಕೆ ನಮ್ಮ ಶಿವಲಿಂಗದೇವರು ಏನಂದರೆಂದರೆ- +“ತನುಜನೇ, ಅತಳ ವಿತಳ ಪಾತಳವೆಂಬ +ಅಧೋಲೋಕದಲ್ಲಿ ಬೆಟ್ಟದ ಮಾಯಕಾರ್ತಿ ಅವತಾರಗೊಂಡು +ಕಟ್ಟಿರುವೆ ಹುತ್ತದಲ್ಲಿ ಸ್ಥಾಪನೆಗೊಂಡಿದ್ದಾಳೆ. +ಪುರುಷಾಮೃಗವೆಂಬ ಸೈತಾನ ಸರ್ಪ ಅವಳ ಕಾವಲಿಗಿದೆ. +ಅದನ್ನ ಜಯಿಸಿ, ಅವಳನ್ನು ವರುಸಿ, +ಸಂಸಾರ ದಂದುಗವ ಸುರುಮಾಡಯ್ಯಾ” +-ಎಂದು ಆಶೀರ್ವದಿಸಿ “ತೊಂದರೆ ಬಂದರೆ ತಗೊ” ತಮ್ಮ ಮೈಮ್ಯಾಲಿನ ಹಿಡಿ ರೋಮಂಗಳ ಕಿತ್ತು ಕೊಟ್ಟು ಮಾಯವಾದರು. +ಇಂತು ನರಮಾನವನು ಪಾತಾಳಕಿಳಿವ ಬಿಲಕ್ಕೆ ಬಂದು ಶಿವನೇ ಎಂದು ಕೆಳಗಿಳಿದು ಮಾಯಕಾರ್ತಿಯ ಪರಿಶೋಧನೆ ಮಾಡುತ್ತಿರುವಲ್ಲಿ ಎತ್ತರವಾದ ಬೆಟ್ಟದ ಹಾಗೆ ಎದುರಿಗೇ ಕುಂತಿದೆ ಪುರುಷಾಮೃಗವೆಂಬ ಸೈತಾನಸರ್ಪ! ನೆತ್ತಿಯಲ್ಲಿ ಜೋಡಿ ಸೂರ್ಯರಂತ ಕಣ್ಣಿವೆ! ಮುಳ್ಳಿನಂತ ಒರಟಾದ ಉದ್ದುದ್ದ ರೋಮಗಳಿವೆ! ನೂರುಗಾವುದ ಹುತ್ತದರಮನೆಗೆ ಶಿಂಬಿಸುತ್ತಿ ಶಿಖರದಲ್ಲಿ ಹೆಡೆಯೆತ್ತಿ ಹೊಸನಾತ ಹೊಸನಾತವೆಂದು ಹೊಂಚುತ ನರಮಾನವನಿಗೆ ಬಾಯಿ ಹಾಕೇಬಿಟ್ಟಿತು. “ಇದೇನು ಬಿಕ್ಕಟ್ಟು ಬಂತು ಶಿವನೇ” ಎಂದುಕೊಳ್ಳುವಷ್ಟರಲ್ಲಿ ನರಮಾನವನು ಪುರುಷಾಮೃಗದ ನಾಲಗೆಯಲ್ಲಿ ಲಾಗ ಹಾಕುತ್ತಿದ್ದ. ಅಂಗೈಯಲ್ಲಿ ಅಡಿಕೆಯಾಡುವಂತೆ ನಾಲಗೆಯ ಮ್ಯಾಲೆ ಇವನನಾಡಿಸುತ ಸೈತಾನ ಸರ್ಪ ಇನ್ನೇನು ಇವನನ್ನ ದವಡೆಗೆ ತಳ್ಳಬೇಕು ಅಷ್ಟರಲ್ಲಿ ದೊಡ್ಡ ದೇವರು ಕೊಟ್ಟ ರೋಮಂಗಳ ನೆನಪಾಗಿ ಅವನ್ನು ಎಸೆದುಬಿಟ್ಟ. ಶಿವ ಶಿವಾ,-ಅವು ಬಿದ್ದಲ್ಲೆಲ್ಲಾ ರೋಮಕ್ಕೊಂದರಂತೆ ಸಾವಿರ ಶಿವಲಿಂಗಗಳು ಉದ್ಭವವಾಗಿ ಕಾಣದ ಆಕಾಶಗಂಟೆ ಢಣಲೆಂದು ಹೊಡೆದಾಡಿದವು! ತಕ್ಷಣ ಪುರುಷಾಮೃಗವು ನರಮಾನವನ ಹೊರಕ್ಕೆ ಉಗುಳಿ ಒಂದೊಂದು ಶಿವಲಿಂಗಕ್ಕೂ ಆರುಮೂರೊಂಬತ್ತು ಪ್ರದಕ್ಷಿಣೆ ಸುತ್ತಿ ಶಿವಭಕ್ತಿ ಶಿವಾಚಾರ ಮಾಡತೊಡಗಿತು. ಇದೇ ಸಮಯವೆಂದು ನರನು ಅವಸರದಲ್ಲಿ ಓಡಿ ಹೋಗಿ ಹುತ್ತದರಮನೆಯ ಏಳೇಳು ಗೇಟುಗಳನೊದ್ದು ಮುರಿದು ಒಳಗೆ ಹೋಗಿ ನೋಡಿದರೆ ಬೆಟ್ಟದ ಮಾಯಕಾರ್ತಿ ಬಟ್ಟೆಯ ನೇಯುತ್ತ ಕುಂತಿದ್ದಾಳೆ! ಹುಟ್ಟು ನಿರ್ವಾಣದಲ್ಲಿದ್ದ ನರನು ಬಟ್ಟೆ ನೇಯುವ ಮಾಯಕಾರ್ತಿಯ ಕಂಡು ಮರುಳಾಗಿ ಶಿವನ ನಿಜರೂಪವ ತಿಳಿಸಿದ. ಮಾಯಕಾರ್ತಿ ನಾಂಚಿ ಕಾದ ಲೋಹದೋಪಾದಿಯಲ್ಲಿ ಕೆಂಪಾಗಿ ದಯ ಮಾಡಿ ಅವನಿಗೂ ಒಂದು ಬಟ್ಟೆಯ ಕೊಟ್ಟಳು. ಆಮ್ಯಾಲೆ ಅವಸರ ಮಾಡಿ ಅಲ್ಲೇ ಬಿದ್ದಿದ್ದ ತನ್ನ ಹಿಂದಿನವತಾರ ಪುಣ್ಯಕೋಟಿಯ ಕೊಂಬುಗಳ ತಗೊಂಡು ನರನೊಂದಿಗೆ ಓಡೋಡಿ ಪಾತಾಳದ ಬಿಲ ತಲುಪಿದಳು. +ಮೊದಲು ಮಾಯಕಾರ್ತಿಯ ಮ್ಯಾಲೆ ಹತ್ತಿಸಿ ತಾನೂ ಹತ್ತಬೇಕೆಂದು ಆಧಾರಕ್ಕೆ ಬಲಗೈ ನೀಡಿ ಬಲಗಾಲನ್ನು ಬಿಲದ ಮ್ಯಾಲೂರಿ ಹುಕಿಯಿಂದ ಹತ್ತಬೇಕೆಂಬಷ್ಟರಲ್ಲಿ ಶಿವ ಶಿವಾ, ಸೈತಾನ ಸರ್ಪ ಬಂದು ಇನ್ನೂ ಪಾತಾಳ ಸೀಮೆಯಲ್ಲಿದ್ದ ನರನ ಎಡಗೈ ಎಡಗಾಲು ಹಿಡಿದು ಕೆಳಕ್ಕೆಳೆಯತೊಡಗಿತು! ನರನ ಎಡಗೈ ಎಡಗಾಲು ಪುರುಷಾಮೃಗದ ಕೈಯಲ್ಲಿ, ಬಲಗೈ ಬಲಗಾಲು ಮಾಯಕಾರ್ತಿಯ ಕೈಯಲ್ಲಿ! ಕೊನೆಗೆ ಮಾಯಕಾರ್ತಿ ಶಿವನ ಹೆಸರುಗೊಂಡು ಡೊಗ್ಗಾಲು ಮಂಡಿಯೂರಿ ನರಮಾನವನ ಬಲಗೈ ಬಲಗಾಲನ್ನು ಮ್ಯಾಲೆಳೆದಳು. ಹಸೀ ಮರ ಸೀಳಿದಂತೆ ಕರಕರ ಭಯಂಕರ ಸದ್ದಾಯಿತು. ಹಲ್ಲು ಕಚ್ಚಿ ಮೀಸಲು ಶಕ್ತಿಯಿಂದ ಮ್ಯಾಲೆಳೆದಳು. ಜಗ್ಗುತ್ತಿದ್ದ ಹಗ್ಗ ಹರಿದು ಕೈಗೆ ಬಂದಂತಾಗಿ ಹಿಂದೆ ಬಿದ್ದಳು. ಹಿಂಗ್ಯಾಕೆಂದು ನೋಡಿದರೆ ಹಿರಿಯನ ಬಲ ಅರ್ಧ ದೇಹ ಅವಳ ಕೈಯಲ್ಲಿತ್ತು, ಬಲಗೈ ಬಲಗಾಲಿತ್ತು! ಬಲಗಡೆ ಅರ್ಧಾಮುಖವಿತ್ತು, ಸರಿಯಾಗಿ ಬೆನ್ನುಹುರಿಯಲ್ಲೇ ಸೀಳಿ ಸೊಂಟದಿಂದ ನೆತ್ತಿಯ ತನಕ ಹಸಿಯ ನೆತ್ತರು ಸೋರುತ್ತಿತ್ತು! ಇದನ್ನು ನೋಡಿ ಮಾಯಕಾರ್ತಿ ಕಿಟಾರನೆ ಕಿರಿಚಿದಳು. +ಇದನ್ನೆಲ್ಲ ಮ್ಯಾಲಿಂದ ನೋಡುತ್ತಿದ್ದ ಲೋಕನಾಯಕ ಸ್ವಾಮಿಗೆ ವ್ಯಾಕುಲವಾಗಿ ಒಂದು ಮಾಡಹೋದರೆ ಇನ್ನೊಂದಾಯಿತಲ್ಲ ಎಂದು ಖೇದವಾಗಿ, ನೀಲಿ ಆಕಾಶದಲ್ಲಿ ನಿಂತು ಲೋಕವ ಬೆಳಗುತ್ತಿದ್ದ ಸೂರ್ಯನಿಗೆ “ಹೋಗಿ ನರಮಾನವನ ಉದ್ಧರಿಸೆಂದು” ಅಪ್ಪಣೆಯಿತ್ತರು. ಸೂರ್ಯನಾರಾಯಣಸ್ವಾಮಿ ಕೆಳಗಡೆ ಬಂದು ತಮ್ಮ ಕೆಂಡಗಣ್ಣಿನ ಜಗಜಗ ಬೆಳಕನ್ನ ನರನ ಹರಿದ ಭಾಗದ ಮ್ಯಾಲೆ ಚೆಲ್ಲಿದಾಗ ಅರೆಕೊರೆಯಾಗಿದ್ದ ದೇಹ ಇಡಿಯಾಗಿ ಜೀವ ತುಂಬಿತು. ನಿದ್ದೆಯಿಂದೆಂಬಂತೆ ಎದ್ದು ಸಾಷ್ಟಾಂಗವೆರಗಿದ ನರನಿಗೆ ಮಾಯಕಾರ್ತಿಯೊಂದಿಗೆ ಸುಖಬಾಳೆಂದು ಆಶೀರ್ವದಿಸಿ ಸೂರ್ಯದೇವರು ಅಸ್ತಂಗತರಾದರು. +ರಾತ್ರಿಗೆಂದರೆ ಇನ್ನೊಂದು ಹೊಯ್ಕಾಯಿತು ಶಿವನೆ. ನರನ ಇನ್ನರ್ಧ ಎಡಭಾಗವನ್ನ ಸೈತಾನಸರ್ಪ ಕಸಿದಿತ್ತಲ್ಲ, ದೇಹ ಊನವಾದುದರಿಂದ ತಿನ್ನಲಾರದೆ, ಪಾತಾಳಬಿಲದೊಳಗಿಂದ ಅದನ್ನೂ ಭೂಮಿಗೆ ಉಗುಳಿಬಿಟ್ಟಿತು. ಶಿವದೇವರೀಗ ತಮ್ಮ ಜಡೆಮರೆಯ ಚಂದ್ರಸ್ವಾಮಿಗೆ “ನರನ ಉದ್ಧರಿಸಿ ಬಾ” ಎಂದು ಆಜ್ಞಾಪಿಸಿದರು. ಚಂದ್ರಾಮಸ್ವಾಮಿ ತಮ್ಮ ಬೆಳ್ದಿಂಗಳನು ನರನ ಎಡದೇಹದ ಮ್ಯಾಲೆ ಕರುಣೆಯಿಂದ ಸುರುವಿ ಪೂರ್ಣದೇಹನ ಮಾಡಿ ಜೀವಬರಿಸಿ ಸುಖಬಾಳೆಂದು ಹರಸಿ ಶಿವನ ಜಡೆಯಡರಿದರು. +ಇಂತೀರೀತಿ ಒಬ್ಬನಿದ್ದ ನರಮಾನವ ಈಗ ಇಬ್ಬರಾದರು. ಸೂರ್ಯನಿಂದ ಜೀವ ಪಡೆದವನು ಅಣ್ಣನೆಂದಾಯಿತು. ಚಂದ್ರನಿಂದ ಪಡೆದವನು ತಮ್ಮನೆಂದಾಯಿತು. ಆದರೆ ಮಾಯಕಾರ್ತಿ ಯಾರೊಂದಿಗಿರಬೇಕೆಂದು ಜಿಜ್ಞಾಸೆಯಾಗಿ ಇಬ್ಬರೂ ಎಳೆದಾಡತೊಡಗಿದರು. ಆವಾಗ ಶಿವದೇವರು ಮಧ್ಯೆ ಬಾಯಿ ಹಾಕಿ ಮಾಯಕಾರ್ತಿ ಇಬ್ಬರ ಸೊತ್ತೆಂದು ಪಂಚಾತಿಕೆ ಮಾಡಿ ಅಣ್ಣತಮ್ಮಂದಿರ ಸಮಾಧಾನ ಮಾಡಿದರು. ಪಾತಾಳದ ಬಿಲ ಮುಚ್ಚಿ ಅದರ ಮ್ಯಾಲೆ ಕರಿಕಂಬಳಿಯ ಗದ್ದಿಗೆ ಮಾಡಿ ತೆಂಕುಮುಖವಾಗಿ ಅಣ್ಣನನ್ನು, ಬಡಗುಮುಖವಾಗಿ ತಮ್ಮನನ್ನು ಬೆನ್ನಿಗೆ ಬೆನ್ನಾತು ಕೂರಿಸಿ, ಮಧ್ಯೆ ಮಾಯಕಾರ್ತಿಯ ಸ್ಥಾಪನೆ ಮಾಡಿ ಬೆಳ್ಳಿಬೆತ್ತದ ಅಧಿಕಾರ ಕೊಟ್ಟು ಒಡ್ಡೋಲಗ ಮಾಡಿಸಿ- +ಮಾನವರಿಗೆ ದೊಡ್ಡವರಾಗಿ +ದೇವರಿಗೆ ಸಣ್ಣವರಾಗಿ ಬಾಳಿರಯ್ಯಾ- +ಎಂದು ಹರಸಿ ಶಿವಲೋಕಕ್ಕೆ ಸಂಚರಣೆ ಮಾಡಿದರು. ಇಲ್ಲಿಂದ ಸಂಸಾರ ದಂದುಗ ಸುರುವಾಯ್ತು ನೋಡು: ಗಾಳ ಗುದ್ಲಿ ತಗಂಡು ದುಡುಯುವಷ್ಟು ಕೆಲಸ, ಉಣ್ಣುವಷ್ಟು ಅನ್ನವಿರುವ ಶಿವಾಪುರವೆಂಬ ಘನವಾದ ಹಟ್ಟಿಯ ಕಟ್ಟಿ, ಪುಣ್ಯಕೋಟಿಯ ಹೆಸರಿನಲ್ಲಿ ಕೊಟ್ಟಿಗೆಯಲ್ಲಿ ದನಕುರಿಗಳ ಸಾಕಿ ಹಾಲು ಹಿಂಡಿ ಹೈನು ಬೆಣ್ಣೆ ಮಾಡುವ ಗೊಲ್ಲ ಗೋಕುಲ ಕುಲವ ಮೊದಲು ಮಾಡಿದರು. +ಆದರೆ ಅಣ್ಣತಮ್ಮಂದಿರಲ್ಲಿ ವಿರಸ ಕಮ್ಮಿಯಾಗಲಿಲ್ಲ. ಶಿವನು ಮಾಡಿದ ಕಟ್ಟಳೆಗಳ ಕಡೆಗಾಣಿಸಿ ಮಾಯಕಾರ್ತಿ ತನಗೆ ಮಾತ್ರ ಸೇರಿದವಳೆಂದು ಇಬ್ಬರೂ ತಾರಾಮಾರು ಗೌಜು ಗದ್ದಲ ಮಾಡುತ್ತ ಜಗಳಾಡತೊಡಗಿದರು. ಅವನಿವನೆನ್ನದೆ ಮಾಯಕಾರ್ತಿ ಎಳೆದವನೊಂದಿಗೆ ಇರಬೇಕಾಗಿ ಬಂದು “ಎರಡು ದಾರಿಗಳಲ್ಲಿ ಹೆಂಗಂತ ವ್ಯವಹರಿಸಲೋ ಶಿವನೆ” ಎಂದು ಮೊರೆಯಿಟ್ಟಳು. ಶಿವದೇವರಿನ್ನೊಮ್ಮೆ ಭೂಲೋಕಕ್ಕೆ ಬಂದು ಪುಣ್ಯ ಕೋಟಿಯ ಕೊಂಬುಗಳ ಪಾಲುಮಾಡಿ ಬಲಗೊಂಬನ್ನು ಅಣ್ಣನಿಗೂ ಎಡಗೊಂಬನ್ನು ತಮ್ಮನಿಗೂ ಪಂಚಾತಿಕೆ ಮಾಡಿ ಕೊಟ್ಟು ಹಗಲು ಅಣ್ಣನದೆಂದೂ ರಾತ್ರಿ ತಮ್ಮನದೆಂದೂ, ಹಗಲಿನವರು ಸೂರ್ಯನ ಒಕ್ಕಲೆಂದೂ, ರಾತ್ರಿಯವರು ಚಂದ್ರನ ಒಕ್ಕಲೆಂದೂ ಹಗಲಿಗೆ ಒಂದು ಸತ್ಯವೆಂದೂ ರಾತ್ರಿಗೆ ಹಲವು ಸತ್ಯಗಳೆಂದೂ ಸಾರಿ ಪತ್ರಕರಾರು ಬರೆದುಕೊಟ್ಟರು. ಅವರವರ ಸಮಯದಲ್ಲಿ ಮಾಯಕಾರ್ತಿ ಅವರವರೊಂದಿಗೆ ಇರಬೇಕೆಂದು ಕಟ್ಟಳೆ ಮಾಡಿ ಸೂರ್ಯಚಂದ್ರರನ್ನ ಕಾವಲಿಗಿರಿಸಿದರು. ಆದರೂ ಇವರ ಜಗಳ ತೀರಲಿಲ್ಲ. ಒಬ್ಬರ ಸಮಯದಲ್ಲಿ ಇನ್ನೊಬ್ಬರ ಆಕ್ರಮಣ ಅತಿಕ್ರಮಣಗಳಾಗಿ ಮೂವರ ಕೂಗಾಟ ಕೇಳಲಾರದೆ ಶಿವದೇವರು ಭೂಲೋಕದ ಮ್ಯಾಲೆ ಆಕಾಶವ ಡಬ್ಬುಹಾಕಿ ಮುಚ್ಚಿ ಮ್ಯಾಲಿನ ತಮ್ಮ ನಿವಾಸಕ್ಕೆ ಹೋದರು. +ಈಗಿವರು ಎಷ್ಟು ಕಿರಿಚಿದರೂ ಒದರಿದರೂ ಹೇಳಕೇಳುವುದಕ್ಕೆ ಶಿವದೇವರೂ ಇರಲಿಲ್ಲ. ಮೊದಲಾದರೆ ಮಾಯಕಾರ್ತಿ ನೆಪವಾಗಿ ಕುಸ್ತಿ ಜಗಳಗಳಾದರೆ ಈಗ ತಂತಮ್ಮ ಬೆಡಗಿನ ದೇವತೆಗಳಾದ ಸೂರ್ಯ ಚಂದ್ರರ ಹೆಸರಿನಲ್ಲೂ ವಿದ್ದಗಳು ಸುರುವಾದವು. +ಅಣ್ಣನೊಮ್ಮೆ ತಮ್ಮನನ್ನು ಹೀಂಕಾರವಾಗಿ ಜರಿದು ಹೆದರಿಸಲು ತನ್ನ ಪಾಲಿನ ಕೊಂಬನ್ನೂದಿದ ನೋಡು: ಊದಿ ಕೆಳಗಿಡೋದರೊಳಗೆ ಅದರೊಳಗಿಂದ ಬೆಂಕಿ ಮಾಡಿ ಮಾಂಸ ಬೇಯಿಸಿ ತಿನ್ನುವ, ಬೇರಿನಿಂದ ವೈದ್ಯ ಮಾಡುವ, ಲೋಹದಿಂದ ಆಯುಧ ಮಾಡುವ, ಆಯುಧಗಳಿಂದ ವಿದ್ದ ಮಾಡಿ ಗೆಲ್ಲುವ….ಇತ್ಯಾದಿ ಚೌಸಷ್ಟಿ ವಿದ್ಯೆಗಳು ಸಳಸಳ ಹುಟ್ಟಿಕೊಂಡವು. ಅಣ್ಣ ಕೇಕೆ ಹಾಕಿ ಕುಣಿದಾಡಿದ. +ಇದನ್ನು ತಮ್ಮನೂ ತನ್ನ ಪಾಲಿನ ಕೊಂಬನ್ನೂದಿದಾಗ ಓಂಕಾರ ನಾದ ಮೊದಲು ಶಬ್ದ ಕಡೆಯಾಗಿ ಸಂಗೀತ ಸಾಹಿತ್ಯ ಮುಂತಾದ ಇಪ್ಪತ್ತೇಳು ತನ್ಮಯ ಕಲೆಗಳು, ನೂರೆಂಟು ಕನಸುಗಳಾದ ನಮ್ಮೊಂದಿಗೆ ಹುಟ್ಟಿದವು. ಆದರೆ ನಾವು ಮತ್ತು ಕಲೆಗಳು ಹುಟ್ಟಿದ್ದು ಸೂರ್ಯನಿಗೂ ಅವನೊಕ್ಕಲು ಅಣ್ಣನಿಗೂ ಸರಿಬರಲಿಲ್ಲ. ರಾತ್ರಿಯಲ್ಲಿ ಚಂದ್ರಾಮಸ್ವಾಮಿಯ ಬೆಳ್ದಿಂಗಳಲ್ಲಿ ನಾವು ಸುಖವಿದ್ದಾಗ ಸೂರ್ಯನಾರಾಯಣಸ್ವಾಮಿ ಗುಡುಗು ಮಿಂಚು ಸಿಡಿಲುಗಳಿಂದ ನಿರ್ದಯವಾಗಿ ಕಲೆಗಳ ಹೆದರಿಸಿ, ಕಲೆಗಳ ಮ್ಯಾಲೆ ವಿದ್ಯೆಗಳ ಬಿಟ್ಟು ಹಿಂಸಿಸಿದರು. ಕಲೆಗಳು ಗಾಬರಿಯಾಗಿ ಎಲ್ಲೆಂದರಲ್ಲಿ ಬಚ್ಚಿಟ್ಟುಕೊಂಡವು. ಮಾಯಕಾರ್ತಿಗೆ ಕಾಳಜಿಯಾಗಿ ಎಲ್ಲಿದ್ದರಲ್ಲಿಂದ ಕಲೆಗಳನ್ನು ಕರೆತರಲು ಗಾಳಿದೇವರ ಕಳಿಸಿದಳು. ಮೂಲೆ ಮೂಲೆಯಲ್ಲಿ ಅಡಗಿದ್ದ ಕಲೆಗಳನ್ನು ವಾಯುದೇವರು ಹುಡುಕಿ ಕರೆತಂದು ಚಂದ್ರಾಮಸ್ವಾಮಿಯ ರಕ್ಷಣೆಗೆ ಬಿಟ್ಟರು. ಸೂರ್ಯದೇವರ ಸೇಡಿನಿಂದ ಕಲೆಗಳು ನಾಶವಾಗಬಾರದೆಂದು ಚಂದ್ರಾಮಸ್ವಾಮಿ ತಾವೇನು ಮಾಡಿದರೆಂದರೆ ತಿಂಗಳ ಹದಿನಾಕು ದಿವಸ ಶಿವನಿಂದ ಅಂರ್‍ಸುತವ ತುಂಬಿಕೊಂಡು ಉಳಿದ ಹದಿನಾಲ್ಕು ದಿವಸ ಕಲೆಗಳಿಗೆ ನೀಡಿ ಅಮರತ್ವ ನೀಡುತ್ತಿರಲು-ಸಂಪೂರ್ಣ ಅಮೃತ ತುಂಬಿಕೊಂಡ ದಿನ ಹುಣ್ಣಿಮೆಯಾಗಿ, ಸಂಪೂರ್ಣ ಖಾಲಿಯಾದ ದಿವಸ ಅಮಾವಾಸ್ಯೆಯೆಂದು ಗೊತ್ತಾದುವೆಂಬಲ್ಲಿ ಆರು ಮೂರೊಂಬತ್ತು ಅನಂತಕಾಲಂಗಳು ಗತಿಸಿದವು. ಆದರೂ ಅಣ್ಣತಮ್ಮಂದಿರ ಸೇಡು ಮುಗಿಯಲಿಲ್ಲ. ಸೇಡಿನ ಜೊತೆ ಕೇಡುಗಳೂ ಸೇರಿ ಪರಸ್ಪರ ಹಿಂಸಿಸುತ್ತ ಶಪಿಸುತ್ತ ಬೆಳ್ಳಿ ಬೆತ್ತದ ಅಧಿಕಾರವನ್ನ ಒಬ್ಬರಿಂದೊಬ್ಬರು ಕಸಿಯುತ್ತ, ಅದಕ್ಕಾಗಿ ಕೊಲೆಗೈಯುತ್ತ ಪುಂಡಾಟಿಕೆಯಲ್ಲಿ ಬದುಕುತ್ತಿದ್ದಾರೆಂಬಲ್ಲಿ ಪ್ರಸ್ತಾವನೆಯ ಮುಗಿಸಿ, ಕಥಾಬೀಜ ಬಿತ್ತರಿಸುತ್ತೇವೆ. +ಬೆಟ್ಟದಡಿಯ ಶಿವಾಪುರವೆಂಬುದು ಘನವಾದ ಹಟ್ಟಿ. ಗೊಲ್ಲಗೋಕುಲರ ತಿಂಗಳ ಬೆಡಗಿನ ಮಾಚ ಮತ್ತು ಸಿರಿಲಕ್ಕಿ ಏಳು ಹಿಂಡು ದನಕರು ಏಳೇಳು ಹಿಂಡು ಕುರಿಮೇಕೆ ಇತ್ಯಾದಿ ಬದುಕಿನ ಭಾಗ್ಯವುಳ್ಳ ಪುಣ್ಯವಂತರು. ಆದರೆ ಮಕ್ಕಳ ಫಲಪುತ್ರ ಸೌಭಾಗ್ಯವಿಲ್ಲದಿರಲು ಸಂತಾನೋತ್ಪತ್ತಿಯಾದಲ್ಲಿ ಶಿವದೇವರಿಗೆ ಹಿಡಿ ಹಣ ಹಾಕಿಸುವುದಾಗಿ ಹರಕೆ ಹೊತ್ತರು. ದೇವರಿಗೆ ದೇವಾಲಯ ಭೂತಂಗಳಿಗೆ ಸ್ಥಾನಂಗಳ ಕಟ್ಟಿ ದಾನ ಧರ್ಮ ನೇಮವ ಮಾಡಿದರೂ ಮಕ್ಕಳಾಗದಿರಲು ಕುಲಗುರುವಿನ ಕವಡೆ ಶಾಸ್ತ ಕೇಳಿದಾಗ ಯಕ್ಷಿಯ ಕಾಟವೆಂದು ತೋರಿಬಂತು. ಒಂದು ಹುಣ್ಣಿವೆ ದಿನ ಅಂಗಳದಲ್ಲಿ ಮಂಡಳ ಬರೆದು ಮಂಡಳದ ಮಧ್ಯೆ ತಾಮ್ರದ ತಂಬಿಗೆಯಿಟ್ಟು ಅದರಲ್ಲಿ ಯಕ್ಷಿಯ ಅವಾಹಿಸಿ, ಒಂದು ಕಡೆ ಎಮ್ಮೆಕರು ಇನ್ನೊಂದು ಕಡೆ ಮೊಟ್ಟೆಯಿಡುವ ಕೋಳಿಯ ಬಲಿ ಕೊಟ್ಟು, ಕೊಪ್ಪರಿಗೆಯಲ್ಲಿ ಕೋಲುದೀಪ ಇಟ್ಟು ಗಂಡು ಮಗುವಾದರೆ ಐದು ಹಬ್ಬ ನಿನಗೆಂದರು. ಯಕ್ಷಿಗೆ ಹರಕೆ ಒಪ್ಪಿಗೆಯಾಗಿ ಸಿರಿಲಕ್ಕಿ ಬಸಿರಾದಳು. +ಬೆಟ್ಟದ ಮಾಯಿಯ ಧೂಪದೀಪಂಗಳಲ್ಲಿ ಪೂಜೆಯ ಮಾಡಿ ಸುಖ ಹೆರಿಗೆಯಾಗಲೆಂದು ಬೇಡಿಕೊಂಡರು. ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ದಿನ ಉಚಿತವಾದ ಶಿವಯೋಗ ಲಕ್ಷಣದಲ್ಲಿ ಗಂಡು ಮಗುವಾಯಿತು. ಹುಟ್ಟಿದ ಗಳಿಗೆಗೆ ಉಳ್ಳಾಗಡ್ಡಿಯಿಂದ ಗಂಟೆಯ ಬಡಿದರು. ಮಗುವಿನ ಹೆದರಿಕೆ ತೆಗೆದು ಹೊಕ್ಕುಳ ಕುಯ್ದರು. ಮೂರು ದಿವಸಕೆ ಮನೆಯ ಮನೆಯ ಸೂತಕ, ಹತ್ತು ರಾತ್ರಿಗೆ ಹದಿನಾರೂ ಸೂತಕ ತೆಗೆದು ಚಂದಮುತ್ತನೆಂದು ನಾಮಕರಣವ ಕೂಗಿ ಶೆಟಿವಿ ತಾಯಿಗೆ ಹಣೆಬರೆಹ +ಬರೆಯಲೊಪ್ಪಿಸಿದರು. ಹರಿದು ಹಾಲುಂಡು ಕೂತು ಕೂಳುಂಡು ಎಳೆಯ ಮಗ ಹೋಗಿ ಬೆಳೆದ ಮಗನಾಗುವಷ್ಟರಲ್ಲಿ ಮಾಚ ಸೇಡಿನ ಚೂರಿಗೆ ತುತ್ತಾದ. ಅಂದಿಗೆ ಸಿರಿಲಕ್ಕಿಯ ಅಂಚಿನ ಸೀರೆ, ಅರಿಶಿನ ಕುಂಕುಮ, ಮುತೈದೆ ಬಳೆ ಮುಗಿಯಿತು. ಅವಿಲ್ಲದೆ ಬರಿ ಲಕ್ಕಬ್ಬೆಯಾಗಿ ಚಂದಮುತ್ತನಿಗೆ ತಂದೆ ತಾಯಿ ಎರಡೂ ಆಗಿ ಬೆಳೆಸಿ ಕುಲಕಸುಬು ಕಲಿಸಿ ಸೊಂಟಕ್ಕೆ ನೂಲು, ಕಾಲಿಗೆ ಕಡಗ, ಕಿವಿಗೆ ಕುಂಡಲ ಹಾಕಿಸಿದಳು, ಸಂಗೀತದಲ್ಲಿ ಚಂದಮುತ್ತನಿಗೆ ಗತಿಯಿರುವುದ ಗುರುತಿಸಿ ಕುಲಗುರುವಿನಲ್ಲಿ ಕೊಳಲು ವಿದ್ಯೆಯ ಬೋಧೆ ಮಾಡಿಸಿದಳು. ಈಗ ಮದುವೆಯ ಹರೆಯವಾದರೂ ಕೊಂಡಾಟದಿಂದ ಬೆಳದ ಚಂದಮುತ್ತ ವಾರಗೆಯವರೊಂದಿಗೆ ದನಕಾಯಲು ಹೋಗುತ್ತಿದ್ದ. +ಶಿವಾಪುರವೆಂಬ ಘನವಾದ ಹಟ್ಟಿಗೆ ಬಿಸಿಲ ಬೆಡಗಿನ ಸೂರ್ಯಮುತ್ತ ಹೆಗಡೆಯೆಂಬಾತನ ಒಡೆತನ. ಅವನ ಮಗ ಚಿನ್ನಮುತ್ತ, ಚಂದಮುತ್ತನ ಒರಗೆಯಾತ. ಎರಡೂ ಮನೆತನಗಳು ಚಕಮಕಿಯ ಕಲ್ಲಿನಂತೆ ತಾಗುವುದಿದೆ, ಕಿಡಿಯ ಹಾರಿಸೋದಿದೆಯೆಂಬಲ್ಲಿ ಪ್ರಸ್ತಾವನೆ ಮುಗಿದು, ಆಕಾಶ ತೂಕದ ಶಿವಲಿಂಗ, ಭೂಮಿ ತೂಕದ ಲಕ್ಕಬ್ಬೆ, ಚಂದಮುತ್ತನ ಕಾಪಾಡಲೆಂದು ಹಾರೈಸಿ ಕಥಾರಂಭ ಮಾಡುತ್ತೇವೆ, ಶಿವಶಿವ ಎನ್ನಿರಯ್ಯಾ, ಶಿವಲಿಂಗಾ ಎನ್ನಿರಿ. +ಯಕ್ಷಿಯ ಮದುವೆ +ಇಳಿಹೊತ್ತಿನಲ್ಲಿ ಅಬ್ಬೆ +ಸುವ್ವಾಲೆ ಸುಪ್ಪಾಲೆಯೆಂದು ರಾಗ ಎಳೆಯುತ್ತಾ ರಾಗಿ ಕುಟ್ಟುತ್ತಾ ಇರಬೇಕಾದರೆ +ಮೋಜಿನ ಗಾಳಿ ಬೀಸಿ ಸೋಜಿಗದ ಮಳೆ ಬಂತು. +ಎಳೆಬಿಸಿಲಲ್ಲಿ ಬಿದ್ದಮಳೆ ಯಕ್ಷಿಯ ಮದುವೆಯ ಮಾಡಿ +ಸಣ್ಣಗೆ ಉರಿಯುತ್ತಿದ್ದ ಪಡುಸೂರ್ಯನ ನಂದಿಸಿತು. +ಮಗರಾಮ ಇನ್ನೂ ಬರಲಿಲ್ಲೆಂದು ಅಬ್ಬೆ +ಬಾಗಿಲಲ್ಲಿ ನಿಂತು ಕಾಡದಾರಿ ಕಣ್ಣಾಗಿ ಕಾಯುತ್ತಿರಲು +ದನಕರು ಬಂದು ದೊಡ್ಡಿ ಸೇರಿದವು. +ಮಗರಾಮ ಬಂದು, ತಾಯ ನುಡುದಾಡಿಸದೆ +ದೊಡ್ಡಿಗೆ ದನಗಳ ಕೂಡಿ ಬಿಡದೆ +ಜೋಡು ಕಳಚಿ, ಹೆಗಲ ಕಂಬಳಿ, ಬಗಲ ಚೀಲ +ಸೊಂಟದ ಕೊಳಲು, ಕಕ್ಕೆ ದೊಣ್ಣೆಗಳ +ಮೂಲೆಗೆಸೆದು ನೇರ ಜಗಲಿಗೆ ಹೋಗಿ ಬಿದ್ದುಕೊಂಡ. +ಗರ್ಭಕ್ಕೆ ಬೆಂಕಿ ಸುರಿದಂತಾಗಿ +ಅಬ್ಬೆ ಉರಿವುಸಿರ ಸೂಸಿದಳು. +“ಚಂದಿರಾಮಾ ಚಂದಮುತ್ತಾ” ಎಂದಳು. +ಒದ್ದೆ ಕಳಚಿ ಮಡಿ ಉಡು ಮಗಾ” ಎಂದಳು. +ಒಮ್ಮೆ ಕರೆದರೆ ಮೂರು ಬಾರಿ ಓ ಎನ್ನುವ ಮಗ +ಇಂದು ಓಗೊಡಲಿಲ್ಲ. +ತಂದೆಯಿಲ್ಲ, ಒಂದಿಗೆ ಹುಟ್ಟಿದವರಿಲ್ಲ +ಹೇಳಕೇಳುವುದಕ್ಕೆ ಯಾರೂ ಇಲ್ಲವಾಯಿತೇ, +ಬೆನ್ನಿಗಿರು ಬೆಟ್ಟದ ಮಾಯೀ ಎಂಬಲ್ಲಿ +ದೊಡ್ಡಿಗೆ ದನಗಳ ಕೂಡಿಬಿಟ್ಟ ವಾರಗೆಯವರು +ಬಂದರು. ಅಬ್ಬೆ ಕೇಳಿದಳು: +“ಏ ದೇಚ, ಏಕೆಂಚ +ತಿಳಿದವರು ನೀವು ತಿಳಿಸಿ ಹೇಳಿರಯ್ಯಾ +ಅಬ್ಬೆಯ ನುಡಿಸದೆ, ಒದ್ದೆಕೊಡ ಕಳಚದೆ +ಮಾರಿ ಸಣ್ಣದು ಮಾಡಿ ಮಲಗಿಬಿಟ್ಟಿದ್ದಾನೆ ಚಂದ್ರಾಮ +ಯಾರೇನಂದರು ಕಂದನಿಗೆ?” +ಹುಡುಗರು,“ಅಬ್ಬೇ ನಮಗೂ ಅದೇ ಬೆರಗೆಂದರು. +ಕಾರ್ಯಕಾರಣ ಅರಿಯೆವೆಂದು +ನಡೆದದ್ದನ್ನು ನಡೆದಂತೆ ವಿವರಿಸಿದರು: +“ನಮ್ಮ ಚಂದಮುತ್ತ ಗೊತ್ತಲ್ಲ, ದಿನದಂತೆ +ಈ ದಿನವೂ ಇಳಿಹೊತ್ತಲ್ಲಿ ಕೊಳಲೂದಿ ಮೋಡಿಯ ಮಾಡಿ, +ದನಕರು ಕಿವಿ ನಿಗರಿ ಮೇಲುಗಣ್ಣು ತೇಲುಗಣ್ಣಿನಲಿ +ಪರವಶವಾಗಿ ನೆರಳಲ್ಲಿ ಮಲಗಿದ್ದವು. +ನಾವುಗಳಿರಲಿ, ಈ ದಿನ +ಗಿಡಮರ ಕೂಡ ಅವನ ಹಾಡಿಗೆ +ತೂಗಿ ತೊನೆದವು ತಾಯಿ. +ದನಕರು ಮಲಗಿದರೆ ನಾವು ಹುಡುಗರಿಗೇನು ಕೆಲಸ? +ಓಡಾಡುತ್ತ ಮೋಜಿನ ಮತ್ತೇರಿ +ಈ ದಿನ ಮದುವೆಯಾಟ ಆಡೋಣವೆಂದೆವು. +ಚಂದಮುತ್ತ ಒಪ್ಪದಿರಲು ಅವನಿಗೇ ಮದುವೆಯೆಂದೆವು. +ನಮ್ಮ ಒತ್ತಾಯದಿಂದ ತಪ್ಪಿಸಿಕೊಂಡು +ಓಡಿ ಹೋಗಿ ಕಾಡಲ್ಲಿ ಅಡಗಿದ. +ನಾವು ಹುಡುಕುತ್ತಾ ಹೋದೆವು. +ಮೂರು ದಾರಿಗಳು ಸೇರುವಲ್ಲಿ, +ಎಳೆ ಆಲದಮರದಡಿಯಲ್ಲಿ ಚಂದಮುತ್ತ ಅಡಗಿ ನಿಂತಿದ್ದ. +ಅಲ್ಲಿಯೇ ಬಿದ್ದಿದ್ದ, ಯಾವುದೋ ಕಾಲದ +ಶಿಲಾಮೂರ್ತಿಯ ಕದಲದೆ ನೋಡುತ್ತಿದ್ದ. +ಯಾವಳೋ ಆಗಸದ ರಂಭೆ +ಚಂದಮುತ್ತನ ಕೊಳಲುಲಿಯ ಮಾಯೆಗೆ ಒಳಗಾಗಿ +ಭೂಮಿಗಿಳಿದು ಪರವಶವಾಗಿ ಮೈಮರೆತಂತೆ, +ನರಮಾನವರು ನಮ್ಮ ದನಿ ಕೇಳಿ ಈಗಷ್ಟೆ ಕಲ್ಲಾದಂತೆ +ಅದರ ಭಂಗಿ. +ಕನ್ಯೆ ಸಣ್ಣವಳು, ಶುದ್ಧ ಸುಳಿ ಮುದ್ದುಮುಖದವಳು, +ಪಳಗಿದ ಬೇಟೆಗಾರನ ಹಾಗೆ ನೋಟ,- +ಹ್ಯಾಂಗೆ ನಿಂತಿದ್ದಳು ಅಬ್ಬೆ ಬಿಲ್ಲಿನಂತೆ! +ಶಿಲೆಯೆನ್ನುವುದೊಂದು ಬಿಟ್ಟರೆ ಉಳಿದೆಲ್ಲ ಜೀವಂತ. +ನಮಗಿಷ್ಟೆ ಸಾಕಾಗಿ ಕಲ್ಲಿನ ಮೂರ್ತಿಯೊಂದಿಗೇ +ಚಂದಮುತ್ತನ ಮದುವೆಯೆಂದೆವು. ಬೀಗರಾಗಿ ಬಂದು +ಅಮೃತವಲ್ಲಿಯ ತಾಳಿಸರ ಮಾಡಿ, +ಶಿಲಾಮೂರ್ತಿಯ ಕತ್ತಿಗೆ ಕಟ್ಟು ಎಂದೆವು. +ಕಟ್ಟಿದಾಗಿನ ಅಘಟಿತ ಘ್ಟಿತವ +ನಾವೇನು ಹೇಳೇವು ತಾಯಿ! +ಎಲ್ಲಿಂದಲೋ ಮಂಗಳ ವಾದ್ಯ ಕೇಳಿಸಿ +ಮಾಯದ ಗಾಳಿ ಜೋರಾಗಿ ಬೀಸಿದವು. +ಕ್ಷಿತಿಜದ ಕಣ್ಣಲ್ಲಿ ಫಳ್ಳನೆ ಬೆಳಕಾಡಿದ್ದ ಕಂಡೆವು. +ತರುಮರ ಬಳ್ಳಿಗಳ ಕಣ್ಣು ಬಿರಿದು +ಯಾರೋ ಕಾಡಿನಂಗಳದಲ್ಲಿ +ಥರಾವರಿ ಹೂವಿನ ರಂಗೋಲಿ ಬರೆದದ್ದನ್ನ ಕಂಡೆವು. +ನೆಲಕ್ಕೆ ಹುಲ್ಲಿನ ನವಿರೆದ್ದು +ನಮ್ಮಡಿಗಳಿಗೆ ಮುತ್ತಿಟ್ಟದ್ದ ಅನುಭವಿಸಿದೆವು. +ಹಿಡಿದಿಡಲಾರದ ಉತ್ಸಾಹವುಕ್ಕಿ +ಕೂಗಿ ಹಾಡಿದವು ಹಲವರ್ಣದ ಹಕ್ಕಿ. +ಕೇಕೆ ಹಾಕಿ ನವಿಲಾಡಿದವು ತಾಳಮೇಳದೊಳಗೆ. +ಎಳೆ ಆಲದ ಮರ, +ತಿಳಿಹಸಿರು ಬೆಳಕಿನ ವಲಯ ಸುತ್ತ ನಿರ್ಮಿಸಿಕೊಂಡು +ಬೆಳಗುವ ಪ್ರಾಯದ ಮರ +ಪರಿಪರಿ ಆವೇಶಗಳಿಂದ ನಲಗುತ್ತ +ಸುಖಮಯ ಲೋಲುಪ್ತಿಯಲ್ಲಿ ಹಕ್ಕಿಗಳ ಮುಳುಗಿಸುತ್ತ +ಕಣ್ಣು ಹಬ್ಬಾದ ಎಳೆಯ ಮರ ಇಂದ್ಯಾಕೆ ಹೀಗೆಂದವು. +ಯಾರೋ ಉನ್ನತ ದೇವತೆ ಉಲ್ಲಾಸದಲಿ ಬಂದು +ತಂಗಾಳಿಯಾಗಿ ಮರ ತುಂಬಿ +ಹುಡದಿ ಹಾಕುತ್ತಿರಬಹುದೇ? ಎಂದೆವು. +ಸುತ್ತ ಮುತ್ತ ಇಷ್ಟೆಲ್ಲ ನಡೆಯುತ್ತಿದ್ದರೆ +ನಮ್ಮ ಮಿತ್ರ ಚಂದಮುತ್ತ +ಲೋಕವ ಇತರೇತರ ಮಾಡಿ ಮೈಮರೆತಿದ್ದ ಅಬ್ಬೆ!” +“ಏನೆಂದಿರಿ ಮಕ್ಕಳೆ?” +“ಹೌದು ಅಬ್ಬೆ ಅವನು ಮೈ ಮರೆತಿದ್ದ. +ಕನಸುಗಳಿಂದ ಭರಿತವಾಗಿದ್ದವು ಕಣ್ಣು. +ಕೆನ್ನೆ ಕೆಂಪಾಗಿ ಎದ್ದ ಪುಳಕ ಹಾಗೇ ಇತ್ತು. +ಸುಖದಲ್ಲಿ ಮತ್ತೇರಿದ ಪ್ರಮತ್ತನ +ಭುಜತಟ್ಟಿ ಅಲುಗಿ ಚಂದಮುತ್ತಾ ಎಂದೆವು. +ಸೃತಿಯಾಗಿ ನಮ್ಮ ಕಡೆ ನೋಡಿದ. +ಕಣ್ಣುಗಳಲ್ಲಿ ಇನ್ಯಾವುದೋ ಸೀಮೆಯ ಬೆಳಕಿತ್ತು. +ಒಲ್ಲದ ಮನಸ್ಸಿನಿಂದ ಭೂಮಿಗಿಳಿದು ಬಂಧಂಗಿದ್ದ. +ನಮ್ಮ ಗುರುತಾಗಿ, ಕ್ಷಣ ಹೊತ್ತು ತಬ್ಬಿಬ್ಬಾಗಿ +ತಕ್ಷಣ ಕಣ್ಣಲ್ಲಿ ಧಾರಾವತಿ ಜಲವ ಸುರಿಸಿದ. +ಗಾಬರಿಯಾಗಿ ಯಾಕೋ ಏನಾಯಿತೆಂದೆವು. +ನಮ್ಮನ್ನೆಲ್ಲ ಇತರೇತರ ಮಾಡಿರುವಿಯಲ್ಲ, +ಹಿಂಗ್ಯಾಕೆಂದೆವು.” +ಚಂದಮುತ್ತ : ಯಾರೋ ಕರೆದರಲ್ಲ +ಎದೆಯಲಿ ದಾಖಲಾದರಲ್ಲ | +ಮುಖಾ ತೋರದೆ ಸುಖದಲಿ ಮರವೆಯಲಿ +ಸುಳಿದು ಹೋದರಲ್ಲ || +ಗೆಳೆಯರು: ನೀ ಕೇಳಿದ ಸೊಲ್ಲಾ +ನಮಗೂ ಯಾಕ ಕೇಳಿಸಲಿಲ್ಲಾ? | +ಬಾರೋ ಹುಚ್ಚ ಪೋರ +ಸುರಿಸಲಿ ಬ್ಯಾಡ ಕಣ್ಣ ನೀರಾ || +ಚಂದಮುತ್ತ :ಗೆಜ್ಜೆ ಕೇಳಿತಲ್ಲ +ಗೆಜ್ಜೆಯ ಹೆಜ್ಜೆ ಕಾಣದಲ್ಲ | +ಶ್ರೋತೃಸುಖದ ರಂಭೆ +ಕುಣಿಧಾಂಗ ಗುಂಭದಾಗ ಗೊಂಬಿ || +ಗೆಳೆಯರು :ಸೂತ್ರವಿರದ ಮಾತಾ +ಛೀ ತಗಿ ಯವ ಎಳೆತ ಸೆಳೆತ | +ಸೊಲ್ಲು ಸೊಲ್ಲಿಗೊಮ್ಮಿ +ವ್ಯಾಕುಲವ್ಯಾಕ ಪಡುತ ನಿಂತಿ || +“ಎಷ್ಟೊಂದು ಯತ್ನವ ಮಾಡಿದರು +ಅವನ ವೇದನೆಯನ್ನ ಭೇದಿಸಲಾಗಲಿಲ್ಲ ನಮಗೆ. +ಇನ್ನೊಮ್ಮೆ ಮಾಯದ ಗಾಳಿ ಬೀಸಿ +ಮಳೆ ಬಂದು +ಕಂಗಾಲಾಗಿ ಅಗಲಿದೆವು. ಅವನು ಕ್ಷೇಮದಿಂದ +ಗೂಡಿಗೆ ಬಂದುದ ಕೇಳಿ ಆನಂದವಾದೆವು ಅಬ್ಬೆ” ಎಂದರು. +ವಾರಿಗೆಯವರ ನುಡಿಕೇಳಿ +ಹಡೆದೊಡಲು ಉರಿದವು. +ಸತ್ಯವುಳ್ಳ ಶಿವಲಿಂಗದೇವರ ನೆನೆದು +ಮಗನ ನೋಡಲು ಒಳಕ್ಕೆ ಹೋದಳು. +೪. ಸರಿದು ಬಂದಳು ಕ್ಷಿತಿಜದಂತೆ +ಮಗ ಮಲಗಿದ್ದ ಜಗಲಿಗೆ ಹೋಗಿ ಅಬ್ಬೆ ಬೆಳಕಿನಲ್ಲಿ ಕಣ್ಣಡಿಸಿ ಹುಡುಕಿದಳು. ಕತ್ತಲಲ್ಲಿ ಕಾಲಾಡಿಸಿ ಹುಡುಕಿದಳು. ‘ಮಗಾ ಚಂದಮುತ್ತಾ, ಚಂದ್ರಾಮಾ’- ಎಂದು ದನಿಮಾಡಿ ಹುಡುಕಿದಳು. ಹುಡುಕುತ್ತಿದ್ದಾಗ ತಡಕುವ ಕಾಲಿಗೆ ಮಗನ ಮುಡಿ ತಾಗಿತು. ಅಲ್ಲೇ ಕುಳಿತು ಮಗನ ತಲೆ ನೇವರಿಸಿದಳು, ಜ್ವರದಿಂದ ತಲೆ ಸಿಡಿಯುತ್ತಿತ್ತು. ಅಯ್ಯೋ ಕಂದಾ’ ಎಂದು ಒಂದೇ ಉಸುರಿಗೆ ಬಂದು ಕಷಾಯ ಕುದಿಸಿ ಕೊಂಡ್ಯೊಯ್ದಳು. ಒತ್ತಾಯದಿಂದೆಬ್ಬಿಸಿ ಮಗನಿಗೆ ಕುಡಿಸಿ ಭದ್ರ ಮಂಚದ ಮ್ಯಾಲೆ ಮಲಗಿಸಿದಳು. ಮಗನಿಗೆ ಭೂತ ಪಿಶಾಚಿ ಬಾಧೆಯೋ ಎಂದು ಹೆದರಿ ಕುಲದೈವ ಚಂದಪ್ಪ ಬೆಳಗಾಗುವುದರೊಳಗೆ ಮಗನ ಪೀಡೆ ತೊಲಗಲಿ, ನಿನಗೆ ಮಲ್ಲಿಗೆ ಹೂ ದಂಡೆ, ಬಾಡಿನ ರುಚಿ ಕೊಡುವುದಾಗಿ ಹರಕೆ ಹೊತ್ತು ಹಾಲು ಹಿಂಡಲು ಹೋದಳು. +ಚಂದಮುತ್ತ ಅಂಗಾತ ಮಲಗಿದ್ದಾಗ ಎಲೆಮರೆಯಲ್ಲಿದ್ದ ನಾವು ಕನಸುಗಳು, ಹೂಹೂಗಳಲ್ಲಿ ಹುದುಗಿದ್ದ ಕನಸುಗಳು ಚಂದ್ರ, ತಾರೆಯರೊಂದಿಗೆ ಆಕಾಶದಂಗಳದಲ್ಲಿ ತೇಲಾಡುವ ಮಾಯದ ಕನಸುಗಳು- ಹೀಗೆ ಸುತ್ತೂ ಸೀಮೆಯ ಕನಸುಗಳು ಗುಂಪಾಗಿ ಬಂದು ಚಂದಮುತ್ತನ ಕಣ್ಣು ಮುತ್ತಿ ನಮ್ಮನಮ್ಮಲ್ಲಿ ಕೆಲಸ ಹಂಚಿಕೊಂಡೆವು. +ನೀನು ಆಕಾಶದಲ್ಲಿ +ನಕ್ಷತ್ರ ತಾರೆ ಚಿಕ್ಕೆಯ ಹರಹಿ +ದೀಪಾವಳಿ ಬೆಳಗುವಂತೆ ಮಾಡು. +ನೀನು ಶಿವನ ಜಡೆ ನೆತ್ತಿಯ ಕೆಡದ ಹಾಗೆ +ಚಂದ್ರನ ಕಿತ್ತು ತಂದು +ಆಕಾಶ ನೀಲಿಮದಲ್ಲಿಡು. +ನೀನು ಚಂದ್ರಲೋಕದ ಗಾಳಿಯ +ಚಂದಾಗಿ ಬೀಸು, ನೆಪ್ಪಿರಲಿ +ಅದರೊಳಗಿಂದ ಅಸಮಸುಖಗಳು ಬೀಸಿ ಬೀಸಿ ಬರುತ್ತಿರಲಿ. +ಬಳ್ಳಿಯ ಕಣ್ಣು ಬಿರಿದು +ಹುಲ್ಲುಗಾವಲಿನಲಿ ಹೂಗಾಳಿ ಪರಿಮಳಿಸಲಿ, ಆಯಿತೇ? +ಭದ್ರಮಂಚದ ಮ್ಯಾಲೆ ಮಲಗಿರುವ ಚಂದ್ರಾಮನ್ನ +ಮೆಲ್ಲಗೆ ಕರೆತನ್ನಿ ಕಾಡಿಗೆ. +ಹಿತಕರದ ದೃಶ್ಯಗಳಿಂದ +ಸೊಗಸಿನ ಚದುರನಿಗೆ ಸೋಜಿಗವಾಗುವ ಹಾಗೆ +ನೋಡಿಕೊಳ್ಳಿ. +ಎಲ್ಲಿದ್ದಾಳೆ ಯಕ್ಷಿ? +ಎರಡು ಲೋಕಂಗಳ ಮಧ್ಯೆ +ಕರುಳುಬಳ್ಳಿಯ ಬೆಳೆಸಿ +ಎರಡನ್ನು ಬೆಸೆಯುವಾಕೆ. +ಬೇರೆ ಸೀಮೆಯ ಆನಂದಗಳಿಂದ +ಯೌವನವ ಸಿಂಗರಿಸಿಕೊಂಡಿರಲಿ ಆಕೆ. +ಆಯಿತೆ? ಗಿಲಿಗಿಲಿ ಗೆಜ್ಜೆಯ ನುಡಿಸುತ +ಸೀದಾ ಬೇಳೆಸಲಿ ಪದುಮದ ಪಾದ ಕಾಡಿಗೆ. +ಚಂದಮುತ್ತನ ಕಡೆಗೆ ಬಂದಳೆ? +ಭೇಟಿಯಾದವೆ ಕಣ್ಣು? ಹೆಣೆದುಕೊಂಡವೆ ದೃಷ್ಟಿ? +ಸಂತೋಷ ಚಿಗಿತವೆ? +ಪುಳಕದಲಿ ಮೈತೊಳೆದರೆ? +ಹಾಗಿದ್ದರೆ ಚಂದಮುತ್ತನ ಹಾಡು ಕೇಳಿ: +ಹೇಳಕೇಳದೆ ಸುಳಿದರ್‍ಯಾರ? ನಮ ಸೀಮೆಯಲಿ +ತಿಳಿಸದೆ ಬಂದವರ್‍ಯಾರ||ಪ|| +ಆಡಾಡುತ ಬಂದು +ಬಂದ ದಾರಿಯ ಮರೆತು +ಚಿತ್ತದಲಿ ಚಕಿತರಾದವರಾ||ಅ.ಪ|| +ತೆಳ್ಳನೆ ಹೊಟ್ಟೆವಳು ತಾವರೆಯ ಮುಖದವಳು +ಬ್ಯಾರೆ ಸೀಮೆಯ ನಿಲುವು ಶೈಲಿ| +ಹ್ಯಾಗೆ ಸಂಪಿಗೆ ಮೊಗ್ಗು ಹಾಗೆ ಆಕೆಯ ಮೂಗು +ಕಂಗಳೆಂದರೆ ಕಮಲ ನೀಲಿ| +ಮೊಲೆಗಳ ಭಾರಕೆ ಬಾಗಿದಬಾಲೆಯ +ಮುಡಿಯಿಂದ ಜಗುಳ್ಯಾವು ಹೂವು|| +ಮಾರಿ ಸಣ್ಣದು ಮಾಡಿ ದೂರದಲಿ ನಿಂತಳು +ತಿಳಿಯ ಬೆವರಿತ್ತು ಹಣೆಯೊಳಗೆ| +ಅತಿಶಯದ ಕುಸುಮದ ವಾಸನೆ ಎಸೆದಾವು +ಸರಿದು ಬಂದಳು ಕ್ಷಿತಿಜದಂತೆ| +ಬೆದರಿದ ಎರಳೆಯೊ ದೇವರ ತರಳೆಯೊ +ನಿಜವ ತಿಳಿದವರ್‍ಯಾರು ಮಾಯೇ|ನಿಮ್ಮ|| +ಯಾವುದೊ ಹೊಸಚಂದ್ರ ಭೂಮಿಗಿಳಿದಾಂಗಿಹುದು +ಕಾಮಿತ ಫಲಿಸಿದ ಹಾಗೆ| +ಮೂರು ಲೋಕದ ಸುಖದ ಶಿಖರದ ಮ್ಯಾಗಿಂದ +ಕನಸು ಕೆಳಜಾರಿದ ಹಾಗೆ| +ಸಣ್ಣ ಮಿಂಚಿನ ಹಾಗೆ ಕಣ್ಣು ಹೊಡೆವಳು ಕನ್ಯೆ +ಚಿಮ್ಮುವ ಚಿಲುಮೆಯ ಹಾಗೆ||ಹ್ಯಾಗೆ|| +ಅಷ್ಟರಲ್ಲಿ ಉಣ್ಣದೆ ಮಲಗಿದ್ದ ಮಗನ ನೋಡಲೆಂದು ಅಬ್ಬೆ ಬಂದಳು. ಹಣೆ ಮುಟ್ಟಿ ಮುಂಗುರುಳು ನ್ಯಾವರಿಸಿದಳು. ನಾವು ಕನಸುಗಳು ಗಡಬಗಿಸಿ ರಚಿಸಿದ ನಿರ್ಮಿತಂಗಳೆಲ್ಲವ ಕರಗಿಸಿ ಓಡುತ್ತ, ಚಂದಮುತ್ತನ ಕಣ್ಣಲ್ಲಿ ನೆಟ್ಟಿದ್ದ ಯಕ್ಷಿಯ ಬಲವಂತ ಕಿತ್ತೆಳೆದುಕೊಂಡು ಮಾಯವಾದೆವು. ಚಂದಮುತ್ತ ಗಾಬರಿಯಿಂದ ಗಕ್ಕನೆ ಎದ್ದು, ಸುತ್ತೂ ಕಡೆ ನೋಡಿ, +ಯಾಕೆನ್ನ ಎಬ್ಬಿಸಿದಿರಿ| +ಕಣ್ಣಗಿನ| ಚಂದ್ರನ್ನ ಅಗಲಿಸಿದಿರಿ|| +-ಎಂದು ಅಳತೊಡಗಿದ. ಮಗನ ಇಂಪಿರದ ಮಾತಿಗೆ ಅಬ್ಬೆಯ ಹೃದಯ ಕಂಪಿಸಿತು. ‘ಅರಿವಿಗೆ ಬಾ ಮಗನೇ ಕನಸು ಕಂಡೆಯಾ?’ ಎಂದು ಭುಜ ಹಿಡಿದಲಿಗಿದಳು. +“ಹೌದು ಅಬ್ಬೆ”-ಅಂದ. +“ಏನು ಕನಸು ಕಂಡೆ ಕಂದ?” +“ಬೆಳ್ದಿಂಗಳಲ್ಲಿ ಈಜಾಡುತ್ತಿದ್ದ ಚಂದ್ರನ್ನ ಕಣ್ಣಲ್ಲಿ ಹಿಡಿದುಕೊಂಡಿದ್ದೆ. ನೀ ಬಂದೆ. ಕಣ್ಣಿಂದ ಜಗುಳಿ ಎದೆಗಿಳಿದ ಅಬ್ಬೆ”-ಎಂದು ಎದೆ ಹಿಡಿದುಕೊಂಡ. +ಅಬ್ಬೆಯ ಹರುಷಗಳು ಇದ್ದಿಲಾದವು. ನಾಳೆ ಕುಲಗುರುವ ಕಾಣಬೇಕೆಂದು, ಅಲ್ಲಿಯ ತನಕ ಇನ್ನಷ್ಟು ಹರಕೆಗಳ ಹೊರಬೇಕೆಂದು ಗೂಡಿನ ಮಾಡದಲ್ಲಿರುವ ಮನೆದೇವರು ಚಂದಪ್ಪನ ಕಡೆಗೆ ನಡೆದಳು. +೫ . ಬ್ಯಾರೆ ಸೀಮೆಯವಳು +ಬೆಳ್ಳಿ ಮೂಡಿ ಬೆಳಗಾಯಿತು. ಅಬ್ಬೆ ಕೋಳಿಯ ಕೂಗಿಗಿಂತ ಮುಂಚೆ ಎದ್ದು ಹಿಡಿಸೂಡಿ ಹಿಡಿದು ಅಂಗಳ ಗೂಡಿಸಿದಳು. ಎಮ್ಮೆ ಹಸುಗಳ ಗಂಜಳ ಬಳಿದು ತಿಪ್ಪೆಗೆಸೆದು ಬಂದಳು. ಹಲ್ಲು ಪುಡಿಯಿಂದ ಹಲ್ಲುಜ್ಜಿ ಮಡುವಿನಲ್ಲಿ ಮಿಂದು ಮಡಿಯುಟ್ಟಳು. ಕುಲದೈವಕ್ಕೆ ತುಪ್ಪದ ದೀವಟಿಗೆ ಹಚ್ಚಿದಳು. ಕರುಗಳ ಬಿಡದೆ, ಹಸು ಎಮ್ಮೆ ಹಿಂಡದೆ ಅವಸರದಲ್ಲಿ ಭದ್ರ ಮಂಚದ ಮ್ಯಾಲೆ ಮಲಗಿದ್ದ ಮಗನ ಕಡೆಗೊಮ್ಮೆ ನೋಡಿ ಕಂದನ ಕಾಪಾಡೆಂದು ಸತ್ಯದೇವರ ಚಿತ್ತದಲ್ಲಿ ಸ್ಮರಿಸಿ, ಧರೆಗೆ ದೊಡ್ಡವನಾದ ಕುಲಗುರುವಿನಲ್ಲಿ ದೌಡಾಯಿಸಿದಳು.ಸ್ವಲ್ಪ ಸಮಯವಾಗುತ್ತಲೂ ಬಾಗಿಲು ತಂತಾನೆ ತೆರೆದು ನಿನ್ನೆಯ ಮೈಲಿಗೆ ಬಟ್ಟೆ ಹೊರಕ್ಕೆ ಬೀಳುತ್ತಿತ್ತು. +ಇಂದು ಕೂಟ್ಟ ಮಡಿಬಟ್ಟೆ ವಿಗ್ರಹದ ಮೈಮಾಲಿರುತ್ತಿತು. ಚಂದಮುತ್ತ ದೈವಕ್ಕೆ ಕ +ಕುಲಗುರುವಾಗಲೇ ಬೆಳಗಿನ ಕುಲಾಚಾರಂಗಳ ತಪ್ಪದೆ ಪಾಲಿಸಿ ಮೂರು ಕಾಲಿನ ಅಸನದ ಮ್ಯಾಲೆ ಕರಿ ಕಂಬಳಿಯ ಗದ್ದಿಗೆ ಮಾಡಿ ದೊಡ್ಡ ಚಿಂತೆಯ ಮಾಡುತ್ತ ಕುಂತಿದ್ದ. ರಾತ್ರಿ ಕನಸಾಗಿತ್ತು. ಆತಂಕವಿತ್ತು ಕಣ್ಣಲ್ಲಿ. ಅಷ್ಟರಲ್ಲಿ ಅಬ್ಬೆ ಬಂದು ‘ಕಾಪಾಡು ಶಿವನೇ’ ಎಂದು ಅಡ್ಡಬಿದ್ದಳು. +ಅಬ್ಬೆ: ಕಾಡಿಂದ ಬಂದ ಮಗ ಮಲಗಿ ಬಿಟ್ಟಿದ್ದಾನೆ +ಬಂದವನು ನುಡಿದಾಡಿಸಲಿಲ್ಲ. ಉಣಲಿಲ್ಲ +ಒದ್ದೆ ಬಟ್ಟೆ ತೆಗೆದುಡಲಿಲ್ಲ. +ಕುಲಗುರು: ಸುಧಾರಿಸಿಕೊ ಮಗಳೆ, ಕುಂತು ಸಾದ್ಯಂತ ಹೇಳು-ಎಂದನು. ಅಬ್ಬೆ ಹತ್ತೂ ಬೆರಳು ಜೋಡಿಸಿ ನಮಸ್ಕರಿಸುವ ಭಂಗಿಯಲ್ಲೇ ನಿಂತು ಹೇಳಿದಳು: +ನಿನ್ನೆ ಹಟ್ಟಿಯ ಹೈಕಳು ಕಾಡಲ್ಲಿ ಸೇರಿ +ಆಡಾಡುತ್ತ ಕಂದನಿಗೆ ಕಲ್ಲುಗೊಂಬೆಯ ಜೊತೆ +ಮದುವೆಯ ಮಾಡಿದರೆ, +ಮಾಯದ ಗಾಳಿ ಬೀಸಿ ಬೀಸಿ ಬಂದೋ +ಯಕ್ಷಿಯ ಮಳೆ ಸುರಿದೋ +ಆಗಬಾರ್‍ದು ಆಯಿತಂತೆ ಮಗಂಗೆ. +ನನಗೆ ಮಗನಾದರೆ ನಿನಗೆ ಶಿಶುಮಗನಲ್ಲವೆ? +ನೀನೇ ಕೈಹಿಡಿದು ವಿದ್ಯಾ ಬುದ್ಧಿ ಕಲಿಸಿ, ಕಲಿತ ವಿದ್ಯನ ಮಾಡಲಿಲ್ಲವೆ? +ಈಗವನು ಹೆಂಗೆಂಗೋ ಆದರೆ ಹೆಂಗೆ? +ದೇವ ದೈವದ ಸಮ ನಿನ್ನ ಬಿಟ್ಟು ನಮಗಿನ್ಯಾರಿದ್ದಾರೆ? +ಕಾಪಾಡು ನನ್ನಪ್ಪಾ…… +ಒಮ್ಮೆ ಕರೆದರೆ ಮೂರು ಬಾರಿ ಓ ಅನ್ನುತ್ತಿದ್ದ +ಚಂದಮುತ್ತ ನನ್ನೊಂದಿಗೆ ಮಾತಾಡಲೊಲ್ಲ. ಗುರುತು +ಹಿಡಿಯಲೊಲ್ಲ. ಬಂದವ ನೆಟ್ಟಗೆ ಹೋಗಿ ಮಲಗಿಬಿಟ್ಟ. +ಎಬ್ಬಿಸಿದರೆ ಹ್ಯಾಗೆ ಹ್ಯಾಗೋ ಕೈಕಾಲು ಆಡಿಸುತಾನೆ. +ಏನೇನೋ ಮುರಿದ ಮಾತುಗಳ ಕನವರಿಸುತಾನೆ. +ಮದ್ದು ಮಾಟವೋ ಅರಿಯೆ. +ಬೆಟ್ಟದ ಸಿರಿಮಾಯೀ +ಪ್ರತಿ ಮಂಗಳವಾರ ಹಾಲೋಗರ ನಿನಗೆ. +ಕುರಿ, ಕೋಳಿಯ ಬಾಡಿನ ರುಚಿ ನಿನಗೆ. +ನನ್ನ ಕಂದನ ನನಗೆ ಕೊಡು. +-ಎಂದು ಹರಕೆ ಹೊತ್ತಳು. ಇಷ್ಟಾದರೂ ಸುಮ್ಮನೆ ಕೂತ ಕುಲಗುರುವಿನ ನೋಡಿ,- +ಇನ್ನೂ ಸುಮ್ಮನೆ ಕುಂತಿದ್ದೀಯಲ್ಲಪ್ಪಾ. +-ಎಂದು ದನಿ ಮಾಡಿ ಬಿಕ್ಕಿ ಬಿಕ್ಕಿ ದುಃಖ ಮಾಡಿದಳು. +ಅಬ್ಬೆಯ ನುಡಿ ಸಾದ್ಯಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸಿದ. ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸುವಷ್ಟರಲ್ಲಿ ಕೋಲಕಾರ ಬಂದು ಚಾವಡಿ ಕಟ್ಟೆಯ ಹಿಂದೆ ಕಾಲು ಮೆಟ್ಟಿ ಕೋಲು ಕುಟ್ಟಿ ನಿಂತು“ಗುರುವೇ” ಎಂದ. “ಯಾರಪ್ಪಾ ನೀನು?” +“ಗುರುವೇ ಹೆಗಡೆ ಕರೀತಾನೆ. ಎಲ್ಲಿದ್ದರಲ್ಲಿಂದ, ಹೆಂಗಿದ್ದರೆ ಹಂಗೇ ಬರಬೇಕಪೋ”-ಅಂದ. ನಿಂತಿದ್ದ ಸಿರಿಲಕ್ಕಿಗೆ,- +“ಬೆಟ್ಟದ ಮಾಯಿ ಎಲ್ಲ ನೋಡಿಕೊಳ್ಳುತ್ತಾಳೆ, ನಿಶ್ಚಿಂತಳಾಗಿರು ಮಗಳೆ. ನೀನಾಗಿ ಮಗನಿಗೆ ಕಠಿಣೋಕ್ತಿ ಆಡಬೇಡ. ನಾನೇ ಚಂದಮುತ್ತನನ್ನು ಮಾತಾಡಿಸುತ್ತೇನೆ.” +-ಎಂದು ಹೇಳಿ ಮೂರುಕಾಲಿನ ಅಸನದಲ್ಲಿ ಕುಂತುಕೊಂಡೇ ಅಬ್ಬೆಗೆ ಪಾದ ಕೊಟ್ಟ. ಮಂಡೆಯ ಮ್ಯಾಲೆ ಕೈಯಿಟ್ಟು ಹರಸಿ ಚೀಲದ ಬಂಡಾರವ ಲಕ್ಕಿಯ ಹಣೆಗೆ ಹಚ್ಚಿ ಉಳಿದುದನ್ನು ಗಾಳಿಗೆ ತೂರಿ“ಬೆಟ್ಟದ ಮಾಯೀ” ಎಂದು ಎದ್ದು ಹೊರಟ. +೬ . ಶಿವದುಃಖ +ಕುಲಗುರುವಿನ ಪಾದ ಪಡೆದುಕೊಂಡು ಅಬ್ಬೆ ಬಂದದ್ದೇ-ಮಗನಲ್ಲಿಗೆ ಹೋದಳು.ಹಾಸಿಗೆಯಲ್ಲಿ ಮಗನಿರಲಿಲ್ಲ; ಹೊರಗೆ ಬಾವಿಯ ಬಳಿ, ಪಕ್ಕದ ಮೆಳೆಯಲ್ಲಿ ಹುಡುಕಿದಳು. ‘ಮಗಾ ಚಂದ್ರಾಮಾ, ಚಂದಮುತ್ತಾ’ ಎಂದು ಕರೆದಳು. ಮಗನ ದನಿ ಕೇಳಿಸಲಿಲ್ಲ. ಹೃದಯ ಪರಚಿಕೊಂಡಳು. ಹೆಸರಿಡದ ಭಯಗಳಾವರಿಸಿ ಗರ್ಭದಲ್ಲಿ ಚೂರಿ ಆಡಿಸಿದಂತಾಯ್ತು. ಗಡಬಡಿಸಿ ಹೋಗಿ ಗೋಡೆಯ ಬಿಲದಲ್ಲಿ ಸೀಮೆ ಸುಣ್ಣದಲ್ಲಿ ಬರೆದ ಕುಲದ ಸ್ವಾಮಿ ಚಂದ್ರಾಮನ ಮುಟ್ಟಿ ಹಣೆಗೊತ್ತಿಕೊಂಡಳು. ಅದಾಗಿ ಬೆಟ್ಟದ ಕಡೆ ಮುಖ ಮಾಡಿ ‘ಬೆನ್ನಿಗಿರು ಬೆಟ್ಟದ ಮಾಯೀ’ ಎಂದು ಹೇಳಿ ಕೆನ್ನೆ ಕೆನ್ನೆ ಬಡಿದುಕೊಂಡಳು. ‘ನೀ ಮುನಿದರಿನ್ಯಾರು ಸಲಿವ್ಯಾರು ತಾಯೀ’ ಎಂದು ಬೆಟ್ಟದ ಮಾಯಿಗೆ ಹೇಳುತ್ತಿರುವಂತೆ ಕಣ್ಣೀರ ಜಲ ಸುರಿಯಿತು. ‘ಇಲ್ಲಿಯ ತನಕ ಕಾಡುವ ದೈವಂಗಳಿಂದ ಮಗನ ಕಾಪಾಡಿ ಒಂದು ಭವ ಪಾರಾದೆನೆಂದರೆ ಈಗ ಇನ್ನೊಂದು ಸುರುವಾಯ್ತಲ್ಲೇ ತಾಯೀ’-ಎಂದು‌ಏಳೇಳು ಲೋಕಂಗಳ ಭಾರೀ ದುಃಖ ಮಾಡಿ ಕರುಳು ತಾಳದೆ ಕಾಡಿಗೆ ಹೊರಟಳು. +ದನಗಳ ಮೇಯಿಸುತ್ತಿದ್ದ ಬಾಲಕರಿದ್ದಲ್ಲಿಗೆ ಹೋದಳು. ಚಂದಮುತ್ತ ಇರಲಿಲ್ಲ. ಎಲ್ಲೆಂದು ಕೇಳಿದಳು. ಎಳೆ ಆಲದ ಮರ ತೋರಿಸಿದರು. ಅವನೊಬ್ಬನನ್ನೇ ಹೊರತುಪಡಿಸಿದ್ದೀರಲ್ಲಾ ಜಗಳಾಡಿದಿರಾ? ಎಂದಳು. ಹುಡುಗರು ಹೇಳಿದರು: +ಇಂದು ಚಂದಮುತ್ತ ನಿನ್ನಿನಂತಿಲ್ಲ ಅಬ್ಬೇ, +ಆಡಿದರೆ ಮಾತಾಡಿದ, ಇಲ್ಲದಿದ್ದರಿಲ್ಲ. +ಹತ್ತು ಮಾತಿಗೆ ಒಂದುತ್ತರ ಕೊಡುವ. +ಬೆಳಿಗ್ಗೆ ಬಂದಾಗಿನಿಂದ +ಕ್ಷಿತಿಜವನ್ನು ಅದು ಕನ್ನಡಿಯೆಂಬಂತೆ +ನೋಡುತ್ತ ಕುಂತಿದಾನೆ. +ಕನ್ನಡಿಯಲ್ಲಿ ಯಾರು ಮೂಡಿರುವರೋ- +ಮೂಡಿದವರೊಂದಿಗೆ ಕೈಸನ್ನೆ ಬಾಯಿಸನ್ನೆಯಲ್ಲಿ +ಮಾತಾಡುವ. +ಮೂಡಿದವರ್‍ಯಾರೆಂದು ನಮಗೆ ಕಾಣಿಸದಾಗಿ +ಅವನ ಮಾತು ನಮಗೆ ತಿಳಿಯುತ್ತಿಲ್ಲ. +ನಮಗವನ ಕಣ್ಣಷ್ಟೆ ಕಾಣುತ್ತಾವೆ. +ಕಣ್ಣಲ್ಲಿ ನಾವಂತೂ ಮೂಡಲಿಲ್ಲ. ಮೂಡಿದ್ದೂ +ಬರೀ ಕ್ಷಿತಿಜ. +ಕ್ಷಿತಿಜದಲ್ಲಿ ಒಮ್ಮೊಮ್ಮೆ ಕಾಮನ ಬಿಲ್ಲು ಕಂಡಂತೆ +ಅವನ ಕಣ್ಣು ಗಾಜು ಗಾಜಾಗಿ ಫಳಫಳ ಹೊಳೆಯುತ್ತಾವ. +ನಿಧಿಯ ಕಂಡವರಂತೆ, ಆದರೆ ಜಿಪುಣ +ಇನ್ನೊಬ್ಬರಿಗೆ ಗುಟ್ಟು ಬಿಡದಂತೆ +ಅಭಿನಯಿಸುವ. +ಒತ್ತಾಯ ಮಾಡಿದರೆ ಕಣ್ಣೀರು ಸುರಿಸುವೆನೆಂದ +ನಾವ್ಯಾರೂ ಕೇಳಲಿಲ್ಲ, +ಅವನು ಹೇಳಲಿಲ್ಲ. +ಅಕಾ, ಕೊಳಲುಲಿ ಕೇಳಿಬಂತು. +ನಿನ್ನ ದನಕರು ನಾವು ನೋಡಿಕೊಳ್ಳುತ್ತೇವೆ, ಚಿಂತೆ ಬೇಡವ್ವ” +ಎಂದರು. ಅವಸರ ಮಾಡಿ ಮಗನ ಕಡೆಗೆ ಧಾವಿಸಿದಳು. +೭ . ಶಿವದೇವರು ನನ್ನ ಮಗರಾಯ +ಚಂದಮುತ್ತ ಬಂಡೆ ಮ್ಯಾಲೆ ಕುಂತು ಕೊಳಲು ನುಡಿಸುತ್ತಿದ್ದ. ಹುಲ್ಲುಗಾವಲಿನಲ್ಲಿ ಹೂಗಾಳಿ ಬೀಸಿ ನುಡಿಸುತ್ತಿದ್ದ ಹಾಡು ಕಿವಿಗೆ ಹಿತಕರವಾಗಿತ್ತು. ಕಣ್ಣು ಮುಚ್ಚಿದ್ದ. ಹಾರ್‍ಯಾಡೋ ಕೂದಲಿನ ಹಣೆಯಂಚಿನ ಮ್ಯಾಲೆ ಕರಿ ಕಂಬಳಿಯಿತ್ತು. ಯಾವುದೋ ಕನಸನ್ನ ಕೊಳಲುಲಿಯ ಬಲೆ ಹಾಕಿ ಜಗ್ಗಿ ಜಗ್ಗಿ ತರುತ್ತಿದ್ದ ಹಾಗೆ ಕೊಳಲನ್ನ ಅಲುಗುತ್ತಿದ್ದ. ಅದು ಸಿಗದಾಗಿತ್ತು. ಬಲೆಯಿಂದ ಜಗುಳುತ್ತಿರಬೇಕು. ಕಣ್ಣುಗಳನ್ನು ಇನ್ನಷ್ಟು ಜೋರಾಗಿ ಮುಚ್ಚಿ ಇನ್ನೊಮ್ಮೆ ಬಲೆ ಎಸೆದು ಹೊಂಚುತ್ತಿದ್ದ. ಸಿಕ್ಕಿತೆಂಬಾಗ ನುಸುಳಿ ಕೈಜಾರಿದಂತೆ, ಕಣ್ಣೆದುರಲ್ಲೇ ಕರಗಿದಂತೆ ಆಟವಾಡಿಸುವ ಕನಸು. +ಅಬ್ಬೆ ಬಂದು ನಿಂತದ್ದು ಮಗಂಗೆ ಅರಿವಾಗಲಿಲ್ಲ. ಆಗಲೇ ಅಬ್ಬೆಗೆ ಗೊತ್ತಾದದ್ದು ‘ಎಲಾ ಶಿವನೆ! ಮಗ ಎಷ್ಟು ದೊಡ್ಡವನಾಗಿ ಬೆಳೆದಿದ್ದಾನಲ್ಲಾ!’ ಎಂದು. +ಭುಜಗಳ ವಿಸ್ತಾರ ಕಂಡು ಆನೆ ಮರಿ ನನ್ನ ಮಗ ಎಂದಳು. +ನೆತ್ತಿಯಲ್ಲಿ ಲೋಲಾಡುವ ನವಿಲುಗರಿ ನೋಡಿ +ಕೃಷ್ಣದೇವರಾಯ ನನ್ನ ಮಗ ಎಂದಳು. +ಜಗ್ಗಿ ಜಡೆ ಕಟ್ಟಿದ್ದರೂ ಬಿಡುಗಡೆಗೊಂಡು +ಕೆನ್ನೆ ಕತ್ತಿನ ಮ್ಯಾಲೆ ಆಟವಾಡುವ +ಮಿಡಿನಾಗರ ಜಡೆ ಕಂಡು +ಶಿವದೇವರು ನನ್ನ ಮಗರಾಯನೆಂದಳು. +ಹದಿನೆಂಟು ಗೊಂಡೆಗಳ ಲಂಗೀಟಿಯ +ಗಟ್ಟಿಮುಟಾದ ತೊಡೆ ಸೊಂಟಗಳ ನೋಡಿ +ಕಾಮದೇವರು ನನ್ನ ಮಗರಾಯನೆಂದಳು. +ದೃಷ್ಟಿ ತಾಗೀತೆಂದು ಮನಸ್ಸಿನಲ್ಲೇ ನಿವಾಳಿ ಚೆಲ್ಲಿದಳು. +ಕೊಳಲೂದುವ ಮಗ ಈಗ ಸೋತ ಹಾಗಿತ್ತು. ಬೆನ್ನು ತಟ್ಟಿದಳು. ಸಮಾಧಿಭಂಗವಾಗಿ ಕಣ್ತೆರೆದ. ಎದಿರಿಗೆ ಹಡೆದವ್ವ! ‘ಅಬ್ಬೇ’ ಎಂದ. +ಮಗನ ಚೆಲುವಿಕೆಯ ಚೋದ್ಯವ ನೋಡಿ ಆದ ಆನಂದ ಒಂದು ಕಡೆ, ಕುಲಗುರುವಿನ ನುಡಿಕೇಳಿ ಆದ ಆತಂಕ ಇನ್ನೊಂದು ಕಡೆ. ಆನಂದ ಆತಂಕಗಳಲ್ಲಿ ಅಬ್ಬೆಯ ಹೃದಯ ಹಸಿರೇರಿ ಹೆಚ್ಚು ನುಡಿದಾಡಿಸದೆ ಮಗನ ಗೂಡಿಗೆ ಕರೆತಂದಳು. +ಬಾವಿಯ ಕಿರುಯಾತದಿಂದ ನೀರು ಸೆಳೆಸೆಳೆದು ಹಂಡೆ, ಹರವಿ ತುಂಬಿ ಒಲೆಗೆ ಬೆಂಕಿಯಿಟ್ಟಳು. ಮಗನ ಮುಂದೆ ಕೂರಿಸಿಕೊಂಡು ಬೆಳ್ಳಿಯೆಣ್ಣೆ ಕುಡಿಕೆಯಿಂದ ಎಣ್ಣೆ ತಗೊಂಡು ಮಗನ ಕೈ ಮೈ ತಲೆ ತಂಪಾಗುವಂತೆ ಎಣ್ಣೆ ಹಚ್ಚಿದಳು. ತುಂಡು ಸಾಬಾನು ಸೀಗೆಪುಡಿ ತಗೊಂಡು ಬಾ ಜಳಕಕ್ಕೆಂದು ಕೈಹಿಡಿದು ಬಚ್ಚಲಿಗೆ ಕರೆದೊಯ್ದಳು. +ನೂರು ತಂಬಿಗೆ ಬಿಸಿನೀರೆರೆದು ಸಾಬೂನಿನಿಂದೊಮ್ಮೆ ಮೈ ಹಸನು ಮಾಡಿದಳು. ಸೀಗೆಯಿಂದೊಮ್ಮೆ ಶುದ್ಧ ಮಾಡಿದಳು. ನೂರು ತಂಬಿಗೆ ಬಿಸಿನೀರೆರೆದು ಬಿಸಿ ಮಾಡಿ, ತಣ್ಣೀರಲ್ಲಿ ತಂಪು ಮಾಡಿದಳು. ಮಡಿ ಪಾವಡದಿಂದ ತಾನೇ ಮುಂದಾಗಿ ತಲೆ ಒರೆಸಿ ಗೊಂಡೇದ ಲಂಗೋಟಿ ಕೊಟ್ಟಳು. ಮಗ ಮರೆಗೆ ಹೋಗುತ್ತಲೂ ಹೆಮ್ಮೆಯಿಂದ ಹಿಡಿದಿಟ್ಟ ನಗೆಯ ಮಲ್ಲಿಗೆ ಚೆಲ್ಲಾಡಿದಳು ಚಂದಮುತ್ತ ದೇವರ ಬಿಲಕ್ಕೆ ಹೋಗಿ ಸಾವಿರದೆಂಟು ನಾಮಗಳಿಂದ ಕುಲದೇವರ ಹೊಗಳಿ ಹೊರಬಂದ. +ಅಬ್ಬೆ ಬಾಳೆಯೆಲೆ ಹಾಕಿ ನೀರು ಚಿಮುಕಿಸಿದಳು. ಮುದ್ದೆ ಬಡಿಸಿದಳು. ಎರಡು ಬಗೆ ಅನ್ನ ಬಡಿಸಿದಳು. ಮೂರು ಬಗೆ ಬಾಡು ಬಡಿಸಿದಳು. ಆರು ಬಗೆ ಪಲ್ಯ ಪದಾರ್ಥ ಚಟ್ನಿಯ ಬಡಿಸಿ ತುತ್ತು ಮಾಡಿ ಮಾಡಿ ಮಗನ ಬಾಯಿಗಿಟ್ಟು ಉಣಿಸಿದಳು. +ಕಾವಲಿಗೆ ಹೋಗುತ್ತೇನೆಂದ ಮಗನ ತಡೆದು, ಮುಂದೆ ಕೂರಿಸಿಕೊಂಡು ಸೊಂಪಾಗಿ ಬೆಳೆದ ತಲೆಕೂದಲನ್ನು ಬಿಡಿಸಿ ಬೆನ್ನಿಗಿರಿಸಿ ಹಿತಕರದ ಬಿಸಿಲಲ್ಲಿ ಹಾಯಾಗಿ ಕುಂತಳು. ಬಣ್ಣದ ಬಾಚಣಿಗೆಯಿಂದ ಮಗನ ತಲೆ ಬಾಚಿ ಹೇನು ಹೆಕ್ಕುತ್ತ ಕೇಳಿದಳು. +“ನಿನ್ನೆ ಮನೆಗೆ ಬಂದವನು ನನ್ನ ನುಡಿದಾಡಿಸದೆ ಇಂದು ಬೆಳಿಗ್ಗೆ ಕಾಡಿಗೆ ಓಡಿದೆಯಲ್ಲ, ಏನು ಕಾರಣ ಮಗನೆ?” +“ಏನಿಲ್ಲಬ್ಬೆ” +ಮತ್ಯಾಕೆ ಹಾಗೆ ಹೇಳದೆ ಕೇಳದೆ ಕಾಡಿಗೆ ಓಡಿ ಹೋದೆ?” +ರಾತ್ರೆ ಒಂದು ಕನಸು ಕಂಡೆ ಅಬ್ಬೆ” +“ಕನಸಿನಲ್ಲೇನು ಕಣ್ಣು ತುಂಬುವನ ದನ ಕಂಡೆಯಾ? ಕಂಡಿದ್ದರೆ ಹೇಳು ಬೆಲೆ ಕೊಟ್ಟು ಕೊಳ್ಳುವಾ.” +“ಇಲ್ಲ ಅಬ್ಬೆ” +“ಇನ್ನೇನು ಪರಿಮಳದ ಹೂಬಳ್ಳಿ ಕಂಡೆಯಾ? ಕಂಡಿದ್ದರೆ ಹೇಳು, ಅಂಗಳದಲ್ಲೇ ಸಸಿ ನೆಟ್ಟು ಬೆಳೆಸುವಾ.” +“ಇಲ್ಲ ಅಬ್ಬೆ” +“ಸೊಬಗುಳ್ಳ ಬೆಡಗಿಯ ಕಂಡೆಯಾ?” +ಈಗ ಚಂದಮುತ್ತ ತಲೆ ತಿರುಗಿಸಿ ಅಬ್ಬೆಯ ಮುಖ ನೋಡಿದ. +ಕನಸಿನಲ್ಲಿ ಚಂದ್ರನ ಕಂಡೆ ಅಬ್ಬೆ”-ಅಂದ. +“ಚಂದ್ರನ ಕಂಡೆಯೋ ಚಂದ್ರನಂಥ ಹೆಣ್ಣ ಕಂಡೆಯೋ! +ಇಂದಿನ ನಿನ್ನ ಕೊಳಲ ಹಾಡು ಪಸಂದಾಗಿತ್ತಪ್ಪ. ಹಾಡು +ನಮಗಿರಲಿ, ಹಾಡಿನ ಹುಡುಗಿ ನಿನಗಿರಲೇಳು” +ಎನ್ನುತ್ತ ಅಕ್ಕರೆ ಮತ್ತು ಆತಂಕದಿಂದ ಲಟಿಕೆ ಮುರಿದಳು. ಮಗ ನಗುತ್ತ ನವಿಲುಗರಿ ತುರಾಯಿ ನೆತ್ತಿಯ ಮುಡಿಗಿಟ್ಟು, ಕರಿ ಕಂಬಳಿಯ ಹೆಗಲಿಗೆ ಹೊತ್ತು, ಬೆಳ್ಳಿಬಿಡಿಯ ಕಿರುಗತ್ತಿಯ ಎಡಸೊಂಟಕ್ಕೆ ಜೋತು, ಬಣ್ಣದ ಕೊಳಲು ಬಲಸೊಂಟಕ್ಕೆ ಜೋತು ಕಕ್ಕೆದೊಣ್ಣೆ ಕೈಲಿ ಹಿಡಿದುಕೊಂಡು, ಹಿಮ್ಮಣ್ಣಿ ಚೀಲದಲ್ಲಿ ಎಲಡಿಕೆ ಸುಣ್ಣ ಕಡ್ಡೀಪುಡಿ ಹಾಕ್ಕೊಂಡು ಹೊರಟ. ಅಬ್ಬೆಯ ಕಣ್ಣು ಹಾದಿಯಾದವು. +೮ . ಹೊಸ ದೈವದ ಅವತಾರ +ಕುಲಗುರು ಬರುತ್ತಿರುವುದ ಕಂಡು ಚಾವಡಿಯಲ್ಲಿ ಹೊಲಗೆಲಸದ ಕರಿಕಂಬಳಿ ಹಾಸಿ ಅಕ್ಷತೆಯಲ್ಲಿ ಚಿತ್ರ ಬರೆದು, ತಾಂಬೂಲ ತಟ್ಟೆ ಅಣಿಮಾಡಿಟ್ಟು ಹಟ್ಟಿಯಾಳ್ತನ ಮಾಡುವ ಹೆಗಡೆ ಕಾದು ನಿಂತ. ಅಷ್ಟರಲ್ಲಿ ಬಗಲ ಚೀಲ, ಬಿಳಿತಲೆಯ ಕುಲಗುರು ಕೋಲೂರಿಕೊಂಡು ಹಳಬನ ಹಿಂದಿನಿಂದ ಬಂದ. ‘ಬಾ ಶಿವನೇ’ ಎಂದು ಕರವೆತ್ತಿ ನಮಸ್ಕಾರ ಮಾಡಿದ ಹೆಗಡೆಗೆ ಬಲಗೈ‌ಎತ್ತಿ ಹರಸಿ ಬಗಲ ಚೀಲದ ಬಂಡಾರ ತೆಗೆದು ಹಣೆಗಂಟಿಸಿ “ಬೆಟ್ಟದ ಮಾಯೀ” ಎನ್ನುತ ಉಳಿದ ಬಂಡಾರವನ್ನು ಗಾಳಿಯಲ್ಲಿ ತೂರಿದ. ಕರಿಕಂಬಳಿ ಗದ್ದಿಗೆಯಲ್ಲಿ ಕುಂತು ಬಾಯಾರಿಕೆಗೆ ಬೆಲ್ಲ ನೀರು ಕುಡಿದ. ‘ಬೆಟ್ಟದ ಮಾಯೀ’ ಎನ್ನುತ್ತ ಕುಡಿದುದನ್ನ ತಾಯಿಗರ್ಪಿಸಿ ಹೆಗಡೆ ಕಡೆ ನೋಡಿ, +“ಏನು ಕರೆಸಿದ್ದು ನನ್ನಪ್ಪ?” ಎಂದ. +“ಈಗ ಮೂರು ದಿನದಿಂದ ಒಂದೇ ಸ್ವಪ್ನ ಕಾಣಿಸುತ್ತ ಇದೆ. +ಸ್ವಪ್ನದಿಂದ ಏನೋ ದರ್ಶನವಾಗಿ ಆತಂಕದಿಂದ ಹೇಳಿಕಳುಹಿಸಬೇಕಾಯ್ತು.” +“ಸ್ವಪ್ನದಲ್ಲಿ ಕಂಡದ್ದು ದೈವವೋ ಸೇಡು ಮಾರಿಯೋ?” +“ಹೊಸ ದೈವ ಕಾಣಿಸಿಕೊಂಡು ಮೂರು ದಾರಿ ಕೂಡುವಲ್ಲಿ ಅವತಾರವಾಗಿದ್ದೇನೆ. ಮನ್ನಣೆ ಮಾಡಿ ಗುಡಿ ಗುಂಡಾರ ಕಟ್ಟಿಸಿಕೊಟ್ಟರೆ ಹಿಡಿದ ಮಣ್ಣು ಚಿನ್ನ ಮಾಡೇನು. ತಪ್ಪಿದರೆ ಬೂದಿ ಮಾಡೇನೆಂದು ಹೇಳಿತಲ್ಲ! ಏನು ಮಾಡಬೇಕು.? ನೀನು ತೋರುವ ಬೆಳಕ ಅನುಸರಿಸಿ ನಡೆವವರು ನಾವು” +“ಇದ್ಯಾವ ಹೊಸ ದೈವವೋ ಕಾಣೆನಲ್ಲ!” +ಎನ್ನುತ್ತಿರವಂತೆ ತನ್ನ ಕನಸಿನ ನೆನಪಾಯ್ತು. +“ನಿನ್ನೆ ಭೂತ ಸಂಚಾರದ ವ್ಯಾಳದಲ್ಲಿ +ನನಗೂ ಒಂದು ಕನಸಾಯ್ತಲ್ಲ ನನ್ನಪ್ಪ!, +ಆಕಾಶದ ಗಂಟೆ ಢಣಲೆಂದು ಹೊಡೆದವು. +ಬೆಟ್ಟದ ಮೈತುಂಬಿ ಕಾಡು ಗಿಡಮರ ಒಡಮುರಿದು +ಹೂ ಹೂ ಚೆಲ್ಲಿ ಹುಡದಿಯಾಡಿದವು. +ಝಗ್ಗಂತ ಬೆಳಕಲ್ಲಿ ಫಳ್ಳಂತ ಹೊಳೆವಾಕಾಶದಿಂದ +ಯಾರೋ ಉನ್ನತ ದೇವತೆ +ಏಣಿಯಿಲ್ಲದೆ ಕೆಳಗಿಳಿದು ಬಂದುದ ಕಂಡೆ. +ಮೂರು ದಾರಿ ಸೇರುವಲ್ಲಿ ದೀವಿಗೆಯ +ಬೆಳಕಾಡಿದ್ದ ಕಂಡೆ! +ಫಕ್ಕನೆಚ್ಚರವಾಗಿ ಸಳಸಳ ಮೈಬೆವರಿಳಿದವು! +ನನ್ನ ಕನಸಿಗೂ ನಿನ್ನ ಕನಸಿಗೂ ಸಂಬಂಧವಿರಬಹುದ?-ಎಂದ. +ಹೆಗಡೆ : ನಿನ್ನ ಕನಸಿನಲ್ಲೂ +ಮೂರು ದಾರಿ ಸೇರುವಲ್ಲಿ ದೀವಟಿಗೆ ಬೆಳಕಾಡಿದ್ದು +ವಿಶೇಷವೆ. ಹೋಗಿ ನೋಡಿಕೊಂಡು ಬರಬಹುದಲ್ಲ? +ಹಂಗೇ ಆಗಲೆಂದಳು- +ಎಂದು ಕುಲಗುರು ಹೊರಡುವ ಉತ್ಸಾಹ ತೋರಿದ. +೯ . ಒಕ್ಕಲಾದವರು +ಕುಲಗುರು,ಹೆಗಡೆ ಮತ್ತು ಹಟ್ಟಿಯ ಹಿರೀಕರು ಕೂಡಿಕೊಂಡು ಕಾಡಿನ ಮಧ್ಯೆ ಮೂರು ದಾರಿ ಸೇರುವಲ್ಲಿಗೆ ಹೋಗಿ ಹುಡುಕತೊಡಗಿದರು. ದನಗಾಹಿ ಬಾಲಕರಾಗಲೇ ಅಲ್ಲಿದ್ದರು. ಮತ್ತು ಹಿರೀಕರು ಏನು ಹುಡುಕುತ್ತಿದ್ದಾರೆಂದು ತಿಳಿಯದೆ ಸೋಜಿಗಗೊಂಡು ಅವರೂ ಅವರೊಂದಿಗೆ ಹೆಜ್ಜೆ ಹಾಕಿದರು. ಕೊನೆಗೆ ಎಲ್ಲೂ ಸುಳಿವು ಸಿಕ್ಕದಿದ್ದಾಗ ಕುಲಗುರುವಿಗೆ ಸಿರಿಲಕ್ಕಿ ಹೇಳಿದ್ದು ನೆನಪಾಗಿ “ಎನ್ರೆಪ್ಪ, ಇಲ್ಲೆಲ್ಲಾದರೂ ಶಿಲಾಮೂರ್ತಿ ಕಂಡಿತ?” ಎಂದರು. ಹುಡುಗರು ಉತ್ಸಾಹದಿಂದ ಆಲದ ಮರದ ಬಳಿಯ ಶಿಲಾಮೂರ್ತಿಯ ತೋರಿಸಿದರು. ಆದರೆ ನಿನ್ನೆ ತಾವು ಅದರೊಂದಿಗೆ ಆಡಿದಾಟ ಹೇಳಲಿಲ್ಲ. ಹೇಳಲೆಂದು ಬಾಯಿತೆಗೆದ ಸಣ್ಣ ಹೆಗಡೆ ಚಿನ್ನಮುತ್ತನ ಬಾಯನ್ನ ಯಾರೋ ಮುಚ್ಚಿದಂತಾಗಿ ಅವನೂ ಬಾಯಿ ಬಿಡಲಿಲ್ಲ. +ಮೆಳೆಯಲ್ಲಿದ್ದ ಶಿಲಾಮೂರ್ತಿ ತುಂಬ ಸುಂದರವಾದ ಯಕ್ಷಿಯ ಮೂರ್ತಿ. ಲೋಕ ಲೌಕಿಕ ಕಂಡು ಬೆರಗಿನಲ್ಲಿ ಬಟ್ಟಲಗಣ್ಣು ತೆರೆದ ಹಾಗಿತ್ತು. ಬಲಗೈ ಆಶೀರ್ವದಿಸುವ ಭಂಗಿಯಲ್ಲಿತ್ತು, ಬಲಭುಜದ ಮ್ಯಾಲೆ ಗಿಣಿ ಕುಂತಿತ್ತು. ಎಡಗೈ ತೊಡೆ ಮಧ್ಯದ ಮರ್ಯಾದೆ ಮುಚ್ಚಿಕೊಂಡಿತ್ತು. ಮದುವೆಯಾಟದಲ್ಲಿ ಚಂದಮುತ್ತ ಕತ್ತಿಗೆ ಹಾಕಿದ್ದ ಅಮೃತವಲ್ಲಿ ಹಾಗೇ ಇತ್ತು. ಕುಲಗುರುವಿಗೆಲ್ಲ ಗೊತ್ತಾಗಿ ಹೋಯ್ತು. ಆ ವಿಷಯ ಅವನು ಚರ್ಚಿಸಲಿಲ್ಲ. ಯಕ್ಷಿಯ ಗುಡಿ ಕಟ್ಟುವುದಕ್ಕೆ ಮನೆಗೊಂದಾಳು ಬರಬೇಕೆಂದು ಕುಳವಾಡಿ ಡಂಗುರ ಸಾರಿದ. ಮಾರನೆಯ ದಿನ ಹೆಗಡೆಯ ಹಿರಿತನದಲ್ಲಿಕಲ್ಲೊಡ್ಡರು ಮಣ್ಣೊಡ್ಡರು ಸೇರಿ ಮನೆಗೊಂದಾಳಿನಂತೆ ಮೆಳೆಗೆ ಬಂದರು. ಸುತ್ತ ಹಸನು ಮಾಡಿ ಒಲಿದು ಬಂದ ಯಕ್ಷಿ ಕುಂತ್ಕೊಳ್ಳೋದಕ್ಕೊಂದು ತಳ ನಿಂತ್ಕೊಳ್ಳೋದಕ್ಕೊಂದು ನೆಲೆಯಾಗುವಂಥ ಗುಡಿಯ ಕಟ್ಟಿ ಗುಡಿಗೆ ಸುಣ್ಣ ಬಣ್ಣ ಬಳೆದರು. ಬಲ ಗೋಡೆಯ ಮ್ಯಾಲೆ ಸೂರ್ಯನಾರಾಯಣ ಸ್ವಾಮಿ, ಎಡಗೋಡೆಯ ಮ್ಯಾಲೆ ಚಂದ್ರಾಮಸ್ವಾಮಿಯ ಚಿತ್ರ ಬರೆದರು. ಶಿಖರದ ಮ್ಯಾಲೆ ಕಮಳದ ಕಸೂತಿಯಿರ್ವ ಜೆಂಡಾ ಹಾರಿಸಿದರು. ಹುಣ್ಣಿವೆ ದಿನ ಪೂಜೆಯೆಂದು ಸುತ್ತೂ ಸೀಮೆಯ ದೇವದೈವಂಗಳನ್ನು ಪಾಲ್ಕೀ ಸಮೇತ ಕರೆಸಿದರು. ಗರ್ನಾಲು ಸಿಡಿದು ಕೊಂಬು ಊದಿ ವಾದ್ಯ ಮೊಳಗಿ ಎತ್ತಿದ ಸತ್ತಿಗೆ ಮೆರೆದು ಸರ್ವ ಬಿರುದಿಂದ ಮೆರವಣಿಗೆ ಹೊರಟು ಚಾಂಗುಭಲೆಯೆಂಬ ನುಡಿಯೆ ನುಡಿಯಾಯಿತೆಲ್ಲೆಡೆಗೆ. +ಹುಣ್ಣಿಮೆಯಂದು ಕುಲಗುರು ಸುಮುಹೂರ್ತದಲ್ಲಿ ಪೂಜೆ ಸುರುಮಾಡಿ ಏಳು ಗಂಗೆಯ ಕುಂಕುಮನೀರಿನಿಂದ ಸ್ನಾನ ಮಾಡಿಸಿದ. ನೂರು ಕುರಿ, ನೂರು ಕೋಳಿ, ನೂರು ಮಡಕೆ ಈಚಲ ರಸವ ಅರ್ಪಿಸಿ ಇಪ್ಪತ್ತು ಮೊಳದ ಬಣ್ಣದ ದಟ್ಟಿ, ನೂರು ಮೊಳದ ಹೂವಿನ ದಂಡೆ, ಅಕ್ಷತೆ, ಅರಿಷಿಣ ಕುಂಕುಮವ ಬೆಳ್ಳಿಯ ತಟ್ಟೆಯಲ್ಲಿಟ್ಟು ಮೂರ್ತಿಯ ಮುಂದೆ ಸರಿಸಿ, +“ಬಾಗಿನ ಭಕ್ತಿ ನಮ್ಮದು, ಸತ್ಯದ ಶಕ್ತಿ ನಿನ್ನದು +ಕೈಯಾರೆ ತಗೊಂಡು ಭಕ್ತರ ಹರಸವ್ವಾ” +ಎಂದು ಬಾಗಿದ ನಮಸ್ಕಾರವ ಮಾಡಿದ್ದೇ ಬಾಗಿನ ತಟ್ಟೆಯನ್ನು ತಾನು ಮುಟ್ಟುವುದಿಲ್ಲವೆಂಬಂತೆ ತಟ್ಟೆ ದೂರ ಸರಿಯಿತು. +ಮನುಷ್ಯರೇ ಮುದ್ದಾಂ ಸರಿಸಿದಂತೆ ತಟ್ಟೆ ಸರಿದಾಗ ಕುಲಗುರುವಿಗೆ ಸಿರಿಲಕ್ಕಿಯ ಮಾತು ನೆನಪಾಗಿ ಚಂದಮುತ್ತನ್ನ ಮುಂದೆ ಕರೆದು ’ನೀನು ಬಾಗಿನವಿಡು ಕಂದಾ’ ಎನ್ನುವಷ್ಟರಲ್ಲಿ ಹೆಗಡೆ ಮುಂದೆ ಬಂದು ಚಿನ್ನಮುತ್ತನ್ನ ಕುಲಗುರುವಿನ ಪಾದದ ಮ್ಯಾಕೆ ಚೆಲ್ಲಿ “ಇವನಿಡಲಿ ಗುರುಪಾದವೇ” ಅಂದ. ಕುಲಗುರು ಅಪ್ಪಣೆ ಕೊಡುವ ಮೊದಲೇ ಚಿನ್ನಮುತ್ತ ಬಾಗಿನ ತಟ್ಟೆಯ ತಗೊಂಡು ಯಕ್ಷಿಯ ಮುಂದಿಟ್ಟು ಬಾಗಿದ ನಮಸ್ಕಾರವ ಮಾಡಿ ಕಣ್ಣು ಮುಚ್ಚಿ ನಿಂತುಕೊಂಡ. ಈ ಬಾರಿಯೂ ತಟ್ಟೆ ದೂರ ಸರಿದು ಬಂತು. ಚಿನ್ನಮುತ್ತ ಮತ್ತು ಹೆಗಡೆಯ ಮುಖ ಕಪ್ಪಿಟ್ಟವು. ಈ ತನಕ ಸುಮ್ಮನಿದ್ದ ಕುಲಗುರು ಈಗ ಚಂದಮುತ್ತನಿಗೆ ಸನ್ನೆ ಮಾಡಿದ. +ಚಂದಮುತ್ತ ನಿನ್ನೆಯ ಘಟಿತವ ನೆನೆದು ಗಡಗಡ ನಡುಗಿದ. ಯಕ್ಷಿಯ ಗ್ಯಾನದಲ್ಲಿ ನೂರೊಂದು ನೆನೆದ. ತಂದೆ ತಾಯಿಯ ನೆನೆದ, ಸುತ್ತೇಳು ಬಳಗವ ನೆನೆದ, ಬೆಟ್ಟದ ಮಾಯಿಯ ನೆನೆದು ಕುಲದೇವರ ಸ್ಮರಿಸಿ ಬಾಗಿನ ತಟ್ಟೆಯ ದೇವಿಯ ಮುಂದಿಟ್ಟು ನಿಂತ. ಕೂಡಿದವರೆಲ್ಲ ನೆತ್ತಿಯ ಮ್ಯಾಲೆ ಕೈಹೊತ್ತು ಭಕ್ತಿಯ ಭಾವದಲ್ಲಿ ನಿಂತಿರುವಾಗ ದೇವಿ ಬಾಗಿನವ ಒಪ್ಪಿಕೊಂಡಳು. ಶಿಲಾಮೂರ್ತಿಗೆ ದಟ್ಟಿ ಉಡಿಸಿ ತಲೆಮ್ಯಾಲೆ ಹೂದಂಡೆಯಿಟ್ಟ. ಎಲ್ಲರಿಗೂ ಭಕ್ತಿಯ ಆವೇಶವಾಗಿ ಬಲಿನೀಡಿ ಕುಣಿದಾಡಿದರು. ಚಂದಮುತ್ತನ್ನ ‘ದೈವದ ಪಾದಕೆ ಒಪ್ಪಿದ ಶಿಶುಮಗ ನೀನೊಬ್ಬನೇ’ ಎಂದು ಕೊಂಡಾಡಿದರು. ನಿತ್ಯದ ಬಾಗಿನಪೂಜೆ ಅವನದೆಂದು ಗೊತ್ತುಮಾಡಿ ಬಿಳಿಯ ಕಂಬಳಿ, ಇಪ್ಪತ್ತು ಮೊಳದ ದಟ್ಟಿ, ಏಳು ಸೇರಡಿಕೆ, ಏಳುಕಟ್ಟು ವೀಳ್ಯೆದೆಲೆ, ಹಬ್ಬಹರಿದಿನಗಳಲ್ಲಿ ಭಕ್ತಾದಿಗಳು ಕೊಟ್ಟ ನೈವೇದ್ಯ ಅವನದೇ ಎಂದು ಹಕ್ಕುಗಳು ನಿರ್ಧರಿಸಿದರು. ಹುಣ್ಣಿವೆ ಅಮಾವಾಸ್ಯೆಗೊಮ್ಮೆ ವ್ರತ, ವರ್ಷಕ್ಕೊಮ್ಮೆ ಮೂರುದಿನದ ಪರಿಸೆ ಮೆರೆಸುವುದೆಂದು ತೀರ್ಮಾನಿಸಿ ಎಲ್ಲರೂ ಹೊಸದೈವದ ಒಕ್ಕಲಾದರು. +೧೦. ಕಾಡುಹಕ್ಕಿಯ ಹಾಡು +ಚಂದಮುತ್ತನ ಬಗ್ಗೆ ಹಟ್ಟಿಯವರಲ್ಲಿ ಪ್ರೀತಿ ಮತ್ತು ಚಿನ್ನಮುತ್ತನಲ್ಲಿ ಅಸೂಯೆ ಹೆಚ್ಚಾದವು. ಇಬ್ಬರೂ ಕುಲಗುರುವಿನಲ್ಲಿ ವಿದ್ಯಾ, ಬುದ್ಧಿ, ಕೊಳಲು ಗೀತ ಸಂಗೀತ ಕಲಿತವರು, ಅಸೂಯೆಯಿಂದ ಚಿನ್ನಮುತ್ತನ ಏಕಾಗ್ರತೆ ಮುರಿದು ಮನಸ್ಸು ವಿಕಾರ ಯೋಚನೆಗಳಲ್ಲಿ ಮುಳುಗಿತು. ಗುರುವಿನ ಬಳಿ ಇಬ್ಬರೂ ಸೇರುತ್ತಿದ್ದರು. ಕುಲಗುರು ಒಂದು ತೋರಿಸಿದರೆ ಚಂದಮುತ್ತ ಹತ್ತಾಗಿ ಹುಟ್ಟಿಸಿ ವಿಸ್ತರಿಸಿ ಗುರುವಿಗೇ ಚೋದ್ಯ ಮಾಡುತ್ತಿದ್ದ. “ಇದನ್ನೆಲ್ಲಿ ಕಲಿತೆ?” ಎಂದು ಕುಲಗುರು ಕೇಳಿದರೆ “ನಿನ್ನಲ್ಲಿ” ಎನ್ನುತ್ತಿದ್ದ. “ನಾನು ನಿನಗಿದನ್ನು ಕಲಿಸಲೇ ಇಲ್ಲವಲ್ಲ” ಎಂದರೆ “ಹಾಂಗಿದ್ದರೆ ನೀನೇ ಬಲ್ಲೆ ಗುರುಪಾದವೇ” ಎಂದು ಪಾದ ಮುಟ್ಟುತ್ತಿದ್ದ, ಕುಲಗುರುವಿಗಿದರಿಂದ ಇನ್ನಷ್ಟು ಆನಂದ ಆಶ್ಚರ್‍ಯ ಆಗುತ್ತಿತ್ತು. +ಚಂದಮುತ್ತ ಕೊಳಲು ನುಡಿಸುತ್ತಿದ್ದರೆ ಕುಲಗುರು ಮೈಮರೆಯುತ್ತಿದ್ದ. ಅಕ್ಕಪಕ್ಕ ಇದ್ದವರು ನಿಂತವರು ನಿಂತುಕೊಂಡೇ ಕೂತವರು ಕೂತುಕೊಂಡೇ ಮೈಮರೆಯುತ್ತಿದ್ದರು. ಹಾಗೆ ಮೈಮರೆತಿದ್ದಾಗ ತಮಗೆ ಯಾವುದೋ ಸುಖದ ಸೀಮೆಯಲ್ಲಿ ಸಂಚರಿಸಿದಂತಾಗುತ್ತಿತ್ತು. ತಮಗೆ ಅಪರಿಚಿತವಾದ ಅನೇಕ ಆಸ್ತಿತ್ವಗಳ ಸುಖತನ ಸಿಕ್ಕಹಾಗೆ ಅನಿಸುತ್ತಿತ್ತು. ಆತನ ಸಂಗೀತ ಮುಗಿದ ಮ್ಯಾಲೆ ಈ ಲೋಕ ಬದುಕೊದಕ್ಕೆ ಮೊದಲಿಗಿಂತ ಚೆನ್ನಾಗಿದೆಯೆಂದು ಅನಿಸುತ್ತಿತ್ತು. +ಈಗ ಚಂದಮುತ್ತ ದನಕಾವಲಿಗೆ ಹೋದರೆ ಹೋದ; ಬಿಟ್ಟರೆ ಬಿಟ್ಟ. ಅಬ್ಬೆ ಒತ್ತಾಯ ಮಾಡುತ್ತಿರಲಿಲ್ಲ. ಯಾಕೆಂದರೆ ಬೇರೆ ಹಟ್ಟಿಯಲ್ಲಿದ್ದ ತನ್ನ ತಮ್ಮನನ್ನು ಕರೆದು ದನಕರುಗಳ ಉಸ್ತುವಾರಿಗಿಟ್ಟುಕೊಂಡಳು. ದೈವದ ಕೃಪೆ ತನ್ನ ಮಗನ ಮೇಲಾದದಕ್ಕೆ ಆನಂದವಾಗಿತ್ತು. ಆತಂಕವೂ ಆಗಿತ್ತು. +ಚಂದಮುತ್ತ ದಿನಾ ಬೆಳಿಗ್ಗೆ ಕೋಳೀಯ ಕೂಗಿಗೆದ್ದು, ತಣ್ಣೀರು ಮಿಂದು, ಮಡಿಯುತ್ತು ಬಾಗಿನ ತಗೊಂಡು ದೇವಾಲಯಕ್ಕೆ ಹೋಗುತ್ತಿದ್ದ. ಪಾತಾಳಗಂಗೆಯ ಕುಂಕುಮನೀರಿನಿಂದ ವಿಗ್ರಹಕ್ಕೆ ಸ್ನಾನ ಮಾಡಿಸಿ ದೈವದ ಎಡಬದಿಗೆ ಮೊಗ್ಗುಸಂಪಿಗೆ, ಬಲಬದಿಗೆ ಎಳೆ ಹಿಂಗಾರಿಟ್ಟು, ಮುಂದೆ ಮಡಿ ಬಾಗಿನವಿಟ್ಟು ಹೊರಬಂದು ಬಾಗಿಲು ಮುಂದೆ ಮಾಡಿ, ದೈವದ ಕಡೆ ಬೆನ್ನು ತಿರುಗಿಸಿ ನಿಂತುಕೊಳ್ಳುತ್ತಿದ್ದ. ಸಲ್ಪ ಸಮಯವಾಗುತ್ತಲೂ ಬಾಗಿಲು ತಂತಾನೆ ತೆರೆದು ನಿನ್ನೆಯ ಮೈಲಿಗೆ ಬಟ್ಟೆ ಹೊರಕ್ಕೆ ಬೀಳುತ್ತಿತ್ತು. ಇಂದು ಕೊಟ್ಟ ಮಡಿಬಟ್ಟೆ ವಿಗ್ರಹದ ಮೈಮ್ಯಾಲಿರುತ್ತಿತು. ಚಂದಮುತ್ತ ದೈವಕ್ಕೆ ಕಳ್ಳಿನ ನೊರೆ, ಈಚಲರುಚಿಯರ್ಪಿಸಿ, ಬಾಗಿದ ನಮಸಾರವ ಮಾಡುತ್ತಿದ. +ಚಂದಮುತ್ತನಿಗೆ ದಿನಾ ಆಗಬಾರದ ಅನುಭವಗಳಾಗುತ್ತಿದವು. ಶಿಲಾಮೂರ್ತಿಯ ಸಮೀಪ ಇದ್ದಾಗ ಇಡೀ ಡಿನ ಡಿವ್ಯ ಉದ್ರೇಕದ ಚಿಲುಮೆಯಲ್ಲಿ ಇರುತ್ತಿದ್ದ. +ಒಂದು ದಿನ ದೈವದ ಪೂಜೆ ಮುಗಿಸಿ ಹೊರಬಂದಾಗ ಅಂಗಳದಲ್ಲಿ ಶೃಂಗಾರ ಹೂದೋಟ ಬೆಳೆಯಬೇಕೆಂದು ಮಲ್ಲಿಗೆ ಬಳ್ಳಿಯ ನೆಟ್ಟ: ನೆಟ್ಟ ಮರುದಿನವೆ ಬಳ್ಳಿ ಚಿಗುರಿ ನಳ ನಳಿಸಿ ಬೆಳೆಯಿತು. +ಮಾರನೇ ದಿನ ಮೊಗ್ಗು ಮೂಡಿ ಸುತ್ತ ಸೀಮೆಯ ತುಂಬ ಪರಿಮಳದ ಗಾಳಿ ಘಮ ಘಮಿಸಿ ಚಂದಮುತ್ತ ಆನಂದದ ದಿಗಿಲಾಯಿತು. ತಕ್ಷಣ ಕಂಬಳಿಯ ಸೆರಗಿನಲ್ಲಿ ಕಣ್ಣು ಕೋರೈಸುವ ತಾರೆಯಂಥ ಮಲ್ಲಿಗೆ ಮೊಗ್ಗು ಹರಿದು ಅವಸರದಲ್ಲಿ ಪೋಣಿಸಿ ಸರ ಮಾಡಿದ. ಒಡನೆ ಗುಡಿಯೊಳಕ್ಕೋಡಿ ವಿಗ್ರಹದ ಎದುರಿಗೆ ನಿಂತು ತಗುಬಗಗೊಂಡ,- +ಮಾಟಗರ್ತಿ ಯಕ್ಷಿ, ಮಾಯಕಾರ್ತಿ ಯಕ್ಷಿ +ತಂತ್ರಗಾರ್ತಿ ಯಕ್ಷಿ, ಮಂತ್ರಗಾರ್ತಿ ಯಕ್ಷಿ +ಚಿಕ್ಕವಳು ಯಕ್ಷಿ, ಎಳೆಬೈತಲೆಯ +ಸುದ್ದ ಸುಳಿಯೋಳು ಯಕ್ಷಿ! +ಇರುಳಿನ ಹಾಗೆ ಸುರುಳಿಗೂದಲ +ಕರಚೆಲುವೆ ಯಕ್ಷಿ! +ಅವಳೊಂದು ಕಣ್ಣಿನ ಭಾವ ನೋಡಿದರೆ +ಸಂಪಿಗೆ ಎಸಳಂತೆ. +ಅವಳೊಂದು ಬಾಯ ಭಾವ ನೋಡಿದರೆ +ಬೆಳ್ದಿಂಗಳ ನಗೆ ಸುರಿಸುತ್ತ +ಒಲುಮೆಯ ಚಿಲುಮೆ ಚಿಮ್ಮುತ್ತ +ಇನ್ನೇನು ಕುಣಿಯಲಿರುವ ನವಿಲಂತೆ +ನಿಂತ ಮುರ್ತಿಯ ನೋಡಿ +ಚಂದಮುತ್ತನಿಗೆ ಮೆಚ್ಚಾಗಿ +ಕೈ ಮೈ ಮನಕ್ಕೆ ಮೋಹದ ಹುಚ್ಚಡರಿ +ಶಿಲಾಮುರ್ತಿಯ ತುರುಬಿನಲ್ಲಿ ಮಲ್ಲಿಗೆ ಮೊಗ್ಗಿನಸರ ತುರುಬಿದ. +ದಳದಳ ಅರಳಿ ಹೂವಾದವು ಮುಡಿಗೇರಿದ ಮೊಗ್ಗು! +ಅಂದಕ್ಕೊಂದು ಮೊಗ್ಗು ಚಂದಕ್ಕೊಂದು ಮೊಗ್ಗು ಏರಿಸಿದ. +ಕಂಡಹಾಗೆ ಕಾಣಿಸದ ಹಾಗೆ ಮೂರ್ತಿಯ ಕೆನ್ನಿಯ ಸ್ಪರ್ಶಿಸಿದ. +ಶಿವ ಶಿವಾ! ಕೆನ್ನೆ ಕತ್ತಿನ ಮ್ಯಾಲೆ +ಯಾರದೋ ಉದ್ರೇಕದ ಉಸಿರಾಟ ತಾಗಿತು! +ಮೈಯಲ್ಲಿ ಮಿಂಚಿನ ಹೊಳೆ ಹರಿದು +ಕೊಂಟದ ಕೊಳಲು ಕಿತ್ತು ತುಟಿಗಿಟ್ಟುದೇ ತಡ, +ಯಾರೋ ಕಾಡಹಕ್ಕಿಯ ಹಾಡುಗಳ ಹಕ್ಕಿ +ಹುಡುಗನ ಮ್ಯಾಲೆ ಚೆಲ್ಲಿ ಕಿಲಕಿಲ ನಕ್ಕರು. +ಗಾಳಿಯಲ್ಲಿ ತೇಲಾಡುವ ಹಾಡುಗಳ +ಗಕ್ಕನೆ ಕೊಳಲುಲಿಯಲ್ಲಿ ಹಿಡಿಡು ನುಡಿಸುತ್ತ +ಹಾಡು ತೋರಿದ ತಾಳ ಅನುಸರಿಸಿ +ಕುಣಿಯತೊಡಗಿದ. +ರಾಗಗಳಿಗೆ ಸರಾಗ ಒಲಿದ ಯಕ್ಷಿ +ಕಲ್ಲಿನ ಬಂಧನದಿಂದ ಛಟ್ಟನೆ ಬಿಡುಗಡೆ ಹೊಂದಿ +ಗಡಬಡಿಸಿ ಉಟ್ಟ ಮಡಿಬಟ್ಟೆಯ ತೀಡಿಕೊಂಡಳು. +ಅಂಗೈಯ ಕನ್ನಡಿ ಮಾಡಿ ನೋಡಿಕೊಂಡು +ಕುರುಳು ತಿದ್ದಿಕೊಂಡಳು. +ಸೋರ್‍ಮುಡಿಯ ಹೂವಿನ ಸರವ +ಮತ್ತೆ ಮುಟ್ಟಿ ನೋಡುತ +ಕಣ್ಣಿನಲ್ಲಿ ದೀಪವುರಿದು ಬೆಳಕಿನಲ್ಲಿ ತೇಲುತ +ಸಡಗರಿಸಿದಳು. +ಚಂದದ ಹುಡುಗ ಚಂದಮುತ್ತ ಕಲ್ಲುಮುಳ್ಳೆನ್ನದೆ ಕುಣಿಯುತ್ತಿದ್ದ. +ರೂಪುರೇಖೆ ಸದ್ದುಳ್ಳ ಚಂದಮುತ್ತ ಮರಡಿ ಮಾಳ ಅನ್ನದೆ ಹೆಜ್ಜೆ +ಹಾಕುತ್ತಿದ್ದ. +ಹಾಡು ಅಲೆ ಅಲೆಯಾಗಿ ನುಗ್ಗಿ ಯಕ್ಷಿಯ ತೇಲಿಸಿದಾಗ +ತೂಕ ತಪ್ಪಿದಂತಾಗಿ ಸಮತೂಕ ಸರಿಪಡಿಸಿಕೊಂಡಳು. +ಕ್ಷಣಕ್ಷಣಕೆ ಹುಟ್ಟುವ ಹೊಂದುವ ಬೆಳೆಯುವ +ಏನಿದೇನೇ ತಾಯಿ ಈ ಅನುಭವ! +-ಎನ್ನುತ ನವಿಲಿನ ಹೆಜ್ಜೆ ಹಾಕಿದಳು, ಚಿಗುರು ಪಾದದ ಯಕ್ಷಿ ಕಲ್ಲೊರಟು ಮಣ್ಣೊರಟು ಕುಂಕುಮ ಕಾಲಿಗೆ ತಾಕಿ ನೋವಾಗಿ ಹಾ ಎಂದು ನರಳಿ ಅಸಹಾಯಕಳಾಗಿ ಹೇಳಿದಳು ಎಳೆಯ ಪಾದದ ಯಕ್ಷಿ: +ಅಯ್ಯಾ ಆತುರದವನೆ, ಅಯ್ಯಾ ಕಾತರದವನೆ +ಹೂಬಿಟ್ಟ ಕಬ್ಬಿನ ಜಲ್ಲೆಯಂಥವನೆ +ಚೆಲುವನೆ, ಎಲ್ಲರೊಳಧಿಕನೆ +ನೆಲದಲ್ಲಿ ಕಾಲೂರಿ ಗೊತ್ತಿರದವಳು +ನಾ ಹ್ಯಾಗೆ ಕುಣಿಯಲಿ? +ಕುಣಿಯದೆ ಹ್ಯಾಗಿರಲಿ? +ನಿಲ್ಲಿಸೋ ನಿಲ್ಲಿಸಯ್ಯಾ. +ಇದ್ಯಾವುದನ್ನೂ ಕೇಳಿಸಿಕೊಳ್ಳದೆ ಹಾಡಿನಲ್ಲಿ ತನ್ಮಯನಾಗಿದ್ದ, ಕುಣಿದು ಕುಣಿದು ಅಂಗಜಲದಲ್ಲಿ ಅದ್ದಿಹೋಗಿದ್ದ ಚಂದಮುತ್ತನ ಚೆಲ್ವಿಕೆಯ ಚೋದ್ಯವ ನೋಡಿ ಸೋಜಿಗಗೊಂಡಳು: +ಅವ್ ನೋಡ ಕೊಳಲೂದಿ ಕುಣಿಯುವ ಹುಡುಗ +ಹುಚ್ಚು ಕೆರಳಿಸುತಾನ ಅಂಗಾಂಗದೊಳಗ +ಹೆಗಲಿನ ಗೊಂಗಡಿ ನೆತ್ತೀತುರಾಯಿ +ಗರಿಬಿಚ್ಚಿ ಕುಣಿಧಾಂಗ ಶ್ರಾವಣದ ಸೋಗಿ || +ಕಲ್ಲೆಂದು ಮೆಲ್ಲಗೆ ಸೊಲ್ಲಿಲ್ಲದೆ ಬಂದಾ +ಎಡದ ಕೈಯಲ್ಲಿ ಎನ್ನ ಸೋರ್‍ಮುಡಿಯ ಹಿಡಿದಾ +ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದಾ +ಮುಂಗುರುಳು ನ್ಯಾವರಿಸಿ ಕಣ್ಣು ಹಬ್ಬಾದ || +ತಡೆಯಲಾಗಲೆ ಇಲ್ಲ ನಮ್ಮ ಮೈ ನವಿರಾ +ಮೈತುಂಬ ಸಳಸಳ ತುಳುಕ್ಯಾವ ಬೆವರಾ +ಹಟ್ಟಿ ಸ್ವಾಮಿಯೆ ನಿನ್ನ ಕಟ್ಟಳೆಯ ಹೊರತಾ +ಅರಗಳಿಗೆ ಇರಲಾರೆ ನಾ ನಿನ್ನ ಮರೆತಾ || +ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ +ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ +ಮಂದಿ ಏನೆಂದಾರು ನಾ ಹಿಂದೆ ಬರಲು +ವಾರೀಗಿ ದೇವರು ಕೋಪಗೊಂಡಾರು || +ತಿಳಿಯಬಲ್ಲವರೆಲ್ಲ ತಿಳಿಹೇಳಿರವ್ವಾ +ಸುರರ ಜಾತಿಗೆ ನಾನು ಹೊರತಾದೆನವ್ವಾ +ನವು ಹಂಗಿಗರವ್ವ ಚೆಲುವನ ಕಲೆಗೆ +ಕಲೆಯೊಂದಿಗೇ ಇವನ ಮುಗ್ಧ ಒಲುಮೆಗೆ || +ಅಷ್ಟರಲ್ಲಿ ಬೇರೆ ಯಾವುದೋ ದನಿ ಕೇಳಿಸಿ ಯಕ್ಷಿ ಹಿಂಜರಿದು ಮತ್ತೆ ಶಿಲಾಮೂರ್ತಿಯಾಗಿ ಶಿಲೆಯಲ್ಲಿ ಅಡಕಗೊಂಡಳು. +೧೧. ಹಂಸ ಹಂಸಿಯರ ಜೋಡಿ +ಇಂತೀ ರೀತಿ ಮಾಯಕಾರ್ತಿ ಯಕ್ಷಿ ಚಂದಮುತ್ತನಿಗೊಲಿದು ಅವನ ಭಯಭಕ್ತಿಯಲಿ ಮುಳುಗೆದ್ದು ವಾಲಾಡುತ್ತ ಇರುವಲ್ಲಿ, +ಇತ್ತ ಚಿನ್ನಮುತ್ತನ ಹೃದಯದಲ್ಲಿ ಹಗೆಯ ಹೊಗೆಯಾಡತೊಡಗಿದವು. ಯಾವಳೋ ಮಾಯದ ಯಕ್ಷಿ ಅವನಿಗೆ ಒಲಿದಿರುವಳೆಂದು, ದಿನಾ ಮೈಲಿಗೆ ಕಳಚಿ ಇವ ಕೊಟ್ಟ ಮಡಿಯನುಡುವಳೆಂದು, ದಿನಕೊಂದು ವಿದ್ಯ ಸಿದ್ಧಿಗಳ ಕೊಡುವಳೆಂದು ಕತೆಗಳ ಕೇಳಿ ಅಸೂಯೆಯಿಂದ ಕಂಗಾಲಾಗಿ ಹೋದ. +ಚಂದಮುತ್ತನ ಬಗ್ಗೆ ನಿಂದಕದ ಮಾತಾಡಿ +ಆನಂದಪಟ್ಟ. +ಹುಸಿಕಳಂಕಗಳ ಹುಟ್ಟಿಸಿ +ಹಾದಿಬೀದಿಗಳಲ್ಲಿ ಅತಿರಂಜಿಸಿ ಹೇಳಿದ. +ಚಂದನುತ್ತನ ದುರ್ಗುಣಗಳ ಸಾವಿರ ಸಾರಿ +ಜಪಿಸಿ ಸೇಡಿನ ಕಿಡಿಯಾದಲ್ಲಿ +ಯಕ್ಷಿಯ ಮೊದಲ ಪರಿಸೆ ಬಂತು….. +ನಮಗೆ ಚಿನ್ನಮುತ್ತನ್ನ ಕಂಡರಾಗುವುದಿಲ್ಲ. ಯಾಕೆಂದರೆ ಚಿನ್ನಮುತ್ತನಿಗೆ ಕನಸು ಕಂಡರಾಗುವುದಿಲ್ಲ. ಕತೆಯಲ್ಲಿ ಕಾಲಿಟ್ಟವನಾದ್ದರಿಂದ ಬಿಡುವಂತಿಲ್ಲ. ಇಂತಾಗಿ ನಾವು ಕಂಡ ಸೋಜಿಗದ ಸಂಗತಿಯೊಂದನ್ನು ಹೇಳಿ ಅವನನ್ನ ಕತೆಯಲ್ಲಿ ಕರೆದುಕೊಳ್ಳತ್ತೇವೆ: +ತಾಯಿಯಿಲ್ಲದ ಒಬ್ಬನೇ ಮಗನ್ನ ದೊಡ್ಡ ಹೆಗಡೆ ಕೊಂಡಾಟದಲ್ಲಿ ಬೆಳೆಸಿದನಾಗಿ ಸಿರಿಸಂಪತ್ತು ಅದ್ದೂರಿ ದೊರೆತನದ ಸುಖಸಾಗರದಲ್ಲಿ ಬಾಳಾಡ್ತ ಇದ್ದ ಚಿನ್ನಮುತ್ತ. ಎತ್ತರವಾದ ಆಳು. ವ್ಯಾಯಾಮ ಮಾಡಿ ಕುಸ್ತೀ ಹಿಡಿದು ಗಟ್ಟಿಮುಟಾಗಿದ್ದ ಅವನ ದೇಹ ಮನಸ್ಸುಗಳಲ್ಲಿ ಮೃದುವಾದ ಭಾಗಗಳೇ ಇರಲಿಲ್ಲ. ಬಹಳ ಕಾಲ ದೇಹವನ್ನ ಸೂರ್ಯನ ಸನ್ನಿಧಿಯಲ್ಲಿಟ್ಟಿದ್ದರಿಂದ ಅದು ಸುಟ್ಟ ಇಟ್ಟಿಗೆಯಂತಾಗಿತ್ತು. ಸರಿಕರೊಂದಿಗೆ ಕೂಡ ಸರಸವಾಡುವವನಲ್ಲ. ಚಿನ್ನಿಕೋಲು ಗೋಲಿಗುಂಡು ಲಗ್ಗೆ ಚೆಂಡಿನಲ್ಲಿ ಕೂಡ ತಾನೇ ಗೆಲ್ಲಬೇಕೆಂಬಾತ. ಬರಿ ಒಂದು ಹುಬ್ಬಿನ ಗಂಟಿನಿಂದ ಎದುರು ನಿಂತವನ ಬಾಯಿ ಮುಚ್ಚಬಲ್ಲವನಾಗಿದ್ದ. ಇನ್ನೇನು, ರಾತ್ರಿ ಅವನ ಕಣ್ಣು ಕಾಣುತ್ತಿರಲಿಲ್ಲ. ಇರುಳು ಸತ್ಯಗಳ ಕಾಣುವ ವಿವೇಕ ಮತ್ತು ತಾಳ್ಮೆ ಬಿಸಿಲಬೆಡಗಿನವರಲ್ಲಿ ಇರಲಿಲ್ಲವಾಗಿ ಇದೊಂದು ಸೋಜಿಗದ ಮಾತಲ್ಲ. +ಇಂತಿರಲು ಒಂದು ದಿನ ಮಡುವಿನಾಚೆ ದಡದಲ್ಲಿ ನಸುಕಿನಲ್ಲಿ ಯಕ್ಷಿಯ ಪೂಜೆ ಮುಗಿಸಿ ಚಂದಮುತ್ತ-ಅದೇನು ಮೂಡು ಬಂತೋ-ಕೊಳಲು ನುಡಿಸುತ್ತಿದ್ದ. ನಸುಕಿನ ಮಂಜು ಮಡುವಿನ ಮ್ಯಾಲೆ ಉಗಿಯ ಹಾಗಾಡುತ್ತಿತ್ತು. ಸವಿಗೊರಳ ಹಕ್ಕಿಗಳು ಬೆಳಗಿನ ಚಿಲಿಪಿಲಿ ನಿಲ್ಲಿಸಿ ಕೊಳಲು ಆಲಿಸುತ್ತಿದ್ದವು. ಎಳೆಯ ಹಂಸಹಂಸಿಯರ ಜೋಡಿಯೊಂದು ಮಡುವಿನ ಕನಸಿನ ಹಾಗೆ ಅರೆಗಣ್ಣಾಗಿ ತೇಲುತ್ತ ಕೊಳಲಾಲಿಸುತ್ತ ಮೈಮರೆಯುತ್ತಿದ್ದವು. ನಾವು ಇಬ್ಬನಿಯಿಂದ ಥಳಥಳ ಹೊಳೆವ ಹಸಿರಿನಲ್ಲಿ ಕಾಲೂರಿ ಸುತ್ತಲಿನ ಶೀತಲ ಶಿವಶಾಂತಿಯನ್ನು ತೀಡಿ ಬರುವ ಕೊಳಲಿಗೆ ಶಬ್ದಮುಗ್ಧರಾಗಿ ನಿಂತಿದ್ದೆವು. ಅಷ್ಟರಲ್ಲಿ ಯಾರೋ ನೀರಲ್ಲಿ ಜಿಗಿದ ಸದ್ದಾಗಿ ಆತಂಕವಾಯಿತು. ಯಾಕೆಂದರೆ ಹಂಸದ ಜೋಡಿಯ ಮನಸ್ಸು ಕದಡುವುದು ನಮಗೆ ಬೇಕಿರಲಿಲ್ಲ. ಆದರೆ ನಮ್ಮ ಊಹೆ ಮೀರಿ ಹಂಸಹಂಸಿಯರು ಕೊಳಲ ಹಾಡಿನಲ್ಲಿ ಸುಖರಂಜಿತರಾಗಿ ತನ್ಮಯರಾಗಿದ್ದರು. ನೀರಿನ ಸದ್ದಿನಿಂದ ಸಮಾಧಿ ಭಂಗವಾಗಲೇ ಇಲ್ಲ. +ನೀರಿಗಿಳಿದವನು ಚಿನ್ನಮುತ್ತ. ಕೊಳಲುಲಿ ಚಂದಮುತ್ತನದೆಂದು ಗೊತ್ತಾಗಿ ಅಸೂಯೆಯಿಂದ ಸುಖವಂಚಿತನಾದ. ನೀರಿನಲ್ಲಿದ್ದರೂ ಮಾರಾಯನ ಮುಖ ಕಪ್ಪಿಟ್ಟಿತು. ಜಳಕವ ಮಾಡಿ ಅವಸರದಲ್ಲೆದ್ದು ಮೈಲಿಗೆ ಕಳೆದು ಲಂಗೋಟಿ ಹಾಕಿದ. ಜಡೆಕಟ್ಟಿ ಅಂಚಿನ ಮಡಿಯುಟ್ಟ. ಕೊಳಲದನಿ ತಡೆಯಿಲ್ಲದೆ ಹರಿದು ಬರುತ್ತಿರುವಾಗ ಹಂಸ ಜೋಡಿಯ ತನ್ಮಯತೆ ನೋಡಿ ಕಣ್ಣಿಗೆ ಖಾರ ಉಗ್ಗಿದಂತಾಯ್ತು ಅವನಿಗೆ. +ಸುಡುಗಾಡ ಬೆಂಕಿಯ ಥರ ಕಣ್ಣುರಿದವು. +ರವರುದ್ರಗೋಪದಲ್ಲಿ ಕೊತಕೊತ ಕುದ್ದು +ಬುದ್ಧಿತಪ್ಪಿ ಅನುಚಿತವ ನೆನೆದು +ಬೆಣಚುಗಲ್ಲು ತಗೊಂಡು +ಸದ್ದಿಲ್ಲದೆ ಹೊಂಚಿಹೊಂಚಿ ಹೆಜ್ಜೆಯ ಹಾಕಿ ಸಂಚರಿಸಿ +ಆಯಕಟ್ಟಿನ ಜಾಗದಲ್ಲಿ ನಿಂತು, ಗುರಿಹಿಡಿದು +ತೇಲುವ ಜೋಡಿಗೆ ಎಸೆದುಬಿಟ್ಟ ಶಿವನೆ! +ಶಿವಶಿವಾ +ಗಂಡು ಹಂಡದ ಕತ್ತಿನ ಕಳಸ ಮುರಿದು +ಒದರಲೂ ಆಗದೆ ಒದ್ದಾಡಿ ಪಟಪಟ ರೆಕ್ಕೆಯ ಬಡಿದು +ನೀರಲ್ಲಿ ಮುಳುಗಿತು! +ಕಂಪಿತೆ ಹಂಸಿ ಏನೆಂದು ತಿಳಿಯದೆ +ಪ್ರೈಯಕರ ಮುಳುಗಿದುದ ನೋಡಿ +ಕಿಟಾರ್‍ನೆ ಕಿರಿಚಿದಳು. +ತರುಮರಗಳಲ್ಲಿದ್ದ ಹಕ್ಕಿಗಳು ಕಿತ್ತಾಡಿ +ಅಪರಿಚಿತ ವಿಕಾರ ಸದ್ದು ಮಾಡಿ +ಕಿರಿಚಿ ಚೀತ್ಕಾರ ಮಾಡಿದವು. +ಉಗುರಿನಿಂದ +ತಂತಾವೇ ಪರಚಿಕೊಂಡು +ರೆಕ್ಕೆಗಳಿಂದ ತಿವಿದಾಡಿದವು. +ಗಾಬರಿಯಲಿ ಹಂಸಿ +ಅಗಲವಾದ ಕೆಂಗಣ್ಣು ತೆರೆದು ಚಿನ್ನಮುತ್ತನ +ನೋಡಿ, ನೋಟಗಳಿಂದ ಇರಿದು +ಅವನಿದ್ದ ಕಡೆಗೆ +ಬಿಟ್ಟ ಬಾಣದ ಹಾಗೆ +ಹಾರಿದಳು. +ಭಯದಲ್ಲಿ ಚಿನ್ನಮುತ್ತ ಸರಸರ್‍ನೆ ಮರೆಯಾದ. +ನಮ್ಮ ಕರುಳಿಗೆ ಗಾಯವಾಗಿ +ಹಂಸಿಯ ಆಲಾಪ ನೋಡಲಾರದೆ +ಚಿನ್ನಮುತ್ತನ, ಅವನ ಹುಚ್ಚಿನ ಸಮೇತ +ಅಲ್ಲೇ ಬಿಟ್ಟು ಬಂದೆವು ಶಿವಾ. +ಆಮೇಲೆ ಹಂಸಿ ಹಾರಲಿಲ್ಲ, ಕೂಗಲಿಲ್ಲ, ಬೇರೆ ಹಕ್ಕಿಗಳೊಂದಿಗೆ ಬೆರೆಯಲಿಲ್ಲ. ತಿನ್ನಲಿಲ್ಲ, ನೀರು ಮುಟ್ಟಲಿಲ್ಲ. ಪ್ರಿಯಕರನ ಕಗ್ಗೊಲೆಯಾದ ದಡದ ಬಳಿ ಹುಣ್ಣಿವೆ ನಂತರದ ಚಂದ್ರನಂತೆ ದಿನಾ ಕ್ಷೀಣಿಸುತ ನಿಂತಳು. ದುಃಖ ತಡೆಯದೆ ಒಮ್ಮೆ ನಾವೇ ಸಮಾಧಾನ ಹೇಳಹೋದಾಗ ಅವಳು ಅಂಗಲಾಚಿದಳು: +“ದಯಮಾಡಿ ಒಮ್ಮೆ, ಒಂದೇ ಬಾರಿ ಅವನನ್ನ ಇಲ್ಲಿಗೆ ಕರೆದು ತರುತ್ತೀರಾ? ಅವನಿಗೆ ನಾನೇನೂ ಮಾಡುವುದಿಲ್ಲವೆಂದು ಭಾಷೆ ಕೊಡುತ್ತೇನೆ.” +-ಇಂತೆಂಬ ನುಡಿ ಕೇಳಿ ಒಪ್ಪಿಕೊಂಡು ಬಂದೆವು. +ರಾತ್ರಿ ಚಿನ್ನಮುತ್ತನ ಕನಸಿನಲ್ಲಿ ಹಂಸಿಯ ತೋರಿಸಿ “ಅವಳಿದ್ದಲ್ಲಿಗೆ ಒಮ್ಮೆ ಹೋಗಿ ಬಾ” ಎಂಬ ಸಂದೇಶ ಕೊಟ್ಟೆವು. ತಕ್ಷಣ ಎದ್ದು ಕೂತ. ಹೆದರಿದ್ದ. ಜಲಜಲ ಬೆವರೊರೆಸಿಕೊಂಡು ಮತ್ತೆ ಮಲಗಿದ. ಆದರೆ ಬೆಳಿಗ್ಗೆ ಬರಲಿಲ್ಲ. +ಮಾರನೇ ದಿನ ರಾತ್ರೆ ಅದೇ ಕನಸು ತೋರಿದೆವು. ಈಗಲೂ ಎದ್ದು ಹೆದರಿ ಕೂತ. ಆದರೆ ಬರಲಿಲ್ಲ. ಹೀಗೇ ನಾಕೈದು ದಿನ ತೋರಿದರೂ ಬರಲಿಲ್ಲ. ಈಗ ಅದೇ ಕನಸನ್ನ, ಒಂದೇ ರಾತ್ರಿ ಅನೇಕ ಬಾರಿ ತೋರಿಸಿದೆವು. ಬರಬರುತ್ತ ಕಣ್ಣು ಮುಚ್ಚಿದಾಗಲೆಲ್ಲ ತೋರಿಸಿದೆವು. ಇನ್ನು ಈ ಕನಸಿಂದ ಮುಕ್ತಿಯಿಲ್ಲವೆಂದು ಗೊತ್ತಾಗಿ ತುಂಬಿದ ಸೋಮವಾರ ಬೆಳಿಗ್ಗೆ ನಡಿನಲಿ ಚಿಕ್ಕ ಚೂರಿ ಸಿಕ್ಕಿಸಿಕೊಂಡು, ಕೈಯಲ್ಲಿ ಕಕ್ಕೆ ದೊಣ್ಣೆ ಹಿಡಕೊಂಡು ಬಂದ ನೋಡು,- +ಶಿವ ಶಿವಾ- +ಅಷ್ಟು ದೂರದಿಂದಲೇ ಹನ್ಸಿ ಗುರುತಿಸಿ ಅವಳ ಕಣ್ಣು ಫಳಫಳ ಹೊಳೆದವು. ಚಿನ್ನಮುತ್ತು ಕೋಲು ಗಟ್ಟಿಯಾಗಿ ಹಿಡಿದುಕೊಂಡು ನಿಂತ. ಹಂಸಿ ಕಾಲೂರಿ ಎದುರೆದುರೇ ನಡೆಯುತ್ತ ಬಂದು ಅವನೆದುರು ಸಮೀಪದಲ್ಲಿಯೇ ನಿಂತಳು. +“ನನ್ನ ಪ್ರಿಯಕರನ ಪ್ರಾಣ ತಗೊಂಡೆಯಲ್ಲವೆ? +ನನ್ನ ಪ್ರಾಣವನ್ನೂ ತಗೋ ನನ್ನಪ್ಪಾ” +-ಎಂದು ಮನುಷ್ಯರಂತೆ ಮಾತಾಡಿ, ದೇಹದ ಹಿಂಬಾಗದ ಮ್ಯಾಲೆ ಕುಂತು ಎರಡೂ ಕಾಲುಗುರುಗಳನ್ನು ಜೋರಿನಿಂದ ಎದೆಯಲ್ಲಿ ತುರುಕಿ ಎದೆಯನ್ನ ಹರಿದುಕೊಂಡು ಬಿಟ್ಟಳು ಶಿವನೆ! ಶಿವ ಶಿವಾ ಅವಳ ಶುಭ್ರ ಎದೆ ಹರಿದು ನೆತ್ತರು ಚಿಲ್ಲನೆ ಚಿನ್ನಮುತ್ತನ ಮುಖಕ್ಕೆ ಸಿಡಿಯಿತು. ಹಾ ಎಂದು ನೋಡಿದರೆ ಅಷ್ಟರಲ್ಲೇ ಹಂಸಿಯ ಕತ್ತಿನ ಕಳಸ ಮುರಿದು ಗೋಣು ಚೆಲ್ಲಿ ಸತ್ತಾಗಿತ್ತು. ನಮ್ಮಲ್ಲಿಯ ಕೆಲವರು ದೃಶ್ಯವ ನೋಡಲಾರದೆ ಕಿಟಾರ್‍ನೆ ಕಿರಿಚಿಕೊಂಡರು. ಎದೆ ಪರಚಿಕೊಂಡರು. ಮುಖಮುಚ್ಚಿಕೊಂಡರು! +ಚಿನ್ನಮುತ್ತನ ಬಗ್ಗೆ ನಮಗೆ ಗೊತ್ತಿದ್ದ ಸಂಗತಿ ಇದು ಮಾತ್ರ. ನಾವಿಂತು ಈ ಕಥೆಯ ಹೇಳಿ ಮುಗಿಸುವುದರೊಳಗಾಗಿ ಯಕ್ಷಿಯ ಪರಿಸೆ ಬಂತು…… +೧೨. ಬಂತಣ್ಣ ಪರಿಸೆ ಬಂತೊ +ಶಿವಪುರದ ಸಮಸ್ತ ಹಿರಿಕಿರಿಯರು ಮಂದಿಮಾರ್ಬಲ ಸಹಿತ ಮಿಂದು ಮಡಿಯುಟ್ಟು, ಹಾಡಿಗೂಡುಗಳಲ್ಲಿ ಹಬ್ಬದ ಬೆಳಕಿಟ್ಟು ಕುಲದೇವರ ಪೂಜಿಸಿದರು; ತಂತಮ್ಮ ದನಕರು, ಕುರಿಮೇಕೆ ಮುಂತಾದ ಬದುಕಿನ ಭಾಗ್ಯಗಳನ್ನ ಹೂಹಿಂಗಾರುಗಳಿಂದ ಶೃಂಗರಿಸಿದರು. ಕುಲಗುರು ಮತ್ತು ಹೆಗಡೇನ ಹಿರಿತನದಲ್ಲಿ ಕೊಂಬು, ಕಹಳೆ, ನಗಾರಿ, ನೌಬತ್ತು ಮುಂತಾದ ಯಾವತ್ತು ವಾದ್ಯಂಗಳ ನುಡಿಸುತ್ತ ಯಕ್ಷಿಯ ಗುಡಿಗೆ ಹೋದರು. ಚಂದಮುತ್ತ ಈ ದಿನ ಅಬ್ಬೆಯ ಆದೇಶದಂತೆ ಮಿಂದು ಲಂಗೋಟಿಗಳಲ್ಲಿ ಮೇಲಾದ ಮುತ್ತಿನ ಗೊಂಡೆ ಜರತಾರಿ ಅಂಚಿನ ಲಂಗೋಟಿಯ ಧರಿಸಿ, ಮುಂಗೈಗೆ ಬೆಳ್ಳಿಯ ಕಡಗ ಇಟ್ಟು ಶೃಂಗಾರವಾಗಿ ಬೆಳ್ಳಿಕೊಳಲು ಸೊಂಟಕ್ಕೆ ಸಿಕ್ಕಿಸಿಕೊಂಡು ನಡೆದ. ಚಿನ್ನಮುತ್ತ ಅಂಚಿರುವ ಧೋತ್ರವುಟ್ಟು ಬಂಗಾರದಲ್ಲಿ ಶೃಂಗಾರವಾಗಿ ಮುತ್ತಿನ ಮುದ್ರೆಯಿರುವ ಉಂಗುರವಿಟ್ಟುಕೊಂಡ. ಕೈಗೆ ಚಿನ್ನದ ಕಡೆ ತೋಡೆಯಿಟ್ಟುಕೊಂಡು ಗೆಜ್ಜೆ ಕಟ್ಟಿದ ಪಿಳ್ಳಂಗೋವಿಯ ಹಿಡಿದುಕೊಂಡು ನಡೆದ. +ಯಕ್ಷಿಗುಡಿಯ ಅಂಗಳವ ಸೆಗಣಿ ಸಾರಿಸಿ ಕಬ್ಬಿನ ಕೋಲಿನ ಕಂಬ, ಪಂಚವಳ್ಳಿ ವಿಳ್ಯೆದೆಲೆಯ ಚಪ್ಪರ ಹಾಕಿ ನಂದಾದೀಪ ಹಚ್ಚಿದರು. ಹಟ್ಟಿಯ ದೇವರು ಬೆಟ್ಟದ ದೇವರು ಹಾಡಿ ಗೂಡಿನ ಸುತ್ತೂ ಸೀಮೆಯ ಸಮಸ್ತ ದೇವದೈವಂಗಳ ಕರೆಸಿ, ಧೂಪದೀಪ ಬೆಳಗಿ ಪಾದಕಾಣಿಕೆ ನೀಡಿ ಮರ್ಯಾದೆ ಮಾಡಿದರು. +ಚಂದಮುತ್ತ ಯಕ್ಷಿಯ ವಿಗ್ರಹವ ಮೀಯಿಸಿ, ಮಡಿದಟ್ಟಿ ಉಡಿಸಿ, ಬೆಳ್ಳಿ ಬಂಗಾರದಲ್ಲಿ ಶೃಂಗಾರ ಮಾಡಿ, ಕುಂಕುಮವಿಟ್ಟ. ಬಲಬದಿಗೆ ಸಿರಿಸಂಪಿಗೆ, ಎಡಬದಿಗೆ ಎಳೆಹಿಂಗಾರಿಟ್ಟು ಸಾಷ್ಟಾಂಗವೆರಗಿದ. ಗುಡಿಬಾಗಿಲಲ್ಲಿ ಕಟ್ಟಿದ್ದ ಹಿಂಡಿಕುರಿ ಬಲಿಕೊಟ್ಟು ಬಲಿ ಬಡಿಸಿ ಧೂಪ ದೀಪಾರತಿಯ ಹೊಗೆ ಎಬ್ಬಿಸಿದರು. ಆಮೇಲೆ ಸರ್ವರೂ ಮುಂದೆ ಬಂದು ಶಕ್ತಿನಾಮಕಳಾದ ಯಕ್ಷಿಯ ಮೈಚೆಲ್ಲಿ ನಮಸ್ಕಾರವ ಮಾಡಿ- +ಹಿಂಡುವ ಹಸುಕುರಿ ಕೊಡು +ಮೇಯಿಸೋವಷ್ಟು ಕಾಡು ಕೊಡು +ಎಂದು ಬೇಡಿಕೊಂಡರು. ಆಶೀರ್ವಾದ ಪ್ರಸಾದ ಪಡಕೊಂಬಾಗ ಗೋಧೂಳಿ ಲಗ್ನದ ಸಮಯವಾಯಿತು. +ಈಗ ಒಬ್ಬೊಬ್ಬರೇ ಮುಂದೆ ಬಂದು ತಂತಮ್ಮ ಕಲೆ ಕೈಚಳಕ ಚಮತ್ಕಾರಗಳ ತೋರತೊಡಗಿದರು. ಕೋಲಾಟದವರು ಹಾಡು ಹಾಡುತ್ತ ಕೋಲು ಕುಣಿಯುತ್ತ ತೆಂಗಿನ ಮರದಷ್ಟುದ್ದ ಧೂಳೆಬ್ಬಿಸಿದರು: +ಬಂತಣ್ಣ ಪರಿಸೆ ಬಂತೊ +ಮಾಯಕಾರ್ತಿ | ಯಕ್ಷಿಯ ಪರಿಸೆ ಬಂತೊ +ತಾವು ತಾವಿನ ಮಾವು ಚಿಗುರ್‍ಯಾವು | ಗಿಣಿರಾಮ +ಪದಹಾಡಿ ಪರಿಸೆ ಬಂತೋ || +ಯಾರಿಗೂ ಶಿವಾಪುರಕ್ಕೆ ಹಿಂದಿರುಗುವ ನೆನಪೇ ಆಗಲೊಲ್ಲದು. ಹಿರಿಯನೊಬ್ಬ “ಈಗ ಕುಲಗುರುವಿನ ಶಿಶುಮಕ್ಕಳು ಕಲಿತವಿದ್ಯೆಯ ಒಂದೆರಡು ವರಸೆ ತೋರಿಸಲಿ”- ಎಂದ. ಇದಕ್ಕಾಗಿಯೇ ಕಾಯುತ್ತಿದ್ದನೆಂಬಂತೆ ಚಿನ್ನಮುತ್ತ ಸೊಂಟದಲ್ಲಿ ಸಿಕ್ಕಿಸಿದ್ದ ಚಿನ್ನದ ಗೆಜ್ಜೆ ಕೊಳಲು ತೆಗೆದು ನಿಧಾನವಾಗಿ ರಾಗ ಎತ್ತಿ ನುಡಿಸತೊಡಗಿದ. ಸಹಜ ಸಂಚಾರಗಳ ತಕ್ಕ ಸ್ಥಾಯಿಗಳನ್ನೆಬ್ಬಿಸಿ, ಕಾಳಜಿಯಿಂದ ನಿಯಂತ್ರಿಸಿ ಆಕಾರಗೊಂಬ ಹಾಗೆ ಮಾಡಿದ. ಜನ ಸಂತೋಷಗೊಂಡು ಹೊಳೆಯುವ ಮಾತುಗಳಿಂದ ಕುಲಗುರುವಿನ ಕೌಶಲ ಹೊಗಳಿ, ಈಗ ಚಂದಮುತ್ತನ ಸರದಿಯೆಂದರು. +ಚಂದಮುತ್ತ ಗುರುಪಾದದ ಕಡೆ ನೋಡಿದ. ಕುಲಗುರುವಿನ ಸನ್ನೆಯಿಂದ ಅಪ್ಪಣೆ ಸಿಕ್ಕುತ್ತಲೂ ನೆತ್ತಿ ಕೇಶಗಳ ಸುತ್ತಿಕಟ್ಟಿ, ಎದ್ದು ಬಂದು ಗುರುಪಾದಕ್ಕೆ ಬಾಗಿ ಸತ್ಯದ ಶಿವದೇವರು, ಹೆತ್ತಯ್ಯ, ಮುತ್ತಯ್ಯರ ನೆನೆದು ಸೊಂಟದ +ಬೆಳ್ಳಿಕೊಳಲು ತೆಗೆದು ತುಟಿಗಿಟ್ಟುಕೊಂಡ- +ಮಧುರವಾದ ನಾದಗಳ +ಹದವಾಗಿ ತೆಗೆದು ರಾಗಕ್ಕೆ ಮೊದಲಾದಾಗ +ಮೂಡುಮಲೆಯಲ್ಲಿ ಚಂದ್ರಮೂಡಿ +ಆವರಿಸಿಬಿಟ್ಟಿತು ಎಳೆಬೆಳ್ದಿಂಗಳ ಮಾಯೆ +ಅನಾಯಾಸ. +ಹರುಷದ ಬಳ್ಳಿ ಹಬ್ಬಿತು +ಕೆಳಗೆ ಕ್ಷಿತಿಜದ ತನಕ +ಮ್ಯಾಲೆ ಚಂದ್ರನ ತನಕ. +ಹಾಡು ಅಲೆ ಅಲೆಯಾಗಿ +ಬೆಳ್ದಿಂಗಳಗುಂಟ ತೇಲಿ ತೇಲಿ ಬಂದಾಗ +ಭಾವಪರವಶ ಮಂದಿ ಹಾ ಎಂದರು. +ಚಿನ್ನಮುತ್ತ ಹೊಟ್ಟೆಯುರಿಯಿಂದ ಸುಟ್ಟು ಭಸ್ಮವಾದ. ಇದು ಚಂದಮುತ್ತನ ಗಮನಕ್ಕೆ ಬಂದುದೇ, ಸೇಡು ಆವರಿಸಿಬಿಟ್ಟಿತು. ಪಂತಪೌರುಷಕ್ಕೆ ಬಿದ್ದು ಚಿನ್ನಮುತ್ತ ನುಡಿಸಿದ್ದನ್ನೆಲ್ಲ ತಾನೂ ನುಡಿಸಿ ಅವನ ದೌರ್ಬಲ್ಯಗಳ ಬೆಳಕಿಗೆ ತಂದ. +ಛಲವೇರಿ ಚಾಪಲ್ಯ ಬಲವೇರಿ +ಒಂದಾದ ಮ್ಯಾಲೊಂದು +ರಾಗಂಗಳ ನುಡಿಸಿ +ಜನ ತಲೆಗೊಂದು ಹೊಗಳುವಂತೆ ಮಾಡಿದ. +ಚಂದ್ರನ ಕಿರಣ ಹೆಚ್ಚು ಹೆಚ್ಚು +ಪ್ರಖರವಾಗಿ ಸುಡುತ್ತಿರುವಂತೆ +ಚಿನ್ನಮುತ್ತ ಖಿನ್ನನಾದ. +ಅದ ಕಂಡು ಉತ್ತೇಜಿತವಾಯಿತು +ಚಂದಮುತ್ತನ ಹರ್ಷ. +ಇನ್ನೊಂದು ಹೀಗೇ ಮತ್ತೊಂದು ರಾಗ ಎತ್ತುವಷ್ಟರಲ್ಲಿ ಹಾಡಿನೆಳೆ ಕಿತ್ತಂತೆ ಥಟ್ಟನೆ ಕಟ್ಟಾಯಿತು. ಗುಡ್ಡ ನಕ್ಕಂತೆ ಕೇಳಿಸಿ ಎಲ್ಲ ಮಂದಿ ಆಘಾತಗೊಂಡು ದಿಗ್ಭ್ರಾಂತರಾಗಿ ಹಿಂದಿರುಗಿ ನೋಡಿದರೆ,- +ಎಲ್ಲರ ಹಿಂದೊಂದು ಮುದುಕಿ, +ಹಾಳು ಮುದುಕಿ, ಕೊಳಕು ಮುದುಕಿ +ಚಂದಮುತ್ತನ ಕಡೆ ತಿರಸ್ಕಾರದಿಂದ ನೋಡುತ್ತ, +ಬಾಯಿತುಂಬ ಹಲ್ಲಿನ ನಗೆಯ ಗಹಗಹಿಸಿ ನಗುತ್ತ, +ನಿಂತಿದ್ದಾಳೆ! ಭೂಮಿ ಆಕಾಶಕ್ಕೆ ಏಕಾಗಿ ಕೀಲಿಸಿದಂತೆ! +ಮುಸುರೆ ಮೂಗು ಕೆಂಡಗಣ್ಣು ಕೆಂಪಗೆ ಬಿಟ್ಕೊಂಡು +ಕೆಂಜೆಡೆ ತುಂಬ ನಕ್ಷತ್ರದಂಥ ಮಣಿಗಳ ಮಡಿಕ್ಕೊಂಡು +ಕತ್ತಿನ ತುಂಬ ರುದ್ರಾಕ್ಷಿ ಧರಿಸ್ಕೊಂಡು +ಛಿದ್ರಕುಬಸ ತೊಟ್ಟು ಚಿಂದಿ ಸೀರೆ ಉಟ್ಟು, +ಲಂಬ ಕುಚ ಜೋತ ಕರ್ಣ, ಕೈಯಲ್ಲಿ ಬಿದಿರ ಕೋಲಿನ ಚೌಡಿಕೆ +ಹಿಡಿದುಕೊಂಡು +ರುದ್ರಗೋಪವ ತಾಳಿ +ಮನಸ್ಸಿಗೆ ಬಂದ ಹಾಗೆ ಧ್ವನಿ ಮಾಡಿ ಕೈಬೀಸಿ ಕಣ್ಣು ತಿರುವುತ್ತ, +ಗೊತ ಗೊತ ನಾರುತ್ತ ಕಂಡವರು ಕಾರಿಕೊಳ್ಳುವ ಹಾಗೆ, ನಿಂತವರು +ಹೇಸಿಕೊಳ್ಳುವ ಹಾಗೆ +ಅಕಾರಾಳ ವಿಕಾರಾಳವಾಗಿ ನಿಂತಿದ್ದಾಳೆ! +ನೋಡಿ ಹಿರಿಯರಿಂದ ಕಿರಿಯರ ತನಕ ಗಾಬರಿಯಾದರು. ಕಾಡು, ಬೆಟ್ಟ, ಗುಡಿ ಗುಂಡಾರ ಮಗುಚಿ ಬಿದ್ದಂಗಾಯ್ತು. ಸದ್ದು ಗದ್ದಲವಾಗಿ ಇದ್ಯಾವ ಲೋಕದ ರಾಕ್ಷಸಿಯೆಂದು, ಇನ್ನು ಜೀವಸಹಿತ ವಾಪಸಾಗುವುದು ಶಕ್ಯವಿಲ್ಲೆಂದು ಕೆಲವರು ಬೋಧೆ ತಪ್ಪಿ ಬಿದ್ದರು. ಕೆಲವರು ಜೀವ ಹೆಪ್ಪು ಗಟ್ಟಿಸಿಕೊಂಡು ನಿಶ್ಚಲ ಕುಂತರು. +ಚಂದಮುತ್ತನನ್ನ ಕೋಲಿನಿಂದ ತೋರಿಸುತ್ತ ಗುಡ್ಡ ಗುಡುಗುವ ಹಾಗೆ ಗುಡುಗಿದಳು- ಯಾರು? ಆ ಕೊಳಕು ಮುದುಕಿ! +“ಆ ಹಾಹಾ, +ಈ ಕ್ರಿಮಿ ನುಡಿಸಿದ್ದೇ ಸಂಗೀತವೆಂದಾದರೆ +ಸತ್ಯ ಸಂಗೀತ ಅಂಬೋದು ಸತ್ತುಹೋಗದ? +ನಿತ್ಯ ನ್ಯಾಯ ಅಂಬೋದು ನಿಂತುಹೋಗದ? +ಮ್ಯಾಲಿನ ಮಳೆ ಮ್ಯಾಲೇ ಇಂಗಿ +ಕೆಳಗಿನ ಬೆಳೆ ಸುಟ್ಟು ಹೋಗದ? +-ಎಂದು ಒರಟು ಮಾತುಗಳ ಅಲೆಯೆಬ್ಬಿಸಿ ಹೃದಯಗಳಿಗಪ್ಪಳಿಸಿ ಹರಿದಾಡಿದಳು. +ಈಗ ಧೈರ್‍ಯ ತಗೋಬೇಕಾದವನು ಕುಲಗುರುವೊಬ್ಬನೇ. ಉಳಿದವರೆಲ್ಲ ಗಾಬರಿಯಲ್ಲಿ ಉಸಿರಾಟವನ್ನೇ ನಿಲ್ಲಿಸಿದ್ದರು. ಕುಲಗುರು ಬೆವರಜಲವ ಒರೆಸಿಕೊಂಡು ಕರವೆತ್ತಿ ಕೈಮುಗಿದು ತೊದಲುತ್ತ ಬಾಯಿಬಿಟ್ಟ. +ಕುಲಗುರು : ತಾಯಿ, ನಮ್ಮ ಸಾವಿರ ತಪ್ಪು +ಒಪ್ಪಿಕೊಂಡು ನೀನು ಯಾರಂತ ಹೇಳಿದರೆ… +ಮುದಿಜೋಗ್ತಿ : ನಮಗೆ ನಾಮಕರಣ ಮಾಡಿದವರಿಲ್ಲ. ನಾನಿದ್ದೇನೆ, ನನ್ನ +ಸತ್ಯವೂ ಇದೆ. ಕಣ್ಣಿದ್ದರೆ ನೋಡಿಕೊ. ನೆತ್ತರಲ್ಲಿ ಹುಟ್ಟಿ +ದವಳಲ್ಲ, ನೀರಲ್ಲಿ ನೆನೆದವಳಲ್ಲ. ಆಕಾಶವೆಂಬ ಬಯಲ +ಕೆರೆಯಲ್ಲಿ ಬಿಳಿತಾವರೆಯೆಂಬ ಮೂರೆಸಳಿನ ಹೂವಿನಲ್ಲಿ +ಹುಟ್ಟಿದವಳು; ನಾನು ಕಾಲನ ಸೂಳೆ, ನೀ ಯಾರೋ +ಮುದಿಯ? +ಕುಲಗುರು : ನಾನು ನಿನ್ನ ಪಾದದ +ಧೂಳು; ಕುಲಗುರು. ಈ ಶಿಶು ಮಕ್ಕಳಿಗೆ +ಮುಂದುವರೆಯುವುದು +ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […] +ಪೀಠಿಕಾ ಸಂಧಿಶ್ರೀ ವನಿತೆಯರಸನೆವಿಮಲ ರಾಜೀವ ಪೀಠನ ಪಿತನೆ ಜಗತಿಪಾವನನೆ ಸನಕಾದಿ ಸಜ್ಜನಿಕರ ದಾತಾರರಾವಣಾಸುರ ಮಥನ ಶ್ರವಣ ಸುಧಾ ವಿನೂತನ ಜನದ ಗದುಗಿನ ವೀರನಾರಾಯಣ ೧ ಶರಣ ಸಂಗವ್ಯಸನ ಭುಜಗಾಭರಣನಮರ ಕಿರೀಟ ಪಂಡಿತಚರಣ ಚಾರುಚರಿತ್ರ ನಿರುಪಮ […] +ಸಂಗೀತ ಕಲಿಸಿದವನು.ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ-ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕಇಂಥ ಕಚಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_449.txt b/Kannada Sahitya/article_449.txt new file mode 100644 index 0000000000000000000000000000000000000000..77d8fbedc7c2b90a1689fe6185029757e02dcb8e --- /dev/null +++ b/Kannada Sahitya/article_449.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. +ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? +ಅಲ್ಲಾ.. ಸ್ಕೂಟರಿನಲ್ಲಿ ಇಷ್ಟು ದೂರ ಬರ್ತೀವಲ್ಲಾ.. ಯಾಕೆ? ಬಾಬು ಹೇದ: ಮನೆಯ ಹತ್ತಿರಾನೇ ಒಂದು ಹೊಸಾ ಸಲೂನು ಶುರುವಾಗಿದೆಯೆಂತೆ. ಆಶಾ ಹೇರ್ ಆರ್ಟ್ ಅಂತ. ಬಾಬುಗೆ ತುಂಬಾ ಚೆನ್ನಾಗಿ ಸ್ಪೈಕಿ ಕಟ್ ಮಾಡಿದ್ದಾನೆ. +ಪ್ರಭಾತ ಸ್ಕೂಟರ್ ಒಡಿಸುತ್ತಿದ್ದ. ಈ ಮಾತಿಗೆ ಅವನ ಬಳಿ ಉತ್ತರವಿರಲ್ಲಿಲ್ಲ. ಪರಿಮಲ್ ಗಾರ್ಡನ್ ಬಳಿಯಿದ್ದ ಫ಼್ಲಾಟನ್ನು ಬಿಟ್ಟು ತಾನು ಕಲಿಸುತ್ತಿದ್ದ ಯೂನಿವರ್ಸಿಟಿ ಕ್ವಾರ್ಟರ್ಸ್‌ಗೆ ಹೋಗಿ ಒಂದು ವರ್ಷ ಆಗಿತ್ತು. ಆದರೂ ಕಟ್ಟಿಂಗಿಗೆ ಮಾತ್ರ ಹಳೆಯ ಮನೀಷಾ ಹೇರ್ ಆರ್ಟ್ ಬಳಿಗೇ ಯಾಕೆ ಬರಬೇಕು ಅನ್ನುವುದಕ್ಕೆ ತಕ್ಷಣ ಜವಾಬು ಇರಲಿಲ್ಲ. +ಕಳೆದ ಹಲವು ವರ್ಷಗಳಲ್ಲಿ ಅಪ್ಪ ಮಗನಿಗೆ ಇದೊಂದು ರೀತಿಯ ರಿವಾಜು ಆಗಿಬಿಟ್ಟಿತ್ತು. ಪ್ರತೀ ತಿಂಗಳ ಎರಡನೇ ಶನಿವಾರ ಮನೆಯಲ್ಲಿರುವ ಹಳೆಯ ಪೇಪರು, ಖಾಲೀ ಬಾಟ್ಲಿ, ಹಾಲಿನ ಕವರು, ಕಸ ಕಡ್ಡಿಯನ್ನೆಲ್ಲಾ ಒಂದು ದೊಡ್ಡ ಚೀಲಕ್ಕೆ ತುಂಬಿಸಿ, – ಬೀಳದಂತೆ ಸ್ಕೂಟರಿನ ಕೊಂಡಿಗೆ ಸಿಕ್ಕಿಸಿ, ಹಾಗೂ ಹೀಗೂ ಬ್ಯಾಲೆನ್ಸ್ ಮಾಡುತ್ತಾ ಕಬಾಡಿವಾಲಾನ ಬಳಿ ಹೋಗುವುದು. ಬಂದ ಹಣವನ್ನು ಜೇಬಿಗಿರಿಸಿ ಕಟ್ಟಿಂಗ್ ಮಾಡಿಸಿಕೊಳ್ಳುವುದು. ಪ್ರಭಾತ ಪ್ರತಿ ಮುಂಜಾನೆ ತರಿಸುತ್ತಿದ್ದ ಪೇಪರುಗಳು, ಮುಫ಼ತ್ತು ಗಡಿಯಾರ, ಟೆಲಿಫೋನು ಇತ್ಯಾದಿ ಪಡೆಯಲೆಂದು ತರಿಸುತ್ತಿದ್ದ ಔಟ್‌ಲುಕ್, ಇಂಡಿಯಾ ಟುಡೇ ಇತ್ಯಾದಿ ಪತ್ರಿಕೆಗಳು – ಅಪ್ಪ ಮಗ ಇಬ್ಬರಿಗೂ ತಿಂಗಳಿಗೊಮ್ಮೆ ಕಟ್ಟಿಂಗ್ ಮಾಡಿಸಿಕೊಳ್ಳಲು ಸಾಕಾಗುತ್ತಿತ್ತು. (ಯೂನಿವರ್ಸಿಟಿ ಕ್ಯಾಂಪಸ್ಸಿಗೆ ಬಂದ ನಂತರ ಈ ರಿವಾಜಿನಲ್ಲಿ ಸ್ವಲ್ಪ ಬದಲಾವಣೆ ಆಗಿತ್ತು: ಕ್ಯಾಂಪಸ್‌ನಲ್ಲಿ ಮನೆಯ ಮುಂದೆಯೇ ಹೋಗುವ ಇನ್ ಹೌಸ್ ಕಬಾಡಿವಾಲಾನ ಬಳಿ ಪೇಪರ್ ಹಾಕುವ ರಿವಾಜನ್ನು ತನ್ನ ಪತ್ನಿ ಪ್ರಾರಂಭಿಸಿದಾಗಿನಿಂದಲೂ ಸ್ವಂತ ಸಂಪನ್ಮೂಲಗಳಿಂದ ಕಟ್ಟಿಂಗಿಗೆ ಹಣ ಪೂರೈಸಬೇಕಾಗಿತ್ತು). ಮೊದಮೊದಲಿಗೆ ಪ್ರತಿಬಾರಿಯೂ ಮನಿಷಾ ಹೇರ್ ಆರ್ಟ್‌ನವನು ನವರತ್ನ ತೇಲ್ ಹಾಕಿ ತಲೆಗೆ ಮಾಲಿಷ್ ಮಾಡುತ್ತೇನೆಂದು ಹೇಳುತ್ತಿದ್ದನಾದರೂ ಪ್ರಭಾತನ ಲೆಕ್ಕದ ಪ್ರಕಾರ ಅದಕ್ಕೂ ದುಡ್ಡು ಪೂರೈಸಬೇಕಾದರೆ ಪ್ರತಿದಿನ ಇನ್ನೊಂದು ಪೇಪರು, ಮತ್ತೊಂದೆರಡು ವಾರಪತ್ರಿಕೆಗಳಿಗೆ ಚಂದಾದಾರನಾಗಬೇಕಾದೀತಾದ್ದರಿಂದ ಬೇಡವೆಂದಿದ್ದ! ಹೀಗಾಗಿ ಮೊದಲಿಗೆ ಪ್ರಭಾತ ಮಾಲಿಷ್ ಬಗ್ಗೆ ಹೆಚ್ಚು ಉತ್ಸಾಹ ತೋರಿರಲ್ಲಿಲ್ಲ. ಮೇಲಾಗಿ ಜನ ಯಾಕೆ ತೇಲ್ ಮಾಲಿಷ್ ಮಾಡಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅವನಿಗೆ ತುಂಬವೇ ಕುತೂಹಲವಿತ್ತು. ಮಾಲಿಷ್‌ನ ಅಭ್ಯಾಸ ತನ್ನ ಸ್ವಂತ ಊರಾದ ಬೆಂಗಳೂರಿಗಿಂತ ಅಹಮದಾಬಾದಿನಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದಂತಿತ್ತು. +ಮಗ ಅರಿಜಿತ್ ಇಲ್ಲೇ ಕಟ್ಟಿಂಗ್ ಮಾಡಿಸುಕೊಳ್ಳುತ್ತಾ ಬೆಳೆದದ್ದನ್ನ ಪ್ರಭಾತ ನೆನಪು ಮಾಡಿಕೊಂಡ. ಬಂದ ಹೊಸತರಲ್ಲಿ ಕುರ್ಚಿಯ ಮೇಲೆ ಒಂದು ದೊಡ್ಡ ವೃತ್ತಾಕಾರದ ದಿಂಬನ್ನು ಇಟ್ಟು ಅದರ ಮೇಲೆ ಮಗುವನ್ನು ಕೂಡಿಸುತ್ತಿದ್ದರು. ರಾವಣಾಸುರನ ಆಸ್ಥಾನದಲ್ಲಿ ಬಾಲ ಸುತ್ತಿ ಕೂತ ಹನುಮಂತನಂತೆ ಅರಿಜಿತ್ (ಮುದ್ದಾಗಿ) ಕಾಣುತ್ತಿದ್ದ. ಮಗನ ಕಟ್ಟಿಂಗ್ ಮುಗಿಯುವವರೆಗೂ ಅವನ ಹಿಂದೆ ನಿಂತು ಪ್ರಭಾತ ಬ್ಯಾಕ್‌ಸೀಟ್ ಡ್ರೈವಿಂಗ್ ಮಾಡುತ್ತಾ ಸೂಚನೆಗಳ್ಳನ್ನು ಕೊಡುತ್ತಿದ್ದ: ತಲೆಯ ಮೇಲೆ ಬಾಚಣಿಗೆ ಓಡಿಸುವಷ್ಟು ಕೂದಲು ಇರಲಿ; ಸೈಡಿನಲ್ಲಿ ಬಾರೀಕ್‌ಆಗಿ ಕತ್ತರಿಸಬೇಕು; ಕಿವಿಯ ಮೇಲಿಂದ ದೊಡ್ಡ ವೃತ್ತಾಕಾರವಾಗಿ ಕೂದಲು ತೆಗೀಬೇಕು – ಬೆಳೆದಾಗ ಕಿವಿಯ ಮೇಲೆ ಸುಲಭವಾಗಿ ಕೂದಲು ಬೀಳಬಾರದು; ಕೆನ್ನೆಯ ಮೇಲೆ ರೇಜರ್ ಓಡಿಸಬಾರದು – ಬದಲಿಗೆ ಮೆಷೀನ್ ಓಡಿಸಬೇಕು.. ಇದೆಲ್ಲ ಮನೀಷಾ ಹೇರ್ ಆರ್ಟ್‌ನ ಕೆಲಸಗಾರರಿಗೆ ಮನೋಗತವಾಗಿತ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ಒಂದೆರಡು ಪುಟ್ಟ ವಿಚಾರಗಳು ಬದಲಾಗಿದ್ದುವು. ಮಗ ಅರಿಜಿತ್ ದಿಂಬಿಲ್ಲದೇ ಕುಳಿತು ಕೊಳ್ಳುವಷ್ಟು ಬೆಳೆದಿದ್ದ. ಕಟ್ಟಿಂಗ್ ಹೇಗೆ ಮಾಡಬೇಕೆಂದು ಈಗೀಗ ಅವನೇ ಹೇಳುತ್ತಿದ್ದ. ಆದರೂ ಮಷ್‌ರೂಂ, ಸ್ಪೈಕಿ ಇತ್ಯದಿ ಕಟ್ ಮಾಡಿಸಿಕೊಳ್ಳಲು ಪ್ರಭಾತ ಪರವಾನಗಿ ಕೊಟ್ಟಿರಲಿಲ್ಲ. ಹೇರ್ ಕಟ್ಟಿಂಗ್ ಸೆಲೂನ್ ಬದಲಾಯಿಸಿದರೆ ’ಬೆಕ್ಕಂ’ನಂತಹ ಸ್ಪೈಕಿ ಕಟ್ ಮಾಡಿಸಿಕೊಳ್ಳಬಹುದೆಂದು ಅರಿಜಿತ್ ಪ್ರಯತ್ನ ಮಾಡಿದ್ದ. ಆದರೆ ಈವರೆಗೆ ತನ್ನ ಯಾವುದೇ ಯೋಜನೆ ಕೆಲಸ ಮಾಡಿರಲಿಲ್ಲ. ಹೀಗಾಗಿ ತಾನು ಯಾವಾಗ ಬೆಳೆದು ದೊಡ್ಡವನಾಗುತ್ತೇನೆಂದು ಯೋಚಿಸುತ್ತಾ ಬೇಚೈನಾಗಿ ಅರಿಜಿತ್ ಕಾಯುತ್ತಿದ್ದ. +ಮನೀಷಾ ಹೇರ್ ಆರ್ಟ್‌ನ ಹೆಸರಿನ ಬಗ್ಗೆ ಅಪ್ಪ ಮಗನ ನಡುವೆ ಸಾಕಷ್ಟು ಚರ್ಚೆಯಾಗಿತ್ತು. ಇಟ್ಟಿರುವ ಹೆಸರು ಮನಿಷಾಳದ್ದಾಗಿದ್ದರೂ ಐಶ್ವರ್ಯ ರಾಯ್‌ಳ ದೊಡ್ಡ ಪೋಸ್ಟರ್ ಚಿತ್ರವನ್ನ ಯಾಕೆ ಹಾಕಿದ್ದನೆ? ಅಥವಾ ಸೆಲೂನಿಗೆ ಯಾಕೆ ಐಶ್ವರ್ಯಳ ಹೆಸರು ಇಡಲಿಲ್ಲ? ಇಲ್ಲಿನ ಬಹಳಷ್ಟು ಸೆಲೂನುಗಳು ಗಂಡಸರ ಕೂದಲನ್ನು ಕತ್ತಿರಿಸಿದರೂ, ಹೆಣ್ಣು ಹೆಸರುಗಳನ್ನೇ ಪಡೆದಿರುವುದರ ಹಿಂದಿರುವ ಗುಟ್ಟೇನೆಂಬುದರ ಬಗ್ಗೆ ಸಹ ಅವರು ಚರ್ಚಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಕೂದಲು ಕತ್ತರಿಸುವ ಪ್ರಕ್ರಿಯೆಯಲ್ಲಿ ಕಲೆ ಎಲ್ಲಿಂದ ತೂರಿ ಕೊಂಡಿತು? ಈಚೀಚೆಗೆ ಚಾಲ್ತಿಗೆ ಬಂದಿರುವ ಡಿಸೈನ್ ಕಟ್ಟಿಂಗ್‌ನಿಂದಾಗಿ ಆರ್ಟ್ ಪದ ಬಂದಿರಬಹುದೇ? ಪ್ರಭಾತನ ಪ್ರಶ್ನೆಗಳು ಒಂದು ಸ್ಥರದ್ದಾಗಿದ್ದರೆ, ಅರಿಜಿತ್‌ನ ಪ್ರಶ್ನೆಗಳು ಬೇರೆ ಸ್ಥರದ್ದಾಗಿರುತ್ತಿದ್ದವು: ಸಲೂನಿನಲ್ಲಿ ಟಿಂಕಲ್ ತರಿಸದೇ ಬರೇ ಸ್ಟಾರ್‌ಡಸ್ಟ್ ಮಾತ್ರ ಯಾಕೆ ತರಿಸುತ್ತಾರೆ? ಈ ಎಲ್ಲ ವಿಷಯಗಳ ಬಗ್ಗೆ ಅಪ್ಪ ಮಗ ಬಹಳಷ್ಟು ಚರ್ಚಿಸಿದ್ದುಂಟು. ಮತ್ತೊಂದು ಗಮ್ಮತ್ತಿನ ವಿಷಯವೆಂದರೆ ಈ ಊರಿನ ಎಲ್ಲ ಸಲೂನುಗಳಲ್ಲಿ ಮುಖದ ಎದುರಿಗೆ ಕನ್ನಡಿಯಿರುತ್ತಿತ್ತೇ ಹೊರತು, ಹಿಂದೆ ಏನಾಗುತ್ತಿದೆ ಎಂದು ಗಿರಾಕಿಗಳಿಗೆ ತಿಳಿಯುತ್ತಿರಲ್ಲಿಲ್ಲ. ಕಟ್ಟಿಂಗ್ ಮುಗಿದ ಮೇಲೆ ಒಂದು ಕನ್ನಡಿಯನ್ನು ತಲೆಯ ಹಿಂದಕ್ಕೆ ಹಿಡಿದು ಕಡವಾ ಚೌತ್ ದಿನ ಜರಡಿಯ ಮೂಲಕ ಚಂದ್ರ ದರ್ಶನ ಮಾಡಿಸುವಂತೆ ತಲೆಯ ಹಿಂಭಾಗದ ದರ್ಶನ i&ಂಚಿಛಿuಣe;ಡಿಸುತ್ತಿದ್ದರು. ಅಷ್ಟು ಹೊತ್ತಿಗಾಗಲೇ ಆಗಬೇಕಾದ ಡ್ಯಾಮೇಜ್ ಮುಗಿದಿರುತ್ತಿತ್ತಾದ್ದರಿಂದ ಚಂದ್ರಾಕರದ ಹಿಂಭಾಗವನ್ನು ಕನ್ನಡಿಯಲ್ಲಿ ನೋಡಿಕೊಂಡು ಹೆಚ್ಚು ಮಾತನಾಡದೇ ಜನ ತಲೆಯಾಡಿಸಿ ಹೊರಟುಹೋಗುತ್ತಿದ್ದರು. +ಇಲ್ಲಿಗೇ ಯಾಕೆ ಕಟ್ಟಿಂಗಿಗೆ ಬರಬೇಕು ಎಂಬ ಪ್ರಶ್ನೆಗೆ ಅವನ ಬಳಿ ಉತ್ತರವಿರಲ್ಲಿಲ್ಲ. ಅಥವಾ ಇತ್ತೇ? ಹಾಗೆ ನೋಡಿದರೆ, ಹಳೇ ಪೇಪರ್ ಹಾಕುವ ಕಬಾಡಿವಾಲಾನನ್ನು ಬದಲಯಿಸಿಯಾಗಿತ್ತು. ದಿನಸಿ ಕೊಡುತ್ತಿದ್ದ ಅಂಗಡಿಯನ್ನೂ ಹೀಗೇ ಬದಲಾಯಿಸಿಯಾಗಿತ್ತು. ಮುಂಚೆ ಸಪ್ಲೈ ಮಾಡುತ್ತಿದ್ದ ಜಸಾನಿ ಬ್ರದರ್ಸ್ ಅಂಗಡಿಯ ೨ ಕಿಲೋಮೀಟರ್ ಪರಿಧಿಯಲ್ಲಿ ಫ಼್ರೀ ಡೆಲಿವರಿಯ ಲಕ್ಷ್ಮಣ ರೇಖೆ ದಾಟಿದ್ದರಿಂದ – ಈಗ ದಿವಸಿ ಕೃಷ್ಣಾ ಕಿರಣಾದಿಂದ ಬರುತ್ತಿತ್ತು. ಬೆಂಗಳೂರಿನ ರಾಮಯ್ಯಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಕೃಷ್ಣಾದ ಯುವ ಮಾಲೀಕ ಒಂದೆರಡು ತುಂಡು ಕನ್ನಡ ಮಾತಾಡುತ್ತಿದ್ದುದರಿಂದ ಪ್ರಭಾತನಿಗೂ ಬಹಳ ಖುಶಿಯಾಗಿತ್ತು. ಹಾಗೆ ನೋಡಿದರೆ ಪರಿಮಲ್ ಗಾರ್ಡನ್ ಫ಼್ಲಾಟ್‌ನ ದಿನಗಳಿಂದ ಹಾಗೆಯೇ ಮುಂದುವರಿದ ಹಳೇ ಕೊಂಡಿ ಇದೊಂದೇ ಆಗಿತ್ತು. +ಪ್ರತೀ ವರ್ಷ ದೀಪಾವಳಿಯ ನಂತರ ಕೂದಲು ಕತ್ತರಿಸಿಕೊಳ್ಳಲು ಹೋದಾಗ ಅಲ್ಲಿನ ಕೆಲಸಗಾರರು ನೆನಪಿನಿಂದ ದೀಪಾವಳಿ ಬಕ್ಷೀಸು ಕಿತ್ತುಕೊಳ್ಳುತ್ತಿದ್ದುದ್ದು ಪ್ರಭಾತನಿಗೆ ತುಂಬಾ ಕಿರಿಕಿರಿಯುಂಟು ಮಾಡುತ್ತಿತ್ತು. ಒಂದು ವರ್ಷ ದೀಪಾವಳಿ ರಜೆಗೆ ಎಲ್ಲರೂ ಬೆಂಗಳೂರಿಗೆ ಹೋಗಿದ್ದಾಗ, ಈ ವಿಷಯ ನೆನಪಾಗಿ ಪ್ರಭಾತ ಅಲ್ಲೇ ಕಟಿಂಗ್ ಮಾಡಿಸಿಕೊಂಡು ಬಂದಿದ್ದ. ಹೀಗಾಗಿ, ಇಲ್ಲಿ ಕಟ್ಟಿಂಗಿಗೆ ತಿಂಗಳ ನಂತರ ಜನವರಿಯಲ್ಲಿ ಇಬ್ಬರೂ ಹೋಗಿದ್ದರು. ಆದರೇನಂತೆ.. ಅಲ್ಲಿನ ಕೆಲಸಗಾರರು ಮರೆತಿರಲಿಲ್ಲ. ನಿರ್ಮಮಕಾರವಾಗಿ ಕೊಡುವವನ ಜಾತಿ ಕೋಮು ಏನೂ ವಿಚಾರಿಸದೇ ದೀವಾಳಿಕೆ ಬಾದ್ ಪಹಲೇ ಬಾರ್ ಆಯಾ.. ಬಕ್ಷೀಶ್ ಸಾಬ್.. ಅಂತ ಹೇಳಿ ಚಿದಂಬರಂ ಸಾಹೇಬರು ಎಜುಕೇಷನ್ ಸೆಸ್ ಕಸಿದು ಕೊಂಡಂತೆ ವಸೂಲು ಮಾಡಿಯೇಬಿಡುತ್ತಿದ್ದರು. ಈ ಘಟನೆಯಾದಾಗ ಪ್ರಭಾತ ಇಲ್ಲಿಗೆ ಮತ್ತೆ ಬರಬಾರದೆಂದು ನಿರ್ಧಾರ ಮಾಡಿದ್ದ. ಆದರೆ, ಆ ನಿರ್ಧಾರ ಹೆಚ್ಚು ದಿನ ಕಾಯಂ ಆಗಿ ನಿಲ್ಲಲ್ಲಿಲ್ಲ. +ಈ ನಡುವೆ ಮನೀಷಾ ಹೇರ್ ಆರ್ಟ್‌ನ ರಸ್ತೆಯಲ್ಲಿ ಪಾರ್ಕಿಂಗಿಗೆ ಕಷ್ಟವಾಗುತ್ತಿದ್ದಾಗ್ಯೂ ಪ್ರಭಾತ ಮಗನನ್ನು ಇಲ್ಲಿಗೇ ಎಳೆದು ತರುತ್ತಿದ್ದ. ಒಂದು: ಹಳೇ ಪೇಪರಿನ ಆಮದನಿಯಿರಲ್ಲಿಲ್ಲ, ಮೇಲಾಗಿ: ಹೇರ್‌ಕಟ್ ಖರ್ಚಲ್ಲದೇ, ಹದಿನೈದು ರೂಪಾಯಿಯ ಪೆಟ್ರೋಲು ಸುರಿಯಬೇಕಿತ್ತು. ಆದರೂ ಮನಿಷಾ ಯಾಕೆ ಎಂಬುದಕ್ಕೆ ಅವನು ಉತ್ತರ ಹುಡುಕುತ್ತಿದ್ದ. ಹಾಗೆ ನೋಡಿದರೆ ಪ್ರಭಾತನಾಗಲೀ ಅರಿಜಿತ್ ಆಗಲೀ, ಮಿಕ್ಕ ಗಿರಾಕಿಗಳಂತೆ ಹೆಚ್ಚು ಮಾತಾಡುತ್ತಿರಲ್ಲಿಲ್ಲ. ಎಲ್ಲವೂ ವಿಚಿತ್ರ ಮೌನದಲ್ಲಿ ನಡೆದು ಹೋಗುತ್ತಿತ್ತು. ಇಬ್ಬರಿಗೂ ಗುಜರಾತಿ ಭಾಷೆ ಬರುತ್ತಿರಲ್ಲಿಲ್ಲವಾದ್ದರಿಂದ ಮಾತಾಡಬೇಕೆಂದರೂ ಅದು ಸರಳವಾಗಿ ಸಾಧ್ಯವಾಗುತ್ತಿರಲ್ಲಿಲ್ಲ. ಬಹಳ ದಿನಗಳವರೆಗೆ ಈ ಸಲೂನಿನ ಮಾಲೀಕ ಅಥವಾ ಮುಖ್ಯಸ್ಥ ಯಾರೆಂಬುದೂ ಪ್ರಭಾತನಿಗೆ ತಿಳಿದಿರಲ್ಲಿಲ್ಲ. ಇವರು ಹೋದಾಗಲ್ಲೆಲ್ಲಾ ಅಲ್ಲಿ ನಾಲ್ಕಾರು ಜನ ಕೂದಲು ಕತ್ತಿರಿಸಲು ಸನ್ನದ್ಧರಾಗಿ ನಿಂತಿರುತ್ತಿದ್ದರು. ಬರುವ ಜನರ ಕೋರಿಕೆಯ ಮೇರೆಗೆ ಷೇವಿಂಗ್, ಕೂದಲು ಕತ್ತರಿಸುವುದು, ಬಣ್ಣ ಹಾಕುವುದು, ಮತ್ತು ಕೆಲ ಗಂಡಸರಿಗೆ (ಮುಖ್ಯವಾಗಿ ಯುವಕರಿಗೆ) ಮುಖಕ್ಕೆ ಫ಼ೇಶಿಯಲ್ ಮಾಡುವುದು, ಹೀಗೆ ಅನೇಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿದ್ದುವು. ಪ್ರಭಾತ ಮತ್ತು ಅರಿಜಿತ್ ಮಾತ್ರ ಅಲ್ಲಿ ಕೂತು ಸ್ಟಾರ್‌ಡಸ್ಟ್‌ನಲ್ಲಿ ಷಾರುಖ್ ಚಿತ್ರಗಳನ್ನು ನೋಡುವುದು, ತಮ್ಮ ಸರದಿ ಬಂದಾಗ ತಲೆ ಒಡ್ಡುವುದು, ಹಣ ಕೊಟ್ಟು ವಾಪಸ್ಸಾಗುವುದು – ಇಷ್ಟೇ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರಿಗೂ ಅಲ್ಲಿ ಕೂದಲು ಕತ್ತರಿಸುವವರ ಮುಖ ಪರಿಚಯವಿದ್ದರೂ, ಹೆಸರುಗಳು ತಿಳಿದಿರಲ್ಲಿಲ್ಲ. ಆದರೆ ಅರಿಜಿತನನ್ನು ನೋಡಿ ಅಂಗಡಿಯಲ್ಲಿ ಯಾರಾದರೂ ಕ್ಯಾ ಛೋಟೂ ಕೈಸಾ ಹೈ.. .. ಬಹುತ್ ದಿನ್ ಕೆ ಬಾದ್ ಆಯಾ ಬಾಲ್ ಕಟಾನೆ ಅಂತ ಹೇಳುತ್ತಿದ್ದುದುಂಟು. +ಎಷ್ಟು ಯೊಚನೆ ಮಾಡಿದರೂ ಸೆಲೂನನ್ನು ಯಾಕೆ ಬದಲಾಯಿಸಿಲಲ್ಲ ಎಂಬುದಕ್ಕೆ ಉತ್ತರ ಹುಡುಕುವುದು ಕಷ್ಟವಾಗುತ್ತಾ ಹೋಯಿತು. ಎರಡು ವರ್ಷಗಳ ಹಿಂದೆ ಗೋಧ್ರಾ ಕಾಂಡದ ನಂತರ ಅಹಮದಾಬಾದಿನಲ್ಲಿ ದೊಡ್ಡ ಕೋಮು ಗಲಭೆಯಾಗಿತ್ತು. ಈ ಗಲಭೆಯಾಗುವವರೆಗೂ ಯಾವ ಅಂಗಡಿಯನ್ನ ಯಾವ ಕೋಮಿನವರು ನಡೆಸುತ್ತಿದ್ದರೆಂದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲವೆನ್ನಿಸುತ್ತದೆ. ಈ ಗಲಭೆಯಲ್ಲಿ ಗುರಿಯಿಟ್ಟಂತೆ ಮುಸಲ್ಮಾನರ ಎಷ್ಟೋ ಆಸ್ತಿಪಾಸ್ತಿ ನಷ್ಟವಾಯಿತು. ಇದು ಎಷ್ಟರ ಮಟ್ಟಿಗೆಂದರೆ, ಭಸ್ಮವಾದ ಯವುದಾದರೂ ಕಟ್ಟಡ ಕಂಡರೆ, ಅದರ ಮಾಲೀಕ ಯಾವ ಕೋಮಿಗೆ ಸೇರಿದ್ದೆಂದು ಪ್ರಶ್ನೆ ಕೇಳುವ ಅವಶ್ಯಕತೆಯೇ ಇರಲಿಲ್ಲ. ಪ್ರಭಾತನಿಗೆ ಇನ್ನೂ ನೆನಪಿದೆ – ತನ್ನ ಕ್ಯಾಂಪಸ್ಸಿನ ಬಳಿ ಇದ್ದ ಎಡ್‌ವರ್ಡ್ ಡ್ರೈ ಕ್ಲೀನರ್ಸ್‌ನ ಅಂಗಡಿ ಮಾತ್ರ ಈ ಸರ್ವನಾಶವನ್ನು ತಡೆದು ಪ್ರತಿಭಟಾತ್ಮಕವಾಗಿ ನಿಂತಿತ್ತು. ಅದರ ಹಿಂದಿನ ಗಮ್ಮತ್ತಿನ ಕತೆ ಈ ರೀತಿ ಇತ್ತು: ಗಲಭೆಯ ದಿನ ಕತ್ತಿ ಝಳಪಿಸುತ್ತಾ ತಿಲಕ ಧರಿಸಿದ್ದ ದೊಡ್ಡ ಗುಂಪು ಅಲ್ಲಿಗೆ ಬಂದಾಗ ಅಂಗಡಿಯವನು ಹೇಳಿದನಂತೆ: ಸುಡುವುದಾದರೆ ಎಲ್ಲವನ್ನೂ ಸುಟ್ಟು ಹಾಕಿ – ಆದರೆ ಇಷ್ಟು ಮಾತ್ರ ನೆನಪಿರಲಿ – ಇಲ್ಲಿರುವ ಒಂದೊಂದು ಬಟ್ಟೆಯೂ ಹಿಂದೂಗಳದ್ದು. ಹೀಗೆ ಈ ಎಡ್‌ವರ್ಡ್ ಒಬ್ಬನನ್ನು ಬಿಟ್ಟರೆ, ಮಿಕ್ಕೆಲ್ಲಾ ಮುಸಲ್ಮಾನರ ಅಂಗಡಿಗಳು ಭಸ್ಮವಾಗಿಬಿಟ್ಟಿದ್ದವು. ವಿಚಿತ್ರವೆಂದರೆ ನಾಶವಾದ ಅಂಗಡಿಗಳ ಹೆಸರಿನ ಯಾದಿ ನೋಡಿದರೆ ಆ ಸಂಸ್ಥೆಗಳ ಮಾಲೀಕರು ಯಾರಾದರೂ ಆಗಬಹುದಿತ್ತು.. ಅಭಿಲಾಷಾ ಪ್ಯೂರ್ ವೆಜ್ ರೆಸ್ತುರಾ, ತುಳಸಿ ಹೋಟೆಲ್, ಮೋತಿ ಮಹಲ್.. ಅದಾನಿ ರಾವ್‌ಜಿ ಸೂಪರ್ ಸ್ಟೋರ್.. ಹಾಗೂ ಮನಿಷಾ ಹೇರ್ ಆರ್ಟ್. +ಕಡೆಯ ಹೆಸರೊಂದನ್ನು ಬಿಟ್ಟು ಮಿಕ್ಕವನ್ನೆಲ್ಲಾ ಪ್ರಭಾತ ಪತ್ರಿಕೆಯಲ್ಲಿ ಓದಿದ್ದ. ತಲೆಯ ಮೇಲೆ ಕೂದಲು ಬೆಳೆಯುತ್ತಿದ್ದಂತೆ ಮತ್ತೆ ತಿಂಗಳ ಎರಡನೆಯ ಶನಿವಾರ ಬಂತು. ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತಿರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್ ತುಂಬಿರುತ್ತಿದ್ದ ಮನಿಷಾ ಹೇರ್ ಆರ್ಟ್ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇ ಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು. ಎಲ್ಲವೂ ಮೌನದಲ್ಲಿ ನಡೆಯಿತು. ಏನಾಯಿತೆಂದು ಕೇಳುವ ಅವಶ್ಯಕತೆ ಪ್ರಭಾತನಿಗಿರಲ್ಲ. ಎಲ್ಲ ಮುಗಿಸಿ ತಲೆಯ ಹಿಂದೆ ಕನ್ನಡಿ ಹಿಡಿಯುತ್ತಾ ಆತ ತೇಲ್ ಲಗವಾಲೋ ನಾ ಸಾಹೇಬ್.. ಠಂಡಾ ರಹೇಗಾ.. ಅನ್ನುತ್ತಾ ಅವನು ನವರತ್ನ ತೇಲ್‌ನ ಬಾಟಲಿಗೆ ಕೈ ಒಡ್ಡಿದ. ಪ್ರಭಾತ ಸುತ್ತಲೂ ನೋಡಿದ. ಬೇರಾವ ಗಿರಾಕಿಯೂ ಇಲ್ಲಿಗೆ ಬರುತ್ತಿದ್ದಂತಿರಲಿಲ್ಲ. ಸುಮ್ಮನೆ ಮೌನವಾಗಿ ಅಲ್ಲೇ ಅಲುಗಾಡದೇ ಕುಳಿತಿದ್ದ. ಅಂದು ಪ್ರಾರಂಭವಾದ ಈ ತೇಲ್ ಮಾಲಿಷ್‌ನ ಪ್ರಕ್ರಿಯೆ ಈ ಎರಡು ವರ್ಷಗಳಲ್ಲಿ ಎಡೆಬಿಡದೇ ನಡೆದು ಬಂದಿದೆ. +ಕ್ರಮಕ್ರಮೇಣ ಮನಿಷಾ ಹೇರ್ ಆರ್ಟ್ ಮುಂಚಿನ ಸ್ಥಿತಿಗೇ ವಾಪಸ್ಸಾಗ ಹತ್ತಿತು. ಆದರೆ ಮುಂಚೆ ಕೆಲಸ ಮಾಡುತ್ತಿದ್ದವರು ಒಬ್ಬರೂ ಇಲ್ಲಿ ಕೆಲಸ ಮಾಡುತ್ತಿದ್ದಂತೆ ಕಾಣಲಿಲ್ಲ. ಈ ಬಾರಿ ದೀಪಾವಳಿಗೂ ಬಕ್ಷೀಸು ಕೇಳಿದಂತೆ ಪ್ರಭಾತನಿಗೆ ನೆನಪಿಲ್ಲ. ಈ ಎಲ್ಲದರ ಮಧ್ಯೆ ಮಗ ಕೇಳಿದ ಪ್ರಶ್ನೆಗೆ ಅವನು ಉತ್ತರವನ್ನೇ ಕೊಟ್ಟಿರಲಿಲ್ಲ ಎಂದು ನೆನಪಾಯಿತು. ಯೊಚಿಸುತ್ತಾ, ತಲೆ ಕೆರೆಯುತ್ತ ಪ್ರಭಾತ ಕಡೆಗೂ ಅರಿಜಿತನ ಪ್ರಶ್ನೆಗೆ ಉತ್ತರ ತಯಾರು ಮಾಡಿಕೊಂಡ – ಇಲ್ಲಿಗೇ ಯಾಕೆ ಬರೋದೂಂದ್ರೆ – ಊರಿನಲ್ಲಿನ ಅತ್ಯುತ್ತಮ ತೇಲ್ ಮಾಲಿಷ್ ಮಾಡುವುದು ಮನಿಷಾ ಹೇರ್ ಆರ್ಟ್‌ನವನೇ.. +ಅರಿಜಿತನಿಗೆ ಇದು ಸರಿಯಾದ ಉತ್ತರ ಅನ್ನಿಸಲಿಲ್ಲ. ಆದರೂ ಅಪ್ಪನೆದುರು ಅವನು ಹೆಚ್ಚು ವಾದಿಸುತ್ತಿರಲ್ಲಿಲ್ಲವದ್ದರಿಂದ, ಸುಮ್ಮನಾದ. ಮೌನವಾಗಿ ಇಬ್ಬರೂ ಮತ್ತೊಮ್ಮೆ ಕೂದಲನ್ನು ಕತ್ತರಿಗೊಡ್ಡಿ ಪಟ್ಟಾಭಿಷೇಕ ಮಾಡಿಸಿಕೊಂಡು ಮನೆಗೆ ವಾಪಸ್ಸಾದರು. +ಅಹಮದಾಬಾದ್ +ಜುಲೈ ೨೦೦೪. +೧ . ಈ ಊರಿನಲ್ಲಿ ಅಂಗಡಿಯ ಹೆಸರಿಗೂ, ಮಾಲೀಕತ್ವಕ್ಕೂ ಹೆಚ್ಚಿನ ಸಂಬಂಧವಿರಲ್ಲಿಲ್ಲ. ಹೆಚ್ಚೂ ಕಮ್ಮಿ ಎಲ್ಲ ಡ್ರೈ ಕ್ಲೀನಿಂಗ್ ಅಂಗಡಿಗಳಿಗೂ ಎಡ್‌ವರ್ಡ್‌ನ ಹೆಸರಿರುತ್ತಿತ್ತು. ಬೇಕರಿಗಳು ಹೆಚ್ಚಿನಂಶ ಇಟಾಲಿಯನ್ ಬೇಕರಿಗಳಾಗಿದ್ದುವು, ಮತ್ತು ದೊಡ್ಡ ಪಾನ್ ಅಂಗಡಿಗಳಿಗೆ ಅಶೋಕ್ ಪಾನ್ ಪ್ಯಾಲೆಸ್ ಎಂಬ ಹೆಸರಿರುತ್ತಿತ್ತು +***** +ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […] +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […] +ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_45.txt b/Kannada Sahitya/article_45.txt new file mode 100644 index 0000000000000000000000000000000000000000..193b6baeb68bbecd6913a7371c7f9760607892f6 --- /dev/null +++ b/Kannada Sahitya/article_45.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿಕಾರಿ +ಪುರದ ದಾರಿಯ +ಬಿಳಿ ಮನೆಯ ಹೆಂಚಿನ ಮೇಲೆ +ರಾಶಿರಾಶಿ ಕೆಂಪು ಮೆಣಸಿನ ಕಾಯಿ +ಮೊಲ ಕಚ್ಚಿದ +ನಾಯಿ ಬಾಯಿ. +***** +ಫುಟ್‌ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. ***** +ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. ***** +ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_450.txt b/Kannada Sahitya/article_450.txt new file mode 100644 index 0000000000000000000000000000000000000000..eb6e9d9c7615d52a74ae2d364ab2a6a92452f258 --- /dev/null +++ b/Kannada Sahitya/article_450.txt @@ -0,0 +1,109 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೊಸ ಮದುಮಗಳ ನಾಚಿಕೆಯ +ಬಡಾವಣೆಗಳಲ್ಲಿ +ಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿ +ಪಳಗಿರುವ ಮೊಹಲ್ಲಗಳಲ್ಲಿ +ಮಾಟಾದ ಸೌಧಗಳ +ನೋಟದಾಮೋದಗಳ +ನೀಟು ದಂತಾವಳಿಯ ನಡುವೆ +ಕಣ್ಣನಿರಿಯುತ್ತವೆ ಧುತ್ತೆಂದು +-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು; +ಪಾರ್ಥೇನಿಯಮ್ಮಿನ ದಟ್ಟ ತೋಟಗಳು +ಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳು +ಸೆಟ್ಟರ, ಸೇಟುಗಳ, +ನರಾಕೃತಿವೆತ್ತ ನೋಟುಗಳ, +ಸುಲಭ ಕಮಾಯಿಯ ಬತ್ತದೂಟೆಗಳು; +ದಿನೇ ದಿನೇ ದಿವಕ್ಕೇರಿರುವ ರೇಟುಗಳು; +-ಖಾಲಿ ಸೈಟುಗಳು! +ಇದ್ದಲ್ಲೆ ಇದ್ದರೂ +ಕದಲದೆ ಬಿದ್ದಿದ್ದರೂ +ಪತ್ರಗಳ ದ್ವಾರಾ ಕಛೇರಿಗಳನಲೆದು +ಹತ್ತು ಕೈಗಳ ಬದಲಿ, +ಕೊನೆಗೆ ಯಾರದೋ ತೊತ್ತು; +ಜಂಬದ ಮೂಗಿನ, ಸಿರಿವಂತಿಕೆಯ ನತ್ತಿನ +ತೋರಿಕೆಯ ಮುತ್ತು. +ತೇಪಿನಳತೆಯ ಈ ಕರಾರುವಾಕ್ಕು ಉದ್ದಗಲಗಳು, +ನೆಲದಸಂಖ್ಯಾತ ಒಂದೆತನದ ಹೋಳುಗಳಲ್ಲಿ +ನೆಟ್ಟ ಕಲ್ಲಿನ +ಕಪ್ಪು ನಂಬರಿನ +ಏಕಮೇವ ಗುರುತುಗಳು- +ಕೆಲವೊಮ್ಮೆ ಚೌರ ಮಾಡಿಸಿದಂತೆ +ಸಸ್ಯ ಸಂತತಿಯೆಲ್ಲ ತೋಪಾಗಿ +ತಿಟ್ಟು ತೆವರು ತೋಪಡ ಹೊಡೆಸಿಕೊಂಡು ಸಾಫಾಗಿ +ಅಲಂಕರಣದಂಕಣಗಳಾಗುತ್ತವೆ; +ಚೆಳ್ಳೆಪಿಳ್ಳೆಗಳ ಕ್ರಿಕೆಟ್ ಆಟ, +ದನ ಕರುಗಳ ಗೂಟ, +ನೆರೆಮನೆಯ ಒಗೆದರಿವೆಗಳ ತೂಗಾಟ, +ನಾಯಿಗಳ ಕೂಟಗಳಿಗೆ; +ಹಾಗೆಯೇ, +ಸಂಜೆ ಮಗ್ಗಲು ಮನೆಗಳೆಲ್ಲ ದೀಪ್ತಿಯ ಧರಿಸಿ +ಹೊರಗೆಸೆವ ನೆರಳುಗಳ ಪಟ್ಟೆಗಳಿಗೆ, +ತಮದ ಬೆಳ್ಳಟ್ಟೆಗಳಿಗೆ. +ನಿವಾಸ ನಾಮೆಯ ಕಣ್ತುಂಬುವ ಸೊಗಸುಗಳ +ನಿಗುರಿಸಿಕೊಂಡ ಸಹ ನಿವೇಶನಗಳೊಡನೆ, ಹಿಂದೊಮ್ಮೆ +ಮಸಿ ಹಿಡಿದ ಮೊಗದ ಈ ಅ-ಪಾಯಗಳು ಕೂಡ, +ಬಡ ಆರಂಬಗಾರನ ಹೊಟ್ಟೆಪಾಡ +ನೇಗಿಲಿನ ಹಂಬಲ, +ತಲತಲಾಂತರದ ಬೆಂಬಲ. +ಬಟಾಬಯಲ ಈ ಖುಷ್ಕಿ ತುಂಡುಗಳು, +ನಗರ ಒತ್ತರಿಸಿ +ಹಳ್ಳಿ ಆಸುಪಾಸೆಲ್ಲ ತತ್ತರಿಸಿ +ಸೈಜುವಾರಿ ಕತ್ತರಿಸಿ ಹಂಚಿಕೆಗೊಂಡು +-ಈಗ ಸಿಕ್ಕಿದವರ ಸೀರುಂಡೆಗಳು; +ಹಣದಾಹಿಯ ಬುಂಡೆಗಳು. +ಕೆಲವು ಸೈಟು, +ಮದುವೆ ಲೇಟಾದ ಕನ್ಯೆಯದೆ ಥೇಟು. +ವಾರಿಗೆಯ ಪ್ರಿಯಂವದೆಯರೆಲ್ಲ ಸಂಸಾರವೊಂದಿಗರಾಗಿ +ಉಪ್ಪರಿಗೆ ಮೇಲುಪ್ಪರಿಗೆಯ ಕರುಳ ತೆನೆಗಳ ತೂಗಿ +ಬೀಗಿದ್ದರೂ, ಇವು ಮಾತ್ರ ಸೊರಗಿ- +ಪ್ರಾಧಿಕಾರದ ಮಲ ತಾಯ +ತಹಬಂದಿಯಲ್ಲಿ ಬಂದಿಗಳಾಗಿ, +ದಫ್ತರಿನ ಅಂಕಿ ಅಂಶದ ಇಂಕಿನ ಚಕ್ಕುಬಂದಿಗಳಾಗಿ, +ಅಲಾಟಾಗದುಳಿದ ನೆಲದಾಕಾರದ ನೋಟುಗಳು. +ಸದ್ಯಕ್ಕೆ ಈ ತೆರೆಮರೆಯ ವಹಿವಾಟುಗಳು +ಕುಲಗೆಟ್ಟ ಓಟುಗಳು; +ಮುಂದೊಮ್ಮೆ ಹಿಗ್ಗಬಹುದು +ವಧು ದಕ್ಷಿಣೆಯ ಮೇರೆ; +ಆ ಮಾತು ಬೇರೆ! +ಸೈಟುಗಳ ಪಾಲಿಗೆ, +ಒಂದನ್ನೇ ತೂಗಿಸಿಕೊಂಡು +ಹೋಗಲಾಗದಸಹಾಯಕತೆಗೆ, +ಅನೇಕರು, +ಏಕಪತ್ನೀವ್ರತಸ್ಥರು, +ಏಕದೇಹ ರತಸ್ಥರು, +ಒಂದೆ ಕೆರೆಯ ಬೆಸ್ತರು. +ಕೆಲವರೋ ದೇಹವಿಡಿ ಧನೇಂದ್ರಿಯರಾದ +ಭೂಲೋಕದಿಂದ್ರರು. +ಅವರಿಗೆ ಹತ್ತಾರು ತ್ತೆವಲಿನೈಲು, +ದುಡ್ಡಸ್ತಿಕೆಯ ದಾಸಯ್ಯತನದ ಡೌಲು. +ಎಂದೇ, ಅಂಥ ಸ್ತ್ರೀಮಂತರು ಬಹುಪತ್ನೀಕ; +ಆಗಬೇಕವರಿಗೆ ಹಲವಾರು ಅನಧಿಕೃತ ನಿಕಾ! +– ೪ – +ನಮ್ಮಂತರಾಳಗಳ ಲೇ‌ಔಟುಗಳಲ್ಲು ಇವೆ +ಖಾಲಿ ಸೈಟುಗಳು; +ಅಲ್ಲಿ ಅಕ್ರಮವಾಗಿ ತಳವೂರಿವೆ; +ಅಟ್ಟಲಾಗದ ಕಠೋರ ನೆನಹುಗಳು +ಗಿಜಿಗುಡುವ ಬಡ ಕುಟೀರಗಳು, +ಹಳೆ ಹತಾಶೆಗಳ ಗಟಾರದಂಚಿನ ನಾರುವ ವಠಾರಗಳು; +ವಿಷಾದದ ಆಗುಹೋಗುಗಳು; +ಮಾ ನಿಷಾದದ ವ್ಯರ್ಥ ಕೂಗುಗಳು. +ಕೀಲಿಕರಣ: ಶ್ರೀನಿವಾಸ +ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! ಬಂದದ್ದು ಹಂಜಿಯ ಮಾಡಿ ರಾಟ […] +ಅಕ್ಷರಗಳ ಹೊತ್ತುಕೊಂಡು ಮಧ್ಯಾಹ್ನದ ರಣ ಬಿಸಿಲಿನಲ್ಲಿ ಅಲೆಯುತ್ತಿದ್ದೆ. ಕುದಿಯುವ ತಲೆ ಸೀಳಾಗಿ ಶಬ್ದಗುಚ್ಛಗಳೆಲ್ಲ ತೇಲತೊಡಗಿದವು ವರ್ತಮಾನದ ಒಳಗೆ ಇವುಗಳ ಪದರುಗಳ ಬಿಡಿಸಿ ಚರ್ಮ ಒ೦ದೊ೦ದಾಗಿ ಕಳಚಿ ತಂಪು ಕಾಯಲು ನಿಂತೆ ಮೋಸಂಬಿ ತೊಳೆ ತೊಳೆ […] +-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_451.txt b/Kannada Sahitya/article_451.txt new file mode 100644 index 0000000000000000000000000000000000000000..7fa95d622fff2e1b71079b528a53440bccbf694f --- /dev/null +++ b/Kannada Sahitya/article_451.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆ +ನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ +ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗು +ಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ +ನೀನು ಬಾಗಿಲು ಬಡಿದು ಕೂತರೂ ಸರಿ +ನಿನ್ನಾಣತಿಗೆ ಆತ ಶರಣು, ದೊರೆಗೆ ಅಪಾರ ಧಿಮಾಕು ದರ್ಪ +ಕರಕಾದ ಮೊಂಬತ್ತಿಯಾಗಿದೆ ಕಂಗಳ ಬೆಳಕು +ಕರಗಿ ಕೊರಗಿದ ಹೃದಯದಲ್ಲಡಗಿದೆ ದಿವ್ಯ ರಹಸ್ಯ +ಆತನ ಕೈಯ ವಿಷಜಲ ಮತ್ತು ಮಧುವಿನ ನಡುವೆ ವ್ಯತ್ಯಾಸ +ಮಾಡಿದೆನೆ ನಾನು? ಆ ಆತ್ಮದ ದಾರಿಯಲ್ಲಿ ಅದು ಅಪ್ರಾಮಾಣಿಕವಾಸ +ಅಲೆದಾಟವೀಗ ಬಿಟ್ಟೆ, ಸಖನೊಡನಿರಲು ಬಂದೆ +ನಾನೀಗ ಮರಣ ಮುಕ್ತ, ಸಾವಿಲ್ಲದ ಜೀವ ಒದಗಿ ಬಂತು +ಓ ಹೃದಯವೇ, ತೊರೆಯಲ್ಲೆ ಇದ್ದೂ ನೀರಿನ ಹಂಬಲವೇಕೆ? +ಹಬ್ಬಕ್ಕೆ ಬಾ ಎಂದು ಎಷ್ಟು ಕಾಲ ಹೇಳುತ್ತಿ? +ಬಾ, ಪ್ರಾರ್ಥನೆಯ ಹೊತ್ತಾಯಿತು +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […] +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_452.txt b/Kannada Sahitya/article_452.txt new file mode 100644 index 0000000000000000000000000000000000000000..0c526d5668045e79c158d0831c104439c4382805 --- /dev/null +++ b/Kannada Sahitya/article_452.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ನೀಲಾಂಬರಿ +ತಾಳ — ಅಟ್ಟ +ಇಷ್ಟು ದಿನ ಈ ವೈಕುಂಠ | +ಎಷ್ಟು ದೂರವೊ ಎನ್ನುತಲಿದ್ದೆ || +ದೃಷ್ಟಿಯಿಂದಲಿ ನಾನು ಕಂಡೆ | +ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| +ಎಂಟು – ಏಳನು ಕಳಿದುದರಿಂದೆ | +ಬಂಟರೈವರ ತುಳಿದುದರಿಂದೆ || +ತುಂಟಿಕನೊಬ್ಬನ ತರೆದುದರಿಂದೆ | +ಬಂಟನಾಗಿ ಬಂದೆನೊ ರಂಗಶಾಯಿ ||೧|| +ವನ – ಉಪವನಗಳಿಂದ | +ಘನ ಸರೋವರಗಳಿಂದ || +ಕನಕ ಗೋಪುರಗಳಿಂದ | +ಘನಶೋಭಿತನೆ ರಂಗಶಾಯಿ ||೨|| +ವಜ್ರ – ವೈಢೂರ್ಯದ ತೊಲೆಗಳ ಕಂಡೆ | +ಪ್ರಜ್ವಲಿಪ ಮಹಾದ್ವಾರವ ಕಂಡೆ || +ನಿರ್ಜರಾದಿ ಮುನಿಗಳ ಕಂಡೆ | +ದುರ್ಜನಾಂತಕನೆ ಶ್ರೀರಂಗಶಾಯಿ ||೩|| +ರಂಭೆ – ಊರ್ವಶಿಯರ ಮೇಳವ ಕಂಡೆ | +ತುಂಬುರುಮುನಿ ನಾರದರನು ಕಂಡೆ || +ಅಂಬುಜೋದ್ಭವ ರುದ್ರರ ಕಂಡೆ | +ಶಂಬರಾರಿ ಪಿತನೆ ರಂಗಶಾಯಿ ||೪|| +ನಾಗಶಯನನ ಮೂರುತಿ ಕಂಡೆ | +ಭೋಗಿಭೂಷಣ ಶಿವನನು ಕಂಡೆ || +ಭಾಗವತರ ಸಮ್ಮೇಳವ ಕಂಡೆ | +ಕಾಗಿನೆಲೆಯಾದಿಕೇಶವ ರಂಗಶಾಯಿ ||೫|| +***** +ರಾಗ — ಕಾಂಬೋದಿ ತಾಳ — ಝಂಪೆ ಬಾಯಿ ನಾರಿದ ಮೇಲೆ ಏಕಾಂತವೆ | ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | ಬಣ್ಣಗುಂದಿದ ಮೇಲೆ ಬಹುಮಾನವೆ || […] +ರಾಗ — ಮೋಹನತಾಳ — ಅಟ್ಟ ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ |ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| ವಿತ್ತವುಳ್ಲವನ ಕುಲ ಎಣಿಸುವುದುಂಟೆ |ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| ಅತ್ತೆಮನೆ ಸೇರುವಗೆ ಅಭಿಮಾನವುಂಟೆ |ಬತ್ತಲೆ […] +ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_453.txt b/Kannada Sahitya/article_453.txt new file mode 100644 index 0000000000000000000000000000000000000000..a61dc35363260393b4371452bc006db0680a8c90 --- /dev/null +++ b/Kannada Sahitya/article_453.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಹ್! ನಮ್ಮ ಬೆಂಗಳೂರು. +ಸಂಪ್ರದಾಯಸ್ಥ ಸುಂದರಿಗೆ +ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ +ಇಲ್ಲೊಂದು ಮಲ್ಲೇಶ್ವರವಿದೆ. +ವ್ಯಾಕ್ಸಿಂಗ್ ಮಾಡಿ ಮಾಡಿ +ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. +ಶಿವಾಜಿನಗರ, ಕಳಾಸಿಪಾಳ್ಯಗಳ ಮೈ +ಇನ್ನೂ ನೆರೆತಿಲ್ಲ. +ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ +ಹುಟ್ಟುವಾಗಲೇ ಹರಿದಿದೆ. +ಇಲ್ಲೊಮ್ಮೆ ಸುತ್ತಿದಾಗ: +ರಾತ್ರಿ ರೈನ್ ಡ್ಯಾನ್ಸಿನಲಿ +ಅವಸರಿಸುವ ನೆರೆಮನೆ ಗರತಿ, +ಎದುರೇ ಸಿಕ್ಕಾಗ +ಅಪರಿಚಿತಳಾಗುವ ಹಳೆಯ ಗೆಳತಿ, +ಮಾತಿಗೂ ಸಿಗದ ಮನೆಯೊಡತಿ, +ಹೈಸ್ಕೂಲಿಗೇ ಮುಗಿದ ವರ್ಜಿನ್ ಪ್ರೀತಿ. +ಮಂದಿರದೊಳಗೆ ಸ್ಲೀವ್‌ಲೆಸ್ ಪ್ರದಕ್ಷಿಣೆ, +ಕ್ಲೀವೇಜ್ ಹಣ್ಣು-ಕಾಯಿ, ಸ್ಟೇರಿಂಗ್ ಆರತಿ. +ಅಪರೂಪಕ್ಕೊಮ್ಮೆ ಅಳೆದು ತೂಗಿ +ಮೆಚ್ಚಿದ ಹುಡುಗಿ- +ಮುಂಜಾವಿನಲಿ ಸುಪ್ರಭಾತ +ಸಂಜೆ ಪುರುಷಸೂಕ್ತ. +ಬೆಂಗಳೂರೆಂದರೆ- +ನಮ್ಮ ನಂಬಿಕೆಗಳ ಪವರ್‌ಹೌಸಿನಲ್ಲೇ +ನಮ್ಮೊಳಗಿನ ಅಪನಂಬಿಕೆಯ ಸ್ವಿಚ್ಚುಗಳು. +ಉರಿದರೂ ಬೆಳಗದ +ತಂತುಗಳಿಲ್ಲದ ಬಲ್ಬುಗಳು. +***** +ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […] +ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […] +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_454.txt b/Kannada Sahitya/article_454.txt new file mode 100644 index 0000000000000000000000000000000000000000..66c294b5538d4831a49e88bc8e2b753505ae75a0 --- /dev/null +++ b/Kannada Sahitya/article_454.txt @@ -0,0 +1,53 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ನಿಮ್ಮೊಡನಿದ್ದೂ ನಿಮ್ಮಂತಾಗದೆ +ಜಗ್ಗಿದ ಕಡೆ ಬಾಗದೆ +ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ +ಪರಕೀಯನಾಗಿ +ತಲೆಯೆತ್ತುವುದಿದೆ ನೋಡಿ +ಅದು ಬಲು ಕಷ್ಟದ ಕೆಲಸ. +ವೃತ್ತದಲ್ಲಿ ಉನ್ಮತ್ತರಾದ +ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ +ಕುಣಿಕೆ ಎಸೆದಿದ್ದರೂ +ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ +ಸಂಯಮವನ್ನೇ ಪೋಷಿಸಿ ಸಾಕುತ್ತ +ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ +ಅದು ಬಲು ಕಷ್ಟದ ಕೆಲಸ. +– ೨ – +ಒಳಗೊಳಗೇ ಬೇರು ಕೊಯ್ದು +ಲೋಕದೆದುರಲ್ಲಿ ನೀರು ಹೊಯ್ದು +ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ +ಗೊತ್ತಿಲ್ಲದಂತೆ ನಟಿಸಿ +ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ +ಬಾಳ ತಳ್ಳುವುದಿದೆ ನೋಡಿ +ಅದು ಬಲು ಕಷ್ಟದ ಕೆಲಸ. +ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು +ಸಂಶಯದ ಪಂಜವೆತ್ತಿ +ನನ್ನ ನಂಬಿಕೆ ನೀಯತ್ತು ಹಕ್ಕು +ಕೊನೆಗೆ ಸಾಜಾತನವನ್ನು ಪರಚಿ, ಒತ್ತಿ- +ನೋವಿಗೆ ಕಣ್ಣು ತುಂಬಿದ್ದರೂ, +ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ +ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ +ಹುಸಿ ನಗುತ್ತ ಎದುರಿಸುವುದಿದೆಯಲ್ಲ +ಅದು ಬಲು ಕಷ್ಟದ ಕೆಲಸ. +***** +ಕೀಲಿಕರಣ: ಶ್ರೀನಿವಾಸ +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […] +ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? ಗೆರೆಯ ಬರುವುದರೊಳಗೆ, ನೀರು ಕರಗಿ ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, ನದಿಯಾಗಿ ಹರಿದು, ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ ಮತ್ತೆ ನೀರಾಗುವುದರೊಳಗೆ […] +“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_455.txt b/Kannada Sahitya/article_455.txt new file mode 100644 index 0000000000000000000000000000000000000000..f1702e233c5231d493f17ceeb1ae2d439e11ba26 --- /dev/null +++ b/Kannada Sahitya/article_455.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ರಂಗಭೂಮಿ ಸಿನಿಮಾರಂಗದ ಏಳುಬೀಳುಗಳನ್ನು ತುಂಬಾ ಚೆನ್ನಾಗಿ ಬಲ್ಲ ‘ಮಿಸ್ಟರ್‍ ಎಕ್ಸ್’ ಮೊನ್ನೆ ಅಪರೂಪಕ್ಕೆ ಸಿಕ್ಕ. ನಾನು ಆಕಾಶವಾಣಿಯಲ್ಲಿ ದುಡಿಯುತ್ತಿದ್ದಾಗ ಗಾಳಿಯ ಮೇಲೆ ತೇಲಿಬಿಟ್ಟ ಪಾತ್ರಗಳಲ್ಲಿ ‘ಈರಣ್ಣನಷ್ಟೇ’ ‘ಮಿಸ್ಟರ್‍ ಎಕ್ಸ್’ ಕೂಡಾ ಮುಖ್ಯ. ಅದರಿಂದ ಅವನನ್ನೇ ಮಾತಿಗೆಳೆದೆ. +‘ಏನನ್ನುತ್ತೆ ಆಕಾಶವಾಣಿ ಈಗ’ ಎಂದೆ. +ಟೀವಿ ಬಂದ ಮೇಲೆ ಆಕಾಶವಾಣಿ ಕೇಳುವವರು ಕಡಿಮೆ ಆಗಿದಾರೆ. ಆದರೆ ಎಐಆರ್‌ಗೂ ಒಂದು ಮಹತ್ವವಿದೆ ಎಂದು ತೋರಿಸಿಕೊಟ್ಟವನು ಕಾಡುಗಳ್ಳ ವೀರಪ್ಪನ್. ಡಾ.ರಾಜ್‌ಕುಮಾರ್‍ ಮನೆಯವರೆಲ್ಲ ಎಐಆರ್‍ ಮಹತ್ವ ಅರಿತುದು ಆಗಲೇ. ಅದಕ್ಕೇ ಇಡೀ ರಾಜ್ ಕುಟುಂಬ ಆಕಾಶವಾಣಿಗೆ ಕೃತಜ್ಞರಾಗಿದ್ದೇವೆ ಎಂದು ನೂರು ಬಾರಿ ಹೇಳಿ ಆಗಿದೆ. +ಡಾಟ್ ಕಾಂಗಳು ಬಂದ ಮೇಲೆ ಪತ್ರಿಕೆಯ ಮಹತ್ವ ಕಡಿಮೆ ಆಗಿದೆ ಎಂದು ಕೇಳಿದ್ದೇನಲ್ಲ. ಹಾಗೇನಿಲ್ಲ. ಎಷ್ಟೋಮಂದಿ ಕಂಪ್ಯೂಟರ್‌ಗಳನ್ನೇ ನೋಡಿಲ್ಲ ಇಂದೂ, ಈಗಲೂ ಶುಕ್ರವಾರದ ಸಿನಿಮಾ ಪುಟಗಳಿಗಾಗಿ ಪತ್ರಿಕೆಗಳು ಬಿಸಿ ದೋಸೆಯಂತೆ ಖರ್ಚಾಗುತ್ತಿವೆಯಲ್ಲ ಅಂದಮೇಲೆ ನಟ-ನಟಿಯರಿಗೆ ಫುಲ್ ಪಬ್ಲಿಸಿಟಿ ಎಂದ ಹಾಗಾಯಿತು. +ಛೆ-ಛೆ ಎಂಥ ಫಲಾತನ್ ನಟ ನಟಿಯಾಗಲಿ ರಂಗಭೂಮಿಯಲ್ಲಿ ಅವರೆಷ್ಟೇ ಮೇಜರ್‍ ನಾಟಕಗಳನ್ನು ಮಾಡಿರಲಿ ಅವರ ಬಗ್ಗೆ ಪತ್ರಿಕೆಗಳಲ್ಲಿ ನಾಲ್ಕು ಸಾಲು ಬರೆಯುವವರು ಅಪರೂಪ. ಹಾಗೇನಾದರೂ ಕೆಲವರದು ಬಂದರೆ ಪತ್ರಿಕಾವಲಯದ ಸ್ವಿಚ್‌ಬೋರ್ಡ್‌ಗಳನ್ನು ಆಪರೇಟ್ ಮಾಡುವುದು ಅವರಿಗೆ ಗೊತ್ತು – ‘ಲಾಬಿ’ ಮಾಡುವುದೇ ಅಂಥ ಹಲವರ ಹಾಬಿ. +ನಾಟಕ ರಂಗದ ನಟನಟಿಯರ ಬಗ್ಗೆ ಬರೆಯದೆ ಸಿನಿಮಾದ ನಾಲ್ಕು ಪುಟ ತುಂಬುತ್ತಾರೆ ಹೇಗೆ? +ಡಬ್ಬ ನಟ-ನಟಿಯರಾದರೂ ಚಿಂತೆಯಿಲ್ಲ. ಅವರೊಂದು ಡಬ್ಬಾ ಫಿಲಮ್‌ನಲ್ಲಿ ಮಾಡಿ ಪ್ರೆಸ್‌ಮೀಟ್ ಕರೆದರೆ ಪಾರ್ಟಿ ನೀಡಿ ಹರಟಿದರೆ ಮುಂದಿನ ಶುಕ್ರವಾರ ಕಲರ್‍ ಫೋಟೋ ಮತ್ತು ಸಂದರ್ಶನ ಗ್ಯಾರಂಟಿ ಎನ್ನುವುದನ್ನೀಗ ಕಾಣಬಹುದು. +ನಟಿ ಮುದ್ದಾಗಿದ್ದರೆ, ಹಾಯ್ ಎನ್ನುತ್ತ ನೆಗೆ ಮಲ್ಲಿಗೆ ಚೆಲ್ಲಿದರೆ, ವಸ್ತ್ರ ಧರಿಸುವುದೇ ನನಗೆ ಅಲರ್ಜಿ ಎಂಬ ಮಾತು ಸ್ಪಷ್ಟವಾಗಿ ಹೇಳಿದರೆ ಅಂಥ ನಟಿಗೆ ಸ್ಪೆಷಲ್ ಫೋಟೋ ಸೆಷನ್‌ಗಳಾಗುತ್ತದೆ. ಸೆನ್‌ಷೇಶನಲ್ ಎನ್ನಬಹುದಾದಂಥ ಪೋಟೋಗಳು ಮುಂದಿನ ಶುಕ್ರವಾರ ರಂಗುರಂಗಾಗಿ ರಾರಾಜಿಸುತ್ತವೆ. +ಅಭಿನಯವೇ ಗೊತ್ತಿಲ್ಲದ ಆಕೆ ಏನು ಭಾವನೆಗಳನ್ನು ವ್ಯಕ್ತಪಡಿಸಿಯಾಳು. ಕನ್ನಡವೇ ಗೊತ್ತಿಲ್ಲದ ಪರಭಾಷಾ ಗಿಣಿಯಾದರೆ ಆಕೆಯನ್ನು ನಿರ್ದೇಶಕ ಹೇಗೆ ದುಡಿಸಿಕೊಳ್ಳುವ? +ಸೃಜನಶೀಲ ನಿರ್ದೇಶಕನಾದರೆ ಸೆಟ್ ಮೇಲೆ ದುಡಿಸಿಕೊಳ್ಳುವ, ಖಯಾಲಿ ನಿರ್ದೇಶಕರಾದರೆ ದುಡುಸಿಕೊಳ್ಳುವ ಸ್ಥಳವೇ ಬೇರೆ. ಕನ್ನಡದ ಬಗ್ಗೆ ಉದ್ದುದ್ದ ಮಾತನಾಡುತ್ತ, ಕನ್ನಡವೇ ನನ್ನ ಜೀವನದ ಉಸಿರು ಎನ್ನುವ ಮಂದಿಯೂ ಪರಭಾಷಾ ನಟಿಯರಿಗೆ ಅಗ್ರಮನ್ನಣೆ ಸಲ್ಲಿಸುತ್ತಿರುವುದು ಸರಿಯೇ? ದೋಷವಿರುವುದು ಕನ್ನಡ ಚಿತ್ರ ರಸಿಕರಲ್ಲೇ. ಅವರೊಮ್ಮೆ ಪರಭಾಷಾ ನಟಿಯರು ಅಭಿನಯಿಸಿದ ಚಿತ್ರಗಳನ್ನು ನಾವು ನೊಡುವುದಿಲ್ಲ ಎಂಬ ಮನಸು ಮಾಡಿದರೆ ನಿರ್ಮಾಪಕ ನಿರ್ದೇಶಕರು ಕನ್ನಡ ನಟ-ನಟಿಯರನ್ನೇ ಹಾಕಿ ಚಿತ್ರ ಮಾಡುವ ದಿನ ಬರುತ್ತದೆ. ಅಂಥ ಚಿತ್ರಗಳನ್ನು ‘ಕ್ಯೂ’ ನಿಂತು ನೋಡುವ ಮನಸು ಮಾಡಬೇಕಷ್ಟೆ ಕನ್ನಡಿಗರು. +ರಮೇಶ್, ಶಿವರಾಜ್‌ಕುಮಾರ್‍, ರವಿಚಂದ್ರನ್, ಅವರ ಚಿತ್ರಗಳು ವಾರಕ್ಕೊಂದು ಬಂದರೆ ಅವರಿಗೆ ಅವರೇ ಕಾಂಪಿಟೇಷನ್ ಮಾಡಿಕೊಂಡಂತಾಗುವುದಿಲ್ಲವೆ? +‘ಅದೃಷ್ಟ ಬಂದಾಗ ಬಾಚಿಕೋ’ ಎನ್ನುತ್ತಾರಲ್ಲ ಹಾಗೆ, ಕಾಲ್‌ಷೀಟ್ ಕೇಳಿದವರಿಗೆಲ್ಲ- ಕಥೆ ಕೇಳದೆ-ಪಾತ್ರಗಳಲ್ಲಿ ಚೂಸಿ ಆಗಿರದೆ ‘ಕೋ’ ಅನ್ನುತ್ತ ಹೋದರೆ ಈ ಸಮಸ್ಯೆ ಅನಿವಾರ್ಯವಾಗಿ ಎದುರಾಗುತ್ತದೆ. ಇದಕ್ಕೆ ಮದ್ದನ್ನ ಅವರವರೇ ಕಂಡುಹಿಡಿದುಕೊಳ್ಳಬೇಕು. +ಒಳ್ಳೆ ಥಿಯೇಟರ್‌ಗಳು ಬಲಾಢ್ಯರಿಗೆ ಮಾತ್ರ ಸಿಗುತ್ತೆ. ಸಿಕ್ಕಿದ ಥಿಯೇಟರ್‌ನಲ್ಲಿ ಚಿತ್ರ ಚೆನ್ನಾಗಿ ಓಡುತ್ತಿದ್ದರೂ ಅದನ್ನು ಕೀಳಿಸಿ ತಮ್ಮ ಚಿತ್ರ ಹಾಕುವ ಮಹಾಮಹಿಮರು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ. ಇದೊಂದು ವಿಷವ್ಯೂಹ. ಕತ್ತಿ, ಚಾಕು, ಚೂರಿಗಳೇ ಚಿತ್ರರಂಗವನ್ನು ಆಳುವ ದಿನ ಬಂದು ಹೋಗಿದೆ. ಹಣವೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ ಒಬ್ಬರನ್ನೊಬ್ಬರು ತುಳಿದು ಮುಂದೆ ಬರುವುದೇ ಇಂದಿನ ನೀತಿ ಆಗಿದೆ. +ಅದರಲ್ಲೇನೂ ಅನುಮಾನವಿಲ್ಲ. ಹಣ ಅಷ್ಟೇ ಮುಖ್ಯ ಈಗ. ಸಿನಿಮಾ ಎಂದರೆ ಸಿಡಿಸಿಡಿ ಎನ್ನುತ್ತಿದ್ದ ರಂಗನಟ-ನಿರ್ದೇಶಕರು ಈಗ ಸಿನಿಮಾದಲ್ಲಿ ಮುಳುಗಿಲ್ಲವೆ? ಹೌದು, ಕುಣಿತಗಳಿಂದ ನಾಟಕ ಕುಲಗೆಟ್ಟು ಹೋಯಿತು ಎಂದು ಬಿ.ವಿ.ಕಾರಂತರನ್ನು ಜರಿದವರು – ಸಿನಿಮಾರಂಗಕ್ಕೆ ಬಂದಾಗ ಕಾಂಪ್ರೋಮೈಸ್ ಆಗಿ ಹಾಡುಗಳನ್ನು ಹಾಕಿಲ್ಲವೆ? ಮುಂಚೆ ವಿಚಾರ ಸಂಕಿರಣಗಳಲ್ಲಿ ಎಸ್.ಎಲ್. ಭೈರಪ್ಪನವರನ್ನು ಗೇಲಿ ಮಾಡಿದವರು ಕಾದಂಬರಿ ರೈಟ್ಸ್ ಚಿತ್ರಕ್ಕೆಂದು ಪಡೆದುಕೊಳ್ಳುವಾಗ ನೀವೇ ‘ಇಂದ್ರ ಚಂದ್ರ’ ಎಂದು ಅವರನ್ನು ಹಾಡಿ ಹೊಗಳಿಲ್ಲವೆ? +ಹಾಗಾದರಿದು ಒಂದು ರೀತಿಯ ದ್ವಂದ್ವದ ಜಗತ್ತು ಎನ್ನಿ. +ಇಲ್ಲಿ ನಾವು ಕಾಣುವುದು ಕೇಳುವುದು ತುಟಿಯಂಚಿನ ಮಾತುಗಳೇ ಹೊರತು, ಹೃದಯದ ಅಂತರಾಳದಿಂದ ಬರುವಂಥ ಮಾತುಗಳಲ್ಲ. ಇಲ್ಲಿ ಗೆದ್ದ ಕುದುರೆಗೆ ಮನ್ನಣೆಯೇ ಹೊರತು ಸೋತ ಕುದುರೆಗಳಿಗಲ್ಲ. +ಚಿತ್ರರಂಗದಲ್ಲೀಗ ರೀಮೇಕ್ ಹಾವಳಿ ಅತಿಯಾಗಿದೆಯಲ್ಲ. ಬಹಳಷ್ಟು ಪತ್ರಕರ್ತರೂ ಈಗ ಸಿನಿಮಾ-ಟೀವಿಗಳಿಗೆ ನುಗ್ಗಿದ್ದಾರೆ. ‘ಎಷ್ಟಾದರೂ ಖರ್ಚಾಗಲಿ ಒಳ್ಳೆ ಕತೆ ಇದ್ದರೆ ಕೊಡಿ’ ಎಂದು ಕುಮಾರಸ್ವಾಮಿಯವರು ಹೇಳಿದರಂತೆ. ರಾಷ್ಟ್ರಗೀತೆ ಮಾಡಿದ ಕೆ.ಮಂಜು ಸಹಾ ಹೇಳುತ್ತಲೆ ಇರುತ್ತಾರೆ. ಇಂಥ ವೇಳೆ ನಾಗೇಶ್‌ಕುಮಾರ್‍, ಯೋಗೀಶ್ವರ್‍ ಅಂಥವರೂ ದನಿಗೂಡಿಸುತ್ತಾರೆ. ‘ಕೊಡಬಹುದಲ್ಲವೆ ಒಳ್ಳೆ ಕಥೆಗಳನ್ನು’ ಪತ್ರಕರ್ತರು ಎಂದಾಗ ‘ಹೌದಲ್ಲ’ ಎಂದುಕೊಂಡೆ, ೨೦೦೧ರಲ್ಲಿ ಪತ್ರಕರ್ತರ ಚಿತ್ರಗಳೂ ಕಥೆಯಾದಾವು. ಆ ಹೊತ್ತಿಗೆ ವಿಮರ್ಶೆ ಬರೆಯಲು ಮತ್ತೊಬ್ಬ ಯುವ ಪತ್ರಕರ್ತ ಹುಟ್ಟಿರುತ್ತಾರೆ. +– ಜೈ ಕನ್ನಡಾಂಬೆ +***** +(೯-೨-೨೦೦೦) +ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಶನಿವಾರ ಬೆಳಗ್ಗೆ ಅಪರಾಧೀ ಪ್ರಜ್ಞೆಯಿಂದ ಟೆಲಿಫೋನ್ ಡಯಲ್ ತಿರುಗಿಸಿದೆ. ‘ಹಲೋ ಶೇಖರ್, ಇವತ್ತು ನನಗೆ ಸಮಯವಿಲ್ಲ, ಮೀಟಿಂಗ್-ಗೆ ಬರೋಕ್ಕೆ ಆಗೊಲ್ಲ’ ಎಂದೆ. ‘ಪರವಾಗಿಲ್ಲ ಶಿವು, ಆದರೆ ಇಂದು ಮಧ್ಯಾಹ್ನ ಬಾದಾಮಿ ಹೌಸ್-ನಲ್ಲಿ ‘ದ್ವೀಪ‘ ಚಿತ್ರದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_456.txt b/Kannada Sahitya/article_456.txt new file mode 100644 index 0000000000000000000000000000000000000000..e4e71bcb087b868a3ffb5829867f108e8c5e2d49 --- /dev/null +++ b/Kannada Sahitya/article_456.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ ಪ್ರೇಕ್ಷಕರ ಕಣ್ಣಂಚಿನಲ್ಲಿಯೂ ಕಂಬನಿ ಮೂಡುವಂತೆ ಮಾಡಿದ್ದಾರೆ. +ಗ್ರಾಮೀಣ ಜೀವನದ ಸೊಗಡನ್ನು, ಅಲ್ಲಿನ ಕಿತಾಪತಿಗಳ ಕುರುಕ್ಷೇತ್ರವನ್ನು ಅವರು ಚೆನ್ನಾಗಿ ಬಲ್ಲರು. ಬ್ರಹ್ಮಚಾರಿಯಾಗಿದ್ದ ಮಹೇಂದರ್‍ ಬದುಕಿನಲ್ಲಿ ಪ್ರೀತಿಯ ತಂಗಾಳಿ ತೇಲಿಬರಲು ಕಾರಣಳು ಬೆಡಗಿನ ತಾರೆ – ಶೃತಿ. ಅದು ಬಗೆಬಗೆಯ ಸುದ್ದಿಯಾಗಿ ಗಾಸಿಪ್ ಆಗಿ ವಿವಿಧ ರೂಪ ತಾಳಿ ಸ್ವರ, ಅಪಸ್ವರಗಳು ರಾಗರಾಗವಾಗಿ ತೇಲಿ ಕಡೆಗೂ ಶೃತಿ ಸೇರಿದಾಗ ವಿವಾಹದ ಸಂಭ್ರಮ. +ಮಹೇಂದರ್‍ ಕಲಾಶಿಕ್ಷಣವನ್ನು ಅಕಾಡೆಮಿಕ್ ಆಗಿ ಕಲಿತವರಲ್ಲ. ಭಾವನೆಗಳು ಸುಳಿದಾಗ ಅವರು ಹಿಡಿದ ಕುಂಚ ಬಣ್ಣದೊಡನೆ ಕಣ್ಣಾಮುಚ್ಚಾಲೆಯಾಡಿ ಕಾಗದದ ಮೇಲೆ, ಕ್ಯಾನ್‌ವಾಸಿನ ಮೇಲೆ ರಂಗಿನೋಕುಳಿ ಚೆಲ್ಲಿ ವೈವಿಧ್ಯಮಯ ಚಿತ್ರಗಳನ್ನು ರಚಿಸಿ ಕಲಾವಿದ (ಪೈಯಿಂಟರ್‍) ಎಂದೇ ಹೆಸರಾದರು. +ಆ ರಂಗದಲ್ಲೇ ಖ್ಯಾತರಾಗುವ ಕನಸು ಅವರದಾಗಿತ್ತು. ವಿದೇಶಕ್ಕೆ ಅವರನ್ನು ಆಹ್ವಾನಿಸಿದ ವ್ಯಕ್ತಿ ತೀರಿಕೊಂಡಾಗ ಅವರ ಕನಸುಗಳು ನುಚ್ಚುನೂರಾಗಿ ತಾವು ಬರೆದ ಎಲ್ಲ ಚಿತ್ರಗಳನ್ನು ಖುದ್ದಾಗಿ ಅಗ್ನಿಗೆ ಆಹುತಿ ಮಾಡಿದರು. ಕಲಾವಿದನ ನೋವು ಆ ಘಳಿಗೆಯಲ್ಲಿ ಹೇಗಿರಬಹುದು ಎಂಬುದನ್ನು ಬಲ್ಲವರು ಮಾತ್ರ ಬಲ್ಲವರು. +ಇವರ ಈ ಕತೇ ಕೇಳಿದಾಗ ಕರ್ನಾಟಕದ ಹೆಮ್ಮೆಯ ಕಲಾವಿದರಾದ ಪಿ.ಸುಬ್ಬರಾಯರು ನೆನಪಾಗುತ್ತಿದ್ದಾರೆ. ‘ಪಿ. ಸುಬ್ಬರಾವ್ ಕರ್ನಾಟಕದ ಆಧುನಿಕ ಚಿತ್ರಕಾರರಾಗಿ ಹೆಸರಾಗುವುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದವರು ಅ.ನ.ಕೃ. ಅವರ ಮೆಚ್ಚಿಗೆಯ ನುಡಿಯಿಂದ ಉಬ್ಬಿಹೋಗಿದ್ದರು ಪಿ.ಸುಬ್ಬರಾವ್. +ಪೂನಾದಲ್ಲಿ ಗೊಂದಲೇಕರ್‍ ಅವರ ಶಿಷ್ಯರಾಗಿ, ಕಲಾವಿದರಾಗಿ ರೂಪುಗೊಂಡ ಪಿ.ಎಸ್.ರಾವ್, ಕಲಾಮಂದಿರದ ಕಲಾ ಶಾಲಾ ನಿರ್ವಹಿಸುವ ಹೊಣೆ ಹೊತ್ತರು ಹಲವು ವರ್ಷ. ಆಗ ಡಾ. ರಾಜೀವ್ ತಾರಾನಾಥ್, ನವರತ್ನರಾಮ್, ನಾನು ಅವರ ಕೈಕೆಳಗೆ ಚಿತ್ರಕಲೆ ಅಭ್ಯಸಿಸಿದೆವು. +ಕ್ಯಾನ್‌ವಾಸ್ ಕಾಸ್ಟ್ಲಿ ಎಂಬ ಕಾರಣಕ್ಕೆ ಅವರು ತಮ್ಮ ಬಹುಪಾಲು ಚಿತ್ರಗಳನ್ನು ಪ್ಲೈವುಡ್ ಮೇಲೆ ರಚಿಸಿದರು. ಒಂದಕ್ಕಿಂತ ಒಂದು ಅದ್ಭುತ ಎನ್ನುವಂಥ ಕಲ್ಪನಾ ಚಿತ್ರಗಳವು. ಅವನ್ನು ‘ಅಬ್‌ಸ್ಟ್ರಾಕ್ಟ್’ ಕೃತಿಗಳು ಎನ್ನುವುದಕ್ಕಿಂತ ತುಂಬ ‘ಸಾಂಕೇತಿಕ ಚಿತ್ರಗಳು’ ಎಂದರೂ ತಪ್ಪಾಗಲಿಕ್ಕಿಲ್ಲ. +ಇಲ್ಲಿಂದ ಧಾರವಾಡಕ್ಕೆ ತೆರಳಿದ ನಂತರ ಒಮ್ಮೆ ಬಂದು “ಮೂರ್ತಿ, ನಾನು ರಷ್ಯಾಗೆ ಹೋಗುವ ಕಲಾವಿದರ ಪಟ್ಟಿಯಲ್ಲಿದ್ದೇನೆ” ಎಂದು ಸಂಭ್ರಮಿಸಿದ್ದರು. +ಅವರು ಆಯ್ಕೆ ಆಗಿದ್ದು ನಿಜ. ಆದರೆ ಈ ವಿಚಿತ್ರ ಜಗತ್ತಿನಲ್ಲಿ ಲಾಬಿ ಮಾಡುವವರು ಅತಿ. ಅಂಥ ಪರಿಣಾಮದಿಂದಾಗಿ ಅವರು ಹೋಗಲಾಗಲಿಲ್ಲ. ಮತ್ತೊಮ್ಮೆ ಸಿಕ್ಕಿದಾಗ ಕೇಳಿದೆ. ‘ನಾನು ಹೋಗ್ತಿಲ್ಲ ನನ್ನ ಪೆಯಿಂಟಿಂಗ್ ಹೋಗ್ತಿದೆ’ ಎಂದು ನೊಂದು ನುಡಿದರು. +ಆಸೆ-ನಿರಾಸೆಯಾದಾಗ ಯಾರೇನು ಮಾಡಿಕೊಳ್ಳುತ್ತಾರೆ ಎಂದು ಹೇಳುವುದೂ ಕಷ್ಟ. ಪಿ.ಎಸ್. ರಾವ್ ದೆಹಲಿಗೆ ತೆರಳಿದರು. ವರ್ಷ ಕಳೆದಿರಬಹುದು. ಒಂದು ಬೆಳಿಗ್ಗೆ ಪತ್ರಿಕೆಯೊಂದರಲ್ಲಿ ಸಣ್ಣ ಸುದ್ದಿ ಬಂದಿತ್ತು. +‘ದೆಹಲಿಯಲ್ಲಿ ಕಲಾವಿದ ಪಿ.ಎಸ್.ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು. ಕರ್ನಾಟಕದ ಆಧುನಿಕ ಚಿತ್ರಕಲಾ ಪಂಥಕ್ಕೆ ನಾಂದಿ ಹಾಡಿದ ವ್ಯಕ್ತಿಗೆ ದೊಡ್ಡ ಪ್ರಮಾಣದಲ್ಲಿ ಒಂದು ಶ್ರದ್ಧಾಂಜಲಿಯೂ ನಡೆಯಲಿಲ್ಲ. ಇದು ಕನ್ನಡ ಜನ ಸರಕಾರ ಕನ್ನಡ ಕಲಾವಿದರ ಬಗ್ಗೆ ತೋರುವ ಪ್ರೀತಿ. +ಮಹೇಂದರ್‍ ತಮ್ಮ ಪೆಯಿಂಟಿಂಗ್‌ಗಳನ್ನು ಸುಟ್ಟರು ಎಂಬ ಸುದ್ದಿ ಓದಿದಾಗಲೂ ಪಿ.ಎಸ್.ರಾವ್ ಘಟನೆ ನೆನಪಾಗಿತ್ತು. ಅನಂತರ ಮಹೇಂದರ್‍ ಚಿತ್ರರಂಗಕ್ಕೆ ನುಗ್ಗಿದರು. ನಿರ್ದೇಶಕರಾಗಿ ಹೆಸರಾದರು. ಒಂದಾದ ಮೇಲೊಂದು ಚಿತ್ರ ತೆಗೆದು ಜನಪ್ರಿಯರೂ ಆದರು. ಅನಂತರ ಎಲ್ಲ ಹೀರೋ ಆಗುತ್ತಿರುವುದನ್ನು ನೋಡಿ ತಾವೂ ಏಕೆ ಹೀರೋ ಆಗಬಾರದೆಂದು ಕನಸಿದರು. ಜನಪ್ರಿಯ ತಾರೆ ಶೃತಿ ತಮ್ಮ ಮಡದಿಯೇ ಆಗಿರುವಾಗ ಅವಳೊಂದಿಗೆ ನಾಯಕನಾಗಬಯಸಿ, ಗಟ್ಟಿಮೇಳ ತೆರೆಗಿತ್ತರು. ಅವರೆಷ್ಟೇ ಸಮರ್ಥ ನಿರ್ದೇಶಕರಿರಬಹುದು. ಮೊದಲ ಬಾರಿ ಹೀರೋ ಆಗಿ ಮಿಂಚ ಹೊರಟಾಗ ನಾನಾ ಮುಜುಗರಗಳು ಅವರನ್ನು ಕಾಡಿದೆ. +ನಿರ್ದೇಶಕನಾಗಿ ಇರುವ ‘ಕಾನ್‌ಫಿಡೆನ್ಸ್’ ನಟರಾಗಿ ಇರುವುದು ಸಾಧ್ಯವಿಲ್ಲ. ಆದರಿಂದಾಗಿಯೇ ಬಹಳೆಡೆ ಮುಖಭಾವ ಬ್ಲಾಂಕ್ ಎನಿಸುತ್ತದೆ – ಭಾವದ ಅಭಾವದಿಂದ ಫೇಸ್ ‘ವುಡನ್’ ಎನ್ನಿಸುತ್ತಿದೆ. ಆದರೆ ಚಕಮಕಿಯ ಮಾತಿನಿಂದ ಮಹೇಂದರ್‍ ಗೆದ್ದಿದ್ದಾರೆ. ಹೀರೋ ಇಮೇಜ್ ಉಳಿಸಿಕೊಳ್ಳಲು ಡಾನ್ಸಿಂಗ್, ಫೈಟಿಂಗ್ ಎಲ್ಲಾ ತುರುಕುವ ಸಾಹಸ ಮಾಡಿ ಸುಸ್ತಾಗಿದ್ದಾರೆ. +ಇಷ್ಟಂತೂ ನಿಜ. ಮನೆಮಂದಿ ಎಲ್ಲ ಕೂತು ನೋಡಬಹುದಾದ ಸದಭಿರುಚಿ ಚಿತ್ರ ನೀಡಲು ಶ್ರಮಿಸಿದ್ದಾರೆ. ಇಂಥ ವ್ಯಕ್ತಿ ವಸ್ತು ವೈವಿಧ್ಯಕ್ಕೆ ತಡಕಬೇಕಿಲ್ಲ. ಅವರೊಬ್ಬ ಚಿತ್ರ ಕಲಾವಿದರೂ ಆಗಿರುವುದರಿಂದ ‘ವಿನ್ಸಂಟ್ ವ್ಯಾನ್‌ಗೋ’ ಅಂಥ ಕಲಾವಿದರ ಬದುಕು ಆಧರಿಸಿದ ‘ಲಸ್ಟ್ ಫಾರ್‍ ಲೈಫ್’ ನಂಥ ಚಿತ್ರ ತೆಗೆವ ಮನಸೇಕೆ ಮಾಡಬಾರದು ಎಂಬ ಮಾತನ್ನು ಅವರಿಗೂ ಹೇಳಿ ಆಗಿದೆ. +ಮಹೇಂದರ್‍ ತಾವು ಬರೆದ ಪೈಂಟಿಂಗ್‌ಗಳನ್ನು ಸುಟ್ಟರೂ, ಶೃತಿಯೊಂದಿಗೆ ಪ್ರೀತಿ ಅರಳಿದಾಗ ಮತ್ತೆ ಬ್ರಷ್ ಹಿಡಿದು ಅವಳ ರೂಪು ಚಿತ್ರ (ಪೊಟ್ರೇಟ್) ಬರೆದೆ ಎಂದರು ಈ ಪ್ರಸ್ತಾಪ ಮಾಡಿದಾಗ. +ಮಹೇಂದರ್‍ ಚಿತ್ರಕಲಾವಿದರೂ ಆದುದರಿಂದ, ಕಲಾವಿದರ ಬದುಕಿನ ಬಗೆಗೂ ಚಿತ್ರ ತೆಗೆವ ಮನಸ್ಸು ಮಾಡಿ ಎಂದು ವಿನಂತಿಸಬಹುದಷ್ಟೆ. +ಹಾಗೆ ಆರ್ಡರ್‍ ಮಾಡಲು ನಾವ್ಯಾರು? ಅಪ್ರತಿಮ ಕಲಾವಿದೆ ಶೃತಿ. ಬಾಳಸಂಗಾತಿ ಮಾತ್ರವಲ್ಲ. ನಿರ್ಮಾಪಕಿಯೂ ಆಗಿರುವುದರಿಂದ ‘ಶೃತಿ’ ಕೂಡ ಈ ದಿಕ್ಕಿನಲ್ಲಿ ಚಿಂತಿಸಬಹುದು. ಏನಂತೀರಿ ಶೃತಿ? +***** +(೧೬-೦೩-೨೦೦೧) +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಶನಿವಾರ ಬೆಳಗ್ಗೆ ಅಪರಾಧೀ ಪ್ರಜ್ಞೆಯಿಂದ ಟೆಲಿಫೋನ್ ಡಯಲ್ ತಿರುಗಿಸಿದೆ. ‘ಹಲೋ ಶೇಖರ್, ಇವತ್ತು ನನಗೆ ಸಮಯವಿಲ್ಲ, ಮೀಟಿಂಗ್-ಗೆ ಬರೋಕ್ಕೆ ಆಗೊಲ್ಲ’ ಎಂದೆ. ‘ಪರವಾಗಿಲ್ಲ ಶಿವು, ಆದರೆ ಇಂದು ಮಧ್ಯಾಹ್ನ ಬಾದಾಮಿ ಹೌಸ್-ನಲ್ಲಿ ‘ದ್ವೀಪ‘ ಚಿತ್ರದ […] +ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_457.txt b/Kannada Sahitya/article_457.txt new file mode 100644 index 0000000000000000000000000000000000000000..9504789b042797415c686edc1985cfe2eaa6530b --- /dev/null +++ b/Kannada Sahitya/article_457.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” +ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ಇದುವರೆಗೂ ಬೇರೆ ಯಾರ ಜೊತೆಯೂ ಮಲಗಿಲ್ಲವ?” +ನಿಶ್ಚಲತೆಯಿಂದ ಉತ್ತರಿಸಿದಳು ಅವಳು. “ಇಲ್ಲ.” +“ಬೇರೆ ಯಾರನ್ನೂ ಪ್ರೀತಿಸಿಲ್ಲವ?” +“ಇಲ್ಲ.” +ಒಂದು ಸಣ್ಣ ಉಸಿರು ಆತನ ಮುಖದಿಂದ ತಿಳಿಯುವಂತೆಯೇ ಹೊರಬಿತ್ತು. “ಇರಲಿ. ಹೊತ್ತಾಯಿತು. ನಾನು ಹೊರಟೆ.” -ಎಂದ. +“ಹೂಂ….ಹೋಗು. ಅಲ್ಲಿಗೇ….” +ಆತನಿಗೆ ಸಿಟ್ಟು ಬರುವುದಿಲ್ಲ. ಸುಮ್ಮನೆ ನಗುವ. ಮಗುವಿನಂತೆ ನಿಲ್ಲುವ. “ನೀನೊಬ್ಬಳೇ ನನಗೆ ಏಳೇಳು ಜನ್ಮಕ್ಕೂ ಅಂತೆಲ್ಲ ನಾಟಕದ ಮಾತು ಹೇಳಬೇಕೆ? ಬೇಕೆಂದರೆ ಹೇಳುವೆ.” +“……….” +ಕೇಳಿದ “ನಾನಿನ್ನು ಹೊರಡಲೆ?” +“ಬೇಡ. ಹನ್ನೆರಡೂವರೆಗೆ ಒಂದು ನಿಮಿಷವಿದೆ. ಅಷ್ಟು ಕಳೆಯಲಿ.” +ಎದ್ದು ನಿಂತ ಅವನನ್ನು ಒತ್ತಿ ಕುಳ್ಳಿರಿಸಿದಳು ಅವಳು. ಒಂದೇ ನಿಮಿಷ…. +ಹನ್ನೆರಡೂವರೆಯಾಗಿಯಾಯಿತು. ಆತ ಹೊರಟು ಹೋದ. +ಆತ ತನ್ನ ಮಟ್ಟಿಗೆ ಪ್ರಪಂಚವೇ ಆಗಿರುವನಲ್ಲವೆ ಬಾಗಿಲು ಹಾಕಿದಳು ಆಕೆ. ಫ್ಯಾನಿನಡಿ ಕೈಕಾಲುಗಳನ್ನು ಸಡಿಲಾಗಿ ಚೆಲ್ಲಿ ಕಣ್ಣುಮುಚ್ಚಿ ಮಲಗಿದಳು……ನಿಧಾನವಾಗಿ ಉಸಿರಾಡು. ಇನ್ನೂ ನಿಧಾನ. ತಲೆಯಲ್ಲಿ ಬೇರೆ ಯಾವ ವಿಚಾರ ಬೇಡ. ಆಳವಾಗಿ ಒಂದು ನಿದ್ದೆ ಬರಲಿ…..ತನ್ನೊಳಗೇ ಹೇಳಿಕೊಂಡಳು. +ಆದರೂ ಆತ ಆ ಪ್ರಶ್ನೆ ಕೇಳಿದನಲ್ಲ! ಎಲವೋ, ಗಂಡಸರು ಮಲಗುವಷ್ಟು ಸುಲಭವಾಗಿ ಹೆಂಗಸರು ಮಲಗುವುದಿಲ್ಲ ತಿಳಕೊ. ಅವರ ಆಯ್ಕೆ ಸೂಕ್ಷ್ಮದ್ದು. ಜಾಗರೂಕತೆಯದು. ಎಷ್ಟೆಂದರೆ ಆಯ್ಕೆ ಮುಗಿಯುವಾಗ ಅವರ ಆಯುಷ್ಯವೇ ಅರ್ಧ ಮುಗಿಯುತ್ತದೆ. ಅದಕ್ಕೇ ಬಹುಶಃ ಅವರಿಗೆ ಆಯ್ಕೆಯ ಅವಕಾಶವನ್ನೇ ಕತ್ತರಿಸಿ ಹಾಕಿರುವುದು. +ಉಸಿರಾಟ ಆಳವಾದಂತೆ ಧ್ಯಾನವೂ ಆಳ ಅಳಕ್ಕೆ ಇಳಿಯುತ್ತಿತ್ತು. ಎಲ್ಲೋ ಆಳತಳಕ್ಕೆ ಹೋಗಿ ಸ್ಮೃತಿ ಕಚ್ಚಿ ಎತ್ತಿ ಮೇಲ್ತಂದಂತೆ, ಹಿಡಿತ ತಪ್ಪಿ ಮತ್ತದು ಕೆಳಗೆ ಬಿದ್ದಂತೆ. ಮತ್ತೆ ಮತ್ತೆ ಹೆಕ್ಕಿಕೊಂಡಂತೆ. ಏನದು? ಯಾರ ನೆನಪು? +-ಅವು ಪ್ರಾಥಮಿಕದ ದಿನಗಳು. ಶಾಂತಪ್ಪ ಮಾಸ್ಟರಲ್ಲವ ಅವರು. ಆಗ ತಾನಿನ್ನೂ ನಾಲ್ಕನೆಯ ತರಗತಿ. ಶಾಂತಪ್ಪ ಮಾಸ್ಟರು ಕ್ಲಾಸ್ ಟೀಚರಾಗಿ ಬಂದಿದ್ದರು. ನೋಡಲು ಹುರುಪಾಗಿದ್ದರು. ಎತ್ತರ . ನಕ್ಕರೆ ಗಲ್ಲಗಳಲ್ಲಿ ಗೆರೆ. +ಪಕ್ಕದಲ್ಲಿ ಕುಳಿತಿದ್ದ ಅರುಂಧತಿ “ಈ ಮಾಸ್ಟರು ಚೆಂದ ಇದ್ದಾರೆ ಅಲ್ಲವ?” ಎಂದು ಕಿವಿಯಲ್ಲಿ ಪಿಸುಗುಟ್ಟಿದಾಗ “ಥೂ ಹಾಗೆಲ್ಲ ಹೇಳಬಾರದು. ಅಸಹ್ಯ.”-ಎಂದಿದ್ದೆ ತಾನು. ಮನೆಗೆ ಹೋದ ಮೇಲೆ ಅರುಂಧತಿ ಹೀಗೆ ಹೇಳಿದಳು ಎಂದು, ತಾನಾದರೆ ದೊಡ್ಡ ಸುಭಗಿತ್ತಿ ಹಾಗೆಲ್ಲ ಹೇಳುವವಳಲ್ಲ ಎಂಬಂತೆ ಅಮ್ಮನೊಡನೆ ಹೇಳುತ್ತ ಆ ಮಾಸ್ಟರ ವಿಷಯವನ್ನು ಮತ್ತೆ ಎತ್ತಿದರೆ +“ಕಲಿಯುವ ಮಕ್ಕಳಿಗೆ ಏನದು ಅಧಿಕ? ಮಾಸ್ಟರು ಹೇಗಿದ್ದರೇನು?”-ಅಮ್ಮ ತಾನು ಹೇಳುವುದನ್ನು ಪೂರ್ತಿ ಯಾಕೆ ಕೇಳಬಾರದು? ತಾನು ಅಂಥವಳಲ್ಲ ಅಂತ ಅಮ್ಮನಿಗೇಕೆ ತಿಳಿಯುವುದಿಲ್ಲ? +ಆದರೂ …..ಬೆನ್ನ ಹಿಂದೆ ಕೈಕಟ್ಟಿಕೊಂಡು ಪಾಠ ಹೇಳುತ್ತ ತಿರುಗುತ್ತಿದ್ದ ಅವರು ಒಮ್ಮೆ ತನ್ನ ಸಮೀಪಕ್ಕೆ ಬಂದಾಗ ಅವರ ಶರ್ಟಿನ ತುದಿಯನ್ನು ತಾನು ಮುಟ್ಟಿದ್ದು ಅಮ್ಮನಿಗೆ ಹೇಳಲೇ ಇಲ್ಲ ತಾನು. +ಅದು ಅಷ್ಟೇ. ಅಲ್ಲಿಗೆ ಮುಗಿಯಿತು. +ಅವರಿಗೂ ಲೆಕ್ಕದ ಟೀಚರಿಗೂ ದೋಸ್ತಿ ಬಿದ್ದಿದೆ ಎಂದಳು ಗಿರಿಜ ಎಂಬವಳು. ಹೇಗೆ ಗೊತ್ತಾಯಿತು ನಿನಗೆ ಎಂದರೆ ಗೊತ್ತಾಯಿತು ಹೇಗೋ ಎಂದಳು. ಕಣ್ಣಲ್ಲಿ ಕಂಡಂತೆ ಏನೇನೋ ವಿವರಿಸಿದಳು. “ಟೀಚರು ಮಾತಾಡುವಾಗ ಮಾಸ್ಟರು ಅವರನ್ನೇ ನೋಡುತ್ತಿರುತ್ತಾರೆ. ಇನ್ನೊಮ್ಮೆ ಸರೀ ನೋಡು.” ಎಂದಳು. ಅಷ್ಟರವರೆಗೆ ಮಾಸ್ಟರು ಕೊಟ್ಟ ಹೋಮ್‌ವರ್ಕನ್ನು ಜತನದಿಂದ ಮಾಡುತ್ತಿದ್ದ ತಾನು ಆಮೇಲಿಂದ ಒಟ್ಟಾರೆಯಾಗಿ ಮಾಡಿದೆನಲ್ಲವೆ? ಅರುಂಧತಿ ಮತ್ತು ಗಿರಿಜ ಕೂಡ ಬಹುಶಃ +ಒಂದು ರಾತ್ರಿ ಊಟದ ಸಮಯ. “ಅಮ್ಮ, ಆ ಶಾಂತಪ್ಪ ಮಾಸ್ಟರು ಲೆಕ್ಕದ ಟೀಚರೊಡನೆ…..” ಎಂದು ಹೇಳಲು ಹೊರಟದ್ದೇ “ಮಾಸ್ಟರುಗಳಿಗೆ ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು ಯಾಕೆ ಇಂಥದ್ದೆಲ್ಲ, ಬೇಕಾಗಿದೆಯ?” ಎಂದೆಲ್ಲ ಹೇಳುತ್ತ ಮುಂದೆ ತಾನು ಉದ್ದ ಎಳೆಯಬೇಕೆಂದಿದ್ದ ಮಾತುಗಳನ್ನೆಲ್ಲ ಗುಡಿಸಿಹಾಕಿಬಿಟ್ಟಳು. ತನಗೆ ಊಟ ಸೇರಲಿಲ್ಲ. “ಉಣ್ಣು. ರಾತ್ರಿ ಅಡಿಕೆಯಷ್ಟು ಉಂಡರೂ ಆನೆಯಷ್ಟು ಬಲ”-ಕಣ್ಣು ಕೆಂಚರಿಸಿದಳು ಅಮ್ಮ. +* +* +* +ಎಲ್ಲಿಯ ಶಾಂತಪ್ಪ ಮಾಸ್ಟರೋ ಯಾವ ಲೆಕ್ಕದ ಟೀಚರೋ. ಈಗ ಆ ಮಾಸ್ಟರು ಎಲ್ಲಿದ್ದಾರೆ? ಆ ಟೀಚರಂತೂ ಮದುವೆಯಾಗಲೇ ಇಲ್ಲವಂತೆ. ಟೀಚರ್, ದೊಡ್ಡ ತಪ್ಪು ಮಾಡಿದಿರಿ ಆತ ಯೌವನವನ್ನು ಪ್ರೀತಿ ಮಾಡುವವ. ಜೀವನವನ್ನಲ್ಲ. ನೀವು ಬಿಳಿಗೂದಲಿನವರಾದರೆ ಅವನಿಗೆ ಬೇಡ. ಇದೆಲ್ಲ ನಿಮಗೆ ಯಾಕೆ ತಿಳಿಯದೆ ಹೋಯಿತು ಟೀಚರ್? +ಸ್ವತಃ ಟೀಚರೇ ಎದುರು ನಿಂತು ನಗುತ್ತಿದ್ದರು. ಪ್ರಶ್ನೆಯನ್ನು ಅವಳಿಗೇ ತಿರುಗಿಸಿಟ್ಟಂತೆ. ಎಲ್ಲ ಪುರುಷರೂ ಹಾಗೇ ಎಂಬಂತೆ. +ಕಿರುಚಿದಳು ಆಕೆ. “ಟೀಚರ್, ಆತನೇನು ಶಾಂತಪ್ಪ ಮಾಷ್ಟರ ಹಾಗಲ್ಲ ತಿಳೀತಾ?” ನಸುನಗುತ್ತ ಟೀಚರು ಮರೆಯಾದರು. ಆಕೆ ಮೆಲುವಾಗಿ ಉಸಿರಾಡಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕೆಂದಷ್ಟೂ ಅದು ವೇಗದಿಂದ ಏರಿಳಿಯತೊಡಗಿತು. ಶಾಂತಪ್ಪ ಮಾಸ್ಟರ ಕಣ್ಣುಗಳನ್ನು ನೆನಪಿಸಿಕೊಳ್ಳ ಹೋದಳು. ಅವು ಟೊಳ್ಳು ಬಿದ್ದಿದ್ದವು! +…..ಕಣ್ಣೆದುರು ಆತ ನಿಂತಿದ್ದ. ಅದೇ ಸಂಯಮದ ನಗೆ. +ನಂಬುತ್ತೀಯಾ ಇದನ್ನ? ಇನ್ನೂ ಏಳೆಂಟು ವರ್ಷದ ಹುಡುಗಿಯ ಪ್ರೀತಿ ಕಥೆಯನ್ನ? ಆತ ಎಲ್ಲ ಬಲ್ಲಂತೆ ದೊಡ್ಡದಾಗಿ ನಕ್ಕ. ಆಕೆ ಆ ನಗೆಯನ್ನೇ ದಿಟ್ಟಿಸಿದಳು. ಆತನ ನಗೆಯ ಗೆರೆ ಶಾಂತಪ್ಪ ಮಾಸ್ಟರ ನಗೆಯ ಗೆರೆಯನ್ನೇ ಹೋಲುತ್ತಿದೆಯೇ…..! ಮೆಲ್ಲ ಆ ಗೆರೆಯ ಮೇಲೆ ಕೈಯಾಡಿದಿದಳು. ಬಾಲ್ಯದ ಮೃದು ಭಾವನೆಯನ್ನು ಪ್ರೀತಿಯಿಂದ ಸವರಿದಂತೆ. +ಆತ ಮಾಯವಾದ. +* +* +* +ನಾಟಕದ ಹಾಡುಗಳಿಗೆ ಹಾರ್‍ಮೋನಿಯಂ ನುಡಿಸಲು ಬರುತ್ತಿದ್ದ ರಘುಪತಿ! ನೀನು ಇನ್ನೂ ಇಲ್ಲಿದ್ದೀಯ? ಇಲ್ಲವೇ ಇಲ್ಲ ಎಂದು ತಿಳಿದಿದ್ದೆ. ಹಾರ್‍ಮೋನಿಯಂ ನುಡಿಸುವ ಆ ದೃಢವಾದ ಬೆರಳುಗಳನ್ನೇ ನಾವು ನೋಡುತ್ತಾ ಇರುತ್ತಿದ್ದೆವಲ್ಲ! ಕೆಂಪು ಗುಲಾಬಿ ಮಿಶ್ರ ಉಗುರುಗಳು. ಬೆರಳುಗಂಟಿನ ಮೇಲೆಯೂ ರೋಮ. ಅವು ಹಾರ್‍ಮೋನಿಯಂನ ಮನೆಯ ಮೇಲೆ ಕುಣಿಯುತ್ತ ಅತ್ತ ಇತ್ತ ಸಾಗುವಾಗ ಸಮ್ಮೋಹಗೊಂಡವರಂತೆ ನೋಡುತ್ತಿದ್ದೆವಲ್ಲ ಎಲ್ಲ ಹುಡುಗಿಯರೂ. ಮನೆ ಪಕ್ಕದ ಕಸ್ತೂರಿಯೂ. ಇಲ್ಲವಾದರೆ ಅವನ ಕುರಿತು ಮಾತಾಡುವಾಗೆಲ್ಲ ಕಸ್ತೂರಿಯ ಮುಖ ಯಾಕೆ ಹೊಳೆಯುತ್ತಿತ್ತು? ಆತ ಕಾಟುಜಾತಿಯವ ಎಂದು ತಿಳಿದ ದಿನ ಅವಳ ದನಿಯೇಕೆ ಬೇಸರ ಕಾಸಿದಂತಿತ್ತು? +“ನಿಂಗೇನು ಅವರು ಯಾವ ಜಾತಿಯಾದರೆ?”-ಸುಭಗಿತ್ತಿ ತಾನು ಕೇಳಿದ್ದೆ. ಕಸ್ತೂರಿ ಮಾತಾಡಲಿಲ್ಲ. ಬಹಳ ಹೊತ್ತಿನವರೆಗೂ ಯೋಚನೆಯಲ್ಲಿದ್ದಂತೆ ಕಂಡಳು. ಅವಳ ದುಃಖ ಕಂಡು ತನಗೆ ಖುಶಿಯಾಗಿತ್ತು. ಜೊತೆಗೇ ಅವ ಕಾಟುಜಾತಿಯಂತ ಒಳಗೊಳಗೇ ಖುಶಿ ನಂದಿಹೋಗುತ್ತಿತ್ತು ಕೂಡ. ಆದರೂ ಬಾಯಿಪಾಠ ಹೇಳುವಂತೆ ಹೇಳಿದ್ದೆ. “ಜಾತಿಗೀತಿ ಎಂಥದನಾ? ಅದೆಲ್ಲ ಸುಮ್ಮನೆ”-ಎಂದು. +ಮನೆ ಮುಟ್ಟುವುದರೊಳಗೆ ಅವಳೊಡನೆ ಬೇಕೆಂದೇ ಜಗಳಾಡಿದ್ದೆ. ಸಣ್ಣ ವಿಷಯಕ್ಕೆ. ಆತ ಚಾಕ್‌ಪೀಸ್ ಹಿಡಿಯುವುದು ಸಿಗರೇಟು ಹಿಡಿದ ಹಾಗೇ ಎಂದು ಆಕೆ ಹೇಳಿದ್ದಕ್ಕೆ. ಸ್ವಲ್ಪ ಸಮಯದ ನಂತರ ಮತ್ತೊಂದು ಸುದ್ದಿ ತಂದವಳೂ ಅವಳೇ. “ಏಯ್, ರಘುಪತಿಗೆ ಮದುವೆಯಂತೆ. ಸಾವಿರಗಟ್ಟಲೆ ವರದಕ್ಷಿಣೆಯಂತೆ.” ಆಕೆ ಹೇಳಿದ್ದು ‘ನಿನಗೆ ಹಾಗೇ ಆಗಬೇಕು’ ಎಂಬ ಧಾಟಿಯಲ್ಲಿ! ಯಾವುದೂ ಸ್ಪಷ್ಟವಿಲ್ಲದ ಸ್ಪಷ್ಟ ನುಡಿಯದ ಸ್ಪಷ್ಟಗೊಳ್ಳಲು ಹೆದರುವ ದಿನಗಳವು. ಎಲ್ಲ ಮುಸುಕಿನೊಳಗಿನ ಗುಮಾನಿ. +ತಾನು ಮುಟ್ಟಿನವಳು ಬೇರೆ. ಕೆಳಹೊಟ್ಟೆ ಅಸಾಧ್ಯ ನೋಯುತ್ತಿತ್ತು. ಕಾಲು ಜಗಿಯುತ್ತಿತ್ತು. ಮನೆ ಮುಟ್ಟಿದವಳೇ ವಾಂತಿ ಮಾಡಿದೆ. ತಿಂಡಿ ಬೇಡ ಕಾಫಿ ಬೇಡ ಎಂದು ಮುಟ್ಟಿನ ಮೂಲೆಯಲ್ಲಿ ಕವುಚಿ ಮಲಗಿಬಿಟ್ಟೆ. ಒಳಗಿಂದ ಕೇಳಿಸುತ್ತಿತ್ತು. “ಎಸ್ಸೆಸ್ಸೆಲ್ಸಿ ಆಗಿಬಿಟ್ಟರೆ ಸಾಕು. ಮುಂದೆ ಕಳಿಸುವುದು ಬೇಡ. ಮುಟ್ಟಿನ ಹೊತ್ತಿನಲ್ಲೆಲ್ಲಾ ಶಾಲೆಗೆ ಹೋಗುವುದು, ಉಳಿದವರನ್ನು ಮುಟ್ಟುವುದು, ಹಾರುವುದು ಕುಣಿಯುವುದು, ಯಾಕಾಗುತ್ತದೆ? ಮುಂದೆ ಹೆತ್ತುಹಿಡಿಯ ಬೇಕಾದವರು.” +“ಅಷ್ಟೇ ಸೈಯಾ? ಯಾರನ್ನಾದರೂ ಕಟ್ಟಿಕೊಂಡು ಹಾರಿದರೆ!….ಜಾತಿಗೀತಿ ನೋಡಿಕೊಂಡು ಹಾರಿದರಾದರೂ ಅದೊಂದು ಲೆಕ್ಕ”-ದೊಡ್ಡ ನಗೆಯಲ್ಲಿ ಮಾತು ಉರುಳಿಸಿಬಿಡುವ ಗುಂಡಕ್ಕ. ಅವರಿಗೆ ಇದೆಲ್ಲ ಹೇಗೆ ತಿಳಿಯುತ್ತದೆ? +ತಾನು ಬಿಕ್ಕುತ್ತಿದ್ದೆ. ಗುಂಡಕ್ಕನಿಗೆ ಕಾಣಿಸುತ್ತಿರಲಿಲ್ಲ. +ಮರೆಯಾಗಿದ್ದ ರಘುಪತಿ ಯಾಕಿಲ್ಲಿ ಮತ್ತೆ ಪ್ರತ್ಯಕ್ಷನಾದ? ನನಗಂತೂ ಬೇಡ. +……ಮುಂದೆ? ಕೇಳಿದನಾತ ಬಾನ್ಸುರಿಯಂತೆ. ಅರೆ, ರಘುಪತಿಯ ನಗೆಯ ಬಿಳಲು ಇಲ್ಲಿ, ನಿನ್ನ ಕಣ್ಣಲ್ಲಿ! ಹೋಗು ಹೋಗು, ನಾ ಮುಂದೆ ಹೇಳುವುದಿಲ್ಲ. ಅದೂ ನಿನ್ನ ಹತ್ತಿರ. +* +* +* +ಹೊರಳಿದಳಾಕೆ. ಏನು ಮಾಡಿದರೂ ನಿದ್ದೆ ಬರಲೊಲ್ಲದು. ಸುತ್ತ ನಿಶ್ಯಬ್ದ. ನಿಶ್ಯಬ್ದತೆ ಸೀಳಿಕೊಂಡು ನಂಬರು ಕರೆದಂತೆ. +ಹಂಡ್ರೆಡ್ ಆಂಡ್ ಏಟ್? +ಎಸ್ ಸರ್. +ಈ ಸರ್‌ಗೆ ಎಷ್ಟು ಬೇಗ ‘ನೋ’ ಅನ್ನಬೇಕಾಯ್ತು. ಆತನ ನಿಲುವು ನಡಿಗೆಯನ್ನು ತಾನು ಕಣ್ಣಿಂದ ಹಿಂಬಾಲಿಸುತ್ತಿರುವಾಗಲೇ ಫಕ್ಕನೆ ಆತ ತೀರ ಕೊಳಕಾಗಿ ಕಂಡಿದ್ದ. ಸಧ್ಯ ತಾನು ಬಾಯಿಬಿಡದ್ದು ಎಷ್ಟು ಒಳ್ಳೆಯದಾಯಿತು! ಮತ್ತೆ, ಪ್ರೀತಿಸುತ್ತೇನೆಂದು ಜಗವೆಲ್ಲ ಹೇಳಿಕೊಂಡು ಬಂದ ಮತ್ತೊಬ್ಬ ಸರ್. ಬಲು ತಮಾಶೆಯಾಗಿದ್ದ. ಆಚೀಚೆ ಹೋಗುವಾಗ ಸಣ್ಣಗೆ ಸಿಳ್ಳಿನಲ್ಲಿ ಹಾಡು ನುಡಿಸುತ್ತಿದ್ದ. ತನಗೆ ತಡೆಯಲಾರದ ನಗು ಬರುತ್ತಿತ್ತು. ಮತ್ತು ತಾನು ಅವನಿಗೂ ‘ನೋ’ವಾಗಬೇಕಾಯಿತು. ಅವರ ಮುಖಗಳನ್ನೆಲ್ಲ ಈಗ ಎಣಿಸಹೋದರೆ ಒಂದೂ ಮೂಡುತ್ತಿಲ್ಲ! +ಕೇಳಿಲ್ಲಿ, ಎಲ್ಲಿಯೂ ಬೀಳದೆ ಜೋತಾಡದೆ ಸೋಲದೆ ತೆರೆದುಕೊಳ್ಳುತ್ತ ಮುಚ್ಚಿಕೊಳ್ಳುತ್ತ ಮತ್ತೆ ತೆರೆದುಕೊಳ್ಳುತ್ತ ಬದುಕಿಗೆ ಮಿಡಿಯುತ್ತಲೇ ಇದ್ದೆ. ಇನ್ನೂ ಹೇಳಬೇಕೇನು ನಿನಗೆ? ಕೇಳುವಂಥವನಾಗಿ ಧೀರ. +* +* +* +ಅಂದೊಮ್ಮೆ ನೈಟ್ ಬಸ್ಸಿನಲ್ಲಿ ಕುಳಿತಿದ್ದೆ. ತನ್ನ ಬಳಿಯೇ ಓರ್ವ ಬಂದು ಕುಳಿತ. ಎಲ್ಲಿಯವನೋ ಯಾರೋ. ಬಸ್ಸು ವಾಲುವಾಗ ತೋಳಿಗೆ ತೋಳು ತಾಕುತ್ತಿತ್ತು. ಮೊದಮೊದಲು ಮುದುರುತ್ತಿದ್ದ ಆತ ಆ ಮೇಲೆ ಮಾತಿಗೆ ತೊಡಗಿದ್ದ. ಸ್ವರದಲ್ಲಿ ಹೊಳಪಿತ್ತು. ಏನು ಮಾತಾಡಿದ ಅಂದರೆ ತನ್ನ ಕೆಲಸ ಊರು….ಹೀಗೇ. ಯಾಕೆ ಹೇಳಿದನೋ. ಮನುಷ್ಯ ತನ್ನನ್ನು ತಾನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಇರಬಹುದು. ಕಣ್ಣು ಕೂರುತ್ತಿತ್ತು. ಒಮ್ಮೊಮ್ಮೆ ಅವನ ತಲೆ ನನ್ನ ಹೆಗಲಿಗೆ ಬಂದು ತೂಗುತ್ತಿತ್ತು. (ಉದ್ದ ಪಯಣ. ನಾನೂ ಏನೂ ಮಾಡುವಂತಿರಲಿಲ್ಲ ಅಂತೆಲ್ಲ ಹೇಳಬೇಕೇ?) ಕತ್ತಲಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಆದರೆ ಲೈಟು ಹತ್ತಿದಾಗಲೂ ನಾನು ಕಿಟಿಕಿಯ ಹೊರಗೆ ನೋಡುತ್ತಿದ್ದೆ! ನನಗವನನ್ನು ನೋಡಬೇಕೆಂದು ಅನಿಸಲೇ ಇಲ್ಲ. ಬೆಳಕಲ್ಲಿ ಅವನ ಮಾತು ಕೇಳಬೇಕಂತಲೂ ಅನಿಸುತ್ತಿರಲಿಲ್ಲ. ಮಬ್ಬುಗತ್ತಲೆಯಲ್ಲಿ, ಬೆಕ್ಕಿನನಿದ್ದೆಯಂತಹ ಸಣ್ಣ ಸಣ್ಣ ನಿದ್ದೆಗಳೆಡೆಯಲ್ಲಿ ಆತ ಮಾತಾಡುತ್ತಲೇ ಇಲ್ಲ. ಏನಂತ? ನೆನಪಿಲ್ಲ. ನಾನೇನೂ ನಿದ್ದೆ ಹೋಗಿರಲಿಲ್ಲ. ಆದರೆ ಅವನ ಮಾತಿನ ಸಾರ ನನಗೆ ಬೇಕಂತಲೂ ಇರಲಿಲ್ಲ. ಮರೆತುಹೋಗದಿರುವುದು ಬಸ್ಸಿನ ಕುಲುಕಾಟ ಮಾತ್ರ. +ಬೆಳಗಿನ ನಸುಕು. ಅವನ ಊರು ಬಂತು ಬಂತೆನುವಾಗ ತನ್ನ ಸೂಟ್‌ಕೇಸ್ ಇತ್ಯಾದಿ ಜೋಡಿಸಿಕೊಳ್ಳತೊಡಗಿದ. ಅಷ್ಟೂ ಹೊತ್ತೂ ಜೊತೆಗೇ ಕುಳಿತು ಚಂದ ದನಿಯಲ್ಲಿ ಮಾತಾಡುತ್ತಲೇ ಬಂದ ಆತ ಊರು ಬರುತ್ತಲೂ ಅಪರಿಚಿತರಂತೆ ತಟಪಟ ಇಳಿದು ಹೋಗಿಬಿಟ್ಟ. ಎಲ್ಲಿಗೋ ಏನೋ? ಮನುಷ್ಯ ಮನುಷ್ಯನಾಗಿ ಇರುವುದು ಇಂತಹ ಕೆಲ ಕ್ಷಣಗಳಲ್ಲಿ ಮಾತ್ರವಿರಬಹುದೆ? ಸಭ್ಯತೆಯ ಎಲ್ಲೆ ಮೀರದೆಯೂ ನೆನಪು ಉಳಿಸಿ ಹೋದ. ಹೋಗುವಾಗ ನನಗೂ ದುಃಖವಾಗಲಿಲ್ಲ. …..ಇನ್ನೂ ಇದ್ದಾನೆ ಒಳಗೆ ಅಂದರೆ! ಕೇವಲ ಧ್ವನಿಯಾಗಿ. +ಹೇಳು. ಇದಕ್ಕೆಲ್ಲ ಪ್ರೀತಿಯ ಹೆಸರು ಕೊಡುತ್ತೀಯ? ಮಲಗುವುದೆಂದರೆ ಇದೇ ಮತ್ತೆ ಎನ್ನುತ್ತೀಯ? ಆದರೆ ನಾನು ಹಾಗೆಣಿಸುವುದಿಲ್ಲ. ಬಹುಶಃ ಪ್ರೀತಿಸುವ ಗುಣದ ಮನ ಆ ಸ್ವಭಾವ ಒಣಗಿ ಹೋಗದಂತೆ ಮೃದುತ್ವದ ಸಿಂಚನ ಮಾಡುತ್ತ ತನ್ನನ್ನು ತಾನೇ ಕಾಪಾಡಿಕೊಂಡು ಬರುವ ಬಗೆಯಾಗಿರಬಹುದು ಅದು. ಇದೆಲ್ಲ ನಡೆದದ್ದು ಮುಂದೊಂದು ದಿನದ ಒಂದು ಘನಕ್ಕಾಗಿ. ಒಂದು ನಿಜಕ್ಕಾಗಿ. ಒಂದು ನಿಜವಾದ ಮಲಗುವಿಕೆಗಾಗಿ. ಅರ್ಥವಾಗುತ್ತಿದೆಯೇ ನಿನಗೆ? ಅರ್ಥ ಮಾಡಿಸಬೇಕಿಲ್ಲ, ಅದೂ ನಿನಗೆ! +ಇಷ್ಟಕ್ಕೂ ಅರ್ಥ ಮಾಡಿಸುವ ಕೆಲಸ ಬಲು ಕಷ್ಟದ್ದು. ಉದಾಹರಣೆಗೆ ಆ ಶತದಡ್ಡ ಹುಡುಗ, ಅಡ್ಡಡ್ಡ ಬೆಳೆದುಕೊಂಡವ, ಬಂದ ಎಂದರೆ ಎಲ್ಲಿಲ್ಲದ ಗೆಲುವು ಯಾಕೆ ತುಂಬುತ್ತಿತ್ತೆಂದು ಹೇಳಲು ಹೇಗೆ ಸಾಧ್ಯ? ಅವನಿರುವಷ್ಟು ಹೊತ್ತು ಮಾತಿಗೆ ಮುಂಚೆ ನಗೆ. ನಗೆಗಾಗಿಯೇ ಅರಳುವಂತಹ ನಗೆ. ಈಗಲೂ ಅವನನ್ನು ನೆನೆಸಿಕೊಂಡರೆ ಒಂದು ಹಾಸು ನಗೆ ಬರುತ್ತದೆ ತನಗೆ. +ಈ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಕೇವಲ ಆಶ್ಚರ್ಯವೇ? ಚೇಷ್ಟೆಯ ನಗು. ತೆಳು ಅಲೆಯ ಮೃದು ವೇದನೆ. ಎಲ್ಲೋ ಸಂಧಿಸಿದ ಕಣ್ಣುಗಳು ಯಾವ ಸೇತುಬಂಧವಿಲ್ಲದೆಯೂ ಹರಿದುಬರುವ ಮಂದಸ್ಮಿತಗಳು ಶಬ್ದವಿಲ್ಲದ ಮಾತುಗಳು ಕೇಳದ ರಾಗಗಳು…… +* +* +* +“ಹೂಂ, ಹಾಗೆ ಬಾ ಮತ್ತೆ.” +“ಅರೇ, ನೀನಿನ್ನೂ ಹೋಗಿಲ್ಲವೆ? ಹನ್ನೆರಡೂವರೆಯಾದೊಡನೆ ಹೋಗುವೆನೆಂದು ಹೊರಟವನು? ಹೋಗು ಹೋಗು. ನನ್ನ ಬಳಿ ಮಾತಿಲ್ಲದೆ ಕುಳಿತುಕೊಳ್ಳುವವನು ಅದು ಹೇಗೆ ಇನ್ನೊಬ್ಬಳು ಎದುರು ಬಂದರೆ ವಾಚಾಳಿಯಾಗುತ್ತಿ? ನೀನೆಂದರೆ ಅಸಹ್ಯವಾಗುವಂತೆ ವರ್ತಿಸುತ್ತಿ? ನೀನೇ ಅಲ್ಲ ಅಂತನಿಸುವಶ್ಟು ಕೆಟ್ಟದಾಗಿ ನಗುತ್ತೀ ಚಲಿಸುತ್ತೀ……” +ಆಕೆ ಅವನನ್ನೇ ದಿಟ್ಟಿಸಿದಳು. +ಆ ಮುಖದಲ್ಲಿ ಗೆರೆಯಿತ್ತು. ತುಟಿಯಲ್ಲಿ ಸಿಳ್ಳಿತ್ತು. ಬೆರಳ ತುದಿಯಲ್ಲಿ ಗುಲಾಬಿಗೆಂಪಿತ್ತು. ಕಣ್ಣಲ್ಲಿ ನಗೆಯಿತ್ತು. +ಸೊಂಟಕ್ಕೆ ಕೈಕೊಟ್ಟು ನಗುತ್ತ ನಿಂತಿದ್ದನಾತ. +ಬಾ. ದೇವರಗೂಡಲ್ಲಿ ಕೈಗೆ ಕಡಗೋಲು ಕೊಟ್ಟು ಕೂರಿಸುತ್ತೇನೆ…… +* +* +* +ಆಕೆ ತಲೆಯನ್ನೊಮ್ಮೆ ಜೋರಾಗಿ ಅಲುಗಿಸಿ ಮಲಗಿದಳು. ಈಗ ಶವಾಸನ. ಕಾಲನ್ನು ಅಗಲಿಸಿ ಎದೆಯ ಮೇಲೆ ಬಲಗೈಯಿಟ್ಟು ಎಡಗೈಯನ್ನು ನಾಭಿಯ ಮೇಲಿಟ್ಟು ಉಸಿರಿನ ಏರಿಳಿತವನ್ನೇ ಗಮನಿಸು-ಎಂದು ತನಗೇ ಹೇಳಿಕೊಳ್ಳುತ್ತ. ನಿಧಾನವಾಗಿ ಆಳವಾಗಿ ಉಸಿರಾಡುತ್ತ. +ಫ್ಯಾನು ತಿರುಗುತ್ತಲೇ ಇತ್ತು. ತನ್ನ ಸುತ್ತ ತಾನೇ. ಸ್ವಂತ ಗತಿಯ ಮೇಲೆ ತನಗೇ ನಿಯಂತ್ರಣವಿಲ್ಲದ ವಸ್ತು. +***** +ಕೀಲಿಕರಣ: ಸೀತಾಶೇಖರ +ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು […] +(ಚಿತ್ತಾಲರ ೫೦ನೇ ಕಥೆ) ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ […] +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_458.txt b/Kannada Sahitya/article_458.txt new file mode 100644 index 0000000000000000000000000000000000000000..c4439fbe7b1b00631764128bbbb3b4ac6c972f14 --- /dev/null +++ b/Kannada Sahitya/article_458.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೀಗೆ, +ಆಳೆಯ ಮೇಲೆ +ಹಾಡು +ಹಚ್ಚೆ ಹೊಯ್ದ ಚಿತ್ತಾರದ ಹಾಗೆ +ಹಾಡು +ಹಾಳೆಯಿಂದೆದ್ದು ಶಬ್ದ, +ಅದರ ಹಿಂದೊಂದು ಶಬ್ದ; +ಶಬ್ದ +ಶಬ್ದಗಳ +ಸರಣಿ +ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! +ಈಗ +ಹಾಳೆಯ ಮೇಲೆ +ಹಾಡು – ಶಬ್ದ +ಹಾಡು – ನಿಃಶಬ್ದ +***** +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […] +ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್‍ಣತೆಯ ಬಿಂಬಿಪಂತೆ, ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_459.txt b/Kannada Sahitya/article_459.txt new file mode 100644 index 0000000000000000000000000000000000000000..84fe3a86aa4f2fa79080a7319c546bd80f69a3bf --- /dev/null +++ b/Kannada Sahitya/article_459.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, +ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. +ಅದರಿಂದಾಗಿ ನಾನು ನಡೆಸುತ್ತಿದ್ದ ಪತ್ರಿಕೆಗೆ ತಾತ್ಕಾಲಿಕ ವಿರಾಮ ನೀಡಿ ನನ್ನ ದೇಹದಲ್ಲಿ ಒಂದು ತೊಟ್ಟು ರಕ್ತ ಇರುವವರೆಗೆ ನಿಮ್ಮ ಏಳಿಗೆಗಾಗಿ ದುಡಿಯುವ ಮನಸ್ಸು ಮಾಡಿದ್ದೇನೆ. +ಸಿನಿ ಪತ್ರಕರ್ತನಾಗಿ ಅಲ್ಲಿ ಮಹತ್ತರವಾದುದನ್ನು ಸಾಧಿಸಬೇಕು ಎಂದು ಆಸೆಪಟ್ಟೆ. ಅದಕ್ಕಾಗೇ ಮೀಸಲಾಗಿದ್ದ ಸಂಘಗಳಿಂದ ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್ ಹಾಗೂ ವೇದಿಕೆ ಸಂಸ್ಥೆಗಳು ಏನಾದರೂ ಮಾಡಿ ಯಾವೆಂದು ಶಬರಿಯಂತೆ ಕಾದೆ. ಆದರೆ ಆ ಎರಡು ಸಂಸ್ಥೆಗಳನ್ನು ತಮ್ಮ ತಮ್ಮ ಜೇಬಿನಲ್ಲಿಟ್ಟುಕೊಂಡಿರುವ ಮಂದಿ ಸಂಸ್ಥೆಯ ಲೆಟರ್‌ಹೆಡ್ ಲಾಭ ಪಡೆಯುತ್ತ ಹೋದರೆ ಹೊರತು ಯುವ ಪೀಳಿಗೆಯ ಪತ್ರಕರ್ತರನ್ನು ಕ್ಯಾರೇ ಎನ್ನಲಿಲ್ಲ. ಸಮಿತಿ, ಕಮಿಟಿ ಮುಂತಾದವುಗಳಿಗೆ ಹಾರಲು ಸಂಸ್ಥೆ ಹೆಸರು ಉಪಯೋಗವಾಯಿತು. ಅವರಿಗೆ ‘ಜೈ’ ಎಂದವರೆಲ್ಲ ‘ಕುರಿಗಳು ಸಾರ್‍ ಕುರಿಗಳು’ ಎನ್ನುವ ಸ್ಥಿತಿ ಬಂತು. +ಆಗಲೆ ನಾನು ನಿರ್ಧರಿಸಿದ್ದು-ಪೇಪರ್‍ ಮಾಡುವುದಕ್ಕಿಂತ ಸಿನಿಮಾ ಟೀವಿ ಸೀರಿಯಲ್ ಮಾಡುವುದು ವಾಸಿ ಎಂದು. ಪೇಪರ್‍ ಮಾಡಹೊರಟವನು ಫ್ಲಾಪ್ ಆಗಬಹುದು-ಆದರೆ ಸಿನಿಮಾ ಮಾಡಹೋದವನು ‘ಚೀಟರ್‍’ ಎನ್ನಿಸಿಕೊಳ್ಳಬಹುದೆ ಹೊರತು ‘ಪಾಪರ್‍’ ಆಗುವುದು ಸಾಧ್ಯವಿಲ್ಲ ಎನಿಸಿತು. ಅದರಿಂದ ಈಗ ಸಿನಿರಂಗಕ್ಕೆ ಕಾಲಿಟ್ಟಿರುವೆ. +ನಾನೂ ಸುನೀಲ್‌ಕುಮಾರ್‍ ದೇಸಾಯಿಯವರಂತೆ ಹೊಸ ಮುಖಗಳನ್ನು ಹಾಕಿಕೊಂಡೇ ಚಿತ್ರ ಮಾಡುವೆ. “ಸುದೀಪ್ ಸಂಜೀವ್”ಗೆ ಅವರ ತಂದೆ ಸರೋವರ್‍ ಸಂಜೀವ್ ಗಾಡ್‌ಫಾದರಾಗಿದ್ದಾರೆ. ನಿಮ್ಮಂತಹವರಿಗೆ ಅಂಥ ಗಾಡ್‌ಫಾದರ್‌ಗಳಿಲ್ಲ ಎಂದು ನಾನು ಬಲ್ಲೆ. +ಅದರಿಂದ ಹತ್ತು-ಇಪ್ಪತ್ತು ಸಾವಿರ ಹಾಕಬಲ್ಲ ನಟ-ನಟಿಯರು ಇಂದೇ ಬನ್ನಿ. ನನ್ನ ಚಿತ್ರ ರಿಲೀಸ್ ಆದರೆ ನಾಳೆ ನೀವು ಗ್ಲಾಮರಸ್ ಸ್ಟಾರ್‍ಸ್ ಆಗಬಹುದು. +ಆಗ ಗಾಂಧೀನಗರದವರು ನಿಮ್ಮನ್ನು ಬುಕ್ ಮಾಡಲು ನಾ ಮುಂದು-ತಾ ಮುಂದು ಎಂದು ಬರುತ್ತಾರೆ. ಮೊದಲು ಹೀರೋ ಪಾತ್ರಕ್ಕೆ ೧೫ ಸಾವಿರ ೨೦ ಸಾವಿರ ಕೊಡಬಹುದು. ಒಂದು ಚಿತ್ರ ಕ್ಲಿಕ್ ಆದರೆ ಲಕ್ಷ-ಲಕ್ಷ ಕೊಡುವವರು ಹುಡುಕಿ ಬರುತ್ತಾರೆ. +ಚಿತ್ರ ಶತದಿನೋತ್ಸವ ಓಡಿದಲ್ಲಿ ನಿಮ್ಮ ಕಾಲ್‌ಷೀಟ್‌ಗೆ ವಿಲಿವಿಲಿ ವದ್ದಾಡುವವರು ಸಾಲು ಸಾಲು ಕ್ಯೂ ನಿಂತಾರು. +ಆಗ ನಿಮ್ಮ ಹೆಸರಿನಲ್ಲೊಂದು ಅಭಿಮಾನಿ ಸಂಘ ನೀವೇ ಆರಂಭಿಸಿದರೆ ಅದು ಬೃಹದಾಕಾರವಾಗಿ ಬೆಳೆಯುತ್ತದೆ. +ಮೊದಲ ಪ್ರದರ್ಶನಕ್ಕೆ ನೀವು ಸ್ವಲ್ಪ ತಡವಾಗಿ ಕಾರಿನಲ್ಲಿ ಬಂದಿಳಿಯಿರಿ. ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಎಲ್ಲರಿಗೂ ಸ್ಟೈಲಿಷ್ ಆಗಿ ಆಟೋಗ್ರಾಫ್ ಹಾಕಿ. +ನಿಮ್ಮ ಕೈಯಿಂದ ಖರ್ಚಾದರೂ ಚಿಂತೆಯಿಲ್ಲ ನಿಮ್ಮ ದೃಶ್ಯ ಬಂದಾಗ ವಿಶಿಲ್ ಹಾಕಲು-ಕಾಸೆಸೆಯಲು ಮಂದಿಯನ್ನು ಕರೆತನ್ನಿ. ಆಗ ಜನಪ್ರಿಯತೆ ಹೆಚ್ಚುತ್ತ ಹೋಗುತ್ತದೆ. +ಕೋಟಿ ಕೋಟಿ ಹಾಕಿದ ಚಿತ್ರಗಳು ಮಾತ್ರ ಹಣ ಮಾಡುತ್ತದೆ ಎಂಬುದು ಸುಳ್ಳು. +‘ಯಾರಿಗೆ ಸಾಲತ್ತೆ ಸಂಬಳ’ ಕಡಿಮೆ ವೆಚ್ಚದಲ್ಲಿ ತಯಾರಾದ ಚಿತ್ರ. ಆದರೂ ಅದೇಕೆ ಗೆದ್ದಿತು? +ಮಕ್ಕಳ ಆಸೆ-ಕನಸು, ಕೆಳ-ಮಧ್ಯಮ ವರ್ಗದ ಜನತೆಯ ಕಷ್ಟ-ಸುಖಗಳು ಹೇಳಿದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? +ಅದಕ್ಕೆ ನಾನೀಗ ಅಂತದೇ ಕತೆ ಆರಿಸಿರುವೆ. ಕಥೆ ಏನು ಎಂದು ಈಗ ಕೇಳಬೇಡಿ? +ಪಾತ್ರಗಳು ಹೇಗಿರಬಹುದು ಎಂದು ಪತ್ತೇದಾರಿ ಕೆಲಸಕ್ಕೆ ಹೊರಡಬೇಡಿ. ಹಾಸ್ಯ ದೃಶ್ಯಗಳು ಹೇಗಿರಬಹುದು ಎಂದು ಈಗ ನಾನು ಹೇಳುವುದಿಲ್ಲ. +ಚಿತ್ರ ನಟ-ನಟಿಯರಾಗ ಬಯಸುವವರು ಹತ್ತು-ಇಪ್ಪತ್ತು-ಸಾವಿರ ಹಣ ಹಾಕಬಲ್ಲವರು ತಕ್ಷಣ ಬಂದು ನೋಡಿ. +ಮೇಲುಕೋಟೆ ಪ್ರೊಡಕ್ಷನ್ಸ್ +ಪಂಗನಾಮ ಬಿಲ್ಡಿಂಗ್, ಕುಂಭಕೋಣ +ತಮ್ಮವ +ಮಿ.ವೆಂಕಣ್ಣ +ಚಿತ್ರ ನಿರ್ಮಾಪಕ +ಈ ಲೇಖನ ಹೇಗಿದೆ ಮೂರ್ತಿಗಳೆ ಎಂದ ವೆಂಕಣ್ಣ. +“ಆಹಾ!! ತಲೆ ಅಂದ್ರೆ ತಲೆ ಎಂಕ. ಛಾಟಿ ಇಲ್ಲದೆ ಬುಗುರಿ ಆಡಿಸಬಲ್ಲೆ ನೀನು” ಎಂದೆ. +ಈಗ ಈ ಚಿತ್ರದ ಮುಹೂರ್ತಕ್ಕೆ ಕಾದಿರುವೆ ನಾನೂ ಸಹ. +***** +(೨೮-೭-೨೦೦೦) +“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್‍ […] +ಸಂದರ್ಶಕಿ : ಪ್ರೀತಿ ನಾಗರಾಜ್ ಸಮಯ: ಮಧ್ಯಾಹ್ನ ೨:೩೦ ಘಂಟೆಸ್ಥಳ: ಜಯನಗರಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_46.txt b/Kannada Sahitya/article_46.txt new file mode 100644 index 0000000000000000000000000000000000000000..b0a2e39bc41e30456f6c01d5833f25c7d5fa7a05 --- /dev/null +++ b/Kannada Sahitya/article_46.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತನ್ನ ತುರುಬಿನಲಿ +ಒಂಟಿಗೂದಲ ಗುರುತಿಸಿ +ಹೌಹಾರಿದ ಚೆಲುವೆ ಯೌವನಸ್ಥೆ- +ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು +ಇಡೀ ತಲೆಯನ್ನೇ ನರೆತಿಸಿಕೊಂಡಳು. +***** +ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. ***** +ಬೃಹದಾಕಾರ ಆದದ್ದನ್ನು ಅದ್ಭೂತ ಎನ್ನಬಹುದಲ್ಲವೆ? ***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_460.txt b/Kannada Sahitya/article_460.txt new file mode 100644 index 0000000000000000000000000000000000000000..649b5331357acb2f56f9e3c390a8b58297e1105b --- /dev/null +++ b/Kannada Sahitya/article_460.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಭಿ +ಮಾನ ಬೇರೆ +ಮಾನ ಬೇರೆ: +ಒಂದು ನಾವೇ +ಬೆಳಸಿಕೊಳ್ಳುವ +ಸೊತ್ತು; +ಇನ್ನೊಂದು ಹೆರರು +ನಮಗೆ ಕಟ್ಟುವ +ಕಿಮ್ಮತ್ತು. +***** +ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. ***** +ಆಫೀಸು ಎನ್ನುವುದರಲ್ಲೆ ಫೀಸು ಸೇರಿಕೊಂಡಿರುವುದು `ಅರ್ಥ’ ಪೂರ್ಣವಲ್ಲವೆ? ***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_461.txt b/Kannada Sahitya/article_461.txt new file mode 100644 index 0000000000000000000000000000000000000000..95d76bee56d348eed53242e1efdfd6d5f8a54fd9 --- /dev/null +++ b/Kannada Sahitya/article_461.txt @@ -0,0 +1,151 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ ಜನ್ಮ ಹೋಯಿತು. ಹಾಳಾದವನು ಎಲ್ಲ ಕಡೆಯಲ್ಲಿ ಟಮಕೀ ಬಾರಿಸುತ್ತ ತಿರುಗುತ್ತಿದ್ದಾನೆ : ನೀನು ನನ್ನ ಮೇಲೆ ಕಾದಂಬರಿ ಬರೆಯುತ್ತಿದ್ದೀಯಂತೆ. ಈಗಾಗಲೇ ಅರ್ಧದ ಮೇಲೇ ಬರೆದು ಮುಗಿಸಿದ್ದೀಯಂತೆ. ಎಲ್ಲವನ್ನು ಉಘಡಾ-ಉಘಡೀ ಹೇಳಿದ್ದೀಯಂತೆ. ಮೊನ್ನೆ ಅರ್ಜುನ್‌ರಾವ್ ಭೇಟಿಯಾದಾಗ ಕೂಡ ಅದನ್ನೇ ಹೇಳಿದ….ಅಮ್ಮನ ಬಗ್ಗೆ ಬರೆದಾಗ ನಾನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅದರಲ್ಲಿ ನಮ್ಮ ಬಡತನದ ಬಗ್ಗೆ ಬರೆದದ್ದು….ಬಡವನಾಗಿ ಹುಟ್ಟಿದರೆ ಏನಾಯಿತೋ(ಬೋಳೀಮಗನೇ) ಆದರೆ….ಸ್ವಂತ ಮೆಹನತ್ತಿನಿಂದ ಈ ಎತ್ತರಕ್ಕೆ ಏರಿದವನನ್ನು ಕೆಳಗೆ ಎಳೆಯುವುದರಲ್ಲಿ ನಿನಗೇನು ಸುಖವೋ ? ನನ್ನ ಬದನಾಮೀ ಮಾಡ್ತೀಯೇನೋ ? ಒಮ್ಮೆ ಕೈತಪ್ಪಿ ಆದದ್ದಕ್ಕೆ ಪ್ರಾಯಶ್ಚಿತ್ತವೇ ಇಲ್ಲವೇನೋ ? ಸ್ವತಃ ಸತ್ತವಳ ಅಕ್ಕನೇ ಇದನ್ನೆಲ್ಲ ಮರೆತಾಗ ನಿನಗೆ ಯಾಕೋ ಇಷ್ಟೊಂದು ಜಿದ್ದು ? ಸತ್ಯ ನಿನಗೆ ಗೊತ್ತಿಲ್ಲ ನಾನು ಹೇಳಹೊರಟರೆ ನಾಲಿಗೆ ಹಿಡಿದುಕೊಳ್ಳುತ್ತದೆ. ನಿನ್ನ ಹಾಗೆ ಬರೆಯುವ ಕಲೆ ನನಗಿಲ್ಲವೋ…. ಇಲ್ಲವಾದರೆ ನಿನ್ನ ಚಾರಿತ್ರ್ಯ ಏನೆಂಬುದನ್ನು ನಾನು ತೋರಿಸಿಕೊಡುತ್ತಿದ್ದೆ….” +ಶ್ರೀನಿವಾಸನ ದನಿಯಲ್ಲಿ ಸಿಟ್ಟಿನ ಬದಲು ಒಂದು ರೀತಿಯ ದೈನ್ಯ. ಅಳುಬುರುಕುತನ ಸೇರುತ್ತಿರುವುದನ್ನು ಕಂಡು ಮುದುಕಿ ಒಮ್ಮೆಲೇ ಕೆರಳಿದಳು. ಕೂತಲ್ಲಿಂದ ಕೂಡಲೇ ಏಳಲಾಗದ್ದಕ್ಕೆ ಕುಂಡಿ ಸರಿಸುತ್ತ ನೇರವಾಗಿ ನಾಗಪ್ಪ ಕೂತ ಸೋಫಾದ ತೀರ ಹತ್ತಿರಕ್ಕೆ ಬಂದಳು. ಒಂದರೆನಿಮಿಷ ಶ್ರೀನಿವಾಸನ ಕಡೆ ತಾತ್ಸಾರ ತುಂಬಿದ ದೃಷ್ಟಿ ಚೆಲ್ಲಿದಳು. ಆಮೇಲೆ ಇನ್ನೆಲ್ಲೋ ನೋಡುತ್ತ ; “ಅದೇನು ಕೈಗೆ ಬಳೆ ಹಾಕಿಕೊಂಡ ಹಾಗೆ ಮಾತನಾಡ್ತೀಽಽಯೋ. ನೀರಿಲ್ಲದವನ ಹಾಗೆ ನೀನು ಆಗಬೇಡವೋ. ಷಂಢನಾಗಬೇಡವೋ. ನಿನ್ನ ಅಪ್ಪನ ಹಾಗೆ ಆಗಬೇಡವೋ. ಹೇಳುಽಽ. ಎಲ್ಲವನ್ನುಽಽ. ಕೇಳುವ ಧೈರ್ಯವಿದ್ದರೆ ಕೇಳಲೀ_ಅವನ ಅಪ್ಪ-ಅಮ್ಮರ ಬಗ್ಗೆಽಽ. ಸೋದರತ್ತೆಯ ಬಗ್ಗೆಽಽ. ಅಣ್ಣನ ಬಗ್ಗೆಽಽ. ತಂಗಿಯ ಬಗ್ಗೆಽಽ. ಯಾಕೆ ಹೆದರಿಕೇ ? ಬರೇ ನೀನು ಮೇಲೆ ಬರುತ್ತಿರುವುದನ್ನು ಸಹಿಸಲಾಗದೇ ನಿನ್ನ ಬಗ್ಗೆ ಇಲ್ಲದ ಸುದ್ದಿ ಹಬ್ಬಿಸುವ ಈ ಹಲ್ಕಾಽಽ ಮನುಷ್ಯನ ಬಾಯಿ ಮುಚ್ಚಿಸುವ ತಾಕತ್ತು ನಿನಗಿಲ್ಲವೇನೋಽಽ. ಮೊನ್ನೆ ರಾತ್ರಿ, ಬೆಳಗಾಗುವ ತನಕ ನನ್ನಿಂದ ಎಲ್ಲ ಕೇಳಿ ತಿಳಿದು ಈಗ ಐನ್ ಹೊತ್ತಿಗೆ ಮೆತ್ತಗಾಗುತ್ತೀಯೇನೋ….ಹಳ್ಳಿಯಲ್ಲಿ ಸುಖವಾಗಿ ಜೀವ ಬಿಡುತ್ತಿದ್ದ ಮುದುಕಿಯನ್ನು ಟ್ಯಾಕ್ಸಿಯಲ್ಲಿ ತುರುಕಿ ಮೈ ನುಗ್ಗು ನುಗ್ಗು ಮಾಡಿಸಿ ಕರೆತರಿಸಿದ್ದು….” +ನಾಗಪ್ಪನಿಗೆ ಮುಂದಿನದೆಲ್ಲ ಕೇಳುತ್ತ ಕೂಡ್ರುವ ಮನಸ್ಸಾಗಲಿಲ್ಲ. ವಿಚಿತ್ರ ಸದ್ದು ಮಾಡುತ್ತ, ತಡೆತಡೆದು ಹೊರಗೆ ಬರುತ್ತಿದ್ದ ಮುದುಕಿಯ ಮಾತುಗಳು ಅವಳು ಬಯಸಿದ ಪರಿಣಾಮ ಮಾಡುವ ಬದಲು ಅವ್ಯಕ್ತ ಕಾರಣಕ್ಕಾಗಿ ಮೈಮೇಲೆ ಮುಳ್ಳು ನಿಲ್ಲಿಸುತ್ತಿದ್ದವು : ಅವಳ ವಿಲಕ್ಷಣ ಭಾಷೆಯಲ್ಲಿ ಪ್ರಕಟವಾಗಹತ್ತಿದ ಸಂಗತಿಗಳು ಮನುಷ್ಯ-ಸಂವೇದನೆಗೆ ದಕ್ಕುವ ಸತ್ಯಗಳಾಗಿ ತೋರಲಿಲ್ಲ. ಅಥವಾ ಈಗಾಗಲೇ ತನ್ನ ಸಂವೇದನಾಶಕ್ತಿಯೇ ಮೊಟಕಾಗಿರಬಹುದೇ ? ಅನ್ನಿಸಿತು. ಕುಳಿತಲ್ಲಿಂದ ಎದ್ದವನೇ ಧಡಧಡ ಸದ್ದು ಮಾಡುವ ಹೆಜ್ಜೆ ಇಡುತ್ತ ಸೀದಾ ತನ್ನ ಕೋಣೆಗೆ ನಡೆದ. ಹಾಗೆ ಹೋಗುವಾಗ ತನ್ನಲ್ಲಿ ಮೊಳೆತ ಭಾವನೆಯ ಗುರುತು ನಾಗಪ್ಪನಿಗೇ ಸಿಗಲಿಲ್ಲ : ಸಿಟ್ಟೇ ? ತಿರಸ್ಕಾರವೇ ? ಜಿಗುಪ್ಸೆಯೇ ? ತಿಳಿಯಲಿಲ್ಲ. ಅನ್ನಿಸಿಕೆಗಳೆಲ್ಲ ಸುನ್ನವಾದ ಭಾಸ. ಕೋಣೆಗೆ ಹೋಗಿ ಡ್ರೆಸ್ಸು ಬದಲಿಸಬೇಕೆಂದು ಪ್ಯಾಂಟು ಕೈಗೆ ತೆಗೆದುಕೊಳ್ಳುತ್ತಿರುವಾಗ ಶ್ರೀನಿವಾಸ ಒಳಗೆ ಬಂದು ತನ್ನ ಹಿಂದೆಯೇ ಕದ ಮುಚ್ಚಿಕೊಂಡು ಅಗುಳಿ ಇಕ್ಕಿದ. ಶ್ರೀನಿವಾಸನ ಬಣ್ಣಗೆಟ್ಟ ಮೋರೆ, ಗಾಬರಿ ಬಿದ್ದ ಕಣ್ಣುಗಳನ್ನು ನೋಡಿ ನಾಗಪ್ಪ ಥಕ್ಕಾದ : ಬೆಳಿಗ್ಗೆ ಇಲ್ಲಿಗೆ ಬರುವಾಗ ಊಹಿಸಿಕೊಂಡದ್ದಕ್ಕೆ ವ್ಯತಿರಿಕ್ತವಾದದ್ದೇನೂ ನಡೆಯದೇ ಇದ್ದರೂ ಶ್ರೀನಿವಾಸನ ಸದ್ಯದ ಅವತಾರವನ್ನು ನೋಡಿ ಮಾತ್ರ ದಂಗುಬಡಿದುಹೋದ : ಸಾಯಲು ಹೊರಟ ಹಣ್ಣುಹಣ್ಣು ಮುದುಕಿಯ ಮುಖಾಂತರ ತಾನು ಇಷ್ಟು ದಿನ ಹೆದರಿಕೊಂಡ ತನ್ನ ಭೂತಕಾಲ ತೆರೆದುಕೊಳ್ಳಹತ್ತಿದ ಗಳಿಗೆಯಲ್ಲಿ ಯಾವುದೋ ನಿಗೂಢ ಕಾರಣಕ್ಕಾಗಿ ಶ್ರೀನಿವಾಸನು ಮರೆಯಲು ಯತ್ನಿಸಿದ್ದುದಕ್ಕೆ ತಾನೇ ಜೀವಂತ ಪ್ರತೀಕಾರವಾಗುತ್ತಿದ್ದಿರಬೇಕು: ಎದುರಿಗೆ ಕೂತವನು ಹನ್ನೆರಡು ದಿನಗಳ ಹಿಂದಿನ ಶ್ರೀನಿವಾಸನಾಗಿಯೇ ಇರಲಿಲ್ಲ. ಅಷ್ಟೇಕೆ, ಬೆಳಿಗ್ಗೆ ಬಂದಾಗ ನೋಡಿದ ಶ್ರೀನಿವಾಸ ಕೂಡ ಆಗಿರಲಿಲ್ಲ : ತಾನು ಮಾತನಾಡುವ ಮೊದಲೇ ತನ್ನ ಚಾರಿತ್ರ್ಯವನ್ನು ಬಯಲಿಗೆಳೆಯುವ ಬೆದರಿಕೆ ಹಾಕುತ್ತಿರುವಾಗ ಒಂದೂ ಮಗ ತಾನೇ ಯಾವುದಕ್ಕೋ ಹೆದರಿಕೊಂಡಂತೆ ಬಿಳಿಚಿಕೊಂಡಿದ್ದಾನೆ. ನಾಗಪ್ಪನಿಗೆ ಈ ಘಟನೆ ಅನಿರೀಕ್ಷಿತ. ಈತನನ್ನು ಮೊದಲಿನಿಂದಲೂ ಬೆನ್ನಟ್ಟಿ ಬರುತ್ತಿದ್ದುದಕ್ಕೆ ತಾನು ಪ್ರತೀಕವಾಗುತ್ತಿದ್ದ ಈ ಪ್ರಕ್ರಿಯೆ ದೊಡ್ಡ ಸೋಜಿಗ, ನಾಗಪ್ಪ ಮಾತನಾಡಲಿಲ್ಲ. ಲುಂಗಿ ಕಳಚಿ ಪ್ಯಾಂಟು ಧರಿಸುವಾಗ ಥಟ್ಟನೆಂಬಂತೆ ಒಂದು ವಿಚಾರ ಹೊಳೆದುಹೋಯಿತು : ಶ್ರೀನಿವಾಸನ ಯಾತನೆಗೆ, ಅಸಾಧಾರಣವಾದ ಅದರ ತೀವ್ರತೆಗೆ, ಅದನ್ನು ಮಾತಿನಲ್ಲಿ ಹಿಡಿಯುವ ಅಸಮರ್ಥತೆಯೇ ಕಾರಣವಾಗಿರಬಹುದೇ ? ಏರಿಕ್ ಬರ್ನ್ ನೆನಪಿಗೆ ಬಂದ : ಭಾಷೆ ತಿಳಿಯುವ ಮುಂಚಿನ ಕಾಲದಲ್ಲಿ ಮೆದುಳಿನಲ್ಲಿ ಕೇವಲ ಪ್ರತಿಮೆಗಳಾಗಿಯೇ ನಿಂತ ಅನುಭವ ಈಗಲೂ ಮೂಡಿ ಕಾಡುತ್ತಿರಬಹುದೇ ಹೊರತು ಮಾತಿನಲ್ಲಿ ಹೊರದಾರಿಯನ್ನು ಕಾಣುವಲ್ಲಿ ಸೋಲುತ್ತಿರಬಹುದು. ಈ ವಿವೇಕಪ್ರಜ್ಞೆ ಶ್ರೀನಿವಾಸನ ಬಗ್ಗೆ ಸಹಾನುಭೂತಿಯನ್ನು ಹುಟ್ಟುಸುವಂತಹದಾಗಿತ್ತಾದರೂ ಸ್ವತಃ ತಾನೇ ಕಳೆದ ಹಲವು ದಿನಗಳಿಂದ ಅನುಭವಿಸುತ್ತ ಬಂದದ್ದು ಅದಕ್ಕೆ ಅಡ್ಡ ಬಂತು : ನಾಗಪ್ಪ ತನ್ನ ಮೌನ ಮುರಿಯಲಿಲ್ಲ. ಪ್ಯಾಂಟಿನ ಕಿಸೆಯೊಳಗಿಂದ ಹಣಿಗೆಯನ್ನು ಹೊರತೆಗೆದು ನಿಧಾನವಾಗಿ ಒಂದು ಬಗೆಯ ಬೇಫೀಕೀರತೆಯಿಂದ ಕೂದಲು ಬಾಚಿಕೊಳ್ಳಹತ್ತಿದ : ಈ ನಿಧಾನ, ಊಟಕ್ಕಾಗಿ ಬಂದೂ ಊಟಮಾಡುವ ಮೊದಲೇ ಹೋಗಲು ಹೊರಟು ನಿಂತವನ ಮೌನದಲ್ಲಿಯ ಬೇಫೀಕೀರತ್ ಶ್ರೀನಿವಾಸನನ್ನು ಇನ್ನಷ್ಟು ಹೆದರಿಸಲು ಕಾರಣವಾದವು : “ಊಟ ಮಾಡುವ ಮೊದಲೇ….”_ಮಾತನಾಡುವದು ಅಸಾಧ್ಯವಾಯಿತು. ಕೂತಲ್ಲಿಂದ ಎದ್ದವನೇ ಇವನು ಏನು ಮಾಡುತ್ತಿದ್ದಾನೆ ಎನ್ನುವುದು ನಾಗಪ್ಪನ ಲಕ್ಷ್ಯಕ್ಕೆ ಬರುವ ಮೊದಲೇ ಶ್ರೀನಿವಾಸ ನೆಲದ ಮೇಲೆ ಮಂಡಿಯೂರಿ ಕುಳಿತು ನಾಗಪ್ಪನ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದ: “ದಮ್ಮಯ್ಯ ನಾಗಪ್ಪಾಽಽ. ಇಷ್ಟೊಂದು ನಿರ್ದಯನಾಗಬೇಡ. ಇಷ್ಟೆಲ್ಲ ಕಷ್ಟಪಟ್ಟು ಬೆಳೆಸಿಕೊಂಡುಬಂದದ್ದನ್ನು ಹೀಗೆ ಮಣ್ಣುಗೂಡಿಸಬೇಡ” ಎಂದ. ಇದು ಬರಿ ನಾಟಕವಲ್ಲ. ಶ್ರೀನಿವಾಸ ನಿಜಕ್ಕೂ ಯಾವುದಕ್ಕೋ ಹೆದರಿದ್ದಾನೆ ! ವಿವೇಕಶೂನ್ಯವಾದ ರಿತಿಯಲ್ಲಿ ಬೆಚ್ಚಿಕೊಂಡಿದ್ದಾನೆ : ಪ್ಯಾಂಟಿನ ಒಳಗೆ ಕೈಹಾಕಿ ಕಾಲುಗಳನ್ನು ಹಿಡಿದದ್ದೇ ಅಂಗೈಗಳು ಬೆವರಿನಿಂದ ಒದ್ದೆಯಾಗಿದ್ದವು. ತನ್ನ ಕಣ್ಣುಗಳಲ್ಲಿ ಕಣ್ಣು ನೆಡಲು ಹವಣಿಸುತ್ತಿದ್ದವನ ಮೋರೆಯಲ್ಲಿ_ಹಣೆಯ ಮೇಲೆ, ಗದ್ದ ಮೂಗುಗಳ ಮೇಲೆ_ಬೆವರ ಹನಿಗಳು ಸಾಲುಗಟ್ಟಿದ್ದವು. ನಾಗಪ್ಪ ಶಾಕ್ ಬಡೆದವನ ಹಾಗೆ ಶ್ರೀನಿವಾಸನ ಕೈಗಳಿಂದ ಕಾಲುಗಳನ್ನು ಬಿಡಿಸಿಕೊಂಡವನೇ ಕಿಡಕಿಗೆ ಬಂದು ಹೊರಗೆ ನೋಡುತ್ತ ನಿಂತ :ಕಣ್ಣ ಇದಿರಿನ ಪರಿಸರದಿಂದ ಹೊರಟ ಬೆಳಕು ಕಣ್ಣ ಪರದೆಯ ಮೇಲೆ ಚಿತ್ರಗಳಾಗಿ ಮೂಡುತ್ತಿತ್ತೇ ಹೊರತು ಮೆದುಳು ಆ ಚಿತ್ರಗಳ ಗುರುತು ಹಿಡಿಯಲು ನಿರಾಕರಿಸುತ್ತಿದ್ದಂತಿತ್ತು…. +ಬೆನ್ನ ಹಿಂದಿನಿಂದ ವಿಚಿತ್ರ ಸದ್ದು, ಬೋಳೀಮಗ ಏನೋ ಹೇಳುತ್ತಿರಬೇಕು ಇಲ್ಲ, ತನ್ನಷ್ಟಕ್ಕೇ ಮಾತನಾಡಿಕೊಳ್ಳುತ್ತಿರಬೇಕು ಅನ್ನಿಸಿ ಮೈ ಜುಮ್ ಎಂದಿತು : ಕಿವಿಯ ಮೇಲೆ ಬೀಳುತ್ತಿದ್ದದ್ದು ಮಾನವಸಹಜ ಭಾಷೆಯಾಗಿ ತೋರಲಿಲ್ಲ; ಬರೇ ಅರ್ಥವಾಗದ ಸದ್ದು : +‘ಬದುಕಿನಲ್ಲಿ ನಾನು ಎಷ್ಟೊಂದು ನೋವು ತಿಂದಿದ್ದೇನೆ. ಕಷ್ಟಪಟ್ಟಿದ್ದೇನೆ. ಆದರೆ ಯಾರ ಮುಂದೂ ದೀನನಾದವನಲ್ಲ. ಯಾರ ಕಾಲನ್ನೂ ಹಿಡಿದವನಲ್ಲ. ಈವತ್ತು ನಿನ್ನದನ್ನು ಹಿಡಿದೆ. ಒಪ್ಪುತ್ತೇನೆ : ನಾವು ಜಿದ್ದಿನ ಜನ ಎಂದು ನೀನು ತಿಳಿದುಕೊಂಡರೂ ಕೆಲವು ವಿಷಯಗಳಲ್ಲಿ ಮಾತ್ರ ನಿನಗಿದ್ದ ಧೈರ್ಯ ನನಗಿಲ್ಲ. ನನ್ನ ಕುಲದ ಬಗ್ಗೆ, ಚಿಕ್ಕಂದಿನ ಬಡತನದ ಬಗ್ಗೆ, ಚಾರಿತ್ರ್ಯದ ಬಗ್ಗೆ_ಯಾರಾದರೂ ಮಾತನಾಡಿದರೆ ಕೇಳುವ ಧೈರ್ಯ ನನಗೆ ಎಳ್ಳಷ್ಟೂ ಇಲ್ಲ.ಇದರ ಕಾರಣ ನಿನಗೆ ಗೊತ್ತಾಗಬೇಕು. ನಿನ್ನಹಾಗೆ ಮಾನವಶಾಶ್ತ್ರ ಓದಿದವನಲ್ಲ ನಾನು. ಅಪ್ಪನ ಬಗ್ಗೆ ನಾನು ಆದರ ಇದ್ದವನಲ್ಲ. ಅವನು ಕೋಟಿತೀರ್ಥದಲ್ಲಿ ಮುಳುಗಿ ಜೀವ ಕಳೆದುಕೊಂಡಾಗ ಒಂದು ದರಿದ್ರ ಪೀಡೆ ತೊಲಗಿತು ಎಂದು ಸಂತೋಷಪಟ್ಟಿದ್ದನ್ನು ಯಾವ ಭಿಡೆ ಇಲ್ಲದೇ ಒಪ್ಪಿಕೊಳ್ಳುವ ಧೈರ್ಯವಿದೆ. ಆದರೆ ಅದೇ ದುರ್ಘಟನೆ ನಿನ್ನ ಕತೆಯಲ್ಲಿ ಮೂಡಿ ಬಂದು ಓದಲು ಸಿಕ್ಕಾಗ ಓದಿದ ಕೆಲವು ದಿನ ನಾನು ಅಂಜಿಕೊಂಡ ರೀತಿ ನನಗೊಬ್ಬನಿಗೇ ಗೊತ್ತು. ನೀನು ನನ್ನ ಅಪ್ಪನ ಹೆಸರನ್ನು ಕೂಡ ಬದಲಿಸದೇ ಎಲ್ಲ ವಿವರಗಳ ವಿಶ್ಲೇಷಣೆ ಮಾಡಿ ಕತೆ ಬರೆದಾಗ ಒಂದು ಹೇಳಹೆಸರಿಲ್ಲದ ಹಳ್ಳಿಯ ಕೊಂಪೆಯಲ್ಲಿ ನಡೆದ ಈ ದುರ್ಮರಣ ಜಗಜ್ಜಾಹೀರವಾಗುತ್ತದೆಯಲ್ಲ ಎಂಬ ಸತ್ಯಕ್ಕೆ ಭೀತನಾಗಿದ್ದೆ….ಮೊದಲಿನಿಂದಲೂ ನಿನ್ನನ್ನು ನೋಡಿದರೆ ನನಗೆ ಭಯ, ಯಾಕೆ ಎನ್ನುವದು ನನಗೇಗೊತ್ತಿಲ್ಲ. ನಾನು ನನ್ನಲ್ಲೇ ಬಚ್ಚಿಟ್ಟುಕೊಂಡದ್ದನ್ನು ಉಳಿದವರೆದುರು ಬಿಚ್ಚುವ ಧೈರ್ಯ ನನಗಿಲ್ಲವೇ ಇಲ್ಲ. ಉಳಿದವರಿಗೆ ಗೊತ್ತಾಗುವ ಶಕ್ಯತೆ ಇಲ್ಲದ ಎಂಥದ್ದನ್ನು ಬೇಕಾದರೂ ಮಾಡುವ ಎದೆಗಾರಿಕೆ ನನಗಿದೆ. ನಾನು ಬಚ್ಚಿಟ್ಟುಕೊಂಡ ಎಷ್ಟೋ ಸಂಗತಿಗಳು ನಿನಗೊಬ್ಬನಿಗೇ ಗೊತ್ತಿವೆ ಎನ್ನುವುದನ್ನು ಬಲ್ಲೆ. ಆದರೂ ನಿನಗೆ ಗೊತ್ತಿಲ್ಲ ಎಂದುಕೊಂಡದ್ದು ? ಅದೂ ಕೂಡ ನಿನಗೀಗ ಗೊತ್ತಾಗಿಬಿಟ್ಟಿದೆಯೇ ? ಗೊತ್ತಾಗಿಬಿಡಬಹುದೇ ? ಇಷ್ಟು ದಿನ ಬಂದಿರದ ಸಂಶಯ, ನೀನು ಕಾದಂಬರಿ ಬರೆಯುತ್ತಿದ್ದೀ ಎಂದು ತಿಳಿದದ್ದೇ, ಹೀಗೇಕೆ ಕಾಡುತ್ತಿದೆಯೋ, ಅರಿಯೆ. ಅಪ್ಪ ಕೋಟಿತೀರ್ಥದಲ್ಲಿ ಸತ್ತದ್ದು ನನಗೆ ಗೊತ್ತಿದೆ. ಯಾಕೆ ಎನ್ನುವದು ಗೊತ್ತಿದೆಯೆ ? ಹೇಗೆ ಎನ್ನುವದು ? ಅದು ಆತ್ಮಹತ್ಯೆಯೆಂದುನಿಜಕ್ಕೂ ನಂಬುತ್ತೀಯಾ ? ಶಾರದೆಯ ಬಗ್ಗೆ ಕೂಡ ಏನೋ ಗೊತ್ತಾಗಿದೆ ಎಂಬ ಗುಮಾನಿ. ಆದರೆ ಅವಳ ಚೊಚ್ಚಲು-ಮಗುವಿನ ಬಗ್ಗೆ ? ಆ ಮಗುವಿನ ತಂದೆಯ ಬಗ್ಗೆ ? ನಿನಗೆ ಗೊತ್ತಿರಬಹುದಾಗಿದ್ದದ್ದಕ್ಕೆ ಹೆದರಿಕೆಯಿಲ್ಲ; ಗೊತ್ತಿದ್ದನ್ನು ಬಿಚ್ಚುವ ನಿನ್ನ ದುರಭ್ಯಾಸಕ್ಕೆ. ಅಮ್ಮನ ಬಗ್ಗೆ ಕತೆ ಬರೆದಾಗಲೇ ಹೆದರಿಕೊಂಡಿದ್ದೆ. ಈಗ ನೇತ್ರಾವತಿಯ ಸಾವಿನ ಬಗ್ಗೆ ಕಾದಂಬರಿ ಬರೆಯುತ್ತೀಯಂತೆ. ಈಗಾಗಲೇ ಅರ್ಧದಷ್ಟು ಬರೆದು ಮುಗಿಸಿದ್ದೀಯಂತೆ. ನೀನು ಹೈದರಾಬಾದ್ ಬಿಟ್ಟು ಮುಂಬಯಿಗೆ ಬಂದದ್ದೇ ಈ ಕಾದಂಬರಿ ಬರೆಯಲಿಕ್ಕಂತೆ_ಸೀತಾರಾಮ ಹೇಳಿದ. ಸಂತೋಷಭವನದ ನಾಯಕನೂ ಸಹ. ಈ ಮೂವರಿಗೂ ನನ್ನ ಬಗ್ಗೆ ಹೊಟ್ಟೆಕಿಚ್ಚು. ಬೇಡವಾದದ್ದನ್ನೆಲ್ಲ ಹೇಳಿ ಹೆದರಿಸುತ್ತಾರೆ. ಖೇತವಾಡಿ, ಅದರಲ್ಲೂ ಖೇಮರಾಜಭವನ, ಗೋಲಪೀಠಾಗಳ ವರ್ಣನೆ ಮಾಡಿದ ರೀತಿಯನ್ನಂತೂ ಒಂದು ದಿನ ನಮ್ಮ ಮನೆಯಲ್ಲೇ ಸತ್ಯನಾರಾಯಣಪೂಜೆಗೆ ಬಂದ ಜನರ ಇದಿರು ಉಪ್ಪು-ಖಾರ ಹಚ್ಚಿ ಹೇಳುತ್ತ ಬಾಯಿ ಚಪ್ಪರಿಸುತ್ತಿದ್ದ ಸೀತಾರಾಮ. ಹೆಸರುಗಳನ್ನು ಕೂಡ ಬದಲಿಸಿಲ್ಲವಂತೆ….ಹೌದೇನೋ ನಾಗಪ್ಪ ? ಯಾಕೋ ನಿನಗೆ ನನ್ನ ಮೇಲೆ ಇಷ್ಟೊಂದು ಹಗೆ ? ಈ ಕಾದಂಬರಿ ಈಗ ಯಾಕೆ ? ಇಷ್ಟೆಲ್ಲ ವರ್ಷಗಳ ಮೇಲೆ ? ನನ್ನ ಅಭ್ಯುದಯದ ಕಾಲದಲ್ಲಿ ? ಈವತ್ತು ನಮ್ಮ ಸಮಾಜದಲ್ಲಿ ನನಗೊಂದು ಮಾನದ ಸ್ಥಾನವಿದೆ. ಸಾರಸ್ವತ-ಬ್ರಾಹ್ಮಣ-ಲೀಗಿನ ಅಧ್ಯಕ್ಷ ಆಗಲಿದ್ದೇನೆ. ನಗರಪಾಲಿಕೆ ಚುನಾವಣೆಗೆ ನಿಂತಿದ್ದೇನೆ. ಮುಂದೆ ದೈವ ತೆರೆದರೆ ಎಸ್ಸೆಂಬ್ಲೀ ಇಲೆಕ್ಷನ್ನಿಗೂ. ಹಣ ಬೇಕಾದಷ್ಟು ಗಳಿಸಿದ್ದೇನೆ ನಾಗಪ್ಪಾ. ಸ್ವಂತ ಮೆಹನತ್ತಿನಿಂದ ಸದ್ಯ ಟ್ರಾನ್ಸ್‌ಪೋರ್ಟ್ ಬಿಸಿನೆಸ್ಸೂ ಶುರುಮಾಡಿದ್ದೇನೆ_ಈಗ ಎರಡು ವರ್ಷಗಳಾಗುತ್ತ ಬಂದವು. ಆ ಮೂಲಕವೇ ನಿನ್ನ ಕಂಪನಿಯೊಡನೆ ಸಂಬಂಧ. ನಿನ್ನ ಪರಿಚಯದ ಆಧಾರದ ಮೇಲೆ ನಿನ್ನ ಇಲ್ಲಿಯ ಆಫೀಸಿಗೆ ಹೋಗಿದ್ದೆ. ಆಗಲೇ ಖಂಬಾಟಾನ ಪರಿಚಯವಾಯಿತು. ಅತ್ಯಂತ ಖೋಟಾ ಮನುಷ್ಯ . ಎಲ್ಲ ದಗಲ್ಬಾಜಿಯ ವ್ಯವಹಾರ. ಖಂಬಾಟನ ಹೆಂಡತಿ, ನಿನ್ನ ಆ‌ಒ‌ಆ ಯ ಹೆಂಡತಿ ಇಬ್ಬರ ನನ್ನ ಕಂಪನಿಯಲ್ಲಿ ಭಾಗೀದಾರಾರು. ಇದು ನಿಮ್ಮ ಕಂಪನಿಯಲ್ಲಿ ಎಷ್ಟು ಮಂದಿಗೆ ಗೊತ್ತಿದೆಯೋ ಅರಿಯೆ. ಹಾಗೆಂದೇ ಅಲ್ಲವೆ ಕಂಪನಿಗೆ ಬರುವ, ಕಂಪನಿಯಿಂದ ಹೊರಗೆ ಹೋಗುವ ಎಲ್ಲ ಮಾಲುಗಳ ಸಾಗಾಣಿಕೆಯ ಮೂರು ವರ್ಷಗಳ ಕಾಂಟ್ರ್ಯಾಕ್ಟು ನಮಗೆ ಸಿಕ್ಕದ್ದು? ಕಾಂಟ್ರ್ಯಾಕ್ಟಿನ ಮೇಲೆ ಸಹಿ ಮಾಡಿದವರು ಹೈದರಾಬಾದ ಫ್ಯಾಕ್ಟರಿಯ ಮ್ಯಾನೇಜರರು: ಆದರೆ ಆ‌ಒ‌ಆ ಯವರ ಇನೀಶಲ್ಸೂ ಇವೆ ಅದರೆ ಮೇಲೆ. ಸದ್ಯ ನಿನ್ನ ಬಂದೂಕವಾಲಾ ದೊಡ್ಡ ಲಫಡಾದಲ್ಲಿ ಸಿಕ್ಕಿಕೊಂಡಿದ್ದಾನೆ. ಹತ್ತು ಟನ್ನಿನಷ್ಟು ಕಚ್ಚಾ ಮಾಲನ್ನು ನಿಮ್ಮ ಫ್ಯಾಕ್ಟರಿಯಿಂದ ಕಳ್ಳರೀತಿಯಿಂದ ಸಾಗಿಸಿ ಮುಂಬಯಿಯ ಒಬ್ಬ ದೊಡ್ಡ ವ್ಯಾಪಾರಿಗೆ ಮಾರಿದ್ದಾನೆ. ಈ ಮಾಲನ್ನು ತಯಾರಿಸುತ್ತಿದ್ದ ಕಾರಖಾನೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಉತ್ಪಾದನೆ ಹಲವು ತಿಂಗಳವರೆಗೆ ನಿಂತುಹೋದಾಗ ಈ ಸರಕಿನ ಧಾರಣೆ ಪೇಟೆಯಲ್ಲಿ ಮೂಲಧಾರಣೆಯ ಹತ್ತುಪಟ್ಟಿನಷ್ಟಾಯಿತು. ಬಂದೂಕವಾಲಾ ಹಾಗೂ ಅವನ ಚೇಲಾಗಳು ಕೂಡಿ ಕಾರಖಾನೆಯ ಒಂದು ವಿಭಾಗಕ್ಕೆ ಬೆಂಕಿಹತ್ತಿದ ನಾಟಕ ಮಾಡಿ ಈ ಮಾಲು ಆ ಬೆಂಕಿಯಲ್ಲಿ ಸುಟ್ಟುಹೋದಂತೆ ವರದಿ ಮಾಡಿದ್ದಾರೆ. ಬೆಂಕಿ ಹತೋಟಿಯ ಹೊರಗೆ ಹೋಗಿ, ಪಾಪ ಮೂರು ಜನ ಸತ್ತರಂತೆ. ಈ ಎಲ್ಲ ಲಫಡಾದ ವಿವರಗಳೆಲ್ಲ ಯಾರಿಗೋ ಹೇಗೋ ಗೊತ್ತಾಗಿ ಸಹಿ ಮಾಡಿರದ ಪತ್ರದ ಪ್ರತಿಗಳನ್ನು ಕಂಪನಿಯ_ದೇಶದಲ್ಲಿಯ, ವಿದೇಶದಲ್ಲಿಯ_ ಡೈರೆಕ್ಟರರಿಗೆ, ಷೇರುದಾರರಿಗೆ ಕಳಿಸಿದ್ದಾರಂತೆ. ಈ ಪತ್ರದ ಹಿಂದಿನ ತಲೆ ನಿನ್ನದು ಎಂದು ಬಂದೂಕವಾಲಾನ ಸಂಶಯ. ಈ ತನಿಖೆಯ ಹಗರಣ ನಿನ್ನ ಬಾಯಿ ಮುಚ್ಚಿಸುವ ದುಷ್ಟ ಉಪಾಯ. ಈಗ ನಿನ್ನ ಆ‌ಒ‌ಆ ಯವರು ಏಕಾ‌ಏಕಿ ಅಮೇರಿಕೆಗೆ ಹೊರಟುಹೋದದ್ದಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲವೆಂದು ತಿಳಿಯಬೇಡ. ಸಮಯ ಬಂದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಿನ್ನನ್ನು ಬಲಿಕೊಟ್ಟರೂ ಕೊಟ್ಟರೇ. ನನಗೊಬ್ಬನಿಗೇ ಗೊತ್ತಿದೆ ಯಾವ ವ್ಯಾಪಾರಿಗೆ ಕಳ್ಳಮಾಲನ್ನು ಮಾರಿದ್ದಾರೆ ಎನ್ನುವದು. ಹಾಗೆಂದೇ ನಮ್ಮ ಸೊಸೈಟಿಯಲ್ಲಿ ಮೂರು ಫ್ಲ್ಯಾಟ್ಸ್ ಬುಕ್ ಮಾಡಿದ್ದು; ಪ್ರತಿಯೊಂದಕ್ಕೆ ರೋಖು ಹಣ ೨೫,೦೦೦ ರೂಪಾಯಿ ನನ್ನ ಕೈಲಿ ಕೊಟ್ಟದ್ದು ; ಮುಂದೊಂದು ದಿನ ಕಂಪನಿಯ ಡೈರೆಕ್ಟರ್ ಮಾಡುವ ಭರವಸೆ ಕೊಟ್ಟದ್ದು….” +ವಾರಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಅನುಭವಿಸುತ್ತ ಬಂದದ್ದು ಐದು ಮಿನಿಟುಗಳ ಮಾತಿನಲ್ಲಿ ಹಿಡಿಯುವುದು ಶಕ್ಯವಾಗಿ ತೋರಲಿಲ್ಲ. ಶ್ರೀನಿವಾಸನಿಗೆ, ಮಾತನಾಡೋಣವೆಂದು ಬಾಯಿತೆರೆದರೆ ತುಟಿಗಳು ಥರಥರ ಅದುರುತ್ತಿದ್ದುವೆ ಹೊರತು ಶಬ್ದ ಹುಟ್ಟಿರಲಿಲ್ಲ. ಹಿಟ್ಟಿದ್ದು ಇನ್ನೊಬ್ಬನಿಗೆ ಅರ್ಥವಾಗಬಹುದಾದ ಭಾಷೆಗಿಂತ ಹೆಚ್ಚಾಗಿ ಒಂದು ಖಾಸಗೀ ಸಂಜ್ಞಾ ಕ್ರಮವನ್ನು ಹೋಲುವ ವಿಚಿತ್ರ ಸದ್ದಾಗಿ, ನರಳಿಕೆಯಾಗಿ ನಾಗಪ್ಪನ ಕಿವಿಗಳನ್ನು ಹೊಕ್ಕಾಗ, ನಾಗಪ್ಪ ನಿಂತಲ್ಲೇ ಬೆವರಿ ಸಣ್ಣಗೆ ನಡುಗಹತ್ತಿದ :ಅದೆಷ್ಟು ಹೊತ್ತು ನಿನ್ನ ಮಾತಿನ ಹಾದಿ ಕಾಯಲೋ ಬೋಳೀಮಗನೇ. ಬಾಯಿಬಿಡೋ,ಅದೇನು ಪೆಟ್ಟು ತಿಂದ ನಾಯಿಯ ಹಾಗೆ ಕುಂಯ್ಗುಡುತ್ತೀ :ಹುಟ್ಟಿದ ನಡುಕ ಬೆನ್ನ ಹಿಂದೆ ಕೂತವನ ? _ನಿಂತವನ ? ದೃಷ್ಟಿಗೆ ಬೀಳದೆ ಇರಲಿ ಎನ್ನುವಂತೆ ಕಿಡಕಿಯ ಕಟ್ಟಿಗೆಯ ಚೌಕಟ್ಟನ್ನು ಗಟ್ಟಿಯಾಗಿ ಅದುಮಿ ಹಿಡಿದ.ಬೆನ್ನ ಹಿಂದಿನವನ ನರಳಿಕೆಯ ಸದ್ದು ಹೆಚ್ಚುತ್ತ ಹೋದಹಾಗೆ, ಕಿಡಕಿಯ ಹತ್ತಿರ ನಿಲ್ಲುವದು ನಾಗಪ್ಪನಿಗೆ ಅಸಾಧ್ಯವಾಗಹತ್ತಿತು :ಹೊರಗಿನ ಪರಿಚಯದ ಪರಿಸರ ಕೂಡ ಎಂದಿನ ಗೆಳೆತನವನ್ನು ಬಿಟ್ಟುಕೊಟ್ಟು ಕೆಲ ಹೊತ್ತಿನ ಮೊದಲಷ್ಟೇ ಸಂಧಿಸಿದ ಮುದುಕಿಯ ಬೀಭತ್ಸವಾದ ದ್ವೇಷಪಂಥ ಕುರೂಪ ಮುಸುಕೆಳೆದುಕೊಳ್ಳುತ್ತಿದ್ದ ಭಾಸವಾಗಿ ಸರಕ್ಕನೆ ಹಿಂತಿರುಗಿದಾಗ ಅಪ್ರತಿಭನಾದ : ಮಂಚದ ಅಂಚಿನಲ್ಲಿ ಕೂತ ಶ್ರೀನಿವಾಸ ಕೆಲವೇ ಕ್ಷಣಗಳಲ್ಲಿ ತಾರುಣ್ಯವನ್ನು ಕಳೆದುಕೊಂಡು ಹಣ್ಣುಹಣ್ಣು ಮುದುಕನಾದವನ ಹಾಗೆ ತೋರುತ್ತಿದ್ದ ! ಎದ್ದು ನಿಲ್ಲುವ ತಾಕತ್ತೇ ಇಲ್ಲದವನ ಹಾಗೆ ತೂಗಾಡುತ್ತ ಮಂಚದಿಂದ ಎದ್ದ. ಮುದ್ದೆಯಾಗಿ ನಾಗಪ್ಪನ ಕಾಲ ಮೇಲೆ ಬಿದ್ದು : “ನನ್ನ ಬಗ್ಗೆ ಕಾದಂಬರಿ ಬರೀಬೇಡಾಽಽ,” ಎಂದ. “ಬೇಕಾದರೆ ಬೇಕಾದರೆ….” ಮುಂದಿನ ಮಾತುಗಳು ಕುರಿಯ ಹಾಗೆ ಬೇ ಬೇ ಬೇ ಎಂದು ಅಸಂಬದ್ಧವಾದ ಧ್ವನಿ ಎಬ್ಬಿಸಿದವು. ಆದರೆ ನಾಗಪ್ಪನಿಗೆ ಮಾತ್ರ _ ಸ್ವತಃ ಆಡಿದವನಿಗೇ ಅರ್ಥವಾಗಿರಲಾರದ_ಮಾತಿನ ಪ್ರತಿ ಶಬ್ದವೂ ಸ್ಪಷ್ಟವಾಗಿ,ಸ್ಪುಟವಾಗಿ ಕೇಳಿಸಿದಂತಾಗಿ ಶ್ರೀನಿವಾಸನ ಕೈಗಳಿಂದ ಕಾಲುಗಳನ್ನು ಬಿಡಿಸಿಕೊಂಡವನೇ ಕೋಣೆಯ ಕದಗಳನ್ನು ತೆರೆದು ಅಲ್ಲಿಂದ ಓಟ ಕಿತ್ತ. +uಟಿಜeಜಿiಟಿeಜ‌ಓಡುವ ರಭಸಕ್ಕೆ ಎರಡು ಸಾರೆ ಹೆಜ್ಜೆ ತಪ್ಪಿ ಮುಗ್ಗರಿಸಿ ಬೀಳುವಂತಾಯಿತು : ಓಟಕ್ಕೆ ಪ್ರೇರಣೆಯಾದದ್ದರಲ್ಲಿ ಭಯ ಹಾಗೂ ಜಿಗುಪ್ಸೆ ಒಂದು ಇನ್ನೊಂದರೊಡನೆ ಸ್ಪರ್ಧಿಸುವಂತಿದ್ದವು. ಇಲ್ಲಿಗೆ ಬಂದಾಗ ಕಳಚಿಟ್ಟ ಬೂಟುಗಳನ್ನು ಈಗ ಹಾಕಿಕೊಳ್ಳುವ ವ್ಯವಧಾನವೂ ಇಲ್ಲದವನ ಹಾಗೆ ಬರಿಗಾಲಲ್ಲೇ ಮನೆಯಿಂದ ಹೊರಬಿದ್ದ. ಭಡಭಡ ಜಿನ್ನೆಯ ಮೆಟ್ಟಿಲಿಳಿದು, ಅಂಗಳದಲ್ಲಿ ಕಾಲಿಟ್ಟವನೇ ಏನೋ ಭಯಾನಕವಾದದ್ದು ಬೆನ್ನಟ್ಟಿ ಬರುತ್ತಿದೆ ಎನ್ನುವ ಹಾಗೆ ಓಡುತ್ತಿದ್ದ ರೀತಿಗೆ ನೋಡಿದ ಜನ ಬೆಕ್ಕಸಬೆರಗಾದರು. ಆದರೆ ಇದಾವುದರ ಪರಿವೆಯೇ ಇಲ್ಲದವನ ಹಾಗೆ ನಾಗಪ್ಪ ಓಡುತ್ತಿದ್ದ. ಓಡೋಡಿ ಕೆಡಲ್ ರೋಡಿಗೆ ಬರುವಷ್ಟರಲ್ಲಿ ಕೂದಲು ಕೆದರಿಕೊಂಡಿದ್ದವು. ಮೈ ಧಾರಾಳವಾಗಿ ಬೆವೆತಿತ್ತು. ಕಲ್ಲು-ಮಣ್ಣುಗಳ ಮೇಲೆ ತಿಕ್ಕಿದ ಪಾದಗಳು ಉರಿಯತೊಡಗಿದ್ದವು. ಒಳ್ಳೇ ಬಿಸಿಲಿನ ಹೊತ್ತು ಹೊಟ್ಟೆ ಚೆನ್ನಾಗಿ ಹಸಿದಿತ್ತು ಎಂಬುದರ ನೆನಪು ಕೂಡ ಮಾಯವಾಗಿತ್ತು. ಟ್ಯಾಕ್ಸಿ ಹಿಡಿದು ಆದಷ್ಟು ಬೇಗ ಕೋಣೆ ಸೇರಬೇಕು ಎಂಬ ಒಂದೇ ಒಂದು ವಿಚಾರ ಮನಸ್ಸಿನಲ್ಲಿಯ ಉಳಿದೆಲ್ಲವನ್ನೂ ಮೆಟ್ಟಿ ನಿಂತಿದ್ದರೂ ರಸ್ತೆಗೆ ಬಂದದ್ದೇ ಧುತ್ ಎಂದು ಇದಿರಾದದ್ದು ಟ್ಯಾಕ್ಸಿಯೆಂದು ಗುರುತು ಹಿಡಿಯುವದೇ ಕಠಿಣವಾಯಿತು. ಇವನು ಓಡಿ ಬಂದ ರೀತಿಯನ್ನು ಕಂಡೇ ಏನೋ ವಿಶೇಷವನ್ನು ಊಹಿಸಿಕೊಂಡ ಟ್ಯಾಕ್ಸೀವಾಲಾನೇ_‘ಟ್ಯಾಕ್ಸೀ ಬೇಕೇನು, ಸಾಹೇಬ್ ?’ ಎಂದು ಕೇಳಿದಾಗ ಯಾಂತ್ರಿಕವಾಗಿ ಟ್ಯಾಕ್ಸಿಯನ್ನು ಸಮೀಪಿಸಿ, ಯಾಂತ್ರಿಕವಾಗಿಯೇ ಕದ ತೆರೆದು ಸೀಟಿನ ಮೇಲೆ ಮೈಚೆಲ್ಲಿ ಕಣ್ಣುಮುಚ್ಚಿದ : ತನಗೆ ತಿಳಿಯದ ಹಾಗೆ ಎಲ್ಲಾದರೂ ತೆರೆದುಕೊಂಡಾವೆಂಬ ಅಳುಕಿನಿಂದೆಂಬಂತೆ ಎರಡೂ ಕೈಗಳಿಂದ ಅವುಗಳನ್ನು ಗಟ್ಟಿಯಾಗಿ ಮುಚ್ಚಿ ಹಿಡಿದ. ಟ್ಯಾಕ್ಸಿಯವನು ಮೀಟರಿನ ಪತಾಕೆಯನ್ನು ಕೆಳಗೆ ಇಳಿಸುತ್ತ ‘ಎಲ್ಲಿಗೆ ಹೋಗುವದು, ಸಾಹೇಬ್ ?’ ಎಂದು ಕೇಳಿದಾಗ ‘ಖೇತವಾಡೀ_ಏಳನೇ ಗಲ್ಲಿ’ ಎನ್ನುವದೂ ಕಠಿಣವಾಯಿತು. ಶ್ರೀನಿವಾಸ ಬೇ ಬೇ ಬೇ ಎಂದು ಬೊಗಳಿದ ಮಾತುಗಳು ನೆನಪಿಗೆ ಬರಹತ್ತಿದವು : ಅವನು ಅಂದದ್ದಾದರೂ ಹೌದೆ ? ಅಥವಾ….ಇಲ್ಲ, ನಾಗಪ್ಪನಿಗೆ ಯಾವ ಸಂಶಯವೂ ಉಳಿಯಲಿಲ್ಲ. ಸರಿಯಾಗಿಯೇ ಕೇಳಿದ್ದೇನೆ ಎನ್ನುವದು ಮನದಟ್ಟಾಗುತ್ತಿದ್ದ ಹಾಗೇ ಹೊಟ್ಟೆ ತೊಳಸಿದಂತಾಗಿ ಟ್ಯಾಕ್ಸಿಯವನಿಗೆ ವಾಹನವನ್ನು ರಸ್ತೆಯ ಅಂಚಿಗೆ ತರುವಂತೆ ಹೇಳಿ ಅವನು ಹಾಗೆ ತರುವ ಪುರುಸೊತ್ತೂ ಇಲ್ಲದವನ ಹಾಗೆ ಕಿಟಕಿಯೊಳಗಿಂದ ತಲೆ ಹೊರಗೆ ಹಾಕಿ ಬಕಬಕ ಕಾರಿಕೊಂಡ. ಪುಣ್ಯಕ್ಕೆ ಆ ಹೊತ್ತಿಗೆ ವಾಹನಗಳ ಓಡಾಟ ಕಡಿಮೆಯಾಗಿದ್ದರಿಂದ ಟ್ಯಾಕ್ಸಿಯ ಎಡಮಗ್ಗುಲಲ್ಲಿ ಓಡುವ ಇನ್ನೊಂದು ವಾಹನ ಇರಲಿಲ್ಲ. ಬಸ್‌ಸ್ಟಾಪಿನಲ್ಲಿ ನಿಂತವರಲ್ಲಿ ಕೆಲವರು, ಕುಡುಕನಿರಬೇಕು ಎಂಬ ಸಂಶಯದಿಂದ ಕಣ್ಣುಕಿಸಿದು ನೋಡಿದರು. ಟ್ಯಾಕ್ಸೀ ಡ್ರೈವರನ ತಲೆಯಲ್ಲೂ ಅದೇ ಸಂಶಯ ! ಆದರೂ ಬಹಳ ಹೊತ್ತಿನ ತನಕ ಗಿರಾಕಿ ಸಿಗದೆ ಬೇಜಾರುಪಟ್ಟವನಿಗೆ ದೂರದ ಪ್ರಯಾಣದ ಗಿರಾಕಿಯೊಂದು ಸಿಕ್ಕಿದ್ದರಿಂದ ಏನೊಂದೂ ಕೇಳುವ ಧೈರ್ಯವಾಗದೇ ಅವನು ಹೇಳಿದಂತೆ ಜನರಿಲ್ಲದ ಜಾಗ ಬಂದೊಡನೆ ಟ್ಯಾಕ್ಸಿಯನ್ನು ಫುಟ್‌ಪಾಥಿನ ಅಂಚಿಗೆ ಒಯ್ದು ನಿಲ್ಲಿಸಿದ. ಅದೇ ಶಮನವಾಗಹತ್ತಿದ ಓಕರಿಕೆ ಹಾಗೆ ನಿಲ್ಲಿಸಿದ್ದೇ ತಡ, ನಿಲ್ಲಿಸಿದ್ದ ಕಾರಣದ ನೆನಪಿನಿಂದಲೇ ಇನ್ನೊಮ್ಮೆ ಕೆರಳಿ ಟ್ಯಾಕ್ಸಿಯ ಕದ ತೆರೆದು ಕುಳಿತಲ್ಲಿಂದಲೇ ಕಾರಿಕೊಂಡ. ಶ್ರೀನಿವಾಸನ ಮನೆಯ ಊಟದ ಪ್ರತೀಕ್ಷೆಯಿಂದಲೇ ಹಸಿದುಕೊಂಡ ಹೊಟ್ಟೆ ಅವನಲ್ಲಿ ತಿಂದ ಬಿಸ್ಕೂಟು ಆಂಬೋಡೆಗಳನ್ನು ಅರ್ಜುನ್‌ರಾವರ ಮನೆಯಲ್ಲಿ ತಿಂದದ್ದರಲ್ಲಿ ಅರಗದೇ ಉಳಿದ ಬಟಾಟೇ ಪೋವೇ, ಕುಡಿದದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾದ ಚಹದ ಬಣ್ಣದ ನೀರಿನಂತಹದನ್ನು_ಎಲ್ಲ ಎಲ್ಲವನ್ನೂ ಹೊರಗೆ ತಂದಿತು. ಟ್ಯಾಕ್ಸೀವಾಲಾನಿಗೆ ಈಗ ಸಂಶಯವೇ ಉಳಿಯಲಿಲ್ಲ. ಕಳ್ಳಸರಾಯಿಯನ್ನು ಎಂದೂ ಮುಟ್ಟಿರದ ಪೋಕ್ತನ ಹಾಗೆ_‘ಥತ್ ! ಸೂಳೇಮಗನೇ, ಇಷ್ಟು ಹೊತ್ತಿಗೇ ಲಕ್ಕಾಗಿ ಬಂದಿದ್ದೀಯಾ’ ಎಂದುಕೊಂಡು ಕಾಲಿಗೆ ಚಪ್ಪಲಿ ಕೂಡ ಹಾಕಿಕೊಳ್ಳದೇ ತೂಗಾಡುತ್ತ ಬಂದಾಗಿನ ನಾಗಪ್ಪನ ವೇಷವನ್ನು ನೆನೆದುಕೊಂಡು ಮೂಗುಮುಚ್ಚಿಕೊಂಡ. ನಾಗಪ್ಪ ಕದ ಮುಚ್ಚಿ, ಪ್ಯಾಂಟಿನ ಕಿಸೆಯೊಳಗಿಂದ ಕೈವಸ್ತ್ರವನ್ನು ಹೊರತೆಗೆದು ಬಾಯಿ-ಮೋರೆಗಳನ್ನು ಒರೆಸಿಕೊಳ್ಳುತ್ತ, ‘ಹೋಗೋಣ’ ಎಂದಾಗಿನ ಕ್ಷೀಣ ಧ್ವನಿ ತನಗಾದರೂ ಕೇಳಿಸಿತ್ತೇ ಎಂಬ ಸಂಶಯ ಬಂತು. ಮೂಗಿನ ಮೇಲಿನ ಕೈ ತೆಗೆಯದೇ ತನ್ನತ್ತ ನೋಡುತ್ತಿದ್ದ ಡ್ರೈವರನಿಗೆ ಹೊರಡುವಂತೆ ಸನ್ನೆಮಾಡಿದ. +ಟ್ಯಾಕ್ಸೀ ಸ್ಟಾರ್ಟ್ ಮಾಡುತ್ತ “ಮಾಲು ಒಳ್ಳೆಯದಿರಲಿಕ್ಕಿಲ್ಲ, ಸಾಹೇಬ್” ಎಂದ ಡ್ರೈವರನ ಉದ್ಧಟತನಕ್ಕೆ ಸಿಟ್ಟಿನ ಬದಲು ನಗು ಬರುವಂತಾದರೂ ಸದ್ಯ ಯಾವ ಭಾವನೆಯನ್ನೂ ವ್ಯಕ್ತಪಡಿಸುವ ತ್ರಾಣವೇ ಇಲ್ಲದವನ ಹಾಗೆ ಸೀಟಿನಮೇಲೆ ಆದಷ್ಟು ನಿಡಿದಾಗಿ ಮೈಚಾಚಿ ಕಣ್ಣುಮುಚ್ಚಿಕೊಂಡ : ಮುಚ್ಚಿಕೊಂಡಲ್ಲೇ ಮತ್ತೆ, ನಡೆದದ್ದೆಲ್ಲ ನೆನಪಿಗೆ ಬರಹತ್ತಿದ ಭಯವಾಗಿ ಎದ್ದು ನೆಟ್ಟಗೆ ಕುಳಿತ : ಯಾವುದನ್ನೂ ಕುರಿತು ವಿಚಾರಮಾಡುವ ಧೈರ್ಯವೇ ಇರಲಿಲ್ಲ. ವಿಚಾರಮಾಡಿದರೆ ಶ್ರೀನಿವಾಸ ಕಾದಂಬರಿ ಬರೆಯದಿರಲು ಒಡ್ಡಿದ ಆಮಿಷದ ನೆನಪಾಗಬಹುದು. ನೆನಪಾದರೆ ತಿರುಗಿ ಕಾರಿಕೊಂಡೇನು ಎಂಬ ಕಾತರದಿಂದ ಮುಂದಿನ ಸೀಟಿನ ಅಂಚನ್ನು ಗಟ್ಟಿಯಾಗಿ ಅದುಮಿ ಹಿಡಿದ. ಅವುಡುಗಚ್ಚಿದ. ಕಣ್ಣುಗಳನ್ನು ದೊಡ್ಡದು ಮಾಡಿ ನೋಡಿದ. ಮುಂದಿನ ಕನ್ನಡಿಯ ತುಂಡಿನಲ್ಲಿ ತನ್ನ ಚಟುವಟಿಕೆಗಳನ್ನು ಅವಲೋಕಿಸುತ್ತಿದ್ದ ಡ್ರೈವರನ ಕಣ್ಣುಗಳನ್ನು ತನ್ನವು ಸಂಧಿಸಿದೊಡನೆ ಮಂದವಾಗಿ ನಕ್ಕ. ಡ್ರೈವರನ ಮೋರೆಯ ಮೇಲೂ ನಗು ಮೂಡಿತು. “ಯಾವ ಊರು?” ಎಂದು ಕೇಳಿದಾಗ “ಮಂಗಳೂರಿನ ಕಡೆಯವನು,” ಎಂದು ಡ್ರೈವರನ ಉತ್ತರ ಬಂತು. “ಹೌದೆ? ಭಾಷೆ ಕೊಂಕಣಿಯೋ ಕನ್ನಡವೋ ?” ಎಂದು ಕೇಳಿದ್ದಕ್ಕೆ “ತುಳು. ಆದರೆ ಕೊಂಕಣಿ ಕನ್ನಡ ಎರಡೂ ಬರುತ್ತವೆ.” ಎಂದ. ನಾಗಪ್ಪ ತಾನು ಉತ್ತರ ಕನ್ನಡದವನೆಂದೂ, ಕನ್ನಡದಲ್ಲಿ ಲೇಖಕನೆಂದೂ ಪರಿಚಯ ಮಾಡಿಕೊಟ್ಟ. ಡ್ರೈವರನಿಗೆ ಕನ್ನಡ ಲೇಖಕರ ಹೆಸರುಗಳಾವುವೂ ಗೊತ್ತಿರಲಿಲ್ಲ. ಆದರೂ ಗೌರವದ ಭಾವನೆಯನ್ನು ಮೋರೆಯ ಮೇಲೆ ಬೆಳಗಿಸಿ ನೋಡುತ್ತಿದ್ದಾಗ ತಾನು ಆಗ ಕಾರಿಕೊಂಡದ್ದು ಸಾರಾಯಿಯಲ್ಲ ಎನ್ನುತ್ತಿರುವಾಗಲೇ ಡ್ರೈವರ್ ಸಂಕೋಚದ ಮುದ್ದೆಯಾಗಿ, ಕ್ಷಮೆ ಬೇಡುವ ದನಿಯಲ್ಲಿ_”ನನಗೆ ಈಗ ಗೊತ್ತಾಯಿತು ಸರ್, ಮರೆತುಬಿಡಿ,” ಎಂದ. ತಾನು ಕನ್ನಡದಲ್ಲಿ ಬರೆಯುತ್ತಿದ್ದದ್ದೇನು ಎನ್ನುವುದನ್ನು ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ಕಾರಿಕೊಳ್ಳುವಂತಾಯಿತು. ಈ ಹೊತ್ತಿಗೆ ಹೊಟ್ಟೆಯಲ್ಲ ಖಾಲಿಯಾದ್ದರಿಂದ ಓಕರಿಕೆಯ ಸದ್ದೇ ದೊಡ್ಡದಾಯಿತು : ಆಹಾರದಲ್ಲಿ ಏನನ್ನಾದರೂ ಬೆರೆಸಿದರೋ ಏನೋ ಎನ್ನುವಂತಹ ಅನುಮಾನ ಪ್ರಕಟಿಸಿದ ಡ್ರೈವರನಿಗೆ ಆದದ್ದಾದರೂ ಏನು ಎಂದು ಹೇಳೋಣವೆಂದರೆ ತುಟಿಗಳು ನಡುಗಹತ್ತಿದವು. ಆದರೆ ಕೆಲ ಸಮಯದ ನಂತರ, ‘ಓಕರಿಕೆಗೆ ಕಾರಣವಾದದ್ದು ಸತ್ಯದ ಅಜೀರ್ಣ’ ಎನ್ನಬೇಕೆಂದೆನಿಸಿತು. ಟ್ಯಾಕ್ಸಿಯವನಿಗೆ ಅರ್ಥವಾಗಲಿಕ್ಕಿಲ್ಲ ಎಂದು ಸುಮ್ಮನಾದ. ಆದರೆ ಅಜೀರ್ಣದ ನೆನಪಿನಿಂದ ನೆನಪಿಗೆ ಬಂದದ್ದು ಇನ್ನೊಮ್ಮೆ ಟ್ಯಾಕ್ಸಿಯನ್ನು ರಸ್ತೆಯ ಬದಿಗೆಳೆಯುವಂತೆ ಕೇಳಿಕೊಳ್ಳಲು ಕಾರಣವಾಯಿತು : ನಿಲ್ಲಿಸಲು ಹೇಳಿದ ಜಾಗದ ಸಮೀಪ ಪೋಲೀಸ್ ಕಾನ್ಸ್ಟೇಬಲ್ ನಿಂತದ್ದರಿಂದ ಯಾವ ಲಫಡಾದಲ್ಲೂ ಸಿಕ್ಕಿಕೊಳ್ಳುವ ಧೈರ್ಯವಿಲ್ಲದ ಟ್ಯಾಕ್ಸೀವಾಲಾ ತುಸು ಮುಂದೆ ಹೋಗಿ ವಾಹನ ನಿಲ್ಲಿಸಿದ. ಒಳಗಿನದೇನೂ ಹೊರಗೆ ಬರದಿದ್ದರೂ ಓಕರಿಕೆಯ ಒತ್ತಡಕ್ಕೆ ಹೊಟ್ಟೆ ನೋಯಹತ್ತಿತು : ಗಂಟಲು ಉರಿಯಹತ್ತಿತು : ಡಾಕ್ಟರ ಕಡೆಯಿಂದ ಚಿಟಿಣi-sಠಿಚಿsmoಜiಛಿ ಇಂಜೆಕ್ಷನ್ ಆಗಲಿ ಗುಳಿಗೆಯಾಗಲೀ ತೆಗೆದುಕೊಂಡರೆ ಹೇಗೆ ಎಂಬ ವಿಚಾರ ಬಂದು ಕೈಗಡಿಯಾರ ನೋಡಿಕೊಂಡ_ಒಂದೂವರೆ ಗಂಟೆ ! ಇಷ್ಟು ಹೊತ್ತಿಗೆ ಆಗಲೇ ಊಟ ಮುಗಿಸಿ ಗಡದ್ದಾಗಿ ನಿದ್ದೆ ಮಾಡಬಹುದಾಗಿತ್ತು ಎಂಬ ವಿಚಾರದ ಹಿಂದೆಯೇ ಊಟ ತಪ್ಪಿದ್ದರ ಕಾರಣ ನೆನಪಿಗೆ…..ಬರಲು ತಡವಾಗಲಿಲ್ಲ. ಈ ಸರತಿ ಟ್ಯಾಕ್ಸಿಯನ್ನು ನಿಲ್ಲಿಸೆಂದು ಹೇಳುವ ಪುರುಸೊತ್ತೂ ಇರಲಿಲ್ಲ. ಅಬ್ಬಾ! ಹೊಟ್ಟೆಯಲ್ಲಿ ಇಷ್ಟೊಂದು ನೀರು ಹೇಗೋ….ಟ್ಯಾಕ್ಸಿಯವನು ವಾಹನವನ್ನು ತಿರುಗಿ ಬದಿಗೆಳೆದ. ಇವನ ಅವಸ್ಥೆ ಈಗ ನಿಜಕ್ಕೂ ಚಿಂತೆಗೆ ಕಾರಣವಾಯಿತು. ಕನ್ನಡ ನಾಡಿನವನೆಂದು ಈಗ ಗೊತ್ತಾದ್ದರಿಂದ ಹುಟ್ಟಿದ ಒಂದು ಬಗೆಯ ಆತ್ಮೀಯತೆಯೂ ಈಗ ಈ ಚಿಂತೆಗೆ ಇನ್ನಷ್ಟು ಪುಟಕೊಟ್ಟಿತು. +“ಸರ್… ನೀವು ತಪ್ಪು ತಿಳಿಯದಿದ್ದರೆ…. ಇಲ್ಲೇ ವರ್ಲೀ ನಾಕಾದಲ್ಲಿ ಡಾ. ಶೆಟ್ಟಿ ಅಂತ ಇದ್ದಾರೆ. ದವಾಖಾನೆಯ ಮೇಲ್ಗಡೆಯಲ್ಲೇ ಮನೆ. ನಮ್ಮ ಕಡೆಯವರೇ….” +ಟ್ಯಾಕ್ಸಿಯವನ ಸೂಚನೆಗೆ ಸನ್ನೆಯಿಂದಲೇ ಒಪ್ಪಿಗೆ ವ್ಯಕ್ತಪಡಿಸಿದ : ಮಾತನಾಡುವ, ಸರಿಯಾಗಿ ಕೂಡ್ರುವ ತಾಕತ್ತೂ ಇಲ್ಲದೇ ಸೀಟಿನಲ್ಲಿ ಮೈಮುದುಡಿ ಬಿದ್ದುಕೊಂಡ. ಹೊಟ್ಟೆಯಲ್ಲಿ ಒಂದು ಬಗೆಯ ನಡುಕ-ಚಳಿ ಹತ್ತಿದ ರೀತಿ ! +ಡಾ. ಶೆಟ್ಟಿಯವರು ಇನ್ನೂ ದವಾಖಾನೆಯಲ್ಲೇ ಇದ್ದರು. ದವಾಖಾನೆ ರಸ್ತೆಯ ಬಲದ ಅಂಚಿನಲ್ಲಿತ್ತು. ಡ್ರೈವರ್ ಮುಂದಿನ ಕೂಟಸ್ಥಾನಕ್ಕೆಹೋಗಿ ಯೂ-ಟರ್ನ್ ಮಾಡಿ ರಸ್ತೆಯ ಇನ್ನೊಂದು ಅಂಚಿಗೆ ಬಂದು ವಾಹನವನ್ನು ಸರಿಯಾಗಿ ದವಾಖಾನೆಯ ಇದಿರಿಗೇ ನಿಲ್ಲಿಸಿದ. ತಾನೇ ಮೊದಲು ಇಳಿದು ಓಡೋಡಿ ಹೋಗಿ ಡಾಕ್ಟರರನ್ನು ಕಂಡು ವರದಿ ಕೊಟ್ಟು ಬಂದ. ಡಾಕ್ಟರರ ಮೋರೆ ಕಂಡದ್ದೇ ತ್ರಾಣ ಬಂದವನ ಹಾಗೆ ಟ್ಯಾಕ್ಸಿಯಿಂದ ಇಳಿದು ದವಾಖಾನೆಯತ್ತ ನಡೆಯಹತ್ತಿದ. ಫುಟ್‌ಪಾಥಿನ ಮೇಲೆ ಒಮ್ಮೆ ಜೋಲಿ ತಪ್ಪಿ ಮುಗ್ಗರಿಸಿ ಬೀಳುವಂತಾಯಿತು. ಅಷ್ಟೇ ಡಾಕ್ಟರರ ಹೆಸರೇ ಅವರು ಕನ್ನಡದವರೆಂದು ಸಾರುತ್ತಿತ್ತು. ಟ್ಯಾಕ್ಸೀವಾಲಾ ಕೂಡಾ ಹಾಗೇ ಹೇಳಿದ್ದ. +“ನನಗೇನೂ ಆಗಿಲ್ಲ, ಡಾಕ್ಟರರೇ. Psಥಿಛಿhosomಚಿಣiಛಿ ಕಂಪ್ಲೇಂಟು. ಹೇಳಲಿಕ್ಕೆ ಹೋದರೆ ಮತ್ತೆಲ್ಲಿ ವಾಂತಿಯಾದೀತೆಂಬ ಭಯ ; ಮಾತು ಮಾಡಬಹುದಾದದ್ದನ್ನು ಹೊಟ್ಟೆಯೇ ಮಾಡಲಿಕ್ಕೆ ಹತ್ತಿದೆಯೆಂದು ತೋರುತ್ತದೆ. ಏನಾದರೂ ಏಂಟೀ-ಸ್ಟೆಸ್ಮಾಡಿಕ್…” +“ಓಹೋಹೋ !….ಮಾತು ಆರಂಭಿಸಿದಾಗ ಸೈಕಾಲಾಜಿಯ ವಿದ್ಯಾರ್ಥಿ ಎಂದುಕೊಂಡಿದ್ದೆ. ವೈದ್ಯಕೀಯದಲ್ಲಿಯೂ….?” ಡಾಕ್ಟರರು ನಗುತ್ತ ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ಅವನ ನಾಲಗೆ, ಹೊಟ್ಟೆ, ನಾಡಿಗಳ ಪರೀಕ್ಷೆ ನಡೆಸಿದಾಗ, ಟ್ಯಾಕ್ಸೀವಾಲಾ_”ಕನ್ನಡದಲ್ಲಿ ದೊಡ್ಡ ಲೇಖಕರೂ ಅಂತೆ. ಡಾಕ್ಟರರೇ,” ಎಂಬ ಮಾತು ಜೋಡಿಸಿದ. ಡಾಕ್ಟರರು ಇಂಜೆಕ್ಷನ್ ಕೊಡುವ ತಯಾರಿ ಮಾಡುತ್ತ ತುಂಬ ಅಭಿಮಾನದಿಂದ_”ಹೌದೆ ? ಏನು ಬರೆಯುತ್ತೀರೋ ?” ನಾಗಪ್ಪನಿಗೆ ಮತ್ತೆ ಓಕರಿಕೆ ಬರುತ್ತಿದ್ದುದನ್ನು ನೋಡಿ ಕಂಪೌಂಡರ್ ಎಲ್ಯೂಮಿನಿಯಮ್ ಬಟ್ಟಲು ತಂದ. ಡಾಕ್ಟರ್ ಹೆಚ್ಚು ಮಾತನಾಡಿಸಲು ಹೋಗದೇ ಇಂಜೆಕ್ಷನ್ ಚುಚ್ಚಿದರು. ಕೆಲವು ಗುಳಿಗೆಗಳನ್ನು ಕೊಟ್ಟು-“ಮನೆಗೆ ಹೋಗಿ ಸ್ವಸ್ಥ ನಿದ್ದೆಮಾಡಿರಿ. ಇನ್ನೂ ತೊಂದರೆಯಾದರೆ ಸಂಜೆ ಬಂದು ಕಾಣಿರಿ,” ಎಂದು ಬೀಳ್ಕೊಟ್ಟರು. +ಇಂಜೆಕ್ಷನ್ನಿನ ಪರಿಣಾಮ ಆಗಹತ್ತಿದಂತೆ ಹೊಟ್ಟೆಯ ಜೊತೆಗೆ ಕಣ್ಣಿಗೂ ನಿದ್ದೆ ಬರುತ್ತಿದ್ದಂತೆ ತೋರಿತು. ಖೇತವಾಡಿಯ ೭ನೇ ಗಲ್ಲಿಗೆ ಬಂದ ನಂತರವೇ ತನಗೆ ಹತ್ತಿದ ಜೋಂಪಿನಿಂದ ಎಚ್ಚೆತ್ತ. ಖೇಮರಾಜಭವನಕ್ಕೆ ಬಂದು, ಟ್ಯಾಕ್ಸಿಯವನನ್ನು ಆಭಾರ ಮನ್ನಿಸಿ ಬೀಳ್ಕೊಟ್ಟು, ನಿಚ್ಚಣಿಕೆಯ ಮೆಟ್ಟಿಲುಗಳನ್ನೇರಿ ಮೂರನೇ ಮಜಲೆಯ ಕಡೆಗೆ ಹೋಗುತ್ತಿದ್ದದ್ದು ನೆನಪಿದೆ. ಆದರೆ ಆ ಮುಂದಿನದೆಲ್ಲ ಎಂದೋ ಕಂಡ ಕನಸಿನ ಛಾಯೆಯೆಂದು : ಅಷ್ಟೊಂದು ನಿತ್ರಾಣನಾಗಿದ್ದರೂ ಹಿಂದೆ ಯಾವುದೋ ವಿಚಿತ್ರ ಗಳಿಗೆಯಲ್ಲಿ ಎಣಿಸಿನೋಡಿದಂತಹ ೩೯ ಪಾವಟಿಗೆಗಳನ್ನು ಹೇಗೆ ಹತ್ತಿ ಹೋದೆ ? ಬೂಟು-ಚಪ್ಪಲಿಗಳಿಲ್ಲದೇನೇ ರೂಮಿನತ್ತ ಹೆಜ್ಜೆ ಇಡುತ್ತಿದ್ದಾಗ ಯಾರಾದರೂ ನೋಡಿದರೇ ? ತನ್ನ ವೇಷಭೂಷಣಗಳನ್ನು ನೋಡಿ ಆಶ್ಚರ್ಯಪಟ್ಟರೇ ? ಕೋಣೆಯ ಬೀಗ ತೆರೆದದ್ದು, ಹಾಸಿಗೆ ಸೇರಿದ್ದು ಈ ಯಾವ ವಿವರಗಳ ನೆನಪೂ ಇಲ್ಲ : ಗಾಢ ನಿದ್ದೆಯಿಂದ ಎಚ್ಚರಗೊಂಡವನ ಹಾಗೆ ಹಾಸಿಗೆಯಲ್ಲಿ ಎದ್ದು ಕುಳಿತು ಗಡಿಯಾರ ನೋಡಿಕೊಂಡಾಗ ಸಂಜೆಯ ಐದು ಗಂಟೆ! ಗಂಟೆ ನೋಡಿಕೊಂಡದ್ದೇ ತಟ್ಟನೆ ಅರಿವನ್ನು ತಟ್ಟಿದ ಸಂಗತಿ : ಹೊಟ್ಟೆ ಹಸಿದಿದೆಯೆಂಬುದು, ಹಾಸಿಗೆಯಿಂದ ಎದ್ದಾಗ ಕಾಲುಗಳು ಗಡಗಡ ನಡುಗಿದವು. ನಾಗಂದಿಗೆಯ ಮೇಲಿಂದ ಡಬ್ಬಿಯೊಂದನ್ನು ಪ್ರಯಾಸಪಟ್ಟು ಕೆಳಗಿಳಿಸಿ ಮುಚ್ಚಳ ತೆರೆದರೆ ಎಂದೋ ತಂದಿರಿಸಿದ ಪ್ರಿಟಾನಿಯಾ ಬಿಸ್ಕೀಟುಗಳಲ್ಲಿ ಮೂರು ಹೇಗೋ ತಪ್ಪಿ ಉಳಿದಿದ್ದವು. ಮೂರನ್ನೂ ಹಪಾಪಿಯಂತೆ ಒಂದೇ ಕ್ಷಣದಲ್ಲಿ ಫಸ್ತುಮಾಡಿದ. ಹಣ್ಣುಗಳನ್ನಿಡುತ್ತಿದ್ದ ಸರಿಗೆಯ ತೂಗು-ಬುಟ್ಟಿಯಲ್ಲಿ ನೋಡಿದರೆ ಒಂದೇ ಒಂದು ಬಾಳೆಹಣ್ಣು ಇತ್ತು. ತೆಗೆದು ತಿಂದ. ಮಣ್ಣಿನ ಹೂಜೆಯಲ್ಲಿ ನೀರು ತುಂಬಲು ಮರೆತದ್ದರಿಂದ ನೇರವಾಗಿ ನಲ್ಲಿಯಿಂದ ನೀರನ್ನು ಗ್ಲಾಸಿನಲ್ಲಿ ತುಂಬಿ ಕುಡಿದ. ತುಸು ಸಮಾಧಾನವೆನಿಸಿತು. ಇನ್ನೂ ಕೆಲಹೊತ್ತಿನ ಮೇಲೆ ಕೆಳಗಿನ ಉಡುಪೀ ರೆಸ್ಟೋರೆಂಟಿಗೆ ಹೋಗಿ ಏನಾದರೂ ತಿಂದು ಚಹ ಕುಡಿದು ಬಂದರಾಯಿತು ಎಂದುಕೊಂಡು ಒಂದು ಬಗೆಯ ಆಲಸ್ಯದಿಂದೆಂಬಂತೆ ತಿರುಗಿ ಹಾಸಿಗೆಗೆ ಮೈ ಚಾಚಿದ್ದೇ ತಡ. ಈ ಒಂದು ಕ್ಷಣಕ್ಕಾಗಿಯೇ ಕಾದು ನಿಂತಂತಿದ್ದ ಅರಿವೊಂದು ಮೂಡಿಬಂದ ರಭಸಕ್ಕೆ ನಾಗಪ್ಪ ತತ್ತರಿಸಿ ಬೆವರಹತ್ತಿದ : ಈ ಬೋಳೀಮಗ ಶ್ರೀನಿವಾಸ_ನಾಡೂ ಮಾಸ್ಕೇರಿಯ ಪದ್ಮನಾಭ ನಾರಾಯಣ ಕೇಣಿ ಅವರ ತೊಡೆಗಳ ನಡುವೆ ಜೋತಾಡುತ್ತಿದ್ದುದರ ತೆವಲಿಗೆ ನಿರುದ್ದಿಶ್ಯನಾಗಿ ಹುಟ್ಟಿದ ಹಡಬಿಟ್ಟೀ ಶ್ರೀನಿವಾಸ_ಈಗ ಕೆಂಪು ಸೀರೆ ಸುತ್ತಿಕೊಂಡ ನಿರ್ಜೀವ ಮುದ್ದೆಯಾಗಿಯೂ ಒಂದು ಕಾಲಕ್ಕೆ ಜಿದ್ದಿನ ಪ್ರತಿರೂಪವಾದ ಪದ್ದಕ್ಕನ ಮಗನಾಗಿ ಶೋಭಿಸುವ ಛಲದ ಶ್ರೀನಿವಾಸ_ತಾನೆಂದೂ ಬಡತನವನ್ನು ನೋಡಿಯೇ ಇರಲಿಲ್ಲ ಎಂಬಂತೆ ಈಗ ಬದುಕುತ್ತ ಆಗಿನದೆಲ್ಲವನ್ನೂ ಮರೆಯಲು ಹೋರಾಟ ನಡೆಸಿದ ಶ್ರೀನಿವಾಸ_ಅಪ್ಪನ ಶ್ರಾದ್ದಕ್ಕೆ ಕೂತಾಗ, ಅಪ್ಪನಿಗೆ ರಾತ್ರೆ ನಿದ್ದೆ ಬೀಳದ ಬೇಸರಕ್ಕೆ ಹುಟ್ಟಿದ ಮಕ್ಕಳಲ್ಲವೇ ನಾವು ?_ಎಂದು ಪುರೋಹಿತರ ಜತೆ ಮಾತನಾಡಿದ ಹಲ್ಕಟ್‌ಬಾಯ ಶ್ರೀನಿವಾಸ_ತನ್ನದರ ಪ್ರತಾಪ ಪರೀಕ್ಷಿಸಲು ನೇತ್ರಾವತಿಯನ್ನು ಬಲಿಕೊಟ್ಟ ಶ್ರೀನಿವಾಸ_ಶ್ರೀಮಂತಿಕೆಯ ನಿಚ್ಚಣಿಕೆಯನ್ನೇರಲೆಂದೇ ಕೌಮಾರ್ಯ ಕಳಕೊಂಡವಳನ್ನು ಮದುವೆಯಾಗಿಯೂ ಹೀರೋ ಆಗಿ ಮೆರೆದ ಶ್ರೀನಿವಾಸ_ಫಿರೋಜನೊಡನೆ ಕೂಡಿ ಪಿತೂರಿ ಮಾಡುತ್ತಿರುವ ಶ್ರೀನಿವಾಸ_ನನ್ನನ್ನು ಶಿಕಾರಿಯಾಡುತ್ತಿರುವ ಶ್ರೀನಿವಾಸ_ಸಾರಸ್ವತ ಸಮಾಜದ ಒಬ್ಬ ಗಣ್ಯವ್ಯಕ್ತಿಯಾಗಲು ಹೊರಟ ಶ್ರೀನಿವಾಸ_ರಾತೋರಾತ್ ತನ್ನ ಹಿಂದಿನದೆಲ್ಲವನ್ನೂ ಮರೆಯಲು ಹೊರಟ ಶ್ರೀನಿವಾಸ_ಮರೆಸಲು ಹೊರಟ ಶ್ರೀನಿವಾಸ_ತನ್ನ ಬಗ್ಗೆ ಕಾದಂಬರಿ ಬರೀಬೇಡಾ ಎಂದ ಶ್ರೀನಿವಾಸ_ಕಾಲು ಹಿಡಿದ ಶ್ರೀನಿವಾಸ_ಬೇಕಾದ್ದನ್ನು ಕೇಳು ಎಂದ ಶ್ರೀನಿವಾಸ_ಬೇಕಾದರೆ ಹಣ_ಬೇಕಾದರೆ ಶಾರದೆ… +ನಾಗಪ್ಪನಿಗೆ ಹಾಸಿಗೆಯಲ್ಲಿ ಬಿದ್ದದ್ದೇ ಮತ್ತೆ ವಾಂತಿಯಾಗುವ ಭಯವಾಗಿ ಮೋರಿಗೆ ಓಡಿದ.uಟಿಜeಜಿiಟಿeಜ- ಅಧ್ಯಾಯ ಮೂವತ್ತೆರಡು – +ನಾಗಪ್ಪನಿಗೆ ತಾನು ಎಚ್ಚರಗೊಂಡದ್ದು ನಿದ್ದೆಯಿಂದಲೋ ಮೂರ್ಛೆಯಿಂದಲೋ ಎಂಬುದು ಥಟ್ಟನೆ ತಿಳಿಯಲಿಲ್ಲ. ಹಾಸಿಗೆಯಿಂದ ಎದ್ದು ಕುರ್ಚಿಯಲ್ಲಿ ಕೂತಾಗ ಯೋಚಿಸುವ, ನೆನಸುವ, ಧೇನಿಸುವ ಸಾಮರ್ಥ್ಯವನ್ನೇ ಕಳಕೊಂಡಂತೆ ಮನಸ್ಸು ಸುನ್ನವಾಗಿತ್ತು. ಕೈಕಾಲುಗಳೆಲ್ಲ, ತಿಂಗಳುಗಟ್ಟಲೆ ಬೇನೆ ಬಿದ್ದವನ ಹಾಗೆ, ನಿತ್ರಾಣವಾಗಿದ್ದವು ಕೋಣೆಯೊಳಗಿನ ಬೆಳಕನ್ನು ನೋಡಿ ಹೊತ್ತು ಎಷ್ಟಾಗಿದೆಯೆಂದು ಗೊತ್ತುಹಿಡಿಯುವುದು ಕೂಡ ಕಷ್ಟಕರವಾಯಿತು. ಕೈಗಡಿಯಾರ ನೋಡಿಕೊಳ್ಳೋಣವೆಂದರೆ ಅದರ ಮೋರೆಯೇ ಸರಿಯಾಗಿ ಕಾಣದಾಯಿತು. ಹೊತ್ತು ಹೋದ ಹಾಗೆ ಮೆಲ್ಲನೆ ನೆನಪಿಗೆ ಬರಹತ್ತಿತು : ಹಾಸಿಗೆಯ ಮೇಲೆ ಅಡ್ಡವಾಗುವ ಮೊದಲಷ್ಟೇ ಡಾಕ್ಟರರು ಕೊಟ್ಟ ಗುಳಿಗೆಗಳಲ್ಲೊಂದನ್ನು ನುಂಗಿದ್ದು. ಅದರಲ್ಲಿ ಗುಂಗಿಯ ಔಷಧಿಯೂ ಇದೆಯೆಂದೂ ತೋರುತ್ತದೆ. ಹೇವರಿಸುವ ಹೊಟ್ಟೆಯೊಂದಿಗೆ ವಿಚಾರ-ಶಕ್ತಿಯ ಮೇಲೂ ಪರಿಣಾಮ ಮಾಡಿರಬೇಕು. ಯಾವುದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವ ಶಕ್ತಿಯೇ ಒಸರಿಹೋದಂತೆ ತೋರಿತು. ಡಾಕ್ಟರರ ಗುಳಿಗೆಯ ನೆನಪಿನಿಂದ ಅದಕ್ಕೆ ಕಾರಣವಾದ ಓಕರಿಕೆ, ಅದಕ್ಕೆ ಕಾರಣವಾದ_ಶತಸಹಸ್ರ ಬೈಗುಳಗಳನ್ನು ತಿಂದ_ಶ್ರೀನಿವಾಸ, ಅವನಾಡಿದ ಮಾತುಗಳು, ಎಲ್ಲವೂ ನೆನಪನ್ನು ತಟ್ಟಿಹೋದರೂ ದೇಹವಾಗಲೀ ಮನಸ್ಸಾಗಲೀ ಯಾವುದೇ ರೀತಿಯಿಂದ ಪ್ರತೀಕಾರ ತೋರಿಸಲಿಲ್ಲ. ಇನ್ನೂ ಕೆಲ ಹೊತ್ತಿನ ಮೇಲೆ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತ ಅನ್ನಿಸಿಕೆಯೊಂದೇ : ಹೊಟ್ಟೆ ಅತೀವ ಹಸಿದಿದೆ_ರೆಸ್ಟೋರೆಂಟಿಗೆ ಹೋಗಿ ಏನಾದರೂ ತಿಂದು ಬರಬೇಕು…. +ಈ ನಿರ್ಧಾರದಿಂದಲೇ ಬುದ್ದಿ ಚುರುಕುಗೊಂಡಿತೆಂಬಂತೆ ತಕ್ಷಣ ಕುರ್ಚಿಯಿಂದ ಎದ್ದ. ಈ ನಿರ್ಧಾರ ಬದಲಿಸುವ ಮೊದಲೇ ಕೋಣೆಯ ಹೊರಗೆ ಬೀಳಬೇಕು ಎಂಬ ತರಾತುರಿಯಿಂದೆಂಬಂತೆ ಭರಭರ ಮೋರೆ ತೊಳೆದುಕೊಂಡು_ಡ್ರೆಸ್ಸು ಬದಲಿಸಿ ಕಾಲಲ್ಲಿ ಚಪ್ಪಲಿಗಳನ್ನು ಮೆಟ್ಟಿದ. ಕದ ಮುಚ್ಚಿ ಬೀಗ ಹಾಕಿದ. ಅವಸರ ಅವಸರವಾಗಿ ಜಿನ್ನೆ ಇಳಿಸು ರಸ್ತೆಗೆ ಬಂದ. ಇಷ್ಟು ಕೂಡ ದೊಡ್ಡ ಪ್ರಯಾಸದ ಕೆಲಸವಾಗಿತ್ತೆಂಬಂತೆ ಕಾಲರಿನ ಅಡಿಯ ಕೊರಳ ಭಾಗ ಬೆವೆತಿತು. ವಿಚಾರಮಾಡುವ ಮೊದಲೇ ೬ನೇ ಗಲ್ಲಿಗೆ ಹೊರಳಿದ. ಗಲ್ಲಿಯ ಕೊನೆಯಲ್ಲಿ ಸೂರ್‍ಯಾಸ್ತದ ಕಿರಣಗಳು ಮೂಡಿಸಿದ ಅರಿಶಿಣ ಬಣ್ಣದ ಬೆಳಕಿನ ಕಲೆ ಗಡಿಯಾರ ನೋಡಿಕೊಳ್ಳುವಂತೆ ಮಾಡಿತು_ಆರೂವರೆಯಾಗಿತ್ತು. ಖೇತವಾಡೀ ಮೇನ್ ರೋಡ್ ಸೇರಿ ಪ್ರಾರ್ಥನಾ ಸಮಾಜದ ಕಡೆಗೆ ಹೊರಳಿದವನ ಹೆಜ್ಜೆಗಳು ನೇರವಾಗಿ_ವಿಧಿಯ ಕೈವಾಡದಿಂದೆಂಬಂತೆ_ಎಲ್ಲ ಬಿಟ್ಟು ಸಂತೋಷಭವನದ ಕಡೆಗೇ ಬೀಳುತ್ತಿದ್ದರೂ ನಡಿಗೆಯ ದಿಕ್ಕನ್ನು ಬದಲಿಸುವ ಗಟ್ಟಿತನ ಮನಸ್ಸಿಗೆ ಇಲ್ಲವೇ ಇಲ್ಲ ಎಂಬಂತಾಗಿತ್ತು. ಅದೂ ಸಾಲದೆಂಬಂತೆ, ಬೆನ್-ಹ್ಯಾಮ್-ಹಾಲ್-ಲೇನ್ ಸೇರುವಷ್ಟರಲ್ಲಿ ಸುತ್ತಲಿನ ವಾತಾವರಣದಲ್ಲಿ ಒಂದು ಬಗೆಯ ಅಳುಬುರುಕುತನ ಸೇರಿಕೊಂಡ್ಡುಬಿಟ್ಟಿದೆ ಅನ್ನಿಸಿ ನಾಗಪ್ಪನ ಮನಸ್ಸಿಗೂ ಅರ್ಥವಾಗದ ಹಳಹಳಿ ಮುತ್ತಿಕೊಂಡಿತು : ‘ಸಂತೋಷಭವ’ಕ್ಕೆ ಬಂದು ತನ್ನ ಎಂದಿನ ಕೋಣೆಯನ್ನು ಹೊಕ್ಕದ್ದೇ ಕಣ್ಣ ಮುಂದೆ ಧುತ್ ಎಂದು ಹಾಜರಾದ ಮಾಣಿಗೆ ಮೊತ್ತಮೊದಲು ಇತ್ತ ಆದೇಶವೆಂದರೆ ಕೋಣೆಯ ಹಿತ್ತಲ ಬದಿಯ ಕಿಡಕಿಯ ದಡಿಯ ಮೇಲಿರಿಸಿದ ಅಗರಬತ್ತಿಯನ್ನು ತೆಗೆಯಲು ಕೇಳಿಕೊಂಡದ್ದು_ತನ್ನ ಮನಸ್ಸಿನ ಹಳಹಳಿಗೆ, ವಾತಾವರಣದಲ್ಲಿಯ ಅಳುಬುರುಕುತನಕ್ಕೆ ಅವುಗಳೇ ಮೂಲವಾಗಿದ್ದವು ಎನ್ನುವಂತೆ !ರಾಯರ ಈ ಆದೇಶ ವಿಚಿತ್ರವಾಗಿ ಕಂಡಿತಾದರೂ ರಾಯರ ಬಗ್ಗೆ ತುಂಬ ಗೌರವ ಇಟ್ಟುಕೊಂಡ ಮಾಣಿ ಕೂಡಲೇ ಹೇಳಿದ ಹಾಗೇ ಮಾಡಿ ತಿರುಗಿ ಹಾಜರಾದೊಡನೆ_”ಹೇಳಿ, ಏನು ತರಲಿ ? ಉತ್ತಪ್ಪ, ವಡೆ ಹಾಗೂ ಉಷ್ಮಾ ?” ನಾಗಪ್ಪ ಮುಗುಳುನಗುತ್ತ _ “ಸೈ” ಎಂದ. “ಉಷ್ಮಾ ಮೊದಲು ತಾ_ಉತ್ತಪ್ಪ, ವಡೆ ಕಾಫಿಯ ಜೊತೆಗೆ, ಅದಕ್ಕೂ ಮೊದಲು ತಾಜಾ ಲಿಂಬೇ ಹಣ್ಣು ಸೋಡಾ ಹಾಕಿ ಶರ್ಬತ್ : ಹೊಟ್ಟೆ ಸರಿಯಿಲ್ಲ,” ಎಂದ. “ರಾಯರ ಮೋರೆ ನೋಡಿದಾಗಲೇ ಅನ್ನಿಸಿತ್ತು.” ಎನ್ನುತ್ತ ರಾಯರಿತ್ತ ಆಜ್ಞೆ ಪಾಲಿಸಲು ಅಲ್ಲಿಂದ ಹೆಜ್ಜೆ ಕಿತ್ತ. +ಕೆಲ ಹೊತ್ತಿನ ಮೇಲೆ ಮಾಣಿ, ಆ ವಾರದ ಪ್ರಜಾಮತ, ನಿನ್ನೆಯ ದಿನಾಂಕದ ಸಂಯುಕ್ತ ಕರ್ನಾಟಕ ಇವುಗಳ ಜತೆಗೆ ಶರ್ಬತ್ತಿನ ಗ್ಲಾಸ್ ತಂದು ಟೇಬಲ್ ಮೇಲೆ ಇರಿಸಿದ. ಪ್ರಜಾಮತ ಈ ಮೊದಲು ನೋಡಿದ್ದೇ ಆಗಿತ್ತು. ಆದ್ದರಿಂದ ಸಂಯುಕ್ತ ಕರ್ನಾಟಕದ ಪುಟಗಳಲ್ಲಿ ಕಣ್ಣುಹಾಯಿಸುತ್ತ ಲಿಂಬೇ ಹಣ್ಣಿನ ಶರ್ಬತ್ತು ಕುಡಿಯಹತ್ತಿದ : ಅದತ ತಂಪು, ಹುಳಿ ಬೆರೆಸಿದ ಸಿಹಿ ಹೊಟ್ಟೆಗೆ ಹಿತವೆನಿಸಿದವು. ಪಾನೀಯದೊಳಗಿನ ಸಕ್ಕರೆ ಮೆದುಳಿನ ವಿಚಾರಮಾಡುವ ತಾಕತ್ತನ್ನು ಚುರುಕುಗೊಳಿಸುತ್ತಿದೆ ಅನ್ನಿಸಿತು. ಉಷ್ಮಾ ಬಂದಿತು. ಬಹಳ ಖುಶಿಯಿಂದ ಬಾಯಿ ಚಪ್ಪರಿಸುತ್ತ ಅದನ್ನು ಮುಗಿಸಿದ. ಹಾಗೂ ಉತ್ತಪ್ಪ ವಡೆಗಳು ಬರುವ ಹಾದಿಯನ್ನೇ ಕಾಯಹತ್ತಿದ. ಅವೂ ಬಂದವು. ಕಾಫಿಯೂ ಬಂದಿತು. ಇವೇ ತಿಂಡಿಗಳನ್ನು ‘ಸಂತೋಷಭವನ’ದಲ್ಲಿ ಈಗ ಎಷ್ಟು ದಿನಗಳಿಂದ ತಿನ್ನುತ್ತ ಬಂದಿದ್ದರೂ ಇಂದು ಅವುಗಳ ರುಚಿಯೇ ಬೇರೆಯಾಗಿತ್ತು ಎಂಬಂತಹ ಖುಶಿಯಲ್ಲಿ ಮಾಣಿಗೆ ದೊಡ್ಡ ಟಿಪ್ಸ್ ಕೊಟ್ಟು ಹೊರಬಿದ್ದವನಿಗೆ ಚೌಪಾಟಿಗೆ ಹೋಗುವ ಉಮೇದು ಬಂದಿತು. ರುಚಿಕರವಾದ ತಿಂಡಿ ಕೊಟ್ಟ ಖುಶಿ ; ಬೆಳಗ್ಗಿನಿಂದಲೂ ಹಸಿದ ಹೊಟ್ಟೆ ಪಟ್ಟ ಸಂತೃಪ್ತಿಯ ಖುಶಿ ; ಚೌಪಾಟಿಗೆ ಹೋಗಬೇಕು ಎನ್ನುವ ಆತುರ ತಂದ ಖುಶಿ_ಇವುಗಳ ಹಿಡಿತದಲ್ಲಿದ್ದವನಿಗೆ ಗಲ್ಲೆಯ ಮೇಲೆ ಕೂತ ಬೃಹದಾಕಾರದ ನಾಯಕ ಕೂಡ ಲಕ್ಷ್ಯಕ್ಕೆ ಬರಲಿಲ್ಲ. ಅವನನ್ನು ಅಲ್ಲಿ ನೋಡಿ ಆಶ್ಚರ್ಯ ಪಟ್ಟ ನಾಯಕನೇ, ಮಾಣಿಯನ್ನು ಕರೆದು ಇದೀಗ ರಸ್ತೆ ಸೇರಿದವನು ನಾಗಪ್ಪನಲ್ಲವೇ ? ಎಂದು ಕೇಳಿ ಖಾತ್ರಿ ಮಾಡಿಕೊಂಡ. +ಚೌಪಾಟಿಗೆ ಹೋಗಿ ಸಮುದ್ರದಂಡೆಯ ಉಸುಕಿನಲ್ಲಿ ಕಾಲು ಚಲ್ಲಿ ಕೂತವನಿಗೆ ಸೂರ್ಯ ಎಂದೋ ಮುಳುಗಿ ದಂಡೆಯ ಮೇಲೆ ಆಗಲೇ ಮಬ್ಬುಗತ್ತಲೆ ಕವಿದದ್ದು ಲಕ್ಷ್ಯಕ್ಕೆ ಬಂದರೂ ಈ ಪರಿಸರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಎಚ್ಚರ ಮಾತ್ರ ಇದ್ದಂತೆ ತೋರಲಿಲ್ಲ. ಚಂಪೀವಾಲಾ, ಕುಲ್ಫೀವಾಲಾ, ನಾರಿಯಲ್ ಪಾಣೀವಾಲಾ, ಭೇಳ್‌ಪುರೀವಾಲಾ, ಇವರೆಲ್ಲ ತಮ್ಮ ತಮ್ಮ ಸರಕುಗಳ ಹೆಸರುಗಳನ್ನು ಕೂಗುತ್ತ ಎಬ್ಬಿಸಿದ ಗದ್ದಲ ಒಳಗೆ ನೆಲಸಹತ್ತಿದ ಪ್ರಶಾಂತತೆಗೆ ಭಂಗ ತರಲಿಲ್ಲ : ಅಪೇರಾ_ಹೌಸದ ಆಸುಪಾಸಿನ ಬೆಲೆವೆಣ್ಣುಗಳ ಏಜೆಂಟರು ಆಗೀಗ ಕೊಡುತ್ತಿದ್ದ ಕಿರುಕುಳ ಕೂಡ ಕಾಡಲಿಲ್ಲ. ಇದು ಯುದ್ಧದ ಕೊನೆಯಲ್ಲಿ ಬರುವ ಶಾಂತಿಯೋ ಅದರ ಪೂರ್ವದ್ದೋ ಎನ್ನುವ ಕುತೂಹಲವೂ ತಟ್ಟಲಿಲ್ಲ. ನಾಳೆ : ತಾನು ಇಷ್ಟು ದಿನ ಪಡುತ್ತ ಬಂದ ಯಾತನೆಯ ಕೊನೆ ! ಯಾಕೆಂದರೆ ತಾನೇ ಇದನ್ನೆಲ್ಲ ಕೊನೆಗೊಳಿಸಬೇಕೆಂದು ನಿಶ್ಚಯಿಸಿದ್ದೇನೆ. ನಾಳೆಯ ಮುಖಾಮುಖಿಯ ಬಗ್ಗೆ ತನಗೀಗ ಯಾವುದೇ ಬಗೆಯ ಉದ್ವೇಗವೂ ಇಲ್ಲ ಎಂಬುದರ ಅರಿವು ಇದ್ದೂ ಅದರ ಬಗ್ಗೆ ಆಶ್ಚರ್ಯವೆನ್ನಿಸಲಿಲ್ಲ. ಬೆಳಿಗ್ಗೆ ಶ್ರೀನಿವಾಸನ ಮನೆಯಲ್ಲಿ ಬಂದ ಅನುಭವ ಈ ನಿಶ್ಚಲತೆಗೆ ಕಾರಣವಾಗಿದ್ದೂ ಈ ಕಾರಣದ ಬಗ್ಗೆ ಕೂಡ ವಿಚಾರಮಾಡುವ ಆತುರ ತೋರಲಿಲ್ಲ. ನಾಗಪ್ಪನಿಗೆ ಈ ಕ್ಷಣಕ್ಕೆ ಮಹತ್ವದ್ದೆಂದು ತೋರಿದ್ದು ಒಳಗಿನ ನಿರ್ಭಯತೆಯೇ : ಭೂತಕಾಲಕ್ಕಾಗಲೀ, ಇನ್ನೂ ಕಂಡಿರದ ಭವಿಷ್ಯತ್ತಿಗಾಗಲೀ ಕೈಚಾಚಿ ವೃಥಾ ಬಳಲುವುದನ್ನು ಬಿಟ್ಟುಕೊಟ್ಟು ತನ್ನೆಲ್ಲ ಶಕ್ತಿಗಳನ್ನು ಇದೀಗಿನ ಈ ಒಂದು ಕ್ಷಣದ ಮೇಲೇ ಏಕಾಗ್ರಗೊಳಿಸಿದಾಗ ಹುಟ್ಟಿದ ಪ್ರಚಂಡ ಆತ್ಮವಿಶ್ವಾಸ ! ಇದನ್ನು ಮತ್ತೆ ಎಂದಿಗೂ ಸಡಿಲಗೊಳ್ಳಲು ಬಿಡಬಾರದು. ವಾಂತಿಯ ರೂಪದಲ್ಲಿ ಆಗ ತಾನು ನಿಷೇಧ ವ್ಯಕ್ತಪಡಿಸಿದ್ದು ಶ್ರೀನಿವಾಸ ಅನೂಹ್ಯವಾದ ರೀತಿಯಲ್ಲಿ ಕಣ್ತೆರೆಯಿಸಿದಾಗ ಕಂಡಂಥ ನಿಷ್ಠುರವಾದ, ಬೀಭತ್ಸವಾದ ವಾಸ್ತವತೆಗಷ್ಟೇ ಅಲ್ಲವಾಗಿತ್ತು. ಇಲ್ಲದ ಆಸೆ ಅಪೇಕ್ಷೆಗಳಿಗೆ ಕಟ್ಟುಬಿದ್ದುದರಿಂದಲೇ ಹೆದರಿಸುತ್ತಿದ್ದ ಭೂತಕಾಲಕ್ಕೂ ಆಗಿತ್ತು. ಅಮಿಷವೊಡ್ಡಿ ವಿಲಿವಿಲಿ ಒದ್ದಾಡಿಸುತ್ತಿದ್ದ ಭವಿಷ್ಯತ್ತಿಗೂ ಆಗಿತ್ತು…. +ನಾಗಪ್ಪ ಕೂತಲ್ಲೇ ಅಂಗತ್ತನಾಗಿ ತಂಪು ಉಸುಕಿನಲ್ಲಿ ಬೆನ್ನು ಚಾಚಿದ. ಮೇಲಿನ ನಿರಭ್ರವಾದ ನೀಲಿ ಆಕಾಶದಲ್ಲಿ ಕಣ್ಣು ನೆಟ್ಟು ಕೂತ. ಯಾವುದನ್ನೂ ಕುರಿತು ವಿಚಾರಮಾಡಲು ನಿರಾಕರಿಸುತ್ತ ಖಾಲಿಯಾದ ಮನಸ್ಸು ಸುತ್ತಲಿನ ಸದ್ದುಗದ್ದಲಕ್ಕೆ ಕಿವಿ ಮುಚ್ಚಿತ್ತು. ಮೇಲಿನ ಆಕಾಶವನ್ನು ಎಷ್ಟೊಂದು ಏಕಾಗ್ರತೆಯಿಂದ ವೀಕ್ಷಿಸುತ್ತಿದ್ದನೆಂದರೆ ತಾನು ಕ್ರಮೇಣ ಅದರಲ್ಲಿ ಕರಗಿ ಹೋಗುತ್ತಿದ್ದೇನೆಂಬಂತಹ ಅನುಭಾವಿಯ ಅನುಭವ ! ಬೆಚ್ಚಿಬಿದ್ದವನಂತೆ ಎದ್ದ. ದೂರದಲ್ಲಿ ಪರಿಚಯದ ಕ್ಲಾಕ್‌ಟಾವರ್ ಎಂಟು ಗಂಟೆಯ ದನಿ ಮೊಳಗಿಸಿತು : ಯಾವುದೇ ರೀತಿಯಿಂದ ಭಾವುಕನಾಗದೇ ಎದ್ದ. ಊಟ ಮಾಡುವಷ್ಟು ಹಸಿವೆ ಇರಲಿಲ್ಲ. ಭೈಯಾನ ಅಂಗಡಿಯಲ್ಲಿ ಗ್ಲಾಸು ತುಂಬ ಕೆನೆ ತೇಲುವ ಹಾಲು ಕುಡಿದರಾಯಿತು ಎಂದುಕೊಂಡು ಮನೆಯ ಕಡೆಗೆ ಹೆಜ್ಜೆ ಇಡಹತ್ತಿದ…. +ಭೈಯಾನಲ್ಲಿ ಹಾಲು ಕುಡಿದು ಮನೆಗೆ ಹೋಗುವ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಅರಿವು ಮೂಡಹತ್ತಿತು : ತಾನು ಸಂಜೆ ಕೋಣೆಯಿಂದ ಹೊಬೀಳುವಾಗ ಶಿಂಪಿಯವರ ಮನೆಗೆ ಇನ್ನೂ ಬೀಗವಿತ್ತು. ಅರ್ಜುನ್‌ರಾವರ ತಾತಿ ತಾನು ತನ್ನ ಕೋಣೆಗೆ ಬೀಗ ಹಾಕುವಾಗ_ತನ್ನ ಹತ್ತಿರ ಏನೋ ಮಾತನಾಡುವ ಕುತೂಹಲದಿಂದೆಂಬಂತೆ_ತನ್ನ ಕಡೆಗೇ ನೋಡುತ್ತ ಬಾಗಿಲಲ್ಲಿ ನಿಂತದ್ದನ್ನು ನೋಡಿಯೂ ತಾನು ಅವಳತ್ತ ಲಕ್ಷ್ಯ ಕೊಡದೇ ಸೀದ ಜಿನ್ನೆಯ ಕಡೆಗೆ ಹೆಜ್ಜೆ ಇಟ್ಟಿದ್ದೆ ಎನ್ನುವದು ನೆನಪಾಯಿತು. ಶಿಂಪಿಯವರ ಮನೆಗೆ ಈಗಲೂ ಬೀಗವಿತ್ತು ! +ಮನೆಯ ಕದ ತೆರೆದು ದೀಪ ಹಾಕಿದಾಗ, ಕದದ ಸಮೀಪ ಪತ್ರ ಬಿದ್ದದ್ದು ಕಂಡುಬಂತು. ಇಂದು ರವಿವಾರ_ಪೋಸ್ಟಲ್ ಡೆಲಿವರಿ ಇಲ್ಲ. ಯಾರೋ ಖುದ್ದು ಬಂದು ಒಳಗೆ ತೂರಿ ಹೋಗಿರಬೇಕು. ಪತ್ರವನ್ನು ತೆರೆದು ಓದಿನೋಡಿ_ಔh ! ಊeಟಟ ಎಂದ. ತನಿಖೆಯನ್ನು ನಾಳೆ_ಸೋಮವಾರದ_ಬದಲು ಮಂಗಳವಾರಕ್ಕೆ ಮುಂದೂಡಲಾಗಿತ್ತು ! ಇದು, ಈ ತನಿಖೆಯ ಆಯೋಗವನ್ನು ಇದಿರಿಸುವ ತನ್ನ ಮನೋಧೈರ್ಯವನ್ನು ಮುರಿಯುವ ಹಂಚಿಕೆ ಎಂದು ತಿಳಿದ ನಾಗಪ್ಪ ಮನಸ್ಸನ್ನು ತಿರುಗಿ ಕ್ಷೋಭೆಗೆ ಒಳಗಾಗಲು ಬಿಡದೇ_ಅಡ್ಡಿಯಿಲ್ಲ. ಮಂಗಳವಾರವಾದರೆ ಮಂಗಳವಾರ. ನೋಡೋಣ ಈ ಸತ್ವಪರೀಕ್ಷೆ ಯಾವ ಹಂತವನ್ನು ಮುಟ್ಟುತ್ತದೆಯೋ ಎಂದು ! ಶ್ರೀನಿವಾಸನ ಬಗ್ಗೆ ಬರೆಯಬೇಕೆಂದು ಯೋಚಿಸಿದ ಕಾದಂಬರಿಯನ್ನು ನಾಳೆಯಿಂದಲೇ ಆರಂಭಿಸಿದರಾಯಿತು ಎಂದುಕೊಂಡ : ತಾನು ಈ ಕಾದಂಬರಿಯನ್ನು ಬರೆಯುವುದರ ಬಗ್ಗೆ ಶ್ರೀನಿವಾಸನಿಗಿದ್ದ ಭೀತಿ ಇಷ್ಟೊಂದು ವಿಕೋಪಕ್ಕೆ ಹೋದ ಕಾರಣವೇನು ? ಈ ಅವಾಸ್ತವವಾದ ಭಯದ ಸ್ವರೂಪ ಅರಿಯುವ ಪ್ರಯತ್ನವೇ ಕಾದಂಬರಿಯ ವಸ್ತುವಾಗಬೇಕು. ಇಷ್ಟು ದಿನ ಬರಿಯೆ ಹುಡಿಹುಡಿಯಾಗಿ ಭಾವಗೋಚರವಾದದ್ದರ ಕೇಂದ್ರ ಈಗ ಅನಾಯಾಸವಾಗಿ ಹರಳುಗಟ್ಟುತ್ತಿದ್ದದ್ದು ಅರಿವಿಗೆ ಬಂದಾಗ ಮನಸ್ಸು ಪುಲಕಿತವಾಯಿತು. ಶ್ರೀನಿವಾಸ, ಒಂದೂ ಮಗ, ಬರೆಯದಿರಲು ಒಡ್ಡಿದ ಅಸಹ್ಯವಾದ ಅಮಿಷವೇ ಈಗ ಕಾದಂಬರಿಯ ಲೇಖನಕ್ಕೆ ಪ್ರಚೋದನೆಯಾಗುತ್ತಿದ್ದದ್ದು ನೋಡಿ ಮೋಜು ಎನಿಸಿತು…. +ನಾಗಪ್ಪ ಬೆಳಿಗ್ಗೆ ಐದು ಗಂಟೆಗೇ ಎದ್ದದ್ದು ಬರೆಯುವ ನಿರ್ಧಾರದಿಂದಲೇ ಆಗಿದ್ದರೂ ಹಾಸಿಗೆಯಲ್ಲಿ ಬಿದ್ದದ್ದೇ ಅವನಿಗೆ ಅರಿವಾಗುವ ಮೊದಲೇ ತೊಡಗಿಸಿಕೊಂಡದ್ದು ನಿನ್ನೆ ಶ್ರೀನಿವಾಸನ ಮನೆಯಲ್ಲಿ ನಡೆದದ್ದರ ಪುನರ್ವಿಮರ್ಶೆಯಲ್ಲೇ ! ಹಿಂದಿನದಕ್ಕೆ ಕೈಚಾಚಲಾರೆನೆಂದು ನಿನ್ನೆಯಷ್ಟೇ ಚೌಪಾಟಿಯ ಉಸುಕಿನಲ್ಲಿ ಅಡ್ಡವಾದಾಗ ನಿರ್ಧಾರಮಾಡಿದ್ದ. ಮಾಡಿದರೇನಂತೆ ! ಈವರೆಗಿನ ತನ್ನ ಆಯುಷ್ಯದಲ್ಲಿ ಇಂತಹ ಮನೋನಿರ್ಧಾರಗಳು ಎಷ್ಟು ಸಾವಿರ ಸನ್ನಿವೇಶಗಳಲ್ಲಿ ನಡೆದಿವೆಯೋ ನಾಗಪ್ಪ ಲೆಕ್ಕ ಹಿಡಿಯಲಾರ. ಕೊನೆಗೂ ಮನೋನಿರ್ಧಾರವೊಂದೇ ನಮ್ಮ ಕ್ರಿಯೆಯೆನ್ನು ನಿಶ್ಚಯಿಸಲಾರದಷ್ಟೇ ! ನಿನ್ನೆ ಶ್ರೀನಿವಾಸ ತನ್ನ ಪೂರ್ವೇತಿಹಾಸದ ಬಗ್ಗೆ ಬರೆಯದಿರಲು ಮುಂದೆ ಒಡ್ಡಿದ ಪ್ರಲೋಭನೆಗೆ ತನ್ನಿಂದಾದ ಪ್ರತೀಕಾರದಲ್ಲಿ ಮನಸ್ಸಿಗಿಂತ ಹೆಚ್ಚಾಗಿ ಹೊಟ್ಟೆಯೇ ಪ್ರಮುಖ ಪಾತ್ರವಹಿಸಿದಂತಿತ್ತು. ರೋಗದ ಲಕ್ಷಣ ತಳೆದ ಈ ಮೇಲೇರುವ ಪಂದ್ಯಾಟದಲ್ಲಿ ಕೈಹಿಡಿದ ಹೆಂಡತಿಯ ಶೀಲವೂ ಸಿಕ್ಕಿಬಿದ್ದಿದೆಯೇ ? ಖಂಬಾಟಾ ಮೇಲೇರಿದ್ದೇ ಹಾಗೆಂದು ಕೇಳಿದ್ದ. ಅತ್ಯಂತ ‘ಮೊಡ್’ ಲಾವಣ್ಯವತಿಯಾದ ಶಿರೀನ್ ಖಂಬಾಟಾನ ಹೆಂಡತಿಹೇಗಾದಳೋ….! ನಮ್ಮ ಒ‌ಆ,ಆ‌ಒ‌ಆ ಇಬ್ಬರೂ ಇವಳನ್ನು ಇಟ್ಟುಕೊಂಡಿದ್ದಾರಂತೆ ! ನಾಗಪ್ಪನಿಗೆ ತನ್ನ ವಿಚಾರಸರಣಿಯನ್ನು ಮುಂದುವರಿಸುವುದಾಗಲಿಲ್ಲ….ಹಾಸಿಗೆಯಿಂದ ಏಳುವಾಗ ಶಾರದೆ ನೆನಪಿಗೆ ಬಂದು, ಆಶಾ, ಚೇತನಾರ ಮೋರೆಗಳೂ ಕಣ್ಣಮುಂದೆ ನಿಂತು ಕಣ್ಣುಗಳು ತುಂಬಿಬಂದವು. +ಈ ಎಲ್ಲ ವೈಯಕ್ತಿಕ ಅಭ್ಯುದಯದ ಅಭಿಲಾಷೆ ಹಾಗೂ ಲೈಂಗಿಕತೆಯ ಕಲಸುಮೇಲೋಗರದಿಂದ ಹುಟ್ಟಿದ ಹೇವರಿಕೆಯನ್ನು ಮರೆಯಲೆಂದೇ ನಾಗಪ್ಪ ತನ್ನ ಮನಸ್ಸನ್ನು ಇನ್ನೊಂದೆಡೆಗೆ ಹಾಯಿಸಲು ಯತ್ನಿಸಿದ_ಮಗ್ಗಲು ಮನೆಯ ಜಾನಕಿಯ ಕಡೆಗೆ : ಅವಳ ಮನೆಯಲ್ಲಿ ಊಟ ಮಾಡಿ ಬಂದ ರಾತ್ರಿ ಬೇರಾವ ಹೆಣ್ಣೂ ತನ್ನ ಮೇಲೆ ಇಷ್ಟೊಂದು ಪ್ರಚಂಡವಾದ ಪರಿಣಾಮ ಮಾಡಿರಲಿಲ್ಲ ಎಂಬುದನ್ನು ಪ್ರಜ್ಞಾತೀತವಾದ ತನ್ನ ದೇಹವೇ ಭಿಡೆ, ಲಜ್ಜೆಗಳನ್ನು ಬಿಟ್ಟೇ ಒಪ್ಪಿಕೊಂಡದ್ದು ಈಗ ನೆನಪಿಗೆ ಬಂದಾಗ ನಾಗಪ್ಪನಿಗೆ ತನ್ನ ಬಗ್ಗೆ ತನಗೇ ನಾಚಿಕೆಯೆನಿಸಿತು ; ತಾನೂ ಶ್ರೀನಿವಾಸರಿಂದ, ಬಂದೂಕವಾಲಾರಿಂದ, ಖಂಬಾಟಾರಿಂದ, ಪಟೇಲರಿಂದ ಬೇರೆಯಾಗಿಲ್ಲವೇನೋ ! ಎಂದುಕೊಳ್ಳುತ್ತ ಹಾಸಿಗೆಯಿಂದ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಲು ಹೊರಟ : ಈ ಹೊತ್ತು ಕೋಣೆಯಲ್ಲಿ ಕೂಡ್ರುವುದೇ ಬೇಡ. ಹೀಗೆ ಹೊರಗಿನ ಸಂಪರ್ಕವನ್ನು ಕಳೆದುಕೊಂಡು ಈ ಹೊಸಲು ಕೋಣೆಯಲ್ಲೇ ಕುಳಿತುಬಿಟ್ಟರೆ ಮನಸ್ಸು ಎಂತಹ ಹೊಲಸು ಆಳಕ್ಕೂ ಇಳಿದುಬಿಟ್ಟೀತು. ಎಲ್ಲಾದರೂ ಹೋಗಬೇಕು. ದೂರ ಹೋಗಬೇಕು. ಸ್ವಚ್ಛವಾದ ಬಿಸಿಲಲ್ಲಿ, ಗಾಳಿಯಲ್ಲಿ, ಗಿಡ-ಮರಗಳಿದ್ದಲ್ಲಿ, ಹಸಿರು ಇದ್ದಲ್ಲಿ, ದೇವರು ಸೃಷ್ಟಿಸಿದ್ದರ ಸಹವಾಸದಲ್ಲಿ ಕೆಲವು ಕಾಲ ಕಳೆಯಬೇಕು. ಎರಡು ಕಾಲುಗಳುಳ್ಳ, ತಲೆಬುರುಡೆಯಲ್ಲಿ ಬೃಹದಾಕಾರದ ಮೆದುಳಿದ್ದ ಈ ಪ್ರಾಣಿಯಲ್ಲಿ ಮನುಷ್ಯತ್ವದ ಸಾಕ್ಷಾತ್ಕಾರವಾಗುವದು ಕಟ್ಟಕಡೆಗೆ, ಇಂತಹ ಅಪರೂಪದ ಕ್ಷಣಗಳಲ್ಲಿ ಮಾತ್ರವೇನೋ…. ಬರೆಯದಿದ್ದರೂ ಅಡ್ಡಿಯಿಲ್ಲ ! ಓದುವುದೂ ಬೇಡ ! ಹೀಗೇ ಗೊತ್ತು-ಗುರಿಯಿಲ್ಲದೇನೇ ಅಲೆಯುತ್ತಿರುವದು…. +ಹೀಗೆ ಅಲೆಯುವ ನಿರ್ಧಾರವೇ ಸ್ಫೂರ್ತಿದಾಯಕವಾಗಿತ್ತೆನ್ನುವಂತೆ ನಾಗಪ್ಪ ಅತ್ಯಂತ ಉತ್ಸಾಹದಿಂದ ಅದರ ಸಿದ್ಧತೆಗೆ ತೊಡಗಿದ. +uಟಿಜeಜಿiಟಿeಜ- ಭಾಗ : ಐದು – +-ಅಧ್ಯಾಯ ಮೂವತ್ಮೂರು – +ಕೊನೆಗೊಮ್ಮೆ, ನಾಗಪ್ಪ ಕಾಯುತ್ತಿದ್ದ ದಿನ ಉದಯಿಸಿತ್ತು. +ಹಾಸಿಗೆಯಿಂದ ಏಳುವಾಗ ಯಾವುದೇ ಬಗೆಯ ಆತಂಕ, ಕಾತರಗಳು ಮನಸ್ಸನ್ನು ತಟ್ಟಿರಲಿಲ್ಲ. ಇದಾವುದರಲ್ಲಿ ತನಗೀಗ ಆಸ್ಥೆಯೇ ಉಳಿದಿಲ್ಲ ಎಂಬ ಭಾವನೆಯ ಕಡೆಗೆ ಕೂಡ ವಿಶೇಷ ಲಕ್ಷ್ಯ ಹರಿಸಿರಲಿಲ್ಲ. ಇಷ್ಟು ದಿವಸ ಕಾದಿದ್ದೆ, ಆ ಮುಹೂರ್ತ ಈಗ ಬಂದಿದೆ ಎಂಬ ತಟಸ್ಥ ಭಾವನೆಯಿಂದಲೇ ಕಂಪನಿಯ ಡ್ರೈವರ್ ಬಂದದ್ದೇ ಕಾರಿನಲ್ಲಿ ಹೋಗಿ ಕುಳಿತಿದ್ದ. ತನ್ನ ಡ್ರೆಸ್ಸಿನ ಬಗ್ಗೆ ವಿಶೇಷ ಕಾಳಜಿ ವಹಿಸದೇ ಕಪ್ಪು ಬಣ್ಣದ ರೇಯ್ಮಂಡ್ ಮಿಲ್ಲಿನ ಟೆರ್ರಿವೂಲ್ ಪ್ಯಾಂಟು, ಅಚ್ಚ ನೀಲೀ ಬಣ್ಣದ ಸ್ಟ್ರಾಯ್ಪ್ಸ್‌ಗಳಿದ್ದ ಉದ್ದತೋಳಿನ ಲಿಬರ್ಟೀ ರೆಡಿಮೇಡ್ ಶರ್ಟು ತೊಟ್ಟಿದ್ದ. ಟಾಯ್ ತೊಡಬೇಕೋ ಬೇಡವೋ ಎಂಬ ಪ್ರಶ್ನೆಗೆ ಕೂಡ ಕ್ಷಣಾರ್ಧದಲ್ಲಿ ಉತ್ತರ ಕಂಡುಕೊಂಡವನ ಹಾಗೆ ಕೈಗೆ ತೆಗೆದುಕೊಂಡ ಟಾಯನ್ನು ತಿರುಗಿ ಸ್ಟ್ಯಾಂಡಿನ ಮೇಲಿರಿಸಿ, ಶರ್ಟಿನ ಕೊನೆಯ ಒಂದು ಗುಂಡಿಯನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಾಕಿಕೊಂಡಿದ್ದ. ಬೂಟು ಹಾಕಿಕೊಳ್ಳುವಾಗ ಮಾತ್ರ ಕ್ಷಣ ಹೊತ್ತು ವಿಚಲಿತನಾಗಿದ್ದ_ಕರಿಯ ಬಣ್ಣದ ಬೂಟುಗಳನ್ನು ಶ್ರೀನಿವಾಸನ ಮನೆಯಲ್ಲಿ ಬಿಟ್ಟುಬಂದಿದ್ದ ! ಮರುಗಳಿಗೆ ಹಾಗೆ ಬಿಟ್ಟು ಬಂದುದ್ದರ ಕಾರಣ ನೆನಪಿಗೆ ಬಂದು, ಮುಗುಳುನಗುತ್ತ, ಬಹಳ ದಿನಗಳಿಂದ ಹಾಕಿಕೊಂಡಿರದ ಕಂದೀಬಣ್ಣದ ಹಳೇ ಬೂಟುಗಳನ್ನೇ ಹಾಕಿಕೊಂಡಿದ್ದ. ಕಪ್ಪುಬಣ್ಣದ ಪ್ಯಾಂಟಿಗೆ ಅವು ಹೊಂದುವದಿಲ್ಲ ಎಂಬುದನ್ನು ಅರಿತೂ ಅದರ ಪರಿವೆಯೇ ಇಲ್ಲದವನ ಹಾಗೆ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಂಡ್ದಿದ್ದ. ಕಣ್ಣಮುಂದೆ ಮೂಡಿದ ಮೋರೆ ತನ್ನದಲ್ಲವೇ ಅಲ್ಲ ಎನ್ನುವಂತಹ ಪರಕೀಯತೆಯ ಭಾವನೆಯಿಂದ ಕ್ಷಣಕಾಲ ನಿರುಕಿಸಿದ್ದ. ಕಾರಿನಲ್ಲಿ ಕೂತು ತಾಜಮಹಲ್ ಹೊಟೆಲ್ ಅತ್ತ ಸಾಗುತ್ತಿದ್ದವನ ಮನಸ್ಸಿನಲ್ಲಿ ಮೂಡಿ ನಿಂತದ್ದು ಅದೇ ಮೋರೆ : ತನ್ನದಾಗಿಯೂ ಬೇರೆಯೇ ಒಬ್ಬನದಾಗಿ ತೋರಿದ್ದು ! ಅದರ ಕಣ್ಣುಗಳಲ್ಲಿ ಮೂಡಿದ ನಿಷ್ಪಾಪ ಮುಗ್ಧತೆ ನಾಗಪ್ಪನನ್ನು ಎಷ್ಟೊಂದು ಆಳಕ್ಕೆ ಕಲಕಿಬಿಟ್ಟಿತ್ತೆಂದರೆ ಅದರಿಂದಾಗಿ ಹುಟ್ಟಿದ ಅಂತರ್ಮುಖತೆಯಿಂದ ಹೊರಗೆ ಬರಲು ಬಹಳ ಹೊತ್ತು ಹಿಡಿಯಿತು…. +ಹೊರಗೆ ಬಂದಾಗ ಕಾರು ಸಮುದ್ರದ ದಂಡೆಗುಂಟ ಹರಿದ ಹರವಾದ ಮರೀನ್-ಡ್ರೈವ್-ರಸ್ತೆಯ ಮೇಲೆ ಓಡುತ್ತಿತ್ತು : ಪರಿಚಯದ ನೀರು, ದೂರದ ಎಡಕ್ಕೆ ಪರಿಚಯದ ರೇಲು-ಹಳಿ. ಅದರ ಬದಿಯಲ್ಲೇ ಆಟದ ದೊಡ್ಡ ದೊಡ್ಡ ಮೈದಾನಗಳು. ಕಾರಿನ ಹಿಂದೆ, ಮುಂದೆ ಎಡೆಬಿಡದೇ ಸಾಗುತ್ತಿದ್ದ ವಾಹನಗಳ ಸಾಲುಗಳು, ಪರಿಸ್ಥಿತಿಯ ಸಂಪೂರ್ಣ ಪರಿಚಯವಿದ್ದವನಂತೆ ತೋರುವ ಡ್ರೈವರ್ ಗಂಭೀರ ಮೌನ ತಳೆದು ಕೂತಿದ್ದ. ನಾಗಪ್ಪನಿಗೆ ತಾನೇ ಏನಾದರೂ ಮಾತನಾಡಬೇಕು ಅನ್ನಿಸಿ ಬಾಯಿ ತೆರೆಯೋಣವೆಂದರೆ ಮಾತೇ ಹೊರಡದಾಯಿತು. ಕಣ್ಣುಗಳು ಮಾತ್ರ ತಮ್ಮಿಂದ ತಾವೇ ತುಂಬಿಬಂದವು : ಎಷ್ಟೊಂದು ಧೀರೋದಾತ್ತ ಮಾತುಗಳಲ್ಲಿ ಇದೆಲ್ಲದರ ಸೋಕ್ಷಮೋಕ್ಷಕ್ಕೆ ಮನಸ್ಸನ್ನು ಗಟ್ಟಿಮಾಡಿದ್ದೇನೆಂದು ಹೇಳಿಕೊಂಡರೂ ಏಕೋ ತಾಜಮಹಲ್ ಹೊಟೆಲ್ಲು ಸಮೀಪವಾಗುತ್ತಿದ್ದಂತೆ ಶಬ್ದಗಳ ಆಚೆ ನಿಂತ ಯಾವುದಕ್ಕೋ ಮನಸ್ಸು ಮೆಲ್ಲನೆ ಕರಗಹತ್ತಿತ್ತು : ಇಷ್ಟು ದಿನ ಕೇವಲ ಮಾನಸಿಕವಾದದ್ದು ಈಗ ಪ್ರತ್ಯಕ್ಷ ಕಣ್ಣೆದುರಿನಲ್ಲಿ ನಡೆಯಲಿತ್ತು. ಇಷ್ಟು ವರ್ಷ ಬೆಳೆಸಿಕೊಂಡು ಬಂದ ಒಂದು ಕರಿಯರ್ ತನ್ನ ಶಿಖರಾವಸ್ಥೆಗೆ ಮುಟ್ಟಲಿದ್ದ ಕ್ಷಣದಲ್ಲೇ ಈಗ ಉಧ್ವಸ್ತಗೊಳ್ಳಲಿತ್ತು. ಕಾರಣ : ಮನುಷ್ಯನ ಶಿಕಾರಿಯಾಡುವ ಪ್ರವೃತ್ತಿ, ಕಾರಣ : ಕೆಲವರ ಬದುಕುವ ರೀತಿಗೇ ಮೂಲವಾದ ಭೀತಿ….ನಾಗಪ್ಪಾ ನಾಗಪ್ಪಾಽಽ….ಬೋಳೀಮಗನೇ, ತಿರುಗಿ ಆರಂಭವಾಯಿತೇನೊ ನಿನ್ನ ರಿಪಿ ರಿಪಿ ? ನೀನು ಒಪ್ಪಿಕೊಳ್ಳಲಿದ್ದರೂ ನೀನೇ ಹೆದರಿಕೊಂಡಿದ್ದೀಯೋ : ಎಲ್ಲೋ ಆಳದಲ್ಲಿ ಫಿರೋಜ್ ನಿನ್ನ ಬಗ್ಗೆ ಹಗೆ ಕಾದಿರದಿದ್ದರೆ ?….ಶ್ರೀನಿವಾಸ ಅವನ ಪಿತೂರಿಯಲ್ಲಿ ಸಾಮೀಲಾಗಿರದಿದ್ದರೆ ?….ಇದೆಲ್ಲ ನಡೆಯುತ್ತಿರಲೇ ಇಲ್ಲವೆಂದಲ್ಲವೆ ?_ಮತ್ತೆ ಮೂಲಪದಕ್ಕೆ ಬಂದು ಮುಟ್ಟಿದೆಯಲ್ಲವೋ….ಇದೆಲ್ಲ ನಿರರ್ಥಕ….ಗಳಿಗೆ ಹತ್ತಿರವಾಗುತ್ತಿದೆ….ಹೊರಗೆ ಬಾ…. ಸಿದ್ಧನಾಗು. +ಕಾರು ನರಿಮನ್-ಪಾಯಿಂಟಿಗೆ ಬಂದು ಸಚಿವಾಲಯದತ್ತ ಹೊರಳಿತು : ಆಕಾಶದತ್ತ ಚಂಗನೆ ನೆಗೆದು ಕತ್ತು ಸೆಟೆದು ನಿಂತ ಸ್ಕಾಯ್-ಸ್ಕ್ರೇಪರ್ ಕಟ್ಟಡಗಳು ; ತಮ್ಮ ತಮ್ಮ ಅಫೀಸುಗಳಲ್ಲಿ ನಿನ್ನೆ ಅರ್ಧಕ್ಕೇ ಬಿಟ್ಟುಬಂದ ಕೆಲಸಗಳಿಗೆ ಹಿಂತಿರುಗುವ ಅವಸರದಲ್ಲಿದ್ದ ಜನ ; ಇರಿವೆಗಳ ಹಾಗೆ ಸಾಲುಗಟ್ಟಿ ಹರಿಯುತ್ತಿದ್ದ ವಾಹನಗಳು : ಕಣ್ಣಿನಲ್ಲಿ ಮೂಡಿಯೂ ಮನಸ್ಸನ್ನು ತಟ್ಟುತ್ತಿರಲಿಲ್ಲ. ಸ್ಟ್ಯಾಂಡ್-ಬುಕ್-ಸ್ಟಾಲಿನಲ್ಲಿ ಸೇಲ್ಸ್‌ಮನ್ ಆಗುವ ; ಖೇತವಾಡಿಯ ಗಲ್ಲಿಯೊಂದರಲ್ಲಿ ನ್ಯೂಸ್-ಪೇಪರಿನ ಅಂಗಡಿ ತೆರೆಯುವ ; ಹಳ್ಳಿಯ ಸಾಲೆಯಲ್ಲಿ ಮಾಸ್ತರನಾಗುವ ಬಲವಿಲ್ಲದ ಸಂಕಲ್ಪಗಳು ಹಗಲುಗನಸುಗಳ ಹಾಗೆ ಮನಸ್ಸನ್ನು ತಟ್ಟುತಟ್ಟುವುದರಲ್ಲೇ ಮಾಯವಾಗಹತ್ತಿದ್ದವು….ಕಾರು ರೀಗಲ್ ಸಿನೇಮಾ-ಥಿಯೇಟರ್ ದಾಟಿ ಗೇಟ್‌ವೇ-ಆಫ್-ಇಂಡಿಯಾದ ಕಡೆಗೆ ಸಾಗಿತ್ತು : ಇತ್ತಕಡೆಗೆ ಬರದೇ ಎಷ್ಟು ಕಾಲವಾಯಿತು ? ಪೂರ್ವ ದಿಕ್ಕಿನ ಸಮುದ್ರದ ಮೇಲೆ ಹಲವು ಹಡಗುಗಳು ತೇಲುತ್ತಿದ್ದವು. ಒಂದು ಹಡಗದಿಂದ ನಿಷ್ಕಾರಣವಾಗಿ ಹೊರಟ ಸೈರನ್‌ಗೆ ನಾಗಪ್ಪ ಮನಸ್ಸನ್ನು ಮುತ್ತಿದ ಹಳವಂಡದಿಂದ ಅರ್ಧ ಎಚ್ಚರಗೊಂಡು ಕುಳಿತ : ಅರೆ ! ಕೂತಲ್ಲೇ ಜೊಂಪು ಹತ್ತಿರಬೇಕು ಎಂದುಕೊಂಡು ಕಣ್ಣರಳಿಸಿದ…. +ಆಗ, ಕಾರು ತಾಲಮಹಲ್ ಹೊಟೆಲ್ಲಿನ ಭವ್ಯ ಕಟ್ಟಡದ ಇದಿರು ನಿಂತ ಮೇಲೆಯೇ, ಡ್ರೈವರ್ ಕೆಳಗಿಳಿದು ನಮ್ರತೆಯಿಂದ ಕದ ತೆರೆದಮೇಲೆಯೇ ಲಕ್ಷ್ಯಕ್ಕೆ ಬಂದಿತು : ಇದು ತಮ್ಮ ಕಂಪನಿಯ ಕಾರು ಅಲ್ಲ ಎನ್ನುವದು. ಲಕಲಕ ಹೊಳೆಯುವ ಈ ದೊಡ್ಡ ಕಾರು ಮರ್ಸೆಡೀಸ್ ಬೆಂಝ್ ಎನ್ನುವದು. ಕದ ತೆರೆದು ನಿಂತ ಡ್ರೈವರ್ ಕೂಡ ಪರಿಚಯದವನಾಗಿರಲಿಲ್ಲ ; ಪರಿಶುಭ್ರವಾದ ಯೂನಿಫಾರ್ಮು : ತಲೆಗೆ ಕಪ್ಪು ಅಂಚು ಉಳ್ಳ ಬಿಳಿಯ ಹ್ಯಾಟು….ಕಾಲಿಗೆ ಮೋರೆ ಕಾಣುವಷ್ಟು ಹೊಳಪಿನ ಕಪ್ಪು ಬಣ್ಣದ ಬೂಟುಗಳು… +ನಾಗಪ್ಪ ತನಗೆ ಹತ್ತಿದ ಗುಂಗಿನಿಂದ ಸಂಪೂರ್ಣವಾಗಿ ಎಚ್ಚರಗೊಂಡದ್ದು ಮಾತ್ರ ಖಂಬಾಟಾ ನಿಷ್ಕಾರಣವಾಗಿ ಹಲ್ಲುಕಿಸಿಯುತ್ತ, ಹ ಹ ಹ ! ಹೆ ಹೆ ಹೆ ! ಎಂಬ ವಿಚಿತ್ರ ಸದ್ದು ಮಾಡುತ್ತ ಎಲ್ಲಿಂದಲೋ ಬಂದು ಕಣ್ಣಮುಂದೆ ಪ್ರಕಟವಾಗಿ ಬಾ ಬಾ ಬಾ ಎಂದು ಕೈ ಮುಂದೆ ಚಾಚಿದಾಗಲೇ ! ಏನಾದರೂ ಕೇಳಲೇಬೇಕೆಂಬ ಹುಕ್ಕಿಯಿಂದೆಂಬಂತೆ_”ಕಾರು ಹೊತ್ತಿಗೆ ಸರಿಯಾಗಿ ಮುಟ್ಟಿತೆ ?” ಎನ್ನುತ್ತ ಇನ್ನೊಮ್ಮೆ ಹಲ್ಲು ಕಿಸಿದು ನಗುತ್ತ ಹಸ್ತಾಂದೋಲನಕ್ಕಾಗಿ ಚಾಚಿಯೇ ಹಿಡಿ‌ಅದ ಕೈಯನ್ನು ನಾಗಪ್ಪ ಗಮನಿಸಿಯೇ ಇಲ್ಲ ಎಂಬುದನ್ನು ಅರಿತು ಪೆಚ್ಚನಾಗಿ, ಕೈಯನ್ನು ಮೆಲ್ಲಗೆ ಪ್ಯಾಂಟಿನ ಕಿಸೆಗೆ ಸೇರಿಸಿದ. ತನ್ನ ಪ್ರತಿಕ್ರಿಯೆಯಲ್ಲಿ ದೊಡ್ಡ ಕ್ರಾಂತಿಯಾಗುತ್ತಿದೆ ಎಂಬುದು ಲಕ್ಷ್ಯಕ್ಕೆ ಬಂದದ್ದು ಆಗ_ಕಣ್ಣಮುಂದೆ, ಕಣ್ಣುತುಂಬಿ ನಿಂತ ಖಂಬಾಟಾ ಅಕಾರದಲ್ಲಿ, ಮಹತ್ವದಲ್ಲಿ ಒಮ್ಮೆಲೇ ಕುಗ್ಗಿ ಹೋದಂತೆ ತೋರಿದಾಗ ! ಕಾರ್ರಿಡಾರಿನ ನೆಲಕ್ಕೆ ಹಾಸಿದ ಕೆಂಪು ಬಣ್ಣದ ರತ್ನಗಂಬಳಿಯನ್ನು, ಗೋಡೆಗಳ, ಸೀಲಿಂಗಿನ ಭವ್ಯ ಸಿಂಗಾರವನ್ನು ಒಮ್ಮೆ ಅವಲೋಕಿಸಿ ಅದು ತನ್ನ ಮೇಲೆ ಅಂತಹ ಅವಾಸ್ತವವಾದ ಪರಿಣಾಮವನ್ನೇನೂ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬರುತ್ತಿರುವಾಗ ! ಕೇಳಿದ: “ಎಲ್ಲರೂ ಬಂದು ತಲುಪಿದ್ದಾರೊ ?” ಇದು ತನ್ನ ದನಿಯೆಂಬುದನ್ನು ಗುರುತು ಹಿಡಿಯಲು ಖಂಬಾಟಾನಿಗೆ ಕಷ್ಟವಾಗುತ್ತಿದ್ದುದನ್ನು ಕಂಡು ಖುಶಿಪಟ್ಟ. ಕಷ್ಟವಾದದ್ದು ಖಂಬಾಟಾನಿಗಷ್ಟೇ ಅಲ್ಲ, ಸ್ವತಃ ತನಗೂ. +ಲಿಫ್ಟ್ ಇದ್ದ ಜಾಗದತ್ತ ಹೋಗುವಾಗ ಗೋಡೆಯ ಮೇಲಿನ ಆಳೆತ್ತರದ ಕನ್ನಡಿಯಲ್ಲಿ ತನ್ನನ್ನೊಮ್ಮೆ ನೋಡಿಕೊಂಡ : ತನ್ನ ಅನುಭವಕ್ಕೆ ಸ್ಪಷ್ಟವಾಗಿ ವೇದ್ಯವಾಗುವಷ್ಟರಮಟ್ಟಿಗೆ ತನ್ನಲ್ಲಾದ ಪರಿವರ್ತನೆ ಬರಿಯೆ ಒಳಗಿನದೇ ? ಎಂಬ ಗುಮಾನಿಯಿದೆಯೆಂಬಂತೆ ಅಪಾದಮಸ್ತಕ ನೋಡಿಕೊಂಡ : ಹೊರಗೇನೂ ಬದಲಾಗಿರಲಿಲ್ಲ_ತಲೆಯಲ್ಲಿ ಕೋಡುಮೂಡಿರಲಿಲ್ಲ : ಹಣೆಯಲ್ಲಿ ಇನ್ನೊಂದು ಕಣ್ಣು ತೆರೆದಿರಲಿಲ್ಲ. ಕಾಫ್ಕಾನ ಕತೆಯಲ್ಲಿ ಗ್ರೆಗೆರ್ ಸಾಮ್ಸಾಗೆ ಆದದ್ದು ನೆನಪಿಗೆ ಬಂದು ತನ್ನಷ್ಟಕ್ಕೇ ಮುಗುಳುನಕ್ಕ. ಖಂಬಾಟಾ ಇನ್ನೂ ತನ್ನ ಅರಿವಿನ ಗಡಿಯಲ್ಲೇ ನಿಂತಿದ್ದ. ಕನ್ನಡಿಯಲ್ಲಿ ನೋಡಿಕೊಂಡಾಗ, ಲಿಫ್ಟಿಗಾಗಿ ಕಾಯುತ್ತ ಸಾಲುಗಟ್ಟಿ ನಿಂತವರನ್ನು ಗಮನಿಸಿದಾಗ ತಾನು ಸೂಟು ಧರಿಸಿರಬೇಕಿತ್ತೇನೋ ಅನ್ನಿಸಿತು. ಕನಿಷ್ಠ ಟೈಯನ್ನಾದರೂ ತೊಡಬೇಕಿತ್ತೇನೋ. ಖಂಬಾಟಾ ಸೂಟಿನಲ್ಲಿದ್ದದ್ದು ಲಕ್ಷ್ಯಕ್ಕೆ ಬಂದದ್ದು ಆಗ ! ಖಂಬಾಟಾನನ್ನು ಬುಡದಿಂದ ತುದಿಯವರೆಗೆ ನೋಡುತ್ತಿದ್ದಂತೆ ನಗು ತಡೆಯುವದು ಅಸಾಧ್ಯವಾಯಿತು : ಯಾವ ಅಜ್ಜನ ಕಾಲಕ್ಕೆ ಹೊಲಿಸಿದ್ದೋ_ಈಗ ಬೊಜ್ಜು ಬೆಳೆದು ದಪ್ಪವಾದ ದೇಹಕ್ಕೆ ಬಿಗಿಯಾಗುತ್ತಿತ್ತು ! ಈಗಿನ ಫ್ಯಾಶನ್ನಿಗೆ ಶೋಭಿಸುವಂತಹದೂ ಅಲ್ಲ ಮತ್ತೆ. ತೊಟ್ಟ ಶರ್ಟು ಕೂಡ ಟಾಯ್ ತೊಡಲು ಸರಿಯಾದ ಕಾಲರ್ ಇಲ್ಲದ್ದು. ಶುದ್ಧ ಪೆದ್ದನಂತೆ ತೋರುತ್ತಿದ್ದ : ನಾಗಪ್ಪನ ಮೋರೆಯ ಮೇಲೆ ತಂತಾನೇ ಪ್ರಕಟವಾದಭಾವಕ್ಕೆ ಖಂಬಾಟಾ ಅತೀವ ಗೊಂದಲಿಸಿದ. ಎಷ್ಟು ಗೊಂದಲಿಸಿದನೆಂದರೆ ತಾವು ಇಳಿಯಬೇಕಾದದ್ದು ಏಳನೇ ಮಜಲು ಎಂಬುದು ಮರೆತು ಎಂಟನೇ ಮಜಲಿಗೆ ಹೋಗಿ ತನ್ನ ಎಚ್ಚರಗೇಡಿತನವನ್ನು ತಾನೇ ಶಪಿಸಿಕೊಂಡ. +ಲಿಫ್ಟಿನಿಂದ ಹೊರಗೆ ಬಂದು ತತತಾ ಪತತಾ ಎನ್ನುತ್ತ ಕ್ಷಮೆಯೋ ವಿವರಣೆಯೋ ಯಾವುದೂ ಸ್ಪಷ್ಟವಾಗಿ ಗೊತ್ತಾಗದ ಹಾಗೆ ಗೊಣಗುಟ್ಟುತ್ತ ನಿಚ್ಹಣಿಕೆಯ ಮೆಟ್ಟಿಲಿಳಿದು ಏಳನೇ ಮಜಲೆಗೆ ನಾಗಪ್ಪನನ್ನು ಕರೆದೊಯ್ದ. ಕಾರ್ರಿಡಾರಿನ ಮೇಲೆ, ಮೆಟ್ಟಿಲುಗಳ ಮೇಲೆಲ್ಲ ಕೆಂಪು ಮೈಗೆ ಬಿಳಿಯ ಹೂವುಗಳನ್ನು ಚಿತ್ರಿಸಿಕೊಂಡ ರತ್ನಗಂಬಳಿಗಳು, ಮೆಟ್ಟಿಲು ಸಾಲಿನ ಎದುರಿನಲ್ಲಿಯೇ ಗೋಡೆಯಷ್ಟು ಎತ್ತರವಾದ ನಿಲುವುಗನ್ನಡಿ. ಬಗೆಬಗೆಯ ದೀಪಗಳು. ಸೀಲಿಂಗಿನಿಂದ ತೂಗುವ ಶೆಂಡಲಿಯರ್‍ಗಳು.ಪೂರ್ವದ ಕಿಡಕಿಗಳಿಂದ ಕಾಣುವ ಸಮುದ್ರ ; ಯಾವ ಒಂದು ತರಾತುರಿಯೂ ಇಲ್ಲದವನ ಹಾಗೆ_ತಾನು ಈ ಹೊಟೆಲ್ಲಿಗೆ ಬಂದದ್ದೇ ಇವೆಲ್ಲವುಗಳನ್ನು ನೋಡಲಿಕ್ಕೆ ಎನ್ನುವ ಹಾಗೆ_ನಿಧಾನವಾಗಿ ತದೇಕಚಿತ್ತದಿಂದ ಎಲ್ಲವನ್ನೂ ಅವಲೋಕಿಸಹತ್ತಿದ. ನಾಗಪ್ಪನ ಈ ಬೇಫೀಕೀರತೆಯೇ ಖಂಬಾಟಾನನ್ನು ಇನ್ನಷ್ಟು ಗೊಂದಲಕ್ಕೀಡುಮಾಡಿತು. ಕಿಡಕಿಯ ಹತ್ತಿರ ಬಂದು ಸಮುದ್ರದ ನೀರನ್ನು ಜನ್ಮದಲ್ಲಿ ಇದೇ ಮೊದಲ ಬಾರಿ ನೋಡುತ್ತಿದ್ದವನ ರೀತಿ ನೋಡುತ್ತ ನಿಂತುಬಿಟ್ಟ ನಾಗಪ್ಪನನ್ನು ತಾವು ಇಲ್ಲಿಗೆ ಬಂದ ಉದ್ದೇಶದ ಬಗ್ಗೆ ಹೇಗೆ ಎಚ್ಚರಿಸುವುದು ಎಂದು ತಿಳಿಯದೆ ಖಂಬಾಟಾ, ಒಳಗೆ ಹೋಗುವ ಹೊತ್ತು ಆಗಲೇ ಮೀರಿಹೋಗಿದೆ, ಅವರೆಲ್ಲ ತಮ್ಮ ಹಾದಿ ಕಾಯುತ್ತಿದ್ದಾರೆ_ಎಂಬ ಉತಾವಳಿಯ ಭಾವನೆಯಿಂದ ಕೈ ಬೆರಳುಗಳನ್ನು ಹೊಸೆಯುತ್ತ _ “We ಚಿಡಿe geಣಣiಟಿg ಟಚಿಣe,” ಎಂದ. ತನ್ನ ದನಿಯಲ್ಲಿಯ ಧೈನ್ಯತೆಗೆ ತಾನೇ ನಾಚಿಕೆಪಟ್ಟ. “ಐಚಿಣe ಜಿoಡಿ ತಿhಚಿಣ ?” ಎಂಬ ನಾಗಪ್ಪನ ಮರುಸವಾಲಿನಿಂದ ಮಾತ್ರ ಖಂಬಾಟಾನ ತಾಳ್ಮೆಗೆ ಧಕ್ಕೆ ತಗಲದೇ ಇರಲಿಲ್ಲ : ‘ಒಳಗೆ ಹೋದ ಮೇಲೆ ಗೊತ್ತಾದೀತು ಭೆಂಛೋದ್ _ ಟಚಿಣe ಜಿoಡಿ ತಿhಚಿಣ ಎನ್ನುವುದು,’ ಎಂದು ಒದರಿ ಹೇಳುವಷ್ಟರ ಮಟ್ಟಿಗೆ ಬಂದ. ಸಿಟ್ಟನ್ನು ಶತಪ್ರಯತ್ನದಿಂದ ಅದುಮಿಹಿಡಿಯುತ್ತ _ “ಖಿheಥಿ ಚಿಡಿe ತಿಚಿiಣiಟಿg ಜಿoಡಿ us” ಎಂದ. +uಟಿಜeಜಿiಟಿeಜಖಂಬಾಟಾ ‘us’ ಎಂದದ್ದನ್ನು ಗಮನಿಸಿ, “ಯಾಕೆ ? ನನ್ನ ಜೊತೆಗೆ ಪಾಪ ನಿನ್ನನ್ನೂ ಸೇರಿಸಿದ್ದಾರೆಯೇ ?” ಎಂದು ಕೇಳಿದನೇ ಹೊರತು ನಾಗಪ್ಪ ಕಿಡಕಿಯಿಂದ ಕದಲಲಿಲ್ಲ. ಕದಲುವ ಆತುರವನ್ನೂ ತೋರಲಿಲ್ಲ ; ಒಂದು ಬಗೆಯ ವಿಸ್ಮಯ, ಕೌತುಕ ತುಂಬಿದ ಕಣ್ಣುಗಳಿಂದ ತಾವು ನಿಂತ ಕಾರ್ರಿಡಾರನ್ನು, ಹೊಟೆಲ್ಲಿನ ಬಾಹ್ಯ ಪರಿಸರವನ್ನು ನೋಡುತ್ತ ನಿಂತೇ ಉಳಿದ. ತನ್ನ ಸಂಕಲ್ಪ ಬಲವನ್ನು ಮೀರಿ ನಿಂತಂತಹದೇನೋ ಒಳಗೊಳಗೇ ಸದ್ದಿಲ್ಲದೇ_ಖಂಬಾಟಾ ತನ್ನನ್ನು ಕರೆದೊಯ್ಯಲಿದ್ದ ರೂಮಿನಲ್ಲಿ ನಡೆಯಲಿದ್ದುದ್ದನ್ನು ಇದಿರಿಸಲು_ತನ್ನಷ್ಟಕ್ಕೆ ಸಿದ್ಧವಾಗುತ್ತಿದೆ ಎಂಬಂತಹ ಅರ್ಧ ಕಣ್ತೆರೆದ ಅರಿವು ಈ ತನ್ನ ನಿಷ್ಪಾಪವೆಂದು ತೋರುತ್ತಿದ್ದ ಅವಲೋಕನದ ಹಿಂದೆ ಕೆಲಸ ಮಾಡುತ್ತಿದೆ ಎನ್ನುವ ಅನ್ನಿಸಿಕೆಯಿಂದ ನಾಗಪ್ಪ ಪುಲಕಿತನಾಗದೇ ಉಳಿಯಲಿಲ್ಲ. ತಾಳ್ಮೆಗೆಟ್ಟ ಖಂಬಾಟಾಗೆ ಇದೆಲ್ಲ ಉದ್ಧಟತನವೆಂದು ತೋರಹತ್ತಿ ಒಳಗೊಳಗೇ ಕುದಿಯಹತ್ತಿದ. ಆದರೆ ನಾಗಪ್ಪನನ್ನು ಅಲ್ಲಿಂದ ಕದಲಿಸುವದು ಹೇಗೆ ಎನ್ನುವುದು ತಿಳಿಯದೆ ಹತಾಶನಾದ. ನಾಗಪ್ಪನೇ ಅವನ ಸಹಾಯಕ್ಕೆ ಬಂದ. ಕೈಗಡಿಯಾರ ನೋಡಿಕೊಳ್ಳುತ್ತ, “ಒಳಗೆ ಹೋಗುವ ಹೊತ್ತಾಯಿತಲ್ಲವೆ ? ಕೋಣೆ ಯಾವುದೆಂದು ಗೊತ್ತಿದೆಯೇ ?” ಎಂದು ಕೇಳಿದ. ಅವನು ಕೇಳಿದ ರೀತಿಗೇ ಖಂಬಾಟಾನ ಮೈ ಉರಿಯಹತ್ತಿತು. ಆದರೆ ಏನು ಮಾಡಲೂ ನಿರುಪಾಯನಾದವನ ಹಾಗೆ_”Pಟeಚಿse huಡಿಡಿಥಿ uಠಿ. ಈಗಾಗಲೇ ಹತ್ತು ಮಿನಿಟುಗಳ ವಿಳಂಬವಾಗಿದೆ.” ಎನ್ನುತ್ತ ಹೊಟೆಲ್ಲಿನ ಏರ್-ಕಂಡೀಶಂಡ್ ತಂಪಿನಲ್ಲಿಯೂ ಹಣೆಯ ಮೇಲೆ ಹನಿಗೂಡಹತ್ತಿದ ಬೆವರನ್ನೊರೆಸಿಕೊಳ್ಳಲು ಕಿಸೆಯಿಂದ ಕೈರುಮಾಲನ್ನು ಹೊರತೆಗೆದ. ತಾವು ಹೋಗಬೇಕಾದ ರೂಮು ತಲುಪಿದೊಡನೆ ಕರೆಗಂಟೆಯನ್ನು ಒತ್ತಿ, ಕದ ತೆರೆಯುವುದನ್ನೇ ಕಾಯುತ್ತ, ಹಣೆಯಮೇಲಿನ ಬೆವರನ್ನೊರೆಸಿಕೊಂಡ. +ನಾಗಪ್ಪ ಖಂಬಾಟಾನ ದಶೆ ನೋಡಿ ಒಳಗೊಳಗೇ ನಗುತ್ತ, “ನಿನಗೆ ಈ ತನಿಖೆ ಉಂಟುಮಾಡಿದ ಆತಂಕವನ್ನು ಸುಲಭವಾಗಿ ಗ್ರಹಿಸಬಲ್ಲೆ. ಆದರೆ ಕಾಳಜಿ ಮಾಡಬೇಡ. I ತಿoಟಿ’ಣ be ಣoo hಚಿಡಿsh oಟಿ ಥಿou. ಃuಣ I ತಿoಟಿ’ಣ sಠಿಚಿಡಿe Phiಡಿoz….” ಎಂದ. ಇವನ ವಾಕ್ಯ ಪೂರ್ಣವಾಗುವುದಕ್ಕೂ ಕದ ತೆರೆದು ಸ್ವತಃ ಫಿರೋಜನೇ ಧುತ್ ಎಂದು ಕಣ್ಣ ಮುಂದೆ ಹಾಜರಾಗುವುದಕ್ಕೂ ಗಂಟುಬಿದ್ದಿತು. ಖಂಬಾಟ ಕಂಗೆಟ್ಟು ನೆಲಕ್ಕೆ ಇಳಿಯುವ ಸ್ಥಿತಿಯಲ್ಲಿದ್ದ. ಫಿರೋಜನೇ ಅವನನ್ನು ಪಾರುಮಾಡಿದ: ನೀನು ಹೋಗಬಹುದೆಂದು ಕಣ್ಸನ್ನೆಯಿಂದ ತಿಳಿಸಿದವನೇ ನಾಗಪ್ಪನತ್ತ ತಿರುಗಿ, “ಹೆಲ್ಲೋ ಹೆಲ್ಲೋ ನಾಗ್….ಅome iಟಿ, ಛಿome iಟಿ,” ಎಂದು ಕೈ ಮುಂದೆ ಮಾಡಿದ. ನಾಗಪ್ಪ, ತನ್ನ ಅಂತಃಶಕ್ತಿಗಳೆಲ್ಲ ಸಂಪೂರ್ಣವಾಗಿ ತನ್ನ ವಶದಲ್ಲಿವೆ ಎಂಬ ಆತ್ಮವಿಶ್ವಾಸ ಪ್ರಕಟಿಸುತ್ತ, “ಹೆಲ್ಲೋ ಫಿರೋಜ್” ಎಂದು ಒಳಹೊಕ್ಕನೇ ಹೊರತು ಅವನು ಮುಂದೆ ಮಾಡಿದ ಕೈಯನ್ನು ಕುಲುಕಲಿಲ್ಲ. ಅದರತ್ತ ನೋಡಿಯೇ ಇಲ್ಲವೆಂದು ನಟಿಸುತ್ತ, ಕಣ್ಣ ಇದಿರಿನ ದೊಡ್ಡ ಸೋಫಾದಲ್ಲಿ ಆಸನಾರೂಢರಾಗಿದ್ದ ಇಬ್ಬರು ಗೃಹಸ್ಥರನ್ನು ಒಮ್ಮೆ ನೋಡಿ ರೂಮಿನ ಕಣ್ಣುಕುಕ್ಕಿಸುವ ಅಲಂಕಾರವನ್ನು ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ನೋಡುತ್ತ ನಿಂತ. ಕೋಣೆಯ ಕದ ಮುಚ್ಚಿ ಒಳಗೆ ಬಂದ ಫಿರೋಜ್ ನಾಗಪ್ಪನ ನಡತೆಯಿಂದ ವಿಚಲಿತನಾಗಿದ್ದರೂ ಹಾಗೆಂದು ತೋರಿಸಿಕೊಳ್ಳದೇ “ಬಾ ನಾಗ್, ನನ್ನಿಬ್ಬರು ಗೆಳೆಯರ ಪರಿಚಯ ಮಾಡಿಸುತ್ತೇನೆ :ಖಿhis is ಒಡಿ.ಆಚಿsಣuಡಿ_ಒಚಿಟಿಚಿgiಟಿg ಆiಡಿeಛಿಣoಡಿ oಜಿ ಆಚಿsಣuಡಿ & ಅo. Pಡಿivಚಿಣe ಐimiಣeಜ. ಸಧ್ಯವೇ ನಮ್ಮ ಕಂಪನಿಯ ಬೋರ್ಡಿನ ಮೇಲೂ ಬರಲಿದ್ದಾರೆ,” ಎಂದ. +“ನಿನ್ನನ್ನು ಭೇಟಿಯಾದದ್ದು ಬಹಳ ಬಹಳ ಸಂತೋಷ. ಮಿಸ್ಟರ್ ದಸ್ತೂರ್,” ಎಂದು ಬೇಕಷ್ಟೇ ನಕ್ಕು ಹಸ್ತಲಾಘವ ಮಾಡಿದ, ನಾಗಪ್ಪ. +ಫಿರೋಜ್, ಇನ್ನೊಬ್ಬ ಗೃಹಸ್ಥನತ್ತ ತಿರುಗಿ “ಂಟಿಜ ಣhis is ಒಡಿ. Pಚಿಣeಟ_ಆiಡಿeಛಿಣoಡಿ oಜಿ….” +ಫಿರೋಜನ ವಾಕ್ಯ ಮುಂದುವರಿಯುವ ಮೊದಲೇ ನಾಗಪ್ಪನೇ ಅಂದ_”ಆಫ್ ಪಟೇಲ್ ಅಂಡ್ ಕೋ ಪ್ರೈವೇಟ್ ಲಿಮಿಟೆಟ್, ಊe ಣoo is goiಟಿg ಣo be oಟಿ ouಡಿ boಚಿಡಿಜ sooಟಿ.” +ಫಿರೋಜನಿಗೆ ಇದು ಸೇರಲಿಲ್ಲ. ಆದರೂ ತನ್ನ ಅಸಂತೋಷವನ್ನು ತೋರಗೊಡದೇ_ “ಙouಡಿ guess is ಡಿighಣ….” ಎನ್ನುತ್ತಿರುವಾಗ ಪಟೇಲನೊಡನೆ ಹಸ್ತಾಂದೋಲನ ಮಾಡುತ್ತ, ನಾಗಪ್ಪ _”ಂಟಿಜ ಥಿou musಣ be ಚಿ Pಚಿಡಿsee Pಚಿಣeಟ ?” ಎಂದು ಕೇಳಿದ. ಪಟೇಲ ಈ ಪ್ರಶ್ನೆಯನ್ನು ಹೇಗೆ ಉತ್ತರಿಸಬೇಕು ಎನ್ನುವುದು ತಿಳಿಯದೇ ಹಲ್ಲು ಕಿಸಿದು ನಕ್ಕ. ನಾಗಪ್ಪನ ಕಣ್ಣ ಮುಂದೆ ಖಂಬಾಟಾನ ಚಿತ್ರ ನಿಲ್ಲುತ್ತಿರುವಾಗ ಫಿರೋಜನ ಮೋರೆ ಬಣ್ಣಗೆಡಹತ್ತಿತು. ನಾಗಪ್ಪ, ಪಟೇಲನ ಇದಿರಿನ ಸೋಫಾದಲ್ಲಿ ಕೂಡ್ರುತ್ತ : +“ಪಟೇಲರು ಗುಜರಾಥಿಗಳಲ್ಲೂ ಇದ್ದಾರೆ ಪಾರ್ಸೀಗಳಲ್ಲೂ ಇದ್ದಾರೆ_ಆದ್ದರಿಂದ ನಮ್ಮ ಒ‌ಆ ಇದ್ದಾರಲ್ಲ ಅವರು ಗುಜರಾಥೀ ಪಟೇಲರು” ಎಂದ. ಅವನು ಈ ಮೊದಲು ಕೇಳಿದ ಪ್ರಶ್ನೆಯ ಅರ್ಥ ಈಗ ಹೊಳೆಯಿತೆನ್ನುವಂತೆ ಪಾರ್ಸೀ ಪಟೇಲನ ಮೋರೆಯ ಮೇಲೆ ನಿರಂಬಳತೆ ಬೆಳಗಿತು. ಆದರೆ ನಾಗಪ್ಪನ ಮುಂದಿನ ಮಾತುಗಳು ಮಾತ್ರ ಮೂವರನ್ನೂ ಮತ್ತೆ ಗೊಂದಲಕ್ಕೀಡುಮಾಡಿದವು : +“ಮೇಲಾಗಿ ಈ ತನಿಖೆಯ ಆಯೋಗದಲ್ಲಿ ಫಿರೋಜನ ಜತೆಗೆ ಇನ್ನಿಬ್ಬರು ಸದ್ಗೃಹಸ್ಥರು ಇದ್ದಾರೆ ಎಂದು ನಮ್ಮ ಖಂಬಾಟಾನಿಂದ_ನಿಮಗೆ ಅವನ ಪರಿಚಯ ಇಲ್ಲವಾದರೆ, ಅವನು ನಮ್ಮ ಪರ್ಸೊನಲ್ ಆಂಡ್ ಎಡ್ಮಿನಿಸ್ಟ್ರೇಶ್‌ನ್ ಮ್ಯಾನೇಜರ್_ತಿಳಿದಾಗ ‘ಈ ಇಬ್ಬರು ಸದ್ಗೃಹಸ್ಥರ ಹೆಸರುಗಳನ್ನು ತಿಳಿಯಬಹುದೇ ?’ ಎಂದು ಕೇಳಿದ್ದೆ. ಖಂಬಾಟಾ_‘ಅದು ನಿನಗೆ ತನಿಖೆಯ ಹೊತ್ತಿಗೆ ಗೊತ್ತಾಗಿಯೇ ಆಗುತ್ತದೆ’ ಎಂದಿದ್ದ, ಮುಂದೆ ನನಗೆ ಕಳಿಸಿದ ಪತ್ರದಲ್ಲೂ ಹಾಗೇ ತಿಳಿಸಿದ್ದ. ಆಗಲೇ ನಾನು ಮನಸ್ಸಿನಲ್ಲಿ ಎಣಿಸಿದ್ದೆ : ಫಿರೋಜ್ ನೇಮಿಸಿದ ಆಯೋಗವೆಂದಮೇಲೆ ಆ ಇಬ್ಬರು ಸದ್ಗೃಹಸ್ಥರು ಪಾರ್ಸೀ ಇರಲೇಬೇಕು ಎಂದು.” +ಮೂವರೂ ಸೋಫಾಗಳಲ್ಲಿ ಕೂತಲ್ಲೇ ಚಡಪಡಿಸಿದ್ದು ಗಮನಿಸಿ_ +“ನನ್ನನ್ನು ತಪ್ಪು ತಿಳಿಯಬೇಡಿ, ಮಾರಾಯರೇ….ನೀವು ಪಾರ್ಸೀ ಎಂದು ತಿಳಿದು ಮನಸ್ಸಿಗಾದ ಉಲ್ಲಾಸ ಎಷ್ಟೆಂದು ಹೇಳಲಿ ! ಯಾಕೆಂದರೆ, ಪಾರ್ಸೀ ಜನರ ನ್ಯಾಯಬುದ್ದಿಯಲ್ಲಿ ದೊಡ್ಡ ವಿಶ್ವಾಸ ಇಟ್ಟುಕೊಂಡವನು ನಾನು.” ಎಂದ. +ಸನ್ನಿವೇಶ ಸಂಪೂರ್ಣವಾಗಿ ತಮ್ಮ ಹತೋಟಿಯ ಹೊರಗೆ ಹೋಗುತ್ತಿದೆ ಎಂಬುದನ್ನು ಗಮನಿಸಿದ ದಸ್ತೂರ್ ಫಿರೋಜನ ಕಡೆಗೊಮ್ಮೆ ನೋಡಿ, ಕಣ್ಣು ಮಿಟುಕಿಸಿ, ಮೂಗಿನ ಹೊರಳೆಗಳನ್ನು ಕ್ಷಣಕಾಲ ಅರಳಿಸಿ, ಸರಿಯಾಗಿದ್ದ ತನ್ನ ಟಾಯ್ ಮೇಲೆ ಅದನ್ನು ಸರಿಪಡಿಸುವವನ ಹಾಗೆ ಕೈಯಾಡಿಸಿ, ಗಂಟಲು ಸಡಿಲಿಸಿ_ +“ಖಿhಚಿಟಿಞs ಥಿouಟಿg mಚಿಟಿ_ಣhಚಿಟಿಞs ಜಿoಡಿ ಣhe ಟಿiಛಿe ಛಿomಠಿಟimeಟಿಣs. ರಿusಣiಛಿe ಥಿou ತಿiಟಟ ಛಿeಡಿಣಚಿiಟಿಟಥಿ hಚಿve ಜಿಡಿom us…. ಂಟಿಜ ಡಿeಟಚಿx….” ಎಂದ. +ದಸ್ತೂರನ ಈ ಮಾತಿಗೆನಾಗಪ್ಪ ತುಂಬ ಸುಖವಾಗಿ ಮುಗುಳುನಕ್ಕ : +“ನಾನೂ ನಿಮಗೆ ಅದನ್ನೇ ಹೇಳುವವನಿದ್ದೆ….ಅರ್ಥಾತ್ ನನ್ನ ಈ ಇನ್‌ಫಾರ್ಮಲ್ ಡ್ರೆಸ್ಸಿಗೆ ನಿಮ್ಮ ಆಕ್ಷೇಪಣೆ ಇಲ್ಲದಿದ್ದರೆ ಮಾತ್ರ…ಮತ್ತೆ ಒಂದನ್ನು ಮೊದಲೇ ಸ್ಪಷ್ಟಪಡಿಸಬೇಕೇನೋ…. I ಚಿm ಟಿoಣ ಣhe ಣಥಿಠಿe ಣo be iಟಿಜಿಟueಟಿಛಿeಜoಡಿ iಟಿ ಚಿಟಿಥಿ ತಿಚಿಥಿ ಠಿಡಿessuಡಿiseಜ bಥಿ ಣhe ಜeಛಿoಡಿ oಜಿ ಣhe ಠಿಟಚಿಛಿe oಡಿ oಜಿ iಣs oಛಿಛಿuಠಿಚಿಟಿಣs.” +ಈ ಮಾತಿನ ಪರಿಣಾಮ ಇವನನ್ನು ಮೊದಲಿನಿಂದಲೂ ಒಂದು ಬಗೆಯ ಕೌತುಕದಿಂದಲೇ ನೋಡುತ್ತ ಕುಳಿತ ಪಟೇಲನ ಮೇಲೆ ಎಷ್ಟೊಂದು ಆಗಿತ್ತೆಂದರೆ ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಬರುವ ಮೊದಲೇ ಧಡಕ್ಕನೆ ಕೂತಲ್ಲಿಂದ ಎದ್ದು ನಿಂತವನೇ _ +“ನಿಮಗೆ ಹೇಗೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಃuಣ I ಚಿgಡಿee ತಿiಣh ಣhis ಥಿouಟಿg mಚಿಟಿ,” ಎಂದು ಕೋಟು ಟಾಯ್ ಕಳಚಿದ ; ಹೊಟೆಲ್ಲಿನ ಏರ್-ಕಂಡೀಶನಿಂಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ,” ಎಂದ. +ದಸ್ತೂರನೂ ಕೋಟು ಕಳಚಿದ ; ಟಾಯ್ ತೆಗೆಯಲಿಲ್ಲ. ಉದ್ಧಟತನವೆಂದು ತೋರಬಹುದಾದ ನೇರವಾದ ಮಾತುಗಳಿಂದ ಅದಾಗಲೇ ನಾಗಪ್ಪ, ಪಟೇಲ್ ಹಾಗೂ ದಸ್ತೂರರ ಗೆಳೆಯನಾಗಿಬಿಟ್ಟಿದ್ದಾನೆ ಎಂಬ ಅನ್ನಿಸಿಕೆಯಿಂದಲೇ ಫಿರೋಜ್ ಒಳಗೊಳಗೇ ಸಿಟ್ಟಿನಿಂದ ಕುದಿಯಹತ್ತಿದ. ಆದರೂ ತಾನೊಬ್ಬನೇ ‘ನಿನ್ನೊಡನೆ ಹಗೆ ಕಾದವನು’ ಎಂಬಂತೆ ತೋರಬಾರದೆಂದು ಕುಳಿತಲ್ಲಿಂದ ಎದ್ದು ಕೋಟು ತೆಗೆದ, ಹಾಗೂ ನಾಗಪ್ಪನಿಗೆ_”Whಚಿಣ ತಿiಟಟ ಥಿou ಛಿಚಿಡಿe ಣo hಚಿve_hoಣ oಡಿ ಛಿoಟಜ ?” ಎಂದು ಕೇಳಿದ. +‘I ತಿiಟಟ ರಿoiಟಿ ಥಿou, geಟಿಣಟemeಟಿ_I ಚಿm gಚಿme ಜಿoಡಿ ಚಿಟಿಥಿಣhiಟಿg.” ಇದನ್ನು ಹೇಳಿದ ನಾಗಪ್ಪ ಪಟೇಲ ಹಾಗೂ ದಸ್ತೂರರಿಬ್ಬರಿಗೂ ತುಂಬ ಮೋಹಕವಾಗಿ ಕಂಡ : ಅವರ ಮೋರೆಯ ಮೇಲೆ ಮುಚ್ಚುಮರೆಯಿಲ್ಲದೆ ವ್ಯಕ್ತವಾದ ಮೆಚ್ಚಿಗೆಯನ್ನು ನೋಡಿ ಫಿರೋಜ್ ಅಸೂಯೆಪಟ್ಟ. +“ಃeeಡಿ ತಿoಟಿ’ಣ be ಚಿ bಚಿಜ iಜeಚಿ,” ಎಂದು ದಸ್ತೂರ್ ಸೂಚಿಸಿದ್ದಕ್ಕೆ, ನಾಗಪ್ಪ, ಕೈ ಗಡಿಯಾರ ನೋಡಿ, “ಇಚಿಡಿಟಥಿ ಜಿoಡಿ ಣhe ಜಚಿಥಿ buಣ gooಜ ಜಿoಡಿ ಣhe seಚಿsoಟಿ.” ಎಂದು ಸಮ್ಮತಿ ಇತ್ತಾಗ ಫಿರೋಜ್ ಕೂತಲ್ಲಿಂದ ಎದ್ದು ‘ರೂಮ್ ಸರ್ವೀಸ್’ಗೆ ಫೋನ್ ಮಾಡಿ ನಾಲ್ಕು ಬಿಯರ್ ಬಾಟಲಿಗಳನ್ನೂ ಅದರ ಜೊತೆಗೆ ಒಂದು ಪ್ಲೇಟು ಕೆಶ್ಯೂನಟ್ಸ್ ಹಾಗೂ ಒಂದು ಪ್ಲೇಟು ವೇಫರ್ಸ್ ಕಳಿಸುವಂತೆ ಕೇಳಿಕೊಂಡು ತನ್ನ ಸ್ಥಾನಕ್ಕೆ ಮರಳಿದ. +ದಸ್ತೂರ್ ಎಲ್ಲವನ್ನೂ ಎಲ್ಲಿ ಹಾಳುಮಾಡಿಬಿಡುತ್ತಾನೋ ಎಂಬ ಅಸಮಾಧಾನ ತುಂಬಿದ ಫಿರೋಜನ ಕಣ್ಣುಗಳನ್ನು ಸಂಧಿಸಿದ್ದೇ ತಡ, ದಸ್ತೂರ್_‘ಹೆದರಬೇಡ ಎಲ್ಲವನ್ನೂ ನನಗೆ ಬಿಡು’ ಎನ್ನುವ ರೀತಿ_ಇನ್ನೊಮ್ಮೆ ಕಣ್ಣು ಮಿಟುಕಿಸಿದ. ನಾಗಪ್ಪನ ಸೂಕ್ಷ್ಮ ದೃಷ್ಟಿಯಿಂದ ಇದನ್ನು ಅಡಗಿಸುವುದು ಮಾತ್ರ ಸಾಧ್ಯವಾಗಲಿಲ್ಲ : ಈ ನಗು ಮೋರೆಯ ಪಾರ್ಸೀ ಫಿರೋಜನಷ್ಟೇ ಧೂರ್ತನೆಂಬುದನ್ನು ಅವನು ಎಂದೋ ಅರಿತಿದ್ದ. ತನ್ನ ಬೇಟೆಯನ್ನು ಸರಿಯಾದ ಸನ್ನಿವೇಶದಲ್ಲಿ, ಸರಿಯಾದ ಮುಹೂರ್ತದಲ್ಲಿ ಹಿಡಿಯಲು ಎಷ್ಟು ಹೊತ್ತು ಬೇಕಾದರೂ ಕಾಯುವ ತಾಳ್ಮೆ ಇದ್ದ ಪ್ರಾಣಿಯಿದು…. +uಟಿಜeಜಿiಟಿeಜದಸ್ತೂರನೇ ಈ ನಾಟಕದ ಸೂತ್ರಧಾರನೆಂಬುದನ್ನು ನಾಗಪ್ಪ ಅರಿಯದೇ ಇರಲಿಲ್ಲ. ಪರದೆ ಏಳುವ ಸಂಧಿಯನ್ನೇ ಕಾಯುತ್ತಿದ್ದಾನೆ ಒಂದೂ ಮಗ : ಎಲ್ಲ ಪಾರ್ಸಿಗಳೂ ತಮ್ಮ ಮೂಗಿನಿಂದಲೇ ಎದ್ದು ಕಾಣುತ್ತಿದ್ದರೂ ಈ ಪಾರ್ಸಿಯ ಮೂಗಿನಲ್ಲೇನೋ ವಿಶೇಷವಿದೆ ಎಂಬಂತೆ ಲಕ್ಷ್ಯವನ್ನು ಅದರ ಮೇಲೇ ಕೇಂದ್ರೀಕರಿಸಿದಾಗ ಥಟ್ಟನೆ ಇವನೆಲ್ಲೋ ಉಮ್ರಿಗಾರನನ್ನು ಹೋಲುತ್ತಾನೆ ಎಂಬುದು ಹೊಳೆದಾಗ ಒಂದು ಬಗೆಯ ತುಂಟತನದ ಮುಗುಳುನಗೆ ನಾಗಪ್ಪನ ಮೋರೆಯನ್ನು ಬೆಳಗಿಸಿತು. ಆ ನಗೆಯ ಅರ್ಥವಾಗದೇ ಗೊಂದಲಿಸಿದ ದಸ್ತೂರ್ ಮೋರೆಯ ಮೇಲೊಮ್ಮೆ ಕೈಯಾಡಿಸಿಕೊಂಡ ಹಾಗೂ : +” I ತಿouಟಜ ಟiಞe ಣo ಛಿಟಚಿಡಿiಜಿಥಿ oಟಿe ಣhiಟಿg_ಣhಚಿಣ ಣhis is ಟಿoಣ ಚಿಟಿ iಟಿvesಣigಚಿಣioಟಿ buಣ ಚಿಟಿ iಟಿಣeಡಿvieತಿ,” ಎಂದ. ವಿವರಣೆ ಕೊಟ್ಟ ದನಿಯಲ್ಲಿ ಗಾಂಭೀರ್ಯವಿದ್ದರೂ ಅವನಿಗೆ ಅಂಟಿಕೊಂಡಂತಿದ್ದ ಒಂದು ರೀತಿಯ ಪೆದ್ದುತನ ನಾಗಪ್ಪನ ಸೂಕ್ಷ್ಮಗ್ರಹಣ-ಶಕ್ತಿಯಿಂದ ತಪ್ಪಿಸಿಕೊಳ್ಳಲಿಲ್ಲ. ದಸ್ತೂರನ ವಾಕ್ಯ ಮುಗಿಯುತ್ತಲೇ : +“I ಣhiಟಿಞ ತಿe shouಟಜ eಜuಛಿಚಿಣe ouಡಿ ಠಿeಡಿsoಟಿಟಿeಟ ಆeಠಿಚಿಡಿಣmeಟಿಣ ಣo ಞಟಿoತಿ ಣhe ಜiಜಿಜಿeಡಿeಟಿಛಿe beಣತಿeeಟಿ ಣhe ಣತಿo.” ಹೀಗೆ ಹೇಳಿ, ನಾಗಪ್ಪ ಫಿರೋಜನ ಕಡೆ ನೋಡಿದ. +ಇವನಲ್ಲಿ ಕ್ರಾಂತಿಕಾರಕ ಬದಲಾಗಿಬಿಟ್ಟಿದೆ ಎಂಬುದನ್ನು ಯಾವಾಗಲೋ ಮನಗಂಡ ಫಿರೋಜ್ ತಾಳ್ಮೆಗೆಟ್ಟು_”ಖಿhis is ಚಿಟಿ iಟಿvesಣigಚಿಣioಟಿ ಣoo,” ಎಂದ. ಒಳಗೆ ಕುದಿಯುವ ಸಿಟ್ಟು ಇದ್ದಾಗಲೂ ಸನ್ನಿವೇಶ ಬೇಡಿದರೆ ಬೇಕಾದಷ್ಟು ಸಿಹಿಯಾಗಿ ಮಾತನಾಡುವ, ಶಾಂತತೆಯ ಮುಖವಾಡ ಧರಿಸುವ ಕಲೆಯಿದ್ದ ಫಿರೋಜ್ ಕೂಡ ತನಗೆ ಬಂದ ಸಿಟ್ಟನ್ನು ಅಡಗಿಸುವುದರಲ್ಲಿ ಸೋತಿದ್ದ. ಇದನ್ನು ಗಮನಿಸಿದ ನಾಗಪ್ಪ_ +“ಔಜಿ ಛಿouಡಿse ಥಿou meಚಿಟಿ_ಣhis is ಚಿಟಿ iಟಿvesಣigಚಿಣioಟಿ ಣhಡಿough ಚಿಟಿ iಟಿಣeಡಿvieತಿ,” ಎನ್ನುತ್ತ ಮುಗುಳುನಕ್ಕ. +ಫಿರೋಜ್ ವರ್ಣಿಸಿದ ವ್ಯಕ್ತಿತ್ವದ ಇಸಮ್ ಅಲ್ಲವಿದು ಎಂದು ಅರಿತ ಪಟೇಲ್ ನಡುವೆ ಬಾಯಿ ಹಾಕಿ :”ಇಟಿoughoಜಿ ಣhese ಠಿಡಿeಟimiಟಿಚಿಡಿies. ಐeಣ us ಛಿome sಣಡಿಚಿighಣ ಣo ಣhe busiಟಿess,” ಎನ್ನುತ್ತಿರುವಾಗ ಸಮವಸ್ತ್ರಧಾರಿಯಾದ ಬೇರರ್ ಆರ್ಡರ್ ಮಾಡಿದ ಬಿಯರ್ ಹಾಗೂ ತಿನಿಸುಗಳೊಂದಿಗೆ ಕದ ದೂಡಿ ಒಳಗೆ ಬಂದ. ಪಟೇಲ_‘sಣಡಿಚಿighಣ ಣo ಣhe busiಟಿess’ ಅನ್ನುವುದಕ್ಕೂ ಬೇರರ್ ಬಿಯರ್ ಒಳಗೆ ತರುವುದಕ್ಕೂ ತಾಳೆಯಾದದ್ದರ ಮೇಲೇ ಜೋಕ್ ಮಾಡುವ ಲಹರಿಯನ್ನು ಪ್ರಯತ್ನಪೂರ್ವಕವಾಗಿ ತಡೆದು, ಗಂಭೀರವಾಗಿ : “ನಾನಂತೂ ಸಿದ್ಧನಾಗಿ ಕುಳಿತಿದ್ದೇನೆ,” ಎಂದ ನಾಗಪ್ಪ. ‘ದನಿಯಲ್ಲಿ ಬಹಳ ದಿನಗಳಿಂದ ಅದಕ್ಕಾಗಿ ಕಾಯುತ್ತಿದ್ದೇನೆ’ ಎನ್ನುವ ಧಾಟಿಯಿತ್ತು. +ಬೇರರ್, ತಂದ ಬಾಟಲಿಗಳನ್ನು ಇಟ್ಟುಹೋಗದೇ, ಒಂದೊಂದೇ ತೆರೆದು ಬಿಯರನ್ನು ಕಾಚಿನ ಮಗ್ಗುಗಳಲ್ಲಿ ತುಂಬಹತ್ತಿದ. ತಂಪು ಬಿಯರಿನ ವಾಸನೆ ಮೂಗು ಹೊಕ್ಕದ್ದೇ ನಾಗಪ್ಪ ಖುಶಿಪಟ್ಟ. ಪಟೇಲ ಕೂಡ ಬಾಯಿ ಚಪ್ಪರಿಸಹತ್ತಿದ. ಫಿರೋಜ್ ಹಾಗೂ ದಸ್ತೂರ್ ಇದೀಗ ಬರುತ್ತೇವೆ ಎನ್ನುವುದನ್ನು ಕಣ್ಣಿನಿಂದಲೇ ಸೂಚಿಸುತ್ತ ಮಗ್ಗಲು ಕೋಣೆಗೆ ಹೋದರು : ಎರಡೂ ಮಗ ಮಜಾ ಮಾಡುತ್ತಿದ್ದದ್ದು ಈ ಏರ್-ಕಂಡೀಶಂಡ್ ‘ಸ್ವೀಟ್’ನಲ್ಲಿ ! ಎಷ್ಟೊಂದು ಹುಡುಗಿಯರೊಡನೆ ಚಕ್ಕಂದವಾಡಿದ್ದಾನೋ ಎಂದುಕೊಳ್ಳುವಾಗ_ಥ್ರೀಟೀ, ಡಾಯನಾರ ಚಿತ್ರಗಳ ಹಿಂದೆಯೇ ಮೇರಿಯ ಚಿತ್ರವೂ ಕಣ್ಣಮುಂದೆ ಬಂದು ನಿಂತವು : ಅವಳೊಡನೆ ಟೆಲಿಫೋನ್ ಮೇಲೆ ಮಾತನಾಡುತ್ತಿದ್ದಾಗ ಅವಳ ಬಾಯಿಂದ ಕೇಳಿದ_ಇದೇ ತಾಜಮಹಲ್ ಹೊಟೆಲ್ಲಿನಲ್ಲಿ ಫಿರೋಜ್ ಕೊಟ್ಟ_ಪಾರ್ಟಿಯ ವರ್ಣನೆಯಿಂದ ತನ್ನಲ್ಲಿ ಸಹಿಸಲಸಾಧ್ಯವಾಗುವಷ್ಟರ ಮಟ್ಟಿಗೆ ಹುಟ್ಟಿದ ಅಸೂಯೆಯ ನೆನಪಿನಿಂದ ಮನಸ್ಸು ಈಗ ಯಾವುದೇ ಬಗೆಯ ಕ್ಷೋಭೆಗೆ ಒಳಗಾಗಲಿಲ್ಲ; ಖುಶಿಯಾಯಿತು. ಹನ್ನೆರಡು ದಿನಗಳ ತೆರಪಿಲ್ಲದ ಯಾತನೆಯ ನಂತರ ನೆಲಸಹತ್ತಿದ ಈ ಭಾವನೆಗಳ ಸ್ಥೈರ್ಯವನ್ನು ಇನ್ನೆಂದಿಗೂ ಕೆಡಿಸಿಕೊಳ್ಳಬಾರದು ಎಂದು ಮನಸ್ಸು ಆಣೆಮಾಡುವುದರಲ್ಲಿ ತೊಡಗಿದಾಗ ಬೇರರ್, ಪಟೇಲನ ಅದೇಶದ ಮೇರೆಗೆ ಬಿಯರ್ ತುಂಬಿದ ಒಂದು ಮಗ್ಗನ್ನು ನಾಗಪ್ಪನ ಕೈಗೂ ಇನ್ನೊಂದನ್ನು ಪಟೇಲನ ಕೈಗೂ ಕೊಟ್ಟ. ವೋಚರದ ಮೇಲೆ ಸಹಿ ಬೇಕಿತ್ತೇನೋ, ತುಸು ತಡೆದು ಬಾ ಎಂದು ಪಟೇಲ ಸೂಚಿಸಿದಾಗ ಬೇರರ್ ಹೊರಟುಹೋದದ್ದೇ “ಅome oಟಿ, ಥಿouಟಿg mಚಿಟಿ. ಐeಣ us ಟಿoಣ ತಿಚಿsಣe ಣime,” ಎಂದು ಮಗ್ ಎತ್ತಿ ಹಿಡಿದು ‘ಚಿಯರ್ಸ್’ ಎಂದ ಪಟೇಲ. ನಾಗಪ್ಪನೂ ‘ಚಿಯರ್ಸ್’ ಎನ್ನುತ್ತ ಬಿಯರಿನ ತಂಪು ಗುಟುಕೊಂದನ್ನು ಸೀಪಿದ್ದೇ ತಡ_ಆಹಾ ಎನ್ನುವಷ್ಟು ಉಲ್ಲಸಿತನಾದ. +ದಸ್ತೂರ್ ಹಾಗೂ ಫಿರೋಜ್ ಇನ್ನೂ ಮಗ್ಗಲು-ಕೋಣೆಯಿಂದ ಹೊರಗೆ ಬರದೇ ಇದ್ದುದನ್ನು ಗಮನಿಸಿ ಇನ್ನೊಂದು ಗುಟುಕು ಬಿಯರನ್ನು ಸೀಪುತ್ತ : +“I ಚಿm soಡಿಡಿಥಿ I seem ಣo hಚಿve uಠಿseಣ some oಜಿ ಥಿouಡಿ eಚಿಡಿಟieಡಿ sಣಡಿಚಿಣegಥಿ,” ಎಂದ ನಾಗಪ್ಪ ; ಹಾಗೂ ತನ್ನ ಮಾತಿನ ಪರಿಣಾಮಕ್ಕಾಗಿ ಪಟೇಲನ ಮೋರೆ ನೋಡಹತ್ತಿದ. +ಪಟೇಲನಿಗೆ ಫಿರೋಜನ ಈ ಲಫಡಾದಲ್ಲಿ ವಿಶೇಷ ಆಸ್ಥೆ ಇದ್ದಂತೆ ತೋರಲಿಲ್ಲ : “ಸ್ಟ್ರಾಟಜಿ ಎಲ್ಲಿಂದ ಬಂತು ಮಣ್ಣು. ನಮ್ಮ ಫಿರೋಜನದು ಅತ್ಯಂತ ನರ್ವಸ್ ಜಾತಿ. ನೀವೂ ಗೆಳೆಯರೂ ಕೂಡ ಕಳಿಸಿದ ಮೂಗರ್ಜಿಯಿಂದ ಹೆದರಿಕೊಂಡುಬಿಟ್ಟಿದ್ದಾನೆ. ಇಷ್ಟೇ_ಃe ಠಿಡಿಚಿಛಿಣiಛಿಚಿಟ ಚಿಟಿಜ ಚಿಛಿಛಿeಠಿಣ ಣhe oಜಿಜಿeಡಿ ಣhಚಿಣ is beiಟಿg mಚಿಜe ಣo ಥಿou….” ಎನ್ನುತ್ತ ಬಿಯರಿನ ತಂಪನ್ನು ಅದು ತರುತ್ತಿದ್ದ ಮತ್ತನ್ನು ಆಸ್ವಾದಿಸಹತ್ತಿದ. +ಒಂದೂ ಮಗನೆ, ನನಗೆ ಚೆಂಡಿಕೆ ಹಚ್ಚುತ್ತೀಯೇನೋ. ಅಂದರೆ ಆ ಸಹಿಯಿಲ್ಲದ ಪತ್ರವನ್ನು ಬರೆದವನು ನಾನೇ ಎಂಬುದನ್ನು ಖಾತ್ರಿಮಾಡಿಕೊಳ್ಳುವುದಕ್ಕೆ ಈ ಹಗರಣ, ಭೆಂಛೋದ್ ! ನೀನೂ ಧೂರ್ತನೇ ಹಾಗಾದರೆ. ನಿನ್ನ ಉಳಿದಿಬ್ಬರು ಗೆಳೆಯರು ಹೀಗೇ ಗಪ್‌ಚಿಪ್ ಎದ್ದುಹೋದದ್ದು ಕೂಡ ಮೊದಲೇ ಯೋಜಿಸಿಕೊಂಡ ಯುಕ್ತಿ_ಅಲ್ಲವೇನೋ ?…. ಇದಾವುದರ ಅರ್ಥವೇ ತನಗಾಗುತ್ತಿಲ್ಲ ಎಂಬಂತೆ ನಟಿಸುತ್ತ ಹಾಗೂ ತಾವಿಬ್ಬರೇ ಗುಟ್ಟಿನಲ್ಲಿ ಈ ತನಿಖೆಯ ಬಗ್ಗೆ ಮಾತನಾಡುವದು ಸರಿಯಲ್ಲವೇನೋ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಧಾಟಿಯಲ್ಲಿ, ನಾಗಪ್ಪ : +“ತನ್ನ ಗುಟ್ಟನ್ನು ನೀವು ಹೀಗೆ ಹೊರಗೆಡಹಿದ್ದೀರಿ ಎಂದು ಗೊತ್ತಾದರೆ ಫಿರೋಜ್ ನಿಮ್ಮನ್ನು ದ್ವೇಷಿಸದೇ ಇರಲಾರ….ನಮ್ಮ ಹತ್ತೇ ಮಿನಿಟುಗಳ ಪರಿಚಯದಲ್ಲಿ ನೀವು ನನ್ನನ್ನು ಬಹಳ ಮೆಚ್ಚಿಕೊಂಡಂತಿದೆ. ಅದಕ್ಕಾಗಿ ಅಭಾರಿಯಾಗಿದ್ದೇನೆ. ಆದರೆ ನನಗೆ ಹೆಚ್ಚು ಕುತೂಹಲವಿದ್ದದ್ದು ನಿಮ್ಮ ಹಾಗೂ ಫಿರೋಜನ ಪರಿಚಯ ಹೇಗೆ ಆಯಿತು ? ಎಂದು ತಿಳಿಯುವುದರಲ್ಲಿ_”I meಚಿಟಿ ಟಿoಣ ರಿusಣ beಛಿಚಿuse boಣh oಜಿ ಥಿou ಚಿಡಿe ಠಿಚಿಡಿssis….” ಎಂದ. +ಪಟೇಲ ಅಕ್ಷರಶಃ ಸೋಫಾದಲ್ಲಿ ಜಿಗಿದುಬಿದ್ದ : “ಔಜಿ ಛಿouಡಿse ಟಿoಣ…. ಔಜಿ ಛಿouಡಿse ಟಿoಣ….” ವಿವರಣೆ ಕೊಡುವ ಮಾತಿನಲ್ಲಿ ಪ್ರತಿಭಟನೆಯ ಅಂಶವೇ ದೊಡ್ಡದಾಗಿತ್ತು. ಫಿರೋಜ್ ಹಾಗೂ ದಸ್ತೂರರು ಬೇಕಾದ್ದಕ್ಕಿಂತ ಹೆಚ್ಚು ಹೊತ್ತು ಒಳಗಿದ್ದಾರೆ ಅನ್ನಿಸಿ_ಅome oಟಿ ಜಿeಟಟoತಿs_ಥಿouಡಿ beeಡಿ is geಣಣiಟಿg vಚಿಡಿm…” ಎಂದು ಕರೆದೊಡನೆ ಇಬ್ಬರೂ ಲಗುಬಗೆಯಿಂದ ಹೊರಗೆ ಬಂದು ತಾವು ಅವರಿಬ್ಬರನ್ನೇ ಬಿಟ್ಟು ಒಳಗೆ ಹೋಗಬೇಕಾಗಿ ಬಂದದ್ದರ ಬಗ್ಗೆ ಕ್ಷಮೆ ಯಾಚಿಸಿ ತಮ್ಮ ತಮ್ಮ ಬಿಯರ್ ಮಗ್ಗುಗಳನ್ನೆತ್ತಿ ‘ಚಿಯರ್ಸ್’ ಎಂದರು. +“ನೀವು ಕೂಡಲೇ ಹೊರಗೆ ಬಂದದ್ದು ಒಳ್ಳೆಯದಾಯಿತು. ನಾನು ಕೇಳಹತ್ತಿದ ಪ್ರಶ್ನೆಗಳಿಂದ ಪಾಪ, ಪಟೇಲರಿಗೆ ಉಂಟಾದ ಫಜೀತಿ ಹೇಳತೀರದು….” ನಾಗಪ್ಪ ತುಂಟತನದಿಂದ ಮುಗುಳುನಗುತ್ತ ಪಟೇಲನ ಕಡೆಗೆ ನೋಡಿದಾಗ ಪಟೇಲನ ಲಕ್ಷ್ಯವೆಲ್ಲ ಸೀಲಿಂಗಿನ ಬಣ್ಣದ ಮೇಲೂರಿತ್ತು. +ನಾಗಪ್ಪ ಅಲ್ಲಿಗೇ ತಡೆಯಲಿಲ್ಲ_”ನೀವು ಇಲ್ಲಿಂದ ಹೊರಟುಹೋದದ್ದೇ ತಡ, ನಮ್ಮ ಪಟೇಲ ಸಾಹೇಬರು ಎರಡೂ ಬಿಸಿನೆಸ್ಸುಗಳನ್ನು ಒಂದೇ ಕಾಲಕ್ಕೆ ಆರಂಭಿಸಿಬಿಟ್ಟರು_ನನಗೆ ಬಿಯರ್ ಕುಡಿಸುವುದರ ಜತೆಗೆ ನೀವು ಅವರಿಗೆ ವಹಿಸಿಕೊಟ್ಟ ಕೆಲಸವನ್ನೂ, ಅವರು ನನಗೆ ಹೇಳಿದ್ದರ ಮುಖ್ಯ ಸಾರಾಂಶ ಇಷ್ಟೆಂದು ನನ್ನ ಗ್ರಹಿಕೆ : ಬೋರ್ಡು ಮೆಂಬರರಿಗೆ ಕಳಿಸಿದ ಸಹಿಯಿಲ್ಲದ ಪತ್ರ ನಾನು ಬರೆದದ್ದು ಹೌದು ಎಂದಾದರೆ, ನನಗೇನೋ ದೊಡ್ಡ ಆಫರ್ ಬರಲಿದೆಯಂತೆ. ನಾನದನ್ನು ಸ್ವೀಕರಿಸಿ ತೆಪ್ಪಗೆ ಬಾಯಿ ಮುಚ್ಚಿಕೊಂಡಿರುವದು ಒಳ್ಳೆಯದು ಎಂದು ಅವರ ಸಲಹೆಯೆಂದು ತೋರುತ್ತದೆ…. ಅಲ್ಲವೇ ಪಟೇಲರೆ ?” ಪಟೇಲನ ಕಡೆಗೆ ತಿರುಗಿದರೆ ಅಲ್ಲಿ ಅವನು ತನ್ನ ಜಾಗದಲ್ಲಿ ಇರಲೇ ಇಲ್ಲ. ಇವನು ಮಾತಿಗೆ ಆರಂಭಿಸಿದ ರೀತಿ ನೋಡಿಯೇ ಬೆದರಿದವನು ಬಿಯರಿಗೆ ಹೆಚ್ಚಿನ ಜಾಗ ಮಾಡಿಕೊಡುವ ನೆಪದಿಂದೆಂಬಂತೆ ಕ್ಲೋಕ್-ರೂಮ್ ಹುಡುಕುತ್ತ ಒಳಗೆ ಹೋಗಿದ್ದ. +ದಸ್ತೂರ್ ಹಾಗೂ ಫಿರೋಜರಂತೂ ಇವನ ಮಾತಿನ ರೀತಿಗೆ ಥಕ್ಕಾಗಿಬಿಟ್ಟರು. ಈ ಹತ್ತು-ಹನ್ನೆರಡು ದಿನಗಳಲ್ಲಿ ಇವನಲ್ಲಿ ಹೀಗೆ ಅಮೂಲಾಗ್ರವಾಗಿ ಬದಲಾಗುವಂತಹದು ಏನು ನಡೆಯಿತೋ ಎನ್ನುವದು ತಿಳಿಯದೇ ಅವರು ದಿಗ್ಭ್ರಮೆಗೊಂಡರು. ಕಾರಣ ಏನೇ ಇರಲಿ, ಬದಲಾದದ್ದಂತೂ ನಿಃಸಂಶಯ. ಇವನ ವ್ಯಕ್ತಿತ್ವದ ಬಗ್ಗೆ ಫಿರೋಜ್ ಈ ಮೊದಲು ಮಾಡಿಕೊಟ್ಟ ಕಲ್ಪನೆಗೂ ಪ್ರತ್ಯಕ್ಷದಲ್ಲಿ ಕಂಡವನಿಗೂ ಇರುವ ಅಂತರವನ್ನು ಕಂಡು ದಸ್ತೂರ್ ಒಳಗೊಳಗೇ ಫಿರೋಜನ ಬಗ್ಗೆ ಸಿಡಿಮಿಡಿಗೊಂಡ. ಫಿರೋಜನೇ ತಾನು ಸಿಕ್ಕಿಸಿಕೊಂಡ ಈ ಪೇಚಿನ ಪ್ರಸಂಗವನ್ನು ನಿಭಾಯಿಸಿಕೊಳ್ಳಲೀ ಎಂದು ಕೈಚೆಲ್ಲಿ ಕೂತ ಥರ ನಾಗಪ್ಪನ ಕಡೆಗೆ ಕೌತುಕ ತುಂಬಿದ ದೃಷ್ಟಿಯಿಂದ ನೋಡುತ್ತ ಬಿಯರ್ ಸೇವಿಸಹತ್ತಿದ. ಸ್ವಭಾವತಃ ಪುಕ್ಕಲು-ಪ್ರಕೃತಿಯವನಾದ ಫಿರೋಜ್ ದಸ್ತೂರನ ಈ ನಿಲುವಿನಿಂದ ಇನ್ನಷ್ಟು ಗಾಬರಿಯಾದ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ನಾಗಪ್ಪ, ಇಷ್ಟೊಂದು ಸುಲಭವಾಗಿ ತನ್ನ ಪರವಾಗಿ ಬೆಳೆಯುತ್ತಿದ್ದ ಸನ್ನಿವೇಷವನ್ನು ವ್ಯ್ರ್ಥವಾಗಲು ಬಿಡಬಾರದು ಎನ್ನುವ ಹಟದಿಂದೆಂಬಂತೆ ಅಂದ : +“ಆ ಪತ್ರ ಬರೆದದ್ದು ನಾನಲ್ಲ. ಆ ಪತ್ರದಲ್ಲಿ ಏನೇನು ಇದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ಇಷ್ಟೇ : ಆ ಪತ್ರದಲ್ಲಿ ನಮೂದಿಸಿರಬಹುದಾದ ಕೆಲವರ ಕರಾಮತಿಗಳ ಬಗ್ಗೆ ನನ್ನ ಹತ್ತಿರ ಸಾಕಷ್ಟು ಮಾಹಿತಿ ಇದೆ. ಅದರಿಂದ ಈ ತನಿಖೆಯ ಆಯೋಗಕ್ಕೆ ಉಪಯೋಗವಾಗಬಹುದಾದ ಪಕ್ಷದಲ್ಲಿ ನಾನು ಯಾವ ಬಕ್ಷೀಸಿನ ಅಪೇಕ್ಷೆ ಇಲ್ಲದೇನೆ ನಿಮ್ಮ ಮುಂದೆ ಇರಿಸಲು ಸಿದ್ಧನಿದ್ದೇನೆ.” +ಫಿರೋಜನಿಂದ ಇನ್ನು ಸುಮ್ಮನಿರುವದು ಸಾಧ್ಯವಾಗಲಿಲ್ಲ. ತನಗೆ ಬಂದ ಸಿಟ್ಟನ್ನು ಅಡಗಿಸುವ ಪ್ರಯತ್ನ ಕೂಡ ಮಾಡದೇ ಗುಡುಗಿದ : +“ಆoಟಿ;ಣ be imಠಿeಡಿಣiಟಿeಟಿಣ. ಇಲ್ಲಿ ನಿನ್ನ ಬಗ್ಗೆ ತನಿಖೆ ನಡೆದಿದೆಯೇ ಹೊರತು….ನೀನೇ ತನಿಖೆ ನಡೆಸಲು ಹೊಟಂತೆ ಮಾತನಾಡಬೇಡ.” +ನಾಗಪ್ಪ, ಫಿರೋಜನ ಮಾತುಗಳಿಂದ ಆಶ್ಚರ್ಯಪಡುತ್ತಿರುವಾಗಲೂ ಸನ್ನಿವೇಶದಲ್ಲಿಯ ಈ ಹೊಸ ಸಾಧ್ಯತೆಯನ್ನು ಕಂಡು ಪುಲಕಿತನಾಗಿ ಮುಗುಳುನಕ್ಕ : “ಅದರ ಅರಿವು ನನಗೆ ಇದೆ ಫಿರೋಜ್…. ಈ ಪರಿಸ್ಥಿತಿಗೆ ವ್ಯತಿರಿಕ್ತವಾದದ್ದೇನನ್ನೂ ನಾನು ಅಂದಿಲ್ಲ…. uಟಿಟess ತಿe ಚಿಡಿe ಠಿಡಿomಠಿಣeಜ bಥಿ ouಡಿ uಟಿಛಿoಟಿsಛಿious ಣo heಚಿಡಿ ಣhiಟಿgs ತಿhiಛಿh ತಿeಡಿe ಟಿoಣ sಚಿiಜ.” +ನಾಗಪ್ಪನ ಈ ಮಾತುಗಳಿಂದ ಫಿರೋಜ್ ಇನ್ನಷ್ಟು ಕೆರಳಿದ. ಆಗ ದಸ್ತೂರ್ ಒಮ್ಮೆಲೇ_ಮಾತಿಗೆ ಪೂರ್ವಯೋಜಿತ ದಿಕ್ಕು ಕೊಡಲು ಕಾದು ಕೂತವನ ಹಾಗೆ_ಕೇಳಿದ : +‘ಓಕೇ ಮಿಸ್ಟರ್ ನಾಗನಾಥ್. ಹೇಳಿ : ತಂದೆ-ತಾಯಿಗಳಿಗೆ ನೀವು ಒಟ್ಟೂ ಎಷ್ಟು ಮಂದಿ ಮಕ್ಕಳು ?” +ನಾಗಪ್ಪ ನಿರುತ್ತರನಾದ : ಎಲ್ಲ ಬಿಟ್ಟು ತನಿಖೆ ಇದೇ ಪ್ರಶ್ನೆಯಿಂದೇಕೆ ಆರಂಭವಾಯಿತು ? ತೀರ ಸಹಜವೆಂದು ತೋರುತ್ತಿದ್ದ ಈ ಪ್ರಶ್ನೆ ನನ್ನ ಮೇಲೆ ಇದೇಕೆ ಇಷ್ಟೊಂದು ಭಾವನಾತ್ಮಕ ಆಘಾತ ಉಂಟುಮಾಡುತ್ತಿದೆ ? ಈ ಪ್ರಶ್ನೆ ಸಹಜವಾದದ್ದೇ ? ಅಥವಾ….ಶ್ರೀನಿವಾಸ ಕೊನೆಗೂ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ತನ್ನ ಬಗ್ಗೆ ಗುಪ್ತ ಮಾಹಿತಿಯನ್ನು ಒದಗಿಸಿರಬಹುದೆ ? ಬೇರೆ ಯಾವುದೇ ಪ್ರಶ್ನೆಯಿಂದ ತನಿಖೆ ಆರಂಭವಾಗಿದ್ದರೂ ನಾಗಪ್ಪ ಹೀಗೆ ಕೇಳಬೇಕೆಂದು ನಿಶ್ಚಯಿಸಿಕೊಂಡಿದ್ದ : ‘ದಯಮಾಡಿ_ಈ ತನಿಖೆಯ ಉದ್ದೇಶವೇನು ? ಅದನ್ನು ನಡೆಸುವ ಅಧಿಕಾರ ನಿಮಗೆ ಯಾರು ಕೊಟ್ಟಿದ್ದಾರೆ ? ಎಂಬುದನ್ನು ಸ್ಪಷ್ಟಪಡಿಸಿರಿ ಇಲ್ಲಾವದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವದು ಶಕ್ಯವಿಲ್ಲ….’ಆದರೆ ಈಗ ದಸ್ತೂರ್ ಕೇಳಿದ ಪ್ರಶ್ನೆಯಿಂದ ಮಾತ್ರ ನಾಗಪ್ಪ ತಬ್ಬಿಬ್ಬಾದ : ಈ ಮುಖಾಮುಖಿಯನ್ನು ಇದಿರಿಸಲು ಬೇಕಾದ ಸಂಕಲ್ಪ ಬಲವನ್ನು ನಿಶ್ಚಯಿಸಿದ ಅನೇಕ ಶಕ್ತಿಗಳಲ್ಲಿ ಮಹತ್ವದ್ದೊಂದು ಐನ್ ಗಳಿಗೆಯಲ್ಲಿ ಕುಸಿದುಬೀಳುತ್ತಿದೆ ಎಂಬಂತಹ ಅನುಭವದಿಂದ ಧೃತಿಗೆಡಹತ್ತಿದ. +ಫಿರೋಜ್ ಈ ಸಂಧಿಯನ್ನು ವ್ಯರ್ಥಹೋಗಲು ಬಿಡಲಿಲ್ಲ : “ಅomಚಿ oಟಿ ಓಚಿg, ಜoಟಿ’ಣ ಟeಣ ಥಿouಡಿ subಛಿoಟಿsಛಿious ಡಿeಚಿಜ meಚಿಟಿiಟಿgs ತಿhiಛಿh ಚಿಡಿe ಟಿoಣ ಣheಡಿe is so simಠಿಟe ಚಿ quesಣioಟಿ.” ಫಿರೋಜನ ಈ ಮಾತುಗಳಿಂದ ಅವನು ಬಯಸಿದ ಪರಿಣಾಮ ದಸ್ತೂರನ ಮೇಲೆ ಆಗದೇ ಉಳಿಯಲಿಲ್ಲ : ತನ್ನ ಪ್ರಶ್ನೆಯಿಂದ ನಾಗಪ್ಪನ ಮನಸ್ಸಿಗೆ ಆಘಾತವಾಗಿದೆ ಎನ್ನುವುದು ಅವನ ಲಕ್ಷ್ಯಕ್ಕೆ ಬರದೇ ಇರಲಿಲ್ಲ. ಆದರೆ ಫಿರೋಜನ ಧ್ವನಿಯಲ್ಲಿಯ ವ್ಯಂಗ್ಯವೇ ನಾಗಪ್ಪನಿಗೆ ಆಹ್ವಾನವಾಯಿತು : +“ಕ್ಷಮಿಸಿ ಮಿಸ್ಟರ್ ದಸ್ತೂರ್, ಅನಿರೀಕ್ಷಿತವಾದ ನಿಮ್ಮ ಪ್ರಶ್ನೆ ನನ್ನ ವ್ಯಕ್ತಿತ್ವದ ಒಂದು ಸೂಕ್ಷ್ಮಸ್ಥಾನವನ್ನು ತಟ್ಟಿದ್ದು ನಿಜ. (ಹೀಗೇ ಹೇಳಹೊರಟರೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಅರ್ಥವಾಗುವಂತೆ ಹೇಳಲಿಕ್ಕೆ ಸಮಯ ಸಾಲದು.) ಒಂದನ್ನು ಹೇಳಿ_ಯಾಕಂದರೆ ಇದು ನನ್ನ ಕರಿಯರಿನ ಪ್ರಶ್ನೆ : ಈ ತನಿಖೆಯ ಉದ್ದೇಶವೇನು ? ಅದನ್ನು ನಡೆಸಲು ನಿಮ್ಮನ್ನು ನೇಮಿಸಿದವರು ಯಾರು ? ಅಧಿಕಾರ ಕೊಟ್ಟವರು ಯಾರು ? ನನ್ನ ಮೇಲಿನ ಆರೋಪಗಳಾದರೂ ಏನು ? ಹೊರಿಸಿದವರು ಯಾರು ?_ಈ ಪ್ರಶ್ನೆಗಳಿಗೆ ಉತ್ತರ ಸಿಗದೇ ನಿಮ್ಮ ಯಾವ ಪ್ರಶ್ನೆಗಳಿಗೂ ನಾನು ಉತ್ತರ ಕೊಡುವದು ಅಸಾಧ್ಯ….” +ಯಾವುದೇ ಬಗೆಯ ನಾಟಕೀಯತೆ ಇಲ್ಲದೇ, ದಸ್ತೂರನ ಕಣ್ಣುಗಳಲ್ಲಿ ಕಣ್ಣುನೆಟ್ಟು ತನಗೆ ಆಡಲು ಶಕ್ಯವಾದ ಈ ಮಾತಿನಿಂದ ನಾಗಪ್ಪನಿಗೆ ಸಮಾಧಾನವಾಗದೇ ಇರಲಿಲ್ಲ. ಉಳಿದವರ ಮೇಲೆ ಅದು ಉಂಟುಮಾಡಿರಬಹುದಾದ ಪರಿಣಾಮ ತಿಳಿಯುವ ಕುತೂಹಲ ಹುಟ್ಟಲಿಲ್ಲ. ಯಾಕೆಂದರೆ ಅಂತಹ ಉದ್ದೇಶವೇ ಆ ಮಾತಿಗೆ ಇರಲಿಲ್ಲ. +ಇತ್ತ ದಸ್ತೂರನೂ ಈ ತನಿಖೆಗೆ ಬೇಕಾದ ಅನೌಪಚಾರಿಕತೆಯನ್ನು ಕಾಯ್ದುಕೊಂಡು ಗಂಭೀರನಾಗಲು ಈಗ ನಿರ್ಧರಿಸಿದಂತಿತ್ತು : ಬಿಯರಿನ ಪಾತ್ರೆಯನ್ನು ಟೀಪಾಯಿಯ ಮೇಲಿಟ್ಟು, ಕೆಲ ಹೊತ್ತಿನ ಮೊದಲಷ್ಟೇ ಬದಿಯ ಕೋಣೆಯಿಂದ ತಂದಿರಿಸಿದ ಫೈಲನ್ನು ಕೈಗೆ ತೆಗೆದುಕೊಂಡು, ಚೂಪಾಗಿ ಕೆತ್ತಿ ತಂದ ಪೆನ್ಸಿಲ್ ಒಂದನ್ನು ಒಮ್ಮೆ ಫೈಲ್ ಮೇಲೆ ಬಡಿಯುತ್ತ, ಇನ್ನೊಮ್ಮೆ ಮೂಸಿನೋಡುವ ರೀತಿ ಮೂಗಿನ ಹತ್ತಿರ ಹಿಡಿಯುತ್ತ, ಮಗದೊಮ್ಮೆ ಗಲ್ಲದ ಮೇಲೆ ಒತ್ತುತ್ತ, ಕೆಲಹೊತ್ತು ಮುಗುಳುನಗೆ ಬೆರೆಸಿದ ಮೌನಧರಿಸಿ ಕುಳಿತ : ಒಂದೂ ಮಗ ಸಿದ್ಧವಾಗ್ತಾಽಽ ಇದಾನೆ : ನಾಗಪ್ಪನೂ ಉತ್ತರ ಕೊಡಲು ಸಿದ್ಧನಾಗಿ ದಸ್ತೂರ್ ಬಾಯಿ ತೆರೆಯುವುದನ್ನೇ ಕಾಯುತ್ತ ಕುಳಿತ : ಇನ್ನು ಹೆದರಕೂಡದು. ಭಾವುಕನಾಗಕೂಡದು. ಫಕ್ಕನೆಂಬಂತೆ ಒಂದು ಸಂಶಯ : ತನಗೆ ನೇರವಾಗಿ ಹೇಳಲು ಹಿಂದೆಗೆದದ್ದನ್ನು ಶ್ರೀನಿವಾಸ ಫಿರೋಜನಿಗೆ ತಿಳಿಸಿಲ್ಲವಷ್ಟೇ ? ತನಿಖೆಯ ದಿನ ಮುಂದೆ ಬೀಳಲು ಕೊನೆಯ ಗಳಿಗೆಯಲ್ಲಿ ಶ್ರೀನಿವಾಸನಿಂದ ದೊರೆತಿರಬಹುದಾದ ಮಾಹಿತಿಯೇ ಕಾರಣ ಅಲ್ಲವಷ್ಟೇ ? ಈ ಸಂಶಯದಿಂದ ನಾಗಪ್ಪನ ಧೈರ್ಯ ಮಾತ್ರ ಎಳ್ಳಷ್ಟೂ ಕುಗ್ಗಲಿಲ್ಲ. ಬದಲು ದಸ್ತೂರನ ಪ್ರಶ್ನೆಯನ್ನು ಕೇಳುವ ಆತುರ ಹೆಚ್ಚಿತು_ಅಷ್ಟೇ. ಆ ಆತುರವನ್ನು ಮೋರೆಯಮೇಲೆ ಸ್ಪಷ್ಟವಾಗಿ ಮೂಡಿಸಿ ದಸ್ತೂರನನ್ನೇ ಎವೆಯಿಕ್ಕದೇ ನೋಡುತ್ತ ಕೂತ. +ದಸ್ತೂರ್ ಪ್ರಶ್ನೆ ಕೇಳಲು ತೆಗೆದುಕೊಳ್ಳುತ್ತಿದ್ದ ವೇಳೆ ಪಟೇಲ್ ಹಾಗೂ ಫಿರೋಜರ ಮೇಲೂ ಪರಿಣಾಮ ಮಾಡುತ್ತಿದ್ದಂತೆ ತೋರಿತು : ಇಬ್ಬರೂ ಕೂತಲ್ಲೇ ಚಡಪಡಿಸುತ್ತಾ ಕುಂಡೆ ಸರಿಸಿದರು. ದಸ್ತೂರ್ ಬಾಯಿ ತೆರೆಯಲು ಹವಣಿಸುತ್ತಿದ್ದ. ಆದರೆ ಶಬ್ದವಾಗಲು ಬಯಸುತ್ತಿದ್ದ ಪ್ರಶ್ನೆ ಒಳಗೆಲ್ಲೋ ತಡವರಿಸುತ್ತಿದ್ದುದನ್ನು ನಾಗಪ್ಪನ ಚೂಪು ದೃಷ್ಟಿಯಿಂದ ಮರೆಯಿಸಲಾಗಲಿಲ್ಲ : ಗಾಳಾ ಹಾಕ್ತಾನೆ ಎರಡೂ ಮಗ. ಲೆಕ್ಕಾ ಹಾಕ್ತಾನೆ_ಎಲ್ಲಿಂದ ಶುರು ಮಾಡಲಿ ? ಹೇಗೆ ಶುರು ಮಾಡಲಿ ? ಹೇಗಾದರೂ ಶುರುಮಾಡೋಽಽ….ಈ ತನಿಖೆಯ ಭವಿತವ್ಯ ನೀನು ಹೇಗೆ ಆರಂಭಮಾಡುತ್ತೀ ಎಂಬುದನ್ನೇನೂ ಅವಲಂಬಿಸಿಲ್ಲವೋ ; ನಾನು ಹೇಗೆ ಕೊನೆಗೊಳಿಸುತ್ತೇನೆ ಎಂಬುದರ ಮೇಲೆ ನಿಂತಿದೆ. ಮತ್ತು ನಾನು ಹೇಗೆ ಕೊನೆಗೊಳಿಸುತ್ತೇನೆ ಎಂಬುದು ನನಗೆ ಗೊತ್ತಿದೆ. ನಿಮಗೂ ಗೊತ್ತಾಗುತ್ತದೆ. ಉತಾವಳಿ ಮಾಡಬೇಡ. ನ್ಯಾಯವನ್ನು ಬೇಡಲು ಬಂದಿಲ್ಲ. ಬಂದದ್ದು ನೀವು ಎಸಗಿದ ಅನ್ಯಾಯವನ್ನು ಬಯಲಿಗೆಳೆಯಲು. ಬಾ, ನೀವು ಬರುವುದನ್ನೇ ಕಾಯುತ್ತ ಇದ್ದೇನೆ ಕಳೆದ ಎರಡು ವಾರಗಳಿಂದಲೂ…. +ನಾಗಪ್ಪ ಬಿಯರಿನ ತಂಪು ಗುಟುಕೊಂದನ್ನು ಹೀರಿದ ; ತುಂಬ ಸಮಾಧಾನ ಎನಿಸಿತು. ಫಿರೋಜ್ ಪೈಪ್ ಸ್ವಚ್ಛ ಮಾಡುವ ಉದ್ಯೋಗದಲ್ಲಿ ನಿರತನಾಗಿದ್ದ. ಪಟೇಲ್ ಬಿಯರಿನ ಅಮಲನ್ನು ಆಸ್ವಾದಿಸುತ್ತ, ದಸ್ತೂರನ ಮುಂದಿನ ಚಾಲಿನ ಹಾದಿ ಕಾಯುತ್ತ ಚಡಪಡಿಸುತ್ತಿದ್ದ. ಕುಂಡೆ ಸರಿಸುತ್ತಿದ್ದ. ಭುಜ ಹಾರಿಸುತ್ತಿದ್ದ. ದಸ್ತೂರ್ ಮಹದ್ಗಾಂಭೀರ್ಯದಲ್ಲಿ ಆರಂಭಿಸಿದ. ಅವನ ವ್ಯಕ್ತಿತ್ವಕ್ಕೆ ಶೋಭಿಸದ ಈ ಗಂಭೀರ್ಯದಲ್ಲಿಯ ಸುಳ್ಳುತನವೇ ನಾಗಪ್ಪನ ಸಿಟ್ಟಿಗೆ ಕಾರಣವಾಯಿತು. ಆದರೂ ತಾಳ್ಮೆ ನಟಿಸುತ್ತ ಕುಳಿತ, ಕೇಳಿದ. +ದಸ್ತೂರ್_”ಕಳೆದ ಎರಡು ವಾರಗಳಿಂದ ನೀವು ಪಡಬೇಕಾಗಿ ಬಂದ ನೋವು, ಆತಂಕಗಳನ್ನು ನಾನು ಸುಲಭವಾಗಿ ಊಹಿಸಬಲ್ಲೆ, ಆದರೂ….” +ನಾಗಪ್ಪನಿಂದ ಈ ಸುಳ್ಳನ್ನು ಸಹಿಸುವುದಾಗಲಿಲ್ಲ. ಫಿರೋಜನ ಕೈಕೆಳಗೆ ಅವನ ಇಂತಹವೇ ಸುಳ್ಳಿನ ಕಂತೆಗಳನ್ನು ಕೇಳುತ್ತ ಹದಿನೆಂಟು ವರುಷ ಹೇಗೆ ಕೆಲಸ ಮಾಡಿದೆ ಎನ್ನುವುದರ ಬಗ್ಗೆ ಈಗ ಆಶ್ಚರ್ಯವೆನಿಸಿತು : +“ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಕಾಗಿಲ್ಲ. ಮಿಸ್ಟರ್ ದಸ್ತೂರ್. ಮೇಲಾಗಿ, ನನ್ನ ನೋವನ್ನು ಆತಂಕವನ್ನು ನೀವು ಎಂದೂ ಊಹಿಸಲಾರಿರಿ. ಯಾಕೆಂದರೆ ನಾನಿದ್ದ ಸನ್ನಿವೇಶದಲ್ಲಿ ನೀವು ಇಲ್ಲವೇ ಇಲ್ಲ. ಆದರೂ ನಿಮ್ಮ ಅಂತಃಕರಣಕ್ಕೆ ಅಭಾರಿಯಾಗಿದ್ದೇನೆ….” +ನಾಗಪ್ಪನ ಮಾತಿನಲ್ಲಿಯ ಪ್ರತಿಭಟನೆಯ ಧ್ವನಿ ಉಳಿದ ಮೂವರ ಲಕ್ಷ್ಯಕ್ಕೆ ಬರದೇ ಇರುವುದು ಶಕ್ಯವಿರಲಿಲ್ಲ. ಕಣ್ಣೆದುರಿನ ಸೋಫಾದಲ್ಲಿ ಸಿಡಿಮಿಡಿಗೊಳ್ಳುತ್ತ ಆಸ್ಫೋಟನದ ಸಂಧಿ ಕಾಯುತ್ತಿದ್ದ ಬಂಡಾಯವನ್ನು ಕೂಡಲೇ ಹತೋಟಿಗೆ ತರಬೇಕಾದರೆ ತಾನು ಕಳೆದ ಮೂವತ್ತು ವರ್ಷಗಳ ವ್ಯಾವಸಾಯಿಕ ಅನುಭವದಲ್ಲಿ ಕಲಿತ ಎಲ್ಲ ಚಾಣಾಕ್ಷತೆಯನ್ನೂ ಈಗ ಉಪಯೋಗಿಸಬೇಕಾದದ್ದರ ಗರಜನ್ನು ಕಂಡುಕೊಂಡ ದಸ್ತೂರ್, ನಾಗಪ್ಪನ ಮಾತುಗಳಿಂದ ವಿಚಲಿತನಾಗದೇ : +” I ಞಟಿoತಿ, I ಞಟಿoತಿ, ಠಿಟeಚಿse ಜoಟಿ;ಣ ಣಚಿಞe me ಟiಣeಡಿಚಿಟಟಥಿ. ಇveಡಿಥಿ mಚಿಟಿ hಚಿs his oತಿಟಿ sಣಥಿಟe oಜಿ bಡಿeಚಿಞiಟಿg ಣhe iಛಿe…. ಇನ್ನೊಬ್ಬನ ಅಪರಿಚಿತ ವಿಶ್ವವನ್ನು ಪ್ರವೇಶಿಸುವ ಅಪರಿಚಿತನಿಗೆ ನಮ್ಮ ವಿಶ್ವದಲ್ಲಿ ಬರಮಾಡಿಕೊಳ್ಳುವ ಪರಿ ವ್ಯಕ್ತಿವ್ಯಕ್ತಿಗೆ ಭಿನ್ನವಾದದ್ದೆಂದು ಅನಿಸುವದಿಲ್ಲವೇ ? ಈಗ ನಾವೇ, ಈವರೆಗೂ ಪರಸ್ಪರ ಪರಿಚಯವಿಲ್ಲದೆಯೂ ಗೆಳೆಯರಾಗಲು ಹೊರಟಿದ್ದೇವೆ. ಯಾವ ಸಂಕೋಚವೂ ಇಲ್ಲದೇನೆ ನನ್ನನ್ನು ನಿಮ್ಮ ಗೆಳೆಯನೆಂದು ತಿಳಿಯಿರಿ, ಮಿಸ್ಟರ್ ನಾಗನಾಥ. ಹಿತೈಷಿಯೆಂದು ತಿಳಿಯಿರಿ. ದಯಮಾಡಿ ಎಲ್ಲ ದುರಾಗ್ರಹಗಳನ್ನೂ ಸದ್ಯ ಬದಿಗೆ ತಳ್ಳಿರಿ_ನಾವಿಬ್ಬರೂ ತಳ್ಳೋಣ. ಮನಸ್ಸಿನಲ್ಲಿಯ ಎಲ್ಲ ಅಪನಂಬಿಕೆಗಳನ್ನೂ, ನಾವು ನಾವು ಹೇಳಲಿದ್ದುದನ್ನು ತೆರೆದ ಮನಸ್ಸಿನಿಂದ ಕೇಳೋಣ.” +ಕೈಯಲ್ಲಿ ಹಿಡಿದ ಪಾತ್ರೆಯಲ್ಲಿಯ ಬಿಯರಿನಷ್ಟೇ ತಂಪಾದ ಈ ಮಾತು ನಾಗಪ್ಪನ ಮೇಲೆ ದಸ್ತೂರ್ ಬಯಸಿದ ಪರಿಣಾಮ ಮಾಡದೇ ಇರಲಿಲ್ಲ. ಹೊಟ್ಟೆಯೊಳಗೆ ಅದಾಗಲೇ ಸೇರಿದ ಬಿಯರೂ ಈ ಪರಿಣಾಮದಲ್ಲಿ ಭಾಗವಹಿಸಿತ್ತು. ಇದನ್ನರಿತ, ಹೊರಗಿನಿಂದ ಪೆದ್ದನಂತೆ ಕಂಡರೂ ಉಳಿದಿಬ್ಬರಿಗಿಂತ ಧೂರ್ತತನದಲ್ಲಿ ಮೇಲುಗೈಯಾದ ಪಟೆಲ್ ಕೂಡಲೇ ಖಾಲಿಯಾಗಹತ್ತಿದ ಬಿಯರಿನ ಪಾತ್ರೆಗಳನ್ನು ತುಂಬಹತ್ತಿದ. ಆಗಿನಿಂದಲೂ ಸರಿಯಾದ ಮಾತುಕತೆಯನ್ನೇ ಅಸಾಧ್ಯ ಮಾಡಿದ ನಾಗಪ್ಪನ ಪ್ರತಿಭಟನೆಯ ನಿಲುವಿಗೆ_ತಾತ್ಪೂರ್‍ತಿಕವಾಗಿಯಾದರೂ_ತಡೆ ಹಾಕಿದ್ದು, ದಸ್ತೂರನ ಮಾತುಗಳಿಂದ ಹುಟ್ಟಿದ ದಿಗಿಲೇ : ತಮ್ಮ ಮಾತಿಗೆ ಕಿವಿಗೊಡಲು ಸಿದ್ಧನಾದುದನ್ನು ಗಮನಿಸಿಯೇ ಸಂತೋಷಪಟ್ಟ ಉಳಿದ ಮೂವರೂ ಬಿಯರಿನ ಪಾತ್ರೆಗಳನ್ನು ಏಕಕಾಲಕ್ಕೆ ಎತ್ತಿದಾಗಿನ ಆಕಸ್ಮಿಕದಿಂದ ತಾವೇ ಮುಜುಗರಪಟ್ಟರು. ಬಿಯರಿನ ಮತ್ತಿಗೆ ಖುಶಿಯಾದ ನಾಗಪ್ಪ ಮಾತ್ರ ಅದರ ಕಡೆಗೆ ತನ್ನ ಲಕ್ಷ್ಯ ಕೊಡಲಿಲ್ಲ. ದಸ್ತೂರನ ಮುಂದಿನ ಮಾತುಗಳ ಹಾದಿ ಕಾದ. +“ನೆನಪಿದೆಯೆ ?_ನಾನು ಈ ಭೇಟಿಯನ್ನು boಣh ಚಿಟಿ iಟಿಣeಡಿvieತಿ ಚಿಟಿಜ iಟಿvesಣigಚಿಣioಟಿ ಎಂದು ಕರೆದದ್ದು ? ‘ಇಂಟರ್‍ವ್ಯೂ’ ಎಂದು ಯಾಕೆ ಕರೆದೆನೆಂದರೆ_ನಿಮಗೆ ಒಂದು ಹೊಸ ಹುದ್ದೆಗೆ_ ನಿಮ್ಮಿಂದ ಕಲ್ಪಿಸಲೂ ಅಸಾಧ್ಯವಾಗುವಷ್ಟರ ಮಟ್ಟಿಗೆ ಹೊಸದಾದ ಸ್ಥಾನಕ್ಕೆ ಬಡತಿಯಾಗುವ ಸಂಭವ ಇದೆ. ನಂಬುವಿರಾ_ನೇಮಣೂಕಿಯ ಜಾಗ ಹಾಂಕಾಂಗ್ ಎಂಬುದನ್ನು ? ಇನ್‌ವೆಸ್ಟಿಗೇಶನ್ ಎಂದು ಕರೆದದ್ದರ ಕಾರಣವಿಷ್ಟೇ : ಕೆಲವು ತಿಂಗಳ ಹಿಂದೆ ಫ್ಯಾಕ್ಟರಿಯಲ್ಲಿ ನಡೆದ ಬೆಂಕಿಯ ಅನಾಹುತದಲ್ಲಿ ನಿಮ್ಮ ಕೈಯಿದೆ ಎಂಬ ದುಷ್ಟ ಕಂಪ್ಲೇಂಟೊಂದು ಈ ಬಡತಿಗೆ ಅಡ್ಡಬಂದಿದೆ.” +ಈ ಭೇಟಿಯ ಭವಿತವ್ಯವೇ ದಸ್ತೂರ್ ಅಷ್ಟೊಂದು ಚಾಲಾಖಿನಿಂದ ಮಾಡಿದ ಮಂಡನೆಗೆ ನಾಗಪ್ಪನಿಂದ ಬರುವ ಪ್ರತಿಕ್ರಿಯೆಯನ್ನು ಅವಲಂಬಿಸಿದೆ ಎನ್ನುವ ಹಾಗೆ ಫಿರೋಜ್ ಅತ್ಯಂತ ಕಾತರದಿಂದ ಅವನತ್ತ ನೋಡಿದ. ಅವನ ಪ್ರತಿಕ್ರಿಯೆ ಬರಲು ತಡವಾಗಲಿಲ್ಲ. ಆದರೆ ಅದು ಬಂದದ್ದು ಫಿರೋಜ್ ಇಷ್ಟು ದಿನ ಅರ್ಥಮಾಡಿಕೊಂಡಥ ನಾಗಪ್ಪನ ವ್ಯಕ್ತಿತ್ವದ ನೆಲೆಯಿಂದಲ್ಲವಾಗಿತ್ತು. ಒಂದರ್ಥದಲ್ಲಿ, ತನ್ನ ವ್ಯಕ್ತಿತ್ವದ ಈ ಪಾತಳಿಯ ಅರಿವು ಇಷ್ಟು ದಿನ ಸ್ವತಃ ನಾಗಪ್ಪನಿಗೇ ಆಗಿರಲಿಲ್ಲವೇನೋ ! ಯಾಕೆಂದರೆ, ಬೇಟೆಗಾರರು ನೇರವಾಗಿ ತನ್ನ ಮರ್ಮಸ್ಥಾನಕ್ಕೆ ಗುರಿ ಹಿಡಿದು ಕೋವಿಯ ನಳಿಗೆಯಲ್ಲಿ ಕಣ್ಣಿಟ್ಟು ನಿಲ್ಲುವ ಸನ್ನಿವೇಶ ಹಿಂದೆಂದೂ ಹೀಗೆ ಇದಿರಾಗಿ ನಿಂತಿರಲಿಲ್ಲ. ಆತ್ಮಸಂರಕ್ಷಣೆಯ ಪ್ರಾಣಿಬಲ ತಾನೇತಾನಾಗಿ ಕತ್ತೆತ್ತಿ ನಿಂತಿತು : +“Iಣ is veಡಿಥಿ iಟಿಣeಡಿesಣiಟಿg, ಒಡಿ. ಆಚಿsಣuಡಿ…. ಈ ದೂರು ನನ್ನ ಬಗ್ಗೆ ಹುಟ್ಟಿಸಿದ ಸಂಶಯವನ್ನು ನಾನು ಕೂಡಲೇ ದೂರಮಾಡಬೇಕು ಎನ್ನುವದನ್ನೂ ನಾನು ಒಪ್ಪುತ್ತೇನೆ. (ಆ ಒಂದು ಕಾರಣಕ್ಕಾಗಿಯೇ ನಿಮ್ಮ ಪೆದ್ದು ಮುಖಗಳನ್ನು ನೋಡುತ್ತ ಬಿಯರ್ ಕುಡಿಯುವ ಈ ದೌರ್ಭಾಗ್ಯವನ್ನು ಸಹಿಸುತ್ತ ಕೂತದ್ದು.)_ಙes, I musಣ ಛಿಟeಚಿಡಿ mಚಿಥಿ ಟಿಚಿme beಜಿoಡಿe beiಟಿg ಛಿoಟಿsiಜeಡಿeಜ ಜಿoಡಿ ಣhe ಠಿಡಿomoಣioಟಿ. So ಟeಣ us sಣಚಿಡಿಣ ತಿiಣh ಣhe iಟಿvesಣigಚಿಣioಟಿ.” +ನಾಗಪ್ಪನ ಮಾತಿಗೆ ದಸ್ತೂರ್ ಪುಲಕಿತನಾದ : +‘I ಚಿm gಟಚಿಜ ಣhಚಿಣ ಥಿou sಚಿಥಿ so. ಖಿheಡಿe is ಟಿoಣhiಟಿg gಡಿeಚಿಣeಡಿ ಣhಚಿಟಿ oಟಿe’s oತಿಟಿ ಟಿಚಿme, oಟಿe’s ಠಿಡಿesಣige, oಟಿe’s imಚಿge-ತಿhಚಿಣ ಜo ಥಿou sಚಿಥಿ ?” +ತಾನು ಈ ತನಿಖೆಗೆ ಇತ್ತ ಸಮ್ಮತಿಯನ್ನು ತಪ್ಪು ತಿಳಿದ ಈ ಮೂವರ ಫಜೀತಿ ಮಾಡದಿದ್ದರೆ ! ಂಟಿಜ ಣheಡಿe is ಟಿoಣhiಟಿg biggeಡಿ ಣhಚಿಟಿ ಥಿouಡಿ ಜiಡಿಣಥಿ ಟಿose_ಥಿou ಜiಡಿಣu ಠಿig : ನಾಗಪ್ಪ ಮಾತನಾಡದೆ ದಸ್ತೂರನ ಮೂಗನ್ನೇ ನೋಡುತ್ತ ಕುಳಿತುಬಿಟ್ಟ. ಬರಬರುತ್ತ ಅದು ನಿಜಕ್ಕೂ ಹಂದಿಯ ಮುಸುಡಿ ಆಗುತ್ತಿದ್ದುದನ್ನು ನೋಡಿ ಎಲ್ಲಿ ತಾನು ನಕ್ಕುಬಿಟ್ಟೇನೋ ಎಂದು ಭಯವಾಗಿ ತುಟಿ ಕಚ್ಚಿ ಹಿಡಿದ. +” ಙou hಚಿve ಟಿoಣhiಟಿg ಣo ಜಿeಚಿಡಿ, ಒಡಿ. ಓಚಿgಟಿಚಿಣh,” ದಸ್ತೂರನ ಈ ಮಾತಿಗೆ ನಗು ತಡೆಯುವದು ಅಸಾಧ್ಯವಾಗಿ ತೋರಿದ್ದರಿಂದ ಕಿಸೆಯೊಳಗಿಂದ ಕೈವಸ್ತ್ರವನ್ನು ಹೊರಗೆ ತೆಗೆದು ಮೋರೆಯನ್ನು ಒರೆಸಿಕೊಳ್ಳುವ ನಟನೆ ಮಾಡುತ್ತ ತನ್ನ ನಗುವ ಲಹರಿಯನ್ನು ಹತ್ತಿಕ್ಕಿದಾಗ ಹಾಯೆನಿಸಿ_ “ಖಿhಚಿಟಿಞ ಥಿou, ಒಡಿ. ಆಚಿsಣuಡಿ, I ಜeಠಿeಟಿಜ uಠಿoಟಿ ಥಿou. I ಚಿm iಟಿಟಿoಛಿeಟಿಣ,” ಎಂದ. ತಿರುಗೆಲ್ಲಿ ನಗು ಬಂದೀತೆಂಬ ಭಯದಿಂದ ಬಿಯರಿನ ಪಾತ್ರೆಯನ್ನು ಬಾಯಿಗೆ ಹಿಡಿದಾಗ ದಸ್ತೂರನ ಭರವಸೆ ಕೊಡುವ ಮಾತು : +“We ಞಟಿoತಿ. ಆದರೆ ಈ ದುಷ್ಟ ಜಗತ್ತಿನಲ್ಲಿ ನಾವು ನಿರ್ದೋಶಿಗಳಾಗಿ ಇದ್ದರಷ್ಟೇ ಸಾಲದು. ನಿರ್ದೋಶಿಗಳಾಗಿ ಕಾಣಬೇಕು, ನಿರ್ದೋಶಿಗಳೆಂದು ತೋರಿಸಿಕೊಡಬೇಕು. We ಚಿಡಿe heಡಿe ಣo heಟಠಿ ಥಿou.” +“I ಚಿm suಡಿe ಥಿou ಚಿಡಿe, ಒಡಿ. ಆಚಿsಣuಡಿ, I hಚಿve ಟಿo ತಿoಡಿಜs ಣo ಣhಚಿಟಿಞ ಥಿou.” +uಟಿಜeಜಿiಟಿeಜನಾಗಪ್ಪ ತನ್ನ ಮಾತುಗಳನ್ನು ತಾನ್ನಂಬದಾದ….ನಾಗಪ್ಪಾ….ನಾಗಪ್ಪಾಽಽ_ಸುಳ್ಳಾಡಿದೆಯೋ ನಾಗಪ್ಪಾಽಽ…ಕೋಳೀಗಿರಿಯಣ್ಣನ ಕೇರಿಯ ನಾಗಪ್ಪಾಽಽ, ಕೋಳಿಯ ಪುಚ್ಚದಷ್ಟು ಮೆತ್ತಗಿನ ನಾಗಪ್ಪಾಽಽ, ಬೆಳೆದೆಯಲ್ಲವೋ ನಾಗಪ್ಪಾಽಽ, ಗಟ್ಟಿಯಾದಿಯೋ ನಾಗಪ್ಪಾಽಽ, ಜಾಣ ಆದಿಯೋ ನಾಗಪ್ಪಾಽಽ : ಬಾಟಲಿಯೊಳಗಿನ ಬಿಯರನ್ನು ಮಗ್ಗಿಗೆ ಯಾರು ಸುರಿದರೋ ತಿಳಿಯಲಿಲ್ಲ : ಕರುಳಲ್ಲಿ ಅನುಭವಿಸಿದ ತಂಪಿನಿಂದಾಗಿ ರಕ್ತದ ಬಿಸಿ ಮೆಲ್ಲಕ್ಕೆ ಏರಹತ್ತಿದ ಅನಿಸಿಕೆ. ಈವರೆಗೂ ತೆರೆದುಕೊಂಡಿರದ ವ್ಯಕ್ತಿತ್ವದ ಸತ್ಯಗಳು ತೆರೆದುಕೊಳ್ಳದ ಹಾಗೆ ಮಾಡಿದ ಬಿಗಿತಗಳು ಈಗ ಮೆಲ್ಲಗೆ ಸಡಿಲಗೊಂಡಿದ್ದವು ; ಇನ್ನೂ ಅವನ ಅನುಭವಕ್ಕೆ ಬಂದಿರದ ಒಂದು ಆಳದಿಂದ ಧೈರ್ಯ ಅನಾಮತ್ತಾಗಿ ತಲೆಯೆತ್ತಹತ್ತಿತು. “ಈouಡಿ moಡಿe boಣಣಟes oಜಿ beeಡಿ ಠಿಟeಚಿse.” _ ಇದು ಯಾರ ದನಿ ? ಫಿರೋಜನದಲ್ಲವೆ ? ಭೆಂಛೋದ್….ಬಿಯರ್ ಕುಡಿಸಿ ಅಮಲೇರಿಸುವ ತಂತ್ರವೆ ? ಕುಡಿಸು, ಕುಡಿಸಿದಷ್ಟೇ ಬಂತು. ನಿಮ್ಮಂತಹ ಧೂರ್ತ ಖದೀಮರೊಡನೆ ಕದೀಮನಾಗುವ ತಾಕತ್ತು ನನಗೂ ಬೇಕಷ್ಟು ಇದೆಯೋ, ಫಿರೋಜ್….ಬಿಯರ್ ಕುಡಿದಾಗಷ್ಟೇ ಅಲ್ಲ ಮತ್ತೆ…. +ಬಿಯರಿನ ಮತ್ತು ಸುಖದಾಯಕವಾಗಿತ್ತು. ದಸ್ತೂರನ ಮುಂದಿನ ಮಾತುಗಳನ್ನು ಕೇಳುವ ಉತ್ಸುಕತೆ ಹೆಚ್ಚಿತ್ತು : +ದಸ್ತೂರ್ : “ಓo ಟಿeeಜ ಣo ಣhಚಿಟಿಞ me, ಒಡಿ. ಓಚಿgಚಿಟಿಚಿಣh… ಐeಣ us begiಟಿ ಜಿಡಿom ಣhe begiಟಿಟಿiಟಿg….” +ಶುರು ಮಾಡೋ ಬೋಳೀಮಗನೇ, ಬೇಕಾದಲ್ಲಿಂದ ಶುರು ಮಾಡು. ನಿನ್ನಜ್ಜನ ತರಡಿನಿಂದಲೇ ಶುರು ಮಾಡು ಬೇಕಾದರೆ : ನಿನ್ನ ಈ ಇಲ್ಲದ ಕಿತಾಪತಿಗೆ ಅದೇ ಅಲ್ಲವೇ ಬೇರು…. +“ಫ್ಯಾಕ್ಟರಿಯಲ್ಲಿ ಬೆಂಕಿ ಹತ್ತಿತ್ತಲ್ಲ….” +“ಆ ಬೆಂಕಿ ಹತ್ತಿತ್ತಲ್ಲ…. ಖಿhಚಿಣ is, iಜಿ ಥಿou ತಿಚಿಟಿಣ me ಣo sಠಿeಚಿಞ ಣhe ಣಡಿuಣh….. ಆ ಬೆಂಕಿ ಹಚ್ಚಿದ್ದು.” +“We ತಿಚಿಟಿಣ ಥಿou ಣo sಠಿeಚಿಞ ಣhe ಣಡಿuಣh. We ಚಿಡಿe heಡಿe ಣo ಞಟಿoತಿ iಣ. ಆ ಬೆಂಕಿ ಹತ್ತಿದ್ದಲ್ಲ ; ಹಚ್ಚಿದ್ದು ಎಂಬ ಸಂಶಯ ಮೊಟ್ಟ ಮೊದಲು ಬಂದದ್ದು ಯಾವಾಗ ?” +“ಮೊದಲಿನಿಂದಲೂ.” +“ಯಾಕೆ ?” +“ಆ ಡಿಪಾರ್ಟಮೆಂಟಿನಲ್ಲಿ ನಡೆಯುತ್ತಿದ್ದ ಅಂದಾದುಂದಿಯ ಬಗ್ಗೆ ನಾನು ಮೊದಲಿನಿಂದಲೂ ಪ್ರತಿಭಟಿಸುತ್ತ ಬಂದದ್ದು ಫಿರೋಜನಿಗೆ ಗೊತ್ತೇ ಇದೆ. ಪೆರೊಕ್ಸೈಡ್ ಉತ್ಪಾದನೆಗೆ ಸಂಬಂಧಪಟ್ಟ ಯಾವ ಜಾಗರೂಕತೆಯನ್ನೂ ನಾವು ವಹಿಸಲೇ ಇಲ್ಲ. ನಾನೇ ಮುಂದಾಗಿ ಜಗತ್ತಿನ ಉಳಿದ ದೇಶಗಳಲ್ಲಿಯ ದೊಡ್ಡ ದೊಡ್ಡ ಕಂಪನಿಗಳಿಗೆ ಪತ್ರ ಬರೆದು ಈ ಉತ್ಪಾದನೆಯ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ sಚಿಜಿeಣಥಿ meಚಿsuಡಿes ಕುರಿತು ಸಿದ್ಧಪಡಿಸಿದ ಮಾಹಿತಿಯನ್ನು ತರಿಸಿ ಒ‌ಆ ಯವರಿಗೆ ಕಳಿಸಿದ್ದೆ. ಅದರಿಂದ ನನಗಾದ ಫಾಯಿದೆ ಎಂದರೆ ವಿನಾಕಾರಣ ಫಿರೋಜನಿಂದ ಗದರಿಸಿಕೊಂಡದ್ದು…..” +“ಖಿhಚಿಣ iಟಿಛಿiಜeಟಿಣ musಣ hಚಿve huಡಿಣ ಥಿou ಜeeಠಿಟಥಿ…. ಸ್ವಾಭಿಮಾನವಿದ್ದ ಯಾರಿಗಾದರೂ ನೋವಾಗುವುದೇ….” +“ನನ್ನ ಭಾವನೆಗಳ ಪರಿಚಯ ಫಿರೋಜನಿಗಿದೆ.” +“ನಿಮ್ಮ ಆ ನೋವನ್ನು ನೀವು ಯಾರ ಮುಂದಾದರೂ ಯಾವಾಗಲಾದರೂ ಆಡಿ ತೋರಿಸಿದ್ದೀರಾ ?” +” ಔಜಿ ಛಿouಡಿse_ ನೇರವಾಗಿ ಫಿರೋಜನಿಗೇ…..ಚಿಟಿಜ Phiಡಿoz ಜiಜ ಟಿoಣ ಟiಞe me ಜಿoಡಿ ಣhಚಿಣ….” +ಬಾಯಲ್ಲಿ ಪೈಪ್ ಹಿಡಿದ ಫಿರೋಜನ ಮೋರೆ ವ್ಯಕ್ತಪಡಿಸಿದ ಭಾವನೆಯನ್ನು ಓದುವದು ನಾಗಪ್ಪನಿಗೆ ಸುಲಭವಾಗಿರಲಿಲ್ಲ. ಓದುವ ಕುತೂಹಲವೂ ಇರಲಿಲ್ಲ. ಕದ ದೂಡಿ ಒಳಗೆ ಬಂದ ಬೇರರ್ ದಸ್ತೂರ್ ಕೇಳ ಹೊರಟ ಪ್ರಶ್ನೆಗೆ ಕೆಲಹೊತ್ತು ತಡೆಹಾಕಿದ. ಬೇರರ್ ಈ ಮೊದಲು ಆರ್ಡರ್ ಮಾಡಿದ ಬಿಯರಿನ ಹೊಸ ನಾಲ್ಕು ಬಾಟಲಿಗಳನ್ನು, ಅವುಗಳ ಜೊತೆಗೆ ಸ್ನ್ಯಾಕ್ಸೂ ತಂದಿದ್ದ. ಸ್ನ್ಯಾಕ್ಸ್ ನೋಡಿದ ಕೂಡಲೇ ಹೊಟ್ಟೆ ಹಸಿದದ್ದರ ಅರಿವು ಬಂತು ನಾಗಪ್ಪನಿಗೆ. ಬಿಯರಿನ ಹೊಸ ಬಾಟಲಿಗಳೂ ತುಂಬ ಸುಖದಾಯಕವಾಗಿ ಕಂಡವು. ಬೇರರ್ ತಂದ ಸರಂಜಾಮನ್ನು ಹೇಳಿದಲ್ಲಿ ಇಟ್ಟು, ವೌಚರ್‍ಗಳ ಮೇಲೆ ಫಿರೋಜನಿಂದ ಸಹಿ ಮಾಡಿಸಿಕೊಂಡು ಅಲ್ಲಿಂದ ಹೊರಟುಹೋದ. +ದಸ್ತೂರ್ ಆರಂಭ ಮಾಡಿದ ರೀತಿಯಿಂದ ತುಂಬ ಖುಶಿಯಾದ ಫಿರೋಜ್: “ನೀನೂ ಮುಂದುವರಿಸು ಬೋಮೀ. ನಾನೂ ಹಾಗೂ ದೋಸ್ತೂ (ಪಟೇಲನ ಅಂಕಿತನಾಮ) ಇದರ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ” ಎಂದದ್ದೆ ಇಬ್ಬರೂ ಬಿಯರ್ ಹಾಗೂ ಸ್ನ್ಯಾಕ್ಸ್‌ಗಳ ವ್ಯವಸ್ಥೆಗೆ ತೊಡಗಿದರು. +ದಸ್ತೂರ್ :”ನೇರವಾಗಿ ನಿಮ್ಮ ಬಾಸ್‌ಗೇ ನಿಮ್ಮ ಅಸಮಾಧಾನವನ್ನು ತಿಳಿಸುವ ನಿಮ್ಮ ಧೈರ್ಯ ಮೆಚ್ಚತಕ್ಕದ್ದೇ. ಆದರೆ ಫಿರೋಜನ ಹೊರತಾಗಿ ಇನ್ನಾರಿಗಾದರೂ ?” +“ಹಾಗೆ ನೋಡಿದರೆ ನನ್ನ ಈ ವಿಷಯದಲ್ಲಿ ಅಸಮಾಧಾನ ಫ್ಯಾಕ್ಟರಿಯಲ್ಲಿ ಅನೇಕರಿಗೆ ಗೊತ್ತಿತ್ತು….” +“ಅದೇ…ಅವರಿಗೆ ಗೊತ್ತಾದದ್ದು ಹೇಗೆ ?….ನೀವೇ ಪ್ರತಿಯೊಬ್ಬನಿಗೆ ಹೇಳುತ್ತಾ ಹೋಗಿರಲಿಲ್ಲ?” +ನಾಗಪ್ಪ ಈ ಮಾತಿಗೆ ನಿರುತ್ತರನಾದ : ಬಿಯರಿನ ಅಮಲಿಗೋ, ಫಿರೋಜ್ ಮುಂದೆ ಹಿಡಿದ ಪ್ಲೇಟಿನಲ್ಲಿಯ ಸ್ನ್ಯಾಕ್ಸ್‌ಗಳಲ್ಲಿ (ಚಿಕನ್‌ಟೀಕಾ, ಮಟನ್ ಕಬಾಬ್, ಫಿಶ್ ಫಿಂಗರ್ಸ್) ಯಾವುದನ್ನು ಎತ್ತಿಕೊಳ್ಳಲಿ ಎಂಬ ಸಂದಿಗ್ಧಕ್ಕೋ ಅಥವಾ ಎಲ್ಲೋ ಆಳದಲ್ಲಿ_‘ಕೋಳೀಗಿರಿಯಣ್ಣನ ಕೇರಿಯವನೇ, ಇದು ಸ್ಕಾಯ್‌ಸ್ಕ್ರೇಪರ್ ಜಗತ್ತಿನ ಪ್ರಶ್ನೆ : ಹುಷಾರ್_’ ಎಂದು ಎದ್ದು ಇಷಾರೆಯ ದನಿಗೋ ನಾಗಪ್ಪ ಕಿರಿಕಿರಿಯಾದ. ಕೂಡಲೇ ಉತ್ತರ ಕೊಡದೇ ಕಬಾಬ್ ಒಂದನ್ನು ಎತ್ತಿಕೊಂಡು ಮೂಲೆ ಕಚ್ಚಿದ. ಬಿಯರಿನ ಗುಟುಕೊಂದನ್ನು ಸೀಪಿದ. ದಸ್ತೂರನತ್ತ, ನಿನ್ನ ಮಾತಿನ ಅರ್ಥವಾಗಿಲ್ಲ ಎನ್ನುವಂತೆ ನೋಡಿದ. ದಸ್ತೂರ್ ಸ್ಪಷ್ಟಪಡಿಸಿದ : +‘ನಿಮ್ಮ ಅಸಮಾಧಾನವನ್ನು ನೀವು ಆತ್ಮೀಯರೆಂದು ತಿಳಿದ ಯಾರಿಗಾದರೂ ಹೆಚ್ಚಿನ ವಿವರಗಳೊಂದಿಗೆ ವ್ಯಕ್ತಪಡಿಸಿದ್ದೀರಾ ? ಉದಾ : I ತಿoಟಿ’ಣ be suಡಿಠಿಡಿiseಜ iಜಿ ಣhe ಜಿಚಿಛಿಣoಡಿಥಿ is seಣ oಟಿ ಜಿiಡಿe, oಟಿe oಜಿ ಣhese ಜಚಿಥಿs’ ಎಂದು ಮುಂತಾಗಿ ?” +ದಸ್ತೂರನ ಈ ಹೇಳಿಕೆಯ ಪರಿಣಾಮ ನಾಗಪ್ಪನ ಮೇಲೆ ಅಷ್ಟೊಂದು ಆದಂತೆ ತೋರಲಿಲ್ಲ.”ಖಿhis is ಣoo geಟಿeಡಿಚಿಟ ಚಿ sಣಚಿಣemeಟಿಣ ಣo hಚಿve beeಟಿ mಚಿಜe ಣo ಚಿಟಿಥಿ ಠಿಚಿಡಿಣiಛಿuಟಚಿಡಿ ಠಿeಡಿsoಟಿ,” ಎಂದ. ಆದರೂ ದಸ್ತೂರನ ಮಾತಿನ ಧಾಟಿಯಿಂದ ಯಾವುದೋ ಒಂದು ವಿಶೇಷ ವ್ಯಕ್ತಿಯ ಹೆಸರು ಮೆಲ್ಲಗೆ ಸೇರ್ಪಡೆಯಾಗ್ತಾ ಇದೆ ಎನ್ನುವುದು ಲಕ್ಷ್ಯಕ್ಕೆ ಬರದೇ ಇರಲಿಲ್ಲ. ತುಸು ಬೇಚೈನುಗೊಂಡರೂ ಅದನ್ನು ತೋರಿಸಿಕೊಳ್ಳಲಿಲ್ಲ. +ದಸ್ತೂರ್ : “ನನ್ನ ಮುಂದಿನ ಮಾತಿನಿಂದ ನಿಮ್ಮ ನೆನಪೇನಾದರೂ ಚುರುಕುಗೊಳ್ಳುತ್ತದೋ ನೋಡಿ. ನೀವು ಅದೇ ವ್ಯಕ್ತಿಗೆ ಹೀಗೇನಾದರೂ ಹೇಳಿದಿರಾ ? _‘ಎusಣ ಣo ಣeಚಿಛಿh ಣhese bಟoಞes ತಿhಚಿಣ ಛಿhemiಛಿಚಿಟ ಜಿiಡಿes ಚಿಡಿe ಟiಞe I ಜಿeeಟ ಟiಞe ಛಿhಚಿಟಿgiಟಿg ಣhe ಜಿoಡಿmuಟಚಿಣioಟಿ ಚಿಟಿಜ ಛಿಚಿuseoಟಿe.” +“ಔh ! ಓo ! Iಣ ತಿಚಿs oಟಿಟಥಿ ಚಿ ತಿಚಿಥಿ oಜಿ exಠಿಡಿessiಟಿg mಥಿ ಚಿಟಿgeಡಿ….” +“ನೀವು ಹಾಗೆ ಹೇಳಿದ್ದಂತೂ ನಿಜ ತಾನೆ ? ಯಾರಿಗೆನ್ನುವದು ಈಗಲಾದರೂ ನಿಮಗೆ ನೆನಪಾಗುತ್ತದೆಯೆ ?” +ಯಾರಿಗೆನ್ನುವುದರ ಬಗ್ಗೆ ನಾಗಪ್ಪನಿಗೆ ಸಂಶಯವೇ ಉಳಿಯಲಿಲ್ಲ. ಆದರೆ ಹೈದರಾಬಾದಿನ ಫ್ಯಾಕ್ಟರಿಯಲ್ಲೇ ತನ್ನ ಬಗ್ಗೆ ಸಹಾನುಭೂತಿ ಇದ್ದ, ಆದರವಿದ್ದ(ಕೆಲವೊಂದು ಭಾವನಾತ್ಮಕ ಗಳಿಗೆಗಳಲ್ಲಿ ಇದನ್ನೇ ಪ್ರೀತಿಯೆಂದು ಕೂಡ ತಿಳಿದ) ಒಂದೇ ಒಂದು ವ್ಯಕ್ತಿ ಎಂಬ ತಿಳವಳಿಕೆಗೆ ಕಾರಣಳಾದ ರೀನಾ ಫಿರೋಜನ ಪಿತೂರಿಯಲ್ಲಿ ?….ನಾಗಪ್ಪ ನಂಬದಾದ. ಯಾಕೆಂದರೆ ನಂಬುವ ಧೈರ್ಯವಾಗಲಿಲ್ಲ. ರೀನಾಳಂಥ ರೀನಾ ಕೂಡ ಸುಳ್ಳಾಗುವದು ಶಕ್ಯವಿದ್ದರೆ ತಾನು ತೊಡಗಿಸಿಕೊಂಡ ಈ ಪ್ರತಿಭಟನೆಗೆ ಯಾವ ಅರ್ಥವೂ ಉಳಿಯಲಿಲ್ಲ…..ದೇವರೇ ಇದು ಸುಳ್ಳಾಗಲೀ…. ಸುಳ್ಳಾಗಲೀ. ಆಗಿನಿಂದಲೂ ಸಂತೋಷ ಕೊಡುತ್ತಿದ್ದ ಬಿಯರು ಹೊರಗೆ ಬರುವ ಭಯವಾಗಿ ಮುಖ ಒಮ್ಮೆಲೇ ಬಣ್ಣಕಳೆದುಕೊಳ್ಳಹತ್ತಿತು : ಕುಳಿತಲ್ಲಿಂದ ಎದ್ದವನೇ ಬಾತ್‌ರೂಮ್ ಹುಡುಕುತ್ತ ಮಗ್ಗಲಿನ ಕೋಣೆಗೆ ಧಾವಿಸಿದ. ಮೂತ್ರ ವಿಸರ್ಜನೆ ಮಾಡಿದ ಮೇಲೆ ತಣ್ಣಗಿನ ನೀರಿನಿಂದ ಮೋರೆ ತೊಳೆದುಕೊಂಡ. ಕಣ್ಣಿಗೆ ನೀರು ಬಡಿದ. ಮೆದುಳು ತುಸು ಚುರುಕುಗೊಂಡಂತೆನಿಸಿತು. ವಾಂತಿಯಾಗುವ ಹೆರದಿಕೆ ಸದ್ಯಕ್ಕಂತೂ ದೂರವಾಗಿತ್ತು…. ಅಂತೂ ತನಿಖೆಯ ಪ್ರಶ್ನೆಗಳು ಬರಬರುತ್ತ ತಾನು ಎಣಿಸಿರದ ಜಾಗಗಳಿಗೇ ತನ್ನನ್ನು ಎಳೆದೊಯ್ಯುತ್ತಿವೆ ಅನ್ನಿಸಿತು : ನಿರಪರಾಧಿಯಾಗಿಯೂ ತನ್ನ ಅಪರಾಧ ಸಿದ್ಧಗೊಳಿಸುವ ಪುರಾವೆಗಳು ಗಟ್ಟಿಯಾಗುತ್ತಿವೆ. ತೀರ ಪರಿಚಯದ್ದೆಂದು ತಿಳಿದ ಜಗತ್ತು ಮೆಲ್ಲಕ್ಕೆ ಅಪರಿಚಿತತೆಯ ಮುಸುಕೆಳೆದುಕೊಳ್ಳುತ್ತಿದೆ : ಕದದ ಮೇಲೆ ಬಡಿದ ಸದ್ದಿನ ಹಿಂದೆಯೇ_ “ಚಿಡಿe ಥಿou ಚಿಟಟ ಡಿighಣ, ಒಡಿ. ಓಚಿgಚಿಟಿಚಿಣh ?” ಎಂಬ ಪೆದ್ದು ಪಟೇಲನ ದನಿ. ನಾಗಪ್ಪ ದಡಬಡಿಸಿದ. ಹತ್ತಿದ ಗುಂಗಿನಿಂದ ಎಚ್ಚರಗೊಂಡ : ಪೊದೆಯಲ್ಲಿ ಅಡಗಿಕೊಂಡ ಭಯಗ್ರಸ್ತ ಪ್ರಾಣಿಯನ್ನು ಹೋ ಹೋ….ಹಾ…ಹಾ ಎಂದು ಗುಲ್ಲೆಬ್ಬಿಸಿ ಹೊರಗೆ ಬರುವಂತೆ ಮಾಡುವ ಬೇಟೆಗಾರರ ಬೇಹುಗಾರಿಕೆ ಇದು ಎಂಬ ಭ್ರಮೆಯನ್ನು ಕೊಡವಿಕಾಕುವವನಂತೆ ತಲೆಯನ್ನು ಗಲಗಲ ಅಲ್ಲಾಡಿಸಿ_”I ಚಿm ಚಿಟಟ ಡಿighಣ. I ತಿiಟಟ be ouಣ iಟಿ ಚಿ miಟಿuಣe,” ಎಂದ. ಸ್ವತಃ ಆಡಿದವನಿಗೇ ಕೇಳಿಸಿರಲಾರದಷ್ಟು ಕ್ಷೀಣಗೊಂಡ ನಾಗಪ್ಪನ ಧ್ವನಿ ಹೊರಗಿನಿಂದ ಕದಕ್ಕೆ ಕಿವಿ ಹಚ್ಚಿ ಆಲಿಸುತ್ತಿದ್ದ ಪಟೇಲನ ಹುರುಪಿಗೆ ಇನ್ನಷ್ಟು ಕಳೆ ತಂದಿತ್ತು ಎನ್ನುವುದು ಮಾತ್ರ ನಾಗಪ್ಪನಿಗೆ ಈಗ ಗೊತ್ತಾಗುವುದು ಶಕ್ಯವಿರಲಿಲ್ಲ. +ನಾಗಪ್ಪ ಕದ ತೆರೆದು ಹೊರಗೆ ಬಂದದ್ದೇ, ಅವನ ದಾರಿ ಕಾಯುತ್ತ ನಿಂತ ಪಟೇಲ ಕಾಳಜಿಯನ್ನು ನಟಿಸುತ್ತ ಈ ಮೊದಲು ತನಗಾದ ಅವಮಾನದ ಸೇಡು ತೀರಿಸಿಕೊಳ್ಳುವ ಗತ್ತಿನಲ್ಲಿ, ಗುಟ್ಟಾದ ಮಾತೊಂದನ್ನು ಹೇಳುವವನಂತೆ ಧ್ವನಿ ತಗ್ಗಿಸಿ _ “ಕಾಳಜಿ ಮಾಡಬೇಡಿ, ಮಿಸ್ಟರ್ ನಾಗನಾಥ, ನಾವೆಲ್ಲ ಇಲ್ಲವೇ ನಿಮ್ಮ ಬೆಂಬಲಕ್ಕೆ?” ಎಂದ . ಬೇರೆ ಯಾವ ಸಮಯದಲ್ಲಾದರೂ ತಲೆಯ ಮೇಲೆ ಜಪ್ಪಿ ಬಿಡುವಷ್ಟು ಸಿಟ್ಟು ಬರುತ್ತಿತ್ತು, ನಾಗಪ್ಪನಿಗೆ. ಈಗ ಮಾತ್ರ ಯಾವುದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಇಲ್ಲವಾಗಿತ್ತು. ಅಷ್ಟೊಂದು ಬಿಯರನ್ನು ಕುಡಿಯಬಾರದಿತ್ತೇನೋ.ಇಲ್ಲವಾದರೆ ಈ ಮೂವರು ಠಕ್ಕರೆ ಫಜೀತಿ ಮಾಡದೇ ಬಿಡುತ್ತಿರಲಿಲ್ಲ…. ತಾನು ಬಾತ್ ರೂಮಿಗೆ ಹೋದದ್ದೇ ತನ್ನ ಬಗ್ಗೆ ಏನನ್ನೋ ಮಾತನಾಡಿಕೊಂಡು ಈಗ ತಾನು ಹಿಂತಿರುಗಿ ಬಂದದ್ದೇ ಗಪಕ್ ಎಂದು ಬಾಯಿ ಬಿಗಿ ಹಿಡಿದು ಕೂತವರ ರೀತಿ ತನ್ನತ್ತ ವಿಚಿತ್ರವಾಗಿ ನೋಡುತ್ತಿದ್ದ ಈ ಮೂವರು ನಿಜಕ್ಕೂ ಯಾರು? ಈ ಮೊದಲು ಎಂದಾದರೂ ಇವರನ್ನು ನೋಡಿದ್ದೇನೆಯೇ? ಬಲ್ಲೆನೇ ? …. ಥಟ್ಟನೆ ಹುಟ್ಟಿದ ಗುಮಾನಿ ಹೊತ್ತು ಹೋದ ಹಾಗೆ ಬೆಳೆಯುತ್ತ ಹೋಯಿತು . ನರಿಮನ್ -ಪಾಯಿಂಟ್‌ನಲ್ಲಿ ಎದ್ದು ನಿಂತ ಸ್ಕಾಯ್‌ಸ್ಕ್ರೇಪರುಗಳಂತೆ ತನ್ನ ಭಾವನೆಗಳ ಪರಿಧಿಯೊಳಗೆ ಬರಲು ನಿರಾಕರಿಸುತ್ತ ಬಾಯಿ ಬಿಗಿಹಿಡಿದು ನಿಂತಂತಹದೇನೋ ತಾನು ಬೆಳೆದು ಬಂದ ಕೋಳಿಗಿರಿಯಣ್ಣನ ಕೇರಿಯತ್ತ ಕುಂಡೆ ತಿರುವಿ ತಿರಸ್ಕಾರದಿಂದ ನಗುತಿದೆ ಎನ್ನುವ ಭಾವನೆಯ ಹಿಡಿತದಿಂದ ಬಿಡಿಸಿಕೊಳ್ಳುವುದು ಕಠಿಣವಾಯಿತು: ಕೂತಲ್ಲೇ ಬೆಳೆಯುತ್ತ ನಡೆದವರು, ಕಪ್ಪಾಗಿ ನಿಗೂಢರಾಗುತ್ತ ಮೂಕರಾದವರು ಮಾತು -ಕತೆಯನ್ನೇ ಅಸಾಧ್ಯಮಾಡಿದಾಗ -ತಾನು ಈ ರೂಮಿಗೆ ಬಂದದ್ದಾದರೂ ಯಾಕೆ ಎಂಬುದು ಕೂಡ ಮುಸುಕುಗೊಳ್ಳಹತ್ತಿತು. ಯಾರು ಯಾರೋ ಮಾಡಿದ ಅಪರಾಧಗಳನ್ನು ಬಯಲಿಗೆಳೆಯುವ ಪಣ ತೊಟ್ಟು ಬಂದವನಿಗೆ ತನ್ನ ನಿರಪರಾಧತೆಯನ್ನು ಸಿದ್ಧಗೊಳಿಸಲು ಗರಜಿನ ಭಾರವೇ ದೊಡ್ಡದಾಗಹತ್ತಿತು. +ಇವನ ಒಳಗಡೆ ನಡೆಯುತ್ತಿದ್ದುದನ್ನು ಸರಿಯಾಗಿ ಆರಿತವನ ಹಾಗೆ, ದಸ್ತೂರ್, ದನಿಯಲ್ಲಿಯ ಗಾಂಭೀರ್ಯ ಹೆಚ್ಚಿಸಿ ಬಾಯಿಬಿಚ್ಚಿದ: +“Soಡಿಡಿಥಿ ಣo be ಠಿeಡಿsoಟಿಚಿಟ- ತಿe ಛಿಚಿಟಿ‘ಣ heಟಠಿ iಣ. ಖಿhe mಚಿಣಣeಡಿ is so seಡಿious ತಿe ಛಿಚಿಟಿ‘ಣ ಚಿಜಿಜಿoಡಿಜ ಣo ಣಚಿಞe ಛಿhಚಿಟಿಛಿes” +ನಾಗಪ್ಪ ಬಿಯರಿಗೆ ತಿರುಗಿ ಕೈಹಚ್ಚಲಿಲ್ಲ. ಬಾಥ್‌ರೂಮಿಗೆ ಹೋದಾಗ ಪಾತ್ರೆಯನ್ನು ಯಾರೋ ತುಂಬಿ ಇಟ್ಟಿದ್ದರು. ದಸ್ತೂರನ ಮೋರೆಯಲ್ಲಿಯದೇನೋ ತನ್ನ ದುಗುಡಕ್ಕೆ ಕಾರಣವಾಗಹತ್ತಿತ್ತು.ತಾನು ನಿಜಕ್ಕೂ ನಿರಪರಾಧಿ. ಆದರೆ ಈ ದಸ್ತೂರದನ್ನು ನಂಬುತ್ತಿಲ್ಲವೇನೋ ಎಂಬ ಶಂಕೆ- ಮೋರೆಯ ಮೇಲೆ- ದಯಮಾಡಿ ನಂಬು ಎಂಬಂತಹ ಆರ್ಜವತೆಗೆ ಎಡೆಮಾಡಿಕೊಟ್ಟಿತ್ತು. ದಸ್ತೂರ್ ಬಹು ಗಂಭೀರವಾಗಿ ಕೇಳಿದ; +“ರೀನಾಳೊಡನೆ ನಿಮ್ಮ ಸಂಬಂಧವೇನು ?” +ನಾಗಪ್ಪ ತೀರ ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಯಿಂದ ತಬ್ಬಿಬ್ಬಾದ. ಅದಕ್ಕಿಂತ ಹೆಚ್ಚಾಗಿ, ಒಂದು ಅಸಾಧಾರಣ ಗಳಿಗೆಯಲ್ಲಿ ತಾನು ಬೆಂಕಿಯ ಬಗ್ಗೆ ಹೇಳಿದ್ದನ್ನು ಹೀಗೆ ತನ್ನ ವೈರಿಗಳಿಗೆ ತಿಳಿಸಿದವಳು ರೀನಾಳೇ ಎಂಬುದು ಖಂಡಿತವಾದದ್ದು ದಿಗ್ಭ್ರಮೆಗೆ ಕಾರಣವಾಗಿತ್ತು. ಆದರೂ ಈ ವೈಯಕ್ತಿಕ ಪ್ರಶ್ನೆಗೆ ಕೈ ಹಾಕುವ ಅಧಿಕಾರ ಈ ದಸ್ತೂರನಿಗೆಲ್ಲಿ ? ತಾನು ಈ ಕಂಪನಿಯ ನೌಕರಿಯಲ್ಲಿದ್ದ ಕಾರಣಕ್ಕಾಗಿಯೇ ತಾನೆ ? ಅದನ್ನು ಧಿಕ್ಕರಿಸುವ ನಿರ್ಧಾರ ಮಾಡಿಯೇ ತನ್ನಿಲ್ಲಿಗೆ ಬಂದದ್ದು. ಆದರೆ ಈಗ ಇದ್ದಕ್ಕಿದ್ದಂತೆ ತಾನು ನಿರಪರಾಧಿ ಎಂಬುದನ್ನು ಸಿದ್ಧಗೊಳಿಸಿ ತೋರಿಸುವ ಗರಜೇ ಬಹಳ ದೊಡ್ಡದಾಗಿ ತೋರುತ್ತಿದೆಯಲ್ಲ ! ಬರಬರುತ್ತ ಈ ಪಾರ್ಸಿಯ ದರ್ಪ ಅವನ ಮೂಗಿನ ಹಾಗೇ ದೊಡ್ಡದಾಗುತ್ತ ನೆಡೆದಿದೆಯಲ್ಲ ! ಒಂದು ಬಗೆಯ ಅನಾಸಕ್ತ ಕುತೂಹಲದಿಂದ ದಸ್ತೂರನ ಮುಂದಿನ ಪ್ರಶ್ನೆಯ ಹಾದಿ ಕಾದ. ದಸ್ತೂರ್ ಕೇಳಿದ : +“ನಿಮ್ಮಿಬ್ಬರಿಗೂ ಲೈಂಗಿಕ ಸಂಬಂಧವಿತ್ತೇ ?” +ನಾಗಪ್ಪ ತನ್ನ ಕಿವಿಗಳನ್ನು ನಂಬದಾದ. ಇದು ತೀರ ಖಾಸಗಿ ಪ್ರಶ್ನೆ. ಇದನ್ನು ಕೇಳುವ ಅಧಿಕಾರ ನಿನಗಿಲ್ಲ ಎನ್ನಬೇಕೆಂದರೆ ಹಾಗೆ ಅನ್ನಲು ಕಾರಣವಾಗಬೇಕಾದ ಸಿಟ್ಟು ಕೂಡ ಹುಟ್ಟುವ ಮೊದಲೇ ಅಡಗಿಹೋಗಿತ್ತು : ರೀನಾಳನ್ನು ಬಿಟ್ಟು ಬೇರೆ ಯಾರೂ ಈ ಗೌಪ್ಯವನ್ನು ಒಡೆಯುವುದು ಶಕ್ಯವಿರಲಿಲ್ಲ….ಅಥವಾ ತನ್ನನ್ನು ಹೆದರಿಸಿ ಮಣಿಸಲೆಂದೇ ಇವರು ಹೂಡಿದ ನಾಟಕವೇ ಇದು ? ದಸ್ತೂರನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ ಈ ಸಂಶಯವನ್ನು ದೂರ ಮಾಡಿದ : +“ಬೆಂಕಿ ಎಂದ ಕೂಡಲೇ ಮೈ ಜುಮ್ ಎಂದು ನಡುಗಲು ಕಾರಣವಾಗುವಂತಹ ಶಾರೀರಕ ಊನವೇನಾದರೂ ನಿಮ್ಮಲ್ಲಿದೆಯೇ ? ಆu ಥಿou hಚಿve ಚಿ ಟಿeuಡಿoಣiಛಿ ಜಿeಚಿಡಿ oಜಿ ಜಿiಡಿe ?” +ಈಗ ಮಾತ್ರ ನಾಗಪ್ಪನಲ್ಲಿ ಸಂಶಯವೇ ಉಳಿಯಲಿಲ್ಲ. ಅದೆಲ್ಲ ಅವನಿಗೆ ಹೇಗೆ ಗೊತ್ತಾಯಿತು ಎಂದು ತಿಳಿಯುವ ಕುತೂಹಲ ಕೂಡ ಉಂಟಾಗಲಿಲ್ಲ : ರೀನಾಳ ಸಹವಾಸದಲ್ಲಿ ಕಳೆದ ಹಲವಾರು ರಾತ್ರಿಗಳು ನಾಗಪ್ಪ ಅತ್ಯಂತ ಸುಖದ ಕ್ಷಣಗಳಲ್ಲಿ ಮಾತ್ರ ನೆನೆಯುವಂತಹವುಗಳಾಗಿದ್ದವು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಈ ಆಂಗ್ಲೋ_ಇಂಡಿಯನ್ ಹುಡುಗಿ ತಮ್ಮ ಈ ಸಂಬಂಧವನ್ನು ಗುಪ್ತವಾಗಿ ಇಡುವುದರ ಬಗ್ಗೆ ತನ್ನಿಂದ ಬೇಡಿದ ಭರವಸೆಗೆ ಉತ್ತರವೆಂಬಂತೆ ಈ ಗುಟ್ಟನ್ನು ತಾನು ತನಗೂ ಒಡೆಯಲು ನಿರಾಕರಿಸಿದ್ದ ! ಅಚ್ಚರಿಯ ಸಂಗತಿಯೆಂದರೆ ರೀನಾಳೇ ಹೀಗೆ ತನಗೆ ಎರಡು ಬಗೆದದ್ದು ತಿಳಿದಾಗ ಸಿಟ್ಟು ಬರದೇ ಇದ್ದದ್ದು. ಮನುಷ್ಯ ಸಂಬಂಧಗಳ ಸತ್ಯವನ್ನು ತಿಳಿಯುವ ಶಕ್ತಿಯೇ ತನ್ನಲ್ಲೀಗ ಉಳಿದಿಲ್ಲವೇನೋ ಎಂಬಂಥ ತಟಸ್ಥ ಭಾವನೆಯಿಂದಲೇ. ಕೆಲ ಸಮಯ ಕೈ ಹಚ್ಚಿರದ ಬಿಯರಿನ ಪಾತ್ರೆಯನ್ನು ಕೈಗೆತ್ತಿ ಎರಡು ಗುಟುಕುಗಳನ್ನು ಒಂದೇ ಬಾರಿಗೆ ಹೀರಿದ. ದಸ್ತೂರನ ಮಾತಿನಲ್ಲಿ ಸೇರಿಕೊಂಡ ವ್ಯಕ್ತಿಯನ್ನು ತಾನು ಈವರೆಗೂ ಕಡೇ ಇಲ್ಲವಲ್ಲ ಎನ್ನುವ ಕುತೂಹಲ ತುಂಬಿದ ಧಾಟಿಯಲ್ಲಿ ಹೇಳಿದ : +“ನೀವು ಹೇಳುತ್ತಿದ್ದದ್ದು ತುಂಬ ಸ್ವಾರಸ್ಯಪೂರ್ಣವಾಗಿದೆ. ಮಿಸ್ಟರ್ ದಸ್ತೂರ್. ನಿಲ್ಲಿಸಬೇಡಿ. ಕೇಳಲು ಬಹಳ ಉತ್ಸುಕನಾಗಿದ್ದೇನೆ….” +***** +ಮುಂದುವರೆಯುವುದು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಪಾತ್ರಗಳು ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು. ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು […] +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_462.txt b/Kannada Sahitya/article_462.txt new file mode 100644 index 0000000000000000000000000000000000000000..1baa30d870c2c27c094e89db9aa01ecf96cca987 --- /dev/null +++ b/Kannada Sahitya/article_462.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಬ್ಬದ ವೇಳೆ ಅಂಗಡಿಯಲ್ಲಿ +ಸರ್ವ ವಿಘ್ನಾಪಹಾರಿ ವಿನಾಯಕರು +ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. +ಪೀಡಾ ನಿವಾರಣೆಗಾಗಿ ಅವರೆದುರು +ಬೆದರು ಬೊಂಬೆ ಇಟ್ಟಿದ್ದರು! +***** +ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! ***** +ಬೀದಿಯಲ್ಲಿ ನೀವು ಹೋಗುತ್ತಿರುವಾಗ ಯಾರಾದರೂ ನಮಸ್ಕರಿಸಿದರೆ ಪಕ್ಕದಲ್ಲಿ ದೇವಸ್ಥಾನ ಇದೆಯೇ ನೋಡಿ. ***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_463.txt b/Kannada Sahitya/article_463.txt new file mode 100644 index 0000000000000000000000000000000000000000..4075339115221d0da1031597ea58032216de6a0e --- /dev/null +++ b/Kannada Sahitya/article_463.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೆನಪಿನಾಳದಿಂದ ಘಂ ಎಂದಿತ್ತು +ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ +ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ +ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ +ಬಟ್ಟಲಲಿ ಕಾದ ಕೇಸರಿ ಹಾಲು….. +ಹನಿ ಹನಿ ಮಳೆ ಬಿದ್ದು +ತೇವವಾಗಿತ್ತು ನೆಲ +ಮಣ್ಣ ವಾಸನೆ ಘಂ ಎಂದು +ಗಾಳಿಯಲಿ ಹಬ್ಬಿ +ಸುಳಿದಿತ್ತು ಊರ ಕೇರಿಯ ತುಂಬ. +ಹೀಗೆ, +ಕಾಯುತ್ತಾ ನಿಮಿಷಗಳ +ಕೂಡುತ್ತಾ…. ಕಳೆಯುತ್ತಾ….. +ಕತ್ತಲ ಚತ್ರಗಳ ಜೋಡಿಸುತ್ತಿತ್ತು ಮನಸು +…. …. …. …. +….. ….. ….. ….. +ಗಡಿಯಾರದಲ್ಲಿ ತಾಸು ಅಷ್ಟೇ +ಕುಂಟುವ ಮುಳ್ಳುಗಳಿಗೇಕಿಂದು +ಇಷ್ಟು ಸುಸ್ತು? +ಗೋಡೆ ಮೂಲೆಗೆ ಅಲ್ಲಿಂದಿಲ್ಲಿ +ಜೇಡ ನಡಿಗೆ ನೆಯ್ದ ಬಲೆ +ಸುಮೊ ಆಟಗಾರ ಜೀಕುಹಾಕಿ +ಇದರೊಳಕ್ಕೆ ಜಿಗಿದರೆ ಹೇಗೆ? +ನಿಮಿಷ ನಿಂತು, ಮುನ್ನಡೆದಳು +ಜೇಡನ ಜೇಡ್ತಿ. +ಬಿಸಿಗಾಲಿಗೆ ರೆಕ್ಕೆ ಬೆರೆಸಿ +ಬೆವರ ಸಿಂಪಡಿಸಿ +ತಿರುಗುತ್ತಿತ್ತು ಫ್ಯಾನು, +ಮೋಡ ಮುಚ್ಚಿದೆ ಹೊರಗೆ +ಒಳಗೆ ಚಾಚಿದೆ ಮಬ್ಬು….. +ಕಣ್ಣು ಮುಚ್ಚಿದ್ದೆ ತಡ +ಸರ ಸರ ಸರಿವ +ಮಿಂಚು ಹುಳುಗಳಂತೆ +ಏನೇನೋ ಚತ್ರಗಳು +ಒಂದರ ಮೇಲೊಂದರಂತೆ +ಹರಿದು ಹೊರಟ್ಟಿತ್ತು +ನೆನಪು +ಸರಿ ಸರಿದು ಸಾಗಿತ್ತು +ಕತ್ತಲಲಿ ಕಣ್ಣ ಮುಂದೆ. +ಮನೆಯ ಹೊರಗಿನ ಗೇಟು +ಕಿರ್‍ರೆಂದ ಸದ್ದು? +ಬಾಗಿಲಿಗೆ ಮನ ಕೊಟ್ಟೆ +ಬೆರಳು ಕುಟ್ಟಿದ ಸದ್ದು? +ಕರೆಗಂಟೆ ಕೆಟ್ಟಿದೆಯೊ? +ದಡಬಡಿಸಿ ಮೇಲೆದ್ದು +ತೆರೆದ ಬಾಗಿಲಿನಾಚೆ +ಕಪ್ಪಗೆ ಮಲಗಿತ್ತು ಖಾಲಿ ರಸ್ತೆ. +***** +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +– ೧ – ಮೊದಮೊದಲು ಹೀಗಿರಲಿಲ್ಲ ಈ ಕರಿಹೈದ. ತುಂಬ ಸಂಕೋಚದವ. ನೋಡಿದರೆ ಬಾಡಿ ಮೂಲೆಯಲ್ಲಿ ಮುದುಡುತ್ತಿದ್ದ. ಮಾತಿಗೊಮ್ಮೆ ತಪ್ಪಿತಸ್ಥರ ಹಾಗೆ ಹಸ್ತ ಹೊಸೆಯುತ್ತಿದ್ದ. ಯಾರೋ ನೆಂಟರ ಪೈಕಿ; ಕೈತುಂಬ ಕೆಲಸದ, ತಲೆತುಂಬ ಯೋಚನೆಯ […] +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_464.txt b/Kannada Sahitya/article_464.txt new file mode 100644 index 0000000000000000000000000000000000000000..9afab538493dde2584996cb8f626587910c63a4d --- /dev/null +++ b/Kannada Sahitya/article_464.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. +ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು ಬರೀ ದೀಪಗಳು. ಕೆಳಗೆ ತಿರುವಿನಲ್ಲಿ ಮೇಲೇರುತ್ತಿರುವ ಜೋಡಿ ದೀಪಗಳು. ಎದುರಿನಿಂದ ಇಳಿದು ಬಂದು ಕ್ಷಣ ಕಣ್ಣು ಕೋರೈಸಿ ಪಕ್ಕದಲ್ಲಿ ಸಾಗಿಹೋಗುವ ದೀಪಗಳು. ಆಗಾಗ ಯಾವು ಯಾವುದೋ ಹಳ್ಳಿಗಳ ಮಿಣಿಕು ದೀಪ ಗುಂಪುಗಳು. ಗೊತ್ತೇ ಇಲ್ಲದಂತೆ ನಿಶ್ಚಿಂತ ನಿದ್ದೆ. +ಆಗ ಮಧ್ಯರಾತ್ರಿಯಾಗಿತ್ತು. ನಾವು ಕುಲು ಬಸ್ ಸ್ಟ್ಯಾಂಡಿನಲ್ಲಿದ್ದೆವು. ಜ್ಞಾಪಕ ಬಂದರೆ ಈಗ ಅಲ್ಲೇ ಇದ್ದೇನೆ ಅನ್ನಿಸುತ್ತದೆ. +ಕೇವಲ ನಾಲ್ಕು ದಿನಗಳಷ್ಟೆ ಕಳೆದದ್ದೆ ನಾನು ಶಿವಮೊಗ್ಗ ಬಿಟ್ಟು? ನಾನು ಬೇರೆ ಯಾರೋ ಆಗಿಬಿಟ್ಟಿದ್ದೇನೆಯೇ? ಚಳಿ. ಕತ್ತಲು. ಆಗುಂಬೆ ಊರಿನ ಬಸ್ ಸ್ಟ್ಯಾಂಡಿನ ಥರ. ನಿಧಾನವಾಗಿ ನಮ್ಮ ಸುತ್ತ ನಾಲ್ಕಾರು ಜನ ಬಂದವು. ಎಲ್ಲವೂ ಸ್ವೆಟರು ಕೋಟು ಟೋಪಿಗಳು. ಜೇಬಿನಲ್ಲಿ ಕೈ ಬಚ್ಚಿಟ್ಟುಕೊಂಡವರು. ಎದೆಯ ಮೇಲೆ ಕೈಕಟ್ಟಿಕೊಂಡವರು. ನಾವು ನಮ್ಮ ನಮ್ಮಲ್ಲೆ ಮತ್ತು ನಾವೆಲ್ಲ ಆ ಜನದ ಜೊತೆ, ಆ ಜನವೆಲ್ಲ ತಮ್ಮತಮ್ಮಲ್ಲೆ ಮತ್ತು ನಮ್ಮೆಲ್ಲರ ಜೊತೆ ಒಟ್ಟಾಗಿ ಪ್ರಶ್ನೆ ಕೇಳುತ್ತ ಉತ್ತರ ಹೇಳುತ್ತ ಒಬ್ಬರಿಗೊಬ್ಬರು ಹೇಗೆ ಅರ್ಥವಾದೆವೋ ಗೊತ್ತಿಲ್ಲ. ಧಾರಿಣಿ, ಚಂದ್ರಾ, ಶ್ಯಾಮಲಾ ನಮ್ಮ ಚೀಲಗಳ ರಾಶಿಯ ಹತ್ತಿರ ಪುಟ್ಟ ಗುಂಪಾಗಿ ಮುದುರಿ ನಿಂತಿದ್ದರು. +ನೀವು ಎಲ್ಲಿಂದ ಬಂದಿರಿ ಹೋಟೆಲಿದೆಯಾ ಎಷ್ಟು ಜನ ಇದ್ದೀರಿ ಹೋಗಲಿ ಛತ್ರ ಎಲ್ಲಿಗೆ ಹೋಗಬೇಕು ಬಾಡಿಗೆ ಎಷ್ಟು ಬ್ಯಾಂಗಲೂರ್ ಸೆ ಎಲ್ಲಿದೆ ಹತ್ತು ಜನ ರಾಯ್ ಸನ್‌ಗೆ ಇಲ್ಲವೆ ಮನಾಲಿಗೆ ಹೋಗಬೇಕಿತ್ತೆ ಎಲ್ಲ ಭರ್ತಿಯೆ ಇದು ಸೀಸನ್ ಹೋ ತ್ರೆಕಿಂಗ್ ವಾಲಾಗಳಾ – ಒಟ್ಟು ಇತ್ಯರ್ಥ ಕುಲುನಲ್ಲಿ ಜಾಗ ಸಿಗುವುದು ಕಷ್ಟ. ಇಲ್ಲೆ ಹತ್ತಿರ ಒಂದು ಹೋಟೆಲಿದೆ ಹೋಗಿ ಕೇಳಿ ನೋಡಿ. +ನಾನು ಮತ್ತು ಶ್ರೀನಾಥ ಹೋದೆವು. ಕೇಳಿದೆವು. ನೋಡಿದೆವು. ಚೆನ್ನಾಗಿರಲಿಲ್ಲ. ಮುನ್ನೂರು ರೂಪಾಯಿ ಕೇಳಿದ. ಕಡಮೆಗೆ ಒಪ್ಪಲೇ ಇಲ್ಲ. ಸದ್ಯ ಜಾಗ ಸಿಕ್ಕಿತಲ್ಲ. ರಾತ್ರಿ ಸುರಕ್ಷಿತವಾಗಿ ಕಳೆಯಬಹುದಲ್ಲ. ಒಪ್ಪಿಬಿಟ್ಟೆವು. +ಆದರೆ ಬಂದು ಉಳಿದವರಿಗೆ ಹೇಳಿದರೆ ಮೂರ್ತಿ ಆನೆ ಪಟಾಕಿಯ ಸರ ಆಗಿ ಸಿಡಿ ಸಿಡಿ ಸಿಡಿದು ಸಿಡಿದುಬಿದ್ದ. ನನ್ನನ್ನೂ ಶ್ರೀನಾಥನನ್ನೂ ಬಯ್ದ. ನಿಮಗೆ ಬುದ್ಧಿ ಇದೆಯಾ. ಆ ಹೋಟೆಲಿನವನು ಮನುಷ್ಯನಾ ಅಂತೆಲ್ಲ ಬಯ್ದ. ರಸ್ತೆಯಲ್ಲೆ. ನಮ್ಮ ಜೊತೆ ಬಂದ ಹೋಟೆಲು ಹುಡುಗನನ್ನೂ. ಒಬ್ಬಿಬ್ಬರು ಪೋಲೀಸರು ಬಂದರು. ಪಾಪ. ಪೋಲೀಸರು ಅನ್ನುವ ಹಾಗೇ ಇರಲಿಲ್ಲ. ಹೋಟೆಲ ಹುಡುಗನನ್ನು ಬಯ್ದರು. ಗೋಗರೆದರು. ಕೈ ಮುಗಿದರು. ಉಪಯೋಗ ಮಾತ್ರ ಇಲ್ಲ. +ಪೋಲೀಸು ನಮಗೇ ಹೇಳಿದ. ಒಂದು ಕೆಲಸ ಮಾಡಿ. ಏನು? ಹೀಗೇ ಸೀದಾ ಹೋಗಿ. ಹೋದರೆ? ಮಾತಾ ಮಂದಿರ ಸಿಗುತ್ತದೆ. ನೀವು ಅಲ್ಲಿ ರಾತ್ರಿ ಕಳೆಯಬಹುದು. ಮುಫ್ತ್. ಎಷ್ಟು ದೂರ? ಎರಡು ಕಿಲೋಮೀಟರ್. ಏನೂ ಭಯ ಇಲ್ಲವೆ? ಛೆ ಏನೇನೂ ಇಲ್ಲ. ನಮ್ಮ ಹತ್ತು ಜನರದ್ದು ಹನ್ನೆರಡು ಮಾತು. ಮೂರ್ತಿಗೆ ಎಲ್ಲಿಲ್ಲದ ಹುರುಪು ಬಂದು ನಾಯಕನಾಗಿಬಿಟ್ಟ. ಮಾತಾ ಮಂದಿರವೆ? ಎಲ್ಲಿದೆ ಅಂದಿರಿ? ಹೀಗೆ. ಸೀದ ಹೋಗಿ. ದಾರಿ ತಪ್ಪುವ ಭಯ ಇಲ್ಲ. ಮೇನ್ ರಸ್ತೆಯಲ್ಲೆ ಇದೆ. ಕಾಂಪೌಂಡಿಗೆ ಗೇಟು ಇದೆ. ಅದರ ಮೆಲೆ ಸಿಂಹದ ಬೊಂಬೆ ಇವೆ. ಭಯ ಏನೂ ಇಲ್ಲ. +ಎಷ್ಟೊಂದು ಚಳಿ ಇದೆ. ರಾತ್ರಿಯ ಒಂದು ಗಂಟೆ. ಮೂರ್ತಿಯ ಹುರುಪು ನನಗೂ ಬಂತು. ಅಥವ ಆಯಾಸ ಏನೂ ಆಗಿಲ್ಲ ಅನ್ನುವ ತೋರಿಕೆಯೋ? ಮೂರ್ತಿಯಂತೆಯೇ ನಡೆದು ಅವನ ನಿರ್ಧಾರ ಸುಳ್ಳು ಅಂತ ತೋರಿಸುವ ಗುಟ್ಟು ಆಸೆಯೋ? ಎಲ್ಲರೂ ನಮ್ಮ ನಮ್ಮ ಭಾರ ಹೊತ್ತು ನಡೆದೆವು. +ಇಷ್ಟು ಹೊತ್ತು ಗಮನಿಸಿಯೇ ಇರಲಿಲ್ಲ. ಬೆಳದಿಂಗಳು ಇದೆ. ಮಂಕಾಗಿ. ಮಲಗಿದ ಮನೆಗಳನ್ನು ದಾಟಿದೆವು. ಐದೆ ನಿಮಿಷ. ಊರ ಹೊರಗಿದ್ದೆವು. ರಸ್ತೆ ಪಕ್ಕದಲ್ಲೆ ನದಿ ಇದೆ. ಬಿಯಾಸ್. ಎಷ್ಟೊಂದು ರಭಸವಾಗಿ ಹರಿಯುತ್ತಿದೆ. ಶಬ್ದ. ಸದ್ದು. ಅಲ್ಲ. ಮೊರೆತ. ಹೌದು ಮೊರೆತ. ಎಂದೂ ನದಿಯ ಇಂಥ ಮೊರೆತ ಕೇಳಿರಲಿಲ್ಲ. ವ್ಯಾಸ ಅನ್ನುವುದರ ತದ್ಭವ ಬಿಯಾಸ್ ಅಂದುಕೊಂಡಿದ್ದೆ. ಅಲ್ಲವಂತೆ. ಆದರೇನು. ನನ್ನ ಮಟ್ಟಿಗೆ ಅದೇ ವ್ಯಾಸ. ಪದಕ್ಕೆ ನಾನು ಕೊಡುವುದೇ ಅರ್ಥ, ನನ್ನ ಮಟ್ಟಿಗೆ. ಬೆಳ್ಳನೆ ನೀರಿನ ಮೇಲೆ ಬೆಳದಿಂಗಳು. ರಸ್ತೆಯ ನಾಲ್ಕೆ ಅಡಿ ಆಚೆ ನಮ್ಮ ಪಕ್ಕದಲ್ಲೆ ಆರ್ಭಟಿಸುವ ಮೊರೆಯುವರವ್ಹಸದಿಂದ ನುಗ್ಗಿ ಹರಿಯುವ ಬಿಯಾಸ್-ವ್ಯಾಸ. ಆಗ ಗೊತ್ತಿರಲಿಲ್ಲ. ಹಿಮಾಲಯದ ನಮ್ಮ ನಡಿಗೆಯ ಉದ್ದಕ್ಕೂ ಒಂದಲ್ಲ ಒಂದು ನದಿ., ಹೆಸರು ಯಾವುದಾದರೂ ಸರಿನದಿ, ನಮ್ಮ ಜೊತೆಗೇ ಇರುತ್ತದೆ ಎಂದು. ನನಗೆ ಗೊತ್ತಿಲ್ಲ. ಹೆಗೋ ನನ್ನ ತುಂಬು ನೊರೆ ನೊರೆ ಮೊರೆಯುವ ಆರ್ಭಟಿಸುವ ನದಿ ಮತ್ತು ಬೆಳದಿಂಗಳು ತುಂಬಿ ಬಿಟ್ಟವು. ನದಿಯ ಶೃತಿಗೆ ಹೆಜ್ಜೆ ಹಾಕುತ್ತ ನದಿಯ ವಿರುದ್ಧ ದಿಕ್ಕಿಗೆ ನಡೆದೆವು. ಚಳಿ, ನದಿ, ಮೊರೆತ, ಬೆಳದಿಂಗಳು. ನಡು ರಾತ್ತ್ರಿ. ನಡೆದೆವು. +ನನ್ನೊಳಗೆ ಕ್ರಮೇಣ ಭಯ ಶುರುವಾಯಿತು. ಆತಂಕ ಹೆಚ್ಚಾಯಿತು. ಎಲ್ಲರಿಗೂ ಹಾಗೇ ಆಯಿತೋ ಏನೋ. ಗೊತ್ತಿಲ್ಲದ ಊರು. ಊರು ದಾಟಿ ನಟ್ಟಿರುಳಿನಲ್ಲಿ. ಜೊತೆಗೆ ಹೆಂಗಸರಿದ್ದಾರೆ. ಗೊತ್ತಿಲ್ಲದ ಊರಿನಲ್ಲಿ. ಊರು ದಾಟಿ ನಡೂರಾತ್ರಿ ಹೆಂಗಸರನ್ನು ಕಟ್ಟಿಕೊಂಡು, ಆಕರ್ಷಿಸುವ ಭಯ ಹುಟ್ಟಿಸುವ ನದಿಯ ಪಕ್ಕದಲ್ಲಿ, ಇನ್ನೊಂದು ಪಕ್ಕದಲ್ಲಿ ಗುಡ್ಡ ಇಟ್ಟುಕೊಂಡು, ಬೆಳದಿಂಗಳಲ್ಲಿ ವಿಚಿತ್ರವಾಗಿ ಕಾಣುವ ಮರಗಳ ಕಪ್ಪು ಅಸ್ಪಷ್ಟ ನೆರಳಿನಲ್ಲಿ ಗೊತ್ತಿಲ್ಲದ ಆಶ್ರಮ ಹುಡುಕಿಕೊಂಡು ನಡೆಯುತ್ತಿದ್ದೇವಲ್ಲ. ಎಂದೆಂದೂ ಕನಸಿನಲ್ಲೂ ಕಂಡಿರದ ಜಾಗ. ಇಲ್ಲಿಡುವ ಒಂದೊಂದು ಹೆಜ್ಜೆಯೂ ಹೊಸದು. ಬೈದೆವು ಮೂರ್ತಿಯನ್ನು. ಧಾರಿಣಿಯೂ ಗಂಡನನ್ನು ಬೈದರು. +ಅರ್ಧ ಗಂಟೆ ನಡೆದೆವು. ಎಷ್ಟು ಹೊತ್ತು ಬೈಯಲು ಸಾಧ್ಯ. ಸುಮ್ಮನೆ ನಡೆದೆವು. ಎಷ್ಟು ಹೊತ್ತು ಸುಮ್ಮನೆ ನಡೆಯಲು ಸಾಧ್ಯ. ಬೈದೆವು. ಪೋಲೀಸ ನಿಜ ಹೇಳಿದನೆ? ಎಲ್ಲಿದೆ ಮಠ? ನಡಿಗೆ ನಿಧಾನವಾಯಿತು. ಎಲ್ಲಿದೆ ಸಿಂಹದ ಗೇಟು? ಚೀಲಗಳು ಪೆಟ್ಟಿಗೆಗಳು ಭಾರವಾದವು. +ಕೂತಿರಿ ಬರುತ್ತೇವೆ ಅಂತ ರಾಜು ಮತ್ತು ಮೂರ್ತಿ ಮುಂದೆ ನಡೆದರು. ಈಗ ಏನೇನೂ ನೆನಪಿಲ್ಲ. ಶಿವಮೊಗ್ಗೆ. ದೆಹಲಿ. ನನ್ನ ಹೆಸರು. ಏನೇನೂ. ಬರೀ ನದಿಯ ಮೊರೆತ. ಟಾರು ರಸ್ತೆಯ ಅಂಚು. ಬೆಳದಿಂಗಳು. ಆತಂಕ. ಮಲಗಲು ಬೆನ್ನಿಗೆ ನೆಲ ಬೇಕು ಅನ್ನುವ ಆಸೆ. ಕೂರುವುದು ಬೇಡ ಅಂತ ನಡೆದೆವು. ನಾಲ್ಕು ಹೆಜ್ಜೆ ಹೋಗುವುದರೊಳಗೆ ಮತ್ತೆ ಅನುಮಾನ ಬಂದು ಕೂತೆವು.ಸಿಂಹದ ಗೇಟಿನ ಆಶ್ರಮ ಸಿಕ್ಕಿತೋ ಇಲ್ಲವೋ ಜಾಗ ಕೊಡಲು ಅವರು ಒಪ್ಪಿದರೋ ಇಲ್ಲವೋ? ಸುಮ್ಮನೆ ಕೂತು ಕಾಯುವುದೆ ವಾಸಿ ಅವರಿಗೆ. ಮತ್ತೆ ಕುಲುಗೇ ಹಿಂತಿರುಗಬೇಕೋ ಏನೋ. ಆ ಹೋಟೆಲಿಗೆ. ಹಾಗಾದರೆ ನಡೆಯುವುದು ಯಾಕೆ? +ಬಂದರು. ಇಲ್ಲೆ ಇದೆಯಂತೆ ಆಶ್ರಮ. ಇನ್ನೂ ಸ್ವಲ್ಪ ದೂರ. ಸಿಕ್ಕಿಬಿಟ್ಟಿತು. ಪುಟ್ಟ. ಅಲ್ಲ, ಸಾಕಷ್ಟೆ ದೊಡ್ಡ ಪಡಸಾಲೆ. ಅಲ್ಲಿಗೆ ಹತ್ತಲು ಏಳೆಂಟು ಮೆಟ್ಟಿಲು. ಪಡಸಾಲೆಯಲ್ಲಿ ಬೆಳದಿಂಗಳ ಬೆಳಕು. ದೊಡ್ಡ ದೊಡ್ಡ ಚಾಪೆಯ ಸುರುಳಿಗಳು. ಬಿಡಿಸಿದಷ್ಟೂ ಮುಗಿಯುವುದೇ ಇಲ್ಲ. ನಾನು ಎಂದೂ ಅಷ್ಟು ದಪ್ಪನೆ ಅಷ್ಟು ಮೃದುವಾದ ಅಷ್ಟು ದೊಡ್ಡ ಚಾಪೆಗಳನ್ನು ನೋಡಿರಲೇ ಇಲ್ಲ. ಯಾರನ್ನಾದರೂ ಕೇಳಬೇಕಾಗೊತ್ತೋ ಏನೋ. ಕೇಳಲು ಯಾರೂ ಇಲ್ಲವಲ್ಲ. ಇದು ಮಠ ಅಲ್ಲ. ಬರೀ ಮೊಗಸಾಲೆ. ಮಠ ಎಲ್ಲಿದೆಯೋ. ಇದ್ದರೆ ಇರಲಿ ಬಿಡಿ. ಚಾಪೆ ಇದೆ. ಮಲಗೋಣ. ರಾತ್ರಿ ಎರಡೂವರೆ ದಾಟಿದೆ. ಚಳಿ ಜಾಸ್ತಿ ಆಗುತ್ತಿದೆ. ಸಾಮಾನೆಲ್ಲ ರಾಶಿ ಹಾಕಿ ಚಾಪೆ ಮೇಲೆ ಮೈ ಚೆಲ್ಲಿ ಗೋಡೆ ಮೇಲೆ ಬಿದ್ದಿದ್ದ ಬೆಳದಿಂಗಳು ನೋಡುತ್ತ ನದಿಯ ಮೊರೆತ ಕೇಳುತ್ತ ನಿದ್ದೆ ಬಂದುಬಿಟ್ಟಿತು. +ಬರವಣಿಗೆಯ ಹತ್ತನೆಯ ದಿನ +ನಿಜವಾಗಿ ಹೊಸತಾದ್ದೆಲ್ಲ ಅಪರಿಚಿತವಾಗಿಯೇ ಇರುತ್ತದೆ. ಹಿಮಾಲಯದಲ್ಲಿನ ಮೊದಲ ಮುಂಜಾವೂ ಅಷ್ಟೆ. ಹೊಸ ಜಾಗ. ಹೊಸ ನಿದ್ರೆ. ಹೊಸ ಎಚ್ಚರ. ನದಿಯ ಮೊರೆತ. ಎಚ್ಚರವಾಗುತ್ತಿದ್ದ ಮೂರ್ತಿ ಎಚ್ಚರದ ಮುಲುಗು ಮುಲುಗುತ್ತಿದ್ದ. ಶ್ಯಾಮಲಾ ಮಲಗಿದಲ್ಲೆ ಏನೇನೋ ಹೇಳುತ್ತಿದ್ದಳು. ನಾವೆಲ್ಲ ನಿದ್ದೆಯಲ್ಲಿ ಮಾತು ಕಳುದುಕೊಂಡಿಲ್ಲ ಅನ್ನುವುದು ನಮಗೇ ಸ್ಪಷ್ಟ ಮಾಡಿಕೊಳ್ಳುವ ಹಾಗೆ. ಅಪರಿಚಿತ ಜಾಗದ ಅಪರಿಚಿತ ಹಗಲನ್ನು ಹೇಗೆ ಏನು ಮಾಡಬೇಕೆಂದು ತಿಳಿಯದೆ ಸುಮ್ಮನೆ ಆಡಿದ ಮಾತುಗಳು. ಏನೇನೋ. ಚೀಲಗಳಲ್ಲಿ ಪೆಟ್ಟಿಗೆಗಳಲ್ಲಿ ಏನೇನನ್ನೋ ತಡಕುವ ಶಬ್ದ. ಆಚೆ ಹಕ್ಕಿಗಳ ಸದ್ದು. ಸೂರ್ಯ ಇಲ್ಲ. ಬೂದಿ ಬೆಳಕು. ಮೋಡ ಕವಿದ ಚಳಿ. +ನಾನು ಮತ್ತು ರಾಜು ಬೆಳಗಿನ ಮುಖ್ಯ ಕೆಲಸಗಳಿಗೆ ಹೊರಟೆವು. ನಮ್ಮ ಪಡಸಾಲೆ ರಸ್ತೆಗೇ ಅಂಟಿದ್ದ ಗುಡ್ಡದ ಮೈಕೊರೆದು ಮಾಡಿದ್ದು. ಮೆಟ್ಟಿಲು ಇನ್ನೂ ಮೇಲಕ್ಕಿತ್ತು. ಅಲ್ಲೆಲ್ಲೋ ಮಠ ಇರಬೇಕು. ಸಿಂಹ ಇತ್ತು. ಕತ್ತಲಲ್ಲಿ ಕಂಡಿರಲಿಲ್ಲ. ಎದುರಿಗೇ ರಸ್ತೆ. ರಸ್ತೆಯ ಆಚೆ ಮರಗಳ ಸಾಲು. ಸಾಲಿನ ಆಚೆ ಬಿಯಾಸ್. ಅಲ್ಲಿ ಒಂದು ಶೆಡ್ಡು. ಹುಹುಹು ಅನ್ನುತ್ತ. ಇನ್ನೂ ಮಲಗೇ ಇದ್ದವರನ್ನು ಬಿಟ್ಟು ಸರಿಯಾದ ಜಾಗ ಹುಡುಕಿ ಹೊರಟೆವು. ಎಲ್ಲೂ ಸಿಗಲಿಲ್ಲ. ಗುಡ್ಡ ಹತ್ತಲಾಗುವುದಿಲ್ಲ. ನದಿಯ ಪಕ್ಕದಲ್ಲಿ ಮರೆಯಿಲ್ಲ. ಇಂಥ ಸುಂದರ ನದಿಯ ಜಾಗವನ್ನು ಗಲೀಜು ಮಾಡಬೇಕೆ? ಗಲೀಜು ಮಾಡದೆ ಬದುಕುವುದು ಹೇಗೆ? +ರಾಜು ಹೇಳಿದ್ದು-ರಾತ್ರಿ ಶ್ರೀನಾಥನಿಗೆ ಬೆಳದಿಂಗಳಲ್ಲಿ ನದಿಯ ಫೋಟೋ ತೆಗೆಯುವ ಆಸೆ ಹುಟ್ಟಿತಂತೆ. ಅನಂತನನ್ನೂ ಗೌಡರನ್ನೂ ರಾಜುವನ್ನೂ ಕರೆದುಕೊಂಡು ನದಿಯ ಹತ್ತಿರ ಹೋಗಿ ಕ್ಯಾಮರಾ ಇಟ್ಟು ಸುಮಾರು ಮುವ್ವತ್ತು ನಿಮಿಷ ಎಕ್ಸ್ ಪೋಸ್ ಮಾಡಿ ನದಿಯ ಫೊಟೋ ತೆಗೆದನಂತೆ. ಬೆಳದಿಂಗಳು ನದಿ ಇವನ್ನ ನನಗಿಂತ ಬೇರೆಥರ ಅವರೆಲ್ಲ ನೋಡಿದರೆಂದು ಒಂದು ಥರ ಹೊಟ್ಟೆಕಿಚ್ಚಾಯಿತು. +ವಾಪಸ್ಸು ಬರುವ ಹೊತ್ತಿಗೆ ನಮ್ಮ ಪಡಸಾಲೆ ಹತ್ತಿರ ಯಾರೋ ಒಬ್ಬ ಠಳಾಯಿಸುತ್ತಿದ್ದ. ನಮ್ಮನ್ನು ಬೈಯಲು ಬಂದವನೋ ಏನೋ. ಇಲ್ಲ. ಮಠದ ಮನುಷ್ಯನಂತೆ. ನೀವು ರಾತ್ರಿ ಬಂದಾಗ ನಮಗೆ ಗೊತ್ತಾಗಲೇ ಇಲ್ಲ. ನಿಮಗೆಷ್ಟು ತೊಂದರೆ ಆಯಿತೋ ಅಂತ ಅವನು ಪೇಚಾಡಿ ನಿಮ್ಮ ಅನುಮತಿ ಕೇಳದೆ ನಾವು ಉಳಿದು ಬಿಟ್ಟೆವಲ್ಲ ಅಂತ ನಾವು ಪೇಚಾಡಿ ಕೊನೆಗೆ ಅವನೇ ಅತಿ ತಪ್ಪಿತಸ್ಥನಂತೆ ‘ದಯವಿಟ್ಟು ಚಹ ಕುಡಿಯಿರಿ’ ಅಂತ ನಮ್ಮನ್ನು ಬೇಡಿಕೊಂಡು-ಅಹಾ, ಜನ ಎಷ್ಟು ಒಳ್ಳೆಯವರು. +ಚಂದ್ರಳಿಗೂ ಹಾಗೇ ಅನ್ನಿಸಿತು. ಶ್ರೀನಾಥನಿಗೂ, ಮಠಗಳನ್ನು ದ್ವೇಷಿಸುವ ಮೂರ್ತಿಗೂ. ನನಗೂ. ಎಷ್ಟೊಂದು ಉಪಕಾರ ಮಾಡಿದರು ಆ ಜನ. ನಮಗೆಂದೇ ವಿಶೇಷವಾಗಿ ಅನ್ನ ಮಾಡಿ, ಸಿಹಿ ಮಾಡಿ ಬಡಿಸಿದರು. ಮಾತಾಜಿ ನಮ್ಮ ಜೊತೆ ಫೊಟೋ ತೆಗೆಸಿಕೊಂಡರು. ಆ ಮಠ ಸ್ಥಾಪನೆ ಮಾಡಿದವರು ಬಹಳ ಹಿಂದೆ ಕರ್ನಾಟಕದಿಂದಲೇ ಬಂದವರು ಅಂತ ಹೇಳಿದರು. ನಮಗೆಲ್ಲ ನಾವು ವಿ ಐ ಪಿಗಳು ಅನ್ನಿಸುವ ಹಾಗೆ ಮಾಡಿಬಿಟ್ಟರು. +ನಾವು ಬ್ರಿಂಗ್ಟಾದಿಂದ ಇಳಿಯುತ್ತಿದ್ದಾಗ ಜಲಪಾತದ ಪಕ್ಕದಲ್ಲಿ ಶರ್ಮನ ಸಂಸಾರ ನಮ್ಮನ್ನು ಕಂಡು, ಕರೆದು, ಅವರ ತಿಂಡಿಯನ್ನು ಹಂಚಿಕೊಟ್ಟಾಗ ಮತ್ತೆ ಅನ್ನಿಸಿತು-ಜನ ಎಷ್ಟು ಒಳ್ಳೆಯವರು. +ಜಾನಾಕ್ಕೆ ಏರುತ್ತಿದ್ದಾಗ ಮಹಾರಾಷ್ಟ್ರದ ಹುಡುಗನಿಗೆ ವಾಂತಿಯಾಯಿತು. ಅಲ್ಲಿದ್ದವರೆಲ್ಲ ನಾಮುಂದು ತಾಮುಂದು ಎಂದು ತಮ್ಮಲ್ಲಿದ್ದ ಔಷಧಗಳನ್ನು ಕೊಟ್ಟು ಉಪಚರಿಸಲು ಮುಂದಾದರು. ಜನ ಎಷ್ಟು ಒಳ್ಳೆಯವರು. +ಅಹಮದಾಬಾದಿನ ಹುಡುಗಿ ಮಲಾನಾದಲ್ಲಿ ಜ್ವರ ಬಂದು ನಡುಗಿದಾಗ ಬಂಗಾಳದ ಅಜಯ ಅವಳನ್ನೂ ಅವಳ ಚೀಲದ ಹೊರೆಯನ್ನೂ ಹೊತ್ತು ನಡೆದ. ಜನ ಎಷ್ಟು ಒಳ್ಳೆಯವರು. +ಹೌದಲ್ಲವಾ ಅಂತ ಚಂದ್ರಳನ್ನು ಇಂದು ಬಾರಿ ಕೇಳಿದೆ. ಅವಳು ಬಹಳ ಚೆನ್ನಾಗಿ ಹೇಳಿದಳು. ಇಲ್ಲಿ ನಾವೆಲ್ಲ ಒಂದೇ ಸಮಾನ ಅನ್ನುವ ಹಾಗೆ ಇರುತ್ತೇವೆ. ಒಂದೇ ಸಮಾನ ಅನ್ನುವ ಹಾಗೆ ಕಷ್ಟ ಪಡುತ್ತಿದ್ದೇವೆ. ನಡೆದು ನಡೆದು ಸುಸ್ತಾಗುತ್ತಿದ್ದೇವೆ. ನೋಡಿ ಖುಷಿ ಪಡುತ್ತಿದ್ದೇವೆ. ಮತ್ತೆ ಅದರಿಂದ ಎಲ್ಲರೂ ಒಂದೇ ಅನ್ನಿಸುತ್ತೆ. ಆಮೇಲೆ ಇದು ಸ್ವಲ್ಪ ಕಾಲದ ಬದುಕು. ಒಂದು ವಾರ ಕಳೆದ ಮೇಲೆ ಯಾರು ಯಾರು ಎಲ್ಲೆಲ್ಲೋ. ನಮ್ಮ ನಮ್ಮ ಊರಿಗೆ ಹೋಗಿಬಿಡುತ್ತೇವೆ. ಹಾಗಾಗಿ ಎಲ್ಲರೂ ಸಾಧ್ಯವಾದಷ್ಟು ಒಳ್ಳೆಯವರಾಗೇ ಇರಲು ಪ್ರಯತ್ನಿಸುತ್ತೇವೆ. – ಒಳ್ಳೆಯತನಕ್ಕೂ ಅದು ಕಾಣಿಸಿಕೊಳ್ಳುವುದಕ್ಕೂ ಎಷ್ಟೊಂದು ಕಂಡೀಷನ್ನುಗಳು. +ನಿಜವಾಗಲೂ ನಮ್ಮ ಒಳ್ಳೆತನ ನಮ್ಮ ಸಂತೋಷ ಹೀಗೇ ಮೇಲೆ ಮೇಲೆ ತೇಲುವುದು ಅಷ್ಟೇನೋ ಏನೋ. ಈಗ ಯೋಚನೆ ಮಾಡಿದರೆ ಅನ್ನಿಸುತ್ತದೆ. ನಡೆಯುತ್ತಿರುವಾಗ, ನೋಡಿ ಖುಷಿಪಡುತ್ತಿರುವಾಗ, ಮಾತನಾಡಿಸಿದವರನ್ನು ಸೌಜನ್ಯದಿಂದ ಕೇಳುತ್ತಿರುವಾಗ, ಒಳ್ಳೆಯವನಾಗಿರುವಾಗ ನನ್ನ ಒಳಗೇ ಗುಟ್ಟಾಗಿ ಎಷ್ಟೊಂದೆಲ್ಲ ಇದ್ದವು. +ಬರವಣಿಗೆಯ ಹನ್ನೊಂದನೆಯ ದಿನ +ಒಳಗಿರುವ ಗುಟ್ಟುಗಳು. ಗುಟ್ಟುಗಳು ಇವೆ ಎಂದು ಗೊತ್ತಿರುವುದು. ಇವೆರಡನ್ನೂ ದಾಟಿ ಸುಮ್ಮನೆ ಬರೀ ಇರುವ ಕ್ಷಣಗಳು ಕೆಲವು ಇರುತ್ತವಲ್ಲ ಅಂಥವನ್ನು ಪಡೆಯುವ ಆಸೆ ತುಂಬ ಅದಮ್ಯವಾಗಿರುತ್ತದೆ. +ಒಂದು ಸಾರಿ ಕೊಡಚಾದ್ರಿಗೆ ಹೋಗಿದ್ದೆವು. ನಾನು ಮತ್ತು ರಾಜು ಇಬ್ಬರೂ ದಾರಿ ತಪ್ಪಿಬಿಟ್ಟೆವು. ಕಾಡು ದಟ್ಟವಾಗಿತ್ತು. ಮಳೆಗಾಲದಲ್ಲಿ ನೀರು ಬೆಟ್ಟದಿಂದ ಕೆಳಗಿಳಿಯುವ ಜಾಡು ಕಾಣಿಸಿತು. ಇಳಿದೆವು. ಕಾಲು ಊರಲು ಗಟ್ಟಿಯಾದ ಜಾಗವಿಲ್ಲ. ಬರೀ ಕೆಂಪು ಧೂಳುಮಣ್ಣು. ಸೂರ್ಯನ ಬೆಳಕು ಇಲ್ಲ. ದಿಕ್ಕು ತಿಳಿಯುವುದು ಕಷ್ಟ. ತುಂಬ ಕಡಿದಾದ ಇಳಿಜಾರು. ಕೈಗೆ ಅಲ್ಲಲ್ಲೆ ಮರಗಳ ಅವಲಂಬನೆ. ಆಮೇಲೆ ಕಲ್ಲುಗಳು ಕಂಡವು. ನುಣ್ಣನೆ ಕಲ್ಲು, ದಪ್ಪ ಕಲ್ಲು, ಉರುಟು ಕಲ್ಲು, ಸಣ್ಣ ಕಲ್ಲುಗಳು, ಕೆಲವು ನಯವಾದ ಬಂಡೆಗಳು. ಕಲ್ಲುಗಳೇ ತುಂಬಿದ ಒಂದು ಮಳೆ ನೀರಿನ ದಾರಿ. ಅಲ್ಲಿ ಇಳಿಯುವುದು ಸುಲಭ ಅನ್ನಿಸಿತು. ಕುಕ್ಕರುಗಾಲಿನಲ್ಲಿ ಕೂತು, ಬೆನ್ನು ಒಂದು ಬಂಡೆಗೆ ಒತ್ತಿ, ಕಾಲಿಗೆ ಸಿಗದ ಇನ್ನೊಂದು ಬಂಡೆಗೆ ಕಾಲು ಇಳಿಬಿಟ್ಟು, ಹೆಜ್ಜೆ ಇಡುತ್ತ, ಹೆಜ್ಜೆ ಇಟ್ಟಾಗ ಕೈ ಆಧಾರವಾಗಿ ಹಿಡಿದಿದ್ದ ಕಲ್ಲು ಕೈಗೇ ಕಿತ್ತು ಬಂದು, ಹೆದರಿ, ಇಳಿದೆವು. ಬೆತ್ತದ-ಮುಳ್ಳು-ಮೈ-ಕೋಲುಗಳ ಪೊದೆ. ಕೈಗೆ ಚುಚ್ಚದೆ, ಮೈಗೆ ಚುಚ್ಚದೆ, ಹಾಗೆ, ಹುಷಾರಾಗಿ ಇಳಿದೆವು. ಒಂದು ನಾನ್ನೂರು ಅಡಿ. ನೀರಿನ ಶಬ್ದ ಕೇಳಿಸಿತು. ಹತ್ತಿರದಲ್ಲೇ ಎಲ್ಲೋ ಇದೆ. ಕಿವಿ ತೋರಿಸಿದ ದಾರಿಯಲ್ಲಿ ಸಾಗಿದೆವು. ನಾಲ್ಕು ಅಲ್ಲ ಆರು ಹಂತಗಳಲ್ಲಿ, ತುಂಬ ಚನ್ನಾಗಿ, ನಮಗೆ ಒಂದು ಚೂರೂ ಭಯ ಹುಟ್ಟಿಸದಹಾಗೆ, ಧುಮುಕುತ್ತಿರುವ ಜಲಪಾತ. ಮೇಲೆ ಎಲ್ಲೋ ನಮಗಾಗಿ ಕಾಯುತ್ತಿದ್ದ ಎಲ್ಲರನ್ನೂ ಮರೆತುಬಿಟ್ಟೆವು. ತಣ್ಣನೆ ಹೊಸ ನೀರಿನಲ್ಲಿ ಕೈಗೆ ಮೈಗೆ ಆದ ತರಚು ಗಾಯಗಳೆಲ್ಲ ಉರಿದು ಆಮೇಲೆ ಹಿತವಾದವು. ಜಲಪಾತದ ಬಂಡೆಗಳಲ್ಲಿ ಪಾಚಿ ಇರಲಿಲ್ಲ. ಜಾರಿಕೆ ಇರಲಿಲ್ಲ. ಮೈಮೇಲೆಲ್ಲ ಸುರಿಯುತ್ತಿರುವ ನೀರಿನಲ್ಲಿ ನೆನೆದುಕೊಂಡು, ಜಲಪಾತದಲ್ಲೆ ಸ್ವಲ್ಪ ದೂರ ಮೇಲಕ್ಕೆ ಹತ್ತಿದೆವು. ರಾಜುಗೆ ಮೈಮೇಲಿನ ಬಟ್ಟೆಗಳನ್ನೆಲ್ಲ ತೆಗೆದು ದಿಕ್ಕೇ ಅಂಬರವಾಗಿ ಸ್ನಾನ ಮಾಡಬೇಕೆನ್ನಿಸಿತು. ನನಗೆ ಯಾಕೆ ಸಂಕೋಚ? ನನ್ನ ಆಸೆ ಇನ್ನೂ ಹಾಗೇ ಉಳಿದಿದೆ. ನೀರಿನಲ್ಲಿ ಸುಮ್ಮನೆ ಮಲಗಿಬಿಟ್ಟೆ. ಸುರಿಯುವ ನೀರಿಗೆ ತಲೆ ಕೊಟ್ಟು ಕೂತುಬಿಟ್ಟೆ. ತಲೆಮೇಲೆ ಬೀಳುವ ನೀರಿನ ಮೃದು ಹೊಡೆತ ಮೈಯೊಳಗೆಲ್ಲ ಎಂಥ ಶಬ್ದ ಹುಟ್ಟಿಸುತ್ತದಲ್ಲ. ಸಂಜೆ ಐದಾಗುತ್ತಿತ್ತು. ಆ ಅದ್ಭುತ ಮನುಷ್ಯ ದೇನಾಶ್ರೀಯನ್ನು ಅವರಣ್ಣ ಡಾಕ್ಟರನ್ನೂ, ಚಿತ್ರದುರ್ಗದ ಪಂಕಜ, ಶಿಕಾಪುರದ ಬಸವರಾಜ ಅವರನ್ನೆಲ್ಲ ಕರೆದುಕೊಂಡು ಬಂದು ಈ ಜಲಪಾತವನ್ನು ತೋರಿಸಬೇಕು ಅನ್ನುವ ಆಸೆ ಹುಟ್ಟಿತು. ಹೊರಟೆವು ಬಂದ ದಾರಿಯಲ್ಲೆ. ಕಾಯುತ್ತಿದ್ದ ಅವರನ್ನು ಕರಕೊಂಡು ಬಂದೆವು. ಅವತ್ತು ಕತ್ತಲು ಕವಿಯುವವರೆಗೂ ಆ ನೀರು ಜಾಡಿನಲ್ಲಿ ನಾಲ್ಕು ಸಾರಿ ಓಡಾಡಿ, ಜಲಪಾತದಲ್ಲಿ ಎರಡೆರಡು ಸಾರಿ ನಡೆದು ರಾತ್ರಿ ಮಲಗಿದರೆ- +ಕಲ್ಲಿಗೆ ಒತ್ತಿದ್ದ ಅಂಗೈ, ಬಂಡೆಗೆ ಒರಗಿದ್ದ ಬೆನ್ನು, ಭಾರ ತಡೆದಿದ್ದ ತೋಳು, ಮೇಲಕ್ಕೆ ನನ್ನ ಮೈಯನ್ನು ತಳ್ಳಲು ದುಡಿದ ತೊಡೆ, ಮುಳ್ಳಲ್ಲಿ ತರಚಿಸಿಕೊಂಡ ಕತ್ತು, ಬಂಡೆಗಳ ಆಕಾರವೆಲ್ಲ ತುಂಬಿಕೊಂಡ ಕಣ್ಣು, ಬೆವರು, ಮೈಯ ಪ್ರತೀ ಕಣವೂ ಏನೇನೋ ಅನುಭವ ಪಡೆದಿದ್ದವಲ್ಲ- ನನ್ನ ಇಡೀ ಮೈ ಕನಸು ಕಂಡಿತು. ನಾನು ಮಲಗಿದ್ದು ಹೌದಾದರೂ ತುಂಬ ಒಳ್ಳೆಯ ನಿದ್ದೆ ಬಂದರೂ ಎಚ್ಚರಕ್ಕಿಂತ ಸ್ಪಷ್ಟವಾಗಿ ನಾನು ಬಂಡೆ ಬಿರುಕುಗಳಲ್ಲಿ ಮರದ ತೊಗಟೆಗಳಲ್ಲಿ ತುಂತುರು ನೀರಿನಲ್ಲಿ ಕರಗಿ ಹೋದಹಾಗೆ, ಅವೆಲ್ಲ ನನ್ನೊಳಗೇ ತುಂಬಿಕೊಂಡೇ ಇರುವ ಹಾಗೆ- ಅಂಥ ಇಡೀ ಮೈ ಪಡೆದ, ಕಂಡ ಕನಸು ಬಿದ್ದೇ ಇಲ್ಲ ಮತ್ತೆ ಯಾವತ್ತೂ. ನಾನು ಇರಲೆ ಇಲ್ಲ. ಅನುಭವ ಬರೀ ಅದು ಮಾತ್ರ ಇತ್ತು. ಈಗ ನೆನಪು ಅಷ್ಟೆ. +ಹಾಗೆ ಹಿಮಾಲಯದಲ್ಲಿ ನನಗೆ ಅನ್ನಿಸಲೆ ಇಲ್ಲ. ಕಣ್ಣು ಏನೇನೋ ನೋಡುತ್ತಿತ್ತು. ಮೈ ನಡೆಯುತ್ತಿತ್ತು. ಜನ ಒಳ್ಳೆಯವರಾಗಿದ್ದರು. ನಾನು ಒಳ್ಳೆಯವನಾಗಿದ್ದೆ. ಆದರೆ ನನ್ನೊಳಗಿನ ನಾನು ಹಾಗೇ ಇತ್ತು. +ನಾವು ಬ್ರಿಂಗ್ಟಾದಿಂದ ಜಾರಿಗೆ ಹೋಗುವಾಗ ನನಗೆ ಚಂದ್ರಳ ಮೇಲೆ ತುಂಬ ಸಿಟ್ಟು ಬಂದಿತ್ತು. ಮೂರ್ತಿಯ ಮೇಲೆ ಸಿಟ್ಟು ಬಂದಿತ್ತು. ಮೂರ್ತಿ ಧಾರಿಣಿಯನ್ನು ನೋಡಿಕೊಂಡಷ್ಟು ಚೆನ್ನಾಗಿ ನಾನು ಚಂದ್ರಳನ್ನು ನೋಡಿಕೊಳ್ಳುವುದಿಲ್ಲವೆಂದು ಅವಳ, ಚಂದ್ರಳ, ಆಪಾದನೆ. ಮೂರ್ತಿಯನ್ನು ನೋಡಿ, ಧಾರಿಣಿಗೆ ಎಷ್ಟೊಂದು ಗಮನಕೊಡುತ್ತಾರೆ, ನಿಮ್ಮ ಹಾಗಲ್ಲ ಎಂದು ಎರಡು ಮೂರು ಬಾರಿ ಹೇಳಿದ್ದಳು. ಮೂರ್ತಿಗಾದರೂ ಯಾಕೆ ಇಂಥ ಜಂಬ, ಹೆಮ್ಮೆ-ಇಡೀ ಜಗತ್ತಿನಲ್ಲಿ ತಾವೇ ಆದರ್ಶ ದಂಪತಿಗಳು ಅಂತ. ದೆಹಲಿಗೆ ಬರುತ್ತ ರೈಲಿನಲ್ಲಿ ತಿಮ್ಮೇಗೌಡರಿಗೂ ಮೂರ್ತಿಗೂ ಪ್ರೀತಿ ಪ್ರೇಮ ದಾಂಪತ್ಯದ ವಿಷಯದಲ್ಲಿ ಬಿಸಿಯಾದ ಚರ್ಚೆ ಆಗಿತ್ತು. +ಬ್ರಿಂಗ್ಟಾದಿಂದ ಒಂದೇ ಸಮನೆ ಇಳಿಜಾರು ಹಾದಿ. ನಡೆಯುವುದೇನೋ ಸುಲಭ. ಒಂದು ಆರಡಿ ಅಗಲದ ಮಣ್ಣು ದಾರಿ. ಬಲಗಡೆ ಹತ್ತು ಸಾವಿರಕ್ಕಿಂತ ಹೆಚ್ಚು ಅಡಿಗಳಷ್ಟು ಆಳದ ಕೊಳ್ಳ. ಅಲ್ಲಿ ಹರಿಯುವ ನದಿ ಪೆನ್ಸಿಲು ಗೆರೆಯ ಹಾಗೆ. ಎಡಗಡೆಗೆ ಮೈಗೇ ತಗಲುವಂತಿರುವ ಬೆಟ್ಟದ ಮೈ. ಎದುರಿಗೆ ಒಂದು ಕುರಿ ಬಂದರೂ ನಿಂತು ನಿಧಾನವಾಗಿ ದಾರಿ ಮಾಡಿಕೊಂಡು ಪರಸ್ಪರ ಸಾಗಬೇಕು. ಕಣ್ಣು ಕಾಣಬಲ್ಲಷ್ಟು ದೂರವೂ ಬೆಟ್ಟಗಳ ಸಾಲು. ಬೆಟ್ಟಗಳ ಬೆನ್ನಲ್ಲಿ ಸುಮ್ಮನೆ ಇಳಿಯುತ್ತ ಬಿದ್ದಿರುವ ಕಾಲುದಾರಿ. +ಇಳಿಜಾರು ದಾರಿಯಲ್ಲಿ ಬೇಗ ನಡೆಯಬೇಕೆಂಬ ಉತ್ಸಾಹ ಹುಟ್ಟುತ್ತದೆ. ಬೆಟ್ಟಗಳಲ್ಲಿ ನಡೆಯುವುದಕ್ಕೆ ಒಂದು ರೀತಿಯ ಲಯ ಬೇಕು. ತುಂಬ ಜೋರಾಗಿ ನಡೆದರೂ ಆಯಾಸ. ನಿಧಾನವಾಗಿ ನಡೆದರೂ ಆಯಾಸ. ಆದರೆ ಒಬ್ಬೊಬ್ಬರ ಲಯವೂ ಬೇರೆಯೇ. ನ್ನ ಮತ್ತು ಚಂದ್ರಳ ನಡಿಗೆ ಹಾಗೆ ಹೊಂದುವುದಿಲ್ಲ. ಅವಳ ಬಲವಂತಕ್ಕೆ ಹೊಂದಿಕೊಂಡೆ. ಒಂಬತ್ತು ಗಂಟೆಯಿಂದ ನಡೆಯುತ್ತಲೇ ಇದ್ದೇವೆ. ಬ್ರಿಂಗ್ಟಾ ಗುಡ್ಡದ ತುದಿಯಲ್ಲಿ ಸೌದೆ ಪುರಳೆ ಹರಡಿಕೊಂಡು ಟೀ ಮಾಡುತ್ತಿದ್ದ ಮನುಷ್ಯನನ್ನು ದಾಟಿದ ಮೇಲೆ ಮತ್ತೆ ಅಂಥವರು ಸಿಕ್ಕೇ ಇಲ್ಲ. ಮದ್ಯಾಹ್ನ ಹನ್ನೆರಡು ಗಂಟೆಹೊತ್ತಿಗೆ ಇಳಿದು ಇಳಿದು ಬೇಸರ ಬಂದರೂ ಇನ್ನೂ ದಾರಿ ಮುಗಿದಿಲ್ಲ. ಎಲ್ಲ ಇಬ್ಬರಿಬ್ಬರ ಒಬ್ಬೊಬ್ಬರ ಮೂರು ಜನ ನಾಲ್ಕು ಜನರ ಗುಂಪಾಗಿ ಒಡೆದು ಹೋಗಿದ್ದಾರೆ. +ನಾನು ಮತ್ತು ಚಂದ್ರ ಸುಮ್ಮ ಸುಮ್ಮನೆ ಆಹಾ ಅದೆಷ್ಟು ಚೆನ್ನ ಇದೆಷ್ಟು ಚೆನ್ನ ಅಂದುಕೊಳ್ಳುತ್ತ ನಡೆಯುತ್ತಿದ್ದೆವು. ಆಗ ಅಲ್ಲೆ ಒಂದು ತಿರುವಿನಲ್ಲಿ ಶ್ರೀನಾಥ, ರಾಜು ಮತ್ತು ಶ್ಯಾಮಲಾ ಸಿಕ್ಕಿದರು. ಅವರಿಗೆ ಒಂದು ಹಾವು ಕಂಡಿತಂತೆ. ಅದು ಯಾವ ಕಲ್ಲು ಸಂದಿಗೆ ಹೋಗಿ ಸೇರಿಕೊಂಡಿತು. ಅದು ನಿಜವಾಗಲೂ ಹಾವು ಹೌದೇ ಅಂತ ಸಂಶೋಧನೆ ಮಾಡುತ್ತಿದ್ದರು. ನಾನು ಚಂದ್ರ ಮುಂದೆ ನಡೆದೆವು. ಇನ್ನೂ ಒಂದು ಗಂಟೆ. +ಯಾಕೋ ಯಾರೂ ಕಾಣಲೇ ಇಲ್ಲ. ಹೊಟ್ಟೆ ಹಸಿಯತೊಡಗಿತು. ನಮ್ಮ ಗುಂಪಿನವರು ಯಾರಾದರೂ ಸಿಗುತ್ತಾರೋ ಅಂತ ನೋಡಿದೆವು. ಯಾರೂ ಇಲ್ಲ. ಒಂದು ಮರ ಇತ್ತು. ಸ್ವಲ್ಪ ನೆರಳಿತ್ತು. ಅಲ್ಲಿ ಕೊಹಿಲಿಗೆ ಹೊರಟ ಗುಂಪಿನವರು ಇಬ್ಬರು ಇದ್ದರು. ಅವರ ಜೊತೆ ಊಟಕ್ಕೆ ಕೂತೆವು. +ಊಟವೆಂದರೆ ಎಂಥ ಊಟ. ಹಿಮಾಲಯದಲ್ಲಿ ನನಗೆ ತಿಳಿಯಿತು. ರುಚಿ ಅನ್ನುವುದು ಬರೀ ಸುಳ್ಳು. ಬರೀ ಲಕ್ಷುರಿ. ನಡೆಯುವುದಕ್ಕೆ ಶಕ್ತಿ ಬೇಕು. ಶಕ್ತಿಬರಲು ಹೊಟ್ಟೆಗೆ ಏನಾದರೂ ಬೇಕು. ಹೊಟ್ಟೆಯಷ್ಟೇ ಮುಖ್ಯ. ಕೇವಲ ಹೊಟ್ಟೆ ಮಾತ್ರ. ನಾಲಗೆ ಅನ್ನುವುದು ಬರೀ ನಾಲ್ಕಂಗುಲ ಚರ್ಮದ ಚೂರು. ಚಪಾತಿಗಳಿದ್ದವು. ಬೆಳಿಗ್ಗೆ ಕಟ್ಟಿಕೊಟ್ಟಾಗ ತುಂಬ ಬಿಸಿ ಇದ್ದವು. ಈಗ ಅವೆಲ್ಲ ಹಳೆಯ ಟೈರಿನ ಚೂರುಗಳು. ತಿಂದಷ್ಟೂ ಮುಗಿಯದು. ನಾಲಗೆಗೆ ಎಂಥ ತಿರಸ್ಕಾರ. ಆದರೂ ತಿನ್ನಬೇಕು. ಚಪಾತಿಗೆ ಧಾರಾಳವಾಗಿ ಹಾಕಿದ್ದ ಎಣ್ಣೆಯಲ್ಲ, ಅಥವ ಡಾಲ್ಡಾನೋ, ಚಳಿಗೆ ದಪ್ಪಗೆ ಬೆಳ್ಳಗೆ ಹೆಪ್ಪುಗಟ್ಟಿತ್ತು. ಪಲ್ಯಕ್ಕೆ ಹಾಕಿದ್ದ ಆಲೂಗಡ್ಡೆಯೆಲ್ಲ ಸಣ್ಣ ಸಣ್ಣ ಜಲ್ಲಿ ಕಲ್ಲುಗಳ ಹಾಗಿದ್ದವು. ಬೇಯಿಸಿದ ಮೊಟ್ಟೆ ಕ್ರಿಕೆಟ್ಟಿನ ಚೆಂಡಿನಂತಿತ್ತು. ನಾಲಗೆ ಇರುವುದನ್ನು ಮರೆತು ಅವನ್ನು ಸಾಧ್ಯವಾದಷ್ಟು ನೇರವಾಗಿ ಹೊಟ್ಟೆಗೆ ಕಳಿಸಬೇಕು. ಜೊತೆಗೇ ಇದ್ದ ಕೊಹಲಿ ಹುಡುಗರ ಹೆಸರು ಮರೆತಿದೆ. ಚಂದ್ರಳಿಗಂತೂ ಹಿಮಾಲಯದ ಆಹಾರಕ್ಕೆ ಹೊಂದಿಕೊಳ್ಳುವುದು ಆಗಲೇ ಇಲ್ಲ. ಗೊಣಗದೆ ತಿನ್ನು ಅಂತ ನಾನು. +ನಾವಿರುವುದು ಕಣಿವೆಯಲ್ಲಿ. ಇಂಥದ್ದು ಆಗಲೆ ಒಂದೆರಡು ದಾಟಿದ್ದೆವು. ಇಲ್ಲಿಂದ ಮುಂದೆ ಇನ್ನೂ ಪೀನಿ ಅನ್ನುವ ಹಳ್ಳಿ ತಲುಪಬೇಕು. ಅಲ್ಲಿಂದ ಜಾರಿಗೆ. ಇಷ್ಟು ಹೊತ್ತೂ ಕಾಣುತ್ತಿದ್ದ ಹಾಗೆ ಉದ್ದಕ್ಕೆ ರಸ್ತೆ ಮೈಚಾಚಿ ಬಿದ್ದಿಲ್ಲ. +ನಾವು ಇಲ್ಲಿ ಕೂತು ಅರ್ಧಗಂಟೆಯಾಗುತ್ತ ಬಂತು. ಯಾಕೆ ನಮ್ಮವರು ಯಾರೂ ಕಾಣುತ್ತಿಲ್ಲ. ನಾನು ಮದುವೆಯಾಗಬೇಕಿದ್ದ ಇನ್ನೊಬ್ಬ ಹುಡುಗಿ ಒಂದು ಕ್ಷಣ ಸುಮ್ಮನೆ ಮನಸ್ಸಿನಲ್ಲಿ ನೆರಳಾಗಿ ಹಾದು ಹೋದಳು. ಯಾರು ಬರದಿದ್ದರೇನು? ನಾವಿಬ್ಬರು ಇದ್ದೀವಲ್ಲ. ಅವರಿಗೆ ಯಾಕೆ ಕಾಯುವುದು? ಹೋಗೋಣ. ಹಾಗಂತ ನಾನು ಅಂದೆನೋ ಚಂದ್ರ ಅಂದಳೋ. ಆ ಭಾವದಲ್ಲಿ ಇಬ್ಬರೂ ಹೊರಟೆವು. ಹುಡುಗರಿಬ್ಬರು ಅಲ್ಲೆ ಉಳಿದರು. +ಹೊರಟಾಗಲೇ ಅನುಮಾನ .ನಮ್ಮ ಬೆನ್ನಿಗಿದ್ದ ಬೆಟ್ಟದ ಮೇಲೆ ಅಲ್ಲಿ ದೂರದಲ್ಲಿ ಒಂದು ರಸ್ತೆ ಕಾಣುತ್ತದಲ್ಲ ಅದರಲ್ಲಿ ಹೋಗಬೇಕಿತ್ತು ಏನೋ. ಅದು, ಆಸರೆ, ಮೇಲಕ್ಕೆ ಏರುವ ರಸ್ತೆಯಂತೆ ಇದೆ. ಅಲ್ಲಿ ಯಾರೂ ನಡೆಯುತ್ತಲೂ ಇಲ್ಲ. ಹಿಮಾಲಯದಲ್ಲಿ ಕಣ್ಣಿಗೆ ಕಾಣುವ ದೂರ ಮೋಸ ಮಾಡುತ್ತದೆ. ಇಲ್ಲೆ ಇದೆ ಅಂತನ್ನಿಸುವ, ಕಣ್ಣೆದುರಿಗೇ ಕಾಣುವ ಜಾಗಕ್ಕೆ ತಲುಪಲೂ ಗಂಟೆಗಟ್ಟಲೆ ನಡೆಯಬೇಕು. ಅದೇ ಸರಿಯಾದ ದಾರಿಯಾಗಿದ್ದರೂ ಮತ್ತೆ ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ. +ಸುಮ್ಮನೆ ಕೆಳಕ್ಕೆ ಕೆಳಕ್ಕೆ ನಡೆದೆವು. ಸೂರ್ಯ ಎಲ್ಲಿ ಹೋದನೋ. ಮೋಡ ಇಲ್ಲಿಯೂ ಕವಿಯುತ್ತಿದೆ. ನಿಶ್ಚಲತೆ ಹೆಚ್ಚಾಗುತ್ತಿದೆ. ದಾರಿಯ ಮೇಲೆ ಚಾಕ್‌ಲೆಟ್ಟಿನ ಕಾಗದದ ತುಂಡುಗಳೂ ಇಲ್ಲ. ನಮಗಿಂತಲೂ ಮೊದಲೇ ಯಾರೂ ಈ ದಾರಿಯಲ್ಲಿ ಹೋದಂತಿಲ್ಲ. ತುಂಬ ನಿರ್ಜನವಾಗಿದೆ. +ದಾರಿ ಇದೆಯಾ ಇದೆಯಾ ಅಂತ ಚಂದ್ರ ಕೇಳುತ್ತಿದ್ದಳು. ನನ್ನ ಒಳಗೇ ಚಂದ್ರಳ ಮೇಲೆ ಸಿಡುಕು ಬೆಳೆಯುತ್ತಿತ್ತು. ದಾರಿ ಇದಲ್ಲ ಅಂತ ನನ್ನೊಳಗೇ ಅನ್ನಿಸುತ್ತಿತ್ತು. ಆದರೆ ಈಗ ಇರುವ ಕಡೆಯಿಂದ ಬೇರೆ ಇನ್ನೆಲ್ಲಿಗೂ ಹೋಗುವ ಹಾಗೂ ಇಲ್ಲ. ತಪ್ಪು ಮಾಡಿಬಿಟ್ಟೆವು. ಜನರ ಗುಂಪಿನಿಂದ ಬೇರೆ ಆಗದಿದ್ದರೆ ದಾರಿ ತಪ್ಪುತ್ತಿರಲಿಲ್ಲವೇನೋ. ಅಥವಾ ದಾರಿ ತಪ್ಪಿದ್ದರೂ ಜನ ಜೊತೆಗೆ ಇರುತ್ತಿದ್ದರು. +ಕವಲು ಕಾಣಿಸಿತು. ನಮ್ಮ ಎದುರು ನೆಲದ ಮೇಲೆ ಬಿದ್ದ ದೊಡ್ಡ ಬಂಡೆ. ಅದರ ಮೇಲೆ ಅಸ್ಪಷ್ಟವಾದ ಬಾಣದ ಗುರುತು. ಖುಷಿ ಆಯಿತು. ದಾರಿ ಸಿಕ್ಕಿತು. ಬಾ ಬೇಗ ಬೇಗ ಅಂತ ಅವಸರ ಮಾಡಿದೆ.ಆದರೆ ಬಾಣಗಳ ಗುರುತು ಎಡಕ್ಕೂ ಇದೆ ಬಲಕ್ಕೂ ಇದೆ ಅನ್ನಿಸುತ್ತಿದೆ. ಬಲಗಡೆಯದು ಇಳಿಯುವ ದಾರಿ. ಕಲ್ಲು ಬಂಡೆಗಳ ದಾರಿ. ಎಡಗಡೆಯದು ಸುಮ್ಮನೆ ಅಲ್ಲೆ ಸುತ್ತುವ ದಾರಿಯ ಹಾಗಿದೆ. ಬಂಡೆಗಳ ದಾರಿ ಕಡಿದಾಗಿದೆ. +ದಾರಿ ಹೌದೆ ಅಂತ ನೋದಲು ಒಬ್ಬನೇ ಹೋದೆ. ಅಥವಾ ನೋಡಿ ಬನ್ನಿ ಆಮೇಲೆ ಬರುತ್ತೇನೆ ಅಂತ ಚಂದ್ರ ಹೇಳಿದಳೋ. ಅಲ್ಲೆ ಕುಳಿತಳು. ಬಂಡೆಗಳ ದಾರಿಯಲ್ಲಿ ಇಳಿದೆ. ಕೂತು ಬಂಡೆಗೆ ಮೈ ಊರಿ ಇಳಿದೆ. ಇಳಿಯುತ್ತ ಇಳಿಯುತ್ತ ಇದ್ದಂತೆ ಈ ದಾರಿ ಎಲ್ಲಿಗೂ ಹೋಗುವುದಿಲ್ಲ. ಅನ್ನಿಸಿತು. ಕನಸಿನಲ್ಲಿ ಕಾಣುವ ದಾರಿಯ ಥರ. ಮುಂದೆ ಹೋದಷ್ಟೂ ಇಕ್ಕಟ್ಟಾಗುತ್ತಿದೆ. ಚಂದ್ರ ಕೂಡ ಕಾಣುತ್ತಿಲ್ಲ. ಅವಳ ಧ್ವನಿ ಕೇಳಿಸಿತು. ದಾರಿ ಇದೆಯಾ? ದಾರಿ ಇದೆಯಾ? +ವಾಪಸ್ಸು ಬಂದೆ. +ಕಳೆದುಹೋಗಿಬಿಟ್ಟೆವು ಅನ್ನಿಸಿತು. ಮೋಡಗಳು ಬಿಗಿದುಕೊಂಡುಬಿಟ್ಟಿದ್ದವು. ಜೋರಾಗಿ ಕೂಗಬೇಕು ಅನ್ನಿಸಿತು. ರಾಜೂ ರಾಜೂ ಅಂತ ಇಬ್ಬರೂ ಕೂಗಿದೆವು. ರಾಜು ಅನ್ನುವ ಹೆಸರು ಕೂಗುವುದು ಸುಲಭ. ವಿಶಾಲ ಹಿಮಾಲಯದಲ್ಲಿ ನಮ್ಮ ಧ್ವನಿ ಎಷ್ಟು ದೂರ ಕೇಳಿಸೀತು. ನಿಶ್ಚಲ ಮದ್ಯಾಹ್ನ ಗೋಡೆಯಹಾಗಿತ್ತು. ಮತ್ತೆ ಮತ್ತೆ ಕೂಗಿದೆವು. ನಮ್ಮ ಕೂಗು ಕೇಳಿಸುವಷ್ಟು ದೂರದಲ್ಲಿ ಯಾರೂ ಇಲ್ಲ. ಅಂತ ನಮಗೆ ಗೊತ್ತಾಗಿತ್ತು. +ಮಳೆ ಬಂದರೆ ಅನ್ನುವ ಯೋಚನೆ ಬಂತು. ಎಡಗಡೆಯ ಜಾಡಿನಲ್ಲಿ ನಡೆದೆವು. ಸ್ವಲ್ಪ ದೂರ ನಡೆಯುವುದು. ನಿಲ್ಲುವುದು, ಕೂಗುವುದು, ಇದು ದಾರಿ ಇರಬಹುದು ಅಂತ ನಡೆಯುವುದು, ನಡೆಯುತ್ತಿದ್ದಂತೆ ಅನುಮಾನ ಪಡುವುದು, ನಿಲ್ಲುವುದು, ಕೂಗುವುದು. +ಒಂದು ದೊಡ್ದ ಬೋರೆ ಕಾಣಿಸಿತು, ನೂರಿನ್ನೂರು ಎತ್ತರದ್ದು. ಅದರ ಮೇಲೆ ಒಂದೆರಡು ಮರಗಳು. ಒಂದು ಮನೆ, ಎತ್ತರ ಕಂಬಗಳ ಮೇಲೆ ಒಂದು ವೇದಿಕೆ ಮಾಡಿ ಅದರ ಮೇಲೆ ಮರಗಳ ಹಲಗೆಗಳಿಂದ ಕಟ್ಟಿದ ಮನೆ. ಅಲ್ಲಿ ಯಾರೋ ಹೆಂಗಸು ಬಾಗಿಲಲ್ಲಿ ನಿಂತ ಹಾಗೆ ಅಥವ ಹೊರಗೆ ಬರುತ್ತಿರುವ ಹಾಗೆ ಕಾಣುತ್ತಿದೆ. ಒಬ್ಬ ಮುದುಕಿ ಕೂತಿದ್ದಾಳೆ. ಇನ್ನೊಬ್ಬ, ಯಜಮಾನ ಇರಬೇಕು, ಜಗಲಿಯ ಮೇಲೆ. +ನಾನು ಕೆಳಗಿನಿಂದ ಗಟ್ಟಿಯಾಗಿ ‘ಪೀನಿ, ಪೀನೀ’ ಅಂತ ಕೂಗಿದೆ. ‘ಕೆಳಗೆ ಕೆಳಗೆ’ ಅಂತ ಅವನು ಅಲ್ಲಿಂದ ಹೇಳಿದ. ಕೆಳಗೆ ಇಳಿಯಲು ದಾರಿಯೇ ಇಲ್ಲ. ‘ನಹಿ, ನಹಿ, ನೀಚೇ, ನೀಚೇ’ ಅಂದ. ನಡೆದೆವು. ಅವನು ಹೇಳಿದ ಕಡೆ ದಾರಿ ಥರ ಇದೆ ಅಂತ ನಂಬಿ, ತಿರುವಿನಲ್ಲಿ ಮನೆ ಮರೆಯಾಯಿತು. ಅವನ ಧ್ವನಿ ಮತ್ತೆ ಕೇಳಿಸಿತು. ‘ಅಲ್ಲಲ್ಲ, ಅಲ್ಲಿ, ಅಲ್ಲಿ, ಕೆಳಗೆ, ಕೆಳಗೆ,’ ಅವನು ನಮಗೆ ಕಾಣುತ್ತಿಲ್ಲ. ನಾವು ಅವನಿಗೆ ಕಾಣುತ್ತಿದ್ದೇವೆ. ಅವನ ಧ್ವನಿಯಲ್ಲಿ ಕೋಪ ಇದ್ದಹಾಗಿತ್ತು. ಇವರಿಗೆ ಇಷ್ಟೂ ಅರ್ಥವಾಗುವುದಿಲ್ಲವಲ್ಲ ಅಂತ ಜಾಗ ಚೆನ್ನಾಗಿ ಗೊತ್ತಿರುವವನ ಕೋಪವೆ? ಅಲ್ಲೆ, ಅಲ್ಲಿ ಅಂದರೆ ಎಲ್ಲಿ ಅಂತ? ನಾವು ನಡೆಯುತ್ತಿದ್ದ ದಾರಿ ಬಿಟ್ಟು ದಾರಿಯೇ ಇಲ್ಲದ ಮುಳ್ಳುಪೊದೆಗಳತ್ತ ಹೆಜ್ಜೆ ಹಾಕಿದಾಗ ಧ್ವನಿ ಅವನದು ಸುಮ್ಮನಾಯಿತು. +ನಾವು ಅವನ ಮನೆಗೇ ಹೋಗಬೇಕಿತ್ತೆ? ನೂರಿನ್ನೂರು ಅಡಿ ಏರಿ? ಇಲ್ಲ. ಹೀಗೇ ಹೋಗಿ ಅಂದನಲ್ಲ. ಹೋಗೋಣ , ಹೋದೆವು. ಎದುರಿಗೆ ದೊಡ್ದ ಪೈನ್ ಮರಗಳ ಕಾಡು ಒಂದು ಕಾಣಿಸಿತು. +ಮತ್ತೆ ಮುಂದಿನ ಅರ್ಧ ಗಂಟೆ ಹೊತ್ತಿನಲ್ಲಿ ಏನೇನೆಲ್ಲ ಆಯಿತು ಅದನ್ನು ಬರೆಯಲು ಸಾಧ್ಯವೇ ಇಲ್ಲ. ಒಂದೊಂದು ಕ್ಷಣದಲ್ಲೂ ಹತ್ತು ಹತ್ತು ಭಾವಗಳು ಮನಸ್ಸಿನಲ್ಲಿ ಹುಟ್ಟಿ ಒಂದರೊಳಗೊಂದು ಬರೆಯುತ್ತಿದ್ದರೆ ಹೇಳುವುದು ಏನನ್ನ? ಹೇಗೆ? +ಮರಗಳ ಗುಂಪು ಕಾಣಿಸಿತು ಅಂತನ್ನುವ ಹೊತ್ತಿಗೇ ಧೋ ಧೋ ಮಳೆ ಶುರುವಾಯಿತು ಹನಿ ಬೀಳುತ್ತಿದೆ ಅನ್ನುವುದು ಗೊತ್ತಾಗುವ ಕ್ಷಣದಲ್ಲೆ ಇಬ್ಬರೂ ನಮಗೆ ಗೊತ್ತಿಲ್ಲದೆ ಓಡುತ್ತಿದ್ದಂತೆ ಆಲಿಕಲ್ಲುಗಳು ಜೋರಾಗಿ ಅಬ್ಬಾ ಅಷ್ಟು ಜೋರಾಗಿ ಬೀಸುವುದು ಸಾಧ್ಯವೇ ಅನ್ನಿಸುವಂತೆ ಗಾಳಿ ಬೀಸಿತು. ಶಬ್ದ. ರಪ ರಪ ಮಳೆಹನಿಗಳ ಏಟು. ಆಲಿಕಲ್ಲು. +ಪೈನ್ ಮರಗಳಿಗೆ ನೆರಳು ಇಲ್ಲ. ಆದರೂ ಬಯಲಿಗಿಂತ ಅಲ್ಲಿರುವುದು ವಾಸಿ. ಸುಮ್ಮನೆ ಮಳೆಗೆ ಗಾಳಿಗೆ ಆಲಿಕಲ್ಲಿಗೆ ಮೈ ಒಡ್ಡಿ ಭಯಪಡುವುದಲ್ಲದೆ ಬೇರೇನು ಮಾಡಬಹುದು. ಬೆಟ್ಟಕ್ಕೆ ಶಕ್ತಿ ಇದೆ. ದೃಡವಾಗಿ ನಿಂತಿದೆ. ಮಳೆಗೆ ಶಕ್ತಿ ಇದೆ. ಬೆಟ್ತವನ್ನು ಕರಗಿಸುವ ಹಾಗೆ ಹೊಯ್ಯುತ್ತಿದೆ. ಗಾಳಿಗೆ ಶಕ್ತಿ ಇದೆ. ಬೆಟ್ಟವನ್ನೂ ಕಾಡನ್ನೂ ನೆಲವನ್ನಾಗಿ ಮಾಡಲು ಬೀಸುತ್ತಿದೆ. ಈ ಶಕ್ತಿಗಳಿಗೆ ನಾನು ಮತ್ತು ಚಂದ್ರ ಇರುವುದು ಲೆಕ್ಕಕ್ಕೇ ಇಲ್ಲ. ನಾವು ಅಂದರೆ ಬರೀ ಮೈ. ಬರೀ ಮನಸ್ಸು. ತುಂಬ ಭಯ. ಈಗ ಹಿಮಾಲಯ ಕಾಣುತ್ತಿಲ್ಲ. ಆಕಾಶ ಕಾಣುತ್ತಿಲ್ಲ. ಆಕಾರ ಕಾಣುತ್ತಿಲ್ಲ. ಕಣ್ಣೆದುರಿಗೆ ಸುತ್ತಲೂ ಕಂಬಿಗಳ ಹಾಗೆ ಪೈನ್ ಮರದ ಕಾಂಡಗಳು. ನನ್ನ ಮೈಯೊಳಗೆ ನಾನು. ಚಂದ್ರಳೊಳಗೆ ಚಂದ್ರ. ಅಂಗಿಯೊಳಗೆ ಬೆವರಿದ ಮೈ. ಬೆವರಿಗೆ ಬೆರೆತ, ನೆನೆದ ಅಂಗಿಯಿಂದ ಇಳಿದು ಮೈ ಒದ್ದೆ ಮಾಡುವ ಮಳೆಯ ನೀರು. ಎರಡೆ ನಿಮಿಷದಲ್ಲಿ ನೆಲಕಾಣದಂತೆ ಹರಡಿಕೊಂಡ ಆಲಿಕಲ್ಲುಗಳು. ಮಳೆಗೆ ಕರುಣೆ ಇಲ್ಲ. ಬೆಟ್ಟಕ್ಕೆ ಕರುಣೆ ಇಲ್ಲ. ಗಾಳಿಗೆ ಕರುಣೆ ಇಲ್ಲ. ನಾನು ಯಾಕೆ ಇಲ್ಲಿಗೆ ಬಂದೆ? ಚಂದ್ರ ಯಾಕೆ ನನ್ನ ಜೊತೆ ಇದ್ದಾಳೆ? ಏನಾದರೂ ಆದರೆ? ಏನಾದರೂ ಅಂದರೆ ಏನು? ಸತ್ತು ಹೋಗುತ್ತೇವಾ? ಇಲ್ಲಿಂದ ತಪ್ಪಿಸಿಕೊಳ್ಳಬೇಕು. ಹೇಗೆ? ಯಾವಾಗ? ಪಾರಾಗುತ್ತೇವಾ? ಈ ಮಳೆ ನಿಲ್ಲುತ್ತದೆಯೇ? ಚಂದ್ರ ನನ್ನ ಜೊತೆ ಇರಬಾರದಾಗಿತ್ತು. ಯಾಕೆ, ಅವಳ ಜವಾಬ್ದಾರಿ ಈಗ ನನಗೆ ಬೇಡವಾಗಿದೆಯಾ? ನಮ್ಮ ಜೊತೆ ಇನ್ನು ಯಾರಾದರೂ ಇರಬೇಕಾಗಿತ್ತು ಯಾರು? ಯಾರಾದರೂ ಇದ್ದು ತಾನೆ ಏನಾಗುತ್ತಿತ್ತು? ಏನು ಮಾಡುತ್ತಿದ್ದರು? ನಾನಿದ್ದು ಚಂದ್ರಳಿಗೆ ಏನು ಮಡಬಲ್ಲೆ. ಅವಳಿದ್ದು ನನಗೆ ಏನು? ನಾನು ಏನು ಮಾಡಲಿ? ಬೇರೆ ಯಾರಾದರೂ ಇದ್ದು ಅವರು ನನಗಿಂತ ಬೇರೆ ಥರ ಇರಲು ಆಗಿದ್ದರೆ ಆಗ ಚಂದ್ರಳಿಗೆ ನನ್ನ ಬಗ್ಗೆ ಏನನ್ನಿಸುತ್ತಿತ್ತು. ನನಗೇ ನನ್ನ ಬಗ್ಗೆ ಏನನ್ನಿಸುತ್ತಿತ್ತು? +ಹೆದರ ಬೇಡ ಮಳೆ ನಿಲ್ಲುತ್ತೆ. ಇಲ್ಲೆ ಎಲ್ಲೋ ಹಳ್ಳಿ ಇರಬೇಕು. ಹೋಗೋಣ. ನಮಗೆ ಯಾರಾದರೂ ಸಿಗುತ್ತಾರೆ. ಹೀಗಂತ ಚಂದ್ರಳಿಗೆ ಹೇಳುತ್ತಿದ್ದೆ. ಆದರೆ ನನಗೇ ಹೆದರಿಕೆ ಆಗಿತ್ತು. ಏನೂ ಆಗುವುದಿಲ್ಲ ಅಂತಲೂ ಅನ್ನಿಸುತ್ತಿತ್ತು. ಶಿವಮೊಗ್ಗದ ನಮ್ಮ ಮನೆ, ಮನೆಯಲ್ಲಿ ನಮ್ಮ ರೂಮು, ರೂಮಿನಲ್ಲಿ ನಮ್ಮ ಮಂಚ, ಅದರ ಮೇಲೆ ದಿಂಬಿಗೊರಗಿ, ಕಿಟಕಿ ಪಕ್ಕದಲ್ಲಿ. ಓದುತ್ತ ನಾನು ಇರುತ್ತಿದ್ದ ಚಿತ್ರ ಮನಸ್ಸಿಗೆ ಬರುತ್ತಿತ್ತು. ಏನಾದರೂ ಆದರೆ? ಇಲ್ಲ. ಏನೂ ಆಗುವುದಿಲ್ಲ, ಹೌದೆ? +ಸುಳ್ಳು, ಇದೆಲ್ಲ ಸುಳ್ಳು, ಯಾಕೆಂದರೆ ನಮಗೆ ನಿಜವಾಗಿ ಶುದ್ಧ ಭಯವನ್ನು ಪಡುವುದಕ್ಕೂ ಬರುವುದಿಲ್ಲ. ನನ್ನ ಒಳಗೇ ಎಲ್ಲೋ ವಿಶ್ವಾಸ ಇತ್ತು. ಕೊನೆಯ ಪಕ್ಷ ಮಳೆ ಕಡಿಮೆ ಆದರೆ ಇಲ್ಲೆ ಒಂದೆರಡು ಕಿಲೋ ಮೀಟರ್ ಅಳತೆಯಲ್ಲಿ ಹಳ್ಳಿ ಇದೆ. ಅಥವ ನಮಗೆ ‘ಕೆಳಗೆ ಕೆಳಗೆ’ ಅಂತ ಹೇಳಿದ ಮುದುಕನ ಮನೆ ಇದೆ ಅನ್ನುವ ವಿಶ್ವಾಸ. ಜನ ಇದ್ದಾರೆ. ಜನ ಅಂದರೆ ಅವರೂ ಜನವೆ. ಯಾರೂ ಯಾರೆಂದರೆ ಯಾರೂ ಇಲ್ಲದೆ ಬರೀ ಶಕ್ತಿಗಳಿಗೇ ನಮ್ಮನ್ನು ಒಡ್ಡಿಕೊಂಡು ಅನುಭವಿಸುವ ಶುದ್ಧ ಭಯ ಹೇಗಿರಬಹುದೊ. +ಸುಳ್ಳು. ಯಾಕೊ ನನ್ನ ಮನಸ್ಸಿಗೆ ಇನ್ನೂ ಧೈರ್ಯವಾಗಿಲ್ಲ. ಗಾಳಿಗೆ ಮಳೆಗೆ ಚಳಿಗೆ ಮೈ ಒಡ್ಡಿ ಎಲ್ಲ ತೆರೆದುಕೊಂಡು ಬಿದ್ದಿರುವ ಬೆಟ್ಟ ಮತ್ತು ಬೀಸುತ್ತಿರುವ ಗಾಳಿ ಬೀಳುತ್ತಿರುವ ಮಳೆ ಎಲ್ಲ ಸುಮ್ಮನೆ ಇವೆ. ಹಾಗೆ ಸುಮ್ಮನೆ ಇರುವುದು ಮಾತ್ರ ನಿಜ, ಭಯವೋ ಕರುಣೆಯೋ ಇತ್ಯಾದಿ ಭಾವನೆಗಳು ಬರೀ ಸುಳ್ಳು. ಶುದ್ಧ ಭಯ, ಶುದ್ಧ ಪ್ರೀತಿ ಇಂಥವೆಲ್ಲ ಸಿಗಲಿ ಎಂದು ಹಾರೈಸುವುದೇ ತಪ್ಪು ಮತ್ತು ಸುಳ್ಳು. ಹೌದೆ? +ಬರವಣಿಗೆಯ ಹನ್ನೆರಡನೆಯ ದಿನ +ಹಿಮಾಲಯಕ್ಕೆ ಮಾನವೂ ಇಲ್ಲ ಅವಮಾನವೂ ಇಲ್ಲ. ಮಾನವೆಂದರೆ ಅಳತೆಯೆಂದು ಅರ್ಥವಂತೆ. ಅಳತೆ ಇರುವುದು ನನಗೆ, ನಮಗೆ. ಅವಮಾನ ಇರುವುದೂ ನನಗೆ. ಅದಕ್ಕೇ ಹಿಮಾಲಯಕ್ಕೆ ಅವಮಾನ ಮಾಡುತ್ತಿದ್ದೇವೆ. ಅದರ ಎತ್ತರ ಅಳೆದು, ಅಗಲ ಲೆಕ್ಕ ಹಾಕಿ, ಫೋಟೋ ತೆಗೆದು ಮಾನದಲ್ಲಿ ಬಂಧಿಸುತ್ತೇವೆ. ನಮ್ಮ ಅಳತೆಗೆ ಅದನ್ನು ಕುಗ್ಗಿಸಿ ಆಲ್ಬಮ್ಮಿನ ಫ್ರೇಮಿನಲ್ಲಿ ಕಟ್ಟಿಹಾಕುತ್ತೇವೆ. ಸಿನಿಮಾದಲ್ಲಿ ನೋಡುವ ಹಿಮಾಲಯ ಹಿಮಾಲಯ ಅಲ್ಲ. ಬಡಪಾಯಿ ಕ್ಯಾಮೆರಾ ಹಿಡಿದದ್ದು ಹಿಮಾಲಯ ಅಲ್ಲ. ಹಿಮಾಲಯವನ್ನು ನೋಡದೆ ಕಲ್ಪಿಸಿಕೊಂಡದ್ದು ಹಿಮಾಲಯ ಅಲ್ಲ. ನನಗೇನಾದರೂ ಪ್ರಪಂಚದ ಮೇಲೆಲ್ಲ ನಡೆಸುವಂಥ ಅಧಿಕಾರ ಇದ್ದಿದ್ದರೆ ಹಿಮಾಲಯದ ಫೋಟೋ ತೆಗೆಯುವುದನ್ನು ನಿಷೇಧಿಸುತ್ತಿದ್ದೆ. +ಹಿಮಾಲಯದಲ್ಲಿ ನೋಡಿದ್ದು ನಡೆದಿದ್ದು ಅನುಭವಿಸಿದ್ದು ಏನು? ದೂರ ಅನ್ನುವ ಮಾತಿಗೆ ಅಲ್ಲಿ ಅರ್ಥ ಇಲ್ಲ. ಎತ್ತರ ಅನ್ನುವ ಮಾತಿಗೆ ಅರ್ಥ ಇಲ್ಲ. ವಿಶಾಲ ಅನ್ನುವ ಮಾತಿಗೆ ಅರ್ಥ ಇಲ್ಲ. ನೋಡಿ ನೋಡಿ ಕಣ್ಣಿನ ಮಿತಿ, ನಡೆದು ನಡೆದು ಕಾಲಿನ ಮಿತಿ, ನನ್ನ ಮಿತಿ ನನಗೆ ಗೊತ್ತಾಗುತ್ತಿದೆ. +ಹಿಮಾಲಯದಲ್ಲಿ ನಡೆದ ಪ್ರತಿ ದಿನವೂ ಪ್ರತಿ ಕ್ಷಣದ ನೋಟವೂ ಬಿಸಿಲೂ ಮೋಡವೂ ಮರಗಳೂ ಬೇರೆ ಬೇರೆಯಾಗಿರುತ್ತಿದ್ದವು. ಹಾಗೆ ಬೇರೆ ಬೇರೆ ಎಂದು ಅನುಭವಕ್ಕೆ ಬಂದು ಇದ್ದರೂ ಮಾತಿನಲ್ಲಿ ಬೇರೆ ಬೇರೆ ಎಂದು ಗೊತ್ತಾಗುವ ಹಾಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಈ ಪ್ರತಿಕ್ಷಣ ಹೊಸತರ ಜೊತೆಗೇ ನನ್ನ ಒಳಗಿನ ಜೇಡರ ಬಲೆಗಳು, ಹರಿದ ಕಾಗದದ ಚೂರುಗಳು, ಹಂದಿ ಜಿಂಕೆಗಳನ್ನು ಮಾತಿನಲ್ಲಿ ಹೊರಗೆಳೆದು ಒಣಗಿ ಹಾಕುವುದು ಹೇಗೆ? ನನ್ನೊಳಗೆ ಇವೆಲ್ಲ ಇರುವ ಹಾಗೆ ಗೌಡರ ಮನಸ್ಸಿನೊಳಗೂ ಚಂದ್ರಳ ಒಳಗೂ ಎಲ್ಲರ ಒಳಗೂ ಇರಬಹುದಲ್ಲವೆ? ಆದರೆ ಅದು ಹೇಗೆ ನಾವು ನಮ್ಮ ಒಳಗನ್ನು ಬಚ್ಚಿಟ್ಟುಕೊಂಡು ಶಾಂತ ಸರೋವರವಾಗಿ ಎಲ್ಲವನ್ನೂ ನೋಡುತ್ತೇವೆ. ಅಥವ ಒಳಗೆ ಅದೆಲ್ಲ ಇರುವುದರಿಂದಲೇ ಒಳಗೇನೂ ಇಂಥವಿಲ್ಲದ ಹಿಮಾಲಯ ಇಷ್ಟವೋ? +ಅಥವ ಹಿಮಾಲಯ ನನ್ನ ಕಣ್ಣಿಗೆ ಕಂಡದ್ದು ಬರೀ ಸುಂದರವಾಗಿಯೋ. ಹಿಮಾಲಯ ಏನನ್ನೂ ಬಚ್ಚಿಟ್ಟು ಕೊಳ್ಳುವುದಿಲ್ಲ. ಆದರೆ ಇರುವುದೆಲ್ಲ ಕಾಣುವುದೂ ಇಲ್ಲ. ಕಂಡಷ್ಟೆ ಸಾಕೋ. ಸಾಕು ಅಂದುಕೊಂಡರೂ ಕಾಣದೆ ಇರುವುದನ್ನು ಕಾಣಲಾಗದ ಮಿತಿಯ ಬಗ್ಗೆ ಯಾಕೆ ತಳಮಳ ತಹತಹ. ‘ನನ್ನ ಈ ಗಡ್ಡ ಹಿಮಾಲಯದ ಗುಡ್ಡ’ ಅಂತೆಲ್ಲ ಸುಮ್ಮನೆ ತಲೆಗೆ ಹೊಳೆದ ಪದಗಳನ್ನೆಲ್ಲ ಸೇರಿಸಿ ಪದ್ಯ ಮಾಡಿ ಹಾಡುವ ಗೌಡರ ಮನಸ್ಸಿನೊಳಗೆ ಏನೇನೆಲ್ಲ ಇರಬಹುದು. ಯಾವಾಗಲೂ ಮಾತೇ ಆಡದ ಅನಂತನ ಮನಸ್ಸಿನೊಳಗೆ ಏನೆಲ್ಲ ನಡೆದಿದೆ. ನನ್ನವಳಾದ ಚಂದ್ರ ನನಗೆಷ್ಟು ಗೊತ್ತು. ಇರುವುದೆಲ್ಲವ ಬಿಟ್ಟು – ಬಿಡುವುದೇನು ಬಂತು. ಇರುವುದೆಲ್ಲ ತಿಳಿದದ್ದಾದರೂ ಸಿಕ್ಕಿದ್ದಾದರೂ ಎಲ್ಲಿ? ತಿಳಿದಷ್ಟರಿಂದ ಇರದುದನ್ನೆಲ್ಲ ಊಹೆ ಮಾಡುವುದು ಎಷ್ಟು ನಿಜ. ತಿಳಿಯದೆ ಬಿಡುವುದಾದರೂ ಹೇಗೆ? ಸಿಗಲಿ. ಮೊದಲು ಸಿಗಲಿ. ಅಂದರೆ ಎಲ್ಲಿ ಸಿಗುತ್ತದೆ. ಸಿಗುವುದನ್ನು ಇರುವಂತೆ ಮಾಡಿಕೊಳ್ಳಲು ಯಾಕೆ ಭಯ. ಯಾಕೆ ಹಿಮಾಲಯದಂಥ ಅಡ್ಡಿ. ನನ್ನ ಒಳಗಿನ ಹಿಮಾಲಯ. ಹೇಗೆ ಸಂಚರಿಸಲಿ? ಅಲ್ಲೆಲ್ಲೊ ಉತ್ತರದಲ್ಲಿ ಹಿಮಾಲಯ ಇರುವುದೂ ಗೊತ್ತಿಲ್ಲದಂತೆ ಇಷ್ಟು ವರ್ಷ ಸುಮ್ಮನೆ ಬದುಕಿರಲಿಲ್ಲವೆ? ಹಾಗೇ ನನ್ನೊಳಗೂ ಹಿಮಾಲಯದಂಥದ್ದು ಏನೇನೋ ಇರುವುದನ್ನೆಲ್ಲ ಇಲ್ಲ ಅಂದುಕೊಂಡು, ಅಥವ ಸುಮ್ಮನೆ ಇದೆ, ಇದ್ದರೆ ಇರಲಿ ಅಂತ ಅವಜ್ಞೆ ಮಾಡಿ ಇದ್ದರೆ ಸಾಕೊ. +ಹಿಮಾಲಯಕ್ಕೆ ದಾರಿ ಇದೆ. ಅಲ್ಲಿ ನಡೆಯಲು ನಂಬುವುದಕ್ಕೆ ಅರ್ಹವಾದ ನೆರವು ಇದೆ. ರೈಲು, ಬಸ್ಸು, ದಾರಿಯುದ್ದಕ್ಕೂ ಟೆಂಟು, ಬೆಳಗ್ಗೆ ಟೀ, ದಾರಿಗೆ ಕಟ್ಟಿಕೊಡುವ ಊಟ, ರಾತ್ರಿಗೆ ಕಂಬಳಿ – ಇವೆಲ್ಲ ನೆರವನ್ನು ನೆಚ್ಚಿ ಕಂಡದ್ದು ಬರಿ ಸುಳ್ಳೆ? ನನ್ನೊಳಗಿನ ಚಾರಣಕ್ಕೆ ಯಾವ ನೆರವು ಯಾವ ನಂಬಿಕೆ? ಇರುವುದನ್ನೆಲ್ಲ ನೋಡದೆ ಇರುವುದೇ ಹೇಳದೆ ಇರುವುದೇ ಕ್ಷೇಮವೋ? ಕ್ಷೇಮ ಬೇಡ ಅನ್ನುವ ಧೈರ್ಯ ಬಂದೀತು ಯಾವಾಗ? +ಮತ್ತೆ ಬರವಣಿಗೆಯ ಮೊದಲನೆಯ ದಿನ +ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. +ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. ಬಹಳ ಕಾಲದ ನಂತರ ನಾಲ್ಕು ದಿನ ತಿಮ್ಮೇಗೌಡರ ಗೊತೆ ಕಳೆದದ್ದು. ಅವರೆದುರು ರಾಘು ನನ್ನ ಹಿಮಾಲಯ ಬರಹ ಮೆಚ್ಚಿದ್ದು. ನನಗೇ ಈ ಬರೆದದ್ದನ್ನೆಲ್ಲ ರಹಮತ್‌ಗೆ ಕೊಡಬೇಕು ಅನ್ನಿಸಿದ್ದು, ಅಥವ ತಿಂಗಳಿಗೆ ಎರಡು ಬಾರಿಯಾದರೂ ಹೃಷಿಕೇಶ, ಈಗಲೂ, ಕನಸಿನಲ್ಲಿ ಬರುವುದು ಹೀಗೆ ಏನೇನೋ ಕಾರಣ ಇರಬಹುದು. +ದಿನಕ್ಕೆ ಎರಡು ಬಾರಿ ತೂಗುಸೇತುವೆ ದಾಟಿ ಹೋಗುತ್ತಿದ್ದೆ. ಮಲೆನಾಡಿನ ಅಡಿಕೆ ಸಾರದ ಮೇಲೆ ನಡೆದದ್ದು, ಹಿಂದೆ ಚಂದ್ರಾ ಜೊತೆ ಟ್ರೆಕಿಂಗ್ ಹೋದಾಗ ನೋಡಿದ, ದಾಟಿದ, ಕೆಲವು ಬಾರಿ ಖುಷಿಗೆ ಎಂದು ಹಗ್ಗಕ್ಕೆ ಜೋತು ಬಿದ್ದು ತಲೆಕೆಳಗಾಗಿ ನದಿ ದಾಟುವ ಸಾಹಸ ಅಭ್ಯಾಸ ಮಾಡಿದ್ದು ಇವಲ್ಲ ಆ ಸೇತುವೆ ಮೇಲೆ ಹೋಗುತ್ತಾ ಇರುವಾಗ ಬಿಳೀ ಪಂಚೆ ಉಟ್ಟು ಖಾದಿ ಜುಬ್ಬದ ಜೇಬಿನಲ್ಲಿ ಕೈ ಇಟ್ಟು ನಡೆಯುತ್ತಿದ್ದೆ. ಹರಿದ್ವಾರದಲ್ಲಿ ಇಪ್ಪತ್ತು ರೂಪಾಯಿಗೆ ಒಂದರಂತೆ ಎರಡು ಜುಬ್ಬ ತೆಗೆದುಕೊಂಡಿದ್ದೆ. ಇಲ್ಲಿ ಕೃಷ್ಣಾನಂದರು ನನಗೆ ಪಂಚೆ ಕೊಡುವ ಹೊತ್ತಿಗೆ ಹದಿನೈದು ದಿನ ಕಳೆದಿತ್ತು. ಹೃಷಿಕೇಶ ನನ್ನನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿತ್ತು. +ಡಿಸೆಂಬರಿನ ಕೊನೆಯ ಭಾಗದಲ್ಲಿ, ನುಣ್ಣಗೆ ಕ್ಷೌರ ಮಾಡಿದ ಮುಖದ ಮೆಲೆ ಮತ್ತು ಸ್ವಲ್ಪ ಉದ್ದವಾಗಿ ಬೆಳೆದ ತಲೆಕೂದಲ ಒಳಗೆ ನದಿಯ ಮೇಲಿನ ಡಿಸೆಂಬರ್ ಗಾಳಿ ಜೋರಾಗಿ ಬೀಸುತ್ತಿತು. ಸೇತುವೆಯ ತೀರ ಕೆಳಗೆ ತೆಳುವಾಗಿ ಹರಿಯುವ ಗಂಗೆಯ ಮೀನುಗಳಿಗೆ ಆಹಾರ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಯಾತ್ರಿಗಳಿಗೆ ದುಂಬಾಲು ಬೀಳುವ ಬಾಲಕಿಯರು ನನ್ನತ್ತ ಗಮನಕೊಡುವುದು ಬಿಟ್ಟಿದ್ದರು. ಹಳತಾದ ಕೊಳಕು ಲಂಗ, ಹರಿದ ಸ್ವೆಟರು ಹಾಕಿಕೊಂಡ ಇಂಥ ಹುಡುಗಿಯರು ನಾನು ಕಂಡಾಗ ನಕ್ಕೂ ನಗದಂತೆ ನಕ್ಕು, ಬೇರೆ ಯಾತ್ರಿಗಳ ಅಂಗಿ ಹಿಡಿದು, ಕೈ ಹಿಡಿದು, ಹಿಟ್ಟಿನ ಗೋಲಿಗಳ ಪ್ಯಾಕೆಟ್ಟು ತೆಗೆದುಕೊಳ್ಳಿ ಎಂದು ಕಾಡುತ್ತಿದ್ದರು. ರೂಪಾಯಿಗೆ ಒಂದು ಪ್ಯಾಕೆಟ್ಟು. ಅವರು ಈಗ ನನ್ನ ಗಮನಿಸುತ್ತಿರಲಿಲ್ಲ. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ಮೊದಮೊದಲು ಫೋಟೋಗಳನ್ನು ಮಾರಲು ನನ್ನ ಬಳಿ ಬರುತ್ತಿದ್ದವರು, ಸೇತುವೆ ನಡುವೆ ನಿಲ್ಲಿಸಿ ನದಿ ಮತ್ತು ಹಿಮಾಲಯದ ಹಿನ್ನೆಲೆಯ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸುತ್ತಿದ್ದವರು ನಾನೊಬ್ಬ ಗಿರಾಕಿಯೇ ಅಲ್ಲ ಅಂತ ಈಗ ತೀರ್ಮಾನಿಸಿಬಿಟ್ಟಿದ್ದರು. ಹೃಷಿಕೇಶ ನನ್ನನ್ನು…..ಸೇತುವೆಯ ಮೊದಲಿಗೇ ಒಂದು ಇದ್ದಿಲು ಒಲೆ ಇಟ್ಟುಕೊಂಡು ದಿನದ ಅಲ್ಲ ಹೊತ್ತಿನಲ್ಲೂ ಒಂದೇ ಸಮ “ಪಾಪಡ್ ಲೇಲೋ, ದುನಿಯಾ ಕಾ ಪಾಪಡ್”ಎಂದು ಬಿಡುವು ಕೊಡದೆ, ಜನ ಅವನತ್ತ ನೋಡಿದಾಗೆಲ್ಲ ಕೂಗುವ ಮುದುಕ ನನ್ನ ಕಂಡಾಗ ಸುಮ್ಮನೆ ಇರುತ್ತಿದ್ದ. ಹೃಷಿಕೇಶ ನನ್ನನ್ನು…. ಗಂಗೆಯ ಆ ಕಡೆಯ ದಡದಲ್ಲಿ ಒಂದು ಟೀ ಅಂಗಡಿ. ಅದರ ಯಜಮಾನನಿಗೆ ಕುರುಚುಲು ಗಡ್ದ. ಕ್ರಾಪು ಮತ್ತು ಅದರೊಳಗೆ ಬಚ್ಚಿಟ್ಟುಕೊಂಡಿದ್ದ. ಸ್ವಲ್ಪ ಉಬ್ಬು ಹಲ್ಲು. ಸದಾ ನಗುಮುಖ. ಕೆಲಸದ ಹುಡುಗನನ್ನು ಮಾತ್ರ ಬೈಯುತ್ತಿದ್ದ. ನಾನು ಅವನ ಅಂಗಡಿಗೆ ಕಾಲಿಟ್ಟ ಕೂಡಲೆ ಸ್ಪೆಶಲ್ ಚಾ ಮಾಡಿ ಉದ್ದ ಲೋಟಕ್ಕೆ ತುಂಬಿ, ಲೋಟವನ್ನು ಒಮ್ಮೆ ಹೆಗಲಮೇಲಿದ್ದ ಟವಲಿನಲ್ಲಿ ಒರೆಸಿ ನನ್ನ ಮುಂದೆ ಇಡುತ್ತಿದ್ದ. ನಾನು ಆರಾಮಾಗಿ ಒಂದು ಸಿಗರೇಟು ಸೇದುತ್ತಿದ್ದೆ. ಸಂಜೆ ಹೊತ್ತು ರಸ್ತೆ ಪಕ್ಕದಲ್ಲಿ ಒಂದು ಒಲೆ ಇಟ್ಟು ಜಿಲೇಬಿ ಕರೆಯುತ್ತಿದ್ದ. ಹಳ್ಳಿ ಹಿಂದಿಯಲ್ಲಿ ಮಾತಾಡುತ್ತಿದ್ದ. ಚಿಲ್ಲರೆ ಇಲ್ಲದಿದ್ದರೆ ನಾಳೆ ಬಂದಾಗ ಕೊಡಿ ಅನ್ನುತ್ತಿದ್ದ. ಒಂದು ದಿನ ಹೋಗದಿದ್ದರೆ ನಿನ್ನೆ ಯಾಕೆ ಬರಲಿಲ್ಲ ಅಂತ ಕೇಳುತ್ತಿದ್ದ. ತನ್ನ ಮಗ, ಸೊಸೆ, ರಸ್ತೆ ಎದುರು ಇರುವ ತನ್ನ ಬಳೆ ಅಂಗಡಿ ಎಲ್ಲದರ ಬಗ್ಗೆ ಏನೇನಾದರೂ ಹೇಳುತ್ತಿದ್ದ. ನನಗೆ ಹಿಂದಿ ತಿಳಿಯುತ್ತದೆ, ಮಾತಾಡಲು ಬರುವುದಿಲ್ಲ ಅಂತ ಅವನಿಗೆ ಗೊತ್ತಿತ್ತು. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ನೆಲೆ ಇಲ್ಲದೆ ಅಲ್ಲಿ ನೆಲೆಸಿದ್ದ ಹಲವು ನೂರು ಜನರಲ್ಲಿ ನಾನು ಒಬ್ಬನಾಗಿಬಿಟ್ಟಿದ್ದೆ. +ಹೃಷಿಕೇಶಕ್ಕೆ ಬಂದಾಗ ಬಹುಶಃ ನಾನು ಎದ್ದುಕಾಣುವ ಅಪರಿಚಿತ ಆಗಿದ್ದೆ! ಹರಿದ್ವಾರದ ಪ್ರೊಫೆಶನಲ್ ಸನ್ಯಾಸಿಗಳು ನನಗೆ ಒಗ್ಗಿರಲಿಲ್ಲ. ಅವರ ಬದುಕು ಬೇರೆ ಥರದ್ದು. ಅವರು ನನಗೆ ಪರಿಚಯ ಆಗಿ ಅವರೊಡನೆ ಹದಿನೈದು ಇಪ್ಪತ್ತು ದಿನ ಕಳೆಯಲು ವಾರಣಾಸಿಯಲ್ಲಿ ನನಗೆ ಸಿಕ್ಕ ಇಂಗ್ಲಿಷ್ ಮಹಿಳೆ ಕಾರಣ. +ಡಿಸೆಂಬರ್ ತಿಂಗಳ ಮೊದಲ ವಾರದ ಕೊನೆಗೆ ನಾನು ವಾರಣಾಸಿಗೆ ಬಂದೆ. ರಾತ್ರಿಯ ಕೊರೆಯುವ ಚಳಿ. ಸುರಿಯುವ ಮಂಜಿನಲ್ಲಿ ಸ್ಟೇಶನ್ನಿನ ಪ್ರಖರ ದೀಪಗಳು ಮಂಕಾಗಿ, ನೆಲದ ಆಧಾರ ಇಲ್ಲದೆ, ಅಂತರದಲ್ಲಿ ಇದ್ದೂ ಇಲ್ಲದಂತೆ ಉರಿಯುತ್ತಿದ್ದವು. ರೈಲಿನಲ್ಲಿ ನನ್ನ ಜೊತೆ ಬಂದ ಕಾನ್ವೆಂಟಿನ ಮಹಿಳೆಯರು ಹೊರಟುಹೋಗಿದ್ದರು. ಅವರಿಗೆ ಹೋಗಲು ಗೊತ್ತಾದ ಒಂದು ಜಾಗ ಇತ್ತು. ವ್ಯಾಪಾರಿಯ ಮಗ ಗುಡ್‌ಬೈ ಅಂತ ಹೇಳಿ ನಗುತ್ತ ಹೊರಟುಹೋದ. ಅವನಿಗೆ ಹೋಗಲು ಮನೆ ಇತ್ತು. ನಾನು ಕೆಲಸ ಬಿಟ್ಟು ಹೊರಟಿದ್ದೇನೆ ಅಂತ ಅವನಿಗೆ ಹೇಳಿದ್ದೆ. ಪೆನ್‌ಶನ್ ಬರುತ್ತೆ ಅಂತ ಹೇಳಿದ್ದೆ. ಒಳ್ಳೆ ಕೆಲಸ ಮಾಡಿದಿರಿ, ಸರ್ಕಾರಿ ಕೆಲಸದಿಂದ ಏನೂ ಲಾಭ ಇಲ್ಲ ಅಂದ. ಬಿಸಿನೆಸ್ ಮಾಡುವ ಆಸೆ ಇದೆಯಾ ಅಂದ. ಹ್ಞೂ ಅಂದೆ. ಊರು ಬಂದಾಗ ಸುಮ್ಮನೆ ಹೊರಟು ಹೋದ. ರೈಲು ಇಳಿದಾಗ ರಾತ್ರಿ ಹನ್ನೆರಡು. ನಾಲ್ಕು ಗಂಟೆ ತಡ. ಚಳಿ ಎಷ್ಟಿತ್ತು ಅಂದರೆ ಚಳಿಯ ಅನುಭವ ಆಗುವ ಮಿತಿಯನ್ನೂ ಮೀರಿತ್ತು. ನನ್ನ ಜರ್ಕಿನ್ ನೆಟ್ ಬನೀನಿನಷ್ಟು ನಿರುಪಯುಕ್ತವಾಗಿತ್ತು. ಜೊತೆಗೆ ಇದ್ದ ಹೆಗಲು ಚೀಲದಲ್ಲಿ ಒಂದು ಷರಟು ಮಾತ್ರ ಇತ್ತು. ಇನ್ನೊಂದು ಪ್ಯಾಂಟು ಮಂಗಳೂರಲ್ಲೆ ಕಳೆದು ಹೋಗಿತ್ತು. ಬೆಳಗಾದರೆ ಎಲ್ಲಾದರೂ ಹೋಗಬಹುದಾಗಿತ್ತು. ಈಗ ಚಳಿ ಇರದ ಮಲಗುವ ಜಾಗಮಾತ್ರ ಬೇಕಿತ್ತು. ಕೆಲವರು ಮುದುರಿ ಮಲಗಿದ್ದರು. ಒಬ್ಬಿಬ್ಬರು ಕೂಲಿಯವರು ಇದ್ದರೂ ಬರಿಗೈಯ ನನ್ನನ್ನು ತಿರುಗಿಯೂ ನೋಡಲಿಲ್ಲ. +ಸ್ಟೇಷನ್ನಿನ ಹೊರಗೆ ಸೈಕಲ್ ರಿಕ್ಷಾಗಳಲ್ಲಿ ರಿಕ್ಷಾವಾಲಾಗಳು ಮಲಗಿದ್ದರು. ಅವರು ಯಾರನ್ನಾದರೂ ಹೋಟೆಲ್ ಎಲ್ಲಿದೆ ಕೇಳಬೇಕು ಅಂದುಕೊಂಡರೂ ಮೋಸ ಮಾಡಿದರೆ ಅನ್ನುವ ಅಳುಕು ಇತ್ತು. ಆಗ ಬಿಳೀ ಪ್ಯಾಂಟು, ಶರಟು, ಸ್ವೆಟರು, ತಲೆಗೆ ಉಣ್ಣೆ ಟೋಪಿ ಹಾಕಿಕೊಂಡಿದ್ದ ಹುಡುಗ ಸಿಕ್ಕಿದ. ಉಳಿಯಲು ಜಾಗ ಬೇಕೆ? ಬೇಕು. ಎಂಥಾ ಹೋಟೆಲ್? ತುಂಬಾ ಬೆಲೆಯದ್ದು ಬೇಡ. ಎಲ್ಲಿಂದ ಬರ್ತಿದೀರಿ? ಕರ್ನಾಟಕ. ಪ್ರವಾಸಿಯೇ? ಹೌದು. ಹೀಗೆ ಕೇಳುತ್ತ ಕೇಳುತ್ತ ಹೋಟೆಲಿಗೆ ಒಯ್ದ. ದಿನಕ್ಕೆ ನೂರ ಐವತ್ತು. ಅಷ್ಟು ಕೊಡುವುದು ಕಷ್ಟ. ಇರುವ ಎರಡು ಸಾವಿರ ಇನ್ನೂ ಕೆಲವು ತಿಂಗಳಾದರೂ ನನಗೆ ಆಧಾರವಾಗಿ ಉಳಿಯಬೇಕು. ನನಗೆ ನೆಲೆ ಸಿಗುವವರೆಗೆ. ಆದರೆ ಇಲ್ಲಿ, ಈಗ, ನಾನು ಪ್ರವಾಸಿ ಅಂತ ನಟಿಸಬೇಕಿತ್ತು. ಚಳಿಯಿಂದ ತಪ್ಪಿಸಿಕೊಳ್ಳಬೇಕಿತ್ತು. ಒಪ್ಪಿದೆ. ಆ ಹುಡುಗ ತನ್ನ ಹೆಸರು ಪಾಂಡೆ ಅಂತ ಹೇಳಿ, ಹೋಟೆಲ್ಲಿನವನ ಬಳಿ ಕಮೀಷನ್ ಪಡೆದು ಬೆಳಿಗ್ಗೆ ಬೇಗ ಬರುತ್ತೇನೆಂದು ಹೋಗಿಬಿತ್ತ. ಎರಡು ದಪ್ಪ ರಗ್ಗುಗಳನ್ನು ಹೊದ್ದು ನಿದ್ದೆ ಮಾಡಿದೆ. +ಬೆಳಗಾಗುವ ಹೊತ್ತಿಗೆ ಪಾಂಡೆ ಬಂದ. ಬನಾರಸ್ ತೋರಿಸ್ತೇನೆ. ಅಂದ. ಎಷ್ಟು ದಿನ ಇರುತ್ತೀರಿ? ಮೂರು ದಿನ ಅಂದೆ. ಸುಮ್ಮನೆ. ಇಲ್ಲೇ ಇರಲು, ಸಾಧ್ಯವಾದರೆ, ಬಂದವನು ಅಂತ ಹೇಳಲಿಲ್ಲ. ರಿಕ್ಷಾನೋ ಟ್ಯಾಕ್ಸೀನೋ ಅಂದ. ನಡೆಯೋಣ ಅಂದೆ. ನನ್ನತ್ತ ವಿಚಿತ್ರವಾಗಿ ನೋಡಿದ. ಸರಿ ಅಂದ. ಬೆಳಗಿನ ಚಳಿ ಬಿಸಿಲಲ್ಲಿ ಬನಾರಸ್ ಎದ್ದೇಳುತ್ತಿತ್ತು. ಶಾಲೆಗೆ ಹೋಗುವ ಉಣ್ಣೆ ಉಡುಪಿನ ಮಕ್ಕಳು. ತರಕಾರಿ ಮಾರಲು ಬಂದ ಹಳ್ಳಿ ಜನ. ಕಾಂಪೌಂಡಿನ ಬಾಗಿಲಲ್ಲಿ ನಿಂತು ವ್ಯಾಪಾರ ಮಾಡುವ ಸ್ವೆಟರು ತೊಟ್ಟ ಹೆಂಗಸರು ಅಲ್ಲೊಂದು ಇಲ್ಲೊಂದು ಬಾಗಿಲು ತೆರೆದ ಅಂಗಡಿಗಳು…. ಅದು ಯಾವುದೇ ಊರು ಇರಬಹುದು. +ಈ ಊರಲ್ಲಿ ತಿಥಿ ಮಾಡಿಸಿದರೆ ಹಿರಿಯರಿಗೆ ಶಾಶ್ವತವಾದ ಮುಕ್ತಿ ಸಿಗುತ್ತೆ. ತಾನು ಅದನ್ನು ಕಡಿಮೆ ಖರ್ಚಿನಲ್ಲಿ, ಕೇವಲ ಐನೂರು ರೂಪಾಯಿಯಲ್ಲಿ ಮಾಡಿಸಲು ಏರ್ಪಾಡು ಮಾಡಿಕೊಡುವೆ, ಬೇರೆಯವರ ಹತ್ತಿರ ಹೋಗಿ ಮೋಸ ಬೀಳಬೇಡಿ ಅಂತ ಪಾಂಡೆ ಬಲೆ ನೇಯತೊಡಗಿದ. ನಮ್ಮಲ್ಲಿ ತಿಥಿ ಮಾಡಿಸುವ ಸಂಪ್ರದಾಯ ಇಲ್ಲ ಅಂದೆ. ನೀವು ಮುಸ್ಲಿಮರಾ ಅಂದ. ಅಲ್ಲ ಅಂದೆ. ಮತ್ತೆ? ತನ್ನ ಎದೆಯ ಮೇಲೆ ಕೈಯಿಂದ ಶಿಲುಬೆಯ ಆಕಾರ ಮೂಡಿಸುತ್ತಾ ಕ್ರಿಶ್ಚಿಯನ್ನರೆ ಅನ್ನುವ ಹಾಗೆ ನೋಡಿದ. ಅಲ್ಲ ಅಂದೆ. ಮತ್ತೆ ಹಿಂದೂ ಆದರೆ ತಿಥಿ ಯಾಕೆ ಮಾಡಲ್ಲ? ಅವನ ಹತ್ತಿರ ವಾದ ಮಾಡುವಷ್ಟು ಹಿಂದಿ ನನಗೆ ಗೊತ್ತಿರಲಿಲ್ಲ. +ತುಂಬ ದಿನ ಉಳುಯೋದಕ್ಕೆ ಇಲ್ಲಿ ಛತ್ರಗಳು ಇಲ್ಲವಾ ಅಂದೆ. ಇವೆ. ನೀವು ಉಳುಯುವಂಥವು ಇಲ್ಲ ಅಂದ. ಸರ್ಕಾರವೇ ಗಾಂಜಾ ಮಾರುವ ಲೈಸನ್ಸ್ ಅಂಗಡಿ ಹತ್ತಿರ ಉದ್ದ ಗಡ್ಡದವರು, ಬೋಳು ತಲೆಯವರು, ಬೂದಿಬಡುಕರು ಗುಂಪುಗೂಡಿದ್ದರು. ಯಾಕೆ ಇವರೆಲ್ಲ ಹೀಗಿದ್ದಾರೆ? ವಿಶ್ವನಾಥಮಂದಿರದ ಕಿರು ಓಣಿ ಬೆಂಗಳೂರಿನ ಚಿಕ್ಕಪೇಟೆಯ ಅಜ್ಞಾತ ಗಲ್ಲಿಯಂತಿತ್ತು. ಚಪ್ಪಡಿ ಹಾಕಿದ ರಸ್ತೆಯ ಮೇಲೆ ದನಗಳು ಓಡಾಡುತ್ತಿದ್ದವು. ಅಪರಾಜಿತೋ ಸಿನಿಮಾ ಜ್ಞಾಪಕಕ್ಕೆ ಬಂತು. ದೇವಾಲಯದಲ್ಲಿ ನೆಲದೊಳಗೆ ಅಡಗಿದ ನುಣುಪು ಕಲ್ಲು ಮುಟ್ಟಿ ಹೂವಿಟ್ಟಾಗ ಕಾಲಿಗೆ ನೀರಿನಲ್ಲಿ ನೆನೆದ ಚಪ್ಪಡಿ ಕಲ್ಲು ತಣ್ಣಗೆ ತಗಲುತ್ತಿತ್ತು. ಮಂಕು ದೀಪ, ಸಣ್ಣಗೆ ಉರಿಯುವ ಎಣ್ಣೆ ದೀಪ, ಸುತ್ತ ಜನರ ಮೈ‌ಒತ್ತಡ. ಹೆಜ್ಜೆ ಹೆಜ್ಜೆಗೆ ಕಾಡುವ ಪಂಡರಿಗೆ ನೂರೈವತ್ತು ರೂಪಾಯಿ ಕೊಡದೆ ತಪ್ಪಿಸಿಕೊಳ್ಳಲು ಆಗಲಿಲ್ಲ. +ಪಾಂಡೆ ಮತ್ತೆ ತಿಥಿ ಮಾಡಿಸುವುದಕ್ಕೆ, ಮನೆಯವರಿಗೆ ಸೀರೆ ಕೊಡಿಸುವುದಕ್ಕೆ ಗಂಟುಬಿದ್ದ. ದೋಣಿಯಲ್ಲಿ ಕೂತು ಗಂಗೆಯ ಆಕಡೆ ದಡಕ್ಕೆ ಹೋಗುತ್ತೀರಾ. ಬರೀ ಇನ್ನೂರು ರೂಪಾಯಿ ಅಂದ. ಬೇಡವೇ ಬೇಡ ಅಂತಂದಾಗ ಸಂಕಟಮೋಚನ ಮಂದಿರ ತೋರಿಸುತ್ತೇನೆ ಅಂತ ಯೂನಿವರ್ಸಿಟಿ ಹತ್ತಿರ ಕರಕೊಂಡು ಹೋಗಿ ದೇವಸ್ಥಾನಗಳನ್ನು ತೋರಿಸಿದ. ಸಂಜೆ ಹೊತ್ತಿಗೆ ಖುಷಿ ಆಯಿತಾ ಬಕ್ಷೀಸು ಕೊಡಿ ಅಂತ-ಐವತ್ತು, ಸಾಲದು ಎಪ್ಪತ್ತೈದು, ಸಾಲದು ನೂರು, ನೂರೈವತ್ತು ಪಡೆದು ನಾಳೆ ಬೆಳಿಗ್ಗೆ ಬರುತ್ತೇನೆ ಅಂತ ಮಾಯವಾದ. +ನಾನು ಮಾಡಿದ ಮೊದಲನೆಯ ಕೆಲಸ ಅಂದರೆ ಅವನು ಗೊತ್ತು ಮಾಡಿದ ಹೋಟೆಲು ಖಾಲಿ ಮಾಡಿದ್ದು. ಇನ್ನೊಂದು ಚಿಕ್ಕ ಮನೆಯಂಥ ಹೋಟೆಲು. ಹೆಸರು ಸುಂದರವಾಗಿತ್ತು. ನೀಲಗಂಗಾ. ಬಾಡಿಗೆ ತೀರ ಕಡಿಮೆ. ಅದರ ವಾಚಾಳಿ ಮಾಲಕನಿಂದ ತಪ್ಪಿಸಿಕೊಳ್ಳಲು ಮಾರನೆಯ ಇಡೀ ದಿನ ಊರು ಅಲೆದೆ. +ವಿಷಕನ್ಯಾ ಸಿನಿಮಾದ ಪೋಸ್ಟರು ತುಂಬಿದ ಗೋಡೆಗಳು. ಟಿವಿ, ಬಟ್ಟೆ ಜಾಹಿರಾತು ನೇತುಹಾಕಿಕೊಂಡ ಕಂಬಗಳು. ಎಲ್ಲೆಲ್ಲೋ ತಿರುಗುವ ಗಲ್ಲಿಗಳು. ನಿರ್ದಿಷ್ಟ ಕೆಲಸ ಮತ್ತು ಗುರು ಇರುವಂತೆ ಓಡಾಡುವ ಜನಗಳು. ನೀನೆ ಅಂತ ಕೇಳುವವರಿಲ್ಲದೆ ನಾನೂ ಯಾರೊಡನೆಯೂ ಮಾತಾಡದೆ ನನ್ನ ಯಾರೂ ಮಾತಾಡಿಸದೆ ಇಡೀ ದಿನ ವಾರಣಾಸಿ ಸುತ್ತಿದೆ. ಆ ಬೀದಿ ತುಂಬ ಕಡಿತದ ಬೆಲೆಯ ರಜಾಯಿ ಮಾರಾಟದ ಬೋರ್ಡುಗಳು. ತೀರ ಕಡಿಮೆ ಬೆಲೆಯ ಒಂದು ರಜಾಯಿ ಕೊಂಡೆ. ನೀಲಗಂಗಾದಲ್ಲಿ ರಗ್ಗು ಇರಲಿಲ್ಲ. +ಬೆಳಿಗ್ಗೆ ಮತ್ತೆ ಹೊರಟೆ. ವಿಶ್ವನಾಥ ದೇವಸ್ಥಾನದ ದಾರಿ ಸಿಗಲಿಲ್ಲ. ಕೇಳುತ್ತ ಹೊರಟೆ. ದೇವಸ್ಥಾನದ ಪಕ್ಕದಲ್ಲೆ ಇದ್ದ ಗಂಗಾ ನದಿಯ ಉದ್ದಕ್ಕೂ ನದಿಯ ಜೊತೆ ಮತ್ತು ನದಿಯ ವಿರುದ್ಧ ದಿಕ್ಕಿನಲ್ಲಿ ಸುಮ್ಮನೆ ಅಲೆದಾಡಿದೆ. ಈಗುವವರು, ಬಟ್ಟೆ ಒಗೆಯುವವರು, ಹಾರುವವರು, ನಾಯಿಗಳು, ಪೂಜೆಮಾಡುವವರು, ಮೆಟ್ಟಿಲುಗಳು, ಕಟ್ಟೆಯಮೇಲೆ ದುಂಡಾದ ಹಾಳೆ ಛತ್ರಿಗಳು. ದಪ್ಪ ದಪ್ಪ ಅಕ್ಷರಗಳಲ್ಲಿ ಘಾಟಿಯ ಹೆಸರು ಬರೆದುಕೊಂಡ ಬೋರ್ಡುಗಳು. ನದಿಯ ಮೇಲೆ ಓಡಾಡುವ ದೋಣಿಗಳು. ನನ್ನ ನಿರುದ್ದಿಶ್ಯ ನಡೆ…..ಇನ್ನೂ ಹತ್ತು ಗಂಟೆ. ನಡೆದಿದ್ದೆ. ಯಾರನ್ನೋ ಕಾಣಬೇಕು. ಏನೋ ಆಗಬೇಕು, ಇಡೀ ದಿನ ಕಳೆಯುವುದು? ಅಥವಾ ಇಡೀ ಬದುಕು ಹೀಗೇ? ಗೊತ್ತಿಲ್ಲ ನಡೆದಿದ್ದೆ. +ಅಲ್ಲೊಂದು ಕಡೆ ಜಗತ್ತೆಲ್ಲ ಮರೆತಂತೆ ಪುಸ್ತಕ ಓದುತ್ತ ಕುಳಿತ ಒಬ್ಬ ವಿದೇಶೀ ಮಹಿಳೆ ಇದ್ದಳು. ಸ್ವಲ್ಪ ಹೊತ್ತು ನೋಡುತ್ತ ನಿಂತೆ. ಬಿಳೀ ಪಂಚೆ, ಬನೀನು ತೊಟ್ಟ, ಸ್ವಲ್ಪ ಗಡ್ಡ ಇದ್ದ, ಜುಟ್ಟು ಗಂಟು ಹಾಕಿಕೊಂಡ ಒಬ್ಬ ಯುವಕ ನದಿಯಿಂದ ಸ್ನಾನ ಮಾಡಿ ಎದ್ದು ಬರುತ್ತಿದ್ದ. ಅವಳನ್ನು ಗುರುತು ಹಿಡಿದು ಮಾತನಾಡಿಸಿದ. ಇಬ್ಬರೂ ಒಬ್ಬನೇ ಗುರುವಿನ ಶಿಷ್ಯರಂತೆ. ಅವನು ನಿಂತು, ಅವಳು ಓದುತ್ತಿದ್ದ ಪುಟದ ಗುರುತಿಗೆಂದು ಬೆರಳಿಟ್ಟು ಪುಸ್ತಕ ಮಡಚಿ ಮೊದಲ ಮೆಟ್ಟಿಲ ಕಟ್ಟೆಯ ಮೇಲೆ ಕುಳಿತು, ಹಳೆಯ ಕತೆಗಳನ್ನು ಮನುಷ್ಯರನ್ನು ಜ್ಞಾಪಿಸಿಕೊಳ್ಳುತ್ತ ಇದ್ದರು. ಅವನು ಹೋಗುವವರೆಗೆ ಕಾದೆ. ನಾನು ನೋಡಬೇಕಾದವಳು ಇವಳೇನೇ? ಅವಳು ನನ್ನ ಕಣ್ಣ ಅಳತೆಯಿಂದ ತಪ್ಪಿ ಹೋಗದಂತೆ ಅಲ್ಲೆ ಹದಿನೈದು ನಿಮಿಷ ಸುತ್ತಾಡಿದೆ. ಧೈರ್ಯ ಕೂಡುತ್ತ ಚದುರುತ್ತ ಇತ್ತು. ಆಕೆ ಬಿಸಿಲಿಗೆ ಬೆನ್ನು ಕೊಟ್ಟು ಪುಸ್ತಕ ಓದುತ್ತ ತನ್ಮಯಳಾಗಿದ್ದಳು. ಏಚುಸ್ ಮೆ ಅಂದೆ. ಅವಳು ಕ್ಷಮಿಸದೆ, ಶಾಪ ಕೊಡುವವಳಂತೆ ತಲೆ ಎತ್ತಿ ನೋಡಿ, ಹುಬ್ಬು ಗಂಟಿಕ್ಕಿ, ಟಪ್ಪನೆ ಪುಸ್ತಕ ಮುಚ್ಚಿ ‘ಏನು” ಎಂಬಂತೆ ನೋಡಿದಳು. “ನೀವು ಓದುತ್ತಿರುವುದು ಏನು?” ಅಂದೆ. ಎಂಥ ಮೂರ್ಖ ಪ್ರಶ್ನೆ! “ಪ್ರಾರ್ಥನೆಗಳ ಪುಸ್ತಕ.” ಶೊ ವ್ಹಟ್ ಎಂಬಂತೆ ಅವಳ ಮುಖ ಭಾವ. ಅದನ್ನು ದೂರ ಮಾಡಲೆಂಬಂತೆ ತಡವರಿಸುತ್ತ ನನ್ನ ಬಗ್ಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಮೇಷ್ಟರು ಇತ್ಯಾದಿ. ನಾನು ಭಿಕ್ಷುಕನೋ ಮೋಸಗಾರನೋ ಅಲ್ಲ ಎಂದು ಖಚಿತವಾಯಿತೇನೋ ಎಂಬಂತೆ ತಾನೂ ಇಂಗ್ಲಿಷ್ ಲಿಟರೀಚರ್ ಕಲಿಸುವವಳು ಇತ್ಯಾದಿ ಹೇಳಿದಳು. ಹೀಗೆ ಮಾತಾಡುತ್ತ ನನ್ನ ಬಗ್ಗೆ ಅಂಥ ಕುತೂಹಲ ಏನೂ ಇಲ್ಲದೆ ಕೇಳುತ್ತ “ನಿನಗೆ ಒಬ್ಬ ಗುರು ಅಗತ್ಯ” ಅಂದಳು. +“ಇರಬಹುದು. ಆದರೆ ಗುರು ಯಾರು. ಎಲ್ಲಿ ಅಂತ ಹುಡುಕುವುದು.” +“ಹುಡುಕುತ್ತ ಹೋಗಬೇಕು. ಒಮ್ಮೆಯಲ್ಲ ಒಮ್ಮೆ ಸಿಗುತ್ತಾನೆ.” +“ನಿಮಗೆ ಸಿಕ್ಕಿದ್ದಾನಾ?” +“ಹೌದು” +“ಯಾರು.” +“ಗಣೇಶಪುರಿ.” +“ಎಲ್ಲಿದ್ದಾರೆ?” +“ಇಂಥ ಕಡೆ ಅಂತ ಇಲ್ಲ. ಇಂಡಿಯಾದಲ್ಲಿ ಎಲ್ಲ ಕಡೆ ಓಡಾಡುತ್ತಿರುತ್ತಾರೆ. ಹರಿದ್ವಾರದಲ್ಲಿ ಅವರ ಒಂದು ಮಠ ಇದೆ. ವಿಚಾರಿಸಿದರೆ ತಿಳಿಯಬಹುದು. ಆತ ತುಂಬ ಅದ್ಭುತ ಮನುಷ್ಯ. ಮನಸ್ಸನ್ನ ತುಂಬ ಚೆನ್ನಾಗಿ ತಿಳೀತಾರೆ. ನಮಗೆ ಏನು ಬೇಕು ಅಂತ ಅವರಿಗೆ ಗೊತ್ತಾಗುತ್ತೆ. ನನ್ನ ಮನಸ್ಸಿಗೆ ಅವರಿಂದ ತುಂಬ ಸಮಾಧಾನ ಸಿಕ್ಕಿತು.” +ಆಮೇಲೆ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದಳು. “ಅವರು ನಿನ್ನ ಗುರು ಆಗಬಹುದೋ, ಗೊತ್ತಿಲ್ಲ. ನಮಗೆ ತಕ್ಕ ಗುರುವನ್ನು ನಾವೇ ಹುಡುಕಿಕೊಳ್ಳಬೇಕು. ಸಿಕ್ಕರೆ ನೋಡು. ನಿನ್ನ ಪುಣ್ಯ.” +ಬನಾರಸಿನಿಂದ ಹರಿದ್ವಾರಕ್ಕೆ ಒಂದು ಇಡೀ ದಿನದ ಪ್ರಯಾಣ. ನಾನಿದ್ದ ರೈಲು ಬೋಗಿಯ ಬಾಗಿಲಿಗೆ ಒಂದೆರಡು ಗುಮ್ ಶುದಾ ನೋಟೀಸುಗಳನ್ನು ಹಚ್ಚಿದ್ದರು. ಕಳೆದು ಹೋದ ಇಂಥವರನ್ನು ಹುಡುಕಿಕೊಟ್ಟರೆ ಸಾವಿರ, ಐದು ಸಾವಿರ ಬಹುಮಾನ ಇತ್ಯಾದಿ. ಎಷ್ಟೊಂದು ಜನ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ನಿಜವಾಗಿ ಹುಡುಕಲು ಸಾಧ್ಯವೆ, ಸಿಗಲು ಸಾಧ್ಯವೆ? ಈಗ ನನ್ನ ಹುಡುಕಲು ಚಂದ್ರಾ ಏನು ಮಾಡುತ್ತಿರಬಹುದು? ಅಮ್ಮ? ನಾನು ಇಂಥಲ್ಲಿ ಇದ್ದೇನೆ, ಇಂಥಲ್ಲಿ ಹೋಗುತ್ತಿದ್ದೇನೆ ಅಂತ ನನಗೇ ಗೊತ್ತಿಲ್ಲದಿರುವಾಗ ಇನ್ನು ಯಾರು ತಾನೇ ನನ್ನ ಹುಡುಕಲು ಸಾಧ್ಯ? +ಹರಿದ್ವಾರದ ಗುರಿ ಹಿಡಿದು ಹೋಗುತ್ತಿದ್ದ ರೈಲಿಗೆ ಸಿಕ್ಕಿ ಅವತ್ತು ಮಧ್ಯಾಹ್ನ ಯಾರೋ ಹುಡುಗ ಸತ್ತು ಹೋದ. ರೈಲು ಬಹಳ ಹೊತ್ತು ನಿಂತಿತು. ಆದರೂ ಇಳಿದು ಹೋಗಿ ನೋಡಬೇಕು ಅನ್ನಿಸಲಿಲ್ಲ. ನನ್ನ ಬೋಗಿಯ ಪಕ್ಕದಲ್ಲೆ ಕೆಲವು ಹೆಂಗಸರು ಅಳುತ್ತ ಓಡಿ ಬಂದರು. ಅವರು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು. ಅಳುತ್ತಿದ್ದರು. ರೈಲು ದಾರಿಯ ಪಕ್ಕದಲ್ಲೆ ಇದ್ದ ರಸ್ತೆಯ ಮೇಲೆ ಲಾರಿ ಬಸ್ಸುಗಳು ನಿಂತಿದ್ದವು. ಮಧ್ಯಾಹ್ನದ ಬಿಸಿಲಿನಲ್ಲಿ. ದೂರದಲ್ಲಿ ಇಂಜಿನ್ನಿನ ಕೆಳಗೆ ಹುಡುಗ ಸತ್ತು ಬಿದ್ದಿದ್ದ. ಯಾರೋ? ನನ್ನ ಬೋಗಿಯ್ +ಹಾಗೆ ಬಹಳ ಹೊತ್ತು ಒಬ್ಬನೇ ಇರಲಿಲ್ಲ. ಸಂಜೆ ಹೊತ್ತಿಗೆ ಒಂದು ಸ್ಟೇಶನ್ನಿನಲ್ಲಿ ಕೆಲಸಗಾರರ ಒಂದು ಗುಂಪು ನನ್ನ ಬೋಗಿಗೆ ಹತ್ತಿತು. ಹರಿದ್ವಾರಕ್ಕೆ ಹೊರಟಿದ್ದ ಇನ್ನೊಬ್ಬ ಸ್ಮಾರ್ಟ್ ಯುವಕ ಹತ್ತಿದವನೇ ಹಾಸಿಗೆ ದಿಂಬು ಎಲ್ಲ ಅಣಿಮಾಡಿಕೊಂಡು ಅಚ್ಚುಕಟ್ಟಾಗಿ ಹೊದ್ದು ಮಲಗಿಬಿಟ್ಟ. ನಾನು ಓದಿ ಸುಮ್ಮನೆ ಎಸೆದಿದ್ದ ಇಂಗ್ಲಿಷ್ ಪೇಪರನ್ನು ಒಬ್ಬ ಕೆಲಸಗಾರ ಎತ್ತಿಕೊಂಡ. ಇದು ಯಾರದು ಅಂದ. ಸುಮ್ಮನೆ ಇದ್ದೆ. ಓದಿ ಮುಗಿಸಿದ ಹಳೇ ಪೇಪರು. ಏ ಲಾ-ವಾರಿಸ್ ಹೈ ಕ್ಯಾ ಅಂದ. ಯಾರೂ ಮಾತಾಡಲಿಲ್ಲ. ಹಾಗಾದರೆ ನನಗಿರಲಿ ಅಂತ ಚೀಲದೊಳಕ್ಕೆ ಇಟ್ಟುಕೊಂಡ. ಅವನ ಗೆಳೆಯರು ರೇಗಿಸಿದರು. “ಇಂಗ್ಲಿಷ್ ಪೇಪರು ತಗೊಂಡು ಏನು ಮಾಡುತ್ತೀ?” ಇದು ಹೇಗೂ ಲಾ ವಾರಿಸ್. ಯಾತಕ್ಕಾದರೂ ಬರುತ್ತೆ. “ಬಿಟ್ಟಿ ಸಿಕ್ಕಿದ್ದರ ಖುಷಿ. ಯಾರಾದರೂ ಕೇಳಿಯಾರೆಂಬ ಅಳುಕು. ಗೆಳೆಯರೆಲ್ಲರನ್ನೂ ಬಿಟ್ಟು ತಾನೇ ಹೀಗೆ ತಗೊಂಡದ್ದು ಸರಿಯೇ ಎಂಬ ಅನುಮಾನ ಎಲ್ಲ ಸೇರಿ ಸ್ವಲ್ಪ ಪೆಕರನ ಹಾಗೆ ನಕ್ಕ. ಪೇಪರು ಇಟ್ಟುಕೊಂಡ ಚೀಲವನ್ನು ತಟ್ಟಿ ನೇವರಿಸಿದ. ನನ್ನ ಕಡೆಗೆ ನೋಡಿದ. ಬಹುಶಃ ಈ ಪೇಪರು ಇವನದ್ದು ಇರಬಹುದು. ಕೇಳಿಯಾನೋ ಏನೋ ಎಂಬ ಗುಮಾನಿಯಿಂದೆಂಬಂತೆ. ಕುರುಚಲು ಗಡ್ಡ. ಗುಳಿ ಬಿದ್ದ ಕಣ್ಣು. ಬಹುಶಃ ರೋಗದ ಮೈ. ತೆಳ್ಳಗಿದ್ದ. ಆತ ಯಾಕೋ ಬಹಳ ನೆನಪಿನಲ್ಲಿ ಉಳಿದಿದ್ದಾನೆ ಬ್ರಿಂಗ್ಟಾ ಟಾಪಿನಲ್ಲಿ ಕಾಲು ಚಾಚಿ ಟೀ ಕಾಯಿಸುತ್ತಿದ್ದವನ ಹಾಗೆ. +ಹರಿದ್ವಾರದ ರೈಲ್ವೆ ಡಾರ್ಮಿಟರಿಯಲ್ಲಿ ಜಾಗ ಕೇಳಿದ್ದಕ್ಕೆ ಎಲ್ಲರಿಗೂ ಆಶ್ಚರ್ಯ ಆಯಿತು. ಹೆಜ್ಜೆಗೆ ಹತ್ತು ಛತ್ರ ಇರುವ ಊರು ಅದು. ಆಗ ನನಗೆ ಗೊತ್ತಿರಲಿಲ್ಲ. ಅಚ್ಚುಕಟ್ಟಾದ ಕೋಣೆಗಳಿರುವ ಡಾರ್ಮಿಟರಿಯನ್ನು ನೋಡಿ ಕೊಳ್ಳುವ ಹೆಂಗಸು ನನ್ನನ್ನು ಒಬ್ಬ ಪೀಡೆ ಎಂಬಂತೆ ಕಂಡಳು. ಎಷ್ಟು ದಿನ ಇರುತ್ತೀ ಅಂತ ಕೇಳಿದಳು. +ಇದು ಹಿಂದೆ ನಾನು ಎಲ್ಲರೊಡನೆ ಬಂದ ಹರಿದ್ವಾರ ಅಲ್ಲ. ಅಥವ ಹರದ್ವಾರವೋ? ಸರ್ಕಲಿನಲ್ಲಿ ಒಂದು ಬಿಳಿಕಲ್ಲಿನ ಶಿವನ ಬೊಂಬೆ. ಆಗ ಒಮ್ಮೆ ನಾನು ಮತ್ತು ಚಂದ್ರ ಅದನ್ನು ನೋಡಿ ಮೆಚ್ಚಿದ್ದು ಜ್ಞಾಪಕ ಬಂತು. ಹತ್ತಿರದಲ್ಲೆ ಓಣಿಯಲ್ಲಿ, ಹಿಂದೆ ಒಮ್ಮೆ ರಾಜು ಹುಡುಕಿಕೊಂಡು ಬಂದು ನಮ್ಮನ್ನೆಲ್ಲ ಕರಕೊಂಡು ಹೋಗಿದ್ದ ಮದರಾಸು ರೆಸ್ಟಾರೆಂಟ್. ಮಾಲಿಕ ಬಹುಶಃ ಅವನೇ ಇದ್ದ. ನಾಲ್ಕೈದು ವರ್ಷದ ಹಿಂದೆ ನಮಗೆ ಊಟ ಬಡಿಸಿದ್ದ. ಸಿನಿಮಾ ಹುಚ್ಚಿನ, ಬಹುಶಃ ಗಣೇಶ ಎಂಬ ಹೆಸರಿನ ಮಾಣಿ ಕಾಣಲಿಲ್ಲ. ಹೋಟೆಲಿನಲ್ಲಿ ಜನವೇ ಇರಲಿಲ್ಲ. ಆಗ ಟ್ರೆಕಿಂಗ್ ಮುಗಿಸಿ ಸುಸ್ತಾಗಿ ಬಂದ ನಮಗೆ ಅಷ್ಟು ಸುಂದರ ಅನ್ನಿಸಿದ್ದ ಮದರಾಸೀ ಊಟದ ರುಚಿ ಈಗ ಕಾಣಲಿಲ್ಲ. +ಹಿಂದೆ, ಆಗ, ಎಲ್ಲರೊಡನೆ ಬಂದಾಗ ಹೂಗಳ ಕಣಿವೆಗೆ ಹೋಗುವ ದಾರಿಯಲ್ಲಿ ಒಂದು ದಿನ ತಂಗುವ ಊರು ಮಾತ್ರವಾಗಿ ಕಂಡಿದ್ದ ಊರನ್ನು ಈಗ ಇಲ್ಲೆ ಇರಲು ಬಂದ ಒಬ್ಬಂಟಿಯಂತೆ ಹೊಸದಾಗಿ ನೋಡುತ್ತ, ನೆನಪುಗಳನ್ನು ಮಾಡಿಕೊಳ್ಳುತ್ತ ಹೋದೆ. +ಎಲ್ಲ ಬೋರ್ಡುಗಳನ್ನು ಗಮನ ಕೊಟ್ಟು ನೋಡುತ್ತ ಹೋದೆ. ಹಿಂದೆ ಒಮ್ಮೆ ಚಂದ್ರಾ ಆಸೆಪಟ್ಟು ಕೇಜಿಗಟ್ಟಲೆ ಸ್ವೆಟರು ಕೊಂಡ ಅಂಗಡಿ ಸಿಕ್ಕಿತು. ಸೌಮ್ಯಮರಿಗೆ ಕೊಡುವುದಕ್ಕೆ ಬೇಕು ಅಂತ ನಾನೇ ಚಂದ್ರಳಿಗೆ ಹೇಳಿ ಸ್ವೆಟರು ಒಂದು ಕೊಂಡಿದ್ದೆ. ಈಗ ಅವಳು ಅವಳ ಅಮ್ಮ ಏನು ಮಾಡುತ್ತಿರಬಹುದೋ. ಚಂದ್ರಾ ಹಿತ್ತಾಳೆ ಕಂಚು ದೀಪಗಳನ್ನು ಕೊಂಡಿದ್ದ ಅಂಗಡಿ ಸಿಕ್ಕಿತು. ನಾನು ವಾಲ್ಮೀಕಿ ರಾಮಾಯಣ ಕೊಂಡ ಅಂಗಡಿಯೂ ಇದೆ. ಆದರೆ ಈ ಅಂಗಡಿಗಳಿಗೆ ನಾನು ಖಂಡಿತ ನೆನಪಿಲ್ಲ. ಊರಿನ ನೆನಪು ನನಗೇ ಹೊರತು, ನನ್ನ ನೆನಪು ಊರಿಗೆ ಯಾಕಿರಬೇಕು? ನಾನೇನೂ ಅಲ್ಲಿ ಊರಿಕೊಂಡವನಲ್ಲ. +ಎಲ್ಲಿದೆ ಗಣೇಶಪುರಿಯ ಆಶ್ರಮ. ಯಾರನ್ನು ಕೇಳುವುದು ಇಲ್ಲಿ. ಎಡಗಡೆಗೆ ಹೋದರೆ ನದಿ. ವಿಶಾಲ. ವಿಶಾಲ. ಎಕರೆಗಟ್ಟಲೆ ವಿಶಾಲವಾಗಿ ಹರಿಯುವ ಗಂಗೆಗೆ ಒಡ್ಡು ಕಟ್ಟಿ ವೇಗ ತಡೆದು ಎರಡು ಮೂರು ಸೀಳು ಮಾಡಿ ನಿಯಂತ್ರಿಸಿರುವ ಹರ ಕೀ ಪಾವಡಿ. ಇಲ್ಲಿ ಈಗಲೂ ಅಂದಿನಂತೆಯೇ ಸಹಸ್ರ ಸಹಸ್ರ ಜನ. ಎಲ್ಲ ಥರದ ಮುಖ, ಇಡೀ ಇಂಡಿಯ ಈ ನದಿಯ ದಡದಲ್ಲಿ ಸೇರಿದ ಹಾಗೆ ಇರುತ್ತದೆ. ಇಲ್ಲ, ಇಲ್ಲಿ ಸಿಖ್ಖರ ಲಂಗರ್ ಇದೆ. ಮಾನಸಾ ದೇವಿಗೆ ಹೋಗುವ ರಸ್ತೆ ಇದೆ. ಹೋಟೆಲುಗಳು ಇವೆ. ನನಗೆ ಬೇಕಾದ ಆಶ್ರಮ ಇಲ್ಲ. ಹಿಂದಿರುಗಿ ಮತ್ತೆ ಸ್ಟೇಶನ್ನಿನವರೆಗೆ ಬಂದು ಬಲದ ರಸ್ತೆ ಹಿಡಿದೆ. ಆಫೀಸುಗಳ ದಾರಿ. ಗಂಗೆಯ ಕಾಲುವೆಗೆ ಒಂದು ಕಬ್ಬಿಣದ ಸೇತುವೆ. ಅದರ ಮೇಲಿಂದ ಧುಮುಕಿ ಈಗುವ ಹುಡುಗರು ಸೇತುವೆ ಮೇಲೆ ನಿಂತರೆ ಅಗಾಧ ವೇಗದ ಗಂಗಾ ನೀರು. ಸೇತುವೆಯ ಆಚೆ ನಿಶ್ಚಲವಾಗಿ ನಿಂತ ಮನೆಗಳ ಗುಂಪು. ಸೇತುವೆಯನ್ನು ದಾಟಿ ಬಲಕ್ಕೆ ತಿರುಗಿ ಮತ್ತೆ ಎಡಕ್ಕೆ ತಿರುಗುವಂತೆ ಇರುವ ವಕ್ರವಾದ ಟಾರು ರಸ್ತೆ. ಅದರ ಬದಿಗೆ ಚಾ ದುಕಾನು. ಕಾದು ನಿಂತ ಸೈಕಲ್ ರಿಕ್ಷಾಗಳು. ಆಫೀಸಿನ ಕಾಂಪೌಂಡುಗಳು. ಇನ್ನೂ ಮುಂದೆ. ಅಲ್ಲೂ ಹೋಗಿ ನೋಡೋಣ. +ಊರು ಮುಗಿಯುವಂತಿರುವ ಲಕ್ಷಣ. ಅಲ್ಲಿ ಒಂದು ಗೋಡೆಯ ಮೇಲೆ ಈಶ್ವರನ ಚಿತ್ರ ಇರುವ ಬೋರ್ಡು. ಪಕ್ಕದಲ್ಲಿ ಕೊಲಾಪ್ಸಬಲ್ ಗೇಟು. ಅದು ಮುಚ್ಚಿದ ದೇವಸ್ಥಾನ. ಸಾಧನಾ ಮಂದಿರ ಅಂತ ಬರೆದು ಪಕ್ಕದ ಗಲ್ಲಿಗೆ ಬಾಣ ತೋರಿಸಿದ್ದರು. ಕೆಳಗೆ ಶ್ರೀ ಗಣೇಶಾನಂದ ಪುರಿ ಮಹಾರಾಜ್ ಅಂತ ಬರೆದಿತ್ತು. ಮೊನ್ನೆ ಬನಾರಸಿನಲ್ಲಿ ಇಂಗ್ಲೆಂಡಿನ ಹೆಣ್ಣುಮಗಳು ಹೇಳಿದ ಗಣೇಶ ಪುರಿ ಇವರೇ ಇರಬಹುದು. ಬಾಣದ ಗುರಿ ಹಿಡಿದು ತಿರುಗಿದೆ. ಗಲ್ಲಿಗೆ ಮಣ್ಣು ರಸ್ತೆ. ಬಲತುದಿಯಲ್ಲಿ ನಾಲ್ಕಂತಸ್ತಿನ ಕಟ್ಟಡ. ಏನೋ ರಿಪೇರಿ ಮಾಡುತ್ತಿದ್ದರು. ಎಡಗಡೆ ಇನ್ನೊಂದು. ಒಳಗೆ ಹೋದೆ. ಗಾಳಿಗೆ ತೆರೆದುಕೊಂಡ ವಿಶಾಲವಾದ ಹಜಾರ. ಅದರ ಸುತ್ತಲೂ ಜಗಲಿ. +ಜಗಲಿಯಲ್ಲಿ ಕೋಣೆಗಳು. ಎಲ್ಲ ಮುಚ್ಚಿದ ಬಾಗಿಲುಗಳು. ಗೋಡೆ ತುಂಬ ಬೋರ್ಡುಗಳು, ಫೋಟೋಗಳು. ಉಜ್ಜಿ ಉಜ್ಜಿ ತೊಳೆದ ಹೊಳೆಯುವ ನೆಲ. ವಿಶಾಲವಾದ ಜಮಖಾನ. ಗಾಢ ಬಣ್ಣದ ಅಂಚಿರುವ ಗೋಡೆಗಳು. ಪ್ಯಾಂಟು ಜರ್ಕಿನು ತೊಟ್ಟ ನಾನು ಅಲ್ಲಿನ ನಿಶ್ಯಬ್ದಕ್ಕೆ ಅಸಂಗತ ಅಂತ ನನಗೆ ಅನ್ನಿಸತೊಡಗಿತು. ಹಜಾರದ ಪಕ್ಕದಲ್ಲೆ ಒಂದು ಮಂದಿರ. ರಾಮ ಸೀತೆ ಲಕ್ಷ್ಮಣರ ವಿಗ್ರಹಗಳು. ಇನ್ನೊಂದು ಮಂದಿರದಲ್ಲಿ ಕೊಳಲು ಊದುತ್ತಿರುವಕೃಷ್ಣ. ಆಮೇಲೆ ಇನ್ನೊಂದು ಕೋಣೆಯಲ್ಲಿ ತಪಸ್ಸಿಗೆ ಕುಳಿತ ಈಶ್ವರ. ಮುಂದೆ ಹೋಗಲೋ ಬೇಡವೋ ಯಾರಾದರೂ ಇದ್ದಾರೋ ಇಲ್ಲವೋ ಅಂತ ನಾನು ಅಳುಕುತ್ತ ಅನುಮಾನ ಪಡುತ್ತ ಇದ್ದಾಗ ಒಬ್ಬ ಮುದುಕ. +ಮುದುಕನ ಮುಖದ ತುಂಬ ಬಿಳೀ ಗಡ್ಡ. ಅಲ್ಲಲ್ಲಿ ಸ್ವಲ್ಪ ಕಡಮೆ ಬಿಳಿ ಬಣ್ಣದ ಕೂದಲುಗಳು. ತುಂಬ ಎತ್ತರ ಏನಿರಲಿಲ್ಲ. ನನಗಿಂತಲೂ ಕುಳ್ಳು. ಸ್ಥೂಲ ಅನ್ನುವಂಥ ಮೈ. ಸೊಂಟಕ್ಕೆ ಸುತ್ತಿಕೊಂಡ, ಮೊಳಕಾಲು ಮುಟ್ಟುತ್ತಿದ್ದ ಕಾವಿ ಪಂಚೆ. ಹೊದ್ದದ್ದು ಇನ್ನೊಂದು ಕಾವಿ ಟವಲು. ತಲೆ ತುಂಬ ಉದ್ದ ಬಿಳೀ ಕೂದಲು. ದಪ್ಪ ದಪ್ಪ ಮೀನ ಖಂಡಗಳು. +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […] +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […] +ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_465.txt b/Kannada Sahitya/article_465.txt new file mode 100644 index 0000000000000000000000000000000000000000..738bf625f4c7a7e65b7bb5cf4ac732d25851b67f --- /dev/null +++ b/Kannada Sahitya/article_465.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾವು ಹುಂಬರು, +ಕಣ್ಣು ತುಂಬಿದ ಕನಸುಗಳಿಗೆ +ಸೂರ್ಯನ ಫಳಫಳ ಬೆಳಕನ್ನ ಸಿಂಪಡಿಸಿ +ರಂಗೇರಿಸಿ ರಂಗಪಂಚಮಿಯಾಡುತ್ತಾ ಆಡುತ್ತಾ +ಈ ಸಿಟಿಗೆ ಬಂದಾಗ- +ನಮ್ಮ ಜೊತೆ ಬಂದ ಸೂರ್ಯ ತಪ್ಪಿಸಿಕೊಂಡ. +ಅತ್ತಿತ್ತ ನೋಡುತ್ತ ಎತ್ತೆತ್ತರ ಹಾರಿ +ಮಿತ್ರಾ ಎನ್ನುತ್ತಾ ಕೂಗಿ, ಕರೆದು ಹುಡುಕುತ್ತಾ +ಸಿಕ್ಕದ್ದಕ್ಕೆ ಸತ್ತನೋ ಎಂದು +ಆತನ ಗುಣಗಾನ ಮಾಡಿ ಅತ್ತೆವು. +ನಮ್ಮ ಹುಂಬತನಕ್ಕೆ ಇಡೀ ಸಿಟಿ ಹಲ್ಲು ಕಿರಿದಂತೆ +ಸಾಲುದೀಪ ಝಗ್ಗಂತ ಉರಿದವು. +ಅಷ್ಟರಲ್ಲಿ ಯಾರೋ-ಸಿಟಿಯವನಂತೆ- +ಧಡೂತಿ ಕುಳ ಬಂದು ನಿಂತ. +ಹೇಳಕೇಳುವ ದಿಕ್ಕಿಲ್ಲದ ಕಕವಾಗಳೆಂದು +ಕಾಕು ಮಾಡಿ ಪಕಪಕ ನಕ್ಕ. +ನಾವು ಹುಂಬರು ಹೆದರಿ ಫಕ್ಕನೆ ತಕ್ಕೈಸಿದೆವು. +ತಪ್ಪು ಮಾಡಿದೆವೆಂದು ಒಪ್ಪೊಕೋ ಎಂದು +ಗಕ್ಕನೆ ಹಿಡಿದ. +ಒದರುವ ನಮ್ಮ ಬಾಯಿ ಕಿತ್ತ +ಖೆಕ್ಕರಿಸುವ ಕಣ್ಣು ಕಿತ್ತ +ಒದ್ದಾಡುವ ನರ ಕಿತ್ತ +ಕಿತ್ತು ಒತ್ತೊತ್ತಿ ಹಿಸುಕಿದ; +ಕಚಪಚ ತುಳಿದು ತೆಳ್ಳಗೆ ಕಾಗದ ಮಾಡಿದ. +ತನ್ನ ಗಂಜಲದಿಂದ ಥರಾವರಿ ನೋಟುಗಳ +ಚಿತ್ರ ಬರೆದು +ಅಚಿತ್ರೋ ವಿಚಿತ್ರ +ಪೋಸ್ಟರ್ ಮಾಡಿ +ಎತ್ತರದ ಗೋಡೆಗಂಟಿಸಿದ. +ಮಳೆಗಾಳಿ ಬೀಸಿ, ಪೋಸ್ಟರಿನ ಅಂಚು ಹರಿದಾಗ +ಆಗೀಗ ನಮ್ಮೊಳಗಿನ ಹಳದಿ ಆತ್ಮ +ಕಾಣಿಸಿಕೊಳ್ಳುವುದುಂಟು, ಕಳೆದ ಸೂರ್ಯನ್ನ +ಹುಡುಕುವುದುಂಟು. +ಗೋಡೆಯಂಚಿನ ಕಪ್ಪು ಕಿಟಿಕಿಗಪ್ಪಳಿಸಿ +ತಡಕಾಡುವುದುಂಟು ಉಸಿರಿಗಾಗಿ. ಆಗ ಆ ಧಡೂತಿ ಸಿಟಿಯವ +ಬಂದು ತಿರುಗಾ ನಮ್ಮ ಅಂಟಿಸುವ. +ಮತ್ತೆ ಮಳೆಗಾಳಿ ಬಂದೀತಂತ +ಕಾಯುತ್ತ ಕಾಯುತ್ತ, +ಕಾಯುತ್ತೇವೆ. +***** +ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […] +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […] +೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_466.txt b/Kannada Sahitya/article_466.txt new file mode 100644 index 0000000000000000000000000000000000000000..47a92b0c4ae74e26eb8909313268b02b8faf807e --- /dev/null +++ b/Kannada Sahitya/article_466.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಾಯ ಶ್ರೀಮುಖ ಕಂಡು ಮನವು ನೆಮ್ಮದಿಗೊಂಡು +ಎದೆ ಹಿಗ್ಗಿ ಸಂತಸದಿ ಹಾಡುತಿಹುದು; +ಅವಳ ಕರುಣೆಯ ಕೊಂಡು ವಾತ್ಸಲ್ಯ ಸವಿಯುಂಡು +ಮಮತೆಯಲಿ ಅದನಿದನು ಬೇಡುತಿಹುದು. +ಇಲ್ಲಿ ಎದಗುದಿಯಿಲ್ಲ ಕವಡುಗಂಟಕವಿಲ್ಲ +ಭಾವ ಪಾವನ, ಲಾಲಿ ಹಾಲಿನೊಡಲು; +ಅಕ್ಕರದಿ ಮೈದಡವಿ ತಕ್ಕೈಸಿ ಮುದಗೊಂಡು +ಹದುಳದಲಿ ಹರಸುತಿಹ ತಾಯ ಮಡಿಲು. +ತಪ್ಪಿರಲಿ ಒಪ್ಪಿರಲಿ ಸೆರಗಿನಲಿ ಮುಚ್ಚಿ, +ದುಗುಡವಿರೆ ನಗೆಯ ಬೆಳದಿಂಗಳವ ಹೊಚ್ಚಿ, +ಕಂಟಕವ ದೂರಿಟ್ಟು ಸಂತವಿಸಿ ಕಾಯೆ, +ಎಂಟೆದೆಯ ಬಂಟನಾಗುವ ತೆರದಿ ತಾಯೆ! +***** +ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […] +ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […] +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_467.txt b/Kannada Sahitya/article_467.txt new file mode 100644 index 0000000000000000000000000000000000000000..81973e7dc8d64fa3e9c783f008cfbf6d1c0c0359 --- /dev/null +++ b/Kannada Sahitya/article_467.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ ಊದು ದಾಸಯ್ಯ ನನ್ನ ಬಾಲಕ್ಕೆ ಇನ್ನಷ್ಟು ಶಂಖ ” ಎಂಬಂತೆ ಕಸಕಡ್ಡಿಗಳನ್ನು ಹರಿಯುತ್ತಲೆ ಇತ್ತು-ಅತ್ತ ಕಡಲತ್ತ. +ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು, ಪಕ್ಕದಲ್ಲಿ ಬೂದಿಯ ಗೆರಟೆಯನ್ನಿರಿಸಿಕೊಂಡು ಹೊಳೆಯ ‘ಗುಣವಾಚನ’ಕ್ಕೆ ತೊಡಗಿದ್ದಳು. ಹೊಳೆಯುವ ಹೊಳೆಯ ಮೈಗೆ ಆ ಪರಿಯ ಬೈಗಳ ಪೆಟ್ಟು ತಗಲುತ್ತಿದ್ದಂತೆ, ಅದರ ದಡದಲ್ಲಿ ನಿಂತು ಮರಿಮೀನುಗಳ ತಪಾಸಣೆಯಲ್ಲಿದ್ದ ಅಸಂಖ್ಯ ಕೊಕ್ಕರೆ-ಕೊಂಗ್ರು-ಮಿಂಚುಳ್ಳಿಗಳೆಲ್ಲ ಆಕೆಯ ಬೈಗಳ ಪಾಲು ತಮಗೆಂದೂ ಬೆಡವೆಂಬಂತೆ ಸರ್ರನೆ ಆಚೆ ದಡಕ್ಕೆ ತಟ್ಟನೆ ಹಾರಿ ಹೋದವು. +ಆ ಹೊಳೆಯೇನು ಬೇಕು ಬೇಕೆಂದೇ ಚಿನ್ನಮ್ಮನ ಕುಟುಂಬಕ್ಕೆ ಅಂತಹ ಅಪವಾದಜನ್ನು ಎಳೆದು ತಂದುಹಾಕಿದೆಯೆ? ಅದಕ್ಕೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ-ವಾತ್ಸಲ್ಯ, ಕಾಳಜಿ, ಅನುಕಂಪವಿಲ್ಲ! ಇಲ್ಲದಿದ್ದಲ್ಲಿ ಆ ಹೊಳೆ ಯಾಕಾಗಿ ಚಿನ್ನಮ್ಮನ ಗಂಡ ಕುದುಪನ ಗಾಳದ ಬಾಯಿಗೆ ಅಂತಹ ಹೊಡೆಯುವ ಮಳೆಗಾಲದಲ್ಲೂ ದಿನವೂ ಒಂದಷ್ಟು ತರುಮೀನುಗಳನ್ನು ಸಿಲುಕಿಸಬೇಕು! ಹಾಗೇ… ತಾನು ಹರಿದು ಬರುವಾಗಲೆಲ್ಲಾ ತನ್ನ ಸೆರಗಂಚಿನಲ್ಲಿರುವ ತೋಟಗಳಿಂದ ಆಗಾಗ್ಗೆ ಅಷ್ಟಿಷ್ಟು ತೆಂಗಿನಕಾಯಿ-ಸೌದೆ ಕಟ್ಟಿಗೆಗಳನ್ನು ತಂದು ಕುದುಪನ ದಿಟ್ಟಿಗೆ ಅವನ್ನೆಲ್ಲ ಬೀಳಿಸುತ್ತಿಲ್ಲವೆ! ಆಟಿ-ಸೋಣ ಕಾಲದ ಮಳೆಗಾಲದಲ್ಲಂತೂ ಕೇಳುವುದೇ ಬೇಡ. ಅಲ್ಲಿ ಇಲ್ಲಿಂದ ಪಾತ್ರೆ-ಪಗಡಿ, ಸೌದೆ-ಕಟ್ಟಿಗೆ, ಕೋಳಿ-ಕುರಿ, ಏಣಿ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತು ತಂದು ಚಿನ್ನಮ್ಮ-ಕುದುಪರ ಮಡಿಲಿಗೆ ಸುರಿಯುವುದು ಮಾಮೂಲು. ಚಿನ್ನಮ್ಮನ ಜೊತೆ ಆ ಹೊಳೆಗೆ ಇಷ್ಟೊಂದು ಒಡನಾಟವಿದ್ದರೂ, ಮೊನ್ನೆಯ ಶ್ರಾವಣ ಮಾಸದ ನಾಕರಂದು ಇದೇ ಹೊಳೆ ಆಕೆಯ ಕುಟುಂಬದ ಮೇಲೆ ದೊಡ್ಡ ಅಪವಾದವೊಂದನ್ನು ಹೊರಿಸಿ ಇಡೀಯ ಕುಟುಂಬದ ಉಗ್ರಕೋಪ-ಅಸಹನೆಗೆ ಬಲಿಯಾಗಬೇಕಾಯಿತು. +ಆದದ್ದಿಷ್ಟೆ, ಕಳೆದ ಶ್ರಾವಣ ಮಾಸದ ನಾಕನೇ ದಿನ ಚಿನ್ನಮ್ಮನ ಏಕೈಕ ಮಗ ಗುಡ್ಡ, ಆ ಪರಿಯಲ್ಲಿ ತುಂಬಿ ಹರಿಯುತ್ತಿದ್ದ ಶಾಂಭವಿ ಹೊಳೆಯ ದಡದಲ್ಲಿ ಕೂತು, ಧಣಿ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ. ಆಷಾಡ-ಶ್ರಾವಣ-ಭಾದ್ರಪದ ಮಾಸದಲ್ಲಿ ನದಿಯ ಒಡಲೆಂದರೆ ಎಂಥದ್ದು!ಕಾವಿಗೆ ಕೂತ ಹೇಂಟೆಯಂತೆ-ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ದ. ಹತ್ತಿರ ಬಂದವರನ್ನು ಕುಕ್ಕಿ ಮುಕ್ಕುವ ಸಿಡುಕು. ಹುಟ್ಟುವ ಘಟ್ಟದಲ್ಲಿ ಆ ಹೊಳೆಯ ದೇಹ-ಒಡಲು ಮನಸ್ಸು ಪ್ರಫುಲ್ಲ, ಶಾಂತ, ನಿರ್ಮಲವಾಗಿದ್ದರೂ ಅದು ಸಾಗಿ ಬರುವ ದಾರಿಯದ್ದೇನು ಸುಲಭದ್ದೇ.ಕಡಲ ಸಂಗಮಕ್ಕಾಗಿ ರಭಸದಿಂದ ಹಾತೊರೆದು ಬರುವಾಗ ದಾರಿಯಲ್ಲಿ ತುಂಬಿ ಹರಿವ ಅನೇಕ ಕೆರೆ ತೋಡು ಹಳ್ಳ ಕೊಳ್ಳಗಳ್ಳನ್ನು ತನ್ನೊಡಲೊಳಗೆ ಬಾಚಿಕೊಂಡು ಸಾಗಿ ಬರಬೇಕಲ್ಲವೆ! ಇಂತಹ ವಿಕ್ಷಿಪ್ತ ಮನಸ್ಥಿತಿ, ಪರಿಸ್ಥಿತಿಯಲ್ಲಿ ಆ ಶಾಂಭವಿ ಹೊಳೆ ಇರಬೇಕಾದರೆ, ಚಿನ್ನಮ್ಮನ ಮಗ ಎಂಟು ವರ್ಷದ ಗುಡ್ಡ, ಧಣಿಗಳ ಮುಸರೆ ಪಾತ್ರೆಯಲ್ಲಿ ಮರಿಮೀನುಗಳನ್ನು ಹಿಡಿಯುವ ಆಟವನ್ನಾಡುತ್ತ… ತನ್ನದೆ ಲೋಕದಲ್ಲಿ ವಿಹರಿಸುತ್ತಾ ಪಾತ್ರೆ ಉಜ್ಜುತ್ತಿದ್ದ. +ನಿಜಕ್ಕೂ ಧಣಿ ವೆಂಕಪ್ಪಯ್ಯನವರ ಮಾತಿನಂತೆ ಹೇಳುವುದಾದರೆ ಗುಡ್ಡ ಪಾತ್ರೆ ಉಜ್ಜುತ್ತಿದ್ದುದು ಹೊಳೆಯ ಸೆರಗಲ್ಲಿ ಅಲ್ಲವೇ ಅಲ್ಲ, ಆತ ಉಜ್ಜುತ್ತಿದ್ದುದು ವೆಂಕಪ್ಪಯ್ಯನವರ ತೆಂಗಿನ ತೋಟದ ಅಂಚಿನಲ್ಲಿ. ಮಳೆಗಾಲದಲ್ಲಿ ಆ ಹೊಳೆ ಆಡಿದ್ದೇ ಆಟ, ಹೂಡಿದ್ದೇ ಹೂಟ. ‘ ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ…, ಎಷ್ಟಗಲ ಸೆರಗು ಹಾಸಿಯಾದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ…’ ಎಂದು ಧಣಿಗಳು ಯಾವತ್ತೂ ಹೊಳೆಯನ್ನು ಮೂದಲಿಸುವುದು ಇದ್ದೇ ಇದೆ. ಹೊಳೆಗೂ ಬಾಯೇನಾದರೂ ಬರುತ್ತಿದ್ದರೆ ‘ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ-ಉಗ್ರಾಣಿಯನ್ನಾದರೂ ಕರೆತಂದು ನನ್ನೆದುರು ಸರಪಳಿ ಎಳೆಸು. ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ…’ ಎಂದು ಮರುತ್ತರ ಕೊಡುತ್ತಿತ್ತೇನೋ! ಬಾಯಿ ಇಲ್ಲದಿದ್ದರೇನಂತೆ… ಮಳೆಗಾಲ ಬಂದೊಡನೆ ಬರಿ ಕ್ರಿಯೆಯಲ್ಲಿಯೇ ತನ್ನ ವ್ಯಾಪ್ತಿ, ತನ್ನ ಪರಿವಾರ, ತನ್ನ ಬಲ ಎಷ್ಟೆಂಬುದ್ದನ್ನು ಧಣಿಗಳಿಗೆ ಮನವರಿಕೆ ಮಾಡಿ ಅವರಿಗೆ ಕಿರಿಕಿರಿ ಎಬ್ಬಿಸುವುದರಲ್ಲಿ ಹೊಳೆಯೇನು ಹಿಂದೆ ಬಿದ್ದಿಲ್ಲ. ಹೊಳೆಯ ಈ ಉಪಟಳ ತಾಳಲಾರದೆ ಧಣಿಯವರು ಪ್ರತಿ ವರ್ಷವೂ ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಒಂದಷ್ಟು ಅತ್ಲಾಗೆ ದೂಡುವಂತೆ ಪಾದೆಕಲ್ಲು-ಮುರುಕಲ್ಲಿನ ಗಟ್ಟಿ, ಅಡಿಪಂಚಾಂಗ ಹಾಕಿಸಿ ನದಿಯ ಸೆರಗಿಗೂ ತೋಟಕ್ಕೂ ನಡುವೆ ದರೆ ಎಬ್ಬಿಸಿ ಎತ್ತರಿಸುವುದಿದೆ. ಈ ವರ್ಷ ಹೊಳೆಯ ಮೈಯಿಂದ ತೋತವನ್ನು ನಾಕಡಿ ಎತ್ತರಿಸಿದ್ದರೆ, ಮುಂದಿನ ವರ್ಷ ಐದಡಿ ಎತ್ತರಿಕೆ. ಆದರೆ ಈ ಬಿರಿಬೇಸಿಗೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ಹೊಳೆಯಂತೂ ತನ್ನ ನಿಶ್ಯಕ್ತ ಸ್ಥಿತಿಯಲ್ಲಿ ಧಣಿಗಳ ಆ ಕೃತ್ಯವನ್ನು ಕಂಡೂ ಕಾಣದಂತಿದ್ದು ‘ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ….?’ ಎಂದು ಧಣಿಯವರ ಪೆದ್ದುತನದ ಬಗ್ಗೆ ಮನಸ್ಸಲ್ಲೇ ನಗುತ್ತಾ ಆ ದರೆಯನ್ನು ಕೆಡವಲು ಹೊಂಚುಹಾಕುತ್ತಿರುತ್ತದೆ. ಅನಾದಿ ಕಾಲದಿಂದಲೂ ಅಲ್ಲೇ ಇರುವ ಹೊಳೆಗೇನು ತಿಳಿದಿಲ್ಲವೆ. ಇವ ಧನಿಕ ಮಹಾಶಯ ತನ್ನ ಸೆರಗನ್ನೇ ಒತ್ತರಿಸಿಕೊಂಡು ತೋಟಮಾಡಿದ್ದಾನೆ ಎನ್ನುವ ಸತ್ಯ. ಅಂತು ಮಳೆಗಾಲ ಕಾಲಿಟ್ಟು, ಅಟಿ ತಿಂಗಳ ನಾಲ್ಕು ಜಡಿಮಳೆ ಹೊಡೆದರೆ ಸಾಕು ದಣಿಗಳು ಕಟ್ಟಿದ ದರೆ ಬುಡದಿಂದಲೇ ಲಯ. ಹೊಳೆ ತಟ್ಟನೆ ಧಣಿಯವರ ತೋಟದೊಳಗೆ ನುಗ್ಗಿ ಅದನ್ನಿಡೀ ಕಡಲು ಮಾಡಿ ಸೇಡು ತೀರಿಸಿಕೊಳ್ಳುತ್ತದೆ. +ಹೀಗೆ ಧಣಿ ಹಾಗೂ ಹೊಳೆಯ ನಡುವೆ ಇನ್ನೂ ಸಮರ ನಡೆಯುತ್ತಿದ್ದ ಆ ಶ್ರಾವಣಮಾಸದ ಮುಂಜಾನೆ, ಬಾಲಕ ಗುಡ್ಡ ತೋಟದ ಅಂಚಲ್ಲಿ ಕೂತು ಬೂದಿಯಿಂದ ತಿಕ್ಕಿದ ಪಾತ್ರೆಗಳನ್ನು ಹೊಳೆಯ ನೀರಲ್ಲಿ ಜಾಲಾಡಿಸುತ್ತಿದ್ದ. ಹೊಳೆಯ ನೀರು ವಾರಗಟ್ಟಲೆ ಅಲ್ಲೇ ನಿಂತು ಧಣಿಗಳ ತೋಟದ ಅಂಚು ತುಳುವ ಹಲಸಿನಂತೆ ಮೆತ್ತಗಾಗಿದೆ ಎಂಬುದು ಆ ಪುಟ್ತ ಬಾಲಕನಿಗೆ ಅದೇಗೆ ತಿಳಿದೀತು? ಹಿಂದಿನ ದಿನ ರಾತ್ರಿ ಊರ ವಿಷ್ಣುಮೂರ್ತಿ ದೇವಳದಲ್ಲಿ ನಡೆದ ಹರಿಕಥಾ ಕಾಲಕ್ಷೇಪದಲ್ಲಿ ಹರಿದಾಸರು ಹೇಳಿರುವ ಉಪಕತೆಗಳನ್ನು ನೆನೆಸಿಕೊಂಡೇ ನಗುತ್ತಾ ಪಾತ್ರೆ ಬೆಳಗುತ್ತಿದ್ದ ಆ ಬಾಲನಿಗೆ ಕಾಲಡಿಯ ಮನ್ಣು ಕುಸಿಯಬಹುದೆನ್ನುವ ಅಂದಾಜು ಇಲ್ಲ….ಪರಿಜ್ಞಾನವೂ ಇಲ್ಲ. ಕಾಲಡಿಯ ಮಣ್ಣು ಮೆಲುವಾಗಿ ಕುಸಿದು ಹೊಳೆಗೆ ಜಾರಿತು! ಕ್ಷಣಮಾತ್ರದಲ್ಲಿ ಗುಡ್ಡನ ಜತೆ ಧಣಿಗಳ ಮನೆಯ ಪಾತ್ರೆ, ಸೌಟು, ಕೊಳಗ, ತಪ್ಪಲೆಗಳೆಲ್ಲವೂ ನೀರು ಪಾಲಾದವು! ಗುಡ್ಡನೇನು ಸಾಮಾನ್ಯ ಪೋರನೆ? ಆತನ ಈಜಿಗೆ ಮೀನುಗಳೇ ನಾಚಬೇಕು. ಈಜಿ ಮೇಲೆ ಬಂದವ ನೇರ ಧಾವಿಸಿದ್ದು ಅಪ್ಪ ಕುದುಪನತ್ತ. ಧಣಿಗಳ ತೋಟದಲ್ಲಿ ತೆಂಗಿನಬುಡ ಬಿಡಿಸುವ ಕಾಯಕದಲ್ಲಿ ಮಗ್ನನಾಗಿದ್ದ ಕುದುಪನಿಗೆ ಮಗನ ಮಾತು ಕೇಳಿ ಎದೆ ಬಡಿತ ಸ್ತಬ್ಧಗೊಂಡಂತಾಯಿತು. ಬಂದು ನೋಡುತ್ತಾನೇನು! ಮುಸುರೆ ಪಾತ್ರೆಗಳೆಲ್ಲವೂ ಹೊಳೆಯ ಪಾಲಾಗಿವೆ. ಧಣಿಗಳಿಗೇನಾದರೂ ಈ ಸುದ್ದಿ ತಲುಪಿದರೆ, ಅವರ ಸಿಟ್ಟಿನ ಭರಕ್ಕೆ ತಾವೆಲ್ಲರೂ ಹೊಳೆಪಾಲಾಗುವುದು ಖಂಡಿತ ಎಂದು ಆಲೋಚಿಸಿದವನೆ ತಟ್ಟನೆ ಮೈಯ ಬಟ್ಟೆ ಬರೆಗಳನ್ನೆಲ್ಲ ಜಾರಿಸಿ ಅತ್ತೆಸೆದು ಕೋಮಣಾಲಂಕೃತನಾಗಿ ಹೊಳೆಯಲ್ಲಿ ಮುಳುಗಿ ನೆಲಕಚ್ಚಿರುವ ಪಾತ್ರೆಗಳಿಗಾಗಿ ಜಾಲಾಡತೊಡಗಿದ್ದ. ಕುಸಿದ ಮಣ್ಣಡಿಯಲ್ಲಿ ಸಿಗುವಷ್ಟು ಪಾತ್ರೆಗಳು ಸಿಕ್ಕವು. ಇನ್ನೆಷ್ಟು ಪಾತ್ರೆಗಳು ಸಿಗಬೇಕು? ಕುದುಪನಿಗೆ ಅಂದಾಜಿಲ್ಲ. ಮುಸುರೆ ಪಾತ್ರೆಗಳ ‘ಒಡೆಯ’ ಮಗನನ್ನು ಕೇಳಿದರೆ ಆತ ತೋರುಬೆರಳುಗಳನ್ನು ಬಾಯೊಳಗಿರಿಸಿಕೊಂಡು ಮೌನಮುದ್ರೆಯಲ್ಲಿದ್ದಾನೆ. ಹೇಗೋಚಡ್ಡಿ ಒದ್ದೆ ನೀರಾಗಿದೆ. ಮತ್ತೊಮ್ಮೆ ತಾನು ಈ ತುಂಬಿದ ಹೊಳೆಯಲ್ಲಿ ಯಾಕೆ ಈಜಬಾರದು? ಅಪ್ಪನಲ್ಲಿ ಕೇಳುವುದೋ….ಬಿಡುವುದೋ ಎಂಬ ಯೋಚನೆಯಲ್ಲಿದ್ದ ಗುಡ್ಡನಲ್ಲಿ- +‘ಏಯ್ ಮೂರ್‍ಕಾಸಿನ ಹಡಬೆ…..ಇಷ್ಟೆನಾ ಪಾತ್ರೆ…..ಇನ್ನ್ಯಾವುದಾದರೂ ಮುಳುಗಿದ್ಯನಾ….?’ +ಅಪ್ಪನ ಪ್ರಶ್ನೆಗೆ ಮಗ ಯೋಚನೆಯ ಕೋಟೆಯಿಂದ ಹೊರಬಂದ. +ಊಹುಂ…. ಮಗ ಗುಡ್ಡನಿಗೆ ಇನ್ಯಾವ ಪಾತ್ರೆಗಳೂ ನೆನಪಿಗೆ ಬರುತ್ತಿಲ್ಲ. ಮಾಮೂಲಾಗಿ ದಿನವೂ ಇರುವಂತಹ ಎರಡು ಕಂಚಿನ ಕೊಳಗ, ಎರಡು ಹಿತ್ತಾಳೆ ಗಿಂಡೆ, ಹತ್ತು ಹಿತ್ತಾಳೆ ಲೋಟ, ಎರಡು ಚೊಂಬು, ಆರು ಮರದ ಸೌಟು, ಎರಡು ಹಿತ್ತಾಳೆ ಸೌಟು, ಹತ್ತು ಕಂಚಿನ ಬಟ್ಟಲು, ಎಂಟು ಹಿತ್ತಾಳೆ ತಟ್ಟೆ, ಒಂದು ಬಾಣಲೆ….ಇವೆಲ್ಲವೂ ಇವೆ. ಮತ್ತ್ಯಾವುದು ಕಾಣಿಸುತ್ತಿಲ್ಲ? ಮಗ ಗುಡ್ಡನಿಗೂ ತಿಳಿಯುತ್ತಿಲ್ಲ, ಅಪ್ಪನಿಗೂ ಅಷ್ಟೆ. ಅಪ್ಪ ಮಗನನ್ನು ಅದೆಷ್ಟು ಕಾಡಿದರೂ, ಬೇಡಿದರೂ ಬಾಲಕ ಗುಡ್ಡನಿಗೆ ಉತ್ತರಿಸಲು ಕಿವಿ ಬಾಯಿ ಏನೂ ತೋಚುತ್ತಿಲ್ಲ. ಧಣಿಯವರ ಒಡತಿ ದಿನವೂ ಹೊರಗೆ ಸುರಿಯುವ ಮುಸುರೆ ಪಾತ್ರೆಗಳನ್ನು ಹೊತ್ತು ತಂದು ಅದನ್ನು ಉಜ್ಜುದಷ್ಟೆ ಆತನ ಕೆಲಸ. ಎಷ್ಟು ಪಾತ್ರೆ…ಯಾವುದು ಏನು ಎತ್ತ ಯಾಕಿಷ್ಟು ಎಂದು ವಿಚಾರಿಸಿದರೆ, ಧಣಿಪತ್ನಿ ಮಜ್ಜಿಗೆ ಕಡೆಯುವ ಕಡಗೋಲಲ್ಲೆ ತಲೆ ಸೀಳಿಬಿಟ್ಟಾರು? +ಅಪ್ಪನ ಕಾಡುವಿಕೆಗೆ ಕೊನೆಗೂ ಯೋಚಿಸಿ ಯೋಚಿಸಿ ಹಣ್ಣಾದ ಗುಡ್ಡನಿಗೆ ತಟ್ಟನೆ ನೆನಪಿಗೆ ಬಂದದ್ದು ಆ ಬೆಳ್ಳಿಲೋಟ. ಮುಂಜಾನೆ ರೇಜಿಗೆ ಹಿಡಿಸುವಷ್ಟು ಬಾರಿ ಧಣಿಪತ್ನಿಯವರು ‘ಈ ಬೆಳ್ಳಿಲೋಟ ಜಾಗ್ರತೆ ಮಾರಾಯ, ನನ್ನ ಮದುವೆಯಲ್ಲಿ ನನ್ನಪ್ಪ ಕೊಟ್ಟಿದ್ದು….ಅಪ್ಪಯ್ಯ ಕುಡ್ಲದ ರಥಬೀದಿಯಲ್ಲಿರುವ ನರಸಿಂಹಾಚಾರಿಯಲ್ಲಿ ಮಾಡಿಸಿದ್ದು. ಅದರ ಮೈಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿ ತಾನೆ ಮಾಡಿಯಾನು…’ ಎಂದು ಹೇಳಿಯೇ ಮುಸುರೆ ಪಾತ್ರೆಯ ಜೊತೆಗೆ ಅದನ್ನೂ ಸೇರಿಸಿ ಇಟ್ಟಿದ್ದನ್ನು ಗುಡ್ಡ ಇದೀಗ ನೆನಪಿಸಿಕೊಂಡ. ಆದರೇನು ಆತ ನೆನಪಿಸಿಕೊಂಡದ್ದೇ ಬಂತು. ಕುದುಪ ಅದೆಷ್ಟು ಬಾರಿ ಹೊಳೆಯೊಳಗೆ ಮುಳುಗಿ ಮೇಲೆದ್ದರೂ ಬೆಳ್ಳಿಲೋಟವನ್ನು ಹೊಳೆ ಬಿಟ್ಟುಕೊಡುತ್ತಿಲ್ಲ. ಅಂತೂ ಬೆಳ್ಳಿಲೋಟ ಹೊಳೆಯ ಒಡಲಿಂದ ಹೊರಬರಲಿಲ್ಲ. ಅಪ್ಪ ಮಗ ಇಬ್ಬರೂ, ಆಗ ತಾನೆ ಅಲ್ಲಿಗೆ ಬಂದ ಚಿನ್ನಮ್ಮನ ಜತೆ ಸೇರಿ ಸಾಕಷ್ಟು ಕಣ್ಣೀರನ್ನು ಹೊಳೆಯ ನೀರಿಗೆ ಸೇರಿಸಿದರೂ ಹೊಳೆಯಿಂದ ಬಂದ ಉತ್ತರ ಒಂದೆ-ಬೆಳ್ಳಿಲೋಟ ಇಲ್ಲ ಎಂಬುದೇ. ಭೂಮಿ ಆಕಾಶ ಒಂದಾಗುವಂತೆ ಮತ್ತೆ ಮಳೆ ಜಡಿಯತೊಡಗಿದಾಗ ಕುದುಪ ಅಸಹಾಯಕನಾಗಿ ಧಣಿಗಳ ಅಂಗಳಕ್ಕೆ ಬಂದು ಬೆಳ್ಳಿಲೋಟದ ವಿಷಯ ತಲಪಿಸಿದ್ದ. ಮಳೆಯ ಆರ್ಭಟದ ಜತೆ ಧಣಿಯರ ಆರ್ಭಟವೂ ಏರಿತು. ಆ ಆರ್ಭಟದ ಜತೆಗೆ ಕುದುಪನ ಕುಟುಂಬವೆ ಬೆಳ್ಲಿಲೋಟವನ್ನು ಲಪಟಾಯಿಸಿದ್ದು ಎಂಬ ಅಪವಾದವೂ ಬೀಸಿಬಂತು. ಕುದುಪ ಧಣಿಗಳ ಕಾಲು ಹಿಡಿದು ನಡೆದ ನಿಜಸ್ಥಿತಿ ವಿವರಿಸಿದರೂ ಅವರು ಒಪ್ಪಲೊಲ್ಲರು. ಧಣಿಯವರು ಎಂದಾದರೂ ಒಕ್ಕಲ ಮಕ್ಕಳನ್ನು ನಂಬಿದ್ದುಂಟೆ? +‘ಇದೆಲ್ಲ ಸಾಕು ಮಾರಾಯ, ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ…’ ಎಂದು ಒಳಮನೆಯ ದಾರಂದಕ್ಕೆ ಆತು ನಿಂತು ಧಣಿಪತ್ನಿಯವರು ಚೀರಿದಾಗ ಕುದಪನ ಬಾಯಿ ಕಟ್ಟಿ ಹೋಗಿತ್ತು. +ಧಣಿಗಳು ಗುಡ್ಡನ ಬಾಯಿ ಬಿಡಿಸಲು ಆತನ ಮೈಮೇಲಿನ ಚರ್ಮ ಸುಲಿಯುವುದೊಂದೇ ಬಾಕಿ. ಅಂಗಳದ ಹೊಂಗಾರೆ ಮರಕ್ಕೆ ಆತನನ್ನು ಬಿಗಿದು ಆ ಮಳೆಯಲ್ಲೇ ತೆಂಗಿನ ಕೊತ್ತಳಿಗೆಯಲ್ಲಿ ಬಡಿದೇ ಬಡಿದರು. ಚಿನ್ನಮ್ಮನಿಗೆ ತನ್ನ ಕರುಳ ಕುಡಿಯ ಚೀರಾಟ ನರಳಾಟ ನೋಡಲಾಗಲಿಲ್ಲ. ತಟ್ಟನೆ ‘ನಮ್ಮ ಊರ ಕೋಡ್ದಬ್ಬು ದೈವದ ಮೇಲೆ ಆಣೆಯಿದೆ….ಇನ್ನು ನನ್ನ ಮಗನ ಮೇಲೆ ಕೈಮಾಡಿದ್ದಲ್ಲಿ…’ ಎಂದು ಅಸಹಾಯಕತನದಿಂದ ಕಿರಿಚುತ್ತ ಧಣಿಗಳ ಕಾಲಿಗಡ್ಡ ಬಿದ್ದು, ತಾನು ಆ ಬೆಳ್ಳೊಲೋಟದ ಹಣವನ್ನು ವರ್ಷಾನುಗಟ್ಟಲೆ ಪಡಿಯಿಲ್ಲದೆ ನಿಮ್ಮಲ್ಲಿ ದುಡಿದು ತೀರಿಸುವೆನೆಂದು ಅಳುತ್ತಾ ಬೇಡಿಕೊಂಡಳು. ಧಣಿಗಳ ಕೈಯಿಂದ ಕೊತ್ತಳಿಗೆ ಕೆಳಗುರುಳಿತು. ಮುಂದಿನ ಮೂರು ಬೇಸಿಗೆ ರಜದವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ-ಎಂಬ ಕರಾರಿನನ್ವಯ ಗುಡ್ಡ ಬಂಧಮುಕ್ತನಾದ. +ಧಣಿಗಳ ಬೆಳ್ಳಿಲೋಟವನ್ನು ಎಂದು ಆ ಹೊಳೆ ನುಂಗಿತ್ತೋ ಅಂದಿನಿಂದ ಚಿನ್ನಮ್ಮ ಒಂಥರಾ ಹುಚ್ಚಳಾಗಿದ್ದಾಳೆ. ಆ ಘಟನೆ ನಡೆದು ಇಂದಿಗೆ ನವಮಾಸಗಳು ಉರುಳಿವೆ. ಬೆಂಕಿಯುಗುಳುವ ವೈಶಾಖ ಮಾಸ ಕಾಲಿಟ್ಟಿದೆ. +ಇಂದು ವೈಶಾಖಮಾಸದ ಮೂರನೇ ದಿನ. ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಅಂಚಿನಲ್ಲಿ ಕೂತು ಪಾತ್ರೆ ತಿಕ್ಕುತ್ತಾ ಹೊಳೆಯ ಮನೆಹಾಳು ಬುದ್ಧಿಯನ್ನು ನಿಂದಿಸುತ್ತಿದ್ದಾಳೆ. ಅಷ್ಟರಲ್ಲಿ ಧಣಿಗಳು ಕುದುಪನ ಜತೆಗೂಡಿ ಬಂದು ಆ ದಿನದ ಕೆಲಸ ಕಾರ್‍ಯಗಳ ಬಗ್ಗೆ ಮಾತೆತ್ತಿದ್ದಾರೆ. ಕುದುಪ ಸೊಂಟದಲ್ಲಿನ ಕರಿದಾರಕ್ಕೆ ಕೋಮಣದ ತುಂಡೊಂದನ್ನು ಸಿಲುಕಿಸಿ, ತಲೆಗೊಂದು ಎಲೆವಸ್ತ್ರ ಬಿಗಿಯುತ್ತಾ ಧಸ್ಣಿಗಳಿಂದ ಉದುರುವ ಮಾತುಗಳನ್ನು ಹೆಕ್ಕಿಕೊಳ್ಳುವ ಭಂಗಿಯಲ್ಲಿ ನಿಂತಿದ್ದಾನೆ. ಕಾದು ಬತ್ತಿರುವ ಹೊಳೆಯಿಂದ ಹೂಳೆತ್ತಿ ತಂದು ತೆಂಗಿನ ತೋಟಕ್ಕೆ ಹಾಕಬೇಕೆಂದು ಧಣಿಗಳು ಕುದುಪನಿಗೆ ಸೂಚನೆ ನೀಡುತ್ತಿದ್ದರು. ಧಣಿಗಳ ಮಾತು ಚಿನ್ನಮ್ಮನ ಕಿವಿಗೂ ತಲುಪುತ್ತಿದೆ. ಆದರೆ ಅದು ತನಗಲ್ಲ ತನ್ನ ಕಿವಿ ಬೀಳಿನ ಬುಗುಡಿಗೆ ಎಂಬಂತೆ ತಾನು ಧಣಿಗಳ ಮನೆಯ ಮುಸುರೆ ಪಾತ್ರೆ ತಿಕ್ಕುತ್ತಾ ಹೊಳೆಯ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತಿದ್ದಳು. +ಚಿನ್ನಮ್ಮ ಕೊನೆಗೂ ಮುಸುರೆ ಕೆಲಸವನ್ನೆಲ್ಲ ಮುಗಿಸಿ ತನ್ನ ಗುಡಿಸಲಲ್ಲಿ ಒಣ ಮೀನಿನ ಚಟ್ನಿಯಲ್ಲಿ ತಂಗಳನ್ನ ಉಂಡು ಬಂದು ಹೂಳು ಹೊರುವ ಕೆಲಸದಲ್ಲಿ ತೊಡಗಿಕೊಂಡಳು. ಸುಡುವ ಸೂರ್‍ಯನಡಿ ಹೂಳೆತ್ತುತ್ತಾ ತಾನು ಕರಟುತ್ತಿರುವಾಗ ತೋಟದ ನೆರಳಲ್ಲಿ ಕುಳಿತು ಧಣಿಯವರು ಕೊಡುವ ಸೂಚನೆಗಳಿಂದ ಚಿನ್ನಮ್ಮನ ಸಿಟ್ಟಿನುರಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತಿತ್ತು. ಚಿನ್ನಮ್ಮ ಅಸಹನೆಯಿಂದ ಕನಲುತ್ತಾ, ನೆತ್ತಿ ಮೇಲೆ ಬೆಂಕಿಯುಗುಳುತ್ತಿದ್ದ ಸೂರ್‍ಯನನ್ನೂ ಧಣಿಯನ್ನೂ ಶಪಿಸುತ್ತಾ ಹೂಳು ಹೊರುತ್ತಿದ್ದಳು. ಕುದುಪ ಹೂಳು ತುಂಬಿ ಕೊಡುತ್ತಿದ್ದ, ಚಿನ್ನಮ್ಮ ಅದನ್ನು ಹೊತ್ತು ತಂದು ತೆಂಗಿನ ಬುಡಕ್ಕೆ ಎಸೆಯುತ್ತಿದ್ದಳು. +ಹೂಳೆತ್ತುವ ಕೆಲಸ ಹಾಗೆಯೇ ಮುಂದುವರೆದಿತ್ತು. ಮೂಳೆ ಮುರಿದು ಹೋಗುವಂಥಹ ಕೆಲಸವದು. ಕುದುಪ ಸುಸ್ತಾದ. ಒಂದರೆಕ್ಷಣ ಅಲ್ಲೇ ನೀರೊಳಗೆ ಕುಸಿದು ಕುಳಿತ. ನೆರಳಲಿದ್ದ ಧಣಿಗಳಿಗೆ ಸಿಟ್ಟಿನಿಂದ ಪಿತ್ತವೇರಿದಂತಾಯ್ತು. ‘ಎದ್ದೇಳೋ ಮೂರ್‍ಕಾಸಿನವ….ಪಡಿ ಅಳೆಯುವಾಗ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರ್‍ತೀಯೇನೋ ನೀನು?’ ಎಂದು ಸಿಡುಕಿದರು. ಚಿನ್ನಮ್ಮನಿಗಂತೂ ಪಡಿಯಿಲ್ಲದ ಈ ದುಡಿತದ ಬಗ್ಗೆ ಇನ್ನಿಲ್ಲದಂತಹ ಅಸಮಧಾನವಿದೆ. ಒಂದೆಡೆ ಕಳ್ಳತನದ ಅಪವಾದ, ಮತ್ತೊಂದೆಡೆ ಕಠಿಣ ಶ್ರಮದ ದುಡಿತಕ್ಕೂ ಬೆವರಿಗೂ ಪ್ರತಿಫಲವಿಲ್ಲ. ಚಿನ್ನಮ್ಮ ತನ್ನ ಭಾರದ ಒಡಲನ್ನು ಕಣ್ಣೀರು ಜಿನುಗಿಸಿಕೊಂಡು ಮೆದುಗೊಳಿಸಿಕೊಂಡಳು. ಕುದುಪ ಧಣಿಯವರ ಸಿಡುಕು ಬೈಗಳಿಗೆ ಬೆದರಿ ಎದ್ದುನಿಂತು ಮತ್ತೆ ಕೆಲಸದಲ್ಲಿ ಮಗ್ನನಾದ. ಗಂಡ ಹೆಂಡಿರಿಬ್ಬರೂ ಹೊಳೆಗೆ ಬೆವರಿನ ಮಳೆ ಸುರಿಸಿದರು. ಕುದುಪನಂತೂ ಆ ಬಿರುಬಿಸಿಲಿನ ಝಳಕ್ಕೆ ಕುಸಿಯುವಂತಾದ. ಆದರೂ ಧಣಿಗಳ ಭಯದಿಂದ ಕುಸಿಯದಾದ. ದೇಹದ ಮೂಲೆಮೂಲೆಗಳಿಂದ ಒಂದಷ್ಟು ತಾಕತ್ತನ್ನು ಸೋಸಿ ತಂದು ಮತ್ತೆ ಬುಟ್ಟಿಗೆ ಹೂಳು ತುಂಬತೊಡಗಿದ. ಬುಟ್ಟಿ ತುಂಬತೊಡಗಿತು…..ಇನ್ನೇನು ಹೂಳು ತುಂಬಿದ್ದ ಬುಟ್ಟಿಯನ್ನು ಚಿನ್ನಮ್ಮನ ತಲೆಗೇರಿಸಬೇಕೆನ್ನುವಷ್ಟರಲ್ಲಿ ನೋಡುತ್ತಾನೇನು! ಅವ ಮೂರ್ಛೆ ಬೀಳುವಂತಾದ. +ನವಮಾಸಗಳ ಕಾಲ ಹೊಳೆಯ ಉದರದಲ್ಲಿ ಅಡಗಿದ್ದ ಧಣಿಗಳ ಬೆಳ್ಳಿಲೋಟದ ಮಂಕುಮೂತಿ ಕಾಣಿಸುತ್ತಿದೆ! ತಾನೀ ದಂಪತಿಗಳನ್ನು ಅಪವಾದದ ಕುಣಿಕೆಯೊಳಗೆ ಸಿಲುಕಿಸಿ ನದಿಯ ಉದರದಲ್ಲಿ ಅಡಗಿಕೊಂಡೆನಲ್ಲಾ-ಎಂಬ ಪಶ್ಚಾತ್ತಪದಲ್ಲದು ಮುಖ ಮರೆಮಾಡಿಕೊಂಡಿದೆಯೇನೋ ಎಂಬಂತೆ ಕೆಸರೊಳಗೆ ದೇಹ ಹುದುಗಿಸಿಕೊಂಡಿದ್ದ ಬೆಳ್ಳಿಲೋಟವನ್ನು ಕುದುಪ ನಿಧಾನಕ್ಕೆ ಬುಟ್ಟಿಯಿಂದ ಹೊರಗೆಳೆದ. ಇನ್ನೂ ಸೂತಕ ಕಳೆಯ ಹಸಿ ಮಗುವನ್ನು ಮೀಯಿಸುವಂತೆ ನಿಧಾನಕ್ಕೆ ಹೊಳೆಯ ನೀರಲ್ಲಿ ಆ ಬೆಳ್ಳಿಲೋಟವನ್ನು ತೊಳೆಯತೊಡಗಿದ. ಈ ಲೋಟದಿಂದಾಗಿ ತಾನೆಷ್ಟು ಅಪಮಾನದ ಮಾತುಗಳನ್ನು ಆ ಧಣಿಪತ್ನಿಯವರ ಕೊಳಕು ಬಾಯಿಂದ ಕೇಳಿಬಿಟ್ಟೆ…ಎಂದು ಕುದುಪ ಹನಿಗಣ್ಣಾಗಿಯೇ ಆ ಲೋಟವನ್ನು ತೊಳೆದ. ಹೊಳೆಯ ಹೂಳೊಳಗೆ ಅವಿತು ತನ್ನ ಬಣ್ಣ-ಗಾಂಭೀರ್‍ಯ ಕಳೆದುಕೊಂಡಂತಿದ್ದ ಬೆಳ್ಳಿಲೋಟಕ್ಕೆ ಇದೀಗ ಕುದುಪನಿಂದಾಗಿ ಜೀವ ಬಂದಂತಾಯ್ತು. +ತೋಟದಂಚಿನ ನೆರೆಳಲ್ಲಿ ಕುಳಿತು ಒಕ್ಕಲ ಮಕ್ಕಳ ಬೆವರಧಾರೆಯನ್ನೇ ದಿಟ್ಟಿಸುತ್ತಿದ್ದ ಧಣಿಗಳನ್ನು ಬೆಳ್ಳಿಲೋಟವು ಗಮನಿಸಿತು. ಧಣಿಗಳ ಮಾತ್ರ ಆ ಲೋಟವನ್ನು ಗಮನಿಸುವಂತಿರಲಿಲ್ಲ. ಅವರು ಚಿನ್ನಮ್ಮನ ಹಣೆಯಿಂದ ಕುಂಕುಮದೊಂದಿಗೆ ಕೆಳಗಿಳಿಯುತ್ತಿದ್ದ ಬೆವರಿನ ದಾರಿಯನ್ನೆ ಗಮನಿಸುತ್ತಿದ್ದರು. ಕುದುಪ ಹೂಳು ತುಂಬಿದ ಬುಟ್ಟಿಯನ್ನೆತ್ತಿ ಚಿನ್ನಮ್ಮನ ತಲೆಗೇರಿಸದೆ ನೀರೊಳಗೇ ನಿಂತು….ಕೂತು ಕಾಲ ಕಳೆಯುವ ಇನ್ನೇನೋ ಮಸಲತ್ತು ನಡೆಸುತ್ತಿರುವುದನ್ನು ಕಂಡು ಧಣಿಗಳು ಮತ್ತೆ ಸಿಟ್ಟಾದರು. ಆದರೂ ಇದೇನೊ ಹೊಸ ಮಸಲತ್ತು ಇರಬೇಕೆಂದು ಕಣ್ಣು ಕಿರಿದುಗೊಳಿಸಿ ಆತನತ್ತಲೇ ದಿಟ್ಟ ನೆಟ್ಟರು. +ಕುದುಪ ಯಾವುದೋ ಒಂದು ಕುಲಗೆಟ್ಟ ಲೋಟವನ್ನು ನೀರೊಳಗೆ ಅದ್ದಿ ತೆಗೆದು ಮಣಗಟ್ಟಲೆ ಕೊಳೆಗತ್ಟಿದ್ದ ತನ್ನ ಎಲೆವಸ್ತ್ರದಲ್ಲಿ ಒರೆಸಿ ಚಿನ್ನಮ್ಮನ ಕೈಗೆ ಕೊಡುವುದನ್ನು ಧಣಿಗಳು ಮೌನವಾಗಿಯೇ ದಿಟ್ಟಿಸಿದರು. ಮಾನಗೆಟ್ಟ ಈ ಹುಚ್ಚು ಹೊಳೆ ಯಾವುದೋ ಮಳೆಗಾಲದಲ್ಲಿ ಯಾರದ್ದೋ ಮನೆ, ಮಠ ಮುಳುಗಿಸಿ ಹೊತ್ತು ತಂದಿರುವ ಲೋಟವಿರಬೇಕದು ಎಂದು ಯೋಚಿಸಿದ ಧಣಿಗಳು, ಆ ಹಾಳು ಲೋಟದ ಜಗತ್ತಲ್ಲೆ ಮುಳುಗಿಹೋದ ಗಂಡಹೆಂಡಿರ ಚಲನವಲನವನ್ನು ಕಿರಿದು ಕಣ್ಣಿಂದ ಮತ್ತಷ್ಟು ಗಮನಿಸತೊಡಗಿದರು. ನಿಧಾನಕ್ಕೆ ಕೂತಲಿಂದ ಎದ್ದುಬಂದರು. +ಹಾಗೇ ಸದ್ದಿಲ್ಲದೆ ಬಂದ ಧಣಿಗಳು ನೆರಳಲ್ಲೇ ನಿಂತು ತನ್ನೆದುರು ನಡೆಯುತ್ತಿದ್ದ ‘ವ್ಯಾಪಾರ’ವನ್ನು ಕಿರುಗಣ್ಣಿನಿಂದ ಗಮನಿಸುತ್ತಿದ್ದಂತೆ ಅವರ ಎದೆ ಬಡಿತದ ಲಯ ತಪ್ಪತೊಡಗಿತು. ಅವರ ಒಡಲ ಸಮಸ್ತ ವ್ಯವಹಾರಗಳು ಒಂದರೆ ಗಳಿಗೆ ಸ್ತಬ್ಧಗೊಂಡಂತಾಯ್ತು! ಚಿನ್ನಮ್ಮ ತನ್ನ ಕೈಯಲ್ಲಿದ್ದ ಲೋಟ ತಿರುಗಿಸುತ್ತಿದ್ದಂತೆ ಅವರನ್ನೇ ಆಕೆ ತಿರುಗಿಸಿದಂತಾಯ್ತು! ಕಂಠದಲ್ಲಿ ಬಳ್ಳಿ ಬಿಟ್ಟ ಆ ಬೆಳ್ಳಿಲೋಟ ಧಣಿಯವರಿಗೆ ನಿಧಾನಕ್ಕೆ ತನ್ನ ಪರಿಚಯ ಮಾಡಿಸತೊಡಗಿತ್ತು. ಹೌದು! ಅದೇ ಬೆಳ್ಳಿಲೋಟ. ಅದರ ಕಂಠ ಏಳು ಎಸಳುಗಳ ದೊಡ್ಡ ಹೂವಿನಂತಿದೆ. ಧಣಿಗಳಿಗೆ ಲೋಟದ ಪರಿಚಯ ಪೂರ್ಣವಾಯ್ತು. ಎಷ್ಟೆಂದರೂ ಕಳೆದ ನಲವತ್ತು ವಸಂತಗಳಿಂದ ಆ ಬೆಳ್ಳಿಲೋಟ ಧಣಿಗಳ ಒಡನಾಟದಲ್ಲಿರಲಿಲ್ಲವೆ! ಧಣಿಗಳ ದಾಂಪತ್ಯ ಜೀವನದ ಎಲ್ಲ ಪ್ರಮುಖ ಹಂತಗಳಲ್ಲೂ ಅದು ಮೂಕಸಾಕ್ಷಿಯಾಗಿರಲಿಲ್ಲವೆ? +ಧಣಿಗಳು ಆ ಬೆಳ್ಳಿಲೋಟವನ್ನೇ ದಿಟ್ಟಿಸಿದರು. ಚಿನ್ನಮ್ಮಳೂ ಲೋಟವನ್ನು ಹಾಗೇ ತಿರುಗಿಸಿ ನೋಡುತ್ತಲೇ ಅದರ ಪರಿಚಯ ಮಾಡಿಕೊಂಡಳು. ಆಕೆಯೂ ಆ ಬೆಳ್ಳಿಲೋಟವನ್ನು ಅದೆಷ್ಟು ಬಾರಿ ನೊರೆಕಾಯಿಯಿಂದ ಮೀಯಿಸಿಲ್ಲ. ಹಾಗೆ ಮೀಯಿಸುವಾಗಲೆಲ್ಲ ಅದರ ಮೈಮೇಲೆ ಬಿಟ್ಟಿರುವ ಬಳ್ಳಿಯ ಚಂದವನ್ನು ಅದೆಷ್ಟು ಬಾರಿ ಧಣಿಪತ್ನಿಯವರಲ್ಲಿ ಹೊಗಳಿಲ್ಲ. ಹೌದು, ಅದೇ….ಕಂಠದಲ್ಲೆಲ್ಲ ಬಳ್ಳಿ ಬಿಟ್ಟ ಚಂದದ ಲೋಟ! ಚಿನ್ನಮ್ಮನಿಗೆ ಆ ಲೋಟವನ್ನು ಅದೆಷ್ಟು ನೋಡಿದರೂ ಸಾಲದು. ಧಣಿಗಳಿಗೆ ಕಾಣುವಂತೇ ಎತ್ತರಿಸಿ ಹಿಡಿದು ನೋಡಿಯೇ ನೋಡಿದಳು. +ಕುದುಪನೂ ಆ ಬೆಳ್ಳೊಲೋಟವನ್ನೇ ಗಮನಿಸುತ್ತಿದ್ದ. ಆತನಿಗಂತೂ ಆ ಲೋಟದ ದರ್ಶನವಾದೊಡನೆ ಬಿಸಿಲಿನಿಂದ ಜೀವ ಕಳೆದುಕೊಂಡಂತಿದ್ದ ದೇಹಕ್ಕೆ ಮತ್ತಷ್ಟು ಹೊಸ ಚೈತನ್ಯ ಬಂದಂತಾಗಿತ್ತು. ನೆತ್ತಿ ಮೇಲೆ ಬಿಸಿಲು ಕಾರುತ್ತಿರುವ ಸೂರ್‍ಯ ಇನ್ನಷ್ಟು ಬೇಕಿದ್ದರೆ ಕಾರಲಿ….ಎಂಬ ಉಢಾಫೆಯೂ ಆತನಲ್ಲಿ ಮೈತಳೆದು ಬಂದಂತಿತ್ತು. ಆತ ಚಿನ್ನಮ್ಮನ ಕೈಲಿದ್ದ ಬೆಳ್ಳಿಲೋಟವನ್ನೊಮ್ಮೆ ಧಣಿಯವರ ಪರಿಧಿಗೆ ಒಪ್ಪಿಸಲು ಕಾತುರನಾಗಿ ಆ ಲೋಟ ಚಿನ್ನಮ್ಮನಿಂದ ತನ್ನ ಕೈಗೆ ಹಸ್ತಾಂತರಗೊಳ್ಳುವ ಕ್ಷಣಕ್ಕಾಗಿ ಕಾಯುತ್ತಿದ್ದ. +ಹಾಗೆ ಕಾಯುವ ಪ್ರತೀಕ್ಷಣವೂ ಆತನಿಗೆ ಅತೀ ದೀರ್ಘವಾಗಿ ಪರಿಣಮಿಸತೊಡಗಿತ್ತು. ಕ್ಷಣಕ್ಷಣಕ್ಕೂ ಆತನ ಚಡಪಡಿಕೆ ಏರುತ್ತಿದ್ದರೂ ಆ ಬಗ್ಗೆ ಚಿನ್ನಮ್ಮನಿಗೆ ಲಕ್ಷ್ಯವಿಲ್ಲ. ಲೋಟದ ಚಂದವನ್ನು‌ಉ‌ಉ ಆಕೆ ಮತ್ತೆ ಮತ್ತೆ ತಿರುಗಿಸಿ ನೋಡುತ್ತಿದ್ದಂತೆ….ಆಕೆಯ ಒಡಲಲ್ಲೂ ಅದೆಷ್ಟೊ ಭಾವನೆಗಳು ಗಿರಕಿ ಹೊಡೆಯತೊಡಗಿದ್ದವು. ಇದೇ ಲೋಟವಲ್ಲವೆ….ತನ್ನ ಬೆವರಿನ ಸೆಲೆ ಕಳೆದದ್ದು. ಕಳ್ಳತನದ ಕಿರೀಟವನ್ನು ತನ್ನ ಮುರುಕಲ ಗುಡಿಸಲ ಚಾವಣಿಗೆ ಜೋಡಿಸಿದ್ದು! ಥೂ! ಬೆಳ್ಳಿಯದ್ದಾದರೇನಂತೆ….ಬುದ್ಧಿ ಮಣ್ಣಿಗಿಂತಲೂ ಬುರ್ನಾಸು, ಮೂರ್‍ಕಾಸಿನದ್ದು! ಪಟ್ಟದ ಮೇಲಿನ ಕತ್ತಿಗೆ ಚಟ್ಟದಲ್ಲಿರುವವನ ಮೇಲೆ ದಿಟ್ಟಿ ಎಂದಿಗೂ ಸಲ್ಲ. ಜಾತಿಹಾವಿಗ್ಯಾಕೆ ಎರೆಹುಳದಂತೆ ಕೆಸರು ಕೆದಕುವ ಕೆಲಸ! ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಇದುವರೆಗೆ ಉಂಡ ನೋವು, ಅವಮಾನ, ಪಟ್ಟಪಾಡು ಪರಿತಾಪಗಳೆಲ್ಲ ಚಿನ್ನಮ್ಮನ ಚಿತ್ತದಿಂದ ದಿಗಿಣಿ ತೆಗೆದು ಮೇಲೆದ್ದು ಬಂದು ಆಕೆಯ ಯೋಚನಾಶಕ್ತಿ, ವಿವೇಚನಾ ಶಕ್ತಿಯನ್ನೆ ಕ್ಷಣಕಾಲ ಕಸಿದುಕೊಂಡವು. ಒಡಲಪಿತ್ತ ಒಂದರೆ ಕ್ಷಣ ಕೆರಳಿದಂತಾಯಿತು. ಆ ಸಂಕಟವುಂಡ ಜೀವಕ್ಕೆ ಏನನ್ನಿಸಿತೋ ಆ ಕ್ಷಣ! ಚಿನ್ನಮ್ಮ ತಟ್ಟನೆ ಪೂರ್ವಾಭಿಮುಖವಾಗಿ ನಡೆದಳು ಆ ಹೊಳೆಯಲ್ಲೆ. ಹತ್ತು ಹೆಜ್ಜೆ ಹಾಕಿ ಹನ್ನೊಂದನೇ ಹೆಜ್ಜೆಯಡಿ ನಿಂತವಳು….ಅತ್ತ ದೂರದಲ್ಲಿದ್ದ ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೆ ಬಿಟ್ಟಳು! ಕಂಠದಲ್ಲಿ ಬಳ್ಳಿ ಹೊತ್ತ ಆ ಬೆಳ್ಳಿಲೋಟ ತೋಟದಂಚಿನ ನೆರಳಲ್ಲಿ ನಿಂತು ತನ್ನನ್ನೇ ದಿಟ್ಟಿಸುತ್ತಿದ್ದ ಧಣಿಯವರ ಮೋರೆಯ ಅಸಂಖ್ಯ ಭಾವನೆಗಳನ್ನು ಓದುತ್ತಾ, ಆಳದ ಮಡುವಲ್ಲಿ ನಿಧಾನಕ್ಕೆ ಮುಳುಗಿ ಹೋಯ್ತು. ಚಿನ್ನಮ್ಮ ಹೊಳೆಯ ನೀರಲ್ಲೊಮ್ಮೆ ಸಂಪೂರ್ಣ ಮುಳುಗಿ ಮತ್ತೆ ಎದ್ದು ನಿಂತಳು. ನೆರಳಲ್ಲಿದ್ದ ಧಣಿಯವರು ತಾನು ಹೊದ್ದುಕೊಂಡಿದ್ದ ವಲ್ಲಿಯಿಂದ ಮುಖಕ್ಕೆ ಗಾಳಿ ಬೀಸಿಕೊಂಡರು. +***** +‘ಭಾವನಾ’ ೧೯೯೯ +ಕೀಲಿಕರಣ: ಸೀತಾಶೇಖರ್ ಸಹಾಯ: ಸತ್ಯ, ವಾಸು +ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ […] +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_468.txt b/Kannada Sahitya/article_468.txt new file mode 100644 index 0000000000000000000000000000000000000000..7e12cc0fd16560f0fb04fd7a69e9c87957ed034f --- /dev/null +++ b/Kannada Sahitya/article_468.txt @@ -0,0 +1,81 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧) +ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತ +ಜಾವ ಜಾವಕೆ ಹಾಡಿನೆಳೆಯ ಜಗ್ಗಿ +ದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳು +ಇರುಳಬಾನಿಗೆ ಚಂದ್ರ ತಾರೆಯಾಗಿ ! +ನೀರು ತುಂಬಿದ ಕೆರೆಯ ಹೃದಯಾಂತರಾಳದಲಿ +ಆ ನೀಲಿ ಆ ಮೋಡವೆಲ್ಲ ಮೂಡಿ +ಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗು +ಯಾವುದೋ ಮಾಯೆಯಲಿ ಗಾಳಿ ತೀಡಿ ! +ಈ ಮನೆಯ ಮನದ ಅನುನಯ ನಿತ್ಯನೂತನವು +ಅದರ ಕಲ್ಪನೆ ಕುಡಿಯೆ ರಂಗವಲ್ಲಿ +ಊದು ಬತ್ತಿಯು ಬರೆವ ಊಹೆ ಚಿತ್ರವಿಲಾಸ- +ಮಗುವಿನೆಳನಗೆಯದರ ಧವಳಕೀರ್ತಿ ! +ಮುಂಜಾನದಂಗಳದಿ ಹೊನ್ನ ಬೆಳಕಿನ ಹುಂಜ +ಕೂಗಿ ಕುಣಿಸುವುದದರ ಹೂತುರಾಯಿ +ಸಂಜೆ ಮೇಲುಪ್ಪರಿಗೆ ಚಿಕ್ಕೆ ಸಮ್ಮೇಳನಕೆ +ಕತ್ತಲೆಯ ಬೀಡಿನಲಿ ಸರಬರಾಯಿ ! +ಹಂಚುಮಾಳಿಗೆ ಮೇಲೆ ಓಡೋಡಿ ಬರುವ ಮಳೆ +ಕಿಟಕಿ ಕಣ್ಣನು ತೆರೆವ ಮಿಂಚು ಸೆಳೆತ +ಎಲ್ಲ ಗುಡುಗಿನ ಧ್ವನಿಯನೆದೆಗೆ ತುಂಬಿಸಿಕೊಳ್ಳುವ +ಇದರ ಮಡಿಲಲ್ಲಿಹವು ನೂರುಗೀತ ! +(೨) +ಜಾಜಿ ಮಲ್ಲಿಗೆ ಬಕುಲ ಸಂಪಿಗೆಯ ಹೂಗಾಳಿ +ಬಾನಬೆಳುದಿಂಗಳಿನ ಗಂಧಲೇಪ +ನೂರು ಸ್ನೇಹದ ಒಲುಮೆ ಚಿಲುಮೆ ಪುಟಿಯುವ ರಂಗ +ಏಕಾಂತಕಿದು ಮತ್ತೆ ನಿಸ್ತರಂಗ ! +ದೂರ ದೂರದ ಹಡಗು ಬಂದು ತಂಗುವವಿದರ +ಒಡಲ ನಡುಗಡ್ಡೆಯಲಿ ಸರಕು ಇಳಿಸಿ, +ತೆರೆ ತೆರೆಯ ಭಾವದುನ್ಮಾದಕ್ಕೆ ಏರಿಳಿದು +ಸಾಗುವವು ದಿಗಂತಕ್ಕೆ ಎಳಸಿ ! +ದಾರಿ ತಪ್ಪುತ ಅಲೆದು ಮುಗಿಲ ಶೂನ್ಯವನಳೆದು +ಕನಸೊಡೆದು ಗರಿಯುದುರಿ ಸೋತಪಕ್ಷಿ +ರೆಂಬೆ ರೆಂಬೆಯ ಕುಕ್ಕಿ ಕನವರಿಸಿ ಹಾರುವವು +ಮರದ ಹರಣವೆ ಹಾರಿ ಹೋದ ತೆರದಿ ! +ಚಣಕೊಂದು ತೋಟ, ಮನವೆಳಸಿದಾಕಡೆ ನೋಟ +ಹರಿಸಿ ಹಾರುತ ಗಾಳಿಯೊಡನೆ ತೇಲಿ +ಅಂತು ಇಂತೂ ಹೊತ್ತುಗಳೆವ ಪಾತರಗಿತ್ತಿ +ಒಮ್ಮೆಯಾದರು ಭೆಟ್ಟಿ ಕೊಡುವವಿಲ್ಲಿ ! +ಮಾವು ಹೂವಿನ ತೇರು, ಹೊಂಗೆ ತುಂಬಿದ ಬಸುರಿ +ಉರಿವ ದೀಪಸ್ತಂಭನಗೊ ಬೂರಲ ! +ಬೆಳೆದು ಬಾಗಿದ ತೆಂಗು ಹುಲ್ಲು ಹೂವಿನ ರಂಗು +ಎಲ್ಲೊ ಮರೆಯಾಗಿಹುದು ಮರಿಕೋಗಿಲ ! +(೩) +ನಿಮಿಷ ನಿಮಿಷಕೆ ಬೀದಿಮೈಯ ಕೆರೆಯುವ ಕಾರು +ಬಸ್ಸು ತುಂಬಿದ ಲಾರಿ ತರಗಬರಗ +ಆಡು ಕುರಿಮರಿ ಎಮ್ಮ ಹೋರಿ ಆಕಳ ಮುಂದೆ +ನಡುಬೀದಿಯಲಿ ನಾಯಿ ಗೋಪ್ಯಭಂಗ ! +ಹೊಗೆಗೋಡೆ ಹಳಸಿರುವ ನೆಳಲು ಬಚ್ಚಲರೊಜ್ಜು +ಇಲ್ಲಣವು ಜೇಡಬಲೆ ಧೂಳಿ ಮುಸುಕು +ಒಲೆಯ ಮೇಲೊಗ್ಗರಣೆ ಘಾಟ ಛಟ ಛಟ ಸೀನು- +ಡಬ್ಬಿ ಬಾಯಿಗೆ ಸೊಂಡಿ ಚಾಚುವಿಲಿಯು +ಊರಿನಾಚೆಗೆ ದೂರ ಗಿರಿಕಿರೀಟದ ತುದಿಗೆ +ಮೋಡ-ಬೆಳಕಿನ ಪುಂಜ-ಅದ್ವಿತೀಯ ! +ಹಗಲು ಇರುಳಿನ ಕೈಗೆ ಕೊಟ್ಟ ಪ್ರತಿಭೆಯ ಪಂಜು- +ಬಾನಿನಾಶೀರ್ವಾದ ಶಾಂತಿ ಅಭಯ ! +ದಿನಬಳಕೆಯನು ಮೀರಿ ಸೆಳೆವತೀಂದ್ರಿಯ ಸ್ಪರ್ಶ +ಹೊರಜಗವನೊಳಗಿಟ್ಟವುಂಕಿ ತಣಿಸಿ +ಬಾನ ಕನ್ನಡಿಗೆ ಚೌಕಟ್ಟು ಹಾಕಿದೆ ಕಿಟಕಿ +ಇಲ್ಲಿ ಕುಳ್ಳಿರು, ಆಗು ಅಂತರ್ಮುಖಿ. +ಕೀಲಿಕರಣ: ಎಂ ಎನ್ ಎಸ್ ರಾವ್ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ +‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ […] +ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […] +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_469.txt b/Kannada Sahitya/article_469.txt new file mode 100644 index 0000000000000000000000000000000000000000..69a82907fbce2d378af0f0460ad552b2888e8d28 --- /dev/null +++ b/Kannada Sahitya/article_469.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ನನ್ನ ಕವಿತೆ +ಈಜಿಪ್ಟಿನ ರೊಟ್ಟಿಯಿದ್ದಂತೆ +ರಾತ್ರಿ ಕಳೆದಂತೆ +ಹಳಸುತ್ತ ಹೋಗುತ್ತದೆ +ಬಿಸಿಯಿದ್ದಾಗಲೆ +ಅದನ್ನು ತಿನ್ನು +ಕಸ ಧೂಳು ಕೂರುವ +ಮುನ್ನ ಅದನ್ನು ತಿನ್ನು +ಅದು ಒಣ ನೆಲದ ಮೇಲ ಮೀನು +ಒಂದು ಕ್ಷಣದಲ್ಲಿ ಅದರ ಹೆಣ +ಅದು ತಾಜಾ ಎಂದು ತಿಂದರೂ +ಅನೇಕ ರಸಗಳ ಆವಾಹನೆ ಬೇಕು +ನೀನೇನು ಕುಡಿಯುತ್ತಿಯೊ ಅದು ನಿನ್ನ ಪ್ರತಿಭೆ +ಅದು ಕೊಳೆವ ಹಳೆಯ ಕಥೆಯಲ್ಲ, ನನ್ನ ಸುಖ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ ಪ್ರೀತಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_47.txt b/Kannada Sahitya/article_47.txt new file mode 100644 index 0000000000000000000000000000000000000000..97a62ee51a001c3b8910270992703effb13dd4e9 --- /dev/null +++ b/Kannada Sahitya/article_47.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಿಸಿಲಿಗೆ +ಕರಗಿದ +ಡಾಂಬರಿನಲ್ಲಿ ಮಣ್ಣು +ಹೂತುಕೊಳ್ಳುತ್ತದೆ +ರೋಡು ಕಾಯುತ್ತದೆ +***** +ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. ***** +ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ ***** +ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿಪಾಪ ತೊಳೆಯುವ ಚಪಲ-ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವಕಾಯಕದ ಹಾಗೆ ಅಸಫಲ. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_470.txt b/Kannada Sahitya/article_470.txt new file mode 100644 index 0000000000000000000000000000000000000000..9d69bca79b2d88925f5b1308e6463b55464495e7 --- /dev/null +++ b/Kannada Sahitya/article_470.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) +ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು ಮುದ್ದಿಸುತ್ತ ಮನವೇಲ “ಆಯಿತು. ಇನ್ನು ನೀನು ಬಸುರಿ” ಎಂದು ನಿಷ್ಕಾರುಣವಾಗಿ ವಿಚಿತ್ರವಾಗಿ ಹೆದರಿಸುತ್ತಿದ್ದಾನೆ. +ಮನೆ ಹಿತ್ತಿಲ ಬಾವಿಯ ಬಳಿ ಗೆಳತಿಯನ್ನು ಕರೆದು ಆಬೋಲೀನ ತನ್ನ ಕಿರಗಣೆ ಲಂಗ ಸಡಿಲಿಸಿ ತುಸು ಜಾರಿಸಿ ಗೆಳತಿಯ ಕೈ ಸೆಳೆದು ಕಿಬ್ಬೊಟ್ಟೆಗೆ ಹಿಡಿದು: ‘ಹೇಳೆ, ನಾನು ಬಸುರಿಯೇನೇ’ ಎಂದು ಆರ್ತವಾಗಿ ಕೇಳುತ್ತಿದ್ದಾಳೆ. +ಕಿಟಿಕಿಯಾಚೆ ರಸ್ತೆಯಲ್ಲಿ ಮರವೊಂದು ಭೋರೆಂದು ಅಡ್ಡ ಬಿದ್ದಿದೆ. ಇಡೀ ದಿನ ನಿಷ್ಕ್ರಿಯನಾಗಿ, ತನ್ನ ಕೋಣೆಯಿಂದ, ಈ ಅಡ್ಡಬಿದ್ದ ಮರದ ವಿಲೇವಾರಿಯನ್ನು ನೋಡುತ್ತಿರುವ, ವ್ಯಗ್ರ ತರುಣ ಪೀಜೀ(ಪೇಯಿಂಗ್ ಗೆಸ್ಟ್)ತನ್ನ ಕಾಮನೆಗಳ ಪ್ರಪಂಚದಲ್ಲಿ ವಿಹ್ವಲನಾಗುತ್ತಿದ್ದಾನೆ. +ಸಾವು ಬದುಕಿನ ನಡುವೆ ತುಯ್ಯುತ್ತ ಕಾಯಿಲೆಯಲ್ಲಿ ಮಲಗಿರುವವನ ಕಂಗಳಲ್ಲಿ ಮೇಲಿನ ಜಂತಿ ತೊಲೆಗಳು ವಿಲಕ್ಷಣ ಬಿಂಬಗಳನ್ನು ಮೂಡಿಸುತ್ತಿರುವಂತೆಯೇ: “ನೆರೆ ಮನೆಯ ಪೊಕ್ಕ ಬಂದಾನೋ” ಎಂದು ಕಿವಿ ತುಂಬಿದ ಕೂಗುವಿಚಿತ್ರ ಅದೃಷ್ಟದಬಾಗಿಲು ತೆರೆಯುತ್ತಿದೆ.“ಪಯಣ”ಕ್ಕೆ ಸ್ವಯಂ ಸಿದ್ಧನಾದ ನಾಯಕ ಸೂಟುಬೂಟಿನಲ್ಲಿ ಸೂಟಕೇಸನ್ನೂ ಕೈಲಿ ಹಿಡಿದು ಕೆರೆಗೆ ಕಾಯುತ್ತ ಮಂಚದ ಮೇಲೊರಗಿ ನಿದ್ದೆ ಹೋಗಿದ್ದಾನೆ. +ಜಡಿ ಮಳೆಯ ರಾತ್ರಿಯಲ್ಲಿ ಫಳೀರನೆ ಝಗ್ಗೆಂದು ಮಿಂಚಿಗೆ ಓಣಿ, ಅದರಲ್ಲಿ ನಿಂತ ಚಕ್ಕಡಿ ದೂರದಲ್ಲಿ ಸರಿದ ಕಂಬಳಿ ಕೊಪ್ಪೆ ಹೊದ್ದುಕೊಂಡವ ಎಲ್ಲ ಒಂದೇ ಚಣ ಕಂದು ಮತ್ತೆ ಕಗ್ಗತ್ತಲ್ಲಿ ಕರಗಿ ಹೋಗಿವೆ. “ಛಲದ ಅಮಾನುಷ ರೂಪದಂತಿರುವ ಪದ್ದಕ್ಕನ ಕೆಂಪು ಸೆರಗು ಸರಿದು ಅವಳ ಬೋಳಿಸಿದ ತಲೆಯ ಮೇಲಿನ ಕುರುಚುಲು ಕೂದಲು ವಿಕಾರವಾಗಿ ಕಣ್ಣುಕುಕ್ಕುತ್ತಿದೆ. ಮೈಯ್ಯಲ್ಲಿ ಪ್ರಾಯ ಮುಸುಗುಡುವ ದೇವಿ ಒಳಬರುತ್ತಲೇ ಹಿಂಬದಿಯಿಂದ ಬಾಗಿಲ ಚಿಲಕ ಹಾಕಿ ಕಣ್ಣ ಕಿಡಕಿಗಳನ್ನು ತೆರೆದು ಆಟಕ್ಕೆ ತೆರೆಯುತ್ತಿದ್ದಾಳೆ. ಕೋಟಿ ತೀರ್ಥದಲ್ಲಿ ಅಲೆಗಳೇಳುತ್ತಿವೆ. ಮೂರು ದಾರಿಗಳ ನಡುವೆ ನಿರ್ಮಲೆಯ ನಿಷ್ಕಳಂಕ ತಾರಿ ದೋಣಿ ತುಯ್ಯಿತ್ತಿದೆ. +ಅರವತ್ತರ ದಶಕದ ಈ ಅಚ್ಚಳಿಯದ ಚಿತ್ರಗಳನ್ನು ಮನದಲ್ಲಿ ಹೊತ್ತುಕೊಂಡು ನಾವು ಎಳೆಯರು, ನಾವು ಗೆಳೆಯರು, ಹೊಟ್ಟೆಪಾಡಿಗೆಂದು ಮುಂಬಯಿಗೆ ಬಂದಾಗ ಅದು ಎಪ್ಪತ್ತರ ದಶಕದ ಉತ್ತರಾರ್ಧ. ಬ್ಯಾಂಡ್ ಸ್ಟಾಂಡಿನ ಬಾಲ್ಕನಿಯ ಎದುರು ಅದೇ ಸಮುದ್ರ. ಹನೇ ಹಳ್ಳಿಯ ರೇವಗುಂದೆ ಇಲ್ಲಿ ಕಲ್ಲುಬಂಡೆಯಾಗಿದೆ. ಖೇತವಾಡಿಯ ಗಲ್ಲಿಗಳಲ್ಲಿ, ಕಾರ್ಪೊರೇಟ್ ಏಣಿಗಳಲ್ಲಿ, ಜನ ಅರಣ್ಯದ ಲಿಫ್ಟ್‌ಗಳಲ್ಲಿ ನರಬೇಟೆ, ಶಿಕಾರಿ. ಮನುಷ್ಯ ಮನುಷ್ಯನನ್ನು ಅಟ್ಟಿಸಿಕೊಂಡು ಹೋಗಿದ್ದಾನೆ. ಹತಾಶನಾಗಿ ಕೈ ಚೆಲ್ಲಿ ನಿಂತಿದ್ದಾನೆ. +ಗುಣವಾಗದ ಬೇನೆಗೆ ತುತ್ತಾಗುತ್ತಿರುವ ಹೊಟ್ಟೆಯ ಮಗಳು ಜಾನಕಿ ತನ್ನ ದುರಾದೃಷ್ಟದ ವಿವಿಧ ರೂಪಗಳಲ್ಲಿ ಕಲೆಗಾರನನ್ನು ಕಸುಬಿಗೆಳೆಸುತ್ತಿದ್ದಾಳೆ. ಸಮೂಹ ಬಲಾತ್ಕಾರಕ್ಕೊಳಗಾಗುತ್ತಾಳೆ, ಛಸ್ ನಾಲಾ ಗಣಿಯಲ್ಲಿ ಉಸಿರುಗಟ್ಟಿ ಸಾಯುತ್ತಾಳೆ. ಯಾವ ರೂಪದಲ್ಲಿ “ಆಕರ್ಷಕ ನೋವಾ”ಗ ಬಲ್ಲೆ ಎಂದು ಕತೆಗಾರನನ್ನು ಕೆಣಕುತ್ತ ಕತೆಯಾಗುತ್ತಾಳೆ ಹುಡುಗಿ. ಬೆಳಕನ್ನು ಕಟ್ಟಿ ಹಾಕಿ ‘ಓನ್’ ಮಾಡುವವರನ್ನೇ ನೋಡ್ತ ಬೇನ್ಯ ನಿಂತಿದ್ದಾನೆ. ಬಟ್ಟೆಯಲ್ಲಿ ಸುತ್ತಿಟ್ಟ ಹೆಣದಂತಿರುವ ಮೂಟೆಯನ್ನು ನಡುಗುವ ಕೈಗಳಿಂದ ಬಿಡಿಸಿದರೆ ಹೊರ ಬೀಳುತ್ತದೆ ಕಳುವಾದ ಆಳೆತ್ತರದ ದೇವತಾ ವಿಗ್ರಹ. +ಕತೆಯಲ್ಲಿ ಬಂದ ವೋಮೂ ಈಗ ಮನೆಗೂ ಬಂದು ಕದ ತಟ್ಟುತ್ತಿದಾನೆ. ಅಮಾಯಕ ಬಾಲಕ ಮಲಗಿದಲ್ಲೆ ಮಂಚಕ್ಕೆ ಕಟ್ಟಲ್ಪಟ್ಟಿದ್ದಾನೆ. ಗಿಡಗಳೊಂದಿಗೆ ಮಾತಾಡುತ್ತಾನೆ. ಹಠಾತ್ತನೆ ಒಂದು ದಿನ ಬಾಲ್ಕನು ಸೋಫಾಗಳ ತನ್ನ ಸುರಕ್ಷಿತ ಕೋಟೆಯನ್ನು ಮುರಿದು ಹೊರಬಿದ್ದು ಕೊಲೆಗೊಂಡ ಕಾರ್ಮಿಕ ಮುಂದಾಳುವಿನ ಚಿತಾಭಸ್ಮವನ್ನು ಆತನ ತಂದೆತಾಯಿಗಳ ಕೈಗಿತ್ತು, ಅವರ ದೇಖರೇಖಗೆಂದು ಅವರೆಡೆಯೇ ಉಳಿದು ಬಿಡುತ್ತಾನೆ. +ಎಂಬತ್ತರ ದಶಕದಲ್ಲಿ ಇದೇ ಅನ್ವೇಷಣೆ, ‘ಡೇರಿಂಗ್ ಅಕ್ಟ್’ ನಲ್ಲೇ ನಿಜವಾಗುವ ಸಂಕಲ್ಪ, ತೊಟ್ಟಿಯಲ್ಲಿ ಯಾರೋ ಎಸೆದು ಹೋದ ನವಜಾತ ಶಿಶುವಿನ ಸುತ್ತ ನೆರೆದು ನಾಗರಿಕರು ಚರ್ಚಾಕೂಟ ನಡೆಸಿದಾಗ ಮೊದಲು ಅದನ್ನು ಎದೆಗೊತ್ತಿಕೊಂಡು ನೀರು ಹನಿಸಲು ಮುಂದಾದ ಶ್ರೀಮತಿ ಬಾಸ್ಲಾ. ನಾಪತ್ತೆಯಾದ ಮಗ ಎಂತೆಂಥ ನರಕ ಕೂಪಗಳಲ್ಲಿ ಹಾಯುತ್ತಿರುವನೋ ಎಂದು ನಿದ್ದೆಯಿಲ್ಲದೆ ಹೊರಳಾಡಿ ತಾನೂ ಆ ಪಾಡು ಪಡಬೇಕೆಂದು ಕೊಳಗೇರಿಯಲ್ಲಿರಲು ಹವಣಿಸುವ ತಂದೆ. ಬೇರ್ಪಟ್ಟು ಛೇಧಿಸಲ್ಪಟ್ಟ ಅಣ್ಣ ತಮ್ಮಂದಿರ ನಡುವಿನ ನಿಗೂಢ ಅಗೋಚರ ಅನುಬಂಧದ ಪ್ರತೀಕದಂತಿರುವ ಹಕ್ಕಿಯ ಒಂಟಿ ಗರಿ. +ಹನೇಹಳ್ಳಿಯ ಹಳೆ ಮಾವಿನಮರದ ಮೇಲೆ ಮತ್ತು ದಾದರ್ ಹಾರ್ನಿಮನ್ ಸರ್ಕಲ್ ಮೇಲೆ ಒಂದೇ ಥರ ಬೀಳುವ ಅದೇ ಅರಿಷಿಣ ಬಣ್ಣದ ಬಿಸಿಲು. ತೊಂಬತ್ತರ ದಶಕದ ಆರಂಭದಲ್ಲಿ ಹಣದಾಮಿಷಕ್ಕೆ ಬಲಿಯಾಗದ ಪುರುಷೋತ್ತಮ, ತನ್ನನ್ನು ತೊರೆದ ತಾಯಿ ನಿಜಕ್ಕೂ ಹೆತ್ತ ತಾಯಲ್ಲ ಎಂಬ ಮಾಹಿತಿ ತಿಳಿದ ತಕ್ಷಣ ಕಿಂಚಿತ್ತೂ ವಿಚಲಿತನಾಗದೆ ‘ಸೋ ವಾಟ್’? ಅಂದು ಅಂತಃಕರಣದ ಹಾದಿಯಲ್ಲಿ ಮುನ್ನಡೆಯುತ್ತಾನೆ. +ಖೇತವಾಡಿಯ ಮೂವರು ಬಡ ಸೋದರಿಯರೂ ಗುಟ್ಟಾಗಿ ಒಬ್ಬನನ್ನೇ ಪ್ರೇಮಿಸತೊಡಗಿ ನಂತರ ಪರಸ್ಪರರಿಗಾಗಿ ತಂತಮ್ಮ ಪ್ರೇಮವನ್ನು ಹೊಸಕಿಕೊಳ್ಳುತ್ತಾರೆ. “ಆತ್ಮಹತ್ಯೆಯ ಚೀಟಿ” ಅಂತ ಎಲ್ಲರೂ ಅಂದುಕೊಂಡ ಒಡೆಯದ ಪತ್ರವೊಂದು ಅಂಚೆಗೆ ಹಾಕದ ಪ್ರೇಮ ಪತ್ರವಾಗಿತ್ತು ಎಂದು ತಿಳಿಯುವ ಹೊತ್ತಿಗೆ ಅಂತರಂಗದ ಕಿಟಕಿಗಳು ಹಾಳು ಬಿದ್ದುಹೋಗಿರುತ್ತವೆ. ಕೇಂದ್ರದ ವೃತ್ತಗಳೆಲ್ಲ ಊರ್ದ್ವಮುಖಿಯಾದ ಸ್ಪೈರಲ್ ಆಕಾರವನ್ನು ಪಡೆಯತೊಡಗುತ್ತವೆ. +ಕಳೆದ ಐವತ್ತು ವರ್ಷಗಳಿಂದ ತಮ್ಮ ಕಥೆ, ಕಾದಂಬರಿ, ಪ್ರಬಂಧಗಳ ಮೂಲಕ ಇಂಥ ಅಸಂಖ್ಯ ಸನ್ನಿವೇಶಗಳನ್ನು, ರೂಪಕ, ಪ್ರತಿಮೆಗಳನ್ನು ಕನ್ನಡ ಭಾಷೆಗೆ, ಮನಸ್ಸಿಗೆ ಕೊಡುತ್ತ ಬಂದಿರುವ ನಮ್ಮ ಪ್ರೀತಿಯ ಯಶವಂತ ಚಿತ್ತಾಲರಿಗೆ ಈ ಶ್ರಾವಣದಲ್ಲಿ ಎಪ್ಪತ್ತು ತುಂಬುತ್ತಿದೆ. +ಬಾಂದ್ರಾ ಸಮುದ್ರಕಿನಾರೆಯ ತಮ್ಮ ಎಂದಿನ ಅಚ್ಚುಕಟ್ಟಾದ ಪುಟ್ಟ ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಕುಟುಂಬವತ್ಸಲ ಯಶವಂತ ಸದ್ದಿಲ್ಲದ ಆಗಸ್ಟ್ ೩ರಂದು ಎಪ್ಪತ್ತು ದಾಟುತ್ತಿದ್ದಾರೆ. ಹೇಗೆ ಆಚರಿಸುತ್ತಿದ್ದೀರಿ? ಅಂತ ಫೋನಿನಲ್ಲಿ ಕೇಳಿದರೆ “ಏನಿಲ್ಲ ಮನೆಮಂದಿಯೊಂದಿಗೆ ಬರೀತಾ ಇರೋ ಹೊಸ ಕತೆಯೊಂದಿಗೆ” ಎನ್ನುತ್ತಾರೆ. ವಿಜ್ಞಾನಿ, ಚಿಂತಕ, ಸಾಹಿತಿ, ಸೂಕ್ಷ್ಮಜ್ಞ, ಸ್ನೇಹಶೀಲ ಸಜ್ಜನ, ಶಿಸ್ತು ನೇಮನಿಷ್ಠೆಯ ಮಾನವತಾವಾದಿ, ಮುಂಬಯಿ ಕನ್ನಡ ಜೀವಿಗಳ ನೈತಿಕ ದೀಪಸ್ತಂಭದಂತಿರುವ ಪ್ರಿಯ ಯಶವಂತರಿಗೆ ಮಮತೆಯ ಅಭಿವಂದನೆಗಳು. +ಚಿತ್ತಾಲರ ಚಿತ್ತಲೋಕದ ಗಾಳಿ ಬೆಳಕು ಕನ್ನಡ ಸಂವೇದನೆಯನ್ನು ಹಸನುಗೊಳಿಸುತ್ತಿರಲಿ. ಅವರ ಕೃತಿಗಳ ಮಾನವೀಯ ತುಡಿತಗಳು ಮರಗಟ್ಟಿದ ಮನಗಳನ್ನು ಸ್ಪರ್ಶಿಸಲಿ. ಸುರಿಯುತ್ತಿರುವ ಈ ಎಪ್ಪತ್ತನೇ ಶ್ರಾವಣದ ಮಳೆ ಅವರ ಮುಂದಿನ ಕೃತಿಗಳ ಹಾದಿಗೆ ಹಸಿರು ನಿಶಾನೆ ಹಿಡಿಯಲಿ. +***** +ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_471.txt b/Kannada Sahitya/article_471.txt new file mode 100644 index 0000000000000000000000000000000000000000..56bc6bb306af7c59d6e085a9d5484dbe5c398b35 --- /dev/null +++ b/Kannada Sahitya/article_471.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ +ನನ್ನ ಅಂತಃಕರಣದ ಮುಗ್ಧ +ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ +ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? +ಮ ‘ಮ’ಕಾರಕ್ಕೆ ಈಡಾಗಿ +ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ +ಕಣ್ಣುಪಟ್ಟಿಯ ಕಟ್ಟಿ ಓಡಿಸಿದ ರಥ-ಪಥದ +ಚಕ್ರಕ್ಕೆ ಸಿಕ್ಕು ಚೀತ್ಕರಿಸಿ +ನೋಡ ನೋಡುತ್ತ ಹಾಡೇ ಹಗಲು +ಕವಿದ ಕತ್ತಲು; +ಬೇತಾಳಗಳ ಪದಾಘಾತಕ್ಕೆ +ರಾಮಾರಗತವಾಗಿ ಹೋದಿರಾ? +ಇಲ್ಲ- +ಓಂಕಾರದ ಶಂಖದಿಂದ ನಾಭಿಮೂಲಕ್ಕಿರಿದು +ಕರಳು ಹೊರದೆಗೆದು, ಜೈಕಾರಗೈದ +ಸಾಧು ಸತ್ಪುರುಷರ ಕಂಡು +ಮರಾ ಮರಾ ಮರಾ ಮರುಗಿದಿರಾ? +ಸೇಡಿನ ಹೋಮ ಹವನಕ್ಕೆ ಪ್ರೀತಿ, ಮೈತ್ರಿಯ ಎಲ್ಲಾ ಆಹುತಿಯಾಗಿ ಹೋದ- +ವಲ್ಲಾ! +ತಿಳಿವಿನ ತುಪ್ಪ ಸುಟ್ಟ ಕಮಟು ವಾಸನೆಯಲ್ಲಿ +ಶ್ವಾಸೋಚ್ಛ್ವಾಸಕ್ಕೆ ಕೂಡ ದಾರಿಯಿಲ್ಲ. +ಗೂಢ ಗುಮ್ಮಟದೊಳಗೆ +ಗು ಗುಟುಕಿಟ್ಟು, ಪಟಪಟ ರೆಕ್ಕೆ ಬಡಿವಾಗ +ಬಿಳಿ ಪಾರಿವಾಳ, +ಸುತ್ತಿಗೆ ಹಿಡಿದು ಬಡಿದು ಕತ್ತರಿಸಿ +ತಾಯ ಮೊಲೆತೊಟ್ಟು +(ಮಕ್ಕಳಿವರೇನಮ್ಮ…ಮಕ್ಕಳಿವರೇನಮ್ಮ) +ಚರಿತ್ರೆಯ ಪುಟಪುಟದಲ್ಲಿ ಮತ್ತೆ +ರಕ್ತ ತಟಗುಟ್ಟಿ +ಸರಯೂ ನದಿಯು ಮುಂದೆ ಹರಿಯಲಿಲ್ಲ. +ಚೂರಿ ಇರಿತಕ್ಕೆ ಕುಸಿದ ನಿಶ್ಯಬ್ದ ಶಬ್ದಗಳೆ +ಮೆಲ್ಲಗೆ ಎತ್ತಿ, ಗಲ್ಲಕೆ ಒತ್ತಿಕೊಳ್ಳುತ್ತೇನೆ. +ಅಕ್ಷರಕ್ಷರದಲ್ಲಿ ಬೆಸೆದು, ಭಾಷೆ +ಕೊಟ್ಟಿದ್ದೀರಿ ಭಾವಕ್ಕೆ +ಹೃದಯ ಸಂವಾದಕ್ಕೆ, ಅನುಭಾವ ಗೀತಕ್ಕೆ +ಈಗ ಏತಕ್ಕೆ ಮೂಕವಾಗಿದ್ದೀರಿ? +ಬೆಂಕಿಯಾರಿಸಿ, ಕಣ್ಣಿರನೊರೆಸಿ,ಅಕಲಂಕವಾಗಿ +ಬನ್ನಿ, ಬನ್ನಿ ಕನಸುಗಳೇ ಮರಳಿ ತಲೆಯ ಗುಮ್ಮಟಿಕೆ +ಕಾದಿರುವ ಹೃದಯ ಕಮ್ಮಟಿಕೆ: +ಸೌಹಾರ್ದದ ಮುದ್ರೆ ಪಡೆದು ಚಲಾವಣೆಯಾಗಿ +ದೇಶದುದ್ದಗಲಕ್ಕು ಸಂಚರಿಸಿ +ಸಮ-ರಸ-ಧ್ವನಿಯಾಗಿ. +***** +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […] +‘ಸೋ’ ಎಂದು ಸುರಿವ ಮಳೆ ಉನ್ಮಾದಗೊಂಡ ಇಳೆ! ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ. ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ, ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ, ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_472.txt b/Kannada Sahitya/article_472.txt new file mode 100644 index 0000000000000000000000000000000000000000..4ed5326a85ce4c7086f5efcc1d4879f9347fad86 --- /dev/null +++ b/Kannada Sahitya/article_472.txt @@ -0,0 +1,262 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೧೦ +– ೧ – +ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. +ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ ಅವಳಲ್ಲಿ ಇತರರಿಗಿಂತ ಭಿನ್ನವಾದ ಅಭಿಪ್ರಾಯ ಬೆಳೆದಿತ್ತು. ಅವಳ ತಂದೆ ಕಂಠೀಜೋಯಿಸರು ಈ ಊರಿನಲ್ಲಿ, ಅಥವಾ ಈ ಸುತ್ತಿನಲ್ಲೇ ಮೀರಿಸುವವರಿಲ್ಲದಷ್ಟು ಪೌರೋಹಿತ್ಯ ಕಲಿತವರು. ಶುಭಾಶುಭ ಎರಡೂ ವಿಧವಾದ ಕರ್ಮಗಳ ಬಗೆಗೆ ಯಾರಿಗಾದರೂ ಸಂಶಯ ಬಂದರೆ ಅವರ ಹತ್ತಿರ ಬಂದು ಪರಿಹರಿಸಿಕೊಂಡು ಹೋಗುತ್ತಿದ್ದರು. ಅಂಥವರು ಸ್ವತಃ ತಮ್ಮ ತಂದೆಯ ಶ್ರಾದ್ಧ ಮಾಡುತ್ತಿರಲಿಲ್ಲ. ಯಾರು ಕೇಳಿದರೂ -‘ನಾನು ಗಯಾಕ್ಕೆ ಹೋಗಿ ಪಿಂಡ ಹಾಕಿ ಬಂದಿದೀನಿ. ಇನ್ನು ಮಾಡೊಹಾಗಿಲ್ಲ’ ಎನ್ನುತ್ತಿದ್ದರು. ಗಯೆಯಲ್ಲಿ ಪಿಂಡಪ್ರದಾನ ಮಾಡಿದಮೇಲೆ ಪ್ರಾತಿಸಾಂವತ್ಸರಿಕ ಶ್ರಾದ್ಧ ಮಾಡುವ ಅಗತ್ಯವಿಲ್ಲವೆನ್ನುವ ಒಂದು ಮಂತ್ರವನ್ನೇ ಹೇಳಿಬಿಡುತ್ತಿದ್ದರು. ಆದರೆ ಅವರು ನಿಜವಾಗಿಯೂ ಗಯೆಗೆ ಹೋಗಿದ್ದರೋ, ಹೋಗಿದ್ದರೂ ಅಲ್ಲಿ ಪಿಂಡಪ್ರಧಾನ ಮಾಡಿದ್ದರೋ ಎಂಬ ಬಗೆಗೆ ಯಾರಿಗೂ ನಂಬಿಕೆ ಇಲ್ಲ. ಸ್ವತಃ ಅಕ್ಕಮ್ಮನಿಗೇ ನಂಬಿಕೆ ಇಲ್ಲ. ಆದರೆ ಕಂಠೀಜೋಯಿಸರ ಎದುರು ನಿಂತು ಮಾತನಾಡುವ ಎದೆ ಯಾರಿಗುಂಟು. +ಅಪ್ಪನಾದರೂ ಇದ್ದಿದ್ದರೆ ಈ ಊರ ಜೋಯಿಸರ ಬಾಲ ಬೆಳೆಯುತ್ತಿರಲಿಲ್ಲ. ನಮ್ಮ ಜಮೀನು ಹೋಗುತ್ತಿರಲಿಲ್ಲ. ಒಂದು ಸಲ ಬಂದು ಗುಡುಗು ಹಾಕಿದ್ದರೆ, ಗಂಡ ಅತ್ತೆ ಎಲ್ಲರೂ ಹೆದರಿ, ಹೇಳಿದಂತೆ ಕೇಳುತ್ತಿದ್ದರು; ಜಮೀನು ಉಳಿಯುತ್ತಿತ್ತು. ಎಲ್ಲಿಗೆ ಹೋದನೋ ಏನು ಕತೆಯೋ! ಅವನು ಖಂಡಿತ ಸತ್ತಿಲ್ಲ. ಹಿಂದೆ ನಾನು ಮಗುವಾಗಿದ್ದಾಗ ಒಂದು ಸಲ ಹೀಗೆಯೇ ಊರು ಬಿಟ್ಟು ಹೋಗಿದ್ದವನು ನಾಲ್ಕು ವರ್ಷ ಬಂದಿರಲಿಲ್ಲವಂತೆ. ಕಾಶಿ, ರಾಮೇಶ್ವರ, ಎಲ್ಲೆಲ್ಲೋ ಸುತ್ತಿಕೊಂಡು ಬಂದಿದ್ದನಂತೆ. ಈಗ ಮತ್ತೆ ಎಲ್ಲಿಹೋದನೋ? ಆದರೆ ಈ ಸಲ ಹೋಗಿ ಆಗಲೇ ಒಂಬತ್ತು ಒಂಬತ್ತು ವರ್ಷದ ಹತ್ತಿರ ಹತ್ತಿರ ಆಯಿತಲ್ಲ. ಪಾರ್ವತಿ ಹುಟ್ಟಿದ ಎಂಟನೆಯ ತಿಂಗಳಿಗೋ ಒಂಬತ್ತನೆಯ ತಿಂಗಳಿಗೋ ಹೋದದ್ದು. ಈಗ ಅವಳಿಗೆ ಒಂಬತ್ತು ನಡೆಯುತ್ತಿದೆ. ದೇಶಾಂತರ ಸುತ್ತುವುದು ಅವನ ಹಣೆಬರಹವೋ, ಅವನು ಹೀಗೆ ದೂರ ಹೋಗುವುದು ನಮ್ಮ ಹಣೆಬರಹವೋ! +ಶ್ರಾದ್ಧದ ದಿನ ತಾಯಿಯ ಮನೆಗೆ ಹೋದಮೇಲೆ ಅವಳ ಮನಸ್ಸು ಕಸಿವಿಸಿಯಾಯಿತು, ತನ್ನ ಮನೆಯಲ್ಲಿಯೇ ಕರ್ಮ ನಡೆದಿದ್ದರೆ ಅವಳು ಉಪವಾಸವಿದ್ದು, ತಲೆಗೂ ಸ್ನಾನ ಮಾಡಿ ಅಡಿಗೆ ಮಾಡಬೇಕಾಗಿತ್ತು. ಈಗ ತನ್ನನ್ನು ದೂರ ಇಟ್ಟಿದ್ದರೂ ತಾನು ಏನಾದರೂ ತಿನ್ನಬಹುದೋ ಬೇಡವೋ? ಮನೆಯ ಸೊಸೆ ತಾನು: ಗಂಡ ಎಡಬಲಕ್ಕೆ ಹಾಕಿಕೊಂಡು ಕರ್ಮ ಮಾಡುತ್ತಿದ್ದಾರೆ. ತಾನು ಹೇಗೆ ಏನಾದರೂ ತಿನ್ನುವುದು? -ಎಂದು ಯೋಚಿಸಿದ ಅವಳು, ಹುಡುಗರಿಗೆ ಮಾತ್ರ ರೊಟ್ಟಿ ಚಟ್ನಿ ಮಾಡಿಕೊಟ್ಟಳು. ಕರ್ಮವನ್ನು ಇಲ್ಲಿ ಮಾಡಿದ್ದರೂ ಹುಡುಗರು ತಿಂಡಿ ತಿನ್ನಬಹುದಾಗಿತ್ತು. +ಮಧ್ಯಾಹ್ನದ ಪ್ರಸಾದಕ್ಕೆ ಹುಡುಗರನ್ನು ಕರೆಯುತ್ತಾರೋ ಇಲ್ಲವೋ ಎಂಬ ಬಗೆಗೆ ಅವಳಿಗೇ ಅನುಮಾನ. ಆದುದರಿಂದ ಅವರಿಗಾದರೂ ಅಡಿಗೆ ಮಾಡುವುದೋ ಬೇಡವೋ ಎಂಬುದನ್ನು ತೀರ್ಮಾನಿಸಲಾರದೆ, ಕೊನೆಗೆ ಹೇಗಾದರೂ ಆಗಲಿ ಎಂದು ಮತ್ತೆ ಎಂಟು ಹತ್ತು ರೊಟ್ಟಿ ಮಾಡಿಟ್ಟಳು. ಅವರು ಕರೆದರೆ ರೊಟ್ಟಿ ಏನೂ ಹಳಸುವುದಿಲ್ಲ. ಕರೆಯದಿದ್ದರೆ ಅದನ್ನೇ ತಿನ್ನುತ್ತವೆ. +ಹುಡುಗರೆಲ್ಲ ಸ್ಕೂಲಿಗೆ ಹೋದರು. ಪಾರ್ವತಿ, ರಾಮಣ್ಣ, ಇಬ್ಬರೂ ನಾಲ್ಕನೇ ಕ್ಲಾಸಿನಲ್ಲಿದ್ದಾರೆ. ವಿಶ್ವನಾಥ ಎರಡನೆಯ ಕ್ಲಾಸು. ನಂಜು ಕೂತು ಎಲೆ ಹಚ್ಚಿಸುತ್ತಿದ್ದಳು. ಮಧ್ಯಾಹ್ನ ಅಲ್ಲಿ ಅತ್ತೆಯ ಮನೆಯಲ್ಲಿ ಅಪರಕರ್ಮ ಶುರುವಾಗುವ ಹೊತ್ತು. ಇಲ್ಲಿಗೆ ಮಾದೇವಯ್ಯನವರು ಬಂದರು. ಇವರ ಮನೆಗೆ ಆಗಾಗ್ಯೆ ಬರುತ್ತಿದ್ದರಾದರೂ ಅವರು ಈ ಹೊತ್ತಿನಲ್ಲಿ ಎಂದೂ ಬಂದವರಲ್ಲ. ಇದು ಅವರು ಕಂತೆಭಿಕ್ಷೆ ಮುಗಿಸಿ ಊಟ ಮಾಡುವ ಹೊತ್ತು. ಹಳ್ಳಿಯ ಕಡೆ ಭಿಕ್ಷಕ್ಕೆ ಹೋಗಿದ್ದರೆ ಹೊರಗೆ ಇರುವ ಹೊತ್ತು. ಅಯ್ಯನವರು ಇನ್ನೂ ಊಟ ಮಾಡಿದಂತೆ ಕಾಣಲಿಲ್ಲ. ಮುಖ ತುಂಬ ಸಪ್ಪಗಾಗಿತ್ತು. ‘ನಾವಂತೂ ಸಂಸಾರಸ್ಥರು, ಬೆಳಿಗ್ಗೆ ಎದ್ದರೆ ಕಾಷ್ಠವ್ಯಸನ. ಸನ್ಯಾಸಿಗಳಾದ ಅವರಿಗೆ ಮುಖ ಸಪ್ಪಗಾಗುವಂಥದ್ದು ಏನು ನಡೆದಿದೆಯೋ!’-ಎಂದು ಯೋಚಿಸಿಕೊಂಡೇ ನಂಜಮ್ಮ ಮಂದಲಿಗೆ ಹಾಕಿಕೊಟ್ಟು ಕೇಳಿದಳು: ‘ಏನು, ಅಯ್ನೋರ ಬಿನ್ನ ತೀರಿದಂತಿಲ್ಲ.’ +‘ಈ ಊರಿನ ನಮ್ಮ ಜಾತಿಯೋರ ಮನ್ಲಿ ಕಂತೆಭಿಕ್ಷೆ ಮಾಡಬ್ಯಾಡ್ದು ಅಂತ ಮಾಡಿದೀನಿ ಕಣವ್ವ.’ +‘ಏನಾಯ್ತು?’ +“ಹಳ್ಳೀಕಡೆ ತಿರುಗಿ ರಾಗಿಕಾಳು ಎತ್ತಿಕೊಂಡು ಬತ್ತೀನಿ. ಪರಸ್ಥಳದೋರು ಇನ್ಯಾರಾದ್ರೂ ಸಾದು ಸನ್ಯಾಸಿಗಳು ಗ್ರಾಮಕ್ಕೆ ಬಂದಾಗ ಗುಡೀಲಿ ಅವರಿಗೆ ಸೈನ್‌ಪಾಕ ಕೊಡ್ತೀನಲ್ಲ. ಊರಿನಾಗಿದ್ರೆ ನನ್ನ ಊಟ ಕಂತೆಬಿಕ್ಷದಾಗೆ ಕಳೀತಿತ್ತು. ಈ ಊರ ಬಣಜಿಗರ ಕೇರಿಯೋರು ಏನೋ ಮಾತಾಡ್ಕಂಡಿರೋ ಹಂಗೆ ಕಾಣ್ತೈತೆ. ಈಗ ಭಿಕ್ಷೆಗೆ ಹೋಗಿದ್ದೆ. ಒಂದು ನಾಕು ಮನೆಗೆ ಹೋದ್ರೆ ಯಲ್ಲಾರೂ, ‘ಈ ಅಯ್ನೋರಿಗೆ ಬೆಳಿಗ್ಗೆ ಕೋರಣ್ಯದ ಬಿಕ್ಷೆ ರಾಗಿಯೂ ಬೇಕು, ಮಧ್ಯಾಹ್ನ ಕಂತೆಬಿಕ್ಷದ ಮುದ್ದೆ ಎಸರೂ ಬೇಕು’ ಅಂದ್ರು. ಬ್ಯಾಸರಾಯ್ತು. ಸುಮ್ಕೆ ಬಂದ್‌ಬಿಟ್ಟೆ.” +ನಂಜಮ್ಮನಿಗೆ ವ್ಯಸನವಾಯಿತು. ಅಯ್ಯನವರು ಹಳ್ಳೀಕಡೆಯಿಂದ ತಂದ ದಿನಸಿಗಳನ್ನು ಮಾರಿ ಗಂಟು ಮಾಡಿಕೊಳ್ಳುತ್ತಿರಲಿಲ್ಲ. ಅವರದಾಗಿ ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅವರು ಕಷ್ಟಪಟ್ಟು ಭಿಕ್ಷೆ ಬೇಡುವುದು ಪರಸ್ಥಳದವರಿಗೆ ಅನ್ನವಿಕ್ಕುವುದಕ್ಕಾಗಿ. +‘ಅಯ್ನೋರೇ, ನೀವು ಗುಡಿಗೆ ಹೋಗಿ ಅಡಿಗೆ ಮಾಡಿಕೊಳ್ಳೋದಿಲ್ವೆ?’ +‘ಮನ್ಸಿಲ್ಲ ಕಣವ್ವ. ಹ್ವಟ್ಟೆ ಏನೋ ಹಸೀತೈತೆ. ನೀನೇನಾದ್ರೂ ಇಕ್ಕಿದ್ರೆ ಉಣ್ತೀನಿ.’ +ನಂಜಮ್ಮನಿಗೆ ಹೆಚ್ಚು ಆಶ್ಚರ್ಯವಾಗಲಿಲ್ಲ. ಜಂಗಮರಾದ ಈ ಸನ್ಯಾಸಿಗಳು ಇದುವರೆಗೂ ತನ್ನ ಮನೆಯಲ್ಲಿ ಒಂದು ಹನಿ ನೀರೂ ಕುಡಿದಿರಲಿಲ್ಲ. ಈಗ ಅವರೇ ಊಟ ಮಾಡುವುದಾಗಿ ಕೇಳುತ್ತಾರೆ. ‘ಹಂಗೇ ಕುಂತ್ಕಳಿ, ಬ್ಯಾಗ ಒಂದಿಷ್ಟು ಅನ್ನ ಸಾರು ಮಾಡ್ತೀನಿ’-ಅವಳೆಂದುದಕ್ಕೆ, ‘ಅದೆಲ್ಲ ಬ್ಯಾಡ. ಏನು ಮಾಡಿದ್ದೈತೋ ಅದ ಇಕ್ಕವ್ವ’ ಎಂದರು. ನಂಜಮ್ಮ ಒಳಗೆ ಹೋಗಿ, ಮಾಡಿಟ್ಟಿದ್ದ ರೊಟ್ಟಿ ಚಟ್ನಿಗಳ ಜೊತೆಗೆ ಒಂದು ಅಲ್ಯೂಮಿನಿಯಂ ಬಟ್ಟಲಿನ ತುಂಬ ಮೊಸರನ್ನೂ ತಂದು ಅವರ ಮುಂದಿಟ್ಟಳು. ಎದ್ದು ಕೈ ತೊಳೆದುಕೊಂಡು ಅವರು ರೊಟ್ಟಿ ಮುರಿಯಲು ಪ್ರಾರಂಭಿಸಿದರು, ಅವರನ್ನು ನೋಡಿದ ನಂಜಮ್ಮನಿಗೆ ತಕ್ಷಣ ತನ್ನ ಮಾವನವರ ಶ್ರಾದ್ಧವು ಅತ್ತೆಯ ಮನೆಯಲ್ಲಿ ನಡೆಯುತ್ತಿರುವ ನೆನಪಾಯಿತು. ಇಷ್ಟು ಹೊತ್ತಿಗೆ ಅಲ್ಲಿ ಬ್ರಾಹ್ಮಣ ಭೋಜನ ಶುರುವಾಗಿರಬಹುದು. ಅವಳು ಹೇಳಿದಳು: ‘ಅಯ್ನೋರೇ, ಇವತ್ತು ನಮ್ಮ ಮಾವ್ನೋರ ವೈದೀಕ. ನನ್ನೊಬ್ಬಳಿಗೆ ಬಹಿಷ್ಕಾರ ಇನ್ನೂ ಇಟ್ಟಿದಾರೆ ಗೊತ್ತೆ?’ +‘ಗೊತ್ತು, ಗೊತ್ತು. ಯಲ್ಲಾನೂ ತುಪ್ಪದಾಗೇ ಮಾಡಬೇಕು, ಇಲ್ದಿದ್ರೆ ನಾನು ಬಿನ್ನಾ ತೀರ್ಸಾಕ್ ಬರಾಕಿಲ್ಲ ಅಂತ ಬ್ರಾಹ್ಮಣೋತ್ತಂರು ಅಂದ್ರಂತೆ. ಅಪ್ಪಣ್ಣಯ್ಯ ಬೆಳ್ಳಿ ಪಂಚತ್ರೇನ ಕಾಶಿಂಬಡ್ಡಿ ಅಂಗ್ಡೀಲಿ ಎಲ್ಡು ರೂಪಾಯಿಗೆ ಅಡುವು ಮಡಗಿ ಬೆಣ್ಣೆ ತಂದ. ನಾನು ಒಂಬತ್ತು ಹತ್ತು ಗಂಟೇನಾಗ ಗುಡಿ ಮುಂದೆ ಕುಂತಿದ್ದೆ. ದಾರೀಲಿ ಬತ್ತಾ ನನ್ನ ಕಂಡು ಹೇಳ್ದ. ಜೋಯಿಸರಿಗೆ ಜ್ವರ ಬಂತಂತೆ. ತುಪ್ಪದ್ದಾದ್ರೆ ವಡೆ, ಉಂಡೆ, ಯಲ್ಲಾ ಭೋಜನ ಮಾಡ್ತಾರಂತೆ. ಎಣ್ಣೇದಾದ್ರೆ ವಲ್ಲೆ ಅಂದ್ರಂತೆ.’ +ಇನ್ನು ಬಡ್ಡಿ ತೆತ್ತು ಅವರು ಬೆಳ್ಳಿಯ ಪಾತ್ರೆ ಬಿಡಿಸಿಕೊಳ್ಳುವುದಿಲ್ಲವೆಂಬುದನ್ನು ಯಾರೂ ಬಾಯಿ ಬಿಟ್ಟು ಮಾತನಾಡಿಕೊಳ್ಳುವ ಅಗತ್ಯವಿರಲಿಲ್ಲ. ‘ಅಯ್ನೋರೇ, ಈ ತಿಥಿ ಮತಿ ಅನ್ನೋದೆಲ್ಲ ನಿಜವೆ? ಇಂಥ ಜೋಯ್ಸರುಗಳನ್ನು ಕರ್ದು ಅನ್ನ ಹಾಕೂದು ಅಂದ್ರೆ ಅದೆಲ್ಲ ಸುಳ್ಳು ಅನ್ಸುತ್ತೆ.’ +‘ಅದು ನಿಜವೋ ಸುಳ್ಳೊ ಯಾರಿಗೆ ಗೊತ್ತು? ನಿಜವಿದ್ರು ಇರ್ಭೌದು. ರಾಮಣ್ಣ ಶ್ಯಾನುಭಾಗರಿದ್ದಾಗ ನಿಮ್ಮತ್ತೆ ಒಂದಿನವೂ ಸಂಜೆಗಂಟ ಹ್ವಟ್ಟೆಗೆ ಹಿಟ್ಟು ಕಾಣಿಸ್ಲಿಲ್ಲ. ಗಂಡನ್ನ ನ್ಯಟ್ಟಗೆ ನಿಗಾ ಮಾಡ್ಲಿಲ್ಲ. ಈಗ ಹಳ್ಳಿಮ್ಯಾಲೆ ತಿರುಪೆ ಮಾಡ್ಕಂಡ್ ಬಂದಿ, ತುತೀ ಮಾಡ್ತೈತೆ ಆ ಯಮ್ಮ.’ +‘ನಮ್ಮ ಮಾವ್ನೋರು ಬದುಕಿದ್ದಾಗ್ಲೂ ನೀವು ಈ ಊರಲ್ಲೇ ಇದ್ರಾ?’ +‘ಚಿನ್ನಯ್ಯ ಹುಟ್ಟಾದು ಮೂರು ವರ್ಷಕ್ಕೆ ಮುಂಚೆ ನಾನು ಇಲ್ಲಿಗೆ ಬಂದುದ್ದು.’ +‘ಹಾಗಾದ್ರೆ ನಿಮ್ಮೂರು ಯಾವ್ದು?’ +‘ಯಾವ್ದಾದ್ರೆ ಏನು? ಶಿವ ಹುಟ್ಸಿದ ಮ್ಯಾಲೆ ಸಾಯೂಗಂಟ ಯಾವ್ದಾದ್ರೂ ಒಂದೂರಾಗಿರಬೇಕಲ್ಲ’-ಎಂದರೇ ಹೊರತು ತಮ್ಮ ಊರಿನ ಹೆಸರು ಹೇಳಲಿಲ್ಲ. ಅವರ ಊರು ಯಾರಿಗೂ ಗೊತ್ತಿಲ್ಲ. ಈ ಊರಿಗೆ ಬಂದ ಹೊಸತರಲ್ಲಿ ಅವರು ಹುಬ್ಬಳ್ಳಿ ಧಾರವಾಡದ ಕಡೆಯ ಉತ್ತರ ಸೀಮೆಯವರ ಹಾಗೆ ಮಾತನಾಡುತ್ತಿದ್ದರಂತೆ. ಬೋರೆಸಂತೆ, ರಾಮನಾಥಪುರ ಜಾತ್ರೆ ಮೊದಲಾದ ಕಡೆಗಳಲ್ಲಿ ಹೋರಿ ಜೋಡಿಗಳನ್ನು ಕೊಳ್ಳಲು ಬರುತ್ತಿದ್ದ ಉತ್ತರ ಸೀಮೆಯವರ ರೀತಿ ಇವರ ಮಾತು ಎಂದು ಆಗ ಜನರು ಗುರುತಿಸಿದ್ದರಂತೆ. ಮೊದಮೊದಲು ರಾಗಿ ಮುದ್ದೆ ನುಂಗುವುದು ಬರುತ್ತಿರದ ಇವರು ಬರೀ ರೊಟ್ಟಿ ತಿನ್ನುತ್ತಿದ್ದರಂತೆ. ಆದರೆ ಒಂದೆರಡು ವರ್ಷದಲ್ಲಿ ಇಲ್ಲಿಯವರ ಹಾಗೆಯೇ ಮಾತನಾಡುವುದನ್ನೂ ಕಲಿತರು, ಮುದ್ದೆ ಮುರಿಯುವುದನ್ನೂ ಅಭ್ಯಾಸ ಮಾಡಿಕೊಂಡರು. ‘ನಿಮ್ದು ಯಾವೂರು?’-ಎಂದರೆ, ‘ರಾಮಸಂದ್ರದ ಚೋಳೇಶ್ವರನ ಗುಡಿ’ ಎನ್ನಲು ಪ್ರಾರಂಭಿಸಿದರು. ಈಗ ಯಾರೂ ಅವರನ್ನು ಈ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಚೆನ್ನಿಗರಾಯರಂತಹ ನಡುವಯಸ್ಸಿನವರಿಗಿಂತ ಅವರು ರಾಮಸಂದ್ರಕ್ಕೆ ಹಳಬರು. ನಂಜಮ್ಮ ಅವರ ಊರಿನ ವಿಷಯವಾಗಿ ಮತ್ತೆ ಕೇಳಲಿಲ್ಲ. +ಅಷ್ಟರಲ್ಲಿ ಅವರು ರೊಟ್ಟಿ ತಿಂದು ಮುಗಿಸಿದ್ದರು. ಮಧ್ಯಾಹ್ನದ ಊಟಕ್ಕೆಂದು ಹುಡುಗರು ಮನೆಗೆ ಬಂದರು. ಅಮ್ಮ ಕೊಟ್ಟ ರೊಟ್ಟಿ ಚಟ್ನಿಗಳನ್ನು ಗೊಣಗದೆ ತಿಂದು ನೀರು ಕುಡಿದು ಮತ್ತೆ ಸ್ಕೂಲಿಗೆ ಹೋದರು. ನಂಜಮ್ಮ ಮಾತ್ರ ತಿನ್ನಲಿಲ್ಲ. ಹುಡುಗರು ತಿಂದ ಮೇಲೆ ಏನೂ ಉಳಿಯಲಿಲ್ಲ. ಮತ್ತೆ ಮಾಡಲು ಮನಸ್ಸಿರಲಿಲ್ಲ. ಅಯ್ಯನವರು ಹೊರಗೆ ಕುಳಿತೇ ಇದ್ದರು. ಅವಳು ಹೊರಗೆ ಬಂದು, ಅದುವರೆಗೂ ಮನಸ್ಸಿನಲ್ಲೇ ಯೋಚಿಸುತ್ತಿದ್ದ ಒಂದು ಪ್ರಶ್ನೆಯನ್ನು ಕೇಳಿದಳು: ‘ಅಯ್ನೋರೇ, ಮತ್ತೆ ನಿಮ್ಮುನ್ನ ಒಂದು ಪ್ರಶ್ನೆ ಕೇಳ್ತೀನಿ. ಉತ್ತರ ಹೇಳ್ಬೇಕು ಅನ್ಸಿದ್ರೆ ಹೇಳಿ. ಇಲ್ದೆ ಇದ್ರೆ ಬ್ಯಾಡಿ. ನೀವು ಮನೆ ಮಠ ಬಿಟ್ಟು ಯಾಕೆ ಹೀಗೆ ಬಂದುಬಿಟ್ರಿ?’ +‘ಮನೆ ಮಠ ಬಿಟ್ಟು ಎಲ್ಲಿ ಬಂದೆನವ್ವಾ? ಸಂಸಾರ ಎಲ್ಲಿತ್ತು? ಹುಟ್ಟಿದಾಗ್ಲೇ ಸನ್ಯಾಸಿಯಾಗಿ ಹುಟ್ಟಿದೆ. ಹಿಂಗೆ ಊರೂರು ಅಲ್ಕಂಡು ಬಂದೆ. ಇಲ್ಲಿರಾ ಮನಸ್ಸಾಯ್ತು ಇದೀನಿ’ -ಎಂದರೇ ಹೊರತು ಅವಳ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ಅವರಿಗೆ ಮನೆ, ಸಂಸಾರ, ಇತ್ತೋ ಇರಲಿಲ್ಲವೋ ಎಂಬುದೂ ಒಗಟಾಗಿಯೇ ಉಳಿಯಿತು. +ಅವಳು ಅವರ ಹಿಂದಿನ ಜೀವನದ ಬಗೆಗೆ ಯೋಚಿಸುತ್ತಾ ಕುಳಿತಳು. ಮದುವೆಯಾಗಿದ್ದರೋ ಇಲ್ಲವೋ, ಅಥವಾ ಆದಮೇಲೆ ಸಂಸಾರ ಬಿಟ್ಟು ಹೀಗೆ ಹೊರಟುಬಂದರೋ! ಬಳ್ಳಾರಿ ಸೀಮೆಯವರಂತೆ; ಹೆಂಡತಿ ಏನೋ ಚಾತೂರ ಕೆಲಸ ಮಾಡಿದಳಂತೆ; ಅದಕ್ಕೆ ಬೇಜಾರಿನಿಂದ ಎಲ್ಲವನ್ನೂ ಬಿಟ್ಟು ಹೀಗೆ ಹೊರಟುಬಂದರಂತೆ-ಎಂದು ಪಕ್ಕದ ಮನೆಯ ಪುಟ್ಟವ್ವ ಒಂದು ದಿನ ನಂಜಮ್ಮನಿಗೆ ಹೇಳಿದಳು. ‘ಇದು ನಿಂಗೆ ಹ್ಯಾಗೆ ಗೊತ್ತು?’- ಎಂದು ಕೇಳಿದುದಕ್ಕೆ ಅವಳು, ‘ಹಂಗಂತ ಯಾರ್ಯಾರೋ ಅಂದ್ಕಂತಿದ್ರು ಕಣವ್ವ. ನಾನು ಹುಡ್ಗಿಯಾಗಿದ್ದಾಗ ಅಂತಿದ್ದುದು. ಆಗ ಈ ವಯ್ನೋರು ಮುದುಕ್ರಾಗಿರ್ನಿಲ್ಲ’ ಎಂದಿದ್ದಳು. ಪುಟ್ಟವ್ವನ ಮಾತನ್ನು ಸಹ ನಂಬುವಂತಿಲ್ಲ. ಅಯ್ಯನವರು ತಾವಾಗಿಯೇ ಈ ಬಗೆಗೆ ಎಂದೂ ಯಾರಲ್ಲಿಯೂ ಬಾಯಿ ಬಿಡುವುದಿಲ್ಲ ಎಂದು ಯೋಚಿಸಿದ ಅವಳು, ಹೇಳದಿದ್ದರೆ ಬ್ಯಾಡ, ಅವರ ಮನಸ್ಸಿನ ದುಃಖ ಏನಿದೆಯೋ!’ ಎಂದು ಸುಮ್ಮನಾದಳು. +ಒಂದು ಮಾತನ್ನೂ ಆಡದೆ ಇಬ್ಬರೂ ಸ್ವಲ್ಪ ಹೊತ್ತು ಕುಳಿತಿದ್ದರು. ‘ಏನು ಏಚ್ನೆ ಮಾಡ್ತಾ ಕುಂತ್ಕಂಡೆಯವ್ವಾ?’-ಅಯ್ಯನವರು ಕೇಳಿದರು. +‘ಏನೂ ಇಲ್ಲ.’ +‘ಈಟು ದಿನ ಈ ಊರ ಋಣವಿತ್ತು. ಬ್ಯಾರೆ ಎಲ್ಲಾರ ಹ್ವಾಗ್ ಬೇಕು ಅಂತ ಯೋಚಿಸ್ತಾ ಇದೀನಿ.’ +‘ಅಯ್ನೋರೇ, ನೀವು ಹೇಳಿ ಕೇಳಿ ಸನ್ಯಾಸಿಗಳು. ಯಾರೋ ತಿಳಿವಳಿಕೆ ಇಲ್ಲದ ನಾಕು ಜನ ಏನೋ ಅಂದ್ರೆ ನೀವು ಬೇಜಾರುಪಟ್ಟುಕೋಭೌದಾ? ನೀವು ಯಾವ ಊರಿಗೆ ಹೋದ್ರೂ ಇಂಥೋರು ಇರ್ತಾರೆ, ಅಂಥೋರೂ ಇರ್ತಾರೆ.’ +‘ಅದೂ ನಿಜ ಕಣವ್ವ’- ಎಂದರು. ಅವರಿಗೆ ಹೆಚ್ಚು ಮಾತನಾಡುವ ಲಹರಿ ಇರಲಿಲ್ಲವೆಂದು ಕಾಣುತ್ತದೆ. ಸ್ವಲ್ಪ ಹೊತ್ತಿನಲ್ಲಿ ಎದ್ದು ಗುಡಿಗೆ ಹೊರಟುಹೋದರು. +– ೨ – +ಮಾದೇವಯ್ಯನವರು ಆ ದಿನ ಬೆಳಿಗ್ಗೆ ಹಳ್ಳಿಯ ಕಡೆ ಹೋದವರು ಎರಡು ಮೂರು ತಿಂಗಳಾದರೂ ರಾಮಸಂದ್ರಕ್ಕೆ ಹಿಂತಿರುಗಲಿಲ್ಲ. ಅವರು ಊರು ಬಿಟ್ಟು ಹೊರಟೇ ಹೋದರೇನೋ ಎಂದು ನಂಜಮ್ಮ ವ್ಯಾಕುಲಗೊಂಡಳು. ಒಳ್ಳೆಯ ಮನುಷ್ಯ ಎಂದು ಕರೆಯಬಹುದಾದ ವ್ಯಕ್ತಿ ಈ ಊರಿನಲ್ಲಿದ್ದವರು ಅವರೊಬ್ಬರೇ. ಅವರೂ ಬೇಸರಪಟ್ಟುಕೊಂಡು ಹೊರಟುಹೋಗಿದ್ದಾರೆ. ಮತ್ತೆ ಬರುತ್ತಾರೋ ಇಲ್ಲವೋ! ಅವರ ಸಾಮಾನುಗಳು ಮಾತ್ರ ಗುಡಿಯಲ್ಲಿಯೇ ಇವೆ. ಎರಡು ಮೂರು ಪಲ್ಲ ರಾಗಿ, ಎರಡು ಮೂಟೆ ಹುರುಳೀಕಾಳು, ಒಂದು ಗುಡಾಣ ಮೆಣಸಿನಕಾಯಿ, ಕೆಲವು ಅಲ್ಯುಮಿನಿಯಂ ಪಾತ್ರೆಗಳು, ನಾಲ್ಕೈದು ಚಾಪೆಗಳನ್ನು ಇಟ್ಟಿದ್ದ ಕೋಣೆಗೆ ಅವರು ಬೀಗ ಹಾಕಿಕೊಳ್ಳುತ್ತಿದ್ದರು. ಬೀಗದ ಕೈ ತೆಗೆದುಕೊಂಡು ಹೋಗಿದ್ದಾರಂತೆ. ಅಂದರೆ ಒಂದಲ್ಲ ಒಂದು ದಿನ ಹಿಂತಿರುಗುತ್ತಾರೆಂಬ ನಿರೀಕ್ಷೆ ಅವಳಿಗಿತ್ತು. ಅವರು ಹೋದಮೇಲೆ ದೇವಸ್ಥಾನದಲ್ಲಿ ಕಳೆಯೇ ಇರಲಿಲ್ಲ. ನಂಜಮ್ಮ ಅಲ್ಲಿಗೆ ಎಂದೂ ಹೋದವಳಲ್ಲ. ಈಗ ಚೆನ್ನಿಗರಾಯರಂಥವರಿಗೂ ಅಲ್ಲಿಗೆ ಹೋಗಿ ಕೂರಲು ಯಾವ ಆಕರ್ಷಣೆಯೂ ಇರಲಿಲ್ಲ. +ಪಾರ್ವತಿ, ರಾಮಣ್ಣ ಇಬ್ಬರೂ ಪ್ರೈಮರಿ ಸ್ಕೂಲು ಮುಗಿಸಿದರು. ರಾಮಣ್ಣ ತುಂಬ ಜಾಣ ಹುಡುಗ. ಸ್ಕೂಲಿಗೇ ಮೊದಲನೆಯವನಾಗಿದ್ದಾನೆಂದು ಮೇಷ್ಟರು ಸೂರಪ್ಪನವರು ಹೇಳುತ್ತಿದ್ದರು. ಹವಳ ಪೋಣಿಸಿದಷ್ಟು ದುಂಡಗೆ ಅಕ್ಷರ ಬರೆಯುತ್ತಿದ್ದ. ಶ್ಯಾನುಭೋಗಿಕೆ ಪುಸ್ತಕಕ್ಕೆ ತಪ್ಪಿಲ್ಲದೆ ರೂಲು ಹಾಕುತ್ತಿದ್ದ. ಅಲ್ಪಪ್ರಾಣ ಮಹಾಪ್ರಾಣ ಹ್ರಸ್ವದೀರ್ಘಗಳ ತಪ್ಪಿಲ್ಲದೆ ಕನ್ನಡದಲ್ಲಿ ಏನನ್ನಾದರೂ ಓದುತ್ತಿದ್ದ. ಮೂರು ಜನ ಮಕ್ಕಳಿಗೂ ನಂಜಮ್ಮ ಶಾಂತಾಕಾರಂ ಭುಜಗ ಶಯನಂ, ಭಜಗೋವಿಂದಂ ಮೂಢಮತೇ, ಮೊದಲಾಗಿ ಅನೇಕ ಸ್ತೋತ್ರಪಾಠಗಳನ್ನು ಹೇಳಿಕೊಟ್ಟಿದ್ದಳು. ನಳಚರಿತ್ರೆ, ಲವಕುಶ ಕಾಳಗಗಳನ್ನು ಸಹ, ಪಾರ್ವತಿ ರಾಮಣ್ಣರು ಬಾಯಿಪಾಠ ಮಾಡಿದ್ದರು. ಶ್ಯಾನುಭೋಗಿಕೆ ಮಾಡಲು ಇದಕ್ಕಿಂತ ವಿದ್ಯೆ ಬೇಕೆ? ಆದರೆ ನಂಜಮ್ಮನ ಯೋಚನೆ ಬೇರೆಯೇ ಇತ್ತು. ಈ ಕೆಲಸ ತನ್ನ ಮಕ್ಕಳಿಗೆ ಬೇಡ. ಅವು ಓದಿ ಯಾವುದಾದರೂ ನೌಕರಿ ಮಾಡಬೇಕು. ಕೊನೆಯ ಪಕ್ಷ ಶೇಕ್ದಾರಿಕೆ ಮಾಡುವಷ್ಟಾದರೂ ವಿದ್ಯೆ ಕಲಿಯಬೇಕು. +‘ರಾಮಣ್ಣನನ್ನು ಮುಂದಕ್ಕೆ ಮಿಡ್ಳ್‌ಸ್ಕೂಲು ಓದಿಸಿ; ಬಿಡಬೇಡಿ’-ಸೂರಪ್ಪ ಮೇಷ್ಟರು ಹೇಳಿದರು. ಮಿಡ್ಳ್‌ಸ್ಕೂಲು ಇರುವುದು ಕಂಬನಕೆರೆಯಲ್ಲಿ, ರಾಮಸಂದ್ರಕ್ಕೆ ಐದು ಮೈಲಿ ದೂರ. ಆ ಊರಿನಲ್ಲಿ ಹದಿನೈದು ಇಪ್ಪತ್ತು ಬ್ರಾಹ್ಮಣರ ಮನೆಗಳಿವೆಯಂತೆ. ಯಾರಾದರೂ ಗಂಡಸರು ಹೋಗಿ ವಾರ ಮಾಡಿಕೊಟ್ಟು ಬಂದರೆ ಹುಡುಗ ಅಲ್ಲಿಯೇ ಇದ್ದು ಓದಬಹುದು. ಶನಿವಾರ ಊರಿಗೆ ಬಂದು ಸೋಮವಾರದ ಊಟ ಹೆಗಲಿಗೆ ಹಾಕಿಕೊಂಡು ಸ್ಕೂಲಿನ ಹೊತ್ತಿಗೆ ಹೋದರೆ ಒಟ್ಟು ನಾಲ್ಕು ವಾರ ಸಿಕ್ಕಿದರೆ ಸಾಕು. ಶನಿವಾರ ಮಧ್ಯಾಹ್ನಕ್ಕೆ ಯಾರಾದರೂ ಊಟ ಹಾಕಿದರೆ ಸರಿ. ಶೇಕ್ದಾರರನ್ನು ಕೇಳಿದರೆ ಒಂದು ವಾರ ಕೊಡಬಹುದು. ಇನ್ನು ನಾಲ್ಕು ದಿನಕ್ಕೆ ಯಾರನ್ನು ಕೇಳುವುದು? ಸೂರಪ್ಪ ಮೇಷ್ಟರಿಗೋ ದ್ಯಾವರಸಯ್ಯನವರಿಗೋ ಅಲ್ಲಿ ಗುರುತಿನವರಿರಬಹುದು. +ಆದರೆ ಇನ್ನೊಬ್ಬರ ಮನೆಯಲ್ಲಿ ಊಟ ಮಾಡಲು ರಾಮಣ್ಣ ಒಪ್ಪಲಿಲ್ಲ. ಹುಡುಗನಿಗೆ ಸಂಕೋಚವೋ ಅಥವಾ ಭಯವೋ. ದಿನವೂ ಊರಿನಿಂದ ಕಂಬನಕೆರೆಗೆ ನಡೆದೇ ಹೋಗಿ ಬರುತ್ತೇನೆಂದು ಹೇಳಿದ. ಹೋಗುತ್ತಾ ಐದು ಮೈಲಿ, ಬರುತ್ತಾ ಐದು ಮೈಲಿ. ರಾಮಸಂದ್ರದ ಅಮ್ಮನ ಗುಡಿಯ ಆಚೆ ಮುದಿಮಾವಿನ ಮರದ ಕೆಳಗಿನಿಂದ ಹಾಯ್ದು ಕಬ್ಬಳ್ಳಿ ಬುಗವನ್ನು ಏರಿ ಇಳಿದು ಹುತ್ತದ ದಿಬ್ಬದ ಮಗ್ಗುಲಿಗೆ ನಡೆಯಬೇಕು. ಆ ದಿಬ್ಬದ ತುಂಬ ಬರೀ ಹುತ್ತಗಳೇ ಇವೆ. ಅವುಗಳ ಒಳಗೆ ಎಷ್ಟು ಸಾವಿರ ಹಾವುಗಳಿವೆಯೋ. ಕೋಡುಗಳಂತೆ ಬೆಳೆದು ನಿಂತಿರುವ ಅವುಗಳ ಬಾಯಿಯನ್ನು ನೋಡಿದರೇ ಹೆದರಿಕೆಯಾಗುತ್ತೆ. ಅದರ ಆಚೆಗೆ ಗೌಡನ ಕೊಪ್ಪಲು. ಮುಂದೆ ಪಾಪಾಸುಕಳ್ಳಿಯ ಓಣಿಯಿಂದ ಹೋದರೆ ಕಂಬನಕೆರೆ. ರಾಮಣ್ಣ ಇನ್ನೂ ಒಂಬತ್ತು ವರ್ಷದ ಹುಡುಗ. ಒಬ್ಬನೇ ಈ ದಾರಿಯಲ್ಲಿ ಹೋಗಿಬರಬೇಕು. ಆದರೆ ಕಷ್ಟ ಪಡದೆ ವಿದ್ಯೆ ಬರುವುದು ಹೇಗೆ? ಸೂರಪ್ಪ ಮೇಷ್ಟರು ಕೊಟ್ಟ ಪ್ರೈಮರಿ ಸ್ಕೂಲಿನ ಸರ್ಟಿಫಿಕೇಟನ್ನು ದೇವರ ಮುಂದಿಟ್ಟು ಪೂಜೆ ಮಾಡಿ ಕಣ್ಣಿಗೆ ಒತ್ತಿಕೊಂಡು ಕೈಗೆ ತೆಗೆದುಕೊಂಡ ಮೇಲೆ ನಂಜಮ್ಮ ಮಗನಿಗೆ ಮಾಡಿದ್ದ ರೊಟ್ಟಿ ಚಟ್ನಿಯನ್ನು ಕಟ್ಟಿ ಕೊಟ್ಟಳು. ಸ್ಕೂಲಿಗೆ ಹೋಗಿ ಸೇರಿಸಿ ಬರಲು ತಾವು ಹೋಗುತ್ತೇವೆಂದು ಚೆನ್ನಿಗರಾಯರೇನೋ ಒಪ್ಪಿಕೊಂಡಿದ್ದರು. ಹೊರಡುವ ದಿನ ಬೆಳಿಗ್ಗೆ ಏಳು ಗಂಟೆಗೆ ಏಳಬೇಕಾದಾಗ ಮುಸುಕಿನ ಒಳಗೇ, ‘ನಾಳೆ ಹೋದ್ರಾತು’ ಎಂದರು. ಆದರೆ ಮೊದಲೇ ಪಂಚಾಂಗ ನೋಡಿ ನಿಷ್ಕರ್ಷಿಸಿದ್ದ ದಿನವನ್ನು ಬಿಡುವಂತಿರಲಿಲ್ಲ. ಮಗನ ಜೊತೆಗೆ ನಂಜಮ್ಮನೇ ಹೊರಟಳು. ದೇವರಿಗೆ, ತಾಯಿಗೆ, ಅಕ್ಕ ಪಾರ್ವತಿಗೆ ರಾಮಣ್ಣ ನಮಸ್ಕಾರ ಮಾಡಿದ. ಮಲಗಿದ್ದವರಿಗೆ ನಮಸ್ಕಾರ ಮಾಡಬಾರದಲ್ಲ, ತೀರ್ಥರೂಪರು ಮೇಲೆ ಏಳಲಿಲ್ಲವಾದುದರಿಂದ ಅವರಿಗೆ ಸಲ್ಲಲಿಲ್ಲ. ತಾಯಿ ಮಗ, ಇಬ್ಬರೂ ಸ್ಕೂಲಿಗೆ ಹೋದರು. ಪೋಷಕರ ರುಜುವಿನ ಜಾಗದಲ್ಲಿ ತಾಯಿಯ ಸಹಿ ಹಾಕಿಸಿ ಎಂಟಾಣೆ ಪ್ರವೇಶ ಶುಲ್ಕದೊಡನೆ ಹೆಡ್ಮಾಸ್ಟರು ಹುಡುಗನನ್ನು ಸ್ಕೂಲಿಗೆ ಸೇರಿಸಿಕೊಂಡರು. ಅಲ್ಲಿಗೆ ಹೋಗಿ ಉಳಿದ ಹುಡುಗರನ್ನು ನೋಡಿದಾಗ ನಂಜಮ್ಮನಿಗೆ ಎನಿಸಿತು: ತನ್ನ ಮಗನಿಗೆ ಒಂದು ಲುಂಗಿಯ ಪಂಚೆ ತಂದು ಕೊಡಬೇಕು. ತಲೆಗೆ ಒಂದು ಕರಿ ಟೋಪಿ ಬೇಕು. ಇದು ಮಿಡ್ಳ್‌ಸ್ಕೂಲು. ಬರೀ ಚಡ್ಡಿ ಹಾಕಿಕೊಂಡು ಹೋಗುವಂತಿಲ್ಲ. +ಲುಂಗಿ ಎಂದರೆ ಎರಡಾದರೂ ಬೇಕು. ಒಂದನ್ನು ಒಗೆದರೆ ಇನ್ನೊಂದು ಬೇಕಲ್ಲ. ಎರಡು ಲುಂಗಿ ಒಂದು ಟೋಪಿಗೆ ಒಟ್ಟು ಎರಡು ರೂಪಾಯಿ ಬೇಕು. ಅಲ್ಲದೆ ಪುಸ್ತಕವಾಗಬೇಕು. ಸೀಸದ ಕಡ್ಡಿ. ಎಕ್ಸರ್‌ಸೈಜು ಪುಸ್ತಕ, ಅವನ್ನೂ ರೊಟ್ಟಿ ಚಟ್ನಿಗಳನ್ನೂ ಹಾಕಿಕೊಳ್ಳಲು ಒಂದು ಬಣ್ಣದ ಕೈಚೀಲ. ಒಟ್ಟು ಏಳೆಂಟು ರೂಪಾಯಿಯಾದರೂ ತಿನ್ನುತ್ತದೆ. ಮನೆಯಲ್ಲಿ ಅಷ್ಟು ದುಡ್ಡಿಲ್ಲ. ಅಟ್ಟದ ಮೇಲೆ ಹಚ್ಚಿಸಿ ಇಟ್ಟಿದ್ದ ಎಲೆಗಳ ಪಿಂಡಿಯಿತ್ತು. ಈ ಸಲ ಮದುವೆಯ ಕಾಲದಲ್ಲಿ ಹಳ್ಳಿಗಳವರೇ ಬಂದು ಎಲೆಗಳನ್ನು ಮನೆಯಿಂದ ಕೊಂಡು ಹೋಗಿದ್ದರು. ಉಳಿದದ್ದು ಅಟ್ಟದ ಮೇಲಿದೆ. ಮನೆಗೆ ಬಂದ ನಂಜಮ್ಮ ಅಟ್ಟ ಹತ್ತಿ ಎಣಿಸಿ ನೋಡಿದಳು. ಒಟ್ಟು ನೂರು ಪಿಂಡಿಗಳಿವೆ. ಪಿಂಡಿಗೆ ಏಳಾಣೆ ಅಂದರೆ ನಲವತ್ತನಾಲ್ಕೂ ಮುಕ್ಕಾಲು ರೂಪಾಯಿ ಆಯಿತು. ಒಟ್ಟಿಗೆ ಕೊಟ್ಟುಬಿಡಬೇಕು. ಆದರೆ ಬರೀ ನೂರು ಪಿಂಡಿಗಾಗಿ ತಿಪಟೂರಿಗೆ ಒಂದು ಗಾಡಿ ಹೂಡುವುದೆಂದರೆ ಬಾಡಿಗೆ ದಂಡ. ತಕ್ಷಣದಲ್ಲಿ ದುಡ್ಡು ಎಲ್ಲಿಂದ ಬರಬೇಕು? +ಅವಳು ಸರ್ವಕ್ಕನಿಗೆ ಹೇಳಿಕಳಿಸಿದಳು. ಸರ್ವಕ್ಕನ ಹತ್ತಿರವೂ ಎಂಬತ್ತು ಪಿಂಡಿಯಷ್ಟು ಎಲೆ ಇತ್ತು. ಇಬ್ಬರದೂ ಸೇರಿಸಿ ಕಳಿಸಿದರೆ ಗಾಡಿ ಬಾಡಿಗೆ ಅರ್ಧ ಅರ್ಧ ಹಂಚಿಕೊಳ್ಳಬಹುದು. ಸರ್ವಕ್ಕ ಹೇಳಿದಳು: ‘ಯಾವುದೋ ಕೋಲ್ಟು ಸಾಕ್ಷಿಗೆ ನಮ್ಮೋರು ನಾಳಿಕ್ ತಿಪ್ಟೂರಿಗೆ ಓಯ್ತಾರೆ. ಕಮಾನು ಗಾಡೀಲಿ ಒಬ್ರೇ ಓಗಾದು. ಅದ್ರಾಗೆ ಆಕ್ ಕಳ್ಸಾಣ’. +‘ಸರ್ವಕ್ಕ, ಕಳುಸ್‌ಭೌದು. ನಿಮ್ಮ ಯಜಮಾನರ ಸ್ವಭಾವ ನಿಮಗೇ ಗೊತ್ತಿದೆಯಲ್ಲ.’ +‘ಅದೂ ನಿಜ’-ಎಂದು ಅವಳು ಒಪ್ಪಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು. ಇಬ್ಬರ ಎಲೆಯನ್ನೂ ತುಂಬಿಸಿಕೊಂಡು ಗಾಡಿಯಲ್ಲಿ ಗಂಡನ ಜೊತೆಗೆ ಸರ್ವಕ್ಕನೂ ಹೋಗುವುದು. ವ್ಯಾಪಾರವನ್ನು ಅವಳೇ ಮಾಡಿ ಕ್ಷೇಮವಾಗಿ ದುಡ್ಡು ತರುವುದು. ನಂಜಮ್ಮ ಸಲಹೆಗೆ ಒಪ್ಪಿದಳು. ಹಾಗೆಯೇ ರಾಮಣ್ಣನಿಗೆ ತರಬೇಕಾದ ಲುಂಗಿ, ಟೋಪಿ, ಪುಸ್ತಕ, ಅದರ ಚೀಲ ಮೊದಲಾದವುಗಳ ಪಟ್ಟಿಯನ್ನೂ ಹಾಕಿಕೊಟ್ಟಳು. +ಮರುದಿನ ರಾತ್ರಿ ಗಾಡಿಯ ಮೇಲೆ ಗಂಡನ ಜೊತೆ ಸರ್ವಕ್ಕ ಹೋದಳು. ದುಡ್ಡು ತೆಗೆದುಕೊಂಡು, ನಂಜಮ್ಮ ಹೇಳಿದ ಸಾಮಾನುಗಳನ್ನೂ ಖರೀದಿ ಮಾಡಿ ಮುಂದಿನ ರಾತ್ರಿ ಗಾಡಿ ಹತ್ತಿದಳು. ದಾರಿಯಲ್ಲಿ ಅವಳೂ ತೂಕಡಿಸಿದಳು. ಬೆಳಗ್ಗೆ ಊರಿಗೆ ಬಂದು ಮನೆಯ ಮುಂದೆ ಗಾಡಿ ಇಳಿದಾಗ, ಅವಳು ಖರೀದಿ ಮಾಡಿ ತಂದಿದ್ದ ಸಾಮಾನುಗಳು ಇದ್ದವು. ಕೊರಳಿಗೆ ನೇತುಹಾಕಿಕೊಂಡಿದ್ದ ದುಡ್ಡಿನ ಚೀಲ ಇರಲಿಲ್ಲ. ಗಂಡನಿಗೆ ಹೇಳಿದುದಕ್ಕೆ-‘ಕತ್ತೆ ಹಂಗ್ ಬಿದ್ಕಂಡ್ ನಿದ್ದೆ ಮಾಡ್ತಿದ್ದೆ. ದಾರೀಲಿ ಎಲ್ಲಿ ಉದುರುಸ್ಕಂಡು ಬಂದ್ಯೊ ಬಾಂಚೋತ್ ಮುಂಡೆ’ ಎಂದು ರೇವಣ್ಣಶೆಟ್ಟಿ ಉಗ್ರರೂಪ ತಾಳಿದ. ಕಣ್ಣೀರು ಹಾಕುತ್ತಾ ಓಡಿ ಬಂದ ಸರ್ವಕ್ಕ ವಿಷಯ ತಿಳಿಸಿದಾಗ ನಂಜಮ್ಮನಿಗೆ ಏನು ಹೇಳುವುದಕ್ಕೂ ತಿಳಿಯಲಿಲ್ಲ. ನಂಜಮ್ಮನ ಸಾಮಾನಿಗೆ ಅವಳು ಒಟ್ಟು ಆರೂವರೆ ರೂಪಾಯಿ ಖರ್ಚು ಮಾಡಿದ್ದಳು. ಇನ್ನು ಮೂವತ್ತೆಂಟೂಕಾಲು ಕೊಡಬೇಕು. ಅವಳದೂ ಚೀಲದಲ್ಲಿ ಮೂವತ್ತೈದು ರೂಪಾಯಿ ಇತ್ತು. +‘ನಂಜಮ್ಮಾರೇ, ನನ್ನ ಕೊಳ್ಳಲಿರಾ ಕರಡಿಗೆ ಆಣೆ ಮಡಗಿ ಏಳ್ತೀನಿ, ನನ್ನೇ ಕಳ್ಳಿ ಅಂತ ತಿಳ್ಕಬ್ಯಾಡಿ.’ +‘ನಂಜಮ್ಮ ತಾಳ್ಮೆಯಿಂದ ಯೋಚಿಸಿ ನಾಲ್ಕಾರು ಪ್ರಶ್ನೆ ಕೇಳಿದಳು. ನಂತರ ಎಂದಳು: ‘ನೀವೇನೇ ಹೇಳಿ. ದುಡ್ಡು ಇನ್ನು ಹ್ಯಾಗೂ ಕಳೆದಿಲ್ಲ. ನೀವು ತೂಕಡುಸ್ತಾ ಇದ್ದಾಗ ನಿಮ್ಮ ಯಜಮಾನರೇ ಹೊಡೆದಿದಾರೆ.’ +ಅದೇ ನಿಜವೆಂದು ಸರ್ವಕ್ಕನಿಗೆ ತಕ್ಷಣ ಹೊಳೆಯಿತು. ನೇರವಾಗಿ ಮನೆಗೆ ಹೋಗಿ- ‘ನೀವೇ ದುಡ್ಡು ತಗಂಡಿದೀರಾ. ನಂಜಮ್ಮಾರ ದುಡ್ಡಾರ ಕೊಟ್ಬುಡಿ’ ಎಂದು ಹೇಳಿದುದಕ್ಕೆ ರೇವಣ್ಣಶೆಟ್ಟಿ, ವೀರಭದ್ರನ ಜಾತ್ರೆಯಲ್ಲಿ ಕುಣಿಯುವ ಭೂತದಂತೆ ಆಗಿ ಅವಳನ್ನು ಹಿಡಿದು ಮೈ ಕೈ ಮುರಿಯುವಂತೆ ಹೊಡೆದುಬಿಟ್ಟ. ಕೋರ್ಟಿಗೆ ಹೋಗಿ ಸಾಕ್ಷಿ ಹೇಳಿಬರುವಂತಹ ದೊಡ್ಡ ಮನುಷ್ಯನನ್ನು ಕಳ್ಳನೆಂದರೆ ಅವನು ಸಹಿಸುವುದು ಹೇಗೆ? +ತನಗೆ ಅಷ್ಟು ಏಟು ಬಿದ್ದರೂ ಸರ್ವಕ್ಕ ಮನಸ್ಸಿನಲ್ಲಿಯೇ ಏನೋ ನಿಶ್ಚಯಿಸಿದಳು. ಮರುದಿನ ಹೊತ್ತಿಗೆ ಮುಂಚೆ ಎದ್ದು, ತನ್ನ ಮಗಳು ರುದ್ರಾಣಿಯನ್ನು ಜೊತೆಗೆ ಕರೆದುಕೊಂಡು ತನ್ನ ತೌರೂರಾದ ಶಿವಗೆರೆಗೆ ನಡೆದೇಹೋದಳು. ಅವಳ ಕೊರಳಿನಲ್ಲಿ ತಂದೆಯ ಮನೆಯವರು ಹಾಕಿದ್ದ ಬಂಗಾರದ ಕರಡಿಗೆ ಇತ್ತು. ದೇವರು ಎಂಬ ಭಯದಿಂದಲೋ, ಅಥವಾ ಆ ಆಲೋಚನೆ ಹೊಳೆದಿರಲಿಲ್ಲವೋ, ರೇವಣ್ಣಶೆಟ್ಟಿಯ ದೃಷ್ಟಿ ಅದರ ಮೇಲೆ ಬಿದ್ದಿರದೆ ಅದು ಇನ್ನೂ ಉಳಿದಿತ್ತು. ಒಬ್ಬ ಅಕ್ಕಸಾಲಿಗನಿಗೆ ಅದನ್ನು ನೂರ ಐವತ್ತು ರೂಪಾಯಿಗೆ ಮಾರಿ ಎಂಟು ರೂಪಾಯಿಗೆ ಒಂದು ಬೆಳ್ಳಿಯ ಕರಡಿಗೆ ಮಾಡಿಸಿಕೊಂಡಳು. ಎರಡು ದಿನವಾದ ಮೇಲೆ ಊರಿಗೆ ಹಿಂತಿರುಗಿದ ಅವಳು ನಂಜಮ್ಮನಿಗೆ ಕೊಡಬೇಕಾದುದನ್ನು ಕೊಟ್ಟು, ಉಳಿದ ಹಣವನ್ನೂ ಅವಳ ಕೈಲೇ ಇಟ್ಟು ಹೇಳಿದಳು: ‘ಮನ್ಲಿ ತಿನ್ನಾಕ್ ಇಲ್ಲದ ದಿನ ಬಂದ್ ಕೇಳಿ ರೂಪಾಯಿ, ಎಂಟಾಣೆ, ಇಸ್ಕಂಡ್ ಹೋಯ್ತೀನಿ. ನೀವು ಮಡೀಕಂಡಿರಿ.’ +‘ಇಷ್ಟು ದೊಡ್ಡ ಗಂಟು ನಾನು ಎಲ್ಲಿ ಇಟ್ಟಿರ್ಲಿ ಸರ್ವಕ್ಕ? ಅಕಸ್ಮಾತ್ ಏನಾದ್ರೂ ಆದ್ರೆ ನನ್ನ ಗತಿ ಏನು?’ +‘ಒಂದು ಮಡಕೇಲಿ ಹಾಕಿ ಅಟ್ಟದಮ್ಯಾಲೆ ಎಲೆ ಸರದ ಒಳಗೆ ಮಡಗಿ. ಯಾರ್ಗೂ ತಿಳಿಯಾಕುಲ್ಲ.’ +ನಂಜಮ್ಮ ಹಾಗೆಯೇ ಮಾಡಿದಳು. +– ೩ – +ರಾಮಣ್ಣ ಮಿಡ್ಳ್‌ಸ್ಕೂಲಿಗೆ ಹೋಗಿಬರಲು ಶುರುವಾದ ಮೇಲೆ ಪಾರ್ವತಿ ಮನೆಯಲ್ಲಿ ಉಳಿದಳು. ಅದುವರೆಗೂ ಅವಳ ಬಗೆಗೆ ಮೂಡದಿದ್ದ ಹೊಸ ಯೋಚನೆಯೊಂದು ನಂಜಮ್ಮನ ಮನಸ್ಸಿನಲ್ಲಿ ಹುಟ್ಟಿ ಕಾಡತೊಡಗಿತು. ಅವಳಿಗಾಗಲೇ ಹನ್ನೆರಡು ವರ್ಷ. ತನ್ನಂತೆಯೇ ಎತ್ತರವಾದ ತುಂಬುಮೈಕಟ್ಟಿನ ಅವಳು ಹನ್ನೆರಡಕ್ಕಿಂತ ದೊಡ್ಡ ವಯಸ್ಸಿನ ಹುಡುಗಿಯಂತೆ ಕಾಣುತ್ತಾಳೆ. ಮದುವೆ ಮಾಡಬೇಕು. ಗಂಡು ಹುಡುಕುವವರು ಯಾರು? ದುಡ್ಡು ಹೊಂದಿಸುವುದೆಲ್ಲಿ? ಇಷ್ಟು ದಿನವೂ ತಾನು ಬರೀ ಸಂಸಾರ ಸಾಗಿಸಿಕೊಂಡು ಬಂದಿದೀನಿ. ಈಗ ರಾಮಣ್ಣನ ವಿದ್ಯಾಭ್ಯಾಸದ ಖರ್ಚಿಗೂ ಒದಗಿಸಬೇಕು. ಇದರ ಮೇಲೆ ಮಗಳ ಮದುವೆ ಮಾಡುವುದೆಂದರೆ ಹುಡುಗಾಟವಲ್ಲ. ಆದರೆ ಮಾಡದೆ ಬಿಡುವ ಕೆಲಸವಲ್ಲ ಅದು. +ಪಾರ್ವತಿ ಸ್ಕೂಲಿಗೆ ಹೋಗುತ್ತಿದ್ದಾಗಲೇ, ತಾಯಿಗೆ ಬರುತ್ತಿದ್ದ ಹಾಡುಹಸೆಗಳನ್ನೆಲ್ಲ ಕಲಿತಿದ್ದಳು. ಹಬ್ಬದ ಅಡಿಗೆಯನ್ನು ಸಹ ನಂಜಮ್ಮ ಇತ್ತೀಚೆಗೆ ಅವಳ ಕೈಲಿ ಮಾಡಿಸುತ್ತಿದ್ದಳು. ಸ್ಕೂಲು ಮುಗಿದ ಮೇಲೆ ಮನೆಯಲ್ಲಿ ಕೂತು ಮಾಡುವುದೇನು? ಬೆಳಗಿನಿಂದ ಸಂಜೆಯ ಹೊತ್ತಿಗೆ ಇನ್ನೂರು ಎಲೆ ಹಚ್ಚಿಹಾಕುತ್ತಿದ್ದಳು. ಬೆಳೆಯುವ ಹುಡುಗಿ, ಒಂದಿಷ್ಟು ಹಾಲು ತುಪ್ಪ ಹಾಕಬೇಕು. ವಿಶ್ವನ ಬಾಣಂತಿತನದಲ್ಲಿ ಅಕ್ಕಮ್ಮ ತಂದುಕೊಟ್ಟಿದ್ದ ಹಸುವಿನ ಹೆಣ್ಣುಗರು ಈಗ ಕರು ಹಾಕಿದೆ. ಅದಕ್ಕೆ ಆರೈಕೆ ಇಲ್ಲ. ಹೊರಗೆ ಹಸುರಿನಲ್ಲಿ ಕಾಲಾಡಿಸಿಸುವವರಿಲ್ಲದೆ ಅಂಥ ಒಳ್ಳೆಯ ತಳಿ ದಿನಕ್ಕೆ ಮೂರು ಪಾವು ಹಾಲಿಗೆ ಇಳಿದಿದೆ. ಊಟಕ್ಕೆ ಮೂರು ಕರಟ ಮೊಸರು ಹಾಕದೆ ಇದ್ದರೆ ಯಜಮಾನರು ಹಲಲೋ ಎಂದು ಕಿರುಚಿಕೊಳ್ಳುತ್ತಾರೆ. ಉಳಿದುದರಲ್ಲಿ ಯಾವ ಮಕ್ಕಳಿಗೆ ಎಷ್ಟೆಷ್ಟು ಹಾಕುವುದು? ದಿನಾ ಅಷ್ಟೊಂದು ಮುತ್ತುಗದೆಲೆ ಹಚ್ಚಿ ಉಷ್ಣವಾಗುವ ಹುಡುಗಿ. ದಿನಕ್ಕೆ ಹತ್ತು ಮೈಲಿ ತಿರುಗಿ ಸ್ಕೂಲಿಗೆ ಹೋಗಿಬರುವ ಹುಡುಗ. ಊರಿನಲ್ಲೇ ಸ್ಕೂಲಿಗೆ ಹೋಗುತ್ತಿದ್ದು ಬೆಳೆಯುವ ಚಿಕ್ಕವನು. ಇವರಲ್ಲಿ ಯಾರಿಗೆ ಕಡಮೆ ಮಾಡಬಹುದು, ಯಾರಿಗೆ ಹೆಚ್ಚು ಮಾಡಬಹುದು! +ಆ ವರ್ಷ ಜ್ಯೇಷ್ಠ ಆಷಾಢವಾದರೂ ಮಳೆಯಾಗಲಿಲ್ಲ. ಮಲೆಸೀಮೆಯಲ್ಲಿ ಮಳೆ ಇಲ್ಲವೆಂದು ಯಾರೋ ಹೇಳಿದರು. ಬರೀ ಪಡುವಲಗಾಳಿ ಹೊಡೆಯುತ್ತಿತ್ತು. ಬೇಸಿಗೆಯಲ್ಲಿ ಒಣಗಿದ ಭೂಮಿಯಲ್ಲಿ ಹಸುರು ಚಿಗುರಿಲ್ಲ. ಹೊಟ್ಟೆಗಿಲ್ಲದ ಹಸು ಒಂದು ಪಾವು ಹಾಲಿಗೆ ಇಳಿದದ್ದು ಕೊನೆಗೆ ಪೂರ್ತಿ ಮಾನಿಸಿಕೊಂಡುಬಿಟ್ಟಿತು. ಮನೆಯಲ್ಲಿ ಮಜ್ಜಿಗೆಯ ನೀರು ಪೂರ್ತಿ ಇಲ್ಲವಾಯಿತು. ಯಾರೂ ಹೊಲವನ್ನು ಗೇಯ್ದಿಲ್ಲ. ಈ ವರ್ಷದ ಬೆಳೆ ಪೂರ್ತಿ ಕೈಕೊಡುತ್ತದೆಯೋ ಅಥವಾ ಹಿಂಗಾರಾದರೂ ನಡೆಸಿ ರಾಗಿ ಕೈಗೆ ಬರುತ್ತದೆಯೋ ಎಂಬ ಬಗೆಗೆ ಹಳ್ಳಿಗಳಲ್ಲೆಲ್ಲ ಕಳವಳ. ಹೊಸ ವರ್ಷದ ಕಂದಾಯಕ್ಕೆ ನಂಜಮ್ಮ ಎಂದಿನಂತೆ ಪಟೇಲ ಗುಂಡೇಗೌಡರು ಮತ್ತೆ ಇಬ್ಬರಿಗೆ ನೂರು ರೂಪಾಯಿಗೆ ಗಂಡನಿಂದ ರಶೀತಿ ಬರೆಸಿದ್ದಳು. ಆದರೆ ಮಳೆ ಹೀಗೆ ಕೈಕೊಟ್ಟಿದ್ದನ್ನು ಕಂಡ ಗೌಡರು ಹೇಳಿದರು: ‘ಅವ್ವಾ. ನನ್ನ ಹಗೇವಿನಲ್ಲಿರಾ ರಾಗಿ ಇದೊಂದು ವರ್ಷ ಬೆಳೆಯಾಗದಿದ್ರೂ ಮನೆಯೋರ್ಗೆ ಆಳುಗಳಿಗೆ ಆಯ್ತದೆ. ನಮ್ಮ ಜಮ್ಮೇನಳ್ಳಿ ಬೀಗರ ಮನೇಲಿ ಒಂದು ಕಾಳೂ ಇಲ್ವಂತೆ. ಒಂದ್ ನಾಕ್ ಖಂಡುಗನಾದ್ರೂ ಬೇಕು ಅಂತ ಏಳಿ ಕಳಿಸಿದ್ರು. ಕೊಡಾಹಂಗಿಲ್ಲ, ಬಿಡಾಹಂಗಿಲ್ಲ; ಹಂಗಾಗೈತೆ. ನಿನ್ನ ರಶೀತಿಗೆ ಬೇಕಾದ್ರೆ ದುಡ್ಡು ತಗಾ. ಈ ವರ್ಷ ರಾಗಿ ಇಲ್ಲ.’ +ಆಗಲೇ ದುಡ್ಡು ತೆಗೆದುಕೊಂಡು ರಾಗಿ ಕೊಂಡಿದ್ದರೆ ನಂಜಮ್ಮ ಬುದ್ಧಿವಂತಳಾಗುತ್ತಿದ್ದಳು. ಮುಂದೆ ಹೀಗಾಗುತ್ತದೆಂಬುದು ಅವಳಿಗಾದರೂ ಏನು ಗೊತ್ತು? ಮನೆಯಲ್ಲಿ ಇನ್ನೂ ಸ್ವಲ್ಪ ದಾಸ್ತಾನಿತ್ತು. ಅದು ಮುಗಿಯುವ ಹೊತ್ತಿಗೆ ಮತ್ತೆ ಎರಡು ತಿಂಗಳು ಕಳೆಯಿತು. ಇನ್ನೂ ಮಳೆ ಬೀಳಲಿಲ್ಲ. ಅಷ್ಟರಲ್ಲಿ ರಾಗಿಯ ಧಾರಣೆ ರೂಪಾಯಿಗೆ ಎಂಟು ಸೇರಿಗೆ ಏರಿತ್ತು. ಮೂರು ರೂಪಾಯಿಗೆ ಪಲ್ಲವೆಲ್ಲಿ, ಈಗ ಆಗಿರುವ ಹನ್ನೆರಡು ರೂಪಾಯಿಗೆ ಪಲ್ಲದ ದುಬಾರಿ ಧಾರಣೆ ಎಲ್ಲಿ? ಅವಳ ಎದೆ ಜಲ್ ಎಂದಿತು. ಒಂದು ದಿನ ದುಡ್ಡನ್ನೇ ಕೇಳಲು ಕುರುಬರಹಳ್ಳಿಗೆ ಹೋದಾಗ ಗುಂಡೇಗೌಡರು ಎಂದರು: ‘ನಿನ್ಮನ್ಲಿ ರಾಗಿ ಐತೇನೋ ಅಂತ ನಾನ್ ತಿಳ್ಕಂಡಿದ್ದೆ. ನೀನು ಬರ್ನಿಲ್ಲ. ಈಗಲೇ ಸಿಕ್ದೋಟು ತೆಗ್ದು ಮಡೀಕಂಡುಬುಡು. ಇನ್ನೊಂದೆಲ್ಡು ತಿಂಗ್ಳು ಹ್ವಾದ್ರೆ ಬೀಜಕ್ಕೂ ರಾಗಿ ಸಿಕ್ಕಾಕುಲ್ಲ.’ +‘ಹಾಗಾದ್ರೆ ನೀವೇ ಎಲ್ಲಾದ್ರೂ ಕೊಡ್ಸಿ ಗೌಡ್ರೆ.’ +ಕುರುಬರಹಳ್ಳಿಯ ಪಕ್ಕದ ನಾಗೇನಹಳ್ಳಿಯ ಚಿಕ್ಕತಮ್ಮೇಗೌಡರು ಇನ್ನೂ ಹಗೇವು ಕಿತ್ತಿರಲಿಲ್ಲ. ಅವರು ಕಿತ್ತಿದ್ದನ್ನು ವಿಚಾರಿಸಿ ಗುಂಡೇಗೌಡರು ಐದು ಪಲ್ಲ ರಾಗಿ ತೆಗೆಸಿ ಕಳಿಸಿದರು. ಈಗ ಧಾರಣೆ ಇನ್ನೂ ಏರಿತ್ತು. ಪಲ್ಲಕ್ಕೆ ಹದಿನಾರು ರೂಪಾಯಿ. ಎಂದರೆ ರೂಪಾಯಿಗೆ ಆರು ಸೇರು. ಗುಂಡೆಗೌಡರ ಕಂದಾಯದ ಎಂಬತ್ತು ರೂಪಾಯಿ ಅಷ್ಟಕ್ಕೆ ಮುಕ್ತಾಯವಾಯಿತು. ಇನ್ನು ಉಳಿದಿರುವ ಇಪ್ಪತ್ತು ರೂಪಾಯಿ, ಮೇಲೆ ಯಾವುದಾದರೂ ಚಿಲ್ಲರೆ ಖರ್ಚಿಗೆ ಬೇಕು. ನಂಜಮ್ಮ ಅದನ್ನು ನಗದು ಇಸಿದುಕೊಂಡಳು. +ಐದು ಜನಕ್ಕೆ ಕೊನೆಯ ಪಕ್ಷ ದಿನಕ್ಕೆ ನಾಲ್ಕು ಸೇರು ರಾಗಿಯಾದರೂ ಬೇಕು. +ಮೇಲೆ ಕೈತುಂಬ ಹಾಲು ಮೊಸರು ತರಕಾರಿ ಬೇಳೆ ಕಾಳುಗಳಿದ್ದರೆ ಹಿಟ್ಟಿನ ಖರ್ಚು ಕಡಿಮೆ. ಯಾವುದೂ ಇಲ್ಲದೆ ಬರೀ ಅದರಲ್ಲಿಯೇ ಹೊಟ್ಟೆ ತುಂಬಬೇಕೆಂದರೆ ನಾಲ್ಕು ಸೇರು ಬೇಕೇ ಬೇಕು. ಬೆಳಗಿನ ರೊಟ್ಟಿ ನಿಲ್ಲಿಸಿದರೆ ಒಂದು ಸೇರು ಉಳಿತಾಯವಾಗುತ್ತೆ. ಆದರೆ ಸ್ಕೂಲಿಗೆ ಹೋಗುವ ರಾಮಣ್ಣನಿಗೆ ತೆಗೆದುಕೊಂಡು ಹೋಗಲು ರೊಟ್ಟಿ ತಟ್ಟಬೇಕು. ಹಿರಿಯನಿಗೆ ತಟ್ಟಿ ನೆಲ್ಲಿಯಕಾಯಿ ಉಪ್ಪಿನಕಾಯಿ ಕೊಟ್ಟಾಗ ಕೊನೆಯ ವಿಶ್ವ ಬಿಡುವುದಿಲ್ಲ. ಬೆಳೆಯುತ್ತಿರುವ ಹುಡುಗಿ ಪಾರ್ವತಿಗೆ ಹೇಗೆ ಇಲ್ಲವೆನ್ನುವುದು? ಹುಡುಗರ ಹೊಟ್ಟೆಯನ್ನು ಹೇಗಾದರೂ ಕಟ್ಟಿಸಬಹುದು. ಯಜಮಾನರನ್ನು ಸಮಾಧಾನ ಮಾಡುವುದು ಹುಡುಗಾಟದ ಮಾತಲ್ಲ. ಎದ್ದ ತಕ್ಷಣ ರೊಟ್ಟಿಯಾಗದಿದ್ದರೆ ಅವರು ಬಾಗಿಲಿನಿಂದ ಹೊರಗೆ ಹೋಗಿ ಬೀದಿಯಲ್ಲಿ ನಿಂತು, ಯಕ್ಷಗಾನ ಕುಣಿತದವರು ಊರಿಗೆಲ್ಲ ಕೇಳುವಂತೆ ಕಿರುಚುವ ಹಾಗೆ ಗಟ್ಟಿಯಾಗಿ ಮುಂಡೆ ರಂಡೆಗಳ ಮಂತ್ರ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎದ್ದರೆ ಮನೆಯ ಮರ್ಯಾದೆ ಊರಿಗೆಲ್ಲ ಕೇಳುವುದು ಅವಳಿಗೆ ಬೇಡ. ಅಲ್ಲದೆ ಬೆಳೆಯುವ ಹುಡುಗರ ಕಿವಿಗೆ ಈ ಮಾತು ಪದೇ ಪದೇ ಬೀಳುವುದನ್ನು ತಪ್ಪಿಸಲು ಅವಳು ಸಾಧ್ಯವಾದ ಮಟ್ಟಿಗೂ ಪ್ರಯತ್ನಿಸುತ್ತಿದ್ದಳು. +ಪರಿಣಾಮವೆಂದರೆ ದಿನಕ್ಕೆ ನಾಲ್ಕು ಸೇರಿನಂತೆ ಐದು ಪಲ್ಲ ರಾಗಿ ನಾಲ್ಕು ತಿಂಗಳಿನಲ್ಲಿ ಚಟ್-ಎದ್ದುಹೋಗುತ್ತೆ. ಮತ್ತೆ ಕೊಳ್ಳಲು ದುಡ್ಡಿಲ್ಲ. ಆದುದರಿಂದ ಮುಂದಿನ ಸಂಪಾದನೆ ಏನಿದ್ದರೂ ಎಲೆ ಹಚ್ಚುವುದರಲ್ಲಿ ಆಗಬೇಕು. ಸರಿ, ತಾಯಿ ಮಗಳು ಇಬ್ಬರೂ ಕೂತು, ದಿನಕ್ಕೆ ನಾನ್ನೂರರಷ್ಟು ಎಲೆ ದಳೆಯುತ್ತಿದ್ದರು. ಈ ವರ್ಷ ಪಹಣಿ ಬರೆಯುವ ಕೆಲಸವಿಲ್ಲ. ಎಲ್ಲೂ ಯಾವ ಬೆಳೆಯೂ ಆಗದೆ ಹೊಲಗದ್ದೆಗಳಲ್ಲಿ ಸುಟ್ಟ ಬೂದಿಯ ಬಯಲಿನಂತೆ ಆಗಿರುವಾಗ ಪಹಣಿ ಬರೆಯುವುದೇನಿದೆ. ಆದರೆ ಲೆಕ್ಕದ ಪುಸ್ತಕ ಹೊಲಿದು ಹೆಡಿಂಗ್ ಕಟ್ಟಿ ಉದ್ದ ಅಡ್ಡ ರೂಲುಗಳನ್ನು, ಕೆಂಪು ಶಾಯಿ ಸೀಸದ ಕಡ್ಡಿಗಳಲ್ಲಿ ಹಾಕಬೇಕು. ಪ್ರತಿಯೊಂದು ಸರ್ವೆ ನಂಬರಿನ ಜಾಗದಲ್ಲೂ-‘ಖಾಲಿ’, ‘ಖಾಲಿ’ ಎಂದಾದರೂ ಬರೆಯಬೇಕು. ಸರ್ಕಾರೀ ಲೆಕ್ಕವೆಂದರೆ ಲೆಕ್ಕ. ಬಾಗಾಯ್ತು ನಂಬರಿನಲ್ಲಿ ತೆಂಗು, ಮಾವು ಎಂಬುದನ್ನು ‘ಖಾಲಿ’ ಎಂದು ಬರೆಯುವಂತಿಲ್ಲ. ಮುತ್ತಗದೆಲೆ, ಮನೆಗೆಲಸಗಳ ಜೊತೆಗೆ ನಂಜಮ್ಮ ಅದನ್ನೂ ನಿಭಾಯಿಸಿದಳು. +ಮುಂದಿನ ಪುಷ್ಯ, ಮಾಘ ಬರುವ ಹೊತ್ತಿಗೆ, ಜನಗಳಿಗೆ ಬಂದಿದ್ದ ಹಾಹಾಕಾರ ಪೂರ್ತಿಯಾಗಿ ದನಗಳಿಗೂ ಬಡಿಯಿತು. ಎಲ್ಲಿಯೂ ಕುಡಿಯುವ ನೀರಿಲ್ಲ; ಮೇಯಲು ಹುಲ್ಲಿಲ್ಲ. ಬೆಳೆಯೇ ಇಲ್ಲದಿರುವಾಗ ಗೊಂತಿನಲ್ಲಿ ತಿನ್ನುವ ಹುಲ್ಲಿಗೂ ತೊಂದರೆಯಾಗಿತ್ತು. ಸ್ವಲ್ಪ ಹೆಚ್ಚಾಗಿ ಹುಲ್ಲು ಇಟ್ಟಿದ್ದವರು ಕೊಪ್ಪಲಿನಿಂದ ತೆಗೆದು ಅಟ್ಟಕ್ಕೆ ಸಾಗಿಸಿದರು. ಇಲ್ಲದಿದ್ದರೆ ಕಳವಳವಾಗುತ್ತಿತ್ತು. ಇದ್ದುದನ್ನೇ ಒಪ್ಪವಾಗಿ ದಿನಕ್ಕೆ ಅರ್ಧ ತಬ್ಬಿನಂತೆ ಹಾಕಿ, ಜನದ ಜೀವದಂತೆ ದನದ ಜೀವವನ್ನೂ ಶರೀರಕ್ಕೆ ಅಂಟಿಸಿ ಇಡುವ ಪ್ರಯತ್ನ ಮಾಡುತ್ತಿದ್ದರು. ಹುಲ್ಲು ಇಲ್ಲದವರ ದನಗಳು ಸತ್ತು ಬೀಳುತ್ತಿದ್ದವು. ತನ್ನ ಮನೆಯಲ್ಲಿ ಹುಟ್ಟಿದ ಹೋರಿ ಕರುಗಳನ್ನು ಅವು ಬೆಳೆದಂತೆ ನಂಜಮ್ಮ ಮಾರಿಬಿಡುತ್ತಿದ್ದಳು. ಇನ್ನು ಉಳಿದಿದ್ದ ಎರಡು ಹಸು ಒಂದು ಮೊಳಕ, ಹುಲ್ಲಿಲ್ಲದೆ ಸಾಯಲಾದುವು. ಅವನ್ನು ನಾಗಲಾಪುರಕಾದರೂ ಹೊಡೆದು ಕಳಿಸುವ ಯೋಚನೆ ಮಾಡಿದಳು. ಆದರೆ ಅಲ್ಲಿಯೂ ಇದೇ ಕ್ಷಾಮವಂತೆ. ಬರವು ಬರೀ ರಾಮಸಂದ್ರಕ್ಕೇ ಬಂದಿರಲಿಲ್ಲ. ತುಮಕೂರು, ಹಾಸನ, ಕೋಲಾರ, ಮೊದಲಾದ ಬಯಲುಸೀಮೆಯಲ್ಲೆಲ್ಲ ಈ ವರ್ಷ ಅನಾವೃಷ್ಠಿಯಾಗಿತ್ತು. ನಾಲೆ ಬಯಲಿನವರೇ ಪುಣ್ಯವಂತರು. ಎಷ್ಟೋ ಜನ ಗನ್ನಿ ಶ್ರೀನಿವಾಸಪುರಗಳಿಗೆ ಹೋಗಿ ಒಂದು ಗಾಡಿ ನೆಲ್ಲು ಹುಲ್ಲಿಗೆ ಐವತ್ತು ರೂಪಾಯಿ ಕೊಟ್ಟು ಹೇರಿಕೊಂಡು ಬಂದರು. ಎರಡನೆಯ ಸಲ ಹೋದಾಗ ಗಾಡಿಗೆ ಅರವತ್ತೈದು ರೂಪಾಯಿಗೆ ಏರಿಸಿದ್ದರಂತೆ. ನಂಜಮ್ಮನಿಗೆ ಏನೂ ತಿಳಿಯಲಿಲ್ಲ. ಒಂದು ದಿನ ತನ್ನ ಮನೆಯ ಎರಡು ಹಸು ಒಂದು ಮೊಳಕ, ಮೂರನ್ನೂ ಹೊಡೆದುಕೊಂಡು ಕುರುಬರಹಳ್ಳಿಗೆ ಹೋಗಿ ಗುಂಡೇಗೌಡರ ಮುಂದೆ ನಿಲ್ಲಿಸಿ ಹೇಳಿದಳು: ‘ಗೌಡರೇ, ಇವನ್ನ ನಾನು ಗೋದಾನ ಮಾಡ್ತೀನಿ ಅಂತ ತಿಳಕಂಡು ತಗಂಡುಬಿಡಿ. ದಿನಕ್ಕೆ ಒಂದು ಹೊರತೆಯಾದರೂ ಹುಲ್ಲು ಹಾಕಿ ಸಾಕಿ ಬದುಕಿಸಿಕೊಳ್ಳಿ. ಉಳುದ್ರೆ ಮುಂದೆ ನಿಮ್ಮ ಮಮ್ಮಕ್ಕಳು ಹಾಲು ಕುಡಿತೂವೆ. ಅವು ಸಾಯೂದು ನಾನು ನೋಡ್ಲಾರೆ.’ +‘ಅವ್ವಾ, ಒಕ್ಕಲಿಗನಾಗಿ ಹುಟ್ಟಿ ನಾನು ಗೋದಾನ ತಗಳ್ಲಾ?’ +‘ಹಾಗಾದ್ರೆ ಮೂರರಿಂದ ಒಟ್ಟು ಮೂರು ಬಿಲ್ಲೆ ಕೊಟ್ಟುಬಿಡಿ. ಹಗ್ಗ ಹಿಡಿದು, ಖರೀದಿ ಅಂತ ನಿಮ್ಮ ಕೈಲಿಡ್ತೀನಿ. ಅವುಗಳ ಜೀವ ಉಳ್ಕೊಳ್ಳೋದು ಮುಖ್ಯ.’ +ಗೌಡರಿಗೂ ಹುಲ್ಲಿನ ಕಷ್ಟ. ಅವರು ದಿಮ್ಮನೆಯ ಕುಳವೇನೋ ಹೌದು. ಮುಂದಿನ ಒಂದು ವರ್ಷಕ್ಕೆ ಆಗುವ ದಾಸ್ತಾನು ಯಾವಾಗಲೂ ಇಡುತ್ತಿದ್ದರು. ಮುಂದಿನ ವರ್ಷವೂ ಮಳೆರಾಯ ಹೀಗೆ ಕಣ್ಣಾಮುಚ್ಚಾಲೆ ಆಡಿದರೆ ಗತಿ ಏನು? ಆದರೆ ಮುಂದಿನ ವರ್ಷದ ಅನಿಶ್ಚಿತತೆಗೆ ಹೆದರಿ ಅವರು ಈಗ, ತಮ್ಮ ಮನೆಯ ಬಾಗಿಲಿಗೆ ಬಂದಿರುವ ನಂಜಮ್ಮನಂತಹ ಹೆಂಗಸಿನ ಕೋರಿಕೆಯನ್ನು ಹೇಗೆ ತಳ್ಳಿಹಾಕಬಲ್ಲರು? ಅದು ಬರೀ ಶ್ಯಾನುಭೋಗಮ್ಮನ ಮಾತಿನ ಪ್ರಶ್ನೆಯಲ್ಲ, ಮೂರು ಗೋದನಗಳ ಪ್ರಶ್ನೆ. ‘ಆಯ್ತು, ನಾನ್ ಮಡೀಕಂಡ್ ಸಾಕ್ತೀನಿ. ದಾನವೂ ಬ್ಯಾಡ, ಖರೀದಿಯೂ ಬ್ಯಾಡ. ಇದರ ಜಾತೀದ ಒಂದು ಹೆಣ್ಣುತಳಿ ನಂಗೆ ಆಮ್ಯಾಕೆ ಕೊಟ್ಬುಡು. ಬೆಳ್ಳಗೆ ಒಳ್ಳೇ ಚಂದಾಗೈತೆ.’ +ನಂಜಮ್ಮನ ಯೋಚನೆ ತಪ್ಪಿತು. ಅವಳು ಊರಿಗೆ ಹಿಂತಿರುಗಿದಳು. ರಾಮಸಂದ್ರದಲ್ಲಿ ಎಷ್ಟೋ ದನಗಳು ಸತ್ತುಹೋದವು. ಉಳಿದುವೆಲ್ಲ ಸಾಯುವ ಸ್ಥಿತಿಗೆ ಬಂದಿದ್ದವು. +ತಾಯಿ ಮಗಳು ಕೂತು ಬೇಗ ಬೇಗ ಹಚ್ಚಿದುದರಿಂದ ಆ ವರ್ಷದ ಎಲೆಯ ಸರಗಳೆಲ್ಲ ಮಾರ್ಗಶೀರ್ಷ ಮಾಸಕ್ಕೇ ಮುಗಿದುಹೋದುವು. ಅಷ್ಟರಲ್ಲಿ ಮನೆಯಲ್ಲಿದ್ದ ರಾಗಿಯೂ ಮುಗಿದು ಹಿಟ್ಟಿನ ಮಡಕೆ ಲೊಟ್ಟೆ ಹಾಕುತ್ತಿತ್ತು. ಅಟ್ಟ ಹತ್ತಿ ಎಣಿಸಿ ನೋಡಿದರೆ ಒಟ್ಟು ಇಪ್ಪತ್ತು ಸಾವಿರಕ್ಕೂ ಮೀರಿ ಎಲೆಗಳಿದ್ದವು. ಈಗ ಧಾರಣೆ ಏರಿರಬಹುದು. ಎಲ್ಲ ಸಾಮಾನುಗಳ ಬೆಲೆಯೂ ಏರಿರುವಾಗ ಅದು ಏರದೆ ಇರುತ್ತದೆಯೆ? ನೂರಕ್ಕೆ ಎಂಟಾಣೆ ಅಂತ ಲೆಕ್ಕ ಹಾಕಿದರೂ ಒಟ್ಟು ಒಂದು ನೂರು ರೂಪಾಯಿ ಬರಬೇಕು. ಎರಡು ಗಾಡಿ ಮಾಡಿಸಿಕೊಂಡು, ರಾಮಣ್ಣ ಮತ್ತು ಸರ್ವಕ್ಕನ ಸಂಗಡ ನಂಜಮ್ಮ ತಿಪಟೂರಿಗೆ ಹೋದಳು. ಸರ್ವಕ್ಕನದು ಆರು ಸಾವಿರ ಎಲೆಯಾಗಿತ್ತು. ಇಷ್ಟೊಂದು ಎಲೆ ಒಟ್ಟಿಗೆ ಬಂದುದನ್ನು ನೋಡಿದ ವ್ಯಾಪಾರಿ ಕ್ವಾಮಟಿಗ ಶೆಟ್ಟಿ ಹೇಳಿದ: ‘ಅಮ್ಮಯ್ಯಾರೇ, ಎಲ್ಲೆಲ್ಲೂ ಬರ. ಉಣ್ಣಾಕೇ ಇಲ್ದೆ ಇರುವಾಗ ಎಲೆ ಯಾರಿಗೆ ಬೇಕು? ಏನೋ ನೀವು ತಂದಿದೀರ ಅಂತ ನಾನು ತಗಾತೀನಿ. ನೂರಕ್ಕೆ ನಾಲ್ಕಾಣೆ ಧಾರಣೆ.’ +‘ಇದೇನು ಶೆಟ್ರೆ ಹೀಗಂತೀರ? ನಾವು ತಲೆಮೇಲೆ ಹೊತ್ತು, ಪೋಣಿಸಿ, ಒಣಗಿಸಿ, ಆಮೇಲೆ ಹಚ್ಚಿ ಎಲ್ಲ ಮಾಡಿದುದಕ್ಕೆ ನಾಕಾಣೆ ಅಂದ್ರೆ ಯಾವ ಧರ್ಮ?’ +‘ಧರ್ಮ ಕರ್ಮದ ಮಾತಲ್ಲ. ಬೇಕಾದರೆ ಇನ್ನೊಂದು ಕಡೆ ವಿಚಾರಿಸಿ.’ +ಬೇರೆ ಅಂಗಡಿಗಳಲ್ಲಿ ವಿಚಾರಿಸಿದರೆ ಮೂರಾಣೆ ಎಂದರು. ಮೊದಲನೆಯವನಿಗೇ ಎರಡು ಗಾಡಿಗಳ ಪಿಂಡಿಯನ್ನೂ ಸೀಯ್ದು ಇಬ್ಬರೂ ಹಂಚಿಕೊಂಡು ನಂಜಮ್ಮ ಮೂರೂವರೆ ರೂಪಾಯಿಯನ್ನೂ ಸರ್ವಕ್ಕ ಒಂದೂವರೆಯನ್ನೂ ಗಾಡಿಯ ಬಾಡಿಗೆ ಕೊಟ್ಟರು. ನಂಜಮ್ಮ ತನಗೆ ಮಗಳಿಗೆ ಒಟ್ಟು ಮೂರು ಮೂರು ರೂಪಾಯಿನ ಎರಡು ಸೀರೆ, ರಾಮಣ್ಣನಿಗೆ ಒಂದು ಅಂಗಿ, ವಿಶ್ವನಿಗೆ ಒಂದು ಅಂಗಿ, ಒಂದೊಂದು ಚಡ್ಡಿಗಳನ್ನು ಕೊಂಡಳು. ಎಲ್ಲ ಕಳೆದು ಇನ್ನು ಮೂವತ್ತೇಳು ರೂಪಾಯಿ ಉಳಿಯಿತು. ತೆಗೆದುಕೊಂಡು ಹೋಗಿದ್ದ ಒಣ ರೊಟ್ಟಿಯನ್ನೇ ಕಡಿದುಕೊಂಡು ಎಲ್ಲರೂ ಊರಿಗೆ ಬಂದರು ಅಷ್ಟರಲ್ಲಿ ರಾಗಿಯ ಧಾರಣೆ ಪಲ್ಲಕ್ಕೆ ಇಪ್ಪತ್ತಕ್ಕೆ ಏರಿತ್ತು. +– ೪ – +ಅದೇ ಸಮಯಕ್ಕೆ ಎಲ್ಲೆಲ್ಲಿಯೂ ಪ್ಲೇಗುಮಾರಿ ಬಂದಳು. ಈ ಸಲ ಗೂಡೆ ಮಾರಮ್ಮನೂ ಬರಲಿಲ್ಲ. ಯಾರಿಗೂ ಅವಳ ಸುಳಿವು ಸೂಕ್ಷ್ಮ ಏನೂ ತಿಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡ ಪಿಡುಗು, ಊರು ಊರುಗಳಲ್ಲೆಲ್ಲ ಆಹುತಿ ತೆಗೆದುಕೊಳ್ಳಲಾರಂಭಿಸಿತು. ಸುತ್ತಮುತ್ತ ಯಾವ ಊರಿನಲ್ಲಿ ಕೇಳಿದರೂ ಇಲಿ ಬೀಳುತ್ತಿತ್ತು. ಕೆಲವು ಊರುಗಳಲ್ಲಂತೂ ಇಲಿ ಬಿದ್ದುದು ಗಮನಕ್ಕೆ ಬರುವ ಮೊದಲು ಜನಗಳೇ ಬಿದ್ದು ಹೋದರು. ರಾಮಸಂದ್ರದಲ್ಲೂ ಕೆಲವರಿಗೆ ಗೆಡ್ಡೆ ಬಂತು. ತಡ ಮಾಡದೆ ಎಲ್ಲರೂ ಊರು ಬಿಟ್ಟರು. ಸ್ವಂತ ಜಮೀನು ಇದ್ದವರು ತಮ್ಮ ಹೊಲ ತೋಟಗಳಲ್ಲಿ ಶೆಡ್ಡು ಹಾಕಿದರೆ, ಎಲ್ಲ ಜಮೀನನ್ನೂ ಕಳೆದುಕೊಂಡಿದ್ದ ನಂಜಮ್ಮ, ಗಂಗಮ್ಮ, ಸರ್ವಕ್ಕನಂಥವರು ಗ್ರಾಮದೇವತೆಯ ಗುಡಿಯ ಹಿಂಭಾಗದಲ್ಲಿ ಹಾಕಿಕೊಂಡರು. +ಹೊಸ ವರ್ಷದಲ್ಲಿ ಮಳೆ ಇಲ್ಲದೆ ಮುತ್ತುಗದ ಗಿಡಗಳೂ ಚಿಗುರದೆ, ಒಳ್ಳೆಯ ಎಲೆಗಳನ್ನು ಬಿಟ್ಟಿಲ್ಲ. ಹಳೆಯ ಎಲೆಗಳು ಚಕ್ಕಳದಂತೆ ಗಟ್ಟಿಯಾಗಿವೆ. ಅವನ್ನು ಕಿತ್ತು ತಂದರೂ ಹಚ್ಚಲಾಗುವುದಿಲ್ಲ. ಶೆಡ್ಡಿನಲ್ಲಿ ಸುಮ್ಮನೆ ಕೂತು ಮಾಡುವುದಾದರೂ ಏನು? ತಿಪಟೂರಿನಲ್ಲಿ ಎಲೆ ಮಾರಿದ ದುಡ್ಡಿನ ರಾಗಿಯೂ ಮುಗಿಯುತ್ತಾ ಬಂದಿದೆ. ಇನ್ನು ಮೂರು ದಿನ ಕಳೆದರೆ ಒಲೆ ಹಚ್ಚುವಂತೆಯೂ ಇಲ್ಲ. ಕೆಲವು ಗಂಡಸರಂತೂ ರಾತ್ರಿ ಹೊತ್ತು ಅವರಿವರ ತೆಂಗಿನ ತೋಟಗಳಿಗೆ ನುಗ್ಗಿ ಮರ ಹತ್ತಿ ಕೈಗೆ ಸಿಕ್ಕಿದಷ್ಟು ಎಳೆಗಾಯಿಯೋ ಬಳಲುಗಾಯಿಯೋ ಕಿತ್ತು ತರುತ್ತಾರೆ. ಬರೀ ಅವನ್ನೇ ಸುಲಿದು ಒಡಲು ತುಂಬಿಸಿಕೊಳ್ಳುತ್ತಾರೆ. ಅದನ್ನು ಕಂಡ ತೋಟದ ಯಜಮಾನರು ರಾತ್ರಿ ಕಾವಲು ಕಾಯಲು ಹೋದರೆ ಅವರಿಗೇ ಕಲ್ಲೇಟು ಬಿತ್ತು. ಜೀವಭಯದಿಂದ ಅವರು, ತೋಟ ಕಾಯುವುದನ್ನೇ ಬಿಟ್ಟುಬಿಟ್ಟರು. ಇನ್ನು ಯಾವ ದಾರಿಯೂ ಇಲ್ಲದಿದ್ದ ಜನರ ಮನೆಯ ಚಿನ್ನ ಬೆಳ್ಳಿಗಳು ಕಾಶಿಂಬಡ್ಡಿ ಸಾಹುಕಾರರ ಅಂಗಡಿ ಸೇರಿದುವು. ಆನಂತರ ಒಂದೊಂದಾಗಿ ಹಿತ್ತಾಳೆ ತಾಮ್ರದ ಪಾತ್ರೆಗಳೂ ಅಲ್ಲಿಗೇ ಹೋಗಿ ತುಂಬಿದುವು. +ಇವರ ಮನೆಯ ರಾಗಿ ಮುಗಿದುಹೋದ ಮರುದಿನ ರಾಮಣ್ಣ ಹಟಮಾಡಿದವನಂತೆ ಉಪವಾಸವೇ ಸ್ಕೂಲಿಗೆ ನಡೆದು ಹೋದ. ಕಂಬನಕೆರೆಯ ಅವನ ಸ್ಕೂಲು ಊರ ಹೊರಗೆ ಎರಡು ಫರ್ಲಾಂಗ್ ದೂರದಲ್ಲಿ ಎತ್ತರವಾದ ಜಾಗದಲ್ಲಿದ್ದುದರಿಂದ ಅದನ್ನು ಬಿಡುವ ಕಾರಣವಿರಲಿಲ್ಲ. ಓದುವುದೆಂದರೆ ರಾಮಣ್ಣನಿಗೆ ಇನ್ನಿಲ್ಲದ ಆಶೆ. ಅವನ ಪುಸ್ತಕದ, ಮುಂದಿನ ಪಾಠಗಳನ್ನೆಲ್ಲ ತನಗೆ ತಾನೇ ಓದಿಕೊಂಡುಬಿಟ್ಟಿದ್ದ. ಮುಂದಿನ ಅಧ್ಯಾಯದ ಲೆಕ್ಕ ಇಂಗ್ಲಿಷ್ ಪುಸ್ತಕವನ್ನು ಬಾಯಿಪಾಠ ಮಾಡಿಹಾಕಿದ್ದ. ಒಂದು ದಿನವಾದರೂ ಸ್ಕೂಲು ಕಳೆದುಕೊಳ್ಳುವುದು ಅವನಿಗೆ ಇಷ್ಟವಿಲ್ಲ. ಉಪವಾಸವೇ ಐದು ಮೈಲಿ ನಡೆದ ಅವನು ಸ್ಕೂಲಿನಲ್ಲಿ ಮಂಕಾಗಿ ಕುಳಿತಿದ್ದ. ಒಂದೂವರೆ ಗಂಟೆ ಹೊಡೆದಾಗ ಊರಿನ ಹುಡುಗರು ತಮ್ಮ ತಮ್ಮ ಶೆಡ್ಡುಗಳಿಗೆ ಊಟಕ್ಕೆ ಹೋದರು. ಹಳ್ಳಿಯ ಹುಡುಗರು ರೊಟ್ಟಿ ತಿನ್ನಲು ಸ್ಕೂಲಿನ ಹಿಂಬದಿಗೆ ಇದ್ದ ಕೆರೆಯ ಹತ್ತಿರಕ್ಕೆ ನಡೆದರು. ಒಣಗಿದ ಕೆರೆಯ ಅಂಗಳದಲ್ಲಿ ಈಗ, ಇಳಿಯುವ ಬಾವಿ ತೋಡಿದ್ದರು. ಇವನು ಸ್ಕೂಲಿನ ಹಿಂದಿನ ಮರದ ಕೆಳಗೆ ಮುದುರಿಕೊಂಡು ಕೂತಿದ್ದ. +ಮಗ ಉಪವಾಸ ಹೋಗಿದ್ದಾನೆಂದು ಮನೆಯಲ್ಲಿ ನಂಜಮ್ಮ ಕೊರಗುತ್ತಿದ್ದಳು. ಪಾರ್ವತಿ ಸಪ್ಪೆ ಮುಖ ಹಾಕಿಕೊಂಡು ಒಂದು ಕಡೆ ಕೂತಿದ್ದರೆ, ವಿಶ್ವ ಹಸಿವೆಯೆಂದು ಗಲಾಟೆ ಮಾಡಿ ಅಮ್ಮನ ಸೆರಗು ಹಿಡಿದು ಎಳೆಯುತ್ತಿದ್ದ. ಒಂದು ದಿನ ಉಪವಾಸವಿರಬಹುದು; ಎರಡು ದಿನ ಇರಬಹುದು. ಹೀಗೆಯೇ ಎಷ್ಟು ದಿನ ಇರಲು ಸಾಧ್ಯ? ಅದುವರೆಗೂ ನಂಜಮ್ಮ ಯಾವ ಪಾತ್ರೆಯನ್ನೂ ಕಾಶಿಂಬಡ್ಡಿಯ ಹತ್ತಿರ ಅಡವು ಹಾಕಲಿಲ್ಲ. ಮತ್ತೆ ಕೊಳ್ಳಬೇಕಾದರೆ ಇಪ್ಪತ್ತು ರೂಪಾಯಿ ಕೊಡಬೇಕಾದ ಪಾತ್ರೆಗೆ ಕಾಶಿಂಬಡ್ಡಿ ಎರಡು ರೂಪಾಯಿ ಕೊಡುತ್ತಿದ್ದ. ರಾಗಿಯ ಧಾರಣೆ ರೂಪಾಯಿಗೆ ಎರಡು ಸೇರು ಆಗಿದೆ. ಎರಡು ರೂಪಾಯಿ ಕೊಟ್ಟು ನಾಲ್ಕು ಸೇರು ತಂದರೆ ಒಂದು ದಿನ, ತಪ್ಪಿದರೆ ಒಂದೂವರೆ ದಿನವಾದೀತು. ಮತ್ತೆ ಇನ್ನೊಂದು ಪಾತ್ರೆ ಅಡವಿಡಬೇಕು. ಒಟ್ಟು ಹದಿನೈದು ಇಪ್ಪತ್ತು ದಿನಗಳಲ್ಲಿ ಮನೆಯ ಪಾತ್ರೆಗಳೆಲ್ಲ ಕಳೆದುಕೊಂಡರೆ ಮುಂದೆಯೂ ಈ ಉಪವಾಸದ ಸಮಸ್ಯೆ ತಪ್ಪುವುದಿಲ್ಲ. ದೇವರು ಕಾಲವನ್ನು ಹೀಗೆಯೇ ಇಟ್ಟಿರುವುದಿಲ್ಲ. ಮತ್ತೆ ರಾಗಿ ಸಿಕ್ಕುವ ಕಾಲ ಬರಬಹುದು. ಆದರೆ ಕಳಕೊಂಡ ಪಾತ್ರೆಗಳನ್ನು ಪುನಃ ಮಾಡುವುದು ಸಾಧ್ಯವಿಲ್ಲ. ಅದೂ ಅಕ್ಕಮ್ಮ ತಂದುಕೊಟ್ಟವು ಅವು. +ನಂಜಮ್ಮನ ವಿವೇಕವೇನೋ ಹೀಗೆ ಲೆಕ್ಕ ಹಾಕುತ್ತಿತ್ತು. ಆದರೆ ಹೊಟ್ಟೆಗೂ ಮೆದುಳಿಗೂ ದೂರ ಜಾಸ್ತಿ. ಪಾರ್ವತಿ ಮಲಗಿಬಿಟ್ಟಿದ್ದಾಳೆ. ಅತ್ತು ರಂಪ ಮಾಡಿ ಸಾಕಾದ ವಿಶ್ವ ಅಮ್ಮನನ್ನು ಹೊಡೆದು, ಅವಳ ಕೈಲಿ ಮಾತನಾಡದೆ ಹೋಗಿ ಒಂದು ಮೂಲೆಯಲ್ಲಿ ಬಿದ್ದುಕೊಂಡಿದ್ದಾನೆ. ಅವಳ ಹೊಟ್ಟೆಯ ಒಳಗೂ ಉರಿ ಹಾಕಿದ ಹಾಗೆ ಆಗುತ್ತಿದೆ. ಯಜಮಾನರು ಮಧ್ಯಾಹ್ನದಿಂದ ಎಲ್ಲಿಗೋ ಹೋಗಿದ್ದಾರೆ. ಅವರ ತಾಯಿಯ ಶೆಡ್ಡಿಗೆ ಹೋಗಿರಬಹುದು. ಅಲ್ಲಿಯೇ ಏನಾದರೂ ಕವಳ ಸಿಕ್ಕಿರಬಹುದು. ಗಂಗಮ್ಮನ ಹತ್ತಿರ ಇನ್ನೂ ರಾಗಿ ಇದೆ. ತಾಯಿ ಮಗ ಇಬ್ಬರೇ ಆದುದರಿಂದ ಅವರು ಸಾಕಷ್ಟು ಹಳೆಯ ದಾಸ್ತಾನು ಇಟ್ಟಿದ್ದರು. ಕಳೆದ ಮೂರು ತಿಂಗಳಿನಲ್ಲಿ ಎರಡು ಸಲ ನಾಲೆ ಬಯಲಿನ ಕಡೆಗೆ ದೇಶಾವರಿ ಹೋಗಿ ಅಕ್ಕಿಯ ಮೂಟೆಯನ್ನೇ ತಂದಿದ್ದರು. ರಾಮಣ್ಣ ಇನ್ನೂ ಸ್ಕೂಲಿನಿಂದ ಬಂದಿಲ್ಲ. ಕತ್ತಲಾಗಿ ಆಗಲೇ ಎಷ್ಟೋ ಹೊತ್ತಾಗಿದೆ. ಹುಡುಗ ಉಪವಾಸ ಹೋಗಿದ್ದ. ನಡೆಯಲು ಶಕ್ತಿ ಇಲ್ಲದೆ ಎಲ್ಲಿಯಾದರೂ ಬಿದ್ದುಬಿಟ್ಟನೋ ಏನು ಕಥೆಯೋ! ಕಂಬನಕೆರೆಯ ದಾರಿಯಲ್ಲಿ ಸ್ವಲ್ಪ ಹೋಗಿ ನೋಡಬೇಕು. ಆದರೆ ಹೆಂಗಸಾದ ತಾನು ಒಬ್ಬಳೇ ಕತ್ತಲೆಯಲ್ಲಿ ಹೇಗೆ ಹೋಗುವುದು? ಪಾರ್ವತಿ ಮೇಲೆ ಏಳಲಾರದೆ ಮಲಗಿದ್ದಾಳೆ. ಅವಳನ್ನು ಕರೆದುಕೊಂಡು ಹೊರಟರೆ ಶೆಡ್ಡಿನಲ್ಲಿ ವಿಶ್ವ ಒಂದೇ ಹೇಗೆ ಇದ್ದೀತು? ಇಷ್ಟು ಹೊತ್ತಿನಲ್ಲಿ ಶೆಡ್ಡಿನ ಬಾಗಿಲು ಹಾಕಿಕೊಂಡು ಹೋಗುವುದೂ ಅಪಾಯವೇ. ಯಾರಾದರೂ ನುಗ್ಗಿ ಕೈಗೆ ಸಿಕ್ಕಿದ ಪಾತ್ರೆ ಪರಟಿ ಹೊತ್ತುಕೊಂಡು ಹೋಗಬಹುದು. ಹೊಟ್ಟೆಗಿಲ್ಲದ ಕಾಲದಲ್ಲಿ ಏನು ಸಿಕ್ಕಿದರೂ ಕಳವಾಗುತ್ತದೆ. +ಪಾರ್ವತಿ ವಿಶ್ವರನ್ನು ಮನೆಯಲ್ಲಿ ಬಿಟ್ಟು-‘ಇಲ್ಲೇ ಕೆರೆ ಕಡೆ ಹೋಗ್ತೀನಿ ಇರಿ’ಎಂದು ಹೇಳಿ ಅವಳು ಹೊರಗೆ ಬಂದಳು. ಕಂಬನಕೆರೆಯ ದಾರಿಯಲ್ಲಿ ಮೂರು ಫರ್ಲಾಂಗು ನಡೆದರೆ ಮುದಿ ಮಾವಿನಮರವಿದೆ. ಯಾವ ಪುರಾತನ ಕಾಲದ್ದೋ, ಪೊಟರೆಗಳ ತುಂಬ ಗೂಬೆಗಳಿವೆ. ರಾತ್ರಿಯ ಹೊತ್ತು ಅವು ಕೂಗುವುದು ಇವರ ಶೆಡ್ಡಿಗೂ ಕೇಳಿಸುತ್ತಿರುತ್ತದೆ. ‘ಗೂ ಗ್ಗೂ ಗ್ಗೂ, ಗುದ್ಲೀ ತಾ’-ಎಂಬ ಅದರ ಕೂಗೇ ಕೆಟ್ಟ ಸೂಚನೆ. ಯಾರ ಮನೆಯ ಮೇಲಾದರೂ ಕೂತು ಅದು ‘ಗುದ್ಲೀ ತಾ’ ಎಂದು ಕೂಗಿದರೆ ಆ ಮನೆಯಲ್ಲಿ ಒಂದು ಚಿಕ್ಕ ಮಗುವೋ ಹುಡುಗನೋ ಸಾಯುತ್ತಾರೆ. ದೊಡ್ಡವರು ಸತ್ತರೆ ಸುಡುವುದು, ಚಿಕ್ಕವರನ್ನು ಹೂಳುವುದು. ಬ್ರಾಹ್ಮಣರಲ್ಲದವರಾದರೆ ಯಾರು ಸತ್ತರೂ ಹೂಳುತ್ತಾರೆ. ಆದುದರಿಂದ ಗೂಬೆ ಬ್ರಾಹ್ಮಣರ ಮನೆಯ ಮೇಲೆ ಕೂಗಿದರೆ ಹುಡುಗರು ಮಾತ್ರ, ಇತರರ ಮನೆಯ ಮೇಲೆ ಕೂತು ಕೂಗಿದರೆ ಯಾರು ಬೇಕಾದರೂ ಸಾಯುವ ಸೂಚನೆ. ಆ ಮರದ ಹತ್ತಿರಕ್ಕೆ ಬರುವ ವೇಳೆಗೆ ನಂಜಮ್ಮನಿಗೆ ಹೆದರಿಕೆಯಾಯಿತು. ಹಿಂತಿರುಗಿ ಹೋಗಿ ಬಿಡಲೇ ಎಂಬ ಯೋಚನೆಯೂ ಬಂತು. ಆದರೆ ರಾಮಣ್ಣ ಆ ಮರದ ಕೆಳಗಿನಿಂದಲೇ ಬರಬೇಕು. ಹತ್ತು ವರ್ಷದ ಹುಡುಗ ಹೇಗೆ ಧೈರ್ಯವಾಗಿ ಬಂದೀತು? +ಅವಳು ಹಿಂತಿರುಗಿ ಹೋಗಲಾರಳು, ಅಲ್ಲಿಯೇ ಇರಲಾರಳು. ಆದುದರಿಂದ ಇನ್ನೂ ಎರಡು ಫರ್ಲಾಂಗು ನಡೆದಳು. ದಾರಿಯ ಹತ್ತಿರ ಒಂದು ಕಲ್ಲುಬಂಡೆ ಇತ್ತು. ಅದನ್ನು ಹತ್ತಿ ನಿಂತು, ರಾಮಣ್ಣ ಬರಬೇಕಾದ ದಾರಿಯ ಕಡೆಗೆ ನಿಟ್ಟಿಸುತ್ತ ನಿಂತಳು. ಅರ್ಧ ಗಂಟೆ ಕಳೆದರೂ ಅವನು ಬರಲಿಲ್ಲ. ಅವಳಿಗೆ ಹೆದರಿಕೆಯಾಯಿತು. ಹರಿಶ್ಚಂದ್ರನ ಕಥೆ ಜ್ಞಾಪಕಕ್ಕೆ ಬಂತು. ಚಂದ್ರಮತಿ ರೋಹಿತಾಶ್ವನನ್ನು ಹೀಗೆಯೇ ಕಾಯುತ್ತಿರುತ್ತಾಳೆ. ಆದರೆ ರೋಹಿತಾಶ್ವ ಹಾವು ಕಡಿದು ಸತ್ತುಬಿದ್ದಿದ್ದಾನೆ. ಆಮೇಲೆ, ಅವನ ಜೊತೆ ಹೋಗಿದ್ದ ಇತರ ಹುಡುಗರಿಂದ ವಿಷಯ ತಿಳಿಯುತ್ತದೆ. ಚಂದ್ರಮತಿ ಎಷ್ಟು ಗಟ್ಟಿಯಾಗಿ ಗೊಳೋ ಎಂದು ಅತ್ತಳೋ! ನಂಜಮ್ಮನಿಗೂ ಅಳು ಬಂತು. ಕಂಬನಕೆರೆ ದಾರಿಯಲ್ಲೂ ಹುತ್ತಗಳಿವೆ. ಕಬ್ಬಳ್ಳಿಬುಗದ ಆಚೆಗೆ ಇರುವ ಹುತ್ತದ ದಿಬ್ಬದ ಮಗ್ಗುಲಿಗೇ ದಾರಿ ಇದೆ. ಇಡೀ ದಿಬ್ಬದ ತುಂಬ ಹುತ್ತದ ಕೋಡುಗಳೇ ಸೆಟೆದು ನಿಂತಿವೆ. ಸುತ್ತ ಹಳ್ಳ ಕೊಳ್ಳಗಳಲ್ಲಿ ಕಪ್ಪೆ ಹಿಡಿಯಲು ಹೋಗುವ ಹಾವುಗಳೆಲ್ಲ ಆ ಹುತ್ತಗಳಿಗೇ ಹೋಗಿ ಸೇರಿಕೊಳ್ಳುತ್ತವಂತೆ. ಬರುವಾಗ ಹುಡುಗ ಎತ್ತಲೋ ನೋಡುತ್ತಾ ಯಾವುದಾದರೂ ಹಾವನ್ನು ತುಳಿದಿರಬಹುದು. ಅಥವಾ ಹುತ್ತದ ಹತ್ತಿರ ತಲೆ ಹಾಕುತ್ತಿದ್ದ ಹಾವಿಗೆ ಕೀಟಲೆಗೆಂದು ಕಲ್ಲು ಹೊಡೆದಿರಬಹುದು. ದೇವರೇ, ಹಾಗೆ ಏನೂ ಆಗದಿರಲಿ. ರಾಮಣ್ಣ ಜಾಣ ಹುಡುಗ. ಹಾಗೆಲ್ಲ ಕೀಟಲೆ ಮಾಡುವುದಿಲ್ಲ. ಕೀಟಲೆ ಏನಿದ್ದರೂ ವಿಶ್ವನದು. +ಅವಳು ಇನ್ನೂ ಸ್ವಲ್ಪ ಹೊತ್ತು ಹಾಗೆಯೇ ನಿಂತಳು. ಶೆಡ್ಡಿಗೆ ಹಿಂತಿರುಗಿ ಹೋಗಿ ಯಾರಾದರೂ ಸುತ್ತಲಿನ ಗಂಡಸರಿಗೆ ಹೇಳಿ ಹುಡುಕಲು ಕಳಿಸಲೇ, ತಾನೂ ಜೊತೆಯಲ್ಲಿ ಹೋಗಲೇ, ಎಂಬ ಯೋಚನೆ ಬಂತು. ಹುಟ್ಟಿಸಿದ ಅಪ್ಪನಿಗೆ ಮಾತ್ರ ಇಂತಹ ಯಾವ ಯೋಚನೆಯೂ ಇಲ್ಲ. ಮಧ್ಯಾಹ್ನದಿಂದ ಅವರ ಮುಖವೂ ಇಲ್ಲ. ಶೆಡ್ಡಿಗೆ ಹಿಂತಿರುಗಲು ಅವಳು ಕಾಲು ತಿರುಗಿಸಿದಳು. ಮತ್ತೆ ಇನ್ನೂ ಸ್ವಲ್ಪ ಹೊತ್ತು ಕಾಯಲು ನಿಂತಳು. ದೃಷ್ಟಿ ರಾಮಣ್ಣ ಬರಬಹುದಾದ ದಿಕ್ಕಿನಲ್ಲಿಯೇ ನೆಟ್ಟಿತ್ತು. ಅವಳು ನಿಂತಿದ್ದ ಜಾಗವೂ ಒಳ್ಳೆಯದಲ್ಲ, ಚೆನ್ನೇನಹಳ್ಳಿಯ ಪಟೇಲ ಶಿದ್ದೇಗೌಡನನ್ನು ಈಗ ಮೂರು ವರ್ಷದಲ್ಲಿ ತಾನೇ, ಅವಳ ಹತ್ತಿರ ಇದ್ದ ಕಲ್ಲುಬಂಡೆಯ ಮಗ್ಗುಲಿನಲ್ಲಿ ಖೂನಿ ಮಾಡಿದ್ದರು. ಬಂಡೆಯ ಮೇಲೆ ಮಲಗಿಸಿಕೊಂಡು ಅವನ ತಲೆಯನ್ನು ಕಲ್ಲುಗುಂಡಿನಿಂದ ಜಜ್ಜಿ ಸಾಯಿಸಿದ್ದರಂತೆ. ಚನ್ನೇಗೌಡ ದೆವ್ವವಾಗಿ ಈ ಬಂಡೆಯ ಹತ್ತಿರ ಕತ್ತಲೆಯ ರಾತ್ರಿಗಳಲ್ಲಿ ಸುತ್ತುತ್ತಿರುತ್ತಾನಂತೆ. ಒಂದೊಂದು ಸಲ ಗೋಳೋ ಎಂದು ಅವನು ಅಳುತ್ತಿರುವುದನ್ನು ತಿಪಟೂರಿನಿಂದ ಗಾಡಿಯಲ್ಲಿ ಬಂದವರು ಕೇಳಿದ್ದಾರೆ. +ನಂಜಮ್ಮನಿಗೆ ಭಯವಾಯಿತು. ಮೈ ಕೈ ಒಂದು ನಿಮಿಷ ಕಂಪಿಸಿತು. ಹಿಂತಿರುಗಿ ಹೋಗಿಬಿಡಲೇ ಎಂಬ ಯೋಚನೆ ಬಂತು. ಆದರೆ ಮಗ ಮನೆಗೆ ಬಂದಿಲ್ಲ. ದೊಡ್ಡವಳಾದ ತಾನೇ ಹೆದರಿಕೊಂಡು ಹೋಗಿಬಿಟ್ಟರೆ ಸಣ್ಣ ಹುಡುಗ ಒಬ್ಬನೇ ಹೇಗೆ ಬಂದಾನು?-ಎಂದು ಯೋಚಿಸಿ ದಾರಿ ನೋಡುತ್ತ ಅಲ್ಲಿಯೇ ನಿಂತಳು. ಆದರೆ ಕತ್ತಲೆಯಲ್ಲಿ ದೃಷ್ಟಿ ದೂರ ಹೋಗುತ್ತಿರಲಿಲ್ಲ. +ದೆವ್ವ ಒಂದು ಕಡೆ ಇರುವುದಿಲ್ಲವಂತೆ. ಸುತ್ತ ಮುತ್ತ ಅಲೆಯುತ್ತಿರುತ್ತದಂತೆ. ಇಲ್ಲಿಂದ ಹಾಗೆಯೇ ಕಂಬನಕೆರೆಯ ಕಡೆಗೆ ಸಂಚಾರ ಹೋಗಿ, ಒಬ್ಬನೇ ಬರುತ್ತಿದ್ದ ರಾಮಣ್ಣನನ್ನು ಹಿಡಿದುಬಿಟ್ಟಿದ್ದರೆ ಏನು ಗತಿ?-ಎಂಬ ಯೋಚನೆಯೂ ಬಂತು. ಆದರೆ ಮನಸ್ಸು ತಕ್ಷಣ ಸಮಾಧಾನ ಹೇಳಿಕೊಂಡಿತು: ದೆವ್ವ ಗಿವ್ವ ಅನ್ನೂದೆಲ್ಲ ಸುಳ್ಳು. ನಮ್ಮ ಅಪ್ಪ, ಕಲ್ಲೇಶಣ್ಣಯ್ಯ, ಎಂಥ ಕತ್ತಲಿನಲ್ಲೂ ಒಬ್ಬೊಬ್ಬರೇ ಹತ್ತು ಹತ್ತು ಹರಿದಾರಿ ಹೋಗೂದಿಲ್ಲವೆ? ದೆವ್ವವೇ ಇದ್ದರೆ ಅವರನ್ನು ಯಾಕೆ ಏನು ಮಾಡುಲ್ಲ?-ಈ ಯೋಚನೆಯಿಂದ ಮನಸ್ಸು ಸಮಾಧಾನಗೊಂಡರೂ ರಾಮಣ್ಣ ಚಿಕ್ಕ ಹುಡುಗ ಎಂಬ ನೆನಪಾಗಿ, ಮತ್ತೆ ಆತಂಕ ಭಯಗಳು ಆಕ್ರಮಿಸಿದುವು. +ಅಷ್ಟರಲ್ಲಿ ಯಾರೋ ಬಂದಂತೆ ಆಯಿತು. ಹೌದು, ಮನುಷ್ಯರೇ. ಆದರೆ ತಲೆಯ ಮೇಲೆ ಏನೋ ದೊಡ್ಡ ಗಂಟು ಇರುವಂತಿದೆ. ಸ್ಕೂಲಿಗೆ ಹೋದ ಹುಡುಗನ ತಲೆಯ ಮೇಲೆ ಗಂಟು ಎಲ್ಲಿಂದ ಬರಬೇಕು? ಅವನು ರಾಮಣ್ಣನಲ್ಲ; ಮತ್ತೆ ಯಾರೋ ಇರಬಹುದು. ಅಷ್ಟರಲ್ಲಿ ಅವರು ಆ ದಾರಿಯನ್ನು ಬಿಟ್ಟು ತೋಟದ ಕಡೆ ಹೊರಟಂತೆ ಆಯಿತು. ಆಮೇಲೆ ಏನೋ ನೋಡಿ ಹೆದರಿದವರಂತೆ ಬೇಗ ಬೇಗ ನಡೆದರು. ಅವಳೇ ಧೈರ್ಯ ತಂದುಕೊಂಡು, ‘ಯಾರದು?’ ಎಂದು ಕೇಳಿದಳು. ಅವರು ಮಾತನಾಡಲಿಲ್ಲ. ಅವಳು ಮತ್ತೊಮ್ಮೆ-‘ಯಾರು ಆ ಕಡೆ ಹೋಗ್ತಿರೂದು?’ ಎಂದಾಗ ಅವರು ಅಲ್ಲಿಯೇ ನಿಂತುಕೊಂಡರು. ಆಮೇಲೆ, ‘ಯಾರು, ಅಮ್ಮನೇ?’-ಎಂದು ಕೇಳಿದಾಗ ಅವನು ರಾಮಣ್ಣನೆನ್ನುವುದು ಗೊತ್ತಾಯಿತು. +‘ನಾನು ಕಣೋ ಮರಿ, ಅದ್ಯಾಕೆ ಆ ಕಡೆ ಹೋಗ್ತಿದೀಯಾ ಕಲ್ಲು ಮುಳ್ನಲ್ಲಿ?’ +ರಾಮಣ್ಣ ಹತ್ತಿರ ಬಂದ. ಅವನ ತಲೆಯಮೇಲೆ ದಪ್ಪನಾದ ಮೂರು ಹಲಸಿನಕಾಯಿಗಳಿದ್ದುವು. ಈಚಲ ಶೆಬ್ಬೆಯ ಕಟ್ಟುಹಾಕಿದ್ದ ಅವನ್ನು ಅವನು ಉಟ್ಟ ಲುಂಗಿಯನ್ನು ಬಿಚ್ಚಿ ಶಿಂಬಿ ಮಾಡಿ ತಲೆಯಮೇಲೆ ಇಟ್ಟುಕೊಂಡಿದ್ದ. +‘ಅದ್ಯಾಕೆ ಆ ಕಡೆ ಹೋಗ್ತಿದ್ದೆ ಮರಿ?-ಅಮ್ಮ ಕೇಳಿದಳು. +‘ಅಲ್ಲಿಂದ ದೂರದಲ್ಲಿ ಕರ್ರಗೆ ಕಾಣಿಸ್ತು. ಇಲ್ಲಿ ಕಲ್ಲುಬಂಡೆ ಹತ್ರವಲ್ವೆ ಆವಾಗ ಚೆನ್ನೇನಹಳ್ಳಿ ಶಿವೇಗೌಡುನ್ನ ಖೂನಿ ಮಾಡಿದ್ದು? ಅವ್ನು ದೆವ್ವವಾಗಿದಾನೆ ಅಂತಿರ್‍ಲಿಲ್ವೆ? ದೆವ್ವ ಅಂತ ತಿಳ್ಕಂಡು ಆ ಕಡೆ ವಾಟಹ್ವಡೀತಿದ್ದೆ. ನೀನು ಅಂತ ನನಗೇನು ಗೊತ್ತು?’ +‘ಇದುನ್ನೆಲ್ಲಿಂದ ತಂದೆ? ನಾನು ಹೊತ್ಕತ್ತೀನಿ ಕೊಡು’-ಎಂದು, ಹೊರೆಯನ್ನು ಅವಳು ತನ್ನ ತಲೆಯ ಮೇಲೆ ಇಟ್ಟುಕೊಂಡಳು. +‘ಅಲ್ಲಿ ದಾರೀಲಿ, ಗೌಡನ ಕೊಪ್ಪಲು ಸಿಕ್ಕುತ್ತಲ್ಲಾ, ಅದರ ಒಂದು ತ್ವಾಟದಲ್ಲಿ ಹಲಸಿನ ಮರದಲ್ಲಿ ಕಾಯಿ ಬಿಟ್ಟುದ್ದುದು ನೋಡಿದ್ದೆ. ಬೇಕು ಅಂತಲೇ ಕತ್ಲೆ ಮಾಡ್ಕಂಡು ಹೊರಟೆ. ಮೆಲ್ಲಗೆ ಬೇಲಿ ನುಸ್ದು ಈ ಮೂರು ಕಾಯಿ ಕಿತ್ಕಂಡು ಬಂದೆ. ಈಚಲು ಕಟ್ಟು ಕಂಬನಕೆರೆ ಹತ್ರುಲ್ಲೇ ಕಿತ್ಕಂಡು ಚೀಲುಕ್ಕೆ ಹಾಕ್ಕಂಡಿದ್ದೆ. ಹಚ್ಚಿ ಪಲ್ಯ ಮಾಡ್ಕಂಡು ತಿಂದ್ರೆ ಹೊಟ್ಟೆ ತುಂಬಲ್ವೇನಮ್ಮ?’ +ಮಗನ ಸಾಹಸ ಮತ್ತು ಬುದ್ಧಿವಂತಿಕೆಗೆ ಏನು ಹೇಳಬೇಕೆಂಬುದು ಅವಳಿಗೆ ತಿಳಿಯಲಿಲ್ಲ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು ಪಾಪವೆಂದು ಅವಳು ಮಕ್ಕಳಿಗೆ ಹೇಳಿಕೊಟ್ಟಿದ್ದಳು. ರಾಮಣ್ಣ ಮಿಡ್ಳ್‌ಸ್ಕೂಲಿನಲ್ಲಿ ಓದುತ್ತಿದ್ದಾನೆ. ಈ ಪಾಪ ಪುಣ್ಯದ ವಿಚಾರ ಅವನಿಗೆ ಗೊತ್ತಿಲ್ಲದೆ ಇಲ್ಲ. ಈಗ ಅವಳು ಮಗನಿಗೆ ಬುದ್ಧಿ ಹೇಳಲು ಹೋಗಲಿಲ್ಲ. ಇಬ್ಬರೂ ಬೇಗ ಬೇಗ ಹೆಜ್ಜೆ ಹಾಕಿದರು. ಮನೆಯಲ್ಲಿ ಹುಡುಗರು ಸುಸ್ತಾಗಿ ಬಿದ್ದುಕೊಂಡಿವೆ. ತಾವಿಬ್ಬರೂ ಹಸಿದಿದ್ದಾರೆ. ರಾಮಣ್ಣ ಹತ್ತು ಮೈಲಿ ನಡೆದಿದೆ. ಹಲಸಿನಕಾಯಿ ಹೆಚ್ಚಿ ಪಲ್ಯ ಮಾಡಿದರೆ ಹೊಟ್ಟೆಗೆ ಆಧಾರವಾಗುತ್ತೆ. +ಅವಳು ಶೆಡ್ಡಿಗೆ ಬರುವ ವೇಳೆಗೆ ಯಜಮಾನರು ಬಂದು ಹಾಸಿಗೆ ಹಾಸಿಕೊಂಡು ಮಲಗಿ ಗೊರಕೆ ಬಿಡುತ್ತಿದ್ದರು. ಹೊಟ್ಟೆ ಭರ್ತಿ ಇರದಿದ್ದರೆ ಗೊರಕೆ ಎಲ್ಲಿಂದ ಬರುತ್ತದೆ, ಎಂಬಷ್ಟು ಅನುಭವ ಅವಳಿಗೂ ಇತ್ತು. ತಿಳಿವಳಿಕೆ ರಾಮಣ್ಣನಿಗೂ ಇತ್ತು. ಇಬ್ಬರಲ್ಲಿ ಯಾರೂ ಮಾತನಾಡಲಿಲ್ಲ. ಅವರನ್ನು ಎಬ್ಬಿಸಲೂ ಇಲ್ಲ. ಪಾರ್ವತಿ, ವಿಶ್ವ, ಇಬ್ಬರೂ ಸುರುಟಿಕೊಂಡು ನಿದ್ರೆ ಮಾಡುತ್ತಿದ್ದರು. ಈಳಿಗೆಮಣೆ ತೆಗೆದುಕೊಂಡು ನಂಜಮ್ಮ ಮೂರು ಕಾಯಿಗಳನ್ನೂ ಬೇಗ ಬೇಗ ಹೆಚ್ಚಿದಳು. ಸಿಪ್ಪೆ ಮೂಗುಗಳನ್ನು ತೆಗೆದುಹಾಕಿ, ಸ್ವಲ್ಪ ಬಲಿತಿದ್ದ ಬೀಜವನ್ನೂ ಬೇಯಲು ಬಿಟ್ಟಳು. ಅದಕ್ಕೇ ಒಂದು ಹಿಡಿ ಮೆಣಸಿನ ಪುಡಿ ಹಾಕಿದಳು. +ಅದು ಬೇಯುತ್ತಿರುವಾಗ ರಾಮಣ್ಣ ಮೆಲ್ಲನೆ ಕೇಳಿದ: ‘ಅಮ್ಮ, ಒಕ್ಲಿಗರ ಮನೇ ರೊಟ್ಟಿ ತಿಂದ್ರೆ ಪಾಪ ಬರುಲ್ವೇನಮ್ಮ?’ +‘ಯಾಕೆ ಮರಿ?’ +“ಇವತ್ತು ಮಧ್ಯಾಹ್ನ ನಾನು ತಿಂಡಿ ಇಲ್ದೆ ಮರದ ಕೆಳಗೆ ಕೂತಿದ್ದೆ. ನನ್ನ ಸ್ನೇಹಿತ ಒಬ್ಬ ಇದಾನೆ, ಕೆಂಗಲಾಪುರದ ನರಸೇಗೌಡ ಅಂತ. ಅವನ ರೊಟ್ಟಿ ಉಳಿದಿತ್ತು. ಅದ್ಯಾಕ್ ನೀನು ರೊಟ್ಟಿ ತಿನ್ಲಿಲ್ಲ ಅಂತ ಕೇಳ್ದ. ನಾನು ಹೇಳಲಿಲ್ಲ. ಅವನೇ, ‘ತಿಂದ್ರೆ ಏನೂ ಆಗುಲ್ಲ, ನಾನು ಯಾರ ಕೈಲೂ ಹೇಳುಲ್ಲ, ತಿನ್ನೋ’-ಅಂತ ಒಂದು ರೊಟ್ಟಿ ಹುಚ್ಚೆಳ್ಳು ಹುಡಿ ಕೊಟ್ಟ. ರೊಟ್ಟಿ ಒಳ್ಳೇ ಅಂಗೈ ಮಂದಕ್ಕಿತ್ತು. ತಿಂದುಬಿಟ್ಟೆ. ಅವ್ನು ಯಾರಿಗೂ ಹೇಳುಲ್ಲ ಅಂತ ಅಂಗೈ ಮುಟ್ಟಿ ಭಾಷೆ ಇಕ್ಕಿದಾನೆ.” +ಅಮ್ಮ ಯಾವ ಮಾತನ್ನೂ ಆಡಲಿಲ್ಲ. ರಾಮಣ್ಣನೇ, ‘ಹೇಳಮ್ಮ, ಅದು ಪಾಪವಾ? ದೇವ್ರು ಏನೂ ಮಾಡಲ್ವ?’ ಎಂದು ಇನ್ನೊಂದು ಸಲ ಕೇಳಿದಾಗ ಹೇಳಿದಳು: ‘ವಿಶ್ವ ಮಾದೇವಯ್ನೋರ ತಟ್ಟೇಲಿ ಊಟ ಮಾಡ್ತಿರ್ಲಿಲ್ವೆ?’ +‘ಅವ್ನು ಹುಡುಗ. ನಾನು ದೊಡ್ಡೋನಲ್ವ.’ +ಮಗನ ಪ್ರಶ್ನೆಗೆ ಉತ್ತರ ಹೇಳಲು ಅವಳಿಗೆ ತಿಳಿಯಲಿಲ್ಲ. ಹುಡುಗರಿಗಿಲ್ಲದ ಪಾಪ ಪುಣ್ಯ ದೊಡ್ಡವರಿಗೆ ಎಲ್ಲಿಂದ ಬರುತ್ತೆ? ಹ್ಯಾಗೆ ಬರುತ್ತೆ?-ಎಂಬ ಪ್ರಶ್ನೆಯನ್ನು ಕುರಿತು ಮನಸ್ಸು ಚಿಂತಿಸುತ್ತಿತ್ತು. ರಾಮಣ್ಣನೂ ಮತ್ತೆ ಕೇಳಲಿಲ್ಲ. ಹಲಸಿನ ಹೋಳು ಬೆಂದಮೇಲೆ ಉಪ್ಪುಹಾಕಿ ಕೆಳಕ್ಕೆ ಇಟ್ಟು ಪಾರ್ವತಿ ವಿಶ್ವರನ್ನು ಎಬ್ಬಿಸಿದಳು. ‘ಹಲಸಿನಕಾಯಿ ಪಲ್ಯ ತಿಂತೀರಾ?’-ಎಂದು ಯಜಮಾನರನ್ನು ಕೇಳಿದುದಕ್ಕೆ, ‘ನಂಗೇನ್ ಬ್ಯಾಡ’ ಎಂದು ಅವರು ನಿದ್ದೆಗಣ್ಣಿನಲ್ಲೇ ಹೇಳಿ ಮತ್ತೆ ಗೊರಕೆ ಶುರುಮಾಡಿದರು. ಪಲ್ಯ ಅದೆಷ್ಟು ರುಚಿಯಾಗಿತ್ತೋ! ಹುಡುಗರು ಹೊಟ್ಟೆ ತುಂಬ ತಿಂದರು. ಜೊತೆಗೆ ಅಮ್ಮನಿಗೂ ಸಾಕಾಯಿತು. ರಾತ್ರಿ ಮಲಗಿದ ಮೇಲೆ ಅವಳು ರಾಮಣ್ಣನಿಗೆ ಹೇಳಿದಳು: ‘ಮತ್ತೆ ಹೀಗೆ ಆ ತೋಟಕ್ಕೆ ಹೋಗ್ಬ್ಯಾಡ. ಒಂದು ದಿನ ಕಳ್ಳತನವಾಯ್ತು ಅಂತ ಗೊತ್ತಾದ್ ಮೇಲೆ ಅವರು ಕಾಯ್ತಾ ಇರ್ತಾರೆ.’ +– ೫ – +ಆಹಾರದ ಹಾಹಾಕಾರ ಹೆಚ್ಚಾದಂತೆಲ್ಲ ಅದರ ಶೋಧನೆಯ ಪ್ರಯತ್ನವೂ ಹೆಚ್ಚಾಯಿತು. ಕೆರೆ ಎಲ್ಲ ಒಣಗಿ, ಅದರ ಬಯಲಿನ ಕರಿಯ ನೆಲ ಬಿರುಕು ಬಿಟ್ಟಿತ್ತು. ಗೋಡು ಮಣ್ಣನ್ನು ಅಗೆದರೆ ಶತ್ತೆಯ ಬೇರು ಸಿಕ್ಕುತ್ತದೆಂದು ಬೆಸ್ತರ ಮಾಟ ಕಂಡು ಹಿಡಿದ. ಒಂದು ದಿನ ಅವನು ಅದನ್ನು ತಂದುದೇ ತಡ, ಊರೆಲ್ಲ ಅಲ್ಲಿಗೆ ನುಗ್ಗಿತು. ಒಬ್ಬೊಬ್ಬರು ಒಂದೊಂದು ಜಾಗದಲ್ಲಿ ಅಗೆಯಲು ನಿಂತರು. ಹೆಬ್ಬೆಟ್ಟು ದಪ್ಪದ ಬೇರುಗಳು ಗೆಣಸಿನಂತೆ ಅಲ್ಲೊಂದು ಇಲ್ಲೊಂದು ಸಿಕ್ಕುತ್ತಿದ್ದವು. ಬೆಳಗಿನಿಂದ ಸಂಜೆಯತನಕ ಒಬ್ಬರು ಹೀಗೆ ಮಣ್ಣು ಶೋಧಿಸಿದರೆ ರಾತ್ರಿ ನಾಲ್ಕು ಜನಕ್ಕೆ ಆಗುವಷ್ಟು ಬೇರು ಸಿಕ್ಕುತ್ತಿತ್ತು. ಕಾಯಕಕ್ಕೆ ನಂಜಮ್ಮ ಪಾರ್ವತಿ ಒಂದು ಕೈಪಿಕಾಸಿ, ಗೆರಸಿಕುಕ್ಕೆ ತೆಗೆದುಕೊಂಡು ಜೊತೆಯಲ್ಲಿ ಹೊರಟರು. ಎಲೆ ಹಚ್ಚುವ ಬದಲು ಈ ಕೆಲಸ. ತಲೆಯ ಮೇಲೆ ಸೆರಗು ಹೊದೆದುಕೊಂಡಿದ್ದರೂ, ಕಾಯುವ ಬಿಸಿಲು ಮುಖ ಮೈಗಳನ್ನು ಸುಡುತ್ತಿತ್ತು. ಮೊದಲ ದಿನ ಬೇರನ್ನು ತಂದು ಬಾವಿಯ ನೀರಿನಲ್ಲಿ ಉಜ್ಜಿ ಉಜ್ಜಿ ತೊಳೆದು ಉಪ್ಪುಕಾರ ಹಾಕಿ ಬೇಯಿಸಿದರೆ ಅದರ ವಾಸನೆ ತಿನ್ನುವುದಕ್ಕೆ ಬಿಡುತ್ತಿರಲಿಲ್ಲ. ಆದರೆ ಹೊಟ್ಟೆ ಕೇಳುತ್ತಿರಲಿಲ್ಲ. ಅಂತೂ ಬೇಯಿಸಿದುದರಲ್ಲಿ ಸ್ವಲ್ಪವೂ ಉಳಿಯಲಿಲ್ಲ. ನಾಳೆ ಬೆಳಿಗ್ಗೆ ಬಿಸಿಲು ಏರುವ ಮೊದಲೇ ಹೋಗಬೇಕೆಂದು ತಾಯಿ ಮಗಳು ನಿಶ್ಚಯಿಸಿದರು. +ಮರುದಿನ ಇವರು ಹೊರಟಾಗ ಸರ್ವಕ್ಕನೂ ಬಂದು ಸೇರಿಕೊಂಡಳು. ಮೂವರೂ ಜೊತೆಯಲ್ಲಿ ಮಣ್ಣು ಅಗೆಯುತ್ತಿದ್ದಾಗ ನಂಜಮ್ಮ ಎಂದಳು: ‘ನೋಡ್ರಿ, ಮಾದೇವಯ್ನೋರು ಹೋಗಿಯೇ ಹೋದ್ರು. ಊರಿಗೆ ಈ ಗತಿ ಬಂತು. ಸಾಧು ಸಜ್ಜನರ ಶಾಪ ಒಳ್ಳೇದಲ್ಲ ಅನ್ನೂದು ಇದುಕ್ಕೇ.’ +‘ಯಾರೋ ನಾಕು ಜನ ಕ್ಯೆಟ್ಟಮುಂಡೇವು ಹಿಂಗಂದುದಕ್ಕೆ ನೋಡಿ ಊರಿಗೇ ಕೇಡು ಬಂತು.’ +‘ನಿಮ್ಮ ಜನವೇಯಂತೆ ಅವ್ರುನ್ನ ಹಂಗಂದುದ್ದು.’ +‘ನಂಜಮ್ಮಾರೇ, ನಿಮಗಿನ್ನೂ ವಳಗಡೆ ಮಾತು ಗೊತ್ತಿಲ್ಲ. ನಮ್ಮ ಜನದೋರ್ ಕೈಲಿ ಹಂಗಂತ ಏಳ್ಕೊಟ್ಟಿದ್ದು ನಮ್ಮನೆಯೋರೇಯಂತೆ. ಇಂತದೆಲ್ಲ ಲಾಯ್ರಿ ಪೈಂಟು ಇವ್ರಿಗೇ ಅಲ್ವಾ ತಿಳಿಯಾದು?’ +‘ಅವ್ರು ಮತ್ತೆ ಬಂದ್ರೂ ಬರ್‍ಭೌದು ಅನ್ಸುತ್ತೆ ಕಣ್ರೀ. ಗುಡೀಲಿ ಅವರುದ್ದೊಂದಿಷ್ಟು ಪಾತ್ರೆ, ರಾಗಿ, ಕಾಳು, ಮೆಣಸಿನಕಾಯಿ ಇಟ್ಟು ಹೋಗಿದಾರೆ. ಬೀಗದ ಕೈ ಅವರ ಹತ್ರವೇ ಇದೆ. ’ +ಏಳೆಂಟು ದಿನ ಸರ್ವಕ್ಕ ಇವರ ಜೊತೆಯಲ್ಲೇ ಗೆಡ್ಡೆ ಅಗೆಯಲು ಬಂದಳು. ಒಂದು ದಿನ ಅವಳೇ ಯಾರಿಗೂ ಕಾಣದಂತೆ ಮುಚ್ಚಿಕೊಂಡು ನಂಜಮ್ಮನ ಶೆಡ್ಡಿಗೆ ಐದು ಸೇರು ರಾಗಿ, ಒಂದು ಸೇರು ಅಕ್ಕಿ ತಂದುಕೊಟ್ಟು ಹೇಳಿದಳು: ‘ ಯಾರಿಗೂ ಏಳ್‌ಬ್ಯಾಡಿ ನಂಜಮ್ಮಾರೇ. ನಮ್ಮನೆಯೋರು ಎಲ್ಡು ಮೂಟೆ ರಾಗಿ ಇಪ್ಪತ್ತೈದು ಸೇರು ಅಕ್ಕಿ, ಕಾಪಿ ಬೀಜ, ಎಲ್ಲ ತಂದವ್ರೆ; ಕೋಲ್ಟಿನ ಕೆಲಸಕ್ಕೆ ತಿಪಟೂರಿಗೆ ಓಗಿದ್ರಂತೆ’. +ಈ ರಾಗಿಯನ್ನು ಮುಚ್ಚಿಟ್ಟು ಒಪ್ಪವಾಗಿ ಮಾಡಿದರೆ ಸ್ಕೂಲಿಗೆ ನಡೆಯುವ ರಾಮಣ್ಣ ಮತ್ತು ಚಿಕ್ಕ ಹುಡುಗ ವಿಶ್ವ, ಇಬ್ಬರಿಗೂ ಎಂಟು ದಿನ ಬೆಳಗಿನ ಹೊತ್ತು ರೊಟ್ಟಿ ಮಾಡಿಕೊಡಬಹುದು. ಈ ಗೆಡ್ಡೆ ತಿಂದು ಹೊಟ್ಟೆ ಉರಿಹತ್ತಿದೆ. ಒಂದು ದಿನವಾದರೂ ಅನ್ನಮಾಡಿ ಹುಣಿಸೆ ನೀರಿನ ಜೊತೆ ತಿನ್ನಬಹುದು. ಸರ್ವಕ್ಕನ ಅಂತಃಕರಣಕ್ಕೆ ನಂಜಮ್ಮನಿಗೆ ಸಂತೋಷವಾಯಿತು. ರೇವಣ್ಣಶೆಟ್ಟಿಯಲ್ಲಿ ಉಳಿದ ದುರ್ಗುಣಗಳೆಷಿದ್ದರೂ, ಸಮಯದಲ್ಲಿ ಬುದ್ಧಿ ಉಪಯೋಗಿಸುತ್ತಾನೆ. ಯಾವುದೋ ಕೋರ್ಟಿನ ಗಿರಾಕಿ ಹಿಡಿದು ಏನೋ ಗೋಲನ್ ಮಾಡಿದಾನೆ. ಇಲ್ಲದಿದ್ದರೆ ಎರಡು ಮೂಟೆ ರಾಗಿ, ಇಪ್ಪತ್ತೈದು ಸೇರು ಅಕ್ಕಿ, ಇವೆಲ್ಲ ತರಲು ದುಡ್ಡೆಲ್ಲಿಂದ ಬರಬೇಕು? ಆದರೆ ಅವನ ಸಂಪಾದನೆ ಎಲ್ಲ ಮನೆಹಾಳು ದಾರಿಯದು-ಎಂದುಕೊಂಡು ನಂಜಮ್ಮ ರಾಗಿ ಬೀಸಲು ಕುಳಿತಳು. +ಐದು ಆರು ದಿನದಲ್ಲಿ ಗ್ರಾಮದ ಬಣಜಿಗರಿಗೂ, ನೊಣಬಗೌಡರಿಗೂ ಉಳಿದ ಮತಸ್ಥರಿಗೂ ಜಗಳ ಹುಟ್ಟಿತು. ಮಾದೇವಯ್ಯನವರು ದೇವಸ್ಥಾನದ ತಮ್ಮ ಕೋಣೆಯಲ್ಲಿ ರಾಗಿ, ಕಾಳುಗಳನ್ನಿಟ್ಟಿದ್ದ ಸಂಗತಿ ಎಷ್ಟೋ ಜನಕ್ಕೆ ಗೊತ್ತು. ನಂಜಮ್ಮ ಸ್ವಾಭಾವಿಕವಾಗಿ ಅದನ್ನು ಸರ್ವಕ್ಕನಿಗೆ ಹೇಳಿದ ಮೇಲೆ ಅವಳು ಅದನ್ನು ಗಂಡನಿಗೆ ಹೇಳಿದಳು. ಆ ದಿನಸಿ ತಮ್ಮ ಮನೆಗೆ ಬರಲಿ ಎಂಬ ಆಶೆ ಅವಳಿಗೆ ಇಲ್ಲದೆ ಇರಲಿಲ್ಲ. ಇಂಥದರಲ್ಲೆಲ್ಲ ರೇವಣ್ಣಶೆಟ್ಟಿಯ ಬುದ್ಧಿ ತುಂಬ ಚುರುಕು. ಒಂದು ದಿನ ಬಿಟ್ಟು ಊರಿನ ಗುಡಿಗೆ ಹೋಗಿ ಆ ಕೋಣೆಯ ಬಾಗಿಲ ಬೀಗ ಮುರಿದು ದಿನಸಿಯನ್ನು ಹೊಡೆದುಕೊಳ್ಳಬೇಕೆಂದು ಅವನು ಯೋಚಿಸಿದ. ಆದರೆ ಬಿಟ್ಟ ಊರಿಗೆ ಒಬ್ಬನೇ ಹೋಗಲು ಹೆದರಿಕೆ. ಸಂಕಲಮ್ಮ ಊರಿನಲ್ಲೆಲ್ಲ ಸಂಚಾರ ಮಾಡುತ್ತಿರುತ್ತಾಳೆ. ಈ ಕೆಲಸಕ್ಕೆ, ಅದೂ ರಾತ್ರಿಯ ಹೊತ್ತು, ಹೋಗಬೇಕು. ಹೋಗಿ ಈಶ್ವರ ಗುಡಿಯ ಒಳಗಣ ಅಂಕಣಕ್ಕೆ ನುಗ್ಗಿ ಬೀಗ ಒಡೆಯಬೇಕು. ಸುಂಕಲಮ್ಮನೆಂದರೆ ಈಶ್ವರನ ಹೆಂಡತಿ ಪಾರ್ವತಿಯೇ ತಾನೇ? ಅವಳ ಗುಡಿಗೇ ಹೋದರೆ ಸುಮ್ಮನಿರಾಕಿಲ್ಲ. ನೆತ್ಲ ಕಾರ್ಕಂಡ್ ಬೀಳಿಸ್ ಬಿಡ್ತಾಳೆ. ಆದರೆ ಅಲ್ಲಿ ಇಟ್ಟಿರುವ ರಾಗಿ ಮತ್ತು ಕಾಳುಗಳ ಆಶೆಯನ್ನ ಅವನು ಬಿಡಲೂ ಆರ. ಒಬ್ಬರಿಗಿಂತ ಇಬ್ಬರು ವಾಸಿ ಎಂದು ಈ ಯೋಚನೆಯನ್ನು ತನ್ನ ದಾಯಾದಿ ಪುಟ್ಟಣ್ಣಶೆಟ್ಟಿಗೆ ಹೇಳಿದ. ಪುಟ್ಟಣ್ಣಶೆಟ್ಟಿ ಆ ದಿನ ರಾತ್ರಿ ತನ್ನ ಹೆಂಡತಿಯ ಕೈಯಲ್ಲಿ ಪಿಸುಗುಟ್ಟಿದ. ಹೀಗಾಗಿ ಅದು ಬಣಜಿಗರಿಗೆಲ್ಲ ತಿಳಿದು ಬಿಟ್ಟಿತು. ‘ಮಾದೇವಯ್ನೋರು ನಮ್ಮ ಜಾತಿ. ನಾವೆಲ್ಲ ಒಟ್ಟಿಗೆ ಹಂಚಿಕಳಾಣ’-ಎನ್ನುವ ಮಟ್ಟಿಗೆ ಮಾತು ಹೋಯಿತು. ಇದು ನೊಣಬಗೌಡರಿಗೆ ತಿಳಿದು, ಒಕ್ಕಲಿಗ, ಕುರುಬ, ಮಗ್ಗ, ಬೆಸ್ತ, ಹೀಗೆ ಊರಿಗೆಲ್ಲ ಹರಡಿತು. ‘ಅಯ್ನೋರು ಬರೀ ಬಣಜಿಗರ ಮನ್ಲೇ ಅಲ್ಲ ಬಿಕ್ಷಾ ಮಾಡಿದ್ದು. ನಮ್ಮ ಜಾತಿಯೋರೂ ಆಕಿದೀವಿ. ನಂಗೂ ಪಾಲು ಸಿಕ್ಬೇಕು’-ಎಂದು ಪ್ರತಿಯೊಬ್ಬರೂ ಹಠ ಹಿಡಿದರು. ಈ ಹಠ ಜಗಳಕ್ಕೆ ತಿರುಗಿ ಹೊಡೆದಾಟ ಆಯಿತು. ಕೊನೆಗೆ ಗ್ರಾಮದ ಪಟೇಲ ಶಿವೇಗೌಡ ನ್ಯಾಯ ಹೇಳಿ, ದಿನಸಿಯನ್ನು ಪ್ರತಿಯೊಬ್ಬರೂ ಹಂಚಿಕೊಳ್ಳಬೇಕೆಂದು ನಿರ್ಣಯ ಮಾಡಿದ. ಎಲ್ಲರೂ ಒಪ್ಪಬೇಕಾಯಿತು. ಪ್ರತಿಯೊಬ್ಬರಿಗೂ ಎರಡೆರಡು ಸೇರು ರಾಗಿ ಇದರಿಂದ ಸಿಕ್ಕಬಹುದು. +ಒಂದು ದಿನ ಮಧ್ಯಾಹ್ನ ಮನೆಗೆ ಒಂದಾಳಿನಂತೆ ಸೇರಿ ಊರಿನೊಳಕ್ಕೆ ಹೋದರು. ಗುಡಿಯ ಒಳಗಡೆ ಪ್ರವೇಶಿಸಿ ನೋಡಿದಾಗ ಅಯ್ಯನವರ ಕೋಣೆ ಬಾಗಿಲಿಗೆ ಬೀಗವೇ ಇರಲಿಲ್ಲ. ಒಳಗೆ ನೋಡಿದರೆ ರಾಗಿಯ ಚೀಲವೂ ಇಲ್ಲ, ಕಾಳಿನ ಮೂಟೆಯೂ ಇಲ್ಲ. ಇನ್ನೊಂದು ಮಡಕೆಯಲ್ಲಿದ್ದ ಮೆಣಸಿನಕಾಯಿಯೂ ಖಾಲಿಯಾಗಿದೆ. ಅಲ್ಯುಮಿನಿಯಂ ಪಾತ್ರೆಗಳು ಮಾತ್ರ ಅಲ್ಲಿಯೇ ಇವೆ. +‘ಯಾವನೋ ನನ್ಮಗ ಕೊಟ್ಟವ್ನೆ ಕೈಯ’-ಎಂದು ಎಲ್ಲರೂ ತೀರ್ಮಾನಿಸಿದರಾದರೂ ಆ ಮಗ ಯಾರೆಂಬುದನ್ನು ಪತ್ತೆ ಹಚ್ಚುವ ಯಾವ ಉಪಾಯವೂ ಯಾರಿಗೂ ಹೊಳೆಯಲಿಲ್ಲ. ನಿರಾಶೆಯಿಂದ ಎಲ್ಲರೂ ಹಿಂತಿರುಗಿದರು. +ಕೆರೆಯ ಶೆತ್ತೆಗೆಡ್ಡೆ ಮುಗಿದುಹೋಯಿತು. ಇಡೀ ಕೆರೆಯ ಬಯಲಿನಲ್ಲಿ ಜನಗಳು ಅಗೆಯದೆ ಬಿಟ್ಟ ಒಂದು ಅಂಗುಲ ಜಾಗವೂ ಉಳಿದಿರಲಿಲ್ಲ. ಅಷ್ಟರಲ್ಲಿ ಯಾರೋ ಒಂದು ದಿನ ಕತ್ತಾಳೆ ಗಿಡವನ್ನು ಕಡಿದು ಅದರ ಗಿಣ್ಣನ್ನು ತಂದು ಬೇಯಿಸಿ ತಿಂದರಂತೆ. ಅದೂ ಶತ್ತೆಗೆಡ್ಡೆಯ ಹಾಗೆಯೇ ಇರುತ್ತದೆ ಎಂದು ತಿಳಿದ ಮೆಲೆ ಊರಿನವರ ಗಮನವೆಲ್ಲ ಸುತ್ತಮುತ್ತ ಇದ್ದ ಕತ್ತಾಳೆ ಗಿಡಗಳನ್ನು ಧ್ವಂಸಮಾಡಲು ಹೋಯಿತು. ಶತ್ತೆಗೆಡ್ಡೆಯಾದರೆ ಅಗೆದು ಅಗೆದು ಆರಿಸಿ ಶೋಧಿಸಿ ಸಾಕಾಗಬೇಕು. ಕತ್ತಾಳೆಗಿಣ್ಣು ದಪ್ಪವಾಗಿರುವುದರಿಂದ ಅಷ್ಟು ಕಷ್ಟ ಪಡಬೇಕಾಗಿಯೂ ಇರಲಿಲ್ಲ. ಆದುದರಿಂದ ಎಲ್ಲರೂ ಹೊಟ್ಟೆ ತುಂಬವೇ ತಿಂದರು. +ತಿಂದ ಎರಡನೆಯ ದಿನಕ್ಕೇ ಊರಿನವರಿಗೆಲ್ಲ ಭೇದಿ ಶುರುವಾಯಿತು. ಮೊದಲೇ ಒಳಗೆ ಏನೂ ಇಲ್ಲದೆ ಚಕ್ಕಳವಾಗಿದ್ದ ಹೊಟ್ಟೆಗಳು ಈಗ ಭೇದಿಯೂ ಆದಮೇಲೆ ಮಡಿಸಿಕೊಂಡು ಬೀಳುವ ಹಾಗೆ ಆದವು. ಊರಿನಲ್ಲಿ ಒಟ್ಟು ಹದಿನಾರು ಜನ ಅದರಲ್ಲಿ ಸತ್ತುಹೋದರು. ಉಳಿದವರು ಭೇದಿಯ ಕಾರಣವನ್ನು ಅರ್ಥಮಾಡಿಕೊಂಡು ಕತ್ತಾಳೆ ಗಿಣ್ಣು ಕಡಿಯುವುದು ಬಿಟ್ಟುಬಿಟ್ಟರು. +– ೬ – +ನಂಜಮ್ಮ, ಪಾರ್ವತಿ, ಸರ್ವಕ್ಕ, ಮೂವರೂ ಕೆರೆಗೆ ಶತ್ತೆಗೆಡ್ಡೆ ಶೋಧಿಸಲು ಹೋಗಿದ್ದಾಗ ಒಂದು ದಿನ ಪಾರ್ವತಿಗೆ ತುಂಬ ತಲೆನೋವು ಬಂತು. ತಲೆಗೆ ಸೆರಗಿನ ಮುಸುಕು ಹಾಕಿಕೊಂಡರೂ ಬಿಸಿಲಿನ ಕಾವಿಗೆ ಅದು ತಡೆಯಾಗಲಿಲ್ಲ. ‘ಮಗ, ನೀನು ಶೆಡ್ಡಿಗೆ ಹ್ವಾಗು. ನಾನು ನಂಜವ್ವಾರು ಆದೋಟು ಕಿತ್ಕಂಡ್ ಬತ್ತೀವಿ’-ಎಂದು ಸರ್ವಕ್ಕ ಹೇಳಿದಳು. ನಂಜಮ್ಮನೂ ಅದೇ ಮಾತು ಹೇಳಿದ ಮೇಲೆ ಪಾರ್ವತಿ ಒಬ್ಬಳೇ ಮನೆಗೆ ಹೊರಟಳು. +ಕಾವಿಗೆ ಬಿರಿದು ಒಡೆದ ಗೋಡುಮಣ್ಣನ್ನು ತುಳಿದುಕೊಂಡು ಗುಡಿಯ ಸಮೀಪದಿಂದ ಹತ್ತಿ ಏರಿಯಮೇಲೆ ನಡೆದು ಅವಳು ಶೆಡ್ಡಿನ ಕಡೆಗೆ ಹೋಗುತ್ತಿದ್ದಾಗ ಏರಿಯ ಕೊನೆಯಲ್ಲಿ ನರಸಿ ಸಿಕ್ಕಿದಳು. ನೀರಿನ ಕಡೆಗೆ ಹೋಗಿದ್ದಳೆಂದು ಅವಳು ಬಂದ ದಿಕ್ಕೇ ಹೇಳುತ್ತಿತ್ತು. ಅವಳು ಪಾರ್ವತಿಯನ್ನು ಕೇಳಿದಳು: ‘ಗೆಡ್ಡೆ ಕಿತ್ ಆಯ್ತಾ ಮಗಾ?’ +‘ಇನ್ನೂ ಇಲ್ಲ ಕಣಮ್ಮ. ತಲೆ ನೋಯ್ತಿತ್ತು ನಾನು ಬಂದೆ.’ +‘ಹಂಗೆ ನಮ್ಮಂಗ್ಡಿ ತಾವುಕ್ ಬಾ. ಒಂದೀಟು ಕಡ್ಲೆ ಕೊಡ್ತೀನಿ ತಿನ್ನೀವಿ.’ +ಪಾರ್ವತಿ ಅದಕ್ಕೆ ಏನೂ ಹೇಳಲಿಲ್ಲ. ಶೆಡ್ಡಿನ ಕಡೆಗೆ ತಿರುಗುವ ಜಾಗ ಬಂದಾಗ ಸುಮ್ಮನೆ ತನ್ನ ಪಾಡಿಗೆ ತಾನು ನಡೆದಳು. ನರಸಿಯೇ-‘ಏನ್ ನಾಚ್ಕಬ್ಯಾಡ ಬಾರವ್ವ. ನಮ್ ಜನ ಮಾಡಿದ್ ಕಡ್ಲೆ ತಿಂದ್ರೆ ಏನೂ ಆಗಾಕುಲ್ಲ’ ಎನ್ನುತ್ತಿರುವಷ್ಟರಲ್ಲಿ ಶೆಡ್ಡಿನ ಹತ್ತಿರ ಆಡುತ್ತಿದ್ದ ವಿಶ್ವ ಅಕ್ಕನನ್ನು ಕಂಡು ಹತ್ತಿರ ಬಂತು. ನರಸಿ ಮತ್ತೆ ಕಡಲೆಯ ಮಾತಾಡಿದುದನ್ನು ಕೇಳಿದ ಅದು ‘ನಡಿಯಕ್ಕಯ್ಯಾ, ಈಸ್‌ಕಂಡ್ ಬರಾಣ’ ಎಂದು ಹಟ ಹಿಡಿಯಿತು. ಇಬ್ಬರೂ ಅಂಗಡಿಗೆ ಬಂದರು. ನರಸಿ ಇಬ್ಬರಿಗೂ ಎರಡೆರಡು ಶಾರೆ ಹುರಿಗಡಲೆ, ಮೇಲೆ ಒಂದೊಂದು ಮುರುಕು ಬೆಲ್ಲ ಕೊಟ್ಟಳು. ವಿಶ್ವ ತನ್ನ ಪಾಲಿನದನ್ನು ಬಾಚಿ ಮುಕ್ಕಲು ಶುರು ಮಾಡಿತು. ಪಾರ್ವತಿ ಒಂದು ಹಿಡಿಯನ್ನು ಬಾಯಿಗೆ ಹಾಕಿಕೊಂಡಳು. ಆದರೆ ತಕ್ಷಣ ಅವಳ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ‘ಯಾಕ್ ಮಗಾ ಅಳ್ತೀಯಾ?’-ಎಂದು ನರಸಿ ಕೇಳಿದರೆ ಕಣ್ಣೀರು ಇನ್ನೂ ಹೆಚ್ಚಾಗಿ, ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿತು. ನರಸಿಯೇ ಹತ್ತಿರ ಬಂದು ಅವಳ ಬೆನ್ನು ಸವರಿ ಕೇಳಿದ ಮೇಲೆ ಹೇಳಿದಳು: ‘ನಮ್ಮ ರಾಮಣ್ಣ ಉಪಾಸ ಕಂಬನಕೆರೆಗೆ ಹೋಗಿದಾನೆ.’ +ನರಸಿಗೆ ದುಃಖವಾಯಿತು. ಇನ್ನೆರಡು ಶಾರೆ ಕಡಲೆ, ಒಂದು ಮುರುಕು ಬೆಲ್ಲವನ್ನು ಪಾರ್ವತಿಯ ಸೆರಗಿಗೆ ಹಾಕಿ-‘ಅದು ಬಂದಮ್ಯಾಲೆ ಕೊಡು’ ಎಂದಮೇಲೆ ಪಾರ್ವತಿಯ ಕಣ್ಣೀರು ಕಡಿಮೆಯಾಯಿತು. ‘ನಾವು ಹೋಗ್ತೀವಿ ಕಣ್ ನರಸಮ್ಮ’-ಎಂದು ಹೇಳಿ ಅವಳು ವಿಶ್ವನ ಕೈಹಿಡಿದು ಶೆಡ್ಡಿಗೆ ನಡೆದಳು. ಬೀಗ ತೆಗೆದು ಒಳಗೆ ಹೋಗಿ ಚಾಪೆ ಹಾಸಿ ಮಲಗಿದ ಮೇಲೆ ಅವಳ ಮನಸ್ಸು ಯೋಚಿಸಲು ಮೊದಲುಮಾಡಿತು. ತಾನು ಇದುವರೆಗೂ ನರಸಮ್ಮನ ಕೈಲಿ ಮಾತನಾಡಿರಲಿಲ್ಲ. ಅವಳು ಕೆಟ್ಟವಳಂತೆ. ಇವತ್ತು ಅವಳೇ ತನ್ನನ್ನು ಕರೆದು ಕಡಲೆ ಕೊಟ್ಟಳು. ತಾನು ತಿನ್ನಬಾರದಾಗಿತ್ತೋ ಏನೋ. ಅದು ಅಮ್ಮನಿಗೆ ಗೊತ್ತಾದರೆ ಬೈಯ್ಯುತ್ತಾಳೆ. ಅಮ್ಮ ಬಂದಮೇಲೆ ಹೇಳಲೇಕೂಡದು-ಎಂದು ನಿಶ್ಚಯಿಸಿದಳು. ಆದರೆ ರಾಮಣ್ಣನಿಗೆ ಇಟ್ಟುಕೊಂಡಿದ್ದ ಕಡಲೆಯ ನೆನಪಾಯಿತು. ಅವನು ಬಂದಮೇಲೆ, ಇದೆಲ್ಲಿ ಬಂತು ಅಂತ ಕೇಳಿದರೆ ಏನು ಹೇಳುವುದು? ಈ ವಿಶ್ವ, ಅಮ್ಮನು ಬಂದ ತಕ್ಷಣ ಹೇಳಿ ಬಿಡುತ್ತೆ. ಈಗ ಏನು ಮಾಡಬೇಕು?-ಎಂದು ಅರ್ಧ ಗಂಟೆ ಯೋಚಿಸಿದಳು. ಕೊನೆಗೆ ಒಂದು ಉಪಾಯ ಹೊಳೆಯಿತು. ಸೆರಗಿನಲ್ಲಿದ್ದ ಕಡಲೆ ಬೆಲ್ಲವನ್ನು ಬಿಚ್ಚಿ ವಿಶ್ವನಿಗೆ ಕೊಟ್ಟು ಹೇಳಿದಳು: ‘ಇದ ನೀನೇ ತಿನ್ನೋ.’ +‘ರಾಮಣ್ಣನಿಗೆ? ’ – ಅವನು ಕೇಳಿದ. +‘ಅವ್ನು ಬರೂಹೊತ್ತಿಗೆ ಅಮ್ಮ ಬಂದು ಗೆಡ್ಡೆ ಬೇಸಿರ್ತಾಳೆ. ಅವ್ನಿಗೆ ಹುರಿಗಡ್ಲೆ ಬೆಲ್ಲಸೇರುಲ್ಲ. ನೀನೇ ತಿನ್ನು.’ +‘ನೀನೊಂದಿಷ್ಟು, ನಾನೊಂದಿಷ್ಟು’ -ಎಂದು ವಿಶ್ವ ಹೇಳಿದರೂ ಕೇಳದೆ ಎಲ್ಲವನ್ನೂ ಅವನಿಗೇ ತಿನ್ನಿಸಿದಳು. ಚೊಂಬಿನಲ್ಲಿ ನೀರು ಬಗ್ಗಿಸಿಕೊಂಡು ಅವನು ಕುಡಿದ ಮೇಲೆ ಹತ್ತಿರ ಕರೆದು ಕೂರಿಸಿಕೊಂಡು ಹೇಳಿದಳು: ‘ನೋಡು , ಇವತ್ತು ನರಸಮ್ಮನ ಅಂಗ್ಡೀಲಿ ಇದ ತಿಂದಿದ್ದು ಗೊತ್ತಾದ್ರೆ ಅಮ್ಮ ಹ್ವಡೀತಾಳೆ. ಯಾರ ಕೈಲೂ ನೀನು ಹೇಳ್ ಕೂಡ್ದು.’ +‘ಯಾಕೆ ಹೊಡೀತಾಳೆ?’ +‘ಯಾಕೋ? ನರಸಮ್ಮ ಕೆಟ್ಟೋಳು ಅಂತ ಎಲ್ಲಾರೂ ಮಾತಾಡ್ಕಳಲ್ವೆ? ನೀನು ಯಾರ ಕೈಲೂ ಹೇಳ್ ಕೂಡ್ದು.’ +‘ಹೂಂ.’ +‘ಹಾಗಂತ ಆಣೆ ಇಡು.’ +ವಿಶ್ವ ಅವಳ ಅಂಗೈಮೇಲೆ ತನ್ನ ಅಂಗೈಯಿಂದ ಬಡಿದು ಒಂದು ಸಲ ಚಿಗುಟಿ ಭಾಷೆ ಕೊಟ್ಟ. ಆದರೆ ಅಷ್ಟರಿಂದ ಮಾತ್ರ ಅವಳಿಗೆ ಧೈರ್ಯ ಬರಲಿಲ್ಲ. ಅವನನ್ನು ಹತ್ತಿರವೇ ಇದ್ದ ಗ್ರಾಮದೇವತೆ ಕಾಳಮ್ಮನ ಗುಡಿಗೆ ಕರೆದುಕೊಂಡು ಹೋಗಿ, ಬಾಗಿಲು ಹಾಕಿದ್ದ ಹೊಸಲನ್ನು ಮುಟ್ಟಿಸಿ ಆಣೆ ಮಾಡಿ-‘ಈಗ ಅಮ್ಮನ ಮ್ಯಾಲೆ ಆಣೆ ಹಾಕಿದೀಯಾ. ನೀನೇನಾದ್ರೂ ಹೇಳಿದ್ರೆ ಗುಡೀಲಿರೂ ಬ್ಯಾತಾಳ ಬಂದು ನಿನ್ನ ನುಂಗಿಹಾಕಿಬಿಡುತ್ತೆ’ ಎಂದು ಹೆದರಿಸಿದಳು. +‘ನಾನೇನು ಹೇಳುಲ್ಲ ಕಣೆ, ನಂಗೊತ್ತಿಲ್ವೆ?’-ಎಂದು ಅವನು ರೇಗಿ ನುಡಿದ ಮೇಲೆ ಅವಳು ಸುಮ್ಮನಾದಳು. +ಸಂಜೆಗೆ ಅಮ್ಮ ಮನೆಗೆ ಬಂದು ಗೆಡ್ಡೆಯನ್ನು ತೊಳೆದು ಶೋಧಿಸಿ ಬೇಯಿಸಲು ಇಟ್ಟಳು. ಹೊತ್ತು ಮುಳುಗಿದ ಮೇಲೆ ರಾಮಣ್ಣ ಬಂದ. ಚೆನ್ನಿಗರಾಯರೂ ಎಲ್ಲಿಯೋ ಹೋಗಿದ್ದವರು ಹಿಂತಿರುಗಿದರು. ಗೆಡ್ಡೆ ತಿನ್ನಲು ಕುಳಿತಾಗ ವಿಶ್ವ ಅರ್ಧಕ್ಕೇ ಬೇಡವೆಂದು ಬಿಟ್ಟ. ‘ಯಾಕೋ, ಏನು ತಿಂದಿದ್ದೀಯೋ?’-ಎಂದು ಅಮ್ಮ ಕೇಳಿದಾಗ ಪಾರ್ವತಿಯ ಉಸಿರು ಹಿಡಿದುಕೊಂಡಿತು. +ಆದರೆ ವಿಶ್ವ, ‘ಇವತ್ತು ಚೆನ್ನಾಗಿಲ್ಲ ಕಣಮ್ಮ, ಕೆಟ್ಟ ವಾಸನೆ’-ಎಂದನೇ ಹೊರತು ಮತ್ತೆ ಏನೂ ಹೇಳಲಿಲ್ಲ. ಎಲ್ಲರೂ ತಿಂದಮೇಲೆ ಅವನೇ ಅಕ್ಕನನ್ನು ಶೆಡ್ಡಿನಿಂದ ಹೊರಗೆ ಕರೆದುಕೊಂಡು ಹೋಗಿ-‘ನಾನ್ ಹೇಳಿದ್ನೇನೆ?’ ಎಂದು ಕೇಳಿದ. +‘ಇಲ್ಲ, ನೀನು ಜಾಣ’-ಎಂದು ಮೆಚ್ಚುಗೆ ಹೇಳಿ ಅವಳು ಒಳಗೆ ಬಂದಳು. +– ೭ – +ಸುತ್ತಮುತ್ತ ಎಲ್ಲೆಲ್ಲಿಯೂ ಪ್ಲೇಗು ಅಡಗಿಹೋದುದರಿಂದ ಎಲ್ಲ ಹಳ್ಳಿಗಳವರೂ ಶೆಡ್ಡುಗಳನ್ನು ಬಿಟ್ಟು ಊರಿಗೆ ಹಿಂತಿರುಗಿದರು. ರಾಮಸಂದ್ರದವರೂ ಬಂದರು. ಊರಿಗೆ ಬಂದಿದ್ದಕ್ಕೂ ಹೊರಗೆ ಇದ್ದದ್ದಕ್ಕೂ ಹೆಚ್ಚು ವ್ಯತ್ಯಾಸವೇನೂ ಇರಲಿಲ್ಲ. ಅಲ್ಲಿಯೂ ಹೊಟ್ಟೆಗೆ ಇರಲಿಲ್ಲ; ಇಲ್ಲಿಯೂ ಇಲ್ಲ. +ನಂಜಮ್ಮನಿಗೆ ಒಂದು ಉಪಾಯ ಹೊಳೆಯಿತು. ಹಿಂದೆ ಅಪ್ಪಣ್ಣಯ್ಯ ಗುಡಿಸಲು ಕಟ್ಟಿ ಆಮೇಲೆ ಬೆಂಕಿ ಹಚ್ಚಿ ಸುಟ್ಟುಹಾಕಿದುದು ಗುಂಡೇಗೌಡರ ಹಿತ್ತಲಿನ ಜಾಗ. ಆ ವರ್ಷ ಬರ ಬಂದು ಎಲ್ಲೆಲ್ಲಿಯೂ ಬೆಳೆ ಇಲ್ಲದುದರಿಂದ ನಾಲೆ ಬಯಲನ್ನುಳಿದು ಇತರ ಕಡೆಗಳಲ್ಲೆಲ್ಲ ಸರ್ಕಾರದವರು ರೆವಿನ್ಯೂ ಕಂದಾಯವನ್ನು ವಜಾ ಮಾಡಿದರು. ಆ ವರ್ಷ ವಸೂಲಿಗೆ ಸಹ ಅವರು ಕುರುಬರಹಳ್ಳಿಗೆ ಹೋಗಿರಲಿಲ್ಲ. ವರ್ಷದ ಪೋಟಿಕೆಗೆ ವಜಾ ಹಾಕಿಕೊಳ್ಳಲು ಗುಂಡೇಗೌಡರು ಕೊಟ್ಟು, ಕೊಡಿಸಿದ್ದ ನೂರು ರೂಪಾಯಿಯ ದಿಕ್ಕೇನು? +ಚೆನ್ನಿಗರಾಯರು ಕಳೆದ ಎಂಟು ದಿನದಿಂದ ಊರಿನಲ್ಲಿರಲಿಲ್ಲ. ಎಲ್ಲಿಗೆ ಹೋಗಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. +ನಂಜಮ್ಮನೇ ಕುರುಬರಹಳ್ಳಿಗೆ ಹೋಗಿ ಕೇಳಿದಳು: ‘ಗೌಡರೇ, ಈ ವರ್ಷ ಕಂದಾಯವಿಲ್ಲ. ನಿಮ್ಮ ದುಡ್ದನ್ನು ಮುಂದಿನ ವರ್ಷಕ್ಕೆ ಹಾಕ್ಕೊಳ್ತೀನಿ.’ +‘ಆಯ್ತು ಬುಡವ್ವ, ಈಗ ಹಣ ವಾಪಸ್ ತಾ ಅಂದ್ರೆ ನೀನೆಲ್ಲಿ ತತ್ತೀಯಾ? +‘ಇನ್ನೂ ಒಂದು ಮಾತು. ನಿಮ್ಮ ಹಿತ್ಲು ಇದೆಯಲ್ಲ. ಅದಕ್ಕೆ ಬೇಲಿ ಹಾಕ್ಕಂಡು ನಾನು ಒಂದಿಷ್ಟು ದಂಟಿನ ಸೊಪ್ಪು ಬೆಳ್ಕತ್ತೀನಿ.’ +‘ಬ್ಯಳ್ಕ. ನನ್ ಗಂಟೇನ್ ಹೋಯ್ತದೆ?’ +ಮನೆಗೆ ಬಂದ ಮುತ್ತೈದೆ ಎಂದು ಗೌಡರು ಒಂದು ತೆಂಗಿನಕಾಯಿ ಒಂದು ಸೇರು ರಾಗಿಹಿಟ್ಟು ಕೊಟ್ಟು ಕಳುಹಿಸಿದರು. ಅವರನ್ನೂ ಅವರ ಮುಂದಿನ ಪೀಳಿಗೆಯನ್ನೂ ಹರಸುತ್ತಾ ಊರಿಗೆ ಬರುವಾಗ ಒಂದು ಯೋಚನೆ ಬಂತು. ಆ ವರ್ಷದ ಕಂದಾಯವನ್ನೇನೋ ಸರ್ಕಾರದವರು ವಜಾ ಮಾಡಿದಾರೆ. ಆದರೆ ಶ್ಯಾನುಭೋಗರ ಪೋಟಿಕೆಯಂತೂ ಬರುತ್ತೆ. ಯಜಮಾನರ ಕೈಗೆ ಪೂರ್ತಿ ಪೋಟಿಕೆ ಹಣ ಸಿಕ್ಕಿದರೆ ಅದು ಮುಗಿಯುವತನಕ ಅವರು ತಿಪಟೂರಿನ ಹೋಟೆಲನ್ನು ಬಿಡುವುದಿಲ್ಲ. ಹಣ ಅವರ ಕೈಗೆ ಸಿಕ್ಕದಂತೆ ಏನಾದರೂ ಮಾಡಬೇಕು. ಯಾರ ಸಹಾಯ ಕೇಳುವುದು? ಕಂಬನಕೆರೆಗೆ ಹೋಗಿ ಶೇಕ್ದಾರರಿಗೇ ಕೈ ಮುಗಿಯಬೇಕು. ಮತ್ತೆ ಯಾರೂ ಈ ವಿಷಯದಲ್ಲಿ ಸಹಾಯ ಮಾಡಲು ಅಸಮರ್ಥರು-ಎಂದು ತೀರ್ಮಾನಕ್ಕೆ ಬಂದಳು. +ಯಜಮಾನರು ಎಂಟು ದಿನದಿಂದ ಊರಿನಲ್ಲಿರಲಿಲ್ಲ. ಗಂಗಮ್ಮ ಅಪ್ಪಣ್ಣಯ್ಯರೂ ಇಲ್ಲ. ಅವರು ನಾಲೆ ಬಯಲು ಕಡೆ ಬತ್ತದ ದೇಶಾವರಿಗೆ ಹೋಗಿದ್ದಾರೆ. ದಿನವೂ ಸುಖವಾಗಿ ಊಟ ಸಿಕ್ಕುತ್ತದೆಂದು ಇವರೂ ತಾಯಿ ತಮ್ಮನನ್ನು ಕೂಡಿಕೊಂಡಿರಬಹುದು. +ಮರುದಿನ ರಾಮಣ್ಣನ ಜೊತೆ ಅವಳು ಕಂಬನಕೆರೆಗೆ ಹೋದಳು. ತಾಯಿ ಮಗ ಇಬ್ಬರೂ ಶೇಕ್ದಾರರ ಮನೆಗೆ ಹೋಗಿ ಕೈಮುಗಿದಾಗ ಅವರು-‘ಏನಮ್ಮಾ ಬಂದ್ರಿ? ಈ ವರ್ಷ ವಸೂಲಿಯೂ ಇಲ್ಲ, ಪಹಣಿಯೂ ಇಲ್ಲ. ಮುಂದಿನ ವರ್ಷ ಏನಾಗುತ್ತೋ ಏನೋ!’ ಎಂದರು. +ನಂಜಮ್ಮ ತನ್ನ ಗಂಡನ ವಿಷಯ ಹೇಳಿ, ಪ್ರತಿವರ್ಷವೂ ಕುರುಬರಹಳ್ಳಿಯ ಪಟೇಲ ಗುಂಡೇಗೌಡರು, ಮತ್ತೆ ಇಬ್ಬರ ಕಂದಾಯಕ್ಕೆ ಪೋಟಿಕೆ ವಜಾ ಕಟ್ಟಿಸುತ್ತಿದ್ದುದನ್ನು ತಿಳಿಸಿ, ಈ ವರ್ಷ ಕಂದಾಯ ರಿಮಿಶನ್ ಆಗಿರುವುದರಿಂದ ಉದ್ಭವಿಸಿರುವ ಸಮಸ್ಯೆಯನ್ನು ವಿವರಿಸಿದಳು. +‘ನೋಡಿ ಅಮ್ಮ, ಚೆನ್ನಿಗರಾಯರ ಕಥೆ ನಂಗೂ ಗೊತ್ತು. ಈ ಹೋಬಳೀಲಿ ಅವರ ವಿಷಯ ಮಾತಾಡದೇ ಇರೋ ಶ್ಯಾನುಭೋಗರೇ ಇಲ್ಲ. ಆದರೆ ಕಾನೂನು ಪ್ರಕಾರ ನಾನು ಏನೂ ಮಾಡೂಹಾಗಿಲ್ಲ. ಸಾಹೇಬರಿಗೆ ಒಂದು ಮಾತು ಹೇಳ್ತೀನಿ.’ +‘ನೀವು ಏನಾದರೂ ಮಾಡಿ ಮಕ್ಕಳ ಅನ್ನ ಕೊಡಿಸಿಕೊಡಬೇಕು.’ +ಶೇಕ್ದಾರರ ಹೆಂಡತಿ ಗಂಡನಿಗೆ ಹೇಳಿದರು: ‘ಇವತ್ತು ಹ್ಯಾಗೂ ತಿಪಟೂರಿಗೆ ಹೋಗ್ತೀರಲ್ಲ. ಇವರುನ್ನೂ ಕರ್ಕಂಡು ಹೋಗಿ ಸಾಹೇಬರಿಗೇ ತೋರಿಸಿ ನೀವೇ ಎಲ್ಲಾ ಹೇಳಿ. ಅವನ ಯೋಗ್ತಿ ಅವರಿಗೆ ಗೊತ್ತಾಗ್ಲಿ.’ +ಹನ್ನೊಂದು ಗಂಟೆಯ ಮೊದಲಿಯಾರ್ ಮೋಟಾರಿನಲ್ಲಿ ತಮ್ಮೊಡನೆ ತಿಪಟೂರಿಗೆ ಬರುವಂತೆ ಶೇಕ್ದಾರರು ಕರೆದರು. ಮೋಟಾರು ಛಾರ್ಜಿಗೆ ತಾನು ದುಡ್ಡು ತಂದಿಲ್ಲವೆಂದು ಅವಳು ಜೀವ ಹಿಂಡಿಕೊಂಡು ಹೇಳಿದಮೇಲೆ, ‘ಪರವಾಗಿಲ್ಲ, ನಿಂಗೆ ನಾಲ್ಕಾಣೆ, ಹುಡುಗನಿಗೆ ಅರ್ಧ ಛಾರ್ಜು ಹಾಕ್ಕೋ ಅಂತೀನಿ. ಆರಾಣೆ ನಾನೇ ಕೊಡ್ತೀನಿ ಬನ್ನಿ.’ +ತಾಯಿ ಮಗ ಇಬ್ಬರಿಗೂ ಅವರ ಮನೆಯಲ್ಲಿ ಉಪ್ಪಿಟ್ಟು ಕಾಫಿ ಆಯಿತು. ಮೋಟಾರು ಹತ್ತಿ ಹನ್ನೆರಡು ಗಂಟೆಯ ಹೊತ್ತಿಗೆ ಇವರು ತಾಲ್ಲೂಕ್ ಆಫೀಸಿಗೆ ಹೋದ ತಕ್ಷಣ ಶೇಕ್ದಾರರು ಹೋಬಳಿ ಗುಮಾಸ್ತನನ್ನು ವಿಚಾರಿಸಿದರು. ಅವನು ಹೇಳಿದ: ‘ರಾಮಸಂದ್ರ ಫಿರ್ಖಾದ ಪೋಟಿಕೆ ಕೊಟ್ಟು ಆಗಲೇ ಎಂಟು ದಿನವಾಯ್ತಲ್ಲ ಸಾರ್.’ +ನಂಜಮ್ಮನ ಎದೆ ಧಸ್ಸಕ್ಕೆಂದಿತು. ‘ಈಗ ಏನು ಮಾಡೂದಮ್ಮ?’-ಶೇಕ್ದಾರರು ಕೇಳಿದರು. +‘ಹಾಗಾದ್ರೆ ಅವ್ರು ಈ ಊರಿನಲ್ಲೇ ಇರಬೌದು ಸ್ವಾಮಿ. ಪೂರ್ತಿ ದುಡ್ಡು ಇನ್ನೂ ಖರ್ಚಾಗಿರುಲ್ಲ. ನೀವು ದೊಡ್ಡ ಮನಸ್ಸು ಮಾಡಿ ಅವ್ರನ್ನ ಹೆದ್ರಿಸಿದ್ರೆ ಕೊಡ್ತಾರೆ.’ +‘ಮಾಧವಭಟ್ರ ಹೋಟ್ಲಿನ ಹತ್ರಾನೇ ಇರ್ತಾರೆ ಸಾರ್ ಅವ್ರು. ನೀವು ಈಗ ಬೇಕಾದ್ರೆ ಅಲ್ಲಿಗೆ ಹೋಗಿ. ಒಳಗೆ ಕೂತು ಊಟ ಹೊಡೀತಿರ್ತಾರೆ.’-ಹೋಬಳಿಯ ಗುಮಾಸ್ತ ಹೇಳಿದ. +ಅರಳಿಕಟ್ಟೆಯ ಹತ್ತಿರ ಇದ್ದ ಹೋಟೆಲಿಗೆ ಮೂವರೂ ಹೋದರು. ನಂಜಮ್ಮ ರಾಮಣ್ಣ ಹೊರಗೆ ನಿಂತರು. ಶೇಕ್ದಾರರು ಊಟದ ಹಾಲಿನ ಬಾಗಿಲಿನಲ್ಲಿ ನಿಂತು ಬಗ್ಗಿ ನೋಡಿದರೆ ಗುಮಾಸ್ತನ ಮಾತು ನಿಜವಾಗಿತ್ತು. ಮಣೆಯ ಮೇಲೆ ಕೂತು ಅಗ್ರದ ಬಾಳೆ ಎಲೆಯಲ್ಲಿ ಅವರು ಆಲೂಗಡ್ಡೆ ಬದನೇಕಾಯಿ ನೀರುಳ್ಳಿಗಳ ಸಾಂಬಾರಿನಿಂದ ಕಲಸಿದ ರಾಶಿ ಹಾಕಿಕೊಂಡು ತುತ್ತು ಎತ್ತುತ್ತಿದ್ದರು. ಅನ್ನದ ರಾಶಿಯ ಸುತ್ತಲೂ ಪಲ್ಯ, ಗೊಜ್ಜು, ಉಪ್ಪಿನಕಾಯಿ, ಹಪ್ಪಳಗಳ ಸಾಮಂತಗುಪ್ಪೆಗಳಿದ್ದವು. ಶೇಕ್ದಾರರು ಅವರನ್ನು ಮಾತನಾಡಿಸಲಿಲ್ಲ. ಹೊರಗೆ ಬಂದು ಒಂದು ಕುರ್ಚಿಯ ಮೇಲೆ ಕುಳಿತರು. ಅರ್ಧ ಗಂಟೆಯ ಕಾಲ ಹೊರಗೆ ನಂಜಮ್ಮ ರಾಮಣ್ಣ, ಒಳಗೆ ಶೇಕ್ದಾರರು ಕಾಯುತ್ತಲೇ ಇದ್ದರು. ಭೋಜನ ಮುಗಿಸಿದ ಶ್ಯಾನುಭೋಗರು ಹೊರಗೆ ಬರುತ್ತಾರೆ: ಶೇಕ್ದಾರರನ್ನು ಕಂಡು ತಕ್ಷಣ ಕೈ ಮುಗಿದು- ‘ಕೈ ಮುಗಿದೆ ಮಹಾಸ್ವಾಮಿ’ ಎಂದರು. +‘ಏನು ಶ್ಯಾನುಭೋಗ್ರೇ ಬಂದಿದ್ರಿ?’ +‘ಇ‌ಇ‌ಇ‌ಇ ಇಲ್ಲೇ ಒಂದಿಷ್ಟು ಕ್ಯ ಕ್ಯ ಕ್ಯಲ್ಸವಿತ್ತು ಮಾಸ್ವಾಮಿ.’ +‘ಮೊದಲು ಅವರಿಗೆ ಊಟದ ದುಡ್ಡು ಕೊಡಿ. ಒಂದಿಷ್ಟು ಮಾತಿದೆ.’ +ಚೆನ್ನಿಗರಾಯರು ಹತ್ತು ಆಣೆ ಕೊಟ್ಟು ಹೊರಗೆ ಬಂದರೆ ಹೆಂಡತಿ ಮಗ ನಿಂತಿದ್ದಾರೆ. ಶೇಕ್ದಾರರು, ‘ನೋಡಿ, ನಿಮ್ ಮ್ಯಾಲೆ ಪೋಲೀಸ್ ವಾರಂಟ್ ಇದೆ. ಅಮಲ್ದಾರ್ ಸಾಹೇಬ್ರು ನಿಮ್ಮುನ್ನ ಅರೆಸ್ಟ್ ಮಾಡಿಸೋಕೆ ಹೇಳಿದಾರೆ.’ +ಚೆನ್ನಿಗರಾಯರು ನಡುಗಿಹೋದರು. ಶೇಕ್ದಾರರು: ‘ರೈತರ ಹತ್ರ ಪೋಟಿಗೇಲಿ ಕಟಾಯ್ಸ್ತೀನಿ ಅಂತ ಹೇಳಿ ಕಂದಾಯ ತಗಂಡು ಇಲ್ಲಿ ಬಂದು ಪೋಟಿಗೆ ಖರ್ಚು ಹಾಕಿಸಿ ಕಂಡಿದೀರಲ್ಲ, ಅದು ಕ್ರಿಮಿನಲ್ ಅಲ್ವೆ?’ +‘ತಪ್ಪಾಯ್ತು ಸ್ವಾಮಿ, ಈ ಈ ಮುಂ…..’ಎಂದವರು ತಕ್ಷಣ ನಾಲಿಗೆ ಬಿಗಿಹಿಡಿದು ಕೇಳಿದರು:‘ಇವ್ಳು ಹೇಳಿದ್ಲಾ ಸ್ವಾಮಿ.’ +‘ಯಾರಾದ್ರೂ ಹೇಳ್ಲಿ. ಸಾಹೇಬ್ರ ಆಫೀಸಿಗೆ ಬನ್ನಿ.’ +‘ನಿ ನಿಮ್ ಕಾಲಿಗೆ ಬೀಳ್ತೀನಿ ಸ್ವಾಮಿ. ಪೋಲೀಸ್ನೋರ್ಗೆ ಹಿಡ್ಕೊಡ್ ಬ್ಯಾಡಿ. ನಾನು ಮರ್ಯಾದಸ್ಥ.’ +‘ಆಯ್ತು, ನಿಮ್ಮ ಹತ್ರ ಈಗ ಎಷ್ಟು ರೂಪಾಯಿ ಇದೆ? ತೆಗೆದು ನನ್ನ ಕೈಲಿ ಕೊಡಿ. ಈ ನಿಮಿಷವೇ ತೆಗೀಬೇಕು. ಹುಂ.’ +‘ಕೊಡ್ತೀನಿ ಸ್ವಾಮಿ. ವಳಗಡೆ ಇದೆ.’ +‘ಆದ್ರೂ ಪರವಾಗಿಲ್ಲ. ಇಲ್ಲೇ ತೆಕ್ಕೊಡ್ ಬೇಕು.’ +ಚೆನ್ನಿಗರಾಯರು ತಮ್ಮ ಅಂಗಿಯನ್ನು ಎತ್ತಿ ಕಚ್ಚೆಪಂಚೆಯ ಗಂಟಿನಿಂದ ನುಸಿಸಿ ಲಂಗೋಟಿಯ ಜೊತೆಗೆ ಕಟ್ಟಿದ ಅರಿವೆ ಬಳಲಿನ ಒಂದು ಗಂಟನ್ನು ತೆಗೆದರು. ಹತ್ತು ರೂಪಾಯಿಗಳ ಆರು ನೋಟು, ಐದರದು ಒಂದು ಇದ್ದವು. ಹಣವನ್ನು ಎಣಿಸಿದ ಶೇಕ್ದಾರರು ಕೇಳಿದರು: ‘ಉಳಿದದ್ದು ಏನಾಯ್ತು?’ +‘ಖರ್ಚಾತು ಸ್ವಾಮಿ.’ +‘ಮನೇಲಿ ಹೆಂಡ್ತಿ ಮಕ್ಳುನ್ನ ಉಪವಾಸ ಕೆಡವಿ ಇಲ್ಲಿ ಬಂದು ಹಂದಿ ತಿಂದ ಹಾಗೆ ತಿಂತೀಯಲ್ಲ, ನಾಚಿಕೆಯಾಗುಲ್ವೇನಯ್ಯ ನಿಂಗೆ? ಹಸಿದಿರೋ ನಾಯಿಗೆ ರೊಟ್ಟಿ ಹಾಕಿದ್ರೂ ಕಚ್ಕಂಡು ಹೋಗಿ ಅದರ ಮರಿಗೆ ಕೊಡುತ್ತೆ’-ಎಂದು ಬೈದ ಅವರು, ಹಣವನ್ನು ನಂಜಮ್ಮನ ಕೈಗೆ ಕೊಟ್ಟು ಚೆನ್ನಿಗರಾಯರಿಗೆ ಹೇಳಿದರು: ‘ಶ್ಯಾನುಭೋಗಿಕೆ ಲೆಕ್ಕ ಬರಿಯುಕ್ಕೆ ನಿಂಗೆ ಬರುಲ್ಲ. ಈಯಮ್ಮನೇ ಬರೆಯೋದು ಅಂತ ನಂಗೆ ಗೊತ್ತಿದೆ. ಇನ್ನೊಂದು ದಿನ ಏನಾದ್ರೂ ಹೀಗೆ ಹೆಂಡ್ತಿ ಮಕ್ಳಿಗೆ ಕಾಣದ ಹಾಗೆ ಪೋಟಿಗೆ ತಗಂಡು ತಿಂದ್ರೆ ನಿನ್ನ ಅರೆಸ್ಟ್ ಮಾಡಿಸಿಬಿಡ್ತೀನಿ. ನಾನು ವರ್ಗವಾಗಿ ಹೋದ್ರೂ ಮುಂದಿನ ಶೇಕ್ದಾರರಿಗೆ ಹೇಳಿ ಹೋಗ್ತೀನಿ. ಸಾಹೇಬರ ಕೈಲೂ ಹೇಳ್ತೀನಿ.’ +ಚೆನ್ನಿಗರಾಯರು ಬೀದಿಯಲ್ಲಿಯೇ ಬಾಗಿ, ಬೂಟು ಹಾಕಿದ್ದ ಅವರ ಕಾಲು ಹಿಡಿದುಕೊಂಡು-‘ಸಾಹೇಬ್ರಿಗೆ ಹೇಳ್ ಬ್ಯಾಡಿ ಸ್ವಾಮಿ. ನಾನು ಬಡವ’ ಎಂದು ನಡುಗುತ್ತಾ ಕೇಳಿಕೊಂಡಮೇಲೆ ಶೇಕ್ದಾರರು, ‘ಅಮ್ಮಾ, ನಾಕು ಗಂಟೆಗೆ ಮೋಟಾರಿದೆ. ಅಷ್ಟರಲ್ಲಿ ನೀವು ಏನಾದ್ರೂ ಸಾಮಾನು ಗೀಮಾನು ತಗೂಳೂದಿದ್ರೆ ತಗಳಿ. ನಾನು ತಾಲ್ಲೂಕ್ ಆಫೀಸಿಗೆ ಹೋಗ್ ಬೇಕು. ಅದೇ ಬಸ್ಸಿನಲ್ಲಿ ನಾನೂ ಬರ್ತೀನಿ’ ಎಂದು ಹೇಳಿಹೋದರು. ಚೆನ್ನಿಗರಾಯರು ಮಾನಭಂಗವಾದವರಂತೆ ಅರಳೀಕಟ್ಟೆಯ ಮೇಲೆ ಹತ್ತಿ ತಲೆಯನ್ನು ಮಂಡಿಗಳ ಸಂದಿನಲ್ಲಿ ಬಗ್ಗಿಸಿಕೊಂಡು ಕುಕ್ಕರಗಾಲಿನಲ್ಲಿ ಕುಳಿತುಬಿಟ್ಟರು. ರಾಮಣ್ಣ, ‘ಅಮ್ಮ, ಹೋಟ್ಲಲ್ಲಿ ನಾನು ಯಾವತ್ತೂ ಊಟ ಮಾಡಿಲ್ಲ. ಇವತ್ತು ಇಕ್ಕಿಸು’ ಎಂದ. +‘ಊರಲ್ಲಿ ಅಕ್ಕಯ್ಯ, ವಿಶ್ವ ಉಪವಾಸ ಇವೆಯಲ್ಲಾ ಮರಿ. ಬೆಳಿಗ್ಗೆ ಒಂದೊಂದು ರೊಟ್ಟಿ ತಿಂದಿದ್ವು.’ +ಅವನು ಉತ್ತರ ಹೇಳಲಿಲ್ಲ. ಮುಖ ಸಪ್ಪಗೆ ಮಾಡಿಕೊಂಡ. ಅಮ್ಮನ ಹೊಟ್ಟೆ ಚುರ್ ಎಂದಿತು. ಮಗನನ್ನು ಒಳಗೆ ಕರೆದುಕೊಂಡು ಹೋಗಿ-‘ಈ ಹುಡುಗ್ನಿಗೆ ಊಟಕ್ಕೆ ಎಷ್ಟು?’ ಎಂದು ಕೇಳಿದಳು. ಅವರು-‘ಆರಾಣೆ’ಎಂದರು. ‘ಇವನಿಗೆ ಇಕ್ಕಿ’-ಎಂದುದಕ್ಕೆ ಅವನು, ‘ಅಮ್ಮ, ನೀನು ಮಾಡದಿದ್ರೆ ನಂಗೂ ಬ್ಯಾಡ’ ಎಂದ. ಅವಳು ಕುಳಿತಳು. ದೊಡ್ಡವರಿಗೆ ಹತ್ತಾಣೆ. ಗಮ ಗಮ ಎನ್ನುವ ಹಾಗೆ ಅಡಿಗೆ ಮಾಡಿದ್ದರು. ‘ಸಾಮಾನೆಲ್ಲ ಇದ್ರೆ ಮನೇಲಿ ನಾವೂ ಹೀಗೇ ಮಾಡ್ಭೌದು. ನೀನು ದೊಡ್ಡೋನಾಗಿ ಸಂಬಳ ತರುವಾಗ ನಾನು ಚನ್ನಾಗಿ ಮಾಡಿ ಇಕ್ತೀನಿ’-ಎಂದು ಹೇಳುತ್ತಾ ಅವಳು ಊಟ ಮುಗಿಸಿದಳು. ಇಬ್ಬರಿಂದ ಒಂದು ರೂಪಾಯಿ ಆಯಿತು. ಮನೆಯಲ್ಲಿ ಮಕ್ಕಳಿಗೆಂದು ನಾಲ್ಕಾಣೆಗೆ ಖಾರಾ ಶೇವು, ನಾಲ್ಕಾಣೆಗೆ ಕಡಲೆಪುರಿ, ಎಂಟಾಣೆಗೆ ಮೈಸೂರು ಪಾಕುಗಳನ್ನು ಕಟ್ಟಿಸಿಕೊಂಡು ಅವಳು ಹತ್ತಿರವೇ ಇದ್ದ ಒಂದು ದೊಡ್ಡ ಅಂಗಡಿಗೆ ಹೋಗಿ ವಿಚಾರಿಸಿದರೆ ರಾಗಿಯ ಧಾರಣೆ ಪಲ್ಲಕ್ಕೆ ಮೂವತ್ತೇ ರೂಪಾಯಿ. ಅದೇ ರಾಮಸಂದ್ರದಲ್ಲಿ ಐವತ್ತಕ್ಕೆ ಮಾರುತ್ತಿತ್ತು. ಅರವತ್ತು ರೂಪಾಯಿ ಕೊಟ್ಟು ಎರಡು ಪಲ್ಲ ರಾಗಿ ಕೊಂಡು, ಅದನ್ನು ಮೋಟಾರಿಗೆ ಹಾಕಿಸಿಕೊಡುವಂತೆ ಅಂಗಡಿಯವನನ್ನೇ ಕೇಳಿಕೊಂಡಳು. ಅದೇ ಬಸ್ಸಿಗೆ ಬಂದ ಶೇಕ್ದಾರರು ಹೇಳಿದ ಮೇಲೆ ಮೋಟಾರಿನವನು ರಾಗಿಯ ಮೂಟೆಗಳಿಗೆ ಛಾರ್ಜು ಮಾಡಲಿಲ್ಲ. ಚೆನ್ನಿಗರಾಯರು ಎಲ್ಲಿ ಹೋದರೋ ಯಾರಿಗೂ ಗೊತ್ತಾಗಲಿಲ್ಲ. +ಊರಿಗೆ ಒಂದು ಮೈಲಿ ದೂರದ ರಸ್ತೆಯಲ್ಲಿ ರಾಗಿಯ ಮೂಟೆಗಳನ್ನು ಇಳಿಸಿ ಮೋಟಾರು ಮುಂದೆ ಹೋದಾಗ, ರಾಮಣ್ಣ ಊರಿಗೆ ಹೋಗಿ ಕುಳವಾಡಿಗೆ ಹೇಳಿ ಒಂದು ಗಾಡಿ ಹೂಡಿಸಿಕೊಂಡು ಬಂದ. ಅದುವರೆಗೂ ಮೂಟೆಯನ್ನು ಕಾಯುತ್ತಾ ನಂಜಮ್ಮ ರಸ್ತೆಯ ದಡದಲ್ಲೇ ಇದ್ದಳು. +ಚೆನ್ನಿಗರಾಯರು ಮರುದಿನ ಕಾಲುನಡಿಗೆಯಲ್ಲಿ ಒಂದು ಊರು ಸೇರಿದರು. ನಂಜಮ್ಮ ಅವರನ್ನು ಏನೂ ಅನ್ನಲಿಲ್ಲ. ರಾಮಣ್ಣ ಅಪ್ಪನನ್ನು ಛೇಡಿಸುವ ಮಾತನಾಡಿದಾಗ ಅವಳೇ-‘ಮಗೂ ಅವರು ಏನೇ ಮಾಡಿದರೂ ಹೆತ್ತ ತಂದೆ. ನೀನು ಜಾಣ. ಹಾಗೆಲ್ಲ ಅವರನ್ನ ಅನ್ಬಾರ್ದು’ ಎಂದು ಹೇಳಿ ಸುಮ್ಮನಾಗಿಸಿದಳು. +ಮನೆಗೆ ಎರಡು ಪಲ್ಲ ರಾಗಿ ಬಂದದ್ದು ಎಲ್ಲರಿಗೂ ಸ್ವರ್ಗದ ಕಾಮಧೇನುವೇ ಬಂದಷ್ಟು ಸಂತೋಷ. ಹೊಟ್ಟೆಗಿಲ್ಲದೆ ನಂಜಮ್ಮ ಒಣಗಿದ ಹತ್ತಿಯ ಗಿಡದಂತೆ ಆಗಿದ್ದಳು. ತುಂಬಿಕೊಂಡು ಬೆಳೆಯುತ್ತಿದ್ದ ಪಾರ್ವತಿ ರಾಮಣ್ಣರು ಸೀಕಲು ಕೋತಿಗಳಾಗಿದ್ದರು. ವಿಶ್ವ ಮೊದಲಿನಿಂದ ತುಂಬ ದಷ್ಟಪುಷ್ಟನಾದ ಹುಡುಗ. ಈಗ ಅವನನ್ನೂ ನೋಡುವಂತಿರಲಿಲ್ಲ. ಇದು ಅವರೊಬ್ಬರ ಪಾಡಲ್ಲ. ಊರಿನಲ್ಲಿ ಮುಕ್ಕಾಲು ಜನರ ಸ್ಥಿತಿ ಹೀಗೆಯೇ ಆಗಿತ್ತು. ಉಳಿದ ಕಾಲುಭಾಗ ಚನ್ನಾಗಿದ್ದರು. ಇವರ ಮನೆಯಲ್ಲಿ ಚೆನ್ನಿಗರಾಯರ ಕಾಯ ಸ್ವಲ್ಪ ಕಂದಿದ್ದರೂ ಇದ್ದದ್ದರಲ್ಲಿ ಚನ್ನಾಗಿತ್ತು. +ಹೊಟ್ಟೆ ತುಂಬ ತಿಂದರೆ ರಾಗಿ ಎರಡು ತಿಂಗಳಿಗೆ ಚಟ್ಟೆದ್ದುಹೋಗುತ್ತೆ. ದಿನಕ್ಕೆ ಎರಡು ಸೇರಿಗಿಂತ ಹೆಚ್ಚು ಖರ್ಚು ಮಾಡಕೂಡದೆಂದು ನಂಜಮ್ಮ ನಿರ್ಧರಿಸಿದಳು. ಈ ವರ್ಷ ಇನ್ನೂ ಮಳೆಯಾಗಿಲ್ಲ; ಮುಂದೆ ಕಾಲ ಇದಕ್ಕಿಂತ ಕೆಡಬಹುದು ಎಂದು ಯೋಚಿಸಿದ ಅವಳು ಪಾರ್ವತಿಗೆ ಹೇಳಿದಳು: ‘ಬೆಳಗ್ಗೆ ಸಮನಾಗಿ ಏಳು ರೊಟ್ಟಿ ಮಾಡು. ಎಲ್ಲ ರೊಟ್ಟಿಯೂ ಒಂದೇಸಮಕ್ಕಿರಬೇಕು. ಎಲ್ಲರಿಗೂ ಒಂದೊಂದು ರೊಟ್ಟಿ. ರಾಮಣ್ಣ ಒಂದು ತಗಂಡು ಹೋಗ್ತಾನೆ. ಮಧ್ಯಾಹ್ನ ವಿಶ್ವ, ನೀನು, ಅರ್ಧ ಅರ್ಧ ತಿನ್ನಿ. ಇನ್ನು ರಾತ್ರಿತನಕ ಏನೂ ಇಲ್ಲ. ರಾತ್ರಿ ಒಂದು ಸೇರು ರಾಗಿ ಬೀಸಿ ಹಿಟ್ಟು ಹುಯ್ದು ಸಮನಾಗಿ ಐದು ಮುದ್ದೆ ಕಟ್ಟು. ಯಾರಿಗೆ ಸಾಕಾದರೂ ಅಷ್ಟೇ ಬೇಕಾದರೂ ಅಷ್ಟೇ.’ +ಈ ವ್ಯವಸ್ಥೆಯ ಊಟ ಹುಡುಗರಿಗೆ ಹೇಗೋ ಹೊಟ್ಟೆ ತುಂಬಿದಂತೆ ಆಗುತ್ತಿತ್ತು. ನಂಜಮ್ಮ ಹಸಿವು ತಡೆಯುವುದಕ್ಕೆ ಸಿದ್ಧಳಾಗಿಯೇ ಇದ್ದಳು. ಚೆನ್ನಿಗರಾಯರ ಹೊಟ್ಟೆಗೇ ತಾಪತ್ರಯ. ಅವರು ಹೆಂಡತಿಯ ಮೇಲೆ ರೇಗಿದಾಗ, ರಾಮಣ್ಣ ಪಾರ್ವತಿಯರೇ ತಿರುಗಿಬಿದ್ದರು. ಜೊತೆಗೆ ಕಿರಿಯವನಾದ ವಿಶ್ವ-‘ನೀನು ಅಣ್ಣನಲ್ವೆ, ಅಕ್ಕಿ ತಂದ್ಹಾಕು. ನಾನು ಅನ್ನ ಉಣ್ಣಬೇಕು’ ಎಂದು ಕೇಳಿತು. +‘ಇವರವ್ವುನಾ….. ಹಿಡಕಂಡು’-ಎಂದು ಬೈಯುತ್ತಾ ಅವರು ಏರಿಯ ಕಡೆಗೆ ಹೊರಟು ಹೋದರು. +ಅಡಿಗೆ ಮತ್ತು ಇತರ ಕೆಲಸಗಳನ್ನು ಪೂರ್ತಿಯಾಗಿ ಪಾರ್ವತಿಯ ಮೇಲೆ ಬಿಟ್ಟು ನಂಜಮ್ಮ ಹಿತ್ತಿಲನ್ನು ಒಂದು ಹದಕ್ಕೆ ತರಲು ನಿಂತಳು. ಅಪ್ಪಣ್ಣಯ್ಯ ಸುಟ್ಟುಹಾಕಿದ ಮೇಲೆ ಮಸಿ ಕಟ್ಟಿದ ಗೋಡೆಗಳು ಹಾಗೆಯೇ ನಿಂತಿದ್ದವು. ಅವುಗಳನ್ನೆಲ್ಲ ಹಾರೆಯಿಂದ ಉರುಳಿಸಿ ಕೆಡೆವಿದ ಮೇಲೆ ಅವಳು ಇಡೀ ಹಿತ್ತಿಲಿಗೆ ಬೆಳಿಗ್ಗೆ ಸಂಜೆ ಬಾವಿಯಿಂದ ನೀರು ಸೇದಿಹುಯ್ದಳು. ಒಂದು ವರ್ಷದಿಂದ ನೀರನ್ನೇ ಕಾಣದ ನೆಲದ ಒಂದೊಂದು ಮೊಳ ಜಾಗವೂ ಬಿಂದಿಗೆ ಬಿಂದಿಗೆ ನೀರು ಕುಡಿಯಿತು. ನೆಲ ಮೆದುವಾದ ಮೇಲೆ, ತಾನೇ ಒಂದು ಕಡೆಯಿಂದ ಅಗೆಯಲು ಶುರುಮಾಡಿದಳು. ಹೊಲೆಯರ ಬೇಲೂರನಿಗೆ ಎರಡು ರೂಪಾಯಿಕೊಟ್ಟು ಒಂದು ಗಾಡಿ ಬಿದಿರುಮುಳ್ಳು ತರಿಸಿದಳು. ಹಿತ್ತಲಿನ ನಾಲ್ಕು ಕಡೆಗೂ ಸಾಲಿಗೆ ಕಳ್ಳೀಕೊಂಬೆಗಳನ್ನು ನೆಟ್ಟು ಬಿಗಿಯಾಗಿ ಎರಡು ವರಸೆ ಬಿದಿರುಮುಳ್ಳು ಕೊಟ್ಟು ಈಚಲು ಶಬ್ಬೆಯಿಂದ ಕಟ್ಟಿದಳು. ನಡುವೆ ತೆಳ್ಳಗೆ ಗೊಬ್ಬಳಿಯ ಮುಳ್ಳು ಸೇರಿಸಿ ಬೇಲಿಯನ್ನು ಬಂದೋಬಸ್ತ್ ಮಾಡಿ ಒಂದು ಬಾಗಿಲು, ತದ್ದಲು ಕಟ್ಟಿ ಬೀಗ ಹಾಕುವಂತೆ ಮಾಡಿದಳು. ಒಂದು ಸ್ವಲ್ಪ ಜಾಗಕ್ಕೆ ದಂಟು, ಇನ್ನು ಸ್ವಲ್ಪಕ್ಕೆ ಕೀರೇಗಿಡಗಳನ್ನು ಹಾಕಿದ ಮೇಲೆ, ತಾನೇ ಕಂಬನಕೆರೆಯ ಸಂತೆಗೆ ಹೋಗಿ ತಿಂಗಳು ಹುರುಳಿ, ಬದನೆ ಬೀಜಗಳನ್ನು ತಂದಳು. ಬದನೆಯ ಒಟ್ಟಲುಹಾಕಿ ಗುಣಿ ತೋಡಿ ತಿಂಗಳುಹುರುಳಿಯ ಬೀಜ ಬಿತ್ತಿದಳು. ಹೊಟ್ಟೆಗಿಲ್ಲದಿದ್ದರೆ ತರಕಾರಿಯನ್ನಾದರೂ ಬೆಳೆಯಬೇಕು. ಬಾವಿಯ ಗಂಗಮ್ಮ ತಾಯಿ ಮಾತ್ರ ಕಣ್ಮರೆಯಾಗಿಲ್ಲ-ಎಂದು ಬೆಳಿಗ್ಗೆ ಸಂಜೆ ನೀರು ಸೇದಿ ಹುಯ್ಯುತ್ತಿದ್ದಳು. +ಈ ನಡುವೆ ಸರ್ವಕ್ಕನ ಮಗಳು ರುದ್ರಾಣಿಗೆ ವಾಂತಿ ಭೇದಿ ತಗುಲಿತು. ಎರಡನೇ ದಿನದಲ್ಲಿ ಸುಸ್ತಾಗಿ ಹುಡುಗಿ ಸತ್ತೂ ಹೋದಳು. ಅವಳಿಗೆ ವಾಂತಿ ಭೇದಿಯಾಗಿದ್ದ ವಿಷಯ ನಂಜಮ್ಮನಿಗೂ ತಿಳಿದಿರಲಿಲ್ಲ; ಯಾರಿಗೂ ಗೊತ್ತಿರಲಿಲ್ಲ. ಸುದ್ದಿ ತಿಳಿದ ತಕ್ಷಣ ನಂಜಮ್ಮ ಸರ್ವಕ್ಕನ ಮನೆಗೆ ಹೋದರೆ, ಅಷ್ಟರಲ್ಲಿ ಶವವನ್ನು ದುಪ್ಪಟಿಯ ಮೇಲೆ ಹಾಕಿ ನಾಲ್ಕು ಜನ ನಾಲ್ಕು ಮೂಲೆಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ರೇವಣ್ಣಶೆಟ್ಟಿ ತಲೆತಗ್ಗಿಸಿ ಮಗಳ ಹೆಣದ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅವರ ಜನರ ಪದ್ಧತಿಯಂತೆ ಹೆಣದ ಹಿಂದೆ ಒಬ್ಬರು ಹಿಡಿ ಹಿಡಿ ಪುರಿ ಎರಚಿಕೊಂಡು ನಡೆಯುತ್ತಿದ್ದರು. ಸರ್ವಕ್ಕ ಮನೆಯ ಹೊಸಿಲಿಗೆ ಹಣೆ ಚಚ್ಚಿಕೊಂಡು ಕಣ್ಣೀರು ಸುರಿಸುತ್ತಿದ್ದಳೇ ಹೊರತು ಗಟ್ಟಿಯಾಗಿ ಅಳುತ್ತಿರಲಿಲ್ಲ. +ರುದ್ರಾಣಿ ಪಾರ್ವತಿಗಿಂತ ನಾಲ್ಕು ವರ್ಷಕ್ಕೆ ದೊಡ್ಡವಳು. ಮಾಡಿದ್ದರೆ ಮದುವೆಯಾಗಿ ಇಷ್ಟರಲ್ಲಿ ಒಂದೆರಡು ಮಕ್ಕಳ ತಾಯಿಯಾಗಬೇಕಾಗಿದ್ದ ಹುಡುಗಿ. ಸರ್ವಕ್ಕನ ಹಾಗೆಯೇ ದೊಡ್ಡ ಹೆಣ್ಣು, ತುಂಬಿದ ತಲೆಕೂದಲು. ಹಿಂದಿನಿಂದ ನೋಡಿದರೆ ತಾಯಿ ಮಗಳಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ನಂಜಮ್ಮ ಹೋಗಿ ಹತ್ತಿರ ಕೂತು ಸೂತಕದ ಸರ್ವಕ್ಕನ ಕೈಹಿಡಿದು-‘ತಲೆ ಚಚ್ಚಿಕಂಡ್ರೆ ಏನು ಬಂತು? ಹಾಗೆ ಮಾಡಬ್ಯಾಡ ಕಣ್ರಿ. ಏನಾಗಿತ್ತು ಮಗೀಗೆ?’ ಎಂದು ಸಮಾಧಾನ ಹೇಳಿದುದಕ್ಕೆ ಮಗಳನ್ನು ಕಳೆದುಕೊಂಡ ತಾಯಿ, ‘ಬಂದಿತ್ತು ಅವರಪ್ಪನ ರ್‍ವಾಗ’ ಎಂದವಳೇ ಆ ದುಃಖದಲ್ಲೂ ನಾಲಿಗೆ ಕಚ್ಚಿಕೊಂಡಳು. +ಹೆಣವನ್ನು ಮಣ್ಣುಮಾಡಿ ರೇವಣ್ಣಶೆಟ್ಟಿ ಮನೆಗೆ ಹಿಂತಿರುಗುವವರೆಗೂ ನಂಜಮ್ಮ ಅಲ್ಲಿ ಕೂತಿದ್ದಳು. ಸುತ್ತಮುತ್ತ ಎಷ್ಟೋ ಜನ ಹೆಂಗಸರೂ ಗಂಡಸರೂ ಬಂದು ನಿಂತಿದ್ದರು. ರೇವಣ್ಣಶೆಟ್ಟಿ ಬಂದತಕ್ಷಣ ಹೆಂಗಸರೆಲ್ಲ, ರೊಂಯ್ ಎಂದು ಬೀಸಿಬಂದ ಕಲ್ಲಿಗೆ ಹಕ್ಕಿಗಳು ಪ್ರವೃತ್ತಿಮಾತ್ರದಿಂದ ಹೆದರಿ ಹಾರುವಂತೆ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಗಂಡಸರು ಮಾತ್ರ ಉಳಿದರು. ನಂಜಮ್ಮನೂ ತನ್ನ ಮನೆಗೆ ಬಂದಳು. ಸರ್ವಕ್ಕನ ಮನೆಗೂ, ನಂಜಮ್ಮ ತರಕಾರಿ ಹಾಕಿದ್ದ ಹಿತ್ತಲಿಗೂ ಹತ್ತಿರ. ಸರ್ವಕ್ಕನನ್ನು ಅಲ್ಲಿಗೇ ಕರೆದುಕೊಂಡು ಹೋಗಿ ಕೂರಿಸಿಕೊಂಡು ಮರುದಿನದಿಂದ ನಂಜಮ್ಮ ಸಮಾಧಾನ ಹೇಳುತ್ತಿದ್ದಳು. ಜೀವ ಯಾರಿಗೆ ಶಾಶ್ವತ? ಜವರಾಯ ಯಾವತ್ತು ಬಾ ಅಂದ್ರೂ ಹೋಗಬೇಕು. ತಾಯಿ ಮಗಳು, ನಾವು ಹೆತ್ತದ್ದು. ನಮ್ಮನ್ನು ಹೆತ್ತವರು, ಅನ್ನುವುದೆಲ್ಲ ಬರೀ ಮಾಯೆ-ಎಂದು ತನಗೆ ತಿಳಿದಂತೆ ಅವಳು ಎಷ್ಟು ಹೇಳಿದರೂ ಸರ್ವಕ್ಕನ ದುಃಖ ಆರಲಿಲ್ಲ. ಅವಳು ತಾನಾಗಿಯೇ ನಂಜಮ್ಮನ ಹಿತ್ತಿಲಿಗೆ ಬಂದು ಕೂರುವಳು. ಒಂದು ಮಾತೂ ಆಡುತ್ತಿರಲಿಲ್ಲ. ನಂಜಮ್ಮ ತನ್ನ ಮನೆಯ ಬಾವಿಯಿಂದ ನೀರು ಸೇದಿ, ಸೊಂಟದಲ್ಲೊಂದು ಬಲಗೈಯಲ್ಲೊಂದು ಬಿಂದಿಗೆ ಹಿಡಿದು ತಂದು ಸೊಪ್ಪಿನ ಮಡಿ, ಬದನೆಯ ಗುಳಿಗಳಿಗೆ ಹಾಕುವಳು. ನಡುವೆ ಅವಳು ಮಾತನಾಡಿಸಿದರೂ ಸರ್ವಕ್ಕ ಮಾತನಾಡುತ್ತಿರಲಿಲ್ಲ. ಒಂದು ದಿನ ಸಂಜೆ ನಂಜಮ್ಮ ಸೊಪ್ಪಿನ ಮಡಿಗೆ ನೀರು ಹಾಕಿದ ಮೇಲೆ ಸರ್ವಕ್ಕ ಎಂದಳು: ‘ಹುಟ್ಟಿಸಿದ ಅಪ್ಪನೇ ಮಗಳನ್ನು ಕೊಂದ್ರೆ ಹಣೇಬರಾವು ಏನು ಮಾಡ್ತೈತ್ರೀ?’ +‘ಹಾಗಂದ್ರೇನು ಸರ್ವಕ್ಕ?’ +‘ಓಕ್ಕಳ್ಳಿ ಬುಡಿ.’ +‘ಅದೇನು ಹೇಳಿ. ನಾನು ಯಾರ ಕೈಲೂ ಹೇಳುಲ್ಲ. ನಿಮ್ಮಾಣೆ.’ +‘ಕೋಲ್ಟ್ನಲ್ಲಿ ಸಾಕ್ಷಿ ಏಳಿ ನಮ್ಮೋರು ಎಲ್ಡು ಪಲ್ಲ ರಾಗಿ ಇಪ್ಪತ್ತೈದು ಸೇರು ಅಕ್ಕಿ, ಯಲ್ಲಾ ತಂದ್ರು ಅಂತ ನಾನು ನಿಮಗೆ ಒಂದೀಟು ರಾಗಿ ತಂದ್ ಕೊಡಲಿಲ್ವರಾ?’ +‘ಹೂಂ.’ +‘ಅದು ಕೋಲ್ಟಿಂದಲ್ವರಂತೆ. ಆ ಪರದೇಶಿ ನನ್ಮಗ ಕಾಶಿಂಬಡ್ಡಿ, ಅವನ ಹೆಂಡ್ತಿ ಮಕ್ಳು ಯಲ್ಲಾ ಮಲೆಯಾಳದಲ್ಲವ್ರಂತೆ. ಅವ್ನ ತಾವ ನಮ್ಮೋರು ದುಡ್ಡು ಇಸ್ಕಂಡ್ರಂತೆ.’ +‘ಇಸ್ಕಂಡ್ರೇನಾಯ್ತು?’ +‘ನಾನೂ ನೀವೂ ಶೆತ್ತೆಗ್ಯಡ್ಡೆ ಕೀಣಾಕೆ ಕೆರೆಗೆ ಓಯ್ತಿರ್‍ಲಿಲ್ವರಾ? ಆಗ ನಮ್ಮನೆಯೋರೇ ಅವ್ನುನ್ನ ನಮ್ಮ ಶೆಡ್ಡಿಗೆ ಕರ್ಕಂಡ್ ಬತ್ತಿದ್ರಂತೆ. ರುದ್ರಾಣಿ ಬಸುರಿಯಾಗ್ಬಿಟ್ಳು.’ +ಸರ್ವಕ್ಕ ಹೇಳಿದುದನ್ನು ಸರಿಯಾಗಿ ಕಲ್ಪಿಸಿಕೊಳ್ಳುವುದು ನಂಜಮ್ಮನಿಗೆ ಕಷ್ಟವಾಯಿತು. ಈ ಸಲ ಗ್ರಾಮಕ್ಕೆ ಬಂದಿದ್ದ ಬರದಲ್ಲಿ ಎಷ್ಟೋ ಜನ ಹೆಂಗಸರು ಮಾನ ಬಿಟ್ಟು ಹೊಟ್ಟೆಗೆ ಸಂಪಾದಿಸಿದರೆಂಬುದನ್ನು ಅವಳು ಕೇಳಿದ್ದಳು. ಆದರೆ ತಂದೆಯೇ ಮಗಳಿಂದ ಹೀಗೆ ಮಾಡಿಸುತ್ತಾನೆಂಬುದನ್ನು ಅವಳು ತಕ್ಷಣ ನಂಬಲಾರದಾದಳು. +‘ಕೈ ಹಿಡಿದ ಗಂಡನ ಮ್ಯಾಲೆ ನಾನ್ ಸುಳ್ ಏಳ್ತೀನೇನ್ರೀ? ಅಪ್ಪ ಅನ್ನಿಸ್ಕಂಡ್ ಸೂಳೆ ಮಗ ಹಿಂಗ್ ಏಳ್ದ ಅಂತ ಅವ್ಳು ಹ್ಯಂಗೆ ಒಪ್ಕಂಡ್ಳು? ಶಿವಗೆರೆ ಕಡೆಯೋರೇ ಕೇಳಾಕ್ ಬಂದಿದ್ರು. ಮದ್ವೆ ಮಾಡಾನ ಅಂತ ನಾನು ಏಟೇಟು ಏಳ್ದೆ. ಅನ್ನ ಖರ್ಚಿಗೆ ದುಡ್ಡಿಲ್ಲ ತಡಿ, ಆಮ್ಯಾಲೆ ಮಾಡಾನ ಅಂತ ಇವ್ರೇ ಅಂದಿದ್ರು.’ +‘ಮುಂದೇನಾಯ್ತು?’ +“ನಂಗ್ ಗೊತ್ತೇ ಇಲ್ಲ. ಮೂರು ತಿಂಗ್ಳು ಆದಮ್ಯಾಲೆ ಗೊತ್ತಾಯ್ತು. ಮುಂಡೆ ನಿಂದೇ ತೆಪ್ಪು ಅಂತ ಇವ್ರು ಅವ್ಳುನ್ನೇ ಹ್ವಡದ್ರು. ‘ಇಲ್ಲ ಕಣವ್ವ. ಅಪ್ಪಾಜಿಯೇ, ಏನೂ ಪರವಾಗಿಲ್ಲ ಹ್ಯೆದರ್ಕಾಬ್ಯಾಡ ಅಂತ ಏಳಿ ಕಾಶಿಂಬಡ್ಡಿನ ವಳಕ್ಕೆ ಬುಟ್ಟು, ಅವ್ರು ಈಚೆಕಡೆ ಬಾಕ್ಲು ಆಕ್ಕಂಡ್ರು’ ಅಂತ ಅವ್ಳು ಆಣೆ ಮಾಡಿದ್ಲು. ಇನ್ನೇನ್ ಮಾಡಾಕಾಯ್ತದೆ? ಇವ್ರೇ ಆ ನರಸೀ ತವ ಔಸ್ತಿ ತಂದು ಮೂರು ದಿನ ಕುಡಿಸಿದ್ರು. ಬರೀ ನೆತ್ಲ ಹ್ವಂಡಾಕೆ ಶುರುವಾಯ್ತು. ನಿಲ್ಲೇ ಇಲ್ಲ. ನನ್ಮಗು ಸತ್ಹೋಗ್ ಬುಡ್ತು.” +ನಂಜಮ್ಮ ಮೂಕಳಾದಳು. ಸರ್ವಕ್ಕ ಮತ್ತೆ ಒಂದು ಸಲ ಗಟ್ಟಿಯಾಗಿ ಅತ್ತು ಕಣ್ಣೀರು ಒರೆಸಿಕೊಳ್ಳುತ್ತಿರುವಾಗ ನಂಜಮ್ಮನ ಯೋಚನೆಯು ಪಾರ್ವತಿಯ ಕಡೆಗೆ ಹೋಯಿತು. ಅವಳಿಗಾಗಲೇ ಹನ್ನೆರಡು ವರ್ಷ ತುಂಬುವುದರಲ್ಲಿದೆ. ಈ ಬರ ಬರದೆ ಹೊಟ್ಟೆಗೆ ನೆಮ್ಮದಿಯಾಗಿದ್ದರೆ ಇಷ್ಟರಲ್ಲಿಯೇ ಮೈನೆರೆಯುತ್ತಿದ್ದಳೇನೋ. ಅಕಸ್ಮಾತ್ ಮೊದಲೇ ನೆರೆದು ಕೂತರೆ ಗತಿ ಏನು? ಇಂತಹ ದುರ್ಭಿಕ್ಷ ಬಂದಿರುವಾಗ ಮದುವೆ ಮಾಡುವುದು ಹೇಗೆ? ಎಷ್ಟೇ ಬಡತನದ ಮದುವೆ ಎಂದರೂ, ಹುಲ್ಲು ನೀರು ಇರುವ ಒಂದು ಗೊಂತು ಹುಡುಕಿ ಕಟ್ಟಬೇಕೆಂದರೆ ಏಳು ಎಂಟು ರೂಪಾಯಿಯಾದರೂ ಬೇಕು. ಬೆಳಿಗ್ಗೆ ಸಂಜೆಯ ಹೊಟ್ಟೆಗೇ ಸಂಕಟ ಬಂದಿರುವ ಈ ಕಾಲದಲ್ಲಿ ಎಂಟು ನೂರು ರೂಪಾಯಿ ಎಲ್ಲಿಂದ ಬಂದೀತು? +‘ನಂಜಮ್ಮಾರೇ, ನೀವು ಯಾರ ಕುಟ್ಟೂ ಏಳ್ಕೂಡ್ದು.’ +‘ದೇವರಾಣೆಗೂ ಹೇಳುಲ್ಲ ಸರ್ವಕ್ಕ. ನಿಮ್ಮ ಮರ್ಯಾದೆ ಬ್ಯಾರೆಯಲ್ಲ ನನ್ನ ಮರ್ಯಾದೆ ಬ್ಯಾರೆಯಲ್ಲ.’ +‘ಈ ಗಂಡನ ಸವಾಸ ಬ್ಯಾಡ, ಬುಟ್ ತೌರೂರಿಗೆ ಓಗಿಬಿಡಾನಾ ಅನ್ನುಸ್ತೈತೆ. ಆದ್ರೆ ಅಲ್ಲಿ ಓಗಿ ಅತ್ತಿಗೇರ ಕೈಕೆಳಗೆ ಬೀಳ್ಬೇಕು. ನಾವು ಯಾಕೆ ಬದುಕಿದೀವಿ ನೀವಾರ ಹೇಳಿ.’ +ಸರ್ವಕ್ಕ ಈಗ ಕೇಳಿದ ಪ್ರಶ್ನೆಯನ್ನು ನಂಜಮ್ಮ ಈ ಹಿಂದೆ ಅನೇಕ ಸಲ ತನ್ನನ್ನು ತಾನೇ ಕೇಳಿಕೊಂಡಿದ್ದಳು. ತನ್ನ ಜೀವನದಲ್ಲಾದರೂ ಏನಿತ್ತು. ಗಂಡನ ಪ್ರೀತಿಯೇ? ಅತ್ತೆಯ ಅಂತಃಕರಣವೇ? ತೌರಿನ ಸುಖವೆ? ಆದರೂ ತಾನು ಸಾಯದೆ ಬದುಕಿದೆ. ಮಕ್ಕಳಾದವು. ಈಗ ತಾನು ಯಾಕೆ ಬದುಕಿದ್ದೀನಿ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಮಕ್ಕಳು ಎದುರಿಗೆ ನಿಲ್ಲುತ್ತವೆ. ಹಿತ್ತಿಲಿನ ತರಕಾರಿಗೆ ನೀರು ಹುಯ್ದು, ಗಂಡ ಕದ್ದು ಪೋಟಿಕೆ ಹಣ ತಿನ್ನದಂತೆ ಕಾವಲು ಕಾಯ್ದು, ಬೆಳಿಗ್ಗೆ ಸಂಜೆ ಮುತ್ತಗದೆಲೆ ಹಚ್ಚಿ ಅವಕ್ಕೆ ಒಂದು ರೊಟ್ಟಿ ಅರ್ಧ ಮುದ್ದೆ ಹಿಟ್ಟು, ಅದೂ ಇಲ್ಲದಿದ್ದರೆ ಒಂದು ಹಿಡಿ ಸೊಪ್ಪು, ಇಷ್ಟನ್ನು ತೂತು ಬಿದ್ದು ಅರಿವೆ ಬಳಲು ಹಾಕಿ ಮುಚ್ಚಿದ ಅಲ್ಯೂಮಿನಿಯಂ ತಟ್ಟೆಗೆ ಬಡಿಸುವುದಕ್ಕೆ ಮಾತ್ರವೇ ಬದುಕಿರಬೇಕೆ? ಅಷ್ಟೇ, ಇನ್ನೇನುಂಟು ಬದುಕಿನಲ್ಲಿ?-ಎಂದುಕೊಂಡಳು. +– ೮ – +ಪ್ಲೇಗಿನ ಸುಂಕಲಮ್ಮ ಪೂರ್ತಿಯಾಗಿ ಹೊರಟುಹೋದಮೇಲೆ ಬಹಳ ಜನಕ್ಕೆ ನಾಗರು ಬಡಿಯಿತು. ಯಾರನ್ನು ನೋಡಲಿ ತುರಿ, ಕಜ್ಜಿ, ಕುರು ಏಳುತ್ತಿದ್ದವು. ಎಲ್ಲರೂ ಕೂತಲ್ಲಿ, ನಿಂತಲ್ಲಿ, ಮೈ ಕೈಗಳನ್ನು ಪರಪರ ಕೆರೆದುಕೊಳ್ಳುವವರೇ. ಕಾಲು ತೊಡೆಗಳ ಮೇಲೆ ಕುರು ಎದ್ದವರು ಕುಂಟಿಕೊಂಡು ನಡೆಯುವರು. ಬೆಂಕಿಯ ಶಾಖ ಕೊಟ್ಟು ಅದು ಒಡೆಯುವ ತನಕ ಅವರ ಯಾತನೆ ಹೇಳತೀರದು. ಕಜ್ಜಿ ಎದ್ದವರ ಮೈ ಕೈ ಮತ್ತು ಬೆರಳ ಸಂದುಗಳೆಲ್ಲ ರಸಿಕೆಯಿಂದ ಮೆತ್ತಿಕೊಂಡಿರುತ್ತಿದ್ದವು. +ನಂಜಮ್ಮನ ಮನೆಯಲ್ಲಿಯೂ ಕಜ್ಜಿ ಎದ್ದಿತು. ಮೊದಲು ಆದದ್ದು ರಾಮಣ್ಣನಿಗೆ. ಆಮೇಲೆ ಪಾರ್ವತಿ ವಿಶ್ವರಿಗೆ ತಗುಲಿ, ಅಮ್ಮನಿಗೂ ಆಯಿತು. ಎಳೆ ಬಿಸಿಲು ಕಾಸುವುದು, ಇಲ್ಲದಿದ್ದರೆ ಒಲೆಗೆ ಉರಿ ಹಾಕಿ, ಬೆಂಕಿಯ ಮುಂದೆ ಕಜ್ಜಿ ಎದ್ದ ಭಾಗಗಳನ್ನು ಹಿಡಿದು ಹಾ ಎನ್ನುವ ಹಾಗಾಗುವಂತೆ ಕಾಯಿಸುವುದಷ್ಟೇ ಅವರು ಮಾಡುತ್ತಿದ್ದ ಔಷಧಿ. ಒಂದೊಂದು ದಿನ ಬೆಳಗಾಗುವ ವೇಳೆಗೆ ಅಂಗೈ ಮುಂಗೈಗಳ ಮೇಲೆ ಉಪ್ಪಿಯ ಹಣ್ಣಿನಂತೆ ಬೆಳ್ಳಗೆ ಗುಳ್ಳೆಗಳೆದ್ದುಬಿಡುವುವು. ಅವನ್ನು ಹಾಗೆಯೇ ಬಿಡುವುದು ಹುಡುಗರಿಗೆ ಆಗುತ್ತಿರಲಿಲ್ಲ. ಏನಾದರೂ ಮಾಡಿ ಒಡೆದು ಕೀವನ್ನು ಹೊರಗೆ ತೆಗೆಯಬೇಕು. ಗೊಬ್ಬಳಿಮುಳ್ಳಿನಿಂದ ಚುಚ್ಚಿ ರಸಿಕೆ ಹೊರಡಿಸುವುದೇ ಒಂದು ಕೆಲಸ. ಹಾಗೆ ಹೊರಡಿಸುವಾಗ ಅಕ್ಕಪಕ್ಕದ ಭಾಗಗಳಿಗೆ ತಗುಲಿ ವ್ರಣ ಅಲ್ಲಿಗೂ ಹರಡುತ್ತಿತ್ತು. ಮೊದಲು ಹುಚ್ಚುಕಡಿತ, ಅದನ್ನು ತಡೆಯಲಾರದೆ ಮಾಡುವ ಕೆರೆತ. ನಂತರ ಆಗುವ ಉರಿಯನ್ನು ತಾಳಲಾರದೆ ವಿಶ್ವನಂತೂ ಗಟ್ಟಿಯಾಗಿ ಅತ್ತುಬಿಡುತ್ತಿತ್ತು. ರಾಮಣ್ಣ ಪಾರ್ವತಿಯರೂ ಒಂದೊಂದುಸಲ ಅಳು ತಡೆಯುತ್ತಿರಲಿಲ್ಲ. ಇದುವರೆಗೂ ಮನೆಗೆಲಸವೆಲ್ಲ ಪಾರ್ವತಿಯ ಮೇಲಿತ್ತು. ಎರಡು ಕೈಗಳಲ್ಲೂ ಕಜ್ಜಿಯಾದ ಮೇಲೆ ಅವಳು ಪಾತ್ರೆ ತಿಕ್ಕಲಾರಳು. ಗೂಟ ಹಿಡಿದು ಬೀಸುವ ಕಲ್ಲು ತಿರುಗಿಸಲಾರಳು. ಅದೇ ರೀತಿ ನಂಜಮ್ಮ ಹಿತ್ತಿಲಿನ ಗಿಡಗಳಿಗೆ ಹಗ್ಗ ಹಿಡಿದು ನೀರು ಸೇದಲಾರಳು. ಇಷ್ಟು ದಿನ ಕಷ್ಟಪಟ್ಟು ದುಡಿದು ಚಿಗುರಿಸಿದ್ದ ಸೊಪ್ಪು ತರಕಾರಿಗಳು ಒಣಗುವ ಸ್ಥಿತಿಗೆ ಬಂದುವು. +ಊರಿನವರೆಲ್ಲ ನಾಗಪ್ಪನಿಗೆ ಹರಕೆ ಹೊತ್ತರು. ನಂಜಮ್ಮನೂ ಎಂಟು ದಿನ ಒಂದೇ ಸಮನಾಗಿ ಹುಡುಗರಿಗೂ ಸ್ನಾನ ಮಾಡಿಸಿ ತಾನೂ ತಣ್ಣೀರು ಹುಯ್ದುಕೊಂಡು, ತಮ್ಮೇಗೌಡನ ಮನೆಯಲ್ಲಿ ಇಸಿದುಕೊಂಡು ಬಂದ ಅರ್ಧ ಬಟ್ಟಲು ಹಾಲನ್ನು ಹುತ್ತಕ್ಕೆ ತನಿ ಎರೆದು ಹುಡುಗರಿಂದ ಅಡ್ಡ ಬೀಳಿಸಿ ಬಂದಳು. ಆದರೂ ನಾಗಪ್ಪ ಪ್ರಸನ್ನವಾಗಲಿಲ್ಲ. ಕಜ್ಜಿ ತುರಿಗಳು ಇನ್ನೂ ರೇಗಿದವು. +ಇವರಿಗೆಲ್ಲ ಕಜ್ಜಿಯ ನರಳಾಟ ಶುರುವಾದ ಒಂದು ತಿಂಗಳಿನ ಹೊತ್ತಿಗೆ ಚೆನ್ನಿಗರಾಯರಿಗೂ ಹತ್ತಿತು. ಮೊದಲ ಸಲದ ಗುಳ್ಳೆಗೇ ಅವರು ಎದ್ದು ಕುಣಿದುಬಿಟ್ಟರು. ಊರಿಗೆಲ್ಲ ಕಜ್ಜಿಯಾಗಿದ್ದರೂ ಪಟೇಲ ಮೊದಲಾದ ಕೆಲವು ಅನುಕೂಲಸ್ಥರಿಗೆ ಏನೂ ಆಗಿರಲಿಲ್ಲ. ಗಂಗಮ್ಮ ಅಪ್ಪಣ್ಣಯ್ಯರಿಗೂ ಅದರ ಸೋಂಕು ತಗುಲಿರಲಿಲ್ಲ. ಕೈಬೆರಳ ಸಂದುಗಳಲ್ಲಿ ರಸಿಕೆ ಸೋರುವ ವ್ರಣದಿಂದ ಚೆನ್ನಿಗರಾಯರು ತಾಯಿಯ ಮನೆಗೆ ಹೋದಾಗ ಗಂಗಮ್ಮ ಎಂದಳು: ‘ಶೃಂಗೇರಿ ಗುರುಗಳಿಂದ ಬಹಿಷ್ಕಾರವಾಗಿದೆ. ಆ ಲೌಡಿ ಪ್ರಾಯಶ್ಚಿತ್ತ ಮಾಡ್ಕಳ್ಲಿಲ್ಲ. ಮುಟ್ಟು ಚಟ್ಟು ಅಂತ ಮಡಿ ಮೈಲಿಗೆ ಮಾಡುಲ್ಲ. ಮುಟ್ಟಾದೋಳು ಸೊಪ್ಪಿನ ಮಡಿ ಮುಟ್ಟಿ ನೀರು ಹುಯ್ದರೆ ನಾಗಪ್ಪ ಬರದೆ ಇರುತ್ತೆಯೆ? ಆ ಮುಂಡೆಯಿಂದ ನಿಂಗೂ ಬಂತು. ಚಿನ್ನಯ್ಯ, ಅವ್ಳುನ್ನ ಬಿಡದೆ ಇದ್ರೆ ನಿಂಗೆ ಇದು ಹುಶಾರಾಗುಲ್ಲ.’ +ಬಿಡುತ್ತೇನೆಂದು ಹೇಳಿದರೆ ಹೆಂಡತಿ ಹೆದರುವುದಿಲ್ಲವೆಂದು ಚೆನ್ನಿಗರಾಯರಿಗೆ ಗೊತ್ತು. ಅವಳನ್ನು ಬಿಟ್ಟು ತಾವು ಕವಳಕ್ಕೆ ಏನು ಮಾಡಬೇಕು? ಅವಳೇನಾದರೂ ಹೋಗಿ ಶೇಕ್ದಾರರಿಗೆ ಹೇಳಿದರೆ! ಆದುದರಿಂದ ಅವರು ಈ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಕಜ್ಜಿಗೆ ಏನಾದರೂ ಮಾಡಲೇಬೇಕು. ತಾಯಿ ಮಗ, ಇಬ್ಬರೂ ಅಣ್ಣಾಜೋಯಿಸರ ಮನೆಗೆ ಹೋದರು. ಅವರು ಏನೋ ಉಪಾಯ ಹೇಳುತ್ತಿರುವಷ್ಟರಲ್ಲಿಯೇ ಅಯ್ಯಾಶಾಸ್ತ್ರಿಗಳು ಬಂದರು. ಶಾಸ್ತ್ರಿಗಳು ವಯಸ್ಸಿನಲ್ಲಿ ಹಿರಿಯರು. ಯಾರ ಯಾರ ಮನೆಯಲ್ಲಿ ಯಾವ ಯಾವ ಶಾಸ್ತ್ರ ಸಂಪ್ರದಾಯಗಳಿದ್ದುವು ಎಂಬುದೆಲ್ಲ ಅವರಿಗೆ ಗೊತ್ತು. ಹೇಳಿದರು: ‘ಗಂಗಮ್ಮ, ನಿನ್ನ ಗಂಡನ ಕಾಲದಲ್ಲಿ ನಾಗರು ಮಾಡ್ತಿದ್ದುದು ಜ್ಞಾಪಕವಿಲ್ಲವೆ? ಗಂಡ ಸತ್ತ ಮೇಲೆ ಒಂದು ಸರ್ತಿಯಾದರೂ ನೀನು ಮಾಡಿಸಿದೀಯಾ? ನಾಗಪ್ಪ ಹಿಡಿದು ಕಾಡದೆ ಇನ್ನೇನಾಗುತ್ತೆ?’ +ಗಂಗಮ್ಮನಿಗೆ ನೆನಪಾಯಿತು. ಅದು ತುಂಬ ಭಕ್ತಿ ಶ್ರದ್ಧೆಗಳಿಂದ ಮಾಡಬೇಕಾದ ಕರ್ಮ. ಪಕ್ಷದ ಯಾವುದೋ ಒಂದು ಷಷ್ಠಿಯ ದಿನ ಮನೆಯವರೆಲ್ಲ ತೋಟಕ್ಕೆ ಹೋಗಬೇಕು. ಹಿಂದಿನ ದಿನವೇ ಗಂಡಸರು ಹೋಗಿ ತೋಟದಲ್ಲಿ ಒಂದು ಪುಟ್ಟ ಬಾವಿ ತೆಗೆದು ಬಂದಿರಬೇಕು. ಈಗ ಅದರಲ್ಲಿ ಬಂದಿರುವ ಜಲದಲ್ಲಿ ವಡೆ, ಒಬ್ಬಟ್ಟು, ಪಾಯಸ, ಅನ್ನ ಸಾರು ಹುಳಿಗಳ ಅಡುಗೆಯಾಗಬೇಕು. ಇಬ್ಬರು ಪುರೋಹಿತರು, ಅವರ ಹೆಂಡತಿಯರು, ಒಬ್ಬ ವಿಧವೆ, ಒಬ್ಬ ವಿಧುರ, ಒಬ್ಬ ಬ್ರಹ್ಮಚಾರಿ, ಇಷ್ಟು ಜನ ಹೊರಗಿನವರನ್ನು ಊಟಕ್ಕೆ ಕರೆಯಬೇಕು. ಗೋಧಿ ಹಿಟ್ಟು ಅಕ್ಕಿಯ ಹಿಟ್ಟುಗಳನ್ನು ಕಲೆಸಿ, ಅದರಲ್ಲಿ ಹೆಡೆ ಎತ್ತಿರುವ ನಾಗಪ್ಪನನ್ನು ಹೊಸೆದು, ಅವನಿಗೆ ಸಕಲ ಪೂಜೆಗಳನ್ನೂ ಸಲ್ಲಿಸಿದಮೇಲೆ ಈ ಬ್ರಾಹ್ಮಣ ಮುತ್ತೈದೆ, ವಿಧುರ, ವಿಧವೆ, ಬ್ರಹ್ಮಚಾರಿಗಳಿಗೆ, ಶ್ರಾದ್ಧದ ದಿನ ಬಡಿಸುವಷ್ಟೇ ಧಾರಾಳವಾದ ಭೋಜನ ಮಾಡಿಸಿ ಕೊನೆಯ ಪಕ್ಷ ಒಂದೊಂದು ಬೆಳ್ಳಿಯ ರೂಪಾಯಿ ದಕ್ಷಿಣೆ, ಗಂಡಸರಿಗೆ ಪಂಚೆ ಹೆಂಗಸರಿಗೆ ರವಿಕೆಕಣ, ಬ್ರಹ್ಮಚಾರಿಗೆ ಒಂಟಿಪಂಚೆ , ಒಂಟಿ ಜನಿವಾರ ದಕ್ಷಿಣೆ ಕೊಡಬೇಕು. ನಂತರ ಇವರು ಪ್ರಸಾದರೂಪವಾಗಿ ಊಟ ಮಾಡಿದ ಮೇಲೆ ಸಂಜೆ ನಾಗಪ್ಪನಿಗೆ ಮಹಾಮಂಗಳಾರತಿ ಮಾಡಿ, ಅವನನ್ನೂ ಅಲ್ಲಿಗೆ ತೆಗೆದುಕೊಂಡು ಹೋಗಿ, ಉಳಿದಿದ್ದ ಅಕ್ಕಿ, ಬೇಳೆ, ಗೋಧಿಹಿಟ್ಟು ಮೊದಲಾದುವನ್ನೂ ಬಾವಿಗೆ ಹಾಕಿ ಬಾವಿಯನ್ನು ಮುಚ್ಚಿಬಿಟ್ಟು ಮತ್ತೆ ಹಿಂತಿರುಗಿ ನೋಡದೆ ಸಂಜೆಗತ್ತಲಿನಲ್ಲಿ ಊರಿಗೆ ಬರಬೇಕು. ‘ಇಷ್ಟು ಮಾಡಿದರೆ ಕಜ್ಜಿ ಕುರು ಎಲ್ಲ ತಾನೇ ಓಡಿಹೋಗುತ್ತೆ. ನಿನ್ನ ಗಂಡ ಇದ್ದಾಗ ನಿಮಗೆ ಯಾವತ್ತಾದ್ರೂ ಹೀಗೆ ಆಗಿತ್ತಾ? ನೀವು ಮಾಡೂ ಕರ್ಮ ಬಿಟ್ಟಿರಿ. ಇಂಥದೆಲ್ಲ ಆಗ್ತಾ ಇದೆ’-ಎಂದು, ತಮಗೂ ಎದ್ದಿದ್ದ ಕಜ್ಜಿಯ ಕೈಯನ್ನು ತುರಿಸುತ್ತಾ ಅಯ್ಯಾಶಾಸ್ತ್ರಿಗಳು ಕೇಳಿದಾಗ ಗಂಗಮ್ಮ, ಏನಾದರೂ ಸರಿ ನಾಗಪ್ಪನನ್ನು ಮಾಡಿಯೇ ತೀರಬೇಕೆಂದು ನಿರ್ಧರಿಸಿದಳು. +ಅಣ್ಣಾಜೋಯಿಸರು ಎಂದರು: ‘ಉಳಿದದ್ದಕ್ಕೆ ಯೋಚನೆ ಮಾಡಬ್ಯಾಡ. ಬ್ರಾಹ್ಮಣರಾಗಿ ನಾನು, ಅಯ್ಯಾ ಚಿಕ್ಕಪ್ಪ, ಚಿಕ್ಕಮ್ಮ, ನನ್ನ ಹೆಂಡತಿ ಇದೀವಿ. ಬ್ರಹ್ಮಚಾರಿಯಾಗಿ ನಮ್ಮ ನರಸಿಂಹನೇ ಇದಾನೆ. ವಿಧವೆಗೆ ಬೇಕಾದ್ರೆ ಕೊಂಡೇನಹಳ್ಳಿಯಿಂದ ನನ್ನ ತಂಗಿ ಕರುಸ್ತೀನಿ. ವಿಧುರನಿಗೆ ರಂಗಾಪುರದಿಂದ ನನ್ನ ಹೆಂಡ್ತಿ ಅಣ್ಣನಿಗೆ ಹೇಳಿಕಳುಸ್ತೀನಿ. ನೀನು ಉಳಿದದ್ದೆಲ್ಲ ಅಣಿಮಾಡಿಕೊ.’ +ಸಧ್ಯದಲ್ಲಿಯೇ ಮನೆತನದ ಈ ಧಾರ್ಮಿಕ ವಿಧಿಯನ್ನು ಪೂರೈಸುವುದಾಗಿ ಹೇಳಿ ಗಂಗಮ್ಮ ತನ್ನ ಮನೆಗೆ ಬಂದಳು. ‘ಚಿನ್ನಯ್ಯ, ಅರ್ಧ ಖರ್ಚು ಕೊಡು ಅಂತ ನಿನ್ನ ಹೆಂಡ್ತಿಗೆ ಹೇಳು’-ಎಂದು ಹೇಳಿಕಳಿಸಿದಳು. ಗಂಡ ಹೇಳಿದ ವರ್ಣನೆಯನ್ನು ಕೇಳಿದ ಮೇಲೆ ನಂಜಮ್ಮ ಲೆಕ್ಕ ಹಾಕಿದಳು. ಒಟ್ಟಿನಲ್ಲಿ ಇದಕ್ಕೆ ಒಂದು ನೂರು ರೂಪಾಯಿಯಾದರೂ ಬೇಕು. ಅರ್ಧವೆಂದರೆ ಐವತ್ತು. ಇದರ ಜೊತೆಗೇ ಈ ಜೋಯಿಸರು ತಮ್ಮ ಬಹಿಷ್ಕಾರದ ಪ್ರಾಯಶ್ಚಿತ್ತದ ಪ್ರಶ್ನೆಯನ್ನೂ ಎತ್ತಿ ದುಡ್ಡು ಕೇಳುತ್ತಾರೆ. ಸದ್ಯ, ಹೊಟ್ಟೆಗೇ ಇಲ್ಲದ ಈ ಸ್ಥಿತಿಯಲ್ಲಿ ಇದಕ್ಕೆಲ್ಲ ಎಲ್ಲಿ ತರುವುದು? ಈ ನಾಗಪ್ಪನ ಕೆಲಸವೇ ಬೇಡವೆಂದು ಅವಳು ನಿರ್ಧರಿಸಿದಳು. ಆದರೆ ಅದೇ ಕಜ್ಜಿ ಕುರುಗಳ ಕಾರಣವಾಗಿದ್ದು, ನಾಗಪ್ಪ ಮುನಿದು ರೇಗಿ ಯಾರನ್ನಾದರೂ ಬಲಿ ತೆಗೆದುಕೊಂಡರೆ? – ಎಂಬ ಭಯ ಒಂದು ಕಡೆ. +ಸೊಸೆ ಮತ್ತು ಮೊಮ್ಮಕ್ಕಳ ಗತಿ ಏನಾದರೂ ಆಗಬಹುದು, ತನಗೂ ಅಪ್ಪಣ್ಣಯ್ಯನಿಗೂ ಕಜ್ಜಿ ಆದರೆ ಏನು ಗತಿ ಎಂಬ ಯೋಚನೆ ಗಂಗಮ್ಮನಿಗೆ ಹತ್ತಿತು. ಜೊತೆಗೆ ಮಗ ಚೆನ್ನಿಗರಾಯನನ್ನೂ ಕರೆದುಕೊಂಡು ಹೊಳೆಸೀಮೆಯಾದ ಅಕ್ಕಿಹೆಬ್ಬಾಳಿನ ಕಡೆಗೆ ದೇಶಾವರಿ ಹೊರಟಳು.. ‘ದೇವರ ಕೆಲಸವಾಗಬೇಕು ಧರ್ಮ ಕೊಡಿ’-ಎಂದು ಹಳ್ಳಿಗಳ ಮನೆಮನೆಗೆ ಹೋದರೆ ದುಡ್ಡಂತೂ ಇಲ್ಲ. ಎರಡು ಸೇರು ಬತ್ತ ಇಲ್ಲವೆಂದರೆ ಅವರಿಗೂ ಪಾಪ. ಹೀಗೆ ಬತ್ತ ಗುಡ್ಡೆ ಹಾಕಿ ಅದನ್ನು ಮಾರಿ ಒಟ್ಟಿನಲ್ಲಿ ಒಂದು ತಿಂಗಳಿನಲ್ಲಿ ನೂರು ರೂಪಾಯಿ ಮಾಡಿಕೊಂಡು ಊರಿಗೆ ಬಂದು ಮೂವರೂ ಕೂಡಿ ತೋಟದ ನಾಗಪ್ಪನನ್ನು ಮಾಡುವ ದಿನ ನಿಷ್ಕರ್ಷೆಮಾಡಿದರು. +ಕಜ್ಜಿ ವಿಪರೀತವಾಗಿದ್ದರೂ ರಾಮಣ್ಣ ಸ್ಕೂಲಿಗೆ ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ. ಈಗ ಅವನು ಇಂಗ್ಲಿಷ್ ಎರಡನೇ ಕ್ಲಾಸು. ಅವನ ಸ್ಕೂಲಿನಲ್ಲಿ ಹೀಗೆಯೇ ಕಜ್ಜಿ ಹತ್ತಿದ ಹುಡುಗರು ಕಡಿಮೆ ಇರಲಿಲ್ಲ. ಊರೂರಿಗೆಲ್ಲ ಪ್ಲೇಗಿನ ಅಮ್ಮ ಬಂದಂತೆ ಈಗ ಎಲ್ಲೆಲ್ಲಿಯೂ ನಾಗರು ಬಂದಿತ್ತು. ಕಜ್ಜಿ ಎದ್ದವರನ್ನೆಲ್ಲ ಮೇಷ್ಟರು ಪ್ರತ್ಯೇಕವಾಗಿ ಕೂರಿಸುತ್ತಿದ್ದರು. ಒಂದು ದಿನ ಸ್ಕೂಲು ಹೆಡ್ಮಾಸ್ಟರೇ ಹುಡುಗರ ಈ ಅಸಹ್ಯವನ್ನು ನೋಡಲಾರದೆ, ಹೋಗಿ ಸರ್ಕಾರಿ ಆಸ್ಪತ್ರೆಯ ಡಾಕ್ಟರಿಗೆ ಹೇಳಿದರು. ಗ್ರಾಮಪಂಚಾಯ್ತಿಯ ಛೇರ್‌ಮನ್ ಮತ್ತು ಡಾಕ್ಟರು ಮೇಲಕ್ಕೆ ಬರೆದು ಮಿಲ್ಕ್ ಇಂಜೆಕ್ಷನ್ ಟ್ಯೂಬುಗಳನ್ನು ತರಿಸಿದರು. ಡಾಕ್ಟರು ಎಲ್ಲ ಹುಡುಗರಿಗೂ ಎರಡು ದಿನ ಚುಚ್ಚಿ, ಹಚ್ಚಿಕೊಳ್ಳಲು ಮುಲಾಮು ಕೊಟ್ಟು ಕಳುಹಿಸಿದರು. ಗಂಧಕದ ಮುಲಾಮು ಹಚ್ಚಿಕೊಳ್ಳದಿದ್ದರೂ ಇಂಜೆಕ್ಷನ್ ತೆಗೆದುಕೊಂಡಮೇಲೆ ಹುಡುಗರ ಕಜ್ಜಿ ತಾನಾಗಿಯೇ ಒಣಗಿ ಚರ್ಮದ ಮೇಲಿನ ಬುರುಗು ಕೆಲವು ದಿನಗಳಲ್ಲಿ ಒಣಗಿ ಹೋಯಿತು. +ರಾಮಣ್ಣ ಅಮ್ಮನಿಗೆ ಹೇಳಿದ: ‘ಆ ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನೋಯುತ್ತೆ ಕಣಮ್ಮ. ನನ್ನ ಮೈ ನೋಡು. ಹ್ಯಾಗೆ ವಾಸಿಯಾಗಿದೆ. ನೀವೆಲ್ಲ ಒಂದು ದಿನ ಬನ್ನಿ. ಆಸ್ಪತ್ರೇಲಿ ಅದ ಚುಚ್ಚಿಸಿಕೊಳ್ಳಿ.’ +ಒಂದು ದಿನ, ಪಾರ್ವತಿ ಮತ್ತು ವಿಶ್ವರೊಡನೆ ನಂಜಮ್ಮ ಕಂಬನಕೆರೆಗೆ ಹೋದಳು. ತಮ್ಮ ಕಷ್ಟ ಸುಖ ಹೇಳಿಕೊಂಡ ಮೇಲೆ ಡಾಕ್ಟರು ದುಡ್ಡಿಲ್ಲದೆಯೇ ಸೂಜಿ ಚುಚ್ಚಿದರು. ಮತ್ತೆ ನಾಲ್ಕು ದಿನದ ನಂತರ ಹೋಗಿ ಇನ್ನೊಂದು ಸಲ ಚುಚ್ಚಿಸಿಕೊಂಡು ಬಂದಮೇಲೆ ಇವರ ಮೈಯೂ ಒಣಗಲು ಶುರುವಾಯಿತು. ಒಂದು ದಿನ ರಾಮಣ್ಣನೇ ಹೇಳಿದ: ‘ಅಮ್ಮ, ನಮ್ಮ ಹೆಡ್ಮೇಷ್ಟ್ರು ಹೇಳಿದರು. ಹೋದ ವರ್ಷವೆಲ್ಲ ಮಳೆ ಬೆಳೆಯಿಲ್ಲ. ಯಾರಿಗೂ ಹಾಲು ಮೊಸರಿಲ್ಲ. ಹೊಟ್ಟೆಗಿಲ್ಲದೆ ಗೆಡ್ಡೆ ಗೆಣಸು ಅಂತ ಸಿಕ್ಕಿದ್ದೆಲ್ಲ ತಿಂದು ರಕ್ತ ಕೆಟ್ಟು ಕಜ್ಜಿಯಾಗಿದೆಯಂತೆ. ನಾಗರು ಪಾಗರು ಅನ್ನೋದೆಲ್ಲ ಸುಳ್ಳಂತೆ. ಊರಿನೋರೆಲ್ಲ ಹೀಗೆ ಇಂಜೆಕ್ಷನ್ ತಗಂಡ್ರೆ ವಾಸಿಯಾಗುತ್ತಂತೆ.’ +ಅಷ್ಟರಲ್ಲಿ ಗಂಗಮ್ಮ, ಅಪ್ಪಣ್ಣಯ್ಯ, ಚೆನ್ನಿಗರಾಯರು ಹೋಗಿ ಜೋಯಿಸರಿಗೆ ಪಂಚೆ ಸೀರೆ ದಕ್ಷಿಣೆಗಳೊಡನೆ ಶ್ರದ್ಧಾ ಭಕ್ತಿಯ ಭೋಜನವನ್ನೂ ಮಾಡಿಸಿ ತೋಟದ ನಾಗರು ಮಾಡಿಕೊಂಡು ಬಂದರು. ನಂಜಮ್ಮ ಹುಡುಗರ ಜೊತೆ ಹೋಗಿ ಔಷಧಿ ತೆಗೆದುಕೊಂಡಳೆಂಬುದು ಗೊತ್ತಾದಾಗ ಗಂಗಮ್ಮ ಹೇಳಿದಳು: ‘ದೇವರು ಬಂದಿರುವಾಗ ಮುಂಡೆ ಔಸ್ತಿ ತಗಂಡಿದಾಳೆ. ಮೈ ಕೈ ಎಲ್ಲ ಕೊಳೆತು ಸಾಯ್ತಾಳೆ ನೋಡು. ನಾಗಪ್ಪ ಅಂದ್ರೆ ಏನಂತ ತಿಳ್ಕಂಡಿದಾಳೆ ಅವ್ಳು!’ +ನಂಜಮ್ಮ ಮತ್ತು ಅವಳ ಮಕ್ಕಳಿಗೆ ಗುಣವಾಗಿ ಮೈ ಕೈಯ ಕಲೆಯೂ ಇಲ್ಲವಾದ ಮೇಲೆ ಊರಿನ ಇತರ ಎಷ್ಟೋ ಜನರು ಒಬ್ಬೊಬ್ಬರಾಗಿ ಕಂಬನಕೆರೆಗೆ ಹೋದರು. ಒಂದು ಇಂಜೆಕ್ಷನ್ ಐದು ರೂಪಾಯಿ. +– ೯ – +ಜ್ಯೇಷ್ಠ ಆಷಾಢ ಕಳೆದರೂ ಒಂದು ಹನಿ ಮಳೆ ಬಿದ್ದಿರಲಿಲ್ಲ. ಈ ವರ್ಷವೂ ಹೋದ ಸಲದಂತೆಯೇ ಬರವು ಮುಂದುವರಿಯುವುದು ನಿಶ್ಚಯವಾಗಿತ್ತು. ಹೋದ ವರ್ಷ ಹಳೆಯ ದಿನಸಿ ಇಟ್ಟುಕೊಂಡಿದ್ದ ದಿಮ್ಮನೆಯ ಕುಳಗಳೂ ಈ ಸಲ ಬಾಯಿ ಬಿಡುತ್ತಿದ್ದರು. ಆಕಾಶದಲ್ಲಿ ಮೋಡಗಳು ಬರುತ್ತಿದ್ದವು. ಆದರೆ ಎತ್ತಲಿಂದಲೋ ಏಳುವ ಗಾಳಿಯೂ ಅವನ್ನು ಎಬ್ಬಿಸಿಕೊಂಡು ಹೊರಟುಹೋಗುತ್ತಿತ್ತು. ಈ ವರ್ಷ ಮೂರು ಕೊಳಗ ಮಳೆಯಾದರೆ ಒಂಬತ್ತು ಕೊಳಗ ಗಾಳಿ ಎಂದು ಪಂಚಾಂಗದಲ್ಲಿಯೇ ಬರೆದಿತ್ತು. ಗಾಳಿಯೇನೋ ಸಿಕ್ಕಾಬಟ್ಟೆ ಇದೆ. ಆದರೆ ಅದರ ಮೂರರಲ್ಲಿ ಒಂದು ಭಾಗವಿರಲಿ, ನೂರರಲ್ಲಿ ಒಂದು ಭಾಗ ಮಳೆಯೂ ಬಿದ್ದಿಲ್ಲ. ಕಜ್ಜಿ ವಾಸಿಯಾದ ಮೇಲೆ ನಂಜಮ್ಮ ಹಗಲು ಸಂಜೆ ಹಿತ್ತಿಲಿನಲ್ಲಿಯೇ ಕೆಲಸ ಮಾಡುತ್ತಾಳೆ. ಈಗೀಗ ದಿನಕ್ಕೆ ಒಂದೇ ಸೇರು ರಾಗಿಯಲ್ಲಿ ಎಲ್ಲರ ಊಟವೂ ಆಗಬೇಕು. ಹೊಟ್ಟೆ ತುಂಬುವಷ್ಟು ದಂಟಿನಸೊಪ್ಪು, ಬದನೆಕಾಯಿ, ತಿಂಗಳಹುರುಳಿ ಮೊದಲಾಗಿ ಬೇಯಿಸಿ ತಿನ್ನುತ್ತಾರೆ. ಈ ಉಪಾಯ ಮಾಡಿರುವುದು ಅವಳದೊಂದೇ ಸಂಸಾರ. ರಾತ್ರಿಯ ವೇಳೆ ತನ್ನ ಹಿತ್ತಿಲಿನಲ್ಲಿ ಕಳ್ಳತನವಾಗುವುದು ತೀರ ಸಹಜವೆಂಬುದು ಅವಳಿಗೆ ಗೊತ್ತು. ಆದುದರಿಂದ ಒಂದು ರಾತ್ರಿಗೆ ನಾಲ್ಕು ಬಾರಿಯಂತೆ ಎದ್ದು ಹುಡುಗರನ್ನೂ ಕರೆದುಕೊಂಡು ಹೋಗಿ ನೋಡಿ ಬರುತ್ತಾಳೆ. ಹೋದ ವರ್ಷವೆಲ್ಲ ಮಳೆ ಇಲ್ಲದುದಕ್ಕೆ ಈ ಸಲ ತೆಂಗಿನ ಮರಗಳೂ ಮಂಕಾಗಿವೆ. ತೋಟದ ಮಾಲೀಕರೇ ಎಳೆಗಾಯಿಗಳನ್ನು ಕಿತ್ತು ತಿಪಟೂರಿಗೆ ಹೇರಿ ಮಾರತೊಡಗಿದುದರಿಂದ ಕಾಯಿಗಳ್ಳರಿಗೆ ಅದೂ ಇಲ್ಲದಂತೆ ಆಗಿದೆ. +ಒಂದು ನಡುರಾತ್ರಿಯಲ್ಲಿ ಇದ್ದಕ್ಕಿದ್ದಹಾಗೆಯೇ ಮಳೆ ಬೀಳಲು ಶುರುವಾಯಿತು. ಆಕಾಶದಿಂದ ಆಲಿಕಲ್ಲುಗಳು ಬಿದ್ದಂತೆಯೇ ಮಳೆಯ ನೀರೇ ಪಟಪಟನೆ ಹೊಡೆಯುತ್ತಾ ಸುರಿಯಿತು. ಮುಂಗಾರಿನ ಕಾಲ ಹೋಗಿ, ಹಿಂಗಾರಿನ ದಿನವೂ ಕಳೆಯುತ್ತಿರುವ ಈಗ ಇದ್ದಕ್ಕಿದ್ದಂತೆ ಮುಂಗಾರನ್ನು ಮೀರಿಸುವಷ್ಟು ಜೋರಾಗಿ ಮಳೆ ಜಡಿಯಿತು. ಮಲಗಿದ್ದ ಊರಿನವರಿಗೆಲ್ಲ ಎಚ್ಚರ. ಎಲ್ಲರೂ ತಮ್ಮ ತಮ್ಮ ಮನೆಗಳಿಂದ ಹೊರಗೆ ಬಂದು ನೋಡುತ್ತಾರೆ: ಸ್ವಲ್ಪವೂ ಗಾಳಿಯಿಲ್ಲ. ಬರೀ ಮಳೆ. ಆಕಾಶ ಕರ್ರಗೆ ಹೆಪ್ಪುಗಟ್ಟಿ ನಿಂತಿದೆ. ಭೂಮಿಯ ಮೇಲೆ ದಢದಢನೆ ನೀರು ಸುರಿಯುವುದು ಬಿಟ್ಟರೆ ಅದಕ್ಕೆ ಬೇರೆ ಯಾವ ಕೆಲಸವೂ ಇಲ್ಲವೆಂಬಂತೆ ಕಾಣಿಸುತ್ತಿದೆ. ಇಷ್ಟು ದಿನ ಇಲ್ಲದ ನೀರು ಮೋಡಗಳು ಒಂದೇ ದಿನ ಆಕಾಶದಲ್ಲಿ ಎಲ್ಲಿ ಸೇರಿಕೊಂಡಿತೋ ಯಾವಾಗ ಕೂಡಿಕೊಂಡಿತೋ! ಗ್ರಾಮದೇವರು ಚೋಳೇಶ್ವರನ ಕೃಪೆಯೇ ಸೈ. ಇಲ್ಲದಿದ್ದರೆ ಕಾಲ ಕಳೆದ ಮೇಲೆಯಾದರೂ ಮಳೆ ಎಲ್ಲಿಂದ ಬರಬೇಕು? ಅರ್ಧ ಗಂಟೆಯಲ್ಲಿಯೇ ಊರ ಬೀದಿ ತುಂಬಿ ನೀರು ಕೊಚ್ಚೆ ಹರಿಯಲು ಮೊದಲಾಯಿತು. ಈ ಮಳೆಯ ಜೋರಿಗೆ ಹಿತ್ತಿಲಿನ ದಂಟು, ಬದನೆ, ತಿಂಗಳಹುರುಳಿ ಮೊದಲಾದ ತರಕಾರಿಗಳೆಲ್ಲ ಕೊಚ್ಚಿಹೋಗಿವೆ-ಎಂದು ನಂಜಮ್ಮನಿಗೆ ಒಂದು ಕಡೆ ಆತಂಕವಾದರೆ ಇನ್ನೊಂದೆಡೆಯಲ್ಲಿ ಸಂತೋಷ. ಊರಿಗೆಲ್ಲ ಮಳೆಯಾಗಿ ಬೆಳೆ ಬೆಳೆದರೆ ತಮಗೂ ತಿನ್ನುವ ಹಿಟ್ಟು ಸಿಕ್ಕುತ್ತದೆ. ಕೊಚ್ಚಿಹೋದ ತನ್ನ ಹಿತ್ತಿಲಿನ ಗಿಡಗಳನ್ನು ಮತ್ತೆ ಬೀಜ ಹಾಕಿ ಬೆಳೆಸಬಹುದು. ಸದ್ಯ ಬೆಳೆಯಾದರೆ ಸಾಕು. +ಮಳೆಯೇ ಇಲ್ಲದಿರುವಾಗ ಯಾರೂ ಮನೆಯ ಹೆಂಚು ಕೈಯಾಡಿಸುವ ಯೋಚನೆಗೆ ಹೋಗಿರಲಿಲ್ಲ. ಅಲ್ಲದೆ ವಿಪರೀತ ಗಾಳಿಗೆ ಸಿಕ್ಕಿ ವರ್ಷದ ಶುರುವಿನಿಂದ ಹೆಂಚುಗಳು ಸರುಗಿದ್ದವು. ಆ ರಾತ್ರಿ ಸೋರದಿರುವ ಮನೆಯೇ ಇಲ್ಲ. ಮನೆ ಸೋರಲಿ, ಕೊನೆಗೆ ಗೋಡೆ ಕುಸಿಯಲಿ, ಸದ್ಯ, ಮಳೆಯಾಯಿತಲ್ಲ ಅಷ್ಟೇ ಸಾಕು-ಎಂದು ಎಲ್ಲರೂ ಯೋಚಿಸುತ್ತಿದ್ದರು. +ಬೆಳಗಿನ ಜಾವದ ಹೊತ್ತಿಗೆ ಮಳೆ ನಿಂತಿತು. ಬೆಳಿಗ್ಗೆ ಎದ್ದು ಎಲ್ಲರೂ ಅವರವರ ಹೊಲಗದ್ದೆಗಳ ಕಡೆಗೆ ಹೊರಟರು. ಒಂದೇ ರಾತ್ರಿಯಲ್ಲಿ ಊರ ಕೆರೆಗೆ ಅರ್ಧ ನೀರು ಬಂದಿದೆ: ಎಂದರೆ ಮೇಲ್ಭಾಗದ ಹಳ್ಳಿಗಳಿಗೂ ಮಳೆಯಾಗಿದೆ. +ನಂಜಮ್ಮ ಹಿತ್ತಿಲಿನ ಹತ್ತಿರಕ್ಕೆ ಹೋಗುತ್ತಿದ್ದಳು. ದಾರಿಯಲ್ಲಿ ಮಾದೇವಯ್ಯನವರು ಬಂದರು. ಈ ಊರನ್ನೇ ಬಿಟ್ಟು ಹೊರಟುಹೋದ ಅಯ್ಯನವರು ಇನ್ನು ಮತ್ತೆ ಬರಲಾರರೆಂದು ಅವಳೂ ಭಾವಿಸಿದ್ದಳು. +‘ಅಯ್ನೋರೇ, ನಮ್ಮುನ್ನೆಲ್ಲ ಬಿಟ್ ಇಷ್ಟ್ ದಿನ ಹೊರಟುಹೋಗಿದ್ರಲ್ಲಾ?’ +‘ಕಾಶಿಗೆ ಹೋಗಿದ್ದೆ ಕಣವ್ವಾ. ಈಟು ದಿನ ಅಲ್ಲೇ ಇದ್ದೆ. ಏನೋ ಮತ್ತೆ ಇಲ್ಲಿಗೇ ಬರಾಣ ಅನ್ನುಸ್ತು. ಬಂದೆ.’ +ಅಯ್ಯನವರನ್ನು ಮನೆಗೆ ಕರೆದುಕೊಂಡು ಹೋದಳು. ಚೆನ್ನಿಗರಾಯರು ಎದ್ದು ಹೊರಗೆ ಹೋಗಿದ್ದರು. ನಂಜಮ್ಮ ಕೇಳಿದಳು: ‘ಯಾವಾಗ ಬಂದ್ರಿ?’ +‘ರಾತ್ರಿ ಹೊತ್ತಾಗಿತ್ತು. ನಾನೇ ಬಂದು ನಿಮ್ಮುನ್ನ ಎಬ್ಬಿರಿಸಾನ ಅಂತಿದ್ದೆ. ಓಟ್ರಲ್ಲಿ ಮಳೆ ಬಂತು.’ +ಅವರು ಈ ಮಾತು ಹೇಳುವಷ್ಟರಲ್ಲಿ ಯಾತಕ್ಕೋ ಸರ್ವಕ್ಕ ಅಲ್ಲಿಗೆ ಬಂದಳು. ಅಯ್ಯನವರು ಊರಿಗೆ ಬಂದರಂತೆ. ಬಂದ ತಕ್ಷಣ ಮಳೆ ಬಂದಿದೆ. ಅವರು ಹೋಗಿ ಎಷ್ಟು ದಿನವಾಯಿತು? ಅವಳ ಮನಸ್ಸಿನಲ್ಲಿ, ತಕ್ಷಣ ಹೊಳೆದುಬಿಟ್ಟಿತು: ನಮ್ಮ ಬಣಜಿಗ ಜಾತಿಯೋರು ಅವ್ರಿಗೆ ಕಂತೆಬಿಕ್ಷೆ ಹಾಕಾಕುಲ್ಲ ಅಂತ ಅಂದ್ರು. ಕ್ವಾಪಮಾಡ್ಕಂಡು ಅಯ್ನೋರು ಹೊಂಟೋದ್ರು. ಆವಾಗ್ಲಿಂದ ಮಳೆ ಇಲ್ಲ. ನ್ಯನ್ನೆ ರಾತ್ರಿ ಇವ್ರು ಬಂದ್ರು. ಮಳೆ ಬಂತು. ಸಾದು ಶರಣರು ಅಂದ್ರೆ ಏನಂತ ತಿಳ್ಕಂಡವ್ರೆ ನಮ್ಮ ಜನ? ಸರ್ವಕ್ಕ ಹತ್ತಿರ ಬಂದು ಅಯ್ಯನವರ ಪಾದಕ್ಕೆ ಅಡ್ಡಬಿದ್ದಳು. +‘ಅಯ್ನೋರೇ, ನಮ್ಮೂರ ಬಿಟ್ಟು ಬೇಜಾರು ಮಾಡ್ಕಂಡು ಯಾಕೆ ಹೋದ್ರಿ?’-ನಂಜಮ್ಮ ಕೇಳಿದಳು. +‘ಏನೋ ಎಲ್ಲಾರ ಹ್ವಾಗ್ಬೇಕು ಅಂತ ಮನ್ಸಾತು ಕಣವ್ವ. ನನ್ನಂತೋರೇ ಒಬ್ರು ಜೋಡಿ ಸಿಕ್ಕಿದ್ರು. ವಿಶ್ವನಾಥನ ಪಾದ, ಕಾಶಿಗೆ ಹ್ವಾದೆ. ಜಂಗಮವಾಡಿ ಮಠ ಅಂತ ಐತೆ. ನಮ್ಮ ಕಡೆ ಜಂಗಮರು ಯಾರು ಹ್ವಾದ್ರೂ ಏನೂ ಯೋಚ್ನೆ ಇಲ್ದೆ ಇರ್‍ಭೌದು. ಇಲ್ಲಿ ಮಾಡಾ ಭಜನೆ ಅಲ್ಲೇ ಮಾಡ್ಕಂತಿದ್ದೆ. ಏಟಾದ್ರೂ ಅದು ನಮ್ಮ ದೇಸವಲ್ಲ, ನಮ್ಮ ಜನವಲ್ಲ. ಮಠದೊರೇನೋ ನಮ್ಮೋರು. ಇಲ್ಲಿಗೆ ಬರಾನ ಅನ್ನುಸ್ತು. ಬಂದ್ಬುಟ್ಟೆ.’ +‘ಅಯ್ನೋರೇ, ನಿಮ್ಮ ರಾಗಿ, ಅವರೇಕಾಳೆಲ್ಲ ಕಳ್ತನವಾಗೈತಂತೆ ನೋಡ್ಕಂಡ್ರಾ?’-ಸರ್ವಕ್ಕ ಕೇಳಿದಳು. +‘ರಾತ್ರಿನಾಗ ಕಡ್ಡಿ ಗೀರಿ ನೋಡ್ದೆ. ಇರ್ಲಿಲ್ಲ. ಸುತ್ತಮುತ್ತ ಬರ ಬಂದೈತಿ. ಹ್ವಟ್ಟೆಗಿಲ್ದೋರು ಯಾರೋ ತಿಂದವ್ರೆ. ಯಾರು ತಿಂದ್ರೂ ಮಣ್ಣಾಗಾದೇ ಅಲ್ವ?’ +ನಂಜಮ್ಮನ ಹತ್ತಿರ ಒಂದು ಸೇರು ಹಸಿಟ್ಟು ಸಾಲ ಕೇಳಲು ಬಂದಿದ್ದ ಸರ್ವಕ್ಕ ಅದನ್ನು ಇಸಿದುಕೊಂಡು ಹೊರಟುಹೋದಳು. ಅವರ ಮನೆಗೆ ಯಾರೋ ನೆಂಟರು ಬಂದಿದ್ದಾರೆ. ಸರ್ವಕ್ಕ ಹೋದಮೇಲೆ ಅಯ್ಯನವರು ಹೇಳಿದರು: ‘ನಿಮ್ಮ ಅಪ್ಪಾಜೀನ ನಾನು ನೋಡಿದೆ.’ +‘ಎಲ್ಲಿ?’-ನಂಜಮ್ಮ ಉತ್ಸುಕಳಾಗಿ ಕೇಳಿದಳು. ಅವಳ ತಂದೆ ಕಂಠೀಜೋಯಿಸರು ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿ ಒಟ್ಟು ಹನ್ನೆರಡು ವರ್ಷವೇ ಆಗಿತ್ತು. ಹನ್ನೆರಡು ವರ್ಷ ತುಂಬಿದರೆ ಮುಖ ತೊರೆಯುತ್ತೆ. ಜೀವಂತ ಬದುಕಿದ್ದಾರೆಯೋ ಸತ್ತಿದ್ದಾರೆಯೋ ಎಂದು ಅವಳು ಹಲವು ಸಲ ತನ್ನಲ್ಲಿಯೇ ಯೋಚಿಸಿದ್ದಳು. +“ಕಾಶೀಲೇ ಅವ್ರೆ ಕಣವ್ವ. ಈಗ ಒಂದು ತಿಂಗಳಿನಲ್ಲಿ ಒಂದು ದಿನ ಬೆಳಿಗ್ಗೆ ನದೀ ದಡಕ್ಕೆ ಹ್ವಾಗಿದ್ದೆ. ಹನುಮಾನ್ ಘಾಟ್ ಅಂತ ಆ ಘಾಟಿನ ಹೆಸರು, ನಮ್ಮ ಕಡೆ ಬ್ರಾಂಬ್ರು ಯಾರ್ಯಾರೋ ಇದ್ರು. ನಮ್ಮ ಕಡೇಯೋರೇನು. ಹಿಂದೂಸ್ಥಾನದ ಎಲ್ಲಾ ಕಡೆ ಮಂದೀನೂ ಕಾಶಿಗೆ ದಿನಾ ಬತ್ತಾನೇ ಇರ್ತಾರೆ. ಅವ್ರು ತಿಥಿಕರ್ಮ ಮಾಡ್ತಾ ಇದ್ರು. ನಿಮ್ಮ ಅಪ್ಪಾಜಿ ಗಟ್ಟಿಯಾಗಿ ಮಂತ್ರ ಹೇಳ್ತಿತ್ತು. ನಾನೇ ಮಾತಾಡುಸ್ದೆ. ಆಮೇಲೆ ಎಲ್ಡು ದಿನವಾದ್‌ಮ್ಯಾಲೆ ಅವರೇ ನಾನು ಠಿಕಾಣಿ ಹಾಕಿದ್ದ ಜಂಗಮವಾಡಿ ಮಠಕ್ಕೆ ಬಂದ್ರು. ಅವ್ರೇ ಹ್ಯದ್ರಿಹ್ಯದರ್ಕಂಡು-ನನ್ನ ಅರೆಸ್ಟ್ ಮಾಡಬೇಕು ಅಂತ ಪೋಲೀಸ್ನೋರ ಹುಕುಂ ಇನ್ನೂ ಐತಾ?’ ಅಂತ ಕೇಳಿದ್ರು. ಯಾವ್ದು, ಅಂದೆ. ‘ನಮ್ಮೂರ ಶ್ಯಾನುಭೋಗ ಶ್ಯಾಮಣ್ಣ ಸತ್ತದ್ದು’-ಅಂದ್ರು. ನಂಗೆ ಅದೆಲ್ಲ ತಪ್ಸೀಲು ಗೊತ್ತಿರ್ನಿಲ್ಲ. ನಂಗ್ ಗೊತ್ತಿದ್ದುನ್ ಹೇಳ್ದೆ: ‘ಅಲ್ಲಾ ಸ್ವಾಮಿ, ಕೋಲ್ಟಿನಾಗೆ ನೀವೇ ವ್ಯಾಜ್ಯ ಗೆದ್ರಂತೆ. ಗೆದ್ದಮ್ಯಾಲೆ ಯಾಕೆ ಊರು ಬಿಟ್ಟು ಹ್ವಂಟುಬುಟ್ರಿ?’ ಅವರೇನೂ ಜವಾಬು ಹೇಳ್ಲಿಲ್ಲ. ‘ನಾನು ಊರು ಬಿಟ್ಟು ಹನ್ನೆಲ್ಡು ವರ್ಷವಾಗ್ತಾ ಬಂತು. ಊರ್‍ಕಡಿಕ್ ಹೋಯ್ತೀನಿ’ ಅಂದ್ರು. ಆಮ್ಯಾಲೆ ಮತ್ತೆ ನಂಗ್ ಸಿಕ್ನೇ ಇಲ್ಲ. ಅವ್ರೆಲ್ಲಿದಾರೆ ಅಂತ್ಲೂ ಏಳ್ಲಿಲ್ಲ.” +ನಂಜಮ್ಮನಿಗೆ ಈಗ ಎಲ್ಲವೂ ಅರ್ಥವಾಯಿತು. ಕೋರ್ಟಿನಲ್ಲಿ ಕೇಸು ಮುಗಿಸಿಕೊಂಡು ಊರಿಗೆ ಬಂದ ಶ್ಯಾಮಣ್ಣ-‘ಆ ನನ್ಮಗ ಸಿಕ್ಲಿ, ಜಡ್ಜಿಗಳೇ ನೇಣುಗಟ್ಟುಸ್ತಾರೆ’ ಎಂದಿದ್ದ. ಅದಕ್ಕೇ ಹೆದರಿ ಅವರು ಹೀಗೆ ದೇಶಾಂತರ ಹೋಗಿರಬಹುದು. ಇಂಥ ಕೇಸುಗಳ ಜೀವ ಹನ್ನೆರಡು ವರ್ಷ ಇರುತ್ತಂತೆ. ಆಮೇಲೆ ಸರ್ಕಾರದವರು ಆ ಕಾಗದ ಪತ್ರಗಳನ್ನು ಸುಟ್ಟುಹಾಕಿಬಿಡುತ್ತಾರಂತೆ. ಹೀಗೆ ಮನೆ ಮಠ ಬಿಟ್ಟು ದೇಶಾಂತರ ತಿರುಗುವುದೇ ತನ್ನ ತಂದೆಯ ಹಣೆಯಲ್ಲಿ ಬರೆದಿದೆಯೇ ಎಂದು ಯೋಚಿಸುತ್ತಾ ಅವಳು ಅಂತರ್ಮುಖಿಯಾದಳು. ಅಷ್ಟರಲ್ಲಿ ಚೆನ್ನಿಗರಾಯರು ಮನೆಗೆ ಬಂದರು. ಅಯ್ಯನವರನ್ನು ಕಂಡ ಇವರಿಗೂ ಎಷ್ಟೋ ಸಂತೋಷ. ಅವರು ಹಾಡುತ್ತಿದ್ದ ತತ್ವ, ಭಜನೆ, ಲಾವಣಿಗಳನ್ನು ಕೇಳಿಕೊಂಡು ಇವರಿಗೆ ಸಲೀಸಾಗಿ ಹೊತ್ತು ಹೋಗುತ್ತಿತ್ತು. ಅಯ್ಯನವರು ಇದುವರೆಗೂ ಎಲ್ಲಿದ್ದರು ಇತ್ಯಾದಿ ಕುಶಲೋಪರಿಗಳನ್ನು ವಿಚಾರಿಸಿದ ಚೆನ್ನಿಗರಾಯರಿಗೆ, ಕಾಶಿ ಎಂಬುದನ್ನು ಕೇಳಿದ ತಕ್ಷಣ ಒಂದು ಪ್ರಶ್ನೆ ಕೇಳಬೇಕೆನ್ನಿಸಿತು. ಕಾಶಿಯ ಬಗೆಗೆ ಅವರು ಅನೇಕರಿಂದ ಏನೇನೋ ಕೇಳಿದ್ದರು. ಆದರೆ ಮಾದೇವಯ್ಯನವರಂತೆ ಅಲ್ಲಿಯೇ ವರ್ಷ ವರ್ಷವರೆ ಇದ್ದು ತಿಳಿದವರು ಯಾರನ್ನೂ ಇದುವರೆಗೆ ಕಂಡಿರಲಿಲ್ಲ. +‘ಅಯ್ನೋರೇ, ಅಲ್ಲಿ ರಾಜ ಮಹಾರಾಜರು ದಿನಾ ಸಮಾರಾಧನೆ ಮಾಡುಸ್ತಾರಂತೆ. ಊಟದಲ್ಲಿ ಒಂದೊಂದು ಲಾಡು ಉಂಡೆ ತಿಂದ್ರೆ ಒಂದೊಂದು ರೂಪಾಯಿ ದಕ್ಷಿಣೆ ಕೊಡ್ತಾರಂತೆ ನಿಜವೆ?’-ಅವರು ಕೇಳಿದರು. +‘ಅಲ್ಲಿ ರಾಜ ಮಹಾರಾಜರ ಧರ್ಮಶಾಲೆ ಏನೋ ಬಹುತ್ ಅವೆ. ಹೋದೋರಿಗೆ ಒಂದೊಂದು ಧರ್ಮಶಾಲೇಲಿ ಮೂರು ಮೂರು ದಿನ ಮುಫತ್ ಊಟ ನೀಡ್ತಾರೆ. ಹಬ್ಬದ ದಿನ ಊಟ ಹಾಕುಸ್ತಾರೆ. ಒಂದೊಂದು ದಫ ಒಂದು ಲಾಡು ತಿಂದ್ರೆ ಒಂದೊಂದು ರೂಪಾಯಿ ಕೊಡೋದೂ ಉಂಟು.’ +‘ಹಾಗಾದ್ರೆ ಅಲ್ಲಿಗೇ ಹೋಗಿ ಇದ್ದು ಬಿಡಬೇಕುಕಣ್ರೀ.’ +‘ಶ್ಯಾನುಭೋಗ್ರೇ, ಕಾಶೀಲೇನು ಭಿಕ್ಷುಕರಿಲ್ಲ ಅಂತೀರಾ? ನಿಮ್ಹಂಗೆ ಅಲ್ಲಿಗೆ ಹೋಗಿ ಇರಬೇಕು ಅನ್ನೋರು ಏನು ಕಮ್ಮಿ ಅವ್ರೆ ಅಂತೀರಾ? ಹಿಂಗೆ ಯಲ್ರಿಗೂ ದಿನಾ ಮುಫತ್ ಭೋಜನ ಕೊಡ್ಸುಕ್ಕೆ ಯಾವ ರಾಜನ ಕೈಲಿ ಆಗ್ತೈತಿ?’ +‘ಥೂ, ಆ ರಾಜನ ಅವ್ವನ ಯೋಗ್ತಿಗೆ ನನ್ ಯಕ್ಡ ಹ್ವಡೆಯ. ಆ ಸಂಪತ್ತಿಗೆ ಅವನೆಂಥಾ ಮಹಾರಾಜ?’ +ಅಯ್ಯನವರು ಅದಕ್ಕೆ ಯಾವ ಉತ್ತರ, ಟಿಪ್ಪಣಿಗಳನ್ನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಕೂತಿದ್ದು ಅವರು ಹೊರಟಾಗ ನಂಜಮ್ಮ, ‘ನಿಮ್ಮ ಗುಡೀಲಿದ್ದ ರಾಗಿ, ಕಾಳು, ಎಲ್ಲಾ ಕಳವಾಗಿದೆ. ಇವತ್ತಿಗೆ ಒಂದಿಷ್ಟು ಹಸಿಟ್ಟು, ಬ್ಯಾಳೆ, ಖಾರದ ಪುಡಿ ಕೊಡ್ತೀನಿ. ಇಲ್ದೆ ಇದ್ರೆ ನಮ್ಮನ್ಲೇ ಬಿನ್ನ ತೀರುಸ್ತೀರಾ?’ +ಒಂದು ನಿಮಿಷ ಯೋಚಿಸಿದ ಅವರು-‘ಈ ಊರಲ್ಲಿರಾಣ ಅಂತ ಬಂದೆ. ಸುತ್ತ ಹಳ್ಳೀಲಿ ಜೋಳಿಗೆ ಹಿಡಿದು ಭಿಕ್ಷೆ ಮಾಡ್ತೀನಿ. ಜಾತಿಸ್ಥರ ಮುಲಾಜೇನು ಇಲ್ಲ. ಇಲ್ಲೇ ಬಿನ್ನಕ್ಕೆ ಬತ್ತೀನಿ’ ಎಂದು ಹೇಳಿ ಹೊರಟುಹೋದರು. +ಅವರು ಗುಡಿಗೆ ಹೋಗಿ ಇನ್ನೂ ಅರ್ಧ ಗಂಟೆ ಕಳೆದಿರಲಿಲ್ಲ. ಒಬ್ಬೊಬ್ಬರಾಗಿ ಬಣಜಿಗರ ಗಂಡಸರೆಲ್ಲ ಬಂದು ಸೇರಿದರು. ರೇವಣ್ಣಶೆಟ್ಟಿ, ಶೆಟ್ಟಪ್ಪ, ಮುರಳಶೆಟ್ಟಪ್ಪ, ಲಿಂಗದೇವರು, ಎಲ್ಲರೂ ಒಟ್ಟಿಗೆ ಬಂದು ಅಯ್ಯನವರಿಗೆ ಉದ್ದಕ್ಕೆ ಅಡ್ಡಬಿದ್ದರು. ರೇವಣ್ಣಶೆಟ್ಟಿ ಹೇಳಿದ: ‘ಅಯ್ನೋರೇ, ನೀವು ಮಹಾಂತರು. ನಮ್ಮೂರ ಮ್ಯಾಲೆ ಸಿಟ್ಕಂಡು ಹೊಂಟೋದ್ರಿ. ಊರಲ್ಲಿ ಮಳೆ ಬರ್ನಿಲ್ಲ, ಬೆಳೆ ಬೆಳೀನಿಲ್ಲ. ನೆನ್ನೆ ರಾತ್ರಿ ಬಂದ್ರಿ. ಮಳೆ ಬಂತು. ನಾವು ನಿಮ್ಮುನ್ನ ಅಂದು ಪಾಪ ಮಾಡಿಬಿಟ್ವು. ನೀವು ಆದ ಮರ್ತು, ನಮ್ಮಗಳ ಮನೆಗೆ ದಿನಾ ಕಂತೆಭಿಕ್ಷಕ್ಕೆ ಬರ್‌ಬೇಕು.’ +ಅಯ್ಯನವರು ಈ ವಿಚಾರವನ್ನೇ ಮರೆತುಬಿಟ್ಟಿದ್ದರು. ಈಗ ಇವರು ಹೀಗೆ ಹೇಳುತ್ತಿದ್ದಾರೆ. ತಾವು ಊರು ಬಿಟ್ಟುದರಿಂದಲೇ ಇಲ್ಲಿ ಮಳೆ ಹೋಯಿತೇ? ಬರೀ ರಾಮಸಂದ್ರಕ್ಕೆ ಮಾತ್ರ ಹೋಗಿಲ್ಲ, ಸೀಮೆಗೇ ಹೋಗಿದೆ. ತಮಿಳು ತೆಲುಗು ದೇಶಗಳಲ್ಲೂ ಇಲ್ಲದುದನ್ನು ಅವರು ರೈಲಿನಲ್ಲಿ ಬರುವಾಗ ನೋಡಿದ್ದರು. ನೆನ್ನೆ ತಾವು ಈ ಊರು ತಲುಪಿದ್ದಕ್ಕೂ ಇಲ್ಲಿ ಮಳೆ ಆದದ್ದಕ್ಕೂ ಅದೇನು ಶಿವನ ಸಂಬಂಧ?-ಈ ಊರ ಮೇಲಣ ಹಳ್ಳಿಗಳಲ್ಲೂ ಮಳೆಯಾಗೈತೆ. ಅವರೇ ಅಂದ್ರು: ‘ನಾವೇನೂ ಮಹಂತರಲ್ಲ. ಮಳೆ ಬೆಳೆ ಹೋಗಾದು ಬರಾದು ಶಿವನ ಇಚ್ಚೆ. ಜನಗಳ ಪಾಪ ಪುಣ್ಯಕ್ಕೆ ತಕ್ಕ ಹಂಗೆ ಶಿವ ಕೊಡ್ತಾನೆ. ನಮ್ಮ ಮುದ್ದೆ ನಾವು ತೊಳಸ್ಕಂತೀವಿ.’ +ಆದರೆ ಅವರು ಕೇಳಲಿಲ್ಲ. ದಿನವೂ ಮಧ್ಯಾಹ್ನ ತಮ್ಮ ಮನೆಗಳಲ್ಲಿ ಕಂತೆಭಿಕ್ಷೆ ಇಕ್ಕಿಸಿಕೊಂಡು ತಮ್ಮನ್ನು ಧನ್ಯರನ್ನಾಗಿ ಮಾಡಬೇಕೆಂದು ಮತ್ತೊಮ್ಮೆ ಕೈಮುಗಿದರು. ಅಯ್ಯನವರು ಬೇಡವೆನ್ನಲಿಲ್ಲ. ಈಗ ಊರಿನಲ್ಲಿ ಎಲ್ಲರ ಮನೆಯಲ್ಲೂ ಕವಳಕ್ಕೆ ಕಷ್ಟವೆಂದು ಅವರು ಕೇಳಿದ್ದರು. ಆದರೂ ಅವರು ಮಧ್ಯಾಹ್ನ ಕಂತೆಭಿಕ್ಷೆ ಮಾಡಿ ಗುಡಿಗೆ ತಂದು ಕೂತು ಉಂಡರು. ನಂಜಮ್ಮನ ಮನೆಗೆ ರಾತ್ರಿ ಬರುವುದಾಗಿ ಹೇಳಿ ಬಂದರು. ಅವಳ ಮಗ ವಿಶ್ವ ಆಗಲೇ ಅಯ್ಯನವರನ್ನು ಅರ್ಧ ಮರೆತುಬಿಟ್ಟಿದ್ದ. ಅವನು ಸ್ಕೂಲಿಗೆ ಬೇರೆ ಹೋಗುತ್ತಾನೆ. ಅವರು ಉಣ್ಣುವಾಗ ಜೊತೆಯಲ್ಲಿ ಜೊತೆಯಲ್ಲಿ ಕೂರಲು ಆಗ ಸ್ಕೂಲಿನ ಸಮಯ. +ಮಾದೇವಯ್ಯನವರು ಊರು ಬಿಟ್ಟು ಹೋದುದಕ್ಕೆ ಊರಿನಲ್ಲಿ ಮಳೆ ಬೆಳೆ ಆಗಲಿಲ್ಲ. ನೆನ್ನೆ ರಾತ್ರಿ ಅವರು ಹಿಂತಿರುಗಿ ಬಂದದ್ದರಿಂದಲೇ ಮಳೆ ಬಂತು ಎಂಬ ಸುದ್ದಿ ಊರಿನಲ್ಲೆಲ್ಲ ಹರಡಿತು. ಕುರುಬ ಕುಂಬಾರ, ಬಡಗಿ, ಚಮ್ಮಾರರಾದಿಯಾಗಿಯೂ ಗುಡಿಗೆ ಬಂದು ಅವರಿಗೆ ಕೈಮುಗಿದು ಹೋದರು. ಪಟೇಲ ಶಿವೇಗೌಡನಂತಹ ಕೆಲವರು ಮಾತ್ರ ಇದನ್ನು ನಂಬಲಿಲ್ಲ. ಆ ದಿನ ರಾತ್ರಿ ಅಯ್ಯನವರು ಒಬ್ಬರೇ ಗುಡಿಯಲ್ಲಿ ಮಲಗಿದ್ದರು. ನಡುರಾತ್ರಿಯ ವೇಳೆಗೆ ಯಾರೋ ಒಬ್ಬ ಬಂದು, ‘ಅಯ್ಯಾರೇ, ಅಯ್ಯಾರೇ’ ಎಂದು ಕೂಗಿ ಎಬ್ಬಿಸಿದ. ಅಯ್ಯನವರು ಎದ್ದು ಬೆಂಕಿಕಡ್ಡಿ ಗೀರಿ ನೋಡಿದರು. ಬಂದಿದ್ದವನು ಪಟೇಲ ಶಿವೇಗೌಡರ ಮನೆಯ ಜೀತದ ಆಳು ಗೊರವ. ಇವರ ಕಾಲು ಮುಟ್ಟಿ ಹೇಳಿದ: ‘ಯಪ್ಪ, ನಂಗೆ ಸಾಪ ಆಕ್‌ಬ್ಯಾಡ. ನಂದೇನೂ ತೆಪ್ಪಿಲ್ಲ.’ +‘ಯಾಕೆ ಏನಾಯ್ತು? ಏಳು.’ +‘ನಿನ್ನ ರಾಗಿ, ಅವರೇಕಾಳು, ಯಲ್ಲಾನೂ ನಮ್ಮ ಗೌಡ್ರು ರಾತ್ರಿನಾಗ, ಬಿಟ್ಟ ಊರಿಗೆ ಬಂದು ಒರುಸ್ಕಂಡು ಕುಂಡೊಯ್ದ್ರು. ಅವ್ರೇ ಬಂದು ಬೀಗ ಮುರುದ್ರು. ನಾನು ಒತ್ಕಂಡೋಗಿ ಅವ್ರ ಶೆಡ್ಡಿಗೆ ಆಕ್ದೆ. ನನ್ ಮನ್ಗೇನೂ ತಗಂಡಿಲ್ಲ.’ +‘ಆಗ್ಲಿ ಬುಡು, ನಿಂದೇನೂ ತೆಪ್ಪಿಲ್ಲ.’ +‘ನಾನ್ಹಿಂಗಂದೆ ಅಂತ ಯಾರ್‌ಕುಟ್ಟೂ ಅನ್‌ಬ್ಯಾಡ.’ +‘ಹೇಳಾಕುಲ್ಲ’-ಎಂದು ಅವರು ಮಾತು ಕೊಟ್ಟ ಮೇಲೆ ಅವನು ಹೊರಟು ಹೋದ. +ಪಟೇಲ ಶಿವೇಗೌಡರು ಎಂಥವರೆಂಬುದು ಅಯ್ಯನವರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಬಿಟ್ಟ ಊರಿನಲ್ಲಿ ದೇವಸ್ಥಾನದ ಕೋಣೆಯ ಬೀಗ ಮುರಿದು ರಾಗಿಯ ಕಳವು ಮಾಡುವುದೆಂದರೆ ಯಾರೋ ಇಂಥವರೊಬ್ಬರ ಕುಮ್ಮಕ್ಕಿಲ್ಲದೆ ಬರೀ ಹೊಟ್ಟೆಗಿಲ್ಲದ ಕಳ್ಳರು ಮಾಡಲಾರರೆಂದು ಅವರೂ ಊಹಿಸಿದ್ದರು. +ಮರುದಿನ ಬೆಳಿಗ್ಗೆ ಸುಮಾರು ಹತ್ತು ಗಂಟೆಯಲ್ಲಿ ಒಂದು ವಿಶೇಷ ನಡೆಯಿತು. ನೂರು ರೊಂಯಿಪಟಗಳು ಒಂದೇ ಸಮನೆ ಮೊರೆದಂತೆ ಅದೇನೋ ಸದ್ದಾಯಿತು. ಹೊಲ ಗದ್ದೆಗಳ ಅಟ್ಟಲು ಮಣ್ಣಿನ ಮೇಲೆ ನಡೆಯುತ್ತಿದ್ದ ಜನಗಳೆಲ್ಲ ಕತ್ತೆತ್ತಿ ನೋಡುತ್ತಾರೆ: ಆಕಾಶದಲ್ಲಿ ಬೆಳ್ಳನೆಯ ಭಾರೀ ಗರುಡ ಪಕ್ಷಿಯಂಥದೊಂದು ಹೋಗುತ್ತಿದೆ. ರೆಕ್ಕೆ ಆಡಿಸುತ್ತಿಲ್ಲ. ಅದಕ್ಕೆ ಕೊಕ್ಕಿಲ್ಲ. ಆದರೆ ಬಾಲದಂತೆ ಏನೋ ಇದೆ. ರೆಕ್ಕೆಯಂತೆ ಎರಡು ಕಡೆಯೂ ಹರಡಿದೆ. ಊರ ಮೇಲೆ ಬಂದಾಗ ಅದರಿಂದ ಅದೇನೋ ಕೆಳಗೆ ಬಿತ್ತು. ಬಿರುಗಾಳಿಗೆ ತೂರುವ ತರಗು ಎಲೆಗಳಂತೆ ಊರ ಮೇಲೆಲ್ಲ ಚದುರಿ ಬಿದ್ದ ಕಾಗದದ ಚೀಟಿಗಳಾಗಿದ್ದವು. ಮೇಲೆ ಹೋದದ್ದು ವಿಮಾನವೆಂದು, ಈ ಹಿಂದೆ ಅಂಥದ್ದನ್ನು ನೋಡಿರದಿದ್ದರೂ ಎಷ್ಟೋ ಜನಕ್ಕೆ ಗೊತ್ತಾಯಿತು. ನಂಜಮ್ಮ ಕೆಳಗೆ ಬಿದ್ದ ಒಂದು ಚೀಟಿಯನ್ನು ತೆಗೆದುಕೊಂಡು ಓದಿದಳು. +ಮೈಸೂರು ರಾಜ್ಯವನ್ನಾಳುವ ಮಹಾಸ್ವಾಮಿ ಶ್ರೀಮನ್ ಮಹಾರಾಜರ ಘನ ಸರ್ಕಾರವು ಅದನ್ನು ಅಚ್ಚುಹಾಕಿಸಿತ್ತು. ಈಗ ಯುದ್ಧ ನಡೆಯುತ್ತಿದೆಯಂತೆ. ಯೂರೋಪು ದೇಶದಲ್ಲಿ ಜರ್ಮನಿಯವರು ಮುನ್ನುಗ್ಗುತ್ತಿದ್ದಾರಂತೆ. ಜಪಾನಿನವರು ಇಂಡಿಯಾ ದೇಶವನ್ನು ಕಬಳಿಸಲು ಬರುತ್ತಿದ್ದಾರೆ. ನಮ್ಮ ಮೈಸೂರು ದೇಶದ ಮೇಲೂ ಬಾಂಬು ಬಂದು ಬೀಳಬಹುದು. ವಿಮಾನಗಳು ಬಂದಾಗ ಜನಗಳು ನಿಂತು ನೋಡಬಾರದು. ನಿಂತಲ್ಲಿಯೇ ಮಕಾಡೆ ಮಲಗಿಬಿಡಬೇಕು. ಶತ್ರುಗಳನ್ನು ಹೊಡೆದೋಡಿಸಲು ಯುದ್ಧನಿಧಿಗೆ ಜನಗಳೆಲ್ಲ ಸಹಾಯ ಮಾಡಬೇಕು-ಎಂದು ಬರೆದು ಕೊನೆಯಲ್ಲಿ, ‘ವಿಜಯ’ ಎಂದು ಹಾಕಿತ್ತು. +ಇದಾದ ಒಂದು ವಾರದಲ್ಲಿ ಶೇಕ್‌ದಾರರು ರಾಮಸಂದ್ರಕ್ಕೆ ಬಂದರು. ಯುದ್ಧನಿಧಿಗೆ ಹಣ ಕೊಡಿಸಬೇಕೆಂದು ಸರ್ಕಾಸದ ಆಜ್ಞೆಯಾಗಿದೆ. ಮಳೆ ಬೆಳೆ ಇಲ್ಲವೆಂದು ಅದೇ ಸರ್ಕಾರ ಹೋದ ವರ್ಷ ಕಂದಾಯ ವಜಾ ಮಾಡಿತ್ತು. ಆದರೆ ಈಗ ಇಂಗ್ಲೆಂಡ್ ಚಕ್ರವರ್ತಿಗಳು ಹಣವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಜನಗಳು ಆದಷ್ಟು ಕೊಡಲೇಬೇಕು. ಶೇಕ್‌ದಾರರೇ ಬಂದ ಮೇಲೆ ಮಾಡುವುದೇನು? ಶಿವೇಗೌಡ ಕಾಶಿಂಬಡ್ಡಿ ಮೊದಲಾದವರಿಂದ, ಶೇಕ್‌ದಾರರು ಹೇಳಿದಷ್ಟು ವಸೂಲಿಯಾಯಿತು. ಊರ ಹೊರಗೆ ತನ್ನದೇ ಕಿರಾಣಿ ಅಂಗಡಿ ನಡೆಸುತ್ತಿದ್ದ ನರಸಿಯೂ ಐದು ರೂಪಾಯಿ ಕೊಟ್ಟಳು. ಒಟ್ಟಿನಲ್ಲಿ ರಾಮಸಂದ್ರದಲ್ಲಿ ನೂರು ರೂಪಾಯಿ ವಸೂಲಾಯಿತು. ‘ನಿಮ್ಮ ಗ್ರಾಮದ ಮರ್ಯಾದೆ ಉಳೀತು’-ಎಂದು ಶೇಕ್‌ದಾರರು ಹೇಳಿ ಹೋದರು. +ಮರುದಿನ ರಾಮಣ್ಣ ಸ್ಕೂಲಿನಿಂದ ಬರುವಾಗ ಅವನ ಶರಟಿನ ವ್ ಎಂಬ ಆಕಾರದಲ್ಲಿ ಅಚ್ಚುಮಾಡಿರುವ ಗುರುತಿನ ಒಂದು ಬಣ್ಣದ ಕಾಗದವನ್ನು ಗುಂಡುಸೂಜಿಯಿಂದ ಚುಚ್ಚಿಕೊಂಡಿದ್ದ. ಅವನು ಮನೆಗೆ ಬಂದು ಹೇಳಿದ: “ಅಮ್ಮ, ನಮ್ಮ ಸ್ಕೂಲಿನಲ್ಲಿ ಇದನ್ನ ಎಲ್ಲ ಹುಡುಗರಿಗೂ ಹಾಕಿ ಮೆರೆವಣಿಗೆ ಮಾಡಿಸಿದರು. ಇದು ನೋಡು, ನಾನು ನಿಂಗೆ ಹೇಳ್ಕೊಟ್ಟಿರ್‍ಲಿಲ್ವಾ? ಇಂಗ್ಲಿಷಿನ ‘ವಿ’ ಅನ್ನೂ ಅಕ್ಷರ. ‘ವಿ’ಅಂದ್ರೆ ‘ವಿಕ್ಟರಿ’ಅಂತ. ಯುದ್ಧದಲ್ಲಿ ನಮಗೆಲ್ಲ ವಿಜಯವಾಗಲಿ ಅಂತ. ಅದಕ್ಕೆ ಎಲ್ಲ ಹುಡುಗರೂ ಎರಡೆರಡಾಣೆ ತರಬೇಕು ಅಂತ ಹೆಡ್ಮೇಷ್ಟರು ಹೇಳಿದಾರೆ” ಎಂದು ಹುಡುಗ ವಿವರಿಸುತ್ತಿದ್ದ. ಎರಡಾಣೆಯನ್ನು ಎಲ್ಲಿ ಹೊಂಚುವುದೆಂದು ಅಮ್ಮ ಯೋಚಿಸತೊಡಗಿದಳು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್ +ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. “ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” “ನಿಮ್ಮನ್ನ […] +ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ […] +ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_473.txt b/Kannada Sahitya/article_473.txt new file mode 100644 index 0000000000000000000000000000000000000000..4f3d4dcb14550939f9d72937fcaeb17bca9db616 --- /dev/null +++ b/Kannada Sahitya/article_473.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧ +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_474.txt b/Kannada Sahitya/article_474.txt new file mode 100644 index 0000000000000000000000000000000000000000..b2600c2ef72f79d4c5d4dedea120508059de2eca --- /dev/null +++ b/Kannada Sahitya/article_474.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? +ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! +ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ +ನಿನ್ನಿಂದ ಇಷ್ಟೊಂದು ಹಠ ಹಿಡಿದು ಜುಗ್ಗತನ +ಸೂರೆ ಬಂದ ವರಗಳು ಅಲ್ಲಿಂದ +ನಿನ್ನಿಂದ ಮಾತ್ರ ಬರೀ ಅಪರಾಧ +ಇಷ್ಟೆಲ್ಲ ಅಸೂಯೆ, ಅಗಾಧ ಅಸಂಬದ್ಧ ಊಹೆ ನಿನ್ನಿಂದ, ಬರೀ ಕರಾಳ ಕಲ್ಪನೆ +ಎಷ್ಟೆಲ್ಲ ಮಧು ಮಧುರ ಉದಾರ ಕೊಡುಗೆ ಅಲ್ಲಿಂದ ? +ಕಡೆಗೂ ಎಲ್ಲ ಪಾಪಕೃತ್ಯಕ್ಕೀಗ ನಿನ್ನಲ್ಲಿ ಪಶ್ಚಾತ್ತಾಪ +ನಿನ್ನ ತುಟಿಯಲ್ಲೀಗ ಬರೀ ಆ ಪುಣ್ಯನಾಮದ ಜಪ +ಎಲ್ಲ ಪಾಪಗಳಿಂದ ನೀನೀಗ ಮುಕ್ತನಾಗು +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […] +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ ವಿರಹದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_475.txt b/Kannada Sahitya/article_475.txt new file mode 100644 index 0000000000000000000000000000000000000000..8294c52792013966d93fcc1a89d67c56052dbeb4 --- /dev/null +++ b/Kannada Sahitya/article_475.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. +ದೊಡ್ಡವರು ಚರ್ಚೆಗೆ ಕುಳಿತಾಗ ತಮ್ಮದೇ ಆದ ಲಾಜಿಕ್ ಹಿಡಿದು ಎಲ್ಲರಿಗಿಂತ ತಾನೇ ಮಹಾ ಚಾಣಾಕ್ಷ ಎಂಬಂತೆ ಈ ಕ್ಷಣವೂ ಮಾತನಾಡುವವರನ್ನು ನೀವೂ ಕಂಡಿರುತ್ತೀರಿ-ಕೇಳಿರುತ್ತೀರಿ. +ಕನ್ನಡದ ವರನಟ ಡಾ. ರಾಜ್‌ಕುಮಾರ್‍ ಸುರಕ್ಷಿತವಾಗಿ ಹಿಂತಿರುಗಲಿ ಕನ್ನಡ ಜನಮನದ ದುಗುಡ ದುಮ್ಮಾನಗಳು ದೂರವಾಗಿ, ದಟ್ಟನೆ ಕವಿದಿರುವ ಕಪ್ಪನೆಯ ಮೋಡಗಳು ಮಂಜಿನಂತೆ ಕರಗಿ ಎಲ್ಲರ ಮುಖ ಕಮಲದಲ್ಲಿ ನಗೆ ತಾಂಡವವಾಡುವಂತಾಗಲಿ ಡಾ. ರಾಜ್ ಕುಟುಂಬ ವರ್ಗದಲ್ಲಿ ಮುಂಚಿನಂತೆ ಹರ್ಷ ಉಕ್ಕಿ ಬರಲಿ ಎಂದು ಹಾರೈಸಲು ‘ಬಿಂಬ’ ಮಕ್ಕಳು ಕಲಾಂಗಣದಲ್ಲಿ ತುಂಬಿ ತುಳುಕಿದ್ದರು. ಮಕ್ಕಳನ್ನು ಕರೆತಂದ ಪೋಷಕರು ನಮ್ಮ ಹಾರೈಕೆಯೂ ಅದೇ ಎಂದು ಕುಳಿತರು. +ಅಂದಿನ ಸರಳವಾದ ಸಮಾರಂಭದ ಹೊಣೆ ಹೊತ್ತ ವನಮಾಲಾ ಪ್ರಕಾಶ್ ಕಾರ್ಯಕ್ರಮದ ರೂವಾರಿ ನೀವು ಎಂದು ಕಲಾವಿದ ಎ.ಎಂ.ಪ್ರಕಾಶ್‌ಗೆ ಆ ಜವಾಬ್ದಾರಿ ನೀಡಿದರು. +ಕಾರ್ಯಕ್ರಮ ಅಲ್ಲೇ ಆ ಕ್ಷಣದಲ್ಲೇ ರೂಪುಗೊಳ್ಳಬೇಕಾಯಿತು. “ಡಾ. ರಾಜ್‌ಕುಮಾರ್‍ ಹಾಗೂ ಕಾಡುಗಳ್ಳ ವೀರಪ್ಪನ್ ಹೆಸರು ಈಗ ಜನಜನಿತವಾಗಿದೆ. ಇದಕ್ಕೆ ಕಾರಣವೇನು? ಎಂದು ಕೇಳಿದ ಮರುಘಳಿಗೆ “ನಾ ಮುಂದೆ-ತಾ ಮುಂದೆ” ಎಲ್ಲ ಒಬ್ಬೊಬ್ಬರಾಗಿ ನಿಂತು “ವರ್ಬಾಟಂ ರಿಪೋರ್ಟ್” ಎನ್ನುತ್ತಾರಲ್ಲ ಹಾಗೆ ಚಾಚೂ ತಪ್ಪದೆ ಎಲ್ಲ ವರದಿ ಮಾಡಿದರು. +ಇವೆಲ್ಲ ನೋಡುತ್ತ ಕುಳಿತಿದ್ದವರು ನಾನು ಹಾಗೂ ಪತ್ರಕರ್ತ ಮಿತ್ರ ಬಾಬೂ ದಿನಕರ್‍. “ಮುಂದೇನು ಮಾಡುತ್ತಾರೋ ನೋಡೋಣ” ಎಂಬುದು ನಮ್ಮ ಕುತೂಹಲವಾಗಿತ್ತು. +ಪ್ರಕಾಶ್ ಹೇಳಿದರು “ನಾನೀಗ ೧೫-೧೫ ಮಂದಿಯ ಎರಡು ಗುಂಪು ಮಾಡುತ್ತೇನೆ. ಒಂದಕ್ಕೆ ಅರ್ಜುನ್ ಹಾಗೂ ಪ್ರಿಯದರ್ಶಿನಿ ಲೀಡರ್‍ಸ್ ಆಗಿರುತ್ತಾರೆ. ಎರಡನೆ ಗುಂಪಿಗೆ ಅಖಿಲಾ, ಅನ್ವಿತಾ, ಅರ್ಚನಾ ಮುಂದಾಳುಗಳಾಗಿರುತ್ತಾರೆ. ಎರಡೂ ಗುಂಪಿನವರು ಬೇರೆ ಬೇರೆಯಾಗಿ ಕುಳಿತು ಚರ್ಚೆ ಮಾಡಿ, ಡಾ. ರಾಜ್‌ರನ್ನು ವೀರಪ್ಪನ್ ಕರೆದೊಯ್ದ ಘಳಿಗೆಯಿಂದ ಈವರೆಗೆ ಏನೇನಾಯಿತು ಎಂಬುದನ್ನು ನಮ್ಮ ಮುಂದೆ ನಾಟಕ ಆಡಿ ತೋರಬೇಕು. ಇದು ಹೇಗೆ ಮುಕ್ತಾಯವಾದೀತು ಎಂಬುದು ನಿಮ್ಮ ಕಲ್ಪನೆಗೆ ಬಿಟ್ಟ ವಿಷಯ. ಸಾಧಾರಣವಾಗಿ ಒಬ್ಬ ನಾಟಕಕಾರ ಬರೆದ ನಾಟಕ ಈವರೆಗೆ ಆಡಿದ್ದೀರಿ. ಇಂದು ನೀವೆಲ್ಲ ಸೇರಿ ಈ ನಾಟಕ ಚರ್ಚಿಸಿ-ಅಭಿನಯಿಸಬೇಕು. ನಿಮ್ಮ ಚಿಂತನಾ ಶಕ್ತಿಗೆ-ಸಂಘಟನಾ ಚಾತುರ್ಯಕ್ಕೆ ಇದೊಂದು ಸವಾಲು. ನಾಟಕಾಭಿನಯಿಸಲು ನಿಮಗೆ ನೀಡಿರುವ ಅವಕಾಶ ಅರ್ಧ ಗಂಟೆ” ಎಂದದ್ದೇ ತಡ-ಎರಡು ಗುಂಪುಗಳಲ್ಲಿ ಕತೆಯ ಬಗ್ಗೆ ಚರ್ಚೆ ನಡೆಯಿತು. +ನಾನು ವೀರಪ್ಪನ್ ಎಂದ ಒಬ್ಬ. ನಾನು ಡಾ. ರಾಜ್ ಆಗ್ತೀನಿ ಎಂದ ಮಗದೊಬ್ಬ. ನಾನು ಪಾರ್ವತಮ್ಮನವರಾಗ್ತೀನಿ ಎಂದಳು ಒಬ್ಬ ಹುಡುಗಿ. ಎರಡೂ ಗುಂಪುಗಳಲ್ಲಿ ನಾಟಕದ ತಯಾರಿ ನಡೆಯಿತು. +ಒಬ್ಬ ಹುಡುಗ ಬಂದೂಕು ಹಿಡಿಯುವುದು ಹೇಗೆಂದು ಹೇಳಿ ಕೊಡುತ್ತಿದ್ದ. +ಒಬ್ಬ ಹುಡುಗಿ ಪಾರ್ವತಮ್ಮನವರ ಪಾತ್ರಧಾರಿಗೆ ದೊಡ್ಡ ಕುಂಕುಮವಿಟ್ಟಳು. ನಾನು ಶಿವರಾಜ್‌ಕುಮಾರ್‍ ಎಂದ ಹುಡುಗ ಬಣ್ಣ ಬಣ್ಣದ ಷರಟು ಧರಿಸಿ ನಿಂತ. +ಎರಡೂ ತಂಡದವರು ‘ಅಭಿನಯ ತರಂಗ’ ನಾಟಕ ಶಾಲೆಯಲ್ಲಿದ್ದ ಹಲವು ರಂಗ ಸಜ್ಜಿಕೆಗೆ ಬೇಕಾದ ವಸ್ತುಗಳನ್ನು ತಂದಿಟ್ಟುಕೊಂಡರು. +ತಂಡದಲ್ಲೊಬ್ಬ ನಾನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂದು ಸಂಭ್ರಮಿಸುತ್ತಿದ್ದ. +ಡ್ಯಾನ್ಸ್ ಚೆನ್ನಾಗಿ ಬಲ್ಲ ಹುಡುಗಿ ಸಪ್ಪಗಿದ್ದಳು. “ಏಕೆ” ಎಂದಾಗ “ವೀರಪ್ಪನ್ ವಿಷಯ ಕುರಿತ ನಾಟಕದಲ್ಲಿ ಸಂತೋಷಕ್ಕೆ-ಕುಣಿತಕ್ಕೆ ಜಾಗವೆಲ್ಲಿದೆ” ಎಂದಳು. +“ಪರವಾಗಿಲ್ವೆ-ಅಷ್ಟರಮಟ್ಟಿಗೆ ಚಿಂತಿಸಿದ್ದಾಳಲ್ಲ” ಎಂದು ನಾನಂದುಕೊಳ್ಳುತ್ತಿದ್ದಾಗ ಅಖಿಲ “ನೀನ್ಯಾಕೆ ಸಪ್ಪಗಿದ್ದಿ ಬಾ. ನೀನು ಪಾತ್ರ ವಹಿಸಬೇಕು ನಮ್ಮ ಜತೆ” ಎಂದು ಕರೆದೊಯ್ದಳು. +ಎಲ್ಲ ೧೦-೧೫ ನಿಮಿಷ ಹೊರಾಂಗಣದಲ್ಲಿ, ಮಹಡಿ ಮೇಲೆ ಎಲ್ಲ ಹೋಗಿ ರಿಹರ್‍ಸಲ್ ಮಾಡಿ “ನಾವೀಗ ರೆಡಿ” ಎಂದು ಬಂದರು. +ಮೊದಲ ಗುಂಪು ಅರ್ಜುನ್ ಅವರದು. ಅರ್ಜುನ್‌ಗೆ ವಯಸ್ಸು ೧೨. ಮಹಾ ಚೂಟಿ ಹುಡುಗ. “ಈಗ ನಾವು ನಾವೇ ಸಿದ್ಧಮಾಡಿರುವ ನಾಟಕ ನೋಡುತ್ತೀರಿ? ಎಂದು ಅನೌನ್ಸ್ ಮಾಡಿ ಪಕ್ಕಕ್ಕೆ ತೆರಳಿದ. ಟಿ.ವಿ. ಮುಂದೆ ಕೆಲವರು ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ನಾಲ್ಕಾರು ಮಂದಿ ಗನ್ ಹಿಡಿದು ಬಂದರು. ‘ಸಾರ್‍ ಬೇಕು’ ಎಂದರು. +ಪಾರ್ವತಮ್ಮನವರ ಪಾತ್ರಧಾರಿ “ಏಕೆ” ಎಂದಾಗ ಒಬ್ಬಾತ ‘ಶ್’ ಎಂದ. ಡಾ. ರಾಜ್ ಪಾತ್ರಧಾರಿ ಗಂಭೀರವಾಗಿ ಎದ್ದು “ಪಾರ್ವತಿ-ನೀ ಏನೂ ಯೋಚ್ನೆ ಮಾಡಬೇಡ- ಧೈರ್ಯವಾಗಿರು- ಮಕ್ಕಳಿಗೆಲ್ಲ ಹೇಳು” ಎಂದು ಹೊರಟರು ಅವರ ಹಿಂದೆ. +ಲೈಟ್ಸ್ ಆಫ್ ಎಂದ ಅರ್ಜುನ್. +ಟೇಬಲ್ ಮೇಲೆ ಒಬ್ಬ ಕುಳಿತ. ‘ಉದಯ ಟಿವಿ ವಿಶೇಷ ವಾರ್ತೆ’ ಎಂದು ಡಾ.ರಾಜ್ ಅಪಹರಣದ ಸುದ್ದಿ ಬಿತ್ತಿರಿಸಿದ. ಮುಂದಿನ ದೃಶ್ಯ. ೧೦, ೧೨ ಹುಡುಗರು ಬರುತ್ತಿದ್ದಾರೆ. +‘ವೀರಪ್ಪನ್ ಒದ್ದು ಬಿಡಿ’ ‘ಡಾ. ರಾಜ್ ಬಿಟ್ಟುಬಿಡಿ’ ಎಂದು ಕೂಗುತ್ತಾ. +ಆನಂತರ ಬೇರೆ ಬೇರೆ ಕಡೆಯಿಂದ ಬಂದ ಹಲವು ಹುಡುಗರು ಕಲ್ಲು ಬೀರಿದರು. ಅಂಗಡಿ ಮುಚ್ಚಿ ಓಡಿದರು ಎಲ್ಲ. ಲೈಟ್ಸ್ ಆಫ್ ಎಂದ ಅರ್ಜುನ್. +ಕಾಡಿನಲ್ಲಿ ವೀರಪ್ಪನ್ ಡಾ. ರಾಜ್‌ಗೆ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಒಂದೆಡೆ ಕೂರಿಸಿ “ಡಾ. ರಾಜ್ ಅವರೆ ನಿಮ್ಮ ಹೆಸರು ಕೇಳಿದೀನಿ-ಹಾಡು ಕೇಳಿದೀನಿ ನಿಮ್ಮ ಬಗ್ಗೆ ಎಲ್ಲರಿಗೂ ಗೌರವ ಅಂತ ಕೇಳಿದೀನಿ – ನೀವು ಅಂದ್ರೆ ಎಲ್ಲಾ ಸರಕಾರಗಳು ನಡುಗುತ್ವೇ ಅಂತ ಹಿಡ್ಕೊಂಡು ಬಂದಿದೀನಿ. ನೀವು ಇಲ್ಲಿ ಹಾಯಾಗಿರಬಹುದು. ನಿಮ್ಮಿಂದ ನನ್ನ ಕೆಲಸವೂ ಚಿಟಕೀಲಿ ಆಗುತ್ತೆ. ಅದಿರ್‍ಲಿ ಒಂದು ಹಾಡು ಹೇಳ್ತೀರಾ” ಎಂದಾಗ ಡಾ. ರಾಜ್ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುವರು. ವೀರಪ್ಪನ್ ಪಾತ್ರದ ಹುಡುಗ ತಾಳ ಹಾಕಿದ ಚಪ್ಪಾಳೆ ತಟ್ಟಿದ. +ಮುಂದಿನ ದೃಶ್ಯದಲ್ಲಿ ಎಸ್.ಎಂ.ಕೃಷ್ಣ, ಪಾರ್ವತಮ್ಮ, ಶಿವರಾಜ್‌ಕುಮಾರ್‍, ರಾಘವೇಂದ್ರ ರಾಜ್‌ಕುಮಾರ್‍, ಪುನೀತ್ ರಾಜ್‌ಕುಮಾರ್‍ ಪ್ರೆಸ್ ಮೀಟ್ ಮಾಡಿದರು. ನಂತರ ಮದರಾಸಿಗೆ ತೆರಳಿದರು. ಹೀಗೆ ಸೀನ್ ಬೈ ಸೀನ್ ನಾಟಕ ನಡೆದು ಡಾ. ರಾಜ್ ವ್ಯಕ್ತಿತ್ವಕ್ಕೆ ಮನಸೋತ ವೀರಪ್ಪನ್ “ನಾನು ಈವರೆಗೆ ಗಂಧದ ಮರ ಕದೀತಿದ್ದೆ. ಆದರೆ ಆ ಗಂಧದ ಸುವಾಸನೆ ಮೂಸಿರಲಿಲ್ಲ. ನಿಮ್ಮ ಮಾತುಕತೆಯಿಂದ ನನ್ನ ಕಣ್ತೆರೆದಿದೆ. ನಾನೀಗ ನನ್ನ ದಂಧೆ ಬಿಟ್ಟು ಮನುಷ್ಯನಾಗಿ ಬಾಳುವೆ” ಎಂದು ಡಾ. ರಾಜ್‌ಗೆ ಶರಣಾದಾಗ ಅವರೇ ಆತನನ್ನು ಕರೆತರುವರು. +ಆಗ ನನಗೆ ರೋಲಿಲ್ಲ ಎಂದು ಸಪ್ಪಗಿದ್ದ ಹುಡುಗಿ “ಬಂದರು ಬಂದರು ಡಾ. ರಾಜ್” ಎಂದು ಸಂಭ್ರಮಿಸುವಳು. ಆಗ ಹಾಡು ಕುಣಿತ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. +ಮಕ್ಕಳ ‘ಎ’ ಗುಂಪು ‘ಹೀಗಾದರೆ ಚೆನ್ನ’ ಎಂದು ಭಾವಿಸಿ ನಾಟಕ ರೂಪಿಸಿದ್ದರು. +ಎ ಗುಂಪಿಗೆ ಬಿದ್ದ ಚಪ್ಪಾಳೆಗಿಂತ ಹೆಚ್ಚು ಚೆಪ್ಪಾಳೆ ಗಿಟ್ಟಿಸಬೇಕೆಂಬುದು ಅಖಿಲಾ, ಅನ್ವಿತಾ, ಅರ್ಚನಾ ಆಶಯವಾಗಿತ್ತು. ಈ ಮೂವರೂ ಸಖತ್ ಚೂಟಿ ಮಕ್ಕಳು. ಹಾಡು-ಕುಣಿತ-ಚರ್ಚೆ-ಹರಟೆ-ತಲೆಹರಟೆಯಲ್ಲೂ ಹೆಸರಾದವರು. +ಇವರು ಅಭಿನಯಿಸಿದ ಕಿರು ನಾಟಕ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದ್ದರೂ ಅಲ್ಲಿ ಅವರದೇ ಆದ ವ್ಯಾಖ್ಯಾನವಿತ್ತು. ವೀರಪ್ಪನ್ ತನ್ನ ಕನಸು-ನನಸು ಮಾಡಿಕೊಳ್ಳಲು ಡಾ. ರಾಜ್‌ರನ್ನು ಅಪಹರಿಸಲು ಬೆಕ್ಕಿನಂತೆ ಹೊಂಚು ಹಾಕಿದ ಎಂಬುದರ ಸೂಚನೆ ಇತ್ತು. +ಕೋಲೆಬಸವನಂತೆ ಎಲ್ಲಕ್ಕೂ ‘ಹುಂ’ ಎನ್ನುವ ಬದಲು ಅನಿಸಿದ್ದನ್ನು ಅನಿಸಿದಂತೆ ಹೇಳಬೇಕು ‘ಇದು ಸರಿಯಲ್ಲ’ ಎನಿಸಿದಾಗ ಪ್ರತಿಭಟಿಸಬೇಕು ಎಂಬ ಧ್ವನಿ ಇತ್ತು. +ಯಾರೇ ಆಗಲಿ ಶಾಂತಿ ಕಾಪಾಡಿಕೊಳ್ಳಬೇಕಾದಾಗ ರೇಟಿಯೋ-ಟಿ.ವಿ. ಪತ್ರಿಕೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಚಿತ್ರಣವಿತ್ತು. +ದಿಕ್ಕು ತೋಚದಾದಾಗ, ಆಕಾಶವೇ ತಲೆಮೇಲೆ ಬಿದ್ದಂತಾದಾಗ-ನಾಸ್ತಿಕರೂ ಹೇಗೆ ಆಸ್ತಿಕರಾಗುತ್ತಾರೆ ಎಂಬುದರ ದೃಶ್ಯಗಳ ಪ್ರದರ್ಶನವಿತ್ತು. +ಡಾ. ರಾಜ್ ಸುರಕ್ಷಿತವಾಗಿ ಹಿಂತಿರುಗಿ ಬರಲಿ ಎಂಬುದೇ ಎಲ್ಲರ ‘ಕನಸಾದಾಗ’ ಜನರ ಭಯ ಭೀತಿ, ಕಾತರತೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸ್ಪಷ್ಟ ಚಿತ್ರವಿತ್ತು. +ತನಗೆ ಬೇಕಾದುದನ್ನು ಬೇಕಾದಂತೆ ಹೇಳಿಸಬೇಕಾದಾಗ ಡಾ. ರಾಜ್ ಅವರನ್ನು ‘ಬಂದೂಕು ಹಿಡಿದು ಹೇಗೆ ಹೆದರಿಸಿರಬಹುದು’ ಎಂಬ ಒಂದು ದೃಶ್ಯವೂ ಇತ್ತು. +ಇವೆಲ್ಲವೂ ಗಾಜನೂರಿನಿಂದ ಹಿಡಿದು ಇಲ್ಲಿಯವರೆಗೆ ಏನೇನಾಯಿತು ಎಂಬುದನ್ನು ಸೀನ್ ಬೈ ಸೀನ್ ಬಿಚ್ಚಿಟ್ಟ ಸ್ಕ್ರೀನ್ ಪ್ಲೇ ಅಂತೆ ಇದ್ದದ್ದು ಮಕ್ಕಳ ಕ್ರಿಯಾಶೀಲತೆಗೊಂದು ಮಾದರಿ ಎನಿಸಿತು. +ಇವರ ನಾಟಕದಲ್ಲಿ ವೀರಪ್ಪನ್ ತನ್ನ ಹತ್ತಾರು ಬೇಡಿಕೆಗಳಲ್ಲಿ ತಾನೇ ಹಲವನ್ನು ಬಿಟ್ಟು ಡಾ. ರಾಜ್ ಅವರೊಂದಿಗೆ ಬರುವ. ಇಂಥ ವೇಳೆ ನಕ್ಕೀರನ್ ಗೋಪಾಲ್ ಮಧ್ಯವರ್ತಿಯಾಗಿ ಬಂದು ಅವನೂ ಡಾ. ರಾಜ್ ಅವರ ವ್ಯಕ್ತಿತ್ವಕ್ಕೆ ಮಾರು ಹೋದ ಎಂದು ಚಿತ್ರಿಸಲಾಗಿತ್ತು. ಎಸ್.ಎಂ ಕೃಷ್ಣ, ಕರುಣಾನಿಧಿ ಮುಂತಾದವರೂ ಪಾತ್ರಗಳಾಗಿ ತೇಲಿಬಂದರು. +ಪಾರ್ವತಮ್ಮ ರಾಜ್‌ಕುಮಾರ್‍ ತಮ್ಮ ನೋವು ನುಂಗಿ-ಎಲ್ಲರನ್ನೂ ಸಂತೈಸುತ್ತ-ದಿಟ್ಟ ಮಹಿಳೆಯಾಗಿ ಚಿತ್ರಿಸಿದುದು ಈ ಪ್ರಯೋಗದ ವಿಶೇಷ. +ಅನಂತರ ಪತ್ರಕರ್ತ ಬಾಬು ದಿನಕರ್‍ ಮಾತನಾಡಿ “ಪುಟ್ಟ ಪುಟ್ಟ ನಾಟಕಗಳೆರಡು ನನ್ನ ಕಣ್ಣೆದುರಿಗೇ ರೂಪುಗೊಂಡು ಬಿಂಬ ಮಕ್ಕಳಿಂದ ರಂಗಕ್ಕೆ ಬಂದುದು ಕಂಡೆ. ನನಗಿಲ್ಲಿ ತುಂಬ ತುಂಬ ಮೆಚ್ಚುಗೆಯಾದುದು ಎರಡು ತಂಡಗಳವರು-ರಂಗಭೂಮಿಯಲ್ಲಿ ಅಭಿನಯಿಸಲು ಅನುಕೂಲವಾಗುವಂತೆ ದೃಶ್ಯಗಳನ್ನು ವಿಂಗಡಿಸಿಕೊಂಡಿದ್ದ ರೀತಿ. ಆಯಾ ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ತಮ್ಮದೇ ಮಾತಿನಲ್ಲಿ ಸಂಭಾಷಣೆ ಹೆಣೆದುಕೊಂಡಿದ್ದುದು ‘ಮಕ್ಕಳಿಗೇನು ಗೊತ್ತಾಗುತ್ತದೆ’ ಎಂದು ತಾತ್ಸಾರ ಮಾಡುವ ದೊಡ್ಡವರು ನಾಚಬೇಕು ಎನಿಸಿತು ಬಿಂಬ ಮಕ್ಕಳ ಈ ಪ್ರಯೋಗ ನೋಡಿದಾಗ” -ಡಾ. ರಾಜ್ ಸುರಕ್ಷಿತವಾಗಿ ಹಿಂತಿರುಗಿ ಬರಲಿ ಶಾಂತಿ ಸಮಾಧಾನ ಎಲ್ಲೆಲ್ಲೂ ನೆಲೆಸುವಂತಾಗಲಿ” ಎಂದು ಕಡೆಯಲ್ಲಿ ಹೇಳಿದವರು ಬಿಂಬ ಸಂಚಾಲಕಿ ವನಮಾಲಾ ಪ್ರಕಾಶ್. +-ಇಷ್ಟಂತೂ ನಿಜ-ಇಂದಿನ ಮಕ್ಕಳು ಯಾರಿಗೇನು ಕಡಿಮೆ ಇಲ್ಲ ಸಂದರ್ಭಕ್ಕೆ ಅನುಗುಣವಾಗಿ ಸ್ಪಂದಿಸುವ ದೃಷ್ಟಿಯಿಂದ. +***** +(೧೧-೮-೨೦೦೦) +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […] +ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ […] +೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_476.txt b/Kannada Sahitya/article_476.txt new file mode 100644 index 0000000000000000000000000000000000000000..8af741eeca76aa33fd94245ff8c91d1a33c66e7d --- /dev/null +++ b/Kannada Sahitya/article_476.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ ಹೋಗಿ ಆಡಬೇಕಾಗಬಹುದಾದ ಮಾತುಗಳನ್ನು ಮನಸ್ಸಿನಿಂದ ದೂರ ಮಾಡಲು ಮೈ ಮರೆಯುವಂಥ ಏನನ್ನಾದರೂ ಮಾಡಬೇಕೆನ್ನಿಸಿತು. ರಾಮತೀರ್ಥಕ್ಕೆ ಹೋಗುವ ದಾರಿಯಲ್ಲಿ ಅಣ್ಣ ಅನಂತನ ಅಂಗಡಿಯಿದ್ದದ್ದರಿಂದ ಅತ್ತ ಹೋಗದೆ ಬಂದರಿನತ್ತ ನಡೆದ. ಮನೆಯಿಂದ ಹೊರಡುವ ಹೊತ್ತಿಗೆ ಹೆಂಡತಿ ಮಾಲಿನಿ ಏನನ್ನೂ ಹೇಳದೆ ಇದ್ದರೂ ‘ಹೋಗಿಬರುತ್ತೇನೆ’ ಎಂದದ್ದಕ್ಕೆ ಅವಳು ಹೂಂ ಅಂದ ರೀತಿಯಲ್ಲೇ ಗಂಡ ಮರಳಿ ಬರುವಾಗ ಸಾಧಿಸಿಕೊಂಡು ಬರಬೇಕಾದದ್ದರ ಬಗೆಗಿನ ಅಪೇಕ್ಷೆ ವ್ಯಕ್ತವಾಗಿತ್ತು. ಹೇಳಬೇಕಾದ್ದನ್ನೆಲ್ಲ ಹಿಂದಿನ ರಾತ್ರಿಯೇ ಆಡಿ ಮುಗಿಸಿದ್ದಳು. ಎಲ್ಲ ಮಾತುಗಳು ಸ್ವರಗಳು ತಾರಕ ತಲುಪಿ ಈವತ್ತು ಬೆಳಿಗ್ಗೆ ಅದಕ್ಕಿಂತ ಎತ್ತರದಲ್ಲಿ ಒತ್ತಾಯ ಮಾಡುವುದು ಶಕ್ಯವಿಲ್ಲ ಅನಿಸಿ ಮೌನದಲ್ಲೇ ಚುಚ್ಚಿದ್ದಳು. “ಅದೇನು ದೊಡ್ಡ ವಿಷಯ ಬಿಡೆ….ಅವರು ನಮಗೆ ಮಾಡಿದ್ದನ್ನು ನೆನೆಸಿಕೊಳ್ಳಬೇಕೆ ಹೊರತು, ಯಾರೋ ಹೇಳಿದ್ದನ್ನು ಕೇಳಿಕೊಂಡು ಇಂಥ ಸಣ್ಣಸಂಗತಿ ಈಗ ಮತ್ತೆ ಯಾಕೆ ಎತ್ತಬೇಕು?….”ಎಂದು ರಾತ್ರಿ ರಘುವೀರ ಹೇಳಿದ್ದು ಅವಳನ್ನು ಕೆರಳಿಸಿತ್ತು. “ನೋಡಿ…. ಇದೇ ಮಾತು…. ಇದೇ ಮಾತು ಇಷ್ಟು ವರ್ಷ ಹೇಳಿಕೊಂಡು ಬಂದಿರಲ್ಲ…. ಅದಕ್ಕೇ ಈಗ ನಮಗೆ ಗೆರಟೆ ಹಿಡಿಯುವ ಸ್ಥಿತಿ ಬಂತು…. ಆವಾಗಲೇ ನೀವು ಜೋರಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ…. ಇಲ್ಲವಾದರೆ ಆಸ್ತಿಯಲ್ಲಿ ಸಮಪಾಲು ಬಂದಿತ್ತಲ್ಲ…… ಕೊಟ್ಟಿದ್ದೆ ಎಂದು ನಿಮ್ಮಣ್ಣ ಹೇಳುತ್ತಾರಲ್ಲ…… ಹಾಗೇ ಆಗಿದ್ದರೆ ಅವರೇಕೆ ಅಷ್ಟು ಶ್ರೀಮಂತರಾದರು…… ನೀವೇಕೆ ಮುಂದೆ ಬರಲಿಲ್ಲ…… ನಿಮ್ಮ ಹತ್ತಿರ ನಯದ ಮಾತಾಡಿ ತಲೆಗೆ ಎಣ್ಣೆ ಹಾಕಿ ಕಳಿಸಿದ್ದಾರೆ…… ಈಗ ಕೂತು ಗಸಗಸಾ ತಿಕ್ಕಿಕೊಳ್ಳಿ……” ಅವನು ಸಮಾಧಾನದಿಂದ ಕೇಳುತ್ತಿದ್ದಷ್ಟೂ ಅವಳು ಕನಲಿ, ಮಾತಿಗೆ ಮಾತು ಸೇರಿಸುತ್ತ ಅವನ ಸೈರಣೆ ತಪ್ಪುವ ತನಕ, ಆತ ಕೂಗಾಡಿ ಸಿಟ್ಟಿನಿಂದ ಕಂಪಿಸುತ್ತ ಧಡಧಡ ಅತ್ತಿಂದಿತ್ತ ಓಡಾಡುವ ತನಕ, ತನ್ನ ಮಾತು ಅವನ ಅಂತರಂಗವನ್ನು ನಾಟಿತು ಎಂದು ಖಾತ್ರಿಯಾಗುವ ತನಕ ದನಿ ಇಳಿಸಿರಲಿಲ್ಲ. ಇಂಥ ಪ್ರಸಂಗ ಬಂದಾಗಲೆಲ್ಲ ಈ ಮದುವೆಯಾಗಿ ತಾನು ಮನಸ್ಸಿನ ಶಾಂತಿ ಕಳಕೊಂಡೆನೇನೋ ಎಂದು ರಘುವೀರನಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಮಾಲಿನಿಯೇನು ಸದಾ ಜಗಳವಾಡುವಂಥ ಹೆಂಗಸಲ್ಲ. ಆದರೆ ತನ್ನದು, ತನ್ನ ಮನೆ, ತನ್ನ ಸಂಸಾರದ ವ್ಯಾಮೋಹ ತೀರ ಹೆಚ್ಚಾದಾಗ ಸ್ತಿಮಿತ ತಪ್ಪಿದ ಹಾಗೆ ಆಡುತ್ತಾಳೆ ಅನಿಸುತ್ತಿತ್ತು. ಮದುವೆಯಾದಾಗ ರಘುವೀರನಿಗೆ ಮೂವತ್ತೈದು ವರ್ಷ. ಮಾಲಿನಿಗೆ ಮೂವತ್ತೆರಡು. ತಡವಾಗಿ ಮದುವೆಯಾದದ್ದರಿಂದ ಕಳಕೊಂಡಿದ್ದನ್ನೆಲ್ಲ ಈಗ ಒಮ್ಮೆಲೇ ಬಾಚಿಕೊಳ್ಳುವ ಹಾಗೆ ಆಡುತ್ತಿದ್ದಾಳೇನೋ ಅಂದುಕೊಳ್ಳೂತ್ತಿದ್ದ. ಮಚವೆ ಹತ್ತಿಕೊಂಡು, ಹದಿನೈದು ವರ್ಷಗಳ ಕಾಲ ಸಮುದ್ರದ ಮೇಲೆಯೇ ಅನ್ನುವ ಹಾಗೆ ಬದುಕಿದ ರಘುವೀರ ಮಚವೆಯ ವ್ಯವಹಾರ ನಿಲ್ಲಿಸುವ ಪ್ರಸಂಗ ಬಂದ ಮೇಲೆ ಹೊನ್ನಾವರದಲ್ಲೇ ಇರಬೇಕಾಯಿತು. ಅದಾಗದೇ ಇದ್ದಿದ್ದರೆ ಈ ಮದುವೆಯ ಒತ್ತಾಯಕ್ಕೆ ರಘುವೀರ ಬಹುಶಃ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಅಂತೂ ಅದಾವುದೋ ಗಳಿಗೆಯಲ್ಲಿ ಒಪ್ಪಿಕೊಂಡದ್ದೇ ಎಲ್ಲದಕ್ಕೆ ಕಟ್ಟಿಬಿದ್ದಂತಾಗಿತ್ತು. ರಘುವೀರ ಬಂದರಿನತ್ತ ಹೋದಾಗ ಆಗತಾನೇ ಬೆಳಗಿನ ಮೀನು ದೋಣಿಗಳು ದಡ ಹತ್ತುತ್ತಿದ್ದವು. ಮೀನು ಕೊಳ್ಳುವ ಜನರ ಗದ್ದಲ, ದಡ ಸೇರಲು ಪೈಪೋಟಿಯಿಂದ ಸರಸರ ಹುಟ್ಟು ಹಾಕುತ್ತ ಬ್ರಿಜ್ಜಿನ ಕಂಬಗಳ ನಡುವಿನಿಂದ ತೀರದ ಗಿರಾಕಿಗಳತ್ತ ನುಗ್ಗುವ ಮೀನುದೋಣಿಗಳು. ಎರಡು ದಂಡೆಗಳನ್ನು ಸೇರಿಸಲು ಹಾಕಿದ ಹೊಲಿಗೆಯ ಹಾಗೆ ತೋರುವ ಈ ಬ್ರಿಜ್ಜನ್ನು ರಘುವೀರನೆಂದೂ ಇಷ್ಟಪಟ್ಟಿರಲಿಲ್ಲ. ಅದು ಉದ್ಘಾಟನೆಯಾದ ಹೊಸದರಲ್ಲಿ ಕುತೂಹಲದಿಂದ ಅದರ ಮೇಲೆ ಆಚೆಯಿಂದ ಈಚೆಯವರೆಗೆ ನಡೆದಿದ್ದ. ಭರ್ರಭರ್ರನೆ ಲಾರಿಗಳು ದಾಟಿಹೋದ ಹಾಗೆ ಮೈಲುದ್ದದ ಬ್ರಿಜ್ಜು ಕುಪಿಸಿ, ಆ ಕಂಪನ ಇನ್ನೂ ಆರದೇ ಒಳಗೆ ಉಳಿದ ಹಾಗೆ ಅನಿಸುತ್ತಿತ್ತು. ಭರಿಸಿಕೊಳ್ಳಲಾಗದ ಯಾವುದನ್ನೋ ಒಳಗೆ ಹಾದುಹೋಗಲು ಬಿಟ್ಟ ಹಾಗೆ. ಸ್ವಲ್ಪ ಹೊತ್ತು ಸುಮ್ಮನೇ ದೋಣಿಗಳನ್ನು ನೋಡುತ್ತ ನಿಂತು ರಘುವೀರ ಬಂದರಿನಗುಂಟ, ನದಿ ಸಮುದ್ರ ಸೇರುವತ್ತ ನಡೆದ. +-೨- +ಚಿಕ್ಕಂದಿನಿಂದಲೂ ಯಾರ ತಂಟೆಗೂ ಹೋಗದ ರಘುವೀರನಿಗೆ ಅದಾವುದೋ ಹಂತದಲ್ಲಿ ಈತ ಭೋಳೆ ಅನ್ನುವದು ಅಂಟಿಕೊಂಡುಬಿಟ್ಟಿತ್ತು. ಹಾಗೆ ನೋಡಿದರೆ ಅಣ್ಣ ಅನಂತನಿಗಿಂತ ಅವನೇ ಹೆಚ್ಚು ಓದಿದವನು. ಅನಂತ ಏಳನೇ ತರಗತಿಯವರೆಗೆ ಓದಿದ್ದರೆ ರಘುವೀರ ಮೆಟ್ರಿಕ್ ಪಾಸಾಗಿದ್ದ. ಓದುವುದೊಂದು ಬಿಟ್ಟು ಬಾಕಿ ಎಲ್ಲಾ ವಿಷಯಗಳಲ್ಲಿ ಅನಂತ ಮುಂದು. ಅಪ್ಪನ ಅಂಗಡಿಯಲ್ಲಿ ಕೂತು ವ್ಯವಹಾರ ಕಲಿತಿದ್ದ. ಅಪ್ಪ ಸತ್ತ ನಂತರ ಅವನೇ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗಬೇಕಾಯಿತು. ಅಡಿಕೆ ದಲಾಲಿ ವ್ಯಾಪಾರ. ಆಗ ಅನಂತನಿಗೆ ಇಪ್ಪತ್ತು ವರ್ಷ. ರಘುವೀರನಿಗೆ ಹದಿನೆಂಟು. ಅವನೂ ಅಣ್ಣನಿಗೆ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದರೂ ವ್ಯವಹಾರದ ಸೂತ್ರವೆಲ್ಲ ಅನಂತನ ಕೈಯಲ್ಲಿತ್ತು. ರಘುವೀರನಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಎರಡು ವರ್ಷ ಅಂಗಡಿ ನಡೆಸಿ ಹುಟ್ಟಿದ ಆತ್ಮವಿಶ್ವಾಸದಿಂದಲೇ ಅನಂತ ಮಚವೆಯ ವ್ಯವಹಾರಕ್ಕೆ ಕೈಹಾಕಿದ್ದು. ಆಗಲೇ ಹೊನ್ನಾವರದಲ್ಲಿ ಒಂದಿಬ್ಬರು ದೊಡ್ಡ ಕುಳಗಳು ಮಚವೆ ಇಟ್ಟಿದ್ದರು. ಅನಂತ ಇದ್ದ ದುಡ್ಡೆಲ್ಲ ಹಾಕಿ, ಎಲ್ಲೆಲ್ಲಿಂದಲೋ ಸಾಲ ಎತ್ತಿ ಮಂಗಳೂರಿನಲ್ಲಿ ಮಚವೆ ಕಟ್ಟಿಸಲು ಹಾಕಿದ. ಮಂಗಳೂರಿನಿಂದ ಗೋವಾಕ್ಕೆ ಅಲ್ಲಿಂದ ಮುಂಬಯಿಗೆ ಸ್ರಕು ಸಾಗಣೆ ವ್ಯವಹಾರ ಜೋರಾಗಿತ್ತು. ಆಗಿನ್ನೂ ಶರಾವತಿಗೆ ಸೇತುವೆಯಾಗಿರಲಿಲ್ಲ. ಅಕ್ಕಿ ಹೆಂಚು ಕಟ್ಟಿಗೆ ಮಾವು ಎಲ್ಲವನ್ನೂ ಮಚವೆಯಲ್ಲೇ ಸಾಗಿಸುತ್ತಿದ್ದರು. ಮುಂಬಯಿಯಲ್ಲಿ ತೆಂಗಿನಕಾಯಿಗೆ ಬೆಲೆ ಬಂದರೆ ಅದೂ ಹೋಗುತ್ತಿತ್ತು. ಊರಲ್ಲಿರುವ ಮಚವೆಗಳಿಗಿಂತ ದೊಡ್ಡದನ್ನು ಕಟ್ಟಿಸಿದರು. ಗೇರು ಎಣ್ಣೆ, ಕಪ್ಪು ಬಣ್ಣ ಹಚ್ಚಿದ ಅದರ ಹೊರಭಾಗ ಮೀರಿ ಮಿರಿ ಮಿಂಚುತ್ತಿತ್ತು. ಎತ್ತರದ ಹಾಯಿಕಂಬಗಳು ಆಕಾಶವನ್ನು ನೆಟ್ಟಿನಿಂತಂತಿದ್ದವು. ವಿಶಾಲವಾದ ಬೆಳ್ಳಗಿನ ಹಾಯಿಗಳಿಂದ, ಮಚವೆ ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾದ ಹಾಗೆ ಕಾಣಿಸುತ್ತಿತ್ತು. ಮಚವೆಗೆ ‘ವಿಶ್ವಸಾಗರ’ ಎಂದು ಹೆಸರಿಟ್ಟರು. ಸಣ್ಣ ಹಡಗಿನ ಹಾಗೆ ಎರಡು ಮಜಲುಗಳಲ್ಲಿ ಸರಕು ಪೇರಿಸಿಡುವಂತೆ ಒಳವಿನ್ಯಾಸವಿತ್ತು. ಒಳಗೆ ಇಳಿದರೆ ದೊಡ್ಡ ಮಹಡಿ ಮನೆಯನ್ನು ಹೊಕ್ಕಂತಾಗುತ್ತಿತ್ತು. ಒಳಗೆ ಇಳಿಯುವ ನಿಚ್ಚಣಿಕೆಯ ಪಕ್ಕ ಮೂರು ಕೋಣೆಗಳಿದ್ದವು. ಅಡಿಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆ ಇತ್ತು. ಸರಕು ಹತ್ತಿ ಇಳಿಸಲು ಮೇಲ್ಗಡ್ಡೆ ಎರಡು ದೊಡ್ಡ ಬಾಗಿಲುಗಳು. ಉಳಿದೆಲ್ಲ ಕಡೆ ಸಂದಿಗೊಂದಿಗಳಲ್ಲಿ ಡಾಂಬರು ತುಂಬಿಸಿ ನೀರು ಒಳಬರದ ಹಾಗೆ ಮಾಡಿದ್ದರು. ಸರಕು ತುಂಬಿಸಿ ಬಾಗಿಲು ಮುಚ್ಚಿ ಸಂದಿಗಳಲ್ಲಿ ಅರಗು ಹಾಕಿಬಿಟ್ಟರೆ ಎಂಥ ಮಳೇಯಲ್ಲೂ ಒಂದು ಹನಿ ನೀರು ತಾಗುತ್ತಿರಲಿಲ್ಲ. ಒಳಗೆ ಹತ್ತಿಳಿಯುವುದಕ್ಕಿರುವ ಸಣ್ಣ ಬಾಗಿಲೊಂದನ್ನು ಬಿಟ್ಟರೆ ಸಾಮಾನು ತುಂಬಿಸಿದ್ದೇ ಉಳಿದ ಬಾಗಿಲುಗಳನ್ನು ಮುಚ್ಚಿ ಬಿಡುತ್ತಿದ್ದರು. ತೂಕ ಸರಿದೂಗಿಸಲು ಮಚವೆಯ ಮೇಲ್ಗಡೆ ಮರಳು ತುಂಬಿದ ಚೀಲಗಳನ್ನು ಪೇರಿಸಿಟ್ಟಿದ್ದರು. ದೊಡ್ಡ ರೀತಿಯಲ್ಲಿ ಪೂಜೆಯಾಗಿ, ಗೊಂಡೆಹೂವಿನ ಸರಗಳಿಂದ ಸಿಂಗಾರಗೊಂಡ ವಿಶ್ವಸಾಗರದ ಮೊದಲ ಯಾತ್ರೆ ಹೊನ್ನಾವರದಿಂದ ಮುಂಬಯಿಗೆ. ಅದರಲ್ಲಿ ರಘುವೀರನೂ ಹೊರಟ. ಅದು ಅವನ ಮೊದಲ ಸಮುದ್ರ ಯಾತ್ರೆ. ದಂಡೆಯಲ್ಲಿ ಕೈಬೀಸುತ್ತ ನಿಂತ ಜನ ದೂರವಾಗುತ್ತ, ನದಿ ಸಮುದ್ರ ಸೇರುವಲ್ಲಿ ಹೊಯ್ದಾಡಿ ಮಚವೆ ಸಮುದ್ರ ಸೇರಿತು. ಯಾರಾದರೂ ವಿಶ್ವಾಸದ ಜನ ಸಿಗುವವರೆಗೆ ಸ್ವತಃ ಹೋಗಿಬರುವುದು ಎಂದು ಆರಂಭವಾದ ಈ ಮಚವೆಯ ಸಖ್ಯ ಮುಂದಿನ ಹದಿನೈದು ವರ್ಷಗಳವರೆಗೆ ಮುಂದುವರಿದಿತ್ತು. ಪ್ರತಿ ಸಲ ಮಚವೆಯಲ್ಲಿ ಹೋಗುವಾಗಲೂ ಹೊಸತೆಂಬಂತೆ ಅದೇ ಮೊದಲ ಯಾತ್ರೆಯಂತೆ ರಘುವೀರನಿಗೆ ಅನಿಸುತ್ತಿತ್ತು. ಸಮುದ್ರದ ಲಹರಿ ಒಂದೊಂದು ಬಾರಿಯೂ ಒಂದೊಂದು ರೀತಿ. ಪ್ರತಿ ಸಾರಿಯೂ ಸಮುದ್ರದ ಹೊಸತೊಂದು ಗುಟ್ಟು ಬಿಚ್ಚಿಕೊಳ್ಳುತ್ತಿತ್ತು. ಜಟ್ಟಿಯ ಸ್ನಾಯುಗಳ ಹಾಗೆ ನುರಿಯುವ ಅಲೆಗಳ ನಡುವೆ ಗಾಳಿ, ಸೂರ್ಯ, ಚಂದ್ರ, ನಕ್ಷತ್ರ, ಮೋಡ ಎಲ್ಲ ಸರೀ ಒದಗಿಬಂದು ದಾರಿ ಸೂಚಿಸಬೇಕು. ಸುತ್ತಮುತ್ತ ನೀರೇ ನೀರು ತುಂಬಿದ್ದರೂ ಅದರಲ್ಲೇ ದಾರಿ ಕಾಣುವ ಶಕ್ತಿ ಬೇಕು. ಮೊದಲ ನಾಲ್ಕೈದು ವರ್ಷ ಕಾಸರಕೋಡಿನ ಅನುಭವಿ ನಾವಿಕ ಗಣು ಇದ್ದ. ಅವನಿಂದಲೇ ರಘುವೀರ ಎಲ್ಲ ರಹಸ್ಯಗಳನ್ನು ಅರಿತದ್ದು: ಗಾಳಿಯ ಸೂಚನೆ ತಿಳಿಯುವುದು ಹೇಗೆ, ಗಾಳಿ ಅನುಕೂಲವಿಲ್ಲದಿದ್ದರೂ ಚಿಕ್ಕ ಚಿಕ್ಕ ಹಾಯಿಗಳನ್ನು ಹೇಗೆ ವಿವಿಧ ಕೋನಗಳಲ್ಲಿ ನಿಲ್ಲಿಸಿ ಮುಂದಿನ ಮುಖ್ಯ ಹಾಯಿಯತ್ತ ಗಾಳಿಯ ಬಲ ಹಾಯುವ ಹಾಗೆ ಮಾಡಬೇಕು, ನೀರಿನ ಬಣ್ಣದಿಂದ ಮೀನಿನ ಹಿಂಡು ಗುರುತಿಸುವುದು ಹೇಗೆ, ತೂಫಾನಿನ ಸುಳಿವು ಹಿಡಿಯುವುದು ಹೇಗೆ, ದಿಕ್ಸೂಚಿಯನ್ನು ಉಪಯೋಗಿಸುವುದು ಹೇಗೆ, ಈ ನಕ್ಷತ್ರ ಇಲ್ಲಿದ್ದರೆ ನೀನು ಇಂಥಲ್ಲಿದ್ದೀ, ಆ ನಕ್ಷತ್ರಕ್ಕೆ ಮುಖ ಮಾಡಿ ನಿಂತರೆ ಬಲಕ್ಕಿರುವುದು ಮುಂಬಯಿ ಇತ್ಯಾದಿಗಳನ್ನು ಕಲಿತದ್ದು ಅವನಿಂದಲೇ. ಅವನಿದ್ದಷ್ಟು ದಿನವೂ ಅವನು ರಘುವೀರನ ಹತ್ತಿರದ ಗೆಳೆಯನಾಗಿದ್ದ. ಕೊನೆಗೊಂದು ದಿವಸ ಯಾವುದೋ ಹಡಗಿನಲ್ಲಿ ಕೆಲಸ ಸಿಕ್ಕಿತೆಂದು ಹೇಳಿ ಬಿಟ್ಟು ಹೊರಟುಹೋದ. +-೩- +ಅನಂತ ಮುಂಬಯಿಯ ಯಾವುದೋ ಕಂಪನಿಗೆ ಬರೆದು, ಅವರು ಅಲ್ಲಿಂದ ಮಂಗಳೂರಿಗೆ ಸಾಗಿಸುವ ಸರಕನ್ನು ಇವರ ಮಚವೆ ಮುಂಬಯಿ ತಲಪುವ ವೇಳೆಗೆ ತಯಾರಾಗಿ ಇಡುವ ವ್ಯವಸ್ಥೆ ಮಾಡಿದ್ದ. ಇಲ್ಲಿಂದ ಒಯ್ದ ಸಾಮಾನು ಅಲ್ಲಿ ಇಳಿಸಿ ತೂಕ ಹಾಕಿಸಿ ರಸೀತಿ ಪಡೆದು, ಮತ್ತೆ ಮಾಲು ಏರಿಸಿ ವಾಪಸು ಹೊರಡುವುದಷ್ಟೆ ರಘುವೀರನ ಜವಾಬ್ದಾರಿ. ಅವನಿಗೆ ಅದಕ್ಕಿಂತ ಹೆಚ್ಚಿನದರಲ್ಲಿ ಆಸಕ್ತಿಯೂ ಇರಲಿಲ್ಲ. ಮಂಗಳೂರಿನಲ್ಲಿಯೂ ಅದೇ ರೀತಿಯ ಏರ್ಪಾಡಾಗಿತ್ತು. ಹೊನ್ನಾವರದ ವ್ಯವಹಾರವನ್ನೆಲ್ಲ ಅನಂತ ನೋಡಿಕೊಳ್ಳುತ್ತಿದ್ದ. ಆಗಾಗ ಮಚವೆ ಹೊನ್ನಾವರಕ್ಕೆ ಬಂದು ಹೋಗುವುದಂತೂ ಇದ್ದೇ ಇತ್ತು. ಮಚವೆಯ ವ್ಯವಹಾರದಲ್ಲಿ ಅದೆಷ್ಟು ದುಡ್ಡು ಬಂತು ಹೋಯಿತು ಎಂದು ರಘುವೀರ ಯಾವತ್ತು ತಲೆಕೆಡಿಸಿಕೊಳ್ಳಲಿಲ್ಲ. ಮಚವೆಯ ರಿಪೇರಿ, ಬಣ್ಣ, ನೌಕರಿಗೆ ಸಂಬಳ, ಮುಂಬಯಿ ಮಂಗಳೂರಲ್ಲಿ ಅಗತ್ಯದ ಖರ್ಚುಗಳಿಗೆ ಬೇಕಾದ ಹಣವನ್ನು ಅನಂತನಿಂದ ತಗೊಳ್ಳುತ್ತಿದ್ದ. ಅನಂತನೂ ಯಾಕೆ ಏನು ಎಂದು ಕೇಳದೇ ಅವನು ಕೇಳಿದಷ್ಟು ತೆಗೆದುಕೊಡುತ್ತಿದ್ದ. ಇತರರ ಮಚವೆಗಳಲ್ಲಿ ಎಷ್ಟೇ ನಂಬಿಕಸ್ತ ನೌಕರರಿದ್ದರೂ ಒಂದು ಬಂದರಿನಿಂದ ಇನ್ನೊಂದು ಕಡೆ ಕದ್ದು ಮಾಲು ಸಾಗಿಸುತ್ತಿದ್ದರು. ಹೆಂಡವೋ, ಪರ್ಮಿಟ್ಟಿಲ್ಲದೇ ಅಕ್ಕಿಯೋ, ಕಟ್ಟಿಗೆಯ ನಾಟವೋ ಏನೋ ಒಂದು ಕಳ್ಳವ್ಯವಹಾರ ನಡೆದೇ ನಡೆಯುತ್ತಿತ್ತು. ರಘುವೀರ ಸ್ವತಃ ಸದಾ ಮಚವೆಯ ಮೇಲೇ ಇರುವುದರಿಂದ ವಿಶ್ವಸಾಗರದಲ್ಲಿ ಇಂಥ ವ್ಯವಹಾರ ನಡೆಯಲಿಲ್ಲ. ಹಾಗಾಗಿ ಯಾವ ಮೇಲು ಸಂಪಾದನೆಯೂ ಇಲ್ಲದ ಈ ಕೆಲಸದಲ್ಲಿ ಆಳುಗಳು ಬಹಳ ಕಾಲ ಇರುತ್ತಲೇ ಇಲ್ಲ. ಹೊಸಬರು ಕೆಲಸ ಕಲಿಯಲು ಬಂದು ಬೇರೆ ಕಡೆ ಕೆಲಸ ಸಿಕ್ಕಿದ್ದೇ ಹೊರಟುಬಿಡುತ್ತಿದ್ದರು. ಮಚವೆಯ ಏರಿಳಿತ ಎದೆತಿದಿಯ ಹಾಗೆ ರಘುವೀರನಲ್ಲಿ ಒಂದಾಗಿಬಿಟ್ಟಿತ್ತು. ಕೊನೆಗಾಣದ ನೀರಿನಲ್ಲಿ ದಿಕ್ಕನ್ನು ಸೂಚಿಸುವ ಮುಳ್ಳಿನ ಭರವಸೆಯ ಮೇಲೆ ಹಾಯಿಗಳ ಆಕಾರ, ಎತ್ತರ, ದಿಕ್ಕು, ಕೋನಗಳನ್ನು ಬದಲಾಯಿಸುತ್ತ ನೀರಿನಲ್ಲಿ ಹಾದಿ ಹುಡುಕಿ ಹೋಗುವುದು ಯಾವುದೋ ಅಲೌಕಿಕದ ಬೆನ್ನು ಹತ್ತಿ ಹೋಗುವ ಹುಚ್ಚಿನ ಹಾಗೆ ಅಂಟಿಕೊಂಡಿತ್ತು. ಒಂದು ಕಡೆಯಿಂದ ಏರಿ ಇನ್ನೊಂದು ಕಡೆ ಇಳಿಯುವ ಸೂರ್ಯ. ಅದೇ ಚಕ್ರದಲ್ಲಿ ಸುತ್ತಿ ಸುತ್ತಿ ಹದಿನೈದು ವರ್ಷಗಳು ಕಳೆದುಹೋದವು. ಆದರೂ ಪ್ರತಿ ಬಾರಿಯೂ ಹೊಸತೇನೋ ದಕ್ಕಿದ ಹಾಗೆ; ಸಿಗಬೇಕಾದ್ದಿನ್ನೂ ಸಿಕ್ಕಿಲ್ಲದ ಹಾಗೆ; ಸಮಾಧಾನ ಮತ್ತು ಅತೃಪ್ತಿ ಒಟ್ಟೊಟ್ಟಿಗೆ. ರಘುವೀರ ತನ್ನ ಮಚವೆಗೆ ತಾನೇ ತಯಾರಿಸಿದ ಹಲವಾರು ಹೊಸ ಆಕಾರದ ಹಾಯಿಗಳನ್ನು ಜೋಡಿಸಿದ್ದ. ಮಚವೆಯ ತೂಕ, ಗಾಳಿಯ ಬಲ ನೋಡಿಕೊಂಡು ಹಲವನ್ನು ಬಿಚ್ಚುತ್ತಿದ್ದ, ಹಲವನ್ನು ಸುತ್ತಿಡುತ್ತಿದ್ದ. ಗಂಟೆಗಟ್ಟಲೆ ಮಚವೆಯ ಮೇಲ್ಭಾಗದಲ್ಲಿ ಕೂತು ಹಲವಾರು ಕೋನಗಳಲ್ಲಿ ಅವುಗಳನ್ನು ಹೊಂದಿಸುತ್ತ ಅದೇನೋ ಧ್ಯಾನದಲ್ಲಿರುತ್ತಿದ್ದ. ಅವನ ಮಚವೆ ಉಳಿದವರಿಗಿಂತ ಮುಕ್ಕಾಲು ದಿವಸ ಮೊದಲೇ ಮಂಗಳೂರಿನಿಂದ ಮುಂಬಯಿ ಸೇರುವ ಹಾಗೆ ಮಾಡುತ್ತಿದ್ದ. ಮಳೆಗಾಲದಲ್ಲಿ ಮೂರು ತಿಂಗಳು ಮಚವೆ ನಡೆಸುತ್ತಿರಲಿಲ್ಲ. ಆಗ ಅದರ ರಿಪೇರಿ ಬಣ್ಣ ಇತ್ಯಾದಿ ಆಗಬೇಕು. ಆ ದಿವಸಗಳಲ್ಲಿ ಮಳೆಗಾಲ ಮುಗಿಯುವುದನ್ನೇ ಎದುರುನೋಡುತ್ತ ಚಡಪಡಿಸುತ್ತಿದ್ದ. ರಘುವೀರ ಮಚವೆಯಲ್ಲಿ ಸುತ್ತುತ್ತಿದ್ದ ವರ್ಷಗಳಲ್ಲಿ ಜನ ಈತ ತೀರಾ ಭೋಳೇ, ಇವನು ಹೀಗೆ ಹಮಾಲರ ಹಾಗೆ ದುಡಿಯುವದು, ಇವನ ಅಣ್ಣ ಮಚವೆಯಿಂದ ಬರುವ ದುಡ್ಡಿನಿಂದ ಸಾವುಕಾರನಾಗಿ ಕಾಲ ಮೇಲೆ ಕಾಲು ಹಾಕಿ ಕೂರುವುದು ಎಂದೆಲ್ಲ ಆಡಿಕೊಂಡರು. ಆಳುಗಳನ್ನಿಟ್ಟು ಮಚವೆ ನಡೆಸುವುದರ ಬದಲು ಇವನೇಕೆ ಖಾರ್ವಿಯ ಹಾಗೆ ಯಾವಾಗಲೂ ಅದರ ಮೇಲೆಯೇ ಇರುತ್ತಾನಲ್ಲ ಎಂದು ಆಡಿಕೊಂಡರು. ಕೆಲವರು ಅದನ್ನು ರಘುವೀರನಿಗೆ ಚುಚ್ಚಿ ಹೇಳಲು ನೋಡಿದರು. ಅವನು ಹಾಂ ಹಾಂ ಎಂದು ಸುಮ್ಮನಾಗಿದ್ದಕ್ಕೆ ಕೈಲಾಗದವನು ಅಂದುಕೊಂಡರು. ಈ ನಡುವೆ ಅನಂತ ಹಳೆಯ ಅಡಿಕೆ ವ್ಯಾಪಾರದ ಜೊತೆಗೆ ಅಂಗಡಿಯ ಪಕ್ಕದ ಭಾಗವನ್ನೂ ಕೊಂಡುಕೊಂಡು ಕಿರಾಣಿ ವ್ಯಾಪಾರ ಸುರುಮಾಡಿದ್ದ. ಭರಭರಾಟೆಯ ವ್ಯಾಪಾರ ನಡೆಯುತ್ತಿತ್ತು. ಅಡಿಕೆ ಹಾಕಿ ದುಡ್ಡು ತಗೊಂಡ ಜನ ಅಲ್ಲೇ ಕಿರಾಣಿ ವ್ಯಾಪಾರವನ್ನೂ ಮುಗಿಸಿ ಹೋಗುತ್ತಿದ್ದರು. ಸಣ್ಣ ತೋಟ ಇರುವವರಿಗೆ ಕಿರಾಣಿ ಸಾಲ ಕೊಟ್ಟು ಬೆಳೆ ಬಂದಾಗ ಅವರ ಅಡಿಕೆ ತನ್ನ ಅಂಗಡಿಗೆ ತನ್ನ ಧಾರಣೆಗೇ ಬರುವ ಹಾಗೆ ಮಾಡುವ ಚಾಲಾಕಿತನವೂ ಅನಂತನಿಗಿತ್ತು. +-೪- +ಶರಾವತಿಗೆ ಸೇತುವೆಯಾದ ಮೇಲೆ ಮುಂಬೈನಿಂದ ಮಂಗಳೂರಿಗೆ ಒಂದೇ ಸಮನೆ ಲಾರಿಗಳು ಓಡಾಡಲಾರಂಭಿಸಿದವು. ಮಚವೆಯ ಮೂಲಕ ಸರಕು ಸಾಗಿಸುವುದು ಇಳಿಮುಖವಾಗುತ್ತ ಬಂದು ಇನ್ನು ನಡೆಸಲಿಕ್ಕಾಗದ ಸ್ಥಿತಿ ಬಂತು. ಅದರ ವರ್ಷದ ರಿಪೇರಿ, ನೌಕರರ ಸಂಬಳಕ್ಕೂ ದುಡ್ಡು ಹುಟ್ಟದಿರುವ ಪ್ರಸಂಗ ಬಂತು. ಆಗ ಅನಂತ ರಘುವೀರನ ಜೊತೆ ಮಚವೆ ದಂಡೆಗಿಳಿದು ಹಾಕುವ ಮಾತು ತೆಗೆದ. ಇತ್ತೀಚೆಗೆ ಎಷ್ಟೋ ಬಾರಿ ಬರೀ ಕಾಲು ಭಾಗ ಸಾಮಾನು ತುಂಬಿಕೊಂಡು ಹೋಗುವಾಗಲೇ ರಘುವೀರನಿಗೆ ಇದರ ಬಗ್ಗೆ ಅನುಮಾನ ಬಂದಿತ್ತು. ಮಚವೆಯಲ್ಲಿ ಸಾಗಿಸಲು ತಗಲುವಷ್ಟು ಕಾಲ ಕಾಯಲು ಯಾರೂ ತಯಾರಿರಲಿಲ್ಲ. ಮಚವೆಯಲ್ಲಿ ಕಳಿಸಿ ಅದು ವಾರದ ಮೇಲೆ ತಲುಪಿ ಅಲ್ಲಿಂದ ವಸೂಲಿಯಾಗಲು ವಾರ ಕಾಯಬೇಕಲ್ಲ; ಲಾರಿಯಲ್ಲಾದರೆ ಬೆಲೆ ಹೆಚ್ಚಾದರೂ ನಾಲ್ಕೈದು ದಿವಸಕ್ಕೆ ಎಲ್ಲವೂ ಆಗುತ್ತದಲ್ಲ ಅನ್ನುತ್ತಿದ್ದರು. ಅದೇನು ಬದುಕಲು ಪುರುಸತ್ತಿಲ್ಲದವರ ಹಾಗೆ ವೇಳೆ ವೇಳೆ ಎಂದು ಸಾಯುತ್ತಾರೋ ಎಂದು ರಘುವೀರನಿಗೆ ಅನಿಸುತ್ತಿತ್ತು. ಕೊನೆಗೂ ಮಚವೆಯನ್ನು ದಂಡೆಗೆಳೆದು ಹಾಕಿದ ಮೇಲೆ ರಘುವೀರ ಹೊನ್ನಾವರದಲ್ಲೇ ಇರಬೇಕಾಯಿತು. ಮಳೆಗಾಲದಲ್ಲಿ ಊರಿಗೆ ಬಂದು ಇರುತ್ತಿದ್ದರೂ ಸದಾ ಅಲ್ಲಿರಬೇಕಾಗಿ ಬಂದಾಗ ಜನ ಬೇರೆಯದೇ ಥರ ಕಾಣತೊಡಗಿದರು. ಮೊದಲ ಕೆಲವು ದಿವಸ ಏನೂ ಮಾಡದೇ ಸುಮ್ಮನೇ ಮನೆಯಲ್ಲಿದ್ದ. ಆಮೇಲೆ ಅನಂತನ ಅಂಗಡಿಗೆ ಹೋಗಿ ಏನಾದರೂ ಕೆಲಸದಲ್ಲಿ ತೊಡಗತೊಡಗಿದ. ಬೇಸರವಾದರೆ ರಾಮತೀರ್ಥಕ್ಕೆ ಹೋಗಿ ಧಾರೆಯ ಕೆಳಗೆ ನಿಂತುಬಿಡುತ್ತಿದ್ದ. ನೆಲದ ಮೇಲೆ ಬದುಕಿಯೇ ಗೊತ್ತಿಲ್ಲದವನ ಹಾಗೆ ಏನೂ ತೋಚದೇ, ಸಮಯ ಸಾಗದೇ ನಿಂತುಬಿಟ್ಟಿದೆಯೇನೋ ಅನಿಸುತ್ತಿತ್ತು. “ನೀನು ಲಾರಿ ನೋಡಿಕೊಳ್ಳುವುದಾದರೆ ಒಂದು ಕೊಳ್ಳುವ ವಿಚಾರ ಮಾಡುವಾ” ಎಂಬ ಅನಂತನ ಸೂಚನೆಯನ್ನು ನಿರಾಕರಿಸಿಬಿಟ್ಟ. ಹಿಂದೆ ಹೊನ್ನಾವರದಿಂದ ಮಚವೆ ಹೋಗುವಾಗ “ರಘುವೀರ ನಮ್ಮ ಮಾಲು ಹಾಕಿದ್ದೇವಪ್ಪಾ…… ನೀನೇ ನೋಡಿಕೊಳ್ಳಬೇಕು……” ಎಂದು ಮಾತಾಡಿಸುತ್ತಿದ್ದ ಜನ, ಮುಂಬೈಯಲ್ಲಿ ಯಾರು ಯಾರಿಗೋ ತಲುಪಿಸಲು ಉಪ್ಪಿನಕಾಯಿ ಹಪ್ಪಳ ಕೊಟ್ಟು, ಅಲ್ಲಿಂದ ಬರುವಾಗ ತರುವ ಸಾಮಾನಿನ ಪಟ್ಟಿ ಕೊಟ್ಟು ‘ನಮ್ಮ ರಘುವೀರ’ ಎಂದು ಪುಸಲಾಯಿಸುತ್ತಿದ್ದ ಜನರ ಬಾಯಲ್ಲೇ ರಘುವೀರ ಯಾವುದಕ್ಕೂ ಪ್ರಯೋಜನವಿಲ್ಲದವನಾಗಿಬಿಟ್ಟ. ರಘುವೀರ ಊರಲ್ಲಿ ನೆಲೆಸಿದ ಆರು ತಿಂಗಳಲ್ಲಿ ಅನಂತ ಹೊಸ ಮನೆಯೊಂದನ್ನು ಕಟ್ಟಿಸುವ ಯೋಚನೆ ಮಾಡಿದ. ಅದುವರೆಗೂ ಇಡಿಯ ಕುಟುಂಬಕ್ಕೆ ಸೇರಿದ ಮನೆಯಲ್ಲಿ, ದಾಯಾದಿಗಳ ಇನ್ನಿತರ ಎರಡು ಸಂಸಾರಗಳ ಜೊತೆ ಇರುತ್ತಿದ್ದರು. ಅದು ಹಳೆಯ ದೊಡ್ಡ ಮನೆ. ರಘುವೀರನ ಅಪ್ಪನ ಕಾಲದಲ್ಲೇ ಪಾಲಾಗಿ ಪ್ರತ್ಯೇಕ ಮೂರು ಒಲೆಗಳು ಉರಿಯುತ್ತಿದ್ದವು. ಗೆರೆಯೆಳೆದು ಗೋಡೆಕಟ್ಟಿ ಪಾಲುಮಾಡಿಕೊಂಡಿರಲಿಲ್ಲವಾದ್ದರಿಂದ, ಬರೀ ಕೋಣೆಗಳನ್ನು ಹಂಚಿಕೊಂಡಿದ್ದರಿಂದ, ಒಬ್ಬರ ಜಾಗದಲ್ಲಿ ಇನ್ನೊಬ್ಬರು ಹಾದುಹೋಗಬೇಕಾದ ಅನಿವಾರ್ಯತೆಯಿಂದ ಪರಸ್ಪರ ಸೌಹಾರ್ದವಿನ್ನೂ ಸ್ವಲ್ಪಮಟ್ಟಿಗೆ ಉಳಿದುಕೊಂಡಿತ್ತು. ಅನಂತರ ಹೆಂಡತಿ ಪ್ರಭಾವತಿ ಮನೆಗೆ ಹಿರಿಯ ಸೊಸೆ. ಅವಳು ಜಾಣ್ಮೆಯಿಂದ ಯಾವ ಮುಖಾಮುಖಿಗೂ ಇಳಿಯದೇ ಸುಸೂತ್ರ ನಿರ್ವಹಿಸಿಕೊಂಡಿದ್ದಳು. ಅನಂತನಿಗೆ ಇಬ್ಬರು ಗಂಡುಮಕ್ಕಳು. ಮಕ್ಕಳು ಬೆಳೆಯುತ್ತಿದ್ದ ಹಾಗೆ, ಈಗ ರಘುವೀರನೂ ಇಲ್ಲಿಯೇ ಇರುವುದೆಂದಾದ ಮೇಲೆ ಜಾಗ ಸಾಲದು ಎಂದು ಹೊಸ ಮನೆಯ ಯೋಚನೆ ಮಾಡಿದ್ದ. ಜಾಗ ಕೊಂಡು ಆರು ತಿಂಗಳಿನಲ್ಲಿ ಮನೆಯೂ ತಯಾರಾಗಿ ಎಲ್ಲ ಅಲ್ಲಿಗೆ ಹೋದರು. ಆಗಲೇ ರಘುವೀರನ ಅಮ್ಮ ಮದುವೆಯಾಗೆಂದು ಅವನನ್ನು ಸತಾಯಿಸಲು ಸುರುಮಾಡಿದ್ದು. ತಾನೇ ಹಾಯಿ ಹರಿದ ಮಚವೆಯ ಹಾಗೆ ದಿಕ್ಕು ತೋಚದೆ ಇರುವಾಗ ಇನ್ನು ಈ ಸಂಸಾರದ ರಗಳೆ ಬೇಡವೆಂದುಕೊಂಡಿದ್ದ. ಅವನಿಗಾಗಲೇ ಮೂವತ್ತೈದು ವರ್ಷವಾಗಿತ್ತು. ಕೂದಲು ನೆರೆಯಲಾರಂಭಿಸಿದ್ದವು. ಮೋರೆಯ ಮೇಲೆ ಸದಾ ಕುರುಚಲು ಗಡ್ಡ. ಮಚವೆಯ ಮೇಲೆ ಯಾವುದೋ ಬಟ್ಟೆ ಹಾಕಿಕೊಂಡಿರುತ್ತಿದ್ದವನು ಈಗ ಪೈಜಾಮ ಅಂಗಿ ಹಾಕುತ್ತಿದ್ದ. ಸದಾ ತಾಯಿ ಅತ್ತೂ ಕರೆದು ಅನಂತನೂ ಒತ್ತಾಯಿಸಿದಾಗ ಯಾವುದೋ ಅಳಿಗೆಯಲ್ಲಿ ಮದುವೆಗೆ ಹೂಂ ಅಂದು ಬಿಟ್ಟಿದ್ದ. ಹಳದೀಪುರದ ಹುಡುಗಿ ಮಾಲಿನಿ ಸಿಕ್ಕಿದ್ದಳು. ಮೂವತ್ತೆರಡಾದರೂ ಮದುವೆಯಾಗದೇ ಉಳಿದವಳು. ಸಾಧಾರಣ ರೂಪ. “ಆ ರಘುವೀರನಾದರೂ ಏನು…… ವಯಸ್ಸಾಗಿದೆಯಲ್ಲ…… ಅಲ್ಲದೇ ಅವನದ್ದು ಅಂತ ಏನಿದೆ? ಎಲ್ಲ ಅಣ್ಣನದೇ ಕಾರುಬಾರು……” ಎಂದು ಜನ ಆಡಿಕೊಳ್ಳುತ್ತಿದ್ದರಿಂದ ಅವನಿಗೆ ಹೆಣ್ಣು ಕೊಡಲು ತಯಾರಾಗಿದ್ದವರೂ ಬಹಳ ಜನ ಇರಲಿಲ್ಲ. ಹಳದೀ ಪುರದಲ್ಲೇ ಮದುವೆಯೂ ಆಯಿತು. ಮಗನ ಮದುವೆಗೆ ಒಂದು ತಿಂಗಳಿರುವಾಗಲೇ ಮದುವೆ ಮದುವೆ ಎಂದು ಹಲುಬಿದ ಅವನ ಅಮ್ಮ ತೀರಿಕೊಂಡಳು. ಅದಾದ ನಂತರ ರಘುವೀರನ ಜೊತೆ ಅನಂತ ಪಾಲಿನ ಮಾತು ತೆಗೆದ. ಪಾಲಿನ ಮಾತು ತೆಗೆದದ್ದೇ ರಘುವೀರನಿಗೆ ಚಿಕ್ಕಪ್ಪ ಪಬ್ಬನ ನೆನಪಾಗಿ ಏನೂ ಬೇಡ ಅನಿಸಿಬಿಟ್ಟಿತು. “ನನಗೇನೂ ಆಸೆಯಿಲ್ಲ. ನೀನೇ ಎಲ್ಲ ಇಟ್ಟುಕೊ” ಅಂದ. ಅನಂತ “ಈಗ ಪಾಲಾಗುವುದೇ ಒಳ್ಳೆಯದು…… ಮುಂದೆ ನಿನ್ನ ಮಕ್ಕಳು ನನ್ನ ಮಕ್ಕಳು ಹೇಗೋ ಏನೋ…… ಅವರು ಜಗಳವಾಡಿ ಪಾಲು ಮಾಡಿಕೊಳ್ಳುವುದಕ್ಕಿಂತ ನಾವು ಚೆನ್ನಾಗಿರುವಾಗಲೇ ಪಾಲು ಮಾಡಿಕೊಳ್ಳುವುದು ಒಳ್ಳೆಯದು……” ಅಂದ. ಹದಿನಾರು ವರ್ಷಗಳ ಹಿಂದಿನ ಲೆಕ್ಕಾಚಾರ ಹಾಕುತ್ತ “ಅಪ್ಪ ಬಿಟ್ಟು ಹೋದ ಹಣ, ನಾವು ತಗೊಂಡ ಸಾಲ ಸೇರಿಸಿ ಮಚವೆ ಕೊಂಡೆವಲ್ಲ. ಅದು ನಿನ್ನದೇ. ಮಚವೆಯಿಂದ ಬಂದ ದುಡ್ಡಿನಲ್ಲಿ ಸಾಲ ತೀರಿಸಿ, ಅದರ ಖರ್ಚು ಕಳೆದು ಬಂದ ಲಾಭವೆಲ್ಲ ನಿನ್ನ ಹೆಸರಲ್ಲಿ ನಲವತ್ತು ಸಾವಿರ ಇದೆ. ಅಂಗಡಿ ನನ್ನ ಪಾಲಿನದು – ಅಂದುಕೊಂಡಿದ್ದೇನೆ. ಅದರಿಂದ ಬಂದದ್ದು ಸ್ವಯಾರ್ಜಿತ. ಹಳೆಯ ಮನೆಯಲ್ಲಿ ನನಗೆ ಪಾಲು ಬೇಡ…… ಅದು ನಿನಗೇ ಇರಲಿ. ನೀನೀಗ ಮದುವೆಯಾದ ಮೇಲೆ ನನ್ನ ಜೊತೆಯೇ ಇರಬಹುದು. ಆ ಮನೆಯ ಪಾಲು ಬೇಡವಾದರೆ ಅಲ್ಲಿರುವವರಿಗೇ ಅದನ್ನು ಮಾರಿ ದುಡ್ಡು ತಗೊಂಡುಬಿಡು…… ಇನ್ನು ಅಮ್ಮನ ಬಂಗಾರದಲ್ಲಿ ಅರ್ಧ ನನಗೆ ಅರ್ಧ ನಿನಗೆ…… ನೀನು ನನ್ನ ಜೊತೆ ಅಂಗಡಿಯಲ್ಲಿದ್ದರೆ ನನಗೂ ಸಹಾಯವಾಗುತ್ತದೆ…… ಮತ್ತೆ ಬೇರೆ ಮನೆ ಮಾಡಲು ಹೋಗಬೇಡ……” ಎಂದೆಲ್ಲ ಹೇಳಿದ. ರಘುವೀರ ಎಲ್ಲದಕ್ಕೂ ಹೂಂ ಹೂಂ ಅಂದ. ಇಷ್ಟೇ ಮಾತುಗಳಲ್ಲಿ ಪಾಲಾಗಿ ಹೋಯಿತು. ಅಮ್ಮನ ಬಂಗಾರದ ಪಾಲು ಕೊಟ್ಟು ಬ್ಯಾಂಕಲ್ಲಿ ಇಡು ಅಂದ. ಅದರಲ್ಲೇ ಒಂದಿಷ್ಟು ಮುರಿಸಿ ಮಾಲಿನಿಗೆ ಮದುವೆಯ ಆಭರಣ ಮಾಡಿಸಿದ್ದಾಯಿತು. +-೫- +ಪಬ್ಬ ಅಂದರೆ ರಘುವೀರನ ಚಿಕ್ಕಪ್ಪ. ಅವನ ಹೆಸರು ಪ್ರಭಾಕರ. ಸಣ್ಣ ಹುಡುಗರೂ ಅವನನ್ನು ಪಬ್ಬ ಅಂತಲೇ ಕರೆಯುವುದು. ರಘುವೀರನ ಅಪ್ಪನಿಗೆ ಮೂರು ಜನ ತಮ್ಮಂದಿರು. ಅವರ ಅಪ್ಪ ಬದುಕಿರುವವರೆಗೆ ಒಂದೇ ಮನೆಯಲ್ಲಿ ಒಂದೇ ಕುಟುಂಬವಾಗಿದ್ದರು. ಎಲ್ಲರೂ ಸೇರಿ ಅಂಗಡಿ ನಡೆಸುತ್ತಿದ್ದರು. ಉದ್ದೋ ಉದ್ದ ದೊಡ್ಡ ಅಂಗಡಿ. ಮೂವರು ಅಣ್ಣ ತಮ್ಮಂದಿರು ಅಂಗಡಿಯಲ್ಲಿ ದುಡಿಯುತ್ತಿದ್ದರು. ಪಬ್ಬ ಮಾತ್ರ ಎಂದೂ ಆ ಕಡೆ ಹಾದವನಲ್ಲ. ಅವನ ಪಾಡಿಗೆ ನಾಟಕ ಆಡಿಸಿಕೊಂಡು ಇದ್ದ. ಅವನಿಗೆ ಅದೇನೋ ನಾಟಕದ ಹುಚ್ಚು. ಊರಲ್ಲಿ ಒಂದಿಷ್ಟು ಹುಡುಗರನ್ನು ಕಟ್ಟಿ ನಾಟಕ ಆಡಿಸಿದ. ಕೆಲವೊಮ್ಮೆ ಹುಬ್ಬಳ್ಳಿಯಿಂದ ಜನ ಕರೆಸಿ ನಾಟಕ ಆಡಿಸುತ್ತಿದ್ದ. ಸ್ವತಃ ಅಭಿನಯಿಸುತ್ತಿದ್ದ. ಅವನು ಆಡಿಸಿದ ನಾಟಕ ನೋಡಿ ಏಣಿಗಿ ಕಂಪನಿಯವರೇ ಬೆರಗಾಗಿದ್ದರಂತೆ. ಅವನ ಪಾತ್ರ ನೋಡಿ ಏಣಿಗಿ ಬಾಳಪ್ಪನವರು ಬಕ್ಷೀಸು ಕೊಟ್ಟಿದ್ದರಂತೆ – ಹೀಗೆಲ್ಲ ಅವನ ಬಗ್ಗೆ ಕತೆಗಳು. ವಯಸ್ಸು ಮೀರಿ ಹೋಗಿದ್ದರೂ ಮದುವೆಯಾಗದೇ ಉಳಿದಿದ್ದ. ಪಬ್ಬ ಇಲ್ಲದೇ ಇದ್ದರೆ ಮನೆಯ ಹೆಂಗಸರಿಗೆ ಕೈ ಮುರಿದ ಹಾಗಾಗುತ್ತಿತ್ತು. ಕಿರಾಣಿ ಸಾಮಾನು ತರಕಾರಿ ತೆಂಗಿನಕಾಯಿ ಎಲ್ಲ ಅವನೇ ನೋಡಿಕೊಳ್ಳುವುದು. ಬೆಳಿಗ್ಗೆ ಬೇಗನೇ ಎದ್ದು ಹಿತ್ತಲಲ್ಲಿ ಪುರುಳೆ ಆರಿಸಿ ಬಚ್ಚಲ ಒಲೆ ಹತ್ತಿಸುವುದು. ಬೆಳಗಿನ ಕೆಲಸ ಮುಗಿಸಿ ಗಂಜಿ ಉಂಡು ಅವನು ತನ್ನ ನಾಯಕದ ಕೆಲಸಕ್ಕೆ ಹೊರಟುಬಿಡುತ್ತಿದ್ದ. ಚೌತಿ ಹಬ್ಬಕ್ಕೆ ಎಲ್ಲ ತಯಾರಿಯೂ ಅವನದೇ. ಫಲಾವಳಿ ಕಟ್ಟಲು ಎಲ್ಲೆಂಲ್ಲಿಂದಲೋ ಅಪರೂಪದ ಹಣ್ಣು ತರಕಾರಿ ತರುತ್ತಿದ್ದ. ಮಂಟಪದ ಅಲಂಕಾರ ಅವನದೇ. ಅಣ್ಣಂದಿರು ಯಾರೂ ಅವನನ್ನು ಅಂಗಡಿ ಕೆಲಸಕ್ಕೂ ಎಳೆದಿರಲಿಲ್ಲ. ಅವನು ಏನಾದರೂ ಮಾಡಬೇಕು ಎಂದು ಅವರಿಗೆ ಒಳಗೊಳಗೇ ಅನಿಸಿದ್ದರೂ ನಾಟಕದ ಚಟ ಹತ್ತಿಸಿಕೊಂಡರೂ ಮನೆಯ ವ್ಯವಹಾರವಾದರೂ ನೋಡಿಕೊಂಡು ಇದ್ದಾನಲ್ಲ ಎಂದು ಸುಮ್ಮನಿದ್ದರು. ಮಕ್ಕಳಿಗೆಲ್ಲ ಪಬ್ಬ ಎಂದರೆ ಪ್ರಾಣ. ಅವರಿಗೆ ಅವನ ಬಣ್ಣದ ಬೇಗಡೆಯಿಂದ ಕಿರೀಟ ಗಿರೀಟ ಮಾಡಿಕೊಟ್ಟು ಬೇರೆಯದೇ ಲೋಕಕ್ಕೆ ಒಯ್ಯುತ್ತಿದ್ದ. ಆಸುಪಾಸಿನಲ್ಲೆಲ್ಲ ಅವನ ನಾಟಕದ ಖ್ಯಾತಿ ಹರಡಿತ್ತು. ಬೇರೆ ಊರಲ್ಲಿ ನಾನು ಹೊನ್ನಾವರದವನು ಅಂದರೆ ನಿಮಗೆ ಪಬ್ಬ ಗೊತ್ತೋ? ಅನ್ನುವಷ್ಟರವರೆಗೆ ಅವನು ಹೆಸರು ಮಾಡಿದ್ದ. ಅಪ್ಪ ಬದುಕಿರುವವರೆಗೂ ಒಟ್ಟಿಗೇ ಇದ್ದ ಅಣ್ಣ ತಮ್ಮಂದಿರು ಅವನು ತೀರಿಕೊಂಡ ಆರು ತಿಂಗಳಿಗೇ ಪಾಲಿಗೆ ಕೂತರು. ಆಗ ರಘುವೀರನಿಗೆ ಎಂಟು ವರ್ಷ. ಎರಡು ಮೂರು ದಿನ ಸತತ ಜಗಳವಾಗಿದ್ದೊಂದೇ ನೆನಪು. ಆಮೇಲೆ ನಡೆದ ಪಾಲಿನ ಪ್ರಸಂಗ, ಬೇಡ ಬೇಡವೆಂದರೂ ಪಬ್ಬನನ್ನೂ ಕೂರಿಸಿಕೊಂಡದ್ದು, ಅವನು ನಡುವೆ ಎದ್ದು ಹೋದದ್ದು ಕಣ್ಣಿಗೆ ಕಟ್ಟಿದ ಹಾಗಿದೆ. ಪಾತ್ರೆ ತಪ್ಪಲೆ ತಾಟು ಸೌಟು ಹಂಡೆ ತಂಬಿಗೆ ಮಂಚ ಹಾಸಿಗೆಗಳೂ ನಾಲ್ಕು ಭಾಗವಾಗಿ ಹೋದವು. ಮನೆಯ ಬಂಗಾರವನ್ನೆಲ್ಲ ಆಭರಣಗಳನ್ನೆಲ್ಲ ಅದು ಬರೀ ಲೋಹವೆಂಬಂತೆ ಗುಪ್ಪೆ ಮಾಡಿ ವಸ್ತದಲ್ಲಿ ಕಟ್ಟಿ ಒಬ್ಬೊಬ್ಬರು ಒಂದೊಂದು ಗಂಟು ಎತ್ತಿಕೊಂಡರು. ಆ ವಯಸ್ಸಿನಲ್ಲಿ ಪಾಲಿನ ಅರ್ಥ ಸ್ಪಷ್ಟವಾಗಿ ತಿಳಿದಿರದಿದ್ದರೂ ರಘುವೀರನ ಮನಸ್ಸಿನಲ್ಲಿ ಹಲವು ಚಿತ್ರಗಳು ನಿಚ್ಚಳವಾಗಿ ಒತ್ತಿನಿಂತವು: ಒಟ್ಟಿಗೇ ಊಟಕ್ಕೆ ಕೂರುತ್ತಿದ್ದ ಹುಡುಗರು ಬೇರೆ ಬೇರೆ ಅಡಿಗೆ ಮನೆಗಳಲ್ಲಿ ಕೂತು ಉಣ್ಣತೊಡಗಿದರು. ಬಚ್ಚಲಲ್ಲಿ ಹಳೆ ತಂಬಿಗೆಯಿತ್ತು, ಆದರೆ ಹಂಡೆ ಹೊಸದು ಬಂದಿತ್ತು. ಅಪ್ಪ ಯಾವಾಗಲೂ ಉಪಯೋಗಿಸುತ್ತಿದ್ದ ನೀರು ಕುಡಿಯುವ ತಂಬಿಗೆಯ ಬದಲು ಬೇರೊಂದು ಬಳಸತೊಡಗಿದ. ಪಬ್ಬ ಮಲಗುತ್ತಿದ್ದ ಚಿತ್ತಾರದ ಮಂಚ ಅಪ್ಪನ ಕೋಣೆಗೆ ಬಂದಿತ್ತು. ಮೊದಲು ಯಾರು ಮಕ್ಕಳಿಗೆ ಏನು ತಂದರೂ ಎಲ್ಲರಿಗೂ ತರುತ್ತಿದ್ದರು. ಈಗ ಅವರವರ ಅಪ್ಪಂದಿರು ಅವರವರ ಮಕ್ಕಳಿಗೆ ಮಾತ್ರ ತರತೊಡಗಿದರು. ಆಡಿ ಓಡಿ ಬೆಳೆದ ಜಾಗ, ಮಲಗುವ ಮಂಚ, ಹಾಸಿಗೆ, ಊಟದ ತಟ್ಟೆಗಳೆಲ್ಲ ಯಾರು ಯಾರದೋ ಪಾಲಿಗೆ ಹೋಗಿ ಹಂಡೆಯಿದ್ದರೆ ತಂಬಿಗೆಯಿಲ್ಲ, ಕಾವಲಿಯಿದ್ದರೆ ದೋಸೆ ಕೈಯಿಲ್ಲ ಹೀಗೆಲ್ಲ ಆಗಿ ಪಾಲಿಗೆ ಬಾರೆದೇ ಇದ್ದದ್ದನ್ನು ಹೊಸತಾಗಿ ಕೊಂಡು ಅವು ಹಳೆಯದರ ಜೊತೆ ಸೇರದೇ ಎದ್ದು ಕಾಣುವಂತಾಗಿ ಪಾಲಿನ ಛಾಯೆ ಎಲ್ಲೆಲ್ಲೂ ಕಾಣುವಂತಾಗಿತ್ತು. ತನ್ನ ಪಾಲಿಗೆ ಬಂದ ಅಂಗಡಿಯ ಭಾಗದಲ್ಲಿ ರಘುವೀರನ ಅಪ್ಪ ಅಡಿಕೆ ದಲಾಲಿ ವ್ಯಾಪಾರ ಸುರುಮಾಡಿದ. ಉಳಿದವರೂ ತಮ್ಮ ತಮ್ಮದೇ ದಂಧೆ ಆರಂಭಿಸಿದರು. ಪಬ್ಬನೂ ಈಗ ಏನಾದರೂ ಮಾಡಬೇಕಿತ್ತು. ಅವರವರ ಮನೆ ಸಾಮಾನು ತರಕಾರಿ ಅವರವರೇ ತರುತ್ತಿದ್ದುದರಿಂದ ಪಬ್ಬ ಮನೆಯಲ್ಲೂ ಪ್ರಯೋಜನವಿಲ್ಲದವನಾದ. ಅವನ ಪಾಲು ಕೊಟ್ಟದ್ದೇ ತಮ್ಮ ಜವಾಬ್ದಾರಿ ತೀರಿತು ಎಂದು ಎಲ್ಲರೂ ಭಾವಿಸಿಕೊಂಡಂತಿತ್ತು. ನಾಟಕದ ಹೊರತು ಯಾವ ವ್ಯವಹಾರವನ್ನೂ ಅವನು ಮಾಡಲಾರದವನಾಗಿದ್ದ. ಒಂದು ವರ್ಷ ಸುಮ್ಮನೇ ಮಂಕಾಗಿ ಊರಲ್ಲಿದ್ದ. ನಾಟಕ ಆಡಿಸಲಿಲ್ಲ. ಏನೋ ಕಳಕೊಂಡವನ ಹಾಗಿದ್ದ. ಕೆಲವೊಮ್ಮೆ ಮನೆಗೆ ಬಂದು ಯಾರದೋ ಅಡಿಗೆ ಮನೆಯಲ್ಲಿ ಕೂತು ಊಟ ಮಾಡಿ ಹೋಗುತ್ತಿದ್ದ. ಒಂದು ಬೆಳಿಗ್ಗೆ ಯಾರಿಗೂ ಹೇಳದೆ ನಾಪತ್ತೆಯಾದ. ಅವನನ್ನು ಹುಡುಕಿಸಲು ಅಣ್ಣ ತಮ್ಮಂದಿರೂ ಹೆಚ್ಚು ಪ್ರಯತ್ನಿಸಲಿಲ್ಲ. ಯಾವುದೋ ಕಂಪನಿಯ ಹಿಂದೆ ಹೋಗಿರಬೇಕು ಬರುತ್ತಾನೆ ಅಂದುಕೊಂಡರು. ಅವನನ್ನು ಪುಣೆಯಲ್ಲಿ ನೋಡಿದ ಹಾಗಾಯಿತು ಎಂದು ಯಾರೋ ಹೇಳಿದ ವರ್ತಮಾನವೇ ಅವನ ಬಗ್ಗೆ ಕೇಳಿದ ಕೊನೆಯ ಸುದ್ದಿ. ಪಬ್ಬ ರಘುವೀರನ ಜೀವನದುದ್ದಕ್ಕೂ ಕಾಡುತ್ತಲೇ ಇದ್ದ. ಪಬ್ಬನಿಗೆ ರಘುವೀರನ ಮೇಲಿದ್ದ ವಿಶೇಷ ಪ್ರೀತಿಯ ಕಾರಣ ಮಾತ್ರವಲ್ಲದೇ ಅಣ್ಣಂದಿರೆಲ್ಲ ಅವನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಅನಿಸುತ್ತಿತ್ತು. ಪಬ್ಬನ ಶಿಶ್ಯ ಶ್ರೀನಿವಾಸ ಮುಂಬೈ ಸೇರಿ ಸಿನೇಮಾದಲ್ಲಿ ಬಹಳ ಹೆಸರು ಮಾಡಿದ್ದಾನೆಂಬ ಸುದ್ದಿ ಕೇಳಿದಾಗಂತೂ ರಘುವೀರನಿಗೆ ಪಬ್ಬನೂ ದೊಡ್ಡ ವ್ಯಕ್ತಿಯಾಗುತ್ತಿದ್ದ ಅವನನ್ನು ಈ ಮನೆಯ ಪಾಲಿನ ವ್ಯವಹಾರವೇ ಕೆಡಿಸಿತು ಎಂದನ್ನಿಸಿತ್ತು. ಸಹಕುಟುಂಬದಲ್ಲಿ ಪಬ್ಬ ತನ್ನದೇ ರೀತಿಯಲ್ಲಿ ಕುಟುಂಬದ ಕೆಲವು ಅಗತ್ಯಗಳನ್ನಾದರೂ ಪೂರೈಸಿ ಸಲ್ಲುತ್ತಿದ್ದ. ಅವನ ಮೇಲೆ ಸಲ್ಲದ ಜವಾಬ್ದಾರಿಯ ನೊಗ ಹೊರಿಸಿದ್ದೇ ತಪ್ಪಾಯಿತೇನೋ ಅನಿಸಿತ್ತು…… +-೬- +ಮದುವೆಯ ನಂತರ ರಘುವೀರನ ಸಂಸಾರ ಜೀವನವೂ ಅನಂತನ ಮನೆಯಲ್ಲೇ ಆರಂಭವಾಯಿತು. ಆರುತಿಂಗಳಲ್ಲೇ ಮಾಲಿನಿ ಸಣ್ಣಪುಟ್ಟ ರಸಕಸಿ ಸುರುಮಾಡಿದ್ದಳು. ತನ್ನ ಗಂಡ ಅಂಗಡಿಯಲ್ಲಿ ದುಡಿಯುವುದು ಬರೀ ಈ ಊಟದ ಸಲುವಾಗಿ ಮಾತ್ರವೇ? ಅವನಿಗೆ ಲಾಭದಲ್ಲಿ ಎನು ಪಾಲುಂಟು? ಎಂದೆಲ್ಲಾ ಗಂಡನ ಬಳಿ ಕಿರಿಕಿರಿ ಮಾಡತೊಡಗಿದಳು. ಏನು ಬೇಕಾದರೂ ಅನಂತನನ್ನು ಯಾಕೆ ಕೇಳಬೇಕು? ಅನಂತನ ಮಕ್ಕಳು ಅದೆಷ್ಟು ದುಂದುವೆಚ್ಚ ಮಾಡುತ್ತಿಲ್ಲ? ಇತ್ಯಾದಿ ಕೇಳತೊಡಗಿದಳು. ಯಾರು ಏನೇ ಸಹಜವಾಗಿ ಅಂದರೂ ಹಂಗಿನ ಅನ್ನದ ಕಾರಣ ಮನಸ್ಸಲ್ಲಿಟ್ಟುಕೊಂಡೇ ಹೇಳುತ್ತಿದ್ದಾರೆ ಎಂದು ಭಾವಿಸಿದಳು. ಅವಳಿಗೊಂದು ಮಗುವಾಗಿ ಮಗುವಿಗೆ ವರ್ಷ ತುಂಬುವ ವೇಳೆಗೆ ಬೇರೆ ಮನೆ ಮಾಡಬೇಕೆಂದು ಪಟ್ಟು ಹಿಡಿದಳು. ಹಬ್ಬಗಳಲ್ಲೆಲ್ಲ ಅನಂತನೇ ಯಾಕೆ ಸೀರೆ ಬಟ್ಟೆ ತರಬೇಕು? ತನಗೆ ಬೇಕಾದ್ದನ್ನು ಗಂಡನಿಂದಲೇ ಪಡೆಯಬೇಕೆಂಬ ಸಹಜ ಹಮ್ಮು – ಎಲ್ಲ ಸೇರಿಕೊಂಡು ಮನಸ್ಸು ಕಹಿ ಮಾಡಿಕೊಂಡಳು. ಒಟ್ಟಾಗಿ ಇರುವ ಕುಟುಂಬದ ಸಂಗತಿಗಳು ಬೇರೆಯಾಗಿರುತ್ತವೆ ಎಂದು ರಘುವೀರ ಹೇಳಹೊರಟರೆ ಅದು ಕೈಲಾಗದವನ ಮಾತಾಗಿ ಕಾಣಿಸಿತು. ನಮಗೇತಕ್ಕೂ ಕಮ್ಮಿಯಿಲ್ಲವಲ್ಲ ಎಂದವನು ಹೇಳಿದರೆ ಅದು ಭಿಕ್ಷೆಯ ಅನ್ನ ಅಂದಳು. ಅಂತೂ ಕೊನೆಗೆ ರಘುವೀರನ ಸಂಸಾರ ಹಳೆಯ ಮನೆಗೆ ಹೋಗುವುದೆಂದಾಯಿತು. ತನ್ನದು ತನ್ನ ಸ್ವಂತದ್ದು ಎಂದವಳು ಒದ್ದಾಡುವ ರೀತಿಗಳೇ ರಘುವೀರನಿಗೆ ಅರ್ಥವಾಗುತ್ತಿರಲಿಲ್ಲ. ಹಳೆಯ ಮನೆಗೆ ಹೋಗುವಾಗ ಇಲ್ಲಿಂದಲೇ ಹಕ್ಕಿನಿಂದಲೆಂಬಂತೆ ಪಾತ್ರೆ ಬಟ್ಟೆ ಹಾಸಿಗೆ ಹೊತ್ತೊಯ್ದಳು. ಅನಂತನಾಗಲೀ ಪ್ರಭಾವತಿಯಾಗಲೀ ಒಂದು ಮಾತಾಡಲಿಲ್ಲ. ಅವರು ಸಮಾಧಾನದಿಂದ ನಡೆದುಕೊಂಡಷ್ಟೂ ಅದು ದಯೆಯ ಹಾಗೆ ಕಂಡು ಇನ್ನಷ್ಟು ಕನಲಿದಳು. ಬೇರೆ ಮನೆ ಮಾಡಿದ ನಂತರವೂ ರಘುವೀರ ಅನಂತನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ. ಗಲ್ಲದ ಮೇಲೆ ಕೂರುವುದರಿಂದ ಹಿಡಿದು ಸಾಮಾನು ಕಟ್ಟಿಕೊಡುವುದರವರೆಗೆ ಇದು ಅಂತ ನಿರ್ದಿಷ್ಟ ಕೆಲಸವಿಲ್ಲದೇ ಏನನ್ನಾದರೂ ಮಾಡುತ್ತಿದ್ದ. ಎರಡು ಮನೆಗೂ ಅಗತ್ಯವಿರುವ ತರಕಾರಿ ಮೀನು ಕಿರಾಣಿ ಸಾಮಾನು ರಘುವೀರನೇ ಒಯ್ದು ಹಾಕುತ್ತಿದ್ದ. ಅನಂತ ತಮ್ಮನ ಜೊತೆ ಮನಸ್ಸು ಮುರಿದುಕೊಳ್ಳದೇ ಎರಡೂ ಸಂಸಾರ ನಡೆಸುವುದು ತನ್ನ ಜಾವಾಬ್ದಾರಿಯಂತೆ ಒಂದು ಮಾತು ಹೇಳದೇ ಅಗತ್ಯದ ದುಡ್ಡು ತೆಗೆದುಕೊಡುತ್ತಿದ್ದ. ಎಷ್ಟೋ ಸಲ ಬೇಕಿಲ್ಲದಿದ್ದರೂ ಛಲಕ್ಕೆ ಬಿದ್ದವಳ ಹಾಗೆ ಮಾಲಿನಿ ಹೆಚ್ಚು ಹೆಚ್ಚು ಸಾಮಾನು ತರಿಸಿ ಇಡುತ್ತಿದ್ದಳು. ನೀವೇ ಒಂದು ಅಂಗಡಿ ಹಾಕಿ ಎಂದು ಗಂಡನಿಗೆ ದುಂಬಾಲು ಬಿದ್ದಳು. ಅವರ ಅಂಗಡಿಯಲ್ಲಿ ಸಾಯುವ ಹಾಗೆ ದುಡಿಯುವುದು ಯಾಕೆ, ಅದರ ಬದಲಿಗೆ ನಾವೇ ಒಂದು ಅಂಗಡಿ ಮಾಡೋಣ ಎಂದವಳ ವಾದ. ರಘುವೀರನಿಗೆ ಅದರಲ್ಲಿ ಚೂರೂ ಆಸಕ್ತಿಯಿರಲಿಲ್ಲ. “ನಿಮಗೇನೂ ಸಾಧಿಸುವ ಛಲವಿಲ್ಲ. ಏನಾದರೂ ಆಗಬೇಕೆನ್ನುವ ಹಟವಿಲ್ಲ…. ಆ ಮಚವೆಯ ಮೇಲೆ ಅಷ್ಟು ವರ್ಷ ಇದ್ದಿರಲ್ಲ ಏನು ಮಾಡಿದಿರಿ? ಅದರ ಬದಲಿಗೆ ಒಂದು ಸಣ್ಣ ಅಂಗಡಿ ಹಾಕಿ ಕೂತಿದ್ದರೂ ಅದರ ಹತ್ತುಪಟ್ಟು ಗಳಿಸಬಹುದಿತ್ತು…… ನಿಮ್ಮನ್ನು ದೂರ ಇಡುವುದಕ್ಕಾಗಿಯೇ ನಿಮ್ಮನ್ನು ಅಣ್ಣ ಅದರ ಮೇಲೆ ಕಳಿಸಿ ಬಿಟ್ಟಿದ್ದು…… ” ಎಂದೆಲ್ಲ ಆಡಿ ರಘುವೀರ ತಾಳ್ಮೆಗೆಡುವ ಹಾಗೆ ಮಾಡುತ್ತಿದ್ದಳು. ಇವರೆಲ್ಲ ಯಾಕೆ ಪ್ರತಿಯೊಬ್ಬರೂ ಏನನ್ನಾದರೂ ಸಾಧಿಸಲೇಬೇಕೆಂದು ಅಂದುಕೊಳ್ಳುತ್ತಾರೋ ಎಂದು ರಘುವೀರನಿಗೆ ಅನಿಸುತ್ತಿತ್ತು. ಎಲ್ಲರನ್ನೂ ಬದಿಗೆ ಒತ್ತಿ ಮುನ್ನುಗ್ಗುವುದೇ ಸಫಲ ಜೀವನದ ಲಕ್ಷಣವೆಂದು ಯಾಕೆ ತಿಳಿದುಕೊಂಡಿದ್ದಾರೋ, ದುಡ್ಡು ಹುಟ್ಟದ ಯಾವ ಕೆಲಸವೂ ಪ್ರಯೋಜನವಿಲ್ಲದ್ದೆಂದು ಯಾಕೆ ತಿಳಕೊಂಡಿದ್ದಾರೋ ಎಂದನಿಸುತ್ತಿತ್ತು. ಅವನಿದನ್ನು ಹೇಳಲು ಹೊರಟರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಮಚವೆಯಲ್ಲಿ ತಿರುಗಾಡಿದ ದಿವಸಗಳಲ್ಲಿ ಮನಸ್ಸಿಗೆ ದೊರೆತ ಸುಖ ಸಮಾಧಾನಗಳ ಅರ್ಥ, ಅಲ್ಲಿ ತಾನು ಸಾಧಿಸಿದ್ದು, ಅರಿತದ್ದು, ಬೆಳೆದದ್ದು ಯಾರಿಗೂ ತಿಳಿಸಲಾಗದ ಹಾಗೆ ಅನಿಸುತ್ತಿತ್ತು. ಸಾಧನೆಯ ಹಾದಿ ಲೌಕಿಕದ್ದೇ ಆಗಿರಬೇಕೆಂಬ ಅಪೇಕ್ಷೆ ಎಲ್ಲರಿಗೂ. ಎಲ್ಲಿ ಹೋದರೂ ಏನೋ ಒಂದು ವ್ಯವಹಾರದ ಮಾತಿನಲ್ಲೇ ಮುಳುಗಿರುತ್ತಿದ್ದರು – ಕಂಪನಿಯ ಶೇರುಗಳು, ಲಾರಿ ವ್ಯಾಪಾರ, ಅಡಿಕೆ ದರ, ಯಾವುದೋ ಕಂಪನಿಯ ಏಜನ್ಸಿ ಇದೇ ಮಾತುಗಳು. ಐದೇ ನಿಮಿಷಗಳಲ್ಲಿ ಅವರ ಜೊತೆ ಮಾತಾಡಬಹುದಾದ ವಿಷಯಗಳೆಲ್ಲ ಮುಗಿದು ಹೋಗುತ್ತಿದ್ದವು. +-೭- +ಮದುವೆಯಾದ ಹತ್ತು ವರ್ಷಗಳ ನಂತರವೂ ಏನೂ ಬದಲಾಗದೇ ಉಳಿದ ಹಾಗೆ ಮಾಲಿನಿ ಗಂಡನನ್ನು ಸತಾಯಿಸುತ್ತ ಅವನು ಈಗಲಾದರೂ ಸ್ವಂತ ದಂಧೆ ಸುರುಮಾಡಬೇಕೆಂದು ಒತ್ತಾಯಿಸುತ್ತಲೇ ಇದ್ದಳು. ಇದೇ ಕಾರಣಕ್ಕೆ ಗಂಡಹೆಂಡಿರ ನಡುವೆ ಯಾವಾಗಲೂ ಮಾತುಗಳ ಹಣಾಹಣಿ ನಡೆಯುತ್ತಿತ್ತು. ಈ ವರ್ಷಗಳಲ್ಲಿ ಅವರ ನಡುವಿನ ದೈಹಿಕ ಸಂಯೋಗದ ಕ್ಷಣಗಳೂ ಊಟ ನಿತ್ಯಕ್ರಮದ ಹಾಗೆ ಜರುಗುತ್ತಿದ್ದವು. ಆ ಕ್ಷಣದ ಉತ್ಕಟತೆಗೂ ದೈನಿಕಕ್ಕೂ ಸಂಬಂಧವಿಲ್ಲದವರ ಹಾಗೆ ಮಾತುಗಳ ಯುದ್ಧದಲ್ಲಿ ಒಬ್ಬರನ್ನೊಬ್ಬರು ಅಂದುಕೊಳ್ಳುತ್ತ ಒಬ್ಬರನ್ನೊಬ್ಬರು ಬದಲಾಯಿಸಲು ಸಾಧ್ಯವಿಲ್ಲವೆಂದುಕೊಳ್ಳುತ್ತ ಹತಾಶರಾಗುತ್ತಿದ್ದರು. ಹಿಂದೆ ಆದ ಪಾಲಿನ ವಿಷಯ ಎತ್ತಿ ಮಾಲಿನಿ, ಅದು ಸರಿಯಾಗಿ ಆಗಿರಲಿಕ್ಕಿಲ್ಲ, ನಿಮಗೆ ಅವರು ಲೆಕ್ಕಪತ್ರ ತೋರಿಸಿದ್ದರೇ? ಎಷ್ಟು ದುಡ್ಡು ಎತ್ತಿ ಹಾಕಿದ್ದಾರೋ, ನೀವು ಆ ವಿಷಯ ಮತ್ತೆ ಎತ್ತಬಾರದು ಅಂತಲೇ ಈಗ ಅತೀ ಒಳ್ಳೆಯವರ ಹಾಗೆ ಕೇಳಿದ್ದು ಕೊಡುವ ನಾಟಕ ಆಡುತ್ತಿದ್ದಾರೆ, ಎಂದು ಒಂದೇ ಸಮನೆ ಅನ್ನುತ್ತಿದ್ದಳು. ಹೆಂಡತಿಯ ಬಾಯಿ ಮುಚ್ಚಿಸುವ ಯಾವ ಆಯುಧವೂ ತನ್ನಲ್ಲಿಲ್ಲದ ಹಾಗೆ ಅನಿಸುತ್ತಿತ್ತು. ಇತ್ತೀಚೆಗೆ ಎರಡು ದಿವಸಗಳ ಹಿಂದೆ ಯಾರೋ ಬಂದು ಮಾಲಿನಿಗೆ “ನಿನ್ನ ಅತ್ತೆಯದೊಂದು ಅರವತ್ತು ಪವನಿನ ಸರವಿತ್ತಲ್ಲ…… ಅದು ಯಾರ ಪಾಲಿಗೆ ಹೋಯಿತು? ಪವನುಗಳನ್ನು ಅರ್ಧರ್ಧ ಹಂಚಿಕೊಂಡಿರಬೇಕಲ್ಲವೇ……?” ಎಂದು ಚಾಡಿ ಹೇಳಿ ಚಿಚ್ಚಿಕೊಟ್ಟು ಹೋಗಿದ್ದರು. ಅದನ್ನೇ ಹಿಡಕೊಂಡು ಮಾಲಿನಿ ಈ ಎರಡು ದಿನದಿಂದ ರಘುವೀರನ ಪ್ರಾಣ ಹಿಂಡುತ್ತಿದ್ದಳು. “ಪಾಲು ಸರಿಯಾಗಿ ಆಗಿದೆ ಅದು ಅಣ್ಣನ ಪಾಲಿನದು” ಎಂದು ರಘುವೀರ ಜಾರಿಕೊಳ್ಳಲು ನೋಡಿದ. ಮಾಲಿನಿ ಪ್ರಭಾವತಿಯ ಬಳಿ ಹೋಗಿ ಉಪಾಯವಾಗಿ ಮಾತಾಡಿ ಆ ಸರದ ಸುದ್ದಿ ತೆಗೆಯಲು ನೋಡಿದಳು. ಪ್ರಭಾವತಿ ಸರವಿದ್ದ ಸಂಗತಿ ಎತ್ತಲೇ ಇಲ್ಲ. ಇದರಿಂದಾಗಿ ಇನ್ನೂ ಸಂಶಯ ಹೆಚ್ಚಿ ಮಾಲಿನಿ ರಘುವೀರನ ಬೆನ್ನು ಬಿದ್ದು ಅನಂತನ ಜೊತೆ ಆ ಸರದ ವಿಷಯ ಇತ್ಯರ್ಥವಾಗಲೇಬೇಕೆಂದು ಕೂತಳು. ಹಿಂದಿನ ರಾತ್ರಿ ನಡೆದ ಜಗಳದಲ್ಲಂತೂ ಮಾಲಿನಿ ಬರೀ ಸರದ ವಿಷಯ ಮಾತ್ರವಲ್ಲ ಅಂಗಡಿಯ ಜಾಗದಲ್ಲೂ ಪಾಲು ಕೇಳಿ ಎಂದು ಸುರು ಮಾಡಿದಳು. “ಅಂಗಡಿ ಅವನದು ಮಚವೆ ನನ್ನದು” ಎಂದು ರಘುವೀರ ಹೇಳಿದಾಗಲಂತೂ “ಈಗ ಆ ಮಚವೆಯಲ್ಲೇ ಕೂರಿ…… ಹೊಟ್ಟೆ ತುಂಬುತ್ತದೋ ನೋಡುವಾ…… ಆಹಾಹಾ ಎಷ್ಟು ಚೆನ್ನಾಗಿ ಪಾಲು ಮಾಡಿದ್ದಾರೆ. ಅಂಗಡಿ ಅದರ ಜಾಗ ಎಲ್ಲ ತನಗೇ ಇಟ್ಟುಕೊಂಡು ಹಾಳಾಗಿಹೋದ ಆ ಮಚವೆ ನಿಮಗೆ ಕೊಟ್ಟಿದ್ದಾರೆ…… ಎಷ್ಟು ದೊಡ್ಡ ಮನುಷ್ಯರು…… ಹೋಗಿ ಅವರ ಕಾಲಿಗೆ ಬೀಳುವಾ……” ಎಂದು ತಿವಿದಳು. ಕೊನೆಗೆ ಬೇರೇನಿಲ್ಲದಿದ್ದರೂ ರಘುವೀರ ಆ ಸರದ ವಿಷಯವನ್ನಾದರೂ ಎತ್ತಬೇಕು ಎಂದು ಪಟ್ಟು ಹಿಡಿದಳು. “ನಾಳೆಯೇ ಹೋಗಿ ಮಾತಾಡಿಕೊಂಡು ಬನ್ನಿ…… ಕಮ್ಮಿ ಬಂಗರ ಅಲ್ಲ ಅದು…… ನಮ್ಮ ಮಕ್ಕಳೂ ಮುಂದೆ ಏನಾದರೂ ಮಾಡಬೇಕು…… ಇಲ್ಲಾ ಬೇಡವೇ ಬೇಡ, ನಮ್ಮ ಮಕ್ಕಳನ್ನೂ ಅವರ ಅಂಗಡಿಯಲ್ಲಿ ಆಳಿನ ಕೆಲಸಕ್ಕೆ ಸೇರಿಸುವುದಾದರೆ ಏನೂ ಮಾಡಬೇಡಿ……” ಎಂದೆಲ್ಲ ಅಂದಳು. ಕೊನೆಯಲ್ಲಿ ಏನೊಂದೂ ಇತ್ಯರ್ಥವಾಗದೇ ಉಳಿದರೂ ತನ್ನದೇ ಕೊನೆಯ ಮಾತೆಂಬಂತೆ ರಘುವೀರ ಮಾರನೇ ದಿನವೇ ಕೇಳಬೇಕು ಎಂದು ನೂರು ಸಲ ಸಾರಿ ಹೇಳಿದ್ದಳು. ಹೆಂಡತಿಯ ಮಾತುಗಳನ್ನೇ ಧೇನಿಸುತ್ತ ಬಂದರಿನ ಮೇಲೆ ಸುಮ್ಮನೆ ನಡೆಯುತ್ತ ರಘುವೀರನಿಗೆ ಈ ಅಶಾಂತಿಗೆ ಕೊನೆಯಿಲ್ಲ ಅನಿಸಿತು. ಮಚವೆಯಲ್ಲಿ ತೊಡಗಿಸಿಕೊಂಡ ಹಾಗೆ ಯಾವುದರಲ್ಲೂ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ತೂಗುವ ಮಚವೆಗೆ ಹೊಂದಿಕೊಂಡ ಸಮತೋಲ ಈ ಭೂಮಿಯ ಮೇಲೆ ತಪ್ಪಿಹೋದಂತಾಗುತ್ತಿತ್ತು. ಮಚವೆ ನಡೆಸುವುದರಲ್ಲಿ ಎಂಥ ನಿಷ್ಣಾತನಿದ್ದರೂ ಈಗ ಏನು? ಅನಂತನ ಹತ್ತಿರ ಹೋಗಿ ಮತ್ತೆ ಹಳೆಯ ಮಾತು ಎತ್ತುವುದನ್ನು ಯೋಚಿಸಿದರೇ ನಾಚಿಕೆಯಾಗುತ್ತದೆ. ತಾನು ಸುಮ್ಮನಿದ್ದರೆ ಮಾಲಿನಿ ಸುಮ್ಮನಿರುತ್ತಾಳೆಯೇ? ಗಾಳಿಗೆ ತೂರಿ ಹೋಗುತ್ತಿರುವ ಗಾಳಿಪಟದ ದಾರ ಸಡಿಲು ಬಿಟ್ಟಹಾಗೆ ಅದರಷ್ಟಕ್ಕೇ ಅದನ್ನು ಹೋಗಲಿ ಎಂದು ಬಿಟ್ಟು ಬಿಡಬೇಕು ಅಥವಾ ಪಬ್ಬನ ಹಾಗೆ ಎಲ್ಲದರತ್ತ ಮುಖ ತಿರುವಿ ಮಚವೆ ಹತ್ತಿ…… ಬಂದರಿನಲ್ಲಿ ನಡೆಯುತ್ತಿದ್ದ ಹಾಗೆ ವಿಶ್ವಸಾಗರದ ನೆನಪಾಯಿತು. ಹಿಂದೆ ಯಾವಾಗಲೋ ಒಮ್ಮೆ ಅದನ್ನು ನೋಡಲು ಹೋಗಿದ್ದ. ದಂಡೆಗೆಳೆದು ಹಾಕಿದ ನಂತರದ ಎರಡು ವರ್ಷಗಳವರೆಗೆ ಅದನ್ನು ನೋಡಲೂ ನಿರಾಕರಿಸಿದವನ ಹಾಗೆ ಅತ್ತ ಹೋಗಿರಲೇ ಇಲ್ಲ. ಆ ನಂತರ ಒಮ್ಮೆ ಅದನ್ನು ರಿಪೇರಿ ಮಾಡಿ ನೀರಿಗಿಳಿಸುವ ಹುಚ್ಚು ವಿಚಾರ ಬಂದು ಆ ಕಡೆ ಹೊರಟ. ಬಂದರಿನಿಂದ ಎರಡು ಮೈಲು ಆಚೆ ನದಿ ಸಮುದ್ರ ಸೇರುವ ಹತ್ತಿರ ಅದನ್ನೆತ್ತಿ ಹಾಕಿದ್ದರು. ಅಲ್ಲಿ ಹೋಗಿ ನೋಡಿದರೆ ಬರೀ ಮಚವೆಯ ಅಸ್ತಿಪಂಜರ ನಿಂತ ಹಾಗಿತ್ತು. ಕಟ್ಟಿಗೆಯೆಲ್ಲ ಲಡ್ಡಾಗಿ ಕೀಳಲು ಸಾಧ್ಯವಾದದ್ದನ್ನೆಲ್ಲಾ ಜನ ಹೊತ್ತೊಯ್ದು ಉರವಲಕ್ಕೆ ಹಾಕಿದ್ದರು. ಅದಕ್ಕೊಂದು ಪ್ರದಕ್ಷಿಣೆ ಹಾಕಿದ. ಮಚವೆ ಮರಳಿನಲ್ಲಿ ಹೂತಂತಿತ್ತು. ಮತ್ತೆ ಯಾವತ್ತೂ ಇದನ್ನು ನೀರಿಗಿಳಿಸಲಾರೆ ಅನ್ನಿಸಿ ಖಿನ್ನನಾಗಿದ್ದ. ಹೊತ್ತೇರುವವರೆಗೂ ಬಂದರಿನಲ್ಲೇ ನದಿಯ ಗುಂಟ ನಡೆದೂ ನಡೆದೂ ಅನ್ಯಮನಸ್ಕನಾಗಿ ಮನೆಯತ್ತ ಹೊರಟ. ಒಳಬರುತ್ತಿದ್ದಂತೆ ಮಾಲಿನಿ “ಮಾತಾಡಿಸಿದಾ” ಅಂದಳು. “ಇಲ್ಲ” ಅಂದ. +***** +ಜನವರಿ ೧೯೯೨ +‘ಬರಹ’ಕ್ಕಿಳಿಸಿದವರು – ಗುರುಪ್ರಸಾದ್.ಎಸ್ (ಪಚ್ಚಿ) +ದಿನಾಂಕ ೧, ಜೂನ್ ೧೯೮೯ ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ […] +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_477.txt b/Kannada Sahitya/article_477.txt new file mode 100644 index 0000000000000000000000000000000000000000..9fd11cd1226aec4e1dab37709e51b4bcab1569da --- /dev/null +++ b/Kannada Sahitya/article_477.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಿಸಿಲು ಕುದುರುವ +ಮೊದಲೇ +ಹಾವು ಜೀರುಂಡೆ ನಿಶಾ +ಚರಗಳೆಲ್ಲ ಗೂಡು ಸೇರಿ +ಹೊರಬೀಳುತ್ತವೆ +ಹಕ್ಕಿ ಪಕ್ಕಿ +***** +ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. ***** +ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_478.txt b/Kannada Sahitya/article_478.txt new file mode 100644 index 0000000000000000000000000000000000000000..2d69d2bee17c9eed326e3e6d7980e4cecd29e410 --- /dev/null +++ b/Kannada Sahitya/article_478.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ ಕಾರಣಗಳು “ಲಾಭ ತರದ”, “ಅರ್ಥಿಕ ಉದ್ದೇಶಗಳಿರದ”-ಎಲ್ಲ ಚಟುವಟಿಕೆಗಳು ಎದುರಿಸುವಂತಹುದೆ. ಅದನ್ನು ವೈಯಕ್ತಿಕವಾಗಿ ಹಾಗು ಕನ್ನಡಸಾಹಿತ್ಯ.ಕಾಂ ನ ನಿರ್ವಾಹಕನಾಗಿ ಈಗ ನಾನು ಎದುರಿಸುತ್ತ ಸುಸ್ತಾಗಿ ಹೋಗಿದ್ದೇನೆ. ಒಪ್ಪಿಕೊಂಡಂತೆ, ಮತ್ತೊಂದು ಸಂಚಿಕೆಯನ್ನು ಅಪ್‌ಡೇಟ್ ಮಾಡಿ, ನಂತರ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತೇನೆ. ’ಯಾರಾದರೂ ಒಂದು ಸಮರ್ಥವಾದ ತಂಡ ಕಟ್ಟಲು ಮುಂದೆ ಬಂದರೆ ಸಂತೋಷ.” -ಇಲ್ಲದಿದ್ದರೆ ಕನ್ನಡಸಾಹಿತ್ಯ.ಕಾಂನ ಚಟುವಟಿಕೆಗಳು ಕುಂಟುತ್ತಲೇ ಇರುತ್ತದೆ. ಪ್ರಗತಿ, ವಿಸ್ತರಣೆ ಇತ್ಯಾದಿಗಳೆಲ್ಲ ಅಸಾಧ್ಯವೆಂದಾಗಿ ಬಿಡುತ್ತದೆ. +ಕನಡಸಾಹಿತ್ಯ.ಕಾಂ ನಿಯಮಿತವಾಗಿ ಹೊರಬರಬೇಕಾದರೆ ಅನೇಕ ಅಗತ್ಯಗಳು ಕಂಡು ಬರುತ್ತದೆ. ಅದನ್ನು ಇಲ್ಲಿ ಪಟ್ಟಿ ಮಾಡಿಬಿಡುತ್ತೇನೆ: +೧. ನಿರ್ವಹಣೆಗೆ ಆದಳಿತ ಮಂಡಲಿ. ಕರ್ತವ್ಯಗಳು: ಸಂಪಾದಕೀಯ ಮಂಡಳಿಯ ಸಮಾಲೋಚನೆಯೊಂದಿಗೆ ಯೋಜನೆಯ ಸಿಧ್ಧತೆ, ಯೋಜನೆಗಾಗಿ ಬೇಕಾಗುವುದೆಲ್ಲವನ್ನು ಒದಗಿಸಿಕೊಳ್ಳುವುದು ಇತ್ಯಾದಿ. ಬೇಕಾದ ಉಪಮಂಡಳಿಗಳನ್ನು ರಚಿಸಿ ಅದಕ್ಕೆ ಬೇಕಾದ ಗೊತ್ತು-ಗುರಿಗಳನ್ನು ನಿಗದಿ ಪಡಿಸುವುದು. ಖರ್ಚು-ವೆಚ್ಚದ ಉಸ್ತುವಾರಿ. +೨. ಸಂಪಾದಕೀಯ ಮಂಡಳಿ. ಕರ್ತವ್ಯಗಳು: ಕನಡಸಾಹಿತ್ಯ.ಕಾಂ ಗೆ ಬೇಕಾದ ಪಠ್ಯವನ್ನು ಆಯ್ಕೆ ಮಾಡುವುದು, ಬೇಕಾದವರಿಂದ ಅನುಮತಿ ಪಡೆಯುವುದು, ಉತ್ಪಾದನೆಯ ಹಂತದ ಮಂಡಳಿಗೆ ಸೂಚನೆ ನೀಡುವುದು. +೩. ಉತ್ಪಾದನಾ ಮಂಡಳಿ: ಇದರ ಕೆಳಗೆ ತಾಂತ್ರಿಕ ಹಾಗು ಅರೆ ತಾಂತ್ರಿಕ ಕಾರ್ಯಕರ್ತರು: ವೆಬ್‌ಸೈಟ್ ನಿರ್ವಹಣೆ ಎಲ್ಲ ಸಂದರ್ಭದಲ್ಲೂ ಒಂದೇ ತರವಾಗಿರುವುದಿಲ್ಲ. ತಾಂತ್ರಿಕವಾಗಿ ಸಿಗುವ ಉಚಿತ ಸಲಕರಣೆಗಳನ್ನು ಕನ್ನಡಕ್ಕೆ ಒಗ್ಗಿಸುವುದೂ ಸುಲಭವಲ್ಲ. ಎಲ್ಲರೂ ಕೈ ಜೋಡಿಸಿದರೆ ಇದು ಅಗಾಧವಾಗಿ ಬೆಳೆಯುತ್ತಲೇ ಹೋಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮದೇ ಆದ ತಾಂತ್ರಿಕ ಸಲಕರಣೆಗಳನ್ನು ರೂಪಿಸಿ, ಅದಕ್ಕೆ ಬೇಕಾದ ಪರಿಣಿತರು ಒಟ್ಟುಗೂಡಿ ತಯಾರಿಸಬೇಕು. (ಈ ವಿಚಾರದಲ್ಲಿ ಕನ್ನಡಿಗರು ಬಹಳ ಹಿಂದೆ ಉಳಿದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಕನ್ನಡದ ದುರಂತ. ಇಂದಿನ ತಾಂತ್ರಿಕತೆಯಲ್ಲಿ ಮುಂದಿರುವ ವಿಚಾರವಂತ, ಪ್ರಜ್ಞಾವಂತ ಯುವಕರ ನಾಚಿಕೆಗೇಡಿನ ಪ್ರವೃತ್ತಿ…ಅಲ್ಲಲ್ಲಿ ಶೇಷಾದ್ರಿವಾಸುರಂತವರೂ ಇದ್ದಾರೆ ಎನ್ನುವುದೇ ಸದ್ಯದ ತೃಪ್ತಿ). ತಾಂತ್ರಿಕ ಯೋಜನೆ ತಯರಿಸುವಾಗ, ಆಡಳೀತ ಮಂಡಳಿ ಸಂಪಾದಕೀಯ ಮಡಳಿಯ ಅಗತ್ಯ ಮತ್ತು ಪೂರೈಕೆಗಳನ್ನು ಗಮನದಲ್ಲಿರಿಸ್ಕೊಳ್ಳಲು ಸಮಾಲೋಚನೆ ಅಗತ್ಯ. ಇನ್ನುಳಿದಂತೆ, ಸಂಪಾಕೀಯ್ಯ ಮಡಳಿಯ ಚಟುವಟಿಕೆಗಳಲ್ಲಿ ನೆರವಾಗುವುದು. ಬರಹ ಕ್ಕೆ ಕೀ ಇನ್ ಮ‌ಆಡುವುದು, ಕೀ ಇನ್ ಮಾಡಿದ್ದನ್ನು ತಪ್ಪುಗಳಿಲ್ಲದಂತೆ ನೋದಿಕೊಳ್ಳುವುದು. ಇದು ನಿಗದಿತ ವೇಳಯಲ್ಲಿ ಸದಾ ಆಗಬೇಕಾದ ಕೆಲಸ. ( ಈ ವಿಷಯದಲ್ಲಿ ಅತ್ಯಂತ ನಿಷ್ಠೆಯಿರುವವರೆಂದರೆ ನಮ್ಮ ಕಿಶೋರ್ ಚಂದ್ರ. ವೈದೇಹಿಯವರ ಎಷ್ಟೊಂದು ಸಣ್ಣಕತೆಗಳನ್ನು ಈಗಾಗಲೇ ಬರಹಕ್ಕೆ ಇಳಿಸಿಬಿಟ್ಟಿದ್ದಾರೆ..ಧನ್ಯವಾದಗಳು ಕಿಶೋರ್) +ಇವು ಮುಖ್ಯವಾದರೆ ಇವುಗಳಡಿ ಉಪಮಂಡಳಿಗಳು, ಇದಕ್ಕೆಲ್ಲ ದುಡಿಯಲು ಬೇಕಾದ ಕಾರ್ಯಕರ್ತರು ಸಿಗಬೇಕು. ಮುಂದೆ ಬಂದವರ ಉದ್ದೇಶ, ಪರಿಣತಿಗಳನ್ನು ಕೊಂಚಮಟ್ಟಿಗಾದರೂ ಪರಿಶೀಲಿಸಬೇಕು. ಮೊನ್ನೆ ನಡೆದ ಅನೌಪಚಾರಿಕವಾದ ಚರ್ಚೆಯೊಂದರಲ್ಲಿ ಇದು ಹೇಗಿರಬೇಕು, ಅಗತ್ಯಗಳೇನು ಎಂಬುದರ ಬಗೆಗೆ ವಿಸ್ತಾರವಾಗಿ ಬರೆಯಲು ಒಪ್ಪಿಕೊಂಡಿದ್ದೇನೆ. ಈ ವಾರ ಅದೇ ಕೆಲಸ. ಅದು ತಡವಾದರೆ, ಅದನ್ನು ಇಲ್ಲಿ ಸ್ಥೂಲವಾಗಿ ವಿವರಿಸಿಬಿಟ್ಟಿದ್ದೇನೆ. ಅಲ್ಲಿಯವರೆಗೂ ಎಲ್ಲರೂ “ಅಲೋಚಿಸಲಿ” ಎಂದು. +-ಇದೆಲ್ಲವನ್ನು ನಾನೋಬ್ಬನೇ ಸಾಧಿಸಲಾಗುವುದಿಲ್ಲ. ಇಲ್ಲಿಯವರೆಗೆ ಕುಂಟುತ್ತಲೋ ದೇಕುತ್ತಲೋ ನಡೆಸಿಕೊಂಡು ಬಂದಿದ್ದೇನೆ. ಯಾಹೂ ಗ್ರೂಪ್ ತಂಡ ಇದನ್ನು ಚರ್ಚೆಗೆತ್ತಿಕೊಳ್ಳುತ್ತದೆಂದು ನನ್ನ ಆಶಯ. ಚರ್ಚೆಯಲ್ಲಿ ಯಾಹೂ ತಂಡದ ಪ್ರತಿಯೊಬ್ಬರೂ ಭಾಗವಹಿಸ ಬೇಕಾಗಿ ಮನವಿ. ಚರ್ಚೆ ಅಗುವಾಗ ನಾನು ಮಧ್ಯೆ ಪ್ರವೇಶಿಸುವುದಿಲ್ಲ. ಚರ್ಚೆಯನ್ನು ಕ್ರೋಢೀಕರಿಸಿದಾಗ ಸರಿಯಾದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದಷ್ಟೆ ನನ್ನ ಕಾಳಜಿ. ಆದರೆ, ಈ ಚರ್ಚೆಯನ್ನು ನಿಗದಿತವೇಳೇಗೆ ಆರಂಭಿಸಿ-ಮುಗಿಸಿ. ಚರೆಚೆಯಲಿ ಭಾಗವಹಿಸದೇ ಮೌನವಾಗಿ ಉಳಿಯುವವರನ್ನು ಹೇಗೆ ವರ್ಗೀಕರಿಸಬೇಕು, ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕೆ ಎಂದಿರುವ ಗುಂಪಿನಲ್ಲಿ ಅಂತಹವರ ಅಗತ್ಯವಿದೆಯೆ? ಬರಿಯ ಸಂಖ್ಯೆಯ ದೊಂಬರಾಟವಾಗಿಬಿಡುವುದಿಲ್ಲವೆ? ಇದನ್ನೆಲ್ಲ ನಾನು ಗ್ರೂಪ್‌ನಲ್ಲೇ ಹೇಳಬಹುದಾಗಿತ್ತು. ಅಲ್ಲಿ ಹೇಳಿದರೆ ಅದನ್ನು ಗೌಪ್ಯವಾಗಿಟ್ಟಂಟೆ ಆಗುವುದಿಲ್ಲ. ಆದುದರಿಂದ ಈ ಪುಟದಲ್ಲಿ ಇದನ್ನು ಕಾಣಿಸಿದ್ದೇನೆ. ಯಾರೊಬ್ಬರೂ ಅನ್ಯಥಾ ಭಾವಿಸಬಾರದಾಗಿ ಮೊದಲೇ ಕೇಳಿಕೊಂಡು ಬಿಡುತ್ತಿದ್ದೇನೆ. +ಇಷ್ಟು ಹೇಳಿದನಂತರ ಈ ಸಂಚಿಕೆಯ ಬಗೆಗೆ.. +* +* +* +ನಾನು ಅನಂತಮೂರ್ತಿಯವರನ್ನು ನೋಡಿ, ಮಾತನಾಡಿ ಎರಡು ವರ್ಷಗಳ ಮೇಲೇ ಆದವು. ಈ ತಿಂಗಳು ಅವರಿಗೆ ೭೨ ತುಂಬಲಿದೆ (ಜನ್ಮ ದಿನಾಂಕ: ೨೧-೧೨-೧೯೩೨). ಕನ್ನಡಸಾಹಿತ್ಯ.ಕಾಂ ಆರಂಭವಾದದ್ದೇ ಅವರ ಎಲ್ಲ ಸಾಹಿತ್ಯವನ್ನು; ಅಧ್ಯಯನಕ್ಕಾಗಿ, ಅಂತರ್ಜಾಲದ ಮೂಲಕ ಹೆಚ್ಚು ಜನರಿಗೆ ತಲುಪಿಸಲೆಂದು. ಆ ಮೂಲಕ ಕನ್ನಡ ಅಂತರ್ಜಾಲದಲ್ಲಿ ಒಂದು ಗೌರವವಾದ ಸ್ಥಾನ ಗಳಿಸಿಕೊಳ್ಳುತ್ತದೆ ಎಂಬ ಉದ್ದೇಶದಿಂದ ಹಿನ್ನೆಲೆಯಲ್ಲಿ. ಅಂತರ್ಜಾಲವನ್ನು “ಕನ್ನಡ”ಕ್ಕಾಗಿ ಹುಡುಕಿದರೆ ಗೌರವದಿಂದ ನೋಡಬಹುದಾದ ಯತ್ನಗಳು ಅತ್ಯಂತ ಕಡಿಮೆ. “ಕನ್ನಡ ಸಾಹಿತ್ಯವೆಂದರೆ ಬರಿ ಅನಂತಮೂರ್ತಿಯವರ ಸಾಹಿತ್ಯ ಮಾತ್ರವಲ್ಲ ಎಂದು ಯು ಆರ್ ಎಲ್ ಆಧಾರಿತ ತರ್ಕವನ್ನು” ಸಾಕಷ್ಟು ಜನ ಮುಂದಿಟ್ಟಿದ್ದರು. ಇದರಲ್ಲಿ, ಜಾತಿ ರಾಜಕಾರಣದ ಉದ್ದೇಶಗಳೂ ಇದ್ದವು. +ಉದ್ದೇಶವನ್ನು, ಸಾಕಷ್ಟು ಲೇಖಕರ ಕೃತಿಗಳನ್ನು ಅಳವಡಿಸುವುದೆಂದು ತೀರ್ಮಾನ ಮಾಡಿಕೊಂಡು ಅದಕ್ಕಾಗಿ ಕೆಲಸ ಮಾಡುತ್ತಾ ಸಾಗಿದ್ದೇವೆ, ಪ್ರಾತಿನಿಧಿಕವಾಗಿಯಾದರೂ ಆ ಪ್ರಯತ್ನ ಸಾಗಿದೆ ಎಂಬುದಕ್ಕೆ, ಇನ್ನೂ ಅಪ್‌ಡೇಟ್ ಆಗದ ಲೇಖಕರ ಪಟ್ಟಿ ನೋಡಿದರೆ, ಅರ್ಕೈವ್ ವಿಭಾಗ ನೋಡಿದರೆ ಸ್ಪಷ್ಟವಾಗುತ್ತದೆ. ಅನಂತಮೂರ್ತಿಯವರ ವಿರುಧ್ಧ ರಾಡಿಯ ಎರಚಾಟ ಸಾಗುತ್ತಲೇ ಬಂದಿದೆ. ಅದರತ್ತ ವಿಷಯವನ್ನು ಕೇಂದ್ರಿಕರಿಸುವುದು ಇಲ್ಲಿಯ ಉದ್ದೇಶವಲ್ಲ. ಮೊದಲು ನನಗೆ ಅನಂತಮೂರ್ತಿಯವರೆಂದರೆ ಏಕೆ ಗೌರವವೆಂದು ಹೇಳಿಬಿಡುತ್ತೇನೆ: ಅವರು ಎಂದೂ ಬಹುಸಂಸ್ಕೃತಿಗೆ ಧಕ್ಕೆ ತರುವಂತಹ ಬಹಿರಂಗ ನಿಲುವುಗಳನ್ನು ತೆಗೆದುಕೊಳ್ಳಲಿಲ್ಲ. ಬಹಿರಂಗ ನಿಲುವುಗಳನ್ನು ತೆಗೆದುಕೊಂಡಾಗ ಸಾಧ್ಯವಾದಷ್ಟೂ ಅಸ್ಪಸಂಖ್ಯಾತರ ಹಿತಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೆಲ್ಲ, “ಒಳಗೊಳಗೇ ಆತ ಬ್ರಾಹ್ಮಣ” ಎಂದು ಜಾತಿ ರಾಜಕಾರಣ ಎರಚಾಟದ ನಡುವೆಯೂ. ಆದರೆ, ಅನಂತಮೂರ್ತಿಯವರು ಜಾತಿ ರಾಜಕಾರಣದಲ್ಲಿ ಎಂದೂ ಆಸಕ್ತಿವಹಿಸಿಲ್ಲ ಎನ್ನುವುದನ್ನು ಅವರ ಸಾಕಷ್ಟು ಲೇಖನಗಳನ್ನು ಓದಿದಾಗ ತಿಳಿಯುತ್ತದೆ. ಅವರ ಲೇಖನಗಳು “ಭಾರತೀಯ ಚಿಂತನೆಗಳಿಗೆ” ಒಂದು ಹೊಸ ದಿಕ್ಕನ್ನು ಸೂಚಿಸಿದ್ದನ್ನು ಯಾರೊಬ್ಬರೂ ಮರೆಯುವ ಹಾಗೆ ಇಲ್ಲ. ಸಮಗ್ರತೆಯ ನಡುವೆ-ಪ್ರಾದೇಶಿಕತೆಯನ್ನು, ಪ್ರಾದೇಶಿಕತೆಯ ನಡುವೆ ಸಮಗ್ರತೆಯನ್ನು ತರುವ ಅವರ ಪರಿಗೆ ನಾನು ಎಂದೂ ಬೆರಗಾಗಿದ್ದೇನೆ. ಅವರ ಸಾಹಿತ್ಯದ ಬಗೆಗೆ ಹೆಚ್ಚಿನ ಚರ್ಚೆಯನ್ನಂತೂ ಈಗಿನ ಸಂದರ್ಭದ ಅಗತ್ಯ. +ಅನಂತಮೂರ್ತಿಯವರ ಎಲ್ಲ ಸಾಹಿತ್ಯ, ಆಗಿದಾಂಗ್ಯೆ ಅವರ ನೀಡುವ ಪ್ರತಿಕ್ರಿಯೆಗಳು, ಅವರ ಭಾಷಣ ಇತ್ಯಾದಿಗಳ ಸಮಗ್ರತೆಗಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ತೆರೆಯಬೇಕು, ಅಲ್ಲಿ ಅವರ ಅನುವಾದಗಳು ಪ್ರಕಟವಾಗಬೇಕು. ಇದಕ್ಕಾಗಿ, ಕನ್ನಡಸಾಹಿತ್ಯ.ಕಾಂ ತನ್ನ ಕೈಯಲಾದದ್ದನ್ನ ತಾನು ಮಾಡುತ್ತದೆ. ಈಗಾಗಲೇ ಅವರ ಎಲ್ಲ ಸಣ್ಣಕತೆಗಳನ್ನು, ಪ್ರಮುಖವಾದ ಲೇಖನಗಳನ್ನು ಕನ್ನಡಸಾಹಿತ್ಯ.ಕಾಂ ಪ್ರಕಟಿಸಿದೆ. ಉಳಿದದ್ದನ್ನು ಅಯೋಜಿಸಿದಾಗ ಅವರದೇ ಪ್ರತ್ಯೇಕ ವಿಭಾಗ ಮಾಡಬಹುದು. ನಮ್ಮ ಕಾಲದ ಒಬ್ಬ ಉತ್ತಮ ಚಿಂತಕನಿಗೆ ಇದು ನಾವು ತೋರಬಹುದಾದ ಕನಿಷ್ಟ ಗೌರವ. +ಅಪ್‌ಡೇಟ್ ವೇಳೆಗೆ ಸಾಂದರ್ಭಿಕವಾಗಿರಲೆಂದು ಅವರ “ಅವಸ್ಥೆ” ಕಾದಂಬರಿಯನ್ನು ಸಂಪೂರ್ಣವಾಗಿ ಈ ಸಂಚಿಕೆಯಲ್ಲಿ ನೀಡಲಾಗಿದೆ. ಜೊತೆಗೆ ಅವಸ್ಥೆ ಸಂದರ್ಭದ ಅವರ ಹೇಳಿಕೆಗಳುಳ್ಳ “ಪ್ರತಿಕ್ರಿಯೆ”ಗಳನ್ನು ನೀಡಲಾಗಿದೆ. ಅವರ ಹಿಂದಿನ ಎಲ್ಲ ಕೃತಿಗಳನ್ನು (ಮಿಥುನ-ಕವನ ಸಂಕಲನವೊಂದನ್ನು ಹೊರತು ಪಡಿಸಿ) ಮುಂದಿನ ಪುಟಕ್ಕೆ ತರಲಾಗಿದೆ. +* +* +* +ಕನ್ನಡದ ಒಬ್ಬ ಉತ್ತಮ ಸಿನಿಮಾಸಕ್ತ-ನಿರ್ದೇಶಕ ಪಿ ಶೇಷಾದ್ರಿಯವರು ಭೇಟಿಯಾಗಿದ್ದರು. ನನ್ನ ಜೀವನದ ಒಂದು ನಾಚಿಕೆಗೇಡಿನ ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. “ಶಾಂತಿ ಶಾಂತಿ ಶಂತಿ” ಎಂಬ ಚಿತ್ರಕ್ಕೆ ನಾನು ಚಿತ್ರಕತೆ ಹಾಗು ಸಂಭಾಷಣೆ ರಚಿಸುವ ಹೊಣೆಗಾರಿಕೆಯಲ್ಲಿ ಪಾಲುಗೊಂಡಿದ್ದೆ. ಬೆಂಗಳೂರಿನ ಪತ್ರಕರ್ತರಲ್ಲಿ ಸಿನಿಮ ಬಗೆಗೆ ಆಸಕ್ತಿ ಉಳ್ಳವರಲ್ಲಿ, ಸ್ವಲ್ಪ ಅಧಿಕೃತವಾಗಿ ಮಾತನಾಡಬಲ್ಲೆ ಎಂಬ ಕಾರಣದಿಂದಲೋ ಏನೋ ಲಂಕೇಶ್ ಪತ್ರಿಕೆಯ ಸದಶಿವ ಶಣೈಯಂತಹವರಿಗೆ ನನ್ನ ಬಗ್ಗೆ ಮುಜುಗರ ತರಿಸುವಷ್ಟು ಗೌರವ. ಅವರು, ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿಯವರಾಗಿದ್ದಾಗ (ಈಗ ಅವರು ಪ್ರಧಾನ ಕಾರ್ಯದರ್ಶಿ) ಸಿನಿಮಾ ಕ್ಶೇತ್ರದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಕೆಲವು ಪತ್ರಕರ್ತ ಮಿತ್ರರಿಗೆ ಪ್ರೆಸ್ ಕ್ಲಬ್‌ನಲ್ಲಿ ಸನ್ಮಾನ ಇಟ್ಟುಕೊಂಡಿದ್ದಾಗ, ಮೇಲಿನ ಶಾಂತಿ ಕಾರಣದಿಂದ ನಾನೂ ಅದರಲ್ಲಿ ಭಾಗಿಯಾಗಬೇಕಾಯಿತು. ಆಗ ಶೇಶಾದ್ರಿಯವರೂ ಒಬ್ಬರು. ಅಲ್ಲಿ ಆದ ಭೇಟಿ. ಇಲ್ಲಿನ ತನಕ ಆಗಿರಲಿಲ್ಲ. ಅವರ ರಭಸ ಚಟುವಟಿಕೆಗಳ ನಡುವೆ ನನ್ನನ್ನು ಅವರು ನೆನಪಿಟ್ಟುಕೊಳ್ಳುವುದೂ ಸಾಧ್ಯವಿರಲಿಲ್ಲ. +ವಿನ್‌ಸ್ಟನ್ ಗ್ಯಾರೆಟ್‌ನ, “ಚಿತ್ರಕತೆಗಳನ್ನು ಸಾಹಿತ್ಯವೆಂದು ಏಕೆ ಪರಿಗಣಿಸಬಾರದು? ಎಂಬ ಪ್ರಶ್ನೆಯನ್ನು ಎತ್ತಿಕೊಂಡಿರುವ – “ಸ್ಚ್ರೀನ್‌ಪ್ಲೇಸ್ ಆಸ್ ಲಿಟರೇಚರ್” ಓದಿದ ಮೇಲೆ ನನಗೆ ಸಿನಿಮಾ ಚಿತ್ರಕತೆಗಳ ಬಗೆಗೆ ಒಂದು ಕಣ್ಣು. ಸಿಕ್ಕರಲ್ಲವೆ? ಘಟಶ್ರಾದ್ಧ ಚಿತ್ರಕತೆ ಪ್ರಕಟವಾಗಿದೆ. ಅದನ್ನು ಬಿಟ್ಟರೆ ಯಾವುದೇ ಚಿತ್ರಕತೆ ಮುದ್ರಣಗೊಂಡಂತೆ ಕಾಣುವುದಿಲ್ಲ. ಉದಾಹರಣೆಗಾದರೂ ಇರಲಿ ಎನ್ನುವುದಕ್ಕಾಗಿ, ಕುತೂಹಲಿಗಳಿಗೆ, ಚಿತ್ರದ ಅಧ್ಯಯನಕ್ಕೆ ಆಕರವಾಗಿ ಬಳಸುವವರಿಗೆ ಇರಲಿ ಎನ್ನುವ ಕಾರಣಕ್ಕಾಗಿ “ಬೇರು” ಚಿತ್ರದ ಚಿತ್ರಕ್ತೆ ದೊರಕುತ್ತದೆಯೆ ಎಂದು ಅವರನ್ನು ಕೇಳಿದೆ. ಕೊಟ್ಟಿದ್ದಾರೆ. ಅದನ್ನು ಪ್ರಕಟಿಸಲಾಗಿದೆ. +ಉಳಿದಂತೆ: ಬೇರು ಚಿತ್ರ ಬಿಡುಗಡೆಯಾಗಿದ್ದಾಗ ನಮ್ಮ ಶಿವಕುಮಾರ್ ರೊಂದಿಗೆ ಮಲ್ಟಿಪ್ಲೆಕ್ಸ್ (!!!) ನಲ್ಲಿ ನೋಡಿದ್ದೆ. ಆಗ ಒಂದೆರಡು ಸಾಲುಗಳನ್ನಾದರೂ ಬರೆಯಬೇಕಿತ್ತು. ಆಗಿರಲಿಲ್ಲ. ಮತ್ತೆ ಅದೇ ಚಿತ್ರವನ್ನು ನೋಡಿದೆ. ಅದರ ಬಗೆಗೆ ಬರೆಯಬೇಕೆಂದಾಗ: +ಅತ್ತ ಕಾಂಗ್ರೆಸ್ ಪಕ್ಷವನ್ನು ನೋಡಿ: ನಟವರ್ ಸಿಂಗ್‌ರಂತಹವರು “ಭ್ರಷ್ಟಾಚಾರದ” ಅರೋಪಕ್ಕೊಳಗಾಗಿದ್ದಾರೆ. ೧೧ ಸಂಸದರು ಸಿಕ್ಕಿಬಿದ್ದಾಗಿದೆ. ಇದು ಯಾವುದೂ ನಮ್ಮನ್ನು ಬೆಚ್ಚಿಬೀಳಿಸುವುದಿಲ್ಲ. ಆ ಮಟ್ಟಿಗೆ, ಲಂಚಗುಳಿತನ ಬದುಕಿನ ಒಂದು ಭಾಗವಾಗಿದೆ ಎನ್ನುವ ವಾದದ ಹಿನ್ನೆಲೆಯಲ್ಲಿ ಒಂದು ರೀತಿಯ ಉಪೇಕ್ಷೆ. ಬೇರು ಭ್ರಷ್ಟಾಚಾರದ ಬಗೆಗೆ ಹೆಚ್ಚಿನ ಮಟ್ಟಿಗೆ ಮಾತನಡುತ್ತಾ ಹೋಗಿ ಅದು ಹೇಗೆ ಸಾಮಾನ್ಯರನ್ನು ದುರಂತಕ್ಕೀಡು ಮಾಡಿಬಿಡುತ್ತದೆ ಎಂದು ವಾದಿಸುತ್ತಾ ಹೋಗುತ್ತದೆ -ಜಾಗತೀಕ ಸಂದರ್ಭದಲ್ಲಿ ಸೂರ್ಯನ ಕುದುರೆ ಇದ್ದಂತೆ. ಚಿತ್ರಕತೆಗಾರಿಗೆ, ನಿರ್ದೇಶಕರಿಗೆ ಚೆನ್ನಾಗಿ ಗೊತ್ತು. ಈ ಭ್ರಷ್ಟಾಚಾರದ ಪ್ರಕರಣದ ಚಿತ್ರಣ ಪ್ರೇಕ್ಷಕನ್ನು ತಟ್ಟುವುದೇ ಇಲ್ಲವೆಂದು. ಹೀಗಾಗಿ, ಅದರ ಬದಲಿಗೆ ಅದರ “ಕೇಂದ್ರ ವಸ್ತು: ಲಂಚಗುಳಿತನವನ್ನು ಬ್ಯುರೋಕ್ರಸಿಯ ಜಡತ್ವದ ಮಧ್ಯದಲ್ಲಿ ಸಹಿಸಿಕೊಳ್ಳಬೇಕೆ-ಸಹಿಸಿಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಅಮಾನವೀಯವಾದ ಒಂದು ನಿರ್ಧಾರಕ್ಕೆ ಬಂದಂತಾಗುತ್ತದೆ ಎಂಬ ಸಮರ್ಥನೆಯ ಧ್ವನಿಯೂ ಚಿತ್ರದಲ್ಲಿ ಸಹಜವಾಗಿ ಮೂಡಿಬಂದಿದೆ. ಇದರ ತುಮುಲ ಭ್ರಷ್ಟಾಚಾರದ ಖಂಡನೆಯಲ್ಲ- ಸಮರ್ಥನೆಯೂ ಅಲ್ಲ. ಆದುದರಿಂದಲೇ ಈ ಚಿತ್ರ ಒಂದು ರೀತಿಯ ಸಾರ್ವಜನಿಕ ಒಪ್ಪಿಗೆಯನ್ನು ಪಡೆದುಕೊಂಡು ಬಿಡುತ್ತದೆ. ಕೊರತೆಗಳೇನೇ ಇರಲಿ, ಎಲ್ಲರೂ ನೋಡಬೇಕಾದ ಚಿತ್ರ. ಸಂದರ್ಭ ಸಿಕ್ಕಾಗ ತಪ್ಪದೇ ನೋಡಿ. ಯುವ ಜನತೆಯ ಕೆಟ್ಟ ಸಾಂಧರ್ಭಿಕ ಪ್ರಾಮಾಣಿಕತೆಯನ್ನು ಚೆನ್ನಾಗಿಯೇ ಚಿತ್ರ ತೋರಿಸುತ್ತದೆ. ಸುಚೀಂದ್ರ ಪ್ರಸಾದ್, ದತ್ತ ಮುಂತಾದ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. +* +* +* +ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರವಾದ ಸಂದರ್ಭವನ್ನು ನೋಡಬಹುದು. ಇದು ಕನ್ನಡ ಸಾಹಿತ್ಯ ಅಧ್ಯಯನದ ಆರಂಭ ಹಾಗು ಇಂಗ್ಲಿಷ್ ಸಾಹಿತ್ಯದ ಕುರಿತಂತೆ ಆಸಕ್ತಿ ಹುಟ್ಟಿಕೊಳ್ಳುವ ಸಂದರ್ಭದಲ್ಲಿ ಇದನ್ನು ಅನೇಕರು ಗಮನಿಸಿರಬಹುದು. ಕನ್ನಡದ ಸಾಹಿತ್ಯ (ಅದರಲ್ಲೂ ಹೆಚ್ಚಿನ ಮಟ್ಟಿಗೆ ಗಂಡಸರಿಗೆ) ಆರಂಭವಗುವುದೇ ರೋಮಾಂಚಕಾರಿ, ಪತ್ತೆದಾರಿ ಕಾದಂಬರಿಗಳನ್ನು ಪ್ರೌಢಾವಸ್ಥೆಯಲ್ಲಿ ಓದಿನ ಮೂಲಕ: ಎನ್ ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಮ ರಾಮ ಮೂರ್ತಿ ಈ ವರ್ಗದಲ್ಲೇ ಸ್ವಲ್ಪ ಕ್ಲಾಸಿಕ್ ಬೇಕೆಂದರೆ ಟಿ ಕೆ ರಾಮರಾವ್. ಇಂಗ್ಲಿಷನ್ನು ಕೈಗೆತ್ತಿಕೊಳ್ಳುವುದೇ ಕ್ಲಾಸಿಕ್‌ಗಳ ಮೂಲಕ: ದಾಸ್ತೊವೆಸ್ಕಿ, ಟಾಲ್‌ಸ್ಟಾಯ್, ಪ್ಲಾಬೆ ..ಹೀಗೆ ಸಾಗುತ್ತದೆ. ನಂತರ ತ್ರಿಲ್ಲರ್‌ಗಳಿಗೆ ತಿರುಗುತ್ತದೆ. ಇರ್ವಿಂಗ್ ವ್ಯಾಲೆಸ್, ಚೇಸ್, ಲುಡ್ಲುಮ್ ಎಂದು ಅದರಲ್ಲಿ ಸ್ವಲ್ಪ ವ್ಯತ್ಯಾಸದ್ದು ಎಂದರೆ: ಲೆಕಾರ್ ಹಾಗು ಇತ್ತೀಚಿನ ಸ್ಕಾಟ್ ಟ್ಯೂರೊ. ಸ್ಕಾಟ್ ಟ್ಯೂರೋ ನ್ಯಾಯಾಲಯ, ರಾಜಕೀಯ, ಪತ್ತೆದಾರಿಕೆ ಇತ್ಯಾದಿ ಅಂಶಗಳನ್ನು ಬೆರೆಸುವ ಚಾಣಾಕ್ಷ ಬರಹಗಾರ. ಸೀತಾರಾಂ ರವರ “ಮುಕ್ತ” ಧಾರವಾಹಿಯಲ್ಲೂ ಈ ಅಂಶಗಳಿವೆ. ಮುಂದಕ್ಕೆ ಗಾವ್ರಾಸ್‌ನ ’ಜಿ’ಯನ್ನೂ ನೋಡಬಹುದು ಎಂದು ಈಗಲೇ ಊಹಿಸಲು ಬೇಕಾದಷ್ಟು ಗ್ರಾಸ ಒದಗಿಸಿದೆ. +ನನ್ನ ಸಾಹಿತ್ಯಾಸಕ್ತಿಯಂತೂ ಮೇಲಿನ ಕ್ರಮವನ್ನೇ ಹಾದು ಬಂದದ್ದು: ಕನ್ನಡಸಾಹಿತ್ಯ.ಕಾಂ ಈವರೆಗೂ ಪತ್ತೆದಾರಿ ಕಾದಂಬರಿಗಳನ್ನು ಪ್ರಕಟಿಸಿಯೇ ಇರಲಿಲ್ಲ. ಮಡಿವಂತಿಕೆಯೇನೂ ಇಲ್ಲ. ಸಂದರ್ಭ ಒದಗಿರಲಿಲ್ಲ. ಈಗ ಪ್ರೇಂ ಕುಮಾರ್‌ರವರ “ಪರಾವಲಂಬಿ” ಕಾದಂಬರಿಯನ್ನು ಪ್ರಕಟಿಸಲಾಗಿದೆ. ಕಣ್ಣಾಡಿಸಿದಾಗ, ನನ್ನ ಮೆಚ್ಚುಗೆಯ ಲೆಕಾರ್ ಹಾಗು ಟ್ಯೂರೋ ಗತಿಗೆ ತಕ್ಕಂತೆ ಇದೆ ಎಂದನ್ನಿಸಿತು. ಬಿಡುವಾದಾಗ, ಪೂರ್ತಿ ಓದಬೇಕು. ರೋಮಾಂಚಕಾರಿ, ಪತ್ತೇದಾರಿಯಲ್ಲಿ ಅಸಕ್ತಿ ಇರುವವರು ನೋಡಬಹುದು. +ಪ್ರೇಂಕುಮಾರ್ ಬರಿಯ ಥ್ರಿಲ್ಲರ್‌ಗಳನ್ನು ಮಾತ್ರ ಬರೆದಿಲ್ಲ. ಇತ್ತೀಚೆಗೆ ಅವರು ಪಾಂಡಿಚೆರಿಯಲ್ಲಿ (ಪುದುಚೆರಿ) ಅವರ “ಯಾನ” ಸಣ್ಣಕತೆಯ ಸಂಗ್ರಹ ಬಿಡುಗಡೆಯಾಗಿದೆ. ಅದರಿಂದ ಒಂದು ಸಣ್ಣಕತೆಯನ್ನು ಪ್ರಕಟಿಸಲಾಗಿದೆ. +ಕಳೆದ ಭಾನುವಾರ, ನಮ್ಮ ವಿವೇಕ ಶಾನಭಾಗರವರು “ಮತ್ತೊಬ್ಬನ ಸಂಸಾರ” ಸಣ್ಣಕತೆಗಳ ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಹೋಗಲಾಗಲಿಲ್ಲ. ಈ ಕೆ ಎಸ್ ಸಿಯ ಕೆಲಸದ ಭಾರ ಹಾಗು ಜರೂರಿನ ನಡುವೆ ನಾನು ಹೋಗದಿರುವುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. +ಇಷ್ಟು ಹೇಳಿ-ಗ್ರೂಪ್ ನಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತಾ- ಮುಂದಿನ ಸಂಚಿಕೆ ಫೆಬ್ರುವರಿ ಮೊದಲವಾರದಲ್ಲಿ ಎಂದು ನೆನಪಿಸುತ್ತಾ.. +೧೮-೧೨-೨೦೦೫ ರಂದು ಸೇರಿಸಿದ್ದು: ಈ ಪುಟಕ್ಕೆ ಟಿಪ್ಪಣಿ ಬರೆಯುವಾಗ ತೀರಾ ಸುಸ್ತಾಗಿದ್ದಾಗ ಒಂದು ಹೇಳುವುದನ್ನು ಮರೆತಿದ್ದೆ. ಆದಕ್ಕಾಗಿ ಈ ಮರು ಟಿಪ್ಪಣಿ: ಭಾರತದಿಂದ “ಅವಸ್ಥೆ” ಕಾದಂಬರಿ ತರಿಸಿಕೊಂಡು, ಎಲ್ಲವನ್ನೂ ಕೀ ಇನ್ ಮಾಡಿ ಕಳಿಸಿದ್ದು ತಿಂಗಳುಗಳೇ ಆಗಿದ್ದವು. ಅನೇಕ ತಾಂತ್ರಿಕ ಅವಘಡಗಳಲ್ಲಿ ನನ್ನ ಸಾಕಷ್ಟು ಈಮೈಲುಗಳು ಹೋಗಿವೆ. ಅವಸ್ಥೆ ಕಾದಂಬರಿ ಕೀ ಇನ್ ಮಾಡಿದವರು ಅಡಿ ಟಿಪ್ಪಣಿಯನ್ನೂ ಸೇರಿಸಿಲ್ಲ. ನನಗೆ ಅವರ ಹೆಸರೂ ನೆನಪಿಗೆ ಬರುತ್ತಿಲ್ಲ. ಈ ಕಾದಂಬರಿಯನ್ನು ಸಂಪೂರ್ಣವಾಗಿ ಕಿ ಇನ್ ಮಾಡಿದವರ ಹೆಸರನ್ನು ಸ್ಮರಿಸದಿರುವುದು ಒಂದು ತರಹ ಮುಜುಗರಕ್ಕೆ ಕಾರಣವಾಗಿದೆ. ಅವರು ಯಾರೇ ಆಗಿದ್ದರೂ “ದಯವಿಟ್ಟು ನನ್ನನ್ನು ಸಂಪರ್ಕಿಸಬೇಕಾಗಿ ಮನವಿ”. +ದಿನಾಂಕ ೨೨-೧೨-೨೦೦೫ರಂದು ಸೇರಿಸಿದ್ದು: ಸುದ್ಧಿ ತಿಳಿದು ಅತ್ಯಂತ ಸಂತೋಷವಾಯಿತು. ನಮ್ಮ ರಾಘವೇಂದ್ರ ಪಾಟೀಲರ “ತೇರು” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. ಇದನ್ನು ಕೆಳೆದ ಮೂರು ತಿಂಗಳ ಹಿಂದೆಯೆ ಕನ್ನಡಸಾಹಿತ್ಯ.ಕಾಂ ಪ್ರಕಟಿಸಿತ್ತು ಅದರ ಲಿಂಕ್ ಇಲ್ಲಿದೆ. +“ಸಾಕಷ್ಟು ವಿಮರ್ಶಕರು, ಸ್ನೇಹಿತರು ಈ ಕೃತಿಯ ಹಿಂದೆ ಇದ್ದಾರೆ. ಪ್ರಶಸ್ತಿ ನನ್ನದೊಬ್ಬನದಲ್ಲ” ಎಂದು ವಿನಯದಿಂದ ಪಾಟೀಲರು ಪ್ರತಿಕ್ರಿಯಿಸಿರುವುದು ಅವರ ದೊಡ್ಡತನವನ್ನು ತೋರಿಸುತ್ತದೆ. ಜೊತೆಗೆ ಅವರ ಸ್ನೇಹಿತರ ಬಳಗದ್ದೂ ಸಹ. ಅವರಿಗೆಲ್ಲ ಕನ್ನಡಸಾಹಿತ್ಯ.ಕಾಂನ ಧನ್ಯವಾದ ಹಾಗು ಅಭಿನಂದನೆಗಳು +ಭೈರಪ್ಪನವರಿಗೆ ಪಂಪ ಪ್ರಶಸ್ತಿ +ದಿನಾಂಕ ೧೧-೦೧-೨೦೦೬ ರಂದುಸೇರಿಸಿದ್ದು: ನಾನು ಆರನೆ ತರಗತಿಗೆ ಶಾಲೆ ಬಿಟ್ಟುದ್ದರಿಂದ ಕುಟುಂಬದ ಎಲ್ಲ ಸದಸ್ಯರ ಅವಗಣನೆಗೆ ಗುರಿಯಾದದ್ದು ಸಹಜವೆ. ಆದರೂ, ಒಳಗಿನ ನೋವು-ಅದನ್ನು ಮೀರಲು ನಾನು ಕೈಗೊಂಡ ಕ್ರಮಗಳು: ದುಡಿತ. ಇಟ್ಟಿಗೆ ಹೊರುವ ಕೂಲಿಕೆಲಸ, ಎಂಜಲು ತಟ್ಟೆ ತೊಳೆದದ್ದು, ಟೂರಿಂಗ್ ಟಾಕೀಸಿನಲ್ಲಿ ಕೆಲಸ ಮಾಡಿದ್ದು ಇವೆಲ್ಲ ನನ್ನೊಳಗೆ “ಕ್ರಮಬಧ್ಧ ಶಿಕ್ಷಣಕ್ಕೊಳಗಾದವರ” ಸಂವೇದನಿಗಿಂತಲೂ ಕೊಂಚ ಭಿನ್ನವಾದ ಸಂವೇದನೆಯನ್ನೇ ತಂದು ಕೊಟ್ಟಿತ್ತು. ಭೈರಪ್ಪನವರ ಗೃಹಭಂಗ ನನಗೆ ಅತ್ಯಂತ ಪ್ರಿಯವಾದ ಕಾದಂಬರಿ. ನಾನು ಅವರನ್ನು ಗೃಹಭಂಗ ಕಾದಂಬರಿಯ ಪ್ರಕಟಣೆಗೆ ಅನುಮತಿ ಕೋರಲು ಮೈಸೂರಿಗೆ ಹೋದಾಗ ನನಗಿದ್ದ ಸಹಜವಾದ “ಕ್ರಮಬದ್ಧ ಶಿಕ್ಷಣ ಪಡೆದವರ ಸ್ಥಾನದಲ್ಲಿದ್ದ” ಭೈರಪ್ಪನವರ ಬಗೆಗೆ ಅನಗತ್ಯವಾದ ಕಹಿ ಇತ್ತು ಎಂದೇ ಹೇಳಬಹುದು. ಆದರೆ, ಅವರು ನನ್ನನ್ನು ಉಪಚರಿಸಿದ ರೀತಿ ನಿಜಕ್ಕೂ ನಾನು ಒಳಗೇ ಹಿಡಿಹಿಡಿಯಾಗಿ ಹೋದದ್ದಂತೂ ನಿಜ. “ನಿಮಗೆ ಏಕೆ ಗೃಹಭಂಗ ಇಷ್ಟವಾದ ಕೃತಿ” ಎಂದು ಅವರು ಕೇಳಿದಾಗ ನಾನು ನನ್ನ ಬದುಕನ್ನು ಬೆರೆಸಿಯೇ ಕಾರಣಗಳನ್ನು ಹೇಳಿದ್ದೆ. ಯೋಚಿಸುತ್ತೇನೆ ಎಂದ ಭರಪ್ಪನವರು ಹದಿನೈದು ದಿನಗಳೊಳಗೆ “ಎಕ್ಸ್‌ಕ್ಲೂಸಿವ್” ಆದ ಅನುಮತಿ ಪತ್ರವನ್ನು ಅಂಚೆಯಲ್ಲಿ ಕಳಿಸಿದರು. ನೀವು ಅನುಮತಿ ನೀಡಿದರೂ ಸರಿ, ಇಲ್ಲದಿದ್ದರೂ ಸರಿ ಬಹುಶಃ ನಾನು ಇದೇ ನಿಮ್ಮನ್ನು ಕಡೆಯ ಬಾರಿ ನೋಡುವುದು ಎಂದು ಅವರಿಗೆ ತಿಳಿಸಿದ್ದೆ. ಕಸಾಕಾಂನಲ್ಲಿ ಭೈರಪ್ಪನವರ ಗೃಹಭಂಗ ಪ್ರಕಟವಾಗಿದೆ. ಈ ಕಾದಂಬರಿಯ ಬಗೆಗೆ ಹೆಚ್ಚು ಚರ್ಚೆಯಾಗಿಯೇ ಇಲ್ಲ. ನಿಜಕ್ಕೂ, ಇದೊಂದು ಅಪರೂಪದ ಕೃತಿ. ಕಸಾಕಾಂನ ಎಲ್ಲರೂ ಇದನ್ನು ಓದಿದರೆ (ಅದರಲ್ಲೂ ಈ ಐಟಿಯ ಯುವ ಜನ) ಸ್ವಲ್ಪವಾದರೂ ಜನಪರವಾದ ಸಂವೇದನೆ ಹುಟ್ಟಿಕೊಳ್ಳಬಹುದೇನೋ ಎಂದು ನನ್ನ ಆಶಯ.ಇತರರೂ ಮತ್ತೊಮ್ಮೆ ಓದಿ ಚರ್ಚಿಸಬಹುದಾದ ಕೃತಿ. +ಅವರಿಗೆ ಪಂಪ ಪ್ರಶಸ್ತಿ ತಡವಾಗಿಯಾದರೂ ಸಿಕ್ಕಿರುವುದು ನಿಜಕ್ಕೂ ಸಂತೋಷ. ಅವರಿಗೆ ಅಭಿನಂದನೆಗಳು. +ಸಿಜಿಕೆಯವರು ಇನ್ನಿಲ್ಲ +ಈ ಮಧ್ಯೆ ಕನ್ನಡ ನಾಟಕ ರಂಗದಲ್ಲಿ ಪರಿಚಿತರಾದ ಸಿಜಿಕೆಯವರು ಇಂದು ನಿಧನರಾಗಿದ್ದಾರೆ. ಅತ್ಯುತ್ತಮ ಸಂಘಟಕರೂ ಆಗಿದ್ದ ಸಿಜಿಕೆಯವರ ನಿಧನ ನಮ್ಮ ತಲೆಮಾರಿನ ಮತ್ತೊಂದು ಕೊಂಡಿ ಕಳಚಿಬಿದ್ದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಿಜಿಕೆಯವರ ಬಗೆಗೆ ಹೆಚ್ಚು ತಿಳಿದಿರುವವರು ಯಾರಾದರೂ ಏನನ್ನಾದರೂ ಬರೆದರೆ ಹೆಚ್ಚು ಸೂಕ್ತ. +-ಶೇಖರ್‌ಪೂರ್ಣ +೧೭-೧೨-೨೦೦೫ +***** +‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […] +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_479.txt b/Kannada Sahitya/article_479.txt new file mode 100644 index 0000000000000000000000000000000000000000..2a03d00e56c5d6b87aea4050245b2b397d6532ed --- /dev/null +++ b/Kannada Sahitya/article_479.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಕಪ್ಪು ಕಾದಂಬರಿಯ ಮುನ್ನುಡಿ) +ಈ ನನ್ನ ಕಪ್ಪು ಪ್ರೀತಿಯ ಕಾದಂಬರಿ ಮತ್ತೆ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದಂತೆ ನಾಲ್ಕು ಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸುವೆ. +ಈ ಕೃತಿ ಪ್ರಕಟವಾದ ವರ್ಷದಲ್ಲಿ ನನ್ನ ಜೀವಕ್ಕೆ ಸಂಚಕಾರ ತಂದಿತ್ತು ಎಂಬ ಬಗ್ಗೆ ಇವರಿಸುವ ಮೊದಲು ನಾನು ಯಾವ ನಮೂನೆಯ ಲೇಖಕ ಎಂಬುದನ್ನು ವಿವರಿಸುವುದು ಒಳ್ಳೆಯದು, ನಾನು; ನನ್ನಂಥ ಗ್ರಾಮೀಣ ಹಿನ್ನೆಲೆಯ ಲೇಖಕರು ಯಾವುದೇ ವಿಶ್ವವಿದ್ಯಾನಿಲಯದಿಂದ ಬರಹ ರೂಢಿಸಿಕೊಂಡವರಲ್ಲ. ನಾವು ಓದಿದ್ದು ಅಕ್ಷರ ಕಲಿತುಕೊಂಡದ್ದು ಎಷ್ಟು ಆಕಸ್ಮಿಕವೋ, ಬರೆಯತೊಡಗಿದ್ದು ಅಷ್ಟೇ ಆಕಸ್ಮಿಕ. ಪುಂಖಾನುಪುಂಖವಾಗಿ ಕಥೆ ಹೇಳುತ್ತಿದ್ದ; ಪದಗಳನ್ನು ಕಟ್ಟಿ ಹಾಡುತ್ತಿದ್ದ ಬೊಜ್ಜು ಬಾಯಿಯ ಅನಕ್ಷರಸ್ಥ ಹಿರಿಯರ ನಡುವೆ ಬಾಲ್ಯ ಕಳೆಯದಿದ್ದಲ್ಲಿ ನನಗೆ ಬರಹದ ಆಸಕ್ತಿ ಮೂಡುತ್ತಿರಲಿಲ್ಲ. ಕಲ್ಲುಗೋಡೆಗಳಿಗೆ ಡಿಕ್ಕಿ ಹೊಡೆದು ತಲೆಯ ತಾಕತ್ತನ್ನು ಪರೀಕ್ಷಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಪ್ರೌಢಶಾಲೆ ದಾಟುವ ಹೊತ್ತಿಗೆ ನರಸಿಂಹಯ್ಯನವರಿಂದ ಹಿಡಿದು ಅನಕೃ, ತರಾಸುರಂಥವರನ್ನು ಅರಗಿಸಿಕೊಂಡಿದ್ದ ನಾನು ಸಿದ್ಧಗಂಗಾಮಠದಲ್ಲಿ ಮಲ್ಲೇಪುರಂ ವೆಂಕಟೇಶ್‌ರಂಥವರ ಸಹವಾಸದಿಂದ ಒಂದಿಷ್ಟು ಯಶಸ್ವಿ ಭಾವಗೀತೆಗಳನ್ನು ಬರೆಯಲಿಕ್ಕೆ, ಕುವೆಂಪು, ಬೇಮ್ದ್ರೆಯವರಂಥವರ ಕಾವ್ಯಗಳ ಜೊತೆಗೆ ಪಂಪ, ರನ್ನ, ಕುಮಾರವ್ಯಾಸರಂಥ ಹಳಗನ್ನಡ ಕವಿಗಳ ಕಾವ್ಯಗಳನ್ನು ಓದಿಕೊಂಡೆ. ವಾಚಕರವಾಣಿಗೆ ಪತ್ರ ಬರೆಯುವುದರ ಮೂಲಕ ಗದ್ಯ ಬರಹವನ್ನು ರೂಢಿಸಿಕೊಂಡೆ. ಧಾರವಾಢದಲ್ಲಿ ಹೆಡೆಯಾಡುತ್ತಿದ್ದ, ಬುಸುಗುಟ್ಟುತ್ತಿದ್ದ ನವನಿರ್ಮಾಣ ಚಳವಳಿಗಳಲ್ಲಿ ಹೌದೋ, ಅಲ್ಲವೋ ಎನ್ನುವಂತೆ ಭಾಗವಹಿಸಿ ಪ್ರತಿಭಟಿಸುವ, ಉಲ್ಲಮ್ಘಿಸುವ ಚಾಳಿ ಹತ್ತಿಸಿಕೊಂಡೆ. ನಮ್ಮೆಲ್ಲರ ಅದೃಷ್ಟವೋ ಎಂಬಂತೆ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಭವ್ಯ ಭಾರತವನ್ನು ತುರ್ತು ಪರಿಸ್ಥಿತಿ ಎಂಬ ಕತ್ತಲೆಯ ಕೂಪಕ್ಕೆ ತಳ್ಳಿ ಪುಣ್ಯಕಟ್ಟಿಕೊಂಡರು. ಆ ಸಂದರ್ಭದಲ್ಲಿ ಸುಡು ಸುಡುವ, ಹಸಿ ಹಸಿ ಪದ್ಯಗಳನ್ನು ಬರೆಯುತ್ತಿದ್ದ ನನಗೆ ಹೇಗಾದರೂ ಮಾಡಿ ಜೈಲಿಗೆ ಹೋಗಿ‌ಉ ಪೋಲೀಸರ ಹೈದರಾಬಾದ್ ಗೋಲಿಯ ರುಚಿ ನೋಡುವ ಆಸೆ ಇತ್ತು. ಅದಕ್ಕಾಗಿ ನಾನು ಇಂದಿರಾಗಾಂಧಿ ವಿರುದ್ಧ ಮಾತಾಡಿದೆ, ಬರೆದೆ, ಗೆಳೆಯರನ್ನು ಕಟ್ಟಿಕೊಂಡು ಜಗದಂಬೆ ಬೀದಿ ನಾಟಕವನ್ನೂ ಆಡಿದೆ. ಆದರೆ ಇಪ್ಪತ್ತರ ಹರೆಯದ ಸಣಕಲು ಶರೀರದ ನನ್ನನ್ನು ಮುಟ್ಟುವ ಧೈರ್ಯ ಅವತ್ತಿನ ಪೋಲೀಸರಿಗೆ ಬರಲೇ ಇಲ್ಲ – ಪೋಲೀಸರಿಗಿಂತ ಮೊದಲೇ ನಮ್ಮಪ್ಪ ನನ್ನನ್ನು ಆಂಧ್ರಪ್ರದೇಶಕ್ಕೆ ಗಡಿಪಾರು ಮಾಡಿ ತಲೆ ನೋವು ಕಡಿಮೆ ಮಾಡಿಕೊಂಡ. ಅಲ್ಲಿ ಒಂದೆರಡು ತಿಂಗಳು ಒಡಹುಟ್ಟಿದ ಅಕ್ಕನಮನೆಗೆ ನೀರು ಹೊತ್ತ ಮೇಲೆ ಮಾಸ್ತರಿಕ ನೌಕರಿ ದೊರಕಿತು. +ನಾನು ಮಾಸ್ತರಿಕೆ ಆರಂಭ್ಸಿದ ವಂದವಾಗಲಿ ಎಂಬ ಶಿಲಾಯುಗ ಜಾಯಮಾನದ ಹಳ್ಳಿಯಲ್ಲೂ ನನ್ನ ಬಂಡಾಯ ಜಾಯಮಾನದ ಗುಣ ದ್ವಿಗುಣಗೊಂಡಿತು. ಅಲ್ಲಿ ಕೇವಲ ಮೇಲ್ಜಾತಿಯವರಿಗೆ, ಮೇಲ್ವರ್ಗದವರಿಗಷ್ಟೇ ಸೀಮಿತಗೊಂಡಿದ್ದ ಸರಕಾರಿ ಶಾಲೆಗೆ ಶೂದ್ರಕೋಮಿಗೆ ಸೇರಿದ ಹುಡುಗರುಪ್ಪಡಿಯನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಸೆಗಣಿ ಬಳಿಯೋ ಮೂಮ್ಡೇವ್ಕೆ ವಿದ್ಯೆ ಹತ್ತೋದಿಲ್ಲಪ್ಪಾ…. ಅಂಥ ಹುಚ್ಚು ಸಾಹಸ ಮಾಡಬೇಡ ಎಂದು ಹೇಳಲು ಪ್ರಯತ್ನಿಸಿದ ಗ್ರಾಮದ ಗೌಡರ, ಜಮೀನ್ದಾರರ ಮಾತಿಗೆ ಸೊಪ್ಪು ಹಾಕಲಿಲ್ಲ. ಅವರ ಕಣ್ಣುಗಳು ಕೆಂಜರಿಯುತ್ತಿದ್ದರು ಲೆಕ್ಕಿಸಲಿಲ್ಲ. ಉಳ್ಳವರ ಎಂಜಲು ಅರಗಿಸಿಕೊಂಡೇ ಸಹಸ್ರ ಸಹಸ್ರ ಕೊರತೆಗಳ ನಡುವೆ ಬದುಕುತ್ತಿದ್ದ ಹೊಲೆಯರ, ಮಾದಿಗರ ಮಕ್ಕಳು ಶಾಲೆಯ ಆಜುಬಾಜು ಸುಳಿಯಬಾರದೆಂದೇ ಸರಕಾರಿ ಶಾಲೆಗೆ ಪಕಾಕಟ್ಟಡ ಆಗದಂತೆ ಅಲ್ಲಿನ ಜಮೀನ್ದಾರಿ ವ್ಯವಸ್ಥೆ ನೋಡಿಕೊಂಡಿತ್ತು. ಆದರ್ಶಗಳ ಗೂಬೆ ಮೇಲೆ ವಿಹರಿಸುತ್ತಿದ್ದ ನಾನು ತುರ್ತುಪರಿಸ್ಥಿತಿ ಎಂಬ ಬಿಲ್ಲು ಬಾಣಹಿಡಿದುಕೊಂಡು ದಲಿತರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಬಗೆಬಗೆಯ ಪ್ರಯತ್ನ ಮಾಡಿದೆ. ಉಳ್ಳವರ ಯಾವುದೇ ಹಂಗು ಲಗಾಮುಗಳಿಂದ ದೂರವಿದ್ದ ನಾನು ಸರಕಾರಿ ಶಾಲೆಯನ್ನು ಮೇಲ್ಜಾತಿಯವರ ಸುಪರ್ಧಿಯಲ್ಲಿದ್ದ ವೀರಭದ್ರ ದೇವರ ಗುಡಿಯಿಂದ ದಲಿತಕೇರಿಯಲ್ಲಿದ್ದ ಕಂದಾರಮ್ಮನ ಗುಡಿಗೆ ವರ್ಗಾಯಿಸಿ ಜಮೀನ್ದಾರಿ ವ್ಯವಸ್ಥೆಯ ಬೆನ್ನಿಗೆ ಬರೆ ಎಳೆದೆ. ಇದರಿಂದ ರೆಡ್ಡಿ ಕೋಮಿನವರು ಬುಸುಗುಟ್ಟ,ಆರಂಭಿಸಿದ್ದು ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಿತು. ದೈಹಿಕವಾಗಿಯೂ ಗಟ್ಟಿಮುಟ್ಟಾಗಿದ್ದ ನಾನು ಯಾವುದೇ ಬುಸುಗುಟ್ಟುವಿಕೆಗೆ ವಿಚಲಿತನಾಗದೆ ಕಪ್ಪೆಗಳಂತೆ ಪುಟಿದು ನೆಗೆದುನೋಡುತ್ತಿದ್ದ ದಲಿತ ಮಕ್ಕಳನ್ನು ಹಿಡಿದು ತಂದು ಅಕ್ಷರ ಕಲಿಸುವಲ್ಲಿ ಯಶಸ್ವಿಯಾದೆ. ದಲಿತ ಕೇರಿಯಲ್ಲಿ ಅಕ್ಷರದ ಅರುಣೋದಯ ಕಾಣಿಸಿಕೊಂಡಿದ್ದು ನನ್ನ ಸತತ ಪ್ರಯತ್ನದಿಂದಾಗಿಯೇ, ಅನೇಕ ವರ್ಷಗಳ ಕಾಲ ದಲಿತ ಬದುಕಿನೊಂದಿಗೆ ನಿಕಟ ಸಂಬಂಧವಿರಿಸಿಕೊಂಡಿದ್ದರಿಂದಾಗಿಯೇ ನನ್ನ ಕಥೆಗಳಲ್ಲಿ ದಲಿತರಾದ ಕಿವುಡ, ಕತ್ತಲ, ಠೊಣ್ಣಿ, ಉಪ್ಪುಳಿ, ಕೊಕ್ಕ, ಚಂದ್ರರಂಥವರು ಸ್ವಾಭಾವಿಕವಾಗಿ ಜಾಗ ಪಡೆದುಕೊಂಡರು. ದಲಿತೇತರರು ದಲಿತರ ಬಗ್ಗೆ ಬರೆಯಬಾರದೆಂದು ಕಡುವಾಗಿ ವಾದಿಸುತ್ತಿರುವರು ನನ್ನದೊಂದು ಯಶಸ್ವಿ ಕಥೆ ದೇವರ ಹೆಣದ ಬಗ್ಗೆ ಅಪಸೊಲ್ಲು ಎತ್ತಿದರು. ದಲಿತರ ಬದುಕು ಹೀಗಿರಲು ಸಾದ್ಯವೇ ಎಂಬ ಅನುಮಾನ ವ್ಯಕ್ತಪಡಿಸುವ ಕರ್ನಾಟಕದ ಅಕ್ಷರಸ್ಥ ದಲಿತ, ನೆರೆಹೊರೆಯ ದಲಿತರ ಬದುಕಿನ ಒಳನಮೂನೆಗಳನ್ನು ನೋಡಿಲ್ಲ. ಊಹೆಗೆ, ಅಕ್ಷರದ ಚಿಮುಟಿಗೆ ನಿಲುಕದ ಎಷ್ಟೋ ದಾರುಣ ಸತ್ಯಗಳು ಆಂಧ್ರದ ಗ್ರಾಮಾಂತರ ಪ್ರದೇಶದಲಿವೆ ಎಂಬ ವಾಸ್ತವ ಗೋಚರಿಸುವುದು. ಒಂದು ಕೋಳಿ, ಒಂದು ಕ್ವಾರ್ಟರ್ ರಂ, ಒಂದು ಸಾವಿರ ನಗದು ರೂಪಾಯಿ ನಗದು ಕೊಟ್ಟರೆ ಸೂಚಿಸಿದವರನ್ನು ನಿರಾಯಾಸವಾಗಿ ಕೊಲೆಮಾಡುವಂಥ ದಲಿತ, ಶೂದ್ರ ಅಲ್ಲಿ ಆಯುಧದ ರೀತಿಯಲ್ಲಿದ್ದಾನೆ. ಅಂಥವರನ್ನು ಅಲ್ಲಿನ ಜಮೀನ್ದಾರಿ ವ್ಯವಸ್ಥೆ ತನ್ನ ಅಸ್ತಿತ್ವದ ರಕ್ಷಣೆಗೆ ಬಳಸಿಕೊಳ್ಳಿತ್ತಿದೆ. ಕೊಲೆ, ಸುಲಿಗೆ, ಖಟ್ಳೆಗಳಿಂದಾಗಿ ಜೈಲು ಪಾಲಾದವರಿಗೂ ಮತ್ತು ಅವರ ಹೆಂಡತಿ ಮಕ್ಕಳಿಗೂ ನಡುವೆ ಅಕ್ಷರದ ಸೇತುವೆಯಾಗಿ ಕೆಲಸ ಮಾಡಿದ ಅನುಭವ ನನಗಿದೆ. ಬೀದಿಯಲ್ಲಿ ಹೋಗುವ ಎಷ್ಟೋ ಮಾರಿಗಳನ್ನು ಮೈ ಮೇಲೆಳೆದುಕೊಂಡ ಅನುಭವ ನನಗಿದೆ. ಇಂಥ ಸಂದರ್ಭದಲ್ಲಿ ನಾನು ನಿರ್ವಾತ ಸ್ಥಿತಿಯಲ್ಲಿ ಕೂತು ಕಾಲ್ಪನಿಕ ಕಥೆಗಳನ್ನು ಬರೆಯಲಿಲ್ಲ. ನನ್ನ ಒಂದೊಂದು ಕಥೆಯ ಹಿಂದೆ ಒಂದೊಂದು ಸಂಕಟ, ತಾಪತ್ರಯಗಳಿವೆ. ಕರ್ನಾಟಕದ ಓದುಗರೊಂದಿಗೆ ನಿರಂತರವಾಗಿ ಸಂವಾದಿಸುವ; ನಿಕಟ ಸಂಪರ್ಕವಿರಿಸಿಕೊಳ್ಳುವ, ನನ್ನ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ಭೀಕರ ಒಂಟಿತನದ ಬೇಗುದಿಯನ್ನು ನೀಗಿಕೊಳ್ಳಲೆಂದೇ ಅನೇಕ ಕಥೆಗಳನ್ನು ಒಂದರ ಹಿಂದೆ ಒಂದರಂತೆ ಬರೆದೆ. ಹೀಗೆ ನನಗೆ ತೋಚಿದಂತೆ ಬರೆಯುವುದು ನನಗೆ ಅನಿವಾರ್ಯವಾಗಿತ್ತು. ಬರಹದ ಮೂಲಕ ನನ್ನ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಬರಹ ನನ್ನ ಮಾನಸಿಕ ಬೇಗುದಿಯನ್ನು ಕಡಿಮೆಮಾಡಿ ಮನಸ್ಸನ್ನು ನಿರಮ್ಮಳಮಾಡುತ್ತಿತ್ತು. ಇನ್ನೊಬ್ಬರು ನನ್ನನ್ನು ಕಥೆಗಾರನೆಂದು ಗುರುತಿಸುವಷ್ಟರ ಮಟ್ಟಿಗೆ ನಾನು ಅನೇಕ ಕಥೆಗಳನ್ನು ಬರೆದೆ. ಆಗ ಸ್ವಲ್ಪ ಸೊಕ್ಕು ಬಂದು ಬೆಂಗಳೂರಿನ ಗೆಳೆಯರೆದುರು ಧಿಮಾಕಿನಿಂದ ಅಡ್ಡಾಡುತ್ತಿದ್ದೆ. ಆ ಸೊಕ್ಕು, ಧಿಮಾಕು ಜಮೀನ್ದಾರಿ ವ್ಯವಸ್ಥೆಯ ಪ್ರಭಾವದಿಂದ ಬಂದದ್ದು…. ಕನಿಷ್ಠ ಸೌಲಭ್ಯಗಳಿಲ್ಲದೆ ಬದುಕುತ್ತಿರುವಲ್ಲಿನ ಹಳ್ಳಿಗಳಿಗೆ, ಉಯ್ಯಾಲವಾಡ, ಕೋಸಿಗೆ ಔಕು ಮುಂತಾದ ಪಾಳೆ ಪಟ್ಟುಗಳಾಗಲೀ, ಗಂಗುಲ ಪ್ರತಾಪರೆಡ್ಡಿ. ಚೆಲ್ಲಾರಾಮ ಕ್ರಿಷ್ಣರೆಡ್ಡಿ, ಭೂಮಾನಾಗಿ ರೆಡ್ಡಿಯರಂಥ ಜಮೀನ್ದಾರರಾಗಲೀ ಬಿಟ್ಟರೆ ಬೇರೊಂದು ಮಾಹಿತಿ ತಿಳಿಯದು. ಅಂಥ ವಾತಾವರಣ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ರಮ, ವಯಕ್ತಿಕ ಕ್ಷೇಮ ಲಾಭ ಹೇಗಿರಬೇಡ? ಶ್ರೀರಾಕುಳಂ ರೈತ ಹೋರಾಟಕ್ಕೆ ಸಂಬಂಧಿಸಿದಂಥ ಸಾಹಿತ್ಯದ ಪ್ರಭಾವದಿಂದಾಗಿ ನನ್ನ ಬಹುಪಾಲು ಆರಂಭಿಕ ಕಥೆಗಳಲ್ಲಿ ಕ್ರೌರ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅಷ್ಟೇ ನಿಚ್ಚಳವಾಗಿತ್ತು. ಭಾಷೆ, ಅನುಭವ ಮತ್ತು ಅಭಿವ್ಯಕ್ತ ಕ್ರಮ ಕನ್ನಡದ ಲೇಖಕರಿಗಿಂತ ಭಿನ್ನವಾಗಿತ್ತು. ಭಿನ್ನವಾಗಿರುವುದು ಕೂಡ. ಇದನ್ನೆಲ್ಲ ಓದಿದ ವಿಮರ್ಶಕರು ನನ್ನನ್ನು ಪಾಶ್ಚಿಮಾತ್ಯ ಲೇಖಕರೊಂದಿಗೆ ಸಮೀಕರಿಸಿ ನೋಡುವುದು, ಕನ್ನಡದ ಬಹುಮುಖ್ಯ ಕಥೆಗಾರರ ಪ್ರಭಾವ ನನ್ನ ಮೇಲಿದೆಯೆಂದು ವಾದಿಸುವುದು ಎಷ್ಟರಮಟ್ಟಿಗೆ ಸರಿ? ಅಂದ ಮಾತ್ರಕ್ಕೆ ನಾನು ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ದೇವನೂರು ಮಹಾದೇವನಂಥವರ ತರಗತಿಗಳಲ್ಲಿ ಓದಿಲ್ಲವೆಂದು ಅರ್ಥವಲ್ಲ…. ಒಬ್ಬ ಕಥೆಗಾರ ಯಾವ ಯಾವ ಶಾಲೆಗಳನ್ನು ದಾಟಬೇಕೋ ಅದನ್ನೆಲ್ಲ ನಾನೂ ಯಶಸ್ವಿಯಾಗಿ ದಾಟಿದ್ದೇನೆ…. ಕನ್ನಡ ಮತ್ತು ತೆಲುಗು ಭಾಷೆಗಳ ಸಣ್ಣ ಕಥಾ ಪ್ರಕಾರದ ಸತ್ವವನ್ನು ಅರಗಿಸಿಕೊಳ್ಳಿತ್ತಲೇ ಕಥೆಗಳನ್ನು ಬರೆಯತೊಡಗಿದಂಥವನು ನಾನು…. ಇರಲಿ…. ಈ ಹಿನ್ನೆಲೆಯಿಂದ ೧೯೮೦ರ ಹೊತ್ತಿಗೆ ಸುಮಾರು ಕಥೆಗಳನ್ನು ಬರೆದು ಅನೇಕರಿಂದ ಹಲೋ, ಹಲೋ ಎನ್ನಿಸಿಕೊಳ್ಳುತ್ತಿದ್ದ ನಾನು ಈ ನನ್ನ ಪ್ರಪ್ರಥಮ ಕಾದಂಬರಿ ಬರೆದದ್ದೆ ತೀರಾ ಆಕಸ್ಮಿಕ. ಆ ಹೊತ್ತಿಗಾಗಲೆ ಹುಂಬತನಕ್ಕೆ ಹೆಸರಾಗಿದ್ದ ನಾನು ‘ಇನ್ನಾದರೂ ಸಾಯಬೇಕು’ ಎಂಬ ಕಥೆ ಬರೆದು ಬಳ್ಳಾರಿಯ ಹೋಟೆಲ್ ಉದ್ಯಮಿಯೋರ್ವರ ಕೋಪಾರುಣನೇತ್ರಗಳಿಗೆ ತುತ್ತಾಗಿ ಕೋರ್ಟುಕಟ್ಟಲೆ ಹತ್ತಿಳಿದಿದ್ದೆ. ಕೋರ್ಟಿಗೆ ಹೋಗುವಂಥ ಕತೆಗಳನ್ನು ಬರೆಯುವ ನಾನೆಂಬ ಅಹಂನಲ್ಲಿದ್ದ ನನಗೂ ಮತ್ತು ಮಲ್ಲೇಪುರಂ ವೆಂಕಟೇಶರೆಂಬ ಪಂಡಿತರಿಗೂ ೧೯೭೦ರಲ್ಲಿ ಸೃಜನಶೀಲಕ್ರಿಯೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿಯಾಯಿತು. “ಕಥೆ ಬರೆದಷ್ಟು ಸುಲಭವಲ್ಲ ಕಾದಂಬರಿ ಬರೆಯುವುದು” ಅವರೂ, ಅದ್ಯಾವ ಮಹಾಸಂಗತಿ ಎಂದು ನಾನೂ ಅರ್ಧಗಂಟೆ ಕಾಲ ವಾದಿಸಿದೆವು. ಮಾತಿಗೆ ಮಾತು ಬೆಳೆದು ನಾನು ಒಂದೇ ವಾರದಲ್ಲಿ ಕಾದಂಬರಿ ಬರೆಯುವೆನೆಂದೂ; ಅದು ವಿಮರ್ಶಕರಿಗೆ ಮೆಚ್ಚುಗೆಯಾಗಿ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆಯುವುದೆಂದೂ ಅವರಿಗೆ ಮಾತುಕೊಟ್ಟೆ. +ಬೆಂಗಳೂರಿಂದ ವಂದವಾಗಿಲಿಗೆ ಮರಳಿ ಬಂದೊಡನೆ ಒಂದು ವಾರದಲ್ಲಿ ಕಾದಂಬರಿ ಬರೆದು, ಅದಕ್ಕೆ ಕಪು ಎಂಬ ಶೀರ್ಶಿಕೆ ಕೊಟ್ಟೆ. ನಾನೆಂದೂ ನನ್ನ ಬರಹವನ್ನು ಎರಡನೆ ಸಾರಿ ಓದುವ, ತಿದ್ದುವ ತಾಪತ್ರಯಕ್ಕೆ ಸಿಲುಕಿದವನಲ್ಲ. ಅದರಂತೆ ಕಪ್ಪು ಕಾದಂಬರಿಯ ಹಸ್ತಪ್ರತಿಯ ಮೇಲೆ ಕಣ್ಣಾಡಿಸಲಿಲ್ಲ. ಅದನ್ನು ಕಂಕುಳಲ್ಲಿಟ್ಟುಕೊಂಡು ಸೀದ ಬೆಂಗಳೂರಿಗೆ ಹೋಗಿ ಛಾಲೆಂಜರ್ ಮತ್ತು ಛಾರ್ಜರ್ ವೆಂಕಟೇಶ್‌ರೆಂಬ ನಿರುಪದ್ರವಿ ಮಿತ್ರರ ಮುಂದೆ ಹಿಡಿದೆ. ಅವರು ಓದಿದರೋ ಇಲ್ಲವೋ ನೆನಪಿಲ್ಲ ಆದರೆ ಅವರು ಶಹಬ್ಬಾಶ್ ಕುಂವೀ ಎಂದು ಬೆನ್ನುತಟ್ಟಿದ್ದು ಮಾತ್ರ ನೆನಪಿದೆ. +ಪ್ರಕಾಶನಕ್ಕೆ ಸಂಬಂಧಿಸಿದಂತೆ ಅನೇಕ ಎಡರುತೊಡರುಗಳು ಎದುರಾದವು. ಅದು ಮಲ್ಲಿಗೆ ಎಂಬ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಲಿ ಎಂದು ಯಾಕೆ ಆಶಿಸಿದೆನೆಂದರೆ ಕನ್ನಡದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರಾದ ಎಸ್.ದಿವಾಕರ್ ಅವರು ಸಂಪಾದಕರಾಗಿದ್ದು ನವೋದಯ ಕಾಲದ ಅನೇಕ ಮಹತ್ವದ ಕಥೆಗಳನ್ನು ಗಿರಡ್ಡಿಯವರ ಮಾತುಗಳೊಂದಿಗೆ ಮಾಸಿಕದಲ್ಲಿ ಪ್ರಕಟಿಸುತ್ತಿದ್ದರು. ಅವರಿಗೆ ಕಾದಂಬರಿಯ ಹಸ್ತ ಪ್ರತಿ ನೀಡಿ ತಿಂಗಳುಗಟ್ಟಲೆ ಕಾದೆ. ಅದನ್ನು ಓದಿರದಿದ್ದ ಅವರು ಇಂಗ್ಲೀಷ್ ಕಾದಂಬರಿಗಳ ಬಗ್ಗೆ ಗಂಟೆಗಟ್ಟಲೆ ಮಾತಾಡಿ ನನ್ನನ್ನು ಹಿಂಡಿ ಹಿಪ್ಪೆಮಾಡಿದರು. ಉಪಾಯಾಂತರದಿಂದ ಕಾದಂಬರಿಯ ಹಸ್ತಪ್ರತಿಯನ್ನು ಪಡೆದು, ಕಂಕುಳಲ್ಲಿ ಶಿಳ್ಳೆ ಹಾಕುತ್ತ ಸೀದ ಗೀತಾ ಪ್ರಕಾಶಕರ ಬಳಿಗೆ ಹೋದೆ. ನನ್ನ ದೃಷ್ಟಿಯಲ್ಲಿ ಆಗ ಅವರೋರ್ವರೇ ಶ್ರೇಷ್ಠ ಪ್ರಕಾಶಕರಾಗಿದ್ದರು. ಹೋದೊಡನೆ ಪ್ರವರ ಹೇಳಿಕೊಂಡು ಅವರ ಕೈಗೆ ಕಾದಂಬರಿಯ ಹಸ್ತಪ್ರತಿ ಕೊಟ್ಟು ರಾಜ ಗಾಂಭೀರ್ಯದಿಂದ ನಿಂತುಕೊಂಡೆ. ಆ ಮಾಹಾನುಭಾವರು ಹಸ್ತಪ್ರತಿ ಕಡೆಗೊಮ್ಮೆ; ನನ್ನ ಕಡೆಗೊಮ್ಮೆ ಅನುಮಾನಾಸ್ಪದ ರೀತಿಯಲ್ಲಿ ನೋಡಿ ನನ್ನ ನಾಮಾಂಕಿತ ಕೇಳಿದರು, ಹೇಳಿದೆ. ನಕ್ಕು “ಕುಂ ವೀರಭದ್ರಪ್ಪ ಎಂಬ ಹೆಸರು ಕೇಳಿದ್ರೆ ಯಾರು ಈ ಕಾದಂಬರಿ ಓದೋದಿಲ್ರೀ…. ಸಾಯಿಸುತೆ, ರಾಧಾದೇವಿ, ಅಶ್ವಿನಿ…. ಇಂಥ ಹೆಸರಿಟ್ಕೊಂಡ್ರೆ ನಾವಿದನ್ನು ಪ್ರಕಟಿಸ್ತೀವಿ” ಎಂದರು. ಅದನ್ನು ಕೇಳಿ ಸಿಟ್ಟು ಬೇಸರ ಒಟ್ಟಿಗೆ ಬಂದವು. ಸಾಲಸೋಲಮಾಡಿ ನಾನೇ ಪ್ರಕಟಿಸಬೇಕೆಂದು ಪರಮಮಿತ್ರ ಜಾಣಗೆರೆಯವರ ಕೈಗೆ ಕೊಟ್ಟು “ಕುಂಬಳಕಾಯಿ ನಿಮ್ದೆ; ಕುಡುಗೋಲು ನಿಮ್ದೆ” ಎಂದು ಭಾರ ಹಾಕಿದೆ. ಮುಂದೆ ಸಂಸಾರದ ತಾಪತ್ರಗಳಿಂದಾಗಿ ಅದರ ಹೊಣೆಯನ್ನು ಹಗರಿ ಬೊಮ್ಮನಹಳ್ಳಿಯ ಯುವಕರ ಸಂಘ ಪ್ರಕಾಶನದ ಹಿರಿಯ ಆತ್ಮೀಯ ಮಿತ್ರರಾದ ಗುರುಮೂರ್ತಿಯವರ ಕೊರಳಿಗೆ ಕಟ್ಟಿದೆ. ಯಾಕಾಗಬಾರದೆಂದು ಅವರು ಅದನ್ನು ಪ್ರಕಟಿಸಿ ಬಿಟ್ಟರು. ಬಿಡುಗಡೆ ಆಗುವುದಕ್ಕಿಂತ ಮೊದಲು ಕಪ್ಪು ಕಾದಂಬರಿಯ ಐದಾರು ಪ್ರತಿ ತಂದು ವಂದವಾಗಿಲಿಯ ಮಹಾನ್ ಓದುಗರಾದ ತಿಪ್ಪಾರೆಡ್ಡಿ, ಸುಶೀಲಮ್ಮರಿಗೆ ಕೊಟ್ಟು ಕಾಲರ್ ಸರಿಪಡಿಸಿಕೊಂಡೆ. +ಒಂದು ದಿನ ಶಾಲೆಗೆ ಹೊರಟಿದ್ದ ನನ್ನನ್ನು ತುರುಬಿ ಪ್ರಹ್ಲಾದರೆಡ್ಡಿ “ಮೇಸ್ಟ್ರೆ! ಹೇಳ್ದೆ ಕೇಳ್ದೆ ಊರು ಬಿಟ್ಟು ಹೋಗಿಬಿಡಿ” ಎಂದರು, ಬಾಯಿ ಒಣಗಿತು. “ಯಾಕ್ರಿ?” ಅಂದೆ, “ನೀವು ಊರವರ ಮೇಲೆ ಅದೇನೋ ಕಾದಂಬರಿ ಗೀದಂಬರಿ ಬರೆದೀರಂತಲ್ರಿ…. ನಿಮ್ಮ ತಲೆ ಬೋಳಿಸಿ ಕತ್ತೆ ಮೇಲೆ ಕುಂಡ್ರಿಸಿ ಮೆರವನಿಗೆ ಮಾಡಬೇಕಂತ ಊರವರು ಒಳಗೊಳಗೆ ಪ್ಲಾನ್ ಮಾಡ್ತಿದ್ದಾರೆ; ಆ ಗಲಾಟೆಯಲ್ಲಿ ನಿಮ್ಮ ಕೊಲೇನೂ ಆಗಬಹ್ದು…. ಅದ್ಕೆ ಈಗಿಂದೀಗ್ಲೆ ಊರು ಬಿಟ್ಟು ಹೋಗಿಬಿಡ್ರಿ” ಎಂದು ಅಂಗಲಾಚಿದರು. ಅದನ್ನು ಕೇಳಿ ನಾನು ಕುಸಿದುಬಿಟ್ಟೆ. +ಮುಖ್ಯ ರಸ್ತೆಯಿಂದ ಐದಾರು ಮೈಲಿ ದೂರದಲ್ಲಿ ದೀಪದಂತಿದ್ದ ಆ ಊರಲ್ಲಿ ಕೊಲೆಗಿಲೆ ನಡೆದರೂ ಹೊರ ಪ್ರಪಂಚಕ್ಕೆ ಅಷ್ಟು ಸುಲಭವಾಗಿ ಗೊತ್ತಾಗುವುದು ಸಾಧ್ಯವಿರಲಿಲ್ಲ. ಗ್ರಾಮದಲ್ಲಿ ನಡೆಯುತ್ತಿದ್ದ ಎಷ್ಟೋ ದೊಂಬಿಗಳು, ಕೊಲೆಗಳು ಮುಖಂಡರ ಪಂಚಾಯ್ತಿಗಳಿಂದಾಗಿ ಅಲ್ಲೇ ಮುಚ್ಚಿಕೊಂಡು ಬಿಡುತ್ತಿದ್ದವು. ಮೇಸ್ಟ್ರುಗಳೆಂದರೆ ರೆಡ್ಡಿ ಕೋಮಿನವರ ಸಾಕುನಾಯಿಗಳಂತಿರಬೇಕೆಂದೇ ಭಾವಿಸಿದ್ದಂತಹ ಗ್ರಾಮ ಅದಾಗಿತ್ತು. ಅಲ್ಲಿ ಕೆಲಸ ಮಾಡಿದ ಮೇಸ್ಟ್ರುಗಳು ಆ ಗೌಡನ ಮನೆಯಲ್ಲೊಂದಿಷ್ಟು, ಈ ಗೌಡನ ಮನೆಯಲ್ಲೊಂದಿಷ್ಟು ಉಂಡು, ಅವರೊಂದಿಗೆ ಇಸಪೀಟು, ಮಟಕಾ ಆಡಿ ಹೇಗೋ ಒಂದು ರೀತಿ ಕಾಲಕಳೆದು ಹೋಗಿದ್ದರು. ಆದರೆ ನಾನು ದಲಿತ, ಶೂದ್ರರನ್ನು ಅಕ್ಷರಸ್ಥರನ್ನಾಗಿ ಮಾಡಿದ್ದು, ನನ್ನಿಂದ ವಿದ್ಯೆ ಕಲಿತ ಅವರು ಎದೆ ಸೆಟೆಸಿಕೊಂಡು ಅಡ್ಡಾಡುತ್ತಿದ್ದುದು, ಚಪರ ಚನ್ನಪ್ಪನ ಗುಂಡನ್ನು ಅದೋನಿಯ ಮಾಟಿಗರ ಬೇಡರಿಂದ ಎತ್ತಿಸಿ ಊರ ಪ್ರಮುಖ ಗೌಡನ ಬಾಯಿಯಿಂದ ಸಾರ್ವಜನಿಕವಾಗಿ ಸುಳ್ಳು ಹೇಳಿಸಿ ಅವರ ಪ್ರತಿಷ್ಠೆಯ ಬೆನ್ನಿಗೆ ಬರೆ ಎಳೆದದ್ದು, ಇಂಥ ಎಷ್ಟೋ ಕಾರಣಗಳಿಂದ; ಸುಧಾರಣೆಗಳಿಂದ ಒಳಗೊಳಗೇ ಕೆರಳಿದ್ದ ಜಮೀನ್ದಾರಿ ಮಂದಿ ನನ್ನ ಕಾದಂಬರಿಯನ್ನೇ ಒಂದು ನೆಪವಾಗಿರಿಸಿಕೊಂಡು ಅಲ್ಲಿಯ ಮುಗ್ಧ ಜನರನ್ನು ನನ್ನ ವಿರುದ್ದ ಎತ್ತಿಕಟ್ಟುವಲ್ಲಿ ಯಶಸ್ವಿಯಾದರು. +ದೈಹಿಕವಾಗಿ ಸ್ಟ್ರಾಂಗ್ ಇದ್ದ ನನ್ನನ್ನು ಅಷ್ಟು ಸುಲಭವಾಗಿ ಅಟ್ಯಾರ್ ಮಾಡುವುದು ಸಾಧ್ಯವಿರಲಿಲ್ಲ. ಶಿವಲಿಂಗಯ್ಯ, ಮಾನಪ್ಪಾಚಾರಿಯರಂಥ ಅಪಾ ಪೋಲಿಯರು ಸ್ಕೂಲ್ ಬಳಿಗೆ ಬಂದು ಬಾಯಿಗೆ ಬಂದಂತೆ ಬಯ್ದು ಹೋದರು. ನಾನು ಏಳೆಂಟುಮಂದಿ ಬಾಡಿಗೆ ಬಂಟರಿಗೆ ಕುಡಿಸಿ ತಿನ್ನಿಸಿ ಮೈಗಾವಲು ಇರಿಸಿಕೊಂಡು ಅಡ್ಡಾಡತೊಡಗಿದೆ. ನನ್ನ ಹೆಣ ಇಂದು ಉರುಳಬಹುದು, ನಾಳೆ ಉರುಳಬಹುದೆಂದು ಜಾತಕಪಕ್ಷಿಗಳಮ್ತೆ ಕಾಯುತ್ತಿದ್ದ ಗ್ರಾಮಸ್ಥರು ನಾನಿನ್ನು ಬದುಕಿರುವುದು ಕಂಡು ಪದೇಪದೆ ನಿರಾಶರಾಗುತ್ತಿದ್ದರು. ಸೊಂಟದಲ್ಲಿ ಸೈಕಲ್ ಚೈನು, ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬೆಂಗಾವಲಿನಡುವೆ ಸಹಜ ಕ್ರಿಯೆಗಳನ್ನು ಅರ್ಧಂಬರ್ಧ ತೀರಿಸುತ್ತ ಹೇಗೋ ಮೂರುನಾಲ್ಕು ದಿನ ಕಳೆದ ಮೇಲೆ ನನ್ನನ್ನು ರಾಮದೇವರಗುಡಿ ಪಂಚಾಯ್ತಿ ಕಟ್ಟೆಗೆ ಕರೆದರು. ಗುರುಬಸಪ್ಪ (ಎರಡು ಮೂರು ಖೂನಿ ಮಾಡಿ ದಕ್ಕಿಸಿಕೊಂಡಿದ್ದಂಥ ವ್ಯಕ್ತಿ. ಈಗ ಗುರುಬೋಧೆ ಸ್ವೀಕರಿಸಿ ಸಾಧು ಸಂತನಾಗಿದ್ದಾನೆ) ಹೋಗದಂತೆ ನನ್ನನ್ನು ತಡೆದ, “ಎರಡರಲ್ಲೊಂದು ಪೈಸಲ್ಲಾಗಲಿ” ಎಂಬ ಕಾರಣದಿಂದ ನಾನು ಹಿಂಗಾವಲು, ಮುಂಗಾವಲು ಇಟ್ಟುಕೊಂಡು ಅಲ್ಲಿಗೆ ಹೋದೆ. ಅಲ್ಲಿದ್ದ ಒಬ್ಬೊಬ್ಬ ಸದ್‌ಗೃಹಸ್ಥ ಬಾಯಿಗೆ ಬಂದಂತೆ ಮಾತಾಡಿದ. ನಾನು ನನ್ನು ಕಾದಂಬರಿ ಸದರೀ ಗ್ರಾಮಕ್ಕೂ ಯಾವ ಸಂಬಂಧವಿಲ್ಲವೆಂದೂ, ದೂರದ ಕೋಸಿಗಿಯಲ್ಲಿದ್ದ ನಾರಾಯಣ ದೊರೆ (ಶಾಂಬೆನಗಲ್‌ರವರ ನಿಶಾಂತ್ ಚಿತ್ರಕ್ಕೆ ಸ್ಪೂರ್ತಿ ನೀಡಿದ ಸ್ವಾತಂತ್ರೋತ್ತರ ಪಾಳೆಗಾರ., ಅನೇಕ ನಮೂನೆಯ ದೌರ್ಜನ್ಯಕ್ಕೆ, ಕ್ರೌರ್ಯಕ್ಕೆ ಹೆಸರಾಗಿದ್ದ ಆತ ಆದವಾನಿಯಲ್ಲಿ ೧೯೭೪ರಲ್ಲಿ ಹಾಡುಹಗಲೇ ಕೊಲೆಯಾದ) ಕುರಿತು ಬರೆದದ್ದೆಂದೂ ಪರಿಪರಿಯಾಗಿ ಹೇಳಿದೆ. ಆದರೆ ಅವರಾರೂ ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ನಾನೊಬ್ಬ ಹಾರ್ಡ್‌ಕೋರ್ ನಕ್ಸಲೈಟ್‌ನೆಂದೇ ತಿಳಿದಿದ್ದ ಗ್ರಾಮದ ಸರಪಂಚ ಓಂಕಾರರೆಡ್ಡಿ “ಎಷ್ಟು ಪುಸ್ತಕ ಮಾಡಿಸಿದ್ದೀ, ನಿನ್ನಂಥ ನಾಸ್ತಿಕ ಮಾಡುವ ಆಣೆ ಪ್ರಮಾಣಗಳನ್ನು ನಾವೆಲ್ಲ ನಂಬೋದಿಲ್ಲ…. ಹತ್ತು ಸಾವಿರ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿದ್ದೀ ಅಂತ ನಮ್ಗೆಲ್ಲ ಗೊತ್ತಾಗಿದೆ. ಮರ್ಯಾದೆಯಿಂದ ಅವನ್ನೆಲ್ಲ ತಂದು ನಮ್ಮ ಕಣ್ಣೆದುರಿಗೆ ಸುಡಬೇಕು. ಇಲ್ಲಾಂದ್ರೆ ನಿನ್ ಕಥೇನ ಮುಗಿಸ್ತೀವಿ” ಎಂದ. ಅದಕ್ಕೆ ನಾನು ಒಪ್ಪಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಊರುಬಿಟ್ಟೆ. ಹಾಗೆ ಊರು ಬಿಟ್ಟವನು ಅಪ್ಪಿತಪ್ಪಿ ಆ ಊರಲ್ಲಿ ಕಾಲಿರಿಸಲಿಲ್ಲ. +ಮುಂದೆ ಈ ಕಾದಂಬರಿಯನ್ನು ಪ್ರೊ. ಚಂದ್ರಶೇಖರ ಪಾಟೀಲ ಬಿಡುಗಡೆ ಮಾಡುತ್ತ ಶ್ರೇಷ್ಠ ಕೃತಿ ಎಂದು ಹೊಗಳಿದರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವಿಮರ್ಶಕರು ಕಾದಂಬರಿಯನ್ನು ಮೆಚ್ಚಿ ಬರೆದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೮೩ರ ಸಾಲಿನ ಉತ್ತಮ ಕಾದಂಬರಿ ಪ್ರಶಸ್ತಿ ನೀಡಿ ಗೌರವಿಸಿತು. +ಕರ್ನಾಟಕದ ಒಂದೆರಡು ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ತರಗತಿಗಳಿಗೆ ಈ ಕಾದಂಬರಿಯನ್ನು ಪಠ್ಯವಾಗಿರಿಸಿದವು. ನನ್ನನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಕಾದಂಬರಿಕಾರರನ್ನಾಗಿ ಸ್ವೀಕರಿಸಿದ ಈ ನನ್ನ ಪ್ರೀತಿಯ ಕಪ್ಪು ಕಾದಂಬರಿ ಹುಟ್ಟಿಸಿದ ದಿಗಿಲು, ತೋರಿಸಿದ ಪ್ರೀತಿ, ತೆರೆದ ಜೀವನಾನುಭವ ಅಷ್ಟಿಷ್ಟಲ್ಲ. ಈ ಕಾದಂಬರಿ ಸೃಷ್ಟಿಸಿದ ಜಾಡಿನಲ್ಲಿ ನಡೆಯುತ್ತಲೆ ಬೇಲಿ ಮತ್ತು ಹೊಲ, ಅಸ್ತಿ, ಕೊಟ್ರಿ ಹೈಸ್ಕೂಲಿಗೆ ಸೇರಿದ್ದು ಮುಂತಾದ ಅನೇಕ ಕಾದಂಬರಿಗಳನ್ನು, ಮತ್ತು ಇತ್ತೀಚೆಗೆ ಶಾಮಣ್ಣ ಎಂಬ ಬೃಹತ್ಕಾದಂಬರಿಯನ್ನೂ ಬರೆದೆ. +ರಾಜೇಂದ್ರ ಪ್ರಿಂಟರ್‍ಸ್‌ನ ಮಿತ್ರ ಲೋಕಪ್ಪನವರು ತಮ್ಮ ಸಂವಹನ ಪ್ರಕಾಶನದ ಮೂಲಕ ಪ್ರಕಟಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. +ಕಳೆದ ವರ್ಷ ಭೌತಿಕವಾಗಿ ನಮ್ಮಿಂದ ಅಗಲಿದ ಈ ನೆಲದ ಶ್ರೇಷ್ಠ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣನವರಿಗೆ ಈ ಕೃತಿಯನ್ನು ಅರ್ಪಿಸಿರುವೆ. +ಮತ್ತೊಮ್ಮೆ ಈ ನನ್ನ ಪ್ರೀತಿಯ ಬರಹವನ್ನು ಓದುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನಮಸ್ಕಾರಗಳು. +ಕೊಟ್ಟೂರು (ಬಳ್ಳಾರಿ ಜಿಲ್ಲೆ) ಕುಂ. ವೀರಭದ್ರಪ್ಪ +ದಿ. ೨೪-೦೭-೧೯೯೯ +***** +ಕೀಲಿಕರಣ: ಸಿ ಶ್ರೀನಿವಾಸ (ಚೀನಿ), ಗುರುಪ್ರಸಾದ್ (ಪಚ್ಚಿ) +ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […] +‘ಬಿಚ್ಚು’ (ಲಾರೆನ್ಸ್)‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್)‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ (ಬ್ಲೇಕ್) ಆದರೆ: ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ […] +ಅಧ್ಯಕ್ಷರಾದ ಬಸಂತ್‌ಕುಮಾರ್‍ ಪಾಟೀಲ್ ಅವರೆ, ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_48.txt b/Kannada Sahitya/article_48.txt new file mode 100644 index 0000000000000000000000000000000000000000..bce02fe544687011fa0d6b3db6665260817f840e --- /dev/null +++ b/Kannada Sahitya/article_48.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-ವೆರ್ಲೆನ್ +ಮುಖ್ಯವಾದ್ದು ನಾದ +ನಯವಾಗದಂತೆ ವಕ್ರ ಬಳಕುವ ಲಯ +ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ +ಘನವಾಗದ ಚಂಚಲ +ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ +ಇಂಗಿತದ ಸೂಕ್ಷ್ಮ, +ಮಾತಿಗೆ ದಕ್ಕದಂತೆ ಮಿಗುವ ಮೌನ +ಈ ಸಂಗೀತವೇ +ಅರ್ಥದ ಛಾಯೆ +ಆಮೇಲೆ ಉಳಿದದ್ದು +ಸಾಹಿತ್ಯ +(ಇದು ಫ್ರೆಂಚ್ ಕವಿ, ವೆರ್ಲೆನ್ ಬರೆದ ಪದ್ಯವೊಂದರ ಸಂಕ್ಷಿಪ್ತ ರೂಪ. ವೆರ್ಲೆನ್‌ನ ಕಾಲ ೧೮೪೪-೧೮೯೬. ಈತ ಇನ್ನೊಬ್ಬ ದೊಡ್ಡ ಕವಿ ರಿಂಬೊ ಜೊತೆ ಪ್ರೀತಿ ದ್ವೇಷಗಳ ಸಂಬಂಧ ಇದ್ದವ; ರಿಂಬೊನನ್ನ ಕೊಲ್ಲಲು ಯತ್ನಿಸಿ, ಗಾಯಗೊಳಿಸಿ, ಜೈಲಿಗೆ ಹೋದವ… ಕುಡುಕ, ಸಿಡುಕ, ಮುಗ್ಧ, ಕಟುಕ ಎಲ್ಲವೂ ಆಗಿ ಸ್ಲಮ್ಮುಗಳಲ್ಲಿ ಸೂಳೆಯರ ಜೊತೆ ಬಾಳಿದ ಈ ವೆರ್ಲೆನ್ ಒಬ್ಬ ಹುಡುಗಿಯನ್ನು ಪ್ರೀತಿಸಿ, ತೊರೆದು, ಪ್ರೀತಿಸಿ ಈ ಬಾಳಿನಲ್ಲೇ ನರಕವೂ ಇದೆ, ಸ್ವರ್ಗವೂ ಇದೆ ಎಂಬುದನ್ನು ಕಂಡವನಾದ; ಶೋಫನೋರ್‌ ಎಂಬ ತತ್ವಜ್ಞಾನಿಯಿಂದ ಪ್ರಭಾವಿತನಾದ ಇವನು ಇದಕ್ಕೆ ವಿರುದ್ಧವಾಗಿ ಜೈಲಿನಲ್ಲಿ ಕ್ಯಾಥೊಲಿಕ್ ಆಗಿ ದೈವ ಶ್ರದ್ಧೆಯನ್ನು ಕವನಗಳನ್ನು ಬರೆದು ಮತ್ತೆ ರಿಂಬೋನ ಹೀಯಾಳಿಕೆಯ ಕಣ್ಣಲ್ಲಿ ಪತಿತನಾದ. ರೋಗಿಷ್ಟನಾಗಿ, ಕಡುಬಡವನಾಗಿ ಸತ್ತ ಪರಮ ವ್ಯಸನಿಯೂ, ವ್ಯಾಮೋಹಿಯೂ ಆದ ಈ ಕವಿಯನ್ನು ಫ್ರೆಂಚ್ ಜನ ಅದೆಷ್ಟು ಕಾವ್ಯಪ್ರಿಯರು ಎಂದರೆ ಅವನ ಕಾಲದಲ್ಲೇ ಬಹಳ ಮೆಚ್ಚಿಕೊಂಡರು. ಈತ ಅವರ ಪಾಲಿಗೆ ಕಾವ್ಯದ ರಾಜಕುಮಾರ. ಸಿಂಬಲಿಸ್ಟ್ ಸಂಪ್ರದಾಯದ ಕವಿಗಳಿಗೆ ಈ ಪದ್ಯ ಒಂದು ಮ್ಯಾನಿಫೆಸ್ಟೋ. ಸಭ್ಯ ಸಾಮಾಜಿಕರ ಆತ್ಮವಂಚನೆಗೆ ಸವಾಲಾಗುವ ಈ ಬಗೆಯ ಸಿಂಬಲಿಸ್ಟ್ ಕಾವ್ಯವು ಆ ಕಾಲದ ಪ್ರತಿರೋಧವಾಗಿತ್ತು ಎನ್ನಬಹುದು. ಏಕಕಾಲದಲ್ಲಿ ಮುಗ್ಧನಂತೆಯೂ ಪಾತಕಿಯಂತೆಯೂ ಕಾಣುವ ವೆರ್ಲೆನ್‌ನ ನಿಲುವು ಡಿಕಡೆಂಟ್, ಅಂದರೆ ಸಾಹಿತ್ಯಲೋಕದ ಅವಸಾನದ ಲಕ್ಷಣಗಳು ಅನ್ನುವವರು ಇದ್ದಾರೆ. ‘ಆಮೇಲೆ ಉಳಿದದ್ದು?’ ಎನ್ನುವ ಪ್ರಶ್ನೆ ಕೇಳಿ ಉತ್ತರವಾಗಿ ‘ಸಾಹಿತ್ಯ’ ಅನ್ನುವ ಈ ಪದ್ಯ ನಾವು ವಿಶ್ಲೇಷಣೆಗೆ ಎತ್ತಿಕೊಳ್ಳಲು ತವಕಿಸುವ ಕೃತಿಯ ‘ಸಾಹಿತ್ಯ’ ಎನ್ನಿಸಿಕೊಳ್ಳುವ ‘ಅಭಿಪ್ರಾಯಗಳ’ ಭಾಗವನ್ನು ಕ್ಷುಲ್ಲಕವೆಂಬಂತೆ ಕಾಣುತ್ತದೆ. ವೆರ್ಲೆನ್, ರಿಲ್ಕೆ, ಬ್ರೆಕ್ಟ್-ಇವರ ನಡುವಿನ ಭಿನ್ನತೆ ಸಾಮ್ಯತೆಗಳು (ಮುಖ್ಯವಾಗಿ ಬ್ರೆಕ್ಟ್, ಕವಿಯ ಭಿನ್ನತೆ) ಐರೋಪ್ಯ ಕಾವ್ಯದ ಅಂತರಂಗದಲ್ಲಿ ಇರುವ ಸೆಳೆತಗಳಿಗೆ ದ್ಯೋತಕವಾಗಿದೆ. ತಮ್ಮ ಒಳಬಾಳನ್ನು ನಿರ್ದಯವಾಗಿ ನಿರ್ಮಮವಾಗಿ ಶೋಧಿಸುವ ಇಂಥವರು ಮಧ್ಯಮವರ್ಗದ ಸಭ್ಯರು ತಮ್ಮ ಲೌಕಿಕ ಹಿತಕ್ಕಾಗಿ ಮನಸ್ಸಿನ ಅಗತ್ಯವಾದ ನೆಮ್ಮದಿಗಾಗಿ ಆತುಕೊಳ್ಳುವ ವ್ಯವಸ್ಥೆಯನ್ನು ಬುಡಮೇಲು ಮಾಡಿಬಿಡುತ್ತಾರೆ.) +***** +“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […] +ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […] +ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_480.txt b/Kannada Sahitya/article_480.txt new file mode 100644 index 0000000000000000000000000000000000000000..92dedbc1bf101a8c96c88295bbb1c70464b149d9 --- /dev/null +++ b/Kannada Sahitya/article_480.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೋಗದಿರೆಲೊ ರಂಗಾ +ಬಾಗಿಲಿಂದಾಚೆಗೆ….. +ಥುತ್ ನಿನ್ಮನೆ ಹಾಳಾಗಾ +ಮುಚ್ಕೊಳೋ ಮೊದಲು +ಎಸೆಯೋ ಕೊಳಲು +ಕಿತ್ತೆಸೆ ಹರಿ +ಆ ನವಿಲುಗರಿ +ಹೋಗು ಹಾಳಾಗೇ ಹೋಗು +(ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) +ಯಾಕೆ ಗೊತ್ತಾ? +ನಾನು ಕೇವಲ ನರಕುನ್ನಿ +ಪಚಪಚ ಕಿಲುಬು ನಾಲಗೆ ಕಿಸಿದು +ನೀನಿಟ್ಟು ಹೋದ ಪಾಂಚಜನ್ಯಕ್ಕೆ +ತುಕ್ಕು ತೊಡಿಸಿ ಶವವಾದವನು +ಬನ್ನಿರೈ ಹೊತ್ತೊಯ್ದಿರೈ-ಎಂದು +ಸನ್ನದ್ಧನಾದವನು +ನಿನ್ನ ಬಾಲ್ಯಗಳ ನೆಚ್ಚಿ ಹಾಯಾಗಿರದೆ +ಬರೇ ನಿನ್ನ ರಾಸಲೀಲಾವಿನೋದಗಳ +ಕಥೆಯಾಲಿಸಿ: ಅಸಹ್ಯ ಪರಿತಪಿಸಿದವನು +ಭಪ್ಪರೆ ಭಳಿರೆಂದು ಕುಪ್ಪಳಿಸಿ +ತೆರೆಯುರುಳುವ ಮೊದಲೇ ಮೀಸೆ ಕಿತ್ತವನು- +ಬಾ, ನೋಡಿಲ್ಲಿ +ಈ ನಾಚಿಕೆ ಈ ಹಗರಣ +ನಿನ್ನ ನೆನಪು ಒನಪುಗಳ ಭಲೇ ಹಚ್ಚಿಕೊಂಡು +ಮಾರಾಟಕ್ಕೆ ಬಿದ್ದು ಬಿಟ್ಟಿದ್ದೀನಪ್ಪ ನಾನು +ತರತರ ಅವಸ್ಥೆ ಮರ್‍ಯಾದೆಗಳ +ಆಜೀವ ಜನ್ಮಾಂತರದಲ್ಲಿ, +ನಿನ್ನ ಕಥೆಗಳಲ್ಲರಳುವ ನನ್ನಜ್ಜ ಮುತ್ತಾತನ +ಮನೋಧರ್‍ಮದಲ್ಲಿ ನಿನ್ನ ಅಶ್ಲೀಲಕ್ಕೂ +ಗುಲಾಬಿ ಪೂಸಿದ ಈ ಮನೆಯ ಸಂಸ್ಕಾರದಲ್ಲಿ +ಇಷ್ಟು ದಿನವೂ ಹಗಲನ್ನೆ ಇರುಳೆಂದೇ ತಿಳಿದಿದ್ದೆ +ನಿನ್ನಂತೆ ಆಗಲೆಂದೇ ಈ ಕಿಸಿದ +ಮಣ್ಣ ಬಿರುಕಲ್ಲೆಲ್ಲ ಹಸಿಬೀಜಗಳ +ಹುಡುಕಿ ಬಿಡಿಸಿ ಹೊರಗೆಳೆದು ಕಚ್ಚಿ ಮುತ್ತಿಕ್ಕಿ +ನೆಟ್ಟು ನೆಟ್ಟಿಸಿಕೊಂಡು ಬರೀ +ಬೋಳುಬೋಳಾಗಿ ಬಿಟ್ಟಿದ್ದೇನೋ ನಾನು +ಮಾರಾಯ +ಚರ್‍ಮಕ್ಕೂ ಹೃದಯಕ್ಕೂ +ಬದುಕಿಗೂ ವ್ಯವಹಾರಕ್ಕೂ +ಇಲ್ಲಿ ಇನ್ನೂ ಕಾವು ಬಲಿತೇ ಇಲ್ಲ +ಶ್ವಾಸದ ಮೇಲೂ ವಿಶ್ವಾಸ ಇಲ್ಲೋ ಇಲ್ಲ. +ಇಲ್ಲ ಕೃಷ್ಣಾ ಇಲ್ಲ +ನೀ ತಪ್ಪು ತಿಳಿದಿದ್ದೀ +ಅಥವಾ ಹಾದಿ ತಪ್ಪಿ ಈ ಮನೆ ಹೊಕ್ಕಿದ್ದೀ +ನಿನ್ನ ಸತ್ಕಾರಗೈದು +ನಾ ಪಾಪ ಕಟ್ಟಿಕೊಳ್ಳೆನೋ ದೇವಾ +ಹುಂ….. ಹೊರಡಪ್ಪ- +ಆ ಬೆಣ್ಣೆ ಒರೆಸಿಕೋ-ನಾಚಿಕೆಯಿಲ್ಲವೇನೋ +ಬೆಳೆದಿದ್ದೀಯೋ ನೀನು-ತೊಟ್ಟುಕೋ ಏನಾದರೂ +ಆ ಕೊಳಲು ಮಾಸಿದೆ ನೋಡು +ಗಲ್ಲ ಇಳಿದಿದೆ ನೋಡು +ಹುಂ… ಏಳು… ಹೊರ್ವು- +ಮೈತುಂಬ ನಿರಿಗೆ ಹೊದ್ದು ಬೊಚ್ಚು ಬಾಯಲ್ಲಿ +ಕವಳ ಕುಟ್ಟುತ್ತ ಕೂತ ನಿನ್ನಾ ಮುದಿ ಗೋಪಿಯರಿದ್ದಲ್ಲಿಗೆ +ಐಸೆ +ಗೆಟಾಽಽಽವ್ಟ್ +***** +ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […] +೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […] +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_481.txt b/Kannada Sahitya/article_481.txt new file mode 100644 index 0000000000000000000000000000000000000000..6b2311516301331e8870342225bdefbaa3fc871c --- /dev/null +++ b/Kannada Sahitya/article_481.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನು +ಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆ +ಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆ +ಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆ +ಕೂಡಿ ಇಮ್ಮೈಯಾಗಿ ಪಡೆಯರಂತೆ +ಅಲೆಯ ಮೇಲಲೆಯ ಸುಖವಂತೆ ಪಡುವಾಗ +ಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆ +ಕಣ್ ಮುಚ್ಚರಂತೆ ನಮ್ಮಂತೆ ಉಮ್ಮಳಿಸಿ +ಚಿಲುಮೆ ಚಿಮ್ಮಿಸಿಕೊಂಡು ಒಡೆಯರಂತೆ +ಪಡೆದು ಖಿನ್ನತೆಯಲ್ಲಿ ಕುಸಿಯರಂತೆ +ರಾಧೆ ದೊಡ್ಡವಳಂತೆ ಕೊಟ್ಟು ಕನ್ನಿಕೆಯಂತೆ +ಕಳ್ಳಿಗೂ ನಿನ್ನಂತೆ ಲಜ್ಜೆಯಂತೆ +ಮೊಲೆಗವನು ಮಗುವಂತೆ ತೊಡೆಗವನು ತಿದಿಯಂತೆ +ಗಂಡನೂ ಮಿಂಡನೂ ಭಗವಂತನಂತೆ +ಕುಸಿದು ಎರಡೆರಡಾಗಿ ಬಗೆಯರಂತೆ +ಅವಳು ಬಿಳಿಯಂತೆ ಇವನು ಕಪ್ಪಂತೆ, ಕೂಡಿರಲು +ಕಪ್ಪಾರು ಬಿಳಿಯಾರು ತಿಳಿಯದಂತೆ +ಹರಿಯಲೆಂದೇ ಕೂಡಿ ಕೂಡಲೆಂದೇ ಹರಿವ +ಸಂಗಮದ ಜಲದಂತೆ ನಿಜ ಮಿಥುನವಂತೆ +ನೀಡಿ ಇಡಿ ಹೊಕ್ಕವರು ಬಿಡಿ ಉಳಿಯರಂತೆ. +೨೦-೧೨-೯೧ +ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […] +೧ ಇದು ಬಾಳಕೊರಡ ಮುಡಿ- ಮೇಲೆ ಕಾಣದ ಕೈಯ ಕರಗಸವು ರೌರವದಿ ಕೊರೆಯುತಿದೆ ಕೊರಡಿನೆದೆ ಬಿರಿಯುತಿದೆ ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ […] +ಹತ್ತಾರು ರಸ್ತೆಗಳು ಒಂದನ್ನೊಂದು ಕತ್ತರಿಸುತ್ತ ಕೂತರೆ ಹೋಗುವುದೆಲ್ಲಿಗೆ ಹೇಳು ಹತ್ತೂ ಕಡೆ ಕನ್ನಡಿ ಹಿಡಿದು ನೀ ಕೂತರೆ ನಾ ಬತ್ತಲಾಗದೆ ಉಪಾಯವಿದೆಯೆ? ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_482.txt b/Kannada Sahitya/article_482.txt new file mode 100644 index 0000000000000000000000000000000000000000..31e4f6d326b3b38786a043f44c210dd195930c4d --- /dev/null +++ b/Kannada Sahitya/article_482.txt @@ -0,0 +1,97 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಷಾ ಸಮಿತಿಯ ವರದಿ +ದಿನಾಂಕ: ೨೭-೧-೧೯೮೧ +(ಡಾ| ಗೋಕಾಕ್ ಸಮಿತಿ ವರದಿ) +ಸನ್ಮಾನ್ಯ ಶಿಕ್ಷಣ ಸಚಿವರಿಗೆ, +ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ ಸಮಿತಿಗೆ ವಹಿಸಲು ನಿರ್ಧರಿಸಿ ಸಮಿತಿ ರಚಿಸಿ ಸರ್ಕಾರ ಕ್ರಮಾಂಕ ಇಡಿ-೧೧೩ ಎಸ್‌ಒಹೆಚ್-೭೯, ಬೆಂಗಳೂರು, ದಿನಾಂಕ ೫ನೆ ಜುಲೈ ೧೯೮೦ರ ಆದೇಶ ಹೊರಡಿಸಿತು. +೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು ೫೨೫, ರಾಜಾಮಹಲ್ ವಿಲಾಸ ಬಡಾವಣೆ,ಬೆಂಗಳೂರು-೫೬. +೨ ಶ್ರೀ ಜಿ. ನಾರಾಯಣ ಸದಸ್ಯರು ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ೩, ೧೦ನೇ ಕ್ರಾಸ್, ಹನುಮಂತನಗರ, ಬೆಂಗಳೂರು-೧೯. +೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು ೩೦೫, ೬ನೇ ಕ್ರಾಸ್, ೧ನೇ ಬ್ಲಾಕ್, ಜಯನಗರ, ಬೆಂಗಳೂರು-೧೧. +೪ ಶ್ರೀ ತ. ಸು. ಶಾಮರಾಯರು ಸದಸ್ಯರು ನಿವೃತ್ತ ಕನ್ನಡ ಪ್ರಾಧ್ಯಾಪಕರು, ಚಿದಂಬರ ಆಶ್ರಮ, ಗುಬ್ಬಿ ಪೋಸ್ಟ್, ತುಮಕೂರು ಜಿಲ್ಲೆ. +೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು ಪ್ರಾಧ್ಯಾಪಕರು, ಸಂಸ್ಕೃತ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾರ. +೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು ಪ್ರಾಧ್ಯಾಪಕರು, ಸಂಸ್ಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು. +೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ ಅಡಿಷನಲ್ ಕಾರ್ಯದರ್ಶಿ, ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆ, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. +ಸಮಿತಿಯ ಪರಿಶೀಲನೆಗೆ ವಹಿಸಿದ ಸಮಸ್ಯೆಗಳು ಸಮಿತಿಯ ರಚನೆಯ ಸಂಬಂಧ ಹೊರಡಿಸಿದ ಸರ್ಕಾರಿ ಆಜ್ಞೆಯಲ್ಲಿ ಉಕ್ತವಾಗಿವೆ. ಈ ಆಜ್ಞೆಯಂತೆ ಸಮಿತಿ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಕೊಡಬೇಕಾಗಿತ್ತು. ಆದರೆ ಸಮಸ್ಯೆಯ ಗಂಭೀರತೆಯನ್ನು ಮನಗಂಡ ಅಧ್ಯಕ್ಷರು ಮತ್ತು ಸದಸ್ಯರು ಪ್ರತಿಯೊಂದು ಅಂಶವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರಕ್ಕೆ ಬರುವುದು ಉಚಿತವೆಂದು ನಿರ್ಧರಿಸಿದುದರಿಂದ ಆ ಅವಧಿಯೊಳಗೆ ವರದಿ ತಯಾರಿಸಲು ಸಾಧ್ಯವಾಗಲಿಲ್ಲ. ಆದರೂ ಹೆಚ್ಚು ವಿಳಂಬ ಮಾಡದೆ ವರದಿಯನ್ನು ತಯಾರಿಸಿದೆ. ಈ ವರದಿಯಲ್ಲಿ ಮಾಡಿರುವ ಸಲಹೆಗಳನ್ನು ಸರ್ಕಾರ ಪರಿಶೀಲಿಸಿ ಎಲ್ಲಾ ಸಲಹೆಗಳನ್ನೂ ಕಾರ್ಯರೂಪಕ್ಕೆ ತರುವ ನಿರ್ಧಾರ ಕೈಗೊಳ್ಳುವುದೆಂದು ಆಶಿಸಿದ್ದೇವೆ. +ಈ ಗಂಭೀರ ಸಮಸ್ಯೆ ಬಗ್ಗೆ ಆಲೋಚಿಸಿ ಸೂಕ್ತಪರಿಹಾರ ಸಲಹೆಮಾಡುವ ಅವಕಾಶ ಈ ಸಮಿತಿಯ ಸದಸ್ಯರಿಗೆ ಒದಗಿಸಿಕೊಟ್ಟಿದ್ದಕ್ಕೆ ಸರ್ಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ. +ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಸದಸ್ಯ-ಕಾರ್ಯದರ್ಶಿ, +ಭಾಷಾ ಸಮಿತಿ. +ಸರ್ಕಾರಿ ಆದೇಶ +ವಿಷಯ: ಪ್ರೌಢ್) ಸರ್ಕಾರಿ ಆದೇಶ ಕ್ರಮಾಂಕ ಇಡಿ ೧೧೩ ಎಸ‌ಎಚ್-೭೯, +ದಿನಾಂಕ ೨೦ನೇ ಅಕ್ಟೋಬರ್ ೧೯೭೯ +ಪ್ರಸ್ತಾವನೆ: +ಸ್ವಾತಂತ್ರ್ಯ ಪೂರ್ವದಿಂದಲೂ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಅಭ್ಯಸಿಸಲು ಪ್ರೌಢಶಾಲಾ ಪಠ್ಯವಸ್ತುವಿನಲ್ಲಿ ಅವಕಾಶವಿತ್ತು. ತ್ರಿಭಾಷಾಸೂತ್ರ ಒಪ್ಪಿಕೊಂಡಮೇಲೂ ಈ ವ್ಯವಸ್ಥೆ ಮುಂದುವರಿಯಿತು. ಆದರೆ ಮೇಲೆ ಉಲ್ಲೇಖಿಸಿರುವ ಸರ್ಕಾರಿ ಆದೇಶದಂತೆ ಸಂಸ್ಕೃತ ಭಾಷೆಯನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆದು ಸಂಯೋಜಿತ ಭಾಷೆಯಾಗಿ ಅಂದರೆ, ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು, ಭಾಷೆಗಳನ್ನು ಪ್ರಥಮಭಾಷೆಯಾಗಿ ಅಭ್ಯಸಿಸಲು ಅವಕಾಶ ಕಲ್ಪಿಸಿದೆ. ಈ ನೀತಿ ಸಂಸ್ಕೃತ ಪ್ರೇಮಿಗಳ ವಿರೋಧವನ್ನು ಎದುರಿಸಬೇಕಾಯಿತು. ಅನೇಕ ವಿದ್ವಾಂಸರು, ಶಿಕ್ಷಣ ತಜ್ಞರು ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಉಳಿಸಲು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಾಕಷ್ಟು ವಿವಾದವೆದ್ದಿದೆ. +ಈ ವಿವಾದಾತ್ಮಕವಾದ ಸಮಸ್ಯೆಯನ್ನು ತಜ್ಞರ ಸಮಿತಿಯ ಪರಿಶೀಲನೆಗೆ ವಹಿಸಲು ನಿರ್ಧರಿಸಿದೆ. +ಸರ್ಕಾರಿ ಆದೇಶ ಕ್ರಮಾಂಕ ಇಡಿ ೧೧೩ ಎಸ್‌ಒಹೆಚ್ ೭೯, ಬೆಂಗಳೂರು ದಿನಾಂಕ ೫ನೇ ಜುಲೈ ೧೯೮೦ +ಮೇಲಿನ ನಿರ್ಧಾರದಂತೆ ; +ಈ ಕೆಳಗೆ ಹೆಸರಿಸಿರುವವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. +೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು +೨ ಶ್ರೀ ಜಿ. ನಾರಾಯಣ ಸದಸ್ಯರು +೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು +೪ ಶ್ರೀ ತ. ಸು. ಶಾಮರಾಯರು ಸದಸ್ಯರು +೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು +೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು +೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ +ಈ ಸಮಿತಿಯು ಕೆಳಕಂಡ ಪ್ಯಾರಾದಲ್ಲಿ ಉಕ್ತವಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಒಪ್ಪಿಸಬೇಕೆಂದು ಕೋರಿದೆ. +೧. ಸಂಸ್ಕೃತ ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸ ವಿಷಯವಾಗಿ ಉಳಿಯಬೇಕೆ? +೨. ಉಳಿಯಬೇಕಾದರೆ, ಕನ್ನಡಕ್ಕೆ ಪರ್ಯಾಯ ಭಾಷೆಯಾಗದೆ ಉಳಿಸುವುದು ಹೇಗೆ? +೩. ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಬಿಡುವುದು ಸೂಕ್ತವೆ? +ಮೇಲಿನ ವಿಷಯಗಳನ್ನು ಪರಿಶೀಲಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯವಸ್ತುವಿನಲ್ಲಿ ಭಾಷೆಗಳ ಸ್ಥಾನದ ಬಗ್ಗೆ ಉಚಿತವೂ, ಕಾರ್ಯರೂಪಕ್ಕೆ ತರುವಂತಹುದೂ ಆದ ನೀತಿಯನ್ನು ನಿರ್ಣಯಿಸಲು ಸಹಾಯಕವಾಗುವಂತೆ ಸಲಹೆಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಮೂರು ತಿಂಗಳ ಅವಧಿಯಲ್ಲಿ ಸಲ್ಲಿಸಬೇಕು. +ಮೇಲ್ಕಂಡ ಸಮಿತಿಯ ಅಧಿಕಾರೇತೇರ ಸದಸ್ಯರ ಪ್ರಮಾಣ ಮತ್ತು ದಿನಬಥ್ಯದ ವೆಚ್ಚವನ್ನೂ “೨೭೭ ವಿದ್ಯಾಭ್ಯಾಸ-೪-ಸಾಮಾನ್ಯ-೮-ಇತರ ವೆಚ್ಚ-೧-ಸಾಮಾನ್ಯ ಶಿಕ್ಷಣ ಸಮಿತಿಗಳು ಮತ್ತು ಮಂಡಳಿಗಳು” ಲೆಕ್ಕ ಶೀರ್ಷಿಕೆಯಲ್ಲಿ ಭರಿಸಬಹುದು. ಈ ಸದಸ್ಯರು ಪ್ರಯಾಣ ಮತ್ತು ದಿನಭತ್ಯಗಳ ಸಲುವಾಗಿ ಕರ್ನಾಟಕ ಸರ್ಕಾರ ಸೇವಾ ನಿಯಮಗಳ ಅನುಬಂಧ ‘ಎ’ ಅಡಿಯಲ್ಲಿ ‘ಎ’ ದರ್ಜೆಯವರೆಂದು ಪರಿಗಣಿಸಬೇಕು. +ಮೇಲ್ಕಂಡ ಆಜ್ಞೆಯು ಟಿಪ್ಪಣಿ ಸಂಖ್ಯೆ ಅ. ಕಾ. ೨೦೦೭ ದಿನಾಂಕ ೨೩ನೇ ಜೂನ್ ೧೯೮೦ರಲ್ಲಿ ಉಕ್ತವಾಗಿರುವ ಆರ್ಥಿಕ ಇಲಾಖೆಯ ಒಪ್ಪಿಗೆಯ ಮೇರೆಗೆ ಹೊರಡಿಸಲ್ಪಟ್ಟಿದೆ. +ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ +ಸಹಿ +(ಲೀಲಾ ಜಾರ್ಜ) +ಪ್ರಚಾರ ಅಧೀನ ಕಾರ್ಯದರ್ಶಿ, +ಶಿಕ್ಷಣ ಮತ್ತು ಯುವಜನ ಸೇವಾ ಇಲಾಖೆ. +ಗೆ, +ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು. +ಸಮಿತಿಯ ಎಲ್ಲಾ ಸದಸ್ಯರುಗಳಿಗೂ +‘ಪ್ರತಿ’ +ಸಮಿತಿಯ ಮೊದಲ ಮಾತು +ಭಾಷಾ ಶಿಕ್ಷಣವು ಶಿಕ್ಷಣದ ಉಳಿದ ಭಾಗಗಳಿಗಿಂತ ಒಂದು ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಎಲ್ಲಾ ಜ್ಞಾನ ವಿಜ್ಞಾನದ ಬೋಧನೆಗೆ ಭಾಷೆಯೇ ಮಾಧ್ಯಮವಾಗಿದೆ. ಅಲ್ಲದೆ ಭಾಷೆಗಳನ್ನು ಹೇಗೆ ಕಲಿಸಬೇಕೆಂಬ ಒಂದು ಶಾಸ್ತ್ರವೇ ಪ್ರತ್ಯೇಕವಾಗಿದೆ. ಭಾರತದಲ್ಲಿಯ ಹಾಗೂ ಕರ್ನಾಟಕ ರಾಜ್ಯದಲ್ಲಿಯ ವಿಶೇಷ ಸ್ಥಿತಿಯನ್ನು ಅನುಲಕ್ಷಿಸಿ ಇಲ್ಲಿ ಶಿಕ್ಷಣದ ಇಂದಿನ ಆಗು_ಹೋಗುಗಳನ್ನು ವಿಮರ್ಶಿಸಿ, ಆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಂದಿನ ಭಾಷಾಶಿಕ್ಷಣದ ಗೊತ್ತುಗುರಿಗಳನ್ನು ನಿರ್ಣಯಿಸಬೇಕಾಗಿದೆ. +ಮಾಧ್ಯಮಿಕ ಹಂತದಲ್ಲಿಯ ಭಾಷಾಶಿಕ್ಷಣ ಕ್ರಮವು ಈಗೊಂದೆರಡು ವರ್ಷಗಳಿಂದ ತೀವ್ರ ಚರ್ಚೆಗೆ ಹಾಗೂ ವಾದಕ್ಕೆ ಗುರಿಯಾಗಿದೆ. ಈ ಸಮಸ್ಯೆಯು ಅಲ್ಲಲ್ಲಿ ಭಾವನಾವೇಶಕ್ಕೂ ಎಡೆಮಾಡಿಕೊಟ್ಟಿದೆ. ಸಮಾಜದಲ್ಲಿರಬಹುದಾದ ಸಂಕುಚಿತ ಭಾವನೆಗಳ ಪರಿಸ್ಪುರಣಕ್ಕೂ ಅದು ಈಗೀಗ ಕಾರಣವಾಗಿದೆ. ಮಂತ್ರಿಮಂಡಲದ ಕೆಲವು ಮಾನ್ಯ ಸದಸ್ಯರೂ ಕನ್ನಡ_ಸಂಸ್ಕೃತಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕ ವೇದಿಕೆಗಳಿಂದ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿಯ ಕೆಲವೊಂದು ವೃತ್ತ_ಪಂಗಡಗಳಿಂದ ಅಭಿಪ್ರಾಯ_ವಿರೋಧ_ಎಚ್ಚರಿಕೆಗಳು ವ್ಯಕ್ತವಾಗಿವೆ. ಕನ್ನಡದ ಹಿತಕ್ಕೆ ವಿರೋಧವಾದ ಸಮಿತಿ ಇದೆಂದು ಒಂದು ಗುಂಪು ಸಾರಿದರೆ, ಸಂಸ್ಕೃತಕ್ಕೆ ವಿರೋಧವಾದ ಸಮಿತಿ ಇದೆಂದು ಇನ್ನೊಂದು ವೃತ್ತ ಎಚ್ಚರಿಕೆ ನೀಡಿದೆ. ಒಂದು ಶೈಕ್ಷಣಿಕ ಸಮಸ್ಯೆ ಭಾವನೆಗಳನ್ನು ಇಷ್ಟೊಂದು ಕೆರಳಿಸಿರಬೇಕಾದರೆ ಅದರಿಂದ ಎಷ್ಟು ತರಹದ ವಿವಿಧ ಸ್ಪಂದನಗಳು ಹೊರಟಿವೆಯೆಂಬುದೂ, ಅದು ಎಷ್ಟೊಂದು ಜೀವಂತ ಹಾಗೂ ಗಂಭೀರ ಪ್ರಶ್ನೆಯಾಗಿದೆಯೆಂದೂ ತನಗೆ ತಾನೇ ಸ್ಪಷ್ಟವಾಗುತ್ತದೆ. +ಕೆಲವರು ಸಮಿತಿಯ ಜಟಿಲ ಕಾರ್ಯವನ್ನು ಕುರಿತು ಕರುಣಾಭಾವವನ್ನು ತಾಳಿದ್ದಾರೆ. ಹಲವರು ಸಮಿತಿಯು ಭಯಗೊಂಡಿದೆಯೆಂದು ಗ್ರಹಿಸಿ ಅದರ ವರದಿಯೂ ಒಂದು ಭಯಗ್ರಸ್ತ ವರದಿಯಾಗುವುದೆಂದು ನಂಬಿದ್ದಾರೆ. ಆದರೆ ಏನೆಂದು ಭಯಗೊಳ್ಳುವುದು? ಸಮಿತಿಯ ಸದಸ್ಯರಿಗೆ ಯಾವ ಆಸೆ-ಆಕಾಂಕ್ಷೆಗಳೂ ಇಲ್ಲ. ಅವರೆಲ್ಲ ತಮ್ಮ ತಮ್ಮ ಕಾರ್ಯಕ್ಷೇತ್ರಗಳನ್ನು ಎಂದೋ ಕಂಡುಕೊಂಡಿದ್ದು ತಾವು ಮಾಡಬೇಕಾದ ಕಾರ್ಯ ಯಾವುದೆಂಬುದನ್ನು ನಿರ್ದಿಷ್ಟಗೊಳಿಸಿ, ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಮಿತಿಗಾಗಿ ಕರೆಬಂದಾಗ ಇದೊಂದು ಜನತೆಯ ಸೇವೆಯೆಂದು ಅದನ್ನು ಸ್ವೀಕರಿಸಿದ್ದಾರೆ. ಅಲ್ಲದೆ ಅಲ್ಲಲ್ಲಿ ವ್ಯಕ್ತವಾದ ಒಂದು ಅಭಿಪ್ರಾಯ-ವಿರೋಧ-ಎಚ್ಚರಿಕೆಯನ್ನು ಇನ್ನೊಂದು ಅಭಿಪ್ರಾಯ-ವಿರೋಧ-ಎಚ್ಚರಿಕೆಯು ತನಗೆ ತಾನೇ ಎದುರಿಸುವುದರಲ್ಲಿ ತೊಡಗಿದೆ. ಸಮಿತಿಯು ಯಾವ ಪೂರ್ವಗ್ರಹಗಳಿಲ್ಲದೆ ತನ್ನ ಕಾರ್ಯಕಲಾಪಗಳನ್ನು ಪ್ರಾರಂಭಿಸಿ ಕನ್ನಡ ಜನತೆಯ ಕಲ್ಯಾಣವೂ ಭಾಷಾ ಶಿಕ್ಷಣದ ಮೂಲತತ್ವಗಳೂ ತನ್ನ ಅಡಿಗಲ್ಲೆಂದು ಭದ್ರವಾಗಿ ಸ್ವೀಕರಿಸಿದೆ. ಈ ಕಲ್ಯಾಣ ಹಾಗೂ ಈ ತತ್ವಗಳು ಸಮಿತಿಯ ಕಾರ್ಯವ್ಯಾಪ್ತಿಯ ಉತ್ತರ-ದಕ್ಷಿಣ ಧ್ರುವಗಳಾಗಿವೆ. ಅಲ್ಲದೆ ಈ ಎರಡು ಧ್ರುವಗಳೆಂದರೂ ಒಂದೇ ಧ್ರುವನಕ್ಷತ್ರ. ಏಕೆಂದರೆ ಎಲ್ಲ ಮೂಲತತ್ವಗಳ ಬೇರೂ ಜನತೆಯ ಕಲ್ಯಾಣದಲ್ಲಿದೆ. ಅದೇ ಎಲ್ಲ ತತ್ವದ ಉಗಮಸ್ಥಾನವೆಂದರೂ ಸಲ್ಲುವುದು. ಈ ವರದಿಯಲ್ಲಿ ಗುಣಗಳಿರಲಿ, ದೋಷಗಳಿರಲಿ, ಹೊರಗಿನ ಯಾವ ಅಭಿಪ್ರಾಯವಾಗಲಿ ವಿರೋಧವಾಗಲಿ ಅವುಗಳಿಗೆ ಕಾರಣವಾಗಿಲ್ಲ. ಆ ಗುಣ-ದೋಷಗಳ ಹೊಣೆ ನೇರವಾಗಿ ಸಮಿತಿಯ ತಲೆಯ ಮೇಲೆಯೇ ಇದೆ. +* +* +* +ಶಿಕ್ಷಣ ಪದ್ಧತಿಗೆ, ಪಠ್ಯಕ್ರಮ ಮತ್ತು ಪಠ್ಯವಸ್ತುವಿಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸಿ ಪ್ರಚಲಿತ ಕಾಲದ ಮೌಲ್ಯಗಳು, ಅವಶ್ಯಕತೆಗಳು ಮತ್ತು ಕಿರಿಯ ಪೀಳಿಗೆಯ ಭವಿಷ್ಯ-ಇವುಗಳನ್ನು ಗಮನಿಸಿ ಉದ್ವೇಗಕ್ಕೆ ಎಡೆಗೊಡದೆ ಸಮಾಧಾನವಾಗಿ ಆಲೋಚಿಸಿ ಸೂಕ್ತವೂ ಅಗತ್ಯವೂ ಆದ ನಿರ್ಣಯಗಳನ್ನು ಕೈಗೊಳ್ಳುವುದು ಅವಶ್ಯಕ. ಪೂರ್ವಗ್ರಹ ಪೀಡಿತ ದೃಷ್ಟಿಯಿಂದ ಯಾವುದೇ ನಿರ್ಣಯ ಕೈಗೊಂಡರೂ ಅದು ಉದ್ದೇಶಿತ ಗುರಿ ಮುಟ್ಟಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸುವುದು ಅನಾವಶ್ಯಕವೆಂದು ಭಾವಿಸುತ್ತೇವೆ. +ಸಂಸ್ಕೃತ ಪ್ರಥಮಭಾಷೆಯಾಗಿ ಉಳಿಯಬೇಕೆ? ಇಲ್ಲವೇ ಅದು ಶಾಲಾ ಪಠ್ಯವಸ್ತುವಿನಿಂದಲೇ ಜಾರಿಹೋಗಬೇಕೆ? ಎಂಬ ವಾದವನ್ನು ಈ ಹಿನ್ನೆಲೆಯಲ್ಲಿಯೇ ಪರಿಶೀಲಿಸಬೇಕಾಗುತ್ತದೆ. ಸಂಸ್ಕೃತ ಪ್ರಥಮಭಾಷೆಗಳ ಗುಂಪಿನಲ್ಲಿ ಉಳಿದುಕೊಂಡು ಬಂದುದು ಹೇಗೆ ಎಂಬುದರ ಅರಿವು ಬರಬೇಕಾದರೆ ಈ ಪರಿಸ್ಥಿತಿ ಹೇಗೆ ಉಂಟಾಯಿತು ಎಂಬುದನ್ನು ತಿಳಿಯುವುದು ಅವಶ್ಯ. +ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಥಮಿಕ ಐದನೆಯ ತರಗತಿಯಿಂದ ಎಂಟನೇ ತರಗತಿಯವರೆಗೆ ವಿಜ್ಞಾನ ಬೋಧನೆ ಇರಲಿಲ್ಲ. ಅದರ ಬದಲು ಶಾರೀರ ಶಾಸ್ತ್ರ ಅಭ್ಯಸಿಸುತ್ತಿದ್ದರು. ಇದೂ ಕಡ್ಡಾಯವಾಗಿರಲಿಲ್ಲ. ಈ ವಿಷಯಕ್ಕೆ ಬದಲಾಗಿ ಯಾವುದಾದರೂ ಒಂದು ವೃತ್ತಿ ಇಲ್ಲವೇ ಸಂಸ್ಕೃತವನ್ನು ತೆಗೆದುಕೊಂಡು ಅಭ್ಯಾಸ ಮಾಡಲು ಅವಕಾಶವಿತ್ತು. ಈ ವ್ಯವಸ್ಥೆ ಹಳೇ ಮೈಸೂರಿನ ಪ್ರದೇಶದಲ್ಲಿ ಮಾತ್ರ ಇತ್ತು. ಹೀಗೆ ಮಾಧ್ಯಮಿಕ ಶಾಲೆಗಳಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡು ಕಲಿತವರು ಪ್ರೌಢಶಾಲೆಗಳಲ್ಲಿ ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಲು ಅವಕಾಶವಿತ್ತು. ಕನ್ನಡ, ಉರ್ದು, ತೆಲುಗು, ತಮಿಳು, ಮುಂತಾದ ದ್ವಿತೀಯಭಾಷೆಗಳ ಗುಂಪಿನಲ್ಲಿ ಸಂಸ್ಕೃತವೂ ಒಂದಾಗಿತ್ತು. ಈ ವ್ಯವಸ್ಥೆ ಪ್ರಾಥಮಿಕ ಶಾಲೆಗಳ ಪಠ್ಯವಸ್ತು ಪರಿಷ್ಕಾರಗೊಂಡು, ಸಾಮಾನ್ಯ ವಿಜ್ಞಾನ ಬೋಧನೆ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗುವವರೆಗೆ ಮುಂದುವರೆದುಕೊಂಡು ಬಂದಿತು. +ಅಂದೂ ಕೂಡ ಸಂಸ್ಕೃತದ ಪಠ್ಯವಸ್ತುವಿನ ಮಟ್ಟ ಇತರ ದ್ವಿತೀಯ ಭಾಷೆಗಳ ಮಟ್ಟಕ್ಕೆ ಸರಿಸಮನಾಗಿರಲಿಲ್ಲ. ಎಂಟು ವರ್ಷಗಳ ಕಾಲ ತಮ್ಮ ಮಾತೃಭಾಷೆಯನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಿದವರ ಮಟ್ಟದಲ್ಲಿ ನಾಲ್ಕುವರ್ಷಗಳ ಕಾಲ ಸಂಸ್ಕೃತ ಅಭ್ಯಸಿಸಿದವರು ಪ್ರೌಢಶಾಲೆಗಳಲ್ಲಿ ಸಂಸ್ಕೃತ ಕಲಿಯುವುದು ಕಠಿಣವೆಂಬುದು ಆಗಲೂ ಸ್ಪಷ್ಟವಾಗಿತ್ತು. +ಮುಂಬಯಿ ರಾಜ್ಯದ ಕನ್ನಡ ಮಾತನಾಡುವ ಪ್ರದೇಶದಲ್ಲಿ ಬೇರೆ ವ್ಯವಸ್ಥೆಯೇ ಇತ್ತು. ಆ ಪ್ರದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಅನಂತರ ರಾಜ್ಯ ಪುನರ್ವಿಂಗಡಣೆಯವರೆಗೆ ಸಂಸ್ಕೃತವನ್ನು ಒಂದು ಪೂರ್ಣ ಸ್ವತಂತ್ರ ವಿಷಯವಾಗಿ ಅಭ್ಯಸಿಸಲು ಅವಕಾಶವಿತ್ತು. ಅಲ್ಲಿನ ವ್ಯವಸ್ಥೆಯಂತೆ ಪ್ರಾಥಮಿಕ ಶಿಕ್ಷಣದ ಅವಧಿ ನಾಲ್ಕು ವರ್ಷಗಳು. ಅನಂತರ ಮಾಧ್ಯಮಿಕ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಐದನೆಯ ತರಗತಿಯಿಂದ ಇಂಗ್ಲಿಷು ಕಲಿಸುವ ವ್ಯವಸ್ಥೆ ಇತ್ತು. ಸಂಸ್ಕೃತವನ್ನು ಮಾಧ್ಯಮಿಕ ಶಾಲೆಯ ನಾಲ್ಕನೆಯ ತರಗತಿಯಿಂದ ಪ್ರಾರಂಭಿಸಿ ಎಸ್.ಎಸ್.ಎಲ್.ಸಿ.ಯವರೆಗೆ ಅಂದರೆ ನಾಲ್ಕು ವರ್ಷಗಳು ಕಲಿಸುವ ಏರ್ಪಾಟಿತ್ತು. ಇಂಗ್ಲಿಷು, ಕನ್ನಡ ಮತ್ತು ಸಂಸ್ಕೃತಗಳಿಗೆ ಸಮಾನ ಸ್ಥಾನವಿದ್ದು ಮೂರಕ್ಕೂ ನೂರು ನೂರು ಅಂಕಗಳಿದ್ದುವು. +ದಕ್ಷಿಣಕನ್ನಡ ಜಿಲ್ಲೆಯಲ್ಲಿ ಓರಿಯಂಟಲ್ ಶಾಲೆಗಳಿದ್ದುವು. ಈ ಶಾಲೆಗಳಲ್ಲಿ ಸಾಮಾನ್ಯ ಶಾಲೆಗಳಲ್ಲಿ ಕಲಿಸುವ ವಿಷಯಗಳ ಜೊತೆಗೆ ಸಂಸ್ಕೃತವನ್ನು ಉಚ್ಛಮಟ್ಟದಲ್ಲಿ ಕಲಿಸುವ ವ್ಯವಸ್ಥೆ ಇತ್ತು. ಈ ಶಾಲೆಗಳು ಇನ್ನೂ ಉಳಿದುಕೊಂಡಿವೆ. ಅವುಗಳಲ್ಲಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. +ಮೇಲೆ ತಿಳಿಸಿದ ವ್ಯವಸ್ಥೆ ರಾಜ್ಯಪುನರ್ವಿಂಗಡಣೆಗೆ ಮೊದಲು ಈಗ ಕರ್ನಾಟಕದಲ್ಲಿ ವಿಲೀನಗೊಂಡಿರುವ ಬೇರೆ ಬೇರೆ ಪ್ರದೇಶಗಳಲ್ಲಿ ಸಂಸ್ಕೃತ ಅಭ್ಯಾಸಕ್ಕೆ ಇದ್ದ ಅವಕಾಶಗಳು. +ಇಂದಿನ ವಿಶಾಲ ಕರ್ನಾಟಕ ಮುಂಬಯಿ ಪ್ರಾಂತದ ಕನ್ನಡ ಮಾತನಾಡುವ ಪ್ರದೇಶಗಳು, ಹೈದರಾಬಾದ್ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳು, ಕೊಡಗು ಮತ್ತು ಮದರಾಸು ರಾಜ್ಯದಿಂದ ಬಳ್ಳಾರಿ ಜಿಲ್ಲೆ, ದಕ್ಷಿಣಕನ್ನಡ ಜಿಲ್ಲೆ ಮತ್ತು ಕೊಳ್ಳೆಗಾಲ ತಾಲ್ಲೂಕುಗಳನ್ನೊಳಗೊಂಡಿದೆ. ೧೯೫೬ರ ನವೆಂಬರ್ ಒಂದರಂದು ವಿಶಾಲ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿತು. +ರಾಜ್ಯ ಪುನರ್ವಿಂಗಡಣೆ ಹಲವು ಹೊಸ ಸಮಸ್ಯೆಗಳನ್ನು ಉಂಟುಮಾಡಿತು. ಆಡಳಿತ ವ್ಯವಸ್ಥೆ, ಶಿಕ್ಷಣ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಎಕರೂಪತೆಯನ್ನು ಸಾಧಿಸುವುದು ಅವಶ್ಯಕವೂ, ಅನಿವಾರ್ಯವೂ ಆಗಿತ್ತು. ಆದುದರಿಂದ ಈ ಉದ್ದೇಶ ಸಾಧನೆಗಾಗಿ ಬೇರೆ ಬೇರೆ ಪ್ರದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿ ಎಕರೂಪವಾದ ಶಿಕ್ಷಣ ಪದ್ಧತಿಯನ್ನು ನಿರ್ಧರಿಸಲು ರಾಜ್ಯಮಟ್ಟದಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ‘ಶಿಕ್ಷಣ ಏಕತಾ ಸಮಿತಿಯ’ ರಚನೆಯಾಯಿತು. ರಾಜ್ಯದಲ್ಲಿ ಶಿಕ್ಷಣ ಪದ್ಧತಿಯಲ್ಲಿದ್ದ ಭಿನ್ನತೆಯನ್ನು ನಿವಾರಿಸಿ ಏಕತೆಯನ್ನು ರೂಪಿಸುವುದೇ ಸಮಿತಿಯ ಉದ್ದೇಶ. +ಶಿಕ್ಷಣ ಏಕತಾ ಸಮಿತಿಯು ರಾಜ್ಯ ಪುನರ್ವಿಂಗಡಣೆಯ ಪರಿಣಾಮವಾಗಿ ಬೇರೆಬೇರೆ ಪ್ರಾಂತಗಳಿಂದ ಬಂದ ಪ್ರದೇಶಗಳಲ್ಲಿದ್ದ ಶಿಕ್ಷಣ ಪದ್ಧತಿಯನ್ನು ಪರಿಶೀಲಿಸಿ ಏಕರೂಪವಾದ ಶಿಕ್ಷಣ ಪದ್ಧತಿಯ ವ್ಯವಸ್ಥೆಯನ್ನು ಸಲಹೆ ಮಾಡಿತು. ಆ ಸಲಹೆಗಳಲ್ಲಿ ಅತಿ ಮುಖ್ಯವಾದುದು ಭಾಷಾಭ್ಯಾಸಕ್ಕೆ ಸಂಬಂಧಿಸಿದುದು ಈ ವಿಷಯದಲ್ಲಿ ವಿಪುಲವಾಗಿ ಚರ್ಚೆ ನಡೆದು ಸಂಸ್ಕೃತವನ್ನು ಎರಡು ಹಂತಗಳಲ್ಲಿ ಅಭ್ಯಾಸಮಾಡುವ ಅವಕಾಶ ಕಲ್ಪಿಸಿಕೊಡುವ ನಿರ್ಧಾರವಾಯಿತು. ಅದರಂತೆ ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಲ್ಲಿ ಸೇರಿಸಿದುದಲ್ಲದೆ ಸಂಯೋಜಿತ ಭಾಷೆಯಾಗಿ ಆಯ್ಕೆಮಾಡಿಕೊಂಡು ತಮ್ಮ ಮಾತೃಭಾಷೆಯ ಜೊತೆಗೆ ಅಭ್ಯಸಿಸಲೂ ಅವಕಾಶ ಕಲ್ಪಿಸಿದರು. ಈ ನಿರ್ಧಾರದಂತೆ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು ಮಾತೃಭಾಷೆಯಗಿರುವವರೂ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಅಭ್ಯಸಿಸುತ್ತಿದ್ದರು. ಹಾಗೆಯೇ ತಮ್ಮ ಮಾತೃಭಾಷೆಯನ್ನು ವಾರಕ್ಕೆ ಮೂರು ಅವಧಿಗಳು ಮತ್ತು ಸಂಸ್ಕೃತವನ್ನು ಎರಡು ಅವಧಿಗಳೂ ಅಭ್ಯಾಸಮಾಡಲು ಅವಕಾಶವಿತ್ತು. +ಮೇಲೆ ವಿವರಿಸಿದ ವ್ಯವಸ್ಥೆ ೧೯೬೩ ಮತ್ತು ೧೯೬೯ರಲ್ಲಿ ಪ್ರೌಢಶಾಲಾ ಪಠ್ಯವಸ್ತುವನ್ನು ಪರಿಷ್ಕರಿಸಿದಾಗಲೂ ಉಳಿದುಕೊಂಡಿತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯಲು ಅವಕಾಶವಿಲ್ಲದೆ ಅದನ್ನು ಪ್ರೌಢಶಾಲೆಯಲ್ಲಿ ಪ್ರಥಮಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳು ಅಕ್ಷಾರಾಭ್ಯಾಸದಿಂದ ಸಂಸ್ಕೃತದ ಅಭ್ಯಾಸವನ್ನು ಪ್ರಾರಂಭಿಸಬೇಕಾಗಿದ್ದುದರಿಂದ ಸಂಸ್ಕೃತದ ಪಠ್ಯವಸ್ತು ಬೇರೆ ಪ್ರಥಮಭಾಷೆಗಳ ಪಠ್ಯವಸ್ತುವಿಗೆ ಹೋಲಿಸಿದಾಗ ಅತಿ ಸುಲಭವಾಗಿತ್ತು. ಬೇರೆ ಭಾಷೆಗಳನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಆಯಾ ಭಾಷೆಗಳ ಪಠ್ಯವಸ್ತು ಸಾಕಷ್ಟು ಕಠಿಣವಾಗಿದ್ದು ಅವರು ನಿರೀಕ್ಷಿತ ಗುರಿ ಮುಟ್ಟಬೇಕಾದರೆ ಸಾಕಷ್ಟು ಶ್ರಮಪಡಬೇಕಾಗಿತ್ತು. ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡವರು ಅಷ್ಟು ಶ್ರಮಪಡಬೇಕಾಗಿರಲಿಲ್ಲ. ಅಲ್ಲದೆ ಅವರು ಪರೀಕ್ಷೆಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಉತ್ತರ ಬರೆಯುವ ಪ್ರಮೇಯವೂ ಇರಲಿಲ್ಲ. ಉತ್ತರಗಳನ್ನು ತಮ್ಮ ಮಾತೃಭಾಷೆ ಇಲ್ಲವೆ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರು. ಈ ಕಾರಣಗಳಿಂದಾಗಿ ಸಂಸ್ಕೃತ ಆರಿಸಿಕೊಂಡವರು ಪರೀಕ್ಷೆಯಲ್ಲಿ ಇತರ ಭಾಷೆಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸುವುದು ಸಾಧ್ಯ ಎಂಬ ಅಭಿಪ್ರಾಯ ಅಲ್ಲಲ್ಲಿ ಪ್ರಚಲಿತವಾಗಿತ್ತು. ಈ ವಿಷಯ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮತ್ತು ಶಿಕ್ಷಣ ತಜ್ಞರಲ್ಲಿ ಕಿರಿಕಿರಿಯನ್ನು ಉಂಟುಮಾಡಿತು. ಸಂಸ್ಕೃತದ ಪಠ್ಯವಸ್ತು ಅತ್ಯಂತ ಸುಲಭವಾಗಿರುವುದರಿಂದಲೂ ಮತ್ತು ಆ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಅವಕಾಶವಿರುವುದರಿಂದ ಕನ್ನಡ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳು ಕನ್ನಡವನ್ನು ಮಾತೃಭಾಷೆಯಾಗಿ ಆಯ್ಕೆ ಮಾಡುವುದನ್ನು ಬಿಟ್ಟು ಅಧಿಕ ಸಂಖ್ಯೆಯಲ್ಲಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆಯ್ಕೆ ಮಾಡುವುದರಿಂದ ಕನ್ನಡಕ್ಕೆ ಧಕ್ಕೆ ಬರುವುದೆಂಬ ಭೀತಿಯನ್ನು ವ್ಯಕ್ತಪಡಿಸಿದರು. ಅಲ್ಲದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದವರಲ್ಲಿ ಹೆಚ್ಚು ಜನರು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆಯ್ಕೆಮಾಡಿಕೊಂಡು ಪರೀಕ್ಷೆಗೆ ಕುಳಿತವರೆ ಆಗಿದ್ದರು. ಕನ್ನದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಕೃತದ ಕಡೆಗೆ ಆಕರ್ಷಿತರಾಗಲು ಇದೂ ಒಂದು ಕಾರಣವೆಂದು ಭಾವಿಸಿದರು. ಅಲ್ಲಲ್ಲಿ ಇದರ ಬಗ್ಗೆ ಟೀಕೆ ಟಿಪ್ಪಣಿಗಳು ಪ್ರಾರಂಭವಾಗಿ ೧೯೭೬ರಲ್ಲಿ ಶಿವಮೊಗ್ಗದಲ್ಲಿ ನಡೆದ ೪೯ನೆಯ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಷಯ ಬಹಿರಂಗವಾಗಿ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೆ ಚರ್ಚೆಗೆ ಬಂದಿತು. +ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದೂ, ಕನ್ನಡ ಭಾಷೆಯನ್ನು ಕನ್ನಡೇತರರ ಮಕ್ಕಳಿಗೆ ಕಡ್ಡಾಯ ಮಾಡಬೇಕೆಂದೂ ಠರಾವು ಮಂಡಿಸಿ ಆ ಠರಾವು ಅಂಗೀಕೃತವಾಯಿತು. ಆ ಠರಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಕಳುಹಿಸಿ ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದೂ, ಪ್ರಾದೇಶಿಕ ಭಾಷೆಯೂ, ಆಡಳಿತ ಭಾಷೆಯೂ ಆದ ಕನ್ನಡ ಅಭ್ಯಾಸವನ್ನು ಎಲ್ಲರಿಗೂ ಕಡ್ಡಾಯ ಮಾಡಬೇಕೆಂದೂ ಪ್ರಾರ್ಥಿಸಿತು. +ಸಂಸ್ಕೃತದ ಬಗ್ಗೆ ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ವಿಷಯವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿಗೆ ಕಳುಹಿಸಿ ವರದಿ ಕೊಡುವಂತೆ ಕೇಳಿತು. ಮಂಡಳಿಯ ವರದಿಯೂ ಈ ಆರೋಪಗಳನ್ನು ಪುಷ್ಟೀಕರಿಸಿತು. ಈ ವರದಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಮುಂದುವರಿಸಬಾರದೆಂಬ ವಾದಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತು. ಸಂಸ್ಕೃತದ ಪರ ಮತ್ತು ವಿರೋಧವಾದ ವಾದವಿವಾದಗಳು ಮುಂದುವರಿಯುತ್ತಲೇ ಇದ್ದುವು. +ಆಗಿದ್ದ ಶಿಕ್ಷಣ ವ್ಯವಸ್ಥೆಯಂತೆ ಯಾವ ಹಂತದಲ್ಲಿಯೂ ಭಾಷಾ ಅಲ್ಪಸಂಖ್ಯಾತರ ಮಕ್ಕಳು ಕನ್ನಡ ಕಲಿಯದೆ ಶಾಲಾಶಿಕ್ಷಣ ಮುಗಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಿಗರು ಈ ವ್ಯವಸ್ಥೆಯನ್ನು ವಿರೋಧಿಸಿ ಎಲ್ಲರಿಗೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭಿಸಿದರು. ರಾಜ್ಯ ಸರ್ಕಾರ ರಾಜ್ಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡ ಆಡಳಿತಭಾಷೆ ಆಗಬೇಕೆಂದು ಘೋಷಿಸಿದ ಮೇಲೆ ಈ ಒತ್ತಾಯಕ್ಕೆ ಮತ್ತಷ್ಟು ಚಾಲನೆ ದೊರಕಿತು. ಕನ್ನಡಿಗರ ಈ ಒತ್ತಾಯ ಅಸ್ವಾಭಾವಿಕವಲ್ಲವೆಂದು ಹೇಳಬೇಕಾಗಿಲ್ಲ. ಅದು ಸ್ವಯಂವಿದಿತ. +ಮೇಲಿನ ವಾದವಿವಾದಗಳು ಪ್ರಾರಂಭವಾದಾಗಲೇ ಸರ್ಕಾರ ಅದುವರೆಗೂ ಒಂದು ವರ್ಷದ ಅವಧಿಯದಿದ್ದ ಸ್ನಾತಕ ಪೂರ್ವ ಶಿಕ್ಷಣವನ್ನು ಪುನರ್‌ರಚಿಸಿ ಎರಡು ವರ್ಷಗಳ ಅವಧಿಯ ವ್ಯಾಸಂಗ ವ್ಯವಸ್ಥೆಯನ್ನು ೧೯೭೨ರಲ್ಲಿ ಅನುಷ್ಠಾನಕ್ಕೆ ತಂದಿತು. ಈ ಬದಲಾವಣೆಯಿಂದ ಮತ್ತೊಮ್ಮೆ ಪ್ರೌಢಶಾಲಾ ಪಠ್ಯವಸ್ತುವನ್ನು ಪರಿಷ್ಕರಿಸುವುದು ಅಗತ್ಯವಾಯಿತು. ಅದರಂತೆ ಸರ್ಕಾರ ಪಠ್ಯವಸ್ತುರಚನಾಸಮಿತಿಯನ್ನು ರಚಿಸಿತು. ಸಮಿತಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯವರು ರಚಿಸಿದ್ದ ಪಠ್ಯವಸ್ತುವನ್ನು ಅಧಾರವಾಗಿಟ್ಟುಕೊಂಡು ಪಠ್ಯವಸ್ತುವಿನ ಪರಿಷ್ಕರಣ ಕಾರ್ಯ ಪ್ರಾರಂಭಿಸಿತು. ಇದರಿಂದ ಪ್ರೌಢಶಾಲೆಗಳಲ್ಲಿ ಅಭ್ಯಸಿಸಬೇಕಾದ ವಿಷಯಗಳ ಪಠ್ಯವಸ್ತುವಿನ ವ್ಯಾಪ್ತಿ ಹೆಚ್ಚಾಯಿತು. +ಹೀಗೆ ಪರಿಷ್ಕರಿಸಿದ ಪಠ್ಯವಸ್ತುವನ್ನು ಅನುಷ್ಠಾನಕ್ಕೆ ತರುವುದಕ್ಕೆ ಮೊದಲು ಅನುಮೋದನೆಗಾಗಿ ರಾಜ್ಯ ಶಿಕ್ಷಣ ಸಲಹಾಮಂಡಳಿಯ ಮುಂದೆ ತರಲಾಯಿತು. ಈ ಮಂಡಳಿ ಶಿಕ್ಷಣತಜ್ಞರಿಂದ ಕೂಡಿದೆ. ಸದಸ್ಯರು ಪ್ರತಿಯೊಂದು ಅಂಶವನ್ನು ಕೂಲಂಕುಷವಾಗಿ ಪರಿಶೀಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಸ್ಕೃತದ ಬಗ್ಗೆ ಚರ್ಚೆ ಪ್ರಾರಂಭವಾದಾಗ ಪರ ಮತ್ತು ವಿರೋಧವಾಗಿ ಅಭಿಪ್ರಾಯಗಳು ವ್ಯಕ್ತಪಟ್ಟುವು. ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂಬುದು ಕೆಲವರ ವಾದವಾದರೆ ಅದು ಎಂದೂ ಕನ್ನಡದ ಬೆಳವಣಿಗೆಗೆ ಧಕ್ಕೆಯುಂಟು ಮಾಡುವುದಿಲ್ಲವಾದುದರಿಂದ ಪ್ರಥಮಭಾಷೆಗಳ ಪಟ್ಟಿಯಲ್ಲಿ ಉಳಿಯಬೇಕೆಂದು ಕೆಲವರು ವಾದಿಸಿದರು. ಪ್ರಥಮ ಘಟ್ಟದಲ್ಲಿ ಸಂಶ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ಕೈಬಿಡಬೇಕೆಂದು ನಿರ್ಣಯ ಆಯಿತು. ಆದರೆ ಮರು ಚರ್ಚೆಯಾಗಿ ಆ ನಿರ್ಣಯ ಬದಲಾಗಿ ಸಂಸ್ಕೃತ ಹಿಂದಿನಂತೆಯೇ ಪ್ರಥಮಭಾಷೆಯಾಗಿ ಉಳಿಯಬೇಕೆಂದೂ, ಅದರ ಮಟ್ಟ ಉಳಿದ ಪ್ರಥಮಭಾಷೆಗಳ ಮಟ್ಟಕ್ಕೆ ಸರಿಸಮನಾಗಿರಬೇಕೆಂದೂ ನಿರ್ಣಯ ಆಯಿತು. ಪರಿಷ್ಕೃತ ಪಠ್ಯವಸ್ತು ೧೯೭೮-೧೯೭೯ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬಂದಿತು. +ಮಂಡಳಿಯ ಸಲಹೆಯಂತೆ ಸಂಸ್ಕೃತದ ಪಠ್ಯವಸ್ತುವನ್ನು ಸಾಕಷ್ಟು ಕಠಿಣಮಾಡಿ ಇತರ ಪ್ರಥಮಭಾಷೆಗಳ ಮಟ್ಟಕ್ಕೆ ಸರಿಸಮನಾಗಿ ಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನ ಸಫಲವಾಗಲಿಲ್ಲ. ಆದರೆ ಹಿಂದಿನ ಪಠ್ಯವಸ್ತುವಿಗಿಂತ ಪರಿಷ್ಕೃತ ಪಠ್ಯವಸ್ತು ಸ್ವಲ್ಪಮಟ್ಟಿಗೆ ಕಠಿಣವಾಯಿತು. +ಅಲ್ಲದೆ ಅಲ್ಲಿಯವರೆಗೂ ಅಸ್ತಿತ್ವದಲ್ಲಿಲ್ಲದ ಒಂದು ಹೊಸ ವ್ಯವಸ್ಥೆ ಪರಿಷ್ಕೃತ ಪಠ್ಯವಸ್ತುವಿನಲ್ಲಿ ಅಳವಡಿಸಲಾಯಿತು. ೧೯೭೮ ರವರೆಗೆ ತ್ರಿಭಾಷಾ ಸೂತ್ರದಂತೆ ಹಿಂದಿಯನ್ನು ತೃತೀಯ ಭಾಷೆಯಾಗಿ ಅಭ್ಯಸಿಸುತ್ತಿದ್ದರು. ಆದರೆ ಹಿಂದಿ ಭಾಷೆಯ ಅಭ್ಯಾಸ ಕಡ್ಡಾಯವಾಗಿರಲಿಲ್ಲ ಮತ್ತು ವಿದ್ಯಾರ್ಥಿಗಳು ಆ ವಿಷಯದಲ್ಲಿ ಸ್ವ‌ಇಚ್ಛೆಯಿಂದ ಪರೀಕ್ಷೆಗೆ ಕೂಡಬಹುದಾಗಿತ್ತು. ಅಂತಹವರಿಗೆ ಕೆಲವು ರಿಯಾಯತಿ ದೊರೆಯುತ್ತಿತ್ತು. ಅವು ಯಾವುವೆಂದರೆ: ಯಾವುದೇ ವಿದ್ಯಾರ್ಥಿ ಸ್ವ‌ಇಚ್ಛೆಯಿಂದ ಹಿಂದಿಯಲ್ಲಿ ಪರೀಕ್ಷೆಗೆ ಕುಳಿತು ಆ ವಿಷಯದಲ್ಲಿ ಶೇಕಡ ೨೫ ಅಂಕಗಳನ್ನು ಗಳಿಸಿದರೆ ಅಂತಹ ವಿದ್ಯಾರ್ಥಿ ಉಳಿದ ವಿಷಯಗಳಲ್ಲಿ ಪ್ರತಿ ವಿಷಯದಲ್ಲೂ ಶೇಕಡ ೩೦ ಅಂಕಗಳಿಗಿಂತ ಕಡಮೆಯಿಲ್ಲದಂತೆ ಅಂಕಗಳನ್ನು ಗಳಿಸಿ ಎಲ್ಲಾ ವಿಷಯಗಳ ಅಂಕಗಳೂ ಒಟ್ಟಾಗಿ ಶೇಕಡ ೩೫ ಅಂಕಗಳು ಸರಾಸರಿ ಬಂದಿದ್ದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಹರಾಗುತ್ಫ್ತಿದ್ಫ್ದ್ರು. ಹಿಂದಿಯಲ್ಫ್ಲಿ ಪರೀಕ್ಫೆಯನ್ಫ್ನು ತೆಗೆದುಕೊಳ್ಫ್ಳ್ದ್ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಪ್ರತಿ ವಿಷಯದಲ್ಲೂ ಶೇಕಡ ೩೫ ಅಂಕಗಳನ್ನು ಪಡೆಯಬೇಕಾಗಿತ್ತು. ಹಿಂದೀ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡವರು ಆ ವಿಷಯದಲ್ಲಿ ನಿಗದಿಮಾಡಿದ ಅಂಕಗಳನ್ನು ಗಳಿಸದೆ ಉಳಿದ ವಿಷಯಗಳಲ್ಲಿ ಪ್ರತಿ ವಿಷಯದಲ್ಲೂ ಶೇಕಡ ೩೫ ಅಂಕಗಳನ್ನು ಗಳಿಸಿದ್ದರೆ ಅವರೂ ಉತ್ತೀರ್ಣರಾಗಲು ಅಱರಾಗುತ್ತಿದ್ದರು. ಅಂದರೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಡ್ಡಾಯವಾಗಿ ಅಭ್ಯಾಸಮಾಡುವ ಅವಕಾಶವನ್ನು ಪಾಠಕ್ರಮದಲ್ಲಿ ಅಳವಡಿಸಿದ್ದರೂ ವಾಸ್ತವವಾಗಿ ಅದು ಪರೀಕ್ಷೆಗೆ ಕಡ್ಡಾಯದ ವಿಷಯವಾಗಿರಲಿಲ್ಲ. ಮಕ್ಕಳ ಭಾಷೆಯಲ್ಲಿ ಹೇಳುವುದಾದರೆ ಅದರ ಸ್ಥಿತಿ “ಆಟಕ್ಕುಂಟು, ಲೆಕ್ಕಕ್ಕಿಲ್ಲ” ಎಂಬಂತಿತ್ತು. +ಪರಿಷ್ಕೃತ ಪಠ್ಯವಸ್ತು ೧೯೭೮-೧೯೭೯ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಕ್ಕೆ ಬಂದಾಗ ಮೇಲಿನ ಸೂತ್ರವನ್ನು ಕನ್ನಡಕ್ಕೂ ಅನ್ವಯಿಸಿ ಕನ್ನಡೇತರ ವಿದ್ಯಾರ್ಥಿಗಳು ಕನ್ನಡವನ್ನು ತೃತೀಯ ಭಾಷೆಯಾಗಿ ಅಭ್ಯಸಿಸಲು ಅವಕಾಶಮಾಡಿಕೊಟ್ಟಿದೆ. ಆದರೆ ಇದರಲ್ಲಿ ಕಡ್ಡಾಯವಿಲ್ಲ. ಸ್ವ‌ಇಚ್ಛೆಯಿಂದ ಅಭ್ಯಸಿಸಬಹುದು. ಇದೊಂದು ಕನ್ನಡಿಗರ ಕಣ್ಣೊರೆಸುವ ವ್ಯವಸ್ಥೆ. ಇದು ಈಗ ಅನುಷ್ಠಾನದಲ್ಲಿರುವ ವ್ಯವಸ್ಥೆ ಒಟ್ಟಿನಲ್ಲಿ ಕನ್ನಡೇತರರ ಮಕ್ಕಳಿಗೆ ಯಾವ ಹಂತದಲ್ಲೂ ಕನ್ನಡ ಕಡ್ಡಾಯದ ಅಭ್ಯಾಸದ ವಿಷಯವಾಗಿಲ್ಲ. +ಮೇಲಿನ ವ್ಯವಸ್ಥೆಗೆ ಕನ್ನಡಿಗರು ತೀವ್ರವಿರೋಧ ವ್ಯಕ್ತಪಡಿಸಿದುದಲ್ಲದೆ ಕನ್ನಡೇತರರ ಮಕ್ಕಳಿಗೆ ಕನ್ನಡ ಕಡ್ಡಾಯಮಾಡಬೇಕೆಂದು ಸಾರ್ವಜನಿಕ ವೇದಿಕೆಗಳಲ್ಲಿ, ಪತ್ರಿಕೆಗಳಲ್ಲಿ ಮತ್ತು ಮನವಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭಿಸಿದರು. ಕನ್ನಡ ಆಡಳಿತದ ಎಲ್ಲಾ ಹಂತದಲ್ಲೂ ಆಡಳಿತ ಭಾಷೆಯಾಗಬೇಕೆಂಬ ಸರ್ಕಾರದ ನಿಲುವು ಯಶಸ್ವಿಯಾಗಬೇಕಾದರೆ ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಹಂತಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಶ್ರೀ ಸಾಮಾನ್ಯರ ಭಾಷೆಯಲ್ಲಿ ವ್ಯವಹರಿಸುವ ಶಕ್ತಿ ಪಡೆದಿರಬೇಕು. ಇಲ್ಲದಿದ್ದರೆ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಕಷ್ಟ. ಅಧಿಕಾರಿಗಳ ಮತ್ತು ಶ್ರೀಸಾಮಾನ್ಯರ ಸಂಬಂಧವನ್ನು ಮಧುರಗೊಳಿಸಿ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಹಕಾರಿಯಾಗುವ ಸಾಧನ ಭಾಶೆ. ಈ ದೃಷ್ಟಿಯಿಂದ ಕನ್ನಡ ಎಲ್ಲರಿಗೂ ಕಡ್ಡಾಯವಾಗಬೇಕೆಂಬ ಕನ್ನಡಿಗರ ಒತ್ತಾಯ ಅಂಧಾಭಿಮನದಿಂದ ಮೂಡಿಬಂದದ್ದಲ್ಲವೆಂದು ಸ್ಪಷ್ಟವಾಗುತ್ತದೆ. ಈ ಒತ್ತಾಯ ದಿನೇದಿನೇ ತೀವ್ರರೂಪ ತಾಳುತ್ತಿದೆ. +***** +ಮುಂದುವರೆಯುವುದು +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ […] +ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಳು ಕಾರ್ಯಕ್ರಮ : ಎಚ್.ಎ.ಎಲ್.ನ ‘ವಿಮಾನ’ ಸಂಘದ ವಾರ್ಷಿಕೋತ್ಸವ ಮತ್ತು ಹಿರಿಯ ನಟ ಅಶ್ವತ್‌ರವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸ್ಥಳ : ಡಾ||ರಾಜ್‌ಕುಮಾರ್ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ದಿನಾಂಕ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_483.txt b/Kannada Sahitya/article_483.txt new file mode 100644 index 0000000000000000000000000000000000000000..1f1bda1e570a624f704f70060176849d673c4513 --- /dev/null +++ b/Kannada Sahitya/article_483.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಹೊಗೆ ತುಂಬಿ +ನಗೆ ತುಂಬಿ +ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ +ಜೀವ ತುಂಬಿ, +ದೂರ ಹಾರುವದೆಂಬ ಭರವಸೆಯ ನಂಬಿ, +ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು +ಉತ್ಸಾಹ ಸಾಹಸಕೆ ರೂಪುಗೊಟ್ಟು +ಮೇಲುನಾಡಿಗೆ ತೇಲಬಿಟ್ಟೆವಿದೊ ಚೈತನ್ಯದಾಕಾಶಬುಟ್ಟಿ! +ಏರುವದೊ +ಇಳಿಯುವದೊ +ಗಾಳಿಯಾಘಾತದಲಿ ಜೋಲಿ ಹೊಡೆದುರುಳುವದೊ? +ಮೈ ಸುಟ್ಟುಕೊಳ್ಳುವದೊ, +ಕಾಣಲಾರದ ಕೊಳ್ಳದಾಳದಲಿ ಬೀಳುವದೊ- +ಆರು ಕಂಡಿಹರಿದನು? +ತಿಳಿಯಲಾರದ ಹದನು! +ಆದರೂ ಆದರೂ ಹಾರಿಸಿದೆವಿದನು! +ಹುಡುಗತನದುತ್ಸಾಹ ಕೊನೆಬಲ್ಲುದೇನು? +೨ +ಆಕಾಶದ ಪ್ರಕಾಶದಲಿ ಎದೆಯ ತೆರೆದು +ಇಳೆಯ ಬಾಳಿನ ಹಂಗು ನೂಲು ಹರಿದು +ಮೇಲೆ ತೇಲಾಡುವುದ ಕಣ್ಣಾರೆ ಕಂಡು +ನನ್ನ ಬಗೆಯಾಶೆಗಳು ರೆಕ್ಕೆಗೊಂಡು +ಅಂಧಂ ತಮಸ್ಸಿನಲು ಬೆಳಕನುಂಡು +ಮುಗಿಲಲ್ಲಿ ಬಿತ್ತಿರುವ ಮುತ್ತುಗಳ ಬೆಳೆಯ +ಹಾಲುಗಳನು ಬಯಸಿ ಹಾರುತಿವೆ ಗೆಳೆಯ! +ಅದೊ! ನೋಡು ನೋಡು +ಚಿಕ್ಕೆಗುರಿ ಬೆಂಬತ್ತಿ ಸಾಗಿರುವ ಕಿರುದೀಪಕಾವ ಕೇಡು? +ಇಳೆಯ ಬಾಳರಳಿ ಬಂಗಾರ ಭರಣಿಯು ತೇಲಿ +ಬೆಳ್ಳಿ ಚಿಕ್ಕಗೆ ತೆಕ್ಕೆ ಹಾಕಿಹುದು ನೋಡು! +ಬೆಳಕು ಬೆಳಕಿಗೆ ಮುತ್ತು ಕೊಟ್ಟಿಹುದು +ಆ ಪ್ರೀತಿ ಸೌರಭವೆ ತೋಳಬಂದಿ! +ಸೌಂದರ್ಯದಾನಂದವಿಲ್ಲಿ ಬಂದಿ. +೩ +ದೀನ ಮಾನವ ರಚಿತ ಆಕಾಶಬುಟ್ಟಿ +ದಾನವರ ಬಿರುಗಾಳಿ ದಾಳಿಯನು ಮೆಟ್ಟಿ +ಬಾನವರನಪ್ಪಿ ಒಂದಾಗಿಹುದು ನೋಡು! +ನೋಡಿದೆಯ ಕವಿಯೆ? +ಊರ್ಧ್ವಮುಖಿಗಲ್ಲದಿದು ಉಳಿದವರಿಗಳವೆ? +ಆತ್ಮ ಬಲದೆದುರು ಮೇಣುಳಿದ ಬಲವೆ? +ಆಕಾಶಬುಟ್ಟಿಯೊಲು ಏಕಾಕಿಯಾದರೂ +ಎದೆಗೆದೆಯ ಹೊಂದೀಪ ಉದ್ದೀಪನಂಗೊಂಡು +ಬಾಳದ್ವೀಪವ ಬೆಳಗುವಂತೆ ಹಾಡು +ಎಂದೆಂದು ನೀನಿಂಥ ಹಾಡ ಹಾಡು| +***** +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […] +ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_484.txt b/Kannada Sahitya/article_484.txt new file mode 100644 index 0000000000000000000000000000000000000000..82c2a794e4844f4a108f6061fbf04bb4951a56ab --- /dev/null +++ b/Kannada Sahitya/article_484.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು ಕನ್ನಡದಲ್ಲಿ ಪ್ರಸಿದ್ಧವಾದ ಎರಡು ಬಗೆಗಳನ್ನು ನೋಡೋಣ. ಧೀಮಂತ ವಿಮರ್ಶಕರಾದ ಡಾ. ಡಿ. ಆರ್. ನಾಗರಾಜರ ಜೊತೆಗೆ ಇದನ್ನು ಒಮ್ಮೆ ಚರ್ಚಿಸುವಾಗ ಕಾರಂತರ ಚೋಮ ಮತ್ತು ಕುವೆಂಪುರವರ ನಾಯಿಗುತ್ತಿಯರಲ್ಲಿ ಯಾರು ಹೆಚ್ಚು ಸಮರ್ಪಕ ದಲಿತ ಪಾತ್ರವೆಂಬ ಪ್ರಶ್ನೆಯೆದ್ದಿತು. ಚೋಮನ ಕಲ್ಪನೆ ಟ್ರಾಜೆಡಿಯ ರೀತಿಯದು; ನಾಯಿಗುತ್ತಿ ಕಾಮಿಕ್ ಎನ್ನಬಹುದಾದ ಪಾತ್ರ. ಡಾ. ನಾಗರಾಜರು ಗುತ್ತಿಯ ಪರವಾಗಿ ವಾದಿಸಿದರು. ಈ ಬಗ್ಗೆ ಅವರು ನಮ್ಮ ತಿಳಿವನ್ನು ಬೆಳೆಸುವಂತೆ ಹೇಳುವ ತುಂಬ ಸೂಕ್ಷ್ಮಗಳು ಇವೆ. ಅವುಗಳನ್ನು ಸದ್ಯಕ್ಕೆ ಕಡೆಗಾಣಿಸಿ, ಗಂಭೀರನಾದ ಚೋಮನನ್ನೂ, ಮೃದುಹಾಸ್ಯದಲ್ಲಿ ತನ್ನ ಜೀವಂತಿಕೆಯಿಂದ ಹೊಳೆಯುವ ವೈನೋದಿಕ ಪಾತ್ರವಾದ ಗುತ್ತಿಯನ್ನೂ ದಲಿತ ಇರುವ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳನ್ನೂ ಒಟ್ಟಾಗಿ ಬಿಂಬಿಸಬಲ್ಲ ಎರಡು ಸಾಹಿತ್ಯ ಮಾದರಿಗಳೆಂದು ತಿಳಿದು ಮುಂದುವರಿಯುವೆ. ಚೋಮ ತಾನು ಹಾಯಲಾರದ ಗೋಡೆಗಳಿಗೆ ತಲೆ ಚಚ್ಚಿಕೊಂಡು ಸಾಯುತ್ತಾನೆ. ತನ್ನ ಹೋರಾಟದಲ್ಲಿ, ಹಠದಲ್ಲಿ ನಮ್ಮ ಅನುಕಂಪವನ್ನೂ ಗೌರವವನ್ನೂ ಗಳಿಸಿಕೊಳ್ಳುತ್ತಾನೆ. ತನ್ನ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲು ದುಡಿಯನ್ನು ಉನ್ಮಾದದಲ್ಲಿ ಬಾರಿಸುವ ಚೋಮ ನಮಗೆ ಗೊತ್ತಿರಬಹುದಾದ ಯಾವ ವಿಶಿಷ್ಟ ಹರಿಜನನಿಗಿಂತಲೂ ಡೊಡ್ಡವನು. ಅವನ ಗಾತ್ರ ಹೀಗೆ ವಾಸ್ತವಕ್ಕಿಂತ ಸ್ವಲ್ಪ ದೊಡ್ಡದಾದ್ದು ಎನ್ನಿಸುವುದರಿಂದಲೇ ಅವನು ಎಲ್ಲ ಕಾಲದ, ದೇಶದ ದಲಿತರನ್ನೂ ಪ್ರತಿನಿಧಿಸಬಲ್ಲ ಕಾವ್ಯಪ್ರತಿಮೆಯಾಗಿಬಿಡುತ್ತಾನೆ. ಇಂಗ್ಲಿಷಿನಲ್ಲಿ ‘ಹೈ ಮೈಮಟಿಕ್’ (ಘನ ಅನುಕರಣೆ?) ಎಂಬ ಬಗೆಯ ಚಿತ್ರಣ ಚೋಮನದು. ನಾಯಿಗುತ್ತಿಯಾದರೋ ‘ಲೋ ಮೈಮಟಿಕ್’ (ಲಘು ಅನುಕರಣೆ?) ಎಂಬ ಬಗೆಯದು. ಇವನು ತಲೆ ಗಟ್ಟಿಸಿಕೊಳ್ಳುವುದಿಲ್ಲ. ಸಿಕ್ಕಿ ಬೀಳುವುದಿಲ್ಲ; ಇವನಿಗೆ ತಾಳಿಬಾಳುವ ಒಳ ದಾರಿಗಳು ಗೊತ್ತು. ಸ್ಪಷ್ಟ ದಿಟ್ಟ ಗೆರೆಗಳಿಂದ ಕಡೆದು ನಿಲ್ಲಿಸಿದ ಚಿತ್ರ ಚೋಮನದ್ದಾದರೆ, ಗುತ್ತಿ ಮೂಡುವುದು ಹಲವು ದೇಸೀ ನಡೆನುಡಿಯ ವಿವರಗಳಲ್ಲಿ. ಚೋಮನನ್ನು ನಾವು ಕಾಣುವುದು ಎಷ್ಟು ಬೇಕೋ ಅಷ್ಟೇ ವಿವರಗಳಲ್ಲಿ; ಎಲ್ಲ ದೇಶ ಕಾಲಗಳ ದಲಿತ ಪ್ರತಿಮೆಯಾಗಲು ಅವನು ಹಾಗೆ ಕಣ್ಣಿಗೆ ಹೊಡೆಯುವಂತೆ ಕಾಣಬೇಕು. ಗುತ್ತಿಯದು ದಟ್ಟವಾದ ಚಿತ್ರಣ; ಅವನನ್ನು ಕಂಡು ನಗುವುದು ಸಾಧ್ಯವಾಗುವುದು ಅವನು ಹೀಗೆ ತೀರಾ ಎನ್ನಿಸುವಷ್ಟು ವಿಶಿಷ್ಟನಾಗುವುದರಿಂದಲೇ. ಅವನನ್ನು ನಾವು ಗುರುತಿಸುವುದೇ ಚೋಮನಂತೆ ಹರಿಜನರ ಪ್ರತಿನಿಧಿಯೆಂದು ಆಗಿದ್ದಲ್ಲಿ. ಅವನನ್ನು ಕಂಡು ಬಗುವುದು ಕ್ರೌರ್ಯವಾಗಿರುತ್ತಿತ್ತು. ನಗುವವನ ಶ್ರೇಷ್ಠತೆಯ ಹಮ್ಮಾಗಿರುತ್ತಿತ್ತು. ಬಾಳುವ ಉಪಾಯಗಳನ್ನು ತಿಳಿದಿರುವ ಗುತ್ತಿ ನಮ್ಮನ್ನು ನಗಿಸುತ್ತಲೇ ಅವನಂಥವರ ಆಳವಾದ ಪ್ರಕೃತಿದತ್ತ ಚೈತನ್ಯವನ್ನೂ ನಮಗೆ ಹೊಳೆಯುವಂತೆ ಮಾಡುತ್ತಾನೆ – ಗಟ್ಟಿ ಮಾತಲ್ಲಲ್ಲ, ಪಿಸುಮಾತಿನಲ್ಲಿ; ನಿಲುವಲ್ಲಲ್ಲ, ಚಲನೆಯಲ್ಲಿ. +ಈ ಎರಡು ಕ್ರಮಗಳ ಬಗ್ಗೆ ಇನ್ನೂ ಹೇಳುವುದಿದೆ. ನಗಿಸುತ್ತಲೇ ನಮ್ಮನ್ನು ದೃಢಗೊಳಿಸುವ ಕ್ರಮಕ್ಕೆ ಚಾಪ್ಲಿನ್‌ನ ‘ಡಿ ಗ್ರೇಟ್ ಡಿಕ್ಟೇಟರ್ ಅಪೂರ್ವ ಉದಾಹರಣೆ. ಯಹೂದ್ಯರನ್ನು ಸುಟ್ಟುಬೇಯಿಸಿ ಅವರ ತಲೆಬುರುಡೆಗಳನ್ನು ಆಶ್‌ಟ್ರೇ ಮಾಡಿಕೊಳ್ಳುತ್ತಿದ್ದ ಕಾಲದಲ್ಲೇ ಹಿಟ್ಲರ್‌ನನ್ನು ಹಾಸ್ಯಾಸ್ಪದ ಮಾಡಿದ ಚಾಪ್ಲಿನ್ ನಮಗೆ ಕೊಡುವುದು ಭವ್ಯವಾದ ಆಧ್ಯಾತ್ಮಿಕ ಅನುಭವವನ್ನೇ. ಸಾಹಿತ್ಯ ತನ್ನ ಓದುಗರ ಮಾನವೀಯತೆಯನ್ನು ಪೊರೆದು ಬೆಳೆಸುವುದು, ಆತಂಕಗಳನ್ನು ಗೆಲ್ಲುವ ಕ್ರಮಗಳನ್ನು ಕಲಿಸುವುದು ಹೀಗೆ ಹಲವು ರೀತಿಗಳಲ್ಲಿ. ಕಲೆಗಾರೊಕೆ ಕೇವಲ ಮೆರುಗಲ್ಲ; ಅದು ವಾಸ್ತವದಲ್ಲೇ ನಮ್ಮಲ್ಲಿ ಅಧ್ಯತ್ಮಿಕ ಶಕ್ತಿಯನ್ನು ಕಾಪಾಡಬಲ್ಲ ಸಾಧನ. ಅಂದರೆ ಜೀವದ ಸ್ಪಂದನಶೀಲ ಆರೋಗ್ಯವನ್ನು ಕಾಯುವ ಉಪಾಯ. ಬದುಕಿ ಉಳಿಯುವ ಉಪಾಯವಾಗಿ ದಲಿತರು ಹಾಡುವಾಗ, ಕಥೆ ಕಟ್ಟುವಾಗ, ನಗುವಾಗ, ಕುಣಿಯುವಾಗ ವ್ಯಕ್ತವಾಗುವ ಕಲೆ ಅಧ್ಯಾತ್ಮಿಕವೆನ್ನಬಹುದಾದ ಚೈತನ್ಯದ್ದೇ. ಕಷ್ಟವನ್ನೂ ದುಷ್ಟವನ್ನೂ ಮೀರುವ ಕ್ರಮಗಳು ಹಲವು: ಸಮಾಜದ ನೈಜ ಬದಲಾವಣೆಯ ಕ್ರಾಂತಿಕಾರವಾದ ಸಾಧ್ಯತೆಯನ್ನು ಇಲ್ಲೇ, ಈ ಸೋಲಿನ ನಿರಾಶೆಯಲ್ಲೇ, ಸಾಧ್ಯವೆಂದೂ, ಸಾಧುವೆಂದೂ ತರ್ಕಾತೀತವಾಗಿ ಒಪ್ಪಿಸುವಂತೆ ಮಾಡುವುದು ಹಲವು ಉಪಾಯಗಳನ್ನು ಪಡೆದ ಕಲೆಗಾರಿಕೆ. +ಚೋಮ ಮತ್ತು ಗುತ್ತಿಯರ ಎರಡು ಮಾದರಿಗಳಂತೆ ಪ್ರೇಂಚಂದರ ಹೆಣದ ಬಟ್ಟೆ ಕಥೆಯ (ಕಫನ್) ಇನ್ನೊಂದು ಮಾದರಿಯಿದೆ – ನಮ್ಮನ್ನು ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವಂತೆ ಮಾಡುವ ಉಪಾಯವಾಗಿ. ಬಡತನ ಮತ್ತು ಅದರಿಂದ ಹುಟ್ಟುವ ಅತಿದೈನ್ಯ ಪ್ರೇಂಚಂದರ ಅಂತ್ಯಜರನ್ನು ಅಮಾನವರನ್ನಾಗಿ ಮಾಡಿದೆ. ಸತ್ತ ಹೆಣ್ಣಿಗೆಂದು ಹೆಣೆದ ಬಟ್ಟೆಯನ್ನು ಬೇಡಿ ತಂದು, ಅದನ್ನು ಮಾರಿ, ಅವರು ಕುಡಿದು ತಿಂದು ಮೈಮರೆಯುತ್ತಾರೆ. ನಮ್ಮಂತೆ ಮನುಷ್ಯರಾದ ಈ ಇಬ್ಬರು, ನಾವು ಪೊರೆಯುವ ವ್ಯವಸ್ಥೆಯಿಂದಾಗಿ ಪಶುಸಮಾನರಾಗುವುದು ಕಂಡು, ಬಡತನ ಎಲ್ಲ ಮಾನವೀಯ ಲಕ್ಷಣಗಳನ್ನು ಇಂಗಿಸಬಲ್ಲುದೆಂದು ತಿಳಿದು ನಾವು ಬೆಚ್ಚುತ್ತೇವೆ. ತೀವ್ರ ಮುಜುಗರದಲ್ಲಿ ನಮ್ಮ ಬಗ್ಗೆ ನಾವು ಹೇಸುವಂತೆ ಮಾಡಿ ಪ್ರೇಂಚಂದರು ನಮ್ಮಲ್ಲಿ ಮೌಲ್ಯ ಪ್ರಜ್ಞೆ ಅಂಕುರಿಸುವಂತೆ ಮಾಡುತ್ತಾರೆ. ಈ ಮಾದರಿಯ ಬರವಣಿಗೆಯನ್ನು ಕನ್ನಡದಲ್ಲಿ ನಾನು ಅಷ್ಟಾಗಿ ಕಂಡಿಲ್ಲ. ಹಿಂದಿ ಮತ್ತು ಉರ್ದುವಿನಲ್ಲಿ ಪ್ರೇಂಚಂದರ ಕಥೆ ಒಂದು ವಿಶಿಷ್ಟ ಪ್ರಗತಿಶೀಲ ಪರಂಪರೆಯನ್ನೇ ಬೆಳೆಸಿದೆಯೆಂದು ಕೇಳಿದ್ದೇನೆ. ಚೋಮ, ಗುತ್ತಿಯರದರಂತೆ ಈ ಬಗೆಯೂ ಮಹತ್ವದ್ದೆಂದು ಗುರುತಿಸಲು ಮಾತ್ರ ಪ್ರೇಂಚಂದರನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ. +ಮೇಲಿನ ದೀರ್ಘ ಪ್ರಸ್ತಾವನೆಯ ಉದ್ದೇಶ, ದೇವನೂರು ಮಹಾದೇವರ ಅಪೂರ್ವ ಶೋಭೆಯ ಕಥಾನಕವಾದ ಒಡಲಾಳದ ಅಧ್ಯಯನಕ್ಕಾಗಿ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು. ಹಾಪ್‌ಕಿನ್ಸ್ ಎಂಬ ಇಂಗ್ಲಿಷ್ ಕವಿಯ ಬಗ್ಗೆ ಬರೆಯುತ್ತ ಲೀವಿಸ್ ಎಂಬ ವಿಮರ್ಶಕ ಅವನ ಒಂದು ಪದ್ಯದಲ್ಲಿ (ಟೆಕ್ನಿಕಲ್ ಟ್ರಯಂಫ್=ರೀತಿಯ ಜಯ) ಎಂಬುದೇ (ಸ್ಪಿರಿಚುಯಲ್ ಟ್ರಯುಂಫ್ =ಆಧ್ಯಾತ್ಮಿಕ ಜಯ) ಆಗುತ್ತದೆ ಎನ್ನುತ್ತಾನೆ. ಕವಿಯ ಮನಸ್ಸಲ್ಲಿ ಒಂದು ತೀವ್ರ ತಳಮಳವೆದ್ದಿದೆ. ಅದನ್ನು ಅವನು ಗೆಲ್ಲಬೇಕಾಗಿದೆ. ಗೆದ್ದು ಬರೆಯುವುದಲ್ಲ, ಗೆಲ್ಲಲೆಂದೇ ಬರೆಯುವುದು ಅವನ ಕ್ರಮ; ಹಾಗೆ ನೋಡಿದರೆ ಎಲ್ಲ ದೊಡ್ಡ ಲೇಖಕರ ಕ್ರಮ ಅದೇ. ಹಾಗಾದ್ದರಿಂದಲೇ ಬರೆದುಕೊಳ್ಳುವ ಕ್ರಮ ಸಾಹಿತ್ಯದ ‘ರೀತಿ’ಯ ಪ್ರಶ್ನೆ ಮಾತ್ರವಾಗದೆ ತನ್ನ ಮನಸ್ಸಿನ ತಳಮಳವನ್ನು ಗೆಲ್ಲುವ ಕ್ರಮವೂ ಆಗಿಬಿಡುತ್ತದೆ. ಮಹದೇವರ ಒಡಲಾಳದ ಭಾಷಾಪ್ರಯೋಗ, ಕಥನಕ್ರಮಗಳಿಗೆ ಅಪೂರ್ವ ಶೋಭೆ ಉಂಟಾಗುವುದು ಲೇಖಕನಿಗೆ ಬರೆಯುವ ಕ್ರಮವೇ ನೈತಿಕ ಕ್ರಿಯೆಯೂ ಆಗಿದೆಯೆಂದು ನಮಗೆ ಅನ್ನಿಸುವುದರಿಂದ. ಇರುವುದನ್ನು ಇದ್ದಂತೆಯೇ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಪ್ರೀತಿ ಹುಟ್ಟುವುದು, ಹೀಗೆ ಪ್ರೀತಿಗೆ ಪಾತ್ರರಾದ ಜನಗಳು ಶೋಭಾಯಮಾನರಾಗುವುದು ಒಡಲಾಳದ ಕ್ಷುಲ್ಲಕವೆನ್ನಿಸಬಹುದಾಗಿದ್ದ ದೈನಿಕದ ಜಗಳ ಮತ್ತು ಚೌರ್ಯದ ಕಥೆಯಲ್ಲಿ ಸಾಧ್ಯವಾಗಿದೆ. ಇದೊಂದು ಬೆರಗು ಹುಟ್ಟಿಸುವ ಯಶಸ್ಸು ಎನ್ನಬಹುದು. ಇದನ್ನು ಸಾಧ್ಯವಾಗಿಸಿದ್ದು ಲೇಖಕರ ನೋಟ, ಅಂದರೆ ನೋಡುವ, ಅರಿಯುವ ಕ್ರಮ; ತೋರಿಕೆಗೆ ಕ್ಷುಲ್ಲಕವಾಗಿ ಕಾಣುವುದರಲ್ಲೂ ಚೈತನ್ಯವನ್ನು ಗುರುತಿಸುವ ಶಕ್ತಿ. ಸ್ವತಃ ಹರಿಜನ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದು ವಿದ್ಯಾವಂತರಾದ ಮಹದೇವರಂಥ ಲೇಖಕರೊಬ್ಬರು ತಾವು ಹುಟ್ಟಿದ ತಾಣದಿಂದ ಅನಿವಾರ್ಯವಾಗಿ ದೂರವಾಗುತ್ತಿರುವಾಗ ಈ ಕತಾನಕವನ್ನು ಬರೆದಿದ್ದಾರೆಂಬುದನ್ನು ಗಮನಿಸಿದಲ್ಲಿ, ಈ ಬರೆಯುವ ಪ್ರಕ್ರಿಯೆಯೇ ಅವರಿಗೆ ಕಳೆದುಕೊಳ್ಳುತ್ತಿರುವುದನ್ನು ಮತ್ತೆ ಪಡೆದುಕೊಳ್ಳುವ, ತನ್ನ ಜನದ ಬಗ್ಗೆ ಮತ್ತೆ ಪ್ರೀತಿಯನ್ನೂ ಸಲಿಗೆಯನ್ನೂ ಗಳಿಸಿಕೊಳ್ಳುವ ಕ್ರಿಯೆಯಾಗಿದೆ ಎನ್ನಿಸುತ್ತದೆ. ಬೆಂಕಿಯ ಸುತ್ತ ಕೂತು ಕಡಲೆಕಾಯಿಯನ್ನು ತಿನ್ನುತ್ತ ಹರಿಜನ ಕುಟುಂಬ ಬೆಂಕಿಯ ಪ್ರಭೆಯಲ್ಲಿ ಹೊಳೆಯುವಾಗ, ಗೌರಿ ಚಿತ್ರಿಸಿದ ನವಿಲು ಕುಣಿಯುವಾಗ, ಸಾಕವ್ವ ‘ಮೂರನೆ ಕ್ಲಾಸಿನ’ ಶಿವೂಗೆ ಕಥೆ ಹೇಳುವಾಗ, ಪೋಲೀಸ್ ಕಾನ್ಸ್‌ಟೇಬಲ್ ರೇವಣ್ಣ ಉಚ್ಚೆ ಹೊಯ್ಯುವುದನ್ನು ಕಂಡು ಹರಿಜನ ಹೆಂಗಸರು ನಗುವಾಗ ಲೇಖಕರು ಈ ಪಾತ್ರದ ಬಗ್ಗೆ ಅನುಭವಿಸುವ ಪ್ರೀತಿ ನಮ್ಮದೂ ಆಗುತ್ತದೆ. ಅವರೂ ನಾವೂ ಒಂದಾಗುತ್ತೇವೆ; ಕರುಣೆಯಲ್ಲಲ್ಲ, ತಾದಾತ್ಮಿಯದಲ್ಲಿ. ಹೊಟ್ಟೆಪಾಡಿನ ರಿಕ್ತವಾದ (‘ಸಬ್‌ಸಿಸ್ಟೆನಸ್’ ಎಕಾನಮಿ’) ಅರ್ಥವ್ಯವಸ್ಥೆಯಲ್ಲಿ ಹೇಗೋ ಬದುಕುವ, ಕದ್ದಾದರೂ ಬಾಳುವ ಉಪಾಯಗಾರರಾದ ದಲಿತರು ಮಾನವನ ಅದಮ್ಯ ಚೈತನ್ಯಕ್ಕೆ ಉದಾಹರಣೆಗಳಾಗುತ್ತಾರೆ. +ಅಂದರೆ ಒಡಲಾಳ ಹೀಗೆ ಖುಷಿಪಡಿಸಿ ನಮ್ಮನ್ನು ತಣಿಸುವ ಕೃತಿ ಮಾತ್ರವಾಗಿದ್ದರೆ ಅದು ದೋಷಯುಕ್ತವಾಗಿಬಿಡುತ್ತಿತ್ತು. ವೈಭವೀಕರಿಸುವ ಬರವಣಿಗೆಯ ಕ್ರಮ ಅಹಿತವಾದ್ದನ್ನು ಮರೆಸುತ್ತದೆ. ಹಾಗಾಗುವ ಅಪಾಯದಿಂದ ಒಡಲಾಳ ತಪ್ಪಿಸಿಕೊಂಡಿದೆ. ಒಂದು ಸಿಪ್ಪೆಯೂ ಪೋಲೀಸರಿಗೆ ಸಿಗದಂತೆ ಕಡಲೇಕಾಯಿಯನ್ನು ತಮ್ಮ ಒಡಲಿನ ಉರಿಯಲ್ಲಿ ಜೀರ್ಣಿಸಿಕೊಂಡ ಈ ಉಪಾಯಗಾರರ ಹಿರಿಯವ್ವನಾದ ಸಾಕವ್ವ ತನ್ನ ಇನ್ನೊಂದು ಹುಂಜವನ್ನೂ ಪೋಲೀಸರಿಗೆ ಕಳೆದುಕೊಂಡು ಪೆಚ್ಚಾಗುತ್ತಾಳೆ. ಪೋಲೀಸರು ತಪಾಸಣೆ ಮಾಡುವ ಸಾಕವ್ವನ ‘ನಾಕು ಕಂಬದ ತೊಟ್ಟಿ ಹಟ್ಟಿ’ ಯಲ್ಲಿ “ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು” ಎಂಬ ಒಂದು ವಿವರ ಕಾಣಿಸಿಕೊಳ್ಳುತ್ತದೆ. ಇಂದು ಅತ್ಯಂತ ಮಹತ್ವದ ವಿವರ. ಹೊಟ್ಟೆಪಾಡಿನ ಸಬ್‌ಸಿಸ್ಟೆನ್ಸ್ ಅರ್ಥವ್ಯವಸ್ಥೆಯಲ್ಲೂ ದುಡಿಮೆಯ ಮಾರ್ಗವನ್ನು ಕೊಟ್ಟಿದ್ದ ರಾಟೆ ನಿಷ್ಪ್ರಯೋಜಕವಾಗಿದೆ. ಬೆಳವಣಿಗೆಯನ್ನು ಕಳೆದುಕೊಂಡ ರೋಗಿಷ್ಟ ಬಾಲಕ ಸದಾ ದುಪಟಿ ಹೊದ್ದ ‘ದುಪಟಿ ಕಮಿಷನರ್’ ಆಗಿದ್ದಾನೆ. ಬಡತನ ಮತ್ತು ನಿರುದ್ಯೋಗ ಹರಿಜನರನ್ನು ಹಿಂಡಿ ಹಿಪ್ಪೆ ಮಾಡಿದೆ; ಆದರೂ ಅವರು ಜ್ವಲಿಸಬಲ್ಲವರಾಗಿ ಉಳಿದಿದ್ದಾರೆ. ‘ಲೋ ಮೈಮೆಟಿಕ್’ನ ವೈನೋದಿಕ ಕ್ರಮದ ಬರವಣಿಗೆ ಇರುವ ಸ್ಥಿತಿಯನ್ನೂ ಅಂತರ್ಗತ ಸಾಧ್ಯತೆಯನ್ನೂ ಹೀಗೆ ಒಟ್ಟಾಗಿ ಬಿಂಬಿಸುತ್ತದೆ. ಕಥಾನಕ ಕೊಡುವ ಖುಷಿ ನಮ್ಮನ್ನು ತಣಿಸುವಂಥದಲ್ಲ; ನಮ್ಮ ಏಕಾಗ್ರ ಗಮನವನ್ನು ಕಥೆಯ ಲೋಕಕ್ಕೆ ಉತ್ಕರ್ಷದಲ್ಲಿ ಒದಗಿಸಿಕೊಡುವಂಥದು. ಎಂಥ ಸ್ಥಿತಿಯಲ್ಲೂ ಹರಿಜನರು ಎಷ್ಟು ಜೀವಂತವಾಗಿದ್ದಾರೆ ಎಂದು ನಮಗೆ ಅನ್ನಿಸುತ್ತಿರುವಂತೆಯೇ ಅವರನ್ನು ಅವುಕಿರುವ ದಾರಿದ್ರ್ಯ ಮಾಯವಾದಲ್ಲಿ ಅವರ ಶಕ್ತಿ ಎಷ್ಟು ಅಪಾರ ಸಾಧ್ಯತೆಗಳನ್ನು ಪಡೆದಿರುವಂಥದು ಎಂದು ನಮಗೆ ಅನ್ನಿಸುವಂತೆ ಕಥಾನಕ ನಮ್ಮ ಗಮನವನ್ನು ಪ್ರಚೋದಿಸುತ್ತದೆ. ನಮ್ಮ ಚೈತನ್ಯ ಹೀಗೆ ಹೆಚ್ಚಿದ ಹೊರತು ಕ್ರಾಂತಿಕಾರಕತೆ ಹೇಗೆ ತಾನೇ ಸಾಧ್ಯವಾದಿತು? ಹೇಗೋ ಜೀವವುಳಿಸಿಕೊಂಡು ಸಾಯದಂತೆ ಬದುಕಿರುವವರ ಸರ್ವೈವಲ್‌ನ ಕಥೆಯೊಂದು, ಮನುಷ್ಯ ಚೈತನ್ಯ ಅದಮ್ಯವೆಂಬ ಪಾರಮಾರ್ಥಿಕ ಅನುಭವವನ್ನು ಕೊಡುವ ಮೂಲಕ ಓದುಗರ ಕ್ರಾಂತಿಯ ಅಪೇಕ್ಷೆಯನ್ನು ಹೇಗೆ ಕುದುರಿಸುತ್ತದೆಂಬುದನ್ನು – ‘ಲೋ ಮೈಮೆಟಿಕ್’ ಕ್ರಮದಲ್ಲಿ ಅದನ್ನು ಹೇಗೆ ಸಾಧಿಸುತ್ತದೆಂದು – ಇನ್ನಷ್ಟು ಪರಿಶೀಲಿಸೋಣ. +ಮನುಷ್ಯನ ಅಸ್ತಿತ್ವಕ್ಕೇ ಅಡಿಪಾಯವಾದ ಕಾಮ ಮತ್ತು ಪಾಲನೆಗಳಲ್ಲಿ ಕಾಮದ ಮಹತ್ವವನ್ನು ಮನಗಾಣಿಸುವ ಎಷ್ಟೋ ಕನ್ನಡ ಕೃತಿಗಳಿವೆ. ಆದರೆ ‘ಪಾಲನೆ’ಯನ್ನೇ ಕೇಂದ್ರ ವಸ್ತುವಾಗಿ ಪಡಕೊಂಡ ಈಚಿನ ಮುಖ್ಯ ಕೃತಿಯೆಂದರೆ ಮಹದೇವರ ‘ಒಡಲಾಳ’. ಸಂಸಾರ, ಸಮಾಜ, ಪ್ರಭುತ್ವ, ಒಟ್ಟಿನಲ್ಲಿ ಮಾನವನ ನಾಗರಿಕತೆ ಮತ್ತು ಸಂಸ್ಕೃತಿ – ಇವುಗಳಿಗೆ ಪ್ರೇರಕವಾದ ಶಕ್ತಿಯೆಂದರೆ ಮಾನವನಲ್ಲಿರುವ ‘ಪಾಲನೆ’ಯ ಪ್ರಕೃತಿ. ಸಾಮಾಜಿಕ ವ್ಯವಸ್ಥೆಯನ್ನು ವಿನಾಶಕಾರಿಯಾಗಿದೆಯೆಂದು ನಮಗೆ ಅನ್ನಿಸುವುದು ಮನುಷ್ಯನಿಗೆ ಸಹಜವಾದ ‘ಪಾಲನೆ’ಗೆ ಅದು ಅಡ್ಡಿಯನ್ನುಂಟು ಮಾಡಿದಾಗ. ಮಕ್ಕಳನ್ನು ಬೆಳೆಸುವುದು, ಓದಿಸುವುದು, ಬಹುಶಃ ವಂಶಾಭಿವೃದ್ಧಿಗೆ ಹಾತೊರೆಯುವುದು, ಆಸ್ತಿಗಾಗಿ ಆಸೆಪಡುವುದು – ಎಲ್ಲವುದಕ್ಕೂ ತಳದಲ್ಲಿರುವುದು ‘ಪಾಲನೆ’ಯ ಪ್ರವೃತ್ತಿಯೇ. ನಮ್ಮ ನೈತಿಕತೆಯ ಉಗಮವಿರುವುದೂ ಈ ‘ಪಾಲನೆ’ಯಲ್ಲೇ. ಒಡಲಾಳದ ಸಾಕವ್ವನ ಮೂಲಕ, ಅವಳ ಹೆಸರಿನಿಂದಾಗಿ ಕೂಡ, ನಮ್ಮ ಗಮನವನ್ನೆಲ್ಲ ದುಡಿಸಿಕೊಳ್ಳುವುದು ಹೇಗೆ ಒಂದು ರಿಕ್ತ ಹೊಟ್ಟೆಪಾಡಿನ ಅರ್ಥವ್ಯವಸ್ಥೆಯಲ್ಲೂ ಈ ಪಾಲನೆಯ ಕ್ರಿಯೆ ನಡೆದುಕೊಂಡು ಬಂದಿದೆ ಎಂಬುದು. * +ತಾನು ಸಾಕಿದ ಒಂದು ಹುಂಜ (ಅದು ದೇವರಿಗೆ ಬಿಟ್ಟಿದ್ದೆಂಬುದು ಅರ್ಥಪೂರ್ಣ) ಉಳಿದವರಿಗೆ ಯಃಕಷ್ಚಿತ್ ಎನ್ನಿಸುತ್ತಿದ್ದರೂ, ಕಳೆದುಹೋಯಿತೆಂದು ಹಂಬಲಿಸುವ ಸಾಕವ್ವ ನಮ್ಮನ್ನು ಪಾಲನೆಯ ಹಲವು ಮಜಲುಗಳ ಬಗ್ಗೆ ವೈನೋದಿಕವಾಗಿ ಚಿಂತಿಸುವಂತೆ ಮಾಡುತ್ತಾಳೆ. (ಹುಂಜದ ಮೂಲಕ ಪಾಲನೆಗೂ ದೈವಿಕ ಕಲ್ಪನೆಗೂ ಇರುವ ಸಂಬಂಧ ಸಾಕವ್ವನ ಪ್ರಜ್ಞೆಯಲ್ಲಿ ವ್ಯಕ್ತವಾಗುತ್ತದೆ) “ಚರುಮಗಳು ಸ್ವತಂತ್ರವಾಗಿ ಅಲ್ಲಾಡುವ” ಸಾಕವ್ವ ತನ್ನ ವೃದ್ಧಾಪ್ಯದಲ್ಲಿ ಸಾವಿಗೆ ಹತ್ತಿರವಾದಳು. ಆದರೂ ಅವಳ ಛಲ ಅದಮ್ಯವಾದ್ದು. ಸವುತಿ ಕೆಂಪಮ್ಮನ ಬಗ್ಗೆ ಅವಳು ಅಂದುಕೊಳ್ಳುವುದು, ಕಡಲೆಕಾಯನ್ನು ತಿನ್ನುವಾಗ ನೆರೆಮನೆಯ ಕಾಳಕ್ಕಗೆಂದು ಸೊಸೆಯೆತ್ತಿಕೊಂಡ ನಾಲ್ಕು ಬೊಗಸೆಯಲ್ಲಿ ಒಂದು ಬೊಗಸೆ ತೆಗೆದು ಗುಡ್ಡೆಗೆ ಹಿಂದಿರುಗಿಸುವುದು, ಕಳೆದ ಹುಂಜಕ್ಕಾಗಿ ಅವಳು ಗೋಳಿಡುವುದು, ಮಣ್ಣೆರಚುತ್ತ ಶಾಪ ಹಾಕುವುದು, ಮಗ ಸೊಸೆಯರ ಜೊತೆ ಆಸ್ತಿಗಾಗಿ ವ್ಯಾಜ್ಯ ಮಾಡುವುದು – ಈ ಎಲ್ಲದರಲ್ಲೂ ನಮಗೂ, ಅವಳ ಸುತ್ತಲಿನವರಿಗೂ ಕೂಡ, ವಿನೋದವೆನ್ನಿಸುವ ಅತಿಯಿದೆ. ಆದರೆ ಅವಳ ಈ ಹಟದ ಇನ್ನೊಂದು ಮುಖವೇ ‘ಪಾಲನೆ’ಯಾಗಿದೆ. ಸೊಸೆ ಚೆಲುವಮ್ಮನ ಜೊತೆ ಅವಳು ಆಸ್ತಿ ತನ್ನದು “ಸ್ವಾರ್ಜತ” ಎಂದು ಜಗಳವಾಡುವಾಗಲೂ ಚೆಲುವಮ್ಮನ ಕೂಸು ಅವಳ ಜೊತೆ ಆಡುತ್ತಿರುತ್ತದೆ. ತನಗೆ ತಿನ್ನಲು ಕುಡಿಯಲು ಕೊಟ್ಟಿದ್ದನ್ನು ಅವಳು ಯಾವಾಗಲೂ ಮಕ್ಕಳ ಜೊತೆ ಹಂಚಿಕೊಳ್ಳುತ್ತಾಳೆ. ಒಬ್ಬಳು ಸೊಸೆ ಜೊತೆ ಜಗಳವಾಡುವ ಕ್ರಮ ಕೂಡ ಅವಳು ತನ್ನ ಪ್ರೀತಿಯನ್ನೂ, ಪಾಲನೆಯ ಕಾಳಜಿಯನ್ನೂ ವ್ಯಕ್ತಗೊಳಿಸುವ ಒಂದು ಕಟುವಾದ ರೀತಿಯೆ ಆಗಿಬಿಡುತ್ತದೆ. ಹಟ್ಟಿ, ಹೊಲದ ಮಾತೇ ತುಂಬಿರುವ ಈ ಜಗದಲ್ಲಿ ಚೆಲುವಮ್ಮನ ಕೈಗೂಸು ಅಜ್ಜಿಯ ಸುತ್ತ ಅಳುತ್ತಿರುತ್ತದೆ. ಹೇಗಾದರೂ ಬಾಳುವುದೊಂದೇ ಮೌಲ್ಯವೆನ್ನುವಂತೆ, ತೀರಾ ಈ ಮಣ್ಣಿಗೆ ಮಾತ್ರ ಸೇರಿದ್ದವಳು ತಾನೆಂಬುವಂತೆ ಸಾಕವ್ವ ಮಾತಾಡುತ್ತಾಳೆ. ಪುಟಗೌರಿ ಬರೆದ ನವಿಲಿನಿಂದ ಖುಷಿಯಾದ ಶಿವೂ ಅಜ್ಜಿಯನ್ನು ಕರೆದು ಅದನ್ನು ತೋರಿಸಬೇಕೆಂದಾಗ “ತಗಾ ಅದ್ಯಾರೊ ಒಬ್ಬಳು ಕುಟ್ಟೊ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ” ಎನ್ನುತ್ತಾಳೆ. +ಆದರೆ ಮಾತ್ರ, ಯಾವ ನಿರುಪಯುಕ್ತ ಸೊಗಸಿಗೂ ಜಾಗವಿಲ್ಲವೆನ್ನುವಂತೆ ಹೊಟ್ಟೆಪಾಡಿನ ಕಾಯಕಜೀವಿಯಾದ ಇದೇ ಸಾಕವ್ವ ತನ್ನ ಪರದಾಟಗಳ ಪ್ರಪಂಚವನ್ನು ಮೀರಿ ಮಾತಾಡುವಾಗ ತತ್ವಜ್ಞಾನಿಯಾಗಿಬಿಡುತ್ತಾಳೆ: ಮೂರನೇ ಕ್ಲಾಸಿನ ಶಿವೂನಲ್ಲಿ ಅವಳು ಕಾಣುವ ಭವಿಷ್ಯದ ಕನಸು, ತನ್ನ ಹೋರಾಟದ ಜೀವನವನ್ನು ಅವಳು ನಿರುದ್ವಿಜ್ಞಳಾಗಿ ಭಾವಿಸುವ ರೀತಿ ಒಡಲಾಳದ ಬರವಣಿಗೆಯ ಎಲ್ಲ ಚೆಲುವನ್ನೂ ಸಾರವಾಗಿ ಪಡೆದುಕೊಂಡಿದೆ. ಮಹದೇವರ ಭಾಷೆಗೆ ಇರುವ ಕಾವ್ಯ ಚೈತನ್ಯಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯೆಂದು ಇಡಿಯಾಗಿ ಅದನ್ನಿಲ್ಲಿ ಉದ್ಧರಿಸುತ್ತೇನೆ: ತನ್ನ ಮೊತ್ತದ ಒತ್ತಡದಲ್ಲಿ ಸಾಕವ್ವನ ದುಡಿಮೆ ಜೀವನದ ದೈನಿಕ ಬವಣೆ ಹೇಗೆ ಮೌಲಿಕವಾದ ಜೀವನ ದೃಷ್ಟಿಯಾಗಿ ರೂಪಾಂತರವಾಗುತ್ತದೆ ಗಮನಿಸಿ. (ಹೆಗಲ್ ಹೇಳುವಂತೆ ‘ಕ್ವಾನ್‌ಟಿಟೇಟಿವ್ ಚೇಂಜ್ ಬಿಕಮ್ಸ್ ಕ್ವಾಲಿಟೇಟಿವ್ ಚೇಂಜ್’) ದೈನಿಕದ ಒಡಲಲ್ಲೇ ಗುಣಾತ್ಮಕವಾದ ಪುರಾಣಸೃಷ್ಟಿಯಾಗುವ ಕ್ರಮ ಇಲ್ಲಿದೆ. ಈ ಪುರಾಣಸೃಷ್ಟಿಯ ಮೂಲವಿರುವುದು ಸಾಕವ್ವನ ಪಾಲನೆಯ ಛಲದಲ್ಲಿ. +‘ನೀ ಇದ್ರ?’ +‘ಯಮದೇವರೂ ಓಡೋಯ್ತರ!’ +ಶಿವೂಗೆ ಅದನ್ನು ತನ್ನ ಕಣ್ಣುಗಳಿಗೆ ತಂದುಕೊಳ್ಳಲು ಆಗಲಿಲ್ಲ. ಬೆಪ್ಪಗಣ್ಣುಬುಟ್ಟು ನೋಡಿತು. ಸಾಕವ್ವ ಅಂದಳು: +‘ಅವರ್ಗ ಆಲ್ದಮರ್ದ ಗಾತ್ರ ಮೀಸ…… ದಾರಂದದಗಲದ ಹಲ್ಲು……’ +‘ಅವ್ರು ನಿನ್ನ ಎಳ್ಕೊಂಡೋದ್ರ……’ +‘ಆಯ್ ತಗತಗಾ…… ನನ್ಯಾಕ ಎಳ್ಕೊಂಡುವೋದೀರಿ ಮೂದೇವ್ಗಳ…… ನಾನೇ ಬತ್ತೀನಿ ನಡೀರಿ ಅಂತೀನಿ.’ +‘ಆಮೇಲ……’ +‘ಆಮೇಲ ಅವರ್ಗಿಂತ, ಮೋದ್ಲು ನಾನೀಯ ಯಮಧರ್ಮರಾಜ್ನ ತವುಕ ವೊಯ್ತೀನಿ……’ +ಸಾಕವ್ವನ ಬಾಯಿಂದ ಮಾತುಗಳು ಬರುತ್ತಿದ್ದಂತೆ…… ಅವಳು ಸುಕ್ಕಿಂದ ಮಾಡಿದ ಅಲ್ಲಾಡುವ ಚರ್ಮ, ಅವಳ ಮೊಖದ ಹಲ್ಲಿಲ್ಲದ ಬಾಯಿ, ತಲೆಯ ನರಕೂದಲು ಮಾಯವಾದವು. ಸಾಕವ್ವನೊಳಗ ಪುಟಗೌರಿಚಿಕ್ಕಿ ಮೂಡಿದಳು. +‘ಯಮಧರ್ಮರಾಜ ಏನ್ಮಾಡೀನು……’ +‘ಅವ್ನಾ…… ನಮ್ಮ ಹಟ್ಟಿಗಾತ್ರದ ಸಿಮ್ಮಾಸನದ ಮೇಲೆ ಕೂತ್ಕೊಂಡು…… ಯಮದೂತರು ಕರ್ಕಾ ಬತ್ತಾರಲ್ಲ…… ಅವರ್ಗ ಸೀಕ್ಸೆ ಕೊಡ್ತಾನ……’ +‘ಅದ್ಕೂನು ನಿಂಗೆ ಹೆದ್ರಕ ಆಗಲ್ವಾ……’ +‘ಹಾಯ್…… ನರಲೋಕದಲ್ಲಿ ನಾನು ಪಟ್ಟಂತ ಕಷ್ಟಕ್ಕೆ ಆ ಸೀಕ್ಸ ಎಲ್ಲಾದ್ದು ತಗಾ…… ಅವ್ನ ಜೊತೇಲೂ ಅದ್ನೆ ಅಂತೀನಿಕನಾ……’ +ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಬಿಳೀ ಸೀರೆ ಉಟ್ಟು ಹಾರಾಡುವ ಕೂದಲ ಗಾಳೀಗೆ ಬಿಟ್ಟು ಬಳಕುತ ದೇವಕನ್ನಿಕೆ ಆದಳು. +‘ಅವ್ನು …… ಅದ್ಕೇನಂದನು?’ +‘ಅದ್ಕಾ ಅವ ಆಯ್ತು ಮುದ್ಕಿ, ನಿನ್ನ ಧೈರಕ ಮೆಚ್ಚಿ…… ಏನ್ ವರ ಬೇಕು ಕೇಳ್ಕ ಅಂತಾನ’ +ಬಿಳಿ ಸೀರೆ ಉಟ್ಟು ಹಾರಡುವ ಕೂದಲ ಗಾಳೀಗೆ ಬಿಟ್ಟು ಬಳಕುತ ದೇವಕನ್ನಿಕೆಯು ತನ್ನ ಕಿರುಬೆರಳಲಿ ಭೂಲೋಕಾನ ಆಡಿಸತೊಡಗಿದಳು. +‘ವರ ಕೇಳ್ಕ ಅಂದ್ಮೇಲ……’ +‘ಅದ್ಕ ನಾನು, ನೋಡು ಸ್ವಾಮಿ…… ನನ್ನ ಮೊಮ್ಗೂಸು ನರಲೋಕದಲಿ ರಾಜ್ ಭಾರ ಮಾಡುವಂಥ ವರ ಕೊಡು…… ಅಷ್ಟು ಸಾಕು ಅಂತೀನಿ.’ (ಪುಟ ೨೦-೨೧) +‘ಮೂರನೇ ಕ್ಲಾಸಿನ’ ಶಿವೂ ಕಣ್ಣಿಂದ ಸಾಕವ್ವನನ್ನು ನೋಡುವುದರಿಂದಾಗಿ (ಭಾಷೆಯಲ್ಲಾಗುವ ಬದಲಾವಣೆಯನ್ನು ಗಮನಿಸಿ) ಸಾಕವ್ವ ಒಂದು ಪುರಾಣ ಪಾತ್ರವಾಗುತ್ತಾಳೆ. ನವಿಲು ಬರೆದ ಪುಟಗೌರಿಯ ಜೊತೆ ಮಿಲನವಾಗುತ್ತಾಳೆ. ಕಥಾನಕದ ವೈನೋದಿಕದ ಧಾಟಿಯಿಂದಾಗಿ ಸಾಕವ್ವ ಯಮನನ್ನೂ ಎದುರಿಸುವುದು ನಮ್ಮ ಭಾವನೆಗೆ ಹೊರೆಯಾಗದಂತೆ ಅವಳ ಒಟ್ಟು ಜೀವನದ ಮೇಲೆ ವಿಶೇಷವಾದ ಪ್ರಭೆಯನ್ನು ಚೆಲ್ಲುತ್ತದೆ. ಕೊನೆಯಲ್ಲಿ ಅವಳು ಶಿವೂನ ಧ್ಯಾನವ ಮುರುದು ‘ಈಗ ನನ್ನುಂಜನ ನೋಡ್ಕಂಬರುವ. ಬಾ ಕೂಸು’ ಎನ್ನುವುದಂತೂ ಇಡೀ ಕಥೆ ಅವಳ ಹುಂಜದ ತಪಾಸಣೆಗೆ (‘ಪಾಲನೆ’)ಗೆ ಶಿವೂನನ್ನು ಬಳಸುವ ಉಪಾಯವಾಗುತ್ತದೆ. ದೈನಿಕದ ಇಕ್ಕಟ್ಟಿನಲ್ಲೇ ಅವಳ ಕಲ್ಪನೆ ಮೊಳೆಯುತ್ತದೆ. ಕಥೆಯುದ್ದಕ್ಕೂ ಅವಳಲ್ಲಿ ಕಾಣುವ ಜಗಳಗಂಟಿತನ, ದಿಟ್ಟತನ, ಜಿಗಟುಗಳು ವಂಶಪಾಲನೆಗೆ ಅಗತ್ಯವಾದ ಗುಣಗಳಾಗಿ ಕಾಣುತ್ತವೆ. ಹೀಗೆ ನಾವು ನಮ್ಮ ಜಗತ್ತಲ್ಲಿ ನೆಗೆಟಿವ್ ಎಂದುಕೊಳ್ಳುವ ವಿಷಯಗಳು – ಜಗಳಗಂಟಿತನ, ಜಿಪುಣತನ, ಚೌರ್ಯ ಇತ್ಯಾದಿ – ದಲಿತರ ಹೊಟ್ಟೆಪಾಡಿನ ಅರ್ಥವ್ಯವಸ್ಥೆಯಲ್ಲಿ ಪಾಸಿಟಿವ್ ಮೌಲಗಳನ್ನು ಪೋಷಿಸುವ ಉಪಾಯಗಳಾಗುತ್ತವೆ. +ಫೆಲನಿಯ ಸಿನಿಮಾವೊಂದರಲ್ಲಿ ಊರಿನೊಳಕ್ಕೆ ಹಠಾತ್ತನೆ ಬಂದು ನಮ್ಮನ್ನು ಬೆರಗುಗೊಳಿಸುವ ನವಿಲಿನಂತೆ ಒಡಲಾಳದ ರಿಕ್ತ ಪ್ರಪಂಚದಲ್ಲಿ ಪುಟಗೌರಿ ಗೋಡೆಯ ಮೇಲೆ ನವಿಲು ಬರೆಯುತ್ತಾಳೆ. “ಶಿವೂ ತಲೆ ಎತ್ತಿ ನೋಡಿದರೆ, ನಡುಮನೆ ಗೂಡ ಬಲಪಕ್ಕದಲ್ಲಿ ನೀಲಿಲಿ ಮೂಡಿದ್ದ ನವುಲು ಶಿವೂನ ನೋಡ್ತ ಕುಣೀತಿತ್ತು”. ನಂತರ ಪೋಲಿಸರು ಸಾಕವ್ವನ ಹಟ್ಟಿಯನ್ನು ತಪಾಸಣೆ ಮಾಡುವಾಗ “ಯಾವ ಜಪ್ತಿಗೂ ಸಿಗದೆ ಗೋಡೆ ಮೇಲಿನ ನವುಲುಗಳು ಕುಣಿಯುತ್ತಿದ್ದುವು. ಶಿವೂ, ಪುಟಗೌರಿ, ವಾಚುಕಟ್ಟಿದ ಗುರಿಸಿದ್ದು, ಸಿಪ್ಪೆ ಸಿಗದ ಹಾಗೆ ಕಡಲೆಕಾಯನ್ನು ತಿಂದು ಬಿಡುವ ಎಲ್ಲರೂ ಬೇರೆ ಬೇರೆ ಬಗೆಗಳಲ್ಲಿ ಈ ಹಟ್ಟಿಯೊಳಗಿನ ಬದುಕಿನ ಕಾರ್ಪಣ್ಯವನ್ನು ಮೀರಬಲ್ಲ ಶಕ್ತಿ ಪಡೆದಿದ್ದಾರೆ. ಗುರುಸಿದ್ದು ಹೋಟೆಲಿಗೆ ನುಗ್ಗಿ “ಕಾಸ ಬಿಸಾಕಿ ‘ದೋಸ ಟೀ ಕೊಡ್ರಿ’ ” ಎಂದು ರಾಜಕೀಯವಾಗಿಯೇ ದಲಿತ ಸ್ಥಿತಿಯನ್ನು ಮೀರಬಲ್ಲವನು. (ಕಡಲೇಕಾಯಿ ತಿನ್ನುತ್ತಾ ಬೆಂಕಿ ಎದುರು ಇಡೀ ಹಟ್ಟಿ ಸೇರಿದಾಗ ಇವನೇ ‘ಸಹವೀರ್ಯಂಕರವಾವಹೈ’ ಕ್ರಿಯೆಗೆ ಕುಮ್ಮಕ್ಕು ಕೊಡುವವನು.) ವಂಶದ ಪಾಲನೆಯಲ್ಲಿ ಜೀವ ಸವೆಸಿದ ಸಾಕವ್ವ ನೋವನ್ನು ಉಂಡವಳಾದ್ದರಿಂದ ಯಮನಿಗೇ ಸವಾಲು ಹಾಕಬಲ್ಲವಳಾಗಿ ತನ್ನ ಸ್ಥಿತಿ ಮೀರುವವಳು. ಒಡಲಾಳ ಕಥಾನಕ ಹೀಗೆ ತನ್ನ ಮಿತಿಗಳ (ನೆಸೆಸಿಟಿ) ಇಕ್ಕಟ್ಟಿನ ಪ್ರಪಂಚದಲ್ಲೇ ಸ್ವಾತಂತ್ರ್ಯ (ಫ್ರೀಡಂ) ವನ್ನು ಸೂಚಿಸುತ್ತದೆ. ಕಥೆಯ ಧಾಟಿ ವೈನೋದಿಕದ್ದಾದ್ದರಿಂದ ಭಾವನೆಗಳನ್ನು ಒಂದರ ಮೇಲೊಂದು ಪೇರಿಸಿ, ಶೃಂಗ ಸ್ಥಿತಿ ಮುಟ್ಟಿಸಿ ಕಥೆಯನ್ನು ಕೊನೆಯಲ್ಲಿ ಮುಕ್ತಾಯಕ್ಕೆ ತರುವ ಅಸಹಜ ಒತ್ತಡ ಲೇಖಕನ ಮೇಲಿಲ್ಲ. ಅಥವಾ ಅಂಥ ಮುಕ್ತಾಯದ ಅಪೇಕ್ಷೆಯೂ ನಮ್ಮಲ್ಲಿ ಹುಟ್ಟುವುದಿಲ್ಲ. ನಿಜ ಜೀವನದಲ್ಲಿ ನಾವು ಕಾಣದ ಕ್ರಾಂತಿಕಾರಕತೆಯನ್ನಾಗಲೀ, ಸಮಸ್ಯೆಗೆ ಉತ್ತರವನ್ನಾಗಲೀ ಕಥೆಯಲ್ಲಿ ಕೊಡಬೇಕಾದ ತಾತ್ವಿಕ ಬಿಕ್ಕಟ್ಟಿಗೆ ಲೇಖಕ ಒಳಗಾಗಲ್ಲ. ನಮ್ಮಲ್ಲಿ ಪ್ರೀತಿಯನ್ನು ಹುಟ್ಟಿಸುವ ಮೂಲಕ ನಮ್ಮ ಅರಿವನ್ನು ಬದಲಾಯಿಸಿ ಹಿಗ್ಗಿಸುವ ಕೆಲಸವನ್ನು ಮಹದೇವರ ಕಥನಕ್ರಮ ಮಾಡುತ್ತದೆ. ಪ್ರತಿಯೊಬ್ಬರೂ ಕಥೆಯಲ್ಲಿ ಒಂದಲ್ಲ ಒಂದು ಬಗೆಯ ಕನಸುಗಾರರಾಗಿಯೇ ಬೆಳೆಯುತ್ತಾರೆ. ಸಾಹುಕಾರ್ ಎತ್ತಪ್ಪನವರ ಸಮೃದ್ಧಿಯೂ ಇವರ ಕನಸುಗಾರಿಕೆಗೆ ಪುಷ್ಟಿಕೊಡುತ್ತದೆ; ಅವರ ಹೊಲದ ಕಡಲೇಕಾಯಿ ಇವರ ಜಠರಾಗ್ನಿಯಲ್ಲಿ ನಿರ್ನಾಮವಾಗುತ್ತದೆ. ಸ್ಥಿತಿಯಲ್ಲೇ ಸಾಧ್ಯತೆ ಹೀಗೆ ಬಿಂಬುತ್ತದೆ. +ಕಥೆಯ ‘ಇಹ’ದಲ್ಲಿ ‘ಪರ’ ಎಂದು ನಮಗೆ ಅನ್ನಿಸುವುದು ‘ಯಾವ ಜಪ್ತಿಗೂ’ ಸಿಗದಂತೆ ಹಟ್ಟಿಯ ಗೋಡೆ ಮೇಲೆ ಕುಣಿಯುತ್ತಿರುವ ನವಿಲುಗಳು. ಓದುತ್ತಿರುವ ಶಿವೂ ಬಿಟ್ಟು ಉಳಿದೆಲ್ಲರ ಅವಜ್ಞೆಗೆ ಒಳಗಾಗುವ ಈ ನವಿಲುಗಳ ಕಥೆಯ ಲೋಕದಲ್ಲೆ ಹುಟ್ಟಿಯೂ ಆ ಲೋಕ ಬಿಟ್ಟು ನಿಲ್ಲುತ್ತದೆ ಎನ್ನಿಸಬಹುದಾದರೂ, ಕಥೆಯ ಲೋಕದ ದೈನಿಕಗಳ ಕ್ಷುದ್ರತೆಯಲ್ಲಿ ಈ ಬಗೆಯ ‘ಪರ’ ಎನ್ನಿಸುವ ಸೌಂದರ್ಯ ಮಾತ್ರ ಸೃಷ್ಟಿಯಾಗಿದೆಯೆಂದು ತಿಳಿದರೆ ತಪ್ಪಾಗುತ್ತದೆ. ರಿಕ್ತವಾದ ಅರ್ಥ ವ್ಯವಸ್ಥೆಯ ಈ ಪ್ರಪಂಚದಲ್ಲಿ ಕಳೆದ ಹುಂಜಕ್ಕಾಗಿ ನಡೆಯುವ ತಪಾಸಣೆ, ಇಲ್ಲದಿರುವ ಆಸ್ತಿ ಬಗ್ಗೆ ಅದೇನೋ ಮಹತ್ತಿನದು ಇದೆ ಎಂಬಂತೆ ಸಾಕವ್ವ ನಡೆಸುವ ಸಂಭ್ರಮದ ಜಗಳ, ಶಿವೂನನ್ನು ಹುಂಜದ ತಪಾಸಣೆಗೆ ಎಳೆದೊಯ್ಯುವ ಉಪಾಯವಾಗಿ ಅವಳು ಹೇಳುವ ಪುರಾಣದ ಶೋಭೆಯುಳ್ಳ ಕಥೆ, ಬೆಂಕಿಯೆದುರು ಕಡಲೇಕಾಯಿ ತಿನ್ನುವಾಗ ನಡೆವ ಮಾತುಕಥೆ – ಈ ಎಲ್ಲಾ ಪ್ರಸಂಗಗಳೂ ಕ್ಷುದ್ರವಾಗಬಹುದಾಗಿದ್ದ ದೈನಿಕವೇ ಹೊಳೆಯಿಸಿದಂಥವು. ಉಣ್ಣುವಂಥ ಒಂದು ನಿತ್ಯದ ಸಾಮಾನ್ಯ ಕ್ರಿಯೆಯೂ ಇಲ್ಲಿ ಯಜ್ಞಕ್ಕೆ ಸಮಾನವಾದ ರಿಚುಯಲ್. ಸಕವ್ವನ ‘ಪಾಲನೆ’ಯ ಪ್ರಪಂಚದಲ್ಲಿ ಹೀಗೆ ಸಾಮಾನ್ಯವಾಗಬಹುದಾದ್ದೆಲ್ಲವೂ ವಿಶೇಷ. ಅವಳು ಪಾಲಿಸುತ್ತಿರುವ ಕಿರಿಯರಾದ ಪುಟಗೌರಿ, ಶಿವೂರಿಂದಾಗಿ ನವಿಲು ಕೂಡ ಈ ದೈನಿಕಗಳೇ ಹೊಳೆಯಿಸುತ್ತಿರುವ ಇನ್ನೊಂದು ಸಂಭ್ರಮ. ಈ ಹಟ್ಟಿಯಲ್ಲಿ ಹೀಗಾಗಿ ದೀಪಹಚ್ಚುವುದೂ, ಅದನ್ನು ಹಂಚಿಕೊಳ್ಳುವುದೂ, ಒಟ್ಟಾಗಿ ಉಣ್ಣುವುದೂ “ಸಹನಾಭವತು! ಸಹನೌ ಭುನಕ್ತು! ಸಹವೀರ್ಯಂ ಕರವಾವಹೈ” ಎಂಬಂಥ ಉಪನಿಷತ್ತಿನ ಆದರ್ಶವಾದ ಮಾನವ ಸಾಹಚರ್ಯದ ಕ್ರಿಯೆಗಳೇ. ‘ಪಾಲನೆ’ಯಿಂದಾಗಿ ದೈನಿಕವನ್ನೂ ವಿಶೇಷವಾಗಿಸಿಕೊಂಡ ಸಾಕವ್ವನ ಹಟ್ಟಿ ಪೋಲಿಸರಿಂದ ತಪಾಸಣೆಗೆ ಒಳಗಾಗುತ್ತದೆ. ಇದು ಇಡೀ ಹಟ್ಟಿಯ ಜಗತ್ತನ್ನು ನಾಶಮಾಡುವಂತೆ ದೇವನೂರರು ಚಿತ್ರಿಸಬಹುದಿತ್ತು. ಹೈಮೈಮಟಿಕ್ ಮಾದರಿಯ ಕಥೆಯಾಗಿದ್ದಲ್ಲಿ ಒಡಲಾಳದ ಪಾತ್ರಗಳು ಈ ಪೋಲಿಸ್ ತಪಾಸಣೆಯನ್ನು ಒಂದೋ ಗೆಲ್ಲಬೇಕಾಗುತ್ತಿತ್ತು; ಅಥವಾ ಅದರಿಂದ ಕರುಣಾಜನಕವೆಂಬಂತೆ ನಾಶವಾಗಬೇಕಾಗಿತ್ತು. ಚಾಪ್ಲಿನ್‌ನ ಬೌಲರ್ ಹ್ಯಾಟ್ ಧರಿಸಿದ ಪುಟ್ಟ ಮನುಷ್ಯನಿಗೆ ನಾಶವಾಗದಂತೆ ಹೇಗೆ ಬಾಳುವುದು ಗೊತ್ತು; ಅಂಥ ಕಾಮೆಡಿಯ ಶಕ್ತಿಯನ್ನು ಪಡೆದ ಕಥೆ ಒಡಲಾಳವಾದ್ದರಿಂದ ಕಡಲೇಕಾಯನ್ನು ಕದ್ದು ತಂದು ತಿನ್ನುವುದು ಕೂಡ ನವಿಲನ್ನು ಗೋಡೆ ಮೇಲೆ ಕುಣಿಸುವ ಕ್ರಿಯೆಗೆ ಸರಿಸಮವೆನ್ನಿಸುವ ಶೋಭೆಯನ್ನು ಪಡೆದುಕೊಳ್ಳುತ್ತದೆ. ಕ್ಷುದ್ರವಾಗಬಹುದಾಗಿದ್ದ ದೈನಿಕ ಉದ್ದೀಪನಗೊಳ್ಳುತ್ತದೆ. ಪಾಲನೆಯ ಪರದಾಟದಲ್ಲಿ ಕ್ರಾಂತಿಗೆ ಹದಗೊಳ್ಳಬಲ್ಲ ನೆಲೆ ಸೂಚಿತವಾಗುತ್ತದೆ. +ಹೀಗಾಗಿ ಭಾರತದ ಕಥಾಸಾಹಿತ್ಯದಲ್ಲೇ ನಾನು ತಿಳಿದಂತೆ ದೇವನೂರ ಮಹಾದೇವರ ಒಡಲಾಳ ಒಂದು ಅಪೂರ್ವ ಶೋಭೆಯ ಕೃತಿ ಎನ್ನಬಹುದು. +*ನೋಡಿ “ಮರಳು ಮಣ್ಣಿಗೆ”- ಲೇಖನ +ರುಜುವಾತು ೧೨, ಅಕ್ಟೋಬರ್ – ಡಿಸೆಂಬರ್ ೮೩ +***** +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟೀಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಮ್ಮ ರಾಜಕೀಯ ವ್ಯವಸ್ಥೆ ಸೂತ್ರ ತಪ್ಪುತ್ತಿರುವ ಬಗೆಗಿನ ಕಳವಳವನ್ನು, ಸಮುದಾಯ ಪ್ರಜ್ಞೆ ಒಡೆದುಹೋಗುತ್ತಿರುವ ಬಗೆಗಿನ ತಬ್ಬಿಬ್ಬನ್ನೂ, ನಮ್ಮ ಸಂಸ್ಕೃತಿಯ ದ್ವಂದ್ವಗಳನ್ನು ಅರಗಿಸಿಕೊಳ್ಳಲಾಗದ ತಪ್ಪಿತಸ್ಥ ಮನೋಭಾವವನ್ನೂ ತೋರಿಸುತ್ತದೆ. […] +ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_485.txt b/Kannada Sahitya/article_485.txt new file mode 100644 index 0000000000000000000000000000000000000000..2417232435862985cc14ffda64be10b6cd462c62 --- /dev/null +++ b/Kannada Sahitya/article_485.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೇಳನೋ ಹರಿ ತಾಳನೊ ಪ +ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| +ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು +ಕೊಂಬು ಕೊಳಲು ಧ್ವನಿ ಸ್ವರಗಳಿದ್ದು +ತುಂಬುರು ನಾರದರ ಗಾನ ಕೇಳುವ ಹರಿ +ನಂಬಲಾರ ಈ ಡಂಭಕದ ಕೂಗಾಟ ||೧|| +ನಾನಾ ಬಗೆಯ ರಾಗ ಭಾವ ತಿಳಿದು ಸ್ವರ +ಜ್ಞಾನ ಮನೋಧರ್ಮ ಜಾತಿಯಿದ್ದು +ದಾನವಾರಿಯ ದಿವ್ಯ ನಾಮರಹಿತವಾದ +ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ||೨|| +ಅಡಿಗಡಿಗಾನಂದ ಬಾಷ್ಪಪುಳಕದಿಂದ +ನಡೆನುಡಿಗೆ ಶ್ರೀ ಹರಿಯೆನ್ನುತ +ದೃಢ ಭಕ್ತರನು ಕೂಡಿ ಹರಿ ಕೀರ್ತನೆ ಪಾಡಿ +ಕಡೆಗೆ ಪುರಂದರವಿಠಲನೆಂದರೆ ಕೇಳ್ವ ||೩|| +***** +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […] +ರಾಗ — ಕಾಂಬೋದಿ ತಾಳ — ಝಂಪೆ ಬಾಯಿ ನಾರಿದ ಮೇಲೆ ಏಕಾಂತವೆ | ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | ಬಣ್ಣಗುಂದಿದ ಮೇಲೆ ಬಹುಮಾನವೆ || […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_486.txt b/Kannada Sahitya/article_486.txt new file mode 100644 index 0000000000000000000000000000000000000000..2f74acf67ddaf4894c19c66421c652bc87cca7e2 --- /dev/null +++ b/Kannada Sahitya/article_486.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಮೋಹನ +ತಾಳ — ಅಟ್ಟ +ಆರು ಬಾಳಿದರೇನು ಆರು ಬದುಕಿದರೇನು | +ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| +ಉಣ್ಣಬರದವರಲ್ಲಿ ಊರೂಟವಾದರೆ ಏನು | +ಹಣ್ಣು ಬಿಡದ ಮರಗಳು ಹಾಳಾದರೇನು || +ಕಣ್ಣಿಲದವಗಿನ್ನು ಕನ್ನಡಿಯಿದ್ದು ಫಲವೇನು | +ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು? ||೧|| +ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನು | +ಹೊಕ್ಕು ನಡೆಯದ ನಂಟತನದೊಳೇನು || +ರೊಕ್ಕವಿಲ್ಲದವಗೆ ಬಂಧುಗಳಿದ್ದರೇನು | +ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||೨|| +ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನು | +ಬಲ್ಪಂಥವಿಲ್ಲದವನ ಬಾಳ್ವೆಯೇನು || +ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ | +ಅಲ್ಪವೂ ನೆನೆಯದ ನರನಿದ್ದರೇನು? ||೩|| +***** +ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […] +ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […] +ರಾಗ — ಪಂತುವರಾಳಿ ತಾಳ — ಅಟ್ಟ ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ |ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ |ಅಟ್ಟು ಉಣ್ಣದ ವಸ್ತುಗಳಿಲ್ಲವೊ ||ಗುಟ್ಟು ಕಾಣಿಸಿಬಂತು ಹಿರಿದೇನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_487.txt b/Kannada Sahitya/article_487.txt new file mode 100644 index 0000000000000000000000000000000000000000..b04e1d3d5ee7957d47246a249b09ad7e36244a36 --- /dev/null +++ b/Kannada Sahitya/article_487.txt @@ -0,0 +1,90 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊದಲ ಪಾದ +ಕೆರೆ ದಂಡೆಯ ಕಲ್ಲಮೇಲೆ ಕುಳಿತು ಮುಳುಗುತ್ತಿದ್ದ ಸೂರ್‍ಯನನ್ನೇ ದಿಟ್ಟಿಸುತ್ತ ಯಶವಂತನ ಕಣ್ಣೊಳಗೆ ಸೂರ್‍ಯ ಚೂರುಚೂರಾಗಿ ನೀರ ತೆರೆಗಳ ಮೂಲಕ ಪ್ರತಿಫಲಿಸುತ್ತಿದ್ದ. ಕತ್ತಲು ಪುರಾತನ ಹಾದಿಯಲ್ಲಿ ಸಾಗುತ್ತಿತ್ತು. ನೀರಕ್ಕಿಗಳು ಹಗಲಲ್ಲೆ ಹಾಡಿ ಹಾರಾಡಿ ಇನ್ನೂ ದಣಿಯದೆ ನೀರ ತಡಿಯಲ್ಲಿ ಕುಳಿತು ಏನೇನನ್ನೋ ವಟಗುಟ್ಟುತ್ತಿದ್ದವು. ದಿಗಂತವೆಲ್ಲ ದಿವ್ಯ ಮೌನವನ್ನು ಬಿತ್ತುತ್ತಿತ್ತು. ಕೆರೆ ಬಯಲ ಹಸಿರು ಮೇವನ್ನು ಮೇದು ಸಂತೃಪ್ತಿಯಲಿ ದನಕರುಗಳು ಕೊಟ್ಟಿಗೆಯ ಕಡೆಗೆ ಹೋಗುತ್ತಿದ್ದವು. ಕಟಾವು ಮುಗಿಸಿ ಬತ್ತದ ಹೊರೆಗಳನ್ನು ಎತ್ತಿನ ಗಾಡಿಗಳಿಗೆ ತುಂಬಿಕೊಂಡು ಹೋಗುತ್ತಿದ್ದ ರೈತರು ಉತ್ಸಾಹದಲ್ಲಿ ಆಡುತ್ತಿದ್ದ ಮಾತುಗಳು ತೇಲಿ ಬಂದು ಯಶವಂತನ ಕಿವಿ ಮುಟ್ಟಿ ಹೋಗುತ್ತಿದ್ದವು. ಆ ಎತ್ತುಗಳ ಕೊರಳ ಗಂಟೆಯ ಸದ್ದಂತು ಅನೂಹ್ಯವಾಗಿ ಅನುರಣಿಸುತ್ತಿತ್ತು. ಮಾಗಿಯ ಗಾಳಿ ಸಂಜೆಯ ಜೊತೆ ಪಿಸು ಮಾತಾಡುತ್ತ ಕೆರೆ ನೀರ ಥಂಡಿಯನ್ನು ಕರೆದುಕೊಳ್ಳುತ್ತಿತ್ತು. +ಯಶವಂತನಿಗೆ ಅದಾವುದೂ ಹಿತ ಎನಿಸುತ್ತಿರಲಿಲ್ಲ. ಅವನು ಮೈಸೂರಿನಿಂದ ಹಳ್ಳಿಗೆ ಬಂದದ್ದು ಹಳೆಯ ಗಾಯಗಳನ್ನು ಮರೆಯಲಿಕ್ಕೆ. ಬಹಳ ವರ್ಷಗಳಿಂದ ಆತ ಊರಿನ ಎಲ್ಲ ಸಂಬಂಧಗಳಿಂದ ದೂರವಿದ್ದ. ಹೆಚ್ಚು ಕಡಿಮೆ ಆತ ಬೇರು ಕಡಿದುಕೊಂಡಂತೆ ಪೇಟೆಯ ಬದುಕಿಗೆ ಒಗ್ಗಿಕೊಂಡಿದ್ದ. ಮೈಸೂರಿನ ನೀರು ಅವನ ವ್ಯಕ್ತಿತ್ವವನ್ನೇ ಬದಲಿಸಿಬಿಟ್ಟಿತ್ತು. ಗುಂಪಿನಲ್ಲಿ ಬದುಕುವುದೆಂದರೆ ಆತನಿಗೆ ಆಗುತ್ತಲೇ ಇರಲಿಲ್ಲ. ಸದಾ ವ್ಯಗ್ರನಾಗಿ ಒಂಟಿಯಾಗಿ ಅಶಾಂತ ಮುನಿಯಂತೆ ಸುತ್ತಾಡುವುದೆಂದರೆ ಆತನಿಗೆ ಪರಮಾನಂದ. ಎಂ.ಎ. ಮುಗಿಸಿ ತುಂಬಾ ಪ್ರತಿಭಾವಂತನೆಂದು ಚಿನ್ನದ ಪದಕ ಪಡೆದು ಉನ್ನತ ಅಧ್ಯಯನಕ್ಕೆ ಫೆಲೋಷಿಪ್ ಕೂಡ ಪಡೆದು ಸಂಶೋಧನೆಗೆ ಇಳಿದ ನಂತರವೇ ಯಶವಂತನ ದಿಕ್ಕು ದೆಸೆಗಳು ಬದಲಾದದ್ದು. ಆ ಮೊದಲು ಆತ ಪುಸ್ತಕದ ಹುಳುವೇ ಆಗಿಬಿಟ್ಟಿದ. ಯಾರೊಬ್ಬರ ಜೊತೆಯೂ ಅವನಿಗೆ ಸರಿಯಾದ ಸ್ನೇಹವೇ ಸಾಧ್ಯವಾಗಿರಲಿಲ್ಲ. +ಅಪ್ಪ ಕಳುಹಿಸುತ್ತಿದ್ದ ಇನ್ನೂರು ರೂಪಾಯಿಗಳಲ್ಲೇ ತಿಂಗಳು ತುಂಬಿಸಿ ಅಂಚೆಯವನ ಬಳಿ ಮಾತ್ರ ವಿಶ್ವಾಸ ಮಾಡಿ ಕೈ ಸಾಲ ಪಡೆದು ಎಂಒ ಬಂದ ಕ್ಷಣದಲ್ಲೇ ಹಿಂತಿರುಗಿಸಿ: ಆ ದಿನ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಸುತ್ತಾಡಿ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಅಡ್ಡಾಡಿ ತರಕಾರಿ ಮಾಳಿಗೆಯ ಸಾಲುಗಳಲ್ಲಿ ವಿನಾಕಾರಣ ಅಲೆದಾಡಿ ಆ ಹಸಿರು ತರಕಾರಿಗಳ ಹಿತವಾದ ಕಂಪನ್ನು ಕುಡಿದು ಕೊನೆಗೆ ಯಾಕೋ ಮಂಡಿಪೇಟೆಯ ಕಿಷ್ಕಿಂದೆಯಲ್ಲಿ ಸುತ್ತಿ, ಅಲ್ಲೆಲ್ಲ ದಿನಗೂಲಿ ನೌಕರರು ಸಾರಾಯಿ ಅಂಗಡಿಗಳ ಮುಂದೆ ಕುಡಿದು ಬಿದ್ದಿರುವುದನ್ನು ನೋಡಿ ಅಲ್ಲಿನ ಗದ್ದಲದ ನೂರೆಂಟು ಮಾತುಗಳನ್ನು ಕಿವಿ ಮೇಲೆ ಹಾಕಿಕೊಂಡು ಗಂಗೋತ್ರಿ ತನಕ ನಡೆದುಕೊಂಡೇ ಬಂದು ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ರೂಮು ಸೇರಿಕೊಳ್ಳುತ್ತಿದ್ದ. ಹಾಗೆ ಬಂದವನು ದಣಿದ ಕಣ್ಣುಗಳ ಮುಚ್ಚಿ ತನಗೆ ಯಾವತ್ತೂ ಅತ್ಯಂತ ಪ್ರಿಯವಾದ ಕಿಶೋರಿ ಅಮೋಣ್‌ಕರ್‌ಳ ಹಿಂದೂಸ್ತಾನಿ ಗಾಯನವನ್ನು ಇಡೀ ದೇಹದ ನರನಾಡಿಗೆ ಉಸಿರಾಟದ ಮೂಲಕ ಎಳೆದುಕೊಳ್ಳುತ್ತಾ ಕನಸಿನ ಯಾವುದೊ ಲೋಕಕ್ಕೆ ತೇಲಿ ಹೋಗುವುದು ರೂಢಿಯಾಗಿ ಬಿಟ್ಟಿತು. +ಯಶವಂತನ ಅಪ್ಪ ಊರ ಪಟೇಲ ಎಂಬುದು ಖರೆ ಆಗಿದ್ದರೂ ಗತಕಾಲದ ವೈಭವವೆಲ್ಲ ಅಳಿದುಹೋಗಿತ್ತು. ಮಗನನ್ನು ಪ್ರಖ್ಯಾತ ಲಾಯರನನ್ನಾಗಿಸಬೇಕೆಂದು ಅವರು ಕನಸಿದ್ದು ಮಣ್ಣುಪಾಲಾಗಿತ್ತು. ಊರನ್ಯಾಯ ನೀತಿಯ ಆಳ್ವಿಕೆಯನ್ನು ಮಾಡಿದ್ದ ಅವರಿಗೆ ತನ್ನ ಮಗನೂ ನ್ಯಾಯಾಧೀಶನಾಗಬೇಕು ಎಂದು ಬಯಸಿದ್ದು ಸಹಜವಾಗಿತ್ತು. ಪಟೇಲರ ಅಳಿಯ ಯಾವುದೊ ವೈಶಮ್ಯಕ್ಕೆ ಒಳಗಾಗಿ ದಾಯಾದಿಗಳ ಜೊತೆ ಕಲಹಕ್ಕೆ ಬಿದ್ದು ಸೊಂಟ ಮುರಿದುಕೊಂಡು ಹಾಸಿಗೆ ಹಿಡಿದ ಮೇಲೆ ಅವರ ಮನೆತನದ ವೈಭೋಗವೆಲ್ಲ ಯಾರ್‍ಯಾರದೊ ಪಾಲಾಗಿ ಬಿಟ್ಟಿತು. ಆದರೂ ಲೆಕ್ಕಕ್ಕೆ ಅವರು ಸಾಯುವ ತನಕ ಜನರಿಂದ ಪಟೇಲರು ಎನಿಸಿಕೊಂಡೇ ಶಿವನ ಪಾದ ಸೇರಿಕೊಂಡರು. ಯಶವಂತ ಎಂ.ಎ. ಮುಗಿಸುವುದಕ್ಕೂ ಪಟೇಲರು ಈ ಲೋಕಕ್ಕೆ ವಿದಾಯ ಹೇಳುವುದಕ್ಕೂ ಸಮಯ ಒಂದೇ ಆಗಿತ್ತು. +ಸಯ್ಯಾಜಿರಾವ್ ರಸ್ತೆಯಲ್ಲಿ ಅವತ್ತು ಯಶವಂತ ರ್‍ಯಾಂಕ್ ಪಡೆದು ಸಿರಿಯಲ್ಲಿ ಅಲೆಯುವಾಗ ಆತನ ಅಪ್ಪ ಹದಿನಾರು ಕಂಬದ ಮನೆಯ ಪಡಸಾಲೆಯಲ್ಲಿ ಮಲಗಿ ಕೊನೆಯ ಉಸಿರು ಎಳೆಯುತ್ತ; ತನ್ನ ಮಗ ಯಶವಂತ ಇನ್ನೂ ಬಂದಿಲ್ಲವೇ, ಬಂದಿಲ್ಲವೇನೂ, ಆತನಿಗೆ ಸುದ್ದಿ ಕೊಟ್ಟಿದ್ದೀರೇನೂ, ಕರೆದುಕೊಂಡು ಬರಲು ಯಾರನ್ನು ಕಳುಹಿಸಿದ್ದೀರಿ, ಇನ್ನೂ ಎಷ್ಟೊತ್ತಿಗೆ ಬರಬಹುದು…. ಹೋಗಿ ಯಾರಾದ್ರೂ ಬೇಗ ಕರೆದುಕೊಂಡು ಬನ್ನಿ. ಆಗ್ಲೇ ಬಾಗಿಲ ಬಳಿ ಯಮಲೋಕದವರು ಬಂದು ನಿಂತಿದ್ದಾರೆ…. ಅಯ್ಯೋ ಮಗನೇ ನನ್ನ ಸಂಕಟ ನಿನಗೆ ಅರುವಾಗುತ್ತಲ್ಲವೇನೊ…. ಎನ್ನುತ್ತಲೇ ಪ್ರಾಣ ಕಳೆದುಕೊಂಡಿದ್ದರು ಯಶವಂತನಿಗೆ ಕಳುಹಿಸಿದ್ದ ತಂತಿ ಸಂದೇಶವೂ ಮುಟ್ಟಿರಲಿಲ್ಲ. ಕರೆದುಕೊಂಡು ಬರಲು ಹೋಗಿದ್ದವರು ಗಂಗೋತ್ರಿಯ ತುಂಬ ಹುಡುಕಾಡಿ ಹಿಂತಿರುಗಿದ್ದರು. ಪಟೇಲರು ಯಶವಂತನಿಗೆ ಹೇಳಬೇಕೆಂದಿದ್ದ ಮಾತುಗಳನ್ನು ತಮ್ಮ ಜೊತೆಗೇ ನುಂಗಿಕೊಂಡು ಹೋಗಿದ್ದರು. ಮರುದಿನ ಸುದ್ದಿ ತಲುಪಿ ಯಶವಂತ ಊರಿಗೆ ಬಂದಿದ್ದನಾದರೂ ತಂದೆಯ ಮುಖ ಸಿಕ್ಕಿರಲಿಲ್ಲ. ತಾಯಿ ಮಗನನ್ನು ಕಂಡು ತಬ್ಬಲಿಯಾದೆಯಾ ಮಗನೇ ಎಂದು ಅತ್ತು ಅಪ್ಪಿಕೊಂಡು ಸಂಕಟಪಟ್ಟಿದ್ದಳು. ಮನೆಯಲ್ಲಿ ಸೇರಿದ್ದ ಎಲ್ಲ ನೆಂಟರ ನೂರಾರು ಮಾತುಗಳಲ್ಲಿ ಯಶವಂತ ತತ್ತರಿಸಿ ಹೋಗಿದ್ದ. ಆತನ ಅಣ್ಣಂದಿರು ಮನೆತನದ ಜವಾಬ್ದಾರಿ ಹೊತ್ತುಕೊಂಡು ಪಟೇಲರ ಆತ್ಮಕ್ಕೆ ಶಾಂತಿ ಕೋರುವ ಆಚರಣೆಗಳನ್ನು ಮುಗಿಸಿದ್ದರು. ಯಶವಂತನಿಗೆ ಸಾವನ್ನು ಕಂಡರೆ ವಿಪರೀತ ದಿಗಿಲು. ಪಟೇಲರು ಹಾಗೆ ಆರ್ತವಾಗಿ ಕೊನೆಯುಸಿರೆಳೆಯುತ್ತ ಮಗನಿಗಾಗಿ ಹಂಬಲಿಸಿದ್ದ ಸಂಗತಿ ಮನೆಯವರನ್ನಷ್ಟೇ ಅಲ್ಲದೆ ಇಡೀ ಊರಿನವರ ಮನಸ್ಸನ್ನೇ ಕಲಕಿಬಿಟ್ಟಿತ್ತು. ಯಶವಂತ ಅಪ್ಪನ ಆ ಕರೆಯನ್ನು ಕಲ್ಪಿಸಿಕೊಂಡೇ ಕುಗ್ಗಿಹೋಗಿದ್ದ. ಸಾವಿನ ಸೂತಕ ಮುಗಿದ ಮೇಲೆ ಕೂಡಲೆ ಮೈಸೂರಿಗೆ ಬಂದು ಗಂಗೋತ್ರಿಯಲ್ಲಿ ಒಂಟಿಯಾಗಿ ತಿರುಗುತ್ತ; ಬಂದ ಎಲ್ಲ ದುಃಖವನ್ನು ಕದ್ದು ಮುಚ್ಚಿ ಕರಗಿಸುತ್ತ ಲೈಬ್ರರಿಗೆ ಹೋಗಿ ಮೂರನೇ ಮಹಡಿ ಪುಸ್ತಕಗಳ ರ್‍ಯಾಕಿನ ಮೂಲೆ ಮರೆಯಲ್ಲಿ ಸ್ಟೂಲಿನಮೇಲೆ ಕುಳಿತು ಪುಸ್ತಕಗಳ ಧೂಳು ಕುಡಿಯುತ್ತ, ಅಷ್ಟೊಂದು ಹಳೆಯ ಪುಟಗಳ ಗಮಲ ಆಗ್ರಣಿಸುತ್ತ ರಾಶಿಯಾಗಿ ಬೇಕಾದ ಪುಸ್ತಕಗಳನ್ನೆಲ್ಲ ಒಡ್ಡಿಕೊಂಡು ಮುಳುಗಿ ಹೋಗುತ್ತಿದ್ದ. +ಪಟೇಲರು ಮಾಡಿದ್ದ ಎಲ್ಲ ಸಾಲವನ್ನು ತೀರಿಸುವಲ್ಲಿ ತಗಾದೆ ಉಂಟಾಗಿ ಮನೆಯ ಒಳಗೆ ಅಡ್ಡಾದಿಡ್ಡಿ ಗೋಡೆಗಳೆದ್ದು ಜಗಳವಾಗಿತ್ತು. ಯಶವಂತನ ಹಿರಿಯಣ್ಣ ವೆಂಕೋಬಿಯು ತಂದೆಯ ಸಾಲಕ್ಕೂ ತನಗೂ ಯಾವ ಸಂಬಂಧವೂ ಇಲ್ಲವೆಂದು ಹಠ ಹಿಡಿದಿದ್ದ. ಅವನ ಬೆನ್ನಹಿಂದೆ ಹುಟ್ಟಿದ್ದ ಪ್ರಶಾಂತ ಕೂಡ ಅದೇ ವಾದ ಮಾಡಿದ್ದ. ಹಾಗಾದರೆ ಮಾಡಿದ್ದ ಸಾಲವನ್ನು ಯಾರ ತಲೆಮೇಲೆ ಹಾಕಬೇಕು ಎಂಬ ನ್ಯಾಯ ಪಂಚಾಯ್ತಿ ಆದಾಗ; ಅದು ಕಿರಿಯನಾದ ಯಶವಂತನ ಕಡೆ ತಿರುಗಿತ್ತು. ಆತನನ್ನು ಓದಿಸಲು ತಾವು ತುಂಬಾ ದುಡ್ಡು ಕಳೆದುಕೊಳ್ಳಬೇಕಾಯಿತು ಎಂದು ಅಣ್ಣಂದಿರಿಬ್ಬರೂ ಹೊಸಮಾತು ತೆಗೆದಿದ್ದರು. ಅತ್ತಿಗೆಯರಂತೂ ಲಕ್ಷಾಂತರ ರುಪಾಯಿಗಳನ್ನು ತಮ್ಮ ಗಂಡಂದಿರು ಈ ಮನೆಯ ವ್ಯವಹಾರಗಳಿಗೆ ಹಾಕಿ ಕೈ ಸುಟ್ಟುಕೊಂಡಿರುವುದೂ ಅಲ್ಲದೆ ಈಗ ಮಾವನವರು ಅವರಿಚ್ಛೆಗೆ ಬಂದಂತೆ ತಮಗೆ ತಿಳಿಸದೆ ಮಾಡಿದ ಸಾಲಕ್ಕೆ ಯಾಕೆ ಜವಾಬ್ದಾರರಾಗಬೇಕೆ ಎಂದು ಗಂಡಂದಿರನ್ನು ಬಿಗಿಮಾಡಿಕೊಂಡಿದ್ದರು. ಯಶವಂತನ ತಾಯಿ ಏನನ್ನೂ ಮಾಡಲಾಗದೆ ತನ್ನ ಮೈಮೇಲಿದ್ದ ತವರು ಮನೆಯ ಒಡವೆಗಳನ್ನೆಲ್ಲ ಬಿಚ್ಚಿ ಹಿರಿಮಕ್ಕಳಿಬ್ಬರ ಕೈಗೆ ಕೊಟ್ಟು; ಇವನ್ನು ಮಾರಿ ನಿಮ್ಮ ತಂದೆ ಮಾಡಿದ್ದಾರೆನ್ನಲಾದ ಸಾಲವನ್ನು ತೀರಿಸಿ ಅವರ ಆತ್ಮಕ್ಕೆ ಮುಕ್ತಿ ದೊರಕಿಸಿ ಎಂದು ಗಳಗಳನೆ ಅತ್ತುಬಿಟ್ಟಿದ್ದರು. +ವೆಂಕೋಬಿಯೂ ಪ್ರಶಾಂತನೂ ಅವತ್ತು ತಾಯಿ ಮುಂದೆ ನಟಿಸಿದ್ದರು. ಅದೂ ಅಲ್ಲದೆ ಸತತವಾಗಿ ಮೂರು ವರ್ಷಗಳಿಂದಲೂ ಮಳೆ ಬಾರದೆ ಬೆಳೆಯೂ ಸಿಗದೆ; ವ್ಯವಹಾರಕ್ಕೆ ಎಂದು ಮಾಡಿದ್ದ ಬ್ಯಾಂಕಿನ ಸಾಲವು ಹೆಬ್ಬಾವಿನಂತೆ ಸುತ್ತಿಕೊಂಡಿತ್ತು. ಅಪ್ಪ ಹೋಗಿ ಹೋಗಿ ಆ ಹೊಲೆಯರ ಮಾದೇವನಿಂದ ಬಡ್ಡಿಗೆ ಮೂವತ್ತು ಸಾವಿರ ಸಾಲ ತಂದು ಮಣ್ಣಿಗೆ ಸುರಿದು ಮಣ್ಣು ಸೇರಿಕೊಂಡುಬಿಟ್ಟ.ಈಗ ನೋಡಿದರೆ; ಅವನು ಕಂಡಲೆಲ್ಲ ‘ಎಲ್ಲಿ ಸ್ವಾಮೀ ದುಡ್ಡು ಕೊಡ್ತೀರೋ ಇಲ್ಲಾ ನಾವೇ ತಕೋಬೇಕೋ’ ಅಂತಾ ಊರ ಮುಂದೆ ಸಿಗರೇಟು ಸೇದುತ್ತಾ ತನ್ನ ಮುಖದ ಮೇಲೆ ಹೊಗೆ ಬಿಟ್ಟು ಕೇಳುತ್ತಾನೆ. ನಾನು ಇದನ್ನು ಸಹಿಸಿಕೊಳ್ಳಲಾರೆ. ಅಪ್ಪ ಪಟೇಲನಾಗಿದ್ದ ಕಾಲದಲ್ಲಿ ಆ ಮಾದೇವನ ಅಪ್ಪ ನಮ್ಮ ತೋಟದಲ್ಲಿ ಜೀತ ಮಾಡ್ತಾ ಇದ್ದ. ಇವತ್ತು ಅವನು ತೋಟ ಮಾರ್‍ತೀರಾ ಅಂತಾ ನನ್ನೇ ಕೇಳ್ತಾನೆ. ಮೊದ್ಲು ಅವನ ಸಾಲ ತೀರಿಸಬೇಕು. ಇಲ್ಲಾ ಅಂದ್ರೆ ಆ ನೀಚ ಮನೆ ಜಪ್ತಿ ಮಾಡಿಸಲೂ ಹೇಸದವನು ಎಂದು ಪ್ರಾಶಾಂತ ತಾಯಿ ಮುಂದೆ ತೀರಾ ಅಪಮಾನದಿಂದ ನಲುಗಿ ಹೋದವನಂತೆ ವಿನಂತಿಸುತ್ತಿದ್ದ. +ಪಟೇಲರ ಹೆಂಡತಿ ರೇಣುಕವ್ವ ತಮಗೆ ಇಂತಹ ಗತಿ ಬಂತಲ್ಲ ಎಂದು ದೇವರಿಗೆ ಶಾಪ ಹಾಕಿದ್ದಳು. ಇನ್ನೂ ಮದುವೆ ಆಗದ ತ್ರಿವೇಣಿಯ ಬಗ್ಗೆಯೇ ತಾಯಿಗೆ ಚಿಂತೆ. ಆಕೆಯೊಬ್ಬಳನ್ನು ದಡ ಸೇರಿಸಿದರೆ ಚಿಂತೆ ಇರಲಿಲ್ಲವಾದರೂ ಹೆತ್ತ ಕರುಳು ಸುಮ್ಮನಿರಲಾರದೆ; ಆತ ಮೈಸೂರಲ್ಲಿ ಯಾವ ಪಾಡು ಪಟ್ಟುಕೊಂಡಿರುವನೋ ಎಂದು ರೇಣುಕವ್ವ ಆಗಾಗ ನೆನೆಸಿಕೊಳ್ಳುತ್ತಿದ್ದಳು. ವೆಂಕೋಬಿಯು ಅಪ್ಪ ಸತ್ತ ಆರೇ ತಿಂಗಳಿಗೆ ಗುಟ್ಟಾಗಿ ಕೆರೆ ಬಯಲ ಎರಡು ಎಕರೆ ಗದ್ದೆಯನ್ನು ಹೊಂಗಸೂರಿನ ಶೆಟ್ಟರಿಗೆ ಮಾರಿಬಿಟ್ಟಿದ್ದ. ತಡವಾಗಿ ಸುದ್ದಿ ಗೊತ್ತಾದ ಕೂಡಲೇ ಪ್ರಶಾಂತ ಕುಡಿದು ಬಂದು ಜಗಳಕ್ಕೆ ಬಿದ್ದು ಪಟೇಲರ ಮಕ್ಕಳು ಇಂತಹ ಹೀನ ಸ್ಥಿತಿಗೆ ಇಳಿದು ಹೀಗೆ ಬೀದಿಯಲ್ಲಿ ಕಚ್ಚಾಡುವರೇ ಎಂಬಂತೆ ರಂಪ ಮಾಡಿಕೊಂಡಿದ್ದರು. ವೆಂಕೋಬಿಯನ್ನು ಕಡಿದು ಹಾಕುವುದಾಗಿ ಮಚ್ಚನ್ನೇ ಹಿಡಿದುಕೊಂಡು ಪ್ರಶಾಂತ ನುಗ್ಗಿ ಬಂದಾಗ ರೇಣುಕವ್ವ ಬಾಯಿ ಬಡಿದುಕೊಂಡು ಅಡ್ಡ ನಿಂತು ಮೊದಲು ನನ್ನ ಕತ್ತು ಕಡಿದು ಹಾಕು ಆಮೇಲೆ ನೀವು ಕಡಿದುಕೊಳ್ಳಿ ಎಂದು ಇಡೀ ಕೇರಿಯೇ ಮೊಳಗುವಂತೆ ಕೂಗಿಕೊಂಡಳು. +‘ಈ ವೆಂಕೋಬಿ ಇದ್ದಾನಲ್ಲಾ, ಇವನು ಎಂಥವನು ಅಂತಾ ತಿಳಿದಿದ್ದೀಯವ್ವಾ, ಇವನು ಆಗಾಗ ಮೈಸೂರಿಗೆ ತಮ್ಮನನ್ನು ನೋಡಿಬರ್‍ತೇನೆ, ಅವನಿಗೆ ದುಡ್ಡಿನ ಅಗತ್ಯವಿದೆ ಅಂತಾ ಹೋಗ್ತಾ ಬರ್‍ತಾ ಇದ್ದನಲ್ಲಾ: ಯಾಕೆ ಅಂತ ಗೊತ್ತಾ?….ಅಲ್ಲಿ ಮೈಸೂರಲಿ ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಬರೋಕೆ ಹೋಗ್ತಾ ಇದ್ದ. ಅಲ್ಲಿ ಕುದುರೆ ಬಾಲಕ್ಕೆ ಲೆಕ್ಕವಿಲ್ಲದಂತೆ ದುಡ್ಡು ಕಟ್ಟಿದ್ದೂ ಅಲ್ಲದೆ ಸೂಳೆ ಜಯಮ್ಮನ ಮನೆಗೂ ಹೋಗಿ ಬರ್‍ತಿದ್ದ. ಒಳಗಿಮ್ದೊಳಗೇ ಬಿಲ ಕೊದಂಗೆ ಅಂತಾ ಗದ್ದೆಯ ಮಾರಿ ದುಡ್ಡೆಲ್ಲನು ಕಳ್ಕಂಡು ಇವತ್ತು ಯಾವ್ದಾವ್ದೋ ಲೆಕ್ಕ ಹೇಳಿದ್ರೆ ನಾನು ನಂಬ್ತೀನೇನೊ’ ಎಂದು ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಬಚ್ಚಲಿಗೆ ಕೆಡವಿ ತುಳಿದು; ಬಿಡಿಸಿಕೊಳ್ಳಲು ಬಂದ ಅತ್ತಿಗೆಯ ಕಪಾಳಕ್ಕೆ ಸರಿಯಾಗಿ ಬೀಸಿ ಆಕ್ರೋಶದಿಂದ ಕುಣಿದಾಡಿದ್ದ. ಕೇರಿಯ ಜನ ಅವತ್ತು ಸಮಾಧಾನ ಮಾಡದಿದ್ದರೆ ವೆಂಕೋಬಿಯ ಗತಿ ಏನೇನೋ ಆಗಿಬಿಡುತ್ತಿತ್ತು ರೇಣುಕವ್ವ ಮಕ್ಕಲು ಕೈ ಮೀರಿ ಹೋಗಿದ್ದಾರೆಂದು ನರಳಿದಳು. ಸತ್ತಿರುವ ಗಂಡ ತನ್ನನ್ನು ಕರೆದುಕೊಳ್ಳಲಿ ಎಂದು ಪ್ರಾರ್ಥಿಸಿದಳು. +ಇದಾದ ನಂತರವೇ ಆಸ್ತಿ ಪಾಲಾದದ್ದು. ಯಶವಂತನನ್ನು ಕರೆದಿದ್ದರೂ ಆತ ಬಂದಿರಲಿಲ್ಲ. ಆಸ್ತಿಗೂ ತನಗೂ ಏನೇನೂ ಸಂಬಂಧವಿಲ್ಲ. ಅಪ್ಪನ ಸಂಪಾದನೆಯಲ್ಲಿ ತನಗೇನೂ ಬೇಡವೆಂದು ದೂರವೆ ಉಳಿದಿದ್ದ. ಪಂಚಾಯ್ತಿಯ ಧರ್ಮದಂತೆ ಯಶವಂತನಿಗೂ ಒಂದು ಪಾಲು ಆಸ್ತಿಯನ್ನು ಬಿಡಲಾಗಿತ್ತು. ಹಾಗೆಯೇ ತಂದೆಯ ಸಾಲವನ್ನು ತೀರಿಸುವಲ್ಲಿ ಯಶವಂತನೂ ಭಾಗಿಯಾಗಬೇಕಿತ್ತು. ದೂರದ ಮೈಸೂರಿನಲ್ಲಿ ಸಂಶೋಧನೆಯ ಸಿಕ್ಕಿನಲ್ಲಿ ಮುಳುಗಿ ಹೋಗಿದ್ದ. ಅವನಿಗೆ ಇದಾವುದೂ ತಟ್ಟಿರಲಿಲ್ಲ. ಫೆಲೋಷಿಪ್ ಸಿಕ್ಕಿದ್ದೇ ಅವನಿಗೆ ದೊಡ್ಡ ಆಸರೆ ಆಗಿಬಿಟ್ಟಿತ್ತು. ಆ ನಡುವೆ ಕ್ರಾಂತಿಕಾರಿ ಪ್ರಾಧ್ಯಾಪಕರೊಬ್ಬರು ಅವನನ್ನು ತಮ್ಮೆಡೆಗೆ ಸೆಳೆದಿದ್ದರು. ಮಹಿಳೆಯರ ಮೇಲಿನ ಮಾನಸಿಕ ಹಲ್ಲೆಗೆ ಪಿತೃ ಪ್ರಧಾನ ವ್ಯವಸ್ಥೆಯು ಆಸ್ತಿಯ ಪರಿಕಲ್ಪನೆಯ ಮೂಲಕವೇ ಸಂಚು ರೂಪಿಸಿ ಎಲ್ಲ ಬಗೆಯ ಮೌಲ್ಯಗಳನ್ನೂ ಹೇಗೆ ಅಪವ್ಯಾಖ್ಯಾನಕ್ಕೆ ಒಳಪಡಿಸಿ ಶೋಷಣೆಯ ಬಲೆಯನ್ನು ನೇಯ್ದಿದೆ ಎಂಬ ವಿಚಾರಗಳನ್ನು ಗಾಢವಾಗಿ ಪ್ರಭಾವಿಸಿ ಮನವರಿಕೆ ಮಾಡಿಸಿದ್ದರು. ನಿತ್ಯ ಸಂಜೆ ಅವರ ಮನಗೆ ಹೋಗಿ ಚಹಾ ಕುಡಿದು ಕ್ರಾಂತಿಯ ಮೋಹವನ್ನು ಮೈತುಂಬಿಕೊಂಡು ಬರುವುದು ಹಿತವೆನಿಸಿತ್ತು. ಯಶವಂತ ಎಂದೂ ಜನ ಸೇರದವನು ನಿಧಾನವಾಗಿ ಆಪ್ತರನ್ನು ಹುಡುಕಿಕೊಳ್ಳುವುದನ್ನು ಕಲಿಯತೊಡಗಿದ್ದ. ಕ್ರಾಂತಿ ಕನ್ನೆಯ ಮೋಗವಿಲ್ಲದವನು ಯಾವತ್ತೂ ಒಂದು ಘನತೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾರ ಎಂದು ಹೇಳುತ್ತಿದ್ದ ಪ್ರಾಧ್ಯಾಪಕರ ಮಾತು ಯಶವಂತನಿಗೆ ತುಂಬ ಪ್ರಿಯವಾಗಿತ್ತು. ಹಾಗಾಗಿಯೇ ಆತ ಸೋವಿಯತ್ ಒಕ್ಕೂಟದ ಕ್ರಾಂತಿಯ ಕಾವ್ಯವನ್ನು ವಿಶೇಷವಾಗಿ ಓದಿಕೊಳ್ಳುತ್ತಿದ್ದ. ಸಮಾಜವಾದಿ ಮಿತ್ರರ ಜೊತೆ ವಾಗ್ವಾದಕ್ಕೂ ಇಳಿಯುತ್ತಿದ್ದ. ಅಂತೂ ಹಳ್ಳಿಯ ಕಡೆಗಿದ್ದ ಒಂದಿಷ್ಟು ಸಂಬಂಧಗಳನ್ನು ತನಗೆ ತಾನೇ ನಿಷೇಧಿಸಿಕೊಂಡಿದ್ದ. +ಕೊನೆಯ ಉಸಿರೆಳೆಯುವ ಕ್ಷಣದಲ್ಲಿ ಯಶವಂತ ಬಂದಿದ್ದರೆ ಪಟೇಲರು ಮಗನಿಗೆ ಏನನ್ನು ಹೇಳುತ್ತಿದ್ದರೊ ಗೊತ್ತಿಲ್ಲ. ಕಾಲ ಕಳೆದಂತೆ ತಂದೆಯ ನೆನಪು ಯಶವಂತನಿಗೂ ಮಾಸಿತು. ಗಂಗೋತ್ರಿಯ ಹರೆಯದ ಚಂದದ ಹಕ್ಕಿಗಳು ಅವನ ಮನಸ್ಸಿನ ತುಂಬ ಹಾರಾಡತೊಡಗಿದವು. ಸಂಶೋಧವಾ ಕಮ್ಮಟದಲ್ಲಿ ಆತ ಮಂಡಿಸಿದ ಪ್ರಬಂಧ ಅದ್ಭುತವಾಗಿತ್ತು. ವಿದ್ಯಾವಂತರೆಲ್ಲ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದ್ದರು. ಸಮಾಜ ವಿಜ್ಞಾನಗಳ ಯಾವುದೇ ಸಿದ್ಧಾಂತಗಳ ಪೈಕಿ ಮಾನಸಿಕ ಹಿಂಸೆಗೆ ಇಂತಹ ಗ್ರಹಿಕೆಗಳಿಲ್ಲ ಎಂದು ಅದೇ ಕ್ರಾಂತಿಕಾರಿ ಪ್ರಾಧ್ಯಾಪಕರು ಸಮಾರೋಪ ಭಾಷಣದಲ್ಲಿ ಯಶವಂತನ ತಿಳುವಳಿಕೆಯನ್ನು ಕೊಂಡಾಡಿದ್ದರು. ನಿಜಕ್ಕೂ ಯಶವಂತ ಹಿಂಸೆಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನವನ್ನೇ ಮಾಡಿದ್ದ. ಹಿಂಸೆಯ ಪ್ರವೃತ್ತಿ ಹೇಗೆ ವಿಸ್ತರಿಸಿ ಜಗತ್ತಿನ ಉದ್ದಕ್ಕೂ ನೈತಿಕತೆಯನ್ನು ವಿಕಾರಗೊಳಿಸಿ ಸಾಮಾಜಿಕ ಸಂಬಂಧಗಳನ್ನು ನಾಶಪಡಿಸುತ್ತದೆ ಎಂದು ಹತ್ತಾರು ಆಧಾರಗಳನ್ನು ಹಿಡಿದು ವಿಶ್ಲೇಷಿಸಿದ್ದ. ಕಮ್ಮಟ ಮುಗಿಯುವ ನಾಲ್ಕನೇ ದಿನದ ವೇಳೆಗೆ ಯಶವಂತ ಕ್ಯಾಂಪಾಸ್ಸಿನ ತುಂಬ ಸುದ್ದಿಯಾಗಿದ್ದ. ಲೇಡಿಸು ಹಾಸ್ಟೆಲಿನ ಹುಡುಗಿಯರು ಆತನ ಬಗ್ಗೆ ಸ್ನಾನದ ಮನೆಗಳಲ್ಲೂ ಮಾತನಾಡಿಕೊಳ್ಳುವಂತೆ ಆಗಿತ್ತು. +ಊರಲ್ಲಿ ವೆಂಕೋಬಿಯು ಪಾಲು ಪಡೆದು ಬೇರೆ ಆದ ಮೇಲೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ತನ್ನ ಇಬ್ಬರು ಮಕ್ಕಳನ್ನೂ ಹೆಂಡತಿಯನ್ನೂ ಮರೆತು ಹಳ್ಳದ ತಂಪಿನಲ್ಲಿ ಜೂಜಿಗೆ ಕುಳಿತು ಹಗಲನ್ನೆಲ್ಲ ಅಲ್ಲೇ ಕಳೆದು ರಾತ್ರಿಯನ್ನು ಕೂಡ ಹೆಚ್ಚು ಕಡಿಮೆ ಅಲ್ಲೇ ಕರಗಿಸಿ ಒಂದು ದಿನ ಕೈ ತುಂಬ ಗೆದ್ದು ಮತ್ತೊಂದು ದಿನ ಬಿಡಿಗಾಸನ್ನೂ ಉಳಿಸಿಕೊಳ್ಳದಂತೆ ಸೋತು ಮತ್ತೆ ಸಾಲ ಪಡೆದು ಸಾಲದಲ್ಲೇ ಜೂಜಾಡಿ ಪವಾಡದಂತೆ ಸಾವಿರಾರು ರೂ.ಗಳನ್ನು ಗೆದ್ದು ಆದಷ್ಟು ದುಡ್ಡನ್ನು ಅಲ್ಲೇ ಸಾಲದವರಿಗೆ ವರ್ಗಾಯಿಸಿ ಕುಡಿದ ಅಮಲಿನಲ್ಲಿ ಯಾರ್‍ಯಾರ ಮೇಲೊ ಜಗಳಕ್ಕೆ ಬಿದ್ದು ಮನೆಗೆ ಬಂದು ಹೆಂಡತಿ ಮಕ್ಕಳ ಮೇಲೆ ಸಿಟ್ಟು ಕಾರಿಕೊಂಡು ಹೊಡೆದು ಬಡಿದು ಮನೆಯನ್ನೇ ನರಕ ಮಾಡಿಬಿಡುತ್ತಿದ್ದ. ತಂದೆಯು ಉಳಿಸಿದ್ದ ಒಂದಿಷ್ಟು ಜಮೀನಿನ ಮೇಲೂ ಜೂಜಾಡುವ ಆತ ಹಿಮ್ಜರಿಯಲಿಲ್ಲ. ಮಳೆ ಇಲ್ಲದೆ ಬೆಳೆ ಇಲ್ಲದೆ ಜನ ಸಾಯುತ್ತಿರುವಾಗ ಆ ಪಾಳು ಜಮೀನಿನಿಂದ ಹೀಗಾದರೂ ಸಾಲ ಪಡೆಯಬಹುದಲ್ಲಾ ಎಂದು ವೆಂಕೋಬಿ ಅಮಲಿನಲ್ಲಿ ನರ್ತಿಸುತ್ತಿದ್ದ. +ಪ್ರಶಾಂತ, ವೆಂಕೋಬಿಯ ಸಂಬಂಧ ಕಳೆದುಕೊಂಡಿದ್ದ. ಗಂಡನ ಕಾಟ ತಾಳಲಾರದೆ ಹಿರಿ ಸೊಸೆ ಮನೆ ಬಿಟ್ಟು ತವರಿಗೆ ಓಡಿ ಹೋಗುವುದನ್ನು ತಡೆದು ಸಾಕಾಗಿ ರೇಣುಕವ್ವ ಸುಮ್ಮನಾಗಿಬಿಟ್ಟಿದ್ದಳು. ವೆಂಕೋಬಿಯ ಮಾವ ಬಂದು ಎಷ್ಟೆಲ್ಲ ಯುಕ್ತಿ ಹೇಳಿದರೂ ಏನೂ ಬದಲಾಗಲಿಲ್ಲ. ಕೊನೆಗೆ ವೆಂಕೋಬಿಯ ಹೆಂಡತಿಯ ಅಣ್ಣ ಬಂದು ಸಹಿಸಲಾರದೆ ಜಗಳಕ್ಕೆ ಬಿದ್ದು ಮಾರಾಮಾರಿಯಾಗಿತ್ತು. ಈಕೆ ತನ್ನ ಮನೆಯಲ್ಲಿ ಇರಬೇಕಾದ್ದಿಲ್ಲ, ಇವಳ ಜೊತೆ ನನಗೆ ಸಂಸಾರ ಸಾಧ್ಯವಿಲ್ಲ ಎಂದು ವೆಂಕೋಬಿ ಮುನಿಸಿಕೊಂಡು ಹೆಚ್ಚು ಕಡಿಮೆ ಒಂದು ತಿಂಗಳ ತನಕ ಮನೆಗೆ ಬರದೆ ಹಳ್ಳದ ತಂಪಿನ ಜೂಜಿನಲ್ಲೇ ಮುಳುಗಿಬಿಟ್ಟಿದ್ದ. ಅವನ ಮಕ್ಕಳಿಗೆ ಹಿಟ್ಟು ಸೊಪ್ಪು ಮಾಡಿಕೊಂಡು ರೇಣುಕವ್ವ ವೆಂಕೋಬಿಗಾಗಿ ಸರೊತ್ತಿನ ತನಕ ದೀಪ ಹಚ್ಚಿಕೊಂಡು ಒಂದು ಕಣ್ಣಲ್ಲಿ ನಿದ್ರೆ ಮಾಡುತ್ತಾ ಇನ್ನೊಂದು ಕಣ್ಣನ್ನು ಮಗನಿಗಾಗಿ ತೆರೆದುಕೊಂಡು ಕಾಯುತ್ತಲೇ ಇದ್ದಳು. ಕಿರಿಯ ಮಗಳಾದ ತ್ರಿವೇಣಿ ಮನೆಯ ಎಲ್ಲ ಘಟನೆಗಳನ್ನು ಮೂಕವಾಗಿ ಸಹಿಸುತ್ತ ಕಣ್ಣಂಚಿಗೆ ಬಂದು ನಿಂತ ಕಣ್ಣೀರ ಸೆರಗಿನಿಂದ ಮರೆಯಲ್ಲಿ ಒರೆಸಿಕೊಳ್ಳುತ್ತ ತಾಯಿಯ ಹಿಂದಿಂದೆಯೇ ಸುತ್ತುತ್ತಿದ್ದಳು. +ಪ್ರಶಾಂತನ ಹೆಂಡತಿ ಅವರಾರ ಕಡೆಗೂ ತಿರುಗಿ ನೋಡುತ್ತಿರಲಿಲ್ಲ. ಆಕೆಯ ಪ್ರತಿಯೊಂದು ಮಾತಿಗೂ ಪ್ರಶಾಂತ ಸೊಪ್ಪು ಹಾಕುತ್ತಿದ್ದ. ಪಟೇಲರು ತೀರಿ ಹೋದ ದಿನಗಳಲ್ಲಿ ಹೊಲೆಯರ ಮಾದೇವನ ಬಳಿ ಅಪ್ಪ ಮೂವತ್ತು ಸಾವಿರ ರೂಪಾಯಿ ಸಾಲ ಮಾಡಿದ್ದಾರೆ. ಅದನ್ನು ತೀರಿಸಬೇಕು ಎಂದು ಕಣ್ಣೀರು ಹಾಕುತ್ತ ತಾಯಿಯ ಮುಂದೆ ನಿವೇದಿಸಿಕೊಂಡಿದ್ದೆಲ್ಲಾ ನಾಟಕವಾಗಿತ್ತು. ಪಟೇಲರು ತನ್ನ ಇಬ್ಬರೂ ಹಿರಿಯ ಗಂಡು ಮಕ್ಕಳನ್ನು ಬಹು ಮುದ್ದಾಗಿ ಬೆಳೆಸಿದ್ದರು. ಓದದೆ ಪೋಲಿ ಬಿದ್ದ ಮಕ್ಕಳನ್ನು ವ್ಯವಸಾಯಕ್ಕೆ ತೊಡಗಿಸಿಕೊಂಡಿದ್ದರು. ಇರುವ ಜಮೀನನ್ನು ನಿಷ್ಠೆಯಿಂದ ಮಾಡಿದರೆ ಸುಖವಾಗಿ ಇರಬಹುದು ಎಂದು ಭಾವಿಸಿ ಮಕ್ಕಳ ಮೇಲೆ ವಿಶ್ವಾಸವಿಟ್ಟಿದ್ದರು. ವೆಂಕೋಬಿಯೂ ಪ್ರಶಾಂತನೂ ತಂದೆಯಿದ್ದ ಕಾಲದಲ್ಲೇ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಬರಗಾಲವೂ ಅವರ ನಿರಾಸಕ್ತಿಯಲ್ಲಿ ಪಾಲುಗೊಂಡಿತ್ತು. ಅದಲ್ಲದೆ ಅಷ್ಟೊಂದು ಕಷ್ಟಪಟ್ಟು ಹಗಲು ರಾತ್ರಿ ಮಳೆ, ಚಳಿ, ಬಿಸಿಲು ಎನ್ನದೆ ಮೈ ಮೂಳೆ ಮುರಿದು ದುಡಿದರೂ ಫಸಲಿಗೆ ಗಿಟ್ಟುತ್ತಿದ್ದ ಬೆಲೆಯಂತೂ ಹೇಳತೀರದಾಗಿತ್ತು. ಸ್ವತಃ ವೆಂಕೋಬಿಯು ತಮ್ಮನ ಜೊತೆ ಎಕರೆಗಟ್ಟಲೆ ಬೆಳೆದಿದ್ದ ಹೂ ಕೋಸಿಗೆ ಬೆಲೆ ದಕ್ಕದೆ ಪಾತಾಳಕ್ಕೆ ಬಿದ್ದಂತಾಗಿ ಲಾರಿ ಬಾಡಿಗೆಗೂ ಕಾಸು ಕೊಡಲಾಗದೆ ತೀರಾ ಅಪಮಾನಿತನಾಗಿ ಬಂದು ತಾವಿನ್ನು ಯಾಕೆ ಇಷ್ಟು ಬೆವರು ಹರಿಸಿ ದುಡಿಯಬೇಕು ಎಂದು ಜಡ್ಡುಗಟ್ಟಿದ ವ್ಯವಸಾಯವನ್ನು ನಂಬಿ ಬದುಕಬಾರದು ಎಂದು ವೆಂಕೋಬಿ ಆಗಾಗ ಮನೆಯಲ್ಲಿ ಪರದಾಡುತ್ತಿದ್ದುದೂ ಉಂಟು. ಪಟೇಲರು ಎಲ್ಲೆಲ್ಲಿ ಸಾಲ ಮಾಡಿದ್ದರೆಂಬುದಕ್ಕೆ ಸೂಕ್ತವಾಗಿ ದಾಖಲೆಯೇ ಇರಲಿಲ್ಲ. +ಪಟೆಲರು ಸತ್ತದ್ದು ಕೂಡ ಭಯಾನಕ ಗುಪ್ತ ಖಾಯಿಲೆಯಿಂದ ಎಂದು ಜನ ಹೇಳುತ್ತಿದ್ದರು. ಆನೆಯಂತಿದ್ದ ಪಟೇಲರು ಹೇಗೆ ಮೂಳೆ ಚಕ್ಕಳವಾಗಿದ್ದರೆಂದು ನೋಡಿದ್ರಾ, ಅಬ್ಬಬ್ಬಾ ಅಂತಹ ಹೆಣವನ್ನು ನಾನು ಎಂದೂ ನೋಡೇ ಇರಲಿಲ್ಲ. ಮುಖದ ಮ್ಯಾಲೆ ಚಕಳ ಸುಮ್ನೆ ಅಂಟಿಕೊಂಡಿತ್ತು. ದುಪ್ಟಿಯಿಂದ ಎದ್ದು ಬಂದಂತೆ ಕಾಣ್ತಿದ್ರು ಎಂದು ಯಾವನೊ ತಲೆ ಮಾಸಿದವನು ಭಯಾನಕವಾಗಿ ಪಟೇಲರ ಕೃಶ ದೇಹವನ್ನು ವರ್ಣಿಸುತ್ತಿದ್ದರೆ: ಬಾಯಿ ಮುಚ್ಚಿಕೊಂಡು ಕೂತಿರಲಾಗದ ಇನ್ನಾವನೊ ಮೊದಲಿನವ ಮಾತಿನಿಂದ ಉತ್ಸಾಹಿತನಾಗಿ ‘ಅಯ್ಯೋ; ಪಟೇಲ್ರ ಮೈಯೆಲ್ಲ ಕೀವುಗತ್ಟಿ ಉಳಾ ಮಿಳ್ಯಾಡ್ತ ಇದ್ದೋ; ಅಂತಾ ವಾಸ್ನೆಯ ನಾನೆಂದೂ ಕಂಡಿರಲಿಲ್ಲ’ ಎಂದು ಮುಖವನ್ನು ಅಸಹ್ಯ ಮಾಡಿಕೊಳ್ಳುತ್ತಿದ್ದ. +ಎರಡನೆ ಪಾದ: +ಅಂತೂ ಪಟೇಲರು ಸತ್ತ ಮೇಲೂ ತರಾವರಿ ಮಾತುಗಳಿಗೆ ಈಡಾಗಿದ್ದರು. ಯಶವಂತನಿಗೆ ಆ ಯಾವ ಆರೋಪಗಳು ಕೇಳಿಸಿರಲಿಲ್ಲ. ಅವನ ಪಾಡಿಗೆ ಅವನು ಪ್ರೊಫೆಸರ್ ದಾರಿಯಲ್ಲಿ ಕ್ರಾಂತಿಯ ಕನ್ನೆಯರನ್ನು ಮೋಹಿಸುತ್ತಿದ್ದ. ಪ್ರಶಾಂತ ಆಗಾಗ ತಾಯಿ ಮುಂದೆ ದೈನ್ಯತೆ ಪ್ರದರ್ಶಿಸಿ ತಂದೆಯವರು ನಿಧಿಯನ್ನು ಮನೆಯ ಯಾವುದೊ ಮೂಲೆಯಲ್ಲಿ ಬಚ್ಚಿಟ್ಟಿದ್ದಾರಂತೆ, ಅದೂ ಹಳೇ ಕಾಲದ ನಾಣ್ಯಗಳಂತೆ ಬ್ರಿಟಿಷರು ಮೈಸೂರಿನ ಹುಲಿ ಟಿಪ್ಪುವಿನ ಮೇಲೆ ದಾಳಿ ಮಾಡಿದ್ದಾಗ ತಪ್ಪಿಸಿಕೊಂಡು ಬಂದಿದ್ದ ಸೈನಿಕರ ಬಳಿ ಇದ್ದ ಅಪ್ಪಟ ಚಿನ್ನದ ನಾಣ್ಯಗಳನ್ನು ಹೇಗೋ ಲಪಟಾಯಿಸಿ ಪಡೆದುಕೊಂಡರಂತೆ. ಟಿಪ್ಪು ಸತ್ತ ಸುದ್ದಿ ತಿಳಿದ ಕೂಡಲೆ ಯುದ್ಧ ಭೂಮಿಯಲ್ಲಿದ್ದ ಕೆಲ ಸೈನಿಕರು ಅರಮನೆಗೆ ತೆರಳಿ ಕೈಗೆ ಸಿಕ್ಕಿದ್ದಷ್ಟನ್ನು ಬಾಚಿಕೊಂಡು ತಲೆಮರೆಸಿಕೊಂಡು ದಾರಿ ತಪ್ಪಿ ಬಂದಾಗ ಆಗ ಪಟೇಲರ ತಂದೆಯಾಗಿದ್ದ ಪರ್ವತಪ್ಪನವರ ಕೈಗೆ ಸಿಕ್ಕಿಬಿದ್ದು ಹೆದರಿ ಅಷ್ಟೂ ಚಿನ್ನವನ್ನು ಕೊಟ್ಟು ಮಾಯಾವಾಗಿದ್ದರಂತೆ ಎಂಬ ಕತೆಯನ್ನು ಯಾರಿಂದಲೋ ಕೇಳಿಸಿಕೊಂಡ ಪ್ರಶಾಂತ ಹಗಲು ರಾತ್ರಿ ಮನೆಯ ಯಾವ ಮೂಲೆಯಲ್ಲಿ ಚಿನ್ನವನ್ನು ಬಚ್ಚಿಟ್ಟಿರಬಹುದೆಂದು ತಾಯಿ ರೇಣುಕವ್ವನನ್ನು ಪೀಡಿಸುತ್ತಿದ್ದ. ಆತನ ಹೆಂಡತಿ ವನಜಳಂತೂ ಪ್ರತಿ ರಾತ್ರಿಯೂ ಮನೆಯ ಮೂಲೆ ಸಂದಿಗಳ ನೆಲವನ್ನೆಲ್ಲ ಬೆರಳುಗಳನ್ನು ಮಡಿಚಿಕೊಂಡು ಕುಟ್ಟಿಕುಟ್ಟಿ ಎಲ್ಲಿ ಡೊರಗು ಬಿದ್ದಂತೆ ಶಬ್ದ ಕೇಳಿಸುವುದೊ ಎಂದು ಹುಡುಕಾಡಿ ಹುಚ್ಚಾಗುತ್ತಿದ್ದಳು. +ಪರ್ವತಪ್ಪನವರು ಟಿಪ್ಪುವಿನ ಕಾಲದಲ್ಲಿ ಪಾಳೆಯಗಾರರೇ ಆಗಿದ್ದವರು. ಜನರನ್ನು ಹೆದರಿಸಿ ಸಂಪತ್ತನ್ನು ಲೂಟಿ ಮಾಡಿ ಯಾರಿಗೂ ಗೊತ್ತಿಲ್ಲದಂತೆ; ಆದರೆ ಮಗನಾಗಿದ್ದ ಪಟೇಲರಿಗೆ ಮಾತ್ರ ಒಂದಿಷ್ಟು ಗೊತ್ತಿರುವಂತೆ ನೆಲವನ್ನು ಅಗೆದು ಚಿನ್ನವನ್ನು ಹುಗಿದಿದ್ದಾರೆ ಎಂಬ ಪ್ರತೀತಿ ಇತ್ತು. ರೇಣುಕವ್ವನೂ ತಾನು ಮದುವೆ ಆದ ಕಾಲದಲ್ಲಿ ಇಂತಹ ಮಾತುಗಳನ್ನು ಕೇಳಿಸಿಕೊಂಡಿದ್ದಳು. ‘ಅಯ್ಯೋ ಮನೆ ಮೂಲೆ ಮೂಲೆಯಲ್ಲೂ ಚಿನ್ನ ಬಚ್ಚಿಟ್ಟಿರುವ ಮನೆಗೆ ಸೊಸೆಯಾಗಿ ಹೋಗಬೇಕಾದರೆ ಏಳೇಳು ಜನ್ಮಗಳ ಪುಣ್ಯ ಮಾಡಿರಬೇಕು’ ಎಂದು ಜನರು ಐಸಿರಿಯ ಮಾತನಾಡಿದ್ದರು. ಪಟೇಲರು ಆ ಎಲ್ಲ ಮಾತುಗಳನ್ನು ಪ್ರತಿಷ್ಠೆಗಾಗಿ ಹೌದೆಂದು ಒಪ್ಪಿಕೊಂಡಿದ್ದು ನಿಜವಿತ್ತು. ವೆಂಕೋಬಿಯು ತಂದೆಯ ಮಾತೆಲ್ಲ ಸುಳ್ಳು ಎಂದು ಹೇಳುತ್ತಿದ್ದ. ಪ್ರಶಾಂತ ಮಾತ್ರ ತಮ್ಮ ಮನೆಯ ನೆಲದ ಕೆಳಗೆ ನಿಸ್ಸಂದೇಹವಾಗಿ ಚಿನ್ನದ ನಿಧಿ ಇದೆ ಎಂದು ನಂಬಿ; ತಾಯಿಗೆ ಮಾತ್ರವೇ ಆ ಗುಪ್ತ ನಿಧಿಯ ತಾವು ಗೊತ್ತಿದೆ ಎಂದು ಗುಟ್ಟಾಗಿ ದುಂಬಾಲು ಬೀಳುತ್ತಿದ್ದ. ಆತನ ಹೆಂಡತಿಯ ಕನಸಿನ ತುಂಬ ಚಿನ್ನದ ನಿಧಿಯೇ ಕುಣಿಯುತ್ತಿತ್ತು. +ಪಟೆಲರು ಬದುಕಿದ್ದಾಗ ಕೇವಲ ಕತೆಗಳಂತೆ ಕೇಳಿಸುತ್ತಿದ್ದ ಆ ಮಾತುಗಳೆಲ್ಲ ಅವರು ಸತ್ತ ಮೇಲೆ ಸತ್ಯದಂತೆ ಕಾಣುತ್ತಿದ್ದವು. ಹಾಗೆ ಮೂರು ದಿನವೂ ಪ್ರಾಣ ಬಿಡದೆ ನರಳಾಡುತ್ತಾ ತಾವೆಲ್ಲ ಏನು ಹೇಳಿದರೂ ಕೇಳಿದರೂ ಬಾಯಿ ಬಿಡದೆ ಎಲ್ಲ ಗುಟ್ಟನ್ನು ಕಿರಿ ಮಗನಾದ ಯಶವಂತನ ಕಿವಿಗೆ ಮಾತ್ರ ಉಸುರುವೆ ಎಂಬಂತೆ ವಿಲಿವಿಲಿ ಸಂಕಟಪಡುತ್ತಿದ್ದುದು ಚಿನ್ನವನ್ನು ಎಲ್ಲಿ ಬಚ್ಚಿಡಲಾಗಿದೆ ಎಂಬುದನ್ನು ತಿಳಿಸಲಿಲ್ಲಾಗಿಯೇ ಇರಬೇಕೆಂದು ಪ್ರಶಾಂತ ಲೆಕ್ಕಿಸಿದ್ದ. ತಂದೆಯಾಗಿ ನಮಗೆ ಗುಟ್ಟೂ ತಿಳಿಸದೆ ಮೋಸ ಮಾಡಿದನಲ್ಲ ಎಂಬ ಭಾವನೆಯೂ ಪ್ರಶಾಂತ ಮತ್ತು ವೆಂಕೋಬಿಯರ ಮನಸ್ಸಿನಲ್ಲಿ ದಟ್ಟವಾಗಿತ್ತು. ಕೊನೆ ಪಕ್ಷ ಕೈಹಿಡಿದು ಬಾಳಿ ಬದುಕಿ ಕೊನೆಗೆ ಬಾಯಿಗೆ ಬೀರು ಬಿಟ್ಟ ತನ್ನ ಹೆಂಡತಿಗಾದರೂ ರವಷ್ಟು ಗುಟ್ಟು ಬಿಟ್ಟು ಕೊಡದೆ ಹೋದನಲ್ಲ ಎಂದು ಜನ ಆಡಿಕೊಂಡಿದ್ದರು. ಸಾಯುವ ಕೊನೆಗಾಲದಲ್ಲಿ ಅರಳು ಮರಳಾಗಿ ಆಡುತ್ತಿದ್ದ ಪಟೇಲರು ಹೆಚ್ಚು ಕಡಿಮೆ ಎಲ್ಲ ನೆನಪನ್ನೂ ಕಳೆದುಕೊಂಡಿದ್ದರು. ಚಿನ್ನದ ವಿಷಯ ತೆಗೆದಾಗಲೆಲ್ಲ ಮಕ್ಕಳಂತೆ ಬೊಚ್ಚುಬಾಯಿ ಬಿಟ್ಟುಕೊಂಡು ಕೇಳಿಸದ ಕಿವಿಯ ತೆರೆದುಕೊಂಡು ನಡುಗುವ ತಲೆಯನ್ನು ಸಾವರಿಸಿಕೊಂಡು ಏನು ಎಂಬಂತೆ ಕತ್ತು ಎತ್ತುವ ವೇಳೆಗೆ ಮತ್ತೆ ಎಲ್ಲವನ್ನೂ ಮರೆತುಬಿಡುತ್ತಿದ್ದರು. +ರೇಣುಕವ್ವ ಮಗ ಪ್ರಶಾಂತನ ಮೇಲೆ ಎಷ್ಟೇ ರೇಗಾಡಿದರೂ ಆತನ ಆಸೆ ಸುಮ್ಮನಿರುತ್ತಿರಲಿಲ್ಲ. ಅದು ಅವನನ್ನೇ ಆಟ ಆಡಿಸುತ್ತಿತ್ತು. ಬೆಳೆ ಕೈಕೊಟ್ಟು ಸಾಲಗಳು ಮೈಮೇಲೆ ಬರುವಾಗ ಪದೇ ಪದೇ ಚಿನ್ನದ ನಾಣ್ಯಗಳ ಯಾವ ಲವ ಲೇಶದ ಆಸೆಯನ್ನೂ ಇಟ್ಟುಕೊಂಡಿರಲಿಲ್ಲ. ಒಮ್ಮೆ ಮದುವೆ ಆದ ಹೊಸದರಲ್ಲಿ ತೊಟ್ಟಿ ಮನೆಯ ನೀರೊಲೆಯ ಪಕ್ಕದ ಗೋಡೆಯನ್ನು ಕೆಡವಿ ಅಲ್ಲಿ ನೀರಿನ ತೊಟ್ಟಿಯನ್ನು ಕಟ್ಟುವಾಗ ಕುಡಿಕೆಯೊಂದರಲ್ಲಿ ಒಂದಿಷ್ಟು ಬೆಳ್ಳಿಯ ನಾಣ್ಯಗಳು ಸಿಕ್ಕಿದ್ದವು. ಆಗ ಪ್ರಶಾಂತ ಕೈಗೂಸಾಗಿದ್ದ. ಆ ಬೆಳ್ಳಿ ನಾಣ್ಯಗಳನ್ನು ಕೆಚ್ಚಿಸಿ ಆತನಿಗೆ ಉಡುದಾರ ಮಾಡಿಸಿದ್ದರು. ಅದಷ್ತನ್ನು ಬಿಟ್ಟರೆ ಭಾಗಶಃ ಆ ಮನೆಯ ಯಾವ ಮೂಲೆಯಲ್ಲೂ ಎಂದೂ ಚಿನ್ನದ ಸುಳಿವು ಕಂಡಿರಲಿಲ್ಲ. ಸ್ವತಹ್ ಪಟೇಲರು ತಮ್ಮ ಕಷ್ಟಕಾಲದಲ್ಲಿ ಕೂಡ ತಂದೆ; ಪರ್ವತಪ್ಪಬವರು ಟಿಪ್ಪು ಕಾಲದ ಚಿನ್ನದ ನಾಣ್ಯಗಳನ್ನು ತಮಗಾಗಿ ಎಲ್ಲೋ ಬಚ್ಚಿಟ್ಟಿರುವರೆಂದು ಭಾವಿಸಿ ಹುಡುಕಿ ಹತಾಶೆಯಿಂದ ಅಮ್ತಹ ಯಾವ ಆಸೆಯೂ ತಕ್ಕುದಲ್ಲವೆಂದು ಕೈಬಿಟ್ಟಿದ್ದರು. ರಾಮಾಜೋಯಿಸರನ್ನು ಕರೆಸಿ ಬಚ್ಚಿಟ್ಟಿರುವ ಚಿನ್ನವನ್ನು ತೆಗೆಸಲು ಏನು ಕ್ರಮ ಅನುಸರಿಸಬೇಕು ಎಂದು ಶಾಸ್ತ್ರ ಕೇಳಿದ್ದರು. +ಮೇಲುಕೋಟೆಯ ಕಡೆಯಿಂದ ಬಂದು ಊರಲ್ಲಿದ್ದ ಆ ರಾಮಾಜೋಯಿಸರು ಪಟೇಲರಿಗೆ ಆಪ್ತರು. ಅವರು ಏನೇನೊ ಹೇಳಿದ್ದರು. ಚಿನ್ನವನ್ನು ಬಚ್ಚಿಟ್ಟು ಇಂತಿಷ್ಟೆ ಕಾಲ ಕಳೆಯಿತೆಂದರೆ ಅದು ಭೂಮಿ ತಾಯಿಯ ಚಿನ್ನವಾಗಿಬಿಡುತ್ತದೆ. ಅಮ್ತಹ ಚಿನ್ನವನ್ನು ಕಾಯಲು ಆಕೆ ಏಳು ತಲೆಗಳ ಸರ್ಪವನ್ನು ಕಾವಲಿಗೆ ಬಿಟ್ಟಿರುತ್ತಾಳೆ. ಏಳು ಹೆಡೆಯ ನಡುವಿನ ಹಳದಿಯ ಜ್ವಾಲೆಯ ಮಣಿಯು ಸದಾ ಎಚ್ಚರವಾಗಿರುತ್ತದೆ. ಶಾಸ್ತ್ರಾಚಾರದ ವಿಧಿಗಳನ್ನು ಅನುಸರಿದೆ ಹೋಗಿ ಅಗೆದರೆ ಅದು ತಮ್ಮನ್ನೇ ಬಲಿ ತೆಗೆದುಕೊಂಡುಬಿಡುತ್ತದೆ. ಚಿನ್ನ ಅಂದರೆ ಏನೆಂದು ತಿಳಿದಿದ್ದೀರಿ ಪಟೇಲರೇ. ಅದು ಸಾವಿದ್ದಂತೆ. ಅದನ್ನು ದಕ್ಕಿಸಿಕೊಳ್ಳುವುದು ಅಂದರೆ ಸಾವನ್ನು ಗೆದ್ದಂತೆ. ಚಿನ್ನದ ಆಸೆಯನ್ನು ಹಿಂಬಾಲಿಸುವುದು ತರವಲ್ಲ. ನಿಮಗೆ ಆಪ್ತರಾಗಿರುವ ಕಾರಣಕ್ಕೆ ಈ ಮಾತು ಹೇಳುತ್ತಿರುವೆ. ಅದರ ಭ್ರಮೆಯನ್ನು ಬಿಟ್ಟುಬಿಡಿ. ವಿಧಿಯು ಯಾವ ರೀತಿ ವೇಷ ಧರಿಸಿ ಬರುತ್ತೋ ಯಾರಿಗೆ ತಾನೆ ಗೊತ್ತು. ನೀವು ಚಿನ್ನದ ಸಹವಾಸವನ್ನು ಬಿಟ್ಟುಬಿಡಿ. ಶಾಸ್ತ್ರಮಾಡಿ ಒಂದು ವೇಳೆ ಚಿನ್ನ ಪತ್ತೆ ಮಾಡಿದರೂ ಅದು ನ್ಯಾಯವಲ್ಲ. ನಿಮ್ಮ ಮಕ್ಕಳು ಗಟ್ಟಿಗರು, ಭೂಮಿತಾಯಿಯ ಜೊತೆ ಬದುಕು ಮಾಡಿದರೆ ಅದಕ್ಕಿಂತ ಚಿನ್ನ ಇನ್ಯಾವುದೂ ಇಲ್ಲ ಎಂದು ಹೇಳಿ ಸುಮ್ಮನಿರಿಸಿದ್ದರು. ಪಟೇಲರು ಅವತ್ತೇ ಚಿನ್ನದ ಮೋಹವನ್ನು ಕಳೆದುಕೊಂಡಿದ್ದರು. ರೇಣುಕವ್ವನಿಗೆ ಮೊದಲೇ ಅಮ್ತಹ ಭಾವನೆಗಳು ಕರಗಿಹೋಗಿದ್ದವು. +ಆದರೆ ಜನರ ಮನಸ್ಸಿನಲ್ಲಿ ಯಾವುದೂ ಸಾಯುವುದಿಲ್ಲ. ಇಲ್ಲದ್ದನ್ನು ಅಪಾರವಾಗಿ ಕಲ್ಪಿಸಿಕೊಳ್ಳುವ ಗುಣ ಅನುವಂಶಿಕವಾಗಿ ಬಂದಿರುತ್ತದೆ. ಪ್ರಶಾಂತ ಮನೆಯನ್ನು ಪಾಲು ಮಡಿಕೊಳ್ಳುವಾಗಲೂ ಚಿನ್ನ ಇಟ್ಟಿರುವ ಜಾಗವು ತನ್ನ ಕಡೆಗೇ ಬಂದಿರುತ್ತದೆ ಎಂದು ತಿಳಿದಿದ್ದ. ತಂದೆ ತೀರಿಕೊಂಡ ನಾಲ್ಕೇ ತಿಂಗಳಿಗೆ ಆತ ಇಲಿ ಬಿಲಕ್ಕೆ ಹಾವು ಬಂದು ಸೇರಿಕೊಂಡಿದೆ ಎಂಬನೆಪ ಮಾಡಿಕೊಂಡು ಗುಟ್ಟಾಗಿ ಮನೆಯ ಮೂಲೆ ನೆಲಗಳನ್ನೆಲ್ಲ ಅಗೆದು ಏನೂ ಸಿಗದೆ ಪೆಚ್ಹ್ಚಾಗಿದ್ದ. ಆದರೂ ಬಿಡದೆ ಕೊಳ್ಳೆಗಾಲದ ಮಾಟ ಮಂತ್ರದ ರಾಮಯ್ಯ ಊರು ಸುತ್ತಿಕೊಂಡು ಬಂದಾಗ ಗುಪ್ತ ನಿಧಿಯನ್ನು ಪತ್ತೆ ಹಚ್ಚಲು ಇರುವ ವಾಮ ಮಾರ್ಗಗಳನ್ನು ಕೇಳಿದ್ದ. ಆ ಭಯಾನಕ ರಾಮಯ್ಯನೋ ಯಾಕೋ ಏನೋ ವಿಚಿತ್ರವಾದ ಭೀಭತ್ಸ ಕ್ರಮವೊಂದನ್ನು ತಿಳಿಸಿದ್ದ. ತೀರ ಬಂಧು ಬಳಗದವರ ಮಕ್ಕಳ ಪೈಕಿ ಒಬ್ಬನನ್ನು ಬಲಿ ಕೊಟ್ಟರೆ ಆ ನಿಧಿಯನ್ನು ಆ ನಿಧಿಯನ್ನು ಪತ್ತೆ ಮಾಡಿಕೊಡುವುದಾಗಿಯೂ; ಆ ಮೇಲೆ ಆ ಚಿನ್ನದಲ್ಲಿ ತನಗೆ ಅರ್ಧ ಪಾಲು ಬರಬೇಕು ಎಂದು ಷರತ್ತು ಮಂಡಿಸಿದ್ದ. +ರೇಣುಕವ್ವ ನುಸಿ ಪೀಡೆಯಿಂದ ಒಣಗಿ ನಿಂತ ತೆಂಗಿನ ತೋಟದಲ್ಲಿ ಗಂಡನ ಸಮಾಧಿಯ ಮುಂದೆ ಚಿಂತೆಯಲ್ಲಿ ಉರಿಯುತ್ತ ಕೂತಿರುವಾಗ ಬಲಿಯ ಸಂಗತಿಯೇ ತಿಳಿಯದೆಂದು ತರ್ಕಿಸಿದ್ದರು. ರಾಮಯ್ಯ ಇಂತಹ ನಿಧಿ ಶೋಧದ ಬಲಿ ಆಚರಣೆಗಳನ್ನು ಮಾಡುವುದರಲ್ಲಿ ಪಳಗಿದ್ದಾತ. ವೆಂಕೋಬಿಯು ಜೀವನದಲ್ಲಿ ಕಂಡುಕೊಂಡಿದ್ದ ಒಂದೇ ಒಂದು ನೆಮ್ಮದಿಯ ತಾಣವೆಂದರೆ ಹಳ್ಳದ ಹೊಂಗೆ ಮರಗಳ ತಂಪಿನ ಜೂಜಾಟವೇ. ಆತನಿಗೆ ಸಾಲ ಕೊಡಲು ಜನರಿದ್ದರು ಪಕ್ಕದ ಸಾದಾರಹಳ್ಳಿಯ ವಕ್ಕಲಿಗರು ಪಟೇಲರ ಮನೆಯಲ್ಲಿ ಚಿನ್ನದ ನಿಧಿ ಇದೆ ಎಂದು ಕೇಳಿ ಆಸೆಪಟ್ಟಿದ್ದರು. ತನ್ನ ಮನೆಯ ಮೇಲೆ ಸಾಲ ತೆಗೆಯಲು ವೆಂಕೋಬಿಯು ಹಿಂಜದಿರಲಿಲ್ಲ. ಮನೆ ಮೇಲೆ ಸಾಲ ಕೊಡಲು ತಯಾರಿದ್ದವರಿಗೂ ಚಿನ್ನದ ಮೋಹವಿತ್ತು ಯಶವಂತನ ತಂಗಿ ತ್ರಿವೇಣಿ ತಾಯಿಯ ಜೊತೆ ತೋಟದ ಸಣ್ಣ ಪುಟ್ಟ ಕೆಲಸಗಳಲ್ಲಿ ದುಃಖ ಮರೆಯುತ್ತಿದ್ದಳು. ಬಲಿ ಕೊಡಲು ನಿರ್ಧಿಷ್ಟವಾದ ಅಮಾಸ್ಯೆಯ ರಾತ್ರಿಯೇ ಬೇಕಿದ್ದರಿಂದ ರಾಮಯ್ಯ ಊರಿಗೆ ಹೋಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬರುವುದಾಗಿ ಹೊರಟು ಹೋಗಿದ್ದ. ಪ್ರಶಾಂತ ಚಡಪಡಿಸುತ್ತ ದಿನ ಕಾಯುತ್ತಿದ್ದ. +ವೆಂಕೋಬಿಯ ಹೆಂಡತಿಯು ರೋಸಿ ಹೋಗಿದ್ದಳು. ಆಕೆಯ ಅಣ್ಣ ಗಜಾನನ ವೆಂಕೋಬಿಯಂತಹ ನೀಚನಿಗೆ ತಂಗಿಯನ್ನು ಕೊಟ್ಟು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಯಿತಲ್ಲಾ ಎಂದು ತನ್ನ ಕಣ್ಣ ಎದುರಲ್ಲೇ ತಂಗಿ ಬದುಕಿರಲಿ ಎಂದು ತವರಿನಲ್ಲೇ ಆಕೆಯನ್ನು ಇರಿಸಿಕೊಂಡಿದ್ದ. ಮುಂದಿನ ವಾರ ತಾನೇ ಹೋಗಿ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಬರುವುದಾಗಿ ತಂಗಿಗೆ ಹೇಳಿ ಸಮಾಧಾನ ಮಾಡಿದ್ದ. ಪಟೇಲರ ಮನೆ ಹಾಳಾಯಿತೆಂದು ಮಾರಿ ಗುಡಿಯ ಪಡಸಾಲೆಗಳಲ್ಲಿ ಆಡಿಕೊಳ್ಳುವುದು ನಡೆದೇ ಇತ್ತು. ತ್ರಿವೇಣಿಗೆ ಮದುವೆಯನ್ನೂ ಅಣ್ಣಂದಿರು ಮಾಡಲಾರರು ಎಂದು ಭವಿಷ್ಯ ನುಡಿಯುತ್ತಿದ್ದರು. ಬದುಕಿದ್ದಾಗ ರೇಣುಕವ್ವ ಗಂಡನ ಕೈಯಿಂದ ಭಾಷೆ ತೆಗೆದುಕೊಂಡು ನಿಧಿ ಇರುವುದು ನಿಜವೇ ಎಂದು ಕೇಳಿದ್ದಳು. ಪಟೇಲರು ಏನನ್ನೂ ಖಚಿತವಾಗಿ ಹೇಳಲಾರದೆ ಗೊಂದಲಗೊಂಡಿದ್ದರು ತಂದೆ ಪರ್ವತಪ್ಪನವರೂ ಕೂಡ ಮಗನಾಗಿದ್ದ ಪಟೇಲರಿಗೆ ನಿರ್ಧಿಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಆದರೆ ಅವರು ಸಾಯುವಾಗ ಒಂದು ಒಡಪು ಮಾದರಿಯ ಮಾತೊಂದನ್ನು ಹೇಳಿ ಉಸಿರು ಬಿಟ್ಟಿದ್ದರು. +‘ಮಣ್ಣು ಅಂದ್ರೆ ಚಿನ್ನ ಕಣಪ್ಪಾ, ನಿನ್ನೊಳಗೆ, ನೀ ನಿಂತರೂ ನೆಲದೊಳಗೆ ನಿನ್ನ ಕರ್ಮದೊಳಗೆ ಚಿನ್ನದ ಭಂಡಾರವೇ ಇದೆ. ಅದನ್ನು ಯಾವತ್ತೂ ಮರೀಬ್ಯಾಡ. ಅದ ಮಸೀ ಮಾಡ್ಕೋ ಬ್ಯಾಡ. ನಿನ್ನ ಕಷ್ಟಕಾಲದಲ್ಲಿ ಅದೇ ನಿನ್ನ ತಲೇ ಕಾಯೋದು ಮಗನೇ’ ಎಂದು ಪ್ರಾಣ ಬಿಟ್ಟಿದ್ದರು. ಅವತ್ತು ಪಟೇಲರಿಗೆ ಅಮ್ತಹ ದುಃಖದ ಕಿಡಿಯೊಳಗೆ ಏನೂ ಅರ್ಥವಾಗಿರಲಿಲ್ಲ. ಮುಂದೆ ಜನ ಅದನ್ನು ತರಾವರಿಯಾಗಿ ಅರ್ಥೈಸಿದ್ದರು. ಪಟೇಲರೂ ಅದನ್ನು ನಂಬಿದ್ದರು. +ಯಶವಂತ ತಮ್ಮ ಮನೆತನಕ್ಕೆ ಚಿನ್ನದ ಆಸರೆ ಇದೆ ಎಂದು ಕೇಳಿಸಿಕೊಂಡು ಮರೆಯುತ್ತಿದ್ದ. ಮೈಸೂರಿನ ಸುಂದರ ಪರಿಸರದಲ್ಲಿ ಆತ ಯಾವುದೋ ಲೋಕಕ್ಕೆ ಹಕ್ಕಿಯಂತೆ ಹಾರಿ ಹೋಗಲು ತವಕಿಸುವ ಹಕ್ಕಿಯಂತೆ ಊರನ್ನು ಮರೆತುಬಿಟ್ಟಿದ್ದ. ತನ್ನ ಅಣ್ಣಂದಿರು ಬಡಿದಾಡಿಕೊಂಡು ಅಪ್ಪನ ಸಾಲದ ಹೊರೆಯ ನೆಪದಲ್ಲಿ ಮನೆಯನ್ನೂ ಮಾರಿಕೊಳ್ಳುವ ಸ್ಥಿತಿಗೆ ಇಳಿದಿದ್ದಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ. ಇತ್ತೀಚೆಗೆ ಯಶವಂತ ಚೆಲುವೆಯರ ಮೋಹಕ್ಕೆ ಒಳಗಾಗಿ ಹಂಬಲಿಸುತ್ತಿದ್ದ. ಕ್ರಾಂತಿಕಾರಿ ಪ್ರೊಫೆಸರ್ ಪ್ರತಿಪಾದಿಸುತ್ತಿದ್ದ ಅಂತರ್ ಜಾತಿಯ ಪ್ರೇಮವಿವಾಹವನ್ನು ಮೈದುಂಬಿಕೊಳ್ಳುತ್ತಿದ್ದ. +ಯಶವಂತನಿಗಾಗಿ ಕಾತರಿಸುತ್ತಿದ್ದ ವತ್ಸಲ ಮುದ್ದಾದ ಹುಡುಗಿ. ಪ್ರಾಯದ ಸೆಳೆತಕ್ಕೆ ಸಿಕ್ಕಿ ಬಾಯಾರಿ ಯಶವಂತನ ಒಂದೇ ಒಂದು ನಗುವಿಗಾಗಿ ಹಂಬಲಿಸುತ್ತಿದ್ದಳು. ಯಶವಂತ ಅದೇ ವೇಳೆಗೆ ಯಮುನ ಎಂಬ ಹುಡುಗಿಯ ಬಗ್ಗೆ ಮೋಹಗೊಂಡಿದ್ದ. ಬಳ್ಳಾರಿ ಸೀಮೆಯಿಂದ ಬಂದಿದ್ದ ಆ ಹುಡುಗಿ ಯಮುನ; ತುಂಬಾ ಮುಗ್ದೆ. ಅಪ್ಪಟ ಹಳ್ಳಿಗಾಡಿನ ಬೇರಿನ ನಾರಿನ ಸೊಬಗಿನ ಕನ್ಯೆ. ತಿರಸ್ಕಾರಕ್ಕೆ ಒಳಪಟ್ಟ ಜಾತಿಯಿಂದ ಬಂದ ಯಮುನಳ ಪೂರ್ವಿಕರು ದೇವದಾಸಿಯರು ಆಗಿದ್ದರಂತೆ. ಅಂತಹವಳ ಪ್ರೇಮಕ್ಕಾಗಿ ಯಶವಂತ ತಲೆಕೆಡಿಸಿಕೊಂಡಿದ್ದು ಸಹಜವಾಗಿತ್ತು. ಅವನ ಬೌದ್ಧಿಕ ಪರಿಸರ ಅಂತದಕ್ಕೆಲ್ಲ ಒತ್ತಾಸೆಯಾಗಿತ್ತು. ವತ್ಸಲ ಬೇಡಿಕೊಂಡಿದ್ದರೂ ಯಶವಂತ ಒಪ್ಪಿರಲಿಲ್ಲ. ಆತನ ಮುಂಗೈ ಹಿಡಿದು ಲೇಡಿಸು ಹಾಸ್ಟೆಲಿನ ಪಾರ್ಕೊಳಗೆ ಕತ್ತಲೆಯಲ್ಲಿ ಕುಳಿತು ವಿನಂತಿಸಿಕೊಳ್ಳುತ್ತಾ ಮುತ್ತಿಕ್ಕಿದರೂ ಯಶವಂತ ಕರಗಿರಲಿಲ್ಲ. ಆಕೆಯ ಕೈಯನ್ನು ಮೆಲ್ಲಗೆ ಬಿಡಿಸಿಕೊಂಡು ಬಂದುಬಿಟ್ಟಿದ್ದ. ಆವತ್ತು ಅವನ ಆ ಪ್ರೇಮ ನಿಷ್ಠೆಯು ತುಂಬ ಉತ್ಕಟವಾಗಿತ್ತು. ಪವಿತ್ರವಾಗಿತ್ತು. ನಿರ್ಮಲವಾಗಿತ್ತು. ನ್ಯಾಯಯೋಚಿತವಾಗಿತ್ತು. +ಯಮುನ ಅಂತಹ ಬೆಡಗಿನ ಗಂಗೋತ್ರಿಯಲ್ಲಿ ಹೊಸ ಕಾಲದಲ್ಲೂ ಲಮ್ಗ ದಾವಣಿಯನ್ನು ತೊಡುತ್ತಿದ್ದಳೆಂದರೆ ಅವಳ ಮುಗ್ಧತೆ ಮತ್ತು ಸೊಬಗು ಎಂತಹದೆಂಬುದನ್ನು ಯಾರಿಗಾದರೂ ತಿಳಿಯುತ್ತದೆ. ಆಕೆ ಆಗಾಗ ಕ್ರಾಂತಿಕಾರಿ ಪ್ರೊಫೆಸರ್ ಬಳಿ ಬರುತ್ತಿದ್ದಳು. ಆಕೆ ಬಾಯನ್ನೇ ಬಿಡುತ್ತಿರಲಿಲ್ಲ. ನೋಡಿದವರು ಆಕೆ ಮೂಕಿಯೇ ಇರಬೇಕು ಎಂದು ಭಾವಿಸುವಂತಿತ್ತು. ಪ್ರೊಫೆಸರ್ ಯಾವತ್ತೂ ಕೂಡ ಹೋರಾಟದ ಅಮಲಲ್ಲೇ ಇರುತ್ತಿದರು. ಕೆಲವರು ಅವರನ್ನು ನಕ್ಸಲೇಟ್ ಎಂದು ಅನುಮಾನಿಸಿ ಕಿರುಕುಳವನ್ನೂ ಕೊಡುತ್ತಿದ್ದರು. ಯಶವಂತನಿಗೆ ಯಮುನಳನ್ನು ಪರಿಚಯಿಸಿದ್ದು ಅವರೇ. ಆಕೆಯ ಬಗೆಗಿನ ಮಾಹಿತಿಯನ್ನು ಕೊಟ್ಟು ಒಬ್ಬರಿಗೊಬ್ಬರು ಹತ್ತಿರವಾಗಲು ಮಾರ್ಗ ಕಲ್ಪಿಸಿದ್ದೂ ಅವರೇ. ಆ ಮೆಲೆ ಒಂದು ದಿನ ಅವರಿಬ್ಬರೂ ಅಂತರಂಗದಲ್ಲಿ ಸಂಗಮಿಸಿದರು. ಗಾಢವಾಗಿ ಒಬ್ಬರನ್ನೊಬ್ಬರು ಲೀನವಾಗಿಸಿಕೊಂಡರು. ಪ್ರೊಫೆಸರ್ ಅವರಿಬ್ಬರನ್ನೂ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಪಂಚತಾರಾ ಹೋಟೆಲಲ್ಲಿ ಪಾರ್ಟಿ ಕೊಟ್ಟು ವಿಸ್ಕಿ ಕುಡಿಸಿ, ಕ್ರಾಂತಿಯ ಅಮಲನ್ನು ತುಂಬಿದ್ದರು ಎಲ್ಲ ಆದ ಮೇಲೆ ತಡವೇಕೆ; ಸರಳ ವಿವಾಹ ಆಗಿ ಬಿಡಿ ಎಂದು ಒಪ್ಪಿಸಿಯೂ ಬಿಟ್ಟರು. +ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ಯಶವಂತನ ಬಾಳಲ್ಲಿ ಯಮುನ ನಿಂತಿದ್ದಳು. ಎಂ.ಎ. ಮುಗಿಸಿ ಸಂಶೋಧನೆ ಮಾಡುತ್ತಿದ್ದ ಯಶವಂತನಿಗೆ ಧೈರ್‍ಯ ಇತ್ತಾದರೂ ಯಮುನಳಿಗೆ ಆತಂಕವಿತ್ತು. ಇಲ್ಲೇ ಯೂನಿವರ್ಸಿಟಿಯಲ್ಲೇ ಕೆಲಸ ಕೊಡಿಸುವುದಾಗಿ ಪ್ರೊಫೆಸರ್ ಆಶ್ವಾಸನೆಯನ್ನೂ ನೀಡಿದ್ದರು. ಪಟೆಲರು ಬದುಕಿದ್ದರೆ ಆಗುತ್ತಿದ್ದ ಕತೆಯೇ ಬೇರೆ. ಮಗಳು ತ್ರಿವೇಣಿಯನ್ನು ಅಕ್ಕನ ಮಗನಿಗೆ ಕೊಟ್ಟು ತನ್ನ ಮಗನಿಗೆ ತಂಗಿಯ ಮಗಳನ್ನು ತಂದುಕೊಳ್ಳಲು ಬಯಸಿದ್ದರು. ಕರಳುಬಳ್ಳಿಯಲ್ಲೇ ಸಂಬಂಧಗಳು ಬೆಸೆದುಕೊಳ್ಳಬೇಕು ಎಂಬುದನ್ನು ರೇಣುಕವ್ವನೂ ಒಪ್ಪಿದ್ದವಳೇ ಆದರೂ ಗಂಡ ಸತ್ತ ಮೇಲೆ ಹಳೆಯ ಸಂಬಂಧಗಳು ಸಡಿಲಗೊಂಡು ಪಟೇಲರ ಅಕ್ಕನ ಮಗನಿಗೆ ಕೈತುಂಬ ವರೋಪಚಾರ ಮಾಡುವಂತಹ ಹೆಣ್ಣು ಸಿಕ್ಕಿ ಅವರ ಮದುವೆಯೂ ಮುಗಿದುಹೋಗಿತ್ತು. +ಯಶವಂತ ತನ್ನ ನಿರ್ಧಾರವನ್ನು ತಾಯಿಗೂ ತಿಳಿಸಿರಲಿಲ್ಲ. ವಯಸ್ಸಿಗೆ ಬಂದ ಮಗ ಏನು ಮಡಿಕೊಂಡನೊ ಎಂಬ ನೆನಪು ಅವರಿಗೂ ಬಂದಿರಲಿಲ್ಲ. ಅವರು ತಮ್ಮ ಚಿಂತೆಯಲ್ಲೇ ಮಗಳು ತ್ರಿವೇಣಿಯನ್ನು ಕಾಯುವುದರಲ್ಲೇ ಮುಳುಗಿದ್ದರು. ಕಾಲ ಕೆಟ್ಟು ವಿಧಿಯೂ ಕೈ ಕೊಟ್ಟು ಹೀಗೆ ಹಿರೀ ಮಕ್ಕಳಿಬ್ಬರೂ ದಿಕ್ಕು ತಪ್ಪಿರುವಾಗ ತ್ರಿವೇಣಿ ಎಲ್ಲಿ ಕಾಲು ಜಾರುವಳೋ ಎಂಬ ಗುಪ್ತವಾದ ಅಳುಕು ರೇಣುಕವ್ವನ ಪ್ರಾಣದ ಜೊತೆ ಸೇರಿಕೊಂಡಿತ್ತು. ಆಗೊಮ್ಮೆ ವೆಂಕೋಬಿಗೂ ಪ್ರಶಾಂತನಿಗೂ ಯೋಗ್ಯವಾದ ಗಂಡನ್ನು ಹುಡುಕಿ ಎಂದು ರೇಣುಕವ್ವ ವಿನಂತಿಸಿಕೊಂಡಿದ್ದರೂ ಅವರಿಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಬೆಳೆದ ಮಗಳು ಹೀಗೆ ಲಗ್ನವಿಲ್ಲದೆ ಮನೆಯಲ್ಲೇ ಉಳಿದಿರುತ್ತಾಳೆ ಎಂದರೆ ಅದು ಸೆರಗಿನ ಒಳಗೆ ಕೆಂಡವನ್ನು ಕಟ್ಟಿಕೊಂಡಂತೆ ಎಂದು ರೇಣುಕವ್ವ ಯೋಚಿಸುತ್ತಿದ್ದಳು. ಪ್ರಾಯದ ಮೋಹಕ ರಾಗಗಳು ತ್ರಿವೇಣಿಯ ನಾಭಿಯಲ್ಲಿ ತಿವಿಯುತ್ತಿದ್ದರೂ ಅವಳು ಎಲ್ಲವನ್ನೂ ಬಚ್ಚಿಟ್ಟುಕೊಂಡಿದ್ದಳು. ಕನಸಿನಲ್ಲಿ ಬಂದ ರಮ್ಯ ಲೋಕದ ಪುರುಷನೊಬ್ಬ ತನ್ನ ದೇಹವನ್ನು ನುಂಗುತ್ತಿದ್ದಾನೆಂದು ಆಗಾಗ ಬೆವರುತ್ತ, ಆ ಭಯದಲ್ಲೂ ಮಾಯದ ರೋಮಾಂಚನಕ್ಕೆ ಒಳಗಾಗಿ ಕಂಪಿಸುತ್ತಾ; ತೋಟದ ಬೇಲಿಯನ್ನು ಭದ್ರಪಡಿಸುತ್ತಾ ಕಳ್ಳಕಾಕರು, ದನಕರುಗಳು ಒಳಗೆ ಬಾರದಿರಲಿ ಎಂದು ಮತ್ತೆ ಮತ್ತೆ ಬೇಲಿಯನ್ನು ಮುಚ್ಚಿತ್ತಿದ್ದಳು. ವಿಶ್ವಾಸವಿದ್ದ ಕೆಲವರ ಬಳಿ ರೇಣುಕವ್ವನೇ ಮಗಳಿಗೆ ಗಂಡು ತೋರಿಸಲು ಕೇಳಿಕೊಂಡರೂ ಮುಂದಿನ ಮದುವೆ ಸುಗ್ಗಿಯಲ್ಲಿ ನೋಡೋಣ ಎಂದು ಕೈ ತೊಳೆದುಕೊಂಡಿದ್ದರು. +ಈ ನಡುವೆ ವೆಂಕೋಬಿಯು ಜೂಜಾಟದಲ್ಲಿ ಜಗಳಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದ. ಸಾಲ ಕೊಟ್ಟವರು ಮನೆ ಬಿಟ್ಟು ಕೊಡು ಎಂದು ಧಮಕಿ ಹಾಕಿದ್ದರು. ತಾನು ಸಾಲ ತೀರಿಸಿದ್ದೇನೆ ಎಂದು ವೆಂಕೋಬಿಯೂ ರಂಪ ಮಾಡಿದ. ಕುಡಿದ ಅಮಲಿನಲ್ಲಿ ಆತ ಯಾವುದೋ ಪತ್ರಕ್ಕೆ ಸಹಿ ಕೂಡ ಮಾಡಿಬಿಟ್ಟಿದ್ದ. ಇನ್ನೂ ಶಾಲೆಗೆ ಸೇರದ, ಯಾವತ್ತೂ ಹಿತ್ತಿಲ ಮರದ ನೆರಳಲ್ಲೇ ತನ್ನ ಸೊತ್ತು ಕಾಲುಗಳನ್ನು ತಿರುವುಕೊಳ್ಳುತ್ತಾ ಮಣ್ಣಿನಲ್ಲಿ ಆಟವಾಡಿಕೊಳ್ಳುತ್ತಿದ್ದ ಸಂಪತ್ತನ್ನು ತನ್ನ ತಾಯಿ ನಾಳೆಯೊ ನಾಳಿದ್ದೊ ಅಥವಾ ಈ ಸಂಜೆಯೊ ಇಲ್ಲವೇ ಈಗಲೇ ಇನ್ನೊಂದಿಷ್ಟು ಹೊತ್ತಾದ ಮೇಲೆ ಬರಬಹುದು ಎಂದು ಆಗಾಗ ದಾರಿ ನೋಡುತ್ತಿದ್ದವನು; ಆಹಿತ್ತಲಿನ ಯಾವುದೋ ಒಂದು ಹುಳದಂತೆ ಅಲ್ಲೇ ಬಿದ್ದಿರುತ್ತಿದ್ದ. ಹುಟ್ಟಿದ ನಂತರ ಆತ ಪೋಲಿಯೋದಿಂದಾಗಿ ಎರಡೂ ಕಾಲುಗಳನ್ನು ವಿಕಲಗೊಳಿಸಿಕೊಂಡೇ ಬಂದಿದ್ದ. ಯಾವ ಕೈಮದ್ದಿಗೂ ಸಂಪತ್ತನ ಕಾಲುಗಳು ಸರಿಯಾಗಿರಲಿಲ್ಲ. ಇದು ವೆಂಕೋಬಿಯ ಕರ್ಮವೆಂದು ಪ್ರಶಾಂತನೇ ಹಿಂದೆ ಜರಿಯುವುದಿತ್ತು. ಯಶವಂತನ ಬಗ್ಗೆ ಈಗ ಯಾರೂ ಯೋಚಿಸುತ್ತಿರಲಿಲ್ಲ. ಆತನೂ ಅದೇ ಹಾದಿಯಲ್ಲಿದ್ದ. ಅವನ ಸುಖವೇ ಅವನಿಗೆ ಮುಖ್ಯವಾಗಿತ್ತು. ತ್ರಿವೇಣಿಯು ರಾತ್ರಿ ವೇಳೆ ರಮ್ಯವಾದ ಕನಸುಗಳು ಬಾರದಿರಲಿ ಎಂದು ಎಷ್ಟೇ ಪ್ರಾರ್ಥಿಸಿ ಮಲಗಿದರೂ ಅವು ಅವಳನ್ನು ಬಿಡದೆ ದಟ್ಟವಾದ ಕತ್ತಲ ಬೆಟ್ಟಗಳ ಮರೆಯಿಂದ ಅಟ್ಟಿಸಿಕೊಂಡು ಬರುತ್ತಿದ್ದವು. ಆಕೆ ಒಬ್ಬಂಟಿಯಾಗಿ ಆ ಬೆಟ್ಟದ ಕಣಿವೆಯೊಳಕ್ಕೆ ಧುಮುಕಿ ತಪ್ಪಿಸಿಕೊಳ್ಳಲು ಓಡಿದರೂ ಆ ರಮ್ಯ ಪುರುಷ ಬಿಡುತ್ತಿರಲಿಲ್ಲ. ಹಾರಿ ಬಂದು ಬಿಗಿದಪ್ಪಿಕೊಳ್ಳುತ್ತಿದ್ದ. ಅವಳ ಮೈ ತುಂಬ ಬೆವರ ಹೊಳೆ ಹರಿಸುತ್ತ ಅದರಲ್ಲಿ ಮೀಯುತ್ತಿದ್ದ. ಬೇಡ….ಬೇಡ….ಬಿಟ್ಟು ಬಿಡೆಂದು ಬೇಡಿದರೂ ರಮ್ಯ ಪುರುಷ ತನ್ನ ರೆಕ್ಕೆ ಮೇಲೆ ಕೂರಿಸಿಕೊಂಡು ಆಕಾಶಕ್ಕೆ ಹಾರಿ ಹೋಗುತ್ತಿದ್ದ. ಬೆಳಗಾಗಿ ಎದ್ದಾಗ ತ್ರಿವೇಣಿಯ ಮೈಯೆಲ್ಲಾ ಭಾರವಾಗಿರುತ್ತಿತ್ತು. ಯಾರೋ ತನ್ನ ಮೈಯೊಳಗೆ ಕದ್ದು ಕುಳಿತಿದ್ದಾರೆ ಎಂಬ ಭಯ ಸುಳಿಯುತ್ತಿತ್ತು. +ಯಶವಂತನಿಗೆ ತ್ರಿವೇಣಿಯ ನೆನಪಾದರೂ ಎಲ್ಲಿಂದ ಬರಬೇಕು? ಅವನೊ ಯಮುನಳ ಲಂಗ ದಾವಣಿಯ ತೊಡೆ ಮೇಲೆ ತಲೆ ಇಟ್ಟು ಕ್ರಾಂತಿಯ ಕವಿತೆಗಳನ್ನು ವಾಚಿಸುತ್ತಾ ನವ ನಿರ್ಮಾಣದ ಸಮಾಜದಲ್ಲಿ ತಮ್ಮ ಪಾತ್ರವೇನು ಎಂದು ಭಾಷಣ ಬಿಗಿಯುತ್ತಿದ್ದ. ಮುಗ್ಧೆಯಾದ ಯಮುನೆ ಬಟ್ಟಲುಗಣ್ಣಲ್ಲಿ ಅವನ ಮಾತು, ರೂಪ, ಲಾಲಿತ್ಯವನ್ನೆಲ್ಲ ತುಂಬಿಕೊಂಡು ಎದೆಗೆ ಒತ್ತಿಕೊಳ್ಳುತ್ತಿದ್ದಳು. ಯಶವಂತ ದಿನ ಕಳೆದಂತೆಲ್ಲ ತಾನು ಉಳಿದವರೆಲ್ಲರಿಗಿಂತ ಭಿನ್ನ ಎಂದು ಭಾವಿಸಿದ. ಮೇಲರಿಮೆ ಅವನೊಳಗೆ ಮನೆ ಮಾಡಿಕೊಂಡಿತು. ಆಯ ತಪ್ಪಿದ ಮನೆಯ ದುರಂತಗಳಿಂದಲೂ ಆತ ತಪ್ಪಿಸಿಕೊಳ್ಳಬೇಕಿತ್ತು. ಮೈಸೂರಿನಲ್ಲೇ ಕುಂಬಾರ ಕೊಪ್ಪಲಿನಲ್ಲಿ ಪುಟ್ಟದಾದ ಮನೆಯನ್ನು ಬಾಡಿಗೆಗೆ ಪಡೆದು ಸಂಸಾರ ಹೂಡಿಬಿಡೋಣವೇ ಎಂದು ಆತ ಆತುರ ಮಾಡಿದ. +ಕ್ರಾಂತಿಕಾರಿ ಪ್ರೊಫೆಸರ್ ಈ ನಡುವೆ ಅಮೆರಿಕಾದ ಅಯೋವಾ ಯೂನಿವರ್ಸಿಟಿಗೆ ವಿಸಿಟಿಂಗ್ ಫೆಲೊ ಆಗಿ ಹೋಗಬೇಕಾಗಿ ಬಂತು. ಸಸ್ಯ ವಿಜ್ಞಾನದಲ್ಲಿ ಅವರದು ಅದ್ವಿತೀಯ ತಿಳುವಳಿಕೆ. ಅದರಲ್ಲೂ ಸಸ್ಯ ಸಂಕುಲದ ದೇಶೀಯ ವೈದ್ಯ ಪದ್ಧತಿಯ ಬಗೆಗೂ ಅವರು ಅಪಾರವಾಗಿ ತಿಳಿದುಕೊಂಡಿದ್ದರು. ಕ್ರಾಂತಿಕಾರಿ ಆಗಿದ್ದರೂ ಅವರ ಸಂಶೋಶನಾ ತಿಳುವಳಿಕೆಯು ಪ್ರಶ್ನಾತೀತವಾಗಿತ್ತು. ಹಾಗಾಗಿಯೇ ಅವರು ಅಯೋವಾ ಯೂನಿವರ್ಸಿಟಿಗೆ ಬೇಕಾಗಿದ್ದರು. ಪ್ರೊಫೆಸರ್ ಎಂದಿನಂತೆ ಯಶವಂತನನ್ನೂ ಯಮುನಳನ್ನೂ ಕಾವೇರಿ ನದಿಯ ಬಲಮುರಿ ತೀರಕ್ಕೆ ಕರೆದುಕೊಂಡು ಹೋಗಿ ಸಂಜೆ ಕಳೆದು ಯುಕ್ತಿಯನ್ನು ತುಂಬಿದ್ದರು. ಅಂತೆಯೇ ಅಮೆರಿಕಾಕ್ಕೆ ಹೊರಟು ಅಲ್ಲಿನ ಲೋಕದಲ್ಲಿ ಮುಳುಗಿದರು. ಯಶವಂತ ತಾನೂ ಕೂದ ನಾಳೆ ಅಮೆರಿಕಾದ ಯಾವುದಾದರೊಂದು ಯೂನಿವರ್ಸಿಟಿಯಲ್ಲಿ ನೆಲೆ ಕಂಡುಕೊಳ್ಳಬೇಕೆಂದು ಆಸೆಪಟ್ಟ, ಅಂತಹ ಕಲ್ಪನೆಯನ್ನು ಯಮುನಳಿಗೆ ಮುತ್ತಿನ ಮಣಿಯಂತೆ ಪೋಣಿಸಿದ. +ತನ್ನ ತಮ್ಮ ಯಶವಂತ ಈ ಮಟ್ಟ ಮುಟ್ಟಿದ್ದಾನೆಂದು ಗೊತ್ತು ಮಾಡಿಕೊಳ್ಳುವುದಕ್ಕಾದರೂ ಅವರಿಗೆ ಸಮಯ ಎಲ್ಲಿತ್ತು. ಅಸ್ತಿತ್ವದ ಹುಡುಕಾಟದಲ್ಲಿ‌ಅಣ್ಣಂದಿರು ಸಂಬಂಧಗಳನ್ನೇ ಕಳೆದುಕೊಂಡಿದ್ದರು. ರೇಣುಕವ್ವ ಕುಗ್ಗಿಹೋಗಿದ್ದರು. ಮಗ ಪ್ರಶಾಂತ ಚಿನ್ನದ ಹುಚ್ಚಿಗೆ ಸಿಲುಕಿರುವನೆಂದು ಅನಿಸಿದರೂ ಆಕೆ ಏನನ್ನೂ ಮಾಡಲಾರದವಳಾಗಿದ್ದಳು. ಹೆತ್ತ ತಾಯಿಯಾಗಿ ನಿನಗೆ ನಾನು ಸುಳ್ಳು ಹೇಳುವುದುಂಟೇ ಮಗನೇ, ನಾನು ಮಾತ್ರ ಚಿನ್ನ ಬಚ್ಚಿಟ್ಟಿರುವ ಗುರುತು ಕಾಣೆ ಎಂದು ತಾಳಿಯ ಮೇಲೆ ಆಣೆ ಮಾಡಿದರೂ ಪ್ರಶಾಂತ ನಂಬುತ್ತಿರಲಿಲ್ಲ. ಎಲ್ಲೋ ಈಕೆ ಕಿವಿ ಕಿತ್ತರೂ ಕಿರಿ ಮಗ ಲೇಸು ಎಂಬಂತೆ ಯಶವಂತನ ಭವಿಷ್ಯಕ್ಕಾಗಿ ಇಲ್ಲವೆ ತ್ರಿವೇಣಿಯ ಮದುವೆಗಾಗಿ ಗುಟ್ಟನ್ನು ಬಿಡುತ್ತಿಲ್ಲವೆಂದು; ಎಷ್ಟೋ ಬಾರಿ ಪೀಡಿಸಿ ಸಾಕಾಗಿ ಕೊನೆಗೆ ವಾಮ ಮಾರ್ಗ ಹಿಡಿದಿದ್ದ. ವೆಂಕೋಬನ ಹೆಂಡತಿ ಹುಚ್ಚಿ ಆಗುವುದೊಂದು ಬಾಕಿ ಇತ್ತು. ಆದದ್ದು ಆಗಿ ಹೋಯಿತು, ಮಕ್ಕಳಿಗಾಗಿಯಾದರೂ ಆ ಮನೆಯಲ್ಲೇ ಹೋಗಿ ನೆಲೆಸುವೆ ಎಂದು ವೆಂಕೋಬನ ಹೆಂಡತಿ ತನ್ನ ಅಣ್ಣ ಗಜಾನನನ್ನು ವಿನಂತಿಸಿಕೊಂಡಿದ್ದರೂ ಆತ ಅಕೆಯ ಮೇಲೇ ರೇಗಾಡಿ ಬಾಯಿ ಮುಚ್ಚಿಸಿದ. ರೇಣುಕವ್ವನ ಬೆನ್ನು ಕಚ್ಚಿಕೊಂಡು ವೆಂಕೋಬಿಯ ಮಕ್ಕಳು ಉಳಿದಿದ್ದರು. ಈಗ ಯಶವಂತ ಹಿಂದಿನಂತೆ ಮೈಸೂರಿನ ಬೀದಿಗಳಲ್ಲಿ ವಿಕ್ಷಿಪ್ತವಾಗಿ ಅಲೆಯುವುದು ತಪ್ಪಿ; ಯಮುನಳ ಜೊತೆ ಕಾವೇರಿ ನದಿಯ ದಂಡೆಯ ದಟ್ಟ ಹಸಿರ ಮರೆಯಲ್ಲಿ ವಿವರಿಸುವುದು ಹೆಚ್ಚಾಗಿತ್ತು. ಪರಿಣಾಮ ಸಹಜವಾಗಿಯೇ ಆಗಿತ್ತು. ಯಮುನ ಗರ್ಭಿಣಿಯಾಗಿದ್ದಳು. ಯಶವಂತ ವಿಷಯ ತಿಳಿದು ಬೇಸರಗೊಂಡಿದ್ದ. ಪ್ರೊಫೆಸರ್ ಹಿಂತಿರುಗುವ ತನಕ ತಾವು ಮುಂದುವರಿಯಬಾರದು ಎಂದು ತೀರ್ಮಾನಿಸಿಕೊಂಡಿದ್ದರು. ಪ್ರಕ್ರಿತಿ ಅವರ ನಿರ್ಧಾರವನ್ನು ಬದಲಿಸಿತ್ತು. ಯಮುನಳ ಎಂ.ಎ ಪರಿಕ್ಷೆಗಳು ಮುಗಿದು ಆಕೆ ಊರಿಗೆ ಹೇಗೆ ಹೋಗುವುದೆಂದು ಇಕ್ಕಟ್ಟಿನಲ್ಲಿ ನಿಂತಿದ್ದಳು. ತಾನೆಲ್ಲೊ ದುಡುಕಿದೆನೇ ಎಂದು ಯಾವುದೋ ಪಾಪ ಪ್ರಜ್ಞೆ ಕಾಡತೊಡಗಿತು. ಆದರೂ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಕಂದನ ಬಗ್ಗೆ ಮಮಕಾರದಲ್ಲಿ ಕಲ್ಪಿಸುತ್ತಾ ಒಂದು ಕ್ಷಣ ವಿಸ್ಮಯ ಒಂದು ಕ್ಷಣ ಭಯ ಇನ್ನೊಂದು ಕ್ಷಣ ಎಂತದೋ ಜೀವ ಸಂಭ್ರಮದ ಕಂಪನ ಮತ್ತೊಂದು ಕ್ಷಣ ತಾಯಿ ಆಗುತ್ತಿರುವ ದಿವ್ಯತೆಯಲ್ಲಿ ಪ್ರತಿಯೊಂದು ಕ್ಷಣವನ್ನೂ ಹೊತ್ತುಕೊಂಡು ಯಶವಂತನ ಹಿಂದೇ ಸುತ್ತುತ್ತಿದ್ದಳು. +ಯಮುನಳ ಹೊಟ್ಟೆಯಲ್ಲಿ ಮೊಳಕೆಯೊಡೆಯುತ್ತಿರುವ ಕೂಸಿನ ಬಗ್ಗೆ ಯಶವಂತನ ಕ್ರಾಂತಿಕಾರಿ ಮನಸ್ಸು ವಾತ್ಸಲ್ಯಕ್ಕೆ ಒಳಗಾದದ್ದು ಕಡಿಮೆಯೇ. ಪ್ರೊಫೆಸರ್ ಬಂದು ಯೂನಿವರ್ಸಿಟಿಯಲ್ಲಿ ಕೆಲಸ ಕೊಡಿಸಿ ಆದ ಮೇಲೆಯೇ ಮಕ್ಕಳು ಪಡೆಯಬೇಕೆಂದು ಆತ ಲೆಕ್ಕ ಹಾಕಿದ್ದ. ಊರವರ ಉಸಾಬರಿ ಅವನಿಗೆ ಇರಲಿಲ್ಲವಾದ್ದರಿಂದ ಈಗ ಯಮುನಳು ಗರ್ಭಿಣಿ ಆಗಿರುವುದು ತಲೆ ತಿನ್ನತೊಡಗಿತು. ಹಾಸ್ಟೆಲ್‌ನಲ್ಲಿ ಯಮುನ ಉಳಿಯುವಂತಿರಲಿಲ್ಲ. ಕ್ಯಾಂಪಸ್ಸಿನ ತುಂಬ ಅವರ ಸಂಬಂಧ ಬಯಲಾಗಿತ್ತು. ಅವರು ಸಧ್ಯದಲ್ಲೇ ಸರಳ ವಿವಾಹವನ್ನು ಗಾಂಧಿ ಭವನದಲ್ಲೇ ತಮ್ಮೆಲ್ಲರ ಮುಂದೆ ಆಗುವರೆಂಬ ಮಾತುಗಳು ಗಾಳಿಯಲ್ಲಿ ಬೀಸಾಡಿ ಆ ವಿಷಯವೇ ಯಾವುದೊ ಸುಳಿಗೆ ಸಿಕ್ಕಿಕೊಳ್ಳುತ್ತಿತ್ತು. ಪ್ರೊಫೆಸರ್ ಬರುವುದಕ್ಕೆ ಇನ್ನೂ ಕಾಲ ಸಾಕಷ್ಟು ಉಳಿದಿತ್ತು. ಯಶವಂತ ತನ್ನ ಸಂಶೋಧನೆಯಲ್ಲಿ ಹಿಂದೆ ಬಿದ್ದಿದ್ದ. ಮಾರ್ಗದರ್ಶಕರಾಗಿದ್ದ ಪ್ರೊ ಶುಭಚಂದ್ರ ಆತನಿಗೆ ಐದಾರು ಬಾರಿ ಎಚ್ಚರಿಸಿದ್ದರು. ಬೇಗ ಥೀಸಸ್ ಬರೆದು ಮುಗಿಸಿದರೆ ಅನುಕೂಲ ಎಂದು ಹೇಳಿದ್ದೆಲ್ಲ ಗಾಳಿಯಲ್ಲಿ ತೂರಿಹೋಗಿತ್ತು. +ಆಗಾಗ ಪ್ರಗತಿಪರ ಸಂಘಟನೆಗಳ ಚಳವಳಿಯಲ್ಲಿ ತೊಡಗಿ ಮಾಧ್ಯಮಗಳಲ್ಲೀ ಕಾಣಿಸಿಕೊಂಡ. ಸಂಶೋಧನೆಯ ಜಡ ಲೋಕಕ್ಕಿಂತ ಕ್ರಾಂತಿಯ ಜೀವಂತ ಸಮಾಜವೇ ಮುಖ್ಯ ಎಂದು ವಾದಿಸತೊಡಗಿದ. ಶುಭಚಂದ್ರ ಅವರು ಯಶವಂತನ ಮೇಲಿಟ್ಟ ವಿಶ್ವಾಸವನ್ನು ಕಳೆದುಕೊಂಡರು. ಅಯೋವಾ ಯೂನಿವರ್ಸಿಟಿಯನ್ನು ಸೇರಿಕೊಂಡಿದ್ದ ಕ್ರಾಂತಿಕಾರಿ ಪ್ರೊಫೆಸರ್ ಕಡೆಯಿಂದ ಯಾವ ಸುದ್ದಿಯೂ ಬಂದಿರಲಿಲ್ಲ. ಯಶವಂತ ಬರೆದಿದ್ದ ಒಂದೆರಡು ಪತ್ರಗಳು ಹಿಂತಿರುಗಿ ಬಂದಿದ್ದವು. +ಒಂದೊಂದು ದಿನವೂ ಬೆಟ್ತದಂತೆ ಯಶವಂತನಿಗೆ ಭಾರವಾಗತೊಡಗಿದವು. ಅನಿವಾರ್‍ಯವಾಗಿ ಆತ ಕುಂಬಾರ ಕೊಪ್ಪಲಿನಲ್ಲಿ ಕಿರಿದಾದ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಯಮುನಳ ಕೈಕಾಲು ಮುಖ ಮೈಯೆಲ್ಲವೂ ಊದಿಕೊಳ್ಳುತ್ತಿದ್ದವು. ಸಮಾಜಕ್ಕೆ ಹೆದರಿಯೋ ಏನೋ ಅವರು ರಿಜಿಸ್ಟರ್ ಕಛೇರಿಗೆ ಹೋಗಿ ಮದುವೆ ಮಾಡಿಕೊಂಡಿದ್ದರು. ಇಲ್ಲದಿದ್ದರೆ ಅವರಿಗೆ ಅಷ್ಟು ಸುಲಭವಾಗಿ ಬಾಡಿಗೆಗೆ ಮನೆ ಸಿಗುತ್ತಿರಲಿಲ್ಲ. ಯಶವಂತ ತಾಳ್ಮೆಗೆಟ್ಟು ಯಮುನಳ ಮೇಲೆ ರೇಗಾಡುವುದು ಜಾಸ್ತಿಯಾಗಿತ್ತು. ಅಬಾರ್ಶನ್ ಮಾಡಿಸಲು ಯಶವಂತ ಎಷ್ಟೇ ಕೇಳಿಕೊಂಡರೂ ಯಮುನ ಒಪ್ಪಿರಲಿಲ್ಲ. ಪ್ರೇಮ ವಿವಾಹಕ್ಕೆ ಎಂದೊ ಒಂದಾಗಿ ಕೂಡಿದ ಮೇಲೆ ಅದಕ್ಕೆ ಹುಟ್ಟಿದ ಕೂಸಿನ ಕುತ್ತಿಗೆಯನ್ನು ಹೆತ್ತವರೇ ಕತ್ತರಿಸಿದರೆ ಅದಕ್ಕಿಂತ ಘೋರವಾದ ಮಾನಸಿಕ ಹಲ್ಲೆ ಇನ್ನೊಂದಿಲ್ಲ ಎಂದು ಯಮುನ ವ್ಯಂಗ್ಯವಾಗಿ ಯಶವಂತನ ಥೀಸಸೀನ ವಿಷಯದ ಜಾಡಿಗೆ ಪ್ರತಿಕ್ರಿಯಿಸುವಂತೆ ಹೇಳಿದಾಗ ಆತ ಮರುಮಾತಾಡಲು ಸಾಧ್ಯವಾಗಿರಲಿಲ್ಲ. ಯಮುನ ಬಳ್ಳಾರಿಯ ಕುಗ್ರಾಮದಲ್ಲಿದ್ದ ತನ್ನ ತಾಯಿಗೆ ಸುಳ್ಳು ಪತ್ರ ಬರೆದು ತಾನು ಸಂಶೋಧನೆಗೆ ಸೇರಿಕೊಂಡಿರುವೆ ಎಂದು ಏನೇನೋ ಕತೆ ಕಟ್ಟಿ ನಂಬಿಸಿದ್ದಳು. ಯಮುನಳ ತಾಯಿ ಹೂಮಾರುವ ವೃತ್ತಿಯವಳು. ಅದರಲ್ಲೇ ಬದುಕಿನ ಅರ್ಧ ಪಯಣವನ್ನು ಮುಗಿಸಿದ್ದಳು. +ಗಂಡ ಎಂಬ ಅನಾಮಧೇಯ ಎಂದೊ ಕೂಡಿ ಯಮುನಳ ಜನ್ಮಕ್ಕೆ ಕಾರಣವಾಗಿ ನಿಗೂಢವಾಗಿದ್ದು ಯಾವ್ಯಾವಾಗಲೋ ಬಂದು ಹೋಗುತ್ತಿದ್ದವನು; ಇದ್ದಕ್ಕಿದ್ದ ಹಾಗೆ ಒಂದು ಮಧ್ಯರಾತ್ರಿ ಎದ್ದು; ಯಾರೋ ಕರೆಯುತ್ತಿದ್ದಾರೆಂದು ಕತ್ತಲಿನಲ್ಲಿ ಕರಗಿಹೋಗಿದ್ದ. ಯಮುನಳ ತಾಯಿ ಹುಲಿಗೆವ್ವ ಅಮ್ತಹ ಗಂಡನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೂ ಮಾರುವ ವೃತ್ತಿಯಲ್ಲೇ ಮಗಳನ್ನು ಸಾಕಿದ್ದಳು. ಎಷ್ಟೋ ರಾತ್ರಿ ಅವಳ ಮಲ್ಲಿಗೆ ದಂಡೆಗಾಗಿ ಜನ ಬಂದು ಹೋಗುವುದೂ ಇತ್ತು. ಅದರ ಬಗ್ಗೆ ಯಮುನಳಿಗೆ ಅಸಾಧ್ಯ ಅಸಹನೆ ಇತ್ತು. ಹುಲಿಗೆವ್ವನ ಬಾಳು ಮಾನ ಅಪಮಾನಗಳನ್ನು ದಾಟಿತ್ತು. ದೂರದ ಅಂತಹ ಮಹರಾಜರ ದರ್ಬಾರಾದ ಮೈಸೂರಿನಲ್ಲಿ ತನ್ನ ಮಗಳು ಉನ್ನತ ಶಿಕ್ಷಣದಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ಹುಲಿಗೆವ್ವ ನಂಬಿ ನಿರಾಳವಾಗಿದ್ದಳು. +ಯಮುನೆ ದಿನಗಳು ಹತ್ತಿರವಾದಂತೆಲ್ಲ ಉದ್ವಿಗ್ನಗೊಂಡಿದ್ದಳು. ವೈದ್ಯರು ಪರೀಕ್ಷಿಸಿ ಏನೇನೋ ಹೆದರಿಸಿದ್ದರು. ವಿಪರೀತ ರಕ್ತದ ಒತ್ತಡವಾಗಿ ಯಮುನಳ ಮೈಯೆಲ್ಲ ಕಂಪಿಸುವಂತಾಗಿತ್ತು. ಅದಕ್ಕೆಂದೇ ಹತ್ತಾರು ಬಗೆಯ ಔಷಧಿಗಳನ್ನು ವೈದ್ಯರು ನೀಡಿದ್ದರು. ಒತ್ತಡದ ತೀವ್ರತೆಯಿಂದಾಗಿ ಯಮುನಳ ಕಣ್ಣುಗಳು ಉಬ್ಬಿಕೊಂಡು ರಕ್ತ ಕಾರುವಂತಾಗಿದ್ದವು. ಮೈಯಲ್ಲಿ ನೀರು ತುಂಬಿಕೊಂಡು ನೋಡಲು ಭಯ ತರಿಸುವಂತಾಗಿದ್ದಳು. ಕ್ಯಾಂಪಸ್ಸಿನ ಹಳೆಯ ಗೆಳೆಯರು ಆಕೆಯನ್ನು ಕಂಡು ದಿಗಿಲಾಗಿದ್ದರು. ಅಂತಹ ಹಳ್ಳಿಯ ಚೆಲುವೆಯ ಕೋಮಲ ರೂಪ ಏನಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದರು. ಯಶವಂತನಿಗೂ ತಾನು ಅಷ್ಟೊಂದು ಮೋಹಿಸಿದ್ದು ಈಕೆಯನ್ನಲ್ಲವೇನೋ ಎನಿಸಿ ಹತಾಶೆ ಮತ್ತು ಅಧೀನತೆಯಿಂದ ನರಳತೊಡಗಿದ. ಹೆರಿಗೆ ತೊಂದರೆಯಾಗಿ ತಾನೇನಾದರೂ ಸತ್ತು ಹೋದರೆ ತನ್ನ ಹೆಣವನ್ನು ಊರಿಗೆ ಕೊಂಡೊಯ್ಯಬೇಡ ಎಂದು ಯಮುನ ಕಣ್ಣೀರು ಹರಿಸುತ್ತ ಯಶವಂತನ ಕೈ ಹಿಡಿದು ಏದುಸಿರು ಬಿಡುತ್ತಾ ಉದ್ವೇಗದಲ್ಲಿ ತತ್ತರಿಸುತ್ತಾ ದುಃಖಿಸುವಾಗ ಆತನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. +ಕ್ರಾಂತಿಕಾರಿ ಪ್ರೊಫೆಸರ್‌ಗೆ ಕಷ್ಟವನ್ನು ತಿಳಿಸೋಣ ಎಂದು ಯತ್ನಿಸಿದ್ದೆಲ್ಲ ವಿಫಲವಾಗಿತ್ತು. ಪ್ರೊ. ಶುಭಚಂದ್ರರೂ ಜಾರಿಕೊಂಡಿದ್ದರು. ಆ ನಡುವೆ ವತ್ಸಲ ಸಿಕ್ಕಿ ಆಕೆಯೇ ಯಶವಂತನನ್ನು ಸಮಾಧಾನ ಮಾಡಿ ಹೆರಿಗೆಯ ವೇಳೆ ತಾನೇ ಬಂದು ನಿಂತು ಎಲ್ಲ ಆರೈಕೆ ಮಾಡುವುದಾಗಿ ತಿಳಿಸಿದ್ದಳು. ಯಶವಂತನ ತಲೆಯಲ್ಲಿ ಆಗೊಮ್ಮೆ ಸಣ್ಣಗೆ ಆಸೆಯೊಂದು ತೇಲಿ ಬಂದಿತ್ತು. ಈ ವತ್ಸಲಳನ್ನೇ ಮದುವೆ ಮಾಡಿಕೊಂಡಿದ್ದರೆ ಯಾವ ತರಲೆ ತಾಪತ್ರಯ ಇರುತ್ತಿರಲಿಲ್ಲವೇನೋ. ಒಂದೇ ಜಾತಿಯವರಾಗಿದ್ದರಿಂದ ಮನೆಯವರೂ ಒಪ್ಪಿಕೊಳ್ಳುತ್ತಿದ್ದರೇನೋ ಎಂಬ ಆಲೋಚನೆಯೂ ಬಂದು ಅದರೊಳಗೆ ಯಮುನ ಬೇಡವಾದ ಬಸುರಿನಂತೆ ಕಂಡಳು. ಕಟ್ಟಿಕೊಂಡ ತಪ್ಪಿಗೆ ಅನುಭವಿಸಬೇಕೆಂದು ತನಗೆ ತಾನೇ ಹೇಳಿಕೊಂಡು ಯಶವಂತ ನಾಳಿನ ಖರ್ಚಿಗೆಂದು ಹಣ ಹೊಂದಿಸುತ್ತಿದ್ದ. +ಮೂರನೆ ಪಾದ: +ಅಲ್ಲಿ ದೂರದ ಅಯೋವಾ ಯೂನಿವರ್ಸಿಟಿಯಲ್ಲಿ ಸಂಶೋಧನೆಯ ತಪಸ್ಸಿನಲ್ಲಿ ಮುಳುಗಿದ್ದ ಕ್ರಾಂತಿಕಾರಿ ಪ್ರೊಫೆಸರ್ ಅವರ ಮೇಲೆ ಆಪತ್ತು ಅಪ್ಪಳಿಸಿತ್ತೂ ಕೂಡ. ಕ್ರಾಂತಿಕಾರಿ ಪ್ರೊಫೆಸರ್ ವಿರುದ್ಧ ಕತ್ತಿ ಮಸೆಯುತ್ತಿದ್ದ ನಾಮ-ದಾರಗಳು ಕೇಂದ್ರ ಸರ್ಕಾರಕ್ಕೆ ಗುಪ್ತ ವರದಿ ಕಳುಹಿಸಿ; ಆ ಕ್ರಾಂತಿಕಾರಿ ಪ್ರೊಫೆಸರ್ ನಕ್ಸಲಿಯ ಚಳುವಳಿಯ ನೇತಾರರಲ್ಲಿ ಒಬ್ಬನೆಂದು ತಿಳಿಸಿ. ಮುಂದುವರಿದು; ಆತ ಭಯೋತ್ಪಾದನೆ ಅಂತಹ ಹತ್ತಾರು ಚಟುವಟಿಕೆಗಳಿಗೆ ಮೆದುಳಾಗಿ ಕೆಲಸ ಮಾಡಿದ್ದಾನೆಂದು ದಾಖಲೆಗಳನ್ನು ಸೃಷ್ಟಿಸಿ ಆತನನ್ನು ತತ್‌ಕ್ಷಣವೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಜಾಲ ರೂಪಿಸಲಾಗಿತ್ತು. ರಾತ್ರೋರಾತ್ರಿ ಕ್ರಾಂತಿಕಾರಿ ಪ್ರೊಫೆಸರ್ ಅವರನ್ನು ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅಮೇರಿಕದ ಪೋಲೀಸರು ಕ್ರಾಂತಿಕಾರಿ ಪ್ರೊಫೆಸರ್ ಅವರನ್ನು ಹಿಡಿದಿ ವಿಚಾರಣೆಗೆ ಒಳಪಡಿಸಿ ನಿಗೂಢ ಮಾರ್ಗಗಳಲ್ಲಿ ಅವರನ್ನು ಕೆಡವಿ ಹಾಕಿ ಭಾರತ ಸರ್ಕಾರದ ಜೊತೆ ಮಾತನಾಡಿ ಊಹೆಗೂ ನಿಲುಕದ ರೀತಿಯಲ್ಲಿ ಮಾಹಿತಿ ರೂಪಿಸಿಕೊಂಡು ಭಾರತಕ್ಕೆ ಕಳುಹಿಸಿದ್ದರು. ಭಯೋತ್ಪಾದಕ ವಿಜ್ಞಾನಿ ಎಂದು ಪತ್ರಿಕೆಗಳು ಅವರ ಬಗ್ಗೆ ಬರೆದಿದ್ದವು. ವಿಮಾನದಿಂದ ಇಳಿಯುತ್ತಿದ್ದಂತೆಯೇ ಪ್ರೊಫೆಸರ್ ಅವರನ್ನು ಬಂಧಿಸಲಾಗಿತ್ತು. +ಹಾಗೆಯೇ ಯೂನಿವರ್ಸಿಟಿಯಲ್ಲಿ ಅವರಿಗೆ ಆಪ್ತವಾಗಿದ್ದವರು ಯಾರ್‍ಯಾರು ಎಂದು ಪಟ್ಟಿ ತಯಾರಿಸಿ ಅದರಲ್ಲಿ ಯಶವಂತನನ್ನು ಪ್ರಮುಖವಾಗಿ ಗುರುತಿಸಲಾಗಿತ್ತು. ಸ್ಥಳೀಯ ಪತ್ರಿಕೆಗಳು ದೊಡ್ಡ ರಹಸ್ಯವನ್ನು ಬಯಲು ಮಾಡುವವರಂತೆ ಪುಟಗಟ್ಟಲೆ ಏನೇನೋ ಬರೆದು ಯಶವಂತನ ಫೋಟೋ ಕೂಡ ಮುದ್ರಿಸಿದ್ದವು. ಅದರ ಬೆನ್ನ ಹಿಂದೆಯೇ ಪೋಲೀಸರು ಯಶವಂತನನ್ನು ಹಿಡಿದುಕೊಂಡಿದ್ದರು. ಅವನ ಪರವಾಗಿ ಚಳುವಳಿ ಮಾಡಿ ಬಿಡಿಸಿಕೊಳ್ಳಲು ಈಗ ಯಾರೂ ಇರಲಿಲ್ಲ. ಸ್ವತಃ ಕ್ರಾಂತಿಕಾರಿ ಪ್ರೊಫೆಸರ್ ಅವರೇ ನಿಗುಢವಾದ ರೀತಿಯಲ್ಲಿ ಪೋಲೀಸರಿಂದ ಬಚ್ಚಿಟ್ಟಲ್ಪಟ್ಟಿದ್ದರು. ಅದೇ ವೇಳೆಗೆ ಯಮುನ ಏಳನೇ ತಿಂಗಳಿಗೆ ಪ್ರವೇಶಿಸುತ್ತಿದ್ದವಳು ಮಧ್ಯರಾತ್ರಿಯಲ್ಲಿ ಹೊಟ್ಟೆ ನೋವೆಂದು ನರಳಾಡಿ ಕೂಗಿಕೊಂಡಿದ್ದಳು. ಯಶವಂತನನ್ನು ವಿಚಾರಣೆಗೆಂದು ಪೋಲೀಸರು ಕರೆದುಕೊಂಡಿದ್ದರು. ನಿಮ್ಮ ದಮ್ಮಯ್ಯ ಇದೊಂದು ರಾತ್ರಿ ಕಳೆಯಲು ಬಿಡಿ. ನನ್ನ ಹೆಂಡತಿ ಕಷ್ಟದಲ್ಲಿದ್ದಾಳೆ ಎಂದು ಎಷ್ಟೇ ಆರ್ತನಾಗಿ ವಿನಂತಿಸಿಕೊಂಡಿದ್ದರೂ ಪೋಲೀಸರು ಕರಗಿರಲಿಲ್ಲ. ಹೆಚ್ಚಿಗೆ ಮಾತನಾಡಿದರೆ ಇವಳನ್ನೂ ಸ್ಟೇಷನ್ನಿಗೆ ಎಳೆದುಕೊಂಡು ಹೋಗಬೇಕಾಗುತ್ತದೆ ನಡೆಯೋ ಸೂ…..ಮಗನೇ ಎಂದು ಕುತ್ತಿಗೆ ಹಿಡಿದು ಗುದುಮಿ ಎಳೆದ ಮೇಲೆ ಯಶವಂತನ ಆಕ್ರೋಶವೆಲ್ಲ ತಣ್ಣಗಾಗಿತ್ತು. +ಅಂತಹ ಅವೇಳೆಯಲ್ಲಿ ಪಕ್ಕದ ಮನೆಯ ವಿಧವೆಯೊಬ್ಬಳು ಬಂದು ಕಾಪಾಡಿದ್ದಳು. ಆ ಬಡವೆ ವಿಧವೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೂ ಸಾಧ್ಯವಿರಲಿಲ್ಲ. ಕುಂಬಾರ ಕೊಪ್ಪಲಿನ ಒಂದೆರಡು ಹೆಂಗಸರೇ ಸೇರಿಕೊಂಡು ಯಮುನಳ ಗರ್ಭದ ಹೊರೆಯನ್ನು ಇಳಿಸಿದ್ದರು. ಅವರ ಅದೃಷ್ಟವೊ ದುರಾದೃಷ್ಟವೊ ಹುಟ್ಟುವ ಮೊದಲೇ ಹೊಟ್ಟೆಯಲ್ಲಿ ಮಗು ಸತ್ತು ಹೋಗಿತ್ತು. ಯಮುನ ಗೋಳುಗರೆಯುತ್ತ ಪಕ್ಕದ ಮನೆಯ ವಿಧವೆಯ ಜೊತೆ ಅಂತಹ ಹೆರಿಗೆಯ ಸಾವಿನಂತಹ ಸ್ಥಿತಿಯಲ್ಲಿ ತನ್ನ ಸಂಕಟವನ್ನೆಲ್ಲ ತೋಡಿಕೊಂಡಿದ್ದಳು. ಹೆರಿಗೆ ಮಾಡಿಸಿದ ಆ ವಿಧವೆಯ ಸತ್ತ ಮಗುವಿನ ಮುಖವನ್ನು ಯಮುನಳಿಗೆ ತೋರಿಸಿ; +‘ಎಲ್ಲ ನಿನ್ನಂತೆಯೇ ಇತ್ತು. ಅದೃಷ್ಟವಿಲ್ಲ. ಹೋಗಲಿ ಬಿಡು. ಇನ್ನೊಂದು ಸಲ ಹುಟ್ಟಿ ಬರ್‍ತದೆ’ +ಎಂದು ಹೇಳಿ ಸ್ಮಶಾನದಲ್ಲಿ ಹುಗಿದು ಬಂದಿದ್ದಳು. +ಒಂದು ವಾರವಾದರೂ ತಿಂಗಳಾದರೂ ಮೂರು ತಿಂಗಳಾದರೂ ಯಶವಂತ ಹಿಂದಿರುಗಿ ಬಂದಿರಲಿಲ್ಲ. ಅವನನ್ನು ಪೋಲೀಸರು ಕೊಂದು ಹಾಕಿರುತ್ತಾರೆ ಎಂದೇ ಯಮುನ ದಿನನಿತ್ಯ ಯೋಚಿಸಿ ಹುಚ್ಚಿಯಂತಾಗಿದ್ದಳು. ಅವಳ ಮೇಲೂ ಪೋಲೀಸರು ಒಂದು ಕಣ್ಣು ಇಟ್ಟಿದ್ದರು. ಯಾವ ಪುಣ್ಯವೊ ಏನೊ ಆಕೆಯನ್ನು ಅವರಿನ್ನೂ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿರಲಿಲ್ಲ. ಆದರೂ ಮೂರ್‍ನಾಲ್ಕು ಬಾರಿ ಮನೆಗೆ ಬಂದು ಏನೇನೋ ಹುಡುಕಿ ವಿಚಾರಿಸಿಕೊಂಡಿದ್ದರು. +ಅಲ್ಲಿ ಊರಲ್ಲಿ ಏನೇನೋ ಘಟಿಸುತ್ತಿದ್ದವು. ವೆಂಕೋಬಿಯು ಕುಡಿದು ಕುಡಿದು ಸತ್ತೇ ಹೋಗುವನೆಂದು ಜನ ಆಡಿಕೊಳ್ಳುತ್ತಿದ್ದರು. ಆತನ ಹೆಂಡತಿ ರೇವತಿಯು ಅಣ್ಣನಾದ ಗಜಾನನ ಮುಂದೆ ದೈನೇಸಿಯಾಗಿ ವಿನಂತಿಸಿಕೊಳ್ಳುವುದು ನಡೆದೇ ಇತ್ತು. ನನ್ನ ಕರುಳು ಕರೆಯುತ್ತಿದೆ ಅಣ್ಣಾ. ಆ ಮನೆಗೇ ನಾನು ಸೇರಬೇಕಾದವಳು. ಸಂಪತ್ತನನ್ನು ಬಿಟ್ಟು ಬದುಕಿರಲಾರೆ. ಅವನು ಗಂಡನಾದವನು ಹಾಳಾಗಲಿ, ಆದರೆ ನಾನು ನನ್ನ ಮಕ್ಕಳನ್ನಾದರೂ ಉಳಿಸಿಕೊಳ್ಳುವೆ. ಗಂಡನ ಮನೆಗೆ ಕಳಿಸಣ್ಣ ಎಂದರೂ ಗಜಾನನ ಜಗ್ಗಿರಲಿಲ್ಲ. ವೆಂಕೋಬನ ಪಾಪಗಳಿಂದಲೇ ನಿನಗೆ ಅಂತಹ ಅಂಗವಿಕಲ ಮಗು ಹುಟ್ಟಿರುವುದು ಎಂದು ಗಜಾನನ ರೇಗಾಡಿ; ಮುಂದಿನ ವಾರ ತಾನೇ ಹೋಗಿ ಮಕ್ಕಳನ್ನು ಕರೆದುಕೊಂಡು ಬಂದುಬಿಡಿವೆ ಎಂದು ಹೇಳಿದ್ದವನು ತಿಂಗಳನ್ನೇ ಕಳೆದಿದ್ದ. ಪ್ರಶಾಂತನ ಹೆಂಡತಿ ತುಂಬ ಸಡಗರದಲ್ಲಿ ಇದ್ದಳು. ತನ್ನ ಗಂಡ ಹೇಗಾದರೂ ಮಾಡಿ ಪೂರ್ವಿಕರು ಬಿಟ್ಟಿರುವ ಚಿನ್ನವನ್ನು ಮೋಡಿ ರಾಮಯ್ಯನಿಂದ ಪತ್ತೆ ಮಾಡಿಸಿಯೇ ಬಿಡುವನೆಂದು ಹಿಗ್ಗುತ್ತಿದ್ದಳು. ರೇಣುಕವ್ವ ಎಲ್ಲಾ ದೇವರಿಗೂ ಹರಕೆ ಕಟ್ಟಿಕೊಂಡು ಸುಸ್ತಾಗಿದ್ದಳು. +ತ್ರಿವೇಣಿಯ ರಮ್ಯ ಪುರುಷನ ಕನಸು ರೂಪಾಂತರಗೊಳ್ಳುತ್ತಿತ್ತು. ಅವಳ ದೇಹದ ತುಂಬ ಏನೊ ಪುಳಕ ಕಿಲಕಿಲ ನಗಾಡುತ್ತಿತ್ತು. ರಾತ್ರಿ ಆಯಿತೆಂದರೆ ಸಾಕು; ಅವಳ ಕೋಮಲ ರಾಗಗಳು ಗಾಳಿಯಲ್ಲಿ ತೇಲಿ ಬರುವ ಪುರುಷ ವಾಸನೆಯನ್ನು ಕುಡಿಯುತ್ತಿದ್ದವು. ಆ ಹಳೆಯ ಮನೆಯಲ್ಲಿ ಎಲ್ಲರೂ ಮಲಗಿರುವಾಗ ಸದ್ದಿಲ್ಲದೆ ಮಾಯಾಮೃಗ ಒಂದು ಬಂದು ಅವಳನ್ನು ಎತ್ತಿಕೊಂಡು ಹೋಗುತ್ತಿತ್ತು. ಮೊದಮೊದಲು ವಿಪರೀತ ಅಂಜುತ್ತಿದ್ದ ತ್ರಿವೇಣಿಯು ಆ ನಂತರಕ್ಕೆ ಆ ಮಾಯಾಮೃಗವಿನ್ನೂ ನಡುರಾತ್ರಿಯಾದರೂ ಯಾಕೆ ಬಂದಿಲ್ಲವೊ ಎಂದು ವಿರಹಪಡುತ್ತಿದ್ದಳು. ಆ ರಮ್ಯ ಮಾಯಾಮೃಗದ ಸುಳಿವಾದರೂ ಆ ಮನೆಯ ಅವರವರ ಹಾಡಿನಲ್ಲಿ ಯಾರಿಗೂ ತಿಳಿಯುತ್ತಿರಲಿಲ್ಲ. +ಆ ಒಂದು ರಾತ್ರಿ ಮುಟ್ಟಾಗದ ದಿನ ರಮ್ಯ ಪುರುಷ ತನ್ನೊಳಗೇ ಬೇರುಬಿಟ್ಟಿದ್ದಾನೆಂದು ತ್ರಿವೇಣಿಯ ಅರಿವಿಗೆ ಬಂತು. ಅಂತಹ ಎಲ್ಲ ಹೆಣ್ಣುಮಕ್ಕಳಂತೆಯೇ ಅವಳು ವಿಲವಿಲ ಒದ್ದಾಡಿ ಸಂಕಟದಿಂದ ಕಂಬನಿಗೆರೆಯುತ್ತಾ ಮೂಲೆ ಸೇರಿಕೊಂಡಳು. ರೇಣುಕವ್ವ ತೋಟಕ್ಕೆ ಹೋಗೋಣ ಬಾ; ಅಲ್ಲಿ ವಿಪರೀತವಾಗಿ ಬೇಲಿಯೆಲ್ಲ ಹಾಳಾಗಿ ಹೋಗಿದೆ. ಕಳ್ಳಕಾಕರು ನಾಯಿ ನರಿಗಳು, ದನಕುರಿಗಳು ಬೇಕಾಬಿಟ್ಟಿ ನುಗ್ಗುತ್ತಿವೆ ಎಂದು ಒತ್ತಾಯಿಸಿದರೂ ತ್ರಿವೇಣಿ ತಲೆ ನೋವೆಂದು ಮಲಗಿಬಿಡುತ್ತಿದ್ದಳು. ಎಂದೂ ಆಗದ ವಾಂತಿ ಬಂದು ತಲೆ ಸುತ್ತಿ ಹಿತ್ತಿಲಲ್ಲಿ ಕುಳಿತುಬಿಟ್ಟಿದ್ದಳು. ಹೊಂಗೆ ಮರದ ಕೂಸಿನಂತೆ ತನ್ನ ಸೊಟ್ಟ ಕಾಲುಗಳ ನುಲಿದುಕೊಂಡು ಆಕಾಶವನ್ನೂ ದಾರಿಯನ್ನೂ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಿದ್ದ ವೆಂಕೋಬಿಯ ಮಗ ಸಂಪತ್ತನು ತ್ರಿವೇಣಿಯ ಸ್ಥಿತಿಯನ್ನು ತಿಳಿಯಲಾಗದೆ ಸುಮ್ಮನೆ ನೋಡುತ್ತಿದ್ದ. +ತಾಯಿ ರೇಣುಕವ್ವನಿಗೆ ಹೇಳಿಕೊಳ್ಳಲು ಆಗದೆ ತ್ರಿವೇಣಿಯು ನರಳುತ್ತ ಆ ರಮ್ಯ ಮಾಯಾ ಪುರುಷ ಈ ರಾತ್ರಿಗೆ ಬರಬಹುದೆಂದು ಕಾದೇ ಕಾದರೂ ಅವನ ಸುಳಿವಿಲ್ಲದೆ ನೆರಳುಗಳು ಬಂದು ಅವಳ ಕಣ್ಣುಗಳನ್ನು ಕುಕ್ಕುತ್ತಿದ್ದವು. ಕತ್ತಲೆಯಲ್ಲೇ ಮುಳುಗಿ ಹೋಗುವುದಕ್ಕಾಗಿ ಆಕೆ ಕಾತರಿಸುತ್ತಿದ್ದಳು. ಏಳು ರಾತ್ರಿಗಳು ಕಳೆದರೂ ರಮ್ಯ ಪುರುಷ ಕನಸಿಗೂ ಬರಲಿಲ್ಲ ಆದರೆ ಎಂತೆಂತದೊ ಕನಸುಗಳು ಅವಳ ಗರ್ಭದ ಒಳಗೇ ನರ್ತಿಸಿ ನಗಾಡಿದಂತೆ ಆಗಿ ಆಕೆ ದಿಕ್ಕೆಟ್ಟಿದ್ದಳು. ಭೀತಿಯ ಕನಸಿನಿಂದ ಎಚ್ಚೆತ್ತ ಮಗು ತನ್ನೊಳಗಿನ ಕನಸನ್ನು ಹೇಳಿಕೊಳ್ಳಲಾಗದೆ ದುಃಖಳಿಸುವಂತೆ; ತ್ರಿವೇಣಿಯು ಅತ್ತು ಅತ್ತು ಕಣ್ಣುಗಳು ಕೆಂಪಾಗಿ ಕೆನ್ನೆ ತುದಿಗಳು ಕನ್ಣೀರಿನಿಂದ ತೋಯ್ದು ಮೂಗಿನ ಹೊಳ್ಳೆಗಳೆಲ್ಲ ಕೆಂಪಾಗಿ ನಡುಗುತ್ತಿದ್ದಳು. ಹೆತ್ತ ಕರುಳಿಗೆ ಎಲ್ಲವೂ ಅರ್ಥವಾಗಿಬಿಡುತ್ತದೆ. ರೇಣುಕವ್ವ ಮಗಳ ಸಂಕಟದ ಮೂಲವನ್ನು ಪತ್ತೆ ಮಾಡಿದ್ದಳು. +ತನ್ನ ಮಗಳು ಇಂಥಹ ಕೆಲಸ ಮಾಡಿಕೊಂಡಳೇ; ಯಾವ ಪಾಪಿ ಅವಳ ಮುಟ್ಟಿಬಿಟ್ಟನೊ, ಯಾವ ಮಾಯದಲ್ಲಿ ಅದೆಲ್ಲ ಆಯಿತೊ ಎಂದು ಕುಸಿದು, ಕೊನೆಗೆ ಎದ್ದು ನಿಂತು ತಡ ಮಾಡಿದರೆ ಎಲ್ಲವೂ ಮುಳುಗಿ ಹೋಗುತ್ತದೆ ಎಂದು ಸಾದಾರಳ್ಳಿಯ ಸಿದ್ದವ್ವನನ್ನು ಮನೆಗೆ ಕರೆಸಿಕೊಂಡು ಗುಟ್ಟಾಗಿ ಕೈ ಮದ್ದು ಪಡೆದು ತ್ರಿವೇಣಿಗೆ ಕುಡಿಸಿ ಹೊಟ್ಟೆಯಲ್ಲಿ ಬೇರು ಬಿಡುತ್ತಿದ್ದ ರಮ್ಯ ಪುರುಷನ ಕುಡಿಯನ್ನು ಕತ್ತರಿಸಿ ಹಾಕಿಸಿದಳು. ತ್ರಿವೇಣಿ ಬಾಯಿ ಬಿಡದೆ ಸತಾಯಿಸಿದ್ದಳು. ಆಚೆ ಕೇರಿಯ ಹೊಲೆಯರ ಸುಂದರ ತ್ರಿವೇಣಿಯ ಮೋಹ ಪಾಶಕ್ಕೆ ಸಿಲುಕಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಆತ ಊರಿಗೆ ಬಂದು ಸೇರಿಕೊಂಡಿದ್ದವನು ತ್ರಿವೇಣಿಯನ್ನು ವಶಪಡಿಸಿಕೊಂಡಿದ್ದ. ಕತ್ತಲೆಯಲ್ಲೇ ಎಲ್ಲವೂ ನಡೆದು ಹೋಗಿತ್ತು. ಆ ಹೊಲೆಯರ ಸುಂದರನನ್ನು ಹಿಡಿದು ಹೀಗೆ ಮಾಡಿರುವೆಯಲ್ಲಾ ಸರಿ ಏನಯ್ಯಾ; ನೀನೇ ಈಗ ಈಕೆಯನ್ನು ಲಗ್ನವಾಗು ಎಂದು ಕೇಳುವಂತೆಯೂ ಇರಲಿಲ್ಲ. ಅವನು ಬೆಂಗಳೂರಿಗೆ ಓಡಿ ಹೋಗಿ ಯಾವುದೋ ಗಲ್ಲಿಯಲ್ಲಿ ಸೇರಿಕೊಂಡಿದ್ದ. +ಯಶವಂತನಿಗೆ ಇದು ಗೊತ್ತಾಗುವುದಾದರೂ ಹೇಗೆ? ಆತ ಯಮುನಳು ಏನಾದಳೆಂಬುದನ್ನೇ ತಿಳಿಯದಾಗಿದ್ದಾಗ ಊರಿನ ಸ್ಥಿತಿಯನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗಿರಲಿಲ್ಲ. ಆತನಿಗೆ ಕೊಡಲಾಗಿದ್ದ ಫೆಲೋಷಿಪನ್ನು ಯೂನಿವರ್ಸಿಟಿ ಹಿಂತೆಗೆದುಕೊಂಡಿತ್ತು. ಯಮುನ ಆತ್ಮಹತ್ಯೆಗೆ ಯತ್ನಿಸಿದ್ದರೆ ಅಚ್ಚರಿ ಏನಿಲ್ಲ. ಪಕ್ಕದ ಮನೆಯ ವಿಧವೆ ಯಮುನಳ ಮೇಲೆ ತೋರಬಹುದಾದಷ್ಟು ಮಾನವೀಯತೆಯನ್ನು ತೋರಿ ಸಾಕಾಗಿ ಸುಮ್ಮನಾಗಿದ್ದಳು. ಕ್ರಾಂತಿಕಾರಿ ಪ್ರೊಫೆಸರ್ ಏನಾದರೆಂಬುದು ನಿಗೂಢವಾಗಿ ಯಶವಂತ ಕಂಗೆಟ್ಟು ಅವರ ಸಹವಾಸದಿಂದಲೇ ಹೀಗಾಯಿತು ಎಂದು ತಾಳ್ಮೆ ಕಳೆದುಕೊಂಡು ಅಸಹಾಯಕತೆಯಲ್ಲಿ ಮನದಲ್ಲೇ ಅವರಿಗೆ ಹಿಡಿ ಶಾಪ ಹಾಕಿದ. ರೇಣುಕವ್ವ ಮಗಳನ್ನು ಮತ್ತೂ ಜೋಪಾನ ಮಾಡಬೇಕಿತ್ತು. ತಾನು ಬದುಕಿದ್ದು ಮಾಡಬೇಕಾದ್ದೇನಿದೆ ಎನ್ನುತ್ತಾ ಸಾಯುವುದೇ ಲೇಸೆನ್ನುತ್ತಿದ್ದಳು. +ಇತ್ತೀಚೆಗೆ ಊರಿಗೆ ಗುಡ್ಡದಿಂದ ತೋಳಗಳು ನುಗ್ಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದು ನಿಜವೂ ಇತ್ತು. ರಾತ್ರಿ ವೇಳೆ ತೋಳಗಳು ಊರ ಮುಂದಿನ ಕಟ್ಟೆಯ ಬಳಿಯೇ ಹಸಿದು ಊಳಿಡುವುದು ಅನೇಕರ ನಿದ್ದೆಯಲ್ಲಿ ಬಂದು ಹೋಗುತ್ತಿತ್ತು. ತೋಳಗಳು ಹಾಗೆ ಕೂಗುವುದನ್ನು ಸಹಿಸಲಾರದೆ ರೇಣುಕವ್ವ ಯಾವ ಕೇಡಿಗೆ ಈ ತೋಳಗಳು ಹೀಗೆ ಕೂಗುತ್ತಿವೆಯೋ ಎಂದು ಮಗಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದಳು. ರೇಣುಕವ್ವನ ನಿದ್ದೆಯನ್ನು ಅವು ತಿಂದಿದ್ದವು. ಒಂದೆರಡು ಬಾರಿ ಕನಸಿಗೆ ಬಂದು ತನ್ನ ಮಗಳಾದ ತ್ರಿವೇಣಿಯನ್ನೇ ಗುಡ್ಡದ ಬಯಲಲ್ಲಿ ಓಡಾಡಿಸಿ ಹಿಡಿದು ಗವಿಯ ಒಳಕ್ಕೆ ಕಚ್ಚಿ ಎಳೆದುಕೊಂಡು ಹೋದಂತಾಗಿತ್ತು. ತೆಂಗಿನ ತೋಟಗಳಲ್ಲಿ ಕಳ್ಳತನ ಮಾಡುವ ಕಳ್ಳಪೀರನು ಖುದ್ದಾಗಿ ಆ ತೋಳಗಳನ್ನು ನೋಡಿದ್ದಾಗಿ ವರ್ಣಿಸಿದ್ದನ್ನು ಕೇಳಿಸಿಕೊಂಡಿದ್ದ ತ್ರಿವೇಣಿಯು ನಡುಗಿಹೋಗಿದ್ದಳು. +ಕೊಬ್ಬಿದ್ದ ಆ ತೋಳಗಳು ಗರಗಸದ ಹಲ್ಲುಗಳಲ್ಲಿ ಅಷ್ಟುದ್ದ ಕೆನ್ನಾಲಿಗೆಯ ಜೋತಾಡಿಸಿಕೊಂಡು ಬೇಟೆಯ ದಾಹದಲ್ಲಿ ಜೊಲ್ಲು ಸುರಿಸುತ್ತಿದ್ದವು ಎಂದು ಹೇಳಿದ್ದ. ವೆಂಕೋಬಿ ಮಾತ್ರ ಹಳ್ಳದ ತಂಪಿನಲ್ಲೇ ಕುಡಿದು ಬಿದ್ದಿರುತ್ತಿದ್ದ. ಪ್ರಶಾಂತ ನಿಂತಲ್ಲಿ ನಿಲ್ಲಲಾರದೆ ಮೋಡಿ ರಾಮಯ್ಯ ನಾಳೆ ನಾಡಿದ್ದು ಬರಬಹುದೆಂದು ಉದ್ವಿಗ್ನಗೊಳ್ಳುತ್ತಿದ್ದ. ಗಜಾನನ ಹಠವೂ ವಿಪರೀತವಾಗಿತ್ತು. ಆ ವೆಂಕೋಬಿಯೇ ಬಂದು ತಪ್ಪಾಯಿತು ಎಂದು ಬಪ್ಪಿ ಕುಡಿತ ಮತ್ತು ಇಸ್ಪೀಟಾಟಗಳನ್ನು ಬಿಟ್ಟು ಇನ್ನು ಮುಂದೆ ಸರಿಯಾಗಿ ಇರುತ್ತೇನೆ ಎಂದು ಪಂಚಾಯ್ತಿಯಲ್ಲಿ ಮಾತು ಕೊಟ್ಟರೆ ಮಾತ್ರ ತಂಗಿಯನ್ನು ಆತನೊಡನೆ ಕಳಿಸಿ ಕೊಡುವುದಾಗಿ ಶರತ್ತು ಹಾಕಿದ್ದ. ರೇಣುಕವ್ವ ವೆಂಕೋಬಿಯನ್ನು ವಿನಂತಿಸಿಕೊಂಡಿದ್ದರೂ ಆತ ಹಳ್ಳದ ಬದಿಯಲ್ಲಿ ಮುಳುಗಿ ಹೋಗುತ್ತಿದ್ದ. ಆತನನ್ನು ಗರ್ಭದಿಂದ ಹೆತ್ತು ಕೊಂಡಷ್ಟು ಸುಲಭವಾಗಿ ಆ ಹಳ್ಳದ ಬದಿಯೊಳಗಿಂದ ಎತ್ತಿಕೊಳ್ಳಲು ರೇಣುಕವ್ವನಿಗೆ ಸಾಧ್ಯವಿರಲಿಲ್ಲ. +ಯಶವಂತನ ಪಾಡು ಹೇಳತೀರದಾಗಿತ್ತು. ಯಾವ ಕ್ರಾಂತಿಯೂ ಸಂಶೋಧನೆಯೂ ಆದರ್ಶವೂ ಆತನಿಗೆ ಈಗ ಬೇಕಿರಲಿಲ್ಲ. ಭಗ್ನಗೊಂಡು ಹತ್ತಿ ಉರಿವ ಹೂದೋಟದಂತೆ ಅವನ ಮನಸ್ಸು ನಲುಗಿ ಹೋಗಿತ್ತು. ಇದ್ದಕ್ಕಿದ್ದಂತೆ ಯಮುನಳ ಅವ್ವ ಹುಲಿಗೆವ್ವ ಮೈಸೂರಿಗೆ ಬಂದುಬಿಟ್ಟಿದ್ದಳು. ಹುಲಿಗೆವ್ವನ ಸಿರಿಗೆ ಪಾರವೇ ಇರಲಿಲ್ಲ. ಯಮುನ ಆಕಸ್ಮಿಕವಾಗಿ ಸುಧಾರಿಸಿಕೊಂಡಿದ್ದಳು. ಹುಲಿಗೆವ್ವನನ್ನು ಮೈಸೂರು ಸುತ್ತಿಸಿದಳು. ಮಗಳು ಸ್ವರ್ಗದಲ್ಲೇ ಇದ್ದಾಳೆಂದು ಹುಲಿಗೆವ್ವ ನಂಬಿದಳು. ಆದರೂ ಏನೊ ವ್ಯತ್ಯಾಸವಾಗಿದೆ ಎಂದು ಬಂದ ಅನುಮಾನವನ್ನು ನುಂಗಿಕೊಂಡು ಇನ್ನು ಯಾವಾಗ ನಿನ್ನ ಓದೆಲ್ಲವೂ ಮುಗಿಯುವುದೆಂದು ವಿಚಾರಿಸಿ ಮದುವೆಯ ಪ್ರಸ್ತಾಪ ಮಾಡಿ ತನ್ನ ದೂರದ ಸಂಬಂಧಿಕರ ಹುಡುಗನ ಬಗ್ಗೆ ತಿಳಿಸಿ. ಆತ ನಿನ್ನನ್ನು ಲಗ್ನವಾಗಲು ಒಪ್ಪಿದ್ದಾನೆಂದು ಹುಲಿಗೆವ್ವ ಸಂಭ್ರಮದಿಂದ ಮಾತನಾಡುತ್ತಿದ್ದಳು. +ಯಮುನ ಬಾಯಿ ತೆರೆಯಲಾರದೆ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಿದ್ದಳು. ತಾಯಿ ಬಂದ ಕೂಡಲೇ ಪಕ್ಕದ ಮನೆಯ ವಿಧವೆಯನ್ನು ಕಂಡು ಯಾವ ಕಾರಣಕ್ಕೂ ಬಂದಿರುವ ತನ್ನ ತಾಯಿಯ ಜೊತೆ ಹೆರಿಗೆ ವಿಷಯವನ್ನು ತಿಳಿಸಬಾರದು ಎಂದು ಕೈಹಿಡಿದು ವಿನಂತಿಸಿಕೊಂಡಿದ್ದಳು. ದಿಕ್ಕೆಟ್ಟವರ ಪಾಡನ್ನು ಉಂಡಿದ್ದ ಆ ವಿಧವೆಯು ಹುಲಿಗೆವ್ವನಿಗೆ ಏನನ್ನೂ ತಿಳಿಸಿರಲಿಲ್ಲ. ಯಮುನ ಆ ರಾತ್ರಿಯೆಲ್ಲಾ ಯೋಚಿಸಿದ್ದಳು. ಯಶವಂತ ಇನ್ನು ಜೀವಂತವಾಗಿ ಹಿಂತಿರುಗಲಾರ ಎಂದೇ ಲೆಕ್ಕಿಸುತ್ತಿದ್ದಳು. ನಕ್ಸಲೈಟ್ ಆದವರನ್ನು ಪೋಲೀಸರು ಕ್ರೂರವಾಗಿ ಕೊಂದೇ ಬಿಡುತ್ತಾರೆ ಎಂಬ ಕತೆಗಳು ಕ್ಯಾಂಪಸ್ಸಿನ ತುಂಬ ಹರಿದಾಡಿ ಇಷ್ಟು ತಿಂಗಳಾದರೂ ಯಶವಂತ ಪತ್ತೆಯೇ ಇಲ್ಲವೆಂದರೆ ಅವನನ್ನು ಮುಗಿಸಿರಬೇಕು ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಂತಹ ಯಶವಂತನಿಗಾಗಿ ತಾನು ಅಷ್ಟೊಂದು ಹಂಬಲಿಸಿ ತಲೆ ಕೆಡಿಸಿಕೊಂಡಿದ್ದೆನಲ್ಲಾ ಎಂದು ಆ ವತ್ಸಲ ಹಿಂದಿನದನ್ನು ನೆನೆದು ಬೆವೆತುಹೋಗಿದ್ದಳು. ಅಂತೂ ಹುಲಿಗೆವ್ವ ಮಗಳ ಓದು ಸಾಕು ಎಂದು ತೀರ್ಮಾನಿಸಿ ಊರಿಗೆ ಕರೆದುಕೊಂಡು ಹೋಗಿ ಲಗ್ನ ಮಾಡುವುದೇ ಸರಿ ಎಂದುಕೊಳ್ಳುತ್ತಿದ್ದಳು. ಸದ್ಯ ಈ ಎಲ್ಲಾ ಹಿಂಸೆಯಿಂದ ತಪ್ಪಿಸಿಕೊಂಡರೆ ಸಾಕೆಂದು ಯಮುನಳೂ ಕೂಡ ಊರಿಗೆ ಹೋಗಲು ಒಪ್ಪಿದ್ದಳು. ಮದುವೆ, ಯಶವಂತ, ನಾಳಿನ ಬದುಕು ಇವನ್ನೆಲ್ಲ ಮುಂದೆ ಯೋಚಿಸಿದರೆ ಆಯಿತು ಎಂದು ಹುಲಿಗೆವ್ವನನ್ನು ಹಿಂಬಾಲಿಸಿದ್ದಳು. +ಅತ್ತ ಯಶವಂತ ತಂಗಿ ತ್ರಿವೇಣಿ ಗರ ಬಡಿದವರಂತೆ ಕತ್ತಲೆಯ ಮರೆಯಲ್ಲಿ ಜೋಮು ಹಿಡಿದ ಮನದಲ್ಲಿ ಬಿದ್ದುಕೊಂಡಿದ್ದಳು. ತೋಳಗಳು ಊರ ಸುತ್ತ ಸುತ್ತುತ್ತಿವೆ ಎಂದು ಯಾರೋ ಹೇಳುವುದು ಅವಳ ನಾಭಿಯ ತಳವನ್ನು ಚುಚ್ಚಿದಂತಾಗಿ ದಿಗಿಲುಗೊಳ್ಳುತ್ತಿದ್ದಳು. ದಟ್ಟವಾದ ಅಮಾವಾಸ್ಯೆಯ ಕಾರ್ಗತ್ತಲು ಹೂಂಕರಿಸಿಕೊಂಡು ಬರುತ್ತಿತ್ತು. ಅದರ ಜೊತೆ ಸೊಕ್ಕಿನಿಂದ ಕುಣಿಯಲು ರಾತ್ರಿಯು ಉದ್ರೇಕಗೊಳ್ಳುತ್ತಿತ್ತು. ಪ್ರಶಾಂತ ಮನಸ್ಸನ್ನು ಹದ ಮಾಡಿಕೊಂಡಿದ್ದ. ಬಚ್ಚಿಟ್ಟಿರುವ ಚಿನ್ನದ ನಿಧಿಯನ್ನು ಪತ್ತೆ ಮಾಡುವ ಎಲ್ಲಾ ವಾಮಾಚರಣೆಗಳನ್ನು ಕೈಗೊಳ್ಳುತ್ತಿದ್ದ. ಆಗಲೇ ಮೋಡಿ ರಾಮಯ್ಯ ಬಂದು ಮಾರಿ ಗುಡಿಯಲ್ಲಿ ಬೀಡು ಬಿಟ್ಟಿದ್ದ. ಆಕಾಶವೆಲ್ಲ ಕತ್ತಲೆಯ ಮಹಾ ಮಳೆಯನ್ನು ಸುರಿಸುತ್ತಿತ್ತು. ಹಿತ್ತಲ ಹೊಂಗೆ ಮರವು ವೆಂಕೋಬಿಯ ಮಗ ಸಂಪತ್ತನ ಮುರುಕು ಆಟಿಕೆಗಳನ್ನು ಕಾಯುತ್ತ ನಿಂತಿತ್ತು. ಕತ್ತಲ ಕದಿಯುತ್ತ ಪ್ರಶಾಂತನ ಮನಸ್ಸು ಚಿನ್ನದ ಅಮಲಿನಲ್ಲಿ ಬೇಯುತ್ತ ನಡುರಾತ್ರಿಯು ಬೇಗ ಬಂದುಬಿಡಲಿ ಎಂದು ತುದಿ ಗಾಲದಲ್ಲಿ ನಿಂತಿದ್ದ. ಮೋಡಿ ರಾಮಯ್ಯ ಗುಡ್ಡದ ಗವಿಯಲ್ಲಿ ಕುಳಿತು ಬಲಿಯ ಆಚರಣೆಗಳನ್ನು ರೂಪಿಸುತ್ತಿದ್ದ. ವಾಮಾಚಾರದ ಪರಿಕರಗಳನ್ನೆಲ್ಲ ಕಾಳಿಕಾ ಮಾತೆಯ ವಿಗ್ರಹದ ಮುಂದೆ ಒಡ್ಡಿಕೊಂಡು ಪ್ರಶಾಂತ ಬರುವುದನ್ನೇ ಕಾಯುತ್ತಿದ್ದ. +ರೇಣುಕವ್ವನಿಗೆ ತ್ರಿವೇಣಿಯದೇ ಚಿಂತೆ. ಮಗಳ ಸೀರೆ ಸೆರಗನ್ನು ತನ್ನ ಸೀರೆಯ ಸೆರಗಿನ ತುದಿಗೆ ಕಟ್ಟಿಕೊಂಡು ಮಲಗಿದ್ದಳು. ಮಾಯದ ನಿದ್ದೆಯು ಅವಳನ್ನು ನುಂಗಿತ್ತು. ದಟ್ಟವಾದ ಆ ಕ್ರೂರ ಕತ್ತಲೆಯಲ್ಲಿ ಎದ್ದ ಪ್ರಶಾಂತನು ಹಜಾರಕ್ಕೆ ಬಂದು ಅಲ್ಲಿ ಯಾವತ್ತೂ ಅನಾಥನಂತೆ ಬಿದ್ದಿರುತ್ತಿದ್ದ ಸಂಪತ್ತನನ್ನು ಎತ್ತಿಕೊಂಡ. ಆ ಸಂಜೆಯೇ ಊಟಕ್ಕೆ ಮೊದಲು ವೈನ ಮಾಡಿ ಸಂಪತ್ತನ ತಲೆ ಸವರಿ ಪೆಪ್ಪರಮೆಂಟು ತಿನ್ನು ಎಂದು ಏನನ್ನೋ ಸಿಹಿಯಾದ್ದನ್ನು ತಿನ್ನಿಸಿದ್ದ. ಮೋಡಿ ರಾಮಯ್ಯನೇ ಅದನ್ನು ತಿನಿಸಲು ಕೊಟ್ಟದ್ದು. ಅದನ್ನು ತಿಂದ ಸ್ವಲ್ಪ ಹೊತ್ತಾದ ಮೇಲೆ ವಿಪರೀತ ನಿದ್ದೆ ಬಂದು ಬಿಡುತ್ತಿತ್ತು. ಪ್ರಶಾಂತ ಎತ್ತಿ ಹೆಗಲ ಮೇಲೆ ಹಾಕಿಕೊಂಡು ಹಿತ್ತಲ ದಾರಿಯಲ್ಲಿ ಗುಡ್ಡದ ಕಡೆಗೆ ಹೊರಡುವಾಗ ಅವನನ್ನು ಆ ಹೊಂಗೆ ಮರವು ಎಷ್ಟೋ ಜೋರಾಗಿ ಕೂಗಿಕೊಂಡರೂ ಸಂಪತ್ತನಿಗೆ ಎಚ್ಚರವೇ ಇರಲಿಲ್ಲ. +ಊರ ದಾರಿ ದಾಟಿ ಗುಡ್ಡದ ಕಾಲು ದಾರಿಗೆ ಬಮ್ದಂತೆ ಪ್ರಶಾಂತ ಬೆವೆತು ಹೋಗಿದ್ದ. ನಡುರಾತ್ರಿ ಕತ್ತಲಿನ ಜೊತೆ ಆತ ಹೆಜ್ಜೆ ಹಾಕುತ್ತಿದ್ದ. ಸಂಪತ್ತನಿಗೆ ಎಚ್ಚರವಾಯಿತು. ಕೂಗಿಕೊಳ್ಳದಿರಲಿ ಎಂದು ಆತನ ಬಾಯಿ ಮುಚ್ಚಿದ. ಮಗನನ್ನು ಬಿಟ್ಟು ಬದುಕಲಾರೆ; ನನ್ನ ಮಗನನ್ನು ನೀನಾದರೂ ಹೊತ್ತುಕೊಂಡು ಬಂದು ಕೊಟ್ಟು ಬಿಡಪ್ಪಾ ಎಂದು ಸ್ವತಃ ನಿನ್ನ ತಾಯಿಯೇ ನನಗೆ ಹೇಳಿದ್ದಾಳೆಂದು ಪ್ರಶಾಂತ ಆ ಮುಗ್ಧ ಸಂಪತ್ತನ ಮನಸ್ಸಿನಲ್ಲಿ ತಾಯಿ ಆಸೆ ಹುಟ್ಟಿಸಿದ. ಅಂತಹ ಭಯಾನಕ ಕತ್ತಲೆಯಲ್ಲೂ ಸಂಪತ್ತನು ಚಿಕ್ಕಪ್ಪನು ಎಷ್ಟು ಒಳ್ಳೆಯವನೆಂದು ಮುದ್ದಿನಿಂದ ಪ್ರಶಾಂತನ ತಲೆಯನ್ನು ಮುತ್ತಿಕ್ಕಿಕೊಂಡ. ಕತ್ತಲೆ ಎಂಬ ಭಾವಲಿಯ ಹಿಂಡು ಸಂಪತ್ತನ ತಲೆ ಮೇಲೇ ಸುತ್ತುತ್ತ ಎಷ್ಟು ಬೇಗನೆ ಇವನ ಕೊರಳ ಕುಕ್ಕಿ ನೆತ್ತರ ಹೀರಬೇಕೆಂದು ಪ್ರಶಾಂತನ ಮನಸ್ಸನ್ನು ಕೇಳುತ್ತಿತ್ತು. +‘ಇನ್ನು ಸ್ವಲ್ಪ ಹೊತ್ತಾದ ಮೇಲೆ ಅಮ್ಮನ ಊರು ಸಿಕ್ಕಿಬಿಡುತ್ತದಾ ಚಿಕ್ಕಪ್ಪಾ’ ಎಂದು ಸಂಪತ್ತನು ಕೇಳುತ್ತಿದ್ದ. ದುರ್ಗಮವಾದ ಗುಡ್ದವು ಅಮಾವಾಸ್ಯೆಯ ಆ ಕತ್ತಲಿನಲ್ಲಿ ತಾಯಿಯನ್ನು ನೋಡುವ ಹಂಬಲದಲ್ಲಿ ಸಂಪತ್ತನಿಗೆ ಭಯವನ್ನೇ ಹುಟ್ಟಿಸುತ್ತಿರಲಿಲ್ಲ. ‘ಬೇಗ ಬೇಗ ನಡೀ ಚಿಕ್ಕಪ್ಪ ನಮ್ಮಮ್ಮ ಕಾಯ್ತಾನೇ ಇರ್‍ತಾರೆ’ ಎನ್ನುತ್ತ ಸಂಪತ್ತನು ಪ್ರಶಾಂತನ ಹೆಗಲ ಮೇಲೆ ತನ್ನ ಸೊಟ್ಟ ಕೈಕಾಲುಗಳನ್ನು ಇಳಿಬಿಟ್ಟಿದ್ದ. ಪ್ರಶಾಂತ ಗುಡ್ಡದ ಗವಿಯ ಬಾಗಿಲು ಬಡಿದ. ಮೋಡಿ ರಾಮಯ್ಯ ಪೂರ್ಣ ಬೆತ್ತಲಾಗಿ ಮೈತುಂಬಾ ಬೂದಿ ಬಳಿದುಕ್ಕೊಂಡು ಮುಖಕ್ಕೆ ಅರಿಶಿನ ಕುಂಕುಮ ಮೆತ್ತಿಕೊಂಡು ಕಾಳಿಕಾದೇವಿಯ ಮುಂದೆ ಮಂತ್ರ ಹಾಕುತ್ತಿದ್ದ. ಭೀಕರವಾಗಿದ್ದ ಅವನನ್ನು ಕಂಡ ಕೂಡಲೇ ಕಿಟಾರನೆ ಸಂಪತ್ತು ಕಿರುಚಿಕೊಂಡಿದ್ದ. ಪ್ರಶಾಂತ ಆತನ ಬಾಯಿ ಅಮುಕಿ ಹಿಡಿದು ಒಳಕ್ಕೆ ಕರೆದುಕೊಂಡು ಹೋಗಿದ್ದ. +ಗವಿಯ ಹೊರಗೆ ಅಮಾವಾಸ್ಯೆಯು ರುದ್ರ ನರ್ತನ ಮಾಡುತ್ತಿತ್ತು. ಚಿನ್ನದ ನಿಧಿ ಎಲ್ಲಿದೆ ಎಂದು ಪತ್ತೆ ಮಾಡಲು ನಡೆಸುವ ವಾಮ ಮಾರ್ಗಗಳಲ್ಲಿ ಸಂಪತ್ತನನ್ನು ಬಲಿ ಕೊಡಲು ಹಾಗೆ ಅಂತಹ ವೇಳೆಯಲ್ಲಿ ಪ್ರಶಾಂತನು ಮುದ್ದಿನಿಂದ ಹೊತ್ತುಕೊಂಡು ಬಂದು ಈಗ ಮೋಡಿ ರಾಮಯ್ಯನ ಕೈಗೆ ಕೊಟ್ಟು ಉದ್ವೇಗದಲ್ಲಿ ನಡುಗುತ್ತಿದ್ದ. ಮೋಡಿರಾಮಯ್ಯ ನಿರ್ದಯವಾಗಿ ಸಂಪತ್ತನ ಕುತ್ತಿಗೆಯನ್ನೇ ದಿಟ್ಟಿಸಿ ಮಂತ್ರ ಹಾಕುತ್ತಿದ್ದ. ಸಂಪತ್ತ ತರತರ ತತ್ತರಿಸುತ್ತ ಅಷ್ಟಗಲ ಕಣ್ಣು ಬಿಟ್ಟುಕೊಂಡು ಆಕ್ರಂದಿಸುತ್ತಿದ್ದ. ಸದ್ದು ಹೊರಬರದಿರಲಿ ಎಂದು ಆತನ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಕಾಳಿಕಾದೇವಿಯ ಮುಂದೆ ಕೆಡವಿಕೊಂಡಿದ್ದರು. ತನ್ನ ಸೊಟ್ಟಕಾಲುಗಳನ್ನು ಎಳೆದಾಡುತ್ತಾ ಆಸರೆಗಾಗಿ ಅಂಗಲಾಚುತ್ತಾ ‘ಚಿಕ್ಕಪ್ಪಾ ಚಿಕ್ಕಪ್ಪಾ ಚಿಕ್ಕಪ್ಪಾ’ ಎಂದು ಧ್ವನಿ ಸ್ಪೋಟಿಸಿದರೂ ಯಾವ ಸದ್ದೂ ಬಾರದಾಗಿ ಪ್ರಶಾಂತನ ಮನಸ್ಸು ಕರಗದಾಗಿ ಆತ ಸುಮ್ಮನಿರೆಂದು ಕಣ್ಣು ಮೆಡರಿಸುತ್ತಿದ್ದ. ತೆವಳಿಕೊಂಡೇ ಆತ ಪ್ರಶಾಂತನ ಕಡೆಗೆ ಚಲಿಸುತ್ತಿದ್ದರೆ ಮೋಡಿ ರಾಮಯ್ಯ ನಿಶ್ಪಾಪಿ ಸಂಪತ್ತನನ್ನು ಒಂದು ಹುಳು ಎಂಬಂತೆ ಹತ್ತಿರಕ್ಕೆ ಎಳೆದುಕೊಳ್ಳುತ್ತಿದ್ದ. +ಗುಡ್ಡದ ಯಾವುದೋ ಮೂಲೆಯಲ್ಲಿ ತೋಳಗಳು ಭಯಂಕರವಾಗಿ ರಕ್ತ ದಾಹದಲ್ಲಿ ಅರಚಾಡುತ್ತಿದ್ದವು. ಆ ತೋಳಗಳು ಊರೊಳಗಿಂದ ಏನನ್ನೋ ಹಿಡಿದುಕೊಂಡು ಬಂದು ರಕ್ತ ಕುಡಿಯುತ್ತ ಅದರ ದೇಹವನ್ನು ಕೋರೆ ಹಲ್ಲುಗಳಿಂದ ಬಗೆಯುತ್ತ ತಿನ್ನುತ್ತಿದ್ದವು. ಕತ್ತಲೆಯ ಕೇಕೆ ಹಾಕುತ್ತ ತೋಳಗಳ ಜೊತೆ ಕುಣಿಯುತ್ತಿತ್ತು. ಸಂಪತ್ತನು ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಕಟ್ಟಿದ್ದ ಕೈಕಟ್ಟನ್ನು ಕಿತ್ತುಕೊಂಡು ಬಾಯಿಗೆ ತುಂಬಿದ್ದ ಬಟ್ಟೆಯನ್ನು ಕಿತ್ತೆಸೆದು ‘ಅಮ್ಮಾ ಅಮ್ಮಾ ಅಮ್ಮಾ’ ಎಂದು ಗವಿಯೇ ಮೊಳಗುವಂತೆ ಕೂಗಿಕೊಂಡದ್ದಕ್ಕೂ ಅವನ ಗೋಣನ್ನು ಮುರಿಯುವುದಕ್ಕೂ ಒಂದೇ ಕ್ಷಣವಾಗಿತ್ತು. ಹೊರಗೆ ತೋಳಗಳ ಆರ್ಭಟಕ್ಕೆ ಕತ್ತಲು ತಾಳ ಹಾಕುತ್ತಿತ್ತು. ಗವಿಯ ಒಳಗೆ ನೆತ್ತರು ತಣ್ಣಗೆ ಹೆಪ್ಪುಗಟ್ಟುತ್ತಿತ್ತು. ‘ಉಳಿದದ್ದನ್ನೆಲ್ಲ ನಾನು ನೋಡಿಕೊಳ್ಳುವೆ; ಇನ್ನು ನೀನು ಹೊರಡು’ ಎಂದು ಮೋಡಿ ರಾಮಯ್ಯ ಪ್ರಶಾಂತನನ್ನು ಕಳಿಸಿಬಿಟ್ಟ. ತುಂಡಾಗಿ ಬಿದ್ದಿದ್ದ ಸಂಪತ್ತನ ದೇಹವನ್ನು ನೋಡುತ್ತ ತನಗಿನ್ನು ಚಿನ್ನದ ನಿಧಿ ಸಿಕ್ಕಿಯೇ ಬಿಟ್ಟಿತೆಂದು ಉದ್ವೇಗದ ಆನಂದದಲ್ಲಿ ಹುಚ್ಚಾಗುತ್ತ ಮನೆಗೆ ಬಂದುಬಿಟ್ಟ. +ಪ್ರಚ್ಛನ್ನ ಹುಣ್ಣಿಮೆಯಂದು ನಿಧಿಯೇ ಮನೆಗೆ ಬಂದು ಕಾಣಿಸಿಕೊಳ್ಳುತ್ತದೆ ಎಂದು ಹೇಳಿ ಹಣ ಪಡೆದು ಮೋಡಿ ರಾಮಯ್ಯ ನಾಪತ್ತೆ ಆಗಿದ್ದ. ಸೂರ್ಯನು ತನಗೇನೂ ಗೊತ್ತಿಲ್ಲ ಎಂಬಂತೆ ಬೀದಿಯಲ್ಲಿ ಬೆಳಕನ್ನು ಚೆಲ್ಲುತ್ತಿದ್ದ. ಹಿತ್ತಲ ಹೊಂಗೆ ಮರ ಅಳುತ್ತ ಹಾಗೇ ನಿಂತಿತ್ತು. ಅದರ ರೆಂಬೆ ಕೊಂಬೆ ಹೂ ಎಲೆ ಚಿಗುರು ಎಲ್ಲವೂ ಸೂತಕದಲ್ಲಿ ತೊಯ್ದು ಹೋಗಿದ್ದವು. ತನ್ನೊಳಗೆ ಕೂತಿದ್ದ ಸಣ್ಣ ಪುಟ್ಟ ಹಕ್ಕಿಗಳಿಗೂ ಹೊಂಗೆ ಮರವು ಕಳೆದ ರಾತ್ರಿ ಏನಾಯಿತು ಎಂದು ಹೇಳಿಕೊಳ್ಳುತ್ತಿತ್ತು. ರೇಣುಕವ್ವ ಸಂಪತ್ತ ಎಲ್ಲಿ ಹೋದನೆಂದು ಹುಡುಕಾಡುತ್ತಿದ್ದಳು. ತ್ರಿವೇಣಿಯು ಹೊಟ್ಟೆ ನೋವೆಂದು ಮೂಲೆಯಲ್ಲಿ ಕುಳಿತಿದ್ದಳು. ಪ್ರಶಾಂತ ಕಾಣಿಸಿಕೊಂಡಿರಲಿಲ್ಲ. ಆತನ ಹೆಂಡತಿ ಮುಗುಮ್ಮಾಗಿದ್ದಳು. ಸಂಜೆವರೆಗೂ ಸಂಪತ್ತನಿಗಾಗಿ ಹುಡುಕಾಡಿ ಸಾಕಾಯಿತು. ಊರವರು ಏನೇನೋ ಹೇಳತೊಡಗಿದರು. ಕಳ್ಳಪೀರ ತೋಳಗಳ ಬಗ್ಗೆ ಹೇಳುತ್ತಿದ್ದ. ರಾತ್ರಿ ಊರ ಮುಂದಲ ಕಟ್ಟೆಯ ಬಳಿ ಕೊಬ್ಬಿದ್ದ ಎರಡು ಗಂಡು ತೋಳಗಳು ಸುತ್ತಾಡುತ್ತಿದ್ದವೆಂದು ತಿಳಿಸಿ, ಅವು ಊರೊಳಕ್ಕೆ ಬಂದುದನ್ನು ತಾನು ನೋಡಿದೆ ಎಂದು ವಿವರಿಸುತ್ತಿದ್ದ. ನಿಶಾಚರಿಯಂತಿದ್ದ ಕಳ್ಳಪೀರನ ಮಾತನ್ನು ಜನ ನಂಬಿದರು. ಎಲ್ಲೋ ರಾತ್ರಿ ಉಚ್ಚೆ ಹುಯ್ಯಲು ಹಿತ್ತಲ ಬಾಗಿಲಿನಿಂದ ಬಂದಿರುವಾಗ ಸಂಪತ್ತನನ್ನು ಆ ತೋಳಗಳು ಕಚ್ಚಿಕೊಂಡು ಹೋಗಿರಬಹುದು ಎಂದು ಊಹೆ ಮಾಡುತ್ತಿದ್ದರು. ಪ್ರಶಾಂತನ ಹೆಂಡತಿ ಸಮ್ಮತಿಸುವಂತೆ ಬಾಯಿ ತೆಗೆದು ‘ಹೌದೂ ಸರೋತ್ತಿನಲ್ಲಿ ಹಿತ್ತಲ ಬಾಗಿಲು ಕಡೆ ಏನೋ ಸದ್ದಾದುದನ್ನು ನಾನು ನಿದ್ದೆಗಣ್ಣಲ್ಲಿ ಕೇಳಿಸಿಕೊಂಡೆ’ ಎನ್ನುತ್ತಿದ್ದಳು. +ರೇಣುಕವ್ವ ಬಾಯಿ ಬಡಿದುಕೊಳ್ಳುತ್ತ ವೆಂಕೋಬಿಗೆ ಹಿಡಿ ಶಾಪ ಹಾಕುತ್ತ ಮಗನನ್ನು ತೋಳಕ್ಕೆ ಬಲಿ ಕೊಟ್ಟನಲ್ಲ ಎಂದು ರೋಧಿಸುತ್ತಿದ್ದಳು. ಪ್ರಶಾಂತ ಪ್ರತಿ ಕ್ಷಣವೂ ಗಲಿಬಿಲಿಗೊಳ್ಳುತ್ತಿದ್ದ. ಅವನ ಮನದೊಳಗೆ ನೆತ್ತರು ಚಿನ್ನದ ನಿಧಿಯಿಂದ ಚಿಮ್ಮುತ್ತಿತ್ತು. ಹುಣ್ಣಿಮೆಯು ಯಾವಾಗ ಬರುವುದೋ ಎಂದು ಚಡಪಡಿಸುತ್ತಿದ್ದ. ಸುದ್ದಿ ತಿಳಿದು; ವೆಂಕೋಬಿಯು ಮುರಿದುಕೊಂಡಿರುವ ಕಾಲನ್ನು ಎಳೆದುಕೊಂಡು ಬಂದು ಹಜಾರದಲ್ಲಿ ಬಿದ್ದುಕೊಂಡು ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದರಿಂದಲೇ ಆತ ತೋಳದ ಬಾಯಿಗೆ ತುತ್ತಾದುದು ಎಂದು ಆರೋಪಿಸುತ್ತಿದ್ದ. ತ್ರಿವೇಣಿಯು ತೋಳಗಳನ್ನು ಕಲ್ಪಿಸಿಕೊಂಡೇ ಇನ್ನೆಂದೂ ರಾತ್ರಿ ವೇಳೆ ಹಿತ್ತಲಿಗೆ ಕಲಿಡಬಾರದು ಎಂದು ಹೆದರುತ್ತಿದ್ದಳು. ಐದಾರು ದಿನಗಳ ತನಕ ತರಾವರಿಯಾಗಿ ಜನ ಕಲ್ಪಿಸಿಕೊಳ್ಳುತ್ತಿದ್ದರು. ಗಜಾನನ ಸುದ್ದಿ ತಿಳಿದ ಕೂದಲೇ ತಂಗಿಯ ಜೊತೆ ಬಂದು ಅಂಗಳದಲ್ಲಿ ಅಳುತ್ತ ಕೂತುಬಿಟ್ಟಿದ್ದ. ವೆಂಕೋಬನ ಹೆಂಡತಿಯನ್ನು ಯಾರೂ ಸಮಾಧಾನ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಶಾಂತ ಗುಡ್ಡದ ಕಡೆ ಗುಟ್ಟಾಗಿ ಹೋಗಿ ಗವಿಯನ್ನು ಪರೀಕ್ಷಿಸಿದ್ದ. ಮೋಡಿ ರಾಮಯ್ಯ ಬಲಿಯ ಯಾವ ಸುಳಿವೂ ಇಲ್ಲದಂತೆ ಮಾಯ ಮಾಡಿಬಿಟ್ಟಿದ್ದ. ಸೂತಕವೂ ಕಳೆದು ಹೋಗಿತ್ತು. +ವೆಂಕೋಬಿ ಬೆಳಿಗ್ಗೆ ಎದ್ದ ಕೂಡಲೆ ಒಂದಿಷ್ಟು ಸಾರಾಯನ್ನು ಕುಡಿದರೆ ಮಾತ್ರ ಒಂದಿಷ್ಟು ಲವಲವಿಕೆ ಆಗುತ್ತಿದ್ದ. ಕುಡಿಯದೆ ಸುಮ್ಮನೆ ಇರಲು ಇವನಿಂದ ಆಗುತ್ತಿರಲಿಲ್ಲ ಅವನ ದೇಹ ಸ್ಥಿತಿಯು ಅಮಲಿನಲ್ಲಿದ್ದಾಗ ಮಾತ್ರವೇ ಕ್ರಿಯಾಶೀಲ ಆಗಿರುತ್ತಿತ್ತು. ಗಜಾನನ ತಂಗಿಯ ಉಳಿದಿಬ್ಬರು ಮಕ್ಕಳನ್ನು ಜೊತೆಗೂಡಿಸಿಕೊಂಡು ತನ್ನ ಊರಿಗೆ ಹೊರಟೇ ಬಿಟ್ಟ. ರೇಣುಕವ್ವ ದಿಕ್ಕೆಟ್ಟು ಒಂಟಿ ಮರದಂತೆ ಅಂಗಳದಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಳು. ಪ್ರಶಾಂತನ ಹೆಂಡತಿ ಎಂದಿನಂತೆ ಮರೆಗೆ ಸರಿದುಕೊಂಡು ಗಂಡನ ಜೊತೆ ಗುಪ್ತ ನಿಧಿಯ ಕತೆಗಳನ್ನು ಹೇಳುತ್ತಿದ್ದಳು. ಸಂಪತ್ತು ಹೇಗೆ ಸತ್ತನೆಂದು ಪತ್ತೆ ಹಚ್ಚಲು ಯಾರಿಗೂ ಆಸಕ್ತಿ ಇರಲಿಲ್ಲ. ಮೋಡಿ ರಾಮಯ್ಯ ಯಾವ ಮಾಯ ಮಾಡಿರುವನೊ ಎಂದು ಪ್ರಶಾಂತ ರಾತ್ರಿ ವೇಳೆ ಸುತ್ತಾಡುವುದೂ ಹೆಚ್ಚಾಗಿತ್ತು. +ಹುಣ್ಣಿಮೆಯ ದಿನ ಹತ್ತಿರವಾಯಿತು. ಆ ದಿನ ಬಂದೇ ಬಿಟ್ಟಿತು. ಮನೆಯನ್ನೆಲ್ಲ ಸಾರಿಸಿ ಪೂಜೆ ಮಾಡಿ ಪ್ರಶಾಂತನ ಹೆಂಡತಿ ಲಕ್ಷ್ಮಿ ಪೂಜೆ ಮಾಡುತ್ತಿದ್ದಳು. ಪ್ರಶಾಂತನ ತಲೆ ತುಂಬ ಸಂಪತ್ತನ ಕೊರಳ ನೆತ್ತರು ಚಿಮ್ಮಿದಂತಾಗಿ ತನ್ನ ತಲೆಯೇ ಸಿಡಿದು ಹೋಯಿತೇನೋ ಎನಿಸುತ್ತಿತ್ತು. ಪುಚ್ಛನ್ನವಾದ ಹುಣ್ಣಿಮೆಯು ಆಕಾಶದಲ್ಲಿ ಹಾರಾಡುತ್ತಿತ್ತು. ಮಧ್ಯರಾತ್ರಿ ಕಳೆದರೂ ಯಾವ ನಿಧಿಯ ಕುರುಹು ಕಾಣಲಿಲ್ಲ. ಸಂಪತ್ತನು ಚಿಕ್ಕಪ್ಪಾ ಚಿಕ್ಕಪ್ಪಾ ಚಿಕ್ಕಪ್ಪಾ ಎಂದು ಧ್ವನಿ ಬದಲಿಸಿ ತರಾವರಿಯಾಗಿ ಕರೆದು ನಡುನಡುವೆ ನಗಾಡುತ್ತಾ ಕೇಕೆ ಹಾಕುತ್ತಾ ಮತ್ತದೇ ದನಿಯಲ್ಲಿ ಚಿಕ್ಕಪ್ಪಾ ಎಂದು ಆರ್ತನಾಗಿ ಕೂಗುವುದು ಪ್ರಶಾಂತನ ಮೈ ತುಂಬ ಮೊಳಗಿ ಹುಚ್ಚೆದ್ದು ಗುಡ್ಡದ ಕಡೆಗೆ ಓಡಿ ಹೋಗಿದ್ದ. ಇಡೀ ಗುಡ್ಡವೇ ಚಿಕ್ಕಪ್ಪಾ ಎಂದು ಕೂಗುತ್ತಿತ್ತು. ಆ ಕರೆಯನ್ನು ಪ್ರಶಾಂತನ ಕಿವಿಗಳು ಸಹಿಸದಾದವು. ಪ್ರಜ್ಞೆಯ ಆಳದಲ್ಲಿ ಆ ಕೂಗು ಭರ್ಜಿಯಂತೆ ತಿವಿಯತೊಡಗಿತು. ಕುಂತಲ್ಲಿ ನಿಂತಲ್ಲಿ ಪ್ರಶಾಂತನಿಗೆ ಏನೇನೋ ಭ್ರಮೆಗಳು ಮುತ್ತಿಕೊಂಡವು. ಹುಣ್ಣಿಮೆ ಕಳೆದು ಅಮಾವಾಸ್ಯೆಯೂ ಬಂದು ಮತ್ತೊಂದು ಹುಣ್ಣಿಮೆಯೂ ಜಾರಿದರೂ ನಿಧಿ ಕಾಣದೆ ಪ್ರಶಾಂತ ನಿಜಕ್ಕೂ ಹುಚ್ಚಾಗಿ ಗುಡ್ಡದಲ್ಲಿ ಓಡಾಡತೊಡಗಿದ. ಆತನ ಹೆಂಡತಿ ಬೇಸ್ತುಬಿದ್ದಳು. +ರೇಣುಕವ್ವ ತನ್ನ ಮನೆತನ ಮುಗಿಯಿತು ಎಂದುಕೊಂಡಳು. ಯಶವಂತ ಹೇಗೋ ಬಚಾವಾಗಿ ಬಂದು ಯಮುನಳನ್ನು ಹುಡುಕಾಡಿದ. ಆಕೆ ಹುಲಿಗೆವ್ವನ ಜೊತೆ ಹೊರಟು ಹೋಗಿದ್ದಳು. ಮೈಸೂರಿನ ತುಂಬ ಬಿಕಾರಿಯಂತೆ ಅಲೆದಾಡಿದ ಯಶವಂತ ಕೊನೆಗೆ ಹಳ್ಳಿಗೆ ಬಂದಿದ್ದ. ಹಾಗೆ ಬಂದು ಮನೆಯ ಸ್ಥಿತಿಯನ್ನು ತಿಳಿದು ದಂಗಾಗಿ ಹೋದ. ಪ್ರಶಾಂತ ಊರ ಮಾರಿ ಗುಡಿ ಮುಂದೆ ಹುಚ್ಚನಾಗಿ ಓಡಾಡುತ್ತಾ ಬಗೆಬಗೆಯಾದ ಯಾವುದೊ ಗಂಟುಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಜಗತ್ತಿನ ಸಂಬಂಧಗಳನ್ನು ಕಳೆದುಕೊಂಡಿದ್ದ. ಯಶವಂತನ ಮುಂದೆ ರೇಣುಕವ್ವ ಎಲ್ಲವನ್ನೂ ಒಪ್ಪಿಸಿ, ಈಗ ನೀನೇ ಎಲ್ಲವನ್ನೂ ಕಾಪಾಡಬೇಕು ಎಂದು ವಿನಂತಿಸುತ್ತಿದ್ದಳು. ಕ್ರಾಂತಿಕಾರಿ ಪ್ರೊಫೆಸರ್ ಯಶವಂತನ ಭಾವನೆಯಲ್ಲಿ ಸುಮ್ಮನೆ ಸುಳಿದುಹೋದರು. ಯಮುನಳ ಮತ್ತು ತನ್ನ ಜೊತೆಗಿನ ಮುಂದಿನ ಸಂಬಂಧ ಏನು ಎಂದು ಅದೇ ಯಶವಂತ ಅದೇ ಕೆರೆ ದಂಡೆಯ ಕಲ್ಲು ಬೆಂಚಿನ ಮೇಲೆ ಕುಳಿತು ದೀರ್ಘವಾಗಿ ಆಲೋಚಿಸುತ್ತಿದ್ದ. ಗುಡ್ಡದ ಗವಿಯ ಸಂಧಿಯಿಂದ ಏನೋ ವಾಸನೆ ತುರಿ ಬಂದು ಕೆರೆಯ ನೀರ ಮೇಲೆ ಹಾಯ್ದು ಯಶವಂತನ ಮೂಗನ್ನು ಸವರಿಕೊಂಡು ಹೋಗುತ್ತಿತ್ತು. ಏನನ್ನಾದರೂ ಇಲ್ಲೇ ಈ ಮಣ್ಣೊಳಗೇ ಮಾಡಬೇಕೆಂದು ಯಶವಂತ ಕತ್ತಲೆಯನ್ನು ಬಿಡಿಸಿಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಕಿತ್ತ. ಹಿತ್ತಿಲಲ್ಲಿ ಹೊಂಗೆ ಮರದ ಕೆಳಗೆ ಅನಾಥವಾಗಿ ಬಿದ್ದಿದ್ದ ಸಂಪತ್ತನ ಮುರುಕು ಆಟಿಕೆಗಳು ಆತ ಎಂದಾದರೂ ಬರಬಹುದೆಂದು ಮುಗ್ಧವಾಗಿ ಅಲ್ಲೇ ಕಾಯುತ್ತ ಕಾಲದಲ್ಲಿ ಕರಗುತ್ತಿದ್ದವು. +***** +ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ […] +ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ […] +ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_488.txt b/Kannada Sahitya/article_488.txt new file mode 100644 index 0000000000000000000000000000000000000000..20b85649ee583c3bb787d02b619da0517146140e --- /dev/null +++ b/Kannada Sahitya/article_488.txt @@ -0,0 +1,130 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಷಾ ಸಮಿತಿಯ ವರದಿ +ದಿನಾಂಕ: ೨೭-೧-೧೯೮೧ +(ಡಾ| ಗೋಕಾಕ್ ಸಮಿತಿ ವರದಿ) +ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು ನೂರಕ್ಕೆ ಎಪ್ಪತ್ತು ಜನ ಕನ್ನಡಿಗರು ನಿರಕ್ಷರಿಗಳಿರುವಾಗ ಸಂಸ್ಕೃತಿಯ ಬೀಜಗಳನ್ನು ಅವರ ಮನದಲ್ಲಿ ಬಿತ್ತುವುದಕ್ಕೋಸ್ಕರ ಪ್ರಾದೇಶಿಕ ಭಾಷೆಯಾದ ಕನ್ನಡವೊಂದೇ ಉಚಿತ ಮಾಧ್ಯಮವಾಗಬಲ್ಲದು. ಅಕ್ಷರಿಗಳಾಗಲಿ ನಿರಕ್ಷರಿಗಳಾಗಲಿ. ಎಲ್ಲರಿಗೂ ಅದು ಗ್ರಾಹ್ಯವಾಗುವುದು. ಅಂತೆಯೇ ಕನ್ನಡದ ಸಾಹಿತ್ಯೇತಿಹಾಸದ ಉದ್ದಕ್ಕೂ ರಾಮಾಯಣ-ಮಹಾಭಾರತ ಕಾವ್ಯಗಳನ್ನು ಕನ್ನಡದಲ್ಲಿ ಪುನರ್‌ಸೃಷ್ಟಿಸುವ ಸಾಹಸ ನಡೆಯಿತು. ಜೈನಧರ್ಮವು ಕನ್ನಡ ಕಾವ್ಯಗಳಲ್ಲಿ ರೂಪಗೊಂಡಿತು. ‘ವಚನಗಳು’ ಕನ್ನಡ ಉಪನಿಷತ್ತುಗಳಾದವು. “ಸಂಸ್ಕೃತದೊಳಿನ್ನೇನು?” ಎಂಬ ಪ್ರಶ್ನೆಯನ್ನು ಕನ್ನಡ ಜನ ಕೇಳುವಂತಾಯಿತು. ಬರಿ ಇಂದಿಗೇ ಅಲ್ಲ: ಈಗೊಂದು ಸಾವಿರ ವರ್ಷಗಳಿಂದ ಕನ್ನಡವು ಜನತೆಯ ಪ್ರಥಮ ಭಾಷೆಯಾಗಿದೆ. +ಸಂಸ್ಕೃತದಲ್ಲಿ ಇನ್ನೂ ಒಂದು ಕೊರತೆಯಿದೆ. ಅದರಲ್ಲಿ ಆಧುನಿಕ ಜಗತ್ತಿನ ವಾಙ್ಮಯವಿಲ್ಲ. ಸುಮಾರು ೧೬ನೆಯ ಶತಮನದ ತರುವಾಯ ಭಾರತ ದೇಶದ ಜ್ಞಾನ ಪ್ರಪಂಚದಲ್ಲಿ ಸಹ ತನಗಿದ್ದ ಪ್ರಾಮುಖ್ಯವನ್ನು ಕಡೆದುಕೊಳ್ಳಹತ್ತಿತು. ಯುರೋಪಿಯನ್ ರಿನೇಸಾನ್ಸ್ ಇಲ್ಲಿವೆ. ಪುನರುಜ್ಜೀವನದ ಕ್ರಾಂತಿಯು ಈ ಕ್ಷೇತ್ರದಲ್ಲಿಯ ನಾಯಕತ್ವವನ್ನು ಯುರೋಪಿಗೆ ದೊರೆಯುವಂತೆ ಮಾಡಿತು. ಕಳೆದ ನಾಲ್ಕು ಶತಮಾನಗಳಲ್ಲಿ ಪ್ರಪಂಚದಲ್ಲಿಯೂ ಜ್ಞಾನ ಪ್ರಪಂಚದಲ್ಲಿಯೂ ಆದ ಅದ್ಭುತ ಬದಲಾವಣೆಗಳನ್ನೂ, ಸಂಶೋಧನೆಗಳನ್ನೂ ಗಮನಿಸದಿದ್ದ ನಾಗರಿಕನು ಸುಸಂಸ್ಕೃತನೆಂದು ಹೇಳಲು ಬರುವುದಿಲ್ಲ. ಕಳೆದ ನಾಲ್ಕು ಶತಮಾನಗಳ ಸಂಸ್ಕೃತ ಸಾಹಿತ್ಯವನ್ನು ಆಂಗ್ಲ ಸಾಹಿತ್ಯದೊಡನೆ ಹೋಲಿಸಿ ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಏಳನೆಯ ಶತಮಾನದ ಸಾಹಿತ್ಯದ ಪೂರ್ವದಲ್ಲಿ ಇಂಗ್ಲಿಷಿನಲ್ಲಿ ಅಲ್ಪಸ್ವಲ್ಪ ಬರವಣಿಗೆ ಇದ್ದಿರಬಹುದು. ಆದರೆ ಇದಕ್ಕೂ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಾಹಿತ್ಯದ ಮೂಲಕ ಸಂಸ್ಕೃತವು ಇಂದಿಗೂ ಜಗತ್ತಿನಲ್ಲಿಯ ಅದ್ವಿತೀಯ ಸಾಹಿತ್ಯವಾಗಿ (ಕೆಲವೊಂದು ದಿಕ್ಕಿನಲ್ಲಿ) ಉಳಿದುಕೊಂಡಿದೆ. ಏಳನೆಯ ಶತಮಾನದಿಂದ ೧೫ನೆಯ ಶತಮಾನದವರೆಗೆ ಬಂದ ಸಂಸ್ಕೃತ ಸಾಹಿತ್ಯವು ಇಂಗ್ಲಿಷಿಗಿಂತ ಎಷ್ಟೋ ಹೆಚ್ಚಾಗಿ ಶ್ರೀಮಂತವಾಗಿದೆ. ಆದರೆ ಇಲ್ಲಿಂದ ಮುಂದೆ, ಒಮ್ಮಿಂದೊಮ್ಮೆ, ಪುನರುಜ್ಜೀವನ ಕ್ರಾಂತಿಯ ಮೂಲಕ ಇಂಗ್ಲಿಷ್ ವಾಙ್ಮಯಕ್ಕೆ ಅಗಾಧ ವಿಸ್ತಾರವು ಆಧುನಿಕತೆಯೂ ಬರುತ್ತವೆ. ಅದು ಚಮತ್ಕಾರಿಕ ವೇಗದಿಂದ ಅತ್ಯದ್ಭುತವಾಗಿ ಬೆಳೆಯುತ್ತದೆ. ಇಂಗ್ಲಿಷು ೧೯ನೆಯ ಶತಮಾನದ ಕೊನೆಗೆ ಜಾಗತಿಕ ಭಾಷೆಯಾಗಿ ಅದರ ಸಾಹಿತ್ಯವು ಆಧುನಿಕ ಪ್ರಪಂಚದ ಜ್ಞಾನವನ್ನೆಲ್ಲ ಒಳಗೊಂಡ ಸಾಹಿತ್ಯವಾಗುತ್ತದೆ. ಇಂಗ್ಲಿಷಿನಲ್ಲಿ ದಿನ ದಿನಕ್ಕೆ ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುವ ಸಂಶೋಧನೆಗಳು ಉಪಲಬ್ದಹವಾಗುತ್ತವೆ. ಈ ಸಂಶೋಧನೆಗಳನ್ನು ನಾವು ತಿಳಿಯದೆ ಹೋದರೆ ಆಧುನಿಕ ಪ್ರಪಂಚವನ್ನು ನೋಡಲು ನಮಗಿದ್ದ ಕಣ್ಣನ್ನು ನಾವೇ ಕಳೆದುಕೊಂಡಂತಾಗುತ್ತದೆ. ೨೦ನೆಯ ಶತಮಾನದ ಸುಸಂಸ್ಕೃತ ನಾಗರಿಕರಾಗಿ ಬಾಳಬೇಕಾದ ಕನ್ನಡಿಗರಿಗೆ ಈ ಮಾತನ್ನು ನೆನೆಯದೆ ಗತಿಯಿಲ್ಲ. ಯಾವ ದಿಕ್ಕಿನಿಂದಾದರೂ ಬಂದಿರಲಿ, ಜ್ಞಾನವು ಪವಿತ್ರವಾದುದೇ. ಅದೇ ರೀತಿಯಾಗಿ ಕೆಲವೊಂದು ಶಾಶ್ವತ ಮೌಲ್ಯಗಳನ್ನು ಕೊಡಲು ಕೈಯೆತ್ತಿ ನಿಂತ ಸಸ್ಕೃತ-ಪಾಲಿ-ಅರ್ಧ ಮಾಗಧಿಗಳೆಡೆಗೆ ಇಡೀ ಜಗತ್ತೇ ಧಾವಿಸುತ್ತದೆ. ಇದೂ ನಮ್ಮ ಚಿರಸ್ಮರಣೆಯಲ್ಲಿರಬೇಕಾದ ಸಂಗತಿಯಾಗಿದೆ. +ಕಳೆದ ನ‌ಅಲ್ಕು ಶತಮಾನಗಳ ಸಂಸ್ಕೃತ ಸಾಹಿತ್ಯದಲ್ಲಿ ನೈಜ ಕಾವ್ಯವಿದೆ. ಹೆಚ್ಚಾಗಿ ಪರಂಪರೆಯ ಅನುಕರಣವೇ ಇದೆ. ಇತ್ತೀಚೆಗೆ ಆಂಗ್ಲ ಕಾವ್ಯದ ಪ್ರಭಾವವು ಅಲ್ಲಲ್ಲಿ ಕಂಡು ಬರುತ್ತದೆ. ಆದರೆ ಆಧುನಿಕ ಪ್ರಪಂಚದ ಜ್ಞಾನ-ವಿಜ್ಞಾನಗಳು ಅಲ್ಲಿ ಮೂಡಿ ಬಂದಿಲ್ಲ. ಸಂಸ್ಕೃತದಲ್ಲಿ ಅವುಗಳನ್ನು ಇಂಗ್ಲಿಶಿನಿಂದ ಭಾಷಾಂತರಿಸಿ ತಂದರೂ, ಇಂಗ್ಲಿಷಿಗಿಂತ ಕದಾಚಿತ ಹೆಚ್ಚು ಅವು ಸಂಸ್ಕೃತದಲ್ಲಿ ಅಗಂಯವಾಗುವುವು. ಸಂಸ್ಕೃತದಲ್ಲಿಯೆ ಹಿಂದಿನಿಂದ ಬೆಳೆದು ಬಂದ ವಿಜ್ಞಾನವು ಇನ್ನೂ ಬಹುಮಟ್ಟಿಗೆ ಸಂಶೋಧನದ ವಿಷಯವಾಗಿಯೇ ಉಳಿದಿದೆ. ಆದರೆ ಕನ್ನಡದಲ್ಲಿ ಇಂದಿಲ್ಲ ನಾಳೆ ಇಂದಿನ ಪ್ರಪಂಚದ ವಿಜ್ಞಾನವೆಲ್ಲ ಪಡಿಮೂಡುವುದು. ಅದನ್ನು ಕನ್ನಡಿಗರು ಸುಲಭವಾಗಿ ತಿಳಿದುಕೊಳ್ಳಬಹುದು. +ಸಂಸ್ಕೃತಕ್ಕೆ ಒಂದು ವ್ಯಾವಹಾರಿಕ ಅಸ್ತಿತ್ವವಿದೆಯೆಂಬುದು ನಿಜ. ಘಟನಾ ಸಭೆಯ ಹಲವಾರು ಸದಸ್ಯರು ಹಿಂದೆ ಸಂಸ್ಕೃತವು ಅಧಿಕೃತ ಅಂತರ್ ರಾಜ್ಯ ಸಂಪರ್ಕ ಭಾಷೆಯಾಗಿರಬೇಕೆಂದು ವಾದಿಸಿದ್ದರು. ಈಚೆಗೆ ದಿನದ ವಾರ್ತೆಗಲು ಪ್ರತಿನಿತ್ಯ ರೇಡಿಯೋದ ಮೇಲೆ ಸಂಸ್ಕೃತದಲ್ಲಿಯೂ ಪ್ರಸಾರವಾಗುತ್ತಿವೆ. ಕೆಲವು ನಿಯತಕಾಲಿಕಗಳೂ ಸಂಸ್ಕೃತದಲ್ಲಿ ಪ್ರಕಟವಾಗುತ್ತಿವೆ. ಹೀಗೆ ಹಿಂದಿನ ನಾಗರಿಕತೆಯ ಉದ್ದೇಶಗಳಿಗೂ ಸಂಸ್ಕೃತವು ಬಳಕೆಯಾಗುತ್ತಿದೆ. ಅಲ್ಲದೆ ಪಂಡಿತರ ಭಾಷೆಯಾಗಿ, ಸಂವಾದ ಪ್ರವಚನಗಳ ಸಲುವಾಗಿ, ಸಂಸ್ಕೃತವು ಬಳಕೆಯಲ್ಲಿದೆ. +ಆದರೆ ಈ ಎಲ್ಲ ಚಟುವಟಿಕೆಗಳು ಸಂಸ್ಕೃತ ಭಾಷೆಯು ಒಂದು ಆಧುನಿಕ ಭಾಷೆಯೆಂಬ ವರ್ಣನೆಗೆ ಆಧಾರವಾಗಲಾರವು. ಇವು ಕುತೂಹಲವನ್ನು ಕೆರಳಿಸುತ್ತವೆ. “ಸಂಸ್ಕೃತದಲ್ಲಿಯೂ ಹೀಗೆ ಮಾಡುವುದು ಸಾಧ್ಯ” ಎಂದು ನಮ್ಮನ್ನು ಬೆರಗುಗೊಳಿಸುತ್ತವೆ. ಮೂರು ಕೋಟಿ ಜನರ ಬಳಕೆ ನುಡಿಗಳ ಸಹಜ ಓಘದಂತೆ ಇದೊಂದು ನೈಸರ್ಗಿಕ ಕ್ರಿಯೆಯಲ್ಲ. +ಸಂಸ್ಕೃತದ ಪ್ರಯೋಜನವು ಇನ್ನೊಂದು ರೀತಿಯಲ್ಲಿ ಸ್ಪುಟವಾಗುತ್ತದೆ. ಕನ್ನಡದ ಜೀವಜೀವಾಳದಲ್ಲಿಯೇ ಸಂಸ್ಕೃತವು ಹಾಸು ಹೊಕ್ಕಗಿದೆ. ಗೌಡೀಯ ಭಾಷೆಗಳೆಲ್ಲ ಸಂಸ್ಕೃತದಿಂದ ಹುಟ್ಟಿದುದಲ್ಲದೆ ದ್ರಾವಿಡ ಭಾಷೆಗಳೂ ತಮ್ಮ ಶಬ್ದ ಸಂಪತ್ತಿನ ಎಷ್ಟೋ ಭಾಗವನ್ನು ಸಂಸ್ಕೃತದಿಂದ ಆಯ್ದುಕೊಂಡವು. ಯುರೋಪಿನಲ್ಲಿ ಜರ್ಮನ್ ಭಾಷೆಯ ಹಾಗೆ ಈ ವಿಷಯದಲ್ಲಿ ತಮಿಳಿನ ಒಲವು ಕೂಕಡ ತರುವ ಧೋರಣದ್ದಲ್ಲ. ಆದರೆ ವೈಜ್ಞಾನಿಕ ಶಬ್ದಕೋಶವನ್ನು ದಿನ ದಿನ್ನಕ್ಕೆ ಹಿಗ್ಗಿಸುವೆ ಒತ್ತಡ ಬಂದಾಗ ತಮಿಳೂ ಸಹ ಇದೇ ದಾರಿಯನ್ನು ತುಳಿಯಬೇಕಾಗಬಹುದು. ಹೀಗೆ ಕನ್ನಡದ ಪ್ರತಿಭೆಯನ್ನು ತಿಳಿಯಲು ಸಹ ನಾವು ಸಂಸ್ಕೃತವನ್ನು ಅಭ್ಯಸಿಸುವದು ಅವಶ್ಯವಾಗುತ್ತದೆ ಹಳಗನ್ನಡ ಹಾಗೂ ನಡುಗನ್ನಡ ಸಾಹಿತ್ಯಗಳ ಅಭ್ಯಾಸಿಗಳಿಗಂತೂ ಸಂಸ್ಕೃತದ ಅಧ್ಯಯನ ಅತ್ಯಗತ್ಯವಾಗಿದೆ. ಏಕೆಂದರೆ ಸಂಸ್ಕೃತದಲ್ಲಿಯ ಮಹಾಕಾವ್ಯಗಳೂ ಕನ್ನಡ ಸಾಹಿತ್ಯದ ಇತಿಹಾಸದ ತುಂಬೆಲ್ಲ ಬೆಳಕು ಚೆಲ್ಲಿವೆ. ಗೀತೋಪನಿಷದ್ ವಾಕ್ಯಗಳೂ ಹಾಗೆಯೇ. ಅಲಂಕಾರ ಶಾಸ್ತ್ರ, ಪಂಚತಂತ್ರ, ಒಂದಲ್ಲ, ಎರಡಲ್ಲ ಆ ಗಣಿಯಿಂದ ಕನ್ನಡವು ಅನೇಕ ವಿಷಯಗಳನ್ನು ಅಗೆದು ತಂದಿದೆ. ಹೀಗೆ ಸಂಸ್ಕೃತವನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಂಡಷ್ಟೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳು ನಮಗೆ ಇನ್ನಿಷ್ಟು ನಿಚ್ಚಳವಾಗುತ್ತ ನಡೆಯುತ್ತವೆ. ಕನ್ನಡ ಭಾಷೆ-ಸಾಹಿತ್ಯಗಳ ಅಭ್ಯಾಸಕ್ಕೆ ಸಂಸ್ಕೃತದ ಅಭ್ಯಾಸ ಈ ದೃಷ್ಟಿಯಿಂದ ಪೋಷಕವಾಗಿದೆ. +(೭) ಉಳಿದ ಪ್ರಾಚೀನ ಭಾಷೆಗಳು +ಸಂಸ್ಕೃದ ಸ್ಥಾನವನ್ನು ಕುರಿತು ಮೇಲೆ ವಿವರವಾಗಿ ಚರ್ಚಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ನಾವು ಇನ್ನೊಂದು ಮಾತನ್ನು ನೆನೆಯುವುದು ಅಗತ್ಯ. ಸಾಂಸ್ಕೃತಿಕ-ಧಾರ್ಮಿಕ ಭಾಷೆಯಾಗಿ ಅನೇಕರು ಸಂಸ್ಕೃತವನ್ನು ಅಭ್ಯಸಿಸಿದಂತೆ ಕೆಲವರು ಫಾರಸಿ ಅರೇಬಿಕ್ ಭಾಷೆಗಳನ್ನೂ ಹಲವರು ಗ್ರೀಕ್-ಲ್ಯಾಟಿನ್, ಹೀಬ್ರೂ ಭಾಷೆಗಳನ್ನು ಕಲಿಯಲು ಇಚ್ಚೆಪಡಬಹುದು. ಈ ಮೊದಲು ವಿಂಗಡಿಸಿ ಕಂಡುಕೊಂಡಂತೆ ವ್ಯಾವಹಾರಿಕ ಇಲ್ಲವೆ ಸಾಂಸ್ಕೃತಿಕ ಕಾರಣಗಳಿಂದಾಗಿ ಕೆಲವರು ಹಿಂದಿ-ತೆಲುಗು-ತಮಿಳು-ಮಲೆಯಾಳಂ-ಮರಾಠಿ ಮೊದಲಾದ ಭಾಷೆಗಳಲ್ಲಿ ಒಂದು ಭಾಷೆಯನ್ನು ಕಲಿಯಲು ಇಚ್ಚೆ ಪಡಬಹುದು. ನಮ್ಮ ವಿಶಾಲ ದೇಶದಲ್ಲಿ ಇದೆಲ್ಲ ವೈವಿಧ್ಯಕ್ಕೂ ಅವಕಾಶವಿರಬೇಕು. ಸಂಸ್ಕೃತವು ಪಾಲಿ. ಅರ್ಧ ಮಾಗಧಿ, ಮುಂದೆ ಹಿಂದೀ, ಬಂಗಾಲಿ ಮೊದಲಾದ ಭಾಷೆಗಳ ರೂಪಗಳನ್ನು ತಳೆದಮ್ತೆ ಲ್ಯಾಟಿನ್ ಭಾಷೆಯು ಇಟ್ಯಾಲಿಯನ್ ಆಗಿ, ಹಾಗೂ ಪ್ರಾಚೀನ ಅರೇಬಿಕ್ ಭಾಷೆಯು ಆಧುನಿಕ ಅರೇಬಿಕ್ ಆಗಿ, ಪ್ರಾಚೀನ ಫಾರಸಿ ಭಾಷೆಯು ಪರ್ಸಿಯನ್ ಆಗಿ ವಿಕಾಸಗೊಂಡಿದೆ. ಆದರೆ ಸಂಸ್ಕೃತದ ಒಂದು ಗ್ರಾಂಥಿಕ ರೂಪಕ್ಕೆ ಸ್ಥಿರಕ್ಕೆ ಬಂದಂತೆ ಮಧ್ಯಕಾಲೀನ ಲ್ಯಾಟಿನ್ ಹಾಗೂ ಫಾರಸಿ ಭಾಷೆಗಳಿಗೂ ಒಂದು ಗ್ರಾಂಥಿಕ ಪರಂಪರೆಯ ಸ್ಥಿರತೆ ಬಂದಿದೆ. ಲ್ಯಾಟಿನ್-ಅರೇಬಿಕ್ ಭಾಷೆಗಳಲ್ಲಿಯ ಹಲವಾರು ನಿರ್ದಿಷ್ಟ ಪ್ರಾರ್ಥನೆಗಳು ಇನ್ನೂ ರೂಢಿಯಲ್ಲಿವೆ. ಅರೇಬಿಕ್-ಫಾರಸಿ ಅಭ್ಯಾಸ ನಡೆದಿರುವಂತೆ ಹಲವು ಕಾಲೇಜುಗಳಲ್ಲಿಯೂ ಡಿಯಾಲಾಜಿಕಲ್ ಸೆಮಿನರಿಗಳಲ್ಲಿಯೂ ಮಧ್ಯಕಾಲೀನ ಲ್ಯಾಟಿನ್ ಅಭ್ಯಾಸ ನಡೆಯುತ್ತಿದೆ. +೨. ಸಮಿತಿಯ ಸಲಹೆಗಳು +ಭಾಷಾ ಶಿಕ್ಷಣ ತತ್ವಗಳನ್ನನುಸರಿಸಿ ಭಾಷೆಗಳ ಮಹತ್ವದ ಪ್ರಮಾಣ, ಇಂದಿನ ಕನ್ನಡ ಜನತೆಯ ಪರಿಸ್ಥಿತಿ, ಅಲ್ಪಸಂಖ್ಯಾತರ ಸಮಸ್ಯೆಗಳು, ವಿಕಸನಪೂರ್ಣ ವಿದ್ಯಾರ್ಜನೆಯ ಕ್ರಮ: ಎಲ್ಲ ವಿಷಯಗಳನ್ನು ಕುರಿತು ಆಮಂತ್ರಿತರೊಡನೆ ಹಾಗೂ ಸಾರ್ವಜನಿಕವಾಗಿ ನಡೆದ ಚರ್ಚೆಗಳನ್ನು ಲಕ್ಷಿಸಿ, ಸಮಿತಿಯ ಸದಸ್ಯರ ವಿಚಾರಗಳನ್ನು ಮಥಿಸಿ ಈ ವರದಿಯಲ್ಲಿ ಸೂಚಿಸಿರುವ ಅಭಿಪ್ರಾಯಗಳನ್ನು ಸಾರ್ವಾನುಮತದಿಂದ ಸಮಿತಿಯು ಅಂಗೀಕರಿಸಿದೆ. +(೧) ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಭಾಷೆಯನ್ನು ಏಕೈಕ ಪ್ರಥಮಭಾಷೆಯನ್ನಾಗಿ ಮಾಡಿ ಅದರ ಅಭ್ಯಾಸ ಕಡ್ಡಾಯವಾಗಬೇಕು. ಅದಕ್ಕೆ ೧೫೦ ಅಂಕಗಳಿರಬೇಕು. (ಈ ವಿಷಯದಲ್ಲಿ ಒಂದು ತಾತ್ಪೂರ್ತಿಕ ವ್ಯವಸ್ಥೆಯು ಅವಶ್ಯವಾದ್ದರಿಂದ ಅದನ್ನು ಮುಂದೆ ಒಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.) +(೨) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಉರ್ದು, ಹಿಂದೀ-ಈ ಆಧುನಿಕ ಭಾಷೆಗಳಲ್ಲಿ ಒಂದು: +ಇಲ್ಲವೆ +ಇಂಗ್ಲಿಷು +ಇಲ್ಲವೆ +ಸಂಸ್ಕೃತ, ಅರೇಬಿಕ, ಪರ್ಸಿಯನ್, ಲ್ಯಾಟಿನ್, ಗ್ರೀಕ್- ಈ ಪ್ರಾಚೀನ ಭಾಷೆಗಳಲ್ಲಿ ಒಂದು: +(೩) ನಿರ್ದಿಷ್ಟಗೊಳಿಸಿದ ಪ್ರಥಮಭಾಷೆಯನ್ನೂ ಹಾಗೂ ಆಯ್ದುಕೊಂಡ ದ್ವಿತೀಯ ಭಾಷೆಯನ್ನೂ ಬಿಟ್ಟು ಇನ್ನಾವುದಾದರೊಂದು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ದುಕೊಳ್ಳಬೇಕು. ಈ ಭಾಷೆಯನ್ನು ಪಟ್ಟಿ (೨) ರಲ್ಲಿ ಕಾಣಿಸಿರುವ ಭಾಷೆಗಳ ಪಟ್ಟಿಯಿಂದ ಆಯ್ದುಕೊಳ್ಳಬೇಕು. +(೪) ತೃತೀಯ ಭಾಷೆಗೆ ೫೦ ಅಂಕಗಳಿರಬೇಕು. ತೃತೀಯ ಭಾಷೆಯೂ ಪರೀಕ್ಷೆಗೆ ಕಡ್ಡಾಯದ ವಿಷಯವಾಗಬೇಕು. +(೫) ದ್ವಿತೀಯ ಮತ್ತು ತೃತೀಯ ಭಾಷೆಯ ಗುಂಪುಗಳಲ್ಲಿ ಎಲ್ಲ ಭಾಷಾವರ್ಗಗಳೂ ಸೇರ್ಪಡೆಯಾಗುತ್ತವೆ. ಅಭ್ಯಸಿಸಲಿರುವ ಭಾಷೆಯು ಅರ್ವಾಚೀನವಾಗಲಿ, ಪ್ರಾಚೀನವಾಗಲಿ, ಆಯಾ ಹಂತದಲ್ಲಿ ಉಳಿದ ಭಾಷೆಗಳ ಹಾಗೂ ಭಾಷಾವರ್ಗಗಳ ಮಟ್ಟಕ್ಕೆ ಅದರ ಮಟ್ಟವೂ ಸರಿಸಮವಾಗಿರಬೇಕು. +(೬) ಮೇಲೆ ಕಾಣಿಸಿದ ಐದು ಸಲಹೆಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯಿಸುವುವು. ಆದರೆ ಕಡ್ಡಾಯದ ಪರೀಕ್ಷಾ ವಿಷಯವಾಗಿ ವಿದ್ಯಾರ್ಥಿಗಳಿಗೆ ಭಾರವಾಗದೆ ಪ್ರತಿಭಾವಂತ ವಿದ್ಯಾರ್ಥಿಗಳ ಸುಪ್ತ ಚೇತನವನ್ನು ಉದ್ದೇಶಿಸುವಂತಹ ಒಂದು ಆರೋಹಣ ಕ್ರಮವೂ ನವ ಜನಾಂಗದ ದೃಷ್ಟಿಯಿಂದ ಸ್ವಾಗತಾರ್ಹವೆನಿಸಿದೆ. ಕಡ್ಡಾಯವಿದ್ದ ಭಾಷಾ ವಿಷಯಗಳು ಈಗಿರುವಂತೆಯೇ ಅಂದರೆ (ಪ್ರಥಮಭಾಷೆಗೆ ೧೫೦, ದ್ವಿತೀಯ ಭಾಷೆಗೆ ೧೦೦, ತೃತೀಯ ಭಾಷೆಗೆ ೫೦) ಅಂಕಗಳು ಉಳಿಯಲಿ. ಆದರೆ ಇಚ್ಚೆಪಟ್ಟವರಿಗೆ ಹೆಚ್ಚಿನ ಪರಿಶ್ರಮ ಪಡುವ ಸುಸಂಧಿ ದೊರೆಯುವಂತಿರಬೇಕು. ಇಂತಹ ಕ್ರಮವು ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಅಭ್ಯಾಸದಲ್ಲಿ ಹೆಚ್ಚಿನ ಆಸ್ಥೆಯನ್ನು ವಹಿಸಲು ಅದು ಅವರನ್ನು ಪ್ರೇರಿಸುತ್ತದೆ. ಮುಂದೆ ಸಾಧ್ಯವಾಗದ ಒಂದು ವಿಷಯದ ಅಭ್ಯಾಸವನ್ನು ಎಸ್.ಎಸ್.ಎಲ್.ಸಿ ವರ್ಷದಲ್ಲಿಯೇ ಕೊನೆಗೊಳಿಸಲು ಅದು ಅವರನ್ನು ಹುರಿದುಂಬಿಸುತ್ತದೆ. +ಆ ಕ್ರಮವು ಯಾವುದೆಂದರೆ, ಒಂದು ಸಬ್ಜೆಕ್ಟ್ ಎಕ್ಸಾಮಿನೇಷನ್ ಇಲ್ಲವೆ ಒಂದು ವಿಶಿಷ್ಟ ವಿಷಯ ಪರೀಕ್ಷೆ. ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು, ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್-ಇವುಗಳಲ್ಲಿ ಒಂದು ಭಾಷೆಯನ್ನೋ ಅಥವಾ ಅವಕಾಶವಿರುವ ಇನ್ನಾವುದಾದರೂ ಒಂದು ವಿಷಯವನ್ನೋ ಆಯ್ದುಕೊಂಡು ವಿದ್ಯಾರ್ಥಿಗಳು ತಮಗೆ ತಾವೇ ಅಭ್ಯಸಿಸಬಹುದು. ಅವುಗಳಿಗಾಗಿ ಶಾಲೆಗಳಲ್ಲಿ ಯಾವ ಬೋಧನಾ ಸೌಲಭ್ಯಗಳೂ ಇರುವುದಿಲ್ಲ. ಹೀಗೆ ಹೆಚ್ಚಿನ ವಿಷಯವನ್ನು ಆಯ್ಕೆಮಾಡಿಕೊಂಡವರು ಅದನ್ನು ಸ್ವತಂತ್ರವಾಗಿ ಅಭ್ಯಸಿಸಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಸ್ವಸಂತೋಷದ ಪರೀಕ್ಷೆ. +ಈ ವಿಷಯದಲ್ಲಿ ಪರೀಕ್ಷೆಯನ್ನು ಎಸ್.ಎಸ್.ಎಲ್.ಸಿ ಪರೀಕ್ಷೆ ಜೊತೆಯಲ್ಲಿಯೇ ವ್ಯವಸ್ಥೆ ಮಾಡಬಹುದು. ಆಡಳಿತ ದೃಷ್ಟಿಯಿಂದ ಇದು ಸೂಕ್ತ. ಇಲ್ಲವೇ ಆ ಪರೀಕ್ಷೆ ಆದ ಒಂದು ತಿಂಗಳಲ್ಲಿ ನಡೆಸಬಹುದು. +ವಿದ್ಯಾರ್ಥಿಗಳು ಈ ವಿಷಯದಲ್ಲಿ ಗಳಿಸುವ ಅಂಕಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕವಾಗಿಯೇ ಅರ್ಹತಾ ಪತ್ರ ವಿತರಣೆಯ ವ್ಯವಸ್ಥೆ ಆಗಬೇಕು. +ಭಾಷಾ ವಿಷಯಗಳಲ್ಲದೆ, ಚಿತ್ರಕಲೆ, ಸಂಗೀತ, ವೃತ್ತಿ ಶಿಕ್ಷಣ, ನೃತ್ಯ, ಮುಂತಾದ ಇನ್ನಿತರ ವಿಷಯಗಳನ್ನೂ ಸೇರಿಸಬಹುದು. +ಈ ವಿಷಯಗಳಿಗೆ ಸಂಬಂಧಪಟ್ಟಂತೆ ಅಗತ್ಯವಾದ ಪಠ್ಯವಸ್ತು ಮತ್ತು ಪರೀಕ್ಷಾಕ್ರಮವನ್ನು ತಯಾರಿಸುವ ಜವಾಬ್ದಾರಿಯನ್ನು ತಜ್ಞರ ಸಮಿತಿಗೆ ವಹಿಸಬೇಕು. +ಸಲಹೆ (೧)ಕ್ಕೆ ಟಿಪ್ಪಣಿ: +(ಅ) ೧೯೮೧-೮೨ ರಿಂದಲೇ ಕನ್ನಡವು ಏಕೈಕ ಪ್ರಥಮಭಾಷೆಯಿರಬೇಕೆಂದು ಹೇಳಿದೆಯಷ್ಟೆ. ಕನ್ನಡ ಮಾತೃಭಾಷೆಯಾದವರಿಗೆ ಅಲ್ಲದೆ, ಅದನ್ನು “ದ್ವಿತೀಯ ಮಾತೃಭಾಷೆ” ಯೆಂದು ಕರ್ನಾಟಕದಲ್ಲಿ ನೆಲೆಸಿ ಸ್ವೀಕರಿಸಿದವರಿಗೆ ಇದರಿಂದ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡವನ್ನು ಕಲಿಯುವ ಏರ್ಪಾಟು ಮಾಡಿಕೊಳ್ಳದೆ ಇರುವ ಅನೇಕ ಕನ್ನಡೇತರ ಕುಟುಂಬಗಳು ಕರ್ನಾಟಕದಲ್ಲಿವೆ. ಇವರ ಸಲುವಾಗಿ ಸರ್ಕಾರದವರಾಗಲಿ, ಖಾಸಗಿ ಸಂಸ್ಥೆಗಳಾಗಲಿ ತೆರೆದ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ವ್ಯವಸ್ಥೆ ಇರಬೇಕೆಂದು ಅಂಗೀಕೃತವಾಗಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಅದನ್ನು ಪ್ರಾರಂಭಿಸಬೇಕಾಗಿದೆ. ೧೯೮೧-೮೨ ರಿಂದ ಪ್ರಾಥಮಿಕ ೩ನೇ ಇಯತ್ತೆಯಲ್ಲಿ ಅದನ್ನು ಪ್ರಾರಂಭಿಸಿದರೆ, ೩ನೆಯ ಇಯತ್ತೆಯನ್ನು ಮುಗಿಸಿ, ೪, ೫, ೬, ೭, ಇವುಗಳನ್ನೂ ದಾಟಬೇಕಾದರೆ ೧೯೮೧-೮೨ ರಲ್ಲಿ ಕನ್ನಡವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಗೆ ಹಂತಹಂತದಲ್ಲಿ ಅದನ್ನು ಕಲಿಯಲು ೫ ವರ್ಷಗಳು ಬೇಕಾಗುತ್ತವೆ. ಕಾರಣ ಸಮಿತಿಯ ನಿರ್ಧಾರದಂತೆ ಕನ್ನಡೇತರರ ಮಕ್ಕಳಿಗೂ ೧೯೮೧-೮೨ ರಿಂದ ೧೫೦ ಅಂಕಗಳ ಕನ್ನಡವನ್ನು ೮ನೆಯ ಇಯತ್ತೆಯಿಂದ ಕಡ್ಡಾಯದ ವಿಷಯ ಹಾಗೂ ಪ್ರಥಮಭಾಷೆಯನ್ನಾಗಿ ಮಾಡಿದರೆ ಅವರಿಗೆ ತೊಂದರೆಯುಂಟಾಗುತ್ತದೆ. ಆದುದರಿಂದ ಅವರಿಗಾಗುವ ಈ ತೊಂದರೆಯನ್ನು ನಿವಾರಿಸಲು ಅದನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಿತಿಯು ಈ ಕೆಳಗಿನ ವ್ಯವಸ್ಥೆಯನ್ನು ಸಲಹೆ ಮಾಡಿದೆ. ಈ ವ್ಯವ್ಸ್ಥೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಾಗಲಿ, ಖಾಸಗಿ ಶಾಲೆಗಳಲ್ಲಾಗಲೀ, ಕನ್ನಡೇತರ ಮಕ್ಕಳು ೧೯೮೧-೮೨ರ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಕಡ್ಡಾಯದ ವಿಷಯವಾಗಿ ಕಲಿಯಲು ಪ್ರಾರಂಭಿಸುತ್ತಾರೆ. ಹಂತಗಳನ್ನು ಈ ರೀತಿಯಾಗಿ ಏರ್ಪಡಿಸಲಾಗುವುದು. +೧೯೬೧-೬೨ ಕನ್ನಡ ಕಡ್ಡಾಯದ ವಿಷಯ ೩ ನೆ ಇಯತ್ತೆ +೧೯೮೨-೮೩ ” ೪ ನೆ ಇಯತ್ತೆ +೧೯೮೩-೮೪ ” ೫ ನೆ ಇಯತ್ತೆ +೧೯೮೪-೮೫ ” ೬ ನೆ ಇಯತ್ತೆ +೧೯೮೫-೮೬ ” ೭ ನೆ ಇಯತ್ತೆ +೧೯೮೬-೮೭ +ಹಾಗೂ ಮುಂದೆ ” ೮ ನೆ ಇಯತ್ತೆ +ಹೀಗೆ ಸಾಗುವದರಿಂದ ವ್ಯವಸ್ಥಾಪಕರಿಗೆ ವ್ಯವಸ್ಥೆಮಾಡಲು ಯೋಗ್ಯ ಸಮಯ ದೊರೆಯುತ್ತದೆ. ಕನ್ನಡೇತರ ಮಕ್ಕಳಿಗೆ ಉಳಿದ ಮಕ್ಕಳಂತೆ ಕನ್ನಡವನ್ನು ಕ್ರಮೇಣ ಚೆನ್ನಾಗಿ ಅರಿತುಕೊಂಡು ನಿರೀಕ್ಷಿಸಿದ ಮಟ್ಟವನ್ನು ಸುಲಭವಾಗಿ ತಲುಪಲು ವೇಳೆ ಹಾಗೂ ಶಿಕ್ಷಣ ದೊರೆಯುತ್ತದೆ. ಕರ್ನಾಟಕ ರಾಜ್ಯದಲ್ಲಿ ೧೦ ವರ್ಷ ನೆಲೆಸಿದ ಮನೆತನಗಳ ಮಕ್ಕಳು ಕನ್ನಡವನ್ನು ಈ ರೀತಿಯಾಗಿ ಕಡ್ಡಾಯದ ವಿಷಯವನ್ನಾಗಿ ಕಲಿಯಬೇಕು. +(ಆ) ಮೇಲೆ ಉಲ್ಲೇಖಿಸಿದ ಕಾರಣದ ಮೂಲಕ ೧೯೮೬-೮೭ನೆಯ ಶೈಕ್ಷಣಿಕ ವರ್ಷದಲ್ಲಿ ಕನ್ನಡೇತರ ಮಕ್ಕಳಿಗೂ ೮ನೆಯ ಇಯತ್ತೆಯಲ್ಲಿ ೧೫೦ ಗುಣಾಂಕಗಳ ಕನ್ನಡ ಭಾಷಾ ವಿಷಯವನ್ನು೮ ಅಭ್ಯಸಿಸುವ ಚೈತನ್ಯ ಬರುವವರೆಗೆ ಅವರು ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ೩ನೆಯ ಇಯತ್ತೆಯಿಂದ ೭ನೆಯ ಇಯತ್ತೆಯವರೆಗೆ ಕಲಿತು ಮುಂದುವರಿಯುತ್ತಾರೆ. ಈ ಅವಧಿ ಮುಗಿಯುವವರೆಗೆ-ಅಂದರೆ ೧೯೮೧-೮೨, ೧೯೮೨-೮೩, ೧೯೮೩-೮೪, ೧೯೮೪-೮೫ ಹಾಗೂ ೧೯೮೫-೮೬-ಈ ಐದು ವರ್ಷಗಳಲ್ಲಿ ೮ನೆಯ ಇಯತ್ತೆಯಲ್ಲಿ ಕನ್ನಡೇತರ ಮಕ್ಕಳು ೧೫೦ ಗುಣಾಂಕಗಳ ಮಟ್ಟದ ತಮ್ಮ ಮಾತೃಭಾಷೆಯನ್ನು ಹಾಗೂ ೧೦೦ ಅಂಕಗಳ ದ್ವಿತೀಯ ಭಾಷೆ ಇಲ್ಲವೆ ೫೦ ಗುಣಾಂಕಗಳ ತೃತೀಯ ಭಾಷೆಯಾದ ಕನ್ನಡವನ್ನೂ ಅಭ್ಯಸಿಸಬೇಕಾಗುತ್ತದೆ. ಆದರೆ ೧೯೮೬-೮೭ರಿಂದ ಮಾತ್ರ ಅವರಿಗೆ ಕನ್ನಡ ೧೫೦ ಗುಣಾಂಕಗಳಿದ್ದ ಕಡ್ಡಾಯದ ಭಾಷೆಯಾಗುತ್ತದೆ. ಆಗ ೧೦೦ ಗುಣಾಂಕ (ದ್ವಿತೀಯ) ಇಲ್ಲವೆ ೫೦ ಗುಣಾಂಕಗಳುಳ್ಳ (ತೃತೀಯ) ಭಾಷೆಯಾಗಿ ಅವರು ತಮ್ಮ ಮಾತೃಭಾಷೆಯನ್ನು ಕಲಿಯಬಹುದು. +(ಇ) ಇದು ಅಲ್ಪಸಂಖ್ಯಾತರ ಮಾತೃಭಾಷೆಗಳ ವಿಷಯವಾಯಿತು. ಸಂಸ್ಕೃತ ಹಾಗೂ ಇನ್ನುಳಿದ ಪ್ರಾಚೀನ ಭಾಷೆಗಳಿಗೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಸಹ ಪ್ರಥಮ ಭಾಷೆಯ ಸ್ಥಾನವಿರುವುದಿಲ್ಲ. ಅವುಗಳನ್ನು ದ್ವಿತೀಯ (೧೦೦ ಅಂಕಗಳು) ಇಲ್ಲವೆ ತೃತೀಯ (೫೦ ಅಂಕಗಳು) ಭಾಷೆಗಳೆಂದು ಆಯ್ದುಕೊಳ್ಳಬಹುದು. ಸಂಸ್ಕೃತವು ದ್ವಿತೀಯ ಮತ್ತು ತೃತೀಯ ಭಾಷೆಗಳ ಗುಂಪಿನಲ್ಲಿರುವುದರಿಂದ ಆ ಗುಂಪಿನಲ್ಲಿರುವ ಇತರ ಭಾಷೆಗಳ ಮಟ್ಟಕ್ಕೆ ಅದರ ಪಠ್ಯಕ್ರಮ ಸರಿಸಮವಾಗಬೇಕಾಗಿರುತ್ತದೆ. +(ಈ) ದ್ವಿತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೆ ಹಾಗೂ ಇಂಗ್ಲಿಷಿಗೆ ಸ್ಥಾನವಿರುವುದು. ‘ಇ’ಯಲ್ಲಿ ಹೇಳಿದಂತೆ ಸಂಸ್ಕೃತ ಹಾಗೂ ಉಳಿದ ಪ್ರಾಚೀನ ಭಾಷೆಗಳಿಗೂ ಇಲ್ಲಿ ಸ್ಥಾನವಿರುವುದು. ಇಲ್ಲಿ ಆಯ್ದುಕೊಂಡ ಪ್ರತಿಯೊಂದು ಭಾಷೆಗೂ ೧೦೦ ಅಂಕಗಳಿರುವುವು. +(ಉ) ತೃತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡ, ಸಂಸ್ಕೃತ ಮತ್ತು ಹಿಂದೀ ಭಾಷೆಗಳು ಇರುತ್ತವೆ. +ಕನ್ನಡ ಶಿಕ್ಷಕರನ್ನು ಇಲ್ಲಿಯವರೆಗೆ ನೇಮಿಸದಿರುವ ಮೂಲಕ ಈ ಮೊದಲು ಹೇಳಿದಂತೆ ವುದ್ಯಾರ್ಥಿಗಳು ಪ್ರೌಢಶಾಲೆಗಳಲ್ಲಿ ೧೫೦ ಅಂಕಗಳ ಕನ್ನಡ ಭಾಷೆಯನ್ನು ೮ನೆಯ ಇಯತ್ತೆಯಲ್ಲಿ ಅಭ್ಯಸಿಸಲು ೧೯೮೬-೮೭ರವರೆಗೆ ಅರ್ಹರಾಗಿರುವುದಿಲ್ಲ. ೧೯೮೧-೮೨ ರಿಂದ ೧೯೮೫-೮೬ನೆಯ ವರ್ಷ ಮುಗಿಯುವವರೆಗೆ (ಅಂದರೆ ೩ನೆಯ ಇಯತ್ತೆಯಲ್ಲಿ ಅಭ್ಯಸಿಸಲು ೧೯೮೧-೮೨ರಲ್ಲಿ ಪ್ರಾರಂಭಿಸಿದ ವಿದ್ಯಾರ್ಥಿಯು ೧೯೮೫-೮೬ರಲ್ಲಿ ೭ನೆಯ) ಸರ್ಕಾರ ಈಗಾಗಲೇ ನಿರ್ಧರಿಸಿ ಪಠ್ಯಕ್ರಮದಲ್ಲಿ ಪ್ರತಿವರ್ಷ ಕನ್ನಡ ಭಾಷೆಯ ಶಿಕ್ಷಣಕ್ಕಾಗಿ ಏರ್ಪಾಟು ಮಾಡಿದ ಪ್ರಕಾರ ಪ್ರಾಥಮಿಕ ಮೂರನೆಯ ತರಗತಿಯಿಂದ ಕ್ರಮಶಃ ಕನ್ನಡವನ್ನು ಕಲಿಸಲು ಬೇಕಾದ ಸೌಲಭ್ಯಗಳನ್ನು ೧೯೮೧-೮೨ರಿಂದ ಒದಗಿಸಲೇಬೇಕು. ಈ ಕಾರ್ಯವನ್ನು ಕುರಿತು ಸರ್ಕಾರ ಒಡನೆ ಕಾರ್ಯಪ್ರವೃತ್ತರಾಗಲೇ ಬೇಕು. +೧೧(೩) (ಅ) ಕೆಲವು ನಕ್ಷೆಗಳು: ಮುಖ್ಯ ಸಲಹೆಗಳ ಪ್ರಕಾರ ೧೯೮೧-೮೨ ರಿಂದ ಹಾಗೂ ಮುಂದೆ ಎಲ್ಲ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ. ಭಾಷಾ ಶಿಕ್ಷಣ ವ್ಯವಸ್ಥೆ +ಪ್ರಥಮಭಾಷೆ +ದ್ವಿತೀಯಭಾಷೆ +ತೃತೀಯಭಾಷೆ +ಕನ್ನಡ ಏಕೈಕ ಕಡ್ಡಾಯದ ಭಾಷೆ +ಅಂಕಗಳು ೧೫೦ ಅಂಕಗಳು ೧೦೦ +ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದು ದ್ವಿತೀಯಭಾಷೆಯೆಂದು ಆಯ್ದುಕೊಂಡ +(ಅ) ಆಧುನಿಕ ಭಾರತೀಯ ಭಾಷೆಗಳು : ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು. +(ಆ) ಇಂಗ್ಲಿಷು +(ಇ) ಪ್ರಾಚೀನ ಭಾಷೆಗಳು: ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್. +ಅಂಕಗಳು ೫೦ +ದ್ವಿತೀಯಭಾಷೆಯೆಂದು ಆಯ್ದುಕೊಂಡ ಭಾಷೆಯನ್ನು ಬಿಟ್ಟು ಉಳಿದ ಭಾಷೆಗಳಲ್ಲಿ ಒಂದು: +ದ್ವಿತೀಯಭಾಷೆಯ (ಅ), (ಆ) ಮತ್ತು (ಇ) ವರ್ಗಗಳೊಳಗಿಂದ ಆಯ್ದುಕೊಳ್ಳ ಬಹುದು. +ತೃತೀಯಭಾಷೆಯೂ ಕಡ್ಡಾಯ ಪರೀಕ್ಷಾ ಭಾಷೆ. +೧೧ (೩) (ಅ): ವಿಶಿಷ್ಟ ವಿಷಯ ಪರೀಕ್ಷಾ ವ್ಯವಸ್ಥೆ +ಎಸ್.ಎಸ್.ಎಲ್.ಸಿ. ಪರೀಕ್ಷೆ ನಂತರದ ಪರೀಕ್ಷೆ ಅಥವಾ ಜೊತೆಯಲ್ಲಿ ನಡೆಯುವ ಪರೀಕ್ಷೆ. +ಶಾಲೆಯಲ್ಲಿ ಬೋಧನೆ ಇಲ್ಲ +ಸ್ವತಂತ್ರ ಅಭ್ಯಾಸ ಮೇಲಿನ ಮೂರು ಅಂಕಣಗಳಲ್ಲಿಯೂ ಯಾವುದೇ ಒಂದು ಭಾಷೆ ಅಥವಾ ವಿಶೇಷ ವಿಷಯವನ್ನು ಅಭ್ಯಸಿಸಿ ಪರೀಕ್ಷೆ ತೆಗೆದು ಕೊಳ್ಳಬಹುದು. +ಅಂಕಗಳು : ೧೦೦ +ಎಸ್.ಎಸ್.ಎಲ್.ಸಿಗಿಂತ ತುಸು ಹೆಚ್ಚಿನ ಮಟ್ಟ. ೧೯೮೧-೮೨ರಿಂದ ಮುಂದೆ ಎಸ್.ಎಸ್. ಎಲ್.ಸಿ ವರ್ಷದಲ್ಲಿಯೇ ಅಭ್ಯಾಸ. +ಪ್ರತ್ಯೇಕ ಅರ್ಹತಾಪತ್ರ +ಸುಪ್ತ ಚೇತನದ ಉದ್ದೀತನವೇ ಗುರಿ. +೧೯೮೧-೮೨ರಿಂದ ೧೯೮೫-೮೬ ರ ವರೆಗೆ ಗ್ರಾಹ್ಯವೆಂದು ಸೂಚಿಸಿದ ತಾತ್ಪೂರ್ತಿಕ ವ್ಯವಸ್ಥೆಯ ಎರಡು ನಕ್ಷೆಗಳು ಕನ್ನಡೇತರ ವಿದ್ಯಾರ್ಥಿಗಳಿಗಾಗಿ +ಪ್ರಥಮಭಾಷೆ +ದ್ವಿತೀಯಭಾಷೆ +ತೃತೀಯಭಾಷೆ +ಕನ್ನಡ : ಅಂಕಗಳು-೧೫೦ +(ಕನ್ನಡ ಶಿಕ್ಷಕರಿಲ್ಲದ ಮೂಲಕ ಪ್ರಾಥಮಿಕ ೩ನೆಯ ಇಯತ್ತೆಯಿಂದ ಕನ್ನಡ ಕನ್ನಡೇತರ ವಿದ್ಯಾರ್ಥಿಗಳು ಕನ್ನಡ ಕಲಿತಿಲ್ಲ. ಕಾರಣ ೧೯೮೧-೮೨ರಿಂದ ಕನ್ನಡವನ್ನು ಕಡ್ಡಾಯವಾಗಿ ೩ನೆಯ ಇಯತ್ತೆಯಿಂದ ಕಲಿಯಲು ಪ್ರಾರಂಭಿಸಿದ ವಿದ್ಯಾರ್ಥಿಗಳು ೧೯೮೬-೮೭ ರಲ್ಲಿ ೮ನೆಯ ಇಯತ್ತೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯೆಂದು (೧೫೦ ಅಂಕಗಳು) ತೆಗೆದು ಕೊಳ್ಳುತ್ತಾರೆ. +ಅಲ್ಲಿಯವರೆಗೆ ತಮ್ಮ ಮಾತೃಭಾಷೆಯನ್ನು (ತಮಿಳು, ತೆಲುಗು, ಮಲೆ ಕನ್ನಡವನ್ನು ದ್ವಿತೀಯ ಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ವಿಷಯವನ್ನಾಗಿ ತೆಗೆದುಕೊಳ್ಳುತ್ತಾರೆ. ಹಾಗೂ ಕನ್ನಡವನ್ನು ವರ್ಷಾನು ವರ್ಷ ಕಲಿತು ೧೯೮೬-೮೭ರಲ್ಲಿ ಪ್ರಥಮ ಭಾಷೆಯಾಗಿಸಿಕೊಳ್ಳುತ್ತಾರೆ. ೧೯೮೬-೮೭ರ ವರೆಗೆ ಕನ್ನಡೇತರ ವಿದ್ಯಾರ್ಥಿಗಳು ೪ನೆಯ ಇಯತ್ತೆಯಲ್ಲಿ ಕನ್ನಡವನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ಕಲಿಯುತ್ತಾರೆ. ಅಂಕಗಳು ೧೦೦ +ಕನ್ನಡ +ಇಲ್ಲವೆ +ಇಂಗ್ಲಿಷು +ಇಲ್ಲವೆ +(ಇ) ಒಂದು ಪ್ರಾಚೀನ ಭಾಷೆ (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್) ಅಂಕಗಳು: ೫೦ +ಕನ್ನಡ +ಇಲ್ಲವೆ +ಇಂಗ್ಲಿಷು +ಇಲ್ಲವೆ +(ಇ) ಒಂದು ಪ್ರಾಚೀನ ಭಾಷೆ (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್) +ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳುವವರಿಗೆ ಅದು ತೃತೀಯ ಭಾಷೆಯಾಗಿ ಕಡ್ಡಾಯದ ಪರೀಕ್ಷಾ ವಿಷಯವಾಗಿರುತ್ತದೆ. +ಕನ್ನಡ ವಿದ್ಯಾರ್ಥಿಗಳಿಗಾಗಿ ೧೯೮೧-೮೬ರವರೆಗೆ ಮಾಡಿದ ಭಾಷಾಭ್ಯಾಸ ವ್ಯವಸ್ಥೆ +ಪ್ರಥಮಭಾಷೆ +ದ್ವಿತೀಯಭಾಷೆ +ತೃತೀಯಭಾಷೆ +ಕನ್ನಡ ಏಕೈಕ ಕಡ್ಡಾಯದ ಭಾಷೆ +ಅಂಕಗಳು ೧೫೦ ಅಂಕಗಳು ೧೦೦ +ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದು +(ಅ) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಇಲ್ಲವೆ, +(ಆ) ಇಂಗ್ಲಿಷು ಇಲ್ಲವೆ +(ಇ) ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್. ಅಂಕಗಳು: ೫೦ +ಕೆಳಗಣ ಭಾಷೆಗಳಲ್ಲಿ ಒಂದು: +(ಅ) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು ಹಿಂದೀ ಇಲ್ಲವೆ +(ಆ)ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್ +ಇಲ್ಲವೆ +ಗ್ರೀಕ್ +ಕನ್ನಡ ಹಾಗು ಕನ್ನಡೇತರ ವಿದ್ಯಾರ್ಥಿಗಳಿಗೆ ೧೯೮೧-೮೬ರವರೆಗೆ ಹಾಗೂ ಮುಂದೆ ಸರ್ವ ಸಾಧಾರಣವಾದ ವಿಶಿಷ್ಟ ವಿಷಯಾ ಪರೀಕ್ಷಾ ವ್ಯವಸ್ಥೆ +ಪ್ರಥಮಭಾಷೆ +ದ್ವಿತೀಯಭಾಷೆ +ತೃತೀಯಭಾಷೆ +ಎಸ್.ಎಸ್.ಎಲ್.ಸಿ ಪರೀಕ್ಷೆಯ ಜೊತೆಗೆ ಅಥವಾ ಅನಂತರದ ಪರೀಕ್ಷೆ ಶಾಲೆಯಲ್ಲಿ ಬೋಧನ ಇಲ್ಲ. ಸ್ವತಂತ್ರ ಅಭ್ಯಾಸ. ಪ್ರಥಮ-ದ್ವಿತೀಯ-ತೃತೀಯ ಭಾಷೆಗಳಾಗಿ ಉಲ್ಲೇಖಗೊಂಡ ಯಾವುದೇ ಒಂದು ಭಾಷೆ ಅಥವಾ ವಿಷಯ ಆರಿಸಿಕೊಂಡು ವಿದ್ಯಾರ್ಥಿ ಪರೀಕ್ಷೆಗೆ ತೆಗೆದುಕೊಳ್ಳಬಹುದು. ೧೦೦ ಅಂಕಗಳು ಎಸ್.ಎಸ್.ಎಲ್.ಸಿ. ಗಿಂತ ತುಸು ಹೆಚ್ಚಿನ ಮಟ್ಟ ಎಸ್.ಎಸ್.ಎಲ್.ಸಿ ವರ್ಷದಲ್ಲಿಯೇ ಅಭ್ಯಾಸ ಪ್ರತ್ಯೇಕ ಅರ್ಹತಾ ಪತ್ರ. ಸುಪ್ತ ಚೇತನದ ಉದ್ದೀಪನವೇ ಗುರಿ. +ಕೆಲವು ವಿವರಣೆಗಳು +(೧) ತಾತ್ಪೂರ್ತಿಕ ವ್ಯವಸ್ಥೆ +೧೯೮೧ ರಿಂದ ೧೯೮೬ರ ವರೆಗೆ ಮಾಡಿದ ತಾತ್ಪೂರ್ತಿಕ ವ್ಯವಸ್ಥೆಗೂ ಸಮಿತಿಯ ಮುಖ್ಯ ಸಲಹೆಗಳ ಪ್ರಕಾರ ಒಡನೆ ಪ್ರಾರಂಭವಾಗಿ ಹಾಗೆಯೇ ಮುಂದುವರಿಯಬೇಕಾದ ವ್ಯವಸ್ಥೆಗೂ ಇರುವ ಅಂತರಗಳಿಷ್ಟು. +(ಅ) ಕನ್ನಡೇತರ ವಿದ್ಯಾರ್ಥಿಗಳ ಮಾತೃಭಾಷೆಯ (ತಮಿಳು ಮುಂತಾದ) ಅಭ್ಯಾಸ ೧೫೦ ಅಂಕಗಳು ಮಟ್ಟದಿದ್ದು ಕನ್ನಡ ಭಾಷೆಯನ್ನು ಅವರು ೧೦೦ ಇಲ್ಲವೆ ೫೦ ಅಂಕಗಳ ವಿಷಯವನ್ನಾಗಿ, ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ, ೧೯೮೫-೮೬ನೆಯ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಅಭ್ಯಸಿಸುತ್ತಾರೆ. ದ್ವಿತೀಯ ಭಾಷೆಯಾಗಿ ವಿದ್ಯಾರ್ಥಿಗಳು ಬಹುತೇಕ ಇಂಗ್ಲೀಷನ್ನು ಅಭ್ಯಸಿಸುವ ಕಾರಣವಾಗಿ, ಅವರು ಕನ್ನಡವನ್ನು ತೃತೀಯ ಭಾಷೆಯಾಗಿ ವ್ಯಾಸಂಗಕ್ಕಾಗಿ ಎತ್ತಿಕೊಳ್ಳಬಹುದು. ಈ ಅವಧಿಯಲ್ಲಿ ಸಹ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸುವ ಕನ್ನಡೇತರ ವಿದ್ಯಾರ್ಥಿಗಳೂ ಇರಬಹುದು. ಅಂಥವರ ಸಲುವಾಗಿ ಕನ್ನಡವನ್ನು ದ್ವಿತೀಯ ಭಾಷೆಗಳ ಮಾಲಿಕೆಯಲ್ಲಿ ಸೇರಿಸಲಾಗಿದೆ. ಏನೇ ಇರಲಿ ಈ ಅವಧಿಯಲ್ಲೆಲ್ಲ-೧೯೮೧-೮೨ರಲ್ಲಿ ಪ್ರಾಥಮಿಕ ೩ನೆಯ ಇಯತ್ತೆಯಲ್ಲಿ ಕನ್ನಡದ ಅಭ್ಯಾಸವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳು ವರ್ಷಾನುವರ್ಷ ಆ ವಿಷಯವನ್ನು ಅಭ್ಯಸಿಸಿ ೧೯೮೬-೮೭ರಲ್ಲಿ ೧೫೦ ಅಂಕಗಳ ಕನ್ನಡ ವಿಷಯವನ್ನು ಅಭ್ಯಸಿಸಲು ಅರ್ಹರಾಗುತ್ತಾರೆ. ಆ ವರ್ಷದಿಂದ ಕನ್ನಡದ ವಿಷಯದಲ್ಲಿ ಮಾಡಿದ ಸಲಹೆಯು ಪೂರ್ಣ ಜಾರಿಯಲ್ಲಿ ಬರುತ್ತದೆ. +(ಆ) “ಕನ್ನಡವನ್ನುಳಿದ ಆಧುನಿಕ ಭಾರತೀಯ ಭಾಷೆಗಳು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಹಿಂದೀ, ಉರ್ದು) ಇಂಗ್ಲೀಷು, ಮತ್ತು ಪ್ರಾಚೀನ ಭಾಷೆಗಳ ಒಂದು ಪಟ್ಟಿ ಮಾಡಬೇಕು. (ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್) ಈ ಭಾಷೆಗಳಲ್ಲಿ ಒಂದನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಳ್ಳಬಹುದು. ದ್ವಿತೀಯ ಭಾಷೆಗೆ ೧೦೦ ಅಂಕಗಳು ಇರುತ್ತವೆ. ಇವುಗಳಲ್ಲಿ ಇನ್ನೊಂದು ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ದುಕೊಳ್ಳಬಹುದು. ತೃತೀಯ ಭಾಷೆಗೆ ೫೦ ಅಂಕಗಳಿರುತ್ತವೆ.” ಈ ಸಲಹೆಗೂ ಸಮಿತಿಯು ಸೂಚಿಸಿದ ತಾತ್ಪೂರ್ತಿಕ ಭಾಷಾ ವ್ಯವಸ್ಥೆಗೂ ಅಂತರಗಳಿವೆ. ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಮಾಡಿದ ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ಕನ್ನಡವನ್ನು ಮೂರು ಅಂಕಣಗಳಲ್ಲಿಯೂ ಕಾಣಿಸಬೇಕಾಗಿದೆ. ೧೫೦ ಅಂಕಗಳ ಕನ್ನಡವನ್ನು ಕನ್ನಡಿಗ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಇವರು ಕನ್ನಡ ಮಾತೃಭಾಷೆ ಇದ್ದವರಾಗಬಹುದು., ಇಲ್ಲವೆ ಅನ್ಯಭಾಷೆ ಮಾತೃಭಾಷೆ ಇದ್ದರೂ ಕನ್ನಡ ನಾಡಿನಲ್ಲಿ ನೆಲೆಸಿದವರಾಗಬಹುದು. ಕನ್ನಡೇತರ ವಿದ್ಯಾರ್ಥಿಗಳಿಗಾಗಿ ೧೦೦ ಹಾಗೂ ೫೦ ಅಂಕಗಳ ಕನ್ನಡವನ್ನು ತಾತ್ಪೂರ್ತಿಕವಾಗಿ ದ್ವಿತೀಯ ಹಾಗೂ ತೃತೀಯ ಭಾಷೆಯೆಂದು ಸೇರಿಸಲಗಿದೆ. ೧೯೮೬-೮೭ನೇ ಶೈಕ್ಷಣಿಕ ವರ್ಷದಿಂದ ಇವೆರಡೂ ಕನ್ನಡಗಳೂ ಇಲ್ಲವಾಗಿ ೧೫೦ ಅಂಕಗಳ ಏಕೈಕ ಕನ್ನಡವು ಎಲ್ಲರಿಗೂ ಕಡ್ಡಾಯದ ಪ್ರಥಮಭಾಷೆ ಆಗುತ್ತದೆ. +***** +ಮುಂದುವರೆಯುವುದು +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ […] +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_489.txt b/Kannada Sahitya/article_489.txt new file mode 100644 index 0000000000000000000000000000000000000000..07d7aa433f4599910509d26be99246032b5b4c9b --- /dev/null +++ b/Kannada Sahitya/article_489.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ +ನವಗ್ರಹಗಳು +ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, +ಮಾರುಕಟ್ಟೆಯ ತುಂಬ +ಪಂಚಭೂತಗಳ ಸಂಕ್ಷೇಪ ರೂಪ. +***** +ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. ***** +ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_49.txt b/Kannada Sahitya/article_49.txt new file mode 100644 index 0000000000000000000000000000000000000000..81aaf6135fad730fe12db54962d866c5a1d4cba5 --- /dev/null +++ b/Kannada Sahitya/article_49.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು ಹೋಲುವ ವ್ಯಕ್ತಿಯೋರ್ವನ ಚಿತ್ರ ಮೂಡಿ ಹಿಂದಕ್ಕೂ ಮುಂದಕ್ಕೂ ಅಳ್ಳಾಡಿದ್ದು. ಕೂದಲನ್ನಿಡಿ ಕಣ್ಣಹುಬ್ಬಿಗೆ ವರ್ಗಾಯಿಸಿ ಮಿರಿಮಿರಿ ಮಿಂಚುವ ತಲೆಯ ಆತನ ಸಚ್ಚಾರಿತ್ರ್ಯಕ್ಕೆ ಸಾಕ್ಷಿಯಾಗಿ ನೊಸಲಮೇಲೆ ಸದಾ ರಾರಾಜಿಸುತ್ತಿದ್ದ ತ್ರಿಪುಂಡ್ರದ ಗೆರೆಗಳು ಮುಖದ ತುಂಬ ಹರಡಿದ್ದ ದೊಣ್ಣೇ ಮೂಗಿಗೆ ವಿಶೇಷ ಕಳೆ ನೀಡಿದ್ದವು. ಆನೆಸೊಂಡಿಲಂಥ ತೋಳುಗಳ ಆತನೋ, ಭೂಮಿಯನ್ನೇ ಆಪೋಶನ ತಗೊಂಡಂತಿದ್ದ ಆತನ ಹೊಟ್ಟೆಯೋ; ಆರು ಮೊಳಕ್ಕೆ ತುಸು ಕಡಿಮೆ ಇದ್ದ ಆತ ನಮ್ಮೂರಿನ ಇರುವೆ ಎಂಬತ್ನಾಲ್ಕು ಕೋಟಿ ಜೀವರಾಶಿಗೆಲ್ಲ ಚಿರಪರಿಚಿತನೇ; ಆತನನ್ನು ಕಂಡರೆ ಬೆಕ್ಕು ಮಿಯಾವ್ ಅನ್ನುತ್ತಿತ್ತು. ನಾಯಿ ಕುಯ್ ಕುಯ್ ಎಂದು ಬಾಲ ಅಲ್ಲಾಡಿಸುತ್ತ ಅದನ್ನು ಹಿಂದಿನ ಕಾಲುಗಳ ಸಂದಿಗೆ ಮೆತ್ತಿ ಪರಮ ವಿನಯ ಪ್ರಕಟಿಸುತ್ತಿತ್ತು. ಆತನ ದನಿಗೆ ಸರುಪ ವಿನಯದಿಂದಲೇ ಅಡಗುತ್ತಿತ್ತು. ಅಷ್ಟೇ ಏಕೆ ಪುರಸಭಾ ವ್ಯಾಪ್ತಿಯ ಸರ್ವಹನ್ನೊಂದು ಅಕ್ಷೋಹಿಣಿ ದೊಡ್ಡ ದೊಡ್ಡ ಮನುಷ್ಯರು ಕುಂತರೂ ನಿಂತರೂ; ಹಾಸಿಗೆಗೆ ಹೋಗುವ ಮೊದಲು ಡಾಕ್ಟರ್ ರೇವಣಸಿದ್ದಪ್ಪರ ನಾಮಸ್ಮರಣೆ ಮಾಡುತ್ತಿದ್ದರಲ್ಲದೆ; ತಮ್ಮ ಮರ್ಜಿ ಮುಲಾಜು ಹಿಡಿದು ಬದುಕುವ ಪುಡಪೋಸಿ ಜನಕ್ಕೆಲ್ಲ ಅವರು ಡಾ. ರೇವಣಸಿದ್ದಪ್ಪರ ನಾಮ ಜಪಿಸಿ ಪುನೀತರಾಗುವಂತೆ ಪುಸಲಾಯಿಸುತ್ತಿದ್ದರು. +uಟಿಜeಜಿiಟಿeಜ +ಪಯೋರಿಯಕ್ಕೆ ಹೆಸರಾಗಿದ್ದ ಬಾಯಿಯ ಒಡೆಯ ನಮ್ಮ ಕಾಲೇಜಿನ ಪ್ರಿನ್ಸಿಪಾಲರಂತೂ ತಮ್ಮ ಡ್ರಾಯರ್ ಜೋಬಿನಲ್ಲಿ ಡಾ. ರೇವಣಸಿದ್ದಪ್ಪರ ಪಾಸ್‌ಪೋರ್ಟ್ ಸೈಜಿನ ತ್ರಿವರ್ಣದ ಫೋಟೋ ಇಟ್ಟುಕೊಂಡೇ ತಂಬಿಗೆಯೊಂದಿಗೆ ಹೊರಡುತ್ತಿದ್ದರು. ಮೊಳೆರೋಗದಿಂದ ಭಾರತ್ ಬಂದ್ ಆಚರಿಸುತ್ತಿದ್ದ ದೊಡ್ಡ ಕರುಳನ್ನು ಹಿಂಜಿ ಹಿಂಜಿ ತಾಸುಗಟ್ಟಲೆ ಕೂತು ಆ ಫೋಟೋ ನೋಡುತ್ತ ನೋಡುತ್ತ ಸಲೀಸಾಗಿ ಮಲವಿಸರ್ಜಿಸುತ್ತಿದ್ದರೆಂದಮೇಲೆ ಕೇಳುವುದೇನಿದೆ? ಅವರು ತಮ್ಮ ಜೀಷ್ಠಪುತ್ರಿ ಚೊಚ್ಚಲು ಹೆರಿಗೆ ಸಂದರ್ಭದಲ್ಲೂ ಪ್ರಸೂತಿಕಾ ಕೋಣೆಗೆ ಡಾಕ್ಟರರ ಫೋಟೋ ಅಂಟಿಸಿ ಧೈರ್ಯ ತುಂಬಿ ಹೆರಿಗೆ ಸೂಸೂತ್ರವಾಗುವಂತೆ ನೋಡಿಕೊಂಡರಂತೆ. ಕಳೆದ ವರ್ಷ ತಮ್ಮ ತಾಯಿ ಸೀದ ಸ್ವರ್ಗಕ್ಕೆ ಹೋಗಿ ಪಾರ್ವತಿ ಪರಮೇಶ್ವರರ ಸೇವೆ ಮಾಡಿಕೊಂಡಿರುವುದಕ್ಕೆ ಕಾರಣ ಆಕೆ ಡಾಕ್ಟರರ ಫೋಟೋ ನೋಡು ನೋಡುತ್ತಲೇ ಕೊನೆಯುಸಿರೆಳೆದಿದ್ದರಿಂದಲೇ; ಅಷ್ಟೇ ಅಲ್ಲದೆ ಮದುವೆ ಮುಂಜಿ ಎಲ್ಲಿಯೇ ನಡೆಯಲಿ! ಹೇಗೇ ನಡೆಯಲಿ ಪ್ರಿನ್ಸಿಪಾಲರು ಅಲ್ಲಿಗಲ್ಲಿಗೆ ಏಕ್‌ದಂ ಹಾಜರಾಗಿ ಡಾಕ್ಟರರ ಫೋಟೋವನ್ನು ಅಲ್ಲೆಲ್ಲ ಲಗತ್ತಿಸಿ ಕಂಟಕಗಳಿಗೆ ಮಾರ್ಗೋಪಾಯಗಳನ್ನು ಕಲ್ಪಿಸಿಬಿಡುತ್ತಾರಂತೆ. +ಇಂಗ್ಲಿಷ್ ಭಾಷೆಯನ್ನು ಕರತಲಾಮಲಕ ಮಾಡಿಕೊಂಡಿದ್ದ ನಮ್ಮ ಪ್ರಿನ್ಸಿಪಾಲರು ತರಗತಿ ಪ್ರವೇಶಿಸುತ್ತಲೇ ವೇರ್ ದಿ ಮೈಂಡ್ ಈಸ್ ವಿತ್ ಔಟ್ ಫಿಯರ್ ಅಂತ ವಿಕ್ಟೋರಿಯನ್ ಶೈಲಿಯಲ್ಲಿ ಹೆಸರಿಗಷ್ಟೇ ಹೇಳಿ ನೀವೆಲ್ಲ ಡಾ. ರೇವಣಸಿದ್ದಪ್ಪನವರ ಥರಾ ಆಗಬೇಕ್ರಯಾ; ‘ಕೃಷಿಯುಂಟೇ ಮನಿಷಿ ಋಷಿ ಆವುತಾಡು’ ಅಂತ ತೆಲುಗು ಕವಿ ಗುರುಜಾಡ ಅಪ್ಪಾರಾವು ಡಾಕ್ಟರಂಥವರನ್ನು ಕುರಿತೇ ಬರೆದಿರಬೇಕು ಕಣ್ರಯ್ಯಾ; ನೀವೆಲ್ಲ ಅವ್ರಥರಾ ದೊಡ್ಡಸ್ತಿಕೆ ಬೆಳೆಸ್ಕೋಬೇಕು; ದೊಡ್‌ಮನುಶ್ಶೋರಾಗಬೇಕು. ನಿಮ್ಮ ಶರೀರವನ್ನು ಅವರ ಥರಾ ಗಂಧದ ಕೊರಡಿನಂತೆ ತೇಯಬೇಕ್ರಯ್ಯಾ ತೇಯಬೇಕು ಎಂದು ತರಗತಿ ತುಂಬ ತಮ್ಮ ಬಾಯ ಪವಿತ್ರ ಪರಿಮಳ ಮಿಶ್ರಿತ ಲಾಲಾರಸ ಸಿಂಪಡಿಸುತ್ತ ಹೊಸ ಚೈತನ್ಯ ತುಂಬುತ್ತಿದ್ದರು. ಅವರ ವಾಗ್ ವೈಖರಿ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ನಮ್ಮ ಕನಸುಗಳಲ್ಲಿ ನಾವು ಗುಟ್ಟಾಗಿ ಪ್ರೀತಿಸುತ್ತಿದ್ದ ಲಲನಾಮಣಿಗಳು ಬರುವ ಬದಲಿಗೆ ಕ್ವಿಂಟಲ್ ವಜನದ ಡಾ. ರೇವಣಸಿದ್ದಪ್ಪ ಕಾಣಿಸಿಕೊಂಡುಬಿಡುತ್ತಿದ್ದರು. +ಹಿಟ್ಲರ್ ಮತ್ತು ಗಂಧೀಜಿಯರ ವಿಚಿತ್ರ ಕಾಂಬಿನೇಷನ್ನಿಂದ ಮಾಡಲ್ಪಟ್ಟಂತಿದ್ದ ಅಪ್ಪನ ಭಯದಿಂದ ಹೇಗೋ ಬಾಲ್ಯ ಕಳೆದು ಯೌವನಾವಸ್ಥಗೆ ಕಾಲಿರಿಸಿದ್ದ ನನ್ನೊಳಗೆ ಪ್ರಿನ್ಸಿಪಾಲರು ಡಾ. ರೇವಣಸಿದ್ದಪ್ಪನವರ ಅಗಾಧ ವ್ಯಕ್ತಿತ್ವ ತುಂಬಿ ನಮ್ಮ ನಡಿಗೆಗೆ ವಿಶಿಷ್ಟವಾದ ಶೈಲಿ ತಂದಿದ್ದರು. ನಾನು ಒಂದು ಕಡೆ ನಡೆಯುತ್ತಿದ್ದರೆ ನನ್ನ ದೇಹವೆಂಬುದು ಮತ್ತಾವ ಕಡೆಗೋ, ಹಾಗಾಗಿ ತಲುಪಬೇಕಾದ ಗುರಿ ತಲುಪಲಾಗುತ್ತಿರಲಿಲ್ಲ ನನಗೆ. ಕುಂತರೂ ನಿಂತರೂ ನನ್ನನ್ನು ಕಾಡತೊಡಗಿದ್ದು ಅದೇ ಗಾತ್ರದ ವ್ಯಕ್ತಿತ್ವ. +ಕಾಂಡಕ್ಟ್ ಸರ್ಟಿಫಿಕೇಟಿಗೆ ಸಹಿ ಪಡೆಯಲು ಆತನ ಬಳಿಗೆ ಹೋಗದಿದ್ದಲ್ಲಿ ಆತನ ವ್ಯಕ್ತಿತ್ವದಿಂದ ನಾನು ಬಚಾವಾಗಬಹುದಿತ್ತು. ಹಾಲಿ ಸಬ್ ಇನ್ಸ್‌ಪೆಕ್ಟರ್ ಕೂಡ ನೌಕರಿಗೆ ಸೇರುವ ಮೊದಲು ಡಾಕ್ಟರಿಂದ ತನ್ನ ಕಾಂಡಕ್ಟ್ ಸರ್ಟಿಫಿಕೇಟ್‌ಗೆ ಸಹಿ ಮಾಡಿಸಿಕೊಂಡಿದ್ದರಂತೆ. ಸಜ್ಜನಿಕೆ ಸೌಜನ್ಯಗಳಿಂದಲೇ ಮಾಡಲ್ಪಟ್ಟಂತಿರುವ ಡಾಕ್ಟರ್ ಮುಂದೊಂದು ದಿನ ಸದರೀ ಪುರಸಭೆಯ ಅಧ್ಯಕ್ಷರಾಗಲೂ ಬಹುದೆಂದು ಹಾಲಿ ಅಧ್ಯಕ್ಷರೇ ಸ್ವಾತಂತ್ರೋತ್ಸವದ ದಿನದಂದು ನಮಗೆಲ್ಲ ಭಾಷಣ ಮಾಡಿದ್ದರು. ಎಮ್ಮೆಲ್ಲೆ; ಎಂಪಿ; ಅಷ್ಟೇ ಏಕೆ ಸಚಿವರಾಗಲೂಬಹುದೆಂದು ಪ್ರಿನ್ಸಿಪಾಲರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಭಿಮಾನದಿಂದ ಹೇಳಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾಕ್ಟರ್‌ರವರು ಗದ್ಗದಿತರಾದರು. ನಡುಗುವ ದನಿಯಲ್ಲಿ ನಾನೇನು ದೊಡ್ಡ ಮನುಷ್ಯನಲ್ಲ. ಮಾಮೂಲಿ ಆರೆಂಪಿ ಡಾಕ್ಟರ್; ವಾರಕ್ಕೇಳು ಮನೆಗಳಲ್ಲಿ ಊಟ ಮಾಡಿ ಮೆಟ್ರಿಕ್ ಪಾಸು ಮಾಡಿದ್ದೇ ಹೆಚ್ಚು. ದೇವರು ಕೊಟ್ಟಿದ್ದಾನೆ. ಅದನ್ನು ಬಡಬಗ್ಗರಿಗೆ ಕೈಲಾದಷ್ಟು ಸಹಾಯ ಮಾಡ್ತೀನಿ. ಈ ಮಾನವ ಜನ್ಮ ಯಾವತ್ತು ಹೋಗ್ತದೋ ಏನೋ…..! ಯಾರು ಬಲ್ಲರು! ಎಲ್ಲ ಸಿವನಾಟ. ನಾವು ಸತ್ತಮೇಲೆ ನಮ್ಮ ಹಿಂದೆ ಬರೋದು ಒಳ್ಳೇದು ಕೆಟ್ಟದ್ದು ತಾನೆ….! ಒಳ್ಳೆಯವನು ಅಂತ ಅನ್ನಿಸ್ಕೊಂಡು ಸಾಯಬೇಕೆನ್ನುವುದೇ ನನ್ನ ಆಸೆ. ನಾಳಿನ ಭವ್ಯ ಭಾರತದ ನಿರ್ಮಾಪಕರಾದ ನಿಮಗೆಲ್ಲ ಒಳ್ಳೇದಾಗಲೆಂದು ಈ ಸಾರಿ ಲಡ್ಡು ಮಾಡಿಸಿದ್ದೀನಿ. ಮುಂದಿನ ಸ್ವಾತಂತ್ರ್ಯ ದಿನೋತ್ಸವದವರೆಗೆ ಬದುಕಿದ್ರೆ ನಿಮ್ಗೆಲ್ಲ ಸೋನ್‌ಪಾಪಡಿ ಮಾಡಿಸ್ತೀನಿ…. ಇದು ಖಂಡಿತ…. ಎಂದಾಗ ನಮ್ಮ ಕಣ್ಣಲ್ಲಿ ನೀರಾಡಿತ್ತು. “ಬೋಲೋ ಭಾರತ್ ಮಾತಾಕೀ ಜೈ” ಅಂತ ಮೂರು ಸಾರಿ ಹೇಳಿಸಿ ನಮ್ಮ ಕೈಗೆ ತೆಂಗಿನಕಾಯಿ ಗಾತ್ರದ ಲಾಡು ಹಂಚಿದ್ದರು +uಟಿಜeಜಿiಟಿeಜ”ಆ ಡಾಕ್ಟರ್ ನೋಡೋಕೆ ಹಂಗಿದಾರೆ. ಅಡುಪುಕ್ಕಲು, ಇಲಿ ಕಂಡ್ರೆ ಹುಲಿ ಕಂಡವರಂತೆ ಹೆದರ್‍ತಾರೆ”. ಲಡ್ಡು ತಿನ್ನುತ್ತ ಶಂಭು ನನ್ನ ಕಿವಿಯಲ್ಲಿ “ಅವರು ಈಗ್ಲೂ ಹಾಸ್ಗೇಲಿ ಉಚ್ಚೆ ಹೊಯ್ಕೆಳ್ತಾರಂತೆ” ಎಂದು ಉಸುರಿದ. +ಅಷ್ಟು ದೊಡ್ಡ ಮನುಷ್ಯರಾಗಿ ಹಾಸಿಗೇಲಿ ಉಚ್ಚೆ ಹೊಯ್ಯುತ್ತಾರೆನ್ನುವುದು ನನಗೆ ಮುಖ್ಯ ವಿಷಯವೆನಿಸಿತು. ಅದರಿಂದ ಅವರ ಬಗ್ಗೆ ಗೌರವ ದುಪ್ಪಟ್ಟಾಯಿತು. ಮುಂದೊಂದು ದಿನ ಕತೆಗಾರನಾದಾಗ ಯಾವುದಾದರೊಂದು ಕತೆಯಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಬೇಕೆಂದುಕೊಂಡೆ. +ಅಂಜುತ್ತ ಅಳುಕುತ್ತ ಅವರ ಮನೆ ಬಳಿಗೆ ಹೋಗಿದ್ದು ನೆನಪು. ಅಷ್ಟೇನೂ ದೊಡ್ಡದಲ್ಲದ ಮನೆ ಅಂಗಳದಲ್ಲಿ ದೊಡ್ಡ ರಂಗೋಲಿ, ಅಲ್ಲಿ ಬೆಕ್ಕು ಇರದಿದ್ದುದರಿಂದ ಹತ್ತಾರು ಪಾರಿವಾಳಗಳು ಅಂಗಳದಲ್ಲಿ ಚೆಲ್ಲಿದ ಕಾಳು ಮೇಯುತ್ತಿದ್ದವು. ತಲಬಾಗಿಲ ಮೇಲೆ ದೇವಾನುದೇವತೆಗಳ ಫೋಟೋಗಳು ರಾರಾಜಿಸುತ್ತಿದ್ದವು. ತಲೆತುಂಬ ಸೆರಗು ಹೊದ್ದಿದ್ದ ಹೆಂಗಸು! ಆಕೆ ಅವರ ಪತ್ನಿ ಇದ್ದಿರಬಹುದು. ಹಾಲಿನಿಂದ ಮಾಡಲ್ಪಟ್ಟಂತೆ ಆಕರ್ಷಕವಾಗಿದ್ದಳು. ಹಣೆಮೇಲೆ ಎಂಟಾಣೆ ಅಗಲದ ಕುಂಕುಮ, ಗಂಟೆ ಸದ್ದು; ಊದುಬತ್ತಿಯ ಪರಿಮಳ, ಒಳಗಡೆ ಡಾಕ್ಟರರು ಶಿವಪೂಜೆಗೆ ತೊಡಗಿರಬಹುದು….! ಸಾವಿರದೆಂಟು ಪಂಚಾಕ್ಷರಿ ಮಂತ್ರ ಪಠಿಸದೆ ಮೇಲೇಳುವುದಿಲ್ಲವಂತೆ…. ಪೂಜೆಗೆ ಸುರುವಾಗಿ ಎರಡು ತಾಸು ಮೇಲಾಗಿದೆಯಂತೆ. ರೋಗಿಗಳ ಸಾಲಿನಲ್ಲಿ ಒಂದುಕಡೆ ನಿಂತೆ. ತುಸುಹೊತ್ತಿಗೆ ಡಾಕ್ಟರರು ಬಂದರು. ಮೈತುಂಬ ವಿಭೂತಿ, ಮುಖದ ತುಂಬ ಸಾತ್ವಿಕ ಕಳೆ ತುಳುಕಾಡುತ್ತಿತ್ತು. +ನನ್ನನ್ನು ಪ್ರೀತಿಯಿಂದ ಮಾತಾಡಿಸಿದರು. ಮೈದಡವಿದರು. ಇತಿಗತಿ ವಿಚಾರಿಸಿದರು. ವಿದ್ಯಾವಂತನಾಗಿ ಈ ದೇಶಕ್ಕೆ ಕೀರ್ತಿ ತರಬೇಕೆಂದರು. ಅವರ ಪ್ರತಿಯೊಂದು ಮಾತು ಹಿತವಾಗಿತ್ತು. ಕಾಂಡಕ್ಟ್ ಸರ್ಟಿಫಿಕೇಟಿಗೆ ಅವರು ಸಹಿ ಹಾಕುತ್ತಿದ್ದಾಗ ನನ್ನ ಕಣ್ಣುಗಳು ಅವರ ಭಯದಿಂದ ವಿಸರ್ಜಿಸಿಬಹುದಾದ ಹಾಸಿಗೆ ಎಲ್ಲಿರಬಹುದೆಂದು ಹುಡುಕುತ್ತಿದ್ದವು. ಬಲವಂತ ಮಾಡಿದರು ಊಟ ಮಾಡೆಂದು, ಆಗಲೆ ಅವರ ಸಜ್ಜನಿಕೆಗೆ ಮಾರುಹೋಗಿದ್ದ ನಾನು ಉಂಡೇನೆಯೇ! +ಆ ಕ್ಷಣದಿಂದ ಅವರಿಗೆ ಮತ್ತಷ್ಟು ಗೌರವ ಕೊಡತೊಡಗಿದೆ. ಅವರಿಗೆ ಎದುರು ಹಾಯುವುದೇ ಮುಜುಗರವಾಗಿ ಸೈಡುಬೀಳುತ್ತಿದ್ದೆ. ‘ತೀರಾ ಎದುರಾದಾಗ ನಮಸ್ಕಾರ ಸಾರ್ ಎನ್ನುತ್ತಿದ್ದೆ. ಎಲ್ಲರಿಗಿಂತ ಅವರು ನನ್ನ ಕಣ್ಣಿಗೆ ಹೆಚ್ಚು ಬೀಳುತ್ತಿದ್ದ ಕಾರಣವೆಂದರೆ ಅವರು ದಿನಂಪ್ರತಿ ದರುಶನ ಪಡೆಯುತ್ತಿದ್ದ ಐದು ದೇವರ ಗುಡಿಗಳು ನಮ್ಮ ಓಣಿಯಲ್ಲಿದ್ದವು. ಪುಣ್ಯಾತ್ಮ ಭಕ್ತಿಯೇ ಮೈವೆತ್ತಂತೆ ಬರುತ್ತಿದ್ದುದೋ….! ಮಂಗಳಾರತಿ ತಟ್ಟೆಗೆ ಐದು ರೂಪಾಯಿ ದಕ್ಷಿಣೆ ಹಾಕುತ್ತಿದ್ದುದೋ….! ಪೂಜಾರಿಗಳು ದಕ್ಷಿಣೆ ಆಸೆಗೆ ದೇವರುಗಳನ್ನು ಕಿತ್ತುಕೊಂಡು ಅವರ ಬಳಿಗೆ ಓಡಿಬರುತ್ತಿದ್ದುದೋ….! ಅವರು ಅಷ್ಟಾಂಗ ಪ್ರಣಾಮ ಸಲ್ಲಿಸುತ್ತಿದ್ದುದೋ….! +ಅವರ ಪುಟ್ಟ ಭಾವಚಿತ್ರವನ್ನು ಹೇಗೋ ಸಂಪಾದಿಸಿ ನೋಟುಪುಸ್ತಕದಲ್ಲಿಟ್ಟು ಪುಣ್ಯಾತ್ಮ ನಿನ್ನಂತೆ ನಾನು ಎಂದಾಗುವೆನೋ….! ಒಂದೊಂದು ದೇವರು ಮಂಗಳಾರತಿ ತಟ್ಟೆಗೆ ಐದು ರೂಪಾಯಿ ದಕ್ಷಿಣೆ ಹಾಕುವಷ್ಟು ಶ್ರೀಮಂತನೆಂದಾಗುವೆನೋ! ಎಂದು ಕನವರಿಸುತ್ತ; ಕನವರಿಕೆಯನ್ನೇ ಆತ್ಮವಿಶ್ವಾಸವನ್ನಾಗಿ ಮಾಡಿಕೊಂಡು ಕಾಲೇಜಿನಲ್ಲಿ ಡುಮುಕಿ ಹೊಡೆದೆ. +‘ಮಗನೇ ನಿನ್ಗೆ ಕಾಲೇಜು ಸಹವಾಸ ಸಾಕು. ಕುಂಬಾರರಿಗೆ ವಿದ್ಯೆ ಹತ್ತುವುದುಂಟೆ!…” ಹಡದಪ್ಪ ಕೆಂಪು ನಿಶಾನೆ ತೋರಿಸಿದ, ಹಾಗೂ ಹೀಗೂ ಶಿಕ್ಷಕ ತರಬೇತಿ ಮುಗಿಸಿದೆ. ಡಾಕ್ಟರು ರೇವಣಸಿದ್ದಪ್ಪನವರ ನೆನಪು ಅಳಿಸಿದ್ದರಿಂದಲೋ ಏನೋ! ಮಠದ ಜೀವಿತಾವಧಿಯಲ್ಲಿ ಪುಟ್ಟ ಕವಿಯಾಗಿ ರೂಪಗೊಂಡಿದ್ದೆ. ಕವಿತೆಯ ಮಾಧ್ಯಮದಿಂದ ಸಮಾಜ ಬದಲಾಯಿಸಬೇಕೆಂಬ ಹಠವನ್ನು ಹೆಜ್ಜೆ ಹೆಜ್ಜೆಗೆ ಪ್ರಕಟಿಸುತ್ತಿದ್ದೆ. ಅದಕ್ಕೆ ಸಹಾಯಕವಾಗಿ ಮಿತ್ರ ‘ಬಹಿರಂಗ’ ಎಂಬ ವಾರಪತ್ರಿಕೆ ಶುರುಮಾಡಿದ್ದ. ತುರ್ತು ಪರಿಸ್ಥಿತಿ ಅದೇ ಆಗ ಜಾರಿಗೊಂಡಿತ್ತು. ಜನಕ್ಕೆ ಕುಂತರೂ ಭಯ ನಿಂತರೂ ಭಯ ಕಾಡುತ್ತಿತ್ತು. ಅವರ ಭಯವನ್ನೇ ಬಂಡವಾಳ ಮಾಡಿಕೊಂಡು ಪತ್ರಿಕೆ ಬದುಕಬೇಕಾಗಿತ್ತು. ಅದರ ಮೂಲಕ ನನ್ನ ಕವನಗಳು ಬದುಕಬೇಕಾಗಿತ್ತು. ಆಗ ತುರ್ತು ಪರಿಸ್ಥಿತಿ ವಿರೋಧಿ ಕವಿ ಸಮ್ಮೇಳನ ನಡೆಸುವುದೆಂದು ತೀರ್ಮಾನಿಸಿದೆವು. ಅದಕ್ಕೆ ಒಬ್ಬ ಅಧ್ಯಕ್ಷರು ಬೇಕಲ್ಲ!… ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ. “ಏನಯ್ಯ ಚೆನ್ನಾಗಿದ್ದೀಯಾ” ಎಂದು ಡಾಕ್ಟರ್ ರೇವಣಸಿದ್ದಪ್ಪ ಎದುರಾದರು. ನಾನು ಕವಿಯಾಗಿರುವುದನ್ನು ಹೇಳಿಕೊಂಡೆ. ಭೇಷ್ ಎಂದರು. ಕವಿ ಸಮ್ಮೇಳನ ಮಾಡ್ತಿದೀವಿ ಎಂದೆ. ‘ಭೇಷ್’ ಎಂದರು. ಕವಿಸಮ್ಮೇಳನದ ಅಧ್ಯಕ್ಷತೆ ವಹಿಸಬೇಕೆಂದೆ, ಆಗಲಿ ಎಂದು ಒಪ್ಪಿಕೊಂಡರು. ಪ್ರತಿ ಕವಿತೆಗೂ ಭಲಾ ಎಂದು ಉದ್ಗರಿಸಿದರು. ಸಮ್ಮೇಳನದ ಖರ್ಚು ನೋಡಿಕೊಂಡಿದ್ದ ಅವರು ಅಧ್ಯಕ್ಷ ಭಾಷಣ ಮಾಡಿದರು. ನಂತರ ಕವಿಗಳಿಗೆಲ್ಲ ದೋಸೆ ತಿನ್ನಿಸಿ ಕಾಫಿ ಕುಡಿಸಿದರು. +ನಂತರ ನನ್ನ ಕವಿತೆ ಪ್ರಕಟವಾಗಿದ್ದ ಪತ್ರಿಕೆ- ಸಂಚಿಕೆ ತೋರಿಸಿದೆ. ‘ಭೇಷ್’ ಎಂದರು. ಸಾರ್ ಚಂದಾದಾರರಾಗಿ, ಅಂದೆ. ಆಗ್ಲಿ ಅಂದರು. ನೂರು ರೂಪಾಯಿ ನೋಟು ಕೊಟ್ಟರು. ಹತ್ತು ವರ್ಷದ ಚಂದಾ ಬರಕೋ ಅಂದರು. ನನ್ನ ಮೈಜುಂ ಅಂತು. ಅವರು ಕಲಿಯುಗದ ಕರ್ಣ ಅನ್ನಿಸ್ತು. ಪ್ರತಿಯಾಗಿ ಒಂದು ದೀರ್ಘ ನಮಸ್ಕಾರ ಸಲ್ಲಿಸಿ ವಾಪಸಾದೆ. +ಮೊದಲಿಗಿಂತ ಅವರ ವರ್ಚಸ್ಸು ಊರಲ್ಲಿ ದ್ವಿಗುಣಗೊಂಡಿತ್ತು. ದೇಹದ ಗಾತ್ರದಲ್ಲೂ ಸಹ! ಸಾಹಿತ್ಯದ ಬಗೆಗೂ ತಿಳಿದುಕೊಂಡಿದ್ದ ಆತನ ಮನೆಗೆ ದಿನಕ್ಕೊಮ್ಮೆಯಾದರೂ ಎಡತಾಕಿ ಸಾರ್ ಅದು ಬರೆದೆ ಸಾರ್ ಇದು ಬರೆದೆ ಎಂದು ತೋರಿಸುತ್ತಿದ್ದೆ. ಭೇಷ್ ಭೇಷ್ ಅನ್ತಿದ್ದರು. ಕಾವ್ಯ ಪ್ರೇಮಿಗೆ ಮುಜುರೆ ಸಲ್ಲಿಸಿ ವಾಪಸಾಗುತ್ತಿದ್ದೆ. ಆಗ್ಲೆ ರಿಟೈರಾಗಿದ್ದ ಪ್ರಿನ್ಸಿಪಾಲರು ಡಾಕ್ಟರ್ ಬಗ್ಗೆ ಒಂದು ಆರ್ಟಿಕಲ್ ಬರೆದು ಪ್ರಕಟಿಸೋ…. ಮುಂದಿನ ಛೇರ್ಮನ್ನು ಅವ್ರೇ ಅಂದರು. ಸರಿ ಅನ್ನಿಸಿತು. ನೂರು ರೂಪಾಯಿ ಚಂದಾ ಕೊಟ್ಟೋರು ಛೇರ್ಮನ್ನಾದರೆ ಪತ್ರಿಕೆ ಕೇಳೋದೇನಿದೆ? ಜೊತೆಗೆ ಹಾಸಿಗೇಲಿ ಮೂತ್ರ ವಿಸರ್ಜಿಸೋವಷ್ಟು ಸಜ್ಜನರಿಂದಲೇ ಈ ಸಮಾಜ ಬದಲಾಗಲು ಸಾಧ್ಯ ಎಂದು ಸಂಪಾದಕರೊಂದಿಗೆ ಮಾತಾಡಿದೆ. ಅವರ ಕಲ್ಯಾಣ ಗುಣಗಳೊಂದಿಗೆ ಅವರು ಹಾಸಿಗೇಲಿ ಮೂತ್ರ ವಿಸರ್ಜಿಸುವುದನ್ನು ಸೇರಿಸಿ ಬರೆದಾಗಲೇ ಲೇಖನ ಅರ್ಥಪೂರ್ಣವಾಗುತ್ತದೆ ಎಂದೂ, ಮೂತ್ರ ವಿಸರ್ಜಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದೂ, ಸಂಪಾದಕ ಮಿತ್ರರು ಸಲಹೆ ನೀಡಿದರು. +ಸಾರ್ ನಿಮ್ಮ ಬಗ್ಗೆ ಒಂದು ಲೇಖನ ಬರೀಬೇಕೆಂದ್ಕೊಂಡಿದೀನಿ ಅಂದೆ ಒಮ್ಮೆ. ಡಾಕ್ಟರಿಗೆ ಅವರ ದೊಡ್ಡಗಾತ್ರದ ಮುಖ ಅರಳಿ ದೇಶಾವರಿ ನಗೆ ತುಳುಕಿತು. ಪ್ರತಿಸಾರಿ ಕಂಡಾಗಲೆಲ್ಲ ಹಾಗೆ ನಗುತ್ತಿದ್ದರು. ಸಾಂದರ್ಭಿಕವಾಗಿ ಅದು ಇದೂ ಹೇಳುತ್ತಿದ್ದರು. ತಾವು ಹಾಸೀಗೇಲಿ ಮೂತ್ರ ವಿಸರ್ಜಿಸುವುದನ್ನು ಅದ್ಹೇಗೆ ಹೇಳಿಯಾರು? ಆದರೂ ಅವರು ನಿಸ್ಸಂದೇಹವಾಗಿ ದೊಡ್ಡ ಮನುಷ್ಯರಾಗಿದ್ದರು. +uಟಿಜeಜಿiಟಿeಜಗಂಡನ ಮುಖವನ್ನು ಸರಿಯಾಗಿ ನೋಡಿರದವರಂತಿದ್ದ, ತಮ್ಮ ಕಾಲ ಹೆಬ್ಬೆರಳ ಉಗುರ ಪಾರದರ್ಶಕದಲ್ಲಿ ಗಂಡನ ಮುಖವನ್ನು ತಲಕೆಳಗಾಗಿ ನೋಡಿದವರಂತಿದ್ದ, ಮಾತಾಡಲು ಗೊತ್ತೇ ಇರದಂತಿದ್ದ ಅವರ ಧರ್ಮಪತ್ನಿಯವರನ್ನು ಮಾತಾಡಿಸಲು ಹಲವು ಸಾರಿ ಪ್ರಯತ್ನಿಸಿ ವಿಫಲನಾಗಿದ್ದೆ. ಆಕೆ ತಾನು ನಿಸ್ಸಂದೇಹವಾಗಿ ಅಪ್ಪಟ ಧರ್ಮಪತ್ನಿ ಎಂಬಂತೆ ವರ್ತಿಸುತ್ತಿದ್ದರು. ಅವರಿಗಿಂತ ಹತ್ತು ವರ್ಷ ಚಿಕ್ಕವನಿದ್ದ ನನ್ನ ಕಡೆ ಆಗೊಮ್ಮೆ ಈಗೊಮ್ಮೆ ತಮ್ಮ ಬೊಗಸೆ ಗಂಗಳಿಂದ ನೋಡುತ್ತಿದ್ದರು. ಗುಡುಗು ರಹಿತ ಕೋಲ್ಮಿಂಚು ನೋಡಿದ ಅನುಭವವಾಗಿತ್ತು ನನಗೆ. ಇಂಥ ಅಪೂರ್ವ ದಂಪತಿಗಳಿಗೆ ಒಂದೆರಡು ಮಕ್ಕಳಿದ್ದರೆ ಚೆನ್ನಾಗಿರ್‍ತಿತ್ತಲ್ಲಾ. ದೇವರು ಎಲ್ಲಾ ಕೊಟ್ಟಿದ್ದಾನೆ. ಸಂತಾನ ಮಾತ್ರ ಕೊಟ್ಟಿಲ್ವಲ್ಲಾ…. ಎಲ್ಲಿಯವರೆಗೆ ದೇಶದ ಮಕ್ಕಳೇ ತಮ್ಮ ಮಕ್ಕಳು ಎಂದು ಭಾವಿಸಿಕೊಂಡಿರಲು ಸಾಧ್ಯ!…. ಗ್ರಾಮದ ಹಲವರಂತೆ ನಾನೂ ಪೇಚಾಡಿಕೊಳ್ಳುತ್ತಿದ್ದೆ ಹಲವು ಬಾರಿ. +ಒಂದು ದಿನ ಸಂಪಾದಕರೊಂದಿಗೆ ಜಿಲ್ಲಾಸ್ಥಳಕ್ಕೆ ಹೋದೆ. ನಾವು ಹೋಗಿದ್ದು ವರಿಷ್ಠ ಪೋಲೀಸ್ ಅಧಿಕಾರಿ ಕಛೇರಿಗೆ. ದಕ್ಷ ಪೋಲೀಸ್ ಅಧಿಕಾರಿ ಎಂದು ಹೆಸರಾಗಿ ಅವರು ಮಕ್ಕಳ ಸಾಹಿತಿಗಳಾಗಿದ್ದರು. ಪುಟ್ಟಿ ಪುಟ್ಟಿ ಎಂಥ ಪುಟ್ಟಿ ಎಂಬ ಕವನವನ್ನು ಓದಿ ಹೇಗಿತ್ತು ಅಂದರು. ತುಂಬಾ ಚೆನ್ನಾಗಿದೆ ಸಾರ್ ಎಂದೆವು. ಕಾಫಿ ಕೊಡಿಸಿದರು. +ಸಂಪಾದಕರು ಅವರೊಂದಿಗೆ ಇಂಗ್ಲಿಷಿನಲ್ಲಿ ಠಸ್ಸಾ ಪುಸ್ಸಾ ಎಂದು ಗಹನ ವಿಷಯದ ಕುರಿತು ಚರ್ಚಿಸತೊಡಗಿದರು! ಆಗ ಪಾಮರನಾದ ನನಗೇನು ಕೆಲಸ! ಚಿಕ್ಕ ಪೋಲೀಸ್ ಠಾಣೆಯನ್ನು ಎಂದೂ ಪ್ರವೇಶಿಸಿರದಿದ್ದ ನಾನು ಸಹಜವಾಗಿ ರೋಮಾಂಚನಗೊಂಡಿದ್ದೆ. ಅದು ಇದು ನೋಡುತ್ತ ಗೋಡೆಗೆ ತೂಗಬಿಟ್ಟಿದ್ದ ಬಗೆಬಗೆಯ ಚಿತ್ರಪಟಗಳನ್ನು ನೋಡತೊಡಗಿದೆ. ಪುಟ್ಟಪುಟ್ಟ ಭಾವಚಿತ್ರಗಳಿಂದಲೇ ತುಂಬಿದ್ದ ದೊಡ್ಡದೊಂದು ಫಲಕ ನನ್ನ ಗಮನ ಸೆಳೆಯಿತು. ಅಲ್ಲಿದ್ದ ಪ್ರತಿಯೊಂದು ಮುಖವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದೆ. ದುಗುಡ ತುಂಬಿದ ವಿಷಣ್ಣ ಮುಖಗಳವು. ಅವುಗಳೆಲ್ಲಾ ತಲಾ ಒಂದೊಂದು ಸ್ಲೇಟ್ ಹಿಡಿದುಕೊಂಡಿದ್ದವು. ಸ್ಲೇಟಿನಲ್ಲಿ ಒಂದೊಂದು ನಂಬರ್ ಕೊಡಲಾಗಿತ್ತು. ಅವರು ದೇಶಭಕ್ತರೆಂದು ಊಹಿಸಲಾರದಷ್ಟು ಕೇಡಿ ಕಳ್ಳರವೆಂದು ಊಹಿಸಬಹುದಾದಷ್ಟು ಜಾಣನಿದ್ದೆ ನಾನು. +ಅವುಗಳ ಪೈಕಿ ಒಂದು ಮುಖ ಮಾತ್ರ ನನ್ನ ಚಿತ್ತವನ್ನು ಅಪಹರಿಸಿಬಿಟ್ಟಿತು. ನೋಡೇ ನೋಡಿದೆ. ಅದೇ ಮುಖ ಅದೇ ಮೂಗು; ಈ ಮುಖವನ್ನು ಎಲ್ಲೋ ನೋಡಿದಂತಿದೆಯಲ್ಲಾ! ಯಾರ ಮುಖವಾಗಿರಬಹುದು! ಎಷ್ಟೋ ಹೊತ್ತು ನೋಡಿದೆ. ಹೊಳೆಯಲಿಲ್ಲ. ಸಂಪಾದಕರೊಂದಿಗೆ ಬಸ್‌ಸ್ಟಾಂಡಿಗೆ ಬಂದೆ. ಆ ಮುಖ ನನ್ನನ್ನು ಬಸ್ಸು ಹತ್ತಲು ಬಿಡಲೇ ಇಲ್ಲ. ಇನ್ನೊಂದು ಬಸ್ಸಿಗೆ ಬರುವುದಾಗಿ ಹೇಳಿ ಸಂಪಾದಕರನ್ನು ಕಳಿಸಿದೆ. ನಾನು ಮತ್ತೆ ಪೋಲೀಸ್ ಕಛೇರಿಗೆ ಹೊರಟೆ, ಅಧಿಕಾರಿ ಪ್ರೀತಿಯಿಂದಲೇ ಬರಮಾಡಿಕೊಂಡು ‘ಗುಲಾಬಿ ಗುಲಾಬಿ ನೆಹರು ಗುಲಾಬಿ’ ಎಂಬ ಕವಿತೆ ಓದಿದವರಾದರು. ಕಾಫಿ ಕೊಡಿಸಲಿಲ್ಲ. ಅವರ ಪರವಾನಿಗೆ ಪಡೆದು ನನ್ನ ಚಿತ್ತ ಕದ್ದಿದ್ದ ಮುಖದಲ್ಲಿ ದೃಷ್ಟಿ ನೆಟ್ಟೆ. ಸುಮಾರು ಹೊತ್ತು ನೋಡಿದ ಮೇಲೆ ಅಯ್ಯೋ ಈ ಮುಖ ಡಾ. ರೇವಣಸಿದ್ದಪ್ಪನವರನ್ನು ಹೋಲುತ್ತಿರುವುದೆನ್ನಿಸಿತು. ಹೌದು ಇದು ನಿಸ್ಸಂದೇಹವಾಗಿ ಡಾಕ್ಟರ್ ಮುಖವೇ ಎಂದು ನಿರ್ಧರಿಸಿದೆ. +“ಅದೇನು ಅಷ್ಟು ಹೊತ್ತಿಂದ ನೋಡ್ತಿದೀರಿ?” ಅಂದರು ಅಧಿಕಾರಿ. +“ಸಾರ್ ಈ ಫೋಟೋದಲ್ಲಿರೋರು ಯಾರು?” ಅಂದೆ. +“ಅವನೊಬ್ಬ ದೊಡ್ಡ ಕೇಡಿ. ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ತುಂಬಾ ವರ್ಷಗಳಾದ್ವು….” ಎಂದರು. +“ಸಾರ್ ಮತ್ತೆ ನೀವು ಹುಡುಕಲಿಲ್ವೇ?” ಅಂದೆ. +“ರೈಲಿಗೆ ಬಿದ್ದು ಸೂಸೆಡ್ ಮಾಡಿಕೊಂಡ. ಬಾಡಿ ಜಜ್ಜಿಹೋಗಿತ್ತು” ಅಂದರು. +“ಸರ್” ಏನೋ ಹೇಳಲು ಪ್ರಯತ್ನಿಸಿದೆ, ಹೇಳಲಿಲ್ಲ. +ವಾಪಸ್ಸು ಬಂದೆ. +ಒಂದೆರಡು ದಿನ ಮನೆ ಬಿಟ್ಟು ಹೊರಗೆ ಹೋಗಲೇ ಇಲ್ಲ. ಪತ್ರಿಕೆ ಕೆಲಸಗಳಿಗಾಗಿ ಹೊರಗೆ ಹೋಗಬೇಕಾಗಿ ಬಂತು, ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ತೊಡಗಿದ ಮೇಲೆ ಮನಸ್ಸು ನಿರುಮ್ಮಳವಾಯಿತು. ಕೇಡಿ ಲಿಸ್ಟ್ನಲ್ಲಿರುವ ಮುಖ ಕುರಿತ ಯಾರಿಗೂ ಹೇಳಲಿಲ್ಲ. ಯಾರಿಗೆ ಯಾಕೆ ಹೇಳಬೇಕು? ಈ ಭೂಮಿಯ ಮೇಲೆ ಯಾರು ತಾನೆ ಸಾಚಾ! +ಪುರಸಭಾ ಚುನಾವಣೆ ಬಿಸಿ ಅದೇ ಆಗ ಏರಿತ್ತು. ಆಡಳಿತ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಾ. ರೇವಣಸಿದ್ದಪ್ಪ ಸ್ಪರ್ಧಿಸಿದ್ದರು. ಉದ್ದೇಶಪೂರ್ವಕವಾಗಿ ಅವರನ್ನು ಕಂಡಿರಲಿಲ್ಲ. ತಪ್ಪಿಸಿಕೊಂಡು ಅಡ್ಡಾಡುತ್ತಿದ್ದೆ. ಒಮ್ಮೆ ಭರ್ ಅಂತ ಮೋಟಾರು ಬೈಕ್ ಹಾಕಿಕೊಂಡು ಎದುರಿಗೆ ಬಂದು ಬಿಡಬೇಕೆ? ನಮಸ್ಕಾರ ಸಾರ್ ಅಂದೆ. ಇತ್ತೀಚಿಗೆ ಕಾಣಿಸ್ಲಿಲ್ವಲ್ಲಯ್ಯಾ ಅಂದರು. ದೇವರ ದಯೆಯಿಂದ ತಾವು ಚುನಾಯಿತರಾಗುವುದರಿಂದ ಹಿಡಿದು ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾಗುವವರೆಗೆ ಹೇಳಿದರು. ಈ ಸಂದರ್ಭದಲ್ಲಿ ಲೇಖನ ಬರೆಯಲಿ ಅಂತ. +ಜೀವ ತಡೆಯಲಾಗಲಿಲ್ಲ. ಸಾರ್ ಒಂದುಕಡೆ ನಿಮ್ಮ ಫೋಟೋ ನೋಡಿದೆ ಅಂದೆ. ಅವರಿಗೆ ಅಷ್ಟು ಆಶ್ಚರ್ಯವಾಗಲಿಲ್ಲ. ಯಾವುದಾದ್ರು ಸಮಾರಂಭದಲ್ಲಿ ಭಾಗವಹಿಸಿದ್ದ ಫೋಟೋ ಇರಬೇಕೆಂದರು. ಅಲ್ಲ ಅಂದೆ. ಮತ್ತೆಲ್ಲಿಯದು ಅಂತ ಕೇಳಿದರು. ಹೋಗ್ಲಿ ಬಿಡ್ರಿ ಸಾರ್ ಈ ಒಳ್ಳೆ ಟೈಮ್ನಲ್ಲಿ ಆ ವಿಷ್ಯ ಯಾಕೆ! ಅಂದುಬಿಟ್ಟೆ. +ಮುಂದೆ ಮೂರ್‍ನಾಲ್ಕು ಸಾರಿ ಕಂಡಾಗ ಎಲ್ಲಿ ನೋಡಿದಿಯಪ್ಪಾ ಅಂದರು. ಹೋಗ್ಲಿ ಬಿಡ್ರಿ ಸಾರ್ ಆ ವಿಷ್ಯ ಯಾಕೆ ಅಂದೆ. ನಂತರ ಅವರು ಚುನಾವಣೀಲಿ ಗೆದ್ದು ಪುರಸಭಾ ಅಧ್ಯಕ್ಷರಾಗಿಬಿಟ್ಟರು. ಪೌರಸನ್ಮಾನ ಸಮಾರಂಭದಲ್ಲಿ ವೇದಿಕೆ ಮೇಲೆ ಸುಖಾಸೀನರಾಗಿದ್ದ ಅವರ ಕಣ್ಣಿಗೆ ದೂರದಲ್ಲಿ ನಿಂತಿದ್ದ ನಾನು ಬಿದ್ದೆ. ಎರಡು ಮೂರು ಸಾರಿ ಸಂಜ್ಞೆ ಮಾಡಿ ಕರೆದರು, ಹೋದೆ. ಕಿವಿಯಲ್ಲಿ ಬಾಯಿ ಇಟ್ಟು ಎಲ್ಲಿ ನೋಡ್ದಿ ಹೇಳಬಾರ್‍ದೆ ಅಂತ ಪಿಸುಗುಟ್ಟಿದರು. ಹೋಗ್ಲಿ ಬಿಡ್ರಿ ಸಾರ್ ಈ ಸಮಯದಲ್ಲಿ ಆ ವಿಷ್ಯ ಯಾಕೆ ಅಂದೆ. ಸನ್ಮಾನಕ್ಕೆ ಉತ್ತರವಾಗಿ ಭಾಷಣದಲ್ಲಿ ಉತ್ಸಾಹವಿರಲಿಲ್ಲ. ರೋಗಿಯಂತೆ ಮಾತಾಡಿದರು! +ಮಾಗಿಯ ಕಾಲದ ಸುಖದ ನಿದ್ದೆಯಲ್ಲಿ ಮಲಗಿದ್ದ ನನಗೆ ಚುಮುಚುಮು ಬೆಳಗಾಗಿರುವುದು ಗೊತ್ತಾಗಲಿಲ್ಲ. ಮಲಗೇ ಇದ್ದೆ. ಡಾಕ್ಟರ್ ಬಂದಂತೆ; ಅದನೇನಜ್ಜೀ ನಿನ್ ಮೊಮ್ಮಗ ವೀರಭದ್ರ ಎಂದು ಕೇಳಿದಂತೆ; ಮಕ್ಕಂಡಾನೆ ಎಬಿಸ್ತೀನಿ ಬರ್ರೀ ಸಾರೂ ಎಂದು ಅಜ್ಜಿ ಕರಿಯ ಕಂಬಳಿ ಗದ್ದುಗೆ ಹಾಕಿದಂತೆ; ಅದರ ಮೇಲೆ ಡಾಕ್ಟರ್ ಶಿವಶಿವಾ ಎಂದು ಕೂತಂತೆ. ಓಣಿ ಜನ ಓ ಛೇರ್ಮಾನ್ರು ಬಂದಾರೆ ಎಂದು ಮುಕ್ಕರಿದಂತೆ ಕನಸು ಕಂಡೆ. ಅಜ್ಜಿ ಎಬ್ಬಿಸಿದ ಮೇಲೆ ಅದು ಕನಸಲ್ಲ ನನಸು ಎಂದು ತಿಳಿಯಿತು. ಜಿಬರೆಗಣ್ಣುಜ್ಜುತ್ತ ನಮಸ್ಕಾರ ಸಾರ್ ಅಂದೆ. ಏನಯ್ಯಾ ಈ ವಯಸ್ನಲ್ಲಿ ಇಷ್ಟೊತ್ತು ಮಲಗಿದರೆಂಗೆ, ದೇವಸ್ಥಾನಕ್ಕೆ ಬಂದಿದ್ದೆ. ನಿನ್ ನೆನಪಾಯಿತು. ನೋಡೋಣಾಂತ ಬಂದೆ. ಬಾ…. ಬಾ…. ಅಂಗಿ ಹಾಕ್ಕೊ ಒಂದು ರೌಂಡ್ ಹಂಗೆ ಅಡ್ಡಾಡಿಕೊಂಡ್ ಬರೋಣ ಅಂದರು. ಅಂಗಿ ತೊಟ್ಟು ಹೊರಟೆ. +ದಾರಿಯುದ್ದಕ್ಕೂ ಮುನ್ಸಿಪಾಲಿಟಿ ತಾಪತ್ರಯದ ಬಗ್ಗೆ ಮಾತಾಡುತ್ತ ಹೊರಟರು. ಕಾಫಿ ಕುಡಿಸಿದರು. ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಎಲ್ಲಿ ನೋಡಿದೆಯ್ಯಾ ಹೇಳಬಾರದೆ ಅಂದರು. ಹೇಗೆ ಹೇಳುವುದು ನಾನು! ಬಿಸಿ ತುಪ್ಪವನ್ನು ಗಂಟಲ್ಲಿಟ್ಟುಕೊಂಡ ಅನುಭವ. ಏನು ಮಾಡುವುದು! ಕೊನೆಗೆ ಹೇಳೇಬಿಟ್ಟೆ. ಎಸ್ಪಿ ಆಫೀಸ್ನಲ್ಲಿ ಅಂತ. ಅದನ್ನು ಕೇಳಿ ಪಾತಾಳಕ್ಕಿಳಿದುಬಿಟ್ಟರು. ನನ್ನೆರಡು ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಇವು ಕೈಯಲ್ಲ ಕಾಲು ಅಂದರು. ಇನ್ನು ಮುಂದೆ ನನ್ನ ಒಡಹುಟ್ಟಿದ ಅಣ್ಣನಿಗಿಂತ ಹೆಚ್ಚಂತ ತಿಳ್ಕೊಳ್ರಿ ಅಂದರು. +ಆ ದಿನದಿಂದ ಅವರು ನನ್ನನ್ನು ಪರಾಂಬರಿಸುವುದು ಹೆಚ್ಚಯಿತು. ತಮ್ಮಿಂದ ನಿರುದ್ಯೋಗಿಯಾಗಿದ್ದ ನಾನು ಏನಾದರೂ ಸಹಾಯ ಪಡೆಯಬಹುದೆಂದು ಊಹಿಸಿದ್ದರು. ಆ ಪೈಕಿ ನಾನಾಗಿರಲಿಲ್ಲ. +ಒಂದು ದಿನ ಮನೆಗೆ ಬಂದಕೂಡಲೆ ಅಜ್ಜಿ ಒಂದು ಕವರು ಕೊಟ್ಟಿತು. ಛೇರ್ಮಾನ್ರು ಕೊಟ್‌ಕಳಿಸಿದ್ರಪ್ಪ ಅಂತ. ತೆಗೆದು ನೋಡಿದೆ. ಎರಡು ಸಾವಿರದಷ್ಟು ಹಣ ಇತ್ತು. ನನಗೆ ಏನೂ ಅನ್ನಿಸಲಿಲ್ಲ. ಆ ಹಣದೊಂದಿಗೆ ಸೀದಾ ಅವರ ಮನೆ ಹತ್ತಿರ ಹೋದೆ. ನನ್ನ ಪುಣ್ಯಕ್ಕೆ ಅವರು ಒಬ್ರೆ ಇದ್ದರು. ನಮಸ್ಕಾರ ಸಾರ್ ಅಂದೆ…. ಕೂತಲ್ಲಿಂದ ಓಡಿ ಬಂದು ನನ್ನನ್ನು ಕೋಣೆಯೊಳಗೆ ಕರೆದೊಯ್ದರು. ಹಣ ಮರಳಿಸುತ್ತ ‘ಸಾರ್ ಇನ್ನೊಮ್ಮೆ ಈ ರೀತಿ ಹಣ ಕಳಿಸಬೇಡಿ’ ಅಂದೆ. ಅವರು ಕಣ್ಣು ಒದ್ದೆಮಾಡಿಕೊಂಡರು. ಏನು ಕೇಳಿದ್ರೂ ಕೊಡ್ತೀನಿ ಅಂದರು. ನೌಕರಿ ಕೊಡಿಸ್ತೀನಿ ಅಂದರು. ನಾನು ಯಾವುದೂ ಬೇಡಿ ಸಾರ್ ಅಂದೆ. ಎಲ್ಲ ವಿಧಿ ಆಟ…. ನಾನು ಅಂತೋನಲ್ಲ ಅಂದರು. ನಾನು ‘ಯಾರ್‍ಗೂ ಹೇಳೊಲ್ಲ…. ಹೆದರಬೇಡಿ ಸಾರ್’ ಅಂದು ವಾಪಸು ಬಂದೆ. +ನಾನು ಅವರನ್ನು ಎಂದೂ ಕಾಣಲು ಹೋಗದಿದ್ದರೂ ಅವರೇ ಹುಡುಕಿಕೊಂಡು ನನ್ನ ಬಳಿ ಬರುತ್ತಿದ್ದರು. ‘ಹಾಗೆ ಸಾರ್ ಹೀಗೆ ಸಾರ್’ ಅಂತ ಬಹುವಚನದಲ್ಲಿ ಮಾತಾಡುತ್ತಿದ್ದರು. ನನಗೆ ಇರುಸುಮುರುಸಾಗುತ್ತಿತ್ತು. +ಜನರಿಗೂ ಇದು ವಿಚಿತ್ರ ಎನ್ನಿಸಿತು. ಜನಾನುರಾಗಿಗಳೂ; ಛೇರ್ಮನೂ; ಶ್ರೀಮಂತರೂ ಆದ ಡಾಕ್ಟರ್ ರೇವಣಸಿದ್ದಪ್ಪರೆಲ್ಲಿ; ಈ ಪಡಪೋಸಿ ಕುಂಬಾರ ಹುಡುಗ ವೀರಭದ್ರ ಎಲ್ಲಿ! ಅಂಥ ಮಹಾನ್ ವ್ಯಕ್ತಿ ಪಡಪೋಸಿಗೆ ಎಲ್ಲಿಲ್ಲದ ಗೌರವ ಕೊಡುವುದೆಂದರೇನು! ಜನ ನನ್ನ ಕಡೆ ಒಂದು ನಮೂನೆ ನೋಡತೊಡಗಿದರು. +ಜನಮರುಳೋ ಜಾತ್ರೆ ಮರುಳೋ…. ಎನ್ನುವಂತೆ ಹವಾ ಬದಲಾವಣೆಯಾದರೆ ಎಲ್ಲಾ ಸರಿ ಹೋಗುತ್ತದೆಂದು ನಾನು ಹೇಳದೆ ಕೇಳದೆ ಆಂಧ್ರಪ್ರದೇಶದಲ್ಲಿರುವ ಅಕ್ಕ ರುದ್ರಮ್ಮನವರ ಮನೆ ಸೇರಿಕೊಂಡೆ. ಐದು ಪೈಸೆ ಲಂಚ ಇಲ್ಲದೆ ಸಾಲಿಮೇಷ್ಟ್ರು ನೌಕರಿ ದೊರಕಿತು. ಸ್ನೇಹಿತರೆಲ್ಲ ‘ನಿಂದೆ ಛಾನ್ಸು’ ‘ನಿಂದೆ ಛಾನ್ಸು’ ಅಂದರು. +ನಾನು ನನ್ನೂರಿಗೆ ಬಂದು ನಾಲ್ಕು ದಿನ ಇದ್ದದ್ದೆ ಕಡಿಮೆ. ಯಾವಾಗಾದ್ರು ಹೋದ್ರೆ ರಾತ್ರಿ ಇದ್ದು ಬೆಳಿಗ್ಗೆ ವಾಪಾಸಾಗಿ ಬಿಡುತ್ತಿದ್ದೆ. ಹೀಗೆ ಸುಮಾರು ಮೂರ್‍ನಾಲ್ಕು ವರ್ಷ ಕಳೆದಿರಬಹುದು. ನಮ್ಮ ಅಪ್ಪ ಸತ್ತನಂತರದ ಉಪಟಳಕ್ಕೆ ಕೆಲವು ದಿನ ಊರಲ್ಲಿ ನಿಲ್ಲಬೇಕಾಗಿ ಬಂತು. ಆಗ ಇದ್ದಕ್ಕಿದ್ದಂತೆ ಡಾ. ರೇವಣಸಿದ್ದಪ್ಪನವರ ನೆನಪಾಯಿತು. ಎಲ್ಲಿ ಅವರೀಗ ಅಂತ ಒಬ್ಬರನ್ನು ಕೇಳಿದೆ ‘ಅಯ್ಯೋ ಅವ್ನಾ’ ಅಂತ ಉಸಿರುಬಿಟ್ಟರು. ಇನ್ನೂರು ಕಿಲೋಮೀಟರು ದೂರದ ಗುಂಟೂರ್ ಕ್ಯಾಂಪ್ ಬಳಿ ನಡೆದ ಪೋಲೀಸ್ ಎನ್‌ಕೌಂಟರ್‌ನಲ್ಲಿ ಸತ್ತು ಹೋದ ಎಂದು ಹೇಳಿದ ನಂತರ ಎಲ್ಲ ತಿಳಿದು ದಿಗ್ಮೂಢನಾದೆ. +ಡಾಕ್ಟರ್ ಹೆಸರಿಗಷ್ಟೆ ಡಾಕ್ಟರ್. ಆತ ರಾತ್ರಿ ಕಲಾಪಗಳಿಗೆ ಮನೆಯ ಹಿಂದಿನ ಬಾಗಿಲು ಬಳಸುತ್ತಿದ್ದ! ಸಿನಿಮಾದಲ್ಲಿ ಡಕಾಯಿತರು ವೇಷ ಹಾಕ್ಕೊಂತಾರಲ್ಲ ಹಾಗೆ ವೇಷ ಹಾಕ್ಕೊಂಡು ಸ್ಟೆನ್‌ಗನ್‌ನಂಥ ಮಾರಕಾಯುಧಗಳನ್ನು ಧರಿಸಿಕೊಂಡು ಮೋಟಾರ್ ಬೈಕ್ ಏರುತ್ತಿದ್ದರು. ಅದು ಮೊದಲೆ ಡಬ್ಬಲ್ ಇಂಜೀನ್ ಮೋಟಾರ್ ಬೈಕು. ಸೈಲೆನ್ಸರ್ ಅಳವಡಿಸಿದ್ದರಿಂದ ಅದು ಹೆಚ್ಚಿಗೆ ಸದ್ದು ಮಾಡುತ್ತಿರಲಿಲ್ಲ. ಸುಮಾರು ಇನ್ನೂರು ಮುನ್ನೂರು ಕಿಲೋಮೀಟರ್ ದೂರ ಹೋಗಿ ದರೋಡೆಮಾಡಿಕೊಂಡು ಬೆಳಗಾಮುಂಜಾನೆ ಊರಿಗೆ ಗಪ್‌ಚಿಪ್ ಅಂತ ವಾಪಸಾಗಿಬಿಡ್ತಿದ್ದರು. ಅದಾವುದೋ ರೋಗದ ನೆಪದಿಂದ ನಿದ್ದೆಯ ಇಂಜೆಕ್ಷನ್ ಮಾಡುತ್ತಿದ್ದುದರಿಂದ ಅವರ ಧರ್ಮಪತ್ನಿಗೆ ಇಡೀರಾತ್ರಿ ಎಚ್ಚರಾಗುತ್ತಿರಲಿಲ್ಲ. ಆ ಮನೆಗೊಂದು ನೆಲಮಾಳಿಗೆ. ಅಲ್ಲಿ ಲಕ್ಷಾಂತರ ರೂಪಾಯಿ ಹಣ ಒಡವೆ, ಅಲ್ಲಿಗೆ ಪ್ರವೇಶ ಇದ್ದದ್ದು ದೇವರ ಕೋಣೆಯ ಮೂಲಕ. +ಡಾ. ರೇವಣಸಿದ್ದಪ್ಪ ಬಾಗಿಲು ಬಂದ್ ಮಾಡಿಕೊಂಡು ಗಂಟೆಗಟ್ಟಲೆ ಪೂಜೆ ಯಾಕೆ ಮಾಡ್ತಿದ್ದರು ಅಂತ ಆಮೇಲೆ ಅರ್ಥ ಆಯ್ತು ನನಗೆ. ಈಗಲೂ ನಮ್ಮೂರ ಬಸ್‌ಸ್ಟಾಂಡಿನಲ್ಲಿ ಅರೆಬರೆ ಹುಚ್ಚಿನಿಂದ ಭಿಕ್ಷೆಬೇಡುತ್ತ ತಿರುಗುವ ಅವರ ಧರ್ಮಪತ್ನಿಯನ್ನು ನೋಡಿದಾಗಲೆಲ್ಲ ಆ (ಈ) ಕಥೆ ನೆನಪು ಮಾಡಿಕೊಳ್ತಿರ್‍ತೀನಿ. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ […] +ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_490.txt b/Kannada Sahitya/article_490.txt new file mode 100644 index 0000000000000000000000000000000000000000..b96251901753356623bc3774c0f3407611eb81f6 --- /dev/null +++ b/Kannada Sahitya/article_490.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮತ್ತೆ ಬರವಣಿಗೆಯ ಮೊದಲನೆಯ ದಿನ +ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. +ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. ಬಹಳ ಕಾಲದ ನಂತರ ನಾಲ್ಕು ದಿನ ತಿಮ್ಮೇಗೌಡರ ಗೊತೆ ಕಳೆದದ್ದು. ಅವರೆದುರು ರಾಘು ನನ್ನ ಹಿಮಾಲಯ ಬರಹ ಮೆಚ್ಚಿದ್ದು. ನನಗೇ ಈ ಬರೆದದ್ದನ್ನೆಲ್ಲ ರಹಮತ್‌ಗೆ ಕೊಡಬೇಕು ಅನ್ನಿಸಿದ್ದು, ಅಥವ ತಿಂಗಳಿಗೆ ಎರಡು ಬಾರಿಯಾದರೂ ಹೃಷಿಕೇಶ, ಈಗಲೂ, ಕನಸಿನಲ್ಲಿ ಬರುವುದು ಹೀಗೆ ಏನೇನೋ ಕಾರಣ ಇರಬಹುದು. +ದಿನಕ್ಕೆ ಎರಡು ಬಾರಿ ತೂಗುಸೇತುವೆ ದಾಟಿ ಹೋಗುತ್ತಿದ್ದೆ. ಮಲೆನಾಡಿನ ಅಡಿಕೆ ಸಾರದ ಮೇಲೆ ನಡೆದದ್ದು, ಹಿಂದೆ ಚಂದ್ರಾ ಜೊತೆ ಟ್ರೆಕಿಂಗ್ ಹೋದಾಗ ನೋಡಿದ, ದಾಟಿದ, ಕೆಲವು ಬಾರಿ ಖುಷಿಗೆ ಎಂದು ಹಗ್ಗಕ್ಕೆ ಜೋತು ಬಿದ್ದು ತಲೆಕೆಳಗಾಗಿ ನದಿ ದಾಟುವ ಸಾಹಸ ಅಭ್ಯಾಸ ಮಾಡಿದ್ದು ಇವಲ್ಲ ಆ ಸೇತುವೆ ಮೇಲೆ ಹೋಗುತ್ತಾ ಇರುವಾಗ ಬಿಳೀ ಪಂಚೆ ಉಟ್ಟು ಖಾದಿ ಜುಬ್ಬದ ಜೇಬಿನಲ್ಲಿ ಕೈ ಇಟ್ಟು ನಡೆಯುತ್ತಿದ್ದೆ. ಹರಿದ್ವಾರದಲ್ಲಿ ಇಪ್ಪತ್ತು ರೂಪಾಯಿಗೆ ಒಂದರಂತೆ ಎರಡು ಜುಬ್ಬ ತೆಗೆದುಕೊಂಡಿದ್ದೆ. ಇಲ್ಲಿ ಕೃಷ್ಣಾನಂದರು ನನಗೆ ಪಂಚೆ ಕೊಡುವ ಹೊತ್ತಿಗೆ ಹದಿನೈದು ದಿನ ಕಳೆದಿತ್ತು. ಹೃಷಿಕೇಶ ನನ್ನನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿತ್ತು. +ಡಿಸೆಂಬರಿನ ಕೊನೆಯ ಭಾಗದಲ್ಲಿ, ನುಣ್ಣಗೆ ಕ್ಷೌರ ಮಾಡಿದ ಮುಖದ ಮೆಲೆ ಮತ್ತು ಸ್ವಲ್ಪ ಉದ್ದವಾಗಿ ಬೆಳೆದ ತಲೆಕೂದಲ ಒಳಗೆ ನದಿಯ ಮೇಲಿನ ಡಿಸೆಂಬರ್ ಗಾಳಿ ಜೋರಾಗಿ ಬೀಸುತ್ತಿತು. ಸೇತುವೆಯ ತೀರ ಕೆಳಗೆ ತೆಳುವಾಗಿ ಹರಿಯುವ ಗಂಗೆಯ ಮೀನುಗಳಿಗೆ ಆಹಾರ ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಯಾತ್ರಿಗಳಿಗೆ ದುಂಬಾಲು ಬೀಳುವ ಬಾಲಕಿಯರು ನನ್ನತ್ತ ಗಮನಕೊಡುವುದು ಬಿಟ್ಟಿದ್ದರು. ಹಳತಾದ ಕೊಳಕು ಲಂಗ, ಹರಿದ ಸ್ವೆಟರು ಹಾಕಿಕೊಂಡ ಇಂಥ ಹುಡುಗಿಯರು ನಾನು ಕಂಡಾಗ ನಕ್ಕೂ ನಗದಂತೆ ನಕ್ಕು, ಬೇರೆ ಯಾತ್ರಿಗಳ ಅಂಗಿ ಹಿಡಿದು, ಕೈ ಹಿಡಿದು, ಹಿಟ್ಟಿನ ಗೋಲಿಗಳ ಪ್ಯಾಕೆಟ್ಟು ತೆಗೆದುಕೊಳ್ಳಿ ಎಂದು ಕಾಡುತ್ತಿದ್ದರು. ರೂಪಾಯಿಗೆ ಒಂದು ಪ್ಯಾಕೆಟ್ಟು. ಅವರು ಈಗ ನನ್ನ ಗಮನಿಸುತ್ತಿರಲಿಲ್ಲ. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ಮೊದಮೊದಲು ಫೋಟೋಗಳನ್ನು ಮಾರಲು ನನ್ನ ಬಳಿ ಬರುತ್ತಿದ್ದವರು, ಸೇತುವೆ ನಡುವೆ ನಿಲ್ಲಿಸಿ ನದಿ ಮತ್ತು ಹಿಮಾಲಯದ ಹಿನ್ನೆಲೆಯ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸುತ್ತಿದ್ದವರು ನಾನೊಬ್ಬ ಗಿರಾಕಿಯೇ ಅಲ್ಲ ಅಂತ ಈಗ ತೀರ್ಮಾನಿಸಿಬಿಟ್ಟಿದ್ದರು. ಹೃಷಿಕೇಶ ನನ್ನನ್ನು…..ಸೇತುವೆಯ ಮೊದಲಿಗೇ ಒಂದು ಇದ್ದಿಲು ಒಲೆ ಇಟ್ಟುಕೊಂಡು ದಿನದ ಅಲ್ಲ ಹೊತ್ತಿನಲ್ಲೂ ಒಂದೇ ಸಮ “ಪಾಪಡ್ ಲೇಲೋ, ದುನಿಯಾ ಕಾ ಪಾಪಡ್”ಎಂದು ಬಿಡುವು ಕೊಡದೆ, ಜನ ಅವನತ್ತ ನೋಡಿದಾಗೆಲ್ಲ ಕೂಗುವ ಮುದುಕ ನನ್ನ ಕಂಡಾಗ ಸುಮ್ಮನೆ ಇರುತ್ತಿದ್ದ. ಹೃಷಿಕೇಶ ನನ್ನನ್ನು…. ಗಂಗೆಯ ಆ ಕಡೆಯ ದಡದಲ್ಲಿ ಒಂದು ಟೀ ಅಂಗಡಿ. ಅದರ ಯಜಮಾನನಿಗೆ ಕುರುಚುಲು ಗಡ್ದ. ಕ್ರಾಪು ಮತ್ತು ಅದರೊಳಗೆ ಬಚ್ಚಿಟ್ಟುಕೊಂಡಿದ್ದ. ಸ್ವಲ್ಪ ಉಬ್ಬು ಹಲ್ಲು. ಸದಾ ನಗುಮುಖ. ಕೆಲಸದ ಹುಡುಗನನ್ನು ಮಾತ್ರ ಬೈಯುತ್ತಿದ್ದ. ನಾನು ಅವನ ಅಂಗಡಿಗೆ ಕಾಲಿಟ್ಟ ಕೂಡಲೆ ಸ್ಪೆಶಲ್ ಚಾ ಮಾಡಿ ಉದ್ದ ಲೋಟಕ್ಕೆ ತುಂಬಿ, ಲೋಟವನ್ನು ಒಮ್ಮೆ ಹೆಗಲಮೇಲಿದ್ದ ಟವಲಿನಲ್ಲಿ ಒರೆಸಿ ನನ್ನ ಮುಂದೆ ಇಡುತ್ತಿದ್ದ. ನಾನು ಆರಾಮಾಗಿ ಒಂದು ಸಿಗರೇಟು ಸೇದುತ್ತಿದ್ದೆ. ಸಂಜೆ ಹೊತ್ತು ರಸ್ತೆ ಪಕ್ಕದಲ್ಲಿ ಒಂದು ಒಲೆ ಇಟ್ಟು ಜಿಲೇಬಿ ಕರೆಯುತ್ತಿದ್ದ. ಹಳ್ಳಿ ಹಿಂದಿಯಲ್ಲಿ ಮಾತಾಡುತ್ತಿದ್ದ. ಚಿಲ್ಲರೆ ಇಲ್ಲದಿದ್ದರೆ ನಾಳೆ ಬಂದಾಗ ಕೊಡಿ ಅನ್ನುತ್ತಿದ್ದ. ಒಂದು ದಿನ ಹೋಗದಿದ್ದರೆ ನಿನ್ನೆ ಯಾಕೆ ಬರಲಿಲ್ಲ ಅಂತ ಕೇಳುತ್ತಿದ್ದ. ತನ್ನ ಮಗ, ಸೊಸೆ, ರಸ್ತೆ ಎದುರು ಇರುವ ತನ್ನ ಬಳೆ ಅಂಗಡಿ ಎಲ್ಲದರ ಬಗ್ಗೆ ಏನೇನಾದರೂ ಹೇಳುತ್ತಿದ್ದ. ನನಗೆ ಹಿಂದಿ ತಿಳಿಯುತ್ತದೆ, ಮಾತಾಡಲು ಬರುವುದಿಲ್ಲ ಅಂತ ಅವನಿಗೆ ಗೊತ್ತಿತ್ತು. ಹೃಷಿಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ನೆಲೆ ಇಲ್ಲದೆ ಅಲ್ಲಿ ನೆಲೆಸಿದ್ದ ಹಲವು ನೂರು ಜನರಲ್ಲಿ ನಾನು ಒಬ್ಬನಾಗಿಬಿಟ್ಟಿದ್ದೆ. +ಹೃಷಿಕೇಶಕ್ಕೆ ಬಂದಾಗ ಬಹುಶಃ ನಾನು ಎದ್ದುಕಾಣುವ ಅಪರಿಚಿತ ಆಗಿದ್ದೆ! ಹರಿದ್ವಾರದ ಪ್ರೊಫೆಶನಲ್ ಸನ್ಯಾಸಿಗಳು ನನಗೆ ಒಗ್ಗಿರಲಿಲ್ಲ. ಅವರ ಬದುಕು ಬೇರೆ ಥರದ್ದು. ಅವರು ನನಗೆ ಪರಿಚಯ ಆಗಿ ಅವರೊಡನೆ ಹದಿನೈದು ಇಪ್ಪತ್ತು ದಿನ ಕಳೆಯಲು ವಾರಣಾಸಿಯಲ್ಲಿ ನನಗೆ ಸಿಕ್ಕ ಇಂಗ್ಲಿಷ್ ಮಹಿಳೆ ಕಾರಣ. +ಡಿಸೆಂಬರ್ ತಿಂಗಳ ಮೊದಲ ವಾರದ ಕೊನೆಗೆ ನಾನು ವಾರಣಾಸಿಗೆ ಬಂದೆ. ರಾತ್ರಿಯ ಕೊರೆಯುವ ಚಳಿ. ಸುರಿಯುವ ಮಂಜಿನಲ್ಲಿ ಸ್ಟೇಶನ್ನಿನ ಪ್ರಖರ ದೀಪಗಳು ಮಂಕಾಗಿ, ನೆಲದ ಆಧಾರ ಇಲ್ಲದೆ, ಅಂತರದಲ್ಲಿ ಇದ್ದೂ ಇಲ್ಲದಂತೆ ಉರಿಯುತ್ತಿದ್ದವು. ರೈಲಿನಲ್ಲಿ ನನ್ನ ಜೊತೆ ಬಂದ ಕಾನ್ವೆಂಟಿನ ಮಹಿಳೆಯರು ಹೊರಟುಹೋಗಿದ್ದರು. ಅವರಿಗೆ ಹೋಗಲು ಗೊತ್ತಾದ ಒಂದು ಜಾಗ ಇತ್ತು. ವ್ಯಾಪಾರಿಯ ಮಗ ಗುಡ್‌ಬೈ ಅಂತ ಹೇಳಿ ನಗುತ್ತ ಹೊರಟುಹೋದ. ಅವನಿಗೆ ಹೋಗಲು ಮನೆ ಇತ್ತು. ನಾನು ಕೆಲಸ ಬಿಟ್ಟು ಹೊರಟಿದ್ದೇನೆ ಅಂತ ಅವನಿಗೆ ಹೇಳಿದ್ದೆ. ಪೆನ್‌ಶನ್ ಬರುತ್ತೆ ಅಂತ ಹೇಳಿದ್ದೆ. ಒಳ್ಳೆ ಕೆಲಸ ಮಾಡಿದಿರಿ, ಸರ್ಕಾರಿ ಕೆಲಸದಿಂದ ಏನೂ ಲಾಭ ಇಲ್ಲ ಅಂದ. ಬಿಸಿನೆಸ್ ಮಾಡುವ ಆಸೆ ಇದೆಯಾ ಅಂದ. ಹ್ಞೂ ಅಂದೆ. ಊರು ಬಂದಾಗ ಸುಮ್ಮನೆ ಹೊರಟು ಹೋದ. ರೈಲು ಇಳಿದಾಗ ರಾತ್ರಿ ಹನ್ನೆರಡು. ನಾಲ್ಕು ಗಂಟೆ ತಡ. ಚಳಿ ಎಷ್ಟಿತ್ತು ಅಂದರೆ ಚಳಿಯ ಅನುಭವ ಆಗುವ ಮಿತಿಯನ್ನೂ ಮೀರಿತ್ತು. ನನ್ನ ಜರ್ಕಿನ್ ನೆಟ್ ಬನೀನಿನಷ್ಟು ನಿರುಪಯುಕ್ತವಾಗಿತ್ತು. ಜೊತೆಗೆ ಇದ್ದ ಹೆಗಲು ಚೀಲದಲ್ಲಿ ಒಂದು ಷರಟು ಮಾತ್ರ ಇತ್ತು. ಇನ್ನೊಂದು ಪ್ಯಾಂಟು ಮಂಗಳೂರಲ್ಲೆ ಕಳೆದು ಹೋಗಿತ್ತು. ಬೆಳಗಾದರೆ ಎಲ್ಲಾದರೂ ಹೋಗಬಹುದಾಗಿತ್ತು. ಈಗ ಚಳಿ ಇರದ ಮಲಗುವ ಜಾಗಮಾತ್ರ ಬೇಕಿತ್ತು. ಕೆಲವರು ಮುದುರಿ ಮಲಗಿದ್ದರು. ಒಬ್ಬಿಬ್ಬರು ಕೂಲಿಯವರು ಇದ್ದರೂ ಬರಿಗೈಯ ನನ್ನನ್ನು ತಿರುಗಿಯೂ ನೋಡಲಿಲ್ಲ. +ಸ್ಟೇಷನ್ನಿನ ಹೊರಗೆ ಸೈಕಲ್ ರಿಕ್ಷಾಗಳಲ್ಲಿ ರಿಕ್ಷಾವಾಲಾಗಳು ಮಲಗಿದ್ದರು. ಅವರು ಯಾರನ್ನಾದರೂ ಹೋಟೆಲ್ ಎಲ್ಲಿದೆ ಕೇಳಬೇಕು ಅಂದುಕೊಂಡರೂ ಮೋಸ ಮಾಡಿದರೆ ಅನ್ನುವ ಅಳುಕು ಇತ್ತು. ಆಗ ಬಿಳೀ ಪ್ಯಾಂಟು, ಶರಟು, ಸ್ವೆಟರು, ತಲೆಗೆ ಉಣ್ಣೆ ಟೋಪಿ ಹಾಕಿಕೊಂಡಿದ್ದ ಹುಡುಗ ಸಿಕ್ಕಿದ. ಉಳಿಯಲು ಜಾಗ ಬೇಕೆ? ಬೇಕು. ಎಂಥಾ ಹೋಟೆಲ್? ತುಂಬಾ ಬೆಲೆಯದ್ದು ಬೇಡ. ಎಲ್ಲಿಂದ ಬರ್ತಿದೀರಿ? ಕರ್ನಾಟಕ. ಪ್ರವಾಸಿಯೇ? ಹೌದು. ಹೀಗೆ ಕೇಳುತ್ತ ಕೇಳುತ್ತ ಹೋಟೆಲಿಗೆ ಒಯ್ದ. ದಿನಕ್ಕೆ ನೂರ ಐವತ್ತು. ಅಷ್ಟು ಕೊಡುವುದು ಕಷ್ಟ. ಇರುವ ಎರಡು ಸಾವಿರ ಇನ್ನೂ ಕೆಲವು ತಿಂಗಳಾದರೂ ನನಗೆ ಆಧಾರವಾಗಿ ಉಳಿಯಬೇಕು. ನನಗೆ ನೆಲೆ ಸಿಗುವವರೆಗೆ. ಆದರೆ ಇಲ್ಲಿ, ಈಗ, ನಾನು ಪ್ರವಾಸಿ ಅಂತ ನಟಿಸಬೇಕಿತ್ತು. ಚಳಿಯಿಂದ ತಪ್ಪಿಸಿಕೊಳ್ಳಬೇಕಿತ್ತು. ಒಪ್ಪಿದೆ. ಆ ಹುಡುಗ ತನ್ನ ಹೆಸರು ಪಾಂಡೆ ಅಂತ ಹೇಳಿ, ಹೋಟೆಲ್ಲಿನವನ ಬಳಿ ಕಮೀಷನ್ ಪಡೆದು ಬೆಳಿಗ್ಗೆ ಬೇಗ ಬರುತ್ತೇನೆಂದು ಹೋಗಿಬಿತ್ತ. ಎರಡು ದಪ್ಪ ರಗ್ಗುಗಳನ್ನು ಹೊದ್ದು ನಿದ್ದೆ ಮಾಡಿದೆ. +ಬೆಳಗಾಗುವ ಹೊತ್ತಿಗೆ ಪಾಂಡೆ ಬಂದ. ಬನಾರಸ್ ತೋರಿಸ್ತೇನೆ. ಅಂದ. ಎಷ್ಟು ದಿನ ಇರುತ್ತೀರಿ? ಮೂರು ದಿನ ಅಂದೆ. ಸುಮ್ಮನೆ. ಇಲ್ಲೇ ಇರಲು, ಸಾಧ್ಯವಾದರೆ, ಬಂದವನು ಅಂತ ಹೇಳಲಿಲ್ಲ. ರಿಕ್ಷಾನೋ ಟ್ಯಾಕ್ಸೀನೋ ಅಂದ. ನಡೆಯೋಣ ಅಂದೆ. ನನ್ನತ್ತ ವಿಚಿತ್ರವಾಗಿ ನೋಡಿದ. ಸರಿ ಅಂದ. ಬೆಳಗಿನ ಚಳಿ ಬಿಸಿಲಲ್ಲಿ ಬನಾರಸ್ ಎದ್ದೇಳುತ್ತಿತ್ತು. ಶಾಲೆಗೆ ಹೋಗುವ ಉಣ್ಣೆ ಉಡುಪಿನ ಮಕ್ಕಳು. ತರಕಾರಿ ಮಾರಲು ಬಂದ ಹಳ್ಳಿ ಜನ. ಕಾಂಪೌಂಡಿನ ಬಾಗಿಲಲ್ಲಿ ನಿಂತು ವ್ಯಾಪಾರ ಮಾಡುವ ಸ್ವೆಟರು ತೊಟ್ಟ ಹೆಂಗಸರು ಅಲ್ಲೊಂದು ಇಲ್ಲೊಂದು ಬಾಗಿಲು ತೆರೆದ ಅಂಗಡಿಗಳು…. ಅದು ಯಾವುದೇ ಊರು ಇರಬಹುದು. +ಈ ಊರಲ್ಲಿ ತಿಥಿ ಮಾಡಿಸಿದರೆ ಹಿರಿಯರಿಗೆ ಶಾಶ್ವತವಾದ ಮುಕ್ತಿ ಸಿಗುತ್ತೆ, ತಾನು ಅದನ್ನು ಕಡಿಮೆ ಖರ್ಚಿನಲ್ಲಿ, ಕೇವಲ ಐನೂರು ರೂಪಾಯಲ್ಲಿ ಮಾಡಿಸಲು ಏರ್ಪಾಡು ಮಾಡಿಕೊಡುವೆ, ಬೇರೆಯವರ ಹತ್ತಿರ ಹೋಗಿ ಮೋಸ ಬೀಳಬೇಡಿ ಅಂತ ಪಾಂಡೆ ಬಲೆ ನೇಯತೊಡಗಿದ. ನಮ್ಮಲ್ಲಿ ತಿಥಿ ಮಾಡಿಸುವ ಸಂಪ್ರದಾಯ ಇಲ್ಲ ಅಂದೆ. ನೀವು ಮುಸ್ಲಿಮರಾ ಅಂದ. ಅಲ್ಲ ಅಂದೆ. ಮತ್ತೆ? ತನ್ನ ಎದೆಯ ಮೇಲೆ ಕೈಯಿಂದ ಶಿಲುಬೆಯ ಆಕಾರ ಮೂಡಿಸುತ್ತಾ ಕ್ರಿಶ್ಚಿಯನ್ನರೆ ಅನ್ನುವ ಹಾಗೆ ನೋಡಿದ. ಅಲ್ಲ ಅಂದೆ. ಮತ್ತೆ ಹಿಂದೂ ಆದರೆ ತಿಥಿ ಯಾಕೆ ಮಾಡಲ್ಲ? ಅವನ ಹತ್ತಿರ ವಾದ ಮಾಡುವಷ್ಟು ಹಿಂದಿ ನನಗೆ ಗೊತ್ತಿರಲಿಲ್ಲ. +ತುಂಬ ದಿನ ಉಳಿಯೋದಕ್ಕೆ ಇಲ್ಲಿ ಚತ್ರಗಳು ಇಲ್ಲವಾ ಎಂದೆ. ಇವೆ, ನೀವು ಉಳಿಯುವಂಥವು ಇಲ್ಲ ಅಂದ. ಸರ್ಕಾರವೇ ಗಾಂಜಾ ಮಾರುವ ಲೈಸೆನ್ಸ್ ಅಂಗಡಿ ಹತ್ತಿರ ಉದ್ದ ಗಡ್ಡದವರು, ಬೋಳು ತಲೆಯವರು, ಬೂದಿಬಡುಕರು ಗುಂಪುಗೂಡಿದ್ದರು. ಯಾಕೆ ಇವರೆಲ್ಲ ಹೀಗಿದ್ದಾರೆ? ವಿಶ್ವನಾಥಮಂದಿರದ ಕಿರು ಓಣಿ ಬೆಂಗಳೂರಿನ ಚಿಕ್ಕಪೇಟೆಯ ಅಜ್ಞಾತ ಗಲ್ಲಿಯಂತಿತ್ತು. ಚಪ್ಪಡಿ ಹಾಕಿದ ರಸ್ತೆಯ ಮೇಲೆ ದನಗಳು ಓಡಾಡುತ್ತಿದ್ದವು. ಅಪರಾಜಿತೋ ಸಿನಿಮಾ ಜ್ಞಾಪಕ ಬಂತು. ದೇವಾಲಯದಲ್ಲಿ ನೆಲದೊಳಗೆ ಅಡಗಿದ ನುಣುಪು ಕಲ್ಲು ಮುಟ್ಟಿ ಹೂವಿಟ್ಟಾಗ ಕಾಲಿಗೆ ನೀರಲ್ಲಿ ನೆನೆದ ಚಪ್ಪಡಿ ಕಲ್ಲು ತಣ್ಣಗೆ ತಗಲುತ್ತಿತ್ತು. ಮಂಕು ದೀಪ, ಸಣ್ಣಗೆ ಉರಿಯುವ ಎಣ್ಣೆದೀಪ, ಸುತ್ತ ಜನರ ಮೈ ಒತ್ತಡ. ಹೆಜ್ಜೆ ಹೆಜ್ಜೆಗೆ ಕಾಡುವ ಪಂಡರಿಗೆ ನೂರೈವತ್ತು ರೂಪಾಯಿ ಕೊಡದೆ ತಪ್ಪಿಸಿಕೊಳ್ಳಲಾಗಲಿಲ್ಲ. +ಪಾಂಡೆ ಮತ್ತೆ ತಿಥಿ ಮಾಡಿಸುವುದಕ್ಕೆ, ಮನೆಯವರಿಗೆ ಸೀರೆ ಕೊಡಿಸುವುದಕ್ಕೆ ಗಂಟುಬಿದ್ದ. ದೋಣಿಯಲ್ಲಿ ಕೂತು ಗಂಗೆಯ ಆಕಡೆ ದಡಕ್ಕೆ ಹೋಗುತ್ತೀರಾ, ಬರೀ ಇನ್ನೂರು ರೂಪಾಯಿ ಅಂದ. ಬೇಡವೇ ಬೇಡ ಅಂತಂದಾಗ ಸಂಕಟಮೋಚನ ಮಂದಿರ ತೋರಿಸುತ್ತೇನೆ ಅಂತ ಊನಿವರ್ಸಿಟಿ ಹತ್ತಿರ ಕರಕೊಂಡು ಹೋಗಿ ದೇವಸ್ಥಾನಗಳನ್ನು ತೋರಿಸಿದ. ಸಂಜೆ ಹೊತ್ತಿಗೆ ಖುಶಿ ಆಯಿತಾ ಬಕ್ಷೀಸು ಕೊಡಿ ಅಂತ – ಐವತ್ತು, ಸಾಲದು. ಎಪ್ಪತ್ತೈದು, ಸಾಲದು. ನೂರು, ನೂರೈವತ್ತು ಪಡೆದು ನಾಳೆ ಬೆಳಿಗ್ಗೆ ಬರುತ್ತೇನೆ ಅಂತ ಮಾಯವಾದ. +ನಾನು ಮಾಡಿದ ಮೊದಲನೆಯ ಕೆಲಸ ಅಂದರೆ ಅವನು ಗೊತ್ತುಮಾಡಿದ ಹೋಟೆಲು ಖಾಲಿ ಮಾಡಿದ್ದು. ಇನ್ನೊಂದು ಚಿಕ್ಕ ಮನೆಯಂಥ ಹೋಟೆಲು. ಹೆಸರು ಸುಂದರವಾಗಿತ್ತು. ನೀಲಗಂಗಾ. ಬಾಡಿಗೆ ತೀರಾ ಕಡಿಮೆ. ವಾಚಾಳಿ ಮಾಲಕನಿಂದ ತಪ್ಪಿಸಿಕೊಳ್ಳಲು ಮಾರನೆಯ ಇಡೀ ದಿನ ಊರು ಅಲೆದೆ. +ವಿಷಕನ್ಯಾ ಸಿನಿಮಾದ ಪೋಸ್ಟರು ತುಂಬಿದ ಗೋಡೆಗಳು. ಟಿವಿ, ಬಟ್ಟೇ ಜಾಹಿರಾತು ನೇತುಹಾಕಿಕೊಂಡ ಕಂಬಗಳು. ಎಲ್ಲೆಲ್ಲೋ ತಿರುಗುವ ಗಲ್ಲಿಗಳು. ನಿರ್ದಿಷ್ಟ ಕೆಲಸ ಮತ್ತು ಗುರಿ ಇರುವಂತೆ ಓಡಾಡುವ ಜನಗಳು. ನೀನೇ ಅಂತ ಕೇಳುವವರಿಲ್ಲದೆ ನಾನೂ ಯಾರೊಡನೆಯೂ ಮಾತಾಡದೆ ನನ್ನ ಯಾರೂ ಮಾತಾಡಿಸದೆ ಇಡೀ ದಿನ ವಾರಣಾಸಿ ಸುತ್ತಿದೆ. ಆ ಬೀದಿ ತುಂಬ ಕಡಿತದ ಬೆಲೆಯ ರಜಾಯಿ ಮಾರಾಟದ ಬೋರ್ಡುಗಳು. ತೀರ ಕಡಮೆ ಬೆಲೆಯ ಒಂದು ರಜಾಯಿ ಕಂಡೆ. ನೀಲಗಂಗಾದಲ್ಲಿ ರಗ್ಗು ಇರಲಿಲ್ಲ. +ಬೆಳಗ್ಗೆ ಮತ್ತೆ ಹೊರಟೆ. ವಿಶ್ವನಾಥ ದೇವಸ್ಥಾನದ ದಾರಿ ಸಿಗಲಿಲ್ಲ. ಕೇಳುತ್ತ ಹೊರಟೆ. ದೇವಸ್ಥಾನದ ಪಕ್ಕದಲ್ಲೆ ಇದ್ದ ಗಂಗಾ ನದಿಯ ಉದ್ದಕ್ಕೂ ನದಿಯ ಜೊತೆ ಮತ್ತು ನದಿಯ ವಿರುದ್ಧ ದಿಕ್ಕಿನಲ್ಲಿ ಸುಮ್ಮನೆ ಅಲೆದಾಡಿದೆ. ಈಜುವವರು, ಬಟ್ಟೆ ಒಗೆಯುವವರು, ಹಾರುವವರು, ನಾಯಿಗಳು, ಪೂಜೆಮಾಡುವವರು, ಮೆಟ್ಟಿಲುಗಳು, ಕಟ್ಟಯಮೇಲೆ ದುಂಡಾದ ಹಾಳೆ ಛತ್ರಿಗಳು, ದಪ್ಪ ದಪ್ಪ ಅಕ್ಷರಗಳಲ್ಲಿ ಘಾಟಿಯ ಹೆಸರು ಬರೆದುಕೊಂಡ ಬೋರ್ಡುಗಳು. ನದಿಯ ಮೇಲೆ ಓಡಾಡುವ ದೋಣಿಗಳು. ನನ್ನ ನಿರುದ್ಧಿಶ್ಯ ನಡೆ…. ಇನ್ನೂ ಹತ್ತು ಗಂಟೆ. ನಡೆದಿದ್ದೆ. ಯಾರನ್ನೋ ಕಾಣಬೇಕು. ಏನೋ ಆಗಬೇಕು. ಇಡೀ ದಿನ ಕಳೆಯುವುದು? ಅಥವಾ ಇಡೀ ಬದುಕು ಹೀಗೇ? ಗೊತ್ತಿಲ್ಲ. ನಡೆದಿದ್ದೆ. +ಅಲ್ಲೊಂದು ಕಡೆ ಜಗತ್ತೆಲ್ಲ ಮರೆತಂತೆ ಪುಸ್ತಕ ಓದುತ್ತ ಕುಳಿತ ಒಬ ವಿದೇಶೀ ಮಹಿಳೆ ಇದ್ದಳು. ಸ್ವಲ್ಪ ಹೊತ್ತು ನೋಡುತ್ತ ನಿಂತೆ. ಬಿಳೀ ಪಂಚೆ, ಬನೀನು ತೊಟ್ಟ, ಸ್ವಲ್ಪ ಗಡ್ಡ ಇದ್ದ, ಜುಟ್ಟು ಗಂಟು ಹಾಕಿಕೊಂಡ ಒಬ್ಬ ಯುವಕ ನದಿಯಿಂದ ಸ್ನಾನ ಮಾಡಿ ಎದ್ದು ಬರುತ್ತಿದ್ದ. ಅವಳನ್ನು ಗುರುತು ಹಿಡಿದು ಮಾತನಾಡಿಸಿದ. ಇಬ್ಬರೂ ಒಬ್ಬನೇ ಗುರುವಿನ ಶಿಷ್ಯರಂತೆ. ಅವನು ನಿಂತು, ಅವಳು ಓದುತ್ತಿದ್ದ ಪುಟದ ಗುರುತಿಗೆಂದು ಬೆರಳಿಟ್ಟು ಪುಸ್ತಕ ಮಡಚಿ ಮೊದಲ ಮೆಟ್ಟಿಲ ಕಟ್ಟೆಯ ಮೇಲೆ ಕುಳಿತು, ಹಳೆಯ ಕತೆಗಳನ್ನು ಮನುಷ್ಯರನ್ನು ಜ್ಞಾಪಿಸಿಕೊಳ್ಳುತ್ತ ಇದ್ದರು. ಅವನು ಹೋಗುವವರೆಗೆ ಕಾದೆ. ನಾನು ನೋಡಬೇಕಾದವಳು ಇವಳೇನೇ? ಅವಳು ನನ್ನ ಕಣ್ಣ ಅಳತೆಯಿಂದ ತಪ್ಪಿಹೋಗದಂತೆ ಅಲ್ಲೆ ಹದಿನೈದು ನಿಮಿಷ ಸುತ್ತಾಡಿದೆ. ಧೈರ್ಯ ಕೂಡುತ್ತ ಚದರುತ್ತ ಇತ್ತು. ಆಕೆ ಬಿಸಿಲಿಗೆ ಬೆನ್ನು ಕೊಟ್ಟು ಪುಸ್ತಕ ಓದುತ್ತ ತನ್ಮಯಳಾಗಿದ್ದಳು. exಛಿuse me ಅಂದೆ. ಅವಳು ಕ್ಷಮಿಸದೆ, ಶಾಪ ಕೊಡುವವಳಂತೆ ತಲೆ ಎತ್ತಿ ನೋಡಿ, ಹುಬ್ಬು ಗಂಟಿಕ್ಕಿ, ಟಪ್ಪನೆ ಪುಸ್ತಕ ಮುಚ್ಚಿ ‘ಏನು’ ಎಂಬಂತೆ ನೋಡಿದಳು. “ನೀವು ಓದುತ್ತಿರುವುದು ಏನು?” ಅಂದೆ. ಎಂಥ ಮೂರ್ಖ ಪ್ರಶ್ನೆ! “ಪ್ರಾರ್ಥನೆಗಳ ಪುಸ್ತಕ.” so ತಿhಚಿಣ ಎಂಬಂತೆ ಅವಳ ಮುಖ ಭಾವ. ಅದನ್ನು ದೂರ ಮಾಡಲೆಂಬಂತೆ ತಡವರಿಸುತ್ತ ನನ್ನ ಬಗ್ಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಮೇಷ್ಟರು ಇತ್ಯಾದಿ. ನಾನು ಭಿಕ್ಷುಕನೋ ಮೋಸಗಾರನೋ ಅಲ್ಲ ಎಂದು ಖಚಿತವಾಯಿತೇನೋ ಎಂಬಂತೆ ತಾನೂ ಇಂಗ್ಲಿಷ್ ಲಿಟರೇಚರ್ ಕಲಿಸುವವಳು ಇತ್ಯಾದಿ ಹೇಳಿದಳು. ಹೀಗೆ ಮಾತಾಡುತ್ತ ನನ್ನ ಬಗ್ಗೆ ಅಂಥ ಕುತೂಹಲ ಏನೂ ಇಲ್ಲದೆ ಕೇಳುತ್ತ “ನಿನಗೆ ಒಬ್ಬ ಗುರು ಅಗತ್ಯ” ಅಂದಳು. +“ಇರಬಹುದು. ಆದರೆ ಗುರು ಯಾರು, ಎಲ್ಲಿ ಅಂತ ಹುಡುಕುವುದು.” +“ಹುಡುಕುತ್ತ ಹೋಗಬೇಕು. ಒಮ್ಮೆಯಲ್ಲ ಒಮ್ಮೆ ಸಿಗುತ್ತಾನೆ.” +“ನಿಮಗೆ ಸಿಕ್ಕಿದ್ದಾನಾ?” +“ಹೌದು” +“ಯಾರು” +“ಗಣೇಶಪುರಿ” +“ಎಲ್ಲಿದ್ದಾರೆ?” +“ಇಂಥ ಕಡೆ ಅಂತ ಇಲ್ಲ. ಇಂಡಿಯಾದಲ್ಲಿ ಎಲ್ಲ ಕಡೆ ಓಡಾಡುತ್ತಿರುತ್ತಾರೆ. ಹರಿದ್ವಾರದಲ್ಲಿ ಅವರ ಒಂದು ಮಠ ಇದೆ. ವಿಚಾರಿಸಿದರೆ ತಿಳಿಯಬಹುದು. ಆತ ತುಂಬ ಅದ್ಭುತ ಮನುಷ್ಯ. ಮನಸ್ಸನ್ನ ತುಂಬ ಚೆನ್ನಾಗಿ ತಿಳೀತಾರೆ. ನಮಗೆ ಏನು ಬೇಕು ಅಂತ ಅವರಿಗೆ ಗೊತ್ತಾಗತ್ತೆ. ನನ್ನ ಮನಸ್ಸಿಗೆ ಅವರಿಂದ ತುಂಬ ಸಮಾಧಾನ ಸಿಕ್ಕಿತು” +ಆಮೇಲೆ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದಳು. “ಅವರು ನಿನ್ನ ಗುರು ಆಗಬಹುದೋ, ಗೊತ್ತಿಲ್ಲ. ನಮಗೆ ತಕ್ಕ ಗುರುವನ್ನು ನಾವೇ ಹುಡುಕಿಕೊಳ್ಳಬೇಕು. ಸಿಕ್ಕರೆ ನೋಡು. ನಿನ್ನ ಪುಣ್ಯ” +ಬನಾರಸಿನಿಂದ ಹರಿದ್ವಾರಕ್ಕೆ ಒಂದು ಇಡೀ ದಿನ ಪ್ರಯಾಣ. ನಾನಿದ್ದ ರೈಲು ಬೋಗಿಯ ಬಾಗಿಲಿಗೆ ಒಂದೆರಡು ಗುಂ ಶುದಾ ನೋಟೀಸುಗಳನ್ನು ಹಚ್ಚಿದ್ದರು. ಕಳೆದು ಹೋದ ಇಂಥವರನ್ನು ಹುಡುಕಿಕೊಟ್ಟರೆ ಸಾವಿರ, ಐದು ಸಾವಿರ ಬಹುಮಾನ ಇತ್ಯಾದಿ. ಎಷ್ಟೊಂದು ಜನ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ನಿಜವಾಗಿ ಹುಡುಕಲು ಸಾಧ್ಯವೆ, ಸಿಗಲು ಸಾಧ್ಯವೆ? ಈಗ ನನ್ನ ಹುಡುಕಲು ಚಂದ್ರಾ ಏನು ಮಾಡುತ್ತಿರಬಹುದು? ಅಮ್ಮ? ನಾನು ಇಂಥಲ್ಲಿ ಇದ್ದೇನೆ, ಇಂಥಲ್ಲಿ ಹೋಗುತ್ತಿದ್ದೇನೆ ಅಂತ ನನಗೇ ಗೊತ್ತಿಲ್ಲದಿರುವಾಗ. ಇನ್ನು ಯಾರು ತಾನೇ ನನ್ನ ಹುಡುಕಲು ಸಾಧ್ಯ? +ಹರಿದ್ವಾರದ ಗುರಿ ಹಿಡಿದು ಹೋಗುತ್ತಿದ್ದ ರೈಲಿಗೆ ಸಿಕ್ಕಿ ಅವತ್ತು ಮಧ್ಯಾಹ್ನ ಯಾರೋ ಹುಡುಗ ಸತ್ತು ಹೋದ. ರೈಲು ಬಹಳ ಹೊತ್ತು ನಿಂತಿತು. ಆದರೂ ಇಳಿದು ಹೋಗಿ ನೋಡಬೇಕು ಅನ್ನಿಸಲಿಲ್ಲ. ನನ್ನ ಬೋಗಿಯ ಪಕ್ಕದಲ್ಲೇ ಕೆಲವು ಹೆಂಗಸರು ಅಳುತ್ತ ಓಡಿ ಬಂದರು. ಅವರು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು. ಅಳುತ್ತಿದ್ದರು. ರೈಲು ದಾರಿಯ ಪಕ್ಕದಲ್ಲೆ ಇದ್ದ ರಸ್ತೆಯ ಮೇಲೆ ಲಾರಿ ಬಸ್ಸುಗಳು ನಿಂತಿದ್ದವು. ಮಧ್ಯಾಹ್ನದ ಬಿಸಿಲಿನಲ್ಲಿ, ದೂರದಲ್ಲಿ ಇಂಜಿನ್ನಿನ ಕೆಳಗೆ ಹುಡುಗ ಸತ್ತುಬಿದ್ದಿದ್ದ. ಯಾರೋ? ನನ್ನ ಬೋಗಿಯ ಒಳಗೆ ನಾನು ಒಬ್ಬನೇ. +ಹಾಗೆ ಬಹಳ ಹೊತ್ತು ಒಬ್ಬನೇ ಇರಲಿಲ್ಲ. ಸಂಜೆ ಹೊತ್ತಿಗೆ ಒಂದು ಸ್ಟೇಶನ್ನಿನಲ್ಲಿ ಕೆಲಸಗಾರರ ಒಂದು ಗುಂಪು ನನ್ನ ಬೋಗಿಗೆ ಹತ್ತಿತು. ಹರಿದ್ವಾರಕ್ಕೆ ಹೊರಟಿದ್ದ ಇನ್ನೊಬ್ಬ ಸ್ಮಾರ್ಟ್ ಯುವಕ ಹತ್ತಿದವನೇ ಹಾಸಿಗೆ ದಿಂಬು ಎಲ್ಲ ಆಣಿಮಾಡಿಕೊಂಡು ಅಚ್ಚುಕಟ್ಟಾಗಿ ಹೊದ್ದು ಮಲಗಿಬಿಟ್ಟ. ನಾನು ಓದಿ ಸುಮ್ಮನೆ ಎಸೆದಿದ್ದ ಇಂಗ್ಲಿಷ್ ಪೇಪರನ್ನು ಒಬ್ಬ ಕೆಲಸಗಾರ ಎತ್ತಿಕೊಂಡ. ಇದು ಯಾರದು ಅಂದ. ಸುಮ್ಮನೆ ಇದ್ದೆ. ಓದಿ ಮುಗಿಸಿದ ಹಳೇ ಪೇಪರು. ಏಲಾ-ವಾರಿಸ್ ಹೈ ಕ್ಯಾ ಅಂದ. ಯಾರೂ ಮಾತಾಡಲಿಲ್ಲ. ಹಾಗಾದರೆ ನನಗಿರಲಿ ಅಂತ ಚೀಲದೊಳಕ್ಕೆ ಇಟ್ಟುಕೊಂಡ. ಅವನ ಗೆಳೆಯರು ರೇಗಿಸಿದರು. “ಇಂಗ್ಲೀಷು ಪೇಪರು ತಗೊಂಡು ಏನು ಮಾಡುತ್ತೀ?” “ಇದು ಹೇಗೂ ಲಾವಾರಿಸ್. ಯಾತಕ್ಕಾದರೂ ಬರುತ್ತೆ.” ಬಿಟ್ಟಿ ಸಿಕ್ಕಿದರೆ ಖುಷಿ. ಯಾರದರೂ ಕೇಳಿಯಾರೆಂಬ ಅಳುಕು. ಗೆಳೆಯರೆಲ್ಲರನ್ನೂ ಬಿಟ್ಟು ತಾನೇ ಹೀಗೆ ತಗೊಂಡದ್ದು ಸರಿಯೇ ಎಂಬ ಅನುಮಾನ ಎಲ್ಲ ಸೇರಿ ಸ್ವಲ್ಪ ಪೆಕರನ ಹಾಗೆ ನಕ್ಕ. ಪೇಪರು ಇಟ್ಟುಕೊಂಡ ಚೀಲವನ್ನು ತಟ್ಟಿ ನೇವರಿಸಿದ. ನನ್ನ ಕಡೆಗೆ ನೋಡಿದ. ಬಹುಶಃ ಈ ಪೇಪರು ಇವನದ್ದು ಇರಬಹುದು. ಕೇಳಿಯಾನೋ ಎನೊ ಎಂಬ ಗುಮಾನಿಯಿಂದೆಂಬಂತೆ. ಕುರುಚುಲು ಗಡ್ಡ. ಗುಳಿ ಬಿದ್ದ ಕಣ್ಣು. ಬಹುಶಃ ರೋಗದ ಮೈ. ತೆಳ್ಳಗಿದ್ದ. ಆತ ಯಾಕೋ ಬಹಳ ನೆನಪಿನಲ್ಲಿ ಉಳಿದಿದ್ದಾನೆ – ಬ್ರಿಂಗ್ಟಾ ಟಾಪಿನಲ್ಲಿ ಕಾಲು ಚಾಚಿ ಟೀ ಕಾಯಿಸುತ್ತಿದ್ದವನ ಹಾಗೆ. +ಹರಿದ್ವಾರದ ರೈಲ್ವೆ ಡಾರ್ಮಿಟರಿಯಲ್ಲಿ ಜಾಗ ಕೇಳಿದ್ದಕ್ಕೆ ಎಲ್ಲರಿಗೂ ಆಶ್ಚರ್ಯ ಆಯಿತು. ಹೆಜ್ಜೆಗೆ ಹತ್ತು ಛತ್ರ ಇರುವ ಊರು ಅದು. ಆಗ ನನಗೆ ಗೊತ್ತಿರಲಿಲ್ಲ. ಅಚ್ಚುಕಟ್ಟಾದ ಕೋಣೆಗಳಿರುವ ಡಾರ್ಮಿಟರಿಯನ್ನು ನೋಡಿಕೊಳ್ಳುವ ಹೆಂಗಸು ನನ್ನನ್ನು ಒಬ್ಬ ಪೀಡೆ ಎಂಬಂತೆ ಕಂಡಳು. ಎಷ್ಟು ದಿನ ಇರುತ್ತೀ ಅಂತ ಕೇಳಿದಳು. +ಇದು ನಾನು ಹಿಂದೆ ಎಲ್ಲರೊಡನೆ ಬಂದ ಹರಿದ್ವಾರ ಅಲ್ಲ. ಅಥವ ಹರಿದ್ವಾರವೋ? ಸರ್ಕಲ್ಲಿನಲ್ಲಿ ಒಂದು ಬಿಳೀ ಕಲ್ಲಿನ ಶಿವನ ಬೊಂಬೆ. ಆಗ ಒಮ್ಮೆ ನಾನು ಮತ್ತು ಚಂದ್ರ ಅದನ್ನು ನೋಡಿ ಮೆಚ್ಚಿದ್ದು ಜ್ಞಾಪಕ ಬಂತು. ಹತ್ತಿರದಲ್ಲೆ ಓಣಿಯಲ್ಲಿ. ಹಿಂದೆ ಒಮ್ಮೆ ರಾಜು ಹುಡುಕಿಕೊಂಡು ಬಂದು ನಮ್ಮನ್ನೆಲ್ಲ ಕರಕೊಂಡು ಹೋಗಿದ್ದ ಮದರಾಸು ರೆಸ್ಟಾರೆಂಟ್. ಮಾಲಿಕ ಬಹುಶಃ ಅವನೇ ಇದ್ದ. ನಾಲ್ಕೈದು ವರ್ಷದ ಹಿಂದೆ ನಮಗೆ ಊಟ ಬಡಿಸಿದ್ದ. ಸಿನಿಮಾ ಹುಚ್ಚಿನ, ಬಹುಶಃ ಗಣೇಶ ಎಂಬ ಹೆಸರಿನ ಮಾಣಿ ಕಾಣಲಿಲ್ಲ. ಹೋಟೆಲಿನಲ್ಲಿ ಜನವೇ ಇರಲಿಲ್ಲ. ಆಗ ಟ್ರಕಿಂಗ್ ಮುಗಿಸಿ ಸುಸ್ತಾಗಿ ಬಂದ ನಮಗೆ ಅಷ್ಟು ಸುಂದರ ಅನ್ನಿಸಿದ್ದ ಮದರಾಸೀ ಊಟದ ರುಚಿ ಈಗ ಕಾಣಲಿಲ್ಲ. +ಹಿಂದೆ, ಆಗ, ಎಲ್ಲರೊಡನೆ ಬಂದಾಗ ಹೂಗಳ ಕಣಿವೆಗೆ ಹೋಗುವ ದಾರಿಯಲ್ಲಿ ಒಂದು ದಿನ ತಂಗುವ ಊರು ಮಾತ್ರವಾಗಿ ಕಂಡಿದ್ದ ಊರನ್ನು ಈಗ ಇಲ್ಲೆ ಇರಲು ಬಂದ ಒಬ್ಬಂಟಿಯಂತೆ ಹೊಸದಾಗಿ ನೋಡುತ್ತ, ನೆನಪುಗಳನ್ನು ಮಾಡಿಕೊಳ್ಳುತ್ತ ಹೋದೆ. +ಎಲ್ಲ ಬೋರ್ಡುಗಳನ್ನು ಗಮನಕೊಟ್ಟು ನೋಡುತ್ತ ಹೋದೆ. ಹಿಂದೆ ಒಮ್ಮೆ ಚಂದ್ರಾ ಆಸೆಪಟ್ಟು ಕೇಜಿಗಟ್ಟಲೆ ಸ್ವೆಟರು ಕೊಂಡ ಅಂಗಡಿ ಸಿಕ್ಕಿತು. ಸೌಂಯಮರಿಗೆ ಕೊಡುವುದಕ್ಕೆ ಬೇಕು ಅಂತ ನಾನೇ ಚಂದ್ರಳಿಗೆ ಹೇಳಿ ಸ್ವೆಟರು ಒಂದು ಕೊಂಡಿದ್ದೆ. ಈಗ ಅವಳು ಅವಳ ಅಮ್ಮ ಏನು ಮಾಡುತ್ತಿರಬಹುದೋ. ಚಂದ್ರಾ ಹಿತ್ತಾಳೆ ಕಂಚು ದೀಪಗಳನ್ನುಕೊಂಡಿದ್ದ ಅಂಗಡಿ ಸಿಕ್ಕಿತು. ನಾನು ವಾಲ್ಮೀಕಿ ರಾಮಾಯಣ ಕೊಂಡ ಅಂಗಡಿಯೂ ಇದೆ. ಆದರೆ ಈ ಅಂಗಡಿಗಳಿಗೆ ನಾನು ಖಂಡಿತ ನೆನಪಿಲ್ಲ. ಊರಿನ ನೆನಪು ನನಗೇ ಹೊರತು, ನನ್ನ ನೆನಪು ಊರಿಗೆ ಯಾಕಿರಬೇಕು? ನಾನೇನು ಅಲ್ಲಿ ಊರಿಕೊಂಡವನಲ್ಲ. +ಎಲ್ಲಿದೆ ಗಣೇಶಪುರಿಯ ಆಶ್ರಮ. ಯಾರನ್ನು ಕೇಳುವುದು ಇಲ್ಲಿ. ಎಡಗಡೆಗೆ ಹೋದರೆ ನದಿ. ವಿಶಾಲ. ವಿಶಾಲ, ಎಕರೆಗಟ್ಟಲೆ ವಿಶಾಲವಾಗಿ ಹರಿಯುವ ಗಂಗೆಗೆ ಒಡ್ಡು ಕಟ್ಟಿ ವೇಗ ತಡೆದು ಎರಡು ಮೂರು ಸೀಳು ಮಾಡಿ ನಿಯಂತ್ರಿಸುವ ಹರ ಕೀ ಪಾವಡಿ. ಇಲ್ಲಿ ಈಗಲೂ ಅಂದಿನಂತೆಯೇ ಸಹಸ್ರ ಸಹಸ್ರ ಜನ. ಎಲ್ಲ ಥರದ ಬಟ್ಟೆ, ಎಲ್ಲ ಥರದ ಮಾತು, ಎಲ್ಲ ಥರದ ಮುಖ, ಇಡೀ ಇಂಡಿಯ ಈ ನದಿಯ ದಡದಲ್ಲಿ ಸೇರಿದ ಹಾಗೆ ಇರುತ್ತದೆ. ಇಲ್ಲ, ಇಲ್ಲಿ ಸಿಖ್ಖರ ಲಂಗರ್ ಇದೆ. ಮಾನಸಾ ದೇವಿಗೆ ಹೋಗುವ ರಸ್ತೆ ಇದೆ. ಹೋಟೆಲುಗಳು ಇವೆ. ನನಗೆ ಬೇಕಾದ ಆಶ್ರಮ ಇಲ್ಲ. ಹಿಂದಿರುಗಿ ಮತ್ತೆ ಸ್ಟೇಶನ್ನಿನವರೆಗೆ ಬಂದು ಬಲದ ರಸ್ತೆ ಹಿಡಿದೆ. ಆಫೀಸುಗಳ ದಾರಿ. ಗಂಗೆಯ ಕಾಲುವೆಗೆ ಒಂದು ಕಬ್ಬಿಣದ ಸೇತುವೆ. ಅದರ ಮೇಲಿಂದ ಧುಮುಕಿ ಈಜುವ ಹುಡುಗರು. ಸೇತುವೆ ಮೇಲೆ ನಿಂತರೆ ಆಗಾಧ ವೇಗದ ಗಂಗಾ ನೀರು. ಸೇತುವೆಯ ಆಚೆ ನಿಶ್ಚಲವಾಗಿ ನಿಂತ ಮನೆಗಳ ಗುಂಪು. ಸೇತುವೆಯನ್ನು ದಾಟಿ ಬಲಕ್ಕೆ ತಿರುಗಿ ಮತ್ತೆ ಎಡಕ್ಕೆ ತಿರುಗುವಂತೆ ಇರುವ ವಕ್ರವಾದ ಟಾರು ರಸ್ತೆ. ಅದರ ಬದಿಗೆ ಚಾ ದುಕಾನು. ಕಾದು ನಿಂತ ಸೈಕಲ್ ರಿಕ್ಷಾಗಳು. ಆಫೀಸಿನ ಕಾಂಪೌಂಡುಗಳು. ಇನ್ನೂ ಮುಂದೆ. ಅಲ್ಲಿ ಹೋಗಿ ನೋಡೋಣ. +ಊರು ಮುಗಿಯುವಂತಿರುವ ಲಕ್ಷಣ. ಅಲ್ಲಿ ಒಂದು ಗೋಡೆಯ ಮೇಲೆ ಈಶ್ವರನ ಚಿತ್ರ ಇರುವ ಬೋರ್ಡು. ಪಕ್ಕದಲ್ಲಿ ಛಿoಟಟಚಿಠಿsibಟe ಗೇಟು. ಅದು ಮುಚ್ಚಿದ ದೇವಸ್ಥಾನ. ಸಾಧನಾ ಮಂದಿರ ಅಂತ ಬರೆದು ಪಕ್ಕದ ಗಲ್ಲಿಗೆ ಬಾಣ ತೋರಿಸಿದ್ದರು. ಕೆಳಗೆ ಶ್ರೀ ಗಣೇಶಾನಂದ ಪುರಿ ಮಹಾರಾಜ್ ಅಂತ ಬರೆದಿತ್ತು. ಮೊನ್ನೆ ಬನಾರಸಿನಲ್ಲಿ ಇಂಗ್ಲೆಂಡಿನ ಹೆಣ್ಣುಮಗಳು ಹೇಳಿದ ಗಣೇಶ ಪುರಿ ಇವರೇ ಇರಬಹುದು. ಬಾಣದ ಗುರಿ ಹಿಡಿದು ತಿರುಗಿದೆ. ಗಲ್ಲಿಗೆ ಮಣ್ಣು ರಸ್ತೆ. ಬಲತುದಿಯಲ್ಲಿ ನಾಲ್ಕಂತಸ್ತಿನ ಕಟ್ಟಡ. ಏನೋ ರಿಪೇರಿ ಮಾಡುತ್ತಿದ್ದರು. ಎಡಗಡೆ ಇನ್ನೊಂದು. +ಒಳಗೆ ಹೋದೆ. ಗಾಳಿಗೆ ತೆರೆದುಕೊಂಡ ವಿಶಾಲವಾದ ಹಜಾರ. ಅದರ ಸುತ್ತಲೂ ಜಗಲಿ. +ಜಗಲಿಯಲ್ಲಿ ಕೋಣೆಗಳು. ಎಲ್ಲ ಮುಚ್ಚಿದ ಬಾಗಿಲುಗಳು. ಗೋಡೆ ತುಂಬ ಬೋರ್ಡುಗಳು, ಫೋಟೋಗಳು. ಉಜ್ಜಿ ಉಜ್ಜಿ ತೊಳೆದ ಹೊಳೆಯುವ ನೆಲ. ವಿಶಾಲವಾದ ಜಮಖಾನ. ಗಾಢ ಬಣ್ಣದ ಅಂಚಿರುವ ಗೋಡೆಗಳು. ಪ್ಯಾಂಟು ಜರ್ಕಿನು ತೊಟ್ಟ ನಾನು ಅಲ್ಲಿನ ನಿಶ್ಯಬ್ದಕ್ಕೆ ಅಸಂಗತ ಅಂತ ನನಗೆ ಅನ್ನಿಸತೊಡಗಿತು. ಹಜಾರದ ಪಕ್ಕದಲ್ಲೆ ಒಂದು ಮಂದಿರ. ರಾಮ ಸೀತೆ ಲಕ್ಷ್ಮಣರ ವಿಗ್ರಹಗಳು. ಇನ್ನೊಂದು ಮಂದಿರದಲ್ಲಿ ಕೊಳಲು ಊದುತ್ತಿರುವಕೃಷ್ಣ. ಆಮೇಲೆ ಇನ್ನೊಂದು ಕೋಣೆಯಲ್ಲಿ ತಪಸ್ಸಿಗೆ ಕುಳಿತ ಈಶ್ವರ. ಮುಂದೆ ಹೋಗಲೋ ಬೇಡವೋ ಯಾರಾದರೂ ಇದ್ದಾರೋ ಇಲ್ಲವೋ ಅಂತ ನಾನು ಅಳುಕುತ್ತ ಅನುಮಾನ ಪಡುತ್ತ ಇದ್ದಾಗ ಒಬ್ಬ ಮುದುಕ. +ಮುದುಕನ ಮುಖದ ತುಂಬ ಬಿಳೀ ಗಡ್ಡ. ಅಲ್ಲಲ್ಲಿ ಸ್ವಲ್ಪ ಕಡಮೆ ಬಿಳಿ ಬಣ್ಣದ ಕೂದಲುಗಳು. ತುಂಬ ಎತ್ತರ ಏನಿರಲಿಲ್ಲ. ನನಗಿಂತಲೂ ಕುಳ್ಳು. ಸ್ಥೂಲ ಅನ್ನುವಂಥ ಮೈ. ಸೊಂಟಕ್ಕೆ ಸುತ್ತಿಕೊಂಡ, ಮೊಳಕಾಲು ಮುಟ್ಟುತ್ತಿದ್ದ ಕಾವಿ ಪಂಚೆ. ಹೊದ್ದದ್ದು ಇನ್ನೊಂದು ಕಾವಿ ಟವಲು. ತಲೆ ತುಂಬ ಉದ್ದ ಬಿಳೀ ಕೂದಲು. ದಪ್ಪ ದಪ್ಪ ಮೀನ ಖಂಡಗಳು. ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ ಕೇಳಬೇಕು. ಹೇಗೆ? +ಹೀಗೆ ಇದ್ದದ್ದನೆಲ್ಲ ಇದ್ದ ಹಾಗೆ ಬಿಟ್ಟು ಬರಲಿ ‘ಇದ್ದ’ ಕಾರಣ ಇನ್ನೊಬ್ಬರಿಗೆ ಹೇಳಿದರೆ ಕ್ಷುಲ್ಲಕವಾಗಿ ಕಾಣುತ್ತದೆ. ಬಂದದ್ದು ನಿಜ. ಯಾಕೆ ಅಂತ ವಿವರಿಸತೊಡಗಿದರೆ ನನಗೇ ಸುಳ್ಳಾಗಿ ಕಾಣತೊಡಗುತ್ತದೆ. ಈ ಮುದುಕ ಒಪ್ಪುವಂಥ ಮಾತು ಏನು ಹೇಳಲಿ? +ಜಗಲಿಯ ಮೇಲೆ ಕೂತು ನನ್ನನ್ನೂ ಪಕ್ಕದಲ್ಲಿ ಕೂಡಿಸಿಕೊಂಡ. +“ಬೆಂಗಳೂರಿನಿಂದ ಬಂದಿದ್ದೇನೆ.” +ಬಹುಶಃ ಅರ್ಥ ಆಗಲಿಲ್ಲ. +“ನನಗೆ ಹಿಂದಿ ಬರಲ್ಲ.” +ಅದು ಅವನಿಗೆ ತಿಳಿಯಿತು. +“ಬಂದದ್ದು ಯಾಕೆ?” +“ಗಣೇಶಪುರಿಯನ್ನು ನೋಡಲು ಬಂದೆ.” +ತಕ್ಷಣ ಆತ ನನ್ನನ್ನು ತಡೆದು ಗಣೇಶ ಪುರಿ ಅನ್ನಬಾರದು. ಗಣೇಶಾನಂದ ಪುರಿ ಮಾಹಾರಾಜ್ ಅನ್ನಬೇಕು, ತಿಳಿಯಿತೆ.” ಅಂದ. +ತಪ್ಪಾಯಿತು ಅಂತ ಕ್ಷಮೆ ಕೇಳಿದೆ. +“ಯಾರು ಅವರನ್ನು ನಿಮಗೆ ತಿಳಿಸಿದ್ದು? ಯಾಕೆ ಬಂದಿರಿ?” +ಯಾರು ಅನ್ನುವುದಕ್ಕೆ ಉತ್ತರ ಸುಲಭ. +“ಉಬ್ಬ ಅಂಗ್ರೇಜಿ ಮಹಿಳೆ. ಬನಾರಸ್ಸಿನಲ್ಲಿ ಹೇಳಿದರು.” +ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಹೇಳಲಿ ಕಷ್ಟ ಆಯಿತು. +“ಮನಸ್ಸಿಗೆ ನೆಮ್ಮದಿ ಇಲ್ಲ. ಮನೆ ಬಿಟ್ಟಿದ್ದೇನೆ. ಇಲ್ಲಿ ಗುರುವನ್ನು ನೋಡಬಹುದೆ? ಇಲ್ಲಿ ನಾನು ಇರಬಹುದೆ?” +“ಇರುವುದಕ್ಕೆ ಮಾಹಾರಾಜ್ ಹೇಳಬೇಕು. ಅವರು ಸಂಚಾರ ಹೋಗಿದ್ದಾರೆ. ಇನ್ನೂ ಹದಿನೈದು ದಿನ ಆಗುತ್ತೆ ಬರೋದು. ಅಲ್ಲಿಯವರೆಗೆ ಬೇಕಾದರೆ ಇಲ್ಲಿ ಇರಿ. ಮುಂದೆ ಅವರು ಹೇಳಿದ ಹಾಗೆ ಮಾಡಿ.” +ಆ ಮುದುಕ “ನಿಮ್ಮ ಸಾಮಗ್ರಿಗಳು ಎಲ್ಲಿವೆ” ಅಂತ ಕೇಳಿದ. +“ಸ್ಟೇಶನ್ನಿನಲ್ಲಿ” ಅಂದೆ. +“ಅಲ್ಲಿ ಯಾಕೆ ಇಲ್ಲೆ ತಂದುಬಿಡಿ.” +ಬಹಳ ನಿಧಾನವಾಗಿ ಮಾತನಾಡುತ್ತಿದ್ದ. ಆತನ ನಿಧಾನ ನನಗೆ ಇಷ್ಟ ಆಯಿತು. ಸ್ಟೇಶನ್ನಿನಿಂದ ಚೀಲ ತರುತ್ತೇನೆ ಅಂತ ಹೇಳಿ ಹೊರ ಬಂದೆ. +ಸ್ಟೇಶನ್ನಿನ ಕೆಲಸದಾಕೆಗೆ ತುಂಬ ಸಂತೋಷ ಆಯಿತು. ನನಗೂ. ಇನ್ನು ಹದಿನೈದು ದಿನ ಇರಲು ಒಂದು ಜಾಗ ಸಿಕ್ಕಿತು. ದಿನ ದೂಡಲು ಒಂದು ನೆಪ ಸಿಕ್ಕಿತು. ನಡೆದು ಹೋಗಿ ನಡೆದು ಬಂದೆ. ಹರಿದ್ವಾರ ನನ್ನ ಊರು ಅನ್ನಿಸತೊಡಗಿತ್ತು. ವಾಪಸ್ಸು ಬಂದಾಗ ಸಂಜೆ ಆಗುತ್ತಿತ್ತು. ಇನ್ನೊಬ್ಬ, ಎತ್ತರ ನಿಲವಿನ, ಕಠಿಣ ಎಂಬಂತಿದ್ದ ದೃಷ್ಟಿಯ, ಖಚಿತವಾಗಿ ಗೆರೆಕೊರೆದಂತಿದ್ದ ಮುಖದ ಕಾವಿ ಧಾರಿ ಎದುರಾದ. ಆತ ಅಲ್ಲಿ ಮಹಾ ಪ್ರಧಾನ ಎಂದು ತಿಳಿಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜೆಗೆ ಬರಬೇಕು; ಪ್ರವಚನ ತಪ್ಪಿಸಿಕೊಳ್ಳಬಾರದು; ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಅಂತ ಹೇಳಿದ. ಒಬ್ಬ ಹುಡುಗನನ್ನು ಕೂಗಿ “ಯಾರೋ ಭಗತ್ ಬಂದಿದ್ದಾನೆ. ಸಾಧಕನಿವಾಸದಲ್ಲಿ ಜಾಗ ಕೊಡು” ಅಂತ ಶುದ್ಧ ಹಿಂದಿಯಲ್ಲಿ ಹೇಳಿದ. ನಾನೆಂಥ ಭಗತ! ಆಮೇಲೆ ಹೊಳೆಯಿತು. ಅದು ಹಿಂದಿಯಲ್ಲಿ ‘ಭಕ್ತ’ತಾಳುವ ರೂಪ. ಆದರೆ, ಆ ಮಹಾ ಪ್ರಧಾನನಿಗೆ ನನ್ನ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯ ಬಂದಿಲ್ಲ ಅನ್ನಿಸಿತು. +ನಾಲ್ಕು ಅಂತಸ್ತುಗಳು. ಒಂದೊಂದರಲ್ಲೂ ಹತ್ತು ಹದಿನೈದು ಕೋಣೆಗಳು. ಒಬ್ಬ ಹುಡುಗ ನನ್ನನ್ನು ಚಾವಣಿಯ ಮೇಲೆ ಕರೆದುಕೊಂಡು ಹೋದ. ಚಾವಣಿಯ ಮೇಲೆ, ಮೆಟ್ಟಿಲಿನಿಂದ ದೂರ, ಎಡತುದಿಗೆ ಒಂದು ಬಲತುದಿಗೆ ಇನ್ನೊಂದು, ಚಿಕ್ಕ ಎರಡು ಕೋಣೆಗಳು. ಕೋಣೆಯೊಳಗೆ ಒಂದು ಮಂಚ. ಎರಡು ಕಿಟಕಿ. ಕಿಟಕಿಯ ತುಂಬ, ನೆಲದ ತುಂಬ ಧೂಳು. ಒಂದು ಬಾಗಿಲು. ಅದರಾಚೆಗೆ ಒಳಗೆ ಬಚ್ಚಲು ಮನೆ, ನಲ್ಲಿ. +ನನ್ನ ಕೋಣೆಯ ಆಚೆ ಬಂದರೆ ಹಿತ್ತಿಲು ಕಾಣುತ್ತಿತ್ತು. ಅಲ್ಲೆ, ನಾಲ್ಕು ಅಂತಸ್ತು ಕೆಳಗೆ, ಕಾಂಪೌಂಡಿನ ಆಚೆ, ಗಂಗಾ ನದಿ. ನದಿಯ ದಡದಲ್ಲಿ ಉರುಟುರುಟು ಕಲ್ಲುಗಳ ರಾಶಿ ಹರಡಿ ಬಿದ್ದಿತ್ತು. ಸಂಜೆಯ ತಣ್ಣನೆ ಬಿಸಿಲು ಕತ್ತಲ ಬಣ್ಣಕ್ಕೆ ಬದಲಾಗುತ್ತಿತ್ತು. ಗಂಟೆಯ ಶಬ್ದ ಕೇಳಿಸಿತು. ಹಿತ್ತಿಲಲ್ಲಿ ಪುಟ್ಟ ಪುಟ್ಟ ಗುಡಿಗಳು ಕಂಡವು. ಆರೆಂಟು ಹದಿನೈದು ವಯಸಿನೊಳಗಿನ ಹುಡುಗರು ಬಿಳೀ ಪಂಚೆ ಉಟ್ಟು, ಬಿಳೀ ಬಟ್ಟೆ ಹೊದ್ದು ಒಂದು ಗುಡಿಯ ಮುಂದೆ ನಿಂತಿದ್ದರು. ನೋಡಲು ಹೋದೆ. +ಸ್ತೋತ್ರಗಳನ್ನು ಹೇಳುತ್ತಿದ್ದರು. ಮಂಗಳಾರತಿ ಮಾಡಿದರು. ಇನ್ನೊಂದು ಗುಡಿಗೆ ಹೋದರು. ಅಲ್ಲೂ ಅದೇ. ಅಮೇಲೆ ಇನ್ನೊ೦ದು ಗುಡಿಗೆ. ಅಲ್ಲೂ ಅದೆ. ಬಿಳಿ ಉಡುಗೆಯ ಆ ಮಕ್ಕಳ ನಡುವೆ ಪ್ಯಾಂಟು ಜರ್ಕಿನ್ನು ಹಾಕಿಕೊಂಡ ನಾನು ವಿಚಿತ್ರವಾಗಿದ್ದೆ. ಅಲ್ಲೆ ಒಂದು ಮೆಟ್ಟಿಲ ಮೇಲೆ ಬಿಳೀ ಬಿಳೀ ಸೀರೆ ಕುಪ್ಪಸ ತೊಟ್ಟ ಮಧ್ಯವಯಸ್ಸಿನ ಹೆಂಗಸು ಕುಳಿತಿದ್ದಳು. ಸುಮ್ಮನೆ ನಮ್ಮನ್ನೆಲ್ಲ ನೋಡುತ್ತಿದಳು. ನಾನು ಮೊದಲು ನೋಡಿದ್ದ ಅಂಗಳದಲ್ಲಿ ಗಂಟೆ ಸದ್ದು ಕೇಳಿಸಿತು. ಎಲ್ಲರೂ ಅಲ್ಲಿಗೆ ಹೋದರು. ನಾನೂ. ಅಲ್ಲಿ ಆರೆಂಟು ಜನ ಸನ್ಯಾಸಿಗಳಿದ್ದರು. +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […] +ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […] +ಹಿಂದೆಲ್ಲ ಪರದೇಶ ಸುತ್ತುವಾಗ ಬರೆದಿಡುವ ಪ್ರಯತ್ನ ಮಾಡಿರಲಿಲ್ಲ. ಶಿಸ್ತುರಹಿತವಾದ ಬದುಕು ಅಥವಾ ಬರೆಯಲಾಗದ ಸೋಮಾರಿತನ ಇದಕ್ಕೆ ಕಾರಣವಾಗಿರಬಹುದು. ಆದರೆ ಬಾಳಿನ ಮುಸಂಜೆಯಲ್ಲಿ ಬರೆದಿಟ್ಟ ಈ ಅನುಭವಗಳು ಅನ್ಯರಿಗೆ ಉಪಯೋಗವಾಗದಿದ್ದರೂ, ನನ್ನನ್ನು ನೆನಪಿನ ಆಳಕ್ಕೆ ಕೊಂಡೊಯ್ಯಬಹುದೆನ್ನುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_491.txt b/Kannada Sahitya/article_491.txt new file mode 100644 index 0000000000000000000000000000000000000000..1568774437a02ee0672c4b394bfe032094df1d90 --- /dev/null +++ b/Kannada Sahitya/article_491.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನ ಬಸಿರೊಳೊಗೆದು ಬಂದು +ಎದೆಯ ಹಾಲ ಕುಡಿದು ನಿ೦ದು +ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; +ನಿನ್ನ ಕರುಣ ರಸದೊಳಾಳ್ದು +ತೊದಲು ನುಡಿಯ ಜಾಲ ನೆಯ್ದು +ಹಸುಳೆತನದ ಹಾಲುಗಡಲ ಸವಿಯ ನೋಡಿದೆ. +೨ +ನಿನ್ನ ಮುತ್ತು ಸವಿಯ ತುತ್ತು +ದೂರಗೊಳಿಸಿತೆಲ್ಲ ಕುತ್ತು +ಎನ್ನನೊಂದು ರೂಪುಮಾಡಿ ಭೂಮಿಗಿಳಿಸಿತು; +ನೀನು ಪೇಳ್ದ ಕತೆಯ ತಂತ್ರ +ಸವಿಯ ಹಾಡಲೊರೆದ ಮಂತ್ರ +ಬಾಳ ಹಣತೆಯಲ್ಲಿ ತಾಯೆ; ಬೆಳಕ ಚಿಮ್ಮಿತು. +೩ +ನಿನ್ನ ಲಲಿತ ನುಡಿಯ ತತ್ತ್ವ +ನಡೆಯಲಿದ್ದ ಧೀರ ಸತ್ತ್ವ +ಎನ್ನ ಪ್ರಾಣಪಾತ್ರೆಯಲ್ಲಿ ಬೆರೆತು ಬಂದಿತು; +ಮಮತೆಯಲ್ಲಿ ಮೂರ್ತಿಗೊಂಡ +ಸಮತೆಯಲ್ಲಿ ಸ್ಫೂರ್ತಿಗೊಂಡ +ದಿವ್ಯತೇಜದಲ್ಲಿ ತಾಯೆ, ಕಾವ್ಯ ಮೊಳೆಯಿತು. +೪ +ಅಂದು ತೊದಲು ನುಡಿದ ಕಂದ +ಇಂದು ಹಾಡ ಪಡೆದು ಬಂದ- +ನಂತ ಕರುಣೆ ಅನ್ನಪೂರ್ಣೆ ಕೇಳಲಾಪೆಯಾ? +ಪ್ರೇಮಜೀವಿ ಪಟ್ಟ ಪಾಡು +ಕರುಳ ಬಗೆದು ಬಂದ ಹಾಡು +ತಾಯೆ! ನಿನ್ನ ಮಡಿಲೊಳಿಡಲು ಇಂಬುಗೊಡುವೆಯಾ? +***** +ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […] +೧ ನೀಲ ನೀಲ ನಿರ್ವಿಕಾರ ನಿರುತ ಬಾನಲಿ ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. ಒಳಿತು ಕೆಡಕು ಮನದ ಮಿಡುಕು ಮೇರೆ ಮೀರಿ […] +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_492.txt b/Kannada Sahitya/article_492.txt new file mode 100644 index 0000000000000000000000000000000000000000..6708ec399136b749ed2f0642b63185a34a491d16 --- /dev/null +++ b/Kannada Sahitya/article_492.txt @@ -0,0 +1,153 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಗ ಎರಡು: ಭದ್ರಾಯು +೧ +ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. +ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ ಜಾತಿಯ, ತಂದೆ ತಾಯಿಯರನ್ನು ಕಳಕೊಂಡ. ಅನಾಥ ಬಾಲಿಕೆ ಯಾದವಿಯನ್ನು ಮದುವೆಯಾದನು. ಹಿರಿಯ ರಾಣಿಯ ಗರ್ವಿಷ್ಟ ಕೋಪಾವಿಷ್ಠ ಅಸೂಯಪರ ಸ್ವಭಾವವನ್ನು ಚೆನ್ನಾಗಿ ಅರಿತ ರಾಜನು ಊರ ಹೊರಗೆ ಇದ್ದ ಅರಮನೆಯಲ್ಲಿ ಯಾದವಿಯನ್ನು ಸ್ವತಂತ್ರವಾಗಿ ಇರಿಸುವ ವ್ಯವಸ್ಥೆ ಮಾಡಿದನು. ಮೊದಲೇ ಹಿರಿಯ ರಾಣಿ ಕ್ರೂರಿ; ಸಾಲದ್ದಕ್ಕೆ ಆಕೆಯ ಅಣ್ಣ ತಮ್ಮಂದಿರು ಆಕೆಯ ಕಿವಿಯೂದತೊಡಗಿದರು. ಆಕೆಯ ಪರವಾಗಿ ಕಿರಿಯ ರಾಣಿ ಯಾದವಿಯ ಮೇಲೆ ಕಣ್ಣು ಇಟ್ಟಿದ್ದರು. ಆಕೆ ಗರ್ಭವತಿಯಾದ ಮೇಲೆ ಹಿರಿಯವಳಿಗೆ ಹೊಟ್ಟೆಯುರಿ ಹೆಚ್ಚಾಯಿತು. ಆದರೂ ಅನಸೂಯೆಯ ಸೋಗು ಹಾಕಿ, ಶ್ರೀಮಂತ ಮಾಡಿ ಕುಪ್ಪುಸ ತೊಡಿಸುವ ನೆಪದಿಂದ ಕಿರಿಯ ರಾಣಿಗೆ ವಿಷಮಿಶ್ರಿತ ಆಹಾರವನ್ನು ಕೊಟ್ಟು ಬಿಟ್ಟಳು, ಗರ್ಭಪಾತವಾಗುವ ಉದ್ದೇಶದಿಂದ. +ಆರು ತಿಂಗಳಾಗುವಷ್ಟೊತ್ತಿಗೆ ಕಿರಿಯ ರಾಣಿಗೆ ಸ್ರಾವ ಶುರುವಾಯಿತು. +ರಾಜ ವೈದ್ಯರು ಶಿಷ್ಯನೊಂದಿಗೆ ಬಂದು ಔಷಧ ಕೊಟ್ಟು ಹೊರಟು ಹೋದರು. “ಏನೂ ಅಪಾಯವಿಲ್ಲ” ಎಂದು. ಹೋಗುವಾಗ ಶಿಷ್ಯನಿಗೆ ಅಲ್ಲೇ ಇರುವಂತೆ ಸನ್ನೆ ಮಾಡಿದರು. ಅರಮನೆಯ ಎದುರಿಗೆ ಒಬ್ಬ ಶ್ಯಾಲಕ ಮಹಾಶಯ ನಿಂತಿದ್ದನು. “ಏನು ವೈದ್ಯ ಗುರುಗಳೇ, ಇತ್ತ ಬಂದಿದ್ದಿರಿ? ಅರಸರು ಸೌಖ್ಯ ತಾನೆ?” ಎಂದು ಕೇಳಿದ ವ್ಯಂಗ್ಯವಾಗಿ. +“ಅರಸರು ಮೃಗಯೆಗೆ ಹೋಗಿದ್ದಾರೆ.” +“ಹಾಗಾದರೆ..?” +“ರಾಣಿಗೆ ಗರ್ಭಸ್ರಾವವಾಗುತ್ತಿದೆ, ಔಷಧ ಕೊಟ್ಟಿದ್ದೇನೆ. ಆದರೆ ಗರ್ಭ ನಿಲ್ಲುವ ಆಶೆ ಕಡಿಮೆ, ದೇವರೇ ಕಾಯಬೇಕು. ರಾಣಿಗೆ ಬಯಕೆಯ ದಿನಗಳಲ್ಲಿ ಮಣ್ಣು ತಿನ್ನುವ ಆಸೆಯಾಗಿತ್ತೆ?” +“ನನಗೇನು ಗೊತ್ತು? ಮಣ್ಣು ಮುಕ್ಕಲಿ ಬಿಡಿ!” ಎನ್ನುತ್ತ ಕುದುರೆ ಏರಿ ಶ್ಯಾಲಕ ಮಹಾಶಯ ಓಟಕಿತ್ತ, ತನ್ನ ಅಕ್ಕನಿಗೆ ಸಂತೋಷದ ವಾರ್ತೆ ತಿಳಿಸಲಿಕ್ಕೆ, +ವೈದ್ಯರು ಚಿಂತಾತುರರಾಗಿ ಕಾಲ್ನಡೆಯಿಂದ ಮನೆಗೆ ತೆರಳಿದರು. ಚಿಂತೆ ಬೇರೆ ರಿತಿಯದು…. +ಅವರ ಚತುರ ಶಿಷ್ಯ ಋಷಭದೇವರ ಭಕ್ತ. ಅಲ್ಲಿಯೇ ಕುರುಜಾಂಗುಲದಲ್ಲಿ ಎಂಟು ಹರದಾರಿ ದೂರ ಅವರ ಆಶ್ರಮವಿತ್ತು. ರಾಜವೈದ್ಯರು ಅವರ ಖಾಸಾ ಶಿಷ್ಯರಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಅವರಲ್ಲಿ ಹೋಗಿ ವೈದ್ಯಕದ ವಿಶೇಷ ಉಪಾಯಗಳನ್ನು ಕಲಿತು ಬರುತಿದ್ದರು. ಆದರೆ ಈ ವಿಷಯ ಯಾರಿಗೂ ಹೇಳುತ್ತಿರಲಿಲ್ಲ. ತಮ್ಮದೇ ಸಂಶೋಧನೆಯೆಂದು ಕೊಚ್ಚಿಕೊಳ್ಳುತ್ತಿದ್ದರು. +ರಾಣಿಯನ್ನು ಅನೇಕ ಬಾರಿ ಪರೀಕ್ಷಿಸಿ ನೋಡಿದ್ದರು. ವಿಷಪ್ರಾಷನವಾಗಿದೆಯೆಂದು ಸಂಶಯಗೊಂಡಿದ್ದರು. ಯಾವ ಬಗೆಯ ವಿಷವೆಂಬುದರ ಪತ್ತೆ ಹತ್ತಿದ್ದಿಲ್ಲ, ಅಷ್ಟೆ. ರಾಣಿಯ ಸ್ರಾವವು ಹಸಿರು-ನೀಲಿ ಬಣ್ಣದ್ದು ಎಂದ ಕೂಡಲೆ ಶಿಷ್ಯನಿಗೆ ಸನ್ನೆ ಮಾಡಿದರು. ಆದರೆ ಊರಲ್ಲಿ ಯಾರಿಗೂ ತಿಳಿಯದಂತೆ ನೋಡಿಕೊಂಡರು. +ಶಿಷ್ಯನು ಬೇನೆ ತಿನ್ನುತ್ತ ನರಳುವ ರಾಣಿಗೆ ಎಚ್ಚರತಪ್ಪುವ ಔಷಧವನ್ನು ಕುಡಿಸಿದನು. ಆರು ಜನ ಬೋವಿಗಳನ್ನು ಗುಪ್ತವಾಗಿ ಗೊತ್ತು ಮಾಡಿಟ್ಟಿದ್ದನು. ರಾತ್ರಿ ನಾಲ್ಕು ಪ್ರಹರದ ಹೊತ್ತಿಗೆ ಎಲ್ಲರಿಗೂ ನಿದ್ದೆ ಹತ್ತಿದಾಗ ಅರಮನೆಯ ಹಿತ್ತಲಿನ ಬಾಗಿಲಿನಿಂದ ಮೇಣೆಯೊಂದು ಹೊರಬಿತ್ತು. ಪ್ರಹರಕ್ಕೆ ಒಂದು ಹರಿದಾರಿಯಂತೆ ಮೌನವಾಗಿ ಕುರುಜಾಂಗುಲದೆಡೆ ಸೀಳುದಾರಿಯಿಂದ ಪ್ರಯಾಣ ಮಾಡುತ್ತ ಋಷಭದೇವರ ಆಶ್ರಮಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಬಂದು ತಲುಪಿತು. +ಋಷಭದೇವ ಮಹಾಮುನಿಗಳ ಚರಿತ್ರೆ ಅದ್ಭುತವಾದದ್ದು, ಮಹಿಮೆ ಅಪಾರವಾದದ್ದು, ಚಿಕ್ಕಂದಿನಲ್ಲಿ ನಾಲ್ಕು ವೇದಗಳನ್ನೂ ಕಲಿತು ಹಿಮಾಲಯಕ್ಕೆ ತಪಸ್ಸಿಗೆ ಹೋದರು. ಮರಳಿ ಬರುವಾಗ ದಾರಿ ತಪ್ಪಿ ಕಾಶ್ಮೀರಕ್ಕೆ ಬಂದರು. ಅಲ್ಲಿ ಲಕುಲೀಶ ಕುಲದ ಯಾತ್ರಿಕರು ಭೆಟ್ಟಿಯಾದೊಡನೆ ’ಹೇಗೂ ದಾರಿ ತಪ್ಪಿದೆ’ ಎಂದು ಅವರೊಡನೆ ಕ್ರಿವಿ-ಬಾಹ್ಲೀಕಗಳನ್ನು ಸಂಚರಿಸಿ ಹಿಂಗ್ಲಜಾ ದೇವಿಯ ಆರಾಧನೆ ಮಾಡಿದರು. ನಂತರ ಒಬ್ಬರೇ ಗಾಂಧಾರದೇಶಕ್ಕೆ ಹೋಗಿ. ಅಲ್ಲಿಂದ ಆರ್ಮೇನಿ ದೇಶಕ್ಕೆ ಬಂದರು. ಅಲ್ಲಿ ಹೆಚ್ಚಿನ ಯವನೀ(ಯುನಾನೀ) ವೈದ್ಯಕೀಯ ಅಭ್ಯಾಸ ಮಾಡಿದರು. ಅವರಿಗೆ ಗುರುವು ಹರ್ಮೇಶ ದೇವರ ದಂಡವನ್ನು ದಯಪಾಲಿಸಿದನು. ಹೀಗೆ ಅವರ ಬಳಿ ಮೂರು ಪವಿತ್ರ ದಂಡಗಳು ಕೂಡಿದವು-ಲಕುಲೀಶ ಗುರುವಿನ ಕೃಪಾದಂಡ, ಹಿಂಗ್ಲಜಾ ದೇವಿಯ ಆರಾಧನಾದಂಡ, ಹರ್ಮೇಶ ದೇವತೆಯ ದ್ವಿಸರ್ಪದ ಮುರಿಗೆಯ ದಂಡ. ಮರಳಿ ಬಂದು ಕುರುಜಾಂಗುಲದಲ್ಲಿ ಅಥರ್ವಣ ವೇದದ ಅಭ್ಯಾಸ ಮಾಡಿ ನಾಗಜನರ ಸರ್ಪವಿದ್ಯೆಯನ್ನೂ ಕಲಿತರು. ವಿಷ ನಿವಾರಣೆಯಲ್ಲಿ ಆಳ ಪರಿಣತಿ ಪಡೆದರು. +ಋಷಭ ಮಹರ್ಷಿಗಳು ರಾಣಿಯ ಪರೀಕ್ಷೆ ಮಾಡಿ ಗೋಣು ಅಲ್ಲಾಡಿಸಿದರು-“ಗರ್ಭಸ್ರಾವ ನಿಲ್ಲಿಸುವುದು ಬೇಡ. ಕಡಿಮೆ ಮಾಡುವುದಕ್ಕೆ ಔಷಧ ಕೊಡುತ್ತೇನೆ!” +“ಏಕೆ ಮಹರ್ಷಿಗಳೇ?” +“ಗರ್ಭ ಮೂರು ತಿಂಗಳಿದ್ದಾಗ ವಿಷಪ್ರಾಷನವಾಗಿದೆ. ದೃಢ ಗರ್ಭವಾದ್ದರಿಂದ ಮಗು ಬದುಕಿ ಉಳಿದಿದೆ. ಈಗ ಶ್ವಾಸೋಛ್ವಾಸಶುರುವಾಗಿದೆ. ಸ್ರಾವವನ್ನು ಪೂರ್ಣ ನಿಲ್ಲಿಸಿದರೆ ಹೊಟ್ಟೆಯ ತಳಭಾಗದಲ್ಲಿ ಅದು ಸಂಚಯವಾಗಿ ಮಗುವಿನ ಶ್ವಾಸೋಛ್ವಾಸಕ್ಕೆ ಆತಂಕವಾಗುತ್ತದೆ. ಹಾಗೆಯೇ ಬಿಟ್ಟರೆ ತಾಯಿ ತೀರಾ ದುರ್ಬಲಳಾಗಿ ಹೆರುವ ಕಾಲಕ್ಕೆ ಆಕೆಯ ಜೀವಕ್ಕೆ ಅಪಾಯವಾಗುತ್ತದೆ. ಈಗ ನಮ್ಮ ಪ್ರಯತ್ನ ಎರಡು ಪ್ರಾಣಗಳನ್ನೂ ಉಳಿಸಿಕೊಳ್ಳುವುದಕ್ಕಾಗಿ. ಮೊದಲೇ ಏಕೆ ಬರಲಿಲ್ಲ?” +“ಏನು ಹೇಳಲಿ, ದೇವ? ಹೇಳಿದರೆ ಗುರುನಿಂದೆಯ ಪಾಪ ತಟ್ಟುತ್ತದೆ.” +“ಘಟನೆಗಳನ್ನು ಪೂರ್ಣ ತಿಳಿಯದೆ ಔಷಧ ಕೊಡಬಾರದೆಂದು ಹರ್ಮೇಷನ ಆಜ್ಞೆ.” +“ವಿಷಪ್ರಾಶನವಾದ ಬಗ್ಗೆ ಗುರುಗಳಿಗೆ ತಿಳಿದಿತ್ತು. ಅದನ್ನು ಬಹಿರಂಗವಾಗಿ ಹೇಳಿದರೆ ಹಿರಿಯ ರಾಣಿಯ ಕೋಪ, ಜೊತೆಗೆ ತಮ್ಮ ವೈದ್ಯಕೀಯ ಜ್ಞಾನದ ಅಭಿಮಾನ. ಕೈ ಮೀರಿದ ಮೇಲೆ ರಾಣಿಯನ್ನು ತಮ್ಮ ಕಡೆಗೆ ಒಯ್ಯಬೇಕೆಂದು ವಿಧಿಸಿದರು. ಕಳ್ಳತನದಲ್ಲಿ ಇಲ್ಲಿ ಬಂದಿದ್ದೇವೆ. ಯಾರಿಗಾದರೂ ತಿಳಿದರೆ ನಾನು ಶಿಕ್ಷಾರ್ಹ. ರಾಜರು ಮೃಗಯೆಗೆ ಹೋದ ಸಂಧಿಯಲ್ಲಿ ನಾನು ರಾಣಿಯಲ್ಲಿ ಮೇಣೆಯಲ್ಲಿ ಹಾಕಿ ತಂದೆ!” +“ಒಳ್ಳೆಯ ಕೆಲಸ ಮಾಡಿದಿ. ಆದರೆ ಈಗಾಗಲೇ ಮಗು ಊನವಾಗಿದೆ. ಕೆಲವು ಅಂಗಾಂಗಗಳು ಬೆಳೆದಿಲ್ಲ.” +“ಮುಂದೆ ಕೂಸನ್ನು ಸಾಕುವುದು ತಾಯಿಗೆ ಕಷ್ಟವಾಗುವುದಿಲ್ಲವೇ?” +“ಕೂಸು ಭಾಗ್ಯವಂತನಾಗುತ್ತಾನೆ. ತನ್ನ ಜೀವನವನ್ನು ತಾನೇ ರೂಪಿಸುತ್ತಾನೆ, ಊನಾಂಗಗಳು ಅವನ ವಿಕಾಸಕ್ಕೆ ಬಾಧೆ ತರುವುದಿಲ್ಲ. ಅವನಿಗೆ ರಾಜಯೋಗವಿದೆ.” +೨ +ಈ ಘಟನೆಗಳು ನಡೆದು ಇಪ್ಪತ್ತು ವರ್ಷಗಳಾಗಿ ಹೋಗಿದ್ದವು. ರಾಣಿ ಗಂಡು ಮಗು ಹೆತ್ತಳು, ಮಗುವಿಗೆ ಕೈಗಳೂ ಇಲ್ಲ, ಪಾದಗಳೂ ಇಲ್ಲ. ಕೈ ಇರುವ ಜಾಗೆಯಲ್ಲಿ ಒಂದೇ ಗಣಲಿನ ಭುಜಗಳು. ಅವುಗಳಿಗೆ ಪುಟ್ಟ ಹಸ್ತಗಳು. ಕಾಲುಗಳೂ ಒಂದೇ ಗಣಿಲು; ಪಾದಗಳಿಗೆ ಮೀನದಂತೆ ಅಖಂಡ ಒಂದೇ ಬೆಟ್ಟು ಐದು ಬೆಟ್ಟುಗಳ ಸ್ಥಾನವನ್ನು ಆಕ್ರಮಿಸಿತ್ತು. ಮುಖ ಮಾತ್ರ ತಿದ್ದಿ ತೀಡಿದಂತಿತ್ತು. ಮುಖವನ್ನು ನೋಡಿ ರಾಣಿಗೆ ಸಂತೋಷವಾದರೂ ರಾಕ್ಷಸಜನನದಿಂದ ನಾಚಿ ಅಳತೊಡಗಿದಳು. ಅವನಿಗೆ ಕುತ್ತಿಗೆಯೇ ಇರಲಿಲ್ಲ. ಧಡಕ್ಕೆ ನೇರವಾಗಿ ರುಂಡ ಹತ್ತಿಕೊಂಡಿತ್ತು. +ಋಷಭ ಮಹರ್ಷಿಗಳು ಅವನ ಜಾತಕ ಬರೆದು ಅವನು ಚಕ್ರವರ್ತಿ ಎಂದು ಹೇಳಿದರೂ ರಾಣಿಗೆ ಸಮಾಧಾನವಾಗಲಿಲ್ಲ. +ಹತ್ತು ದಿವಸ ಮಗು ನಿಶ್ಚೇಷ್ಟಿತ ಮಲಗಿಕೊಂಡಿತ್ತು. ಉಸಿರಾಟದಿಂದಷ್ಟೇ ಅದು ಜೀವದಿಂದ ಇದೆಯೆಂದು ಗೊತ್ತಾಗಬೇಕು. +ಹತ್ತು ದಿನಗಳ ನಂತರ ಮಗು ಗಂಭೀರಧ್ವನಿಯಲ್ಲಿ ಚೀರತೊಡಗಿತು. ರಾಣಿ ಎದೆಗವಚಿ ಮೊಲೆಯುಡಿಸಿದಳು. ಹತ್ತು ದಿನ ರಾಣಿಗೆ ತುಳುಕುವ ಎದೆ ಹಾಲಿನಿಂದ ತೊಂದರೆಯಾಗಿತ್ತು. ಮಗು ಚೀರಿದನಂತರ ಮೊಲೆಯುಡಿಸಿದ ಮೇಲೆ ಅವಳ ಎದೆನೋವು ಕಡಿಮೆಯಾಯಿತು, ಜೊತೆಗೆ ಪ್ರೀತಿಯೂ ಉಕ್ಕಿತು. +ಮಹರ್ಷಿಗಳಿಗೆ ರಾಣಿ ವಿನಂತಿ ಮಾಡಿಕೊಂಡಳು: “ಮಹಾಗುರು ಇಂಥ ಸೂಲವನ್ನು ಕಟ್ಟಿಕೊಂಡು ನಾನು ನಗರದಲ್ಲಿ ಇರಲಾರೆ. ಹಾಸ್ಯಾಸ್ಪದಳಾಗುತ್ತೇನೆ. ಇಂಥ ಮಗುವನ್ನು ಹೆತ್ತದ್ದಕ್ಕಾಗಿ ಮಹಾರಾಜರು ಕೋಪಿಸಿಕೊಂಡು ನನ್ನನ್ನು ಕೊಂದುಹಾಕುತ್ತಾರೆ. ನನ್ನ ಸವತಿ ನನ್ನನ್ನು ದ್ವೇಷಿಸುತ್ತಾಳೆ. ನಾನು ಅನಾಥೆ. ನಾನು ಮಾಯವಾದುದಕ್ಕಾಗಿ ನನ್ನ ಬಗ್ಗೆ ಅಳುವವರು ಯಾರೂ ಇಲ್ಲ. ಅಲ್ಲಿ ಇರುವವರೆಗೆ ರಾಜರು ನನ್ನನ್ನು ಸುಖವಾಗಿ ನೋಡಿಕೊಂಡರು. ಮಗುವನ್ನು ನೋಡಿದ ಮೇಲೆ ಅವರೂ ನನ್ನನ್ನು ತೊರೆಯುತ್ತಾರೆ. ಮಗುವನ್ನೂ ಕೊಲ್ಲಬಹುದು, ಅವರು ಮತ್ತೆ ನನ್ನನ್ನು ಮನೆಗೆ ಕರಕೊಂಡರೂ ಇಂದಿಲ್ಲ ನಾಳೆ ಸವತಿ ನನ್ನನ್ನು ವಿಷ ಹಾಕಿ ಕೊಲ್ಲುತ್ತಾಳೆ. ನಾನು ಆಶ್ರಮದಲ್ಲಿ ಈ ಮಗುವಿನ ಜೊತೆಗೆ ಇರುತ್ತೇನೆ. ಕೃಪೆ ಮಾಡಬೇಕು. ” +“ಇರು, ಮಗಳೇ ನಿಶ್ಚಿಂತಳಾಗಿ ಇರು. ನಾನು ನಿನ್ನನ್ನು ಕಾಯುತ್ತೇನೆ. ನಿನ್ನ ಮಗ ಮಾತ್ರ ಭಾಗ್ಯಶಾಲಿಯಾಗುತ್ತೇನೆ. ನಾಳಿನ ಅವನ ಭವಿಷ್ಯಕ್ಕಾಗಿ ಅವನನ್ನು ಚೆನ್ನಾಗಿ ನೋಡಿಕೋ. ಅವನಿಗೆ ಏನೂ ಕಡಿಮೆ ಮಾಡಬೇಡ.” +ರಾಣಿಯ ಶೋಧಕ್ಕಾಗಿ ಅರಸು ಸುತ್ತಲೂ ಗುಪ್ತಚರರನ್ನು ಕಳಿಸಿದನು. ಇಬ್ಬರು ದೂತರು ಆಶ್ರಮಕ್ಕೂ ಬಂದರು. ಸುದೈವದಿಂದ ಅವರಿಗೆ ರಾಣಿಯ ಗುರುತು ಇರಲಿಲ್ಲ. ಊರ ಹೊರಗೆ ಆಕೆಯ ವಾಸುವಿದ್ದುದರಿಂದ. ಆಕೆಗೆ ಯಾವ ರಾಜಮರ್ಯಾದೆ ಇಲ್ಲದ್ದರಿಂದ; ಗರ್ಭಿಣಿಯಾದ ತೊಟ್ಟು ಅವಳ ಮೇಲೆ ರಾಜಸಖ್ತ ಪಹರೆ ನಿಲ್ಲಿಸಿದ್ದ ಮೂಲಕ ; ಆಕೆ ಬಾಣಂತಿಯಾಗಿ ಮುಖ ಬಿಳಿಚಿಟ್ಟ ಮೂಲಕ ; ಅನೇಕ ಕಾರಣಗಳಿಂದ ಅವರು ಲಕ್ಷವೀಯಲಿಲ್ಲ. ಆಕೆಯನ್ನು ನಾಗಕುಲದ ಅನಾಥೆಯೆಂದು ಭಾವಿಸಿದರು. ಆಕೆಯ ಮಗುವನ್ನು ನೋಡಿ ಭೀತಿಯಿಂದ ಓಟಕಿತ್ತರು. “ಇಂಥ ಮಗುವನ್ನು ನನ್ನ ಹೆಂಡತಿ ಹೆರುವುದಾದರೆ, ನಾನು ರಾಜನಾಗಲಿಕ್ಕೂ ಒಲ್ಲೆ!” ಎಂದ ಒಬ್ಬ ; “ಇಲ್ಲಿಯಂತೂ ನೀವು ರಾಜರಾಗುವುದು ಅಸಂಭವ. ಈ ಮಗುವನ್ನು ಎತ್ತಿಕೊಂಡು ಮತ್ಸ್ಯರಾಜ್ಯಕ್ಕೆ ಹೋಗೋಣ. ಅಲ್ಲಿ ನಾವು ರಾಜರಾಗಬಹುದು” ಎಂದು ನಕ್ಕ ಇನ್ನೊಬ್ಬ. ನಗುತ್ತ ಇಬ್ಬರೂ ಮರಳಿದರು. +ಹಿರಿಯ ರಾಣಿ ತನ್ನ ತಮ್ಮಂದಿರ ಮುಖಾಂತರ ಸುದ್ದಿ ಹಬ್ಬಿಸಿದ್ದಳು. “ಆಕೆ ಕಳ್ಳಬಸಿರು, ರಾಜರೇ ಮನೆಯಿಂದ ಹೊರದೂಡಿದ್ದಾರೆ.” ರಾಜ ಮೃಗಯೆಯಿಂದ ಬಂದ ಬಳಿಕ “ಅಯ್ಯೋ, ಓಡಿಹೋದಳಲ್ಲಾ! ಮನೆಯ ದೀಪ ನಂದಿತಲ್ಲಾ! ಆಕಾಶಪಾತಾಳ ಹುಡುಕಿಸಿರಿ. ಈ ರಾಜ್ಯದ ಉಸಿರನ್ನೇ ಆಕೆ ಕದ್ದು ಒಯ್ದಿದ್ದಾಳೆ” ಎಂದು ಕಣ್ಣೀರು ಸುರಿಸಿದಳು. ಹುಡುಕಲು ಹೋದ ದೂತರಿಗೆ “ಆಕೆ ಸಿಕ್ಕಲ್ಲಿ ರುಂಡವನ್ಹಾರಿಸಿ, ನಿಮಗೆ ಸಾವಿರ ಹೊನ್ನು ಕೊಡುತ್ತೇನೆ” ಎಂದು ಹೇಳಿದಳು. ಆ ಪ್ರಸಂಗ ಬರಲೇ ಇಲ್ಲ. ರಾಜರು ತಮ್ಮ ಗುಪ್ತಚರರಿಂದ ಊರಲ್ಲಿ ಹರಡಿದ ಸುದ್ದಿಯಷ್ಟನ್ನೇ ಅರಿತರು. ಅವರು ’ರಾಣಿ ಸಿಕ್ಕಲಿಲ್ಲ’ ಎಂದು ಮೊದಲು ಖೇದಪಟ್ಟರೂ ನಂತರ “ಒಳ್ಳೆಯದೇ ಆಯಿತು!” ಎಂಬ ಭಾವದಲ್ಲಿ ಮೌನದಿಂದ ಇದ್ದರು! +ಇತ್ತ ಚಿಕ್ಕರಾಣಿಯು ತನ್ನ ಕಂದನಿಗೆ ’ಭದ್ರಾಯು’ ’ಶಕ್ರ’ನೆಂದು ಹೆಸರು ಇಟ್ಟಳು. ಗುರುಗಳು ಹೇಳಿದಂತೆ ಚಕ್ರವಾರ್ತಿಯಾಗಲೆಂಬ ಆಸೆಯಿಂದ. ’ಶಕ್ರ’ ಎಂದರೆ ’ಇಂದ್ರ’, ದೇವತೆಗಳ ದೊರೆ. +ಆಶ್ರಮದ ಸುತ್ತ ನೆಲೆಸಿದ ನಾಗ-ಶಬರ ಹೆಣ್ಣು ಮಕ್ಕಳಿಗೆ ಇಂಥ ವಿಚಿತ್ರ ಹೆಸರನ್ನು ಉಚ್ಚರಿಸಲು ಕಷ್ಟವೆನಿಸಿತು. ಅವರೆಲ್ಲ ಅವನಿಗೆ ’ಸಗರ’ನೆಂದು ಕರೆಯತೊಡಗಿದರು, ಹೆಸರನ್ನು ಪ್ರಾಕೃತಿಕರಿಸಿ-ಅದೇ ಹೆಸರೇ ಅವನಿಗೆ ಖಾಯಂ ಆಯಿತು. (ಈ ಸಗರನು ಇಕ್ಶ್ವಾಕು) +೩ +ಮುಂದೆ ೫-೬ ವರ್ಷಗಳ ನಂತರ ಅರಸನಿಗೆ ಅರ್ಧಾಂಗವಾಯುವಿನ ಮೊದಲ ಆಘಾತ ತಟ್ಟಿತು. ಆರು ತಿಂಗಳು ಹಾಸಿಗೆ ಹಿಡಿದು ರಾಜ ಗುಣಮುಖನಾದನು. +ಹಿರಿಯ ರಾಣಿ ಕೇಶಿನಿ ಕೆಲವು ಪ್ರಧಾನಿ-ಸೇನಾಪತಿಗಳನ್ನು ತನ್ನೆಡೆಗೆ ಎಳೆದುಕೊಂಡು, ತಮ್ಮ ದುರ್ಗಸಿಂಹನಿಗೆ ಆರು ತಿಂಗಳ ಆಡಳಿತ ಸೂತ್ರ ಒಪ್ಪಿಸಿದಳು. ಹಾಗೂ ಹೀಗೂ ರಾಜ್ಯದ ರಥ ಮುಂದುವರೆಯಿತು. ರಾಜ ಗುಣಮುಖನಾಗಿ ತಾನೇ ರಾಜ್ಯ ನಡೆಸಿದನು. ಮೂರು ವರ್ಷಗಳಲ್ಲಿ ಎರಡನೆಯ ಆಘಾತ ತಟ್ಟಿ ರಾಜನ ಎಡಭಾಗವೆಲ್ಲ ಮೇಲಿನಿಂದ ಕೆಳಗಿನವರೆಗೆ ನಿಷ್ಕ್ರಿಯಗೊಂಡಿತು. ಮತ್ತೆ ಹಿರಿಯ ತಮ್ಮ ಆಡಳಿತ ವಹಿಸಿಕೊಂಡನು. ಈ ಬಾರಿ ರಾಣಿಯ ಮಾತು ಕೇಳದಾದನು. ಮೆಲ್ಲಗೆ ತಾನೇ ರಾಜನಂತೆ ವರ್ತಿಸತೊಡಗಿದನು. ಮುಂದೆ ಎರಡು ವರ್ಷಕ್ಕೆ ಮತ್ತೊಂದು ಆಘಾತ ತಟ್ಟಿ ಅರಸನು ಮೃತವತ್ ಹಾಸಿಗೆ ಹಿಡಿದು ಕಾಯಿಪಲ್ಯೆಗಳಂತೆ ಜೀವಂತ ಉಳಿದನು ಮಾತ್ರ. +ಆಗ ಮುಖ್ಯ ಪ್ರಧಾನರ ಸೂಚನೆಯ ಮೇರೆಗೆ ಒಬ್ಬ ಹಿರಿಯ ಪೌರ ಪ್ರತಿನಿಧಿ ರಾಣಿಯನ್ನು ಗುಪ್ತವಾಗಿ ಭೇಟಿಯಾಗಿ, “ಹೀಗೆ ತೇಪೆ ಥಿಗಳಿಗಳ ಆಡಳಿತ ಸರಿಯಾಗದು. ರಾಜರು ಇನ್ನು ಮೇಲೆ ರಾಜಕಾರಣವನ್ನು ನಡೆಸಲಾರರು. ಈಗ ಆಡಳಿತ ಹದೆಗಟ್ಟಿದೆ. ರಾಣಿಯವರೇ ಸ್ವತಃ ರಾಜ್ಯ ನಡೆಸಬೇಕು. ಅಥವಾ ರಾಜರ ತಮ್ಮನ ಮಗನಿಗೆ ಪಟ್ಟಾಭಿಷೇಕ ಮಾಡಿಸಬೇಕು. ಅವನು ಹದಿನೆಂಟನೆಯ ವಯಸ್ಸಿಗೆ ಬರುವವರಿಗೆ ರಾಣಿಯವರೇ ಆಡಳಿತ ನಡೆಸಬೇಕು. ಇವು ಮೂರು ಸೂಚನೆಗಳು. ನಾಲ್ಕನೆಯದಿಲ್ಲ,” ಎಂದು ಹೇಳಿದನು. +“ಈಗಿನ ಆಡಳಿತ ಜನರಿಗೆ ಪ್ರಿಯವಾಗಿಲ್ಲವೇ?” +“ತಮಗಾದರೂ ಆಗಿದೆಯೇ, ಮಹಾರಾಣಿ?” +ಈಗಾಗಲೆ ತನ್ನ ಮತ್ತು ಹಿರಿಯ ತಮ್ಮನ ಘರ್ಷಣೆ ಬಯಲಾಗಿದೆಯೆಂದು ರಾಣಿಗೆ ಅನಿಸಿತು. +“ನನಗೇನೂ ತಕರಾರು ಬಂದಿಲ್ಲ.” +“ತಮ್ಮವರೆಗೆ ತಕರಾರು ತರಲಿಕ್ಕೆ ಕಾರಭಾರಿಯ ಆತಂಕವಿದೆ.” +ಆಗ ರಾಣಿಗೆ ಅರ್ಥವಾಯಿತು. ರಾಜರ ತಮ್ಮನ ಮಗನಿಗೆ ಪಟ್ಟಾಭಿಷೇಕ ಮಾಡಿದರೆ ತನ್ನ ಅಧಿಕಾರ ನಡೆಯಲಿಕ್ಕಿಲ್ಲವೆಂದು ರಾಣಿಗೆ ಭಾವನೆಯಾಯಿತು. ತನ್ನ ಕಿರಿಯ ತಮ್ಮನಿಗೆ ಪಟ್ಟಾಭಿಷೇಕ ಮಾಡುವುದೇ ಒಳಿತೆಂದು ಅನ್ನಿಸಿತು. +ಹಿರಿಯ ತಮ್ಮನು ಈ ವರೆಗೆ ಅಧಿಕಾರದ ರುಚಿ ನೋಡಿದವನು. ತಾನೇ ಹೇಳಲಿಕ್ಕೆ ಕೇಶಿನಿ ರಾಣಿಗೆ ಸಂಕೋಚವಾಯಿತು. “ನಿಮ್ಮ ಮೂರನೆಯ ಸೂಚನೆ ನನಗೆ ಮಾನ್ಯ. ಆದರೆ ದುರ್ಗಸಿಂಹನಿಗೆ ವಿವರಿಸಿ ಹೇಳಿರಿ. ನಿರ್ಣಯಕ್ಕಾಗಿ ನನ್ನ ಬಳಿಗೆ ಕರಕೊಂಡು ಬನ್ನಿರಿ” ಎಂದು ರಾಣಿ ಕೈಯೊಗೆದಳು. +ಪೌರನು ಪ್ರಧಾನಿಗೆ ರಾಣಿ ನಿರ್ಣಯದ ವಾರ್ತೆ ತಲುಪಿಸಿದನು. ಎರಡೇ ದಿನಗಳಲ್ಲಿ ಪ್ರಧಾನರು ಕೈಚಳಕ ತೋರಿಸಿದರು. +ಮಂಗಳವಾರದ ದಿನ ಸಂತೆಯ ದಿವಸ. ಸುತ್ತಲಿನ ಹಳ್ಳಿಯ ನಾಗರು-ಶಬರರು-ಮಲ್ಲರು ತಮ್ಮ ಮಾಲನ್ನು ಹೊತ್ತು ತಂದು ಮಾರುವ ದಿನ. ಅಂದಿನ ದಿನ ಊರು ಬಹಳ ಹೊಲಸಾಗುತ್ತಿತ್ತು. ಆಡಳಿತಾಧಿಕಾರಿಯಾದ ರಾಣಿಯ ಹಿರಿಯ ತಮ್ಮ ಊರ ಜಂಗುಳಿಯನ್ನು ತಪ್ಪಿಸುವುದಕ್ಕಾಗಿ ಅಂದು ಗೆಳೆಕಾರರೊಂದಿಗೆ ಬೇಟೆಗೆ ಹೋಗುತ್ತಿದ್ದ. ಸೋಮವಾರ ರಾತ್ರಿ ಅವನ ಕೈಯಿಂದ ಅಕಾರ್ಯವೊಂದು ಜರುಗಿತ್ತು. ಅರಮನೆಯ ಶಬರ ಜಾತಿಯ ಸೇವಕಿಯ ಜೊತೆಗೆ ಅವಿನಯ ಮಾಡಿ, ಮದ್ಯದ ಅಮಲಿನಲ್ಲಿ ಆಕೆಯನ್ನು ಕಿಟಕಿಯ ಹೊರಗೆ ದೂಡಿದ್ದ. ಕಾಲಿಗೆ ಗಾಯವಾಗಿ ನರಳುತ್ತ ಆಕೆ ಅಲ್ಲಿಯೇ ಬಿದ್ದುಕೊಂಡಿದ್ದಳು. ಮರುದಿನ ಬೆಳಿಗ್ಗೆ ಅವಳ ತಂದೆತಾಯಿಗಳು ತಮ್ಮ ಸರಂಜಾಮಿನೊಡನೆ ರಾಜಧಾನಿಗೆ ಬಂದು, ತಮ್ಮ ಮಗಳ ಯೋಗಕ್ಷೇಮ ಕೇಳುವುದಕ್ಕಾಗಿ ಅರಮನೆಗೆ ಬಂದರು. ಮಗಳ ಅವಸ್ಥೆಯನ್ನು ನೋಡಿ ಅವಳನ್ನು ಚಕ್ಕಡಿಯಲ್ಲಿ ಹೇರಿಕೊಂಡು ತಮ್ಮ ನಾಯಕನನ್ನು ಕರೆದುಕೊಂಡು ಬಂದರು. ಅವನು ಕೊತವಾಲನಿಗೆ ತಕರಾರು ಸಲ್ಲಿಸಿದ. ಕೊತವಾಲನು ಪ್ರಧಾನರ ಮನೆಗೆ ಎಲ್ಲರನ್ನೂ ಕರೆದುಕೊಂಡು ಬಂದು ಅವರ ದೂರನ್ನು ವರದಿ ಮಾಡಿದ. +“ಒಂದು ಪ್ರಹರ ಇಲ್ಲಿಯೇ ಇರಿ. ವೈದ್ಯರನ್ನು ಕರೆಸುತ್ತೇನೆ” ಎಂದ, ಪ್ರಧಾನಿ. ಅವರು ಜೋರಾಗಿ ಬಾಯಿ ಮಾಡತೊಡಗಿದರು. ಅವರಿಗೆ ಬಾಯಿ ಮೇಲೆ ಬೆರಳಿಟ್ಟು ಮೌನವಾಗಿರಲು ಪ್ರಧಾನರು ಸೂಚಿಸಿ, ಕಣ್ಣು ಮಿಟುಕಿಸಿದರು. +ಆಡಳಿತಾಧಿಕಾರಿ ದುರ್ಗಸಿಂಹ ಬೇಟೆಗೆ ಹೋದ ಸುದ್ದಿ ಬಂದ ಮೇಲೆ, ಪ್ರಧಾನರು ರಾಣಿಯ ಕಡೆಗೆ ಅವರೆಲ್ಲರನ್ನೂ ಕರೆದುಕೊಂಡು ಹೋದರು. ಒಬ್ಬರೇ ಒಳಗೆ ಹೋಗಿ, ಎಲ್ಲವನ್ನೂ ವಿವರಿಸಿ, ಆಡಳಿತಾಧಿಕಾರಿ ಬೇಟೆಗೆ ಹೋಗಿರುವರೆಂದು, ಅವರು ಬಂದರೂ ಅವರ ಮೇಲೆಯೇ ತಕರಾರು ವ್ಯಾಜ್ಯ ಇರುವದರಿಂದ ಅವರು ನಿರ್ಣಯ ಕೊಡಲಿಕ್ಕೆ ಅನಧಿಕಾರಿಯೆಂದು, ರಾಣಿಯವರೇ ನಿರ್ಣಯ ಕೊಡಬೇಕೆಂದು ಸಲಹೆ ನೀಡಿದರು. +ರಾಣಿ ತನ್ನ ಅಧಿಕಾರ ಚಲಾಯಿಸಿದಳು. ’ಆಡಳಿತಾಧಿಕಾರಿ ದಾಸಿಯ ಕ್ಷಮೆ ಕೇಳಿಕೊಳ್ಳಬೇಕು. ವೈದ್ಯಕೀಯ ಉಪಚಾರಕ್ಕಾಗಿ ನೂರು ವರಹ ಆಕೆಗೆ ಸಲ್ಲಿಸಬೇಕು. ಅದನ್ನು ಬೊಕ್ಕಸದಿಂದ ಕೊಡಬಾರದೆಂದೂ, ಸ್ವಂತದ ಪ್ರಾಪ್ತಿಯಿಂದಲೇ ಕೊಡಬೇಕೆಂದೂ, ಆರು ತಿಂಗಳು ಆ ದಾಸಿಗೆ ಸಲ್ಲತಕ್ಕ ವರಮಾನವನ್ನು ಈಗಲೇ ಕೊಟ್ಟು ರಜೆ ನೀಡಲಾಗಿದೆ’ಯೆಂದೂ ವಿಧಿಸಿದಳು. ತಾನು ಸ್ವತಃ ಹೊರಗೆ ಬಂದು, ಶಬರರನ್ನು ಸಂಧಿಸಿ, ತನ್ನ ನಿರ್ಣಯವನು ಹೇಳಿದಳು. +ಇಷ್ಟಕ್ಕೆ ಆ ಪ್ರಕರಣವನ್ನು ನಿಲ್ಲಿಸಬಹುದಾಗಿತ್ತು. ಆದರೆ ಪ್ರಧಾನರು ಬೇರೆಯೇ ಯೋಚಿಸಿದ್ದರು. ಶಬರರ ನಾಯಕನನ್ನು ಬೇರೆ ಕರೆದು, “ನಿಮ್ಮ ಜನರ ಮೆರವಣಿಗೆ ಹೊರಡಿಸಿ ರಾಣಿಗೆ ಜಯಜಯಕಾರವನ್ನು, ಆಡಳಿತಾಧಿಕಾರಿಗೆ ಧಿಕ್ಕಾರವನ್ನು ಕೂಗಬೇಕು.” ಎಂದು ಪುಸಲಾಯಿಸಿದರು. ’ಪೌರ ಪ್ರಮುಖರ ಕಿವಿ ಮುಟ್ಟಲಿ’, ಇಷ್ಟೆ ಅವರ ವಿವರಣೆ. +ಮಧ್ಯಾಹ್ನ ಶಬರರ ಐನೂರು ಜನರು ಘೋಷಣೆಗಳನ್ನು ಕೂಗುತ್ತ ಊರ ತುಂಬಾ ಅಡ್ಡಾಡಿ, ಅರಮನೆಗೆ ಬಂದು, ಅಲ್ಲಿಯೂ ಘೋಷಣೆ ಕೂಗಿ , ರಾಣಿಯನ್ನು ಹೊರಬರುವಂತೆ ಮಾಡಿ, ಆಕೆಯನ್ನು ಶ್ಲಾಘಿಸಿದರು. +ಸಂಜೆ ಆಡಳಿತಾಧಿಕಾರಿ ಬೇಟೆ ಮುಗಿಸಿ ಬಂದೊಡನೆ, ಅವನ ದೂತರು ಸಾದ್ಯಂತ ವರ್ತಮಾನ ಹೇಳಿದರು. ಅವನಿಗೆ ದ್ವಿದಾಭಾವವುಂಟಾಯಿತು. ರಾಣಿಯವರೆಗೆ ಹೋಗಿ ಹೇಳಲಿಕ್ಕೆ ಸಂಕೋಚ; ಅಲ್ಲದೆ ಅನೇಕ ಬಾರಿ ಆಕೆಯ ಆಜ್ಞೆ ಉಲ್ಲಂಘಿಸಿ ಆಕೆಯ ಕ್ರೋಧಕ್ಕೆ ಕಾರಣನಾದವನು. ಆಕೆಯ ಮುಂದೆ ಅಪರಾಧಿಯಂತೆ ನಿಲ್ಲುವುದು, ತನ್ನ ಅಧಿಕಾರಕ್ಕೆ ಪೆಟ್ಟು ತಗುಲಿದಂತೆಯೇ ಸರಿ. ಇನ್ನು ಪ್ರಧಾನರ ಬಳಿ ಹೋದರೆ, ಅವರು ಏನು ಹೇಳುತ್ತಾರೆ, ಗೊತ್ತು. ತಾನೇ ದೂರಿನ ವಿಷಯವಾದಾಗ ತನ್ನ ಹತ್ತಿರವೇ ನ್ಯಾಯನಿರ್ಣಯ ಕೇಳುವುದೆಂತು, ಎಂದು ಹೇಳಿಯೇ ಹೇಳುತ್ತಾರೆ. ದಾಸಿಗೆ ಕ್ಷಮೆ ಕೇಳುವುದೇ? ಅವಳ ತಂದೆ-ತಾಯಿಗಳಿಗೆ ನೂರು ವರಹದ ಬದಲು ಇನ್ನೂರು ವರಹವನ್ನಾದರೂ ಕೊಟ್ಟು ಈ ಪ್ರಸಂಗ ಅಲ್ಲಿಯೇ ಮುಗಿಸಬಹುದು. ಆದರೆ ಮೆರವಣಿಗೆ? ಘೋಷಣೆ? ಧಿಕ್ಕಾರ?-ಇದರಲ್ಲಿ ಏನೋ ಗುಪಿತವಡಗಿದೆ. ಬಯಲು ಮಾಡಬೇಕು.-ಎಂದು ಯೋಚಿಸಿ, ಪ್ರಧಾನಿಯವರಿಗೆ ಬರಹೇಳಿದ. +ದೂತನು ಮರಳಿ ಬಂದು, ಪ್ರಧಾನಿಗಳು ಸಂಧ್ಯಾವಂದನೆಗೆ ಕುಳಿತಿರುವರೆಂದೂ, ನಮ್ತರ ದೇವಿಪಾರಾಯಣವಾಗಬೇಕೆಂದೂ, ಬೇಕಾದರೆ ನಾಳೆ ಮುಂಜಾನೆ ಬಂದು ಭೇಟಿಯಾಗುವೆನೆಂದೂ ಹೇಳಿದರೆಂದೂ ತಿಳಿಸಿದ. ’ಕಾರ್ಯವಾವುದು?’ ಎಂದೂ ಕೇಳಿದರೆಂದೂ ಹೇಳಿದ. +ಹಿಂದೆ ಎಂದೂ ಇಂಥ ಒರಟು ಉತ್ತರ ಪಡೆಯದ ಆಡಳಿತಾಧಿಕಾರಿಗೆ ನೆಲವೇ ಕುಸಿದಂತಾಯಿತು “ರಾಣಿಯ ಹೆಸರಿನಲ್ಲಿ ತಾನೇ ಆಡಳಿತ ವಹಿಸಿಕೊಳ್ಳಬೇಕೆಂದು ತಂತ್ರ ಮಾಡಿದ್ದಾನೆ ನೀಚ. ಇವನನ್ನು ಈಗಲೇ ಮುರಿಯಬೇಕು!” ಎಂದುಕೊಂಡು ತಾನೇ ಕುದುರೆ ಏರಿ ಅವರ ಮನೆಗೆ ಹೋದ. +ಪ್ರಧಾನರು ನಿಜವಾಗಿ ಸಂಧ್ಯಾವಂದನೆಗೆ ಕುಳಿತಿದ್ದರು-ಅಂದರೆ, ದೂತ ಬಂದು ಹೋದಮೇಲೆ, ತಮ್ಮ ಮಾತು ಸಾಚಾ ಎಂದು ತೋರಿಸಲಿಕ್ಕೆಂದೇ ಕುಳಿತಾರೆಂಬುದು ಇದರ ಅರ್ಥ. ಪ್ರಧಾನರು ಅಷ್ಟು ನೈಷ್ಠಿಕರಲ್ಲವೆಂಬುದು ಜನಜನಿತ. +ಒಂದು ಪ್ರಹರಕಾಲ ಅವರ ಹಾದಿ ಕಾಯುತ್ತ ಹೊರಗೆಯೇ ಸುಖಾಸೀನನಾಗಿದ್ದ, ’ಇಂದು ಇವನನ್ನು ಬಿಡುವುದಿಲ್ಲ!’ ಎಂಬ ಈರ್ಷೆಯಿಂದ. +ಪ್ರಧಾನರು ಭಸ್ಮಾಂಕಿತರಾಗಿ ಲಗುಬಗೆಯಿಂದ ಹೊರಗೆ ಬಂದು ತಾವೇ ಮಾತಿಗೆ ಪ್ರಾರಂಭಿಸಿದರು. +“ಮಹಾರಾಜರ ಆರೋಗ್ಯಕ್ಕಾಗಿ ಇಂದು ಮನೆಯಲ್ಲಿ ದೇವೀ ಪಾರಾಯಣ ಇಟ್ಟುಕೊಂಡಿದ್ದೇವೆ. ತಾವು ಬಂದದ್ದು ಒಳ್ಳೆಯದೇ ಆಯಿತು. ಪಾರಾಯಣವನ್ನು ಕೇಳಿ, ಪ್ರಸಾದ ಸ್ವೀಕರಿಸಿ, ಮರಳಬೇಕು. ಈಗ ಉಪಾಧ್ಯಾಯರು ಬರುತ್ತಾರೆ.” +“ನನ್ನನ್ನು ಆಮಂತ್ರಿಸಿದ್ದೀರಾ?” +“ಹೌದು, ಬೆಳಿಗ್ಗೆ ನಮ್ಮ ಆಳುಮಗ ಹೇಳಲು ಹೋಗಿದ್ದ, ತಾವು ಬೇಟೆಗೆ ಹೋಗಿದ್ದೀರಿ” ಎಂದು ಹೇಳಿದ. +“ಅದಿರಲಿ. ಇಂದು ನನಗೆ ಶಬರರು ಧಿಃಕಾರ ಹಾಕಿದ್ದು ನಿಮ್ಮ ಪ್ರೇರಣೆಯೆಂದು ವಾರ್ತೆ ಬಂದಿದೆ. ಹೌದೆ?” +“ಪ್ರೇರಣೆ ಮಾಡುವುದು ದೇವರ ಕೆಲಸ. ಮನುಷ್ಯನು ಮನುಷ್ಯನನ್ನು ಪ್ರೇರೆಪಿಸುವುದು ಹ್ಯಾಗೆ ಶಕ್ಯ?” +“ನೀವು ಪುಸಲಾಯಿಸಿದ್ದು ನಿಜವೆ? ಅಷ್ಟೆ ಹೇಳಿರಿ.” +“ಯಾರು ಹೇಳುತ್ತಾರೆ? ಅವರನ್ನು ನನ್ನ ಎದುರು ನಿಲ್ಲಿಸಿರಿ.” +“ನೇರವಾಗಿ ಉತ್ತರ ಕೊಡಿರಿ. ನಿಜವೋ ಅಲ್ಲವೊ?” +“ಇದರಲ್ಲಿ ನಿಮ್ಮ ಪಾತ್ರವೇನು?” +“ನನ್ನ ಪಾತ್ರ ಆದ ಘಟನೆಯನ್ನು ಸೂಕ್ತ ಅಧಿಕಾರಿಗೆ ತಿಳಿಸುವುದು. ನಿರ್ಣಯವನ್ನು ಸೂಕ್ತ ಅಧಿಕಾರಿಗೆ ಬಿಟ್ಟುಕೊಡುವುದು.” +“ನಾನೇ ಸೂಕ್ತ ಅಧಿಕಾರಿ” +“ಈ ವಿಷಯದಲ್ಲಿ ನೀವು ನ್ಯಾಯಾಧೀಶರಾಗಲಾರಿರಿ.” +“ಹಾಗಾದರೆ ನಾನು ಆರೋಪಿಯೇ?” +“ಹೌದು. ಕ್ಷಮೆ ಇರಲಿ.” +“ದೂರು ಎರಡು ಪ್ರಹರಕ್ಕೆ ಬಂದಿತು. ಇನ್ನೊಂದು ಪ್ರಹರ ನೀವು ಕಾಯ್ದದ್ದೇಕೆ? ನಾನು ಬೇಟೆಗೆ ಹೋಗಿ, ನಿಮ್ಮ ಸಂಚಿಗೆ ಮುಕ್ತದ್ವಾರ ಮಾಡಿಕೊಳ್ಳಲಿಕ್ಕಷ್ಟೆ?” +“ವೈದ್ಯಚಿಕಿತ್ಸೆ ಇಲ್ಲದೆ ದಾಸಿಯನ್ನು ಮಹಾರಾಣಿಯವರ ಎದುರಿಗೆ ತಂದು ನಿಲ್ಲಿಸಿದ್ದರೆ, ಕ್ಷಮಿಸಿ..ಶಿಕ್ಷೆ ಇನ್ನೂ ಹೆಚ್ಚಾಗುತ್ತಿತ್ತು. ವೈದ್ಯರು ಗಾಯ ತೊಳೆದು, ಪಟ್ಟಿಕಟ್ಟಿ, ಗಾಯದ ಭಯಾನಕತೆಯನ್ನು ಕಡಿಮೆ ಮಾಡಿದರು.” +“ಗಾಯ ಎಷ್ಟಾಗಿದೆ?” +“ಬಲಗಾಲು ಮುರಿದಿದೆ.” +ಆಡಳಿತಾಧಿಕಾರಿ ಮೆತ್ತಗಾದ. ಬೇರೆ ದಿಶೆಯಿಂದ ವಾದಿಸತೊಡಗಿದ. +“ಮಹಾರಾಣಿಯ ನಿರ್ಣಯ ಏಕಪಕ್ಷೀಯವಾದುದಲ್ಲವೆ? ನನ್ನನ್ನು ಏಕೆ ಕರೆಸಲಿಲ್ಲ?” +“ಅದು ಮಹಾರಾಣಿಯವರಿಗೆ ಕೂಡಿದ ವಿಷಯ.” +“ಮಹಾರಾಣಿಯವರಿಗೆ ಇಂಥಹ ದೂರುಗಳನ್ನು ನೇರವಾಗಿ ಸಲ್ಲಿಸಬೇಡಿರೆಂದು ನಿಮಗೆ ನಾನು ಕಟ್ಟಪ್ಪಣೆ ಮಾಡಿದ್ದಿಲ್ಲವೆ?” +“ನಿಮ್ಮ ಕಟ್ಟಪ್ಪಣೆಯನ್ನು ಈ ವಿಷಯದಲ್ಲಿ ನಾನು ಪಾಲಿಸುವುದು ಅಧರ್ಮ. ಬೇರಾವ ವಿಷಯವಾದರೂ ನಾನು ಪಾಲಿಸುತ್ತಿದ್ದೆ. ಮುಂದೂ ಪಾಲಿಸುತ್ತೇನೆ, ನೀವು ಮೇಲಧಿಕಾರಿಗಳು.” +“ಒಂದು ದಿನ ನಿಂತಿದ್ದರೆ ನಿಮ್ಮಪ್ಪನ ಗಂಟೇನು ಹೋಗುತ್ತಿತ್ತು?” +“ನೀವು ಇಲ್ಲಿಯೇ ಇದ್ದರೂ ನಾನು ಮಹಾರಾಣಿಯವರಿಗೇ ತಿಳಿಸುತ್ತಿದ್ದೆ.” +“ಹಾಗಲ್ಲ. ನಾನು ಇಲ್ಲಿದ್ದರೆ, ನನ್ನ ಪಕ್ಷದಿಂದ ಹೇಳುವುದನ್ನು ಹೇಳುತ್ತಿದ್ದೆ.” +“ನ್ಯಾಯದ ವಿಷಯದಲ್ಲಿ ನಾನು ತಡಮಾಡಿದ್ದರೆ ಜನರು ನನಗೆ ಧಿಕ್ಕಾರ ಹಾಕುತ್ತಿದ್ದರು!” +“ಈಗೇನು ಮಾಡಲಿ, ಹೇಳಿರಿ.” +“ಮಹಾರಾಣಿಯವರನ್ನು ಕಂಡು, ನಿಮ್ಮ ಪಕ್ಷದ ಸಮರ್ಥನೆಯನ್ನು ಹೇಳಿ, ಶಿಕ್ಷೆ ಕಡಿಮೆ ಮಾದಿಸಿಕೊಳ್ಳಿರಿ.” +“ಇಷ್ಟೇ ನಿಮ್ಮ ಸಲಹೆಯೇ?-ಒಳ್ಳೇ ಪ್ರಧಾನರು ನೀವು!” +“ನನ್ನಲ್ಲಿ ತಪ್ಪು ಇದ್ದರೆ ನನಗೆ ಹೇಳಿರಿ.” +“ನಾನು ನಿಮಗೆ ಬೆಸರವಾದೆನೆ?” +“ರಾಜಕಾರ್ಯದಲ್ಲಿ ಆ ಪ್ರಶ್ನೆ ಉದ್ಭೂತವಾಗುವುದೇ ಇಲ್ಲ. +ಅಷ್ಟರಲ್ಲಿ ಉಪಾಧ್ಯಾಯರು ಬಂದರು. “ದೇವೀಪಾರಾಯಣದ ಮುಹೂರ್ತ ಬಂದಿತು. ಘಳಿಗೆ ಬಟ್ಟಲು ಬೀಳುವಷ್ಟರಲ್ಲಿ ಪ್ರಾರಂಭವಾಗಬೇಕು. ಪ್ರಭುಗಳು..” +“ನಿಮ್ಮ ಆಮಂತ್ರಣ ಏನಾಯಿತು?” +“ಅದು ಇದ್ದೇ ಇದೆ. ಒಳಗೆ ಬರಬೇಕು.” +“ನಾಳೆ ತೀರ್ಥಪ್ರಸಾದ ಕಳಿಸಿಕೊಡಿರಿ. ನಾನೂ ಹೊರಡುತ್ತೇನೆ. ಪ್ರಧಾನರ ಇನ್ನೊಂದು ಮುಖ ಕಂಡಂತಾಯಿತು.” +“ನನಗೆ ಇರುವುದು ಒಂದೇ ಮುಖ. ಕೃಪೆ ಇರಲಿ.” +ಮುಖ ಸಿಂಡರಿಸಿಕೊಂಡು “ಆಗಲಿ, ನೋಡುತ್ತೇನೆ” ಎಂದು ಆಡಳಿತಾಧಿಕಾರಿ ಹೊರಟುಹೋದ. +ಅರಮನೆಗೆ ಹೋಗಿ ವೇಷ ಬದಲು ಮಾಡಿಕೊಂಡ. ಇನ್ನೂರು ವರಹಗಳನ್ನು ತನ್ನ ವೈಯಕ್ತಿಕ ತಿಜೋರಿಯಿಂದ ತೆಗೆದುಕೊಂಡ. ಕುದುರೆಯನ್ನು ಸಂತೆಪೇಟೆಯ ದೂರದಲ್ಲಿ ನಿಲ್ಲಿಸಿ, ಪೇಟೆಯನ್ನು ಪ್ರವೇಶಿಸಿದ. ಸದ್ದುಗದ್ದಲವಿಲ್ಲದೆ ದಾಸಿಯ ತಂದೆತಾಯಂದಿರನ್ನು ಭೇಟಿಮಾಡಿ, ದಂಡ ಸಲ್ಲಿಸಿ, ಕ್ಷಮೆ ಕೇಳಬೇಕೆಂದು ಅವನ ಆಸೆ. +ಆದರೆ ಎರಡು ಘಂಟೆ ಧಿಕ್ಕಾರ ಹಾಕಿದ ಶಬರರಲ್ಲಿ ಓರ್ವ ಮುದುಕ ಮತ್ತೆ ’ಧಿಕ್ಕಾರ!’ ಹುಯಿಲು ಎಬ್ಬಿಸಿದ ಹತ್ತು ಹನ್ನೆರಡು ಬಾಲಕರು ಮೋಜಿಗಾಗಿ ಅವನನ್ನು ಸುತ್ತುವರಿದು ಧಿಕ್ಕಾರವೆಂದು ಕೂಗತೊಡಗಿದರು. ಯುವಕರೂ ಅವರನ್ನು ಸೇರಿಕೊಂಡರು. ದಾಸಿಯ ತಂದೆ-ತಾಯಿಯರನ್ನು ಶೋಧಿಸುವುದು ಕಷ್ಟವಾಯಿತು ಆ ಸಂತೆಯಲ್ಲಿ. ಆ ದಾಸಿಯ ಊರಿನ ಹೆಸರೂ ಗೊತ್ತಿರಲಿಲ್ಲ. +“ಶಬರರ ನಾಯಕನಾರು?” +ಒಬ್ಬನನ್ನು ತೋರಿಸಿದರು. ಅವನು ಇನ್ನೊಬ್ಬನನ್ನು ತೋರಿಸಿದ. ಅವನು ಮಗುದೊಬ್ಬನನ್ನು ತೋರಿಸಿದ. ಕೊನೆಗೊಮ್ಮ ಊರ ನಾಯಕ ಮುಂದೆ ಬಂದ. “ನಾವು ಪಂಚಾಯಿತಿ ಕೂಡಿಸುತ್ತೇವೆ; ಅವರ ಎದುರಿಗೆ ನೀವು ಕ್ಷಮೆ ಕೇಳಿರಿ” ಎಂದ, ಆ ಶಬರನಾಯಕ. +“ಆಗಲಿ” ಎಂದ ಕಾರಭಾರಿ. +ಮುಂದೆ ಎರಡು ಪ್ರಹರ ಕಳೆದಮೇಲೆ ಸಾಕ್ಷೀಸಹಿತ ಕ್ಷಮೆ ಕೇಳಿ, ಇನ್ನೂರು ವರಹ ಅರ್ಪಿಸಿ, ಕುದುರೆಕಟ್ಟಿದ ಗಿಡಕ್ಕೆ ಮುಟ್ಟಬೇಕಾದರೆ ಇನ್ನೂ ಎರಡು ಪ್ರಹರಗಳು ಬೇಕಾದವು. ಅಂದು ರಾತ್ರಿ ರಾಣಿಯರ ಭೇಟಿ ಶಕ್ಯವಿದ್ದಿಲ್ಲ. +೪ +ಹಿಂದಿನ ಸಂಜೆಯ ಪಂಚಾಯತಿ ಪ್ರಕರಣ ರಾಣಿಗೆ ದೂತರಿಂದ ವರದಿಯಾಗಿತ್ತು. ಇಂಥ ದುಃಸಾಹಸ ಮಾಡಬಹುದೆಂದು ಆಕೆಯ ಕನಸುಮನಸಿನಲ್ಲೂ ಇರಲಿಲ್ಲ. ಇಷ್ಟು ತನ್ನ ನಿರ್ಣಯದ ವಿಸ್ತಾರ ಪರಿಪಾಕವಾಗಬಹುದೆಂದೂ ಆಕೆ ಎಣಿಸಿರಲಿಲ್ಲ. ಆಕೆ ತಿಳಿದುಕೊಂಡಿದ್ದಕ್ಕಿಂತ ವಿಸ್ತಾರ ಪರಿಣಾಮವಾಯಿತು. ಅದು ಮುಂದಿನ ಕತೆ. +ಮರುದಿನ ಮುಂಜಾನೆ ರಾಣಿಯ ಭೇಟಿಯಾಗುವುದರ ಮೊದಲು, ಭಾಂಡಾರಿಯನ್ನು ಕಂಡು ಆಡಳಿತಾಧಿಕಾರಿ ಒಂದು ಸಾವಿರ ವರಹ ಬೇಡಿದನು. ಭಂಡಾರಿ “ರಾಣಿಯ ಅಪ್ಪಣೆಯಿಲ್ಲದೆ ಕೊಡಲಾಗದೆಂದು ನಿನ್ನೆ ಅಪ್ಪಣೆಯಾಗಿದೆ.” ಎಂದ. +ದಾಸಿಗೆ ಕೊಡಮಾಡುವ ದಂಡ ಖಜಾನೆಯಿಂದ ತೆಗೆಯಬಾರದೆಂಬ ಆಜ್ಞೆಯ ಚಲಾವಣೆಗಾಗಿ ರಾಣಿ ಒಟ್ಟು ಒಂದು ಆಜ್ಞೆ ಮಾಡಿದ್ದಳು. +ಆದರೆ ರಾಣಿ ತನ್ನ ಎಲ್ಲ ಅಧಿಕಾರಗಳನ್ನು ಕಸಿದುಕೊಂಡಿದ್ದಾಳೆ ಎಂಬ ಭಾವನೆ ತಮ್ಮನಿಗೆ ಬಂತು. +ರಾಣಿಗೆ ಭೇಟಿಮಾಡುವುದಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ದುರ್ಗಸಿಂಹ ತನ್ನ ಸ್ಥಾನಮಾನವನ್ನು ಗುರುತಿಸಿಕೊಳ್ಳಬಹುದಾಗಿತ್ತು. ಆದರೆ ದುಡುಕಿನ ಸ್ವಭಾವದವನು. ಈಗಂತೂ ಉದ್ವಿಗ್ನನಾಗಿದ್ದನು. ಅವನಿಗೆ ಎರಡೇ ದಾರಿ ತೋಚಿದವು. ಹಠಾತ್ ಹೋಗಿ ರಾಣಿಯನ್ನು ಭೇಟಿ ಮಾಡಿ, ಜೋರು ತೋರಿಸಿ. ಭಾಂಡಾರಿಗೆ ಏಕೆ ಹೀಗೆ ಆಜ್ಞೆ ಮಾಡಿದೆಯೆಂದು ಕೂಗಾಡಿ, ಆಕೆಗೆ ಏನೂ ಆಗದವರಂತೆ ತೋರುವುದು: ಕೇಳಿದರೆ ’ನೀನು ವಿಧಿಸಿದ ದಂಡದ ಇಮ್ಮಡಿ ನಿನ್ನೆಯೇ ಕೊಟ್ಟುಬಿಟ್ಟೆ’ ಎಂದು ಹೇಳುವದು, ಒಂದು ಉಪಾಯ. ಇನ್ನೊಂದು ಮಾರ್ಗವೆಂದರೆ ಸಾಷ್ಟಾಂಗವೆರಗಿ “ರಾಣಿಯ ಆಜ್ಞೆಯನ್ನು ಯಥಾವತ್ತಾಗಿ ನೆರವೇರಿಸಿದ್ದೇನೆ; ನೀನು ಕ್ಷಮಾದಾನ ಮಾಡು” ಎಂದು ಹೇಳುವುದು. ಎರಡನೆಯ ಪರ್ಯಾಯ ಅಸಹಜ. +ಆ ಉದ್ವಿಗ್ನಸ್ಥಿತಿಯಲ್ಲಿ ದುರ್ಗಸಿಂಹನಿಗೆ ಮೊದಲನೆಯ ಉಪಾಯವೇ ಸರಿ ಕಂಡಿತು. ಎಷ್ಟಾದರೂ ಅಕ್ಕ. ಆ ಅಧಿಕಾರ ಎಲ್ಲಿ ಹೋಗಬೇಕು? +ಹದಿನೈದು ನಿಮಿಷ ಮೊದಲೇ ಹೋಗಿ ರಾಣಿಯ ಬಾಗಿಲು ಜೋರನೆ ತಟ್ಟಿದನು. ಸೇವಕಿ ಎಂದು ತಿಳಿದು ’ಬಾ’ ಎಂದಳು. ಧಡಾರನೆ ಬಾಗಿಲು ದೂಡಿ ಒಳಬಂದನು ತಮ್ಮ. ರಾಣಿ ಮುಖ ಸಿಂಡರಿಸಿದಳು. ತಮ್ಮನ ರಭಸದ ಪ್ರಶ್ನೆಗಳನ್ನು ಲಕ್ಷಕ್ಕೆ ತಾರಲಿಲ್ಲ. ಒಂದು ಪೀಠದ ಮೇಲೆ ಕುಳ್ಳಲು ಆಜ್ಞಾಪಿಸಿದಳು. “ನಾನು ಕೂಡಲಿಕ್ಕೆ ಬಂದಿಲ್ಲ. ಕೆರೆ ಅಗಿಯುವ ಕೆಲಸಗಾರರಿಗೆ ಇಂದು ಸಂಬಳ ಕೊಡಬೇಕು. ಭಾಂಡಾರಿಗೆ ಕೇಳಲು ಹೋದರೆ ’ನಿನ್ನ ಅನುಮತಿ ಬೇಕು’ ಎಂದು ಹೇಳಿದ. ಹೀಗಾದರೆ ಕೆಲಸ ನಿಲ್ಲುವುದು” ಎಂದು ಎದ್ದುನಿಂತೇ ಹೇಳಿದ. +“ಕೂಡು!” ಎಂದು ರಾಣಿ ಚೀರಿದಳು. +ಆಕೆಯ ದನಿಯ ಬಿರುಸಿಗೆ ಬೆಕ್ಕಸಬೆರಗಾಗಿ ತಮ್ಮ ಅಕ್ಕಸದಿಂದ ಕುಳಿತುಕೊಂಡ. ರಾಣಿ ತನ್ನ ತಲೆ ಬಾಚಿಕೊಳ್ಳುವ ಕೆಲಸದಲ್ಲಿ ನಿರತಳಾದಳು. ತನ್ನ ಕ್ರೋಧವನ್ನು ಸಾವರಿಸಲು ಯತ್ನ ಮಾಡಿದಳು. ಹದಿನೈದು ನಿಮಿಷದ ನಂತರ ಅವನ ಸಮೀಪಕ್ಕೆ ಬಂದಳು. ಆದರೂ ಆಕೆಯ ದನಿ ಕಂಪಿಸುತ್ತಲೇ ಇತ್ತು. +“ನೀನು ಇನ್ನು ಮೇಲೆ ಆದಳಿತ ಅಧಿಕಾರಿಯಲ್ಲ. ಇಷ್ಟು ದಿನ ನೀನು ಮಾಡಿದ ಸೇವೆ ಸಾಕು. ಎಲ್ಲ ಆಡಳಿತ ನಾನೇ ವಹಿಸಿಕೊಂಡಿದ್ದೇನೆ. ನೀನು ಹೋಗಬಹುದು.” +ಎಲ್ಲಿಗೆ ಎಂಬುದನ್ನು ಹೇಳಲಿಲ್ಲ. +“ಆಗಲಿ; ನಾನಿಲ್ಲದೆ ನಿನ್ನ ಆಡಳಿತ ಹೇಗೆ ನಡೆಯುವುದೋ ನೋಡಿಯೇ ಬಿಡುತ್ತೇನೆ. ಆಡಳಿತವೆಂದರೆ ಕೂದಲಿನ ತೊಡಕು ಬಿಡಿಸಿದಂತಲ್ಲ!” +ರಾಣಿ ಕಾಲು ಅಪ್ಪಳಿಸಿ, “ಹೋಗು!” ಎಂದಳು. +ಅಲ್ಲಿಂದ ಹೊರಬಿದ್ದ ದುರ್ಗಸಿಂಹ ಎಲ್ಲಿಗೆ ಹೋಗುವುದು ತಿಳಿಯದೆ ಮರಳಿ ತನ್ನ ಮನೆಗೆ ಬಂದನು. ಖಾಸಗಿ ತಿಜೋರಿಯಲ್ಲಿ ಖಜಾನೆಯಿಂದ ಪಡೆದ ಹಣ, ವರ್ತಕರಿಂದ ಪಡೆದ ಲಂಚ, ದಬ್ಬಾಳಿಕೆಯಿಂದ ಕೂಡಿಸಿದ ದಂಡ, ಎಲ್ಲವೂ ಕೂಡಿಸಿ ಸುಮಾರು ೫೦೦೦ ವರಹಗಳಿದ್ದವು. ತಿಜೋರಿಯಿಂದ ಅದನ್ನು ಎಣಿಸದೆ ಒಂದು ಹಮ್ಮಿಣಿಯಲ್ಲಿ ಹಾಕಿಕೊಂಡನು. ನಾಲ್ಕು ಬಟ್ಟೆ ಬರೆಗಳನ್ನು ಎಳೆದುಕೊಂಡನು. ಕುದುರೆ ಏರಿದನು. +ಪಾಂಚಾಲದ ತಂದೆಯ ಮನೆಗೆ ಹೋಗಿ ರಾಣಿ ತನ್ನನ್ನು ಗಡಿಪಾರು ಮಾಡಿದಳೆಂದು ಹೇಳುವುದು ಒಂದುದಾರಿ. ಆದರೆ ತಾನು ಹೇಳಿಬಿಟ್ಟಿದ್ದೇನೆ ನಾನಿಲ್ಲದೆ ನಿನ್ನ ರಾಜ್ಯ ಹೇಗೆ ನಡೆಯುತ್ತದೆ ನೋಡಿಬಿಡುತ್ತೇನೆ-ಎಂದು. ತೀರ ಒಂದಿಷ್ಟೂ ವಿರೋಧ-ತಿಕ್ಕಾಟವಿಲ್ಲದೆ ಸೋಲು ಒಪ್ಪಿಕೊಳ್ಳುವುದು ನನ್ನಂತಹವನಿಗೆ ಹೇಗೆ ಸಾಧ್ಯ? +ಕುದುರೆ ಊರ ಹೊರಗೆ ಧಾವಿಸಿದಂತೆ ಅವನ ಮನಸ್ಸೂ ಧಾವಿಸತೊಡಗಿತು. ಹೇಗೂ ನನ್ನ ವಿರುದ್ಧ ವೇಕಾಗಲೀ, ಶಬರರು ಒಂದಾಗಿದ್ದಾರೆ. ದಾಸಿಯ ಊರಿಗೆ ಹೋಗಿ, ಆಕೆಯನ್ನು ಲಗ್ನವಾಗಬೇಕು. ರಾಜಪುತ್ರ ಲಗ್ನವಾಗುತ್ತೇನೆಂದರೆ ಯಾವ ದಾಸಿ ಒಪ್ಪಲಿಕ್ಕಿಲ್ಲ? ಅದರಿಂದ ತನ್ನ ಸತ್ಯಪ್ರೇಮವನ್ನು ತೋರಿಸಿದಂತಾಗುವುದು. ತನ್ನ ಪ್ರತಿಷ್ಥೆ ಬೆಳೆದಂತೆ ಶಬರರ ಸೇನೆ ಕಟ್ಟಿ, ದಶಾರ್ಣದ ಮೇಲೆ ದಾಳಿ ಮಾಡಿ, ರಾಣಿ ನೆಲಕ್ಕೆ ಮೂಗು ಹೊಸೆಯುವಂತೆ ಮಾಡಬೇಕು…ಒಳ್ಳೆಯ ಯೋಚನೆ..ಧನುರ್ವಿದ್ಯೆಯಲ್ಲಿ ಶಬರರಿಗೆ ಕಲಿಸುವಂತಹದೇನೊ ಅವನಲ್ಲಿ ಇರಲಿಲ್ಲ. ಖಡ್ಗವಿದ್ಯೆ ಕಲಿಸಬಹುದು. ಅಶ್ವವಿದ್ಯೆ ಕಲಿಸಬಹುದು. ದಶಾರ್ಣ ನಗರದಲ್ಲಿ ತನ್ನ ಬೇಟೆಯ ಸ್ನೇಹಿತರಿದ್ದಾರೆ. ಅವರ ಜೊತೆಗೆ ಸಂಧಾನ ನಡೆಸಬೇಕು. ತನ್ನ ದಾಳಿಯೊಡನೆ ಅವರು ಒಳಗಿನಿಂದ ಬಂಡು ಹೂಡಬೇಕು…. +ದುರ್ಗಸಿಂಹನ ಹೊಟ್ಟೆ ಹಸಿಯಿತು. ಆಹಾರವನ್ನು ತರಲು ಮರೆತಿದ್ದನು. ಅಲ್ಲಿಯೇ ಗುಡ್ಡದ ಝರಿಯಲ್ಲಿ ನೀರು ಕುಡಿದು, ಕವಳೆ ಹಣ್ಣು ತಿಂದು, ಒಂದು ಗಿಡಕ್ಕೆ ಕುದುರೆ ಕಟ್ಟಿ ನಿದ್ರೆ ಹೋದನು. +ಸುಮಾರು ಎರಡು ಪ್ರಹರ ನಿದ್ದೆ ಮಾಡಿರಬಹುದು. ಜನರ ಮಾತು ಕೇಳಿಸಿ ತಟ್ಟನೆ ಸಮುದ್ರದ ಬುಡದಿಂದ ಗುಳ್ಳೆ ಏಳುವಂತೆ ಅವನ ಜಾಗ್ರತ ಮನಸ್ಸು ನಿದ್ರಾಸಾಗರದ ಬುಡದಿಂದ ಮೇಲಕ್ಕೆದ್ದು ತಟ್ಟನೆ ನಿಚ್ಚಳ ಎಚ್ಚರಕ್ಕೆ ಸ್ಪೋಟಗೊಂಡಿತು. ಯಾರೋ ಹೇಳುತ್ತಿದ್ದರು: “ಇವನೇ ಶ್ರವಣಾಳ ಮಾನಭಂಗ ಮಾಡಿದವನು. ನಿನ್ನೆ ನಮ್ಮಿಂದ ಧಿಕ್ಕಾರಗೊಂಡವನು! ಇವನೇ! ಇವನೇ!” +ಅವನ ಸುತ್ತಲೂ ಧನುರ್ಧಾರಿಗಳಾದ ಶಬರ ಯುವಕರು ಮತ್ತು ಒಬ್ಬ ಕೈಕಾಲಿಲ್ಲದ ಕುಳ್ಳ-ನಿಂತಿದ್ದರು. ಎದ್ದು ಕೂತು ತಟ್ಟನೆ ಮೇಲಕ್ಕೆ ಜಿಗಿದು ಕತ್ತಿಯನ್ನು ಸೆಳೆದುಕೊಂಡನು. ಮಾತಾಡಿದವನ ಮೇಲೆ ಕತ್ತಿ ಪ್ರಹಾರಮಾಡಲೆಂದು ಕತ್ತಿ ಎತ್ತಿದನು. ಆಗ ಏನೋ ಮಿಂಚಿದಂತಾಯಿತು. ಕೈಯಲ್ಲಿ ಒಮ್ಮೆಲೇ ನೋವೆದ್ದು ಬಲ ಉಡುಗಿದಂತಾಯ್ತು. +ರೆಪ್ಪೆ ಬಡಿಯುವಷ್ಟು ಬೇಗನೆ ಆ ಕುಳ್ಳನು ತನ್ನ ಪುಟ್ಟ ಬಿಲ್ಲಿನಿಂದ ಬಿಟ್ಟ ಬಾಣವು ದುರ್ಗಸಿಂಹನ ಮುಂಗೈಯ ಎರಡು ಎಲವುಗಳ ಮಧ್ಯದಲ್ಲಿ ನೀಟಾಗಿ ಸೇರಿತ್ತು. ಅವನು ಯಾವಾಗ ಬಿಲ್ಲು ಎತ್ತಿದನೋ, ಗುರಿ ಇಟ್ಟನೋ, ಹೆದೆಯೇರಿಸಿದನೋ ಯಾರಿಗೂ ತಿಳಿಯದು. ದುರ್ಗಸಿಂಹನ ಕತ್ತಿ ಸಡಲಿ ಟಣತ್ಕಾರದಿಂದ ನೆಲಕ್ಕೆ ಬಿತ್ತು. ಆದರೆ ಶಬರರು ಯಾರೂ ಅಚ್ಚರಿಪಡಲಿಲ್ಲ. ಬಾಣ ಎಷ್ಟು ನೀಟಾಗಿತ್ತೆಂದರೆ, ಅವನ ಎರಡೂ ಎಲವುಗಳಿಗೆ ಧಕ್ಕೆ ಮಾಡದೆ ಮಾಂಸವನ್ನು ಪ್ರವೇಶಿಸಿ ಒಂದು ತುದಿ ಆರುಪಾರು ನಿಂತಿತ್ತು. ದುರ್ಗಸಿಂಹನು ನೋವಾದರೂ ಆ ಕುಳ್ಳನ ಕೌಶಲ್ಯಕ್ಕೆ ಬೆಕ್ಕಸ ಬೆರಗಾದನು. ನೋಡುವಷ್ಟರಲ್ಲಿ ಅವನಿಗೆ ಬಾಹುಗಳೇ ಇದ್ದಿಲ್ಲವೆಂದು ಸ್ಪಷ್ಟವಾಯಿತು.ಮೀನದ ತುಪ್ಪಳದಂತೆ ಅವನ ಎರಡು ಹಸ್ತಗಳು ಭುಜಕ್ಕೆ ಅಂಟಿಕೊಂಡಿದ್ದವಷ್ಟೇ. ಅವನ ಬಿಲ್ಲುಬಾಣಗಳು ಮಕ್ಕಳ ಆಟಿಕೆಯಂತಿದ್ದವು. ದುರ್ಗಸಿಂಹನಿಗೆ ಬಾಣ ತಾಕಿದರೂ ರಕ್ತಸ್ರಾವವಾಗಲು ಕೆಲವು ಕ್ಷಣಗಳೇ ಹಿಡಿದವು. ಅಷ್ಟು ನಿಖರವಾದ ಗುರಿ. +ದುರ್ಗಸಿಂಹನು ಬಾಣ ತಾಕಿದ ಕೈಯಿಂದಲೇ ಚಪ್ಪಾಳೆ ಬಾರಿಸಿ “ಭಾಪು!” ಅಂದನು. +ಯಾರೂ ಅವನತ್ತ ಲಕ್ಷಕೊಡಲಿಲ್ಲ. ಕುಳ್ಳನ ಮುಖವೂ ನಿರ್ವಿಕಾರವಾಗಿತ್ತು. ಶಬರರು ತಮ್ಮತಮ್ಮೊಳಗೆ “ಇವನಿಗೆ ಏನು ಶಾಸ್ತಿ ಮಾಡಬೇಕು?” ಎಂಬ ವಿಚಾರವಾಗಿ ಚರ್ಚೆ ಮಾಡತೊಡಗಿದರು, ತಮ್ಮ ಭಾಷೆಯಲ್ಲಿ. +“ನಾನು ಈಗಾಗಲೇ ಶ್ರವಣಾಳಿಗೆ ದಂಡ ತೆತ್ತಿದ್ದೇನೆ”-ಕೂಗಿದ ದುರ್ಗಸಿಂಹ. +ಎರಡೂ ಭಾಷೆ ಬಲ್ಲ ಒಬ್ಬ ಶಬರನು ಹೇಳಿದನು; “ಅದು ನಿಮ್ಮ ಜಾತಿಯ ನ್ಯಾಯ, ಶಬರರ ಕಾನೂನು ಬೇರೆ ತರಹದ್ದು.” +“ಆಗಲಿ. ನಿಮ್ಮ ಕಾನೂನಿನಂತೆಯೇ ಶಾಸ್ತಿ ಮಾಡಿರಿ.” +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಕಿರಣ್.ಎಂ +ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_493.txt b/Kannada Sahitya/article_493.txt new file mode 100644 index 0000000000000000000000000000000000000000..b029473f62527f88e3aab7b88bcba792d97d573f --- /dev/null +++ b/Kannada Sahitya/article_493.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸ್ನೇಹಿತರೆ, +‘ಕನ್ನಡ ಸಾಹಿತ್ಯದ ಕೆಲವು ಮುಖ್ಯ ವಾಗ್ವಾದಗಳು’ ಎಂಬುದು ಈ ಬಾರಿಯ ಸಂಸ್ಕೃತಿ ಶಿಬಿರದ ಪ್ರಧಾನ ಆಶಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾನೀಗ ಒಂದು ಗೋಷ್ಠಿಯನ್ನು ನಡೆಸಿಕೊಡುತ್ತಿದ್ದೇನೆ. ಈ ಚರ್ಚೆಯು ಕನ್ನಡದ ಛಂದೋರೂಪಗಳನ್ನು ಕುರಿತಾದುದು ಹಾಗೂ ಆ ಛಂದೋರೂಪಗಳ ಚರಿತ್ರೆಯ ಅಧ್ಯಯನದ ಮುಖಾಂತರ ಒಟ್ಟೂ ಕನ್ನಡ ಸಾಹಿತ್ಯದ ಚರಿತ್ರೆಯ ಅಧ್ಯಯನವನ್ನು ಮಾಡುವ ಸಾಧ್ಯತೆಯನ್ನು ಕುರಿತಾದುದು. +ಮುಖ್ಯ ವಿಷಯಕ್ಕೆ ಬರುವ ಮೊದಲು ಕೆಲವು ಪ್ರಾಸ್ತಾವಿಕ ಅಂಶಗಳು: +ಪ್ರಸ್ತುತ ಜಗತ್ತಿನ ಜ್ಞಾನರೂಪಗಳಲ್ಲಿ ಕೆಲವು ಇತ್ತೀಚಿಗಷ್ಟೆ ಬೆಳೆದು ಬಂದಿರುವಂಥವು. ಈ ಹೊಸ ಜ್ಞಾನರೂಪಗಳಲ್ಲಿ ಕೆಲವು ವೈಜ್ಞಾನಿಕ ಪರಿಪೂರ್ಣತೆಯನ್ನು ಪಡೆದುಕೊಂಡವು. ಕೆಲವು ಅಧ್ಯಯನಕ್ರಮಗಳ ಮಟ್ಟಿಗೆ ಶಕ್ತಿದಾಯಕವಾದ ವೈಜ್ಞಾನಿಕ ಪರಿಪೂರ್ಣತೆಯ ಅಂಶ, ಸಾಹಿತ್ಯ ಚರಿತ್ರೆಯ ಅಧ್ಯಯನದಂಥ ಇನ್ನಿತರ ಕ್ರಮಗಳ ಮಟ್ಟಿಗೆ ಮಾತ್ರ ಪೂರಕವಾಗಿಯೆ ಪರಿಣಮಿಸಿತು. ಚಾರಿತ್ರಿಕ ಪ್ರಜ್ಞೆ ಅನ್ನುವುದು ಒಂದು ಆಧುನಿಕ ಸಂವೇದನೆ. ಚರಿತ್ರೆಯನ್ನು ಗ್ರಹಿಸುವಂತಹ ಈ ರೀತಿಯ ಪ್ರಜ್ಞೆ ಸಾಹಿತ್ಯ ಚರಿತ್ರೆಯಂತೆಯೇ ಗ್ರಹಿಸಲೆಳಸುವ ಒಂದು ಮೋಹಕ ದುರಭ್ಯಾಸ ಹಬ್ಬಿತು. ಈ ರೀತಿಯ ಸಾಹಿತ್ಯ ಚರಿತ್ರೆ ಅನ್ನುವುದು ಒಂದು ಕೃತಕವಾದ ವಿಕಲ್ಪ. ಹಾಗಾಗಿ ಇಂದು ಸಾಹಿತ್ಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಹಾಗೂ ಅದಕ್ಕೆ ಒಂದು ಬಗೆಯ ರಮ್ಯತೆಯನ್ನು ತಂದುಕೊಡುವುದರಲ್ಲಿ ಸಾಹಿತ್ಯಚರಿತ್ರೆಯ ವಿಧಾನವನ್ನು ಬಿಟ್ಟುಕೊಡುವುದು ಅನಿವಾರ್ಯವೇನೋ ಎಂದು ನನಗನಿಸುತ್ತದೆ. ಸಾಹಿತ್ಯವನ್ನು ಬಿಟ್ಟುಕೊಡದೆ ಕವಿ-ಕೃತಿ-ಛಂದಸ್ಸುಗಳ ಜೊತೆಗಿನ ನಮ್ಮ ಅನುಸಂಧಾನವನ್ನು ಬಿಟ್ಟುಕೊಡದೆ ಸಾಹಿತ್ಯದ ಚರಿತ್ರೆಯನ್ನು ಮಾತ್ರ ಹೊಸದೊಂದು ಕ್ರಮದ ಮುಖಾಂತರ ಸಮೀಪಿಸಲು ಪ್ರಯತ್ನಿಸಿದಾಗಲಷ್ಟೆ ಅದರ ಒಳಸತ್ಯಗಳು ನಮಗೆ ಗೋಚರವಾಗಬಹುದು. ಅದರಲ್ಲೂ ಕನ್ನಡ ಸಾಹಿತ್ಯ ಸಂಸ್ಕೃತಿಯೊಳಗಡೆ ದೇಶದ ಕಲ್ಪನೆ ಪ್ರಮುಖವಾಗಿದೆಯೆ ಹೊರತು ಕಾಲದ ಕಲ್ಪನೆಯಲ್ಲ. +ಎರಡನೆಯದಾಗಿ, ಆತ್ಮೀಯ ಶತ್ರುತ್ವವೆನ್ನುವುದು ಭಾರತೀಯ ಸಂಸ್ಕೃತಿಯ ಮೂಲಭೂತ ಗುಣಗಳಲ್ಲೊಂದು. ಭಾರತೀಯ ಸಂಸ್ಕೃತಿಯು ಏಕರೂಪಿಯಾದದು, ಏಕಶಿಲಾಕಾರದ್ದು ಎನ್ನುವ ಕಲ್ಪನೆ ನಮ್ಮ ತೀರ ಇತ್ತೀಚಿನ ಅಧ್ಯಯನಕ್ರಮಗಳಿಂದ ರೂಪಿತವಾಗಿರುವ ಒಂದು ಕಲ್ಪನೆ. ನಾವಿಂದು ’ಏಕಘನಾಕೃತಿ’ಯದ್ದು ಎಂದು ಪರಿಭಾವಿಸುವ ಭಾರತೀಯ ಸಂಸ್ಕೃತಿಯ ಒಳಗಡೆ ವಾಸ್ತವದಲ್ಲಿ ಅನೇಕಾನೇಕ ವೈರುದ್ಧ್ಯಗಳು ಹಾಗೂ ಸಂಘರ್ಷಗಳು ತುಂಬಿಕೊಂಡಿವೆ. ಅದರ ಬಹುಧಾರೆಗಳಲ್ಲಿ ಪ್ರತಿಯೊಂದು ಕೂಡಾ ಇನ್ನೊಂದನ್ನು ತನ್ನ ವಿರೋಧಿಯಂತೆ ಪರಿಗಣಿಸುತ್ತಾ ಜೊತೆಗೆಯೇ ಆ ಇನ್ನೊಂದನ್ನು ನಿರಂತರವಾಗಿ ಜೀರ್ಣಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಂಡಿರುತ್ತದೆ. ಇಂಥವೊಂದು ಪ್ರಕ್ರಿಯೆಯಲ್ಲಿ ಹಿಂಸೆಯೆನ್ನುವುದೂ ಒಂದು ಅನಿವಾರ್ಯ ಅಂಶವಾಗಿರುತ್ತದೆ. ಭಾರತೀಯ ಸಂಸ್ಕೃತಿ ಅಥವಾ ಕನ್ನಡ ಸಂಸ್ಕೃತಿಯ ಏಕಾಕೃತಿಯ ಕೃತಕ ಕಲ್ಪನೆಯ ಸುಂದರರೂಪದ ಹಿಂದೆ ಇಂಥ ಹಿಂಸೆಯ ಅನೇಕ ವಿದ್ಯಮಾನಗಳು ಅಡಗಿಕೊಂಡಿರುತ್ತವೆ. ಈ ಅಮೂರ್ತ ಹಿಂಸೆಯ ರೂಪಗಳು ಒಂದು ಬಗೆಯ ರಸಾನುಭವದ ಘನೀಕರಣಕ್ಕೆ ಒಳಗಾಗಿರುತ್ತವೆ. +ಮೂರನೆಯದಾಗಿ ಸಂಸ್ಕೃತಿಯನ್ನು ಕೆತ್ತಿನಿಲ್ಲಿಸುವ ಸ್ಮೃತಿಸಂಚಯಕ್ಕೆ ನೀಡುವ ಹಿಂಸೆಯು ಅಂತಿಮವಾಗಿ ಚರಿತ್ರೆಯಲ್ಲಿ ನಿಜವಾದ ಹಿಂಸೆಯಾಗಿ ಪರಿವರ್ತಿತವಾಗುತ್ತದೆ. ಇದು ಸಂಸ್ಕೃತಿ-ಚರಿತ್ರೆ ಅಥವಾ ಸ್ಮೃತಿ-ಚರಿತ್ರೆಗಳ ನಡುವಿನ ಮೂಲಭೂತ ಸಂಬಂಧಗಳಲ್ಲೊಂದು. ಹಾಗಾಗಿ, ಸಾಮಾನ್ಯವಾಗಿ ಧಾರ್ಮಿಕ ಸಾಹಿತ್ಯ ಕೃತಿಗಳು ಕಾಣಿಸಿಕೊಡುವಂತೆ ನಾವು ಏನನ್ನಾದರೂ ಹಿಂಸಿಸಬಹುದು. ಆದರೆ ಸ್ಮೃತಿಯನ್ನು ಮಾತ್ರ ಹಿಂಸಿಸಲಾಗದು. ಈ ಕಾರಣಕ್ಕಾಗಿಯೆ ಜನ್ನನ ’ಯಶೋಧರ ಚರಿತೆ’ಯಲ್ಲಿ ಹಿಟ್ಟಿನ ಕೋಳಿಯನ್ನು ಬಲಿಕೊಡಲು ಪ್ರಯತ್ನಿಸಿದಾಗ ಅದು ಜೀವ ಬಂದು ಹಾರಿಹೋಗುತ್ತದೆ. +ನಾಲ್ಕನೆಯದಾಗಿ, ಛಂದಸ್ಸಿನ ಕ್ಷೇತ್ರದಲ್ಲಿ ನಡೆಯುವಂತಹ ಕಾಳಗಗಳು ಹಾಗೂ ಸಂಘರ್ಷಗಳು ಯಾವುದೇ ನಿಜವಾದ ಕಾಳಗಗಳಿಗಿಂತ ಹೆಚ್ಚು ನಿಜವಾದುವು ಹಾಗೂ ಬಹುಮುಖಿಯಾದುವು. ಛಂದಸ್ಸು ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲಪ್ರಾಣರೂಪಿ ಪರಿಕಲ್ಪನೆಗಳಲ್ಲಿ ಒಂದು. ಅದು ಒಂದು ಬಗೆಯ ನೇಯ್ಗೆ. ಛಂದಸ್ಸೆಂಬ ಈ ಅಗಾಧ ನೇಯ್ಗೆಯಲ್ಲಿ ಒಂದು ಸಂಸ್ಕೃತಿ ಕಾಲಾನುಕ್ರಮದಲ್ಲಿ ಹಲವು ಎಳೆಗಳನ್ನು ಹೊರಗೆ ತಳ್ಳುತ್ತಲೂ ಹಲವನ್ನು ಒಳಗೆ ಸೇರಿಸಿಕೊಳ್ಳುತ್ತಲೂ ಸಾಗುತ್ತಿರುತ್ತದೆ. ಹಾಗೆ ತ್ಯಕ್ತವಾದ ಎಳೆಗಳು-ಛಂದೋರೂಪಗಳು-ಕೆಲವು ಎಲ್ಲೋ ಒಂದೆಡೆ ಬೇತಾಳಗಳ ಹಾಗೆ, ನೀರುನೆಲೆಯಿಲ್ಲದೆ ಅಲೆವ ಪಿತೃಪಿತಾಮಹರ ಹಾಗೆ ಅಲೆದಾಡುತ್ತಿದ್ದು ಮುಂದೆ ಎಂದೋ ಒಂದು ಕಾಲಘಟ್ಟದಲ್ಲಿ ಪುನಃ ಚರಿತ್ರೆಯ ಹಾಸಿನೊಳಗಡೆಗೆ ಪ್ರವೇಶಿಸಿ ತಮ್ಮನ್ನು ಪುನರ್ ಪ್ರತಿಷ್ಠಾಪನೆಗೊಳಿಸಿಕೊಳ್ಳುತ್ತದೆ. ಈ ರೀತಿಯಲ್ಲಿ ನೋಡಿದಾಗ ಛಂದೋರೂಪಗಳ ಅಧ್ಯಯನ ನಮಗೆ ಹೊಸದಾದ ಒಳನೋಟಗಳನ್ನೇ ನೀಡಬಲ್ಲದು. +ಈ ಹಿನ್ನೆಲೆಯಲ್ಲಿಯೆ, ಕನ್ನಡದಂತಹ ಒಂದು ಭಾಷೆಯ ಅಂತಸ್ಥ ಸ್ಮೃತಿಯ ಒಳಗಡೆಗೆ ಸಂಭವಿಸಿರುವ ಕೆಲವು ಆದಿಮವಾದ ಕೋಲಾಹಲಗಳನ್ನೂ ಸಂಘರ್ಷಗಳನ್ನೂ ಮತ್ತೆ ಕಂಡುಕೊಳ್ಳುವ ಪ್ರಯತ್ನವನ್ನೂ ನಾನಿಲ್ಲಿ ಮಾಡುತ್ತಿದ್ದೇನೆ. +ಕನ್ನಡದ ಮಟ್ಟಿಗೆ ಇಂಥದೊಂದು ಆದಿಮ ಪ್ರಳಯ ಸಂಭವಿಸಿದ್ದು ನೃಪತುಂಗನ ಪೂರ್ವ ಕಾಲದಲ್ಲಿ. ಆ ಪ್ರಳಯದ ನಂತರ ಮತ್ತೊಮ್ಮೆ ಸುವ್ಯವಸ್ಥೆಯನ್ನು ತಂದುಕೊಡಲು ಪ್ರಯತ್ನಿಸಿದ ನೃಪತುಂಗನಿಗೇ ತಾನು ಮಾಡುತ್ತಿರುವುದು ಆದಿಮವಾದ ಒಂದು ಕಾರ್ಯ ಎನ್ನುವ ನಂಬಿಕೆಯಿದೆ. ಹಾಗಾಗಿಯೆ, ಸಾವಿರ ಹೆಡೆಗಳ ವಾಸುಕಿ ಕೂಡಾ ಇದನ್ನು ಮಾಡಲಾರ ಎಂದು ಆತ ಹೇಳುತ್ತಾನೆ. ಇಂಥ ಸುವ್ಯವಸ್ಥೆಯನ್ನು ನೆಲೆಗೊಳಿಸುವಲ್ಲಿ ನೃಪತುಂಗನಿಗಿದ್ದ ದೊಡ್ಡ ಸವಾಲು ಆತನ ಸಾಂಸ್ಕೃತಿಕ ಪರಿಸರದ ಸಮೃದ್ಧತೆಯದಾಗಿತ್ತು. ಸುವ್ಯವಸ್ಥೆಯನ್ನು ಬಯಸುವವರಿಗೆ ಯಾವುದೆ ರೀತಿಯ ಅಪಾರ ವೈವಿಧ್ಯತೆಯೂ ಅಪಾಯಕಾರಿಯಾಗಿಯೂ ಆತಂಕಕಾರಿಯಾಗಿಯೂ ಆಗಿ ಕಾಣುವುದು ಸಹಜ. ಅದಕ್ಕಾಗಿಯೇ ನೃಪತುಂಗ ಹೊಸದೊಂದು ಬಗೆಯ ದೇಶಿಯನ್ನು ನಿರ್ದೇಶಿಸಲೂ ಸಂರಚಿಸಲೂ ಪ್ರಯತ್ನಿಸಿದ. ನಾವು ಸಾಮಾನ್ಯವಾಗಿ ದೇಶಿ ಎಂದು ಕರೆಯುವುದು ಕನ್ನಡ ವೈಯಾಕರಣರು ಹಾಗೂ ಕನ್ನಡ ಕಾವ್ಯಮೀಮಾಂಸಕರು ಮಾನ್ಯ ಮಾಡಿದ ದೇಶಿಗಳೆ ಆಗಿರುತ್ತವೆ. ಆದರೆ ವಾಸ್ತವದಲ್ಲಿ ಇಂಥ ಮಾನ್ಯತೆ ಪಡೆದ ರೂಪಗಳಿಗಿಂತ ಹೊರತಾದ ಬೇರೆ ಅಸಂಖ್ಯ ದೇಶಿಗಳು ಇರುತ್ತವೆ, ಇವೆ. ಕವಿರಾಜಮಾರ್ಗಕಾರನೇ ಇದನ್ನು ಒಪ್ಪಿಕೊಂಡಿದ್ದು. ಹೀಗಾಗಿ ’ಕವಿರಾಜಮಾರ್ಗ’ ಅತ್ಯಂತ ಜಟಿಲವೂ ಸಂಕೀರ್ಣವೂ ಆದ ಪ್ರಕ್ರಿಯೆಯೊಂದನ್ನು ಚಿತ್ರಿಸುವಂತಹ ಕೃತಿ. ಈ ಪ್ರಕ್ರಿಯೆಯಲ್ಲಿ ಕನ್ನಡವೆಂಬ ಒಂದು ಪುಟ್ಟ ಸಂಸ್ಕೃತಿಯು ಸಂಸ್ಕೃತ ಎನ್ನುವ ಆದರ್ಶ ಕನ್ನಡಿಯ ಎದುರು ನಿಂತು ತನ್ನನ್ನು ತಾನು ಸಂಘಟಿಸಿಕೊಂಡಿದೆ; ಕೆಲವೊಂದು‌ಎಳೆಗಳನ್ನು ಉಳಿಸಿಕೊಂಡು ಕೆಲವೊಂದನ್ನು ಕಳಚಿಬಿಟ್ಟು ತನ್ನನ್ನು ತಾನು ಕಟ್ಟಿಕೊಂಡಿದೆ. ಈ ದೃಷ್ಟಿಯಲ್ಲಿ ’ಕವಿರಾಜಮಾರ್ಗ’ ಒಂದು ರಾಜಕೀಯ ಕೃತಿಯೂ ಹೌದು. ನನ್ನ ಪ್ರಕಾರ ಕಳೆದ ಎರಡು ಸಾವಿರ ವರ್ಷಗಳಲ್ಲಿ ಬಂದ ಪ್ರಪಂಚದ ಹತ್ತು-ಹನ್ನೆರಡು ಅತ್ಯಂತ ಮಹತ್ವದ ರಾಜಕೀಯ ಕೃತಿಗಳ ಪಟ್ಟಿಯೊಂದನ್ನು ಮಾಡುವುದಾದಲ್ಲಿ ’ಕವಿರಾಜಮಾರ್ಗ’ ನಿಸ್ಸಂದೇಹವಾಗಿ ಅದರಲ್ಲಿ ಸೇರುವಂಥದು. +ಇಂದು ನಾವು ಮತ್ತೆ ಮತ್ತೆ ಉಲ್ಲೇಖಿಸುವ ಸಮಕಾಲೀನ ಜಾಗತೀಕರಣದ ಪ್ರಕ್ರಿಯೆಯ ಪುರಾತನ ರೂಪವೊಂದನ್ನು ’ಕವಿರಾಜಮಾರ್ಗ’ ನಮ್ಮೆದುರು ಬಿಚ್ಚಿಡುತ್ತದೆ. ಜಾಗತೀಕರಣವೆಂಬುದು ಯಾವತ್ತೂ ನಡೆಯುತ್ತಿರುವ ಒಂದು ಪ್ರಕ್ರಿಯೆ. ಅದು ಮೂಲಭೂತವಾಗಿ ಸ್ಥಳೀಯವಾದ್ದನ್ನು, ದೇಶಿಯಾದ್ದನ್ನು ಗುರುತಿಸುವ ಹಾಗೂ ಅದನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಇನ್ನೊಂದೆಡೆ ಅದು ಯಾವುದನ್ನು ಸ್ಥಳೀಯ ಎಂದು ಗುರುತಿಸುತ್ತಿರುತ್ತದೋ ಆ ’ಸ್ಥಳೀಯ’ವೂ ಒಂದು ಮಟ್ಟದಲ್ಲಿ ಬದಲಾವಣೆ ಹೊಂದುತ್ತ ಹೊಂದುತ್ತ ಆ ’ಜಾಗತಿಕ’ದ ಜೊತೆಗೆ ಸಾಮರಸ್ಯದ ಹೊಂದಾಣಿಕೆಯೊಂದನ್ನು ಸ್ಥಾಪಿಸಿಕೊಳ್ಳಲೆಳಸುತ್ತದೆ. ನಮ್ಮದೆ ಪರಿಸರದ ಒಂದು ಉದಾಹರಣೆಯನ್ನು ನೀಡುವುದಾದರೆ ಯಕ್ಷಗಾನ ಪ್ರಕಾರ ’ಸ್ಥಳೀಯ’ವೆಂದು ’ದೇಶಿ’ಯೆಂದು ಕರೆಸಿಕೊಂಡು ಹೆಚ್ಚುಹೆಚ್ಚು ’ಸ್ಥಳಿಯ’ವಾಗುತ್ತ ನಡೆದಂತೆಯೆ ಮಾರ್ಗ ಸಂಪ್ರದಾಯದ ಜೊತೆಗೆ ಸಾಮರಸ್ಯದ ಸಂಬಂಧವನ್ನೂ ಸ್ಥಾಪಿಸಿಕೊಂಡಿತು. ಅದೇ ಜೋಗಿ ಸಿದ್ಧಯ್ಯನ ಜೋಗಿಯಾಟದಂತಹ ಪ್ರಕಾರಕ್ಕೆ ಮಾತ್ರ ಇದು ಸಾಧ್ಯವಾಗಲಿಲ್ಲ. ಹೀಗಾಗಿ, ಕನ್ನಡ ವೈಯಾಕರಣರು ಮತ್ತು ಕಾವ್ಯ ಮೀಮಾಂಸಕರು ಯಾವುದನ್ನು ದೇಶಿ ಎಂದು ಕರೆದರೂ ಅದು ಮಾರ್ಗಕ್ಕೆ ಒಪ್ಪಿತವಾಗುವ ಹಾಗೂ ಮಾರ್ಗದ ಜೊತೆಗೆ ಹೊಂದಾಣಿಕೆ ಸಾಧಿಸುವ ದೇಶಿಯೆ ಹೊರತು; ಅದರಿಂದ ಹೊರಗಿರುವ ದೇಶಿಯಲ್ಲ. ಸಾಹಿತ್ಯ ಸಂಸ್ಕೃತಿಯೊಂದು ರೂಪುಗೊಳ್ಳುವ ಬಗೆಯೆ ಹೀಗೇ. ಒಂದು ರೀತಿಯ ಶುದ್ಧೀಕರಣದ ನೆಪದ ಒಳಗಡೆಗೆ, ಇಂಥ ಶುದ್ಧೀಕರಣ ಹಾಗೂ ವಿಸ್ತರೀಕರಣದ ಪ್ರಕ್ರಿಯೆ ಇನ್ನೊಂದು ರೀತಿಯಲ್ಲಿ ದಮನೀಕರಣದ ಪ್ರಕ್ರಿಯೆಯೂ ಹೌದು. ಹೀಗಾಗಿ ಕವಿರಾಜಮಾರ್ಗಕಾರ ’ಕುಲಗೆ ಪೊಲಗೆಡಿಸುವರ್ ಆಗಮಬಲಹೀನರ್’ ಎಂದು ಹೇಳುತ್ತಾನೆ. ಆಗಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಇದ್ದ ಅಧಿಕಾರವನ್ನು ಬಳಸಿಕೊಂಡು ಕಾವ್ಯಪರಂಪರೆಯೊಂದನ್ನು ಆತ ಕಟ್ಟಿಕೊಡುತ್ತಾನೆ. ಇದೇ ಕಾರಣಕ್ಕಾಗಿ ಮುಂದೆ ಕವಿಯೊಬ್ಬ ಆತನನ್ನು ’ಕನ್ನಡಿಯುಂ ಕೈದೀವೆಗೆಯುಂ’ ಎಂದು ಕರೆದದ್ದು. ಕನ್ನಡಿಯಲ್ಲಿ ನೋಡಿದಾಗ ಸಂಸ್ಕೃತ ಕಾವ್ಯಾದರ್ಶಕ್ಕೆ ಒಪ್ಪಿಗೆಯಾಗದ ಅನೇಕ ಸಂಗತಿಗಳು ಕನ್ನಡ ಕಾವ್ಯ ಸಂಸ್ಕೃತಿಯಲ್ಲಿವೆ ಎಂಬುದು ಆತನಿಗೆ ಗೋಚರವಾಯಿತು. ಅಂಥ ಅಂಶಗಳಾದ ಬೆದಂಡೆ ಚತ್ತಾಣ ಇತ್ಯಾದಿಗಳ ಬಗ್ಗೆ ಆತ ಚರ್ಚಿಸುತ್ತಾನೆ. ಅವುಗಳ ಸೊಗಸನ್ನು ಕುರಿತು ಪ್ರಸ್ತಾಪಿಸುತ್ತಾನೆ. ಇಲ್ಲಿ ಸಾಹಿತ್ಯಕ ಚರ್ಚೆಗೆ ಒಳಗಾಗುವ ಬೆದಂಡೆ ಚತ್ತಾಣದಂತ ಛಂದೋ ರೂಪಗಳು ಮುಂದೆ ನಾಗವರ್ಮನ ’ವರ್ಧಮಾನ ಪುರಾಣ’ ಹಾಗೂ ’ಅಭಿದಾನ ಕೋಶ’ಗಳಲ್ಲಿ ಸಮಾಜಶಾಸ್ತ್ರೀಯ ವ್ಯಾಖ್ಯೆಗೆ ಒಳಗಾಗುತ್ತವೆ. ಅಲ್ಲಿ ಬೆದಂಡೆ ಚತ್ತಾಣಗಳು ಮೊಂಬರು ಹಾಗೂ ಇಂದ್ರಜಾಲಕರ ಪ್ರಕಾರಗಳೆಂದು ಗುರುತಿಸಲ್ಪಡುತ್ತವೆ. ಹೀಗೆ, ಈ ಛಂದೋ ಪ್ರಕಾರಗಳನ್ನು, ಅವುಗಳ ಅಭಿನಯದ ಅವುಗಳನ್ನು ’ಪೇಳುವ’ ಕ್ರಮಗಳನ್ನು ಅಂಥದೊಂದು ಸಮಾಜ ಶಾಸ್ತ್ರೀಯ ಚೌಕಟ್ಟಿನೊಳಗಿಟ್ಟು ನೋಡತೊಡಗಿದಾಕ್ಷಣ, ಕನ್ನಡ ಸಾಹಿತ್ಯ ಸಂಸ್ಕೃತಿ ತನ್ನನ್ನು ಮೊದಲಬಾರಿಗೆ ಸಂಘಟಿಸಿಕೊಂಡಾಗ ಮತ್ತು ತನಗೆ ಸಾಂಸ್ಥೀಕೃತ ರೂಪವೊಂದನ್ನು ಕೊಟ್ಟುಕೊಂಡಾಗ; ಅದರಿಂದ ಯಾವೆಲ್ಲ ಅಂಶಗಳು ಕಳೆದುಹೋದವು ಎನ್ನುವ ಚಿತ್ರ ನಮಗೆ ಲಭ್ಯವಾಗಲಾರಂಭಿಸುತ್ತದೆ. +ಆದರೆ ಕನ್ನಡದ ಒಂದು ಸೌಭಾಗ್ಯವೆಂದರೆ ಇಂಥ ಸಂಗತಿಗಳು ಯಾವುವೂ ಚರಿತ್ರೆಯಲ್ಲಿ ಮರೆಯಾಗಿ ಹೋಗುವುದಿಲ್ಲ; ಸಾಹಿತ್ಯ ಸಂಸ್ಕೃತಿಯ ಒಳಗಂತೂ ಇದು ಖಂಡಿತ ಸಾಧ್ಯವಿಲ್ಲ. ಶೈಲಿ ಎನ್ನುವುದು ಒಂದು ಸ್ಮೃತಿ ಸಂಚಯ. ಒತ್ತಡದ ಸನ್ನಿವೇಶಗಳಲ್ಲಿ ಅದು ಕೆಲಕಾಲ ಮೋರೆ ಮುಚ್ಚಿ ಕೂರುವುದೇ ಹೊರತು ಸಂಪೂರ್ಣ ಮರೆಯಾಗಿ ಹೋಗುವುದಿಲ್ಲ. ಚಂಪೂವಿನ ಉದಾಹರಣೆಯನ್ನೇ ನೋಡಿ. ಒಂದು ಕಾಲದಲ್ಲಿ ಚಂಪೂ ವಿರಾಟ ರಾಜಪ್ರಕಾರವಾಗಿತ್ತು. ಇನ್ನಿತರ ಛಂದೋರೂಪಗಳು ಆ ರಾಜಛಂದೋರೂಪದಡಿಯಲ್ಲಿ ಇದ್ದುಕೊಂಡು ವಿನಯದಿಂದ ತಗ್ಗಿಬಗ್ಗಿ ನಡೆಯಬೇಕಾಗಿತ್ತು. ಹೀಗೆ ಕನ್ನಡದ ಅನೇಕ ಛಂದೋರೂಪಗಳು ಒಂದು ರೀತಿಯ ಮರೆಮುಸುಕಿನಲ್ಲಿ ಛದ್ಮವೇಷದಲ್ಲಿದ್ದುಕೊಂಡು ಬದುಕುಳಿದು ಬಂದದ್ದನ್ನು ಕಾಣಬಹುದು. ದೇಶಾಂತರದಲ್ಲಿ ವನವಾಸದಲ್ಲಿ ಇದ್ದು ಈ ಛಂದೋರೂಪಗಳು ಮುಂದೊಂದು ಕಾಲಘಟ್ಟದಲ್ಲಿ ಛದ್ಮವೇಷವನ್ನು ಕಳಚಿಹಾಕಿ ಛತ್ರಪತಿತ್ವವನ್ನು ಗಳಿಸಲು ಪ್ರಾರಂಭಿಸಿದವು. ಇವಕ್ಕೆ ನಿದರ್ಶನವಾಗಿ ಪಂಪ ಹಾಗೂ ನನ್ನಯರ ನಡುವಿನ ಸಂಬಂಧವನ್ನೂ ಚಂಪೂ ವಚನ ಹಾಗೂ ವಚನಕಾರರ ವಚನದ ನಡುವಿನ ಸಂಬಂಧವನ್ನು ಗಮನಿಸಬಹುದು. ಹೀಗೆ ಛಂದೋರೂಪಗಳು ತಮ್ಮ ಛದ್ಮವೇಷ ಮತ್ತು ಛತ್ರಪತಿತ್ವಗಳ ನಡುವೆ ಆಡುವ ಆಟದ ಕ್ರಮವೆ ಒಂದು ಸಾಹಿತ್ಯ ಚರಿತ್ರೆಯ ರೂಪವಾಗಬಲ್ಲುದು. ಇಲ್ಲಿ ಹಿಂಸೆಯ ಕಥನವಿದೆ. ಜೊತೆಗೆ ಅಷ್ಟೆ ಅಸಾಧಾರಣವಾದ ಒಂದು ಅತಿಕ್ರಾಂತತೆಯ ಮೀರುವಿಕೆಯ ಕಥನವೂ ಇದೆ. +ಈ ದೃಷ್ಟಿಯಿಂದ ನೋಡಲಾರಂಭಿಸಿದಾಗ ಕನ್ನಡ ಸಾಹಿತ್ಯದ ಒಟ್ಟೂ ಚರಿತ್ರೆ ಒಂದು ಅಪಾರ ಆಶಾವಾದದ ಕಥೆಯಾಗಿಯೂ ಕಾಣತೊಡಗುತ್ತದೆ. ಇಲ್ಲಿಯವರೆಗೆ ಬಂದ ಕನ್ನಡ ಸಾಹಿತ್ಯ ಚರಿತ್ರೆಗಳು, ಕನ್ನಡ ಛಂದಸ್ಸಿನ ಅಧ್ಯಯನಗಳು ಎಲ್ಲವೂ ಈ ಮಹತ್ವದ ಅಂಶವನ್ನು ಮನಗಾಣದ ಕಾರಣಕ್ಕಾಗಿಯೆ ಇಷ್ಟು ನಿಸ್ಸತ್ವವಾಗಿರುವುದು (ನಾನು ಛಂದಸ್ಸನ್ನು ಮೊದಲು ಅಧ್ಯಯನ ಮಾಡಿದ್ದು ಒಣಪಾಠವಾಗಿಯೆ ಮತ್ತು ನಿರ್ಜೀವ ತರಗತಿಗಳಲ್ಲಿಯೇ. ಆದರೆ ಏಳೆಂಟು ವರ್ಷಗಳ ಇತ್ತೀಚೆಗೆ ಛಂದಸ್ಸಿನ ಬಗ್ಗೆ ನನಗೆ ವಿಶೇಷವಾದೊಂದು ವ್ಯಾಮೋಹ ಬೆಳೆಯುತ್ತ ಬಂದಿತು. ಛಂದಸ್ಸನ್ನು ಕೇವಲ ಲಘು-ಗುರುಗಳ ಸಂಘಟನೆಯೆಂದೂ, ಭಾಷೆಯಲ್ಲಿ ಲಯದ ಅಥವಾ ಗಣಿತದ ಅಭಿವ್ಯಕ್ತಿಯೆಂದೊ ಪರಿಗಣಿಸುತ್ತಿರುವವರೆಗೆ ನಮಗೆ ಅದರ ಅಲ್ಪವಾದ ಪ್ರಾಥಮಿಕವಾದ ಸಂಗೀತಶಕ್ತಿ ಮಾತ್ರ ಗೋಚರಿಸುತ್ತದೆಯೆ ಹೊರತು ಛಂದೋ ರೂಪಗಳು ತಮ್ಮ ಗರ್ಭದಲ್ಲಿ ಹುದುಗಿಸಿಕೊಂಡಿರುವಂತಹ ಇಂಥ ಅಸಾಮಾನ್ಯ ವಿರಾಟ್ ಪ್ರಕ್ರಿಯೆ ಗೋಚರಿಸುವುದಿಲ್ಲ. ನನ್ನಮಟ್ಟಿಗೆ ಛಂದೋರೂಪಗಳು ಇನ್ಯಾವ ಸಾಹಿತ್ಯರೂಪಕ್ಕೂ ಮಾತ್ರವಲ್ಲ ಒಟ್ಟೂ ಸಾಹಿತ್ಯಕ್ಕೂ ಸಾಧ್ಯವಾಗದಂತಹ ಅಂತಿಮ ಪ್ರಾಮಾಣ್ಯವನ್ನು ಪಡೆದುಕೊಂಡಿರುತ್ತವೆ. ಒಂದು ಛಂದೋರೂಪದೊಳಗಡೆಗೆ ಅದರ ಸಂಸ್ಕೃತಿಯ, ಅದರ ನಾಡಿನ ಚರಿತ್ರೆ ಅಡಗಿರುತ್ತದೆ. ಈ ಅರ್ಥದಲ್ಲಿ ಛಂದಸ್ಸು ಒಂದು ಸಂಸ್ಕೃತಿಯ ಇತಿಹಾಸದ ಕಾಲಕೋಶವಾಗಿರುತ್ತದೆ. +ಚಂಪೂ. ವಚನ ಮತ್ತು ವಚನಕಾರರ ವಚನಗಳ ಉದಾಹರಣೆಯನ್ನು ಈ ಮೊದಲೆ ಪ್ರಸ್ತಾಪಿಸಿದ್ದೆ. ಅದನ್ನೆ ಸ್ವಲ್ಪ ವಿಸ್ತರಿಸಿ ಹೇಳುವುದಾದರೆ-ಪಂಪ ಮತ್ತು ರನ್ನರ ಕಾಲದಲ್ಲಿ ರಾಜಛಂದೋರೂಪವಾಗಿದ್ದ ಚಂಪೂಪ್ರಕಾರ ನಂತರ ವಚನಕಾರರ ಮಹಾಪ್ರಹಾರದಿಂದ ಎಷ್ಟು ತತ್ತರಿಸಿತೆಂದರೆ, ಅವರ ನಂತರ ಬಂದ ಎಷ್ಟೊ ಕವಿಗಳು ಚಂಪೂವನ್ನೆ ಬಳಸಿದರೂ ಕೂಡ, ರಾಜರನ್ನೂ ಆಸ್ಥಾನಗಳನ್ನೂ ಕುರಿತೆ ಬರೆದರೂ ಕೂಡ, ಪಂಪ-ರನ್ನರ ಬಗೆಯ ಉನ್ಮತ್ತತೆಯನ್ನಾಗಲಿ ಮಾಂತ್ರಿಕತೆಯನ್ನಾಗಲಿ ಮರಳಿ ತರಲು ಕನ್ನಡದ ಯಾವ ಕವಿಗೂ ಸಾಧ್ಯವಾಗಲಿಲ್ಲ. ವಚನಕಾರರು ’ಶ್ರೀವಿಜಯ’ ಕೃತಿಯಲ್ಲಿ ಅನಾದರಕ್ಕೆ ಗುರಿಯಾಗಿದ್ದರು. ’ಶ್ರೀವಿಜಯದ’ ಆ ದೃಷ್ಟಿಕೋನ ಕೇವಲ ಧಾರ್ಮಿಕವೂ ರಾಜಕೀಯಾತ್ಮಕವೂ ಆಗಿರದೆ ಸಾಹಿತ್ಯಕವೂ ಆಗಿತ್ತು. ಛಂದೋರೂಪದ ಬಗೆಗಿನ ಒಂದು ನಿರ್ದಿಷ್ಟ ಕಲ್ಪನೆಯಿಂದ ಪ್ರಭಾವಿತವಾಗಿದ್ದಿತು. ಹೀಗೆ ಅಮಾನ್ಯರಾಗಿದ್ದ ವಚನಕಾರರು ಮುಂದೆ ತಮ್ಮ ಪ್ರಭಾವವನ್ನು ಮೆರೆದರು. ನೇಮಿಚಂದ್ರನ ’ಲೀಲಾವತಿ ಪ್ರಬಂಧ’ ಮುಖ್ಯವಾದೊಂದು ಕೃತಿಯಾಗುವುದು ಇಂಥ ಕಾರಣಕ್ಕಾಗಿಯೂ ಕೂಡ. ನೇಮಿಚಂದ್ರನು ಹೊಯ್ಸಳ ರಾಜನೊಬ್ಬನನ್ನು ನಾಯಕನನ್ನಾಗಿಟ್ಟುಕೊಂಡು ಮಹಾಕಾವ್ಯವೊಂದನ್ನು ಬರೆಯಬಹುದಿತ್ತು ಎಂದು ಅನೇಕರು ಆಕ್ಷೇಪಿಸಿದ್ದುಂಟು. ಆದರೆ ನೇಮಿಚಂದ್ರನಿಗೆ ಪಂಪ ಮತ್ತು ರನ್ನರ ಮಾರ್ಗ ಅಸಹಜವಾಗಿ ಕಾಣತೊಡಗಿದ್ದರಿಂದ ಆತ ಒಂದು ಕಲ್ಪಕ ಕತೆಯನ್ನು ಬರೆದನೇ ಹೊರತು ಚರಿತ್ರೆಯ ಗೋಜಿಗೆ ಹೋಗಲಿಲ್ಲ. ಹೀಗೆ, ಕನ್ನಡಕಾವ್ಯ ಪ್ರತಿಭೆಗಿದ್ದ ಚರಿತ್ರೆಯ ಹುಚ್ಚನ್ನು ವಚನಕಾರರು ಬಹಳ ಯಶಸ್ವಿಯಾಗಿ ಬಿಡಿಸಿಬಿಟ್ಟರು. ಒಬ್ಬ ರಾಜನ ಪಟ್ಟಾಭಿಷೇಕವೆನ್ನುವುದು ಇಡೀ ಜಗತ್ತೇ ಹೊಸದಾಗುತ್ತಿದೆ ಎಂಬ ಅನುಭವಕ್ಕೆ ಸೂಚಕ ಅನ್ನುವ ಪಂಪನಂತಹ ಸಾಲುಗಳನ್ನು ನಂತರದ ದೊಡ್ಡ ಕವಿಗಳು ಯಾರೂ ಬರೆಯಲಾಗಲಿಲ್ಲ. +ಈ ಬಗೆಯ ಕೆಲವು ವಾದಗಳು ಇಪ್ಪತ್ತನೆಯ ಶತಮಾನದವರೆಗೂ ನಡೆದುಬಂದಿರುವುದುಂಟು. ಬಿ. ಎಂ. ಶ್ರೀ. ಮತ್ತು ಬೇಂದ್ರೆಯವರ ಮಧ್ಯೆ ನಡೆದದ್ದು ಇದೇ ರೀತಿ ಒಂದು ವಾಗ್ವಾದ. ಪಂಪ ಪ್ರಭುತ್ವದ ಪರವಾಗಿರುವವನಲ್ಲ. ಅದರ ವಿರೋಧಿ ಎನ್ನುವ ಅರ್ಥದ ಬಿ. ಎಂ. ಶ್ರೀ. ಯವರ ನಿಲುವನ್ನು ಒಪ್ಪದ ಬೇಂದ್ರೆ ಅದನ್ನು ’ವಿಕಟ ವಿಮರ್ಶೆ’ ಯೆಂದೂ ’ಚಂದ್ರಕಳೆಗೆ ಸೋಂಕಿ ತನ್ನ ಕಪ್ಪು ಕಲೆಯನ್ನು ಮರೆಸುವ ವಾಮತಂತ್ರ ಇದು’ ಎಂದೂ ಕರೆದರು. ಭಾರತೀಯ ಸಾಂಸ್ಕೃತಿಕ ರಾಜಕಾರಣದೊಳಗೆ ವಾಮತಂತ್ರ ಎನ್ನುವುದು ಬಹು ಮುಖ್ಯವಾದ ಪದ. ಎಲ್ಲ ಸಂಪ್ರದಾಯಸ್ಥರಿಗೂ ವಾಮತಂತ್ರ-ವಾಮಾಚಾರಗಳ ಬಗ್ಗೆ ಆಳವಾದ ಭಯಾತಂಕಗಳಿರುವುದು ಸಹಜ. ಇಲ್ಲಿ ಬೇಂದ್ರೆ ಅಂಥ ಸಂಪ್ರದಾಯಸ್ಥರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ’ಕರ್ಣರಸಾಯನಮಲ್ತೆ ಭಾರತಂ’ ಎನ್ನುವುದನ್ನು ಬೇಂದ್ರೆ ಹೀಗೆ ಅರ್ಥೈಸುತ್ತಾರೆ. ಜೈನರಿಗೆ ಕರ್ಣರಸಾಯನ ಎನ್ನುವ ಪದದಲ್ಲಿ ’ಶೃತಿಮನೋಹರ’ ಎನ್ನುವ ವಿಶೇಷ ಅರ್ಥವಿದೆ. ಅದನ್ನು ನಾವು ’ಕರ್ಣನ ಪಾತ್ರಕ್ಕೆ ಅನ್ವಯವಾಗುವಂಥದು’ ಎಂದು ತಿಳಿದರೆ ತಪ್ಪಾಗುತ್ತದೆ. ಹಾಗೆಯೇ ದುರ್ಯೋಧನನ ಬಗ್ಗೆ ಬಳಕೆಯಾಗುವ ’ಮಹಾನುಭಾವ’ ಎನ್ನುವ ಪದಕ್ಕೂ ಬೇಂದ್ರೆ ಶಬ್ದಕೋಶದ ಆಧಾರದ ಮೇಲೆಯೇ ವ್ಯಾಖ್ಯಾನ ನೀಡುತ್ತಾರೆ. ’ಮಹಾನುಭಾವ’ ಎಂದಾಕ್ಷಣ ’ಮಹಾವ್ಯಕ್ತಿ’ ಎಂದು ಅರ್ಥೈಸಬೇಕಾಗಿಲ್ಲ (ಇಂದಿಗೂ ಉತ್ತರಭಾರತದಲ್ಲಿ ’ಮಹಾನುಭಾವಿ ಪಂಥ’ ಎನ್ನುವ ಒಂದು ಪಂಥವೇ ಇದೆ.) ’ಮಹಾನುಭಾವ’ ಎಂದರೆ ಕಿಟ್ಟೆಲ್ ನಿಘಂಟು ಹೇಳುವ ಹಾಗೆ ’ಬಲಶಾಲಿ’ ಎನ್ನುವ ಅರ್ಥವಾಗುತ್ತದೆ ಎಂದು ಅವರು ವಾದಿಸುತ್ತಾರೆ. ಈ ರೀತಿಯಾಗಿ ಬೇಂದ್ರೆ ಕಲಾಕೃತಿಯೊಂದನ್ನು ಪುನಸ್ಸಂಘಟಿಸುವ ಹಾಗೂ ಆ ಮೂಲಕ ಅದರ ಮೂಲಾರ್ಥವನ್ನು ಪ್ರತಿಷ್ಠಾಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿ. ಎಂ. ಶ್ರೀ. ಯವರದು ಇಂಥ ಸಂಪ್ರದಾಯಸ್ಥ ಕ್ರಮಕ್ಕೆ ವಿರುದ್ಧವಾದ ಆಧುನಿಕರ ಕ್ರಮ. ಅವರು ತಮ್ಮ ಅಗತ್ಯ-ಅಪೇಕ್ಷೆಗಳಿಗೆ ತಕ್ಕಂತಹ ವಾಚನಾಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿ. ಎಂ. ಶ್ರೀ. ಯವರ ನವೋದಯ ವಿಮರ್ಶೆಯು ಆಧುನಿಕ ವಿಮರ್ಶೆಯ ಒಂದು ಮೂಲಭೂತ ತಂತ್ರವನ್ನು ಬಳಸುತ್ತದೆ. ಅದರ ಪ್ರಕಾರ ಕೃತಿಕಾರ ಇನ್ನಿಲ್ಲವಾದ್ದರಿಂದ ಕೃತಿಯನ್ನು ಓದುವ ಕ್ರಮದಲ್ಲಿ ಅವನನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದೇ ಲೇಸು. ಹೀಗೆ, ಬಿ. ಎಂ. ಶ್ರೀ. ತಮ್ಮ ಮನೋಧರ್ಮದ ಅನುಸಾರವಾಗಿ ಆ ಕೃತಿಯಲ್ಲಿ ಪ್ರತಿನಾಯಕ ಸಿದ್ಧಾಂತವೊಂದನ್ನು ಕಾಣುವ ಹಾಗೂ ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಾರೆ. ಇಂಥ ವಾಮಧರ್ಮ ಆಧುನಿಕ ಯುಗಧರ್ಮದ ಒಂದು ಸಹಜ ಅವಿಭಾಜ್ಯ ಅಂಗವೂ ಹೌದು. ಪ್ರತಿನಾಯಕನನ್ನು ಎತ್ತಿಹಿಡಿಯುವುದು ಪ್ರಜಾಪ್ರಭುತ್ವದ ಮೂಲ ಸೂತ್ರಗಳಲ್ಲೊಂದು. ಹೀಗೆ, ಬೇಂದ್ರೆ, ಪ್ರಾಚೀನರ ಪರವಾಗಿ ಮಾತನಾಡುತ್ತಿದ್ದರೆ ಬಿ. ಎಂ. ಶ್ರೀ. ಆಧುನಿಕರ ಪರವಾಗಿ ಮಾತನಾಡುತ್ತಿದ್ದಾರೆ. ವಿಚ್ಛೇದ ಸ್ವಾತಂತ್ರ್ಯವನ್ನು ಬಯಸುವ ಆಧುನಿಕರ ಮೂಲಭೂತ ಹಕ್ಕೊಂದರ ಪರವಾಗಿ ಮಾತನಾಡುತ್ತಿದ್ದಾರೆ. ಆ ದೃಷ್ಟಿಯಿಂದ ಇವೆರಡು ನಿಲುವುಗಳು ಕೂಡ ಭಾರತೀಯ ಸಂಸ್ಕೃತಿಯಲ್ಲಿ ಹರಿದುಬಂದಿರುವ ವಿರಾಟ್ ಪರಂಪರೆಯೊಂದರ ಧಾರೆಗಳು. +ಇನ್ನೊಂದು ನಿದರ್ಶನ: ಜೈನನಾದ ರನ್ನ, ಭೀಮನನ್ನು ನಾಯಕನ್ನಾಗಿಟ್ಟುಕೊಂಡು ’ಸಾಹಸ ಭೀಮ ವಿಜಯ’ ಕಾವ್ಯವನ್ನು ರಚಿಸಿದ (ಮುಳಿಯ ತಿಮ್ಮಪ್ಪಯ್ಯನವರು ಇಂಥ ಕಾವ್ಯದ ಮೂಲತಂತ್ರವನ್ನು ’ಸಮಾಸೋಲಂಕಾರ’ ಎಂದು ಕರೆಯುತ್ತಾರೆ ’ಚಂದ್ರಪ್ರಭ ಪುರಾಣ’ದಿಂದ ಉಲ್ಲೇಖವೊಂದನ್ನು ತೆಗೆದುಕೊಂಡು, ಪುರಾಣದ ವ್ಯಕ್ತಿಯೋರ್ವನನ್ನೂ ಚಾರಿತ್ರಿಕ ವ್ಯಕ್ತಿಯೋರ್ವನನ್ನೂ ಸಮೀಕರಿಸಿ ಒಬ್ಬನ ಕಥೆಯನ್ನು ಇನ್ನೊಬ್ಬನ ಕಥೆಯಂತೆಯೇ ಹೇಳುವುದು ಸಮಾಸೋಲಂಕಾರದ ಪರಿ ಎಂದವರು ವಿವರಿಸುತ್ತಾರೆ. ಇದು ಭಾರತೀಯ ಪರಂಪರೆಯಲ್ಲಿ ಮಾನ್ಯತೆಯನ್ನು ಪಡೆದಿದ್ದ ಒಂದು ಪ್ರಬಂಧಕಾವ್ಯತಂತ್ರವೂ ಹೌದು. ಪಂಪ ಬಳಸಿದ್ದೂ ಇದೇ ತಂತ್ರವನ್ನು. ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸುವ ಮುಖಾಂತರ ಆತ ಅರಿಕೇಸರಿಗೂ ತನ್ನ ಕೃತಿಗೂ ಅಖಿಲ ಭಾರತ ಸಂಸ್ಕೃತಿಯ ಮಾನ್ಯತೆಯನ್ನು ಪಡೆದುಕೊಳ್ಳಲು ಯತ್ನಿಸಿದ. ರನ್ನನೂ ಇನ್ನೂರ ವರ್ಷಗಳ ನಂತರ ಇದೇ ಕರ್ನಾಟಕದಲ್ಲಿ ಬಂದ ಮಧ್ವಾಚಾರ್ಯರು ತಮ್ಮ ’ಮಹಾಭಾರತ ತಾತ್ಪರ್ಯ ನಿರ್ಣಯ’ದಲ್ಲಿ ರನ್ನನ ನಿಲುವನ್ನೇ ತಾಳುತ್ತಾರೆ; ಕೃಷ್ಣನನ್ನು ಮಾನುಷಸ್ತರಕ್ಕೆ ತರುವ ಯಾವ ಪ್ರಯತ್ನವನ್ನೂ ಮಾಡದೆ ಅವರು ಮಹಾಭಾರತದ ಮಾನುಷ ನಾಯಕ ಭೀಮನೇ ಹೌದು ಎಂದು ನಿರ್ಣಯಿಸಿ ಮಹಾಭಾರತದ ಕಥೆಯನ್ನು ಸಂಪೂರ್ಣವಾಗಿ ಭೀಮನ ಕಥೆಯೆಂದೇ ವ್ಯಾಖ್ಯಾನಿಸುತ್ತಾರೆ. ಅಂದರೆ; ಕನ್ನಡದಲ್ಲಿ ಒಬ್ಬ ಕವಿ ಸಾಧಿಸಿದ್ದನ್ನೇ ಆತನ ಇನ್ನೂರು ವರ್ಷಗಳ ನಂತರ ಬಂದ ಅದೇ ಭಾಷಿಕ ಪ್ರದೇಶದ ಒಬ್ಬ ಸಿದ್ಧಾಂತಿ ಸಂಸ್ಕೃತದಲ್ಲಿ ಸಾಧಿಸಿದರು. ರನ್ನ ತನ್ನ ಕೃತಿಯನ್ನು ’ಸಾಹಸಭೀಮ ವಿಜಯ’ವೆಂದು ಕರೆದ. ಮಧ್ವಾಚಾರ್ಯರು ಭೀಮನನ್ನೇ ಮಹಾಭಾರತದ ನಾಯಕನೆಂದು ಪರಿಗಣಿಸಿದರು. ಇದು ಭಾರತೀಯ ಸಂಸ್ಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಒಂದು ಇನ್ನೊಂದನ್ನು ಪರಸ್ಪರ ಅರಗಿಸಿಕೊಳ್ಳುವ ’ವಾತಾಪಿ ಜೀರ್ಣೋದ್ಭವ’ದ ವಿರಾಟ್ ಪ್ರಕ್ರಿಯೆಯ ಮತ್ತೊಂದು ರೀತಿಯ ನಿದರ್ಶನ. +ಭಾಷೆಗಳ ನಡುವೆ ಹೇಗೋ ಹಾಗೆ ಭಾಷೆಯ ಒಳಗೂ ಸಂಘರ್ಷಗಳಿರುತ್ತವೆ. ಸಂಸ್ಕೃತ ಮತ್ತು ಕನ್ನಡಗಳ ನಡುವೆ ವೈರುದ್ಧ್ಯಾತ್ಮಕ ಸಂಬಂಧವಿರುವುದು ಮಾತ್ರವಲ್ಲ; ಕನ್ನಡದ ಒಳಗೂ ಅನೇಕ ಕಾಳಗಗಳೂ ಕೋಲಾಹಲಗಳೂ ಇರುತ್ತವೆ. ಕನ್ನಡವು ಕನ್ನಡವಾಗಿ ಸಂಘಟಿತಗೊಳ್ಳುವ ಕ್ರಮದ ಒಳಗಡೆಯೇ ಎಷ್ಟೋ ಅಂಶಗಳು ಕಣ್ಮರೆಯಾಗಿ ಹೋಗುತ್ತಿರುತ್ತವೆ. ಇಂಥದು ಜಗತ್ತಿನ ಎಲ್ಲ ಭಾಷೆಗಳಲ್ಲೂ ಸಂಭವಿಸಿರುವ ಪ್ರಕ್ರಿಯೆಯಾಗಿದೆ. ಒಂದು ಕನ್ನಡ, ಒಂದು ಇಂಗ್ಲೀಷ್, ಒಂದು ಫ್ರೆಂಚ್, ಒಂದು ಸ್ಪ್ಯಾನಿಷ್ ಎಂದು ಆಯಾಯಾ ಭಾಷೆಗಳು ಸಂರಚಿತವಾಗುತ್ತಿರುವಾಗ ಅವುಗಳಲ್ಲಿಯ ದೇಶೀ ರೂಪಗಳು ಅವಜ್ಞೆಗೆ ಗುರಿಯಾಗಿ ಮರೆಯಾಗಿ ಹೋಗುತ್ತವೆ. ಹೀಗಾಗಿಯೆ ಕವಿರಾಜಮಾರ್ಗಕಾರನ ಹಾಗೂ ಇತರ ಅನೇಕ ವೈಯಾಕರಣದ ಮೂಲಕ ಕನ್ನಡವು ಕನ್ನಡವಾಗಿ ಹಾಗೂ ಒಂದು ಸಾಹಿತ್ಯ ಪರಂಪರೆಯಾಗಿ ಸಂಘಟಿತವಾಗುತ್ತಿದ್ದಾಗ ಅವರು ಯಾವುದನ್ನು ಕನ್ನಡ ಎಂದು ಮನ್ನಿಸಿದರೋ ಅದಕ್ಕೆ ಹೊರತಾದ ಅನೇಕ ಕನ್ನಡಗಳೂ ಇದ್ದುವು. ಅನೇಕ ದೇಶಿಗಳಿದ್ದವು. ಆದರೆ ತದನಂತರ ಮಾತ್ರ ಕಣ್ಮರೆಯಾಗಿ ಹೋದವು. ಇದಕ್ಕೆ ಒಂದು ಶಿಷ್ಟ, ಮತ್ತೊಂದು ಜಾನಪದ ಎನ್ನುವುದಷ್ಟೇ ಕಾರಣವಾಗಿರಲಾರದು. ಅಥವಾ, ಭಾರತೀಯ ಪರಂಪರೆಯಲ್ಲಿಯೇ ಅಂತರ್ಗತವಾಗಿ ಬಂದಂತೆ ಒಂದು ಯಜಮಾನ ಭಾಷೆ, ಮತ್ತೊಂದು ದಾಸಭಾಷೆ ಎನ್ನುವುದೊಂದೇ ಕಾರಣವಾಗಿರಲಾರದು. ಭಿನ್ನಧಾರೆಗಳ ನಡುವೆ ತೀವ್ರ ಸಂಘರ್ಷವೂ ಇದಕ್ಕೊಂದು ಕಾರಣವಾಗಿರಬಹುದು. ಇಂದು ಕನ್ನಡದಲ್ಲಿ ನಾವು ’ಕರಾಳ’ ಎಂಬ ಪದವನ್ನು ಸರ್ವಸಾಮಾನ್ಯವಾಗಿ ಬಳಸುತ್ತಿರುತ್ತೇವೆ. ಇತ್ತೀಚೆಗೆ ನಿಘಂಟೊಂದರಲ್ಲಿ ಆ ಪದ ಮೂಲದಲ್ಲಿ ವಾಮಾಚಾರದ ಪಂಥವೊಂದರ ಹೆಸರಾಗಿತ್ತು ಎಂದು ನಮೂದಿಸಿದ್ದನ್ನು ನಾನು ಕಂಡೆ. ಆ ವಿಶಿಷ್ಟವಾದ ಧಾರ್ಮಿಕ ಪಂಥ ಮುಂದೆ ವೈದಿಕ ಧರ್ಮದ ಅವಹೇಳನಕ್ಕೆ ಬಲಿಯಾಗಿ ಸಂಪೂರ್ಣವಾಗಿ ಕಣ್ಮರೆಯಾಗಿ ಹೋಯಿತು ಎನ್ನುವ ವಾಸ್ತವಾಂಶ ನಮಗಿಂದು ವಿಶೇಷವಾದ ನಿಘಂಟುಗಳಲ್ಲಿಯಲ್ಲದೆ ಬೇರೆಲ್ಲಿಯೂ ಸಿಗುವುದಿಲ್ಲ. ಇಂದು ನಾವೆಲ್ಲ ’ಕರಾಳ ದಿನ’, ’ಕರಾಳ ಅಧ್ಯಾಯ’, ’ಕರಾಳ ರೂಪ’ ಇತ್ಯಾದಿಯಾಗಿ ಹೇಳುವಾಗೆಲ್ಲ ಆ ಪದವನ್ನು ಅದರ ವೈದಿಕ ಅರ್ಥದಲ್ಲಿ ಮಾತ್ರ ಅವಹೇಳನಾತ್ಮಕವಾಗಿ, ನೇತ್ಯಾತ್ಮಕವಾಗಿ ಮಾತ್ರ ಬಳಸುತ್ತಿರುತ್ತೇವೆ. ಭಾಷೆ, ಪಂಥ ಇತ್ಯಾದಿಗಳು ಮರೆಯಾಗಿ ಹೋಗುವ ವಿಧಾನವಿದು. ಇಲ್ಲಿ ಗ್ರಾಮ್ಯಾ ಮತ್ತು ದೇಶೀಗಳು ಮಾತ್ರವಲ್ಲ, ಇತರ ಅನೇಕ ವಿಭಿನ್ನ ಧಾರೆಗಳು ತಮ್ಮತಮ್ಮೊಳಗಿನ ಸಂಘರ್ಷ ಕೋಲಾಹಲಗಳ ಕಾರಣದಿಂದ ಹೀಗೆ ಮರೆಗೆ ಸರಿದುಹೋಗುತ್ತವೆ. ಇನ್ನೊಂದು ಉದಾಹರಣೆಯನ್ನು ನೀಡುವುದಾದರೆ-ಭಾರತೀಯ ಸಂಸ್ಕೃತಿಯಲ್ಲಿ ಬ್ರಾಹ್ಮಣ್ಯ ಮತ್ತು ಭಕ್ತಿಗಳು ಎರಡು ವಿರುದ್ಧ ಧ್ರುವಗಳು ಎಂದು ಬಹುಜನರು ಸಾಮಾನ್ಯವಾಗಿ ಹೇಳುವುದುಂಟು. ಆದರೆ ವಾಸ್ತವದಲ್ಲಿ ಬ್ರಾಹ್ಮಣ್ಯಕ್ಕೆ ಭಕ್ತಿಗಿಂತಲೂ ಬಲವಾದ ಸವಾಲುಗಳನ್ನು ಒಡ್ಡಿರುವ ಹಾಗೂ ಧಕ್ಕೆಯನ್ನುಂಟು ಮಾಡಿರುವಂತಹ ಧಾರೆಗಳೆಂದರೆ ಯೋಗ ಮತ್ತು ತಂತ್ರಗಳು. ಸಧ್ಯ ಲಭ್ಯವಿರುವ ಕನ್ನಡ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಿದರೆ ವೈದಿಕ ಕೃತಿಗಳು, ಶ್ರವಣ ಕೃತಿಗಳು ಹಾಗೂ ಭಕ್ತಿ ಕೃತಿಗಳು ಸಿಗುತ್ತವೆಯೇ ಹೊರತು ಯೋಗ ಮತ್ತು ತಂತ್ರ ಮಾರ್ಗದ ಕೃತಿಗಳು ಸಿಗುವುದಿಲ್ಲ. ಹಾಗಾಗಿ ನಾವು ಅವುಗಳನ್ನು ಮತ್ತೆ ಶೋಧಿಸಿ, ಅವುಗಳಲ್ಲಿಯ ಅಂಶಗಳನ್ನು ಪುನರಾವಿಷ್ಕರಿಸಿ ನಮ್ಮ ಪರಂಪರೆಯನ್ನು ಹೊಸದಾಗಿಯೇ ಬರೆಯಬೇಕಾಗಿದೆ. ಇದೇ ರೀತಿ ನಾವು ಇದುವರೆಗೆ ಒಪ್ಪಿಕೊಂಡು ಬಂದು ಕನ್ನಡ ಪರಂಪರೆಯೆಂಬುದರ ಹೊರಗಿರುವ ಕನ್ನಡಗಳನ್ನೂ ಸೇರಿಸಿಕೊಂಡು ನಮ್ಮ ಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಪುನಸ್ಸಂಘಟಿಸಬೇಕಾಗಿದೆ. +***** +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […] +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_494.txt b/Kannada Sahitya/article_494.txt new file mode 100644 index 0000000000000000000000000000000000000000..e20c854ce55e70059df6eb88af2bd143d5fc6f47 --- /dev/null +++ b/Kannada Sahitya/article_494.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತುಳುಕು ಚಿಮ್ಮುವ ಹೊಳಪು +ಸಿಗುರು ಚೀರುವ ಅರಚು +ಹಿರಿದುದ್ದ ಬಳುಕಾಡಿ ತೊನೆದು ತೂರಿದ +ಗುರಿ +ಗರಿಮುರೀ ಬಿದಿರು +ಚುಚ್ಚು ಮುಳ್ಳು. +ಸಾವಿರದ ಅಲಗುಗಳ ಜೀವನದ +ಕೆಚ್ಚು ಪರಂಪರೆಯ ಹುಚ್ಚು +ತಿದಿಯಾರಿ ಹೊಗೆಯೆದ್ದ +ಯಜ್ಞಕುಂಡ-ಪ್ರೇಮಿ ಅರೆಬರೆ +ದಿಟ್ಟ ಪ್ರೇಮಪತ್ರ-ಅರ್ಧಕ್ಕೇ +ತಡೆಹಿಡಿದ ಸ್ವಪ್ನಸ್ಖಲನ. +ಕೊರೆಯುವುದು ಬೇರು-ವರ್ತಮಾನ +ಕ್ಕಿಂತ ಆಳದೂರು-ನಿಲುಕದಾಳಕ್ಕಿಂತ +ಇಳಿದ ವ್ಯವಹಾರ ನೀರೆಲ್ಲಿ ನೀರೆಲ್ಲಿ +ಕಲ್ಲುಕೋಶಗಳೊಳಗೆ ದಿವ್ಯ ಅರಸು. +ಸಿಹಿತುಟಿಗೆ ಒತ್ತಿಟ್ಟ ಉಪ್ಪು +ಚುಂಬನದಂತೆ ಸರಸರನೆ ಮೊಳೆಮೊಳೆತು +ಪುಟಿ ಪುಟಿವ ವಾಂಛೆ +ಎಲೆಯೆಲ್ಲಿ ನರವೆಲ್ಲಿ ಕೊಂಬೆಗಳ ತಾವೆಲ್ಲಿ +ಗಿಣ್ಣುಗಳ ನೋವೆಲ್ಲಿ +ಭೇದಭಾವದ ಉಸಿರು +ಟೊಳ್ಳು ಬಸಿರು +ಇಡಿಯ ಜೀವನದಲ್ಲೆ ಒಮ್ಮೆ ಹೂವಿನ ಕಾಲ +ಮೂಲಭೂತಗಳಲ್ಲಿ ಹುತ್ತಗಟ್ಟುತ್ತದೆ +ಒರಲೆ ಇರುವೆ ಸುತ್ತುತ್ತವೆ ಆದರೂ +ನೇರ ನಿಗುರುವ ವೃದ್ಧಿ +ನೇರ ನೋಟದ ಸಿದ್ಧಿ +ಬಾನನ್ನೆ ಸೀಳಿಟ್ಟು ಊರ್ಧ್ವಮುಖ ಚಕ್ಕಂದ +ಫಳಫಳಿತ ಆಸೆಗಳ ಗಟ್ಟಿ ಉಕ್ಕಂದ +ಅರುವತ್ತು ವರುಷದವರೆಗು ಕಾದ ಕಾವು +ಪರಾಗಸ್ಪರ್ಶದ ಯಶದ ಕನಸು ಕಾಣುವ ನೋವು +ಹಾ-ಧಿಗ್ಗನೆ ದಿಗ್ಭ್ರಮೆ ನಲಿವು +ಚೆಂಗು ಚೆಂಗನೆ ನೆಗೆದ ಹೂವು ಹೂವು +ಗಟ್ಟಿ ಮೈ ಕನಸಿದ್ದ ಪಕಳೆ ಪಕಳೆ +ಜತೆಗೆ… ಕಾದ ಕನಸಿಗೆ ಅಂತ್ಯ +ನೆನೆದ ಕಚಗುಳಿ ನಾಶ +ಫಲಿತ ಹಿಂಡಿನ ಮೈ ಲಟಲಟಿಸಿ ಹಿಟ್ಟು +ಮುದಿಯಾಗುದುರುತ್ತಿರುವ +ಮೌನ ಮರಣ +ಶೇಷ ಗಳಗಳ ರಾಶಿ ಅತ್ತ ಇತ್ತ…. +ಎಲ್ಲವೂ ವ್ಯರ್ಥ! +ಇಲ್ಲ, ಹೂದುಂಬಿ ರಸ ತುಳುಕಿ ಕೊನೆಗೂ ಕೃತಾರ್ಥ. +***** +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […] +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_495.txt b/Kannada Sahitya/article_495.txt new file mode 100644 index 0000000000000000000000000000000000000000..8363283a9883cf72f7572570a3e8d573856edf2a --- /dev/null +++ b/Kannada Sahitya/article_495.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಮ್ಮ ಬಿಡುವಿನ ವೇಳೆಯಲ್ಲಿ ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ. ಇದರಿಂದ ಹೆಚ್ಚು ಕನ್ನಡ ಬರಹಗಳು ಡಿಜಿಟಲೈಸ್ ಆಗುತ್ತವೆ. +ವಿವರಗಳಿಗೆ ಸಂಪರ್‍ಕಿಸಿ: +kannadasahithya1 at gmail.com +9441063342 +ಮಾತು ಬಲವರೆಲ್ಲ ಮೇಧಾವಿ ಗಳಲ್ಲ; ಮೌನ ತಳೆದವರೆಲ್ಲ ಮೂದೇವಿ ಗಳಲ್ಲ. ***** +ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_496.txt b/Kannada Sahitya/article_496.txt new file mode 100644 index 0000000000000000000000000000000000000000..df375a2de00682c0af2644a8db1957ba0c2a613f --- /dev/null +++ b/Kannada Sahitya/article_496.txt @@ -0,0 +1,72 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ ಒಂದು ಪಕ್ಕದಲ್ಲಿ ವಿಶಾಲವಾದ ಅರಳೀಮರ; ಇನ್ನೊಂದು ಪಕ್ಕದಲ್ಲಿ ಅರಳೀಕಟ್ಟೆಗೆ ಹೊಂದಿಕೊಂಡಂತೆಯೇ ನಾಡ ಹೆಂಚಿನ ಪುಟ್ಟ ಮನೆ. ಒಂದು ಕಾಲದಲ್ಲಿ, ಅದರ ಹೊರಜಗುಲಿಯಲ್ಲಿ ಕುಲುಮೆಯೊಂದು ಸದಾ ಉಸುರುತ್ತಿತ್ತು. ಇನ್ನೊಂದು ಮೂಲೆಯಲ್ಲಿ ಗೋಣಿ ತಾಟಿನ ಮೇಲೆ, ಉಳಿ, ಚಾಣ, ಬೈರಿಗೆ, ಸುತ್ತಿಗೆ…ಇವೆಲ್ಲವುಗಳ ಒಡೆಯನೇ, ವಿಠಲಾಚಾರಿ. ಅವನ ಖಾಸಗೀ ಜೀವನದ ಬಗ್ಗೆ ಆ ಊರಿನ ಯಾರಿಗೂ ಏನೂ ನಿಖರವಾಗಿ ಗೊತ್ತಿಲ್ಲ; ಇನ್ನು, ಅವನ ಹೆಂಡತಿ ಮಕ್ಕಳ ವಿವರಗಳನ್ನು ಯಾರೂ ‘ಖಾಸಗಿ‘ಯೆಂದು ಪರಿಗಣಿಸಲಾರರು-ಅಲ್ಲವೆ? ಅವನಿಗೆ ಮದುವೆಯಾದ ಶುರುವಿನಲ್ಲೇ ಅವನ ಹೆಂಡತಿ ಅದ್ಯಾರದ್ದೋ ಜೊತೆ ಓಡಿಹೋಗಿದ್ದಳು. ಆದ್ದರಿಂದ ಅವನು ಅತ್ತ ಸಂಸಾರಿಯೂ ಅಲ್ಲ-ಇತ್ತ ಬ್ರಹ್ಮಚಾರಿಯೂ ಅಲ್ಲ. +ವಿಠಲಾಚಾರಿಯ ಹಲವು-ಹತ್ತು ಕಸುಬುಗಳಲ್ಲಿ ಪ್ರಮುಖವಾದುದೆಂದರೆ, ಮರದ ಕೆಲಸ. ಶನೀಶ್ವರನ ಗುಡಿಯ ಹಿಂಭಾಗದ ಅಗ್ರಹಾರದ ಮನೆ-ಮನೆಗಳಲ್ಲಿ, ಅವನ ಕುಶಲ ಕುಸುರಿಗೆ ಸಾಕ್ಷಿಯಾಗಿ, ಕೆತ್ತನೆಯ ಕಂಬಗಳು, ವಾಸ್ತುಬಾಗಿಲು, ದೇವರ ಮಂಟಪಗಳು ವರ್ಷಾನುವರ್ಷಗಳಿಂದ ಉಳಿದುಕೊಂಡು ಬಂದಿವೆ. ಇದೂ ಅಲ್ಲದೆ, ಅವನು ಕಂಚು, ತಾಮ್ರ, ಹಿತ್ತಾಳೆ, ಬೆಳ್ಳಿ,ಬಂಗಾರ ಪಂಚಲೋಹದ ದೇವರ ಮೂರ್ತಿಗಳನ್ನೂ, ಘಂಟೆ, ಆರತಿ, ಕೌಳಿಗೆ-ಉದ್ಧರಣೆ ಮುಂತಾದ ಪೂಜಾ ಸಾಮಗ್ರಿಗಳನ್ನೂ ತಯಾರುಮಾಡಿ ಕೊಡುತ್ತಿದ್ದ. ಅವನು ತನ್ನ ಶ್ರದ್ಧಾ-ಭಕ್ತಿಗಳನ್ನೇ ಆವಾಹನೆ ಮಾಡಿ, ಎರಕ ಹೊಯ್ಯುತ್ತಿದ್ದನೋ ಏನೊ ಆ ಮೂರ್ತಿಗಳಂತೂ ಅಷ್ಟೊಂದು ಸುಂದರವಾಗಿ ಜೀವತುಂಬಿಕೊಂಡಿರುತ್ತಿದ್ದವು! +ಆದರೆ, ಕಾಲ ಬದಲಾದಂತೆ, ಜನರ ಆಸಕ್ತಿಯೂ ಬದಲಾಗಿ, ವಿಠಲಾಚಾರಿಯ ಕುಸುರಿ ಕೆಲಸಗಳಿಗೆ ಬೇಡಿಕೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆಯಾಗಿ, ಉಳಿ-ಚಾಣಗಳು ತುಕ್ಕು ಹಿಡಿದವು; ಎರಕದ ಅಚ್ಚುಗಳು ಮುಕ್ಕಾದವು; ಕುಲುಮೆ-ಅಗ್ಗಿಷ್ಟಿಕೆಗಳು ತಣ್ಣಗಾಗಿಬಿಟ್ಟವು. ಆದ್ದರಿಂದ ಅವನ ನಿತ್ಯಕರ್ಮ +ಗಳಲ್ಲೂ ಬದಲಾವಣೆಗಳಾದವು. ಅವನು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ‘ದೇಶಾವರ‘ ಮಾಡತೊಡಗಿದ. ಜನರು ಅಷ್ಟೊ-ಇಷ್ಟೊ ಹಣವನ್ನೋ, ಅಡಿಕೆಯನ್ನೋ ಕೊಡುತ್ತಿದ್ದರು. ಇದು ಅವನಿಗೆ ಶಾಖಾಯ ಲವಣಾಯ ಸಾಕಾಗುತ್ತಿತ್ತು. ಕೊನೆ-ಕೊನೆಗೆ ಈ ತಿರುಪೆಯ ಬದುಕೂ ಕಷ್ಟವೆನ್ನಿಸಿತೋ ಏನೊ ಬಹಳಷ್ಟು ಹೊತ್ತು, ಶನೀಶ್ವರನ ಗುಡಿಯಲ್ಲಿಯೇ ಕಳೆಯುತ್ತಿದ್ದ. ದಿನವೂ ಮುಂಜಾನೆ ಗುಡಿಯ ಸುತ್ತ ಕಸ ಹೊಡೆಯುತ್ತಿದ್ದ. ಹತ್ತಿಪ್ಪತ್ತು ಮೆಟ್ಟಿಲುಗಳನ್ನು ಇಳಿದು, ಕೆಳಗೆ ಹರಿಯತ್ತಿದ್ದ ವರದಾ ನದಿಯಿಂದ ನೀರನ್ನು ತಂದು ಗುಡಿಯ ಅಂಗಳವನ್ನೆಲ್ಲಾ ತೊಳೆಯುತ್ತಿದ್ದ. ಎದುರಿಗಿನ ಕರವೀರದ ಗಿಡಗಳಿಂದ ಹೂವುಗಳನ್ನು ಕೊಯ್ದು ಕಟ್ಟೆಯ ಮೇಲೆಲ್ಲಾ ಇಡುತ್ತಿದ್ದ. ಪೂಜೆಗೆಂದು, ಹರಿಭಟ್ಟರು ಬಂದು, ಗುಡಿಯ ಕೀಲಿಯನ್ನು ತೆಗೆಯುತ್ತಿದ್ದಂತೆಯೇ, ವಿಠಲಾಚಾರಿಯು, ಗುಡಿಯ ಒಳಗೆಲ್ಲಾ ಹರಡಿಕೊಂಡಿರುತ್ತಿದ್ದ ಇಲಿ-ಬಾವಲಿಗಳ ಹಿಕ್ಕಿಗಳನ್ನು ಗುಡಿಸಿ, ಶುದ್ಧಗೊಳಿಸುತ್ತಿದ್ದ. ಗರ್ಭಗುಡಿಯೊಂದನ್ನು ಮಾತ್ರ ಹರಿಭಟ್ಟರು ತಮ್ಮ ಪೂಜೆಗೂ ಮುನ್ನ ಸ್ವಚ್ಛ ಗೊಳಿಸಿಕೊಂಡರೆ ಸಾಕಿತ್ತು. ಅವರು ಪೂಜೆಯನ್ನು ಮುಗಿಸಿ ಹೋಗುವಾಗ ಇವನ ಕೈಗೆ ಹಾಕುತ್ತಿದ್ದ ಒಂದೆರೆಡು ಬಾಳೆಹಣ್ಣು ಮುಂತಾದ ಪ್ರಸಾದವೇ ಅವನ ಮುಂಜಾವಿನ ಉಪಾಹಾರ. ಹೀಗೆ ಇನ್ನೂ ಕೆಲವು ವರ್ಷಗಳು ಕಳೆದವು. ವಿಠಲಾಚಾರಿಗೆ ಈ ಊರೇ ಬೇಸರವಾಯಿತೇನೊ-ಇದ್ದಕ್ಕಿದ್ದಂತೆ, ನಾಪತ್ತೆಯಾಗಿಬಿಟ್ಟ. ಅವನು ಹೀಗೆ ಊರು ಬಿಟ್ಟು ಹೋಗುವುದು ಇದೇ ಮೊದಲ ಬಾರಿಯೇನೂ ಆಗಿರಲಿಲ್ಲ. ಕೊಲ್ಲೂರಿಗೊ, ಕೊಡಚಾದ್ರಿಗೋ, ಹೋದನೆಂದರೆ, ತಿಂಗಳುಗಟ್ಟಲೆ ಬರುತ್ತಿರಲಿಲ್ಲ. ಒಂದು ವರ್ಷವಾಯಿತು, ಎರಡಾಯಿತು, ನಾಲ್ಕು, ಎಂಟು, ಹತ್ತು ವರ್ಷಗಳಾದವು. ವಿಠಲಾಚಾರಿ ಬರಲೇ ಇಲ್ಲ. ಇಷ್ಟರಲ್ಲಿ ಅವನ ಬಗ್ಗೆ ಅನೇಕ ಕತೆಗಳೂ ಹುಟ್ಟಿಕೊಂಡುಬಿಟ್ಟಿದ್ದವು. ಕೆಲವು ರೋಚಕವಾಗಿಯೂ, ಕೆಲವು ಬೀಭತ್ಸವಾಗಿಯೂ, ಇನ್ನೂ ಕೆಲವು ಕರುಣಾಜನಕವಾಗಿಯೂ, ಕತೆ ಹೇಳುವವರ ಕಲ್ಪನಾಶಕ್ತಿಗೆ ಅನುಗುಣವಾಗಿ ಬೆಳದುಕೊಂಡವು. ಕಾಲಕ್ರಮೇಣ ಜನರು ಕಥಾನಾಯಕನ್ನೂ, ಕತೆಗಳನ್ನೂ ಮರೆತುಬಿಟ್ಟರು… +ನಿಮಗೇ ಗೊತ್ತು-ನಮ್ಮ ದೇಶದಲ್ಲಿ, ನೂರಾರು ವರ್ಷಗಳಿಂದ ಏನೂ ಬದಲಾಗದೆ, ಹಾಗೆಯೇ ಹಾಳುಬಿದ್ದಿದ್ದ ಅನೇಕ ಗುಡಿ-ಗೋಪುರಗಳ ಅದೃಷ್ಟ ಇದ್ದಕ್ಕಿದ್ದಂತೆ ಇತ್ತೀಚೆಗೆ ಖುಲಾಯಿಸುತ್ತಿದೆ. ಯಾರೋ ಒಂದಿಷ್ಟು ಕಾರ್ಯಕರ್ತರು, ಸ್ವಯಂಸೇವಕರು ಒಂದಾಗುತ್ತಾರೆ; ದಾನಿಗಳು ಮುಂದೆ ಬರುತ್ತಾರೆ; ಕೋಳು ಮುರಿದ ಹಾಳು ಗುಡಿಗಳು ಜೀರ್ಣೋದ್ಧಾರವಾಗಿ ಕಂಚಿನ ಕಳಸ ಹೊತ್ತುಕೊಂಡು ದಿನ ಬೆಳಗಾಗುವುದರಲ್ಲಿ ಮಂದಿರಗಳಾಗಿ ನಿಂತುಬಿಡುತ್ತವೆ! ‘ಬಿಕೋ‘ ಎನ್ನುತ್ತಿದ್ದ ಅವು, ಭಜನೆ, ಪೂಜೆ, ಹೋಮ-ಹವನಗಳಿಂದ ಲಗಲಗಿಸುತ್ತವೆ. ದೇವರು ಇನ್ನೂ ಅದೃಷ್ಟವಂತನಾಗಿದ್ದರೆ, ಪಲ್ಲಕ್ಕಿ ಉತ್ಸವಗಳು, ಜಾತ್ರೆ, ರಥೋತ್ಸವಗಳೂ ಪ್ರಾರಂಭವಾಗುತ್ತವೆ. ಹೀಗೆ ಬದಲಾಗುತ್ತಿದ್ದ ಕಾಲವನ್ನೂ, ದೇಶವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದವರಲ್ಲಿ ಶನೀಶ್ವರ ಗುಡಿಯ ಅರೆಕಾಲಿಕ ಅರ್ಚಕರಾಗಿದ್ದ ಹರಿಭಟ್ಟರೂ ಒಬ್ಬರು. ಅವರು ಊರಿನ ಪ್ರಸಿದ್ಧವಾದ ಮಾರಿಕಾಂಬ ದೇವಸ್ಥಾನದಲ್ಲಿ ಪ್ರಮುಖ ಅರ್ಚಕರಾಗಿದ್ದರು. ಆದರೆ, ಆ ದೇವಸ್ಥಾನದಲ್ಲಿ ಇವರ ಪೂಜೆ ನಡೆಯುತ್ತಿತ್ತೇ ವಿನ: ಮಾತು ನಡೆಯುತ್ತಿರಲಿಲ್ಲ. ಇದಕ್ಕೆ ದೇವಸ್ಥಾನದ ಕಮಿಟಿಯ ವ್ಯವಹಾರದ ಅತಿ ಪಾರದರ್ಶಕತೆ ಹಾಗೂ ‘ಬಿಗಿ‘ ನಿಲುವು ಕಾರಣವಾಗಿತ್ತು. ಮಾತು ಮಾತಿಗೆ ಕಮಿಟಿಯ ಸಭೆ-ಸರ್ವಾನುಮತದ ತೀರ್ಮಾನ, ಪೈಸೆ-ಪೈಸೆಗೆ ಲೆಕ್ಕ, ಬಿಲ್ಲು-ರಶೀದಿ… ಇವೆಲ್ಲವುಗಳಿಂದ ಅವರು ರೋಸಿಹೋಗಿದ್ದರು. ‘ಭಕ್ತರು ಭಕ್ತಿಯಿಂದ ದೇವರಿಗೆ ಅರ್ಪಿಸುವ ಹಣಕ್ಕೆ ರಶೀದಿ ಕೊಡಲು ನಾವು ಯಾರು? ದೇವರ ಸೇವೆಗೆ ಮಾಡಿದ ಕೆಲಸ-ಕಾರ್ಯಗಳಿಗೆಲ್ಲಾ ಲೆಕ್ಕವಿಡುವುದು, ಅದರ ತಪಾಸಣೆ ಮಾಡುವುದು ಎಂದರೇನು? ದೇವಾಲಯಗಳು ಅಂದರೆ, ಮುನ್ಸಿಪಾಲಿಟಿಯೆ ಅಥವಾ ತಾಲ್ಲೂಕು ಕಚೇರಿಗಳೆ?‘ ಇಂಥ ಪ್ರಶ್ನೆಗಳನ್ನು ಹರಿಭಟ್ಟರು, ಗಟ್ಟಿಯಾಗಿ ತಮ್ಮಲ್ಲಿಯೇ ಕೇಳಿಕೊಳ್ಳುತ್ತಿದ್ದರು. ಹೀಗೊಂದು ದಿನ, ಶನೀಶ್ವರನಿಗೆ ಪೂಜೆಯನ್ನು ಮುಗಿಸುತ್ತಾ, ‘ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ‘ ಎಂದು ಸಾಷ್ಟಾಂಗ ಹಾಕಿದರು. ಹಾಗೆ ಅವರು ಬಹಳ ಹೊತ್ತು ದೇವರ ಮುಂದೆ ಮಲಗಿಯೇ ಇದ್ದರು. ಆದರೆ, ಅವರು ನಮಸ್ಕಾರ ಮುಗಿಸಿ ಮೇಲೇಳುವಾಗ ಲಘುವಾಗಿದ್ದರು-ಗೆಲುವಾಗಿದ್ದರು. ಶನೀಶ್ವರನು ಅವರ ಕಿವಿಯಲ್ಲಿ ಒಂದು ಅಭಯ ಸೂತ್ರವನ್ನು ಉಸುರಿದ್ದ: “ಹರಿ, ನೀನು ನನ್ನನ್ನು ಉದ್ಧರಿಸು; ನಾನು ನಿನ್ನನ್ನು ಉದ್ಧರಿಸುತ್ತೇನೆ“ ಎಂದು! ಹರಿಭಟ್ಟರಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ಬೇಗಬೇಗನೆ ಮಾರಿಕಾಂಬೆಯ ಪೂಜೆ ಮುಗಿಸಿ, ಭಕ್ತಾದಿಗಳಿಗೆ ತೀರ್ಥ-ಪ್ರಸಾದ ಕೊಡಲು, ತಮ್ಮ ಮಗ ರಾಜೇಶನನ್ನು ಕೂರಿಸಿ, ಸೈಕಲ್ಲು ಹತ್ತಿ ಹಿಂಗಾರಕೊಡಿಗೆ ತಿರುಮಲ ಹೆಗಡೆಯವರ ಮನೆಗೆ ಹೊರಟರು. ಅದು ಕಲ್ಲು-ಮುಳ್ಳುಗಳ ಕಾಲುದಾರಿ; ಸುಡು-ಬಿಸಿಲು; ಆದರೂ ಹರಿಭಟ್ಟರಿಗೆ ಬಳಲಿಕೆಯೆನಿಸಲಿಲ್ಲ. ದಾರಿಯುದ್ದಕ್ಕೂ ಅವರ ಕನಸುಗಳು ಬೆಳೆದು, ಸಾಲುಮರಗಳಾಗಿ ನಿಂತು, ನೆರಳು-ಗಾಳಿಯ ಚಾಮರಸೇವೆ ನಡೆಸಿದ್ದವು… +‘ನನಗೆ ಈಗಾಗಲೇ ಅರವತ್ತು ವರ್ಷಗಳಾಗಿವೆ; ಮಗಳ ಮದುವೆ ಮತ್ತು ನಾಡ ಹೆಂಚಿನ ನನ್ನ ಪೂರ್ವಜರ ಮನೆಗೆ ಮಂಗಳೂರು ಹೆಂಚನ್ನು ಹಾಕಿಸಿದ್ದು ಬಿಟ್ಟರೆ, ಇನ್ನಾವ ಸಾರ್ಥಕ ಕಾರ್ಯವೂ ನನ್ನಿಂದ ಸಾಧ್ಯವಾಗಿಲ್ಲ. ಎಸೆಸ್ಸೆಲ್ಸಿ ನಪಾಸಾದ ಮಗ ಹೊನ್ನಾವರಕ್ಕೆ ಹೋಗಿ, ಶಂಭುಹೆಗಡೆಯವರ ಯಕ್ಷಗಾನ ಶಾಲೆಯನ್ನು ಸೇರಿಕೊಂಡವನು ಮೂರೇ ದಿನಕ್ಕೆ ಓಡಿಬಂದ. ಒಂದಿಷ್ಟುದಿನ ಗೋಕರ್ಣಕ್ಕೆ ಹೋಗಿ ಮಂತ್ರ ಕಲಿಯುವ ಶಾಸ್ತ್ರ ಮುಗಿಸಿ, ಮನೆ ಸೇರಿಕೊಂಡವನು ಹೊರಗೆ ಹೋಗಲೇ ಇಲ್ಲ. ಸಣ್ಣ-ಪುಟ್ಟ ಪೌರೋಹಿತ್ಯಕ್ಕೆ ‘ಪಡಚಾಕರಿ‘ಯಾಗಿ ಹೋಗುವುದನ್ನು ಬಿಟ್ಟರೆ ದುಡಿಮೆ ಏನೂ ಇಲ್ಲ. ನಾನು ಬದುಕಿರುವವರೆಗೇನೋ ಸರಿ. ಮುಂದೆ ಹೆಂಡತಿ ಮಕ್ಕಳಾದ ಮೇಲೆ? ಮಾರಿಕಾಂಬ ದೇವಿಯ ಪೂಜೆಯನ್ನು ನನ್ನ ನಂತರ ಈ ಕಮಿಟಿಯು, ನನ್ನ ಮಗನಿಗೆ ಖಂಡಿತಾ ಕೊಡಲಾರದು. ಒಮ್ಮೆ, ಈ ಶನೀಶ್ವರನ ಗುಡಿಯೇನಾದರೂ ಜೀರ್ಣೋದ್ಧಾರವಾದರೆ, ಸಾಕಷ್ಟು ಭಕ್ತಾದಿಗಳೂ ಬಂದಾರು. ನನ್ನ ಮಗನ ಯಜಮಾನಿಕೆಯಲ್ಲಿ, ದೊಡ್ಡ-ದೊಡ್ಡ ಪೂಜೆ, ಹೋಮ-ಹವನಗಳು ನಡೆದಾವು, ಹಣವೂ ಬಂದೀತು. ಅಲ್ಲದೆ, ಇದಕ್ಕೆ, ಕಮಿಟಿಯ ರಗಳೆಯೂ ಇಲ್ಲ‘ +ಹರಿಭಟ್ಟರು ಯೋಚಿಸುತ್ತಾ ಇದ್ದಂತೆ ತಿರುಮಲ ಹೆಗಡೆಯವರ ಮನೆಯ ಅಂಗಳಕ್ಕೇ ಬಂದು ಬಿಟ್ಟಿದ್ದರು. ಅವರ ಮನೆಯೆದುರು ಮರದ ಬುಡದಲ್ಲಿ ಸೈಕಲ್ಲು ನಿಲ್ಲಿಸಿ, ಒಳ ನಡೆದರು. ತಿರುಮಲ ಹೆಗಡೆಯವರ ಮನೆ ಮಾತ್ರ ದೊಡ್ಡದಲ್ಲ-ಅವರ ಮನಸ್ಸೂ ದೊಡ್ಡದು-ಕೈಗಳೂ ದೊಡ್ಡವು! ಹರಿಭಟ್ಟರು ಅವರಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಹೆಗಡೆಯವರು ಹೇಳಿದರು: “ನಿಮ್ಮ ಸಂಕಲ್ಪವೇನೋ ಒಪ್ಪುವಂಥದ್ದೆ. ಆದರೆ, ಆ ಶನೀಶ್ವರನ ಗುಡಿಯನ್ನು ದೊಡ್ಡದು ಮಾಡಲಿಕ್ಕೆ ಜಾಗ ಎಲ್ಲಿದೆ ಹೇಳಿ? ಎದುರಿಗೆ ವರದಾ ನದಿ; ಹಿಂಬದಿಗೆ ಅಗ್ರಹಾರ; ಎಡಕ್ಕೆ ಅರಳೀ ಕಟ್ಟೆ; ಇನ್ನು ಬಲಕ್ಕೆ…ಅದ್ಯಾರದ್ದೋ ಮನೆ..“ ಹರಿಭಟ್ಟರಿಗೆ ಈ ಸಮಸ್ಯೆ ಮೊದಲೇ +ಗೊತ್ತಿತ್ತು; ಹಾಗೆಯೇ ಅದಕ್ಕೆ ಪರಿಹಾರವೂ ಕೂಡ ಅವರಲ್ಲಿಯೇ ಇತ್ತು: “ಹೆಗಡೆಯವರೆ, ಗುಡಿಯ ಪಕ್ಕದಲ್ಲಿರುವುದು ಯಾರ ಮನೆಯೂ ಅಲ್ಲ. ಅದು ಆ ವಿಠಲಾಚಾರಿಯ ಹಾಳು ಕುಲುಮೆಯಾಗಿತ್ತು-ಅಷ್ಟೆ. ಇನ್ನು, ಆ ಕುಲುಮೆಯೂ ಉರಿಯದೆ ಹತ್ತು ವರ್ಷಗಳಾಗಿ ಹೋದವು. ಅವನಂತೂ ಎಲ್ಲಿಗೆ ಸತ್ತನೋ ಎನೋ. ಈಗ ಅಲ್ಲಿ, ಹಗಲು ಪೋಕರಿ ಹುಡುಗರು ಹೆಂಡ ಕುಡಿಯೋದು, ಇಸ್ಪೀಟು ಆಡೋದು ಮಾಡ್ತಾ ಇರ್‍ತಾರೆ. ಇನ್ನು ರಾತ್ರಿಯಂತೂ ಅಲ್ಲಿ ಏನೇನು ನಡೆಯುತ್ತೋ ಆ ಶನೀಶ್ವರನಿಗೇ ಗೊತ್ತು! ಅಂತೂ, ಭಟ್ಟರ ಮನವಿಯ ಸಾರಾಂಶ ಇಷ್ಟೆ: ಈಗ ವಿಠಲಾಚಾರಿಯ ಬಿಡಾರವಿರುವ ಜಾಗದಲ್ಲಿ ವಿಶಾಲವಾದ ಚಂದ್ರಶಾಲೆಯನ್ನು ನಿರ್ಮಿಸಿ, ಗುಡಿಯನ್ನು ಜೀರ್ಣೋದ್ಧಾರ ಮಾಡಿ ಆಕರ್ಷಕಗೊಳಿಸುವುದು. ಯಾಕೊ ಏನೊ ಭಟ್ಟರ ಸಲಹೆ ಹೆಗಡೆಯವರಿಗೆ ಸರಿ ಕಾಣಲಿಲ್ಲ. ಆದರೂ ಅವರು ಕೊನೆಯದಾಗಿ ಇಷ್ಟು ಭರವಸೆಯನ್ನು ಕೊಟ್ಟರು:“ನೋಡಿ, ಭಟ್ಟರೆ, ಯಾವುದಕ್ಕೂ ಮೊದಲು ನೀವು, ಮುನ್ಸಿಪಾಲಿಟಿಯನ್ನೂ, ಮುಜರಾಯಿಯವರನ್ನೂ ಕೇಳಿ; ಅವರೆಲ್ಲಾ ಒಪ್ಪಿದರೆ ಸರಿ. ಆಮೇಲೆ ನೀವೇ ಅಗ್ರಹಾರದ ಮೂರು ನಾಲ್ಕು ಜನರನ್ನು ಸೇರಿಸಿಕೊಂಡು, ಗುಡಿಯ ಜೀರ್ಣೋದ್ಧಾರ ಸಮಿತಿಯನ್ನು ಮಾಡಿ; ನಾನೂ ಬೇಕಾದರೆ ಬರ್‍ತೇನೆ. ಒಟ್ಟಿಗೇ ಕೂತು ಪ್ಲಾನು ಮಾಡೋಣ. ಇನ್ನು, ದುಡ್ಡಿನ ಬಗ್ಗೆ ನೀವು ತಲೆ ಕೆಡಿಸಿಕೊಳ್ಳೋದು ಬೇಡ-ದೇವರಿದ್ದಾನೆ“. ಹೆಗಡೆಯವರು ತಮ್ಮ ಮಾತಿನ ಕೊನೆಯಲ್ಲಿ ಹೇಳಿದ್ದಷ್ಟೆ ಭಟ್ಟರಿಗೆ ಬೇಕಾದದ್ದು. ಅದರ ಬಲವೊಂದಿದ್ದರೆ, ಮುಜರಾಯಿ-ಪುರಸಭೆ ಯಾವ ಲೆಕ್ಕ? ಅಲ್ಲದೆ ಯಾರುತಾನೆ ಆ ಶನೀಶ್ವರನನ್ನು ಎದುರುಹಾಕಿಕೊಂಡಾರು? ಹರಿಭಟ್ಟರು ಖುಷಿಯಿಂದ ಹೊರಟು, ಸೈಕಲ್ಲಿನ ಹತ್ತಿರ ಬಂದು ನೋಡುತ್ತಾರೆ-ಸೀಟಿನ ಮೇಲೆಲ್ಲ ಕಾಗೆಗಳ ಉಚ್ಛಿಷ್ಟ! ಭಟ್ಟರಿಗೆ ಸೈಕಲ್ಲನ್ನು ಮುಟ್ಟುವ ಮಸ್ಸಾಗಲಿಲ್ಲ. ಆದರೆ, ಕಾಗೆಯೆಂದರೆ ಏನು? ವಾಯಸ ದೇವ! ಶನೀಶ್ವರನ ವಾಹನ! ಅದರ ಅಮೇಧ್ಯವೂ ಪ್ರಸಾದವಷ್ಟೆ! ತಮ್ಮ ದೋತ್ರದಿಂದಲೇ ಅದನ್ನು ಒರೆಸಿದರು. ಲಗುಬಗೆಯಿಂದ ಸೈಕಲ್ಲು ತುಳಿಯತ್ತಾ ಮನೆಯಕಡೆ ಹೊರಟರು. +ಕಮಿಟಿಯಾಯಿತು; ಹೆಗಡೆಯವರೇ ಅಧ್ಯಕ್ಷರು, ಭಟ್ಟರು ಕಾರ್ಯದರ್ಶಿಗಳು. ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗಿಯೂ ಆಯಿತು. ಬರೀ ಐದಾರು ತಿಂಗಳಲ್ಲಿ ಶನಿ ಗುಡಿಯು ‘ಶ್ರೀ ಶನೀಶ್ವರ ದೇವಸ್ಥಾನ‘ವಾಯಿತು. ಎಲ್ಲರ ನಿರೀಕ್ಷೆಗೂ ಮೀರಿ ಹೋಮ-ಹವನಾದಿಗಳು, ಪಲ್ಲಕ್ಕಿ ಉತ್ಸವ ಹಾಗೂ ಯುಗಾದಿಯ ಮರುದಿನವೇ ಜಾತ್ರೆಯೂ ಆಗಿಹೋಯಿತು. ದೇವಸ್ಥಾನದ ಕಮಿಟಿಯು, ಹರಿಭಟ್ಟರು ಆಶಿಸಿದಂತೆ ಅವರ ಮಗ ರಾಜೇಶನನ್ನು ದೇವಸ್ಥಾನದ ಖಾಯಂ ಅರ್ಚಕನಾಗಿ ನೇಮಕಮಾಡಿತು. ಜಾತ್ರೆಯ ದಿನ ಬೆಳಗ್ಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಾಜೇಶನ ಮೈಮೇಲೆ ಸ್ವತ: ಶನೀಶ್ವನೇ ಬಂದು ಭಕ್ತಾದಿಗಳ ಹೆಸರನ್ನು ಬಿಡಿ ಬಿಡಿಯಾಗಿ ಕೂಗಿ ಹರಸಿಯೂಬಿಟ್ಟ! ಆ ಕ್ಷಣದಿಂದಲೇ ಶನೀಶ್ವರನಿಗೆ ಶುಕ್ರದೆಸೆ ತಿರುಗಿತು. +‘ಸಣ್ಣಭಟ್ಟರ ಮೈಮೇಲೆ ಶನಿದೇವರು ಬರ್‍ತದೆ.. ಇದ್ದದ್ದನ್ನು ಇದ್ದಹಾಗೇ ಹೇಳ್ತದೆ. ಎಂಥಾ ಬಿಗಿಯಾದ ಪ್ರಶ್ನೆಯೇ ಆಗಿರಲಿ ಕರೆಕ್ಟಾಗಿ ಉತ್ತರ ಹೇಳ್ತದೆ..‘ ಎಂಬ ಮಾತು ದಿನ-ವಾರಗಳಲ್ಲಿ ಜನಜನಿತವಾಗಿಬಿಟ್ಟಿತು. ಇಡೀ ಪೇಟೆಯವರು, ಸುತ್ತಮುತ್ತಲ ಹಳ್ಳಿಯವರೂ ಅಲ್ಲದೆ ಅಕ್ಕ-ಪಕ್ಕದ ತಾಲೂಕಿನವರೂ ರಾಶಿ ರಾಶಿಯಾಗಿ ಬರಲು ಪ್ರಾರಂಬಿsಸಿದರು. ಶನಿವಾರವಂತೂ ದೇವಸ್ಥಾನದ ಮುಂದೆ ಸಂತೆಯೇ ನೆರೆಯುತ್ತಿತ್ತು. ಊರಿನ ಶ್ರೀಮಂತರು ಸರದಿಯಲ್ಲಿ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆಯನ್ನೂ ಮಾಡಿ ಕೃತಾರ್ಥರಾಗತೊಡಗಿದರು. ಅಡಿಕೆ ಬೆಳೆಗಾರರ ಸಂಘದವರು ಶನಿದೇವರಿಗೆ ಬಂಗಾರದ ಮುಖವಾಡವನ್ನು ಮಾಡಿಸಿಕೊಡಬೇಕೆಂಬ ಮನವಿಯೊಂದಿಗೆ ದೇವಸ್ಥಾನದ ಕಮಿಟಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದರು. ಈಗ ಹರಿಭಟ್ಟರು ತಮ್ಮ ಬಹುತೇಕ ಸಮಯವನ್ನು, ಮಗನಿಗೆ ಸಹಾಯಕರಾಗಿ ಶನೀಶ್ವರನ ದೇವಸ್ಥಾನದಲ್ಲೇ ಕಳೆಯತೊಡಗಿದರು. ಅವರಿಗೆ ಮಾರಿಕಾಂಬ ದೇವಾಲಯದಲ್ಲೇ ಅರೆಕಾಲಿಕ ಪೂಜೆಯಾಗಿಬಿಟ್ಟಿತು. ಆದರೂ ಕೆಲವೊಮ್ಮೆ ಅಗ್ರಹಾರದಿಂದ ನಾಲ್ಕಾರು ಪುರೋಹಿತರನ್ನು ದಿನದ ಲೆಕ್ಕದಲ್ಲಿ ನೇಮಿಸಿಕೊಳ್ಳುತ್ತಿದ್ದರು. ಹೀಗೆ, ಶನೀಶ್ವರನ ನೆರಳಿನಲ್ಲಿ ಹರಿಭಟ್ಟರ ಕುಟುಂಬವಷ್ಟೇ ಅಲ್ಲ ಎಲ್ಲರ ಬದುಕೂ ಬಂಗಾರವಾಗ ತೊಡಗಿತು. ಆದರೆ ಈ ಊರಿನ ಜನಜೀವನದ ಅನೇಕ ಏಳುಬೀಳುಗಳನ್ನು ಸಾವಿರಾರು ವರ್ಷಗಳಿಂದ ನೋಡುತ್ತಿದ್ದ ಆ ವರದೆ ಮಾತ್ರ ಇವನ್ನೆಲ್ಲಾ ನೋಡಿಯೂ ನೋಡದಂತೆ ನಿರ್ಲಿಪ್ತಳಾಗಿ ಶನೀಶ್ವರನ ಪಾದತಳದಲ್ಲಿ ಹರಿದು ಸಾಗುತ್ತಲೇ ಇದ್ದಳು. +ಅದೊಂದು ಶನಿವಾರ. ರಾಜೇಶನು ಬೆಳಗಿನ ಜಾವದಲ್ಲೇ ಎದ್ದು ಇನ್ನೂ ಅರಳುತ್ತಿದ್ದ ತುಂಬೆ ಹೂವುಗಳನ್ನು ಕೊಯ್ದುತಂದು ಗರ್ಭ-ಗುಡಿಯ ಮಂದ ಬೆಳಕಿನಲ್ಲಿ ಪೂಜೆಗೆ ಅಣಿಮಾಡುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಮುಖ ಮಂಟಪಕ್ಕೆ ನೇತುಹಾಕಿದ್ದ ಘಂಟೆ ಒಮ್ಮೆ ‘ಢಾಣ್‘ ಎಂದು ಬಡಿದುಕೊಂಡಿತು. ಅಲ್ಲಿ ಅಷ್ಟು ಹೊತ್ತಿನಲ್ಲಿ ಶನೀಶ್ವರನನ್ನಲ್ಲದೆ, ಇನ್ನಾರನ್ನೂ ನಿರೀಕ್ಷಿಸದಿದ್ದ ರಾಜೇಶ, ಇದ್ದಕ್ಕಿದ್ದಂತೆ ‘ಕುಮೀಟು‘ ಬಿದ್ದು ಘಂಟೆಯನ್ನೊಮ್ಮೆ ನೋಡಿದ. ಅದು ತನಗೆ ಏನೂ ಸಂಬಂಧ ಇಲ್ಲವೆನ್ನುವಂತೆ ಸುಮ್ಮನೆ ನೇತಾಡುತ್ತಿತ್ತು! ಈಗ ಅವನ ದೃಷ್ಟಿ ಘಂಟೆಯ ಕೆಳಗೆ ಕರಿಶಿಲೆಯ ಜಠಾಧಾರಿ ಮೂರ್ತಿಯಂತೆ ನಿಂತಿದ್ದ ಆಕಾರದ ಕಡೆ ಹೊರಳಿತು. ರಾಜೇಶನಿಗೆ ಇದ್ದಕ್ಕಿದ್ದಂತೆ ಪರಶಿವನೇ ಪ್ರತ್ಯಕ್ಷನಾದಂತೆನಿಸಿ ಹೊರಗೆ ಬಂದು ಲೈಟು ಹಾಕಿದ. ಆ ಪ್ರಕಾಶಮಾನವಾದ ವಿದ್ಯುದ್ದೀಪದಲ್ಲಿ ಬೆಳಗಿದವನು-ವಿಠಲಾಚಾರಿ! ಹಿಂದಿನಂತೆ ಕುರುಚಲು ಕರಿ-ಬಿಳಿ ಗಡ್ಡದ ಬದಲು ಈಗ ರೇಶಿಮೆಯಂತೆ ಬೆಳ್ಳಗೆ ಹೊಳೆಯುತ್ತಿದ್ದ ನೀಳವಾದ ಗಡ್ಡ; ತಲೆಯ ಹಿಂಬದಿಗೆ ಕಟ್ಟುತ್ತಿದ್ದ ಜುಟ್ಟು, ಈಗ ನೆತ್ತಿಯ ಮೇಲೆ ಜಟೆಯಾಗಿದೆ; ಕೊಳಕು ಅಂಗಿ-ಪಂಚೆಯ ಬದಲು ಶುಭ್ರ ಕಾವಿ ವಸನ. ನೆರಿಗೆ ಮೂಡಿದ ಮುಖದಲ್ಲಿ ಪ್ರಜ್ವಲಿಸುವ ಕಣ್ಣುಗಳು; ತುಸು ಬಾಗಿದ ಬೆನ್ನು. ಖಂಡಿತ ಇವನು ವಿಠಲಾಚಾರಿಯೇ! ಆತನಿಗೆ ರಾಜೇಶನ ಪರಿಚಯವಿದ್ದಿರಲಿಕ್ಕಿಲ್ಲ. ಅವನು ಊರು ಬಿಡುವಾಗ ಇವನಿನ್ನೂ ಶಾಲೆಗೆ ಹೋಗುತ್ತಿದ್ದ ಚಡ್ಡಿ-ಹುಡುಗ. ಆದರೆ, ರಾಜೇಶನಿಗೆ ಒಮ್ಮೆಲೇ ವಿಠಲಾಚಾರಿಯ ಗುರುತು ಸಿಕ್ಕಿಬಿಟ್ಟಿತು. ಯಾಕೋ ಏನೋ ಅವನಿಗೆ ಒಮ್ಮೆಲೇ ಇಡೀ ಜಂಘಾಬಲವೇ ಉಡುಗಿಹೋದಂತಾಯಿತು. ತಾನು ಬಿಳಿಚಿಕೊಂಡದ್ದನ್ನು ತೋರಿಸಿಕೊಳ್ಳದೆ ಅವನೆಂದ: “ ಓಹ್ ಆಚಾರ್ರು! ಈಗ ಬಂದದ್ದ? ಬಹಳ ಸಂತೋಷ! ನಾನು ಹರಿಭಟ್ಟರ ಮಗ. ನೋಡಿ, ನೀವು ಹೋದ ಮೇಲೆ ದೇವಸ್ಥಾನ ಎಷ್ಟು ಬೆಳೆದುಬಿಟ್ಟಿದೆ…!“ ವಿಠಲಾಚಾರಿ ಮಾತನಾಡಲಿಲ್ಲ. ಒಮ್ಮೆ ದೇವಸ್ಥಾನದ ಸುತ್ತೆಲ್ಲಾ ಕಣ್ಣುಹಾಯಿಸಿ ಗರ್ಭ ಗುಡಿಯ ಹೊಸಿಲಿಗೆ ಬಂದು ನಿಂತ. ಅದೇ ಶನೀಶ್ವರ! ಈಗ ರಾಜೇಶ ಉತ್ಸಾಹದಿಂದ ನಂದಾದೀಪದ ಬತ್ತಿಯನ್ನು ಉದ್ದವಾಗಿ ಎಳೆದು ದೊಡ್ಡ ಬೆಳಕು ಮಾಡಿದ. ಹೌದು ಅದೇ ಶನೀಶ್ವರ! ಏನೇನೂ ವ್ಯತ್ಯಾಸವಿಲ್ಲ! ಕಪ್ಪನೆಯ ಒರಟು ಶಿಲೆಯಲ್ಲಿ ಕೆತ್ತಿದ ಒಂದೂವರೆ-ಎರಡು ಅಡಿ ಎತ್ತರದ ವಿಗ್ರಹ.. ವಿಠಲಾಚಾರಿ ಗರ್ಭಗುಡಿಯ ಹೊಸಿಲಿಗೆ ತಲೆಯಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದ. ಸ್ವಲ್ಪ ಸಮಯದ ನಂತರ ಮೇಲಕ್ಕೆದ್ದು ದೇವಸ್ಥಾನದ ಸುತ್ತೆಲ್ಲಾ ಕಣ್ಣು ಹಾಯಿಸಿದ… +‘ಫಳ-ಫಳ‘ ಹೊಳೆಯುತ್ತಿದ್ದ ಕರಿಶಿಲೆಯ ಗೋಡೆ; ನುಣ್ಣಗೆ ಬೆಳ್ಳಗೆ ನಿಂತ ಸಾಲು ಕಂಬಗಳು…ಹೆಜ್ಜೆಯಿಟ್ಟರೆ ಎಲ್ಲಿ ಕೊಳೆಯಾಗಿ ಬಿಡುವುದೋ ಎಂಬಂತೆ ಥಳಥಳಿಸುತ್ತಿದ್ದ ನಾಜೂಕಾದ ಪಿಂಗಾಣಿಯ ಹಾಸುಬಿಲ್ಲೆಗಳು.. ದಿಕ್ಕು-ದಿಕ್ಕುಗಳಲ್ಲಿ ಬೆಳಗಲು ಸಿದ್ಧವಾಗಿ ಕುಳಿತಿದ್ದ ವಿವಿಧ ಮಾದರಿಯ ವಿದ್ಯುದ್ದೀಪಗಳು..ದುಂಡಾದ ಅಕ್ಷರಗಳಲ್ಲಿ ಬರೆದ ವಿವಿಧ ಪೂಜೆ, ಅರ್ಚನೆ, ಪ್ರಸಾದಗಳ ದರಗಳ ಬೋರ್ಡು.. ಹುಬ್ಬಳ್ಳಿಯ ‘ಆರಾರ್ ಟ್ರೆಝರಿ ಕಂಪೆನಿ‘ಯ ಲಾಂಛನವಿದ್ದ ದೊಡ್ಡ ಕಾಣಿಕೆ ಡಬ್ಬಿ.. ಭಕ್ತಾದಿಗಳ ತಲೆಗೆ ಹೊಡೆದುಬಿಡುತ್ತವೇನೋ ಎನ್ನುವಂತೆ ನೆತ್ತಿಯ ಮೇಲೆ ತೂಗಾಡುತ್ತಿದ್ದ ವಿವಿಧ ಗಾತ್ರದ ಘಂಟೆಗಳು.. ವಿಠಲಾಚಾರಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೊರಗೆ ಬಂದ. ಮೊದಲು ತನ್ನ ಮನೆಯಿದ್ದ ಸ್ಥಳದಲ್ಲೀಗ ವಿಶಾಲವಾದ ಚಂದ್ರಶಾಲೆ..ನೂರಿನ್ನೂರು ಜನರಿಗೆ ಒಟ್ಟಿಗೇ ಊಟಕ್ಕೆ ಕೂರಿಸಬಹುದು.. ಓಹ್! ಇಲ್ಲೊಂದು ಹೋಮಕುಂಡ..! ಹೌದು. ಇಲ್ಲೆ ಇವನ ಪುಟ್ಟ ಕುಲುಮೆ ಇದ್ದದ್ದು… ಅದರ ಆಚೆ ಮೂಲೆಯಲ್ಲಿ ಅಗ್ಗಿಷ್ಟಿಕೆ.. ಇನ್ನೂ ಮುಂದೆ ಹೋದ; ಇದು ತನ್ನ ಒಳಮನೆ.. ಮಲಗುವ ಕೋಣೆ.. ಈಗ ಆ ಮುಂಡು ಗೋಡೆಗಳಿಲ್ಲ ಅಷ್ಟೆ. ಅವನು ಹೆಜ್ಜೆಗಳನ್ನು ಬಿರ-ಬಿರನೆ ಹಾಕಿದ. ಹಿಂಬದಿಗೆ ಬಂದ. ಭೋಜನಶಾಲೆ… ಹಾಗೇ ಬಲಕ್ಕೆ ಹೊರಳಿದ; ವಿಶಾಲವಾದ ಜಗುಲಿ; ಪೇರಿಸಿಟ್ಟ ನೂರಾರು ಕುರ್ಚಿಗಳು ಹಾಗೂ ಉದ್ದನೆಯ ಊಟದ ಮೇಜುಗಳು… ಇನ್ನೂ ಮುಂದೆ, ಹೊರಗೆ ಬಂದುಬಿಟ್ಟ. ಇಲ್ಲ-ಅವನಿನ್ನೂ ಒಳಗೇ ಇದ್ದ! +“ಶನೀಶ್ವರ ದೇವಸ್ಥಾನದ ಆಡಳಿತ ಮಂಡಳಿ ಆಪಿsಸು -ಅಪ್ಪಣೆ ಇಲ್ಲದೆ ಒಳಗೆ ಪ್ರವೇಶವಿಲ್ಲ“ +ಇನ್ನೂ ಮುಂದೆ ಹೊರಟ.. ಅರೆ! ಇಲ್ಲೊಂದು ಅರಳಿಯ ಮರವಿತ್ತಲ್ಲವೆ! ಹೌದು..ಇಲ್ಲಿಯೇ ಇತ್ತು.. ದೊಡ್ಡ-ದೊಡ್ಡ ಕಲ್ಲುಗಳ ಕಟ್ಟೆಯೂ ಇತ್ತಲ್ಲವೆ? ವಿಠಲಾಚಾರಿಗೆ ನಂಬಲಾಗಲಿಲ್ಲ. ಅಥವಾ ತಾನು ಅಪ್ರದಕ್ಷಿಣೆ ಹಾಕಿ ಅರಳೀಮರ ಮಾಯವಾಗಿಬಿಟ್ಟಿತೋ ಹೇಗೆ? ಅವನು ಗಲಿಬಿಲಿಗೊಂಡ. ದೇವಸ್ಥಾನದ ಎದುರು ನಿಂತು, ಕೆಳಗಿನ ಕಲ್ಲಿನ ಸೋಪಾನಗಳನ್ನು ನೋಡಿದ.. ತಳದಲ್ಲಿ ವರದೆ ತುಂಬಿ ಹರಿಯುತ್ತಿದ್ದಳು…ಆಚೆ ದಡದಲ್ಲಿ ಸೊಂಪಾಗಿ ಬೆಳದು ಗೊನೆತುಂಬಿ ನಿಂತ ಅಡಿಕೆ ತೋಟ. ಅದಕ್ಕೂ ಆಚೆ ನಸುಗೆಂಪು ಬಣ್ಣದ ದಿಗಂತ…ವಿಠಲಾಚಾರಿ ನೋಡುತ್ತಲೇ ನಿಂತ… +ಅವನ ಬೆನ್ನಿಗೆ ಮಾರುತಿ ವ್ಯಾನು ಬಂದು ನಿಂತಾಗಲೇ ಎಚ್ಚರ! ಹರಿಭಟ್ಟರು, ಶಾಮೈತಾಳರು, ವರದಾಚಾರ್ಯರು, ರಾಘವರಾಯರು..ಒಬ್ಬೊಬ್ಬರೇ ವ್ಯಾನಿನಿಂದಿಳಿದು ಬಂದರು. ಎಲ್ಲವೂ ಇವನಿಗೆ ಪರಿಚಿತ ಮುಖಗಳೆ. ಇನ್ನೂ ಹಣ್ಣಾಗಿದ್ದಾರೆ-ತನ್ನಂತೆ! ವ್ಯಾನನ್ನು ತಿರುಗಿಸಿ, ಕೊನೆಯಲ್ಲಿ ಇಳಿದು ಬಂದವನೊಬ್ಬನೆ-ಯುವಕ. ಅರೆ! ಅವನು ಆಗ ಗರ್ಭಗುಡಿಯಲ್ಲಿದ್ದವನಲ್ಲವೆ? ಹರಿಭಟ್ಟರೇ ಮಾತನ್ನು ಪ್ರಾರಂಬಿsಸಿದರು: +“ಏನಾ ವಿಟ್ಲ, ಯಾವತ್ತು ಬಂದೆಯೋ ಮಾರಾಯ? ಬಾ, ಒಳಗೆ ನೋಡು..ಹಾಳು ಗುಡಿಯನ್ನು ಹ್ಯಾಗೆ ಕಟ್ಟಿದೀವಿ ಅಂತ..“ +ಶಾಮೈತಾಳರು ಮುಂದುವರಿಸಿದರು: “ಇಡೀ ಪ್ಯಾಟೇಲಿ, ಇಷ್ಟು ದೊಡ್ಡ ದೇವಸ್ಥಾನ ಯಾವುದಿದೆ ಹೇಳು-ನೋಡೋಣ?“ +ವಿಠಲಾಚಾರಿಯ ಉತ್ತರಕ್ಕೆ ಕಾಯದೆ ರಾಘವರಾಯರೆಂದರು: +“ನೋಡು, ವಿಠಲ, ಅಲ್ಲಿ, ನಿನ್ನ ಬಿಡಾರ ಇತ್ತಲ್ಲ? ಅದು, ಹಂಗೆ ಹಾಳು ಬಿದ್ದುಹೋಗಿತ್ತು. ನೀನು ಬರ್‍ತೀಯೇನೊ ಅಂತ ಕಾದವಿ. ನೀನು ಬರಲೇ ಇಲ್ಲ.. ಸರಿ. ದೇವರ ಕೆಲಸ ನಿಲ್ಲಿಸಬಾರದು, ನಿಂಗೆ ಆಮೇಲೆ ಹೇಳಿದರೆ ಸರಿ ಅಂತ ದೇವಸ್ಥಾನಕ್ಕೆ ಸೇರಿಸಿಕೊಂಡಿದೀವಿ..“. ಇನ್ಯಾರೊ ಸೇರಿಸಿದರು: “ನಿನ್ನನ್ನೇನು ಬೀದಿಪಾಲು ಮಾಡೋದಿಲ್ಲಪ್ಪ. ಕಮಿಟಿಯಿಂದ ಪರಿಹಾರ ಧನ ಕೊಡತೀವಿ; ಮುನ್ಸಿಪಾಲಿಟಿಯಿಂದ ಒಂದು ಪಿs ಸೈಟನ್ನೂ ಕೊಡಸ್ತೀವಿ..“. +ಈಗ ಹರಿಭಟ್ಟರು ಕೊನೆಯದಾಗಿ ಕೇಳಿದರು: +“ನಿನ್ನ ಕಬೂಲು ಇದೆ ತಾನೆ?“ +ವಿಠಲಾಚಾರಿ, ದಿಗಂತವನ್ನು ನೋಡುತ್ತಲೇ ಉತ್ತರಿಸಿದ: +“ಸ್ವಾಮಿ, ನೀವೆಲ್ಲಾ ದೊಡ್ಡವರು; ನಿಮಗೆ ಹೇಳಲಿಕ್ಕೆ ನಾನು ಎಷ್ಟರವನು? ನನ್ನ ಸ್ವಂತದ್ದು ಅಂತ ಜಾಗ ಇಲ್ಲಿ ಎಲ್ಲಿತ್ತು-ಹೇಳಿ? ಅದೇ ಅಲ್ಲಿ..ಹೋಮಕುಂಡ ಇದೆಯಲ್ಲಾ-ಅಲ್ಲಿಯಾ? ಅಥವಾ ಭೋಜನಶಾಲೆ ಇದೆಯಲ್ಲ-ಅಲ್ಲಿಯಾ?.. ಹ್ಹ! ಆ ಜಾಗವನ್ನು ದೇವರಿಗೆ ಬಿಟ್ಟುಕೊಡಲಿಕ್ಕೆ ನಾನು ಯಾರು? ಅಥವಾ ತೆಗೆದುಕೊಳ್ಳಲಿಕ್ಕೆ ನೀವು ಯಾರು? ಅದು ದೇವರದ್ದೇ ಅಲ್ಲವಾ ಐತಾಳರೆ? ನಿಮ್ಮೆಲ್ಲರ ಕಣ್ಣಿಗೆ ನಾನು ದೇವರಿಗೇ ಜಾಗವನ್ನು ಬಿಟ್ಟುಕೊಡುವಷ್ಟು ದೊಡ್ಡವನಾಗಿ ಕಂಡೆನೆ?“ +ಅಲ್ಲಿ ನಿಂತಿದ್ದ ಹಿರಿಯರಿಗೆಲ್ಲ ವಿಠಲಾಚಾರಿ ನಗದಿದ್ದರೂ ನಕ್ಕಂತೆ ಕಾಣಿಸಿತು; ತಾವು ನಾಚಿಕೊಳ್ಳದಿದ್ದರೂ ನಾಚಿಕೊಂಡಂತೆನಿಸಿತು. +ಇನ್ನು ಅವನೊಂದಿಗೆ ಮಾತನಾಡಬೇಕಾದದ್ದು ಏನೂ ಉಳಿದಿರಲಿಲ್ಲ. ಆದರೆ, ಅವನನ್ನು ಹಾಗೆಯೇ ಬಿಟ್ಟು ಹೊರಡುವುದೂ ಅವರಿಗೆ ಸರಿಯೆನಿಸಲಿಲ್ಲ. ಅಷ್ಟರಲ್ಲಿ ಗರ್ಭಗುಡಿಯ ಗಂಟೆಯ ಶಬ್ದವಾಯಿತು. ಯಾವಾಗಲೋ ಎನೊ ಹರಿಭಟ್ಟರ ಮಗ, ಗರ್ಭಗುಡಿಗೆ ತೂರಿಕೊಂಡು ಪೂಜೆಯನ್ನು ಪ್ರಾರಂಬಿsಸಿಬಿಟ್ಟಿದ್ದ. ಎಲ್ಲರೂ ಅತ್ತ ಹೆಜ್ಜೆ ಹಾಕಿದರು. ವರದಾಚಾರ್ಯರು ವಿಠಲಾಚಾರಿಯನ್ನು ಕೈಹಿಡಿದು ಗರ್ಭಗುಡಿಯ ಬಾಗಿಲಿನ ಎದುರು ನಿಲ್ಲಿಸಿ, ತಾವು ಒಳಗೆ ಹೋಗಿ ವಿದ್ಯುದ್ದೀಪವನ್ನು ಬೆಳಗಿದರು. ಇಡೀ ಗರ್ಭಗುಡಿ ಪ್ರಕಾಶಮಾನವಾಯಿತು! +“ಭಟ್ಟರೆ, ಶನೀಶ್ವರ ಎಲ್ಲಿ?“ ಇದ್ದಕ್ಕಿದ್ದಂತೆ ವಿಠಲಾಚಾರಿ ಕೇಳಿದ: +ಎಲ್ಲರನ್ನೂ ಚಕಿತರಾದರು ಅರೆ! ವಿಠಲಾಚಾರಿಗೆ ಏನಾಯಿತು!? ಆಗ ಹರಿಭಟ್ಟರು, ದೇವರನ್ನು ತೋರಿಸುತ್ತಾ ಹೇಳಿದರು: +“ಅಲ್ಲೋ ವಿಠಲಾ, ಇಲ್ಲಿ ನೋಡೋ, ಇವನೇ ಅಲ್ಲವೇನೋ ಶನೀಶ್ವರ? ನನ್ನ ಮಗ ಈಗತಾನೆ, ಈ ದೇವರಿಗೆ, ಸ್ನಾನ ಮಾಡಿಸಿ, ಬಂಗಾರದ ಮುಖವಾಡ ಹಾಕಿದ್ದಾನೆ-ಅಷ್ಟೆ; ಇವತ್ತು ಶನಿವಾರ ಅಲ್ಲವೆ? ವಿಶೇಷ ಪೂಜೆ! ನೀನು ಇನ್ನೊಂದು ಸ್ವಲ್ಪ ಹೊತ್ತು ಇಲ್ಲೇ ಇರು, ನಿನಗೇ ತಿಳಿಯುತ್ತೆ-ಎಷ್ಟು ಜನ ಬಂದು ಸೇರ್‍ತಾರೆ ಅಂತ.“ +ಈಗ ರಾಘವರಾಯರ ಸರದಿ; ಅವರೆಂದರು: “ನೋಡು, ದೇವರ ಮುಖವಾಡ ಹ್ಯಾಗಿದೆ ಅಂತ! ಅಡಿಕೆ ಬೆಳೆಗಾರರ ಸಂಘದವರು ಮಾಡಿಸಿಕೊಟ್ಟಿದ್ದು. ಒಂದು ಲಕ್ಷ ರೂಪಾಯಿಗಳದ್ದು!“. +ಈಗ ರಾಜೇಶ ದೊಡ್ಡ-ದೊಡ್ಡ ದಾಸವಾಳದ ಹೂವುಗಳನ್ನು ಶನೀಶ್ವರನಿಗೆ ಮುಡಿಸುತ್ತಿದ್ದ. ವಿಠಲಾಚಾರಿ ನಿಧಾನವಾಗಿ ಕೇಳಿದ: +“ಹರಿಭಟ್ಟರೆ, ಶನೀಶ್ವರನ ಮುಖಕ್ಕೆ, ಈ ತಗಡನ್ನು ಮುಚ್ಚಿದ್ದೀರಲ್ಲ-ಅದನ್ನು ಅವನು ಕೇಳಿದ್ದನಾ?“ ವರದಾಚಾರರು ಹೇಳಿದರು: “ಏನು ಮಾತು ಅಂತ ಆಡತೀಯ, ವಿಠಲ? ದೇವರು ಯಾವತ್ತೂ ಕೊಡೋನೇ ಹೊರತು ಬೇಡೋನಲ್ಲ“. ಇನ್ಯಾರೋ ಮುಂದುವರಿಸಿದರು: “ಆದರೆ, ಅವನನ್ನು ಅಲಂಕರಿಸಿ, ಅರ್ಚಿಸಿ ನಾವು ಪುಣ್ಯ ಕಟ್ಟಿಕೊಳ್ಳೋದಲ್ಲವೆ?“. +ವಿಠಲಾಚಾರಿ ಸಮಾಧಾನದಿಂದಲೆ ಕೇಳಿದ, +“ಹೌದು ಸ್ವಾಮಿ, ಆದರೆ, ಅಂಥ ಸುಂದರವಾದ ಕಲ್ಲಿನ ವಿಗ್ರಹಕ್ಕೆ, ಹಿತ್ತಾಳೆ ತಗಡನ್ನು ಮುಚ್ಚೀದ್ದೀರಲ್ಲ, ಇದು ಅವನಿಗೆ ಬೇಕಿತ್ತಾ?“ +ಶಾಮೈತಾಳರಿಗೆ, ವಿಠಲಾಚಾರಿಯ ಮಾತು ಅತಿಯೆನಿಸಿತು; ಅವರೆಂದರು: +“ಏನು ಮಾತು ವಿಠಲಾ, ನೀನು ಆಡತಾ ಇರೋದು? ಇದು ಬಂಗಾರದ ಮುಖವಾಡ; ಲಕ್ಷಾಂತರ ರೂಪಾಯದ್ದು! ಹರಿಭಟ್ಟರ ಮಗನೇ ಸ್ವತ: ಉಡುಪಿಗೆ ಹೋಗಿ ಬಂಗಾರದ್ದನ್ನೇ ಮಾಡಿಸಿಕೊಂಡು ಬಂದಿದ್ದಾನೆ; ನಿನಗೆ ಕಣ್ಣು ಮಂಜಾಗಿರಬೇಕು. ಇನ್ನೊದು ಸಾರಿ ನೋಡು“. +“ಸ್ವಾಮೀ, ನಾನು ನಿಮಗಿಂತ ಒಂದೆರಡು ವರ್ಷ ಚಿಕ್ಕವನಿರಬಹುದು; ಆದರೆ, ಇಂಥ ನೂರು ದೇವರುಗಳಿಗೆ ಮುಖವಾಡವನ್ನು ಎರಕ ಹೊಯ್ದುಕೊಟ್ಟವನು. ನೀವು ನನಗೆ ಅಪಮಾನ ಮಾಡಿ- ಅಡ್ಡಿಯಿಲ್ಲ. ಆದರೆ, ನನ್ನ ವೃತ್ತಿಗೆ ಅಗೌರವ ಮಾಡಬೇಡಿ-ದಯಮಾಡಿ“. +ಇಷ್ಟೂ ಹೊತ್ತೂ ವಿಠಲಾಚಾರಿಯ ಮಾತುಗಳಲ್ಲಿ ನೋವು ಇತ್ತೇ ವಿನ: ವ್ಯಂಗ್ಯವಾಗಲಿ, ಅಪಹಾಸ್ಯವಾಗಲಿ, ಸಿಟ್ಟಾಗಲಿ, ಇರಲಿಲ್ಲ; ಅವನ ಪ್ರಶ್ನೆಗಳಲ್ಲಿ, ನಿಖರವಾಗಿ ಉತ್ತರ ತಿಳಿದವರು ಮಾಡುವ ತನಿಖೆಯ ಧಾಟಿಯೂ ಇರಲಿಲ್ಲ. ಆದಾಗ್ಯೂ, ರಾಜೇಶ ಕಿರಿಕಿರಿಗೊಂಡ: +“ ಅಪ್ಪಯ್ಯ, ಬೆಳಗಾತು; ಇವತ್ತು ವಿಶೇಷ ಪೂಜೆ, ಹೋಮ ಬೇರೆ ಇದ್ದು; ಬ್ಯಾಗನೆ ಮನೀಗೆ ಹೋಗಿ ಸ್ನಾನ ಮಾಡ್ಕಂಡು ಬನ್ನಿ; ಈ ಪಿರ್ಕಿ ಹತ್ರ ಎಂತಾ ಮಾತು?“ +ರಾಜೇಶನ ಮಾತು ಮುಗಿಯುತ್ತಿದ್ದಂತೆಯೇ ವಿಠಲಾಚಾರಿಯ ಕಾಲುಗಳು ಗರ್ಭಗುಡಿಯ ಒಳಗಿದ್ದವು. ಅವನು ತನ್ನ ಎರಡೂ ಕೈಗಳಿಂದ ಒಮ್ಮೆಲೇ ಶನೀಶ್ವರನ ಮುಖವಾಡವನ್ನು ಕೈಗೆತ್ತಿಕೊಂಡು ಹರಿಭಟ್ಟರ ಮುಖಕ್ಕೆ ಹಿಡಿದು ಹೇಳಿದ: +“ಅಂಥ ಸುಂದರವಾದ ಮೂರ್ತಿಯನ್ನು ಈ ಜುಜುಬಿ ಹಿತ್ತಾಳೆ ತಗಡಿನಲ್ಲಿ ಮುಚ್ಚಿ, ‘ಬಂಗಾರದ್ದು‘ ಅಂತಿದ್ದೀರಲ್ಲ; ಈ ವಯಸ್ಸಿನಲ್ಲಿ ನಿಮ್ಮಂಥವರು ಮಾಡೋ ಕೆಲಸವಾ ಇದು?“. +ಸುತ್ತು-ಮುತ್ತ ನಿಂತಿದ್ದ ಹಿರಿಯರಿಗೆ ಆ ಕೂಡಲೆ ಅವನ ಮಾತುಗಳು ಅರ್ಥವಾಗಲಿಲ್ಲ. ಗರ್ಭ +ಗುಡಿಯಲ್ಲಿದ್ದ ರಾಜೇಶನು ವಿಠಲಾಚಾರಿಯ ಕೈಯಿಂದ ಮುಖವಾಡವನ್ನು ಕಸಿದುಕೊಳ್ಳಲು ಹೊರಗೆ ನುಗ್ಗಿ ಬಂದ. ಆದರೆ, ಅಷ್ಟರಲ್ಲಿ ಅವನು ಆ ಮುಖವಾಡವನ್ನು ಹೊರಗೆ ಎಸೆದುಬಿಟ್ಟಿದ್ದ. ಅದು “ಡಣ್..ಡಣ್..“ ಎಂದು ಸದ್ದುಮಾಡುತ್ತಾ ದೇವಸ್ಥಾನದ ಒಂದೊಂದೇ ಸೋಪಾನದಿಂದ ಉರುಳುತ್ತಾ ಕೊನೆಗೆ ವರದಾ ನದಿಗೆ ಬಿದ್ದು ಮುಳುಗಿಹೋಯಿತು. ಇದರಿಂದ ರಾಜೇಶನ ಸಿಟ್ಟು ನೆತ್ತಿಗೇರಿತು: “ಥೂ! ದರಿದ್ರಗೆಟ್ಟವನೆ, ಅಂತಹ ಬಂಗಾರದ ಮುಖವಾಡವನ್ನು ಎಸೆದೆಯಲ್ಲ ನಿನಗೆ ರೌರವ ನರಕ ತಪ್ಪಿದ್ದಲ್ಲ-ನೋಡು“ ಎಂದು, ಅವನನ್ನು ಹೊಡೆಯಲು ಹೋದ. ಅಷ್ಟರಲ್ಲಿ ಅಲ್ಲಿದ್ದ ಹಿರಿಯರು ಅವನನ್ನು ತಡೆದರು. ವಿಠಲಾಚಾರಿ ಏನೂ ಮಾತಾಡದೆ ದೇವರ ಮೂರ್ತಿಯನ್ನೇ ನೋಡುತ್ತಿದ್ದ. ಆಗ, ಹರಿಭಟ್ಟರು, “ವಿಠಲಾ, ನಮ್ಮ ಮೇಲಿನ ಸಿಟ್ಟನ್ನು ದೇವರಮೇಲೆ ತೀರಿಸಿಕೊಳ್ಳೋದಲ್ಲ; ದೇವರೇನೂ ನಮ್ಮ ಖಾಸಗೀ ಸ್ವತ್ತೆ?“. +ಈಗಲೂ ವಿಠಲಾಚಾರಿ ಮಾತನಾಡಲಿಲ್ಲ. ರಾಜೇಶ ಏದುಸಿರಿನ ನಡುವೆ ಹೇಳಿದ: +“ವಿಠಲಾಚಾರಿ ಅದನ್ನು ಯಾಕೆ ನೀರಿಗೆ ಎಸ್ದ ಗೊತ್ತಾ? ತನ್ನ ಸುಳ್ಳನ್ನ ಮುಚ್ಚಿಕೊಳ್ಳೋಕೆ. ಒಟ್ಟು ಏನೋ ಹೇಳಿಕೊಂಡುಬಿಟ್ಟ-ಭಾರಿ ಬುದ್ಧಿವಂತನ ಹಾಗೆ. ಅದನ್ನ ಸಾಬೀತುಪಡಿಸಬೇಕಾಗುತ್ತೆ ಅಂತ ನೀರಿನಲ್ಲಿ ಮುಳುಗಿಸಿಬಿಟ್ಟ; ಇನ್ನು, ಅವನು ಹೇಳಿದ್ದೇ ಸತ್ಯವಾಗಿ ಉಳಿಯುತ್ತೆ, ನೋಡಿ?!“. ವಿಠಲಾಚಾರಿ ಒಮ್ಮೆ ದೇವರ ಕಡೆ ಮತ್ತೊಮ್ಮೆ ಹೊರಗೆ ನೋಡಿದನೇ ವಿನ: ಮಾತನಾಡಲಿಲ್ಲ. ಇವೆಲ್ಲದ್ದರಿಂದ ಮನನೊಂದ ಶಾಮೈತಾಳರು ಹೇಳಿದರು, +“ದೇವರಿಗೆ ಇಂಥ ಅಪಮಾನ ಮಾಡಬಾರದಿತ್ತು; ಇದರಿಂದ ಊರಿಗೆ ಒಳ್ಳೆಯದಾಗೋಲ್ಲ“. +ಈ ಮಾತನ್ನು ತಮಗೇ ಹೇಳಿದರೆಂದುಕೊಂಡು ಹರಿಭಟ್ಟರು ಹಾಗೂ ರಾಜೇಶ ಮುಖ-ಮುಖ ನೋಡಿಕೊಂಡರು. ವಿಠಲಾಚಾರಿಯು, ನಿಧಾನವಾಗಿ ದೇವಸ್ಥಾನದ ಹೊರಗೆ ಬಂದು, ಒಂದೊಂದೇ ಮೆಟ್ಟಿಲುಗಳನ್ನು ಇಳಿಯತೊಡಗಿದ. ಹಾಗೆ ಇಳಿಯುತ್ತಿದ್ದಂತೆ ಅವನ ಹೆಜ್ಜೆಗಳ ವೇಗ ಹೆಚ್ಚಾಗಿ, ಇನ್ನೇನು ನಾಲ್ಕಾರು ಮೆಟ್ಟಿಲುಗಳಿವೆ ಎನ್ನುವಷ್ಟರಲ್ಲಿ ‘ಚಂಗನೆ‘ ನೀರಿಗೆ ಹಾರಿಯೇಬಿಟ್ಟ. ಅಷ್ಟರ +ಲ್ಲಾಗಲೇ, ಶನೀಶ್ವರನ ಪೂಜೆಗೆಂದು ಭಕ್ತಾದಿಗಳೂ ನೆರೆದಿದ್ದರು. ನೋಡುನೋಡುತ್ತಿದ್ದಂತೆಯೇ, ವಿಠಲಾಚಾರಿ ನೀರಿನಲ್ಲಿ ಮುಳುಗಿಹೋದ. ಇನ್ನೇನು ಮುಳುಗಿಯೇ ಬಿಟ್ಟನೆಂದು ಜನರು ಅಂದುಕೊಳ್ಳುವಷ್ಟರಲ್ಲಿ, ಅವನು ತನ್ನ ಒಂದು ಕೈಯಿಂದ ಮುಖವಾಡವನ್ನೆತ್ತಿ, ಮೆಟ್ಟಿಲುಗಳ ಮೇಲೆ ಜೋರಾಗಿ ಎಸೆದ. ರಾಘವರಾಯರು ಮೆಟ್ಟಿಲುಗಳನ್ನಿಳಿದು ಅದನ್ನು ತೆಗೆದುಕೊಳ್ಳಲು ಬಗ್ಗಿದ್ದರಷ್ಟೆ, ರಾಜೇಶನು ರಭಸದಲ್ಲಿ ಬಂದು ಅದನ್ನು ತೆಗೆದುಕೊಂಡು ಅಷ್ಟೇ ವೇಗದಲ್ಲಿ ಗರ್ಭಗುಡಿಯ ಒಳಗೆ ತೂರಿಕೊಂಡು ಅದನ್ನು ಶನೀಶ್ವರನಿಗೆ ಹಾಕಿಯೇಬಿಟ್ಟ! ನೆರೆದಿದ್ದ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಕೆಲವರು ನೆತ್ತಿಯ ನೇರಕ್ಕೆ ತೂಗುತ್ತಿದ್ದ ಘಂಟೆಗಳತ್ತ ಕೈಗಳನ್ನೆತ್ತಿ ಸೇವೆಸಲ್ಲಿಸಿದರು! +ಈ ಗದ್ದಲದ ನಡುವೆ ಯಾರೂ ವಿಠಲಾಚಾರಿಯನ್ನು ಲಕ್ಷಿಸಲೇ ಇಲ್ಲ. ಅಂದಿನ ಶನೀಶ್ವರನ ವಿಶೇಷ ಪೂಜೆಯ ನಂತರವೂ ಕೂಡ ಯಾರೂ ಅವನನ್ನು ನೋಡಲಿಲ್ಲ. ಆಮೇಲೆ ಜನರು ತಮ್ಮತಮ್ಮಲ್ಲೇ ಅಂದುಕೊಂಡರು: ‘ಅವನಿಗೆ ಒಮ್ಮೆ ಈಜಲು ಬರುತ್ತಿದ್ದರೆ ದಡ ಸೇರಿ ದೇಶಾಂತರ ಹೋಗಿರುತ್ತಾನೆ;ಅದಿಲ್ಲವಾದರೆ, ನದಿಯಲ್ಲಿ ಮುಳುಗಿ ವರದಾಂಬಿಕೆಗೆ ಆಹುತಿಯಾಗಿರುತ್ತಾನೆ-ಅಷ್ಟೆ!‘ +ಇತ್ತೀಚೆಗಂತೂ ಶನೀಶ್ವರ ದೇವಸ್ಥಾನವು ತುಂಬಾ ಅಬಿsವೃದ್ಧಿಹೊಂದಿದೆ. ಈಗ ಅಲ್ಲಿ ಶನಿವಾರವಷ್ಟೇ ಅಲ್ಲ, ಎಲ್ಲಾ ದಿನಗಳಲ್ಲೂ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ನೆರೆಯುತ್ತಾರೆ. ಕಳೆದ ವಾರವಷ್ಟೆ ಮುಜರಾಯಿ ಮಂತ್ರಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಮುಂದಿನ ತಿಂಗಳಿನಿಂದ, ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ಸು, ಬೆಂಗಳೂರಿನಿಂದ ಹೊರಟು, ಈ ದೇವಸ್ಥಾನದ ಎದುರೇ ಬಂದು ನಿಲ್ಲುತ್ತದೆ. ಹೋಮ-ಹವನ, ವಿಶೇಷ ಪೂಜೆ ಮಾಡಿಸುವವರು ಮುಂಚಿತವಾಗಿಯೇ ದೇವಸ್ಥಾನದ ಆಡಳಿತಾದಿsಕಾರಿಗಳಿಗೆ ಬರೆದುಕೊಳ್ಳಬೇಕು. ಅಥವಾ ಅಂತರ್ಜಾಲದಲ್ಲಿ, ‘ರಾಜೇಶ್ವರ ಎಟ್ ಇಂಡಿಯಾ ಡಾಟ್ ಕಾಮ್‘ ನಲ್ಲೂ ಸಂಪರ್ಕಿಸಬಹುದು. +***** +ಈ ಕತೆಗಳ ಸಹವಾಸವೆ ಸಾಕು – ಸಂಕಲನದಿಂದ +ಕೃಪೆ: ಛಂದ ಪುಸ್ತಕ +ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. […] +ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ! ದಾರಿಯಲ್ಲಿ ಕಾರಿ ನಿಧಾನ ಮಾಡಿದಾಗ ಕಂಡದ್ದು: ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ […] +‘ಜೈ ಯಮುನಾಮಯ್ಯಾ… ಜೈ ಗಂಗಾಮಯ್ಯಾ… ಜೈ ಕೇದಾರೇಶ್ವರ…. ಜೈ ಬದರೀ ವಿಶಾಲ…’ ಕಳೆದ ಏಳೆಂಟು ದಿನಗಳಿಂದ ಈ ಚಾರಧಾಮ ಯಾತ್ರೆಯಲ್ಲಿ ಗುರಣ್ಣ ಈ ಜೈಜೈಕಾರಗಳಲ್ಲಿ ಮುಳುಗೇಳುತ್ತಿದ್ದಾನೆ. ಯಾತ್ರೆಯ ಸುರುವಾತಿಗೆ ಗುರಣ್ಣಗ ಈ ಜೈಕಾರಗಳು ಮಜಾ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_497.txt b/Kannada Sahitya/article_497.txt new file mode 100644 index 0000000000000000000000000000000000000000..e36375db68a1b3c6067c279fb9bfda9cee343a8b --- /dev/null +++ b/Kannada Sahitya/article_497.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” -ಬೇಂದ್ರೆ +ಕಳೆದ ತಿಂಗಳು ಪ್ರಕಟಿಸಿದ ದ್ವೀಪ ಚಿತ್ರಕ್ಕೆ ಶಿವಕುಮಾರ್ ಜಿ ವಿ ಬರೆದ ವಿಮರ್ಶೆಗೆ ಯಶಸ್ವಿನಿ ಹೆಗಡೆಯವರ ಪ್ರತಿಕ್ರಿಯೆ… +‘ಮರದ ಎಲೆ ದಿನಾ ಬಿದ್ದು, ಕಸ ಕೊಳಕು ಆಗುತ್ತೇಂತ ಮರಾನೇ ಕಡಿದು ಬಿಡಬಾರದು” -ದ್ವೀಪ ಸಿನಿಮಾ ನೋಡಿದ ಮೇಲೆ ಪ್ರಶಾಂತನ ಈ ಮಾತುಗಳು ಹೆಚ್ಚು ಕಾಡಲಾರಂಬಿಸಿದವೋ ಅಥವ ಪ್ರಶಾಂತನ ಈ ಮಾತುಗಳಿಂದಾಗಿ ದ್ವೀಪ ಹೆಚ್ಚು ಕಾಡಲಾರಂಭಿಸಿದೆಯೋ ಗೊತ್ತಾಗುತ್ತಿಲ್ಲ- ಹಾಗೆಯೇ ನಮ್ಮ ಆಯ್ಕೆಗಳ ಬಗೆಗೆ ಹುಟ್ಟಿಕೊಂದಿರುವ ಗೊಂದಲಗಳ ಪರಿಹಾರಕ್ಕೆ ಯತ್ನಿಸಿದಾಗಿನ ಸಂಕಟಗಳಿಗೆ ಒಂದು ರೂಪವೇ ಈ ಪ್ರತಿಕ್ರಿಯೆ ಎನ್ನಬಹುದೇನೊ.. ನಾನು ಅವನು ರಾತ್ರಿ ಊಟದ ಬಳಿಕ ಹಾಗೇ ಸ್ವಲ್ಪ ದೂರ ತಿರುಗಾಡುವಾಗ, ನಮ್ಮ ನಮ್ಮ ಅನ್ನಿಸಿಕೆಗಳನ್ನು ತೆರೆದಿಡುತ್ತಾ ಹೋಗುವ ವಾಡಿಕೆಯಲ್ಲಿ ಮೂಡಿದ ಚಿಂತನೆ- ಸಾಲುಗಳಲ್ಲಿ ಅಭಿವ್ಯಕ್ತಿಕಂಡುಕೊಂದಾಗ ಆಯ್ಕೆಗಳು ನಿಚ್ಚಳವಾದೀತು ಎಂಬುದರ ಪ್ರಯತ್ನವೇ ಈ ಪ್ರತಿಕ್ರಿಯೆಯೋ.. +ಪರಂಪರೆ , ಒಂದು ಆಲದ ಮರ ಅಂದುಕೊಂಡರೆ , ಅದರ ಬಿಳಲುಗಳು ರೂಪಾಂತರಿತಗೊಂಡು , ಸುಪ್ತವಾಗಿಯೋ ಪ್ರಕಾಶವಾಗಿಯೋ , ಸುತ್ತ ಯಾವತ್ತೂ ಇರುವ ಗಾಳಿಯಂತೆ ಆಡುತ್ತಲೇ ಇರುತ್ತದೆ. +ಪರಂಪರೆ ಮತ್ತು ಅಧುನಿಕತೆ , ಎರಡೂ , ಮನೋ ನಿರ್ಮಿತಪ್ರಪಂಚಗಳು. ಪರಂಪರೆಯೇ ವಾಸ್ತವ, ಶ್ರೇಷ್ಠ , ಅಥ್ವಾ ಅಧುನಿಕತೇ ವಾಸ್ತವ ,ಶ್ರೇಷ್ಠ ಎಂದು ಹೇಳಹೊರಡುವುದು ಕಷ್ಟದ ಮಾತಾದೀತು !. ಯಾಕಂದ್ರೆ ಎರಡೂ ಪ್ರತಿನಿಧಿಸುವ , ಕಾಲ , ದೇಶ , ವ್ಯಕ್ತಿ , ಚರಿತ್ರೆ ಇವು ನಿರ್ಧಾರಕ ಅಂಶಗಳಾಗಿರಬಹುದಾದ ಸಾಧ್ಯತೆ ಇದ್ದೇ ಇರುತ್ತದೆ. +ಆಧುನಿಕತೆ ಮತ್ತು ಪರಂಪರೆ ಒಂದನ್ನೊಂದು ಸದಾ ಒತ್ತರಿಸುತ್ತಾ, ಚಿರಂತನವಾಗಿ +ಸಾಗುವ ಬೃಹದಲೆಗಳಂತೆ ನನಗೆ ಕಂಡಿವೆ. ಹಾಗಾಗಿ ಪಾರಂಪರಿಕ ಮೌಲ್ಯಗಳನ್ನೊಳಗೊಂಡ , ವಾಸ್ತವವಾದೀ ಅಧುನಿಕತೆಯನ್ನು ಒಪ್ಪಿಕೊಳ್ಳಬಹುದೇನೋ ಎಂದು ಯೋಚಿಸಿದೊಡನೆಯೇ , ಹಾಗಾದರೆ , ಬೇವಿನ ಕಡ್ಡಿಯಲ್ಲಿ – ಹಲ್ಲುಜ್ಜುವುದೋ , ಬೇವಿನೆಣ್ಣೆಯಲ್ಲಿ ( ಹಾಗೆಂದು ನಂಬಿಕೊಂಡು) ಮಾಡಿರುವ ನೀಮ್ ಪೇಸ್ಟ್ ನಲ್ಲಿ ಹುಲ್ಲುಜ್ಜೋಣವೋ ಎಂಬ ದಿನನಿತ್ಯ ಎದುರಾಗಬಹುದಾದ ಚಿಕ್ಕ ಪ್ರಶ್ನೆಯನ್ನೂ ಎದುರಿಸಲಾಗದೇ ಹೋಗುತ್ತೇವೆ. ಇಂಥ ಪರಿಸ್ಥಿತಿ, ಈ ತಾಕಲಾಟದ ಹೊರಗೆ ನಿಂತು ಪರಿಹಾರ ಪಡೆಯುವುದು ಅಂಥಾ ಸುಲಭವೇನಲ್ಲ ಅನ್ನೋದನ್ನು ಸೂಚಿಸುತ್ತದೆ. +ಇದೇ ರೀತಿಯ ಸಂದಿಗ್ಘತೆಯ ಕಥಾವಸ್ತುವಿರುವ ಗಿರೀಶ್ ಕಾಸರವಳ್ಳಿಯವರ “ದ್ವೀಪ” ಚಿತ್ರ , ಅನೇಕ ಪ್ರಶ್ನೆಗಳನ್ನು ಸಮಾಜದ ಮುಂದುತ್ತಾ ,ದ್ವೀಪವಾಗುವಿಕೆಯ ಎರಡು ಆಯಾಮಗಳನ್ನು ತೆರೆದಿಟ್ಟಿದೆ. +ಒಂದು ನಮ್ಮ ಅನ್ನಿಸಿಕೆಗಳಿಗೆ ಸ್ಪಂದನೆ ಇಲ್ಲದೆ ದ್ವೀಪವಾಗ್ತಾ ಹೋಗೋದು ; ಮತ್ತೊಂದು ಹಾಗೆ ದ್ವೀಪವಾಗ್ತಾ , ಮಡಗಡ್ಡಿದ ಭಾವನೆಗಳಿಗೆ ರೂಪಕೊಡುತ್ತಾ , ಹೊಸ ಸೃಷ್ಟಿ -ದೃಷ್ಟಿಯ ದಾರಿ ಹುಡುಕೋದು. +ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಲೂ ಅಷ್ಟೆ , ಒಂದು ಹೊರಗಿನ ದ್ವೀಪವಾಗುವಿಕೆಯನ್ನ , ವಿರೋಧಿಸುತ್ತಾ ತಾವು ದ್ವೀಪವೇ ಆಗತೊಡಗುತ್ತವೆ. ದುಗ್ಗಜ್ಜ – ಪಾರಂಪರಿಕ ನಂಬಿಕೆಗಳ ಹಿಡಿತಕ್ಕೆ ಸಿಕ್ಕಿ ದ್ವೀಪವಾದರೆ ,ಅವನ +ಮಗ ಗಣಪ ಸ್ವಂತಿಕೆಯಿಲ್ಲದ ಕಾರಣಕ್ಕೆ ದ್ವೀಪವಾಗುತ್ತನೆ ; ನಾಗಿ ,ಗಣಪನ ಪತ್ನಿ ,ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಶಕ್ತಿ ಇದ್ದವಳಾದರೂ ,ಸಾಮಾಜಿಕ (ದಾಂಪತ್ಯ) ಜೀವನಕ್ಕಾಗಿ ದ್ವೀಪವಾಗುತ್ತಾಳೆ; ನಾಗಿ , ದುಗ್ಗಜ್ಜ , ಗಣಪನ – ಪ್ರಪಂಚಕ್ಕೆ, ಅಣೆಕಟ್ಟಾಗಿ ಬರಬೇಕಿದ್ದ ಕೃಷ್ಣ , ತನ್ನಲ್ಲಿನ ವಯೋ ದೌರ್ಬಲ್ಯದ +[ ಕಾಮ ಒಂದೇ ಅಂತಲ್ಲ , ಅಧುನಿಕ – ತಂತ್ರದ- exಠಿosuಡಿe , ಅಹಮ್, ಎಳಸುತನ ಇತ್ಯಾದಿ .. ] ಕಾರಣಕ್ಕೆ , ದ್ವೀಪವಾಗುವಿಕೆಗೆ ಸಲಕರಣೆಯಾಗುತ್ತಾ ಹೋಗುತ್ತಾನೆ. +ಆಧುನಿಕತೆ ಅನ್ನೋದು ಪರಂಪರೆಯ ಬಸಿರನ್ನು ಸೀಳಿ ಹೊರಬರುವುದರಿಂದ ,ಸಂಪೂರ್ಣ ವಿರೋಧದ ಧ್ವನಿಯನ್ನು ಅದು(ಪರಂಪರೆ) ಉಳಿಸಿಕೊಳ್ಳಲು ಅಸಾಧ್ಯವೇನೋ ! ನನಗೆ ದುಗ್ಗಜ್ಜ, ಗಣಪ , ನಾಗಿ ಯಾರೊಬ್ಬರೂ ಆಧುನಿಕತೆಗೆ ಪೂರ್ಣ ಬೆನ್ನುಹಾಕಿದವರಾಗಿ ಕಾಣಲಿಲ್ಲ. ದುಗ್ಗಜ್ಜನಿಗೆ ತನ್ನ ನೇಮದ ಹಿನ್ನೆಲೆಯನ್ನು , ಅದರೊಡನೆ ಇದ್ದ ತನ್ನ +ಗೌರವವನ್ನು ಗಮನಿಸಿ ಸರ್ಕಾರ ಕೊಡುವ ಪರಿಹಾರವನ್ನು ಸ್ವೀಕರಿಸಲು ಆತನ ಸಮ್ಮತಿ ಇದೆ . ಅಷ್ಟನ್ನೂ ಮಾಡಲೊಪ್ಪದ ವ್ಯವಸ್ಥೆಯ ವಿರುಧ್ಧ ಆತನ ಹೋರಾಟ . ದುಗ್ಗಜ್ಜನ ಸಾವು ಪರಂಪರೆಯ ದುರಂತವಾಗಿ ಕಂಡರೂ , ಪರಂಪರೆ , ಅಧುನಿಕತೆಯ ಬಗೆಗೆ ತೋರುವ ಪಿತೃವಾತ್ಸಲ್ಯದ , ಪರಾಕಾಷ್ಠೆಯೇನೋ ಅನ್ನುವಂತಿದೆ. ಆತನಿಗೆ +ತನ್ನ ಸಾವಿನಿಂದ ಉಳಿದಿಬ್ಬರ ಹಾದಿ ಸುಗಮವಾದೀತು ಅನ್ನೋ ಭಾವನೆ ಇದ್ದರೂ ಆಶ್ಚರ್ಯವೇನಿಲ್ಲ. ಆದರೆ ತಮ್ಮದೇ ವೈಯುಕ್ತಿಕ ಕಾರಣಗಳಿಗಾಗಿ ಹೋರಾಟ ಮುಂದುವರೆಸುವ ದುಗ್ಗಜ್ಜನ ಮುಂದಿನ ಪೀಳಿಗೆಯವರಾದ – ನಾಗಿ , ಗಣಪರ ಹಾದಿ ಮಾತ್ರ ಬೇರೆ ಬೇರೆ. ನಾಗಿ ಮನುಷ್ಯ ಪ್ರಯತ್ನದ ದಾರಿ ಹಿಡಿದರೆ , ಗಣಪ ದೈವಿಕ ನಂಬಿಕೆಯ ದಾರಿ ಹಿಡಿಯುತ್ತಾನೆ. ಆ ನಿಟ್ಟಿನಲ್ಲಿ ಇಬ್ಬರೂ ತಮ್ಮ ಪ್ರಾಣವನ್ನೂ ಒತ್ತೆಯಿಡಲೂ ತಯಾರಾಗುತ್ತಾರೆ. [ಗಣಪ , ಹುಲಿಯಿಂದ ರಕ್ಷಣೆ ಪಡೆಯಲು ನಾಗಿ ಬಾಗಿಲಿಗೆ ಹೊಡೆದ ಎಲ್ಲಾ ಅಡ್ಡ ಹಲಗೆಗಳನ್ನೂ ಕಿತ್ತು ಬೆಂಕಿಗೆ ಹಾಕುತ್ತಾನೆ,ಅಲ್ಲದೆ +ಹುಲಿಯಿಂದ , ಅಣೆಕಟ್ಟಿನ ನೀರು ನುಗ್ಗಿಬರುವುದರ ಭಯದ ಪರಿಹಾರಾರ್ಥ, ಯಾವ ರೀತಿಯಲ್ಲೂ ಕ್ರಮ ಕೈಗೊಳ್ಳುವುದನ್ನು ನಿರಾಕರಿಸುತ್ತಾ ನಿಷ್ಕ್ರಿಯನಾಗಿ ಕಂಬಳಿ ಹೊದ್ದು ಮಲಗುತ್ತಾನೆ.] ನಾಗಿ ಮಾತ್ರ ತನ್ನ ಹೋರಟದ ಹಾದಿಯಲ್ಲಿ , ದುಗ್ಗಜ್ಜನ್ನ ನೇಮಕ್ಕೆ ಗಣಪ ಬಾರಿಸುವ ಡೋಲನ್ನೂ ಬಳಸಿಕೊಳ್ಳಲು ಒಂದು ಹಂತದಲ್ಲಿ ಮುಂದಾಗುತ್ತಾಳೆ. +[ಆಕೆ , ಪಾರಂಪರಿಕ ಶಕ್ತಿಯನ್ನು ಬಳಸಿಕೊಳ್ಳಲು , ತನಗೆ ತಿಳಿಯದೆಯೇ ಹೊರಟಿದ್ದಾಳೆಯೆ?!] +ಚಿತ್ರದ ಪ್ರತಿಯೊಂದು ಪಾತ್ರವೂ ತನ್ನ ನಿಸ್ಸಹಾಯಕತೆಯಲ್ಲಿ ಒಂದೊಂದು ರೀತಿ ವರ್ತಿಸುತ್ತಾರೆ. ನಾಗಿ,ದುಗ್ಗಜ್ಜ ಉದಾತ್ತ ನಿಲುವನ್ನು ತಳೆದರೆ , ಗಣಪನನ್ನು ಕ್ರೌರ್ಯ ಮುಸುಕುತ್ತದೆ. ಅಂಥದ್ದರಲ್ಲೂ ನಾಗಿ ಸ್ಫೋಟಗೊಳ್ಳದೇ ಇರುವುದು ಆಶ್ಚರ್ಯವೆ ಸರಿ. ಬಹುಶ ನಾಗಿ ಬಹು ಸಮತೋಲನದ ಪಾತ್ರ. ಆಕೆ ಮಕ್ಕಳಿಗೆ ಎಲೆಯಲ್ಲಿ +ಕೈಗಡಿಯಾರ ಮಾಡಿಕೊಡಬಲ್ಲಳು , ಹಾಗೇ ಮಾವನ ಎಲೆಯಲ್ಲಿ ಮಾಡಿದ ಕೊಡೆಯನ್ನು ಹಿಡಿದುಕೊಳ್ಳುವ ಮನಸ್ಸು ಮಾಡಬಲ್ಲಳು; ಮಾವನ ಡೋಲನ್ನು ನುಡಿಸಬಲ್ಲಳು ,ಅಂತೆಯೇ ಗಣಪನು ಪೇಟೆಯಲ್ಲಿ ಅಂಗಡಿಯಿಡುವ ಕನಸನ್ನೂ ಕಾಣಬಲ್ಲಳು; ಕೃಷ್ಣನ ಜೊತೆ ಪ್ರೀತಿಯಿಂದ ಇರಬಲ್ಲಳು ಮತ್ತು ಸಂದರ್ಭದಲ್ಲಿ ಅವನನ್ನು ಹೊರಗಟ್ಟಲೂಬಲ್ಲಳು. +ಕೃಷ್ಣ ಬರುವ ದೃಶ್ಯಗಳು ನನಗೆ ಅಸ್ವಾಭಾವಿಕ ಅಂತೇನೂ ಅನ್ನಿಸಲಿಲ್ಲ. ಕೃಷ್ಣ , ’ಮಳೆ ಹನಿ- ಪಾತ್ರೆಗಳ’ ಜೊತೆಯಾಡುವುದು , ಬದುಕಿನ ಏಕತಾನತೆಯನ್ನು , ಹೋಗಲಾಡಿಸುವಲ್ಲಿ ಸೃಜನಶೀಲತೆಯ ಶಕ್ತಿಯನ್ನು ಎತ್ತಿಹಿಡಿಯುತ್ತದೆ. ತನ್ನತನವನ್ನು ಉಳಿಸಿ, ಪ್ರತಿಷ್ಠಾಪಿಸಿಕೊಳ್ಳುವ ಯತ್ನದಲ್ಲಿರುವ ,ಗಣಪ ಮತ್ತು +ತನ್ನ ಹಿಂದಿನ ಬಾಂಬೆ ಜೀವನದ ವೈಫಲ್ಯವನ್ನು ನಿವರಿಸಿಕೊಂಡು , ಸಮಾಜಿಕ ಯಶಸ್ಸಿನ ಅನಿವಾರ್ಯತೆ ಇರುವ ಕೃಷ್ಣ , ಇವರೀರ್‍ವರ ನಡುವಿನ ಸಂಘರ್ಷ ಮತ್ತು ಪರಿಣಾಮವಾಗಿ ಗಣಪ ಸೃಜನಶೀಲವಾದ ಎಲ್ಲಾ ಪ್ರಯತ್ನವನ್ನು ಹೊಸಕಿಹಾಕುತ್ತಾ, “ದ್ವೀಪ”- ಒಂದನ್ನು ಹುಟ್ಟಿಹಾಕುವ ಕ್ರಿಯೆಯ ಚಾಲನೆಯನ್ನು +ಕಾಣಬಹುದು ಅಂತ ನನಗನ್ನಿಸ್ತಾ ಇದೆ. +ನಾಗಿ , ಕೃಷ್ಣನಿಗೆ ಎಣ್ಣೆ ಹಚ್ಚಿದ ಕೈ ಮೂಸಿನೋಡುವಲ್ಲಿ , ಅದು ಬರಿಯ ಮಾತೃವಾತ್ಸಲ್ಯವೋ ಎಂದು ಒಂದು ಸಣ್ಣ ಅನುಮಾನದ ಮೊಳಕೆ ಹುಟ್ಟುವುದು , ಪೇಟೆಗೆ ವಾಪಸ್ಸು ಹೋಗು ಎಂದು ಕೃಷ್ಣನನ್ನು ತಿರುಗಿ ಕಳಿಸುವಲ್ಲಿ ಮುಂದಾದರೂ , “ಇದ್ದೊಂದು ದೋಣಿಯನ್ನು ತೆಗೆದುಕೊಂಡೊಯ್ಯಬೇಡವೋ ” ಎಂದು ಅವನನ್ನು ತಡೆಯಲು ನೋಡುವುದು (ಗಣಪ ,ಮತ್ತೊಂದು ದೋಣಿ ಮಾಡಲಾರನೇ ? , ಅಥ್ವಾ ಇಬ್ಬರೂ ಸೇರಿ ಮಾಡಲಾರರೆ?) – ತಿರುಗಿ ದ್ವೀಪವಾಗುವ ,ಆಗಿಸಿಕೊಳ್ಳುವ ಎಲ್ಲ ಕ್ರಿಯೆಗೂ ಚಾಲನೆ ದೊರಕಿಸಿಕೊಡುವ ಕೀಲೆಣ್ಣೆಯೇನೋ ಎಂದು ಅನ್ನಿಸುವಂತಿದೆ. ಯಾಕೋ ನನಗೆ ಶಿವು ಅವರು ಅಭಿಪ್ರಾಯಪಟ್ಟಂತೆ ಅದ್ಯಾವುದೋ ಅಸಹಜ ಅನ್ನಿಸಲಿಲ್ಲ.ಆದರೆ ನೈತಾತ್ಮಕ ಅಂಶಗಳನ್ನು ಶಿವು ಚೆನ್ನಾಗಿ ಗುರುತಿಸಿದ್ದಾರೆ. +ಸಂಗೀತ ಮಾತ್ರ (ಇದ್ದೊಂದು ಟ್ಯೂನ್ನ ಹಾಗೆ ಕರೀಬಹುದಾದ್ರೆ :-)) ನನಗೆ ಹಿಡಿಸಿತು. +ಒಟ್ಟಾರೆ “ಚಿತ್ರಕ್ಕೆ ಏನು ಹೇಳಬೇಕಿದೆ” ಅನ್ನೋ ಪ್ರಶ್ನೆ ನನಗೂ ಬಹಳವಾಗಿ ಕಾಡಿದ್ದು ಹೌದು .. +ಅಣೆಕಟ್ಟೋ , ಸೀತಾ ಪರ್ವತವೋ ? ಪರಂಪರೆ -ಅಧುನಿಕತೆಯ ಆಯ್ಕೆಗೆ ಸಂಬಂಧಿಸಿದ ತಾಕಲಾಟಗಳೋ ! , ಅಥ್ವಾ ತಮ್ಮ ತಮ್ಮ ಆಯ್ಕೆಗೆ ತಕ್ಕಂತೆ ನಡೆಸುವ ಹೋರಾಟದ ದಾಖಲಾತಿಯೋ ! , ಅಥ್ವಾ ಈ ಎರಡು ಕಾರಣಗಳಿಂದ ಕಾಣುವ ಮನುಷ್ಯನ ನೆರಳುಗಳೋ ! .ಬಹುಶಃ ಇವೆಲ್ಲವೂ ಹೌದು . +ಫ಼ಿಲ್ಮ್ ಕೊನೆಗೆ ನಾಗಿನ ಜeಜಿoಛಿus ಮಾಡಬಾರದಾಗಿತ್ತು , ಒಂದು ಜೆಟ್ ವಿಮಾನದ ಹೊಗೆಯ ಗೆರೆ ಅವಳ ತಲೆ ಮೇಲೆ ಹೋಗೋ ಹಾಗೆ ಮಾಡಬೇಕಿತ್ತು ಅಂತ ಹಾರಾಡುತ್ತಿದ್ದೆ. ಈಗ ಅವಳನ್ನ ಜeಜಿoಛಿus ಮಾಡಿದಾಗಿನ ಹಿನ್ನಲೆಯಲ್ಲಿ , ಬೆಟ್ಟ ಗುಡ್ಡ ,ಸಸ್ಯ ಸಂಪತ್ತು , ಪಕ್ಷಿ ಸಂಕುಲ , ’ಸೀತ ಮಂಟಪ’, ಅದಕ್ಕೆ ಸದಾ ತಳಕು ಹಾಕಿಕೊಂಡಿರುವ ಹುಲಿ ರಾಯನ ಓಡಾದ ನೆನಪಿಗೆ ಬರುತ್ತಾ ದ್ವೀಪವಾಗುವ ವ್ಯಕ್ತಿಗಿಂತ ಎಲ್ಲವನ್ನೂ ಒಳಗೊಂಡ , ದ್ವೀಪವಾಗದೇ ಹೋಗುವ “ದ್ವೀಪ, – ಈ ಪ್ರಪಂಚವೇ ” (ಅಂದ್ರೆ ಸಮಷ್ಟಿ ) ಮುಖ್ಯ ಅನ್ನುವುದನ್ನು ಚಿತ್ರ ಧ್ವನಿಸುತ್ತಿದೆಯೇನೋ ! – ಎಂದು ಅನ್ನಿಸುತ್ತಿದೆ. +***** +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […] +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ […] +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_498.txt b/Kannada Sahitya/article_498.txt new file mode 100644 index 0000000000000000000000000000000000000000..37d40ec77406b3b5a0a3f66a1dfc952c6fb9f286 --- /dev/null +++ b/Kannada Sahitya/article_498.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಆನಂದಭೈರವಿ +ತಾಳ — ಅಟ್ಟ +ಮುಟ್ಟದಿರೋ ಎನ್ನನು – ರಂಗಯ್ಯ | +ಮುಟ್ಟದಿರೋ ಎನ್ನನು ||ಪ|| +ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | +ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| +ಹೊಳೆಯ ಒರತೆಯಲಿ ಮಳಲು ಚೆಲ್ಲಿದಂತೆ | +ಕೆಳದಿಯರ ಕೂಡಾಡಿ ಕಲಿತೆಯೊ ಬೆಡಗ || +ಬಲು ತುಡುಗ… ಬಲು ತುಡುಗ – +ಬಿಡು ಎನ್ನ ಸೆರಗ ||೧|| +ಅತ್ತ ಒಬ್ಬಳ ಕೂಡ ಆಡಿಬರುವುದ ಕಂಡೆ | +ಸತ್ಯವ ಮಾಡದಿರೊ – ಏ ಸರನಂಟ || +ನೂರೆಂಟ……… ನೂರೆಂಟ – +ಬಿಡು ಎನ್ನ ಗಂಟ ||೨|| +ಅಂಗೈಯ ಒಳಗಿನ ಅನುವಾದ ಪಾಯಸ | +ಮುಂಗೈಯಿನ ಮೇಲಿನ ಕಂಡ ಕಲೆಯ || +ಕಾಗಿನೆಲೆಯ……… ಕಾಗಿನೆಲೆಯ – +ಕನಕಯ್ಯನಿಗೊಲೆಯ ||೩|| +***** +ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […] +ರಾಗ — ಕಲ್ಯಾಣಿತಾಳ — ಝಂಪೆ ವರವ ಕೊಡು ಎನಗೆ ವಾಗ್ದೇವಿ – ನಿನ್ನ |ಚರಣಕಮಲಂಗಳನು ದಯಮಾಡು ದೇವಿ ||ಪ|| ಶಿವಮೊಗದ ನಸುನಗೆಯ ಬಾಲೆ |ಎಸೆವ ಕರ್ಣದಿ ಮುತ್ತಿನೋಲೆ ||ನಸುನಗುವ ಪಲ್ಲ ಗುಣಶೀಲೆ – […] +ರಾಗ — ಪಂತುವರಾಳಿ ತಾಳ — ಅಟ್ಟ ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ |ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ |ಅಟ್ಟು ಉಣ್ಣದ ವಸ್ತುಗಳಿಲ್ಲವೊ ||ಗುಟ್ಟು ಕಾಣಿಸಿಬಂತು ಹಿರಿದೇನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_499.txt b/Kannada Sahitya/article_499.txt new file mode 100644 index 0000000000000000000000000000000000000000..d42c2ef7067609ef971a5f6b86d39e5f0eda965f --- /dev/null +++ b/Kannada Sahitya/article_499.txt @@ -0,0 +1,116 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +[೧] +ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು ನೆಟ್ಟರು. ವಾಟರ್ ಪ್ರೊಫ್ ‘ಸೀಕೋ; ಐದು ದಾಟುತ್ತಲಿತ್ತು. ನಡಿಗೆ ಚುರುಕಾಯಿತು. ಮುತ್ತುಚ್ಚೇರ ಜುಮ್ಮಾ ಮಸೀದಿಯ ಪಕ್ಕದ ಕಾಲು ಹಾದಿ ಹೊಕ್ಕು ಬೀಚ್ ರೋಡಿಗೆ ಕಾಲಿರಿಸುವಷ್ಟರಲ್ಲಿ ಮಳೆಯ ಬಿರುಸು ಕಡಿಮೆಯಾಗತೊಡಗಿತು. +ಬೀಚ್ ರೋಡಿನ ಎಡಕ್ಕೆ ಸಿಮೆಂಟ್ ಬಂಗಲೆಗಳಿವೆ; ಬಣ್ಣ ಬಣ್ಣದ ಕಾರುಗಳನ್ನಿಡಲು ಕಬ್ಬಿಣದ ಬಾಗಿಲುಗಳಿರುವ ಶೆಡ್ಡುಗಳಿವೆ. ಬೀಚ್ ರೋಡಿನ ಬಲಕ್ಕೆ ಜಾರುವ ಮರಳ ನೆಲದ ಮೇಲೆ ಸೋಗೆ ಗುಡಿಸಲುಗಳ ಉದ್ದದ ಓರೆಕೋರೆ ಸಾಲಿದೆ. ಮನೆಗಳ ಎದುರು ರಸ್ತೆಯಂಚಿನಲ್ಲಿ ಮಕ್ಕಳು ಗೋಲಿಯಾಡಲು ತೋಡಿರುವ ಸಣ್ಣಪುಟ್ಟ ಗುಣಿಗಳಿವೆ. ಗುಡಿಸಲುಗಳ ಬೆನ್ನ ಹಿಂದೆ ಎತ್ತರವಾಗಿ ಕಾಣಿಸುವ ಬಂಡೆಗೋಡೆಯ ನೆತ್ತಿಯ ಮೇಲೆ ಕಡಲ ಮೊನೆಗಳು ತುಂತುರು ಹನಿಗಳಾಗಿ ಸಿಡಿದು ಹಾರುತ್ತಿರುವುದನ್ನು ರಸ್ತೆಯಿಂದಲೇ ನೋಡಬಹುದು. ಸಿರಿತನ ಮತ್ತು ಬಡತನಗಳನ್ನು ಸೀಳಿ ನಡುವೆ ಮಲಗಿರುವ ಕಪ್ಪು ಟಾರು ರಸ್ತೆ ನಯವಾಗಿ ಜಾರುತ್ತದೆ. +ಮಸೀದಿಯ ಬದಿಯಿಂದ ಆರಂಭಿಸಿ ಸೋಗೆ ಗುಡಿಸಲುಗಳನ್ನು ಒಂದೊಂದಾಗಿ ಎಣಿಸುತ್ತಾ ಹೋಗುವುದಾದರೆ ‘ರುಖಿಯಾಬಿ’ ಯ ಮನೆ ಹದಿನೇಳನೆಯದ್ದು. ಬಂದರು ಸಾಹುಕಾರ ಹಸನ್ ಸಾಹೇಬರ ಮನೆಗೆ ಕೆಲಸಕ್ಕೆ ರುಖಿಯಾಬಿ ಮುಂಜಾನೆ ಹೋದರೆ ಮತ್ತೆ ಮರಳುವುದು ಸೂರ್ಯ ಮುಳುಗಿದ ಬಳಿಕವೇ. ನಾಲ್ಕು ವರ್ಷಗಳ ಕೆಳಗೆಯೇ ‘ದೊಡ್ಡವಳಾಗಿದ್ದ’ ಮಗಳು ಉನ್ನೀಸಾ ಹೊರಗೆ ಕಾಲಿಟ್ಟವಳಲ್ಲ. ಚಹದ ಪೆಟ್ಟಿಗೆಗಳ ತೆಳುಹಲಗೆಗಳನ್ನು ಜೋಡಿಸಿ ಕಟ್ಟಿದ ಮುಂಬಾಗಿಲು ಯಾವಾಗಲೂ ಮುಚ್ಚಿಕೊಂಡೇ ಇರುತ್ತದೆ. +ನಡುರಸ್ತೆಯಲ್ಲಿ ಒಂದು ಕ್ಷಣ ನಿಂತ ಕೋಯಾರವರು ಕತ್ತಿನ ಸಂದಿಯಲ್ಲಿ ಕೊಡೆಯನ್ನು ಸಿಕ್ಕಿಸಿ ಎರಡೂ ಕೈಗಳಿಂದ ಉಟ್ಟಿದ್ದ ಅಡ್ಡಮುಂಡವನ್ನು ಸಡಿಲಿಸಿ ಮತ್ತೆ ಬಿಗಿಯಾಗಿ ಕಟ್ಟಿಕೊಂಡರು. ರಾತ್ರಿಯ ನಮಾಜಿಗೆ ಮೊದಲು ಏನಾದರೊಂದು ಬಗೆಯ ತೀರ್ಮಾನ ಆಗಲೇಬೇಕು. ಶೇಕ್ ಮರ್ಸೂಕ್ ಮುಸ್ತಫಾ ಅರಬಿಯವರು ರಾತ್ರಿ ಹತ್ತರ ತನಕ ಒಲಂಪಿಯಾ ಲಾಡ್ಜ್‌ನಲ್ಲಿ ಕಾಯುತ್ತೇನೆ ಎಂದಿದ್ದಾರೆ. +ರುಖಿಯಾಬಿಯ ಮನೆ ಹತ್ತಿರವಾಗುತ್ತಿದ್ದಂತೆ ನಡಿಗೆ ನಿಧಾನಿಸಿತು. ಯೋಚನೆಗಳಿಂದ ದೇಹ ಭಾರವಾಗತೊಡಗಿತು. ಕಳೆದೆರಡು ವಾರಗಳಿಂದ ಕೋಯಾರವರು ರುಖಿಯಾಬಿಯ ಮನೆಗೆ ಹೋಗುತ್ತಿರುವುದು ಇದೀಗ ಐದನೇ ಸಲ. ಏನಲ್ಲ ಹೇಳಿ ಪುಸಲಾಯಿಸುವುದು ಸಾಧ್ಯವೋ ಅಷ್ಟೆಲ್ಲ ಪ್ರಯತ್ನಗಳನ್ನೂ ಮಾಡಿಯಾಗಿತ್ತು. ರುಖಿಯಾಬಿ ಯಾವುದಕ್ಕೂ ಕರಗುವ ಲಕ್ಷಣ ತೋರಿಸಿರಲಿಲ್ಲ. ಆದರೂ ಕೋಯಾರವರು ಆಸೆ ಬಿಟ್ಟವರಲ್ಲ. ರುಖಿಯಾಬಿ ಒಪ್ಪದೇ ಹೋದರೆ ಕಡಿಮೆಯೆಂದರೂ ಎರಡು ಸಾವಿರದ ಗಂಟು ಮುಳುಗಿ ಹೋದಂತೆಯೇ. +ಈ ಸೀಜನ್‌ನಲ್ಲಿ ಬಂದ ಒಂಭತ್ತು ಮಚ್ವೆಗಳಲ್ಲಿ ಅತ್ಯಂತ ದೊಡ್ಡದು ಶೇಕ್ ಮರ್ಸೂಕ್ ಮುಸ್ತಫಾರದ್ದು. ನಡುವಯಸ್ಸಿನ ಎತ್ತರದ ಅರಬಿ ನೆಲಕ್ಕೆ ಕಾಲಿಡುತ್ತಿದ್ದಂತೆಯೇ ಬೀರಾನ್ ಕೋಯಾ ಪರಿಚಯ ಮಾಡಿಕೊಂದಿದ್ದರು. ಕೋಯಾರವರ ವ್ಯವಹಾರದ ಬಂಡವಾಲವೆಂದರೆ ಅರಬಿಕ್ ಭಾಷೆ. ಈ ವಿಷಯದಲ್ಲಂತೂ ಅದೊಂದು ಟ್ರಂಪ್ ಕಾರ್ಡ್ ಇದ್ದ ಹಾಗೆ. ಹೆಣ್ಣಿಗೆ ಕೊಡಬೇಕಾದ ಮಹರ್ ನಿಶ್ಚಯ ಮಾಡುವವರೂ ಇವರೇ. ಅರಬಿಯ ಭಾಷೆ ಹುಡುಗಿಯ ಮನೆಯವರಿಗೆ ಬಾರದು; ಹುಡುಗಿಯ ಭಾಷೆ ಅರಬರಿಗೆ ಬಾರದು. ಕೋಯಾರವರ ದೊಡ್ಡ ಸಂಸಾರ ಬದುಕುತ್ತಿರುವುದೇ ಈ ವ್ಯತ್ಯಾಸದಲ್ಲಿ. ಅರಬಿ ಐದಕ್ಕೆ ಸೈ ಎಂದರೆ ಹುಡುಗಿಯ ಮನೆಗೆ ಒಂದು ಸಾವಿರ ದಕ್ಕಿದರೂ ಅದೃಷ್ಟವೆನ್ನಬೇಕು. ಕೋಯಾರ ಕುಲ ಕಸುಬೇ ಇದು. ಬೀರಾನ್ ಕೋಯಾ ಸ್ವತಃ ಹೇಳುವುದನ್ನು ನಂಬುವುದಾದರೆ ಇದು ಅವರ ಹದಿಮೂರನೇ ಸೀಜನ್ನು. ನಿಜವಾಗಿ ನೋಡುವುದಾದರೆ ಐದನೆಯದೋ ಅಥವಾ ಆರನೆಯದೋ ಇದ್ದೀತು. ಏಳೆಂಟು ವರ್ಷಗಳ ಕೆಳಗೆ, ಅಂದರೆ ಅವರ ಚಿಕ್ಕಪ್ಪ ಮೈದಿನ್ ಕೋಯಾರವರು ಬದುಕಿದ್ದ ತನಕ ಅಸಿಸ್ಟೆಂಟ್ ಆಗಿಯೇ ಕೆಲಸ ಮಾಡುತ್ತಿದ್ದುದು. +ಮೂರು ತಿಂಗಳ ಸೀಜನ್‌ಗಾಗಿ ಇಡೀ ವರ್ಷದ ತಯಾರಿ ಬೇಕು. ಹದ್ದಿನ ಕಣ್ಣುಗಳಿಂದ ಮನೆ ಮನೆ ಇಣುಕಿ ನೋಡಬೇಕು. ಈ ಬಾರಿ ಬಹಳ ಒದ್ದಾಡಿದರೂ ಕಣ್ಣಿಗೆ ಬಿದ್ದದ್ದು ಎರಡು ಮಾತ್ರ. ಬೀಚ್ ರೋಡಿನ ರುಖಿಯಾಬಿಯ ಮಗಳು ಉನ್ನೀಸ ಮತ್ತು ಪೇಟೆ ಬೀದಿಯ ಸಾರಮ್ಮ. ಸಾರಮ್ಮನಿಗಾದರೋ ಈ ಮೊದಲೇ ಒಂದು ಮದುವೆಯೂ ಆಗಿ ಒಂದು ಮಗು ಕೂಡಾ ಇದೆ. ಕೋಯಾರವರ ಅದೃಷ್ಟಕ್ಕೆ ಅವಳ ಗಂಡ ತಲಾಖ್ ಕೊಟ್ಟಿದ್ದ. ಕೋಯಾರವರು ನಿರೀಕ್ಷಿಸಿದಂತೆಯೇ ಮುಸ್ತಫಾ ಅರಬಿ ಒಪ್ಪಿದ್ದು ಉನ್ನೀಸಳನ್ನು. “ಮಹರ್ ಒಂದೆರಡು ಸಾವಿರ ಹೆಚ್ಚೇ ಆದರೂ ಚಿಕ್ಕ ಹುಡುಗಿಯೇ ಇರಲಿ” ಎಂದು ನಕ್ಕಿದ್ದರು. ಹಾಗೆಂದು ಸಾರಮ್ಮಳಿಗೆ ಬೇರೊಂದು ಅರಬಿ ಹುಡುಕುವುದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ. ಕೋಯಾರವರು ಬೆರಳು ತೋರಿಸಿದಲ್ಲಿ ಕಣ್ಣು ಮುಚ್ಚಿ ನಡೆಯಲು ತಯಾರು ಅವಳು. ಆದರೆ ಅವಳ ವ್ಯವಹಾರದಲ್ಲಿ ಐನೂರು ಗಿಟ್ಟಿದರೂ ಜಾಸ್ತಿಯೇ. ಹೆಚ್ಚು ಕಡಿಮೆ ಮಾಡಿದರೆ ನಡುರಸ್ತೆಯಲ್ಲೇ ಕೋಯಾರ ಕಚ್ಚೆಗೆ ಕೈಹಾಕುವಷ್ಟು ಜೋರಿನವಳು. +ಅಳುಕುತ್ತಲೇ ರಸ್ತೆಯಂಚಿನಿಂದಿಳಿದ ಕೋಯಾ ಮರಳ ನೆಲದಲ್ಲಿ ಹೆಜ್ಜೆ ಕೀಳುತ್ತಾ ರುಖಿಯಾಬಿಯ ಬಾಗಿಲಿಗೆದುರು ನಿಂತು ಸುತ್ತಲೂ ಕಣ್ಣು ಹಾಯಿಸಿದರು. ನೀರಿಳಿಸುತ್ತಿದ್ದ ಕೊಡೆಯನ್ನು ಮಡಚಿ ಸೂರುಗಂಭಕ್ಕೆ ತೂಗುಹಾಕಿ ತಮ್ಮ ಅಡ್ಡಮುಂಡನ್ನೆತ್ತಿ ಮುಖ ಒರೆಸಿಕೊಂಡರು. ಕಡಲ ಭೋರ್ಗರೆಯುವ ಸದ್ದು ಇಲ್ಲವಾದಲ್ಲಿ ಅವರ ಎದೆ ಬಡಿತಕ್ಕೆ ಬಾಗಿಲು ತೆರೆಯಬೇಕಿತ್ತು. ತಮ್ಮ ಧರ್ಮಕಾರ್ಯದಲ್ಲಿ ನೆರವಾಗುವಂತೆ ಅಲ್ಲಾಹುವನ್ನು ದಯನೀಯವಾಗಿ ಪ್ರಾರ್ಥಿಸಿದ ಕೋಯಾ ಅನುಮಾನದಿಂದಲೇ ಬಾಗಿಲು ತಟ್ಟಿದರು. +ಬಾಗಿಲು ತೆರೆದವಳು ಉನ್ನೀಸಾ. ಎದೆ ಬಿರಿಯುವ ಔವನದ ಕೆಂಪು ಹುಡುಗಿ ಬಾಗಿಲಿನೆತ್ತರಕ್ಕೆ ನಿಂತು ಕಣ್ಣು ಅರಳಿಸುತ್ತಿದ್ದಳು. ಕೋಯಾರವರ ಎದೆಬಡಿತ ನಿಂತಂತಾಗಿತ್ತು. ಆರಿಹೋದ ನಾಲಗೆಯನ್ನು ತೇವ ಮಾಡಿಕೊಂಡ ಕೋಯಾ ಪ್ರಯಾಸದಿಂದಲೇ ಪ್ರಯತ್ನಿಸಿದರು. “ರುಖಿಯಾ ಬರಲಿಲ್ವ?” ಇಲ್ಲವೆಂದು ತಲೆಯಾಡಿಸಿದ ಹುಡುಗಿ ಕೋಯಾರವರ ಮುಖವನ್ನೇ ದಿಟ್ಟಿಸುತ್ತಿದ್ದಳು. ಗಲಿಬಿಲಿಗೊಂಡಿದ್ದ ಕೋಯಾ, “ಹಾಗಾದರೆ ಮತ್ತೆ ಬರ್‍ತೇನೆ” ಎಂದವರೇ ತಿರುಗಿಯೂ ನೋಡದೆ ಕೊಡೆಯನ್ನೆತ್ತಿ ಬಿಡಿಸಿಕೊಂಡು, ಮರಳ ನೆಲದಲ್ಲಿ ವೇಗವಾಗಿ ನಡೆದರು; ತಪ್ಪಿಸಿಕೊಂಡು ಓಡುವವರಂತೆ. ನಡುರಸ್ತೆಗೆ ತಲುಪಿದ ಕೋಯಾ ನಿಡಿದಾದ ಉಸಿರುಬಿಟ್ಟು ರುಖಿಯಾಬಿಯ ಗುಡಿಸಲತ್ತ ಕಣ್ಣು ಹಾಯಿಸಿದರು. ಬಾಗಿಲು ಹಿಂದಿನಂತೆಯೇ ಮುಚ್ಚಿಕೊಂಡಿತ್ತು. ಚಿರಿಪಿರಿ ಮಳೆ ನಿಲ್ಲುವ ಹಾಗೆ ಕಾಣಿಸಲಿಲ್ಲ. ನಿಂತಲ್ಲೇ ನಿಲ್ಲಲಾಗದ ಹಸನ್ ಸಾಹೇಬರ ಮನೆಯ ದಾರಿಯಲ್ಲಿ ನಿಧಾನವಾಗಿ ಕಾಲೆಳೆಯಲಾರಂಭಿಸಿದರು. +ಸೀಸನ್ ಬಂತು ಎಂದರೆ ಬೀಚ್‌ರೋಡಿನಲ್ಲಿ ಕಾರುಗಳ ಓಡಾಟ ಜೋರಾಗುತ್ತದೆ. ಕಡಲ ಕರೆಯಲ್ಲಿ ಲಂಗರು ಬಿಡುವ ಅರಬಿ ಮಚ್ವೆಗಳು ನೀರಮೇಲೆ ತಕಪಕ ಕುಣಿಯತೊಡಗಿದವೆಂದರೆ ಇಡೀ ಮುತ್ತುಚ್ಚೇರ ಗಿಜಿಗುಟ್ಟುತ್ತದೆ. ಮಿನಾರಿನೆತ್ತರ ಬೆಳೆದ ಅರಬಿ ವರ್ತಕರು ರಸ್ತೆಯಲ್ಲಿ ನಡೆಯುವಾಗ ಅತ್ತರ್‍ನ ವಾಸನೆ ಹರಡುತ್ತದೆ. ಪಕ್ಕದ ಪೇಟೆಯಲ್ಲಿರುವ ಮಾಳಿಗೆ ಹೋಟೆಲುಗಳ ರೂಮುಗಳೆಲ್ಲ ಫುಲ್ ಆಗುವುದೂ ಮಸೀದಿಗಳ ಎದುರು ಪಕೀರರುಗಳ ಸಾಲು ಉದ್ದವಾಗುವುದೂ ಇದೇ ಸೀಸನ್ಗಳಲ್ಲಿ. ಬಂದರು ಸಾಹುಕಾರರುಗಳೆಲ್ಲ ಈ ದಿನಗಳಲ್ಲಿ ಚುರುಕಾಗುತ್ತಾರೆ-ಅರಬಿ ವರ್ತಕರ ಎಲ್ಲ ‘ಬೇಕು’ಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಸುಮಾರು ಮೂರು ತಿಂಗಳ ಕಾಲ ಇಲ್ಲಿಯೇ ಮೊಕ್ಕಾಂ ಮಾಡುವ ಅರಬಿಗಳು ಖುಷಿಯಾಗಿದ್ದಷ್ಟೂ ಒಳ್ಳೆಯದು ಈ ಬಂದರು ಸಾಹುಕಾರರುಗಳಿಗೆ. ಸಂತೋಷದಲ್ಲೇ ಇರುವ ಅರಬಿ ವರ್ತಕರು ಈ ಸಾಹುಕಾರರುಗಳ ಮರ, ಬಿದಿರುಗಳನ್ನು ಒಂದಕ್ಕೆರಡು ಕೊಟ್ಟು ಕೊಂಡುಹೋಗುತ್ತಾರೆ. ವರ್ತಕರ ಯೋಗಕ್ಷೇಮದ ಹೊಣೆಹೊರುವ ಬೀರಾನ್ ಕೋಯಾ ಸಹಜವಾಗಿಯೇ ಸಾಹುಕಾರರುಗಳಿಗೆ ಹೆಚ್ಚು ಬೇಕಾದವರು. +ಬೀಚ್ ರೋಡಿನ ಎಡಭಾಗದಲ್ಲಿ ಬಣ್ಣಬಣ್ಣದ ಬಲ್ಬುಗಳು ಬೆಳಗಲಾರಂಭಿಸಿದ್ದವು. ಬಲಭಾಗದ ಗುಡಿಸಲುಗಳ ಸೋಗೆ ಸಂದಿಯಿಂದ ಚಿಮಿಣಿ ಬೆಳಕು ಮಿಣುಕುತ್ತಿದ್ದವು. ರುಖಿಯಾಬಿಯೊಂದಿಗೆ ಹೇಳಬೇಕಾದ ಮಾತುಗಳನ್ನು ಉರುಹೊಡೆಯುತ್ತಾ ನಡೆಯುತ್ತಿದ್ದರು ಬೀರಾನ್ ಕೋಯಾ. +ತಲೆಯ ಮೇಲೆ ಸೆರಗೆಳೆದುಕೊಂಡು ತುಂತುರುಮಳೆಗೆ ಕಾಗೆಯಂತೆ ಒದ್ದೆಯಾಗುತ್ತಾ ರುಖಿಯಾಬಿ ಬರುವುದು ಕಾಣಿಸಿದಾಗ ಕೋಯಾರವರ ಎದೆಬಡಿತ ನೂರು ದಾಟಿತು. ರಸ್ತೆಯಂಚಿನಲ್ಲಿ ನಿಂತು ನಿರೀಕ್ಷಿಸಲಾರಂಭಿಸಿದ ಕೋಯಾರಿಗೆ ಒಂದು ಕ್ಷಣ ‘ಅಯ್ಯೋ ಪಾಪ’ ಅನ್ನಿಸಿಬಿಟ್ಟಿತ್ತು. ತಕ್ಷಣದಲ್ಲೇ ಸಾವರಿಸಿಕೊಂಡು ಎದೆ ಕಲ್ಲು ಮಾಡಿಕೊಂಡರು. ಕರುಣೆಗೆ ಈ ವ್ಯವಹಾರದಲ್ಲಿ ಅವಕಾಶವೇ ಇಲ್ಲ. ಪಾಪ ಎಂದು ಸುಮ್ಮನೆ ಕೂತರೆ ಊಟ ಮಾಡುವುದು ಹ್ಯಾಗೆ? ಆರನೇ ಮಗಳು ಹಲೀಮ ದೊಡ್ಡವಳಾಗಿ ಎರಡು ವರ್ಷವಾದರೂ ಒಬ್ಬ ಹುಡುಗನ ಕತ್ತಿಗೆ ಕಟ್ಟಲು ತಮ್ಮಿಂದಾಗಿರಲಿಲ್ಲ. ಎದೆಯೆತ್ತರ ಬೆಳೆದು ನಿಂತಿರುವ ಪ್ರೀತಿಯ ಕೊನೆ ಮಗಳನ್ನು ಯಾವನೋ ಒಬ್ಬ ಅರಬಿಯೊಂದಿಗೆ ‘ನಿಖಾ’ ಮಾಡಿಸಲು ಮನಸ್ಸು ಒಪ್ಪುವುದಿಲ್ಲ. ಮಸೀದಿಯ ಬಳಿಯಲ್ಲಿ ಸೈಕಲು ಅಂಗಡಿ ನಡೆಸುತ್ತಿದ್ದ ‘ಉಸ್ಮಾನ್’ನ ಮೇಲೆ ಕಣ್ಣಿಟ್ಟು ಒಂದು ವರ್ಷವೇ ಆಯಿತು. ಅದು ಇದು ರಾಜಕೀಯ ಮಾತನಾಡುತ್ತಾ ಸೂಚ್ಯವಾಗಿ ಹಲೀಮಳ ಬಗ್ಗೆ ತಿಳಿಸಿಯೂ ಇಟ್ಟಿದ್ದರು. ಅವನಂತೂ ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದ, “ನೋಡಿ ಕೋಯಾ, ನನಗೆ ಅಪ್ಪ ಮಾಡಿಟ್ಟ ಗಂಟೇನೂ ಇಲ್ಲ. ನೀವೇ ನೋಡ್ತಾ ಇದ್ದೀರಿ. ಈಗ ಇರುವ ನಾಲ್ಕು ಲಟ್ಟಸ್ ಸೈಕಲ್‌ನ ಬಾಡಿಗೆಯಲ್ಲಿ ಒಂದು ಸಂಸಾರ ನಡೆಸಲು ಹೊರಟರೆ ಪಂಕ್ಚರ್ ಆಗುವುದಕ್ಕೆ ಅನುಮಾನವೇ ಇಲ್ಲ. ಕಡಿಮೆಯೆಂದರೂ ಇನ್ನೊಂದಾರು ಸೈಕಲ್ ಇದ್ದರೆ ಮದುವೆಯ ಬಗ್ಗೆ ಆಲೋಚನೆ ಮಾಡಬಹುದು. ಬಂಗಾರ-ಗಿಂಗಾರ ಅಂತ ನಾನು ಚರ್ಚೆ ಮಾಡುವುದಿಲ್ಲ. ನಿಮಗೆ ಇಷ್ಟವಿದ್ದಷ್ಟು, ಎಂಟೋ-ಹತ್ತೋ ಪವನು ಹಾಕಿದ್ರೆ ಸಾಕು. ಕ್ಯಾಶ್ ಮಾತ್ರ ಐದು ಸಾವಿರಕ್ಕೆ ಒಂದು ನಯಾಪೈಸೆ ಕಡಿಮೆಯಾದ್ರೆ ಈ ಸುದ್ದಿ ಮಾತೇ ಆಡುವುದು ಬೇಡ.” ಆತ ಹೇಳಿದ್ದರಲ್ಲೂ ನ್ಯಾಯವಿದೆಯೆನ್ನಿಸಿತ್ತು ಕೋಯಾರವರಿಗೆ. ಐದು ಸಾವಿರಕ್ಕೆ ಕಮ್ಮಿಗೆ ಈಗೆಲ್ಲ ಯಾವ ಹುಡುಗ ‘ನಿಖಾ’ಗೆ ಕುಳಿತುಕೊಳ್ತಾನೆ? ಈ ರುಖಿಯಾಬಿ ಒಮ್ಮೆ ‘ಹೂಂ’ ಅಂದರೆ ಸಾಕು; ಮೂರು ಸಾವಿರ ಹ್ಯಾಗಾದರೂ ಉಳಿಸಬಹುದು; ಉಸ್ಮಾನ್‌ನೊಡನೆ ಮಾತನಾಡಲು ಅಷ್ಟಾದರೂ ಬೇಕೇ ಬೇಕು. ಮನೆಯಲ್ಲೇ ತಾಪತ್ರಯ ನೂರು ಇರುವಾಗ ಊರಿನವರ ಬಗ್ಗೆ ಕರುಣೆ ತೋರಿಸುವುದು ಹ್ಯಾಗೆ? ತಾವೇನು ಧರ್ಮಬಾಹಿರವಾದದ್ದೇನೂ ಮಾಡಹೊರಟಿಲ್ಲವಲ್ಲ? ತಮ್ಮೊಳಗೇ ಸಮರ್ಥನೆ ನಡೆಸಿಕೊಂಡರು ಬೀರಾನ್ ಕೋಯ. +ಇನ್ನೂ ನಲವತ್ತು ತುಂಬಿರದಿದ್ದರೂ ಐವತ್ತರ ಮುದುಕಿಯಂತೆ ಕಾಣುವ ರುಖಿಯಾಬಿ, ದಾರಿಗಡ್ಡವಾಗಿ ನಿಂತಿದ್ದ ಕೋಯಾರನ್ನು ಕಂಡು ಬೆಚ್ಚಿಬಿದ್ದಳು. ಅವರೇಕೆ ಕಾದು ಕುಳಿತಿದ್ದಾರೆಂಬುದೂ ಅವಳಿಗೆ ಗೊತ್ತಿತ್ತು. +“ಇಷ್ಟು ಹೊತ್ತಾಯ್ತು ನೋಡು ರುಖಿಯಾ, ನಿನ್ನ ಕಷ್ಟ ನೋಡಿದ್ರೆ ಈ ಬದುಕೇ ಬೇಡ ಅಂತ ಕಾಣ್ತಿದೆ. ಯಾವುದಕ್ಕೂ ಅಲ್ಲಾಹು ಬರೆದಿಡಬೇಕು…ತ್ಚು….ತ್ಚು….”ಲೊಚಗುಟ್ಟಿದ ಕೋಯಾರವರು ತುಟಿ ಪಿಟ್ಟೆನ್ನದೆ ನಡೆಯುತ್ತಿದ್ದ ರುಖಿಯಾಬಿಯ ಅಂಚಿನಲ್ಲೇ ಕಾಲು ಹಾಕಿದರು. +ಅಮ್ಮನಿಗಂಟಿಕೊಂಡೇ ಮನೆಯೊಳಗೆ ನುಗ್ಗಿದ ಕೋಯಾರವರನ್ನು ತಿರಸ್ಕಾರದಿಂದ ನೋಡಿದ ಉನ್ನಿಸಾ, “ಉಮ್ಮ, ನಾನು ಮರಿಯಮ್ಮನ ಮನೆಗೆ ಹೋಗಿ ಬರ್‍ತೇನೆ. ನಿನ್ನೆ ಹೊಸ ಸೀರೆ ತಂದಿದ್ದಾರಂತೆ. ನೋಡಿಕೊಂಡು ಬರ್‍ತೇನೆ” ಎಂದವಳೇ ಹೊರಗೆ ಚಿಮ್ಮಿದಳು. +ಮುಂಬಾಗಿಲ ಮೂಲೆಯಲ್ಲಿ ಒದ್ದೆ ಕೊಡೆಯನ್ನು ಇರಿಸಿದ ಕೋಯಾ ಅಲ್ಲಿಯೇ ಇದ್ದ ಮಣೆಯೊಂದರ ಮೇಲೆ ಕುಳಿತು “ಹ್ಯಾಗೆ ಬೆಳೆದುಬಿಟ್ಟಿದ್ದಾಳಲ್ಲ ಹುಡುಗಿ?” ಎಂದು ಅರ್ಥಗರ್ಭಿತವಾಗಿ ನಕ್ಕರು. ಮನೆಯ ಹಿಂಭಾಗದಲ್ಲಿ ಕಡಲು ಗರ್ಜಿಸುತ್ತಿರುವುದು ಗುಡಿಸಲ ಒಳಗೆಲ್ಲ ಪ್ರತಿಧ್ವನಿಸುತ್ತಿತ್ತು. ಒಳಬಾಗಿಲಿಗೊರಗಿ ಮರದ ಕೊರಡಿನಂತೆ ನಿಂತಿದ್ದ ರುಖಿಯಾಬಿಗೆ ಬೀರಾನ್ ಕೋಯಾ ಹೇಳುತ್ತಿರುವ ಮಾತುಗಳ ಬಗ್ಗೆ ಗಮನವಿದ್ದಿರಲಿಲ್ಲ. ಅವರು ಹೇಳಬಯಸುವುದನ್ನೆಲ್ಲ ಅವಳೀಗಾಗಲೇ ಅರ್ಥ ಮಾಡಿಕೊಂಡಿದ್ದಳು. +ರುಖಿಯಾಬಿಗೆ ಬೀರಾನ್ ಕೋಯಾ ಅಪರಿಚಿತರೇನೂ ಆಗಿಲ್ಲ-ಅವರ ಚಿಕ್ಕಪ್ಪ ಮೈದಿನ್ ಕೋಯಾರವರೇ ಅವಳಿಗೆ ಅರಬ್ಬಿಯೊಬ್ಬನೊಡನೆ ‘ನಿಖಾ’ ಮಾಡಿಸಿದ್ದು. ಆಗ ರುಖಿಯಾಬಿಯ ಮನೆ ಪೇಟೆಬೀದಿಯಲ್ಲಿತ್ತು. ನೆರೆಮನೆಯ ಆಮಿನಾಬಿಗೂ ಅದೇ ದಿನ ‘ನಿಖಾ’ ಆಗಿತ್ತು. ಏನು ಕಾರಣವೋ ಏನೋ ಅದೇ ದಿನ ರಾತ್ರಿ ಅವಳು ಬಾವಿಗೆ ಹಾರಿಕೊಂಡಿದ್ದಳು. ಊರಲ್ಲೆಲ್ಲ ಗಲಾಟೆಯಾಗಿತ್ತು. ಪೋಲೀಸು ಜೀಪು ಕೂಡಾ ಬಂದಿತ್ತಂತೆ. ರುಖಿಯಾಬಿ ಮಾತ್ರ ಒಂದು ವಾರ ಕೋಣೆಯೊಳಗಿಂದ ಹೊರಗೆ ತಲೆಹಾಕಿರಲಿಲ್ಲ. ಹೋಟೆಲಿನ ದೊಡ್ಡ ಕೋಣೆಯಲ್ಲಿ ಇಬ್ಬರೇ. ಊಟ-ತಿಂಡಿ ಎಲ್ಲವೂ ಕೋಣೆಗೇ ಬರುತ್ತಿತ್ತು. ಹಾಗೆ ನೋಡಿದರೆ ಆ ಅರೆಬಿ ನಿಜಕ್ಕೂ ಒಳ್ಳೆಯವರೇ. ಎದ್ದು ನೆಟ್ಟಗೆ ನಿಂಟರೆ ಸೂರಿನಲ್ಲಿ ತೂಗುತ್ತಿದ್ದ ಫ್ಯಾನು ತಲೆತಾಗಬೇಕು; ಅಷ್ಟು ಎತ್ತರ. ಮೂರು ತಿಂಗಳು ಮೂರು ದಿನದ ಹಾಗೆ ಕಳೆದು ಹೋಗಿತ್ತು. ರುಖಿಯಾಬಿ ಮೊನ್ನೆ ಮೊನ್ನೆಯವರೆಗೂ ಕಣ್ಣೀರಿಟ್ಟು ಹೇಳುತ್ತಿದ್ದಳು. “ಅವರು ಎಲ್ಲ ಅರೆಬಿಗಳಂತಾಗಿದ್ದರೆ ತಲಾಖ್ ಕೊಟ್ಟೇ ಹೋಗಬಹುದುತ್ತು. ಬರ್‍ತೇನೆ ಅಂತ ಸುಳ್ಳು ಹೇಳಿ ಹೋಗುವ ಅಗತ್ಯವಿರಲಿಲ್ಲ. ಹೋದವರಿಗೆ ಏನಾಯಿತೋ ಏನೋ….” +ಒಂದೇ ಸಮನೆ ಮಾತಾಡುತ್ತಿದ್ದ ಕೋಯಾರವರು, ರುಖಿಯಾಬಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಾಗ ಅಧೀರರಾದರು. ಈವತ್ತು ರಾತ್ರಿ ನಮಾಜಿಗೆ ಮೊದಲು ರುಖಿಯಾಬಿಯನ್ನು ಒಪ್ಪಿಸಲೇಬೇಕು. ಆ ಅರಬಿ ಇನ್ನೊಂದು ಬಾರಿ ಅವಕಾಶ ಕೊಡಲಾರ. ತೆಗೆದುಕೊಂಡಿದ್ದ ಅಡ್ವಾನ್ಸು ಇನ್ನೂರು ಖರ್ಚಾಗಿ ಹೋಗಿದೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಕೊನೆಗೆ ಮಾತೆಲ್ಲ ಮುಗಿದಂತಾಗಿ ಭುಸುಗುಡುತ್ತಾ-ಉರುಳಾಡುತ್ತಾ ಬಂದ ಮೂರಾಳೆತ್ತರದ ತೆರೆಯೊಂದು ಕಡಲ ಕರೆಯಲ್ಲಿ ತನ್ನ ಶಕ್ತಿಯನ್ನೆಲ್ಲಾ ಕಳಕೊಂಡಂತೆ ಪ್ರಶ್ನಿಸಿದ್ದರು, “ಏನು ಹೇಳ್ತಿ?” +ರುಖಿಯಾಬಿ ಬಂಡೆಗೋಡೆಯಂತೆ ನಿಂತಿದ್ದಳು. ಉತ್ತರಿಸಬೇಕೆಂಬ ಯೋಚನೆಯೂ ಅವಳೊಳಗಿರಲಿಲ್ಲ. +ರುಖಿಯಾಬಿ ಸುಲಭದಲ್ಲಿ ಕರಗುವ ಹೆಣ್ಣಲ್ಲವೆಂಬುದನ್ನು ಅವರ ಚಿಕ್ಕಪ್ಪ ಮೈದಿನ್ ಕೋಯಾರವರೇ ಒಮ್ಮೆ ಹೇಳಿದ್ದರು. “ನೀಯತ್ತು ಅಂತ ಏನಾದ್ರೂ ಇದ್ದರೆ ಅದು ರುಖಿಯಾಳಲ್ಲಿ. ಇದ್ದುದರಲ್ಲಿ ಒಳ್ಳೆಯ ಅರಬಿ ನೋಡಿ ನಿಖಾ ಮಾಡಿದ್ದೆ. ನನಗೂ ಹೇಳದೇ ಹೋಗಿಬಿಟ್ಟ ಆ ಅರಬಿ. ಮರ್ಯಾದೆಯಲ್ಲಿ ನಾಲ್ಕು ಜನರ ಎದುರು ತಲಾಕ್ ಕೊಟ್ಟು ಹೋಗಿರುತ್ತಿದ್ದರೆ ರಗಳೆಯೇ ಇರಲಿಲ್ಲ. ಮುಂದಿನ ಸೀಜನ್‌ಗೆ ಖಂಡಿತ ಬರ್‍ತೇನೆ ಅಂತ ಕುರಾನಿನ ಮೇಲೆ ಆಣೆಹಾಕಿ ಹೋಗಿದ್ದನಂತೆ. ಆದರೆ ಮುಂದಿನ ಸೀಜನ್ ಸಾಯಲಿ, ನಾಲ್ಕು ಸೀಜನ್ ಕಳೆದರೂ ಅರಬಿಯ ಅಡ್ರೆಸ್ ಕೂಡಾ ಇಲ್ಲ. ಆ ಹೆಣ್ಣು ಮಾತ್ರ ಒಂದು ಮಗುವನ್ನು ಹಿಡಿದುಕೊಂಡು ಈ ವರ್ಷ ಬಂದಾರು, ಮುಂದಿನ ವರ್ಷ ಬಂದಾರು ಅಂತ ಕಡಲು ನೋಡ್ತಾ ಕೂತದ್ದಲ್ಲದೇ ನನ್ನ ಒಂದು ಮಾತೂ ಕೂಡಾ ಕೇಳಲು ತಯಾರಾಗಲಿಲ್ಲ. ನಾಲ್ಕನೇ ವರ್ಷ ಮತ್ತೊಂದು ನ್ಯಾಯವಾದ ಪಾರ್ಟಿ ಬಂದಿತ್ತು. ರುಖಿಯಾಬಿಯನ್ನು ಅವಳ ಮಗುವಿನ ಸಮೇತ ಕರೆದುಕೊಂಡು ಹೋಗಲು ರೆಡಿಯಾಗಿದ್ದ. ಉಹುಂ….ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಸರ್ವಿಸ್‌ನಲ್ಲಿ ಇಂಥ ಹುಡುಗಿಯನ್ನು ಕಂಡಿಲ್ಲ. ಇಡೀ ಕೊಪ್ಪರಿಗೆಯನ್ನು ತಂದು ಎದುರು ಈಡ್ತೇವೆ ಎಂದ್ರೂ ತಲೆ ಎತ್ತಿ ನೋಡಲಿಲ್ಲ. ಯಾರಲ್ಲಾದ್ರೂ ಹೇಳಿಸುವ ಅಂದ್ರೆ ಅವಳಿಗೆ ಯಾರಿದ್ದಾರೆ?” ನೆನಪಿಸಿಕೊಳ್ಳುತ್ತಿರುವಂತೆಯೇ ಬೀರಾನ್ ಕೋಯಾ ನವಿರಾಗಿ ನಡುಗಿದರು. ಚಿಕ್ಕಪ್ಪನವರ ಕಾಲದಲ್ಲಿ ಅರಬಿ ಮದುವೆಗಳೆಂದರೆ ನಮಾಜು ಮಾಡಿದಷ್ಟೇ ಸಾಮಾನ್ಯ ಸಂಗತಿ. ನಿಖಾವನ್ನು ಮಸೀದಿಯಲ್ಲೇ ಮಾಡಬೇಕು ಅಥವಾ ಈಗಿನ ಕ್ರಮದಂತೆ ನಾಲ್ಕಾರು ಜನರ ಸಾಕ್ಷಿ ಬೇಕು ಎಂಬೆಲ್ಲ ರೂಲ್ಸುಗಳೇನೂ ಇರಲಿಲ್ಲ. ಎಲ್ಲೆಂದರಲ್ಲಿ ನಿಖಾ ನಡೆದುಹೋಗುತ್ತಿತ್ತು. ಅಲ್ಲದೆ ನಿಖಾ ನಡೆಸಲು ಎಷ್ಟು ಹೊತ್ತು ಬೇಕು? ಆನೆ ಕುದುರೆ ಏನೂ ಆಗಬೇಕಾಗಿರಲಿಲ್ಲ. ಮನಸ್ಸು ಮಾಡಿದರೆ ಗಂಟೆಗೆ ಎಂಟು ನಿಖಾ ಮುಗಿಸಿಬಿಡಬಹುದು. ಯಾವುದಕ್ಕೂ ಈಗ ರುಖಿಯಾಬಿ ಒಪ್ಪಬೇಕಲ್ಲ? +“ನೋಡು ರುಖಿಯಾ, ನನಗೆ ಈ ಮುಸ್ತಫಾ ಅರಬಿ ಚೆನ್ನಾಗಿ ಗೊತ್ತು” ಬೀರಾನ್ ಕೋಯಾ ಮತ್ತೆ ಆರಂಭಿಸಿದರು. “ಅಂತಿಂಥ ಚಿಲ್ಲರೆ ಅರಬಿಯಾಗಿರುತ್ತಿದ್ದರೆ ನಿನ್ನ ಮನೆಗೆ ಕಾಲಿಡುವ ಮಗ ನಾನಲ್ಲ. ಮತ್ತೆ ನಿನಗೇ ಗೊತ್ತಿದೆ-ಈ ಈರಲ್ಲಿ ಹುಡುಗಿಯರಿಗೇನೂ ಬರವಿಲ್ಲ ಅಂತ. ನಾನು ಬರೇ ಸುದ್ದಿ ಕೊಟ್ರೆ ಆಯಿತು. ಹುಡುಕಿಕೊಂಡು ಬರ್‍ತಾರೆ. ಮಹರ್ ಹಣ ಪೂರ್ತಿ ನಾನೇ ಇಟ್ಟುಕೊಂಡರೂ ನಾಲಿಗೆ ಆಡಿಸುವವರಲ್ಲ, ಅರಬಿಗಳ ಹೆಂಡತಿಯಾಗುವುದೆಂದರೆ ಏನು ಕುಶಾಲಾ? ಕಾಲಿಗೂ ಬಂಗಾರದ ಪೈಜಣಿಗೆ ಹಾಕಿದವರಿದ್ದಾರೆ. ಅದೆಲ್ಲ ಅವರವರ ಹಣೆಯಲ್ಲಿ ಬರೆದದ್ದು. ಇಲ್ಲದಿದ್ರೆ ನೀನು ಈವತ್ತು ಈ ಅವಸ್ಥೆಯಲ್ಲಿ ಇರಬೇಕಿತ್ತಾ. ಒಂದು ಮಾತಂತೂ ತಿಳ್ಕೋ, ನಿನಗೆ ಇದಕ್ಕಿಂತ ಒಳ್ಳೆಯ ಸಂಬಂಧ ಬೇರೆ ಈ ಜನ್ಮದಲ್ಲಿ ಸಿಗಲಿಕ್ಕಿಲ್ಲ.” +ರುಖಿಯಾಬಿ ಕಲ್ಲಿನಂತೆಯೇ ನಿಂತಿದ್ದಳು. ಕೆನ್ನೆಯ ಇಳಿಜಾರದಲ್ಲಿ ತೊಟ್ಟು ತೊಟ್ಟಾಗಿ ಉರುಳಿ ಬೀಳುತ್ತಿದ್ದ ಕಣ್ಣೀರ ಬಿಂದುಗಳು ಮೊಣಕೈ ಮೇಲೆ ಬಿದ್ದು ಒಡೆದು ಹೋಗುತ್ತಿದ್ದವು. +ಕೋಯಾರವರು ಮತ್ತೆ ಪುಸಲಾಯಿಸತೊಡಗಿದರು. “ನಾನು ಮುಸ್ತಫಾರಿಗೆ ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದೇನೆ. ನಮ್ಮ ಉನ್ನೀಸಾ ಬಂಗಾರದ ತುಂಡಿನಂಥ ಹುಡುಗಿ. ಕೆಳಗೆ ಇಟ್ಟರೆ ಇರುವೆ ಕಚ್ಚೀತು, ಮೇಲೆ ಇಟ್ಟರೆ ಕಾಗೆ ಕೊಂಡುಹೋದೀತು ಅಂತ ಬೆಳೆದ ಮಗು. ಕಣ್ಣೀರು ಎಂದರೇನು ಅಂತ ಅವಳು ಕಲೀಲಿಲ್ಲ. ಅದೇ ಆರು ತಿಂಗಳ ವಾಯಿದೆ ಹೇಳಿದ್ದೇನೆ. ಅಷ್ಟರೊಳಗೆ ವೀಸಾ ಮಾಡಿ ಕರಕೊಂಡು ಹೋಗುವುದಾದರೆ ಮಾತ್ರ ಈ ಸಂಬಂಧ ಆದೀತು ಎಂದು ಖಡಕ್ಕಾಗಿಯೇ ಹೇಳಿದ್ದೇನೆ. ನಿನಗೆ ಗೊತ್ತಿದೆ. ನಿನ್ನ ಮಾತೆಂದರೆ ಒಂದು ಪೆಟ್ಟು-ಎರಡು ತುಂಡು. ನಿನ್ನ ಮಗಳು ಒಮ್ಮೆ ಕಡಲು ದಾಟಿದಳು ಅಂದರೆ ಸಾಕು; ನಿನ್ನ ಮನೆಗೆ ಬಂಗಾರದ ತಗಡು ಹೊದಿಸಬಹುದು. +ಬಾಯಿ ಪಾಠ ಒಪ್ಪಿಸುವಂತೆ ಸದ್ದು ಮಾಡುತ್ತಿದ್ದ ಕೋಯಾರವರಿಗೆ ತಮ್ಮ ಅನುಭವದ ಮಾತುಗಳೆಲ್ಲ ಖಾಲಿಯಾಗುತ್ತಿರುವಂತೆ ಅನ್ನಿಸತೊಡಗಿತು. ತಣ್ಣಗೆ ಭಯ ಮೊದಲಿಟ್ಟಿತು. ರುಖಿಯಾಬಿ ಒಪ್ಪದೇ ಹೋದರೆ ತಮ್ಮ ಮಗಳು ಹಲೀಮ ಮನೆಯೊಳಗೇ ಕೊಳೆಯಬೇಕಾಗುತ್ತದೆ ಎಂಬ ಯೋಚನೆಯಿಂದ ಅವರ ಮಾತುಗಳಿಗಿಂತ ಸ್ವರವೇ ಹೆಚ್ಚಾಗತೊಡಗಿತು. ಯಾವುದಕ್ಕೂ ರುಖಿಯಾಬಿ ಜಗ್ಗುವುದಿಲ್ಲ ಎಂದು ಖಂಡಿತವಾದ ಬಳಿಕ ಬೆದರಿಸಲೇ ಆರಂಭಿಸಿಬಿಟ್ಟರು. +“ನಾನು ಹೇಳಲಿಲ್ಲ ಅಂತ ಬೇಡ. ನನ್ನ ಮಾತು ಕೇಳಿದೀ ಬಚಾವ್. ಇಲ್ಲ ಅಂದ್ರೆ ನಾನು ಸುಮ್ಮನಿರುವ ಮಗ ಅಲ್ಲ. ನಿನ್ನ ಮಗಳಿಗೆ ಈ ಜೀವಮಾನದಲ್ಲಿ ಒಂದು ಹುಡುಗ ಸಿಗದ ಹಾಗೆ ಮಾಡುವ ದಾರಿ ನನಗೆ ಗೊತ್ತುಂಟು. ಆ ತಾಕತ್ತು ನನಗಿದೆ. ನೀನೇ ಹೇಳು, ಅಪ್ಪ ಯಾರು ಅಂತಲೇ ಗೊತ್ತಿಲ್ಲದ ನಿನ್ನ ಮಗಳನ್ನು ಕಟ್ಟಿಕೊಳ್ಳಲು ಯಾವ ಹುಡುಗ ಓಡಿ ಬರ್‍ತಾನೆ? ಏನೂಂತ ತಿಳ್ಕೊಂಡಿದ್ದಿ? ನಿನ್ನ ಅರಮನೆಯಲ್ಲಿ ಬಂಗಾರದ ಗಟ್ಟಿ ಇಟ್ಟುಕೊಂಡಿದ್ದೀಯಾ? ಹುಂ, ನಾನು ಕೋಪ ಬಂದ್ರೆ ಸೈತಾನನಿಗಿಂತಲೂ ಕಡೆ, ಹಾಂ….!” +ಕಡಲ ತೆರೆಗಳು ಗುಡಿಸಲನ್ನೇ ಕಿತ್ತೆಸೆಯುವಂತೆ ಘರ್ಜಿಸುತ್ತಿದ್ದವು. ಹಾವಿನ ಜಾತಿಯ ಆ ಮುದುಕನಿಂದ ತಪ್ಪಿಸಿಕೊಳ್ಳುವುದೇ ಸಾಧ್ಯವಿಲ್ಲ ಅನ್ನಿಸಲಾರಂಭಿಸಿತು ರುಖಿಯಾಬಿಗೆ. ಉನ್ನೀಸಾ ದೊಡ್ಡವಳಾಗಿ ಎರಡು ವರ್ಷವೇ ದಾಟಿದೆ. ಅವಳ ಮದುವೆಯ ಬಗ್ಗೆ ಯೋಚಿಸುವ ಧೈರ್ಯವೂ ತನಗಿಲ್ಲ. ಮುತ್ತುಚ್ಚೇರದ ಯಾವ ಹುಡುಗನೂ ತಂದೆ ಯಾರೆಂದು ಗೊತ್ತಿಲ್ಲದ ಈ ಹುಡುಗಿಯನ್ನು ಕಟ್ಟಿಕೊಳ್ಳಲಾರ. ದುಡ್ಡಿನ ಆಸೆಯಿಂದಲಾದರೂ ಯಾರಾದರೂ ಬಂದಾರೆನ್ನುವುದಕ್ಕೆ ತನ್ನಲ್ಲಿ ಏನಿದೆ? ಯಾವನಾದರೂ ಒಬ್ಬ ಮುದಿ ಸಾಹುಕಾರನ ಎರಡನೆಯವಳೋ ಅಥವಾ ನಾಲ್ಕನೆಯವಳಾಗಿಯೇ ಬದುಕಬೇಕಾದ ಹಣೆಬರಹ ಮಗಳದ್ದು. ಇದಕ್ಕಿಂತ ಅರಬಿಯೊಬ್ಬನೊಡನೆ ‘ನಿಖಾ’ ನಡೆಸಿ ಅದೃಷ್ಟವನ್ನಾದರೂ ಪರೀಕ್ಷೆ ಮಾಡಿದರೆ ಹ್ಯಾಗೆ? ಆತ ಕರೆದುಕೊಂಡು ಹೋದರೆ ಒಳ್ಳೇಯದೇ ಆಯಿತು. ತಲಾಖ್ ಹೇಳಿ ಹೋದರೂ ಪರವಾಗಿಲ್ಲ. ಮದುವೆಯೇ ಆಗದಿದ್ದರೆ ಮನೆಯಲ್ಲಿಯೇ ಉಳಿಸುವುದೆಂದರೂ ಕಷ್ಟವೇ. ರಾತ್ರಿ ಹಗಲು ಮಗಳನ್ನು ಕಾಯುವುದು ಸಾಧ್ಯವೇ? ಮದುವೆಯಾದ ಬಳಿಕ ಮನೆಯಲ್ಲೇ ಉಳಿದರೂ ಅಪವಾದದ ಮಾತು ಕೇಳಬೇಕಾಗುವುದಿಲ್ಲ….ಹಾಗಾದರೆ ಒಪ್ಪಿಬಿಡಲೆ? +ಕಟ್ಟೆಯೊಡೆದಂತೆ ಸ್ವರವೆಬ್ಬಿಸಿ ಅಳುತ್ತಾ ಕುಸಿದು ಕುಳಿತಳು ರುಖಿಯಾಬಿ. ಕಡಲಿಗಡ್ಡವಾಗಿ ಕಟ್ಟಿದ್ದ ಬಂಡೆಗೋಡೆಯಾದರೂ ಒಡೆದು ಹೋಗಿ ಎಲ್ಲವೂ ಮುಳುಗಿ ಹೋಗಿದ್ದರೆ ? ಅನ್ನಿಸಿತು. +ಬೀರಾನ್ ಕೋಯಾರಿಗೆ ಗಾಬರಿ-ಸಂತೋಷ ಎರಡೂ ಒಟ್ಟಿಗೇ ಆಯಿತು. ಮೆದುವಾಗಿರುವಾಗಲೇ ಬಡಿಯುವುದು ಸುಲಭ ಎಂಬುದನ್ನು ಅನುಭವದಿಂದ ಕಲಿತಿದ್ದರು. +“ಅಳಲಿಕ್ಕೆ ಏನಾಗಿದೆ ಈಗ? ನಾನೇನು ಬಲಾತ್ಕಾರ ಮಾಡಿದ್ದೇನಾ? ಇಷ್ಟವಿದ್ದರೆ ಹೂಂ ಎಂದರಾಯಿತು. ಇಲ್ಲವಾದರೆ ನನ್ನ ದಾರಿ ನಾನು ನೋಡ್ತೇನೆ. ಒತ್ತಾಯ ಯಾವ ಮಗ ಮಾಡ್ತಾನೆ? ನನ್ನ ಲಾಭಕ್ಕ ನಾನು ಇಷ್ಟೆಲ್ಲ ಹೇಳುವುದು? ಒಂಟಿ ಹೆಂಗಸಿಗೆ ಇಷ್ಟು ಹಟ ಇದ್ದರೆ ಅಲ್ಲಾಹು ಮೆಚ್ಚುವುದಿಲ್ಲ.” +“ದೊಡ್ಡ ಮಸೀದಿಯ ‘ಇಮಾಂ’ ಈ ಮದುವೆಗೆ ಬರ್‍ತಾರಾ?” ರುಖಿಯಾಬಿ ಪ್ರಶ್ನಿಸಿದ್ದಳು” +ಬೀರಾನ್ ಕೋಯಾ ತಕ್ಷಣ ಹುಷಾರಾದರು. ಮುಳುಗುತ್ತಿದ್ದ ‘ಮಚ್ವೆ’ ಮತ್ತೆ ತೇಲುವ ಸೂಚನೆ ನೀಡಿತ್ತು. ಲಾಲಿಸುವ ಧ್ವನಿಯಲ್ಲೇ ಹೇಳಿದರು, “ಎ‌ಅಮ್ಥದ್ದು ರುಖಿಯಾ ನೀನು ಹೇಳುವುದು? ನನಗೇನು ನಿನ್ನ ಮೇಲೆ ಹಗೆ ಉಂಟಾ? ನನ್ನನ್ನು ಇಲ್ಲಿಗೆ ಕಳಿಸಿದ್ದು ಯಾರು ಅಂತ ತಿಳಿದಿದ್ದಿ? ನಿನ್ನ ಸಂಗತಿ ಪೂರಾ ಅವರಿಗೆ ಗೊತ್ತಿದೆ. ಅವರೇ ಬಂದು ನಿಖಾ ನಡೆಸಿದ್ರೆ ಆಯ್ತಲ್ಲ?” +ರುಖಿಯಾಬಿಗೆ ಹೊಸ ಪ್ರಶ್ನೆಗಳಾವುವೂ ತೋಚಲಿಲ್ಲ. ಇಡಿಯಾಗಿ ಮುಳುಗಿದವಳಂತೆ ಮೊಣಕಾಲ ನಡುವೆ ತಲೆಯಿರಿಸಿ ಅಳತೊಡಗಿದಳು. +ತಕ್ಷಣ ಎದ್ದು ಹೊರಟು ನಿಂತ ಕೋಯಾ ಹೇಳಿದರು, “ನಾಳೆ ನಾಡಿದ್ದರಲ್ಲಿ ಸ್ವಲ್ಪ ಹಣ ತಂದುಕೊಡ್ತೇನೆ. ಈ ವಾರದ ಒಳಗೆ ಎಲ್ಲ ಮುಗಿದುಹೋಗಬೇಕು. ನನಗೆ ನೂರು ರಗಳೆ ಉಂಟು.” +[೨] +“ಹಲ್ಕಾ ಹರಾಮಿಗಳು!” +ಮುತ್ತುಚ್ಚೇರ ಯೂತ್‌ಲೀಗ್‌ನ ಬಗ್ಗೆ ಮಾತನಾಡುವಾಗಲೆಲ್ಲ ಬೀರಾನ್ ಕೋಯಾ ಬಳಸುತ್ತಿದ್ದ ಮಾತು “ಹಲ್ಕಾ ಹರಾಮಿಗಳು!” “ಕೊನೆಗಾಲ ಸಮೀಪಿಸುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಾ? ಬಡಹುಡುಗಿಯರನ್ನು ಒಂದು ನೆಲೆಗೆ ಮುಟ್ಟಿಸುವ ಕೆಲಸ ತಾನು ಮಾಡುತ್ತಿದ್ದರೆ ಈ ಹರಾಮಿಗಳು ಯಾಕೆ ಅಡ್ಡಗಾಲು ಹಾಕಬೇಕು? ಹೂಂ… ಎಷ್ಟು ಹಾರಾಡ್ತಾರೋ ನೋಡುವ. ಸಾಯಲಿಕ್ಕಿಲ್ಲವೇ ಇವರೆಲ್ಲ? ನರಕದಲ್ಲಿ ಕುದಿಯುವ ಎಣ್ಣೆ ಇರುವುದು ಇವರಿಗಲ್ಲದೆ ಮತ್ಯಾರಿಗೆ?” ಪುರುಸೊತ್ತಾದಾಗಲೆಲ್ಲ ಯೂತ್ ಲೀಗ್‌ನ ಬಗ್ಗೆಯೇ ನಂಜು ಕಾರುತ್ತಿದ್ದರು ಬೀರಾನ್ ಕೋಯಾ. ಅವರ ಕುಲಕಸುಬಿಗೇ ತಲೆನೋವು ತಂದಿದ್ದರು ಈ ಹುಡುಗರು. +ಮುತ್ತುಚ್ಚೇರ ಯೂತ್ ಲೀಗ್‌ಗೆ ತನ್ನದೇ ಆಗಿರುವ ಗೊಂದಲಮಯ ಇತಿಹಾಸವೂ ಇದೆ. ಅವರ ಚಿಕ್ಕಪ್ಪ ಮೈದಿನ್ ಕೋಯಾರವರ ಕಾಲದಲ್ಲೇ ತಲೆಯೆತ್ತಿದ ಯುವ ಸಂಘಟನೆ ಇದು. +ಯಾವನೋ ಒಬ್ಬ ಹರಾಮಿ ಹುಡುಗ ಹತ್ತಾರು ಹುಡುಗರನ್ನು ಕಲೆ ಹಾಕಿ ಒಂದು ಸಂಘವನ್ನೇ ಸ್ಥಾಪಿಸಿಬಿಟ್ಟಿದ್ದ. ನಾಲ್ಕು ಇಂಗ್ಲಿಷ್ ಅಕ್ಷರ ಓದಿದ ಈ ಹಲ್ಕಾ ಹುಡುಗರದ್ದು ಏನು ಅಹಂಕಾರ! ಆರಂಭದ ಎರದು ವರ್ಷಗಳಲ್ಲಂತೂ ಅವರ ಹಾರಾಟವನ್ನು ಹಿಡಿದು ನಿಲ್ಲಿಸುವ ಜನ ಇಲ್ಲ. ಒಂದೇ ಒಂದು ಅರಬಿ ಮದುವೆ ನಡೆಸಲು ಬಿಟ್ಟವರಲ್ಲ ಅವರು. ಸೀಜನ್ ಶುರುವಾಯಿತು ಅಂದರೆ ಸಾಕು; ದೊಣ್ಣೆ ಹಿಡಿದುಕೊಂಡೇ ಬೀದಿ ಬೀದಿ ಅಲೆಯುತ್ತಿದ್ದರು. ಮನೆ ಮನೆ ನುಗ್ಗಿ ಅರಬಿಗಳು ಇದ್ದಾರಾ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಕೋಯಾರವರಿಗೆ ಎಲ್ಲಕ್ಕಿಂತ ದೊಡ್ಡ ಬೇಸರದ ಸಂಗತಿಯೆಂದರೆ ದೊಡ್ಡ ಜಮಾತಿನ ಇಮಾಂ ಕೂಡ ಈ ಹರಾಮಿ ಹುಡುಗರ ಎದುರು ಬಾಲ ಆಡಿಸಿದ್ದು. ಅರಬಿ ಮದುವೆಗೆ ಅವಕಾಶವಿಲ್ಲದ್ದರಿಂದ ಊರಿನ ಮರ ಬಿದಿರಿನ ಸಾಹುಕಾರರೆಲ್ಲ ಕಂಗಾಲು. ಅರಬಿಗಳಿಗೆ ಬೇಸರವಾದರೆ ಇವರಿಗೆ ಹಣ ಕೊಡುವವರು ಯಾರು? ಮರ ಬಿದಿರು ಎಲ್ಲವೂ ಗೋಡೌನ್‌ನಲ್ಲಿಯೇ ಕುಂಬಾಯಿತು. ಬಾಯಿಬಿಟ್ಟು ಹೇಳುವಂತಿಲ್ಲ. ಒಂದೆರಡು ಚಿಲ್ಲರೆ ಪೇಪರ್‌ನವರೂ ಇದನ್ನು ಭಾರೀ ಸುದ್ದಿ ಎಂದು ಅಚ್ಚು ಹಾಕಿಸಿಬಿಟ್ಟಿದ್ದರು. ಒಟ್ಟಿನಲ್ಲಿ ಹರಾಮಿಗಳ ಕಾಲ ಅದು. +ಅಲ್ಲಾಹುವಿನ ದಯೆ. ಕುಂಞಾಲಿ ಹಾಜಿಯವರು ಇಲ್ಲದೇ ಹೋಗಿದ್ದರೆ ಕೋಯಾರವರ ಕುಟುಂಬ ಇಷ್ಟರಲ್ಲೇ ಕಡಲಪಾಲಾಗಬೇಕಿತ್ತು. ತಲೆ ಎಂದರೆ ಅವರದ್ದು. ಎರಡು ಬಾರಿ ಮಕ್ಕಕ್ಕೆ ಹೋಗಿ ಬಂದವರು. ಡಬ್ಬಲ್ ಹಾಜಿಯೆಂದೇ ಜನರು ಅವರನ್ನು ಕರೆಯುತ್ತಿದ್ದುದು. +ಆ ಒಂದು ಸೀಜನ್‌ನಲ್ಲಿ ಕುಂಞಾಲಿ ಹಾಜಿಯವರ ಮನೆಗೆ ಒಂದು ದೊಡ್ಡ ಅರಬಿ ಪಾರ್ಟಿ ಬಂದಿತ್ತು. ಏನಿಲ್ಲವೆಂದರೂ ಒಂದು ನಲವತ್ತು ಐವತ್ತು ಸಾವಿರ ಗಿಟ್ಟುವ ವ್ಯವಹಾರ, ಮೂರು ವರ್ಷಗಳಿಂದ ಗೋಡೌನಿನಲ್ಲಿ ಕುಂಬಾಗುತ್ತಿದ್ದ ಎಲ್ಲ ಮರವನ್ನೂ ಹೇಳಿದ ಕ್ರಮಕ್ಕೆ ಕೊಳ್ಳುವ ಗಿರಾಕಿ. ಈ ಊರಲ್ಲೇ ನಾಲ್ಕು ತಿಂಗಳು ಇದ್ದು ಹೋಗುವ ಅರಬಿ. ಆದ್ದರಿಂದ ಏನಾದರೊಂದು ವ್ಯವಸ್ಥೆ ಆಗಬೇಕಿತ್ತು ಬಲೆ ಬೀಸಿಯೇ ಬಿಟ್ಟರು. +ಮುತ್ತುಚ್ಚೇರ ಯೂತ್ ತನ್ನ ನಾಲ್ಕನೆಯ ವಾರ್ಷಿಕೋತ್ಸವ ನಡೆಸಿತ್ತಷ್ಟೆ. ಆಗ ಸಂಘದ ಜತೆ-ಕಾರ್ಯದರ್ಶಿಯಾಗಿದ್ದವನು ಉಬೇದುಲ್ಲ. ಬಂದರಿನ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್. ಅಪ್ಪ-ಅಮ್ಮ ಇಬ್ಬರೂ ಬದುಕಿಲ್ಲ. ಇರುವ ಒಬ್ಬಳು ಅಕ್ಕನ ನಡತೆ ಅಷ್ಟಕ್ಕಷ್ಟೆ; ಮದುವೆಯಾದ ವಾರದಲ್ಲೇ ತಲಾಖ್ ಪಡೆದ ಹೆಣ್ಣು. ನಾಲ್ಕೈದು ವರ್ಷಗಳಿಂದ ದುಬೈ ಕೆಲಸದ ಬಗ್ಗೆ ಹಗಲು ಕನಸು ಕಾಣುತ್ತಿದ್ದ ಉಬೇದುಲ್ಲ ಬಹಳ ಸುಲಭವಾಗಿಯೇ ಕುಂಞಾಲಿ ಹಾಜಿಯವರ ಬಲೆಯಲ್ಲಿ ಸಿಕ್ಕಿಬಿದ್ದ. ಒಂದೇ ವಾರದೊಳಗೆ ಪಾಸ್‌ಪೋರ್ಟು-ವೀಸಾ ರೆಡಿಯಾಗಿಬಿಟ್ಟಿತು. ಯೂತ್‌ಲೀಗ್‌ನೊಳಗೆ ಗುಸುಗುಸು ಆರಂಭವಾಗುತ್ತಿದ್ದಂತೆಯೇ ಉಬೇದುಲ್ಲ ಯಾರಲ್ಲೂ ಹೇಳದೇ ಕೇಳದೇ ಹಡಗು ಹತ್ತಿಬಿಟ್ಟ. ಅವನ ಅಕ್ಕನೊಡನೆ ಕುಂಞಾಲಿ ಹಾಜಿಯವರ ಅರಬಿ ಅತಿಥಿ ‘ನಿಖಾ’ ಮಾಡಿಕೊಂಡ. ಯೂತ್‌ಲೀಗ್‌ನ ನೈತಿಕತೆಗೆ ಇದೊಂದು ದೊಡ್ಡ ಆಘಾತ. ವಾರದೊಳಗೆ ಯೂತ್‌ಲೀಗ್ ಎರಡು ಹೋಳಾಯಿತು. ಅರಬಿ ಮದುವೆಯ ವಿಧಿ-ವಿಧಾನಗಳನ್ನು ಅಲ್ಪಸ್ವಲ್ಪ ಸುಧಾರಿಸುವ ನಿಲುವನ್ನು ಒಂದು ಗುಂಪು ವಾದಿಸಿದರೆ, ಮತ್ತೊಂದು ಗುಂಪು ಈ ಪದ್ಧತಿಯನ್ನೇ ನಿಲ್ಲಿಸಿಬಿಡಲು ಪಟ್ಟು ಹಿಡಿಯಿತು. ಮುತ್ತುಚ್ಚೇರದ ಸಾಹುಕಾರರುಗಳೆಲ್ಲ ಮೊದಲ ಗುಂಪಿಗೆ ಬಹಿರಂಗವಾಗಿಯೇ ಬೆಂಬಲ ಸಾರಿದಾಗ ಒಂದೆರಡು ಹೊಡೆದಾಟವೂ ಆಯಿತು. ಪೋಲೀಸು-ಪಂಚಾಯಿತಿ ಎಲ್ಲ ನಡೆದ ಬಳಿಕ ಯೂತ್ ಲೀಗ್ ಕಚೇರಿಗೆ ಎರಡು ದೊಡ್ಡ ಬೀಗ ತೂಗಾಡಿತು. ಮುಂದೆ ನಾಲ್ಕು ವರ್ಷ ಇದ್ದೂ ಸತ್ತಂತಿದ್ದ ಈ ಸಂಘಟನೆ ಕಳೆದೆರಡು ವರ್ಷಗಳಿಂದ ಮತ್ತೆ ತಲೆಯೆತ್ತಲಾರಂಭಿಸಿದ್ದು ಕೋಯಾರವರ ಎದೆಯೊಳಗೆ ಚಳಿ ಕುಳ್ಳಿರಿಸಿತ್ತು. ಈ ಹುಡುಗರು ಹಿಂದಿನವರಂತೆ ದೊಣ್ಣೆ ಹಿಡಿದು ಓಡಾಡುತ್ತಿಲ್ಲವಾದರೂ, ಕೋಯಾರ ವ್ಯವಹಾರಗಳಾವುದೂ ರಾಜಾರೋಷವಾಗಿ ನಡೆಯುವುದು ಸಾಧ್ಯವಿರಲಿಲ್ಲ. ಎಲ್ಲವೂ ಗುಟ್ಟಿನಲ್ಲಿಯೇ ಗಪ್‌ಚುಪ್ ಎಂದೇ ಆಗಬೇಕು. ದಕ್ಷಿಣ ಜಮಾತಿನ ಖಾಜಿಯವರು ಇನ್ನೂ ಕೋಯಾರವರ ಧರ್ಮಕಾರ್ಯವನ್ನು ಬೆಂಬಲಿಸುತ್ತಿರುವುದೊಂದೇ ಕೋಯಾರವರಿಗೆ ಸಮಾಧಾನ ನೀಡಿದ ಸಂಗತಿ. ‘ನಿಖಾ’ ನಡೆಸಲು ಎಲ್ಲಿಗೆ ಬರಹೇಳಿದರೂ ಓಡಿ ಬಂದು ನಡೆಸಿಕೊಟ್ಟು ಹೋಗುತ್ತಿದ್ದರು. ಒಂದೈವತ್ತು ರೂಪಾಯಿ ಜಾಸ್ತಿಯೇ ಕೇಳಿದರೂ ಬೇರೆ ಯಾವ ರೀತಿಯ ರಗಳೆಯೂ ಇಲ್ಲ. ಮಹರ್ ಹಣ ಎಷ್ಟು ಎಂದೆಲ್ಲ ತಲೆ ಹರಟೆ ಮಾಡುವ ಜನ ಅಲ್ಲ. ಈ ಖಾಜಿಯವರು ಏನಾದರೂ ಆ ಹಲ್ಕಾ ಹರಾಮಿಗಳ ಎದುರು ಹೆದರಿ ಕುಳಿತಿದ್ದರೆ….ಅಬ್ಬಾ! ಕೋಯಾರವರಿಗೆ ಇದನ್ನು ಯೋಚಿಸುತ್ತಿರುವಾಗಲೇ ಭಯವಾಗುತ್ತದೆ. +ಈ ಬಾರಿಯೂ ಅವರು ಭಯಪತ್ಟಂತೆಯೇ ಆಗಿಬಿಟ್ಟಿತ್ತು. ರುಖಿಯಾಬಿಯ ಮನೆಗೆ ಕೋಯಾರವರು ಹೋಗಿಬರುತ್ತಿರುವ ಸುದ್ದಿ ತಿಳಿದ ಕಾರ್ಯದರ್ಶಿ ಖಾದರ್ ಮರುದಿನ ಸಂಜೆಯೇ ತುರ್ತು ಸಭೆ ಕರೆದುಬಿಟ್ಟ. ಏನೇ ಆದರೂ ಈ ಈ ಮದುವೆ ನಡೆಯದ ಹಾಗೆ ಮಾಡಬೇಕು ಎಂಬುದೇ ಸರ್ವಾನುಮತದ ತೀರ್ಮಾನವಾಗಿ ಹೋಯಿತು. “ಪೋಲೀಸರಿಗೆ ಕಂಪ್ಲೇಂಟು ಕೊಟ್ಟರೆ ಹ್ಯಾಗೆ?” ಎಂದು ಹೊಸ ಸದಸ್ಯನೊಬ್ಬ ಅತ್ಯುತ್ಸಾಹದಿಂದ ಹೇಳಿದಾಗ ಉಪಾಧ್ಯಕ್ಷ ಕಾಸಿಂ, “ಅದರಿಂದ ನಯಾಪೈಸೆ ಉಪಯೋಗವಿಲ್ಲ. ಅವರೇನು ಮಾಡಿಯಾರು ಇದರಲ್ಲಿ? ಧರ್ಮಸಮ್ಮತವಾಗಿಯೇ ‘ನಿಖಾ’ ನಡೆಯುತ್ತದೆ ಎಂದು ಎರಡೂ ಕಡೆಯವರು ಸ್ಟೇಟ್‌ಮೆಂಟ್ ಕೊಟ್ಟರೆ ಮುಗಿಯಿತು. ಈಗಿರುವ ‘ಲಾ’ದಲ್ಲಿ ಇದಕ್ಕೇನೂ ದಾರಿಯಿಲ್ಲ.” ಎಂದ. ಒಂದು ತಾಸಿನ ಚರ್ಚೆಯಾದ ಬಳಿಕ ಕಾರ್ಯದರ್ಶಿ ಕಾಸಿಂ ತೀರ್ಮಾನ ಹೇಳಿದ. “ನಮಗಿರುವುದು ಒಂದೇ ದಾರಿ, ನಾವೆಲ್ಲ ಒಟ್ಟು ಕೂಡಿ ಹೋಗಿ ರುಖಿಯಾಬಿಯನ್ನು ಕಂಡು ತಿಳಿವಳಿಕೆ ಹೇಳಬೇಕು. ಅಗತ್ಯಬಿದ್ದರೆ ಉಪವಾಸ ಮುಷ್ಕರವನ್ನೂ ಮಾಡಬೇಕಾದೀತು” ಸಭೆ ಬರ್ಖಾಸ್ತುಗೊಂಡು ಹೊರಬರುತ್ತಿದ್ದಂತೆ ದೊಡ್ಡ ಹೊಟ್ಟೆಯ ಆದಂ ಅಸಹನೆಯಿಂದ ಗೊಣಗಿದ್ದ. “ರುಖಿಯಾಬಿ ಒಪ್ಪದಿದ್ದರೆ ಕೋಯಾನ ಕಾಲು ಮುರಿದು ಹಾಕುವುದೊಂದೇ ಮಾರ್ಗ. ಉಪವಾಸ ಕೂರುವುದು ನನ್ನಿಂದ ಸಾಧ್ಯವಿಲ್ಲ. ರಂಜಾನ್‌ನಲ್ಲೂ ವ್ರತ ಹಿಡಿದ ಜನ ಅಲ್ಲ ನಾನು.” +ಕಾಸಿಂ ನಗುತ್ತಲೇ ಉತ್ತರಿಸಿದ್ದ. “ರಂಜಾನ್ ತಿಂಗಳ ವ್ರತಕ್ಕಿಂತ ಹೆಚ್ಚು ಪುಣ್ಯ ಈ ಉಪವಾಸದಲ್ಲಿ ಸಿಗುತ್ತದೆ.” +[೩] +ಬೀರಾನ್ ಕೋಯಾ ಬೆಳಿಗ್ಗೆಯೇ ಬಂದು ನೂರರ ಐದು ಹೊಸಾ ನೋಟುಗಳನ್ನು ಕೊಟ್ಟು ಹೇಳಿದ್ದರು. “ಈಗ ಇಷ್ಟು ತೆಗೆದುಕೋ. ಒಂದೆರಡು ಸೀರೆ ಲಂಗ ಅರ್ಜೆಂಟ್ ತೆಗೆದುಕೊಂಡಿಡು. ದುಡ್ಡು ಒಮ್ಮೆಲೇ ಕೊಟ್ಟರೆ ಖರ್ಚಾಗಿ ಹೋದೀತೆಂದು ಈಗ ಇಷ್ಟೇ ತಂದಿದ್ದೇನೆ. ನಾನಿರುವಾಗ ನೀನು ಹೆದರುವ ಅಗತ್ಯವಿಲ್ಲ. ನಿನ್ನ ಮಗಳು ನನ್ನ ಮಗಳು ಬೇರೆ ಅಲ್ಲ. ಒಟ್ಟಿನಲ್ಲಿ ಎಲ್ಲ ಸರಿಯಾಗಿ ಮುಗಿದು ಹೋದರೆ ಸಾಕು.” +ರುಖಿಯಾಬಿಯ ಆಲೋಚನಾ ಶಕ್ತಿಯೇ ಹುದುಗಿ ಹೋಗಿತ್ತು. ಕೋಯಾ ಕೊಟ್ಟ ಹಣವನ್ನು ಅಲ್ಲಿಯೇ ಗೋಡೆಯಲ್ಲಿದ್ದ ತೂಬಿನಲ್ಲಿರಿಸಿ ಹಸನ್ ಸಾಹೇಬರ ಮನೆಗೆ ಹೋಗಿದ್ದಳು. ದಿನವಿಡೀ ಕೆಲಸ; ಬೆನ್ನು ನೆಟ್ಟಗೆ ಮಾಡುವಷ್ಟು ಪುರುಸೊತ್ತು ಕೂಡಾ ಇಲ್ಲ. ಯಾರಲ್ಲೂ ಹೆಚ್ಚಿಗೆ ಮಾತಾಡದೆ ಸಂಜೆಯಾಗುತ್ತಲೇ ಮನೆಯತ್ತ ಕಾಲೆಳೆದಳು. ಈವತ್ತೇ ಪೇಟೆಗೆ ಹೋಗಿ ಸೀರೆ ತಂದರೆ ಹ್ಯಾಗೆ? ಎಂಬ ಯೋಚನೆ ಕ್ಷೀಣವಾಗಿ ಹುಟ್ಟಿಕೊಳ್ಳುತ್ತಿದ್ದಂತೆಯೇ ಸತ್ತುಹೋಗಿತ್ತು. ಯಾವುದೂ ಬೇಡವೆನಿಸಿ ಅನ್ಯಮನಸ್ಕಳಂತೆ ಹೆಜ್ಜೆ ಹಾಕುತ್ತಿದ್ದಳು. +ಮನೆಯೆದುರಿನ ಮರಳ ದಿನ್ನೆಯ ಮೇಲೆ ಯುವಕರ ಗುಂಪೊಂದು ಕುಳಿತಿರುವುದನ್ನು ದೂರದಿಮ್ದಲೇ ನೋಡಿದ ರುಖಿಯಾಬಿ ನವುರಾಗಿ ನಡುಗಿದಳು. ಯಾರಿರಬಹುದು? ಮಗಳಿಗೆ ಏನಾದರೂ ತೊಂದರೆಯಾಗಬಹುದೆ> ಎದೆ ನೂರು ದಾಟಿತು. ಅಕ್ಕಪಕ್ಕದ ಗುಡಿಸಲುಗಳ ಅಂಗಳಗಳಲ್ಲಿ, ಸೋಗೆ ಸಂದಿಗಳಲ್ಲಿ ಹತ್ತಾರು ಜೋಡಿಕಣ್ಣುಗಳು ಮುಂದೇನಾಗುವುದೋ ಎಂದು ಕಾತರಿಸುತ್ತಾ ರುಖಿಯಾಬಿಯನ್ನೇ ದಿಟ್ಟಿಸುತ್ತಿದ್ದವು. ಒಂದೊಂದೇ ನಡುಗುವ ಹೆಜ್ಜೆಗಳೊಂದಿಗೆ ಮನೆಗೆ ಹತ್ತಿರವಾಗುತ್ತಿದ್ದ ರುಖಿಯಾಬಿಯನ್ನು ಕಂಡ ಹುಡುಗರ ಗುಂಪು ನಿಧಾನವಾಗಿ ಎದ್ದು ನಿಂತಿತು. ಎಲ್ಲಾ ಹುಡುಗರ ಕಣ್ಣುಗಳೂ ತನ್ನತ್ತವೇ ಇರುವುದರಿಂದ ಮುಜಗರಗೊಂಡ ರುಖಿಯಾಬಿ ತಲೆ ತಗ್ಗಿಸಿದಳು. ಗುಂಪನ್ನು ಹಾದು ಇನ್ನೇನು ಮನೆಯಂಗಳಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ಒಬ್ಬ ಎದುರು ನಿಂತು, “ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕು” ಎಂದು ತಡೆದ. +ಗಾಬರಿಯಿಂದ ಕಲ್ಲುಕಟ್ಟಿದ ರುಖಿಯಾಬಿ ಕಣ್ಣು ಪಿಳಿಪಿಳಿ ಮಾಡಿದಳು.. ಯುವಕರೆಲ್ಲ ಹತ್ತಿರ ಬಂದು ರುಖಿಯಾಬಿಯ ಸುತ್ತ ನಿಂತರು. ‘ರುಖಿಯಾಬಿಯವರೇ,’ ಸ್ವಾಗತಭಾಷಣ ಮಾಡುತ್ತಿರುವವನಂತೆ, ಉಪಾಧ್ಯಾಕ್ಷ ಕಾಸಿಂ ಆರಂಭಿಸಿದ. “ನಿಮಗೆ ನಮ್ಮ ಮುತ್ತುಚ್ಚೇರ ಯೂತ್ ಲೀಗ್‌ನ್ ಬಗ್ಗೆ ಗೊತ್ತಿರಬಹುದು. ನಿಮ್ಮಂತಹ ಬಡ ಹೆಂಗಸರಿಗೆ ಸಹಾಯ ಮಾಡುವ ಆಸೆಯಿಂದ ನಾವೆಲ್ಲ ಇದರಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ಹೆಸರು ಕಾಸಿಂ. ನಾವೆಲ್ಲ ಇದೇ ಊರವರು. ನಮಗೂ ಅಕ್ಕ ತಂಗಿಯರಿದ್ದಾರೆ. ನಿಮ್ಮಂತಹ ತಾಯಂದಿರೂ ಇದ್ದಾರೆ. ಅದರೆ ನಮ್ಮ ಸಮಾಜ…..” +ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ಆದಂ “ಆ ಮುದುಕ ಕೋಯಾ ನಿಮ್ಮ ಮನೆಗೆ ಯಾವಾಗ ಬಂದದ್ದು?” ಎಂದು ಪ್ರಶ್ನಿಸಿದ. +“ನೀನು ಸುಮ್ಮನಿರು ಆದಂ” ಎಂದು ಆದಂನನ್ನು ಬದಿಗೆ ಸರಿಸಿದ ಕಾರ್ಯದರ್ಶಿ ಖಾದರ್ ರುಖಿಯಾಬಿಯತ್ತ ತಿರುಗಿ ವಿನಯದಿಂದಲೇ ಹೇಳಿದ “ನೋಡಿಯಮ್ಮ ಈ ಅರಬಿಗಳನ್ನು ಮದುವೆಯಾಗಿ ಈ ಊರಿನ ಯಾವ ಹೆಣ್ಣೂ ಉದ್ಧಾರವಾಗಿದಿಲ್ಲ, ಎರಡು ಮೂರು ತಿಂಗಳನ್ನು ಹಣ್ಣು ತಿಂದು ಗೊರಟು ಬಿಸಾಡಿ ಹೋಗಿಬಿಡುತ್ತಾರೆ. ನಾಲ್ಕು ದಿನದ ಖರ್ಚಿಗೆ ಅವರು ಹಣ ಕೊಡಬಹುದು. ಆದರೆ ನಿಮ್ಮ ಮಗಳು ನಂತರ ಏನು ಮಾಡಬೇಕು? ನೀವೇ ಯೋಚಿಸಿ. ನಿಮಗೆ ಕಷ್ಟ ಹೌದು ಆದರೇ ನಿಮ್ಮ ಮಗಳ ಒಳ್ಳೇದಕ್ಕೇ ನಾವು ಹೇಳ್ತೇವೆ……..” +“ಆ ದಲ್ಲಾಲಿ ಈವತ್ತು ಬಂದಿದ್ನಾ?” ಆದಂ ದೊಡ್ಡ ಸ್ವರದಲ್ಲಿ ಪ್ರಶ್ನಿಸಿದ. ಯಾರೋ ಮತ್ತೊಬ್ಬ ಅವನನ್ನು ಹಿಂದಕ್ಕೆ ಎಳೆದುಕೊಂಡ ” ಆ ದಲ್ಲಾಲಿಯ ಕಾಲು ಮುರಿದು ಹಾಕದಿದ್ರೆ ನಾನು ಅಪ್ಪನಿಗೆ ಹುಟ್ಟಿದವನಲ್ಲ…… ಹಾಂ” ಎನ್ನುತ್ತಲೇ ಆದಂ ಹಿಂದಕ್ಕೆ ಸರಿದು ಮರಳ ಮೇಲೆ ಕುಕ್ಕರಗಾಲಲ್ಲಿ ಕುಳಿತು ಮಣ ಮಣ ಮಾಡತೊಡಗಿದ. +ಯೂತ್ ಲಿಗ್‌ನ ಎಲ್ಲ ಸದಸ್ಯರೂ ಕೆಲವೊಮ್ಮೆ ಸರದಿಯಂತೆ ಕೆಲವೊಮ್ಮೆ ಒಟ್ಟಾಗಿ ಮಾತಾಡಿದರೂ. ಯಾವುದಕ್ಕೂ ಎದುರು ಹೇಳದ ರುಖಿಯಾಬಿ ಎಲ್ಲರ ಮಾತನ್ನೂ ಸರಿಯಾಗಿ ಕೇಳಿಸಿಕೊಂಡಳು. ಎದುರು ವಾದಿಸಬೇಕಾದ ಮಾತುಗಳನ್ನೇನೂ ಹುಡುಗರು ಹೇಳಿರಲಿಲ್ಲ. ಎಲ್ಲರದೂ ಒಂದೇ ಸಲಹೇ ” ಈ ಅರಬಿ ಮದುವೆಗೆ ಒಪ್ಪಬೇಡ. ಬೀರಾನ್ ಕೋಯಾ ನಂಬಿಗಸ್ತರಲ್ಲ,” +ಎಲ್ಲರ ಮಾತೂ ಮುಗಿದಮೇಲೆ ರುಖಿಯಾಬಿ ತಿರ್ಮಾನ ಹೇಳುವವಳಂತೆ ಪ್ರಶ್ನಿಸಿದಳು “ಹಾಗಾದರೆ ನಾಳೆ ಕೋಯಾರವರು ಬಂದಾಗ ಈ ಸಂಬಂಧ ಬೇಡ ಎಂದು ಹೇಳಬೇಕಾ?” +” ಹೌದು…. ಹೌದು….” ಎಲ್ಲರೂ ಒಕ್ಕೊರೊಲಲ್ಲಿ ಹೇಳಿದರು. +“ಬೆಳಿಗ್ಗೆ ಅವರು ಹಣ ತಂದುಕೊಟ್ಟಿದ್ದಾರೆ ಅದನ್ನೇನು ಮಾಡಲಿ?” +“ವಾಪಸ್ಸು ಕೊಟ್ಟುಬಿಡಿ” ಎಂದ ಖಾಸಿಂ ತಕ್ಷಣ. +” ಸರಿಯಪ್ಪಾ ಮಕ್ಕಳೆ, ನೀವು ಹೇಳಿದ ಹಾಗೆ ಮಾಡ್ತೇನೆ. ಆಮೇಲೆ?” +” ಏನು ಆಮೇಲೆ?” ಆದಂ ಮತ್ತೆ ಗುಂಪಿನ ಎದುರು ಬಂದು ನಿಂತಿದ್ದ. +“ನನ್ನ ಮಗಳಿಗೆ ಮದುವೆಯಾಗಬೇಕಲ್ಲ?” +“ಯಾರು ಬೇಡ ಅಂದದ್ದು. ಮಾಡಲೇ ಬೇಕಾದದ್ದು ಯಾರು ಅಡ್ಡ ಬರ್‍ತಾರೆ ನಾನು ನೋಡಿಕೊಳ್ಳುತ್ತೇನೆ.” ಆದಂ ತೋಳೇರಿಸಿ ಸುತ್ತಲೂ ಕಣ್ಣು ಹಾಯಿಸಿದ. ಉಪಾಧ್ಯಕ್ಷ ಖಾಸಿಂ ಸಮಾಧಾನದಿಂದಲೇ ಭರವಸೆ ನೀಡಿದ, “ನೀವೇನೂ ಆ ವಿಷಯದಲ್ಲಿ ಯೋಚನೆ ಮಾಡುವುದು ಬೇಡ. ನಮ್ಮ ನಮ್ಮ ಸಂಘಟನೆಯಿಂದಲೇ ನಾವು ಮದುವೆ ನಡೆಸಿಕೊಡ್ತೇವೆ. ಹಣದ ಜವಾಬ್ದಾರಿ ನಮಗೆ ಬಿಟ್ಟುಬಿಡಿ.” +ವಿಷಾದದ ನಗು ನಕ್ಕು ರುಖಿಯಾಬಿ, ಉತ್ಸಾಹದಿಂದ ಮಾತು ಹರಿಸುತ್ತಿದ್ದ ಹುಡುಗರನ್ನೆಲ್ಲ ಅನುಕಂಪದಿಂದೆಂಬಂತೆ ನೋಡಿದಳು. ಅಕ್ಕ ಪಕ್ಕದ ಮನೆ ಮಂದಿಗಳೆಲ್ಲ ತನ್ನನ್ನೇ ಗಮನಿಸುತ್ತಿದ್ದಾರೆಂಬುದು ಅರಿವಾಗೆ ಮುಜುಗರವಾಯಿತು. ನಿರ್ಧಾರದ ಧ್ವನಿಯಲ್ಲಿ ಬಹಳ ಸ್ಪಷ್ಟವಾಗಿ ಹೇಳ ತೊಡಗಿದಳು. ನೋಡಿ ಮಕ್ಕಳೆ ನನಗೆ ಒಬ್ಬ ಮಗ ಇರುತ್ತಿದ್ದರೆ ಖಂಡಿತವಾಗಿಯೂ ನಿಮ್ಮೊಟ್ಟಿಗೆ ಕಳಿಸಿಕೊಡ್ತಿದ್ದೆ. ನೀವು ಮಾಡುತ್ತಿರುವ ಕೆಲಸ ಅಲ್ಲಾಹೂ ಮೆಚ್ಚುವಂಥದ್ದು. ಆದರೆ ನನಗಿರುವುದು ಮಗನಲ್ಲ, ಮಗಳು. ಅವಳಿಗೆ ಮದುವೆ ಮಾಡಲೇ ಬೇಕು. ಹಣವನ್ನು ಹ್ಯಾಗಾದರೂ ಜೋಡಿಸಿಕೊಂಡೇನು. ಸ್ವಲ್ಪ ಬಂಗಾರ ನನ್ನದೇ ಇದೆ. ನನಗೆ ಈಗ ಬೇಕಾಗಿರುವುದು ನನ್ನ ಮಗಳನ್ನು ‘ನಿಖ ಮಾಡಿಕೊಳ್ಳುವ ಒಬ್ಬ ಹುಡುಗ. ಈಗ ನೀವೇ ಹೇಳಿಬಿಡಿ, ನಿಮ್ಮಲ್ಲೇ ಯಾರಾದರೊಬ್ಬರು ನನ್ನ ಮಗಳಿಗೆ ಜೀವನ ಕೊಡುವುದಾದರೆ ಈಗಲೇ ಕೋಯಾರ ಮುಖಕ್ಕೆ ಹಣ ಬಿಸಾಡಿ ಬರ್‍ತೇನೆ. ಹೇಳಿ, ನಿಮ್ಮಲ್ಲಿ ಯಾರು ತಯಾರಿದ್ದೀರಿ?” +ಮುತ್ತುಚ್ಚೇರ ಯೂತ್ ಲೀಗ್‌ನ ಬಾಯಿ ಕಟ್ಟಿ ಹೋಗಿತ್ತು. ರುಖಿಯಾಬಿಯ ಪ್ರಶ್ನೆ ತೀರಾ ಅನಿರಿಕ್ಷಿತ. ಸಂಘಟನೆಯ ಆದರ್ಶದ ಕಲ್ಪನೆಯೆಲ್ಲ ಅವಳ ಒಂದು ಪ್ರಶ್ನೆಯ ಎದುರು ನುಚ್ಚುನೂರಾಗಿದ್ದವು. ಮುಖ ಮುಖ ನೋಡಿಕೊಂದ ಯುವಕರು ತಲೆ ತಗ್ಗಿಸಿ ಗುಸುಗುಸು ಮಾತನಾಡಲು ಯತ್ನಿಸಿ ನಾಚಿಕೆಯಿಂದ ಸುಮ್ಮನಾದರು. +ಸೆರಗಿನ ತುದಿಯಿಂದ ಕಣ್ಣೊರೆಸಿಕೊಳ್ಳುತ್ತ ರುಖಿಯಾಬಿ ಹೇಳಿದಳು, “ನನಗೆ ಗೊತ್ತಿತ್ತು ಮಕ್ಕಳೇ, ನೀವ್ಯಾರೂ ಇದಕ್ಕೆ ತಯಾರಾಗಲಿಕ್ಕಿಲ್ಲ ಎಂದು. ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಹತ್ತು ಹದಿನೈದು ಸಾವಿರ ಕೊಟ್ಟು ನಿಮ್ಮನ್ನು ಕೊಂಡುಕೊಳ್ಳುವ ಸಾಹುಕಾರರು ಈ ಊರಲ್ಲಿ ಸಾವಿರ ಇದ್ದಾರು. ನನಗೆ ಅದೆಲ್ಲ ಹ್ಯಾಗೆ ಸಾಧ್ಯ? ನನ್ನ ಮಗಳ ಹಣೆಯಲ್ಲಿ ಹೀಗೆಯೇ ಆಗಬೇಕೆಂದು ಬರೆದಿದ್ದರೆ ನೀವೇನು ಮಾಡಬಲ್ಲಿರಿ?” +ಗುಂಪಿನ ನಡುವೆಯೇ ದಾರಿ ಬಿಡಿಸಿಕೊಂಡು ನಡೆದ ರುಖಿಯಾಬಿ ಮನೆಯೊಳಗೆ ಸೇರಿಕೊಂಡು ಬಾಗಿಲಿಕ್ಕಿಕೊಂಡಳು. +ಮೆದು ಮರಳ ನಡುವೆ ಹೂತು ಹೋದ ಕಾಲುಗಳನ್ನು ಪ್ರಯಾಸದಿಂದ ಎಳೆದೆಳೆದು ಹೆಜ್ಜೆ ಹಾಕಿದ ಮುತ್ತುಚ್ಚೇರ ಯೂತ್ ಲೀಗ್‌ನ್ ಸದಸ್ಯರುಗಳು ಬೀಚ್ ರೋಡಿನ ಕಪ್ಪು ಟಾರು ರಸ್ತೆಯಲ್ಲಿ ತಲೆ ತಗ್ಗಿಸಿ ನಡೆದರು. ಒಂದು ವೇಳೆ ಬೀರಾನ್ ಕೋಯಾ ದಾರಿಯಲ್ಲಿ ಎದುರಾಗಿರುತ್ತಿದ್ದರೆ ಈ ಯುವಕರು ಅವರನ್ನು ಹರಿದು ಚಿಂದಿ ಮಾಡಿಬಿಡುತ್ತಿದ್ದರೇನೋ. +ಆದರೆ ಬೀರಾನ್ ಕೋಯಾ ಸುಮ್ಮನೆ ಕುಳಿತುಕೊಂಡಿರಲಿಲ್ಲ ರುಖಿಯಾಬಿಯ ಮನೆಗೆ ಹಲ್ಕಾ ಹರಾಮಿಗಳು ಹೊರಟಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣದಲ್ಲೇ ಹಸನ್ ಸಾಹೇಬರ ಮರದ ಮಿಲ್ಲಿಗೆ ಧಾವಿಸಿದ್ದರು. +ಬೀರಾನ್ ಕೋಯಾರವರಿಗೆ ಸಹಾಯ ಮಾಡುವುದೆಂದರೆ ಅದು ತಮಗೇ ಸಹಾಯ ಮಾಡಿಕೊಂಡಂತೆ ಎಂಬುದನ್ನು ಅನುಭವದಿಂದ ಕಲಿತಿರುವ ಹಸನ್ ಸಾಹೇಬರು, ಕೋಯಾರವರನ್ನು ಸಮಾಧಾನಪಡಿಸುತ್ತಾ, “ನೀವು ಒಂದು ಕೂದಲಿನಷ್ಟೂ ಹೆದರುವುದು ಬೇಡ ಕೋಯಾ. ಎಲ್ಲ ನಾನು ಸರಿ ಮಾಡಿಬಿಡ್ತೇನೆ. ರುಖಿಯಾ ನನ್ನ ಮನೆಯ ಕೆಲಸದ ಹೆಂಗ್ಸು ಅಂತ ಅದ್ಮೇಲೆ ನೀವ್ಯಾಕೆ ತಲೆಬಿಸಿ ಮಾಡುವುದು? ನಿಮ್ಮ ಕೆಲಸ ನೀವು ನಡೆಸಿ” ಎಂದರು. ಸಮಾಧಾನದ ಉಸಿರುಬಿಟ್ಟ ಕೋಯಾ ಮೆಟ್ಟಿಲಿಳಿಯುತ್ತಿದ್ದಂತೆ ಸಾಹೇಬರು ಕುಳಿತಲ್ಲಿಂದಲೇ ಹೇಳಿದರು, “ನಿಮಗೆ ಆ ಉಮರಬ್ಬನ ಪರಿಚಯ ಇರಬೇಕಲ್ಲಾ? ರುಳಿಯಾಳನ್ನು ಆವತ್ತು ನನ್ನ ಮನೆಗೆ ಮೊದಲು ಕರಕೊಂಡು ಬಂದವನು ಅವನು. ಅವಳಿಗೆ ಏನೋ ದೂರದಲ್ಲಿ ಅಣ್ಣ ಅಗ್ಬೇಕೂಂತ ಕಾಣ್ತದೆ. ಅವನನ್ನೂ ‘ನಿಖಾ’ ದ ಸಮಯದಲ್ಲಿ ಬರಲಿಕ್ಕೆ ಹೇಳಿ. ನಾವು ನಾವೇ ಕೂಡಿಕೊಂಡು ಮಾಡಿದೆವು ಅಂತ ಅಪವಾದ ಬರಬಾರ್‍ದು ನೋಡಿ.” +ಬೀರಾನ್ ಕೋಯಾ ತಲೆಯಾಡಿಸುತ್ತಾ ಹೊರಟರು. +[೪] +ಮರುದಿನ ಕೆಲಸಕ್ಕೆಂದು ಸಾಹೇಬರ ಮನೆಗೆ ಹೋಗಿದ್ದ ಅಮ್ಮ, ಸೂರ್ಯ ನಡುನೆತ್ತಿಗೆ ಬರುವ ಮೊದಲೇ ಮರಳಿ ಬಂದದನ್ನು ಕಂಡ ಉನ್ನೀಸಾ ಅಚ್ಚರಿಪಡುತ್ತಿದ್ದಂತೆಯೇ, ಮನೆಯೊಳಗೆ ನುಸುಳುತ್ತಲೇ ಕುಸಿದುಬಿದ್ದು ನೆಲಕ್ಕೆ ಹಣೆ ಜಜ್ಜುತ್ತಾ ಅಳುವುದನ್ನು ಕಂಡು ಹೆದರಿಬಿಟ್ಟಳು. ಸಾಹೇಬರ ಮನೆಯಲ್ಲಿ ಏನಾದರೂ ಗಲಾಟೆಯಾಗಿರಬಹುದೇ ಎಂಬ ಅನುಮಾನವೂ ಹುಟ್ಟಿತು. ಹಿಂದಿನ ದಿನ ಸಂಜೆಗೆ ಮನೆಯೆದುರು ಗುಂಪುಗತ್ಟಿದ್ದ ಹುಡುಗರನ್ನು ಒಂದೇ ಪ್ರಶ್ನೆಯಿಂದ ಬಾಯಿ ಮುಚ್ಚಿಸಿದ್ದ ಅಮ್ಮ ಇಂದು ಇಷ್ಟು ಅಳಬೇಕಾದರೆ ಏನಾದರೊಂದು ಅನಾಹುತವಾಗಿರಲೇಬೇಕೆಂದು ತರ್ಕಿಸಿದಳು. ಈ ಎಲ್ಲ ಹಗರಣಗಳಿಗೂ ತಾನೊಬ್ಬಲೇ ಕಾರಣ ಎಂಬ ಅರಿವು ಬಹಳ ಹಿಂಸೆ ಮಾಡಿತು. +ರುಖಿಯಾಬಿ ಒಂದೇ ಸಮನೆ ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಹಿಂದಿನ ಸಂಜೆ ಹುಡುಗರನ್ನು ಹಿಂದಕ್ಕೆ ಕಳುಹಿಸಿದ ಬಳಿಕ ರುಖಿಯಾಬಿ ಹುಚ್ಚು ಹಿಡಿದವಳಮ್ತೆ ಕೂತುಬಿಟ್ಟಿದ್ದಳು. ಮಗಳ ಒತ್ತಾಯಕ್ಕೆ ಊಟ ಮಾಡಿದಂತೆ ನಟಿಸಿದಳಷ್ಟೆ. ಹುಡುಗರ ಮಾತಿನಂತೆ ಅರಬಿ ಮದುವೆಯನ್ನು ನಿರಾಕರಿಸಿದರೆ ಏನಾದೀತು? ಹುಡುಗರು ಬೆನ್ನ ಹಿಂದೆ ಇದ್ದಾರೆಂದ ಮೇಲೆ ಕೋಯಾರವರಿಗೆ ಹೆದರುವ ಅಗತ್ಯವೇನೂ ಇಲ್ಲ. ಆದರೆ ಉನ್ನೀಸಳಿಗೆ ಮದುವೆಯಾಗುವುದು ಯಾವಾಗ? ಮನೆಯೆದುರು ಗುಂಪು ಕಟ್ಟಿ ನಿಂತ ಹುಡುಗರಾರೂ ಮದುವೆಯಾಗಲಾರರು, ಈ ಬಗ್ಗೆ ಆಸೆಯೂ ಇಲ್ಲ. ಹಾಗದರೆ ಮಗಳ ಮದುವೆ? ಬೀರಾನ್ ಕೋಯಾರ ಮಾತುಗಳನ್ನೇನೂ ನಂಬುವ ಹಾಗಿಲ್ಲ. ಆದರೂ ಆ ಅರಬಿ ನಿಜವಾಗಿಯೂ ಒಳ್ಳೆಯವರೇ ಆಗಿದ್ದರೆ? ಕರೆದುಕೊಂಡು ಹೋಗಲೂ ಸಾಕು. ಅರಬಿಯೊಂದಿಗೆ ಮದುವೆಯಾಗಿ ಸುಖವಾಗಿ ಹೋದ ಹುಡುಗಿಯರೂ ಇಲ್ಲದಿಲ್ಲ. ಮಗಳಿಗೆ ಈ ಅರಬಿ ಮದುವೆಯಿಂದ ಸುಖವಿದೆಯೆಂದು ಅಲ್ಲಾಹು ಬರೆದಿದ್ದರೆ ಅಡ್ಡಿ ಮಾಡುವುದ್ಯಾಕೆ? ಆದದ್ದು ಆಗಿ ಹೋಗಲಿ. ದೊಡ್ಡ ಜಮಾತಿನ ‘ಇಮಾ’ಗೆ ಕೂಡಾ ಗೊತ್ತುಂಟಂತೆ. ಅವರೇ ನಿಂತು ‘ನಿಖಾ’ ನಡೆಸಿಯಾರೆ? ಛೆ! ಇರಲಾರದು. ಅವರು ಇಂಥದ್ದಕ್ಕೆಲ್ಲ ಬರುವ ವ್ಯಕ್ತಿಯಲ್ಲ. ಹಾಗಾದರೆ ಬೀರಾನ್ ಕೋಯಾ ಮೋಸ ಮಾಡಿಬಿಟ್ಟರೆ?….. ರಾತ್ರಿಯಿಡೀ ನಿದ್ರೆಯಿಲ್ಲದೆ ಹೊರಳಾಡಿದ್ದಳು. ಒಪ್ಪುವುದೇ ಬಿಡುವುದೇ? ಎಂಬ ಗೊಂದಲದಲ್ಲಿ ಹಣ್ಣಾಗಿದ್ದಳು. +ಬೆಳಿಗ್ಗೆ ಎಂದಿನಂತೆ ಹಸನ್ ಸಾಹೇಬರ ಮನೆಗೆ ಹೋದವಳಿಗೆ ದೊಡ್ಡ ಅಚ್ಚರಿಯೇ ಕಾದು ಕುಳಿತಿತ್ತು. ಏಳೆಂಟು ವರ್ಷಗಳಿಂದೀಚೆಗೆ ಸಾಹುಕಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಒಮ್ಮೆಯಾದರೂ ಸಾಹುಕಾರರು ಕರೆದು ಮಾತನಾಡಿಸಿದವರಲ್ಲ. ಅವರ ಎದುರು ನಿಂತು ತಲೆಯೆತ್ತಿ ನೋಡಿದವಳೂ ಅಲ್ಲ. +ಇಂದು ಬಾಗಿಲಲ್ಲೇ ತಡೆದು ನಿಲ್ಲಿಸಿ ಮಾತನಾಡಿಸಿದಾಗ ಸಂಕೊಚದಿಂದ ಮುದುಡಿದ್ದಲು. ಸಾಹೇಬರ ಮಾತು ಕೂಡಾ ಬೆಣ್ಣೆಯಿಂದ ಕೂದಲು ಎಳೆದಂತೆ. ಎದುರು ವಾದಿಸಲಾಗದೆ ಕರುವಿನಂತೆ ತಲೆ ತಗ್ಗಿಸಿ ಆಲಿಸಿದ್ದಲು. ಎಲ್ಲವನ್ನೂ ಹೇಳಿದ ಸಾಹೇಬರು ಕೊನೆಯಲ್ಲಿ ತೀರ್ಮಾನವನ್ನೂ ಹೇಳಿಬಿಟ್ಟಿದ್ದರು. “ನೀನೇನೂ ಹೆದರುವುದು ಬೇಡ. ನನ್ನ ನಂಬಿಕೆ ಉಂಟಲ್ಲಾ ನಿನಗೆ? ನಾಳೆ ಬೆಳಿಗ್ಗೆಯೇ ನನ್ನ ಮನೆಯಲ್ಲಿ ‘ನಿಖಾ’ ಏರ್ಪಾಡು ಆಗಿದೆ. ಆ ಪೋಲೀ ಹುಡುಗರ ಮಾತು ಕೇಳಿಕೊಂಡು ಕೂತರೆ ನಾಳೆ ಊಟಕ್ಕೆ ಏನು ಮಾಡ್ತಿ? ಆ ಹುಡುಗರು ನಿನಗೆ ಅನ್ನ ಹಾಕ್ತಾರಾ? ನಿನಗೆ ಈ ಊರಲ್ಲಿ ನಾನಲ್ಲದೆ ಬೇರೆ ಯಾರಿದ್ದಾರೆ? ಪಾಸ್ ಪೋರ್ಟ್ ಮಾಡಿ ನಿನ್ನ ಮಗಳನ್ನು ಕಡಲು ದಾಟಿಸುವ ಜವಾಬ್ದಾರಿ ನನ್ನದು; ಆಯ್ತಲ್ಲಾ? ಕೋಯಾರವರಿಗೆ ನಾನು ಹೇಳಿದ್ದೇನೆ. ಎರಡು ಸಾವಿರ ಕ್ಯಾಷ್ ಕೊಟ್ಟುಬಿಡಿ ಎಂದು…. ಈವತ್ತು ನೀನು ಕೆಲಸ ಮಾಡುವುದು ಬೇಡ. ಈಗ ಮನೆಗೆ ಹೋಗು.” +ಸಾಹೇಬರ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬಿಕ್ಕಳಿಸತೊಡಗಿದಳು. ಗಲಿಬಿಲಿಗೊಂಡ ಉನ್ನೀಸಾ ನಿಧಾನವಾಗಿ ಅಮ್ಮನ ಬಳಿ ನಡೆದು ಕುಕ್ಕರಗಾಲಲ್ಲಿ ಕುಳಿತು ರಟ್ಟೆ ಹಿಡಿದು ಎಬ್ಬಿಸಲು ಯತ್ನಿಸಿದಳು. +ದಿಗ್ಗನೆ ಎದ್ದು ಕುಳಿತ ರುಖಿಯಾಬಿ ಮಗಳ ಮುಂದೆಲೆ ಹಿಡಿದು ಹಿಂದೆ ಮುಂದೆ ಜಗ್ಗಾಡುತ್ತಾ “ಇದೆಲ್ಲವೂ ನಿನ್ನಿಂದ, ನೀನು ಹುಟ್ಟುವಾಗಲೇ ಸತ್ತುಹೋಗಿದ್ದರೆ ಚೆನ್ನಾಗಿತ್ತು” ಎಂದು ಸೋಗೆಯಸೂರು ಹಾರಿಹೋಗುವಂತೆ ಅಬ್ಬರಿಸಿ ಹಿಂದಕ್ಕೆ ಬಲವಾಗಿ ದಬ್ಬಿದಳು. ಅಮ್ಮನ ಅನಿರೀಕ್ಷಿತ ಆಕ್ರಮಣದಿಂದ ತತ್ತರಿಸಿದ ಉನ್ನೀಸಾ ಅಂಗಾತ ಬಿದ್ದುಬಿಟ್ಟಳು. ಮಣ್ಣಿನ ನೆಲ ತಲೆಗೆ ಜೋರಾಗಿಯೇ ಬಡಿದದ್ದರಿಂದ ಕಣ್ಣು ಕತ್ತಲೆ ಬಂದಂತಾಗಿ ಹಾಗೆಯೇ ಎಡಕ್ಕೆ ವಾಲಿ ಮಲಗಿಕೊಂಡಳು. ಮಗಳು ಬಿದ್ದಲ್ಲಿಂದ ಏಳದಿರುವುದನ್ನು ಗಮನಿಸಿದ ರುಖಿಯಾಬಿ ಗಬಕ್ಕನೆ ಅವಳನ್ನು ಎತ್ತಿ ಎದೆಗವಚಿಕೊಂಡು ಇಡೂ ಮುತ್ತುಚ್ಚೇರವೇ ಬೆಚ್ಚಿಬೀಳುವಂತೆ ರೋದಿಸತೊಡಗಿದಳು. +ಅಕ್ಕಪಕ್ಕದ ಗುಡಿಸಲ ಹೆಂಗಸರು ಒಬ್ಬೊಬ್ಬರಾಗಿ ಒಳಗೆ ತೂರಿಕೊಂಡರು. ತಲೆಗೊಂದರಂತೆ ಸಮಾಧಾನದ ಮಾತು ಹೇಳತೊಡಗಿದರು. ತಮ್ಮತಮ್ಮ ಅನುಭವದಲ್ಲಿ ಕಂಡಂತೆ ಅರಬಿ ಕಲ್ಯಾಣಗಳ ಒಳಿತು ಕೆಡಕುಗಳ ಬಗ್ಗೆ ಚರ್ಚೆ ನಡೆಸಿದರು. ರುಖಿಯಾಬಿ ಮಾತ್ರ ಯಾರೊಂದಿಗೂ ಮುಖಕೊಟ್ಟು ಮಾತನಾಡಲಿಲ್ಲ. ನೂರು ಪ್ರಶ್ನೆಗಳಲ್ಲಿ ಒಂದಕ್ಕೆ ‘ಹೂಂ’ ಮತ್ತೊಂದಕ್ಕೆ ‘ಉಹೂಂ’ ಎನ್ನುವುದರಲ್ಲೇ ಕಾಲಕಳೆದಳು. +ಇಡೀ ದಿನ ಮನೆಯಲ್ಲಿ ಒಲೆ ಉರಿಯಲಿಲ್ಲ. ಮರುದಿನ ಬೆಳಿಗ್ಗೆ ಉನ್ನೀಸಳನ್ನು ಗುಡಿಸಲ ಒಳಗೆ ಕೂಡಿಹಾಕಿ ಮುಂಬಾಗಿಲಿಗೆ ಬೀಗ ಜಡಿದು ಹಸನ್ ಸಾಹೇಬರ ಮನೆಯತ್ತ ದಾಪುಗಾಲು ಹಾಕಿದ್ದಳು. +ಸೂರ್ಯ ಮೇಲೇರಿ ಬರುತ್ತಿದ್ದಂತೆ ಹಸನ್ ಸಾಹೇಬರ ಬಂಗಲೆಯೆದುರು ಕಪ್ಪು ಕಾರೊಂದು ಬಮ್ದು ನಿಂತಿತು. ಜಗಲಿ ಹಾರಿ ಬಂದ ಬೀರಾನ್ ಕೋಯಾ ಕಾರಿನ ಹಿಂಭಾಗದ ಬಾಗಿಲು ತೆರೆದು ಶೇಕ್ ಮರ್ಸೂಕ್ ಮುಸ್ತಾಫಾರನ್ನು ಲಗುಬಗೆಯಿಂದ ಇಳಿಸಿಕೊಂಡರು. ಅತ್ತರಿನ ಸುವಾಸನೆ ಚಾವಡಿಯನ್ನು ಮುಟ್ಟಿತು. ಗಂಭೀರವಾಗಿ ಹೆಜ್ಜೆ ಬದಲಿಸುತ್ತಾ ಬಂದ ಎತ್ತರ್ದ ಅರಬಿಯನ್ನು ಮೆಟ್ಟಲ ಬಳಿ ಸ್ವತಃ ಹಸನ್ ಸಾಹೇಬರೇ ಕೈಹಿಡಿದು ಸ್ವಾಗತಿಸಿದರು. ಚಾವಡಿಯಲ್ಲಿ ಅದಾಗಲೇ ನಾಲ್ಕೈದು ದೊಡ್ಡ ಮುಂಡಾಸಿನವರು ಕುಳಿತಿದ್ದರು. ರುಖಿಯಾಬಿಯ ದೂರದ ಅಣ್ಣ ಉಮರಬ್ಬ ಹೊಸ ಮುಂಡ ತಲೆಗೊಂದು ರುಮಾಲು ಸುತ್ತಿ ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಶಿಸ್ತಾಗಿ ಕುಳಿತಿದ್ದ. ಒಳಬಾಗಿಲ ಹಸಿರು ಪರದೆಯ ಎಡೆಯಿಂದ ಬಳೆಗಳ ಕಣಕಣ ಆಗೊಮ್ಮೆ-ಈಗೊಮ್ಮೆ ತಪ್ಪಿಸಿಕೊಂಡು ಚಾವಡಿಗೆ ನುಗ್ಗುತ್ತಿತ್ತು. ಮೆತ್ತನೆಯ ಸೋಫಾದಲ್ಲಿ ಇಡಿಯಾಗಿ ತುಂಬಿಕೊಂಡಿದ್ದ ಮುಸ್ತಫಾರವರು ಹರಕು-ಮುರುಕು ಹಿಂದುಸ್ಥಾನಿಯಲ್ಲಿ ಸಾಹೇಬರೊಂದಿಗೆ ಮಾತು ಬದಲಿಸುವ ಪ್ರಯತ್ನ ನಡೆಸಿದ್ದರು. ಬೀರಾನ್ ಕೋಯಾ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕುಳ್ಳಿರದೆ ಗಳಿಗೆಗೊಮ್ಮೆ ವಾಚು ನೋಡಿಕೊಳ್ಳುತ್ತಾ ಶತಪಥ ನಡೆದಾಡುತ್ತಿದ್ದರು. ಕ್ಷಣಕ್ಷಣಕ್ಕೂ ಕಾತರದಿಂದ ರಸ್ತೆ ದಿಟ್ಟಿಸುತ್ತಿದ್ದರು. ಒಮ್ಮೆ ‘ನಿಖಾ’ದ ಕಾರ್ಯಕ್ರಮ ಮುಗಿದುಹೋದರೆ ಸಾಕೆನ್ನಿಸುತ್ತಿತ್ತು. ಹಲ್ಕಾ ಹರಾಮಿ ಹುಡುಗರದ್ದು ಯಾವ ಕ್ಷಣದಲ್ಲೂ ನಂಬುವಂತಿರಲಿಲ್ಲ. ಗುಂಪುಕಟ್ಟಿಕೊಂಡು ಇಲ್ಲಿಗೇ ಬಂದರೂ ಅಚ್ಚರಿಪಡಬೇಕಾಗಿಲ್ಲ. ರಾತ್ರಿಯಿಡೀ ಭಯದಿಂದ ನಿದ್ರೆ ಹಾಳುಮಾಡಿಕೊಂಡಿದ್ದರು. ಹಿತ್ತಲಲ್ಲಿ ಪರಪರ ಸದ್ದಾದಾಗಲೆಲ್ಲ ಹುಡುಗರು ಬಂದರೆಂದೇ ಬೆಚ್ಚಿ ಬೀಳುತ್ತಿದ್ದರು. ಏನಾದರೂ ಹೆದರಿ ಸುಮ್ಮನಿರುವಂತಿಲ್ಲ; ಮಗಳು ಹಲೀಮಳಿಗೆ ಮದುವೆಯಾಗಬೇಕಾದರೆ ಇಲ್ಲಿ ‘ನಿಖಾ’ ನಡೆಯಲೇ ಬೇಕು. ಅರಬಿ ಇನ್ನೂ ಕೂಡಾ ಪೂರ್ತಿ ದುಡ್ಡು ಕೊಟ್ಟಿರಲಿಲ್ಲ. ಎಲ್ಲ ಮುಗಿದು ಹೋದರೆ ಸಂಜೆಯಾಗುವ ಹೊತ್ತಿಗೆ ಮೂರು ಸಾವಿರ ಗಿಟ್ಟುವುದು ಗ್ಯಾರಂಟಿ. +ಗೇಟಿನ ಬಳಿ ರಿಕ್ಷವೊಂದು ಬಂದು ನಿಂತಿತು. ದಕ್ಷಿಣ ಜಮಾತಿನ ಖಾಜಿಯವರು ರಿಕ್ಷದಿಂದಿಳಿದರು. ಕುಪ್ಪಳಿಸಿ ಧಾವಿಸಿದ ಬೀರಾನ್ ಕೋಯಾ ಸೊಂಟದ ಪಟ್ಟಿಯಿಂದ ಹಣ ತೆಗೆದು ರಿಕ್ಷದವನಿಗೆ ಕೊಟ್ಟರು. +ಚಾವಡಿ ಚುರುಕಾಯಿತು. ಚಿಕ್ಕ ಹುಡುಗನೊಬ್ಬ ಒಳಗಿನಿಂದ ಕೆಂಪು ಮಕಮಲ್ಲಿನ ಜಮಖಾನೆಯನ್ನು ಹೊತ್ತು ತಂದು ಚಾವಡಿಯ ನಡುವೆ ಹರಡಿದ. ಖಾಜಿಯವರ ಅನುಮತಿಯನ್ನು ಕಣ್ಸನ್ನೆಯಲ್ಲೇ ಗಿಟ್ಟಿಸಿಕೊಂಡ ಕೋಯಾ, ಮುಸ್ತಫಾರನ್ನು ಕೈ ಹಿಡಿದು ಎಬ್ಬಿಸಿ ಜಮಖಾನೆಯ ಮೇಲೆ ಕುಳ್ಳಿರಿಸಿ ಅರಬಿಕ್‌ನಲ್ಲಿ ಏನೋ ಹೇಳಿ ನಕ್ಕರು. ಅತ್ತಿತ್ತ ಪಿಳಿಪಿಳಿ ದಿಟ್ಟಿಸಿದ ಉಮರಬ್ಬ ತನ್ನನ್ನು ಯಾರೂ ಗಮನಿಸದಿರುವುದನ್ನು ಕಂಡು ಬೇಸರವೆನ್ನಿಸಿದರೂ, ಶಿಸ್ತಿನಿಂದ ನಡೆದು ಬಂದು ಮುಸ್ತಫಾರ ಎದುರು ಕುಳಿತ. +ಗೋಡೆಯ ಬಳಿ ನಿಂತು ದೊಡ್ಡ ಮುಂಡಾಸಿನವರೊಬ್ಬರೊಡನೆ ಪಿಸಿಪಿಸಿ ಮಾತನಾಡುತ್ತಿದ್ದ ಖಾಜಿಯವರು ಉಮರಬ್ಬನತ್ತ ಬೊಟ್ಟುಮಾಡಿ “ಅದು ಯಾರು?” ಎಂದು ಪ್ರಶ್ನಿಸಿದರು. +“ಅದು ರುಖಿಯಾಳಿಗೆ ಅಣ್ಣನಾಗಬೇಕು. ನಾನೇ ಬರಲು ಹೇಳಿದ್ದು” ಹಸನ್ ಸಾಹೇಬರು ಉತ್ತರಿಸಿದರು. +“ಹುಡುಗಿಯ ತಾಯಿಯ ಕಡೆಯವನೋ?” ಖಾಜಿಯವರ ಮತ್ತೊಂದು ಪ್ರಶ್ನೆಗೆ ಎದ್ದು ನಿಂತ ಉಮರಬ್ಬ ‘ಹೌದು’ ಎಂದ. ಪಕಪಕನೆ ಸ್ವರವೆಬ್ಬಿಸಿ ನಕ್ಕ ಖಾಜಿಯವರು, ಬೀರಾನ್ ಕೋಯಾರತ್ತ ತಿರುಗಿ ಹೇಳಿದರು. “ಎಂಥದ್ದು ಕೋಯಾ? ನಿಮಗೂ ಗೊತ್ತಿಲ್ವಾ? ಇಷ್ಟು ವರ್ಷ ಸರ್ವಿಸು ಆದದ್ದು ದಂಡ. ಹುಡುಗಿಯ ತಾಯಿಯ ಕಡೆಯವರು ‘ನಿಖಾ’ಕ್ಕೆ ಕೈಕೊಡುವ ಕ್ರಮ ಈ ಭೂಲೋಕದಲ್ಲಿ ಎಲ್ಲಾದ್ರೂ ಉಂಟಾ?” +ಬೀರಾನ್ ಕೋಯಾ ತುಟಿ ಕಚ್ಚಿಕೊಂಡರು. “ಗಡಿಬಿಡಿಯಲ್ಲಿ ಏನೇನೋ ಆಗಿಹೋಯಿತು ಖಾಜಿಯವರೇ; ಹುಡುಗಿಗೆ ತಂದೆಯ ಕಡೆಯವರು ಅಂತ ಯಾರೂ ಇಲ್ಲ. “ನಿಖಾ ನಡೆಸಿಕೊಡುವ ಖಾಜಿಯವರೇ ಕುಳಿತುಕೊಳ್ಳಬಹುದು ಅಂತ ಶಾಸ್ತ್ರದಲ್ಲಿ ಉಂಟಲ್ಲಾ? ನೀವೇ ಸುಧಾರಿಸಿಬಿಡಿ. ನಿಮಗೆ ಮೊದಲೇ ಹೇಳಲು ಮರೆತುಹೋಯಿತು” ಎಂದ ಕೋಯಾ, ಖಾಜಿಯವರಿಗೆ ಕಣ್ಸನ್ನೆಯಲ್ಲಿ ಮತ್ತೊಂದು ಮಾತು ರವಾನಿಸಿದರು. +ಅವಮಾನಿತನಾದ ಉಮರಬ್ಬ ನಾಚಿಕೆಯಿಂದ ತಲೆತಗ್ಗಿಸಿ ಮೂಲೆ ಸೇರಿದ. ತಾನಿಲ್ಲಿಗೆ ಬರಲೇಬಾರದಿತ್ತು. ಕೋಯಾರವರ ಮಾತು ಕೇಳಿ ಮರ್ಯಾದೆ ಕಳೆದುಕೊಂಡಂತಾಯಿತು ಎಂದು ಹಳಹಳಿಸಿದ. ಮುಂಜಾನೆಯ ನಮಾಜಿನ ಭಾಂಗ್ ಕೇಳಿಸುತ್ತಿರುವಂತೆಯೇ ಬೀರಾನ್ ಕೋಯಾ ಬಂದು ಹೇಳಿದ್ದರು. ರುಖಿಯಾಳನ್ನು ಕಂಡು ಮಾತನಾಡಲು ಸಾಧ್ಯವಾಗಿದ್ದಿರಲಿಲ್ಲ. ಇಲ್ಲೇ ಒಳಗಿರಬಹುದೆಮ್ದು ಕಾಣುತ್ತದೆ. ‘ನಿಖಾ’ ಮುಗಿದನಂತರ ಮಾತನಾಡಿದರಾಯಿತು ಎಂದು ಯೋಚಿಸುತ್ತಾ ಕುಳಿತ. +ಹಸನಬ್ಬನ ಇರವನ್ನೇ ಮರೆತ ಖಾಜಿಯವರು ‘ನಿಖಾ’ದ ಗಡಿಬಿಡಿಯಲ್ಲಿ ಮುಳುಗಿದರು. ಒಳಬಾಗಿಲ ಹಸಿರು ಪರದೆಯ ನಡುವಿನಲ್ಲಿ ಹಲವಾರು ಉಬ್ಬು ತಬ್ಬುಗಳು ಮುದ್ರೆಯೂರತೊಡಗಿದ್ದವು. ಎದುರುಬದುರಾಗಿ ಕುಳಿತುಕೊಂಡ ಖಾಜಿ ಮತ್ತು ಮುಸ್ತಫಾರವರು ಹಸ್ತಲಾಘವ ಶೈಲಿಯಲ್ಲಿ ಕೈಜೋಡಿಸಿದರು. +ವಾಗ್ದಾನದ ಮಾತು ಇನ್ನೇನು ಆರಂಭವಾಗಬೇಕು…..ಅಷ್ಟರಲ್ಲಿ, +“ನಿಲ್ಸಿ!” ಸಿಡಿಲಿನಂತೆ ಆರ್ಭಟ ಕೇಳಿಸಿತ್ತು, ಒಳಬಾಗಿಲ ಹಸಿರು ಪರದೆ ಹಗ್ಗ ಕಡಿದುಕೊಂಡು ನೆಲದ ಮೇಲೆ ದೊಪ್ಪನೆ ಬಿತ್ತು. ಕೂಡಿದ್ದ ಮಂದಿಯೆಲ್ಲ ನಿಂತಲ್ಲೇ ಕುಳಿತಲ್ಲೇ ಕಲ್ಲಾಗಿಬಿಟ್ಟರು. ಬೆಪ್ಪರಂತೆ ಕಣ್ಣು ಪಿಳಿಪಿಳಿ ಮಾಡಿದರು. ಧರ್ಮಕಾರ್ಯದಲ್ಲಿ ಅಪಚಾರ! ‘ನಿಖಾ’ ನಡೆಯುವ ಜಾಗದಲ್ಲಿ ಹೆಂಗಸು! ಕೆದರಿದ ಕೂದಲ, ಬೆಂಕಿಕಾರುವ ಕಣ್ಣುಗಳ ರುಖಿಯಾಬಿ ಬಾಣದಂತೆ ನುಗ್ಗಿ ಅರಬಿಯ ಕೈ ಹಿಡಿದಿದ್ದ ಖಾಜಿಯವರ ಮುಂಗೈಯನ್ನು ಹಿಡಿದೆಳೆದುಬಿಟ್ಟಳು! ಎಲ್ಲವೂ ಮಿಂಚಿನ ವೇಗದಲ್ಲಿ ನಡೆದು ಖಾಜಿಯವರ ರಕ್ತ ತಣ್ಣಗಾಗಿಬಿಟ್ಟಿತ್ತು. +“ನಿಲ್ಸಿ!, ಈ ನಿಖಾ ಕಬೂಲು ಆಗಲಾರದು! ಈ ಮದುವೆಗೆ ಹುಡುಗಿಯ ಸಮ್ಮತಿಯಿಲ್ಲ, ನಿಲ್ಸೀ…..ನಾನೊಪ್ಪುವುದಿಲ್ಲ….!” ರುಖಿಯಾಬಿಯ ಕೀರಲು ದನಿ ರಸ್ತೆಗೆ ಕೇಳಿಸುತ್ತಿತ್ತು. +ತಬ್ಬಿಬ್ಬಾಗಿದ್ದ ಬೀರಾನ್ ಕೋಯಾ ತಕ್ಷಣ ಚೇತರಿಸಿಕೊಂಡು ಎದ್ದು ನಿಂತರು. ಕೋಪದಿಂದ ನಡುಗುತ್ತಿದ್ದರು. “ಏಯ್….ಸೈತಾನ್” ಎಂದು ಅಬ್ಬರಿಸಿ ರುಖಿಯಾಬಿಯತ್ತ ಕೈಯೆತ್ತಿಕೊಂಡೇ ನುಗ್ಗಿದರು. ಎರಡು ಹೆಜ್ಜೆ ಹಿಂದಕ್ಕೆ ಸರಿದ ರುಖಿಯಾಬಿ ಕಟಕಟನೆ ಹಲ್ಲು ಕಡಿಯುತ್ತಾ ಚಿಟಾರನೆ ಚೀರಿ, ಇಡೀ ದೇಹವನ್ನು ಬಿಲ್ಲಿನಂತೆ ಮುಂದಕ್ಕೆ ಬಗ್ಗಿಸಿ ಕ್ಯಾಕರಿಸಿ ಥೂಕ್ಕೆಂದು ಉಗಿದೇಬಿಟ್ಟಳು. ಬೀರಾನ್ ಕೋಯಾರ ನೆತ್ತಿಯ ಮೇಲೆ ಥೊಪ್ಪೆಂದು ಅಂಟಿಕೊಂಡ ಹಳದಿ ಎಂಜಲ ಮುದ್ದೆ ನಿಧಾನವಾಗಿ ಜಾರುತ್ತಾ ಅವರ ಬಲರೆಪ್ಪೆಯನ್ನು ಆವರಿಸಿಬಿಟ್ಟಿತು. ಅವಮಾನದ ಆಘಾತಕ್ಕೆ ಬೀರಾನ್ ಕೋಯಾರ ಎದೆ ಬಡಿತವೇ ನಿಂತಂತಾಯಿತು. ಕೈ ಕಾಲು ಸ್ವಾಧೀನ ತಪ್ಪಿದಂತಾಗಿ ‘ಯಾ ಅಲ್ಲಾ’ ಎನ್ನುತ್ತಲೇ ಕುಸಿದು ಕುಳಿತುಬಿಟ್ಟರು. ಅದುವರೆಗೆ ಗರ ಬಡಿದವರಂತೆ ಕುಳಿತಿದ್ದ ಹಸನ್ ಸಾಹೇಬರು ಧಡಕ್ಕನೆ ಎದ್ದು ಮುಂದೆ ಸಾಗಿ ರುಖಿಯಾಬಿಯ ರಟ್ಟೆಗೆ ಕೈ ಹಾಕುವಷ್ಟರಲ್ಲಿ ಮೂಲೆಯಲ್ಲಿ ಕುಳಿತಿದ್ದ ಉಮರಬ್ಬ ಚಂಗನೆ ಜಿಗಿದು ಸಾಹೇಬರ ಭುಜ ಹಿಡಿದು ಗೋಡೆಯತ್ತ ದಬ್ಬಿಬಿಟ್ಟ. +ಇಡೀ ಮುತ್ತುಚ್ಚೆರವೇ ಎಚ್ಚರಗೊಳ್ಳುವಂತೆ ರುಖಿಯಾಬಿ ಅರಚುತ್ತಿದ್ದಳು. “ನಾನೊಪ್ಪುವುದಿಲ್ಲಾ…ಮುತ್ತುಚ್ಚೇರದ ಯಾವ ಹೆಣ್ಣೂ ಇದಕ್ಕೆ ಒಪ್ಪುವುದಿಲ್ಲಾ….ಇದನ್ನು ಅಲ್ಲಾಹು ಕೂಡಾ ಒಪ್ಪುವುದಿಲ್ಲಾ” +ಚಾವಡಿಯೊಳಗೆ ಬಾಂಬು ಸಿಡಿದಂತಾಗಿತ್ತು. ಸೇರಿದ್ದವರಿಗೆಲ್ಲ ತಮ್ಮೆದುರು ಏನಾಗುತ್ತಿದೆ. ತಾವೇನು ನೋಡುತ್ತಿದ್ದೇವೆ ಎನ್ನುವುದೊಂದೂ ಅರ್ಥವಾಗದಷ್ಟು ಗಲಿಬಿಲಿ. ಧರ್ಮಸಮ್ಮತವಾದ ಮಂಗಳ ಕಾರ್ಯವನ್ನು ಧಿಕ್ಕರಿಸಿ ಬೊಬ್ಬಿರಿಯುತ್ತಾ ಮೆಟ್ಟಲಿಳಿದು ಹೋಗುತ್ತಿರುವ ಕೂಲಿ ಕೆಲಸದ ಹೆಂಗಸೊಬ್ಬಳನ್ನು ತಡೆದು ನಿಲ್ಲಿಸುವ ಎದೆಗಾರಿಕೆ ಚಾವಡಿಯೊಳಗಿದ್ದ ಯಾವ ಗಂಡಸಿಗೂ ಇರಲಿಲ್ಲ. +ಮುತ್ತುಚ್ಚೇರದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬಳು ಹೆಣ್ಣು ಪ್ರತಿಭಟಿಸಿದ್ದಲು! ಪ್ರತಿಭಟಿಸಿ ಬಯಸುವ ನೂರಾರು ಹೆಣ್ಣುಗಳ ಮೊದಲ ಧ್ವನಿಯೆಂಬಂತೆ…. +***** +ಕೀಲಿಕರಣ: ಸೀತಾಶೇಖರ್-ಸಹಾಯ -ನಂದಿನಿ +“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […] +೧ ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು […] +ಒಂದೆರಡು ಮಾತುಗಳು ‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_5.txt b/Kannada Sahitya/article_5.txt new file mode 100644 index 0000000000000000000000000000000000000000..7e259f9a571d3d8129fca99e8596317723851ca9 --- /dev/null +++ b/Kannada Sahitya/article_5.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೂರಾರು ವರುಷಗಳ ಭೀರುನೊಗವನ್ನಿಳುಹಿ, +‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು +ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- +ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ +ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ +ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ +ಭಾರತದ ನರಕೋಟಿ ಸಿಡಿದೆದ್ದು ಗುಡುಗಿತೋ: +ಮಾಡಿರಿಲ್ಲವೆ ಮಡಿಯಿರೆಂಬುದಕೆ ತಲೆಬಾಗಿ. +ಇಂಥ ಪಡೆಗಧಿಪತಿಯು ಕಡುಚಾಗಿ ನೀನಾಗಿ +ಸರ್ವ ಸುಖಭೋಗಕ್ಕೆ ಗಡ ತಿಲಾಂಜಲಿಯಿತ್ತು +ತಾಯ ಪಾದಕ್ಕೆಂದು ರಕ್ತಾಂಜಲಿಯನಿತ್ತು +ತೆರಳಿದೆಯ? ಇಲ್ಲಿಲ್ಲ! ನೆಲದ ಮಕ್ಕಳ ಎದೆಯ +ಕ್ರಾಂತಿಸೆಲೆಯಾಗಿರುವೆ ಮಹದೇವ ಮೈಲಾರ, +ಓ ಸ್ಫೂರ್ತಿಗೊಡು ಕಂನಾಡಿನೇಕಾಂಗಿ ವೀರ. +***** +ಹವೆ ಹೊತ್ತಿಸುವ ಬಿಸಿ ಬಿಸಿಲು ಬೆಂಕಿ ಬೇಸಗೆ ಧಗೆ ಅಲವರಿಕೆಯಲ್ಲಿ ತಣ್ಣನೆ ಒರೆದಂಗಳಕ್ಕೆ ಮೈ ಚಾಚುವ ಹಿಗ್ಗು ಗಡಚಿಕ್ಕುವ ಧೋಮಳೆ ನಡುಕ ಒದ್ದೆ ಮುದ್ದೆಯ ನಡುವೆ ಒಳಕೋಣೆಯ ಬೆಚ್ಚನೆ ಮೂಲೆ ಲಾಟೀನ ಕೆಳಗೆ ಮಗ್ಗಿ […] +ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […] +೧ – ಹೊಸ ಮದುಮಗಳ ನಾಚಿಕೆಯಬಡಾವಣೆಗಳಲ್ಲಿಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿಪಳಗಿರುವ ಮೊಹಲ್ಲಗಳಲ್ಲಿಮಾಟಾದ ಸೌಧಗಳನೋಟದಾಮೋದಗಳನೀಟು ದಂತಾವಳಿಯ ನಡುವೆಕಣ್ಣನಿರಿಯುತ್ತವೆ ಧುತ್ತೆಂದು-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;ಪಾರ್ಥೇನಿಯಮ್ಮಿನ ದಟ್ಟ ತೋಟಗಳುಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳುಸೆಟ್ಟರ, ಸೇಟುಗಳ,ನರಾಕೃತಿವೆತ್ತ ನೋಟುಗಳ,ಸುಲಭ ಕಮಾಯಿಯ ಬತ್ತದೂಟೆಗಳು;ದಿನೇ ದಿನೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_50.txt b/Kannada Sahitya/article_50.txt new file mode 100644 index 0000000000000000000000000000000000000000..db2ef772ee88d9bd174d00a1d0c8105e2e660a8f --- /dev/null +++ b/Kannada Sahitya/article_50.txt @@ -0,0 +1,71 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ ನಮ್ಮಿಬ್ಬರನ್ನೂ ಹೊತ್ತುಕೊಂಡ ಮಂಚ ಮಾತ್ರ ಸುಮ್ಮನೆ ಅಂಗಾತ ಮಲಗಿತ್ತು. +ಈ ರಾತ್ರಿ ಒಂದು ಕನಸಿನ ಥರ ಕಳೆದು ಹೋಯಿತು ಎಂದು ಅವಳು ರಾತ್ರಿ ಕಳೆವ ಮುನ್ನವೇ ಹೇಳಿದ್ದಳು. ಅದು ನಿಜವೇ. ಕಳೆದಿದ್ದಲ್ಲವೆ ಮಾರಾಯ್ತಿ, ಕನಸಿನ ಥರ ಕೂಡಿದ್ದಲ್ಲವೇನೇ ಎಂದು ನಾನು ಅವಳನ್ನು ಮತ್ತೆ ಸೆಳೆದು ಅಪ್ಪಿಕೊಂಡಿದ್ದೆ. ಅದಾಗಿ ಕೆಲವೇ ಗಂಟೆಗಳು ಕಳೆದಿವೆ. +ಅವಳ ಜೊತೆಗೆ ಸೆಕ್ಸ್ ಎನ್ನುವುದು ಒಂದು ಕನಸಿನ ಹಾಗೆ ಇತ್ತು ಎಂದು ಮಾತ್ರ ಅವಳಿಗೆ ಹೇಳಲಿಲ್ಲ. ಯಾಕೆಂದರೆ ಅವಳು ಅಷ್ಟೆಲ್ಲ ನಾಚುತ್ತ ನನ್ನ ಎಳೆತಕ್ಕೆ ಬಗ್ಗಿದ್ದಳು; ನನ್ನ ಜೊತೆ ಕೊಸರಾಡದೆ ಸ್ಪರ್ಶಿಸಿದ್ದಳು. ಅವಳ ಅಂಗಾಲುಗಳನ್ನು ನಾನು ಅನಾಮತ್ತಾಗಿ ಮೇಲೆತ್ತಿ ಮುತ್ತು ಕೊಟ್ಟಾಗ ಛೀ ನೀನು ಹೀಗೆ ಮಾಡಬೇಡ ಮಾರಾಯ, ನಿನಗೆ ನಮಸ್ಕಾರ ಮಾಡೋವಷ್ಟು ಪರಂಪರೆ ನನ್ನದಲ್ಲ ಎಂದು ನಕ್ಕಿದ್ದಳು. +ಅವಳಿಗೆ ಆ ರಾತ್ರಿ ನಾನು ಏನು ಕೊಟ್ಟೆ, ಕೊಡಲಿಲ್ಲ ಎಂಬುದು ನನಗೆ ಈಗಲೂ ಗೊತ್ತಿರಲಿಲ್ಲ. ನಾನು ಸುಮ್ಮನೆ ಅಂಗಾತ ಮಲಗಿ ಅವಳನ್ನೇ ನೋಡುತ್ತಿದ್ದೆ. ಹಬೆಯಾಡೋ ನೀರಿನಲ್ಲಿ ಸ್ನಾನ ಮಾಡಿಬಂದ ಅವಳ ಮುಖದಲ್ಲಿ ಸ್ನಿಗ್ಧ ನಗುವಿತ್ತು. ಅವಳ ಚೂಡಿದಾರದಲ್ಲಿ ಸಡಗರದ ನೆರಿಗೆಗಳಿದ್ದವು. ಅವಳ ಕೂದಲುಗಳು ಲಘುವಾಗಿ ಹಾರುತ್ತಿದ್ದವು. ಫ್ಯಾನಿನ ಗಾಳಿಯೂ ಕರ್ಟನುಗಳನ್ನು ನಡುಗಿಸುತ್ತಿತ್ತೇನೋ. +ನಿನ್ನೆ ಸಂಜೆ ನಾವು ರಿಸೆಪ್ಶನ್‌ನಲ್ಲಿ ರೂಮು ಬುಕ್ ಮಾಡುವಾಗ ನಾನು ವೆಂಕಟೇಶ, ಅವಳು ಗೀತಾ ಎಂದು ಯಾರಾದರೂ ನಂಬಬಹುದಿತ್ತು. ಇವತ್ತು ಹಾಗಿರಲಿಲ್ಲ. ನಾನು ನಾನಾಗಿದ್ದೆ. ಅವಳು ಕ್ರಮೇಣವಾಗಿ ಅವಳಾಗುತ್ತ, ರೂಮಿನ ಹೊರಗಿನ ವಾಸ್ತವಕ್ಕೆ ಮರಳಲು ತಯಾರಾಗುತ್ತಿದ್ದಳು. +ನಾವು ಆರು ತಿಂಗಳುಗಳ ಹಿಂದೆ ವೆಂಕಟೇಶ – ಗೀತಾ ಆಗಿ ಹೀಗೆ ಬರಬಹುದೆಂದು ನಂಬಿರಲಿಲ್ಲ. ನಾವು ಯಾರು ಎನ್ನುವುದು ನಮಗಾಗಲೀ, ಉಳಿದವರಿಗಾಗಲೀ ಗೊತ್ತಿರಲಿಲ್ಲ. ನಮ್ಮ ಸ್ನೇಹ ಹೀಗೆ ಲಾಡ್ಜಿನಲ್ಲಿ ದೇಹಕೂಟವಾಗಿ ಕರಗಿ ರೂಪಾಂತರಗೊಳ್ಳುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. +ಅವಳು ತಲೆಗೂದಲನ್ನು ಎಡಗೈಯಲ್ಲಿ ಹಿಡಿದು ಬಲ ಅಂಗೈಯಿಂದ ಫಟ್ ಎಂದು ಲಘುವಾಗಿ ಝಾಡಿಸಿದಳು. ಅವಳು ವೇಲ್ ಸರಿ ಮಾಡಿಕೊಂಡಳು. ಅವಳು ಮತ್ತೆ ನನ್ನನ್ನು ಹಿಡಿದು ಏಳು ಮಾರಾಯಾ ತಡ ಆಯ್ತು, ನಾನು ಚಿಕ್ಕಮ್ಮನ ಮನೆಗೆ ಹೋಗಬೇಕು ಎಂದು ಕರೆದಳು. ನಾನು ಅವಳನ್ನು ಹಾಗೇ ಎಳೆದುಕೊಂಡೆ. ನನ್ನೊಳಗೆ ಕಾಮಸೂರ್ಯ ಹೊತ್ತಿ ಉರಿಯುತ್ತಿದ್ದ ಎಂಬುದು ಅವಳಿಗೂ ಗೊತ್ತಿತ್ತು. ನಾವು ಮತ್ತೆ ಹಗಲನ್ನು ರಾತ್ರಿಯಾಗಿಸಿದೆವು. ಕರ್ಟನುಗಳಿಗೆ ಕತ್ತಲೆಯ ಪರದೆ ಹಾಕಲು ಹೇಳಿ ಮತ್ತೆ ಕೂಡಿದೆವು. +ಬರೀ ಸೆಕ್ಸ್ ಬಗ್ಗೆ ಈತ ಓಬ್ಸೆಸ್ ಆಗಿದ್ದಾನೆ ಎಂದು ನೀವು ದಯಮಾಡಿ ಭಾವಿಸಬೇಡಿ. ಅವಳನ್ನು ನಾನು ಮನಸಾರೆ ಪ್ರೀತಿಸಿದ್ದೇನೆ. ಅವಳಿಗೆ ಡಜನ್ನುಗಟ್ಟಳೆ ಪತ್ರ ಬರೆದು ಸತಾಯಿಸಿದ್ದೇನೆ. ಅವಳೇ ನನ್ನ ಬದುಕಿನ ಹುಡುಗಿ ಎಂದು ಗಟ್ಟಿಯಾಗಿ ಕರೆದಿದ್ದೇನೆ. ಅವಳಿಗೆಂದೂ ದ್ರೋಹ ಬಗೆಯಲಾರೆ ಎಂದು ಮಾತು ಕೊಟ್ಟಿದ್ದೇನೆ. ನನ್ನ ಹೆಂಡತಿಯೂ ಅವಳಿಗಿಂತ ಹೆಚ್ಚೇನಲ್ಲ ಎಂದು ಹೇಳಿದ್ದೇನೆ….. +ಎಂಬಲ್ಲಿಗೆ ನಾನೆಂಥ ಲಂಪಟ ಎಂದು ನೀವು ನಿರ್ಧರಿಸಿದ್ದರೆ ಅದಕ್ಕೆ ನಾನೇ ಕಾರಣ. +ಅವಳು ನನಗಾಗಿ ದಾವಣಗೆರೆ ಬಸ್ ನಿಲ್ದಾಣದಲ್ಲಿ ಒಂದು ಗಂಟೆ ಕಾದಿದ್ದಾಳೆ; ಬೆಂಗಳೂರಿನ ಚಹರೆ ಗೊತ್ತಿಲ್ಲದೆ ಬಂದವಳು ನನಗಾಗಿ ಮೆಜೆಸ್ಟಿಕ್‌ನಲ್ಲಿ ಕಾದು ತಾಸಿಗಿಷ್ಟೆಂದು ಮೈ ಖರೀದಿಸುವವರ ಕಣ್ಣಿಗೆ ಗುರಿಯಾಗಿದ್ದಾಳೆ. ಮಲ್ಲೇಶ್ವರದ ದೋಸೆ ಹೋಟೆಲಿನಲ್ಲಿ ಗಂಟೆಗಟ್ಟಳೆ ನಿಂತಿದ್ದಾಳೆ. ಗಾಂಧಿ ಬಜಾರಿನಲ್ಲಿ,ಡಿವಿಜಿ ರಸ್ತೆಯಲ್ಲಿ ನನ್ನ ಕೈ ಹಿಡಿದು ನಡೆದಿದ್ದಾಳೆ. ಇಷ್ಟಾಗಿಯೂ ನಾನು ಅವಳನ್ನು ಕೂಡುವುದಕ್ಕೇ ಪ್ರೀತಿಸಿದೆನಾ ಎಂದು ನನಗೆ ಈ ಕ್ಷಣ ಅನ್ನಿಸುತ್ತಿದೆ. +ಈ ಎಕ್ಟ್ರಾ ಮೆರೈಟಲ್ ಸಂಬಂಧಗಳೆಲ್ಲ ಕೇವಲ ಕಾಮಕ್ಕಾಗಿ. ಚಟ ತೀರಿದ ಮೇಲೆ ಎಲ್ಲ ಸಂಬಂಧ, ಸ್ನೇಹ ಕರಗುತ್ತೆ; ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ. +ಗೆಳೆಯ ಹೇಳಿದ್ದ ಮಾತುಗಳು ಈಗ ಅವಳನ್ನು ಕೂಡುವಾಗ ನೆನಪಾಗುತ್ತಿವೆ. ಅವಳೀಗ ಸುಖಶಿಖರದ ಉತ್ತುಂಗದಲ್ಲಿದ್ದಾಳೆ. ಅವಳೀಗ ನನ್ನ ಎದೆಯ ಮೇಲೆ ಮಲಗಿದ್ದಾಳೆ. ಅವಳೀಗ ನನ್ನ ಹೃದಯದ ಮೇಲೆ ಅವಳ ನೆನಪಿನ ಗೆರೆ ಎಳೆದಿದ್ದಾಳೆ. ಅವಳ ಕೂದಲುಗಳು ಚದುರಿವೆ. ನಾನು ಅವಳ ತಲೆಯೊಳಗೆ ಅಂಗೈ ಹರಡಿದ್ದೇನೆ. +‘ನಾನು ನೀನು ಎಂದಿಗೂ ಬೇರೆಯಾಗಬಾರದು ನೋಡು. ನಾನೇನಾದ್ರೂ ಸತ್ರೆ ನೀನೇ ಮಣ್ಣು ಮಾಡಬೇಕು. ಅವನಿಂದ ಮುಟ್ಟಿಸಿಕೊಳ್ಳಲೂ ನನಗೆ ಹೇಸಿಗೆಯಾಗುತ್ತೆ’ +‘ನಾನು ರಕ್ತದಲ್ಲಿ ಕಾಗದ ಬರೆಯೋದನ್ನು ನಿಲ್ಲಿಸ್ತೇನೆ. ನಾನು ಇನ್ನುಮುಂದೆ ಹೀಗೆ ಬೆರಳುಗಳನ್ನು ಚುಚ್ಚಿಕೊಳ್ಳಲ್ಲ. ನಾನು ಇನ್ನುಮುಂದೆ ಆತ್ಮಹತ್ಯೆಯ ಯೋಚನೆ ಮಾಡಲ್ಲ.’ +‘ನಾನು ಎಂದೂ ನಿನ್ನ ಕೈ ಬಿಡಲ್ಲ. ನಾನು ಎಂದಿಗೂ ನಿನ್ನ ಜೊತೆಯಾಗಿ ಇರ್‍ತೇನೆ. ನಾನು ನಿನ್ನವನು’ +‘ನಾನು ಬೆಂಗಳೂರಿಗೆ ಬಂದು ಬಿಡ್ತೇನೆ. ಆ ದರಿದ್ರ ಊರಿನಲ್ಲೇ ನನ್ನ ನೆನಪು, ನನ್ನ ಹಳೆ ಬದುಕು ಎಲ್ಲವೂ ಸಾಯಲಿ.’ +‘ನಾನು ನಿನ್ನ ಮಗಳನ್ನೂ ನನ್ನ ಮಗನಂತೆ ನೋಡಿಕೊಳ್ತೇನೆ.’ +ನಾವು ಮುಖವನ್ನೆಲ್ಲ ಬೊಗಸೆಯಿಂದ ಹಿಡಿದು ಹೀಗೆಲ್ಲ ಮಾತಾಡಿದ್ದೇವೆ. ನಾವು ನಗ್ನವಾದ ಹಾಗೇ ಮಾತಿನ ಉಡುಗೆಯನ್ನೂ ಕಳಚುತ್ತ, ಎಸೆಯುತ್ತ ದೇಹವನ್ನೆಲ್ಲ ಬತ್ತಲು ಮಾಡಿಕೊಳ್ಳುತ್ತಿದ್ದೇವೆ. ನಾವು ರೂಮಿನ ಬೋಲ್ಟು ಹಾಕಿದ್ದೇವೆ. ನಾವು ಎದೆಯ ಕದ ತೆರೆದಿದ್ದೇವೆ. +ಒಂದೇ ದಿನ. ಖಚಿತವಾಗಿ ಹೇಳಬೇಕೆಂದರೆ ಒಂದೇ ರಾತ್ರಿ; ಅರ್ಧ ಹಗಲು. ಊಟಕ್ಕೆ ಹೆಚ್ಚು ಹೊತ್ತು ವೇಸ್ಟ್ ಮಾಡುವುದು ಬೇಡ ಎಂದು ನಕ್ಕಿದ್ದೇವೆ. ಲಿಫ್ಟ್‌ನಲ್ಲಿ ಅಪ್ಪಿಕೊಂಡು ಮುತ್ತಿಕ್ಕಿದ್ದೇವೆ. +ಮೊದಲ ದಿನ ಅವಳು ಆಫೀಸಿಗೆ ಬಂದಾಗ ಅವಳ ಮಗಳೂ ಇದ್ದಳು. ಇಬ್ಬರನ್ನೂ ನೋಡಿದಾಗ ನನಗೆ ಅವಳೇ ನನ್ನ ಬದುಕಿನಲ್ಲಿ ಎಂದೋ ಬರಬೇಕಿದ್ದ ಹುಡುಗಿ, ಪೋರಿ, ಈಗ ಬಂದಿದ್ದಾಳೆ, ಮಗಳ ಜೊತೆಗೆ ಎಂದು ಸಿಟ್ಟು ಬಂದಿತ್ತು. ನನ್ನ ಕ್ಯಾಮೆರಾದಲ್ಲಿ ಒಂದೆರಡು ಚಿತ್ರ ತೆಗೆದಿದ್ದೆ. ಹಾಗೇ ಪ್ರಿಂಟ್ ಹಾಕಿಸಿ ಅಳಿಸಿದ್ದೆ. +ಅವಳು ಆ ಚಿತ್ರದಲ್ಲಿ ನನ್ನನ್ನೇ ನೋಡುತ್ತಿದ್ದಾಳೆ. ಈಗಲೂ ಅವಳೊಂದು ಚಿತ್ರವಾಗಿದ್ದಾಳೆ. +ಅವಳು ಎದ್ದು ನೀರಿನ ಹೂಜಿಯತ್ತ ನಡೆದಳು. ನಾನು ಹಾಗೇ ಬತ್ತಲಾಗಿ ಮಲಗಿದೆ. ಛಾವಣಿಯೇ ಆಕಾಶದ ಹಾಗೆ ಕಾಣುತ್ತಿತ್ತು. ಈ ಆಕಾಶ ಎಷ್ಟು ಹತ್ತಿರದಲ್ಲಿದೆ ಎಂದು ಅಚ್ಚರಿಗೊಂಡೆ. ಅವಳು ನನ್ನ ಬದಿಗೇ ಆತುಕೊಂಡು, ನನ್ನ ಬೆನ್ನು ಹಿಡಿದು ಎಳೆದಳು. +‘ಮತ್ತೆ ಒಂದು ತಿಂಗಳು ನೀನು ಸಿಗಲ್ಲ. ನನ್ನ ನೆನಪಾಗಲ್ವ?‘ +‘ಆಗದೆ ? ನೀನು ಕಚ್ಚಿದ್ದೆಲ್ಲ ನೆನಪಿರುತ್ತೆ. ಅದರಲ್ಲೂ…..’ +‘ಥೂ ತುಂಟ. ತುಂಬಾ ಸೆಕ್ಸಿಯಾಗಿ ಮಾತಾಡ್ತೀಯ…. ಲೇಖಕನಿಗೆ ಇರಬೇಕಾದ ಗಾಂಭೀರ್ಯವೇ ಇಲ್ಲ’ +ನನಗೆ ಅವಳ ಎದುರಿಗೆ ಸೀರಿಯಸ್ ಆಗಿರಬೇಕಿರಲಿಲ್ಲ. ನನಗೆ ಅವಳ ಜೊತೆಗೆ ಮಾತು ಬೇಕಿತ್ತು. ನನಗೆ ಸೆಕ್ಸ್ ಬಗ್ಗೆ ಹರಟೆ ಹೊಡೆಯಬೇಕಿತ್ತು. ನನಗೆ ದೇಹಗಳ ಮಿಲನದ ಬಗ್ಗೆ ಕಿವಿಯಲ್ಲಿ ದನಿ ಉಸುರಿ ಮಾತುಗಳನ್ನು ಹಂಚಿಕೊಳ್ಳಬೇಕಿತ್ತು. ನನಗೆ ಸ್ಪರ್ಶದ ಪ್ರತೀ ಕ್ಷಣವನ್ನೂ ಅನುಭವಿಸುತ್ತಿರೋ ಭಾವವನ್ನು ಹೇಳಬೇಕಿತ್ತು. ನನಗೆ ಅಂಗಾಂಗಗಳ ಬಗ್ಗೆ ಮಾತಾಡಬೇಕಿತ್ತು. +ಅವಳು ಅದಕ್ಕೆಲ್ಲ ಆಕ್ಷೇಪಿಸಲಿಲ್ಲ. ಎರಡು ತಾಸು ಹಾಗೆ ಮಾತಾಡುತ್ತ ಮಲಗಿದ್ದೆವು. ಮಧ್ಯೆ ಬಟ್ಟೆ ಲೇಪಿಸಿಕೊಂಡು ಚಹಾ ತರಿಸಿದೆವು. ದ್ರಾಕ್ಷಿಯನ್ನು ಹಂಚಿಕೊಂಡೆವು. ಸೇಬು ಕತ್ತರಿಸಿದೆವು. +ಜಗತ್ತನ್ನು ಉಡಾಯಿಸಿದೆವು. ದೇಹವನ್ನು ಚುಡಾಯಿಸಿದೆವು. +ರಗ್ಗುಗಳು, ಬೆಡ್‌ಶೀಟುಗಳು ಮುದುಡಿಕೊಂಡವು. ಹಾಸಿಗೆ ಮೆದುವಾಯಿತು. ಮ್ಯಾಗಜಿನ್ ಹಾಳೆಗಳು ಹಾರುವುದನ್ನು ನಿಲ್ಲಿಸಿದವು. ಹೊರಗೆ ರೂಮ್‌ಬಾಯ್‌ಗಳ ಜಗಳ ಕೇಳಿಸುತ್ತಿತ್ತು. ಮತ್ತೆ ಟಿವಿಯಲ್ಲಿ ಯಾರೋ ಅಳುತ್ತಿದ್ದರು. ಇಂಗ್ಲಿಶ್ ಸಿನಿಮಾದಲ್ಲಿ ಕಾರುಗಳು ಸ್ಫೋಟಗೊಂಡವು. ರೇಡಿಯೋ ಸಿಟಿಯಲ್ಲಿ ಮತ್ತೆ ಭೀಗಿ ಭೀಗಿ ರಾತ್ ಮೇ ಎಂದು ಅದ್ನಾನ್ ಸಾಮಿ ಹಾಡುತ್ತಿದ್ದ. +ಅವಳು ಬಟ್ಟೆ ಹಾಕಿಕೊಳ್ಳುತ್ತ ಅಳುತ್ತಿದ್ದಳು. ನಾನು ಅವಳ ಭುಜ ತಟ್ಟಿದೆ. ಕುತ್ತಿಗೆಯ ಮೇಲೆ ಮೆತ್ತಗೆ ಕಚ್ಚಿದೆ. +ಅವಳು ನನ್ನ ಕಾಲಿನ ಮೇಲೆ ನಿಂತು ತಲೆಯನ್ನು ಹಿಡಿದೆಳೆದು ಕಣ್ಣುಗಳಿಗೆ ಎಂಜಲು ಹಚ್ಚಿದಳು. ನನ್ನ ಕಣ್ಣುಗಳು ತೇವಗೊಂಡವು. +ನಮ್ಮನ್ನು ನೀವು ಹೀಗೆ ನೋಡಬಾರದ ಹಾಗೆ ಬಾಗಿಲು ಮುಚ್ಚಿಕೊಂಡಿತ್ತು. +ನಾವು ಅದನ್ನು ಬೆಸಿಲ್ ಒಪ್ಪಂದ ಎಂದು ಕರೆದೆವು. ನಾವು ಅದನ್ನೇ ನಮ್ಮ ಬದುಕಿನ ಕರಾರುಗಳು ಎಂದು ತೀರ್ಮಾನಿಸಿದೆವು. +ಈ ರಾತ್ರಿ ನನಗೆ ಅನ್ನಿಸಿದೆ: ಯಾಣಕ್ಕೆ ಹೋಗುವ ಟ್ರೆಕಿಂಗ್ ಮಾರ್ಗದಲ್ಲಿ ಬತ್ತಲಾಗಿಬಿಡಬೇಕು. ಆಕಾಶವನ್ನೇ ದಿಟ್ಟಿಸಿ ನೋಡುತ್ತ ಅಲ್ಲಿ ಮಲಗಿದರೆ ಎಷ್ಟು ಚೆನ್ನಾಗಿರುತ್ತೆ. ಭೂಮಿಯೆ ಹಾಸಿಗೆ, ಆಕಾಶವೇ ಹೊದಿಕೆಯಾದರೆ ನಾನು ಹೇಗೆ ಬೆಚ್ಚಗಿರುತ್ತೇನೆ. ಅವಳೂ ಬೇಡ. ಇವಳೂಬೇಡ. ಯಾರೂ ಬೇಡ. +ನಾನು ಜೇನುಕಲ್ಲುಗುಡ್ಡದ ಸನ್‌ಸೆಟ್ ಪಾಯಿಂಟ್‌ನಲ್ಲಿ ಹಾಗೇ ಗಾಳಿಯಲ್ಲಿ ಗಾಳಿಯಾಗಿ ತೇಲಬೇಕು. ಎಲ್ಲರೂ ನೋಡುತ್ತಿದ್ದಂತೆ ತೇಲುತ್ತ ತೇಲುತ್ತ ಮೇಲೆ ಹಾರಬೇಕು. ಆಮೇಲೆ ಒಮ್ಮೆಲೆ, ಎಲ್ಲಕ್ಕೂ ಪೂರ್ಣ ವಿರಾಮ ಇರುವ ಹಾಗೆ ಸುಯ್ಯೆಂದು ಜಾರುತ್ತ ಕೆಳಗೆ ಬೀಳಬೇಕು. +ಅವಳಿಗೆ ಹಾಗೆಲ್ಲ ಪತ್ರ ಬರೆದುಬಿಡಬೇಕು. ನಿನ್ನ – ನನ್ನ ಒಪ್ಪಂದಗಳು ಇನ್ನುಮುಂದೆ ಅಸಿಂಧು ಎಂದು ಹೇಳಬೇಕು. +ಅವಳು,ಇವಳು, ಯಾರೋ. ಎಲ್ಲರೂ ನನ್ನನ್ನು ಮುತ್ತಿದ್ದಾರೆ. ಯಾರೋ ನನ್ನ ಭುಜ ಹಿಡಿದು ಕೇಳಿದ್ದಾರೆ: ಮಾರಾಯ, ಯಾಕೆ ನಿನ್ನ ಕೈ ಅಷ್ಟು ಬೆಚ್ಚಗಿದೆ…. +ನಾನು ಮತ್ತೆ ಬೆಸಿಲ್‌ನ್ನೇ ನೋಡುತ್ತ ಕಾರನ್ನು ತಿರುಗಿಸಿದೆ. ಅಲ್ಲಿ ಬೇರೆ ಯಾರೋ ಇದ್ದರು. ಅವರೂ ನಮ್ಮ ಹಾಗೆಯೇ ಗೀತಾ – ವೆಂಕಟೇಶ್ ಆಗಿರಬಹುದೇ ಅನ್ನಿಸಿತು. ಪೊಲೀಸ್ ಪೇದೆ ಸಿಗ್ನಲ್ ಕೊಟ್ಟಕೂಡಲೇ ನಾನು ಬೆಸಿಲ್ ದಾಟಿದೆ. ಎಲ್ಲರೂ ಹಾರ್ನ್ ಮಾಡುತ್ತಿದ್ದಾರೆ. ನೀನು ವೆಂಕಟೇಶ ಅಲ್ಲವಾ? ಅವಳೆಲ್ಲಿ ಎಂದು ಕೇಳುತ್ತಿದ್ದಾರೆ. +ನಾನು ಮತ್ತೆ ಜಯನಗರ ಕಾಂಪ್ಲೆಕ್ಸಿನ ಆ ಬಟ್ಟೆ ಅಂಗಡಿಯ ಮುಂದೆ ನಿಂತಿದ್ದೇನೆ. ಅವರು ಕೇಳಿದ್ದಾರೆ: ಮೇಡಂ ಎಲ್ಲ ಸರ್,ಇವತ್ತು ಬಂದಿಲ್ಲ…. +ನಾನು ಸೌತೆಂಡ್‌ನ ಆ ಹೋಟೆಲ್‌ನ ಆ ಮೂಲೆಯಲ್ಲಿ ಕುಳಿತು ಅದೇ ಬಟರ್‌ಸ್ಕಾಚ್ ಕೇಳಿದ್ದೇನೆ. ಅದೇ ಟೇಬಲ್ ಮೇಲೆ ಅವಳು ತೋಳು ಚೆಲ್ಲಿ ಕುಳಿತಿದ್ದಳು. ಈಗ ಇಲ್ಲಿ ಯಾವುದೋ ಹಾಡು ಕೇಳುತ್ತಿದೆ. ನನಗೆ ಈ ದೃಶ್ಯಗಳೆಲ್ಲ ಯಾಕೆ ನೆನಪಾಗುತ್ತಿವೆ ಎಂದೇ ತಿಳಿಯುತ್ತಿಲ್ಲ. +ನಾನು ನಂದಿಬೆಟ್ಟದ ಆ ತುದಿಯಲ್ಲಿ ಕೂತಾಗೆಲ್ಲ ಕೆಳಗಿರುವ ತಿರುವುಗಳು ಕಾಣಿಸುತ್ತವೆ. ಅಲ್ಲ ಅವಳನ್ನೂ ಹಿಡಿದು ತಿರುಗಿದ್ದೆನಲ್ಲ ಎಂಬ ನೆನಪು ರಾಚುತ್ತದೆ. ನಾನು ಈಗ ಇಲ್ಲಿ ಒಬ್ಬನೇ ಕೂತು ಯಾಕೆ ಹೀಗೆ ಅಳುತ್ತಿದ್ದೇನೆ ಎಂದು ಗೊತ್ತಾಗುತ್ತಿಲ್ಲ. +ಈಗ ಅವಳಿಲ್ಲ. ಅವಳ ನೆನಪೂ ನನಗಷ್ಟಿಲ್ಲ. +ಅವಳು ಬಂದರೆ ನಗು ಬೀರುವಷ್ಟೂ ಸೌಜನ್ಯ ನನ್ನದಾಗಿಲ್ಲ. ನಾನು ಹೊಸ ಮನುಷ್ಯನ ಹಾಗೆ ಬದಲಾಗಿದ್ದೇನೆ. +ಇಲ್ಲಿ ಇವಳು; ಇವಳ ಸಮಸ್ಯೆಗಳು; ಬೇಗುದಿಗಳು. ಇವಳೇ ಈಗ ನನ್ನ ಹುಡುಗಿ. ಅವಳ ಜೊತೆ ಯಾವ ಒಪ್ಪಂದಗಳೂ ಇಲ್ಲ. ಎಲ್ಲವೂ ಛಂದ; ಸ್ವಚ್ಛಂದ. ಅವಳ ಸ್ಪರ್ಶವೂ ಅಷ್ಟೆ. +ನಾವು ಒಪ್ಪಂದಗಳನ್ನು ಮಾಡಿಕೊಳ್ಳಬಾರದು. ಕೊನೆಗೆ ಕೇವಲ ಒಪ್ಪಂದಗಳು ಮಾತ್ರವೇ ಇರುತ್ತವೆ. ನಾವು ಕೇವಲ ಪ್ರೀತಿಸಲಾಗದಿದ್ದರೆ, ಲಾಡ್ಜಿನಲ್ಲಿ ಹಾಗೆ ಕೂಡಬಾರದು. ಸ್ಪರ್ಶದ ಜೊತೆಗೆ ಬಾಳಬಾರದು. +ನಿನ್ನೆ ಅವಳಿಗೆ ಮೈಲ್ ಕಳಿಸಿದ್ದೆ. ಉತ್ತರವೂ ಬಂದಿದೆ. ಅವಳನ್ನು ನೆಗ್ಲೆಕ್ಟ್ ಮಾಡಿದ್ದಕ್ಕೆ ವಾಚಾಮಗೋಚರ ಬೈದಿದ್ದಾಳೆ. ‘ನೀನೊಬ್ಬ ವಿಟ’ ಎಂದು ಬರೆದಿಲ್ಲ ಅಷ್ಟೆ; +ನನಗೆ ಬೆಸಿಲ್ ಒಪ್ಪಂದ ಮರೆಯಬೇಕು. ನನಗೆ ಒಪ್ಪಂದಗಳು ಬೇಡ. +ನಾನು ವೆಂಕಟೇಶ್ ಅಲ್ಲ. +ಅವಳು ಗೀತಾ ಇರಬಹುದೆ? ಗೊತ್ತಿಲ್ಲ. +***** +(೨೯.೧.೨೦೦೬ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ ಕಥೆ ಲೇಖಕರ ಅನುಮತಿಯಿಂದ ಪ್ರಕಟಿಸಲಾಗಿದೆ. ಇದೇ ಕತೆಯನ್ನು ಲೇಖಕರು ಸಂಪದ.ನೆಟ್‌ನಲ್ಲೂ ಪೋಸ್ಟ್ ಮಾಡಿದ್ದಾರೆ. ಕನ್ನಡಸಾಹಿತ್ಯ.ಕಾಂ ಓದುಗರಿಗೂ/ಆರ್ಕೈವ್‌ನಲ್ಲೂ‌ಇರಲೆಂದು ಪ್ರಕಟಿಸಲಾಗಿದೆ -ಸಂ) +ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […] +ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […] +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_500.txt b/Kannada Sahitya/article_500.txt new file mode 100644 index 0000000000000000000000000000000000000000..fef5ea0a9ced424dafb84255f36e0609fef540a6 --- /dev/null +++ b/Kannada Sahitya/article_500.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು ದೇಶಗಳಿಂದ ಕರೆಸಲಾದ ಹನ್ನೆರಡು ಜನರಲ್ಲಿ ನಾನು ಮತ್ತು ಉಚೆ ಕೂಡ ಇದ್ದೆವು. ಇಂಥ ಶಿಬಿರಗಳಿಗೆ ಆಯ್ಕೆಯಾಗುವುದು ಬಹಳ ಮಹತ್ವದ ಸಂಗತಿಯೆಂಬ ಭಾವನೆಯಿತ್ತು. ಹೊಸಹೊಸ ಎತ್ತರದ ಹುದ್ದೆಗಳಿಗೆ, ಹೆಚ್ಚಿನ ಜವಾಬ್ದಾರಿಗೆ ನಮ್ಮನ್ನು ಸನ್ನದ್ಧಗೊಳಿಸುವ ಹಲವು ಪರಿಗಳಲ್ಲಿ ಈ ಶಿಬಿರದ ಯೋಜನೆಯೂ ಒಂದು. ಇತರ ದೇಶಗಳ ಸಂಸ್ಕೃತಿ, ಜೀವನ, ವ್ಯಾಪಾರವಹಿವಾಟು ಇತ್ಯಾದಿಗಳನ್ನು ಅರಿಯುವುದೂ ಇದರ ಮುಖ್ಯ ಉದ್ದೇಶಗಳಲ್ಲೊಂದು ಎಂದು ನಮಗೆ ತಿಳಿಸಿದ್ದರು. ಸಮುದ್ರದ ಎದುರಿಗೇ ಇರುವ ಕಂಪನಿಯ ಟ್ರೇನಿಂಗ್ ಸೆಂಟರಿನಲ್ಲಿ ಶಿಬಿರದ ವ್ಯವಸ್ಥೆ ಮಾಡಲಾಗಿತ್ತು. ಈ ಹವಾನಿಯಂತ್ರಿತ ಕಟ್ಟಡದ ಒಳಗೆ ಕೂತು, ಹೊರಗೆ ಬೇಯುವ ಬೇಸಿಗೆಯ ಸೆಖೆಗೂ, ಉಕ್ಕುವ ಕಡಲಿಗೂ, ಬೀಸುವ ಗಾಳಿಗೂ ಸಂಬಂಧವೇ ಇಲ್ಲದವರ ಹಾಗೆ ಏಳು ದಿನ ಕಳೆದಿದ್ದೆವು. ಶಬ್ದವೂ ಹಾದು ಬಾರದ ಹಾಗೆ ಮುಚ್ಚಿಬಿಟ್ಟಿರುವ ಗಾಜಿನ ದೊಡ್ಡ ಕಿಟಕಿಗಳಿಂದ ಆಚೆ ನೋಡಿದರೆ ಮೂಕಚಿತ್ರವೊಂದರ ದೃಶ್ಯ ನೋಡಿದಂತಾಗುತ್ತಿತ್ತು. ನೊರೆನೊರೆಯಾಗಿ ದಂಡೆಯನ್ನಟ್ಟಿ ಬರುವ ಎತ್ತರದ ಅಲೆಗಳು. ತೊಟ್ಟ ಬಟ್ಟೆ ಪತಾಕೆಯ ಹಾಗೆ ಪಟಪಟ ಹೊಡೆದುಕೊಳ್ಳುವಂತೆ ಬೀಸುವ ಗಾಳಿ. ದಂಡೆಯ ಗುಂಟ ಹಾದುಹೋಗುವ ರಸ್ತೆಯಲ್ಲಿ ಸಾಲು ವಾಹನಗಳು. ನೂರಾರು ಸಣ್ಣಸಣ್ಣ ತಳ್ಳುಗಾಡಿಯ ಅಂಗಡಿಗಳು. ಓಡಲು ನಡೆಯಲು ನೋಡಲು ಕೊಳ್ಳಲು ಬಂದ ಜನ. ಆಚೆ ಜಗತ್ತು ಸದ್ದೇ ಇಲ್ಲದೆ ಜರುಗಿ ಹೋಗುತ್ತಿರುವ ಹಾಗೆ ಕಾಣಿಸುತ್ತಿತ್ತು. +ಉಚೆ ನನ್ನ ಪಕ್ಕದ ರೂಮಿನಲ್ಲೇ ಇದ್ದ. ಅವನು ನನಗೆ ಹೆಚ್ಚು ಹತ್ತಿರವಾಗಲು ಅದೂ ಒಂದು ಕಾರಣವಾಯಿತು. ಇಡೀ ದಿನ ಆರ್ಥಿಕ ನೀತಿ, ವ್ಯಾಪಾರ ನೀತಿ, ಮಾರಾಟ, ಉತ್ಪಾದನೆ, ಯೋಜನೆಗಳನ್ನು ರೂಪಿಸುವುದು, ಯಾವುದೋ ದೇಶದ ಸಂಸ್ಥೆ ತನ್ನ ಬಿಕ್ಕಟ್ಟುಗಳನ್ನು ಹೇಗೆ ದಾಟಿ ಬಂತು – ಎಂದೆಲ್ಲ ಎಂರು ಗಂಟೆಗಳ ಕಾಲ ಮಾತು ಕೇಳಿಸಿಕೊಂಡು, ಕಡ್ಡಾಯವಾಗಿ ಇದನ್ನೆಲ್ಲ ಚರ್ಚಿಸಿ ದಣಿದು ಬಂದ ಎಲ್ಲರೂ ರಾತ್ರಿ ಊಟದ ನಂತರ ಕೂತು ಹರಟುತ್ತಿದ್ದೆವು. ಕೆಲವೊಮ್ಮೆ ಸಮುದ್ರದ ದಂಡೆಗುಂಟ ನಡೆಯುತ್ತಿದ್ದೆವು. ಉಚೆ ನಮ್ಮ ಮನರಂಜನೆಯ ಕೇಂದ್ರವಾಗಿದ್ದ. ತುಂಬ ಚೆನ್ನಾಗಿ ಹಾಡುತ್ತಿದ್ದ. ತನ್ನ ಜೊತೆ ತಂದಿದ್ದ ಕ್ಯಾಸೆಟ್ ಪ್ಲೇಯರ್‌ನಲ್ಲಿ ಸಂಗೀತ ಹಾಕಿ ಕುಣಿಯುತ್ತಿದ್ದ. ಹಾಡು ಮತ್ತು ಕುಣಿತ ಹುಟ್ಟಿನಿಂದಲೇ ಪಡೆದು ಬಂದಂತಿದ್ದ. ಕಪ್ಪಾಗಿ ಆರೋಗ್ಯದಿಂದ ಮಿರಿಮಿರಿ ಮಿಂಚುತ್ತಿದ್ದ ಅವನ ಸದೃಢ ದೇಹ, ಸಂಗೀತ ಕಿವಿಗೆ ಬಿದ್ದದ್ದೇ ಬಳುಕ ತೊಡಗುತ್ತಿತ್ತು. ಅವನ ಗುಂಗುರು ಕೂದಲನ್ನು ಎಳೆದು ಎಷ್ಟು ಉದ್ದ ಇದೆ ಎಂದು ತೋರಿಸಿದ. ತನ್ನ ದೇಶದ ಗುಲಾಮರ ಹಾಡುಗಳನ್ನು ಹಾಡಿ ತೋರಿಸಿದ. ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತೇನೆಂದು ಹೇಳಿ ಚಾಕುವನ್ನು ಅಂಗೈಯ ಮೂಲಕ ಆಚೆಯಿಂದ ಈಚೆ ತರಿಸುವ ಸಣ್ಣ ಜಾದೂ ಮಾಡಿದ. ಹೀಗೆ ಉಚೆ ಎಲ್ಲರ ಸ್ನೇಹಿತನಾದ. +ಏಳನೆಯ ದಿನ ರಾತ್ರಿ ಊಟದ ನಂತರ ನಮ್ಮೆಲ್ಲರನ್ನೂ ಒಂದೆಡೆ ಸೇರಿಸಿ ಮುಂದಿನ ಮೂರು ದಿನಗಳ ಕಾರ್ಯಕ್ರಮ ವಿವರಿಸಿದರು. ಶಿಬಿರದ ಕೊನೆಯ ಮೂರು ದಿನಗಳಲ್ಲಿ, ಇಷ್ಟುದಿನ ಕಲಿಸಿದ್ದನ್ನು ಅನುಭವಕ್ಕೆ ಭಟ್ಟಿ ಇಳಿಸಲೆಂಬಂತೆ ಒಂದು ಆಟವಿಟ್ತು. ಅದೊಂದು ಮ್ಯಾನೇಜ್‌ಮೆಂಟ್ ಗೇಮ್. ನಿಜಕ್ಕೆ ಹತ್ತಿರವಾದ ಅಂತರಾಷ್ರೀಯ ವ್ಯಾಪಾರ ಸನ್ನಿವೇಶವೊಂದನ್ನ್ ಸೃಷ್ಟಿಸಿ,ಅದರಲ್ಲಿ ನಾವೆಲ್ಲ ಪಾಲ್ಗೊಂಡು ನಮ್ಮ ಕೌಶಲ್ಯಗಳನ್ನು ಒರೆಗೆ ಹಚ್ಚುವುದು. ಇದ್ದ ಹನ್ನೆರಡು ಜನರನ್ನು ಮೂರು ಮೂರು ಜನರ ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದರು. ಪ್ರತಿ ಗುಂಪಿಗೂ ಒಂದೊಂದು ಕಾಲ್ಪನಿಕ ಕಂಪನಿಯನ್ನು ವಹಿಸಿಕೊಟ್ಟರು. ಎಲ್ಲವೂ ಸಮಾನ ಅವಸ್ತೆಯಲ್ಲಿರುವ ಕಂಪನಿಗಳನ್ನು – ಉತ್ಪಾದನಾ ಸಾಮರ್ಥ್ಯ, ಕಾರ್ಖಾನೆಗಳ ಸಂಖ್ಯೆ, ಕಾರ್ಮಿಕ ಸಂಖ್ಯೆ,ಬ್ಯಾಂಕಿನಲ್ಲಿದ್ದ ಹಾಣ, ಸಾಲದ ಮೊತ್ತ ಎಲ್ಲವೂ ಸಮವಾಗಿತ್ತು. ಪ್ರತಿ ಗುಂಪೂ ತನ್ನ ಕಂಪನಿಯನ್ನು ಮುಂದಿನ ಮೂರು ವರ್ಷಗಳ ಕಾಲ ನಡೆಸಬೇಕು. ಬೆಳಿಗ್ಗೆ ಎಂಟಕ್ಕೆ ಆಟ ಆರಂಭವಗುವುದು. ಪ್ರತಿ ಗಂಟೆ ಒಂದು ತಿಂಗಳಿಗೆ ಸಮ. ತಿಂಗಳ ಅಂತ್ಯದ ಉತ್ಪಾದನೆ, ಮಾರಾಟ, ಸಾಲಪಾವತಿ ಎಲ್ಲವೂ ಆ ಗಂಟೆಯ ಕೊನೆಗೆ ಜರುಗಬೇಕು. ಹೀಗೆ ಒಂದು ದಿನ ಅಂದರೆ ಒಂದು ವರ್ಷ. ವರ್ಷದ ಕೊನೆಗೆ ಪ್ರತಿ ಕಂಪನಿಯೂ ಆಯವ್ಯಯ ಲಾಭನಷ್ಟ ಪ್ರಕಟಿಸಬೇಕು. ಮೂರನೆಯ ವರ್ಷದ ಕೊನೆಗೆ ಅಂದರೆ ಮೂರನೆಯದಿನ ರಾತ್ರಿ ಪ್ರತಿ ತಂಡವೂ, ತಾನು ಯಾವ ರೀತಿ ವ್ಯವಹಾರಗಳನ್ನು ನಿರ್ವಹಿಸಿದೆ, ಆದ್ದರಿಂದ ಹೇಗೆ ಹೆಚ್ಚು ಲಾಭವಾಯಿತು. ಯಾವ ಉಪಾಯಗಳು ಸರಿಹೋಗಲಿಲ್ಲ,ಅಲ್ಲಿ ಹಿನ್ನೆಡೆಯಾಯಿತು ಇತ್ಯಾದಿ ಎಲ್ಲರಿಗೂ ವಿವರಿಸಬೇಕು. +ಇಷ್ಟೆಲ್ಲ ಹೇಳಿ ನಮಗೆ ಸುಮಾರು ಅರವತ್ತು ಪುಟಗಳನ್ನು ಓದಲು ಕೊಟ್ಟರು. ಅದರಲ್ಲಿ ಆಟದ ನಿಯಮಗಳು, ನಮಗೆ ಕೊಟ್ಟ ಕಾರ್ಖಾನೆಗಳ ಸಾಮರ್ಥ್ಯ, ಯಾವ ಯಾವ ರೀತಿಯ ವಸ್ತುಗಳನ್ನು ಅಲ್ಲಿ ತಯಾರಿಸಬಹುದು, ಹೊಸ ಕಾರ್ಖಾನೆ ತೆರೆಯುವ ವಿಧಾನಗಳು, ನಿಯಮಗಳು, ವೆಚ್ಚಗಳು ಯಾವ ಯಾವ ದೇಶಗಳಲ್ಲಿ ಏನೇನು ಮಾರಟ ಮಾಡಬಹುದು, ಎಲ್ಲೆಲ್ಲಿ ಯಾವ ರೀತಿಯ ತಂತ್ರಜ್ಞಾನ ಇದೆ, ಅದನ್ನು ಬೆಳೆಸುವುದಾದರೆ ಅದಕ್ಕೆ ತಗಲುವ ಕಾಲ ಮತ್ತು ವೆಚ್ಚವೇನು, ಎಲ್ಲೆಲ್ಲಿ ಕಾರ್ಮಿಕರ ಸಂಬಳ ಎಷ್ಟು, ಅವರ ಸಮಸ್ಯೆಗಳು, ಸಂಭವಿಸಬಹುದಾದ ಮುಷ್ಕರಗಳು, ವಿವಿದ ದೇಶಗಳಲ್ಲಿ ಸಾಗಣೆಯ ವೆಚ್ಚ, ಅಲ್ಲಿಯ ರಾಜಕೀಯ ಸ್ಥಿತಿ, ಆರ್ಥಿಕ ಸ್ಥಿತಿ, ಮಿಲಿಟರಿ ಆಡತಳಿತವೋ, ಪ್ರಜಾಪ್ರಭುತ್ವವೋ, ಆ ದೇಶದ ಆಯಾತ – ನಿರ್ಯಾತಗಳೇನು, ಬಹುಸಂಖ್ಯಾತ ಜನರ ಧರ್ಮ ಯಾವುದು ಇತ್ಯಾದಿ ಎಲ್ಲ ವಿವರಗಳೂ ಆ ಅರವತ್ತು ಪುಟಗಳಲ್ಲಿದ್ದವು. ಜಾಗತಿಕ ಮಟ್ಟದಲ್ಲಿ ವ್ಯವಹಾರ ನಿರ್ವಹಿಸಲು ತರಬೇತುಗೊಳಿಸುವ ಅತ್ಯುತ್ತಮ ವಿಧಾನವೆಂದು ಈ ಆಟ ಹೆಸರುವಾಸಿಯಂತೆ. ಇದನ್ನು ರೂಪಿಸಿದ ಪೀಟರ್ ಹಿಂದಿನ್ ರಾತ್ರಿಇಂಗ್ಲೆಂಡಿನಿಂದ ಬಂದಿಳಿದಿದ್ದ. ಒಂದು ಬಾರಿ ಇದನ್ನು ಆಡಲು ಅವನಿಗೆ ಕೊಡಬೇಕಾದ ರಾಯಲ್ಟಿಯ ಬಗ್ಗೆ ಕೇಳಿ ಅಸೂಯೆಪಟ್ಟೆವು. ಮುಂದಿನ ಮೂರು ದಿನಗಳಲ್ಲಿ ಈ ಆಟ ಸರಿಯಾಗಿ, ನಿಯಮಗಳ ಪ್ರಕಾರ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಪೀಟರ್, ವಿವಿಧ ದೇಶಗಳ ಸರ್ಕಾರಗಳ, ಬ್ಯಾಂಕುಗಳ ಪಾತ್ರ ವಹಿಸುವವನಿದ್ದ. ನಿಮ್ಮ ನಿಜವಾದ ಶಕ್ತಿಗಳನ್ನು ಉಪಯೋಗಿಸಲು ನಿಮಗೆ ತಿಳಿಸುವ, ಕುಂದುಕೊರತೆಗಳನ್ನು ಬೇರೆ ಯಾವುದರಿಂದ ತುಂಬಿಸಿಕೊಳ್ಳಬೇಕೆಂಬುದನ್ನು ನಿಮ್ಮ ಅರಿವಿಗೆ ತರುವ, ಇದನ್ನೆಲ್ಲ ನಿಜವಾದ ಸಂಧರ್ಭವೊಂದರಲ್ಲಿಟ್ಟು ಪ್ರಯೋಗಿಸಿ ಪರೀಕ್ಷಿಸಲು ಅವಕಾಶ ಕೊಡುವ ಆಟ…. ಎಂದೆಲ್ಲ ಈ ಆಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ. ನಮಗೆ ಒದಗಿಸಿದ ವಿವರಗಳೆಲ್ಲ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ನಿಜವಾದ ವಿವರಗಲಂತೆ. ಪ್ರತೀ ತಿಂಗಳೂ ಈ ಅರವತ್ತು ಪುಟಗಳನ್ನು ಮರುಪರಿಶೀಲಿಸಿ, ವಿವರಗಳನ್ನು ತಕ್ಕಂತೆ ಬದಲಾಯಿಸುತ್ತಾನಂತೆ. ಅಂತೂ ಅವನ ಪ್ರಕಾರ ಇದೆಲ್ಲ ನಿಜಕ್ಕೆ ಅತಿ ಹತ್ತಿರವಾದ ಸಂದರ್ಭವೊಂದನ್ನು ಸೃಷ್ಟಿಸಿತ್ತು. ಇದನ್ನು ನಿರ್ವಹಿಸಲು ನಾವು ಸಜ್ಜಾದೆವು. +ತಲೆತುಂಬ ಆಟ. ಕೈಯಲ್ಲಿ ಆ ಅರವತ್ತು ಪುಟಗಳನ್ನು ಹಿಡಿದುಕೊಂಡು ನಮ್ಮ ನಮ್ಮ ಕೋಣೆಗೆ ಹಿಂದಿರುಗಿದೆವು. ನಮ್ಮ ಗುಂಪಿನಲ್ಲಿ ನಾನು, ಉಚೆ ಮತ್ತು ಜೆಫ್. ಡಚ್ ಮೂಲದ ಜೆಫ್ ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆದವನು. ವಾಣಿಜ್ಯ ವಿಭಾಗದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿ ಸಣ್ಣ ವಯಸ್ಸಲ್ಲೇ ಎತ್ತರಕ್ಕೇರಿದ್ದ. ಉಚೆ ನಮ್ಮ ಜೊತೆಗಿದ್ದದ್ದು ನಮಗೆ ಖುಷಿಯಾಗಿತ್ತು. ಎಂದಿನಂತೆ ಈ ರಾತ್ರಿ ನಮ್ಮ ಮನರಂಜನೆ ಕಾರ್ಯಕ್ರಮ ನಡೆಯಲಿಲ್ಲ. ನಾಳೆ ಬೆಳಿಗ್ಗೆ ಆಟ ಆರಂಭವಾಗುವ ಮುನ್ನ ಕೊಟ್ಟಿದ್ದನ್ನೆಲ್ಲ ಓದಿ ಸನ್ನದ್ಧರಾಗಬೇಕೆಂಬ ಸ್ಪರ್ಧೆ ಒಳಗೊಳಗೇ ಶುರುವಾಗಿತ್ತು. ನಮ್ಮ ಗುಂಪಿನ ನಾವು ಮೂವರೂ ಪ್ರತ್ಯೇಕವಾಗಿ ಕೂತು ಎಲ್ಲವನ್ನೂ ಓದಿ, ನಂತರ ಒಂದೆಡೆ ಸೇರಿ ನಮ್ಮ ಪಾಲಿಗೆ ಬಂದ ಕಂಪನಿಯ ಸ್ಥಿತಿಗಳನ್ನು ಚರ್ಚಿಸಿದೆವು. ಆಟದ ನಿಯಮಗಳನ್ನು ಚರ್ಚಿಸಿದೆವು. ಆಟ ಒಳಗೆ ಇಳಿಯಲಾರಂಭಿಸಿತ್ತು. ರಾತ್ರಿ ಮಲಗಿದಾಗ ಒಂದೂವರೆ. +ಮರುದಿನ ಬೆಳಿಗ್ಗೆ ಪರೀಕ್ಷೆಗೆ ಹೊರಟವರಂತೆ ತಲೆತುಂಬ ನೂರು ಸಂಗತಿ ತುಂಬಿಕೊಂಡಿದ್ದೆವು. ಒಂದು ವಿಶಾಲವಾದ ಹಾಲ್‌ನಲ್ಲಿ ಆಟದ ವ್ಯವಸ್ಥೆ ಮಾಡಿದ್ದರು. ನಾಲ್ಕು ದೊಡ್ಡ ಟೇಬಲ್‌ಗಳನ್ನು ನಾಲ್ಕು ದಿಕ್ಕಿಗೆ ಇಟ್ಟು ಅದರ ಮೇಲೆ ಜಗತ್ತಿನ ದೊಡ್ಡ ನಕಾಶೆ ಹಾಸಿದ್ದರು. ಆಯಾ ದೇಶದ ಹೆಸರು ಬಿಟ್ಟರೆ ಬೇರೇನೂ ಇರಲಿಲ್ಲ. ನಮ್ಮ ಪಾಲಿಗೆ ಬಂದ ಕಂಪನಿಯ ಕಾರ್ಖಾನೆಯ ಒಂದು ಸಣ್ಣ ಪ್ಲಾಸ್ಟಿಕ್ ಅಚ್ಚನ್ನು ಅಲ್ಲಲ್ಲಿ ಇಟ್ಟಿದ್ದರು. ಉಚೆ ನಕಾಶೆಯಲ್ಲಿ ತನ್ನ ದೇಶವನ್ನು ಗುರುತಿಸಿ ಪುಲಕಿತನಾದ. ನಮಗೆಲ್ಲ ತೋರಿಸಿದ ವಿವರಗಳನ್ನೆಲ್ಲ ಗ್ರಹಿಸಲು. ಅನುಮಾನಗಳಿದ್ದರೆ ಸರಿಪಡಿಸಿಕೊಳ್ಳಲು ಅರ್ಧಗಂಟೆ ಕೊಡಲಾಯಿತು. ನಾವು ನಮ್ಮ ಸರಕುಗಳ ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಖರ್ಚು, ಸಾಗಣೆ, ನಮಗೆ ಬೇಕಾದ ಲಾಭ ಎಲ್ಲ ಎಣಿಸಿ ಯಾವ ಬೆಲೆಗೆ ಮಾರಬಹುದೆಂದು ಲೆಕ್ಕ ಹಾಕಿದೆವು. ಜೆಫ್ ಅಕೌಂಟೆಂಟ್ ಅದ್ದರಿಂದ ಚಕಚಕನೆ ಕೂಡಿ ಕಳೆಯುತ್ತ ಅದರಿಂದ ವರ್ಷದ ಕೊನೆಯಲ್ಲಿ ಲಾಭದ ಮೊತ್ತದ ಮೇಲಾಗುವ ಪರಿಣಾಮವನ್ನು ಅಂದಾಜು ಮಾಡಿದ. ಬಂದ ಹಣವನ್ನು ಎಲ್ಲಿ ತೊಡಗಿಸಬೇಕು, ಬ್ಯಾಂಕ್‌ನಿಂದ ಸಾಲ ತೆಗೆದೆರೆ ಆ ಬಡ್ಡಿಯ ದರದಲ್ಲಿ ಹೆಚ್ಚು ಲಾಭವೋ, ನಮ್ಮ ದುಡ್ಡೇ ತೊಡಗಿಸುವುದು ಒಳ್ಳೆಯದೋ ಎಂದು ತೂಗಿ ನೋಡಿದೆವು. ಎಲ್ಲವೂ ಬಹಳ ಸರಳವಾಗಿ ಕಂಡು ಎಲ್ಲ ಲೆಕ್ಕಾಚಾರದಂತೆ ನಡೆದೆರೆ ಭಾರೀ ಲಾಭ ಮಾಡುವ ಲಕ್ಷಣಗಳು ಕಂಡವು. +ಆಟ ಪ್ರಾರಂಭವಾಯಿತು. ತಿಂಗಳ ಕೊನೆಗೆ ಗುಪ್ತ ಟೆಂಡರು ಹಾಕಿ ಸರಕು ಮಾರಾಟ ಮಾಡಬೇಕಾಗಿತ್ತು. ಈ ತಿಂಗಳು ಎಲ್ಲೆಲ್ಲಿ ಯಾವ ವಸ್ತುವಿಗೆ ಬೇಡಿಕೆ ಇದೆ ಎಂದು ತಿಳಿಸುವ ವಿವರಗಳ ಪಟ್ಟಿ ಕೊಡಲಾಯಿತು. ಒಂದು ಚೀಟಿಯಲ್ಲಿ ನಾವು ಮಾರಬಯಸುವ ವಸ್ತುವಿನ ಬೆಲೆ ಮತ್ತು ಯಾವ ದೇಶಗಳಲ್ಲಿ ಎಷ್ಟೆಷ್ಟು ಎಂದು ಬರೆದು ಪೀಟೆರ್‌ಗೆ ಕೊಡಬೇಕು. ಇತರೆ ಗುಂಪುಗಳು ಎಷ್ಟು ಬೆಲೆ ನಮೂದಿಸಿಎ ಎಂದು ಪೀಟೆರ್ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಅತ್ಯಂತ ಕಡಿಮೆ ಬೆಲೆಗೆ ಮಾರಲು ಸಿಧ್ಧರಾದವರಿಗೆ ಮೊದಲು ಅವಕಾಶ. ಅವರು ಬೇಡ ಅಂದರೆ ಅದರ ನಂತರದ ಕಡಿಮೆ ಬೆಲೆ ನಮೂದಿಸಿದವರಿಗೆ. ಎಲ್ಲ ಚೀಟಿಗಳನ್ನು ಸೇರಿಸಿ, ಮಾರುಕಟ್ಟೆಯ ಪ್ರಕಾರ, ವಸ್ತುಗಳ ಪ್ರಕಾರ ವಿಂಗಡಿಸಿ ಪ್ರತಿ ಮಾರುಕಟ್ಟೆಯಲ್ಲೂ ಯಾರ ಟೆಂಡರು ಸ್ವೀಕಾರವಾಯಿತೆಂದು ಕೂಗಿ ಹೇಳುತ್ತಿದ್ದ. ಮೊದಲ ತಿಂಗಳು ನಮ್ಮ ಬೆಲೆಗಳಲ್ಲಿ ಹೆಚ್ಚಾಗಿ ಒಂದೇ ಒಂದು ಟೆಂಡರೂ ನಮಗೆ ದಕ್ಕಲಿಲ್ಲ. ಕೆಲವು ವಸ್ತುಗಳ ಬೆಲೆ ಇಳಿಸಿದ್ದರಿಂದ ಎರಡನೆಯ ತಿಂಗಳು ಉತ್ಪಾದನೆಯ ಕಾಲುಭಾಗದಷ್ಟು ಖರ್ಚಾಯಿತು. ಇನ್ನೆರಡು ತಿಂಗಳು ಹೀಗೆ ಆದರೆ ಕಚ್ಚಾ ವಸ್ತು ಖರೀದಿಗೆ, ನೌಕರರ ಸಂಬಳಕ್ಕೆ ದುಡ್ಡು ಸಾಲದೇ ಹೋಗುವ ಪರಿಸ್ಥಿತಿ ಬರಲಿದೆ ಎಂದು ಜೆಫ್ ಎಚ್ಚರಿಸಿದ. ಯಾವುದೂ ನಾವು ಅಂದುಕೊಂಡಂತೆ ನಡೆಯೆದೇ, ನಮ್ಮ ಲೆಕ್ಕಚಾರವೆಲ್ಲಾ ತಲೆಕೆಳಗಾಗಿ, ಮೊದಲು ಬಹಳ ಸರಳವಾಗಿ ಕಂಡಿದ್ದೆಲ್ಲ ನೂರಾರು ಕ್ಲಿಷ್ಟ ಹೆಣಿಗೆಗೆಳು ಸೇರಿಕೊಂಡಂತೆ ಕಾಣತೊಡಗಿದವು. ಪ್ರತಿ ತಂಡವೂ ತನ್ನದೇ ಆದ ತಂತ್ರ ರೂಪಿಸಿಕೊಂಡಿತ್ತು. ಟೆಂಡರು ತಮಗೆ ದಕ್ಕಿದೊಡನೆ ಆ ಗುಂಪಿನಲ್ಲಿ ಕೇಕೆ ಕೋಲಾಹಲ. ನಿಜಕ್ಕೂ ಅಲ್ಲೊಂದು ಭೀಕರವಾದ ಸ್ಪರ್ಧೆ ಏರ್ಪಟ್ಟಿತ್ತು. ಇನ್ನೆರಡು ತಿಂಗಳು ಕಳೆಯುವುದರಲ್ಲಿ ನಮ್ಮ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತು. ಹೇಗೆ ಬೆಲೆಗಳನ್ನು ಇಳಿಸಬಹುದು ಎಂದು ಯೋಚಿಸುತ್ತ, ಯಾವ ಕಾರ್ಖಾನೆಯಲ್ಲಿ ಎಷ್ಟು ಉತ್ಪಾದಿಸಬೇಕು, ಎಲ್ಲಿಂದ ಎಲ್ಲಿಗೆ ಸಾಗಿಸಿದರೆ ಲಾಭದಾಯಕ ಎಂದು ಕಂಡುಕೊಂಡಿದ್ದೆವು. ನಕಾಶೆಯ ಮೇಲೆ ಕೇವಲ ಗುರುತಾಗಿ ಕಾಣುವ ಕಾರ್ಖಾನೆಯ ವಿವರಗಳೆಲ್ಲ ನಮ್ಮ ನಾಲಿಗೆಯ ತುದಿಯಲ್ಲಿದ್ದವು – ಎಷ್ಟು ಕಾರ್ಮಿಕರು, ಏನು ಸಂಬಳ, ಉತ್ಪಾದನಾ ಸಾಮರ್ಥ್ಯ ಮತ್ತು ನಿಜವಾಗಿ ಈಗ ಎಷ್ಟು ತಯಾರಾಗುತ್ತಿದೆ ಇತ್ಯಾದಿ ಇತ್ಯಾದಿ. ಹೊಸ ತಂತ್ರಜ್ಞಾನ ಉಪಯೋಗಿಸಿ ನಾವು ಹೊಸ ಕಾರ್ಖಾನೆಗಳನ್ನು ತೆರೆಯಬಹುದಿತ್ತು. ಹಾಗೆ ಮಾಡಿದರೆ ಆರಂಭದ ಖರ್ಚು ಬಿಟ್ಟರೆ ಅತಿ ಕಡಿಮೆ ಬೆಲೆಯಲ್ಲಿ ಉತ್ಪಾದಿಸಬಹುದಿತ್ತು. ನಮ್ಮ ಈಗಿನ ಎರಡು ಕಾರ್ಖಾನೆಗಳಲ್ಲಿ ಹೆಚ್ಚು ಸಾಮರ್ಥ್ಯವಿದ್ದೂ ನಾವು ಅಷ್ಟು ಉತ್ಪಾದಿಸುತ್ತಿರಲಿಲ್ಲ. ಅದನ್ನೇ ಸರಿಮಾಡಬೇಕೆಂದು ನಿರ್ಧರಿಸಿ ನಿಯಮಗಳಿಗಾಗಿ ಪುಟಗಳನ್ನು ತಿರುವಿ ಹಾಕಿದೆವು. ಅಲ್ಲಿ ಕಾರ್ಮಿಕರ ಸಮಸ್ಯೆಯೆಂತೆ. ಎರಡು ಬೇಡಿಕೆಗಳು ಈಡೇರಿದರೆ ಈಗಿನದ್ದಕ್ಕಿಂತ ಶೇಕಡಾ ಹತ್ತರಷ್ಟು ಹೆಚ್ಚು ಉತ್ಪಾದಿಸಬಲ್ಲದು. ಅಲ್ಲಿದ್ದ ಯಂತ್ರವೊಂದು ಹಳೆಯದಾಗಿದ್ದು ವರ್ಷಕ್ಕೆ ನಾಲ್ಕೈದು ಬಾರಿಯಾದರೂ ಅಪಘಾತವಾಗಿ ಕಾರ್ಮಿಕರು ಗಾಯಗೊಳ್ಳುತ್ತಿದ್ದರು. ಆ ಯಂತ್ರವನ್ನು ಬದಲಾಯಿಸಬೇಕು ಅನ್ನುವುದು ಮೊದಲ ಬೇಡಿಕೆ. ಅದಕ್ಕೆ ತಗಲುವ ವೆಚ್ಚ ಒಂದು ಲಕ್ಷ. ಎರಡನೇ ಬೇಡಿಕೆ ಶೇಕಡಾ ಹತ್ತರಷ್ಟು ಹೆಚ್ಚು ಸಂಬಳ. ಜೆಫ್ ಮತ್ತೆ ಕೂಡಿಸಿ ಕಳೆದು ಗುಣಿಸಿ ಲಾಭವಿಲ್ಲ ಬೇಡ ಅಂದುಬಿಟ್ಟ. ಅವನ ಪ್ರಕಾರ ಇಷ್ಟು ಖರ್ಚು ಮಾಡಿ ಹೆಚ್ಚು ಉತ್ಪಾದನೆ ಪಡೆಯತೊಡಗಿದರೆ ಅದರ ನಿಜವಾದ ಲಾಭ ಬರತೊಡಗುವುದು ನಾಲ್ಕನೇ ವರ್ಷದಿಂದ. ಈ ಆಟ ನಾವು ಆಡುವುದೇ ಮೂರು ವರ್ಷದವರೆಗಾದ್ದರಿಂದ ಈ ಖರ್ಚು ಅನಗತ್ಯ ಅಂದ. ಬದಲಿಗೆ ಹೊಸ ತಂತ್ರಜ್ಞಾನದ ಹೊಸ ಕಾರ್ಖಾನೆ ಆರಂಭಿಸೋಣ ಅಂದ. ನನ್ನ ಮತ್ತು ಉಚೆಯ ಅಭಿಪ್ರಾಯ ಬೇರೆಯಾಗಿತ್ತು. ಈ ಕಾರ್ಖಾನೆಯ ಸಮಸ್ಯೆ ಬಗೆಹರಿಸುವುದು ಒಳ್ಳೆಯ ಆಡಳಿತದ ಲಕ್ಷಣ ಎಂದು ನಾವು ಅಂದೆವು. ಅದು ಯಾಕೆ ಸರಿಯಾದ ನಿರ್ಧಾರವಲ್ಲ ಎಂದು ನಮಗೆ ಮನವರಿಕೆ ಮಾಡಿಕೊಡಲು ಜೆಫ್ ತನ್ನ ಲೆಕ್ಕಾಚಾರವನ್ನು ಮೊದಲಿನಿಂದ ವಿವರಿಸತೊಡಗಿದ. “ಸರಿ ಹೋಗಲಿ ಬಿಡು” ಅಂದ ಉಚೆ. ಹೊಸ ಕಾರ್ಖಾನೆಗೆ ಸಾಕಾಗುವಷ್ಟು ಹಣ ನಮ್ಮಲ್ಲಿರಲಿಲ್ಲ. ಬ್ಯಾಂಕ್ ಸಾಲ ತೆಗೆಯಬೇಕೆಂದು ಜೆಫ್ ಸೂಚಿಸಿದ. ಒಂದು ಕಾರ್ಖಾನೆ ಮುಚ್ಚಲು ಇಂತಿಷ್ಟು ದುಡ್ಡ ಅಲ್ಲಿಯ ಪ್ರತಿ ಕಾರ್ಮಿಕರಿಗೂ ಕೊಡಬೇಕು ಎಂಬ ನಿಯಮವಿತ್ತು. ಅದರ ನಂತರ ಆ ಜಾಗ ಮಾರಬಹುದು. ಇದೆಲ್ಲ ಲೆಕ್ಕಹಾಕಿ ಒಂದು ಕಾರ್ಖಾನೆ ಮುಚ್ಚಿಬಿಡುವಾ ಅಂದ. “ಅವಸರ ಮಾಡುವುದು ಬೇಡ. ಯೋಚಿಸೋಣ” ಎಂದು ನಾವಂದೆವು. ನಿಯಮಗಳ ಒಳಹೊಕ್ಕು ನೋಡುವ, ಪ್ರತಿಯೊಂದನ್ನೂ ರೂಪಾಯಿ ಪೈಸೆಗಳಲ್ಲಿ ಅಳೆದು, ಕೂಡಿ ಕಳೆದು ಜೋಡಿಸಿ ಚಕಚಕನೆ ಲೆಕ್ಕ ಹಾಕುವ, ಲಾಭ ನಷ್ಟದ ಮೊತ್ತವನ್ನು ಕರಾರುವಾಕ್ಕಾಗಿ ಹೇಳುವ ಅವನ ಶಕ್ತಿಯ ಎದುರು ನಮ್ಮ ಯಾವ ಮಾತೂ ನಡೆಯದ ಹಾಗಾಗತೊಡಗಿತ್ತು. ಜೆಫ್‌ನ ಲೆಕ್ಕದ ತರ್ಕದ ಖಡ್ಗ ಎಲ್ಲವನ್ನೂ ನಿರ್ದಯವಾಗಿ ತುಂಡರಿಸಬಲ್ಲದಾಗಿತ್ತು. ನಮ್ಮ ಪ್ರತಿ ಅನಿಸಿಕೆಗೂ ಅವನ ಹತ್ತಿರ ತರ್ಕಬದ್ಧವಾದ ಅಂಕಿಸಂಖ್ಯೆಗಳ ಬೆಂಬಲವಿರುವ ಉತ್ತರವಿರುತ್ತಿತ್ತು. ಜೆಫ್ ಟೀ ತರಲು ಎದ್ದು ಹೋದಾಗ “ಈತ ಅಸಾಧ್ಯದ ಮನುಷ್ಯ………ಒಂದು ದಿನ ಇವನು ಕಂಪನಿಯ ಮುಖ್ಯಸ್ಥನಾಗಬಲ್ಲ…….” ಎಂದು ಉಚೆ ನಿಟ್ಟುಸಿರಿಟ್ಟ. +ಆ ಹೊತ್ತಿಗೆ ಪೀಟರ್ ಮಾರುಕಟ್ಟೆಗಳ ಸಂಶೋಧನಾ ವರದಿ ಲಭ್ಯವಿದೆ ಎಂದು ಪ್ರಕಟಿಸಿದ. ಅದರ ಬೆಲೆ ಐದು ಸಾವಿರ. ಅದು ಪ್ರತಿ ಮಾರುಕಟ್ಟೆಯ ವಿವರಗಳು, ಕಾಲಕಾಲಕ್ಕೆ ಅದರ ಏರಿಳಿತ, ಯಾವ ದೇಶಗಳಲ್ಲಿ ಇನ್ನು ಮುಂದೆ ಯಾವ ವಸ್ತುಗಳಿಗೆ ಬೇಡಿಕೆಯಿದೆ, ಅಲ್ಲಿ ಅದನ್ನು ಮಾರುವ ನಿಯಮಗಳೇನು ಎಂದೆಲ್ಲ ಸೂಚಿಸುವ ಹತ್ತು ಪುಟಗಳ ವರದಿ. ನಾವೂ ಅದನ್ನು ಕೊಂಡೆವು. ಜೆಫ್ ಆಮೂಲಾಗ್ರ ಅದನ್ನು ಓದಿ, ನಮಗೆ ಅದನ್ನು ಓದಲು ಕೊಟ್ಟು ತಾನು ಏನೋ ಲೆಕ್ಕದಲ್ಲಿ ಮಗ್ನನಾದ. “ಅಫ್ರಿಕಾದಲ್ಲಿ ನಾವು ವ್ಯಾಪಾರ ವಿಸ್ತರಿಸಿದರೆ ಲಾಭ ಇದೆ” ಎಂದು ಏನೋ ಕಂಡುಹಿಡಿದವನಂತೆ ಉತ್ಸಾಹದಲ್ಲಿ ಹೇಳಿದ. “ಈಗ ಸದ್ಯಕ್ಕೆ ಬೇಡ. ಇನ್ನೆರಡು ತಿಂಗಳಾಗಲಿ” ಅಂದ. +ಆರು ತಿಂಗಳ ವ್ಯವಹಾರ ಮುಗಿದು ನಾವು ಊಟಕ್ಕೆ ಹೊರಟಾಗ ಇಡೀ ವಾತಾವರಣಕ್ಕೆ ಬೇರೆಯದೇ ರಂಗೇರಿತ್ತು. ಕಡಿಮೆ ಬೆಲೆಯಿಟ್ಟು ಟೆಂಡರ್ ಗಿಟ್ಟಿಸಿಕೊಂಡವರು ಅದು ಹೇಗೆ ಅಷ್ಟು ಕಡಿಮೆ ಬೆಲೆಗೆ ಮಾರಬಹುದೆಂದು ಅಸೂಯೆಯಲ್ಲಿ ಲೆಕ್ಕಹಾಕುವುದು, ಇನ್ನೊಬ್ಬರ ತಂತ್ರ ಊಹಿಸುವುದು, ಪ್ರತಿಯೇಟು ಹಾಕುವುದು, ಕೋಪ, ಕೃತಕ ನಗೆ, ಪಿಸುಮಾತಿನ ಚರ್ಚೆಗಳು, ಪರಸ್ಪರ ಭಯಾನಕ ಸ್ಪರ್ಧೆ, ಗುಟ್ಟುಗಳು ಚಕಚಕನೆ ಲಾಭನಷ್ಟ ಎಣಿಸುವುದು…… ಹೀಗೆ ರಣರಂಗದ ಕಳೆಯೇರಿತ್ತು. ಊಟದ ಬಿಡುವಿನಲ್ಲಿ ಯರೂ ಪರಸ್ಪರ ಬೆರೆಯದೇ ತಮ್ಮ ತಮ್ಮದೇ ಗುಂಪುಗಳಲ್ಲಿ ಚರ್ಚಿಸುವುದರಲ್ಲಿ ಮಗ್ನರಾಗಿದ್ದರು. ಕಿಟಕಿಯಿಂದ ಹೊರಗಿನ ಸಮುದ್ರವನ್ನೇ ನೋಡುತ್ತ ನಿಂತ ಉಚೆ ಯಾಕೋ ಅನ್ಯ ಮನಸ್ಕನಾಗಿದ್ದಂತೆ ಅನಿಸಿತು. “ಏನು ಉಚೆ, ಹೇಗೆ ಹೆಚ್ಚು ಲಾಭ ಮಾಡುವುದು ಅಂತ ಯೋಚಿಸುತ್ತಿದ್ದೀಯಾ?” ಅಂದೆ. “ನಾವು ಆಫ್ರಿಕಾದಲ್ಲಿ ಹೊಸ ಕಾರ್ಖಾನೆ ಹಾಕಬಾರದು. ಅಲ್ಲಿಯ ಮಾರುಕಟ್ಟೆಗೆ ಹೋಗಬಾರದು” ಅಂದ. “ಯಾಕೆ?” ಅಂದೆ, ಜೆಫ್‌ನ ಲೆಕ್ಕಾಚಾರದಲ್ಲಿ ಏನೋ ಊನ ಹುಡುಕಿದ್ದಾನೆ ಅಂದುಕೊಂಡು. “ಯಾಕೆಂದರೆ ಅದು ಜನರನ್ನು ನಾಶ ಮಾಡುತ್ತದೆ” ಅಂದ. ನಾನು ಬೆಚ್ಚಿದೆ. ಇವನು ತನ್ನ ದೇಶದ ನಕಾಶೆ ನೋಡಿ ಭಾವುಕನಾಗಿದ್ದಾನೆ ಅನಿಸಿ ರಿಲ್ಯಾಕ್ಸ್ ಅಂದೆ. “ನೀನೂ ಯಾಕೆ ಹೀಗನ್ನುತ್ತೀ…… ನೋಡು ಜೆಫ್‌ಗಿಂತ ನಿನಗೇ ಹೆಚ್ಚು ಇದು ಅರ್ಥವಾಗಬೇಕು. ನೂರಾರು ಜಾತಿ ಧರ್ಮ ದೇವರು ಇರುವ ನಿಮಗೂ ನಮಗೂ ಆಳದಲ್ಲಿ ಬಹಳ ಅಂತರವಿಲ್ಲ. ನಮ್ಮಲ್ಲಿ ಪ್ರತಿ ಊರಿಗೂ ಒಂದೊಂದು ಜೀವನ ವಿಧಾನವಿದೆ……” ಅಂದ. ನನಗಂತೂ ಅವನು ಏನನ್ನು ಉದ್ದೇಶಿಸಿ ಮಾತಾಡುತ್ತಿದ್ದಾನೆ ಅನ್ನುವುದು ಅರ್ಥವಾಗಲೇ ಇಲ್ಲ. ಊಟಕ್ಕೆ ಕೂತಾಗ “ನಿನ್ನ ವಾದ ನನಗೆ ಅರ್ಥವಾಗುತ್ತಿಲ್ಲ” ಅಂದೆ. “ನಾನು ವಾದ ಮಾಡುತ್ತಿಲ್ಲ. ಇದ್ದ ಸಂಗತಿ ಹೇಳಿದೆ ಅಷ್ಟೆ” ಅಂದ. ಆಮೇಲಿನ ದೀರ್ಘ ಮೌನ ಮುರಿದು ತನ್ನ ಬಗ್ಗೆ ತನ್ನ ದೇಶದ ಬಗ್ಗೆ ಬಹಳಷ್ಟು ಹೇಳಿದ. +“ನಾವೆಲ್ಲ ಇನ್ನೂ ಗುಲಾಮರು. ಹೆಸರಿಗೆ ಮಾತ್ರ ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ನನ್ನ ದೂರದ ಸಂಬಂಧಿಯೊಬ್ಬ ಅಧ್ಯಕ್ಷನಾಗಿದ್ದ. ಅವನನ್ನು ಕೊಂದು ಈಗಿರುವಾತ ಮಿಲಿಟರಿ ಆಡಳಿತ ತಂದ. ಚುನಾವಣೆಯ ನಾಟಕವಾಡಿ ಹದಿನೈದು ವರ್ಷಗಳಿಂದ ಇದ್ದಾನೆ. ನಮ್ಮಲ್ಲಿ ಪ್ರೆಸಿಡೆಂಟ್ ಅನ್ನುವ ಶಬ್ದವನ್ನು ಅವನಿಗೆ ಬಿಟ್ಟರೆ ಬೇರೆ ಯಾರಿಗೂ ಬಳಸಬಾರದು. ನಮ್ಮ ದೇಶದಲ್ಲಿ ನಮ್ಮ ಕಂಪನಿಗೆ ಚೇರ್‌ಮನ್ ಇದ್ದಾನೆ. ನಿಮ್ಮಲ್ಲಿಯ ಹಾಗೆ ಪ್ರೆಸಿಡೆಂಟ್ ಇಲ್ಲ…… ನಮ್ಮ ದೇಶದ ಒಂದು ಕಾಲದಲ್ಲಿ ಬಹಳ ಕೋಕೋ ಬೆಳೆಯುತ್ತಿತ್ತು. ಹಿಂದಿನ ಆಡಳಿತ ಅದರ ರಫ್ತಿಗಾಗಿ ದೊಡ್ಡ ಸಂಗ್ರಹಾಲಯಗಳನ್ನು ನಿರ್ಮಿಸಿತ್ತು. ಅದು ಹಿಂದಿನ ಸರ್ಕಾರದ ದೊಡ್ಡ ಸಾಧನೆಯಾಗಿ ಜನರಿಗೆ ಕಂಡಿದ್ದರಿಂದ ಅವುಗಳನ್ನೆಲ್ಲ ನಾಶಮಾಡಿದ. ಜನರನ್ನು ಬಡವರನ್ನಾಗಿ ಮಾಡಿದ. ಆದರೆ ಅವರ ಕೊಳ್ಳುವ ಆಸೆಗಳನ್ನು ಹೆಚ್ಚಿಸಿದ. ಈ ರಾಜಕೀಯ ಹುನ್ನಾರಿನಲ್ಲಿ ಬೇರೆ ದೇಶದ ದೊಡ್ಡ ಕಂಪನಿಗಳೆಲ್ಲ ಶಾಮೀಲಾಗಿದ್ದವು. ನಮ್ಮಲ್ಲಿ ಏನೂ ತಯಾರಾಗದಂತೆ ಮಾಡಿದ. ನಾನು ಹಾಕಿರುವ ಈ ಶರ್ಟು ಕೂಡ ಬೇರೆ ಯಾರೋ ಮಾಡಿ ನಮಗೆ ಕೊಡಬೇಕು. ಇದ್ದ ದೇಶೀ ಉದ್ಯಮಗಳೆಲ್ಲ ಈ ಹೊಸ ತಂತ್ರಜ್ಞಾನ ಇಲ್ಲದೇ, ಸರ್ಕಾರದ ಬೆಂಬಲವಿಲ್ಲದೇ ಸೊರಗಿ ಸಾಯುತ್ತಲಿವೆ. ನಮ್ಮ ನೆಲದಲ್ಲಿ ಒಂದಿಷ್ಟು ಪೆಟ್ರೋಲ್, ಎಣ್ಣೆ ಸಿಗುವುದರಿಂದ ಬದುಕಿದ್ದೇವೆ. ಅದೆಲ್ಲ ಸರ್ಕಾರಕ್ಕೆ ಸೇರಿದ್ದು. ಆಹಾರ ವಿತರಣೆಯ ಸೂತ್ರ ಇರುವುದು ಸರ್ಕಾರದ ಕೈಯಲ್ಲಿ. ಅವರು ವಿತರಿಸುವುದು ದೊಡ್ಡ ಕಂಪನಿಗಳ ಉತ್ಪಾದನೆಗಳು. ನಮ್ಮ ರುಚಿ, ವಾಸನೆ, ಬಟ್ಟೆ, ಆಹಾರದ ಪ್ರಮಾಣ ಬದಲಾಗತೊಡಗಿದೆ. ಎಲ್ಲರ ಮನೆ ಊಟವೂ ಒಂದೇ ರೀತಿಯಾಗುತ್ತಲಿದೆ. ಯಾರಿಗೂ ವೈವಿಧ್ಯ ಬೇಕಿಲ್ಲ. ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಮಾರುವುದು ಬೇಕು. ಹೇರದೇ ಇದ್ದರೆ, ಆಯ್ಕೆ ಇದ್ದರೆ ಯಾರು ತಾನೆ ಕೊಳ್ಳುತ್ತಾರೆ? ನಾವು ಅವರಿಗಾಗಿ ದುಡಿಯುವುದು, ಅವರು ಮಾಡಿದ್ದನ್ನು ಕೊಳ್ಳುವುದು. ನಾವೆಲ್ಲ ಕಡಿಮೆ ಬೆಲೆಗೆ ಸಿಗುವ ಕೂಲಿಗಳಾಗುತ್ತಿದ್ದೇವೆ. ನನ್ನ ಮನೆಯಲ್ಲಿ ನನ್ನ ಇಬ್ಬರು ಚಿಕ್ಕಪ್ಪಂದಿರು ಕೆಲಸ ಕಳಕೊಂಡು ಕೂತಿದ್ದಾರೆ. ಒಬ್ಬನಂತೂ ಕೆಲಸ ಮಾಡುವಾಗ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ……..” +ಉಚೆಯ ಮಾತುಗಳನ್ನು ಕೇಳಿ ನಾನು ಬೆರಗಾದೆ. ಅವನೊಳಗೆ ಇಂಥದ್ದೆಲ್ಲ ಇದೆ ಅನ್ನುವುದು, ಅವನು ಹೀಗೆಲ್ಲ ಯೋಚಿಸುತ್ತಾನೆ ಅನ್ನುವುದು ನನ್ನ ಕಲ್ಪನೆಯ ಆಚೆಯದಾಗಿತ್ತು. ಅವನು ತನ್ನ ಮಾತಲ್ಲಿ ಏನೆಲ್ಲ ಮೂಡಿಸಿದ. ಮನೆಯ ಒಳಗಿನ ಕತ್ತಲು, ಊಟದ ತಟ್ಟೆಗಳು, ಕೆಲಸ ಕಳಕೊಂಡ ಚಿಕ್ಕಪ್ಪಂದಿರ ಖಾಲೀನೋಟ, ಹಾಡುಗಳು,ಹಾಡುವಾಗ ಕಂಪಿಸಿದ ದನಿಗಳೂ,ಮರೆತುಹೋದ ಸಾಲುಗಳು, ನಿದ್ದೆಗೆಟ್ಟಕಣ್ಣುಗಳು, ಜೊತೆಜೊತೆಗೇ ನಂಬಿಕೆಗಳೂ, ಕನಸುಗಳು, ಓಡಿಬಂದ ಮಕಳನ್ನು ತೆಕ್ಕೆಗೆ ಸೇರಿಸಿಕೊಳ್ಳುವ ತೋಳುಗಳು, ಪ್ರೀತಿಯಲ್ಲಿ ಅರಳಿದ ನಗುವಿನಲ್ಲಿ ಹೊಳೆವೆ ಹಲ್ಲುಗಳು, ಹೆಂಡತಿಯನ್ನು ಪ್ರೀತಿಯಿಂದ ತಡವಲಾರದ ಹಾಗೆ ಮಾಡಿದ, ಧಡಕ್ಕನೆ ನಿಂತು ಹೋದ ಜೀವನ ಚಕ್ರಗಳು…… ನಕಾಶೆಯ ಮೇಲಿನ ಅಚ್ಚಿನ ಬೊಂಬೆಗಳ ಸರಿದಾಟವನ್ನು ಬರೀ ಜೆಫ್‌ನ ಲೆಕ್ಕದಲ್ಲಿ ತೂಗಿ ನೋಡದೇ, ಅದಕ್ಕೆ ಅಂಟಿಕೊಂಡ ನೂರಾರು ಹೆಣಿಗೆಗಳನ್ನು ಬಿಚ್ಚತೊಡಗಿದ. ನಾನು ಸುಮ್ಮನೇ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತ ಕೂತೆ. “ತಡವಾಯಿತು ಬನ್ನಿ” ಎಂದು ಜೆಫ್ ಎದ್ದು ಹೋದ. +ಆಟ ಮತ್ತೆ ಆರಂಭವಾಗಿತ್ತು. ಆಟದ ಮತ್ತು ಎಲ್ಲರ ತಲೆಗೇರಿತ್ತು. “ಉಚೆಗೆ ತಲೆಕೆಟ್ಟಿದೆ” ಎಂದು ಜೆಫ್ ನನ್ನ ಕಿವಿಯಲ್ಲಿ ಉಸುರಿದ. ಉಚೆಯ ಜೊತೆ ಹೆಚ್ಚು ವಾದ ಮಾಡದೇ ಸಧ್ಯಕ್ಕೆ ಆಫ್ರಿಕಾದಲ್ಲಿ ವಿಸ್ತರಣೆ ಬೇಡವೆಂದು ನಿರ್ಧರಿಸಿದೆವು. ಎಲ್ಲರೂ ತಮ್ಮ ಸರ್ವ ಶಕ್ತಿಯನ್ನೂ ಚಾಣಾಕ್ಷತೆಯನ್ನೂ ಪಣಕ್ಕೆ ಒಡ್ಡಿದಂತೆ ಆಡುತ್ತಿದ್ದರು. ಆಟ ಮುಂದುವರಿಯುತ್ತಿದ್ದ ಹಾಗೆ ಅದರ ನಿಯಮಗಳೆಲ್ಲ ನಮಗೆ ಎಂದಿನಿಂದಲೂ ಗೊತ್ತಿದ್ದವೇನೋ ಎಂಬಂತೆ ಕರಗತವಾಗಿದ್ದವು. ಒಮ್ಮೊಮ್ಮೆಯಂತೂ ಈ ಆಟದ ನಿಯಮಗಳೇ ನಮ್ಮನ್ನು ನಿಯಂತ್ರಿಸುತ್ತಿವೆ ಅನಿಸುತ್ತಿತ್ತು. ಎರಡು ಬಾರಿ ನಮ್ಮ ಲೆಕ್ಕಾಚಾರ ತಲೆಕೆಳಗಾಗಿ ಸಿದ್ಧವಸ್ತುಗಳು ಮಾರಾಟವಾಗದೇ ಪೇರತೊಡಗಿದ್ದವು. ವರ್ಷದ ಕೊನೆಗೆ ಎಲ್ಲರೂ ವಾರ್ಷಿಕ ವರದಿ ಪ್ರಕಟಿಸಿದಾಗ ನಾವು ನಷ್ಟದಲ್ಲಿಲ್ಲವಾದರೂ ಕೊನೆಯ ಸ್ಥಾನದಲ್ಲಿದ್ದೆವು. ಜೆಫ್‌ಗೆ ಯೋಚನೆಗಿಟ್ಟುಕೊಂಡಿತ್ತು. ಯಾವಗಲೂ ಗೆಲ್ಲಬೇಕು ಅನ್ನುವ ಪೈಕಿ ಅವನು. ರಾತ್ರಿ ಊಟಕ್ಕೆ ಕೂತಾಗ “ನಾಳೆ ನಾವೆಲ್ಲ ಸರಿಯಾಗಿ ಯೋಚಿಸಿಕೊಂಡು ಬರಬೇಕು. ಇವತ್ತಿನ ಹಾಗೆ ಮಾಡಿದರೆ ನಾವು ಕೊನೆಯವರೆಗೂ ಕೊನೆಯ ಸ್ಥಾನದಲ್ಲೇ ಇರುತ್ತೇವೆ” ಅಂದ. “ಬೇಗೆ ಮಲಗಿಕೊಳ್ಳಿ…… ಚೆನ್ನಾಗಿ ನಿದ್ದೆ ಮಾಡಿ” ಎಂದು ಹೋದ. +ಅದಾದ ಮೇಲೆ ನಾನು ಮತ್ತು ಉಚೆ ಬಹಳ ಹೊತ್ತು ಮಾತಾಡುತ್ತ ಕೂತೆವು. ಅವನಿಗೆ ನನ್ನ ಬಗ್ಗೆ, ನಮ್ಮ ದೇಶದ ಬಗ್ಗೆ ಏನೇನೆಲ್ಲ ಹೇಳಿದೆ. ನಮ್ಮ ಜೀವನದ ಆಚಾರಗಳನ್ನು, ನಂಬಿಕೆಗಳನ್ನು, ಮದುವೆಯ ಕಗ್ಗಂಟುಗಳನ್ನು, ಮಧ್ಯಮ ವರ್ಗದ ಕಾರ್ಮಿಕ ಕುಟುಂಬದ ನನ್ನ ತಂದೆತಾಯಿಯರ ಆಸೆಗಳನ್ನು, ನನು ಇಂಥ ಕೆಲಸದಲ್ಲಿರುವುದು ಕಾರ್ಮಿಕನಾದ ನನ್ನ ತಂದೆಗೆ ಕೊಟ್ಟ ಅಭಿಮಾನವನ್ನು ಹೇಳುತ್ತ ಹೇಳುತ್ತ ಹಳಿತಪ್ಪಿದೆ. ಗಾಂಧಿಯ ಬಗ್ಗೆ ಹೇಳಿದೆ, ನಲವತ್ತೇಳರ ಸ್ವಾತಂತ್ರ್ಯದ ಬಗ್ಗೆ, ದೇಶದ ರಾಜಕೀಯದ ಬಗ್ಗೆ ಹೇಳಿದೆ, ನನ್ನ ನಿದ್ದೆಗೇಡಿಗೆ ಕಾರಣವಾಗುವ ತಲ್ಲಣಗಳನ್ನು ಹೇಳಿದೆ, ನನ್ನ ಬಾಲ್ಯದ ಬಗ್ಗೆ ಹೇಳಿದೆ, ಹೆಂಡತಿಯ ಬಗ್ಗೆ ಹೇಳಿದೆ, ಮೈಮೇಲೆ ಗಣ ಬರುವುದನ್ನು ರಂಗಾಗಿ ವಿವರಿಸಿದೆ, ಪತ್ರೊಡೆಯ ರುಚಿ ಹೇಳಿದೆ…… +ತೀರಾ ಮಾತಾಡಿದೆ ಎಂದು ಕಸಿವಿಸಿಪಡುತ್ತ ರ್ಮಿಗೆ ಹೋಗಿ ಮಲಗಿದೆ. ಸರಿಯಾಗಿ ನಿದ್ದೆ ಬರಲಿಲ್ಲ. ಮರುದಿನ ಬೆಳಗ್ಗೇ ಜೆಫ್ ನನ್ನ ರೂಮಿಗೆ ಬಂದು ತಾನು ಯೋಚಿಸಿದ ತಂತ್ರಗಳನ್ನು ಹೇಳಿದ. ಹಿಂದಿನ ದಿನ ಉಚೆ ಆಡಿದ ಮಾತುಗಳು ನನ್ನನ್ನು ಭಾಜಿಸಿದ್ದವು. ಈ ಆಟ ಹೇಗೆ ಕಾಡುತ್ತಿತ್ತೆಂದರೆ ನಡು ರಾತ್ರಿ ಎಚ್ಚರಾದಾಗ ಥಟ್ಟನೆ ಏನೋ ಹೊಳೆದಿತ್ತು. ಎದ್ದು ನೀರು ಕುಡಿದು ಮಲಗುವಾಗಲೂ ಅದೇ ಯೋಚನೆ. ನಮ್ಮ ಒಳಗಿನ ಕಾಮದಂಥ ಯಾವುದೋ ಪ್ರಕೃತಿಯನ್ನು ಹೊಡೆದೆಬ್ಬಿಸಿದ ಹಾಗಿತ್ತು. ಯಾವುದೂ ರುಚಿಸದ ಹಾಗೆ, ಯಾರ ಜೊತೆಯೂ ಬೆರೆಯದೆ ನಮ್ಮ ನಮ್ಮ ಗುಂಪುಗಳಲ್ಲಿ ನಮ್ಮನ್ನು ಕಟ್ಟಿಹಾಕಿದ ಇದರ ಹಿಡಿತಕ್ಕೆ ತಲ್ಲಣಿಸಿದೆ. ಎರಡು ದಿನಗಳಿಂದ ಅರ್ಧ ಓದಿಟ್ಟ ಪುಸ್ತಕ ಮುಂದುವರಿಸಲಾಗಿರಲಿಲ್ಲ. ಹಾಡು ಕುಣಿತ ಹರಟೆಗಳಿಲ್ಲ. ಸಮುದ್ರ ದಂಡೆಯ ಮೇಲೆ ವಾಕಿಂಗ್ ಇಲ್ಲ. ಬರೀ ಇದೇ. +ಬೆಳಗಿನ ತಿಂಡಿಯಾಗಿ, ಆಟ ಶುರುವಾಗಿದ್ದೇ ಜೆಫ್ ಆಫ್ರಿಕಾದ ಮಾತೆತ್ತಿದ. ಉಚೆ ಸಾಧ್ಯವೇ ಇಲ್ಲ ಅಂದ. ನಮಗೆ ಉಚೆಯದು ಅತಿಯಾಯಿತು ಅನಿಸತೊಡಗಿತ್ತು. ನಾವು ಆಫ್ರಿಕಾದಲ್ಲಿ ವ್ಯಾಪಾರ ವಿಸ್ತರಿಸದೇ ಬೇರೆ ಉಪಾಯವಿರಲಿಲ್ಲ. ಬೆರೇ ಯಾವ ತಂಡವೂ ಇನ್ನೂ ಅಲ್ಲಿ ಕಾಲಿಟ್ಟಿರಲಿಲ್ಲ. ಅವರಿಗಿಂತ ಮುಂಚೆಯೆ ನಾವು ಹೋಗದಿದ್ದರೆ ಲಾಭ ಹೆಚ್ಚಿಸುವುದು ಸಾಧ್ಯವೇ ಇರಲಿಲ್ಲ. ನಾನು ಅವನಿಗೆ ನಮಗೆ ಒದಗಿಸಿದ್ದ ಪುಟಗಳಿಂದ ವಿವರಗಳನ್ನು ಎತ್ತಿ ತೋರಿಸುತ್ತ ಯಾಕೆ ನಾವು ಅಲ್ಲಿ ಹೋಗಬೇಕು ಎಂದು ಹೇಳಲು ಪ್ರಯತ್ನಿಸಿದೆ. ಏನನ್ನು ಹೇಳಿದರೂ “ಅದೇ, ಅದೇ ಕಾರಣಕ್ಕೆ ನಾನು ಬೇಡ ಅನ್ನುವುದು” ಎನ್ನುವುದು. ಜೆಫ್ ಅವನಿಗೆ “ಇಷ್ಟೊಂದು ಭಾವುಕವಾಗಿ, ಮಳ್ಳನ ಹಾಗೆ ಆಡಬೇಡ. ನಿನ್ನ ದೇಶದಲ್ಲಿ ಏನಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಈ ಪುಟಗಳಲ್ಲಿ ಎಷ್ಟಿದೆಯೋ ಅಷ್ಟು. ಇದೊಂದು ಆಟ ಅನ್ನುವುದು ತಿಳಕೋ” ಎಂದ. ಉಚೆ ತನ್ನ ಪಟ್ಟು ಬಿಡಲಿಲ್ಲ. “ಇದು ಆಟ. ಈಗ ಮಾತ್ರವಲ್ಲ ಯಾವಗಲೂ ಇದು ಹೀಗೇ. ಕಾಗದದ ಮೇಲಿನ ವಿವರಗಳು, ನಕಾಶೆಯ ಮೇಲಿನ ಹೆಸರುಗಳನ್ನು ನೋಡಿಕೊಂಡು ಅಧಿಕಾರ ಶಕ್ತಿಯ ತಂತಿಗಳನ್ನು ಎಳೆದಾಡಿಸುವುದು…… ಜನರನ್ನು ಕೊಲ್ಲುವ ಆಟ ಆಡಿಸಿದರೆ ನೀನು ಆಡುತ್ತೀಯಾ? ಅದರಲ್ಲಿ ನಿನ್ನ ಬಳಗದವರೆಲ್ಲ ಇದ್ದು ಇಂತಿಂಥವರನ್ನು ಕೊಂದೆ ಎಂದು ಬೊಂಬೆಗಳನ್ನು ಬದಿಗೆ ಸರಿಸಿಡುವ ಆಟವನ್ನು ಆಡುತ್ತೀಯಾ?” ಅಂದ. ಉಚೆಯ ಮಾತುಗಳು ಹರಿತವಾಗಿದ್ದವು. ಜೆಫ್ ಅವನನ್ನು ಬಗೆಬಗೆಯಾಗಿ ಸಮಾಧಾನಪಡಿಸಲು ನೋಡಿದ. “ನಾವೀಗ ನಷ್ಟದಲ್ಲಿಲ್ಲವಲ್ಲ. ಹೆಚ್ಚು ಲಾಭ ಬೇಡ. ಹೀಗೆಯೇ ನಿಭಾಯಿಸೋಣ” ಅಂದ. ಉಚೆಯ ಮಾತಿಗೆ ಜೆಫ್ “ಅಂದರೆ ನಷ್ಟದಲ್ಲಿದ್ದರೆ ನೀನು ಒಪ್ಪಿಕೊಳ್ಳುತ್ತಿದ್ದೆ ಅಂತಾಯಿತು…… ಹಣ ಇಟ್ಟುಕೊಳ್ಳುವುದರಲ್ಲಿ ಮಜವಿಲ್ಲ…… ಹಣ ಮಾಡುವುದರಲ್ಲಿ ಮಜ……” ಅಂದ. ಮತ್ತೆ ಉಚೆಯ ಮೊಂಡುವಾದ ಮುಂದುವರಿಯಿತು. ಉಚೆ ತೀರಾ ಅತಿಗೆ ಇಳಿಯುತ್ತಿದ್ದಾನೆ ಅನಿಸಿತು. ಅವನು ಒಪ್ಪದೇ ನಾವು ಏನೂ ಮಾಡುವಂತಿರಲಿಲ್ಲ. ಆಟದ ನಿಯಮವೇ ಹಾಗಿತ್ತು. ಎಲ್ಲರೂ ಸೇರಿ ಮಾಡಿದ ನಿರ್ಧಾರವಿರಬೇಕು. ಯಾರೊಬ್ಬ ವಿರೋಧಿಸಿದರೂ ಸರ್ಕಾರದ ಪಾತ್ರಧಾರಿ ಪೀಟರ್ ಅದನ್ನು ತಳ್ಳಿಹಾಕುತ್ತಿದ್ದ. ಉಚೆಯನ್ನು ಹೇಗಾದರೂ ಒಪ್ಪಿಸದೇ ಬೇರೆ ದಾರಿಯಿರಲಿಲ್ಲ. +“ನೀನಿಲ್ಲೇ ಇರು” ಎಂದು ನನಗೆ ಹೇಳಿ ಜೆಫ್, ಉಚೆಯನ್ನು ಆಚೆ ಕರೆದುಕೊಂಡು ಹೋದ. ಹತ್ತು ಹದಿನೈದು ನಿಮಿಷಗಳ ನಂತರ ಇಬ್ಬರೂ ಬಂದರು. “ಉಚೆ ಸಹಕರಿಸುತ್ತಾನೆ” ಎಂದು ಜೆಫ್ ಹೇಳಿದ. ಅವನೇನು ಹೇಳಿದನೋ, ಬೆದರಿಕೆ ಹಾಕಿದನೋ, ಇಬ್ಬರೂ ಜಗಳಾಡಿದರೋ, ಹೊಡೆದಾಡಿದರೋ ನನಗೆ ಗೊತ್ತಾಗಲಿಲ್ಲ. ಉಚೆಯ ಮೋರೆ ನೋಡಿ ಕೆಡುಕೆನಿಸಿತು. ನೀನು ಹೇಳಿದ್ದೆಲ್ಲ ಅರ್ಥವಾಗುತ್ತದೆ. ನಿನ್ನ ಹಾಗೆಯೇ ನಾನೂ ಇಂದು ಅವನಿಗೆ ತಿಳಿಸಲು ನಿನ್ನೆ ರಾತ್ರಿ ನನ್ನ ಬಗ್ಗೆ ಅಷ್ಟೆಲ್ಲ ಹೇಳಿಕೊಂಡೆನೇನೋ ಅನಿಸಿತು. ಹಾಗೆ ಅನಿಸುತ್ತಿದ್ದಂತೆಯೇ, ಅವನು ಹೇಳಿದ್ದನ್ನು ಅರ್ಥಮಾಡಿಕೊಂಡರೂ ಇದನ್ನು ಆಟವೆಂದು ಭಾವಿಸುವ ಪರಿವರ್ತನೆ ನನ್ನಲ್ಲಿ ಯಾವಾಗ, ನನ್ನ ಜೀವನದ ಯಾವ ಹಂತದಲ್ಲಿ ಹೇಗೆ ಆಯಿತು ಅಂತ ಅರಿವಾಗಲಿಲ್ಲ. ಉಚೆಯನ್ನು ಜೆಫ್ ಹೇಗೆ ಒಪ್ಪಿಸಿದ, ಅದು ಯಾವ ಶಕ್ತಿಯನ್ನು ಪ್ರಯೋಗಿಸಿದ, ಯಾವ ತಂತಿಯನ್ನಿ ಮೀಟಿದ ಎಂದು ಬಗೆಹರಿಯಲಿಲ್ಲ. ಉಚೆ ಎಲ್ಲದಕ್ಕೂ ಹೂಂ ಹೂಂ ಎಂದು ನಿರಾಸಕ್ತಿಯಲ್ಲಿ ತಲೆಯಾಡಿಸತೊಡಗಿದ. ಅಂತೂ ಮೂರನೇ ದಿನದ ಕೊನೆಗೆ ನಾವು ಎರಡನೇ ಸ್ಥಾನಕ್ಕೇರಿದ್ದೆವು. +***** +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_501.txt b/Kannada Sahitya/article_501.txt new file mode 100644 index 0000000000000000000000000000000000000000..0ef8f11a18ce9b4c5b29768cb1846287829bb507 --- /dev/null +++ b/Kannada Sahitya/article_501.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ +ತೊಡಿಸುತ ಬರುತಿಹ ಒಯ್ಯಾರಿ! +ಹೊಗೆಯ ಸುರುಳಿಗಳ ಅರಳಿನ ಮಾಲೆಯ +ಕೊರಳಿಗೆ ಸೂಡುವ ಸುಕುಮಾರಿ! +ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ +ಕೆಂಗಿಡಿ ಕೆಂಬರಳಿನ ನತ್ತು, +ನಿರಾಭರಣ ಸುಂದರಿ ಸುವಿಲಾಸಿನಿ +ಕಲಿಸಿದರಾರೀ ಹೊಸ ಗತ್ತು? +ಸುಳಿಗಾಳಿಗೆ ಬಲು ಬಳುಕುತ ನಟಿಸುವ +ಒಪ್ಪಿಡಿ ನಡುವಿನ ಹೊಗೆ ರಾಣಿ! +ಒಂದೇ ಸೆಳೆತಕ ತುಟಿಗಳ ಮುದ್ರಿಕೆ +ನಿನ್ನಯ ಹೆಸರೇ “ಜೇನುಹನಿ”. +ಮೊದಮೊದಲಿಗೆ ಹಿರಿಕಿರಿಯರಿಗಂಜುತ +ಕಟ್ಟೇಕಾಂತದಿ ನೀನೊಲಿದೆ; +ಕಿತ್ತಿಳೆ ತೊಳೆ-ತುಟಿ ಮಧುರಿಮೆ ಹೀರಲು +ಮುತ್ತಿನ ಸತ್ತಿಗೆ ನೀನಾದೆ! +ಎಂದಾದರು ನೀನಿರದಿರೆ ಬರದಿರೆ +ವಿರಹದಿ ಕೊರಗುವೆನೇಕಾಕಿ; +ಜುರಿಯೊಂದೆಳೆತಕೆ ಯೋಚನೆ ಮಾಲಿಕೆ +ಭಾವೋದ್ರೇಕವು ಧೂಮಾಕ್ಷಿ | +ಚಿತ್ರವಿಚಿತ್ರದ ಹೊಗೆಗೆರೆ ಮೂಡಿಸಿ +ಸೂತ್ರದ ಗೊಂಬೆಯನಾಡಿಸುವಿ, +ಬಯಲೊಳು ಧೂಮಸ್ತೂಪವ ನಿಲ್ಲಿಸಿ +ಬಾನ್ನೆಲವನ್ನಾಲಿಂಗಿಸುವಿ! +ಧೂಮ್ರಪಾನದೀ ಧೂಪಾರತಿಯೊಳೆ +ಜ್ಞಾನೋಪಾಸನೆಗೆಯ್ಯಿಸುವಿ +ಧ್ಯಾನದಿ ಮನನದಿ ವೈನತೇಯನೊಲು +ಅಮೃತಾಚಲವನ್ನೈದಿಸುವಿ! +ಗುರಿನಿರಿಯಿಲ್ಲದ ಗರಿಗರಿ ಮೋಡದ +ಸರಿದೊರೆಯಾಗಲು ಹಣಗುತಿಹೆ; +ಸುಂಟರಗಾಳಿಯ ಬಂಟನ ದಾಳಿಗೆ +ಕಂಟಣಿಸುತ ಕರಕರಗುತಿಹೆ! +ಮೋದದಿ ಸೇದಲು ಸೂದೆಯನು ಕುಡಿಸುವೆ +ಎದೆಯುರಿ ಸಹಿಸುತ ಕಲ್ಯಾಣಿ, +ಬಿಳಿ ಹೊಗೆ ಬೆಳ್ಗೊಡೆ ಚಾಮರದಡಿಯಲಿ +ಹಾಡಿ ಹರಸುವಳು ಗೀರ್ವಾಣಿ! +ಶಿವ ಶಿವ ಶಂಭೋ ಚಿಲುಮೆಯ ತುಂಬೋ +ನಾನೆ ಸ್ವಯಂಭೂ ಇನ್ನಿಲ್ಲ; +ಬಾರಿಸು ಡಮರುಗ, ಕುಣಿಯಲಿ ಭೃಂಗಿಯು +ಕೈಲಾಸದ ಸುಖ ಬೇರಿಲ್ಲ! +***** +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_502.txt b/Kannada Sahitya/article_502.txt new file mode 100644 index 0000000000000000000000000000000000000000..baf229a0d8c9f03bdc85c8a1363c7464908c3629 --- /dev/null +++ b/Kannada Sahitya/article_502.txt @@ -0,0 +1,473 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧. ನಾನು – ನೀನು +ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. +“ಯಾರು ನೀನು?” ಕೇಳಿದೆ. +ನಾ ಕೇಳಿದ್ದು ಅದನ್ನೋ ಅಥವಾ ನನ್ನನ್ನೇಯೋ ಎಂಬ ಸಂದಿಗ್ಧಕ್ಕೆ ನಾ ಬೀಳುವಷ್ಟರಲ್ಲಿ ಅದು ಮಾತಾಡಿತು. +“ನಾನು ಗಿಣಿ. ಕಾಣುವುದಿಲ್ಲವೇ?” +ಅದರ ದನಿಯಲ್ಲಿ ಪರಿಚಯದ ನಗೆಯಿತ್ತು. ಹಂಗಿಸುವ ಕೊಂಕಿತ್ತು. +“ಈಗಷ್ಟೇ ದೀಪವಾರಿಸಿದ್ದು ನಿನಗೆ ಕಾಣಲಿಲ್ಲವೇ? ಈಪಾಟೀ ಕತ್ತಲಿನಲ್ಲಿ ನಿನ್ನ ಮೂತಿ ಮೋರೆ ನನಗೆ ಹೇಗೆ ತಾನೆ ಬೇರಾಗಿ ಕಾಣಬೇಕು?” ಪ್ರತಿಬಾಣ ಒಗೆದೆ. +ಅದು ಮಾತಾಡಲಿಲ್ಲ. ತಾನು ಹಿಂದೆಂದೂ ಮಾತಾಡಿಯೇ ಇಲ್ಲ, ಮುಂದೆಂದೂ ತುಟಿ ತೆರೆಯಲಾರೆ ಎನ್ನುವಷ್ಟು ಮೌನವಾಗಿಬಿಟ್ಟಿತು. ನನಗದರ ಮೌನ ಸಹನೀಯವೆನಿಸಲಿಲ್ಲ. ಅಲ್ಲದೇ ಮನೆಗೆ ಬಂದ ಅತಿಥಿಯನ್ನು ಮಾತೂ ಆಡಿಸದೆ ಮೌನವಾಗಿ ಕೂರಿಸುವ ಕ್ರೂರ ದುರಭ್ಯಾಸವನ್ನು ನಮ್ಮಮ್ಮ ನನಗೆ ಕಲಿಸಿರಲಿಲ್ಲ. +“ಹಗಲೆಲ್ಲಾ ಅಲ್ಲಿ ಇಲ್ಲಿ ಸುತ್ತಿ ರಾತ್ರಿ ಇಲ್ಲಿಗೇಕೆ ಬಂದೆ? ನಾ ನಿನ್ನ ಒಡತಿಯಲ್ಲ. ಮಲಗುವ ಹೊತ್ತಿನಲ್ಲಿ ನೀ ನನ್ನ ಬಳಿಗೇಕೆ ಬಂದೆ? ನೀ ನನ್ನ ಗಂಡನಲ್ಲ” ಅಂದೆ. +ಅದು ಮಾತಾಡಲಿಲ್ಲ. +ನನ್ನೊಡನದು ಮೌನ ಮುರಿದು ಮೂರು ಮಾತಾಡುವಂತೆ ಮಾಡಲೇಬೇಕೆಂದು ಸಂಕಲ್ಪಿಸಿದೆ. +“ಹೇಳು ಹಗಲೆಲ್ಲ ಎಲ್ಲಿದ್ದೆ? ಊರು ಮಲಗುವವರೆಗೆ ಎಲ್ಲೆಲ್ಲಿ ಅಲೆಯುತ್ತಿದ್ದೆ?” ದನಿ ಎತ್ತರಿಸಿದೆ. +ಅದು ತುಟಿ ತೆರೆಯಿತು. +“ನಿನ್ನೆ ಮೊನ್ನೆಯವರೆಗೆ ನಿನ್ನಿರವಿನರಿವಿರಲೇ ಇಲ್ಲ ನನಗೆ. ಅಂದು ಊರು ಕಣ್ಣ ತುಂಬಾ ಕತ್ತಲ ಕನಸ ತುಂಬಿ ಮೈಮರೆತಿದ್ದಾಗ ನೀನೆದ್ದು ನಿಂತು… ಪಶ್ಚಿಮ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಿದ್ದ ಅರ್ಧ ಚಂದಿರನ ಹಸಿರು ಬೆಳಕನ್ನು ಮೋಹಿಸಲು ಮೊದಲು ಮಾಡಿದಾಗ ದೇವದೂತ ಗೇಬ್ರಿಯಲ್ ನನ್ನನ್ನೆಬ್ಬಿಸಿ ಇಲ್ಲಿಗಟ್ಟಿದ. ಹಾಗೆ ಮಾಡೆಂದು ಅವನಿಗೆ ಆಣತಿಯಾಗಿತ್ತಂತೆ. ಅಂದಿನಿಂದ ನಾ ಇಲ್ಲಿಲ್ಲೇ ಇದ್ದೆ. ನಿನ್ನ ಅಕ್ಕಪಕ್ಕದವರ, ದಾರಿಯಲ್ಲಿ ನೀ ನಡೆವಾಗ ನಿನ್ನತ್ತ ನೋಟ ನೆಡುವವರ, ಕಾಲೇಜಿನಲ್ಲಿ ನಿನ್ನ ಹಿಂದೆಮುಂದೆ ಸುತ್ತುವ ನಿನ್ನದೇ ನೇಹಿಗರ ನಾಲಿಗೆಯಲ್ಲಿದ್ದೆ. ಇದ್ದು ನರ್ತಿಸುತ್ತಿದ್ದೆ. ನರ್ತಿಸಿ ನಲಿಯುತ್ತಿದ್ದೆ.” +ಸ್ವಲ್ಪ ತಡೆದು ಮತ್ತೆ ಹೇಳಿತು. +“ಈಗ ಅವರೆಲ್ಲಾ ಮಲಗಿದರು. ನಾಳೆ ನಸುಕಿನಲ್ಲಿ ಅವರೆದ್ದು ತಂತಮ್ಮ ನಾಲಿಗೆಗಳನ್ನು ಹರಿತಗೊಳಿಸಿಕೊಳ್ಳುವವರೆಗೆ ನನಗೆ ನಿಲ್ಲಲು ನೆಲೆಯಿಲ್ಲ. ಹೀಗಾಗಿ ನಿನ್ನ ನೆರಳಿಗೆ ಬಂದೆ. ಈ ರಾತ್ರಿಯನ್ನು ನಿನ್ನೊಡನೆ ಕಳೆಯುತ್ತೇನೆ.” +“ನೀ ನನ್ನ ಬಳಿಗೇ ಯಾಕೆ ಬರಬೇಕಿತ್ತು? ಹಿಂದೆಂದೂ ನಿನ್ನನ್ನು ಕಂಡ ನೆನಪು ನನಗಿಲ್ಲ. ನಿನ್ನನ್ನೆಂದೂ ನಾ ಮೋಹಿಸಲಿಲ್ಲ. ನಿನ್ನ ಬಗೆಗೆಂದೂ ನಾ ಹಗಲುಗನಸು ಕಂಡವಳಲ್ಲ. ನಿನ್ನ ನೆನಪಿನಿಂದೆಂದೂ ನಾ ನಾಚಿ ನಸುನಕ್ಕವಳಲ್ಲ. ನಿನ್ನನ್ನು ಬಯಸಿ ನನ್ನ ಮೈ ಎಂದೂ ಬೆಚ್ಚಗಾಗಲಿಲ್ಲ. ನಿನ್ನನ್ನು ನೆನಸಿ ನಾನೆಂದೂ ಪುಳಕಗೊಳ್ಳಲಿಲ್ಲ. ನಿನ್ನ ಬರವನ್ನೆಂದೂ ನಾ ಕಾತರದಿಂದ ಕಾಯಲಿಲ್ಲ.” +ಅದು ಕಿಲಿಕಿಲಿ ನಕ್ಕುಬಿಟ್ಟಿತು. +“ನೀನಿರುವವರೆಗೆ ನಾನೂ ಇರುತ್ತೇನೆ. ನೀ ಇಲ್ಲವಾದಾಗ ನಾನೂ ಇಲ್ಲ. ನನ್ನಿರವನ್ನೆಂದೂ ನೀ ನಿರ್ಲಕ್ಷಿಸಬೇಡ. ಹಾಗೇನಾದರೂ ಮಾಡಿದರೆ ನಿನಗೆ ಒಳಿತಾಗದು. ನನ್ನನ್ನು ನಂಬು. ನಿನ್ನನ್ನು ಉದ್ಧರಿಸುತ್ತೇನೆ.” +ಯಾರೋ ಪ್ರವಾದಿಯಂತೆ ನುಡಿದು ಅದು ಮೌನವಾಯಿತು. +ನಾನು ಬೆಪ್ಪು ಬಡೆದು ದನಿ ಕಳೆದುಕೊಂಡೆ. ನಿದಿರೆ ಕೈಬೀಸಿ ಕರೆಯಿತು. +ಕ್ಷಣಗಳ ನಂತರ ಅದು ಮಾತಾಡಿತು. +“ನಿನ್ನೊಡನೆ ಮಾತಾಡಲು ಬಂದಿರುವೆ ನಾನು.” +“ನನಗೀಗ ಮಾತು ಬೇಡ. ನಿದ್ದೆ ಬರುತ್ತಿದೆ.” +“ಓಹೋ! ಹಾಗಾದರೆ ಜೋಗುಳ ಹೇಳಲೇ?” +“ಬೇಡ. ಜೋಗುಳ ಹಾಡಿಸಿಕೊಳ್ಳುವ ವಯಸ್ಸಲ್ಲ ನನ್ನದು. ನಾ ಮನಸ್ಸು ಕೊಟ್ಟಾಗಲೇ ಅವನು ನನ್ನನ್ನು ಮದುವೆಯಾಗಿದ್ದರೆ ಜೋಗುಳ ಕೇಳುವ ಮಗುವೊಂದಿರುತ್ತಿತ್ತು ನನಗೆ.” +ನಿದ್ರಿಸಲು ಬಿಡದೇ ಬಂದು ಕಾಡಿಸುವ ಇದರ ಬಗ್ಗೆ ನನಗೆ ಬೇಸರವೆನಿಸಿತು. ಇದನ್ನು ಓಡಿಸಿ ನೆಮ್ಮದಿಯಿಂದ ನಿದ್ರಿಸುವುದು ಹೇಗೆ? ಅದರ ಕಡೆ ಬೆನ್ನು ತಿರುಗಿಸಿ ಮುಸುಕು ಹೊದ್ದು ಮಲಗಿದೆ. +ಹಾಳಾದ್ದು ಅದೇ ಮಾತಾಡಿತು. +“ನಿನಗೊಂದು ಕಥೆ ಹೇಳಲೇ?” +ಕಥೆ ಎಂದೊಡನೇ ನನ್ನ ಕಿವಿ ನೆಟ್ಟಗಾಯಿತು. ಕಥೆಗಳೆಂದರೆ ನನಗೆ ಬಲು ಇಷ್ಟ. ಪ್ರೇಮಕಥೆಯೆಂದರೆ ಅದರಲ್ಲೂ ದುರಂತ ಕಥೆಯೆಂದರೆ ನನಗೆ ಪ್ರಾಣ. ಅದರಲ್ಲೇ ತನ್ಮಯಳಾಗಿಬಿಡುತ್ತೇನೆ. +“ಎಂಥ ಕಥೆ ಹೇಳುತ್ತಿಯ?” ಆಸೆದುಂಬಿ ಕೇಳಿದೆ. +“ನೀನೇ ಹೇಳು ಎಂಥಾದ್ದು ಹೇಳಲಿ ಅಂತ? ಅವರಿವರ ಕಥೆ ಹೇಳಲೇ?” +“ಬೇಡ. ಅವರಿವರೆಂದೂ ನನ್ನವರಾಗಲಿಲ್ಲ.” +“ಮತ್ತೆ… ನನ್ನ ಕಥೆ ಹೇಳಲೇ?” +“ಓ ಬೇಡಾ. ನಿನ್ನನ್ನೆಂದೂ ನಾ ಬಯಸಿದವಳಲ್ಲ.” +“ಮತ್ತೆ… ನಿನ್ನದೇ ಕಥೆ ಹೇಳಲೇ?” +ನಾನು ಉತ್ತರಿಸಲಿಲ್ಲ. +ಅದೇ ಉತ್ಸಾಹದಿಂದ ಹೇಳಿತು. +“ಓಹೋ ಮೌನಂ ಸಮ್ಮತಿಲಕ್ಷಣಂ! ಸರಿ ನಿನ್ನ ಕಥೆಯನ್ನೇ ಹೇಳುತ್ತೇನೆ. ಅದು ಸರಿ, ಹೇಗೆ ಹೇಳಲಿ? ನಾನು ನೀನಾಗಿ ಹೇಳಲೋ, ಅಥವಾ ನಾನು ಇನ್ನಾರೋ ಆಗಿ ಹೇಳಲೋ?” +“ನೀನು ನೀನೇ ಆಗಿ ಹೇಳು. ನಾನು ನಾನೇ ಆಗಿ ಅರ್ಥೈಸಿಕೊಳ್ಳುತ್ತೇನೆ.” +ಅದು ಉತ್ಸಾಹದಿಂದ ಹೇಳಲಾರಂಭಿಸಿತು. +“ವರುಷ ಇಪ್ಪತ್ತೊಂದರ ಹಿಂದೆ ಧರೆಗಿಳಿದ ಹಾಲುಗಲ್ಲದ ಪೋರಿ ಚಿಗರೆಗಣ್ಣಿನ ಚಕೋರಿಯಾಗಿ ಅರಳಿ ಹದಿನಾರರ ಆಸೆಗಳ ವಯಸ್ಸಿನಲ್ಲಿ ಋತುಮತಿಯಾಗಿ ಹದಿನೇಳರ ಜಾರುವ ನೆಲದಲ್ಲಿ ಯಾರೋ ಕಣ್ಣಲ್ಲೇ ಹೆಣೆದು ಹರಡಿದ ಬಲೆಯಲ್ಲಿ ಸಿಲುಕಿ ಕವನಗಳನ್ನು ನೇಯಲಾರಂಭಿಸಿದಳು… +* +* +* +೨. ಉತ್ತರದ ಬೇರುಗಳು +ನಾನು ಕವನ ಬರೆಯುವುದರಲ್ಲಿ ಬಹಳ ಹೊತ್ತಿನವರೆಗೆ ಮೈಮರೆತಿದ್ದಿರಬೇಕು. ಅವನಿಗದು ಸಹನೀಯವೆನಿಸಲಿಲ್ಲವೆಂದು ಕಾಣುತ್ತದೆ. ನನ್ನ ಮುಂಗುರುಳುಗಳನ್ನೆಳೆದ. ಬಹುಷಃ ಮಾತಾಡಲು ಅವನಿಗೆ ಭಯವಾಗಿರಬೇಕು. ಅಥವಾ ಏನು ಮಾತಾಡಬೇಕೆಂದು ಅವನಿಗೆ ಹೊಳೆಯದೇ ಇದ್ದರೂ ಇರಬಹುದು. ಅಥವಾ ಅವನಿಗೆ ಮಾತೇ ಬರುವುದಿಲ್ಲವೇನೋ. ಇದ್ದೀತು. ನನಗೆ ಸರಿಯಾಗಿ ಗೊತ್ತಿಲ್ಲ. +“ಹುಷ್!” ಅಂದೆ. ಅವನ ಮುಖ ಅರಳಿಕೊಂಡಿತು. ಕಿಲಿಕಿಲಿ ನಕ್ಕ. ಮತ್ತೆ ಅಳುಮುಖ ಮಾಡಿದ. ಸೊರಸೊರ ಅಂದ. ನಾನು ಗಮನಿಸದೇ ಬರೆಯುವುದನ್ನು ಮುಂದುವರೆಸಿದೆ. ಅವನಿಗೆ ಅವಳ ನೆನಪಾಗಿರಬೇಕು. ಮೌನವಾಗಿ ಆಕಾಶ ನೋಡುತ್ತಾ ಕೂತ. ಅವನ ಕಣ್ಣಳತೆಗೆ ಸಾಲುವಷ್ಟು ಆಕಾಶ ಅಲ್ಲಿತ್ತು. +ನಾನು ಕವನ ಬರೆಯುತ್ತಿರುವುದು ಅವನಿಗಾಗಿಯೇ. ಅವನನ್ನು ಕಂಡಾಗಲೆಲ್ಲಾ ಕವನ ಬರೆಯುವ ಬಯಕೆಯಾಗುತ್ತದೆ. ಇಲ್ಲದಿದ್ದರೆ ಮನ ಅಳುತ್ತದೆ. ಅವನು ನನಗಿಂತಾ ಚೆನ್ನಾಗಿ ಅಳಬಲ್ಲ, ರಾಗವಾಗಿ, ಲಯಬದ್ಧವಾಗಿ. ನಾನು ಕೂಸಾಗಿದ್ದಾಗೊಮ್ಮೆ ಹಾಗೆ ಅತ್ತಿದ್ದೆ. ಈಗ ಹಾಗೆ ಅಳಲು ಸಾಧ್ಯವೇ ಆಗುತ್ತಿಲ್ಲ. ಅಳಲು ಬಾಯಿ ತೆರೆದರೆ ಬೇರೆ ಯಾರ್‍ಯಾರೋ ಅಳುವಂತಹ ದನಿ ಹೊರಡುತ್ತದೆ. ಬೇಸರವಾದಾಗ ವಯಲಿನ್‌ನ ಹರಿತ ಸದ್ದಿನಂತೆ ಅಳುತ್ತೇನೆ. ಒಮ್ಮೊಮ್ಮೆ ಅಳುತ್ತಿರುವುದು ನಾನೋ ಅಥವಾ ಟ್ರಾನ್ಸಿಸ್ಟರೋ ಗೊತ್ತಾಗುವುದಿಲ್ಲ. +ಹೊರಗಾದಾಗ ಕವನ ಗಿವನ ಬರೆದೀಯೆ ಜೋಕೆ ಎಂದು ಯಾರೋ ಎಚ್ಚರಿಕೆ ಕೊಟ್ಟಿದ್ದರು. ಯಾರೆಂದು ಸರಿಯಾಗಿ ನೆನಪಾಗುತ್ತಿಲ್ಲ. ಮಮ್ಮಿ ಇರಬೇಕು. ಬಹುಷಃ ಅವಳ ಭೂತವಿದ್ದರೂ ಇರಬಹುದು. ಅಥವಾ ಅವಳ ದನಿಯನ್ನು ಅನುಕರಿಸಿ ಬೇರಾರೋ ಹೇಳಿರಬೇಕು. +ನಿನ್ನೆ ಸಂಜೆಯೇ ನಾನು ಮುಟ್ಟಾಗಿಬಿಟ್ಟಿದ್ದೆ. ಮುಳುಗಿಹೋಗುತ್ತಿದ್ದ ಸಂಜೆಸೂರ್ಯನ ಕೆಂಡದಂಥಾ ಕೆಂಪುಕಿರಣಗಳಲ್ಲಿ ನನ್ನ ಅಚ್ಚ ಬಿಳಿಯ ಲಂಗ ಸೀರೆಗಳೆಲ್ಲವೂ ರಕ್ತದಲ್ಲಿ ತೋಯ್ದುಹೋಗಿದ್ದವು. ಆಗ ಅವನು ನನ್ನ ಜತೆಯಲ್ಲಿಯೇ ಇದ್ದ. ಪಕ್ಕದಲ್ಲಿ ಕೂತು ಅಳುತ್ತಿದ್ದ. ನನ್ನನ್ನು ನೋಡಿ ‘ಎಷ್ಟು ಚೆನ್ನಾಗಿದ್ದೀಯೇ, ಅವಳ ಹಾಗೆ’ ಎಂದು ಮುದ್ದುಗರೆದ. ನನಗೆ ಸಂತಸವಾಯಿತು. ನಾನು ಅವಳಾಗುತ್ತಲಿದ್ದೆ. +ಕೋಣೆಯಾಚೆ ಯಾರದೋ ಹೆಜ್ಜೆಗಳು ಇತ್ತಲೇ ಬರುತ್ತಿರುವಂತೆನಿಸಿತು. ಮಮ್ಮಿಯೇ? ಹೆದರಿಕೆಯಾಯಿತು. ಒಂದುವೇಳೆ ರಕ್ತದಲ್ಲಿ ತೋಯ್ದು ಹೋಗಿರುವ ನನ್ನ ಲಂಗ ಸೀರೆಗಳನ್ನೂ, ತಿಳಿನೀಲೀ ಹಾಳೆಯ ಮೇಲೆ ಸ್ಫುಟವಾಗಿ ಮೂಡಿದ್ದ ಗುಲಾಬೀ ಅಕ್ಷರಗಳನ್ನೂ ಅವಳು ನೋಡಿಬಿಟ್ಟರೆ…! ವಿಪರೀತ ಹೆದರಿಕೆಯಾಗಿ ಕವನ ತುಂಬಿದ್ದ ಹಾಳೆಯನ್ನು ಬಾಯೊಳಗಿಟ್ಟು ಜಗಿದು ನುಂಗಿಬಿಟ್ಟೆ. +ಎತ್ತಲಾದರೂ ಹೊರಟುಹೋಗಬೇಕು. ಇವನನ್ನು ಮದುವೆಯಾಗಿ ಇವನೊಟ್ಟಿಗೆ ಸಂಸಾರ ಮಾಡಿ ಇವನ ಕೂಸನ್ನು ಹೆರಬೇಕು. ಆಗ ಮುಟ್ಟಿನ ರಕ್ತದಲ್ಲಿ ತೊಯ್ದುಹೋಗಿರುವ ಲಂಗ ಸೀರೆಗಳನ್ನು ಒಗೆದುಕೊಂಡರಾಯಿತು. ರಕ್ತವೆಲ್ಲಾ ಹೋಗಿಬಿಡುತ್ತದೆ. ಅವು ಮತ್ತೆ ಬೆಳ್ಳಗೆ ಹೊಳೆಯಲಾರಂಭಿಸುತ್ತವೆ. +ಅದ್ಯಾಕೋ ಅಳಬೇನಿಸಿತು. ಅಳಲಾರಂಭಿಸಿದೆ. ಕೊನೆಗೆ ತಡೆಯಲಾರದೇ ಟ್ರಾನ್ಸಿಸ್ಟರನ್ನು ಆಫ್ ಮಾಡಿದೆ. ದರಿದ್ರದ್ದು ಯಾವಾಗಲೂ ಬರೀ “ಹಳೇ ಪೇಪರ್, ಖಾಲೀಸೀಸಾ” ಎಂದು ಗಂಟಲು ಹರಿದುಕೊಳ್ಳುತ್ತಾ ಬೀದಿಬೀದಿ ಸುತ್ತುತ್ತಿರುತ್ತದೆ. +ಒಳಗೆ ಬಂದವನು ಅಂಕಲ್ ಸ್ಯಾಮ್. ಬಾಗಿಲುದ್ದಕ್ಕೂ ನಿಂತುಬಿಟ್ಟ. ಹಲ್ಲು ಕಿರಿದ. ಗೆರೆಗೆರೆ ಟೋಪಿ ತೆಗೆದು ಬುರುಡೆ ತೋರಿಸಿದ. ನಿನ್ನಮ್ಮ ಬರುವುದಿಲ್ಲ ಎಂದ. ಹೆದರಿಕೊಂಡೆಯಾ ಎಂದು ಕಕ್ಕುಲತೆ ತೋರಿದ. ಎಲ್ಲಾ ಬರೀ ನಾಟಕ. ಬಣ್ಣವಿಲ್ಲದ್ದು. ನನ್ನನ್ನು ನಂಬು ಎಂದು ಗೋಗರೆದ. ಬೇಕಾದರೆ ನೀನೇ ನೋಡು ಎಂದು ಮತ್ತೊಮ್ಮೆ ಟೋಪಿ ತೆಗೆದು ಬುರುಡೆ ಮುಂದೆ ತಂದ. ನಿನ್ನಮ್ಮ ನಿಜವಾಗಿಯೂ ಬರುವುದಿಲ್ಲ, ಅವಳೀಗ ನಿನ್ನ ಲಂಗ ಸೀರೆಗಳನ್ನು ಒಗೆಯುತ್ತಿದ್ದಾಳೆ ಎಂದ. ರಕ್ತದಲ್ಲಿ ನೆನೆದುಹೋಗಿರುವ ಲಂಗ ಸೀರೆಗಳು ಎಂದೂ ಸೇರಿಸಿ ಕಿಸಕ್ಕನೆ ನಕ್ಕ. +ನಾನು ಅವನನ್ನು ನಂಬಿದೆ. +ಸ್ಯಾಮ್ ಬಂದು ನಮ್ಮಿಬ್ಬರ ಮಧ್ಯೆ ಕೂತ. ನಾನು ಈಗ ಏನು ತಂದಿದ್ದೀನಿ ಗೊತ್ತಾ ಎಂದು ಕಣ್ಣು ಮಿಟುಕಿಸಿದ. ಏನೂ ತಂದಿದ್ದೀಯ ಎಂದು ಅವನು ಕೇಳುತ್ತಾನೆಂದು ಸ್ಯಾಮ್ ಅಂದುಕೊಂಡಿದ್ದನೇನೋ. ಆದರೆ ಅವನು ಸ್ಯಾಮ್‌ನ ಕಡೆ ಗಮನವನ್ನೇ ಕೊಡಲಿಲ್ಲ. ಒಂದೇ ಸಮನೆ ಮಣಮಣ ಎದು ಗೊಣಗಿಕೊಳ್ಳುತ್ತಾ ಕೂತ. ಅವನ ಮಣಮಣಗಳಲ್ಲಿ “ವಂದೇ ಮಾತರಮ್, ಪ್ಲೆಬಿಸೈಟ್” ಅಂತ ಏನೇನೊ ನೆರಳುಗಳು ಕುಣಿದಾಡುತ್ತಿದ್ದುದು ನನ್ನ ಅರಿವಿಗೆ ಬಂತು. ಸ್ಯಾಮ್ ಹರಳೆಣ್ಣೆ ಕುಡಿದವನ ಹಾಗೆ ಮುಖ ಮಾಡಿಕೊಂಡು ನನ್ನೆಡೆ ತಿರುಗಿದ. +ಮಧ್ಯಾಹ್ನಧ ವಾರ್ತೆಗಳ ಸಮಯವಾಗಿತ್ತು. ಸ್ಯಾಮ್ ತಂದಿರುವುದೇನೆಂದು ತಿಳಿಯಲು ನಾನು ನನ್ನ ಟ್ರ್ಯಾನ್ಸಿಸ್ಟರನ್ನು ಆನ್ ಮಾಡಿದೆ… +ನನಗೆ ಗೊತ್ತಾಗಿಹೋಯಿತು. ಅವನು ತಂದಿರುವುದು ಒಂದು ಕನಸು. +ಓಹ್! ಅದು ನನ್ನದೇ ಕನಸು! +ಅವನದನ್ನು ನನ್ನ ಉಡಿಯಿಂದ ಕದ್ದಿದ್ದಾನೆ. ಅಥವಾ ರಕ್ತದಲ್ಲಿ ನೆನೆದುಹೋಗಿದ್ದ ನನ್ನ ರೇಶಿಮೆಯ ಲಂಗದ ನಿರಿಗೆಯೊಂದರಲ್ಲಿ ಅಡಗಿ ಕೂತು ಅಳುತ್ತಿದ್ದ ಅದನ್ನು ಜೋಪಾನವಾಗಿ ಎತ್ತಿ ಮಮ್ಮಿ ಇವನ ಕೈಲಿ ಕೊಟ್ಟು ಕಳಿಸಿರಬೇಕು. +ಅಹ್ ಎಂಥಾ ಸುಂದರ ಕನಸು ಅದು! ನೆನಸಿಕೊಂಡಾಗಲೆಲ್ಲಾ ಮನ ಮುಮ್ಮಲ ಮರುಗುತ್ತದೆ. ಬಿಕ್ಕಿಬಿಕ್ಕಿ ಅಳುವ ಬಯಕೆ ಕಣ್ಣುಗಳಿಗಾಗುತ್ತದೆ. ನೀರವ ರಾತ್ರಿಯೊಂದರ ಯಾವುದೋ ಒಂದು ಗಳಿಗೆಯಲ್ಲಿ ಹೆನ್ರಿ ಡೇವಿಡ್ ಥೋರೋ ಆ ಕನಸನ್ನು ನನ್ನ ಕಣ್ಣುಗಳಾಳದಲ್ಲಿ ಬಿತ್ತಿಬಿಟ್ಟಿದ್ದ. ಅವನ ಸ್ಫುಟ ನುಡಿಗಳು ಟೆಲಿಪ್ರಿಂಟರಿನಲ್ಲಿ ಮೂಡುವ ಅಕ್ಷರಗಳಂತೆ ಅದೆಲ್ಲಿಂದಲೋ ಓಡಿಬಂದು ನನ್ನ ಮನದಾಳದ ನೆನಪಿನ ಗರಿಯ ಮೇಲೆ ಪಟಪಟನೆ ಮೂಡಿಬಿಟ್ಟಿದ್ದವು… +…ನಾನವುಗಳನ್ನು ಮತ್ತೆ ಮತ್ತೆ ಓದಿದ್ದೆ. +I ಟoಟಿg ಚಿgo ಟosಣ ಚಿ houಟಿಜ, ಚಿ bಚಿಥಿ hoಡಿse ಚಿಟಿಜ ಚಿ ಣuಡಿಣಟe ಜove, ಚಿಟಿಜ +I ಚಿm sಣiಟಟ oಟಿ ಣheiಡಿ ಣಡಿಚಿiಟ. ಒಚಿಟಿಥಿ ಚಿಡಿe ಣhe ಣಡಿಚಿveಟಟoಡಿs I hಚಿve +sಠಿoಞeಟಿ ಣo ಛಿoಟಿಛಿeಡಿಟಿiಟಿg ಣhem, ಜesಛಿಡಿibiಟಿg ಣheiಡಿ ಣಡಿಚಿಛಿಞs ಚಿಟಿಜ +ತಿhಚಿಣ ಛಿಚಿಟಟs ಣheಥಿ ಚಿಟಿsತಿeಡಿeಜ ಣo. I hಚಿve meಣ oಟಿe oಡಿ ಣತಿo +ತಿho hಚಿಜ hesಡಿಜ ಣhe houಟಿಜ ಚಿಟಿಜ ಣhe ಣಡಿಚಿmಠಿ oಜಿ ಣhe hoಡಿse +ಚಿಟಿಜ hಚಿಜ eveಟಿ seeಟಿ ಣhe ಜove ಜissಚಿಠಿಠಿeಚಿಡಿ behiಟಿಜ ಚಿ ಛಿಟouಜ, +ಚಿಟಿಜ ಣheಥಿ seemeಜ ಚಿs ಚಿಟಿxious ಣo ಡಿeಛಿoveಡಿ ಣhem ಚಿs iಜಿ +ಣheಥಿ hಚಿಜ ಟosಣ ಣhem ಣhemseಟves. +ಓಹ್ ನಾನೆಂತಹ ದುರದೃಷ್ಟಶಾಲಿ! ನನ್ನ ನಾಯಿಯನ್ನು ಕಳೆದುಕೊಂಡೆ. ನನ್ನ ಕುದುರೆಯನ್ನು ಕಳೆದುಕೊಂಡೆ. ನನ್ನ ಪಾರಿವಾಳವನ್ನೂ ಸಹ. ಈಗ ಈ ಪಾಪಿ ಸ್ಯಾಮ್ ನನ್ನ ಕನಸನ್ನೂ ಕಸಿದುಕೊಂಡುಬಿಟ್ಟಿದ್ದಾನೆ! ಓಹ್ ನಾನು ಎಲ್ಲವನ್ನೂ ಕಳೆದುಕೊಂಡೆ… +ಭೋರಿಟ್ಟು ಅಳತೊಡಗಿದೆ. +“ಥತ್ ಯಾವ ಸೀಮೆ ಹೆಣ್ಣು ನೀನು? ಈಪಾಟೀ ಸದ್ದು!” ಎಂದು ಮುಖ ಕಿವಿಚಿ ಸ್ಯಾಮ್ ಟ್ರ್ಯಾನ್ಸಿಸ್ಟರಿನ ಕೊರಳು ಹಿಸುಕಿದ. ನನಗೆ ಸಮಾಧಾನವಾಯಿತು. +ಸ್ಯಾಮ್ ಒಳ್ಳೆಯವನು. ನನ್ನ ಕನಸನ್ನು ಕದ್ದರೂ ಪರವಾಗಿಲ್ಲ, ಪ್ರತಿಯಾಗಿ ನನಗೆ ಉಡಿ ತುಬಾ ಮೌನ ನೀಡಿದ. ಬಹಳ ಆತ್ಮೀಯನಂತೆ ಕಂಡ. ಅವನ ಭುಜಕ್ಕೆ ಮುಖವೊತ್ತಿ ಬಿಕ್ಕುತ್ತಾ ಕೇಳಿದೆ: “ಹೇಳು ಸ್ಯಾಮ್, ಯಾವ ಗಂಡಸಾದರೂ ಮತ್ತೊಬ್ಬ ಗಂಡಸಿನೆದುರು ಹೆಣ್ಣೊಬ್ಬಳು ಬೆತ್ತಲಾಗುವುದನ್ನು ಸಹಿಸುತ್ತಾನಾ?” +ಸ್ಯಾಮ್ ಗಡಬಡಿಸಿ ಎದ್ದ. “ಇವನ ಜತೆ ಯಾವಾಗಲೂ ಕೂತಿರಬೇಡ. ಬಾ ಹೊರಗೆ ಹೋಗೋಣ, ಹವಾ ಚೆನ್ನಾಗಿದೆ” ಎಂದು ನನ್ನನ್ನೆಬ್ಬಿಸಿ ಹೊರಗೆ ಕರೆತಂದ. +ನಾವಿಬ್ಬರೂ ಸಂಜೆಯ ಹೊಂಗಿರಣಗಳಲ್ಲಿ ನಾಚಿಕೆಯಿಲ್ಲದೇ ಬೆತ್ತಲಾಗಿ ಮಲಗಿದ್ದ ನೀಲೀ ಹೊಕ್ಕಳಿನ ರಸ್ತೆಯ ಮೇಲೆ ನಡೆಯತೊಡಗಿದೆವು. ಬಸ್‌ಸ್ಟಾಪಿನ ಬಳಿ ಬಂದಾಗ “ಕ್ಯಾಂಪಸ್ಸಿನಿಂದ ಹೊರಗೆ ಹೋಗೋಣವಾ? ೬೧೫ ಹತ್ತಿ ಕನಾಟ್ ಪ್ಲೇಸಿಗೆ ಹೋಗೋಣ. ಅಲ್ಲಿ ಕಸ್ತೂರ್ ಬಾ ಗಾಂಧಿ ಮಾರ್ಗ್‌ನಲ್ಲಿರುವ ನಿನ್ನ ಬಿಡಾರಕ್ಕೆ ಹೋಗಿ ಚಹಾ ಕುಡಿಯುವ ಬಯಕೆಯಾಗುತ್ತಿದೆ” ಎಂದೆ. “ಬೇಡ, ಲೈಬ್ರರಿಗೆ ಹೋಗೋಣ” ಎಂದ ಸ್ಯಾಮ್. +ನಾನು ಪ್ರತಿಭಟಿಸಿದೆ. +“ಉಹ್ಞುಂ ನಾ ಬರಲ್ಲ. ಲೈಬ್ರರಿಯಲ್ಲಿ ನೀನು ಯಾವಾಗಲೂ ಆ ಕೆಂಪು ಹೊದಿಕೆಯ ಪುಸ್ತಕ ತೋರಿಸಿ ಹೆದರಿಸುತ್ತೀಯೆ.” +“ಇಲ್ಲ ಇಲ್ಲ. ಕೆಂಪು ಹೊದಿಕೆಯ ಪುಸ್ತಕ ಈಗ ಅಲ್ಲಿಲ್ಲ. ಅದು ಹುಳು ತಿಂದುಹೋಯಿತು. ಈಗ ಅದನ್ನು ಯಾರೂ ಮೂಸುವುದಿಲ್ಲ. ಕರಡಿಗಳು ಅದನ್ನು ತಿಪ್ಪೆಗೆ ಎಸೆದು ತುಂಬ ಕಾಲವಾಯಿತು. ಮ್ಯಾಂಡರೀನ್‌ಗಳಂತೂ ಅದನ್ನು ಹರಿದು ಚಿಂದಿ ಮಾಡಿ ಹಾಳೆಗಳನ್ನು ಒಂದೊಂದಾಗಿ ಗಾಳಿಗೆ ತೂರುತ್ತಿದ್ದಾರೆ. ಅದರ ಹೊದಿಕೆಯನ್ನು ಮಾತ್ರ ಎರಡೂ ಕೈಗಳಲ್ಲಿ ಎಲ್ಲರಿಗೂ ಕಾಣುವಂತೆ ಹಿಡಿದುಕೊಂಡಿರುತ್ತಾರೆ ಅಷ್ಟೇ. ಒಳಗೆ ನೋಡಿದರೆ ಯಾವುದೋ ಸೂಪರ್ ಮಾರ್ಕೆಟ್‌ನ ಸಾಮಾನುಗಳ ಬೆಲೆಪಟ್ಟಿ ಇರುತ್ತದೆ. ಇಲ್ಲಿ ನಿಮ್ಮೂರಿನ ಅ ಮೂಡಣ ಮೂಲೆಯಲ್ಲಿ ಒಂದಷ್ಟು ಬಂಗಾಳಿ ಬಾಬುಗಳು ಆಗಾಗ ಬಯಲಲ್ಲಿ ನಿಂತು ಅದರಿಂದ ಗಾಳಿ ಹಾಕಿಕೊಳ್ಳುವುದನ್ನು ಇನ್ನೂ ನಿಲ್ಲಿಸಿಲ್ಲ. ಅವರನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡ. ಇನ್ನು ನಾಕು ದಿನದಲ್ಲಿ ಅವರದನ್ನು ಗಾಳಿಗೆ ತೂರದಿದ್ದರೆ ಕೇಳು. ಎಷ್ಟಾದರೂ ಅವರು ಬಂ”ಗಾಳಿ”ಗಳಲ್ಲವೇ? ಕೆಂಪು ಪುಸ್ತಕವನ್ನು ಮರೆತುಬಿಡು. ಈಗ ಲೈಬ್ರರಿಯಲ್ಲೊಂದು ಹೊಸಾ ಪುಸ್ತಕ ನೋಡಿದ್ದೇನೆ. ಹಸಿರು ಹೊದಿಕೆಯದು. ಹೆಸರು ನೆನಪಿಲ್ಲ. ಆದರೆ ಅದೆಲ್ಲಿದೆಯೆಂದು ಗೊತ್ತು. ಬೆಸ್ಟ್ ಸೆಲ್ಲರ್ ಅದು. ಕ್ರೈಮ್ ಥ್ರಿಲ್ಲರ್. ನಾನಿನ್ನೂ ಓದಿಲ್ಲ. ಮುಟ್ಟಲು ಭಯವಾಗುತ್ತದೆ. ಬಹಳ ಜನ ಓದಿದ್ದಾರಂತೆ. ಆದರೂ ಅದಿನ್ನೂ ಹೊಸದಾಗಿಯೇ ಇದೆ. ಅದನ್ನು ನಿನಗೆ ತೋರಿಸುತ್ತೇನೆ. ಹೇಗಾದರೂ ಅದನ್ನು ಕ್ಯಾಟಲಾಗಿನಿಂದ ಮಂಗಮಾಯ ಮಾಡಿಬಿಡೋಣ. ಈಗ ಕನಾಟ್ ಪ್ಲೇಸಿನ ಕಡೆ ಹೋಗಿ ಮೆರವಣಿಗೆಯಾಗುವುದು ಬೇಡ. ಯಾಕಂದರೆ ನೀನೀಗ ಪ್ಯಾಂಟ್ ಹಾಕಿಕೊಂಡಿದ್ದೀಯೇ. ಮಮ್ಮಿ ಒಗೆದ ನಿನ್ನ ಬಿಳೀ ಲಂಗಸೀರೆಗಳು ಒಣಗಿದ ನಂತರ ಅವುಗಳನ್ನು ಹಾಕಿಕೊಳ್ಳುವೆಯಂತೆ. ಆಗ ನಿನ್ನನ್ನು ಮನೆಗೆ ಕರೆದುಕೊಂಡು ಹೋಗಿ ಬ್ರೆಡ್ ಪಕೋಡ, ಪೆಪ್ಸಿಕೋಲ ಕೊಡಿಸುತ್ತೇನೆ. ತಲೆ ಕೆಡಿಸಿಕೊಳ್ಳಬೇಡ. ಣಚಿಞe iಣ eಚಿsಥಿ ಎಂದ ಸ್ಯಾಮ್. +ನನಗೆ ನಿರಾಸೆಯಾಯಿತು. +ನಾನು ಪ್ಯಾಂಟ್ ಹಾಕಿಕೊಂಡರೆ ಇವನಿಗೇನು? ನಾನು ಸೀರೆಯನ್ನೇ ಯಾಕೆ ಉಡಬೇಕು? ಯಾಕೆ, ಪ್ಯಾಂಟ್ ಹಾಕಿಕೊಂಡ ಹುಡುಗಿಗೆ ಮಕ್ಕಳಾಗುವುದಿಲ್ಲವೇ? +ಆದರೂ ನಾನು ಅವನ ಮಾತಿಗೆ ಒಪ್ಪಿಗೆ ನೀಡಿದೆ. +ಇದು ಇತಿಹಾಸದ ಉದ್ದಕ್ಕೂ ನಡೆದು ಬಂದ ರಿವಾಜು. ಗಂಡಸು ಅಪ್ಪನಾಗಲೀ, ಅಣ್ಣನಾಗಲೀ, ಗಂಡನಾಗಲೀ, ಮಿಂಡನಾಗಲೀ ಅಥವಾ ಬರೀ ಫ್ರೆಂಡೇ ಆಗಿರಲಿ ಹೆಂಗಸು ಅವನ ಮಾತಿಗೆ ಒಪ್ಪಬೇಕು, ಒಪ್ಪುತ್ತಾಳೆ, ಒಪ್ಪಿದ್ದಾಳೆ. +ನಾನೂ ಹಾಗೇ ಮಾಡಿದೆ. ಯಾಕಂದರೆ ನಾನೂ ಒಬ್ಬಳು ಹೆಣ್ಣು. ನನಗೆ ಭಾರೀ ಬೆಟ್ಟಗಳಂಥಾ ಎರಡು ಮೊಲೆಗಳೂ, ಪಾತಾಳದಂಥಾ ಒಂದು ಯೋನಿಯೂ ಇದೆ. +ಸ್ಯಾಮ್‌ಗೆ ಒಬ್ಬಳು ಹಳದೀ ಗೆಳತಿ ಇದ್ದಾಳೆ. ಗೆಳತಿಯೇ ಎಂದು ಗ್ಯಾರಂಟಿಯಾಗಿ ಹೇಳಲಾರೆ. ಯಾಕಂದರೆ ಅವಳನ್ನವನು ಒಮ್ಮೆ ಗೆಳತಿ ಎಂದರೆ ಮತ್ತೊಮ್ಮೆ ಅಮ್ಮ ಅನ್ನುತ್ತಾನೆ. ಒಂದೆರಡು ಸಲ ಮುತ್ತಜ್ಜಿ ಅಂದದ್ದೂ ಉಂಟು. ಇತ್ತೀಚೆಗಂತೂ ಅವಳು ಪ್ರಕೃತಿ, ನಾನು ಪುರುಷ; ಅವಳು ಯಾಂಗ್ ನಾನು ಯಿಂಗ್ ಎಂದು ನನಗರ್ಥವಾಗದ ಚೀನೀ ಭಾಷೆಯಲ್ಲಿ ಏನೇನೋ ಹೇಳುತ್ತಾನೆ. ಇರಲಿ, ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ. ಮಸಲಾ ವಿಷಯ ಏನೆಂದರೆ ಅವಳಿಗೂ ಒಂದು ಯೋನಿ ಇದೆಯಂತೆ. ಹಾಗೆಂದು ಅವನೇ ಹೇಳಿದ್ದ. ನಾನು ನೋಡಿಲ್ಲ. ಅದರೊಳಗೆ ಒಂದು ಬ್ರಹ್ಮಾಂಡವೇ ಅಡಗಿ ಕೂತಿದೆ ಎಂದವನು ಹೇಳುತ್ತಾನೆ. ನನ್ನದರೊಳಗೂ ಅಂಥಾ ಒಂದು ಬ್ರಹ್ಮಾಂಡ ಇದೆಯಾ? ನನಗೆ ಕಾಣಲಿಕ್ಕೇ ಆಗಿಲ್ಲ. +ಅವ್ವಯ್ಯಾ ಥೂ ಎಂಥಾ ಯೋಚನೆ! +bಟಚಿsಠಿhemಥಿ! +ದೈವನಿಂದೆ. +ಹುಚ್ಚು! +ಒಂಥರಾ ಹುಚ್ಚು. ಸಖತ್ ಹುಚ್ಚು. ಹುಚ್ಚು ದೈವನಿಂದೆ. +ಹ್ಞಾಂ ಹುಚ್ಚು ದೈವನಿಂದೆ! ಹಾಗಂದರೇನು? ನಿನ್ನೆಯೋ ಮೊನ್ನೆಯೋ ಯಾರ ಬಾಯಲ್ಲೋ ಆ ಮಾತು ಕೇಳಿದ್ದೆ. ಲಾಲಿ ಇರಬೇಕು. ನನ್ನನ್ನೇ ಉದ್ದೇಶಿಸಿ ಹೇಳಿದ್ದಳು. ಮತ್ತೆ ಟೀವಿಯಲ್ಲಿ ಬರುತ್ತಾನಲ್ಲ ಆ ಮುದಿಯ ನನ್ನ ಕಡೆ ಕಲ್ಲು ಒಗೆದಿದ್ದ. ಪಶ್ಚಿಮ ಏಶಿಯಾದ ಮಕ್ಕಳೆಲ್ಲಾ ಹುಚ್ಚಿ ಹುಚ್ಚಿ ಎಂದು ಕೂಗುತ್ತಾ ಸೀಳುನಾಯಿಗಳಂತೆ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದವು. ನಾನಾಗ ನ್ಯೂಯಾರ್ಕ್‌ನಲ್ಲೋ, ವಾಷಿಂಗ್‌ಟನ್‌ನಲ್ಲೋ ವಿಮಾನಕ್ಕಾಗಿ ಕಾಯುತ್ತಾ ಏರ್‌ಪೋರ್ಟ್‌ನಲ್ಲಿ ಕೂತುಕೊಂಡಿದ್ದೆ… +* +* +* +೩. ವರ್ತಮಾನದ ಆತೀತ +ಬೇಕು-ಬೇಡಗಳ ಸಂದಿಗ್ಧದಲ್ಲಿ ನನ್ನ ನೆನಪನ್ನು ನಾ ಕಳೆದುಕೊಂಡು ಮೈಮರೆತು ಬೆಳಗಿನ ಉಪಾಹಾರವನ್ನು ತೆಗೆದುಕೊಳ್ಳುತ್ತಿದ್ದಾಗ ಮೇಜಿನ ಆಚೆಬದಿಯಿಂದ ಡ್ಯಾಡಿ ನನ್ನೆಡೆಗೇ ನೋಡುತ್ತಿದ್ದರು. ಡ್ಯಾಡಿ ದೊಡ್ಡ ಆಫೀಸರು. ಲಂಚ ತೆಗೆದುಕೊಳ್ಳುವುದಿಲ್ಲ. +ಮಮ್ಮಿ ನನ್ನ ತಲೆ ಸವರಿ ಹೇಳಿದಳು: “ಇಂದೂ ನೀನು ಕಾಲೇಜಿಗೆ ಹೋಗುವುದು ಬೇಡ ಮಗಳೇ. ನಿನಗಿನ್ನೂ ಗುಣವಾಗಿಲ್ಲ.” +ಮಮ್ಮಿಯ ಶರೀರ ಎರಡಾಗಿ ಸೀಳಿ ಆ ಎರಡು ತುಂಡುಗಳ ನಡುವಿನ ಇರುಕಿನಲ್ಲಿ ನಾನು ಅಪ್ಪಚ್ಚಿಯಾಗುವಂತೆ ಸಿಲುಕಿಕೊಂಡು ಹೊರಬರಲು ಹೆಣಗುತ್ತಿದ್ದೇನೆ ಎಂಬ ಭಯಂಕರ ನೆನಪಿನ ಕನಸು ನನ್ನನ್ನು ಇಂದಿಗೂ ಭೂತದಂತೆ ಕಾಡುತ್ತದೆ. ಮಮ್ಮಿಯ ಬಿಳಿದಾದ ಕಿಬ್ಬೊಟ್ಟೆಯ ಆಳದಲ್ಲೆಲ್ಲೋ ನನಗೆಂದೂ ಸಿಗದೇಹೋದ ಲೆಕ್ಕಕ್ಕೆ ಮೀರಿದ ನನ್ನ ತಮ್ಮ ತಂಗಿಯರೆಲ್ಲ ಸುಖವಾಗಿ ಮಲಗಿ ನಿದ್ರಿಸುತ್ತಿದ್ದಾರೆ. ನನ್ನಂತೆ ಕಷ್ಟ ಪಡುವುದು ಅವರಿಗೆ ಬೇಕಿಲ್ಲ. +ನಾನು ಮಾತಾಡದೇ ದನದ ಮಾಂಸದ ತುಂಡೊಂದನ್ನು ಬಾಯಿಗೆ ಹಾಕಿಕೊಂಡೆ. ಹಂದಿಯ ಮಾಂಸ ನಮ್ಮ ಮನೆಯಲ್ಲಿ ನಿಷಿದ್ಧ. ಮಮ್ಮಿ ನನ್ನನ್ನೆಬ್ಬಿಸಿ ಕೋಣೆಯೊಳಗೆ ಕರೆದುಕೊಂಡು ಹೋದಳು. +ನಾನು ಹಾಸಿಗೆಯ ಮೇಲೆ ಬೋರಲಾಗಿ ಮಲಗಿದೆ. ಹಾಗೆ ಹಾಸಿಗೆಯ ಮೇಲೆ ಮಲಗಿದ್ದ ನನ್ನ ಗೆಳತಿಯ ಶವ ನೆನಪಿಗೆ ಬಂದು ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ. ಹಿಂದೆಯೇ ಮಮ್ಮಿ ನನ್ನ ಮುಚ್ಚಿದ ಕಣ್ಣವೆಗಳಿಗೆ ಹೊರಗಿನಿಂದ ಕಳಕ್ಕನೆ ಚಿಲಕ ಹಾಕಿಕೊಂಡು ನಿಂತಳು. ನನಗೆ ನಿದ್ದೆಯಿಂದ ಎಚ್ಚರವಾಗುವವರೆಗೂ ಅವಳ ಏದುಸಿರು ನನ್ನೆದೆಯಲ್ಲಿ ಬಿರುಗಾಳಿಯಂತೆ ಮೊರೆಯುತ್ತಿತ್ತು. +ಎಚ್ಚರವಾದಾಗ ಎದ್ದು ಹೊರಗೆ ಬಂದೆ. +ಮಮ್ಮಿ ಎಲ್ಲೂ ಕಾಣಿಸಲಿಲ್ಲ. ಹಜಾರದ ಗೋಡೆಯ ಮೇಲೆ ಡ್ಯಾಡಿಯ ದೊಡ್ಡ ಫೋಟೋ ಇತ್ತು. ಅದಕ್ಕೆ ಹಾಕಿದ್ದ ಹಾರದಲ್ಲಿನ ಹೂಗಳು ಬಾಡುತ್ತಿದ್ದವು. ಅಗರಬತ್ತಿಯ ವಾಸನೆ ಹಳತಾಗಿಹೋಗಿತ್ತು. +ಅದೇ ಸುಸಮಯವೆಂದುಕೊಂಡು ನಾನು ಚಪ್ಪಲಿ ಮೆಟ್ಟಿ ಹೊರಗೆ ಬಂದೆ. +ಇಂದಾದರೂ ಅವನನ್ನು ಭೇಟಿಯಾಗಬೇಕು, ಸಾಧ್ಯವಾದರೆ. ಅವನೆಲ್ಲಿದ್ದಾನೆಂದು ಯಾರೂ ಹೇಳುವುದಿಲ್ಲ. ನಮ್ಮ ಮನೆಗೆ ಬಂದು ನನ್ನನ್ನು ನೋಡು ಎಂದು ನಾನು ಅವನಿಗೆ ಅನುದಿನವೂ ಪತ್ರ ಬರೆಯುತ್ತಿದ್ದೇನೆ. +ಅವನ ಸುಳಿವಿಲ್ಲ. +ಅವನಿಗೆ ನನ್ನ ಮೇಲಿನ ಪ್ರೀತಿ ಇಂಗಿಹೋಯಿತೇ? ಅರಬಸ್ತಾನದ ಮರಳುಗಾಡಿನ ನೀರವ ಗುಹೆಯಾಯಿತೇ ಹೃದಯ? ಅಯ್ಯೋ ನಾನು ನನ್ನ ನಾಯಿ, ಕುದುರೆ, ಪಾರಿವಾಳದ ಜತೆ ಅವನನ್ನೂ ಕಳೆದುಕೊಂಡೆನೇ? +“ಅಯ್ಯೋ…!” +ನಾನು ನೆಲಬಿರಿಯುವಂತೆ ಚೀರಿದೆ. ಚೀರುತ್ತಲೇ ಇದ್ದೆ ಸ್ಯಾಮ್ ಬಂದು ನನ್ನನ್ನು ತಟ್ಟಿ ಮಲಗಿಸುವವರೆಗೂ. +ನಿದ್ದೆಯಲ್ಲಿ ಒಂದು ಕನಸು… +ಅವನು ನನ್ನ ಕುದುರೆಯ ಮೇಲೆ ಕುಳಿತುಕೊಂಡು ಹೋಗುತ್ತಿದ್ದ. ಪಾರಿವಾಳ ಅವನ ಭುಜದ ಸನಿಹವೇ ಹಾರುತ್ತಾ ಹೋಗುತ್ತಿತ್ತು. ನಾಯಿ ಅವನ ಬಲಬದಿಯಲ್ಲಿ ಕುದುರೆಯ ಹೆಜ್ಜೆಗೆ ಹೆಜ್ಜೆ ಕೂಡಿಸಿ ಓಡುತ್ತಿತ್ತು… +…ನಾನು ಅಂತಃ‘ರಿಕ್ಷಾ’ದಲ್ಲಿ ಸಂಚರಿಸುತ್ತ ಅವನನ್ನು ಹಿಂಬಾಲಿಸುತ್ತಿದ್ದೆ. +ಹಾಗೆಯೇ ಅದೆಷ್ಟೋ ಯೋಜನ ಪಯಣವಾದ ನಂತರ ಇತಿಹಾಸದ ಒಂದು ತಿರುವಿನಲ್ಲಿ ಡ್ಯಾಡಿಯ ಜೀಪು ಕಾಣಿಸಿಕೊಂಡಿತು. ಡ್ಯಾಡಿಯ ಜತೆ ಒಂದು ಹೆಬ್ಬಾವೂ, ಒಂದು ಬಾವುಟವೂ ಇದ್ದವು. +ಡ್ಯಾಡಿ ಅವನನ್ನು ಬೆನ್ನಟ್ಟಿದರು. +ಅವನು ಕುದುರೆಯ ವೇಗ ಹೆಚ್ಚಿಸಿದ. ಅರಬ್ಬೀ ಕುದುರೆ ಅದು. ಪುಟುಪುಟು ಓಡಿತು. ಡ್ಯಾಡಿ ಬಿಡಲಿಲ್ಲ. ಅವರಿಬ್ಬರನ್ನೂ ನೋಡಿ ನಾನು ಚಪ್ಪಾಳೆ ತಟ್ಟಿ ನಗತೊಡಗಿದೆ. +ಬೆಳಗಾಗುವ ಹೊತ್ತಿಗೆ ಡ್ಯಾಡಿಯ ಜೀಪಿನಲ್ಲಿ ರಕ್ತ ಮುಗಿದುಹೋಯಿತು. ಜೀಪು ಮುಂದೆ ಸಾಗಲಾರದೆ ಗಕ್ಕನೆ ನಿಂತುಬಿಟ್ಟಿತು. ನನ್ನ ಕುದುರೆ ಮಾತ್ರ ಯಾವ ಆಯಾಸವೂ ಇಲ್ಲದೇ ಅವನನ್ನು ಹೊತ್ತು ಮಾಯವಾಗಿಬಿಟ್ಟಿತು. ಡ್ಯಾಡಿಗೆ ಅದನ್ನು ಹಿಡಿಯಲಾಗಲಿಲ್ಲ. ಅವನಂತೆ ದಯಾಮಯನೂ ಸರ್ವಶಕ್ತನೂ ಆದ ದೇವರ ಸೃಷ್ಟಿಯಾದ ಜೀವಿಯೊಂದರ ಮೇಲೆ ವಿಶ್ವಾಸವಿಡದೇ ಮನುಷ್ಯನಿರ್ಮಿತಿಯಾದ ಯಂತ್ರವೊಂದರ ಮೇಲೆ ವಿಶ್ವಾಸವಿರಿಸಿ ಡ್ಯಾಡಿ ಸೋತುಹೋದರು. +ಎಚ್ಚರವಾದಾಗ ಅನಿಸಿತು- ಡ್ಯಾಡಿಯ ಸೋಲು ನನ್ನ ಸೋಲೂ ಸಹ. ಅವನು ನನಗೂ ಸಿಗದೇ ಹೊರಟುಹೋಗಿದ್ದಾನೆ. ಜತೆಗೆ ನನ್ನ ಕುದುರೆ, ನಾಯಿ, ಪಾರಿವಾಳವನ್ನು ಕೊಂಡೊಯ್ದಿದ್ದಾನೆ. +ಈ ನಾಲ್ವರಲ್ಲಿ ನನಗೆ ಒಂದು ಸಿಕ್ಕಿದರೂ ಉಳಿದ ಮೂವರನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ. +ಹಾಸಿಗೆಯಿಂದೆದ್ದು ಕಂಡ ಕನಸನ್ನು ಸ್ಯಾಮ್‌ಗೆ ಹೇಳಿದೆ. ಅವನು ನನ್ನ ಬೆನ್ನು ಸವರುತ್ತಾ ಹೇಳಿದ: “ನಿನಗಿನ್ನೂ ನನ್ನ ಮೇಲೆ ನಂಬಿಕೆಯಾದಂತಿಲ್ಲ. ನಿಜ ಹೇಳುತ್ತೇನೆ ಕೇಳು ನಿನಗೆ ಹುಚ್ಚು ಹಿಡಿದಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿರುವವರೆಗೂ ನೀನು ಹುಚ್ಚಿಯಲ್ಲ.” +ಮೋಡಗಳಿಲ್ಲದ ಪೂರ್ಣಿಮೆಯ ರಾತ್ರಿಯಾಗಸದಲ್ಲಿ ಹಿಮಗತ್ತಲು ಮುಸುಕಿಕೊಂಡಿತ್ತು. +ಅವನಿಗೆ ಕೊಟ್ಟಕೊನೆಯ ಪತ್ರ ಬರೆಯತೊಡಗಿದೆ. +ಬೆಳದಿಂಗಳು ಬೇಕೆನಿಸಿದಾಗಲೆಲ್ಲಾ ನಿನ್ನನ್ನು ನೆನಸಿಕೊಂಡವಳು ನಾನು. ನೀ ಇಲ್ಲವಾಗುತ್ತಿದ್ದುದು ನನ್ನ ತಪ್ಪೇ? ಚರಿತ್ರೆಯ ಬಾವಿಯ ಆಳದಲ್ಲಿ ನೆನಪುಗಳು ಹರಿದಾಡುತ್ತಿರುವಾಗ ನನ್ನ ಮೊಲೆಗಳ ತುಂಬಾ ಕವನಗಳು ಭೋರ್ಗರೆಯಲಾರಂಭಿಸುತ್ತವೆ. ಅವೆಲ್ಲವೂ ಪಶ್ಚಿಮದ ಕಡೆಗೇ ಹರಿದುಹೋಗುವುದನ್ನು ತಲೆಬಾಗಿಸಿ ದಿಟ್ಟಿಸುತ್ತೇನೆ. ನೀನಂತೂ ಬರಲೇ ಇಲ್ಲ. ನಾನೇನು ಮಾಡಲಿ? ನಿನ್ನನ್ನು ಹುಡುಕಲು ನನ್ನಲ್ಲಿ ಯಾವ ಸಾಧನವೂ ಇಲ್ಲ. ನನ್ನ ನಾಯಿ ಇದ್ದಿದ್ದರೆ ನಿನ್ನನ್ನು ಹುಡುಕಲು ಕಳಿಸುತ್ತಿದ್ದೆ. ನನ್ನ ಪಾರಿವಾಳವಿದ್ದಿದ್ದರೆ ನಿನಗೆ ಸುದ್ದಿ ಕಳಿಸುತ್ತಿದ್ದೆ. ನನ್ನ ಕುದುರೆ ಇದ್ದಿದ್ದರೆ ನಾನೇ ನಿನ್ನ ಬಳಿಗೆ ಓಡೋಡಿ ಬರುತ್ತಿದ್ದೆ. ಅವು ಮೂರೂ ಈಗ ನಿನ್ನ ಬಳಿಯೇ ಇವೆ. ನನ್ನನ್ನು ಹುಡುಕಲು, ನನಗೆ ಸುದ್ದಿ ಕಳುಹಿಸಲು, ನನ್ನ ಬಳಿಗೆ ಓಡೋಡಿ ಬರಲು ನಿನಗೆ ಆಗುವುದಿಲ್ಲವೇ? ಹಿಮಪಾತವನ್ನೂ ಮೀರಿಸಿದ ತಣ್ಣನೆಯ ಕಟುಕ ನೀನಾಗಬೇಕೆ? ಅಂದು ಕಲ್ಲು ನೀರು ಕರಗುವ ವೇಳೆಯಲ್ಲಿ ಡ್ಯಾಡಿಯಿಂದ ತಪ್ಪಿಸಿಕೊಂಡು ನೀ ಮಾಯವಾದ ಮೇಲೆ ನಿನ್ನನ್ನು ನೋಡಲೇ ಆಗಿಲ್ಲ. ಕನಸು ಹರಿಯದಿದ್ದರೆ ನಾ ಖಂಡಿತಾ ನಿನ್ನ ಹಿಂದೆಯೇ ಬಂದುಬಿಡುತ್ತಿದ್ದೆ. ಎಚ್ಚರವಾದಾಗ ನೀ ಎತ್ತ ಹೋದೆಯೆಂದು ಗೊತ್ತಾಗುವುದಿಲ್ಲ ನೋಡು. ಕನಸ ಕಾಣುವ ವಯಸ್ಸಿನಲ್ಲಿ ನನಗೆ ಕವನ ಹೊಸೆಯುವುದನ್ನು ಕಲಿಸಿದವನು ನೀನು. ನೀನು ಕೊಟ್ಟಕೊನೆಯ ಕಾಯಿ ನಡೆಸಿ ಸಾಲುಗೆರೆಯ ಹಿಂದೆ ನೆಲೆ ನಿಲ್ಲುವವರೆಗೆ ಅವು ಮುಕ್ತಾಯವಾಗುವುದಿಲ್ಲ. ನಾನಿಲ್ಲದೇ ಅವುಗಳಿಗೆ ಅರ್ಥವಿಲ್ಲ. ನೀನಿಲ್ಲದೇ ಅವುಗಳಿಗೆ ಬೆಲೆಯಿಲ್ಲ. ನನ್ನ ಮಾತು ಕೇಳಿ ಅದರಂತೆ ನಡೆದುಕೋ. ಸುಮ್ಮನೆ ಹಟ ಮಾಡಬೇಡ. ಇಲ್ಲದಿದ್ದರೆ ನಾನೆಂದೂ ಟ್ರಾನ್ಸಿಸ್ಟರ್ ಆನ್ ಮಾಡುವುದೇ ಇಲ್ಲ ನೋಡು! ಓಲೈಸಿ ಕರೆದ ನನ್ನ ದನಿಯನ್ನು ಮರುಭೂಮಿಯ ಪಾಪಾಸುಕಳ್ಳಿಯ ಮೇಲೆ ಒಗೆದುಬಿಡಬೇಕೆಂದಿರುವಿಯೇನು? ಕಾಗೆಯ ಗೂಡಿನಲ್ಲಿ ನನ್ನ ಬಸಿರನ್ನು ಹೂತುಬಿಡಬೇಕೆಂದು ಮನಸು ಮಾಡಿರುವಿಯೇನು? ನಿನ್ನನ್ನು ಕಾದು ಕಾದು ಸಾಕಾಗಿ ನನಗೀಗ ಎಷ್ಟು ಕೋಪ ಬಂದಿದೆ ಗೊತ್ತೇ? ನಿನಗೊಂದೇ ಒಂದು ಮಾತು ಹೇಳಿ ನನ್ನನ್ನು, ನಿನ್ನನ್ನು, ಡ್ಯಾಡಿಯನ್ನು, ಬೀದಿಯನ್ನು, ಕಾಲೇಜನ್ನು, ಈ ಜಗತ್ತನ್ನೂ ಉಳಿಸುವ ಬಯಕೆ ನನಗೆ. ಒಂದೇ ಒಂದು ಸಲ ನನ್ನ ಬಳಿಗೆ ಬಾ. ನನ್ನ ಮಾತು ಕೇಳಿ ಹೊರಟುಹೋಗುವೆಯಂತೆ. ಹಗಲಲ್ಲಿ ಯಾರಾದರೂ ನೋಡಿಬಿಡುತ್ತಾರೆಂದು ಭಯವಾದರೆ ರಾತ್ರಿ ಕನಸಲ್ಲಿ ಬಾ. ಕೋಳಿ ಕೂಗುವ ಮೊದಲೇ ಕಳಿಸಿಕೊಡುತ್ತೇನೆ. ನಿನಗೆಂದೂ ನಾ ಕೇಡು ಬಯಸಿದವಳಲ್ಲವೆಂದು ನಿನಗೇ ಗೊತ್ತು. ನಿನ್ನನ್ನು ಕೊಲ್ಲಬೇಕೆಂಬ ಬಯಕೆ ನನಗಿದ್ದುದೇ ಆಗಿದ್ದರೆ ನಿನ್ನನ್ನು ಆವತ್ತೇ ನನ್ನ ಬಸಿರಿನೊಳಗೆ ಹೂತುಬಿಡುತ್ತಿದ್ದೆ. +ನನಗಾದರೂ ಸಾವು ಯಾಕೆ ಬರಬೇಕಿತ್ತು ಹೇಳು? ಅದೂ ಮೊಟ್ಟ ಮೊದಲ ಸಾವು! ಅದರಲ್ಲೂ ಋತುಮತಿಯಾದ ಐದೇ ವರ್ಷಗಳಲ್ಲಿ! ನೀ ನನ್ನನ್ನು ಪ್ರೀತಿಸುವುದು ನಿಂತ ಕ್ಷಣ ನನಗೆ ಸಾವುಂಟಾಗುತ್ತದೆಯೆಂದು ನಿನಗೆ ಯಾರೂ ಹೇಳಿರಲೇ ಇಲ್ಲವೇ? ನಾ ನಿನ್ನನ್ನು ಪ್ರೀತಿಸುವುದು ನಿಂತ ಕ್ಷಣವೇ ನಿನಗೆ ಸಾವು ಬರುತ್ತದೆಂದು ನನಗಂತೂ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ನಿನ್ನನ್ನು ಉಳಿಸುವ ಬಯಕೆಯಿಂದ ನಿನ್ನನ್ನು ಪ್ರೀತಿಸುವುದನ್ನು ನಾ ನಿಲ್ಲಿಸಲೇ ಇಲ್ಲ. ಪ್ರೀತಿಗೆ ಆಗಾಗ ಗೆರೆ ಎಳೆದು ನಿನ್ನನ್ನು ಅದೆಷ್ಟೋ ಬಾರಿ ಕೊಲ್ಲುವ ಅವಕಾಶಗಳು ನನ್ನ ಮಡಿಲಲ್ಲಿ ತುಂಬಿದ್ದವು. ಆದರೆ ನಾ ಹಾಗೆ ಮಾಡಲಿಲ್ಲ. ಇಲ್ಲದಿದ್ದರೆ ನಾ ಕಾಣುವ ಕನಸುಗಳಲ್ಲೆಲ್ಲಾ ನೀನೇ ಯಾಕೆ ಬರಬೇಕಿತ್ತು? ಬರಿದಾಗಿಹೋಗಿದ್ದ ನನ್ನ ಉಡಿಗೆ ಕವನಗಳನ್ನು ತುಂಬುವ ಆಟ ಆಡಲು ನಿನಗೆ ಮನಸ್ಸಾದರೂ ಹೇಗೆ ಬಂತು? +ನಾ ನಿನ್ನನ್ನು ಪ್ರೀತಿಸಿದೆ. +ನಿಜ. +ಅದು ನನ್ನ ತಪ್ಪೇ? +ಈಗಲೂ ಹೇಳುತ್ತಿದ್ದೇನೆ- ನಿನ್ನ ಮೇಲಿನ ನನ್ನ ಪ್ರೀತಿ ಇನಿತೂ ಮಾಸಿಲ್ಲ. +ಅದೂ ನನ್ನ ತಪ್ಪೇ? +ಕಾಲೇಜಿಗೆ ಹೋಗುವ ದಾರಿಯುದ್ದಕ್ಕೂ ಜನ ನನ್ನನ್ನೇ ನೋಡುತ್ತಾರೆ. ಬಹುಷಃ ಅವರೆಂದೂ ಯಾರನ್ನೂ ಪ್ರೀತಿಸಿರಲಾರರು. ಹೀಗಾಗಿಯೇ ಅವರಿಗೊಂದು ಸತ್ಯ ತಿಳಿದಿರಲಾರದು- ಬದುಕಿನಲ್ಲಿ ಆಗಾಗ ಪವಾಡಗಳು ಬೆಳೆದು ವೃಕ್ಷಗಳಾಗಿ ನಿಂತು ಹಣ್ಣು ಬಿಡುತ್ತವೆ. ಆಗಲೇ ಜಗತ್ತಿಗೆ ಮುಟ್ಟು ನಿಲ್ಲುವುದು. ಆಗ ಆ ಹಣ್ಣುಗಳೊಳಗೆಲ್ಲಾ ಧರ್ಮಾಧರ್ಮಪಿಂಡಗಳು ಸೇರಿಕೊಂಡುಬಿಡುತ್ತವೆ. ಅಂತಹ ಹಣ್ಣುಗಳನ್ನು ತಿಂದವರಿಗೆಲ್ಲಾ ಆನರರಿ ಡಾಕ್ಟರೇಟ್ ಡಿಗ್ರಿ ದೊರೆಯುತ್ತದೆ. +ಅಂತಹ ಒಂದು ಘಟಕೋತ್ಸವದಲ್ಲೇ ಅಲ್ಲವೇ ನಾವಿಬ್ಬರೂ ಮೊಟ್ಟಮೊದಲು ಭೇಟಿಯಾದದ್ದು? ಅದಲ್ಲದೇ ಬೇರಿನ್ನಾವ ತಿರುವಿನಲ್ಲಾದರೂ ನನ್ನ ನಿನ್ನ ಹೆಜ್ಜೆಗಳು ನಿಂತಿದ್ದುದೇ ಆಗಿದ್ದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟೋಂದು ಗಾಢವಾಗಿ ಹಚ್ಚಿಕೊಳ್ಳುತ್ತಿರಲಿಲ್ಲ- ಎಂದು ನೀನೇ ಒಂದು ಸಲ ನನ್ನ ಎದೆಯಾಳದಲ್ಲಿ ಉಸಿರಿದ್ದೆ ಅಲ್ಲವೇ? ನೀನು ಮರೆತಿರಬಹುದು. ಮರೆಯುವುದು ನಿನಗೆ ಸುಲಭ. ಹಳೆಯದನ್ನು ಒಳತುರುಕಿ ಹೊಸಬರು ಮಾತಾಡಲು ಮೊದಲು ಮಾಡಿದರೆ ಹೊಸದು ಅಂಟಿಕೊಳ್ಳುತ್ತದೆ. ಹಳೆಯದು ಹಳತಾಗಿ ಹುಳು ತಿಂದು ಹೋಗುತ್ತದೆ- ಎಂಬ ಜಾಗತಿಕ ಸತ್ಯವನ್ನು “ರೇಡಿಯೋ ಕಶ್ಮೀರ್”ನಲ್ಲಿ ಅನೇಕ ಬಾರಿ ಕೇಳಿದ್ದೇನೆ. ಅಂದು ನೀನಂದ ಆ ಮಾತುಗಳೇ ನನ್ನನ್ನಿಂದು ಈ ಸ್ಥಿತಿಗೆ ತಂದು ನಿಲ್ಲಿಸಿದಂಥವು. ನೀ ಅಂದದ್ದೇನು? ನನಗೆ ಚೆನ್ನಾಗಿ ನೆನಪಿದೆ. ವಿಂಧ್ಯದ ಮೇಲೆ ಕೆಳಗೆ ನೋಡು. ಬೇರೆ ಬೇರೆ ಚರಿತ್ರೆ, ಸಂಸ್ಕೃತಿ ಸಂಪ್ರದಾಯ. ಮಣ್ಣು ಬೇರೆ, ಮಣ್ಣಿನ ಮಕ್ಕಳ ಮೈನ ಬಣ್ಣ ಬೇರೆ. ಉಡುಗೆತೊಡುಗೆ ಬೇರೆ, ಊಟ ತಿಂಡಿ ಬೇರೆ. ಸಂಗೀತ ಬೇರೆ, ಶಿಲ್ಪ ಬೇರೆ, ನೃತ್ಯ ಬೇರೆ. ಭಾಷೆಯಂತೂ ಬೇರೆಯೇ ಬೇರೆ. ಆದರೆ ದೇವದೇವತೆಗಳು ಮಾತ್ರ ಅವರೇ. ಅಲ್ಲಿ ಬೇರೆತನವಿಲ್ಲ. ಅದೇ ಥಾರ್‌ನ ಆಕಡೆ ಈಕಡೆ ನೋಡು. ಅದೇ ನೆಲ, ಅದೇ ಜಲ. ಜನರಂತೂ ಅವರೇ. ಅದೇ ಚರಿತ್ರೆ, ಅದೇ ಸಂಸ್ಕೃತಿ. ಒಂದೇ ಊಟ, ಒಂದೇ ಬಟ್ಟೆ. ಹಾಡೊಂದೇ, ನಾಟ್ಯವೂ ಒಂದೇ. ನುಡಿಯಂತೂ ಒಂದರ ಪಡಿಯಚ್ಚು ಇನ್ನೊಂದು. ಎಲ್ಲವೂ ಅದೇ. ಆದರೆ ಪರಮಾತ್ಮ ಮಾತ್ರ ಬೇರೆ. ಆಕಡೆ ಅಲ್ಲಾ. ಈಕಡೆ ಅವನಿಲ್ಲ. ಈ ಪುರಾತನ ಸತ್ಯವನ್ನು ನೀನಂದು ಅರುಹಿದಾಗಲೇ ಅಲ್ಲವೇ ನನ್ನಲ್ಲಿ ಈಗಿನ ದ್ವಂದ್ವ ಆರಂಭವಾದದ್ದು? ನಾ ಯಾರೆಂದು ನಾ ಯೋಚಿಸಹತ್ತಿದ್ದು? ನಿನ್ನ ಆ ಞeಥಿಟಿoಣe ಚಿಜಜಡಿessನ ಪ್ರತಿಯೊಂದು ನನ್ನೆದೆಯಲ್ಲಿ ಯಾವಾಗಲೂ ಪುಟ ತೆರೆದು ಮಲಗಿರುತ್ತದೆ. “ಹಿಂದೆ ಹೋಗು, ಹಿಂದೆ ಹೋಗು. ಸರಿದಾರಿಗೆ ತಿರುಗು” ಎಂದು ನನ್ನನ್ನು ಪುಸಲಾಯಿಸುತ್ತಿರುತ್ತದೆ. ನಿಜ ಹೇಳುತ್ತಿದ್ದೇನೆ ಕೇಳು- ಡ್ಯಾಡಿ ನನಗೆಂದೂ ಯಾವ ಗಂಡನ್ನೂ ನೋಡಿರಲಿಲ್ಲ. ಆದರೆ ನಾನು ಬೇರೊಂದು ನಂಬಿಕೆಯ ಕೂಸನ್ನು ಹೆರುವುದು ಅವರಿಗೆ ಅಧರ್ಮವೆಂದು ಕಂಡಿತ್ತು. ಅವರನ್ನು ಬೈಯಬೇಡ. ಡ್ಯಾಡಿ ವಿಶ್ವಮಾನವ. ಬಿಡಿ ಹೃದಯಗಳಲ್ಲಿ ಕ್ರಾಂತಿಯಾಗುವುದು ಅವರಿಗೆ ಬೇಕಿರಲಿಲ್ಲ. ಬೀದಿಯಲ್ಲಿ, ಸಂತೆಯಲ್ಲಿ, ದೇಶದಲ್ಲಿ, ಯುನೈಟೆಡ್ ನೇಷನ್ಸ್‌ನಲ್ಲಿ ಕ್ರಾಂತಿಯಾಗಬೇಕೆಂದು ಅವರು ಹಪಹಪಿಸುತ್ತಿದ್ದರು. ಆದರೂ ಅವರು ಒಂದು ಮೆಟ್ಟಲು ಕೆಳಗಿಳಿದು ನಿಂತು ಮತ್ತೂ ಒಂದು ಆಸೆ ತೋರಿಸಿದ್ದರು. ನಾಡಿನಲ್ಲಿರುವ ನನ್ನಂಥಾ ಮುಸ್ಲಿಮ್ ಹೆಣ್ಣುಹುಡುಗಿಯರೆಲ್ಲರೂ ಹಿಂದೂ ಹುಡುಗರನ್ನು ಸಾಮೂಹಿಕ ವಿವಾಹವಾಗಬೇಕು; ಹಿಂದೂ ಹುಡುಗಿಯರೆಲ್ಲ ಮುಸ್ಲಿಮ್ ಹುಡುಗರನ್ನು ನಿಕಾ ಮಾಡಿಕೊಳ್ಳಬೇಕು. ಹೀಗೆಂದು ಕಾನೂನಾಗಲಿ. ಸಂವಿಧಾನದ ಠಿಡಿeಚಿmbಟe ನಲ್ಲಿ “We ಣhe Peoಠಿಟe oಜಿ Iಟಿಜiಚಿ… ” ಎನ್ನುವುದರ ಮುಂದೆ ಬ್ರ್ಯಾಕೆಟ್‌ನಲ್ಲಿ ಈ ಎಲ್ಲಾ ಹುಡುಗ ಹುಡುಗಿಯರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೊರೆಯಿಸಬೇಕು. ಒಂದುವೇಳೆ ಮುಸ್ಲಿಮ್ ಹುಡುಗ ಹುಡುಗಿಯರ ಕೊರತೆ ಕಂಡುಬಂದರೆ ರ್‍ಯಾಡ್‌ಕ್ಲಿಫ್‌ನ ಪೆನ್ಸಿಲಿನ ಮೊನೆಯನ್ನು ಮುರಿದುಹಾಕಿ ಆಚೆಬದಿಯಿಂದ ಅವರನ್ನು ಆಮದು ಮಾಡಿಸುತ್ತೇನೆ ಎಂದು ನೀನು ವಾಗ್ದಾನ ಕೊಡಬಲ್ಲೆಯಾ?- ಎಂದು ಕೇಳಿದ್ದರು! ಡ್ಯಾಡಿಯ ಈ ಸವಾಲಿಗೆ ನಾನು ಯಾವ ಮುಖ ಎತ್ತಿಕೊಂಡು ಉತ್ತರಿಸಲಿ? ಪ್ರತಿರಾತ್ರಿ ನನ್ನ ಟ್ರ್ಯಾನ್ಸಿಸ್ಟರ್‌ನಲ್ಲಿ “ಪಾಕಿಸ್ತಾನ್ ಸ್ಟ್ಯಾಂಡರ್ಡ್ ಟೈಂ” ಎಂದು ಕಿವಿಯಾನಿಸಿ ಕೇಳುವುದನ್ನು ಹೇಗೆ ತಾನೆ ನಿಲ್ಲಿಸಲಿ? +ಹೀಗೆ ನನ್ನ ಕಥೆಯನ್ನು, ನನ್ನೊಳಗಿನ ದ್ವಂದ್ವದ ವ್ಯಥೆಯನ್ನು, ನನ್ನ ನಿನ್ನ ಪ್ರೇಮದ ಪರಸಂಗವನ್ನು ಒಂದೊಂದು ಅಧ್ಯಾಯದಲ್ಲೂ ಇಂತಿಷ್ಟು ಅಂತ ಹೇಳುತ್ತಾ ಹೋಗುತ್ತೇನೆ. ಬೆಳಗಾಗುವವರೆಗೆ… +ನೀ ಕೇಳುತ್ತಾ ನಡೆ. +* +* +* +೪. ಸುಂಟರಗಾಳಿ +ಪತ್ರವನ್ನು ಬರೆದು ಮುಗಿಸಿ ಅವನಿಗೆ ತಲುಪಿಸಲು ಸ್ಯಾಮ್‌ನ ಕೈಗೆ ಕೊಟ್ಟೆ. “ಇದ್ಯಾವ ಪೂರ್ವ ಜನ್ಮದ ಕರ್ಮವೋ ಅಕಟಾ” ಎನ್ನುತ್ತಾ ಸ್ಯಾಮ್ ಅದನ್ನು ತೆಗೆದುಕೊಂಡ. ಆಕಾಶ ನೋಡುತ್ತಾ ಜೇಬಿಗೆ ಸೇರಿಸಿದ. “ನೀನೊಮ್ಮೆ ಅದನ್ನು ಓದಬಾರದೇ?” ಎಂದು ಆಕ್ಷೇಪಿಸಿದೆ. ಅವನು ಸಿಡಸಿಡ ಅಂದ. ನನಗೆ ಬಿಕ್ಕಿಬಿಕ್ಕಿ ಅಳುವಂತಾಯಿತು. ಅದೆಷ್ಟೋ ಹೊತ್ತಿನ ಮೇಲೆ ಸ್ಯಾಮ್ ಟ್ರ್ಯಾನ್ಸಿಸ್ಟರಿನ ಕೊರಳು ಹಿಂಡಿದಾಗ ಹೃದಯ ತುಂಬುವಂಥಾ ನೀರವ ನಾಲಿಗೆ ಚಾಚುತ್ತಾ ಬಾಗಿಲಲ್ಲಿ ಬಿದ್ದುಕೊಂಡಿತು. +ಬಿಡಿಬಿಡಿಯಾದ ನೆನಪುಗಳು ಒಂದರ ಬೆನ್ನಟ್ಟಿ ಇನ್ನೊಂದು ಬರಲಾರಂಭಿಸಿದಾಗ ಯಾವುದನ್ನು ಬಿಟ್ಟು ಮತ್ತಾವುದನ್ನು ತಬ್ಬಿ ಮುತ್ತಿಕ್ಕಲಿ ಎಂದು ಕನವರಿಸುತ್ತಾ ನಾ ನಡೆದೆ. +ನಡೆಯುತ್ತಾ ನಡೆಯುತ್ತಾ ಕಾಲೇಜಿನ ಹತ್ತಿರ ಬಂದುಬಿಟ್ಟಿದ್ದೆ. ಕೈಯಲ್ಲಿ ಪುಸ್ತಕಗಳಿರಲಿಲ್ಲ. ಪರ್ಸಿತ್ತು. ಅದರೊಳಗೆ ಬಾವುಟ ಕೊಳ್ಳಲೆಂದು ಬ್ಯಾಬಿಲೋನಿಯನ್ ಆಂಟಿ ಕೊಟ್ಟಿದ್ದ ಚಿಲ್ಲರೆ ಕಾಸುಗಳಿದ್ದವು. ಕಾಲೇಜಿನ ಮುಂದಿದ್ದ ಹಲ್ಲು ಕಿರಿಯುವ ಅಂಗಡಿಗೆ ಹೋಗಿ ನಲವತ್ತೇಳು ತಾಳೆ ಗರಿಗಳ ಒಂದು ಕಟ್ಟನ್ನೂ, ಒಂದು ಹಸಿರು ರಿಫಿಲ್‌ನ ಪೆನ್ನನ್ನೂ ಕೊಂಡು ಕಾಲೇಜಿನ ಆವರಣದೊಳಗೆ ಹೆಜ್ಜೆ ಹಾಕಿದೆ. +ಪ್ರಿನ್ಸಿಪಾಲರ ಕೋಣೆಯ ಮುಂದೆ “ನಾಯಿಗಳಿವೆ ಎಚ್ಚರಿಕೆ” ಎಂಬ ಬೋರ್ಡನ್ನು ತೂಗುಹಾಕಿದ್ದರು. ಅದೇ ಬೋರ್ಡಿನಲ್ಲಿ ಕೆಳಗೆ ಮೂಲೆಯಲ್ಲಿ ಸಣ್ಣಗೆ “ಹಂದಿಗಳಿಗೆ ಪ್ರವೇಶವಿಲ್ಲ” ಎಂದೂ ಬರೆದಿತ್ತು. ನಾನು ತಲೆತಗ್ಗಿಸಿ ನನ್ನ ಕ್ಲಾಸ್‌ರೂಮಿನ ಕಡೆ ಸರಸರನೆ ಜೆಜ್ಜೆ ಹಾಕಿದಾಗ ಯಾರೋ ಬಂದು ನನ್ನ ಎರಡೂ ಕೈಗಳಿಗೆ ಹಗ್ಗ ಕಟ್ಟಿದರು. ನೋಡುನೋಡುತ್ತಿರುವಂತೆಯೇ ನನ್ನ ಮೈ ಸುತ್ತ ನೂರಾರು, ಸಾವಿರಾರು ಕೈಗಳು, ಹಗ್ಗಗಳು ನುಲಿದುಕೊಂಡವು. ಕೈಬೆರಳುಗಳೇ ಉದ್ದೋ‌ಉದ್ದಕ್ಕೆ ಬೆಳೆದು ಹಗ್ಗಗಳಾಗಿ ಹೆಣೆಯಲ್ಪಟ್ಟಿರುವುವೇನೋ ಎಂಬ ಅನುಮಾನ ನನಗಾಯಿತು. ಇದೇನಾಗುತ್ತಿದೆಯೆಂದು ನನ್ನ ಅರಿವಿಗೆ ಬರುವಷ್ಟರಲ್ಲಿ ಯಾವನೋ ಒಬ್ಬ ಚೂಪಾದ ಕೊಕ್ಕೆಯಂತಿದ್ದ ಎಂಥದೋ ಒಂದನ್ನು ನನ್ನ ಎದೆಗೆ ಕಚಕ್ಕನೆ ಚುಚ್ಚಿ ಒಳಗಿನಿಂದ ಏನನ್ನೋ ಸೆಳೆದುಕೊಂಡ. ಅದೇನೆಂದು ತೋರಿಸು ಎಂದರೆ ತೋರಿಸಲಿಲ್ಲ. ಇಷ್ಟೆಲ್ಲಾ ಒಂದೆರಡು ಕ್ಷಣಗಳಲ್ಲಿ ನಡೆದುಹೋಯಿತು. ನಾನು ಬೆಕ್ಕಸಬೆರಗಾಗಿ ನಿಂದೆ. +“ನಡೆನಡೆ ಹರಾಮಿ. ‘ಹೋದೆಯಾ ಪ್ರೇಯಸೀ ಅಂದರೆ ಬಂದೆ ಕನಸಲ್ಲಿ’ ಎಂಬಂತೆ ಮತ್ತೆ ಇಂದೂ ಬಂದೆಯಾ” ಎಂದು ನನ್ನನ್ನೋ ಅಥವಾ ಇನ್ನಾರನ್ನೋ ಗಟ್ಟಿಯಾಗಿ ಬೈಯುತ್ತಾ ಯಾರೋ ನನ್ನನ್ನು ದೂಡಿಕೊಂಡು ಪ್ರಿನ್ಸಿಪಾಲರ ಕೊಟಡಿಯೊಳಗೆ ನಡೆಸಿದರು. ಹಿಂದೆ ಒಂದೇ ಒಂದು ಬಾರಿ ನಾನು ಅಲ್ಲಿಗೆ ಹೋಗಿದ್ದೆ, ಐಡೆಂಟಿಟಿ ಕಾರ್ಡ್‌ಗೆ ಸಹಿ ಹಾಕಿಸಿಕೊಳ್ಳಲು. ಪ್ರಿನ್ಸಿಪಾಲರನ್ನು ಹಲಬಾರಿ ನೋಡಿದ್ದೆ, ಕ್ಲಾಸಿನಲ್ಲಿ. ಅವರೇ ನಮಗೆ “ಮಧ್ಯಯುಗೀನ ಧಾರ್ಮಿಕ ಇತಿಹಾಸ”ವನ್ನು ಬೋಧಿಸುತ್ತಿದ್ದವರು. ಆಗಾಗ ಬೇಕೆನಿಸಿದಾಗ ಕನಸಿನಲ್ಲಿ ಬಂದು ಅಂಜಿಸುತ್ತಿದ್ದರು. ಹೀಗಾಗಿ ಅವರ ಪರಿಚಯ ನನಗೆ ಚೆನ್ನಾಗಿಯೇ ಉಂಟು. +ಹೀಗಾಗಿಯೇ ನಾನು ಅವರನ್ನು ಧೈರ್ಯದಿಂದ ತಲೆಯೆತ್ತಿ ನೋಡುವಂತಾಯಿತು. +ಅವರು ಎತ್ತರವಾದುದೊಂದು ಆಸನದಲ್ಲಿ ಕುಳಿತುಕೊಂಡಿದ್ದರು. ಅವರ ಕುರ್ಚಿಗೆ ಮೇಲುಮೇಲಕ್ಕೆ ಹೋದಂತೆ ಕಿರಿದಾಗುತ್ತಿದ್ದ ಇಪ್ಪತ್ತೊಂದು ಮೆಟ್ಟಲುಗಳಿದ್ದವು. ನಾನು ಮತ್ತೊಮ್ಮೆ ಗಮನವಿಟ್ಟು ಲೆಕ್ಕ ಹಾಕಿದೆ. +ಸರಿಯಾಗಿ ಇಪ್ಪತ್ತೊಂದು! +ಅರೆ! ನಿನ್ನೆಯಷ್ಟೇ ನನಗೆ ಇಪ್ಪತ್ತೊಂದು ತುಂಬಿತು ಎಂಬ ಸತ್ಯ ತಟಕ್ಕನೆ ನೆನಪಿಗೆ ಬಂದಿತು. ನನ್ನ ಹುಟ್ಟುಹಬ್ಬದ ವಿಚಾರವನ್ನು ಇಲ್ಲಿ ನೆನಪಿಸಿಕೊಳ್ಳುವುದರ ಔಚಿತ್ಯವೇನೆಂದು ತಿಳಿಯಲಿಲ್ಲ. ಈ ಪ್ರಿನ್ಸಿಪಾಲರು ನನ್ನ ಬರ್ತ್‌ಡೇ ಪಾರ್ಟಿಗೆ ಬಂದಿದ್ದರೂ ಯಾವ ಉಡುಗೊರೆಯನ್ನೂ ತಂದಿರಲಿಲ್ಲ. ಸರಿ, ಅದು ನಿನ್ನೆಗಾಯಿತು. +ಪ್ರಿನ್ಸಿಪಾಲರು ಒಂದು ಕಾಲನ್ನು ಗದ್ದಿಗೆಯ ಮೇಲಿಟ್ಟುಕೊಂಡು ಇನ್ನೊಂದನ್ನು ಕೆಳಗೆ ಬಿಟ್ಟುಕೊಂಡು ನೇತಾಡಿಸುತ್ತಿದ್ದರು. ಆ ಕಾಲಿನಲ್ಲಿ ಗೆಜ್ಜೆಗಳಿದ್ದವು. ಕಾಲು ಅಲುಗಿದಂತೆಲ್ಲಾ ಅವು ಝಿಲ್‌ಝಿಲ್‌ಝಿಲಕ್ಕೆಂದು ನಿನಾದಗೈಯ್ಯುತ್ತಿದ್ದವು. ಯೂನಿಯನ್ ಡೇ ದಿನ ಸರಯೂ ಕಥಕ್ ಮಾಡುವಾಗ ಇಂಥಾದ್ದೇ ನಿನಾದ ಕೇಳಿ ಮೈಮರೆತಿದ್ದೆ. +ಆ ಗೆಜ್ಜೆಯೊಂದನ್ನು ಬಿಟ್ಟರೆ ಪ್ರಿನ್ಸಿಪಾಲರು ಪೂರ್ತಿ ಬೆತ್ತಲಾಗಿದ್ದರು. ನಾನು ಕಣ್ಣು ಮುಚ್ಚಿಕೊಂಡೆ. ಅವರು ಯಾರಿಗೋ ಸನ್ನೆ ಮಾಡಿ ಒಂದು ಅರಿವೆಯ ತುಂಡನ್ನು ತರಿಸಿಕೊಂಡು ನಡುವಿನಷ್ಟಕ್ಕೆ ಸುತ್ತಿಕೊಂಡು “ಕಣ್ಣು ಬಿಡು ಮಗಳೇ” ಅಂದರು. ಈಗ ನಾನು ಧೈರ್ಯದಿಂದ ಕಣ್ಣು ತೆರೆದು ನೋಡುವಂತಾಯಿತು. +ನೋಡಿದೆ. +ಅವರು ಸುತ್ತಿಕೊಂಡದ್ದು ಜನುಮ ಜನುಮದ ಹಿಂದೆ ನಾನು ಮುಟ್ಟಾಗಿ ಉಕ್ಕಿದ ರಕ್ತವನ್ನು ಒರೆಸಿ ಎಸೆದ ವಸ್ತ್ರವಾಗಿತ್ತು! +ಚೀನಾದಲ್ಲಿ ತಯಾರಾದ ಆ ರೇಶಿಮೆಯ ವಸ್ತ್ರವು ನಯವಾದುದಾಗಿತ್ತು. ಮಿರಮಿರನೆ ಮಿಂಚುಳ್ಳದ್ದಾಗಿತ್ತು. ಅದರ ಬಣ್ಣವೋ ಏಳುಲೋಕಗಳಲ್ಲಿ ಸಾಟಿಯಿಲ್ಲದ್ದು. ಅದರ ಅಂಚಿನಲ್ಲಿದ್ದ ಚಂದದ ಗೊಂಡೆಗಳು ಇನ್ನೂ ಹಾಗೆಯೇ ಜೋತಾಡುತ್ತಿವೆ. ಅದರ ಒಡಲಲ್ಲಿದ್ದ ಕಸೂತಿಯ ಅಂದವನ್ನೆಂತು ಬಣ್ಣಿಸಲಿ? ಓಹ್! ಸುಮ್ಮನಿರುವುದೇ ಲೇಸು. +ಅಂತಹ ನಯನಮನೋಹರವಾದ ಅದೆಷ್ಟೋ ರೇಶಿಮೆ ಅರಿವೆಗಳನ್ನು ತಿಂಗಳು ತಿಂಗಳೂ ಮುಟ್ಟಿನ ರಕ್ತ ಒರೆಸಿ ನಾ ಎಸೆದಿದ್ದೆ. ಅವೆಲ್ಲವೂ ಅದೆಲ್ಲಿ ಹಾರಿಹೋದವೋ. ಇದೊಂದು ಮಾತ್ರ ಪ್ರಿನ್ಸಿಪಾಲರ ಕೈಗೆ ಅದೆಲ್ಲಿ ಸಿಕ್ಕಿತೋ. ಸೋಜಿಗ ಪಟ್ಟುಕೊಂಡೆ. ನನ್ನ ಮುಟ್ಟಿನ ರಕ್ತವಿನ್ನೂ ಅದರಲ್ಲಿ ಹಾಗೇ ಮೆತ್ತಿಕೊಂಡಿದೆ. +ಪ್ರಿನ್ಸಿಪಾಲರ ಮುಖದ ಬಣ್ಣ ಕಡುಗಪ್ಪಾಗಿತ್ತು. ಯಾರೋ ಒಂದು ನಯನಮನೋಹರವಾದ, ವಜ್ರ ವೈಢೂರ್ಯಖಚಿತವಾದ ಚಿನ್ನದ ಕಿರೀಟವೊಂದನ್ನು ತಂದು ಅವರ ತಲೆಯ ಮೇಲೆ ಕೂರಿಸಿದರು. ಸೂರ್ಯನಂತೆ ಹೊಳೆಯುತ್ತಿದ್ದ ಅದು ಅಲ್ಲಿ ಶೋಭಾಯಮಾನವಾಗಿ ಕಂಗೊಳಿಸತೊಡಗಿತು. +ಮನುಷ್ಯಸ್ತ್ರೀಗೆ ದೇವಕುಮಾರನಿಂದ ಹುಟ್ಟಿದ ಪುತ್ರಿಯಂತಿದ್ದ ಒಬ್ಬಳು ಪ್ರಿನ್ಸಿಪಾಲರ ಎಡಕ್ಕಿದ್ದ ಸ್ವಲ್ಪ ಕಡಿಮೆ ಎತ್ತರದ ಆಸನದಲ್ಲಿ ಕುಳಿತುಕೊಂಡಿದ್ದಳು. ಅವಳು ಸರ್ವಾಲಂಕಾರಭೂಷಿತೆಯಾಗಿದ್ದಳು. ಅವಳ ಮೈಮೇಲಿದ್ದ ಒಂದೊಂದು ಅರಿವೆ ಆಭರಣವೂ ಎಲ್ಲೆಲ್ಲಿಂದ ಬಂತೆಂದೂ ಅವುಗಳ ಬೆಲೆಯೆಷ್ಟೆಂದೂ ನನಗೆ ಚೆನ್ನಾಗಿ ನೆನಪಿದೆ. ಚಿನ್ನದ ಎಳೆಗಳ ಹೂಗಳಿಂದಲಂಕರಿಸಲ್ಪಟ್ಟ ಅವಳ ಸಲ್ವಾರ್‌ನ ಬಟ್ಟೆಯನ್ನು ದಮಾಸ್ಕಸ್‌ನ ವ್ಯಾಪಾರಿಯೊಬ್ಬನಿಂದ ಕೊಂಡುಕೊಳ್ಳಲಾಗಿತ್ತು. ಕಸೂತಿಯಿಂದ ಅಲಂಕೃತವಾಗಿದ್ದ ಅವಳ ಕಮೀಜ್ ಸಮರ್‌ಖಂದ್‌ನಿಂದ ತಂದುದಾಗಿತ್ತು. ಅವಳ ಮುಖಕ್ಕೆ ಮುಚ್ಚಿದ್ದ ತೆಳುವಾದ ವಸ್ತ್ರವನ್ನು ಬಂಗಾಳದ ನೇಕಾರರಿಗೆ ವಿಶೇಷ ಆರ್ಡರು ಕೊಟ್ಟು ನೇಯಿಸಿ ತರಲಾಗಿತ್ತು. ಅವಳ ಕೊರಳಿನಲ್ಲಿದ್ದ ಸರದ ಮುತ್ತುಗಳನ್ನು ಸಿಂಹಳದಿಂದ ಕೊಂಡು ತರಲಾಗಿತ್ತು. ಅವಳ ಕೈಗಳಲ್ಲಿದ್ದ ಮುತ್ತಿನ ಕಡಗಗಳು ಹಾಗೂ ಕಿವಿಗಳಲ್ಲಿ ಜೋತಾಡುತ್ತಿದ್ದ ವಜ್ರಖಚಿತ ಲೋಲಾಕುಗಳು ಬಾಗ್ದಾದಿನ ಸುಲ್ತಾನನಿಂದ ಬಂದ ಉಡುಗೊರೆಗಳಾಗಿದ್ದವು. +ಒಂದು ಕಾಲದಲ್ಲಿ ಅವೆಲ್ಲವೂ ನನ್ನವಾಗಿದ್ದವು. +ಮಸ್ಲಿನ್ ಅರಿವೆಯ ಮರೆಯಲ್ಲಿದ್ದ ಅವಳ ಮುಖವು ತೆಳುಮೋಡದ ಪರದೆಯ ಹಿಂದಿನಿಂದ ನಗುವ ಪೂರ್ಣಿಮೆಯ ಚಂದಿರನಂತೆ ಮೋಹಕವಾಗಿತ್ತು. ಅವಳು ಮುಗುಳ್ನಗುತ್ತಿದ್ದಳು. ನನ್ನ ಕಡೆ ನೋಡಿ ಪರಿಚಯದವಳಂತೆ “ಹಾಯ್” ಅಂದಳು. +ನಾನು ಪ್ರತಿಯಾಗಿ ಹಾಯ್‌ಗುಟ್ಟಲಿಲ್ಲ. +ಯಾಕಂದರೆ ಆ ಸಮಯದಲ್ಲಿ ನಾನು ಅವಳ ಆಸನಕ್ಕಿದ್ದ ಮೆಟ್ಟಲುಗಳನ್ನು ಲೆಕ್ಕ ಹಾಕುವುದರಲ್ಲಿ ತನ್ಮಯಳಾಗಿಹೋಗಿದ್ದೆ. ಅವು ಸರಿಯಾಗಿ ಹದಿನಾರಿದ್ದವು. +ಮೈಗಾಡ್! +ನಾನು ಋತುಮತಿಯಾದದ್ದು ಸರಿಯಾಗಿ ಹದಿನಾರು ವರ್ಷಗಳು ಕಳೆದು ಒಂದು ದಿನಕ್ಕೆ! +ವಿಶೇಷ ರೀತಿಯಲ್ಲಿ ಅಲಂಕರಿಸಿಕೊಂಡಿದ್ದ ಸುಂದರಿಯರಾದ ಈರ್ವರು ಅಪ್ಸರೆಯರು ನವಿಲುಗರಿಗಳಿಂದ ಮಾಡಿದ್ದ ಬೃಹದಾಕಾರದ ಮೊರಗಳಂತಹ ಬೀಸಣಿಗೆಗಳಿಂದ ಪ್ರಿನ್ಸಿಪಾಲರಿಗೂ ನನಗೆ ಹಾಯ್‌ಗರೆದವಳಿಗೂ ಗಾಳಿ ಹಾಕುತ್ತಿದ್ದರು. +ನನಗೆ ನಿಂತೂ ನಿಂತೂ ಸಾಕಾಯಿತು. +“ಏನಾದರೂ ಮಾತಾಡೀ” ಎಂದು ಕೂಗಿದೆ. +ಏನೋ ಹೇಳಬೇಕೆಂದು ಪ್ರಿನ್ಸಿಪಾಲರು ಬಾಯಿ ತೆರೆಯುವಷ್ಟರಲ್ಲಿ ಕಾಲೇಜಿನ ಏಕೈಕ ಜವಾನ ಬಿರುಗಾಳಿಯಂತೆ ಒಳನುಗ್ಗಿದ. +ಏನು ಏನಾಯಿತೆಂದು ಎಲ್ಲರೂ ಆತಂಕದಿಂದ ವಿಚಾರಿಸಿಕೊಳ್ಳುತ್ತಿದ್ದಂತೇ ಅವನು ಬೆಳ್ಳಗಿನ ಹಾಳೆಯೊಂದನ್ನು ಪ್ರಿನ್ಸಿಪಾಲರ ಮುಖಕ್ಕೆ ಹಿಡಿದು ಸುಮ್ಮನೆ ನಿಂತುಕೊಂಡ. ಪ್ರಿನ್ಸಿಪಾಲರು ತಮ್ಮ ಕನ್ನಡಕಕ್ಕಾಗಿ ತಡಕಾಡಿದರು. ಬದಿಯಲ್ಲಿದ್ದ ಗೂನುಬೆನ್ನಿನವನೊಬ್ಬ ಚಿನ್ನದ ಹರಿವಾಣದಲ್ಲಿ ಅವರ ಚಾಳೀಸನ್ನಿರಿಸಿ ಅವರ ಮುಂದೆ ಹಿಡಿದು ನಡುಬಾಗಿಸಿ ನಿಂತುಕೊಂಡ. +ಕನ್ನಡಕವನ್ನು ಹಾಕಿಕೊಳ್ಳಬೇಕಾದರೆ ಪ್ರಿನ್ಸಿಪಾಲರು ತಮ್ಮ ತಲೆಯ ಮೇಲೆ ಕೂತುಕೊಂಡಿದ್ದ ಕಿರೀಟವನ್ನು ತೆಗೆಯಬೇಕಾಯಿತು. +ಕನ್ನಡಕ ಹಾಕಿಕೊಂಡು ಪ್ರಿನ್ಸಿಪಾಲರು ಆ ಹಾಳೆಯನ್ನು ಓದಿದರು. ಅವರ ಮುಖದಲ್ಲಿ ಅಚ್ಚರಿ, ದಿಗ್ಭ್ರಮೆ, ಆತಂಕ, ಬೇಸರ, ಅಸಹಾಯಕತೆ- ಹೀಗೆ ಹಲವಾರು ಬಣ್ಣಗಳು ಮಿನುಗಿ ಮಾಯವಾದವು. ಕೊನೆಯಲ್ಲಿ ಗಟ್ಟಿಯಾಗಿ ಉಳಿದದ್ದು ಒಂದು ಪ್ರಶ್ನೆ ಮಾತ್ರ. +“ಇಡೀ ಕಾಲೇಜಿನಲ್ಲಿ ಇರುವವನು ನೀನೊಬ್ಬನೇ ಜವಾನ ಎಂದು ಯುನೈಟೆಡ್ ನೇಷನ್ಸ್‌ನ ರಿಜಿಸ್ಟರಿನಲ್ಲಿ ನಮೂದಾಗಿದೆ. ಅಲ್ಲದೇ ಇಲ್ಲಿಯವರೆಗಿನ ಬೆಳವಣಿಗೆಗಳಲ್ಲಿ ನಿನ್ನ ಪಾತ್ರ ಬಹಳ ದೊಡ್ಡದು, ಗುರುತರವಾದದ್ದು. ಈಗ ಈ ಗಳಿಗೆಯಲ್ಲಿ ನೀನು ಹೀಗೆ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೊರಟುಹೋದರೆ ಹೇಗೆ?” ಪ್ರಿನ್ಸಿಪಾಲರು ಪ್ರಶ್ನಿಸಿದರು. +ಅವನು ಉಸಿರು ಬಿಡಲಿಲ್ಲ. ನನ್ನ ಕಾಲುಗಳು ನೋಯತೊಡಗಿದವು. +“ನೀ ಏಕೆ ಉತ್ತರಿಸಲೊಲ್ಲೆ?” ಪ್ರಿನ್ಸಿಪಾಲರು ದನಿ ಎತ್ತರಿಸಿದರು. +ಆದರೂ ಅವನು ಮಾತಾಡಲಿಲ್ಲ. ನನಗೆ ಎಷ್ಟೊತ್ತಿಗೆ ಕುಳಿತೇನೋ ಅನಿಸತೊಡಗಿತು. +ಹೀಗೆ ಅಲ್ಲಿ ಬಹಳ ಹೊತ್ತಿನವರೆಗೆ ಮೌನವಿತ್ತು. +ಕೊನೆಗೆ ಒಂದು ಧೀರ್ಘ ನಿಟ್ಟುಸಿರಿಟ್ಟು “ಸರಿ ನೀನು ಹೋಗು” ಅಂದರು ಪ್ರಿನ್ಸಿಪಾಲರು. +ಅವನು ನಿಧಾನವಾಗಿ ಒಂದೊಂದೇ ಹೆಜ್ಜೆ ಹಿಂದೆ ನಡೆದು ಬಾಗಿಲ ಬಳಿ ಹೋಗಿ ಒಂದು ಹೆಜ್ಜೆಯನ್ನು ಹೊಸ್ತಿಲ ಹೊರಗಿಟ್ಟು ನಮ್ಮತ್ತ ತಿರುಗಿ ಸಿಡಿಲಿನಂಥಾ ದನಿಯಲ್ಲಿ ಗುಡುಗಿದ. +“ಮಧ್ಯದ ಬಿಳಿಯ ನೆರಳನ್ನು ಕರಗಿಸಿ ಆಚೀಚೆಗಿನ ಹಸಿರು ಕೇಸರಿಗಳನ್ನು ಕೆರಳಿಸುವ ಹೆಣ್ಣುಹಂದಿಗಳು ಪರೀಕ್ಷೆ ಬರೆಯುವ ನಾಡಿನಲ್ಲಿ ಜವಾನನಾಗಿ ಮುಂದುವರೆಯುವುದು ಸೂರ್ಯ ಮುಳುಗದ ಸಾಮ್ರಾಜ್ಯದ ಪ್ರತಿನಿಧಿಯಾದ ನನ್ನಂಥವನ ಮರ್ಯಾದೆಗೆ ಕುಂದು. ಇನ್ನೊಂದು ಗಳಿಗೆಯೂ ಇಲ್ಲಿ ಉಳಿಯುವ ಮನಸ್ಸು ನನಗೆ ಸುತರಾಂ ಇಲ್ಲ.” +ಹಾಗೆ ಕೂಗುತ್ತಲೇ ಚಿಗರೆ ಮರಿಯಂತೆ ಜಿಗಿಜಿಗಿದು ಓಡಿಹೋದ. ಅವನ “ಇಲ್ಲ”ಗಳು ಅದೆಷ್ಟೋ ಹೊತ್ತಿನವರೆಗೆ ಕೇಳಿಬರುತ್ತಿದ್ದವು. +ನನ್ನನ್ನು ಇರಿಯುತ್ತಿದ್ದವು. +ಅವು ದೂರದ ಚರ್ಚಿನ ಗಂಟೆಯ ಸದ್ದಿನೊಡನೆ ಸೇರಿ ಅಸ್ತಿತ್ವ ಕಳೆದುಕೊಂಡಾಗ ಎಲ್ಲರೂ ಒಟ್ಟಿಗೆ “ಇಟ್ ಈಸ್ ಟೂ ಬ್ಯಾಡ್” ಅಂದರು. +ನನಗೆ ಇನ್ನು ನಿಂತಿರುವುದು ಸಾಧ್ಯವೇ ಇಲ್ಲ ಅನಿಸಿಬಿಟ್ಟಿತು. +“ಹೌದು, ಇದು ನಿಜವಾಗಿಯೂ ಕೆಟ್ಟದ್ದೇ. ಈ ಹುಡುಗಿಯ ಬಗ್ಗೆ ಯಾವುದಾದರೊಂದು ನಿರ್ಣಯವನ್ನು ನಾವು ಆದಷ್ಟು ಬೇಗನೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೀಗೆ ಎಲ್ಲರೂ ಒಬ್ಬೊಬ್ಬರಾಗಿ ಬಿಟ್ಟುಹೋದರೆ ಮಾಡುವುದೇನು?” ಎಂದರು ಪ್ರಿನ್ಸಿಪಾಲರು ಭಾರವಾಗಿ. +“ವಿಚಾರಣೆ ಆರಂಭವಾಗಲಿ” ಒಕ್ಕೊರಲಿನಿಂದ ಕೂಗಿತು ಜನಸ್ತೋಮ. +ಸರಿಯೆನ್ನುತ್ತಾ ಪ್ರಿನ್ಸಿಪಾಲರು ಕನ್ನಡಕವನ್ನು ತೆಗೆದಿಟ್ಟು ಕಿರೀಟವನ್ನು ತಲೆಗೇರಿಸಿದರು. ಆದರೆ ಈಗ ಅದು ಮೊದಲಿನಂತೆ ಸುಂದರವಾಗಿ ಕಂಗೊಳಿಸಲಿಲ್ಲ. ಬರೆಯುವ ಮೇಜಿನ ಮೇಲೆ ಕಾಗೆ ಕೂತಂತೆ ಕಾಣತೊಡಗಿತು. +ನಾನು ಕಿಸಕ್ಕನೆ ನಕ್ಕುಬಿಟ್ಟೆ. +“ಮಾಡಬಾರದ್ದನ್ನು ಮಾಡಿ ಈಗ ಹಲ್ಲು ಕಿಸಿಯುವುದ ನೋಡು. ಹಾದರಗಿತ್ತಿ” ಎಂದು ಯಾರೋ ಕೊಂಕಿದರು. +“ಹುಷ್” ಎಂದು ಎಲ್ಲರನ್ನೂ ಸುಮ್ಮನಿರಿಸಿದರು ಪ್ರಿನ್ಸಿಪಾಲರು. +ಈಗ ಅಲ್ಲಿ ನೆಲೆಸಿದ ರುದ್ರಮೌನದಲ್ಲಿ ಗಗನದಿಂದ ಕೇಳಿಬಂದಂತೆ ಪ್ರಿನ್ಸಿಪಾಲರ ದನಿ ಮೊಳಗಿತು. +“ಚಿತ್ರಗುಪ್ತ” +“ಜೀ ಹುಜೂರ್.” ಕತ್ತಲ ಮೂಲೆಯಲ್ಲಿದ್ದವನೊಬ್ಬ ಇದ್ದಕ್ಕಿದ್ದಂತೆ ಅವತರಿಸಿ ಅಲ್ಲಿದ್ದ ಮೇಜೊಂದರ ಬಳಿಗೆ ಕುರ್ಚಿಯೊಂದನ್ನು ಸದ್ದಾಗುವಂತೆ ಎಳೆದುಕೊಂಡು ಕುಳಿತು ನಿಟ್ಟುಸಿರಿಟ್ಟ. +ಅವನು ನಮ್ಮ ಕಾಲೇಜಿನ ಹೆಡ್‌ಕ್ಲಾರ್ಕು. ಹಿಂದಿನ ಹಾಗೇ ಮೈಕೈ ಇತ್ತು. ಒಂದೇ ಒಂದು ಬದಲಾವಣೆಯೆಂದರೆ ಕಣ್ಣುಗಳು ಮತ್ತು ಕಿವಿಗಳು ಮಾತ್ರ ಬೇರೆ ಇನ್ಯಾರವೋ ಅಗಿದ್ದವು. ಅಲ್ಲದೇ ಅದ್ಯಾವ ಮಾಯದಲ್ಲೋ ಅವನ ತಲೆಯ ಮೇಲೆ ಎರಡು ಕೊಂಬುಗಳು ಮೂಡಿಬಿಟ್ಟಿದ್ದವು. ತಲೆಗೇ ಅಂಟಿಕೊಂಡಿರಬೇಕಾಗಿದ್ದ ಕಿರೀಟವನ್ನು ಅವು ತಲೆಯ ಮೇಲೆ ಮೊಳದುದ್ದಕ್ಕೆ ಎತ್ತಿ ಹಿಡಿದಿದ್ದವು. +ಅವನು ಗಂಡೂ ಅಲ್ಲ ಹೆಣ್ಣೂ ಅಲ್ಲ ಅಂತಹ ಒಂದು ಮೈನಾರಿಟಿ ಕಮ್ಯೂನಿಟಿಗೆ ಸೇರಿದವನು ಎಂದು ಕಾಲೇಜಿನ ಹುಡುಗಿಯರು ಮಾತಾಡಿಕೊಳ್ಳುತ್ತಿದ್ದರು. ಅವನು ಒಂದು ರೀತಿಯಲ್ಲಿ ಬೀಜ ಒಡೆದ ಟಗರಿನಂತೆ ಎಂದು ತಸ್ಲೀಮಾ ನಸ್ರೀನ್ ಸೆಮಿನಾರೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವಿವರಣೆ ಕೊಟ್ಟಿದ್ದಳು. +“ಈ ಹುಡುಗಿಯ ಪಾಪಪುಣ್ಯಗಳ ಫೈಲ್ ತಯಾರಾಗಿದೆಯೇ?” ಪ್ರಿನ್ಸಿಪಾಲರು ಪ್ರಶ್ನಿಸಿದರು. +“ಇಲ್ಲ ಜಹಾಂಪನಾ.” +ಪ್ರಿನ್ಸಿಪಾಲರು ಸಿಡಿದೆದ್ದರು. +“ಚಿತ್ರಗುಪ್ತರೇ ಏನು ನೀವು ಹೇಳುತ್ತಿರುವುದು? ಕೊನೆಯ ಕೆಲವು ಪುಟಗಳು ಅಡಿಗೆಮನೆಯಿಂದ ಈ ಬೆಳಿಗ್ಗೆಯಷ್ಟೇ ನಿಮ್ಮ ಕೈಸೇರಿದವು ಎಂದು ನನಗೆ ತಿಳಿದುಹೋಗಿದೆ. ಹುಡುಗಾಟವಾಡುವಿರೇನು? ನಿಜ ಹೇಳಿರಿ. ಇಲ್ಲದಿದ್ದರೆ ಕೊಂಬು ಮುರಿದು ಕೈಗೆ ಕೊಟ್ಟೇನು.” ಅವರು ಅಬ್ಬರಿಸಿದರು. +ಅಲ್ಲಿದ್ದ ಯಾವುದೋ ಒಂದು ದಪ್ಪದ ಪುರಾತನ ಕಡತವನ್ನು ಕೈಗೆತ್ತಿಕೊಂಡು ಅದರ ಮೇಲೆ ಬಲಗೈಯ್ಯನ್ನಿಟ್ಟು ಚಿತ್ರಗುಪ್ತ ಹೇಳಿದ. +“ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ.” +“ಸರಿ ಬೊಗಳಿರಿ ಮತ್ತೆ.” +ಪ್ರಿನ್ಸಿಪಾಲರ ಕೊಠಡಿಯ ಹೊರಗೆ “ನಾಯಿಗಳಿವೆ ಎಚ್ಚರಿಕೆ” ಎಂಬ ಬೋರ್ಡು ಯಾಕಿದೆಯೆಂದು ನನಗೆ ಏಕಾ‌ಏಕಿ ಹೊಳೆದುಬಿಟ್ಟಿತು. +“ನೀವು ಹೇಳುವುದು ನಿಜ ಜಹಾಂಪನಾ. ಕೊನೆಯ ಕೆಲವು ಪುಟಗಳು, ಕೆಲವು ದೈವನಿಂದೆಯ ಆಪಾದನೆಗಳಿದ್ದ ಪುಟಗಳು ಈ ಬೆಳಿಗ್ಗೆಯಷ್ಟೇ ನನ್ನ ಕೈ ಸೇರಿದ್ದು ನಿಜ. ನಿಮಗೆ ನಾ ಯಾಕೆ ಸುಳ್ಳು ಹೇಳಲಿ? ಸುಳ್ಳು ಹೇಳಿ ಯಾವ ನರಕಕ್ಕೆ ಹೋಗಲಿ? ವಿಷಯವೇನೆಂದರೆ ಈಗಷ್ಟೇ ಬಂದ ನಮ್ಮ ತನಿಖಾದಳದಲ್ಲಿನ ಮನುಷ್ಯರುಗಳ ವರದಿಯ ಪ್ರಕಾರ ಆ ಪುಟಗಳು ಈ ಹೆಣ್ಣುಮಗಳಿಗೆ ಸಂಬಂಧಿಸಿದವಲ್ಲ.” +ಅವನು ಸ್ವಲ್ಪ ತಡೆದು ಮುಂದುವರೆಸಿದ. +“ಈ ಹೊಸ ಆಧಾರಗಳ ಮೇಲೆ ಹೇಳುವುದಾದರೆ ಈ ಹುಡುಗಿಯನ್ನು ಇಲ್ಲಿಯವರೆಗೆ ಕರೆತರಲೇಬಾರದಾಗಿತ್ತು. ಅನುಚಿತವೊಂದು ಘಟಿಸಿಹೊಗಿದೆ ಜಹಾಂಪನಾ.” +ಸಭೆಯಲ್ಲಿ ಗುಜುಗುಜು ಸದ್ದೆದ್ದಿತು. ಯಾರೊ ಒಂದಿಬ್ಬರು ಚಿತ್ರಗುಪ್ತನಿಗೆ ಹೊಡೆಯಲು ಮುಂದೆ ನುಗ್ಗಿದರು. ಅವನು ಪಕ್ಷಪಾತಿಯಂತೆ ವರ್ತಿಸುತ್ತಿದ್ದಾನೆಂದು ಅವರೆಲ್ಲರೂ ದೂರುತ್ತಿದ್ದರು. ಅವನನ್ನು ಆ ಕೆಲಸದಿಂದ ಒದ್ದೋಡಿಸಿ ಎಂದು ಎಲ್ಲರೂ ಅರಚಿದರು. +ಆದರೆ ಸೃಷ್ಟಿಯಾದಂದಿನಿಂದಲೂ ಆ ಕೆಲಸವನ್ನು ಅವನೇ ಮಾಡುತ್ತಾ ಬಂದಿದ್ದುದರಿಂದ ಸೀನಿಯಾರಿಟಿಯ ಪ್ರಕಾರ ಮೊದಲ ಸ್ಥಾನದಲ್ಲಿರುವ ಅವನನ್ನು ಆ ಕೆಲಸದಿಂದ ತೆಗೆದುಹಾಕುವುದು ಸಂವಿಧಾನವಿರೋಧೀ ಕೃತ್ಯವಾಗುತ್ತದೆ ಎಂಬ ಅರಿವು ಬಂದೊಡನೇ ಅವರೆಲ್ಲರೂ ಕೈಕೈ ಹಿಸುಕಿಕೊಂಡರು. ಅವರೆಲ್ಲರೂ ಅವನಿಗಿಂತ ಅದೆಷ್ಟೋ ಯುಗಗಳು ಜ್ಯೂನಿಯರ್ ಆಗಿದ್ದರು. +ಪ್ರಿನ್ಸಿಪಾಲರು ಗುಡುಗಿದರು. +“ಈಕೆ ಇಲ್ಲಿಗೆ ಬರಬೇಕೋ ಬೇಡವೋ ಎಂದು ನಿರ್ಧರಿಸುವವನು ನಾನು. ನಾನು ಕೇಳಿದಾಗ ಇವಳ ಪಾಪಪುಣ್ಯಗಳ ವಿವರಗಳನ್ನು ಹೇಳುವುದು ಮಾತ್ರ ನಿಮ್ಮ ಕೆಲಸ ತಿಳೀಯಿತೇ? ಕರ್ಮಕ್ಕನುಸಾರವಾಗಿ ಇವಳನ್ನು ಹೃದಯಕ್ಕೋ ಅಥವಾ ನಾಲಿಗೆಗೋ ಕಳುಹಿಸಬೇಕಾದ ಗುರುತರ ಜವಾಬ್ದಾರಿ ನನ್ನ ತಲೆಯ ಮೇಲಿರುವಾಗ ಇವಳನ್ನು ಇಲ್ಲಿಗೆ ಕರೆತರಲೇಬಾರದಾಗಿತ್ತು ಅನ್ನುತ್ತಿದ್ದಾನೆ ಇವನು! ಮೂರ್ಖ. ಪೆಟ್ಟು ಕೊಟ್ಟು ರಟ್ಟೆ ಮುರಿದುಬಿಟ್ಟೇನು ಜೋಕೆ!” +ನನಗೆ ಚಿತ್ರಗುಪ್ತನ ಮೇಲೆ ನಿಜಕ್ಕೂ ಮರುಕವಾಯಿತು. ಅವನು ಪ್ರತಿವಾದಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಮಿಲಿಯಾಂತರ ಶೋಷಿತ ಜನಸಮೂಹದ ಪ್ರತೀಕದಂತಿದ್ದ ಅವನು. ಅವನಂಥವರಿಗೆ ಆತ್ಮತೃಪ್ತಿ ಎನ್ನುವುದು ಕನಸಿನೊಳಗಿನ ಗಂಟು. ಆದರೂ ಅವನು ಒಮ್ಮೆಯಾದರೂ ಮದುವೆಯಾಗಿರಲಿಲ್ಲ. ಮುಸಲಧಾರೆಯಾಗಿ ಮಳೆ ಹುಯ್ಯುವಾಗ ಉಕ್ಕಿ ಹರಿಯುವ ಗಟಾರದ ರಾಡಿ ನೀರನ್ನು ಆಗಾಗ ಕುಡಿಯುತ್ತಿದ್ದ. +ಬಡಪಾಯಿ, ಪಂಚವರ್ಣದ ಗಿಳಿ ಹೇಳಿದ್ದನ್ನೂ ಬರೆದುಕೊಳ್ಳುತ್ತಿದ್ದ, ಹಾಳೂರ ಹದ್ದು ಹೇತದ್ದನ್ನೂ ಕೆದಕುತ್ತಿದ್ದ. ಹೀಗಾಗಿಯೇ ಅವನ ಮೇಜಿನ ಮೇಲೆ, ಬೀರುವಿನಲ್ಲಿ, ಅಟ್ಟದ ಮೇಲೆ, ಅವನ ಶರಟಿನ ಜೇಬಿನಲ್ಲಿ, ಹೊಕ್ಕುಳ ತೂತಿನಲ್ಲಿ- ಎಲ್ಲ ಕಡೆ ಭಾರಿ ಭಾರಿ ಫೈಲುಗಳು ಅಡಕಿ ಕೂತಿದ್ದವು. ಅಲ್ಲಿ ತಿರುಗಾಡುವಾಗ ಫೈಲುಗಳನ್ನು ತುಳಿದುಕೊಂಡೇ, ಅವುಗಳ ಅಡ್ಡಾದಿಡ್ಡಿ ರಾಶಿಯ ಮೇಲೆ ಸರ್ಕಸ್ ಮಾಡುತ್ತಲೇ ನಡೆಯಬೇಕಾಗಿತ್ತು. ಇದು ಅಲ್ಲಿಯ ವಿಶಿಷ್ಟ ಪುರಾತನ ಸಂಪ್ರದಾಯ. +ಕಡತಯಜ್ಞ ಮಾಡಿಸುವ ಕುಕೋಬ್ರಾ ಗುಂಡುಮುನಿಯೊಬ್ಬರು ಮೊನ್ನೆಮೊನ್ನೆಯಷ್ಟೇ ತನ್ನ ಮುಂದೆ ನಿಂತದ್ದನ್ನು ಅವನು ಮರೆತೇಬಿಟ್ಟಿದ್ದ. ನಾನಾದರೂ ನೆನಪಿಸಬಹುದಾಗಿತ್ತು. ಆದರೆ ಹಾಗೆ ಮಾಡಬಾರದೆಂದು ನನಗೆ ಆಜ್ಞೆಯಾಗಿತ್ತು. +ಕ್ಷಣಗಳು ಉರುಳಲು ಮುಂದೆ ಸಾಗಿದ ಕಾಲದ ಚಕ್ರದಡಿಯಲ್ಲಿ ನನ್ನ ಬದುಕು ನರಳಲು ಮೊದಲು ಮಾಡಿತು. ನನ್ನ ಕಣ್ಣುಗಳಲ್ಲಿ ನೀರಿರಲಿಲ್ಲ. ಹೃದಯದಲ್ಲಿ ಮುಳ್ಳುಗಳೂ ಇರಲಿಲ್ಲ. ಹಾಗೆ ನಾ ಕಲ್ಲುಕಂಬದಂತೆ ನಿಂತುಕೊಂಡಿರಲು… +ಪ್ರಿನ್ಸಿಪಾಲರು ಮಾತಾಡಿದರು. +“ಇವಳಿಗೆ ಎಲ್ಲವೂ ಸರಿಯಾಗಿ ನೆನಪಿದೆಯೋ ವಿಚಾರಿಸಿ.” +ಅವರು ನನ್ನನ್ನೇ ನೇರವಾಗಿ ಕೇಳಬಹುದಾಗಿತ್ತು. ಹಾಗೆ ಮಾಡಿದರೆ ನಾನು ಉತ್ತರಿಸಲಾರೆನೇನೋ ಎಂಬ ಭಯ ಅವರಿಗಿದ್ದಿರಬೇಕು. ನಾನು ಹಾಗೆ ಮಾಡುತ್ತೇನೆಯೇ? ನನಗೆ ಗೊತ್ತಿಲ್ಲ. ಅವರಿಗೆ ತಿಳಿದಿರಬಹುದು. ನನ್ನ ಬಗ್ಗೆ ನನಗಿಂತಲೂ ಅವರಿವರಿಗೇ ಹೆಚ್ಚು ತಿಳಿದಿರುವುದು ನನ್ನ ಅರಿವಿಗೆ ಬಂದಿದೆ. +“ನಿನಗೆ ಎಲ್ಲವೂ ಅಂದರೆ ಎಲ್ಲವೂ ನೆನಪಿದೆಯೇ?” ಚಿತ್ರಗುಪ್ತ ನನ್ನೆಡೆ ತಿರುಗಿ ಮೃದುದನಿಯಲ್ಲಿ ಪ್ರಶ್ನಿಸಿದ. ಆಗಿನ ಅವನ ಮುಖಭಾವ ನನಗೆ ಮೆಚ್ಚಿಕೆಯಾಗಿ ಅವನನ್ನು ಅಪ್ಪಿ ಮುದ್ದಿಸಬೇಕೆಂಬ ಬಯಕೆ ನನಗಾಯಿತು. +“ಹೌದು” ಎಂದು ಗೋಣು ಆಡಿಸಿದೆ. +“ಹಾಗಿದ್ದರೆ ವಿಚಾರಣೆಯನ್ನು ಮುಂದುವರಿಸಬಹುದು” ಪ್ರಿನ್ಸಿಪಾಲರು ಹೇಳಿದರು. +ಅಲ್ಲಲ್ಲಿ ಅರಳಿದ್ದ ಗುಜುಗುಜು ಪೂರ್ಣವಾಗಿ ಅಡಗಿಹೋಯಿತು. ಎಲ್ಲರೂ ಪ್ರಿನ್ಸಿಪಾಲರ ಮುಂದಿನ ಮಾತುಗಳಿಗಾಗಿ ಕಿವಿಗೊಟ್ಟು ಕಾದರು. +“ನಾವು ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದಿಗೆ ವರ್ಗಾಯಿಸಿರುವುದು ನಿನಗೆ ಗೊತ್ತೇ?” +ಈ ಸಲ ಅವರು ನನ್ನನ್ನೇ ನೇರವಾಗಿ ಪ್ರಶ್ನಿಸಿದರು. ಮೊದಲಿನಂತೆ ಚಿತ್ರಗುಪ್ತನ ಮೂಲಕ ಕೇಳಲಿಲ್ಲ. ಅವನ ಕಡೆ ಗಮನವನ್ನೇ ಕೊಡಲಿಲ್ಲ. ಏನೋಪ್ಪ, ಇವರ ರೀತಿನೀತಿಯೇ ನನಗೆ ಅರ್ಥವಾಗುವುದಿಲ್ಲ. +“ಹೌದು ಜಹಾಂಪನಾ” ಎಂದು ನಾನು ತಲೆಯಾಡಿಸಿದೆ. ಆ ವಿಷಯ ನನಗೆ ತಿಳಿದಿತ್ತು. ನಾನದನ್ನು ಚರಿತ್ರೆಯ ಪಠ್ಯಪುಸ್ತಕದಲ್ಲಿ ಓದಿದ್ದೆ. +“ಹಾಗಾದರೆ ದಿಲ್ಲಿಯ ಜನರೆಲ್ಲರೂ ಗಂಟುಮೂಟೆ ಸಹಿತ ದೌಲತಾಬಾದಿಗೆ ಹೊರಡಬೇಕೆಂದು ಆಜ್ಞೆಯಾಗಿರುವುದೂ ನಿನಗೆ ತಿಳಿದಿರಬೇಕಲ್ಲ?” +“ತಿಳಿದಿದೆ ಸರ್.” ಆತ್ಮವಿಶ್ವಾಸದಿಂದ ಹೇಳಿದೆ. +“ದೌಲತಾಬಾದ್ ತಲುಪಲು ಕೇವಲ ಐವತ್ತು ಓವರ್‌ಗಳ ಸಮಯ ನಿಗದಿಯಾಗಿರುವುದೂ ನಿನಗೆ ಗೊತ್ತಿರಬೇಕಲ್ಲ?” +“ಗೊತ್ತು ಕಣಯ್ಯ.” +“ಸರಿ, ಜಾಣಮರಿ ನೀನು. ಎಲ್ಲವನ್ನೂ ತಿಳಿದಿರುವೆ. ಹೊರಡುವ ತಯಾರಿ ಮಾಡಿರುವಿಯೇನು?” +“ಇಲ್ಲ.” +“ಅಂ! ಇನ್ನೂ ಯಾಕಿಲ್ಲ?” +“ಮನಸ್ಸಿಲ್ಲ.” +“ಅಂದರೇನು? ಹೋಗಲು ಮನಸ್ಸಿಲ್ಲವೋ ಅಥವಾ ಹೊರಡುವ ತಯಾರಿ ಮಾಡಲು ಮನಸ್ಸಿಲ್ಲವೋ? ಬಿಡಿಸಿ ಹೇಳು. ಒಗಟಿನಂತೆ ಮಾತಾಡಿದರೆ ನನಗೆ ಅರ್ಥವಾಗುವುದಿಲ್ಲ. ನಾನೆಂದೂ ಯಾರನ್ನೂ ಪ್ರೀತಿಸಿದವನಲ್ಲ.” +“ಹೋಗುವ ಮನಸ್ಸಿಲ್ಲ.” +ನನ್ನ ದನಿ ಸಿಡಿಲಿನಂತೆ ಭವನದಲ್ಲಿ ಗುಡುಗಾಡಿತು. ಒಂದುಕ್ಷಣ ಎಲ್ಲರೂ ತಂತಮ್ಮ ಕಿವಿಗಳನ್ನು ಮುಚ್ಚಿಕೊಂಡರು. ಮರುಕ್ಷಣ ಏಕಾ‌ಏಕಿ ಬಾಯಿ ತೆರೆದು ಮಾತಾಡತೊಡಗಿದರು. ಅವರೆಲ್ಲರೂ ನನ್ನನ್ನು ಬೈಯುತ್ತಿರುವರೆಂದು ನನಗೆ ಸಂವೇದನೆಯಾಯಿತು. +“ಇದೊಳ್ಳೇ ಫಜೀತಿಗಿಟ್ಟುಕೊಂಡಿತಲ್ಲ.” ಪ್ರಿನ್ಸಿಪಾಲರು ತಲೆಯ ಮೇಲೆ ಕೈಹೊತ್ತು ಕುಳಿತರು. +“ನಾನಾಗಲೇ ಹೇಳಿರಲಿಲ್ಲವೇ ಇವಳನ್ನು ಇಲ್ಲಿಗೆ ಕರೆತರಲೇಬಾರದಾಗಿತ್ತು ಅಂತ?” ಚಿತ್ರಗುಪ್ತ ವಿಜಯದ ನಗೆ ಹಾಕಿದ. +“ನೀ ಸುಮ್ಮನಿರಯ್ಯ. ತಿಕವೆಲ್ಲ ಹರಟಬೇಡ.” ಪ್ರಿನ್ಸಿಪಾಲರು ಅವನನ್ನು ಗದರಿ ನನ್ನ ಕಡೆ ತಿರುಗಿದರು. +“ನೀನು ಹೊರಡದಿರಲು ಕಾರಣವೇನು?” +“ಉಹ್ಞುಂ ನಾ ಹೇಳಲಾರೆ.” +“ನೀನು ಹೇಳದಿದ್ದರೆ ಮತ್ತಾರು ಹೇಳಬೇಕು?” +“ಗಿಣಿ” +ನನ್ನ ದನಿ ಮುಗಿದದ್ದೇ ತಡ, ನೆರೆದಿದ್ದ ಜನಸ್ತೋಮ ಗಿಣಿಯನ್ನು ಹುಡುಕಲೆಂದು ದಿಕ್ಕುದಿಕ್ಕಿಗೆ ಚದುರಿಹೋಯಿತು. +* +* +* +೫. ಬಣ್ಣದ ಗರಿ +ಆಗಷ್ಟೇ ಒಳಗೆ ಬಂದಿದ್ದ ಸ್ಯಾಮ್ “ಎದ್ದುಬಿಟ್ಟೆಯಾ? ನಾನೇನಾದರೂ ಸದ್ದುಗಿದ್ದು ಮಾಡಿದೆನೇನು?” ಅಂದ. “ಇಲ್ಲದ ಅವಾಂತರಗಳಿಗೆ ನಿನ್ನನ್ನು ನೀನು ತೊಡಕಿಸಿಕೊಳ್ಳಬೇಡ” ಎಂದವನಿಗೆ ಬುದ್ಧಿವಾದ ಹೇಳಿದೆ. +ಅಂಕಲ್ ಸ್ಯಾಮ್ ಬಲು ಭೋಳೇ ಸ್ವಭಾವದವನು. ಅವನಷ್ಟು ಚಾಲಾಕಿಯಲ್ಲ. ನನ್ನ ಯಾವುದೇ ಸಮಸ್ಯೆಯನ್ನು ಇವನೊಡನೆ ಮನಬಿಚ್ಚಿ ಚರ್ಚಿಸಬಹುದು. ಇವನೊಂದು ತಳ ಕಾಣದ ಗುಡಾಣದಂತೆ. ಎಷ್ಟು ಸುರಿದರೂ “ಇನ್ನೂ ಇನ್ನೂ” ಅನ್ನುತ್ತಿರುತ್ತಾನೆ, ಅಂಬಾಸಿಡರ್ ಕಾರಿನ ಹಾಗೆ. +ಅವನೆಡೆ ತಿರುಗಿ ನಾ ಹೇಳತೊಡಗಿದೆ. +“ಸ್ಯಾಮ್, ನಾನೊಂದು ಕನಸ ಕಂಡೆ. ಸುಂದರ, ಸುಮಧುರ, ಚಿರಕಾಲ ನೆನಪಿನಲ್ಲುಳಿಯುವಂತಹದು.” +“ಬಿಡಿಸಿ ಹೇಳು.” ಅವನು ಆತುರ ತೋರಿದ. +“ಅರ್ಥ ಹೇಳುವಿಯೇನು?” ಸವಾಲೆಸೆದೆ. +“ಖಂಡಿತ.” +ನಾನು ಸೋಜಿಗ ಪಟ್ಟುಕೊಂಡೆ. ಇವನಿಗೆಷ್ಟು ಆತ್ಮವಿಶ್ವಾಸ! ಇವನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿರಬಹುದು. +ನಾನು ಹೇಳತೊಡಗಿದೆ. +“ನಿದಿರೆಯಾವರಿಸಿದೊಡನೆ ಕಣ್ಣತುಂಬ ಕನಸುಗಳು ತುಂಬಿಕೊಳ್ಳುತ್ತವೆ. ನಿನ್ನೆ… ಇಂದು… ಎಂದೆಂದೂ… ಈಗಷ್ಟೇ ನನ್ನೆದೆಯಲ್ಲಿ ಭೋರ್ಗರೆದು ಉಕ್ಕಿದ ಸ್ವಪ್ನವ ವರ್ಣಿಸಿ ಪೇಳುವೆ. ಆಲಿಸು. +ಕಣ್ಣಿನಾಚೆಗೆ ಸಹಸ್ರ ಯೋಜನಗಳ ದೂರದಲ್ಲಿ ಕ್ಷಿತಿಜ. ರೆಪ್ಪೆಗಳ ಪರಿಧಿಯೊಳಗೆ ಹಸಿರು ಕಾನನ. ಹಸಿರೋ ಹಸಿರು. ಹಸಿರು ಸಮುದ್ರ ಅದು. +ದಟ್ಟ ಹಸಿರಿನ ನಡುವೆ ಒಂದು ಮರ. ಮಾಮರ ಅದು. ಹಸಿರುಟ್ಟು ಮೈದುಂಬಿತ್ತು. ನಾನದರ ನೆರಳಲ್ಲಿ ನಿಂತೆ. ನೆರಳೂ ಹಸಿರಾಗಿತ್ತು, ಅವನ ನೆನಪಿನ ಹಾಗೆ. ಹಸಿರು ಎಲೆಗಳ ನಡುವೆ ಒಂದು ಕೋಗಿಲೆ. ಹಚ್ಚ ಹಸಿರಿನ ಮುದ್ದೆ. +ಅದೊಮ್ಮೆ “ಕುಹೂ” ಅಂದಿತು. +ದನಿಗಳಿಗೂ ಬಣ್ಣವಿರುತ್ತಿದ್ದರೆ ಅದರ ಉಲಿತಕ್ಕೆ ಖಂಡಿತಾ ಹಸಿರು ಬಣ್ಣವಿರುತ್ತಿತ್ತು. +ಅದರ ಉಲಿತ ಗಾಳಿಯಲ್ಲಿ ಬೆರೆತಾಗ ಬೀಸುವ ಗಾಳಿ ಹಸಿರಾಯಿತು. ಉಛ್ವಾಸಿಸಿದ ಮನಗಳಿಗೆ ಮಳೆಗಾಲದ ಚಿಗುರು ಹುಲ್ಲಿನ ಕಂಪು ಅಂಟಿಕೊಂಡಿತು. +ಅದೆಷ್ಟೋ ಹೊತ್ತಿನ ನಂತರ ನಾನೊಮ್ಮೆ ಕಣ್ಣಗಲಿಸಿ ನನ್ನ ಸೀರೆಯತ್ತ ಕಣ್ಣು ಹಾಯಿಸಿದೆ. +ಮೈಗಾಡ್! +ಅದು ಹಸಿರಾಗಿತ್ತು! ಹಸಿರು ಕಾನನದ ಒಂದಂಚು ಥಟ್ಟನೆ ಮೇಲೆದ್ದು ಬಂದು ನನ್ನ ತನುವನ್ನು ಅಪ್ಪಿ ಹಿಡಿದಂತಿತ್ತು. +ಓಹ್ ಇದು ಹೇಗಾಯಿತು? ಸೀರೆಯಲ್ಲಿ ಅಂಟಿಕೊಂಡಿದ್ದ ಕೆಂಪು ಅದೆಲ್ಲಿ ಕರಗಿಹೋಯಿತು? ಬಿಡಿಸಿ ಹೇಳು ಸ್ಯಾಮ್. ಅರ್ಥ ಹೇಳು.” +ಅವನು ಮೌನವಾದ. ಗುಹಾಲಯದ ನಿಶಾಚರಿಯಂಥ ಮೌನ ಅದು. ನಾ ಕನಸು ಕಾಣುವಾಗೆಲ್ಲ ಅಂತಹ ಮಂಜುಮೌನ ನನ್ನೆದೆಯಲ್ಲಿ ಮಡುಗಟ್ಟಿ ನಿಂತಿರುತ್ತದೆ. +ಅದೆಷ್ಟೋ ಹೊತ್ತಿನ ನಂತರ ಅವನು ಹೇಳತೊಡಗಿದ. +“ಹಸಿರ ಬಗ್ಗೆ ನಿನಗೇಕಿಷ್ಟು ಮೋಹ ಮೂಡಿತು? ನಾ ಕಂಡಂದಿನಿಂದಲೂ ನೀನೆಂದೂ ಹಸಿರುಡುಗೆ ಉಟ್ಟವಳಲ್ಲ. ಏನೋಪ್ಪ, ಇತ್ತೀಚೆಗೆ ನಿನಗೇನಾಗಿದೆಯೋ ನನಗೆ ಅರ್ಥವೇ ಆಗುತ್ತಿಲ್ಲ. ಇರಲಿ, ಹಸಿರು ಉಸಿರಿನ ಸಂಕೇತ, ಬದುಕಿನ ಆಸೆಯ ಕುರುಹು. ನಿನ್ನ ಕನಸೆಲ್ಲ ಹಸಿರಾದಂತೆ ನಿನ್ನ ಬದುಕೂ ಹಸಿರಾಗಲಿ. ಆ ಹಸಿರು ಕಾನನದಲ್ಲಿ ನಾನೊಂದು ಹಸಿರು ಮಾಮರವಾಗಿ ನಿಲ್ಲುತ್ತೇನೆ…” +ಅವನೇನೋ ಹೇಳುವುದರೊಳಗೆ ನಾ ಬಾಯಿ ಹಾಕಿದೆ. +“ಅವನು ಹಸಿರು ಕೋಗಿಲೆಯಾಗಿ ಹಾಡುತ್ತಾನೆ.” +ಎತ್ತಿಕುಕ್ಕಿದಂತಾಗಿರಬೇಕು ಸ್ಯಾಮ್‌ಗೆ. ನನ್ನನ್ನೊಮ್ಮೆ ದುರುಗುಟ್ಟಿ ನೋಡಿದ. ನಾನು ಪಕಪಕನೆ ನಗಲಾರಂಭಿಸಿದೆ. ಸ್ಯಾಮ್‌ನ ಬಗ್ಗೆ ಮರುಕವೆನಿಸಿತು. ಆಸೆಗೊಂದು ಮಿತಿಯಿರಬೇಕು. ಇಲ್ಲದೇಹೋದರೆ ಹೀಗೆ ಕುಂಡೆಗೆ ಬರೆ ಹಾಕಿಸಿಕೊಂಡು ಕೆಳಗುರುಳಬೇಕಾಗುತ್ತದೆ. +ಅವನು ಹೊರಟುಹೋದ. +ಜಗತ್ತು ಹೀಗೆಯೇ. ಆಸೆ ಇರುವವರೆಗಷ್ಟೇ ಬದುಕು. ಅದಿಲ್ಲವಾದ ಕ್ಷಣ ಹೀಗೇ ಹೊರಟುಹೋಗಬೇಕು. ಇಲ್ಲದಿದ್ದರೆ ಅಸ್ತಿತ್ವಕ್ಕೆ ಯಾವ ಅರ್ಥವೂ ಇರುವುದಿಲ್ಲ. ಮೂರುಕಾಸಿನ ಬೆಲೆಯೂ ಇರುವುದಿಲ್ಲ. +* +* +* +೬. ಆಜಾದೀ ಆಜಾದೀ +ಅಸ್ತಿತ್ವದ ಅರ್ಥ, ಬದುಕಿನ ಬೆಲೆ ಕಳೆದುಕೊಂಡ ಸಿಂಧೂ ಹಾಸಿಗೆಯ ಮೇಲೆ ಬೋರಲಾಗಿ ಮಲಗಿಕೊಂಡಿದ್ದಳು. ಹಸಿರು ಸೀರೆಯಡಿಯಲ್ಲಿ ಬೆಳ್ಳಗಿನ ಕಾಲುಗಳು ಹೊಳೆಯುತ್ತಿದ್ದವು. +ನಾನು ಕಣ್ಣು ಮುಚ್ಚಿಕೊಂಡೆ. +“ನಿಮ್ಮಣ್ಣನಿಗೆ ಬಸುರಾಗಿದ್ದಳು ಅವಳು” ಯಾರೋ ಚುಚ್ಚಿದರು. +“ಅವಳ ಯೋನಿಯ ತುಂಬ ನಿಮ್ಮಣ್ಣನ ಗಡ್ಡದ ಕೂದಲುಗಳು ಕಳೆಯಂತೆ ಹರಡಿಹೋಗಿವೆ.” ಅವರೋ ಅಥವಾ ಇನ್ನಾರೋ ಮತ್ತೆ ಕೆಣಕಿದರು. +“ಅವಳ ಮೊಲೆಗಳ ತುಂಬಾ ನಿಮ್ಮಣ್ಣನ ಬೆಳಗಿನ ಮೈಕ್ ಉಕ್ತಿಗಳು ಕೀವಾಗಿ ಉಕ್ಕಿ ಹರಿಯುತ್ತಿವೆ. ಬೇಕಾದರೆ ಒತ್ತಿನೋಡು.” ಅದ್ಯಾರೋ ಸಿಂಧೂಳ ಮೊಲೆಗಳನ್ನು ಮೃದುವಾಗಿ ಒತ್ತಿದರು. +ಚಿಮ್ಮಿದ ನೂರಾರು ಕನಸುಗಳು ನನಗೆ “ಸಲಾಂ ಆಲೈಕುಂ” ಅಂದವು. +“ಆಲೈಕುಂ ಸಲಾಂ” ಅಂತ ಹೇಳು ಎಂದು ಯಾರೋ ನನ್ನನ್ನು ಒತ್ತಾಯಿಸಿ ಹಿಂಸಿಸಿದರು. +ನಾ ಹೇಳಲಿಲ್ಲ. +ಓಡಿದೆ. +ಓಡುತ್ತಲೇ ಇದ್ದೆ, ಶತಮಾನಗಳವರೆಗೆ. +ನಾನು ಏದುಸಿರು ಬಿಡುತ್ತಾ ನಿಂತಾಗ ನಾಲ್ವರು ಸಿಂಧೂಳನ್ನು ಹೊತ್ತುಕೊಂಡು ನನ್ನನ್ನು ದಾಟಿ ಬಿರಬಿರನೆ ನಡೆದುಹೋದರು. +ಬೆಂಕಿಯ ಕೆನ್ನಾಲಿಗೆಗಳು ನೆಕ್ಕಿದರೂ ಸಿಂಧೂಗೆ ಎಚ್ಚರವಾಗಲೇ ಇಲ್ಲ! ಸಿಂಧೂ ಹಿಂದೂ ಆಗಿ ಇಂಡಿಯಾ ಆಗಿ ಕೊನೆಗೆ ಇಂಡಿಯಾವೋ ಪಾಕಿಸ್ತಾನವೋ ಎಂಬ ಪ್ರಶ್ನೆಯಾಗಿ ಬೆಳೆದು ನಿಂತಳು. +ನನಗೆ ಭೋರಿಟ್ಟು ಅಳುವಂತಾಯಿತು. +ಯಾಕೆ ಹೀಗಾಯಿತು? +ಈಗ ನಾನೇನಾದರೂ ಮಾಡಬೇಕು. ಸುಮ್ಮನೆ ಕೂರುವ ಹಾಗಿಲ್ಲ. ನನ್ನ ಹೆಗಲ ಮೇಲಿರುವುದು ಐತಿಹಾಸಿಕ ಜವಾಬ್ದಾರಿ. +ಚಿತೆಯ ಬೂದಿಯನ್ನು ಬಾಚಿಬಾಚಿ ಕೆದಕಿದೆ. ಹುಡಿಬೂದಿಯಲ್ಲಿ ಕೊಂಕದೇ ನಿಂತದ್ದು ಒಂದು ಸುಂದರ ಕೂದಲು ಮಾತ್ರ. +ಎತ್ತಿಕೊಂಡೆ. +ನಡೆದೆ. +ಓಯಸಿಸ್‌ನ ಅಂಚಿನ ಖರ್ಜೂರದ ತನಿನೆರಳಲ್ಲಿ ಹಿಮದಂಥಾ ನಿಟ್ಟುಸಿರು. +ಒಂಟಿ ಪಯಣಿಗನ ಕಣ್ಣತುಂಬಾ “ಲೂ” ನಿದ್ದೆ. ಓಯಸಿಸ್‌ನ ತಂಪಿನಲ್ಲಿ ಸೊಂಪಾಗಿ ಹರಡಿ ನಿಂತ ಬಯಕೆಗಳ ನೇತ್ರಗಳಲ್ಲಿ ಫಳಕ್ಕೆಂದು ಮಿಂಚಿದ ಆಹ್ವಾನವನ್ನು ಮನ್ನಿಸಿ ಬೆರಳಿನಂಚಿನಲ್ಲಿದ್ದ ಕನಸನ್ನು ನಿಧಾನವಾಗಿ ಅವನ ಅರಿವಿನ ಪರಿಧಿಯೊಳಗೆ ಒತ್ತಿದೆ. ಅಂದು ಕಾಲೇಜಿನ ಮುಂದಿನ ಅಂಗಡಿಯಲ್ಲಿ ಕೊಂಡಿದ್ದ ಹಸಿರು ರಿಫಿಲ್‌ನ ಪೆನ್ನು ಈಗ ಉಪಯೋಗಕ್ಕೆ ಬಂತು. +ಮುಂದೆ ನಡೆದದ್ದು ಇತಿಹಾಸ. +ದೇವರ ವಾಕ್ಯವನ್ನು ದಿಕ್ಕುದಿಕ್ಕಿಗೆ ಹರಡಲು ಹೊರಟ ಸೈನಿಕರು ಹಗಲೆಲ್ಲಾ ನಡೆಸಿದ ನರಮೇಧಕ್ಕೆ ಸಾಕ್ಷಿಯಾಗದೇ, ರಾತ್ರಿ ವಿರಮಿಸಿದ ಅವರ ನಿಷ್ಕಳಂಕ ಕೈ, ಮುಗ್ಧ ಮುಖಗಳನ್ನು ಚುಂಬಿಸಲು ಬಂದ ಚಂದಿರ… +ಓಹ್ ನಿನ್ನಲ್ಲಿ ಬೆಳಕಿರುವರೆಗೆ, ನಿನ್ನ ಮೌನವನ್ನು ಭೂಮಿ ಅರ್ಥೈಸಿಕೊಳ್ಳುವವರೆಗೆ ನೀ ಸಾಕ್ಷಿಯಾಗಿ ನಿಲ್ಲು. ಇದು ಕಟ್ಟಳೆ. ಅಗ್ನಿಪರೀಕ್ಷೆಯಲ್ಲಿ ಗೆದ್ದುಬಂದ ಈ ಕೂದಲನ್ನು ಮುತ್ತಿನ ಚಿಪ್ಪಿನೊಳಗೆ ಭದ್ರವಾಗಿರಿಸಿ ಅದನ್ನು ಹಸಿರು ರೇಶಿಮೆ ವಸ್ತ್ರದಲ್ಲಿ ಸುತ್ತಿ ಮೂವತ್ತಮೂರು ಗಂಟು ಹಾಕಿ ಬಿಳೀ ಅಮೃತಶಿಲೆಯ ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಬೇಕು. ಆ ಪೆಟ್ಟಿಗೆಯನ್ನು ವಿಶ್ವಾಸಿಗಳ ಹೃದಯದಲ್ಲಿ ಅಡಗಿಸಿಡಬೇಕು. ಯಾವ ಸರ್ಕಾರವೂ ಅದನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ. ದೇಶ ಇಬ್ಬಾಗವಾಗಿ ಪಂಚನದಿಗಳಿಗೆ ಮುಟ್ಟಾಗಿ ಉಕ್ಕಿದ ಕೆಂಪುಪ್ರವಾಹದಲ್ಲಿ ಜನಜಾತ್ರೆ ಪೂರ್ವಪಶ್ಚಿಮಗಳಿಗೆ ಸಾಲುಸಾಲು ಹರಿದು ಹೋಗಿ… ನೆಲೆನಿಂತಮೇಲೂ… +ಸರ್ಕಾರಗಳೆರಡಕ್ಕೂ ಭಯವಿರುತ್ತದೆ. +ಈ ಕೂದಲನ್ನು ಕೊಂಕಿಸುವ ಹುಚ್ಚು ಸಾಹಸಕ್ಕೆ ಅವು ಇಳಿಯುವುದಿಲ್ಲ. ಚಿನಾರ್ ವೃಕ್ಷದ ನಿಲುವಿಗೆ ಆತುನಿಂತಂತೆ ಈ ಕೂದಲು ಅಜರಾಮರವಾಗಿ ನಿಲ್ಲುತ್ತದೆ. ಈ ಕೂದಲು ನೆಲೆನಿಂತ ಸ್ಥಳ ಭೂಲೋಕದ ಸ್ವರ್ಗವೆನಿಸಿಕೊಳ್ಳುತ್ತದೆ. ಈ ಸ್ವರ್ಗಕ್ಕಾಗಿ ಮರ್ತ್ಯಗಣಗಳೆರಡರ ನಡುವೆ ಘನಘೋರ ಕಾಳಗ ನಡೆಯುತ್ತದೆ. ಒಂಧು ಗಣ ಕೂದಲನ್ನು ತನ್ನ ಹೃದಯದಲ್ಲೂ ಇನ್ನೊಂದು ಗಣ ಅದನ್ನು ತನ್ನ ನಾಲಿಗೆಯಲ್ಲೂ ಇರಿಸಿಕೊಳ್ಳಲು ಹೋರಾಡುತ್ತವೆ. ಕೂದಲು ಈ ಯಾದವೀ ಕಲಹಕ್ಕೆ ಮೂಕಸಾಕ್ಷಿಯಾಗಿ ನಿಲ್ಲುತ್ತದೆ. ಪ್ರತೀ ಶುಕ್ರವಾರದ ನಟ್ಟ ನಡುಮಧ್ಯಾಹ್ನ ಕಣ್ಣು ತೆರೆದು ಮುಂದೆ ನಿಂತ ಶುಭ್ರಶ್ವೇತ ಸಮುದ್ರವನ್ನು ಪ್ರಶ್ನೆ ಮಾಡುತ್ತದೆ. +ನಾ ಉಳಿದರೆ ಅಳಿಯುವವರಾರು? +ನಾ ಅಳಿದರೆ ಉಳಿಯುವವರಾರು? +ಉತ್ತರಿಸಲು ಬಾಯಿ ತೆರೆದ ಜನಸಮೂಹದ ಕೊರಳಿಗೆ ಕಲ್ಲು ಸಿಲುಕಿಕೊಂಡು ಭಾರಕ್ಕೆ ಇಡೀ ಶ್ವೇತಸಾಗರ ನಡುಬಾಗಿ ನಿಲ್ಲುತ್ತದೆ. +ಯುಗಯುಗಗಳವರೆಗೆ ಇದರ ಪುನರಾವರ್ತನೆಯಾಗುತ್ತದೆ. +ಒಂದುದಿನ… +ಮುತ್ತಿನ ಚಿಪ್ಪಿನ ಮುಚ್ಚಳವನ್ನು ಸೀಳಿ, ರೇಶಿಮೆಯ ಗಂಟನ್ನು ಕಿತ್ತೊಗೆದು, ಸಂದೂಕದ ಬೀಗವನ್ನು ಆಸ್ಫೋಟಿಸಿ ಕೂದಲು ಹೊರಬಂದು ಬಾಗಿದ ನಡುಗಳ ಮೇಲೆ ರಪರಪನೆ ಬಾರಿಸುತ್ತದೆ. ಪೂರ್ವ ಪಶ್ಚಿಮಗಳು ಒಂದಾಗುವಂತೆ ಭಯಂಕರ ನರ್ತನ ಮಾಡುತ್ತದೆ. ಬಾಗಿದ ನಡುಗಳು ಆತ್ಮವಿಶ್ವಾಸದಿಂದ ನೆಟ್ಟಗೆ ನಿಲ್ಲುತ್ತವೆ. +ಕೂದಲು ಉದ್ಗರಿಸುತ್ತದೆ: +“ಆಜಾದೀ ಆಜಾದೀ” +ನೆರೆದ ಜನಸ್ತೋಮ ಒಕ್ಕೊರಲಿನಿಂದ ಮಾರ್ದನಿ ನೀಡುತ್ತದೆ: +ಆಜಾದೀ ಆಜಾದೀ +* +* +* +೭. ಇತಿಹಾಸಕ್ಕೊಂದು ಮುನ್ನುಡಿ +ಟ್ರಾನ್ಸಿಸ್ಟರ್ ಆನ್ ಮಾಡಿದೆ. ಸಂಜೆಯ ವಾರ್ತೆಗಳ ಸಮಯ. ಸುದ್ದಿ ಬಿತ್ತರಗೊಳ್ಳುತ್ತಿತ್ತು. +“…ಇಂದು ಸಂಜೆ ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆಯ ಪ್ರಕಾರ ಚುನಾವಣಾ ಆಯೋಗವನ್ನು ಪುನರ್ರಚಿಸಲಾಗಿದೆ. ಶ್ರೀ ರವೀಂದ್ರನಾಥ ಟ್ಯಾಗೋರ್ ಅವರನ್ನು ಮುಖ್ಯ ಚುನಾವಣಾಧಿಕಾರಿಯನ್ನಾಗಿಯೂ, ಶ್ರೀ ಬಂಕಿಮಚಂದ್ರ ಚಟರ್ಜಿ ಹಾಗು ಜನಾಬ್ ಮಹಮದ್ ಇಕ್ಬಾಲ್ ಅವರುಗಳನ್ನು ಉಪಚುನಾವಣಾಧಿಕಾರಿಗಳನ್ನಾಗಿಯೂ ನೇಮಕ ಮಾಡಲಾಗಿದೆ…” +ತಟ್ಟೆಗೆ ಇಡ್ಲಿ ಹಾಕುತ್ತಿದ್ದ ಮಮ್ಮಿ ಹೇಳಿದಳು. “ಇಂಥಾದ್ದು ನಿನ್ನ ಗರ್ಭದಲ್ಲಿ ಮತ್ತೆಮತ್ತೆ ಮೊಳೆಯುತ್ತಿರುತ್ತದೆ ಮಗಳೇ. ಅಂದು ಹಾಗೆ. ಇಂದು ಹೀಗೆ. ನಾಳೆ ಇನ್ಹೇಗೋ. ಯಾವುದೂ ಶಾಶ್ವತವಲ್ಲ. ನೀನು ಜೋಪಾನವಾಗಿರು. ರಸ್ತೆಯಲ್ಲಿ, ಕಾಲೇಜಿನಲ್ಲಿ, ಲೈಬ್ರರಿಯಲ್ಲಿ, ಟಾಯ್ಲೆಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕು. ಕಾಲ ಹೇಗೋ ಏನೋ. ನಿನ್ನ ಬುದ್ದಿಬೆಳಕು ನಿನ್ನ ಕೈಯಲ್ಲಿರಲಿ.” +“ಸರಿ ಮಮ್ಮಿ. ನಾನು ಎಚ್ಚರಿಕೆಯಿಂದಲೇ ಇರುತ್ತೇನೆ. ಎಲೆಕ್ಷನ್ ಕಮೀಷನ್‌ನಲ್ಲಿ ಯಾರಿದ್ದರೇನು? ನಾನಂತೂ ಅವನಿಗೇ ಓಟು ಹಾಕುತ್ತೇನೆ. ನೀನೇನೂ ತಲೆ ಕೆಡಿಸಿಕೊಳ್ಳಬೇಡ.” +“ಅವನದು ಯಾವ ಗುರುತು ಮಗಳೇ? ಕುದುರೆಯೋ, ನಾಯಿಯೋ ಅಥವಾ ಪಾರಿವಾಳವೋ?” +ಮೈಗಾಡ್! ಮಮ್ಮಿಗೆ ಗೊತ್ತಾಗಿಹೋಗಿದೆ! +“ಸ್ಯಾಮ್ ಬಂದಿದ್ದನೇ?” ಕೇಳಿದೆ. +“ಹೌದು, ಸಂಜೆ ಗೋಧೂಳಿಯ ಸಮಯದಲ್ಲಿ.” +ಅಂದು ಅವನ ಹಸಿರು ಮಾಮರದಾಸೆಯನ್ನು ನಾನು ಬೇರು ಸಹಿತ ಕಿತ್ತು ಕೊಂಬೆರೆಂಬೆಗಳನ್ನು ತರಿದೊಗೆದ ದಿನ ಬೇಸರ ಪಟ್ಟುಕೊಂಡು ಎದ್ದುಹೋದವನು ಮತ್ತೆ ನನ್ನ ಹತ್ತಿರ ಬಂದಿರಲಿಲ್ಲ. ಈ ಸಂಜೆ ಸ್ಮಶಾನದಲ್ಲಿ ನಾನು ಸಿಂಧೂಳ ಬೂದಿಯನ್ನು ಕೆದಕುತ್ತಿದ್ದ ಸಮಯ ನೋಡಿ ಇಲ್ಲಿಗೆ ಬಂದು ಮಮ್ಮಿಗೆ ಚುಚ್ಚಿಬಿಟ್ಟಿದ್ದಾನೆ. ಮಮ್ಮಿಗೆ ಎಲ್ಲವೂ ಗೊತ್ತಾಗಿಹೋಗಿದೆ. ಇನ್ನು ಅವಳು ಮಾಂಸ ತರಲು ಅಂಗಡಿಗೆ ಹೋಗುವುದಿಲ್ಲ. ಇಲ್ಲೇ ಮನೆಯ ಹಜಾರದಲ್ಲೇ ಕಸಾಯಿಖಾನೆ ತೆರೆಯುತ್ತಾಳೆ. ನಾನು ಆದಷ್ಟು ಬೇಗ ಎತ್ತಲಾದರೂ ಓಡಿಹೋಗಬೇಕು. +ಓಡಲೆಂದು ಗಡಬಡಿಸಿ ಎದ್ದೆ. +ಎದ್ದವಳು ಹಿಂದಿನಿಂದ ಜಗ್ಗಿದಂತಾಗಿ ಉರುಳಿಬಿದ್ದೆ. +ಡ್ಯಾಡಿಯ ಕೊರಳಲ್ಲಿದ್ದ ಹೂವಿನ ಹಾರದ ಒಂದು ತುದಿ ಹಂಬಿನಂತೆ ಹಾರಿಬಂದು ನನ್ನ ಕೊರಳಿಗೆ ಉರುಳಿನಂತೆ ಬಿಗಿದುಕೊಂಡಿತ್ತು. +ನಿಸ್ಸಹಾಯಕಳಾಗಿ ಮಮ್ಮಿಯ ಕಡೆಗೊಮ್ಮೆ, ಡ್ಯಾಡಿಯ ಫೋಟೋದ ಕಡೆಗೊಮ್ಮೆ ನೋಡಿದೆ. ಡ್ಯಾಡಿಯ ಮುಖದ ನಿರಿಗೆಗಳು ಗೋಜಲುಗೋಜಲಾಗಿ ಹರಡಿಕೊಂಡವು. ಕಣ್ಣುಗಳಲ್ಲಿ ಕೆಂಪು ಗೋಲಿಗಳು ಹೊರಳಿದವು. ಅವರು ಮಮ್ಮಿಯ ಕಡೆ ತಿರುಗಿ ಹೂಂಕರಿಸಿದರು. +“ನಾನು ಹೇಳಿದ್ದು ನೆನಪಿದೆಯಾ?” +ಮಮ್ಮಿ “ಹ್ಞೂಂ” ಎಂದು ತಲೆಯಾಡಿಸಿದಳು. +“ಮತ್ತೇಕೆ ನೋಡುತ್ತಾ ನಿಂತೆ? ಹೇಳಿದಂತೆ ಮಾಡಬಾರದೇ?” +ಮಮ್ಮಿ ತಲೆತಗ್ಗಿಸಿ ಮೂಲೆಯತ್ತ ನಡೆದು “ಕೊರ್ ಕೊರ್” ಎಂದು ಗುನುಗುತ್ತಿದ್ದ ಭಾರೀ ಗಾತ್ರದ ಕೋಳೀಹುಂಜವೊಂದನ್ನು ಹಿಡಿದುಕೊಂಡು ಬಂದು ನನ್ನ ಮುಂದೆ ನಿಂತಳು. +ಡ್ಯಾಡಿ ಗಂಭೀರ ದನಿಯಲ್ಲಿ ಆಜ್ಞಾಪಿಸಿದರು. +“ಈ ಹುಂಜವನ್ನು ದೌಲತಾಬಾದಿಗೆ ತೆಗೆದುಕೊಂಡುಹೋಗಿ ಮಸೀದಿಯಲ್ಲಿ ಹಲಾಲ್ ಮಾಡಿಸಿಕೊಂಡು ಬಾ, ಈಗಲೇ.” +ಅವರ ದನಿ ನಿರ್ಭಾವುಕವಾಗಿತ್ತು. ಆದರೆ ಸ್ಫುಟವಾಗಿತ್ತು. +“ದೌಲತಾಬಾದಿಗೆ ಹೋಗುವುದಿಲ್ಲ ಎಂದು ಆಗಲೇ ಹೇಳಿದೆನಲ್ಲವೇ?” ಜೋರಾಗಿಯೇ ಹೇಳಿದೆ. ಇನ್ನು ನನಗ್ಯಾವ ಅಂಜಿಕೆ? ಹೇಗೂ ಡ್ಯಾಡಿ ಸೇರಿರುವುದು ಫೋಟೋ ಫ್ರೇಮಿನೊಳಗೆ. +ಡ್ಯಾಡಿ ಗಪ್‌ಚಿಪ್! +ಅಷ್ಟರಲ್ಲಿ ಬುಸಬುಸನೆ ಏದುತ್ತಾ ಪ್ರಿನ್ಸಿಪಾಲರು ಒಳಗೆ ಓಡೋಡಿ ಬಂದರು. ಅವರ ಹಿಂದೆಯೇ ಭಾರೀ ಜನಸ್ತೋಮ ಬಿರುಗಾಳಿಯಂತೆ ಒಳನುಗ್ಗಿತು. +ನಾನು ದಢಕ್ಕನೆ ಎದ್ದುನಿಂತೆ. +“ಉಸ್ಸಪ್ಪಾ, ಕೊನೆಗೂ ಹಿಡಿದುಬಿಟ್ಟೆವು” ಎನ್ನುತ್ತಾ ಪ್ರಿನ್ಸಿಪಾಲರು ಕುಸಿದುಕುಳಿತರು. +ಅವರು ಗಿಣಿಯನ್ನು ಹಿಡಿಯಲು ಸಾಕಷ್ಟು ಅಲೆದಾಡಿರಬೇಕು. ಪೂರ್ತಿ ಬಸವಳಿದವರಂತೆ ಕಾಣುತ್ತಿದ್ದರು. ಒಂದೆರಡು ಕಡೆ ಬಿದ್ದು ಎದ್ದಿದ್ದರೇನೋ, ಕಿರೀಟ ಹಲವು ಕಡೆ ನೆಗ್ಗಿಹೋಗಿತ್ತು. ಅವರು ನಡುವಿಗೆ ಸುತ್ತಿಕೊಂಡಿದ್ದ ವಸ್ತ್ರ ಹರಿದು ಜೂಲಾಗಿತ್ತು. ಅವರ ತಿಕ ಬೆತ್ತಲಾಗಿತ್ತು, ನಾಯಿ ತಿಕದ ಹಾಗೆ. +“ನಾನು ಮಾಡಬೇಕಾದುದನ್ನು ಮಾಡಿದ್ದೇನೆ. ಇನ್ನು ನಿಮ್ಮ ಸರದಿ” ಎಂದು ಪ್ರಿನ್ಸಿಪಾಲರು ಮಮ್ಮಿಯ ಕಡೆ ತಿರುಗಿ ಹೇಳಿ ಸೋಫಾದಲ್ಲಿ ಆರಾಮವಾಗಿ ಒರಗಿದರು. +ಮಮ್ಮಿ ಅವರ ಬಳಿಸಾರಿ ಕಿರೀಟವನ್ನು ಮೇಲೆತ್ತಿದಳು. ಅದರೊಳಗಿನಿಂದ ಗಿಳಿ ಪುರ್ರನೆ ಹಾರಿಹೋಗಿ ಡ್ಯಾಡಿಯ ಭುಜದ ಮೇಲೆ ಕೂತುಕೊಂಡು ಅವರ ಗಡ್ಡದ ಕೂದಲುಗಳಿಂದ ಹೇನು ಹೆಕ್ಕತೊಡಗಿತು. +“ಅದನ್ನು ಕರೆ.” ಮಮ್ಮಿ ಹೇಳಿದಳು. +ನಾನದನ್ನು ಒಲುಮೆಯಿಂದ ರಮಿಸಿ ಕರೆದೆ. +ಚಿನ್ನಾ ಬಾ ರನ್ನಾ ಬಾ +ಮುದ್ದಿನ ಗಿಣಿಯೇ ಬಾ ಬಾ ಬಾ +ಅದು ಪುರ್ರನೆ ಹಾರಿಬಂದು ನನ್ನ ಮುಂಗೈ ಮೇಲೆ ಕುಳಿತುಕೊಂಡಿತು. +“ವಿಚಾರಣೆ ಆರಂಭವಾಗಲಿ. ಆದಷ್ಟು ಬೇಗೆ ಪ್ಲೆಬಿಸೈಟ್ ಮುಗಿಸಿಬಿಡಬೇಕು.” +ಡ್ಯಾಡಿಯ ದನಿ ಮೊಳಗಿತು. ಪ್ರಿನ್ಸಿಪಾಲರಿಂದ ವಿಚಾರಣೆಯ ಅಧಿಕಾರವನ್ನು ಡ್ಯಾಡಿ ಯಾವಾಗ ವಹಿಸಿಕೊಂಡರೋ ತಿಳಿಯಲಿಲ್ಲ. ಅಲ್ಲದೇ ಅದೇನೋ ಪ್ಲೆಬಿಸೈಟ್ ಗಿಬಿಸೈಟ್ ಎಂದು ಬೇರೆ ಹೇಳತೊಡಗಿದ್ದಾರೆ. ಏನೋಪ್ಪ ನನಗೆ ಈ ನಾಡಿನ ರೀತಿನೀತಿಯೇ ಅರ್ಥವಾಗುವುದಿಲ್ಲ. ಜನ ತಾವು ತಾವೇ ಆಗಿ ಉಳಿದು ಬೆಳೆದು ಅಳಿಯುವುದರ ಬದಲು ಇನ್ನಾರೋ ಆಗಿ ಅಳಿದು ನಂತರ ಬೆಳೆದು ಉಳಿಯಲು ನೋಡುತ್ತಾರೆ. ಹುಚ್ಚಾಟ, ಬರೀ ಹುಚ್ಚಾಟ. +ಮಮ್ಮಿ ಮೆಲ್ಲಗೆ ಹತ್ತಿರ ಬಂದು ನನ್ನ ತಲೆ ಸವರಿದಳು. +“ಈಗ ಹಠ ಮಾಡಬೇಡ ಮಗಳೇ. ಎಲ್ಲವನ್ನೂ ಹೇಳಿಬಿಡು. ಇಲ್ಲದಿದ್ದರೆ ನನಗೆ ಬರುತ್ತದೆ ಕುತ್ತು. ನನ್ನ ಯೌವನದ ಪಕಳೆಗಳು ಹೌಸ್ ಆಫ್ ಕಾಮನ್ಸ್‌ನಲ್ಲಿ ಹರಾಜಿಗೆ ಬರುತ್ತವೆ. ಹಾಗಾಗುವುದು ಬೇಡ ಮಗಳೇ. ನಿನ್ನ ಡ್ಯಾಡಿ ಬರೀ ಪ್ರಿನ್ಸಿಪಾಲರಾಗಿಯೇ ಉಳಿಯಲಿ. ಅವರು ಬೇರೇನೂ ಆಗುವುದು ನನಗೆ ಬೇಕಾಗಿಲ್ಲ. ಇಡೀ ಜಗತ್ತಿನ ಹಿತದ ದೃಷ್ಟಿಯಿಂದ ಅವರು ಫೋಟೋ ಫ್ರೇಮಿನೊಳಗೇ ಉಳಿಯುವ ಅಗತ್ಯವಿದೆ.” +ನಾನು ನಿರ್ಧರಿಸಿದೆ. +ಹೇಳಿಬಿಡಬೇಕು +ಎಲ್ಲವನ್ನೂ ಹೇಳಿಬಿಡಬೇಕು +ಕನಸನ್ನೂ ಕನವರಿಕೆಯನ್ನೂ +ನನಸನ್ನೂ ನೆನಕೆಯನ್ನೂ +ಬಯಲಿಗಟ್ಟಿಬಿಡಬೇಕು +ಮೃದುವಾಗಿ ಗಿಣಿಯ ತಲೆಸವರಿ ಮುದ್ದಿಸಿದೆ. “ಹೇಳಿಬಿಡು” ಪಿಸುಗಿದೆ. +ಗಿಣಿ ಕೊರಳು ಕೊಂಕಿಸಿ, ಕಣ್ಣು ಮಿಟುಕಿಸಿ, ಬಾಯಿ ತೆರೆದು… +* +* +* +೮. ಬಿರುಕು ಬಿಟ್ಟ ಕಾಲ +…ಹೇಳಲು ಮೊದಲುಮಾಡಿತು. +ಯೆಹ್ ಆಲ್ ಇಂಡಿಯಾ ರೇಡಿಯೋ ಕೀ ಉರ್ದು ಸರ್ವೀಸ್ ಹೈ. ಆಪ್ ಕೀ ಪಸಂದ್ ಕೇ ಫಿಲ್ಮೀ ನಗ್ಮೋಂಕೋ ಸುನ್‌ನೇ ಕೆ ಬಾದ್ ಅಬ್ ಸುನೀಯೇ ರಜಿಯಾ ಸುಲ್ತಾನಾ ಸೇ ಖಬ್ರೆ… +…ಅಟ್ಲಾಂಟಿಸ್ ಬಾಳಿ ಅಳಿದು ಶತಶತಮಾನಗಳು ಕಳೆದ ಮೇಲೂ ಸಾಲ್ಮನ್ ಮೀನುಗಳಿಗೆ ಮರೆಯಲಾಗದ ದಾರಿ ಅದು. ಯೂರೋಪ್ ಅಮೆರಿಕಾಗಳ ನದೀ ಹಳ್ಳ ತೊರೆಗಳಿಂದ ಹೊರಟು ಅಟ್ಲಾಂಟಿಕ್‌ನತ್ತ ಪಯಣ ಬದುಕಿನ ಅಂತಿಮ ಗುರಿ. ಬೀಜ ಬಿತ್ತಿ ಮೊಳಕೆಯೊಡೆದ ಮೇಲೆ ಅಳಿದುಹೋಗುವ ಸನಾತನ ಸಂಪ್ರದಾಯ. ಮೊಳಕೆ ಚಿಗುರಿ ಮರಿಸಾಲ್ಮನ್ ಆಗಿ ಮತ್ತೆ ಯೂರೋಪ್ ಅಮೆರಿಕಾಗಳತ್ತ ಪ್ರವಾಹದ ಪ್ರಯಾಣ. ಮತ್ತೆ… +ಇದು ಯುಗಯುಗಗಳಿಂದ ಹರಿದುಬಂದ ರಿವಾಜಿನ ಪ್ರವಾಹ. +ಮರಳುಗಾಡಿನ ದಾರಿ ಹಿಡಿದ ಸಾಲ್ಮನ್ ಒಂದು ಹೊಸ ಯುಗದ ಹರಿಕಾರನಾಗಿ ಶರಣಾಗತಿಯ ಕರೆ ನೀಡಿದ್ದು ಈಗ ಇತಿಹಾಸ. ದಿಕ್ಕುದಿಕ್ಕಿಗೆ ಚದುರಿದ ಹರಿತನಾಲಿಗೆಗಳ ಕರೆಗೆ ಓಗೊಟ್ಟ ಯೂಫ್ರಟೀಸ್ ಹಾಗೂ ಟೈಗ್ರಿಸ್‌ಗಳು ಹಸಿರುಪ್ರವಾಹವಾಗಿ ಉಕ್ಕಿ ಹರಿದವು. ಸಹಾರಾ ಬೆಂಗಾಡಿನಲ್ಲಿ ಎಲ್ಲೆಲ್ಲೂ ಚಿಗುರಿದ ಹಸಿರು ಪತಾಕೆ ನೀಲನದಿಯಲ್ಲಿ ಮುಖ ನೋಡಿಕೊಂಡು ನಲಿಯಿತು. ಸಿಂಧೂನದಿ ಹಸಿರುಗಟ್ಟಿ ಹರಿಯಿತು. +ಸಾಲ್ಮನ್ ಮೀನು ಅದರಲ್ಲಿ ಈಜಿತು. +ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದೆ. ಇದು ಸಾರ್ವಕಾಲಿಕ ಸತ್ಯ. ಒಂದು ತಂಟೆಕೋರ ಮರಿಸಾಲ್ಮನ್ ನಡುರಾತ್ರಿಯ ಮಕ್ಕಳಿಗೆ ನಾಚಿಕೆಯಿಲ್ಲದೇ ಸೈತಾನನ ಕವಿತೆಗಳನ್ನು ಓದಿ ಹೇಳುವ ಹುಚ್ಚುಸಾಹಸಕ್ಕೆ ಕೈ ಹಚ್ಚಿದಾಗ ಪಾರಸೀಕ ಹೊಕ್ಕುಳಿನಲ್ಲಿ ಮೂಡಿ ಮೈಲುದೂರಕ್ಕೆ ಕಾಣುವಂತೆ ಸೊಕ್ಕಿ ನಿಂತಿದ್ದ ಇಮಾರತಿನ ಉನ್ನತ ಮಿನಾರು ಅದರ ಮೇಲೆ ಎರಗಿ ಗಢಾರಿಯಂತೆ ಘಟ್ಟಿಸಿತು. ದಿಕ್ಕುಗೆಟ್ಟ ಮರಿಸಾಲ್ಮನ್ ಹೆದರಿ ಹೇತುಕೊಂಡು ಸುಯೆಜ್‌ನಲ್ಲಿ ಸುಂಯ್ಯನೆ ಸಾಗಿ, ಜಿಬ್ರಾಲ್ಟರ್‌ನಲ್ಲಿ ಜಾರಿ, ಡೋವರ್ ದಾಟಿ ಮಮ್ಮಿಯ ಸೆರಗಿನಾಳದ ಪೊಟರೆಯೊಳಗೆ ಅವಿತು ಕೂತಿತು. +ಅದು ಹೊರಬಂದು ಕೊಟ್ಟಕೊನೆಯ ನಗೆಯ ಹನಿಯನ್ನು ಚಿಮುಕಿಸಿದಾಗ ಕಾಲ ಮಾಗಿತ್ತು. ಇಮಾರತು ಮುರಿದು ಮಿನಾರಿನ ಮೊನೆ ಮೊಂಡಾಗಿತ್ತು. ಮೀನು ಮತ್ತೆ ಅಟ್ಲಾಂಟಿಕ್‌ನ ಆಚೆ ಈಚೆ ಈಜಾಡಲು ಮೊದಲುಮಾಡಿತು. +ಕಾಲ ನಿಜವಾಗಿಯೂ ಬದಲಾಗಿತ್ತು. +“ಹೌದೇ?” ನನ್ನನ್ನೇ ಕೇಳಿಕೊಂಡೆ. +ಏನೇನೋ ಗೋಜಲುಗಳು. +ಕಾಲ ಬದಲಾಗುವುದಿಲ್ಲ. ಬದಲಾಗುವುದು, ಬದಲಾಯಿಸಲ್ಪಡುವುದು ಇತಿಹಾಸ, ನಮ್ಮ ಮೈನ ಚರ್ಮ, ಉಟ್ಟ ಬಟ್ಟೆ, ಮೀನಿನ ಹುರುಪೆಗಳು… +ಚಿತ್ರಗುಪ್ತ ನನ್ನ ಹತ್ತಿರ ಸರಿದು ಕಿವಿಯಲ್ಲಿ ಪಿಸುಗಿದ: “ಏನು ಮಾತು ಅಂತ ಆಡ್ತೀಯವ್ವ ನೀನು? ಯಾಕೆ ಬದಲಾಗಿಲ್ಲ?…” ಅವನಿನ್ನೂ ಮಾತು ಮುಗಿಸಿರಲಿಲ್ಲ, ಪ್ರಿನ್ಸಿಪಾಲರು ಮುಖ ಸಿಂಡರಿಸಿ ಅರಚಿದರು. +“ಅಯ್ ಸುಮ್ನಿರಯ್ಯ. ಏನು ಬದಲಾದದ್ದು? ನಿನ್ನಜ್ಜಿ ತಲೆ” ಎಂದು ಅವನನ್ನು ಬೈದು ನನ್ನತ್ತ ತಿರುಗಿ ಹೇಳಿದರು: ನಿನಗೆ ಗೊತ್ತೇ ಅಮ್ಮಣ್ಣೀ? ಹಳೆಯದೇ ಮತ್ತೆಮತ್ತೆ ಹೊಸದಾಗಿ ಹುಟ್ಟುತ್ತಿರುತ್ತದೆ. ಬದಲಾವಣೆ ಎಂದರೆ ಹಳೆಯದು ಹೊಸರೂಪ ತಾಳಿ ಮತ್ತೆ ಎದುರಿಗೆ ನಿಲ್ಲುವುದು ಅಷ್ಟೇ. ಬೇಕಾದರೆ ಬಾಮಿಯನ್‌ಗೆ ಬೆಳಗಿನ ವಾಕಿಂಗ್ ಹೋಗಿ ನೋಡು. ಐದು ಶತಮಾನಗಳ ಹಿಂದೆ ತೊಟ್ಟು ಕಳಚಿ ಕೆಳಗುದುರಿದ್ದೇ ಈಗ ಸಾಗರದಾಚೆಯ ಸ್ಯಾಮ್‌ನ ಜೋಡಿಕನಸುಗಳಿಂದ ಉದುರಿದ ಮಣ್ಣು, ಮೂಳೆ, ಗಾರೆ, ರಕ್ತಗಳಾಗಿ ಕಾಣಿಸಿಕೊಂಡಿದೆ. ಇಂಥಾದ್ದೇ ಮತ್ತೆಮತ್ತೆ ನಡೆಯುತ್ತದೆ. ಸುಮ್ಮನೆ ಬುದ್ಧಿಗೆಟ್ಟವಳಂತೆ ಹಲುಬಬೇಡ.” ಬೇಸರದಿಂದ ಹೇಳಿ ಅಂಡನ್ನು ಒಂದುಕಡೆ ಮೇಲೆತ್ತಿ “ಡರ್ರರ್ರೋ” ಎಂದು ಹೂಸು ಬಿಟ್ಟರು. +ಎಲ್ಲಿಂದಲೋ ಓಡಿಬಂದ ಸ್ಯಾಮ್ ಎಲ್ಲರ ಮೂಗಿನ ಮುಂದೆಯೂ ಒಂದೊಂದು ಗ್ಯಾಸ್‌ಮಾಸ್ಕ್ ಅಲ್ಲಾಡಿಸಿ ನನ್ನ ಹತ್ತಿರ ಬಂದು ಮೆಲುದನಿಯಲ್ಲಿ ಆತುರಾತುರವಾಗಿ ಒದರಿದ: “ಇದು ಆಂಥ್ರಾಕ್ಸ್. ಈ ಮುದಿಯ ಹೀಗೆ ಮಾಡುತ್ತಾನೆ ಎಂದು ನನಗೆ ಗೊತ್ತಿತ್ತು. ಪಾಕಡಾ ಆಸಾಮಿ.” +ನಂತರ ಪ್ರಿನ್ಸಿಪಾಲರತ್ತ ತಿರುಗಿ ಗುಡುಗಿದ. +“ಏಯ್ ಮುದುಕಪ್ಪ, ಇನ್ನೊಂದ್ಸಲ ಹೂಸುಗೀಸು ಬಿಟ್ಟು ಈ ಹುಡುಗಿಯನ್ನು ಹೆದರಿಸಿ ತೊಂದರೆ ಕೊಟ್ಟೀಯೇ ಜೋಕೆ! ಹುಟ್ಟಿಲ್ಲಾ ಅನ್ನಿಸಿಬಿಡ್ತೀನಿ.” +ನನಗೆ ಸಮಾಧಾನವಾಯಿತು. ಸಧ್ಯ ನನ್ನ ಕಡೆಯಲ್ಲೂ ಜನ ಇದ್ದಾರೆ. ಹೆಣ್ಣುಹೆಂಗಸೆಂದು ಇವರೆಲ್ಲರೂ ಹಿಂಸಿಸುವುದು ಎಲ್ಲಾ ಕಾಲಕ್ಕೂ ನಡೆಯುವುದಿಲ್ಲ. ಹಿಂಸಕರಿಗೆ ಪಾಠ ಕಲಿಸುವವರು ಮತ್ತೆಮತ್ತೆ ಹುಟ್ಟಿಬರುತ್ತಿರುತ್ತಾರೆ. +ಅಂದು ಇದೇ ಪ್ರಿನ್ಸಿಪಾಲರು ನನ್ನ ಸೀರೆಯನ್ನು ಸೆಳೆದಾಗ… +ಓಹ್ ಅಂದೂ ನಾನು ಮುಟ್ಟಾಗಿದ್ದೆ. ನನ್ನನ್ನು ಇದೇ ಸ್ಟ್ಯಾಫ್ ರೂಮಿಗೆ ಎಳೆದುಕೊಂಡು ಬಂದಿದ್ದರು. ತಲೆಬಲಿತ ಮುದಿ ಪ್ರೊಫೆಸರುಗಳಿಂದ ಹಿಡಿದು ಮೊಲೆ ಮೀಸೆ ಮೂಡದ ಮರಿಟೈಪಿಸ್ಟುಗಳವರೆಗೆ ಎಲ್ಲರೂ ತುಂಬಿದ್ದ ಒಡ್ಡೋಲಗ ಅದು. ಇದೇ ಈ ಪ್ರಿನ್ಸಿಪಾಲರು ಛೀಫ್ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್‌ನ ಮಾತು ಕೇಳಿ ನನ್ನ ಉಡಿಗೆ ಕೈಹಾಕಿದ್ದರು. ನನ್ನ ಮೈಮುಚ್ಚಿದ್ದು ಒಂಟಿ ಅರಿವೆ, ಬಹಿಷ್ಠೆಯಾಗಿದ್ದುದರ ಕುರುಹು. +ನಾನು ಅರ್ತಳಾಗಿ ಬೇಡಿದೆ. +ನನ್ನ ಐವರು ರೂಮ್‌ಮೇಟ್‌ಗಳಲ್ಲಿ ಒಬ್ಬ ಸುಪ್ರೀಮ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶ. ಇನ್ನೊಬ್ಬ ಹೆವಿವೈಟ್ ಬಾಕ್ಸಿಂಗ್ ವಿಶ್ವಛಾಂಪಿಯನ್. ಇನ್ನೊಬ್ಬ ಮೊನ್ನೆ ತಾನೇ ನಡೆದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಐದು ಸ್ವರ್ಣ ಪದಕಗಳನ್ನು ಗೆದ್ದವನು. ನಾಲ್ಕನೆಯವನು ಸುರಸುಂದರಾಂಗ, ಮಿಸ್ಟರ್ ಯೂನಿವರ್ಸ್ ಕಿರೀಟ ತೊಟ್ಟವನು. ಕೊನೆಯವನು ಹಾರ್ವರ್ಡ್‌ನಲ್ಲಿ ಪ್ರೊಫೆಸರ್, ಮೇಧಾವಿ. ಐವರೂ ಬಿಳೀ ಹಾಳೆಗಳನ್ನು ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದರು. ನಾನು ಎಷ್ಟು ಕರೆದರೂ ಅವರಿಗೆ ಎಚ್ಚರವಾಗಲೇ ಇಲ್ಲ. +ನಾನು ದಿಕ್ಕೆಟ್ಟು ಅತ್ತೆ. +ಪ್ರಿನ್ಸಿಪಾಲರು ನನ್ನ ಸೀರೆಯನ್ನು ಜಗ್ಗಿ ಎಳೆದಾಡಿದರು. +ಆಗ… +ಎಲ್ಲಿಂದಲೋ ಅವತರಿಸಿಬಂದ ಆ ಮೋಡಿಗಾರ. ಕಪ್ಪುಮೈನ ದನಗಾಹೀ ಮಸಾಯಿ ಜಾತಿಯವನು. ಆಫ್ರಿಕಾ ಶಂಖದ್ವೀಪದ ಸೀಳಿನ ಪೂರ್ವದಂಚಿನ ನಿವಾಸಿ. ಕೊಳಲನೂದುವ ಗಾರುಡಿಗ. ಸ್ವಾಹಿಲಿಯಲ್ಲಿ ಉದ್ದಾಮ ಪಂಡಿತ. ಕಪ್ಪುಕಣ್ಣುಗಳಲ್ಲಿ ತುಂಟತನ ಚಿಮ್ಮಿಸುತ್ತಾ ಕೈ‌ಎತ್ತಿದ… +ಪ್ರಿನ್ಸಿಪಾಲರು ಸೋತು ಸುಸ್ತಾಗಿ ಸೀರೆಯ ಗುಪ್ಪೆಯ ಮೇಲೆ ಕುಸಿದುಬಿದ್ದರು. +ಮತ್ತೆ… +ನಾನು ವೇಶ್ಯೆಯಂತೆ. +ಹಾಗೆಂದು ಹೀಯಾಳಿಸಿ ನನ್ನತ್ತ ಕಲ್ಲು ತೂರಿದ್ದರು ಇದೇ ಪ್ರಿನ್ಸಿಪಾಲರು ಮತ್ತವರ ವಿದ್ಯಾರ್ಥಿಗಳು. ನಾನು ನಿಸ್ಸಹಾಯಕಳಾಗಿ ದಿಕ್ಕೆಟ್ಟು ಓಡಿದೆ. ಅವರೆಲ್ಲಾ ಸೀಳುನಾಯಿಗಳಂತೆ ನನ್ನ ಹಿಂದೆ ಬಂದರು. +ಆಗ… +ಎದುರು ನಿಂತ ಅವನು. ಆರಡಿಗೂ ಮೀರಿದ ಅಜಾನುಬಾಹು. ಸದೃಢ ಮೈಕಟ್ಟಿನ, ಬಿಳುಪು ಮೈನ, ಸ್ಫುರದ್ರೂಪೀ ಯುವಕ. ಕರುಣೆಯೇ ಸ್ನಿಗ್ಧಗೊಂಡು ಅವನ ಕಣ್ಣುಗಳಾಗಿದ್ದಂತಿತ್ತು. ಅಂತಹ ಕರುಣೆಯ ಹೆಪ್ಪನ್ನು ಅವನು ಹಿಮಾಲಯದಿಂದ ಬಳುವಳಿಯಾಗಿ ಪಡೆದುಕೊಂಡಿದ್ದನಂತೆ. +ಸುಂದರ ಪುಟ್ಟಗಡ್ಡದ ಅವನು ಇದೇ ಪ್ರಿನ್ಸಿಪಾಲರು ಮತ್ತವರ ವಿದ್ಯಾರ್ಥಿಗಳೆದುರು ನಿಂತು ಗಂಭೀರ ದನಿಯಲ್ಲಿ ಹೇಳಿದ್ದ: +“ನಿಮ್ಮಲ್ಲಿ ಯಾರು ಪಾಪ ಮಾಡಿಲ್ಲವೋ ಅವರು ಇವಳಿಗೆ ಮೊದಲು ಕಲ್ಲು ಹೊಡೆಯಲಿ.” +ಅವರೆಲ್ಲರೂ ನಾಚಿಕೆಯಿಂದ ಮುಖ ಮುಚ್ಚಿಕೊಂಡು ಓಡಿಹೋಗಿದ್ದರು. +ಅವನ ಗಾಂಭೀರ್ಯಕ್ಕೆ ನಾನು ಮನಸೋತುಹೋಗಿದ್ದೆ. ನನ್ನೊಳಗಿನ ಬಯಕೆಯ ಚಿಗುರು ನಿಕೋಸ್ ಕಝಾನ್‌ತ್ಸಾಕಿಸ್‌ಗೆ ಹೇಗೋ ತಿಳಿದುಹೋಗಿ ಅದನ್ನವನು ಜಗಜ್ಜಾಹೀರು ಮಾಡಿಬಿಟ್ಟ… +ಅವನ ಜತೆ ನಾನೂ ಅಜರಾಮರಳಾದೆ, ಹೂವಿನ ಜತೆ ನಾರೂ ಸ್ವರ್ಗ ಸೇರಿದಂತೆ. +ಹೀಗೆ ಪ್ರಿನ್ಸಿಪಾಲರು ಮತ್ತವರ ಶಿಷ್ಯರುಗಳಿಂದ ನನಗೆ ಯಾವಾಗ ತೊಂದರೆಯಾದರೂ ಅವನು ಬಂದು ನನ್ನನ್ನು ಕಾಪಾಡಿದ್ದ. +ಹಾಗೆಯೇ ಈಗ ಸ್ಯಾಮ್ ಅವತರಿಸಿದ್ದಾನೆ. ನಾನವನ ಮಗ್ಗುಲಿಗೆ ಸರಿದೆ. +“ಅವನ ಸಹಾಯ ತೆಗೆದುಕೊಳ್ಳಬೇಡ ಮಗಳೇ. ಅದರಿಂದ ಅನಾಹುತವಾಗುತ್ತದೆ.” ಮಮ್ಮಿ ಎಚ್ಚರಿಸಿದಳು. +“ಯಾಕೆ?” ಕೇಳಿದೆ. +“ನೋಡು ಮಗಳೇ, ಹಿಂದಿನ ಆ ಕಪ್ಪು ಮಸಾಯಿಯ ಹಾಗೆ, ಆ ಪುಟ್ಟ ಕಂದುಗಪ್ಪು ಗಡ್ಡದ ಸುಂದರಾಂಗನ ಹಾಗೆ ಈ ಸ್ಯಾಮ್ ಇಲ್ಲ. ಅವರಿಬ್ಬರಲ್ಲಿ ಒಬ್ಬ ದೇವರು. ಇನ್ನೊಬ್ಬ ದೇವಕುಮಾರ. ಇವನೋ ಹುಳಿ ಉಪ್ಪು ತುಂಬಿದ ಮೈನ ನರಮನುಷ್ಯ. ಇವನು ಅವರಷ್ಟು ಜ್ಞಾನಿಯೂ ಅಲ್ಲ, ಪರೋಪಕಾರಿಯೂ ಅಲ್ಲ. ಒಂದುರೀತಿಯಲ್ಲಿ ಹುಟ್ಟಾ ಸ್ವಾರ್ಥಸಾಧಕ. ತನ್ನ ಬೇಳೆ ಬೇಯಿಸಿಕೊಳ್ಳಲು ಇಲ್ಲಿಗೆ ಓಡಿಬಂದಿದ್ದಾನೆ ಅಷ್ಟೇ. ಅದಕ್ಕೆ ಅವಕಾಶ ಕೊಡಬೇಡ. ಇದು ನಿನ್ನೊಳಗಿನ ದ್ವಂದ್ವ. ನಿನ್ನ ಅಂತರಾಳದ ಸಮಸ್ಯೆ. ನೀನೇ ಬಗೆಹರಿಸಿಕೊಳ್ಳಬೇಕು. ಇವನ ಸಹಾಯ ತೆಗೆದುಕೊಂಡರೆ ಸರ್ವನಾಶ ಖಂಡಿತ. ಎಲ್ಲ ಮುಗಿದು ಇವನು ಹೊರಡುವ ಕಾಲಕ್ಕೆ ನೀನು ಬಟಾಬಯಲಿನಲ್ಲಿ ಬೆತ್ತಲೆಯಾಗಿ ನಿಂತಿರುತ್ತೀ. ನಿನಗೆ ನಂಬಿಕೆಯಾಗದಿದ್ದರೆ ಅಲ್ಲಿ ನೋಡು.” ಬಾಗಿಲಿನಾಚೆ ಕೈಮಾಡಿದಳು ಮಮ್ಮಿ. +ಅತ್ತ ನೋಡಿದೆ. +ಅಲ್ಲಿ… +ಸ್ಯಾಮ್‌ನ ಶಿಶ್ನ ಗಗನದೆತ್ತರಕ್ಕೆ ಬೆಳೆದು ನಿಂತಿತ್ತು. ತನ್ನನ್ನು ಅಡಗಿಸಲು ಪ್ರಯತ್ನಿಸುತ್ತಿದ್ದ ಕೆಂಪು, ಹಳದೀ ಮತ್ತು ಹಸಿರು ಪೊದೆಗಳಿಗೆ ಸವಾಲೆಸೆಯುವಂತೆ ಮಲೆತು ತೊನೆದಾಡುತ್ತಿತ್ತು. +“ಅದನ್ನು ಸಂಭಾಳಿಸಲು ನನ್ನಿಂದಲೇ ಆಗಲಿಲ್ಲ. ಇನ್ನು ನೀನು ಏನುತಾನೆ ಮಾಡೀಯೆ? ನನ್ನ ಮಾತು ಕೇಳಿ ಇವನನ್ನು ಅಟ್ಟು. ನಾನು ಇವನನ್ನು ನಿನಗಿಂತಾ ಚೆನ್ನಾಗಿ ಬಲ್ಲೆ.” +ನನ್ನ ಕಣ್ಣಮುಂದೆ ಭೂತ-ಭವಿಷ್ಯದ ಸ್ಪಟಿಕ ಅಲ್ಲಾಡಿಸಿದ ಮಮ್ಮಿ ಸ್ಯಾಮ್‌ನ ಬೃಹದಾಕಾರದ ಶಿಶ್ನದತ್ತ ಬೆರಳು ಮಾಡಿ ಹೇಳಿದಳು: “ಸ್ವಲ್ಪ ಒಳಸೇರಲು ಇದಕ್ಕೆ ಅವಕಾಶ ಕೊಟ್ಟರೆ ಸಾಕು ಇದು ಹಿಮಾಲಯಕ್ಕೇ ಭೈರಿಗೆ ಹೊಡೆಯುತ್ತದೆ. ನೀನು ನೋಡುನೋಡುತ್ತಿರುವಂತೇ ಈ ಕಡೆಯ ಗುಡಿಗುಂಡಾರ ಮಸೀದಿಗಳಲ್ಲೆಲ್ಲಾ ಇದು ಪಟ್ಟಾಗಿ ಕುಳಿತುಬಿಡುತ್ತದೆ. ಭಾನುವಾರದ ಬೆಳಗುಗಳಲ್ಲಿ ಬಿಳಿಯುಡುಗೆಯ ಜಗದ್ಗುರುಗಳೆಲ್ಲರೂ ‘ಆದಿಯಲ್ಲಿ ಶಿವಲಿಂಗವಿತ್ತು. ಮೊದಮೊದಲು ಅದು ಜಗಮಗ ಹೊಳೆಯುತ್ತಿತ್ತು. ಆಮೇಲೆ ಮೂಡಿದ ಅರ್ಧಚಂದ್ರನ ಮಾಸಲು ಬೆಳಕಿನಲ್ಲಿ ಅದು ಮಂಕಾಗಿ ಕಾಣತೊಡಗಿತು. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಸ್ಯಾಮ್‌ನ ಲಿಂಗ ಧುತ್ತನೆ ಎದ್ದುಬಂದು ನೆಲಮುಗಿಲುಗಳಿಗೆ ಸೇತುವೆಯಾಗಿ ನಿಂತಿತು’ ಎಂದು ಬೋಧಿಸುತ್ತಾರೆ. ಮಕ್ಕಳೆಲ್ಲರೂ ‘ಶಿವಲಿಂಗ ಹೋಗಿ ಸ್ಯಾಮ್‌ಲಿಂಗ ಬಂತು ಡುಂ ಡುಂ ಡುಂ’ ಎಂದು ಹಾಡತೊಡಗುತ್ತಾರೆ. ಮುಂದೊಂದು ದಿನ ಅದೇ ಈ ನಾಡಿನ ರಾಷ್ಟ್ರಗೀತೆಯಾಗುತ್ತದೆ.” +ನನಗೆ ಏನು ಮಾಡಲೂ ತೋಚಲಿಲ್ಲ. +ಅಷ್ಟರಲ್ಲಿ ನನ್ನ ಸಮಸ್ಯೆಗೆ ಮಂಗಳ ಹಾಡುವಂತೆ ನೆರೆದಿದ್ದ ಜನಸಮೂಹದಲ್ಲಿ ಅರ್ಧ ಪ್ರಿನ್ಸಿಪಾಲರ ಕಡೆಗೂ ಇನ್ನರ್ಧ ಸ್ಯಾಮ್‌ನ ಕಡೆಗೂ ಸೇರಿ ಹೊಡೆದಾಡತೊಡಗಿದರು. ಅವನ ಗಡ್ಡವನ್ನು ಇವನು ಕಿತ್ತ. ಇವನ ಟೋಪಿಯನ್ನು ಅವನು ಹರಿದ. +“ಥತ್ ನನಗೆ ಮೊದಲೇ ಗೊತ್ತಿತ್ತು ಇವಳಿಂದಾಗಿ ಹೀಗೆಲ್ಲಾ ಆಗುತ್ತದೆ ಅಂತ.” ಡ್ಯಾಡಿ ನಿರಾಶೆಯಿಂದ ಹೇಳಿ ಕಣ್ಣು ಮುಚ್ಚಿದರು. +* +* +* +೯. ಒಂದು ಹೊಚ್ಚಹೊಸ ಒಡಂಬಡಿಕೆ +ನಾನು ಓಡತೊಡಗಿದೆ. +ಕಾಲೇಜಿನ ಗೇಟನ್ನು ಧಢಾರನೆ ನೂಕಿ ಒಳನುಗ್ಗಿದೆ. ನನ್ನ ಕ್ಲಾಸ್‌ರೂಮಿನ ಬಾಗಿಲು ವಿಶಾಲವಾಗಿ ತೆರೆದಿತ್ತು. ಎಡವಿ ಬೀಳುವುದನ್ನೂ ಲೆಕ್ಕಿಸದೇ ಹೊಸ್ತಿಲು ದಾಟಿದೆ. +ಬೋರ್ಡಿನ ಮೇಲೆ ಏನೋ ಬರೆಯುತ್ತಿದ್ದ ಗಿಣಿ ನನ್ನ ಕಡೆ ತಿರುಗಿ ನಸುನಕ್ಕಿತು. “ಬಾ ನಿನ್ನನ್ನೇ ಕಾಯುತ್ತಿದ್ದೆವು” ಅಂದಿತು. +ನಾನು ನಸುನಾಚಿ ನನ್ನ ಸ್ಥಳದಲ್ಲಿ ಹೋಗಿ ಕುಳಿತೆ. +ಗಿಣಿ ರಾಜಕಾರಣಿಯ ಥರಾ ಡ್ರೆಸ್ ಮಾಡಿಕೊಂಡಿತ್ತು. ಬಿಳೀ ಧೋತರ ಉಟ್ಟುಕೊಂಡಿತ್ತು. ಬಿಳಿಯದೇ ಶರ್ಟು. ಮೇಲೆ ನೆಹರೂ ಕೋಟು. ತಲೆಯಲ್ಲಿ ನೆಹರೂದೋ ಗಾಂಧಿಯದೋ ಒಂದು ಟೋಪಿ. +ಬೋರ್ಡಿನ ಮೇಲೆ ಏನೇನೋ ಸಮೀಕರಣಗಳನ್ನು ಬರೆದು ಗಿಣಿ ನಮ್ಮ ಕಡೆ ತಿರುಗಿ ಪಾಠ ಹೇಳತೊಡಗಿತು. +“ನೋಡ್ರೆಪಾ, ಮೇಲಿನ ಕೇಸರಿಗೂ ಕೆಳಗಿನ ಹಸಿರಿಗೂ ಘರ್ಷಣೆ ತಪ್ಪಿಸಲು ನಡುವಿನ ಬಿಳಿ ಸದಾ ಶ್ರಮಿಸುತ್ತಿರುತ್ತದೆ. ಆದರೆ ತೊಂದರೆ ಇರುವುದು ಈ ಚಕ್ರದಲ್ಲೇ. ಚಕ್ರ ಸದಾ ಸುತ್ತುತ್ತಿರುತ್ತದೆ. ಏನನ್ನೂ ಇದ್ದಹಾಗೇ ಇರಗೊಡುವುದಿಲ್ಲ. ಮೇಲಿನದನ್ನು ಕೆಳಕ್ಕೆ ತಳ್ಳಿ, ಕೆಳಗಿನದನ್ನು ಮೇಲಕ್ಕೆತ್ತಿ ನಿರಂತರವಾಗಿ ಗೊಂದಲಗಳನ್ನು ಸೃಷ್ಟಿಸುತ್ತಿರುತ್ತದೆ. ಎಲ್ಲವನ್ನೂ ಕಲಸುಮೇಲೋಗರ ಮಾಡಿಬಿಡುತ್ತದೆ. ಇದೇ ಬಂದಿರೋದು ತಾಪತ್ರಯ ನೋಡಿ…” +“ಚಕ್ರವನ್ನು ಮುರಿಯಿರಿ.” ಎಲ್ಲರೂ ಸಾಮೂಹಿಕವಾಗಿ ಧ್ವನಿ-ಪ್ರತಿಧ್ವನಿಸಿದರು. ಮುಷ್ಠಿಗಳನ್ನು ಮೇಲೆತ್ತಿ ಬೀದಿಬೀದಿಗಳಲ್ಲಿ ಕುಣಿದರು. +ಹದಿನೆಂಟು ದಿನಗಳವರೆಗೆ ಘನಘೋರ ಕಾಳಗ ನಡೆಯಿತು. ಅದು ಮುಗಿದು ಹನ್ನೊಂದು ಪ್ಲಸ್ ಏಳು ಆಕ್ಷೋಹಿಣಿ ಭೇಧಮೂಲ ನಂಬಿಕೆಗಳು ಸತ್ತು ಮಲಗಿದಾಗ ನಾನೂ ನನ್ನ ಐವರು ರೂಮ್‌ಮೇಟ್‌ಗಳೂ ಗರಬಡಿದವರಂತೆ ನಿಂತೆವು. ನಾವು ಕಾಣುತ್ತಿರುವುದು ಸತ್ಯವೋ ಮಿಥ್ಯವೋ ನನಗಾಕ್ಷಣ ತಿಳಿಯಲೇ ಇಲ್ಲ. ನನ್ನ ಕಣ್ಣುಗಳು ತೇವಗೊಂಡಿದ್ದವು. +ನಾನು ಅಳತೊಡಗಿದೆ… +ಅಳುತ್ತಲೇ ಇದ್ದೆ, ನಲವತ್ತು ದಿನಗಳು ನಲವತ್ತು ರಾತ್ರಿಗಳು ಪೂರ್ಣಗೊಳ್ಳುವವರೆಗೆ. ಕಣ್ಣ ತುಂಬಾ ನೀರು. ಎಲ್ಲೆಲ್ಲೂ ಪ್ರವಾಹ. +ಹಳೆಯದೆಲ್ಲಾ ತೊಳೆದುಹೋಗಿ ಇತಿಹಾಸಪೂರ್ವದ ಕತೆಯಾಯಿತು. +ಎಲ್ಲೆಲ್ಲೂ ಹೊಸನೀರು. +ತ್ರಿವರ್ಣಧ್ವಜ ದಿಕ್ಕೆಟ್ಟು ತೇಲುತ್ತಿತ್ತು. ಉಳಿದಿದ್ದ ಜೀವಜೋಡಿಗಳಲ್ಲೊಂದೊಂದನ್ನು ಮಡಿಲಿಗೆ ತುಂಬಿಕೊಂಡು ತ್ರಿವರ್ಣಧ್ವಜದ ಮೇಲೆ ಕುಳಿತೆ. ಬಂದಬಂದವರಿಗೆಲ್ಲಾ ಜಾಗ ಮಾಡಿಕೊಡುತ್ತಾ ಅದು ಪಶ್ಚಿಮೋತ್ತರದ ಪರ್ವತಗೋಡೆಯವರೆಗೆ ಆವರಿಸಿಕೊಂಡುಬಿಟ್ಟಿತು. +ನಲವತ್ತೊಂದನೆಯ ರಾತ್ರಿ ಮಳೆ ನಿಂತಿತು. +ಸ್ವಚ್ಚ ಆಗಸದಲ್ಲಿ ಚಂದ್ರ ನಗುತ್ತಿದ್ದ. +ನಮ್ಮ ನಡುವೆ ಕತ್ತಲಿತ್ತು. +“ಬೆಳಕ ಕೊಡು.” ಚಂದ್ರನನ್ನು ಕೇಳಿದೆ. ಸೆರಗೊಡ್ಡಿ ಬೇಡಿದೆ. ಅವನು ಕಿಲಿಕಿಲಿ ನಗುತ್ತಾ ಓಡಿಬಂದು ಕೇಸರಿಗೂ ಹಸಿರಿಗೂ ನಡುವೆ ಇದ್ದ ಖಾಲೀ ಬಿಳಿಯಲ್ಲಿ ಪಟ್ಟಾಗಿ ಕೂತುಬಿಟ್ಟ. +ನನಗೆ ಸಮಾಧಾನವಾಯಿತು. +ಈಗ ಮೇಲೆತ್ತಿ ಕೆಳಗೊಗೆದು ಗೋಜಲುಗಟ್ಟಿಸುವ ಚಕ್ರ ಇರಲಿಲ್ಲ. ಅದರ ಜಾಗದಲ್ಲಿ ಚಂದ್ರ- ನಿಶ್ಚಲ, ಪ್ರಶಾಂತ. +ಇನ್ನು ಯಾವ ತೊಂದರೆಯೂ ಇಲ್ಲ. +ಬಾವುಟವನ್ನು ಮೇಲೆತ್ತಿ ಹಿಡಿದು ಬಲೂಚಿಸ್ತಾನದಿಂದ ಬರ್ಮಾದವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕುಣಿಕುಣಿದಾಡುತ್ತಾ ಒಡಾಡಿದೆ. +ಎಲ್ಲೆಲ್ಲಿಯೂ ಬಾವುಟವೋ ಬಾವುಟ. +ಹಾಲುಗಲ್ಲದ ಪುಟ್ಟ ಮಕ್ಕಳು ಶಾಲೆಯಲ್ಲಿ ಪುಸ್ತಕಗಳನ್ನು ತೆರೆದು ಓದಲಾರಂಭಿಸಿದರು: “ನಮ್ಮ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಭಾಗಿಸಬಹುದು. ಮೊದಲನೆಯದು ಹಿಂದೂಕುಷ್, ಕಾರಾಕೊರಂ, ಹಿಮಾಲಯ ಪರ್ವತಶ್ರೇಣಿ; ಎರಡನೆಯದು ಸಿಂಧೂ ಗಂಗಾ ನದಿಗಳ ಬಯಲು; ಮೂ…” +* +* +* +೧೦. ಅಗೋ… ಅಲ್ಲಿ ಓಯಸಿಸ್! +“ನಿನಗೀಗ ಪೂರ್ತಿ ಗುಣವಾಗಿದೆ ಮಗಳೇ. ನಾಳೆಯಿಂದ ನೀನು ಆರಾಮವಾಗಿ ಕಾಲೇಜಿಗೆ ಹೋಗಿಬರಬಹುದು. ಪ್ರಿನ್ಸಿಪಾಲರಿಗೆ ಹೆದರುವಂತಹದೇನೂ ಇಲ್ಲ. ಅವರಿಗೆ ಹೊಸಬಟ್ಟೆಗಳನ್ನು ಹೊಲಿಸಿಕೊಟ್ಟಿದ್ದೇನೆ. ಈಗವರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ.” ಮಮ್ಮಿ ಪ್ರೀತಿಯಿಂದ ನುಡಿದು ತಲೆ ಸವರಿದಳು. +ನಾನು ನಿಡಿದಾಗಿ ಉಸಿರ್ಗರೆದೆ. +ಮಮ್ಮಿ ಟ್ರಾನ್ಸಿಸ್ಟರ್ ಆನ್ ಮಾಡಿದಳು. ಬೆಳಗಿನ ವಾರ್ತೆಗಳು ಹರಿದುಬರುತ್ತಿದ್ದವು. +“…ನಿನ್ನೆ ಸಂಜೆ ಪ್ರಧಾನ ಮಂತ್ರಿ ಶ್ರೀರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಕ್ಷಣಾ ಮಂತ್ರಿ ಜನರಲ್ ಜಹರುದ್ದೀನ್ ಬಾಬರ್ ಅವರ ಉಪಾಧ್ಯಕ್ಷತೆಯಲ್ಲಿ ನಡೆದ ಮಹತ್ವದ ಮಂತ್ರಿಮಂಡಳದ ಸಭೆಯಲ್ಲಿ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಅದರಂತೆ ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದಿಗೆ ಬದಲಾಯಿಸುವುದರ ಬಗೆಗಿನ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ರಾಜಧಾನಿಯನ್ನು ಅಯೋಧ್ಯೆಗೆ ವರ್ಗಾಯಿಸುವ ಹೊಸ ತೀರ್ಮಾನವನ್ನು ಕೈಗೊಳ್ಳಲಾಗಿದೆ. ನೂತನ ರಾಜಧಾನಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಸಂಸತ್ ಭವನಕ್ಕೆ ಮೂರು ಗುಮ್ಮಟಗಳಿರುತ್ತವೆ…” +“ನಿನಗೆ ಇನ್ನೂ ಒಂದು ವಿಷಯ ಗೊತ್ತೇ?” ಮಮ್ಮಿ ಹತ್ತಿರ ಸರಿದು ಹೇಳಿದಳು: “ಮುಂದಿನ ತಿಂಗಳು ನ್ಯೂಯಾರ್ಕ್ ಮತ್ತು ಜಿನೀವಾಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ರಿಪಬ್ಲಿಕ್ ಆಫ್ ಸೌತ್ ಏಶಿಯಾದ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ಅಶೋಕ, ಉಪನಾಯಕ ಅಕ್ಬರ್, ವಿಕೆಟ್ ಕೀಪರ್ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹದಿನಾಲ್ಕು ಆಟಗಾರರ ಪಟ್ಟಿ ಈ ರೀತಿ ಇದೆ…” +“ಟೀಮ್ ಮ್ಯಾನೇಜರ್ ಯಾರು ಮಮ್ಮಿ?” ಕೇಳಿದೆ. +“ಮಹಮದ್ ಆಲಿ ಜಿನ್ನಾ.” ಮಮ್ಮಿ ಹೇಳಿದಳು. +“ಡಾಕ್ಟರ್?” +“ಓ ಅದು ಡಾ. ಎಂ. ಕೆ. ಗಾಂಧಿ. ಈ ‘ವಿಷನ್ ೨೦೨೦’ ಪುಸ್ತಕದಲ್ಲಿ ಎಲ್ಲ ವಿವರಗಳೂ ಇವೆ. ಓದಿಕೋ” ಎನ್ನುತ್ತಾ ಮಮ್ಮಿ ಪುಸ್ತಕವೊಂದನ್ನು ನನ್ನ ಕೈಲಿತ್ತು ನಸುನಕ್ಕಳು. +ಅವಳ ಮುಖದಲ್ಲಿ ಅಂತಹ ಸಂತೃಪ್ತಿಯ ಮಂದಹಾಸವನ್ನು ಕಂಡು ಶತಮಾನಗಳೇ ಕಳೆದುಹೋಗಿದ್ದವು. +***** +“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […] +ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ . ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ […] +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_503.txt b/Kannada Sahitya/article_503.txt new file mode 100644 index 0000000000000000000000000000000000000000..8ef986fdf7e5cf33544e3b43111f008b34879c5f --- /dev/null +++ b/Kannada Sahitya/article_503.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಟ್ಟದ ಮೇಲೆ ಹಿಂದೆ ತಲೆಯೆತ್ತಿ ಮೆರೆದು, ಇಂದು +ಹಾಳು ಬಿದಿರಿವಂಥ ಕೋಟೆ. +ಅಲ್ಲಿದ್ದನೊಬ್ಬ ಮುದುಕ, ಅವಗೊಬ್ಬನೇ ಮಗ +ಹೇಗೊ ಸಾಗಿಸುತ್ತಿದ್ದ ಬದುಕ. +ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾಯಿತು ಅವನ +ಕುದುರೆ, ಅವನಿಗಿದ್ದಾಸರೆ. +ಬೆಟ್ಟದ ಕೆಳಗೆ ಮನೆ ಕಟ್ತಿಕೊಂಡಿದ್ದ ಮಂದಿ +ಬಂದರು,ಮರುಕ ತೋರಿದರು: +‘ಪಾಪ, ದುರ್ದೈವ’ ಎಂದು. +ನಿರ್ಲಕ್ಷ್ಯದಿಂದಿದ್ದ ಮುದುಕ ಕೇಳಿದ: +“ಹೇಗೆ ಬಲ್ಲಿರಿ ಇದು ದುರ್ದೈವ ಎಂದು?” +ದಿನಗಳುರುಳಿದವು; ಅವರಷ್ಟಕ್ಕೆ ಅವರು,ಇವನಷ್ಟಕ್ಕೆ ಇವನು. +ಖರಪುಟದ ದನಿ ಕೇಳಿ ಒಂದು ದಿನ ಹೊರಬಂದ ಮುದುಕ- +ಹೌದು, ತನ್ನದೆ ಕುದುರೆ, ಜೊತೆಗೇ ಕಾಡುಕುದುರೆಗಳ ಹಿಂಡು, +ಬಂದರೋಡೋಡಿ ಕುದುರೆಗಳ ಕೆನೆತ ಕೇಳಿ ಅದೇ ನೆರೆಹೊರೆಯ ಮಂದಿ. +ಕೈಕುಲುಕಿ ಮುದುಕನ ತಬ್ಬಿ ಉದ್ಗರಿಸಿದರು; ‘ಎಂಥಾ ಸುದೈವ!’ +ಹಿಂದೆ ಕೇಳಿದ್ದನಲ್ಲ, ಅದೇ ದನಿಯಲ್ಲಿ ನುಡಿದ ಮುದುಕ: +“ಹೌದೆ? ಹೇಗೆ ಹೇಳುವಿರಿ ಇದು ಸುದೈವವೆಂದು?” +ಉತ್ತರವು ಹೊಳೆಯದೆ ಅವರು ಮರಳಿದರು ಹಿಂದಿನಂತೆ. +ಒಂದಕ್ಕಿಂತ ಒಂದು ಸುಟಿಯಾದ ಕುದುರೆ, ಯಾವುದನು +ಹತ್ತಲಿ? ಯಾವುದ ಬಿಡಲಿ? ಎಂದು ತಕತಕ ಕುಣಿದ ಮಗ. +ದಿನಕ್ಕೊಂದು ಸವಾರಿ, ಕಾಡು-ಮೇಡು ಸುತ್ತಿ ಹೊಡೆದ ಫೇರಿ. +ದಡಕ್ಕನೊಂದು ದಿನ ಥಡಿಜಾರಿ ಬಿದ್ದ ಹುಡುಗ- +ಮುರಿದು ಬಿಟ್ಟಿತು ಅವನ ಬಲಗಾಲ ಮೂಳೆ. +ಮತ್ತೆ ಬಂದರು ಜನ ಯಥಾಪ್ರಕಾರ ವಿಷಾದಪಟ್ಟು +ಮುದುಕನ ಮಗನ ದುರದೃಷ್ಟಕ್ಕೆ: +ತೋಡಿಕೊಂಡರು ತಮ್ಮ ವಾಡಿಕೆಯ ಅನುಕಂಪ +ನಿರ್ಲಿಪ್ತ ಭಾವದಲಿ ಮುದುಕನೆಂದ: +“ಹೇಗೆ ಹೇಳುವಿರಪ್ಪ ಇದು ಅವನ ದುರದೃಷ್ಟವೆಂದು?” +ಒಬ್ಬರ ಮುಖವನ್ನೊಬ್ಬರು ನೋಡಿ ಹಿಂದಿರುಗಿದರು +ಏನು ಉತ್ತರಿಸಬೇಕೆಂಬುದೇ ಹೊಳೆಯದಾಗಿ. +ಮರುವರ್ಷವೇ ಬಂತು ಭೀಕರ ಯುದ್ಧ- +ಯುವಕರಿಗೆಲ್ಲ ತುರ್ತುಕರೆ. +ಮುದುಕನ ಮಗನು ಮಾತ್ರ ಸೇರಬೇಕಾಗಲಿಲ್ಲ ಸೈನ್ಯ- +ಅವನ ಬಲಗಾಲೆ ಊನ. +(ಒಂದು ಹಳೆಯ ಚೀನೀ ದೃಷ್ಟಾಂತ ಕಥೆ) +***** +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […] +೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_504.txt b/Kannada Sahitya/article_504.txt new file mode 100644 index 0000000000000000000000000000000000000000..c0dc646c18a887d120b92159a60ca6f94e57cd3f --- /dev/null +++ b/Kannada Sahitya/article_504.txt @@ -0,0 +1,192 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದ್ವಿತೀಯಾಶ್ವಾಸಂ +ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ ಸೂಕ್ತವಾದ ಬದಲಾವಣೆ ಮಾಡುತ್ತ ನಿರಂತರ ಚಲನೆ ಹೊಂದಿರುವ ಕಾಲವನ್ನು ಭೌತವಿಜ್ಞಾನಿಗಳು ಬಿಲ್ಲಿನಿಂದ ಚಿಮ್ಮಿದ ಬಾಣಕ್ಕೆ ಹೋಲಿಸಿರುವುದು ಸರಿಯಾಗಿದೆ. ಕಾಲ ಸ್ತಬ್ದವಾಗುವುದು ಆಯಾ ವ್ಯಕ್ತಿಗಳ ದೇಹದಲ್ಲಿ ಆವತ್ತಿನವರೆಗೆ ಪ್ರಾಣಪಕ್ಷಿ ವಾಸಮಾಡುತ್ತಿದ್ದು ಕೊನೆಗೊಮ್ಮೆ ಅದು ಹೇಳದೆ ಕೇಳದೆ ಪುರ್ರನೆ ಹಾರಿಹೋದೊಡನೆಯೆ, ಆದರೆ ಪ್ರಾಣಕಳೆದುಕೊಂಡ ವ್ಯಕ್ತಿಯ ಬದುಕು ಹಲವರ ಬಾಯಲ್ಲಿ ಒಂದು ಚಲನೆ ಪಡೆಯುತ್ತದೆ. ಅವನು ಹಂಗಿದ್ದ; ಹಿಂಗಿದ್ದ ಅಂತ ಮಾತಾಡಿಕೊಳ್ಳುತ್ತರೆ. ಭಾಷೆಯ ರೂಪ ಅವಧರಿಸಿ ಅವನು ಬದುಕುಳಿಯುತ್ತಾನೆ. ನಂತರ ಸತ್ತವನ ಯೊಗ್ಯತೆಗೆ ತಕ್ಕಂತೆ ಅವನ ಕಥೆಯೂ ಭೂತಕಾಲದ ದಫ್ತರು ಸೇರಿಬಿಡುತ್ತದೆ. ಆದ್ದರಿಂದ ಪ್ರಾಚೀನರು ‘ಕಾಲೋ ಅಶ್ವೋವಹತಿ’ ಎಂದು ಕಾಲವನ್ನು ನಿರಂತರವಾಗಿ ಸಂಚರಿಸುವ ಕುದುರೆಗೆ ಹೋಲಿಸಿದರು. ‘ಸಪ್ತರಶ್ಮೀ’ ಅಂತ ಅದಕ್ಕೆ ಏಳು ಕಿರಣಗಳನ್ನು ಸೃಷ್ಟಿಸಿದರು. ಸಹಸ್ರಾಕ್ಷೋ ಅಂತ ಸಾವಿರ ಕಣ್ಣುಗಳಿವೆ ಎಂದು ಹೇಳಿದರು. ಅಜರೋ ಅಂತ ಅದಕ್ಕೆ ಮುಪ್ಪಿಲ್ಲವೆಂದು ಘೋಷಿಸಿದರು. ಭೂರಿ ಶೀತಾಃ ಅಂತ ಅದರ ವೀರ್ಯಸಮೃದ್ಧಿತನಕ್ಕೆ ಪ್ರಾಮಾಣಪತ್ರ ದಯಪಾಲಿಸಿದರು. ಮತ್ತೂ ಮುಂದುವರೆದು ಕಾಲೇನ ಆಗತೇನ ಇಮಾಃ ಸರ್ವಾ ಪ್ರಜಾ ನಂದತಿ ಎಂದು ಹೇಳುವುದರ ಮೂಲಕ ದ್ವಂದಾತೀತವಾದ ಅನುಭವವನ್ನು ಕಾಲ ನೀಡುತ್ತದೆ ಎಂದು ಸಾರಿದರು. ಅದಕ್ಕೆ ದೈವಸ್ತಾನ ನೀಡಿ ಕಾಲಭೈರವ ಎಂದು ಹೆಸರಿಟ್ಟರು. ಕಾಲಭೈರವ ಉಗ್ರ ಶಾಸಕ. ಅವನಿಗೆ ಶಿಕ್ಷಿಸುವುದೂ ಗೊತ್ತು, ಶಿಕ್ಷಣ ಕೊಡುವುದೂ ಗೊತ್ತು. ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ; ಈಶತ್ವ ವಶಿತ್ವವೆಂಬುವೇ ಮೊದಲಾದವರನ್ನು ತೇದು ಕುಡಿದ ವಂಶದಿಂದ ಬಂದವನಾದ ಶಾಮಾಶಾಸ್ತ್ರಿಯ ಬದುಕನ್ನೂ, ಕಾರ್ಲಮಾರ್ಕ್ಸ್, ಏಂಗೆಲ್ಸ್, ಚೆಗುವೆರಾ ಇವರೇ ಮೊದಲಾದ ಎಡಪಂಥದವರನ್ನು ಅರೆದು ಕುಡಿದು ಅನ್ನನಾಳದಲ್ಲಿ ಪ್ರತಿಷಾಪಿಸಿಕೊಂಡಿರುವ ಕಾಂರೇಡ್ ರಘುರಾಮನ ಬದುಕನ್ನು ಹೇಗೆ ರೂಪಿಸಿದ ಎಂದು ಯೋಚಿಸುವುದು ಈ ಪೂರ್ವಾರ್ಧ ಕಥಾನಕದಲ್ಲಿ ಮುಖ್ಯ. +ಸಂಸ್ಕೃತ ಕಳೇಬರದಮೇಲೆ ಪದ್ಮಾಸನ ಹಾಕಿ ಪ್ರಾಣಾಯಾಮ, ಧ್ಯಾನ ಮಾಡುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಎಂಬ ಮೇಡ್ ಇನ್ ಇಂಡಿಯಾ ಅಥವಾ ಸನ್ ಆಫ್ ಇಂಡಿಯಾ ಎಂಬುವನು ಹೊಸಪೇಟೆಯ ಅಗ್ರಹಾರ ನಿವಾಸಿ ವೇದಾಂತಿ ರಾಜಗೋಪಾಲಾಚಾರ್ಯರ ಮೊಮ್ಮಗಳಾದ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ಶಾಸ್ಥ್ರೋಕ್ತವಾಗಿ ಮದುವೆ ಮಾಡಿಕೊಂಡು ಸುಖವಾಗಿ ಜೀವಿಸುತ್ತಿದ್ದ ಎಂದು ಹೇಳಿದರೆ ಮುಗಿಯುವುದಿಲ್ಲ. ಹಾಗೆಯೇ ಈ ಕಾದಂಬರಿಯ ಇನ್ನೊಂದು ಮುಖವಾದ ಕಾಮ್ರೇಡ್ ರಘುರಾಮನು ತನ್ನ ಸೋದರಮಾವ ರುದ್ರನಾಯಕನ ಏಕಮಾತ್ರ ಪುತ್ರಿ ಅನಸೂಯಾಳನ್ನು ಗಾಂಧರ್ವ ವಿವಾಹವಾಗಿ ಸುಖೀ ಜೀವನ ನಡೆಸುತ್ತಿದ್ದ ಎಂದು ಸರಳವಾಗಿ ಹೇಳಿ ಕಾದಂಬರಿಕಾರನಾದ ನಾನು ನನ್ನ ಆತ್ಮಸಾಕ್ಷಿಗಾಗಲೀ, ಓದುಗರಿಗಾಗಲೀ ಮೋಸ ಮಾಡಲಾರೆ. ಈ ಕಾಲದಲ್ಲಿ ಓದುಗರೇನು ಮುಗ್ಧರೆನ್ನುವಂತಿಲ್ಲ. ನೀವು ಲೇಖಕರಿಗಿಂತ ಜಾಣರಿರುತ್ತೀರಿ. ಲೇಖಕರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು ನಿಮಗೆ ಗೊತ್ತಿರುತ್ತದೆ.ಓದುವ ಪ್ರತಿಯೊಂದು ಸಂಗತಿಯನ್ನು ಬದುಕಿನ ಸಹಜ ಘಟನಾವಳಿಗಳೊಂದಿಗೆ ತಾಳೆಹಾಕಿ ನೋಡುತ್ತೀರಿ. ಸಾಹಿತ್ಯದ ಪ್ರತಿಯೊಂದು ಅಂಗೋಪಾಂಗವನ್ನು ಪರಿಪೂರ್ಣ ಸಮಾಜದ ಮಗ್ಗುಲಿರಿಸಿ ತಾಳೆಹಾಕಿ ನೋಡುತ್ತೀರಿ. ಸರಿ ಇದ್ದರೆ “ಪರವಾ ಇಲ್ಲಪಾ” ಅಂತೀರಿ. ಇಲ್ಲದಿದ್ದರೆ ಡೋಂಗಿ ಗುರುತಿಸಿ ಆ ಲೇಖಕನನ್ನು ಭೂತದ ಕೊಚ್ಚೆಗೆಸೆದು ಬಿಡುತ್ತೀರಿ. ಆದ್ದರಿಂದ ಸಮಾಜದ ಎರಡು ಭಿನ್ನ ಧೃವಗಳಂತಿರುವ ಶಾಮ ಮತ್ತು ರಘುರವರ ವಿವಾಹೋತ್ತರ ಬದುಕನ್ನು ಅತ್ಯಂತ ಸಹಜವಾಗಿ; ಪ್ರಾಮಾಣಿಕವಾಗಿ ಚಿತ್ರಿಸುವ ಅಗತ್ಯ ಮತ್ತು ಜವಾಬ್ದಾರಿ ನನಗಿದೆ. ವಿವಾಹವೆಂಬುದು ಬದುಕಿನ ಒಂದು ಅರ್ಥಪೂರ್ಣ ಆರಂಭ. ಮದುವೆಯಾಗಿ ಎಲ್ಲರೂ ಸುಖವಾಗಿದ್ದರು ಎಂದು ಹುಸಿ ಸುಳ್ಳು ಹೇಳುವ ಧೈರ್ಯ ನನಗಿಲ್ಲ. ಹಾಗೆ ಹೇಳಿಬಿಟ್ಟೆನೆಂದರೆ ಸತ್ತು ಅತ್ತ ವೈಕುಂಠದಲ್ಲೂ ಇಲ್ಲದೆ, ಇತ್ತ ನರಕದಲ್ಲೂ ಇಲ್ಲದೆ ಕೊತ್ತಲೂರಿನ ರಂಗ ಕಲಾವಿದೆಯರ ಓಣಿಯ ಪಾತಾಳ ಗಂಗೆಯ ಹುಣಸೇ ಮರದಲ್ಲಿ ಪ್ರೇತವಾಗಿ ಜೋತುಬಿದ್ದು ತೂಗಾಡುತ್ತಿರುವ ಶಾಮಾಶಾಸ್ತ್ರಿ ಎಂಬ ಬ್ರಹ್ಮ ಪಿಶಾಚಿ ಕಥೆಗಾರನಾದ ನನ್ನನ್ನು ಒಂದು ಕೈ ನೋಡಿಕೊಳ್ಳದೆ ಇರಲಾರದು. ಅದು ಅಲ್ಲದೆ ಅವರ ನನ್ನ ಖಾಸಾ ದೋಸ್ತು. ಅವನು ನನಗಿಂತ ಮೂರುವರೆ ತಿಂಗಳು ದೊಡ್ಡವನು. ಅವನೂ ನಾನೂ ಒಂದೇ ಗ್ರವುಂಡಿನಲ್ಲಿ ಆಡಿ ಬೆಳೆದವರು. ಅವನಂತೆ ನಾನೂ ಒಂದೆರಡು ಕಥೆ ಕವಿತೆ ಬರೆದು ಹಲವು ಹುಡುಗಿಯರ ಹೃದಯ ಗೆಲ್ಲಲು ವಿಫಲನಾದವನು. ವಿರಹದುರಿಯ ಶಮನಕ್ಕಾಗಿ ಕಾವ್ಯ ಕನ್ನಿಕೆಯೆಂಬ ತಿಳಿಗೊಳದಲ್ಲಿ ನಿರ್ನಾಮ ಆದವನು. ಅವನ ಬದುಕಿನ ವಿವಿದ ಅವಸ್ಥೆಗಳನ್ನು ಗಮನಿಸುತ್ತ, ಪ್ರತಿಯೊಂದು ಅವಸ್ಥೆಗೆ ಸಾಹಿತ್ಯದ ಗರಂ ಮಸಾಲೆ ಹಚ್ಚಿ ಕಥೆ ಬರೆದರೆ ಹೇಗೆ? ಕವಿತೆ ಬರೆದರೆ ಹೇಗೆ? ಕಾದಂಬರಿ ಬರೆದರೆ ಹೇಗೆ ಎಂಬ ಗೊಂದಲಕ್ಕೀಡಾದವನು. ಕೊನೆಗೆ ಏನೂ ಬರೆಯಲಾಗದೆ ಬದುಕಿನ ನಲವತ್ತು ಆಷಾಢಗಳನ್ನು ಕಳೆದವನು. ಅವನ ಬದುಕಿನ ಪ್ರತಿಯೊಂದು ಪಂಚಾಯ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾನು ನನ್ನ ಪ್ರೀತಿಯ ಹಾಗು ಅಂಜುಬುರುಕ ಗೆಳೆಯ ಶಾಮಾಶಾಸ್ತ್ರಿಯು ಮದುವೆ ಆದ ನಂತರ ಸುಖವಾಗಿದ್ದ ಎಂದು ಹೇಳಿಬಿಟ್ಟಲ್ಲಿ ಅವನು ಖಂಡಿತ ಕ್ಷಮಿಸುವುದಿಲ್ಲ. ಶೂದ್ರನಾಗಿ ಹುಟ್ಟಿರುವ, ಯಾವ ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಳ್ಳದೆ ಕೇವಲ ಚತುಷ್ಪಾದಿಯಂತೆ ಏನೋ ಒಂದು ನಾಲ್ಕು ಸಾಲು ಕನ್ನಡವನ್ನು ಸಲೀಸಾಗಿ ಬರೆಯಬಲ್ಲ ನಿನ್ನಂತೆ ಎಲ್ಲರೂ ಸುಖವಾಗಿದ್ದಾರೇನು? ಎಂದು ಅವನ ಪ್ರೇತವೇ ಒಂದು ದಿನ ನನ್ನ ಮನೆ ಬಾಗಿಲಿಗೆ ಬಂದು ಟಪ್ ಟಪ್ ಎಂದು ಕದ ತಟ್ಟಿಬಿಡಬಹುದು. ಇನ್ನೊಂದು ತಮಗ ಅರಿಕೆ ಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ ಅವನ ಹೆಂಡತಿ ನನ್ನ ಪಿತಾಶ್ರೀಗೆ ಮನೆ ಮಾರಿ ಎಲ್ಲಿಗೋ ಹೋಗಿ ಒಂದು ಅರ್ಥವಾಗದ ಖಾಯಿಲೆಯಿಂದ ನರಳುತ್ತಿದ್ದಳೆಂಬುದು. ಬ್ರಾಹ್ಮಣರು ವಾಸವಾಗಿದ್ದ ಮತ್ತು ಬ್ರಾಹ್ಮಣ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿರುವೀ ಮನೆಯ ವಾಸ್ತುವಿನ ಬಗ್ಗೆ ತಲೆ ಕೆಡೆಸಿಕೊಂಡು ಹತ್ತಾರು ವಾಸ್ತು ಶಾಸ್ತ್ರಿಗಳು ಮನೆಗಳಿಗಡ್ಡಾಡಿ ಈ ಸದರೀ ಮನೇಲಿರೋ ಯಾರೂ ಉದ್ದಾರವಾಗುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು ಒಂದು ಪುಲ್ಲಿಂಗ ಜಾತಿಯ ಸಂತಾನ ಹೀನ ನಮ್ಮಜ್ಜಿ ಎಲ್ಲ ಪ್ರವರ ವಿವರಿಸಿ “ತಗೋಬ್ಯಾಡಾಂದ್ರೆ ತಗೋಬ್ಯಾಡ”ವೆಂದು ಪಟ್ಟು ಹಿಡಿದು ಕೂತಿದ್ದುಂಟು. ಶೃಂಗೇರಿಗೆ ಹೋಗಿ ಕೇಶ ತೆಗೆಸಿಕೊಂಡು, ನೂಲಿನ ಸೀರೆ ಉಟ್ಟು ಅಂತರ್ಧಾನಗೊಂಡ ಪತಿ ಶಾಮನ ಫೋಟೋದೆದರು ಕೂತು ‘ನನ್ ಬಾಯಿಗೆ ಮಣ್ಣು ಹಾಕಿ ಹೋದೆಯಲ್ಲೋ, ನಿನಗೆ ಕೈಹಿಡಿಯೋಕೆ ನಾನು ಯಾವ ಜನುಮದಲ್ಲಿ ಯಾವ ಪಾಪ ಮಾಡಿದ್ದೆನೋ ಎಂದು ಬಾಯಿಬಾಯಿ ಬಡಿದುಕೊಳ್ಳುವಾಗ್ಗೆ ಭೂತ ಬಿಡಿಸಲೆಂದು ನಮ್ಮಜ್ಜಿ ಹೋಗಿ ನಿಂತಿದ್ದಳು. ಅದೇ ಹೊತ್ತಿಗೆ ವ್ಯಾಸ ಪೀಠದಲ್ಲಿದ್ದ ಕಿಲುಬು ಹೊತ್ತಿಗೆಯಲ್ಲಿ ಕಳೆದುಕೊಂಡಿದ್ದ ಕಣ್ಣುಗಳನ್ನು ಭೂತಗನ್ನಡಿಗಳ ಸಹಾಯದಿಂದ ಹುಡುಕಾಡುತ್ತಿದ್ದ ಜರ್ಝರಿತ ದೇಹದ ಅಲುಮೇಲಮ್ಮ “ಏನೇ ಬಾಯಿಗೆ ಬಂದಂತೆ ಮಾತಾಡ್ತಿ. ರಾಮ ರಾಮ ಸತ್ತಿರೋ ತನ್ನ ಗಂಡನ್ನ ಬಾಯಿಗೆ ಬಂದಂಗ ಬಯ್ತಿದಾಳಲ್ಲ ದೇವರೇ!” ಎಂದು ದಿಗ್ಗನೆ ಎದ್ದು ಊರುಗೋಲಿನ ಆಸರೆಯಲ್ಲಿ ಪಡಸಾಲೆಗೆ ಬಂದು, ಅಟವಾಳಿಯ ಮುಖ್ಯ ಕಂಭಕ್ಕಾತು ನಿಂತಿದ್ದ ಕೆದರು ತಲೆಯ ನಮ್ಮಜ್ಜಿ ಕಡೆ ಕಣ್ಣುಹಾಯಿಸದೇ (ಅವಿದ್ದರೆ ತಾನೆ) ಜ್ಞಾಪಕ ಬಲದಿಂದ ಸೀದ ಖಾಲಿ ಹಣೆ ಬಡಿದುಕೊಳ್ಳಿತ್ತಿರ್ದ ಸೊಸೆ ಬಳಿಗೆ ಸಾರ್ದುದು ಹೆಂಗಿತ್ತಪ್ಪ ಅಂದರೆ ಹಗಲುಗುರುಡಿ ಗಾಂಧಾರಿ ಕುರುಕ್ಷೇತ್ರದ ರಣರಂಗದಲ್ಲಿ ‘ಸತ್ತ ಮಗಂದಿರ್ ಸತ್ತರ್ ನೀನೆಮಗುಳ್ಳೊಡೆ’ಎಂದು ಕೂಗುತ್ತ ಬಂದಂತಿತ್ತು. ಆಕೆ ಒಂದೊಂದು ಹೆಜ್ಜೆ ಇಡುತ್ತಿದ್ದುದು ಹೇಗಿತ್ತಪ್ಪ ಅಂದರೆ ಜಲಮಹಾನುಭಾವ ನಾಭಿಯೊಳಗುಳಿದ ಕಮಲ ಒದ್ದಾಡುವಂತಿತ್ತು. ತನ್ನ ವೃದ್ದಾಪ್ಯದ ಬದುಕಿನ ದುರ್ಬಲ ಊರುಗೋಲಿನಂತಳಿದುಳಿದಿರುವ ಕೇಶವಿಹೀನೆ ವಿಧವೆ ಸೊಸೆಯನ್ನು ಸ್ವೀಕರಿಸಲಾಗದೆ; ತಿರಸ್ಕರಿಸಲಾಗದೆ, ಗಂಟಲುಗ್ರಾಣದಲ್ಲಿ ಪೇರಿಸಿಟ್ಟ ಹಲವು ಮಾತಿನ ಲಡ್ಡುಗೆಗಳಿಗೆ ದ್ವನಿರೂಪ ಕೊಡಲಾಗದೆ, ಹಾಗೆ ನಡೆಯುತ್ತ ಬಂದು ಕೋಡುಬಳೆಯ ಡಬ್ಬವನ್ನೇ ತನ್ನ ಸೊಸೆ ಎಂದು ಭಾವಿಸಿ “ವೈಕುಂಠವಾಸಿಯಾಗಿರೋ ನನ್ನ ಮಗನನ್ನು ಬೈದು ನರಕಕ್ಕೆ ಹೋಗಬೇಡ ವರಲಕ್ಶ್ಮಿ” ಎಂದು ಪರಿಪರಿಯಾಗಿ ವಿನಂತಿಸಿಕೊಂಡದ್ದುಂಟು. ಸಿಂಬಳ ಕೊರೆದೆಸೆದ ಸವಂಡನಾಗಲಿ ಶಬ್ದವೇದಿ ವಿದ್ಯಾಪಾರಂಗತಳಂತೆ ಅತ್ತೆರಡು ಹೆಜ್ಜೆ ಇರಿಸಿ, ಮಾಡಿಕೊಂಡ ಪತ್ನಿಯಾದ ನೀನು ಸರಿಯಾಗಿದ್ದಲ್ಲಿ ಅವನ್ಯಾಕೆ ಸಾಯ್ತಿದ್ದ’ ಎಂಬೊಂದು ಮಾತು ಆಡುವುದರ ಮೂಲಕ ಪರಮ ಸಾಧ್ವಿಯಾದ ವರಲಕ್ಶ್ಮಿಯ ಹೃದಯವೆಂಬ ದೇಗುಲದಲ್ಲಿ ಬಿರುಗಾಳಿ ಎಬ್ಬಿಸಿದ್ದುಂಟು. ಜಗಳವಾಡುವಾಗೆಲ್ಲ ತುರುಬು ಕಟ್ಟಿಕೊಂಡಿದ್ದರೆ (ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯಮೇಲೆ ಇಳಿದಂತೆ ಇರುಳಾಮಾಲೆ) ಒಂದೇಟಿಗೆ ಬಿಚ್ಚಿ ಮುಖದ ಹಿಂದೆ ಪ್ರಭಾವಳಿಯಂತೆ ಇಳಿ ಬಿಟ್ಟುಕೊಂಡು ಭಲೈ ಸಾರಥಿ ನಾನು ದಾರೆಂದರೆ ಎಂದು ಗಡಗಡ ಗುಡುಗುತ್ತಿದ್ದಳು. ಕಪ್ಪುಗುರುಳು ಇಳಿಬಿಟ್ಟಿದ್ದರೆ ಅದರೊಳಗಿದು ಸಿಗಿಸಿ ಇದರೊಳಗದು ಸಿಗಿಸಿ ‘ಬರ್ರಲೆ ಒಂದು ಕೈ ನೋಡ್ಕೋತೀನಿ’ ಎಂದು ಎದುರಾಳಿಗೆ ಸವಾಲ್ ಹಾಕುತ್ತಿದ್ದಳು. ಕಟ್ಟಲೆಂದೋ ಬಿಚ್ಚಲೆಂದೋ ಕೈಗಳನ್ನು ಹಿಂದಕ್ಕೆ ಹಾಕಿದಳು. ಆದರೆ ಅವು ಅಲ್ಲಿದ್ದರೆ ತಾನೆ! ತಾನೆ ಮುಂಡೆಯಾಗಿರುವುದು, ಶೃಂಗೇರಿಯ ಹದಿಹರೆಯದ ಚಿಗುರುಮೀಸೆಯ ಹಜಾಮನ ಅಮೃತಹಸ್ತದಿಂದ ಮಂಡೆ ತೆಗೆದಿರುವುದು ಆ ಕ್ಷಣ ನೆನಪಾಯಿತು. ರೋಮಾಂಚನ, ಕೋಪ ಇವೆರಡೂ ಒಟ್ಟೊಟ್ಟಿಗೆ ಬಂದವು. ದಿಗ್ಗನೆ ಎದ್ದು, “ಯಾರ್ಯಾರ್ನೋ ಬಿಟ್ಟು ಯಾರ ಯಾರ್ನೋ ಕರಕೊಳ್ತಾನಲ್ಲ ಆ ದೇವ್ರು” ಅಂತ ಗೊಣಗಿದಳು. “ನಾನ್ಯಾಕೆ ನರಕಕ್ಕೆ ಹೋಗ್ಲಿ ಅತ್ತೆಮ್ಮ … ಸಾಯ್ಲಿ ಅಂತ ನಾನೇನಾದ್ರು ನನ್ನ ಪತಿ ದೇವ್ರಿಗೆ ವಿಷಕೊಟ್ಟನೇನು? ನನ್ನಂಥ ಪರಮ ಪತಿವ್ರತೆಯಾದ ಹೆಂಡತೀನ ಇಟ್ಟುಕೊಂಡು ಮಾಡಬಾರದ್ದನ್ನ ಮಾಡಿ ಪ್ರತಿ ದಿನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ರಲ್ಲ … ಆ ನಿನ್ ಮಗ್ನೀಗೆ ಬುದ್ಧಿಹೇಳಬೇಕಾಗಿತ್ತು; ಆಗ ನಿಮ್ಮ ನಾಲಿಗೆ ಬಿದ್ದು ಹೋಗಿತ್ತೇನು?” ಎಂದು ಅಶ್ರುಧಾರೆಯಿಂದ ವಕ್ಷಸ್ಥಳಕ್ಕೆ ಅಭಿಷೇಕ ಮಾಡಿದಳು. ಇದಕ್ಕೆ ಏನು ಉತ್ತರ ಕೊಡಬೇಕೆಂದು ವೃದ್ಧೆಗೆ ಆ ಕ್ಷಣ ಹೊಳೆಯಲಿಲ್ಲ. ಆದರೆ ಆಕಾರವಿಲ್ಲದ ಇಟ್ಟಿಗೆಗಳಿಂದಲೇ ಸುಂದರ ಗೋಡೆ ಕಟ್ಟುವ ನುರಿತ ಬೇಲ್ದಾರನಂತೆ ಮುಖರಹಿತ ಮಾತುಗಳನ್ನೇ ಕುಪ್ಪೆ ಮಾಡಿಕೊಂಡು “ನೀನ್ಯಾವ ಪತಿವ್ರತೆಯೇ … ಒಂದುದಿನವಾದರೂ ಕೈ ಹಿಡಿದ ಗಂಡನ ಯೋಗಕ್ಷೇಮ ವಿಚಾರಿಸಿದ್ದುಂಟಾ…. ಸತ್ತೆಯಾ ಬದುಕಿದಿಯಾ ಎಂದು ಕೇಳಿದ್ದುಂಟಾ … ಇರೋವಷ್ಟು ಕಾಲ ಅವನನ್ನು ಉರಿಸಿಕೊಂಡು ತಿಂದೆಯಲ್ಲೇ …” ಎಂದು ದೃಷ್ಟಾಂತಗಳ ಸರಮಾಲೆಯನ್ನೇ ಪೋಣಿಸಿದಳು. ಅತ್ತೆಯಾಡಿದ ಮಾತುಗಳನ್ನು ಕೇಳಿ ಆ ನಲವತ್ತರಾಸುಪಾಸಿನ ಆಕೆಯ ಹೃದಯದಲ್ಲೆದ್ದ ಚಂಡ ಮಾರುತ ದಾವಾನಲದ ರೂಪ ಪಡೆಯಿತು. “ಅಯ್ಯಯ್ಯೊ … ಈ ಮುದುಕಿ ಬಾಯಿಗೆ ಬಂದಂಗೆ ಮಾತಾಡ್ತಿದೆಯಲ್ಲ್ರಪ್ಪೋ! ನಾನ್ಯಾವ ಕರ್ಮ ಮಾಡಿದ್ದೆನೋ ಇಂಥ ಅತ್ತೆ ಪಡೆಯೋಕೆ! ನಾನ್ಯಾವ ಪಾಪ ಮಾಡಿದ್ದೆನೋ ಈ ಮನೆ ತುಂಬಿಕೊಳ್ಳೋಕೆ! ಈ ಹೊಟ್ಟೇಲಿ ಅವೊಂದೆರಡು ಹುಟ್ಟಿರದಿದ್ದಲ್ಲಿ ಅವತ್ತೇ ತುಂಗಾನದೀಲಿ ಬಿದ್ದು ಆತ್ಮಹತ್ಯೆ ಮಾಡ್ಕೊಳ್ತಿದ್ದೆ … ಇನ್ನೂ ಏನು ಅನುಭವಿಸೋದಿದೆಯೋ ಈ ಅತ್ತೆ ಎಂಬ ರಾಕ್ಷಸಿ ಕೈಯಲ್ಲಿ .. ಓಹ್! ತಿರುಪತಿ ವೆಂಕಟರಮಣನೇ ಈ ಕೂಡಲೆ ನನಗಾದ್ರು ಸಾವು ಕೊಡು, ಇಲ್ಲವಾದಲ್ಲಿ ಈ ಮುದುಕಿನಾದ್ರು ನಿನ್ನ ಪಾದಾರವಿಂದಕ್ಕೆ ಸೇರಿಸ್ಕೋ … ನನ್ನಂಥ ಪರಮ ಭಕ್ತೆಯ ಬದುಕಿನೊಂದಿಗೆ ಚೆಲ್ಲಾಟವಾಡೋದ್ನ ಇನ್ನಾದ್ರೂ ಸಾಕು ಮಾಡೋ ಜಗದ್ರಕ್ಷಕನೇ! ಈಕೆಯಂತೆ ನಾನೇನು ಯೌವನದಲ್ಲಿ ಗಂಡನನ್ನು ಕಳೆದುಕೊಂಡು ಚೆಲ್ಲಾಟವಾಡ್ತಿಲ್ವಲ್ಲ …” ಎಂಬಿವೇ ಮೊದಲಾದ ಮಾತುಗಳು ಮಾವಿನಗುಂಡೆ ಜಲಪಾತದಂತೆ ದುಮ್ಮಿಕ್ಕಿದವು. ಇದನ್ನೆಲ್ಲ ಕೇಳಿಸಿಕೊಂಡು ಮುದುಕಿ ರಾಮಾ …ರಾಮಾ ಅಂತ ಶ್ರವಣೇಂದ್ರಿಯಗಳ ಮೇಲೆ ಕರಕಮಲಗಳನ್ನು ಇರಿಸಿಕೊಂಡಿತು. ಈ ದುಷ್ಟೆಯಾಡಿದ ಮಾತುಗಳನ್ನು ಓಣಿಯಲ್ಲಿ ಯಾರಾದ್ರು ಕೇಳಿಸಿಕೊಂಡರೇನೋ! ಓಯ್ …ಅಂತೂ ನನ್ನ ಕಣ್ಣುಗಳನ್ನು ನುಂಗಿ ನೀರು ಕುಡಿದೆಯಾ ತುಲಸೀ ರಾಮಾಯಣವೇ … ಆಟವಾಳಿಗೆಯಲ್ಲಿ ಯಾರೋ ಅಜ್ಞಾತವ್ಯಕ್ತಿ ನಿಂತಿರುವಂತಿದೆ, ಗುರುತಿಸಲಕ್ಕಾಗುತ್ತಿಲ್ಲವಲ್ಲಾ … ನಾರಾಯಣ … ಹೀಗೆ ಯೋಚಿಸುತ್ತ ಮಂಗಳ ಗೌರಿಯಂತಿದ್ದ ವೃದ್ಧೆ ಚಾಮುಂಡಿಯಂತಾಗಿಬಿಟ್ಟಿತು. ಕೂಡಲೆ ಸೊಸೆಯ ದುರ್ಬಲ ನೂಲಿನಡುಗೆಗೆ ಕೈ ಹಾಕಿ “ಏನು ಮಾತಾಡ್ದೇಯೇ ರಾಜಗೋಪಾಲಾಚಾರಿ ಮೊಮ್ಮಗಳೇ … ನನ್ನ ಏನಂತ ತಿಳ್ಕೊಂಡೀಯಾ? ನಿನ್ನಂತೆ ನಾನೇನಾದ್ರು ಮೊಲೆ ತೊರಿಸ್ಕೊಳ್ತಾ ಅಡ್ಡಾದ್ದುಂಟಾ … ಅದೇನು ಕಂಡು ನನ್ ಪಾತಿವ್ರತ್ಯಕ್ಕೆ ಕಳಂಕ ತರುವಂಥ ಮಾತಾಡ್ದಿ… ಹೇಳಿ ಮುಂದಕ್ಕೆ ಹೋಗು” ಎಂದು ಹಿಡಿದುಕೊಂಡುಬಿಟ್ಟಳು. +ಪರಮಗ್ನೌ ಪುದೀಪ್ತೇತು ಪ್ರಾಣಾನಾಂ ಪರಿವರ್ಜನಂ +ನ ಚಾರಿ ಜನ ಸಂಸರ್ಗೇ ಮುಹೂರ್ತಮಪಿ ಸೇವನಂ … ಎಂದು ಮುಂತಾಗಿ ತಾತಶ್ರೀ ಪದೇ ಪದೇ ಹೇಳುತ್ತಿರ್ದುದು ಸ್ಮರಣೆಗೆ ತಂದುಕೊಂಡ ವರಲಕ್ಷ್ಮಿಯ ಅಂಗೋಪಾಂಗಗಳೆಲ್ಲ ಕಿಡಿಕಿಡಿ ಕಾರತೊಡಗಿದವು. ಗರಿವಳಿದ ಪಾವಿನಂತೆ ಬುಸುಗುಟ್ಟತೊಡಗಿದಳು. ಅಲುಮೇಲಮ್ಮನೆಂಬ ಝಳದ ಝಾಡಿಗೆ ಹೆದರಿ ವರಲಕ್ಷ್ಮಿ ಎಂಬ ಸೂರ್ಯನಳುಕುವನೇನು? +“ಏನ್ರಮ್ಮಾ, ಅತ್ತೆ ಅಂತ ಬೆಲೆ ಕೊಟ್ಟರೆ ನಾಲಿಗೆ ಉದ್ದ ಬಿಡುವಿ ಏನು? ನನ್ನ ಗಂಡನ ಹೊರತಾಗಿ ಬೇರೊಬ್ಬ ಪರಪುರುಷನಿಗೆ ನಾ ನನ್ನ ಮೊಲೆ ತೋರಿಸಿದ್ದೇ ನಿಜವಾದಲ್ಲಿ ಏಗಲೇ ನನ್ನ ತಲೆ ಸಿಡಿದು ಸಾವಿರ ಚೂರಾಗಲೀ … ಅದಾರಿಗೆ ನನ್ನ ಮೊಲೆಗಳನ್ನು ತೋರಿಸಿದೆ … ಹೇಳ್ರಿ, ಹೇಳಿದ ಹೊರತು ಬಿಡೋದಿಲ್ಲ.” +ದೇಹಕ್ಕೆ ತೊಲೆಯೊಡನೆ ಸಂಧಾನವೇನು? ಗಕ್ಕನೆ ತಾನು ವೃದ್ಧೆಯ ವಲ್ಕಲವನ್ನು ಗಟ್ಟಿಯಗಿ ಹಿಡಿದುಕೊಂಡಳು. +ನಮ್ಮಜ್ಜಿ ಹ್ಹಾ ಹ್ಹೂ ಅಂತ ಅನ್ನುವಷ್ಟರಲ್ಲಿ ಆ ಸಿಕ್ಸ್ಟೀ ಪ್ಲಸ್ಸೂ ಮತ್ತು ಫಾರ್ಟೀ ಪ್ಲಸ್ಸೂ ಪರಸ್ಪರ ಹಿಡಿದುಕೊಂಡು ಕೆಳಗಡೆ ಉರುಳಿದರು. +ಕುರುಕುಲಾಕ್ಷ್ಮಾಪಾಲ ಚೂಡಾಮಣಿಯೂ. ಫಣಿರಾಜ ಕೇತನೂ ಪರಸ್ಪರ ಮಲ್ಲಯುದ್ಧಕ್ಕೆ ತೊಡಕಿರುವಂತೆ ಆ ಕ್ಷಣ ಗೋಚರಿಸಿತು. +ತಾನಿನ್ನು ಮಧ್ಯ ಪ್ರವೇಶಿಸಿ ಅತ್ತೆ ಸೊಸೆಯರ ಜಗಳ ಬಿಡಿಸದಿದ್ದಲ್ಲಿ ಆ ವೃದ್ಧ ಅಲುಮೇಲಮ್ಮನವರ ಜರ್ಝರಿತ ದೇಹದಿಂದ ಪ್ರಾಣಪಕ್ಷಿ ಹಾರಿ ಹೋಗುವುದರಲ್ಲಿ ಸಂಶಯವಿಲ್ಲವೆಂದು ನಮ್ಮಜ್ಜಿ ಆ ಕ್ಷಣ ಯೋಚಿಸಿ ಕೂಡಲೆ ಕಚ್ಚೆ ಬಿಗಿಯಿತು. ತನಗೂ ಒಂದು ಗಂಡು ಮಗುವನ್ನು ಆ ದಯಾಮಯನಾದ ಭಗವಂತನು ಅಂದು ದಯಪಾಲಿಸಿದ್ದಲ್ಲಿ ತಾನು ಈ ಹೊತ್ತಿಗೆ ಎಷ್ಟು ಸಾರಿ ಜಗಳವಾಡುತ್ತಿದ್ದೆನೋ? ತನಗೇನಾದರೂ ಸೊಸೆಯಾದವಳು ಹೀಗೆ ಮಾತಾಡಿದ್ದಲ್ಲಿ ಅವಳ ನಾಲಿಗೆಯನ್ನು ಕಿತ್ತು ಎಲೆಅಡಿಕೆ ಚೀಲದಲ್ಲಿ ಇಟ್ಟುಕೊಂಡು ಬಿಡದೆ ಇರುತ್ತಿರಲಿಲ್ಲವು. ಸಮುದ್ರಕ್ಕೆ ಪಡಿ ಸಮುದ್ರವು, ಸಿಡಿಲ ಪೊಟ್ಟಣದಂಥ ವರಲಕ್ಷ್ಮಿಯ ಧೃತರಾಷ್ಟ್ರಾಲಿಂಗನದಿಂದ ಅಶ್ವತ್ಥಾಲ ಮರದಂಥ ಮುದುಕಿಯನ್ನು ರಕ್ಷಿಸದಿದ್ದಲ್ಲಿ ಆ ಮನೆ ದೇವರಾದ ಹಳೇಕೋಟೆ ವೀರಭದ್ರ ದೇವರು ತನ್ನನ್ನು ಕ್ಷಮಿಸಲಾರನು ಎಂದು ಮುಂತಾಗಿ ಯೋಚಿಸುತ್ತಾ ಜಗದೇಕಮಲ್ಲಿಯಾದ ನಮ್ಮಜ್ಜಿಯು ಕೂಡಲೆ ಸುಂಟರಗಾಳಿಯಂತೆ ಸುಳಿದು ಅಲುಮೇಲಜ್ಜಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು …. +ಆಗ ಆ ಮುದುಕಿಯು “ಏಯ್ ಯಾರೆ ಅದು? … ಓಹ್ ನೀನಾ …. ನಿಂಗವ್ವ, ಶೂದ್ರ ಹೆಂಗಸಾದ ನೀನು ಬ್ರಾಹ್ಮಣ ಹೆಂಗಸಾದ ನನ್ನನ್ನು ಮುಟ್ಟುವುದೆಂದರೇನು? ಮುಟ್ಟಿದ್ದೂ ಅಲ್ಲದೆ ಬಿಗಿಯಾಗಿ ಅಪ್ಪಿ ನನ್ನ ಮಡಿಯುಡಿಯನ್ನೆಲ್ಲ ಹಾಳುಮಾಡಿ ಬಿಟ್ಟೆಲ್ಲೇ …” ಎಂದು ಆಕಾಶಕ್ಕೂ ಭೂಮಿಗೂ ಏಕಾಗಿ ಅಬ್ಬರಿಸಲು …. +ನಮ್ಮಜ್ಜಿಗೆ ಸಿಟ್ಟು ಬಂದು “ಯಾವ್ದೇ ಮಡಿ? ಏನೋ ಸೊಸೀ ಕೈಲಿ ಸಾಯ್ತಾಳಂತ ಬುಡುಸಿಕೊಳ್ಳಾಕ್ ಬಂದ್ರೆ ಮಡಿ ಹಾಳಾಯಂತೀಯಲ್ಲೇ” ಎಂದು ಕೊಸರಿ ದೂರ ತಳ್ಳಲು +“ಇದು ನಮ್ ಅತ್ತೆ ಸೊಸೆ ಜಗಳ …. ಇವತ್ತು ಹೊಡೆದಾಡ್ತೀವಿ …. ನಾಳೆ ಒಂದಾಗ್ತೀವಿ … ಅದನ್ಯಾರೆ ನೀನು ಕೇಳೊಕೆ?” ಎಂದು ಅಲುಮೇಲಮ್ಮ ಗುಡುಗಲು …. +ನಮ್ಮಜ್ಜಿಗೆ ದಿಕ್ಕೇ ತೊಚದಂತಾಗಿ … “ಯ್ಯೋನ್ರೇ ವಡದಾಡಿ ಸತ್ತೋಗ್ತಾರಂತ ಬಂದ್ರೆ ನನ್ಬಾಯೀಗೆ ಮಣ್ಣಾಕ್ತೀರಾ…. ಮಾಡ್ಕೆಂಡ ಗಂಡ್ರೂನು ನುಂಗಿ ನೀರ್ಕುಡುದ ಮುಂಡೇರು ನೀವು …”ಎಂದು ತನ್ನ ಅಗ್ಗಿಣೀ ಗೋಳದಂಥ ತನ್ನ ಬಾಯಿ ಪ್ರದರ್ಶಿಸಿತು. ಊರಿನ ಎಲ್ಲ ತರಲೆಗಳನ್ನು ನೋವೇ ಮೊದಲಾದ ತಾಪತ್ರಯಗಳನ್ನು ತನ್ನ ಮೈ ಮೆಲೆಳೆದುಕೊಂಡು ವೀರಾವೇಶ ಪ್ರಕಟಿಸುವುದು ನಮ್ಮಜ್ಜಿ ವ್ಯಕ್ತಿತ್ವದ ಪ್ರಧಾನ ಅಂಗ. ಮಧ್ಯೆ ಪ್ರವೇಶಿಸುವುದರ ಮೂಲಕ ಸಣ್ಣ ಜಗಳವನ್ನು ದೊಡ್ಡದು ಮಾಡುವುದರಲ್ಲಿ; ದೊಡ್ಡ ಜಗಳವನ್ನು ಸಣ್ಣದು ಮಾಡುವುದರಲ್ಲಿ ನಮ್ಮಜ್ಜಿ ವಿಶ್ವವಿಖ್ಯಾತಳು. ಸಮಾಜದ ರಿಪೇರಿ ಮಾಡಲು ಹೋಗಿ ತನಗೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಮಾಜವನ್ನು ಮತ್ತಷ್ಟು ಹದಗೆಡೆಸಿ ತನೊಬ್ಬಳಿದ್ದಾಗ ಮರುಗುತ್ತಿದ್ದುಂಟು. ತನ್ನ ಬಾಯಿಯಿಂದ ಬಿಡುತ್ತಿದ್ದ ಪ್ರತಿಯೊಂದು ವಾಗ್ ಬಾಣವನ್ನು ಸಮರ್ಥಿಸಲು ಏನೆಲ್ಲ ರಂಪಾಟ ಮಾಡುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ತನಗರಿವಿಲ್ಲದಂತೆ ಸಿಕ್ಕಿಹಾಕಿಕೊಂಡಳು. +“ಏನೀ ಮುದುಕೀ …. ನಾವು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಹೆಂಗಸರೂ ಅಂತ ಎಂಥೆಂಥ ಮಾತಾಡ್ತಿರುವೆಯಲ್ಲ… ನಮ್ಮ ಗಂಡನನ್ನು ನುಂಗಿ ನೀರುಕುಡಿದವರೂಂತ ಅಪವಾದ ಹೊರಿಸುತ್ತಿರುವಿಯಲ್ಲ … ನೀನೂ ನಮ್ಮ ಹಾಗೆ ಯೌವನದಲ್ಲಿ ಗಂಡನನ್ನು ಕಳೆದುಕೊಂಡವಳಲ್ಲವೇನು?” ಸೊಸೆ ಹೇಗೋ ಪತ್ತೆ ಮಾಡಿ ಹೇಳಿದ್ದ ಸಂಗತಿಯನ್ನು ನೆನಪು ಮಾಡಿಕೊಂಡು ಏರು ದನಿಯಲ್ಲಿ ಅಲುಮೇಲಮ್ಮ ನುಡಿದುಬಿಟ್ಟಿತು.ವರಲಕ್ಷ್ಮಿ ತನ್ನತ್ತೆಯವರ ಸಮಯ ಪ್ರಜ್ಞೆಯ ಬಗ್ಗೆ ಮುಖದ ತುಂಬ ಮೆಚ್ಚಿಗೆ ಸೂಚಿಸಿದಳು. +ಆಕೆಯ ಮಾತಿನಿಂದ ನಮ್ಮಜ್ಜಿ ಒಂದು ಕ್ಷಣ ವಿಚಲಿತಗೊಂಡಿತು. ತನ್ನ ಬದುಕಿನ ಪುರಾತನ ಸಂಗತಿಗಳನು ಒಳಗೊಳಗೇ ಸಂಗ್ರಹಿಸಿ ಬಿಟ್ಟಿರುವರಲ್ಲ! ದೀಪ ನುಂಗೋ ಅತ್ತೆಗೆ ದೀವಟಿಗೆ ನುಂಗೋ ಸೊಸೆ ತಕ್ಕುದಾಗಿ ಗಂಟುಬಿದ್ದಿರುವಳಲ್ಲ. +“ನಿಮ್ಮ ಮಾತಿಗೆ ನನ್ ಶಾಟಾನೂ ಜುಮ್ಮೆನ್ನೊದಿಲ್ಲೇ … ದೊಡ್ಡ ಮನುಶ್ಶೋಳಾಗೋದ್ಕೂ ಮೊದ್ಲು ನನ್ನ ಗಂಡ ಗೊಟಕ್ಕೆಂದಿದ್ದೂ ನಿಜ . ನಾನು ಗಂಡಸಿನಂಗ ಎದೆಸೆಟೆಸಿ ಬದುಕಿದ್ದು ಖರೇವು… ಹರೇದಾಗ ಮಿಂಡ್ರೂನ ಮಾಡಿದ್ದೂ ಖರೇವು… ಇಲ್ಲದಿದ್ರೆಲ್ಲಿ ಈಟೊಂದು ಆಸ್ತಿ ಸಂಪಾಸ್ಲಿಕ್ಕಾಗ್ತಿತ್ತು … ನನ್ತಂಗೀ ಮಕ್ಳೂನೇ ನನ್ ಮೆಕ್ಳೂಂತ ತಿಳಕೊಂಡು ಪಾನಲೆ (ಪಾಲನೆ) ಪೋಣಣೆ (ಪೋಷಣೆ) ಮಾಡಲೂಕಾಗ್ತಿತ್ತೂ … ನಿಮ್ಮಂಗೆ ನಾನೂ ಮಂಡೆ ಭೋಳಿಸ್ಕೊಂಡು ಮುಂಡೆಯಾಗಿ ಮೂಲಿ ಕೂಕೊಂಡಿದ್ರೆ ಈಟೆಲ್ಲ ಮಾಡಲಾಕಾಗುತ್ತಿತ್ತೇನು! … ಅಲಲಲಾ … ಯೋಳಾಕ ಬಂದುಬಿಟ್ರು ಹಳೇ ಪುಣಾರಾನ (ಪುರಾಣಾನ) … ಯಿನ್ನೊಂದು ಮಾತು ಯ್ಯೋಳ್ತೀನಿ ನೆಪ್ಪಿಟ್ಕಳ್ರಭೇ … ಭೋಸೂಢೇರಾ … ನೂರೊಂದು ರ್‍ವಾಗ ಬೊಡುಕೊಂಡು ಮೊಣ್ಣೆತ್ತಿನ ಅಮಾಸಿ ದಿನ ಗೊಟಕ್ಕಂದ್ನಲ್ಲಾ ಆ ನಿಮ್ಮಾವ ಪರಮೇಸೂರ ಶಾತಿರಿ … ಆ ಶಾತಿರೀನೂ ನನ್ನತ್ರ ಮಲಕ್ಕೊಂಡು ವ್ಯೋನೋ ಕಿಸಿಲಾರ್ದೆ ಹೋದವನೇ …” ನಜಭಜ ಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲಾ ಎಂದವರ್ ಎಂದು ಮುಂತಾಗಿ ಆರಂಭಿಸುತ್ತಲೆ ಆ ಮಾದ್ಗೂಕ್ಯ ಗೋತ್ರದ ಅತ್ತೆ ಸೊಸೆಯರೆಂಬ ಸಾಹಸ ಗರ್ವಾಲಂಕೃತರೀರ್ವರು ಒಂದು ಕ್ಷಣ ಮೌನವೆಂಬ ವೈಶಂಪಾಯನ ಸರೋವರಂ ಪೊಕ್ಕು ಮರುಕ್ಷಣ ರಸೆಯಿಂ ಕಾಲಾಗ್ನಿರುದ್ರಂ ಪೊರಮೊಡೆವಂತೆ ಹೊರಬಂದು ಕೋಪಾರುಕ್ತನೇತ್ರರಾಗಿ “ಅಯ್ಯೋ … ಅಯ್ಯೋ… ಅಯ್ಯಯ್ಯೋ … ವೈಕುಂಠ ವಾಸಿಗಳಾಗಿರೋ ನಮ್ಮ ವಂಶದ ಹಿರಿಯರ ಮೇಲೆ ಗುರುತರ ಆಪಾದನೆ ಹೊರಿಸುತ್ತಿರುವುದಲ್ಲಾ ಈ ಮುದುಕಿ … ಕಲಿಕಾಲದಲ್ಲಿ ಪಾಪಿಗಾಳಿಗೆ ದೀರ್ಘಾಯುಷ್ಯವನ್ನು ದಯಪಾಲಿಸಿರುವ ಓ ವೆಂಕಟರಮಣನೇ … ನಿನ್ನ ದಡ್ಡತನವನ್ನು ಎಷ್ಟೆಂದು ವರ್ಣಿಸುವುದು … ಇರಲಿ … ಬಯ್ದವರ ಹೆಸರ ಮಗನಿಡಬೇಕೆಂದು ದಾಸವರೇಣ್ಯರೇ ಹೇಳಿದ್ದಾರೆ … ಈ ಶೂದ್ರ ಮುದುಕಿ ಎದುರು ತತ್ವ ಜ್ಞಾನದ ಕಿನ್ನರಿ ಭಾರಿಸುವುದರಿಂದೇನು ಉಪಯೋಗ?… ” ಎಂದು ಅಲುಮೇಲಮ್ಮನಿಗೆ ಕೆಮ್ಮು ದಮ್ಮು ಒಂದೇಟಿಗೆ ಒತ್ತರಿಸಿ ಬಂದಿತು. ಸೊಸೆ ವರಲಕ್ಶ್ಮಿ ಮಾತಿನ ಸಾರಥ್ಯವನ್ನು ತಾನು ವಹಿಸಿಕೊಂಡಳು. “ಅತ್ತೆಮ್ಮಾ ಇಂಥ ಅನಾಗರೀಕರ ಎದುರು ಮಾತಾಡಿ ನಾಲಿಗೆ ಮೈಲಿಗೆ ಮಾಡಿಕೊಳ್ಳುವುದೇಕೆ?” ಎಂದು ತನ್ನ ವಜ್ರಾಯುಧದಂಥ ಬಾಚಿ ಹಲ್ಲುಗಳನ್ನು ಝಳಪಿಸಿದಳು. “ಅಮ್ಮಾ ತಾಯಿ … ಏನೆಲ್ಲ ಮಾತಾಡಿ ಪುಣ್ಯ ಕಟ್ಟಿಕೊಂಡಿದ್ದು ಸಾಕಮ್ಮಾ … ನಿನ್ನ ಮಾತು ಮಾಡಿರುವ ಮೈಲಿಗೆ ತೊಳೆಯಲು ಸಾಕ್ಷಾತ್ ಶೃಂಗೇರಿ ಜಗದ್ಗುರುಗಳೇ ಬರಬೇಕು … ದಯವಿಟ್ಟು ಇನ್ನು ಹೊರಡಮ್ಮಾ ಹೊರಡು” ಎಂದು ಅಂಜಲೀಬದ್ಧಳಾಗಿ ಕೇಳಿಕೊಂಡಳು. +“ಅಲಲಲಾ ತಾಟಗಿತ್ತೀ …. ನಿನ್ಮಡಿ ಆಚಾರಕ್ಕೆ ಬೆಂಕಿ ಬೀಳ್ಲಿ … ಆ ಸತ್ತ ನಿನ್ಗಂಡ ಶಾಮಣ್ಣ ನನ್ ಮೊಮ್ಮಗ ಜತಿಗಾರಾಂತ ಈ ಮಾತ್ನ ಯ್ಯೋಳ್ತಿದ್ದೀನಿ… ಗ್ವಂಡನ್ನ ಕಳಕೊಂಡಿದ್ದಾಯ್ತು … ಸೋಬಾಗ್ಯಾನೆಲ್ಲ ಕಳಕೊಂಡಿದ್ದಾಯ್ತು …ಮಾ ಮರುವಾದಸ್ತರಂಗ ಅದೆಂಗ ಬೊದುಕ್ತೀಯೋ ಬೊದುಕಲೇ ಲವುಡೀ … ನಾನೂ ನೋಡ್ತೀನಿ … ಮಂಡೆ ಬೋಳಿಸ್ಕೊಂಡ ಮಾತ್ರಕ್ಕೆ ನಿನ್ನ ಪತಿವ್ರತೀ ಅಂತಾರ್‌ಯೋನೇ … ವಳಗಿಂದು ಬೋಳಿಸ್ಕೋಬೇಕು ವಳಗಿಂದು … ವರ್ಷೋಪ್ಪತ್ನಲ್ಲಿ ನೀನು ಹಾದಿಬುಟ್ಟು ನಡೀಲಿಲ್ಲಾಂದ್ರೆ ಮೂಗಿಗೆ ಕವಡೆ ಕಟ್ಕೋತೀನಿ… ” ಎಂದು ನಮ್ಮಜ್ಜಿ ಮಾಡಿದ ಶಪಥಕ್ಕೆ ಕುಲಗಿರಿಗಳ್ ಅಲ್ಲಾಡಿದವು. +“ವಿಧವೆ ವರಲಕ್ಶ್ಮಿ ಹಾದಿ ತಪ್ಪದಂತೆ ನೋಡು ಜಗದ್ರಕ್ಷಕನೇ … ನಿಂಗಮ್ಮಜ್ಜಿ ಮೂಗಿಗೆ ಕವಡೆ ಕಟ್ಟಿಕೊಳ್ಳದಂತೆ ನೋಡಿಕೊಂಡು ಇರುವೆ ಎಂಬತ್ನಾಲ್ಕುಕೋಟಿ ಜೀವರಾಶಿಯ ಪ್ರಾಣ ಕಾಪಾಡು ಭಗವಂತನೇ” ಎಂದು ಕದನ ಕುತೋಹಲಿಗಳಾದ ದೇವಾನ್ ದೇವತೆಗಳು ತ್ರಿಪುರಾಂತಕನನ್ನು ಬೇಡಿಕೊಳ್ಳುತ್ತಿರುವಾಗ …. +ನಮ್ಮಜ್ಜಿಯು ಒಂದೊಂದು ಹೆಜ್ಜೆಗೆ ಭೂಮಿಯನ್ನು ಗಡ್‌ಗಡಾ ನಡಗಿಸುತ್ತ ಅಲ್ಲಿಂದ ವಾಪಸಾದಳು. ಎಂಬಲ್ಲಿಗೆ ಈ ಪ್ರಕರಣ ಈ ಪುರಾಣ ಮುಕ್ತಾಯವಾಗಲಿಲ್ಲವೆಂದು ಹೇಳುವುದಕ್ಕೆ ವೀಕ್ಷಕ ವಿವರಣಾಕಾರನಾದ ನನ್ನ ಮನಸ್ಸಿಗೆ ನೋವಾಗುತ್ತಿದೆ. ಸಹೃದಯ ವಾಚಕರಾದ ನಿಮ್ಮ ಮನಸ್ಸಿಗೂ ನೋವನ್ನುಂಟು ಮಾಡುವುದಕ್ಕೆ ಶತಕೋಟಿ ಕ್ಷಮೆ ಯಾಚಿಸುತ್ತಿರುವೆನು. +ಮುಂದೇನಾಯ್ತು ಅಂತ ನೀವು ಕೇಳ್ತಿದೀರಂತ ತಿಳಕೊಂಡು ನಾನು ಹೇಳ್ತಿದೀನಿ. ದಯವಿಟ್ಟು ಆಲಿಸುವಂಥವರಾಗಿ. +ತುರ್ತು ಪರಿಸ್ಥಿತಿ ಎಂಬುದು ಹಂಗ ಬಂದು ಹಿಂಗ ಹೋದ ಮೇಲೆ ದೇಶದ ಜೀವನ ಶೈಲಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳಾಗಿರುವುದನ್ನು ನಿಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಸಾಕು ನಾಯಿಗಳ ಬೆಲೆಯೂ ಜಾಸ್ತಿಯಾಗಿರುವಂತೆ ನಾಯಿಗೆ ತಿನ್ನಿಸುವ ಬಿಸ್ಕತ್ತುಗಳನ್ನು ವಿದೇಶೀ ವಿನಿಮಯದ ನೆಪದಲ್ಲಿ ಅಮೇರಿಕಾದಿಂದ ತರಿಸಿಕೊಳ್ಳುವುದು ನಿಮಗೆ ಗೊತ್ತಿರಲು ಸಾಕು. ಫ್ಯೂಡಲಿಸಮ್ಮೂ; ಕ್ಯಾಪಿಟಲಿಸಮ್ಮೂ ಇಂಥವೆಲ್ಲ ಸಮಾಜವಾದದ ನೆಪದಲ್ಲಿ ಚೂಚು ಚೂರಾಗಿವೆ; ಪ್ರತಿಯೊಬ್ಬರ ಮನಸ್ಸಿನಲ್ಲಿ ವಾಸಮಾಡಲಾರಂಭಿಸಿವೆ. ಹೊರಗಡೆ ಮುಗ್ಧನಂತೆ ಕಾಣುವ ಮನುಷ್ಯ ಒಳಗಡೆ ಕ್ರೌರ್ಯ ರೂಢಿಸಿಕೊಂಡಿದ್ದಾನೆ. ಮುಗುಳ್ನಗೆಯನ್ನು ಅಸ್ತ್ರದಂತೆ ಬಳಸಿಕೊಂಡಿದ್ದಾನೆ. ನಯವಿನಯದಿಂದ ನಿರಾತಂಕವಾಗಿ ಬೇಟೆಯಾಡುತ್ತಿದ್ದಾನೆ. ಪ್ರತಿಯೊಂದು ಹೆಜ್ಜೆಯನ್ನು ಸುಪಿರಿಯಾರಿಟಿ ಕಾಂಪ್ಲೆಕ್ಸಿನಿಂದ ಇಡುತ್ತಿದ್ದಾನೆ. ಪ್ರತಿಕ್ಷಣ ಕ್ರಯ, ವಿಕ್ರಯದ ಬಗ್ಗೆ ಆಲೋಚಿಸುತ್ತಿದ್ದಾನೆ. ಇಂಥದ್ದೊಂದು ಆಲೋಚನಾಕ್ರಮದ ಒಂದು ಚಿಕ್ಕ ಘಟಕ ನಮ್ಮಪ್ಪ. +ನಮ್ಮಪ್ಪ ಸ್ವಾತಂತ್ರ ಪೂರ್ವದಲ್ಲಿ ಹಗರಿ ಸಾಲಿನಲ್ಲಿ ತಾನು ಮಾಡಿದ ತುಡುಗಿನ ಕಾರಣಕ್ಕೆ ಊರಿಂದೂರಿಗೆ ಅಲೆದೂ ಅಲೆದು ನಿಂಗಮ್ಮಜ್ಜಿಯ ತಂಗಿಯ ದ್ವಿತೀಯ ಪುತ್ರಿಯನ್ನು ಮದುವೆಯಾಗಿ ಒಂದುಕಡೆ ನೆಲೆ ನಿಂತವನು. ಪರಿಸರವನ್ನು ಪಂಚೇಂದ್ರಿಯಗಳ ತುಡುಗಿನಿಂದ ಮೇದು ದಕ್ಕಿಸಿಕೊಂಡವನು. ಭಯದಿಂದ ಹುಸಿ ವಾತಾವರಣವನ್ನು ನಿರ್ಮಿಸಿಕೊಂಡು ಅದರಲ್ಲಿ ಎಲ್ಲರನ್ನೂ ಕೂಡಿಟ್ಟವನು. ತನಗೆ ಹೆದರುತ್ತಿದ್ದವರೇ ತನ್ನನ್ನು ಹೆದರಿಸಲು ಪ್ರಯತ್ನಿಸುತ್ತಾರೆ ಎಂದು ಅರಿವಾದಾಗ ತನ್ನ ಕುಟುಂಬದ ಸಹಸದಸ್ಯರನ್ನು ತನಗಿಷ್ಟ ಬಂದಂತೆ ಕುಣಿಸತೊಡಗಿದಂಥವನು. ಆದರೆ ಇಷ್ಟೆಲ್ಲ ಇರುವ ನಮ್ಮಪ್ಪನಿಗೆ ಅನಾದಿ ಕಾಲದಿಂದ ತಿರುಗಿ ಬಿದ್ದ ಗಂಡುಗಲಿ ಎಂದರೆ ನಮ್ಮ ನಿಂಗಮ್ಮಜ್ಜಿ ಎಂದು ಹೇಳಬೇಕಾಗಿಲ್ಲ. ತಂಗಿಯ ಮಗಳನ್ನು ಕೊಟ್ಟು ಮನ್ತನಕ್ಕೆ ಇಟ್ಟುಕೊಂಡ ಕ್ಷಣದಿಂದ ಅದಕ್ಕು ಆತಗೂ ಎಣ್ಣೆಶೀಗೆಕಾಯಿ ಸಂಭಂಧ. ತಲಾ ಒಂದೊಂದು ತೊಡೆ ತಟ್ಟುವವರೇ; ತಲಾ ಒಂದೊಂದು ವಿಶೇಷಾಲಂಕೃತ ಮಾತುಗಳನ್ನು ಎರಚಾಡುತ್ತಿದ್ದವರೇ , ಪ್ರತೀ ಸೋಲನ್ನು ಗೆಲುವೆಂದು ಭಾವಿಸಿದಂಥವರೇ. +“ಏನೋ ಬ್ರಾಂಬ್ರು … ಗಂಡನ್ನ ಕಳೆದುಕೊಂಡಿರೋ ವಿಧವೆಯರು. ಅವರ ಬದುಕು ನಿಸೂರಾಗುವುದಾದರೆ ತಾನಾ ಮನೆಯನ್ನು ಕೊಂಡುಕೊಳ್ಳುವುದರಲ್ಲಿತಪ್ಪೇನು” ಎಂದೋ?; ಅದ್ಭುತ ಘಟನಾವಳಿಗಳ ಸರಮಾಲೆ ಹೊಂದಿರುವ ಮನೆಗೆ ತಾನು ವಾರಸುದಾರನಾದಲ್ಲಿ ಸಮಾಜದಲ್ಲಿ ತನ್ನ ವರ್ಚಸ್ಸು ಹೆಚ್ಚುತ್ತದೆ ಎಂದೋ; ಜೇಬಿನಲ್ಲಿ ಘಟ್ಟಿ ಐದು ರುಪಾಯಿಇಲ್ಲದಿದ್ದರೂ ಆ ಭಯಂಕರ ಆತ್ಮ ವಿಶ್ವಾಸಿ ಆ ಮನೆಯನ್ನು ಖರೀದಿಸಲು ಕಂಕಣಬದ್ಧನಾಗಿದ್ದ. ಈ ಬಗ್ಗೆ ನಾನೂನೂವೆ ಒಳಗೊಳಗೆ ಖುಷಿಪಟ್ಟಂಥವನೇ ಆಗಿದ್ದೆ. ಎಷ್ಟಿದ್ದರೂ ಅದು ನನ್ನ ಖಾಸಾ ಗೆಳೆಯನ ಮನೆ ಅಲ್ಲವೆ? +“ಲೋ ತಮ್ಮಾ ಹಾಲಪ್ಪೋ … ಈಗೇನಾತಂಥೀಯಾ? ಆಗಬಾರದ್ದೆಲ್ಲ ಆಗಿ ಹೋತೂ; ಅನ್ನಬಾರದ್ದನ್ನೆಲ್ಲ ಅಂದುಬಿಟ್ರು ಕಣಪ್ಪಾ… ಅವು ಹೆಂಗಸ್ರಲ್ವೇ ಅಲ್ಲ. ಲವುಡೇರು ಗಂಡ್ರಿಲ್ಲ ಈಟುರಿತಾರ… ಇದ್ದಿದ್ದ್ರೆ ಯೇಟುರಿತಿದ್ದ್ರೋ … ನಾನೊಂದ ಮಾತಾಡ್ತೀನಿ … ತಗದುಹಾಕ್ಬಾರ್ದು. ನಿಂಗೆ ತಾಯಂದ್ರು ನಾನೇ … ಅತ್ತೆ ಅಂದ್ರೂ ನಾನೇ … ಆ ಬ್ರಾಂಬ್ರು ಮನಿ ತಂಟೆಗೆ ಹೋಗಬ್ಯಾಡ …” ಎಂದು ನಿಂಗಮ್ಮಜ್ಜಿ ಒಂದೇ ಉಸಿರಿಗೆ ಹೇಳೋದನ್ನೆಲ್ಲ ಹೇಳಿ ಕೋಳೋದನ್ನು ಕೇಳಲಿಕ್ಕಾಗದೆ … ನತದೃಷ್ಟ ಬ್ರಾಹ್ಮಣ ವಿಧವೆಯರನ್ನು ಬಯ್ಯುತ್ತ ಬಯ್ಯುತ್ತ ಒಳಗಡೆ ಬಿರುಗಾಳಿಯಂತೆ ಹೋಗಿ ಬರೀ ಮಾತಿನಿಂದ ಅವರೆಂಥೋರು? ಇವರೆಂಥೋರು? ಎಂದು ಅಷ್ಟಾದಶ ಪುರಾಣ ಒರೆಯತೊಡಗಿತು. +ಮೊದಮೊದಲು ‘ಟೋಪಿ’ ಸೇದುತ್ತಿದ್ದ ನಮ್ಮಪ್ಪ ಇಂದಿರಾಗಾಂಧಿ ಪದಚ್ಯುತಳಾದ ಮೇಲೆ ಎರಡ್ರುಪಾಐ ಕೇಜಿ ಸಕ್ರೀ ಎಂಬ ಸಂತೊಷದ ಭರದಲ್ಲಿ ‘ಆನೆ’ ಸೇದಲಾರಂಭಿಸಿದ. ಇಂದಿರಾ ಗಾಂಧಿಯ ಕಗ್ಗೊಲೆಯ ನೋವನ್ನು ತಾಳಲಾರದೆ ‘ಚಾರ್ಮಿನಾರ್’ಗೆ ಬಂದ. ರಸಾಯನಿಕ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರತೊಡಗಿದ ಮೇಲೆ ‘ಬರಕ್ಲೀ’ಗೆ ಬಂದ. ರಾಜೀವ್ ಗಾಂಧಿಯನ್ನು ಒಬ್ಬ ಯಕಃಶ್ಚಿತ್ ಮಹಿಳೆ ಕೊಲೆಮಾಡುವುದೆಂದರೇನು ಎಂದು ಯೋಚಿಸುತ್ತ ಯೋಚಿಸುತ್ತಾ ಗಣೇಶನ ಮೊರೆ ಹೊಕ್ಕ. ಇಂಥಪ್ಪ ಛಪ್ಪನ್ನಾರು ಅಸಂತುಷ್ಟ ನೋವುಗಳಿಂದಾಗಿ ಆತನ ಸಣ್ಣ ಕರುಳಲ್ಲಿ ವೃಣ ತೊಂದರೆ ಕೊಡಗಿತು. ಏಕಕಾಲಕ್ಕೆ ಅಲೊಪತಿ ಮತ್ತು ಹೋಮಿಯೋಪತಿ ಬಳಸತೊಡಗಿ ಮತ್ತಷ್ಟು ತೊಂದರೆಗೀಡಾಗಿ ತನ್ನ ವಂಶದ ಭೀಕರ ಹಿರಿಯರನ್ನು ಅವರ ಘನ ಕಾರ್ಯಗಳನ್ನು ಕಂಡ ಕಂಡವರಿಗೆಲ್ಲ ಅಪೂರ್ವ ಲವಲವಿಕೆಯಿಂದಲೂ; ವಿಚಿತ್ರಾವೇಶದಿಂದಲೂ ವಿವರಿಸತೊಡಗಿದ. ಆ ಸಂದರ್ಭದಲ್ಲಿಯೇ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಮಾಯವಾಗಿ, ಆಗಷ್ಟೆ ಎಳ್ಳುನೀರು ಬಿಡಿಸಿಕೊಂಡಿದ್ದ ಬಸಪ್ಪನೆಂಬ ನಮ್ಮ ಸಂಬಂಧಿಕನೋರ್ವ ಸಾಧು ವೇಶದಲ್ಲಿ ಪ್ರತ್ಯಕ್ಷನಾಗಿ ‘ಮಾವಾ, ಈ ದೇಹ ನಶ್ವರ, ಈ ಬದುಕು ನಶ್ವರ ಇದರಿಂದ ಮುಕ್ತಿ ಪಡೆಯಬೇಕಾದರೆ ಕಾವಿ ಉಡು … ಗಾಂಜಾ ಸೇದು’ ಎಂದು ಪುಸಲಾಯಿಸತೊಡಗಿದ್ದು. ಎಂಥೆಂಥೋರ ಯಾವ ಬಣ್ಣದ ಮಾತುಗಳನ್ನು ಎಂದೂ ಕಿವಿ ಮೇಲೆ ಹಾಕಿಕೊಳ್ಳದಂಥ ನಮ್ಮಪ ಆತನ ಥಳುಕಿಲ್ಲದ ಮಾತುಗಳಿಗೆ ಮರುಳಾಗಿಬಿಡುವುದೆ? ಬಸಪ್ಪನನ್ನು ಹಿಂದೊಮ್ಮೆ ನಮ್ಮಪ್ಪ ಹಿಗ್ಗಾಮುಗ್ಗಾ ಒದ್ದೋಡಿಸಿದ್ದುಂಟು. ಕೆಲವು ದಿನಗಳಲ್ಲಿ ನಮ್ಮಪ್ಪನೆಂಬ ಕುರುಕುಲ ವಿಲಯೋತ್ಪಾತಕೇತು ಕಾವಿ ತೊಡುವುದರ ಬಗ್ಗೆ; ಗಾಂಜಾ ಸೇದುವ ಬಗ್ಗೆ ಮುನ್ಸೂಚನೆ ಕೊಡತೊಡಗಿದ.ಈ ಸಂದರ್ಭದಲ್ಲಿಯೇ ನಿಂಗಮ್ಮಜ್ಜಿಯ ಮಾತು ಕೇಳಿಸಿಕೊಂಡಿದ್ದು. ಮೊದಲೇ ಅವರಿಬ್ಬರ ಜಾಯಮಾನ ಪರಸ್ಪರ ವಿರುದ್ಧ. ಆತ ವತಿ ಅಂದರೆ ಆಕೆ ಪ್ರೇತಿ ಅನ್ನುವಂಥವಳು. “ನೋಡಬಾರದ್ಯಾಕೆ … ನಾನು ನಮ್ಮಪ್ಪನ ಮಗನಾಗಿದ್ದಲ್ಲಿ ಆ ಮನೆಯನ್ನು ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ” ಎಂದು ಗಣೇಶನ ಹೊಗೆಯನ್ನು ತನ್ನ ಹೆಂಡತಿ ದೊಡ್ಡಮ್ಮನ ಕಾಲರುಳಿನಂಥ ಮುಖಕ್ಕೆ ಬಿಟ್ಟು ಮೊದಲೆ ಅಸಹಾಯ ಶೂರ ಪರಾಕ್ರಮಿಯೂ; ಬಾಯೊಳಗೆ ತಾಂಬೂಲದುಂಡೆಯೊಡಲಲ್ಲಿ ತರಾವರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಂಥವಳೂ ಆದ ನಿಂಗಮ್ಮಜ್ಜಿ ಆ ಕ್ಷಣ ರುದ್ರಾವತಾರ ತಾಳಿ “ಎಲವೋ ದುರುಳ … ಯಿಂದಿಗೆ ನನ್ನ ನಿನ್ನ ರುಣ ತೀರ್ತು …ನಿನ್ನ ದಾರಿ ನಿನ್ಗೆ … ನನ್ನ ದಾರಿ ನನ್ಗೆ …” ಎಂದು ಹೇಷಾರವ ಮಾಡಿದಳು, ಅಷ್ಟದಿಕ್‌ಪಾಲಕರನ್ನು ದುರುಗುಟ್ಟಿ ನೋಡಿ. +“ಯ್ಯೋನಲೋ ಸಾಕಿ ಸಲವಿದ ನನ್ನ ಮಾತ್ನೇ ಧಿಕ್ಕರಿಸ್ತೀಯಾ … ನಿನ್ ಚಲುವಿಕೆಗೆ ಮಳ್ಳಾಗಿ ಮೊಗಳ್ನಕೊಟ್ಟಿದ್ಕೆ ಸರ್‍ಯಾಗಿಯೇ ಮಾತಾಡ್ತೀ … ನೀನು ಯಾವೂರ ಕಾಗೆ ಎಬ್ಬಿಸಾಕೆ ಹ್ವಾದ್ರೆ ನಂಗೇನು? ನಂಗೆ ನನ್ಮೊಗ್ಳೂ …ಮೊಮ್ಮಕ್ಳೂ ಮುಕ್ಯಾ …” ಎಂದು ಆಕೆ ತನ್ನ ಡೊಂಕು ಕಾಲಿಗೆ ಅಡರಿಕೊಂಡಿದ್ದ ರಾಂಪುರದ ಹದಿನೆಂಟು ಮೊಳದ ಸೀರೆಯನ್ನು ಸ್ವಲ್ಪ ಮೇಲೆತ್ತಿ ಕಟ್ಟಿಕೊಂಡಳು. +ಅದೇ ಹೊತ್ತಿಗೆ ಅಡುಗೆ ಮನೆಯಿಂದ ನಮ್ಮಪ್ಪನ ಧರುಮ ಪತನಿಯೂ; ಮುತ್ತಾನ ಸೂಳೆ ಗಿರಿಜೆಯೂ ಎಲೆ ಅಡಿಕೆ ಹಾಕಿಕೊಳ್ಳುವುದನ್ನು ಬಿಟ್ಟು ಎದ್ದು ಬಂದು ಬಿಟ್ಟರು, ಎರಡು ನಮೂನೆಯ ಸುಂಟರಗಾಳಿಗಳು ಒಂದಾದಂತೆ. +“ಯ್ಯೋನೆ … ಬಾಯಿಗೆ ಬೊಂದಂತೆ ಮಾತಾಡ್ತಿ! … ನಾವೇನಾರ ಆಗಲಿ … ಯಣ್ಣು ಮೂಳಾದ ನಿಂಗ್ಯಾಕೆ ಬೇಕೆ? … ನನ್ನ ಗಂಡನ್ನ ಕಾಗೆ ಎಬ್ಬಿಸಾಕೆ ಹೋತಾನೆಂತೀಯ … ನಿನ್ನ ನಾಲ್ಗೆ ಸೇದಿಹೋಗ! ಎಂದು ನಮ್ಮವ್ವನೂ … +ಅದ್ಯಾವ ಜನುಮದಾಗ ಅದೇನಾಗಿ ವುಟ್ಟಿದ್ದೆಭೇ ಅತ್ತೆ … ಗಂಡಸರಂದ್ರೆ ಭಯ ಇಲ್ಲ ಭೀತಿ ಇಲ್ಲ …” ಎಂದು ನಮ್ಮಪ್ಪನ ಪ್ರಿಯತಮೆಯೂ … +ಆಗ ನಮ್ಮಜ್ಜಿ ಚಕ್ರವ್ಯೂಹದಲ್ಲಿ ಸಿಕ್ಕಿ ನತದೃಷ್ಟ ಅಭಿಮನ್ಯುವಿನಂತಾದಳು. +ಮುಧೋಳದ ಬೇಟೆ ನಾಯಿಗಳಂತೆ ನಿಂತಿರುವ ಅವರ ಪೈಕಿ ಮೊದಲು ಯಾರನ್ನು ಎದುರಿಸುವುದು? ಸಿಂಹ ವಿಷ್ಟರದ ಮೇಲೆ ಕದನ ಕುತೋಹಲಿಯಾಗಿರುವ ಅಳಿಯನಿಗಾದರೂ ಬುದ್ಧಿಬೇಡವೆ?… ತಾನು ಬೆಳಗಾಗೆ ಎದ್ದು ಯಾರ ಮುಖ ನೋಡಿದನೆಂಬುವುದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದೆ … “ನನ್ನ ಅತ್ತೆ ಅಂತೀಯೇನೆ ಬಿಕನಾಸಿ ಮುಂಡೆ … ಇಟಗಂಡ ಸೂಳೆಯಾಗಿದ್ದೇ ಯೀಟು ಮಾತಾಡ್ತೀ … ಯಿನ್ನು ಯೀ ಭಾಡಖಾವು ಕಟ್ಟಿಕೊಂಡಿದ್ರೆ ಯಿನ್ನೇಟು ಮಾತಾಡ್ತಿದ್ದೆಯೇ” ಎಂದು ಮಾತಾಡದಿದ್ದಲ್ಲಿ ನಮ್ಮಪ್ಪನಿಗೆ ಸಿಟ್ಟು ಬರುತ್ತಿರಲಿಲ್ಲ. +ಹಾಯಟೆಕ್ ಧೂಮಕೇತುವಿನಂತೆ ಎದ್ದು ಭದ್ಧ ಭ್ರುಕುಟಿಯಾಗಿ ಮುಖವನ್ನು ಗುಗ್ಗುಳ ಮಾಡಿಕೊಂಡನು. “ಯೇನೆ ಮುದಿ ಕತ್ತೆಯೇ … ಹೆಂಡ್ತಿಗಿಂತ ಹೆಚ್ಚಾಗಿಟ್ಟುಕೊಂಡಿರೋಳ್ನ ಸೂಳೆ ಅಂತಿದ್ದೀಯಲ್ಲ! ನಿನ್ನ ಮ್ಯ್ಯಾಗ ಎಷ್ಟಿದ್ದೀತು ಕೊಬ್ಬು? … ಮೊದ್ಲು ನಿನ ಮೈಯೊಳಗಿನ ಎಲುಬು ಮುರುದೇ ನಾನು ಮನೆ ತಂಟೆಗೋಗೋದು” ಎಂದು ತೋಳೇರಿಸಿದನು. +ಅದೆಲ್ಲಿ ತಮ್ಮ ವಂಶದ ಮೋಟುಗೂಟದಂಥ ನಿಂಗವ್ವ ನಿರ್ನಾಮವಾಗಿ ಬಿಡುವಳೊ ಎಂದೂಹಿಸಿ ಆಕೆಯ ತಂಗಿ; ತಂಗಿಯ ಇನ್ನೊಬ್ಬ ಮಗಳು; ಮತ್ತಿನ್ಯಾರ್ಯಾರೋ ಎಲ್ಲಿಂದಲೋ ಬಂದು ಕೋಟೆಯಂತೆ ರಕ್ಷಣೆ ಒದಗಿಸಿದರು. ಹವುದೋ … ಅಲ್ಲವೋ ಎಂಬಂತೆ ಮಾತಾಡುತ್ತ ಆಕೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋದರು. +ಅಂದು ನಡೆದ ಆ ಜಗಳ ಬಹು ದೊಡ್ಡ ಘಟನೆಗೆ ಸುಶ್ರಾವ್ಯವಾಗಿ ನಾಂದಿ ಹಾಡಿತು. ಇತಿಹಾಸ ಪ್ರಸಿದ್ಧ ದ್ವಿದಳ ಧಾನ್ಯವೊಂದು ಅಂದು ವಿಭಜನೆಗೊಂಡದ್ದು ಮತ್ತೆ ಕೂಡಲೇ ಇಲ್ಲ. +ನಿಂಗಮ್ಮಜ್ಜಿ ತನ್ನ ಸಂಗಡಿಗರೊಂದಿಗೆ ಬೇರೊಂದು ಮನೆ ಮಾಡಿ, ಬೇರೊಂದು ಒಲೆ ಹೂಡಿಬಿಟ್ಟಿತು. ಅದು ಹೂಡಿದ ಒಲೆಯಲ್ಲಿ ಅರಷಡ್ವರ್ಗಗಳು ಧಗಧಗಿಸತೊಡಗಿದವು. ಪ್ರತಿದಿನ ಕಾಲು ಕೆದರಿ ಜಗಳ ತೆಗೆಯ ತೊಡಗಿತು. +ಅಂಥ ಜಗಳದಲ್ಲಿ ಉಲ್ಲೇಖಾರ್ಹವಾದುದೆಂದರೆ ಶಾಸ್ತ್ರಿಗಳ ಮನೆ ಬಗ್ಗೆ ಅದು ಹಬ್ಬಿಸಿದ ರೋಚಕ ಕಥೆಗಳು … ಕರ್ಮ ಕಾಂಡಗಳು … ಒಂದೇ ಎರಡೇ … ಅದರ ಜೊತೆಗೆ ಅಕ್ಕಪಕ್ಕದ ಮನೆಯವರನ್ನೂ ಪೈಪೋಟಿಗಿಳಿಸಿ ಪುಣ್ಯ ಕಟ್ಟಿಕೊಂಡಳು. ಆ ಮನೆಯೊಳಗೆಲ್ಲೋ ಗುಪ್ತ ನಿಧಿ ಎಂದು ಹೇಗೋ ಹಬ್ಬಿದ ಸುದ್ದಿಯನ್ನು ದಡ್ಡತನಕ್ಕೆ ಹೆಸರಾದ ಅಕ್ಕಪಕ್ಕದ ಮನೆಯವರು ನಂಬಿಬಿಟ್ಟರು. ಹಾಲಪ್ಪ ಕೊಡೋ ರಖಮ್ಮಿಗಿಂತ ಎರಡರಷ್ಜ್ಟು, ಮೂರರಷ್ಟು ಕೊಡುವುದಾಗಿ ಹೇಳುತ್ತ ಶಾಸ್ತ್ರಿಗಳ ಸ್ಥಿರ, ಚರ ಸಂಪತ್ತಿನ ಉತ್ತರಾಧಿಕಾರಿಗಳ ಬಗೆಗೆ ದಟ್ಟಂಡಿ ದಾರಂಡಿ ಅಲೆಯತೊಡಗಿದರು. +ಹಾಗೆ ಬಂದವರನ್ನು ನೋಡಿದಾಗಲೆಲ್ಲ ಆ ಸಾಧ್ವಿಮಣಿ ಸೊಸೆ ‘ಅಸಂತುಷ್ಟಾ ದ್ವಿಜಾ ನಷ್ಟಾಃ’ ಎಂದು ಆರ್ಯೋಕ್ತಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಳು. ಮನೆಯ ಸುತ್ತ ವಾಸಿಸುವ ಅಷ್ಟದಿಗ್ಗಜಗಳೆಲ್ಲ ತಿಳುವಳಿಕೆ ಇಲ್ಲದವರೆಂದು ವರಲಕ್ಷ್ಮಿಗೆ ಗೊತ್ತು. ಪರಪುರುಷರನ್ನು ಮನೆ ಒಳಗಡೆ ಬಿಟ್ಟುಕೋಬೇಡ ಎಂದು ಅತ್ತೆ ಮಂಚದ ಮೇಲಿಂದಲೇ ಕೂಗುತ್ತಿದ್ದರೂ, ಸೊಸೆ ಬಂದಂಥವರನ್ನು ಅಟವಾಳಿಗೆ ವರೆಗೆ ಬಿಟ್ಟುಕೊಳ್ಳುತ್ತಿದ್ದಳು., ‘ಅಜ್ಞಃ ಸುಖಮಾರಾಧ್ಯ’ ಎಂಬ ಪ್ರಾಚೀನರ ಮಾತನ್ನು ನೆನಪು ಮಾಡಿಕೊಳ್ಳುತ್ತಲೇ ಕೋಸುಂಬರಿ ಪಾನಕ ನೀಡಿ ಸತ್ಕರಿಸುತ್ತಿದ್ದಳು. ‘ವೃಕ್ಷ ಮೂಲಾನಿ ದೂರತಃ ಪರಿವರ್ಜಯೇತ್’ ಎಂಬ ಮಾತಿನಂತೆ ದೂರ ನಿಲ್ಲುತ್ತಿದ್ದಳು. ಸಾರಿಗೆ ವಗ್ಗರಣೆ ಹಾಕಿದಂತೆ; ವಗ್ಗರಣೆಯಲ್ಲಿ ಇಂಗು ಹಾಕಿದಂತೆ ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದಳು. ‘ನೋಡೋಣ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಳು. ‘ದೀರ್ಘಾಯುಷ್ಮಾನ್‌ಭವ’ ಎಂದು ಆಶೀರ್ವಾದ ಮಾಡಿ ಸಾಗಹಾಕುತ್ತಿದ್ದಳು. ಮನೆ ಕ್ರಯಕ್ಕೆ ಕೊಂಡು ಆಕೆ ಉಡಿ ತುಂಬ ಹಣ ತುಂಬಲು ಬಂದವರು ಆಕೆ ಭಾಷೆಯನ್ನಾಗಲೀ ಮಾತಿನ ಅರ್ಥವನ್ನಾಗಲೀ ಅರ್ಥಮಾಡಿಕೊಳ್ಳುವಲ್ಲಿ ಸೋತು ಒಂಥರಾ ಮುಖ ಮಾಡಿಕೊಂಡು ಹೋಗುತ್ತಿದ್ದರು. +ಅವರು ಅತ್ತ ಹೋಗುತ್ತಲೆ ಇತ್ತ ಅತ್ತೆ ಸೊಸೆಯರ ನಡುವೆ ಜಟಾಪಟಿ; ಗಂಡಾಗುಂಡಿಯೂ ಯಥಾಲಾಪದೊಂದಿಗೆ ಶುರುವಾಗುತ್ತಿತ್ತು. ಅತ್ತೆ ಅಲುಮೇಲಮ್ಮ ವ್ಯಾಸಪೀಟಕ್ಕೆ ಕೈಕೊಟ್ಟು ಅದು ಮುರಿಯುವಂತೆ ಮೇಲೆದ್ದು ಗರ್ವಾಲಂಕೃತಳಾಗಿ ಬರುತ್ತಿರುವಾಗಲೇ ಸೊಸೆ ವರಲಕ್ಷ್ಮಿ ‘ರಾಮರಾಮಾ, ಯಾವ ಮುಖ ಹೊತ್ತು ಈಶೂದ್ರರ ನಡುವೆ ಬದುಕುವುದೋ ಕೃಷ್ಣ ಕೃಷ್ನಾ’ ಎಂದು ಜಗಳದ ಮಂಜ್ರಾ ಆರಂಭಿಸುತ್ತಿದ್ದಳು. +“ಮನೆ ಮಾರೋದು ಬೇಡ … ಮಾಮನವರು ಶ್ರದ್ಧಾಭಕ್ತಿಯಿಂದ ವಿಷ್ಣುಪುರಾಣ ಮನನ ಮಾಡಿಕೊಂಡ ಪವಿತ್ರ ಜಾಗ ಇದು. ಇದನ್ನು ಮಾರಿದವರಿಗೆ ಒಳ್ಳೇದಾಗಲ್ಲ … ಮೊಮ್ಮಕ್ಕಳಾದರೂ ಪಾಪಲೇಶವಿಲ್ಲದೆ ಬದುಕೋದು ಬೇಡವೇ” ಅಲುಮೇಲಮ್ಮ ತನ್ನೆಡಗೈಯನ್ನು ಟೊಂಕಕ್ಕೆ ದತ್ತುಕೊಟ್ಟು ಬಲಗೈಯನ್ನು ಪ್ರತಿಭಾ ಪ್ರಹ್ಲಾದ್ರವರ ದೇಹದಂತೆ ತಿರುಗಿಸುತ್ತ ಹೇಳಲು … +“ಯಾವತ್ತು ಈ ಶೂದ್ರಕೇರಿಲಿರೋ ಮನೇಲಿ ವಸಿಸಲಿಕ್ಕೆ ಹತ್ತಿದ್ರೋ ಅವತ್ತೆ ಫಲ್ಗುಣೀ ನದೀಲಿ ಪಿಂಡ ಪ್ರದಾನ ಮಾಡ್ದಂತಾಯ್ತು ಕಣ್ರತ್ತೆ. ಈ ರಂಡೇಮುಖಾನ ಹೊತ್ತು ಈ ತಾಮಸಾಹಾರಿಗಳ ನಡುವೆ ಹೆಂಗತ್ತೆ ಬದುಕೋದು? ನೀವಂತೂ ಇಂದೋ ನಾಳ್ಯೋ ವೈಕುಂಟಕ್ಕೆ ಪಯಣ ಮಾಡಲಿರೋರು … ಬಾಳಕಾಲ ಬದುಕಿರೋ ನನ್ನ ಗತಿ ಏನು! … ಈ ತಾಮಸಿಗಳು ಹರಿದು ಮುಕ್ಕದೆ ಬಿಟ್ಟಾರೇನು! ಇದ್ಕೊಂದು ಮನಿ ಮಾರದಿದ್ರೆ ಮಕ್ಕಳ ಕೈಯಲ್ಲಿ ಗೋಪಾಳ ಬುಟ್ಟಿ ಕೊಡೋದೆ” ವರಲಕ್ಷ್ಮಮ್ಮ ಮೈಕೇಲ್ ಜಾಕ್ಸನ್‌ನಂತೆ ಇಡೀ ಮೈ ಒನೆಯುತ್ತ ನಾಲಿಗೆಗೆ ಆದಿಶಕ್ತಿ ಸ್ವರೂಪ ಕೊಟ್ಟು ಉತ್ತರ ಕೊಡಲು … +ಇದರಿಂದ ವೃದ್ಧೆ ಕ್ರುದ್ಧೆಯಾಗಿ “ಅದೇನೆ ಹಂಗಾಡ್ತಿದೀಯಾ? … ನನ್ ಮಗ ಶಾಮೂ ನಿನಗಾಗಲೀ ನಿನ್ನ ಮಕ್ಕಳಿಗಾಗಲೀ ಮಾಡಿರುವ ಅನ್ಯಾಯವಾದರೂ ಏನೆ?” ಎಂದು ಕರಾಟೇಕಲಿಯಂತೆ ಬಲಗೈಯ ತುದಿ ಬೆರಳುಗಳಿಂದ ಸೊಸೆಯ ಮುಂದಿನ ಬಾಚಿಹಲ್ಲುಗಳಿಗೆ ತಿವಿದಳು. +ದಂತಪಂಕ್ತಿ ಜುಮ್ಮೆಂದು ಬಿಟ್ಟವು ಆ ಕ್ಷಣ. ಕೋಪವೆಂಬುದು ಕೆಂಪು ರಕ್ತಕಣಗಳಲ್ಲಿ ಪ್ರವಹಿಸಿತು. ತಿವಿದೂ ತಿವಿದೂ ಹಲ್ಲುದುರಿಸಿ ಅಕಾಲ ವೃದ್ಧಾಪ್ಯ ತುರುಕಲು ಅತ್ತೆ ನಿರ್ಧರಿಸಿರುವಳೆಂದು ಬಗೆದು ವರಲಕ್ಷ್ಮಿ- +“ಅದೇನು ಅತ್ತೆ … ಹಂಗ ತಿವೀತೀರಲ್ಲ … ನಿಮ್ಮವೇನು ಕೈಯ್ಯೋ … ನಾಗರಹಾವಿನ ಹೆಡೆಯೋ … ನಿನ್ನ ಮಗ ನಿನಗೂ, ನನ್ನ ಮಕ್ಕಳಿಗೂ ಮಾಡಿರುವ ಅನ್ಯಾಯ ಒಂದೇ ಎರಡೇ … ಅವರು ಬದುಕಿರುವಾಗಲೂ ಸುಖ ಕಾಣ್ಲಿಲ್ಲ … ಸತ್ತ ಮೇಲೂ ಸುಖ ಕಾಣಲಿಲ್ಲ … ಅವರು ಮಾಡಿರೋ ಅನ್ಯಾಯ ಇಡಿ ತಾಲ್ಲೂಕಿಗೆ ಗೊತ್ತು … ಬಿಡಿಸಿ ಹೇಳಿ ನಾನ್ಯಾವ ನರಕಕ್ಕೆ ಹೋಗ್ಲಿ …” ಎಂದು ತಲೆಯ ಮೇಲಿದ್ದ ಸೆರಗನ್ನು ತೊಂಕಕ್ಕೆ ಸಿಕ್ಕಿಸಿಕೊಂಡು ಮುಂದುವರಿದು ಹೇಳಿದಳು- +“ಇದು ನನ್ನ ಗಂಡನ ಆಸ್ತಿ … ನಾನು ಬೇಕಾದ್ದು ಮಾಡ್ತೀನಿ … ಅದನ್ನು ಕೇಳೊಕೆ ನೀವ್ಯಾರು ಅಂತೀನಿ? … ” +ಸೊಸೆಯಾಡಿದ ಈ ಮಾತಿನಿಂದ ಅತ್ತೆಮ್ಮನ ತಾಯ್ತನ ವಿಲಿವಿಲನೆ ಒದ್ದಾಡಿತು. ತಾನು ಬದುಕುತ್ತಿರುವ ಕ್ರಮಕ್ಕೆ ತಾನೇ ಅಸಹ್ಯ ಪಟ್ಟುಕೊಂಡಳು. +“ನನ್ನ ಯಾರು ಅಂತೀಯ್ಹೇನೆ? ಇಂಥ ಮಾತಾಡೋಕೆ ಎಷ್ಟು ಧೈರ್ಯ ಕಣೆ ನಿನಗೆ … ಸತ್ಕುಲಸಂಜಾತೆಯಾಗಿದ್ರೆ ಇಂಥ ಮಾತು ನಿನ್ನ ಬಾಯಿಂದ ಬರುತ್ತಿದ್ದವೇನು! +“ಹ್ಹಾಂ … ನನ್ನ ಕುಲಕ್ಕೇ ಅವಮಾನ ಮಾಡುತ್ತೀರಲ್ಲಾ … ಅಯ್ಯಯ್ಯೋ … ತಾತನವರೇ ನನ್ನನ್ನು ಈ ದರಿದ್ರದವರ ಮನೆ ತುಂಬಿಸಿ ಎಷ್ಟು ಅನ್ಯಾಯ ಮಾಡಿದ್ದೀರಲ್ಕ್ಲಾ …” ಅಂಜಲೀಬದ್ಧಳಾಗಿ ವೈಕುಂಠದ ಕಡೆ ಆರ್ತತೆಯಿಂದ ನೋಡಿದಳು. +“ಎಂಥ ಸೊಸೆ ಗಂಟುಬಿದ್ದಿರುವಳಲ್ಲ ರಾಮ ರಾಮಾ … ನಮ್ಮನ್ನ ದರಿದ್ರದವರು ಅಂತೀಯಾ …ನಿನಗೆ ರೌರವ ನರಕ ಪ್ರಾಪ್ತವಾಗಲೀ … ನೀನು ದರಿದ್ರ … ನಿನ್ನ ಅಪ್ಪ ದರಿದ್ರ … ನಿನ್ನ ಒಡಹುಟ್ಟಿದವರು ದರಿದ್ರದವರು…” ಅಲುಮೇಲಮ್ಮ ಲಟಲಟಾಂತ ಲಟ್ಟಿಗೆ ತೆಗೆದಳು. +ವರಲಕ್ಷ್ಮಿಯ ದೇಹವೆಂಬುದು ಧಗಧಗ ಉರಿಯತೊಡಗಿತು. ಕುಪ್ಪಳಿಸಿ ಎಗರಿ ಅತ್ತೆಯ ದುರ್ಬಲ ಸೆರಗು ಹಿಡಿದುಕೊಂಡಳು. +“ಅದೇನು ಕಂಡು ನಮ್ಮ ವಂಶದವರನ್ನ ದರಿದ್ರ ಅಂತೀಯ ಮುದುಕೀ … ನಿನ್ನ ಗಂಡ ಅಂದ್ರೆ ನಮ್ಮ ಮಾವನಂತೆ ಅಮೇಧ್ಯ ತಿಂದು ಭ್ರಷ್ಟರಾದವರುಂಟೇನು? … ಮದ್ಯ ಸೇವಿಸಿ ಕುಲಗೌರವ ಹಾಳುಮಾಡಿದವರುಂಟೇನು?” ತನ್ನ ಹಿಡಿತ ಮತ್ತು ಜಗ್ಗಾಟವನ್ನು ಭದ್ರಪಡಿಸುತ್ತ ಮುಂದುವರಿದು ಹೇಳಿದಳು ” ಆ ಮಾತು ವಾಪಸ್ಸು ತೊಕ್ಕೊಳ್ಳದಿದ್ದರೆ ಬಿಡೋದಿಲ್ಲ” +ಆಕೆಯ ಹಿಡಿತಕ್ಕೆ ವೃದ್ದೆ ಅಲ್ಲಾಡಿ ಹೋದರೂ ವಿಚಲಿತಳಾಗಲಿಲ್ಲ. +“ನಿನ್ನ ಅಣ್ಣ ತಮ್ಮಂದಿರು ಮಾಡಬಾರದ ಪಾಪ ಮಾಡಿ ಅಕಾಲ ಮರಣಕ್ಕೆ ತುತ್ತಾದುದು ನನಗೆ ಗೊತ್ತಿಲ್ಲಾಂಥ ಅಂದುಕೊಂಡಿರುವೆಯೇನೆ? ಇನ್ನು ನಿಮ್ಮ ತಾತನವರ ಬಗೆಗೆ …”ಎಂದಿನ್ನೇನೋ ಹೇಳುವಷ್ಟರಲ್ಲಿ … +“ನಮ್ಮ ತಾತನವರ ಬಗೆಗೇನಾದರೂ ಒಂದು ಮಾತು ಆಡಿದಿರೀ ಅಂದ್ರ ನಿಮ್ಮ ನಾಲಿಗೆಗೆ ಹುಳು ಬೀಳ್ತವೆ… ಎಷ್ಟೊ ಪಾಪಾತ್ಮಗಳಿಗೆ ಮುಕ್ತಿ ದಯಪಾಲಿಸಿದ ಧರ್ಮಾತ್ಮರು ಅವರು … ಅವರೇನು … ನಿಮ್ಮ ಮಾವನವರಂತೆ ಮಲಗಿದಲ್ಲೇ ಮಲ ಮೂತ್ರ ಬಳಿಸಿಕೊಂಡು ವಿಲವಿಲನೆ ಒದ್ದಾಡಿ ಸಾಯಲಿಲ್ವಲ್ಲಾ … ಅವರ ಹಾಗೆ ತಾತನವರೇನು ಪೋಲೀಸರ ಕೂಡ ಒಡೆಸಿಕೊಂಡು ಜಾತಿಭ್ರಷ್ಟರಾಗಿದ್ದಿಲ್ಲಲ್ಲ …” ಎಂದು ತನ್ನ ಬಾಯಲ್ಲಿದ್ದ ಲಾಲಾರಸವನ್ನು ತುಂತುರು ಹನಿಗಳಾಗಿ ಮಾರ್ಪಡಿಸಿ ಅತ್ತೆಯವರ ಮುಖದ ಸುಕ್ಕುಗಳ ಮೇಲೆಲ್ಲ ಅಲಂಕಾರ ಮಾಡಿದಳು. +ವೃದ್ಧೆ ವರಲಕ್ಷ್ಮಿ ಮಾಡಿದ ಒಂದೊಂದು ಮಾತುಗಳಿಂದ ಜರ್ಝರಿತಳಾಗಿಬಿಟ್ಟಳು. +ಇದು ಲಕ್ಷಾಗೇಹಕ್ಕಿದು, ವಿಶಮ ವಿಶಾನ್ನಕ್ಕಿಳಿದು; ನಾಡ ಜೂದಿಗಿಂದು, ಪಂಚಾಲಿ ಪ್ರಪಂಚಕಿದು … ಎಂದು ಮೊದಲಾಗಿ ಭೀಮನು ಗದಾದಂಡದಿಂದ ದುರ್ಯೋಧನನ ಮೈಗೆ ತದಕುತ್ತ ಮೂದಲಿಸಿದನಲ್ಲ ಹಾಗೆ … +ಸೊಸೆ ವಕ್ಷಸ್ಥಳದ ಮೇಲಿದ್ದ ಹಿಡಿತವನ್ನು ಬಿಗಿಗೊಳಿಸಿದರೆ, ಅತ್ತೆಯೂ ಎಗರಿ ಸೊಸೆಯ ಕಿವಿಗಳೆರಡನ್ನು ಎರಡೂ ಕೈಗಳಿಂದ ಕಪಿಮುಷ್ಟಿ ಚುರುಕುಗೊಳಿಸಿದಳು. +“ಅಯ್ಯಯ್ಯೋ … ನಿನ್ನ ಗಂಡ ಕುಡಿದಿರೋವ್ರು ಅನ್ನೊ ಕಾರಣಕ್ಕಾಗಾದರೂ ಬಿಡಬಾರ್ದೇನೇ … ತಾಯಿ ಎದೆ ಹಾಲು ಕುಡಿದೋಳಾಗಿದ್ರೆ ಹೀಗೆ ಹಿಡಿದುಕೊಳ್ತಿದ್ದೆ ಏನೇ? … ಅದ್ಕೆ ನಿನ್ನ ಮೊಲೆಗಳು ಹಾಲಿಲ್ಲದೆ ಗೊಡ್ಡು ಬಿದ್ದಿರೋದು” ಮುದುಕಿ ನಾಲಿಗೆಯಿಂದ ಕುಟುಕಿತು. +ಕೆಣಕಿದಳು ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದ ವೋಲ್. +“ಅಯ್ಯಯ್ಯೋ … ಚಿತೆ ಏರೋ ವಯಸ್ಸಿನಲ್ಲೂ ಹೇಗೆ ಮಾತಾಡ್ತಿದೆಯಲ್ಲಾ ಈ ಮುದಿ ರಾಕ್ಷಸಿ … ನನ್ನ ಹಾಗೆ ಎರಡು ಹಡೆದುಕೊಂಡಿದ್ರೆ ಇನ್ನೆಷ್ಟು ಮಾತಾಡ್ತಿತ್ತೋ … ಹೊಟ್ಟೇಲಿ ಎರಡು ಮಕ್ಕಳನ್ನು ಇಟ್ಟ ಆ ದೇವರು ಆ ದೇವರು ಮೊಲೇಲಿ ಎರಡು ಮಿಳ್ಳೆ ಹಾಲು ಇಡಲಿಲ್ಲವಲ್ಲಾ … ಇದರಲ್ಲಿ ನನ್ನ ತಪ್ಪೇನಿದೆ ಮುದುಕಿ… ನನ್ನ ಕಿವಿಗಳನ್ನು ಒಳ್ಳೆ ಮಾತಿಂದ ಬಿಡ್ತೀಯೋ ಇಲ್ವೋ …” +ನೀನು ಮೊದಲು ಬಿಡು ಅಂತ ಈಕೆ +ನೀನು ಮೊದಲು ಬಿಡು ಅಂತ ಆಕೆ … +ಯಾರೂ ಸೋಲಲೊಲ್ಲರು! +ಯಾರೂ ಗೆಲ್ಲಲೊಲ್ಲರು! +ಇಂಥ ವಿಷಮ ಪರಿಸ್ಥಿತಿಯಲ್ಲಿ ದೇವರು ಸಹಾಯ ಮಾಡದೆ ಇನ್ನಾರು ಸಹಾಯ ಮಾಡಲು ಸಾಧ್ಯ! +ಆರನೆ ಇಂದ್ರಿಯಗಳು ಜಾಗೃತಗೊಂಡು ಬೆಲ್ ಹೊಡೆಯುವುದಕ್ಕೂ ಮೊದಲೆ ಶಿವರಾಮಶಾಸ್ತ್ರಿ ತಲೆನೊಯ್ಯುವುದೆಂತಲೂ; ಅಶ್ವಥ್‌ನಾರಾಯಣ ಹೊಟ್ಟೆ ನೋಯುವುದೆಂಥಲೂ ನೆಪಒಡ್ಡಿ ಸಂಥೆಯೊಳಗೋಂದು ಮನೆಮಾಡಿ ಶಬ್ದಂಕ್ಕಂಜದೆ ಆಕಳಿಸುತ್ತ ಕೂತಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಚನ್ನವೀರಪ್ಪ ಮಾಸ್ತರರ ಪರಮಿಷನ್ ಗಿಟ್ಟಿಸಿಕೊಂಡು ತರಗೆಲೆಗಳೇ ಓಡುತ್ತಿರುವವೋ ಎಂಬಂತೆ ಓಡುತ್ತಬಂದು ಅಮ್ಮಾ; ಅಜ್ಜೀ ಎನ್ನುತ್ತ ಒಳಪ್ರವೇಶಿಸಲು ಅವರಿಬ್ಬರು ತಮ್ಮ ಪಟ್ಟು ಸಡಲಿಸಿ; ಉದಕದಲ್ಲಿ ಅಗ್ನಿ ಬಿಡುಗಡೆಗೊಳ್ಳುವಂತೆ; ಔಷಧದಿಂದ ವ್ಯಾಧಿ ಬಿಡುಗಡೆ ಗೊಳ್ಳುವಂತೆ ಮಂತ್ರ ಪ್ರಯೋಗದಿಂದ ವಿಷ ಬಿಡುಗಡೆಗೊಳ್ಳುವಂತೆ ಅವರಿಂದ ಇವರು, ಇವರಿಂದ ಅವರು ಬಿಡುಗಡೆಗೊಂಡು ರಾಮಾ; ಕೃಷ್ಣಾ ಅಂತ ಭವನ್ನಾಮ ಸ್ಮರಣೆ ಗೈಯುತ್ತ ಪಡಸಾಲೆಯ ಮೂಲೆಗಳನ್ನು ತಲಾ ಒಬ್ಬೊಬ್ಬರು ಆಕ್ರಮಿಸಿಕೊಂಡು ಕೂತುಕೊಳ್ಳಲು ಅದೇ ಪಡಸಾಲೆಯ ಇನ್ನೊಂದು ಮೂಲೆಯಲ್ಲಿ ನಿಘೂಡವಾಗಿ ವಾಸಿಸುತ್ತಿದ್ದ ಶಾಮಾಶಾಸ್ತ್ರಿಯ ಆತ್ಮವು ನಿಟ್ಟುಸಿರು ಬಿಟ್ಟಿತು. ಹಾಂಗೆ ಬಂದು ನೋಡಿಕ್ಕೊಂಡು ಹೀಂಗೆ ಹೋಗಿ ಬಿಡಬೇಕೆಂದು ಯೋಚಿಸಿ ಕೆಲ ಸಮಯದ ಹಿಂದೆ ಬಂದಿತ್ತು. ಬೆಳ್ಳಿ ತೆರೆಯ ಮೇಲಿನ ಘಟನೆಗಳನ್ನು ನೋಡಿ ಆನಂದಿಸಿ; ಉದ್ಗರಿಸಬಹುದಾಗಿತ್ತೇ ವಿನಃ ಚಲನಶೀಲ ಕಥೆಯೊಂದಿಗೆ ತಾದ್ಯಾತ್ಮ ಹೊಂದುವುದು ಸಾಧ್ಯವಿಲ್ಲವೆಂದು ಸತ್ತ ಮರು ಘಳಿಗೆಯೇ ಶಾಮಾಶಾಸ್ತ್ರಿಗೆ ಅರ್ಥವಾಗಿತ್ತು. ದೇಹ ತ್ಯಜಿಸಿದವರಿಗಿರುವ ಒಂದು ಅನುಕೂಲವೆಂದರೆ ಲೀಲಾಜಾಲವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು; ಯಾವುದೇ ರಹದಾರಿಯ ಹಂಗು ಇರುವುದಿಲ್ಲ. ವಿಸರ್ಜನಾಂಗಗಳಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ, ಹೀಗಾಗಿ ಸೂಕ್ಷ್ಮ ಪ್ರವೃತ್ತಿಯ ಶಾಸ್ತ್ರಿ ನಗುತ್ತಿದ್ದ; ಮರುಗುತ್ತಿದ್ದ … ಆದರೆ ಅವನ ಯಾವುದೇ ಸಂವೇದನೆಗೆ ಬದುಕಿರುವ ಯಾರೂ ಭಾಧ್ಯಸ್ಥರಾಗಿರಲಿಲ್ಲ … ಆದರೆ ಆಸ್ತಿಗೆ ಸಂಭಂಧಿಸಿದಂತೆ ಸಂಭಂದ ಕಡಿದುಕೊಳ್ಳುವುದು ಸತ್ತನಂತರವೂ ಅಸಾಧ್ಯವೆಂಬುದಕ್ಕೆ ಅವನೇ ಸಾಕ್ಷಿ; ಯಾವ ಜೀವ ಇರದಿದ್ದರೂ ಪ್ರೇತದಂತೆ ಮನುಷ್ಯರ ಸಂಭಂದಗಳನ್ನು ವಿಘಟಿಸುವ; ಬೆಸೆಯುವ ಚರಾಸ್ತಿ ಎಂಬ ಸವರ್ಣ ಧೀರ್ಘ ಸಂದಿ ಬಗ್ಗೆ ಅವನು ಅಷ್ಟು ತಲೆ ಕೆಡೆಸಿಕೊಂಡುದುದಿಲ್ಲ. ಅವನನ್ನು ಕಾಡತೊಡಗಿದುದು ಸ್ಥಾವರಲಿಂಗೋಪಾದಿಯಲ್ಲಿ ಗ್ರಾಮದ ನಕ್ಷೆಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮನೆ ಎಂಬ ಸ್ಥಿರಾಸ್ತಿ – ‘ಈ ಮನೆಯಲ್ಲಿ ವಾಸಿಸುವುದು ಪೂರ್ಣಾವಧಿ ಬದುಕನು ಬದುಕುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ ಕಣಯ್ಯಾ’ ಎಂದು ಪರಮೇಶ್ವರ ಶಾಸ್ತ್ರಿಗಳು ತಮ್ಮ ಬದುಕಿನ ಎಂಬತ್ನಾಲ್ಕು ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾನವ ಲೋಕವನ್ನು ಉದ್ಧೇಶಿಸಿ ಮಾತನಾಡುತ್ತಾ ಅಪ್ಪಣೆ ಕೊಡಿಸಿದ್ದರು. ಅವರೇ ಇಂಥವರು ನೂರಾರು ವಸಂತಗಳನ್ನು ಕಂಡರೆ ಮನುಕಲವನ್ನು ಕಾಪಾಡುವವರ್ಯಾರು? ಎಂಬ ಲೆಕ್ಕಾಚಾರದಿಂದ ಮೃತ್ಯು ಅವರ ಹೃದಯದ ಬಾಗಿಲು ತಟ್ಟಿತ್ತು. ಅವರ ಮಾತನ್ನು ಸುಳ್ಳು +ಮಾಡಲೆಂದಲ್ಲವೆ ತಾನು ಅಲ್ಪಾಯುಷಿಪಟ್ಟವನ್ನೇರಿದ್ದು? ಪ್ರತಿ ಕ್ಷಣ ಮೃತ್ಯುವನ್ನು ಆಲಂಗಿಸಿದ್ದು. ಕಾಡಿ ಬೇಡಿ ದಿನಕ್ಕೊಂದು ಚೂರು ಚೂರು ಸಾಯತೊಡಗಿದ್ದು. ಬ್ರಾಹ್ಮಣ್ಯವನ್ನು ತಾನು ಇಷ್ಟೊಂದು ದ್ವೇಶಿಸಬಹುದೆಂದು ಹತ್ತಿರದವರ್ಯಾರೂ ಅಂದುಕೊಂಡಿರಲಿಲ್ಲ. ಇಂಥ ಕಥೆ ಕಾದಂಬರಿಗಳನ್ನು ಓದಬೇಡಾಂತ ನಾರಾಯಣ ಪ್ರಾಗ್ ಜೋತಿಷಿ ಕೈಲಿದ್ದ ಸಂಸ್ಕಾರವನ್ನು ಕಿತ್ತೆಸೆದದ್ದುಂಟು. ‘ಬ್ರಾಹ್ಮಣರು ಬರೆದಿರೋದ್ನ ಓದದಿದ್ರೆ ಹೇಗಯ್ಯಾ’ ಎಂದು ತಾನು ಸಮರ್ಥಿಸುದ್ದುಂಟು. “ಇಂಗ್ಲೀಷ್ ಕಲ್ತ ಕೂಡ್ಲೆ ಬ್ರಾಹ್ಮಣ್ಯ ಬಿಡುತ್ತಾರೆಂಬುದಕ್ಕೆ ಅದ್ನ ಬರೆದವರೇ ಸಾಕ್ಷಿ ಕಣಪ್ಪ. ಕಿರಸ್ತಾನರ ಹುಡುಗೀನ ಮದುವೆಯಾಗಿ ಕಟ್ಟಾ ಸಂಪ್ರದಾಯಸ್ತರ ವಿರೋಧ ಕಟ್ಟಿಕೊಂಡ … ” ಹೀಗೆ ನುಡಿದ ಪ್ರಾಗ್ಜೊತಿಷಿ ಅವರ ದೂರದ ಸಂಬಂಧಿಯಂತೆ ತಮ್ಮವರು ಎಂಬ ಅಭಿಮಾನವಾದರೂ ಇರುವುದು ಬೇಡವೆ? ಇದರಿಂದ ತನಗೆ ಸಿಟ್ತು ಬಂದಿತ್ತು. ‘ಎಂಥ ಮಾತಾಡ್ತಿದೀ ನಾರಾಯಣ? … ಒಬ್ಬ ಲೇಖಕನ ಸಂವೇದನಾ ಶೀಲತೆ ಒಬ್ಬ ಲೇಖಕ ಓಡುಗನಾದ ಮಾತ್ರ ಅರ್ಥವಾಗುತ್ತದೆ ಎಂಬುದಕ್ಕೆ ನಾನೇ ನಿದರ್ಶನ ನೋಡು. ಸಂಸ್ಕಾರ ಓದದೆ ಮಾತಾಡ್ತಿದೀಯಲ್ಲ! ಕಾದಂಬರಿಯಲ್ಲಿರೋ ಕ್ರಾಂತಿಕಾರಿ ನಾರಾಯಣಪ್ಪನ ಹೆಸರಿಟ್ಟುಕೊಂಡು ಹೀಗೆ ಮಾತಾಡೋದು ಯಾವ ನ್ಯಾಯವಪ್ಪಾ … ಕಟ್ಟಾ ಸಂಪ್ರಯಸ್ಥರೂ; ವಿವೇಕಿಗಳೂ ಆದ ಪ್ರಾಣೇಶಾಚಾರ್ಯರು ಶೂದ್ರ ಹೆಂಗಸು ಚಂದ್ರಿಯನ್ನು ಸಂಭೋಗಿಸಿ ಸನಾತನತೆಯ ಲಕ್ಷ್ಮಣ ರೇಖೆ ದಾಟಿದ್ದು ಕ್ರಾಂತಿ ಅಲ್ಲವೇನು?” ಎಂದು ತಾನು ಸ್ದ್ವೋಪಜ್ಞತೆಯನ್ನು ಪ್ರದರ್ಶಿಸುದ್ದುಂಟು. ಅದಕ್ಕೆ ನಾರಾಯಣ ಅದ್ಭುತನಗೆ ನಕ್ಕು ” ಆ ನಿಮ್ಮ ಪ್ರಾಣೇಚಾರ್ಯರಿಗೆ ತಮ್ಮ ಸಂಭೋಗ ತೀಟೆ ತೀರಿಸಿಕೊಳ್ಳಲು ಶೂದ್ರ ಮಹಿಳೆ ಚಂದ್ರಿಕೆಯೇ ಬೇಕಾಯ್ತೇನು?” ಎಂದಾಡಿದ್ದುಂಟು. ಇಂಥ ಮಾತಾಡುತ್ತಿದ್ದ ಪ್ರಾಗ್ಜೋತಿಷಿ ತುಂಬ ಬುದ್ಧಿವಂಥನಿದ್ದ. ಸಮರ್ಥ ವೈದ್ಯ ಶವ ಪ್ರರೀಕ್ಷೆ ಮಾಡುವ ರೀತಿಯಲ್ಲಿ ಒಂದು ಕೃತಿಯನ್ನು ಓದಿ ಅರಗೈಸಿಕೊಳ್ಳುತ್ತಿದ್ದ. ಬಹುತೇಕ ಸಂದರ್ಭದಲ್ಲಿ ಅವನು ತುಸು ಹೆಚ್ಚು ಮಾತಾಡುತ್ತಿದ್ದುದು ತನ್ನೊಂದಿಗೆ ಮಾತ್ರ. ಅವನ ಅಂತರಂಗದಲ್ಲಿರುತ್ತಿದ್ದ ವೈಚಾರಿಕ ಕೊಂಪೆಯನ್ನು ಸಮಯ ಸಂದರ್ಭ ನೋಡಿ ಲೂಟಿ ಮಾಡುತ್ತಿದ್ದುದೆಂದರೆ ತಾನು ಮಾತ್ರ. ಅವನ ವರ್ತನೆ ಕೆಲವೊಮ್ಮೆ ತನಗೆ ಇರುಸುಮುರುಸಾಗುತ್ತಿದ್ದುದುಂಟು. ಎಲಾ? ಇವನು ಎಲ್ಲ ಬಿಟ್ಟು ಬಿಟ್ಟಿದ್ದಾನಲ್ಲವೆಂದು ದಿಗ್ಭ್ರಮೆಗೊಳ್ಳುತ್ತಿದ್ದುದುಂಟು. ಅವನನ್ನು ಹತ್ತಿರವಿಟ್ಟುಕೊಳ್ಳಲಾರದೆ ದೂರವಿಡಲಾರದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿಯೇ ಅವನು ಯಾರನ್ನೋ ರಕ್ಷಿಸಲಿಕ್ಕೆ ಹೋಗಿ ಅವರನ್ನು ಬದುಕಿಸಿ ತಾನು ಸತ್ತಿದ್ದ. ಸಾಯುವ ಒಂದು ಕ್ಷಣ ಹಿಂದೆ ಮೈ ಎಲ್ಲ ಸುಟ್ಟು ಕರಟಿದ್ದರೂ ಅವನು ನಗುನಗುತ್ತ ಮಾತಾಡಿಸಿದ್ದ. ಮತಾವ ಕೃತಿ ಓದಿದೆಯೋ? ಎಂದು ಕೇಳಿದ್ದ. ಕೃತಿಯ ಉದ್ದೇಶಕ್ಕೆ ಓದುಗನನ್ನು ಬಲಿ ತೆಗುದುಕೊಳ್ಳುವ ಲೇಖಕನ ಬಗ್ಗೆ ಎಚ್ಚರದಿಂದಿರಬೇಕೆಂದು ತೊದಲಿದ್ದ. ವೈಯಕ್ತಿಕ ಬದುಕನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕೆ ಕೃತಿಯ ನೆರವು ಪಡೆಯುವುದು ಯಾಕೆ? ಎಂದು ಪ್ರಶ್ನಿಸಿದ್ದ. ನಿನ್ನನ್ನು ನೀನು ಅರ್ಥಮಾಡಿಕೋಽಽ ಸಮಾಜದಲ್ಲಿ ; ಕುಟುಂಬದಲ್ಲಿ ನಿನ್ನ ಪಾತ್ರ ಅರ್ಥಮಾಡಿಕೋ ಎಂದು ಹೇಳುತ್ತ ಅವಧೂತನಂತೆ ಕಣ್ಣು ಮುಚ್ಚಿದ್ದ. ಅವನ ಸಾವು ತನ್ನನ್ನು ಕಾಡಿದ್ದು ನಿಜ, ಅವನ ಮಾತುಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗದೆ ತಾನು ಒದ್ದಾಡಿದ್ದು ಸತ್ಯ. ಕುಟುಂಬದಲ್ಲಾಗಲೀ; ಸಮಾಜದಲ್ಲಾಗಲೀ ತನ್ನ ಅಸ್ತಿತ್ವದ ದೌರ್ಬಲ್ಯದ ಬಗ್ಗೆ ಯೋಚಿಸುತ್ತ ಕಂಗಾಲಾಗಿದ್ದು ನಿಜ. ತನ್ನನ್ನು ತಾನು ತನ್ನೊಳಗೆ ಮರೆಮಾಚಿಕೊಳ್ಳುವುದಕ್ಕಾಗದೆ ತಾನು ಕಲಿಬಾರದಿದ್ದನ್ನೆಲ್ಲ ಕಲಿತದ್ದು ನಿಜ, ಘನಘೋರ್ ನರಕ ಯಾತನೆಯ ಸುಳಿಗೆ ಸಿಲುಕಿ ಪ್ರಜ್ಞೆ ಕಳೆದುಕೊಂಡು ಹಳಹಳಿಸುತ್ತ ಮಲಗಿದ್ದ ತಾನು ಸತ್ತದ್ದೇ ತಿಳಿದಿರಲಿಲ್ಲ, ಬಹುದಿನಗಳವರೆಗೆ … ತನ್ನವರೆಂಬುವವರ ಆಳ ಎತ್ತರಗಳನ್ನು ಅಳೆದು ಮೂಕ ವಿಸ್ಮಿತಗೊಳಿಸುವುದಕ್ಕೆ ಸಾದ್ಯವಾದದ್ದು ಪಾಳುಗೋಡೆಯಂಥ ದೇಹವನ್ನು ಸುಟ್ಟು ಸುಡುಗಾಡಿಗೆ ಕಳಿಸಿದ ನಂತರವೇ. ಕೆಟ್ಟದಾಗಿ ಬಾಲ್ಯ ಕಳೆಯುತ್ತಿರುವ ತನ್ನ ಮುದ್ದು ಮಕ್ಕಳ ಮುಖದ ವಿಷಣ್ಣತೆಯನ್ನು ನೋಡಿದಾಗ, ಗತಕಾಲದ ಒಂದೊಂದು ನೆನಪಿನ ಗಾಢ ಆಸರೆಯೊಂದಿಗೆ ಬದುಕುತ್ತಿರುವ ತನ್ನ ವೃದ್ಧ ಮಾತೆಯನ್ನು ನೋಡಿದಾಗ; ಪಾತಿವ್ರತದ ಮುಖವಾಡದೊಳಗೆ ಸದಾ ಅವಿತುಕೊಂಡಿದ್ದು ವಿಲವಿಲನೆ ಒದ್ದಾಡಿದ ಹೆಂಡತಿಯನ್ನು ನೋಡಿದಾಗಲೆಲ್ಲ ದುಃಖ ಧುಮ್ಮಿಕ್ಕಿ ಬರುವುದು. ತುಸು ಸ್ವಾಂತನ ತರುವ ನೆನಪೆಂದರೆ ತಂಬಾಕಿಯ ಉಂಡೆಯನ್ನು ದವಡೆಯೊಳಗೆ ಆತ್ಮಲಿಂಗೋಪಾದಿಯಲ್ಲಿ ಇಟ್ಟುಕೊಂಡು ಭೀಕರ ವಾಸ್ತವದ ಮೇಲೆ ಪದ್ಮಾಸನ ಹಾಕಿಕೊಂಡಿದ್ದು, ತನ್ನನ್ನು ಹೆತ್ತ ಮಗನಿಗಿಂತ ಹೆಚ್ಚಾಗಿ; ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಾಗಿ ಅನುಗಾಲ ನೋಡಿಕೊಂಡ ಅನಸೂಯಾಳದ್ದು. ಅವಳ ಋಣವನ್ನು ಪೆಂಡೆ ಪೆಂಡೆ ಕಟ್ಟಿಕೊಂಡೇ ದೇಹದಿಂದ ನುಣುಚಿಕೊಂಡೆನಲ್ಲ ತಾನು! +“ಶಾಸ್ತ್ರಿ … ಅಳಬ್ಯಾಡೋ ಆ ಯಮ ಎಂಭೋನು ನಿನ್ನ ಪಿರಾಣನ ಅದೆಂಗ ಹೊಯ್ತಾನ ನಾನೊಂದು ಕೈ ನೋಡ್ಕಂತೀನಿ” ಎಂದು ಆಕೆ ತನ್ನ ತೊಡೆ ಮೇಲೆ ತಲೆ ಇರಿಸಿಕೊಂಡು ಮಾತ್ರೆಗಳನ್ನು ನುಂಗಿಸುತ್ತಿದ್ದಳು. ಔಷದವನ್ನು ಕುಡಿಸುತ್ತಿದ್ದಳು. ತನ್ನ ಜೀವಚ್ಛವವನ್ನು ಬಚ್ಚಲಿಗೆ ಎತ್ತೊಯ್ದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಬಟ್ಟೆ ಬರೆ ತೊಡಿಸಿ; ಮಂಚದ ಮೇಲೆ ಮಲಗಿಸಿ ಓದಲು ಪುಸ್ತಕಗಳನ್ನು; ಪತ್ರಿಕೆಗಳನ್ನು ಪಕ್ಕದಲ್ಲಿಡುತ್ತಿದ್ದಳು. ತಾನು ಅಂಥ ಅವಸ್ಥೆಯಲ್ಲಿದ್ದಾಗ ಕುಂ. ವೀರಭದ್ರಪ್ಪನೂ ಬಂದು ನೋಡಿಕೊಂಡು ಹೋಗಿದ್ದುದಿಲ್ಲ; ಎರಡು ಗುಟುಕು ಎಳೆನೀರು ಕುಡಿಸಿದ್ದುದಲ್ಲ. ಶವ ಸಂಸ್ಕಾರದ ಬಗ್ಗೆ ಮಾತಾಡಿದ್ದ. ಪ್ರಪಂಚದ ವಿಭೂತಿ ಪುರುಷರು ಹೇಗೆ ಹೇಗೆ ಸತ್ತರು? ಹೇಗೆ ಹೇಗೆ ಶವ ಸಂಸ್ಕಾರ ಮಾಡಿಸಿಕೊಂಡು ಇತಿಹಾಸದಲ್ಲಿ ಅಜರಾಮರರಾದರು ಎಂದು ವರ್ಣಿಸಿದ್ದ. ನಮ್ಮ ದೇಶದಲ್ಲಿ ಸಹಜ ಮರಣಗಳು ಬೆಲೆ ಕಳೆದುಕೊಂಡಿವೆ ಎಂದೂ ದುರ್ಮರಣಕ್ಕೀಡಾದವರು ತಮ್ಮ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಬರುತ್ತಿರುವರೆಂದೂ; ಸಾಯುವ ಕ್ಷಣದಲ್ಲಿ ಅಲೌಕಿಕವಾದ ಥ್ರಿಲ್ ಅನುಭವಿಸುತ್ತಾರೆ ಮತ್ತು ವಿತರಿಸುತ್ತಾರೆಂದೂ ವಿಚಿತ್ರ ತರ್ಕ ಮಾಡಿದ್ದ. ನಾನು ಬರೆಯಬಹುದಾದ ಕಾದಂಬರಿ, ನೀನು ಸಾಯುವ ಕ್ರಮವನ್ನವಲಂಬಿಸಿರುವುದೆಂದು ಹೇಳಿದ್ದ. ಅವನು ಹಾಗೆ ಮಾತಾಡದಿದ್ದಲ್ಲಿ ತಾನಿನ್ನು ಒಂದಿಷ್ಟು ಕಾಲ ಬದುಕುತ್ತಿದ್ದನೇನೋ! ಅವನಿಂದ ಕಾದಂಬರಿ ಬರೆಯಿಸಿಕೊಳ್ಳಬೇಕೆಂದೇನೋ ತಾನು ಆ ಪರಿ ಸತ್ತಿದ್ದು. +ಆತ್ಮವೂ ನಿಟ್ಟುಸಿರಿಟ್ಟಿತು. ಸುಂಟರ ಗಾಳಿಯನ್ನು ಹುಟ್ಟು ಹಾಕುವಂತಿತ್ತಾ ನಿಟ್ಟುಸಿರು. ಅದಕ್ಕೇ ಇರಬೇಕು ನಾನು ಬರೆಯುತ್ತಿದ್ದ ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಹಾಳೆಗಳು ಇದ್ದಕ್ಕಿದ್ದಂತೆ ಚಲ್ಲಾಪಿಲ್ಲಿಯಾಗುತ್ತಿದ್ದುದು. ಚಲಿಸದ ಫ್ಯಾನನ್ನೋ! ಮುಚ್ಚಿದ ಕಿಟಕಿ; ಬಾಗಿಲುಗಳನ್ನೋ; ಹೆಂಡತಿಯ ಬಿಸಿಯುಸಿರನ್ನೋ ಬಯ್ಯುತ್ತಿದ್ದೆ. ಯಾವ ಚಿಮುಟಿಗೂ ಅವನ ವ್ಯಕ್ತಿತ್ವ ಸಿಕ್ಕದಾಗಿತ್ತು. ಅಕ್ಷರದ ಅಭಯಹಸ್ತಕ್ಕೆ ನಿಲುಕದೆ ದೂರ ಬಹುದೂರ ಸರಿದುಬಿಡುತ್ತಿದ್ದ ಮೃಗಜಲದಂಥ ಅವನ ಸತ್ತ ನಂತರವೇ ಅರ್ಥವಾದದ್ದು. ಜೇಡರ ಬಲೆಯಂಥ ಅವನ ನೆನಪಿನಿಂದ ನಾನು ಬಿಡುಗಡೆಯಾಗಬೇಕಾದರೆ ಅವನ ಕರುಳಿಗೆ ಸಂಬಂಧಿಸಿದ ಎಲ್ಲರೂ ನನ್ನ ಕಣ್ಣ ಪರಿಧಿಯಿಂದ ಬಹು ದೂರ ಹೋಗಿಬಿಡಬೇಕು, ಅಪ್ಪ ಅವರ ಚರಾಸ್ತಿ ಕೊಳ್ಳುವುದರ ಮೂಲಕ ಅವರವರ ದಾರಿ ಹಿಡಿಯಬೇಕು. ಕಣ್ಣಿಗೆ ಕಂಡಿದ್ದೆಲ್ಲ ತನ್ನದಾಗಬೇಕೆಂಬ ಹಠದ ಅಪ್ಪ ನನ್ನ ಆಲೋಚನೆಯ ಚದುರಂಗದಾಟಕ್ಕೆ ದಾಳವಾಗಿದ್ದ. ಆ ಅದ್ಭುತ ದಾಳದ ಚಲನೆಗೆ ನನ್ನ ಶಕ್ತಿಯ ಅಗತ್ಯವಿರಲಿಲ್ಲ. ತನ್ನ ಪಾಡಿಗೆ ತಾನು ನಿರಂತರವಾಗಿ; ನಿರ್ವಿರಾಮವಾಗಿ ಚಲಿಸುವ ದಾಳ ಅದಾಗಿತ್ತು. ರಕ್ತ ಹಂಚಿಕೊಂಡಿರುಚ ನೆಪದಲ್ಲಿ ಅದರೊಂಡಿಗೆ ನಾನೂ ಕದನ ಕುತೋಹಲತನದಿಂದ ನಾನೂ ಚಲಿಸುತ್ತಿದ್ದೆ. ಜಮೀನ್ದಾರಿಕೆ ಗತ್ತು ಠೇಂಕಾರಗಳನ್ನು ಮತ್ತದರ ವರಸೆಗಳನ್ನು ಕಲಿಸುವುದಕ್ಕಾಗಿಯೇ ಅಪ್ಪ ಸದಾ ನನ್ನನ್ನು ತನ್ನ ಹಿಂದಿಟ್ಟುಕೊಂಡಿದ್ದ. ಈಶ್ವರನ ಮುಂದೆ ಬಸವನಂತೆ; ಮಾಕಾಂಬಳಮ್ಮನ ಹಿಂದಿನ ಬನ್ನಿ ಮರದಂತೆ; ಚಹದಂಗಡಿ ಮುಂದಿನ ಬೀಡಿ ಅಂಗಡಿಯಂತೆ ಒಮ್ಮೊಮ್ಮೆ ನನ್ನ ಅಂತರಂಗ ಮಸೀದಿಯಂತೆ ಬಿಕೋ ಎನ್ನುತ್ತಿತ್ತು. ಬಿಕೋತನವನ್ನು ಧ್ಯಾನಮುದ್ರೆಯಿಂದ ಪರಿಗ್ರಹಗೊಳಿಸುತ್ತಿದ್ದೆ. +ಹಗಲೆಲ್ಲ ಹೊಲ ಮೇರೆಗಳಲ್ಲಿ; ತಿಟ್ಟೆ ತಗ್ಗುಗಳಲ್ಲಿ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ತಮ್ತಮ್ಮ ಕೊಟ್ಟಿಗೆಗಳಿಗೆ ಮರಳುವಾಗ ಎಬ್ಬಿಸಿದ ಧೂಳು ಆ ಸಂಜೆಯ ಹೊಂಬೆಳಕಲ್ಲಿ ಕಾವ್ಯಮಯವಾಗಿತ್ತು. ಎದ್ದಿದ್ದ ಅದು ನಿಧಾನವಾಗಿ ನೆಲವನ್ನು ತಬ್ಬಿಕೊಳ್ಳುವ ಕ್ಷಣಾದಲ್ಲಿ ಅಪ್ಪ ಅವರ ಮನೆಗೆ ಹೊರಡುವಾಗ ಸಂಗಡ ನನ್ನನ್ನೂ ಕರೆದೊಯ್ದು – ಅದಕ್ಕೂ ಮೊದಲು ನಿಂಗಮ್ಮಜ್ಜಿ “ಅಲಲಲಾ” ಅಂತು. ಆಗ್ರಾಕ್ಕೆ ಹೋಗಿ ಗೂಬೆ ತಂದಂಗಾಯ್ತಲ್ಲಾ ಅಂತು. ಇದೆಲ್ಲ ನೋಡಾಕೆ ಯಾಕೆ ಬೊದಕಿರಬೇಕಪ್ಪಾ … ಎಂದು ನಿಟ್ಟುಸಿರುಬಿಟ್ಟಿತು. ಇದನ್ನೆಲ್ಲ ಲೆಕ್ಕಿಸದೆ ನಾವು ಅವರ ಮನೆಗೆ ಹೋದೆವು. ಪ್ರಾಚೀನ ಸ್ಮಾರಕದಂತಿದ್ದ ಆ ಮನೆಯನ್ನು ಪ್ರವೇಶಿಸಿದ್ದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು. ನಾವು ಹೋಗುತ್ತಲೆ ಅಲುಮೇಲಮ್ಮಜ್ಜಿ “ರಾಮ ರಾಮ” ಅಂತ ಮರೆಗೆ ಸರಿದುಕೊಂಡರೆ ವರಲಕ್ಷಮ್ಮ “ಶಿವ ಶಿವ” ಆಂತ ಹೊರಗೆ ಕಾಣಿಸಿಕೊಂಡಳು. ಗೌರವದಿಂದ ಮಾತಾಡಿಸಿ ಕೂಡ್ರಲು ಪೀಠ ಹಾಕಿದಳು. ನಾವು ಕೂತುಕೊಂಡ ನಂತರ ಕಾಫಿ ತಂದುಕೊಟ್ಟಳು. ಹತ್ತಿರ ಬಂದ ಪರಮೇಶ ಅಶ್ವಥ್ ನಾರಾಯಣರ ಮೈದಡವಿದ ಅಪ್ಪ, ಬಾಗಿಲ ಪರದೆಯ ಮರೆಯಲ್ಲಿ ಆಕೆ ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದಳು. ಪುರುಷ ಪ್ರಧಾನ ಸಮಾಜವ್ಯವಸ್ಥೆಯ ವಿರುದ್ಧ ನೊಂದ ಮಹಿಳೆ ನಿರ್ಭಿಡೆಯಿಂದ ಮಾತಾಡುತ್ತಿರುವಂತೆ ಭಾಸವಾಯಿತು. ಸೊಸೆಯಾಡುತ್ತಿದ್ದುದನ್ನೆಲ್ಲ ಮರೆಯಲ್ಲಿ ಅಡಗಿದ್ದ ಮುದುಕಿ ಗುಟ್ಟಾಗಿ ಕೇಳಿಸಿಕೊಳ್ಳುತ್ತಿದ್ದುದು ಅದು ಪ್ರ್ತಿಕ್ರಿಯಿಸಿದಾಗ ಬಯಲಿಗೆ ಬಿತ್ತು. +‘ನಮೋ ಸ್ವ್ತನಂತಾಯ ಸಹಸ್ರ ಮೂರ್ತಯೆ’ ಅಂತ ಒಂದು ನಿಟ್ಟುಸಿರು ಬಿಟ್ಟಿತು. ಸಹಸ್ರ ಪಾದಾಕ್ಷಿ ಶಿರೋರು ಬಾಹುವೇ ಅಂತ ಗಂಟಲು ಸರಿಪಡಿಸಿಕೊಂಡಿತು. ಶ್ರೀ ಸಹಸ್ರ ಕೋಟಿ ಯುಗ ಧಾರಿಣೀ ನಮಃ ಅಂತ ಮಾತು ಆರಂಭಿಸಿ ಬಿಟ್ಟಿತು. +“ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ವೋ ಹಾಲಣ್ಣನವ್ರೇ … ಈ ನರಜನ್ಮದಲ್ಲಿ ಇದನ್ನೆಲ್ಲ ಅನುಭವಿಸೋಕೆ! ನೀವು ನೋಡದೆ ಇರೋದೇನಿದೆ? ಅವರನೂ ಕಳೆದುಕೊಂಡೆ ಇದ್ದೊಬ್ಬ ಮಗನನ್ನೂ ಕಳಕೊಂಡೆ … ಮೊಮ್ಮಕ್ಕಳನ್ನು ಆಡಿಸೋ ಭಾಗ್ಯನೂ ಕಳಕೊಂಡು ಹೇಗಪ್ಪಾ ಬದುಕೋದು” +ಅತ್ತೆಯಾಡಿದ ಮಾತು ಕೇಳಿ ಸೊಸೆ ತನ್ನ ಮುಖದಲ್ಲಿ ಪುಜಾಂ ದ್ರವಿಣಂ ಬ್ರಹ್ಮವರ್ಚಸ್ಸು ಆವಹಿಸಿಕೊಂಡು, “ಹಾಲಣ್ಣಾ, ಮಾವನವರು ಬೇರೆ ಅಲ್ಲ ನೀವು ಬೇರೆ ಅಲ್ಲ ಅಂತ ಒಂದು ಮಾತು ಹೇಳ್ತೀನಿ … ನಾನು ಪಟ್ಟ ಕಷ್ಟದಲ್ಲಿ ಇವರು ತಿಲ ಮಾತ್ರ ಕಷ್ಟಪಟ್ಟಿರುವರೇನು? ದೈನಾತಿ ದೈನ್ಯದಿಂದ ಬದುಕಿದ್ದನ್ನು ನೀವೇ ಕಣ್ಣಾರೆ ನೋಡಿರುವಿರಿ … ಅವರು ಮಾಡಿದ ಕರ್ಮಕ್ಕೆ ನಮ್ಮನ್ನೆಲ್ಲ ಬಲಿ ಮಾಡಿ ಅವರು ಹೊರಟು ಹೋದರು. ಈ ಪುಟಗೋಸಿ ಮನೆ ಇರೋ ನೆಪಕ್ಕೆ ಇಲ್ಲೆ ಇದ್ದುಕೊಂಡು ಅದ್‌ಹೇಗ್ರಿ ಮಕ್ಕಳನ್ನು ಜೋಪಾನ ಮಾಡ್ಲಿ … ನಾನೇನು ಇವರನ್ನು ಕೈಬಿಡ್ತೀನಾ … ಅತ್ತೆ ಅಂದ್ರೂ ಇವರೇ … ತಾಯಿ ಅಂದ್ರೂ ಇವರೇ ಅಲ್ವಾ?” +“ನನ್ನ ತಾಯಿ ಅಂತ ತಿಳಿದುಕೊಂಡವಳಾಗಿದ್ರೆ ಗಂಡ ಸತ್ತ ಒಂದು ವಾರಕ್ಕೆ ಕೋರ್ಟು ಕಛೇರಿ ಅಂಥ ಅಲೆದು ಈ ಮನೇ ಮಠನೆಲ್ಲ ನಿನ್ನ ಹೆಸರಿಗೆ ಮಾಡಿಸ್ಕೊಳ್ಳುತ್ತಿದ್ದೇ ಏನು?” +“ನಾನು ಧೈರ್ಯದಿಂದ ಅಡ್ಡಾಡಿ ಮಾಡಿಸಿಕೊಳ್ಳದಿದ್ದಲ್ಲಿ ಇರೋ ಒಂದು ಮನೆ ಆ ದುಗ್ಗಾಣಿ ಸೂಳೆಯ ಪಾಲಾಗ್ತಿತ್ತು … ನಾನೂ ನನ್ನ ಮಕ್ಕಳೂ ಕೆರೆನೋ ಭಾವೀನೋ ನೋಡಿಕೊಳ್ಳಬೇಕಿತ್ತು” ಎಂದು ವರಲಕ್ಷ್ಮಮ್ಮ ಸೆರಗನ್ನು ಮೈತುಂಬ ಹೊದ್ದು ಎರಡು ಕಣ್ಣುಗಳನ್ನು ಮಾತ್ರ ಪಿಳಿಪಿಳಿ ಬಿಡತೊಡಗಿದಳು. +ಅತ್ತೆ ಸೊಸೆಯರಿಬ್ಬರಾಡಿದ ಮಾತುಗಳನ್ನು ತೂಗಿ ನೋಡಿದೆ. ಸಮರ್ಥನೀಯವಾಗಿದ್ದವು. ಎಲ್ಲ ಆಸರೆಗಳಿಂದ ವಂಚಿತಗೊಳ್ಳುತ್ತ್ತಿರುವ ಅಸಹಾಯಕತೆಯಿಂದ ಅಲುಮೇಲಮ್ಮಜ್ಜಿ ವಿಲವಿಲನೆ ಒದ್ದಾಡುತ್ತಿದ್ದಳು. ಎಲ್ಲ ಸಂಭಂಧಗಳನ್ನು ಕಡಿದುಕೊಂಡು ಕರುಳ ಕುಡಿಗಳೊಂದಿಗೆ ಬದುಕನ್ನು ಜೋಡಿಸುವ ಒತ್ತಡದಿಂದ ವರಲಕ್ಷ್ಮಮ್ಮ ವೈಧವ್ಯ ಪ್ರಾಪ್ತವಾದ ಮರುಕ್ಷಣದಿಂದ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಕಠೋರವಾಗಿ ವರ್ತಿಸುತ್ತಿದ್ದಳು. +ಬೆಣ್ಣೆ ತೂಗುವ ಪ್ರಾಣಿ ಬುದ್ಧಿಯ ಜಾಟಗೆರೆ ಸತ್ಯಪ್ಪನ ಸಹಾಯ ಹಸ್ತ ಯಾಚಿಸಿದ್ದು ಈಕೆ ಮಾಡಿದ ದೊಡ್ಡ ತಪ್ಪು. ಜಿಡ್ಡು ಹಸ್ತದ ಸತ್ಯಪ ಎಂಥವನೆಂಬುದು ಸಮಸ್ತ ಊರಿಗೆಲ್ಲ ಗೊತ್ತಿರುವ ಸಂಗತಿ. ಮಹಾ ದೈವಾಂಶ ಸಂಭೂತನಂತೆ ಸೂರ್ಯೋದಯಕ್ಕೆ ಪೂರ್ವದಿಂದಲೇ ವರ್ತಿಸುವುದಕ್ಕೆ ಶುರು ಮಾಡುವ ಆ ಸಜ್ಜನ ಮೈಬಗ್ಗಿಸಿ ಎಂದೂ ದುಡಿದವನಲ್ಲ. ಈ ಕಡೆಯ ಕಸವನ್ನು ಆ ಕಡೆ ಹಾಕಿದವನಲ್ಲ. ಆದರೂ ಎಲ್ಲರಿಗಿಂತ ಸುಖವಾಗಿರುವ ನರಮಾನ್ನವನೆಂದರೆ ಅವನೊಬ್ಬನೆ. +‘ಆಗಿರೊದಾದರೂ ಏನು? ಸ್ವಲ್ಪ ತಡಿ’ ಅಂತ ಓಣಿಯ ಕೆಲವರು ಆಕೆಯನ್ನು ಅವನ ಬಳಿಗೆ ಹೋಗದಂತೆ ತಡೆಯಲೆತ್ನಿಸಿದರು. ನಿಷ್ಟುರವಾದಿ ವರಲಕ್ಶ್ಮಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ, ಯಾವ ಗಾಳಿಗೂ; ಯಾವ ಚಳಿಗೂ ಹೆದರದೆ ನೀರಿನಲ್ಲಿ ಮುಳುಗಿದವಳಂತೆ ವರ್ತಿಸಿದಳು. ಇವರೂ ಸಹಾಯ ಮಾಡೊಲ್ಲ! ಮಾಡಬೇಕೆಂದೋರನ್ನೂ ಬಿಡೊದಿಲ್ಲ ಎಂದು ಗೊಣಗಿದಳು. ಅವನು ಮಹಾ ಕಚ್ಚೆ ಹರುಕ … ಅದ್ಯೇನೆ ಅವನು ಆ ಹೆಸರಿಟ್ಟುಕೊಂಡಿರೋದು ಎಂದೊಬ್ಬರಾಡಿದ ಮಾತು ಕೇಳಿದ ಮರು ದಿನವೇ ತನ್ನ ದೂರದ ಸಂಭಂದಿ ವೆಂಕಟರಮಣಪ್ಪನೊಂದಿಗೆ ಶೃಂಗೇರಿಗೆ ಹೋಗಿ ಕೇಶವಿಹೀನಳಾಗಿ ಊರಿಗೆ ಮರಳಿದ್ದಳು. ನಿಲುಗನ್ನಡಿ ಮುಂದೆ ಕಾಲು ತಾಸು ನಿಂತುಕೊಂಡು ತನ್ನೀ ರೂಪ ಯಾವ ಗಂಡಸಿನಲ್ಲೂ ಕಾಮವಾಂಛೆಯನ್ನುಂಟು ಮಾಡಲಾರದೆಂಬ ಆತ್ಮವಿಶ್ವಾಸ ತಳೆದಿದ್ದಳು. ಯಾವ್ಯಾವ ಪೌರಾಣಿಕ ಹೆಂಗಸನ್ನು ತಡೆವಿ ಯಾವ್ಯಾವ ಪೌರಾಣಿಕ ಪುರುಷ ಶಾಪಕ್ಕೀಡಾದನು ಎಂಬಿವೇ ಮೊದಲಾದ ಕಥೆಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಸತ್ಯಪ್ಪ ಪ್ರಯಾಣ ಮಾಡುವಾಗಲೆಲ್ಲ ನೆನಪು ಮಾಡಿಕೊಳ್ಳುತ್ತ ಮತ್ತು ಪ್ರಸ್ತಾಪಿಸುತ್ತ ಪವಿತ್ರ ವಿಧವೆಯನ್ನು ಕಟ್ಟಿಕೊಂಡು ಈ ಊರಿನಿಂದ ಆ ಊರಿಗೆ; ಆ ಊರಿನಿಂದ ಈ ಊರಿಗೆ ಅಲೆದಾಡಿದ. ಕೆಲವು ಕಡೆ ಒಂದೆರಡು ರಾತ್ರಿ ಆತ ಆಕೆಯೊಡನೆ ಒಂಟಿಯಾಗಿ ಕಳೆದಿರುವುದುಂಟು. ಆದರೆ ಜಖಂ ಮಾಡುದುದಿಲ್ಲ. ಅಕ್ಕಾ; ಅಮ್ಮಾ; ತಾಯಿ; ತಂಗೀ ಎಂದು ಸಂಭೋದಿಸುವವನು ಜಖಂ ಮಾಡುವುವುದಾದರೂ ಹೇಗೆ? ಕಾಮವಾಂಛೆಗೆ ಸಂಬಂಧಿಸಿದಂತೆ ಉತ್ತಮಪುರುಷದಲ್ಲಿ ಹೇಳುವುದಾದರೆ ಮೇಲುಪ್ಪರಿಗೆ ಮನೆಯ ಸತ್ಯಪ್ಪನೆಂಬ ದ್ವಿಪಾದಿಯು ಪರಾಕಾಷ್ಟೆ ತಲುಪಿದಾಗ ಗಾರ್ಧಬಿಣಿ, ಮಹಿಷಿಣಿಯೇ ಮೊದಲಾದ ಚತುಷ್ಪಾದಿಗಳನ್ನು ಬಿಟ್ಟಲ್ಲಿ ಯಾವುದೇ ನಿಷ್ಪ್ರಯೋಜಕ ವಾದ್ಯದಲ್ಲೂ ಅಪರೂಪದ ನಾದ ಹೊರಡಿಸಿ ಸವಿಯಬಲ್ಲ ಮಹಾ ಚತುರ ಸತ್ಯಪ್ಪ ಪ್ರತಿವಾಕ್ಯದಲ್ಲಿ ಗೌರವ ವಿಶೇಷಣಗಳನ್ನು ನಿರಾತಂಕವಾಗಿ ಪ್ರಯೋಗಿಸುತ್ತಿದ್ದುದುದನ್ನು ನೋಡಿ ಜನ ದಿಗ್ಭ್ರಮಿತರಾಗಿದ್ದುಂಟು. ಒಪ್ಪಂದದ ಮೇರೆಗೆ ಒಂದು ಕೈನೋಡಿಕೊಂಡಿರುತ್ತಾನೆಂದು ವಿನಾಕಾರಣ ಆಡಿಕೊಂಡರು. ಆ ಬಗ್ಗೆ ಪ್ರಸ್ತಪಿಸಿದರೆ ಸತ್ಯಪ್ಪನ ಮನಸ್ಸಾಕ್ಷಿ ಖಂಡಿತ ಇಲ್ಲ ಎಂದು ಹೇಳುತ್ತದೆ. ಹೌದು! ಅದು ಹೇಳುವುದು ಸರಿ! ಕೀ|| ಶೇ|| ಪರಮೇಶ್ವರ ಶಾಸ್ತ್ರಿಗಳು ಅವನ ದರಿದ್ರ ನೋಡಲಾರದೆ ಕೇವಲ ನೂರ ಒಂದು ರುಪಾಯಿಗೆ ತೆಂಗಿನಕಾಯಿ ಮಂತ್ರಿಸಿ ಅವನ ಮನೆಯ ತಲೆ ಬಾಗಿಲಿಗೆ ಕಟ್ಟದಿದ್ದಲ್ಲಿ ಅವೆನೆಲ್ಲಿ ಈ ಮಟ್ಟಕ್ಕೆ ತಲುಪುತ್ತಿದ್ದ? ಆ ನೆನಪಿಗೆ ಅವನು ಶಾಸ್ತ್ರಿಗಳ ಭಾವಚಿತ್ರವನ್ನು ಪಡಸಾಲೆಗೆ ನೇತು ಹಾಕಿಕೊಂಡಿರುವನು. ’ಏನಯ್ಯಾ? … ನಮ್ಮ ಮೊಮ್ಮಕ್ಕಳಾದ ಶಾಮಾಶಾಸ್ತ್ರಿಗಳ ವಿವಾಹ ಮಹೋತ್ಸವಕ್ಕೆ ಕಾಣಿಕೆ ಏನು ಕೊಡುತ್ತೀಯಾ?’ ಎಂದು ಶಾಸ್ತ್ರಿಗಳು ಕೇಳಿದ್ದಕ್ಕೆ ಸಾವಿರದಾ ಒಂದು ಎಂದುಬಿಟ್ಟಿದ್ದನು. ಹಾಗೆಯೇ ತಳಿರು ಚಪ್ಪರದ ಕೆಳಗೆ ಕಾಣಿಕೆ ಒಪ್ಪಿಸಿ ಪರಮಾನ್ನ, ಪುಳಿಯೋಗರೆ ಉಂಡು ಹತ್ತು ಹೆಜ್ಜೆಗೊಮ್ಮೆ ಡೆಗುತ್ತ ಮರಳಿ ಮನೆತುಂಬ ಧನ್ಯತಾಭಾವ ಪಸರಿಸಿದ್ದನು. ಹೀಗಾಗಿ ಸತ್ಯಪ್ಪ ವೈಯಕ್ತಿಕವಾಗಿ ಎಷ್ಟೇ ಬ್ರಷ್ಟನಿದ್ದರೂ ಶಾಸ್ತ್ರಿಗಳ ಕುಟುಂಬದ ಸರ್ವ ಸದಸ್ಯರ ಮೇಲೆ ಎಣೆ ಇಲ್ಲದಷ್ಟು ಗೌರವ ಇಟ್ಟುಕೊಂಡಿದ್ದನು. ‘ನಿಮ್ಮ ಮದುವೆಗೆ ಯಾರೂ ಕೊಡದಷ್ಟು ಕಾಣಿಕೆ ಕೊಟ್ಟಿರೋನು ಕಣಪ್ಪ … ಅದಕ್ಕೆ ಒಂದು ಮಾತ್ನ ಕೇಳ್ತಿದ್ದೀನಿ. ಇದೆಲ್ಲ ನಿಮ್ಮಂಥ ಬ್ರಾಂಬ್ರಿಗೆ ಸರಿಹೋಗಲ್ಲ ಬಿಟ್ ಬಿಡಿ’ ಎಂದು ಜಿಲ್ಲಾ ಮುಖ್ಯ ಸ್ಥಳದ ಮುಖ್ಯ ಬೀದಿಯಲ್ಲಿ ಶಾಮಾಶಾಸ್ತ್ರಿಗೆ ಬುದ್ಧಿ ಹೇಳಿದಂಥವನು ಮತ್ತು ಅವನಿಂದ “ಏನಪ್ಪ ನಿನ್ನ ತಿಪಟೂರುಕಡೆ ಬುದ್ಧಿ ನನ್ನ ಹತ್ರ ತೋರಿಸಬೇಡಪ್ಪ … ನಿನ್ನ ಎಲೆಯೊಳಗೆ ಕತ್ತೆ ಸತ್ತಿರೊದ್ನ ಬಿಟ್ಟು ನನ್ನ ಎಲೇಲಿರೊ ನೊಣದ ಬಗ್ಗೆ ಹೇಳೋಕೆ ಬಂದಿದ್ದೀಯ” ಎಂದು ಮುಂತಾಗಿ ವಾಮಾಚಾರವಾಗಿ ಬಯ್ಯಿಸಿಕೊಂಡವನು. ನನ್ನ ಮುಂದೆ ನನಗಿಂತ ಚಿಕ್ಕವರು ಸಾಯೋದನ್ನು ನೋಡಲಿಕ್ಕಾಗದೆ ಬುದ್ಧಿ ಹೇಳಿದೆ ಎಂದೊಂದು ದಿನ ಪಶ್ಚಾತ್ತಾಪಪಟ್ಟ ತಿಪಟೂರು ಮೂಲದ ಮೇಲುಪ್ಪರಿಗೆ ಮನೆಯ ಸತ್ಯಪ್ಪ ಶವಸಂಸ್ಕಾರಕ್ಕೆಂದು ಓಡಿ ಬಂದಾಗ ಕಣ್ಣ ತುಂಬ ನೀರು ತಂದುಕೊಂಡಿದ್ದನು. ದೈವಾಂಶ ಸಂಭೂತರಾದ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ ಶಾಮಾ ಶಾಸ್ತಿಗಳು ಸತ್ತ ಮೇಲೆ ಶೂದ್ರರಿಗಿಂತ ಅತ್ತತ್ತವಾಗಿ ಶವ ಸಂಸ್ಕಾರ ಮಾಡಿಸಿಕೊಳ್ಳಬೇಕಾಗಿ ಬಂದಿತಲ್ಲ … ಅವರೇನು ಪಾಪ ಮಾಡಿದ್ರು? … ಇದನ್ನೆಲ್ಲ ಅನುಭವಿಸೋಕೆ ನೀನಿನ್ನು ಬದುಕಿದ್ದೀಯಲ್ಲ ತಾಯಿ” ಎಂದು ವರಲಕ್ಶ್ಮಮ್ಮನೆದುರು ಸ್ವಾಂತನ ಹೇಳಿದ್ದನು. “ಅವರು ಸತ್ತು ಲೌಕಿಕ ವ್ಯವಹಾರ ಚುಕ್ತಾ ಮಾಡಿಕೊಂಡ್ರು … ನಮ್ಮದಿನ್ನು ಯಾವತ್ತೋ” ಎಂದು ನಿಟ್ಟುಸಿರುಬಿಟ್ಟ ಆಕೆಗೆ “ಹೆದರಬೇದ ತಾಯಿ ನೀವು ಗಂಡಸಿನಂತೆ ಬದುಕುವಂತಾಗಬೇಕು. ಇದ್ಕೆ ನನ್ನಿಂದ ಯಾವ ಸಹಾಯವನ್ನದ್ರೂ ಪಡೀಬೌದು” ಎಂದು ಹೇಳಿ ಬಂದಿದ್ದನು. ಇಷ್ಟೊಂದು ಹಿನ್ನೆಲೆ ಇರುವ ಸತ್ಯಪ್ಪ ವರಲಕ್ಶ್ಮಮ್ಮನ ಕಡೆಗೆ ಕೆಟ್ಟ ಕಣ್ಣಿನಿಂದ ನೋಡುವವನಾದರೂ ಹೇಗೆ? +ಈತನ ಪ್ರತ್ನಕ್ಕಿಂತ ಮುಖ್ಯವಾಗಿ ವರಲಕ್ಶ್ಮಮ್ಮ ಬ್ರಾಹ್ಮಣಳಾಗಿದ್ದುದು; ಗಂಡನನ್ನು ಕಳೆದುಕೊಂದ ಕೆಲವೇ ದಿನಗಳಲ್ಲಿ ಕೇಶವಿಹೀನಳಾಗಿ ನಾರುಮಡಿಯುಟ್ಟಿದ್ದುದು ತುಂಬಾ ಸಹಾಯಾಕ್ಕೆ ಬಂದಿತು. ಅದೂ ಅಲ್ಲದೆ ಪ್ರತಿಯೊಂದು ಆಫೀಸು, ಕಛೇರಿಗಳಲ್ಲಿ ಎಲ್ಲಿ ನೋಡಿದರೂ ಬ್ರಾಂಹ್ಮಣ ಸಂಜಾತರೇ ತುಂಬಿಕೊಡಿದ್ದುದು ಹೆಚ್ಚಿನ ಸಹಾಯಕ್ಕೆ ಬಂದಿತು. ಸತ್ಯಪ್ಪನ ಸುಗಂಧಯುಕ್ತ ಮಾತುಗಳು ಬೇರೆ .. ಇದೆಲ್ಲ ಒಳ್ಳೆಯ ಪರಿಣಾಮ ಬೀರದೆ ಇರಲಿಲ್ಲ. ಅಯ್ಯೋ ಪಾಪ ಎನ್ನುವವರೆಷ್ಟೋ? ನಾವು ನಮ್ಮವರಿಗೆ ಸಹಾಯ ಮಾಡದಿದ್ರೆ ಹೇಗ್ರಿ ಎನ್ನುವವರೆಷ್ಟೊ? ಹೀಗಾಗಿ ಕೊಡಲೀಲಿ ಹೋಗೋ ಕೆಲಸ ಉಗರಿಂದಾಯಿತು. +ಅಂದ ಮಾತ್ರಕ್ಕೆ ಸತ್ಯಪ್ಪ ವರಲಕ್ಷ್ಮಮಗಷ್ಟೇ ನಿಷ್ಠನಾಗಿರಲಿಲ್ಲ. “ಹೀಗೆಲ್ಲ ಮಾಡ್ತಾ ಇದ್ದೀನಿ ಅಮ್ಮಾ … ಇದ್ಕೆ ನಿಮ್ಮ ಅಭ್ಯಂತರವಿಲ್ಲವಷ್ಟೆ” ಅಂತ ಮಾತೋಶ್ರೀ ಅಲುಮೇಲಮ್ಮನವರನ್ನು ಸಂಧಿಸಿದ್ದ. ಅವನ ಮುಖದರ್ಶನ ಮಾಡಿಕೊಳ್ಳುತ್ತಲೆ ಆಕೆ ವಯ್ಯವಯ್ಯಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಳು. ಸೂತಕ ಹೋಗಲಾಡಿಸಲಿಕ್ಕೇನು ಮಾಡುವುದಪ್ಪಾ ಅಮ್ಮಾ … ಎಂದು ಪೇಚಾಡಿದ್ದಳು. ಇದರಿಂದ ತಿಲಮಾತ್ರ ಬೇಸರಕ್ಕೀಡಾಗಲಿಲ ಸತ್ಯಪ್ಪ … ದೊಡ್ಡವರು ಯಾವಾಗ್ಲೂ ಹೀಗೆಯೇ ಎಂದುಕೊಂಡುಬಿಟ್ಟ … +“ನನ್ ಮಾತ್ರ ಅಪಾರ್ಥ ಮಾಡ್ಕೋಬೇಡಿ ಅಮ್ಮಾ … ಹಿರೇ ಶಾಸ್ತ್ರಿಗಳ ಋಣದಲ್ಲಿರೋನು ನಾನು … ತಾಯಿ ಸಮಾನರಾದ ನಿಮ್ಮ ಮನ ನೋಯ್ಸಿ ನಾನ್ಯಾವ ನರಕಕ್ಕೆ ಹೋಗ್ಲಿ … ವರಲಕ್ಷಮ್ಮನವರಿಗೂ ಹಕ್ಕಿರುವಂತೆ ಯಾವತ್ತೂ ಆಸ್ತಿಮೇಲೆ ನಿಮ್ಗೂ ಹಕ್ಕಿದೆ. ಎಷ್ಟಿದ್ರೂ ನೀವು ಶಾಮಣ್ಣನ್ನ ಹೆತ್ತೋರು” ಎಂದು ತೂಕದ ಮಾತುಗಳನ್ನಾಡಿದ. +ಅದರಿಂದ ಅಲುಮೇಲಮ್ಮ ಎಷ್ಟೊ ಕರದಿಬಿಟ್ಟಳು. +“ಅರ್ಥ ಆಯ್ತಪ್ಪಾ… ನೀನು ಹೇಳೋದು ಲೌಕಿಕವಾಗಿ ಸರಿ ಇರಬೌದು … ಕಾಗದ ಪತ್ರಗಳಿಗೆ ಸಹಿ ಹಾಕಿ ನಾನ್ಯಾವ ನರಕಕ್ಕೆ ಹೋಗ್ಲಿ … ಬೇಡ … ಬೇಡ … ಹೆಂಡತಿ ಅಂಬೋಳೆ ಎಲ್ಲಾ ಅನುಭವಿಸ್ಲಿ … ನನಗೆ ನನ್ನ ಮಗನ ಕವಡೆ ಕಾಸುಬೇಡ” ನೊಂದ ಮನಸ್ಸಿನಿಂದ ಬಿಲ್ಕುಲ್ ನುಡಿದಿಬಿಟ್ಟಿದ್ದಳು ಆ ವೃದ್ಧೆ. +ಪ್ರಾರಬ್ಧ ಬಗೆಹರಿಯಿತೆಂದು ಸತ್ಯಪ್ಪ ಮನೆಗೆ ಮರಳಿದವನೆ ತಲೆ ಸ್ನಾನ ಮಾಡಿ ಅಂದು ಶನಿವಾರವಾದ್ದರಿಂದ ಹನುಮಂತ ದೇವರ ಗುಡಿಗೆ ಹೋಗಿ ತುಪ್ಪದ ದೀಪ ಮುಡಿಸಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ ” ನನ್ನದೇನೇ ತಪ್ಪಿದ್ರು ಹೊಟ್ಟೇಲಿ ಹಾಕಿಕೊಂಡು ಕಾಪಾಡು ಪ್ರಾಣದೇವರೇ” ಎಂದು ನಿರುಮ್ಮಳವಾಗಿದ್ದುಬಿಟ್ಟಿದ್ದನು. +ಅತ್ತೆ ಸೊಸೆಯರ ನಡುವೆ ರಾಜಿ ಕುದುರಿಸಲು ಅಪ್ಪ ಹಲವು ರೀತಿಯ ಪ್ರಯತ್ನ ಮಾಡಿದ. ವಿಧವೆಯರು ನಿಟ್ಟುಸಿರು ಬಿಡುವಂತಾಗಬಾರದೆಂಬುದೇ ಆತನ ಧ್ಯೇಯವಾಗಿತ್ತು. “ರಂಡಮುಂಡೇರು ಕಣ್ಣೀರು ಹಾಕಿದ್ರೆ ಈ ದೇಶಕ್ಕೆ ಒಳ್ಳೇದಾಗೋದಿಲ್ಲ” ಅಂತ ಆತ ಮಾತು ಮಾತಿಗೆ ಅಂತಿದ್ದ. ಆದರೆ ನಮ್ಮವರೇ ಆಗಿದ್ದ ಮುವ್ವರು ರಂಡೆಮುಂಡೆಯರಿಗೂ ಆತನಿಗೂ ಆಗುತ್ತಿರಲಿಲ್ಲ. ಅವರ ಹೆಸರು ಎತ್ತಿದರೆ ಮುಂಗುಸಿಯಂತೆ ಸರ್‍ಪರ್ ಸದ್ದು ಮಾಡುತ್ತಿದ್ದುದು ವಿಚಿತ್ರವಾಗಿತ್ತು. +ವಂಶ ಸರ್ವನಾಶಣವಾಗಬಾರದೆಂಬ ಸದುದ್ದೇಶದಿಂದನಿಂಗಮ್ಮಜ್ಜಿ ಆ ಮನೆಯನ್ನು ನಮ್ಮ ಅಪ್ಪ ಯಾ ತನ್ನ ಏಕಮಾತ್ರ ಅಳಿಯ (ಅಳಿಯ ಅಂದರೂ ಅವನೆ; ಮಗ ಅಂದರು ಅವನೆ) ಖರೀದಿಸದಂತೆ ರಚಿಸಿದ್ದ ಅನೇಕ ವ್ಯೂಹಗಳನ್ನು ಲೀಲಾಜಾಲವಾಗಿ ಭೇದಿಸಿ ಮುನ್ನಡೆಯುತ್ತಿದ್ದ ಆ ಧೀರ್ಘ ಕಾಯನನ್ನು (ಅಭಿಮನ್ಯು ಕಾಳಗದಲ್ಲಿ ಸೈಂಧವನ ಪಾತ್ರ ಮಾಡಿ ಫೇಮೋಸಾಗಿದ್ದ) ತಡೆಯುವವರಾರು? ಅತ್ತೆ ಸೊಸೆಯರ ನಡುವೆ ರಾಜಿಕುದುರಿಸಲು ಸತ್ಯಪ್ಪನ ನೆರವು ಪಡೆದರೆ ವಾಸಿ ಎಂದು ಸಂಸಾರ ಸಾಗರಕ್ಕೆ ರೋಸಿ ಭೋಧೆ ಸ್ವೀಕರಿಸಲು ಗುರುಸಾಂತಪ್ಪ ಸಲಹೆ ಮಾಡಿದ ಕೋಡಿಹಳ್ಳಿ ದೊಂಬಿ ಖಟ್ಲೆಯಲ್ಲಿ ತನ್ನ ವಿರುದ್ಧ ಸಾಕ್ಷಿ ನುಡಿದಿದ್ದ ಸತ್ಯಪ್ಪನ ಬಳಿಗೆ ಹೋಗುವುದಾದರೂ ಎಂತ್? “ಲೇ ತಿಪಟೂರುಕಡೆಯ ಕೊಳೆತ ತೆಂಗಿನಕಾಯಿಯೇ … ನನ್ ವಿರುದ್ಧ ಸಾಕ್ಷಿ ಹೇಳುವಷ್ಟು ಧೈರ್ಯ ಬಂತು ನಿನಗೆ… ತಿಂಗಳೊಪ್ಪತ್ತಿನಲ್ಲಿನಿನ್ನ ಊರಿನಿಂದ ಓಡಿಸದಿದ್ದರೆ ನಾನು ಶರಣನ್ನ ಮಗ್ನೇ ಅಲ್ಲ” ಎಂದು ಆತ ಶಪಥ ಮಾಡಿದ್ದುದು ನನ್ನ ನೆನಪಿನಲ್ಲಿತ್ತು. ಜಮೀನ್ದಾರಿಕೆ ನಶಿಸಿಹೋಗಿ ಅದರ ಗತ್ತು ಮಾತ್ರ ಉಳಿದುಕೊಂಡಿರುವ ಅಪ್ಪನಿಗೆ ಆ ತಾಕತ್ತು ಇಲ್ಲವೆಂದು ನನಗೆ ಆಗಿನಿಂದಲೇ ಗೊತ್ತು! ನಾನು ಅಂದುಕೊಂಡಿದ್ದಂತೆ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. “ಅವನ ಕರುಮಕ್ಕೆ ಅವನೋಗ್ತಾನೆ ಬುಡು” ಅಂತ ಅಜ್ಜಿಯೇ ಸಮಾಧಾನ ಹೇಳಿತ್ತು. ಈ ಕಾರಣದಿಂದ ಅಪ್ಪ ಒಲ್ಲದ ಮನಸ್ಸಿನಿಂದ ಅನುಕೂಲ ಸಿಂಧು ಸತ್ಯಪ್ಪನ ಬಳಿಗೆ ತಾನಾಗಿಯೇ ಹೋಗುವುದು ಸಾಧ್ಯವಿರಲಿಲ್ಲ. ಅವಧೂತ ಗುಸಾಂತಪ್ಪ (ಗುಪ್ತರೋಗಗಳ ತಂಗುದಾಣವೆಂದು ಹೆಸರಾದ)ನೇ ಗಾಂಜಾ ಕೊಳ್ಳುವ ನೆಪದಲಿ ಮೇಲುಪ್ಪರಿಗೆ ಮನೆ ತಲುಪಿದ. ಎರಡು ಚೀಟಿ ಕೊಂಡು ಸೊಂಟದ ಮೂಲೆಯಲ್ಲಿ ಭದ್ರಪಡಿಸಿಕೊಂಡ. ಭವಬಂಧನದ ಬಗ್ಗೆ ರಾಜಕಾರಣದ ಬಗ್ಗೆ ಮಾತಾಡುತ್ತಡುತ್ತ ಶಾಸ್ತ್ರಿಗಳ ಮನೆ ತಗಾದೆ ತಲುಪಿದ. ನತದೃಷ್ಟೆ ವಿಧವೆಯರ ಬಗೆಗೂ ಮಾತೆದ್ದಿದ. ಮುತ್ತು ಪೋಣಿಸಿದಂತೆ ಖರೀದಿದಾರ ಹಾಲಪ್ಪನ ಬಗೆಗೂ ಸಹ ಏನು ಮಾಡಲೂ ಹಿಂಜರಿಯದ ಹಾಲಪ್ಪನೆಂಬ ಪ್ರವಾಹ ವಿರುದ್ಧ ಈಜುವುದು ದಡ್ಡನಲ್ಲದ ಸತ್ಯಪ್ಪ ಅಪ್ಪನ ಪರೋಪಕಾರೀ ಬುದ್ಧಿಯನ್ನು ಹಾಡಿ ಹೊಗಳಿದ. ಅಂತಹ ಒಬ್ಬ ಪರಾಕ್ರಮಿ ತನಗೆ ಶರಣಾಗಬೇಕೆಂದೇ ಕೊಲ್ಲೂರುಸ್ವಾಮಿಗಳಿಂದ ಮಂತ್ರಿಸಿ ತಂದುಕಟ್ಟಿದ್ದ, ಗಣೇಶನನ್ನು ಹೋಲುವ ಎಕ್ಕೆ ಗಿಡದ ಬೊಡ್ಡೆ ಇದ್ದ ತೊಲೆ ಕಡೆ ಭಕ್ತಿಪೂರ್ವಕವಾಗಿ ನೋಡಿ ಸಮಾಧಾನದ ಉಸಿರು ಬಿಟ್ಟು ಅದಕ್ಕೇನು ತಾತ … ಇದ್ಕೇನು ತಾತ ಅಂತ ನಯಸ್ಸಾಗಿ ಮಾತಾಡಿದ. ಅಜಾತಶತ್ರು ಹಾಲಪ್ಪನ ಮನೆಗೆ ಖುದ್ದು ತಾನೇ ಹೋಗುವುದಾಗಿ ವಚನ ನೀಡಿದ. “ತಪ್ಪಿಸಿಕೊಂಡೀಯಾ” ಅಂದಿದ್ದಕ್ಕೆ “ತಿಪಟೂರು ಕಡ್ಯೋರು ಎಂದು ಕೊಟ್ಟ ಮಾತಿಗೆ ತಪ್ಪೋದಿಲ್ಲ ತಾತಾ” ಎಮ್ದು ಸಮರ್ಥಿಸಿಕೊಂಡ. +ಬೋದಿ ವೃಕ್ಷದಂಥ ಗುರುಸಾಂತಪ್ಪ ನೀಡಿದ ಮಾಹಿತಿ ಆಧಾರದ ಮೇಲೆ ಮುಖ್ಯವಾಗಿ ಹೃದಯ ಬಡಿತ ಹೆಚ್ಚಿಸಿಕೊಂಡ ಈಕೈಕ ವ್ಯಕ್ತಿ ಎಂದರೆ ನಾನೆ. ಪುಸ್ತಕಗಳನ್ನು ಓದುತ್ತ ಲೇಖಕನಾದವನಲ್ಲ ನಾನು. ಮನುಷ್ಯನ ಮೇಲೆ ನಿಗಾ ಇಡುವುದೆಂದರೆ ಮೃಷ್ಟನ್ನ ಭೋಜನ ಮಾಡಿದಂಥ ಅನುಭವ ನೆನಪಾಗುವುದು. ಅಪ್ರತಿಮ ಸಾಹಿತಿಗಳೆಂದರೆ, ಕ್ರಾಂತಿಕಾರಿಗಳೆಂದರೆ ಮನುಷ್ಯರೆ. ಒಬ್ಬ ಓದಿದಂತೆಯೇ ಲೆಕ್ಕ. ಆದರೆ ನನಗೆ ಭಾರತೀಯ ಮನುಷ್ಯನ ಜಾಯಮಾನ. ನನಗಾಗಲೀ; ನನ್ನ ಬರಹವಾಗಳಿ ಇದಕ್ಕೆ ಹೊರತಲ್ಲ. ಭಾರತೀಯ ಮನುಷ್ಯನು ಕೆಟ್ಟವನು, ಒಳ್ಳೆಯವನು ಅಂತ ನಾನು ವಿಭಜಿಸಲು ಹೋಗುವುದಿಲ್ಲ. ಇಡೀ ದೇಹವೆಂಭೋ ದೇಹಕ್ಕೆ ಕುಷ್ಟರೋಗ ಹತ್ತಿರುವಾಗ ಒಂಚೂರು ಬೆರಳು ಆರೋಗ್ಯಕರವಾಗಿರಬೇಕೆಂದು ಊಹಿಸುವುದು ಎಷ್ಟು ಅಸಂಜಸ? ಸುಲಭವಾಗಿ ಬದುಕಲಿಕ್ಕೆ ಭಾರತದ ಮನುಷ್ಯ ಒಳದಾರಿ ಕಂಡುಕೊಳ್ಳುವುದರಲ್ಲಿ ಚಾಣಾಕ್ಷ. ಇನ್ನೊಬ್ಬರನ್ನು ಬಲಿ ಕೊಟ್ಟಾದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳದೆ ಇರಲಾರ. ಇಂಥವರ ಪೈಕಿ ಮೇಲುಪ್ಪರಿಗೆ ಮನೆಯ ಸತ್ಯಪ್ಪನೂ ಒಬ್ಬ. ಈತನ ಅವಗುಣಗಳನ್ನು ಲೇಖಕನಾಗಿ ನಾನು ತುಂಬ ಇಷ್ಟಪಡುವೆನು. ನಾನೀತನನ್ನು ಮೈ ಎಲ್ಲ ಕಣ್ಣಾಗಿ ಗಮನಿಸುತ್ತ ಬಂದಿರುವೆನು. ಈತನ ಬಗೆಗಿನ ಉಪಕಥೆಗಳನ್ನು ಕೇಳುತ್ತ ಬಂದಿರುವೆನು. ಪ್ರತಿಯೊಂದು ಕಥೆಗೂ ರೋಮಾಂಚನದ ಕಾಣಿಕೆ ನೀಡಿರುವೆನು. ಸದ್ವಿನಿಯದಿಂದಲೇ ಮಾಡಲ್ಪಟ್ಟಂಥ ಸತ್ಯಪ್ಪನ ಬಗ್ಗೆ ಆಲೋಚಿಸುವಾಗ ನನಗೆ ಪಂಚತಂತ್ರದ ಒಂದು ಮಾತು ನೆನಪಿಗೆ ಬರುತ್ತದೆ. ಅದೂ ಮಿತ್ರ ಭೇದಕ್ಕೆ ಸಂಬಂಧಿಸಿದ್ದು.ಅವನು ಹೇಳಿದ್ದಾನೆ ಮುಖಂ ಪದ್ಮದಲಾಕಾರಂ ಅಂದರೆ ಮುಖವು ಪದ್ಮದಳದಂತೆ ಸೊಗಸಾಗಿರುತ್ತದೆ. ವಾಣಿ ಚಂದನ ಶೀತಲಾ ಅಂದರೆ ಮಾತು ಚಂದನದಂತೆ ತಂಪು ನೀಡುತ್ತದೆ. ಹೃದಯಂ ಕರ್ತರೀತುಲ್ಯಂ ಅಂದರೆ ಅವನ ಹೃದಯವು ಕತ್ತರಿಯಂತೆ ಇರುತ್ತದೆ. ಪಂಚತಂತ್ರದ ಕರ್ತೃ ಸತ್ಯಪ್ಪನಂಥವನನ್ನು ನೋಡೇ ಈ ಶ್ಲೋಕ ರಚಿಸಿದ್ದಾನೆಂದು ಹೇಳಬಹುದು. ಸತ್ಯಪ್ಪ ದುಷ್ಟ ಅಂಥ ಗೊತ್ತಿದ್ದರೂ ಅವನ ಸ್ನೇಹವನ್ನು ದೂರ ಮಾಡುವುದು ಎಂಥವರಿಗೂ ಸಾದ್ಯವಿಲ್ಲ. ಅವನ ಬಗ್ಗೆ ಸಾವಿರ ಕೆಟ್ಟ ಮಾತನ್ನಾಡುವವರೆಲ್ಲ ಅವನ ಬಳಿ ಬಾಲಕ್ಕೆ ಬೆಣ್ಣೆ ಹಚ್ಚಿಕೊಂಡು ಕುಂಯ್ ಕುಂಯ್ ರಾಗಾಲಾಪನೆ ಮಾಡುತ್ತ ಬೀಸುತ್ತಲೇ ಇರುತ್ತಾರೆ. ಆದರೆ ನಮ್ಮ ತೀರ್ಥರೂಪ ಮಾತ್ರ ಇದಕ್ಕೆ ಅಪವಾದ. ಅಂದ ಮಾತ್ರಕ್ಕೆ ನಮ್ಮ ತೀರ್ಥರೂಪ ಮಹಾ ಸಜ್ಜನನೆಂದರ್ಥವಲ್ಲ. ಆತ ಹೌದೆಂದರೆ ಹೌದು ಅಲ್ಲ ಅಂದರೆ ಅಲ್ಲ. ಮಾತು ಏಕ್ಮಾರ್ ದೋ ತುಕಡಾ. ನನ್ನ ತಾತ ಮುತ್ತಾತ ಜಮೀನ್ದಾರರಾಗಿದ್ದರು ಅನ್ನೋ ಕಾರಣಕ್ಕೆ ಅದರ ಗತ್ತನ್ನು ಮಾತ್ರ ಉಳಿಸಿಕೊಂಡಿದ್ದ ನನ್ನಪ್ಪ ಅದನ್ನು ತನ್ನ ಪ್ರತಿ ನಡುವಳಿಕೆಯಲ್ಲೂ ಪ್ರಕಟಿಸುತ್ತಿದ್ದ. ಎಲ್ಲರೂ ತನ್ನ ಅಡಿಯಾಳಗಿರಬೇಕೆಂದುಕೊಳ್ಳುತ್ತಿದ್ದ. ಏಷ್ಟೊ ಸಂದರ್ಭದಲ್ಲಿ ಹಾಗಾಗದಿದ್ದಾಗ ಒಳಗೊಳಗೇ ಕೆಟ್ಟದಾಗಿ ನರಳುತ್ತಿದ್ದ. ಹೆಂಡಿರು ಮಕ್ಕಳ ಮೆಲೆ ಕೋಪ ಹರಿಸುತ್ತಿದ್ದ. ಸದೆಯುತ್ತಿದ್ದ. ಹೀಗಾಗಿ ಅವನ ದೇಹದ ಸಣ್ಣ ಕರುಳಿನಲ್ಲಿ ಹೈಡ್ರೋಕ್ಲೋರಿಕ್ ಆಯ್ಸಿಡ್ ಅಗತ್ಯಕ್ಕಿಂತ ಹೆಚ್ಚಾಗಿ ಸ್ರವಿಸಿ ಅಲ್ಲೊಂದು ಇಲ್ಲೊಂದು ಹುಣ್ಣು ಮಾಡಿತ್ತು. ಅದು ಆತನ ಕೋಪಕ್ಕೆ ಕಳಸಪ್ರಾಯವಾಗಿತ್ತು. ‘ಲೇ ಬಣಜಿಗ ನೀನೆ ನನ್ನ ಮನೆ ಬಾಗ್ಲಿಗೆ ಬರೋಹಂಗ ಮಾಡ್ತೀನಿ’ ಅಂತ ಹಿಂದೆ ಒಮ್ಮೆ ಶಪಥ ಮಾಡಿದ್ದ. ಇಷ್ಟು ಟೈಮಿಗೆ ಸರ್ಯಾಗಿ ಸತ್ಯಪ್ಪ ಬರುವನೆಂದು ಗುರುಸಾಂತಪ್ಪ ವಿನಯಪೂರ್ವಕವಾಗಿ ಹೇಳಿದಾಗ ಸಹಜವಾಗಿ ಅಪ್ಪ ಉಬ್ಬಿ ಹೋದ. ಎದುರಾಳಿಯನು ಮಣಿಸುವದ್ರಲ್ಲಿ ಆತ ತುಂಬ ನಿಷ್ಣಾತನಾಗಿದ್ದ. ದಿಗ್ಭ್ರಮೆ ಎಂಬ ಬಲೆಯಲ್ಲಿ ಕೆಡವಿ ಮೂಕ ಪಶು ಚೇತರಿಕೊಳ್ಳದಂತೆ ಮಾಡಿ ಬಿಡಲು ಆತವೇನು ಮಾರಕಾಸ್ತ್ರಗಳನ್ನು ಉಪಯೋಗಿಸುತ್ತಿರಲಿಲ್ಲ. ಸಂಬೋಧನೆಗೆ ಅಗತ್ಯವಾದ ಧ್ವನಿಗೆ ಸ್ವಲ್ಪ ಗತ್ತು ಸೇರಿಸುತ್ತಿದ್ದ. ಗರಿಗರಿ ರೇಶಿಮೆ ಅಂಗಿ ಪರಮಸುಖ್ ಪಂಚೆಯನ್ನು ತೊಡುತ್ತಿದ್ದ. ನುಣ್ಣಗೆ ಬೋಳಿಸಿದ ಮುಖಕ್ಕೆ ಆಫ್‌ಘಾನ್ ಸ್ನೋ ಪೌಡರ್ ಹಚ್ಚುತ್ತಿದ್ದ. ಗಂಧೆಣ್ಣೆ ಹಚ್ಚಿ ಡಬ್ಬಲ್ ಕ್ರಾಪ್ ಬಾಚುತ್ತಿದ್ದ. ಹತ್ತು ಬೆರಳುಗಳ ಪೈಕಿ ನಾಲ್ಕು ಬೆರಳುಗಳಿಗೆ ಉಂಗುರ ತೊಡುತ್ತಿದ್ದ. ಅಲ್ಲದೆ ಘಮಘಮ ಎಣ್ಣೆಯಲ್ಲಿ ಅದ್ದಿ ಒಂಚೂರು ಅರಳೆಯನ್ನು ಬಲಗಿವಿಯ ಮೂಲೆಯಲ್ಲಿ ಅಡಗಿಸಿಟ್ಟು ಉನ್ನತಾಸನದ ಮೇಲೆ ಹನಿಡ್ಯೂ ಸಿಗರೇಟು ಹಚ್ಚಿ ಭಲೆ ಸ್ಟೈಲಿನಿಂದ ಕೂಡುತ್ತಿದ್ದ. ಶ್ರೀಕೃಷ್ಣ ಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್‌ಟಿಆರ್‌ಗೆ ನಮ್ಮಪ್ಪನನ್ನು ತೀರ ಸಹಜವಾಗಿಯೇ ನನ್ನಂಥವರು ಹೋಲಿಸುತ್ತಿದ್ದುದುಂಟು. ಆ ದಿನ ಅಪ್ಪ ಅದೇರೀತಿ ಕೂತುಕೊಂಡ ಕಾಲು ಗಂಟೆಯನಂತರ ಬಿಜಯಂಗೈದ ಮೇಲುಪ್ಪರಿಗೆ ಮನೆ ಸತ್ಯಪ್ಪ ಇದಕೆ ತದ್ವಿರುದ್ಧವಾಗಿದ್ದ. ನಿರ್ಗತಿಕನಂತಿದ್ದ. ವಿಷೇಶ ಗೌರವ ಸೂಚಕವಾಗಿ ಮಾತಾಡುತ್ತ ಬಂದ ಅವನನು ಅಪ್ಪ ನೀಚ ಸ್ಠಾನದಲ್ಲಿ ಕುಳ್ಳರಿಸಿದ. ನನ್ನ ಆಶೀರ್ವಾದದಿಂದಲೇ ನಿನಗೆ ಒಂದು ತುತ್ತು ಕೂಳು ಸಿಗುತ್ತಲಿರುವುದು ಎಂಬ ಧಿಮಾಕಿನಿಂದಲೇ ಅಲ್ಲಡಿಸುತ್ತಿದ್ದ. ತನಗೆ ಶರಣಾದವರಿಗೆ ತುತ್ತು ಪ್ರಸಾದ ಕರುಣಿಸುವುದರಲ್ಲಿ ಅಪ್ಪನ ಒಂದು ಕೈ ಮುಂದು. ಮನೆಯಲ್ಲಿ ಕೂಳು ದುರ್ಬಲವಾಗಿದ್ದರೂ ಪ್ರಸಾದ ಮಾತ್ರ ಅಲಂಕೃತವಾಗಿರುತ್ತಿತ್ತು. ಅದೂ ಅಲ್ಲದೆ ಅಪರೂಪಕ್ಕೆ ಸತ್ಯಪ್ಪ ಬಂದಿದ್ದಾನಂತ ಅವ್ವ ಘಮಘಮ ಪರಿಮಳ ಕಾರುವಂಥ ಉಪ್ಪಿಟ್ಟು ಮಾಡಿದ್ದಳು. ತಿನ್ನೊದು ತಿಂದಾಮೇಲೆ, ಕುಡಿಯೋದು ಕುಡಿದಾದ ಮೇಲೆ ಮಾಅತು ಶಾಸ್ತ್ರಿಗಳ ಮನೆ ವಿಷಯಕ್ಕೆ ಬಂತು. ಎಂಥಾ ಮನೆ? ಎನ್ಕಥೆ? ಅಂಥ ಹೊಗಳಿದರು. ಹಾಗೆಯೇಆ ಮನೆಯ ಪೂರ್ವೇತಿಹಾಸ ಕೆದರಿದರು. ನಮ್ಮಪ್ಪನಾಗಲೀ, ಸತ್ಯಪ್ಪನಾಗಲೀ ಸ್ಥಳಿಯರಾಗಿರಲಿಲ್ಲ. ನೂರು ಮೈಲಿ ದುಉರದೂರಗಳಿಂದ ತಲಾ ಒಂದೊಂದು ತುಗುಡು ಮಾಡಿ ಅದರಿಂದ ಬಚಾವಾಗಲು ಸದರೀ ಉರಿಗೆ ಬಂದು ಯಾರದೋ ಆಸ್ತಿ ಮೇಲೆ ವಿಜಯ ಪತಾಕೆ ಹಾರಿಸಿದಂಥವರು. ತುಡುಗಿನ ವಿಷಯದಲ್ಲಿ ನಮ್ಮಪ್ಪ ಒಂದು ಹೆಜ್ಜೆ ಮುಂದು. ಸರ್ಕಲ್ ಇನ್ಸೆಕ್ಟರ್ ಮಗಳನ್ನ ಲವ್ ಮಾಡಿ ಓಡಿ ಬಂದಿರೋ ನಮ್ಮಪ್ಪನ ಬಗ್ಗೆ ಬರೆದರೆ ತ್ರಿಶಂಕು ಸ್ಥಿತೀಲಿರೋ ಶಾಮನ ಆತ್ಮ ವಿಲಿವಿಲಿ ಒದ್ದಾಡುವುದು ಗ್ಯಾರಂಟಿ. ‘ನಿಮ್ಮಪ್ಪನ ಘನ ಕಾರ್ಯಗಳ ಬಗ್ಗೆ ನಾನೊಂದು ಕಾದಂಬರಿ ಬರೀತೀನಿ ನೋಡ್ತಿರು’ ಎಂದು ಆತ ಅಂತಿದ್ದುದು ನೆನಪಾಗುತ್ತದೆ. ಬೇರೆಯವರ ಬಗ್ಗೆ ಅಷ್ಟು ಆಸಕ್ತಿ ಇರದಿದ್ದ ಅವನಿಗೆ ಮೇಲುಪ್ಪರಿಗೆ ಮನೆ ಸತ್ಯಪ್ಪನ ಬಗ್ಗೆ ಅಷ್ಟು ಗೊತ್ತಿಲ್ಲ. ನಾನು ಶೋಧಿಸಿರುವ ಪ್ರಕಾರ ಆತ ತಿಪಟೂರಿನಲ್ಲಿ ತೆಂಗಿನಕಾಯಿ ಸಗಟು ವ್ಯಾಪಾರಿಯಾಗಿದ್ದ. ಆತನ ಇಬ್ಬರುಹೇಂಅತಿಯರೂ ಅನುಮಾನಸ್ಪದವಾಗಿ ಸತ್ತಿದ್ದರು. ಭೈರಪ್ಪನವರ ಸಾಕ್ಷಿ ಕಾದಂಬರಿಯ ನಾಯಕನಂತಿದ್ದ ಆತ ಸದರೀ ಊರಿಂದ ಮೇಲುಪ್ಪರಿಗೆ ಮನೆಯ ಶಾಂತಪ್ಪ ತೆಂಗಿನಕಾಯಿ ಖರೀದಿಗೆ ತಿಪಟೂರಿಗೆ ಹೋದಾಗಲೆಲ್ಲ ಸತ್ಯಪ್ಪನ ಮನೇಲಿ ಉಳಕೊಳ್ತಿದ್ದ. ನ್ಯಾಸ್ತ ಬೆಳೆಸಿದ. ಗಇ ನ್ಯಾಸ್ತ ಅದು. ಸದರೀ ಊರಿಗೂ ಬರ್ತಿದ್ದ.. ಹೋಗ್ತಿದ್ದ. ಒಂದು ದಿನ ಶಾಂತಪ್ಪ ಅರಗಿಣಿಯಂಥ ಹೆಂಡತಿಯನ್ನೂ; ಲಕ್ಷ ಸುಮಾರುಆಸ್ತಿಯನ್ನು ಬಿಉಹೇಳದೇ ಕೇಳದೆ ಪರಲೋಕಕ್ಕೆ ಹೊರಟುಹೋದ. ಮಣ್ಣಿಗೆ ಅಂತ ಬಂದ ತಿಪಟೂರಿನ ಸತ್ಯಪ್ಪ ಮೇಲುಪ್ಪರಿಗೆ ಮನೆ ಸತ್ಯಪ್ಪನಾದ. ಆ ಕಡೆಯೂ ತಲೆ ಅಲ್ಲಾಡಿಸುವುದೂ ಈ ಕಡೆಯೂ ತಲೆ ಅಲ್ಲಾಡಿಸುವುದು, ಕಸುಬು ಮಾಡಿಕೊಂಡ. ಅಂದರಿಕಿ ಮಂಚಿವಾಡು ಅನ್ನಿಸಿಕೊಂಡ. ಇಷ್ಟು ಈತನ ಸಂಕ್ಷಿಪ್ತ ಚರಿತ್ರೆಯು. +ಅಪ್ಪನೂ ಸತ್ಯಪ್ಪನೂ ಹೇಳೋದನ್ನೆಲ್ಲ ಹೇಳಿದರು, ಕೇಳೊದನ್ನೆಲ್ಲ ಕೇಳಿದರು. ಹ್ಳುತ್ತ ಕೇಳುತ್ತ ಅದ್ಭುತ ಮಿತ್ರರಾಗಿ ಮಾರ್ಪಾಡು ಹೊಂದಿಬಿಟ್ಟಿದ್ದರು. +“ಹಾಲಪ್ಪಣ್ಣಾ … ಈಗ ನನ್ನ ಮನಸ್ಸಿಗೆ ಹಾಲು ಅನ್ನ ಊಟ ಮಾಡ್ದೊಷ್ಟು ಸಂತೋಷ ಆಯ್ತು ಕಣಪ್ಪಾ … ನಿಮ್ಮ ಬಲವಂದಿದ್ರೆ ಇಡೀ ಊರ್‍ನೇ ಬೆಂಕಿ ಪೊಟ್ಟಣದಲ್ಲಿಟ್ಟು ನಿಮ್ಗೆ ನಜರೊಪ್ಪಿಸೇನು ಕಣಣ್ಣಾ … ಆ ಮನೇಲಿ ಹುಟ್ಟಿದ್ದ್ರಿಂದ್ಲೆ ತಾನೆ ದುರ್ಗಪ್ಪ ಹಾಲು ಮೊಸರ್ನಲ್ಲಿ ಕೈಕಾಲು ತೊಳೀತಿರೋದು. ಆ ಮನೇಲಿವಾಸ ಮಾಡಿದ ಮೇಲೆ ತಾನೆ ಪರಮೇಶ್ವರ ಶಾಸ್ತ್ರಿಗಳ ನಾಲಿಗೆಗೆ ದೈವೀ ಶಕ್ತಿ ಲಭಿಸಿದ್ದು … ಆ ಮನೇಲಿ ಇಲಿ ಹೋದ್ರೆ ಹುಲಿ ಆಗ್ತದೆ ಕಣಪ್ಪಾ … ನೋಡ್ತಿದೀರಲ್ಲಾ ಆ ಅತ್ತೆ ಸೊಸೆ ಆಡ್ತಿರೋದ್ನ … ನೀವೇನುಚ್ ಚಿಂತೆ ಮಾಡಬೇಡಿ … ಅವರಿಬ್ರು ನಾನು ಹಾಕ್ದ ಗೆರೆ ದಾಟೋದಿಲ್ಲ. ನಿಟ್ಟುಸಿರು ಬಿಡ್ದ ಹಾಗೆ ಆ ಮನೇನ ನಿಮಗೆ ಕೊಡಿಸೋ ಹಾಗೆ ಮಾಡ್ತೀನಿ … ನಿಮ್ಮಂಥ ದೊಡ್ಡ ಮನಸ್ಸು ಈ ಊರಲ್ಲಿ ಯಾರಿಗೆದ್ದೀತು ಹಾಲಣ್ಣ? … ಬೇರೆಯವರಾಗಿದ್ರೆ ಹೀಗೆ ಯೋಚಿಸ್ತಿದ್ದ್ರಾ? …” ಇನ್ನೂ ಏನೇನೋ ತಿಪಟೂರು ತೆಂಗಿನಕಾಯಿಯಂಥ ಮಾತುಗಳನ್ನು ನಿರರ್ಗಳವಾಗಿ ಹೊಡೆದ. +ಆ ಮಾತುಗಳನ್ನು ಕೇಳುತ್ತಿದ್ದ ನನಗೆ ಹಂಪಿ ವಿರೂಪಾಕ್ಷ ದೇವಾಲಯದ ಪ್ರಾಂಗಣದಲ್ಲಿರುವ ಶ್ರೀಕೃಷ್ಣ ದೇವರಾಯನನ್ನು ಹಾಡಿ ಹೊಗಳುವ ಶಿಲಾಶಾಸನ ನೆನಪಾಯಿತು. +ಶ್ರೀಕೃಷ್ಣ ಭೂಪಾಲನಂತೆಯೇ ನಮ್ಮ ಅಪ್ಪಾಜಿ ಉಬ್ಬಿಹೋದ. ಮೊದಲೇ ಜಮೀನ್ದಾರೀ ಮನಸ್ಸಿನ ವ್ಯಕ್ತಿ. +ಅಲ್ಲಿಂದ ಹೋದ ಸತ್ಯಪ್ಪ ಅತ್ತೆ ಸೊಸೆಯರಿಗೆ ಏನು ಮೋಡಿ ಮಾಡಿದನೋ? ಏನೋ! “ನೀನು ಹೆಂಗೆ ಹೇಳ್ತೀಯೋ ಹಂಗೆ ಕೇಳ್ತೀವಿ” ಎಂದಿಬ್ಬರು ರಾಜಿಗೆ ಬಂದುಬಿಟ್ಟಿದ್ದೊಂದು ಸೋಜಿಗ. ಹಾಗೆ ಒಪ್ಪಿಕೊಂಡಿದ್ದೂ ಅಲ್ಲದೆ ಪರಮಾನ್ನ; ಅನ್ನ ಹುಳಿ ಸಮಾರಾಧನೆ ಮಾಡಿದರಂತೆ … ತಾಂಬೂಲ ಸ್ರಕ್ಚಂದನ ನೀಡಿ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ಅಂತ ಶರಣಾಗತ ಭಾವೋನ್ಮುಖರಾಗಿ ಬೀಳ್ಕೊಟ್ಟರಂತೆ. +ಅವರಿಬ್ಬರನ್ನು ಹೇಗೆ ಒಂದು ಮಾಡಿದಿ ಅಂತ ಒಬ್ಬರು ಯಾರೋ ಕೇಳಿದ್ದಕ್ಕೆ ಸತ್ಯಪ್ಪ ಬಾದಾಮು ಕಲ್ಲರಿನ ಅಂಗಿ ಎತ್ತಿ ವೃಕೋದರದ ತಪ್ಪಲಲ್ಲಿ, ಎಂದರೆ ಎರಡುವರೆ ದಶಕದಿಂದ ಸೊಂಟಕ್ಕೆ ಕಟ್ಟಲ್ಪಟ್ಟಿರುವ ಉಡುದಾರಕ್ಕೆ ಕಟ್ಟಲ್ಪಟ್ಟು; ಒಂದೊಂದು ಹೆಜ್ಜೆಗೆ ಒಂದೊಂದು ರೀತಿಯಲ್ಲಿ ನರ್ತನಂಗೈಯುವ ಎರಡೂವರೆ ಇಂಚುದ್ದದ ತಾಯಿತವನ್ನು ತೋರಿಸಿದನಂತೆ. ಅದನ್ನು ಸಾಕ್ಷಾತ್ ಕಲಿಯುಗದ ಯೋಗವಾಸಿಷ್ಠ್ರೆರೆಂದೇ ಹೆಸರಾಗಿದ್ದ ಪರಮೇಶ್ವರ ಶಾಸ್ತ್ರಿಗಳೇ ಮಂತ್ರಿಸಿ ತಮ್ಮ ಕೈಯಾರೆ ಕಟ್ಟಿರುವರಂತೆ … ಅವರು ಕಟ್ಟಿರದಿದ್ದಲ್ಲಿ ಕೀ.ಶೇ.ಶಾಂತಪ್ಪನ ಹುಲಿಯಂಥ ಭಾವಮೈದುನರೈವರು ಕೊಟ್ಟೂರು ಕೆರೆಯ ತೂಬಿನಲ್ಲಿ ಸತ್ಯಪ್ಪನನ್ನು ಬಚ್ಚಿಟ್ಟುಬಿಡುತ್ತಿದ್ದರಂತೆ… ಅದು ಸೊಂಟದಲ್ಲಿವವರೆಗೆ ಯಾರೂ ತಾನ ಸ್ಯಾಟವನ್ನು ಹರಿದುಕೊಳ್ಳುವುದು ಸಾಧ್ಯವಿಲ್ಲವಂತೆ… ಮುಟ್ಟು ನಿಂತಿರುವ ಯಾರಾದರೂ ಅದನ್ನು ಸ್ಪರ್ಶಿಸಿದರೆ ಸುಟ್ಟುಭಸ್ಮವಾಗುವರಂತೆ… ಆದ್ದರಿಂದ ಆತ್ಮಲಿಂಗೋಪಾದಿಯಲ್ಲಿರುವ ಅದನ್ನು ತಾನು ಪ್ರಾಣಕಿಂತ ಹೆಚ್ಚಾಗಿ ಕಾಪಾಡಿಕೊಳ್ಳುತ್ತಿರುವನಂತೆ… ಹೀಗೆ ಒಂದು ಪುರಾಣವನ್ನೇ ಬಿಚ್ಚುವ ಸತ್ಯಪ್ಪ ಸದಾ ದೇಶಾವರಿ ನಗೆಯನ್ನು ಮುಖದ ತುಂಬ ಮೆತ್ತಿಕೊಂಡಿರುವನು… ಅಂತೂ ಅವನ ಪ್ರಭಾವದಿಂದಾಗಿಯೋ; ಆತ ಕಟ್ಟಿಕೊಂಡಿರುವ ತಾಯಿತದ ನಿಘೂಡ ಶಕ್ತಿಯ ಪ್ರಭಾವದಿಂದಾಗಿಯೋ ವಿಶಿಷ್ಟ ಚಕ್ಕು ಬಂದಿಯ ಕೀ.ಶೇ.ಶಾಮಾಶಾಸ್ತ್ರಿಯ ಪಿತ್ರಾರ್ಜಿತ ಮನೆ ಅಪ್ಪನಿಗೆ ಇಂತಿಷ್ಟೂಂತ ವಿಲೇವಾರಿಯಾಯಿತು. +“ಗೃಹಾಂತ ದ್ರವ್ಯ ಸಂಘಾತಾ” ಹಣವನ್ನು! ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ ಅಂತ ವಿಷ್ಣುಪುರಾಣ ಸಾರಿ ಸಾರಿ ಹೇಳಿದೆ. ಆದರೆ ವಿಧವೆಯರು ಹಣಕ್ಕಾಗಿ ಮನೆಯನ್ನೇ ಮಾರಿದ್ದು ಎಂಥ ವಿಚಿತ್ರ! ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸಿತೆಂಬುದಕ್ಕೆ ಅತ್ತೆ ಸೊಸೆಯರಿಬ್ಬರೂ ಬಂದ ಹಣ ಹಂಚಿಕೊಳ್ಳಲು ಕಚ್ಚಾಡದೇ ಇರಲಿಲ್ಲ. ಬಂದ ಹಣಕ್ಕೇನು ಗೊತ್ತು? ಇವರಲ್ಲಿ ಒಳ್ಳೆಯವರ್‍ಯಾರು ಕೆಟ್ಟವರ್‍ಯಾರೂಂತ. ಯಾರ ಹತ್ತಿರ ಬಲ ಇರುತ್ತೋ ಅವರನ್ನು ಸೇರೋದು ಅದರ ಜಾಯಮಾನ. ‘ನಾಂತರಜ್ಜಾ ಶ್ರೀಯೋ ಜಾತು ಪ್ರಿಯೈರಾಸಾಂ ನಭೂಯತೆ’ ಸಂಪತ್ತಿಗೆ ನೀಚ ಮತ್ತು ಉತ್ತಮ ಎಂಬ ತರತಮ ಭೇಧವಿರುವುದಿಲ್ಲ. ಸಂಪತ್ತು ನಮ್ಮನ್ನು ಪ್ರೀತಿಸ್ತಿದೆ ಅಂತ ಮೂರ್ಖರು ಮಾತ್ರ ತಿಳಕೊಂಡಿರ್‍ತಾರೆ … ಚಪಳೆ ಸೊಡರ ಕುಡಿಯುಂ ಪೋಳ್ವಲ್ ಅಂಥ ನಮ್ಮ ಮಾರ್ಗ ಕವಿ ನಯಸೇನ ಹೇಳಿರೋದು ಅಕ್ಷರಶಃ ನಿಜ. ಅದು ಯಾರೊಬ್ಬರ ಜೇಬಿನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೊಗೊಳ್ಳೋ ಜಾಯಮಾನದ್ದಲ್ಲ. ಪಟಾಕಿಯಂತೆ ನಿಶ್ಶಬ್ದವಾಗಿ ಚಟಚಟ ಸಿಡಿಯುತ್ತಲೇ ಇರುತ್ತದೆ. ತನಗೆ ಆಶ್ರಯ ನೀಡಿದವರಿಗೆ ಹೊಸ ಹೊಸ ಪ್ರೇರಣೆಗಳನ್ನು ನೀಡುತ್ತಲೇ ಇರುತ್ತದೆ. ಹೆಣಗಳ ಹಿಂದೆ ಸದ್ದು ಮಾಡುವ ರೀತಿಯಲ್ಲಿ; ಮಂಗಳಾರತಿ ತಟ್ಟೆ ಮೇಲೂ ಶಬ್ದ ಮಾಡುತ್ತದೆ, ಮನುಷ್ಯ ಮನುಷ್ಯನ ನಡುವೆ ಸಮಾಜ ಸಮಾಜಗಳ ನಡುವೆ ದೇಶ ದೇಶಗಳ ನಡುವೆ ಗೆರೆ ಎಳೀತದೆ; ಗೋಡೆ ಕಟ್ಟುತ್ತದೆ, ಇನ್ನೇನೆಲ್ಲ ಮಾಡುತ್ತದೆ ಮಾಡಿಸುತ್ತದೆ. ಪ್ರಪಂಚದಾದ್ಯಂತ ಅದು ಒಂದೇ ಭಾಷೆಯಲ್ಲಿ ಮಾತಾಡುತ್ತದೆ. ಎಂಥೆಂಥವರನ್ನೂ ಮಣ್ಣು ಮುಕ್ಕಿಸಿದ ಅದಕ್ಕೆ ಈ ವಿಧವೆಯರು ಯಾವ ಲೆಕ್ಕ? +“ನನ್ನ ಪಾಲಿಗೆ ಬರೋದನ್ನು ಕೊಟ್ಟು ಬಿಡು ವರಲಕ್ಶ್ಮೀ … ಮುದುಕೀನ ಗೋಳು ಹುಯ್ಕೊಂಡರೆ ನಿನಗೆ ಒಳ್ಳೇದಾಗೋದಿಲ್ಲ” ನೀರು ತುಂಬಿದ ತಾಮ್ರದ ತಂಬಿಗೆಯನ್ನು ನೆಲದ ಮೇಲೆ ಕುಕ್ಕಿ ಮುದುಕಿ ತಲೆಗೆ ಕೈಹೊತ್ತು ಕೂತುಬಿಟ್ಟಿತು. +“ಅಯ್ಯೋ ರಾಮ ರಾಮ … ಈ ವಯಸ್ಸಿನಲ್ಲಿ ಹಣ ತಗೊಂಡೇನು ಮಾಡ್ತಿದ್ದೀತು ಇದು?” ಗಟ್ಟಿಯಾಗಿಯೇ ಗೊಣಗಿದಳು ಸೊಸೆ. +“ನಾನೇನಾರ ಮಾಡ್ಕೋತೀನೇ … ಅದನ್ನ ಕೇಳೊಕೆ ನೀನ್ಯಾರೆ?” +“ನಾನ್ಯಾರಂತೀರಲ್ಲ … ನಾನು ನಿಮ್ಮ ಸೊಸೆ.” +“ನನ್ ಮಗ ಯಾವತ್ತು ಸತ್ನೋ … ಅವತ್ತೇ ನನ್ನ ನಿನ್ನ ಋಣ ತೀರ್‍ತು.” +“ಎಹ್ಟು ಹಗುರಾಗಿ ಮಾತಾಡ್ತಿದೀರಲ್ಲ … ನಾನು ನಿಮ್ಮ ಸೊಸೆ ಅಲ್ವೇ?” +“ಸೊಸೆ ಆಗಿದ್ರೆ … ಇಡೀ ಗಂಟು ನನ್ನ ಕೈಲಿ ಕೊಟ್ಟು ಹಿರೇಳಾದ ನಾನು ಹೇಳ್ದಂಗೆ ಕೇಳ್ಕೊಂಡು ಬಿದ್ದಿರ್‍ತಿದ್ದಿ ಕಣೆ” +“ಬಿದ್ದಿರೋಕೆ ನಾನೇನು ನಾಯಿಯಲ್ಲ” +“ಹಾಗಿದ್ರೆ ಕೊಟ್ಟು ಬಿಡು ನನ್ನ ಪಾಲಿಂದು” +“ತಗೊಂಡೇನ್ಮಾಡ್ತೀರಂತ” +“ಹಾಳುಭಾವಿಗೆ ಬೀಳ್ತೀನಿ ಕಣೇ” +ಹಣ ಹಂಚಿಕೊಳ್ಳುವ ವಿಷಯದಲ್ಲಿ ಅತ್ತೆ ಸೊಸೆಯರ ಜಗಳ ಯಶಸ್ವಿಯಾಗಿ ಒಂದು ದಿನ ಪೂರೈಸಿತು. ಒಂದೆರಡು ವರ್ಷಗಳಲ್ಲಿ ವೈಕುಂಠವಾಸಿಯಾಗಲಿರುವ ಅತ್ತೆಗೆ ಇಡೀ ಗಂಟು ಕೊಡುವುದೆಂದರೇನು? ಕೊಟ್ಟಲ್ಲಿ ಅದು ಮತ್ತಿನ್ನಾರ ಬಾಯಿಗಿಡುವುದೋ? ಬದುಕಿರೋವಷ್ಟು ಕಾಲ ಮೊಮ್ಮಕ್ಕಳೊಂದಿಗೆ ಆಡಿಕೊಂಡಿದ್ದು ಪ್ರಾಣ ಬಿಡುವುದಕ್ಕೇನಾಗಿದೆ ಧಾಡಿ! ಕೊನೆಗಾಲಕ್ಕೆ ಬಾಯಲ್ಲಿ ಗಂಗಾಜಲ ಬಿಡಲಿಕ್ಕಾದರೂ ತಾವು ಬೇಡವೇನು? ಸೊಸೆ ವರಲಕ್ಷ್ಮಿ ಪರಿಪರಿಯಾಗಿ ಯೋಚಿಸಿದರೂ ಅತ್ತೆ ರಾಜಿಯಗುವ ಲಕ್ಷಣ ಕಂಡು ಬರಲಿಲ್ಲ. ತನ್ನ ಪಾಲಿಂದು ತನ್ನ ಹಸ್ತಗತವಾಗದ ಹೊರತು ಜಪ್ಪಯ್ಯ ಅಂದರೂ ಕದಲದೆ ಇರುವ ಅತ್ತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ವರಲಕ್ಷ್ಮಮ್ಮ ಮತ್ತೆ ಮೇಲುಪ್ಪರಿಗೆ ಸತ್ಯಪ್ಪನ ಸಹಾಯ ಯಾಚಿಸಿದಳು. ಅದರಲ್ಲಿ ನೀನೆಷ್ಟು ಪರ್ಸೆಂಟು ಕಮೀಷನ್ ಹೊಡೆದೆ ಎಂದು ಒಂದೆರಡು ದಿನಗಳಿಂದ ಅವರಿವರು ಒಂದೇ ಸಮನೆ ಕೇಳುತ್ತಿದ್ದುದರಿಂದ ಸತ್ಯಪ್ಪ ಶಿವಪುರದ ಗವಿಮಠದಲ್ಲಿ ಕಳೆದ ವಾರದಿಂದ ನಡೆಯುತ್ತಿದ್ದ ಕೊಟ್ಟೂರೇಶ್ವರ ಪುರಾಣ ಕೇಳಲು ನಾಳೆಯೇ ಹೊರಡಬೇಕೆಂದು ನಿಶ್ಚಯಿಸಿ ಒಂದು ವಿಭೂತಿ ಉಂಡೆಯನ್ನು ನೂರು ರುಪಾಯಿ ಸಂಗಡ ಖಲ್ಲೀ ಜೇಬಿನಲ್ಲಿ ಇಟ್ಟುಕೊಂಡಿದ್ದ. ಅಷ್ಟರೊಳಗೆ ಶಾಸ್ತ್ರಿಗಳ ಮನೆ ಬೆಳಗಿದ ಸೊಸೆ ಬಂದು ಎಂದುಬಿಡುವುದೇ! ಧರ್ಮಸಂಕಟಕ್ಕಿಟ್ಟುಕೊಂಡಿತು ಆತನಿಗೆ. ಯೋಚಿಸುತ್ತ ಯೋಚಿಸುತ್ತ ಅದನ್ನು ಎರಡು ಮೂರು ಕಡೆ ಎತ್ತಿಟ್ಟೂ ಎತ್ತಿಟ್ಟೂ ಒಪ್ಪಿಕೊಂಡ. ಸದರೀ ಪಟ್ಟಣದಲ್ಲಿ ತಾನು ಮತ್ತಷ್ಟು ಭದ್ರವಾಗಿ ನೆಲೆಗೊಳ್ಳುವಂತಾಗಲು ಹಾಲಪ್ಪನ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳಲು ಇದೇ ಸುವರ್ಣಾವಕಾಶವೆಂದು ಬಗೆದ. ಇನ್ನು ಮೂರು ವರ್ಷಗಳಲ್ಲಿ ಬರಲಿರುವ ಪಂಚಾಯ್ತಿ ಚುನಾವಣೆಗಳಲ್ಲಿ ಹನ್ನೊಂದನೆ ವಾರ್ಡಿನಲ್ಲಿ ಸಾಗುವಾನಿ ಮರದಂತಿರುವ ಹಾಲಪ್ಪನವರ ಸಹಾಯ, ಸಹಕಾರ ಇರದಿದ್ದಲ್ಲಿ ಆದೀತೇನು? ಹನ್ನೊಂದನೆಯ ವಾರ್ಡಿನಲ್ಲಿ ಹರಿಯೋ ಹಾವು ಕೂಡ ಹಾಲಪ್ಪನವರ ಹೆಸರು ಕೇಳಿದೊಡನೆ ಒಂದೈದು ನಿಮಿಷ ರೆಸ್ಟ್ ತಗೊಂಡೇ ಮುಂದುವರಿಯಬೇಕು. +ಸತ್ಯಪ್ಪ ಅಂದುಕೊಂಡಂತೆ ಹಾಲಪ್ಪನನ್ನು ಭೇಟಿಯಾದ, ಉಭಂ ಶುಭಂ ಹೇಳಿದ. ಹಾಗೆಯೆ ಅತ್ತೆ ಸೊಸೆಯರ ನಡುವೆ ಉದ್ಭವಿಸಿರುವ ಹೊಸ ಸಮಸ್ಯೆ ಬಗೆಗೂ, ಸತ್ಯಪ್ಪ ಮತ್ತು ಹಾಲಪ್ಪ ಬೇರೆ ಬೇರೆ ಅವಧಿಯಲ್ಲಿ ಅತ್ತೆ ಸೊಸೆಯರೀರ್ವರನ್ನು ಅಲಾಯಿದಾಗಿ ಬೆಟ್ಟಿಯಾಗಿ ಕೂಲಂಕುಷ ಚರ್ಚೆ ನಡೆಸಿದರು. ಹಣವೇ ಸರ್ವ ದುಃಖಕ್ಕೆ ಮೂಲವೆಂದು ಕಾವಿ ನಿಲುವಂಗಿ ತೊಟ್ಟ ಕ್ಷಣದಿಂದ ಏರು ದನಿಯಲ್ಲಿ ಮಾತಾಡುವ ಗುರುಸಾಂತಪ್ಪನೂ ನದಿಯನ್ನು ಹಳ್ಳ ಸೇರಿಕೊಳ್ಳುವಂತೆ ನಡುವೆ ಸೇರಿಕೊಂಡ. ಒಂದೇ ದೇಹದ ಮೂರು ಮುಖಗಳಂತೆ ಅವರು ನಡೆದೂ ನಡೆದೂ ಸದರೀ ಮನೆಯನ್ನು ತಲುಪಿದರು. +ಆಗಲೇ ಸಾಕಷ್ಟು ಮಾತುಗಳನ್ನು ಕಂಠಪಾಠ ಹಾಕಿದ್ದ ವರಲಕ್ಷ್ಮಮ್ಮ ಬಾಗಿಲಲ್ಲಿ ಕಂಡಳು. ಪರೀಕ್ಷಾರ್ಥವಾಗಿ ಪರಮ ಸಾಧ್ವಿ ಅನಸೂಯಳ ಸ್ತನ್ಯಪಾನ ಮಾಡಲು ಬಂದಿರುವ ತ್ರಿಮೂರ್ತಿಗಳಂತೆ ಅವರು ಗೋಚರಿಸಿದರು. ಎದೆ ತುಂಬ ಸೆರಗು ಹೊದ್ದು ಸ್ವಾಗತಿಸಿ ಆಟವಾಳಿಗೆಯಲ್ಲಿ ಚಾಪೆ ಹಾಸಿ ಕೂಡ್ರಿಸಿ ಕುಡಿಯಲೆಂದು ಒಂದು ತಂಬಿಗೆ ನೀರು ಒಂದು ಲೋಟ ಇಟ್ಟಳು. ನಡೆದೂ ನಡೆದೂ ಸುಸ್ತಾಗಿದ್ದ ಅವರು ದಾಹಪರಿಹಾರಾರ್ಥವಾಗಿ ನೀರು ಕುಡಿದು ಎರಡು ಗುಟುಕು ಗಂಟಲಲ್ಲಿರಿಸಿಕೊಂಡು ವಿಷಪ್ರಾಶನ ಮಾಡಿದ ಪರಮೇಶ್ವರನಂತೆ ಮುಖ ಸಿಂಡರಿಸಿಕೊಂಡರು. ಮಹಾ ಸಾಧ್ವಿಯೂ ವ್ಯವಹಾರ ಕುಶಲಿಯೂ ಆದ ಆಕೆ ಬೇಕೆಂದೇ ಹಿಂದೂ ಮಹಾ ಸಾಗರವೆ ನೆಲೆ ಪಡೆದಿರುವ ಬಸವನ ಬಾವಿಯ ನೀರು ಅದರಲ್ಲಿ ತುಂಬಿದ್ದಳು. ಮನೆ ಕೊಡೋದು ಕೊಟ್ಟಾಗಿದೆ, ಪಡೆಯೋದು ಪಡೆದಾಗಿದೆ ಇನ್ನು ಇವರ ಮುಲಾಜು ಯಾಕೆ ಎಂಬ ಭಾವನೆಗಿಂತ ಮುಖ್ಯವಾಗಿ ತಾವು ದೂರದ ಬಾವಿಯಿಂದ ಸಿಹಿನೀರು ತರಲಾರದಷ್ಟು ಅಬಲೆಯರು ಎಂಬುದನ್ನು ಸಾಬೀತುಪಡಿಸಲಿಕ್ಕಾಗಿ ಇರಬಹುದು. ಅದೇ ಉಪ್ಪು ನೀರನ್ನು ಕುಡಿದೂ ಕುಡಿದೂ ಗಂಟಲ ತುರಿ ಹೆಚ್ಚಿಸಿಕೊಂಡ ವಯೋವೃದ್ಧೆಯೂ, ಜ್ಞಾನವೃದ್ಧೆಯೂ ಆದ ಅಲುಮೇಲಮ್ಮಜ್ಜಿ ಒಂದೇ ಸಮನೆ ಕೊಕ್ ಕೊಕ್ ಕೆಮ್ಮುತ್ತ ತಾವಿನ್ನೂ ಬದುಕಿರುವ ಸೂಚನೆ ನೀಡಿತಲ್ಲದೆ, ಗೀರ್ವಾಣ ಭಾಷಾ ಸದೃಶವಾದ ಸದ್ದಿನ ಮೂಲಕ ಪಂಚಾಯ್ತಿ ನೆಪದಲ್ಲಿ ತನಗೇನಾದರೂ ಅನ್ಯಾಯ ಮಾಡಿದಲ್ಲಿ ರೌರವ ನರಕ ಪ್ರಾಪ್ತವಾಗುತ್ತದೆ ಎಂಬ ಸೂಚನೆಯನ್ನೂ ನೀಡುತ್ತ ಹೊರಬಂದಿತು. ವೈರಾಗ್ಯ ಶತಕದ ಈ ಮುಂದಿನ ಶ್ಲೋಕವೇ ವೃದ್ಧೆಯ ರೂಪ ಧರಿಸಿ ನಡೆದು ಬರುತ್ತಿರುವುದೆಂಬಂತೆ ಸೊಸೆಗೆ ಗೋಚರಿಸಿತು. +ವಲೀಭೀರ್ಮು ಖಿಮಾಕ್ರಾಂತಂ, ಅಂದರೆ ಸುಕ್ಕುಗಳಿಂದಲೇ ತುಂಬಿರುವ ಮುಖ +ಪಲಿತೈರಂ ಶಿರಃ, ಅಂದರೆ ನರೆ ಕೂದಲಿಂದ ತುಂಬಿರುವ ತಲೆ +ಗಾತ್ರಾಣಿ ಶಿಥಿಲಾಯಂತೇ, ಅಂದರೆ ಶಿತಿಲಾಥಿ ಶಿಥಿಲವಾಗಿರುವ ಅಂಗಾಂಗಳು +ತೃಷ್ಣೈಕಾ ತರುಣಾಯಂತೇ, ಅಂದರೆ ಆಸೆಯೊಂದೇ ಯೌವನದಿಂದ ಕೂಡಿದೆ +‘ಬರ್ರಿ ಅತ್ತೆಮ್ಮ ಬರ್ರಿ’ ನಾಟಕೀಯವಾಗಿ ಸ್ವಾಗತಿಸಿದ ವರಲಕ್ಷ್ಮಿ ಕೂಡ್ರಲೊಂದು ಮಣೆ ಹಾಕಿ ಅದರ ಮೇಲೆ ದರ್ಭೆ ಚಾಪೆಯ ತುಂಡನ್ನು ಹೊದ್ದಿಸಿ ವಿಧೇಯತೆಯಿಂದಲೇ ಮಾಡಲ್ಪಟ್ಟಿರುವಳಂತೆ ತುಸು ದೂರದಲ್ಲಿ ನಿಂತಳು. +ಆಕೆಯು ತಾಲೀಮು ನೀದಿದ್ದರಿಂದ ಇಬ್ಬರು ಮಕ್ಕಳು ಖಟ್ಲಿಗೆ ಹೊಸ ತಿರುವು ನೀಡುವ ಸಾಕ್ಷಿಗಳಂತೆ ಒಂದೊಂದೆ ಹೆಜ್ಜೆ ಇಕ್ಕುತ್ತ ಬಂದು ತನ್ನನ್ನು ಹೆತ್ತಾಕಿಯ ಎರಡೂ ಪಕ್ಕದಲ್ಲಿ ನಿಂತವು. ಭಲೆ ಭಲೆ ಎಂಬಂತೆ ಆಕೆ ಮಕ್ಕಳ ಮೈದಡವಿದಳು. +ಸ್ವಲ್ಪ ಹೊತ್ತು ಮೌನವೆಂಬುದು ತಂತಾನೆ ನೆಲೆಸಿತು. ತ್ರಿಮೂರ್ತಿಗಳು ಮೊದಲು ಪರಸ್ಪರ ಮುಖ ನೋಡಿಕೊಂಡರು. ನಂತರ ಅವರಿಬ್ಬರ ಮುಖ ನೋಡಿದರು, ನಿಟ್ಟುಸಿರು ಬಿಟ್ಟರು. ನಂತರ ತಾವಿಲ್ಲಿಗೆ ಹೊರಡುವ ಮುನ್ನ ಸೇವಿಸಿದ ಆಹಾರ ನೆನಪಿಸಿಕೊಂಡರು. ಮುಖ ಕಿವಿಚಿಕೊಂಡರು. ಹೋಬ್ಬ ಅಂತ ತಲಾ ಒಂದೊಂದು ಡೇಗುಗಳನ್ನು ಡೇಗಿ ವಾತಾವರಣಕ್ಕೆ ವಿಶೇಶ ಮುದ ನೀಡಿದರು. +ಯಾರು ಮೊದಲು ಮಾತು ಆರಂಭಿಸಬೇಕೆಂಬುದೇ ಪ್ರಮುಖ ಸಮಸ್ಯೆಯಾಯಿತು. +‘ಏನಮ್ಮಾ ನಿಮ್ಮ ಸಮಸ್ಯೆ? ಸಿರಿಯ ಸಂಪದದಿಂದ ಬಾಳ್ವವ ಮರಣ ಮದ್ದನು ಕುಡಿಯಬಹುದೆ?… ಚಂಚಲೆಯಾದ ಲಕ್ಷ್ಮಿಯ ಕಾರಣದಿಂದ ನೀವಿನಿತು ಜಗಳವಾಡ್ವದು ನ್ಯಾಯವೇನ್ರಮ್ಮಾ? ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು ನ್ಯಾಯದಿಂ ಸಾಮರಸ್ಯದಿಂ ಬಾಳ್ವುವುದೇಕಾಗಬಾರದ್ರಮ್ಮಾ?” ಸ್ವಲ್ಪ ಹೊತ್ತಿನ ಹಿಂದೆ ಎಳೆದಿದ್ದ ಗಾಂಜಾದ ನಿಶೆಯಿಂದಾಗಿ ಗುರುಸಾಂತಪ್ಪ ವಿಶಿಷ್ಟ ರೀತಿಯಲ್ಲಿ ಭಾಷಾ ಪ್ರಯೋಗ ಮಾಡಿ ಗಡ್ಡ ನೀವಿಕೊಂಡ. +ತ್ರಿಮೂರ್ತಿಗಳ ಪೈಕಿ ಉಳಿದಿಬ್ಬರು ನೆಮ್ಮದಿಯಿಂದ ಉಸಿರುಬಿಟ್ಟರಾದರೂ ಅವಧೂತನಾಡಿದ ಮಾತಿನ ತಳಬುಡ ಅರ್ಥವಾಗಲಿಲ್ಲ. +“ಹ್ಯಾಗ್ರಿ ತಾತ? … ಸಾಮರಸ್ಯದಿಂದ ಬಾಳುವೆ ಮಾಡೂದು? ಅವರೊಂದಿಗೆ ನಾನೂ ಮಕ್ಕಳನ್ನು ಕಟ್ಟಿಕೊಂಡು ತುಂಬಿದ ಕೆರೇಲಿ ಬಿದ್ದಿದ್ರೆ ಅತ್ತೆಮ್ಮ ನೆಮ್ಮದಿಯಿಂದ ಇರುತ್ತಿದ್ದರೇನೋ…” ಸೆರಗನ್ನು ಬಯಿಗಡ್ಡ ಇಟ್ಟುಕೊಂಡು ಬಿಕ್ಕಿದಳು. +ಪೀಠ ನಿರಾಕರಿಸಿ ಅದರ ಪಕ್ಕ ಕೂತಿದ್ದ ಮುದುಕಿ ಗಂಟಲಲ್ಲಿದ್ದ ಕಫವನ್ನು ಬಾಯಿಗೆ ತಂದುಕೊಂಡುರುಳಾಡಿಸಿ ಮತ್ತೆ ನುಂಗಿ ಅದರಿಂದ ಹೊಸ ತೇಜಸ್ಸು ಪಡೆದು ನಿಗಿನಿಗಿ ಉರಿಯುತ್ತ … +ಇನ್ನಾದ್ರೂ ಸಾಕು ಮಾಡೇ ನಾಟಕದ ಮಾತಾಡೋದನ್ನು … ಕೆರೆ ಭಾವಿ ನೋಡ್ಕೊಳ್ಳೋಳಾಗಿದ್ರೆ ಇನ್ನೂ ಬದುಕಿರೋ ನನಗೆ ದ್ರೋಹ ಮಾಡುತಿದ್ದೆಯೇನು? ಯಾವತ್ತು ಈ ಮನೆ ಮಾರಿದೆಯೋ ಅವತ್ತೆ ನನ್ನ ನಿನ್ನ ಋಣ ತೀರ್‍ತು…” ಕೈ ಅಡ್ಡ ಅಡ್ಡ ತಿರುವಿ ಮಾತಾಡಿತು. +“ಛೇ! ಛೇ! ಎಂಥ ಮಾತಾಡ್ತೀರಲ್ಲ ನೀವು … ನಿಮ್ಮ ಒಪ್ಪಿಗೆ ಇಲ್ದೆ ನಾನೀಮನೆ ಮಾರಿದ್ದೇನು! ಈ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳ್ತೇನಿ … ನಿಮ್ಮ ಒಪ್ಪಿಗೆ ದೊರೆತ ಮೇಲಲ್ವೆ ಮನೆ ವಿಲೇವಾರಿ ಮಾಡಿದ್ದು … ಈಗೇನಾಯ್ತು … ತಡೀರಿ …” ಮಕ್ಕಳನ್ನು ಎರಡು ದಿಕ್ಕೆಗೆ ದೂಡಿ ದುಡುದುಡು ಒಳಗೆ ಓಡಿ.. ದಟ್‌ಪುಟ್ ಸದ್ದು ಮಾಡುತ್ತ ಪೆಟಾರಿ ತೆಗೆದು “ಮುಚ್ಚಿ” ಸುಂಟರಗಾಳಿಯಂತೆ ಹೊರ ಬಂದು ಕೈಯಲ್ಲಿದ್ದ ಹಣದ ಕಂತೆಯನ್ನು ತ್ರಿಮೂರ್ತಿಗಳ ಮುಂದಕ್ಕೆ ಕುಕ್ಕಿ ಮುಂದುವರಿದು ಈ ಪ್ರಕಾರವಾಗಿ ಹೇಳಿದಳು, +“ಹಾಲಪ್ಪಣ್ಣಾ … ನಿಮ್ಮ ಹಣ ತೊಗೊಂಡು ಈ ಮನೇನ ಮುದುಕಿ ಹೆಸರೀಗೆ ಬರೆದುಕೊಟ್ ಬಿಡಿ … ನಾನೀ ಕ್ಷಣನೇ ನಾನೂ ನನ್ ಮಕ್ಳೂ ವಿಷಪ್ರಾಷನ ಮಾಡಿ ಸತ್ತು ಹೋಗ್ತೀವಿ. ಈ ಮುದುಕಿ ಮುಂದೊಂದು ದಿನ ಸತ್ತ ಮೇಲೆ ಮನೆಯೊಳ್ಗೆ ಸಮಾಧಿ ಮಾಡಿ ಬೃಂದಾವನ ಕಟ್ಟಿಸಿ ಉಸ್ತುವಾರಿ ನೊಡ್ಕೊಳ್ಳೋಕೆ ಸಂಪ್ರದಾಯಸ್ಥ ಬ್ರಾಹ್ಮಣರನ್ನು ನೇಮಿಸಿಬಿಡಿ …” ಇಷ್ಟು ಅಂದದ್ದೇ ಎರಡು ಕಣ್ಣುಗಳಿಂದ ಎರಡು ವಿಧದ ಜಲಪಾತ ಸುರಿಯುತ್ತ ಗಂಡ ಸತ್ತ ಮೇಲೆ ಬದುಕಿರಬಾರ್ದೂ ಅಂತ ಬದುಕಿನ ಒಂದೊಂದು ರೋಚಕ ಕ್ಷಣಗಳಿಗೆ ಒಂದೊಂದು ಹೊಸ ರೂಪ ಕೊಡತೊಡಗಿದಳು. +“ನೋಡಿದ್ರ್ಯಾ … ನೋಡಿದ್ರ್ಯಾ … ಇವ್ಳು ಈ ಮುದಿ ಅತ್ತೆ ಮೇಲಿಟ್ತಿರೋ ಪ್ರೀತೀನ …” ಎಂದು ಹೇಳುತ್ತಲೇ ಎದ್ದು ನಿಂತು ಮೊಣಕಾಲಿಗೆ ಮುಂಗೈಯೂರಿ ಇನ್ನೊಂದು ಮುಂಗೈಯನ್ನು ಮೇಲೆತ್ತಿ ತಿರುವುತ್ತ “ನಾನು ಸಮಾಧಿ ಆಗಿ ಅದ್ರ ಮೇಲೆ ಬೃಂದಾವನ ಎದ್ರೆ ಸಂತೋಷ ಪಡ್ತಾ ನೀನಿಲ್ಲೇ ಇರುವಿಯಂತೆ … ಹೇಳಿದ್ನೋ ಬಿಟ್ಟಿದ್ನೋ … ಅಂತೂ ಮನೆ ಮಾರಿ ಪುಣ್ಯ ಕಟ್ಟಿಕೊಂಡೆಯಲ್ಲ … ನನ್ಗೆ ಬರೋದನ್ನ ನನಗೆ ಕೊಟ್ಟುಬಿಡು … ” +ಮುದುಕಿಗೆ ಯಾಕೆ ಹಣದ ವ್ಯಾಮೋಹ ಬಂತೆಂಬುದರ ತಳಬುಡ ತ್ರಿಮೂರ್ತಿಗ್ಳಿಗೆ ಅರ್ಥವಾಗಲಿಲ್ಲ. .. +ಪ್ರಳಯ ಸ್ಥಾನದಲ್ಲಿ ಹಾಲಪ್ಪನೇ ಮಾತಾಡಿದ. +“ಮಾರಿದ್ದಾಯ್ತು ನಾನು ತಗೊಂಡಿದ್ದಾಯ್ತು … ಇನ್ಯಾಕೆ ಇದ್ರ ಬಗ್ಗೆ ಚರ್ಚೆ …” +ಸ್ಥಿತಿಸ್ಥಾನದಲ್ಲಿದ್ದ ಸತ್ಯಪ್ಪ ಪುಡಾರಿ ಗತ್ತಿನಲ್ಲಿ ನಿರ್ಧರಿಸಂತೆ ಮಾತಾಡಿದ. +“ನೀವಿಬ್ರು ಭಾರತದ ಕುಟುಂಬ ವ್ಯವಸ್ಥೆಯ ಎರಡು ಆದರ್ಶ ಮಾದರಿಗಳು … ಹನ್ನೊಂದನೇ ವಾರ್ಡಿಗೆ ಎರಡು ಕಣ್ಣುಗಳಿದ್ದ ಹಾಗೆ … ಮತ್ತೆ … ಮ…ತ್ತೆ” ಕಂಠಪಾಠ ಮಾಡಿದ್ದ ಮುಂದಿನ ಮಾತುಗಳ ‘ಫೀಜು’ನಡುವೆ ಎಗರಿಹೋಯಿತು. +ಸೃಷ್ಟಿ ಸ್ಥಾನದ ಗುರುಸಾಂತಪ್ಪಗೆ ಜವಾರಿ ಭಾಷೆಯಲ್ಲಿಯೇ ಮಾತಾಡಿದರೆ ಇವರಿಗೆ ರಾಮಬಾಣವಾದೀತು ಎಂದು ಊಹಿಸಿದ. +“ವೋಗ್ರವ್ವಾ … ವೋಗ್ರಿ … ದೇಸದಾಗೆಲ್ಲೂ ಇಲ್ಲದೆ ಅತ್ತೆ ಸೊಸೀ ನೀವೇ ಐದೀರೋ ಹೆಂಗೆ … ಹಿಂಗ ಕಿತ್ತಾಡೊರ್ನ ನನ್ನ್ಯಾ ದೇಸದಾಗೂ ನೋಡಿಲ್ಲ ಬುಡ್ರಿ … ಕಿಸಿಲಾರದ ರೊಕ್ಕಕ್ಕ ಹಿಂಗ ಕಿತ್ತಾಡಿದ್ರೆ ದೇವ್ರು ಮೆಚ್ತಾನೇನು? ನಿಮ್ಗೂ ಕೆಲಸ ಬೊಗಸೆ ಇಲ್ಲಾಂದ್ರೆ ನಮ್ಗೂ ಇಲ್ಲಾಂತ ತಿಳ್ದೀರೋ ಹೇಗೆ? ನೀವು ಮೇಲಾಗಿ ಬ್ರಾಂಬ್ರು … ಒಳ್ಳೆದು ಕೆಟ್ಟದ್ದು ತಿಳ್ದಂಥೋರು. ನಿಮ್ಮಂಥೊರು ನಮ್ಮಂಥೊರ್ಗೆ ಬುದ್ಧಿ ಹೇಳ್ಬೇಕು … ಅದು ಬಿಟ್ಟು ನಿಮ್ಮ ನ್ಯಾಯ ಬಗೆ ಹರ್ಸಕ್ಕೆ ನಾವೇ ಬರ್ಬೇಕಾ … ಏಯ್ ಹಾಲಪ್ಪ … ಈಟು ವಯಸ್ಸಾದ್ರು ನಿಂಗಿನ್ನು ಆಸ್ತಿ ಮಾಡೋ ಹುಚ್ಚು ಬಿಡ್ಲಿಲ್ಲ … ಇದ್ನೆಲ್ಲ ಸತ್ತಾಗ ಹಿಂದು ಒಯ್ತಿ ಯೇನು? ಈ ಮನಿ ನಡುವಳಿಕೆಗೆ ನಿನ್ಗೆ ಹತ್ತಿ ಬರೋವಂಗಕಾಣುವಲ್ದು. ನಿನ್ನ ರೊಕ್ಕ ನೀನು ತಗೋ … ಹೊಂಟು ಬಿಡೋಣ” ಎಂದು ಒಂದೇ ಉಸಿರಿಗೆ ಮಾತಾಡಿ ಗಾಂಜಾದ ಗುಳಿಗೆಯೊಂದನ್ನು ಬಾಯಿಗೆ ಹೊಕ್ಕಂಡು ದವಡೇಲಿ ಪ್ರತಿಷ್ಟಾಪಿಸಿ ಬಿಟ್ಟನು. +ತನ್ನ ಸಂಭಂದೀ ಮಾತುಗಳಿಂದ ಹಾಲಪ್ಪ ಒಂದು ಕ್ಷಣ ದಿಗ್ಭ್ರಮೆಗೊಂಡ.ಚೇತರಿಸಿಕೊಂಡು” ಹೋಗ್ಲಿ ಬಿಡು ಗುರುಸಾಂತ … ಪ್ರಪಂಚ ಅರೀದ ಹೆಣ್ಮಕ್ಕಳ ಮಾತಿಗೆ ಬೇಸರ ಮಾಡ್ಕೊಂಡ್ರೆ ಹೆಂಗೆ? … ಸಂಪತ್ತಿನ ವಿಷಯದಾಗ ಎಂಥೆಂಥ ದೇವಾನುದೇವತೆಗಳೇ ಜಗಳಾಡಿದ್ದಾರೆ… ಇನ್ನು ಈ ಹೆಣ್ಣು ಮಕ್ಕಳ ಪಾಡೇನು?” ಎಂದು ವರಲಕ್ಷ್ಮಿ ಕಡೆ ತಿರುಗಿ “ನೀನೂ ನನ್ತಂಗಿ ಇದ್ದಂಗೆ ಅಂತ ತಿಳ್ದು ಹೇಳ್ತೀನಿ … ನಿನ್ ಮನಸ್ಸಿನಾಗದೇನೈತೆ ಹೇಳಿ ಬಿಡು ತಾಯಿ” ಎಂದ. +ಶೂದ್ರರಾಡುತಿರುವ ಗ್ರಾಮ್ಯ ಭಾಷೆಯಿಂದ ತನ್ನ ಕಿವಿ ಸಂಸ್ಕಾರವೇ ಹಾಳಾಯಿತೆಂಬಂತೆ ಮುಖ ಮಾಡಿದ್ದ ಅತ್ತೆ ಕಡೆ ನೋಡಿದ ವರಲಕ್ಷ್ಮಿ ತಾನೂ ಗ್ರಾಮ್ಯ ಭಾಷೆಯಲ್ಲಿಯೇ ಮಾತಾಡಿ ತ್ರಿಮೂರ್ತಿಗಳ ಕೃಪೆಗೆ ಪಾತ್ರಳಾಗಬೇಕೆಂದು ಯೋಚಿಸಿದಳು. +“ಹೇಳೋದೇನೈತ್ರಿ ತಂದೆ?… ನಾನು ಮೊದ್ಲೇ ಗಂಡ ಸತ್ತಾಕೆ. ಇರೋ ಎಲ್ಡು ಮಕ್ಕಳನ್ನು ಕಟ್ಟಿಕೊಂಡು ಒಳ್ಳೇದು ಕೆಟ್ಟದ್ದೂ ನೋಡ್ಕೋತ ಬಾಳಿ ಬದುಕಬೇಕಾಗಿರೋಳು. ಈ ಅತ್ತೆಗೀ ವಯಸ್ನಲ್ಲಿ ನೋಡ್ಕೊಳ್ಳೋರು ಯಾರಿದ್ದಾರೆ … ಅಕೀಗೆ ಮಗ ಅಂದ್ರೂ ನಾನೇ ಸೊಸೆ ಅಂದ್ರೂ ನಾನೇ … ತೆಪ್ಪಗೆ ನಮ್ಮ ಜೊತೆ ಬಂದು ಬೇಕಾದ್ದು ಮಾಡಿಸಿಕೊಂಡು ತಿಂದು ಬಿಡ್ಲಿ… ಕೊನೆಗಾಲಕ್ಕೆ ನಾನಗದೆ ಬೇರೆ ಯಾರಾದಾರೂ? …” ಅನಸೂಯಳೊಂದಿಗೆ ವಾರಕ್ಕೊಂದು ಸಾರಿಯಾದರೂ ಜಗಳ ಆಡೀ ಆಡೀ ಗ್ರಾಮ್ಯ ಭಾಷೆ ರೂಡಿಸಿಕೊಂಡಿದ್ದರಿಂದ ಈ ಪ್ರಕಾರವಾಗಿ ಸಲೀಸಾಗಿ ಮಾತಾಡಿದ್ದಳು. ಆಕೆಯ ಅಸ್ಖಲಿತ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ತಲೆದೂಗಿದರು. +ಆದರೆ ಮುದುಕಿ ಅದುವರೆಗೆ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಬಿಟ್ಟಿತ್ತು. ಇಂಥ ಸೊಸೆಯನ್ನು ಹುಡುಕಿ ತಂದುಕಟ್ಟಿದ ಆಕೆಯ ಮಾಮಾಶ್ರೀಯನ್ನು ಮನಸ್ಸಿನಲ್ಲಿ ಕಣ್ಣುಮುಚ್ಚಿ ಶಪಿಸುತ್ತಿತ್ತು. ತನ್ನ ಪ್ರಾರಬ್ಧವೇ ಸೊಸೆಯ ರೂಪಧರಿಸಿ ಬಂದು ಕಾಡುತ್ತಿರುವುದೆಂದೂ … ಇದರಿಂದ ಬಿಡುಗಡೆಯಾಗಿ ಯಾವುದಾದರೂ ಪವಿತ್ರ ನದಿ ಹುಡುಕಿಕೊಂಡು ಹೋಗಿ ದೇಹ ತ್ಯಜಿಸಬೇಕೆಂದೂ ಕೃತು ನಿಶ್ಚಯ ಮಾಡಿತು. +ತಾನಿದುವರೆಗೆ ಈ ಶನಿಯೊಂದಿಗೆ ಬಾಳುವೆ ಸಾಗಿಸಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಸ್ವಲ್ಪೇ ಸದ್ದು ಮಾಡುತ್ತ … +ಚಂದ್ರೋದ್ಭಾಸಿತ ಶೇಖರೇ ಸ್ಮರಹರೇ ಗಂಗಾಧರೇ ಶಂಕರೇ ಸರ್ಪೈ| ರ್ಬೂಷಿತ ಕರ್ಣಕಂಠಕಂ ಹರೇ ನೇತ್ರೋತ್ಥ ವೈಶಾನರೇ! ದಂತಿತ್ವಕೃತ ಸುಂದರಾಂಬಧರೇ ತ್ರೈಲೋಕ್ಯಸಾರೇ ಹರೇ ಮೋಕ್ಷಾರ್ಥಂ ಕುರು ಚಿತ್ತ ಯಮಲಾಮ್ಮಂತ್ರೈಸ್ತು ಕಿ ಕಮ್ರ್ಮಭಿಃ ಕ್ಷಂತವ್ಯೋ … ಎಂದು ಸರ್ವಾಪರಾಧವನ್ನು ಕ್ಷಮಿಸುವಂತೆ ಪರಮೇಶ್ವರನನ್ನು ಪ್ರಾರ್ಥಿಸಿ ಸ್ವಲ್ಪ ಸ್ವಲ್ಪೇ ಕಿವಿಗಳ ಮೇಲಿದ್ದ ಕೈಗಳನ್ನೂ; ರೆಪ್ಪೆಗಳನ್ನೂ ಬಿಚ್ಚಿ ವಾಯು ಮಂಡಲದ ಸಮಸ್ತ ಪ್ರಾಣಶಕ್ತಿಯನ್ನು ಕುಂಡಲಿನೀ ಬಾಂಡಲೆಗೆ ತುಂಬಿಕೊಳ್ಳಲಿರುವಳಂತೆ ನಿಡಿದಾಗಿ ಉಸಿರೆಳೆದುಕೊಳ್ಳುತ್ತಿರುವಾಗ ಗುರುಸಾಂತಪ್ಪನು ಇದೇ ಸುಸಮಯವೆಂದೂಹಿಸಿಕೊಂಡು … +“ವಯಸ್ಸಗ ಚಿಕ್ಕವಳಾಗಿದ್ರೂ ವರಲಕ್ಷ್ಮಮ್ಮ ಮುತ್ತಿನಂಗ ಮಾತಾಡಿದ್ಳು ಬಿಡಿ … ನಮ್ಮಂಥ ಗುರುಬೋಧ ತಗೊಂಡೋರು ಹಿಂಗೆ ಮಾತಾಡ್ಲಿಕ್ಕೆ ಸಾಧ್ಯವಿಲ್ಲ. ಅಜ್ಜಿ ಸೊಸೀ ಮಾತ್ನ ಕೇಳಿಸಿಕೊಳ್ತೋ ಇಲ್ವೋ … ಕೇಳಿಸಿಕೊಂಡಿದ್ರೆ ನಂ ಪುಣ್ಯ …” ಎಂದು ಹವಿಸ್ಸು ಎರೆದನು. +ಅಲುಮೇಲಮ್ಮ ಬಾಗಿರ್ದ ಸೊಂಟಮಂ ತುಸುವೇ ಮೇಲೆತ್ತಿ ಕಣ್ಣುಗಳಿಂದ ಪ್ರಜ್ವಲಿಸುತ್ತ “ಏನ್ರೋ ನೀವು ಮಾತಾಡ್ತಿರೋದು? ನ್ಯಾಯ ಹೇಳೊ ಲಕ್ಷಣವೇನಿದು? ಈಗ್ಲೆ ಇಷ್ಟು ಮಾತಾಡ್ತಿರೋ ಇವಳು ನನ್ನ್ ಜುಟ್ಟ ಇವಳ ಕೈಗೆ ಸಿಕ್ಕ ಮೇಲೆ ಹುರಿದು ಮುಕ್ಕದೆ ಬಿಡುವಳೇನು? … ಬಂಗಾರದಂಥ ನನ್ನ ಮಗನನ್ನೇ ನುಂಗಿ ಆಚಮನ ಮಾಡಿಧೋಳಿಗೆ ನಾನ್ಯಾವ ಲೆಕ್ಕ … ನನ್ನ ಹಣೇಲಿ ವಿಧಿ ಬರೆದಂತಾಗ್ತದೆ … ನನ್ನ ದಾರಿ ನಾನು ನೋಡ್ಕೋತೀನಿ … ” ಲತಗು ಪುಟುಗು ಲಟ್ಟಿಗೆ ಮುರಿದದ್ದು ವಾದಕ ಶ್ರುತಿಪಡಿಸಿಕೊಳ್ಳಲು ತಬಲದ ಮೇಲೆ ಸದ್ದು ಮಾಡುವಂಥ ಸದ್ದಾಯಿತು. +ತ್ರಿಮೂತಿಗಳು ಅಸಹಾಯಕತೆಯಿಂದ ವರಲಕ್ಶ್ಮಿಯ ಮುಖ ನೋಡಿದರು. ಆಕೆಯೂ ನಿಟ್ಟುಸಿರುಬಿಟ್ಟು ತುಟಿಗಳನ್ನು ಎಡಕ್ಕೂ ಬಲಕ್ಕೂ ಹೊರಳಾಡಿಸಿ ಅಸಂತೃಪ್ತಿ ಸೂಚಿಸಿದಳು. ತುಸು ಹೊತ್ತು ಆ ಮುವ್ವರು ಚರ್ಚಿಸಿ ತಮ್ಮ ನಿರ್ಧಾರವನ್ನು ವರಲಕ್ಶ್ಮಿಗೆ ಸೂಚಿಸಿದರು. ಆಕೆ ಭಾರವಾದ ಉಸಿರು ಬಿಟ್ಟು ಒಪ್ಪಿದಳು. ಸೃಷ್ಟಿ ಮತ್ತು ಸ್ಥಿತಿಗಳ ಸಲಹೆಯಂತೆ ಲಯ ಪ್ರಸ್ತಾಪಿಸುವುದೆಂದು ತೀರ್ಮಾನವಾಯಿತು. +“ಅಮ್ಮಾ … ತಾಯಿ … ಜಗನ್ಮಾತೆ … ಆದಿಶಕ್ತಿ …” ಎಂದು ಪಲ್ಲವಿ ಹಾಡಿ ಲಯ ಮುಂದುವರಿದು ಹೇಳಿತು. “ನೀವು ನಮ್ಗೆಲ್ಲ ತಾಯಿ ಇದ್ದಂತೆ … ಈ ಇಳಿವಯಸ್ಸಿನಲ್ಲಿ ನೀವು ದುಡ್ಡು ತಗೊಂಡೇನ್ಮಾಡ್ತೀರೋ ದೇವ್ರೀಗೆ ಗೊತ್ತು! ನೀವು ಮನಸ್ಸಿಗೆ ನೋವು ನೋವು ಮಾಡ್ಕೊಂಡ್ರೆ ನಮಗಾಗ್ಲಿ; ನಿಮ್ಮ ಸೊಸೆ ಮೊಮ್ಮಕ್ಕಳಿಗಾಗ್ಲಿ ಒಳ್ಳೆದಾಗೊಲ್ಲ… ಅದ್ಕೆ ನಾವೆಲ್ರು ಒಂದು ನಿರ್ಧಾರಕ್ಕೆ ಬಂದಿದೀವಿ… ಅದನ್ನು ನೀವು ದೊಡ್ಡ ಮನಸ್ಸು ಮಾಡಿ ಒಪ್ಕೋಬೇಕು.” +“ನೋಡಪ್ಪಾ … ಎಂದೂ ಇಲ್ಲದ ಹೊಗಳಿಕೆಗೆ ಉಬ್ಬೋಳಲ್ಲ ನಾನು… ಅದೇನು ಹೇಳಬೇಕೆಂತಿಯೋ ಅದನ್ನು ಬಿಚ್ಚಿ ಹೇಳಿ ಬಿಡಪ್ಪಾ!” ತಾನು ಹೊತ್ತಿರುವ ಆಕಾಶ ಎಲ್ಲಿ ಕದಲಿ ಹೋಗುವುದೋ ಎಂದು ತಲೆಗೆ ಒಂದು ಕೈ ಇಟ್ಟು ಹೇಳಿತು. +ಶ್ರೀಕೃಷ್ಣ ಪರಮಾತುಮ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದ ರೀತಿಯಲ್ಲಿ ಲಯದ ಬೆನ್ನುಬು ನಿಸೂರು ಮಾಡಿಕೊಂಡು ಅಲಮೇಲಮ್ಮಜ್ಜಿ ಪಕ್ಕದಲ್ಲಿದ್ದ ಈಶಾನ್ಯದ ಕಡೆ ದೃಷ್ಟಿ ನೆಟ್ಟು- +“ನಮ್ಗೂ ನಿಮ್ ವಯಸ್ನಾಕಿ ಅಕ್ಕ ಅದಾಳ … ನಿಮ್ಮೆದುರೂಗೆ ಹೊರಗೊಂದು ಒಳಗೊಂದು ಮಾತಾಡಿದ್ರೆ ದೇವ್ರು ಮೆಚ್ಚಾಣಿಲ್ಲ . ನಿಮ್ಗೂ ನಾಕು ಮಂದಿಗೆ ಜ್ಞಾನ ಹೇಳೊವಷ್ಟು ಬುದ್ಧಿ ಐತೆ. ನಮ್ಮಂಥ ಮೂಳಗಳಿಂದ ಹೇಳಿಸಿಕೊಳ್ಳೋದು ಸರಿ ಅಲ್ಲ … ನಾವೆಲ್ರು ಒಂದು ತೀರ್ಮಾನಕ್ಕೆ ಬಂದೀವಿ … ಅದೇನಪಾಂದ್ರೆ ವರಲಕ್ಷ್ಮಮ್ಮನಿಂದ ಹತ್ತು ಸಾವ್ರ ಕೊಡಿಸಿಬಿಡ್ತೀವಿ … ರಾಮಾ ಕೃಷ್ಣಾ ಅಂತ ನಿಮ್ಮ ದಾರಿ ನೀವು ನೋಡ್ಕೊಂಡು ನಮ್ಮನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಟಿಕೊಳ್ಳ್ರಿ” ಎಂದು ತುಸು ವ್ಯಂಗಭರಿತ ದ್ವನಿಯಲ್ಲಿ ಹೇಳಿದ್ದನ್ನು ಕೇಳಿ ಮುದುಕಿ ಯಜ್ಞಕುಂಡದಂತೆ ಧಗ್ಗೆಂದಿತು. +“ಏನ್ರೋ ಮುಟ್ಠಾಳರ… ನನ್ನೇನಂತ ತಿಳಿದುಕೊಂಡಿರೋ … ನಾನೇನು ಭಿಕ್ಷೆ ಕೇಳ್ತಿದೀನ? ಸರೀಗರ್ಧ ಕೊಟ್ಟ್ರೆ ಸರಿ … ಇಲ್ಲಾಂದ್ರೆ ನಾನೀ ಮನೆ ಬಿಟ್ಟು ಕದಲೋದಿಲ್ಲ ಎಂದು ಪದ್ಮಾಸನ ಹಾಕಿಬಿಟ್ಟಿತು. +ಅದನ್ನು ಕೇಳಿ ರೊಚ್ಚಿಗೆದ್ದ ವರಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಹಿಗ್ಗಾಮುಗ್ಗಾ ಸದೆಬಡಿಯತೊಡಗಿದಳು. “ಹಾಳಾದೋವೆ … ಈ ದರಿದ್ರದೋಳ ಹೊಟ್ಟೀಲಿ ಯಾಕೆ ಹುಟ್ಟಿದ್ರೋ? … ನಿಮ್ಮಪ್ಪನ ಹಿಂದೆ ನೀವೂ ಸಾಯಬಾರ್ದಾಗಿತ್ತೆ? … ಇಲ್ಲಾ … ನಾನಿನ್ನು ಬದುಕಿರೊದಿಲ್ಲ … ಇನ್ನು ಇಪ್ಪತ್ನಾಲ್ಕು ತಾಸ್ನಲ್ಲಿ ವಿಷ ಕುಡ್ದು ಪ್ರಾಣ ಬಿಡ್ಲಿಲ್ಲ ನಾನು ನಮ್ಮಪ್ಪನ ಮಗಳೇ ಅಲ್ಲ ” ಎಂದು ಒಂದು ಕಣ್ಣು ಮೂಗಿನಿಂದ ಒಂದೇ ಸಮನೆ ಹಳ್ಳ ತೋಡಗಿದಳು … ಆ ಮೂರನೆ ಇಯತ್ತೆ ಒಂದನೇ ಇಯತ್ತೆ ಕಂದಮ್ಮಗಳು ಆಕಾಶ ಬೀಳುವಂತೆ ಹೋ ಎಂದು ಅಳತೊಡಗಲು ಇಡೀ ಓಣಿಗೆ ಓಣಿಯೇ ಮನೆಯ ಸುತ್ತ ನೆರೆಯಿತು. +ಪ್ರೇಕ್ಷಕರ ಎದುರಿಗೆ ಮುಂದಿಟ್ಟ ಕಾಲು ಹಿಂದಿಟ್ಟರಾಗುವುದೇನು! +ಮುದುಕಿ ದಿಗ್ಗನೆದ್ದು ಹೋಗಿ ಆಕೆಯ ಧಾಳಿಗೆ ತುತ್ತಾಗಿರ್ದ ತನ್ನ ಮೊಮ್ಮಕ್ಕಳನ್ನು ಬಿಡಿಸಿ ಎದೆಗವುಚಿಕೊಂಡಿತು. +” ಅದ್ಯಾಕೆ ಹಂಗ ಮಕ್ಕಳನ್ನು ದನಕ್ಕೆ ಬಡಿದ ಹಾಗೆ ಶೂದ್ರರ ಥರ ಬಡೀತೀಯಾ? … ನೀನು ಮಾಡಿರೋ ತಪ್ಪಿಗೆ ಇವನ್ಯಾಕೆ ದಂಡಿಸ್ತಿದೀಯಾ? … ಒಳ್ಳೆ ಕುಟುಂಬದಿಂದ ಬಂದಿರೋಳಾಗಿದ್ರೆ ಹಿಂಗ ಹೊಡೀತಿದ್ದೆ ಏನೆ!…” ಎಂದು ಮಾತಿನ ಮೊನೆಗೆ ಬ್ರಾಹ್ಮಣಿಕೆ ಲೇಪಿಸಿ ಪ್ರಯೋಗಿಸಿತು. … +“ಅತ್ತೆ … ಮರ್ಯಾದೆ ಕೊಟ್ಟು ಮರ್ಯಾದೆ ತೊಗೊಳ್ರಿ … ನನ್ನ ಮಕ್ಕಳ್ನ ನಾನೇನಾದ್ರೂ ಮಾಡ್ತೀನಿ … ಅದ್ನ ಕೇಳೋಕೆ ನೀವ್ಯಾರು?” +“ನಾವ್ವ್ಯಾರಂತೀ ಏನೆ? …” ನಿನ್ನ ನಾಲಿಗೆಗೆ ಹುಳ ಬೀಳ್ಲಿ … ನಾನು ಹೆತ್ತೋನ್ನಲ್ವೇನೆ ನೀನು ಕಟ್ಕೊಂಡು ನಾಲ್ಕಾಲ ಬಾಳುವೆ ಮಾಡಿದ್ದು? ಹಿಂಸೆಯ ಅರ್ಥ ಮಾಡ್ಕೊಂಡಿದ್ದೆ ಅವ್ನು ನಿನ್ನ ಕಟ್ಟ್ಕೊಂಡ ಮೇಲೆ” +“ಏನೆಲ್ಲ ಮಾತಾಡಿ ನನ್ನ ತಲೆ ಕೆಡಿಸಬೇಡ್ರಿ … ನಿಮ್ಮ ಮಗನ್ನ ಮದ್ವೆ ಮಾಡ್ಕೊಂಡು ಅನುಭವಿಸಿದ್ದು ಅಷ್ಟರಲ್ಲೆ ಇದೆ … ನನ್ನಂಥ ಪತಿವ್ರತೆಗೆ ದ್ರೋಹ ಮಾಡಿ ಯಾವತ್ತು ನಿಮ್ಮ ಮಗ ಆ ಕುಲಟೆ ಅನಸೂಯಳ ಸೆರಗಲ್ಲಿ ಬಿದ್ನೋ ಅವತ್ತೆ ನನ್ನ ನರಕ ನಾನು ಕಂಡುಕೊಂಡ …” +“ಪಾತಿವ್ರತ್ಯದ ನೆಪದಲ್ಲಿ ನೀನು ಅವನನ್ನು ಕುಂತರೂ ಸೇರಲಿಲ್ಲ. ನಿಂತೂ ಸೆರಲಿಲ್ಲ. ಬ್ರಾಹ್ಮಣಿಕೆ ಜೊತೆಗೆ ಪಾತಿವ್ರತ್ಯ ಸೇರ್ಕೊಂಡ್ರೆ ಏನಾಗ್ತದೆ ಎಂಬುದಕ್ಕೆ ನೀನೇ ಸಾಕ್ಷಿ ಕಣೆ … ನಿನು ಸರಿಯಾಗಿದ್ರೆಯಾಕೆ ನನ್ನ ಮಗ ಅನಸೂಯಾಳ ಸೆರಗಿಗೆ ಬೀಳ್ತಿದ್ದ … ನಿನ್ಕಿಂತ ಅವಳೆ ಎಷ್ಟೋ ವಾಸಿ ಅಂತ ನನಗೀಗ ಅನ್ನಿಸ್ತಾ ಇದೆ ಕಣೆ.” +ವರಲಕ್ಷ್ಮಿ ಅಸಹಾಯಕತೆಯಿಂದ ಎದೆಎದೆ ಬಡಿದುಕೊಂಡು ಅಳತೊಡಗಿದಳು … ಆಕೆಯ ರೋಧನದ ಬಗ್ಗೆ ತಲೆಕೆಡೆಸಿಕೊಳ್ಳದೆ ಮುದುಕಿ ವಿಜಯದ ನಗೆ ಬೀರುತ್ತ, ತನ್ನ ಗೊಡವೆಗೆ ಬಂದವರಿಗೆ ಉಳಿಗಾಲವಿಲ್ಲ ಎಂಬ ದೃಷ್ಟಿ ಬೀರುತ್ತ ಸೊಂಟದ ಮೂಲೆಯಿಂದ ಭಾರತ ಸರಕಾರದ ಚಲಾವಣೆಯ ಎರಡು ನೋಟುಗಳನ್ನು ತೆಗೆದು ಮೊಮ್ಮಕ್ಕಳ ಕೈಲಿ ಇರಿಸುತ್ತ, “ಅಷ್ಟಾವಧಾನಿ ಗೋವಿಂದರಾಯರಂಗಡಿಗೆ ಹೋಗಿ ಏನಾದ್ರು ಕೊಂಡುಕೊಳ್ಳಿ” ಎಂದು ಹೇಳಿತು. ಅವು ಏಳು ಕೊಪ್ಪರಿಗೆ ಚಿನ್ನವೇ ದೊರಕಿತೆಂದೆಂಬ ರೀತಿಯಲ್ಲಿ ಹಣ ಹಿಡಿದುಕೊಂಡು ಅಮರಕೋಶದ ಶ್ಲೋಕದ ಜೊತೆಗೆ ಬಾಬಾ ಬ್ಲಾಕ್ ಶೀಪ್ ಕವಿತೆ ಬೆರೆಸಿ ವಿಚಿತ್ರ ರೀತಿಯಲ್ಲಿ ಉಷಾಉತ್ತಪ್ಪ ಥರ ಹಾಡುತ್ತ ಅಂಗಡಿ ಕಡೆ ಓಡಿದವು … +ತನ್ನ ಹದಿನೆಂಟ್ಯ್ ಅಕ್ಷೋಹಿಣಿ ಸೈನ್ಯವೇ ತನ್ನಿಂದ ದೂರವಾಯಿತೆಂಬ ಮತ್ತಷ್ಟು ಅಸಹಾಯಕತೆಯಿಂದ ನಲುಗಿ ಹೋದ ವರಲಕ್ಷ್ಮಿಯನ್ನು ಸಂತೈಸಲು ತಾ ಮುಂದು ನಾ ಮುಂದು ಅಂತ ಮೂರಡಿ ದೂರದಿಂದಲೇ ಪ್ರಯತ್ನಿಸಿದರು. ದುಃಖವೆಂಬುದು ಎಷ್ಟು ಹೊತ್ತು ಇರಲು ಸಾಧ್ಯ! ಸ್ವಲ್ಪ ಹೊತ್ತಿನಲ್ಲಿ ಒಂದು ತಹಬಂದಿಗೆ ತಂದಿತು. +“ಹಂಗಂದ್ರೆ ಎಷ್ಟು ಕೊಡಿಸ ಬೇಕಂತೀರಿ ಅಮ್ಮಾ” ಎಂದು ನಮ್ಮಪ್ಪನೇ ಕೇಳಿದ. +“ಮೂವತ್ತು ಸಾವಿರ … ಅದ್ಕೂ ಒಂದು ದಮ್ಮಡಿ ಇದ್ರೆ ಮುಟ್ಟೋಳಲ್ಲ ನಾನು” ವಿಜಯದ ಉತ್ತುಂಗ ಶಿಖಿರದಲ್ಲಿ ವಿರಾಜಮಾನಳಾಗಿದ್ದ ಅಲುಮೇಲಮ್ಮಜ್ಜಿ ಅಶರೀರವಾಣಿಯಂತೆ ನುಡಿಯಿತು. +“ಅಷ್ಟೊಂದು ತಗೊಡೇನ್ಮಾಡ್ತೀರಿ? … ಕಾಲ ಬೇರೆ ಸುಮಾರೈತಿ … ಒಂದು ಹೋಗಿ ಇನ್ನೊಂದಾಗಿ ಬಿಟ್ಟ್ರೇನ್ಮಾಡ್ತೀರಿ?… ಅದ್ಕೆ ಯೋಚ್ನೆ ಮಾದಿ ಓಂದು ನಿರ್ಧಾರಕ್ಕೆ ಬನ್ನಿ” ವರಲಕ್ಷ್ಮಿ ಪರ ಹೃದಯ ಕರಗಿ ಹಾಲಪ್ಪ ಮೆಲು ದನಿಯಲ್ಲಿ ಕೇಳಿಕೊಂಡ. +“ನಾನು ಅದ್ನೆಲ್ಲ ದಾರೀಲಿ ಹೋಗೋ ಶೂದ್ರರ ದೇವತೆಗೆ ಕೊಡ್ತೀನಪ್ಪಾ … ಅದ್ನೆಲ್ಲ ಏನು ಕೇಳೊದು! ನೋಡು ತಮ್ಮಾ… ನಾನು ಬದುಕ್ನಲ್ಲಿ ನಾನಾ ಕಷ್ಟ ಅನುಭವಿಸಿದೋಳು…. ಪಾಪ ಎಷ್ಟು ಮಾಡಿದ್ದೀನೋ! ಪುಣ್ಯ ಎಷ್ಟು ಮಾಡಿದ್ದೀನೋ!… ಕಾಶೀ, ಕೇದಾರ, ಬದರೀಗೆ ಹೋಗಬೇಕೂಂತಿದ್ದೀನಿ … ಗಂಗೋತ್ರಿಲಿ ದೇಹ ತ್ಯಾಗ ಮಾಡಿ ಲೌಕಿಕ ವ್ಯಾಪಾರ ಮುಗಿಸಬೇಕೆಂದು ದೃಢ ನಿಶ್ಚಯ ಮಾಡಿದ್ದೀನಿ… ಇದೆಲ್ಲ ಶೂದ್ರರಾದ ನಿಮಗೆ ಹೇಗೆ ಅರ್ಥ ಆದೀತು… ಇದ್ನೆಲ್ಲ ಕಟ್ಕೊಂಡು ನೀವು ಮಾಡೊದ್ದರು ಏನಿದೆ? ನಾನೇನು ಬೇರೆಯವರ ಸೊತ್ತಿಗೆ ಆಸೆ ಪಡ್ತಾ ಇಲ್ವಲ್ಲ… ಇದೆಲ್ಲ ನನ್ನ ಗಂಡ ಸಂಪಾದಿಸಿದ್ದು ಕಣ್ರಪ್ಪಾ… ನ್ಯಾವವಾಗಿ ಇದೆಲ್ಲ ನನಗೆ ಸೇರಬೇಕಾದದ್ದೇ. ನಾನೇನು ಆಕೆ ಗಂಡನ ಆಸ್ತೀಲಿ ಪಾಲು ಕೇಳ್ತಿಲ್ವಲ್ಲ… “ಅಲೌಕಿಕ ಜ್ಞಾನದೊಂದಿಗೆ ಲೌಕಿಕ ಜ್ಞಾನವನ್ನೂ ಬೆರೆಸಿ ಪಟಪಟನೆ ಮಾತಾಡಿದಳು. +“ಯಾವ ಪುರುಷಾರ್ಥಕ್ಕೆಂಥ ಮೂವತ್ತು ಸಾವಿರ ಕೊಡೋದು… ಊರು ಹೋಗು ಅನ್ನೋ ವಯಸ್ಸು; ಸುಡುಗಾಡು ಬಾ ಅನ್ನೋ ವಯಸ್ಸು … ಅಬ್ಬಾ ಇದರ ಆಸೆಯೇ … ಈ ಕೊನೆಗಾಲದಲ್ಲೂ ಹೇಗೆ ಕಾಡ್ತಿದೆಯಲ್ಲ… ವರಲಕ್ಷ್ಮಿ ಎದೆಯನ್ನು ದಬ್ ಅಂತ ಗುದ್ದಿಕೊಂಡಳು. +ಎರಡು ನಮೂನೆಯ ಹರತಾಳಗಳ ನಡುವೆ ತ್ರಿಮೂರ್ತಿಗಳು ನ್ಯಾಯ ಬಗೆಹರಿಸಲಾಗದೆ ಬಸವಳಿದವು. ಮುಂದಿರಿಸಿದ ಕಾಲು ಹಿಂದಿರಿಸುವಂತಿಲ್ಲ. ತಾವು ಹನ್ನೊಂದನೆ ವಾರ್ಡಿನ ಮಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬೇಕಾದವರು! ನ್ಯಾಯ ಬಗೆ ಹರಿಸದೆ ಹೋದಲ್ಲಿ ಜನರಾದರು ಏನೆಂದುಕೊಂಡಾರು! ಹನ್ನೊಂದನೆ ವಾರ್ಡನ್ನೇ ಮೂಲ ಬಂಡವಾಳವನ್ನಾಗಿ ಇಟ್ಟು ಭವಿಷ್ಯತ್ತಿನಲ್ಲಿ ಸಾಕಷ್ಟು ಬೇಯಿಸಿಕೊಳ್ಳುವುದಿದೆ! ಅವರೆಲ್ಲ ಕದನ ಕುತೋಹಲಿಗಳಾಗಿ ನೆರೆದಿರುವವರು. +ತ್ರಿಮೂರ್ತಿಗಳು ಸೋಲರಿಯದ ಛಲದಂಕ ಮಲ್ಲರಂತೆ ತತ್‌ಕ್ಷ್ಣಣ ಕಾರ್ಯೋನ್ಮುಖರಾದರು. ತಾಸು ಪರ್ಯಂತ ಸಂಧಾನ ನಡೆಸೀ, ನಡೆಸೀ … ದೇವರ ದಯೆಯೋ ಎಂಬಂತೆ… ಒಂದು ಹಂತ ತಲುಪಿದರು. ವೇದ ಪಾರಾಯಣಂಗಳ ಫಲದಿಂದಾಗಿಯೋ … ಗಂಗಾದಿ ತೀರ್ಥಸ್ನಾನ ಫಲದಿಂದಾಗಿಯೋ … ಕೃರ್ಛಾಧಿ ತಪಸ್ಸಿನ ಫಲದಿಂದಾಗಿಯೊ ಎಂಬಂತೆ ಅಲುಮೇಲಮ್ಮನೇ ಐದು ಸಾವಿರ ಕಡಿಮೆ ಮಾಡಿಕೊಳ್ಳಲು ಬೇಷರತ್ತಾಗಿ ಒಪ್ಪಿಕೊಂಡಳು. ಸೊಸೆಯೂ ಅದಕ್ಕೆ ಸಮ್ಮತಿಸಿದಳು. ತನ್ನ ತಪೋ ಶಕ್ತಿಯ ಸಿಂಹ ಪಾಲನ್ನೇ ಧಾರೆ ಎರೆದುಕೊಡಲಿರುವವಳಂತೆ ಸಾವಿರ ಎಣಿಸಿಕೊಟ್ಟಳು. “ಹೋಗಿ ಬರ್‍ತೀವಮ್ಮಾ … ಇನ್ನು ಮುಂದೆ ನೀವು ನಿಮ್ಮ ನಿಮ್ಮ ಸಂಬಂಧ ಉಳಿಸಿಕೊಳ್ತೀರೋಬಿಡ್‌ತೀರೋ… ಅದು ನಿಮ್ಗೆ ಸೇರಿದ್ದು… ಇದರಲ್ಲಿ ನಮ್ಮಿಂದೇನಾದ್ರು ತಪ್ಪಾಗಿದ್ರೆ ಹೊಟ್ಟೇಲಿ ಹಾಕ್ಕೊಳ್ಳ್ರಿ” ಎಂದು ಹೇಳಿ ತ್ರಿಮೂರ್ತಿಗಳು ತಂತಮ್ಮ ಅಂಡು ಕೆಳಗೆ ಹಾಕಿಕೊಂಡಿದ್ದ ಟವೆಲ್ಲುಗಳನ್ನು ಕೊಡವಿ ಹೆಗಲಮೇಲಿಳಿಬಿಟ್ಟುಕೊಂಡು ಹೊರನಡೆದವು. +ಹೊರಗಡೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತ ನಿಂತಿದ್ದ ಮಹಾನ್ ಜನತೆಯನ್ನು ಉದ್ದೇಶಿಸಿ “ಇಲ್ಲಿ ಏನು ಕರಡಿ ನರಿ ಕುಣಿತಾವೇನು? ಎಲ್ಲ ಮುಗೀತಲ್ಲ … ಇನ್ನು ನೀವು ನಿಮ್ಮ ಮನೆಗೆ ನೀವು ಹೊರಡ್ರಿ” ಎಂದು ಹೇಳಿದ ಅಪ್ಪನ ಕಂಚಿನ ಕಂಠಕ್ಕೆ ಬೆಲೆ ಕೊಟ್ಟುಅವರೆಲ್ಲ ಹಣಕ್ಕೂ ಮನುಷ್ಯರಿಗೂ ಇರುವ ಅನೂಹ್ಯ ಸಂಬಂಧ ಕುರಿತು ತಲಾ ಒಂದೊಂದು ಮಾತಾಡುತ್ತ ಅಲ್ಲಿಂದ ಕಾಲು ಕಿತ್ತರು. +ಮಾಘ ಶುದ್ಧ ಪಂಚಮಿಯಂದು ನಾವು ಆ ಮನೆ ಪ್ರವೇಶ ಮಾಡುವುದಕ್ಕೂ ಮೊದಲು ಸಾಕಷ್ಟು ವಿದ್ಯಮಾನಗಳು ನಡೆದವು. ಈಷ್ಟೆಲ್ಲ ಜಗಳ ಆಡಿದ ಅತ್ತೆ ಸೊಸೆಯರಿಬ್ಬರು ತಲಾ ಒಂದೊಂದು ಉತ್ತರಾದಿ; ದಕ್ಷಿಣಾದಿ ದಾರಿ ಹಿಡಿಯುವರೆಂದು ಜಗಳ ಹರಿದ ಮರುಕ್ಷಣ ಅಂದುಕೊಂಡಿದ್ದೆ. ಕಥೆಗಾರನಾಗಿ ಅವರ ಪೂರ್ವೋತ್ತರ ಬದುಕಿನ ಬಗ್ಗೆ; ಶೇಷಾಯುಷ್ಯ ಕಳೆಯುವ ಬಗ್ಗೆ ಸಾಕಷ್ಟು ಆತಂಕಗೊಂಡು ಆಲೋಚಿಸಿದ್ದೆ. ಆದರೆ ನನ್ನ ಸೃಜನಶೀಲಾತ್ಮಕ ಊಹೆ, ಆತಂಕಗಳೆಲ್ಲ ತಲೆಕೆಳಗಾದವು. +ವಿಚಿತ್ರವೇನೆಂದರೆ ಅತ್ತೆ ಸೊಸೆಯರಿಬ್ಬರು ನಂತರ ದಿನಗಳಲ್ಲಿ ತುಂಬ ಅನ್ಯೋನ್ಯವಾಗಿದ್ದರು. ದೂರದ ಸಂಬಂದಿಯೋರ್ವನು ಹಚ್ಚಿಕೊಟ್ಟಿದ್ದರಿಂದಾಗಿಯೇ ಅಲುಮೇಲಮ್ಮಜ್ಜಿ ಜಿದ್ದಾಜಿದ್ದಿ ಆಡಿತೆಂದು ಅರ್ಥವಾಯಿತು. ನೀಳಕಾಯದ; ಪರಮ ಸಾತ್ವಿಕ ತೇಜಸ್ಸಿನ ಮುಖದ ಆ ದೂರದ ಸಂಬಂಧಿ ನನ್ನ ನೀಳ್ಗಥೆಯ ಯಾವ್ಯ್ದೋ ಮೂಲೆಯ ಪಾತ್ರವೆಂದು ನನಗರ್ಥವಾಯಿತು. ಈ ಬಗ್ಗೆ ನಾನು ತಲೆ ಕೆಡೆಸಿಕೊಳ್ಳದೆ ಇರಲಿಲ್ಲ. ತನ್ನ ಮಗಳನ್ನು ಶಾಮನಿಗೆ ಗಂಟು ಹಾಕಲು ಪ್ರಯತ್ನಿಸಿದ ಹರಪನಹಳ್ಳಿ ಅಗ್ರಹಾರದ ಕಡೆಯ ಶಾನುಭೋಗ ಶಿವರಾಮರಾಯರು ಅಂತ ಕೆಲವರೆಂದರೆ; ಮತ್ತೆ ಕೆಲವರು ಒಂದು ಕಾಲದಲ್ಲಿ ಅಲುಮೇಲಮ್ಮನನ್ನು ಮಾಡಿಕೊಳ್ಳಬೇಕೆಂದು ತಲೆಕೆಡೆಸಿಕೊಂಡಿದ್ದ ಸೂಲದೇವರಹಳ್ಳಿ ಶಾನುಭೋಗರ ಮಗ ಶೀನಪ್ಪ ಅಲಿಯಾಸ್ ಶ್ರೀನಿವಾಸಾಚಾರ್ಯರೆಂದು ಆಡಿಕೊಂಡರು. +ಅಲುಮೇಲಮ್ಮನವರಿಂದ ತಿರಸ್ಕೃತಗೊಂಡ ನಂತರ ಶೀನಪ್ಪ ಶ್ರೀನಿವಾಸಾಚಾರ್ಯರಾಗಿದ್ದೊಂದು ದೊಡ್ಡ ಕಥೆ. ಹೆಂಡತಿ ತೀರಿಕೊಂಡ ನಂತರ ರಮಣ ಮಹರ್ಷಿಗಳ ಆಶ್ರಮದಲ್ಲಿದ್ದು ಮೂರು ತಿಂಗಳಕಾಲ ಮೌನೋಪಾಸನೆ ಮಾಡಿದನಂತೆ, ಉಪಾಸನೆ ಪೂರ್ಣಗೊಂಡ ಕ್ಷಣವೇ ಅಲುಮೇಲಮ್ಮ ಶಂಖ ಚಕ್ರ, ಗದಾ ಹಸ್ತೆಯಾಗಿ ಮಹಾಲಕ್ಷ್ಮಿ ರೂಪದಲ್ಲಿ ದರುಶನ ನೀಡಿದಳಂತೆ. ಅದೂ ಅರೆ ಜಾಗೃತಾವಸ್ಥೆಯಲ್ಲಿ ಬಿದ್ದ ಕನಸಿನಲ್ಲಿ… ಪ್ರತಿ ಶನಿವಾರ ಗೋಧೂಳಿ ಮಹೂರ್ತದಲ್ಲಿ ಪ್ರಾಣ ದೇವರ ದೇವಸ್ಥಾನದಲ್ಲಿ ಬಂದು ಅಲುಮೇಲಮ್ಮಜ್ಜಿಯನ್ನು ಕಂಡು ಮಮ್ಮಲನೆ ಮರುಗಿ ಮಾತಾಡಿಸಿಕೊಂಡು ಹೋಗುತ್ತಿದ್ದನಂತೆ… ಅಕಾಲ ಮರಣಕ್ಕೆ ತುತ್ತಾಗಿದ್ದವವರ ಕೈ ಹಿಡಿದು ಏನು ಸಾಧಿಸಿದೆ? ದೀರ್ಘಾಯುಷಿಯಾದ ನನ್ನ ಕೈ ಹಿಡಿಯಬಾರದಿತ್ತೆ? ಅಂತ ಮಮ್ಮಲನೆ ಮರುಗುತ್ತಿದ್ದನಂತೆ… ಇದೆಲ್ಲ ಜನರು ನನ್ನ ಕಿವಿಗೆ ಬೀಳುವ ಹಾಗೆ ಮಾತಾಡಿಕೊಳ್ಳುತ್ತಿದ್ದರು. +ಇದರಲ್ಲಿ ಹಾಲೆಷ್ಟೊ? ನೀರೆಷ್ಟೋ? ಆದರೆ ಸಾಮಾನ್ಯ ಜನರು ಮಾತ್ರ ನನಗಿಂತ ಹೆಚ್ಚು ಸೃಜನಶೀಲರಾಗಿದ್ದುದು ನಿಜ. ಮುಂದೆ ಯಾರ್ಯಾರ ನಡುವೆ ಏನೇನು ನಡೆಯಿತೋ ಏನೋ…! ತೆರೆಮರೆಯಲ್ಲಿ ಹಲವರು ಮುದುಕಿಯ ಹಣ ಲಪಟಾಯಿಸಲು ಪ್ರಯತ್ನಿಸಿರಬಹುದು. ಅಷ್ಟರಲ್ಲಿ ಮುದುಕಿ ಎಚ್ಚತ್ತುಕೊಂಡಿರಬಹುದು. ಆಕೆ ಮುಂದೆ ಸೊಸೆಯ ಸಾನ್ನಿಧ್ಯವೇ ಪರಮ ಪುಣ್ಯ ಕ್ಷೇತ್ರವೆಂದು ಭಾವಿಸಿರಬಹುದು! ಮೊಮ್ಮಕ್ಕಳೇ ಸಾಕ್ಷಾತ್ ದೈವ ಸ್ವರೂಪವೆಂದೇ ಭಾವಿಸಿರಬಹುದು. ಅಂತೂ ಅದೇ ಮನೆಯಲ್ಲಿ ಮಾಘಮಾಸದವರೆಗೆ ಅತ್ತೆ ಸೊಸೆ ತಮ್ಮ ಕರುಳ ಕುಡಿಗಳೊಂದಿಗೆ ಅನ್ಯೋನ್ಯವಾಗಿದ್ದರು. ಹನ್ನೊಂದನೇ ವಾರ್ಡಿನಲ್ಲಿ ನಡೆಯುತ್ತಿದ್ದ ಅತ್ತೆ ಸೊಸೆ ಜಗಳವನ್ನು ತಾವು ನಯವಾದ ಮಾತುಗಳಿಂದ ಬಗೆಹರಿಸುತ್ತಿದ್ದರು. ಮುಂದೊಂದು ದಿನ ಅವರೆಲ್ಲ ಯಾವುದೋ ಊರಿಗೆ ಪ್ರಯಾಣ ಬೆಳೆಸಿದರು. ಪ್ರಾಯಶಃ ಹೊಸಪೇಟೆ ಇರಬಹುದು. ಹನ್ನೊಂದನೇ ವಾರ್ಡಿನ ಅನೇಕ ಹಿರಿಯರೊಂದಿಗೆ ನಮ್ಮಪ್ಪನೇ ನಿಲ್ದಾಣಕ್ಕೆ ಹೋಗಿ ಬಸ್ಸು ಹತ್ತಿಸಿ ಬಂದನು. +ಮಾಘ ಮಾಸದ ಐದನೆ ದಿನದಂದು ಆ ಮನೆ ಸೇರಿಕೊಂಡೋಡನೆ ನನ್ನನ್ನು ಶಾಮಾಶಾಸ್ತ್ರಿಯ ನೆನಪು ಆವರಿಸಿತು. ಅವನ ಮರಣಾನಂತರ ಸಂಭವಿಸಿದ ಅನೇಕ ಘಟನೆಗಳನ್ನು ಇದಕ್ಕೆ ಪೂರಕವಾಗಿಯೇ ನಾನು ಪ್ರಸ್ತಾಪಿಸಿರುವುದು. ಪ್ರಾಣಕ್ಕಿಂತ ಹೆಚ್ಚಗಿ ಪ್ರೀತಿಸುತ್ತಿದ್ದ ತಾಯಿ, ಪುರಾಣಗಳಲ್ಲಿ ಕಂಡರಿಯದ ಪತಿವ್ರತೆಯಾದ ಹೆಂಡತಿ, ಸಿನಿಮಾ ಬಾಲನಟರಂತಿದ್ದ ಇಬ್ಬರು ಗಂಡು ಮಕ್ಕಳು, ಕೈ ತುಂಬ ಪಗಾರ ಕೊಡುತ್ತಿದ್ದ ನೌಕರಿ, ಇಷ್ಟೆಲ್ಲ ಇದ್ದು ಸುಖವಾಗಿ ಬದುಕಲು ಯಾಕೆ ಅವನಿಂದ ಸಾಧ್ಯವಾಗಲಿಲ್ಲ? ಆ ಅನಸೂಯಳ ಗೊಡವೆಗೆ ಯಾಕೆ ಹೋಗಬೇಕಿತ್ತು? ಇಂಥ ಎಷ್ಟೋ ಬ್ರಹ್ಮಗಂಟುಗಳನ್ನು ಬಿಡಿಸದಿದ್ದಲ್ಲಿ; ಬದುಕಿನೊಳಗೆ ಮೊಟ್ಟೆ ಇಡುತ್ತಿದ್ದ ನಿಗೂಡ ಒಗಟುಗಳನ್ನು ಭೇದಿಸುವುದು ನನ್ನ ಜವಾಬ್ದಾರಿ. ನನ್ನ ಪರಮಾಪ್ತ ಗೆಳೆಯನಾದ ಅವನ ಬಗ್ಗೆ ನೀವು ಅಪಾರ್ಥ ಕಲ್ಪಿಸಿಕೊಳ್ಳಲು ದಾರಿಯಾಗಬಹುದು! ಅವನ ಮತ್ತು ನನ್ನ ನಡುವೆ ಒಂದು ಅಂತರ ಇತ್ತು. ಒಂದು ನಿರ್ದಿಷ್ಟ ದೂರದಿಂದಲೇ ಅವನ್ನು ಗ್ರಹಿಸುವ ಪ್ರಯತ್ನ ನಡೆಸಿದ್ದೆ. ಇಂಥ ಒಬ್ಬ ತನ್ನನ್ನು ಗ್ರಹಿಸುತ್ತಿದ್ದಾನೆಂದು ಅವನು ಅರ್ಥ ಮಾಡಿಕೊಂಡನೇನೋ? ಅಥವಾ ಸಾಹಿತ್ಯದ ಬಗೆಗಿನ ಅಭಿರುಚಿ ಆ ಅಂತರವನ್ನು ಅಳಿಸಿ ಹಾಕಿತೇನೋ? ಅಂತೂ ಹಂತ ಹಂತವಾಗಿ ನಾವಿಬ್ಬರು ಒಂದಾದೆವು. ನನಗೆ ಎಷ್ಟೋ ಸಂದರ್ಭಗಳಲ್ಲಿ ಗೆಳೆಯನಿಂತ ಹೆಚ್ಚಗಿ ಸೋದರನಂತೆ ವರ್ತಿಸುತ್ತಿದ್ದ. ನಾನು ಅಷ್ಟೆ. ಕ್ರಮೇಣ ಅವನ ಬದುಕಿನಲ್ಲಿ ಕಾಣಿಸಿಕೊಂಡ ತಿರುವುಗಳು ನನ್ನನ್ನು ಮೂಕವಿಸ್ಮಿತಗೊಳಿಸಿದವು. ಸರಿತಪ್ಪುಗಳ ಬಗ್ಗೆ ನನ್ನಿಂದ ಯೋಚಿಸುವುದಾಗಲಿಲ್ಲ … ಕೆಲವೊಮ್ಮೆ ನಾನು ಅವನನ್ನು ತಿದ್ದಲು ಪ್ರಯತ್ನಿಸಿದ್ದುಂಟು. ಅವನು ಪ್ರತಿಕ್ಷಣ ಸೋಲುತ್ತಿದ್ದಾನಲ್ಲ ಎಂದು ಮಮ್ಮಲನೆ ಮರುಗುತ್ತಿದ್ದುದುಂಟು. ಆದರೆ ಸೋಲು ಅವನದಾಗಿರಲಿಲ್ಲ. ನನ್ನದಾಗಿರುತ್ತಿತ್ತು. ಅದೂ ಅಲ್ಲದೆ ನೂರಾರು ಕಿಲೋ ಮೀಟರು ದೂರದೂರಿನಲ್ಲಿದ್ದು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ನನಗೆ ಅವನನ್ನು ಪೂರ್ಣ ಹಚ್ಚಿಕೊಳ್ಳುವುದು ಸಾಧ್ಯವಾಗದೆ ಹೋಯಿತು. ಪ್ರತಿ ಸಾರಿ ಬಂದಾಗಲೆಲ್ಲ ವಿಷಾದಕ್ಕೆ ತುತ್ತ್ತಾಗುತ್ತಲೋ, ವೇದನೆಯ ನಿಟ್ಟುಸಿರು ಬಿಡುತ್ತಲೋ, ಕೆಟ್ಟದಾಗಿ ಬಂಡಾಯದ ಬಗ್ಗೆ ಯೋಚಿಸುತ್ತಲೋ ಹೋಗಿಬಿಡುತ್ತಿದ್ದೆ. ನನಗೆ ಅರ್ಥವಾಗದಷ್ಟು ಅವನ ಬದುಕಿನ ವಿದ್ಯಮಾನಗಳು ಒಂದು ಕ್ಷಣ ಪ್ರಖರವಾಗಿ ಕೋರೈಸಿ ಮತ್ತೆ ಅಂತರ್ಧಾನವಾಗಿಬಿಡುತ್ತಿದ್ದವು. ಬೆಳಕಿಗೆ ಮಬ್ಬು ಕವಿದು ವಿವೇಚನಾ ಶಕ್ತಿ ಕಳೆದುಕೊಳ್ಳುತ್ತಿದ್ದ ಕಣ್ಣುಗಳಾಳದಿಂದ ಸ್ತ್ರೀಮೂರ್ತಿಯೊಂದು ಮೂಡತೊಡಗಿತ್ತು. ಅದು ಎಲ್ಲ ಮಾನವೀಯ ಸಂದೇಶಗಳಿಗಿಂತ ಮಿಗಿಲಾಗಿತ್ತು. ಈ ಎಲ್ಲ ಸಿಕ್ಕುಸಿಕ್ಕಾಗಿರುವ ಅನುಭವಗಳನ್ನು ಒಂದೊಂದಾಗಿ ಬಿಡಿಸಿ ಅವಕ್ಕೆಲ್ಲ ಅಕ್ಷರ ರೂಪ ಕೊಟ್ಟು ದೃಶ್ಯಾವಳಿಯಾಗಿರುವ ಕೆಲಸವನ್ನು ಮುಂದೆ ಮಾಡಲಿರುವೆ ಎಂಬಲ್ಲಿಗೆ ಕುಂ. ವೀ. ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ದ್ವಿತೀಯಾಶ್ವಾಸಂ ಸಮಾಪ್ತಿಯಾದುದು. +ಜಯಮಂಗಳಮ್ ನಿತ್ಯ ಶುಭಮಂಗಳಂ +***** +ಮುಂದುವರೆಯುವುದು +ಕೀಲಿಕರಣ: ಎಂ ಎನ್ ಎಸ್ ರಾವ್ +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […] +ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […] +ಅರ್ಪಣೆ ಪ್ರಿಯ ಮಿತ್ರರಾದ ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_505.txt b/Kannada Sahitya/article_505.txt new file mode 100644 index 0000000000000000000000000000000000000000..0ca8fa95e999133798eef8e9a61191f9d34997d6 --- /dev/null +++ b/Kannada Sahitya/article_505.txt @@ -0,0 +1,77 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ ಗೊತ್ತಿತ್ತು. ಈ ಹಿಂದೆಯೂ ಅನೇಕ ಹಳೆಯ ಹಸ್ತಪ್ರತಿಗಳನ್ನು ಜೋಶಿಯವರು ಹುಡುಕಿ, ಸರಿಯಾದ ಪಾಠ Iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಯಾವುದೆಂದು ನಿಗದಿಮಾಡಿ ಚಿದಾನಂದಮೂರ್ತಿಯವರಂಥ ಸಂಶೋಧಕರೂ ಚಕಾರ ಎತ್ತದಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ ಕೀರ್ತನೆಗಳ ಸಮಗ್ರ ಸಂಪುಟಕ್ಕೆ ಜೋಶಿಯವರೇ ಸಂಪಾದ-ಕರಾಗಬೇಕು ಅಂತ ಶರಣಬಸಪ್ಪ ಎರಡು ಮಾತಿಲ್ಲದೆ ನಿರ್ಧರಿಸಿಬಿಟ್ಟರು. +ಜೋಶಿಯವರಿಗೂ ಆ ಕ್ಪಣಕ್ಕೆ ಅದೇನು ಅವಮಾನ ಅನ್ನಿಸಲಿಲ್ಲ. ಅವರು ಅದೊಂದು ಗುರುತರವಾದ ಜವಾಬ್ದಾರಿ ಮತ್ತು ಮುಂದಿನ ಮೂರು ವರುಷಗಳನ್ನು ಅರ್ಥಪೂರ್ಣವಾಗಿ ಕಳೆಯುವುದಕ್ಕೊಂದು ದಾರಿ ಎಂದುಕೊಂಡೇ ಶರಣಬಸಪ್ಪ ಹೇಳಿದ್ದಕ್ಕೆ ಒಪ್ಪಿಕೊಂಡುಬಿಟ್ಟರು. +* +* +* +ಜೋಶಿ ಪರಮನಾಸ್ತಿಕರು. ಅವರ ಮನೆಯಲ್ಲಾಗಲೀ ಮನದಲ್ಲಾಗಲೀ ದೇವರ ಫೋಟೊ ಇರಲಿಲ್ಲ. ದೇವರನ್ನು ಅವರು ನಂಬದೇ ಇದ್ದದ್ದು ತಾತ್ವಿಕ ಕಾರಣಗಳಿಗೇನಲ್ಲ. ಅವರಿಗ್ಯಾಕೋ ಮೊದಲಿನಿಂದಲೇ ದೇವರ ಮೇಲೆ ನಂಬಿಕೆ ಬರಲೊಲ್ಲದು. ದೇವರಿದ್ದಾನೆ ಅಂತ ಯಾರಾದರೂ ಹೇಳುವುದನ್ನು ಕೇಳಿದರೆ ಅವರಿಗೆ ನಗು ಬರುತ್ತಿತ್ತು. ನಿರಾಕಾರನೂ ಅದೃಶ್ಯನೂ ಆದ, ಇದ್ದಾನೋ ಇಲ್ಲವೋ ಅನ್ನುವುದಿನ್ನೂ ಸಾಬೀತಾಗದ ದೇವರನ್ನು ಈ ಮನುಷ್ಯರು ಅಷ್ಟೊಂದು ಗಾಢವಾಗಿ ನಂಬುವುದಕ್ಕೆ ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಅವರನ್ನು ಮತ್ತೆ ಮತ್ತೆ ಕಾಡುತ್ತಿತ್ತು. +ಜೋಶಿಯವರು ಮದುವೆ ಆಗಿರಲಿಲ್ಲ. ಯಾರನ್ನೂ ಪ್ರೀತಿಸಿರಲೂ ಇಲ್ಲ. ಪ್ರೀತಿಸದ ಹೊರತು ದೇವ-ರನ್ನು ಕಾಣುವುದು ಅಸಾಧ್ಯ ಅಂತ ಜೋಶಿಯವರ ಜೊತೆಗೇ ಓದಿದ ಸರಸ್ವತಿ ಒಮ್ಮೆ ಜೋಶಿಯವರಿಗೆ ಹೇಳಿದ್ದಳು. ಅದರ ಆಧಾರದ ಮೇಲೆ ಅವರು ದೇವರು ಮತ್ತು ಪ್ರೀತಿ ಎರಡೂ ಒಂದೇ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಹೀಗಾಗಿ ಎರಡೂ ಅವರ ಪಾಲಿಗೆ ದೂರವೇ ಉಳಿದಿದ್ದವು. +* +* +* +ಪ್ರಸಾರಾಂಗದ ಕೆಲಸಕ್ಕೆಂದು ನರಹರಿತೀರ್ಥರಿಂದ ಗುರುಗೋವಿಂದ ವಿಠಲದಾಸರವರೆಗಿನ ಮೂವತ್ತ-ಮೂರು ದಾಸರ ಒಂದು ಸಾವಿರ ಕೀರ್ತನೆಗಳನ್ನಾದರೂ ಸಂಪಾದಿಸಬೇಕು ಅನ್ನುವ ನಿರ್ಧಾರಕ್ಕೆ ಬಂದಿ-ದ್ದರು. ಆ ಕೀರ್ತನೆಗಳ ಹುಡುಕಾಟಕ್ಕೆಂದು ಜೋಶಿ ಪ್ರಯಾಣ ಆರಂಭಿಸಿದರು. ಮೊಟ್ಟ ಮೊದಲನೆಯ-ದಾಗಿ ಗದಗ, ಉಡುಪಿ, ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿರುವ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಭಜನೆ ಪುಸ್ತಕಗಳನ್ನು ಕೊಂಡು ತಂದರು. ಹಳ್ಳಿಹಳ್ಳಿಗಳ ಭಜನಾಮಂಡಳಿಗಳಿಗೆ ಹೋಗಿ ಅಲ್ಲಿ ಕೃಷ್ಣನ ಮೂರ್ತಿಯ ಕೆಳಗೆ ಬಚ್ಚಿಟ್ಟ ಭಜನಾ ಪುಸ್ತಕಗಳ ಹಸ್ತಪ್ರತಿಗಳನ್ನೆಲ್ಲ ಪ್ರತಿ ಮಾಡಿಸಿಕೊಂಡರು. ಮನೆಮನೆಗಳಲ್ಲಿ ಹಾಡುವ ಭಜನೆಗಳನ್ನು ಬರೆದುಕಳುಹಿಸಬೇಕೆಂದು ಪತ್ರಿಕೆಗಳಲ್ಲಿ ಮನವಿ ಮಾಡಿಕೊಂಡರು. ಉಡುಪಿಯ ಮಠಗಳಲ್ಲಿ ಹಾಡುತ್ತಿದ್ದಂಥ ಕೀರ್ತನೆಗಳನ್ನು ಹುಡುಕಿಸಿ ತರಿಸಿ-ದರು. ಜೋಶಿಯವರ ಮನೆಯ ತುಂಬ ಹಳೆಯ ಹಸ್ತಪ್ರತಿಗಳೂ, ಅವುಗಳ ಝೆರಾಕ್ಸುಗಳೂ ತುಂಬಿಕೊಂ-ಡವು. ಒಂದಷ್ಟು ಹಾಡುಗಳನ್ನು ಮಾನ್ವಿಯಿಂದ, ಗಂಗಾವತಿಯಿಂದ ಅವರ ಶಿಷ್ಯರು ರೆಕಾರ್ ಮಾಡಿಸಿ ಕಳುಹಿಸಿಕೊಟ್ಟಿದ್ದರು. +* +* +* +ಪರಮನಾಸ್ತಿಕ ಜೋಶಿಯವರು ಹಗಲೆನ್ನದೆ ಇರುಳೆನ್ನದೆ ಕೀರ್ತನೆಗಳನ್ನು ಓದಿದರು. ಓದಿದಾಗ ಒಂದು ಅರ್ಥ ಬಂದರೆ ಕೇಳಿದಾಗ ಮತ್ತೊಂದು ಅರ್ಥ ಬರುವಂಥ ಕೀರ್ತನೆಗಳು ಸಾಕಷ್ಟಿದ್ದವು. ಕೆಲವು ಕೀರ್ತನೆಗ-ಳಂತೂ ಏನು ಮಾಡಿದರೂ ಅರ್ಥವಾಗುತ್ತಿರಲಿಲ್ಲ. ಕೆಲವೊಂದು ಉಗಾ?ಗಗಳನ್ನು , ಸುಳಾದಿಗ-ಳನ್ನು ಓದುತ್ತಿದ್ದ ಹಾಗೇ ಅವು ಪರಿಪೂರ್ಣವಾಗಿಲ್ಲ ಅನ್ನಿಸತೊಡಗಿತು. +‘ಮುಳ್ಳುಕೊನೆಯ ಮೇಲೆ ಮೂರು ಗೊನೆಯ ಕಟ್ಟಿ ಎರಡು ತುಂಬದು ಒಂದು ತುಂಬಲೆ ಇಲ್ಲ’ ಹಾಡಂತೂ ಎಷ್ಟು ಬಾರಿ ಓದಿದರೂ ಅರ್ಥಬಿಟ್ಟುಕೊಡಲೇ ಇಲ್ಲ. +* +* +* +ಮೂರು ವರುಷಗಳ ಕಾಲ ಹಗಲು ಇರುಳೆನ್ನದೆ ಜೋಶಿಯವರು ಕೀರ್ತನೆಗಳನ್ನು ಓದಿದರು. ಓದುತ್ತಾ ಓದುತ್ತಾ ಅದರಲ್ಲೇ ತಲ್ಲೀನರಾದರು. ಈ ಮಧ್ಯೆ ಶರಣಬಸಪ್ಪನವರು ತೀರಿಕೊಂಡು ಆ ಜಾಗಕ್ಕೆ ಪಂಪಾಪತಿ ನೇಮಕಗೊಂಡರು. ಪಂಪಾಪತಿಗೂ ಶರಣಬಸಪ್ಪನವರಿಗೂ ತಾತ್ವಿಕವಾದ ಭಿನ್ನಾಭಿಪ್ರಾಯ-ವಿತ್ತು. ಶರಣಬಸಪ್ಪನವರದು ದೇಸಿಯೊ? ಪುಗುವುದು ಧೋರಣೆಯಾದರೆ, ಪಂಪಾಪತಿಯದು ಆಧುನಿಕ ಮನಸ್ಸು. ಅವರು ಈ ಹಸ್ತಪ್ರತಿಗಳನ್ನೆಲ್ಲ ಪ್ರಿಂಟು ಮಾಡಿ ಲೈಬ್ರರಿಯಲ್ಲಿ ತುಂಬುವುದು ಅನಗತ್ಯ ಅನ್ನಿಸಿ, ಅವನ್ನೆಲ್ಲ ಸೀಡಿಗಳಲ್ಲೋ ಮೈಕ್ರೋಫಿಲ್ಮುಗಳಲ್ಲೋ ಸಂಗ್ರಹಿಸಿಟ್ಟರೆ ಸಾಕು ಅಂತ ಅಪ್ಪಣೆ ಕೊಡಿಸಿದರು. ಅಲ್ಲಿಗೆ ಜೋಶಿಯವರ ಸಂಪಾದನೆಯೂ ಅಧಿಕೃತವಾಗಿ ನಿಂತುಹೋಯಿತು. +* +* +* +ಜೋಶಿಯವರು ಕೀರ್ತನೆಗಳ ಸಹವಾಸ ಬಿಡಲಿಲ್ಲ. ಕ್ರಮೇಣ ಅವರು ಕೀರ್ತನೆಗಳಲ್ಲಿ ಏನೋ ಒಂದು ಥರದ ಸುಖ ಪಡೆಯುತ್ತಿರುವಂತೆ ಕಂಡುಬಂದರು. ಒಬ್ಬರೇ ಕೂತು ಕೀರ್ತನೆಗಳನ್ನು ಓದುತ್ತಿದ್ದಾಗ, ವಿದ್ಯಾಭೂಷಣರೋ ಭೀಮಸೇನ ಜೋಶಿಯವರೋ ಹಾಡಿದ ಕೀರ್ತನೆಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರೆಲ್ಲ ತನ್ನ ಕುರಿತೇ ಹಾಡುತ್ತಿದ್ದಾರೆ ಅಂತ ಜೋಶಿಯವರಿಗೆ ಅನ್ನಿಸತೊಡಗಿತು. +ಯಾರೇ ರಂಗನ ಯಾರೇ ಕೃಷ್ಣನ +ಯಾರೇ ರಂಗನ ಕರೆಯ ಬಂದವರು +ಗೋಪಾಲಕೃಷ್ಣನ ಪಾಪವಿನಾಶನ +ಈ ಪರಿಯಿಂದಲಿ ಕರೆಯಬಂದವರು.. +ಎಂಬ ಕೀರ್ತನೆ ಓದುತ್ತಿದ್ದಂತೆ ಅಲ್ಲಿ ಬರುವ ರಂಗನೂ ನಾನೇ ಗೋಪಾಲಕೃಷ್ಣನೂ ನಾನೇ ಅನ್ನಿಸಿ ಜೋಶಿಯವರಿಗೆ ರೋಮಾಂಚವಾಗುತ್ತಿತ್ತು. ಬೆಳಗಾಗಿ ಏಳುತ್ತಲೇ ರಂಗನಾಯಕ ರಾಜೀವಲೋಚನ +ರಮಣನೆ ಬೆಳಗಾಯಿತೇಳೆನ್ನುತ +ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು +ಶೃಂಗಾರದ ನಿದ್ರೆ ಸಾಕೆನ್ನುತ.. +– ಈ ಹಾಡು ಅವರ ಕಿವಿಗೆ ಬೀಳಬೇಕು, ಅಂಥದ್ದೊಂದು ವ್ಯವಸ್ಥೆ ಮಾಡಿಕೊಂಡರು. ಸ್ನಾನ ಮಾಡು-ವಾಗ ‘ಮೊಸರು ಮಾರಲು ಪೋದರೆ ನಿನ್ನ ಕಂದ ಹೆಸರೇನೆಂದೆಲೆ ಕೇಳಿದ. ಹಸನಾದ ಹೆಣ್ಣ ಮೇಲೆ ಕುಸು-ಮವ ತಂದಿಕ್ಕಿ ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ ಮೆಲ್ಲ ಮೆಲ್ಲನೆ ಬಂದನೆ’ ಕೇಳುತ್ತಿದ್ದರು. ಜೋಶಿಯವರಿಗೆ ತಮ್ಮ ಬಾಲ್ಯ ನೆನಪಾಗುತ್ತಿತ್ತು. +* +* +* +ಕ್ರಮೇಣ ಜೋಶಿಯವರಿಗೆ ಆ ಹಾಡುಗಳೆಲ್ಲ ತನ್ನ ಕುರಿತೇ ಬರೆದಿದ್ದಾರೆ ಅನ್ನಿಸತೊಡಗಿತು. ತಾನು ಅಧ್ಯಯನ ಮಾಡುತ್ತಿರುವುದು ತನ್ನ ಚರಿತ್ರೆಯನ್ನೇ ಅನ್ನುವ ಗಾಢನಂಬಿಕೆ ಮೊಳೆಯಿತು. ಅವೆಲ್ಲವೂ ಧೂಳು ಹಿಡಿದು ನಾಶವಾಗಿ ಹೋಗುವುದನ್ನು ಸಹಿಸುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ತನ್ನ ಚರಿತ್ರೆ ಮತ್ತು ಕೀರ್ತನೆಗಳು ಎಲ್ಲರನ್ನೂ ತಲುಪಬೇಕು ಅನ್ನುವ ತೀವ್ರ ಆಶೆ ಕಾಡತೊಡಗಿತು. +ಹಾಗನ್ನಿಸಿದ್ದೇ ಅವರು ಪಂಪಾಪತಿಯವರನ್ನು ಕಾಡತೊಡಗಿದರು. ಬೆಳಗ್ಗೆ ಪಂಪಾಪತಿಯವರ ಮನೆಗೆ ಹೋಗಿ ಅವರಿಗೊಂದು ಕೀರ್ತನೆ ಕೇಳಿಸುತ್ತಿದ್ದರು. ಪಂಪಾಪತಿ ಮತ್ತು ಅವರ ಹೆಂಡತಿ ಅಸಹಾಯಕರಾಗಿ ಕೂತು ಕೇಳುತ್ತಿದ್ದರು. +ಪಾವನತ್ವದಿ ನೋಡೆ ಅಮರಗಂಗಾಜನಕ +ದೇವತ್ವದಲಿ ನೋಡೆ ದಿವಿಜರೊಡೆಯ +ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ +ಆವ ಧೈರ್ಯದಿ ನೋಡೆ ಅಸುರಾಂತಕ +ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ… +ಪಂಪಾಪತಿ ಚೆನ್ನಾಗಿದೆ ಅಂದಾಗ ಜೋಶಿಯವರಿಗೆ ಅವರು ತನ್ನನ್ನೇ ಮೆಚ್ಚಿಕೊಂಡಿದ್ದಾರೆ ಅನ್ನಿಸು-ತ್ತಿತ್ತು. ಇದು ಕ್ರಮೇಣ ಪಂಪಾಪತಿಯವರಿಗೆ ಎಷ್ಟು ಹಿಂಸೆಯಾಯಿತು ಅಂದರೆ ಅವರು ಜೋಶಿಯವ-ರನ್ನು ಮನೆಗೆ ಬರಕೊಡದು ಎಂದು ಕಟ್ಟಪ್ಪಣೆ ಮಾಡಿದರು. ಯಾವ ಕಾರಣಕ್ಕೂ ಕೀರ್ತನೆಗಳ ಪುಸ್ತಕ ಹೊರತರುವುದಿಲ್ಲ ಎಂದು ನಿರ್ಧಾರ ಮಾಡಿ ಅದನ್ನು ಜೋಶಿಯವರಿಗೆ ತಿಳಿಸಿಯೂ ಬಿಟ್ಟರು. ಆದರೆ ಅದನ್ನೆಲ್ಲ ಜೋಶಿ ಮೀರಿದ್ದರು. +* +* +* +ಜೋಶಿಯವರಿಗೆ ಆ ಕೀರ್ತನೆಗಳು ತಮ್ಮ ಕುರಿತಾದವು ಅನ್ನುವ ಬಗ್ಗೆ ಅನುಮಾನವೇ ಉಳಿಯಲಿಲ್ಲ. ಪ್ರತಿಯೊಂದು ಹಾಡೂ ತನ್ನನ್ನೇ ಹಾಡಿ ಹೊಗಳುತ್ತಿದೆ ಅನ್ನಿಸುತ್ತಿತ್ತು. ಹಾಡು ಕೇಳಿಸಿಕೊಳ್ಳುತ್ತಾ ಆ ಹಾಡಿನ ಭಾವಕ್ಕೆ ತಕ್ಕ ಭಂಗಿಯನ್ನು ಪ್ರದರ್ಶಿಸುತ್ತಾ ಜೋಶಿಯವರು ಕೂರುತ್ತಿದ್ದುದನ್ನು ಅನೇಕರು ನೋಡಿದ್ದರು. ಜೋಶಿಯವರಿಗೆ ಹುಚ್ಚು ಹಿಡಿದಿದೆ ಅನ್ನುವ ತೀರ್ಮಾನಕ್ಕೂ ಕೆಲವರು ಬಂದರು. ಜೋಶಿಯವರಿಗೆ ಅತ್ತ ಗಮನ ಇರಲೇ ಇಲ್ಲ. +* +* +* +ಪಂಪಾಪತಿಗೂ ಜೋಶಿಯವರ ವಿಪರೀತ ವರ್ತನೆಯ ಬಗ್ಗೆ ವರದಿಗಳು ಬಂದಿದ್ದವು. ಅವರನ್ನು ಕೆಲಸ-ದಿಂದ ಕಿತ್ತು ಹಾಕಬೇಕು ಅನ್ನುವಷ್ಟರ ಮಟ್ಟಿಗೆ ಅವರ ವಿರುದ್ಧ ಪ್ರಚಾರ ನಡೆದಿತ್ತು.ಕೊನೆಯ ಯತ್ನ-ವಾಗಿ ಜೋಶಿಯವರನ್ನೇ ಕಂಡು ಅವರ ಹತ್ತಿರ ಇನ್ನಾದರೂ ಸರಿಯಾಗಿ ವರ್ತಿಸುವಂತೆ ಹೇಳಬೇಕೆಂದು-ಕೊಂಡು ಒಂದು ಬೆಳಗ್ಗೆ ಪಂಪಾಪತಿಯವರು ಜೋಶಿಯವರ ಮನೆಗೆ ಬಂದರು. +ಮನೆಯ ಬಾಗಿಲು ಹಾಕಿರಲಿಲ್ಲ. ಪಂಪಾಪತಿ ಬಾಗಿಲು ತಳ್ಳಿಕೊಂಡು ಒಳಗೆ ಬಂದರು. ಒಳಗಿನ ದೃಶ್ಯ ಕಂಡು ಬೆರಗಾದರು. +ದೇವರ ಮೂರ್ತಿಯೆದುರು ಅದೇ ಭಂಗಿಯಲ್ಲಿ ಜೋಶಿ ಕೂತಿದ್ದರು. ಅದನ್ನು ನೋಡುತ್ತಿದ್ದ ಹಾಗೇ ಪಂಪಾಪತಿಯವರಿಗೆ ಇಬ್ಬರಲ್ಲಿ ದೇವರು ಯಾರು ಅನ್ನುವುದು ತಟ್ಟನೆ ಹೊಳೆಯಲಿಲ್ಲ. ಮತ್ತಷ್ಟು ಕೂಲಂಕಶವಾಗಿ ನೋಡಿದಾಗ ಜೋಶಿ ಮತ್ತು ದೇವರ ನಡುವಿನ ವ್ಯತ್ಯಾಸ ಮರೆಯಾಗಿ ಒಮ್ಮೆ ಜೋಶಿ ದೇವರಂತೆಯೂ ಮತ್ತೊಮ್ಮೆ ದೇವರು ಜೋಶಿಯಂತೆಯೂ ಕಾಣಿಸತೊಡಗಿ ಪಂಪಾಪತಿ ಅಲ್ಲೇ ಕುಸಿದು ಕೂತು ಕೈಮುಗಿದರು. +ಮತ್ತು….. +ಜೋಶಿಯವರ ದೇಹದಲ್ಲಿದ್ದ ಆತ್ಮ ಪರಮಾತ್ಮನ ದೇಹವನ್ನೋ ಪರಮಾತ್ಮನ ದೇಹದಿಂದ ಒಂದು ಬೆಳಕು ಜೋಶಿಯವರೋ ದೇಹವನ್ನೋ ಖಂಡಿತಾ ಸೇರುತ್ತದೆ ಎಂಬ ಭರವಸೆಯಲ್ಲಿ ಕಾದರು. +***** +ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […] +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_506.txt b/Kannada Sahitya/article_506.txt new file mode 100644 index 0000000000000000000000000000000000000000..21a7df8060f3a4161e423bbd85236c4c02749107 --- /dev/null +++ b/Kannada Sahitya/article_506.txt @@ -0,0 +1,1228 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ ಚಿಕ್ಕಮಗಳೂರಿನ ಹತ್ತಿರವಿರುವ ಒಂದು ಕಾಫ಼ಿ ತೋಟದ ಮಾಲೀಕರೆಂದು, ಪಾದರಿ ಸಿಕ್ವೇರಾ ಅವರ ಕಿರಿಯ ಮಗನೆಂದೂ ಇವರ ಅಕ್ಕ ಭಾವಂದಿರು ಅಮೇರಿಕದಲ್ಲಿ ಇರುವುದರಿಂದಲೂ ಇವರಿಗೆ ಹಣದ ಕೊರತೆ ಇಲ್ಲವೆಂದೂ ಜನ ಮಾತನಾಡಿಕೊಂಡರು. ಪಾದರಿ ಸಿಕ್ವೇರಾ ಅವರ ಕರಿಯ ಕಾರು, ಕ್ಯಾಮರಾ, ರೇಡಿಯೋ ಇವರ ಕುತ್ತಿಗೆಯಲ್ಲಿಯ ಕಿರು ಬೆರಳ ಗಾತ್ರದ ಚಿನ್ನದ ಚೈನು, ಬೆರಳಲ್ಲಿಯ ಉಂಗುರಗಳು ಈ ಮಾತನ್ನು ಧೃಡಪಡಿಸಿದವು. +ಪಾದರಿ ಸಿಕ್ವೇರಾ ಇಗರ್ಜಿಗೆ ಬನ್ನಿ ಎಂದು ಹೇಳುತ್ತಿರಲಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಸತ್ತವರ ಆತ್ಮಗಳಿಗಾಗಿ ಪೂಜೆ ನೀಡುವುದು, ಇಗರ್ಜಿಗೆ ಕೊಡುವ ಅನ್ವಾಲ ಕಾಯಿದೆ ಈ ಯಾವ ಚಿಂತೆಯೂ ಅವರಿಗಿರಲಿಲ್ಲ. ಊರಿಗೆ ಬರುವಾಗ ಜೊತೆಯಲಿ ಓರ್ವ ಹುಡುಗನನ್ನು ಅವರು ಕರೆತಂದಿದ್ದರು. ಅವನು ಅವರ ಅಡಿಗೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಅವರು ಊರಿಗೆ ಬಂದ ಎಂಟು ದಿನಗಳ ನಂತರ ಒಂದು ಲಾರಿ ಬಂದು ಇಗರ್ಜಿಯ ಮುಂದೆ ನಿಂತು ಕುರ್ಚಿ, ಮೇಜು, ಮಂಚ, ಟೀಪಾಯಿ ಎಂದೆಲ್ಲ ಸಾಮಾನು ಇಳಿಸಿತು. ಜತೆಗೆ ಒಂದು ಮೋಟಾರು ಬೈಕ್ ಕೂಡ ಕೆಳಗಿಳಿಯಿತು. ಫೋಟೋ ಮುದ್ರಿಸುವ ಸಾಧನೆ ಸಲಕರಣೆಗಳೂ ಬಂದವು. +ಕೈಯಲ್ಲಿ ಕ್ಯಾಮರಾ ಹಿಡಿದು ತಿರುಗುವ ಪಾದರಿಯನ್ನು ಜನ ಕಂಡರು. ಅವರು ಇಗರ್ಜಿಯಲ್ಲಿ ಫೋಟೋ ತೆಗೆದರು. ಸಂತ ಜೋಸೆಫ಼ರ ಮಂಟಪದ ಫೋಟೋ ತೆಗೆದರು. ಇನಾಸನ ಮನೆ ಮುಂದಿನ ಶಿಲುಬೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. ಎಳೆ ಮಕ್ಕಳು, ಮುದುಕಿಯರು, ಮುದುಕರು ಇಗರ್ಜಿಗೆ ಬಂದ ಯುವತಿಯರು, ಹುಡುಗಿಯರು ಎಲ್ಲರೂ ಅವರ ಕ್ಯಾಮರಾ ಎದುರು ನಿಂತು ನಕ್ಕರು, ನಾಚಿದರು, ಕೇಕೆ ಹಾಕಿದರು. +“ಬೋರೋ ಪದ್ರಾಬ” (ಪಾದರಿಗಳು ಒಳ್ಳೆಯವರು) ಎಂದರು ಕೆಲವರು. +“ದೇವೊ ಸ್ಪೊಣ ನಾ” (ದೈವ ಭಕ್ತಿ ಇಲ್ಲ) ಎಂಬ ಅಭಿಪ್ರಾಯವೂ ಬಂದಿತು. +“ಅವರೆಲ್ಲಿ ಇವರೆಲ್ಲಿ” ಎಂದು ಹಿಂದಿನ ಪಾದರಿಗಳ ಜತೆ ಹೋಲಿಸಿ ನೋಡಿದರು. +ಸಿಮೋನ, ಪಾಸ್ಕೋಲ, ಕೈತಾನ, ಬಳ್ಕೂರಕಾರ, ಪೆದ್ರು, ಸಂತು, ಇಂತ್ರು, ಹಸಿಮಡ್ಲು ಪಾತ್ರೋಲ ಮೊದಲಾದವರಿಗೆಲ್ಲ ವಯಸ್ಸಾಗಿತ್ತು. ಊಟದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ತ್ಯಜಿಸಿದ್ದಳು. ಎಮ್ಮೆ ಮರಿಯ ಕೂಡ ಹಾಲಿನ ಮಾರಾಟ ನಿಲ್ಲಿಸಿದ್ದಳು. ಇವರಲ್ಲಿ ಯಾರಿಗೂ ಪಾದರಿ ಸಿಕ್ವೇರಾ ಮನಸ್ಸಿಗೆ ಬಂದಿರಲಿಲ್ಲ. ಅವರು ಪೂಜೆ ಮಾಡುವ ವಿಧಾನ, ಜಪಹೇಳಿ ಕೊಡುವುದೂ ಹಿಡಿಸುತ್ತಿರಲಿಲ್ಲ. ಭಕ್ತಿಯ ಅಂಶವೂ ಇಲ್ಲದ ಈ ಪೂಜೆ. ಅದು ಹೇಗೆ ಇರಲಿ ಈ ಜನ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡರು. ಕ್ರಿಸ್ತ ಪ್ರಭುವಿನ ಬದುಕಿನ ಪರಿಚಯ ಇವರಿಗಂತೂ ಇತ್ತಲ್ಲ. ಆತ ಲೋಕದ ಪಾಪಿಗಳನ್ನು ಉದ್ಧರಿಸಲು ಬಂದವ ಜನರಲ್ಲಿ ಒಂದು ಧಾರ್ಮಿಕ ಪ್ರಜ್ಞೆಯನ್ನಂತೂ ಬಿತ್ತಿದ್ದ. ಕೆಲ ವರುಷಗಳ ಹಿಂದೆ ಬತ್ತಿ ಹೋದ ಅದನ್ನು ಪಾದರಿ ಗೋನಸ್ವಾಲಿಸ್ ರು, ಪಾದರಿ ಮಸ್ಕರಿನಾಸರು ಮತ್ತೆ ಚಿಗುರುವಂತೆ, ಬೆಳೆಯುವಂತೆ ಮಾಡಿದರು. ಅದರ ಯತ್ನದಿಂದಾಗಿ ಶಿವಸಾಗರದ ಜನ ಈಗಲೂ ಅದೇ ಮನೋಪ್ರವೃತ್ತಿಯವರಾಗಿದ್ದರು. ಹಿರಿಯರು, ಹಳಬರಂತೂ ಈ ಪ್ರವೃತ್ತಿಯಿಂದ ಹೊರಬರಲಿಲ್ಲ. +ಇಷ್ಟಾದರೂ ಫ಼ಾತಿಮಾ ನಗರದ ಜನ ಪಾದರಿ ಸಿಕ್ವೇರಾ ಅವರನ್ನು ತುಂಬಾ ಮೆಚ್ಚಿಕೊಂಡರು. ಪೂಜೆ ಮುಗಿದಾಕ್ಷಣ ಇವರೆಲ್ಲ ಹೋಗಿ ಅವರನ್ನು ಕಂಡು ಮಾತನಾಡಿ ಬರುತ್ತಿದ್ದರು. ವಾರಕ್ಕೊಮ್ಮೆ ಇಲ್ಲ ಎರಡು ಬಾರಿ ಪಾದರಿ ಸಿಕ್ವೇರಾ ಅವರ ಮೋಟಾರ ಸೈಕಲ್ಲು ಫ಼ಾತಿಮಾ ನಗರದತ್ತ ಗುಡುಗುಡು ಸದ್ದು ಮಾಡುತ್ತ ಬರುತ್ತಿತ್ತು. ಅಲ್ಲಿ ಕೆಲ ಮನೆಗಳ ಅಂಗಳಕ್ಕೆ ಹೋಗಿ. ಕೆಲ ಮನೆಗಳ ಒಳಗೆ ಪ್ರವೇಶಿಸಿ- +“ಕಿತೆಂ…ಕಸಿ ಭಲಾಯ್ಕಿ?” (ಹೇಗೆ? ಆರೋಗ್ಯವಾಗಿದ್ದೀರಾ?) ಎಂದು ಕೇಳಿ ಬರುತ್ತಿದ್ದರು ಅವರು. +ರೈಲ್ವೆ ಇಲಾಖೆಗೆ ಕೆಲ ಹೊಸ ನೌಕರರು ಅಧಿಕಾರಿಗಳು ಬಂದಿದ್ದರು. ಅವರಲ್ಲಿ ಕೆಲವರು ಕ್ರೀಸ್ತುವರೂ ಇದ್ದರು. ಎಲ್ಲರಿಗೂ ಸರಕಾರಿ ಮನೆಗಳು ಸಿಗದ್ದರಿಂದ ಕೆಲವರು ಫ಼ಾತಿಮಾ ನಗರದಲ್ಲಿ ಮನೆ ಮಾಡಿದರು. ಇವರಿಗೂ ಪಾದರಿ ಸಿಕ್ವೇರಾ ಅವರಿಗೂ ಒಳ್ಳೆಯ ಸ್ನೇಹವಿತ್ತು. ಅವರು ಇವರ ಮನೆಗಳಿಗೂ ಬಂದು ಮಾತನಾಡಿಕೊಂಡು ಹೋಗುತ್ತಿದ್ದರು. ತಮ್ಮ ಮಾತಿನಲ್ಲಿ ವರ್ತನೆಯಲ್ಲಿ ಫ಼ಾತಿಮಾ ನಗರದ ಕ್ರೀಸ್ತುವರ ಬಗ್ಗೆ ಮೃದುವಾದ ಭಾವನೆಯನ್ನು ಇರಿಸಿಕೊಂಡಿದ್ದರು ಪಾದರಿ. ಇದಕ್ಕೆ ಕಾರಣ ಇವರೆಲ್ಲ ವಿದ್ಯಾವಂತರಾಗಿದ್ದರು. ಒಳ್ಳೆಯ ಉದ್ಯೋಗಗಳಲ್ಲಿದ್ದರು. ಉಡಿಗೆ ತೊಡಿಗೆಯಲ್ಲಿ ಮನೆಯ ರೀತಿ ರಿವಾಜುಗಳಲ್ಲಿ ನಾಜೂಕುತನ ಇರಿಸಿಕೊಂಡಿದ್ದರು. ರೈಲು ಇಲಾಖೆಯ ಕ್ರೈಸ್ತ ನೌಕರರು ತಮಿಳರಾಗಿದ್ದರಿಂದ ಇವರಿಗೆ ಕರಿಕಾಲಿನವರು ಎಂಬ ಅಡ್ಡಹೆಸರೂ ಬಿದ್ದಿತ್ತು. +ಹೀಗೆಯೇ ಪಾದರಿ ಸಿಕ್ವೇರಾ ಅವರ ಆಗಮನ ಸಂತ ತೆರೇಜಾ ಕಾನ್ವೆಂಟಿನ ಕನ್ಯಾ ಸ್ತ್ರೀಯರಿಗೂ ಸಂತಸವನ್ನು ತಂದಿತು. ಶಿವಸಾಗರದ ಕ್ರೀಸ್ತುವರಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ತರಬೇತಿಯನ್ನೂ ನೀಡುವುದು ಅವರ ಉದ್ದೇಶವಾಗಿತ್ತು. ಈ ಕೆಲಸವನ್ನು ಪಾದರಿ ಮಾಡುತ್ತಾರಾದರೂ ಶಿಕ್ಷಣದ ಜತೆ ಜತೆಗೆ ನೀಡುವ ಈ ತರಬೇತಿ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಕೊನೆಯವರೆಗೂ ಇರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. +ಬಹಳ ಹುರುಪಿನಿಂದ ಬಂದ ಅವರಿಗೆ ಇಲ್ಲಿ ನಿರಾಶೆಯಾಗತೊಡಗಿತು. ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದ ಕ್ರೀಸ್ತುವರ ಮಕ್ಕಳನ್ನು ಕಾನ್ವೆಂಟಿಗೆ ತಂದು ಸೇರಿಸಿಕೊಳ್ಳುವುದು ಮೊದಲು ಕಷ್ಟವಾಯಿತು. ಮನೆಗೆ ಶಾಲೆ ಹತ್ತಿರವಾಗಿದ್ದರೂ ಇದೊಂದು ವರ್ಷ ಕಳೆಯಲಿ ಎಂದರು. ನಂತರ ಮಕ್ಕಳು ಶಾಲೆಗೆ ಬಂದವು. ಹೆಸರು ಬರೆಸಿ ಹೋದವರು ನಿತ್ಯ ಹಾಜರಿ ಕೊಡಲು ಮರೆತರು. ಶುಚಿಯಾಗಿ ಬರುತ್ತಿರಲಿಲ್ಲ. ಪುಸ್ತಕ, ಪೆನ್ಸಿಲ್ಲು ತರುತ್ತಿರಲಿಲ್ಲ. ಬೆಳಿಗ್ಗೆ ಬಂದವರು ಸಂಜೆಗೆ ತಪ್ಪಿಸಿಕೊಂಡರು. ಕೆಲವರಿಗೆ ಆಸಕ್ತಿ ಇರಲಿಲ್ಲ. ಶಾಲೆಗೆ ಸೇರಿದ ಮೂರು ಆರು ತಿಂಗಳಲ್ಲಿ ಮಕ್ಕಳು ಬರುವುದನ್ನೇ ನಿಲ್ಲಿಸಿದರು. +ಸಿಸ್ಟರ್ ಲೀನಾ ದುಮಿಂಗನ ಮನೆಗೆ ಹೋಗಿ ಅವನ ಹೆಂಡತಿಗೆ- +“ನಿಮ್ಮ ಹುಡುಗ ಸರಿಯಾಗಿ ಶಾಲೆಗೆ ಬರುವುದಿಲ್ಲ” ಎಂದಾಗ ಆಕೆ- +“ಹೋಗು ಅಂತೀವಿ..ಅವನು ಹೋಗಿ ಗೇರು ಮರದ ಮೇಲೆ ಕೂತರೆ ನಾನು ಏನು ಮಾಡಲಿ?” ಎಂದು ಕೇಳಿದಳು. +ಜೋಸೆಫ಼ನ ಹೆಂಡತಿ ಕ್ರಿಸ್ತೀನಾ- +“ನೀವು ನಮ್ಮ ಹುಡುಗನಿಂದ ಕಸ ಗುಡಿಸೋದು ನೆಲ ತೊಳಿಯೋದು ಮಾಡಸ್ತೀರಂತೆ..ಆ ಕೆಲಸಾನ ಅವನು ಮನೇಲೇ ಮಾಡತಾನೆ ಬಿಡಿ..” ಎಂದಳು. +ಕಾನ್ವೆಂಟಿನ ಕನ್ಯಾಸ್ತ್ರಿಗಳು ಪ್ರತಿದಿನ ಒಂದೊಂದು ಮನೆಗೆ ಹೋಗಿ ಜಪಸರ ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡರು. ಮನೆಯವರೂ ಸೇರಿಕೊಂಡಿದ್ದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ಆದರೆ ಮನೆಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಇನಾಸನ ಮನೆಯಲ್ಲಿ ಅವನ ಮಕ್ಕಳು ಜಗಳವಾಡುತ್ತಿದ್ದರು. ಸಿಮೋನನ ಮನೆಯಲ್ಲಿ ಅತ್ತೆ ಸೊಸೆಯ ನಡುವೆ ಮಾತು. ಕೈತಾನ ಕುಡಿದು ಬಂದಿರುತ್ತಿದ್ದ. +“ಅಯ್ಯೋ ನಮ್ಮ ಕೆಲಸಾನೇ ಮುಗಿಲಿಲ್ವೇ” ಎಂದು ಹೆಂಗಸರು ಗೊಣಗಿದರು. +ಹೀಗಾಗಿ ಈ ಜಪಸರ ಪ್ರಾರ್ಥನೆ ಫ಼ಾತಿಮಾ ನಗರದ ಮನೆಗಳಿಗೆ ಮಾತ್ರ ಸೀಮಿತವಾಯಿತು. +ಪಾದರಿ ಮಸ್ಕರಿನಾಸ ಕೂಡ ಸಿಸ್ಟರುಗಳ ವಿಷಯದಲ್ಲಿ ಅಷ್ಟೊಂದು ಮೃದು ಹೃದಯಿಯಾಗಿರಲಿಲ್ಲ. ಊರಿಗೆ ಶಾಲೆ ಬೇಕು ಬನ್ನಿ ಎಂದು ಅವರೇ ತಮ್ಮನ್ನು ಕರೆದಿದ್ದರೂ ತಾವು ಬಂದ ನಂತರ ಅವರು ಬದಲಾಗಿದ್ದರು. +“ನಿಮ್ಮದೆಲ್ಲ ಸರಿ..ನೀವು ಎಲ್ಲ ಜನ ಬಂದ ಮೇಲೆ ಇಗರ್ಜಿಗೆ ಬರೋದು..ದಿವ್ಯ ಪ್ರಸಾದ ಸ್ವೀಕಾರಕ್ಕೆ ಪ್ರತ್ಯೇಕವಾಗಿ ಮೋಣಕಾಲೂರೋದು..ಕುಳಿತು ಕೊಳ್ಳಲಿಕ್ಕೆ ಬೇರೇನೆ ಜಾಗ ಬೇಕು ಅನ್ನೋದು ನನಗೆ ಹಿಡಿಸೋದಿಲ್ಲ..” ಅನ್ನುತ್ತಿದ್ದರು ಅವರು. +ಶಿವಸಾಗರಕ್ಕೆ ಹೊಸದಾಗಿ ಬಂದ ತಾವು ಹೀಗೊಂದು ಪದ್ಧತಿ ಆರಂಭಿಸಿದ್ದು ನಿಜವೆ. ಇನ್ನೇನು ಪಾದರಿ ಪೂಜೆ ಆರಂಭಿಸುತ್ತಾರೆ ಅನ್ನುವಾಗ ತಾವು ಕಾನ್ವೆಂಟಿನಿಂದ ಸಾಲಾಗಿ ಇಗರ್ಜಿಗೆ ಬರುತ್ತಿದ್ದೆವು. ಎಲ್ಲರೂ ಒಟ್ಟಿಗೇನೆ ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವಲ್ಲಿ ಮೊಣಕಾಲೂರುತ್ತಿದ್ದೇವು. ಊರಿಗೆ ಬಂದ ತಕ್ಷಣ ತಮಗಾಗಿ ಬೇರೆಯೇ ಆಸನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಪಾದರಿಗಳಿಗೆ ಕೇಳಿದ್ದೆವು. ಬೇರೆಲ್ಲ ಕಡೆಯೂ ಈ ಗೌರವ ತಮಗಿರುವಾಗ ಇಲ್ಲಿ ಏಕೆ ಬೇಡ? ಆದರೆ ಇದು ಮಸ್ಕರಿನಾಸರ ಕೋಪಕ್ಕೆ ಕಾರಣವಾಯಿತು. ಪೂಜೆ ಮುಗಿಸಿ ಅವರು ಪೂಜಾ ಪಾತ್ರೆ ಹಿಡಿದು ಒಳಕ್ಕೆ ತಿರುಗುವ ಮುನ್ನವೇ ತಾವು ಇಗರ್ಜಿಯಿಂದ ಹೊರಡುವುದನ್ನು ಸಹಿಸಲು ಅವರಿಂದ ಆಗುತ್ತಿರಲಿಲ್ಲ. ಆಗ ಅವರು ತಮ್ಮನ್ನು ದುರು ದುರು ನೋಡುತ್ತಿದ್ದರು. +ಪಾದರಿ ಸಿಕ್ವೇರಾ ಅವರಲ್ಲಿ ಈ ವರ್ತನೆಯಿಲ್ಲ. +“ಸಿಸ್ಟರ್ ಲೀನಾ…ಈವತ್ತು ನೀವು ಬೇರೆಯೇ ಕಾಣುತ್ತೀರಿ..” +“ಸಿಸ್ಟರ್ ಜ್ಯೋತಿ ನಿಮ್ಮದೊಂದು ಫೋಟೋ ತೆಗೆಯೋಣವೆ?” +“ಸಿಸ್ಟರ್ ಕ್ಲಾರಿಸ್..ನಿಮ್ಮ ಧ್ವನಿ ಚೆನ್ನಾಗಿದೆ.” ಎಂದೆಲ್ಲ ಹೇಳುತ್ತಾರೆ. ಕಾನ್ವೆಂಟಿಗೆ ಬರುತ್ತಾರೆ. ಇಗರ್ಜಿಗೆ ಹೂ ಕುಂಡ ಮಾಡಿಕೊಡಿ. ಅಲ್ತಾರ ಬಟ್ಟೆ ಹೆಣೆದು ಕೊಡಿ ಎಂದು ಕೇಳುತ್ತಾರೆ. +ಹಾಗೆಯೇ ಊರಿನ ಜನಕ್ಕೆ ಕಾನ್ವೆಂಟ್ ಬೇಕಾಗಿದೆ. ಊರಿನ ಶ್ರೀಮಂತರು, ವೈದ್ಯರು, ವಕೀಲರು, ಬ್ಯಾಂಕ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ತಮ್ಮ ಮಕ್ಕಳನ್ನು ತಂದು ತಂದು ಕಾನ್ವೆಂಟಿಗೆ ಸೇರಿಸುತ್ತಾರೆ. ಯೂನಿಫ಼ಾರಂ ಹೊಲಿಸಿ ಮಕ್ಕಳಿಗೆ ತೊಡಿಸಿ ಕಳುಹಿಸುತ್ತಾರೆ. ಫ಼ೀಸು ಡೋನೇಷನ್ ಎಷ್ಟು ಕೇಳಿದರೂ ಕೊಡುತ್ತಾರೆ. ಮದರ್ಸ್ ಡೇ, ಮಕ್ಕಳ ದಿನಾಚರಣೆ, ಫ಼್ಲ್ಯಾಗಡೇ ಎಂದೆಲ್ಲ ಹಣ ತನ್ನಿ ಎಂದಾಗ ಮಕ್ಕಳು ಉತ್ಸಾಹದಿಂದ ಹಣ ತರುತ್ತಾರೆ. +“ಏನಾದರೂ ಆಗಬೇಕಿದ್ದರೆ ಹೇಳಿ ಸಿಸ್ಟರ್” ಎಂದು ಕಂಟ್ರ್ಯಾಕ್ಟರ್ ಶೆಣೈ, ಹೋಟೆಲ್ ಮಾಲೀಕ ಅಪ್ಪಣ್ಣ, ಅಂಗಡಿ ಸಾಹುಕಾರ ವಿಶ್ವನಾಥ ಶೆಟ್ಟಿ, ಡಾಕ್ಟರ್ ಕೊದಂಡರಾವ್, ಎಸ್.ಪಿ ಷಡಕ್ಷರಿ ಬಂದು ಕೇಳುತ್ತಾರೆ. ತಟ್ಟನೆ ಏನಾದರೂ ಕೆಲಸವಾಗಬೇಕು ಅಂದರೆ ಮಾಡಿಕೊಡುತ್ತಾರೆ. ಈ ಸೌಜನ್ಯ ಸೇವಾ ಮನೋಭಾವ ಕ್ರೀಸ್ತುವರಲ್ಲಿ ಇಲ್ಲ. +“ಮದರ್ಸ್ ಡೇಗೆ ಎಂಟೆಂಟಾಣೆ ತನ್ನಿ ” ಎಂದರೆ ಕ್ರೀಸ್ತುವರ ಮಕ್ಕಳು ತರುವುದಿಲ್ಲ. +“ತೆಗೆದುಕೊಂಡು ಬಾ ಹೋಗು” ಎಂದು ಸಿಸ್ಟರ್ ಜ್ಯೋತಿ ಮಿಂಗೇಲಿಯ ಮಗನನ್ನು ಕಳುಹಿಸಿದ್ದಕ್ಕೆ ಅವನ ಹೆಂಡತಿ ಕಲ್ಲಿ ಕಾನ್ವೆಂಟಿಗೆ ಬಂದು- +“ನಿಮಗೇನು ಕಡಿಮೆಯಾಗಿರೋದು..ನಿಮಗೇನು ಮನೇ ಉಂಟು..ಮಕ್ಕಳಿದ್ದಾರೆಯೇ..” ಎಂದು ಕೂಗಾಡಿ ಹೋಗಿದ್ದಾಳೆ. +ಊರ ಜನರಿಗೆ, ಅಧಿಕಾರಿ ಶ್ರೀಮಂತರ ಮಕ್ಕಳಿಗೆ ಕಾನ್ವೆಂಟ್ ಬೇಕಾಗಿದೆ. ಹೀಗೆಂದೇ ಊರಿನಲ್ಲಿ ಕಾನ್ವೆಂಟ್ ನಡೆಯುತ್ತಿದೆ. ಈ ನಡುವೆ ಪಾದರಿ ಸಿಕ್ವೇರಾ ತಮ್ಮನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವುದು ಕೂಡ ನೆಮ್ಮದಿಯ ವಿಷಯ, ಎಂಬ ಅಭಿಪ್ರಾಯವನ್ನು ಸಂತ ತೆರೇಜಾ ಕಾನ್ವೆಂಟಿನ ಸಿಸ್ಟರುಗಳು ತಾಳಿದರು. +ಈ ಎಲ್ಲ ಹಿನ್ನೆಲೆಯಲ್ಲಿ ಶಿವಸಾಗರದ ಕ್ರಿಸ್ತುವರ ಬದುಕು ಸಾಗುತ್ತಿರಲು ಫ಼ಾತಿಮಾ ನಗರ ಹಾಗೂ ಜೋಸೆಫ಼್ ನಗರದ ಒಂದೊಂದು ಮನೆಯ ಬದುಕು ಒಂದೊಂದು ದಾರಿ ಹಿಡಿದಿತ್ತು. +* +* +* +ಸಿಮೋನ ಈಗ ಗುರ್ಕಾರ ಅಷ್ಟೆ. ಅವನು ಈಗ ಮೇಸ್ತ್ರಿಯಲ್ಲ.. ಕೆಲಸ ಮಾಡುವುದನ್ನು ಆತ ನಿಲ್ಲಿಸಿ ಬಹಳ ವರ್ಷಗಳಾಗಿವೆ. ಕೆಲಸ ಮಾಡಿಸುವುದನ್ನು ಕೂಡ. ಅವನ ಪ್ರಕಾರ ಕಲ್ಲು ಕೆಲಸ ಮಾಡುವುದರಲ್ಲಿ ಕ್ರೀಸ್ತುವರಿಗೆ ಇದ್ದ ಹೆಸರು. ನೈಪುಣ್ಯತೆ ಈಗ ಉಳಿದಿಲ್ಲ. +ಶಿವಸಾಗರದ ಯಾವುದೇ ಹಳೆ ಇಮಾರತ ತೆಗೆದುಕೊಳ್ಳಿ ಅದನ್ನು ಕಟ್ಟಿದವ ಇಲ್ಲ ಕಟ್ಟಿಸಿದವ ತಾನು ಅನ್ನುತ್ತಾನೆ ಸಿಮೋನ. +“ಅವತ್ತು ರಾಯರೆ, ಏನೂ ಇರಲಿಲ್ಲ..ಬಸ್ಸು, ರೈಲು ಕೇಳಬೇಡಿ..ಆದರೂ ಜನರನ್ನ ಕರೆತರತಿದ್ದೆ ಕೆಲಸ ಮಾಡತಿದ್ದೆ…ಎಂಥಾ ಕೆಲಸ! ಸೊರಬದ ಸೇತುವೆ ಕಟ್ಟಿದ್ದಕ್ಕೆ ಜಿಲ್ಲಾಧಿಕಾರಿಗಳೇ ನನಗೆ ಹಾರ ಹಾಕಿದ್ರು, ದೇವಪ್ಪನ ಛತ್ರ ಕಟ್ಟಿದ್ದಕ್ಕೆ ಬೆಳ್ಳಿ ಬಳೆ, ಮತ್ತೊಂದು ಕಟ್ಟಿದ್ದಕ್ಕೆ ಬಂಗಾರದ ಉಂಗುರ. ದಿನ ಬೆಳಗಾದ್ರೆ ಜನ ಮನೆಬಾಗಿಲಲ್ಲಿ ಸಿಮೋನ ಆ ಕೆಲಸ ಆಗಬೇಕು, ಈ ಕೆಲಸ ಆಗಬೇಕು..ಅಂತ ಬಂದು ನಿಂತಿರೋರು..” +ಕೇಳುವವರು ಸಿಕ್ಕರೆ ಆತ ಮಾತನಾಡುತ್ತ ಹೋಗುತ್ತಾನೆ. ಈಗೀಗ ಅವನು ಮಾತನಾಡುವುದನ್ನು ಹೆಚ್ಚು ಮಾಡಿದ್ದಾನೆ. +“ಈವತ್ತು ಈ ಹೆಸರು ಉಳಿದಿಲ್ಲ..ಊರಿನ ಯಾರಾದ್ರು ಒಬ್ರು ಕೇರಿಗೆ ಬರತಾರ ನೋಡಿ” ಎಂದು ಮುಖ ಬಾಡಿಸಿಕೊಂಡು ಕೇಳುತ್ತಾನೆ. +“ಯಾಕೆ? ಗೊತ್ತ ನಿಮಗೆ?” +ಅವನೇ ಉತ್ತರ ಕೊಡುತ್ತಾನೆ. +“ಬೇರೆ ಜನ ನಮಗಿಂತ ಚೆನ್ನಾಗಿ ಈ ಕೆಲಸ ಮಾಡತಾರೆ..ಮಲೆಯಾಳಿಗಳು, ತಮಿಳರು ಈ ಕೆಲಸ ಕಲಿತು ಭೇಷ ಅನ್ನಿಸಿಕೊಂಡಿದಾರೆ. ಹೊರಗಿನ ಜನ ಬೇಕಿಲ್ಲ. ಊರಲ್ಲಿ ಇರೋರೇ ಸಾಕು. ನಮ್ಮವರೂ ಇದ್ದಾರೆ..ಆದರೆ ರಾಯರೇ ನಮ್ಮ ಜನರನ್ನು ಹೆಂಡ ಕೆಡಿಸಿದೆ…ಕುಡಿದು ಕುಡಿದು ಎಲ್ಲ ದೋಟಿಗಳಾಗಿದಾರೆ..ಜನರ ಹತ್ರ ಅಡ್ವಾನ್ಸು ಅಂತ ಹಣ ತೊಕೊಳ್ಳೊದು..ಕೆಲಸಕ್ಕೆ ಹೋಗದೆ ಸತಾಯ್ಸೋದು..ಯಾರು ಕೆಲಸ ಕೊಡತಾರೆ ಹೇಳಿ ಹೀಗೆ ಮಾಡಿದ್ರೆ?” ಎಂದು ಕೇಳುತ್ತಾನೆ. +“ನಾನು ಹೇಳೋದು ಸುಳ್ಳಲ್ಲ, ಅಲ್ಲಿ ನೋಡಿ” ಸಿಮೋನ ತೋರಿಸುತ್ತಾನೆ. ಫ಼ಾತಿಮಾ ನಗರದಲ್ಲಿ ಎರಡು ಸಾರಾಯಿ ಅಂಗಡಿ , ಜೋಸೆಫ಼ ನಗರದಲ್ಲಿ ಎರಡು. ಈ ಎರಡೂ ನಗರಗಳಲ್ಲಿ ಎಂಟು ಬಾರುಗಳು. +“ಬ್ರಾಹ್ಮಣರ ಕೇರಿಲಿ ಲಿಂಗಾಯತರ ಕೇರೀಲಿ ಹೀಗೆ ಅಂಗಡಿ ಇಡೋಲ್ಲ…ಸರಕಾರ ಬಿಡಲ್ಲ..ಆದರೆ ಇಲ್ಲಿ..ಜನರಿಗೆ ಬೇಕು ಇಡತಾರೆ..ನಮ ಜನ ಈಗೀಗ ಕುಡಿದೇ ಸತ್ರು..” ಅನ್ನುತ್ತಾನೆ ಆತ. +ತಟ್ಟನೆ ಅವನಿಗೆ ತನ್ನ ಈರ್ವರು ಮಕ್ಕಳ ನೆನಪಾಗುತ್ತದೆ. ಕೇರಿಯ ಇತರೆ ತರುಣರ ನೆನಪಾಗುತ್ತದೆ. ಎಲ್ಲರೂ ಕುಡಿಯುವವರೆ, ಕುಡಿಯುವುದು ಅಂದರೇನು? ಬೆಳಿಗ್ಗೆ ಎದ್ದ ಕ್ಷಣದಿಂದ ಕುಡಿ ಕುಡಿ ಕುಡಿ. ಮದುವೆ ಮನೆಯಲ್ಲಿ ಕುಡಿ, ತೊಟ್ಟಿಲಿಗೆ ಹಾಕುವಲ್ಲಿ ಕುಡಿ, ಹಬ್ಬದ ದಿನ ಕುಡಿ, ಸತ್ತವರ ಮನೆಯಲ್ಲಿ ಕುಡಿ. ಹಿಂದೆ ಹೀಗೆ ಇರಲಿಲ್ಲ. ಕೆಲಸ ಮುಗಿಸಿ ಸಾಯಂಕಾಲ ಬಂದ ಏನೋ ಒಂದಿಷ್ಟು ಕುಡಿದು ಮಲಗಿದ. ಈಗ ? ಕುಡಿದವ ರಸ್ತೆಗೇನೆ ಹೋಗಬೇಕು. +ಊರ ಜನರಿಗೆ ಏನಾಗಿದೆ. ಕ್ರಿಶ್ಚಿಯನ್ ಅಂದ ಕೂಡಲೇ ಈ ಕುಡುಕುತನ ನೆನಪಿಗೆ ಬರುತ್ತದೆ. +“ಹೌದೋ ಅಲ್ಲವೋ ಹೇಳಿ?” ಮತ್ತೆ ಪ್ರಶ್ನೆ ಮಾಡುತ್ತಾನೆ ಸಿಮೋನ. +ಪಾದರಿ ಗೋನಸ್ವಾಲಿಸ್ ಹೇಳಿದರೆಂದು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿದ. ಅವರು ಒಂದು ಎರಡು ತರಗತಿ ಓದಿಬಿಟ್ಟರು. ಹೆಣ್ಣು ಮಕ್ಕಳು ಮದುವೆಯಾಗಿ ಹೋದರು. ಗಂಡು? ಅವರ ಮದುವೆಯೂ ಆಯಿತು. ಹಿರಿಯ ಮಗ ವಿಕ್ಟರ್ ಒಂದು ದಿನ ತನ್ನ ಬಳಿ ಬಂದ- +“..ಅಪ್ಪ ನಾನು ಬೇರೆ ಆಗುತ್ತೇನೆ” ಎಂದು. +ಅವನ ಮಾತೇ ವಿಚಿತ್ರವೆನಿಸಿತು. ತುಂಬಿಕೊಂಡ ಮನೆ ತನ್ನದು..ಆರು ಗಂಡು ಮೂರು ಹೆಣ್ಣು. ಹುಡುಗಿಯರು ಮದುವೆಯಾಗಿ ಹೋಗುವ ಮುನ್ನ ತನ್ನ ಮನೆಯಲ್ಲಿ ಸಂಜೆಯ ಪ್ರಾರ್ಥನೆ ಮಾಡುತ್ತಿದ್ದರೆ ಕೇರಿಗೆಲ್ಲ ಕೇಳುತ್ತಿತ್ತು. ತಾಯಿ ಬೇರೆ. ಎಲ್ಲರೂ ಅಲ್ತಾರಿನ ಮುಂದೆ ಮೊಣಕಾಲೂರಿ ಪರಲೋಕ ಮಂತ್ರ ಹೇಳುತ್ತಿದ್ದರೆ ಬಾಗಿಲ ಬಳಿ ನಿಂತ ತಾನು ಸಂತಸ ಪಡುತ್ತಿದ್ದೆ. ಈ ಮನೆ ಹೀಗೆಯೇ ತುಂಬಿಕೊಂಡಿರಲಿ ಎಂದು ಕೂಡ ಬಯಸುತ್ತಿದ್ದೆ. +“ನಮ್ಮ ಕುಟುಂಬದ ಏಕತೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರ ಸಮರ್ಪಿಸೋಣ” ಎಂದು ತಾನೇ ಹೇಳುತ್ತಿದ್ದ. +ಹೆಣ್ಣು ಮಕ್ಕಳ ಮದುವೆಯಾಯಿತು. ಮೂವರೂ ಮೂರು ದಿಕ್ಕಿಗೆ ಹೋದರು. ಅಮ್ಮ ತೀರಿಕೊಂಡಳು. ಆಗ ತನ್ನ ಮನೆಯ ಪ್ರಾರ್ಥನೆ ಸೊರಗಿತು. ಗಂಡು ಹುಡುಗರು ಹೆಣ್ಣು ಮಕ್ಕಳ ಹಾಗೆ ದನಿ ಎತ್ತಿ ಹಾಡುತ್ತಿರಲಿಲ್ಲ. ಹೆಂಡತಿಯೊಬ್ಬಳೆ ಹಾಡಬೇಕು. ಮನೆಯೂ ಬರಿದಾಗಿ ಹೋದಂತೆ. ಆದರೆ ಆಗಾಗ್ಗೆ ಇಗರ್ಜಿ ಹಬ್ಬಕ್ಕೊ ಕ್ರಿಸ್ಮಸ್ ಗೋ ಅಳಿಯಂದಿರು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂದಾಗ ಮತ್ತೆ ಮನೆ ತುಂಬಿಕೊಳ್ಳುತ್ತಿತ್ತು. +“ತೇರ್ಸ ಮಾಡಲಿಕ್ಕೆ ನಾವು ಇಗರ್ಜಿಗೇನೆ ಹೋಗಬೇಕು” ಅನ್ನುತ್ತಿದ್ದ ಕೊನೆಯ ಮಗ, ಅಷ್ಟು ಜನ ಮನೆಯಲ್ಲಿ ಆದರೂ ಅದೆಂತಹ ಸಂತಸ, ಸಂಭ್ರಮ. ಇದು ನಾಲ್ಕು ದಿನ ಎಂಟು ದಿನ. ನಂತರ ಮತ್ತೆ ಮನೆ ಬರಿದು. ಕ್ರಮೇಣ ಅಳಿಯಂದಿರು, ಹೆಣ್ಣು ಮಕ್ಕಳು ಬರುವುದನ್ನು ಕಡಿಮೆ ಮಾಡಿದರು. ಅವರಿಗೆ ಅವರದ್ದೇ ತಾಪತ್ರಯಗಳು ಕೆಲಸಗಳು. +ಹೀಗೆಂದೇ ಹಿರಿಯ ಮಗನಿಗೆ ಮದುವೆ ಮಾಡಿದೆ. ಎರಡನೆಯವನಿಗೂ ಇಬ್ಬರು ಸೊಸೆಯಂದಿರು ಬಂದರು. +ಮೇಣದ ಬತ್ತಿ ಹಚ್ಚಲು, ದೇವರಿಗೆ ಅಬ್ಬಲಿಗೆ ಹೂವಿನ ಹಾರ ಹಾಕಲು, ಪ್ರಾರ್ಥನೆ ಕಲಿಸಲು, ಕೀರ್ತನೆ ಹಾಡಲು ಹುಡುಗಿಯರು ಬಂದರು. ಮತ್ತೆ ಮನೆಗೆ ಕಳೆ ಬಂದಿತು. ದೇವರ ಕೋಣೆ ತುಂಬಿತು. +ಆದರೆ ಹೊರಗಿನಿಂದ ಬಂದ ಹುಡುಗಿಯರಿಂದ ಏಕೋ ಮನೆಯಲ್ಲಿ ಹೊಂದಾಣಿಕೆ ಕಾಣಲಿಲ್ಲ. ಮುಖ ಊದಿಸಿಕೊಳ್ಳುವುದು, ಅತ್ತೆಯ ಜತೆ ಜಗಳ, ಪ್ರಾರ್ಥನೆಗೆ ಬಾರದಿರುವುದು, ಊಟ ಮಾಡುವಾಗ ಬೇರೆ. ತನ್ನಿಂದ ಇದನ್ನು ಸಹಿಸಲಾಗಲಿಲ್ಲ. +“ಅಪ್ಪಿ..” ಎಂದು ಹೆಂಡತಿಯನ್ನು ಕರೆದೆ. +“ನೀನೆ ಸುಧಾರಿಸಿಕೊಂಡು ಹೋಗಬೇಕು. ಮೂರು ಜನ ಹೆಣ್ಣುಮಕ್ಕಳನ್ನು ಹೆತ್ತು ಬೆಳೆಸಿದವಳು ನೀನು. ಅವರು ಪರಸ್ಪರ ಕಾದಾಡುವಾಗ ಅವರಿಗೆ ಗದರಿಸಿ ಸುಮ್ಮನಿರಿಸಿದವಳು..ಈಗ ನಿನಗೆ ಇಬ್ಬರು ಸೊಸೆಯಂದಿರಿದ್ದಾರೆ..ನೋಡು..ಈ ಮನೆ ಮಾತ್ರ ಹೀಗೇ ಇರಬೇಕು ..” ಎಂದೆ. +ಅಪ್ಪಿ ಮಾತನಾಡಲಿಲ್ಲ, ಆದರೂ ಅವಳ ಮೇಲೆ ನನಗೆ ಭರವಸೆ, ನಂಬಿಕೆ, ತಾನು ಇಲ್ಲಿ ಬಂದು ಇದ್ದಾಗಲೂ ಮನೆ ನಡೆಸಿಕೊಂಡು ಹೋಗಿದ್ದಳು. ನಂತರವೂ ಮನೆ ನೋಡಿಕೊಂಡಿದ್ದಳು. +ಆದರೆ ಹಿರಿಯ ಮಗ-ಅಪ್ಪ ನಾನು ಬೇರೆಯಾಗುತ್ತೇನೆ ಎಂದು ಹೇಳಿದ ಹಿಂದಿನ ರಾತ್ರಿ ಅಪ್ಪಿ- +“..ನಾನೊಂದು ಮಾತು ಹೇಳತೇನೆ ನೀವು ಬೇಸರ ಮಾಡಿಕೋಬಾರದು..” ಎಂದು ಪೀಠಿಕೆ ಹಾಕಿದಳು. +“ಹಿರೇ ಸೊಸೆ ಹಠ ಹಿಡಿದುಕೂತಿದಾಳೆ..ಅವರು ಗಂಡ ಹೆಂಡತಿ ಬೇರೆ ಹೋಗಬೇಕಂತೆ…ಇಲ್ಲ ಅಂದ್ರೆ ನಾನು ಮನೇಲಿ ಇರೋದಿಲ್ಲ ಅಂತಿದಾಳೆ..” +“ಏನಂತೆ ಅವಳ ತೊಂದರೆ..” +“ನಿಜ ಏನೂಂತ ನನಗೆ ಗೊತ್ತಿಲ್ಲ-ಆದರೂ ನನಗೊಂದು ಅನುಮಾನ ಇದೆ..ಅವಳ ತಾಯಿ ಅವಳಿಗೆ ಇದನ್ನೆಲ್ಲ ಹೇಳಿಕೊಟ್ಟಿರಬಹುದು..” +“ನೋಡೋಣ” ಎಂದಿದ್ದೆ ತಾನು. ಆದರೆ ಈ ಮಾತು ನಡೆದ ಮಾರನೇ ದಿನವೇ ಮಗ ತಾನು ಬೇರೆಯಾಗುವುದಾಗಿ ಹೇಳಿದ್ದ. +“ಯೋಚಿಸು ವಿಕ್ಟರ್..ನಾವು ಒಡೆದು ಹೋಗುವುದರಲ್ಲಿ ದೊಡ್ಡಸ್ತಿಕೆ ಇಲ್ಲ..ಒಂದಾಗುವುದರಲ್ಲಿ ನಮ್ಮ ಸಮೋಡ್ತಿಯ ಪ್ರಭಾವ ಇದೆ..” ಎಂದೆ. +ಭಾಗ್ಯವಂತ ಕುಟುಂಬ ಅನ್ನುವಂತಹ ಒಂದು ಕಲ್ಪನೆ ನಮ್ಮಲ್ಲಿತ್ತು. ತಂದೆ ತಾಯಿ ಮಕ್ಕಳೆಲ್ಲ ಒಟ್ಟಿಗೇನೆ ಇರಬೇಕು. ಸುಖ ಸಂತೋಷ ಸ್ನೇಹದಿಂದ ಬದುಕಬೇಕು ಅನ್ನುವ ಆದರ್ಶವನ್ನು ಕ್ರಿಸ್ತಪ್ರಭು ನಮ್ಮ ಮುಂದೆ ಇಟ್ಟಿದ್ದ. ಈ ಕಲ್ಪನೆಗೆ ತನ್ನ ಕುಟುಂಬ ಈವರೆಗೆ ಒಂದು ನಿದರ್ಶನವಾಗಿತ್ತು. ನಾಳೆ ಈ ನಿದರ್ಶನ ಸುಳ್ಳಾಗಬಾರದಲ್ಲವೆ? +“ಇಲ್ಲ ಪಪ್ಪ..ನಾಳೆ ಜಗಳ ದೊಂಬಿ ಆಗುವುದಕ್ಕಿಂತ ಹೀಗೆ ಬೇರೆಯಾಗೋದೇ ಒಳ್ಳೇದೇನೋ ಅನ್ಸುತ್ತೆ..” ಎಂದ ಆತ ಎಲ್ಲವನ್ನೂ ನಿರ್ಧರಿಸಿರುವ ಹಾಗೆ. +“ಆಯಿತು..ನಿನ್ನ ತಾಯಿಗೂ ಒಂದು ಮಾತು ಹೇಳು..ನಿನ್ನ ತಮ್ಮಂದಿರಿಗೂ ಹೇಳು..” ಎಂದೆ. +ಅವನು ಯಾರಿಗೆ ಹೇಳಿದನೋ ಬಿಟ್ಟನೋ ಬೇರೆಯಾದ. ಇಗರ್ಜಿಯ ಹಿಂದೆಯೇ ವೈಜೀಣ ಕತ್ರಿನಳ ಮನೆ ಪಕ್ಕದಲ್ಲಿ ಬೇರೊಂದು ಮನೆ ಮಾಡಿದ. +“ಗುರ್ಕಾರ ಮಾಮ..ಏನು ಮಗ ಬೇರೆ ಹೋದನಂತೆ?” ಎಂದು ಹಲವರು ಕೇಳಿದರು. ಈ ಪ್ರಶ್ನೆಯ ಹಿಂದೆ ಏನೋ ವ್ಯಂಗ್ಯವಿತ್ತು. ಕುಹಕವಿತ್ತು. ನಿಮ್ಮ ಮನೆಯಲ್ಲಿಯೂ ಹೀಗೆ ಆಯಿತೆ” ಎಂಬ ತಿವಿತವಿತ್ತು. +ಹಲವಾರು ದಿನ ಇದೇ ಒಂದು ವ್ಯಥೆಯಾಯಿತು. ತನ್ನ ಪಾಲಿಗೆ ಈ ವ್ಯಥೆಯ ನಡುವೆಯೂ ಒಂದು ಸಂತಸವಿತ್ತು. ಊಟದ ಮನೆ ಸಾಂತಾಮೋರಿ ಮಕ್ಕಳು ಮಾಡಿಕೊಂಡ ಹಾಗೆ ತನ್ನ ಮಗ ಮಾಡಲಿಲ್ಲವಲ್ಲ ಎಂಬ ಸಮಾಧಾನ. +“ಅಪ್ಪಿ..ಹೋಗಲಿ ಬಿಡು..ದೇವದಿತ್ತ: ಸೈತಾನ ನಾಡ್ತ- ದೇವರು ಕೊಡುತ್ತಾನೆ ಸೈತಾನ ಆಟವಾಡಿಸುತ್ತಾನೆ ಅಂತ ಗಾದೆ ಇದೆಯಲ್ಲ. ಬೆರೆಯವರಾದರೂ ನಮ್ಮ ಜತೆ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದ ಗುರ್ಕಾರ ಸಿಮೋನ ಹೆಂಡತಿ. ಅವನಿಗೀಗ ವಯಸ್ಸಾಗಿತ್ತು. +ಜೋಸೆಫ಼ ನಗರದ ಜನರ ಕ್ಷೇಮ ಸಮಾಚಾರ, ಅವರ ಸಮಸ್ಯೆಗಳ ಪರಿಹಾರ ಎಂದು ಕೊಂಚ ತಿರುಗಾಟ ಮಾಡುವುದಿತ್ತು. ಗುರ್ಕಾರ ಎಂಬ ಗೌರವವಂತೂ ಇತ್ತು. +ಕ್ರೀಸ್ತುವರ ಸ್ಥಿತಿಗತಿಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ಬೇರೆಯವರು ಇವರ ವೃತ್ತಿಗಳನ್ನು ಕೈಕೊಂಡಿದ್ದು ಯುವಕರು ಬೇರೆ ವೃತ್ತಿಗಳ ಹುಡುಕಾಟದಲ್ಲಿರುವುದು. ಮಿತಿಮೀರಿದ ಕುಡಿತಗಳು ಇವರ ಬದುಕನ್ನು ಅತಂತ್ರಗೊಳಿಸಿದ್ದವು. +ಮುಂದೆ ಇಂದಿನ ತರುಣರು ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದರೆ ಅನುಕೂಲವಾಗುತ್ತಿತ್ತು. ಅಲ್ಲಲ್ಲಿ ಇರುವ ಕಾನ್ವೆಂಟುಗಳು, ಪಾದರಿಗಳ್ ಶಾಲೆ ಕಾಲೇಜುಗಳು ಈ ಕೆಲಸ ಮಾಡಬಹುದು. ಅವರು ಕೂಡ ಬೇರೆ ಜನರತ್ತ ತೋರುವ ಆಸಕ್ತಿಯನ್ನು ನಮ್ಮವರತ್ತ ತೋರುತ್ತಿಲ್ಲ. ಇದೂ ಒಂದು ಬೇಸರವೆ. +ಹೀಗೆ ಹಲವು ವಿಚಾರಗಳ ಸುಳಿಗೆ ಸಿಲುಕಿ ಬಿದ್ದು ತಾಳ್ಮೆ ಕಳೆದುಕೊಳ್ಳುತ್ತಿದ್ದ. ಯಾರಾದರೂ ಮಾತಿಗೆ ಸಿಕ್ಕರಂತೂ ಅವನ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿತ್ತು. ಇತ್ತೀಚೆಗೆ ಸಾಂತಾಮೋರಿ ಮನೆಯಲ್ಲಿ ನಡೆದ ಪಂಚಾಯ್ತಿಯ ಸಂದರ್ಭದಲ್ಲಿ ಗುರ್ಕಾರ ಸಿಮೋನನಿಗೆ ಬಂದ ಸಿಟ್ಟು, ಕ್ರೋಧವನ್ನು ಈ ಹಿಂದೆ ಯಾರೂ ನೋಡಿರಲಿಲ್ಲ. +* +* +* +ಶಿವಸಾಗರದಲ್ಲಿ ಮಲೆಯಾಳಿಗಳು, ಬೇರೆ ಜನ ಕಲ್ಲಿನ ಕೆಲಸ ಆರಂಭಿಸಿದ ನಂತರ ಘಟ್ಟದ ಕೆಳಗಿನಿಂದ ಬರುವವರ ಸಂಖ್ಯೆ ಕಡಿಮೆಯಾಯಿತು. ಬಂದ ಕೆಲವರು ದೊಡ್ಡಪ್ಪನ ಮನೆ, ಚಿಕ್ಕಪ್ಪನ ಮನೆ ಎಂದು ಅವರಿವರಲ್ಲಿ ಉಳಿದು, ಮಳೆಗಾಲದ ನಂತರ ತಾವೇ ಹೊಸದಾಗಿ ಮನೆ ಮಾಡಿದರು. ಊರ ತುಂಬಾ ಹೋಟೆಲುಗಳು ಆದವು. ಅಂಟುವಾಳದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ನಿಲ್ಲಿಸಿದಳು. ಅವಳ ಮಕ್ಕಳು ಬಸ್ತು ಮತ್ತು ಜಾನಿ ಈರ್ವರೂ ಗಾರೆ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಸಾಂತಾಮೋರಿ ಮಗಳ ಪ್ರಕರಣ ಬೇರೆ ಹಾಗೆ ಆದ ನಂತರ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಅನಂತರ ಅವಳು ಮಾಡಿದ ಒಂದು ಕೆಲಸವೆಂದರೆ ಇಬ್ಬರು ಮಕ್ಕಳ ಮದುವೆ ಮಾಡಿದ್ದು. ಮುರುಡೇಶ್ವರದಿಂದಲೇ ಇಬ್ಬರು ಹುಡುಗಿಯರನ್ನು ತಂದು ಮದುವೆ ಮಾಡಿ ಸೊಸೆಯಂದಿರನ್ನು ಮನೆ ತುಂಬಿಸಿಕೊಂಡಿದ್ದಳು. ಓಮ್ದು ವರ್ಷಕ್ಕೆಲ್ಲ ಸೊಸೆಯಮ್ದಿರು ಬಸಿರಾಗಿ, ಸೀಮಂತ ಮಾಡಿ ಅವರನ್ನು ಅವರವರ ತಾಯಂದಿರ ಮನೆಗೆ ಹೆರಿಗೆಗಾಗಿ ಕಳುಹಿಸಿದ್ದಳು. ಆರು ತಿಂಗಳ ನಂತರ ಸೊಸೆಯಂದಿರು ಮೊಮ್ಮಕ್ಕಳ ಜತೆ ಬಂದಿದ್ದರು. ಈರ್ವರು ಮೊಮ್ಮಕ್ಕಳನ್ನು ನೋಡಿಕೊಂಡು ಅವರ ಸ್ನಾನ ಮಾಡಿಸುತ್ತ, ಮಣ್ಣಿ ಮಾಡಿ ಅವುಗಳಿಗೆ ತಿನ್ನಿಸುತ್ತ- +“ಕುರುಕುರು ಕನ್ನ್ ಮ್ಹ್ಸಿಯೋ ಗೆಲೇರನ್ನ” ಎಂದು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತ ಕಾಲ ಕಳೆದಳು. +ಸೊಸೆಯಂದಿರು ಗಂಡು ಮಕ್ಕಳ ನಂತರ ಮತ್ತೆ ಈರ್ವರು ಗಂಡನ್ನು ಒಂದು ಹೆಣ್ಣನ್ನು ಪಡೆದು ಅಂಟವಾಳದ ಮನೆ ಮಕ್ಕಳಿಂದ ತುಂಬಿಕೊಂಡಿರುವಾಗ , ಹಿರಿಯ ಮೊಮ್ಮಕ್ಕಳು ಹದಿನಾಲ್ಕು ಹದಿನೈದನೆ ವಯಸ್ಸು ಕಂಡಿರುವಾಗ ಈರ್ವರೂ ಮಕ್ಕಳು ಬೇರೆ ಮನೆ ಮಾಡಲು ಯೋಚಿಸಿರುವುದು ಅವಳ ಗಮನಕ್ಕೆ ಬಂದಿದೆ. +ಏನೆಂದರೂ ಅವಳದ್ದು ಊಟದ ಮನೆ. ಮೇಸ್ತ್ರಿಗಳು ಕೆಲಸಗಾರರು- +“ಮೋರಿ ಮಾಯ..ಘೇ” ಎಂದು ತಿಂಗಳಿಗಷ್ಟು ಊಟದ ಹಣವನ್ನು ಬಟವಾಡೆಯಾದ ದಿನ ನೀಡುತ್ತಿದ್ದರು. ಯಾರೂ ಹಣ ನಿಲ್ಲಿಸಿಕೊಂಡಿದ್ದಿಲ್ಲ. ಅಡಿಗೆ ಮಾಡುವಲ್ಲಿ, ಊಟ ಬಡಿಸುವಲ್ಲಿ, ಮೀನು ಮಾಂಸ ಮಾಡಿದ ದಿನ ಹೋಳೂ ಹಾಕುವಾಗ ಕೊಂಚ ಹೆಚ್ಚು ಕಡಿಮೆ ಆಗಿದ್ದಿರಬಹುದು. ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂದು ಇದ್ದರೂ ಯಾರಿಗೋ ಹೆಚ್ಚು ಯಾರಿಗೋ ಕಡಿಮೆ ಆದದ್ದಿದೆ. ಹೀಗೆಂದು ಯಾರೂ ತಕರಾರೂ ಎತ್ತಲಿಲ್ಲ. ಸುಮಾರು ಮೂವತ್ತು ವರ್ಷ ತನ್ನ ಅನ್ನ ಸೇವೆ ನಡೆಯಿತು. ನಂತರ ತಾನೇ ನಿಲ್ಲಿಸಿದೆ. ಮಗಳು ಹಾಗೆ ಆಗಲೂ ತನ್ನ ಮನೆಯಲ್ಲಿ ಸದಾ ತುಂಬಿಕೊಂಡಿರುವ ಗಂಡಸರೇ ಕಾರಣ ಎಂಬ ಮಾತೂ ಕೇಳಿ ಬಂದಿತು. ಆದರೆ ಮನೆಗೆ ಊಟಕ್ಕೆ ಬರುವ ಜನ ಮಗಳ ವಿಷಯದಲ್ಲಿ ಸಲಿಗೆಯಿಂದ ಇರಲಿಲ್ಲ. ಮನೆಯಲ್ಲಿ ಇಂಥದಕ್ಕೆಲ್ಲ ಅವಕಾಶವಿರಲಿಲ್ಲ. ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ನಂತರವೂ ಕೆಲ ವರುಷ ಊಟದ ಮನೆ ಮುಂದುವರಿದಿತ್ತು. ನಂತರ ಅದನ್ನು ನಿಲ್ಲಿಸಿದೆ. ಹೀಗೆಂದು ಅಡಿಗೆ ಮಾಡುವುದು ನಿಲ್ಲುವಂತಿಲ್ಲವಲ್ಲ. ಇಬ್ಬರು ಮಕ್ಕಳು, ಸೊಸೆ ಮೊಮ್ಮಕ್ಕಳು ಎಂದು ಈಗಲೂ ಹಿಂದಿನ ಪಾತ್ರೆಗಳಲ್ಲಿಯೇ ಅಡಿಗೆ ಮಾಡುತ್ತಿದ್ದೇನೆ. ಹಿಂದಿನ ಅವೇ ಕಂಚಿನ ತಟ್ಟೆಗಳು, ಕಂಚಿನ ಲೋಟಗಳು ಬಳಕೆಯಲ್ಲಿವೆ. ಸೊಸೆಯಂದಿರು ಮಾತ್ರ ಬರುವಾಗ ಸ್ಟೀಲಿನ ತಟ್ಟೆ ಲೋಟ ತಂದಿದ್ದಾರೆ. ಅವುಗಳನ್ನು ಅವರು ಹೊರಗೆ ತೆಗೆದಿಲ್ಲ. ತೌರು ಮನೆಯವರು ಕೊಟ್ಟ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಿದ್ದಾರೆ. +“..ಇಡಿ..ಇಡಿ..ಈ ಕಂಚಿನ ತಟ್ಟೆ ಲೋಟಗಳು ಸದ್ಯಕ್ಕೇನೂ ಸವೆಯೋದಿಲ್ಲ..” ಎಂದು ತಾನು ಹೇಳಿದ್ದೇನೆ. +ಮಕ್ಕಳ ನಡುವೆ ಏನೂ ಮನಸ್ತಾಪ ಬಂದಿಲ್ಲ. ಅವರನ್ನು ಸೊಸೆ ಮೊಮ್ಮಕ್ಕಳನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆದರೂ ಬಸ್ತು ಒಮ್ಮೊಮ್ಮೆ ಕುಡಿದು ಬಂದು ಜಗಲಿಯ ಮೇಲೆ ಕುಳಿತು ಕೂಗಾಡುತ್ತಾನೆ. ಈ ಬದಿಯಲ್ಲಿ ಜಾನಿ ಕೂಳಿತು ಕೂಗಾಡುತ್ತಾನೆ. ಇದು ತನಗೆ ಚೆನ್ನಾಗಿ ಕಾಣಿಸುವುದಿಲ್ಲ. +ಊಟಕ್ಕೆ ಅಷ್ಟೊಂದು ಜನ ಬರುತ್ತಿದ್ದರಲ್ಲ ಯಾರೂ ಇಲ್ಲಿ ಕುಡಿಯಬಾರದು ಎಂದು ತಾನು ಹೇಳುತ್ತಿದ್ದೆ. ಊಟ ಮುಗಿಸಿ ಹೊರಡಿ ಅನ್ನುತ್ತಿದ್ದೆ. ಊಟಕ್ಕೆ ಮುನ್ನ ಎಲ್ಲರೂ ಸಾಯಂಕಾಲದ ಸ್ನಾನ ಮಾಡಬೇಕು. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಿದ್ದೆ. ಅಲ್ಲಿ ನಿಂತು ಜಪ ಮಾಡಬೇಕು. ನಂತರ ಬಂದ ಹಾಗೆ ಅವರೆಲ್ಲರಿಗೂ ಕುಚಲಕ್ಕಿ ಗಂಜಿ ಇಲ್ಲವೇ ಅನ್ನ, ಮೀನಿನ ಸಾರು ಇಲ್ಲವೆ ಸಾರು, ಹುರಿದ ಮೀನು. ಭಾನುವಾರದ ಮಾಂಸ. ಊಟ ಮುಗಿಸಿ ನಿಮ್ಮ ನಿಮ್ಮ ಬಿಡಾರಗಳಿಗೆ ಹೊರಡಿ. ಕುಡಿಯುವುದಿದ್ದರೆ ಅಲ್ಲಿ. ಮೊದ ಮೊದಲು ಈ ಜಪ ಮುಂದುವರಿದು ನಡುವೆ ನಿಂತು ಹೋಗಿತ್ತು. ಪಾದರಿ ಗೋನಸ್ವಾಲಿಸ್, ಪಾದರಿ ಮಸ್ಕರಿನಾಸ ಬಂದ ನಂತರ ಮತ್ತೆ ಮುಂದುವರೆಯಿತು. +ಈಗ ಮೊಮ್ಮಕ್ಕಳು ಸೊಸೆಯಂದಿರು ತಪ್ಪದೆ ಆಮೋರಿ ಹೇಳುತ್ತಾರೆ. ಜಪಸರ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಈ ಕೂಡುಕರ ಗದ್ದಲ. ಹಾಗೆಯೇ ಜಗಳ. ಬೇರೆ ಬೇರೆ ಬಿಡಾರ ಮಾಡುವ ಮಾತು. +“ಮಾಯ…ಹಾಂವುಂ. ಇಂಗಡ ರಾವ್ತಂ” (ಅಮ್ಮಾ ನಾನು ಬೇರೆ ಇರುತ್ತೇನೆ..) ಎಂದು ತೊದಲುತ್ತಾನೆ ಬಸ್ತು. +“ನಾನೂ ಅಷ್ಟೇ ” ಅನ್ನುತ್ತಾನೆ ಜಾನಿ. +ಅವರ ಮಾತು ಇವಳಿಗೆ ಅರ್ಥವಾಗುತ್ತದೆ. ದೊಡ್ಡ ಮನೆಯಲ್ಲಿ ಎರಡು ಅಡಿಗೆ ಮನೆ ಮಾಡುವ ಇರಾದೆ ಅವರದ್ದು. ಈಗ ಅವರು ದುಡಿದು ತಂದದ್ದರಲ್ಲಿ ಏನು ಕೊಡಲಿ ಕೊಡದಿರಲಿ ಇವಳು ಎಲ್ಲರಿಗೂ ಊಟ ಹಾಕುತ್ತಾಳೆ. ಕೆಲಬಾರಿ..” +“ಬಸ್ತು ಒಂದಿಷ್ಟು ಹಣ ಕೊಡು” +“ಜಾನಿ ನೀನು ದುಡ್ಡು ಕೊಟ್ಟಿಲ್ಲ” ಅನ್ನುವುದುಂಟು. ಬಟವಾಡೆಯ ದಿನ ಅವರಿಂದ ಹಣ ಕಿತ್ತುಕೊಳ್ಳುವುದುಂಟು. +“ಕೊಡಿ ಇಲ್ಲಿ..ನೂರು ರೂಪಾಯಿ..ಮನೆ ಹಿಂದೆ ಹಣದ ಗಿಡ ಇದೆ ಅಂತ ತಿಳಕೊಂಡಿದ್ದೀರ..ನಿಮಗೂ ಹಾಕಬೇಕು…ನಿಮ್ಮ ಹೆಂಡಿರಿಗೂ ಹಾಕಬೇಕು ಅಂದ್ರೆ ಎಲ್ಲಿಂದ ತರಲಿ” ಎಂದು ಕೇಳುತ್ತಾಳೆ. +ಬಸ್ತು, ಜಾನಿ ಇಬ್ಬರೂ ತಾಯಿಯ ಬಾಯಿಗೆ ಹೆದರಿ ಹಣ ಕೊಡುತ್ತಾರೆ. ಆದರೂ ತಾಯಿಯ ಹತ್ತಿರ ತುಂಬಾ ಹಣವಿದೆ ಅನ್ನುವುದು ಅವರ ವಾದ. +ಮನೆಯಲ್ಲಿ ಒಂದು ಕೊಠಡಿ ಇದೆ. ಕಾಳ್ಕಾ ಕೂಡ (ಕತ್ತಲೆ ಕೋಣೆ) ಎಂದು ಅದನ್ನು ಕರೆಯುತ್ತಾರೆ. ಈ ಕೋಣೆಗೆ ಕಿಟಕಿ ಇಲ್ಲ. ಮುಂಬದಿಯಲ್ಲಿ ಒಂದು ಬಾಗಿಲಿದೆ. ಒಳಗೆ ಮನೆಗೆ ಬೇಕಾದ ಅಷ್ಟು ಸಾಮಾನು ತುಂಬಿ ಇರಿಸಿದ್ದಾಳೆ. ಸಾಂತಾ ಮೊರಿ, ಪಾತ್ರೆ, ಪಡಗ, ಚೆಂಬು ಕೊಡಪಾನ, ತಟ್ಟೆ ಕರಟಗಳಿಂದ ಮಾಡಿದ ಸಾರು ಬಡಿಸುವ ಅನ್ನ ಬಡಿಸುವ ಕೈ ತಟ್ಟೆ ಲೋಟಗಳು, ಹಾಗೆಯೇ ಅಕ್ಕಿ, ಮೆಣಸಿನಕಾಯಿ, ನೀರುಳ್ಳಿ ಇತ್ಯಾದಿ ಸಾಮಾನು, ಒಂದು ಹಾಸಿಗೆ ಇದೆ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಮೇಲೆ ಬಸ್ತು, ಜಾನಿ, ನಾತೇಲ ಮಲಗಿದ್ದಾರೆ. ಈಗ ಮೊಮ್ಮಕ್ಕಳೂ ಮಲಗುತ್ತಾರೆ. ಆದರೆ ಬೇರೊಬ್ಬರು ಅಲ್ಲಿ ಪ್ರವೇಶಿಸುವಂತಿಲ್ಲ. ಒಳಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಸಾಂತಾಮೋರಿ ಹೊರ ಬಂದರೆ ಬಾಗಿಲಿಗೆ ಬೀಗ ಜಡಿಯುತ್ತಾಳೆ. ಕುತ್ತಿಗೆಯಲ್ಲಿಯ ಜಪಸರ, ಬಂಗಾರದ ಮಣಿ, ಸರದ ಜತೆಗೆ ಒಂದು ಕರಿ ಹಗ್ಗವಿದೆ. ಅದಕ್ಕೊಂದು ಬೀಗದ ಕೈಗೊಂಚಲು. ಪ್ರತಿ ಸಾರಿ ಹೊರಬಂದು ಬಾಗಿಲು ಹಾಕಿ ಬೀಗ ಸಿಕ್ಕಿಸಿ ಬೀಗ ಹಾಕುತ್ತಾಳೆ ಅವಳು. ಒಳಗೆ ಸಣ್ಣದೊಂದು ಪೆಟ್ಟಿಗೆಯೂ ಇದೆ. ಈ ಪೆಟ್ಟಿಗೆಯ ನೋಟುಗಳು, ನಾಣ್ಯಗಳು ಬಂಗಾರದ ಆಭರಣ ಇದೆ ಎಂಬುದು ಈ ಮಕ್ಕಳ ವಾದ. +ಮಗಳಿಗಾಗಿ ಅವಳು ತುಂಬಾ ಆಭರಣ ಮಾಡಿಸಿದ್ದರು. ಬಳೆ, ಕಿವಿ, ಬೆಂಡೋಲೆ, ಕೆನ್ನೆ ಸರಪಳಿ, ಪವನಿನ ಸರ, ಕಾಸಿನ ಸರ, ಜಡೆ ಬಿಲ್ಲೆ, ಮುಡಿಗೆ ಮುಳ್ಳು ಎಲ್ಲ ಮಾಡಿಸಿದ್ದಳು. ಮಗಳು ಓಡಿ ಹೋಗುವಾಗ ಎಲ್ಲ ಬಿಟ್ಟು ಹೋದಳು. ಅದನ್ನೆಲ್ಲ ಹಾಗೆಯೇ ಇರಿಸಿಕೊಂಡಿದ್ದಾಳೆ. ಸೊಸೆಯಂದಿರಿಗೂ ಕೊಟ್ಟಿಲ್ಲ. ಮೊಮ್ಮಕ್ಕಳಿಗೂ ಕೊಟ್ಟಿಲ್ಲ. ಹಣವಂತೂ ತುಂಬಾ ಇದೆ. ಇದೆಲ್ಲವನ್ನೂ ತಮಗೆ ಕೊಡಲಿ ಎಂಬುದು ಈ ಮಕ್ಕಳ, ಸೊಸೆಯಂದಿರ ಅಭಿಪ್ರಾಯ. +ಸಾಂತಾಮೊರಿಗೆ ಎಪ್ಪತ್ತೈದೋ, ಎಂಬತ್ತೋ ಆಯಿತು. ಇನ್ನೆಷ್ಟು ವರ್ಷ ಬದುಕುತ್ತಾಳೆ ಅವಳು ಎಂದು ಸಿಮೋನ, ಪಾಸ್ಕೊಲ, ಕತ್ರೀನ ಕೇಳುತ್ತಾಳೆ. ಮಕ್ಕಳಿಗೂ ಇದು ಹೌದು ಎನಿಸುತ್ತದೆ. +ದುಡಿದುದನ್ನು ಹೆಂಡಕ್ಕೆ ಹಾಕಿ, ಒಂದಿಷ್ಟನ್ನು ತಾಯಿಯ ಕೈಗೆ ಹಾಕಿ, ಮತ್ತೂ ಒಂದಿಷ್ಟನ್ನು ಹೆಂಡಿರ ಕೈಗೆ ಹಾಕಿ ಈ ಮಕ್ಕಳು ಕೂಗಾಡುತ್ತಾರೆ ನಾವು ಬೇರೆ‌ಆಗುತ್ತೇವೆ ಅನ್ನುತ್ತಾರೆ. +“ಏನು..ಈ ಮನೇಲಿ ಎರಡು ಒಲೇನ?” ಸಾಂತಾಮೋರಿ ಕೇಳುತ್ತಾಳೆ. ಇದು ತುಂಬಾ ವಿಚಿತ್ರವೆನಿಸುತ್ತದೆ ಅವಳಿಗೆ. ದಿನನಿತ್ಯ ಇಪ್ಪತ್ತು ಮೂವತ್ತು ಜನ ಒಂದೆಡೆಯಲ್ಲಿ ಕುಳಿತು ಊಟ ಮಾಡುತ್ತಿದ್ದುದು ನೆನಪಿಗೆ ಬರುತ್ತದೆ. ಅನುಕೂಲಕ್ಕೆಂದು ಈ ಎರಡು ಒಲೆಗಳು ಒಂದು ಕೂಡೊಲೆ, ಪಾತ್ರೆ ಸಣ್ಣದೆಂದು ಎರಡು ಮೂರು ಬಾರಿ ಅನ್ನ ಮಾಡುವುದು, ಗಂಜಿ ಬೇಯಿಸುವುದು ನಡೆಯುತ್ತಿತ್ತು. ಸಾಕಷ್ಟು ದೊಡ್ಡ ಅಡಿಗೆ ಮನೆ. ಊಟದ ಮನೆ ಕೂಡ ದೊಡ್ಡದೆ. ಆದರೆ ಮನೆಯನ್ನೇ ಎರಡು ಭಾಗವನ್ನಾಗಿ ವಿಭಜಿಸಿದ ಘಟನೆ ಈವರೆಗೆ ನಡೆದಿರಲಿಲ್ಲ. +ಒಟ್ಟಿಗೇ ಅಡಿಗೆ ಮಾಡಿ ಒಟ್ಟಿಗೇನೆ ಕುಳಿತು ಊಟ ಮಾಡುವ ಸಂಪ್ರದಾಯ ನಡೆದು ಬಂದ ಈ ಮನೆಯಲ್ಲಿ ಎರಡು ಒಲೆಗಳನ್ನು ಹೂಡಿದ ನಂತರ ಏನಾದೀತು? ಮೊಮ್ಮಕ್ಕಳು ಬೇರೆ ಬೇರೆ ಕುಳಿತು ಬೇರೆ ಬೇರೆ ಊಟ ಮಾಡುತ್ತಾರೆ. ಸೊಸೆಯಂದಿರು ಅವರವರ ಗಂಡಂದಿರಿಗೆ ಮಕ್ಕಳಿಗೆ ಬಡಿಸುತ್ತಾರೆ. ತಾನು ಊಟ ಮಾಡುವುದು ಎಲ್ಲಿ? ಇಲ್ಲ ತಾನೂ ಮೂರನೇ ಒಲೆ ಹೂಡಬೇಕೆ? +ಸಾಂತಾಮೊರಿ ಜಗಲಿಯ ಆ ತುದಿಗೊಬ್ಬ ಈ ತುದಿಗೊಬ್ಬರಂತೆ ಕುಳಿತ ಮಕ್ಕಳನ್ನು ನೋಡಿದಳು. ಅವಳ ತೊಡೆಯ ಮೇಲೆ ಈ ಇಬ್ಬರೂ ಮಕ್ಕಳು ಹೆತ್ತ ಕರುಳು ತುಂಡುಗಳು ತೊಡೆಗೆ ತಲೆಯೂರಿ ಮಲಗಿದ್ದವು. ಮೊಮ್ಮಕ್ಕಳ ತಲೆ ನೇವರಿಸಿ ಅವಳೆಂದಳು. +“…ಈ ಮನೇಲಿ ಎರಡು ಒಲೆ ಹೂಡಲಿಕ್ಕೆ ನಾನು ಬಿಡೋದಿಲ್ಲ..” +“..ಮತ್ತೆ?” +“ನೀವು ಬೇರೆ ಮನೆ ಮಾಡಿ” ಬಿಗಿ ಮಾತಿನಲ್ಲಿಯೇ ಅವಳು ಉತ್ತರಿಸಿದಳು. +ಬಸ್ತು, ಜಾನರು ಇದನ್ನು ನಿರೀಕ್ಷಿಸಿರಲಿಲ್ಲ. ಅವರಿಬ್ಬರೂ ಬೇರೆ ಬೇರೆ ಮನೆ ಮಾಡಲು ನಿರ್ಧರಿಸಿದ್ದರು. ಯಾವುದಾದರೂ ರೀತಿಯಲ್ಲಿ ತಾಯಿಯನ್ನು ತನ್ನ ಮನೆಯಲ್ಲಿರಿಸಿಕೊಂಡರೆ ಕತ್ತಲೆ ಕೋಣೆಯಲ್ಲಿ ಅವಳು ಗುಪ್ತವಾಗಿ ಇರಿಸಿರುವ +ಹಣ ಬಂಗಾರ ತನ್ನದಾಗುತ್ತದೆ ಎಂದು ಬಸ್ತು ತಿಳಿದ ಹಾಗೆಯೇ ಜಾನಿಕೂಡ ಯೋಚಿಸಿದ್ದ. ಮನೆಯಲ್ಲಿ ಎರಡು ಒಲೆ ಮಾಡಿದ ಕೂಡಲೆ ಅವಳು ಒಂದಲ್ಲ ಒಂದು ಕಡೆ ಸೇರಿಕೊಳ್ಳಬೇಕಲ್ಲ. ಅವಳು ಮೊದಲಿನಿಂದಲೂ ತನ್ನನ್ನೇ ಹೆಚ್ಚು ಪ್ರೀತಿಸುವುದರಿಂದ ತನ್ನ ಬಳಿಯೇ ಇರುತ್ತಾಳೆ ಎಂದು ಬಸ್ತು ನಿರೀಕ್ಷಿಸಿದ್ದ. +ಆದರೆ ನೀವು ಬೇರೆ ಮನೆ ಮಾಡಿ ಎಂದಾಗ ಇಬ್ಬರಿಗೂ ನಿರಾಶೆಯಾಯಿತು. ಬೇರೆ ಮನೆ ಎಂದರೆ ಅವಳು ಈ ಮನೆ ಬಿಡುವುದಿಲ್ಲ. ಕತ್ತಲೆ ಕೋಣೆ ಖಾಲಿಯಾಗುವುದಿಲ್ಲ. +“ಆಯ್ತು..ಮನೆ ಬೇರೆ ಮಾಡತೇವೆ..ನಮ್ಮದನ್ನ ನಮಗೆ ಕೊಡು..” ಎಂದ ಬಸ್ತು ಹೀಗಾದರೂ ಒಂದು ತೀರ್ಮಾನವಾಗಲಿ ಎಂದು. +“ಏನದು ನಿನ್ನ ಪಾಲಿನದು? ಏನು ನಿಮ್ಮಪ್ಪ ಮಾಡಿದ ಆಸ್ತಿ ಇದೆಯೆ ಇಲ್ಲಿ..ಇಲ್ಲ ನಿಮ್ಮಜ್ಜ ಮಾಡಿದ್ದು ಇದೆಯೆ?” ಎಂದು ಕೆಣಕಿದಳು ಸಾಂತಾಮೋರಿ. +ಘಟ್ಟದ ಕೆಳಗಿನಿಂದ ಅವಳು ಬರುವಾಗ ತಂದದ್ದು ಸಣ್ಣದೊಂದು ಬಟ್ಟೆಯ ಗಂಟು, ಪೊಟ್ಲಿ. ಈಗ ಮನೆಯಲ್ಲಿ ಏನೇನಿದೆ ಅದೆಲ್ಲವನ್ನೂ ಮಾಡಿದವಳು ತಾನು. ಈ ಮಕ್ಕಳು ದುಡಿಯುತ್ತಾರೆಂದು ಒಂದು ಸೂಜಿ ಕೂಡ ಈವರೆಗೆ ಮನೆಗೆ ಅಂತ ತಂದುದಿಲ್ಲ. ಇನ್ನು ಇವರದ್ದು ಏನಿದೆ ಇಲ್ಲಿ. +“ಕತ್ತಲೆ ಕೋಣೆಯಲ್ಲಿ ಮುಚ್ಚಿ ಇಟ್ಟೀದಿಯಲ್ಲ..ಅದೆಲ್ಲ ಯಾರಿಗೆ? ಬೇರೆ ಮನೆ ಮಾಡಬೇಕು ಅಂದ್ರೆ ಹಣ ಬೇಡ್ವ..” ಎಂದ ಜಾನಿ. +ಕತ್ತಲೆ ಕೋಣೆಯ ವಿಷಯ ಬಂದ ಕೂಡಲೆ ಸಾಂತಾಮೋರಿಗೆ ಚೇಳು ಕುಟುಕಿದಂತಾಯಿತು. ಅವಳು ಅಲ್ಲಿ ಹಣ ಇರಿಸಿದ್ದಳು. ಬಂಗಾರ ಇರಿಸಿದ್ದಳು. ಸತ್ತ ಮೇಲೆ ಕೊಂಡೊಯ್ಯಲೆಂದು ಇರಿಸಿದ್ದು ಅಲ್ಲ ಅದು. ಮಕ್ಕಳಿಗೆ ಮೊಮ್ಮಕ್ಕಳಿಗೆ ಕಷ್ಟ ಕಾಲದಲ್ಲಿ ಆದೀತೆಂದು ಇರಿಸಿದ್ದು. ಈಗ ತಾನು ಈ ಮನೆಯನ್ನು ನೋಡಿಕೊಳ್ಳುತ್ತಿರುವುದೇ ಆ ಹಣದಿಂದ. ಆ ಹಣವನ್ನು ಈಗ ಈ ಇಬ್ಬರಿಗೆ ಹಂಚಿ ಬಿಟ್ಟರೆ ನಾಳೆ ಮೊಮ್ಮಕ್ಕಳ ಗತಿ? +“ಜಾನಿ..ಅದೆಲ್ಲ ನೀನು ನನಗೆ ಕೇಳಬೇಡ..ನಿನಗೆ ಈ ಮನೇಲಿ ಇರಲಿಕ್ಕೆ ಮನಸ್ಸಿಲ್ಲ ಈಗಿಂದೀಗಲೇ ಹೊರಡು..ಹ್ಯಾಗೂ ದುಡೀತೀರಲ್ಲ..ನಿಮ ನಿಮ ಹೆಂಡಿರು ಮಕ್ಕಳನ್ನು ನೀವು ಸಾಕಿ..ನಿಮ್ಮ ಹೊಟ್ಟೆಗೆ ತಂದು ಹಾಕಿ ಹಾಕಿ ನನಗೆ ಸಾಕಾಗಿ ಹೋಗಿದೆ..” ಎಂದಳು ಸಾಂತಾ ಮೋರಿ. +ಈ ಮಾತು ಬೆಳೆಯುತ್ತಿರುವಾಗಲೇ ಸಿಮೋನ ಮನೆಗೆ ಬರುತ್ತಿದ್ದವ ಇವರ ಮನೆ ಬಳಿ ನಿಂತ. +“ಏನದು ಗಲಾಟೆ?” ಎಂದು ಸಾಂತಾ ಮೋರಿ ಮನೆ ಅಂಗಳಕ್ಕೆ ಕಾಲಿಟ್ಟ. +“ನೋಡು ಸಿಮೋನ..” ಎಂದು ಸಾಂತಾ ಮೋರಿ ಮುಖ ಬಡಿಸಿಕೊಂಡಳು. +“ಯಾಕ್ರೋ..ಕಷ್ಟಾನೋ ಸುಖಾನೋ ಒಂದಾಗಿ ಇರಬೇಕು..ಒಂದೇ ಮನೇಲಿ ಎರಡು ಒಲೆ ಹೂಡೋದು..ಅಣ್ಣ ತಮ್ಮಂದಿರು ಬೇರೆಯಾಗೋದು..ಆಸ್ತೀಲಿ ಪಾಲು ಕೇಳೋದು..ಏನದು?” ಎಂದ ಸಿಮೋನ ಗುರ್ಕಾರನ ಗತ್ತಿನಲ್ಲಿ. +“ಗುರ್ಕಾರ ಮಾಮ..ನಿಮ ಮನೆ ಕತೇನೆ ಹಳಸಿಕೊಂಡು ಕೂತಿದೆ..ನೀವು ಇಲ್ಲಿ ಯಾಕೆ ಬಂದ್ರಿ?” ಎಂದು ವ್ಯಂಗ್ಯವಾಗಿ ಕೇಳಿದ ಬಸ್ತು. +ಸಿಮೋನನ ಮಗ ವಿಕ್ಟರ್ ಆಗಲೇ ಬೇರೊಂದು ಮನೆ ಹುಡುಕುತ್ತಿರುವುದು ಕೇರಿಗೆಲ್ಲ ಗೊತ್ತಾಗಿತ್ತು. +“ಹಲ್ಲು ಉದುರಿಸಿ ಬಿಟ್ಟೇನು” ಎಂದು ಎರಡು ಹೆಜ್ಜೆ ಮುಂದಿಟ್ಟ ಸಿಮೋನ. ನಿನ್ನೆ ಮೊನ್ನೆಯವರೆಗೆ ಊಟ ಮಾಡಿದವರ ತಟ್ಟೆ ತೊಳೆದಿಡುತ್ತಿದ್ದ ಹುಡುಗ ನಾಲಿಗೆಯನ್ನು ಇಷ್ಟ ಉದ್ದ ಮಾಡುವುದೇ? ಬಸ್ತು ಕೂಡ ಹಿಂದೆ ಸರಿಯಲಿಲ್ಲ. ಮಾತು ಮಾತಿಗೆ ಸೇರಿ ಸಿಮೋನ ಬಸ್ತುವಿನ ಕೆನ್ನೆಗೆ ಹೊಡೆದ. ಬಸ್ತು ಕೂಡ ಕೈ ಉದ್ದ ಮಾಡಲಿದ್ದಾಗ ಸಾಂತಾಮೋರಿ ಅವನನ್ನು ತಡೆದಳು. ಇದೇ ಮೂಲ ಕಾರಣವಾಗಿ ಬಸ್ತು ಜಾನರು ಆ ಮನೆ ಬಿಟ್ಟು ಬೇರೆ ಮನೆ ಮಾಡಿದರು. ಊಟದ ಮನೆಯಲ್ಲಿ ಈಗ ಸಾಂತ ಮೋರಿಯೊಬ್ಬಳೆ. ಅವಳು ಕತ್ತಲೆ ಕೋಣೆ ಸೇರಿದರೆ ಹೊರಬೀಳುವುದೇ ಕಡಿಮೆಯಾಯಿತು. +-೭- +ಎಮ್ಮೆ ಮರಿಯಳ ಕೊಟ್ಟಿಗೆ ಈಗ ಬರಿದಾಗಿದೆ. ಹಿಂದಿನಂತೆ ಕೆಲಸ ಮಾಡಲು ಆಗುವುದಿಲ್ಲ ಎಂಬುದನ್ನು ಅರಿತ ಅವಳು ನಿಧಾನವಾಗಿ ವರ್ತನೆ ಮನೆಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದಳು. ಹಿಂದೆಲ್ಲ ಎಮ್ಮೆಗಳು ಹಾಲು ಬತ್ತಿಸಿಕೊಂಡಾಗ ಹೊಸ ಎಮ್ಮೆ ತರುತ್ತಿದ್ದವಳು. ಹೊಸ ಎಮ್ಮೆ ಕೊಳ್ಳುವುದನ್ನು ಬಿಟ್ಟಳು. ಎರಡು ಎಮ್ಮೆಗಳು ಕೊಟ್ಟಿಗೆಯಲ್ಲಿಯೇ ಸತ್ತವು. ಒಂದು ಸೊರಬದ ಸೇತುವೆಯ ಮೇಲೆ ಶೇಂದಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸತ್ತಿತು. ಉಳಿದ ಎಮ್ಮೆಗಳನ್ನು ಹಳ್ಳಿಗೆ ಹೊಡೆದಳು. ಅಲ್ಲಿ ಯಾರೋ ಅವುಗಳನ್ನು ಕೊಂಡರು. ಈಗ ಕೊಟ್ಟಿಗೆಯಲ್ಲಿ ಒಂದು ಹಸುವಿದೆ. ತುಂಬಿಕೊಂಡ ಕೊಟ್ಟಿಗೆಯನ್ನು ಬರಿದಾಗಿಸಬಾರದೆಂದು ಈ ಹಸು ಕಟ್ಟಿದ್ದಾಳೆ. ಜತೆಗೆ ಮನೆಯಲ್ಲಿ ಮೊಮ್ಮಕ್ಕಳಿಗೆ ಹಾಲು ಬೆಕಲ್ಲ. +ಗಾಡಿ ಮಂಜನ ತಾಯಿ ರುದ್ರಮ್ಮ ಪ್ರೀತಿಯಿಂದ ನೋಡಿಕೊಂಡ ಮಗಳು ಫ಼ಿಲೋಮೆನಾ ಗಂಡನ ಮನೆ ಸೇರಿದ್ದಳು. ಮದುವೆಯಾಗಿ ಹೋದವಳನ್ನು ಗಂಡ ಮತ್ತೆ ತಾಯಿಯ ಮನೆಗೆ ಕಳುಹಿಸಿರಲಿಲ್ಲ. ಮದುವೆಗೆ ಬಂದಾಗ ತನ್ನ ಕಡೆಯವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಎಮ್ಮೆ ಕೊಟ್ಟಿಗೆಯ ಮಗ್ಗುಲಲ್ಲಿಯ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಊಟ ಉಪಚಾರ ಸರಿ ಹೋಗಲಿಲ್ಲ ಎಂಬ ಕಾರಣವನ್ನೇ ದೊಡ್ಡದು ಮಾಡಿ ಆತ ಫ಼ಿಲೋಮೆನಾಳನ್ನು “ನೀನು ಮತ್ತೆ ತಾಯಿ ಮನೆ ಅಂದ್ರೆ ಬರೆ ಹಾಕತೀನಿ..” ಎಂದು ಬೆದರಿಸಿ ಇಟ್ಟಿದ್ದ. ಮಂಜನ ತಾಯಿ ರುದ್ರಮ್ಮ ಹಾಸಿಗೆ ಹಿಡಿದವಳು. +“ಪಿಲ್ಲಮ್ಮ..ಪಿಲ್ಲಮ್ಮ” ಎಂದು ಕನವರಿಸಿ ಮರಿಯಳ ಮಗ ಗುಸ್ತೀನ ಹೀಗೆ ಫ಼ಿಲೋಮೆನಾಳನ್ನು ಕಳುಹಿಸಿ ಎಂದು ಜನರ ಮೂಲಕ ಹೇಳಿ ಕಳುಹಿಸಿದ್ದರೂ ಫ಼ಿಲೋಮೇನಾ ಬಂದಿರಲಿಲ್ಲ. ಇಲ್ಲಿ ರುದ್ರಮ್ಮ ಇದೊಂದು ಕೊರಗು ಇರಿಸಿಕೊಂಡು ಸತ್ತಿದ್ದಳು. ಹಲವಾರು ವರ್ಷಗಳಿಂದ ಮಗಳನ್ನು ಕಾಣದ ಮರಿಯ- +“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಾದೆ ಉಂಟಲ್ಲ” ಎಂದು ಕೊರಗನ್ನು ಕಡಿಮೆ ಮಾಡಿದ್ದಳು. +ಈಗ ಇವಳಿಗೆ ನೆಮ್ಮದಿ ಎಂದರೆ ಮೂವರು ಮಕ್ಕಳೂ ಮದುವೆಯಾಗಿದ್ದರು. ಹಿರಿಯ ಮಗ ಗುಸ್ತೀನ ಬ್ಯಾಂಕಿನಲ್ಲಿ ಅಟೆಂಡರ್ ಆಗಿದ್ದ. ಎರಡನೆಯವ ದುಮಿಂಗ ವೆಟರನರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ. ಮೂರನೆಯವ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡಬಾಯ್..ದೇವರ ದಯೆಯಿಂದ ಮೂವರೂ ಒಟ್ಟಿಗೇನೆ ಇದ್ದರು. ಸೊಸೆಯಂದಿರಾಗಿ ಮನೆಗೆ ಬಂದವರು ಕೂಡ ಒಳ್ಳೆಯ ಹುಡುಗಿಯರೆ. ಮಂಕಿ, ಹಡಿನಬಾಳ, ಕೂಡ್ಲದಿಂದ ಬಂದ ಈ ಹುಡುಗಿಯರು ಮನೆಯ ವಾತಾವರಣಕ್ಕೆ ಹೊಂದಿಕೊಂಡರು. ಕೊಟ್ಟಿಗೆಯಲ್ಲಿ ಎಮ್ಮೆ ಶಗಣೆ ಬಾಚಿದರು. ಎಮ್ಮೆಗಳ ಮೈ ತೊಳೆದು ಹಾಲು ಕರೆದರು. +ನಿತ್ಯ ಒಟ್ಟಿಗೇನೆ ಪ್ರಾರ್ಥನೆ ಮಾಡುತ್ತಾರೆ. +“ಮಾಯಂ ಬೆಸಾಂವಂದೀ” ಎಂದು ಸೊಸೆಯಂದಿರು, ಮಕ್ಕ್ಳು, ಮೊಮ್ಮಕ್ಕಳು ಬಂದು ಎದುರು ನಿಂತು ಕೈ ಮುಗಿಯುವಾಗ ಮರಿಯಾಗೆ ಕಣ್ಣುಗಳು ತುಂಬಿ ಬರುತ್ತವೆ. +ಎಲ್ಲರನ್ನೂ ದೇವರ ಹೆಸರಿನಲ್ಲಿ ಆಶೀರ್ವದಿಸುತ್ತಾಳೆ. ಪ್ರತಿ ಮೊಮ್ಮಗನ, ಮೊಮ್ಮಗಳ ಕೈಹಿಡಿದು “ಹೋಡಜಾ” “ಹೋಡಜಾ” (ದೊಡ್ಡವನಾಗು ದೊಡ್ಡವನಾಗು) ಎಂದು ಹೇಳುವಾಗ ಹೃದಯ ಹೂವಿನಂತೆ ಅರಳುತ್ತದೆ. +ಏಕೋ ಅವಳಿಗೆ ತಟ್ಟನೆ ಹಿಂದಿನದೆಲ್ಲ ನೆನಪಿಗೆ ಬರುತ್ತದೆ. ಇಲ್ಲಿ ಬಂದು ಕೆಲಸ ಮಾಡಿದರೆ ಒಂದಿಷ್ಟು ಹಣ ಮಾಡಬಹುದೆಂದು ಕಾಯ್ಕಿಣಿಯರ ಒಡೆಯರ ತೋಟ ಬಿಟ್ಟು ಇಲ್ಲಿಗೆ ಬಂದದ್ದು. ಗಂಡನ ಹಿಂದೆಯೇ ತಾನೂ ಬಂದೆ. ಗಂಡ ಸಂತಿಯಾಗ ಶೆಟ್ಟಿಹಳ್ಳಿ ಶ್ರೀಮಂತರ ಮನೆ ಕಟ್ಟುವಾಗ ಮನೆಯ ಮೇಲಿನಿಂದ ಬಿದ್ದು ಸತ್ತ. ಅಂದು ಕ್ರಿಶ್ಚಿಯನ್ನರು ಸತ್ತರೆ ಹುಗಿಯಲು ಊರಿನಲ್ಲಿ ಸಿಮಿತ್ರಿ ಇರಲಿಲ್ಲ. ಜತೆಗೆ ನೆಂಟರು ಇಷ್ಟರು ಇಲ್ಲದ ಕಡೆ ಗಂಡನನ್ನು ಮಣ್ಣು ಮಾಡಿ ತಿರುಗಿ ಬಂದೆ. ಎಮ್ಮೆ ಕಟ್ಟಿದೆ. ಪಾದರಿ ಗೋನಸ್ವಾಲಿಸ್ ಊರಿಗೆ ಬಂದ ನಂತರ ತನ್ನ ಮಕ್ಕಳ ಬದುಕಿಗೆ ಒಂದು ಕ್ರಮ ವಿಧಾನ ಬಂದಿತು. ಮಕ್ಕಳನ್ನು ಪಾದರಿಗಳ ಮಾತಿಗೆ ಬೆಲೆ ಕೊಟ್ಟು ಸರಕಾರಿ ಶಾಲೆಗೆ ಕಳುಹಿಸಿದೆ. ಮನೆ ಮನೆಗೆ ಹಾಲು ಕೊಡುತ್ತ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿ ತರುತ್ತ, ಇಗರ್ಜಿ ಪೂಜೆ, ಪ್ರಾರ್ಥನೆ ಎಂದು ಆ ಕೆಲಸ ಮಾಡುತ್ತ ಹುಡೂಗರು ಐದು ಆರನೆ ತರಗತಿಯವರೆಗೆ ಓದಿದರು. +ಮಕ್ಕಳಿಗೆ ಒಂದೊಂದು ಕೆಲಸ ಬೇಕಲ್ಲ. ಕ್ರೀಸ್ತುವರಿಗೊಂದು ಕೆಲಸ ಇತ್ತಾದರೂ ತನ್ನ ಗಂಡನ ತಲೆಗೇನೆ ಈ ಕೆಲಸ ಅಂತ್ಯ ಕಂಡಿತು. ಆ ಕೆಲಸ ಕೂಡ ಮಕ್ಕಳಿಗೆ ಬೇಡ ಎನಿಸಿತು. ತಾನೇ ಅವರಿವರನ್ನು ಕಂಡೆ. ಬ್ಯಾಂಕಿನ ಅಧ್ಯಕ್ಷರನ್ನು ಕಂಡೆ, ದನದ ಆಸ್ಪತ್ರೆ ವೈದ್ಯರನ್ನು ಕಂಡೆ. ಸರಕಾರಿ ಆಸ್ಪತ್ರೆ ವೈದ್ಯರು ಬಲ್ಲವರಾಗಿದ್ದರು. +“ರಾಯರೆ..ನಮ ಹುಡುಗನಿಗೆ ಒಂದು ಕೆಲಸ ಕೊಡಿಸಿ” ಎಂದೆ. +ಈ ಎಲ್ಲರ ಮನೆಗಳಿಗೂ ಹಾಲು ಕೊಡುತ್ತಿದ್ದವಳು ತಾನು. ದೊಡ್ಡವರ ಮನೆಗಳಿಗೆ ನೀರು ಬೆರೆಸದೆ ಹಾಲು ಸರಬರಾಜು ಮಾಡುತ್ತಿದ್ದೆ. +“ಕಳಿಸು..ಮಗ ಓದಿದಾನ?” ಎಂದು ಕೇಳಿದರು. ಗುಸ್ತೀನ, ದುಮಿಂಗ, ಬಸ್ತು ಈ ಮೂವರಿಗೂ ಕೆಲಸವಾಯಿತು. ತುಂಬಾ ಗೌರವದ ಕೆಲಸ. ಬೇರೆ ಕ್ರೀಸ್ತುವರ ಮಕ್ಕಳು ಬಾಚಿ ಹೆಗಲಿಗೇರಿಸಿಕೊಂಡು ಹೋಗುತ್ತಿದ್ದರೆ ತನ್ನ ಮಕ್ಕಳು ಶುಚಿಯಾದ ಬಟ್ಟೆ ಧರಿಸಿ, ಆಫ಼ೀಸರುಗಳ ಹಾಗೆ ಕೆಲಸಕ್ಕೆ ಹೋಗುವುದನ್ನು ಕಂಡಾಗ ಸಂತಸವಾಗುತ್ತಿತ್ತು. +ಮಕ್ಕಳು ಮುಂದೆಯೂ ಈ ಗೌರವವನ್ನು ಉಳಿಸಿಕೊಂಡರು. ಒಂದು ಕುಡಿಯುವುದಿಲ್ಲ, ಇಸ್ಪೀಟ ಆಡುವುದಿಲ್ಲ. ಬೀಡಿ ಸಿಗರೇಟು ಮುಟ್ಟಲಿಲ್ಲ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾರೆ. ಇದೇ ಸಂತಸ ಮರಿಯಳಿಗೆ. +ಆದರೂ ಒಂದು ಕೊರತೆ. +ಮೂವರು ಮಕ್ಕಳ ಸಂಸಾರ ಬೆಳೆಯುತ್ತಿದೆ. ಈ ಮೂವರಿಗೂ ಒಂದೊಂದು ಮನೆ ಮಾಡಿಕೊಟ್ಟರೆ ಆಗುತ್ತಿತ್ತೇನೋ ಎನಿಸುತ್ತದೆ. ತನ್ನ ಹಳೆಯ ಮನೆಯಲ್ಲಿ ಇವರು ಎಷ್ಟು ದಿನ ಇದ್ದಾರು. ಈ ವಿಚಾರ ಅವಳ ತಲೆಯಲ್ಲಿ ಬಂದ ಕೆಲವೇ ದಿನಗಳಲ್ಲಿ ಮೂರನೇ ಮಗ ಬಸ್ತು ಅವಳ ಬಳಿ ಬಂದ. ಅವನಿಗೆ ಆಸ್ಪತ್ರೆ ಬಸ್ತು ಎಂಬ ಹೆಸರು ಬಿದ್ದಿತ್ತು. ಊರಿನಲ್ಲಿ ಬಸ್ತು ಎಂದು ಹೆಸರಿರುವವರು ಬೇರೆಯವರೂ ಇದ್ದುದರಿಂದ ಇವನಿಗೆ ಈ ಹೆಸರು- +“ಮಾಯ್..” ಎಂದ ಆತ +“ಏನು ಬಸ್ತು?” +“ಮುನಿಸಿಪಾಲಿಟಿಯವರು ಜಾಗ ಇಲ್ಲದವರಿಗೆ ಜಾಗ ಮಂಜೂರು ಮಾಡತಿದಾರೆ..” +“ಹೌದು” +“ಹೌದು ನಾನೊಂದು ಅರ್ಜಿ ಹಾಕಿಕೊಂಡಿದೀನಿ..ದುಮಿಂಗನಿಗೂ ಹೇಳಿದೀನಿ..ನಮಗೆ ಜಾಗ ಸಿಕ್ಕರೆ ಸರಕಾರದಿಂದ ಮನೆಕಟ್ಟಲಿಕ್ಕೆ ಹಣಾನೂ ಸಿಗುತ್ತೆ..” +“ಒಳ್ಳೆ ಕೆಲಸ ಮಾಡಿದ್ರ..” +ಅಂದು ಮರಿಯ ಮಕ್ಕಳು ತಂದು ಕೊಟ್ಟ ಹಣದಲ್ಲಿ ಐವತ್ತು ರೂಪಾಯಿಗಳನ್ನು ದೇವರ ಪೀಠದಲ್ಲಿ ದೇವರ ಇಮಾಜಿನ ಪದತಳದಲ್ಲಿ ಇರಿಸಿದಳು. ದೋರನಳ್ಳಿಯ ಸಂತ ಅಂತೋನಿಯ ಹೆಸರಿನಲ್ಲಿ ಒಂದು ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿದಳು..ದೋರ್ನಹಳ್ಳಿಗೆ ಹೋಗುವವರು ಸಿಕ್ಕಾಗ ಈ ಹಣವನ್ನು ದೇವರಿಗೆ ತಲುಪಿಸಬೇಕು ಅಂದುಕೊಂಡಳು. +ಅವಳ ಹರಕೆ ದೇವರಿಗೆ ತಲುಪಿತೇನೋ ಅನ್ನುವ ಹಾಗೆ ಆಸ್ಪತ್ರೆ ಬಸ್ತು ಹಾಗೂ ದುಮಿಂಗನಿಗೆ ಮುನಸಿಪಾಲಿಟಿಯಿಂದ ಜಾಗ ಮಂಜೂರಾಯಿತು. ಕೂಡಲೇ ಅವರು ಮನೆ ಕಟ್ಟಲು ಮುಂಗಡ ಹಣ ನೀಡುವಂತೆ ಸರಕಾರಕ್ಕೆ ಅರ್ಜಿ ಕೂಡ ಹಾಕಿದರು. ಶಿವಸಾಗರ ಜಯಪ್ರಕಾಶನಗರದಲ್ಲಿ ಹೊಸ ಮನೆಗಳನ್ನು ಕಟ್ಟುವ ಸಿದ್ಧತೆಗೂ ಅವರು ತೊಡಗಿದರು. +* +* +* +ಜಯಪ್ರಕಾಶ ನಗರದಲ್ಲಿ ಮೂರನೇ ತಿರುವಿನ ಮೊದಲ ಎರಡು ಮನೆಗಳು ಕಂಟ್ರ್ಯಾಕ್ಟರ್ ಕುಂಜುಮನ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವಾಗಲೇ ಜೋಸೆಫ಼ ನಗರದ ಸುತಾರಿ ಇನಾಸನ ಮನೆ ನೆಲಸಮವಾಯಿತು. ಸುಮಾರು ಐವತ್ತು ವರ್ಷಗಳ ಹಿಂದೆ ಸುಣ್ಣದ ರುದ್ರ ಕಟ್ಟಿದ ಮನೆಯನ್ನು ಬೀಳಿಸುವುದು ಏನೂ ಕಷ್ಟವಾಗಲಿಲ್ಲ. ಮಣ್ಣಿನ ಗೋಡೆಗಳು ಆಗಲೇ ಜೀರ್ಣಗೊಂಡಿದ್ದವು. ಬೊಂಬು ಹೊದಿಸಿದ ಮಾಡು ಸುರುಬು ಹತ್ತಿತ್ತು. ಮರದ ಬಾಗಿಲುಗಳು ಹುಳ ಹಿಡಿದು ಟೊಳ್ಳಾಗಿದ್ದವು. ಬಹಳ ಮುಖ್ಯವಾಗಿ ಸುತಾರಿ ಇನಾಸ ಒಂದು ಶುಕ್ರವಾರ ಶಿಲುಬೆಯ ಎದುರು ನಿಂತು ಕೈ ಮುಗಿದು-ದೇವಾ_ಎಂದು ದೇವರನ್ನು ಕರೆಯುತ್ತ ಹೋಗಿ ಮನೆ ಜಗಲಿಯ ಮೇಲೆ ಕುಳಿತವ ಅಲ್ಲೇ ಕುಸಿದು ಬಿದ್ದಿದ್ದ. +ಅದು ಶಿಲುಬೆಯ ಪ್ರಾರ್ಥನೆಗೆ ಜನ ಸೇರುವ ಸಮಯ. ಬಂದವರು ಯಾರೋ ಪಾದರಿ ಸಿಕ್ವೇರಾ ಅವರನ್ನು ಕರೆಯಲು ಓಡಿದರು. ಅವರು ಮೋಟಾರ ಬೈಕ್ ಹತ್ತಿ ಬಂದವರು ಕೊಂಚ ಬಿಸಿಯಾಗಿದ್ದ ಇನಾಸನಿಗೆ ಅಂತ್ಯ ಅಭ್ಯಂಜನ ನೀಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೋದರು. +ಈ ಕಡೆ ಜನರ ಪ್ರಾರ್ಥನೆ ಮುಂದುವರಿದಿರಲು ಅತ್ತ ಕೆಲವರು ಇನಾಸನ ದೇಹಕ್ಕೆ ಮಜ್ಜನ ಮಾಡಿಸಿದರು. ಕೂಡಲೇ ಬಿಳಿ ಉಡುಗೆ ಸಿದ್ಧವಾಯಿತು. ಪೆಟ್ಟಿಗೆ ಮಾಡಲು ಸುತಾರಿ ಬಂದು ಅಂದಾಜಿನ ಅಳತೆ ತೆಗೆದುಕೊಂಡು ಹೋದ. ಚಮಾದೋರ ಇಂತ್ರು ಸಿಮಿತ್ರಿಯಲ್ಲಿ ಹೊಂಡ ತೋಡಲು ಹಾರೆ, ಪಿಕಾಸಿ ಹಿಡಿದು ನಡೆದ. +ಇನಾಸನ ಹೆಣ್ಣು ಮಕ್ಕಳಿಗೆ ಟೆಲಿಗ್ರಾಂ ಗಳನ್ನು ಕಳುಹಿಸಲಾಯಿತು. ಗಂಡು ಮಕ್ಕಳು ಜಗಲಿಯ ಮೇಲೆ ಕುಳಿತರು. ಮೊನ್ನೆ ಒಳ ಬಾಗಿಲಿಗೆ ಒರಗಿ ಕುಳಿತಳು. +ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿಗಳು ಉರಿಯುತ್ತಿರಲು ಹೊರಗೆ ಸೇರಿದ ಜನ ನಿಧಾನವಾಗಿ ಒಳ ಬಂದು ಕುಳಿತು ಪ್ರಾರ್ಥನೆ, ಕೀರ್ತನೆಗಳನ್ನು ಮುಂದುವರೆಸಿದರು. +ಮಾರನೇ ದಿನ ಹನ್ನೆರಡು ಗಂಟೆಗೆಲ್ಲ ಇನಾಸನ ಹೆಣ್ಣುಮಕ್ಕಳು ಧಾವಿಸಿ ಬಂದರು. +“ಬಾಬಾ..ಬಾಬಾ” ಎಂದು ತಂದೆಯ ಶವದ ಮೇಲೆ ಬಿದ್ದು ಅವರು ಅತ್ತರು. ಇಂತ್ರು ಮೂರು ಗಂಟೆಗೆ ಮರಣ ಎಂದು ಮನೆ ಮನೆಗೆ ಹೋಗಿ ಹೇಳಿ ಬಂದ. +ರೈಮಂಡನ ಸಹಾಯಕರು ಮರಣ ಸೂಚಕವಾದ ರಾಗವನ್ನು ಬಾರಿಸುತ್ತಿರಲು ಇನಾಸನ ಶವಯಾತ್ರೆ ಮನೆಯಿಂದ ಹೊರಟಿತು. ಶವ ಪೆಟ್ಟಿಗೆಯನ್ನು ಶಿಲುಬೆಯ ಮೂಂದೆ ಇರಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಗರ್ಜಿ. ಅಲ್ಲಿಂದ ಸಿಮಿತ್ರಿ. ಪಾದರಿಗಳ ಪ್ರಾರ್ಥನೆ ಇತರೆ ಸಂಸ್ಕಾರಗಳು ಮುಗಿದ ನಂತರ ಇಂತ್ರು ಹೊಂಡಕ್ಕೆ ಇಳಿದು ಪೆಟ್ಟಿಗೆಯನ್ನು ಒಳಗೆ ಇಳಿಸಿಕೊಂಡ. ಅದನ್ನು ಸರಿಯಾಗಿ ಇರಿಸಿ ಹೊಂಡದ ಎರಡೂ ದಂಡೆಯ ಮೇಲೆ ಕೈ ಇರಿಸಿ ಆತ ಮೇಲೆ ಬಂದ ನಂತರ ಪಾದರಿ ಮೊದಲನೆಯವರಾಗಿ ಮೂರು ಹಿಡಿ ಮಣ್ಣನ್ನು ಹಾಕಿದರು. ನಂತರ ಜನ ನುಗ್ಗಿ ದಬದಬನೆ ಹಿಡಿ ಹಿಡಿ ಮಣ್ಣನ್ನು ಹೊಂಡಕ್ಕೆ ತೂರಿದರು. +ಗುರ್ಕಾರ ಸಿಮೋನ ಇಗರ್ಜಿ ಮುಂದೆ ನಿಂತು ಸಿಮಿತ್ರಿಯಿಂದ ತಿರುಗಿ ಹೋಗುತ್ತಿರುವ ಜನರಿಗೆ- +“…ಎಲ್ಲ ಮರಣದ ಮನೆಗೆ ಬಂದು ದೇವರ ಪ್ರಾರ್ಥನೆ ಮಾಡಿ ಗಂಜಿ ನೀರು ಕುಡಿದು ಹೋಗಬೇಕು” ಎಂದು ವಿನಂತಿ ಮಾಡಿಕೊಳ್ಳುತ್ತಿದ್ದ. ಇನಾಸನ ಕಿರಿಯ ಮಗ ಪಾಸ್ಕು ಆಗಲೇ ಪ್ರಾರ್ಥನೆಯ ಸಮಯದಲ್ಲಿ ನೀಡಲು ಶರಾಬನ್ನು ತರಲು ಹಣ ಕೊಟ್ಟು ಕಳುಹಿಸಿದ್ದ. +* +* +* +ಇನಾಸ ಸತ್ತ ತಿಂಗಳಿಗೆಲ್ಲ ಅವನ ಮನೆಯ ಗೋಡೆಗಳು ಬಿರುಕು ಬಿಟ್ಟವು. +ಒಂದು ಬೆಳಿಗ್ಗೆ ರೈಮಂಡ್ ಸಿಮೋನನ ಬಳಿ ಬಂದ. +“ಮಾಮ..” ಎಂದು ಮಾತಿಗೆ ತೊಡಗಿದ. +“ಅಪ್ಪ ಹೋದರು” ಎಂದು ಮುಖ ಸಣ್ಣದು ಮಾಡಿಕೊಂಡ. +“ಇನ್ನು ನಾನು ಪಾಸ್ಕು ಒಂದೇ ಮನೇಲಿ ಇರಲಿಕ್ಕೆ ಆಗೋಲ್ಲ ಮಾಮ..ನಾವು ಇರತೀವಿ ಎಂದ್ರು ಈ ಹೆಂಗಸರು ಬಿಡೋಲ್ಲ.” ಅಂದ. +“ಈಗ ಏನು ಆಗಬೇಕು?” +“ನೀವು ಹಿರಿಯರು ಬಂದು ಒಂದು ಪಂಚಾಯ್ತಿ ಮಾಡಬೇಕು.” +“ಏನು ಪಂಚಾಯ್ತಿ ರೈಮಂಡ್..ನೀನು ನಿನ್ನ ತಮ್ಮ ಕೂತು ಬಗೆಹರಿಸಿಕೊಳ್ಳಿ..” ಎಂದ ಸಿಮೋನ. +“ಹಾಗಲ್ಲ ಮಾಮ..ಮೂರನೆಯವರು ಒಬ್ಬರು ಇದ್ದರೆ ಒಳ್ಳೇದು..ನಾವು ನಾವು ಅಂದರೆ ಜಗಳ ಆಗುತ್ತೆ..ಕಿತ್ತಾಟ ಆಗುತ್ತೆ.” +“ಸರಿಯಪ್ಪ ಬರತೇನೆ…” ಎಂದು ಸಿಮೋನ ಒಪ್ಪಿಕೊಂಡ. +ಮನೆಯಲ್ಲಿ ಜೀವ ಇರಲಿಲ್ಲ. ಮನೆ ಇರುವ ಜಾಗವನ್ನು ಸರಿಯಾಗಿ ಅರ್ಧ ಮಾಡಲಾಯಿತು. ಒಂದು ಅರ್ಧ ರೈಮಂಡನಿಗೆ ಉಳಿದದ್ದು ಪಾಸ್ಕುಗೆ. ಮನೆಯಲ್ಲಿ ಹಂಡೆ, ತಪ್ಪಲೆ, ಕೊಡಪಾನ, ಚೆಂಬು, ತಟ್ಟೆ ಎಂದೆಲ್ಲ ತುಂಬಾ ಪಾತ್ರೆಗಳಿದ್ದವು. ಇವುಗಳ ಪಾಲೂ ಆಯಿತು. +ರೈಮಂಡನ ಹೆಂಡತಿ ಅವನ ಬಳಿ ನಿಂತು ಅವನ ಕಿವಿ ಕಚ್ಚುತ್ತಿದ್ದಳು. ಪಾಸ್ಕು ಹೆಂಡತಿ ತನ್ನ ಗಂಡನ ಕಿವಿ. +“ಇನ್ನೇನು?” ಎಂದು ಕೇಳಿದ ಸಿಮೋನ. +“ಅಲ್ಲ ಅಮ್ಮನ ಮೈ ಮೇಲೆ” ರೈಮಂಡ ನೆಲ ನೋಡುತ್ತ ನುಡಿದ. +ಸಿಮೋನನ ದೇಹದಲ್ಲಿಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಆತ ಕೆಂಪಗಾದ. +“..ಏಯ್ ರೈಮಂಡ..ನಿನಗೊಂದು ಧರ್ಮ ಇದೆ..ರೀತಿ ಇದೆ. ದೇವರ ಹತ್ತು ಕಟ್ಟಲೆಗಳನ್ನು ನಾವು ಯಾವತ್ತೂ ಮರೀಬಾರದು. ತಾಯಿ ಬದುಕಿರಬೇಕಾದರೇನೆ ಅವಳ ಮೈ ಮೇಲೆ ಇರೋ ಬಂಗಾರದ ಮೇಲೆ ಕಣ್ಣು ಹಾಕತೀಯಲ್ಲ ನೀನೇನು ಕ್ರೀಸ್ತುವನಾ? ಇಂತಹಾ ಪಂಚಾಯ್ತಿ ಮಾಡಲಿಕ್ಕೆ ನಾನಿಲ್ಲಿ ಬಂದಿಲ್ಲ..” +ಆತ ಕೂತಲ್ಲಿಂದ ಎದ್ದು ತನ್ನ ಹೆಗಲಿಗೆ ಟವಲು ಎಸೆದುಕೊಂಡು ಹೊರಟ. +“ನಿಲ್ಲಿ ಮಾಮ..ನಿಲ್ಲ..ನೀವು ಹೇಳಿದ ಹಾಗೆ ನಾವು ಕೇಳತೀವಿ” ಎಂದು ಪೇಚಾಡಿಕೊಂಡ ರೈಮಂಡ. +“..ಇಲ್ಲಿ ಕೇಳಿ..ಈಕೆ ಬದುಕಿರೋವರೆಗೆ ನೀವಿಬ್ರು ಇವಳನ್ನ ನೋಡಿಕೋ ಬೇಕು..ಅವಳ ಮೈಮೇಲಿನ ಬಂಗಾರಕ್ಕೆ ನೀವ್ಯಾರೂ ಕೈ ಹಾಕಬಾರದು..ಅವಳು ಇರೋ ತನಕ ಅದು ಅವಳದ್ದು..ಅವಳು ಅದನ್ನು ಏನೂ ಮಾಡಬಹುದು..ಕೇಳುವ ಹಕ್ಕು ನಿಮಗಿಲ್ಲ” +ಬಾಗಿಲ ಮರೆಯಲ್ಲಿ ನಿಸ್ತೇಜ ಮುಖ ಹೊತ್ತು ಕುಳಿತ ಮೊನ್ನೆಯನ್ನೇ ನೋಡುತ್ತ ಸಿಮೋನ ನುಡಿದ. ಅವಳು ಮೂಕಿಯಾಗಿದ್ದುದು ಒಳ್ಳೆದಾಯಿತೇನೋ ಅನಿಸಿತು. ಅವಳಂತೂ ಇವರೆಗೆ ಏನೂ ಮಾತನಾಡಿರಲಿಲ್ಲ. +“..ಹಾಗೇನೇ..ಮತ್ತೊಂದು ವಿಷಯ” +ಸಿಮೋನ ಮಾತನ್ನು ಮುಂದುವರೆಸಿದ. +“ನಿಮ್ಮ ಮನೆ ಅಂಗಳದಲ್ಲಿ ದೇವರ ಶಿಲುಬೆ ಇದು ಈ ಇಡೀ ಮನೆಗೆ, ಊರಿಗೆ ಸೇರಿದ್ದು. ನೀವಿಬ್ರು ಇದನ್ನು ನೋಡಿಕೊಳ್ಳತಕ್ಕದ್ದು.” ಎಂದ. +ರೈಮಂಡ ಪಾಸ್ಕು ಅವರ ಹೆಂಡಿರು ಒಪ್ಪಿಕೊಂಡರು. +ಈ ಪಂಚಾಯ್ತಿ ಮುಗಿಯುತ್ತಿದ್ದಂತೆಯೇ ಇನಾಸನ ಮನೆ ಕುಸಿಯಿತು. ತಾತ್ಕಾಲಿಕವಾಗಿ ತಮ್ಮ ತಮ್ಮ ಮಾವಂದಿರ ಮನೆ ಸೇರಿಕೊಂಡ ರೈಮಂಡ್ ಪಾಸ್ಕು ಇಲ್ಲಿ ಎರಡು ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಿದರು ಕೂಡ. ಇನಾಸನ ಹೆಂಡತಿ ಮೊನ್ನೆ ಕೂಡ ಮಗ ಪಾಸ್ಕುವಿನ ಮಾವನ ಮನೆಯಲ್ಲಿ ಕೆಲದಿನಗಳ ಮಟ್ಟಿಗೆ ಉಳಿದುಕೊಂಡಳು. +* +* +* +ಈ ಜಾಗದಲ್ಲಿ ಪ್ರತ್ಯೇಕವಾದ ಮನೆಯೊಂದನ್ನು ಕಟ್ಟಬೇಕೆಂಬುದು ಪಾಸ್ಕು ಹೆಂಡತಿ ಜೋಸೆಫ಼ಿನಾಳ ಬಹುದಿನಗಳ ಆಸೆಯಾಗಿತ್ತು. ಗುತ್ತಿಗೆದಾರ ಪಾಸ್ಕೋಲ ಕೂಡ ತನ್ನ ಹಳೆ ಮನೆ ಮುರಿದು ಹೊಸ ಮನೆ ಕಟ್ಟಿದ್ದ. ಕೇರಿಯಲ್ಲಿ ಇನ್ನೂ ಕೆಲ ಹೊಸ ಮನೆಗಳು ಕಾಣಿಸಿಕೋಂಡಿದ್ದವು. ಹೀಗಿರುವಾಗ ತಾವು ಮಣ್ಣಿನ ಗೋಡೆ, ಬೊಂಬಿನಿಂದ ಮಾಡಿರುವ ಮನೆಯಲ್ಲಿ ವಾಸಿಸುವುದು ಅವಳಿಗೆ ಬೇಕಿರಲಿಲ್ಲ. +ಬೇರೆ ಎಲ್ಲಿಯಾದರೂ ಜಾಗ ನೋಡಿ..ಅಲ್ಲಿ ಹೊಸ ಮನೆ ಕಟ್ಟೋಣ” ಎಂಬ ಅವಳ ಮಾತಿಗೆ ಪಾಸ್ಕು ಅಷ್ಟು ಮಹತ್ವ ಕೊಟ್ಟಿರಲಿಲ್ಲ. ಮನೆ ತಾನೆ? ಕಟ್ಟೋಣ ಅನ್ನುತ್ತಿದ್ದ. ಅವನ ಮನಸ್ಸಿಗೆ ತಾವಿರುವಲ್ಲಿಯೇ ಮನೆ ಕಟ್ಟಬೇಕು ಅನಿಸುತ್ತಿತ್ತು. ಜೈಪ್ರಕಾಶನಗರದಲ್ಲೊ, ಅಶೋಕನಗರದಲ್ಲೋ ನಿವೇಶನಗಳು ದೊರೆತರೂ ಕೇರಿ ಬಿಟ್ಟು ಇಗರ್ಜಿ ಬಿಟ್ಟು ದೂರ ಹೋಗಲು ಆತ ಸಿದ್ಧನಿರಲಿಲ್ಲ. +ತಂದೆಗೆ ಹೇಳಿ ಇಲ್ಲಿಯೇ ಮನೆ ಕಟ್ಟಬಹುದು. ಆದರೆ ಈಗ ರೈಮಂಡಗೂ ಅದರಲ್ಲಿ ಜಾಗ ಕೊಡಬೇಕು. ತಾನು ಕಟ್ಟಿದ ಮನೆಯಲ್ಲಿ ಅವನೂ ಬಂದು ಸೇರಿಕೊಳ್ಳುತ್ತಾನೆ. ಏನು ಉಪಯೋಗ? ತಮ್ಮದೇ ಆದ ಒಂದು ಮನೆ ಇರಬೇಕು ಎಂಬ ಆಸೆ ನೆರವೇರುವುದಿಲ್ಲವೇ? ಎಂದು ಆತ ಯೋಚಿಸುತ್ತಿರಬೇಕಾದರೇನೆ ಇನಾಸ ತನ್ನ ಪ್ರಯಾಣ ಮುಗಿಸಿದ್ದ. +ಪಾದರಿಗಳನ್ನು ಕರೆದೊಯ್ದು ಮಂತ್ರಿಸಿ ಆತ ಕೆಲಸ ಪ್ರಾರಂಭಿಸಿದ. ಈತ ಮನೆಗೆ ನೆಲಪಾಯ ತೋಡುತ್ತಿರಲು ಅತ್ತ ಜಾನಿ ಕೂಡ ಕೆಲಸ ಪ್ರಾರಂಭಿಸಿದ. +ಕಲ್ಲು ಮರಳು ಮಣ್ಣು ಎಂದೆಲ್ಲ ಮನೆ ಅಂಗಳ ತುಂಬಿ ಹೋಗಲು ಶುಕ್ರವಾರದ ಪ್ರಾರ್ಥನೆಗೆ ಜನ ಬರುವುದು ನಿಂತು ಹೋಯಿತು. ಆದರೂ ಮೊನ್ನೆ ಮಾತ್ರ ಪ್ರತಿನಿತ್ಯ ಹೋಗಿ ಶಿಲುಬೆ ದೇವರ ಮುಂದೆ ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿ ಬರುತ್ತಲಿದ್ದಳು. +* +* +* +ಅಳಿಯ ಮನೆ ಕಟ್ಟಿಸುತ್ತಿದ್ದಾನೆ ಎಂದರೆ ಪಾಸ್ಕೋಲ ಮೇಸ್ತ್ರಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ. ಶಿವಸಾಗರದಲ್ಲಿ ಎಷ್ಟೋ ಮನೆಗಳನ್ನು ಕಟ್ಟಡಗಳನ್ನು ಅವನೂ ಕಟ್ಟಿಸಿದ್ದನಲ್ಲವೇ? ಸಿಮೋನನ ಸಹಾಯಕನಾಗಿ ಊರಿಗೆ ಬಂದ ತಾನು ಕೆಲವೇ ವರ್ಷಗಳಲ್ಲಿ ಕಂಟ್ರಾಟುದಾರನಾದೆ. ಸಿಮೋನ ಕಾಯಿಲೆಯಿಂದ ಮಲಗಿದ್ದುದರ ಲಾಭ ಪಡೆದು ತಾನು ಸ್ವತಂತ್ರವಾಗಿ ಕೆಲಸ ಹಿಡಿದೆ. ಸಿಮೋನ ತಿರುಗಿ ಬಂದವ- +“ಪಾಸ್ಕೋಲ..ನೀನು ಹೀಗೆ ಮಾಡೋದ? ಎಂದು ಕೇಳಿದ. +“ಅರ್ಧ ಆಗಿರೋ ಕೆಲಸ ನೀನಾದರೂ ಮುಗಿಸಿ ಕೊಡು ಅಂದರು..ಇದರಲ್ಲಿ ನನ್ನ ತಪ್ಪಿಲ್ಲ..” ಎಂದಿದ್ದೆ ತಾನು. ಸಿಮೋನ ಈ ಮಾತನ್ನು ನಂಬಲಿಲ್ಲ. ಅವನು ನಂಬಬೇಕು ಎಂದು ತಾನೂ ಬಯಸಲಿಲ್ಲ. +ಊರಿನಲ್ಲಿ ಕಾಮಗಾರಿಯಂತೂ ಭರ್ಜರಿಯಾಗಿತ್ತು. ಒಂದಲ್ಲಾ ಒಂದು ಕೆಲಸ ಸಿಕ್ಕಿತು. ಬೇಗನೆ ತಾನು ಸಿಮೋನನ ಹಾಗೆಯೇ ಕಂಟ್ರಾಟುದಾರನಾದೆ. ಕ್ರೀಸ್ತುವರ ನಡುವೆ ಸಿಮೋನನಿಗೆ ಮೊದಲ ಸ್ಥಾನವಾದರೆ ತನಗೆ ಎರಡನೆಯ ಸ್ಥಾನ. ಆತ ಗುರ್ಕಾರ ಆದರೆ ತಾನು ಫ಼ಿರ್ಜಂತ. ಮೊದಲ ನಾಲ್ಕು ವರ್ಷ ಈ ಫ಼ಿರ್ಜಂತ ಗೌರವದಿಂದ ತಾನು ಮುಕ್ತನಾಗಲಿಲ್ಲ. ಏಕೆಂದರೆ ತನ್ನನ್ನು ಬಿಟ್ಟರೆ ಬೇರೆ ಜನ ಕೇರಿಯಲ್ಲಿ ಇರಲಿಲ್ಲ. ಬಾಲ್ತಿದಾರ ಬೇಡ ಎಂದ. ಕೈತಾನ, ಬಳ್ಕೂರ ಕಾರ, ಸಾನಬಾವಿ, ಪೆದ್ರು ಎಲ್ಲರೂ- +“..ಅದನ್ನು ನಮ್ಮಿಂದ ಸುಧಾರಿಸಿಕೊಂಡು ಹೋಗಲಿಕ್ಕೆ ಆಗಲ್ಲಪ್ಪ..ನೀನೇ ಇರು..” ಎಂದರು. +ನಾಲ್ಕು ವರ್ಷ ತನ್ನ ಅಧ್ಯಕ್ಷತೆಯಲ್ಲಿಯ ಊರ ಇಗರ್ಜಿ ಹಬ್ಬ ನಡೆಯಿತು. ಒಂದಿಷ್ಟು ಖರ್ಚು ಬರುತ್ತಿತ್ತು. ಇಗರ್ಜಿಯ ಸಿಂಗಾರ. ಊರಿನಲ್ಲಿ ತೋರಣ ಕಟ್ಟುವುದು, ಕೇರಿಯಲ್ಲಿ ಅಲ್ಲಲ್ಲಿ ಕಮಾನು ನಿರ್ಮಾಣ. ಬ್ರೇಸ್ಪುರ ದಿನದ ಧ್ವಜಾ ರೋಹಣ, ಪಟಾಕಿ, ಬ್ಯಾಂಡು ಎಂದೆಲ್ಲ ತಾನೇ ಖರ್ಚು ಮಾಡುತಿದ್ದೆ. ನಂತರ ಬೇಡ ಬೇಡವೆಂದರೂ ಫ಼ಿರ್ಜಂತ ಆಗಲೇಬೇಕಾಯಿತು. ಅವರೆಲ್ಲ ನೆಪಮಾತ್ರದ ಫ಼ಿರ್ಜಂತಗಳು. ಯಾರೂ ತನ್ನ ಹಾಗೆ ಹಬ್ಬ ಮಾಡಲಿಲ್ಲ. ಈಗ ಹಬ್ಬದ ಮೊದಲ ದಿನ ಮೇಡಿ ನೆಟ್ಟು ಬಾವುಟ ಹಾರಿಸುವುದಿಲ್ಲ. ಫ಼ಿರ್ಜಂತ ಇಲ್ಲ. ಆ ವೈಭವವಿಲ್ಲ. +ಆ ವೈಭವ ತನ್ನ ಬದುಕಿನಿಂದಲೂ ಈಗ ದೂರ. ಮಗಳು ಜೋಸೆಫ಼ಿನಾ ಪಾಸ್ಕುವನ್ನು ಮದುವೆಯಾಗುತ್ತೇನೆ ಎಂದಾಗ ಬೇಡವೆಂದೆ. ಸುತಾರಿ ಇನಾಸನ ಅಂತಸ್ತಿಗೂ ತನ್ನ ಅಂತಸ್ತಿಗೂ ತುಂಬಾ ಅಂತರವಿದೆ ಎಂದೆ. ಪಾಸ್ಕುವಿಗೆ ಬಡಗಿಯ ಕೆಲಸವಲ್ಲದೆ ಬೇರೆ ಕೆಲಸ ಗೊತ್ತಿಲ್ಲ. ಅದೂ ಇವನು ಮಾಡುವ ಕೆಲಸಕ್ಕೊಂದು ಗೌರವವಿದೆಯೇ? ಎಂದು ಕೇಳಿದೆ. ಈ ಸಂಬಂಧ ಬೇಡವೆಂದರೂ ಆಕೆ ಕೇಳಲಿಲ್ಲ. +“ಸರಿ ನಿನ್ನ ಹಣೆಬರಹ” ಎಂದೆ. +ಮಗಳ ಮದುವೆಯನ್ನಂತೂ ಚೆನ್ನಾಗಿಯೇ ಮಾಡಿದೆ. ಒಬ್ಬಳೇ ಮಗಳ ಮದುವೆಯಲ್ಲವೆ? ಆದರೆ ಇದೇ ತನಗೆ ಭಾರವಾಯಿತು. ಜವಳಿ ಅಂಗಡಿಯಲ್ಲಿ ಸಾಲ, ದಿನಸಿ ಅಂಗಡಿಯಲ್ಲಿ ಸಾಲ, ಭಗವಾನಜಿ ಹತ್ತಿರ ಹೆಂಡತಿ ರೀತಾಳ ಭೋರಿ ಮಣೆ ಸರ, ಕಾಸಿನ ಸರ, ಉಂಗುರ ಒಯ್ದಿಟ್ಟು ಸಾಲ ತಂದದ್ದೂ ಆಯಿತು. ಅಂಗಡಿ ಸಾಲ, ಜವಳಿ ಅಂಗಡಿ ಸಾಲವನ್ನೂ ತೀರಿಸಲು ಎರಡು ಮೂರು ವರ್ಷಗಳು ಬೇಕಾದವು. ನಡುವೆ ಜೊಸೆಫ಼ಿನಾ ಹೆರಿಗೆಗೆ ಬಂದಳು. ಮಗುವಿನ ಅಂಗಡಿಯಿಂದ ರೀತಳ ಒಡವೆ ಬಿಡಿಸಿಕೊಂಡು ಬರಲಾಗಲಿಲ್ಲ. +“ರೀತಾ..ಏನು ಹೀಗಾಯ್ತು ನಮ್ಮ ಪರಿಸ್ಥಿತಿ” ಎಂದು ಕಣ್ಣಲ್ಲಿ ನೀರು ತಂದು ಕೊಂಡಾಗ ಅವಳು- +“ಅವೆಲ್ಲ ಮಾಡಿಸಿದ್ದೇ ಕಷ್ಟ ಕಾಲಕ್ಕೆ ಇರಲಿ ಅಂತ ಅಲ್ವೆ?” ಎಂದು ತನಗೇನೆ ಸಮಾಧಾನ ಹೇಳಿದಳು. +ಮೆಜಾರಿಟಿಗೆ ಬಂದ ಮಗ ತನ್ನದೇ ಕೆಲಸವನ್ನು ಮುಂದುವರೆಸಿದ. ಸರಕಾರಿ ಶಾಲೆಗೆ ಸೇರಿಸಿದರೂ ಈತ ಓದಲಿಲ್ಲ. ಮಿಡಲ ಸ್ಕೂಲ್ ತನಕ ಹೋಗಿ ಬಿಟ್ಟ. ಈಗ ನಾಲ್ಕನೆ ದರ್ಜೆ ಗುತ್ತಿಗೆದಾರನಾಗಿ ಲೋಕೋಪಯೋಗಿ, ನೀರಾವರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಾನೆ. ರಸ್ತೆ ರಿಪೇರಿ, ಸರಕಾರಿ ಮನೆಗಳಿಗೆ ಸುಣ್ಣ ಬಣ್ಣ, ಕಾಲು ಸೇತುವೆ ನಿರ್ಮಾಣ. ಮೋರಿ ಕಟ್ಟುವುದು, ಕೆರೆ ರಿಪೇರಿ ಎಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾನೆ. ಸರಕಾರ ಕೊಡುವುದು ಅಲ್ಲಲ್ಲಿಗೆ ಸರಿ ಹೋಗುತ್ತದೆ. ಇದರಲ್ಲಿ ಕಛೇರಿ ಖರ್ಚು ಬೇರೆ. ಗುರ್ಕಾರ ಸಿಮೋನ ಈಗಲೂ ಊರ ಕ್ರೀಸ್ತುವರ ನಡುವೆ ತನ್ನ ಮೊದಲ ಸ್ಥಾನಮಾನಗಳನ್ನು ಉಳಿಸಿಕೊಂಡಿದ್ದಾನೆ. ಆದರೆ ತಾನು ಎಂದೋ ಒಂಭತ್ತನೆಯ ಸ್ಥಾನಕ್ಕೋ ಬಂದು ತಲುಪಿದ್ದೇನೆ. ಈ ಬೇಸರದಲ್ಲೇ ಮನೆಯಲ್ಲಿ ಕೂತಿರುತ್ತೇನೆ. ಪೇಟೆ ಕಡೆ ಹೋದರೆ ಬೋನನ ಅಂಗಡಿಗೆ ಹೋಗಿ ಬರುತ್ತೇನೆ. +ಅಳಿಯ ಮನೆ ಕಟ್ಟಿಸಲು ಆರಂಭಿಸಿದ ಮೇಲೆ ಕಾಲ ಕಳೆಯುವುದು ಕಷ್ಟವೆನಿಸುತ್ತಿಲ್ಲ. ಅಲ್ಲಿ ಹೋಗಿ ನಿಲ್ಲುತ್ತೇನೆ. ಒಂದು ಕಾಲದಲ್ಲಿ ತಾನು ಮಾಡಿದ ಕೆಲಸವೆ. ಆದರೆ ಈಗ ಎಲ್ಲ ಬದಲಾಗಿದೆ. ಒಂಬತ್ತು ಗಂಟೆಗೆ ಕೆಲಸದವರು ಬರುತ್ತಾರೆ. ಅವರು ಉಟ್ಟ ಪಂಚೆ ಬಿಚ್ಚಿ ಬೇರೆ ಉಡುಪು ಧರಿಸಿ ಕೆಲಸ ಆರಂಭಿಸುವುದು ಒಂಬತ್ತುವರೆಗೆ, ನಡುನಡುವೆ ಬೀಡಿ ಸೇದು, ಮಾತನಾಡು, ಹತ್ತೂವರೆಗೆ ಟೀ ಕುಡಿಯಲು ಹೋಗುತ್ತಾರೆ. ಒಂದು ಗಂಟೆಗೆ ಊಟ, ಮೂರು ಗಂಟೆಗೆ ಟೀ, ನಾಲ್ಕುವರೆಗೆಲ್ಲ ಕೆಲಸ ನಿಲ್ಲಿಸಿ ಹೊರಟರೆ. ಪಡಪೋಸಿ ಕೆಲಸ ಬೇರೆ. ಸಿಮೆಂಟು ಮಾರಿ ತಿಂದರು, ಮರಳು ಬೇರೆ ಕಡೆ ಸಾಗಿಸಿದರು. ವಾರದಲ್ಲಿ ಎರಡು ದಿನ ಬಾರದಿರುವುದೂ ಉಂಟು. ಹೀಗಾಗಿ ಜನ ಕ್ರೀಸ್ತುವರನ್ನು ಬಿಟ್ಟು ಬೇರೆಯವರನ್ನು ಕರೆಯುತ್ತಾರೆ. ಹಿಂದೆ ತಾನು, ಸಿಮೋನ, ಕೈತಾನ ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಎಷ್ಟೊಂದು ಶೃದ್ಧೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೆವಲ್ಲ. ಈಗ ಆ ಮನೋಭಾವವಿಲ್ಲ. ಕ್ರೀಸ್ತುವರಿಗೆ ಕೆಲಸ ಸಿಗದಿರಲು ಇದೂ ಒಂದು ಕಾರಣ. +ಸದ್ಯ ಅಳಿಯ ಯಾವ ಕ್ರೀಸ್ತುವರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈರ್ವರು ಮಲೆಯಾಳಿಗಳು, ಓರ್ವ ಊರಿನವನೇ. ತಾನು ಹೋಗಿ ಅಲ್ಲಿ ನಿಂತಿರುತ್ತೇನೆ. +ಅಳಿಯ ಬುದ್ದಿವಂತ ಆ ಸಣ್ಣ ಜಾಗದಲ್ಲಿಯೇ ಒಂದು ಮನೆ. ಅದರ ಮಗ್ಗುಲಲ್ಲಿ ಒಂದು ಮಳಿಗೆ ಕಟ್ಟಿಸುತ್ತಿದ್ದಾನೆ. ಉದ್ದೋ ಉದ್ದವಾಗಿರುವ ಈ ಮಳಿಗೆ ಏಕೆ ಅಂದರೆ- +“…ನನ್ನ ವಿಚಾರ ಏನೋ ಇದೆ ನೋಡೋಣ” ಅನ್ನುತ್ತಾನೆ. +ಮನೆ ಕೂಡ ಮಜಬೂತಾಗಿದೆ. ವ್ಹರಾಂಡ, ಹಾಲ್, ಮಲಗುವ ಕೋಣೆ, ಊಟದ ಕೋಣೆ, ಅಡಿಗೆ ಕೋಣೆ, ಹಿಂದೆ ಬಚ್ಚಲು, ಕಕ್ಕಸು ಎಂದು ಎಲ್ಲ ಅನುಕೂಲವಿರುವ ಮನೆ ಅಳಿಯನದು. ಹಿಂದೆ ತಾವೆಲ್ಲ ತಮಗಾಗಿ ಕಟ್ಟಿಕೊಳ್ಳುತ್ತಿದ್ದುದು ಬೇರೆಯದೇ ಆದ ರೀತಿಯ ಮನೆಗಳನ್ನು, ಜಗಲಿ ಅದು ದಾಟಿದರೆ ದೇವರ ಕೋಣೆ, ನಂತರ ಅಡಿಗೆ ಮನೆ, ಹಿತ್ತಲ ಅಂಚಿನಲ್ಲಿ ಕಕ್ಕಸು. ಕೆಲ ಮನೆಗಳಲ್ಲಿ ಎಮ್ಮೆ ಬಂದು ಬಾಯಿ ಹಾಕುವಂತಹ ಕಕ್ಕಸಿನ ಕಿಂಡಿ. ಕೆಲವು ಕಡೆಗಳಲ್ಲಿ ಆಳವಾದ ಹೊಂಡದ ಮೇಲೆ ಹಾಸಿದ ಚಪ್ಪಡಿ. ನಡುವೆ ದೊಡ್ದದೊಂದು ಕಿಂಡಿ. ಕೆಳಗೆ ಮಿಚುಗುಡುವ ಹುಳಗಳು. ಈಗ ಎಲ್ಲ ಬೇರೆ ಥರ. ಬೊಂಬಾಯಿ ಕಕ್ಕಸು ಬಂದ ನಂತರವಂತೂ ಮನೆಗಳು ಮತ್ತೂ ನಾಜೂಕು. ಪಾಸ್ಕು ಕಟ್ಟಿಸುತ್ತಿರುವ ಮನೆ ಕೂಡ ಇಂತಹದ್ದೆ, ಬೆಳಿಗ್ಗೆ ಸಂಜೆ ತಾನು ಅಲ್ಲಿಗೆ ಹೋಗುತ್ತೇನೆ. +“ನೀವು ಇಲ್ಲಿ ಇರತೀರಲ್ಲ” ಎಂದು ಹೇಳಿ ಅಳಿಯ ಹೊರಟು ಹೋಗುತ್ತಾನೆ. +ಪಾಸ್ಕೋಲ ಹೀಗೆ ಅಳಿಯನ ಮನೆಯ ಬಳಿ ನಿಂತಿರುವಾಗಲೇ ರಸ್ತೆಯ ಮೇಲೆ ಕೈತಾನ ಕಂಡು ಬಂದ. +“ಪಾಸ್ಕೋಲ ಮಾಮ ಹ್ಯಾಗೆ ಆರೋಗ್ಯ?” ಎಂದು ಕೇಳುತ್ತ ಕೈತಾನ ಪಾಸ್ಕೋಲನ ಬಳಿ ಬಂದ. +ಕೈತಾನನಿಗೆ ವಯಸ್ಸಾಗಿತ್ತು. ಈಗಂತೂ ಅವನು ಕೆಲಸಕ್ಕೂ ಹೋಗುತ್ತಿರಲಿಲ್ಲ. ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ನಂತರದ ಹೆರಿಗೆಗಳನ್ನು ಮಾಡಿ ಮಾಡಿ ಆತ ನಿತ್ರಾಣನಾಗಿ ಹೋಗಿದ್ದ. ಅವನ ಹೆಂಡತಿ ಕಾಸಿಲ್ಡ ಈಗ ದುಡಿದು ತಂದು ಗಂಡನನ್ನು ಮನೆಯಲ್ಲಿ ಉಳಿದ ಕೊನೆಯ ಮಗಳು ಪ್ರೆಸಿಲ್ಲಾಳನ್ನು ಸಾಕಬೇಕಿತ್ತು. +ಕಾಸಿಲ್ಡ ಮೂರು ನಾಲ್ಕು ಮನೆಯ ಕೆಲಸ ಮಾಡುತ್ತಿದ್ದಳು. ಫ಼ಾತಿಮಾ ನಗರದ ಅಲೆಕ್ಸ ಪಿಂಟೋ, ಜಾನ ಡಯಾಸ್, ರೈಲ್ವೆ ಇಲಾಖೆಯ ಇರುದನಾದನ ಮನೆಗಳಲ್ಲಿ ಎರಡು ಮೂರು ಗಂಟೆ ಅವಳು ಕೆಲಸ ಮಾಡುತ್ತಿದ್ದಳು. ಜಾನ ಡಯಾಸನ ಹೆಂಡತಿ ಸಿಲ್ವಿಯ ತೊಳೆದ ಪಾತ್ರೆಗಳನ್ನೇ ಎರಡೆರಡು ಬಾರಿ ತೊಳೆಯಲು ಹೇಳುತ್ತಿದ್ದಳು. ಮನೆಯನ್ನು ಎರಡು ಸಲ ಗುಡಿಸಿ ಒರೆಸಬೇಕು. ಪಿಂಟೋ ಹೆಂಡತಿ ಮಗ್ಗಿಬಾಯಿ ಕೂಡ ಹೀಗೆಯೇ. +“ಶಿಶಿಶಿ..ಏನಿದು ಪಾತ್ರೆ ತೊಳೆಯೋ ರೀತಿ? ನೀವು ನಿಮ್ಮ ಮನೇಲೂ ಹೀಗೇನೆ ಕೆಲಸ ಮಾಡುವುದ?” ಎಂದು ಮಾತು ಮಾತಿಗೆ ತಿವಿಯುತ್ತಿದ್ದಳು ಅವಳು. ಇರುದನಾದನ ಹೆಂಡತಿ ಪಾಪಮ್ಮ ಪಾಪದ ಹೆಂಗಸು- +“ಅಲ್ಲಿಷ್ಟು ಗುಡಿಸಿ ಬಿಡು ಕಾಶಿಲ್ಡ..ಬಟ್ಟೆ ನಾನು ಹಾಕತೇನೆ” ಅನ್ನುತ್ತಿದ್ದಳು. +ಪಿಂಟೋ, ಡಯಾಸ್ ಮನೆಯಲ್ಲಿ ಒಂದು ಲೋಟ ಕಾಫ಼ಿ ಕೂಡ ಇವಳಿಗೆ ಸಿಗುತ್ತಿರಲಿಲ್ಲ. ಪಾಪಮ್ಮ ಕಾಫ಼ಿ ತಿಂಡಿಕೊಟ್ಟು ಉಪಚರಿಸುತ್ತಿದ್ದಳು. ಈ ಮೂರು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಬಂದು ಕಾಸಿಲ್ಡ ಅಡಿಗೆ ಮಾಡಬೇಕಿತ್ತು. +ಮನೆಗೊಬ್ಬ ಮಗಬೇಕು ಎಂದು ಎಲ್ಲ ದೇವರುಗಳಿಗೂ ಹರಕೆ ಹೊತ್ತು ಹುಟ್ಟಿದ ಮಗ ಅವರ ಕೈಬಿಟ್ಟಿದ್ದ. ಊರಿನಲ್ಲಿ ಜನರ ಬಾಯಲ್ಲಿ ಚೌಡಪ್ಪ ಎಂದೇ ಜನಪ್ರಿಯ ನಾಗಿದ್ದ ದುಮಿಂಗ ಮದುವೆಯಾಗಿದ್ದೇ ಹೊರ ಹೋದ. ಅವನಿಗೆ ತಂದೆ ತಾಯಿಯ ನೆನಪು ಕೂಡ ಆಗುವುದಿಲ್ಲ. ಹೀಗಾಗಿ ಕಾಸಿಲ್ಡ ತನ್ನ ಗಂಡ, ಕೊನೆಯ ಮಗಳು ಪ್ರೆಸಿಲ್ಲಳ ಬದುಕಿಗೊಂದು ಆಧಾರವಾಗಿ ಕೆಲಸ ಹುಡುಕಿಕೊಂಡಳು. +ಸಂಜೆ ಅವಳಿಗೆ ಮಹಿಳಾ ಸಮಾಜದ ಕೆಲಸ. ಅಲ್ಲಿ ಕಸ ಹೊಡೆಯುವುದು, ಬರುವ ಸದಸ್ಯೆಯರ ಸಣ್ಣ ಪುಟ್ಟ ಕೆಲಸ ಮಾಡಿಕೊಡುವುದು. ಆಕೆ ಕೊಂಚ ನಯ ನಾಜೂಕು ಕಲಿತಳು. ತಿದ್ದಿ ತೀಡಿ ಸೀರೆ ಉಡ ತೊಡಗಿದಳು. +ಗಂಡ ಅಂಕೋಲ ಬಿಟ್ಟು ಇಲ್ಲಿಗೆ ಬಂದದ್ದು ಹಣ ಮಾಡಲೆಂಬುದು ಅವಳಿಗೆ ಗೊತ್ತಿತ್ತು. ಅವನಿಂದ ಹಣ ಮಾಡಲಂತೂ ಆಗಲಿಲ್ಲ. ಆದರೂ ತಾವು ಸುಖವಾಗಿದ್ದೆವು. ಈಗಲೂ ಮರ್ಯಾದೆಯಿಂದ ಇದ್ದೇವೆ. ಜಪ, ಪೂಜೆ, ಪ್ರಾರ್ಥನೆ, ಪಾಪ ನಿವೇದನೆ. ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುವುದಿಲ್ಲ. ಆದರೂ ಏನೋ ಆತಂಕ. ಮಗಳೊಬ್ಬಳಿದ್ದಾಳೆ. ಅವಳ ಮದುವೆ ಆದರೆ ಸಾಕು ಎಂಬ ಹಾರೈಕೆ. +ಪ್ರೆಸಿಲ್ಲಾ ಬುದ್ಧಿವಂತ ಹುಡುಗಿ. ಎಲ್ಲ ವಿಷಯಗಳಲ್ಲೂ ಚುರುಕು. ಸರಕಾರಿ ಪ್ರೌಢಶಾಲೆಗೇನೆ ಹೆಸರು ತರುವಂತೆ ಓದಿ ಮುಂದೆ ಬಂದಳು. ಶಿವಸಾಗರದ ಕ್ರೀಸ್ತುವರಲ್ಲಿ ಹೀಗೆ ಓದಿ ಬೇರೆಯವರ ಗಮನ ಸೆಳೆದವಳು ಪ್ರೆಸಿಲ್ಲ ಒಬ್ಬಳೆ. ಇದೀಗ ಕಾನ್ವೆಂಟ್ ಶಾಲೆಯಲ್ಲಿ, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಕ್ರೀಸ್ತುವರ ಮಕ್ಕಳು ಇದ್ದಾರಾದರೂ ತುಂಬಾ ಬುದ್ಧಿವಂತೆ ಎನಿಸಿಕೊಂಡವಳು ಪ್ರೆಸಿಲ್ಲಾ. +ಇದೇ ಕಾರಣದಿಂದಲೋ ಏನೋ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪ್ರೆಸಿಲ್ಲಾಳನ್ನು ಕರೆದು- +“..ಮುಂದೆ ಕೆಲಸ ಮಾಡುವ ಆಸೆ ಇದೆಯೇನಮ್ಮ ನಿನಗೆ” ಎಂದು ಕೇಳಿದರು. +ಯಾವ ಹುಡುಗಿಯೂ ಕೆಲಸಕ್ಕೆ ಹೋಗದ ಕಾಲ ಅದು. ಹೋದರೂ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ದೊರಕುತ್ತಿತ್ತು. ಪ್ರೆಸಿಲ್ಲ ಈ ದಿಕ್ಕಿನಲ್ಲಿ ವಿಚಾರ ಮಾಡಿರಲಿಲ್ಲ. ಅಕ್ಕಂದಿರ ಹಾಗೆಯೇ ಮದುವೆಯಾಗಿ ಹೋಗುವುದು ಎಂದವಳು ವಿಚಾರ ಮಾಡಿದ್ದಳು. ಆದರೆ ತನ್ನ ಮದುವೆಯ ನಂತರ ಅಪ್ಪ, ಅಮ್ಮನ ಗತಿ ಏನು ಎಂಬ ಪ್ರಶ್ನೆ ಅವಳನ್ನು ಕಾಡುತ್ತಿತ್ತು. ತಮ್ಮನಂತೂ ಅವರನ್ನು ನೋಡಿಕೊಳ್ಳುವುದಿಲ್ಲ. ಮುಂದೆ ಅವರ ಗತಿ? +“ಹೋಗತೀನ ಸಾರ” ಎಂದಳವಳು. +ಅವಳ ಅರ್ಜಿ ಶಿವಮೊಗ್ಗೆಯ ವಿದ್ಯಾ ಇಲಾಖೆಗೆ ಹೋಯಿತು. ಅಲ್ಲಿಂದ ಮಾರುತ್ತರಕ್ಕಾಗಿ ಕಾದಾಗ ಉತ್ತರ ಕೂಡ ಬಂದಿತು. +ಪ್ರೆಸಿಲ್ಲಾಳನ್ನು ಶಿವಮೊಗ್ಗೆಯ ಒಂದು ಕಡೆ ಸಂತಸ ಇನ್ನೊಂದು ಕಡೆ ಆತಂಕ. ಶಿವಮೊಗ್ಗೆಗೆ ಹೋಗಬೇಕು. ಅಲ್ಲಿ ವಾಸಿಸಬೇಕು. ದೊಡ್ಡ ಊರು. ಕೆಲಸ ಹೇಗೋ. ಹೀಗೆಂದು ಸಿಕ್ಕ ಕೆಲಸ ಬಿಡಲುಂಟೆ? ತಂದೆ ಕೆಲಸ ಮಾಡಲಾಗದೆ ಮನೆಯಲ್ಲಿ ಕೂತಿರುವಾಗ, ತಾಯಿ ಅವರಿವರ ಮನೆಗಳಲ್ಲಿ ದುಡಿಯುವಾಗ ತಾನು ಮನೆಬಾಗಿಲಿಗೆ ಬಂದ ಕೆಲಸವನ್ನು ತಿರಸ್ಕರಿಸುವುದೆ? +“ಬಾಬಾ…ನಾನು ಏನು ಮಾಡಲಿ?” ಎಂದು ತಂದೆಯನ್ನೇ ಕೇಳಿದಳು ಪ್ರೆಸಿಲ್ಲ. +“ಪದ್ರಾಬಾ ಅವರನ್ನ ಕೇಳಿ ಬರತೀನಿ” ಎಂದ ಕೈತಾನ ಮನೆ ಬಿಟ್ಟ. +ದಾರಿಯಲ್ಲಿ ಎದುರಾದ ಪಾಸ್ಕೋಲನ ಹತ್ತಿರವೂ ಈ ವಿಷಯ ಪ್ರಸ್ತಾಪ ಮಾಡಿದ. +“ಹೌದು? ಒಳ್ಳೆಯದಾಯ್ತು..ಪದ್ರಾಬ ಏನು ಹೇಳತಾರೋ ನೋಡು..ಕೊನೆಗಾಲದಲ್ಲಿ ನಿಮಗಂತೂ ಒಂದು ಆಧಾರ ಬೇಕಲ್ಲ” ಎಂದ ಪಾಸ್ಕೊಲ. +ಅವನಿಗೂ ಸಂತೋಷವಾಗಿತ್ತು. ಕೈತಾನನದು ಒಳ್ಳೆಯ ಕುಟುಂಬ. ಆದರೆ ಒಳ್ಳೆಯವರಿಗೇನೆ ಕಷ್ಟಗಳು ಹೆಚ್ಚಲ್ಲವೆ? +“ಹೋಗಿ ಬಾ..” ಎಂದು ಕೈತಾನನನ್ನು ಬೀಳ್ಕೋಟ್ಟ ಪಾಸ್ಕೊಲ. +* +* +* +ಇಗರ್ಜಿಯ ಗಂಟೆ ಮಧ್ಯಾಹ್ನದ ಪ್ರಾರ್ಥನಾ ಸಮಯವಾಯಿತು ಎಂಬುದನ್ನು ನೆನಪು ಮಾಡಿಕೊಟ್ಟಿತು. ಪಾಸ್ಕೊಲ ನಿಂತಲ್ಲಿಯೇ ಶಿಲುಬೆಯ ವಂದನೆ ಮಾಡಿದ. +ಒಂದೆರಡು ನಿಮಿಷಗಳಲ್ಲಿ ಮತ್ತೆ ಕೈತಾನ ಕಂಡ. ಉಟ್ಟ ಪಂಚೆಯ ಒಂದು ಚುಂಗನ್ನು ಕೈಯಲ್ಲಿ ಹಿಡಿದು ನಡೆದು ಬರುತ್ತಿದ್ದ. ನಡಿಗೆಯಲ್ಲಿ ಚುರುಕುತನವಿತ್ತು. ಲವಲವಿಕೆಯಿತ್ತು. ಮುಖದ ಮೇಲೆ ಬಹಳ ದಿನಗಳ ನಂತರ ಮೂಡಿ ಬಂದ ಮಂದಹಾಸ. +“ಕೈತಾನ ಮಾಮ ಕೆಲಸ ಹಣ್ಣೋ ಕಾಯೋ?” +“ಹಣ್ಣು ಪಾಸ್ಕೋಲ..ಹಣ್ಣು” +ಕೈತಾನ ನೇರವಾಗಿ ಪಾಸ್ಕೊಲನ ಬಳಿ ಬಂದ. +ಪಾದರಿ ಸಿಕ್ವೇರಾ ಅವನಿಗೆ ಭರವಸೆ ನೀಡಿದ್ದರು. ಸಿಸ್ಟರುಗಳು ನಡೆಸುವ ಹಾಸ್ಟೆಲಿನಲ್ಲಿ ಇರಲು ಪ್ರೆಸಿಲ್ಲಾಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು. +“ಪ್ರೆಸಿಲ್ಲಾ ಹೋಗಲಿ..ಸಿಕ್ಕ ಕೆಲಸವನ್ನು ಬಿಡೋದು ಬೇಡ..” ಎಂದಿದ್ದರು. +“ಮುಂದಿನ ವ್ಯವಸ್ಥೆ ಮಾಡಬೇಕಲ್ಲ..ಬರತೀನಿ” ಎಂದು ಕೈತಾನ ರಸ್ತೆಗೆ ಇಳಿದ. +“ಪಾಯಸ ಮಾಡಲಿಕ್ಕೆ ಹೇಳು ಕಾಸಿಲ್ಡ ಬಾಯಿಗೆ ..ನಾನು ಸಾಯಂಕಾಲ ಬರತೀನಿ” ಎಂದ ಪಾಸ್ಕೊಲ. +ದೇವರು ಒಂದು ಕುಟುಂಬವನ್ನು ಕಾಪಾಡಿದ. ಅವನಿಗೆ ಕೃತಜ್ಞತೆಗಳಿರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ. +ಕೆಲಸಗಾರರು ಊಟದ ಸಮಯವಾಯಿತೆಂದು ಕೆಲಸ ನಿಲ್ಲಿಸಿದಾಗ ಪಾಸ್ಕೊಲನಿಗೆ ಚುರುಗುಟ್ಟುತ್ತಿರುವ ತನ್ನ ಹೊಟ್ಟೆಯ ನೆನಪಾಯಿತು. +-೮- +ಸಾನಬಾವಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದನಂತರ ಸಂಪೂರ್ಣ ಬದಲಾಗಿ ಹೋದಳು. ಆವರೆಗೆ ಪೆದ್ರುವಿನ ಮನೆಯಲ್ಲಿದ್ದು ಅವನ ಹೆಂಡತಿ ಅನ್ನಿಸಿಕೊಳ್ಳದೇ, ಇಟ್ಟುಕೊಂಡವಳು ಎಂಬ ಹೆಸರಿನಲ್ಲಿಯೇ ಕರೆಸಿಕೊಳ್ಳುತ್ತಿದ್ದ ಆಕೆ ಪಾದರಿ ಗೋನಸ್ವಾಲಿಸರ ಕೃಪೆಯಿಂದ ’ಹೆಂಡತಿ’ ಎಂಬ ಗೌರವಕ್ಕೆ ಪಾತ್ರಳಾಗಿಬಿಟ್ಟಳು. ಕೇರಿಯವರು ಅವಳನ್ನು ನೋಡುವ ರೀತಿ ಬೇರೆಯಾಯಿತು. ಮಾತನಾಡಿಸುವ ಧಾಟಿ ಬೇರೆಯಾಯಿತು. ಸಿಮೋನಿನ ತಾಯಿ ಅವಳನ್ನು ಧುವೇ(ಮಗಳೆ) ಎಂದು ಕರೆಯತೊಡಗಿದಳು. ಅವಳು ಕೇರಿಯ ಇತರರ ಪಾಲಿಗೆ ಬಾಯಿ (ಅಕ್ಕ) ಹುನ್ನಿ (ಅತ್ತಿಗೆ) ಮೌಸಿ (ಚಿಕ್ಕಮ್ಮ) ಎಲ್ಲ ಆದಳು. ಕೆಲ ಮಕ್ಕಳಿಗೆ ದೇವಮಾತೆಯೂ ಆಗಿ ಅವರಿಂದ ಮೊದೋನ ಎಂದು ಕರೆಸಿಕೊಳ್ಳತೊಡಗಿದಳು. ತಟ್ಟನೆ ತನ್ನ ಸ್ಥಾನಮಾನಗಳು ಬದಲಾದದ್ದು ಅವಳಿಗೆ ಸಂತೋಷವನ್ನು ತಂದಿತು. ಹೀಗೆಯೇ ಸಿಮೋನನ ಮಗಳು ಕಲಿಸಿದ ಜಪ ಮಂತ್ರಗಳು ಅವಳ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟವು. ಭಾನುವಾರ ಬಂತೆಂದರೆ ಎಲ್ಲ ಹೆಂಗಸರ ಹಾಗೆ ಅಚ್ಚುಕಟ್ಟಾಗಿ ಸೀರೆಯುಟ್ಟು, ತಲೆಯ ಮೇಲೆ ಸೆರಗು ಹೊದ್ದು ಎಲ್ಲರಿಗೂ ಮೊದಲು ಇಗರ್ಜಿಗೆ ಹೋಗತೊಡಗಿದಳು. ಅಲ್ಲಿ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುತ್ತಿರಲಿಲ್ಲ. ಅವಳ ಈ ಶೃದ್ಧೆ ಆಸಕ್ತಿ ಉಳಿದವರನ್ನು ಬೆರಗುಗೊಳಿಸುತ್ತಿತ್ತು. +“ನೋಡೇ..ಮೊನ್ನೆ ಮೊನ್ನೆ ನಮ್ಮ ಸಮೋಡ್ತಿನೊಳಗೆ ಬಂದವಳ..ಭಕ್ತಿ ನೋಡು” ಎಂದು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು. +ಸಾನಬಾವಿ ಪೆದ್ರು ಕೂಡ ಪ್ರತಿ ಭಾನುವಾರ ಇಗರ್ಜಿಗೆ ಹೋಗಲೇ ಬೇಕಾಯಿತು. ಮನೆಯಲ್ಲಿ ನಿತ್ಯ ಪ್ರಾರ್ಥನೆ ತಪ್ಪಲಿಲ್ಲ. ದೇವರ ಮುಂದೆ ಮೇಣದ ಬತ್ತಿ ಹಚ್ಚುವುದನ್ನು ರಂಗಿ ಯಾವತ್ತೂ ಮರೆಯುತ್ತಿರಲಿಲ್ಲ. +ಅವರಿಗೆ ಮತ್ತೂ ಅಚ್ಚರಿಯಾದುದೆಂದರೆ ಇಗರ್ಜಿಯಲ್ಲಿ ಮದುವೆಯಾಗುವುದಕ್ಕೂ ಮೊದಲು ಅವರು ಒಟ್ಟಿಗೇನೆ ಇದ್ದರು. ಗಂಡ ಹನುಮಂತನ ಹತ್ತಿರದ ಸಂಬಂಧಿ ವೀರಭದ್ರ ತನ್ನನ್ನು ಒಳಗೆ ಹಾಕಿಕೊಳ್ಳುವ ಯತ್ನ ಮಾಡಿದಾಗ ರಂಗಿ ಪೆದ್ರುವಿನಲ್ಲಿಗೆ ಓಡಿ ಬಂದು ಅವನ ಮನೆ ಸೇರಿಕೊಂಡಿದ್ದಳು. ಒಂದು ಗಂಡು ಒಂದು ಹೆಣ್ಣು ಅದೆಷ್ಟು ದಿನ ದೂರ ದೂರ ಇರಲು ಸಾಧ್ಯ. ಅದೊಂದು ರಾತ್ರಿ ತನಗೆ ಅರಿವಿಲ್ಲದೇನೆ ರಂಗಿ ಪೆದ್ರುವಿನ ತೋಳುಗಳಲ್ಲಿ ಸಿಲುಕಿ ಮೈ ಹಿಂಡಿದಂತಾಗಿ ದೇಹದ ನರನರಗಳಲ್ಲಿ ಬೆಂಕಿ ಪ್ರಜ್ವಲಿಸಿ, ಹೀಗೆ ಹೊತ್ತಿಕೊಂಡ ಬೆಂಕಿ ಪೆದ್ರುವಿನಿಂದ ನಂದಿಹೋಗಿ ಹಿತಕರವಾಗಿ ಆಕೆ ನರಳಿದ್ದಳು. ಆನಂತರ ಈ ಪ್ರಕರಣ ಮತ್ತೆ ಮತ್ತೆ ಮುಂದುವರೆದಿತ್ತು. ಇಷ್ಟಾದರೂ ಅವಳು ಗರ್ಭಿಣಿಯಾಗಿರಲಿಲ್ಲ. ಎಲ್ಲಿ ಏನಾಗುತ್ತದೋ ಎಂಬ ದಿಗಿಲು. ಅನೈತಿಕವಾಗಿ ಬದುಕುತ್ತಿರುವ ತನಗೆ ಮಗುವಾದರೆ ಅದೊಂದು ಆಪಾದನೆ ಹೊರಬೇಕಾದೀತೆ ಎಂಬ ಆತಂಕದಲ್ಲಿ ದಿನಗಳು ಉರುಳಿ ಹೋಗಿದ್ದವು. +ನಂತರ ಪಾದರಿ ಗೋನಸ್ವಾಲಿಸರು ಅವರನ್ನು ಗಂಡ ಹೆಂಡತಿ ಎಂದು ದೇವರ ಎದುರು ನಿಲ್ಲಿಸಿ ಆಶೀರ್ವದಿಸಿದ್ದರು. ಇದರ ನಂತರ ಪೆದ್ರು- +“..ಫ಼್ಲೊರಿನಾ..” ಎಂದು ಬೇರೆಯೆ ಆದ ರೀತಿಯಲ್ಲಿ ಅಪ್ಪಿ ಮುದ್ದಾಡಿದ್ದ. ಆನಂತರ ಅವಳು ಕೂಡ ಯಾವುದೇ ಭೀತಿ ಭಿಡೆ ಇಲ್ಲದೆ ಪೆದ್ರುವಿಗೆ ತನ್ನ ಮೈ ನೀಡಿದ್ದಳು. ಇದಾದ ಕೆಲವೇ ತಿಂಗಳುಗಳಲ್ಲಿ ಸುತಾರಿ ಇನಾಸನ ಹೆಂಡತಿ ಮೊನ್ನೆ ಫ಼್ಲೊರಿನಾ ಮನೆ ಹಿಂದಿನ ಮಂಟಪದ ಬಳಿ ವಾಂತಿ ಮಾಡುತ್ತ ಕುಳಿತಿರುವುದನ್ನು ಕಂಡು ಸಾಂತಾ ಮೊರಿಯನ್ನು ಕರೆತಂದಳು. +ಸಾಂತಾಮೋರಿ- +“ರಂಗೀ..ರಂಗೀ..ಏನಾಯ್ತು..ಏನಾಯ್ತು?” ಎಂದು ಕೇಳುತ್ತ ಓಡಿ ಬಂದಳು. +ಪೆದ್ರು ಇದು ದೇವರ ಕೃಪೆಯೇ ಹೌದು ಅಂದುಕೊಂಡ. ಫ಼್ಲೋರಿನಾಗೂ ಇದರಲ್ಲಿ ಅನುಮಾನ ಉಳಿಯಲಿಲ್ಲ. ಅಂದು ಗಂಡ ಹೆಂಡತಿ ಅಲ್ತಾರಿನ ಮುಂದೆ ನಿಂತು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಆರು ತಿಂಗಳ ನಂತರ ಪೆದ್ರುವಿನ ಹಾಗೆಯೇ ಗಟ್ಟಿ ಮುಟ್ಟಾಗಿದ್ದ. ಆದರೆ ರಂಗಿಯ ಬಣ್ಣ ಕಸಿದುಕೊಂಡ ಮಗ ಮನೆಯಲ್ಲಿ ಹುಟ್ಟಿದ. +ಹೆರಿಗೆ ಮಾಡಿಸಲೆಂದು ಬಂದ ವೈಜೀಣ್ ಕತ್ರೀಣ್ ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸುತ್ತ- +“..ಆಂಜ್ ಬೊಡ್ವೊ (ದೇವದೂತ) ಬಂದಿದ್ದಾನೆ ನಿಮ್ಮ ಮನೆಗೆ..ತುಂಬಾ ಮುದ್ದಾಗಿದ್ದಾನೆ..” ಎಂದು ಕೂಗಿ ಹೇಳಿದ್ದು ನೋವಿನಲ್ಲೂ ಕಿವಿಗೆ ಬಿದ್ದು ರಂಗಿಯ ಮುಖ ಅರಳಿತ್ತು. ಟೋಲ್ ನಾಕಾದ ಆ ಮನೆಯನ್ನು ಬಿಟ್ಟು ಬಂದ ತನ್ನ ಬದುಕು ಈ ಪರಿಯಲ್ಲಿ ಹಿಗ್ಗಿದ್ದನ್ನು ಕಲ್ಪಿಸಿಕೊಂಡು ಅವಳು ಸಂತಸಪಟ್ಟಳು. ಏಸು ಮರಿ ಜೋಸೆಫ಼ರ ಮೇಲಿನ ಅವಳ ಭಕ್ತಿ ಮತ್ತೂ ಅಧಿಕವಾಯಿತು. +ಮಗನಿಗೆ ನಲವತ್ತನೇ ದಿನ ನಾಮಕರಣಕ್ಕೆಂದು ಕೊಂಡೊಯ್ದಾಗ ಪಾದರಿ ಮಗು ಹುಟ್ಟಿದ ತಾರೀಕು ಕೇಳಿದರು. ಕ್ರಿಶ್ಚಿಯನ್ ಕ್ಯಾಲೆಂಡರ್ ನೋಡಿ ಮಗು ಹುಟ್ಟಿದ ದಿನವೆ ಸಂತ ಗ್ರೆಗೋರಿ ಕೂಡ ಹುಟ್ಟಿದ್ದರಿಂದ ಮಗುವಿನ ಹುಟ್ಟಿದ ದಿನದ ಹೆಸರು ಗ್ರೆಗೋರಿ ಎಂದರು. ಪೆದ್ರುವಿಗೆ ತನ್ನ ಅಜ್ಜನ ಹೆಸರನ್ನು ಮಗುವಿಗೆ ಇಡಬೇಕೆಂದಿತ್ತು. ಅದನ್ನೂ ಆತ ಗೋನಸ್ವಾಲಿಸರಿಗೆ ಹೇಳಿದಾಗ ಅವರು ಇಡೋಣ ಎಂದರು. ಮಗುವಿನ ದೇವ ಪಿತ ದೇವ ಮಾತೆಯಾಗಲು ಅಂಕೋಲಾದ ಕೈತಾನ ಅವನ ಹೆಂಡತಿ ಕಾಸಿಲ್ಡ ಮುಂದೆ ಬಂದರು. ಇಗರ್ಜಿಯಲ್ಲಿ ಸಾನಬಾವಿ ಪೆದ್ರುವಿನ ಮಗನಿಗೆ ಗ್ರೆಗೋರಿ ಫ಼್ರಾನ್ಸಿಸ್ ಎಂದು ನಾಮಕರಣ ಮಾಡಲಾಯಿತು. ಬೋನ ಇಗರ್ಜಿಯ ಗಂಟೆ ಬಾರಿಸಿ ಊರಿಗೆಲ್ಲ ಸುದ್ದಿ ತಿಳಿಸಿದ. ಅಂದು ಸಣ್ಣ ಪ್ರಮಾಣದ ಒಂದು ಊಟ ಕೂಡ ಪೆದ್ರುವಿನ ಮನೆಯಲ್ಲಿ ಇತ್ತು. ಸಾನಬಾವಿ ಪೆದ್ರುವಿನ ಮನೆತನದ ಹೆಸರು ಡಿಸೋಜ ಆಗಿದ್ದರಿಂದ ಅವನ ಮಗ ಗ್ರೆಗೋರಿ ಫ಼್ರಾನ್ಸಿಸ್ ಡಿಸೋಜಾ ಎಂದೇ ಸರಕಾರಿ ಶಾಲೆಯಲ್ಲಿ ದಾಖಲಾದ. +ಸಾನಬಾವಿ ಪೆದ್ರು ಶಿವಸಾಗರಕ್ಕೆ ಬಂದ ಸಿಮೋನ, ಪಾಸ್ಕೊಲ ಇನಾಸ ಇವರೆಲ್ಲರಿಗಿಂತ ಏಳೆಂಟು ವರ್ಷ ಕಿರಿಯನಾಗಿದ್ದ. ಅವನು ಮದುವೆಯಾದದ್ದೂ ತಡವಾಗಿ, ಮಗು ಹುಟ್ಟಿದ್ದು ಮತ್ತು ತಡವಾಗಿ. ಹೀಗಾಗಿ ಅವನ ಮಗ ಗ್ರೆಗೋರಿ ಪ್ರೌಢಶಾಲೆಗೆ ಬಂದಾಗ ಪಾದರಿ ಗೋನಸ್ವಾಲಿಸ್ ಹೊರಟು ಹೋಗಿ ಪಾದರಿ ಮಸ್ಕರಿನಾಸ ಊರಿಗೆ ಬಂದು ಎರಡು ಮೂರು ವರ್ಷಗಳಾಗಿದ್ದವು. ಮಕ್ಕಳನ್ನು ಓದಿಸಿ ಓದಿಸಿ ಎಂಬ ಮಾತನ್ನು ಇವರೂ ಹೇಳುತ್ತಿದ್ದರು. +ಪೆದ್ರುಗೆ ಮಗನ ಓದಿನ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. +“ಈ ಇಜಾರ ಪಜಾರ ಹಾಕಿಕೊಂಡವರು ಏನು ದುಡೀತಾರೆ ಮಾರಾಯ..ನಮ್ಮಷ್ಟು ದುಡೀತಾರ ಅವರು?” ಎಂದು ವಿದ್ಯಾವಂತರನ್ನು ತಿರಸ್ಕಾರದಿಂದ ನೋಡುತ್ತಿದ್ದ. +ಆದರೆ ಫ಼್ಲೋರಿನಾಗೆ ಮಗ ಓದಿ ಆಫ಼ೀಸರ ಆಗಬೇಕು ಎಂಬ ಆಸೆ. ಹೀಗೆಂದೇ ಅವಳು ಮಗನ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ದಳು. ಆತ ಶಾಲೆಗೆ ತಪ್ಪಿಸಿಕೊಳ್ಳಬಾರದು, ಮನೆಯಲ್ಲಿ ಚೆನ್ನಾಗಿ ಓದಬೇಕು. ಸಂಜೆ ಪ್ರಾರ್ಥನೆಯ ಗಂಟೆ ಆಗುತ್ತಿದೆ ಅನ್ನುವಾಗ ಎಲ್ಲೇ ಇರಲಿ ಮನೆಗೆ ಬರಬೇಕು. ಕೈಕಾಲು ಮುಖ ತೊಳೆದು ಅಮೋರಿ ಮಾಡಿ ಓದಲು ಕೊಡಬೇಕು. ಒಂಬತ್ತು ಗಂಟೆಯ ತನಕ ಸೀಮೆ ಎಣ್ಣೆ ದೀಪ ಎದುರು ಇರಿಸಿಕೊಂಡು ಓದು. ಮತ್ತೆ ಬೆಳಗಿನ ಪ್ರಾರ್ಥನೆಯ ಗಂಟೆ ಆದಾಗ ಏಳಬೇಕು. ಮತ್ತೆ ಓದು. ವಯಸ್ಸಿಗೆ ಅನುಗುಣವಾಗಿ ಜ್ಞಾನೋಪದೇಶ ಕಲಿಸಿದಳು. ಪ್ರಥಮ ದಿವ್ಯ ಪ್ರಸಾದ ಸ್ವೀಕಾರ ಸಮಾರಂಭವನ್ನು ಚೆನ್ನಾಗಿಯೇ ಮಾಡಿದಳು. ಮಗನಿಗೆ ಬಿಳಿ ಉಡುಗೆ ತೊಡಿಸಿ ತಲೆಗೊಂದು ಹೂ ಕಿರೀಟವಿರಿಸಿ, ಕೈಗೆ ಮೇಣದ ಬತ್ತಿ ಕೊಟ್ಟು ದಿವ್ಯ ಪ್ರಸಾದ ಸ್ವೀಕಾರ ಸಮಾರಂಭ ಮುಗಿಸಿ, ತಾನೇ ಮಗನನ್ನು ಮನೆ ಮನೆಗೆ ಕರೆದೊಯ್ದು ಹಿರಿಯರಿಂದ ಆಶೀರ್ವಾದ ಮಾಡಿಸಿದಳು. +ಅವಳಿಗೊಂದು ಆಸೆ. ಟೋಲನಾಕಾದ ಬಳಿಯ ಅವರ ಹತ್ತಿರದ ಬಂಧು ಬಳಗದವರು ಅವಳನ್ನು ಅವಳ ಮಗ ಗಂಡನನ್ನು ಗಮನಿಸುತ್ತಿದ್ದರು. ಅವರ ಸ್ಥಿತಿಗತಿಯಲ್ಲಿ ಅಂತಹ ಬದಲಾವಣೆಗಳಾಗಿರಲಿಲ್ಲ. ಹಿಂದಿನಂತೆಯೇ ಬಡತನದಲ್ಲಿ ಕಲ್ಲು ಮಣ್ಣಿನ ಕೆಲಸ ಮಾಡುತ್ತ ಅವರಿದ್ದರು. ಅವರ ಮುಂದೆ ತನ್ನ ಮಗ ಮೆರೆಯಬೇಕು. ಊರಿನಲ್ಲಿ ಒಂದು ಒಳ್ಳೆಯ ನೌಕರಿ ಪಡೆದು ಭಲೆ ಅನಿಸಿಕೊಳ್ಳಬೇಕು ಎಂದೆಲ್ಲ ಅವಳು ಬಯಸಿದಳು. ಅವಳ ಬಯಕೆಯಂತೆಯೇ ಮಗ ಗ್ರೆಗೋರಿ ಓದುತ್ತಿದ್ದ ಕೂಡ. +ಸಾನಬಾವಿ ಪೆದ್ರುವಿನಲ್ಲಿ ಈಗಲೂ ಕೆಲಸ ಮಾಡುವ ಶಕ್ತಿ ಇತ್ತು. ಸಿಮೋನ, ಇನಾಸ ಮುದುಕರಾಗಿದ್ದರೂ ಈತ ಅಲ್ಲಿ ಇಲ್ಲಿ ಕೆಲಸ ಹಿಡಿದು ಮಾಡಿಸುತ್ತ, ತಾನೂ ಮಾಡುತ್ತ ಪೆದ್ರು ಮೇಸ್ತ್ರಿ ಅನ್ನುವ ಹೆಸರು ಉಳಿಸಿಕೊಂಡಿದ್ದ. ಫ಼್ಲೊರಿನಾ ಕೂಡ ಕೆಲಸ ಮಾಡಿಕೊಂಡಿದ್ದವಳೆ. ಪೆದ್ರು ಮನೆ ಸೇರಿದ ನಂತರವೂ ಅವಳು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ಹಿಂದೆಲ್ಲ ಕಟ್ಟಡ ಕೆಲಸಕ್ಕೇ, ಸುಣ್ಣ ತೆಗೆಯಲು ಹೋಗುತ್ತಿದ್ದವಳು ಈಗ ಮೀನು ತೆಗೆದುಕೊಂಡು ಹಳ್ಳಿಗಳಿಗೆ ಹೋಗುತ್ತಾಳೆ. ಅವಳ ಜತೆ ಕೇರಿಯ ಮತ್ತೂ ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಹತ್ತಿರದ ಐದಾರು ಹಳ್ಳಿಗಳಿಗೆ ಹೋಗುವುದು. ಹಳ್ಳಿ ಹೆಂಗಸರು ತಮಗೆ ಬೇಕಾದ ಒಣ ಬಂಗಡೆ, ಸೊರಲು, ಮೋರಿ ಮೀನು ಕೊಂಡು ಭತ್ತ ಕೊಡುತ್ತಾರೆ. ಹೋಗುವಾಗ ಮೀನು ಕೊಂಡೊಯ್ದರೆ ಬರುವಾಗ ಭತ್ತ ತುಂಬಿಕೊಂಡು ಬರುತ್ತಾರೆ. ಕೆಲಬಾರಿ ಮೀನು ಕೊಟ್ಟು ಸುಗ್ಗಿಯಲ್ಲಿ ಭತ್ತ ತರುತ್ತಾರೆ. ಹತ್ತು ಹದಿನೈದು ಮೈಲಿ ಫ಼ಾಸಲೆಯಲ್ಲಿರುವ ಹಳ್ಳಿಗಳಿಗೆ ಹೋಗಿ ಬರುವುದಕ್ಕೆ ಒಂದು ಎರಡು ಗಂಟೆಯಾಗುತ್ತದೆ. +ಮನೆಗೆ ತಂದ ಭತ್ತವನ್ನು ಕುದಿಸಬೇಕು, ಬೇಯಿಸಿದ ಭತ್ತವನ್ನು ಒಣಹಾಕ ಬೇಕು. ನಂತರ ಮಿಲ್ಲಿಗೆ ಕೊಂಡೊಯ್ದು ಅಕ್ಕಿ ಮಾಡಿಸಬೇಕು. ಇಷ್ಟು ಮಾಡಿದ ನಂತರ ಪರಿಮಳ ಬೀರುವ ಕುಸುಬಲು ಅಕ್ಕಿ ದೊರೆಯುತ್ತದೆ. ಮಳೆಗಾಲಕ್ಕೆ ಅಕ್ಕಿಯ ಸಮಸ್ಯೆ ಬಗೆಹರಿಯುತ್ತದೆ. +ಹಳ್ಳಿಗಳಿಗೆ ಹೊರಡುವಾಗ ಹೆಂಗಸರೆಲ್ಲ ಒಟ್ತಿಗೇನೆ ಹೋಗುತ್ತಾರೆ. ಊರ ಟೋಲಗೇಟಿನ ಬಳಿ ಮುಖ್ಯ ರಸ್ತೆ ಕಾಲು ದಾರಿಗಳಾಗಿ ಒಡೆದುಕೊಳ್ಳುತ್ತದೆ. ಒಂದೊಂದು ಹಳ್ಳಿ ಒಂದೊಂದು ದಿಕ್ಕಿಗೆ ಇದ್ದುದರಿಂದ- +“ಬರತೀನಿ ಕತ್ರೀನ” +“ಬರತೀನಿ ಮೇರಿ” +” ಬರತೀನಿ ರಂಗಿ” ಎಂದು ಕೂಗಿ ಹೇಳಿ ಎಲ್ಲ ಚದುರುತ್ತಾರೆ. ಆದರೆ ಮೀನು ಹೊತ್ತು ಅಷ್ಟು ದೂರ ಹೋದ ರಂಗಿ ಗಕ್ಕನೆ ತಿರುಗಿ ನಿಲ್ಲುತ್ತಾಳೆ. +“ಮೇರಿ..ನಿನಗೆ ಹೇಳಿದ್ದಲ್ವ?” +“ಏನು..ನೀನು ಹೇಳಿದ್ದು..” +“ನನ್ನ ರಂಗಿ ಅಂತ ಕರೀಬೇಡ ಅಂತ..” +“ಓ! ಮರೆತು ಹೋಯ್ತು ಕಣೆ ರಂಗಿ..” +ಮತ್ತೆ ಈರ್ವರೂ ನಗುತ್ತಾರೆ. +“ನಿನ್ನ ನಾಲಿಗೆಗೆ ಬರೆ ಹಾಕಬೇಕು ನೋಡು” ಅನ್ನುತ್ತಾಳೆ ಫ಼್ಲೊರಿನಾ ಮುಂಡಿಗೆ ಪೊದೆಗಳ ಆಚೆಗೆ ಮರೆಯಾಗುತ್ತ. +ಬಿದ್ರಳ್ಳಿಗೆ ಹೋಗುವ ಕಾಲುದಾರಿ ಹಿಡಿದಾಗ ಶಾಲೆಗೆ ಹೊರಟ್ಯ ಮಕ್ಕಳು ಎದುರಾಗುತ್ತಾರೆ. +“ಶಾಲೆಗಾ?” ಎಂದು ಕೇಳುತ್ತಾಳೆ ಫ಼್ಲೊರಿನಾ. ಮಕ್ಕಳು ಗುರುತಿದ್ದುದರಿಂದ ಹೌದು ಎಂದು ಹೇಳಿ ಮುಂದಾಗುತ್ತಾರೆ. +ಇವಳಿಗೆ ಮಗನ ನೆನಪಾಗುತ್ತದೆ. +ಮಗ ಸದಾ ಓದುತ್ತಿರುತ್ತಾನೆ. ಶಾಲೆಯ ಪುಸ್ತಕಗಳನ್ನು ಮಾತ್ರವಲ್ಲ ಬೇರೆ ಬೇರೆ ಪುಸ್ತಕಗಳನ್ನು ತಂದು ಓದುತ್ತಾನೆ. +ಮೊನ್ನೆ ಮನೆ ಮಂತ್ರಿಸಲು ಬಂದ ಪಾದರಿ ಸಿಕ್ವೇರಾ ಮಗ ಮೇಜಿನ ಮೇಲೆ ರಾಶಿ ಹಾಕಿರುವ ಪುಸ್ತಕಗಳನ್ನು ತಿರುವಿ ಹಾಕಿ- +“ಏನು ಗ್ರೆಗೋರಿ ಇವುಗಳನ್ನೆಲ್ಲ ಓದುತ್ತಾನ? ” ಎಂದು ಕೇಳಿದರು. +“ಹೌದು ಪದ್ರಾಬ..ಅವನಿಗೆ ಓದುವ ಹುಚ್ಚು. ಊಟ, ನಿದ್ದೆ ಕೂಡ ಬಿಟ್ಟು ಓದುತ್ತಾನೆ..” ಎಂದೆ. +“ಪ್ರಾರ್ಥನೆ ಜಪ ಎಲ್ಲ ಮಾಡತಾನೆ ಅಲ್ವೆ?” ಎಂದವರು ಕೇಳಿದರು. +“ಅದನ್ನ ಮರೆಯೋದಿಲ್ಲ..ಮನೇಲಿ ಪ್ರಾರ್ಥನೆ ಹೇಳಿ ಕೊಡುವವನೇ ಅವನು” ಎಂದೆ. +“ಓದಲಿ..ಓದಲಿ..ಏನು ಬೇಕಾದರೂ ಓದಲಿ. ಆದರೆ ಜಪ ಪ್ರಾರ್ಥನೆ ಇಗರ್ಜಿಗೆ ಬರೋದು ಬಿಡಬಾರದು. ದೈವ ಭಕ್ತಿ, ದೈವ ಭೀತಿ ಇರಬೇಕು.” +“ನಮ ಹುಡುಗ ಹಾಗಲ್ಲ ಪದ್ರಾಬಾ” ಎಂದಿದ್ದೆ ತಾನು. +ಆ ಭರವಸೆ ತನಗಿದೆ. ಮಗ ಗ್ರೆಗೋರಿ ದೇವರ ಮೇಲೆ ನಂಬಿಕೆ ಭಕ್ತಿ ಇರಿಸಿಕೊಂಡೇ ದೊಡ್ಡ ಮನುಷ್ಯನಾಗುತ್ತಾನೆ. ನಮಗೆ ಒಳ್ಳೆಯದಾಗಬೇಕು ಅಂದರೆ ದೇವರ ಕೃಪೆ ಬೇಕಲ್ಲವೇ? +ಬಿದ್ರಳ್ಳಿಯ ಹನುಮಂತ ದೇವರ ಗುಡಿಯ ಮುಂದೆ ಇವಳು ಊರನ್ನು ಪ್ರವೇಶಿಸುತ್ತಾಳೆ. ಅವಳನ್ನು ನೋಡಿದ್ದೆ ಹಳ್ಳಿ ಹೆಂಗಸರು- +“ಬಾ ಫ಼್ಲೋರಿ ನಮ್ಮ..ಹೋದವಾರ ನೀ ಬರ್ಲೇ ಇಲ್ಲ” ಎಂದು ಕೇಳುತ್ತಾರೆ. +* +* +* +ಬೋನ ರೆಮೇಂದಿಯರ ಮಗ ಫ಼ಿಲಿಪ್ಪ ಮಾತ್ರ ಸಾನಬಾವಿ ಪೆದ್ರುವಿನ ಮಗನಿಗಿಂತ ಚಿಕ್ಕವ. ಪ್ರೌಢಶಾಲೆ ಮುಗಿಸಿದ ಮಗ ಆಗಾಗ್ಗೆ ಬಂದು ಅಂಗಡಿಯಲ್ಲಿ ಕೂಡುವುದು ತುಸು ಅನುಕೂಲಕರವೆನಿಸಿತು ಬೋನನಿಗೆ. ಅವನಿಗೂ ಈಗ ವಯಸ್ಸಾಗುತ್ತ ಬಂದಿತ್ತಲ್ಲವೆ? +ಹೆಂಡತಿ ರೆಮೇಂದಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಬೋನನಿಗೆ ಅವಳ ಮೇಲಿನ ಆಸಕ್ತಿ ಒಂದಿಷ್ಟು ಕಡಿಮೆಯಾಗಿರಲಿಲ್ಲ. ಮದುವೆಯಾಗಿ ಈಗ ಹಲವು ವರ್ಷಗಳಾಗಿದ್ದರೂ ರೆಮೇಂದಿ ಹಿಂದಿನಂತೆಯೇ ಉತ್ಸಾಹದ ಬುಗ್ಗೆಯಾಗಿದ್ದಳು. ಫ಼ಿಲಿಪ್ಪ ಹುಟ್ಟುವುದಕ್ಕೂ ಮೊದಲು ಒಂದು ಬಾರಿ ಮೈ ಇಳಿದು ಕತ್ರೀನ ಬಂದು ಅವಳನ್ನು ನೋಡಿಕೊಂಡಿದ್ದಳು. ಫ಼ಿಲಿಪ್ಪ ಹುಟ್ಟಿದಾಗ ಬಾಣಂತನ ಮಾಡಿದವಳು ಕೂಡ ಅವಳೇನೆ. ಆದರೆ ಮತ್ತೆ ಕೆಲ ವರ್ಷಗಳ ಹಿಂದೆ ಎರಡನೇ ಬಾರಿ ಮೈ ಇಳಿದಾಗ ಕತ್ರೀನಬಾಯಿ ಇರಲಿಲ್ಲ. ಊರ ತುಂಬ ನರ್ಸಿಂಗ ಹೋಂಗಳು ಆದದ್ದು ಒಂದು ಕಾರಣವಾದರೆ ಕತ್ರೀನಬಾಯಿ ಮನೆ ಜಗಲಿಯ ಮೇಲೆ ಕುಳಿತು ಜಪಸರದ ಮಣೆ ಎಣಿಸುತ್ತಲೇ ಪ್ರಾಣ ಬಿಟ್ಟದ್ದು ಮತ್ತೊಂದು ಕಾರಣವಾಗಿತ್ತು. +ಇಷ್ಟಾದರೂ ರೆಮೇಂದಿ ಸೊರಗಿಲ್ಲ. +ಪಾದರಿ ಗೋನಸ್ವಾಲಿಸ್ ಇದ್ದಾಗ ಅಡಿಗೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದ ರೆಮೇಂದಿ ಅಂದು ಹೇಗಿದ್ದಳೋ ಇಂದೂ ಹಾಗೆಯೇ ಇದ್ದಾಳೆ. ಆದರೆ ಅವಳಲ್ಲಿ ಏನೋ ಗಾಂಭೀರ್ಯ ಬಂದಿದೆ. ನಡೆಯುವಾಗ ಆ ಚೆಲ್ಲುತನವಿಲ್ಲ. ನಿಧಾನವಾಗಿ ತೂಗಿ ನೋಡಿ ಹೆಜ್ಜೆ ಹಾಕುತ್ತಾಳೆ. ತಂದೆ ಸತ್ತ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನೂ ಕಳೆದುಕೊಂಡ ಆಕೆಯ ಮೇಲೆ ಮನೆಯನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯೂ ಬಿದ್ದು ಈ ಗಾಂಭೀರ್ಯ ಬಂದು ಅವಳಲ್ಲಿ ಸೇರಿಕೊಂಡಿದೆ. +ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅವಳಲ್ಲಿ ಬೇಸರವಿದೆ. +ಬಟ್ಲರ ಫ಼ರಾಸ್ಕನ ಆಗಮನದ ನಂತರದ ಕಾಣಿಕೆ ಡಬ್ಬಿಯ ಪ್ರಕರಣ. ನಂತರ ವಲೇರಿಯನ ಡಯಾಸ ಮಿರೋಣ್ ಆದದ್ದು ಅವಳ ಮನಸ್ಸಿಗೆ ಬಂದಿಲ್ಲ. ಇದು ತನ್ನ ಗಂಡನಿಗೆ ಮಾಡಿದ ಅವಮಾನವೆಂದೇ ಅವಳು ತಿಳಿದುಕೊಂಡಿದ್ದಾಳೆ. +” ಇದನ್ನೆಲ್ಲ ನೀವು ಸುಮ್ನೆ ಸಹಿಸಿಕೊಂಡು ಹೋಗಬಾರದು” ಎಂದು ಹಲವು ಬಾರಿ ಹೇಳಿದ್ದಾಳೆ. +ಹಿಂದೆ ಬಟ್ಲರ ಹೆಂಡತಿ ಎಂದು ಕರೆಸಿಕೊಳ್ಳಲು ಕೊಂಚ ಹಿಂಜರಿಯುತ್ತಿದ್ದ ಆಕೆ ಈಗ ಜವಳಿ ಅಂಗಡಿ ಸಾಹುಕಾರನ ಹೆಂಡತಿ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಾಳೆ. +ಗಂಡ ಮನೆಗೆ ಬಂದು ಊಟ ಮುಗಿಸಿ ಮತ್ತೆ ಅಂಗಡಿಗೆ ಹೊರಟಾಗ ರೇಮೇಂದಿ- +“ಏನು ಬಿಸಿಲಲ್ಲಿ ಹೊರಟು ಬಿಟ್ರಿ” ಎಂದು ತುಸು ಧ್ವನಿ ಏರಿಸುತ್ತಿದ್ದಳು. +“ಬಾಳಾ..ಮಧ್ಯಾಹ್ನದ ನಂತರ ನೀನು ಸ್ವಲ್ಪ ಅಂಗಡಿ ನೋಡಿಕೋ” ಎಂದು ಮಗನಿಗೆ ಹೇಳುತ್ತಿದ್ದಳು. +ಆತ ಕೂಡ ವ್ಯಾಪಾರದಲ್ಲಿ ಪಳಗಿದ್ದ. +ಜವಳಿ ಅಂಗಡಿ ಈಗ ವಿಸ್ತಾರಗೊಂಡಿತ್ತು. ಅಂಗಡಿಯಲ್ಲಿ ಮೂರು ನಾಲ್ಕು ಜನ ಹುಡುಗರೂ ಇದ್ದರು. ತನ್ನ ನಂತರ ಯಾರಾದರೂ ಅಂಗಡಿ ನೋಡಿಕೊಳ್ಳಲು ಬೇಕಲ್ಲ ಎಂದು ಬೋನ ಮಗನನ್ನು ಕಾಲೇಜಿಗೆ ಕಳುಹಿಸಲಿಲ್ಲ. ಅದು ಈಗ ಅನುಕೂಲವೇ ಆಯಿತು. +ಊಟ ಮಾಡಿ ಮಲಗಿಕೊಂಡ ಬೋನ ನಾಲ್ಕು ಗಂಟೆಗೆ ಏಳುತ್ತಾನೆ. ರೆಮೇಂದಿ ಬಿಸಿಬಿಸಿ ಕಾಫ಼ಿ ಮಾಡಿ ತಂದು ಗಂಡನ ಕೈಗೆ ಕೊಡುತ್ತಾಳೆ. +ಆತ ಹೊರ ಹೋಗಲು ಸಿದ್ಧನಾಗುತ್ತಿರಲು ರೇಮೇಂದಿ ಒಂದೆರಡು ಸಾಮಾನಿನ ಹೆಸರು ಹೇಳಿ- +“ಬಾಳು ಕೈಲಿ ಈ ಸಾಮಾನು ಕಳಿಸಿಕೊಡಿ” ಅನ್ನುತ್ತಾಳೆ. +“ಮತ್ತೆ?” ಎಂದು ಅವಳ ಮುಖ ನೋಡುತ್ತಾನೆ ಬೋನ. +“ಏನದು?” ಹೊಸದಾಗಿ ನೋಡತಿದೀರೋ ಹೇಗೆ ನನ್ನನ್ನು ? ಅವಳು ಕೆಣಕುತ್ತಾಳೆ. +“ನೀನು ನನಗೆ ಯಾವತ್ತೂ ಹೊಸಬಳೆ” ಎಂದು ನಗುತ್ತಾನೆ ಬೋನ. +ರಸ್ತೆಯುದ್ದಕ್ಕೂ ಹಲವರನ್ನು ಮಾತನಾಡಿಸುತ್ತ ಬೋನ ಅಂಗಡಿಗೆ ಬರುತ್ತಾನೆ. +ಮಗನ ಎದುರು ಕುಳಿತು ನಗುತ್ತಿದ್ದ ಹುಡುಗಿಯೊಬ್ಬಳು ಧಡಬಡಿಸಿ ಎದ್ದು- +“ನಾನು ಬರತೀನಿ” ಎಂದು ಫ಼ಿಲಿಪ್ಪನಿಗೆ ಹೇಳಿ ಹೊರಡುತ್ತಾಳೆ. +ಫ಼ಿಲಿಪ್ಪ ತಾನು ಕುಳಿತಲ್ಲಿಂದ ಎದ್ದು ತಂದೆಗೆ ಜಾಗ ಮಾಡಿಕೊಡುತ್ತ- +“ಅಲೆಕ್ಸ ಪಿಂಟೋ ಮಗಳು ಪಪ್ಪ..” ಎಂದು ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ. +“ಹೌದು..ಅಲ್ವೆ?” +ಬೋನ ಮಗನ ಮುಖದ ಮೇಲಿನ ಸಂಭ್ರಮವನ್ನು ಗಮನಿಸುತ್ತಾನೆ. +ಪಿಂಟೋ ಮಗಳು ಇವನ ಜವಳಿ ಅಂಗಡಿಯಿಂದ ಇಳಿದು ನಾಗಪ್ಪನ ಸೈಕಲ್ ಶಾಪ್ ಪಕ್ಕದ ಪಿಂಟೋ ಆಟೋ ಸ್ಪೇರ್‍ಸ ಅಂಗಡಿ ಮೆಟ್ಟಲು ಹತ್ತುತ್ತಾಳೆ. +-೯- +ಊರಿನ ಪುರಸಭೆಯ ಚುನಾವಣೆ ಬರುತ್ತದೆ. ಈ ಬಾರಿ ಕೆಲ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಗೆ ಧುಮುಕುತ್ತಿವೆ. ಫ಼ಾತಿಮಾ ನಗರ, ಜೋಸೆಫ಼ ನಗರ ಎರಡೂ ಸೇರಿ ಆದ ಮೂರನೇ ಡಿವಿಜನ್ನಿನಿಂದ ಯಾರನ್ನು ನಿಲ್ಲಿಸುವುದು ಎಂದು ಕಾಂಗ್ರೆಸ್ಸಿನವರು ಅಭ್ಯರ್ಥಿಯನ್ನು ಹುಡುಕ ಹೊರಟಾಗ ಅವರ ಕಣ್ಣಿಗೆ ಅಂತೋನಿ ಬೀಳುತ್ತಾನೆ. ಪಾಸ್ಕೋಲ ಮೇಸ್ತ್ರಿಯ ಮಗ. ಲೋಕೋಪಯೋಗಿ ಇಲಾಖೆ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರ ಅನಿಸಿಕೊಂಡು ಹೆಸರು ಮಾಡಿರುವಾತ. ಇವನಿಗೆ ಜಾತಿ ಬೆಂಬಲವೂ ಸಿಗುತ್ತದೆ. ಇವನನ್ನು ಏಕೆ ನಿಲ್ಲಿಸಬಾರದು ಎಂದು ಕಾಂಗ್ರೆಸ ಖಾಸಿಂ ಸಾಹೇಬರು ಪಾಸ್ಕೋಲನ ಮನೆಗೆ ಬಂದದ್ದೂ ಆಯಿತು. ಅವರ ಜತೆ ಇನ್ನೂ ಕೆಲವರು ಇದ್ದರು. +“ಅಂತೋನಿಯವರೆ..ನಾವು ಒಂದು ಇಚಾರಕ್ಕೆ ಬಂದಿದ್ದೇವೆ..ನೀವು ಆಗಲ್ಲ ಅನ್ನಬಾರದು..” ಎಂದು ಪೀಠಿಕೆ ಹಾಕಿ ವಿಷಯಕ್ಕೆ ಬಂದರು ಖಾಸಿಂ ಸಾಹೇಬರು. +ಚುನಾವಣೆ ಅಂದ ಕೂಡಲೆ ಅಂತೋನಿ ಬೆಚ್ಚಿ ಬಿದ್ದ. ಕಾಲಬಳಿ ಹಾವು ಸುಳಿದ ಹಾಗೆ ಪರದಾಡಿದ. +“ಅಲ್ಲ ಯೋಚಿಸಿ..ಎಲ್ಲ ಜಾತಿಯವರೂ ನಿಲ್ಲತಾರೆ ಅಂದ ಮೇಲೆ ನಿಮ್ಮವರೂ ನಿಲ್ಲಬೇಕು..ನಿಮ್ಮವರ ಓಟುಗಳಂತೂ ಗ್ಯಾರಂಟಿ..ಬೇರೆಯವರೂ ನಿಮ್ಮ ಕೈ ಬಿಡೋಲ್ಲ..ಹುಂ ಅನ್ನಿ” ಎಂದು ಉಳಿದವರೂ ಒತ್ತಾಯ ಮಾಡಿದ್ದರಿಂದ ಅಂತೋನಿ- +“ನೋಡೋಣ..ಒಂದೆರಡು ದಿನ ಕೊಡಿ” ಎಂದ. +“ಆಯ್ತು..ನಾಡಿದ್ದು ನಾವು ಬರತೇವೆ” ಎಂದು ಹೇಳಿ ಖಾಸಿಂ ಸಾಹೇಬರು ತಮ್ಮ ಸಂಗಡಿಗರ ಜತೆ ಹೋದರು. +ಆಂತೋನಿಯ ಮನಸ್ಸಿನಲ್ಲಿ ನಿಧಾನವಾಗಿ ಒಂದು ಬೀಜ ಮೊಳಕೆಯೊಡೆಯತೊಡಗಿತು. ಪುರಸಭೆ ಸದಸ್ಯನಾಗುವುದು ಸಣ್ಣ ವಿಷಯವಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ, ಜಾತಿಯವರೆಲ್ಲ ಕೈಹಿಡಿದರೆ ಇದು ಸುಲಭ. ಈ ಬಗ್ಗೆ ಒಂದಿಬ್ಬರಲ್ಲಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬಹುದಲ್ಲವೆ? +ಅಂತೋನಿ ಮೊದಲು ತನ್ನ ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದ. +“ನಿಲ್ಲು” ಎಂದು ಪಾಸ್ಕೋಲ ತಾನೇ ಹುರುಪುಗೊಂಡ. ಅವನದೊಂದು ಆಸೆ ಹಾಗೆಯೇ ಬತ್ತಿ ಹೋಗಿತ್ತು. ಶಿವಸಾಗರದ ಕ್ರೀಸ್ತುವರ ನಡುವೆ ತಾನು ಪ್ರಮುಖನಾಗಬೇಕೆಂದು ಅವನು ಏನೆಲ್ಲ ಮಾಡಿದ್ದ. ಸಿಮೋನನನ್ನು ಹಿಂದೆ ಹಾಕಬೇಕೆಂಬ ಅವನ ಯತ್ನ ಫ಼ಲಕಾರಿಯಾಗಲಿಲ್ಲ. ಕೊನೆಗೆ ಸಿಮೋನ ಗುರ್ಕಾರ ಆದ. ಈಗ ಅವನ ಹಿರಿಯ ಮಗ ತಂದೆಯ ಸ್ಥಾನಕ್ಕೆ ಬರುವ ಯತ್ನದಲ್ಲಿದ್ದಾನೆ. ಅಲ್ಲದೆ ಈಗೀಗ ಗುರ್ಕಾರನಿಗೆ ಹಿಂದಿನ ಗೌರವವಿಲ್ಲ. ಅವನ ಮಾತನ್ನು ಯಾರೂ ಕೇಳುವುದಿಲ್ಲ. ಅವನಿಗೆ ಗೊತ್ತಿಲ್ಲದೇನೆ ಇಗರ್ಜಿಯಲ್ಲಿ ಏನೇನೋ ನಡೆದುಹೋಗುತ್ತದೆ. ಈಗ ಗೌರವ ಇರುವುದು ಇಂತಹ ಸ್ಥಾನಗಳಿಗೆ. ಮಗ ನಾಳೆ ಗೆದ್ದು ಬಂದರೆ ತನಗೆ ತುಂಬಾ ಗೌರವ ಸಿಗುತ್ತದಲ್ಲವೇ? +“..ನಿಲ್ಲು..ಹಾಗೇ ಗುರ್ಕಾರ ಮಾಮನನ್ನು ಬೋನ ಸಾಹುಕಾರರನ್ನು ಪಾದರಿಗಳನ್ನು ಕಂಡು ಬಾ..” ಎಂದ ಪಾಸ್ಕೋಲ. +ಅಂತೋನಿ ಸಿಮೋನನ ಮನೆಗೆ ಹೋದ. +ಎಲೆ ಅಡಿಕೆಯನ್ನು ಕೊಟ್ಟಣಕ್ಕೆ ಹಾಕಿ ಕುಟ್ಟುತ್ತಿದ್ದ ಸಿಮೋನ.. +“ಬಾ..” ಎಂದ. +“ಚೆನ್ನಾಗಿದೀಯ? ಇಷ್ಟು ದೂರ?” ಎಂದು ಕೇಳಿದ. +“ಹೌದು, ನಮ್ಮವರಿಗೆ ಮನೆ ಕಟ್ಟಲಿಕ್ಕೆ ಜಾಗಬೇಕು. ಮುನಿಸಿಪಾಲಿಟಿಗೆ ಹೋದರೆ ನಮ್ಮವರ ಕೆಲಸ ಕೂಡಲೇ ಆಗಬೇಕು ಅಂದರೆ ನಮ್ಮವರು ಯಾರಾದ್ರು ಅಲ್ಲಿ ಇರಬೇಕು. ಕಾನ್ವೆಂಟಿನವರು ಬಿದರಳ್ಳಿಗೆ ಹೋಗುವ ದಾರೀಲಿ ಜಾಗ ಕೇಳಿದಾರೆ ಅದು ಮಂಜೂರಾಗಬೇಕು..ನೀನು ನಿಲ್ಲು ..ನಾವು ಇದೀವಿ..” ಎಂದು ಆತ ತನ್ನ ಅಭಿಪ್ರಾಯ ಹೇಳಿದ. +ಈ ಹಿಂದೆ ಈರ್ವರು ಈ ಡಿವಿಜನ್ನಿನಿಂದ ನಿಂತು ಗೆದ್ದುಬಂದಿದ್ದರು. ಇವರಿಂದ ಹೇಳಿಕೊಳ್ಳುವ ಕೆಲಸವೇನೂ ಆಗಿರಲಿಲ್ಲ. ಇವರು ಬೇರೆ ಕೋಮಿನವರು ಆಗಿದ್ದರಿಂದ ಕ್ರೀಸ್ತುವರಿಗೆ ಅನುಕೂಲವಾಗಿರಲಿಲ್ಲ. +ಅಂತೋನಿ ಹಾಗೆಯೇ ಬೋನನನ್ನು ಕಂಡ. +ಅವನೂ ಸಂತೋಷ ವ್ಯಕ್ತಪಡಿಸಿದ. +“ನನ್ನ ಬೆಂಬಲ ನಿನಗಿದೆ..ನೀನೂ ಸ್ವಲ್ಪ ಹಣ ಖರ್ಚು ಮಾಡಬೇಕಾಗಿ ಬರಬಹುದು..ಆದರೆ ಧೈರ್ಯಗೆಡಬೇಡ..ನಿಲ್ಲು..” ಎಂದು ಆತ ಅಂತೋನಿಯವರನ್ನು ಹುರಿದುಂಬಿಸಿದ. +* +* +* +ಕ್ರಿಸ್ಮಸ್ ಗೆ ಕೆಲವೇ ದಿನಗಳಿದ್ದುದರಿಂದ ಪಾದರಿ ಸಿಕ್ವೇರಾ ಇಗರ್ಜಿಗೆ ಸುಣ್ಣ ಬಣ್ಣ ತೆಗೆಸುವಲ್ಲಿ ತೊಡಗಿದ್ದರು. ಗುರ್ಕಾರ ಅಲೆಕ್ಸ ಪಿಂಟೋ ಬಣ್ಣ ತೆಗೆಯುವವರಿಗೆ ಸಲಹೆ ನೀಡುತ್ತ ಇಗರ್ಜಿಯ ಹೊರಗೆ ಒಳಗೆ ತಿರುಗಾಡುತ್ತಿದ್ದ. ಪಾದರಿ ಸಿಕ್ವೇರಾ ಬಂದ ನಂತರ ಕ್ರಿಸ್ಮಸ್ ಹಬ್ಬಕ್ಕೆ ಒಂದು ಜಾತ್ರೆಯ ರೂಪ ಬಂದಿತು. ಇಗರ್ಜಿಯ ಬಲ ಭಾಗದಲ್ಲಿ ದೊಡ್ಡ ಪ್ರಮಾಣದ ಕ್ರಿಬ್ ತಯಾರಿಸಿ ಅಲ್ಲಿ ಜೋಸೆಫ಼ ಮೇರಿಯರ ಮೂರು ನಾಲ್ಕು ಅಡಿ ಎತ್ತರದ ಪ್ರತಿಮೆ ಇರಿಸಿ, ಇವರ ನಡುವೆ ಬಾಲ ಏಸುವನ್ನು ಮಲಗಿಸಿ ಕ್ರಿಸ್ಮಸ್ ಹಬ್ಬದ ಮಹತ್ವದ ಘಟನೆಯನ್ನು ಅತಿ ವರ್ಣರಂಜಿತವಾಗಿ ಸೃಷ್ಟಿ ಮಾಡಲಾಗುತ್ತಿತ್ತು. ಕ್ರಿಬ್ಬಿನಲ್ಲಿ ದನಕರು, ಕುರಿಗಳು, ದನಗಾಹಿಗಳು, ಸೇತುವೆ, ಕಾಡು ಹೊಲ ಗದ್ದೆಗಳು, ಹಳ್ಳಿ ಗುಡಿಸಲುಗಳು ರೂಪ ತಳೆಯುತ್ತಿದ್ದವು. ವಿದ್ಯುತ್ ದೀಪಗಳಿಂದ ಇದನ್ನು ಸಜ್ಜುಗೊಳಿಸಿ ಊರಿನ ಜನರನ್ನೇ ಇಲ್ಲಿಗೆ ಸೆಳೆದು ತರುತ್ತಿದ್ದರು ಪಾದರಿ ಸಿಕ್ವೇರಾ. ಈ ಬಾರಿ ಮತ್ತೆ ಏನು ಹೊಸದಾಗಿ ಮಾಡಬೇಕು ಎಂಬ ಬಗ್ಗೆ ವಿಚಾರ ಮಾಡುತ್ತ ನಿಂತಿದ್ದ ಪಾದರಿ ಸಿಕ್ವೇರಾ ಅವರ ಬಳಿ ಸಾರಿ ಅಂತೋನಿ ಕೈ ಮುಗಿದ. +“ಬೆಸಾಂವಂದಿಯಾ ಫ಼ಾದರ್..” ಅವರು ಕೊಂಚವೇ ತಿರುಗಿ ನೋಡಿ. +“ಹುಂ..ಏನು?” ಎಂದು ಕೇಳಿದರು. +ಕೈ ಎತ್ತಿ ಶಿಲುಬೆ ಗುರುತು ಮಾಡಿ ಆಶೀರ್ವದಿಸುವ ಪದ್ಧತಿಯನ್ನು ಇವರು ರೂಢಿಸಿಕೊಂಡಿರಲಿಲ್ಲ. +ಅಂತೋನಿ ತುಸು ಹೊತ್ತು ಅವರ ಮಗ್ಗುಲಲ್ಲಿ ನಿಂತಿದ್ದ. ತಾನು ಚುನಾವಣೆಗೆ ನಿಲ್ಲಲಿರುವ ವಿಷಯ ಹೇಳಿ ಅವರ ಅಭಿಪ್ರಾಯ ಬೆಂಬಲ ತಿಳಿದುಕೊಳ್ಳಲು ಆತ ಬಂದಿದ್ದ. ಪಾದರಿಗಳು ಹುಂ ಎಂದರೆ ಅವರ ಸಹಕಾರ ಸಿಕ್ಕರೆ ತನ್ನ ಗೆಲುವು ಸುಲಭ ಎಂಬುದು ಅವನ ಅಭಿಪ್ರಾಯವಾಗಿತ್ತು. ಆದರೆ ಈ ವಿಷಯವನ್ನು ಇಲ್ಲಿ ಹೊರಗೆ ಹೇಗೆ ಹೇಳುವುದು? ಅವರು ಬಂಗಲೆಯಲ್ಲಿ ಇದ್ದಿದ್ದರೆ ಹೇಳಲು ಅನುಕೂಲವಾಗುತ್ತಿತ್ತು. +“ಒಂದು ವಿಷಯ ಮಾತನಾಡಬೇಕಿತ್ತು ಫ಼ಾದರ್” ಎಂದ ಅಂತೋನಿ. +ಈಗ ಅವರು ಮುಖ ತಿರುಗಿಸಿ ಅವನನ್ನು ನೋಡಿದರು. +“ಏನದು?” +ಅಂತೋನಿ ಮತ್ತೂ ಕಾದ. ಅವರು ಹತ್ತು ನಿಮಿಷದ ಮಟ್ಟಿಗೆ ಬಂಗಲೆಗೆ ಬಂದಿದ್ದರೆ ಆಗುತ್ತಿತ್ತಲ್ಲ. +“ಏನು ಹೇಳು..” +ಅಂತೋನಿ ಹೇಳುವುದೇ, ಸೈ ಎಂದು ನಿರ್ಧರಿಸಿದ. +“ಫ಼ಾದರ್ ನಾನು ಚುನಾವಣೆಗೆ ನಿಲ್ಲಬೇಕು ಅಂತ ಯೋಚನೆ ಮಾಡತಿದೀನ..ನಿಮ್ಮ ಆಶೀರ್ವಾದ ಬೆಂಬಲ ಬೇಕು..” +ಅವರು ನಿಂತಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಹೋದರು. ಗಂಟೆ ಗೋಪುರದವರೆಗೂ ಹೋಗಿ ಅಲ್ಲಿ ನಿಂತು ಇಗರ್ಜಿಯ ಬಲ ಮೂಲೆಯನ್ನು ನೋಡಿ ತಿರುಗಿ ಬಂದರು. ಅಂತೋನಿ ಅವರ ಹಿಂದೆಯೇ ಹೆಜ್ಜೆ ಹಾಕಿದ. +“ಯೋಚನೆ ಮಾಡೀದೀಯ? ಅಲ್ಲಿ ಹೋಗಿ ಏನೇನು ಮಾಡಬೇಕು ಗೊತ್ತಲ್ಲ? ಪುರಸಭೆ ಸದಸ್ಯತ್ವ ಅಂದರೆ ಸುಮ್ಮನೆ ಆಗೋದಿಲ್ಲ..ಅದು ಯಾರೂ ಮಾಡಬಹುದಾದ ಕೆಲಸ ಅಲ್ಲ..” +ಅಂತೋನಿಯ ಮುಖ ಬಿಳಿಚಿಕೊಳ್ಳತೊಡಗಿತು. ಗಂಟೆಗೋಪುರದ ನೆರಳಿನಲ್ಲಿ ನಿಂತಿರುವ ತನ್ನನ್ನು ಆ ನೆರಳು ನುಂಗುತ್ತಿದೆಯೇನೋ ಎಂದು ಆತ ಗಾಬರಿಗೊಂಡ. ಪಾದರಿ ಸಿಕ್ವೇರಾ ಅವರ ಮಾತಿನ ಧಾಟಿ, ಬಳಸಿದ ಶಬ್ದಗಳ ಧ್ವನಿ ಹಿತಕರವಾಗಿರಲಿಲ್ಲ. ಇದು ನಿನಗೆ ಹೆಳಿದ್ದಲ್ಲ ಎಂಬುದನ್ನು ಈ ರೀತಿಯಲ್ಲಿ ಅವರು ಹೇಳುತ್ತಿದ್ದಾರೆ ಎಂಬುದು ಅವನಿಗೆ ಖಚಿತವಾಯಿತು. ಆದರೂ ಅವನೆಂದ- +“ಫ಼ಾದರ್..ದೇವರ ಆಶೀರ್ವಾದ ಇದ್ದರೆ ಯಾವ ಕೆಲಸಾನೂ ದೊಡ್ಡದಲ್ಲ ಅಲ್ಲವೆ? ನೀವು ದೇವರ ಆಶೀರ್ವಾದಾನ ನನಗೆ ದೊರಕಿಸಿಕೊಡಬೇಕು..” +“ನೀನು ಪ್ರಯತ್ನಪಡು..ನಾವು ಪಾದರಿ ಮಾದರಿಗಳು ಈ ರಾಜಕೀಯದಲ್ಲಿ ಪ್ರವೇಶ ಮಾಡಬಾರದು..ನಿನಗೆ ಒಳ್ಳೆಯದಾಗಲಿ..” ಎಂದರವರು ಪ್ಯಾಂಟಿನ ಕಿಸೆಯಿಂದ ಬೀಗದ ಕೈ ಗೊಂಚಲು ತೆಗೆದು ಬಂಗಲೆಯತ್ತ ತಿರುಗುತ್ತ. +ಅಂತೋನಿ ಅಲ್ಲಿ ನಿಲ್ಲಲಿಲ್ಲ. +ಅವನಂತೂ ಒಂದು ನಿರ್ಧಾರ ಮಾಡಿದ್ದ. ಪುರಸಭೆಯ ಬರಲಿರುವ ಚುನಾವಣೆಗೆ ನಿಲ್ಲುವುದೇ ಸರಿ ಎಂಬ ತೀರ್ಮಾನಕ್ಕೂ ಬಂದಿದ್ದ. ಮತ್ತೆ ಮನೆಗೆ ಬಂದ ಖಾಸಿಂ ಸಾಹೇಬರಿಗೆ ತನ್ನ ನಿರ್ಧಾರ ಹೇಳಿದ. ಕೇರಿಯ ಎಲ್ಲರಿಗೂ ವಿಷಯ ತಿಳಿಯಿತು. ಎಲ್ಲರೂ ಅಂತೋನಿಯನ್ನು ಮುಂಚಿತವಾಗಿಯೇ ಅಭಿನಂದಿಸಿದರು ಕೂಡ. +ಆದರೆ ಅಂತೋನಿ ಚುನಾವಣಾ ಅಧಿಕಾರಿಗೆ ಅರ್ಜಿ ನೀಡಿದ ಒಂದೇ ದಿನದಲ್ಲಿ ಮೂರನೇ ಡಿವಿಜನ್ನಿನಿಂದ ಸೋಷಲಿಸ್ಟ +ಪಕ್ಷದಿಂದ ಜಾನ ಡಯಾಸ ಕೂಡ ಅರ್ಜಿ ಕೊಂಡದ್ದು ತಿಳಿದು ಬಂದು ಕಾಂಗ್ರೆಸ್ ಪಕ್ಷದವರು ಗೊಂದಲಗೊಂಡರು. +“ಬೇರೆ ಯಾರೇ ಆಗಿದ್ರು ನಾವು ಯೋಚನೆ ಮಾಡುತಿರಲಿಲ್ಲ..ಆದರೆ ನಿಮ್ಮ ಜಾತಿಯವರೇ ಬೇರೊಬ್ಬರು ನಿಂತರಲ್ಲ..ಓಟು ಒಡೆದು ಹೋಗಲ್ವೇ” ಎಂದವರು ಮೈ ಪರಚಿಕೊಂಡರು. +“ಡಯಾಸರಿಗೆ ಉಮೇದುವಾರಿಕೇನ ಹಿಂದಕ್ಕೆ ತೆಗೆದುಕೊಳ್ಳಲು ಹೇಳಿ..ನಿಮ್ಮ ನಿಮ್ಮಲ್ಲಿ ಈ ಪೈಪೋಟಿ ಬೇಡ.” +– ಎಂಬ ಮಾತುಗಳೂ ಕೇಳಿ ಬಂದವು. +ಡಯಾಸ ನಿರ್ಧಾರ ನಂತರದ್ದು ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಆದರೂ ಆತ ಹಿಂದೆ ಸರಿಯಲಿಲ್ಲ. ಬೋನ, ಸಿಮೋನ, ಪಾಸ್ಕೋಲ ಇನ್ನೂ ಕೆಲವರು ಈ ಬಗ್ಗೆ ಯತ್ನಿಸಿದರು. ಈ ಬಗ್ಗೆ ಇನ್ನೂ ವಿವರವಾಗಿ ಪರಿಶೀಲಿಸಿದಾಗ ಪಾದರಿ ಸಿಕ್ವೇರಾ ಡಯಾಸಗೆ ಬೆಂಬಲ ಕೊಡುತ್ತಿರುವುದೂ ತಿಳಿದುಬಂದಿತು. +“ನೀವು ಹಿಂದೆ ಸರಿಬೇಡಿ..ನಾವು ಫ಼ೈಟ್ ಕೊಡೋಣ” ಎಂದರು ಅಂತೋನಿಯ ಪರವಾಗಿದ್ದ ಕೇರಿಯ ಯುವಕರು. +ಚುನಾವಣೆ ಬರುತ್ತಿದೆ ಅನ್ನುವಾಗ ಮೂರನೆ ಡಿವಿಜನ ರಣರಂಗವಾಯಿತು. +“ಇದೇನ್ರಿ ಹೇಗೆ ನೀವು ನೀವೇ ಜಗಳ ಮಾಡೋದು” ಎಂದು ಇತರೆ ಕೋಮಿನವರು ಅಂತೋನಿ ಹಾಗೂ ಡಯಾಸರ ಮುಖ ನೋಡಿದರು. +ಭಾನುವಾರ ಪಾದರಿ ಸಿಕ್ವೇರಾ ಶರಮಾಂವಂಗೆ ನಿಂತವರು- +“ಚುನಾವಣೆ ಬಂದಿದೆ..ಬುದ್ಧಿವಂತರನ್ನ ಅನುಭವ ಇರುವವರನ್ನ ಆರಿಸಿ” ಎಂದಷ್ಟೇ ಹೇಳಿ ಬೇರೆ ವಿಷಯಕ್ಕೆ ಬಂದರೂ ಅವರು ಭೇಟಿಯಾದ ಎಲ್ಲರಿಗೂ ಡಯಾಸಗೇನೆ ಓಟು ಹಾಕಲು ಹೇಳಿದರು ಎಂಬುದು ಎಲ್ಲರ ಕಿವಿಗೂ ಬಿದ್ದಿತು. +ಸಾಲದ್ದಕ್ಕೆ ಕಾನ್ವೆಂಟಿನ ಸಿಸ್ಟರುಗಳು ಬೇರೆ ಮನೆಮನೆಗೆ ಹೋದವರು ಅಂತೋನಿಗೆ ಏನು ಗೊತ್ತು? ಕಂಟ್ರ್ಯಾಕ್ಟರ್ ಆದ ಕೂಡಲೆ ಎಲ್ಲ ಬರುತ್ತದೆಯೇ ಎಂದೇನೋ ಮಾತನಾಡಿಕೊಂಡದ್ದು ಕೇಳಿ ಬಂದಿತು. +ಅಂತೋನಿ, ಅವನ ಹೆಂಡತಿ, ಅವನ ಗೆಳೆಯರು ಕಾಂಗ್ರೆಸ್ ಸಂಸ್ಥೆ ಪ್ರಚಾರಕ್ಕೇನೂ ಕಡಿಮೆ ಮಾಡಲಿಲ್ಲ. ಆದರೆ ಚುನಾವಣೆ ನಡೆದು ಫ಼ಲಿತಾಂಶ ಹೊರಬಿದ್ದಾಗ ಜಾನಡಯಾಸ ಗೆದ್ದಿದ್ದ. ಅಂತೋನಿ ಸೋತಿದ್ದ. +ಅಂತೋನಿಯನ್ನು ಕಟ್ಟಿಕೊಂಡು ತಿರುಗಾಡಿದ ಕ್ರೀಸ್ತುವ ಯುವಕರು- +“..ಇದು ಯಾಕೆ ಹೀಗಾಯ್ತು ನಮಗೆ ಗೊತ್ತಿದೆ..” ಎಂದು ಹಲ್ಲುಕಡಿದರು. ಮಾಡಿದರು. ಮುಷ್ಟಿ ಬಿಗಿದುಕೊಂಡು, ತುಟಿ ಕಚ್ಚಿಕೊಂಡು ತೋಳಿನ ಸ್ನಾಯುಗಳನ್ನು ಹೊರಳಿಸುತ್ತ, ಅವರು ಮಾತನಾಡಿಕೊಳ್ಳುತ್ತಿದ್ದುದು ಗುರ್ಕಾರ ಸಿಮೋನನ ಕಿವಿಗೆ ಬಿದ್ದಿತು. ಬೋನ ಕೇಳಿಸಿಕೊಂಡ. ಇವರಿಬ್ಬರೂ ಆತಂಕದಿಂದ ಆ ಯುವಕರ ಬಳಿ ಹೋದರು. +“ನೋಡಿ ಹಾಗೆಲ್ಲ ಮಾತನಾಡಬಾರದು..ಡಯಾಸ ಕೂಡ ನಮ್ಮವನೇ ಅಲ್ವೆ..ಅವನೂ ನಮ್ಮ ಕೇರಿಗೆ ನಮ್ಮ ಜನರಿಗೆ ಒಳ್ಳೆಯದು ಮಾಡತಾನೆ..” ಎಂದು ಸಮಾಧಾನ ಹೇಳಿದರು. +ಈ ಚುನಾವಣಾ ಫಲಿತಾಂಶದ ಹಿಂದೆಯೇ ಕ್ರಿಸ್ಮಸ್ ಹಬ್ಬ ಬಂದಿತು. ಮನೆ ಮನೆಯ ಮುಂದೆ ನಕ್ಷತ್ರಗಳು ತೂಗಿ ಬಿದ್ದವು. ಶುಭಾಶಯ ಪತ್ರಗಳು ದೂರದ ನೆಂಟರಿಂದ ಗೆಳೆಯರಿಂದ ಬಂದವು. ಇವರೂ ಆರಿಸಿ ಜನರಿಗೆ ಕಳುಹಿಸಿದರು. ರಾತ್ರಿ ಎರಡು ಗಂಟೆಯವರೆಗೆ ಮನೆ ಮಂದಿ ಕುಳಿತು ಚಕ್ಕುಲಿ, ಶಂಕರ ಪೊಳೆ, ಉಂಡೆ, ಚೌಡೆ ಕಿಡಿಯೆ, ಸುಕ್ರುಂಡೆ, ನೆವ್ರೆ ಎಂದೆಲ್ಲ ತಿಂಡಿಗಳನ್ನು ಮಾಡಿದರು. ಹೊಸಬಟ್ಟೆ ಹೊಲಿಸುವ ಓಡಾಟ, ಮನೆಗೆ ಸುಣ್ಣ ಬಣ್ಣ ಮಾಡಿಸುವುದು. ಹೀಗೆ ಜನ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದರು. +ಡಿಸೆಂಬರ ಇಪ್ಪತ್ನಾಲ್ಕರ ರಾತ್ರಿ ಹತ್ತು ಗಂಟೆಗೇನೆ ಇಗರ್ಜಿಯ ಗಂಟೆ ಬಾರಿಸಿತು. ಜಗತ್ತಿನಲ್ಲಿ ಶಾಂತಿ, ಪ್ರೀತಿ, ಕರುಣೆ, ಕ್ಷಮೆ, ದಯೆಯನ್ನು ಬಿತ್ತಲೆಂದು ಬಂದ ದೇವಕುಮಾರನ ಜನ್ಮ ಸಂದರ್ಭವನ್ನು ಆಚರಿಸಲು ಜೋಸೇಫ಼ ನಗರ, ಫ಼ಾತಿಮಾ ನಗರದ ಕ್ರೀಸ್ತುವರು ಸಂತಸ ಸಂಭ್ರಮದಲ್ಲಿ ಇಗರ್ಜಿಗೆ ಧಾವಿಸಿದರು. ರೈಲು ನಿಲ್ದಾಣದ ಹಿಂಬದಿಯ ಮನೆಗಳಿಂದ, ಜಯಪ್ರಕಾಶ ನಗರದಿಂದ, ಊರಿನ ಇನ್ನೂ ಕೆಲವು ಬಡಾವಣೆಗಳಿಂದ ಕ್ರೀಸ್ತುವರು ಬಂದರು. +ಇಗರ್ಜಿ ಬಾಗಿಲಲ್ಲಿ ಕೈ ಕುಲುಕುವ, ಹ್ಯಾಪಿ ಕ್ರಿಸ್ಮಸ್ ಎಂದು ಹೇಳುವ ಅಪ್ಪಿಕೊಳ್ಳುವ ಸಂಭ್ರಮ ಕಂಡಿತು. ವಿವಿಧ ಬಗೆಯ ಸೆಂಟುಗಳಿಂದ, ಸೀರೆಯೊಳಗೆ ಹಾಕಿ ಇರಿಸಿದ ಡಾಂಬರಿನ ಗುಳಿಗೆಯ ಪರಿಮಳದಿಂದ, ಜತೆಗೆ ವಿಸ್ಕಿ ಬ್ರಾಂಡಿ ಶರಾಬಿನ ವಾಸನೆಯಿಂದ ಇಗರ್ಜಿ ಸುತ್ತಲಿನ ಗಾಳಿ ಭಾರವಾಗಿ ಬೀಸಿತು. +ಮಧ್ಯರಾತ್ರಿಯ ಹೆಪ್ಪುಗಟ್ಟಿಸುವ ಛಳಿಯಲ್ಲಿ ಪಾದರಿ ಕ್ರಿಬ್ಬಿನಲ್ಲಿ ಏಸು ಬಾಲನ ಪ್ರತಿಮೆ ಇರಿಸಿದಾಗ ಗಡಿಯಾರ ಹನ್ನೆರಡು ಬಾರಿಸಿತು. ಇಗರ್ಜಿಯ ಗಂಟೆ ಮೋಹಕವಾಗಿ ಟಿಂಟಣಿಸಿತು. ಮಿರೋಣ್ ಜಾನಡಯಾಸ್ ಪೀಟಿಲಿನ ಮೇಲೆ ಕಮಾನು ಏರಿಸಿ, ಇಳಿಸಿ- +“ಆದೇಸ್ತೆ ಫ಼ಿದೇಲೆಸ ಲೇತು ತೂಯಿ ಪ್ರಾಂತಿಸ ಹೋಸಾನ್ನ ಹೋಸಾನ್ನ..” ಎಂದು ಏಸು ಹುಟ್ಟಿದ ಸಂತಸವನ್ನು ಸಾರುವ ಲ್ಯಾಟಿನ್ ಗೀತೆಯೊಂದನ್ನು ಹಾಡಿದ. ಛಳಿಗೆ ಸಣ್ಣಗೆ ನಡಗುತ್ತ ಜನ ಈ ಹಾಡಿಗೆ ತಮ್ಮ ದನಿ ಸೇರಿಸಿದರು. ಜನ ಎತ್ತರದ ದನಿಯಲ್ಲಿ ಹಾಡುತ್ತಿದ್ದರೆ ಪ್ರತ್ಯೇಕವಾಗಿ ಕುಳಿತ ಸಿಸ್ಟರುಗಳು ಕೆಳಗಿನ ದನಿಯಲ್ಲಿ ತಮ್ಮ ಧ್ವನಿ ಸೇರಿಸಿದರು. +* +* +* +ಬಳ್ಕೂರಕಾರ್ ಕೈತಾನನಿಗೆ ಯಾವುದೇ ತೊಂದರೆ ತಾಪತ್ರಯಗಳು ಇರಲಿಲ್ಲ. ಕೈ ತುಂಬ ಕೆಲಸವಿತ್ತು. ಅವನು ಎಲ್ಲರಿಗಿಂತಲೂ ಹಿರಿಯನಾಗಿದ್ದರಿಂದ ಊರಿನಲ್ಲಿ ಕ್ರೀಸ್ತುವರ ನಡುವೆ ಗೌರವವಿತ್ತು. ಮಜಬೂತಾದ ಮನೆ ಕಟ್ಟಿದ್ದ. ಕುರ್ಚಿ, ಮಂಚ, ಮೇಜು ಎಂದು ಅವರಿವರು ನೋಡಿ ಹೊಟ್ಟೆಗಿಚ್ಚು ಪಡುವಂತೆ ಮಾಡಿಸಿದ್ದ. ಗುಂಡಬಾಳೆಯಿಂದ ಇನಾಸಜ್ಜಿ ಬಂದು ಇವನ ಮನೆಯಲ್ಲಿ ನಿಂತ ನಂತರವಂತೂ ಇವನ ಅದೃಷ್ಟ ಬದಲಾಗಿತ್ತು. +ಮುದುಕಿ ಒಂದಿಷ್ಟು ಹಣ ತಂದು ಅಳಿಯನಿಗೆ ಕೊಟ್ಟಿದ್ದಾಳೆ..ಎಂದು ಜನ ಮಾತನಾಡಿಕೊಳ್ಳುತ್ತಿದ್ದರಾದರೂ ಇದೆಷ್ಟು ನಿಜ ಎಂಬುದು ಯಾರಿಗೂ ತಿಳಿದಿರಲಿಲ್ಲ. +ಇವನ ಹಿರಿಯ ಮಗ ಸ್ಯಾಮ್ಸನ್ ಮಾತ್ರ ವಿದ್ಯಾವಂತನಾಗಿರಲಿಲ್ಲ. ಉಳಿದವರೆಲ್ಲ ಪ್ರೌಢಶಾಲೆಯ ಒಂದು ಎರಡನೆ ತರಗತಿಯವರೆಗೆ ಓದಿ ಮುಂದೆ ಓದಲಾಗದೆ ಹಳ್ಳಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಕೈತಾನನ ಹಿರಿಯ ಮಗ ಸ್ಯಾಮ್ಸನ್ನನ ಮದುವೆ ಹಿಂದೇ ಆಗಿದ್ದರಿಂದ ಅವನ ಸಂಸಾರ ಕೂಡ ಕೈತಾನನ ಮೇಲೆಯೇ ಅವಲಂಬಿಸಿಕೊಂಡಿತ್ತು. ಓರ್ವ ಮಗಳ ಮದುವೆ ಮಾಡಿ ಕೈತಾನ ಒಂದು ಭಾರ ಕಡಿಮೆ ಮಾಡಿಕೊಂಡಿದ್ದ. +ಇನಾಸಜ್ಜಿ ಸತ್ತ ನಂತರ ಅವಳ ಹನ್ನೊಂದನೇ ದಿನ, ನಲವತ್ತನೇ ದಿನ ಎಂದೆಲ್ಲ ಮಾಡಿ ವರ್ಷದ ಪೂಜೆಯನ್ನೂ ಇರಿಸಿಕೊಂಡ. ಪ್ರತಿ ವರುಷ ಇಗರ್ಜಿಯಲ್ಲಿ ಪೂಜೆ ಮಾಡಿಸಿ ಮನೆಯಲ್ಲಿ ಊಟ ಹಾಕುವುದನ್ನು ಮುಂದುವರೆಸಿದ. ಹೀಗೆ ಒಂದೆರಡು ವರ್ಷ ಸತ್ತವರಿಗೆ ಪೂಜೆ ಕೊಡಿಸಿ ಒಂದಿಷ್ಟು ನಷ್ಟ ಮಾಡಿಕೊಂಡ. ಆದರೆ ಮೂರನೇ ವರ್ಷ ಅತ್ತೆ ಹೆಸರಿನಲ್ಲಿ ಪೂಜೆ ಕೊಡಿಸಲು ಇವನೇ ಇರಲಿಲ್ಲ. +ಭಟ್ಕಳದ ಇಗರ್ಜಿಯ ಹಬ್ಬಕ್ಕೆ ಹೋದವ ಅಲ್ಲಿ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದ. ಸಂಜೆ ತೆಂಗಿನಮರದ ಶೇಂದಿ ತಾಜಾ ತಾಜಾ ಸಿಗುತ್ತದೆಂದು ಕುಡಿಯಲು ಹೋದವ ಎಷ್ಟು ಕುಡಿದರೂ ತೃಪ್ತಿಯಾಗದೆ ಅದರಲ್ಲಿಯೇ ಮುಳುಗಿ ಹೋದ. ಕತ್ತಲಾದ ಮೇಲೆ ನೆಂಟರ ಮನೆಗೆ ಹಾಳು ಬಿದ್ದ ಒಂದು ಹಿತ್ತಲ ಮೂಲಕ ಬರುತ್ತಿದ್ದವ ಅಲ್ಲಿದ್ದ ನೆಲಬಾವಿಗೆ ಬಿದ್ದ. +ಯಾರೋ ನೆಂಟರ ಮನೆಗೆ ಹೋಗಿರಬೇಕೆಂದು ಇವನು ಉಳಿದುಕೊಂಡಿದ್ದ ಮನೆಯವರು ತಿಳಿದರು. ಶಿವಸಾಗರದಲ್ಲಿ ಇವನ ಹೆಂಡತಿ ನಮಾ ಮೊರಿಯಾ ಹೀಗೆ ತಿಳಿದಳು. ಆದರೆ ಮೂರು ದಿನಗಳ ನಂತರ ಕೆಟ್ಟ ವಾಸನೆಯಿಂದ ವಿಷಯ ತಿಳಿಯಿತು. ಕೆಂಪು ರುಮಾಲು, ಜರಕಿ ಚಪ್ಪಲಿ, ಎಲೆ ಅಡಿಕೆ ಚೀಲದಿಂದ ವಿಷಯ ಸ್ಪಷ್ಟವಾಯಿತು. ಹೆಣವನ್ನು ಭಟ್ಕಳದಲ್ಲಿಯೇ ಮಣ್ಣು ಮಾಡಲಾಯಿತು. ಇವನ ಹೆಂಡತಿ ಮಕ್ಕಳು ಸಿಮೋನ, ಪಾಸ್ಕೋಲ ಶಿವಸಾಗರದಿಂದ ಇಲ್ಲಿಗೆ ಬಂದರು. +ನಂತರ ಇಲ್ಲಿಯ ಪರಿಸ್ಥಿತಿ ಕೆಡತೊಡಗಿತು. ಮನೆಯಲ್ಲಿದ್ದ ಮರದ ಸಾಮಾನುಗಳನ್ನೆಲ್ಲ ಮಾರಿ ತಿನ್ನುವ ಪರಿಸ್ಥಿತಿ ಬಂದಿತು. ಸ್ಯಾಮ್ಸನ್ನನ ತಮ್ಮಂದಿರು ಶಿವಸಾಗರದ ಆಸುಪಾಸಿನ ಹಳ್ಳಿಗಳಲ್ಲಿ ಹಾಲುಮಡ್ಡಿ ವ್ಯಾಪಾರ, ಅಡಿಕೆ ವ್ಯಾಪಾರ ಎಂದು ಬೇರೆ ಬೇರೆ ಉದ್ಯೋಗ ಹಿಡಿದು ಅಲ್ಲಿಯೇ ಮನೆ ಮಾಡಿದರು. ಸ್ಯಾಮ್ಸನ ಹೆಂಡತಿ, ಮಗಳು ಗ್ಲೋರಿಯಾ ತಾಯಿಯನ್ನು ಸಾಕಿಕೊಂಡು ಹಳೆಯ ಮನೆಯಲ್ಲಿದ್ದಾನೆ. ಇವನ ಮಗಳು ಗ್ಲೋರಿಯಾ ವಿದ್ಯಾವಂತಳಾಗಿದ್ದಾಳೆ. ಅವಳಿಗೆ ಒಂದು ಕೆಲಸವನ್ನು ಹುಡುಕುವ ಯತ್ನದಲ್ಲೂ ಇದ್ದಾನೆ ಸ್ಯಾಮ್ಸನ. +ಈ ನಡುವೆ ಉಳಿದ ತಮ್ಮಂದಿರು ಮನೆಯಲ್ಲಿ ಪಾಲು ಕೇಳುತ್ತಿದ್ದಾರೆ. ಸ್ಯಾಮ್ಸನ ತಮ್ಮಂದಿರಿಗೆ ಎಲ್ಲಿ ಪಾಲುಕೊಡಬೇಕಾಗುತ್ತದೋ ಎಂದು ಮುನಿಸಿಪಾಲಿಟಿಯಲ್ಲಿ ಏನೋ ಭಾನಗಡಿ ಮಾಡಿದ್ದಾನೆಂದೂ ಸುದ್ದಿಯಿದೆ. +ಇಗರ್ಜಿ ಹಬ್ಬಕ್ಕೆ ವರ್ಷಕ್ಕೊಮ್ಮೆ ಬರುವ ಅವನ ತಮ್ಮಂದಿರು- +“ಸ್ಯಾಮ್ಸನ್, ಎಲ್ಲ ಸರಿ. ನೀನು ಈ ಮನೇನ ಒಳಗೆ ಹಾಕಿಕೊಂಡಿದ್ದು ನ್ಯಾಯಾನ? ಇದು ದೇವರ ಹತ್ತು ಕಟ್ಟಲೆಗಳಿಗೆ ವಿರೋಧ ಅಲ್ವ?” ಎಂದು ಜಗಳ ತೆಗೆಯುತ್ತಾರೆ. +ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಗ್ಲಾಸ್ ಹಿಡಿದ ಇವರು ಇಗರ್ಜಿಗೆ ಹೋದವರು ಅಲ್ಲಿಯೇ ಹತ್ತಿರದಲ್ಲಿರುವ ಶರಾಬು ಬಿಳಿಯಪ್ಪನ ಅಂಗಡಿಗೆ ಹೋಗಿ ಸ್ವಲ್ಪ ಕುಡಿದಿರುತ್ತಾರೆ. ಪೂಜೆ ಮುಗಿದದ್ದೆ ಸ್ನೇಹಿತರ ಮನೆ ಗುರುತಿನವರ ಮನೆ ಎಂದು ಒಂದೊಂದು ಗ್ಲಾಸು ಏರಿಸಿ ಊಟದ ಹೊತ್ತಿಗೆ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿರುತ್ತಾರೆ. ಅಣ್ಣ ಸ್ಯಾಮ್ಸನ ತಂದೆಯ ಮನೆಯನ್ನು ಮುರಿದು ಹೊಸದಾಗಿ ಕಟ್ಟಿರುವುದನ್ನು ನೋಡಿದಾಗ ಇವರಿಗೆ ತಾಳ್ಮೆ ಕಳೆದು ಹೋಗಿ ಇವರು ಮಾತನಾಡತೊಡಗುತ್ತಾರೆ. ಮಾತಿಗೆ ಮಾತು ಸೇರಿ ಅದು ಜಗಳವಾಗಿ ಪರಿವರ್ತನೆ ಹೊಂದಿ ಕೊನೆಗೆ ಹೊಡೆದಾಟಕ್ಕೆ ಹೋಗಿ ಸಿಮೋನನೋ ಪಾಸ್ಕೋಲನೋ ಬಂದು ಬಿಡಿಸ ಬೇಕಾಗುತ್ತದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. +ಗುರ್ಕಾರ ಸಿಮೋನ ಒಂದು ದಾರಿ ತೋರಿಸಿದ. +“ಮನೆ ಹೇಗೂ ನಿನ್ನದಾಗಿದೆ..ನಿನ್ನ ತಮ್ಮಂದಿರಿಗೆ ಅವರವರ ಪಾಲಿನ ಹಣ ಕೊಡು..ಒಂದು ಪತ್ರ ಬರೆಸಿಕೋ..ಅಲ್ಲಿಗೆ ಈ ಜಗಳ ನಿಲ್ಲುತ್ತೆ..ಹಬ್ಬಕ್ಕೆ ಬಂದವರು ಹೊಡೆದಾಡಿದರು ಅನ್ನುವ ಮಾತು ಸುಳ್ಳಾಗುತ್ತದೆ..” ಎಂಬ ಗುರ್ಕಾರನ ಮಾತಿಗೆ ಸ್ಯಾಮ್ಸನ್ ಅವನ ತಮ್ಮಂದಿರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಈ ನಡುವೆ ಸ್ಯಾಮ್ಸನ್ ಮಗಳು ಗ್ಲೋರಿಯಾ ಹೈಸ್ಕೂಲು ಮುಗಿಸಿದ್ದಾಳೆ. ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿದ್ದಾಳೆ. ಕೈತಾನನ ಮಗಳು ಪ್ರೆಸಲ್ಲಾಗೆ ಕೆಲಸ ಸಿಕ್ಕಿದೆ. ಇವಳಿಗೆ ಸಿಕ್ಕಿಲ್ಲ. ಮಗಳಿಗೊಂದು ಕೆಲಸ ಕೊಡಿಸಬೇಕು ಎಂಬ ಯತ್ನವನ್ನು ಸ್ಯಾಮ್ಸನ್ ಬಿಟ್ಟಿಲ್ಲ. +ಕಾನ್ವೆಂಟಿನಲ್ಲಿ ಈರ್ವರು ಶಿಕ್ಷಣ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನು ಸ್ಯಾಮ್ಸನಗೆ ಹೇಳಿದವರು ಡಾಕ್ಟರ್ ಕೊದಂಡರಾವ್. ಮಳೆಗಾಲದಲ್ಲಿ ಅವರ ಬಾವಿ ಕುಸಿದಿತ್ತು. ಮಳೆಗಾಲ ಮುಗಿದ ನಂತರ ಬಾವಿಯಿಂದ ನೀರು ಹೊರ ಹಾಕಿ ಕೆಳಗಿನಿಂದ ಕಲ್ಲುಕಟ್ಟಿಕೊಂಡು ಬರುವ ಕೆಲಸ ವಹಿಸಿಕೊಂಡ ಸ್ಯಾಮ್ಸನ್ ಮೇಲಿನಿಂದ ಗಡಗಡೆಯ ಮೂಲಕ ಕಲ್ಲುಗಳನ್ನು ಕೆಳಕ್ಕೆ ಇಳಿಸುತ್ತಿರುವಾಗ ಡಾಕ್ಟರ್ ಕೊದಂಡರಾವ್ ಅಲ್ಲಿಗೆ ಬಂದು ನಿಲ್ಲುತ್ತಿದ್ದರು. ಅದು ಇದು ಮಾತಿನ ನಡುವೆ ಸ್ಯಾಮ್ಸನ್ ಮಗಳು ಪ್ರೌಢಶಾಲೆ ಮುಗಿಸಿ ಮನೆಯಲ್ಲಿ ಕುಳಿತಿರುವ ವಿಷಯ ಬಂದಿತು. +“ಅಲ್ಲಿ ಕಾನ್ವೆಂಟಿನಲ್ಲಿ ಎರಡು ಕೆಲಸ ಖಾಲಿ ಇದೆ ನೋಡು..” ಎಂದರು. ಅವರಿಗೂ ಕಾನ್ವೆಂಟಿಗೂ ಹತ್ತಿರದ ಸಂಪರ್ಕವಿತ್ತು. ಕೊದಂಡರಾಯರ ಮಕ್ಕಳೆಲ್ಲ ಕಾನ್ವೆಂಟಿನಲ್ಲಿಯೇ ಓದುತ್ತಿದ್ದರು. ಸಿಸ್ಟರುಗಳಿಗೆ ಏನೇ ಕಾಯಿಲೆಯಾದರೂ ಅವರು ಇವರ ಬಳಿಗೇನೆ ಬರುತ್ತಿದ್ದರು. ಹೀಗಾಗಿ ಕಾನ್ವೆಂಟಿನ ಹಲವು ವಿಷಯಗಳು ಇವರಿಗೆ ತಿಳಿದಿರುತ್ತಿದ್ದವು. +“ಹೌದಾ..ರಾಯರೆ?” ಎಂದು ಉತ್ಸಾಹದಿಂದ ಕೇಳಿದ ಸಾಮ್ಸನ್. +“ಹೌದು..ಅದು ನಿಮ್ಮದೇ ಅಲ್ವ..ಅರ್ಜಿ ಹಾಕಿಸು ಕೆಲಸ ಸಿಗುತ್ತೆ..” ಎಂದರವರು ಖಚಿತವಾಗಿ- +ಸ್ಯಾಮ್ಸನ್‌ಗೆ ಇಷ್ಟಕ್ಕೇನೆ ಸಂತೋಷವಾಯಿತು. ಮನೆಗೆ ಬಂದವನೇ ಮಗಳಿಗೆ ಹೇಳಿ ಒಂದು ಅರ್ಜಿ ಬರೆಸಿಕೊಂಡು ಸ್ನಾನ ಮಾಡಿ ಬೇರೆ ಉಡುಪು ಧರಿಸಿ ಮಗಳನ್ನು ಕರೆದುಕೊಂಡು ಕಾನ್ವೆಂಟಿಗೆ ಧಾವಿಸಿದ. ಸಿಸ್ಟರುಗಳೆಲ್ಲ ಕಾನ್ವೆಂಟಿನ ಒಳಗಿನ ಅವರ ಕೊಪೆಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಪ್ರಾರ್ಥನೆ ಆಗುವ ತನಕ ಇವರು ಹೊರಗೇನೆ ನಿಂತಿರುತ್ತಿದ್ದರು. ನಂತರ ತೂಗು ಬಿದ್ದ ಕಿರು ಗಂಟೆಯ ದಾರ ಎಳೆದರು. ಹೆಡ್‌ಸಿಸ್ಟರ್ ಬಂದು ಬೀಗ ತೆಗೆದು ಬಾಗಿಲು ತೆಗೆದು- +“..ಕೋಣ್ ಜಾಯ?” (ಯಾರು ಬೇಕು?) ಎಂದು ಕೇಳಿದಾಗ ಸ್ಯಾಮ್ಸನ್ ಅವರ ಕೈಗೆ ಅರ್ಜಿ ನೀಡಿದ. ಅವರು ಅರ್ಜಿ ಓದಿದರು. ಸಾಮ್ಸನ್ ಹಾಗೂ ಗ್ಲೋರಿಯಾರನ್ನು ಎರಡು ಮೂರು ಸಾರಿ ನೋಡಿದರು. ನಂತರ- +“..ನೋಡೋಣ…” ಎಂದರು ತೀರಾ ಸಪ್ಪೆಯಾಗಿ. +“..ಸಿಸ್ಟರ್ ಇದೊಂದು ಉಪಕಾರ ಮಾಡಬೇಕು ನೀವು..” ಎಂದು ಸ್ಯಾಮ್ಸನ್ ಕೈ ಮುಗಿದ. +“ಆಯ್ತು…ಆಯ್ತು..” ಎಂದು ಹೆಡ್‌ಸಿಸ್ಟರ್ ಒಳಹೋಗಿ ಬೀಗ ಹಾಕಿಕೊಂಡರು. +ಕೊದಂಡರಾಯರ ಮಾತು ಕೇಳಿ ಉತ್ಸಾಹದಿಂದ ಬಂದವ ಏಕೋ ಸಿಸ್ಟರರ ದನಿ ಕೇಳಿ ನಿರುತ್ಸಾಹಗೊಂಡ. +ಗ್ಲೋರಿಯಾ ಹಿಂದೆಯೇ ವಿಷಯ ತಿಳಿದ ಹಸಿಮಡ್ಲು ಪಾತ್ರೋಲನ ಮಗಳೂ ಒಂದು ಅರ್ಜಿ ಕೊಟ್ಟಳು. +ತಿಂಗಳುಗಳು ಉರುಳಿದವು. ಅರ್ಜಿಕೊಟ್ಟವರಿಗೆ ತಾವು ಕೊಟ್ಟ ಅರ್ಜಿಯ ಕತೆ ಏನಾಯಿತು ಎಂಬುದು ತಿಳಿಯಲಿಲ್ಲ. ಆದರೂ ಅವರಿಗೊಂದು ಆಸೆ. ಕೆಲಸ ಸಿಗಬಹುದು. ದೇವರು ಕೈಬಿಡಲಾರ ಎಂಬ ಭರವಸೆ. +ಜನವರಿ ತಿಂಗಳು, ಮೂರು ರಾಯರ ಹಬ್ಬ ಆಚರಿಸುವ ಸಂದರ್ಭ. ಬಾಲ ಏಸುವನ್ನು ನೋಡಲು ಮೂರು ಜನ ಪಂಡಿತರು ಬಂದು ಮಗುವಿಗೆ ಕಾಣಿಕೆಗಳನ್ನು ನೀಡಿ ಹೋಗುತ್ತಾರೆ. ಕ್ರಿಬ್ಬಿನಲ್ಲಿ ಮೂವರು ರಾಯರ ಪ್ರತಿಮೆಗಳನ್ನು ಇರಿಸಿ ಅದೊಂದು ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಸುಪಾಸಿನಲ್ಲಿ ಒಂದು ಸುದ್ದಿ ಕೇಳಿ ಬಂದಿತು. +ಕಾನ್ವೆಂಟಿಗೆ ಈರ್ವರು ಹೊಸ ಶಿಕ್ಷಕಿಯರು ಬಂದಿದ್ದಾರೆ. ಒಬ್ಬರು ಮಂಗಳೂರಿನವರು. ಈಗ ಹಾಲಿ ಕಾನ್ವೆಂಟಿನಲ್ಲಿರುವ ಸಿಸ್ಟರ್ ಲೀನಾರ ಅಕ್ಕನ ಮಗಳು. ಇನ್ನೊಬ್ಬಳು ಮಿರೋಣ್ ಜಾನ್ ಡಯಾಸನ ಮಗಳು. ಈವರೆಗೆ ಮಂಗಳೂರಿನಲ್ಲಿ ಇದ್ದವಳನ್ನು ಈಗ ಡಯಾಸ ಇಲ್ಲಿಗೆ ಕರೆಸಿಕೊಂಡು ಕೆಲಸ ಕೊಡಿಸಿದ್ದಾನೆ. +ಸ್ಯಾಮ್ಸನ ಮನೆ ಜಗಲಿಯ ಮೇಲೆ ಕವಳ ಜಗಿಯುತ್ತ ಕುಳಿತವ ಮಗಳಿಂದ ಒಂದು ಚಂಬು ನೀರು ತರಿಸಿಕೊಂಡು ಬಾಯಿ ಮುಕ್ಕಳಿಸಿ, ಹಲ್ಲಿನ ಸಂದಿ ಗೊಂದಿಯಲ್ಲಿ ಸೇರಿಕೊಂಡ ಅಡಿಕೆ ಚೂರನ್ನು ನಾಲಿಗೆ ತುದಿಯಿಂದ ಹೊರಗೆಳೆದು ಅಂಗಳಕ್ಕೆ ತೂಸಿ, ಶರಟೊಂದನ್ನು ತಗುಲಿಸಿಕೊಂಡು ಮನೆಯಿಂದ ಹೊರಬಿದ್ದ. +ರೋಗ ಬಂದ ಕೋಳಿಯ ಮೂಗಿಗೆ ಅದರ ಒಂದು ಪುಕ್ಕ ಚುಚ್ಚಿ ಅದು ತೂರಾಡುತ್ತ ಅಂಗಳದ ತುಂಬ ಓಡಿಯಾಡುವ ಹಾಗೆ ಸ್ಯಾಮ್ಸನ್ನನ ಪರಿಸ್ಥಿತಿಯಾಗಿತ್ತು. ಮಗಳಿಗೆ ಕಾನ್ವೆಂಟಿನಲ್ಲಿ ಕೆಲಸ ಸಿಗಬಹುದು ಅನ್ನುವ ಆಸೆ ಇತ್ತು. ಇದು ನಿರಾಶೆಯಾಗಿ ಪರಿವರ್ತನೆ ಹೊಂದುವುದರ ಜತೆಗೆ ಮೀರೋಣ್ ಜಾನಡಯಾಸನ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು. +ಜಾನಡಯಾಸನಿಗೇನೂ ಕಡಿಮೆಯಾಗಿರಲಿಲ್ಲ. ಅವನ ಮಗ ಕೆಲಸದಲ್ಲಿದ್ದ. ಹೆಣ್ಣು ಮಕ್ಕಳಲ್ಲಿ ಈರ್ವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕಂದಿರ ಜತೆಯಲ್ಲಿದ್ದ ಕೊನೆಯವಳಿಗೂ ಈಗ ಕೆಲಸ ದೊರಕಿದೆ. +ಇಷ್ಟೇ ಅಲ್ಲ ಈ ಬಾಮಣ ಊರಿನಲ್ಲಿ ಇಲ್ಲದ ಮನಸ್ತಾಪಗಳನ್ನು ಉಂಟುಮಾಡುತ್ತ ಅವರಿವರ ಮನೆಗೆ ಬೆಂಕಿ ಇಡುತ್ತ ಇಗರ್ಜಿಯಲ್ಲಿ ದೈವ ಭಕ್ತನಾಗಿ, ಪಾದರಿಯ ಆಪ್ತನಾಗಿ ಮೆರೆಯುತ್ತಿದ್ದಾನೆ. +ಪಾದರಿ ಸಿಕ್ವೇರಾ ಬಂದ ನಂತರ ಇಗರ್ಜಿಯ ಹಣಕಾಸಿನ ವ್ಯವಹಾರವನ್ನು ಈತ ನೋಡಿಕೊಳ್ಳುತ್ತಾನೆ. ಇಗರ್ಜಿಯ ನಡುವೆ ಇಟ್ಟ ಕಾಣಿಕೆ ತಟ್ಟೆಯನ್ನು ಒಳಗೆ ತೆಗೆದುಕೊಂಡು ಹೋಗುವುದು. ಉಳಿದ ಸಂತರ ಬಳಿ ಇರಿಸಿರುವ ಕಾಣಿಕೆ ಡಬ್ಬಗಳ ಬೀಗ ತೆಗೆದು ಹಣ ಎಣಿಸಿಕೊಳ್ಳುವುದು, ಈ ಬಗೆಯ ಕೆಲಸ ಮಾಡುತ್ತ ಒಂದಿಷ್ಟು ಹಣವನ್ನು ತನ್ನ ಜೇಬಿಗೂ ಇಳಿಸುತ್ತಾನೆಂದು ಇಗರ್ಜಿಗೆ ಹೋಗುವ ಸಣ್ಣ ಹುಡುಗರೂ ಹೇಳುತ್ತಾರೆ. +ಕರಿಕಾಲಿನ ಇರುದನಾದದ ಮಗಳು ರೈಲ್ವೆ ಗಾರ್ಡ್ ಓರ್ವನ ಜತೆ ಓಡಿ ಹೋಗಿ ಆರು ತಿಂಗಳಾಗಿತ್ತು. ಅವಳು ಭದ್ರಾವತಿಗೆ ಹೋಗಿ ಸೇರಿಕೊಂಡು ಅಲ್ಲಿ ಆ ಗಾರ್ಡ ಜತೆ ಸಂಸಾರ ಕೂಡ ಹೂಡಿದ್ದಳು. ಇಲ್ಲಿ ಗುಲ್ಲು ಗಲಾಟೆಯಾಯಿತು. ಈ ಡಯಾಸ ಹಾಗೂ ಗುರ್ಕಾರ ಪಿಂಟೋ ಭದ್ರಾವತಿಗೆ ಹೋಗಿ ಆ ಹುಡುಗಿಯನ್ನು ಕರೆ ತಂದರು. ಆರು ತಿಂಗಳು ಯಾರ ಜತೆಗೋ ಇದ್ದು ಬಂದವಳು ಅನ್ನುವ ಕಾರಣಕ್ಕೆ ಕ್ರೀಸ್ತುವರು ಅವಳ ವಿಚಾರಣೆ ಆಗಬೇಕು ಎಂದರು. ಜೂಂತ ಇರಿಸಿ ಎಂದು ಕೂಗಾಡಿದರು. ಈ ಡಯಾಸ ಅವಳ ಆರೋಗ್ಯ ಸರಿಯಿಲ್ಲ ಎಂದು ಅವಳನ್ನು ಶಿವಮೊಗ್ಗೆಗೆ ಕರೆದೊಯ್ದು ಹದಿನೈದು ದಿನ ಆಸ್ಪತ್ರೆಯಲ್ಲಿರಿಸಿ ಅವಳನ್ನು ಸರಿ ಮಾಡಿ ಕರೆತಂದ. ಇದು ಸಾಲದೆಂದು ಓಡಿ ಹೋದವಳನ್ನು ಪಾದರಿ ಕೋಲಾರದ ಓರ್ವ ಹುಡುಗನಿಗೆ ಮದುವೆ ಮಾಡಿದರು. +ಗುರ್ಕಾರನ ಪಿಂಟೋನ ಮೊಮ್ಮಗಳು ಅವನ ಹೆಂಡತಿ ತಂಗಿಯ ಮಗಳು ಚಿಕ್ಕಮಗಳೂರಿನಲ್ಲಿ ಎರಡು ವರ್ಷದಿಂದ ಪ್ರೌಢಶಾಲೆಯಲ್ಲಿ ಫ಼ೇಲಾಗುತ್ತಿದ್ದವಳನ್ನು ಇಲ್ಲಿಗೆ ಕರೆತಂದು ಕಾನ್ವೆಂಟಿಗೆ ಸೇರಿಸಿ ಪಾಸು ಮಾಡಿಸಿದ. ಆ ಹುಡುಗಿಯನ್ನು ಚೆನ್ನಾಗಿ ಓದಿ ಬರೆಯಬಲ್ಲ ಬೇರೊಂದು ಹುಡುಗಿಯ ಪಕ್ಕದಲ್ಲಿ ಕೂರಿಸಿ ಅವಳದನ್ನು ನೋಡಿ ಬರೆಯುವಂತೆ ಇವಳಿಗೆ ಹೇಳಿ ಇವಳು ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದವ ಈ ಡಯಾಸ. ಇದಕ್ಕೆ ಸಿಸ್ಟರುಗಳ ಬೆಂಬಲ. +ಇವನ ಮನೆಯಿಂದ ಹಂದಿ ಮಾಂಸ, ಹೊಳೆ ಮೀನು ನಿರಂತರವಾಗಿ ಕಾನ್ವೆಂಟಿಗೆ ಸರಬರಾಜು ಆಗುತ್ತದೆ. ಸಿಸ್ಟರುಗಳು ಇವನ ಮನೆಗೆ ವಾರಕ್ಕೆ ಎರಡು ದಿನ ಬಂದು ಹೋಗುತ್ತಾರೆ. ಡಯಾಸ ತನ್ನ ಜನರ ಬಗ್ಗೆ ಅವರ ಮಕ್ಕಳ ಬಗ್ಗೆ ತುಂಬಾ ಮುತುವರ್ಜಿವಹಿಸುತ್ತಾನೆ. +ಬೇರೆ ಊರುಗಳಲ್ಲಿ ಮನೆ ಮಾಡಿಕೊಂಡಿರುವ ತನ್ನ ತಮ್ಮಂದಿರು ಆಸ್ತಿಯಲ್ಲಿ ಪಾಲು ಕೇಳಲು ಕೂಡ ಈ ಡಯಾಸ ಕಾರಣ ಎಂಬ ಮಾತಿದೆ. ಅವರು ಹಬ್ಬಕ್ಕೆ ಬಂದಾಗಲೆಲ್ಲ ಈತ ಅವರನ್ನು ನಿಲ್ಲಿಸಿಕೊಂಡು- +“ಫ಼್ಲೋರಾ..ಏನು ನಿನ್ನ ತಂದೆ ಕಟ್ಟಿದ ಮನೇನ ಪೂರ್ತಿಯಾಗಿ ನಿನ್ನ ಅಣ್ಣನಿಗೇಕೇ ಬಿಟ್ಟು ಬಿಟ್ತಿರಾ?” ಎಂದು ಓರ್ವ ತಮ್ಮನಿಗೆ ಕೇಳಿದರೆ ಇನ್ನೋರ್ವನ ಹತ್ತಿರ- +“ಹಬ್ಬಕ್ಕೆ ಬಂದೆಯಾ ಸೈಮನ್..ಬರಬೇಕು ..ಇಲ್ಲಿ ತಂದೇದು ಅಂತ ಒಂದು ಮನೆ ಇದೆಯಲ್ಲ..ಅದನ್ನು ಸಾಮ್ಸನ್ ನೋಡಿಕೊಂಡರೂ ಅದು ನಿಮ್ಮದೇ ಮನೆ ಅಲ್ವೆ?” ಎಂದು ಕೇಳುತ್ತಾನೆ. +ಮೂರನೆಯವನಿಗೂ ಹೀಗೆಯೇ ಕೇಳಿ ಅವರೆಲ್ಲರ ತಲೆ ಕೆಡಿಸುತ್ತಾನೆ. +ಇಂತಹ ಡಯಾಸ ಈಗ ತನ್ನ ಮಗಳಿಗೆ ಸಿಗಬಹುದಾಗಿದ್ದ ಕೆಲಸವನ್ನು ಕಿತ್ತುಕೊಂಡಿದ್ದಾನೆ. ಈ ಬಾಮಣ ಬಾಮಣರೂ ಒಂದೇ. ಅವರು ಬೇರೆಯವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇಲ್ಲವೆಂದರೆ ಸಿಸ್ಟರ್ ಲೀನಾ ಅಕ್ಕನ ಮಗಳನ್ನು ಕರೆತಂದು ಇಲ್ಲಿ ಕೆಲಸ ಕೊಡಿಸಬೇಕಿತ್ತೆ? ಗ್ಲೋರಿಯಾಗೆ ಕೆಲಸ ಕೊಡುವುದು ಬೇಡ. ತೀರಾ ಬಡವನಾಗಿರುವ ಹಸಿಮಡ್ಲು ಪತ್ರೋಲನ ಮಗಳಿಗಾದರೂ ಕೊಡಬಹುದಿತ್ತಲ್ಲ. +ಈ ಎಲ್ಲ ವಿಷಯಗಳು ತಲೆಯಲ್ಲಿ ಮುಳ್ಳು ಹಂದಿಯ ಗಣೆಗಳ ಹಾಗೆ ನಿಮಿರಿ ನಿಂತಿರಲು ಆತ ರಸ್ತೆಗೆ ಇಳಿದ. +ಎದುರು ಬಂದ ಎಲ್ಲರನ್ನೂ ನಿಲ್ಲಿಸಿಕೊಂಡು- +“ಅಲ್ಲ..ಇವರು ಹೀಗೆ ಮಾಡಬಹುದ? ಅವರು ದೇವರ ಸೇವಕರಲ್ವ? ಹಗಲೂ ರಾತ್ರಿ ಪ್ರಾರ್ಥನೆ ಜಪ ಅಂತ ಕಾಲ ಕಳೆಯೋ ಜನ ಅಲ್ವ..ಅವರು ಹೀಗೆ ಮಾಡಬಹುದ?” ಎಂದು ಕೇಳಿದ. +ಗುರ್ಕಾರ ಸಿಮೋನನ ಮನೆಗೆ ಹೋಗಿ- +“ಅವರಿಗೆ ನಮ್ಮ ಊರಿನ ಜಮೀನಿರಬೇಕು..ಅಲ್ಲಿ ಅವರು ಕಾನ್ವೆಂಟ್ ಕಟ್ಟಬೇಕು..ಕೆಲಸ ಮಾಡಲಿಕ್ಕೆ ಮಂಗಳೂರಿನವರೇಬೇಕಾ? ನಮ್ಮ ಹೆಣ್ಣು ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬರೋದಿಲ್ವ..ನೀವು ಗುರ್ಕಾರ ಅಂತ ಇದೀರಲ್ಲ ಇದನ್ನ ಕೇಳಬೇಕು..” ಎಂದು ಕೂಗಾಡಿದ. +ಪಾಸ್ಕೋಲನನ್ನು ನಿಲ್ಲಿಸಿಕೊಂಡು- +“ಹ್ಯಾಗಿದೆ ನ್ಯಾಯ? ಆವತ್ತು ನಿನ ಮಗ ಸೋತ..ಯಾರಿಂದ? ಈ ಬಾಮಣರಿಂದ. ಈಗ ನನ ಮಗಳಿಗೆ ಕೆಲಸ ಸಿಗಲಿಲ್ಲ ಯಾರಿಂದ? ಈ ಬಾಮಣರಿಂದ. ನಾವು ಚಾರಡಿಗಳು ಗೌಡಿಗಳು ನೇಂದರಗಳು ಊರು ಬಿಡೋಣ..ಈ ಬಾಮಣರೇ ಇಲ್ಲಿ ಇದ್ದು ಬಿಡಲಿ..” ಎಂದ. +ಬೋನನ ಅಂಗಡಿಗೂ ಹೋದ. +ಅಲ್ಲಿ ಕೂಗಾಡಿ ಪಿಂಟೋನ ಅಂಗಡಿಯತ್ತ ಒಮ್ಮೆ ನೋಡಿ ರಸ್ತೆಯತ್ತ ಉಗುಳಿ ಮುಂದೆ ಹೋದ. +* +* +* +ಸ್ಯಾಮ್ಸನಗೆ ಆದ ನಿರಾಶೆ, ಹಸಿಮಡ್ಲು ಪತ್ರೋಲನಿಗಾದ ಅನ್ಯಾಯ ಊರ ಕ್ರಿಸ್ತುವರ ಗಮನಕ್ಕೆ ಬಾರದಿರಲಿಲ್ಲ. ಹಿರಿಯರು ಮುದುಕರು ಛೆ! ಪಾಪ!! ಎಂದೆಲ್ಲ ಮರುಕ ಪಟ್ಟರು. ಸಿಸ್ಟರುಗಳು ಏಕೆ ಹೀಗೆ ಮಾಡಿದರು ಎಂದು ಇಳಿದನಿಯಲ್ಲಿ ಮಾತನಾಡಿಕೊಂಡರು. ಆದರೆ ಇದೀಗ ಮೀಸೆ ಚಿಗುರುತ್ತಿದ್ದ ಎದೆ ಬಿರುಸಾಗುತ್ತಿದ್ದ ತರುಣರು ಇದನ್ನು ಸಹಿಸಿಕೊಳ್ಳಲಿಲ್ಲ. +ಈ ಸಿಸ್ಟರುಗಳ ಬಗ್ಗೆ ಡಯಾಸ, ಪಿಂಟೋನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. +ಬೋನನ ಮಗ ಫ಼ಿಲಿಪ್ಪನಿಗೆ ಕೆಟ್ಟ ಅನುಭವಗಳು ಆಗಿದ್ದವು. ಕಾನ್ವೆಂಟ್ ಶಾಲೆಯಲ್ಲಿ ಓದುವಾಗ ಶಾಲೆಯನ್ನು ಗುಡಿಸಲು ತನ್ನನ್ನು, ಗ್ರೆಗೋರಿಯನ್ನು, ರಾಬರ್ಟಿಯನ್ನು ಅವರು ಕರೆಯುತ್ತಿದ್ದರು. +ಡಾಕ್ಟರ್ ಕೋದಂಡರಾಯರ ಮಗ ಶಾಲೆಯಲ್ಲಿ ವಾಂತಿಮಾಡಿಕೊಂಡಾಗ ಅದನ್ನು ತೆಗೆಯಲು ಸಿಸ್ಟರ್ ಲೀನಾ ಕರೆದದ್ದು ಇಂತ್ರು ಮಗ ಸಿರೀಲನನ್ನು. ನಿತ್ಯ ಶಾಲೆಯ ಬೀಗ ತಂದು ಬಾಗಿಲು ತೆಗೆದು, ಸಂಜೆ ಬೀಗ ಹಾಕುವ ಕೆಲಸ ಸುತಾರಿ ಇನಾಸನ ಮಗ ಪಾಸ್ಕು ಮಾಡಬೇಕಾಗುತ್ತಿತ್ತು. +ಊರಿನ ಬಡ ಕ್ರೈಸ್ತುವರ ಮಕ್ಕಳು. ಕಲ್ಲು ಕೆತ್ತುವ, ಕಲ್ಲು ತೆಗೆಯುವ, ಗಿಲಾಯಿ ಮಾಡುವ ಎಲ್ಲರ ಮಕ್ಕಳಿಗೂ ಶಾಲೆಯಲ್ಲಿ ಒಂದಲ್ಲಾ ಒಂದು ಕೆಲಸ. +“..ದೇವಾಚೆಂ ಕಾಮ ಕೆಲೇರ್..ದೇವ ಬೊರೆಂ ಕರ್ತಾ…”(ದೇವರ ಕೆಲಸ ಮಾಡಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ) ಎಂಬ ಮಾತು ಬೇರೆ. +ಎಲ್ಲಿಂದಲೋ ಬರುವ ಗೋದಿ, ಎಣ್ಣೆ, ಹಾಲಿನ ಪುಡಿ ಬಟ್ಟೆ ಎಲ್ಲ ಡಯಾಸ, ಪಿಂಟೋ ಮನೆಗೆ. ಉಳಿದವರಿಗೆ ದೇವರ ಆಶೀರ್ವಾದ. +ಇದು ಫ಼ಿಲಿಪ್ಪನ ಅನುಭವ. ಉಳಿದವರ ಅನುಭವ ಕೂಡ ಬೇರೆಯಾಗಿರಲಿಲ್ಲ. +ಇಗರ್ಜಿಯಲ್ಲಿ ಸಾಲು ಸಾಲಾಗಿ ಬೆಂಚುಗಳನ್ನು ಹಾಕಲಾಗಿತ್ತು. ಈ ಬೆಂಚುಗಳ ಮೇಲೆ ಹೆಸರುಗಳು. ಅಲ್ಲಿ ಕುಳಿತುಕೊಳ್ಳಬೇಕಾದ ಜನರೇ ಬೇರೆ. ಪಾಸ್ಕು, ಬಸ್ತು, ಪೆದ್ರು, ಸಾಂತ ಕೈತಾನ, ಇಂತ್ರು, ಸಂತ, ಬಡ್ತೋಲ, ಫ಼ರಾಸ್ಕ ಯಾರೂ ಅಲ್ಲಿ ಕೂರುವಂತಿಲ್ಲ. ಒಂದು ವೇಳೆ ಕೂತರೂ ಅವರನ್ನು ಎಬ್ಬಿಸುತ್ತಾನೆ ಡಯಾಸ ಪಿಂಟೋ. +“ಏನು..ನೀನೇನು ದೊಡ್ಡ ಆಫ಼ೀಸರ್ರ..ಬೆಂಚಿನ ಮೇಲೆ ಕೂರಲಿಕ್ಕೆ?” ಎಂದು ಕೇಳುತ್ತಾನೆ. +ಆವತ್ತು ಅಂತೋನಿಗೆ ಹಾಗೆ ಆಯಿತು. +ಈಗ ಗ್ಲೋರಿಯಾಗೆ ಹೀಗೆ. +ಹಸಿಮಡ್ಲು ಮಗಳಿಗೆ ಹೀಗೆ. +“ಇದು ಯಾಕೆ ಹೀಗೆ ಆಗತಿದೆ..ನಮಗೆ ಗೊತ್ತು” ಎಂದು ಯುವಕರು ಗುರುಗುಟ್ಟಿದರು. +ಇಗರ್ಜಿ ಮುಂದೆ, ಸಂತ ಜೋಸೆಫ಼ರ ಮಂಟಪದ ಮುಂದೆ, ಕೇರಿಯ ಸರಕಾರಿ ಬಾವಿಯ ಬಳಿ ಜೋಸೆಫ಼ ನಗರದ ಕಾಮತಿ ಅಂಗಡಿ ಬಳಿ, ನಿಂತು ಯುವಕರು ಕಿಡಿಕಾರಿದರು. ಗುರ್ಕಾರ ಸಿಮೋನನ ಕಿವಿಗೂ ಇದು ಬಿದ್ದಿತು. ಬೋನನೂ ಕೇಳಿಸಿಕೊಂಡ. +ಈ ಬಾರಿ ಅವರು ಏನನ್ನೂ ಹೇಳಲು ಹೋಗಲಿಲ್ಲ. +ಸಂಜೆಯ ಆಮೋರಿಗೆ ಕುಳಿತಾಗ ಮಾತ್ರ +“ದೇವಾ” ಎಂದು ದೇವರೆದುರು ಮೊರೆ ಇಟ್ಟರು. +“ಈ ತಳಮಳ ಸಿಟ್ಟು ಕೋಪ ದೂರ ಮಾಡು..” ಎಂದು ಕೈ ಮುಗಿದರು. +* +* +* +ಇತ್ತೀಚಿನ ದಿನಗಳಲ್ಲಿ ಹೀಗೆ ಒಂದಲ್ಲಾ ಒಂದು ಘಟನೆ ನಡೆದು ಸಿಮೋನ ವಿಚಲಿತನಾಗುತ್ತಿದ್ದ. ಮೊನ್ನೆ ಮೊನ್ನೆ ವೈಜೀಣ್ ಕತ್ರೀನ ತೀರಿಕೊಂಡಾಗ ನಡೆದುದನ್ನು ಏನು ಮಾಡಿದರೂ ಮರೆಯಲು ಅವನಿಂದ ಆಗಿರಲಿಲ್ಲ. +ಹಿಂದೆ ಸಂತು ಮೇಸ್ತ ಎಂದು ಒಬ್ಬಾತ ಕೆಲ ವರುಷ ಶಿವಸಾಗರದಲ್ಲಿ ಮನೆ ಮಾಡಿಕೊಂಡಿದ್ದ. ಈತ ಹೊನ್ನಾವರದ ಹತ್ತಿರವಿದ್ದ ಜೋಗಮಠದವ. ಇವನ ಹೆಂಡತಿ ಹೊನ್ನಾವರದವಳು. ಇವಳ ತಂದೆ ಮೂರು ನಾಲ್ಕು ಮಚವೆ ಇರಿಸಿಕೊಂಡು ತುಸು ಅನುಕೂಲವಾಗಿಯೇ ಇದ್ದವನು. ಇವನು ಮಗಳಿಗೆ ಹೆರಿಗೆಯಾಗಿ ಮಗಳು ಗಂಡನ ಮನೆಗೆ ಹೊರಟಾಗ, ದೂರದ ಊರಿನಲ್ಲಿ ನೆಂಟರು ಇಷ್ಟರು ಇಲ್ಲದ ಕಡೆ ಮಗಳನ್ನು ಮಗುವನ್ನು ನೋಡಿಕೊಂಡು ಇರಲಿ ಎಂದು ಕತ್ರೀನಳನ್ನು ಅವಳ ಜತೆ ಕಳುಹಿಸಿದ. ಕತ್ರೀನಳ ತಾಯಿ ಅನ್ನಾಬಾಯಿ ಕೂಡ ಹೊನ್ನಾವರದಲ್ಲಿ ಹೆರಿಗೆ ಮಾಡಿಸುವುದು ಬಾಣಂತಿಯರಿಗೆ ಸ್ನಾನ ಮಾಡಿಸು ಎಂದು ಕೆಲಸ ಮಾಡಿಕೊಂಡಿದ್ದವಳೆ. ಇಷ್ಟು ಬಿಟ್ಟರೆ ಹೆಚ್ಚು ವಿವರ ಅವಳ ಬಗ್ಗೆಯೂ ಇಲ್ಲ. ಕತ್ರೀನಳ ಬಗ್ಗೆಯೂ ಇರಲಿಲ್ಲ. +ಕತ್ರಿನ ಶಿವಸಾಗರಕ್ಕೆ ಬಂದವಳು ಎರಡು ವರ್ಷ ಸಂತು ಮೇಸ್ತನ ಮನೆಯಲ್ಲಿದ್ದಳು. ಅವನ ಸಣ್ಣ ಸಣ್ಣ ಮಕ್ಕಳನ್ನು ನೋಡಿಕೊಂಡು, ಸಂತು ಹೆಂಡತಿಯನ್ನು ನೋಡಿಕೊಂಡು ಇವಳಿದ್ದಳು. +ಸಂತು ಮೇಸ್ತ ಮಾತ್ರ ಒಳ್ಳೆಯವನಾಗಿರಲಿಲ್ಲ. ಮೇಲಿನ ಮನೆ, ಹೆಗ್ಗೋಡು, ಸೂರಗುಪ್ಪೆ ಎಂದೆಲ್ಲ ಅಲ್ಲಲ್ಲಿ ಕೆಲಸ ಹಿಡಿದು ಮನೆ ಕಟ್ಟಿಸುತ್ತಿದ್ದ ಈತ ಹೋದಲ್ಲೆಲ್ಲ ಏನೇನೋ ಭಾನಗಡಿ ಮಾಡಿಕೊಳ್ಳುತ್ತಿದ್ದ ವಿಷಯ ತನ್ನ ಕಿವಿಗೂ ಬೀಳುತ್ತಿತ್ತು. ಒಂದೆರಡು ಸಾರಿ ತಾನೂ ಇವನಿಗೆ ಹೇಳಿದೆ- +“ನೋಡು ಸಂತು…ನಾವು ಬೇರೆ ಊರಿನವರು..ನಮ್ಮ ಧರ್ಮ ಕೂಡ ಬೇರೆ..ನಾವು ಇಲ್ಲಿ ಗೌರವದಿಂದ ಇರಬೇಕು..ಹೆಂಡತಿ ಮಕ್ಕಳು ಅಂತ ಇರಬೇಕಾದರೆ ನಮ್ಮ ಜವಾಬ್ದಾರಿ ಕೂಡ ಹೆಚ್ಚು..ಅವರಿವರು ಸದರದಿಂದ ಮಾತನಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು..” ಎಂದೆಲ್ಲ ಹೇಳಿಯೂ ನೋಡಿದೆ. +ಅವನು ಸರಿಹೋಗಲಿಲ್ಲ. +ಈ ನಡುವೆ ಅವನು ಮನೆಯಲ್ಲಿದ್ದ ಕತ್ರೀನಳನ್ನು ಕೆಣಕಿದ ಎಂದು ಕಾಣುತ್ತದೆ. ಅವಳೂ ಅವನ ಮನೆ ಬಿಟ್ಟು ಬೇರೆ ಮನೆ ಮಾಡಿದಳು. ಈ ಸಂತು ಮೇಸ್ತನ ಖ್ಯಾತಿ ಅವನ ಮಾವನ ಕಿವಿಗೂ ಬಿದ್ದು ಅವನು ಬಂದದ್ದೇ- +“..ನೀವೆಲ್ಲ ಇಲ್ಲಿಂದ ಹೊರಡಿ..” ಎಂದು ಹೇಳಿ ಸಂತುವಿನ ಇಡೀ ಕುಟುಂಬವನ್ನು ಹೊರಡಿಸಿಕೊಂಡು ಘಟ್ಟ ಇಳಿದ. ಆದರೆ ಈ ಕುಟುಂಬದ ಜತೆ ಬಂದ ಕತ್ರೀನ ಇಲ್ಲೇ ಉಳಿದಳು. +ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸುವ ಕೆಲಸವನ್ನು ಕತ್ರೀನ ತನ್ನ ಕೈಗೆತ್ತಿಕೊಂಡಳು. ಶಿವಸಾಗರಕ್ಕೆ ಈ ಕೆಲಸ ಮಾಡುವವರ ಅವಶ್ಯಕತೆ ಇತ್ತು. ಈ ಅವಶ್ಯಕತೆಯನ್ನು ಕತ್ರೀನ ಪೂರೈಸತೊಡಗಿದಳು. ಸಂತು ಮೇಸ್ತು ಊರು ಬಿಡುವಾಗ ಅದೇ ಊರಿಗೆ ಬಂದ ಇಂತ್ರು ಈ ಮನೆಯಲ್ಲಿ ಸೇರಿಕೊಂಡ. ವೈಜೀಣ ಕತ್ರೀನ ಅಲ್ಲಿಯೇ ಬೇರೊಂದು ಮನೆ ಕಟ್ಟಿಕೊಂಡಳು. ಸಿಮೋನ ಅವಳ ನೆರವಿಗೆ ನಿಂತ. +ಒಂಟಿ ಹೆಂಗಸು ಉದ್ದಕ್ಕೂ ಒಂದೇ ಕೆಲಸ ಮಾಡಿಕೊಂಡು ಬಂದಳು. ರಾತ್ರಿ ಎಂದು ನೋಡಲಿಲ್ಲ. ಮಳೆಗಾಲ ಚಳಿಗಾಲ ಎಂದು ನೋಡಲಿಲ್ಲ. ಯಾರೇ ಮನೆ ಬಾಗಿಲಿಗೆ ಹೋಗಿ ಕರೆದರೂ ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದಳು. ನೋವು ಎಂದು ನರಳುತ್ತಿದ್ದವರಿಗೆ ಧೈರ್ಯ ಹೇಳುತ್ತಿದ್ದಳು. +ಮನೆ ಬಾಗಿಲಿಗೆ ಕತ್ರೀನಮ್ಮ ಬಂದಿದ್ದಾಳೆ ಎಂದರೆ ಎಲ್ಲರಿಗೂ ಧೈರ್ಯ. +ಊರಿಗೆ ಬಂದಾಗ ಮೂವತ್ತು ಮೂವತ್ತೈದರ ಪ್ರಾಯ ಹೊಂದಿದ್ದ ಕತ್ರೀನ ಪುರುಷರ ದಬ್ಬಾಳಿಕೆಗೂ ಒಳಗಾದಳು. ಅವಳ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಯಾರೋ ಮನೆ ಬಾಗಿಲು ಬಡಿದು ಓಡಿ ಹೋಗುತ್ತಿದ್ದರು. ಸಾವಿರ ಕಣ್ಣುಗಳು ಆಸೆಯಿಂದ ಚಪಲದಿಂದ ಅವಳನ್ನು ನೋಡಿ ಉರಿಯುತ್ತಿದ್ದವು. ಆದರೂ ತನ್ನ ಕೆಲಸ ಮಾಡಿಕೊಂಡು ಉಳಿದಳು ಕತ್ರೀನ. +ಊರಿನಲ್ಲಿ ಪಾದರಿ ಇರಲಿ ಇಲ್ಲದಿರಲಿ ಮನೆಯಲ್ಲಿ ಜಪ ಪ್ರಾರ್ಥನೆ ನಿಲ್ಲಿಸಲಿಲ್ಲ. ನಿತ್ಯ ಅಮೋರಿಯ ಸದ್ದು ಕೇಳಿ ಬರುತ್ತಿದ್ದುದು ತಮ್ಮ ಮನೆಯಿಂದ ಹಾಗೂ ಅವಳ ಮನೆಯಿಂದ ಮಾತ್ರ. ಊರಿಗೆ ಪಾದರಿ ಬಂದದ್ದು ಅವಳಿಗೆ ತುಂಬಾ ಸಂತೋಷದ ವಿಷಯವಾಯಿತು. ಪ್ರತಿದಿನ ಬೆಳಿಗ್ಗೆ ಅವಳು ಇಗರ್ಜಿಗೆ ಬಂದು ಪೂಜೆ ಕೇಳಬೇಕು. ಭಾನುವಾರಗಳಂದು ದಿವ್ಯಪ್ರಸಾದ ಸ್ವೀಕಾರ. +“ಈ ಕತ್ರೀನಬಾಯಿ ಪ್ರತಿವಾರ ದಿವ್ಯಪ್ರಸಾದ ತೊಕೊಳ್ತಾಳಲ್ಲ ಅವಳೇನು ಪಾಪ ಮಾಡಿರತಾಳೆ?” ಎಂದು ಯಾರೋ ಮಾತಾಡಿಕೊಂಡಿದ್ದು ಇವಳ ಕಿವಿಗೆ ಬಿದ್ದು ಇವಳು- +“..ಪಾಪ ಮಾಡಿದೀನಿ ಅಂತ ಅಲ್ಲ..ನನಗೆ ಶಕ್ತಿ ಬರಲಿ ಅಂತ ನಾನು ಕ್ರಿಸ್ತ ಪ್ರಭುವಿನ ರಕ್ತ ಮಾಂಸವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸೋದು” ಎಂದು ಹೆಳುತ್ತಿದ್ದಳು. +ತಪಸ್ಸಿನ ಕಾಲದ ಉಪವಾಸ, ಮುಂತಿ ಮಾತೆಯ ಹಬ್ಬದ ನವೇನ ಹೀಗೆ ಯಾವುದನ್ನೂ ಬಿಡಲಿಲ್ಲ. +ಊರಿಗೇನೆ ಬೇಕಾದವಳಾಗಿದ್ದವಳು ಕತ್ರೀನ. ಎಲ್ಲ ಜನರಿಗೂ ಅವಳ ಬಗ್ಗೆ ಗೌರವ ಪ್ರೀತಿ. +ಇತ್ತೀಚೆಗೆ ವಯಸ್ಸಾಗಿತ್ತು ಅವಳಿಗೆ. ಊರ ತುಂಬಾ ನರ್ಸಿಂಗ ಹೋಂಗಳು ಆಗಿದ್ದವು. ಆದರೂ ಹೆರಿಗೆ ಕಷ್ಟಕರವಾದಾಗ ನರ್ಸಿಂಗ ಹೋಂನವರು ಕೂಡ ಆಟೋ ಕಳುಹಿಸಿ ಕತ್ರೀನಳ ಮೇಲೆ ತುಂಬಾ ಭರವಸೆ ಇರಿಸಿಕೊಂಡ ಕೆಲವರು- +“..ನೀನು ಬಂದು ನಮ್ಮ ಜತೇಲಿ ಇರು..ಕತ್ರೀನಬಾಯಿ..ನಮಗಷ್ಟೇ ಸಾಕು” ಎಂದು ಹೇಳುತ್ತಿದ್ದರು. +ಕತ್ರೀನಬಾಯಿ ಹಣ ಮಾಡಬಹುದಿತ್ತು. ಕಳ್ಳ ಬಸಿರನ್ನು ತೆಗೆಸಲೆಂದು ಬಹಳ ಜನ ಅವಳಲ್ಲಿಗೆ ಬರುತ್ತಿದ್ದರು. +“ನಾನು ಇದೊಂದು ಕೆಲಸ ಮಾಡಲ್ಲ..ಇದು ಧರ್ಮ ದ್ರೋಹ…ದೇವರ ಸೃಷ್ಟಿನ ಹೊಸಕಿ ಹಾಕಿ ನಾನು ದೇವದ್ರೋಹಿ ಆಗಲಾರೆ..” ಎಂದು ಹೇಳುತ್ತಿದ್ದಳು. +ಹೆರಿಗೆ ಮಾಡಿಸಲೆಂದು ಹೋದ ಈಕೆಗೆ ದೊರಕುತ್ತಿದ್ದ ಪ್ರತಿಫ಼ಲ ಒಂದು ಸೀರೆ. ಒಂದು ಮೊರದ ತುಂಬ ಅಕ್ಕಿ, ಎಲೆ, ಅಡಿಕೆ, ಕೆಲ ರೂಪಾಯಿಗಳು ಇಷ್ಟರಿಂದಲೇ ಬದುಕಿದ್ದಳು ಕತ್ರೀನ. +ಇಳಿ ವಯಸ್ಸಿನಲ್ಲಿ ಕೈಯಲ್ಲಿ ಜಪಸರ ಹಿಡಿದು ಮಣಿ ಎಣಿಸುತ್ತ ಕೂತಿರುತ್ತಿದ್ದಳು. ಸಿಮೋನನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಅವಳಿಗಾಗಿ ಊಟ ಮತ್ತೊಂದು ಹೋಗುತ್ತಿತ್ತು. +“ಬೇಡ ಕಣೆ ಅಪ್ಪಿ…ನಾಲಿಗೆಗೆ ರುಚಿಯಿಲ್ಲ” ಎಂದು ಹೇಳುತ್ತಿದ್ದಳು. +ಒಂದು ತುತ್ತು ಉಂಡು ಉಳಿದುದನ್ನು ಮನೆ ಬಾಗಿಲಿಗೆ ಬರುವ ಕೊರಗರ ಮಕ್ಕಳಿಗೆ ಇಕ್ಕುತ್ತಿದ್ದಳು. +ಈ ಕತ್ರೀನ ಕೈಯಲ್ಲಿ ಜಪಸರ ಹಿಡಿದೇ ಕೊನೆಯ ಉಸಿರು ಎಳೆದಳು. ರಾತ್ರಿಗೆ ಅವಳಿಗೆ ಊಟ ಕೊಡಲೆಂದು ಹೋಗಿದ್ದ ಸಿಮೋನನ ಹೆಂಡತಿ ಅಪ್ಪಿಬಾಯಿ- +“..ದೇವಾ..” (ದೇವರೇ) ಎಂದು ಕೂಗಿ ಓಡಿ ಬಂದಳು. +ಹೆಂಗಸರು ಹೋಗಿ ಸ್ನಾನ ಮಾಡಿಸಿ, ಬಿಳಿ ಸೀರೆ ಉಡಿಸಿ, ಶವವನ್ನು ತಂದು ಮನೆಯ ಹೊರಗೆ ಮಲಗಿಸಿದರು. ಸುತಾರಿ ಮರದ ಶವ ಪೆಟ್ಟಿಗೆ ಸಿದ್ಧಪಡಿಸಿದ. ಜನ, ಹೂವು, ಮೇಣದ ಬತ್ತಿಯನ್ನು ಹಿಡಿದು ಅವಳ ಮನೆಗೆ ಧಾವಿಸಿದರು. ಹಿಂದುಗಳು, ಮುಸ್ಲೀಮರು ದಂಡಿಯಾಗಿ ಬಂದರು. ಆದರೆ ಪಾದರಿ ಸಿಕ್ವೇರಾ ಕತ್ರೀನಬಾಯಿಯ ಶವ ಸಂಸಾರಕ್ಕೆ ಸಿಗಲಿಲ್ಲ. +ಬೆಳಿಗ್ಗೆ ಊರಲ್ಲಿದ್ದ ಅವರು- +“ನಾನು ಹತ್ತು ಗಂಟೆಗೆ ಹೊರಗೆ ಹೋಗಬೇಕು. ಅಷ್ಟರಲ್ಲಿ ಎಲ್ಲ ಮುಗಿಸಿ” ಎಂದರು. +ಕತ್ರೀನಳ ತಾಯಿಯ ಕಡೆಯ ಸಂಬಂಧಿಗಳು ಹೊನ್ನಾವರದಿಂದ ಬರಬೇಕಿತ್ತು. ಸಿಮೋನ- +“…ಅವರು ಬರಲಿ ಪದ್ರಾಬಾ..ಹನ್ನೆರಡು ಗಂಟೆವರೆಗೆ ನೀವು ಇರಿ..” ಎಂದು ಕೇಳಿಕೊಂಡ. +“ಇಲ್ಲ..ಇಲ್ಲ..ಎಲ್ಲ ನೀವೇ ಮಾಡಿ ಮುಗಿಸಿ” ಎಂದು ಸಿಕ್ವೇರಾ ಕಾರನ್ನು ಏರಿದರು. +ಹನ್ನೆರಡು ಗಂಟೆಗೆ ಕತ್ರೀನಳ ಸಂಬಂಧಿಕರು ಬಂದರು. ಶವಯಾತ್ರೆಗೆ ಸಾಕಷ್ಟು ಜನ ಸೇರಿದ್ದರು. ಶವವನ್ನು ಇಗರ್ಜಿಗೆ ಕೊಂಡೊಯ್ದು ಅಲ್ಲಿ ಒಂದು ತೇರ್ಸ ಮಾಡಲಾಯಿತು. ನಂತರ ಮಿರೋಣ, ಡಯಾಸ, ಗುರ್ಕಾರರ ನೇತೃತ್ವದಲ್ಲಿ ಶವ ಸಂಸ್ಕಾರ ಆಯಿತು. +“ಛೇ! ಎಂತಹ ಸಾವು ಬಂತು ನೋಡಿ. ಒಂದು ಪೂಜೆ ಸಿಗಲಿಲ್ಲ. ಪಾದರಿಗಳ ಆಶೀರ್ವಾದ ಸಿಗಲಿಲ್ಲ ಎಂದು ಜನ ಪೇಚಾಡಿಕೊಂಡರು. +ಪಾದರಿ ಸಿಕ್ವೇರಾ ಅಷ್ಟು ಅವಸರ ಮಾಡಿಕೊಂಡು ಹೋದದ್ದು ಎಲ್ಲಿಗೆ ಎಂಬುದು ಅನಂತರ ಸಿಮೋನನಿಗೆ ತಿಳಿದುಬಂದಿತು. ಮೈಸೂರಿನಿಂದ ಬಂದ ನಾಲ್ವರು ಹೆಂಗಸರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಿಗೆ ಜಲಪಾತ ತೋರಿಸಲು ಪಾದರಿ ಸಿಕ್ವೇರಾ ಕರೆದುಕೊಂಡು ಹೋಗಿದ್ದರು. +ಸಿಮೋನ ಅಂತರಂಗದಲ್ಲಿಯೇ ಕೊರಗಿದ. +“ಏನು ಪದ್ರಾಬಾ..ನೀವು ಹೀಗೆ ಮಾಡುವುದಾ?” ಎಂದು ನೇರವಾಗಿ ಪಾದರಿ ಸಿಕ್ವೇರಾ ಅವರಿಗೆ ಕೇಳಿ ಬಿಡಬೇಕು ಅಂದುಕೊಂಡ. ಏನೋ ಅಳುಕು, ಅಂಜಿಕೆ ಅಡ್ಡ ಬಂದಿತು. ಪಾದರಿ ಹೀಗೆ ಮಾಡಬಾರದಿತ್ತು ಎಂದು ಮನಸ್ಸಿನಲ್ಲಿಯೇ ಮಿಡುಕಾಡಿದ. +-೧೦- +ಸಾಂತಾಮೋರಿ ಈಗ ಪೂರ್ಣ ದೈವಭಕ್ತೆ. ದೊಡ್ಡ ಮನೆಯಲ್ಲಿ ಅವಳೊಬ್ಬಳೆ. ಆಗಾಗ್ಗೆ ಮೊಮ್ಮಕ್ಕಳು ’ಅಜ್ಜಿ ಅಜ್ಜಿ’ ಎಂದು ಬಂದು ಹೋಗುವುದನ್ನು ಬಿಟ್ಟರೆ, ಕೇರಿಯ ಜನ ಮಾತನಾಡಿಸುವುದನ್ನು ಬಿಟ್ಟರೆ ಅವಳಿಗೆ ಬೇರೆ ಕೆಲಸವಿಲ್ಲ. ಇಳಿ ವಯಸ್ಸಿನಲ್ಲಿ ಗಂಡು ಮಕ್ಕಳು ದೂರವಾದರೆಂದು ಸಂಕಟಪಡುತ್ತಾಳೆ. ಆಗಾಗೆ ನಾತೇಲಳ ನೆನಪಾಗುತ್ತದೆ. ಅವಳು ಅಲ್ಲಿದ್ದಾಳೆ ಇಲ್ಲಿದ್ದಾಳೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತವೆಯಾದರೂ ನಾತೇಲ ಈವರೆಗೆ ತನ್ನನ್ನು ಸಂಪರ್ಕಿಸಿಲ್ಲ. ಅವಳಿಂದ ತನಗಾದ ಅವಮಾನದಿಂದಾಗಿ ಸಾಂತಾಮೊರಿ ಮಗಳನ್ನು ಮರೆಯುವ ಯತ್ನ ಕೂಡ ಮಾಡಿದ್ದಾಳೆ. +ಬೆಳಿಗ್ಗೆ ಎದ್ದ ತಕ್ಷಣ ಪ್ರಾಥಃಕಾಲದ ಪ್ರಾರ್ಥನೆ ಮುಗಿಸಿ ಇಗರ್ಜಿಗೆ ಹೋಗಿ ಪೂಜೆ ಆಲಿಸಿ ಬರುವುದು, ಮಧ್ಯಾಹ್ನ ರಾತ್ರಿಯ ಪ್ರಾರ್ಥನೆ, ಊಟಕ್ಕೆ ಕುಳಿತಾಗ, ಮಲಗುವ ಮುನ್ನ ಎದ್ದ ತಕ್ಷಣ ದೇವರ ಸ್ಮರಣೆ, ಕುತ್ತಿಗೆಯಲ್ಲಿರುವ ಜಪಸರ ಆಗಾಗ್ಗೆ ಕೈಗೂ ಬರುತ್ತದೆ. ಮಣಿಗಳನ್ನು ಎಣಿಸುತ್ತ ಅವಳು ಜಪ ಸರ ಪ್ರಾರ್ಥನೆಯನ್ನು ಮಾಡುತ್ತಾಳೆ. ಆದರೆ ಅವಳದೊಂದು ಕೊರಗೆಂದರೆ ಸುತಾರಿ ಇನಾಸನ ಮನೆ ಮುಂದಿನ ಶಿಲುಬೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಳು ಹೋಗುವಂತಿಲ್ಲ. ಅವಳು ಮಾತ್ರವಲ್ಲ ಕೇರಿಯ ಯಾರೂ ಈಗ ಅಲ್ಲಿಗೆ ಹೋಗುವುದಿಲ್ಲ. +ಶಿಲುಬೆ ಸುಣ್ಣ ಬಣ್ಣ ಕಾಣದೆ ನಿಂತಿದೆ. ವೇದಿಕೆಯ ಮೇಲಿನಗಾರೆ, ಸುಣ್ಣ ಹಪ್ಪಳದಂತೆ ಎದ್ದು ಬಿದ್ದು ಹೋಗಿದೆ. ಕಜ್ಜಿ ಹತ್ತಿದ ಹಾಗೆ ಬತ್ತಿ ಹಚ್ಚದೆ ತಿಂಗಳುಗಳಾಗಿವೆ. ಶಿಲುಬೆಗೆ ಹೂವಿನ ಅಲಂಕಾರವಿಲ್ಲ. +ಇನಾಸನ ಮನೆ ರೈಮಂಡ ಹಾಗು ಪಾಸ್ಕು ನಡುವೆ ಹಂಚಿ ಹೋದ ನಂತರ ಈ ಶಿಲುಬೆ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಬಂದಿತು. ಕೆಲದಿನ ಇನಾಸನ ಹೆಂಡತಿ ಅಲ್ಲಿದ್ದಳು. ಬಾಯಿ ಇಲ್ಲದ ಅವಳು ಎರಡು ದಿನ ಹಿರಿಯ ಮಗನ ಮನೆ ಎರಡು ದಿನ ಕಿರಿಯ ಮಗನ ಮನೆ ಎರಡು ದಿನ ಎಂದು ಉಳಿದಳು. ಅದು ಏಕೋ ಅವಳಿಗೆ ಹಿಂಸೆ ಎನಿಸಿತು. ತನ್ನ ಬೇಕು ಬೇಡಗಳನ್ನು ಪೂರೈಸುತ್ತ ಅಕ್ಕರೆಯಿಂದ ನೋಡಿಕೊಳ್ಳುವ ಗಂಡ ಇರಲಿಲ್ಲ. ಮನೆ ಮಕ್ಕಳ ಪಾಲಾಗಿತ್ತು. ಒಂದು ಹೊತ್ತಿನ ಊಟಕ್ಕಾಗಿ ಒಂದು ಲೋಟ ಕಾಫ಼ಿಗಾಗಿ ಸೊಸೆಯಂದಿರ ಮರ್ಜಿಕಾಯುವ ಪರಿಸ್ಥಿತಿ ಬಂದಿತ್ತು. ಇದನ್ನು ಬಹಳ ದಿನ ಸಹಿಸಲಾಗದೆ‌ಅವಳು ತನ್ನ ತೌರಿನತ್ತ ನೋಡತೊಡಗಿದಳು. ಮೂಡ್ಕಣಿಯಲ್ಲಿ ಅವಳ ಅಣ್ಣನ ಮನೆಯಿತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಇವಳು ಅಲ್ಲಿಗೆ ಹತ್ತಿರದ ಮಲ್ಕೊಡು=”ಹಡಿನಬಾಳಗಳಿಗೆ” ಕೊಟ್ಟಿದ್ದಳು. ಹೆಣ್ಣು ಮಕ್ಕಳಾದರು ಹತ್ತಿರವಿರುತ್ತಾರೆ ಎಂದೆನಿಸಿ ಮೊನ್ನೆ ಒಂದು ದಿನ ರೈಮಂಡ ಬಸ್ತುವಿಗೆ ಸನ್ನೆಯಲ್ಲಿಯೇ ತಾನು ಘಟ್ಟ ಇಳಿಯುವುದಾಗಿ ಹೇಳಿದಳು. +“ಬೇಡ ನಮ್ಮ ಜತೆ ಇರು” ಎಂದು ಇಬ್ಬರೂ ಬೇಡಿಕೊಂಡರು. ತಾಯಿಯ ಮೈ ಮೇಲಿನ ಆಭರಣ ಇಬ್ಬರ ಕಣ್ಣನ್ನೂ ಕುಕ್ಕಿತು. +“ನಿನಗೇನೂ ಕಡಿಮೆ ಮಾಡಲ್ಲ ನಾವು..ನೀನು ಬೇಕಾದರೆ ಆ ಮನೆಯಲ್ಲಿರು ಈ ಮನೆಯಲ್ಲಿರು. ಬೇಡ ಒಂದು ವಾರ ಅಲ್ಲಿ ಒಂದು ವಾರ ಇಲ್ಲಿ ಇರು..” ಎಂದು ಸನ್ನೆ ಮಾಡಿ ತಿಳಿಸಿದಳು. +ಮೊನ್ನೆ ಒಪ್ಪಲಿಲ್ಲ. ಗಂಟು ಕಟ್ಟಿಕೊಂಡು ಹೊರಡುತ್ತೇನೆಂದು ಹಠ ಮಾಡಿದಳು. ರೈಮಂಡ ಅವಳನ್ನು ಊರಿಗೆ ಕರೆದೊಯ್ದು ಬಿಟ್ಟು ಬಂದ. +ಹೋಗುವಾಗ ಅವಳು- +ಶಿಲುಬೆ ದೇವರಿಗೆ ಮೇಣದಬತ್ತಿ ಹಚ್ಚಿ, ಅದರ ಮುಂದೆ ಪ್ರಾರ್ಥನೆ ಮಾಡಿ ಎಂದು ಹೇಳಿದಳು. +“ಆಯ್ತು..ಆಯ್ತು ನಾವು ಮಾಡತೇವೆ” ಎಂದು ಈರ್ವರೂ ತಲೆ ತೂಗಿದರು. +ಮೊನ್ನೆ ಊರು ಸೇರಿದ ಮೇಲೆ ಇಲ್ಲಿ ದೇವರು ಅನಾಥನಾದ. ರೈಮಂಡ ಮನೆಗೆ ಬಂದು ಕುಡಿಯುತ್ತಿದ್ದ. ಬಸ್ತು ಬರುವಾಗಲೇ ಕುಡಿದು ಬರುತ್ತಿದ್ದ. ಅಂಗಳದಲ್ಲಿ ಚಾಪೆ ಹಾಸುವ ಪದ್ಧತಿ ನಿಂತು ಹೋಯಿತು. ಶಿಲುಬೆಗೆ ಹೂವಿನ ಅಲಂಕಾರ ಮಾಡುವವರು ಇಲ್ಲವಾದರೂ, ರೈಮಂಡ, ಬಸ್ತುವಿನ ಹೆಂಡತಿಯರು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಒಂದು ದಿನ ಶಿಲುಬೆ ದೇವರ ಪದತಲದಲ್ಲಿಯ ಕಾಣಿಕೆ ಡಬ್ಬಿ ಕಾಣೆಯಾಯಿತು. ಈ ಕಾರಣಕ್ಕಾಗಿ ಬಸ್ತು ರೈಮಂಡರ ನಡುವೆ ಜಗಳವಾಯಿತು. +ತೇರ್ಸ ಮಾಡಲು ಅಂಗಳಕ್ಕೆ ಬಂದವರನ್ನು ಬಸ್ತು ಕುಡಿದು ಬಂದವನು- +“ಹೋಗಿ ಹೋಗಿ..ಇಗರ್ಜಿಗೆ ಹೋಗಿ” ಎಂದು ಕೂಗಾಡಿ ಅಟ್ಟಿದ. +ನಿತ್ಯದ ಜಪ ನಿಂತು ಹೋಯಿತು. ಶುಕ್ರವಾರದ ಪ್ರಾರ್ಥನೆ ಇಲ್ಲವಾಯಿತು. ಕೇರಿಯ ಜನ ತಿಂಗಳಿಗೊಂದು ಮನೆಯವರ ಹಾಗೆ ಇಲ್ಲಿ ಬಂದು ನಡೆಸುತ್ತಿದ್ದ ವಿಶೇಷ ತೇರ್ಸ ಕೂಡ ಕ್ರಮೇಣ ಯಾರಿಗೂ ಬೇಡವಾಯಿತು. ಯಾರದ್ದೋ ಮನೆ ಬಾಗಿಲಿಗೆ ಹೋಗಿ ಛಿ! ಥು! ಅನಿಸಿಕೊಳ್ಳುವುದೇಕೆಂದು ಜನ ಇತ್ತ ಬರುವುದನ್ನು ನಿಲ್ಲಿಸಿದರು. ಹೇಗೊ ಇಗರ್ಜಿ ಬಾಗಿಲಲ್ಲಿ ಸಂತನಿದ್ದ. ಇಗರ್ಜಿಯಲ್ಲಿ ಏಸು ಪ್ರಭುವಿದ್ದ. ಮನೆ ಮನೆಯಲ್ಲಿ ಕುಲ ದೇವರ ಪ್ರತಿಮೆ ಇತ್ತು. ಜನ ಸುತಾರಿ ಇನಾಸನ ಮನೆಯ ಶಿಲುಬೆ ದೇವರನ್ನು ಮರೆತರು. ಪಾದರಿ ಸಿಕ್ವೇರಾ ಕೂಡ ಈ ಬಗ್ಗೆ ಆಸಕ್ತಿ ತೋರಲಿಲ್ಲ. +“..ಹೀಗೆ ಆಗಬಾರದಿತ್ತು..” ಎಂದು ಮರುಗಿದಳು ಸಾಂತಾಮೊರಿ. +ಅಲ್ಲಿ ದೀಪದ ಬೆಳಕಿಲ್ಲದೆ, ಪ್ರಾರ್ಥನೆ ಕೀರ್ತನೆಗಳ ದನಿ ಇಲ್ಲದೆ ಆ ರಸ್ತೆಯೇ ಬಣಗುಡುತ್ತಿರುವಂತೆ ಅವಳಿಗೆ ಅನಿಸಿತು. +“..ಅಯ್ಯೋ ಇನ್ನೂ ಏನೇನು ಆಗಬೇಕಾಗಿದೆಯೊ” ಎಂದವಳು ನಿಟ್ಟುಸಿರು ಬಿಟ್ಟಳು. +“ಜೇಸು ಮರಿ ಜೋಸೆಫ಼ರೇ ನನ್ನನ್ನು ಕಾಪಾಡಿ” ಎಂದು ಹೇಳಿ ಕುತ್ತಿಗೆಯಲ್ಲಿಯ ಜಪಸರದ ತುದಿಯ ಪದಕಕ್ಕೆ ಮುತ್ತಿಟ್ಟಳು. +* +* +* +“ಢಣ್..ಢಣ್..ಢಣ್..” +ಮಧ್ಯಾಹ್ನ ೧೨ ಗಂಟೆ. ಇಗರ್ಜಿಯ ಗಂಟೆ ಗೋಪುರದಿಂದ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಕೇಳಿಸತೊಡಗಿತು. ಮೊದಲು ಮೂರು ಬಾರಿ ಢಣ್ ಢಣ್ ಢಣ್ ನಂತರ ನಿಲ್ಲದೆ ಗಂಟೆ ಸದ್ದು ಕೇಳಿಸಿತು. ಸಾಂತಾಮೋರಿ ಕತ್ತಲೆ ಕೋಣೆಗೆ ಬೀಗ ಹಾಕಿ ದೇವರ ಪೀಠಕ್ಕೆ ಬಂದಳು. ಮೇಣದ ಬತ್ತಿ ಹಚ್ಚಿ ಶಿಲುಬೆಯ ಗುರುತು ಮಾಡಿ ಚಾಪೆಯ ಮೇಲೆ ಕುಳಿತು ಪ್ರಾರ್ಥನೆಗೆ ತೊಡಗಿದಳು. +ಹಿಂದೆ ಮಧ್ಯಾಹ್ನದ ಪ್ರಾರ್ಥನಾ ಗಂಟೆಯಾಯೆತೆಂದರೆ ಕ್ರೀಸ್ತುವರ ಮನೆಗಳಲ್ಲಿ ಗಡಿಬಿಡಿ. ದೇವರ ಎದುರು ದೀಪ ಬೆಳಗುವುದು, ಮೊಣಕಾಲೂರುವುದು, ಮಕ್ಕಳನ್ನು ಕರೆಯುವುದು ಪ್ರಾರ್ಥನೆ ಹೇಳಿಕೊಡುವುದು ಮುಗಿದ ನಂತರ ಆಶೀರ್ವಾದ ಕೇಳುವ ಸಂಭ್ರಮ. ಈಗ ಅದೆಲ್ಲ ಕಡಿಮೆ. ಮಕ್ಕಳು ಶಾಲೆಯಲ್ಲಿ, ಗಂಡಸರು ಪೇಟೆ ಕೆಲಸದ ಮೇಲೆ, ಹೆಂಗಸರಿಗೂ ಬಿಡುವಿರುವುದಿಲ್ಲ. ಹನ್ನೆರಡು ಗಂಟೆಯ ಪ್ರಾರ್ಥನಾ ಗಂಟೆ ಕೇಳಿದ ಕೂಡಲೆ ಈಗ ಎಲ್ಲ ಹಣೆ, ಎದೆ, ಭುಜ ಮುಟ್ಟಿಕೊಂಡು ಶಿಲುಬೆಯ ವಂದನೆ ಮಾಡಿ ಮುಗಿಸುತ್ತಾರೆ. ಆದರೆ ಸಾಂತಾಮೊರಿಯಂಥವರು ಮಾತ್ರ ಗಂಟೆ ಸದ್ದು ಕೇಳಿ ಪ್ರಾರ್ಥನೆಗೆ ತೊಡಗಿಕೊಳ್ಳುತ್ತಾರೆ. +ಸಾಂತಾಮೊರಿ ಸಾಕಷ್ಟು ಹೊತ್ತು ಪ್ರಾರ್ಥನೆ ಮಾಡಿದಳು. ಕುಟುಂಬದ ಎಲ್ಲರಿಗೂ ಒಳಿತನ್ನು ಕೋರಿದಳು. ಎಂದೋ ತೀರಿಕೊಂಡ ತನ್ನ ಗಂಡನ ಆತ್ಮಕ್ಕೆ ಸದ್ಗತಿ ನೀಡುವಂತೆ ಬೇಡಿಕೊಂಡಳು. ಸಂಪ್ರದಾಯದಂತೆ ಊರ ಪಾದರಿಗಳಿಗೆ, ಬಿಶಪ್ ಗುರುಗಳಿಗೆ, ರೋಮಿನ ಪೋಪ ಜಗದ್ಗುರುಗಳಿಗೆ ಒಳಿತನ್ನು ಕೇಳಿಕೊಂಡಳು. ಶಿಲುಬೆಯ ಗುರುತಿನೊಂದಿಗೆ ಪ್ರಾರ್ಥನೆ ಮುಗಿಸಿ ಎದ್ದಳು. ಅಲ್ತಾರ ಮೇಲಿನ ಇಮಾಜಿಗೆ ಕೈ ಬೆರಳ ಮೂಲಕ ಮುತ್ತಿಟ್ಟು, ಉಳಿದ ಪೈನಲಗಳಿಗೂ ಮುತ್ತಿಟ್ಟು ಉರಿಯುತ್ತಿದ್ದ ಬತ್ತಿ ಆರಿಸಿ ತಿರುಗಿದಾಗ ಹೊರಗೆ ಆಟೋ ಬಂದು ನಿಂತ ಸದ್ದಾಯಿತು. +“ಇಷ್ಟು ಹೊತ್ತಿಗೆ ಯಾರು ಬಂದರು?” ಎಂದು ಹೊರಗೆ ಬಗ್ಗಿ ನೋಡಿದಳು. ಮತ್ತೂ ಅಚ್ಚರಿ ಎನಿಸಿತು. +ಮೊದಲು ಯುವಕನೋರ್ವ ಇಳಿದ. ನಂತರ ಓರ್ವ ಹೆಂಗಸು. ಅವರ ಸೂಟಕೇಸು, ಬ್ಯಾಗುಗಳು. ಆಟೋ ಹೊರಡುತ್ತಿರಲು ಅವರು ಮನೆಯತ್ತ ತಿರುಗಿದರು. +ಕಣ್ಣು ತುಸು ಮಂದ ಎನಿಸಿತು. +ಎರಡು ಹೆಜ್ಜೆ ಮುಂದಿಟ್ಟು ಜಗಲಿಗೆ ಬಂದವಳು. “ನಾತೇಲ..” ಎಂದು ಚೀರಿದಳು. +ಸಂತೋಷದಿಂದ ಅವಳ ಕಣ್ಣುಗಳು ತುಂಬಿ ಬಂದವು. +* +* +* +ಮಗಳು ತಿರುಗಿ ಬಂದಳೆಂಬ ಸಂತಸದ ಹಿಂದೆಯೇ ಮಗಳು ಈ ವರೆಗೆ ಅನುಭವಿಸಿದ ನೋವು ಕಷ್ಟಗಳ ಅರಿವಾಗಿ ಮನಸ್ಸು ಮುದುಡಿಕೊಂಡಿತು. +ತಾನು ಊರಲ್ಲಿಯೇ ಇದ್ದರೆ ಜಾತಿ ಕಟ್ ಮಾಡುವುದು ಖಚಿತ ಎಂಬುದನ್ನು ತಿಳಿದ ನಾತೇಲ ಊರು ಬಿಟ್ಟಳು. ತನ್ನ ತಾಯಿ ಅಣ್ಣಂದಿರು ಈ ಜಾತಿಕಟ್ ನ ಕಿರುಕುಳಕ್ಕೆ ಒಳಗಾಗುವುದು ಬೇಡ ಎಂದು ಅವಳು ನಿರ್ಧರಿಸಿದಳು. ವಿವಾಹ ಬಾಹಿರವಾದ ಸಂಬಂಧ ಮಾಡಿರುವ ತನಗೆ ಶಿಕ್ಷೆಯಾಗಲಿ, ಆದರೆ ಈ ಶಿಕ್ಷೆಗೆ ತನ್ನ ತಾಯಿ ಅಣ್ಣಂದಿರು ಏಕೆ ಬಲಿಯಾಗಬೇಕು? +ಊರಿಗೆ ಬಂದ ಯಾವುದೋ ಎತ್ತಿನ ಗಾಡಿಯನ್ನೇರಿ ಅವಳು ಶಿರಸಿಗೆ ಬಂದಳು. ಅಲ್ಲಿಂದ ಹುಬ್ಬಳ್ಳಿ. ಅಲ್ಲಿ ಇಲ್ಲಿ ಭಿಕ್ಷೆ ಬೇಡಿ, ಕೈಚಾಚಿ ತುತ್ತು ರೊಟ್ಟಿಗಾಗಿ ಅವರಿವವರನ್ನು ಕಾಡಿ ಅವಳು ಬೆಳಗಾಂವಗೆ ಬಂದು ತಲುಪಿದಳು. ಶಿವಸಾಗರದಿಂದ ಬಹಳ ದೂರ ಹೋಗಬೇಕು ಎಂಬ ಅವಳ ಯತ್ನ ಫ಼ಲಿಸಿತು. ಬೆಳಗಾಂವನ ಟಿಳಕವಾಡದ ಬಂದು ಅಬಲಾಶ್ರಮ ಅವಳಿಗೆ ತಾವು ನೀಡಿತು.. ತನ್ನ ನೋವನ್ನು ಅಲ್ಲಿಯ ರುಕ್ಮಿಣಿ ತಾಯಿಯವರಲ್ಲಿ ಅವಳು ತೋಡಿಕೊಂಡಳು. ಜಾತಿ ಪದ್ಧತಿ ಪರಂಪರೆಯ ಮುಂದೆ ಕೆಲಬಾರಿ ಮಾನವೀಯತೆ ಗೆಲ್ಲುತ್ತದೆ. ಇಲ್ಲಿ ಹಾಗೆಯೇ ಆಯಿತು. ಅಬಲಾಶ್ರಮ ನಡೆಸುತ್ತಿದ್ದ ರುಕ್ಮಿಣಿ ತಾಯಿ ಏನೂ ಕೇಳದೆ ನಾತೇಲಾಗೆ ಆಶ್ರಯ ನೀಡಿದಳು. +ಅವಳ ಹೆರಿಗೆಯೂ ಅಲ್ಲಿಯೇ ಆಯಿತು. ಐದಾರು ತಿಂಗಳ ನಂತರ ಕುರುಡೇಕರ ಎನ್ನುವವರ ಮನೆಯಲ್ಲಿ ಆಕೆಗೆ ಕೆಲಸ ಕೂಡ ಸಿಕ್ಕಿತು. +ಮನೆಯಲ್ಲಿ ಹತ್ತು ಹದಿನೈದು ಜನರ ಊಟ ಉಪಚಾರ ನೋಡಿಕೊಳ್ಳುತ್ತಿದ್ದ ಅವಳಿಗೆ ಕುರುಡೇಕರ ಮನೆಗೆಲಸ ಕಷ್ಟವಾಗಲಿಲ್ಲ. ಮಗನನ್ನು ನೋಡಿಕೊಳ್ಳುವ ಅವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡುವ ಹೊಣೆಗಾರಿಕೆ ಬೇರೆ ಇತ್ತು. +ವಯಸ್ಸಿಗೆ ಸಹಜವಾದ ಬದಲಾವಣೆಗಳಿಗೆ ಅವಳ ಮೈಮನಸ್ಸು ಅರಳುತ್ತಿದ್ದಾಗ ಬೀದಿಗೆ ಬರುತ್ತಿದ್ದ ಓರ್ವ ಕಲಾಯಿಗಾರ ಯುವಕನ ಮೋಹಪಾಶಕ್ಕೆ ಬಿದ್ದಿದ್ದಳು. ಮನೆಯಲ್ಲಿಯ ಪಾತ್ರೆಗಳನ್ನು ಕೊಂಡೊಯ್ದು ಕಲಾಯಿ ಮಾಡಿ ರಿಪೇರಿ ಮಾಡಿ ಹಿಂತಿರುಗಿಸಲು ಆತ ಬರುತ್ತಿದ್ದ. ಊರ ಮಾರಿಗುಂಡಿಯ ಹಿಂಬದಿಯಲ್ಲಿ ಅವನ ಅಂಗಡಿಯಿತ್ತು. ಆಗಾಗ್ಗೆ ಆತ ತನ್ನ ಮನೆಗೂ ಬರುತ್ತಿದ್ದ. ಬೀದಿಗೂ ಬರುತ್ತಿದ್ದ. ಕೊಂಡೊಯ್ಯುವಾಗ ಹಳೆಯದಾಗಿ ಬಣ್ಣ ಕಳೆದುಕೊಂಡಿರುತ್ತಿದ್ದ ಪಾತ್ರೆಗಳನ್ನು ಆತ ತಿರುಗಿ ತಂದಾಗ ಅವು ಲಕಲಕ ಹೊಳೆಯುತ್ತಿದ್ದವು. ಹೊಸದಾಗಿ ಕಂಗೊಳಿಸುತ್ತಿದ್ದವು. +ಹೀಗೆ ಅಂದವಾದ ಪಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದ ಆ ಯುವಕ ಅಂಗಳದಲ್ಲಿ ನಿಂತು- +“ಬಾಯೀ..” ಎಂದು ಕರೆದ. ಅಂದು ಸಾಂತಾಮೋರಿ ಪಾಪ ನಿವೇದನೆಗೆಂದು ಇಗರ್ಜಿಗೆ ಹೋಗಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ನಾತೇಲ ಅದೇ ಸ್ನಾನ ಮುಗಿಸಿ ಉದ್ದ ತಲೆಗೂದಲ ನೀರು ಹೀರಿಕೊಳ್ಳಲೆಂದು ತಲೆಗೊಂದು ಬಟ್ಟೆ ಕಟ್ಟಿಕೊಂಡು ಹೊರಬಂದಾಗ ಆತ ಅಲ್ಲಿ ನಿಂತಿದ್ದ. +“..ಬಾಯಿ..ಪಾತ್ರೆ ತಂದಿದೀನಿ..ಒಳಗೆ ಇಡಲಾ..” ಎಂದು ದೊಡ್ಡ ಪಾತ್ರೆಯಲ್ಲಿರುವ ಸಣ್ಣ ಸಣ್ಣ ಪಾತ್ರೆಗಳನ್ನು ಹೊರಗೆ ತೆಗೆದಿರಿಸಿದ. +“ಒಂದು ದಿನ ಶಗಣೆ ನೀರು ಹಾಕಿ ಇಡು ಬಾಯಿ..ನಾಳೆಯಿಂದ ಬಳಸಬಹುದು” ಎಂದ ಆತ ಒಂದೊಂದೇ ಪಾತ್ರೆ ತಂದು ಒಳಗಿರಿಸಿ. ನಾತೇಲ ಅವನ ಜತೆಗೇನೆ ಒಳಬಂದಳು. ಬಹಳ ದಿನಗಳಿಂದ ಅವರಲ್ಲಿದ್ದ ಸ್ನೇಹ, ಸಲಿಗೆ ಅವರನ್ನು ಮತ್ತೆಲ್ಲಿಗೋ ಕರೆದೊಯ್ದು ಆಗಾಗ್ಗೆ ಆಟವಾಡಿಸುತ್ತಿದ್ದ ಸೈತಾನ ತನ್ನ ಆಟ ತೋರಿಸಿಯೇ ಬಿಟ್ಟ. ಕಲಾಯಿಕಾರನ ಬಲಿಷ್ಠ ತೋಳುಗಳಿಗೆ ತನ್ನನ್ನು ತಾನು ಒಪ್ಪಿಸಿ ಕೊಟ್ಟ ನಾತೇಲ ಮೈ ಹಗುರವಾದಂತಾಗಿ ನರನಾಡಿಗಳಲ್ಲಿ ಸುಖದ ತಂತಿ ಇಂಪಾಗಿ ಮಿಡಿಯಲು ಅಷ್ಟೆ ಭೀತಿಯಿಂದ ಆತಂಕದಿಂದ ಕಳವಳಗೊಂಡಳು. +ಮತ್ತೆ ಮತ್ತೆ ಆ ಯುವಕನ ಸಾಮೀಪ್ಯ ಅವಳಿಗೆ ಬೇಕೆನಿಸಿತು. ಆದರೆ ನಂತರದ ಪರಿಣಾಮ ಬೇರೆಯಾಯಿತು. ಸಂಸಾರಿಗನಾಗಿ ಓರ್ವ ಮಗನ ತಂದೆಯಾಗಿದ್ದ ಆ ಯುವಕನ ಮೇಲೆ ಅತಿಯಾದ ಮಮತೆ ಇರಿಸಿಕೊಂಡ ನಾತೇಲ ತನ್ನ ಶಿಲುಬೆಯನ್ನು ತಾನೇ ಹೋರಲು ನಿರ್ಧರಿಸಿದಳು. ಅಂತೆಯೇ ಅವಳು ಊರುಬಿಟ್ಟಳು. +ಕುರುಡೇಕರ ಮನೆ ಸೇರಿಕೊಂಡ ಅವಳು ಆಗಾಗ್ಗೆ ಹುಬ್ಬಳ್ಳಿ, ಶಿರಸಿಯವರೆಗೂ ಬರುವುದಿತ್ತು. ಕುರುಡೇಕರ ಅವರ ನೆಂಟರು ಅಲ್ಲೆಲ್ಲ ಇದ್ದುದರಿಂದ ಕುರುಡೇಕರ ಕುಟುಂಬದ ಜತೆ ಅವಳು ಇಲ್ಲಿಗೆಲ್ಲ ಬರಬೇಕಾಗುತ್ತಿತ್ತು. ಬಂದಾಗಲೆಲ್ಲ ತನ್ನ ಮನೆಯ ಬಗ್ಗೆ ತಿಳಿದುಕೊಳ್ಳಲು ಅವಳು ಯತ್ನಿಸಿದಳು. +ಕುರುಡೇಕರ ಕುಟುಂಬ ಈಕೆಯನ್ನು ಬಹಳ ವರ್ಷ ಸಲಹೆ ಕಾಪಾಡಿತು. ಅವರ ಬಂಗಲೆ ಹಿಂದಿನ ಮನೆ ತಾಯಿ ಮಗನಿಗೆ ಸಾಕಾಯಿತು. ಮಗ ಓದಿ ಮುಂದೆ ಬಂದ. ಕುರುಡೇಕರ ಮನೆಯಲ್ಲಿ ಕೂಡ ಕೆಲ ಬದಲಾವಣೆಗಳು ಆದವು. ಮನೆಯ ಯಜಮಾನಿಯ ನಂತರ ಸೊಸೆಯಂದಿರು ಅಧಿಕಾರವಹಿಸಿಕೊಂಡರು. ಈ ಹಂತದಲ್ಲಿ ಏಕೋ ನಾತೇಲಾಗೆ ಊರಿನ ನೆನಪಾಯಿತು. ತಾಯಿಯ ಹಂಬಲವಾಯಿತು. ಮಗನಿಗೆ ಊರು ತೋರಿಸಬೇಕು ಎನಿಸಿತು. ಸಾಧ್ಯವಾದರೆ ಅಲ್ಲಿಯೇ ಇರಬೇಕು ಎಂದು ಕೂಡ ಅವಳು ಬಯಸಿದಳು. ಆದರೆ ಜಾತಿಕಟ್ ನ ಹೆದರಿಕೆ ಇನ್ನೂ ಇತ್ತು. ಜನ ತನ್ನನ್ನು ಸ್ವೀಕರಿಸದಿದ್ದರೆ? +ಆದರೂ ಅವಳು ಬಂದಳು. +“ಮಾಯಿ ಇಷ್ಟೆಲ್ಲ ಆಗಿ ಹೋಯಿತು” ಎಂದು ತಾಯಿಯ ಮಡಿಲಲ್ಲಿ ಮುಖವಿರಿಸಿ ಅತ್ತಳು. +“..ಹೋಗಲಿ ಬಿಡು..ಅದೆಲ್ಲ ಆಗಬೇಕಿತ್ತೇನೋ..” ಎಂದಳು ಸಾಂತಾಮೋರಿ ಮಗಳ ಮೈ ಸವರಿ ಅವಳ ಕೆನ್ನೆ ಒರೆಸಿ. ಮೊಮ್ಮಗನನ್ನು ಬಳಿ ಕರೆದು ಅವನನ್ನು ಅಪ್ಪಿಕೊಂಡಳು ಸಾಂತಾಮೊರಿ. +ಸಾಂತಾಮೊರಿ ಮಗಳು ಊರಿಗೆ ತಿರುಗಿ ಬಂದಿದ್ದಾಳೆ ಎಂಬುದು ಕೇರಿಯ ಹಳಬರಿಗೆಲ್ಲ ತಿಳಿಯಿತು. ಇವಳ ಹೆಸರು ಕೇಳದಿದ್ದವರು ಕೂಡ ಕುತೂಹಲಗೊಂಡರು. ಕೆಲವರು ಏನೋ ನೆಪ ಮಾಡಿಕೊಂಡು ಸಾಂತಾಮೊರಿ ಮನೆಗೆ ಬಂದು- +“..ಅರೆ..ಯಾರು? ನಾತೇಲ ಅಲ್ವ? ಎಲ್ಲಿದೀಯ? ಇವನ ಮಗನಾ?” ಎಂದು ವಿಚಾರಿಸಿಕೊಂಡು ಹೋದರು. +ಸಾಂತಾಮೊರಿ ನಿತ್ಯದಂತೆ ಇಗರ್ಜಿಗೆ ಹೋಗುವಾಗಲೂ ಕೆಲವರು. +“ಹೌದೇನೆ, ಸಾಂತಾಮೊರಿ ಮಗಳು ಬಂದಿದಾಳಂತೆ ಹೌದೇನೆ?” ಎಂದು ಕೇಳಿದರು. ಜನ ಈ ಬಗ್ಗೆ ಮತ್ತು ಹೆಚ್ಚಿನ ಆಸಕ್ತಿ ತೋರಲಿಲ್ಲ. +ನಾತೇಲ ಮಗನ ಜತೆ ಹೊರಗೆ ಹೋಗಿ ಬಂದಳು. ಊರು ಬದಲಾಗಿತ್ತು. ದೊಡ್ಡದಾಗಿತ್ತು. ಹೊಸ ಕಟ್ಟಡಗಳು ಎದ್ದು ನಿಂತಿದ್ದವು. ಒಂದು ಪೇಟೆ ಇದ್ದುದು ಈಗ ಊರ ತುಂಬಾ ಪೇಟೆಗಳಾಗಿದ್ದವು. ಮನೆ ಮನೆ ಗೋಡೆಗಳನ್ನು ಒಡೆದು ಅಂಗಡಿಗಳನ್ನಾಗಿ ಮಾಡಲಾಗಿತ್ತು. ಪೇಟೆ ಬೀದಿಯಲ್ಲಿ ಹೋಗುವಾಗ ಬೋನನ ಅಂಗಡಿ ಸಾಲಿನಲ್ಲಿ ಆರನೆ ಅಂಗಡಿ ಗುಡಲಕ್ ಸ್ಟೀಲ್ ವೆಸಲ್ಸ್ ಎಂಬ ಸ್ಟೀಲ್ ಪಾತ್ರೆಗಳೇ ತುಂಬಿರುವ ಅಂಗಡಿಯೊಂದರ ಮುಂದೆ ಬಂದಾಗ ಅವಳ ಕಾಲು ಕಂಪಿಸಿದವು. ಮೈ ಪುಳಕಿತವಾಯಿತು. ಅಂಗಡಿಯೊಳಗಿದ್ದ ಮಾಲಿಕ ಪಾತ್ರೆಗಳ ಮೇಲೆ ಹೆಸರು ಕೆತ್ತುವ ಗಡಿಬಿಡಿಯಲ್ಲಿದ್ದವ ನಾತೇಲಳನ್ನು ನೋಡಲಿಲ್ಲ. ನಾತೇಲ ಕೂಡ ಅತ್ತ ಹೆಚ್ಚು ಗಮನ ಹರಿಸಲಿಲ್ಲ. +ನಾತೇಲ ಊರಿಗೆ ಬಂದ ವಿಷಯ ಅವಳ ಅಣ್ಣಂದಿರಿಗೂ ತಿಳಿಯಿತು. +ಬಸ್ತು ಮನೆಗೆ ಬಂದವನು ಜಗಲಿಯ ಮೇಲೆಯೆ ಕುಳಿತು- +“ಹೋದವಳು ತಿರುಗಿ ಯಾಕೆ ಬಂದೆ..ಮತ್ತೆ ನಮ್ಮ ಮರ್ಯಾದೆ ತೆಗೀಲಿಕ್ಕ?” ಎಂದು ಕೇಳಿದ. +ಜಾನಿ ಕೂಡ ರಸ್ತೆಯ ಮೇಲೆ ನಿಂತು ತಾಯಿಗೆ- +“..ಧಾಜಣರ ಮಾತು ಮೀರಿ ಹೋದವಳಲ್ವ ಅವಳು..ಅವಳನ್ನು ಮನೆಗೆ ಯಾಕೆ ಸೇರಿಸ್ಕೊಂಡಿ..” ಎಂದೆಲ್ಲ ಕೂಗಾಡಿದ. +ನಾತೇಲಳಿಗೂ ಒಂದು ಹಂತದಲ್ಲಿ ತಾನು ಬರಬಾರದಿತ್ತು ಎನಿಸಿತು. ತಾನಲ್ಲಿ ಸುಖವಾಗಿಯೇ ಇದ್ದೇನೆ. ಮತ್ತೆ ಇಲ್ಲಿ ಬಂದು ಏಕೆ ಹಳೆಯ ವೃಣವನ್ನು ಕೆದಕಬೇಕು ಎಂದು ಅವಳು ಯೋಚಿಸಿದಳು. ತಾಯಿಯ ಎದುರು- +“..ಮಾಯಿ..ನನಗೆ ಇಲ್ಲಿ ಇರಲೇ ಬೇಕು ಅಂತಿಲ್ಲ. ಕುರುಡೇಕರ ಮನೆ ನನಗೆ ಇದೆ..ನಾನು ನಾಳೆ ಹೋಗತೀನಿ”. +ಅಂದಾಗ ಸಾಂತಾಮೋರಿ ಅವಳ ಕೈ ಹಿಡಿದುಕೊಂಡಳು. +“..ನೀನು ಬರದೆ ಇದ್ದಿದ್ರೆ..ನಿಶ್ಚಿಂತೆಯಿಂದ ನಾನು ಇರತಿದ್ದೆ..ನೀನು ಬಂದಿದೀಯ..ಮತ್ತೆ ಹೋಗುವ ಮಾತಾಡಬೇಡ..ಜಾಂತು ಜಾತಿಕಟ್ಟು ಎಲ್ಲ ಆ ಕಾಲಕ್ಕೇನೆ ಮುಗಿದು ಹೋಗಿದೆ..ಈವತ್ತು ನೀನು ಮಾಡಿದ ತಪ್ಪನ್ನು ಮಾಡತಿರೋರು ಸುಖವಾಗಿ ಮರ್ಯಾದೆಯಿಂದ ಇದಾರೆ..ಯಾವನಾದರೂ ಒಂದು ವೇಳೆ ಈ ವಿಷಯ ಕೆದಕಲಿಕ್ಕೆ ಬಂದರೆ..ನಾನು ಸುಮ್ನೆ ಇರೋದಿಲ್ಲ..ಇನ್ನು ನೀನು ಹೋಗುವ ಮಾತನ್ನ ಹೇಳಬೇಡ..” ಎಂದಳು. +“ಆಯಿತು” ಎಂದು ನಾತೇಲ ಹೇಳಲಿಲ್ಲ. ಆದರೆ ಮಗನ ಮೂಲಕ ಕುರುಡೇಕರ ಅವರ ಮನೆಗೆ ಬರೆದ ಪತ್ರದಲ್ಲಿ ಹೀಗೊಂದು ಆಶಯವನ್ನು ಅವಳು ಪ್ರಕಟಿಸಿದಳು. +ಸಾಂತಾಮೊರಿ ಕತ್ತಲೆ ಕೋಣೆಯ ಬೀಗದ ಕೈಯನ್ನು ಮಗಳ ಕೈಗೆ ಕೊಟ್ಟಳು. ಮಗಳಿಗೆಂದು ಮಾಡಿಸಿದ ಚಿನ್ನದ ಆಭರಣಗಳನ್ನು ತಂದು ಅವಳ ಮುಂದಿಟ್ಟಳು. ಸಾಂತಾಮೊರಿಗೆ ಈಗ ಮತ್ತೆ ಹುರುಪು ಉತ್ಸಾಹ ಬಂದಿತ್ತು. ಈವರೆಗೆ ತುಸು ಸೊರಗಿದ ಹಾಗೆ ಸೋತ ಹಾಗೆ ಕಾಣುತ್ತಿದ್ದವಳು ಚಿಗುರಿನಿಂತ ಅಂಟವಾಳದ ಮರವಾದಳು. ಹಸಿರು ಎಲೆಗಳು ಚಿಗುರಿ ಎಳೆಗಾಳಿಗೆ ಮಿಂಚಿದವು. ಮೊಮ್ಮಗನಿಗೆ ಊರಿನಲ್ಲಿ ಒಂದು ಕೆಲಸವನ್ನು ಇಲ್ಲ ಒಂದು ಉದ್ಯಮವನ್ನೋ ಮಾಡಿಕೊಡಬೇಕೆಂಬ ವಿಚಾರವೂ ಅವಳ ಮನಸ್ಸಿಗೆ ಬಂದಿತು. ಈ ಬಗ್ಗೆ ಅವಳು ಸಿಮೋನ ಬೋನರನ್ನು ಕಂಡಳು. +ಬೋನನನ್ನು ಕಂಡು ಬಂದಾಗ ಆತ- +ನೋಡಾಣ ಅವನು ಕೆಲಸಕ್ಕೆ ಸೇರುವುದಾದರೆ ನಾನು ಅವನಿಗೆ ಸಹಾಯ ಮಾಡತೇನೆ..” ಎಂದಿದ್ದ. ಸಿಮೋನ ಮೊಮ್ಮಗನ ಮುಖ ನೋಡಿ ನಕ್ಕಿದ್ದ. +ಮೊಮ್ಮಗನನ್ನು ಎದುರು ಕೂರಿಸಿಕೊಂಡು ಇದೆ ವಿಷಯವನ್ನು ಹೇಳುತ್ತಿದ್ದ ಸಾಂತಾಮೊರಿ ಯಾರೋ ಅಂಗಳಕ್ಕೆ ಬಂದರೆಂದು ತಲೆ ಎತ್ತಿ ನೋಡಿದಳು. ಕಣ್ಣು ನದರು ಕಡಿಮೆಯಾದರೂ ಒಳ ಬಂದವರನ್ನು ಗುರುತಿಸುವುದು ಕಷ್ಟವಾಗಲಿಲ್ಲ. +“..ಯಾರು ? ಕೈತಾನ ? ಓ ಕಾಸಿಲ್ಡ ನೀನೂ ಬಂದಿದೀಯ? ಬನ್ನಿ ಬನ್ನಿ..” +ಗಡಿಬಿಡಿಸಿದಳು ಸಾಂತಾಮೊರಿ. ಒಳ ಹೋಗಿ ಈಚಲ ಚಾಪೆ ತಂದು ಜಗಲಿಯ ಮೇಲೆ ಮಡಿಕೆ ಬಿಚ್ಚಿದಳು. +“ಕುತ್ಕೊಳ್ಳಿ..ಕುತ್ಕೊಳ್ಳಿ” ಎಂದಳು. +“ಯಾರು? ಮೊಮ್ಮಗನ?” ಎಂದು ಕೇಳಿದ ಕೈತಾನ. +ಕಾಸಿಲ್ಡ ಬಂದು ಸಾಂತಾಮೊರಿ ಪಕ್ಕದಲ್ಲಿ ಕುಳಿತಳು. +“ಅಲ್ಲಿ ಕುತ್ಕೊ” ಎಂದು ಚಾಪೆ ತೋರಿಸಿದರೂ ಕಾಸಿಲ್ಡ ಅಲ್ಲಿ ಕುಳಿತುಕೊಳ್ಳಲಿಲ್ಲ. ಅವರು ಬಂದುದೇಕೆ ಎಂಬುದು ತಿಳಿದು ಸಾಂತಾಮೊರಿಗೆ ಕರುಳು ಚುರುಗುಟ್ಟಿತು. +ಕೆಲ ದಿನಗಳ ಹಿಂದೆ ಸುತಾರಿ ಇನಾಸನ ಹೆಂಡತಿ ಮೊನ್ನೆ ಹೀಗೆಯೇ ಬಂದಿದ್ದಳು. ಎಳೆ ಹುಡುಗಿಯಾಗಿ ಮುಡಿ ತುಂಬಾ ಮಲ್ಲಿಗೆ ಮುಡಿದು, ಕಿವಿಗೆ ಮೂರು ನಾಲ್ಕು ತೂತ ಮಾಡಿಕೊಂಡು ಆಭರಣ ಧರಿಸಿ ಬಂದಿದ್ದಳು. ಮೊನ್ನೆ ಇನಾಸನ ಹೆಂಡತಿಯಾಗಿ. ಅವಳ ನಿಜವಾದ ಹೆಸರು ಊರಿನಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಕೊನೆಯವರೆಗೂ ಮೊನ್ನೆ ಮೊನ್ನೆ ಎಂದೇ ಕರೆಸಿಕೊಂಡಳು. ಯಾರೊಡನೆಯೂ ಅವಳು ಬಾಯಿ ಬಿಟ್ಟು ಮಾತನಾಡಿದ್ದಿಲ್ಲ. ಮಾತನಾಡಲು ಬಂದರಲ್ಲವೆ? ಆದರೆ ಕೈ ಸನ್ನೆಯಿಂದ, ವಿಚಿತ್ರ ಧ್ವನಿಯಲ್ಲಿ ಎಲ್ಲವನ್ನು ಹೇಳುತ್ತಿದ್ದಳು. +ಮಕ್ಕಳಿಬ್ಬರೂ ಬೇರೆಯಾಗಿ ಇವಳು ಎಲ್ಲಿ ರಸ್ತೆ ಪಾಲಾಗುತ್ತಾಳೋ ಎಂದು ಹೆದರಿಕೊಂಡಾಗ ತನ್ನ ತೌರಿಗೆ ಹಿಂತಿರುಗುವ ಮನಸ್ಸು ಮಾಡಿದ್ದಳು. ಯಾವ ಹೆಂಗಸು ಇಳಿವಯಸ್ಸಿನಲ್ಲಿ ತೌರು ಮನೆಗೆ ಹೋಗುತ್ತಾಳೆ? ಆದರೂ ಇವಳು ಹೋದಳು. ಹೋಗುವ ಮುನ್ನ ಕೇರಿಯ ಎಲ್ಲ ಮನೆಗಳಿಗೂ ಬಂದಳು. +“ಹಾಂ ಹಾಂ” ಎಂದು ತನ್ನನ್ನು ತಾನು ಮುಟ್ಟಿಕೊಂಡು ದೂರ ದೂರ ಎಂದು ಕೈ ಸನ್ನೆ ಮಾಡಿ ಕಣ್ಣಲ್ಲಿ ನೀರು ತಂದುಕೊಂಡಳು. +“ನನ್ನ ಮರೀಬೇಡಿ” ಎಂಬಂತೆ ಎದುರು ಕುಳಿತವರ ಗದ್ದ ಹಿಡಿದೆತ್ತಿ ಕಣ್ಣಲ್ಲಿ ಇಣುಕಿದಳು. +“ಇಗರ್ಜಿ ಹಬ್ಬಕ್ಕೆ ಬಾ..” ಎಂದಾಗ – +“ಬರತೇನೆ ಬರತೇನೆ..” ಎಂಬಂತೆ ತಲೆದೂಗಿದಳು. +ಅವಳು ಅಂಗಳ ದಾಟುವಾಗ ತನಗೂ ಅಳು ಬಂದಿತ್ತು. ಮೊನ್ನೆ ಕೇರಿಯಲ್ಲಿ ಎಲ್ಲರ ಜತೆ ಒಂದಾಗಿದ್ದಳು. ಅವಳ ನಗು, ಕೇಕೆ, ಮಾತಿನ ರೀತಿ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಅವಳಿಲ್ಲ, ಈಗ ಕೈತಾನ ಕಾಸಿಲ್ಡ ಬಂದಿದ್ದಾರೆ. +ಮಗಳು ಪ್ರೆಸಿಲ್ಲಾಗೆ ಕೆಲಸ ಸಿಕ್ಕಿದೆ. ಕೆಲಸ ಖಾಯಂ ಕೂಡ ಆಗಿದೆ. ಅವಳು ಬೇರೊಂದು ಮನೆ ಮಾಡಿದ್ದಾಳೆ. +“ನೀವು ಇಬ್ಬರೇ ಅಲ್ಲಿ ಯಾಕೆ ಇರಬೇಕು..ಇಲ್ಲಿಗೆ ಬಂದು ಬಿಡಿ..” ಎಂದು ತಂದೆಗೆ ಹೇಳಿದ್ದಾಳೆ. +ಇಲ್ಲಿ ಏಕೆ ಇರಬೇಕು ಎಂದೆನ್ನಿಸಿದೆ ಕೈತಾನನಿಗೆ ಅವನ ಹೆಂಡತಿ ಕಾಸಿಲ್ಡಾಗೆ. ಇಲ್ಲೇನು ಜಮೀನೆ? ತೋಟವೆ? ದುಡಿದು ತಂದು ಹಾಕುವ ಮಗನೇ? ಮೊಮ್ಮಕ್ಕಳೆ? ನಾಲ್ವರು ಹೆಣ್ಣು ಮಕ್ಕಳು ದೂರದೂರವಿದ್ದಾರೆ. ನಾಳೆ ಪ್ರೆಸಿಲ್ಲಾಳ ಮದುವೆ ಮಾಡಬೇಕು ನಿಜ. ಅನಂತರ ಅವಳು ಅವಳ ಗಂಡನ ಜತೆ ಹೋಗುವವಳು. ತಾವು ಗಂಡ ಹೆಂಡತಿ ಇಲ್ಲಿ ಇದ್ದರಾಯಿತು ಎಂಬ ವಿಚಾರ ಬರುತ್ತದೆ. ಹೀಗೆಂದು ಕೈತಾನ ಮಗಳಿಗೆ ಹೇಳುತ್ತಾನೆ. +“ಆ ಕಾಲ ಬಂದಾಗ ನೋಡೋಣ..ಈಗ ನನ್ನ ಜತೆ ಇರಿ..” ಎಂದು ಹೇಳುತ್ತಾಳೆ ಹುಡುಗಿ. +ಎಲ್ಲ ಹುಡುಗಿಯರು ಎಂದು ಸಿಡಿಮಿಡಿಗೊಳ್ಳುತ್ತಿದ್ದೆ ತಾನು ಎಂಬುದು ಅವನಿಗೆ ನೆನಪಾಗುತ್ತದೆ. ಗಂಡಾಗಲಿ ಎಂದು ಹರಕೆ ಹೊತ್ತದ್ದು ಕೊನೆಗೂ ಗಂಡಾಯಿತು, ಆದರೆ ಏನು ಪ್ರಯೋಜನವಾಯಿತು? ತೀರಾ ಮುದ್ದು ಮಾಡಿ ಬೆಳೆಸಿದ ಮಗ ತಮ್ಮನ್ನು ದೂರ ಮಾಡಿದ ಎಂದೂ ತಮ್ಮ ಪ್ರೀತಿ ಕಾಣದ ಪ್ರೆಸಿಲ್ಲಾ ತಮ್ಮನ್ನು ಸಾಕಿ ಸಲಹಳು ಮುಂದಾದಳು. +ಸುತಾರಿ ಇನಾಸನ ಮನೆಯಲ್ಲಿ ಹಾಗಾಯಿತು. ಸಾಂತಾಮೊರಿ ಮನೆಯಲ್ಲಿ ಹೀಗಾಯಿತು. ಸಿಮೋನನ ಮಗ ಮನೆ ಬಿಟ್ಟ. ಆದರೆ ತನ್ನ ಮಗಳು ಪ್ರೆಸಿಲ್ಲಾ.. +“ಬಾಬ..ನೀನು ಮಾಯಿ ನನ್ನ ಜತೆ ಬನ್ನಿ..ಇಲ್ಲ ಅಂತ ಹೇಳಬೇಡಿ” ಅನ್ನುತ್ತಾಳೆ. +ಕೊನೆಗೂ ಇರುವ ಮನೆಯನ್ನು ಆನಂದ ಮಾಸ್ತರರು ಎಂದು ಸರಕಾರಿ ಶಾಲೆಯ ಉಪಾಧ್ಯಾಯರೊಬ್ಬರಿಗೆ ಬಾಡಿಗೆಗೆ ಕೊಟ್ಟು ಇವರು ಶಿವಮೊಗ್ಗೆಗೆ ಹೊರಟರು. ಹೋಗುವ ಮುನ್ನ ಎಲ್ಲ ಮನೆಗಳಿಗೂ ಹೋಗಿ ಒಂದು ಮಾತು ಹೇಳೀ ಬರಬೇಕಲ್ಲ. +“ಸಿಮೋನ ಮಾಮ..ನಾವು ಬರತೀವಿ” +“ಬೋನ..ನಾವು ಬರತೀವಿ..” +“ಪೆದ್ರು..ನಾವು ಬರತೀವಿ..” ಈಗ ಸಾಂತಾಮೊರಿ ಮನೆ. +“ನೀವೂ ಹೊರಟ್ರ?” ಎಂದು ಕೇಳುತ್ತಾಳೆ ಸಾಂತಾಮೊರಿ. ಒಂದು ಬಗೆಯ ಸಂಕಟದಿಂದ. ಇಗರ್ಜಿ ಹಿಂಬದಿಯ ಸಾಲಿನಲ್ಲಿ ಆರು ಏಳು ಮನೆಗಳಲ್ಲಿ ಕೈತಾನನದ್ದೂ ಒಂದು. ಇವನ ತಂದೆಗೆ ಅಂಕೋಲದಲ್ಲಿ ದೊಡ್ಡ ತೆಂಗಿನ ತೋಟವಿತ್ತು. ಸುಮಾರು ಐನೂರು ತೆಂಗಿನ ಮರಗಳು. ಅವನದೇ ಆದ ತಪ್ಪಿನಿಂದ ಈ ತೋಟ ಯಾರದೋ ಪಾಲಾಗಿ ಪಾಪ ಕೈತಾನ ಬಾಚಿ ಹಿಡಿದು ಕಲ್ಲು ಕೆತ್ತುವ ಕೆಲಸಕ್ಕೆ ಇಳಿದ. ಇಲ್ಲಿಗೆ ಬಂದ ನಂತರ ಮನೆ ತುಂಬಾ ಹೆಣ್ಣು ಮಕ್ಕಳಾದವು. ಅದೂ ಕೂಡ ಇವನ ಮನಸ್ಸಿಗೆ ಇರುಸು ಮುರುಸು ತಂದಿತು. ಮೊದಲಿನಿಂದ ದೈವ ಭಕ್ತನಾಗಿದ್ದ ಕೈತಾನ ಕೊನೆ ಕೊನೆಗೆ ಶಾಂತಿ ಸಮಾಧಾನದಿಂದ ಇರತೊಡಗಿದ. ಈಗ ಪ್ರೆಸಿಲ್ಲಾ ಶಿವಮೊಗ್ಗದಲ್ಲಿ ಮನೆ ಮಾಡಿದ್ದಾಳೆ. ತಂದೆ ತಾಯಿ ಜತೆ ಅಲ್ಲಿಗೆ ಹೊರಟಿದ್ದಾಳೆ. ಅಂದು ಮೊನ್ನೆ ಇಂದು ಕೈತಾನ, ಕಾಸಿಲ್ಡ. +ಮಗಳು ಕಪ್ಪು ಬಸಿಯಲ್ಲಿ ಟೀ ಮಾಡಿ ತಂದಳು. ಜತೆಗೆ ಕೇಕು, ಹಲ್ವ.. +“ಚೆನ್ನಾಗಿದೀಯ ನಾತೇಲ..” ಊರಿಗೆ ಬಂದಾಗಲೇ ಬಂದು ಮಾತನಾಡಿಸಿದ್ದಳು. ಕಾಸಿಲ್ಡ ಅವಳನ್ನು ಈಗ ಮತ್ತೊಮ್ಮೆ. +“ಚೆನ್ನಾಗಿದೀಯಾ ಆಂಟಿ..” ಟೀ ಕೇಕು ಮುಗಿಸಿ ಕೈತಾನ ಎದ್ದ. +“ಬರತೀವಿ ಸಾಂತಾ..ಶಿವಮೊಗ್ಗದ ಹಬ್ಬಕ್ಕೆ ಬನ್ನಿ. ಮನೆ ಬಾರಲೈನ್ ಹತ್ತಿರವಂತೆ..” +ಕಾಸಿಲ್ಡ ಕಣ್ಣೊರೆಸಿಕೊಂಡಳು. +ಸಾಂತಾ ಮೊರಿಗೂ ತಡೆಯಲಾಗಲಿಲ್ಲ. +“ಬರ್ತಾ ಇರಿ..” ಎಂದು ಮತ್ತೆ ಮತ್ತೆ ಹೇಳದೆ ಇರಲು ಅವಳಿಂದ ಆಗಲಿಲ್ಲ. +* +* +* +ಸುತಾರಿ ಇನಾಸನ ಮನೆ ಇದ್ದ ಜಾಗದಲ್ಲಿ ಎರಡು ಮನೆಗಳು ಎದ್ದು ನಿಂತವು. ಈ ಎರಡೂ ಮನೆಗಳು ಅಣ್ಣ ತಮ್ಮಂದಿರಿಗೆ ಸೇರಿದ ಮನೆಗಳು ಅನ್ನುವುದನ್ನು ಬಿಟ್ಟರೆ ಈ ಎರಡೂ ಮನೆಗಳಲ್ಲಿ ಯಾವುದೇ ಹೊಂದಾಣಿಕೆ ಇರಲಿಲ್ಲ. ಆಕಾರದಲ್ಲಿ, ಗಾತ್ರದಲ್ಲಿ ಈ ಎರಡೂ ಮನೆಗಳು ಬೇರೆ ಬೇರೆಯಾಗಿದ್ದವು. ಇನಾಸನ ಎರಡನೆ ಮಗ ಪಾಸ್ಕು ಇದೇ ಕಟ್ಟಡದಲ್ಲಿ ಒಂದು ಮರಗೆಲಸ ಅಂಗಡಿಯನ್ನು ಕೂಡ ತೆರೆದ. ಮೊದಲ ಮಗನಿಗಂತೂ ಅವನ ಪೀತಳಿ ಬ್ಯಾಂಡಿನ ಉದ್ಯಮ ಚೆನ್ನಾಗಿಯೇ ಇತ್ತು. +ಆದರೆ ಇದೇ ಸಮಯದಲ್ಲಿ ಮರಿಯಳ ಹಳೆಯ ಮನೆ ಕಾಣೆಯಾಗಿ ಅಷ್ಟೂ ಜಾಗದಲ್ಲಿ ದೊಡ್ಡದೊಂದು ಟಾರಸಿ ಮನೆಯ ಕೆಲಸ ಆರಂಭವಾಗಿ ಬಿಟ್ಟಿತು. ಜಯಪ್ರಕಾಶ ನಗರದಲ್ಲಿ ಎಮ್ಮೆ ಮರಿಯಳ ಕೊನೆಯ ಈರ್ವರು ಮಕ್ಕಳು ದುಮಿಂಗ, ಬಸ್ತುರ ಮನೆಗಳ ಕೆಲಸ ಮುಗಿದು ಪಾದರಿ ಸಿಕ್ವೇರಾ ಎರಡೂ ಮನೆಗಳನ್ನು ಮಂತ್ರಿಸಿ, ಕೇರಿಯ ಆಪ್ತರಿಗೆ ತಮ್ಮ ತಮ್ಮ ಮಿತ್ರರಿಗೆ ಒಂದು ಊಟ ಹಾಕಿಸುತ್ತಿದ್ದಂತೆಯೇ ಮರಿಯಳ ಹಿರಿಯ ಮಗ ಗುಸ್ತೀನನಿಗೆ ಒಂದು ಮನೆ ಕಟ್ಟುವ ವಿಚಾರಕ್ಕೆ ಕೂಡ ಜೀವ ಬಂದಿತು. +ಎರಡೂ ಮನೆಗಳ ಘರ ಭರೋಣೆ ಮುಗಿದು, ಬಂದ ಜನ ಊಟ ಮಾಡಿ ಹೋದನಂತರ ಮರಿಯ ಎರಡೂ ಮನೆಗಳ ನಡುವಣ ಅಂಗಳದಲ್ಲಿ ಕುಳಿತು ಮೊಮ್ಮಕ್ಕಳ ಜತೆ ಮಾತನಾಡುತ್ತಿದ್ದಳು. ಅವಳಿಗೆ ಸಂತೋಷವಾಗಿತ್ತು. ಮಕ್ಕಳ ಅಭಿವೃದ್ಧಿ ಕಂಡು ಹೃದಯ ತುಂಬಿ ನಿಂತಿತ್ತು. ಈರ್ವರು ಮಕ್ಕಳು ಸ್ವಂತ ಮನೆ ಮಾಡಿಕೊಂಡರು. ಕೊನೆಯ ಮಗಳು ಮನೆಗೆ ಬರುತ್ತಿಲ್ಲ ಎಂಬ ಚಿಂತೆ ಬಿಟ್ಟರೆ ಬೇರೆ ಚಿಂತೆ ಇರಲಿಲ್ಲ. ಆದರೆ ಈರ್ವರು ಮಕ್ಕಳು ಮನೆ ಕಟ್ಟಿದ ಮೇಲೆ ಹಿರಿಯ ಮಗ ಅದೇ ಹಳೆ ಮನೆಯಲ್ಲಿರುವುದು ಏಕೋ ಅವಳಿಗೆ ಕಸಿವಿಸಿಯನ್ನುಂಟು ಮಾಡುತ್ತಲಿತ್ತು. +ಊರಿನ ಖಾಸಗಿ ಬ್ಯಾಂಕ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗುಸ್ತೀನ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ. ತಾಯಿ ಹಾಲಿನ ವ್ಯಾಪಾರ ಮಾಡುವಾಗ ಕೂಡ ಈ ಬಗ್ಗೆ ತುಂಬಾ ಶ್ರಮಿಸುತ್ತಿದ್ದವನು ಇವನೇನೆ ಒಮ್ಮೊಮ್ಮೆ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿಕೊಂಡು ಆ ಬ್ಯಾಣ ಈ ಬಯಲು ಎಂದು ತಿರುಗಿ ರಾತ್ರಿ ಹತ್ತು ಗಂಟೆಗೆ ಮನೆಗೆ ಬರುವುದಿತ್ತು. ಕೆಲ ಮನೆಗಳಿಗೆ ಇವನೇನೆ, ಹಾಲು ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದ. ತಾನು ಒಂದು ಕೆಲಸ ಹುಡುಕಿಕೊಂಡು ತಮ್ಮಂದಿರಿಗೂ ಕೆಲಸ ಕೊಡಿಸಿದ. ಅವರನ್ನು ಹೆದರಿಸಿ ಬೆದರಿಸಿ ಶಾಲೆಗೆ ಕಳುಹಿಸುತ್ತಿದ್ದ. +ಈತ ಈಗ ಇರುವ ಮನೆ ಸಿಮೋನ ಕಟ್ಟಿದ್ದು. ಬಿದಿರ ತಟ್ಟಿಗೆ ಮಣ್ಣು ಮೆತ್ತಿ ಕಟ್ಟಿದ ಗೋಡೆಗಳು. ಕಾಡು ಮರದ ಪಕಾಶಿ, ರೀಪುಗಳು. ಮೊದಲು ಇದ್ದ ಹುಲ್ಲು ತೆಗೆದು ಅನಂತರ ಹೊದಿಸಿದ ಹಂಚುಗಳು. ಮಳೆಗಾಲದಲ್ಲಿ ಉಬ್ಬಿ ಬೇಸಿಗೆಯಲ್ಲಿ ಬೆಂಡು ಬರುವ ಬಾಗಿಲುಗಳು. ಹಾಲು ಮಾರಿ ಈ ಮನೆಯನ್ನು ಪುನರ್ ನಿರ್ಮಿಸಲು ಆಗಲಿಲ್ಲ. ಹಿಂದಿನ ಹಾಗೆಯೇ ಚಕ್ಕಳವೆದ್ದ ಈ ನೆಲ, ಒಳಗೆ ಉಬ್ಬಿಕೊಂಡ ಗೋಡೆಗಳಿಂದ ಮನೆ ಅಸಹ್ಯವಾಗಿದೆ. ದುಮಿಂಗ, ಬಸ್ತು ಈರ್ವರಿಗೂ ಅವರ ವೃತ್ತಿ ಅಂತಸ್ತಿಗೆ ತಕ್ಕ ಮನೆಯಾಗಿದೆ. ಆದರೆ ಗುಸ್ತೀನನಿಗೆ? +ಈಗಲೂ ಅವಳಲ್ಲಿ ಈ ಕೊರಗು ಇತ್ತು. +ಇಬ್ಬರೂ ಮಕ್ಕಳ ಮನೆ ಅಕ್ಕಪಕ್ಕದಲ್ಲಿ ನಿಂತಿರುವುದನ್ನು ನೋಡಿದಾಗ ಮೂರನೆ ಮಗ ಕೂಡ ಇಂತಹಾ ಮನೆಯನ್ನು ಕಟ್ಟಿಸಬಹುದಿತ್ತಲ್ಲ ಅಂದುಕೊಂಡಳು. ಅದೇ ಸಮಯದಲ್ಲಿ ಹಿರಿಯ ಮಗ ಬಂದು ತಾಯಿಯ ಎದುರಲ್ಲಿ ಕುಳಿತು ಎಲೆ ಅಡಿಕೆ ತಾಬಾಣಕ್ಕೆ ಕೈ ಹಾಕಿದ. ಕೊಂಚ ಹೊತ್ತಿನಲ್ಲಿ ತಂದ ಕುರ್ಚಿ, ಜಮಖಾನ, ಪಾತ್ರೆ ಇತ್ಯಾದಿಗಳನ್ನು ಅವರವರಿಗೆ ಮುಟ್ಟಿಸಿ ದುಮಿಂಗ,ಬಸ್ತು ಈರ್ವರೂ ಬಂದು ತಾಯಿಯ ಬಳಿ ಕುಳಿತರು. ಇವರ ಹೆಂಡಿರೂ ಅಷ್ಟು ದೂರ ಕುಳಿತು ಎಲೆಯ ಬೆನ್ನ ಮೇಲಿನ ನಾರು ತೆಗೆದು ಸುಣ್ಣ ಹಚ್ಚತೊಡಗಿದರು. +“ಮಾಯ್..ಈಗ ನಮ್ಮ ಮನೆ ಆಯ್ತು..ಇನ್ನೊಂದು ಮನೆ ಆಗಬೇಕು..” ಎಂದ ಕಿರಿಯ ಮಗ ಆಸ್ಪತ್ರೆ ಬಸ್ತು. +“..ಮತ್ತೆ ಯಾರದಪ್ಪ ಮನೆ” +“ಅಣ್ಣನಿಗೊಂದು ಹೊಸ ಮನೆ ಆಗಬೇಕು..” +“ಹೌದು ಈಗ ಇರೋ ಸೈಟಿಗೆ ತಕ್ಕ ಹಾಗೆ ದೊಡ್ಡ ಮನೆ ಕಟ್ಟಿಸಬೇಕು” ಎಂದ ದುಮಿಂಗ. +“ನಿಮಗೇನಪ್ಪ..ಸರಕಾರ ಗಟ್ಟಿಯಾಗಿದೆ. ಸಾಲ ಕೊಡುತ್ತೆ..ನಮ್ಮದು ಬಡ ಬ್ಯಾಂಕು..ನಮ್ಮಲ್ಲಿ ತೆಗೆದುಕೊಂಡ ಸಾಲಾನ ನುಂಗಿ ಹಾಕುವವರೇ ಜಾಸ್ತಿ..ನೌಕರರಿಗೆ ಸಾಲ ಕೊಡಲಿಕ್ಕೆ ಹಣಬೇಕಲ್ಲ..” +“ಅಣ್ಣ..ಹೊಸದಾಗಿ ಗೃಹ ನಿರ್ಮಾಣ ಬ್ಯಾಂಕು ಅಂತ ಒಂದು ತೆರೆದಿದ್ದಾರೆ..ಐದು ವರ್ಷ ಆಯ್ತು..ಅಲ್ಲಿಂದ ಸಾಲ ತೊಗೊ..” ಎಂದ ಬಸ್ತು. +ಇದು ಗುಸ್ತೀನನಿಗೆ ಗೊತ್ತಿತ್ತು. ಹಲವರು ಈ ಬ್ಯಾಂಕಿನಿಂದ ಹಣ ಪಡೆದು ಮನೆ ಕಟ್ಟ ತೊಡಗಿದ್ದರು. ಆದರೆ ಈ ಬ್ಯಾಂಕಿನ ನಿಯಮವೆಂದರೆ ಸಾಲ ಕೊಡುವುದಾದರೆ ಮನೆಯ ನಿವೇಶನ ಸ್ವಂತ ಹೆಸರಿನಲ್ಲಿ ಇರಬೇಕಿತ್ತು. ಗುಸ್ತೀನ ತಾನೂ ಒಂದು ನಿವೇಶನ ಪಡೆಯಲು ಪ್ರಯತ್ನಿಸಿದ್ದ. ಆದರೆ ಏಕೋ ಅವನಿಗೆ ನಿವೇಶನ ಮಂಜೂರಾಗಿರಲಿಲ್ಲ. ಒಂದು ವೇಳೆ ಮಂಜೂರಾದರೂ ಒಂ +ದೇ ಗಂಟಿನಲ್ಲಿ ಕಟ್ಟುವಷ್ಟು ಹಣ ಅವನಲ್ಲಿ ಇರಲಿಲ್ಲ. ಹೀಗೆಂದೇ ಆತ ಸಾಲ ಮಾಡುವ ಮನೆ ಕಟ್ಟುವ ವಿಚಾರವನ್ನೇ ಕೈ ಬಿಟ್ಟಿದ್ದ. ಈ ವಿಷಯ ಬಂದಾಗ ಆತ ಸಹಜವಾಗಿ- +“ಅದಕ್ಕೆ ನಮ್ಮದೇ ಜಾಗಬೇಕಲ್ಲಪ್ಪ” ಎಂದ. +“ಇದೂ ತುಂಬಾ ಸುಲಭ” ಎಂದ ಬಸ್ತು ತಾಯಿಯ ಮುಖ ನೋಡಿ. +“ಏನೋ ಅದು?” +ಮರಿಯ ಇನ್ನೋರ್ವ ಮಗನ ಮುಖ ನೋಡಿದಳು. ಈಗ ಹಳೇ ಮನೆ ನಿನ್ನ ಹೆಸರಿನಲ್ಲಿ ಇದೆ ಅಲ್ವ ಅಮ್ಮ? ಅದನ್ನು ಅಣ್ಣನಿಗೆ ಮಾಡಿಕೊಡು..ಅದು ಯಾರು ಸಾಲ ಕೊಡಲ್ವೋ ನೋಡೋಣ..” ಎಂದ ದುಮಿಂಗ. +ಮರಿಯಳ ಮುಖ ಅರಳಿತು. +ಕೆಲವೇ ದಿನಗಳಲ್ಲಿ ಮರಿಯಳ ಹಳೆಯ ಮನೆ, ದನದ ಕೊಟ್ಟಿಗೆ ಹುಲ್ಲಿನ ಶೆಡ್ಡು, ಕಟ್ಟಿಗೆ ತುಂಬಿಡುವ ಮಾಡು ಎಲ್ಲವೂ ಮಾಯವಾಗಿ ಕಂಟ್ರಾಕ್ಟರ್ ಕುಂಜುಮನ್ ತನ್ನ ಕೆಲಸಗಾರರೊಡನೆ ಅಲ್ಲಿಗೆ ಬಂದಿಳಿದ. +“ಈ ಹಬ್ಬದ ಹೊತ್ತಿಗೆ ಮನೆ ಆಗಬೇಕು” ಎಂದ ಗುಸ್ತೀನ. +ಅವನು ತನ್ನ ಹೆಂಡತಿ ಮಕ್ಕಳ ಜತೆ ಬಂದು ತಮ್ಮ ಬಸ್ತುವಿನ ಮನೆ ಸೇರಿಕೊಂಡ. +ಅಲ್ಲಿ ಪಾದರಿಗಳು ಬಂದು ಮಂತ್ರಿಸಿದ ನಂತರ ತಳಪಾಯ ತೋಡುವ ಕೆಲಸ ಆರಂಭವಾಯಿತು. +* +* +* +ಚಮಾದೋರ ಇಂತ್ರೂಗೆ ಒಂದು ಹವ್ಯಾಸವಿತ್ತು. ಪ್ರತಿ ಶನಿವಾರ ಆತ ಬಲೆ, ಹಗ್ಗ, ಮರದ ಸೋಟೆ ಒಂದು ಗೋಣಿ ಚೀಲ ಹಿಡಿದುಕೊಂಡು ಬೇಟೆಗೆ ಹೋಗುತ್ತಿದ್ದ. ಹೇರಳವಾಗಿ ಬಾವಲಕ್ಕಿಗಳು ತಲೆ ಕೆಳಗೆ ಮಾಡಿ ತೂಗುಬಿದ್ದ ಮರಗಳನ್ನು ಈತ ಕಂಡುಕೊಂಡಿದ್ದ. ಈ ಮರಗಳ ಬಳಿ ಬಾವಲಕ್ಕಿಗಳು ತಲೆ ಕೆಳಗೆ ಮಾಡಿ ತೂಗುಬಿದ್ದ ಮರಗಳನ್ನು ಈತ ಕಂಡುಕೊಂಡಿದ್ದ. ಈ ಮರಗಳ ಬಳಿ ಬಾವಲಕ್ಕಿಗಳು ತಿರುಗಾಡುವ ಜಾಡು ನೋಡಿ ಈತ ಬಲೆ ಕಟ್ಟುತ್ತಿದ್ದ. ಎರಡೂ ಮರಗಳನ್ನು ಸೇರಿಸಿ ಅಡ್ಡಲಾಗಿ ಬಲೆಕಟ್ಟಿ ಮರದಿಂದ ಕೆಳಗೆ ಇಳಿಯುತ್ತಿದ್ದ. ರಾತ್ರಿ ಆದ ಹಾಗೆ ಬಾವಲಕ್ಕಿಗಳ ಚಟುವಟಿಕೆ, ಹಾರಾಟ ಪ್ರಾರಂಭವಾಗುತ್ತಿತ್ತು. ಹೀಗೆ ಹಾರಾಡತೊಡಗಿದ ಹಕ್ಕಿಗಳು ಬಲೆಯ ಕಣ್ಣಿನೊಳಗೆ ಸಿಕ್ಕಿ ಬೀಳುತ್ತಿದ್ದವು. ಕೂಡಲೇ ಇಂತ್ರು ಬಲೆಯನ್ನು ಕಟ್ಟಿದ ಹಗ್ಗವನ್ನು ಸಡಿಲ ಮಾಡಿ ಕೆಳಗೆ ಇಳಿಸಿಕೊಂಡು ಮರದ ಸೋಟೆಯಿಂದ ಹಕ್ಕಿಯನ್ನು ಹೊಡೆದು ಅದನ್ನು ಗೋಣಿ ಚೀಲಕ್ಕೆ ಹಾಕಿ ಮತ್ತೆ ಬಲೆಯನ್ನು ಮೇಲೆ ಏರಿಸುತ್ತಿದ್ದ. +ರಾತ್ರಿ ಎಲ್ಲ ಮರದ ಕೆಳಗೆ ಅರ್ಧನಿದ್ದೆ ಅರ್ಧ ಎಚ್ಚರದಲ್ಲಿ ಕೂತಿದ್ದು ಬೆಳಿಗ್ಗೆ ಹತ್ತಿಪ್ಪತ್ತು ಬಾವಲಕ್ಕಿಗಳ ಜತೆ ಆತ ಊರಿಗೆ ಬರುತ್ತಿದ್ದ. ಅವನಿಗೆ ಕೆಲ ಖಾಯಂ ಗಿರಾಕಿಗಳೂ ಇದ್ದರು. ಬಾವಲಕ್ಕಿ ಮಾಂಸಕ್ಕೆ ಒಳ್ಳೆ ಬೇಡಿಕೆಯೂ ಇತ್ತು. +ಅಂದು ಹೀಗೆ ಬಾವಲಕ್ಕಿ ಬೇಟೆಗೆ ಹೋದ ಇಂತ್ರು ಬೆಳಗಾದರೂ ತಿರುಗಿ ಬರಲಿಲ್ಲ. ಜನ ಇಗರ್ಜಿಯ ಪೂಜೆ ಮುಗಿಸಿಕೊಂಡು ಬರುವಾಗ ಇಂತ್ರು ಮಗ ಸಿರೀಲ ಸಿಮೋನನ ಮನೆಯ ಮುಂದೆ ನಿಂತಿದ್ದ. +“ಮಾಮ..ಅಪ್ಪ ರಾತ್ರಿ ಹೋದವನು ಇಷ್ಟು ಹೊತ್ತಾದರೂ ಬರಲಿಲ್ಲ…” ಎಂದ ಹುಡುಗ ಅಳು ದನಿಯಲ್ಲಿ. +“ಎಲ್ಲಿ ಹೋದ ಮಾರಾಯ ಅವನು?” ಎಂದು ಸಿಮೋನ ಗಡಿಬಿಡಿಸಿದ. +ಮಗ ರಾಬರ್ಟನನ್ನು ಸೈಕಲ್ ತೆಗೆದುಕೊಂಡು ಹೋಗಿ ಒಂದೆರಡು ಕಡೆ ನೋಡಿಬರಲು ಹೇಳಿದ. ರಾಬರ್ಟ ಹೋದವನು ಕೂಡಲೇ ತಿರುಗಿ ಬಂದ. ಕಂಬಳಿ ಕೊಪ್ಪದ ಕಾಡಿನಲ್ಲಿ ಇಂತ್ರು ಮರದ ಕೆಳಗೆ ಜಡವಾಗಿ ಬಿದ್ದಿದ್ದ. ಗೋಣಿಚೀಲ ಬರಿದಾಗಿತ್ತು. ಮೇಲೆ ಕಟ್ಟಿದ ಬಲೆಗೆ ಒಂದೇ ಒಂದು ಹಕ್ಕಿ ಸಿಕ್ಕಿ ಬಿದ್ದು ಚೀರಾಡುತ್ತಿತ್ತು. +ಸಿಮೋನನೇ ಮುಂದೆ ನಿಂತು ಇಂತ್ರುವನ್ನು ಮಣ್ಣು ಮಾಡಬೇಕಾಯಿತು. ಇವನ ಮರಣದ ಸುದ್ದಿಯನ್ನು ಜನರಿಗೆ ಮುಟ್ಟಿಸಲು ಮಾತ್ರ ಯಾರೂ ಇರಲಿಲ್ಲ. ಇಂತ್ರುವಿನ ನಂತರ ಅವನ ಮಗ ಸಿರೀಲ ಚಮಾದೋರ ಆಗಿ ಮುಂದುವರಿದನು. +“ಈ ಕೆಲಸ ಏನಾದ್ರು ಸ್ವಲ್ಪ ಮರ್ಯಾದೆ ತರುವಂತಹದ್ದು ಆಗಿದ್ದಿದ್ರೆ..ಇದನ್ನು ಆ ಬಾಮಣರಲ್ಲಿ ಯಾರಿಗಾದರೂ ಕೊಡತಿದ್ರು ಪಾದರಿ..ಇದು ಹೊಂಡ ತೋಡೋದು..ಮನೆ ಮನೆಗೆ ಹೇಳೋದು..ಆಗಿದ್ದರಿಂದ ನಮ್ಮವರಿಗೇನೆ ಉಳೀತು..” ಎಂದು ಕೇರಿ ಹುಡುಗರು ಆದಿಕೊಂಡಿದ್ದು ಸಿಮೋನನ ಕಿವಿಗೆ ಬೀಳದೆ ಇರಲಿಲ್ಲ. +ಈಸ್ಟರ್ ಹಬ್ಬಕ್ಕೆ ಕೆಲವೇ ದಿನಗಳಿವೆ ಅನ್ನುವಾಗ ಮರಿಯಳ ಹಳೆಮನೆ ಇದ್ದ ಜಾಗದಲ್ಲಿ ಭವ್ಯವಾದ ಒಂದು ಹೊಸಮನೆ ಎದ್ದು ನಿಂತಿತ್ತು. +ದುಮಿಂಗ, ಬಸ್ತು ಈರ್ವರೂ ’ಘರ ಭರೋಣೆ’ ವಿಷಯವನ್ನು ಊರಲ್ಲಿ ಎಲ್ಲರಿಗೂ ಹೇಳಿ ಬಂದರು. ಕ್ರೀಸ್ತುವರು ಮಾತ್ರವಲ್ಲದೆ ಗುಸ್ತೀನ, ದುಮಿಂಗ, ಬಸ್ತು ಈ ಮೂವರ ಸ್ನೇಹಿತರು, ಅಭಿಮಾನಿಗಳು ಅಧಿಕವಾಗಿ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದರು. ಪಾದರಿ ಸಿಕ್ವೇರಾ ಮನೆ ಮಂತ್ರಿಸುವಾಗ ಹೊರಗೆ ಗರ್ನಾಲುಗಳು ಸಿಡಿದವು. ಎಮ್ಮೆ ಮರಿಯ ಮಕ್ಕಳು ತಂದ ಹೊಸ ಸೀರೆಯುಟ್ಟು ಸಂಭ್ರಮದಿಂದ ತಿರುಗಾಡಿದಳು. ಜೋಸೆಫ಼ ನಗರ, ಫ಼ಾತಿಮಾ ನಗರ ಹಾಗೂ ಉಳಿದ ಬಡಾವಣೆಗಳಿಂದ ಜನ ಬಂದು ಉಂಡು ಹೋದರು. ಜನರಿಗೆ ತುಂಬಾ ಸಂತೋಷವಾದುದೆಂದರೆ ಮನೆಗೆ ’ಮರಿಯಾ ಕೃಪಾ’ ಎಂದು ಹೆಸರು ಇರಿಸಿದ್ದು. ತಾಯಿಯ ಹೆಸರನ್ನೇ ಮನೆಗೆ ಇರಿಸಿದ ಈ ಪರಿ ಶಿವಸಾಗರದ ಕ್ರೀಸ್ತುವರ ಪಾಲಿಗೆ ಹೊಸ ವಿಷಯವಾಗಿತ್ತು. +-೧೧- +ಗಾಡಿ ಸಿಮೋನನ ಮೂರನೇ ಮಗ ರಾಬರ್ಟ ಜನವರಿ ತಿಂಗಳಲ್ಲಿ ಹಬ್ಬಕ್ಕೆಂದು ಮುರುಡೇಶ್ವರಕ್ಕೆ ಹೊರಟಾಗ ಬಸ್ಸಿನಲ್ಲಿ ಹಿಂದುಗಳು, ನವಾಯ್ತಿಗಳು ತುಂಬಿಕೊಂಡಿದ್ದರಲ್ಲದೆ ಕ್ರೀಸ್ತುವರು ಯಾರೂ ಇರಲಿಲ್ಲ. ಒಂದು ಕಾಲದಲ್ಲಿ ಊರಿನಲ್ಲಿ ಹಬ್ಬವೆಂದರೆ ಇಲ್ಲಿಂದ ತುಂಬಾ ಜನ ಹೋಗುತ್ತಿದ್ದರು. ಸಂಸಾರ ಸಮೇತ ಹೋಗುತ್ತಿದ್ದರು. ಮೂರು ನಾಲ್ಕು ದಿನಗಳವರೆಗೆ ಬಸ್ಸಿನವರಿಗೆ ಒಳ್ಳೆಯ ಕಲೆಕ್ಷನ್ ಕೂಡ ಇರುತ್ತಿತ್ತು. ಆದರೆ ಈಗ ಹಬ್ಬಕ್ಕೆ ಹೋಗುವ ಕ್ರೀಸ್ತುವರು ಕಡಿಮೆಯಾಗಿದ್ದರು. +“ಅಯ್ಯೋ ಬೇಸರ..ಅಲ್ಲಿ ಏನಿದೆ..ತೆಂಗಿನ ತೋಟ ಬಿಟ್ರೆ ಸಮುದ್ರ..ಪೇಟೆ ಕೂಡ ದೊಡ್ಡದಲ್ಲ.” ಎಂದು ಗೊಣಗುತ್ತಿದ್ದರು. +ಅಲ್ಲದೆ ತಮ್ಮ ಹಿರಿಯರ ಊರು, ತಮ್ಮ ಮೂಲಸ್ಥಳ ಎಂಬ ನಂಬಿಕೆಯೂ ಹೊರಟು ಹೋಗಿತ್ತು. +ಆದರೆ ರಾಬರ್ಟಗೆ ಈ ಊರಿನ ಬಗ್ಗೆ ಏನೋ ಆಕರ್ಷಣೆ. ಊರ ತುಂಬ ಇರುವ ತೆಂಗಿನ ಮರಗಳು. ಅಲ್ಲಲ್ಲಿ ಗೇರು, ಹಲಸು, ಮಾವಿನ ಮರಗಳು, ತೋಟದೊಳಗಿನ ಸಣ್ಣ ಮನೆಗಳು. ಸದಾ ಮಡಲು ಹೆಣೆಯುತ್ತ ಹಗ್ಗ ನೂಲುತ್ತ, ಗಾಣ ಆಡಿಸುತ್ತ ಇರುವ ಜನ. ಈ ಹಸಿರು ತೋಟಗಳ ನಡುವೆ ತ್ರಿಕೋಣಾಕರದಲ್ಲಿ ನಿಂತ ತುಂಬಾ ಹಳೆಯದಾದ ಇಗರ್ಜಿ. ಇದರಾಚೆಗೆ ನಿರಂತರವಾಗಿ ಗದ್ದಲ ಮಾಡುತ್ತಲೇ ಇರುವ ಕಡಲು. ಕಡಲ ತಡಿಯಲ್ಲಿ ಜನರ ಗದ್ದಲವಿಲ್ಲ. ಏಡಿಗಳು ನಿರಾತಂಕವಾಗಿ ಓಡಿಯಾಡುತ್ತಿರುತ್ತವೆ. ಕಡಲ ಕಾಗೆಗಳು ಹಾರುತ್ತಿರುತ್ತವೆ. ಕಡಲ ದಂಡೆಗೆ ತೀರಾ ಸನಿಹದಲ್ಲಿ ಹಂದಿ ಮೀನು ಮೇಲೆ ಬಂದು ಮತ್ತೆ ನೀರಿಗೆ ಬಿದ್ದು ಮಾಯವಾಗುತ್ತಿರುತ್ತದೆ. ದೂರದಲ್ಲಿ ಹಡಗುಗಳು, ಬರೆದ ಚಿತ್ರಗಳ ಹಾಗೆ ದಿಗಂತಕ್ಕೆ ಅಂಟಿ ನಿಂತಿದ್ದರೆ ಮೀನು ದೋಣಿಗಳು ಅಲೆಗಳ ಮೇಲೆ ತೇಲುತ್ತ ಬೀಳುತ್ತ ಆಟವಾಡುತ್ತಿರುತ್ತವೆ. ಈ ಕಡಲ ಅಂಚಿಗೆ ಅಂಟಿಕೊಂಡೇ ಮರಿಯಾಣ ದೊಡ್ಡಪ್ಪನ ತೆಂಗಿನ ತೋಟ. +ಅಪ್ಪ ಹುಟ್ಟಿ ಬೆಳೆದ ಮನೆ. ಅಕ್ಕ ಅಣ್ಣಂದಿರು ಕೂಡ ಅವರ ಬಾಲ್ಯವನ್ನು ಕಳೆದದ್ದು ಇಲ್ಲಿಯೇ. ಆದರೆ ತಾನು ಮಾತ್ರ ಹುಟ್ಟಿದ್ದು ಶಿವಸಾಗರದಲ್ಲಿ. ಹೀಗಾಗಿ ತನಗೆ ಈ ತೋಟ, ಈ ಮನೆ, ಈ ಕಡಲು ಎಲ್ಲ ಅಪರಿಚಿತ. ಇದನ್ನೆಲ್ಲ ತಾನು ನೋಡಿದ್ದು ಇತ್ತೀಚೆಗೆ. ಇದೇ ಕಾರಣದಿಂದಲೋ ಏನೋ ತಾನು ಇದೆಲ್ಲವನ್ನೂ ಅತಿಯಾಗಿ ಪ್ರೀತಿಸುತ್ತೇನೆ. ಇದನ್ನು ನೋಡಲೆಂದು ಆಗಾಗ್ಗೆ ಇಲ್ಲಿಗೆ ಬರುತ್ತೇನೆ. ಇಗರ್ಜಿ ಹಬ್ಬಬಂದರಂತೂ ತಾನು ತಪ್ಪದೆ ಊರಿಗೆ ಬರುತ್ತೇನೆ. +ಹಾಗೆ ನೋದಲು ಹೋದರೆ ಊರಿನಲ್ಲಿ ಇರುವವನು ಮರಿಯಾಣ ದೊಡ್ಡಪ್ಪ ಒಬ್ಬನೇ. ಅವನ ಇಬ್ಬರು ಮಕ್ಕಳೂ ಮುಂಬಯಿ ಸೇರಿ ಅಲ್ಲಿ ತಳವೂರಿದ್ದಾರೆ. ಹಿಂದೆಲ್ಲ ವರ್ಷಕ್ಕೆ ಒಮ್ಮೆಯಾದರೂ ಬರುತ್ತಿದ್ದವರು ಈಗೀಗ ಎರಡು ಮೂರು ವರ್ಷಗಳಿಗೊಮ್ಮೆ ಒಂದೆರಡು ದಿನದ ಮಟ್ಟಿಗೆ ಬಂದು ಹೋಗತೊಡಗಿದ್ದಾರೆ. ಅವರ ವಹಿವಾಟು ದೊಡ್ಡದಾಗಿ, ಅಲ್ಲಿಯೇ ಈರ್ವರು ಗೋವಾನಿ ಹುಡುಗಿಯರನ್ನು ಮದುವೆಯಾಗಿ ಸಂಸಾರ ಬೆಳೆದು ಅವರನ್ನು ಮುಂಬಯಿ ಬಿಡುತ್ತಿಲ್ಲ. ಮರಿಯಾಣ ದೊಡ್ದಪ್ಪನ ಹೆಂಡತಿ ಕೂಡ ತೀರಿ ಹೋಗಿ ವರ್ಷಗಳಾಗಿವೆ. ಈಗ ದೊಡ್ಡಪ್ಪ ಒಬ್ಬನೇ. ತೋಟ ನೋಡಿಕೊಳ್ಳಲು ಜನ ಇದ್ದಾರೆ. ತಾನು ಅಲ್ಲಿಗೆ ಹೋದೆನೆಂದರೆ ಅವನಿಗೆ ಸಂತೋಷವಾಗುತ್ತದೆ. ಊರು, ಕಡಲು, ದೊಡ್ಡಪ್ಪನ, ಪ್ರೀತಿ, ಮಮತೆ ತನ್ನನ್ನು ಊರಿನತ್ತ ಸೆಳೆಯುತ್ತದೆ. +ಇಲ್ಲಿ ಶಿವಸಾಗರದಲ್ಲಿ ತನಗೆ ಹೇಳಿಕೊಳ್ಳುವಂತಹ ಕೆಲಸವಿಲ್ಲ ಎಂಬುದೊಂದು ಕೊರಗು. ಇಬ್ಬರು ಅಣ್ಣಂದಿರಿಗಿಂತ ತಾನು ಹೆಚ್ಚು ಓದಿದ್ದು ಹೌದು. ಆದರೆ ಈ ಓದಿನಿಂದ ಪ್ರಯೋಜನವೇನು ಆಗಲಿಲ್ಲ. ಹಿರಿಯ ಅಣ್ಣ ಶಾಲೆಗೆ ಹೋದದ್ದು ಇಲ್ಲವೇ ಇಲ್ಲ. ಅಂದು ಮುರುಡೇಶ್ವರದಲ್ಲಿ ಶಾಲೆಗಳು ಇರಲಿಲ್ಲವೋ ಅಥವಾ ಕ್ರೀಸ್ತುವರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲವೋ ಅಂತು ಕಡಲಕಿನಾರೆಯಲ್ಲಿ ಏಡಿ, ಮಳಿ ಹೆಕ್ಕುತ್ತಿದ್ದ ಅಣ್ಣಂದಿರು ನೇರವಾಗಿ ಅಪ್ಪನ ಜತೆ ಕೆಲಸಕ್ಕೆ ಇಳಿದು, ತುಸು ದೊಡ್ಡವರಾದ ತಕ್ಷಣ ತಾವೂ ಕೆಲಸಗಾರರು ಎಂದೆನಿಸಿಕೊಂಡರು. ಆದರೆ ಶಿವಸಾಗರದಲ್ಲಿ ಹುಟ್ಟಿದ ತಾನು ಶಾಲೆಗೆ ಹೋಗತೊಡಗಿದೆ. ಕಲಿತೆ. ಪ್ರೌಢಶಾಲೆಯ ಕೊನೆಯ ಪರೀಕ್ಷೆಯನ್ನು ಮಾತ್ರ ತನ್ನಿಂದ ಪಾಸು ಮಾಡಲಾಗಲಿಲ್ಲ. ಹೀಗಾಗಿ ತಿಮ್ಮಪ್ಪ ಹೆಗಡೆಯವರ ಅಡಿಕೆ ವಕಾರಿಯಲ್ಲಿ ತನಗೊಂದು ಕೆಲಸ ಸಿಕ್ಕಿತು. ಬೇಡವೆಂದರೂ ಅಪ್ಪ ಅಮ್ಮ ಸೇರಿ ಮದುವೆ ಮಾಡಿದರು. ಹಿಂದೆಯೇ ಮಕ್ಕಳೂ ಆದರು. ಆದರೂ ಏನೋ ಕೊರಗು. ಎಲ್ಲ ಬರಿದಾಗಿರುವ ಅನುಭವ. ಕೆಲಸದಲ್ಲಿ ಆಸಕ್ತಿ ಇಲ್ಲ. ವಕಾರಿಯಲ್ಲಿ ಅಡಿಕೆ ಆರಿಸುವ, ವಿಂಗಡಿಸಿ ಮೂಟೆ ಕಟ್ಟುವ ಕೆಲಸವನ್ನು ಮಾಡಲು ಜನ ಇದ್ದಾರೆ. ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಸಬೇಕು. ಹೊರಗಿನಿಂದ ಬಂದ ಅಡಿಕೆಯ ಲೆಕ್ಕ ಮಾರಾಟವಾದ ಅಡಿಕೆ ಲೆಕ್ಕ ಬರೆದಿಡಬೇಕು. ಕೆಲಸ ಅಚ್ಚು ಕಟ್ಟಾಗಿ ಮಾಡುತ್ತೇನೆ. ಆದರೆ ಕೊಡುವ ಸಂಬಳ ಸಾಲದು. +ಈಗ ಅಪ್ಪ ಕೆಲಸಕ್ಕೆ ಹೋಗುತ್ತಿಲ್ಲ. ಅಣ್ಣ ವಿಕ್ಟರ ಬೆರೆಯಾಗಿದ್ದಾನೆ. ಫ಼ೆಡ್ಡಿ ಮನೆಯಲ್ಲಿಯೇ ಇದ್ದಾನೆ. ವಿಶೇಷವಾಗಿ ಬಾವಿ ಕೆಲಸದಲ್ಲಿ ಈತ ಪಳಗಿರುವುದರಿಂದ ಇವನಿಗೆ ಹೆಚ್ಚಿನ ಬೇಡಿಕೆ ಇದೆ. ಮನೆ ನಡೆಯುತ್ತಿರುವುದೇ ಇವನಿಂದ. ಇದೂ ಒಂದು ತನ್ನನ್ನು ಕಿತ್ತು ತಿನ್ನುತ್ತಿದೆ. ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಎಷ್ಟು ದಿನ ಫ಼ೆಡ್ಡಿಯ ಋಣದಲ್ಲಿ ಬಿದ್ದಿರುವುದು? ಎಂದೋ ಒಂದು ದಿನ ಇವನೂ ತನ್ನ ಹೆಂಡತಿ ಮಕ್ಕಳ ಜತೆ ಬೇರೆಯಾದರೆ? +ಈ ಚಿಂತೆಯ ನಡುವೆಯೂ ಮುರುಡೇಶ್ವರದ ಇಗರ್ಜಿ ಹಬ್ಬ ನೆನಪಿಗೆ ಬರುತ್ತದೆ. ಭಟ್ಕಳದವರೆಗೆ ಒಂದು ಬಸ್ಸು ನಂತರ ಬೇರೊಂದು. ಮುರುಡೇಶ್ವರದಲ್ಲಿ ಸಂತೆ ಹೊಂಡದ ಬಳಿ ಬಸ್ಸಿನಿಂದ ಇಳಿದು. ಕಡಲಕಿನಾರೆಯಲ್ಲಿ ನಡೆದು ಮರಿಯಾಣ ದೊಡ್ಡಪ್ಪನ ತೋಟಕ್ಕೆ ಬಂದ. ದಣಪೆ ದಾಟುವಾಗ ಜಗಲಿಯ ಮೇಲೆ ಕುಳಿತ ದೊಡ್ಡಪ್ಪ- +“ತಮ್ಮಾ..ಯಾರದು?” ಎಂದು ಕೇಳಿದ. +ಮೀನು ತಿನ್ನುವವರ ಕಣ್ಣು ಸೂಕ್ಷ್ಮವಂತೆ. ಎಂಬತ್ತಾದರೂ ದೊಡ್ಡಪ್ಪ ಚುರುಕಾಗಿದ್ದಾನೆ. ಕಣ್ಣು ಕಿವಿ ಗಂಟಲು ಸಶಕ್ತವಾಗಿದೆ. +“..ನಾನು..” ಅಂದ ಕೂಡಲೆ. +“ಯಾರು ರಬ್ಬಿಯಾ?” ಎಂದು ಆತ ಎದ್ದು ಬಂದ. +“..ನಾಳೆ ಹಬ್ಬ..ಈವತ್ತು ಬರಬೇಕಿತ್ತಲ್ಲ..ಯಾಕೆ ಬರಲಿಲ್ಲ ಅಂತ ಯೋಚನೆ ಮಾಡತಿದ್ದೆ. ಏನು ಒಬ್ಬನೇ ಬಂದದ್ದು? ಹೆಂಡತಿ ಮಕ್ಕಳು ಬರಲಿಲ್ವ?” ಎಂದು ಕೇಳಿದ ದೊಡ್ಡಪ್ಪ. +ಹಿಂದಿನಂತೆಯೇ ಅವನ ಮೈಬರಿದು. ಉಡುದಾರಕ್ಕೆ ತೂಗು ಬಿದ್ದ ಒಂದು ಕಷ್ಟಿ. ಕೆಲಸ ಮಾಡಿ ದಷ್ಟಪುಷ್ಟವಾಗಿದ್ದ ಮೈ ಈಗ ಅಲ್ಲಲ್ಲಿ ಜೋಲು ಬಿದ್ದಿತ್ತು. +“ನೀನೊಬ್ಬ ಆದರೂ ಹಬ್ಬ ಅಂದ ಕೂಡಲೇ ಬರತೀಯಲ್ಲ..ನಮ್ಮವರಿಗಂತೂ ಈ ಊರು ಇದೆ ಅನ್ನೋದೇ ಮರೆತು ಹೋಗಿದೆ..” ಎಂದು ಒಂದು ಕಡೆ ಸಂತಸವನ್ನು ಬೇರೊಂದು ಕಡೆ ನೋವನ್ನು ವ್ಯಕ್ತಪಡಿಸಿದ ಮರಿಯಾಣ. +ರಾಬರ್ಟ ನೆಲ ಬಾವಿಗೆ ದೊಟ್ಟೆ ಇಳಿಸಿ ನೀರು ಮೊಗೆದು ತಲೆಯ ಮೇಲೆ ಸುರಿದುಕೊಂಡ. ಮನೆಗೆ ದೊಡ್ಡಪ್ಪನ ಹೆಂಡತಿ ಕಡೆಯವರು ನೆಂಟರಾಗಿ ಬಂದಿದ್ದರು. ಊಟ ಅಡಿಗೆ ವ್ಯವಸ್ಥೆ ಅವರದಾಗಿತ್ತು. ಹೀಗಾಗಿ ರಾಬರ್ಟ್ ದೊಡ್ಡಪ್ಪನ ಜತೆ ಕುಳಿತು ಮಾತನಾಡಿದ. ಅವನ ಸಂಗಡ ತೋಟದಲ್ಲಿ ತಿರುಗಾಡಿದ. ತೋಟದಲ್ಲಿ ನಿಂತರೆ ಕಡಲು ಕಾಣುತ್ತಿತ್ತು. ಮನೆ ಬಾಗಿಲಿಗೆ ಹರಿಕಂತಾರರ ದುಗ್ಗ ಹಸಿ ಮೀನು ತಂದ. +“ನಾಳೆ ಮೀನುಬೇಡ..ನಮಗೆ ಹಬ್ಬ..ಮನೆಯಾಗೆ ಕೋಳಿ ಐತಲ್ಲ..” ಎಂದು ಮರಿಯಾಣ ದುಗ್ಗನಿಗೆ ಹೇಳಿದ. +ತೋಟದಲ್ಲಿ ಇದ್ದ ಹೆಡೆ ಆರಿಸುತ್ತ ಮರಿಯಾಣ ದೊಡ್ಡಪ್ಪ- +“ನನಕೈಲಿ ಇದನ್ನು ನೋಡಿಕೊಳ್ಳಲಿಕ್ಕೆ ಆಗೋದಿಲ್ಲ. ನಿನ್ನಪ್ಪ ಊರು ಬಿಟ್ಟಾಗ ಅವನಿಗೆ ಇಪ್ಪತ್ತೋ ಇಪ್ಪತೈದೋ..ಹಣ ಮಾಡಬೇಕು ಅಂತ ಘಟ್ಟದ ಮೇಲೆ ಹೋದ. ಅವನೊಬ್ಬನೇ ಅಲ್ಲ ಭಾಳ ಜನ ಹೋದ್ರು ಇಲ್ಲಿಂದ..ಏನು ಹಣ ಮಾಡಿದ್ರೋ..ಇಲ್ಲಿ ತೋಟ ಅವರಿವರ ಪಾಲಾಯ್ತು. ನಾನು ಮಾತ್ರ ಇದನ್ನು ಉಳಿಸಿಕೊಂಡೆ…ಒಡೇರು ಕೊನೆಗೆ ಇದ್ನ ನನಗೇ ಮಾಡಿದ್ರು..ನಿನ್ನಪ್ಪ ಇದ್ದಿದ್ರೆ ಇದರಾಗೆ ಅರ್ಧ ಅವನಿಗೂ ಸಿಗತಿತ್ತು…ಇರು ಅಂದ್ರೆ ಕೇಳದೆ ಹೋದ. ಈಗ..ನಮ ಹುಡುಗ್ರು ಮುಂಬಯಿ ಬಿಟ್ಟು ಬರೋದಿಲ್ಲ ಅಂತಿದಾರೆ..ಅವರಿಗೆ ಇದೆಲ್ಲ ಬೇಡವೂ ಬೇಡ..ನನಗೂ ಅಲ್ಲಿಗೆ ಬರಲಿಕ್ಕೆ ಹೇಳತಿದಾರೆ..ನಾ ಅಲ್ಲಿಗೆ ಹೋಗಲಾರೆ.” +ಮರಿಯಾಣ ದೊಡ್ಡಪ್ಪ ಮರಗಳ ಪಾತಿ ಸರಿ ಮಾಡುತ್ತ ನುಡಿಯುತ್ತಿದ್ದ. ರಾಬರ್ಟ ಬಾವಿಯಿಂದ ನೀರು ಎತ್ತಿ ಎತ್ತಿ ಪಾತಿಗಳಿಗೆ ಮೊಗೆಯುತ್ತಿದ್ದ. ಅವನಿಲ್ಲಿಗೆ ಬಂದರೆ ಅವನಿಗೆ ಸಂತಸಕೊಡುತ್ತಿದ್ದ ಇನ್ನೊಂದು ಕೆಲಸವೆಂದರೆ ತೆಂಗಿನಮರಗಳಿಗೆ ನೀರು ಹಾಯಿಸುವುದು. ಮರದ ಸುತ್ತು ಮಣ್ಣಿನ ಕಟ್ಟೆ. ಮರದಿಂದ ಮರಕ್ಕೆ ನೀರು ಹರಿಯಲು ಮಾಡಿದ ಪಾತಿ. ಬಾವಿಯಿಂದ ದೊಟ್ಟೆಯಲ್ಲಿ ನೀರನ್ನು ಎತ್ತಿ ಸುರಿದರೆ ನೀರು ಭರಗುಡುತ್ತ ಈ ಪಾತಿಯಲ್ಲಿ ಹರಿದು ಮರಗಳ ಬಳಿ ಹೋಗುತ್ತಿತ್ತು. ಒಂದು ಮರದ ಸುತ್ತ ನೀರು ನಿಂತ ನಂತರ ಮಣ್ಣಿನ ಅಡ್ಡಗುಪ್ಪೆ ನಿರ್ಮಿಸಿ ನೀರನ್ನು ಬೇರೊಂದು ಮರಕ್ಕೆ ಹರಿಯಬಿಟ್ಟರಾಯಿತು. ರಾಬರ್ಟ್ ನೀರು ಮೊಗೆದ. ಮರಿಯಾಣ ದೊಡ್ಡಪ್ಪ ನೀರು ನಿಲ್ಲಿಸುತ್ತ ಹೋದ. ನಡುವೆ ಎತ್ತರದ ದನಿಯಲ್ಲಿ ಮಾತು. +ರಾಬರ್ಟ ಊರಿಗೆ ಹೋದ ದಿನವೇ ಸಂಜೆ ಊರ ಇಗರ್ಜಿಯಲ್ಲಿ ಬೇಸ್ಪುರ. ಸಂತನ ಹೆಸರಿನ ಧ್ವಜ ಹಾರಿಸುವುದು. ಪೂಜೆ ಮಾರನೇ ದಿನ ಹಬ್ಬ. ಹತ್ತು ಜನ ಪಾದರಿಗಳಿಂದ ವಿಶೇಷ ಗಾಯನ ಪೂಜೆ. ಇಗರ್ಜಿ ಮುಂದಿನ ಚಪ್ಪರದಲ್ಲಿ ಜನ ಜಾತ್ರೆ. ಎಷ್ಟೋ ಜನ ರಾಬರ್ಟನನ್ನು ಗುರುತಿಸಿದರು. +“ಯಾರು? ಸಿಮೋನನ ಮಗನ? ಚೆನ್ನಾಗಿದಾನ ಸಿಮೋನ? ಅವನಿಗೇನು ಊರಿನ ನೆನಪುಂಟಾ? ಅವನಿಗೇನು ಯಾರಿಗೂ ಇಲ್ಲ. ಇಲ್ಲಿಂದ ಹೋದವರೆಲ್ಲ ಊರನ್ನ ಮರೆತುಬಿಡತಾರೆ..” ಎಂದರು ಹಲವರು. +ಇಗರ್ಜಿ ಮುಂಬದಿಯಲ್ಲಿ ಮಿಂಜಿತ್. ಬೆಂತಿಣಗಳನ್ನು ಅರ್ಲೂಕ ಇಮಾಜ ಪೈನೆಲಗಳನ್ನು ಮಾರುವ ಅಂಗಡಿಗಳು. ದೇವರ ಪೀಠದ ಮುಂದೆ ಎಣ್ಣೆಯ ತೂಗುದೀಪ. ದೀಪದ ಕೆಳಗೆ ಎಣ್ಣೆ ತುಂಬಿದ ಪಾತ್ರೆ. ಜನ ಹೋಗಿ ಉದ್ಧರಣೆಯಿಂದ ದೀಪಕ್ಕೆ ಎಣ್ಣೆ ಎರೆದು ದೇವರಿಗೆ ಕೈ ಮುಗಿದು ಬರುತ್ತಿದ್ದರು. ಇಗರ್ಜಿಯ ಬಲ ಪಾರ್ಶ್ವದ ಗೋಡೆಯಲ್ಲಿ ಮೂರು ನಾಲ್ಕು ಅಡಿ ಎತ್ತರದಲ್ಲಿ ಗೋಡೆಯಲ್ಲಿ ಕೊರೆದ ಒಂದು ಪೀಠ. ಅದನ್ನು ಪುಲಪತ್ರಿ ಎಂದು ಕರೆಯುತ್ತಿದ್ದರು. ಇಲ್ಲಿ ನಿಂತು ಪಾದರಿಯ ಶೆರಮಾಂವಂ +ಸಂಜೆ ಇಗರ್ಜಿಯ ಮುಂದಿನ ವೇದಿಕೆಯಲ್ಲಿ ತಿಯಾತ್ರ, ನಾಟಕ..ಹಾಡು, ನೃತ್ಯ. ಇದನ್ನು ನೋಡಲು ಜನವೋ ಜನ. +ನಾಲ್ಕನೇ ದಿನ ಬೆಳಿಗ್ಗೆ ಮರಿಯಾಣ ದೊಡ್ಡಪ್ಪ ತೆಂಗಿನ ಗರಿ, ಹಾಳೆ ಎಲ್ಲ ರಾಶಿ ಹಾಕಿ ತೋಟದಲ್ಲಿ ಬೆಂಕಿ ಮಾಡಿದ್ದ. ಮರಿಯಾಣ ದೊಡ್ಡಪ್ಪನ ಜತೆ ರಾಬರ್ಟ್ ಹೋಗಿ ಹಿತಕರವಾಗಿದ್ದ ಬೆಂಕಿಗೆ ಮೈ ಕೈ ಕಾಯಿಸಿಕೊಳ್ಳುತ್ತ ಕುಳಿತಿದ್ದ. ನೆಂಟರು ಅಂಗಳದಲ್ಲಿ ಚಾಪೆಯ ಮೇಲೆ ಇನ್ನೂ ಹೊರಳಾಡುತ್ತಿದ್ದರು. ಮೇಲೆ ಆಕಾಶ ಬರದಾಗಿತ್ತು. ತೆಂಗಿನ ಮರಗಳ ಗರಿಗಳು ಸದ್ದು ಮಾಡುತಲಿದ್ದವು. ಕಡಲಲ್ಲಿ ಇಳಿತವಿದ್ದುದರಿಂದ ಕಡಲು ಶಾಂತವಾಗಿತ್ತು. +“ದೊಡ್ಡಪ್ಪ..ಒಂದು ಗಂಟೆ ಹನುಮಾನಿಗೆ ನಾನು ಹೊರಟೆ..” ಎಂದ ರಾಬರ್ಟ್. +“..ಇರು..ನಾಲ್ಕು ದಿನ” +“ಇಲ್ಲ ದೊಡ್ಡಪ್ಪ..ಅಲ್ಲಿ ನನಗೊಂದು ಕೆಲಸ ಇದೆ. ಕೈ ತುಂಬಾ ಸಂಬಳ ಬರಲ್ಲ..ಆದರೂ ಕೆಲಸ ಅಂತ ಒಂದು ಮಾಡಬೇಕಲ್ಲ.” +“ಅಲ್ಲ ನಿನಗೊಂದು ಮಾತು ಹೇಳುವ ಅಂತ..ಆದರೆ ಧೈರ್ಯ ಆಗೋದಿಲ್ಲ..ಯಾಕೆ ಅಂದ್ರೆ..ನಿನ್ನಪ್ಪ ಈ ಊರು ಬೇಡ ಅಂತ ಬಿಟ್ಟು ಹೋದವನು..” +“ಹೇಳಿ ದೊಡ್ಡಪ್ಪ..ಏನು?” +“ನೀನು ಇಲ್ಲಿಗೇ ಬಂದು ಬಿಡು..ಈ ತೋಟ ನೋಡಿಕೋ..ನಾನಿರೋ ತನಕ ಇದು ನಂದು..ನಂತರ ನಿನ್ನದು..ಏನಂತಿ?” +ರಾಬರ್ಟ್ ನಕ್ಕ. +“ನಗೋ ಮಾತಲ್ಲ..ನಿಜವಾಗಿಯೂ ನಾನು ಹೇಳತಿದೀನಿ..ಯೋಚನೆ ಮಾಡು..ನಿನ್ನಪ್ಪನಿಗೆ ಹೇಳಬೇಡ ಅವನು ಒಪ್ಪೋದಿಲ್ಲ..” +“ಹೋಗು ದೊಡ್ಡಪ್ಪ..” +ರಾಬರ್ಟ್ ನಗುತ್ತಲೇ ತೆಂಗಿನ ಗರಿಯೊಂದನ್ನು ಬೆಂಕಿಗೆ ಹಾಕಿದ. +ಒಂದಿಷ್ಟು ತೆಂಗಿನಕಾಯಿ, ಎಳನೀರು, ವಾಲಿಬೆಲ್ಲ, ಗೆಣಸು, ಹಗ್ಗದ ಪಿಂಡಿ ಎಂದು ದೊಡ್ಡ ಚೀಲ ಹೊತ್ತು ರಾಬರ್ಟ್ ಬಸ್ ನಿಲ್ದಾಣಕ್ಕೆ ಬಂದ. ಹನುಮಾನ ಹತ್ತಿ ಶಿರಾಲಿ ದಾಟಿ ಭಟ್ಕಳದಲ್ಲಿ ಇಳಿದು, ಕಾದು ನಿಂತ ಶಿವಸಾಗರದ ಬಸ್ಸು ಹತ್ತಿದಾಗ ದೊಡ್ಡಪ್ಪ ಹೇಳಿದ ಮಾತು ಕಿವಿಯಲ್ಲಿತ್ತು. +* +* +* +ಜವಳಿ ಅಂಗಡಿ ಸಾಹುಕಾರ ಬೋನ ತನ್ನ ಮಗನ ಮದುವೆಯ ಬಗ್ಗೆ ವಿಚಾರ ಮಾಡಿದಾಗೆಲ್ಲ ಅವನ ನೆನಪಿಗೆ ಬರುತ್ತಿದ್ದವಳು ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮಗಳು ಸಿಲ್ವಿಯಾ. ಮುದ್ದು ಮುದ್ದಾಗಿ ದಂತದ ಗೊಂಬೆಯ ಹಾಗೆ ಇದ್ದಳು ಹುಡುಗಿ. ಅವಳ ನಮ್ರತೆ, ವಿಧೇಯತೆ, ದೈವ ಭಕ್ತಿ, ಊರವರ ಪ್ರಶಂಸೆಗೆ ಗುರಿಯಾಗಿತ್ತು. ಪಿಂಟೋನ ಹೆಂಡತಿ ಮಗ್ಗಿಬಾಯಿ ಕೊಂಚ ದೊಡ್ಡಸ್ತಿಕೆಯನ್ನು ತೋರಿಸುತ್ತಿದ್ದ ಹೆಂಗಸು. ಪಿಂಟೋ ಕೂಡ. ಆದರೆ ಇವರ ಮಗಳು ಸ್ನೇಹ ಜೀವಿ. ಸರಳೆ. ಅಂದು ತಾನು ಅಂಗಡಿಗೆ ಹೋದಾಗ ಅಂಗಡಿಯಿಂದ ಇಳಿದುಹೋದ ಈ ಹುಡುಗಿ ವಿಶೇಷವಾಗಿ ಬೋನನ ಗಮನ ಸೆಳೆದಿದ್ದಳು. ಪಾದರಿಯ ಹಿಂದೆ ತಿರುಗಾಡಿಕೊಂಡಿದ್ದ ತಾನು ಮದುವೆಯಾದದ್ದು ತಡವಾಗಿ. ಮಗನ ಮದುವೆಯಾದರೂ ಬೇಗನೇ ಆಗಲೆಂದು ಅವನು ಹೆಂಡತಿ ರೆಮೇಂದಿಯ ಬಳಿ ಮಾತನಾಡಿದ. +“ರೆಮೇಂದಿ..ಅಲ್ಲ, ಫ಼ಿಲಿಪ್ಪನ ಬಗ್ಗೆ ಏನಾದರೂ ಯೋಚನೆ ಮಾಡಿದೀಯಾ?” ಎಂದು ಕೇಳಿದ. +“ಏನು ಯೋಚನೆ ಮಾಡೋದು? ಅಂಗಡಿಯಂತೂ ಇದೆ ವ್ಯಾಪಾರ ಕೂಡ ಚೆನ್ನಾಗಿದೆ. ಮತ್ತೇನು?” +“ಅರೆ ನೀನು ಅಜ್ಜಿಯಾಗೋದು ಬೇಡವೇನೆ?” +“ಅಂದರೆ ನಿಮಗೂ ಅಜ್ಜೀ ಆಗಬೇಕು ಅನ್ನೋ ಆಸೆ ಏನೀಗ?” +“ಅವನಿಗೊಂದು ಹೆಣ್ಣು ನೋಡಬೇಕಲ್ಲ” +“ಹುಡುಗೀರು ತುಂಬಾ ಇದಾರೆ..ನೋಡಿ” +“ಹಾಗಲ್ಲ..ಫ಼ಿಲಿಪ್ಪನ ಮನಸ್ಸಿನಲ್ಲಿ ಯಾರಾದರೂ ಇದಾರೆಯೇ ಅಂತ..” +ಬೋನನಿಗೆ ಅಂದು ಆ ಹುಡೂಗಿಯನ್ನು ತನ್ನ ಅಂಗಡಿಯಲ್ಲಿ ನೋಡಿದಾಗಿನಿಂದ ಏನೋ ಅನುಮಾನ. ಆ ಹುಡೂಗಿಯ ನಗುಮುಖ, ಮಗನ ಮುಖದಲ್ಲಿ ಆಗ ಕಂಡ ಗೊಂದಲ ಅವನಿಗೆ ಎನೋ ಇದೆ ಎಂಬುದನ್ನು ಹೇಳಿತ್ತು. ಹೀಗೆಂದೇ ಆತ ಹೆಂಡತಿಗೆ ಕೇಳಿದ. +ಆವರೆಗೆ ಹಗುರವಾಗಿ ಮಾತನಾಡುತ್ತಿದ್ದ ರೆಮೇಂದಿ. +“ಅದೂ..” ಎಂದು ರಾಗ ಎಳೆದಳು. +“..ಹೇಳು..” +“ಹೇಳು ಹೇಳು..ಈ ಪ್ರಸಂಗದಲ್ಲಿ ನೀನೂ ಇದ್ದಿ..ನೆನಪಿರಲಿ..” ಎಂದ ಬೋನ ರೆಮೆಂದಿಯ ನಾಚಿದ ಮುಖ ನೋಡಿ- +“ಅಲೆಕ್ಸ ಪಿಂಟೋ ಮಗಳನ್ನು ನೀವು ನೋಡಿದೀರಾ..ಅಲ್ವ?” +“ನೋಡಿದೀನಿ..ಹುಡುಗಿ ಚೆನ್ನಾಗಿದಾಳೆ” ಎಂದ ಬೋನ. ತನ್ನ ಮನಸ್ಸಿನಲ್ಲಿ ಇರುವುದನ್ನು ಹೆಂಡತಿಯೂ ಹೇಳಿದಳಲ್ಲ ಎಂಬ ಸಂತಸದಲ್ಲಿ. +ಮುಂಬಯಿಯಿಂದ ಪಿಂಟೋ, ಅವನ ಹೆಂಡತಿ ಮಗ್ಗಿಬಾಯಿ ಶಿವಸಾಗರಕ್ಕೆ ಬಂದ ಎಷ್ಟೋ ದಿನಗಳ ನಂತರ ಅವನ ಕಿರಿಯ ಮಗಳು ಸಿಲ್ವಿಯೂ ಊರಿಗೆ ಬಂದಳು. ಅವಳ ಅಕ್ಕಂದಿರು ಮುಂಬಯಿಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ್ದರು. ಅದೇಕೋ ಮುಂಬಯಿಯ ಜೀವನ ಹಿಡಿಸದೆ ತಂದೆ ತಾಯಿಯ ಜತೆ ಇರಲು ಬಂದಳು ಸಿಲ್ವಿಯ. ಮುಂಬಯಿಯಂತಹ ಮುಂದುವರೆದ ಶಹರಿನಲ್ಲಿ ಅಲೆಕ್ಸ ಪಿಂಟೋಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಸಿಲ್ವಿಯಾ ತಾನು ಊರಿಗೆ ಬರುತ್ತೇನೆ ಎಂದಾಗ ಮುಂದೆ ಓದುವುದಿಲ್ಲವಾದರೆ ಬಂದು ಬಿಡು ಎಂದಿದ್ದ ಪಿಂಟೋ. ಹೀಗಾಗಿ ಅವಳು ಇಲ್ಲಿಗೆ ಬಂದಳು. +ಶಿವಸಾಗರಕ್ಕೆ ಬಂದ ನಂತರ ಇಲ್ಲಿಯ ಶಾಂತ ಗೊಂದಲವಿಲ್ಲದ ಬದುಕು ಅವಳಿಗೆ ಹಿಡಿಸಿತು. ಮುಂಬಯಿಯಲ್ಲಿ ಯಾವುದಕ್ಕೂ ಸಮಯ ಸಿಗುತ್ತಿರಲಿಲ್ಲವಾದರೆ ಇಲ್ಲಿ ಕಾಲವೇ ಉರುಳುತ್ತಿರಲಿಲ್ಲ. ಮನೆಯಿಂದ ಐದು ನಿಮಿಷದ ದಾರಿ ಇಗರ್ಜಿಗೆ. ಪೇಟೆಗೆ ಹತ್ತು ನಿಮಿಷ. ತರಕಾರಿ ಮಾರ್ಕೆಟ್ಟಿಗೆ ಮೀನು ಮಾಂಸದ ಮಾರ್ಕೆಟ್ಟಿಗೆ ಮತ್ತೆ ಹತ್ತು ನಿಮಿಷ. ನೀರಿಗೆ ತೊಂದರೆ ಇಲ್ಲ. ಚಾರ್ಕೋಲು ಸೀಮೆ ಎಣ್ಣೆ ಎಂದು ಪರದಾಡಬೇಕಾಗಿಲ್ಲ. +“ಮಮ್ಮಿ..ಇಲ್ಲಿ ಎಲ್ಲ ಅನುಕೂಲ ಇದೆ ಅಲ್ವ?” ಎಂದು ತಾಯಿಯೊಂದಿಗೆ ತನ್ನ ಸಂತಸ ಹಂಚಿಕೊಂಡಳು. ಈ ವಿರಾಮ ಅವಳಿಗೆ ಓದಲು ಇಗರ್ಜಿಗೆ ಹೋಗಲು ಗೆಳತಿಯರ ಜತೆ ಸೇರಲು ಅವಕಾಶ ಕಲ್ಪಿಸಿಕೊಟ್ಟಿತು. ಆದರೂ ಅವಳಿಗೊಂದು ನಿರಾಶೆ ಇದೆ. ಈ ಊರು ಮುಂಬಯಿಯಷ್ಟು ಅತ್ಯಾಧುನಿಕವಾದುದಲ್ಲ. ಇಲ್ಲಿಯ ಜನರ ಉಡಿಗೆ, ತೊಡಿಗೆ, ಭಾಷೆ, ರೀತಿ, ನೀತಿ ಎಲ್ಲವೂ ಸುಮಾರು ಹದಿನೈದು ಇಪ್ಪತ್ತು ವರ್ಷಗಳಷ್ಟು ಹಳೆಯದು. ಹೊಸತನವನ್ನು ಕಂಡುಕೊಳ್ಳದೆ, ಹೊಸದಕ್ಕೆ ಕೂಡಲೇ ಸ್ಪಂದಿಸದ ಬದುಕು ಇಲ್ಲಿಯ ಜನರದ್ದು. ಹೀಗೆಂದೇ ಆಕೆ ಬಂದ ಹೊಸದರಲ್ಲಿ ಕೊರಗಿದ್ದೂ ಉಂಟು. ಆದರೆ ಕ್ರಮೇಣ ಅವಳು ಹೊಂದಿಕೊಂಡಳು. ನಿತ್ಯ ಪೂಜೆಗೆ ಇಗರ್ಜಿಗೆ ಹೋಗುವುದು ಅವಳ ದಿನಚರಿಯ ಮುಖ್ಯ ಅಂಗವಾಯಿತು. ಭಾನುವಾರಗಳಂದು ಜ್ಞಾನೋಪದೇಶ. ಮಿರೋಣ ಜಾನ್ ಡಯಾಸ್ ನಡೆಸುವ ಕ್ವಾಯರ್ ಇವುಗಳಲ್ಲಿ ಭಾಗವಹಿಸುವುದು ಕೂಡ ಅವಳಿಗೆ ಆಸಕ್ತಿಯ ವಿಷಯವಾಯಿತು. +ಹೀಗೆ ಜ್ಞಾನೋಪದೇಶಕ್ಕೆ ಬಂದಾಗಲೇ ಅವಳು ಊರಿನ ಯುವಕ ಯುವತಿಯರನ್ನು ಕಂಡಳು. ಮುಂಬಯಿಯ ತರುಣ, ತರುಣಿಯರ ಹಾಗೆ ಇವರ್ಯಾರೂ ಅತ್ಯಾಧುನಿಕರಾಗಿರಲಿಲ್ಲ. ಏನೋ ಹಿಂಜರಿಕೆ, ಬಳಿ ಹೋದರೆ ಹಿಂದೆ ಸರಿಯುವ ಸ್ವಭಾವ, ತಾವಾಗಿ ಯಾರನ್ನೂ ಮಾತನಾಡಿಸದ ಗುಣ ಇವರಲ್ಲಿತ್ತು. ಯುವಕರೇ ಒಂದು ಗುಂಪಾಗಿ ಯುವತಿಯರೇ ಒಂದು ಗುಂಪಾಗಿ ಪ್ರತ್ಯೇಕವಾಗಿ ನಿಲ್ಲುತ್ತಿದ್ದರು. ಇವರೆಲ್ಲರ ನಡುವೆ ಯಾರ ಬಗ್ಗೆಯೂ ಆಕರ್ಷಿತಳಾಗದ ಸಿಲ್ವಿಯಾ ಮೊದಲ ಬಾರಿಗೆ ಬೋನನ ಮಗ ಫ಼ಿಲಿಪ್ಪನನ್ನು ಕಂಡು ಕುತೂಹಲಗೊಂಡಳು. ಹತ್ತು ಜನರ ನಡೂವೆಯೂ ಎದ್ದು ಕಾಣುವ ನಡೆ, ನುಡಿ, ನಗು, ಮಾತು ಅವನಲ್ಲಿತ್ತು. ಇಗರ್ಜಿಯಲ್ಲಿ ಭಯ, ಭಕ್ತಿಯಿಂದ ವರ್ತಿಸುತ್ತಿದ್ದ. ಜ್ಞಾನೋಪದೇಶವನ್ನು ಶೃದ್ಧೆಯಿಂದ ಕಲಿತು ಒಪ್ಪಿಸುತ್ತಿದ್ದ. ಸ್ನೇಹಿತರ ಜತೆ ಗಂಭೀರವಾಗಿ ವರ್ತಿಸುತ್ತಿದ್ದ. +ಫ಼ಿಲಿಪ್ಪನಿಗೆ ಕೂಡ ಪ್ರತಿಯಾಗಿ ಸಿಲ್ವಿಯಾ ವಿಶೇಷವಾಗಿ ಕಂಡಳು. ಮುಂಬಯಿಯಿಂದ ಬಂದ ಹುಡುಗಿ ಎಂದು ಮೊದಲೇ ಪ್ರಚಲಿತವಾಗಿತ್ತು. ಅವಳ ಉಡಿಗೆ ತೊಡಿಗೆಗಳಲ್ಲಿ ಆಕರ್ಷಣೆ ಇತ್ತು. ಅವಳ ನಿಧಾನ ಪ್ರವೃತ್ತಿ ಅವಳ ಇಡೀ ವ್ಯಕ್ತಿತ್ವಕ್ಕೆ ಶೋಭೆ ತಂದಿತ್ತು. ಸಿಲ್ವಿಯಾ ಸಿಲ್ವಿಯಾ ಎಂದು ಎಲ್ಲ ಹುಡುಗಿಯರು ಇವಳ ಸುತ್ತ ನೆರೆಯುತ್ತಿದ್ದರು. ಇಗರ್ಜಿಯ ಸಮಸ್ತ ಕೆಲಸಗಳಿಗೂ ಸಿಲ್ವಿಯಾ ಬೇಕಾಗುತ್ತಿದ್ದಳು. +ಇವರೀರ್ವರ ಈ ಸ್ವಭಾವ ಅವರನ್ನು ಹತ್ತಿರ ಹತ್ತಿರ ತಂದಿತು. ಮೊದ ಮೊದಲು ನೋಡಿ ನಗುತ್ತಿದ್ದವರು ಮಾತುಕತೆಯಲ್ಲಿ ಮೈ ಮರೆತರು. ಪರಸ್ಪರ ನೋಡಲು ಮಾತನಾಡಲು ಹಾತೊರೆಯತೊಡಗಿದರು. ಮುಂಬಯಿಯ ಈ ಹುಡುಗಿ ಒಂದು ಹೆಜ್ಜೆ ಮುಂದೆ ಹೋಗಿ, ಪೇಟೆಗೆ ಬಂದಾಗಲೆಲ್ಲ ತನ್ನ ತಂದೆಯ ಅಂಗಡಿಗೆ ಹೋಗಿ ಸ್ವಲ್ಪ ಹೊತ್ತು ಕಳೆಯುವಂತೆಯೇ ಬೋನನ ಅಂಗಡಿಗೂ ಬರತೊಡಗಿದಳು. ಅಂಗಡಿಯಲ್ಲಿ ಫ಼ಿಲಿಪ್ಪ ಇರುವ ಸಮಯ ನೋಡಿ ಇಲ್ಲಿ ಬಂದು ಕುಳಿತು ಹೋಗತೊಡಗಿದಳು. +ಇಷ್ಟು ಹೊತ್ತಿಗೆ ಅವರಿಬ್ಬರೂ ಪರಸ್ಪರ ಬಯಸತೊಡಗಿದ್ದರು. ಫ಼ಿಲಿಪ್ಪ ತಾಯಿಯ ಎದುರು ತನ್ನ ಮನದಾಸೆಯನ್ನು ತೋಡಿಕೊಂಡ ಕೂಡ. +“ನೋಡೋಣ” ಎಂದಳು ರೇಮೇಂದಿ. ಅವಳಿಗೂ ಮಗನ ಆಯ್ಕೆ ಸೂಕ್ತವೆನಿಸಿತು. ಹುಡುಗಿ ಲಕ್ಷಣವಾಗಿದ್ದಾಳಲ್ಲ. +ಗಂಡ ಮಗನ ಮದುವೆಯ ವಿಷಯ ಎತ್ತಿದಾಗ ರೆಮೇಂದಿಗೆ ಸಂತಸವಾಯಿತು. ಕೂಡಲೇ ಅವಳು ಮಗನ ಆಯ್ಕೆಯ ಬಗ್ಗೆ ಹೇಳಿದಳು. +“ಅಂತು ನಮ್ಮ ದಾರೀನ ಅವರೂ ಹಿಡಿದರು” ಎಂದು ನಕ್ಕ ಬೋನ. +“..ಆಯ್ತಲ್ಲ..ಈಗ ಮುಂದಿನ ಮಾತಾಡಿ..ಬೇಗನೆ ಮದುವೆ ಮಾಡಿ ಬಿಡೋಣ” ಎಂದು ಒಂದು ರೀತಿಯಲ್ಲಿ ಅವಸರಿಸಿದಳು ರೆಮೇಂದಿ. +“ನಿಲ್ಲು ನಿಲ್ಲು..ಅವಸರ ಮಾಡಬೇಡ” ಎಂದ ಬೋನ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಲ್ಲವೇ? +* +* +* +ಆ ಕಾಲ ಕೂಡಿ ಬಂದಿತು. +ಅಂಗಡಿಗೆ ಬಂದ ಗುರ್ಕಾರ ಸಿಮೋನನ ಹತ್ತಿರ ಬೋನ ಈ ವಿಷಯ ಪ್ರಸ್ತಾಪಿಸಿದ. +“ಹೌದ? ಒಳ್ಳೆಯ ಯೋಚನೆ. ಗಂಡಿನ ಕಡೆಯವರೇ ಹೆಣ್ಣಿನ ಮನೆಗೆ ಹೋಗೋದು ನಮ್ಮಲ್ಲಿ ಪದ್ದತಿ ಅಲ್ಲವೇ? ನಾನು ನೀನು ಹೋಗಿ ಬರೋಣ..” ಎಂದ ಸಿಮೋನ. +ಆದರೆ ಸಿಮೋನನ ಮನಸ್ಸಿನಲ್ಲಿ ಒಂದು ವಿಚಾರವಿತ್ತು. ಈ ಜನ ಪಿಂಟೋ, ಡಯಾಸ್ ಮೊದಲಾದವರು ಏನೋ ಒಂದು ರೀತಿಯಲ್ಲಿ ವರ್ತಿಸುತ್ತಾರೆ. ಬೀಗಿ ನಿಲ್ಲುತ್ತಾರೆ. ಅವರು ಬೋನನ ಮನೆಗೆ ಹೆಣ್ಣು ಕೊಟ್ಟಾರೆಯೇ? ಹಾಗೆಂದು ಬೋನನ ಮಗ ಫ಼ಿಲಿಪ್ಪನಿಗೆ ಊರ ತುಂಬಾ ಗೌರವವಿದೆ. ಅವನ ಜವಳಿ ಅಂಗಡಿ ಕೂಡ ಊರಿನ ಜವಳಿ ಅಂಗಡಿಗಳಲ್ಲಿ ಶ್ರೀಮಂತವಾದದ್ದು. ಇಲ್ಲಿ ಹುಡುಗಿಗೂ ಮನಸ್ಸಿರುವುದರಿಂದ ಅವರು ಒಪ್ಪಬಹುದು. ನೋಡೋಣ ಅಂದುಕೊಂಡ ಸಿಮೋನ. ಮೊದಲೇ ಅಪಸ್ವರದ ಮಾತನಾಡಿ ಬೋನನ ಮನಸ್ಸಿಗೆ ನೋವು ಮಾಡುವುದೇಕೆ ಎಂದು ಸುಮ್ಮನಾದ. +ಭಾನುವಾರ ಗುರ್ಕಾರ ಅಲೆಕ್ಸ ಪಿಂಟೋಗೆ ಸಿಮೋನ- +“..ಪಿಂಟೋ ಮಾಮ..ಒಂದು ಕೆಲಸಕ್ಕೆ ನಿಮ್ಮಲ್ಲಿಗೆ ಬರಬೇಕೂಂತ ಇದೆ…ಸಾಯಂಕಾಲ ಮನೇಲಿ ಇರತೀರಾ?” ಎಂದು ಕೇಳಿದ. +“ಬನ್ನಿ..ನಿಮಗೆ ಗೊತ್ತಲ್ಲ..ಸಾಯಂಕಾಲ ಆರು ಗಂಟೆಗೆ ಇಗರ್ಜಿಯಲ್ಲಿ ದಿವ್ಯ ಪ್ರಸಾದದ ಆಶೀರ್ವಾದ..” +“ನಮ್ಮದೇನಿದ್ದರೂ ಅರ್ಧ ಗಂಟೆಯ ಮಾತು..ನಾನು ಜವಳಿ ಅಂಗಡಿ ಸಾಹುಕಾರರು ಬರತೇವೆ..” ಎಂದ ಸಿಮೋನ. +ಜವಳಿ ಅಂಗಡಿಯ ಸಾಹುಕಾರರು ಅಂದ ಕೂಡಲೆ ಪಿಂಟೋನ ಹಣೆಯ ಮೇಲೆ ಗೆರೆಗಳು ಮೂಡಿದವು. ಏಕೆ? ಏನು? ಎಂದಾತ ಯೋಚಿಸಿದ, ಆದರೂ- +“..ಬನ್ನಿ..ಬನ್ನಿ..” ಎಂದ ತನ್ನ ಮಂಗಳೂರಿನ ಶೈಲಿಯಲ್ಲಿ. +* +* +* +ನಾಲ್ಕು ಗಂಟೆಗೆ ಬೋನ ಸಿಮೋನನ ಜತೆ ಸೇರಿ ಫ಼ಾತಿಮಾ ನಗರದ ಅಲೆಕ್ಸ ಪಿಂಟೋ ಮನೆಗೆ ಬಂದ. ಹಿಂದೆ ಬಾಡಿಗೆಗೆ ಹಿಡಿದ ಮನೆಯನ್ನೇ ಕೊಂಡು ಹೊಸದಾಗಿ ಕಟ್ಟಿಸಿ ಅದಕ್ಕೆ ’ಹೋಲಿಕ್ರಾಸ್’ ಎಂಬ ಹೆಸರನ್ನು ಇಟ್ಟಿದ್ದ ಪಿಂಟೋ. ಮನೆಯ ಮುಂದೆ ಕಂಪೌಂಡು ಒಳಗೆಲ್ಲ ಕುಂಡದ ಗಿಡಗಳು. ನಾಯಿ ಇದೆ ಎಚ್ಚರಿಕೆ ಎಂಬ ಇಂಗ್ಲೀಷ ಬೋರ್ಡಿನೊಂದಿಗೆ ಸದಾ ಮಗ್ಗಿ ಬಾಯಿಯ ಹಿಂದೆಯೇ ತಿರುಗಾಡುವ ಒಂದು ಪೊಮೆರಿನ. ಬಾಗಿಲ ಮೇಲ ಬದಿಯಲ್ಲಿ ಶಿಲುಬೆಗೇರಿದ ಕ್ರಿಸ್ತನ ಪೈನಲ. ಒಳಗೆ ವಿಶೇಷವಾಗಿ ಅಲಂಕರಿಸಿದ ಅಲ್ತಾರ. ಅಲ್ಲಲ್ಲಿ “ದೇವರೇ ಈ ಮನೆಯನ್ನು ನಿನ್ನ ಕೃಪಾದೃಷ್ಟಿಯಿಂದ ಹರಿಸು”, “ಪ್ರಾರ್ಥನೆ ಈ ಮನೆಯ ಶಕ್ತಿ”, ಬೇಡಿಕೊಳ್ಳಿರಿ ನಿಮಗೆ ದೊರೆಯುವುದು, ಹುಡುಕಿರಿ ನಿಮಗೆ ಸಿಕ್ಕುವುದು. ತಟ್ಟಿರಿ ನಿಮಗೆ ತೆರ್ಯುವುದು” “ದೇವರು ನಿಮ್ಮನ್ನು ಪ್ರೀತಿಸುವಂತೆ ನೀವು ಪರರನ್ನು ಪ್ರೀತಿಸಿರಿ” ಎಂಬ ವಾಕ್ಯಗಳಿರುವ ಫ಼ಲಕಗಳು. ಅತಿ ಸುಂದರವಾದ ಮರದ ಪೀಠೋಪಕರಣಗಳು ಒಂದು ರೇಡಿಯೋ, ಒಂದು ಗ್ರಾಮಫ಼ೋನ ಪೆಟ್ಟಿಗೆ. ಮರದ ಬೀರುಗಳು. +“ಕುಳಿತುಕೊಳ್ಳಿ” ಎಂದ ಪಿಂಟೋ ಒಳಬಂದ ಸಿಮೋನ, ಬೋನರಿಗೆ. ಮಗ್ಗಿಬಾಯಿ ಬಾಗಿಲಲ್ಲಿ ಕಾಣಿಸಿಕೊಂಡು +“ಚೆನ್ನಾಗಿದ್ದೀರಾ..?” ಎಂದು ಕೇಳಿ ಮರೆಯಾದಳು. +ಮನೆ ಕೆಲಸದ ಹುಡುಗಿ, ಹಂದಿ ಗುಸ್ತೀನನ ಮಗಳು ಕೊಳೆ ಲಂಗವನ್ನು ಮೇಲೆತ್ತಿ ಸಿಕ್ಕಿಸಿಕೊಂಡು ಒಂದು ತಟ್ಟೆಯಲ್ಲಿ ಎರಡು ಕಪ್ಪುಗಳನ್ನು ಇರಿಸಿಕೊಂಡು ಬಂದು ಎದುರು ಇಟ್ಟು ಹೋದಳು. +“..ಮತ್ತೇ?” ಎಂಬಂತೆ ಪಿಂಟೋ- +“ಕಿತೆಂ” ಎಂದು ಕೇಳಿ ಸಿಮೋನನ ಮುಖ ನೋಡಿದ. +“ನೇರವಾಗಿ ನಾನು ವಿಷಯಕ್ಕೆ ಬರತೇನೆ..ಮಗಳು ಸಿಲ್ವಿಯಾ ಮದುವೆ ಮಾಡುವ ವಿಚಾರ ಇದೆ ಅಂತ ಕೇಳಿದೆ” ಎಂದು ಸಿಮೋನ ಪೀಠಿಕೆ ಹಾಕಿದ. +ಮಿರೋಣ ಡಯಾಸ್ ಸಿಮೋನನ ಜತೆ ಮಾತನಾಡುತ್ತ ಕೆಲ ದಿನಗಳ ಹಿಂದೆ ಈ ಮಾತನ್ನು ಹೇಳಿದ್ದ. ಮಗಳು ಮುಂಬಯಿಯಿಂದ ಬಂದಿದ್ದಳು. ಮದುವೆಯ ವಯಸ್ಸು. ಇವಳ ಹಿಂದೆ ಇನ್ನೂ ಇಬ್ಬರಿದ್ದಾರೆ. ಸೂಕ್ತ ಹುಡುಗರು ಕಣ್ಣಿಗೆ ಕಾಣುತ್ತಿಲ್ಲ. ಇಲ್ಲಿರುವವರೆಂದರೆ ಕಲ್ಲು ಗಾರೆ ಕೆಲಸಗಾರರು, ದರ್ಜಿಗಳು, ಅಟೆಂಡರು, ಪ್ಯೂನುಗಳು ಹೀಗೆಂದೇ ಆತ ಡಯಾಸ್ ಹತ್ತಿರ ಮಾತನಾಡಿದ್ದ. ಡಯಾಸನ ಮಗ ಜಾಕೋಬ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದುದು ಬಹಳ ದಿನಗಳಿಂದ ಪಿಂಟೋನ ಗಮನದಲ್ಲಿತ್ತು. ಹಾಗೆಯೇ ಡಯಾಸ ತನ್ನ ಮಗನಿಗೆ ಮಂಗಳೂರಿನಲ್ಲಿ ಒಂದೂವರೆ ಲಕ್ಷ ರೂಪಾಯಿ ಕೊಡುವ ಒಂದು ಹೆಣ್ಣನ್ನು ನೋಡಿದ್ದಾನೆ ಎಂಬ ವಿಷಯ ಕೂಡ ತಿಳಿದಿತ್ತು. ಆದರೂ ಇರಲಿ ಎಂದು ಒಂದು ಮಾತು ಹೇಳಿದ್ದ. ಈ ಮಾತನ್ನು ಡಯಾಸ್ ಸಿಮೋನನ ಮುಂದೆ ಆಡಿದ್ದ. ಅದು ಈಗ ಉಪಯೋಗಕ್ಕೆ ಬಂದಿತು. +“ಹೌದು..ಒಳ್ಳೇ ಕಡೆ ಸಂಬಂಧ ಸಿಕ್ಕರೆ ಮಾಡೋದೇ” ಎಂದ ಪಿಂಟೋ. +ಸಿಮೋನ ತಾನು ಬೋನನ ಜತೆ ಬರುವುದಾಗಿ ಹೇಳಿದಾಗಲೇ ಏನೋ ಪರಿಮಳ ಅವನ ಮೂಗಿಗೆ ಅಡರಿತ್ತು. ಬೋನನ ಜವಳಿ ಅಂಗಡಿ ಶಿವಸಾಗರದಲ್ಲಿಯೇ ಹೆಸರುವಾಸಿಯಾಗಿತ್ತು. ಅದನ್ನೀಗ ಬೋನನ ಮಗ ಫ಼ಿಲಿಪ್ಪ ನೋಡಿಕೊಳ್ಳುತಲಿದ್ದ. ಒಳ್ಳೆಯ ಹುಡುಗ. ಊರಿನ ಇತರೆ ಕ್ರೈಸ್ತ ಯುವಕರ ಹಾಗೆ ಕುಡಿತ ಇತ್ಯಾದಿ ಇಲ್ಲ. ಸಿಲ್ವಿಯಾಗೆ ತಕ್ಕ ವರ ಆದಾನು ಎಂದು ಕೂಡ ಅನಿಸಿತ್ತು. ಆದರೆ ಇದೆಲ್ಲ ಇತ್ತೀಚಿನ ಬೆಳವಣಿಗೆ, ನಿನ್ನೆ ಮೊನ್ನೆ ಆದ ಬೆಳವಣಿಗೆ. ನೋಡೋಣ ಮಾತು ಬಂದರೆ ವಿಚಾರ ಮಾಡೋಣ ಎಂದು ಕೂಡ ಯೋಚಿಸಿದ್ದ. ಹೀಗಾಗಿ ಮನೆ ಬಾಗಿಲಿಗೆ ಬಂದ ಸಿಮೋನ, ಬೋನರನ್ನು ಸ್ವಾಗತಿಸಿದ್ದ. +“ನಾನು ಬೋನ ಸಾಹುಕಾರರು ಬಂದಿರೋದು ಅದಕ್ಕೇನೆ. ನಮ್ಮ ಸಂಪ್ರದಾಯದ ಪ್ರಕಾರ ಗಂಡಿನವರೇ ಹೆಣ್ಣನ್ನು ಕೇಳಿಕೊಂಡು ಬರಬೇಕಲ್ಲ..ನೀವೂ ಹುಡುಗನ್ನ ನೋಡಿದೀರಾ..ನಾವೂ ಹುಡುಗೀನ ನೋಡಿದ್ದೀವಿ..ಹುಡುಗ ಹುಡುಗಿ ಇಬ್ಬರೂ ಪರಸ್ಪರ ಪರಿಚಯ ಇರುವವರೆ..ಬೋನ ಸಾಹುಕಾರರ ಮಗ ಫ಼ಿಲಿಪ್ಪನ ಬಗ್ಗೆ ನೀವು ವಿಚಾರ ಮಾಡಬಹುದು..ಯೋಚಿಸಿ ನಿಧಾನ ಹೇಳಿ..” ಎಂದು ಸಿಮೋನ ಸವಿಸ್ತಾರವಾಗಿಯೇ ಹೇಳಿ ಇನ್ನು ಕೆಲಸವಾಯಿತು ಎಂಬಂತೆ ಎದ್ದ. ಅವನ ಹಿಂದೆ ಬೋನ ಕೂಡ. +“ಆಯ್ತು ನಾವೂ ಕೇಳಬೇಕು..ನಮ್ಮ ನೆಂಟರು ಇಷ್ಟರು ಅಂತ ಇದಾರೆ ಅವರಿಗೆ ತಿಳಿಸಬೇಕು..” ಎಂದು ಪಿಂಟೋ ನುಡಿದು ಕೊನೆಗೆ +“..ನಮ್ಮಿಬ್ಬರದ್ದು ಒಂದೇ ಡಯಾಸಿಸ್ ಅಲ್ವೆ..ದಿನ ಬೆಳಗಾದರೆ ನಿಮ್ಮ ಮುಖ ನಾವು ನಮ್ಮ ಮುಖ ನೀವು ನೋಡತಿರತೀವಿ..ಹೇಳತೀನಿ..” ಎಂದ. ಬಾಗಿಲವರೆಗೂ ಬಂದು ಇವರನ್ನು ಬೀಳ್ಕೊಡುವಾಗ ಪಾಮೊರಿನ ಕಾಣಿಸಿಕೊಂಡಿತು. ಹಿಂದೆಯೇ ಮಗ್ಗಿಬಾಯಿ. +* +* +* +ಇಗರ್ಜಿಯಲ್ಲಿ ದಿವ್ಯಪ್ರಸಾದದ ಆಶೀರ್ವಾದ ಮುಗಿಸಿಕೊಂಡು ಮನೆಗೆ ಬರುವಾಗ ಹಿಂದೆಯೇ ಜಾನ್ ಡಯಾಸ್ ನ ಹೆಂಡತಿ ಸಿಸಿಲ ತನ್ನ ಹೆಂಡತಿ ಮಗ್ಗಿಬಾಯಿಯ ಜತೆ ಬರುತ್ತಿರುವುದನ್ನು ಪಿಂಟೋ ಕಂಡ. ಅಷ್ಟು ದೂರ ಒಬ್ಬರ ಕಿವಿ ಒಬ್ಬರು ಕಚ್ಚುತ್ತ, ಮಗ್ಗಿಬಾಯಿಯ ಮುಖದ ಮೇಲೆ ಹತ್ತು ಗಂಟುಗಳು ಬಿದ್ದಿರಲು, ಸಿಸಿಲ ಉತ್ಸುಕತೆಯಿಂದ ಏನನ್ನೋ ಹೇಳುತ್ತಿರಲು, ಪಿಂಟೋ ತನ್ನ ಪಾಡಿಗೆ ನಡೆದುಕೊಂಡು ಮನೆಗೆ ಬಂದ. ಹಿಂದಿನಿಂದ ಬಂದ ಮಗ್ಗಿಬಾಯಿ ಕಾಲಿಗೆ ತೊಡರಿಕೊಳ್ಳುತ್ತಿದ್ದ ಪಾಮೊರಿನ್ ಅನ್ನು ಅತ್ತ ತಳ್ಳಿ ತನ್ನ ಕೋಣೆಗೆ ಹೋಗಿ ಬಾಗಿಲ ಹಾಕಿಕೊಂಡಾಗ ಪಿಂಟೋ ತೀರ್ಥದ ಬಟ್ಟಲಿಗೆ ಕೈ ಹಾಕಿದಾಗ ಬಟ್ಟಲು ಗೂಡಿನಲ್ಲಿದ್ದ ಚೇಳು ಕೈಗೆ ಕಟುಕಿದಂತಾಗಿ ಗಾಬರಿಗೊಂಡು ಹೆಂಡತಿಯ ಕೋಣೆ ಹೊಕ್ಕ. +“..ಮಗ್ಗಿ, ಸಿಸಿಲ ಏನಂತೆ?” ಎಂದು ಆತಂಕದಿಂದಲೇ ಕೇಳಿದ. +“ನೀವು ಸಿಮೋನನಿಗೆ ಒಪ್ಪಿಗೆ ಕೊಡಬಾರದಿತ್ತು.” +“ಅಲ್ಲ ನಾನೆಲ್ಲಿ ಒಪ್ಪಿಗೆ ಕೊಟ್ಟಿದ್ದೀನಿ ನೊಡೋಣ ಅಂದೆ. ನಿನ್ನ ಅಣ್ಣ ತಮ್ಮಂದಿರಿಗೆ ಹೇಳದೆ ಕೇಳದೆ ನಾನು ಒಪ್ಪಿಗೆ ಕೊಡೋದುಂಟ.” +“ಆದರೂ ನೀವು ಅವರನ್ನ ಇಲ್ಲಿಗೆ ಕರೀಬಾರದಿತ್ತು..ಇಗರ್ಜಿ ಹತ್ತಿರಾನೆ ಏನಾದರೂ ಹೇಳಿ ಕಳುಹಿಸಬೇಕಿತ್ತು.” +“ಅರೇ ಜೀಸಸ್ ! ಏನಾಯಿತು ಈಗ?” ಪಿಂಟೋ ಮತ್ತೂ ಗಾಬರಿಗೊಂಡ. +“ಹುಡುಗ ಹೆಚ್ಚು ಓದಿಲ್ಲ” +“ಹೌದು..ಮೆಟ್ರಿಕ್ ಆಗಿದೆ” +“ಮನೆ ಕಡೆ ಅನುಕೂಲವಾಗಿಲ್ಲ” +“ಆದರೂ ಒಂದು ಮನೆ ಇದೆ..ಜವಳಿ ಅಂಗಡಿ ಇದೆ..ಐವತ್ತು ಅರವತ್ತು ಲಕ್ಷದ ಆಸ್ತಿ..ನನ್ನ ಅಂಗಡಿಗಿಂತ ದೊಡ್ಡದು..” +“ಆದರೂ ನಾವು ಈ ಊರಿಗೆ ಹೊಸಬರು..ಹೆಚ್ಚು ವಿಚಾರ ಮಾಡಬೇಕು..” +“ಅದು ನಿಜ. ಏನಂತೆ ಈಗ?” +“ಹುಡುಗನ ತಂದೆ ಕನವರ್ಟ್ ಆದವನಂತೆ..” +“ಅರೇ! ಜೀಸಸ್. ನಾವೆಲ್ಲ ಕನವರ್ಟ್ ಆದವರೇ ಅಲ್ವ..ಜೀಸಸ್ ಕ್ರೈಸ್ತ ಕೂಡ ಯಹೂದಿ.” +“ಅದಲ್ಲ ನಾನು ಹೇಳಿದ್ದು..ಹುಡುಗನ ತಂದೆ ನೇಂದರ್..ತಾಯಿ ಚಾರ್‍ಡಿ” +“ಓ!” +ಈ ಬಾರಿ ಗಂಟೆ ಹೊಡೆಯುತ್ತಿರುವಾಗ ಗಂಟೆಯ ನಾಲಿಗೆ ಒಂದು ನೆತ್ತಿಗೆ ಅಪ್ಪಳಿಸಿದಂತಾಗಿ ಪಿಂಟೋ ಕುಸಿದ. ಸುಧಾರಿಸಿಕೊಳ್ಳಲು ಅವನಿಗೆ ಐದಾರು ನಿಮಿಷಗಳು ಬೇಕಾದವು. +ಬೋನ ಬಾಮಣ ಮೂಲದವನಲ್ಲ ಎಂಬುದು ಗೊತ್ತಿತ್ತು. ಆತ ಚಾರಡಿ, ಗೌಡಿ ಆಗಿರಬಹುದು ಎಂದು ಆತ ತಿಳಿದುಕೊಂಡಿದ್ದ. ಆದರೆ ಆತ ನೇಂದರ ಮೂಲದವನು ಎಂಬುದು ತಿಳಿದಾಗ ಮನಸ್ಸಿಗೆ ಕಸಿವಿಸಿಯಾಯಿತು. ಸದ್ಯ ಇದು ಬೇಗನೆ ತಿಳಿಯಿತಲ್ಲ ಎಂದು ಆತ ಬಿಡುಗಡೆಯ ಉಸಿರು ಬಿಟ್ಟ. +* +* +* +ಸಾಂತಾ ಮೊರಿಯ ಮಗಳು ನಾತೇಲ ಊರು ಊರು ತಿರುಗಿ ಬೆಳಗಾಂನ ರುಕ್ಮಿಣಿ ತಾಯಿಯ ಅಬಲಾಶ್ರಮ ಸೇರಿದರೂ ಅವಳಿಂದ ಮಾತೆ ಮೇರಿಯನ್ನು ಏಸು ಪ್ರಭುವನ್ನು ಮರೆಯಲಾಗಲಿಲ್ಲ. ಟಿಳಕವಾಡಿಯ ಇಗರ್ಜಿಯ ಗಂಟೆ ಅವಳನ್ನು ಪ್ರಾರ್ಥನೆಗೆ ಪೂಜೆಗೆ ಕರೆಯಿತು. ತಾನು ಮೋಹ ಪಾಪಕ್ಕೆ ಗುರಿಯಾಗಿ ಮಾಡಬಾರದ ಅಪರಾಧವನ್ನು ಮಾಡಿದ್ದೇನೆ ಎಂಬ ಕೊರಗು ಅವಳನ್ನು ಕಾಡುತ್ತಲೇ ಇತ್ತು. ಧಾಜಣ ನೀಡೂವ ಶಿಕ್ಷೆಯಿಂದ ತಾನು ತಪ್ಪಿಸಿಕೊಂಡು ಬಂದಿದ್ದರೂ, ತಪ್ಪು ತಪ್ಪೇ ಅಲ್ಲವೇ ಎಂದವಳು ವಿಚಾರ ಮಾಡಿದಳು. ಈ ಕಾರಣದಿಂದಲೇ ಅವಳು ಟಿಳಕವಾಡಿಯ ಇಗರ್ಜಿಗೆ ಹೋಗಿ ಪಾಪ ನಿವೇದನೆ ಮಾಡಿಕೊಂಡಿದ್ದಳು. ತಾನು ಮಾಡಿದ ತಪ್ಪಿಗಾಗಿ ತಾನು ಪಶ್ಚಾತ್ತಾಪ ಪಡುತ್ತೇನೆ ಎಂದಳು. ತನ್ನ ಬಸಿರಲ್ಲಿ ಬೆಳೆಯುತ್ತಿರುವ ಮಗುವನ್ನು ಸಾಯಿಸಲು ತಾನು ತನ್ನ ತಾಯಿ ಪ್ರಯತ್ನಿಸಿದ್ದನ್ನು ಹೇಳಿದಳು. ವೈಜಿಣ್ ಕತ್ರೀನ ಇಂತಹ ಪಾಪಕಾರ್ಯವನ್ನು ತಾನು ಮಾಡುವುದಿಲ್ಲ ಎಂದಾಗ ನಾತೇಲ ಈ ಬಗ್ಗೆ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದಳು. ಯಾರದ್ದೋ ಮಗುವನ್ನು ಕೊಲ್ಲುವುದು ಅವಳಿಗೆ ಪಾಪ ಎಂದೆನಿಸಿದರೆ ತನ್ನದೇ ಮಗುವನ್ನು ಕೊಲ್ಲಲು ತಾನೇಕೇ ಮುಂದಾಗಬೇಕು ಎಂಬ ವಿಚಾರ ಮನಸ್ಸಿನಲ್ಲಿ ಬಂದು ಈ ಮಗುವಿಗಾಗಿ ತಾನು ಬದುಕಬೇಕು ಎಂದು ಧಾಜಣರ ಶಿಕ್ಷೆಯಿಂದ ತಪ್ಪಿಸಿಕೊಂಡು ಬಂದೆ ಎಂದು ಪಾದರಿಗಳ ಬಳಿ ವಿವರವಾಗಿ ಹೇಳಿಕೊಂಡಳು. +“ನಿನಗೆ ನಿನ್ನ ತಪ್ಪುಗಳ ಬಗ್ಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದ್ದರೆ ನಾನು ದೇವರ ಹೆಸರಿನಲ್ಲಿ ನಿನ್ನನ್ನು ಕ್ಷಮಿಸುತ್ತೇನೆ. ನಿನ್ನ ಮಗುವನ್ನು ನೀನು ಕಾಪಾಡಿಕೊಂಡು ಆ ಮಗುವಿಗೆ ಕ್ರೈಸ್ತ ಶಿಕ್ಷಣ ನೀಡು, ನೀನು ಮತ್ತೆ ದಾರಿ ತಪ್ಪಬೇಡ..” ಎಂದರು ಟಿಳಕವಾಡದ ಪಾದರಿ. +ನಾತೇಲ ಅಂತೆಯೇ ನಡೆದುಕೊಂಡಳು ಕೂಡ. ಹೆರಿಗೆಯಾದ ಮೇಲೆ ಮಗುವಿಗೆ ಡೇನಿಯಲ್ ಎಂದು ಹೆಸರಿಟ್ಟಳು. ಆಶ್ರಮದಲ್ಲಿ ಜಪ ಪ್ರಾರ್ಥನೆ ಸಲ್ಲಿಸಲು ಅವಕಾಶವಿತ್ತು. ಇಗರ್ಜಿಗೆ ಹೋಗಿ ಬರಲು ಅನುಮತಿ ಇತ್ತು. ನಾತೇಲ ಊರು ಬಿಟ್ಟರೂ ದೇವರನ್ನು ಬಿಡಲಿಲ್ಲ. +ನಂತರ ಕುರ್ಡೇಕರ ಮನೆಯನ್ನು ಸೇರಿದ ಮೇಲೂ ಅವಳು ದೇವರನ್ನು ದೂರಮಾಡಲಿಲ್ಲ. ಮಾಡಬೇಕು ಎಂದು ಅವಳಿಗೆ ಅನಿಸಲಿಲ್ಲ. +ಮಗನಿಗೆ ಎಲ್ಲವನ್ನೂ ಹೇಳಿಕೊಟ್ಟಳು. +ಶಿಲುಬೆಯ ಗುರುತು, ಪರಲೋಕ ಮಂತ್ರ, ನಮೋ ರಾಣೆ ಮಂತ್ರ, ದೇವರ ದಶ ಕಟ್ಟಲೆಗಳು, ಸಂಸ್ಕಾರಗಳು, ಇಗರ್ಜಿ ಮಾತೆಯ ಕಟ್ಟಲೆಗಳು ಹೀಗೆ ಶುದ್ಧ ಕ್ರಿಸ್ತುವನಾಗಿಯೇ ಮಗ ಬೆಳೆದ. ಹತ್ತು ಹನ್ನೆರಡನೇ ವಯಸ್ಸಿಗೆ ದಿವ್ಯ ಪ್ರಸಾದ ಕೊಡಿಸಿದಳು. ನಿತ್ಯಮನೆಯಲ್ಲಿ ಪ್ರಾರ್ಥನೆ ತೇರ್ಸ ತಪ್ಪಿಸಲಿಲ್ಲ. ಭಾನುವಾರದಂದು ಪೂಜೆಗೆ ತಾಯಿ ಮಗ ಹೋಗಿ ಬರುತ್ತಿದ್ದರು. +ಕುರ್ಡೇಕರ ಮನೆಯವರು ಇವಳ ಧಾರ್ಮಿಕ ಚಟುವಟಿಕೆಗಳಿಗೆ ಏನೂ ತೊಂದರೆ ಮಾಡಲಿಲ್ಲ. +ತನ್ನ ಊರು ಮನೆಯಿಂದ ದೂರವಿದ್ದರೂ ದೇವರು ದೇವಮಾತೆ ತನ್ನ ಬಳಿ ಇದ್ದಾರೆ ಎಂಬ ನಂಬಿಕೆ ಅವಳಿಗಿತ್ತು. ಜನ ಅವಳ ಕುಟುಂಬದ ಬಗ್ಗೆ ಕೇಳುತ್ತಿದ್ದರು. ಡೇನಿಯಲ್ ತಂದೆ ಎಲ್ಲಿದ್ದಾನೆ? ಬೇರೆ ಸಂಬಂದಿಕರು, ತಂದೆ ತಾಯಿ ಇತರೆ ಆಪ್ತರು ನಿನಗಿಲ್ಲವೆ ಎಂದು ವಿಚಾರಿಸುತ್ತಿದ್ದರು. +“ಎಲ್ಲ ಇದ್ದಾರೆ..ಕೊಂಚ ದೂರ” ಎಂದು ಉತ್ತರಿಸುತ್ತಿದ್ದಳು ನಾತೇಲ. +ಆ ದೊಡ್ಡ ನಗರದ ಜನ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಷ್ಟೊಂದು ಬಿಡುವು ಕೂಡ ಇರುತ್ತಿರಲಿಲ್ಲ. +ನಾತೇಲಳಿಗೆ ಒಂದು ಆಸೆ ಇತ್ತು. ತಾನು ತನ್ನ ಮಗ ಊರಿಗೆ ಹೋಗಬೇಕು. ತಾಯಿ ಅಣ್ಣಂದಿರನ್ನು ನೋಡಬೇಕು. ಸಾಧ್ಯವಾದರೆ ಊರಲ್ಲಿಯೇ ಇರಬೇಕು ಎಂಬ ಆಸೆ. ಹಾಗೆಯೇ ಒಂದು ಅಳುಕು. ಜನ ತನ್ನನ್ನು ಸ್ವೀಕರಿಸಿಯಾರೆ? ಜೂಂತನ ತೀರ್ಮಾನವನ್ನು ಧಿಕ್ಕರಿಸಿ ಓಡಿ ಬಂದವಳು ತಾನು. ತನ್ನ ಬಗ್ಗೆ ಜನರ ಅಭಿಪ್ರಾಯ ಈಗ ಹೇಗಿರಬಹುದು? +ಅದನ್ನು ತಿಳಿಯಲೆಂದೆ ಅವಳು ಶಿವಸಾಗರಕ್ಕೆ ಬಂದಳು. ಅಣ್ಣಂದಿರು ಬಂದು ಕೂಗಾಡಿ ಹೋದರು. ತಾಯಿ ತನ್ನ ಪರವಾಗಿ ನಿಂತಳು. ಊರಿನಲ್ಲಿ ಇನ್ನೂ ಕೆಲವರು ವಿಚಿತ್ರವಾಗಿ ತನ್ನನ್ನು ನೋಡಿದರು. ತಾನು ನೇರವಾಗಿ ಇಗರ್ಜಿಗೂ ಹೋದೆ. ಪಾದರಿ ಸಿಕ್ವೇರಾ ಅವರನ್ನು ಕಂಡೆ. ಮಗನ ಪರಿಚಯ ಮಾಡಿಕೊಟ್ಟೆ. +“ಪದ್ರಾಬಾ..ನಾನು ಆವತ್ತು ಒಂದೇ ಒಂದು ತಪ್ಪು ಮಾಡಿದೆ…ಮತ್ತೆ ನಾನು ಯಾವುದೇ ಪಾಪ ಮಾಡಲಿಲ್ಲ..ನನಗೆ ಕ್ಷಮೆ ಇಲ್ಲವೇ?” ಎಂದು ನಾತೇಲ ಸಿಕ್ವೇರಾ ಅವರ ಎದುರು ಹೇಳಿದಾಗ ಅವರು ಕೂಡ ಇವಳ ಮಾತಿಗೆ ತಲೆ ದೂಗಿದಂತಿತ್ತು. +“ನಾತೇಲ..ಏಸು ಪ್ರಭು ಈ ಲೋಕಕ್ಕೆ ಬಂದದ್ದೇ ಪಾಪಿಗಳನ್ನು ಉದ್ಧರಿಸಲು..ನಿನ್ನ ಬಗ್ಗೆ ತೀರ್ಪು ನೀಡುವ ಅಧಿಕಾರ ಯಾರಿಗೂ ಇಲ್ಲ..” ಎಂದರು. +ಸಿಮೋನ ಬೋನ, ಮತ್ತಿತರ ಹಿರಿಯರು ಕೂಡ ಇವಳ ನಿರ್ಧಾರದ ಬಗ್ಗೆ ಬೇರೆ ಮಾತುಗಳನ್ನು ಹೇಳಲಿಲ್ಲ. ಆರಂಭದಲ್ಲ್ಲಿ ಅಲ್ಲಿ ಇಲ್ಲಿ ಕೇಳಿ ಬಂದ ಮಾತುಗಳು, ವ್ಯಂಗ್ಯ ನುಡಿಗಳು ಕ್ರಮೇಣ ಅಲ್ಲಿಯೇ ಸತ್ತು ಹೋದವು. ಸಾಂತಾಮೊರಿಯ ಬಾಯಿಗೆ ಹೆದರಿ ಕೆಲವರು ತೆಪ್ಪಗಾದರು. +ಬೋನ ಡೇನಿಯಲ ಗೆ ಒಂದು ಕೆಲಸವನ್ನೂ ಕೊಡಿಸಿದ. ಶಿವಸಾಗರದ ಪುರಸಭೆಯಲ್ಲಿ ಗುಮಾಸ್ತನ ಕೆಲಸ. +“ಸದ್ಯಕ್ಕೆ ಇದು ತಾತ್ಕಾಲಿಕ ಹುದ್ದೆ..ನಾಳೆ ಖಾಯಂ ಆಗುತ್ತದೆ..ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗು” ಎಂದ. +ಡೇನಿಯಲ್ ಒಳ್ಳೆಯ ಹುಡುಗ. ಬುದ್ದಿವಂತ ಅವನು ಕೂಡ ಬಹಳ ಬೇಗನೆ ಪುರಸಭೆಯ ಕೆಲಸ ಕಾರ್ಯಗಳನ್ನು ಕಲಿತ. +ಸಾಂತಾ ಮೊರಿ ಮಗಳು ಮೊಮ್ಮಗನನ್ನು ಕರೆದುಕೊಂಡು ರೈಲಿನಲ್ಲಿ ದೋರ್ನಳ್ಳಿಗೆ ಹೋಗಿ ಬಂದಳು. ದೋರ್ನಳ್ಳಿಯ ಸಂತ ಅಂತೋನಿಯಲ್ಲಿ ಅವಳು ಬಹಳ ಬೇಗನೆ ಪುರಸಭೆಯ ಕೆಲಸ ಕಾರ್ಯಗಳನ್ನು ಕಲಿತ. +ಸಾಂತಾ ಮೊರಿ ಮಗಳು ಮೊಮ್ಮಗನನ್ನು ಕರೆದುಕೊಂಡು ರೈಲಿನಲ್ಲಿ ದೋರ್ನಳ್ಳಿಗೆ ಹೋಗಿ ಬಂದಳು. ದೋರ್ನಳ್ಳಿಯ ಸಂತ ಅಂತೋನಿಯಲ್ಲಿ ಅವಳು ಬಹಳ ಹಿಂದೆ ಹೇಳಿಕೊಂಡ ಒಂದು ಹರಕೆ ಈಗ ಈಡೇರಿತ್ತು. ಮಗಳು ಸುರಕ್ಷಿತವಾಗಿ ತಿರುಗಿ ಬಂದರೆ ನಿನ್ನ ಪಾದಕ್ಕೆ ಬಂದು ಬೆಳ್ಳಿಯ ಕಿರೀಟವನ್ನು ನಿನಗೆ ತೊಡಿಸುತ್ತೇನೆ ಎಂದು ಅವಳು ಹೇಳಿಕೊಂಡಿದ್ದಳು. ಅವಳ ಬೇಡಿಕೆಯನ್ನು ಸಂತ ಅಂತೋನಿ ಈಡೇರಿಸಿ ಕೊಟ್ಟಿದ್ದ. ಮಗಳ ಸಂಗಡ ಮೊಮ್ಮಗನೂ ಬಂದಿದ್ದ. +ಇಗರ್ಜಿ ಪಕ್ಕದ ಸಾಲು ಮನೆಗಳಲ್ಲಿ ಐದನೆಯದಾದ ಸಾಂತಾ ಮೊರಿ ಮನೆಯಲ್ಲಿ ಮತ್ತೆ ಎಂದಿನಂತೆ ತೇರ್ಸ ಕೀರ್ತನೆಗಳು ಕೇಳಿ ಬರತೊಡಗಿದವು. ಅಲ್ಲಿ ಸಂತಸ ಕಂಡು ಬಂದಿತು. +-೧೨- +ಬೆಳಿಗ್ಗೆ ಎದ್ದ ಕೂಡಲೆ ನೊರೆ ನೊರೆ ಸೋಪು ಹಚ್ಚಿಕೊಂಡು ಮೂರು ನಾಲ್ಕು ಬಾರಿ ಕೆನ್ನೆ ಗದ್ದದ ಮೇಲೆ ಕೈಯಾಡಿಸಿಕೊಂಡು ನುಣ್ಣಗೆ ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದ ಪಾದರಿ ಸಿಕ್ವೇರಾ ಅವರ ಮುಖದ ಮೇಲೆ ನಾಲ್ಕೈದು ದಿನಗಳ ಕಳೆ ಎದ್ದು ಕಂಡಿತು. ಕೈಯಲ್ಲಿ ಕ್ಯಾಮರಾ ಹಿಡಿದು ಯಾರ ಮನೆಯಲ್ಲಿ ಬೇಲಿಯಲ್ಲಿ ಹೂವು ಅರಳಿದೆ, ಎಲ್ಲಿ ಬಣ್ಣದ ಹಕ್ಕಿ ಕೂತಿದೆ. ಯಾರ ಮಗು ಮುದ್ದಾಗಿದೆ ಎಂಬುದನ್ನು ಹುಡುಕಿಕೊಂಡು ಹೋಗುತ್ತಿದ್ದ ಸಿಕ್ವೇರಾ ಕ್ಯಾಮೆರಾವನ್ನು ತೆಗೆದು ಒಳಗೆ ಇರಿಸಿದರು. ಊರ ಕ್ರೈಸ್ತ ಹುಡುಗಿಯರನ್ನು ಕೂಡಿಸಿಕೊಂಡು ಕಣಿವೆ, ಕಾಡು, ಜಲಪಾತ ಎಂದು ಸುತ್ತುತ್ತಿದ್ದ ಅವರ ಚಟುವಟಿಕೆ ನಿಂತು ಹೋಗಿ ಅವರ ಕಾರು, ಬಂಗಲೆ ಹಿಂಬದಿಯ ಕಟ್ಟಿಗೆ ಶೆಡ್ಡಿನೊಳಗೆ ಮುಸುಕು ಧರಿಸಿ ನಿಂತು ಬಿಟ್ಟಿತು. ಸದಾ ಸಂಜೆ ಫ಼ಾತಿಮಾ ನಗರಕ್ಕೆ ಧಾವಿಸಿ ಅಲ್ಲಿ ಮನೆ ಮನೆಗಳ ಎದುರು ನಿಂತು- +“ಆಂಟಿ..ಕಸಿ ಭಲಾಯ್ಕಿ?” +“ಅಂಕಲ..ಖೊಂಕ್ಲಿ ಉಣೆಂ ಜಾವೂಂನಾಗಿಂ?” +(ಆಂಟಿ ಆರೋಗ್ಯ ಹೇಗಿದೆ? ಅಂಕಲ ಕೆಮ್ಮು ಕಡಿಮೆಯಾಗಲೇ ಇಲ್ಲವೇ?) ಎಂದು ವಿಚಾರಿಸಿಕೊಳ್ಳಲು ಕಾರಣವಾಗಿದ್ದ ಮೋಟಾರಬೈಕ್ ಕೂಡ ಹೊರಬರಲಿಲ್ಲ. +ಏನೇನೋ ನೆಪ ಮಾಡಿಕೊಂಡು ಬಂದ ಹುಡುಗಿಯರೂ ಪಾದರಿ ಸಿಕ್ವೇರರ ಮೂಡ್ ನೋಡಿ ತಿರುಗಿ ಹೋದರು. +ಅಡಿಗೆ ಹುಡೂಗ ಬೇಯಿಸಿ ಇಟ್ಟುದನ್ನು ಯಾಂತ್ರಿಕವಾಗಿ ಉಂಡು ಎದ್ದರು. ಇಷ್ಟೇ ಯಾಂತ್ರಿಕವಾಗಿ ಪೂಜೆ ಮಾಡಿದರು. ಪ್ರಸಾದ ನೀಡಿದರು. ಇಗರ್ಜಿಯ ಗಂಟೆಯ ಸದ್ದು ಕೇಳಿದ್ದೆ ಕೈಗಳು ಶಿಲುಬೆಯ ಗುರುತು ಮಾಡಿದವು. ತುಟಿಗಳ ಮೇಲೆ ಜಪವೋ ಪ್ರಾರ್ಥನೆಯೋ ಬಂದು ಹೋಯಿತು. +ಪಾದರಿ ಸಿಕ್ವೇರಾ ಬದಲಾಗಿದ್ದರು. ಇತ್ತೀಚಿನ ಕೆಲ ದಿನಗಳಿಂದ ಬಲೆಯೊಳಗೆ ಸಿಕ್ಕಿ ಬಿದ್ದ ಮೊಲದ ಹಾಗೆ ಅವರ ಸ್ಥಿತಿಯಾಗಿತ್ತು. ಈ ಕಡೆಯಿಂದ ಬಿಡಿಸಿಕೊಂಡೆ ಅನ್ನುವಾಗ ಬಲೆ ಬೇರೊಂದು ಕಡೆಯಿಂದ ಸುತ್ತಿಕೊಳ್ಳುತ್ತಿತ್ತು. ಈ ಕಾಲನ್ನು ತೆಗೆದಾಗ ಬೇರೊಂದು ಕಾಲು ಕುಣಿಕೆಯಲ್ಲಿ ಸಿಕ್ಕಿ ಬೀಳುತ್ತಲಿತ್ತು. +ಶಿವಸಾಗರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇಗರ್ಜಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಭಾನುವಾರದ ವಿಶೇಷ ಪೂಜೆಗಂತೂ ಇಗರ್ಜಿ ಸಣ್ಣದಾಯಿತೇನೋ ಅನ್ನುವ ಹಾಗೆ ಜನ ಸೇರುತ್ತಿದ್ದರು. ದಿವ್ಯ ಪ್ರಸಾದ ನೀಡುವುದು ತಮ್ಮೊಬ್ಬರಿಂದ ಆಗದೆ ಕಾನ್ವೆಂಟಿನ ಸಿಸ್ಟರುಗಳು ಕೂಡ ಇದಕ್ಕೆ ನೆರವಾಗುತ್ತಿದ್ದರು. ಪೂಜೆಗೆ ಬಂದ ಪ್ರತಿಯೊಬ್ಬರೂ ದಿವ್ಯಪ್ರಸಾದವನ್ನು ಸ್ವೀಕರಿಸುವುದರಿಂದ ದಿವ್ಯಪ್ರಸಾದವಾಗಿ ಪರಿವರ್ತಿಸುವ “ವಸ್ತು” ವನ್ನು ಗೋಧಿ ಹಿಟ್ಟಿನಿಂದ ತಯಾರಿಸುವುದೇ ವಾರದಲ್ಲಿ ಎರಡು ಮೂರು ದಿನಗಳ ಕೆಲಸವಾಗುತ್ತಿತ್ತು. ಜನ ಇಗರ್ಜಿಗೆ ನೀಡಬೇಕಾದ ಅನ್ವಾಲ ಕಾಯಿದೆಯನ್ನು ತಪ್ಪದೆ ನೀಡುತ್ತಿದ್ದರು. ಹಬ್ಬದ ವಂತಿಗೆ ಇತರೆ ವಂತಿಗೆಗಳು ಸಂದಾಯವಾಗುತ್ತಿದ್ದವು. ಸತ್ತವರಿಗೆ ಕೊಡುವ ಪೂಜೆಗಳು, ಹರಕೆ ಹೇಳಿಕೊಂಡು ಮಾಡಿಸುವ ಪೂಜೆಗಳು. ಕಾಣಿಕೆ ಡಬ್ಬಿಗೆ ಬೀಳುವ ಹಣ, ಸಂತ ಜೋಸೆಫ಼ರ ಮಂಟಪಕ್ಕೆ ಅರ್ಪಿಸುವ ಮೇಣದಬತ್ತಿ ಯಾವುದಕ್ಕೂ ಕಡಿಮೆಯಾಗಿರಲಿಲ್ಲ. ಜನರಲ್ಲಿ ದೈವ ಭಕ್ತಿ, ದೈವಭೀತಿ ಅಧಿಕವಾಗಿದೆ. ಕ್ರಿಸ್ತುವರ ಯೆಲ್ಲ ಮನೆಗಳಲ್ಲಿ ತೇರ್ಸ, ಜಪ, ನಡಿಯುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಅನುಷ್ಟಾನದಲ್ಲಿ ಜನ ಮುಂದಿದ್ದಾರೆ. +ಆದರೆ ಎಲ್ಲೋ ಒಂದು ಕಡೆ ಸೈತಾನ ತನ್ನ ಕೈಚಳಕವನ್ನು ತೋರಿಸುತ್ತಿದ್ದಾನೆ ಅನ್ನಿಸುತ್ತದೆ. ಇಗರ್ಜಿಯಲ್ಲಿ ಒಂದಾಗಿ ನೆರೆಯುವ ಜನ ಗಂಟೆ ಗೊಪುರದ ಕೆಳಗೆ, ಸಂತ ಜೋಸೆಫ಼ರ ಮಂಟಪದ ಬಳಿ ಇಗರ್ಜಿಯ ಮುಂದಿನ ವೆರಾಂಡದಲ್ಲಿ, ರಸ್ತೆಯ ಮೇಲೆ ಗುಂಪಾಗಿ ನಿಂತು ಏನೋ ಪಿಸುಗುಡುತ್ತಾರೆ. ದೂರದಿಂದ ಅವರ ಮುಖಗಳ ಮೇಲೆ ಸಿಟ್ಟು, ಕೋಪ, ಅನುಮಾನದ ಗೆರೆಗಳು ಮೂಡಿ ಮಾಯವಾಗುವುದು ಕಾಣುತ್ತದೆ. +ಬಹಳ ಮುಖ್ಯವಾಗಿ ತರುಣರ ವರ್ತನೆ ಸಹಜವಾಗಿಲ್ಲ. ಮುದುಕರು , ವಯಸ್ಸಾದವರು, ಹೆಂಗಸರು ಇಗರ್ಜಿಗೆ ಬರುತ್ತಾರೆ. ಪಾಪ ನಿವೇದನೆಯಲ್ಲಿ ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳುತ್ತಾರೆ. ಪೂಜೆ ಆಲಿಸಿ , ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಆದರೆ ಯುವಕರು ತೆರೆದ ಮನಸ್ಸಿನೊಡನೆ ಬರುವುದಿಲ್ಲ. ” ಹೃದಯ ಬಿಚ್ಚಿ ಮಾತನಾಡಿ. ಮನಸ್ಸಿನಲ್ಲಿ ಯಾವುದೇ ಅಪರಾಧವನ್ನು ಇರಿಸಿಕೊಳ್ಳಬೇಡಿ ಎಂದು ಪಾಪ ನಿವೇದನೆಗೆ ಕುಳಿತು ತಾನು ಅವರ ಕಿವಿಯಲ್ಲಿ ಪಿಸುಗುಟ್ಟಿದರು- ಸಂಜೆ ಪ್ರಾರ್ಥನೆ ಮಾಡಲಿಲ್ಲ. ಶುಕ್ರವಾರ ಮಾಂಸ ತಿಂದೆ. ತಂದೆ ತಾಯಿಗೆ ಅವಮಾನ ಪಡಿಸಿದೆ, ಕಳ್ಳತನ ಮಾಡಿದೆ. ಸುಳ್ಳು ಹೇಳಿದೆ ಎಂದು – ಮಾಡಿರಬಹುದಾದ ಕೆಲವು ಅಪರಾಧಗಳನ್ನು ಹೇಳುತ್ತಾರಲ್ಲದೆ ಏನೋ ಮುಚ್ಚಿ ಇರಿಸಿಕೊಂಡೆ ಹೋಗುತ್ತಾರೆ. ಪಾಪಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಏಸುವಿನ ರಕ್ತ ಮಾಂಸವೇ ಆದ ದಿವ್ಯ ಪ್ರಸಾದವನ್ನು ಸ್ವೀಕರಿಸಬಾರದು. ಹೀಗೆ ಸ್ವೀಕರಿಸಿದರೆ ಇದು ಮಹಾಪಾಪ, ದಿವ್ಯಪ್ರಸಾದ ಕೂಡಲೇ ಕರಗಿ ಹೋಗುವುದಿಲ್ಲ ಎಂಬ ನಂಬಿಕೆಯಿದ್ದರೂ ಯುವಕರು ಯುವತಿಯರು ಹೀಗೆ ವರ್ತಿಸುತ್ತಾರೆ. +ಮತ್ತೂ ಹೇಳಬೇಕೆಂದರೆ ಶಿವಸಾಗರದ ಎಲ್ಲ ಜನ, ಹಿರಿಯರು, ತನ್ನ ಬಗ್ಗೆ, ಇಗರ್ಜಿ, ಧರ್ಮದ ವಿಷಯದಲ್ಲಿ ವಿಧೇಯರು, ತಗ್ಗಿ ಬಗ್ಗಿ ನಡಿಯುವವರು ಆಗಿರುವಾಗ ಶಿವಸಾಗರದ ಕೆಲ ಕ್ರೈಸ್ತ ತರುಣರು ವಿರೋಧಿಗಳಾಗಿ ನಿಂತಿರುವುದು ತನ್ನ ತಳಮಳಕ್ಕೆ ಅಶಾಂತಿಗೆ ಕಾರಣವಾಗಿದೆ. ತನ್ನ ಮಾತಿಗೆ ನೂರು ಜನ ತಲೆ ಬಾಗುವುದು ತನಗೆ ಸಹಜವಾಗಿ ಕಾಣುತ್ತದೆ ಆದರೆ ಈ ನೂರು ಜನರ ಎದುರು ಓರ್ವ ತನ್ನನ್ನು ಹಿಯಾಳಿಸಿದಾಗ, ಛೇಡಿಸಿದಾಗ, ತಾನು ಮಾಡುತ್ತಿರುವುದೆಲ್ಲ ತಪ್ಪು, ಬೂಟಾಟಿಕೆ ಎಂದಾಗ ಆ ನೂರು ಜನ ತನ್ನ ಕಡೆ ಇದ್ದು ಈ ಓರ್ವನ ವರ್ತನೆ ನೋವುಂಟುಮಾಡುತ್ತದೆ. +ಈಗ ಹೀಗೆ ಆಗುತ್ತದೆ.. +ನಾತೇಲಳ ಮಗ ಡೆನಿಯಲ್.. +ಸಾನಬಾವಿ ಪೆದ್ರು ಮಗ ಗ್ರೆಗೊರಿ.. +ಬೋನ ಸಾಹುಕಾರರ ಮಗ ಫ಼ಿಲಿಪ್ಪ.. +ಹಸಿಮಡ್ಲು ಪತ್ರೋಲನ ಮಗ ಜೂಜೆ… +ಜೂಜೆಯ ಸಂಗಡ ಸದಾ ಇರುವ ಸಾಲ್ಲು, ಅತ್ತ ಪೆದ್ರು ಸಿಂಜಾಂವ, ಲಾದ್ರು ಮೊದಲಾದ ಯುವಕರು ತನ್ನೆದುರು ಈಗ ದೊಡ್ಡ ಸವಾಲಾಗಿ ನಿಂತಿದ್ದಾರೆ. +ಈ ತರುಣರಿಗೆ ಹಿರಿಯರ ಹೆದರಿಕೆ ಇಲ್ಲ. ದೇವರ ಭೀತಿ ಇಲ್ಲ. ಇಗರ್ಜಿ ಮಾತೆಯ ಬಗ್ಗೆ ಅಭಿಮಾನವಿಲ್ಲ. ತನ್ನ ಬಗ್ಗೆ ಗೌರವವಿಲ್ಲ.. +ಈ ಯುವಕರಿಗೆ ಕೆಣಕಲು ಏನಾದರೊಂದು ಸಮಸ್ಯೆ ಸಿಗುತ್ತದೆ. ಇದನ್ನೆ ಗುಡ್ಡ ಮಾಡಿಕೊಂಡು ಈ ಜನ ಬರುತ್ತಾರೆ. +ಇವರೆಲ್ಲ ವಿದ್ಯಾವಂತರು, ಹೈಸ್ಕೂಲಿನವರೆಗೆ ಓದಿದವರು. ಇದೊಂದು ಅಂಶ ಇವರನ್ನು ಹುರಿದುಂಬಿಸುತ್ತದೆ. ರಟ್ಟೆಯಲ್ಲಿ ಶಕ್ತಿಯಿದೆ. ಗಂಟಲಲ್ಲಿ ಅಬ್ಬರಿಸುವ ತ್ರಾಣವಿದೆ. +ಶಿವಸಾಗರದ ಬಹುತೇಕ ಕ್ರಿಸ್ತುವರನ್ನು ಎತ್ತಿ ಕಟ್ಟಲು ಇವರು ಹವಣಿಸುತ್ತಾರೆ. +ಗ್ರೆಗೊರಿಯ ಮೇಲೆ ತನಗೆ ಅನುಮಾನವಿತ್ತು. ಇವನ ತಂದೆ ಸಾನಬಾವಿ ಪೆದ್ರು ದೈವ ಭಕ್ತ. ಇವನ ತಾಯಿ ಕೂಡ. ಹಿಂದು ಜಾತಿಯಲ್ಲಿ ಹುಟ್ಟಿ ಕ್ರೈಸ್ತನನ್ನು ರಕ್ಷಕನೆಂದು ಆಯ್ಕೆ ಮಾಡಿಕೊಂಡಾಕೆ. ದೈವ ಭಕ್ತಿ ಎಂದರೇನು ಎಂಬುವುದನ್ನು ಇವಳಿಂದ ಕಲಿಯಬೇಕು. ಗಂಡ ಹೆಂಡತಿ ಒಂದು ಭಾನುವಾರ ಇಗರ್ಜಿಗೆ ಬಾರದೆ ಉಳಿದವರಲ್ಲ. ಪಾಪ ನಿವೇದನೆ, ಪ್ರಸಾದ ಸ್ವೀಕಾರದಲ್ಲಿ ಮುಂದು. ನಿತ್ಯ ಮನೆಯಲ್ಲಿ ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿ ಉರಿಯಲೇಬೇಕು. ಇವರ ಮಗ ಗ್ರೆಗೊರಿ ಏನೋ ಆಗಿಬಿಟ್ಟ. +ಮೊದಲು ಇವನು ಸರಿಯಾಗಿದ್ದ. ಬಿಡುವಾದಾಗಲೆಲ್ಲ ಇಗರ್ಜಿಯಲ್ಲಿ ತನ್ನ ಬಂಗಲೆಯಲ್ಲಿ ಬಿದ್ದಿರುತ್ತಿದ್ದ. +” …..ಫ಼ಾದರ್…ಫ಼ಾದರ್….” ಎಂದು ತನ್ನ ಸುತ್ತ ತಿರುಗುತ್ತಿದ್ದ. +ಪೀಠ ಬಾಲಕನಾಗಿ ಸೇವೆ ಮಾಡುತ್ತಿದ್ದ. ಜ್ಞಾನೋಪದೇಶದಲ್ಲಿ ಸದಾ ಮುಂದೆ. ಮಿರೋಣ್ ಡಯಾಸ್ ಹೊಸದಾಗಿ ಮಾಡಿರುವ ಚರ್ಚೆ ಕ್ವಾಯರ್ ನಲ್ಲಿ ಗೀತೆ ಕೀರ್ತನೆ ಕಲಿತು ಅದೆಷ್ಟು ಚೆನ್ನಾಗಿ ಹಾಡುತ್ತಿದ್ದನಲ್ಲ. ಇವನಿಗೆ ಏನಾಯಿತು? +ಪ್ರೌಢ ಶಾಲೆ ಮುಗಿಸಿದ್ದೇ- +“ಬ್ಲೆಸ್ ಮಿ ಫ಼ಾದರ್..” ಎಂದು ಕೈಮುಗಿಯುವುದರ ಬದಲು- +“ಗುಡ್ ಮಾರ್ನಿಂಗ್ ಫ಼ಾದರ್” ಅನ್ನತೊಡಗಿದ. +ಒಮ್ಮೆ ಅವನ ಮನೆಗೆ ಹೋದ ತಾನು ಅವನ ಮೇಜಿನ ಮೇಲೆ ರಾಶಿ ಹಾಕಿಕೊಂಡ ಪುಸ್ತಕವನ್ನು ನೋಡಿದೆ. ಶಿ ಶಿ ಶಿ ಪ್ರೊಟೆಸ್ಟೆಂಟರು. ಬೈಬಲ್ ಸೊಸೈಟಿಯವರು ಮುದ್ರಿಸಿದ ಬೈಬಲ್ ಗಳು, ಕರಪತ್ರ, ಪುಸ್ತಿಕೆಗಳು. ಯಾವುದರ ಮೇಲೂ ರೋಮನ್ ಕ್ಯಾತೋಲಿಕರು ಓದಬಹುದೆಂಬ ನಮ್ಮ ಬಿಶಪ್ ರ ಅನುಮತಿ ಮುದ್ರೆ ಇಲ್ಲ. ಜೊತೆಗೆ ಬೇರೆ ಬೇರೆ ಧರ್ಮಗಳಿಗೆ ಸಂಭಂದಪಟ್ಟ ಗ್ರಂಥಗಳು. +“….ಅಯ್ಯೋ ದೇವರೆ…” ಎಂದು ತಾನು ಗಾಬರಿಯಾದೆ. +ಗ್ರೆಗೊರಿ ಮತ್ತೆ ಸಿಕ್ಕಾಗ ಈ ವಿಷಯವನ್ನೇ ಪ್ರಸ್ತಾಪಿಸಿದೆ. “ಏಕೆ ಫ಼ಾದರ್ ಇವುಗಳನ್ನು ಓದಬಾರದೇ?” ಎಂದು ಕೇಳಿದ. +ಅದೇನು ಜಂಬವೆ? ಅಹಂಕಾರವೇ? ಇಲ್ಲ ಧಾರ್ಷ್ಟ್ಯವೆ? ಯಾರನ್ನು ಇಡೀ ಕ್ರೈಸ್ತ ಸಮುದಾಯ ಅಧ್ಯಾತ್ಮಿಕ ಗುರು ಎಂದು, ಆತ್ಮದ ತಂದೆಯೆಂದು ಗೌರವಿಸುತ್ತದೋ ಅಂತಹವರ ಮುಂದೆ ನಿಂತು ಕೇಳುವ ಪ್ರಶ್ನೆಯೇ ಇದು. +” ನೀನು ಯಾಕೆ ಓದಬೇಕು? ನಿನಗೆ ಏನು ಅರ್ಥವಾಗುತ್ತದೆ. ನಾವಿರುವುದು ಏಕೆ ಹಾಗಾದರೆ?” ಎಂದು ತುಸು ಸಿಟ್ಟಿನಿಂದಲೆ ಕೇಳಿದೆ. +” ಪ್ರೊಟೆಸ್ಟೆಂಟ ಧರ್ಮ ಹುಟ್ಟಲು ಇದೇ ಕಾರಣವಲ್ಲವೇ ಫ಼ಾದರ್?” ಎಂದು ನೇರವಾಗಿ ಹಳೆಯ ಪ್ರಕರಣವನ್ನೇ ಕೆದಕಿದ. ತಾನು ತನ್ನ ದನಿ ತಗ್ಗಿಸದೆ +” ಹಾಗಲ್ಲ ಗ್ರೆಗೊರಿ….ಒಂದೆ ವಾಕ್ಯಕ್ಕೆ ಹತ್ತು ಅರ್ಥಗಳಿರುತ್ತವೆ…ನೀನು ಸರಿಯಾದ ಅರ್ಥ ಗ್ರಹಿಸುತ್ತೀಯ ಅಂತ ಏನು ಆಧಾರ? ನೀನು ಎಲ್ಲವನ್ನು ತಪ್ಪಾಗಿ ಗ್ರಹಿಸಿದರೆ..ಧರ್ಮಕ್ಕೆ ತಪ್ಪು ವ್ಯಾಖ್ಯಾನ ಕೊಟ್ಟಂತೆ ಆಗುವುದಿಲ್ಲವೇ?” ಎಂದು ಕೇಳಿದೆ. +ಈ ಮಾತಿಗೆ ಗ್ರೆಗೊರಿ ಬಹಳ ತಿಳಿದುಕೊಂಡಿರುವ ತತ್ವಜ್ಞಾನಿಯಂತೆ ನಕ್ಕ. +” ಈಗ ನೀವು ನೀಡತಿರೋ ವ್ಯಾಖ್ಯಾನ ಎಲ್ಲಿ ಸರಿಯಾಗಿದೆ ಫ಼ಾದರ್?” ಎಂದು ಛೇಡಿಸುವ ದನಿಯಲ್ಲಿ ಕೇಳಿದ. +“ಅಂದರೆ ಏನು ನಿನ್ನ ಮಾತಿನ ಅರ್ಥ?” +ತಾನು ತುಸು ತಾಳ್ಮೆ ಕಳೆದುಕೊಂಡೆ +“ಜನರನ್ನು ಇಗರ್ಜಿ ಸಂಪ್ರದಾಯ, ಆಚರಣೆ, ಪೂಜೆ, ಪಾಪ ನಿವೇದನೆ, ದಿವ್ಯಪ್ರಸಾದ ಸ್ವೀಕಾರ ಮೊದಲಾದ ಸೂತ್ರಗಳಿಂದ ಕಟ್ಟಿಹಾಕುವ ಕೆಲಸವನ್ನು ನೀವು ಮಾಡೋತಿರೊದನ್ನ ಬಿಟ್ಟರೆ ಬೇರೆ ಏನು ಮಾಡುತ್ತೀರ ಫ಼ಾದರ್? ನಮ್ಮವರಲ್ಲೂ ಕಳ್ಳರು, ಸುಳ್ಳರು, ತಂದೆ-ತಾಯಿಯನ್ನ ಅವಮಾನ ಮಾಡುವವರು, ಭ್ರಷ್ಟರು, ವ್ಯಭಿಚಾರಿಗಳು ನಿತ್ಯ ಇಗರ್ಜಿಗೆ ಬರುತ್ತ….ದಿವ್ಯ ಪ್ರಸಾದ ಸ್ವೀಕರಿಸುತ್ತ ಇದ್ದರೆ..ಅಂದರೆ ಧರ್ಮ ಅವರ ಮೇಲೆ ಪರಿಣಾಮ ಮಾಡಿದೆ ಎಂದು ಹೇಗೆ ನಂಬುವುದು? ನಮ್ಮಲ್ಲಿ ಧರ್ಮ ಎನ್ನುವುದು ಹೊರಗಿನ ಆಚರಣೆ. ಒಂದು ಬೂಟಾಟಿಕೆ ಆಗಿದೆ ಅನ್ನುವುದನ್ನ ನೀವು ಯಾಕೆ ಒಪ್ಪಿಕೊಳ್ಳುವುದಿಲ್ಲ?” +ಆತ ಮತ್ತೆ ಏನೇನು ಹೇಳುತ್ತಿದ್ದನೋ ತಾನು ಆತನನ್ನು ತಡೆದೆ… +“…ಸಾಕು ಸಾಕು ಗ್ರೆಗೊರಿ..ಈ ವಯಸ್ಸಿನಲ್ಲಿ ನೀನು ಇಷ್ಟೆಲ್ಲ ಮಾತನಾಡಬಾರದು..” ಎಂದೆ. +“ನಾನು ಮಾತಾಡೋದಿಲ್ಲ ಫ಼ಾದರ್…ನನ್ನ ಮಾತಿಗೆ ನೀವು ಬೆಲೆ ಕೊಡುತ್ತೀರಾ ಅನ್ನುವ ನಂಬಿಕೆ ನನಗಿಲ್ಲ. ಕೊಡಬೇಕು ಅನ್ನುವುದನ್ನು ನಾನು ಬಯಸುವುದಿಲ್ಲ..ಆದರೆ ಯಾವ ಧರ್ಮದಲ್ಲಿ ನಾನು ಹುಟ್ಟಿದ್ದೇನೋ ಆ ಧರ್ಮದಲ್ಲಿ ನನಗೆ ವಿಶ್ವಾಸ ಕಳೆದುಹೋಗಿರುವುದಂತು ನಿಜ…” ಎಂದ ಗ್ರೆಗೊರಿ. ಆಗ ಮಾತ್ರ ತನ್ನ ಸಹನೆಯ ಹಗ್ಗ ಹರಿಯಿತು. +” ಗ್ರೆಗೊರಿ..ಇಗರ್ಜಿ ಮಾತೆಯ ಬಗ್ಗೆ ನೀನು ಹೀಗೆಲ್ಲ ಹಗುರವಾಗಿ ಮಾತನಾಡಬಾರದು..ನಿನಗೆ ಗೊತ್ತಿರಲಿಕ್ಕಿಲ್ಲ…ದೇವರ ಪ್ರತಿನಿಧಿಗಳಾದ ಪಾದರಿಗಳು ಆಶೀರ್ವಾದವನ್ನು ಕೊಡಬಲ್ಲರು ಶಾಪವನ್ನೂ ನೀಡಬಲ್ಲರು ..” ಎಂದು ಹೇಳುತ್ತಿರುವಾಗಲೆ ಗ್ರೆಗೊರಿ ಮರದ ಟೊಂಗೆಯ ಮೇಲೆ ಕುಳಿತ ಹಕ್ಕಿಯಂತೆ ಹಗುರವಾಗಿ ರೆಕ್ಕೆ ಬಿಚ್ಚಿ ಹಾರಿದ. ಅವನ ಮುಖದ ತುಂಬಾ ನಗೆಯ ಅಲೆಗಳು ಉರುಳಾಡಿ ಆತ – +“ಇದು ಆಶೀರ್ವಾದಗಳಿಗೆ ತಲೆ ಬಾಗುವ, ಶಾಪಗಳಿಗೆ ಹೆದರುವ ಕಾಲ ಅಲ್ಲ..ಫ಼ಾದರ್..ನಾನು ಬರತೀನಿ..ನನ್ನ ದಾರಿ ನನಗಿದೆ..” ಎಂದವನೆ ಬಂಗಲೆಯಿಂದ ಹೊರಬಿದ್ದ. +ಅನಂತರ ಅವನು ಅವನದೇ ಒಂದು ದಾರಿಯನ್ನು ಕೂಡ ಕಂಡುಕೊಂಡ. +ಇಗರ್ಜಿಗೆ ಬರುವುದನ್ನು ನಿಲ್ಲಿಸಿದ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಅವನಿಂದ ದೂರವಾಯಿತು. ಜ್ಞಾನೋಪದೇಶಕ್ಕೆ ಬರುವುದನ್ನು ಬಿಟ್ಟ. +ಮನೆಯಲ್ಲಿ ಕೂಡ ಪ್ರಾರ್ಥನೆ, ತೇರ್ಸ ಮಾಡುವುದಿಲ್ಲ ಎಂಬ ಸುದ್ದಿ ಬಂದಿತು. ಆವರೆಗೆ ಕುತ್ತಿಗೆಯಲ್ಲಿ ಕಟ್ಟಿಕೊಂಡಿದ್ದ ಅರ್ಲೂಕನ್ನು ಬಿಚ್ಚಿ ಇರಿಸಿದ್ದಾನೆ ಎಂದರು. +ಇಷ್ಟೆಲ್ಲ ಕೇಳಿಕೊಂಡು ತಾನು ಸುಮ್ಮನಿರುವುದು ಹೇಗೆ?..ಮಕ್ಕಳನ್ನು ಸರಿಯಾದ ಹದ್ದುಬಸ್ತಿನಲ್ಲಿಡಬೇಕಾದವರು ತಂದೆ ತಾಯಿಗಳು ತಾನೆ? ತಾನು ಸಾನಬಾವಿ ಪೆದ್ರುವಿನ ಮನೆಗೆ ಹೋದೆ. ಏನಿದು ನಿಮ್ಮ ಮಗ ಹಿಡಿದಿರುವ ದಾರಿ ಎಂದು ಗಡುಸಾಗಿಯೇ ಕೇಳಿದೆ. +ಫ಼್ಲೋರಿನ- +“….ಪದ್ರಾಬ..ನಮ್ಮ ಮಾತೇ ಕೇಳುತ್ತಿಲ್ಲ…ಅವನ ಹತ್ತಿರ ಮಾತನಾಡಲಿಕ್ಕೆ ನಮಗೆ ಆಗೋಲ್ಲ…” ಎಂದು ಕಣ್ಣಲ್ಲಿ ನೀರು ತಂದು ಕೊಂಡಳು. +ಸಾನಬಾವಿ ಪೆದ್ರು ಕೂಡ. +“ಪದ್ರಾಬ..ಯಾರು ಅವನ ತಲೇಲಿ ಏನು ಹಾಕಿದಾರೆ…ಇಷ್ಟು ವರ್ಷ ಸರಿಯಾಗಿದ್ದವನು ಈಗಲೇ ಹೀಗಾಗಿದ್ದಾನೆ” ಎಂದು ಗೋಳಾಡಿದನು. +ಗ್ರೆಗೊರಿ ಹೀಗೆ ಆಗಿರುವುದರಲ್ಲಿ ತಂದೆ ತಾಯಿಯ ಪಾತ್ರ ಏನೂ ಇಲ್ಲ..ಸೈತಾನ ಅವನನ್ನು ಆಟವಾಡಿಸುತ್ತಿದ್ದಾನೆ ಎನಿಸಿತು. +” ಪೆದ್ರು…ಫ಼್ಲೋರಿನಾ…ನೀವು ನಿತ್ಯ ನಿಮ್ಮ ಮಗನ ಮನಪರಿವರ್ತನೆಗಾಗಿ ದೇವರಲ್ಲಿ ಬೇಡಿಕೊಳ್ಳಿ..ನಾನೂ ಬೇಡಿಕೊಳ್ಳುತ್ತೇನೆ.” ಎಂದೆ. +ನಿತ್ಯ ಬೇಡಿ ಕೊಳ್ಳುತ್ತಿದ್ದೇನೆ ಕೂಡ. ಆದರೆ ಊರಿನ ಅಷ್ಟು ಜನ ಕ್ರೈಸ್ತವರು ಇಗರ್ಜಿಗೆ ಬರುತ್ತಾರೆ. ಈ ಯುವಕ ಇಗರ್ಜಿ ಎದುರಿನಿಂದ ತಿರುಗಾಡುವಾಗ ಕೂಡ ಅತ್ತ ತಿರುಗಿ ನೋಡುವುದಿಲ್ಲ! +ಈ ವಿಷಯ ತನ್ನನ್ನು ಘಾಸಿಗೊಳಿಸುತ್ತಿದೆ. +ಗ್ರೆಗೊರಿಯ ಜತೆಗೆ ಹಸಿಮಡ್ಲು ಪತ್ರೋಲನ ಮಗ ಜೂಜೆ ಬೇರೆ ಇತ್ತೀಚಿಗೆ ಸೇರಿಕೊಂಡಿದ್ದಾನೆ. +ತನ್ನ ತಂಗಿಗೆ ಊರಿನ ಕಾನ್ವೆಂಟಿನ ಸಿಸ್ಟರುಗಳು ಕೆಲಸಕೊಡಲಿಲ್ಲ ಎಂಬ ಕಾರಣವನ್ನೇ ಮುಂದೆ ಮಾಡಿಕೊಂಡು ಈತ ಸಿಸ್ಟರುಗಳನ್ನು ಬಯ್ಯಲು ಒಂದಲ್ಲ ಒಂದು ನೆಪ ಹುಡುಕುತ್ತಿರುತ್ತಾನೆ. +ಬಡವರಿಗೆ ಹಂಚಲೆಂದು ಸಿಸ್ಟರುಗಳು ವಿದೇಶದಿಂದ ತರಿಸಿಕೊಂಡ ಗೋದಿ, ರವೆ, ಎಣ್ಣೆಯನ್ನು ಸಿಸ್ಟರುಗಳು ಅಂಗಡಿಗೆ ಮಾರುತ್ತಾರೆ ಎಂದು ಗದ್ದಲ ಮಾಡಿದ. ಡಯಾಸ ಮನೆಗೆ, ಪಿಂಟೋ ಮನೆಗೆ ಮತ್ತೆ ಇನ್ಯಾರದ್ದೋ ಮನೆಗೆ ಕದ್ದು ಸಾಗಿಸುತ್ತಾರೆ ಎಂದು ಬಡವರಿಗೆ ಇದು ಸಿಗುವುದಿಲ್ಲವೆಂದ. +ಮೊನ್ನೆ ಊರ ಗೋಡೆಗಳ ಮೇಲೆ ಚರ್ಚ್ ಕಂಪೌಂಡಿನ ಮೇಲೆ , ಸರಕಾರಿ ಬಾವಿ, ಕಾನ್ವೆಂಟ್ ಗೋಡೆ, ಫ಼ಾತಿಮಾ ನಗರದ ಮನೆಗಳ ಮೇಲೆ, ಜೋಸೆಫ಼್ ನಗರದ ಮನೆಗಳ ಮೇಲೆ, ಕೆಂಪು ಬಣ್ಣದ ದಪ್ಪ ದಪ್ಪ ಅಕ್ಷರಗಳು ಕಾಣಿಸಿಕೊಂಡವು. +“ಕಾನ್ವೆಂಟ್ ಆಡಳಿತಕ್ಕೆ ಧಿಕ್ಕಾರ” +“ಇಲ್ಲಿಯ ಕಾನ್ವೆಂಟಿನಲ್ಲಿ ಇಲ್ಲಿಯವರಿಗೇ ಕೆಲಸ” +“ಧಿಕ್ಕಾರ..ಧಿಕ್ಕಾರ ಕೆಲಸ ಕೊಡದವರಿಗೆ ಧಿಕ್ಕಾರ” +“ಬಡವರ ಗೋಧಿ ಉಳ್ಳವರ ಬಸಿರಿಗೆ” +ಮದರ್ ಜನರಲ್ ಬಂಗಲೆಗೆ ಬಂದು- +“ಫ಼ಾದರ್…” ಎಂದು ತುಟಿ ಕಚ್ಚಿಕೊಂಡು ಮುಖ ಸಣ್ಣದು ಮಾಡಿಕೊಂಡಾಗ ಫ಼ಾದರಿ ಸಿಕ್ವೇರಾ ಗಡ್ಡ ಮೀಸೆಗಳಿಲ್ಲದ ಬೋಳು ಮುಖವನ್ನು ಉಜ್ಜಿಕೊಂಡರು. ಬಲಗೈ ಮುಷ್ಟಿ ಕಟ್ಟಿ ತಮ್ಮೆದೆಯನ್ನು ತಾವೇ ಗುದ್ದಿಕೊಂಡರು. +ಈ ಕಾನ್ವೆಂಯ್ಟ್ ಪ್ರಕರಣದ ಮೂಲ ಅವರಿಗೆ ಗೊತ್ತಿತ್ತು. ಬಳ್ಕೂರಕಾರನ ಮೊಮ್ಮಗಳು, ಸಾಮ್ಸನ್ನನ ಮಗಳು ಗ್ಲೋರಿಯಾ, ಹಸಿಮಡ್ಲು ಪತ್ರೋಲನ ಮಗಳು ವೆರೋನಿಕ ಖಾಲಿ ಇರುವ ಕೆಲಸ ತಮಗೆ ನೀಡಿ ಎಂದು ಕಾನ್ವೆಂಟಿಗೆ ಕೊಟ್ಟ ಅರ್ಜಿ ಕಸದ ಬುಟ್ಟಿ ಸೇರಿ ಸಿಸ್ಟರ್ ಲಿನಾರ ಅಕ್ಕನ ಮಗಳು ಮಿರೋಣ ಡಯಾಸಿನ ಮಗಳು ಕಾನ್ವೆಂಟಿನಲ್ಲಿ ಕೆಲಸ ಗಿಟ್ಟಿಸಿಕೊಂಡ ನಂತರ ಇದು ನಿಧಾನವಾಗಿ ಕೇರಿಯ ತುಂಬಾ , ಸುತ್ತ ಕೊಳೆತ ನಾಯಿಯ ವಾಸನೆಯಂತೆ ಹಬ್ಬತೊಡಗಿತು. ಗ್ಲೋರಿಯಾ ತಂದೆ ಸಾಮ್ಸನ್ ಮನೆಯ ಮೇಲೆ ಬಾಗಿಲು ತಟ್ಟಿ ನೋಡಿ ವಿಷಯ ಹೀಗಿದೆ ಎಂದು ಹೇಳಿದ. ಹಸಿಮಡ್ಲ ಪಾತ್ರೋಲ ಕೂಡ ಹಿಂದುಳಿಯಲಿಲ್ಲ. ಬ್ಯಾಂಡಾಕರ್ ಡೈಮಂಡ, ಪಾಸ್ಕು, ಮರಿಯಳ ಮಕ್ಕಳು, ಸಿಮೋನನ ಮಗ, ಸಾಂತಾಮೊರಿ ಮೊಮ್ಮಕ್ಕಳಾದ ರಾಬರ್ಟ್, ಗೈಗೊರಿಯರು, ಪೆದ್ರು ಮಗ ಗ್ರೆಗೊರಿ, ಪಾಸ್ಕೋಲ ಮೇಷ್ಟ್ರ ಮಗ ಅಂತೋನಿ, ಹೊಸದಾಗಿ ಊರಿಗೆ ಬಂದ ಇನ್ನು ಹಲವರು ಈ ಬಗ್ಗೆ ಚರ್ಚಿಸಿ, ಕೆಲವರು ಹೋಗಿ ಮೊದಲು ಫ಼ಾದರಿಗಳನ್ನು ಕಂಡರು. +ಯುವಕರ, ನಡು ವಯಸ್ಕರ ಒಂದು ಗುಂಪೇ ತಮ್ಮ ಬಳಿ ಬಂದಾಗ ಪಾದರಿ ಸಿಕ್ವೇರಾ ತುಸು ಬೆದರಿದರು. +“..ಏನು? ಏನು?” ಎಂದು ಕೇಳಿದರು. ಹೀಗೆ ದಂಡು ಗಟ್ಟಿ ಬಂದು ಪಾದರಿಗಳನ್ನು ಕಾಣುವ ಸಂಸ್ಕೃತಿಯನ್ನು ಸಿಕ್ವೇರಾ ಎಂದೂ ಒಪ್ಪಿಕೊಂಡವರಲ್ಲ. ಪಾದರಿಗಳ ಅಥವಾ ಸಿಸ್ಟರುಗಳ ತೀರ್ಮಾನವನ್ನು ಜನ ಸುಮ್ಮನೆ ಒಪ್ಪಿಕೊಳ್ಳಬೇಕಲ್ಲದೆ ಅದನ್ನೊಂದು ಸಮಸ್ಯೆ ಎಂದು ತೆಗೆದುಕೊಳ್ಳುವುದಾಗಲಿ, ಅದರಲ್ಲಿ ಸರಿ ತಪ್ಪನ್ನು ಹುಡುಕುವುದಾಗಲಿ ಎಂದೂ ಸರಿಯಲ್ಲ. ಈಗ ಈ ಯುವಕರು ದಂಡುಗಟ್ಟಿ ಬಂದಿರುವುದು ಸಿಸ್ಟರುಗಳ ತೀರ್ಮಾನ ಸರಿಯಲ್ಲ ಎಂದಲ್ಲವೆ? ಇದು ಸಿಸ್ಟರುಗಳ ವಿರೋಧದ ಮನೋಭಾವವಲ್ಲ ಇಗರ್ಜಿ ಮಾತೆಯನ್ನೇ ವಿರೋಧಿಸಿದ ಹಾಗೆ? +“ಏನು? ಏನು?” ಎಂದು ದನಿ ಏರಿಸಿಯೇ ಇವರು ಕೇಳಿದಾಗ ಆಗಲೇ ಸಾಕಷ್ಟು ಪ್ರಚಾರವಾಗಿದ್ದ ವಿಷಯವನ್ನೇ ಬಂದ ಯುವಕರು ಮತ್ತೊಮ್ಮೆ ಹೇಳಿದರು. ಅವರ ಮಾತಿನಲ್ಲಿ ಆಕ್ರೋಶವಿತ್ತು. ಉದ್ವೇಗವಿತ್ತು. +“ಸಿಸ್ಟರುಗಳು ಬೇರೆ ಯಾರನ್ನೋ ಕೆಲಸಕ್ಕೆ ಸೇರಿಸಿಕೊಂಡಿಲ್ಲ ಅಲ್ವೆ?” ಎಂದು ಕೇಳಿದರು ಸಿಕ್ವೇರಾ ತಾಳ್ಮೆ ತಂದುಕೊಂಡು. +“ಹೌದು, ಆದರೆ ಅವರು ಇಲ್ಲಿಯವರಲ್ಲ ಸಿಸ್ಟರಗೆ ಬೇಕಾದವರು ಒಬ್ಬರು..ಡಯಾಸ್ ಮಗಳು ಮಂಗಳೂರಿನಲ್ಲಿ ಕೆಲಸದ ಮೇಲಿದ್ದವಳು ಇನ್ನೊಬ್ಬಳು..ಇದು ಸರಿಯಲ್ಲ ಅಂತ ನಮ್ಮ ಅಭಿಪ್ರಾಯ…” +“ನೋಡಿ, ಒಂದು ಶಾಲೆ ಒಂದು ಸಂಸ್ಥೆಯನ್ನು ನಡೆಸುವವರಿಗೆ ಕೆಲ ಜವಾಬ್ದಾರಿಗಳು ಇರುತ್ತವೆ. ಕೆಲ ನಿಯಮಗಳೂ ಇರುತ್ತವೆ. ಈ ಪ್ರಕಾರ ಅವರು ನಡೆದುಕೊಳತಾರೆ. ಅದು ಸರಿ ಅಲ್ಲ ಅಂತ ಹೇಳುವ ಅಧಿಕಾರ ಹೊರಗಿನವರಾದ ನಮಗೆ ಇಲ್ಲ. ಈ ಊರಿನಲ್ಲೂ ವಿದ್ಯಾವಂತರಾದವರು ಇದಾರೆ ಅನ್ನೋದು ನನಗೂ ಗೊತ್ತು. ಅವರಿಗೂ ನಾಳೆ ಅವಕಾಶ ಮಾಡಿಕೊಡಿ ಅಂತ ಹೇಳೋಣ..ನೀವು ಈ ವಿಷಯಾನ ಎತ್ತಿಕೊಂಡು ಊರಿಗೆಲ್ಲ ತಿಳಿಯುವ ಹಾಗೆ ಗದ್ದಲ ಮಾಡಬೇಡಿ..ನಮ್ಮ ನಮ್ಮೊಳಗೆ ಹೀಗೆ ಸಮಸ್ಯೆ ಇದೆ ಅಂತ ಹೊರಗಿನವರಿಗೆ ತಿಳೀಬಾರದು..” ಎಂದೇನೋ ಪಾದರಿ ಹೇಳುತ್ತಿರಲು ಎದುರು ನಿಂತ ಯುವಕ ಅವರಿಗೆ ಮುಂದೆ ಮಾತನಾಡಲು ಕೊಡಲಿಲ್ಲ. +“ಫ಼ಾದರ್ ನೀವು ನಮ್ಮ ಕಡೆ ಇರಬೇಕು..ಕಾನ್ವೆಂಟಿಗೆ ಜಾಗ ಕೊಟ್ಟವರು ನಾವು. ಅವರು ಇಲ್ಲಿಗೆ ಬಂದದ್ದು ನಮ್ಮ ಮಕ್ಕಳಿಗಾಗಿ..ಆದರೆ ಈಗ ನಮ್ಮ ಮಕ್ಕಳಿಗೆ ಕಾನ್ವೆಂಟಿನಿಂದ ಉಪಯೋಗ ಆಗತಿಲ್ಲ..ನಮ್ಮ ಹೆಣ್ಣು ಮಕ್ಕಳಿಗೆ ಇಲ್ಲಿ ಕೆಲಸ ಸಿಗತಾ ಇಲ್ಲ. ನೀವು ನಮ್ಮ ಪರವಾಗಿ ನಿಂತು ಈ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲಿಕ್ಕೆ ಸಹಾಯ ಮಾಡೋದಿಲ್ಲ ಅನ್ನೋದಾದರೆ ನಾವೇ ಕಾನ್ವೆಂಟಿಗೆ ಹೋಗುತ್ತೇವೆ…ಹೇಳಿ ಫ಼ಾದರ್ ನೀವು ನಮ್ಮ ಪರವಾಗಿ ಇರತೀರೋ ಇಲ್ಲ..” +ಯುವಕರ ನಾಯಕತ್ವ ವಹಿಸಿಕೊಂಡಂತಿದ್ದ ಜೂಜ ಒಂದು ಸವಾಲನ್ನೇ ಪಾದರಿಗಳ ಮುಂದಿಟ್ಟ. ಈ ಸವಾಲಿಗೆ ಸಿಕ್ವೇರಾ ಉತ್ತರಕೊಡಲು ಹೋಗಲಿಲ್ಲ. ಆದರೂ – +“..ಇದು ಪೂರ್ತಿಯಾಗಿ ಕಾನ್ವೆಂಟಿಗೆ ಸೇರಿದ ವಿಷಯ..ಇಗರ್ಜಿಗೆ ಈ ಬಗ್ಗೆ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ. ಆದರೂ ನೀವು ಅಲ್ಲಿಗೆ ಹೋಗೋದು ಸೂಕ್ತ ಅಲ್ಲ..ಸಿಸ್ಟರುಗಳು ಅಂದರೆ ಏಸು ಪ್ರಭುವಿನ ವಾಕ್ಯವನ್ನು ಕಾರ್ಯ ರೂಪಕ್ಕೆ ಇಳಿಸುವವರೇ ಹೊರತು ಬೆರೆ ಇಲ್ಲ..” +ಸಿಕ್ವೇರರ ಮಾತು ಮುಗಿದಿರಲಿಲ್ಲ. +“ನಡೀರಿ ಹೋಗೋಣ..ಇವರು ಪಾದರಿ ಅಲ್ಲ..ಆ ಸಿಸ್ಟರುಗಳ ತುತ್ತೂರಿ..” ಎಂದು ಕೂಗುತ್ತ ಆ ತರುಣರೆಲ್ಲ ಹೊರಟು ಹೋಗಿದ್ದರು. +ಇದಂತೂ ತಮಗಾದ ಬಹಳ ದೊಡ್ಡ ಅವಮಾನ ಎಂದೇ ತಿಳಿದುಕೊಂಡರು ಸಿಕ್ವೇರಾ. +ಊರ ಕಾನ್ವೆಂಟಿಗೂ ಪಾದರಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಊರ ಕ್ರೀಸ್ತುವರಿಗೂ ಪಾದರಿಗಳಿಗೂ ಸಂಬಂಧ ಇರುತ್ತದಲ್ಲ. +ಪಾದರಿಗಳು ಜನ ಈ ಹಂತಕ್ಕೆ ಹೋಗಲು ಏಕೆ ಬಿಟ್ಟರು? +ಜೂಜ ಬೇರೆ- +“..ಇವರು ಪಾದರಿ ಅಲ್ಲ..ಸಿಸ್ಟರುಗಳ ತುತ್ತೂರಿ” ಎಂದು ಹೇಳಿಹೋದನಲ್ಲ. +ಇದಕ್ಕಿಂತ ದೊಡ್ಡ ಅವಮಾನ ಬೇಕೆ? +ಊರ ಕ್ರೀಸ್ತುವ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಲು ತಾನು ಕಾರಣ ಎಂಬಂತೆ ಈ ಯುವಕರು ಕೂಗಾಡಿ ಹೋದರಲ್ಲ. ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಅಲ್ಲವೆ? +ಸಿಸ್ಟರುಗಳು ಯಾರಿಗೋ ಕೆಲಸ ಕೊಟ್ಟಿರಬಹುದು. ಅವರೇನೂ ಬೇರೆಯವರಲ್ಲ. ಅಲ್ಲವೆ? ನಾಳೆ ಮತ್ತೆ ಕಾನ್ವೆಂಟಿನಲ್ಲಿ ಕೆಲಸ ಖಾಲಿ ಬಿದ್ದರೆ ಇತರೆಯವರಿಗೆ ಕೊಡಬಹುದಲ್ಲವೆ? ಅಂದ ಮೇಲೆ ಈ ಕೂಗಾಟ, ಗೋಡೆ ಬರಹ ಏಕೆ? +ಪಾದರಿ ಸಿಕ್ವೇರಾ ಈ ಎರಡೂ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಿರಬೇಕಾದರೇನೆ ಬೋನನ ಮಗ ಫ಼ಿಲಿಪ್ಪನ ನೆನಪೂ ಅವರಿಗಾಯಿತು. +ಅವರ ಹಿಂದಿನ ಉತ್ಸಾಹ ಚಟುವಟಿಕೆ ಸಂತಸಗಳನ್ನು ಚಿವುಟಿ ಹಾಕುವುದರಲ್ಲಿ ಈ ಫ಼ಿಲಿಪ್ಪನ ಪ್ರಕರಣವೂ ಸೇರ್ಪಡೆಯಾಗಿತ್ತು. +ಅಲೆಕ್ಸ ಪಿಂಟೋ, ಒಂದು ದಿನ ಸಿಮೋನನನ್ನು ಹುಡುಕಿಕೊಂಡು ಬಂದ. ಎಂದಿನಂತೆ ಕ್ಷೇಮ ಸಮಾಚಾರ ಕೇಳಿ, ಮಕ್ಕಳು ಕೆಲಸ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿ, ಊರು, ಇಗರ್ಜಿ, ಕ್ರಿಸ್ತುವರು, ಪಾದರಿ ಎಂದೆಲ್ಲ ಮಾತನಾಡಿ- +“ನಮ್ಮ ಬೋನ ಸಾಹುಕಾರರು ಕೂಡ ಒಳ್ಳೆಯವರೆ” ಎಂದು ಮುಖ್ಯ ವಿಷಯಕ್ಕೆ ಬಂದು- +ಬೋನ, ಅವನ ಹೆಂಡತಿ, ಮಗ, ಈಗ ಅವರ ಸ್ಥಾನಮಾನಗಳ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳಿದ. ಈ ವಿಷಯವನ್ನೇ ಕುರಿತು ಅವರು ಕೊಂಚ ಹೊತ್ತು ಮಾತನಾಡಿದರು ಕೂಡ. ಮಾತು ಮುಗಿಸಿ ಇನ್ನೇನು ಹೊರಡಬೇಕು ಅನ್ನುವಾಗ ಪಿಂಟೋ. +“ಸಿಮೋನ ಮಾಮ..” ಎಂದ ತನ್ನ ಮಾತಿನ ಧಾಟಿಯನ್ನು ಬದಲಾಯಿಸಿ ಒಂದೇ ರಾಗದಲ್ಲಿ ಕೇಳಿ ಬರುತ್ತಿದ್ದ ಗಾಯನದ ನಡುವೆ ಅಪಸ್ವರ ಬಂದಂತೆ ಭಾಸವಾಗಿ ಸಿಮೋನ ಪಿಂಟೋನ ಮುಖ ನೋಡಿದ. +“ಸಿಮೋನ ಮಾಮ..ಸಂದರ್ಭ ನೋಡಿ ಬೋನ ಸಾಹುಕಾರರ ಕಿವಿಗೆ ಒಂದು ವಿಷಯ ಹಾಕಿ ಬಿಡಿ” ಎಂದ. +“ಏನು ವಿಷಯ?” +“ಅದೇ ಮೊನ್ನೆ ನೀವು ಅವರು ನಮ್ಮಲ್ಲಿಗೆ ಬಂದಿದ್ರಿ..ನಾನು ನಮ್ಮ ನೆಂಟರಿಷ್ಟರಿಗೆ ಒಂದು ಮಾತು ಕೇಳಿದೆ…ಕೇಳಬೇಕಲ್ಲ..ಅವರು ಯಾರಿಗೂ ಮನಸ್ಸಿಲ್ಲ..ನನಗೆ ನನ್ನ ಹೆಂಡತಿಗೆ ಈ ಬಗ್ಗೆ ಯಾವುದೇ ತಕರಾರಿಲ್ಲ..ಆದರೆ ಹುಡುಗಿ ಸೋದರ ಮಾವಂದಿರು ಅವಳಿಗೆ ಬೇರೆ ಕಡೆ ಗಂಡು ನೋಡಿದಾರೆ. ಮಂಗಳೂರಿನ ಹುಡುಗ ಈಗ ಇಂಗ್ಲೆಂಡಿನಲ್ಲಿದ್ದಾನೆ..” +ಪಿಂಟೋ ತನ್ನ ಬಾಮಣ ಸ್ಪರ್ಶವನ್ನು ಮಾತಿಗೆ ನೀಡಿ ತುಂಬ ಮೃದುವಾಗಿ, ರಾಗವಾಗಿ, ಅಲ್ಲಲ್ಲಿ ನಿಲ್ಲಿಸಿ, ಕೆಲ ಬಾರಿ ಎಳೆದು ಇಷ್ಟೆಲ್ಲ ಹೇಳುವಾಗ, ಸಿಮೋನನಿಗೆ ಎಲ್ಲ ಅರ್ಥವಾಯಿತು. ತನ್ನ ತಾಯಿ ಈ ಬಾಮಣರು ತಮ್ಮನ್ನು ಶ್ರೇಷ್ಠರು ಎಂದು ಕರೆಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದುದು ಕೂಡ ನೆನಪಿಗೆ ಬಂದು ಈತನ ಈ ಮಾತಿನ ಹಿಂದೆ ಬೇರೇನೋ ಇದೆ ಎಂಬುದು ಖಚಿತವಾಯಿತು. ಮೈ ಮೇಲೆ ಮುಳ್ಳು ಏಳುವಂತೆ ಮಾತನಾಡುತ್ತಿದ್ದ ಪಿಂಟೋನನ್ನು ತಡೆದು ಸಿಮೋನ- +“ಗೊತ್ತಾಯ್ತು ಬಿಡಿ…ನಾನು ಬೋನ ಸಾಹುಕಾರರಿಗೆ ಹೇಳತೀನಿ” ಎಂದ. +ಪಿಂಟೋ ಏನೋ ಕೆಲಸ ನೆನಪಿಗೆ ತಂದುಕೊಂಡು ಹೋದ. ಸಿಮೋನ ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳಲು ಉತ್ಸುಕನಾಗಿದ್ದ ಬೋನ. ತನ್ನ ಮಗ ಅವಳನ್ನು ಮೆಚ್ಚಿಕೊಂಡಿರುವುದು, ಆ ಹುಡುಗಿ ಕೂಡ ತನ್ನ ಮಗನನ್ನು ಒಪ್ಪಿರುವುದು ಈ ಉತ್ಸುಕತೆಗೆ ಕಾರಣವಾಗಿತ್ತು. ಪೇಟೆ ಬದಿಯಲ್ಲಿ ಪಿಂಟೋ ಒಂದು ಅಂಗಡಿ ಇರಿಸಿಕೊಂಡಿದ್ದ. ಅಲ್ಲಿಯೇ ಬೋನನ ಅಂಗಡಿಯೂ ಇತ್ತು. ಬೋನ ಹಾಗೆ ನೋಡಿದರೆ ಪಿಂಟೋಗಿಂತ ಶ್ರೀಮಂತನಾಗಿದ್ದ. ಇವನಿಗೆ ಒಳ್ಳೆಯ ಹೆಸರಿತ್ತು. ಇತ್ತ ಫ಼ಿಲಿಪ್ಪ ಕೂಡ ಒಳ್ಳೆಯವನೆ. ಆ ಹುಡುಗಿ ಕೂಡ. ಈ ಮದುವೆಗೆ ಯಾವುದೆ ಅಡ್ಡಿ ಇರಲಿಲ್ಲ. ಆದರೆ ಈ ಪಿಂಟೋ ಹೀಗೊಂದು ಮಾತು ಹೇಳಿದನಲ್ಲ ಇದನ್ನು ಬೋನನಿಗೆ ಹೇಳುವಂತಿಲ್ಲ. ಹೇಳದೇ ಇರುವಂತಿಲ್ಲ. +ನಾಲ್ಕು ದಿನ ಇದೇ ತೊಳಲಾಟವಾಯಿತು ಮತ್ತೆ ಐದಾರು ದಿನಗಳ ನಂತರ ಸಿಮೋನ ಬೋನನ ಮನೆಗೆ ಹೋದ. +“ಬನ್ನಿ ಅಂಕಲ್..” ಎಂದು ರೆಮೇಂದಿ ಸ್ವಾಗತಿಸಿದಳು. +“ಯಾರು?” ಎಂದು ಕೇಳುತ್ತಾ ಬೋನ ಹೊರಬಂದ. +“ಕುತ್ಕೊಳ್ಳಿ..” ಎಂದು ಸೋಫ಼ಾ ತೋರಿಸಿದ. +“ಪಿಂಟೋ ಸಿಕ್ಕಿರಬೇಕು ಅಲ್ವ?” +ನೇರವಾಗಿ ಆ ವಿಷಯಕ್ಕೇನೆ ಬಂದ ಬೋನ. ಸಿಮೋನ ತಲೆ ತಗ್ಗಿಸಿಕೊಂಡಿದ್ದವ ಏನನ್ನೋ ಹೇಳಲೆಂದು ಹೊರಟಾಗ ಬೋನ ಅವನನ್ನು ತಡೆದ- +“…ನನಗೆಲ್ಲ ಗೊತ್ತಾಗಿದೆ ಸಿಮೋನ ಮಾಮ..” ಎಂದ ಬೋನ. ಅವನ ದನಿ ಸಣ್ಣಗೆ ಕಂಪಿಸುತಿತ್ತು. +“ಪಾದರಿ ಗೋನಸ್ವಾಲಿಸ್ ನನ್ನನ್ನು ಕೆಳಮಟ್ಟದಿಂದ ಮೇಲೆ ಎತ್ತಿ ತಬ್ಬಿಕೊಂಡು ಬೆಳೆಸಿದ್ರು..ಆದರೆ ಈ ಜನ ನನ್ನನ್ನು ನನ್ನ ಮಗನನ್ನು ಮತ್ತೆ ಕೆಳಗೆ ತುಳೀಲಿಕ್ಕೆ ನೋಡ್ತಿದಾರೆ..ಫ಼ಿಲಿಪ್ಪ ಇದನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದಾನೆ..” ಎಂದ ಬೋನ. ಅವನ ಮಾತಿನಲ್ಲಿ ಕೂಡ ಅಪಾರವಾದ ವ್ಯಥೆ ಇತ್ತು. +* +* +* +ತನ್ನ ಮಗಳನ್ನು ಬೋನನ ಮಗ ಫ಼ಿಲಿಪ್ಪನಿಗೆ ಕೊಡಬಾರದು ಎಂದು ನಿರ್ಧರಿಸಿದ ಪಿಂಟೋ ತನ್ನ ಮಗಳು ಸಿಲ್ವಿಯಾಳನ್ನು ಎದುರು ಕೂರಿಸಿಕೊಂಡು- +“..ನಾವೆಲ್ಲ ಒಂದು ಕಾಲದಲ್ಲಿ ಬ್ರಾಹ್ಮಣರಾಗಿದ್ದವರು. ಈಗಲೂ ನಮ್ಮಲ್ಲಿ ಜಾಣ್ಮೆ, ಬುದ್ಧಿವಂತಿಕೆ, ನಯ, ನಾಜೂಕುತನ ಉಳಿದುಕೊಂಡಿದೆ. ನಮ್ಮವರ ಮನೆಗಳ ಸೊಗಸುಗಾರಿಕೆ, ಊಟ, ಉಡಿಗೆಯಲ್ಲಿಯ ಸೊಬಗು ಬೇರೆಯವರಲ್ಲಿ ಇಲ್ಲದಿರಲು ಇದೇ ಕಾರಣ. ನಿನ್ನ ಫ಼ಿಲಿಪ್ಪ ನೇಂದರನ ಮಗ. ಅವನ ತಾಯಿ ಚಾರಡಿ…ಅವರ ಸಂಸ್ಕಾರ ಸಂಸ್ಕೃತಿ ಬೇರೆ. ಮಾತು ಬೇರೆ. ಮನೆಯ ಅಡಿಗೆ ಉಡೀಗೆ ಬೇರೆ. ನಾವೆಲ್ಲ ಒಂದೇ ಜಾತಿ ಹೌದು..ಆದರೆ ಅವನ ರಕ್ತ ಬೇರೆ..ನಿನ್ನ ರಕ್ತ ಬೇರೆ..” +ಎಂದೇನೋ ಹೇಳ ಹೊರಟಾಗ ಸಿಲ್ವಿಯ ಕೆರಳಿ ನಿಂತಿದ್ದಳು. ಕ್ರೀಸ್ತುವರಲ್ಲಿ ಹೀಗೆಲ್ಲ ಒಳಪಂಗಡಗಳಿರುವುದು ಅವಳಿಗೆ ಗೊತ್ತಿತ್ತು. ಭಾಷೆಯಲ್ಲಿ ವ್ಯತ್ಯಾಸವೋ, ಮನೆಯ ಆಚಾರ-ವಿಚಾರಗಳಲ್ಲಿ ಭಿನ್ನತೆಯೋ ಇರಲು ಈ ಒಳಪಂಗಡಗಳು ಕಾರಣ ಎಂದವಳು ನಂಬಿರಲಿಲ್ಲ. ವಿದ್ಯಾಭ್ಯಾಸವೋ, ಶ್ರೀಮಂತಿಕೆಯೋ, ಜನ ಬೆಳೆದುಬಂದ ಪರಿಸರವೋ ಅವರಲ್ಲಿಯ ವ್ಯತ್ಯಾಸಕ್ಕೆ ಕಾರಣವಾಗಬಹುದು. ಬೋನ ಸಾಹುಕಾರರನ್ನು, ಅವರ ಮನೆಯನ್ನು, ಅವರ ಮಗ ಫ಼ಿಲಿಪ್ಪನನ್ನು ನಿಕೃಷ್ಟವಾಗಿ ಕೀಳಾಗಿ ಕಾಣಲು ಯಾವುದೇ ಕಾರಣವಿರಲಿಲ್ಲ. ಅವರು ಮಾತು, ಉಡಿಗೆ, ತೊಡಿಗೆ ಯಾವುದರಲ್ಲೂ ಕಡಿಮೆ ಇರಲಿಲ್ಲ. ಕ್ರೀಸ್ತುವರ ನಡುವೆಯೇ ಹೀಗೊಂದು ಭೇದ ಭಿನ್ನತೆ ಇರುತ್ತದೆಂದರೆ ನಾವೆಲ್ಲ ಕ್ರಿಸ್ತನ ಅನುಯಾಯಿಗಳು ಎಂಬ ಮಾತಿಗೇನೆ ಬೆಲೆ ಇಲ್ಲ ಅಲ್ಲವೆ? +“ಪಪ್ಪ..ನಾನು ಫ಼ಿಲಿಪ್ಪ ಒಂದು ನಿರ್ಧಾರ ಮಾಡಿದ್ದೇವೆ. ಯಾವ ಕಾರಣಕ್ಕೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ..” ಎಂದು ಸಾರಿಬಿಟ್ಟಳು. +“ಇನ್ನು ನಿಮ್ಮ ಮಾತಿನ ಬಗ್ಗೆ ನನಗೆ ಆಸಕ್ತಿ ಇಲ್ಲ” ಎಂದು ಹೇಳಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು. +ಮಾರನೇ ದಿನ ಅವಳು ಮಾಡಿದ ಮೊದಲ ಕೆಲಸವೆಂದರೆ ನೇರವಾಗಿ ಬೋನನ ಅಂಗಡಿಗೆ ಬಂದು ಫ಼ಿಲಿಪ್ಪನಿಗೆ ಹೀಗೆ ಹೀಗೆ ನಡಿಯಿತು ಎಂದು ಹೇಳಿದ್ದು. +ಈ ಬಾಮಣ, ನೆಂದರ ಸಮಸ್ಯೆ ತಮ್ಮ ನಡುವೆಯೂ ಬಂತೆ ಎಂದು ಆತ ಚಿಂತಿತನಾದ. ತನ್ನ ತಂದೆಯ ಬಾಲ್ಯದ ದಿನಗಳ ಬಗ್ಗೆ ತಿಳಿದಿದ್ದ ಆತ ಈ ವಿಷಯದಲ್ಲಿ ಹೆಮ್ಮೆ ಪಡುವುದಿತ್ತು. ಪಾದರಿ ಗೋನಸ್ವಾಲಿಸರಿಗೆ ಸದಾ ತನ್ನ ಕೃತಜ್ಞತೆಗಳನ್ನು ಅರ್ಪಿಸುತ್ತ ಬಂದಿದ್ದ. ಕ್ರಿಸ್ತಪ್ರಭುವನ್ನು ನಂಬುವ ಪಾದರಿಗಳು ಮಾಡಿದ ಸಾಮಾಜಿಕ ಪರಿವರ್ತನೆಯ ಜೀವಂತ ಉದಾಹರಣೆ ತನ್ನ ಕುಟುಂಬ ಎಂಬ ಅರಿವು ಅವನಿಗಿತ್ತು. ತಾನು ನೇಂದರ ಸಬೇಲನ ಮೊಮ್ಮಗ. ಇಡೀ ಸಮಾಜ, ಒಂದು ಊರು ತನ್ನ ತಂದೆಯನ್ನು ಗೌರವ ಮರ್ಯಾದೆಯಿಂದ ಕಾಣುತ್ತಿದೆ ಎಂದು ಕಾಲಘಟ್ಟದಲ್ಲಿ ಆದ ಈ ಪರಿವರ್ತನೆಗೆ ಆತ ಹರ್ಷಪಡುತ್ತಿದ್ದ. ಆದರೆ ಈಗ ಇದೇನು ಆಯಿತು? ಕ್ರೈಸ್ತ ಸಮುದಾಯ ಯಾರನ್ನು ತನ್ನ ಮುಂದಾಳು, ಗುರ್ಕಾರ ಎಂದು ಪರಿಗಣಿಸಿತ್ತೋ ಅವನೇ ಈ ಹಳೆಯ ವೃಣವನ್ನು ಕೆದಕಿದನೆ? ತನ್ನ, ತನ್ನ ತಂದೆ ತಾಯಿಯರ ವರ್ತನೆಯಲ್ಲಿ ಕೀಳುತನವನ್ನ ಕಂಡನೆ ? +ಫ಼ಿಲಿಪ್ಪ ಈ ಬಗ್ಗೆ ಕೊಂಚ ವಿಚಲಿತನಾದ. ಈ ಕ್ಷಣದಲ್ಲಿ ಅವನಿಗೆ ಸಿಲ್ವಿಯಾಳ ಅಭಿಪ್ರಾಯ ಬೇಕಾಗಿತ್ತು. +“ಸಿಲ್ವಿಯಾ..ನಿನ್ನ ನಿರ್ಧಾರವೇನು?” ಎಂದು ಆತ ಸಿಲ್ವಿಯಾಳನ್ನು ಕೇಳಿದ. +“ಫ಼ಿಲಿಪ್ಪ..ನನಗೆ ಈ ಯಾವುದರಲ್ಲೂ ನಂಬಿಕೆ ಇಲ್ಲ..ನಾನು ಯಾವತ್ತೂ ನಿನ್ನವಳು..” +ಮೇಜಿನ ಮೇಲಿದ್ದ ಅವನ ಕೈಯನ್ನು ಬಾಚಿ ಹಿಡಿದುಕೊಂಡಳು ಸಿಲ್ವಿಯಾ. ಅವಳ ಬೆಚ್ಚನೆಯ ಕೋಮಲ ಕರಗಳಲ್ಲಿ ಯಾವುದೋ ದೃಢತೆ, ನಿರ್ಧಾರ, ನಿಷ್ಠುರತೆಯ ಸ್ಪರ್ಶವಾಗಿ ಫ಼ಿಲಿಪ್ಪ- +“…ಹಾಗಾದರೆ ಈ ಮೇಲು ಕೀಳು ಅನ್ನುವ ತಾರತಮ್ಯದ ವಿರುದ್ಧ ನಾವು ಹೋರಾಡೋಣ” ಎಂದ. +ಮಧ್ಯಾಹ್ನ ಮನೆಗೆ ಬಂದವನು ಮನೆಯಲ್ಲಿ ಅವನು ಈ ವಿಷಯವನ್ನೇ ಪ್ರಸ್ತಾಪಿಸಿದ. +“ಪಪ್ಪ, ಕ್ರಿಸ್ತಪ್ರಭುವನ್ನು ರಕ್ಷಕ ಅಂತ ಒಪ್ಪಿಕೊಂಡ ನಂತರವೂ ನೇಂದರ ನೇಂದರ ಆಗಿಯೇ ಬಾಮಣ ಬಾಮಣನಾಗಿಯೇ ಇರುತ್ತಾನೇನು?” ಎಂದು ಆತ ಕೇಳಿದ ಪ್ರಶ್ನೆಗೆ ಬೋನ ಉತ್ತರ ಕೊಡಲಿಲ್ಲ. ಅವನಲ್ಲಿ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಇದೇ ಕಾರಣಕ್ಕಾಗಿ ಪಿಂಟೋ ತನ್ನ ಮಗಳನ್ನು ಫ಼ಿಲಿಪ್ಪನಿಗೆ ಕೊಡಲು ನಿರಾಕರಿಸಿದ ಎಂಬುದಂತೂ ತುಂಬಾ ನೋವಿನ ವಿಷಯವಾಯಿತು ಅವನ ಪಾಲಿಗೆ. +“ಬೇಡ ಬಿಡು..ಅವರ ಹುಡುಗಿ ಅವರಲ್ಲಿರಲಿ” ಎಂದು ಬೋನ ಹೇಳಿದನಾದರೂ ಫ಼ಿಲಿಪ್ಪ ಈ ಮಾತಿಗೆ ತನ್ನ ಒಪ್ಪಿಗೆ ಕೊಡಲಿಲ್ಲ. +* +* +* +“ಸಿಮೋನ ಮಾಮ…ಫ಼ಿಲಿಪ್ಪ ಹಾಗೂ ಸಿಲ್ವಿಯಾ ಇಬ್ಬರೂ ಈ ವಿಷಯಾನ ತೀವ್ರವಾಗಿ ತೆಗೆದುಕೊಂಡಿದ್ದಾರೆ..ನಮ್ಮ ಧರ್ಮದ ಬಗ್ಗೆ ಇಗರ್ಜಿ ಪಾದರಿಗಳ ಬಗ್ಗೇನೆ ಅವರಲ್ಲಿ ಅಪನಂಬಿಕೆ, ಅನುಮಾನ ಪ್ರಾರಂಭವಾಗಿದೆ..ಈ ಸಮಸ್ಯೆ ಹೀಗೆ ಪರಿಹಾರ ಕಂಡುಕೊಳ್ಳುತ್ತೋ ನಾನು ಕಾಣೆ..” ಎಂದ ಬೋನ +ಸಿಮೋನನ ಮುಂದೆ ಕೂಡ ಇದೇ ಸಮಸ್ಯೆ ಇತ್ತು. ಈ ಪ್ರಕರಣದಿಂದಾಗಿ ಬೋನನಿಗೆ ನೋವಾಗಿತ್ತು. ಆದರೆ ಸಿಮೋನ ಈ ಪ್ರಕರಣದ ಆಚೆಗೆ ವಿಚಾರಮಾಡದವನಾಗಿದ್ದ. ಕ್ರೈಸ್ತ ಸಮುದಾಯದಲ್ಲಿ ಹೀಗೊಂದು ಭಿನ್ನತೆ ಇರುವುದನ್ನು ಆತ ಗಮನಿಸುತ್ತ ಬಂದಿದ್ದ. ಅದು ತಪ್ಪೆಂದಾಗಲಿ, ಅದು ಹೋಗಬೇಕೆಂದಾಗಲಿ ಅವನು ಬಯಸಿದವನಲ್ಲ. +ಆದರೆ ಈ ವಿಷಯ ಜೋಸೆಫ಼್ ನಗರದ ಮನೆ ಮನೆಗಳಿಗೆ ಬಹಳ ಬೇಗನೆ ಹಬ್ಬಿತು. ಯುವಕರು ಈ ಬಗ್ಗೆ ತೀವ್ರವಾಗಿ ಸ್ಪಂದಿಸಿದರು. +* * * * +ಗ್ರೆಗೋರಿ ಈಗಲೂ ಸರಿ ಹೋಗಿಲ್ಲ. ದಿನಗಳು ಉರುಳಿದ ಹಾಗೆ ಅವನು ಇಗರ್ಜಿಯಿಂದ, ದೇವರಿಂದ, ಧರ್ಮದಿಂದ ದೂರವಾಗುತ್ತಿದ್ದಾನೇನೋ ಅನ್ನಿಸುತ್ತಿದೆ. +ಜೂಜೆ ಹಾಗು ಅವನ ಗೆಳೆಯರು ತನ್ನನ್ನು ತುತ್ತೂರಿ ಎಂದು ಕರೆದು ಹೋದವರು ಮತ್ತೆ ಈ ವಿಷಯವನ್ನು ಎತ್ತಿಕೊಂಡು ತನ್ನ ಬಳಿ ಬಂದಿಲ್ಲ. ಅವರು ಸಿಸ್ಟರುಗಳ ಬಳಿಯೂ ಹೋಗಿಲ್ಲ. ಆದರೆ ಕೆಲವರು ಬೈಬಲ್ ಸೊಸೈಟಿಯ ಜನರೊಡನೆ ಹೆಚ್ಚಿನ ಸಂಪರ್ಕವಿರಿಸಿಕೊಂಡಿದ್ದಾರೆಂದು ಕೇಳಿದೆ. +ಫ಼ಿಲಿಪ್ಪ ಹಾಗೂ ಸಿಲ್ವಿಯಾರ ತೀರ್ಮಾನವೇನು ಎಂದು ಯೋಚಿಸುತ್ತಿರಬೇಕಾದರೇನೆ ಆ ವಿಷಯ ಕೂಡ ತಿಳಿದು ಬಂತು. +* +* +* +ಫ಼ಿಲಿಪ್ಪ ಸಿಲ್ವಿಯಾ ಈರ್ವರೂ ಪಾದರಿ ಪಿರೇರರ ಮುಂದೆ ಬಂದು ನಿಂತರು. +“ಫ಼ಾದರ್..ನಾವೆಲ್ಲ ಕ್ರಿಸ್ತುವರೆ ಅಲ್ವ..ಆದರೂ ಏನಿದು ಬಾಮಣ ನೇಂದರ ಚಾರ್ಡಿ?” ಎಂದು ಫ಼ಿಲಿಪ್ಪ ಅಸಹನೆಯಿಂದ ಕೇಳಿದ. +ಕ್ರೈಸ್ತನನ್ನು ರಕ್ಷಕ ಎಂದ ಕೂಡಲೇ ಎಲ್ಲರೂ ಒಂದೇ ಆಗುತ್ತಾರೆಂದು ಇಗರ್ಜಿ ಮಾತೆ ಹೇಳುತ್ತಾ ಬಂದಿದೆಯಲ್ಲ ಹಾಗಾದರೆ ಈ ಮೇಲು ಕೀಳು ಹೇಗೆ ಬಂತು? +ಪಾದರಿ ಸಿಕ್ವೇರಾ ಮತ್ತೊಮ್ಮೆ ಗಡ್ಡ ಮೀಸೆಗಳಿಲ್ಲದ ಬೋಳು ಕೆನ್ನೆಯನ್ನು ಕೆರೆದುಕೊಂಡರು. +ಅವರು ಸೆಮಿನರಿಯಲ್ಲಿದ್ದಾಗಲೂ ಈ ತಾರತಮ್ಯವಿತ್ತು. ಒಳಜಾತಿಗಳು, ಒಳಪಂಗಡಗಳು, ಕುಂದಾಪುರ, ಕಾರವಾರ, ಹೊನ್ನಾವರ, ಚಿಕ್ಕಮಗಳೂರಿನವರು ಅವರ ಭಾಷೆ ಹೀಗೆ ಇವರ ಭಾಷೆ ಹಾಗೆ ಎಂಬ ಮಾತು ಕೆಲವರನ್ನು ನಿಷ್ಪ್ರಯೋಜಕರು ಕೆಲವರನ್ನು ಬುದ್ಧಿವಂತರು ಎಂದು ಕರೆಯುವ ಪರಿಪಾಠ ಪಾದರಿಯಾಗಲು ಬಂದವರ ನಡುವೆಯೂ ಇತ್ತು. ತಾವೆಲ್ಲ ಬಾಮಣರೆಂದೇ ಮೆರೆಯುತ್ತಿದುದನ್ನು ಕೂಡ ಸಿಕ್ವೇರಾ ಮರೆತಿರಲಿಲ್ಲ. ಮಂಗಳೂರಿನ ಎಂಟು ಜನರ ಒಂದು ತಂಡ ಸೆಮಿನರಿಯ ಇತರೆ ವಿದ್ಯಾರ್ಥಿಗಳನ್ನು ಈ ಕಾರಣದಿಂದಲೇ ತಮ್ಮ ವಶದಲ್ಲಿ ಇರಿಸಿಕೊಂಡು ಆಟವಾಡಿಸುತ್ತಿತ್ತು. ತಾವು ಪಾದರಿಯಾದ ನಂತರವೂ ಈ ಮೇಲು ಕೀಳು ಅಲ್ಲೊಂದು ಸಾರಿ ಇಲ್ಲೊಂದು ಸಾರಿ ತಲೆ ಎತ್ತಿ ಸಮಸ್ಯೆಯನ್ನು ತಂದೊಡ್ಡುತ್ತಿತ್ತು. ಕೆಲ ಸಂದರ್ಭಗಳಲ್ಲಿ ’ಮೇಲು’ ಎನ್ನುವವರ ಕೈ ಮೇಲಾಗುತ್ತಿತ್ತು. ತಾವು ಕೀಳು ಎಂಬುದನ್ನು ಕೆಲವರು ಒಪ್ಪಿಕೊಂಡು ಸುಮ್ಮನಾಗುತ್ತಿದ್ದರು. ಹೊರಗಿನವರಿಗೆ ಕ್ರಿಸ್ತುವರೆಲ್ಲ ಒಂದೇ ಎಂಬ ಭಾವನೆ ಬರುವಂತೆ ಬಾಮಣರು, ಚಾರಡಿಗಳು ವರ್ತಿಸುತ್ತಿದ್ದರು. ಈ ಮೇಲು-ಕೀಳು ಕ್ರಿಸ್ತನ ಕಾಲದಲ್ಲೂ ಇತ್ತು. ಈಗಲೂ ಇದೆ. ಮುಂದೂ ಇದು ಇರುತ್ತದೆ. ಇದರ ಜತೆ ಹೊಂದಿಕೊಂಡು ಹೋಗಬೇಕಲ್ಲದೆ ಇದನ್ನೇ ಒಂದು ಸಮಸ್ಯೆ ಮಾಡಬಾರದು.ಎಂದೇ ಪಾದರಿ ಸಿಕ್ವೇರ ಫ಼ಿಲಿಪ್ಪ ಸಿಲ್ವಿಯಾರ ಸಮಸ್ಯೆಗೆ ಬೇರೆಯೇ ಒಂದು ಪರಿಹಾರ ಸೂಚಿಸಿದರು. +“ಇಲ್ಲಿ…ಒಳಜಾತಿ ಮುಖ್ಯ ಅಲ್ಲ ಫ಼ಿಲಿಪ್ಪ..ನಿಮ್ಮಿಬ್ಬರ ಮದುವೆಗೆ ನಿಮ್ಮ ನಿಮ್ಮ ಪೋಷಕರಿಗೆ ಮನಸ್ಸಿಲ್ಲ…ಅವರು ನಿಮ್ಮ ಒಳಿತನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನಕ್ಕೆ ಬಂದಿದ್ದಾರೆ…ನೀವು ಅವರ ಮಾತಿನ ಹಾಗೆ ನಡೀರಿ..ಈ ಜಾತಿ ಪಂಗಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ..” ಎಂದರು. +ಫ಼ಿಲಿಪ್ಪನಿಗೆ ನಿರಾಶೆಯಾಯಿತು. ಇಲಿಯನ್ನು ಬಿಲದಲ್ಲಿಯೇ ಇರಿಸಿ ಮೇಲೆ ಮಣ್ಣು ಮೆತ್ತುವ ಈ ಕೆಲಸವನ್ನು ಪಾದರಿಗಳು ಮಾಡಹೊರಟಿರುವುದು ಅಸಹ್ಯವೆನಿಸಿ ಫ಼ಿಲಿಪ್ಪ ಪಾದರಿಯ ಸಮ್ಮುಖದಲ್ಲಿಯೇ ಸಿಲ್ವಿಯಾಳ ಕೈ ಹಿಡಿದು- +“ನೋಡಿ ಫ಼ಾದರ್…ನಮ್ಮ ಹಿರಿಯರು ಒಪ್ಪಲಿ ಒಪ್ಪದೆ ಇರಲಿ…ನಾವು ಮದುವೆಯಾಗೋದಂತೂ ಶತಸಿದ್ಧ…ಇಗರ್ಜಿನಲ್ಲಿ ನಮ್ಮ ಮದುವೆ ಆಗೋದಿಲ್ಲ ಅನ್ನುವುದಾದರೆ….ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗತೇವೆ…ನೀವು ಆವಾಗ ನಾವು ಧರ್ಮವನ್ನು ಬಿಟ್ಟು ಹೋದೆವು ಅಂತ ಮಾತ್ರ ಹೇಳಬಾರದು.” ಎಂದು ಹೇಳಿದವನೇ ಪಾದರಿ ಬಂಗಲೆಯಿಂದ ಹೊರಬಿದ್ದ. ಸಿಲ್ವಿಯಾ ಅವನನ್ನು ಹಿಂಬಾಲಿಸಿದಳು. +* +* +* +ಈ ನಡುವೆ ಮತ್ತೂ ಒಂದು ವಿಷಯ ಪಾದರಿ ಸಿಕ್ವೇರಾ ಎದುರು ಬಂದು ನಿಂತು ಅವರನ್ನು ಧೃತಿಗೆಡಿಸಿತು. +ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಇಗರ್ಜಿ ಎದುರು ನಿಂತು ಅವಸರದಲ್ಲಿ ಶಿಲುಬೆಯ ವಂದನೆ ಮಾಡಿ ತಮ್ಮ ಬಂಗಲೆಯತ್ತ ಬರುತ್ತಿರುವುದನ್ನು ಪಾದರಿ ಸಿಕ್ವೇರಾ ಅಂದು ಕಂಡರು. ಊರ ಇಗರ್ಜಿ ಹಬ್ಬಕ್ಕೆ ಬರುವಂತೆ ಯಾವ ಯಾವ ಪಾದರಿಗಳಿಗೆ ಪತ್ರ ಬರೆಯಬೇಕು ಎಂಬ ವಿಚಾರ ಮಾಡುತ್ತ ಅವರೆಲ್ಲರ ವಿಳಾಸ ಮುಂದಿರಿಸಿಕೊಂಡು ಕುಳಿತಾಗ ಈತ ಬಂದಿದ್ದ. ಇವನ ಅವಸರದ ನಡಿಗೆ ನೋಡಿ ಸಿಕ್ವೇರಾ ಏನೋ ಇದೆ ಅಂದುಕೊಂಡರು.. +ಬಂದವನೇ ಅವಸರದಲ್ಲಿಯೇ- +“ಬ್ಲೇಸ್ ಮಿ ಫ಼ಾದರ್” ಎಂದು ಕೈ ಮುಗಿದ. +ಅವನಿಗೆ ಆಶೀರ್ವದಿಸಿ- +“ಬನ್ನಿ ಏನು ಸಮಾಚಾರ?” ಎಂದು ಮಂಗಳೂರಿನ ಕೊಂಕಣಿಯಲ್ಲಿ ಕೇಳಿದರು ಪಾದರಿ ಸಿಕ್ವೇರಾ. +“ಘಾತ ಜಾಲೋ ಫ಼ಾದರ್..ಘಾತ ಜಾಲೋ..” (ಘಾತವಾಗಿತು ಪಾದರಿಗಳೆ ಘಾತವಾಯಿತು) ಎಂದು ಮನೆಗೆ ಬೆಂಕಿ ಬಿದ್ದಿದೆ ಏನೋ ಅನ್ನುವ ಹಾಗೆ ಕೂಗಿಕೊಂಡ ಪಿಂಟೋ. +“ಏನು ಪಿಂಟೋ ..ಏನಾಯಿತು?” ಎಂದು ಸಿಕ್ವೇರಾ ಕೂಡ ಗಾಬರಿಗೊಂಡರು. ಅದು ಗಾಬರಿಗೊಳ್ಳುವ ವಿಷಯವೇ ಆಗಿತ್ತು. +ಈಗ ಕೆಲವು ವಾರಗಳ ಹಿಂದೆ ಓರ್ವ ಮಧ್ಯವಯಸ್ಕ ಶಿವಸಾಗರದ ಕ್ರೀಸ್ತುವರ ಕೇರಿಗೆ ಬಂದ. ಅವನ ಹೆಗಲಿಗೊಂದು ಚೀಲ. ಕೈಲೊಂದು ಪುಟ್ಟ ಬೈಬಲ್, ಮುಖದ ಮೇಲೆ ಯಾರನ್ನೂ ಮರಳು ಮಾಡಬಲ್ಲ ಮುಗುಳು ನಗೆ. ಈತ ಮೊದಲು ಮಾತನಾಡಿಸಿದ್ದೇ ಬೋನನ ಮಗ ಫ಼ಿಲಿಪ್ಪನನ್ನು. ಫ಼ಿಲಿಪ್ಪನ ಜತೆ ನಡೆದು ಈತ ಅವನ ಜವಳಿ ಅಂಗಡಿಗೆ ಬಂದ. +“ನಾನು ಕ್ರಿಸ್ಟೋಫ಼ರ್ ಅಂತ..ಕಾಸರಗೋದಿನವ..ಟ್ರೂ ಕ್ರಿಶ್ಚಿಯನ್ ಅನ್ನುವ ಸಂಸ್ಥೆಯ ಸದಸ್ಯ..ನಿಜದಲ್ಲಿ ನಾನು ಕ್ರಿಸ್ತನ ಸೇವಕ…” ಎಂದಾತ ತನ್ನ ಪರಿಚಯ ಹೇಳಿಕೊಂಡ. +ಇತ್ತೀಚೆಗೆ ಬೈಬಲ್ ಸೊಸೈಟಿ ಪೆಂಟೆಕೊಸ್ಟ್ ಸಿ.ಎಸ್.ಐ ಎವೆಂಜಲಿಸ್ಟ ಎಂದೆಲ್ಲ ಬೇರೆ ಬೇರೆ ಪಂಥದವರು ಶಿವಸಾಗರಕ್ಕೆ ಬಂದುಹೋಗುವುದು ಸಾಮಾನ್ಯವಾಗಿತ್ತು. ಇವರೆಲ್ಲ ಏಸುವಿನ ಬದುಕು, ಅವನ ಉಪದೇಶ, ಜೀವನ ಸಿದ್ಧಾಂತಗಳಿಗೆ ಹೆಚ್ಚು ಒತ್ತು ಕೊಟ್ಟು ಮಾತನಾಡುತ್ತಿದ್ದರು. ಈ ಪಂಥಗಳಲ್ಲಿ ಇದೂ ಒಂದು ಎಂದುಕೊಂಡ ಫ಼ಿಲಿಪ್ಪ. ಆದರೆ ಆ ಮನುಷ್ಯ ಫ಼ಿಲಿಪ್ಪನನ್ನು ಸುಲಭವಾಗಿ ಬಿಡಲಿಲ್ಲ. +“ಅಲ್ಲ, ನೀವು ಬೈಬಲನ್ನು ಎಷ್ಟು ಸಾರಿ ಓದಿದ್ದೀರಿ?” ಎಂದು ಆತ ಕೇಳಿದ. +“ನಾನು..ನಾನು..” ಫ಼ಿಲಿಪ್ಪ ತೊದಲಿದ. ಉತ್ತರಕೊಡಲು ಅವನಿಂದ ಆಗಲಿಲ್ಲ. ಏಕೆಂದರೆ ಬೈಬಲನ್ನು ಅವನು ಒಂದು ಬಾರಿಯೂ ಓದಿರಲಿಲ್ಲ. +“ನಾನು ಓದಿಲ್ಲ..” +“ತಪ್ಪಲ್ಲವೇ? ನೀವು ಕ್ರಿಷ್ಚಿಯನ್ ಆಗಿ ಬೈಬಲ್ ಓದಿಲ್ಲ ಅನ್ನುವುದು ತಪ್ಪಲ್ಲವೇ ಮುಖ್ಯವಾಗಿ ಬೈಬಲ್ ಓದಿ ಅಂತ ನಿಮ್ಮ ಪಾದರಿ ಯಾವತ್ತೂ ನಿಮಗೆ ಹೇಳಿಲ್ಲ…ದೇವಾಲಯದಲ್ಲಿ ಅವರು ಜನರ ಮೂಲಕ ಓದಿಸುವ ಕೆಲ ಸಾಲುಗಳನ್ನು ಬಿಟ್ಟರೆ ಬೇರೆ ಏನೂ ನಿಮಗೆ ಗೊತ್ತಿಲ್ಲ ಅಲ್ಲವೇ?” +ಫ಼ಿಲಿಪ್ಪ ತಲೆ ತೂಗಿದ. ಅಂಗಡಿಗೆ ಬಂದಾತನನ್ನು ಏನಾದರೂ ಹೇಳಿ ಕಳುಹಿಸಬೇಕು ಎಂದು ವಿಚಾರ ಮಾಡುತ್ತಿದ್ದವ ನಿಧಾನವಾಗಿ ಅವನತ್ತ ಫ಼್ಯಾನನ್ನು ತಿರುಗಿಸಿದ. +ಅವನಿಗೆ ಅಷ್ಟೇ ಸಾಕಾಯಿತು. ಅವನ ದನಿ ಮತ್ತೂ ಮೆದುವಾಯಿತು. ಆದರೆ ಹರಿತವಾಯಿತು ಸೂಕ್ಷ್ಮವಾಯಿತು. +“ನೀವು ಇಂದು ಆಚರಿಸುತ್ತಿರುವುದು ಕ್ರೈಸ್ತ ಧರ್ಮವನ್ನಲ್ಲ. …ಕ್ರೈಸ್ತ ಯಾವತ್ತೂ ದೇವಾಲಯ, ಆರಾಧನೆ, ದೇವರ ಪೀಠ, ಪೂಜೆ, ಪಾದರಿ, ಬಿಶಪ್, ಪೋಪ್, ಸಿಸ್ಟರುಗಳು, ಇವುಗಳಿಗೆ ಪ್ರಾಧಾನ್ಯತೆಯನ್ನು ಕೊಡಲೇ ಇಲ್ಲ. ಪುರೋಹಿತರನ್ನು ಕುರಿಯ ಚರ್ಮ ಧರಿಸಿದ ತೋಳಗಳೆಂದು ಆತ ಕರೆಯುತ್ತಿದ್ದ. ದೇವರನ್ನು ದೇವಾಲಯದಲ್ಲಿ ಪೀಠದ ಮೇಲೆ ವಿಗ್ರಹ ಪ್ರತಿಮೆಗಳಲ್ಲಿ ಹುಡೂಕುವುದನ್ನು ಆತ ವಿರೋಧಿಸುತ್ತಿದ್ದ. ಕ್ರೈಸ್ತನು ನಾವು ನಮ್ಮ ಹೃದಯದಲ್ಲಿ ಪ್ರತಿಷ್ಠೆ ಮಾಡಬೇಕೆ ಹೋರತು ಮತ್ತೆಲ್ಲೋ ಅಲ್ಲ….ಈ ಮೇಣದ ಬತ್ತಿ ಹೂ ಧೂಪಗಳಿಗೆಲ್ಲ ಅರ್ಥವಿಲ್ಲ… …” +ಆತ ಕೇವಲ ಮಾತನಾಡಲಿಲ್ಲ. ಪಟ ಪಟನೆ ಬೈಬಲ್ಲಿನ ಪುಟ ತೆರೆದ. ಅಲ್ಲೊಂದು ಸಾಲು ಇಲ್ಲೊಂದು ಕಂಡಿಕೆ ಓದಿದ. +“ನೋಡಿ ಕ್ರೈಸ್ತನ ಮಾತು ಹೀಗಿದೆ” ಎಂದ. +” ನೀವೇ ಓದಿ, ಪೂರ್ಣ ಬೈಬಲ್ಲನ್ನು ಓದಿ…ಏಸು ಕ್ರಿಸ್ತನ ವಾಕ್ಯಗಳನ್ನು ಕೇಳಿ….” +ಎಂದು ಚೀಲದಿಂದ ಬೇರೊಂದು ಬೈಬಲನ್ನು ತೆಗೆದುಕೊಟ್ಟ. +“ಕ್ರೈಸ್ತ ಧರ್ಮ ಇವತ್ತು ಸಂಪ್ರದಾಯ ಪದ್ಧತಿ ಆಚರಣೆಗಳಿಂದ ತುಂಬಿ ಹೋಗಿದೆ…ಪಾದರಿ ಬಿಶಪ್‌ಗಳು ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಲು ಇದನ್ನೆಲ್ಲ ಸೃಷ್ಟಿ ಮಾಡಿದ್ದಾರೆ…ಏಸು ಕ್ರೀಸ್ತ ಯಾವೆಲ್ಲ ಆಚರಣೆಗಳನ್ನು ಖಂಡಿಸಿದನೋ ಅವೆಲ್ಲ ಮತ್ತೆ ತಲೆ ಎತ್ತಿದೆ. ನಾನು ಏನೂ ಹೇಳುವುದಿಲ್ಲ…ನೀವು ಓದಿ” ಎಂದ. +ಫ಼ಿಲಿಪ್ಪ ಬೈಬಲ್ ಮನೆಗೆ ತಂದು ಓದತೊಡಗಿದ. +ಬೋನ ಓರೆಗಣ್ಣಿನಿಂದ ನೋಡಿದ. ಅವನ ತಾಯಿ – +“ಏನದು?” ಎಂದು ಕೇಳಿದಳು. +ಓದುತ್ತಾ ಹೋದ ಹಾಗೆ ಫ಼ಿಲಿಪ್ಪನ ಎದುರು ಬೇರೆಯೇ ಆದ ಪ್ರಪಂಚವೊಂದು ತೆರೆದುಕೊಂಡಿತು. ರೀತಿ ರಿವಾಜುಗಳಿಂದ ದೂರವಾದ, ಪದ್ಧತಿ ಸಂಪ್ರದಾಯಗಳಿಂದ ಮುಕ್ತವಾದ, ಪಾದರಿಯ ಹೆದರಿಕೆ, ಶಾಪದಿಂದ ಹೊರತಾದ, ಪ್ರೀತಿ, ದಯೆ, ಕರುಣೆ, ಶಾಂತಿ, ಸ್ನೇಹ, ಸೇವೆಗಳೇ ತುಂಬಿಕೊಂಡಿರುವಂತಹ ಒಂದು ಪ್ರಪಂಚ ಅವನಿಗೆ ಕಂಡಿತು. ಕ್ರಿಸ್ತನ ಉಪದೇಶಗಳನ್ನು ಓದುತ್ತ ಆತ ರೋಮಾಂಚನಗೊಂಡ. ಪುಳಕಿತನಾದ, ಇಗರ್ಜಿಗೆ ತಾನು ಎಷ್ಟು ಸಾರಿ ಹೋದೆ? ಪಾದರಿಯ ಪ್ರವಚನ ಕೇಳಿದೆ. ಪಾಪ ನಿವೇದನೆ ಮಾಡಿ ದಿವ್ಯ ಪ್ರಸಾದ ಸ್ವೀಕರಿಸಿದೆ. ಆದರೆ ಈವರೆಗೆ ಈ ಬಗೆಯ ದಿವ್ಯಾನುಭವ ತನಗೆ ಏಕೆ ಆಗಲಿಲ್ಲ ಎಂದು ಯೋಚಿಸಿದ. ಕ್ರಿಸ್ತನ ಒಂದೊಂದು ಮಾತು, ಅವನ ಬದುಕಿನ ಒಂದೊಂದು ಘಟನೆ, ಆತ ಹೇಳಿದ ಒಂದೊಂದು ಕತೆ ಅವನನ್ನು ಎತ್ತರ ಎತ್ತರಕ್ಕೆ ಕೊಂಡೊಯ್ದಿತು. +ಮಾರನೇ ದಿನ ಕ್ರಿಸ್ಟೋಪರ್ ಬಂದಾಗ ಫ಼ಿಲಿಪ್ ಬೇರೆಯೇ ಮನುಷ್ಯನಾಗಿದ್ದ. ಕ್ರಿಸ್ಟೋಪರ್ ಈ ಗುಟ್ಟನ್ನು ತಿಳಿದವನ ಹಾಗೆ ನುಡಿದ. +“ಫ಼ಿಲಿಪ್ಪ್…ಏಸುವನ್ನು ನಾವು ನಮ್ಮೊಳಗೆ ತಂದುಕೊಳ್ಳಬೇಕಲ್ಲದೇ ಗುಡಿಯ ಪೀಠದ ಮೇಳೆ ಕೂಡಿಸುವುದಲ್ಲ. ಏಸು ನಮ್ಮಲ್ಲಿ…ನಮ್ಮ ಅಂತರಂಗದಲ್ಲಿ ಬಂದು ನೆಲೆಸಿದನೆಂದರೆ ನಮಗೆ ಆಗುವ ಅನುಭವ ಸಿಗುವ ಲಾಭ ಬೇರೆ…..” +ಆತನ ಮಾತನ್ನು ಕೇಳುತ್ತ ಕುಳಿತ ಫ಼ಿಲಿಪ್ ಕ್ರಿಸ್ಟೋಪರ್ ಇಷ್ಟಕ್ಕೇನೆ ಸುಮ್ಮನುಳಿಯಲಿಲ್ಲ. ಆತ ಗ್ರೆಗೋರಿಯನ್ನು ಕಂಡ. ಜೂಜೆಯನ್ನು ಮಾತನಾಡಿಸಿದ. ನಾತೇಲಳ ಮಗ ಡೆನಿಯಲ್ ನನ್ನು ತನ್ನ ಕಡೆ ಸೆಳೆದುಕೊಂಡ. ಕೆಲ ಹಿರಿಯರು ಅವನತ್ತ ಸೆಳೆಯಲ್ಪಟ್ಟರು. +ಆತ ಒಂದು ದಿನ ಡೆನಿಯಲ್ ಜತೆ ಸಾಂತಾಮೊರಿ ಮನೆಗೂ ಬಂದ. ಅಲ್ಲಿ ಗೋಡೆಗೆ ಒರಗಿ ಕುಳಿತು ಒಂದು ಸಣ್ಣ ಪ್ರಾರ್ಥನೆ ಮಾಡಿದ. ನಾತೇಲ ದೇವರ ಮುಂದೆ ಮೇಣದ ಬತ್ತಿ ಹಚ್ಚಲು ಹೋದಾಗ ” …….ತಂಗಿ, ಅದರ ಅವಶ್ಯಕತೆ ಇಲ್ಲ…ನಾವು ಬೆಳೆಗಿಸಿಕೊಳ್ಳಬೇಕಾದುದು ನಮ್ಮ ಅಂತಃಕರಣವನ್ನು. ಏಸುವಿನ ಮಾತುಗಳೇ ಈ ಕೆಲಸವನ್ನು ಮಾಡುತ್ತವೆ…” ಎಂದ. ಆತ ಬೈಬಲ್‌ನಿಂದ ಕೆಲ ಸಾಲುಗಳನ್ನು ಓದಿದ. ಅವನ ಮುಂದೆ ಫ಼ಿಲಿಪ್, ಗ್ರೆಗೋರಿ, ಜೂಜ, ಡೆನಿಯಲ್, ನಾತೇಲ ಇನ್ನೂ ಒಂದಿಬ್ಬರು ಕುಳಿತಿದ್ದರು. ಸಾಂತಾಮೊರಿ ಕೂಡ ಬಂದು ಅವರನ್ನು ಸೇರಿಕೊಂಡಳು. +” ಬಂದುಗಳೆ..ನಮ್ಮ ಪಂಥದಲ್ಲಿ ಯಾರೂ ಪಾದರಿಗಳಿಲ್ಲ…ನಾವೆಲ್ಲ ಒಂದೇ…. ನಾವು ಯಾರಲ್ಲೂ ಪಾಪ ನಿವೇದನೆ ಮಾಡಿಕೊಳ್ಳಬೇಕಾಗಿಲ್ಲ….ನಾವು ನೇರವಾಗಿ ಕ್ರಿಸ್ತನೊಡನೆ ವ್ಯವಹರಿಸೋಣ….ನಮಗೆ ಅವನೊಬ್ಬನೇ ಮಾರ್ಗ….ಅವನೊಬ್ಬನೆ ಮುಕ್ತಿ…”. +ಕ್ರಿಸ್ಟೋಫ಼ರ ಮಾತನಾಡುತ್ತಿರುವಾಗ ಇನ್ನೂ ಕೆಲವರು ಅಲ್ಲಿಗೆ ಬಂದು ಸೇರಿಕೊಂಡರು. +* +* +* +ಪಿಂಟೋ ಈ ವಿಷಯವನ್ನು ಹೇಳುತ್ತ ಮೈ ಪರಚಿಕೊಂಡಾಗ +“ಹೌದೆ….ಹೌದೆ ?” ಎಂದು ಕೇಳಿದರು ಸಿಕ್ವೇರಾ. +“ಜೀಸಸ್ ಹೀಗೆ ಆಗಬಾರದಿತ್ತು…ಇಗರ್ಜಿ ಮಾತೆಯ ಭೋದನೆ ಆಚರಣೆಗಳಿಗೆ ವಿರೋಧವಾಗಿ ಹೀಗೊಂದು ಆಚರಣೆ ಬರುವುದೆಂದರೆ ಅದು ಅಪಾಯ…” ಎಂದು ಪಾದರಿ ಚಿಂತಿತರಾದರು. +ಸಿಕ್ವೇರಾ ಅವರಿಗೆ ತಮ್ಮ ಕಾಲಡಿಯಲ್ಲಿ ನೆಲ ಕುಸಿಯುತ್ತಿರುವ ಅನುಭವವಾಯಿತು. ಬೈಬಲ್ ಓದುವ, ಓದಿ ವ್ಯಾಖ್ಯಾನ ಮಾಡುವ ಅಧಿಕಾರ ತಮ್ಮ ಕೈಯಿಂದ ಕಳಚಿ ಹೋಗುತ್ತಿದೆಯೇ ಎಂದವರು ಗಾಬರಿಯಾದರು. ಮುಂದೆ ಮುಂದೆ ಮನೆ ಮನೆಗಳಲ್ಲಿ ತಮಗೆ ತಿಳಿಯದೇ ಈ ಬಗೆಯ ಬೈಬಲ್ ರೀಡಿಂಗ್‌ಗಳು ಆರಂಭವಾಗುತ್ತದೆ. ಜನ ಈ ಬಗೆಯ ಸಭೆ, ಕೂಟಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಊರ ಜನ ಪಾದರಿಯನ್ನು ಧಿಕ್ಕರಿಸಿ ಹೋಗುತ್ತಾರೆ…ಮುಂದೆ? +ಸಿಕ್ವೇರಾ ಕೂಡಲೇ ಮೈ ಕೊಡವಿಕೊಂಡು ಎದ್ದರು. +“ಪಿಂಟೋ ಈ ಬಗ್ಗೆ ಮತ್ತೂ ಮಾಹಿತಿ ಸಿಗಬಹುದೋ ನೋಡಿ..ನಾವು ಈ ಚಟುವಟಿಕೆ ಇಲ್ಲಿಗೇನೆ ನಿಲ್ಲಿಸಬೇಕು….ಕೂಡಲೇ ಮನೆಮನೆಗೆ ಫ಼ಾತಿಮಾ ಮಾತೆಯ ಪ್ರತಿಮೇನ ಕೊಂಡೊಯ್ದು ಅಲ್ಲಿ ಪ್ರಾರ್ಥನೆ ಇತ್ಯಾದಿ ಮಾಡುವುದರ ಮೂಲಕ ಜನರಲ್ಲಿ ದೈವಭಕ್ತಿ ಹೆಚ್ಚುವ ಹಾಗೆ ನೋಡಿಕೊಳ್ಳಬೇಕು..ನಾನು ನೀವು ಎಲ್ಲ ಕ್ರೀಸ್ತುವರ ಮನೆಗಳಿಗೆ ಹೋಗಿ ಬರೋಣ.” ಎಂದು ಅತೀ ಉತ್ಸಾಹದಿಂದ ಹೇಳ ಹೋದವರು ಏಕೋ ತಟ್ಟನೆ ಮಾತಿನ ಧಾಟಿ ಬದಲಾಯಿಸಿ. +“ಇಗರ್ಜಿ ಹಬ್ಬ ಒಂದು ಆಗಲಿ…ನಂತರ ಈ ಬಗ್ಗೆ ಕೆಲಸ ಮಾಡೋಣ..” ಎಂದರು. +“ಹೌದು ಫ಼ಾದರ್..ಇದು ನಮ್ಮ ಸಮೊಡ್ತಿಗೆ ಅಪಾಯ ತರುವಂತಹದು..ನಾವು ಏನನ್ನಾದರೂ ಮಾಡಬೇಕು” ಎಂದು ಅಲೆಕ್ಸ ಪಿಂಟೋ ಸಿಕ್ವೇರರ ದನಿಗೆ ತನ್ನ ದನಿ ಸೇರಿಸಿದ. +* +* +* +ಗುರ್ಕಾರ ಸಿಮೋನ ಏಕೋ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡ. ವಯಸ್ಸಾದದ್ದು ಒಂದು ಕಾರಣವಾದರೆ ತನ್ನ ಸುತ್ತ ನಡೆಯುತ್ತಿರುವುದು ಏಕೋ ಮನಸ್ಸಿಗೆ ಹಿತವನ್ನುಂಟುಮಾಡುವುದಾಗಿರಲಿಲ್ಲ. ಹೀಗೆಂದೇ ಪಾದರಿ ಸಿಕ್ವೇರರಲ್ಲಿಗೆ ಹೋದ ಆತ- +“ಪದ್ರಾಬ..ನನಗೆ ವಯಸ್ಸಾಯಿತು…ಈ ಗುರ್ಕಾರ ಪಟ್ಟ ನನಗೆ ಭಾರವಾಗಿದೆ..ಬೇರೆ ಯಾರನ್ನಾದರೂ ನೇಮಿಸಿದರೆ ಆಗುತ್ತಿತ್ತು..” ಎಂದ. +ಸಿಕ್ವೇರಾ ಅವರಿಗೂ ಈ ಮಾತು ಸರಿ ಎನಿಸಿತು. ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ಈ ಪದವಿ ಬರುವುದಾದ್ದರಿಂದ ಸಿಮೋನನ ಮಗ ವಿಕ್ಟರ್ ಜೋಸೆಫ಼್ ನಗರದ ಗುರ್ಕಾರನೆಂದು ನೇಮಕಗೊಂಡ. ಜನ ಕೂಡ ಇದನ್ನು ಒಪ್ಪಿಕೊಂಡರು. +ಇದೇ ಸಂದರ್ಭದಲ್ಲಿ ಸಿಮೋನನ ಕಿರಿಯ ಮಗ ರಾಬರ್ಟ್ ಎರಡು ಬಾರಿ ಮುರುಡೇಶ್ವರಕ್ಕೆ ಹೋಗಿ ಬಂದಿದ್ದ. ಅವನ ಮರಿಯಾಣ ದೊಡ್ಡಪ್ಪ ಹಾಸಿಗೆ ಹಿಡಿದಿದ್ದ. ಅವನಿಂದ ಏನೂ ಕೆಲಸ ಮಾಡಲು ಆಗುತ್ತಿರಲಿಲ್ಲ. ಆತ- +“ರಬ್ಬಿ ಬಂದು ಬಿಡು, ತೋಟಾನ ನಿನಗೆ ಒಪ್ಪಿಸಿ ನಾನು ಇಗರ್ಜಿ ಮುಂದೆ ಒಂದು ಜಾಗ ನೋಡಿ ಕೊಳತೀನಿ” ಎಂದು ಹೇಳಿದ್ದ. +ಈ ಮಾತು ರಾಬರ್ಟನ ಮನಸ್ಸಿನಲ್ಲಿ ಉಳಿಯಿತು. +* +* +* +ಬಹಳ ದಿನಗಳಿಂದ ಮನಸ್ಸಿನಲ್ಲಿ ಗಟ್ಟಿಯಾಗುತ್ತ ಬಂದ ಈ ವಿಷಯವನ್ನು ಕಾರ್ಯರೂಪಕ್ಕೆ ಇಳಿಸಲು ಒಂದು ದಿನ ರಾಬರ್ಟ ನಿರ್ಧರಿಸಿದ. +ಸಿಮೋನ ಬೆಳಿಗ್ಗೆ ಎದ್ದು ಇಗರ್ಜಿಗೆ ಹೋಗಿ ಬಂದ. ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗಿ ಪೂಜೆ ಆಲಿಸುವುದು ಅವನ ಅಭ್ಯಾಸ. ಹಿಂದೆ ಒಂದಲ್ಲಾ ಒಂದು ಕೆಲಸ ಹಚ್ಚಿಕೊಂಡು ತಿರುಗಾಡುವಾಗ ಇದು ಆಗುತ್ತಿರಲಿಲ್ಲ. ಕ್ರಮೇಣ ಮಕ್ಕಳಿಗೆ ತನ್ನ ಕೆಲಸ ವಹಿಸಿಕೊಟ್ಟನಂತರ ನಿತ್ಯ ಪೂಜೆ ಆಲಿಸುವುದು ಅಭ್ಯಾಸವಾಗಿತ್ತು. ಇಂದು ಏನೋ ಕಳವಳ ಮನಸ್ಸಿನಲ್ಲಿತ್ತು. ಏಕೆಂದು ತಿಳಿಯಲಿಲ್ಲ. +ಮನೆಗೆ ಬಂದಾಗ ಮಗ ರಾಬರ್ಟ್ ಊರಿಗೆ ಹೊರಟು ನಿಂತಿದ್ದ. +“ಅಪ್ಪ ನಾನು ಇಲ್ಲಿಯ ಕೆಲಸ ಬಿಟ್ಟಿದ್ದೇನೆ ಇನ್ನು ಊರಲ್ಲೇ ಇರುವ ಅಂತ ನಿರ್ಧಾರ ಮಾಡಿದ್ದೇನೆ” ಎಂದ. +ಅವನ ಜತೆ ಅವನ ಹೆಂಡತಿ ಮಕ್ಕಳು ಹೊರಟು ನಿಂತಿದ್ದರು. ಈ ಊರು ಬಿಟ್ಟು ಹೋಗುವ ವಿಷಯದಲ್ಲಿ ಅವರಿಗೆ ಅಪಾರವಾದ ಆಸಕ್ತಿ ಉತ್ಸಾಹ ಇದ್ದಂತಿತ್ತು. +ಸಿಮೋನ ಅವರೆಲ್ಲರ ಮುಖ ನೋಡಿದ. +ಒಂದೆರಡು ನಿಮಿಷ ಸುಮ್ಮನೆ ನಿಂತ ನಂತರ- +“ಅಪ್ಪೀ” ಎಂದು ಹೆಂಡತಿಯನ್ನು ಕೂಗಿ ಕರೆದ. +“ನಾನೂ ಘಟ್ಟ ಇಳಿದು ಹೋಗತಿದೀನಿ. ನಾನು ಹುಟ್ಟಿದ ಮನೇಲಿ ನನಗೆ ಒಂದಿಷ್ಟು ಗಂಜಿ ನೀರು ಸಿಗಬಹುದು ಅನ್ನುವ ಭರವಸೆ ಇದೆ. ಯಾರೂ ಇಲ್ಲ ಅಂದ್ರೆ ಅಲ್ಲಿಯ ದೇವರು ನನ್ನ ಪಾಲಿಗಿದಾನೆ…ಏನು ನೀನು ಬರತೀಯ..?” ಎಂದು ಕೇಳಿದ. +ತಟ್ಟನೆ ಈ ಮಾತು ಕೇಳಿ ಬಂದದ್ದರಿಂದ ಅವಳು ಗಲಿಬಿಲಿಗೊಂಡಳು. ಆದರೂ ಗಂಡನ ನಿರ್ಧಾರ ಅವಳಿಗೆ ಸೂಕ್ತವೆನಿಸಿತು. ಮುಂದಿನ ಸಿದ್ಧತೆ ಮಾಡಿಕೊಳ್ಳಲು ಒಳಹೋದಳು. +* +* +* +ಬಸ್ಸು ನಿಲ್ದಾಣವನ್ನು ಬಿಟ್ಟಾಗ ಬೆಳಗಿನ ಏಳು ಗಂಟೆಯಾಗಿತ್ತು. ಇನ್ನೇನು ಊರು ಮುಗಿಯಿತು ಅನ್ನುವಾಗ ಸಿಮೋನ ತಿರುಗಿ ನೋಡಿದ. ಹಸಿರು ಮರ ಗಿಡಗಳ ನಡುವೆ ಹಲವಾರು ಕಾಂಕ್ರೀಟ್ ಕಟ್ಟಡಗಳ ನಡುವೆ ಇಗರ್ಜಿಯ ಎತ್ತರದ ಗೋಪುರ. ಅದರ ಮೇಲಿನ ಶಿಲುಬೆ ಕಂಡಿತು. ಏಕೋ ಕಣ್ಣು ಮಸುಕಾಯಿತು. ತೆಳುವಾಗಿ ನೀರ ಪೊರೆ ಹರಡಿಕೊಂಡಿತು ಬಸ್ಸಿನಿಂದ ಇಳಿದು ಬಿಡಲೆ ಎಂದೂ ಯೋಚಿಸಿದ. ಆದರೂ ಮನಸ್ಸು ಗಟ್ಟಿಮಾಡಿಕೊಂಡು ಕುಳಿತ. +ಬಸ್ಸು ವೇಗವನ್ನು ಹೆಚ್ಚಿಸಿಕೊಂಡು ಊರಿನಿಂದ ಹೊರಬಿದ್ದಿತು. +* +* +* +ಮತ್ತೆ ಕೆಲ ವರುಷಗಳು ಉರುಳಿವೆ. +ಊರು ಬದಲಾಗಿದೆ. +ಸಣ್ಣವರು ದೊಡ್ಡವರಾಗಿ ಬೆಳೆದಿದ್ದಾರೆ. +ದೊಡ್ಡವರಿಗೆ ವಯಸ್ಸಾಗಿದೆ. +ಪಾದರಿ ಸಿಕ್ವೇರಾ ಹೋಗಿ ಪಾದರಿ ಡಿಸೋಜಾ ಶಿವಸಾಗರಕ್ಕೆ ಬಂದಿದ್ದಾರೆ. +ಈಗ… +ಪಾದರಿ ಡಿಸೋಜ ಊರಿನ ಇಗರ್ಜಿ ಕಟ್ಟಿ, ಉದ್ಘಾಟನೆಗೊಂಡು ಐವತ್ತು ವರ್ಷವಾಗಿದೆ ಎಂಬ ವಿಷಯವನ್ನು ಊರಜನರ ಗಮನಕ್ಕೆ ತಂದಿದ್ದಾರೆ. +ಈ ಬಾರಿ ಸಂತ ಜೋಸೆಫ಼ರ ಹಬ್ಬದ ದಿನವೇ ಈ ಐವತ್ತರ ಉತ್ಸವವನ್ನು ಆಚರಿಸಬೇಕೆಂಬ ವಿಚಾರ ಬಂದಿದೆ. ಈ ಸಂದರ್ಭದಲ್ಲಿಯೇ ಈ ಇಗರ್ಜಿ ನಿರ್ಮಾಣಕ್ಕೆ ಕಾರಣರಾದ ಪಾದರಿ ಗೋನಸ್ವಾಲಿಸ್‌ರನ್ನು ಸನ್ಮಾನಿಸುವ ಒಂದು ಕಾರ್ಯವನ್ನು ಕೂಡ ಜನ ಹಮ್ಮಿಕೊಂಡಿದ್ದಾರೆ. +ಬೋನ ನಿಧಾನವಾಗಿ ತನ್ನ ಮಾತು ಮುಗಿಸಿದ. ನೆನಪಿನ ಗುಹೆ ಹೊಕ್ಕ ಆತ ಅಲ್ಲಿಂದ ಹೊರಬಂದ. +* +* +* +ಪಾದರಿ ಗೋನಸ್ವಾಲಿಸ್- +“ಇಷ್ಟೆಲ್ಲ ಆಯಿತೇ ಹಾಗಾದರೆ” ಎಂದು ಇಳಿದನಿಯಲ್ಲಿ ನುಡಿದರು. +ಸಿಮೋನ ಕೂಡ ಊರುಬಿಟ್ಟು ಹೋದನೆ? ಈ ಊರಿನಲ್ಲಿ ಕ್ರೀಸ್ತುವರಿಗೊಂದು ನೆಲೆ ಒದಗಿಸಿದವನೇ ಅವನು, ಅವನೂ ಹೋದನೆ..” ಎಂದವರು ಮಿಡುಕಾಡಿದರು. +“ಫ಼ಾದರ್ ಏಳಿ ಬಹಳ ಹೊತ್ತಾಯಿತು” ಎಂದು ನಾನು ಅವರ ಕೈ ಹಿಡಿದು ಎಬ್ಬಿಸಿದೆ. +“ನಾನು ಬೆಳಿಗ್ಗೆ ಬರತೀನಿ ಫ಼ಾದರ್” ಎಂದು ಬೋನ ಎದ್ದ. +ಪಾದರಿ ಗೋನಸ್ವಾಲಿಸ್ ಎದ್ದರು. ಅವರಲ್ಲಿ ಎಂದಿನ ಉತ್ಸಾಹ ಹುಮ್ಮಸ್ಸು ಇರಲಿಲ್ಲ. +ನಾನು ಅವರ ಕೈ ಹಿಡಿದುಕೊಂಡು ಅವರಿಗಾಗಿ ಇರಿಸಿದ ಕೊಠಡಿಯತ್ತ ಕರೆದೊಯ್ದೆ. +ಕೊನೆಯದಾಗಿ +ಬೆಳಿಗ್ಗೆ ಎದ್ದವರೇ ಗೋನಸ್ವಾಲಿಸ್ ಪೂಜಾ ಉಡುಪು ಧರಿಸಿ ತಾವೇ ಪೂಜೆ ನೆರವೆರಿಸಿದರು. ಪೀಠ ಬಾಲಕನಾಗಿ ನಾನೇ ಅವರಿಗೆ ನೆರವು ನೀಡಿದೆ, ವಯಸ್ಸಾಗಿದ್ದರಿಂದ ದೇವರ ಪೀಠದಲ್ಲಿ ತಿರುಗಾಡುವಾಗ ದಣಿದರು. ನಿಧಾನವಾಗಿ ಹೆಜ್ಜೆ ಹಾಕಿದರು. ಶ್ಲೋಕಗಳನ್ನು ಹೇಳಿದರು. ಬೈಬಲ ಪಠನ ಮಾಡಿದರು. ದಿವ್ಯಪ್ರಸಾದವನ್ನು ತಾವೂ ಸ್ವೀಕರಿಸಿ ನನಗೂ ನೀಡಿದರು. ಪೂಜೆ ಅಷ್ಟೇ ನಿಧಾನವಾದರೂ ಅದರಲ್ಲಿ ಭಕ್ತಿ ಇತ್ತು. ತನ್ಮಯತೆ ಇತ್ತು. ದೇವರನ್ನು ಕಾಣುವ ತವಕವಿತ್ತು. +ಪೂಜೆ ಮುಗಿಸಿ ಕೊಠಡಿಗೆ ಬಂದಾಗ ಅವರ ಉಪಹಾರ ಸಿದ್ದವಾಗಿತ್ತು. ನಾಲ್ಕು ಬ್ರೆಡ್ ಸ್ಲೈಸುಗಳನ್ನು ತಿಂದರು. ಟೀ ಕುಡಿದರು. +“ಸನ್..ನಾನು ಕೇರಿಯೊಳಗೆ ಒಂದು ಸುತ್ತು ಹೋಗಿ ಬರಬೇಕು..” ಎಂದು ನಿಲುವಂಗಿ ಧರಿಸಿದರು. +ಆಗ ಪಾದರಿ ಡಿಸೋಜ- +“ಬ್ಲೇಸ್ ಮಿ ಫ಼ಾದರ್” ಎಂದು ಹೇಳುತ್ತ ಒಳ ಬಂದರು. +“ನಿಮ್ಮನ್ನು ಇಲ್ಲಿಗೆ ಕರೆಸುವುದರಲ್ಲಿ ಇನ್ನೂ ಒಂದು ಉದ್ದೇಶವಿತ್ತು ಫ಼ಾದರ್” ಎಂದರು ಡಿಸೋಜ. +ಅವರು ಕುರ್ಚಿ ಎಳೆದುಕೊಂಡು ಕುಳಿತ ಭಂಗಿ ನೋಡಿದರೆ ಅದು ಒಂದೆರಡು ನಿಮಿಷಗಳಲ್ಲಿ ಹೇಳಿ ಮುಗಿಸುವ ವಿಷಯ ಅಲ್ಲ ಅನಿಸಿತು. +“ಹೇಳಿ” ಎಂದರು ಗೋನಸ್ವಾಲಿಸ್. +ಶಿವಸಾಗರದಲ್ಲಿ ಒಂದು ಹೊಸ ಸಮಸ್ಯೆ ಉದ್ಭವವಾಗಿತ್ತು. ಊರಿನ ಜನರಿಗೂ ಈ ಸಮಸ್ಯೆ ಬೇಕಾಗಿರಲಿಲ್ಲವಾದರೂ ಕೆಲವರು ಈ ಬಗ್ಗೆ ಉತ್ಸುಕರಾಗಿದ್ದರು. +ಇಗರ್ಜಿಯ ಸುತ್ತ ಕೆಲ ಕಟ್ಟಡಗಳು ಎದ್ದು ನಿಂತಿದ್ದವು. ಕಾನ್ವೆಂಟಿನವರು ಹಲವು ಶಾಲಾ ಕಟ್ಟಡಗಳನ್ನು ಕಟ್ಟಿದ್ದರು. ಇನ್ನೂ ಕೆಲವು ಆರಂಭದ ಹಂತದಲ್ಲಿದ್ದವು. ಒಂದು ದೊಡ್ಡ ಕಟ್ಟಡಕ್ಕೆ ಪುರಸಭೆಯವರು ಅನುಮತಿ ನೀಡಿರಲಿಲ್ಲ. ಇಕ್ಕೇರಿ ಅರಸರ ಕಾಲದಲ್ಲಿ ನಿರ್ಮಾಣವಾದ ಒಂದು ಚೌಡಿ ಬನ ಅಲ್ಲಿತ್ತು. ಈ ಚೌಡಿ ಬನವನ್ನು ಇಗರ್ಜಿಯವರು ನಾಶ ಮಾಡಿದ್ದಾರೆ ಎಂಬ ಆಪಾದನೆಯನ್ನು ಕೆಲವರು ಮಾಡಿದ್ದರು. ಈ ಮಾತಿಗೆ ಆಧಾರವಾಗಿ ಅವರು ಕೆಲ ದಾಖಲೆಗಳನ್ನು ಒದಗಿಸಿದ್ದರು. ಈ ಚೌಡಿ ಬನದ ಗುಡಿಯನ್ನು ಗುರುತಿಸಿದ ಹಾಗೆ ಅಲ್ಲಿ ನಾಲ್ಕು ಬದಿಗಳಲ್ಲಿ ನಾಲ್ಕು ಲಿಂಗ ಮುದ್ರೆ ಕಲ್ಲುಗಳು ದೊರೆತಿದ್ದವು. +ಈ ಚೌಡಿ ಬನದ ಪ್ರದೇಶವೇನಿದೆ ಅದನ್ನು ಯಥಾಸ್ಥಿತಿಯಲ್ಲಿ ಬಿಡಬೇಕು. ಅಲ್ಲಿ ಇಗರ್ಜಿಯವರು ಯಾವುದೇ ಕಟ್ಟಡ ಕಟ್ಟಬಾರದು. ಈ ಪ್ರದೇಶವನ್ನು ರಾಜ್ಯ ಪ್ರಾಚ್ಯ ಸಂಶೋಧನಾ ಕೂಡ ಕೇಳಿಬರತೊಡಗಿತ್ತು. +ಪಾದರಿ ಡಿಸೋಜ ಚೌಡಿಬನ ಎಂದು ಕರೆಯಲಾಗುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನೆಲದೊಳಗೆ ಕೆಲಕಂಬಗಳ ಅವಶೇಷಗಳು, ಲಿಂಗ ಮುದ್ರೆ ಕಲ್ಲುಗಳು, ಮಂಟಪದ ಮೇಲಿನ ಕಲ್ಲು ಹಲಗೆ ಇತ್ಯಾದಿ ಅವರಿಗೆ ಸಿಕ್ಕರೂ ಮೇಲೆ ಏನೂ ಇರಲಿಲ್ಲ. +ಈ ಜಾಗ ಕ್ರೀಸ್ತುವರ ವಶಕ್ಕೆ ಬಂದಾಗ ಅಲ್ಲಿ ಏನೂ ಇರಲಿಲ್ಲ ಎಂಬುದನ್ನು ಹೇಳಲು ಬೇಕಾದ ಮಾಹಿತಿ ಅವರಲ್ಲಿ ಇರಲಿಲ್ಲ. ಹೀಗೆಂದೇ ಡಿಸೋಜ ಪಾದರಿ ಗೋನಸ್ವಾಲಿಸ್‌ರಲ್ಲಿ ವಿಷಯವನ್ನು ಪ್ರಸ್ತಾಪಿಸಿದರು. +ಗೋನಸ್ವಾಲಿಸ್‌ರು ಡಿಸೋಜರ ಮಾತುಗಳನ್ನೆಲ್ಲ ಕೇಳಿಸಿಕೊಂಡರು. +“ಅಲ್ಲಿ ಚೌಡಿಯದೊಂದು ವಿಗ್ರಹ, ಒಂದು ಮಂಟಪ ಇದ್ದುದು ನಿಜ. ನಾವು ಸುಳ್ಳು ಹೇಳಲಿಕ್ಕೆ ಆಗುವುದಿಲ್ಲ..” ಎಂದರು ತುಸು ಆತಂಕಕ್ಕೆ ಒಳಗಾಗಿ. +“ಹೀಗೆ ಅಂತ ಹೇಳಿ ಬ್ರಿಟಿಷ ಸರ್ಕಾರ ನಮಗೆ ನೀಡಿದ ಜಾಗಾನ ನಾವೀಗ ಬೇರೆಯವರಿಗೆ ಕೊಡಲಿಕ್ಕೆ ಆಗಲ್ಲ..ಈ ಪ್ರದೇಶ ಒಂದು ಕಾಲದಲ್ಲಿ ರಾಜ ಮಹಾರಾಜರು ಆಳಿದ ಪ್ರದೇಶ. ಅವರ ಕಾಲದ ಕೋಟೆ, ಬುರುಜು, ಗುಡಿ ಮತ್ತೊಂದು ಎಲ್ಲೆಂದರಲ್ಲಿ ಇರಬಹುದು. ಅದೆಲ್ಲ ಹಾಗೇ ಇರಬೇಕು ಅಂದರೆ ಈಗಿನವರು ಎಲ್ಲಿಗೆ ಹೋಗಬೇಕು? ಅಮೂಲ್ಯವಾದದ್ದನ್ನು, ಶ್ರೇಷ್ಠವಾದದ್ದನ್ನು ಸರ್ಕಾರ ರಕ್ಷಿಸಿಕೊಂಡು ಬರಲಿ. ಆದರೆ ಯಾವುದೋ ಮಂಟಪ ಯಾವುದೋ ಕೊಳ ಹಾಗೇ ಇರಬೇಕು ಅನ್ನುವುದರಲ್ಲಿ ಅರ್ಥವಿಲ್ಲ..” +ಗೋನಸ್ವಾಲಿಸ್‌ರ ದನಿ ನಡುಗುತಿತ್ತು. +ಔಡಲಮರದ ಚೌಡಮ್ಮನನ್ನು ಕ್ರೀಸ್ತುವರ ಮನಸ್ಸಿನಿಂದ ಹೊರಹಾಕಲು ಅವರು ದಿಟ್ಟತನದ ಕೆಲ ಕೆಲಸಗಳನ್ನು ಮಾಡಿದ್ದರು. ಆಕೆಯನ್ನು ಕ್ರೀಸ್ತುವರಂತೂ ಮರೆತರು. ಅವಳನ್ನು ಆರಾಧಿಸುತ್ತಿದ್ದ ಜನ ಕೂಡ ಅವಳಿಂದ ದೂರವಾದರು. ಆದರೆ ಈ ಘಟನೆ ನಡೆದ ೫೦ ವರ್ಷಗಳ ನಂತರೆ ಮತ್ತೆ ಈ ಚೌಡಮ್ಮ ಕಾಣಿಸಿಕೊಂಡಳೆ? +” ಆದರೆ ಫ಼ಾದರ್….ಒಂದು ಮಾರ್ಗದವರು ಈ ಬಗ್ಗೆ ತುಂಬಾ ಆಸಕ್ತರಾಗಿದ್ದಾರೆ..” +“ನೀವು ಅವರ ಬಗ್ಗೆ ಯೋಚನೆ ಮಾಡಬೇಡಿ…ಸರ್ಕಾರ, ನ್ಯಾಯಾಲಯಗಳಿರುವತನಕ ನಾವು ಯಾರಿಗೂ ಹೆದರಬೇಕಾಗಲಿಲ್ಲ” +” ಅದು ನಿಜ ಫ಼ಾದರ್..ಈ ಪ್ರಕರಣದಿಂದ ನಮ್ಮ ಜನ ಕೂಡ ವಿಚಲಿತರಾಗಿದ್ದಾರೆ. ಇದು ಒಟ್ಟಿಗೇನೆ ಇರೋ ಜನರ ನಡುವೆ ಭಿನ್ನಾಭಿಪ್ರಾಯಕ್ಕೆ, ಘರ್ಷಣೆಗೆ ಕಾರಣವಾಗಬಾರದು ಅಂತ ನನ್ನ ಆಸೆ.” +“ಹಾಗೆ ಏನು ಆಗಲ್ಲ ಬಿಡಿ…ನಾನು ನಿಮ್ಮ ಹಾಗೆ ಭಿನ್ನಾಭಿಪ್ರಾಯ, ಘರ್ಷಣೆ ಅಂತ ಕೂತಿದ್ರೆ ಇಲ್ಲಿ ಇಗರ್ಜಿ ಆಗತಿರಲಿಲ್ಲ…ಇಷ್ಟೊಂದು ವಿಶಾಲವಾದ ಜಾಗ ನಮಗೆ ಸಿಗುತ್ತಿರಲಿಲ್ಲ..” ಎಂದರು ಗೋನಸ್ವಾಲಿಸ್. +ಪಾದರಿ ಡಿಸೋಜರಿಗೆ ಅವರು ಸಮಾಧಾನ ಹೇಳಿದರಾದರೂ ಮನಸ್ಸಿನ ಒಳ ಪದರಿನಲ್ಲಿ ಏನೋ ಭೀತಿ, ಆತಂಕ ಸುಳಿದಾಡದೆ ಇರಲಿಲ್ಲ. ಈಗ ಏನೇ ಸಮಸ್ಯೆ ಬಂದರೂ ನಾವು ನಾವೇ ಪರಿಹರಿಸಿಕೊಳ್ಳಬೇಕು. ಹಿಂದಿನಂತೆ ಮೆಗ್ಗಾನ ಸಾಹೇಬರಾಗಲಿ, ರಿಪ್ಪಿನ ಸಾಹೇಬರಾಗಲಿ ಕ್ರೈಸ್ತವರನ್ನು ರಕ್ಷಿಸಲು ಇಲ್ಲ ಅಲ್ಲವೇ? +” ಏಕಮಾತ್ರ ನಿಜ ದೇವನ ಮೇಲೆ ಭಾರ ಹಾಕಿ ಎಲ್ಲವೂ ಸುಸೂತ್ರವಾಗಿ ಪರಿಹಾರವಾಗುತ್ತದೆ” ಎಂದು ಹೇಳಿ ಅವರು ಎದ್ದರು. +ಬೋನ ಬಾಗಿಲಲ್ಲಿ ಕಾಣಿಸಿಕೊಂಡ +“ಬೋನ ಹೋಗೋಣ ” ಎಂದರು ಗೋನಸ್ವಾಲಿಸ್. +ಇಗರ್ಜಿ ಪಕ್ಕದ ಕಾಲುದಾರಿ ಹಿಡಿದು ಸಿಮೋನನ ಮನೆಯತ್ತ ತಿರುಗಿದಾಗ ಅವರು ಒಂದೆಡೆ ನಿಂತರು. ಸಂತ ಜೋಸೆಫ಼ರ ಕಲ್ಯಾಣ ಮಂಟಪದ ಮುಂದಿನ ಜಾಗ ಬರಿದಾಗಿತ್ತು. ಅಲ್ಲಿಯ ಮರಗಳನ್ನು ಕಡಿಯಲಾಗಿತ್ತು. ಇದೇ ಜಾಗದಲ್ಲಿಯೇ ಅಲ್ಲವೇ ಔಡಲಮರದ ಚೌಡಮ್ಮ ಇದ್ದುದ್ದು ಎಂದವರು ನೆನಪು ಮಾಡಿಕೊಂಡರು. ಈ ದೇವತೆಯನ್ನು ತಾನು ಇಲ್ಲಿಂದ ಬುಡ ಸಹಿತ ಕಿತ್ತು ಹಾಕಿದೆ ಅಂದುಕೊಂಡನಲ್ಲ ಎಂದವರು ಪೇಚಾಡಿಕೊಂಡರು. ಕಾಂಪೌಂಡಿನ ನಡುವೆ ಇದ್ದ ಕಿರುದಾರಿಯ ಮೂಲಕ ರಸ್ತೆಗೆ ಇಳಿದರು. +” ಓ! ಊರು ಬದಲಾಗಿದೆ” ಎಂದು ಉದ್ಘರಿಸಿದರು. ಸಿಮೋನನ ಮನೆ ಇದ್ದ ಜಾಗದಲ್ಲಿ ಒಂದು ತಾರಸಿ ಕಟ್ಟಡ ನಿಂತಿತ್ತು. ಪಾದರಿಗಳನ್ನು ಕಂಡದ್ದೆ ಸಿಮೋನನ ಹಿರಿಯ ಮಗ ಈಗಿನ ಗುರ್ಕಾರ ರಸ್ತೆಗೆ ಓಡಿ ಬಂದ. +ಕೈ ಮುಗಿದು ಆತ- +” ಮನೆಗೆ ಬನ್ನಿ ಫ಼ಾದರ್..” ಎಂದ. +“ಇರಲಿ..ಎಲ್ಲ ಚೆನ್ನಾಗಿದ್ದಾರ?” ಎಂದು ಕೇಳಿದರು ಗೋನಸ್ವಾಲಿಸ್. +” ಅಪ್ಪ ಅಮ್ಮ ಊರಿಗೆ ಹೋದರು…ನಮ್ಮ ತಮ್ಮ ಕೂಡ ಅಲ್ಲೇ ಇದ್ದಾನೆ..ಇನ್ನೊಬ್ಬ ತಮ್ಮ ಅಪಘಾತಕ್ಕೆ ಸಿಕ್ಕಿ ಸತ್ತ.” +ಪಾದರಿ ಗೋನಸ್ವಾಲಿಸ್ ರಸ್ತೆಯ ಮೇಲೆ ನಿಂತೇ ಸಿಮೋನಿನ ಮನೆ ನೋಡಿದರು. ಹೊರಗಿನ ಅಂಗಳದ ತುಂಬಾ ಹೆಂಗಸರು, ಮಕ್ಕಳು. +“ನನ್ನ ಹೆಂಡತಿ ಮಕ್ಕಳು..ನನ್ನ ತಮ್ಮ ಎರಡನೆಯವ ಅಪಘಾತಕ್ಕೆ ಸಿಕ್ಕ ನಂತರ ಅವನ ಹೆಂಡತಿ ಮಕ್ಕಳು ಕೂಡ ನಮ್ಮ ಮನೆಯಲ್ಲಿದ್ದಾರೆ…ಬಂದು ಅವರನ್ನೆಲ್ಲ ಆಶೀರ್ವಾದಿಸಿ ಪಾದರ್.” +“ದೇವರ ಆಶೀರ್ವಾದ..” +ಅಲ್ಲಿಂದಲೇ ಪಾದರಿ ಗೋನಸ್ವಾಲಿಸ್ ಅಂಗಳದಲ್ಲಿ ನಿಂತ ಎಲ್ಲರಿಗೂ ಆಶೀರ್ವದಿಸಿದರು. ಅಲ್ಲಿ ನಿಂತವರು ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡು ಶಿಲುಬೆಯ ವಂದನೆ ಮಾಡಿದರು. +ವಿಕ್ಟರ್ ಗುರ್ಕಾರನ ತಮ್ಮ ಒಂದು ಅಪಘಾತಕ್ಕೆ ಒಳಗಾಗಿ ಮರಣ ಹೊಂದಿದ್ದ. ಈ ಘಟನೆ ನಡೆದು ಈಗ ಎರಡು ವರ್ಷ. ಅವನ ಹೆಂಡತಿ ಮಕ್ಕಳು ಅನಾಥರಾದರು. +“ಬಂದು ನಮ್ಮಲ್ಲಿರಿ” ಎಂದ ವಿಕ್ಟರ್. ಅವರು ಹಾಗೇ ಮಾಡಿದರು. ಸಿಮೋನ ಊರು ಬಿಟ್ಟ ನಂತರ ಅವನ ಹಿರಿಯ ಮಗ ಬಂದು ಈ ಮನೆಯ ಒಳಗೆ ಸೇರಿಕೊಂಡಿದ್ದ ಉಳಿದ ಮಕ್ಕಳೂ ಈ ಮನೆಯಲ್ಲಿ ಪಾಲು ಕೇಳತೊಡಗಿದರು. ಅವರೆಲ್ಲರ ಬಾಯಿ ಬಡಿದು ವಿಕ್ಟರ್ ಆ ಮನೆಯನ್ನು ತನ್ನದಾಗಿ ಮಾಡಿಕೊಂಡಿದ್ದ. ಆದರೂ ತಮ್ಮನ ಕುಟುಂಬ ಬಂದು ಮನೆ ಸೇರಿಕೊಂಡಿತ್ತು. ಅವರೆಲ್ಲರಿಗೆ ಮಗ್ಗುಲಲ್ಲೈ ಒಂದು ಸಣ್ಣ ಮನೆ ಕಟ್ಟಿಸಿ ಕೊಟ್ಟ. +“ಈ ಮನೇಲಿ ನಿತ್ಯ ಪ್ರಾರ್ಥನೆ, ಜಪ ಕೇಳಿ ಬರೋದು ಹಿಂದೆ. ಈಗ ಹಾಗೇ ಇದೆ ಅಲ್ಲ ಬೋನ?” +ಪಾದರಿ ಗೋನಸ್ವಾಲಿಸ್ ಬೋನನತ್ತ ತಿರುಗಿದರು. +“ಇಲ್ಲ ಫ಼ಾದರ್..ಇಲ್ಲಿ ಈಗ ನಿತ್ಯ ಜಗಳ ವಿಕ್ಟರನಿಗೂ, ಅವನ ತಮ್ಮನ ಹೆಂಡತಿಗೂ ಏನೋ ಸಂಬಂಧ ಬೆಳೆದಿದೆ ಅಂತ ಸುದ್ದಿ. ಇದೇ ಮೂಲ ಕಾರಣವಾಗಿ ಈ ಮನೆ ಹೊಡೆದಾಟ, ಬಡಿದಾಟಗಳ ಕೇಂದ್ರವಾಗಿದೆ” +“ಛೇ!” ಎಂದರು ಪಾದರಿ ಗೋನಸ್ವಾಲಿಸ್. +* +* +* +ಎಮ್ಮೆ ಮರಿಯಾಳ ಹೊಸ ಮನೆ ನೋಡಿ ಅವರಿಗೆ ಅಚ್ಚರಿಯಾಯಿತು. ಬೋನ ಮನೆಯ ಹೆಸರನ್ನು ಓದಿ ಹೇಳಿದರು. ಮನೆ ಜಗಲಿಯ ಮೇಲೆ ಮರಿಯ ಕುಳಿತಿದ್ದಳು. +“ಮರಿಯಾಗೆ ನೂರು ದಾಟಿದೆ..ಯಾರ ಗುರುತು ಪರಿಚಯಾನು ಸಿಗೋದಿಲ್ಲ..ಸದಾ ಕಾಲ ಜಪದ ಮಣಿಗಳನ್ನು ಎಣಿಸೋದೊಂದೇ ಕೆಲಸ. ” ಎಂದ ಬೋನ. +“ಅವಳ ಮಕ್ಕಳು?” +ಮೂರೂ ಜನ ಒಳ್ಳೆ ಕೆಲಸದ ಮೇಲಿದಾರೆ…ಚೆನ್ನಾಗಿಯೂ ಇದ್ದಾರೆ..ದೇವರ ಕೃಪೆ ಅವರ ಮನೆ ಮೇಲಿದೆ..” +“ಹೌದೆ?” +ಗೋನಸ್ವಾಲಿಸ್ ಬೋನನ ಮುಖ ನೋಡಿದರು. +ಮರಿಯ ಎಮ್ಮೆ ಕಟ್ಟಿಕೊಂಡು ಹಾಲು ಮಾರುತ್ತಿದ್ದುದು, ಅವಳ ಮಕ್ಕಳು ಸದಾ ಎಮ್ಮೆ ಕಾಯುವುದು, ಹಾಲು ಕೊಡುವುದು ಎಂದು ತಿರುಗಾಡುತ್ತಿದ್ದುದು ಅವರ ನೆನಪಿಗೆ ಬಂದಿತು. ಆದರೂ ಅವರು ಒಂದು ಒಳ್ಳೆಯ ದಾರಿ ಹಿಡಿದರೆಂದರೆ ಇದು ದೇವರ ಕೃಪೆಯೇ ಅಲ್ಲವೆ? +* * * +ಸುತಾರಿ ಇನಾಸನ ಮನೆ ಎದುರು ತಾವು ಕಟ್ಟಿಸಿದ ಶಿಲುಬೆ ಕಂಬ ಕುಸಿದಿತ್ತು. ಶಿಲುಬೆ ಒಂದು ಕಡೆ ವಾಲಿಕೊಂಡಿತ್ತು. ಈ ದೃಶ್ಯ ಕಂಡು ಗೊನಸ್ವಾಲಿಸ್‌ರು ಕುಸಿದ ಶಿಲುಬೆ ಕಂಬದಂತೆಯೇ ತಾವೂ ಕುಸಿದರು. ತಮ್ಮ ಭಾರವನ್ನೆಲ್ಲ ಊರುಗೋಲಿನ ಮೇಲೆ ಹಾಕಿ ನಿಂತು ಅವರು ಕೇಳಿದರು. +“ಬೋನ ಇದೆಲ್ಲ ಏನು?” +ಬೋನ ಇನಾಸನ ಈರ್ವರು ಮಕ್ಕಳು ಈ ಮನೆಯನ್ನು ಮಾರಿದ್ದನ್ನು ಹೇಳಿದ. ಈರ್ವರೂ ಸಾಲ, ಕುಡಿತಕ್ಕೆ ಬಲಿಯಾಗಿ ಮನೆಗಳನ್ನು ಬ್ಯಾಂಕಿಗೆ ಅಡವಿಟ್ಟು ಸಾಲ ತೆಗೆದರು. ಸಾಲ ತೀರಿಸಲಾಗಲಿಲ್ಲ. ಬ್ಯಾಂಕಿನವರು ಮನೆಗಳನ್ನು ಹರಾಜ ಹಾಕಿದರು. ಹರಾಜಿನಲ್ಲಿ ಕುರುಬರ ಕರಿಯಣ್ಣ ಮನೆಗಳನ್ನು ಕೊಂಡಿದ್ದಾನೆ. ಅಲ್ಲಿ ಒಂದು ದೊಡ್ಡ ಮನೆ ಕಟ್ಟುವ ವಿಚಾರ ಕರಿಯಣ್ಣನಿಗಿದೆ. +ತುಸು ತಡೆದು ಬೋನ- +“ಫ಼ಾದರ್..” ಎಂದ. +ಅವನ ಧ್ವನಿಯಲ್ಲಿ ಏನೋ ಆತಂಕ ಗುರುತಿಸಿದ ಗೋನಸ್ವಾಲಿಸ್- +“ಏನು?” ಎಂದು ಕೇಳಿದರು. +“ಕರಿಯಣ್ಣ..ಅವನ ಮನೆತನದ ದೇವರಿಗೆ ಒಂದು ಸಣ್ಣ ಗುಡಿಯನ್ನು ಕೂಡ ಇಲ್ಲಿ ಕಟ್ಟಬೇಕೂಂತ ಇದಾನೆ.” +ಜೀಸಸ್ ಎಂದು ಉಸುರಿ ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡರು ಗೋನಸ್ವಾಲಿಸ್. ಕಲ್ಲು ಕುಟಿಗನ ಜಾಗದಲ್ಲಿ ಶಿಲುಬೆ ಸ್ಥಾಪಿಸಿದ್ದು ಅವರ ನೆನಪಿಗೆ ಬಂದಿತು. ಹಾಗೆಯೇ ಆ ಹೆಂಗಸು ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಹೇಳಿದ ಮಾತು ಕೂಡ ಏಕೋ ನೆನಪಿಗೆ ಬಂದಿತು. ಹಾಗೆಯೇ ಆ ಹೆಂಗಸು ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಹೇಳಿದ ಮಾತು ಕೂಡ ಏಕೋ ನೆನಪಿಗೆ ಬಂದಿತು. +“ಎಲ್ಲಾ ದೇವ್ರು ಒಂದೇ ಅಲ್ವಾ” +ಅಂದವಳು ಕೇಳಿದ್ದು ಮತ್ತೆ ಕಿವಿಯಲ್ಲಿ ಪ್ರತಿಧ್ವನಿಸಿತು. +ಬಹು ಪ್ರಯಾಸದಲ್ಲಿಯೇ ಅವರು ಮುಂದೆ ಹೆಜ್ಜೆ ಇಟ್ಟರು. +ಸಾನ ಬಾವಿ ಪೆದ್ರು ಮನೆ ಕೂಡ ಬದಲಾಗಿತ್ತು. ಈ ಮನೆಯ ಮುಂದೆ ಒಂದು ಬೋರ್ಡು ತೂಗು ಬಿದ್ದಿತ್ತು. ಇಂಗ್ಲೀಷ ಹಾಗೂ ಕನ್ನಡದ ದಪ್ಪ ಅಕ್ಷರಗಳು ಅಲ್ಲಿದ್ದವು. “ಟ್ರೂ ಕ್ರಿಶ್ಚಿಯನ್ಸ್ ಪ್ರೇಯರ್ ಹಾಲ್” ಎಂಬ ವಾಕ್ಯವನ್ನು ಪಾದರಿ ಗೋನಸ್ವಾಲಿಸ್ ಓದಿದರು. +ಬೋನ ಅವರಿಗೆ ಮುಂದಿನ ವಿವರಗಳನ್ನು ನೀಡಿದ. +“ಶಿವಸಾಗರದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಹೊಸ ಕ್ರೈಸ್ತ ಪಂಥ ತುಂಬಾ ಜನಪ್ರಿಯವಾಗಿದೆ. ಸಾನಬಾವಿ ಪೆದ್ರು ಮಗ ಗ್ರೆಗೋರಿ ಈ ಪಂಥದ ನಾಯಕತ್ವವನ್ನು ವಹಿಸಿಕೊಂಡಿದ್ದಾನೆ. ಎಷ್ಟೋ ಜನ ಯುವಕ ಯುವತಿಯರು ಈ ಪಂಥವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಗ ಫ಼ಿಲಿಪ್ಪ ಕೂಡ ಈಗ ಈ ಪಂಥಕ್ಕೆ ನಡೆದುಕೊಳ್ಳುತ್ತಿದ್ದಾನೆ. ಅವನ ಮದುವೆ ಕೂಡ ಇಲ್ಲಿಯೇ ಆಗಿ ಗಂಡ ಹೆಂಡತಿ ಸುಖವಾಗಿದ್ದಾರೆ.” +ಪಾದರಿ ಗೋನಸ್ವಾಲಿಸ್ ಸಾಕು ಎಂಬಂತೆ ಸಂಜ್ಞೆ ಮಾಡಿದರು. ಏಕೋ ಬೋನನ ಬಾಯಿಂದ ಹೊರ ಬೀಳಬಹುದಾದ ಮುಂದಿನ ಮಾತುಗಳನ್ನು ಕೇಳಲು ಅವರು ಸಿದ್ಧರಿರಲಿಲ್ಲ. +ಅವರು ಮತ್ತೂ ಒಂದೆರಡು ಮನೆಗಳವರೆಗೆ ನಡೆದುಕೊಂಡು ಹೋದರು. +ಮನೆಗಳ ಮುಂದೆ ದೇವರ ಪಟಗಳು ತೂಗು ಬಿದ್ದಿದ್ದವು. ಒಳಗೆ ದೇವರ ಪೀಠಗಳು ಕಾಣುತ್ತಿದ್ದವು. ಕೆಲವರು ಮುಂದೆ ಬಂದು ಗೋನಸ್ವಾಲಿಸರಿಗೆ ಕೈ ಮುಗಿದರು ಕೂಡ. +ಮನೆ ಮನೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿತ್ತು. ಹಬ್ಬಕ್ಕಾಗಿ ಕೇರಿ ಸಜ್ಜುಗೊಳ್ಳುತ್ತಲಿತ್ತು. +“ಆಯಿತು ಎಲ್ಲ ನೋಡಿ ಆಯಿತಲ್ಲ” ಎಂದವರು ತಿರುಗಿದರು. +ಅವರು ತಲೆ ಕೆಳಗೆ ಹಾಕಿದ್ದರು. ಅವರ ಕೈಲಿದ್ದ ಬೆತ್ತ ಕಂಪಿಸುತ್ತಲಿತ್ತು. ಕಾಲುಗಳು ನಡುಗುತ್ತಲಿದ್ದವು. ಅವರಲ್ಲಿದ್ದ ಉತ್ಸಾಹ, ಆಸಕ್ತಿ ಉಡುಗಿ ಹೋಗಿತ್ತು. +ನಾನು ಅವರ ತೋಳು ಹಿಡಿದುಕೊಂಡೆ. +ಬೋನ ನಮ್ಮನ್ನು ಹಿಂಬಾಲಿಸಿದ. +ಇಷ್ಟಾದರೂ ತಾವು ಹಲವಾರು ವರುಷ ಕೆಲಸ ಮಾಡಿದ ಊರಿನ ಬಗ್ಗೆ ತಿಳಿಯಬೇಕು ಎಂಬ ಅವರ ಉತ್ಸಾಹ ಆಸಕ್ತಿ ಮುರುಟಿಕೊಳ್ಳಲಿಲ್ಲವೇನೋ. +ಬಂಗಲೆಗೆ ಬಂದವರೇ ಅವರು ಕೊಂಚ ವಿಶ್ರಾಂತಿ ಪಡೆದರು. ವಿಶ್ರಾಂತಿಯ ನಡುವೆಯೇ ಅವರು ಏನನ್ನೋ ನೆನಪಿಗೆ ತಂದುಕೊಂಡವರಂತೆ ಎದ್ದು ಹೊರ ಬಂದರು. +ನಾನು ಬೋನ ಮಾತನಾಡುತ್ತ ಕುಳಿತಲ್ಲಿಗೆ ಬಂದು- +“ಬೋನಾ” ಎಂದರು. +“ಫ಼ಾದರ್..” ಎಂದ ಬೋನ. +“ಅಂಕೋಲದ ಒಬ್ಬ ಕೈತಾನ ಎನ್ನುವವ ಇಲ್ಲಿ ಇದ್ದ ನೆನಪು. ಮನೆ ತುಂಬಾ ಹೆಣ್ಣು ಮಕ್ಕಳಿದ್ದರು. ಕೊನೆಯ ಮಗ ದುಮಿಂಗ ಎಂದೇನೋ ಅವನ ಹೆಸರಿತ್ತು..” +“ಕೈತಾನ..ಅವನ ಹೆಂಡತಿ ಕಾಸಿಲ್ಡ, ಮಗಳ ಜತೆ ಶಿವಮೊಗ್ಗಕ್ಕೆ ಹೋದರು ಫ಼ಾದರ್..ಅವರ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು. ಕೈತಾನ ತೀರಿಕೊಂಡು ಈಗ ಐದಾರು ವರ್ಷ ಆಗಿದೆ. ಅವನ ಹೆಂಡತಿ ಮಗಳು ಅಳಿಯನ ಜತೆ ಇದ್ದಾರೆ.” ಎಂದ ಬೋನ ಪ್ರೆಸಿಲ್ಲಾಳ ಕತೆ ಹೇಳಿದ. +ಪ್ರೆಸಿಲ್ಲಾ ಬೇರೆ ಮನೆ ಮಾಡಿದಳು. ತಂದೆ ತಾಯಿಯನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡಳು. ಕೈತಾನ ಕಾಸಿಲ್ಡ ನೆಮ್ಮದಿಯಿಂದಲೇ ಇದ್ದರು. +ಮಗಳಿಗೊಂದು ಮದುವೆ ಮಾಡಬೇಕು ಎಂಬ ಚಿಂತೆ ಕೈತಾನನಿಗೆ ಪ್ರಾರಂಭವಾದಾಗ ಪ್ರಸಿಲ್ಲಾ- +“ಬಾಬಾ ನಾನೇ ವರನನ್ನು ಹುಡುಕಿಕೊಂಡಿದ್ದೇನೆ” ಎಂದಳು. +ಅವಳ ಸಂಗಡ ಕೆಲಸ ಮಾಡುತ್ತಿದ್ದ ರಾಮಚಂದ್ರ ಅವಳ ಕೈ ಹಿಡಿಯಲು ಮುಂದಾಗಿದ್ದ. +“ಬೇರೆ ಜಾತಿ..ಚಿಂತೆ ಇಲ್ಲ..ಪಾದರಿಗಳಿಗೆ ಹೇಳಿ ಅವನನ್ನ ನಮ್ಮ ಜಾತಿಗೆ ಸೇರಿಸಿಕೊಳ್ಳೋಣ” ಎಂದ ಕೈತಾನ. +“ಇಲ್ಲ ಬಾಬಾ…ಅವರು ಇದಕ್ಕೆ ವಿರೋಧ” +“ಮತ್ತೆ?” +“ನಾನೇ ಅವರ ಜತೆ ಹೊಂದಿಕೋಬೇಕು” +ಹಾಗೇ ಆಯಿತು. ಧರ್ಮಸ್ಥಳದಲ್ಲಿ ಇವರ ಮದುವೆಯಾಯಿತು. ಕುಂಕುಮ ಅರಿಶಿಣ ಹಚ್ಚಿಕೊಂಡು ಬಂದ ಮಗಳನ್ನು ನೋಡಿ ಕೈತಾನ ಕಾಸಿಲ್ಡ ಅಂತರಂಗದಲ್ಲಿಯೇ ಬೆಂದರು. ರಾಮಚಂದ್ರ ಇವರ ಜತೇಗೇನೆ ಉಳಿದ. ಆದರೆ ಸಿಲ್ವಿಯಾ ಇಗರ್ಜಿಗೆ ಹೋಗುವುದನ್ನು ಬಿಟ್ಟಳು. ಶುಕ್ರವಾರ ಗಂಡನ ಸಂಗಡ ಹೋಗಿ ದೇವರಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಬರುತ್ತಿದ್ದಳು. +ರಾಮಚಂದ್ರ ಕೈತಾನ ಕಾಸಿಲ್ಡರ ಪ್ರಾರ್ಥನೆ ಜಪಕ್ಕೆ ತೊಂದರೆ ಮಾಡಲಿಲ್ಲ. ಆದರೆ ಪ್ರೆಸಿಲ್ಲಾ ಕ್ರಿಸ್ತುವಳಾಗಿ ಉಳಿಯಲಿಲ್ಲ. +ಇದೇ ವ್ಯಥೆಯಲ್ಲಿ ಕೈತಾನ ತೀರಿಕೊಂಡ. +ಕಾಸಿಲ್ಡ ಬದುಕಿದ್ದಾಳೆ. ಅವಳು ಇಗರ್ಜಿಗೆ ಹೋಗುತ್ತಾಳೆ. ಜನ ಆಡುವ ಮಾತಿಗೆ ತಲೆಯೊಡ್ಡುತ್ತಾಳೆ. +“ಈಗ ಪ್ರೆಸಿಲ್ಲಾಗೆ ಇಬ್ಬರು ಮಕ್ಕಳು..ವಿನಾಯಕ, ವಿಜಯೇಂದ್ರ..” +“ಸರಿ ಬಿಡು..” ಎಂದು ಪಾದರಿ ಎದ್ದು ಒಳ ಹೋದರು. +* +* +* +ಅಂದು ಸಂತ ಜೋಸೆಫ಼ರ ಹಬ್ಬ. ಏಳೆಂಟು ಊರುಗಳಿಂದ ಬೋಳು ಮುಖದ, ಬುಶ ಪ್ಯಾಂಟ್ ಧರಿಸಿದ ಹುಡೂಗರು ’ಪಾದರಿ’ ಎಂದು ಕರೆಸಿಕೊಂಡು ಡಿಸೋಜರ ಬಂಗಲೆಯಲ್ಲಿ ಸೇರಿಕೊಂಡರು. ಹಬ್ಬದ ಅಡಿಗೆ ಮಾಡಲು ಬಿಸ್ಮಿಲ್ಲಾ ಹೋಟೆಲಿನ ಪಕಾತಿಗಳು‌ಎರಡು ದಿನಗಳ ಮಟ್ಟಿಗೆ ಕೂಜ್ನ ಅನ್ನು ಆಕ್ರಮಿಸಿಕೊಂಡರು. ಬೆಳಿಗ್ಗೆ ಐದು ಗಂಟೇಗೆನೆ ಸಾದಾ ಪೂಜೆಗಳು ಆರಂಭವಾದವು. ಆರು ಜನ ಗುರುಗಳು ಒಂಬತ್ತು ಗಂಟೆಯ ಗಾಯನ ಪೂಜೆಯನ್ನು ನಡೆಸಿಕೊಟ್ಟರು. ಬೆಳಿಗ್ಗೆ ಬಂದು ಸಾದಾ ಪೂಜೆ ಮಾಡಿ ಪಾದರಿ ಗೋನಸ್ವಾಲಿಸ್ ಬಂಗಲೆಗೆ ಬಂದರು. ಸಂಜೆ ನಡೆಯಲಿರುವ ಮೆರವಣಿಗೆಯಲ್ಲಿ ಅವರು ಪಾಲುಗೊಳ್ಳಬೇಕಿತ್ತು. ಮೆರವಣಿಗೆ ನಂತರದ ಒಂದು ಸಮಾರಂಭದಲ್ಲಿ ಅವರ ಸನ್ಮಾನ ನಡೆಯಲಿತ್ತು. +ಗೋನಸ್ವಾಲಿಸ್‌ರನ್ನು ಅವರ ಕೊಠಡಿಯಲ್ಲಿ ಬಿಟ್ಟು ಇಗರ್ಜಿಯತ್ತ ಹೋದ ನನಗೆ ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಖಚಿತವಾಯಿತು. +ಪ್ರತಿ ವರುಷ ಹಬ್ಬದ ದಿನ ದೇವರ ಪುರುಶಾಂವಂ ಒಂದು ನಿಶ್ಚಿತ ದಾರಿಯಲ್ಲಿ ಹೋಗುತ್ತಿತ್ತಂತೆ. ಇಗರ್ಜಿಯಿಂದ ಹೊರಬಿದ್ದ ದೇವರ, ಸಂತರ ಚರೇಲಗಳು ಸಿಮೋನನ ಮನೆ ಎದುರಿನಿಂದ ಹೊರಟು ಪಾಸ್ಕೊಲ ಮೇಸ್ತನ ಮನೆಯ ಬಳಿ ಬಲಕ್ಕೆ ತಿರುಗಿ ವೈಜೀಣ ಕತ್ರೀನಳ ಮನೆಯ ಬಳಿ ಮತ್ತೆ ತಿರುಗಿ ಇಗರ್ಜಿಗೆ ಒಂದು ಸುತ್ತು ಹಾಕಿ ಮರುಳುತ್ತಿದ್ದವು. ಫ಼ಾತಿಮಾ ನಗರದಲ್ಲೂ ಮನೆಗಳಾದ ಮೇಲೆ ಅಲ್ಲಿಗೂ ದೇವರ ಚರೇಲ ತರಬೇಕು ಎಂಬ ಬೇಡಿಕೆಯಿತ್ತು. ಆದರೆ ಈ ಬಗ್ಗೆ ಯಾರೂ ಪ್ರಯತ್ನಿಸಿರಲಿಲ್ಲ. ಊರಿನ ಬೇರೆಡೆಯಲ್ಲೂ ಕ್ರೀಸ್ತುವರ ಮನೆಗಳಿವೆ. ಅಲ್ಲಿಗೆಲ್ಲ ಹೋಗಲಾಗುವುದಿಲ್ಲ. ಸಾಂಕೇತಿಕವಾಗಿ ಇಗರ್ಜಿ ಸುತ್ತ ದೇವರ ಮೆರವಣಿಗೆ ಹೋದರೆ ಸಾಕು ಎಂದು ಧಾಜಣ್ ನಿರ್ಧರಿಸಿದ್ದರು. +ಆದರೆ ಈ ಬಾರಿ ದೇವರ ಮೆರವಣಿಗೆಯ ದಾರಿ ಬದಲಾಗಿದೆ ಎಂಬ ಮಾತು ಕೇಳಿ ಬಂತು. ಈ ಬಾರಿ ದೇವರು ಫ಼ಾತಿಮಾ ನಗರಕ್ಕೆ ಮೊದಲು ಹೋಗಬೇಕು ನಂತರ ಸರಕಾರಿ ಬಾವಿಯ ಬಳಿ ಹೊರಳಿ ಸಾಂತಾ ಮೊರಿ ಮನೆ ಎದುರಿನಿಂದ ಸಿಮೋನನ ಮನೆ ಬಳಿ ಹೊರಳಿ ಇಗರ್ಜಿಗೆ ಬರುವುದು ಎಂದಾಯಿತು. +“ಈ ದಾರಿ ಬದಲಾವಣೆ ಯಾರು ಮಾಡಿದ್ದು?” ಎಂದು ಕೆಲವರು ಗುರ್ಕಾರ ವಿಕ್ಟರನನ್ನು ಕೇಳಿದರು. +“ನನಗೆ ಗೊತ್ತಿಲ್ಲ, ಗುರ್ಕಾರ ಪಿಂಟೋನ ಕೇಳಿ” ಎಂದ ಆತ. +ಪಿಂಟೋ ಅವನ ಮಂಗಳೂರಿನ ಭಾಷೆಯಲ್ಲಿ- +“ಏನಾಯಿತು? ಅಲ್ಲೂ ನಮ್ಮವರ ಮನೆಗಳಿವೆಯಲ್ವ” ಎಂದ. +ಪಾಸ್ಕೋಲ ಬೋನ ಉಳಿದಹಿರಿಯರು ಹೀಗೆ ಆಗಬಾರದಿತ್ತು ಎಂದರು. +ತರುಣರು ಇದು ಹೇಗೆ ಆಗುತ್ತೋ ನೋಡೋಣ ಎಂದರು. +ಹಳೆಯ ರಸ್ತೆಯ ಉದ್ದಕ್ಕೂ ತೋರಣಗಳು ಎದ್ದವು. +ಫ಼ಾತಿಮಾ ನಗರದ ಕ್ರೀಸ್ತುವರ ಮನೆಗಳ ಮುಂದೆಯೂ ತೋರಣಗಳು ಕಂಡವು. +“ಸಂತ ಜೋಸೆಫ಼ರೇ ನಮಗಾಗಿ ಪ್ರಾರ್ಥಿಸಿರಿ” +“ದೇವ ಬೋರೆಂ ಕರುಂ” (ದೇವರು ಒಳಿತನ್ನು ಮಾಡಲಿ) ಎಂಬ ಬಟ್ಟೆ ಫ಼ಲಕಗಳು ಅಲ್ಲಲ್ಲಿ ಕಂಡವು. +ಮನೆ ಮನೆ ಮುಂದೆ ದೇವರು ಬಂದಾಗ ಹೂವು ನೀಡಲು, ಮೇಣದ ಬತ್ತಿ ಹಚ್ಚಲು ವ್ಯವಸ್ಥೆ ಮಾಡಲಾಯಿತು. +ಸಂತ ಜೋಸೆಫ಼ರ ಪ್ರತಿಮೆ ಇಡಲು ದೋಣಿಯಾಕಾರದ ಒಂದು ಚರೇಲನ್ನು ಸಿದ್ಧಪಡಿಸಲಾಯಿತು. ಇತರೆ ಸಂತರಿಗಾಗಿಯೂ ಬಗೆ ಬಗೆಯಲ್ಲಿ ಸಿಂಗಾರ ಮಾಡಿದ ಚರೇಲಗಳನ್ನು ಕೂಡ ಸಜ್ಜು ಮಾಡಲಾಯಿತು. +ಹಬ್ಬಕ್ಕೆಂದು ಬಂದಿರುವ ಎಲ್ಲ ಪಾದರಿಗಳೂ ನಡೆದುಕೊಂಡೇ ಮೆರವಣಿಗೆಯ ಜೊತೆ ಬರಬೇಕೆಂದು ತೀರ್ಮಾನವಾಯಿತು. ಆದರೆ ಪಾದರಿ ಗೋನಸ್ವಾಲಿಸ್‌ರು ಮಾತ್ರ ತಮ್ಮ ಕಾರಿನಲ್ಲಿ ಕೂತು ಚರೇಲುಗಳ ಹಿಂದೆ ಬರಬೇಕೆಂದು ಪಾದರಿ ಡಿಸೋಜ ನನಗೆ ತಿಳಿಸಿದರು. +ಸಂಜೆಯಾಯಿತು. +ಇಗರ್ಜಿಯ ಗಂಟೆಯಾಯಿತು. +ಮತ್ತೆ ಇಗರ್ಜಿಯ ತುಂಬ ಜನ. +ಪೌಡರು ಸೆಂಟಿನ ವಾಸನೆ. ಹೊಸ ಉಡುಪಿನ ಸರಬರ, ಸಡಗರ, ಮೊದಲು ಒಂದು ಕಿರು ಪ್ರಾರ್ಥನೆ. ಮೆರವಣಿಗೆಯಲ್ಲಿ ಶಿಸ್ತಿನಿಂದ ಭಕ್ತಿಯಿಂದ ವರ್ತಿಸಿ ಇತರೇ ಧರ್ಮೀಯರಿಗೆ ಆದರ್ಶಪ್ರಾಯರಾಗಿರಿ ಎಂಬ ವಿನಂತಿ. ಮಿರೋಣ ಡಯಾಸ್, ಗುರ್ಕಾರ ಪಿಂಟೋ ಫ಼ುಲ್ ಶೂಟಿನಲ್ಲಿದ್ದರು. +ಮೊದಲ ಅಡ್ಡಸಾಲಿನಲ್ಲಿ ನಡುವೆ ಶಿಲುಬೆ. ಎರಡೂ ಬದಿಗಳಲ್ಲಿ ಮೇಣದ ಬತ್ತಿ ಹಚ್ಚಿದ ದೀವಲಿಗಳು. ಇವರ ಹಿಂದೆ ಎರಡು ಉದ್ದ ಸಾಲು. ಒಂದು ಸಾಲಿನಲ್ಲಿ ಹುಡುಗರು, ಇನ್ನೊಂದು ಸಾಲಿನಲ್ಲಿ ಹುಡುಗಿಯರು. ಇವರ ಹಿಂದೆ ಗಂಡಸರು, ಹೆಂಗಸರು ಎಲ್ಲರ ಕೈಯಲ್ಲು ಮೇಣದ ಬತ್ತಿಗಳು. ಜಪಸರ, ಬಾಯಲ್ಲಿ ಜಪ, ಕೀರ್ತನೆ. ಬೇರೆ ಗದ್ದಲವಿಲ್ಲ, ಗಡಿಬಿಡಿಯಿಲ್ಲ. ಎಲ್ಲವೂ ವ್ಯವಸ್ಥಿತ ಭಕ್ತಿಯಿಂದ ದೈವಿಕತೆಯಿಂದ ಪ್ರಭಾವಿತ. +ಗುರ್ಕಾರಗಳು, ಹಿರಿಯರು ಇಗರ್ಜಿಯಿಂದ ಹೊರಬಿದ್ದವರನ್ನು ಸಾಲು ಸಾಲಾಗಿ ನಿಲ್ಲಿಸಿ- +“..ಇನ್ನು ಹೊರಡಿ” ಎಂದರು. +ಎಲ್ಲರಿಗೂ ಮುಂದಿದ್ದ ರೈಮೆಂಡ ಬ್ಯಾಂಡು ಸದ್ದು ಮಾಡತೊಡಗಿತು. ಇಂತ್ರು ಮಗ ಚಾಮಾದೋರ ಸಿರೀಲ ಗರ್ನೇಲ ಇರುವ ಚೀಲವನ್ನು ಒಂದು ಕೈಯಲ್ಲಿ ಉರಿಯುತ್ತಿರುವ ಸೆಣಬಿನ ಹಗ್ಗವನ್ನು ಇನ್ನೊಂದು ಕೈಯಲ್ಲಿ ಹಿಡಿದು ಹೊರಟ. ಅಲ್ಲಲ್ಲಿ ಪಾದರಿಗಳು, ಸಿಸ್ಟರುಗಳು ಮೆರವಣಿಗೆಯ ಜೊತೆಗೇನೆ ಹೊರಟ ಸಂತ ಸಂತಿಣೆಯರ ಅಲಂಕೃತ ಚರೇಲುಗಳು. ತುತ್ತ ತುದಿಯಲ್ಲಿ ಸಂತ ಜೋಸೆಫ಼ರ ದೋಣಿ. ಹಿಂದೆಯೇ ಡೈನಮೋ ಇರಿಸಿ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಮಾಡಲಾಗಿತ್ತು. +“ಮಹೋನ್ನತ ದೇವರಿಗೆ ಸ್ತುತಿಯಾಗಲಿ” ಎಂಬ ಕೀರ್ತನೆಯೊಂದು ಪುರುಶಾಂವನಲ್ಲಿದ್ದ ಎಲ್ಲರ ನಾಲಿಗೆಗಳ ಮೇಲೆ ನಲಿಯುತ್ತಿರಲು, ಜನ ಒಂದೇ ಧ್ವನಿಯಲ್ಲಿ ಹಾಡುತ್ತಿರಲು ಇಗರ್ಜಿಯ ಗಂಟೆ ಮೆರವಣಿಗೆ ಹೊರಟಿತೆಂಬುದನ್ನು ಸಾರುವಂತೆ ಸದ್ದು ಮಾಡತೊಡಗಿತು. ಇಗರ್ಜಿಯಿಂದ ಮೆರವಣಿಗೆ ರಸ್ತೆಗೆ ಬಂದಿತು. +ಮೊದಲ ಸಾಲಿನ ಹುಡುಗ ಹುಡುಗಿಯರ ಹಿಂದೆಯೇ ಫ಼ಾತಿಮಾ ನಗರದ ಡಯಾಸ್, ಪಿಂಟೋ, ಡಿಸೋಜ, ಫ಼ರ್ನಾಂಡಿಸ್, ಬ್ರೆಟ್ಟೋ ಕುಟುಂಬಗಳವರು, ಇವರಿಗೆ ಯಾವತ್ತೂ ಮೊದಲ ಸ್ಥಾನ. ಇಗರ್ಜಿಯ ಬೆಂಚುಗಳು ಇವರಿಗೆ. ದಿವ್ಯಪ್ರಸಾದ ಹಂಚುವಾಗ ಇವರಿಗೇ ಮೊದಲು. ಸಿಮಿತ್ರಿಯಲ್ಲಿ ಇವರ ಕುಟುಂಬ ವರ್ಗದವರಿಗೆ ಮೊದಲ ಸಾಲು. ಪಾದರಿ ಮಾತನಾಡಿಸುವುದು ಮೊದಲು ಇವರನ್ನು. ಸಿಸ್ಟರುಗಳು ಹೆಚ್ಚು ಅಂಕ ಕೊಡುವುದು ಇವರ ಮಕ್ಕಳಿಗೇನೆ. ಮನೆ ಮಂತ್ರಿಸುವಾಗ ಪಾದರಿ ಮೊದಲು ಹೋಗುವುದು ಇವರ ಮನೆಗಳಿಗೆ. ಹೀಗಿರುವಾಗ ದೇವರ ಮೆರವಣಿಗೆಯಲ್ಲಿ ಇವರು ಮೊದಲಲ್ಲಿ ಇರಬೇಕಲ್ಲವೆ? ಸೂಟು ಧರಿಸಿ, ಟೈ ಬಿಗಿದುಕೊಂಡ ಗಂಡಸರು, ಫ಼್ರಾಕು, ಸೀರೆ ಧರಿಸಿ ಹಿಮ್ಮಡಿ ಎತ್ತರದ ಚಪ್ಪಲಿ ಮೆಟ್ಟಿ, ಕೆನ್ನೆ ತುಟಿಗಳಿಗೆ ಕೆಂಪು ಬಳಿದುಕೊಂಡ ಹೆಂಗಸರು ಇಲ್ಲಿದ್ದರು. +ಇವರೆಲ್ಲ ಸಂತ ಸಂತಿಣೆಯರ ಚರೇಲುಗಳನ್ನು ನಡುವೆ ಇರಿಸಿಕೊಂಡು ಫ಼ಾತಿಮಾ ನಗರದತ್ತ ಹೊರಟರು. ಇವರಿಗೆ ಅಪರಿಮಿತ ಸಂತೋಷವಾಗಿತ್ತು. ಇಂದು ದೇವರು ತಮ್ಮ ಬೀದಿಗೇ ಬರುತ್ತಿದ್ದಾನಲ್ಲವೆ? +ಈ ಜನರ ಬಗ್ಗೆಯೇ ಸದಾ ಆಸಕ್ತಿ ತೆಗೆದುಕೊಳ್ಳುತ್ತಿದ್ದ ಪಾದರಿಗಳು, ಸಿಸ್ತರುಗಳು ಕೂಡ ಈ ಸಾಲಿನಲ್ಲಿಯೇ ಚರೇಲುಗಳ ಸಂಗಡ ಹೆಜ್ಜೆ ಹಾಕಿದರು. +ಇಗರ್ಜಿಯ ಗಂಟೆ ಮೆರವಣಿಗೆ ಹೊರಟ ತಕ್ಷಣ ಸದ್ದು ಮಾಡತೊಡಗಿ ಅದರ ಗಂಟಾನಾದ ಇಂಪಾಗಿ ಕೇಳಿ ಬರುತ್ತಿರಲು ಇಗರ್ಜಿ ಮುಂದಿನ ನೇರ ದಾರಿಯಲ್ಲಿ ಹೊರಟ ಮೆರವಣಿಗೆ ಸಿಮೋನನ ಮನೆಯತ್ತ ಹೊರಳುವ ದಾರಿ ಬಿಟ್ಟು ಮುಂದೆ ಸಾಗಿತು… +ಆದರೆ.. +ಮುಂದೆ ಹೋದವರು- +“ಏನಾಯಿತು? ಏನಾಯಿತು?” ಎಂದು ತಿರುಗಿ ನೋಡುತ್ತಿರಲು ಹಿಂದಿನಿಂದ ಬರುತ್ತಿದ್ದ ಜನರ ಸಾಲು ಸಿಮೋನನ ಮನೆ ಬೀದಿಗೆ ಹೊರಳಿ ಬಿಟ್ಟಿತು. ಕಲ್ಲು ಕೆಲಸಗಾರರು, ಗಾರೆ ಕೆಲಸದವರು, ಆಚಾರಿಗಳು, ದರ್ಜಿಗಳು, ಕಚೇರಿಗಳಲ್ಲಿ ಜವಾನ ಅಟೆಂಡರ್ ಕೆಲಸ ಮಾಡುತ್ತಿದ್ದವರು ಸಂತ ಜೋಸೆಫ಼ರ ಪ್ರತಿಮೆ ಇದ್ದ ಡೋಣಿಯ ಸುತ್ತ ಘೇರಾಯಿಸಿಕೊಂಡವರು ಆ ದಾರಿಗೆ ಹೊರಳಿ ಬಿಟ್ಟರು. +ಪಾದರಿ ಡಿಸೋಜ ಓಡಿ ಬಂದರು. +“ಮೊದಲು ಫ಼ಾತಿಮಾ ನಗರ …ನಂತರ ಜೋಸೆಫ಼ ನಗರ..” ಎಂದು ಅವರು ಬೊಬ್ಬೆ ಹೊಡೆದುಕೊಂಡರೂ ಜನ ಕೇಳಲಿಲ್ಲ. +“ನಡೀರಿ..ನಡೀರಿ..ಮೊದಲು ಚಾರಡಿ ಗೌಡಿ, ನೇಂದರರ ಮನೆಗಳ ಮುಂದೆ ಸಂತ ಹೋಗಲಿ..” +“ನಂತರ ಬಾಮಣರ ಮನೆಗಳಿಗೆ” +“ಜಪ ಹೇಳಿ..” +“ಕೀರ್ತನೆ ಹಾಡಿ..” +“ದೋಣೀನ ಆ ಕಡೆ ತಿರುಗಿಸಬೇಡಿ..ಅವರೇ ಬೇಕಾದರೆ ನಮ್ಮ ಹಿಂದೆ ಬರಲಿ..” +ಆವೇಶ ಬಂದಂತೆ ಜನ ಸಿಮೋನನ ಮನೆ ಬೀದಿಗೆ ನುಗ್ಗಿದರು. ಹೆಂಗಸರು ಮಕ್ಕಳಲ್ಲಿ ಏನೋ ಹುರುಪ ಬಂದಿತು. ಗಂಡಸರು ದೋಣಿಯನ್ನು ಮುಂದೆ ತಳ್ಳಿದರು. +ಈ ಎರಡನೇ ಪ್ರವಾಹ ತಡೆಗೋಡೆಯನ್ನು ಒಡೆದುಕೊಂಡು ನುಗ್ಗಿದ ನೀರಿನಂತೆ ಹರಿಯಿತು. +ಮೆರವಣಿಗೆಯ ಮೊದಲ ಸಾಲಿನಲ್ಲಿದ್ದ ಪಿತಳೀ ಬ್ಯಾಂಡಿನ ರೈಮಂಡ ಮತ್ತು ಅವನ ಸಂಗಡಿಗರು ಈ ಸುದ್ದಿ ತಿಳಿದದ್ದೇ ಕ್ಲಾರಿಯೋನಟ, ಡ್ರಮ, ಸೈಡ್ ಡ್ರಮ, ಫ಼್ರೆಂಚ ಹಾರ್ನ್, ತಾಳಗಳನ್ನು ಎತ್ತಿಕೊಂಡು ಯಾವುದೋ ಓಣಿಯಲ್ಲಿ ನುಗ್ಗಿ ಬಂದು ಎರಡನೇ ಮೆರವಣಿಗೆಯ ಮುಂದೆ ಬಂದು ನಿಂತು ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು. ಗರ್ನಾಲಿನ, ಸಿರೀಲ, ಗರ್ನೇಲ್ ಇರುವ ಚೀಲವನ್ನು ಬಗಲಿಗೆ ತುರುಕಿಕೊಂಡು, ಮತ್ತೊಂದು ಕೈಲಿ ಬೆಂಕಿ ಮುಟ್ಟಿಸಿದ ದಾರ ಹಿಡಿದು ಬಂದು ಈ ಮೆರವಣಿಗೆಯಲ್ಲಿ ಸೇರಿಕೊಂಡವ ಏನೋ ಹುರುಪಿನಿಂದ ಒಂದರ ಹಿಂದೆ ಒಂದರಂತೆ ಐದಾರು ಗರ್ನಾಲುಗಳಿಗೆ ಬೆಂಕಿ ಹಚ್ಚಿ ಢಮಾರ ಎನಿಸಿದ. ನಡುವೆ ಏಲ್ಲೋ ಇದ್ದ ಗುರ್ಕಾರ ವಿಕ್ಟರ್- +“…ಹಾಂ..ಎಲ್ಲ ಒಳ್ಳೇದಕ್ಕೆ ನಡೀರಿ..” ಎಂದು ಜನರನ್ನು ಹುರಿದುಂಬಿಸಿದ. +ಬಹಳ ನಿಧಾನವಾಗಿ ಹೋಗುತ್ತಿದ್ದ ನಮ್ಮ ಕಾರು ಕವಲು ದಾರಿಯ ಬಳಿ ನಿಂತು ಬಿಟ್ಟಿತು. +ಡ್ರೈವರಗೆ ಯಾವ ಮೆರವಣಿಗೆಯ ಹಿಂದೆ ಹೋಗಬೇಕೆಂಬುದು ಅರಿವಾಗದೆ ಆತ ಗಲಿಬಿಲಿಗೊಂಡಂತಿತ್ತು. ನಾನು ಕೂಡ ಏನೂ ಅರಿವಾಗದೆ ಪಾದರಿ ಗೋನಸ್ವಾಲಿಸ್‌ರ ಮುಖ ನೋಡುತ್ತಿರಲು ಅವರು ಅನಿರೀಕ್ಷಿತವಾಗಿ ಎಂಬಂತೆ ಕಾರಿನ ಬಾಗಿಲು ತೆರೆದುಕೊಂಡು ಹೊರಗೆ ಇಳಿದರು. +“ಫ಼ಾದರ್” ಎಂದು ನಾನೂ ಕೆಳಗೆ ಹಾರಿದೆ.” +ಕೈಲಿರುವ ಬೆತ್ತವನ್ನು ಬೀಸುತ್ತ ಗೋನಸ್ವಾಲಿಸ್- +“ಮೊಗಾಚಾ ಕ್ರೀಸ್ತುವನೂಂ..ರಾವಾ..ರಾವಾ..” (ಪ್ರೀತಿಯ ಕ್ರೀಸ್ತುವರೆ..ನಿಲ್ಲಿ..ನಿಲ್ಲಿ) ಎಂದು ಎತ್ತರದ ದನಿಯಲ್ಲಿ ಕೂಗತೊಡಗಿದರು. +“ಸೋಮೋಡ್ತನ್ನ ಹೀಗೆ ಒಡೀ ಬೇಡಿ..ನಿಲ್ಲಿ..ನಿಲ್ಲಿ” ಕೈಲಿದ್ದ ಕೋಲು ಜಾರಿ ಕೆಳಗೆ ಬೀಳಲು ಎರಡೂ ಕೈಗಳನ್ನು ಮೇಲೆತ್ತಿ ಅವರು ಬೊಬ್ಬೆ ಹೊಡೆದರು. +ಆದರೆ ಅವರ ಕೂಗು ಬೊಬ್ಬೆ ಯಾರಿಗೂ ಕೇಳಲಿಲ್ಲವೇನೋ ಎಂಬಂತೆ ಫ಼ಾತಿಮಾ ನಗರದತ್ತ ಒಂದು ತುಂಡು ಮೆರವಣಿಗೆ ಜೋಸೆಫ಼್ ನಗರದತ್ತ ಒಂದು ತುಂಡು ಮೆರವಣಿಗೆ ತಿರುಗಿ ಮಾಯವಾಗುತ್ತಿರಲು ಪಾದರಿ ಗೋನಸ್ವಾಲಿಸ್ ಎದೆ ಒತ್ತಿಕೊಂಡು ತತ್ತರಿಸಿ ಕೆಳಗೆ ಬೀಳುವ ಹಂತ ತಲುಪಿದರು. +ಬೋನ ಓಡಿ ಬಂದ. +ನಾನೂ ಕೈ ಚಾಚಿದೆ. +ಅವರನ್ನು ನಿಧಾನ ಕಾರಿನತ್ತ ಕರೆ ತಂದೆವು. +ಡ್ರೈವರ ಬಾಗಿಲು ತೆರೆದ. +ಗೋನಸ್ವಾಲಿಸ್ ಕಾರಿನಲ್ಲಿ ಕುಳಿತು ಸುಧಾರಿಸಿಕೊಂಡರು. +ಇಗರ್ಜಿಯ ಗಂಟೆ ನಿಂತಿರಲಿಲ್ಲ. ದೂರದಲ್ಲಿ ಬ್ಯಾಂಡು ಕೇಳಿ ಬರುತ್ತಿತ್ತು. ಆಕಾಶಕ್ಕೆ ಹಾರಿದ ಗರ್ನಾಲುಗಳು ಅಲ್ಲಿ ಸಿಡಿದು ಸದ್ದು ಮಾಡುತಲಿದ್ದವು. +ಐದಾರು ನಿಮಿಷಗಳ ನಂತರ ಪಾದರಿ ಗೋನಸ್ವಾಲಿಸ್- +“ಸನ್” ಎಂದರು. +“ಫ಼ಾದರ್..” ಅವರತ್ತ ಬಗ್ಗಿ ಅವರ ತುಟಿಗಳ ಬಳಿ ಕಿವಿ ಕೊಂಡೊಯ್ದೆ. +“ಸನ್..ಕಾರನ್ನ ತಿರುಗಿಸಲಿಕ್ಕೆ ಹೇಳು..ನಾವು ಊರಿಗೆ ಹೋಗೋಣ..ನೋಡಬೇಕಾದ್ದನ್ನೆಲ್ಲ ನೋಡಿ ಆಯಿತಲ್ಲ..” +ಡ್ರೈವರ್ ನಿಧಾನವಾಗಿ ಕಾರನ್ನು ತಿರುಗಿಸಿಕೊಂಡ. ಮುಂದಿನ ಸೀಟಿನಲ್ಲಿ ಕುಳಿತ ಬೋನ ನೋವಿನಿಂದ- +“ಫ಼ಾದರ್ ನಾನು ಬರತೀನಿ” ಎಂದು ನುಡಿದು ಕಾರಿನಿಂದ ಇಳಿದ. ಪಾದರಿ ತಲೆಯಾಡಿಸಿದರು. ಇಗರ್ಜಿ ಹಿಂದಾಯಿತು. +ಶಿವಸಾಗರ ಹಿಂದುಳಿಯಿತು. +ಎರಡು ದೀಪಗಳನ್ನು ಉರಿಸುತ್ತ ಕಾರು ಕತ್ತಲೆಯ ಕೂಪಕ್ಕೆ ಇಳಿಯಿತು. +ನಾನು ಹಿಂಬದಿಯ ಸೀಟಿನತ್ತ ತಿರುಗಿ ನೋಡಿದೆ. +“ಜೀಸಸ್ ಇದೇನಾಯಿತು…ಇದು ಹೇಗೆ ಆಯಿತು?” ಎಂದೇನೋ ಪಾದರಿಗ ಗೋನಸ್ವಾಲಿಸ್ ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಿದ್ದರು. +ಅವರನ್ನು ಮಾತನಾಡಿಸುವ ಧೈರ್ಯ ನನಗೆ ಆಗಲಿಲ್ಲ. +ಕಾರು ಊರಿನಿಂದ ಬಹಳ ದೂರ ಬಂದಿತ್ತು. +***** +ಮುಗಿಯಿತು +ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_507.txt b/Kannada Sahitya/article_507.txt new file mode 100644 index 0000000000000000000000000000000000000000..edef06f04b971b2d38ca3f4f6657a55b6ae7dcc2 --- /dev/null +++ b/Kannada Sahitya/article_507.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಾಂಬೋದಿ +ತಾಳ — ಝಂಪೆ +ಬಾಯಿ ನಾರಿದ ಮೇಲೆ ಏಕಾಂತವೆ | +ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| +ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | +ಬಣ್ಣಗುಂದಿದ ಮೇಲೆ ಬಹುಮಾನವೆ || +ಪುಣ್ಯ ತೀರಿದ ಮೇಲೆ ಪರಲೋಕಸಾಧನವೆ | +ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ? ||೧|| +ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ | +ಚಳಿಯುರಿಗೆ ಚಂದನದ ಲೇಪ ಹಿತವೆ || +ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ | +ಬೆಲೆಬಿದ್ದ ಸರಕಿನೊಳು ಲಾಭವುಂಟೆ? ||೨|| +ಪಥ್ಯ ಸೇರದ ಮೇಲೆ ನಿತ್ಯ ಸುಖವೆನೆಬಹುದೆ | +ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ || +ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ | +ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ? ||೩|| +***** +ಶಂಕರಾಭರಣ ಆದಿ ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ಪ ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು ೧ ವೇಣುವಿನೊದನ ಪ್ರಾಣ ಪ್ರಿಯನ ಜಾಣೆಯರರಸನ ಕರೆಯ ಬಂದವರು ೨ ಕರಿರಾಜವರದನ […] +ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […] +ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_508.txt b/Kannada Sahitya/article_508.txt new file mode 100644 index 0000000000000000000000000000000000000000..893cbca18e7c26396440ea35c9ad19c322791a6b --- /dev/null +++ b/Kannada Sahitya/article_508.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಚಂದ್ರನ ಕಣ್ಣಲ್ಲಿ ಹೊಳೆವ ನಕ್ಷತ್ರಗಳು +ತುಟಿಯ ತುಂಬಾ ತೊದಲು, +ಆಳಬೇಡ ಕಂದ, +ಅತ್ತರೆ ಸುರಿವ ಮುತ್ತಿನ ಜೊತೆ +ಜಾರೀತು ತಾರೆಗಳು +ಕೇಳು ರಾಜಕುಮಾರ, +ಏಳು ಸಮುದ್ರಗಳನೀಸಿ +ಏಳು ಪರ್ವತಗಳ ದಾಟಿ +ತಂದುಕೊಡಲಾರೆ +ಮಲ್ಲಿಗೆ ತೂಕದ ರಾಜಕುಮಾರಿಯನ್ನ +ಅದೆಲ್ಲ ಹಳೆಯ ಕಥೆ, +ಪುಟ್ಟ ಪ್ರಪಂಚದ ಕಿಟಕಿಗಿಟ್ಟ +ಬಣ್ಣದ ಗಾಜು +ಹೇಗೆ ಹೇಳಲಿ ನಿನಗೆ +ನಕ್ಷತ್ರದೊಳಗಿನ ಬೆಂಕಿಯ ಕಥೆ, +ಕಡಲ ತಳಕ್ಕೆ ಹುಟ್ಟುವ ಮುತ್ತಿನ ಕಥೆ, +ಹೂವಿನೆದೆಯಲ್ಲಿ ಅರಳುವ ಪರಿಮಳದ ಕಥೆ! +ತಿಳಿಯುವುದಾದರೂ ಹೇಗೆ ನಿನಗೆ, +ಸದ್ದಿಲ್ಲದೇ ಸರಿದುಹೋದ +ನೆನಪಿಗೂ ಸಿಕ್ಕದೇ ಮಗ್ಗುಲಾದ +ಇಂಥಾ ಎಷ್ಟೋ ಮಾತುಗಳು. +ಇಷ್ಟು ತಿಳಿದರೆ ಸಾಕು – +ತಾರೆಗಳ ಬೆಳಕು, ಮುತ್ತುಗಳ ಹೊಳಪು, +ಹೂವಿನಂಥಾ ಮನಸ್ಸು +ನಿನಗಿದ್ದರೂ ಚಂದ, ನನಗಿದ್ದರೂ ಚಂದ; +ಎಲ್ಲರಿಗೂ ಇದ್ದರೆ ಎಷ್ಟು ಚಂದ!! +***** +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_509.txt b/Kannada Sahitya/article_509.txt new file mode 100644 index 0000000000000000000000000000000000000000..b95ac23eb2861ff55c32f98259dee3330591a89d --- /dev/null +++ b/Kannada Sahitya/article_509.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು ಭಾವನಾಶಕ್ತಿ, ಅನಿಶ್ಚಿತತೆ, ದಿಗ್ಭ್ರಮೆ, ಸಂದಿಗ್ಧತೆ ಮೊದಲಾದ ಎಲ್ಲ ನವ್ಯಕಾವ್ಯ ಲಕ್ಷಣಗಳನ್ನೂ ಇಟ್ಟುಕೊಂಡ ’ಗಡಿಯಾರ ದಂಗಡಿಯ ಮುಂದೆ’ ನರಸಿಂಹಸ್ವಾಮಿಯವರ ಕಾವ್ಯ ಗಟ್ಟಿಯಾದದ್ದು ಎನಿಸಿಬಿಟ್ಟಿತು. +ಕೆ.ಎಸ್.ನ ೧೯೧೫ರ ಜನವರಿ ೨೬ ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಅವರ ತಂದೆ ಸುಬ್ಬರಾಯರು, ತಾಯಿ ನಾಗಮ್ಮ. ೧೯೩೭ರಲ್ಲಿ ಮೈಸೂರು ಪೌರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಎರಡನೆ ದರ್ಜೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದಾಗ, ಅವರ ಸಂಬಳ ೨೫ ರೂಪಾಯಿ. ಮನೆ ಬಾಡಿಗೆ ರೂ ೪. ಪೌರಸಭಾ ಕಾರ್ಯಾಲಯದಲ್ಲಿ ಅವರು ಪ್ರಿಯವಾದ ವ್ಯಕ್ತಿಯಾಗಿದ್ದರು. ಮೈಸೂರು ದೇವರಾಜ ಮಾರ್ಕೆಟ್‌ನ ಒಂದು ಫಲಪುಷ್ಪ ಪ್ರದರ್ಶನಕ್ಕೆ ಕರಿಯ ಲಾಂಗ್ ಕೋಟು, ಬಿಳಿಯ ಷರಾಯಿ ಮತ್ತು ಕರಿಯ ಬೂಟ್ಸ್ ಧರಿಸಿ ಹೋಗಿದ್ದರಂತೆ. ಅದೇ ದರ್ಬಾರ್ ಡ್ರೆಸ್‌ನಲ್ಲಿ ಅರಮನೆಗೂ ಹೋಗಿ ಬಂದರಂತೆ. ೧೯೪೦ರ್‍ಲಲಿ ಬೆಂಗಳೂರು ಕಾರ್ಪೊರೇಷನ್ ಕಚೇರಿಗೆ ವರ್ಗ ಆಯಿತು. ಅಲ್ಲಿಂದ ಮೈಸೂರು ತಾಲ್ಲೂಕು ಕಚೇರಿಗೆ ಹೆಡ್ ಮುನ್ಷಿಯಾಗಿ ಹೋದರು. ೧೯೪೨ರಲ್ಲಿ ಅವರು ಕಚೇರಿಗೆ ಹೋದಾಗ ಎಲ್ಲರೂ ಅವರನ್ನು ಕವಿ ಎಂದು ಘೋಷಿಸಿದರು. ’ಈ ಗುಮಾಸ್ತರ ಸಮುದ್ರದಲ್ಲಿ ನಾನು ಒಂದು ಅಲೆಯಾಗಿ ಸೇರಿ ಹೋದೆ’ ಎಂದು ಕೆ.ಎಸ್.ನ. ಹೇಳಿದ್ದಾರೆ. ೧೯೭೦ರಲ್ಲಿ ಅವರು ನಿವೃತ್ತರಾದರು. +೧೯೬೦ ರಿಂದ ೧೯೭೫ರ ವರೆಗೆ ನರಸಿಂಹಸ್ವಾಮಿಯವರ ಯಾವ ಕವನ ಸಂಗ್ರಹವೂ ಬರಲಿಲ್ಲ. ೧೬ ವರ್ಷ ಕಾಲ ’ಅದು ಚಿಂತನೆಯ ಕಾಲ. ಕವನದಿಂದ ಕವನಕ್ಕೆ ಸಂಗ್ರಹದಿಂದ ಸಂಗ್ರಹಕ್ಕೆ ನನ್ನ ಕವಿತೆ ಹೇಗೆ ಸಾಗುತ್ತಿದೆ ಎಂಬುದನ್ನು ನಾನು ಶ್ರದ್ಧೆಯಿಂದ ಸಮೀಕ್ಷೆ ಮಾಡಿದೆ’ ಎಂದು ಅವರು ಹೇಳಿದ್ದಾರೆ. ಆದರೂ ಈ ನಡುವೆ ಅವರಿಗೆ ಅನೇಕ ಸನ್ಮಾನಗಳಾದವು. ೧೯೭೨. ಜಿ.ಎಸ್. ಶಿವರುದ್ರಪ್ಪನವರು ನರಸಿಂಹಸ್ವಾಮಿಯವರ ಬಗ್ಗೆ ’ಚಂದನ’ ಎನ್ನುವ ಅಭಿನಂದನ ಗ್ರಂಥವನ್ನು ಸಂಪಾದಿಸಿದರು. ಅದೇ ವರ್ಷ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿತು. ೧೯೭೮ರಲ್ಲಿ ’ತೆರೆದ ಬಾಗಿಲು’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಮತ್ತು ೧೯೯೬ರಲ್ಲಿ ಪಂಪ ಪ್ರಶಸ್ತಿಯೂ, ೧೯೯೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಶಿಪ್ ಸಿಕ್ಕಿದವು. ಎಲ್ಲದಕ್ಕಿಂತ ದೊಡ್ಡ ಪ್ರಶಸ್ತಿಯಾದ ಜನಪ್ರಿಯತೆಯೂ ಅವರಿಗೆ ಸಿಕ್ಕಿತು. +ಅವರು ಬಡವರಾಗಿ ಬದುಕಿ, ಬಡಜನರ ನೋವು ನಲಿವುಗಳಿಗೆ ಸ್ಪಂದಿಸಿದ್ದಾರೆ. ಬಡತನವನ್ನು ಅವರು ವೈಭವೀಕರಿಸಿಲ್ಲ. ಅದರ ಬಗ್ಗೆ ಭಾವಾತಿರೇಕದಿಂದ ಅಳಲಿಲ್ಲ, ಕೂಗಲೂ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರ ’ಹಸಿದ ಮಗು’ ಎನ್ನುವ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ: +ಅನ್ನವಿಲ್ಲದ ಕಂದ ಬಂತು ಬೀದಿಗೆ, ಗೆಳೆಯ, +ನಾನು ಕವಿತೆಯ ಕೊಡಲು ಹಿಂದೆ ಸರಿದೆ, +ಮಳೆಬಿಲ್ಲು ಕರಗುವುದ ನಾನು ಎಲ್ಲೋ ಕಂಡೆ +ಚೆಲುವು ಹೋಳಾದ ಮನೆ ಅದನು ಕಂಡೆ. +ಒಂದೊಂದು ಬೀದಿಗೊಂದೊಂದು ನೀತಿಯ ಕಂಡೆ, +ಇದರಲ್ಲಿ ಅದನು ಬೇಡುವುದು ಸರಿಯೆ? +ಘಂಟೆಗಳ ಬಡಿಯುತ್ತ ಹುಗ್ಗಿಯನು ಹಂಚಿದರು +ಹಸಿದ ಮಕ್ಕಳಿಗೆಂದು ದೇಗುಲದಲಿ. +’ಅನ್ನ ಹೆಚ್ಚೋ ನಿಮ್ಮ ಕವಿತೆ ಹೆಚ್ಚೋ’ ಎಂದು +ಕೇಳಿದೆ ನಾನು, ಬರಲಿಲ್ಲ ಉತ್ತರ; +ಹಸಿದ ಮಕ್ಕಳ ಕರೆದೆ ’ಬನ್ನಿ ಹತ್ತಿರ’ ಎಂದು, +ಹಸಿದ ಹೊಟ್ಟೆಯ ಮೇಲೆ ತೆರೆಯನೆಳೆದೆ. +ನರಸಿಂಹಸ್ವಾಮಿ ಎಲ್ಲರಿಗೂ ಒಳಿತನ್ನು ಬಯಸುತ್ತಿದ್ದರು. ಆ ರೀತಿಯ ಶುಭವನ್ನು ಸಾಧಿಸುವುದು ಅವರ ಕಾವ್ಯದ ಉದ್ದೇಶವಾಗಿತ್ತು. ಎಲ್ಲರಿಗೂ ಒಳಿತಾಗಲಿ ಎನ್ನುವುದು ಅವರ ಕಾವ್ಯ ಹಿಡಿದ ದಿಕ್ಕೂ ಆಗಿತ್ತು. ಅವರು ಪ್ರೇಮ ಕವಿತೆಗಳನ್ನು ಮಾತ್ರ ಬರೆಯಲಿಲ್ಲ. ನಮ್ಮ ದೈನಂದಿನ ಬದುಕಿನ ವಾಸ್ತವಗಳ ಬಗ್ಗೆ ಮನುಷ್ಯನನ್ನು ಎಂದೆಂದಿನಿಂದಲೂ ಕಾಡುತ್ತಿರುವ ಪ್ರಶ್ನೆಗಳ ಬಗ್ಗೆಯೂ ಬರೆದರು. ದೇವರ ಇರುವಿಕೆಯನ್ನು ಪ್ರಶ್ನಿಸುತ್ತ ’ಎರಡು ಚಿತ್ರಗಳು’ ಎನ್ನುವ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ. +ದೇವರಿದ್ದಾನೆ ಎನುವರು ಕೆಲರು +ಅವನಿಲ್ಲವೆನ್ನುವರು ಇನ್ನು ಕೆಲರು; +ಹಗಲು ರಾತ್ರಿಗಳಲ್ಲಿ ಉರುಳುತ್ತಲಿದೆ ಲೋಕ, +ಇಹನೊ ಇಲ್ಲವೊ ಎಂಬ ಚಿಂತೆ ಇರದೆ. +ದೇವರಿದ್ದಾನೆ ಸರಿ. ಗೊತ್ತಿಲ್ಲ ಎಲ್ಲೆಂದು +ಎಲ್ಲಿದ್ದರೂ ಬರಬೇಕು ಅವನು ಹೊರಗೆ! +ನರಸಿಂಹಸ್ವಾಮಿಗಳಿಗೆ ಭೂಮಿಯೆ ದೇವರು. ಆ ತಾಯಿಯ ಬಗ್ಗೆ ಅಪೂರ್ವ ಪ್ರೀತಿ. ಅನೇಕರಿಗೆ ಚೆಲುವು ಒಲವಾಗಿ ಕಾಣಿಸುತ್ತೆ. ಆದರೆ ನರಸಿಂಹಸ್ವಾಮಿಗಳಿಗೆ ಒಲವು ಚೆಲುವಾಗಿ ಪರಿವರ್ತಿತವಾಗುವುದು ಮುಖ್ಯವಾಗಿತ್ತು. +ಗೋಪಾಲಕೃಷ್ಣ ಅಡಿಗರಿಗಿಂತ ಮೂರು ವರ್ಷ ದೊಡ್ಡವರಾದ ಕೆ.ಎಸ್. ನರಸಿಂಹಸ್ವಾಮಿ, ೧೯೪೨ರಲ್ಲಿ ತಮ್ಮ ಮೊದಲ ಸಂಕಲನವಾದ ’ಮೈಸೂರು ಮಲ್ಲಿಗೆ’ಯನ್ನು, ಡಿ.ವಿ.ಜಿ. ಯವರ ಮುನ್ನುಡಿಯೊಂದಿಗೆ ಪ್ರಕಟಿಸಿದರು. ಅದಕ್ಕೆ ಎ.ಆರ್. ಕೃಷ್ಣಶಾಸ್ತ್ರಿಗಳು ಕಲಾವಿದ ಪುರುಷೋತ್ತಮ ಅವರಿಂದ ಚಿತ್ರಗಳನ್ನು ಬರೆಸಿದ್ದರು. ನರಸಿಂಹಸ್ವಾಮಿಗಳು ಮತ್ತು ತೀ.ನಂ.ಶ್ರೀ. ಕವಿತೆಗಳನ್ನು ಆರಿಸಿದ್ದರು. ಈ ಸಂಗ್ರಹದ ಅನೇಕ ಕವನಗಳು ’ಪ್ರಬುದ್ಧ ಕರ್ನಾಟಕ’, ’ಜಯ ಕರ್ನಾಟಕ’, ’ವಿಚಾರ ವಾಹಿನಿ’ ಮತ್ತು ಕನ್ನಡನುಡಿ’ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ೧೯೪೨ ಜನವರಿಯಲ್ಲಿ ಒಂದು ಸಂಜೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ’ಮೈಸೂರು ಮಲ್ಲಿಗೆ’ ಬಿಡುಗಡೆಯಾಯಿತು. ಇದು ಮನೆಮಾತಾಯಿತು. ಮದುವೆಯಲ್ಲಿ ಉಡುಗೊರೆ ಕೊಡಬೇಕಾದರೆ ಈ ಪುಸ್ತಕವನ್ನೇ ಕೊಟ್ಟರು. ’ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಹೃದಯ ಧ್ವನಿಯೇ ಅಲ್ಲಿ ಹೊರಡುತ್ತಿರುವಂತೆ ಕೇಳಿಬಂದೀತೆಂದು ನನಗೆ ಅನ್ನಿಸುತ್ತದೆ’ ಅಂತ ಡಿ.ವಿ.ಜಿ. ಹೇಳಿದರು. ಬೇಂದ್ರೆಯವರು ’ಮೈಸೂರು ಮಲ್ಲಿಗೆ’ಯನ್ನು ತಂಗಾಳಿಗೊಡ್ಡಿದ ನರಸಿಂಹಸ್ವಾಮಿಯವರ ಪ್ರತಿಭೆ ಅಪ್ಸರೆಯಂತೆ. ಈ ಲಾವಣ್ಯವು ಮಣ್ಣುನೆಲದಿಂದ ಬಂದುದಲ್ಲ ಎನಿಸಿಬಿಟ್ಟಿದೆ’ ಎಂದರು. +೧೯೪೬ರಲ್ಲಿ ಅಡಿಗರ ಮೊದಲ ಸಂಕಲನ ’ಭಾವತರಂಗ’ ಪ್ರಕಟವಾಯಿತು. ಅಡಿಗರು ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ನರಸಿಂಹಸ್ವಾಮಿಗಳು ವಿದ್ಯಾರ್ಥಿಯಾಗಿರಲಿಲ್ಲ. ೧೯೩೬ರಲ್ಲಿ ನರಸಿಂಹಸ್ವಾಮಿಯವರು ವೆಂಕಮ್ಮನವರನ್ನು ಮದುವೆಯಾಗಿ ಅವರು ತಿಪಟೂರಿನಲ್ಲಿದ್ದ ಅವರ ಮಾವನ ಮನೆಯಲಿದ್ದರು. ಅಲ್ಲಿಯೇ ಅನೇಕ ಪ್ರೇಮ ಕವಿತೆಗಳನ್ನೂ ಬರೆದರು. ೧೯೩೭ರಲ್ಲಿ ಮೈಸೂರಿನ ಮುನಿಸಿಪಲ್ ಆಫೀಸಿನಲ್ಲಿ ಅವರಿಗೆ ಗುಮಾಸ್ತನ ಕೆಲಸ ಸಿಕ್ಕಿತು. ಮೈಸೂರಿನಲ್ಲಿ ಸಂಸಾರ ಹೂಡಿದರು. ಈ ನಡುವೆ ಅಡಿಗರು ಹೇಳುವ ಹಾಗೆ ’ನರಸಿಂಹಸ್ವಾಮಿ ಆ ಕಾಲೇಜಿನಲ್ಲಿ ಓದುತ್ತಿರಲಿಲ್ಲವಾದರೂ ಅವರು ಮಹಾರಾಜಾ ಕಾಲೇಜಿನಲ್ಲಿ ಆಗಲೇ ಎಲ್ಲರೂ ಬಲ್ಲ ಕವಿಯಾಗಿದ್ದರು’. ಆದಾದ ಮೇಲೆ ಕೆ.ಎಸ್.ನ. ’ಐರಾವತ’ (೧೯೪೫), ’ದೀಪದ ಮಲ್ಲಿ’ (೧೯೪೭), ’ಉಂಗುರ’ (೧೯೪೯), ’ಇರುವಂತಿಗೆ’ (೧೯೫೨) ಪ್ರಕಟಿಸುವ ಹೊತ್ತಿಗೆ ಅಡಿಗರಿಗೆ ಕೆ.ಎಸ್.ನ. ದೊಡ್ಡ ಸವಾಲಾಗಿದ್ದರು. ಕೆ.ಎಸ್.ನ. ಪ್ರಭಾವಕ್ಕೆ ಸಿಕ್ಕಿಕೊಳ್ಳದೆ ಇರುವುದಕ್ಕಾಗಿ ಅಡಿಗರು ’ನಡೆದು ಬಂದ ದಾರಿ’ ಸಂಕಲನದ (೧೯೫೨) ’ಪುಷ್ಪಕವಿಯ ಪರಾಕು’ ಎನ್ನುವ ಕವನದಲ್ಲಿ ಕೆ.ಎಸ್.ನ. ಅವರನ್ನು ಗೇಲಿ ಮಾಡಿದರು. ಅಲ್ಲಿಂದ ಮುಂದೆ ಅಡಿಗರು ಪ್ರಾರಂಭಿಸಿದ ನವ್ಯಕಾವ್ಯ ಪ್ರಬಲವಾಗುತ್ತಾ ಹೋಯಿತು. ಮೊದಲು ಅಡಿಗರಿಗೆ ಕೆ.ಎಸ್.ನ. ಸವಾಲಾಗಿದ್ದರೆ, ಆಮೇಲೆ ಅಡಿಗರು ನರಸಿಂಹಸ್ವಾಮಿಯವರಿಗೆ ಸವಾಲಾದರು. ನರಸಿಂಹಸ್ವಾಮಿಯವರು ಸವಾಲನ್ನು ಸ್ವೀಕರಿಸಿದರು. ಆರು ವರ್ಷ ಕಾದರು. ೧೯೫೮ರಲ್ಲಿ ಅವರ ’ಶಿಲಾಲತೆ’ ಪ್ರಕಟವಾಯಿತು. ನರಸಿಂಹಸ್ವಾಮಿಯವರ ಕಾವ್ಯ ಹೂಮಾಲೆಯಾಗಿದ್ದುದ್ದು ಕಲ್ಲಿನ ಬಳ್ಳಿಯಾಯಿತು. +***** +ಪ್ರಜಾವಾಣಿ ದಿನಾಂಕ ೪ ಜನವರಿ, ೨೦೦೪ +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […] +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […] +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_51.txt b/Kannada Sahitya/article_51.txt new file mode 100644 index 0000000000000000000000000000000000000000..14654aceb064c96e610d8f196dd7ee3c917fc1f6 --- /dev/null +++ b/Kannada Sahitya/article_51.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. +ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; +ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; +ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು +ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು +ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; +ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; +ಜೇನಿಗೂ ಇನಿದಾಗಿ ನುಡಿವ ನಾಲಗೆ ನೀಡು. +ತಿನಿಸುಗಳೆ? – ಆಡಹಾಲುತ್ತತ್ತಿ ಸಾಬಕ್ಕಿ; +ತುಂಬೀಗ ನೊಂದೆದೆಯ ಕಂಬನಿಯನಂಚುಮಟ; +ಸೆರೆಮನೆಯಲಟ್ಟಿದನು ವರುಷವಿಪ್ಪತ್ತು ದಿಟ; +ಹರಿಜನನು ಮುಗುಚಿಡಲಿ ಸಂಭಾರವನ್ನಿಕ್ಕಿ. +ಕೊಡು ಕೈಗೆ ತೆಳುಗೋಲ, ಮೈಗೆ ಚಿಂದಿಯ ಉಡುಪು; +ಜಗದ ಉದ್ಧಾರಕನು; ಕಾಣಿರಿವನೇ ಬಾಪು* +***** +*ಶ್ರೀ ಟಿ.ಪಿ. ಕೈಲಾಸಂ ಅವರ ‘Recipe’ +೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […] +ನಿಮ್ಮ ಕನಸನು ಬಿಟ್ಟು ಆಚೆ ಬಾರೆವು ನಾವು ಹೀಗೆ ತಡೆದರೆ ನೀವು ತಬ್ಬಿ ಹಿಡಿದು, ನಿಮ್ಮ ಪ್ರೀತಿಯ ನಮಗೆ ಒಂದಂಗುಲದ ಜಾಗ ಕನಸಿನಂತಃಪುರದ ತೋಟದೊಳಗೆ. ಇಲ್ಲಂತು ತನು-ಮನಕೆ ಏಳು ಮಲ್ಲಿಗೆ ತೂಕ ಹೂವ ಎಸಳೇ […] +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_510.txt b/Kannada Sahitya/article_510.txt new file mode 100644 index 0000000000000000000000000000000000000000..b42ae335a9b5fc370efae2353934c82c41b3daee --- /dev/null +++ b/Kannada Sahitya/article_510.txt @@ -0,0 +1,1926 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಪ್ರಥಮಾಶ್ವಾಸಂ’ +ಸಹಸ್ರಪರಮಾಂ ದೇವೀ ಶತ ವಂಧ್ಯಾ ದಶವರಾಂ +ಗಾಯತ್ರೀಂ ಸಂಜಪೇನ್ನಿತ್ಯಂ ಯತವಾಕ್ಕಾಯ ಮಾನಸಃ | +ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ ಅನೇಕರಿಗೆ ಅನ್ನದ ಕನಸು: ಹಲವರಿಗೆ ಬಾಡುಬುರ್ರದ ಕನಸು. ಸುತ್ತ ನಾಲ್ಕು ಕಡೆಗಿದ್ದ ತಿಪ್ಪೆಗಳಿಗೆ ಅನಿರೀಕ್ಷೀತ ಬೆಟ್ಟಿ ನೀಡಿ ಇನ್ಸೆಪೆಕ್ಷನ್ ನಡೆಸಿ ಅದೇ ತಾನೆ ಕೋಳಿಗಳು ಆ ವೇದಾಲಾಪನೆ ಕೇಳಿಸಿಕೊಂಡು ಗಚ್ಚಿನ ಮನೆಕಡೆ ಕುತೋಹಲದಿಂದ ನೋಡತೊಡಗಿದವು. +ಆ ಪೋಹಿಷ್ಠೇತಿ ನವರೃಸ್ಯ ಸೂಕ್ತಸ್ಯ ಅಂಬರೀಷ ಸಿಂದೂದ್ವೀಪ ಋಷಿಃ +ಆಪೋ ದೇವಾತ ಎಂದು ಹೇಳಿ ಬಂದ ದ್ವನಿಯನ್ನು ಅದೇತಾನೆ ಶೌಚೋಪಚಾರ ಮುಗಿಸಿಕೊಂಡು ಬಂದು ಸಂತೃಪ್ತ ಸೂಚಕವಾಗಿ ನಾಲಿಗೆಯನ್ನು ಝಳಪಿಸುತ್ತ ಬಂದ ಅರ್ಜುನ, ಭೀಮ, ರಾಮ ಜರಾಸಂಧವೇ ಮೊದಲಾದ ಶುನಕಾದಿ ಸಜ್ಜನರು ಕೇಳಿಸಿಕೊಂಡು ರೋಮಾಂಚನಗೊಂಡವು. ಕಾರಣ ಕೆಲ ದಿನಗಳ ಹಿಂದೆ ಆರತಿಯನ್ನು ಚುಡಾಯಿಸುವ ಅಂಬರೀಸನ ನಾಗರಹಾವು ಚಿತ್ರದ ಭಿತ್ತಿಚಿತ್ರ ನೋಡಿದ್ದವು. +ಋಗ್ವೇದಿಯ ಪ್ರಾತಃ ಸಂಧ್ಯಾವಂದನದ ಸದ್ದು ಕೇಳಿಸಿಕೊಂಡು ಗಂಡ ಹೆಂಡತಿಯನ್ನು; ಹೆಂಡತಿ ಗಂಡನನ್ನೂ; ಗಂಡ ಹೆಂಡರಿಬ್ಬರು ತಂತಮ್ಮ ಮಕ್ಕಳನ್ನು ಎಬ್ಬಿಸುತ್ತಿದ್ದರು. ಗಚ್ಚಿನ ಮನೆಯಿಂದ ತ್ರಿಕಾಲ ಅಭಾಧಿತವಾಗಿ ಹೊರಡುತ್ತಿದ್ದ ಮಂತ್ರೊಚಾರಣೆ ಇಡೀ ಕೇರಿಗೆ ಅಲಾರಂ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. +ಭರ್ಗೋದೇವಸ್ಯ ರುದ್ರಾತ್ಮನೇ… ಎಂಬುದನ್ನು ಕೇಳಿಸಿಕೊಂಡು ಪಂಚವಿಂಶತಿ ಬೇತಾಳಚಕ್ರವರ್ತಿಯಾದ ರುದ್ರನಾಯಕ ಮೂರನೇ ಬಾರಿಗೆ ಶೌಚಕ್ಕೆ ಹೊರಟಿರುತ್ತಿದ್ದ. ಮಂತ್ರ ತಾಪತ್ರಯಗಳಿತ್ಯಾದಿಗೆಲ್ಲ ತಾನೇ ಚಕ್ರವರ್ತಿ ಎಂದು ಎದೆಗಿಂತ ಹೊಟ್ಟೆಯನ್ನೇ ಹೆಚ್ಚು ಉಬ್ಬಿಸಿಕೊಂಡು, ಹೊಟ್ಟೆಗಿಂತ ಮೀಸೆಯನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು, ಮೀಸೆಗಿಂತ ಕಣ್ಣುಹುಬ್ಬುಗಳನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ಣ್ಣುಹುಬ್ಬುಗಳಿಗಿಂತ ಕಣ್ರೆಪ್ಪೆಗಳನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ರೆಪ್ಪೆಗಳಿಗಿಂತ ಕಣ್ಣುಗುಡ್ಡೆಯನ್ನು ಉಬ್ಬಿಸಿಕೊಂಡು ಮಾರಗಲದ ಬೀದಿಗೆ ಇಡಿಯಾಗಿ ನಡೆಯುತ್ತಿದ್ದ ಅವನು ರೋಮಾಂಚನಗೊಳ್ಳುವುದೆಂದರೇನು? ಆತನ ಮನೆಯಲ್ಲಿ ಪ್ರಾತಃಸಂದ್ಯಾಂಗ ಅರ್ಘ್ಯ ಪ್ರಧಾನಗಳೇ ಮೊದಲಾದುವುಗಳಿಗೆ ಬೆಲೆಕೊಡುತ್ತಿದ್ದವರೆಂದರೆ ಮಂತ್ರವಾದಿಯ ಧರ್ಮಪತ್ನಿ ರುಕ್ಮಣಿ ಮತ್ತು ತಂತ್ರವಾದಿಯ ಮಗಳು ಅನಸೂಯ ಮಾತ್ರ. ಆಚಮನ; ಚಮನ ಮಂತ್ರಗಳು ಪದೇ ಪದೇ ಕಿವಿಗೆ ಬೀಳುವುದರಿಂದ ತಾವು ಪವಿತ್ರರಾಗುತ್ತಿದೆವು ಎಂದುಕೊಳ್ಳುತ್ತಿದ್ದರು. ಮುಂದೊಂದಿನ ಸನಾತನ ಧರ್ಮ ತಾಂಡವಾಡುತ್ತಿರುವ ಗಚ್ಚಿನ ಮನೆಗೆ ಸೊಸೆಯಾಗಿ ಪ್ರವೇಶಿಸುವ ಉದ್ದೇಶದಿಂದ ಅನಸೂಯ ಎಂಬ ಕನ್ಯಾಮಣಿ ಎಷ್ಟೋ ಮಂತ್ರಗಳನ್ನು; ಶ್ಲೊಕಗಳನ್ನು ಬಾಯಿಪಾಠ ಮಾಡಿಬಿಟ್ಟಿದ್ದಳು. ಶ್ರೀ ಪರಮೇಶರ ಪ್ರೀತ್ಯರ್ಥಂ ಎಂಬಂತೆ ಅವುಗಳನ್ನು ತನ್ನ ತನ್ನ ಪ್ರಾಣಪದವಾದಕ ಗಚ್ಚಿನ ಮನೆಯಲ್ಲಿ ಮಾಣಿಕ್ಯ ದೀಪ್ತಿಯಂತೆ ಹೋಳೆಯುತ್ತಿದ್ದ ಶಾಮಾಶಾಸ್ತ್ರಿ ಬೆಟ್ಟಿಯಾದಾಗಲೆಲ್ಲ ಹೇಳಿ ದಿಗ್ಬ್ರಮೆಗೊಳಿಸುತ್ತಿದ್ದಳು. ಅವನ್ನು ಕೇಳಿಸಿಕೊಂಡು ವೇದಮಾತೆಯೂ; ಜ್ಞಾನದಾತೆಯೂ; ಸುರಾಸುರ; ಕಿನ್ನರ ಕಿಂಪುರುಷ; ಋಷಿ ಗಿಷಿಗಳಿಂದ ವಂದಿತೆಯೂ; ಪೂಜಿತೆಯೂ ಆದ ಗಾಯತ್ರಿಯೇ, ರುದ್ರನಾಯಕ ಮತ್ತು ರುಕ್ಮಿಣಿ ಎಂಬ ನಾಮಾಂಕಿತ ನಿಮ್ನ ಜಾತಿ ದಂಪತಿಯರ ಉದರದಲ್ಲಿ ಅನಸೂಯಾ ಎಂಬಭಿದಾನದಿಂದ ಜನಿಸಿದವಳೆಂದು ಭಾವಿಸಿ ಶಾಮಾಶಾಸ್ತ್ರಿಯು ತನ್ನ ಸಹಪಾಟಿ ಅನಸೂಯಳ ಬಗ್ಗೆ ಗೌರವ ಪ್ರೀತಿ ತಳೆಯತೊಡಗಿದ್ದರು. ಗರುಡ ಪುರಾಣ, ಭಗದ್ಗೀತೆ, ಋಗ್ವೇದ; ನಿತ್ಯಕರ್ಮವೇ ಮೊದಲಾದ ಗ್ರಂಥಗಳಲ್ಲಿ ಅನಸೂಯಳಿಂದ ಆಗಮಿಸಿರುತ್ತಿದ್ದ ಪ್ರೇಮಪತ್ರಗಳನ್ನೊ ಅಡಗಿಸಿಟ್ಟುರುತ್ತಿದ್ದನು. ಓ ಕೇಶವಾಯ ಸ್ವಾಹಾ ಎಂದವನು ನೆಪಮಾತ್ರಕ್ಕೆ ಅನ್ನುತ್ತಿದ್ದನಾದರೂ ಅವನ ಹೃದಯದ ಸಾವಿರಕೋಣೆಗಳಿಂದ ’ಓ ಅನಸೂಯಾ ಸ್ವಾಹಾ’ ಎಂಬ ದ್ವನಿ ತರಂಗಗಳು ಹೊರಡುತ್ತಿದ್ದವು. +ಅಂಗೈಯಲ್ಲಿ ಅಭಿಮಂತ್ರಿಸಿದ ನೀರನ್ನು ಮೂಸಿ ನೋಡುವ ಕ್ಷಣದಲ್ಲಿ ವೇದಾಂತ ಶಿಖಾಮಣಿ ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗನ್ನು ನೆನೆಸಿಕೊಂಡುಬಿಟ್ಟರು. ಕ್ರಾಪಿನೊಳಗೆ ಜುಟ್ಟು ಮರೆಮಾಚಿಕೊಂಡಿರುತ್ತಿದ್ದ ಶಾಮು; ಉತ್ತರೀಯದೊಳಗೆ ಯಜ್ಞೋಪವೀತ ಮರೆಮಾಚಿಕೊಂಡಿರುತ್ತಿದ್ದ ಶಾಮು; ಮೀಸೆಯ ಚಿಗುರು ರೋಮಗಳ ಬುಡದಲ್ಲಿ ಬೆವರನ್ನು ಮರೆಮಾಚಿಕೊಂಡಿರುತ್ತಿದ್ದ ಶಾಮು ಸದ್ಯೋಜಾತ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ ಎಂಬ ಪುರುಷಸೂಕ್ತದ ಜೊತೆಗೇನೆ ತರ್ಕ ಶಾಸ್ತ್ರದ ಭಾವಾತ್ಮಕ; ನಿಷೇದಾತ್ಮಕ ಸೂತ್ರಗಳನ್ನೋ; ಬೀಜಗಣಿತದ ಪ್ರಮೇಯಗಳನ್ನೋ ಉಚ್ಚರಿಸಿಬಿಡುತ್ತಿದ್ದನು. +’ಮಗು ಶಾಮೂ… ಪುರುಷ ಸೂಕ್ತಕ್ಕೆ ಅಪಚಾರಮಾಡ್ತಿರುವೆಯಲ್ಲೋ….’ ಎಂದು ವಯೋವೃದ್ಧರೂ ಆದ ಪರಮೇಶ್ವರ ಶಾಸ್ತ್ರಿಗಳು ಎಚ್ಚರಿಸದೆ ಇರುತ್ತಿರಲಿಲ್ಲ. ಇನ್ನೂ ತಮ್ಮ ಮೊಮ್ಮಗ ಅಥಾಂಗ ಪೂಜಾಂಕರಿಷ್ಯೆಯನ್ನೂ ಸ್ಪಷ್ಟವಾಗಿ ಉಚ್ಚರಿಸುತ್ತಿಲ್ಲವಲ್ಲ. ವೈದಿಕಕ್ಕೆ ಪುರೋಹಿತರ ರೀತಿಯಲ್ಲಿ ಹೆಜ್ಜೆ ಇಡದೆ ವಿಟ ಪುರುಷರಂತೆ ಹೆಜ್ಜೆ ಇರಿಸುವನಲ್ಲ ಇಷ್ಟು ವಯಸ್ಸಾದರೂ ತಮ್ಮ ಮೊಮ್ಮಗ ಸ್ವತಂತ್ರವಾಗಿ ಸತ್ಯನಾರಾಯಣ ವ್ರತ ಮಾಡಿಸಲಿಕ್ಕಾಗುತ್ತಿಲ್ಲವಲ್ಲ… ಕ್ರಾಪಿನೊಳಗೆ ಪುರೋಹಿತ್ವದ ಪವಿತ್ರ ಲಾಂಛನವಾದ ಜುಟ್ಟನ್ನು ಗಿಡ್ಡದಾಗಿರಿಸಿ ಮರೆಮಾಚಿಕೊಂಡು ಬಿಡುತ್ತಿರುವನಲ್ಲ ಗಾಂಧಾರ ದೇಶದ ಶಲಾತುರ ಗ್ರಾಮದ ಪಾಣಿನಿಯ ಅಷ್ಟಾಧಾಯಿನಿಯ ಪ್ರಥಮಾಧ್ಯಾಯಕ್ಕೆ ಆತ್ಮನೇ ಕ್ರಿಯೆ ಬರೆಯಬೇಕಾಗಿದ್ದ ತಮ್ಮ ಮೊಮ್ಮಗ ಹುಡುಗಿಯರಿಗೆ ಪ್ರೇಮಪತ್ರ ಬರೆಯುವ ಅಭ್ಯಾಸ ಮಾಡುತ್ತಿರುವನಲ್ಲಾ ರಾಮ ರಾಮಾ ಧೋತರ ನಾರುಮಡಿ ಮೇಲೊಂದು ಉತ್ತರೀಯ ಧರಿಸಿ, ಸನಾತನ ಧರ್ಮ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆದು ನಾಲ್ಕು ಕಾಸು ಸಂಪಾದಿಸಬೇಕಾಗಿದ್ದ ತಮ್ಮ ಮೊಮ್ಮಗ ಟೌಜರು ಮೇಲೊಂದು ಬುಷ್ ಶರಟು ಧರಿಸಿ ಆಧುನಿಕಂಕ್ಷಿಗಳ ಗಮನ ಸೆಳೆಯುತ್ತಿರುವನಲ್ಲಾ ಶಿವ ಶಿವಾ +ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗನ ನಡವಳಿಕೆ ಗಮನಿಸುತ್ತಿದ್ದರು. ಈ ಇಳಿವಯಸ್ಸಿನಲ್ಲಿ ನಿಟ್ಟುಸಿರು ಬಿಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಮಾಮನವರೇ’ ಎಂದು ವಿಧವಾ ಸೊಸೆ ಅಲುಮೇಲಮ್ಮ ತೋರುತ್ತಿದ್ದ ಕಾಳಜಿ ಅಲಕ್ಷಿಸಿ ಕೂತರೊಂದು ಬಿಸಿಯುಸಿರು; ನಿಂತರೊಂದು ಬಿಸಿಯುಸಿರು ಬಿಡುತ್ತಿದ್ದರು. ತಮ್ಮ ವಂಶ ಎಂಥಾದ್ದು? ಏನ್ಕಥೆ? ರಾಜಮಹಾರಜನ್ನು ಏಕವಚನದಿಂದ ಸಂಭೋಧಿಸುತ್ತಿದ್ದಂಥವರು ತಮ್ಮ ಹಿರಿಯರು….. ಪಾಣಿನಿ; ಪತಂಜಲಿ, ಪರಾಶರ, ನಾಗೋಜಿ ಭಟ್ಟ, ಜಮೂರ ನಂದಿ ಮೊದಲಾದ ಶಾಸ್ತ್ರಕೋವಿದರ ಸಾಲಿನಲ್ಲಿ ನಿಲ್ಲುವಂಥವರು ತಮ್ಮ ಹಿರಿಯರು, ದತ್ತಕ ಮೀಮಾಂಸಾ; ಚಿತ್ತಸೂತ್ರ, ಚಿಕಿತ್ಸಾಸಾರ ಸಂಗ್ರಹ, ಗೋಲ ದೀಪಿಕಾ ಚತುರ್ವರ್ಗ ಚಿಂತಾಮಣಿ, ಜೋತಿಷ ವೇದಾಂಗವೇ ಮೊದಲಾದ ಶಾಸ್ತ್ರಾಗಮಗಳನ್ನು ಅರಗಿಸಿಕೊಂಡಂತವರು ತಮ್ಮ ಹಿರಿಯರು. ಜೋತಿಷ ಸಾರೋದ್ಧಾರ, ಸಂಗೀತೋಪನಿಷತ್ಸಾರೋದ್ಧಾರ, ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ವೀರ ಮಿತ್ರೋದಯ, ಲಘು ಶಬ್ದೇಂದು, ಶೇಖರ, ಸಂಸ್ಕೃತ ಭಾಷಾ ವಾರಿಧಿಯೇ ಮೊದಲಾದ ಬಿರುದು ಬಾವಲಿ ಧರಿಸಿದ್ದವರು ತಮ್ಮ ಹಿರಿಯರು, ಅವರು ಇಟ್ಟರೆ ಶಾಪ; ಕೊಟ್ಟರೆ ವರ ಅಂಥವರ ವಂಶದ ಕುಡಿಯಾದ ಶಾಮ ಆಧುನಿಕತೆಯ, ನಾಗರೀಕತೆಯ ಮೋಹ ಪಾಶಕ್ಕೆ ತುಡಿಯುತ್ತಿರುವುದೆಂದರೇನು? +ತಮ್ಮ ಮಗ ಅಶ್ವಥ್ ನಾರಾಯಣ ಶಾಸ್ತ್ರ ಕೋವಿದನಾಗುವ ಬದಲು ಕೋವಿ ಹಿಡಿದಿದ್ದರಿಂದಲ್ಲವೇ ಅವನ ಮಗ ಹೀಗೆ ವರ್ತಿಸುತ್ತಿರುವುದು! ಅವನು ಮ್ಲೇಚ್ಛರ ಸಹವಾಸ ಮಾಡದಿದ್ದರೆಲ್ಲಿ ಇವನು ಹೀಗೆ ವರ್ತಿಸುತ್ತಿದ್ದ; ಸರಸ್ವತ ವ್ಯಾಕರಣ ತೀರ್ಥ ಶಾಮಾ ಶಾಸ್ತ್ರಿಗಳ ಮಗಂದಿರಾದ ತಾವು ಸಕಾಲದಲ್ಲಿ ಮಗ ಅಶ್ವತ್ಥನಿಗೆ ಉಪನಯನ ಮಾಡಿ ಗಾಯತ್ರಿ ಪ್ರಾಣಾಯಾಮಗಳನ್ನು ಶಾಸ್ತ್ರೊಕ್ತವಾಗಿ ಕಲಿಸಿ; ಕಂದ ಮೂಲ ತೀರ್ಥಗಳಿಗೆ ಅವನ ಜೀರ್ಣವ್ಯವಸ್ಥೆಯನ್ನು ಒಗ್ಗಿಸಿ, “ಜುಟ್ಟಿಗಿರೋ ಸ್ಥಾನಮಾನವನ್ನು ಕ್ರಾಪಿಗೆ ಕೊಟ್ಟೆಯಾದರೆ ಹೆಳವನ್ನಾಗಿ ಮಾಡುತ್ತೇನೆ” ಎಂಬುದಾಗಿ ಎಚ್ಚರಿಸಿದ್ದರೆ ಅವನು ಸಂಪ್ರದಾಯಕ್ಕೆ ತಿಲಾಂಜಲಿ ನೀಡುತ್ತಿರಲಿಲ್ಲ… ಆ ಮುದುಕಿಂದಲೇ ಇವನು ಕೆಟ್ಟಿದ್ದು…. ಸನಾತನ ಧರ್ಮದ ಸ್ಥಾನದಲ್ಲಿ ಕರುಳನ್ನು ಪ್ರತಿಷ್ಟಾಪಿಸಿ ಮಗನನ್ನು ಬಲಿಕೊಡಬೇಡವೆಂದು ತಾವು ಕೇಳಿದ್ದುಂಟು; ಪೀಡಿಸಿದ್ದುಂಟು. ಆದರೆ ಕೇಳಬೇಕಲ್ಲ ಹೆತ್ತ ಕರುಳು? ತಮ್ಮ ಸೊಸೆಗೆ ಸನಾತನ ಧರ್ಮಕ್ಕಿರುವ ನಿಯತ್ತಿನ ಪೈಕಿ ಕಾಲುಭಾಗವಾದರೂ ಈ ಮುದುಕಿಗಿತ್ತೇನು? +ಅವನೂ ಕೆಟ್ಟ, ತನ್ನ ಮಗನನ್ನೂ ಕೆಡೆಸಿದ. ಯಥಾ ಪಿತ ತಥಾ ಸುತಾ, ಮಗನಿಗೆ ಮ್ಲೇಚ್ಚ ಸಂಸೃತಿಯ ಬುನಾದಿ ಹಾಕಿಕೊಟ್ಟು ಸತ್ತುಹೋದ. ಸಾವು ಎಂದರೆ ಎಂಥಾದ್ದು? ಶಿವ… ಶಿವಾ…ಯಾವ ಶತ್ರುವಿಗೂ ಅಂಥಾ ಸಾವು ಬರಬಾರದು. ತಮ್ಮ ವಂಶದ ಹಿರಿಯರು ಯಾರೊಬ್ಬರೂ ಅಂಥ ಕೆಟ್ಟ ಸಾವನ್ನು ಕನಸುಮಸಿನಲ್ಲೂ ಊಹಿಸಿದುದುಂಟೇನು? ಗಿರಿಮುತ್ತಾತ ವಿದ್ಯಾವಾಚಸ್ಪತಿ ಶಿವರಾಮಮೋಹನ ಶರ್ಮರಾದರು ಎಂಥವರು? ಸತ್ತವರನ್ನು ಬದುಕಿಸಿದಂತವರು, ಹಸುವಿನ ಕಳೇಬರದ ಕೆಚ್ಚಲಿನಿಂದ ಹಾಲು ಕರೆದಂತವರು, ತಲಕಾಡಿನ ಶ್ರೀರಂಗ ರಾಜರಿಗೆ ದೃಷ್ಟಿದಾನ ಮಾಡಿದಂತವರು. ನೂರೈದು ವರ್ಷ ದೀರ್ಘಕಾಲ ಬದುಕು ಬದುಕಿ, ಸಾಕಪ್ಪ ಈ ಇಹಲೋಕ ವ್ಯಾಪಾರ, ಸ್ವರ್ಗ ಲೋಕಕ್ಕೆ ಹೋಗಿ ಶಿವನ ಸಾನ್ನಿಧ್ಯದಲ್ಲಿ ಶಾಶ್ವತ ಸಂತೋಷದಿಂದ ಇದ್ದು ಬಿಡುವುದಾಗಿ ಜೀವ ಸಮಾಧಿಯಾದಂಥವರು. ತಮ್ಮ ಮುತ್ತಜ್ಜ ರಸರತ್ನಾಕರ ರಾಧಾರಮಣ ಶಾಸ್ತ್ರಿಗಳಾದರೂ ಎಂಥವರು? ಶಂಕರಾಚಾರ್ಯ ಭಗವತ್ಪಾದರ‌ಆತ್ಮದೊಡನೆ ಷಡ್ದರ್ಶನ ಸಮುಚ್ಚಯದ ಬಗ್ಗೆ ಸಾರ್ವಜನಿಕವಾಗಿ ಸಂಭಾಷಿದಂಥವರು, ತಮ್ಮ ನಾಲಿಗೆಯನ್ನೇ ಸರಸ್ವತಿಗೆ ಪಲ್ಲಂಗ +ಮಾಡಿಸಿಕೊಟ್ಟಂಥವರು. ಯಜ್ಞ ಯಾಗಾದಿಗಳಿಂದ ಪೆನುಗೊಂಡೆಯ ರಾಮರಾಜರಿಗೆ ಪುರುಷ ಶಕ್ತಿ ದಯಪಾಲಿಸಿದಂಥವರು, ಚಿನ್ನದ ಪಲ್ಲಕ್ಕಿಯಲ್ಲಿ ಒಂದುಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದ ಅವರು ಬದುಕಿದ್ದು ನೂರರ ಮೇಲೆ ಮೂರು ತುಂಬುವವರೆಗೆ. ಸಾಕಪ್ಪಾ ಸಾಕು ಈ ಕಲಿಯುಗದ ಸಹವಾಸ… “ವೈಕುಂಟಕ್ಕೆ ಹೋಗಿ ಮಹಾವಿಷ್ಣು ದಂಪತಿಗಳ ಶಯನ ಗೃಹ ಗುಡಿಸುವ ಸೇವೆ ಮಾಡಿ ಪಾವನರಾಗುತ್ತೇವೆಂಬುದಾಗಿ” ನುಡಿದು ಕಣ್ಣು ಮುಚ್ಚಿಕೊಂಡಂಥವರು. ತಮ್ಮ ತಾತನವರಾದ ಸರ್ವದರ್ಶನತೀರ್ಥ ಸಕಲೇಶ್ವರ ಶಾಸ್ತ್ರಿಗಳಾದರೋ ಎಂಥವರು? ಅವರಿಗೆ ಸಾಹಿತಿ ಸಮರಾಂಗಣ ಎಂಬ ಬಿರಿದಿತ್ತು. ಅಷ್ತದಿಗ್ಗಜಗಳಿದ್ದ ಶಕ್ತಿ ಅವರೊಬ್ಬರಿಗೇ ಇತ್ತು. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದಂಥವರು. ಶತಾಯುಷ್ಯದ ನಂತರ ಕದಳೀವನ ಹೊಕ್ಕವರು ವಪಸು ಬರಲೇ ಇಲ್ಲ… ಇಂಥವರ ವಂಶದವರಾದ ಪಮೇಶ್ವರ ಶಾಸ್ತ್ರಿಗಳೆಂಬಭಿದಾನ, ಧರಿಸಿರುವರು ತಾವಾದರು ಎಂಥವರು? ಆಚಾರ ವಿಚಾರದಲ್ಲಿ ಅದೆಷ್ಟು ಕಟ್ಟುನಿಟ್ಟು? +ಸುಮಾರು ಎಂಬತ್ತು ವರ್ಷದ ಅವರಿಗೆ ಹಲ್ಲು ಉಚ್ಚಿರಲಿಲ್ಲ. ಸೊಂಟ ಬಾಗಿರಲಿಲ್ಲ. ಎಂದೂ ಒಂದು ಮಾತ್ರೆ ನುಂಗಿರಲಿಲ್ಲ. ಸೂಜಿ ಮಾಡಿಸಿಕೊಂಡು ದೇಹ ಅಪವಿತ್ರ ಮಾಡಿಸಿಕೊಂಡವರಲ್ಲ. ತಮ್ಮ ತಂದೆ ದಿವಾನರ ಬಳಿ ಆಸ್ಥಾನ ಪುರೋಹಿತರಾಗಿದ್ದರು, ತಮ್ಮ ತಾತ ಮಹಾರಾಜರ ಕುಟುಂಬದ ಮುಖ್ಯ ಅರ್ಚಕರಾಗಿದ್ದರು. ತಮ್ಮ ತಾತ ಕುಂಡಲಿ, ಜಾತಕ ಪರಿಶೀಲಿಸಿದ ನಂತರವೇ ಗುಡೀಕೋಟೆ ರಾಜ ಯುದ್ಧಕ್ಕೆ ಹೊರಡುತ್ತಿದ್ದ. ಎಂದೆಲ್ಲ ತಮ್ಮ ವಂಶಾವಳಿ ಬಗ್ಗೆ ಬೀಗುತ್ತಿದ್ದ ಅವರು ತಮ್ಮ ಏಕಮಾತ್ರ ಪುತ್ರನಾದರೂ ಸಂಸೃತದಲ್ಲಿ ಮಹಾಪಂಡಿತನಾಗಿ ವಂಶದ ಕೀರ್ತಿ ಉಳಿಸಲಿ ಎಂದು ಬೆಂಗಳೂರಿನ ಸಂಸೃತ ಪಾಠಶಾಲೆಯೊಂದಕ್ಕೆ ಸೇರಿಸಿದ್ದರು. ಆದರೆ ಆತ ಜುಟ್ಟು ಬೋಳಿಸಿಕೊಂಡು ಮತಭ್ರಷ್ಠನಾದ, ನಗರದ ಬೀದಿಗಳಲ್ಲಿ ಪೋಲಿ ಪೋಲಿಯಾಗಿ ಅಲೆದಾಡಿದ; ತನ್ನ ಹದಿನೆಂಟನೇ ವಯಸ್ಸಿಗೆ ಎರಡು ಮೂರು ಗುಹ್ಯ ರೋಗಗಳಿಗೆ ಬಲಿಯಾಗಿ ಅಡ್ಡಾಡಲಸಾಧ್ಯವಾದ ವೇದನೆಯಿಂದ ನರಳತೊಡಗಿದ. ಪಾಠಶಾಲೆಯ ಪ್ರಾಚಾರ್ಯರಿಂದ ಹೀಗೆ ಅಂತ ಪತ್ರ ಹೋಯಿತು. ಶಾಸ್ತ್ರಿಗಳು ಬಂದರು. ಮಗನ ದೇಹ ಸ್ಪರ್ಶಿಸಲು ಹಿಂಜರಿದರು. ಮುಮ್ಮುಡಿ ಕೃಷ್ಣರಾಜರಿಂದ ಬಳುವಳಿಯಾಗಿ ಬಂದಿದ್ದ ಬೆತ್ತ ಎತ್ತಿ ಬಾರಿಸಿದರು. “ಕೊಂದು ಹಾಕಿಬಿಡ್ತೀನಿ ಮುಂಡೇ ಗಂಡ” ಎಂದು ಬೆದರಿಸಿ ಗುಹ್ಯರೋಗ ತಜ್ಞರಿಂದ ಇಲಾಜು ಮಾಡಿಸಿದರು. ಮಗನ ಭವಿಷ್ಯ ಹೇಗೆ ರೂಪಿಸಬೇಕು ಎಂಬ ಚಿಂತೆಯಲ್ಲಿ ಅವರಿದ್ದಾಗ ಮಗ ಅಶ್ವಥ್ ನಾರಾಯಣ ತಾನು ಮಲಗಿದ್ದ ಶಯನ ಗೃಹದಿಂದ ಪರಾರಿಯಾದ. ಶಾಸ್ತ್ರಿಗಳು ತಮಗೆ ಬಹುಮಾನವಾಗಿ ಬಂದಿದ್ದಂಥ ತೋಳು ಬಂದಿ, ಕಡಗ, ಪದಕಗಳನ್ನು ಮಾರಿ ಐದು ವರ್ಷ ದಿನಮಾನ ಹುಡುಕಿಸಿದರು. ಧರ್ಮಪತ್ನಿ “ಅಶ್ವತ್ಥಾಽ ಅಶ್ವತ್ಥಾಽ” ಅಂತ ಕೊನೆಯುಸಿರೆಳೆದಳು. ಶಾಸ್ತ್ರಿಗಳು ಅಲ್ಲಲ್ಲಿ ವೈದಿಕ ಮಾಡಿಕೊಂಡು ಮಗನನ್ನು ಮರೆತರು. ಆದರೆ ಒಂದು ದಿನ ಅವರು ಸಂಧ್ಯಾವಂದನೆಮಾಡುತ್ತಿದ್ದಾಗ ಯುವಕನೋರ್ವ ಮನೆಬಾಗಿಲು ತಟ್ಟಿದ. ಹುಲಿಯೇ ಮನುಷ್ಯರೂಪ ಧರಿಸಿದಂತಿದ್ದ. ಆಧುನಿಕ ವೇಶಭೂಷಣದವನಾಗಿದ್ದ. ದೇಹದ ಎಲ್ಲ ಕಡೆ ಊದಿಕೊಂಡಿತ್ತು. ಆ ವ್ಯಕ್ತಿ ಶಾಸ್ತ್ರಿಗಳ ಏಕಮಾತ್ರ ಪುತ್ರ ಅಶ್ವಥ್ ನಾರಾಯಣನಾಗಿದ್ದ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತ ಸೇವೆ ಸಲ್ಲಿಸಿದ್ದುದು ಉತ್ತರ ಭಾರತದ ಪೂಂಚ್ ಗಡಿಯಲ್ಲಿ. ನೂರಾರು ಮಂದಿ ಶತ್ರು ಸೈನಿಕರನ್ನು ಕೊಂದಿದ್ದ. ಕೋಳಿ ಕುರಿ ತಿಂದರೆ ಅದೊಂದು ಥರ, ಆದರೆ ಆತ ಗೋಮಾಂಸ, ದನದ ಮಾಂಸ ತಿನ್ನುತ್ತಿದ್ದ. ಎಳನೀರು, ಕಾಫಿ ಟೀ ಕುಡಿದರೆ ಅದೊಂದು ಥರ. ಆತ +ಮಿಲಿಟರಿ ರಮ್ ಕುಡಿಯದೆ ನಿದ್ದೆ ಮಾಡುತ್ತಿರಲ್ಲಿಲ್ಲ. ಇದನ್ನೆಲ್ಲ ಕೇಳಿ ಶಾಸ್ತ್ರಿಗಳು ಅರ್ಧ ಇಳಿದುಹೋದರು. ಆತ ತಮ್ಮ ವಂಶದ ಮಡಿವಂತಿಕೆಯನ್ನು ತೂರಿರಬಹುದು. ಆತ ಎಷ್ಟಿದ್ದರೂ ಎರಡು ಪತ್ತ ಮೀರಿದ ನಂತರ ಹುಟ್ಟಿದ ಮಗ. ಹೆಂಡತಿ ಪ್ರಾಣಾಂತಿಕ ಪ್ರಸವ ವೇದನೆಯನ್ನು ಅನುಭವಿಸಿ ಅಂತೂ ಕೊನೆಗೆ ಹೆತ್ತು ತಾನೂ ಬದುಕಿ ಉಳಿದಿದ್ದಳು. “ದಿನಕ್ಕೊಂದು ಸಾರಿಯಾದರೂ ಗಾಯತ್ರಿ ಜಪಿಸುತ್ತೀದೀಯಾ” ಎಂದಿ ಶಾಸ್ತ್ರಿಗಳು ಪ್ರಶ್ನಿಸುತ್ತಿದ್ದರು. ’ಭೂರ್ಬವಸ್ವಃ ಎನ್ನುವುದನ್ನೇ ಮರೆತುಬಿಟ್ಟಿದ್ದ. ಗಾಯತ್ರಿ ಮೈಖೇಲ್ ಎಂಬ ಹುಡುಗಿಜತೆಗೆ ನಿರಂತರವಾಗಿ ದೈಹಿಕ ಸಂಭಂದ ಇಟ್ಟುಕೊಂಡಿರುವುದಾಗಿ ಹೇಳಿ ಹೆತ್ತ ತಂದೆ ಮುಖಕ್ಕೆ ಬೆರಣಿ ತಟ್ಟಿದ. ಶಾಸ್ತ್ರಿಗಳಿಗೆ ಇದನ್ನೆಲ್ಲಾ ಕೇಳಿ ಗಂಗೆಯಲ್ಲಿ ದೇಹ ತ್ಯಾಗ ಮಾಡಿಕೊಳ್ಳಬೇಕೆನಿಸಿತು. ಅಗ್ರಹಾರದ ಸಹಜೀವಿಗಳು ಬುದ್ಧಿ ಹೇಳಿದರು. ಒಂದು ಹಂತಕ್ಕೆ ತಂದರು. ’ಮಗ ಮ್ಲೇಚ್ಚ ಜಾತಿಯವಳನ್ನು ಮದುವೆಯಾಗಿ ವಂಶವನ್ನು ಮೈಲಿಗೆ ಮಾಡುವ ಮೊದಲೇ ಶಾಸ್ತ್ರೋಕ್ತವಾಗಿ ಸ್ವಜಾತಿ ಸ್ವಗೋತ್ರದ ಹುಡುಗಿಯೋರ್ವಳನ್ನು ಕಟ್ಟಿಹಾಕಿ ಬಿಡುವಂತೆ ಶಾಸ್ತ್ರಿಗಳಿಗೆ ಸೂಚಿಸಿದರು. ಮೊದಮೊದಲು ಅಶ್ವಥ್ ಇದಕ್ಕೆ ಒಪ್ಪಲ್ಲಿಲ್ಲ. ಕಣ್ಣೆದುರಿಗೇ ಆತ್ಮಹತ್ಯೆಯ ಬೆದರಿಕೆ ಹಾಕಿದಾಗಲೂ ಜಗ್ಗಲಿಲ್ಲ. +ಕೊನೆಗೆ ಅಗ್ರಹಾರಕ್ಕೆ ಅಗ್ರಹಾರವೇ ಸಂಪು ಮಾಡಿದಾಗ ಸ್ವಜಾತಿ ಕನ್ಯೆ ನೋಡಲು ಒಪ್ಪಿದ. ಏನು ಬಿಟ್ಟರೂ ಜಾತಿ ಬಿಡಬಾರದು ಎಂದು ತಂದೆಯ ಸಹಪಾಠಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸಿದ. ಮಗನನ್ನು ತಮ್ಮ ಜುಟ್ಟಿಗೆ ಕಟ್ಟಿಕೊಂಡು ಶಾಸ್ತ್ರಿಗಳು ಛಪ್ಪನ್ನಾರು ದೇಶಗಳನ್ನು ಅಲೆದರು. ತಾನು ಸಂಭೋಗಿಸಿದ ಹುಡುಗಿಯರಂತೆ ಇವರಾರು ಇಲ್ಲವೆಂದು ಅಶ್ವಥ್ ತಿರಸ್ಕರಿಸಿದ. ನೂರಾರು ಮಂದಿಯನ್ನು ಕೊಂದವನಿಗೆ ಮಗಳನ್ನು ಹೇಗೆ ಕೊಡುವುದು ಎಂದು ಶಾಸ್ತ್ರಿಗಳಿಗೆ ಹೇಳಿದರು. ಮತ್ತೆ ಕೆಲವರು “ಮಿಲಿಟರಿ ಸೇವೆ ಅಂದ ಮೇಲೆ ಅಮೇಧ್ಯ ಮದ್ಯ ಸೇವನೆ ಮಾಡದೆ ಇರುವುದುಂಟೆ” ಎಂಬ ಅನುಮಾನ ವ್ಯಕ್ತಪಡಿಸಿದರು. ಕೊನೆಗೆ ಗುಣ ಸಾಗರದ ಅದ್ವಿತೀಯ ಪಂಡಿತೋತ್ತಮರಾದ ಶ್ರೀನಿವಾಸರಾಯರು ತಮ್ಮ ಮಗಳನ್ನು ಕೊಡಲು ಒಪ್ಪಿದರು. ಆ ಹುಡುಗಿ ಹೆಸರು ಅಲಮೇಲು, ಶ್ರೀಮದ್ ವೆಂಕಟೇಶನ ಧರ್ಮಪತ್ನಿಯ ಹೆಸರು. ಆಕೆ ಆಚಾರವಂತೆ, ವಿಚಾರವಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. +ತನಗೆ ವಾರದೊಳಗೆ ಮದುವೆ ಮಾಡದಿದ್ದರೆ ಕನ್ನೀರವ್ವನ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯನ್ನು ಹೆದರಿಸಿದ ಧೀಮಂತೆ, ಯೌವನ ಕಾಲಿರಿಸಿದಾಗ ನಿದ್ರಾ ನಡಿಗೆಯ ಚಾಳಿ ಇತ್ತಂತೆ, ಆಕೆ ರೂಪವತಿ ಮತ್ತು ಬಲಶಾಲಿಯಾಗಿದ್ದುದರಿಂದಲೇ ಮಿಲಿಟರಿ ಅಶ್ವತ್ಥ್ ಒಪ್ಪಿಕೊಂಡದ್ದು. ಆಕೆಯ ದೇಹದಲ್ಲಿ ಸ್ಪಂದಿಸುವ ಗುಣ ಕಂಡುಕೊಂಡ ನಂತರವೇ ಕಾಯಾವಾಚಾಮನಸಾ ಮಾಂಗಲ್ಯಧಾರಣೆ ಮಾಡಿದ, ಒಂದು ತಿಂಗಳ ಪರ್ಯಂತರ ಹಾಸಿಗೆ ಪ್ರಸ್ಥ ನಿರ್ವಿಘ್ನವಾಗಿ ನೆರವೇರಿತು. ಮದುವೆಯಾದ ಮೂವತ್ತೈದನೆ ದಿನ ಮಿಲಿಟರಿ ಹೆಡ್ ಕ್ವಾರ್ಟಸ್ಸಿನಿಂದ ಬುಲಾವ್ ಬಂತು. ಮಿಲಿಟರಿ ಉಡುಪು ಧರಿಸಿ ಹೊರಟು ನಿಂತ. ಪತಿಭಕ್ತೆಯಾದ ಅಲಮೇಲು ಕಣ್ಣುಗಳಿಂದ ಅಶ್ರುಧಾರೆ ಹರಿಯಿತು. “ವಾಪಸು ಬರುವುದರೊಳಗೆ ನಮ್ಮಿಬ್ಬರ ಹಾಗೆಯೇ ಗಂಡುಮಗುವನ್ನು ಹೆತ್ತು, ಮೈಗೆ ಎಣ್ಣೆ ನೀರು ಹಾಕ್ಕೊಂಡು ರೆಡಿಯಾಗಿರು” ಎಂದು ಹೇಳಿ ಹೊರಟುಹೋದ. +ಪತಿವಾಕ್ಯ ಪರಿಪಾಲನಾರ್ಥವಾಗಿ ಅಲುಮೇಲು ಮದುವೆಯಾದ ಇನ್ನೂರ ಎಂಬತ್ತೆಂಟನೆ ದಿನದಂದು ಗಂಡುಮಗುವಿಗೆ ಜನ್ಮ ನೀಡಿದಳು. ಆಮಗು ನೋಡಲು ಮುದ್ದಾಗಿತ್ತು. ಸ್ವತಃ +ಜ್ಯೋತಿಷ್ಯ ಮಾರ್ತಾಂಡರಾದ ಶಾಸ್ರಿಗಳು ಗುಣಿಸಿ ಭಾಗಿಸಿ ನಕ್ಶತ್ರ ನೋಡಿದರು. ಸ್ವಾತಿ ನಕ್ಷತ್ರ, ರಾಜಯೋಗ, ನೂರು ವರ್ಷ ತುಂಬಿದ ಬದುಕು ಅನುಭವಿಸುತ್ತನೆ; ಶಾಸ್ತ್ರ ಕೋವಿದನಾಗುತ್ತಾನೆ, ಜ್ಯೊತಿಷ್ಯದಲ್ಲೂ ಕೈಯಾಡಿಸಿ ಭವಿಷ್ಯ ಹೇಳಿ ನಾಲ್ಕಾರು ಮಂದಿ ಶ್ರೀಮಂತರ ಸಖ್ಯ ಸಂಪಾದಿಸುತ್ತಾನೆ, ಸತ್ಯನಾರಾಯಣ ವ್ರತವೇ ಮೊದಲಾದ ವ್ರತಗಳನ್ನು ಆಚರಿಸಿ ಹಣ ಸಂಪಾದಿಸಿ ಹೆಂಡತಿ ಮಕ್ಕಳನ್ನು ಸುಖವಾಗಿಡುತ್ತಾನೆ, ಪತಿಯೇ ದೇವರೆಂದು ಭಾವಿಸುವ ಹೆಂಡತಿ ದೊರಕುತ್ತಾಳೆ, ಹೀಗೆ ಏನೇನೋ ವಿವರಗಳುಳ್ಳ ಜಾತಕ ಬರೆದು ಮುಗಿಸಿದರು ಶಾಸ್ತ್ರಿಗಳು. +ಅಂಗಾತ ಮಲಗಿ ಆಡುವ ಮೊಮ್ಮಗನ ಕಿವಿಯಲ್ಲಿ ಆರು ಮಂತ್ರ ಗೊಣಗಿದರು. ಬೋರಲು ಮಲಗಿ ಇಸ್ಸಿ ಮಾಡುವ ಮೊಮ್ಮಗನ ಕಿವಿಯಲ್ಲಿ ಏಳು ಮಂತ್ರ ಬೋದಿಸಿದರು. ಹೀಗೆ ಕುಂತರೊಂದು ಮಂತ್ರ, ನಿಂತರೊಂದು ಮಂತ್ರ. ತಮ್ಮ ಯಂದೆಯ ಹೆಸರನ್ನು ಇಟ್ಟರೆಂದರೆ ಸಾಮಾನ್ಯವೇನು? ವಾಗ್ವಾದ ತೀರ್ಥ ನವರಸ ನಿಷ್ಣಾತ, ಮುಂತಾದ ಬಿರುದಾಂಕಿತ ಶಾಮಾ ಶಾಸ್ತ್ರಿಗಳು ಬಂದರೆಂದರೆ ಸಾಕ್ಷಾತ್ ಮಹಾರಾಜರೇ ಎದ್ದು ನಿಂದು ಸೂಚಿಸುತ್ತಿದ್ದರು. ಹಿಂದೂ ಮತದ ಎದುರು ಯಾವ ಧರ್ಮಗಳು ಏನೂ ಅಲ್ಲ ಎಂದು ಎಲ್ಲಾ ಧರ್ಮದ ಪಂಡಿತರನ್ನು ಸೋಲಿಸಿ. ಮಹಾರಾಜರಿಂದ ಚಿನ್ನದ ಮುಂಗೈ ಕಡ್ಗ ಪಡೆದಿದ್ದಂಥವರು. ಆ ಕಡಗಕ್ಕೆ ಒಂದು ಪುಟ್ಟ ಘಂಟೆ ಇತ್ತು. ಅವರನ್ನು ಎಲ್ಲರೂ ಘಂಟಾ ಶಾಮಾ ಶಾಸ್ತ್ರಿಗಳೆಂದೇ ಕರೆಯುತ್ತಿದ್ದರು. ಹೊತ್ತೆ ಕಿಚ್ಚಿನಿಂದ ಕುದಿಯುತ್ತಿದ್ದ ಅಗ್ರಹಾರದ ಪಡಪೋಸಿ ಪಂಡಿತರುಶಾಸ್ತ್ರಿಗಳ ಮುಂಗೈಯಿಂದ ಕದಿಯಲು ಪ್ರಯತ್ನಿಸಿದ್ದೂ ಉಂಟು; ಸಿಕ್ಕಿ ಬಿದ್ದಿದ್ದೂ ಉಂಟು. ಶಾಸ್ತ್ರಿಗಳು ಕ್ಷಮಿಸಿದ್ದೂ ಉಂಟು. ಕ್ಷಮಿಸದಿದ್ದರೆ ಅವರು ಅಗ್ರಹಾರದಲ್ಲಿ ಕುಟುಂಬ ಸಹಿತ ವಾಸಿಸುವುದೇ ಕಷ್ಟವಿತ್ತು. ಅದೂ ಅಲ್ಲದೆ ಈ ದೇಶಕ್ಕೆ ದರಿದ್ರ ಸ್ವತಂತ್ರ ಬಂದು ರಾಜರುಗಳೆಲ್ಲಾ ಬೀದಿ ಪಾಲಾಗಿದ್ದರು. ರಾಜರೇ ಬೀದಿ ಪಲಾದರೆಂದ ಮೇಲೆ ಪಂಡಿತರು, ವಿದ್ವಾಂಸರು ತಂತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ತಂತಮ್ಮ ಪವಿತ್ರ ಜುಟ್ಟುಗಳ ಕಡೆಗೆ ವಿಶೇಷ ಗಮನ ಹರಿಸಿದರು. ಜುಟ್ಟು ಎಮ್ದರೆ ಸಾಮಾನ್ಯ ಸಂಗತಿ ಏನು? ಅದು ಸ್ವರ್ಗದಿಂದ ಮಾಹಿತಿ ಸಂಗ್ರಹಿಸಿ ಮೆದುಳಿಗೆ ವರ್ಗಾಯಿಸುವ ಪರಿಣಮಕಾರಿ ರಿಸೀವರ್, ~ಆಂಟೆನ ಇದ್ದಂತೆ. ಶಾಸ್ತ್ರಿಗಳು ತಮ್ಮ ದೇಹಕ್ಕೆ ಎಷ್ಟು ಬೆಲೆ ಕೊಡುತ್ತಿದ್ದರೋ; ಅಷ್ಟೇ ಬೆಲೆಯನ್ನು ತಮ್ಮ ಜುಟ್ಟಿಗೂ ಕೊಡುತ್ತಿದ್ದರು. ಆ ಜುಟ್ಟಿಗಿದ್ದ ಒಂದೊಂದು ಗಂಟುಗಳಲ್ಲಿ ಅವರು ಒಂದೊಂದು ಲೋಕದ ಗುಟ್ಟನ್ನು ಅಡಗಿಸಿಟ್ಟಿದ್ದರು. ಕ್ರಮೇಣ ಅವರ ದೇಹ ಹಣ್ಣಾಯಿತೇ ಹೊರತು ಅವರ ಜುಟ್ಟಿಗೆ ವೃದ್ದಾಪ್ಯ ಬರಲಿಲ್ಲ. ಪ್ರಜಾಪ್ರಭುತ್ವದ ಬಗ್ಗೆ; ಸಾಮಾಜಿಕ ಸಮಾನತೆ ಬಗ್ಗೆ ಅವರಿಗೆ ಕೆಟ್ಟ ಅಸಮಾಧಾನವಿತ್ತು. ಸನಾತನ ನಂಬಿಕೆಗಳನ್ನು ಮೂಡನಂಬಿಕೆಗಳೆಂದು ಕರೆದು ಅವುಗಳ ವಿರುದ್ದ ಎತ್ತರಿಸಿ ಮಾತಾಡುತ್ತಿದ್ದ ಜವಹರಲಾಲ ನೆಹುರೂರವರೆಂದರೆ ಅವರಿಗೆ ಭಯಂಕರ ಕೋಪವಿತ್ತು. ಶೂದ್ರರು; ದಲಿತರಿಗೆ ಸಮಾಜದಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿರುವ ಸರಕಾರಗಳ ವಿರುದ್ಧ ಅವರು ಹಿಡಿ ಶಾಪ ಹಾಕುತ್ತಿದ್ದರು. ಆದ್ದರಿಂದ ಅವರು ಎಂದೂ ಮತಗಟ್ಟೆಗಳಿಗೆ ಹೋಗಿರಲಿಲ್ಲ. ಮತ ಚಲಾಯಿಸಲೂ ಇಲ್ಲ. ಸನಾತನ ಧರ್ಮದ ಪುನರುತ್ಠಾನ ಮಾಡಲು ಕಂಕಣ ಬದ್ಧನಾಗುವಂತೆ ಮಗ ಪರಮೇಶ್ವರ ಶಾಸ್ತ್ರಿಗಳಿಂದ ವಚನ ಪಡೆದರು. ತಮ್ಮ ಪವಿತ್ರ ಕಳೇಬರದೊಂದಿಗೆ ಮಹಾರಾಜರ ಪ್ರಸಾದವಾದ ಮುಂಗೈ ಕಡಗವನ್ನೂ ಇರಿಸಿ ಸಂಸ್ಕಾರ ಮಾಡುವಂತೆ ಮಗನಿಗೆ ಹೇಳಿ ಪ್ರಾಣ ತ್ಯಜಿಸಿದರು. +ಅವರ ಶವವನ್ನು ಕಡಗದೊಂದಿಗೆ ಸಿಂಗರಿಸಿ ಭಕ್ತಾದಿಗಳ ದರ್ಶನಕ್ಕಾಗಿ‌ಒಂದು ದಿನದ ಮಟ್ಟಿಗೆ ಇಡಲಾಯಿತು. ಹೆಣ ನೋಡುವುದಕ್ಕಿಂತ ಕಡಗ ನೋಡಲು ಬಂದವರೇ ಅಧಿಕ. ಕಣ್ಣೀರು ಸುರಿಸಿದ್ದಕ್ಕಿಂತ ಹೆಚ್ಚಾಗಿ ಬಾಯಿಯಿಂದ ಜೊಲ್ಲು ಸುರಿಸಿದುದೇ ಹೆಚ್ಚು. ಅತ್ತು ಕರೆದೂ ಸುಸ್ತಾಗಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಶಾಸ್ತಿಗಳ ಶವ ಕಾಣೆಯಾಯಿತು. ಶಾಸ್ತ್ರಿಗಳ ಆತ್ಮವೇ ತಮ್ಮ ಪವಿತ್ರ ಕಳೆಬರವನ್ನು ಕಾಶಿಯ ಪವಿತ್ರ ಮಣಿಕರ್ಣಿಕಾ ಘಾಟಿಗೆ ಸಾಗಿಸಿರಬಹುದೆಂದು ಅನೇಕರು ಸಂದೇಹಿಸಿದರು. ಕಾಶಿ ವಿಶ್ವನಾಥನ ಸನ್ನಿಧಿಯಲ್ಲೇ ಅಸು ನೀಗುವ ಆಸೆಯನ್ನು ಅವರು ಬದುಕಿದ್ದಾಗ ಹಲವುಕಡೆ ಪ್ರಸ್ತಾಪಿಸಿದ್ದುಂಟು. ಸಾಕ್ಷಾತ್ ಆದಿಶಕ್ತಿಯ ರೂಪವಾದ ದಾಕ್ಷಾಣಿಯ ಶವವನ್ನು ಆಕೆಯ ಪತಿ ಪರಮೇಶ್ವರ ಅಗ್ನಿಗಾಹುತಿ ಮಾಡಿದಂಥಾ ಪರಮಪವಿತ್ರ ಸ್ಥಳವದು. ಅಲ್ಲಿ ದೇಹ ತ್ಯಾಗ ಮಾಡುವುದೆಂದರೇನು? ಅದಕ್ಕೆ ಸಾವಿರಾರು ರುಪಾಯಿಗಳನ್ನು ಜೋಡಿಸುವುದು ಹೇಗೆ? ಅಂಥ ಅಂತ್ಯ ಸಂಸ್ಕಾರಗಳಿಗೆ ಬೇಕಾದ ಎಲ್ಲಾ ಖರ್ಚುಗಳನ್ನು ಧರಿಸಲು ಸ್ವತಂತ್ರೋತ್ತರ ಪ್ರಜಾಪ್ರಭುತ್ವ ಸರಕಾರಗಳು ಸರ್ವಥಾ ಹಿಂದೇಟು ಹಾಕುವವು. ಅಲ್ಲದೆ, ಈ ಸರಕಾರಗಳಿಗೆ ಸನಾತನ ಧರ್ಮಾವಲಂಬೀ ಮೇಲ್ಜಾತಿ ಸಂಜಾತರ ಬಗ್ಗೆ ಲವಲೇಶ ಗೌರವವಿಲ್ಲ. ಕಾಶ್ಮೀರಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವ ನೆಹರೂರವರು ಪ್ರಧಾನಿಗಳಾಗಿದ್ದಾಗ ಅವರಿಂದ ಬ್ರಾಹ್ಮಣ ಪರ ನಿಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ತಲೆಕೆಳಗಾಯಿತು. ಬ್ರಾಹ್ಮಣ ವಿರೋಧಿ ಸರಕಾರಗಳು ಇದ್ದರೆಷ್ಟು? ಬಿದ್ದರೆಷ್ಟು? ಆದರೆ ಅದೇ ರಾಜ ಮಹಾರಾಜರಿದ್ದಿದ್ದರೆ ಹೀಗಾಗುತ್ತಿತ್ತೇನು? ಪಂಡಿತೋತ್ತಮರ ಕಳೆಬರವನ್ನು ನವರತ್ನ ಖಚಿತ ಡೋಲಿಯಲ್ಲಿ ಅಲಂಕರಿಸಿ ಕಾಶಿಗೋ ಕೇದಾರಕ್ಕೋ, ಹೃಷೀಕೇಶಕ್ಕೋ ಸಾಗಿಸುತ್ತಿದ್ದರು. ಅಂತ್ಯ ಸಂಸ್ಕಾರದ ಸಕಲ ಖರ್ಚುಗಳನ್ನೂ ಖಂಡಿತ ಭರಿಸುತ್ತಿದ್ದರು. ಇದನ್ನು ಮನಗಂಡೇ ಶಾಮಾ ಶಾಸ್ತ್ರಿಗಳು ತಮ್ಮ ಆತ್ಮಬಲದಿಂದ ಇಚ್ಛಾಶಕ್ತಿಯಿಂದ ತಮ್ಮ ಶವವನ್ನು ಕಾಶಿಯ ಮಣಿಕರ್ಣಿಕಾ ಘಾಟ್ ಅಂತರಿಕ್ಷ ಮಾರ್ಗವಾಗಿ ಸಾಗಿಸಿರಬಹುದೆಂದು ಸಂದೇಹಿಸಲಾಯಿತು. ಅದನ್ನು ಪುಷ್ಟೀಕರಿಸುವಂತೆ ಕೆಲವರು ತಾವು ಮಟಮ ಟ ಮಧ್ಯ ರಾತ್ರಿ ಸಮಯಯಲ್ಲಿ ಉದ್ದನೆ ವಸ್ತುವೊಂದು ಆಕಾಶ ಮಾರ್ಗವಾಗಿ ಉತ್ತರಾಭಿಮುಖವಾಗಿ ಹೋದದ್ದನ್ನು ಕಂಡೆವೆಂದು ಹೇಳಿದರು. ಅವರ ಆ ವಾದವನ್ನು ಸತ್ಯವೆಂದು ನಿರೂಪಿಸಲು ಗಣಪಥಿ ಭಟ್ಟರು ಆ ವಸ್ತುವಿಂದ ಉದುರಿತ್ತೆಂದು ಹೇಳುತ್ತ, ಸೀದ ತಮ್ಮ ತಲೆಗೇ ಸುರಿದ ಕೆಲವು ಹೂವುಗಳನ್ನು ತೋರಿಸಿದರು. ಅಂದರೆ ಶವ ಈಗಾಗಲೇ ಮಣಿಕರ್ಣಿಕ ಘಾಟ್ ತಲುಪಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅಗ್ನಿ ಸಂಸ್ಕಾರಕ್ಕೆ ಹೆತ್ತ ಮಗನಿಲ್ಲದಿದ್ದರಾಯಿತೇನು? ಶಾಸ್ತ್ರೀಯ ಸಂಸ್ಕಾರವಾಗದಿದ್ದಲ್ಲಿ ಆತ್ಮ ಮೋಕ್ಷ ದೊರಕದೆ ಅತಂತ್ರ ಸ್ಥಿತಿಯಲ್ಲಿ ತಿರುಗಾಡೀತು. ಆ ಪಟ್ಟಣದ ಶ್ರಿಮಂತ ವಣಿಕರಾದ ವೆಂಕಟರಮಣಶ್ರೇಷ್ಠಿಗಳು ಕಾಶಿಗೆ ಹೋಗಿಬರುವ ವೆಚ್ಚವನ್ನು ತಾವು ಧರಿಸುವುದಾಗಿ ಹೇಳಿದರು. ಕೆಲವರು ಟೆಲಿಫೊನ್ ಆಫೀಸಿಗೆ ಹೋಗಿ ಕಾಶಿಯ ಸಂಸೃತ ಪಾಠಶಾಲೆಯ ಉದ್ದಾಮ ಪಂಡಿತರಿಗೆ ಕಾಲ್ ಬುಕ್ ಮಾಡಿದರು. ಇಂಥ ಪವಿತ್ರ ಲಕ್ಷಣಗಳ ಕಳೇಬರ ಮಣಿಕರ್ಣಿಕ್ ಅ ಘಾಟ್ ತಲುಪಿರುವುದರ ಬಗ್ಗೆ ಮಾಹಿತಿ ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಅಂಥ ಲಕ್ಶಣಗಳ ನೂರಾರು ಹೆಣಗಳು ಮಣಿಕರ್ಣಿಕಾ ಘಾಟ್‌ನಲ್ಲಿ ಅನಾಥವಾಗಿ ಬಿದ್ದಿರುವವೆಂದು, ಬಂದು ಹುಡುಕಿಕೊಳ್ಳಿ ಎಂಬ ಸಂದೇಶ ಕಾಶಿಯಿಂದ ಬಂತು. ಅಗ್ರಹಾರಕ್ಕೆಲ್ಲಾ ಅಹಾರಧಾನ್ಯ ಸಪಲ್ಯಾ ಮಾಡುವ ಶ್ರೇಷ್ಠಿಗಳು ಹೋಗಿಯೇ ಬಂದು ಬಿಡಿ ಎಂದು ಹೇಳಿದರು. ಪರಮೇಶ್ವರ ಶಾಸ್ತ್ರಿಗಳನ್ನು ಬಸ್ ನಿಲ್ದಾನದಲ್ಲಿರಿಸಿ +ದುಡ್ಡು ತರಲೆಂದು ಮನೆಗೆ ಹೋಗಿದ್ದೇನೋ ನಿಜ. ತಮ್ಮ ಬೊಜ್ಜಿನ ಕಣಿವೆಯಲ್ಲಿದ್ದ ಬೆಳ್ಳಿ ಉಡುದಾರಕ್ಕಿಂತ ಕರ್ರಗೆ ತೂಗಾಡುತ್ತಿದ್ದ ಬೀಗದ ಕೈಯನ್ನು ಕೈಯಲ್ಲಿ ಹಿಡಿದುಕೊಂಡಿದ್ದೂ ನಿಜ. ಅಷ್ಠೇ ಕರ್ರಗಿದ್ದ ತಿಜೋರಿಯ ತೂತಿನಲ್ಲಿ ತುರುಕಿದ್ದೂ ನಿಜ. ಅವಸರದಲ್ಲಿ ತುರುಕುವವರಿಗೆ ತೂರುವುದಾದರೂ ಹೇಗೆ? ಅದು ಎಷ್ಟಿದ್ದರೂ ಬೀಗರು ಕೊಟ್ಟಿದ್ದು. ಎಲ್ಲ ಮಾಹಿತಿ ಸಂಗ್ರಹಿಸಿದ್ದ ಶ್ರೀಮತಿ ರಿಂದಮ್ಮ ಕುಪ್ಪಳಿಸಿ ಗಂಡನೆದುರು ನಿಂತು ತನ್ನ ಸುಗಾತ್ರದ ಎದೆ ಝಳಪಿದಳು. ಯವನೋ ಬ್ರಾಹ್ಮಣ ಸತ್ತರೆ ತನ್ನ ಗಂಡ ತಿಜೋರಿ ಹಣ ಕೊಡುವುದೆಂದರೇನು? ತರಾತೆಗೆ ತೆಗೆದುಕೊಂಡಳು. ಆಕೆಯ ಪವಿತ್ರ ಭಗವತಿ ಕಣಿವೆಯಿಂದ ಹುಟ್ಟಿ ಸಹ್ಯಾದ್ರಿ ಶ್ರೇಣಿಗಳನ್ನು ಈಡಾಡಿ ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದ ಎಂಟು ಮಂದಿ ಮಕ್ಕಳು ತಮ್ಮ ತಾಯಿಗೆ ಬೇಷರತ್ತಿನ ಬೆಂಬಲ ಸೂಚಿಸಲು ಬೆಕ್ಕು ಮ್ಯಾಂವ್‌ಗುಟ್ಟಿ ಹರ್ಷ ಪ್ರಕಟಿಸಿತು. ಬೊಜ್ಜಿನ ಷ್ಯಾಮಲ ವರ್ಣದ ಸಂದಿಯಲ್ಲಿ ಕಪ್ಪುಕೀ ತೆಪ್ಪನೆ ಉಡುಗಿ ಅಡಗಿ ಕೊಂಡಿತು. ಷವ ಸಂಸ್ಕಾರ ಮುಗಿಯುವವರೆಗೆ ಮುಖಕಮಲವನ್ನು ಸಾರ್ವಜನಿಕವಾಗಿ ತೋರಕೂಡದೆಂದು ಕಟ್ಟಪ್ಪಣೆ ಮಾದಿ, ಅವರೆಲ್ಲ ಸೇರಿ ಶ್ರೆಷ್ಠಿಯನ್ನು ಉಗ್ರಣದ ಕೋಣೆಯಲ್ಲಿ ಬಚ್ಚಿಟ್ಟುಬಿಟ್ಟರು. ಅಷ್ಟೇ ಅಲ್ಲ್ದೆ ಚಿಲಕ ಸರಿಸಿ ಬೀಗ ಕೂಡ ಜಡಿದರು. ಸರ್ವ ಪಾಪ ಪರಿಹಾರ್ಥವಾಗಿ ಬ್ರಾಹ್ಮಣರಿಗೆ ಸಹಾಯಮಾಡಬೇಕೆಂಬ ಸದುದ್ದೇಶದಿಂದ ಉಗ್ರಾಣದ ಪಾಲಾಗಿದ್ದ ಶ್ರೇಷ್ಥಿಯನ್ನು ನೋಡುತ್ತಲೇ ಉಗ್ರಣವನ್ನು ತಮ್ಮ ಕರ್ಯಕ್ಷೇತ್ರ ಮಾಡಿಕೊಂಡಿದ್ದ ಹೆಗ್ಗಣ ಇಲಿಗಳಿಗೆಲ್ಲ ಹೊಸ ಹುಮ್ಮನಸ್ಸು ಬಂತು. ತಮಗೆ ಬಗೆ ಬಗೆಯಾದ ಹಿಂಸೆ ಕೊಟ್ಟಿರುವ ಮತ್ತು ಕೊಡುತ್ತಿರುವ ಶೆಟ್ಟಿ ಒಂತಿಯಾಗಿ ಸಿಕ್ಕರೆತಾವು ಏನೆಂಬುದನ್ನು ತೋರಿಸಬೇಕೆಂದು ಅವೂ ಬಹಳ ದಿನಗಳಿಂದ ಕಾಯುತ್ತಿದ್ದವು. ಹೇಷಾರವದ ಮಾಡುತ್ತಿದ್ದ ಶೆಟ್ಟಿಯ ಸುತ್ತ ಅವೆಲ್ಲ ವರ್ತುಲಾಕಾರವಾಗಿ ನೆರೆತವು. ತಮ್ಮದೇ ಆದ ಭಾಷೆಯಲ್ಲಿ ಹಿಡಿ ಹಿಡಿ ಶಾಪ ಹಾಕತೊಡಗಿದವು. ಬಗೆಬಗೆಯಾದ ಬಲೆಗಳನ್ನು ಪ್ರಯೋಗಿಸಿ ತಮ್ಮನ್ನು ಹಿಡಿಸಿ ಸಾಯಿಸುತ್ತಿದ್ದವನು ಇದೇ ಶೆಟ್ಟಿ, ಎಂಥ ಮನುಷ್ಯರಿವರು, ಮೂಷಕ ವಾಹನ್ವನ್ನು ಪೂಜಿಸುತ್ತಾರೆ, ಅದರೆ ಲಂಬೋದರನಿಗೆ ವಾಹನಗಳದ ತಮ್ಮನ್ನು ಚಿತ್ರಹಿಂಸೆ ಕೊಟ್ಟು ಕೊಲೆಮಾಡಿಸುತ್ತರೆ, ಎಷೊಂದು ಅನಾಗರೀಕರಿ ನರಹುಳುಗಳು!…. ನಮಗೂ ಅದು ಇದು ತಿಂದು ಬದುಕುವ ಹಕ್ಕಿಲ್ಲವೇನು? +ಹೆಗ್ಗಣಗಳು, ಇಲಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯನ್ನು ಪುಷ್ಠೀಕರಿಸುವಂತೆ ಶ್ರೇಷ್ಠಿಯ ಸುತ್ತ ವರ್ತುಲಾಕಾರದಲ್ಲಿ ನೆರೆದು ಗುರುಗುಟ್ಟಿದವು. ದುರುಗುತ್ತಿದವು. ಕೆಲವು ಘರ್ಜಿಸಿದರೆ, ಇನ್ನು ಕೆಲವು ಘೀಳಿಟ್ಟವು. ಮತ್ತೆ ಕೆಲವು ಗಹಗಹಿಸಿ ನಕ್ಕವು. +ಶ್ರೇಷ್ಥಿ ಉಸ್ಸೆಂದು ಗದರಿದರೂ ಅವು ಕೇರು ಮಾಡಲಿಲ್ಲ. ತಮ್ಮ ಮೂಷಿಕ ಭಾಷೆಯಲ್ಲಿ ಅವಾಚ್ಯ-ಶಬ್ದ ಪ್ರಯೊಗ ಮಾಡಿದವು ಮನದಣಿಯೇ. ಆ ದಡ್ಡಗೆ ಅವುಗಳ ಗೀರ್ವಾಣಿ ಅರ್ಥವಾಗಿದ್ದಲ್ಲಿ ಅವಸಾನವನ್ನು‌ಆ ಕೂಡಲೆ ಆಹ್ವಾನಿಸಿಬಿಡುತ್ತಿದ್ದನು. ಗದಗದ ನಡುಗಲಾರಂಭಿಸಿದನು. ಮಲ ಮೂತ್ರಗಳು ಅಂತಿಮ ಸ್ಥಾನದಲ್ಲಿ ಗುರಿ ಇಟ್ಟು ನಿಂತವು. ಹೆಗ್ಗಣ ಇಲಿಗಳು ಆತನ ಮೇಲೆ ಠಣ್ಣ ಟಣ್ ಎಗರಡಲಾಂಭಿಸಿದ್ದೇ ಮೊದಲಿಗೆ ಮೂತ್ರ ಮೂತ್ರ ವಿಸರ್ಜನೆಮಾಡಿಕೊಂಡನು. ಇಲಿಯೊಂದು ಆತನ ಕಿವಿಕಚ್ಚಿತು. ಸೊಂಡಿಲಿಯೊಂದು ಕೆಳದುಟಿಗೆ ಕಾಲೂರಿನಿಂತು ಆತನ ನಾಲಿಗೆಗಾಗಿ ತಡಕಾಡತೊಡಗಿತು. +“ಏಡುಕೊಂಡಲವಾಡ ಚಚ್ಚಿಪೋತಾನು” ಕಿತಾರನೆ ಕಿರಿಚಿದ. ಮಲ ಗುದದ್ವಾರದಿಂದ ಕಿತ್ತು ಬಂತು. +ಆವನು ಹೀಗೆ ಉಗ್ರಣದಲ್ಲಿ ವಿಲವಿಲ ಒದ್ದಾಡುತ್ತಿರಲು ಇತ್ತ ಬುಸ್ ನಿಲ್ದಾಣದಲ್ಲಿ ಪರಮೇಶ್ವರ ಶಾಸ್ತ್ರಿಗಳು “ಶ್ರೇಷ್ಠಿಗಳ ಆಗಮನದಲ್ಲಿ ವಿಳಂಬವಾಗುತ್ತಿದೆಯಲ್ಲಾ…. ರಾಮಾ ರಾಮಾ” ಎಂದು ಪರಿತಪಿಸಿತ್ತಿದ್ದರು. +ಅಷ್ತರಲ್ಲಿ ಅಮರ ಕೋಶದಲ್ಲಿ ನಿಷ್ಣಾತರಾದ, ಸಿದ್ಧಾಂತ ಶಿಖಾಮಣಿ ಎಂಬ ಬಿರುದನ್ನು ತಮ್ಮ ಹೆಂಡತಿಯಿಂದ ಪದೆದುಕೊಂಡಂಥವರಾದ, ಗುಂಡಾಭಟ್ಟರು ಏಳುತ್ತಾ ಬೀಳುತ್ತ ಸಡಲಿದ್ದ ಧೋತರವನ್ನು ಲೆಕ್ಕಿಸದೆ ಓಡಿಬಂದರು. ಅವರನ್ನು ಬೆನ್ನಟ್ಟಿ ಬಂದ ಎರಡು ನಾಯಿಗಳು ಅಷ್ಟು ದೂರ ಹೇಷಾರವ ಮಾಡುತ್ತ ನಿಂತುಕೊಂಡವು. +“ಶಾಸ್ತ್ರಿಗಳೇ… ಅಪಚಾರವಾಯಿತು… ಅಪಚಾರವಾಯಿತು” ಭಟ್ಟರು ಧೋತರದ ನಿರಿಗೆ ಸರಿಪಡಿಸಿಕೊಂಡು ಕಚ್ಚೆ ಸರಿಯಾಗಿ ಕಟ್ಟಿಕೊಂಡರು. ಅವರ ಗ್ಲೋಬಾಕಾರದ ಹೊಟ್ಟೆಯ ಮೇಲೆ ಬೆವರು ಮೆತ್ತಿಕೊಂದಿತ್ತು. +ಶಾಸ್ತ್ರಿಗಳು ಜೀವಮಾನದಲ್ಲಿ ಪ್ರಥಮಬಾರಿಗೆ ದಿಗ್ಭ್ರಮೆಗೊಂಡರು. +ಪ್ರಶ್ನಾರ್ಥಕವಾಗಿ ನೋಡಿದರು. ಮಾತುಗಳು ಗಂಟಲಲ್ಲಿ ಪದ್ಮಾಸನ ಹಾಕಿದವು. ಮಾತಿಗಿಂತ ಮೌನವನ್ನೇ ಹೆಚ್ಚು ಪ್ರೀತಿಸುತ್ತಿದ್ದ ಶಾಸ್ತ್ರಿಗಳಿಗೆ ಹೇಗೆ ಹೇಳುವುದು? ಹೇಳದೆ ಇರಲಿಕ್ಕಾದೀತೆ? ಉತ್ತರೀಯ ಬಾಯಿಗೆ ಅಡ್ಡ ಇಟ್ಟುಕೊಂಡು ಬಿಕ್ಕಿದರು ಭಟ್ಟರು. +“ನೋಡಿ ಶಾಸ್ತ್ರಿಗಳೇ, ಪ್ರಪಂಚ ತುಂಬಾನೇ ಕೆಟ್ಟು ಹೋಗಿದೆ. ಧನ ಇಶಾಚಿಯ ಮೋಹ ಪಾಶಕ್ಕೆ ಸಿಲುಕಿ ಜನಗಳು ಮಾಡಬಾರದ ನೀಚ ಕೆಲಸ ಮಾಡಿದ್ದಾರೆ. ಮಾನವರು ಸನಾತನ ಧರ್ಮ ಮರೆತು ನರಕಕ್ಕೆ ಹೊಗ್ತಿದಾರಲ್ಲ?” ಗುಂಡಾಭಟ್ಟರು ಬಿಕ್ಕಿ ಬಿಕ್ಕಿ ಅಳತೊಡಗಿದರು. +ಎರಡು ದಿನಗಳಿಂದ ಅನ್ನ ನೀರು ಬಿತ್ತ ಸಲ್ಲೇಖನ ವ್ರತ ಸ್ವೀಕರಿಸಿದವರಂತಿದ್ದ ಶಾಸ್ತ್ರಿಗಳಿಗೆ ಕೋಪ ನೆತ್ತಿಗೇರಿಬಿಟ್ಟಿತು. ಎರಡನೆ ಊಟಕ್ಕೆ ಎಂದೂ ಶ್ರೀಕಾರ ಹೇಳಿದವರಲ್ಲ. ತಂದೆ ವೈಕುಂಟವಾಸಿಗಳಾಗಿರುವುದೊಂದು ಸಿಟ್ಟು, ಪಿತಾಶ್ರೀ ತಮ್ಮ ಕಳೆಬರವನ್ನು ಆಕಾಶಮಾರ್ಗವಾಗಿ ಕಾಶಿಗೆ ಒಯ್ದಿರುವುದೊಂದು ಸಿಟ್ಟು, ಶ್ರೇಷ್ಟಿಗಳು ಹಣದ ಹಸ್ತ ಚಾಚದೆ ನಾಪತ್ತೆಯಾಗಿರುವುದೊಂದು ಸಿಟ್ಟು, ಏ ಎಲ್ಲಾ ಸಿಟ್ಟುಗಳಿಗೆ ಕಿರೀಟಪ್ರಾಯವಾಗಿ ಈ ಸಿದ್ದಾಂತ ಶಿಖಾಮಣಿ ಗುಂಡಾಭಟ್ಟರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು. ಭಟ್ಟ ನೋಡಲಿಕ್ಕೆ ಕುಳ್ಳಕಿದ್ದರೂ ಸದ್ವಿನಯಶಾಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹೇಳೋದು ಹೇಳಿಬಿಡಬಾರದೆ? ಅಪ್ರಿಯ ಸಂಗತಿ ಕೇಳಿ ಶಾಪ ಕೊಡಲು ತಾನೇನು ಅಗಸ್ಥ್ಯ ಮಹರ್ಷಿಯೇ? +“ಲಕ್ವ ಬಡಿಡವರ ಹಾಗೆ ಮಾತಾಡ್ತೀಯಲ್ಲ ಭಟ್ಟ, ಅದೇನು ಒಡೆದು ಹೇಳಬಾರದೆ?” ಶಾಸ್ತ್ರಿಗಳ ಜಠರ ಲೋಕ ತಳಮಳಿಸಿತು. +ಯಾವ ನಾಲಿಗೆಯಲ್ಲಿ ಹೇಳಲಿ ಶಾಸ್ತ್ರಿಗಳೇ, ನಿಮ್ಮಿಂದ ರುದ್ರ ಚಮಕ ಕಲಿತೋನು ನಾನು” ಭಟ್ಟ ಉಗುಳು ನುಂಗಿ ಮುಂದುವರೆದು ಹೇಳಿದ. “ನಿಮ್ಮ ಪರಮಪೂಜ್ಯ ತಂದೆಯವರ ದೇಹ ಬಸವನ ಬಾವಿ ತೆಗ್ಗಿನಲ್ಲಿ ಅನಾಥವಾಗಿ ಬಿದ್ದಿದೆ. ಅಯ್ಯೋ… ಯಾವುದನ್ನು ಹೇಳಬಾರದೆಂದು ನಿರ್ಧರಿಸಿದ್ದೇನೋ ಅದೇ ಹೇಳಿಬಿಟ್ಟೆನಲ್ಲಾ? ನಾಲಿಗೆ ಮೈಲಿಗೆಯಾಗಿ ಬಿಟ್ಟಿತಲ್ಲಾ… ಅಯ್ಯೋ…. ನನ್ನಂಥ ಪಾಪಿ ಇದ್ದರೆಷ್ಟು, ಬಿದ್ದು ಹೋದರೆಷ್ಟು” ವಾಯು +ಪ್ರಕೋಪಪಿತ್ತ ಇತ್ಯಾದಿ ಕೆರಳಿ ಜೋರಾಗಿ ಅಳತೊಡಗಿದರು. +ಬಸ್ಸಿಗಾಗಿ ಕಾದಿದ್ದ ಜನ ಅವರ ಸುತ್ತ ನೆರೆದು ಏನು ಎಂಥ ವಿಚಾರಿಸತೊಡಗಿದರು. ಅವರೆಲ್ಲರಿಗು ಸಹಾಯಮಾಡಬೇಕೆಂಬಾಸೆ! +ಶಾಸ್ತ್ರಿಗಳು ಅದನ್ನು ಕೇಳಿ ’ಅಯ್ಯೋ’ ಎಂದು ಮೂರ್ಛೆ ಹೋದರು. ಅವರು ಮೂರ್ಛೆ ಹೋದದ್ದು ಅದೇ ಪ್ರಥಮ. ಸಾವಿರದೊಂದು ಗಾಯತಿ ಜಪಿಸಿ ಅರಿಷಡ್ವರ್ಗಗಳ ಮೂಗಿಗೆ ಇಚ್ಛಾಶಕ್ತಿಯ ಮೂಗುದಾರ ಹಾಕಿದಂತವರು, ಪ್ರಾತಃ ಪೂರ್ವದಲ್ಲಿ ಅರ್ಧ ತಾಸು ಶಾಸ್ತ್ರೊಕ್ತ ಪ್ರಾಣಾಯಾಮ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂದಿದ್ದಂಥವರು. ತಾವು ನುಡಿದಂತೆಯೇ ನಡೆಯುತ್ತೇವೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದವರು, ಅಂಥವರೇ ಮೂರ್ಛೆ ಹೋದರೆಂದರೇನು? ಕಾಲಮಹಿಮೆ ವರ್ಣಿಸದಳ. +ನೂರಾರು ಜನ ನೂರಾರು ದಿಕ್ಕಿಗೆ ಚದುರಿದರು. ಚರಕ ಸುಶ್ರುತರನ್ನು ಹುಡುಕಿ ಕರೆ ತರಲು ಆ ಗ್ರಾಮದ ಅಸ್ವಿನಿ ಕುಮಾರರು, ಚರಕರು, ಸುಶ್ರುತರು ಅನೇಕ ವಿಧವಾದ ಮನರಂಜನೆಯಲ್ಲಿ ಮಗ್ನರಾಗಿದ್ದರು. ಆ ಗ್ರಮಕ್ಕೆ ಹೊಸದಾಗಿ ವೈನ್ ಶಾಪು ಬಂದಿದ್ದೂ ಒಂದು ಕಾರಣ. +ಕೊನೆಗೆ ಕುರುಬರ ಸೋಮಣ್ಣ ಎಂಬ ಏಳೆಂಪಿ ಸಿಕ್ಕ. ದಿಬ್ಬನ ಸುಪುತ್ರ ಕೊತ್ರಗೆ ಇಲಾಜು ಮಾಡಿ ’ಕೊತ್ರ ಹೈಸ್ಕೂಲಿಗೆ ಸೇರಿದ್ದು’ ಎಂಬ ಕದಂಬರಿಯಲ್ಲಿ ಸೇರ್ಪಡೆಯಾಗಿ ಹೆಸರಾಗಿದ್ದಂಥವನು. ಸದಾ ಕುಡಿದವರಂತಿರುತ್ತಿದ್ದ ಅವನು ಕುಡುಕನಾಗಿರಲ್ಲಿಲ್ಲ. +ಹತ್ತಾರು ಮರಣಾಂತಿಕ ಜಾಡ್ಯಗಳಿಗೆ ಆತ ತನ್ನ ದೇಹವನ್ನು ಲೀಜ್ ಕೊಟ್ಟಿದ್ದಾನೆ ಎಂಬಂತೆ ಹೊರನೋಟಕ್ಕೆ ಗೋಚರವಾಗುತ್ತಿದ್ದರೂ ಆತ ಹಂಡ್ರೆಡ್ ಪರ್ಸೆಂಟ್ ಆರೋಗ್ಯವಂತನಾಗಿಯೇ ಇದ್ದ. +ಡಾ|ಸೋಮಣ್ಣ ತಾನು ಶೂದ್ರಾದಿ ಶೂದ್ರ ಎಂಬ ಕಾರಣಕ್ಕೆ ಶಾಸ್ತ್ರಿಗಳ ಪವಿತ್ರ ಬಾಡಿ ಮುಟ್ಟಲು ಹೆದರಿದ. ಎಲ್ಲಿ ಸುಟ್ಟು ಭಸ್ಮವಾಗಿ ಬಿಡುವೆನೋ ಎಂಬ ಕಾರಣದಿಂದ ಮುಟ್ಟಿ ಮುಟ್ಟಿ ನೋಡದೆ ಕೊನೆಗೂ ಮುತ್ತಿದನು. ಇದಕ್ಕೆ ಮಾತ್ರೆಗಳಗಾಲೀ ಸೂಜಿಗಳಗಲೀ ಬೇಡವೆಂದು ಕೊಂಡನು. ಅಳೋಪಥಿಯನು ಅವರ ದೇಹದೊಳಗಡೆ ಅಲೋ ಮಾಡಿ ನರಕಪ್ರಾಪ್ತಿ ಮಾಡಿಕೊಳ್ಳುವುದಾದರೂ ಯಾಕೆ? +ತನ್ನ ಸೊಂಟದ ಗಂತಿನಿಂದ ನಶ್ಶೆ ದಬ್ಬಿ ತೆಗೆದನು. ಒಂದು ಚಿಟಿಕೆ ನಶ್ಶೆಯನ್ನು ಆ ಶಾಸ್ತ್ರಿಗಳ ದವಳಕಾಂತಿ ಮೂಗಿನ ಹೊಳ್ಳೆಗಳೊಳಭಿತ್ತಿಗೆ ನಯವಾಗಿ ಲೇಪಿಸಿದನು. +ಅದರ ಘಾಟು ಕುಂದಲಿನೀ ಕೇಂದ್ರ ತಲುಪಿದೊಡನೆ ಶಾಸ್ತ್ರಿಗಳು ದಿಗ್ಗನೆ ಎದ್ದು ಕೂತು ’ತಂದೆಯೇ’ ಎಂದು ಹಲುಬಿದರು. +ಪಂಚಭೂತಗಳನ್ನು ಕಾಲುಗಳಿಗೆ ತಂದುಕೊಂಡು ಬಸವನ ಬಾವಿ ತಗ್ಗಿನ ಕಡೆ ಓಡತೊಡಗಿದರು. ಶಾಸ್ತ್ರಿಗಳಿಗೂ ಓಡಲು ಬರುತ್ತದೆ ಎನ್ನುವುದು ಜನರು ಕಂಡುಕೊಂಡ ವಿಶೇಷ ಅವರೂ ಅವರ ಹಿಂದೆ ಓಡತೊಡಗಿದರು. +ಕ್ಷಣಾರ್ಧದಲ್ಲಿ ಇತಿಹಾಸ ಪ್ರಸಿದ್ದ ಬಸವನ ಬಾವಿ ತಲುಪಿದರು. ಅಷ್ಟು ಹೊತ್ತಿಗಾಗಲೇ ಜನರ ಪ್ರವಾಹ ಅಲ್ಲಿ ನೆರೆದಿತ್ತು. ಅವರಲ್ಲಿ ಹಲವರು ವಿವಿದ ದರ್ಜೆಯ ಸರಕಾರಿ ಅಧಿಕಾರಿಗಳಿದ್ದರು. ಅವರೆಲ್ಲ ಲಂಚ ಹೊಡೆಯುವುದರಲ್ಲಿ, ಭ್ರಷ್ಠಾಚಾರ ಮಾಡುವುದರಲ್ಲಿ ಪ್ರಖ್ಯಾತರಾಗಿದ್ದರು. ಚರಾಸ್ತಿ, ಸ್ಥಿರಾಸ್ರಿ ಸಾಕಷ್ಟಿದ್ದರೂ ಪಾಪ ಪ್ರಜ್ಞೆಯಿಂದ ನರಳುತ್ತಿದ್ದರು. ಗತಿಸಿದ ಶಾಸ್ತ್ರಿಗಳನ್ನು ಮನೆಗೆ ಕರೆಸಿಕೋ\ಒಂಡು ವಾರಕ್ಕೊಂದೆರಡದರೂ ವ್ರತೋಪಾಸನೆಗಳನ್ನು ಮಾಡಿ ರಿಯಾಯಿತಿ ಪಡೆದುಕೊಳ್ಳುತ್ತಿದ್ದರು. +ಅವರೆಲ್ಲರಿಗೆ ಶಾಸ್ತ್ರಿಗಳ ದೇಹ ತಿಪ್ಪೆಯ ಮೇಲೆ ಬಿದ್ದಿರುವುದು ದುಃಖದಾಯಕವಾಗಿತ್ತು/ ಅದೆಲ್ಲಕ್ಕಿಂತ ದುಃಖದ ಸಂಗತಿ ಎಂದರೆ ಶಾಸ್ತ್ರಿಗಳ ತಲೆಯಮೇಲೆ ಕಾಗೆಯೊಂದು ಕೂತು ಅವರ ಜುಟ್ಟನ್ನು ಮೂಸಿ ನೋಡುತ್ತಿದ್ದುದು. ಅದೆಲ್ಲಕ್ಕಿಂತ ಮತ್ತಷ್ಟು ದುಃಖಕರ ಸಂಗತಿ ಎಂದರೆ ಯಾರೋ ದುರುಳರು ಶಾಸ್ತ್ರಿಗಳ ಮುಂಗೈಯನ್ನೇ ತುಂಡರಿಸಿ ಗಂಟ್ವುಳ್ಳ ಚಿನ್ನದ ಕಡಗವನ್ನು ಅಪರರಿಸಿದ್ದರು. +ಇದು ಕುಟುಂಬದ ದೊಡ್ಡ ದುರಂತವೇ ಸರಿ. ಚಿನ್ನದ ಆಸೆಗೆ ದುರುಳರು ಪವಿತ್ರ ದೇಹವನ್ನೇ ಅಪಹರಿಸಿದರಲ್ಲ? ಸಮಾಜಕ್ಕೆ ಕಾದಿರುವ ದುರಂತಗಳಿಗೆ ಇದು ಪಾರ್ವಭಾವಿ ಮುನ್ಸೂಚನೆ ಮಾತ್ರ. +ಈ ಭೀಕರ ದೃಷ್ಯ ನೋಡಿ ಕಣ್ಣಲ್ಲಿ ನೀರು ಹಾಕಿಕೊಳ್ಳದವರೇ ಇಲ್ಲ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಿದ್ದ ಶಾಸ್ತ್ರಿಗಳು ಸಾವಿನ ನಂತರ ಇಂತಹ ದುರಂತಕ್ಕೆ ತುತ್ತಾಗುವುದೆಂದರೇನು? +ಎಲ್ಲರೂ ಮಮ್ಮಲನೆ ಮರುಗಿದರು. ಪರಮೇಶ್ವರ ಶಾಸ್ತ್ರಿಗಳನ್ನು ದುಃಖದ ಕಡಲಿನಿಂದ ಹೊರ ತೆಗೆದರು. ಮುಂದಿನ ಕಾರ್ಯಕ್ರಮ ಸುಗಮವಾಗಿ ಜರುಗಿಸುವಂತೆ ಸಲಹೆ ಸೂಚನೆ ನೀಡಿದರು. +ಅಂಗೈ ವಿಹೀನ ಕಳೆಬರಕ್ಕೆ ಅಗ್ನಿ ಸಂಸ್ಕಾರ ಮಾಡುವುದಾದರೂ ಹೇಗೆ? +ತಮ್ಮ ತಂದೆಯ ಯಜ್ಞದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಣಿಗೂ ಇಂಥದೇ ಗತಿಯಾಯಿತು. ಬೆಂಕಿಯಲ್ಲಿ ಬೆಂದ ಪತ್ನಿಯ ಕಳೇಬರವನ್ನು ಹೊತ್ತುಕೊಂಡು ಸಾಕ್ಷಾತ್ ಪರಮೇಶ್ವರನೇ ಹುಚ್ಚನಂತೆ ಅಲೆದ. ದಾಕ್ಷಾಯಣಿಯ +ಆಂಗೋಪಾಂಗಗಳೆಲ್ಲ ಎಲ್ಲೆಲ್ಲೋ ಉದುರಿ ಹೋಗಿಬಿಟ್ಟವು. ಅಗ್ನಿ ಸಂಸ್ಕಾರ ಮಾಡಬೇಕೆಂದರೆ ಆಕೆತ ಕೆಲವು ಉಪಾಂಗಗಳು ದೊರಕಲಿಲ್ಲ. ಆದ್ದರಿಂದ ಆಕೆಗೆ ಪುನರ್ಜನ್ಮ ಪ್ರಾಪ್ತವಾಯಿತು. +ಈ ಕಾರಣಕ್ಕಾಗಿ ಬಹಳ ಜನ ಬಹಳ ಹೊತ್ತಿಗೆ ತುಂಡರಿಸಿದ್ದ ಮುಂಗೈಗಾಗಿ ಹುಡುಕೀ ಹುಡುಕೀ ಸುಸ್ತಾದರು. ಮುಂಗೈ ಸಿಕ್ಕದಿದ್ದರೆ ಕುರುಬರ ಸೋಮಣ್ಣನ ಕೂಡ ಬಂದೋಬಸ್ತು ಹೋಲಿಸಿ ಅಗ್ನಿಗಾಹುತಿ ಕೊಡುವುದಿತ್ತು. ತಮ್ಮ ಪೂಜ್ಯ ಪಿತಾಶ್ರೀ ಪುನರ್ಜನ್ಮ ಪಡೆದರೆ ಖಂಡಿತ ಕಲಿಕಾಲ ಸಹಿಸಲಾರರು. ಅಹರ್ನಿಶಿ ಸನಾತನ ಧರ್ಮ ಪ್ರತಿಷ್ಠಾಪನೆಗೆ ಹೋರಾಡದೆ ಇರಲಾರರು? ಎಂದೆಲ್ಲ ಯೊಚಿಸಿದರು ಜೂ. ಶಾಸ್ತ್ರಿಗಳು. +ಮುಂದೊದು ದಿನ ತಮ್ಮ ಧರ್ಮಪತ್ನಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡುವಳೆಂದು ತಿಳಿದರು. ಆದರೆ ಅವರ ನಿರೀಕ್ಷೆಯಂತೆ ಆಕೆ ಗರ್ಭ ದರಿಸಿದ್ದೇನೋ ನಿಜ. ಆಗರ್ಭಕ್ಕೆ ಒಂಬತ್ತು ತಿಂಗಳು ತುಂಬಿದ್ದೇನೋ ನಿಜ. ಆದರೆ ಆ ಮಗು ಯೋನಿ ಮಾರ್ಗಕ್ಕೆ ಕಾಲು ತೂರಿಸಿ ಹೆರಿಗೆಗೆ ತುಂಬ ತೊಂದರೆ ಕೊಟ್ಟಿತು. ತಾನೂ ಸತ್ತುದಲ್ಲದೆ ತನ್ನ ತಾಯಿಯನ್ನೂ ಬಲಿ ತೆಗೆದುಕೊಂಡಿತು. ಅಲ್ಲಿಯವರೆ ತಾವು ಅಕಾಲ ಮರಣಕ್ಕೆ ತುತ್ತಾಗದ್ದಿದ್ದಲ್ಲಿ ತಮ್ಮ ಜೇಷ್ಠ ಪುತ್ರ ಸಕಲ ಕಲಾಪಾರಂಗತನಾಗಿ ದೊಡ್ಡವನಾದಲ್ಲಿ ಅವನಿಗೆ ಯುಕ್ತ ವಯಸ್ಸಿನಲ್ಲಿ ಕಂಕಣ ಬಲ ಕೂಡಿ ಬಂದಲ್ಲಿ, ಆತನ ಧರ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಲ್ಲಿ, ತಮ್ಮ ತಂದೆಯವರ ಹೆಸರು ಇಡಬೇಕು ಎಂದು ನಿಶ್ಚಯಿಸಿದರು. +ಮಗ ಎಂದರೆ ಮಗನೇ ಸರಿ. ಎಂಥ ಕತೃತ್ವಶಾಲಿ ಅವನು. ಸಂಸಾರ ಮಾಡಿದ ತಿಂಗಳೋಪ್ಪತ್ತಿನಲ್ಲಿ ಗಂಡು ಮಗುವಿಗೆ ಬೀಜ ಬಿತ್ತಿಬಿತ್ತಿದ್ದನಲ್ಲ? ಪ್ರಸ್ಥದ ಮೊದಲನೆ ದಿನ ಆತನ +ಹೆಂಡತಿ ತುಂಬಾ ರಂಪಾಟ ಮಾಡಬಹುದೆಂದು ಎಲ್ಲರು ಭಾವಿಸಿದ್ದರು. ಚಿಲಕ ಹಾಕಿಕೊಳ್ಳುತ್ತಲೇ ಆಕೆ ಲಬೋ ಲಬೋ ಬಾಯಿ ಬಡಿದುಕೊಂಡಿದ್ದೇನೋ ನಿಜ. ನೋವು ನೋವು ಎಮ್ದು ಕಿರುಚಾಡಿದ್ದೂ ನಿಜ. ಆದರೆ ಮಿಲಿಟರಿ ಹ್ಯಾಂಡು ಅಶ್ವಥ್ ನಾರಾಯಣ ಅದಕ್ಕೆ ಸೊಪ್ಪು ಹಾಕಿದ್ದಲ್ಲಿ ಇಂಥದ್ದೊಂದು ಹೊಟ್ಟೆಯ ಮಾಣಿಕ್ಯದ ಹರಳು ಉದುರಿ ಬೀಳುತ್ತಿತ್ತೇನು ಈ ಧರೆಗೆ. +ಸುತ್ತು ನಾಲ್ಕು ಕಡೆಯ ಬೀಗರು ಬಿಜ್ಜರನ್ನು ಕರೆಯಿಸಿ, ಜೊತೆಗೆ ವೇದಪಾರಾಯಣ ಮಾಡಿದವರನ್ನು, ಗಂಗಾದಿ ನದಿ ತೀರ್ಥಗಳಲ್ಲಿ ಸ್ನಾನ ಮಾಡಿ ಫಲ ಪಡೆದವರನ್ನು; ಕೃಚ್ಛಾದಿ ತಪಸ್ಸಿನ ಫಲ ಪದೆದವರನ್ನು ಕರೆಸಿದರು. ನೂರಾರು ತಾಮ್ರದ ತಂಬಿಕೆಗಳು ಕಡಿಮೆ ಬೆಳಕನ್ನು ಹೆಚ್ಚಿಗೆ ಪ್ರತಿಫಲಿಸಿದವು. ಮನೆ ತುಂಬ ಬಾಲಂಗೋಚಿಗಳು ವಿಶೇಷ ಶೋಭೆ ನೀಡಿದವು. ಆ ಶೋಭೆ ಪರಮಾರ್ಥಕ್ಕೆ ಸಮಾನನಾಗಿದ್ದಿತು. +ತಾವು ಸತ್ಯನಾರಾಯಣ ವ್ರತ ಮಾಡಿಸಿದಂಥ ಎಲ್ಲ ಶ್ರೀಮಂತರ ಸಹಾಯ ಪಡೆದು ಚಿರೋಟಿ, ಪಾಯಸ, ಬಾಳೆಕಾಯಿ ಬಾಳಕ, ಕೋಸುಂಬರಿ, ಪುಳಿಯೋಗರೆ, ಘಮಘಮ ಆಂಧ್ರ ಶೈಲಿಯ ’ರಸಂ’ ತನ್ನ ಪರಿಮಳವನ್ನು ಇಡೀ ಓಣಿಗೆ ಬೀರಿತ್ತು. +ವೇದಪುರಾಣ ಅರಗಿಸಿಕೊಂಡವರೆಲ್ಲ ಭಕ್ಷ್ಯ ಭೋಜ್ಯಗಳನ್ನು ಲಗಾಯಿಸುತ್ತ ಕಂಠಪೂರ್ತಿ ಹೊಗಳಿದ್ದೇ ಹೊಗಳಿದ್ದು. +ತಾಂಬೂಲ ಮೆಲ್ಲುವಾಗ್ಗೆ ಶಾಸ್ರಿಗಳ ಮೊಮ್ಮಗನ ಜನ್ಮ ನಕ್ಷತ್ರವನ್ನು ಹೊಗಳಿದ್ದೇ ಹೊಗಳಿದ್ದು. ಪ್ರಧಾನ ಮಂತ್ರಿಗಳಂಥವರಿಗೆ ಕುಟುಂಬದ ಪುರೋಹಿತನಾಗುವನೆಂದು ಒಬ್ಬರು ಹೇಳಿದರು ಮತ್ತೊಬ್ಬರು ವ್ಯಾಕರಣದ ವಿಷಯದಲ್ಲಿ ಪಾಣಿನಿಯನ್ನೇ ಮೀರಿಸುವನೆಂದು ಹೇಳಿದರು. ಮಗದೊಬ್ಬರು ಅಮೇರಿಕದ ಅಧ್ಯಕ್ಷರಂಥವರಿಗೆ ಅಷ್ಟಾಂಗಯೋಗ, ಪ್ರಾಣಾಯಾಮ ಮುಂತಾದಯೋಗಗಳನ್ನು ಅಭ್ಯಾಸ ಮಾಡಿಸಿ ದೇಶಕ್ಕೆ ಕೀರ್ತಿ ತರುವನೆಂದು ಹೇಳಿದರು. ಹೀಗೆ ಒಬ್ಬೊಬ್ಬ ಮಾರ್ತಾಂಡರು ಒಂದೊಂದು ನುಡಿದು ಪರಮೇಶ್ವರ ಶಾಸ್ತ್ರಿಗಳನ್ನು ಸಂತೃಪ್ತಿಗೋಳಿಸಿದರು. +ಎಲ್ಲರನ್ನು ಕಾಡಿದ್ದು ಒಂದೇ ಒಂದು ಪ್ರಶ್ನೆ. ದೇಶ ಸೇವೆಯೇ ಈಶನ ಸೇವೆ ಎಂದು ಭಾವಿಸಿರುವ ಶಾಸ್ತ್ರಿಗಳ ಮಗ ಅಶ್ವಥ್ ನಾರಾಯಣ ತನ್ನ ಮಗನ ನಾಮಕರಣಕ್ಕಾಗಿ ಬರಬಹುದಿತ್ತಲ್ಲ? +ಎಲ್ಲ ಸನಾತನಿಗಳನ್ನು ಕಾಡಿದ ಮತ್ತೊಂದು ಪ್ರಶ್ನೆ ಎಂದರೆ, ಸೇನೆಯಲ್ಲಿರುವ ಮಗ ಸರಿಯಾಗಿ ಸಂಧ್ಯಾವಂದನೆ ಮಾಡಿಕೊಳ್ಳುತ್ತಿರುವನೆ? ಮದ್ಯ ಅಮೇಧ್ಯದಿಂದ ದೂರ ಇರುವನೆ? ದೂರವಿದ್ದರೆ ಎಷ್ಟು ದೂರ ಇರುತ್ತಾನೆ, ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಭಾವಿಸುವಷ್ಟು ಮನೋದಾರ್ಡ್ಯ ಪಡೆದಿರುವನೇ? +ಪರಮೇಶ್ವರ ಶಾಸ್ತ್ರಿಗಳಿಗೆ ಸಾಕು ಸಾಕಾಗಿ ಹೋಯಿತು ಉತ್ತರ ಕೊಟ್ಟು ಕೊಟ್ಟು. +ಅವರವರ ಘನತೆ ಗಾಂಭೀರ್ಯಕ್ಕೆ ತಕ್ಕಂತೆ ಮಾನ ಮರ್ಯಾದೆ ಮಾಡಿ ಅವರನ್ನು ಅವರವರ ಅಗ್ರಹಾರಗಳಿಗೆ ಸಾಗುಹಾಕಿದರು. +ಮೊಮ್ಮಗನ ಕಿವಿಗೆ ಸದಾ ಸಂಸ್ಕೃತ ಶ್ಲೋಕಗಳೇ ಬೀಳುತ್ತಿರಬೇಕೆಂದು ಮನೆಯಲ್ಲಿ ಎಲ್ಲರಿಗೆ ಹೇಳಿದರು. ವಿಷ್ಣು ಸಹಸ್ರನಾಮ ಹೇಳುವಾಗಲಂತೂ ಮಗು ಇಷ್ಟಗಲ ಬಾಯಿ ತೆರೆಯುತ್ತಿತ್ತು. ರಾಮನಾಮ ಸ್ಮರಣೆ ಕಿವಿಗೆ ಬಿದ್ದಾಗಂತೂ ಅದರ ಮುಖ ಗಾಂಭೀರ್ಯದಿಂದ ಹೊಳೆಯುತ್ತಿತ್ತು. +ತಮ್ಮ ಮೊಮ್ಮಗ ಯುಕ್ತ ವಯಸ್ಸು ತಲುಪುವ ಹೊತ್ತಿಗೆ ನಾಲ್ಕು ವೇದಗಳ ಪೈಕಿ ಮೂರು ವೇದಗಳನ್ನಾದರೂ ಕರತಲಾಮಲಕ ಮಾಡಿಕೊಳ್ಳುತ್ತಾನೆಂದು ಬಗೆದರು. ತಮ್ಮ ಪ್ರತಿಯೊಂದು +ವೈದಿಕ ವಿಧಿಗಳೊಂದಿಗೆ ಮೊಮ್ಮಗನನ್ನು ಕುಳ್ಳರಿಸಿಕೊಳ್ಳುತ್ತಿದ್ದರು. +ಮೊಮ್ಮಗನ ಕಾಳಜಿಯೊಂದಿಗೆ ಸೊಸೆಯ ಪಾವಿತ್ರ್ಯದ ಬಗೆಗೂ ಹೆಚ್ಚು ಗಮನ ಹರಿಸಬೇಕಾಯಿತು ಶಾಸ್ತ್ರಿಗಳಿಗೆ. ಆಕೆ ಯಾಕೆ ಹಗಲೆಲ್ಲ ತೂಕಡಿಸುತ್ತಿದ್ದಳೆಂದರೆ ಆಕೆ ಇಡೀ ರಾತ್ರಿ ನಿದ್ರಾ ನಡಿಗೆ ಮಾಡುತ್ತಿದ್ದಳು. ಅಡಿಗೆ ಮನೆಯನ್ನು ಬಾತ್ರೂಮ್ ಎಂದು ತಿಳಿದುಕೊಳ್ಳುತ್ತಿದ್ದಳು. ಬೆಡ್ರೂಮನ್ನು ಕಿಚನ್ ರೂಮೆಂದು ತಿಳಿದುಕೊಳ್ಳುತ್ತಿದ್ದಳು. ಅಡಿಗೆ ಮಾಡುವಾಗಲೂ ಅಷ್ಟೇ ಸಕ್ಕರೆಯನ್ನು ಉಪ್ಪೆಂದು ಭಾವಿಸುತ್ತಿದ್ದಳು. ಉಪ್ಪನ್ನು ಸಕ್ಕರೆ ಎಂದು ಭಾವಿಸುತ್ತಿದ್ದಳು. +ಸೊಸೆಯ ಈ ವರ್ತನೆ ಶಾಸ್ತ್ರಿಗಳಿಗೆ ವಿಚಿತ್ರವೆನ್ನಿಸಿತು. ಇನ್ನೊಂದು ಅವರಿಗೆ ಅಘಾತಕಾರಿ ಎಂದು ಕಂಡ ಬಂದ ಸಂಗತಿ ಎಂದರೆ, ಒಂದೊಂದು ರಾತ್ರಿ ಆಕೆ ಅವರ ಮಗ್ಗುಲು ಬಂದು ಮಲಗಿಕೊಳ್ಳುತ್ತಿದ್ದುದು. ತಮ್ಮ ಪೃಷ್ಠಭಾಗದ ಮೇಲೆ ಆಕೆ ದಪ್ಪನೆಯ ಕಾಲು ಹೇರಿದಾಗಲೇ ಅವರಿಗೆ ಗೊತ್ತಾಗುತ್ತಿದ್ದುದು.ಈ ಸೊಸೆಯ ಈ ತೆರನ ವಿಚಿತ್ರ ನದವಳಿಕೆಯನ್ನು ಹೇಗೆ ರಿಪೇರಿ ಮಾಡೋದು ಎಂಬ ಚಿಂತೆ ಕಾಡತೊಡಗಿತ್ತು. ಬೇಕಾಗಿಯೇ ಈ ರೀತಿ ಆಕೆ ವರ್ತಿಸುತ್ತಿರಲಿಲ್ಲ. ಆಕೆಯೊಳಗಿನ ಅದು ಹೀಗೆ ಮಾಡಿಸುತ್ತಿತ್ತು. +ಆಕೆ ಸರಿಯಾಗಿ ಗಂಡನ ಮುಖ ನೋಡಿರಲಿಲ್ಲ. ಮದುವೆಯ ಆ ಮೊದಲ ದಿನಗಳಲ್ಲಿ ಎಲ್ಲಾ ನೋಡೊದು ಎಲ್ಲಿ ಸಾಧ್ಯ? ನೋಡೊದು ಎಲ್ಲಿ ಸಾಧ್ಯ? ನೋಡೋದು ನೋಡಿಕೊಂಡರೆ ಸಾಕಾಗಿರುತ್ತದೆ. ಗಂಡನ ಮುಖವನ್ನು ಆಕೆ ನೋಡಲು ಪ್ರಯತ್ನಿಸಿದ್ದುಂಟು. ಅದಕ್ಕೆ ಆ ಮಿಲಿಟರಿ ಹ್ಯಾಟ್ ಆಸ್ಪದ ಕೊಟ್ಟಿರಲ್ಲಿಲ್ಲ. +ಎಂಟೊಂಬತ್ತು ಮಕ್ಕಳಗುವವರೆಗೆ ಗಂಡನ ನೆರಳಿನಂತೆ ಇರಬೇಕೆಂದು ಆಕೆ ವಿವಾಹ ಪೂರ್ವದಲ್ಲಿ ಅಂದರೆ ಕನ್ಯೆಯಾಗಿದ್ದಾಗ ಅಂದುಕೊಂಡಿದ್ದುಂಟು. ಮದುವೆನೋ ಆಯಿತು. ಮೈಕೈತುಂಬಿಕೊಂಡು ಬಲಿಷ್ಠವಾಗಿದ್ದ. ನಿರೀಕ್ಷೆ ಮೀರಿ ಹಿಂಡಿ ಹಿಪ್ಪಿ ಮಾಡಿದ್ದ. ಹಿಡಿದು ಅಮುಕಿ ಬಿಟ್ಟನೆಂದರೆ ಮೈ ಲಟಲಟ ಎಂದು ಬಿಡಬೇಕು. ದಿನದ ಇಪ್ಪತ್ನಾಕು ತಾಸೂ ಅನೇಕ ಆಟ‌ಆಡಿಸಿ ಬಿಟ್ಟ. ರೋಮಾಂಚನದ ತರಂಗಗಳನ್ನೆಬ್ಬಿಸಿ ಬಿಟ್ಟ. ಅಂಗೋಪಾಂಗಗಳನ್ನು ಪುಳಕಗೊಳಿಸಿಬಿಟ್ಟ. +ಇದು ಹೀಗೆ ಮುಂದುವರಿಯುತ್ತದೆ ಎಂದು ಆಕೆ ಭಾವಿಸಿದ್ದಳು. ಆದರೆ ಯಾವುದೋ ತಂತಿ ಬಂತೂಂತ ಇದ್ದಕಿದ್ದಂತೆ ಹೊರಟು ಹೋಗಿ ಬಿಡುವುದೇನು? ಜುಟ್ಟು ಇಲ್ಲದೆ ನೀಟಾದ ಕ್ರಾಪು ಬಿಟ್ಟಿದ್ದ ಅವನು ತನ್ನಿಂದ ಶಿರಸಾಷ್ಠಾಂಗ ಪ್ರಣಾಮವನ್ನಾದರೂ ಮಾಡಿಸಿಕೊಳ್ಳಲ್ಲಿಲ್ಲವಲ್ಲ? ಬಸ್ ನಿಲ್ದಾಣದವರೆಗೆ ತನಗೆ ಬಂದು ಕಳಿಸಿಕೊಡಲು ಹೇಳಿದ. ಆದರೆ ಲಜ್ಜೆ ಬಿಟ್ಟು ಹೇಗೆ ಹೋಗುವುದು? ಜನ ಏನೆಂದುಕೊಂಡರು? ಶ್ರಾದ್ಧಕ್ಕೋ, ತಿಥಿಗೋ, ಮದುವೆಗೋ ಆದರೆ ಹೋಗಬಹುದು? ಅದೂ ಪ್ಯಾಂಟು ಹಾಕಿಕೊಂಡು ಟ್ರಿಮ್ ಆಗಿರೋ ಗಂಡನ ಜೊತೆ, ಓಣಿ ಗಂಡಸರು ತನ್ನ ಕಡೆ ಆಸೆಯಿಂದ ನೋಡದೆ ಇದ್ದಾರೇನು? ಆಕೆ ಸುತರಾಂ ಹೋಗಲ್ಲಿಲ್ಲ. ಬಿಲ್‌ಕುಲ್ ನಿರಾಕರಿಸಿಬಿಟ್ಟಳು. ದುರ್ದಾನ ತೆಗೆದುಕೊಂಡವನಂತೆ ಗಂಡ ಹೋಗಿಬಿಟ್ಟ. ಮಹಾಭಾರತ, ರಾಮಾಯಣ ನಡೆದ ನಾಡಿನ ಆಚೆಕಡೆ. +ಹೋಗಿ ತಿಂಗಳಾದವು. ಗಂಡನಿಂದ ಉಭಂ ಇಲ್ಲ, ದಿಡೀರನೆ ಒಂದು ಗಂಡು ಮಗು ಹೆತ್ತು ಕೊಟ್ತಿದ್ದಕ್ಕೂ ಸಂತೋಷ ಪಡೋದು ಬೇಡವೇನು…. ಬಂದು ನೋಡೋದು ಬೇಡವೇನು? ಒಂದೇ ಒಂದು ಪತ್ರ ಬರೆಯೋದು ಬೇಡವೇನು? +ವೈಕುಂಠ ಏಕಾದಶಿಗೆ ಕರೆಯಲು ಬಂದಿದ್ದ ತಂದೆಗು ದುಃಖ ಹೇಳಿಕೋಂಡಳು. ಅದಕ್ಕೆ ಆತ ನಿನ್ನ ಗಂಡ ಸಾಮಾನ್ಯ ಕೆಲದಲ್ಲಿಮ್ಮಾ, ಈಶನ ಸೇವೆ ಎಂದು ಬಗೆದು ದೇಶ ಸೇವೆ ಮಾದ್ತಿದಾನೆ. ಪುಳಿಚಾರಿಗೆ ಹೆಸರಾಗಿರೋ ನಮ್ಮ ಜನಾಂಗದಲ್ಲೂ ದೇಶ ಸೇವೆ ಮಾಡೋರು ಇನ್ನೂ ಇದ್ದಾರಮ್ಮಾ ಇದ್ದಾರಮ್ಮಾ ಎಂದು ಆತ ತೇಪೆ ಹಚ್ಚಿದ. +“ಶೂಲದೇವರಹಳ್ಳಿ ಶಾನಭೋಗರ ಮಗ್ನೀಗೆ ಕೊಡೋಣ ಎಂದು ಬಡ್ಕೊಂಡೆ ನೀವು ಕೆಳಿದಿರಾ ನನ್ ಮಾತ್ನಾ” ಸಂಗಡ ಬಂದಿದ್ದ ತಾಯಿ ಹೇಳಿದಳು. “ಹುಡುಗ್ನೀಗೆ ಆಸ್ತಮ ಇದ್ದರೇನಾಯಿತು. ಆ ಕಡೇಲೆಲ್ಲಾ ವೈದಿಕದಲ್ಲಿ ಹೆಸರು ಮಾಡಿಲ್ವೇ?” +ಹೌದು. ಶಾನುಭೋಗರು ಪಾದುಕೆ ಸವೆಯುವಂತೆ ಅಡ್ಡಾಡಿದ್ದು ನಿಜ. “ನಿಮ್ ಮಗಳ್ನ ನನ್ ಮಗ ಪ್ರೀತಿಸ್ತಾನೆ. ಕೊಟ್ಟು ಮದುವೆ ಮಾಡಿ” ಎಂದು ಪೀಡಿಸುತ್ತಿದ್ದುದ್ದೂ ನಿಜ. +ರಾಮನವಮಿಗೆ ತಂದೆತಾಯಿಯರೊಂದಿಗೆ ಅಲಮೇಲು ಕೂಡ ಸೂಲದೇವರ ಹಳ್ಳಿಗೆ ಹೋಗಿದ್ದಳು. “ಲೋ ಶೀನಾ, ಹುಡುಗೀ ಬಂದಿದ್ದಾಳೆ ಒಂಟಿಯಾಗಿದ್ದಾಗ ಒಂದು ಕೈ ನೋಡ್ಕೋ” ಎಂದು ಶಾನುಭೋಗರೇ ಮಗನಿಗೆ ಪರವಾನಿಗೆ ನೀಡಿದ್ದರು. +ಶೀನಪ್ಪ ಏದುಸಿರು ಬಿಡುತ್ತ ಹಿಂದೆ ಮುಂದೆ ಅಡ್ಡಾಡಿದ್ದುಂಟು. ಕಣ್ಣು ಹೊಡೆಯಲು ಪ್ರಯತ್ನಿಸಿದ್ದುಂಟು. ಮುಟ್ಟಾಗಿ ಮೂರು ವರ್ಷವಾಗಿದ್ದರೂ ಯಾವುದೇ ಗಂಡಸರಿಂದ ಯಾವ ಕಾರಣಕ್ಕೂ ಸ್ಪರ್ಶಿಸಿಕೊಂಡವಳಲ್ಲ. ಈ ವಿಶಯದಲ್ಲಿ ಆಕೆ ಸ್ವಲ್ಪ ಕಟ್ಟುನಿಟ್ಟು. ಹೆತ್ತವರು ಹಾಗೆ ಬೆಳೆಸಿದ್ದರು. ಆದ್ದರಿಂದ ಆಕೆ ಆತ ಕೆಮ್ಮಿದರೂ ಕೆರ್ ಮಾಡಿರಲಿಲ್ಲ, ದಮ್ಮಿದರೂ ಕೆರ್ ಮಾಡಿರಲಿಲ್ಲ. +ಶೀನಪ್ಪ ಸುಮ್ಮನೆ ಬಿದುವ ಪೈಕಿ ಆಗಿರಲಿಲ್ಲ. ಆಕೆ ಮಲಗಿದ್ದ ಕೋಣೆಗೆ ಕಳ್ಳತನದಿಂದ ಪ್ರವೇಶಿಸಿದ. ಸೊಳ್ಳೆ ಪರದೆಯೊಳಗೆ ತೂರಿ ಅವಕೊಂದು ಬಿತ್ತ. ಆಗ ಅಲುಮೇಲು ಅಂಬರೀಷನ ಮಗಳು ಶ್ರೀಮತಿ ತಾನೆಂದೂ, ತನ್ನನ್ನು ವಿಷ್ಣುಪರಮಾತ್ಮ ಹಾರಿಸಿಕೊಂಡು ಹೋದಂಥ ಕನಸು ಕಾಣುತ್ತಿದ್ದಳು. ಆದರೆ ಸ್ವಲ್ಪ ಹೊತ್ತಿಗೆ ಗೊತ್ತಾಯ್ತು ತನ್ನನ್ನು ಅವುಚಿಕೊಂಡು ಮೊಲೆ ಹಿಚುಕುತ್ತಿವುದು ವಿಷ್ಣು ಪರಮಾತ್ಮನಲ್ಲ ಎಂಬ ಸಂಗತಿ. ಸಾಕಷ್ಟು ಗಟ್ಟಿಮುಟ್ಟಾಗಿದ್ದ ಆಕೆ, ಅವನಿಗಿಂತಲೂ ಬಲಿಷ್ಟವಾಗಿದ್ದ ಜುಟ್ಟನ್ನು ಗಟ್ಟಿಯಾಗಿ ಹಿಡಿದುಕೊಂಡು ಲಬೋಲಬೋ ಬಾಯಿ ಬಡಿದುಕೊಂಡು ಬಿಟ್ಟಳು. +ಅವತ್ತಿಗೇ ಮುಗಿದುಹೋಯಿತು ಸೂಲ ದೇವರ ಹಳ್ಳಿ ಕಡೆ ಮುಖ ಮಾಡಿ ಮಲಗುವುದು. +’ಆ ಮಗುವಿನ್ನೂ ನಿನ್ನ ಚಿಂತೆಯಲ್ಲಿಯೇ ಇರುವುದು ಮಗಳೇ. ಅನ್ನ ನೀರು ಬಿಟ್ಟು ತುಂಬ ಕೃಶವಾಗಿರುವುದಂತೆ!’ ತಾಯಿ ಸ್ವಲ್ಪ ನಾಚಿಕೆ ಬಿಟ್ಟು ಮಾತನಾಡಿದರೆಂದರೂ ಸರಿಯೇ. +ತಮ್ಮ ಮಗಳನ್ನು ತವರಿಗೆ ಕರೆದುಕೊಂಡು ಹೋಗಲೆಂದೇನೋ ಅವರು ಬಂದಿದ್ದರು. “ಹೋಗಿ ಬಾರಮ್ಮಾ” ಎಂದು ಶಾಸ್ತ್ರಿಗಳೂ ದೊಡ್ಡತನ ತೋರಿಸಿದರು. ಆದರೆ ಹೋದರೆ ಇವರನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ಮಹಾಸಾಧ್ವಿ ಅಲಮೇಲಮ್ಮ ಹೋಗಲಿಲ್ಲ, ಉಣ್ಣಲಿ, ಉಪವಾಸವಿರಲಿ ಗಂಡನ ಮನೆಯೇ ಸರ್ವಸ್ವ ಎಂದು ತಿಳಿದುಕೊಂಡಳು. ಗಂಡ ದೂರವಿದ್ದರೂ ಮಗ ಹತ್ತಿರದಲ್ಲಿದ್ದಾನೆ ಎಂದುಕೊಳ್ಳುವಂತಿಲ್ಲ. ಅದರ ತಾತ ಅದನ್ನು ತಾಯಿಯಾದ ತನ್ನ ಬಳಿ ಬಿಟ್ಟರೆ ತಾನೆ. ಮೊಮ್ಮಗ ಸಂಸ್ಕೃತದಲ್ಲಿ ಮಹಾಪಂಡಿತನಾಗಬೇಕು. ಹಾಗಾಗಬೇಕು, ಹೀಗಾಗಬೇಕು ಎಂದು ಕನಸು ಕಾಣುತ್ತಿರುವ ಮಾಮಾಶ್ರಿ, ಕ್ರಮೇಣ ಈ +ವಿಷಯದಲ್ಲೂ ತರ್ಕ ಶಾಸ್ತ್ರ ಪಾರಂಗತರಾದ ಶಾಸ್ತ್ರಿಗಳಿಗೂ ಅತುಲಮಾತೃವಾತ್ಸಲ್ಯಮಯಿಯಾದ ಅಲುಮೇಲಮ್ಮಗೂ ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರೂ +ಮಗನನ್ನು ಬಿಟ್ಟಿರಲಾರರು. ಶಾಸ್ತ್ರಿಗಳು ಮೊಮ್ಮಗನಲ್ಲಿ ಮಗನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅಲುಮೇಲಮ್ಮ ಮಗನಲ್ಲಿ ಗಂಡನನ್ನು ಗುರುತಿಸುವ ಸನ್ನಾಹದಲ್ಲಿದ್ದರು. +ಅದು ಅಳುತ್ತಿತ್ತು. ತೊಟ್ಟಿಲಲ್ಲಿ ಮಲಗಿಸಿದ ಅಲಮೇಲು ಆಡಿಬಾ ಎನಕಂದ ಅಂಗಾಲ ತೊಳೆದೇನ್ಯಾಽ ಎಂದು ಪದ ಹಾಡತೊಡಗಿದಳು. ಸಿದ್ಧಾಂತ ಶಿಖಾಮಣಿ ಗುಂಡಾಭಟ್ಟರ ಏಳು ದಿನದ ಕಾರ್ಯಕ್ಕೆ ಹೋಗಿದ್ದ ಶಾಸ್ತ್ರಿಗಳು ಅದೇ ತಾನೆ ಬಂದರು. ಸೊಸೆ ಹಾಡುತ್ತಿದ್ದ ಜೋಗುಳದ ಹಾಡು ಕೇಳಿ ಕಿಡಿಕಿಡಿಯಾದರು. ಸೈರಣೆ ಕಳೆದುಕೊಂಡರು. +“ಛೇ… ಛೇ… ರಾಮಾ ರಾಮಾ… ಕೇಳಲಾರೆ. ಅದ್ವಿತೀ ಪಂಡಿತರ ಸೊಸೆಯಾದವಳು ಹಾಡುವ ಹಾಡೇ ಇದು” ಕಿವಿ ಮುಚ್ಚಿಕೊಂಡರು. +ಅದನ್ನು ಕೇಳಿ ಆಕಾಶವೇ ಕಳಚಿ ಬಿದ್ದಂಥ ಅನುಭವವಾಯಿತು ಅಲುಮೇಲಮ್ಮನಿಗೆ. ಹಾಡಿದ ಹಾಡಿನಲ್ಲಿ ಇರುವ ಅಶ್ಲೀಲವಾದರೂ ಏನು? +ಉತ್ತರ ಕೊಡದೆ ಬಾಯಿ ತೆರದಳು. +“ಅಲ್ಲ ತಾಯಿ, ಹೋಗಿ ಹೋಗಿ ಆ ಜಾನಪದ ಗೀತೆಯನ್ನು ಹಾಡುವುದೇನು? ಅಡೂ ಮಗುವಿನ ಕಿವಿಗೆ ಬೀಳುವಂತೆ, ಸಂಸ್ಕೃತದ ಅಸತೋಮ ಹೇಳಬಹುದಾಗಿತ್ತು. ಹೋಗಲಿ ಪೂರ್ಣಮದಂ ಪೂರ್ಣಮಿದಂ ಹೇಳಬಹುದಾಗಿತ್ತು.” ಶಾಸ್ತ್ರಿಗಳು ಮಗುವಿನ ಎರಡು ಕಿವಿಗಳಲ್ಲಿ ಮಂತ್ರ ಶಕ್ತಿಯಿಂದ ಊದಿದರು. +ಮಗು ಕಿಟಾರನೆ ಕಿರುಚಿತು. +“ಅಲ್ಲ ಮಾವನವರೆ, ಸಂಸ್ಕೃತ ಸಂಸ್ಕೃತ ಅಂತ ಹೇಳ್ತೀರಲ್ಲ.ಮಗು ಬೇರೆ ಭಾಷೆ ಕಲಿಯೋದು ಬೇಡವೇನು?” +“ಖಂಡಿತ ಸಲ್ಲದು. ಜಗತ್ತಿನ ಎಲ್ಲಾ ಭಾಷೆಗಳಿಗೆ ಸಂಸ್ಕೃತವೇ ಮಾತೃಸ್ಥಾನದಲ್ಲಿದೆ. ಅದನ್ನು ಕಲಿತರೆ ಎಲ್ಲ ಬಂದಂತೆಯೇ.” +“ಕನ್ನಡ ಕೂಡ ಸಂಸ್ಕೃತ ಮಾತೆಯ ಮಗಳಲ್ಲವೇ?” +“ಹೌದು ಇಲ್ಲವೆಂದವರಾರು?” +“ಹಾಗಿದ್ದರೆ ನಾನು ಹಾಡಿದ ಹಾಡಿನಲ್ಲಿ ತಪ್ಪೇನಿದೆ?” +“ಪುರಂದರ ದಾಸರಂಥವರ ಕೀರ್ತನೆಗಳದರೆ ಸರಿ. ಆದರೆ ನೀನು ಹಾಡುವ ಹಾಡು ಶ್ರೇಷ್ಠ ಕುಲ ಸಂಜಾತರು ಹಾಡುವಂಥದ್ದಲ್ಲ. ಅದು ಹುಟ್ಟಿದ್ದೇ ಕೀಳುಜಾತಿಯವರಿಂದ, ಅಂಥವರು ಮಾತ್ರ ಹಾಡಲಿಕ್ಕೆ ಯೋಗ್ಯವು” ಶಾಸ್ತ್ರಿಗಳು ಕಡ್ಡಿಮುರಿದಂತೆ ನುಡಿದರು. +ಅಡುಗೆ ಮನೆಯ ನಗಂದಿ ಮೇಲಿದ್ದ ಬೆಕ್ಕು ಮ್ಯಾಂವ್ ಮ್ಯಾಂವ್ ಅಂತ ಕೆಟ್ಟದಾಗಿ ಅರಚತೋಡಗಿತು. ಶಾಸ್ತ್ರಿಗಳು ಕಿವಿ ಮುಚ್ಚಿಕೊಂಡರು. ಅಯ್ಯೋ ಮಾರ್ಜಾಲವೇ ಶಾಪ ಹಾಕಿದರು. ಶೂದ್ರರು ಮಾತ್ರ ಮಾರ್ಜಾಲ ಜನ್ಮ ಪಡೆದಿರುತ್ತಾರೆ ಎಂಬುದಕ್ಕೆ ಶಾಸ್ತ್ರಗಳಲ್ಲಿ ಪುರಾವೆಗಳಿವೆ. ಆದ್ದರಿಂದ ಬೆಕ್ಕುಗಳನ್ನು ಕಂಡರೆ ಅವರಿಗಾಗದು. +ಈ ಪ್ರಕಾರವಾಗಿ ಮಾವ ಸೊಸೆಯರ ನಡುವೆ ಹಸುಳೆಯ ಜ್ಞಾನಾರ್ಜನೆಗೆ ಸಂಭಂದಿಸಿದಂಥ ಭಿನ್ನಾಭಿಪ್ರಯಗಳು ಆಗೊಮ್ಮೆ ಈಗೊಮ್ಮೆ ಏಳುತ್ತಿದ್ದವು. ಮಾತು ಮಾತು +ಮಥನದಿಂದ ಕಿಡಿ ಪಕ್ಕದಲ್ಲಿ ಗಂಡ ಇದ್ದಿದ್ದರೆ ಇನ್ನೊಬ್ಬರು ಹೀಗೆ ಟೀಕಿಸುತ್ತಿರಲ್ಲಿಲ್ಲ. ಸಂಸ್ಕೃತ ಕಲಿಸುವ ಒತ್ತಡದಿಂದಾಗಿಯೇ ಇದ್ದೊಬ್ಬ ಮಗನನ್ನು ಮಿಲಿಟರಿ ಪಾಲು ಮಾಡಿದ ಮಹಾನುಭಾವರಿವರು. ಆತ ಒಮ್ಮೆ ಬಂದು ಹೋದರೆ ಒಳ್ಳೆಯದು. +ಆತನಿಗೆ ಪತ್ರ ಬರೆಯಬೇಕೆಂದರೆ ಹತ್ತಾರು ಸಮಸ್ಯೆಗಳು. ಮೊದಲನೆಯದಾಗಿ ಮ್ಲೇಚ್ಚ ಭಾಷೆಯಲ್ಲಿ ವಿಳಸ ಬರೆಯಬೇಕು. ವಿವರವಾಗಿ ಬರೆಯಬೇಕೆಂದರೆ ತಾನು ಕಲಿತಿರುವುದೆಲ್ಲಾ ಸಂಸ್ಕೃತ. ತಮ್ಮ ತಂದೆ ತಮ್ಮ ಮಗಳು ಹೆಳವನಕಟ್ಟೆ ಗಿರಿಯಮ್ಮಳಂತಾಗಬೇಕೆಂದು ಬಯ್ಸಿದ್ದರು. ಮನೆಯ ಮಾಮಾಶ್ರೀಯವರಿಗೂ ಕನ್ನಡ ಬರುವುದಿಲ್ಲ. ಬಂದರೂ ಬರೆಯುವ ಪೈಕಿ ಅಲ್ಲ. ತಮ್ಮಂಥ ಪ್ರಕಾಂಡ ಪಂಡಿತರು ಶೂದ್ರರ ಭಾಷೆಯಲ್ಲಿ ಬರೆಯುವುದೇ? ಎಂದು ಮೂಗು ಮುರಿಯುತ್ತಿದ್ದರು. +ಪರಿಸ್ಥಿತಿ ಹೀಗಂತ ಕೈಕತ್ತಿ ಕೂಡುವಂತಿಲ್ಲ. ಬತ್ತಿ ಹೊಸೆಯುವುದರ ಜೊತೆಗೆ ಗುಟ್ಟಗಿ ಒಂದು ವರ್ಣಮಾಲೆ ಪುಸ್ತಕ ತರಿಸಿಕೋಂಡಳು. ಅಕ್ಕಿಯಲ್ಲಿ ಅರಲು ಆರಿಸುವಾಗ ಅದರೊಳಗೆ ಅಕ್ಷರ ತಿದ್ದತೊಡಗಿದಳು. ಆಕೆ ತುಂಬ ಜಾಣೆಯಾದ್ದರಿಂದ ಐವತ್ತಾರು ಅಕ್ಷರಗಳನ್ನು ಇಪ್ಪತ್ಮೂರು ದಿನಗಳಲ್ಲಿ ಕಲಿತುಕೊಂಡು ಬಿಟ್ಟಳು. ಹಾಗೆಯೇ ಯಾವುದಕ್ಕೆ ಏನನ್ನು ಜೋಡಿಸಿದರೆ ಏನಾಗುತ್ತದೆ ಎನ್ನುವುದೂ ಸಹ! ಕರ್ತೃ ಕರ್ಮದ ಮಿಲನಕ್ಕೆ ಕ್ರಿಯೆ ಎಂಬುದನ್ನೂ ಸಹ ಈ ಪ್ರಕಾರವಾಗಿ ಅಕ್ಷರ ಸಂಪನ್ನೆಯಾದ ಆಕೆ ಕೆಲವು ಹಗಲು ಕೆಲವು ರಾತ್ರಿ ಪರಿಶ್ರಮ ಪಟ್ಟು ಗಂಡನಿಗೆ ಇನ್‌ಲೆಂಡ್ ಲೆಟರು ಬರೆದು ಒಂದು ಹುಡುಗಿಯ ಕೈಯಿಂದ ಕೆಂಪು ಡಬ್ಬಿಗೆ ಹಾಕಿಸಿದಳು. +ಅಂದಿನಿಂದ ಶುರುವಾಯಿತು ಆಕೆ ಗಂಡನ ಪತ್ರಕ್ಕೆ ಕಾಯುವುದು. ತಾನು ತೋಡಿಕೊಂದಿದ್ದ ನೋವು ನಲಿವುಗಳಿಗೆ ಗಂಡ ಪ್ರತಿಯಿಸುತ್ತಾನೆಂದು ಬಗೆದಳು. ಕೆಲಸ ಬೊಗಸೆ ಮುಗಿಸಿಕೊಂಡು ಬಾಗಿಲ ಬಳಿ ನಿಲ್ಲುವುದು : ಟ್ರಿಣ್ ಟ್ರಿಣ್ ಬೆಲ್ ಬಾರಿಸುತ್ತ ಅಂಚೆಯಣ್ಣ ಬಂದೊದನೆ ಅವನತಮುಖಿಯಾಗಿಯೇ “ಅಣ್ಣಾ ಯಾವುದಾದರೂ ಪತ್ರ ಉಂಟಾ” ಎಂದು ಕೇಳುವುದು, ಆತ “ಇಲ್ಲಮ್ಮ ತಾಯಿ” ಎನ್ನುವುದು ಹೀಗೆ ನಡೆಯಿತು. +ಆಕೆಯ ಬಾಯಿಂದ, ’ಅಣ್ಣಾ’ ಎಂದು ಕರೆಸಿಕೊಳ್ಳುವುದು ಪೋಸ್ಟ್‌ಮ್ಯಾನ್‌ಗೆ ಆಪ್ಯಾಯಮಾನವೆನ್ನಿಸಿತು. ಹಾಗೆ ಕರೆಸಿಕೊಳ್ಳಲಿಕ್ಕೆಂದೇ ಆತ ಅಗ್ರಹಾರಕ್ಕೆ ಬರುತ್ತಿದ್ದ. ಆಕೆಯ ದುಃಖ ಅರ್ಥಮಾಡಿಕೊಳ್ಳಬಲ್ಲ ಬಲ್ಲಿದನಾಗಿದ್ದ. ಅನಧಿಕೃತ ತಂಗಿಯ ದುಃಖ ಪರಿಹರಿಸುವ ಬಗೆ ತನಗೆ ನಿಲುಕದ ಸಂಗತಿಯಾಗಿತ್ತು. +ತಮ್ಮ ಸೊಸೆ ದಿನಂಪ್ರತಿ ಹೊತ್ತಿಗೆ ಸರಿಯಾಗಿ ಬಾಗಿಲ ಬಳಿ ನಿಲ್ಲುವುದು ಶಾಸ್ತ್ರಿಗಳು ದೂರದಿಂದಲೇ ಗಮನಿಸಿದರು. ಸ್ತ್ರೀ ಸ್ವಭಾವತಃ ಚಂಚಲೆ ಎಂದು ಶಾಸ್ತ್ರಗಳೇ ಹೇಳಿದೆ. ಸ್ತ್ರೀ ಬುದ್ದಿ ಪ್ರಳಯಾತಕವೆಂಬುದನ್ನೂ ಸಹ, ಸ್ವಾತಂತ್ರಕ್ಕೆ ಅರ್ಹಳಲ್ಲದ ತಮ್ಮ ಸೊಸೆ ಬಾಗಿಲ ಬಳಿ ನಾಚಿಕೆ ಬಿಟ್ಟು ನಿಲ್ಲುವುದೆಂದರೇನು? ಪೋಸ್ಟ್‌ಮ್ಯಾನ್‌ನಂಥ ಪರಪುರುಷನೊಂದಿಗೆ ಮಾತಾಡುವುದೆಂದರೇನು? +ತಮ್ಮ ಚಿತ್ತಕ್ಕೆ ಹೊಳೆದ ಸಂಗತಿಯನ್ನು ಮುಖಕ್ಕೆ ರಾಚುವಂತೆ ಹೇಳುವ ಧೈರ್ಯ ಅವರಿಗೆಲ್ಲಿಯದು. +ಆ ಹೊತ್ತಿಗೆ ಸರಿಯಾಗಿ ಎದುರು ಕುಂಡ್ರಿಸಿಕೊಳ್ಳತೊಡಗಿದರು. ಆಕೆಯ ಎದುರಿಗೆ +ವ್ಯಾಸಪೀಠವಿತ್ತು. ಅದರ ನಡುವೆ ಪಾರಮಾರ್ಥದ ಗ್ರಂಥ ತೆರೆದಿಟ್ಟು ಇದನ್ನು ನೂರು ಸಾರಿ ಓದು, ಅದನ್ನು ಸಾವಿರ ಸಾರಿ ಓದು ಎಂದು ಪರೋಕ್ಷವಾಗಿ ಒತ್ತಾಯಿಸತೊಡಗಿದರು. +ಆಕೆ ಈ ಪ್ರಕಾರವಾಗಿ ಓದುತ್ತಿರುವಾಗ ಹೊರಗಡೆ ಟ್ರಿಣ್ ಟ್ರಿಣ್ ಬೆಲ್ಲಿನ ಸದ್ದಾಗುತ್ತಿತ್ತು. ಮತ್ತೊಂದು ಘಳಿಗೆ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸಾಗುತ್ತಿತ್ತು. +ಒಂದು ದಿನ ಅಂಚೆಯಣ್ಣ ಬೆಲ್ ಮಾಡಿದ. ಯಾರೂ ಹೊರಬಾರದಿದ್ದಾಗ ತಾನೇ ಬಾಗಿಲು ಬಳಿಗೆ ಬಂದು ಬಿಟ್ಟ. ಬಾಗಿಲ ತೋಳಿಗೆ ಕೈಹಚ್ಚಿ ಬಾಗಿ ಒಳಗಡೆ ಇದೀಯಾ ತಾಯಿ ಅಂದ. ಇದರಿಂದ ಶಾಸ್ತ್ರಿಗಳಿಗೆ ಕೋಪ ಬಂತು. ಬ್ರಾಹ್ಮಣನಾದವನು ಕೋಪವನ್ನು ಸೂಚ್ಯವಾಗಿ ಪ್ರಕಟಿಸಬೇಕೆಂದು ಶಾಸ್ತ್ರಗಳೇ ಹೇಳಿದೆ. +“ಏನಪ್ಪಾ… ಅಲ್ಲೇ ನಿಂತ್ಕೋ ಪೂಜೆ ಮಾಡ್ತಿರೋ ಹೊಸ್ತಿಲು ದಾಟಬೇಡ… ಬಂದೆ”” ಶಾಸ್ತ್ರಿಗಳೇ ಎದ್ದುಹೋದರು’ +“ಇದಾರೆ. ಕೆಲಸ ಕಾರ್ಯಗಳಲ್ಲಿ ಮುಳುಗಿದ್ದಾರೆ ನಾವಿದ್ದೇವಲ್ಲ!” ಎಂದರು. +ಅಂಚೆಯಣ್ಣ ನಿಟ್ತುಸಿರು ಬಿಡುತ್ತ ಬಂದಿದ್ದ ಪತ್ರ ಕೊಟ್ಟು ವಾಪಸಾದ. +ಶಾಸ್ತ್ರಿಗಳು ಓಡೆದರು. ಅದು ತಮ್ಮ ಸುಪುತ್ರನ ಪತ್ರ. ಆದರೆ ಆ ದರಿದ್ರದವನು ಆ ಮೇಚ್ಚರಾಡುವ ಭಾಷೆಯಲ್ಲಿ ಬರೆದಿರುವನಲ್ಲ! ಕುದಿದರು. ಸೊಸೆಗೆ ಹೇಳಿದರು. ಆಕೆ ಸಂತೋಷದಿಂದ ಕಂಪಿಸಿತ್ತಿರುವುದನ್ನು ಕಂಡು ತಾವೂ ಸಂತೋಷಪಟ್ಟರು. +ಹೆಗಲ ಮೇಲೆ ಉತ್ತರೀಯ ಹೊದ್ದು ಹೊರಗಡೆ ಹೋಗಿ ಮ್ಲೇಚ್ಚ ಭಾಷೆ ಬಲ್ಲ ಸುಸಂಸ್ಕೃತರನ್ನು ಹುಡುಕಿ ಪತ್ರ ಓದಿಸಿಕೊಂಡು ಬಂದರು. +“ತಾಯಿ ನಿನ್ನ ಗಂಡ ಇಂಥ ದಿನ ಬರ್ತಿದ್ದೀನಂತ ಬರೆಸಿದ್ದಾನೆ ಕಣಮ್ಮಾ” ವಿವರಿಸಿ ಹೇಳಿದರು. +ಅಲಮೇಲಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಆಕೆಗೆ ಸ್ವರ್ಗ ಮೂರೇ ಗೇಣು. ಇನ್ನು ಒಂದು ಪಕ್ಷ ದಿನಮಾನ ಕಾಯಬೇಕಲ್ಲ. ಇದಿನ್ನು ಶುಕ್ಲಪಕ್ಷ. ಆತ ಬರುವುದೆ ಕೃಷ್ಣ ಪಕ್ಷ ಸಮೀಪಿಸಿದಾಗ… +ಒಂದೊಂದು ಲೀಲೆ ನೆನಪಾಗಿ ಆಕೆಯ ಮೈ ರೋಮಾಂಚನಗೊಂಡಿತು. ಗಂಡನಿಗೆ ಪ್ರಿಯವಾದ ತಿಂಡಿಗಳನ್ನು ಲೆಕ್ಕ ಹಾಕಿದಳು. ನಾಗಂದುಗೆಯಲ್ಲಿದ್ದ ಹಣ ಕೊಟ್ಟು ಸಾಮಾನು ತರಿಸಿಕೊಂಡಳು. ದಿನಕ್ಕೊಂದು ತಿಂಡಿ ಮಾಡಿದಳು. ಇವತ್ತು ರವೆ ಉಂಡೆ ಮಾದಿದರೆ ಮರುದಿನ ಕೋಡುಬಳೆ, ಮತ್ತೊಂದು ದಿನ ಮತ್ತೊಂದು. +ಮಗುವನ್ನು ಮಾವನವರಿಂದ ಕಿತ್ತುಕೊಂಡಳು. “ಶಾಮೂ ನಿಮ್ಮಪ್ಪಾಜಿ ಬರ್ತಾರೆ” ಎಂದು ಆಕೆ ಹೇಳುವುದು, ಆಕೆಯಿಂದ ಮಗುವನ್ನೆತ್ತಿಕೊಂಡು, “ಮೊಮ್ಮಗನೇ ನನ್ ಮಗ ಬರ್ತಿದ್ದಾನೆ” ಎಂದು ಶಾಸ್ತ್ರಿಗಳು ಹೇಳುವುದು. +ಹೆಂಡತಿ ಗಂಡನಿಗಾಗ ಹಲುಬುವುದು. +ತಂದೆ ಮಗನಿಗಾಗಿ ಹಲುಬುವುದು. +ಇವೆರಡು ಸಂಬಂಧದ ಎರಡು ಮುಖ್ಯ ನಮೂನೆಗಳು. +ಬರೆದಿದ್ದಕ್ಕಿಂತ ಒಂದೆರಡು ದಿನ ಮುಂಚಿತವಾಗಿ ಅಶ್ವಥ್ ನಾರಾಯಣ ಮನೆ ಬಾಗಿಲು ತಟ್ಟಿಬಿಟ್ಟ. ಬಾಗಿಲು ತೆರೆಯುವ ಮೊದಲು “ಸ್ನಾನಮಾಡಿ ಶುಚಿರ್ಭೂತನಾಗಿ ಒಳಗದೆ ಬರುವಂತಿ” ಎಂದು ಹೇಳಿದಳು. ಆತ ಪ್ರಯಾಣ ಹೊರಡುವ ಮೊದಲು ಅಂದರೆ ವಾರದ ಹಿಂದೆ +ಸ್ನಾನ ಮಾಡಿದ್ದ. ಬಾಗಿಲು ತೆರೆದೊಡನೆ ಬೂಟುಗಾಲಿನೊಂದಿಗೆ ಒಳಗೆ ಪ್ರವೇಶಿಸಿದ. +“ಶೂದ್ರರ ಎಲ್ಲ ಅವಗುಣಗಳನ್ನು ಕಲಿತು ಬಿಟ್ಟಿರುವಿಯಲ್ಲೊ.” ಶಾಸ್ತ್ರಿಗಳು ಮತ್ತೇನನ್ನೋ ನುಡಿವಷ್ತರಲ್ಲಿ ಒಳಗಡೆ ನುಗ್ಗಿಯೇಬಿಟ್ಟ. ಇನ್ನೇನು ತನ್ನನ್ನು ಅವುಚಿಕೊಂಡು ಬೆಡ್‌ರೂಮಿಗೆ ಒಯ್ದೇ ಬಿಡುತ್ತಾರೆಂದು ಹೆದರಿದ ಅಲುಮೇಲಮ್ಮ ಹಂಡೆ ಮರೆಯಲ್ಲಿ ಅವಿತು ಕೂತಂತೆ ನಟಿಸಿದಳು. ಆದರೆ ಆಕೆಯ ಶರೀರದ ಮುಕ್ಕಾಲು ಭಾಗ ಗೋಚರಿಸದೆ ಇರಲಿಲ್ಲ. +ಆದರೆ ಆ ಪತಿ ಪರಮೆಶ್ವನಿಗೆ ಅದೆಲ್ಲ ನೆನಪಿದ್ದರೆ ತಾನೆ? ಸೀದ ತೊಟ್ಟಲಿಗೆ ನುಗ್ಗಿ “ಓ ಮೈ ದಿಯರ್ ಲಿಟ್ಲ್ ಯಾಸ್ಕಲ್” ಎಂದು ಎತ್ತಿ ಹಿಡಿದನೋ ಇಲ್ಲವೋ ಶಾಮು ಡಾರ್ಲಿಂಗ್ ತನ್ನ ಪುಟ್ಟ ಶಿಶ್ನವನ್ನು ಆತನ ಗಲ್ಲ ಮೀಸೆಯ ಬಾಯಿಗೆ ಗುರಿಯಿಟ್ಟು ’ಮಗ್ನೇ ಮಾಡ್ತೀನಿರು. ನಾನು ಭೂಮಿಗೆ ಉದುರಿ ಒಂಭತ್ತು ತಿಂಗಳು ತುಂಬಿದ ಮೇಲೆ ಬಂದಿರುವೆಯಾ’ ಎಂಬರ್ಥ ಬರುವಂತೆ ಅದೇ ತಾನೇ ಮೂಡಿದ್ದ ಎರಡು ಹಲ್ಲು ಪ್ರದರ್ಶಿಸುತ್ತಾ ಕಿಲಕಿಲ ನಗಾಡಿತು. +“ಬಹುತ್ ಸುಂದರ್ ಲಗ್ತಾ ಹೈ ಮೇರಾ ಬೇಟಾ” ಎಂದ. “ಎಲವೋ ಹಿಂದಿಯಲ್ಲಿ ಮಾತಾಡ್ತಿದಿಯಾ” ಎಂದು ಅವುಡುಗಚ್ಚಿ ಪರಿಶುದ್ದ ಗಂಗಾಜಲವನ್ನು ಹೆತ್ತ ತಂದೆಯ ಬಾಯಿಗೆ ಸುರಿದೇ ಬಿಟ್ಟಿತು. +ಅದನ್ನು ನೋಡಿದ ಶಾಸ್ತ್ರಿಗಳ ಸಿಟ್ಟು ಇಳಿದೇ ಹೋಯಿತು. ಮ್ಲೇಚ್ಚರ ಸಹವಾಸದಿಂದ ಕೆಟ್ಟು ಹೋಗಿರುವ ತನ್ನ ತಂದೆಗೆ ಮಗು ಸರಿಯಾದ ಶಾಸ್ತಿ ಮಾಡಿತೆಂದು ಹರ್ಷಚಿತ್ತರಾದರು. +ತನ್ನ ಬಳಿಗೆ ಬರಲೇ ಇಲ್ಲವಲ್ಲ! ಅವಿತಿದ್ದ ಅಲುಮೇಲು ಎದ್ದು ಮೆಲ್ಲಗೆ ಬಂದಳು. ಡಾರ್ಲಿಂಗ್ ಡಾರ್ಲಿಂಗ್ ಅಂತ ಸ್ವಲ್ಪ ಮಾತನಾಡಿದ. ಡ್ಯಾಡಿ ಗೀಡಿ ಅಂತ ಸ್ವಲ್ಪ ತಂದೆಯನ್ನು ಮಾತಾಡಿಸಿದ. ಸಂಸ್ಕೃತ ಸಂಸ್ಕೃತ ಕಲಿಸಿ ನನ್ ಮಗನ್ನ ಎಷ್ಟು ಹಾಳು ಮಾಡಿದ್ದೀರೆಂದು ಲಘು ಪ್ರಶ್ನೆ ಹಾಕಿದ. +ತಮ್ಮ ಪ್ರಕಾಂಡ ಪಂಡಿತರ ವಂಶಸ್ಥನಾಗಿ ಮಗ ಹೀಗೆ ವರ್ತಿಸುತ್ತಿರುವನಲ್ಲಾ! ಶಾಸ್ತ್ರಿಗಳು ಒಂಥರಾ ಮುಖ ಮಾಡಿದರು. +ಅಲುಮೇಲು ಮುತುವರ್ಜಿಯಿಂದ ಗಂಡನಿಗೆ ಅಭ್ಯಂಜನ ಸ್ನಾನ ಮಾಡಿಸಿದಳು. ಬಂಗಾರ ಮುಡಿ ಅಕ್ಕಿ ಅನ್ನ, ಈರುಳ್ಳಿ ಗಾತ್ರದ ತುಪ್ಪ, ಈರುಳ್ಳಿ ಸಾಂಬಾರು ಮಾಡಿ ಬಡಿಸಿದಳು. +ಒಂದೆರಡು ಆಮ್ಲೆಟ್ ಇಲ್ಲದ ಊಟ ಹೇಗೆ ಮಾಡೋದು? ಗೊಣಗುತ್ತ ಊಟ ಮುಗಿಸಿ ಎದ್ದ. ಸ್ವಲ್ಪ ಹೊತ್ತು ಶಾಸ್ತ್ರಿಗಳು ಮಗನೊಂದಿಗೆ ಮನೆ ಮುಂದುಗಡೆ ಕಟ್ಟೆ ಮೇಲೆ ಕೂತು, ಅಗ್ರಹಾರದ ನಾಲ್ಕು ಮಂದಿ ಗಮನಿಸುವಂತೆ ಉಭಯಕುಶಲೋಪರಿ ಮಾತಾಡಿದರು. ಕ್ರಾಪಿನೊಂದಿಗೆ ಜುಟ್ಟನ್ನು ಒಂಚೂರಾದರೂ ಉಳಿಸಿಕೊಳ್ಳಬೇಕಿತ್ತೆಂದು ಬುದ್ಧಿ ಹೇಳಿದರು. +ಅಶ್ವಥ್ ಹೆಂಡತಿಗೆ ನೀಟಾಗಿ ಡ್ರೆಸ್ ಮಾಡಿಕೊಳ್ಳುವಂತೆ ಹೇಳಿದ. ಆಕೆಗೆಂದೇ ತಂದಿದ್ದ ಪಂಜಾಬಿ ಡ್ರೆಸ್ ತೆಗೆದು ಕೊಟ್ಟ. +“ಇದ್ನೆಲ್ಲಾ ಉಟ್ಟುಕೊಳ್ಳೋಕೆ ನಾನೇನು ಕಿರಸ್ತಾನಳೇ?” ಅಲುಮೇಲು ನಿರಾಕರಿಸಿದಳು. ಅದಕ್ಕೆ ಅಶ್ವಥ್ ಕೇರ್ ಮಾಡಲಿಲ್ಲ.? ಅವನೆಷ್ಟಿದ್ದರೂ ನೂರಾರು ಮಂದಿ ಶತ್ರುಗಳನ್ನು ಕೊಂದಂತವನು +ಮಾತೂಂದ್ರೆ ಮಾತು! ಏಕ್‌ಮಾರ್ ದೋ ತುಕುಡಾ! +ವರಾಂಡದಲ್ಲಿ ಶಾಸ್ತ್ರಿಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು. +ಗಂಡನ ಒತ್ತಾಯಕ್ಕೆ ಮಣಿದು ಅಲುಮೇಲು ಅವನು ಸೂಚಿಸಿದ ಉಡುಪು ತೊಟ್ಟುಕೊಂಡಳು. +ಉಳಿದ ಪ್ರಸಾಧನಗಳನ್ನು ತಾನೇ ಲೇಪಿಸಿದ. ನಖಶಿಖಾಂತ ನೋಡಿ ಮಧುಬಾಲ ಕಂಡಂತೆ ಕಾಣಿಸ್ತಿದೀ ಅಂತ ಮೆಚ್ಚುಗೆ ಸೂಚಿಸಿದ. +“ಹಾಗೇ ವಾಕಿಂಗ್ ಹೋಗಿ ಪಿಕ್ಚರ್ ನೋಡಿಕೊಂಡು ಬರೋಣ” ಎಂದ. +ಅದನ್ನು ಕೇಳಿ ಆಕೆ ಹೌಹಾರಿದಳು. +ತನ್ನ ಪಾತಿವ್ರತ್ಯಕ್ಕೆ ಚ್ಯುತಿ ಬಂದೆಂತುಕೊಂಡಳು. +ಪತಿ ವಾಕ್ಯ ಪರಿಪಲನೆಗೆ ಹೋದರೆ ತಪ್ಪೇನು? +ಹೊರಟಳು. ಇದನ್ನು ನೋಡಿ ಶಾಸ್ತ್ರಿಗಳು ವ್ಯಗ್ರಗೊಂಡರು. +ಅವರ ಕೋಪ ಸಂಸ್ಕೃತ ಮೂಲವಾದದ್ದು, ಬಡವನ ದವಡೆಗೆ ಮೂಲವೆಂಬಂಥಾದ್ದು. ಹೊರಟಿದ್ದನ್ನು ಅಗ್ರಹಾರದ ಆದಿ ದಂಪತಿಗಳೆಲ್ಲ ನೋಡಿ ಬೆಕ್ಕಸ ಬೆರಗಾದರು. +ಈ ವರ್ಷ ಮಳೆ ಬರೋದಿಲ್ಲ. +ಭೂಕಂಪವಾಗದೆ ಇರದು. +ಬಾಯಿಗೆ ಬಂದಂತೆ ಮಾತನಾಡಿಕೊಂಡರು. +ತಮ್ಮ ಗಂಡಂದಿರೂ ತಮ್ಮನ್ನು ಹೀಗೆ ಡ್ರೆಸ್ ಮಾಡಿಸಿ ಹೊರಗೆ ಅಡ್ಡಾಡಿಸಿ ಕೊಂಡು ಬರಬಾರದೆ, ಹದಿನಾರು ಮೊಳದ ಸೀರೆಯ ಪತ್ನಿಯರು ಅಂದುಕೊಂಡರು. +ಪಾರ್ವತಿ ಕುಂಡದ ಪವಿತ್ರ ತೀರ್ಥದಲ್ಲಿ ಮುಳುಗಿದವರಿಗೆ ಗಾಳಿಯ ಭಯವೇನು? ಚಳಿಯ ಭಯವೇನು? +ಸ್ವಲ್ಪ ಹೊತ್ತು ಅಲುಮೇಲುವಿಗೆ ನಡೆಯುವುದಕ್ಕೂ ಕಷ್ಟವಾಯಿತು. +ಪ್ರತಿಯೊಂದು ಹೆಜ್ಜೆ ಇಡುವುದನ್ನು ಅಶ್ವಥ್ ಹೇಳಿಕೊಟ್ಟ. ಗಂದಸರೆಲ್ಲ ತನ್ನ ಕಡೆಗೇ ನೋಡುವುತ್ತಿರುವಂದು ಊಹಿಸಿ ಅಲುಮೇಲು ಖಚಿತಪಡಿಸಿಕೊಂಡಳು. +ಊರ ಹೊರಗಡೆ ಕೈಯಾಡಿಸಿ ಅಶ್ವಥ್ ಖಚಿತಪಡಿಸಿಕೊಂಡ. +ಅದೊಂದು ಬಾದರಾಯಣ ಪಾರ್ಕು. ಅಲ್ಲಿ ಎಷ್ಟೋ ಜೋಡಿಗಳು ರೊಮ್ಯಾಂಟಿಕ್ ಮೂಡಿನಲ್ಲಿದ್ದವು. ಅಶ್ವಥ್‌ನೂ ತನ್ನ ಹೆಂಡತಿಯನ್ನು ಅಪ್ಪಿಕೊಂಡ, ಮುದ್ದಿಸಿದ. ಕ್ರಮೇಣ ಆಕೆ ಮೈ ಚಳಿಬಿಟ್ಟಳು. +ತನ್ನ ಕಷ್ಟ ತೋಡಿಕೊಂಡಳು. ಕರಕೊಂಡು ಹೋಗಿರಿ ಎಂದಳು. ಎಲ್ಲಿಡ್ತೀರೋ ಹೆಂಗಿಡ್ತೀರೋ ಹಂಗಿತೀನಿ ಎಂದಳು. ಅಶ್ವಥ್ ತಲೆ ಅಲ್ಲಾಡಿಸಿದ +ರೇಣುಕಾ ಟಾಕೀಸಿನಲ್ಲಿ ’ಅನ್‌ಪಡ್’ ಸಿನಿಮಾ ನೋಡಲೆಂದು ಹೋದರು. ಅದೊಂದು ಆಕೆಗೆ ಹೊಸ ಅನುಭವ. ಅದುವರೆಗೆ ಆಕೆ ನೋಡಿದ್ದುದು ಕೇವಲ ಒಂದೆರಡು ಮಹಾಪತಿವ್ರತೆಯ ಕಥೆಗಳನ್ನು ಮಾತ್ರ. ಅನ್‌ಪಡ್ ಆಕೆಗೆ ಹೊಸ ಅನುಭವ ನೀಡಿತು. ಪ್ರತಿಯೊಂದು ಡೈಲಾಗನ್ನು ಗಂಡ ಹೆಂಡತಿಗೆ ಬಿಡಿಸಿ ಬಿಡಿಸಿ ಹೇಳಿದ. +ಓದು ಎಂದರೆ ಕೇವಲ ಸಂಸ್ಕೃತ ತಿಳಿದುಕೊಂಡಿರೋದಲ್ಲ. ಸಾಮಾನ್ಯ ಜನರಾಡುವ ಭಾಷೆಯಲ್ಲಿ ವ್ಯವಹರಿಸೋದು ಮುಖ್ಯ. ಶಿಕ್ಷಣ ಪಡೆದಾಗ ಮಾತ್ರ ಹೆಣ್ಣಿಗೆ ಸುಖ-ಸೌಖ್ಯ ಸಿಗುತ್ತದೆ ಎಂದು ಅರ್ಥಮಾಡಿಕೊಂಡಳು. +ಹೀಗೆ ತಾನಿರುವಷ್ಟು ಕಾಲ ಅಶ್ವಥ್ ಹೆಂಡತಿ ಮಗುವನ್ನು ಹೊರಗಡೆ ಕರೆದೊಯ್ದು ಅಡ್ಡಡಿಸಿಕೊಂಡು ಬರುತ್ತಿದ್ದ. +ರಜೆ ಮುಗಿಯುತ್ತಾ ಬಂತು. ತನ್ನ ಮಗುವಿಗೆ ಇಂಗ್ಲಿಷ್ ಕಲಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆಂಬುದರ ಬಗ್ಗೆ ತಂದೆಯೊಡನೆ ಚರ್ಚಿಸಿದ. +“ಎಲವೊ ದುರುಳಾತ್ಮ” ಕೆರಳಿದರು ಶಾಸ್ತ್ರಿಗಳು. “ಈ ದೇಹದಲ್ಲಿ ಜೀವ ಇರುವವರೆಗೆ ಅದು ಮಾತ್ರ ಸಾಧ್ಯವಿಲ್ಲ, ಮಗುವಿಗೆ ಶಾಮಾಶಾಸ್ತ್ರಿ ಎಂದು ಹೆಸರಿಟ್ಟಿದ್ದೇನೆ. ಏನೆಂದು ತಿಳಿದಿರುವಿ” ಆ ಕ್ಷಣ ಅವರಿಗೆ ಮಗನ ಬಾಯಿ ಮುಚ್ಚಿಸುವುದು ಸಾಧ್ಯವಾಯಿತು. +ಮುಠ್ಠಾಳ ಮಗನನ್ನು ಸಾಗು ಹಾಕಿ ಮೊಮ್ಮಗನನ್ನು ಒಂದು ಕೈ ನೋಡಿಕೊಂಡು ಬಿಡಬೇಕೆನ್ನಿಸಿತು. ಹಾಗೆ ಆಧುನಿಕ ಉಡುಪು ಧರಿಸಿ ಊರು ತುಂಬ ಗಂಡನೊಂದಿಗೆ ಮೆರೆದಾಡುವ ಸೊಸೆಯನ್ನೂ ಸಹ. +ದವಡೆ ದವಡೆ ಮಸೆಯುವಷ್ಟು ಶಾಸ್ತ್ರಿಗಳ ಹಲ್ಲು ಭದ್ರವಾದವು. +ಅವರು ಅಂದುಕೊಂಡಂತೆ ಅಶ್ವತ್ಥ ಉತ್ತರಾದಿಗೆ ಹೊರಡುವ ಮೊದಲು ತಂದೆಯ ಪಾದಕ್ಕೆರಗಿದ. +“ಅಪ್ಪಾಜಿ ಕಾಲಬದಲಾಗಿದೆ ಎನೊದು ಮರೀಬೇಡಿ. ಆಧುನಿಕ ಮನೋಭಾವ ಬೆಳೆಸಿಕೊಳ್ಳಿ. ಹಾಗೆ ಬೇರೆಯವರಲ್ಲೂ ಬೆಳೆಸಿ. ಸಾವಿರಾರು ವರ್ಷಗಳ ಹಿಂದೆಯೇ ಸತ್ತುಹೋಗಿರುವ ಸಂಸ್ಕೃತಕ್ಕೆ ಜೋತು ಬೀಳಬೇಡಿ. ನನ್‌ಮಗ ದೊಡ್ಡವನಾಗಿ ಡಾಕ್ಟರೋ ಇಂಜಿನಿಯರೋ ಆಗಬೇಕು ಎನ್ನುವುದೇ ನನ್ನ ಆಸೆ” ಎಂದು ತಾನು ಉತ್ತಮ ವಾಗ್ಮಿ ಎಂದು ಸಾಬೀತುಪಡಿಸಿದ. +ತಂದೆ ಎದುರಾಗಿ ಹೆಂಡತಿ ಗಲ್ಲಕ್ಕೆ ಮುದ್ದು ಕೊಟ್ಟ! +“ಮಗೂನ್ನ ಚೆನ್ನಾಗಿ ನೋಡ್ಕೋ ನಮ್ಮಪ್ಪಾಜಿನೂ ಒಂದು ಮಗೂಂತ ತಿಳ್ಕೋ” ಬರಸೆಳೆದು ಅಪ್ಪಿಕೊಂಡ. ಗಂಡಾ ಗಂಡಾ ಅಂತ ತೀರ ಪತಿಭಕ್ತಿ ತೋರಿಸಬೇಡ. ವಾಕಿಂಗೂಂತ ಪಿಚ್ಚರ್ರೂಂತ ಹೋಗ್ತಿರು…” ಮತ್ತೆ ಕಿವಿಯಲ್ಲಿ ಎನೋ ಪಿಸುಗುಟ್ಟಿದ. +ಆಕೆ ಗೋಳೊ ಅಂತ ಅಳ ತೊಡಗಿದಳು. ಕೆನ್ನೆ ಕೆನ್ನೆ ಬಡಿದುಕೊಂಡಳು. ನನ್ನ ಏನೂಂತ ತಿಳ್ಕೊಂಡೀರಿ ಅಂದಳು. +“ಛೀ ಹುಚ್ಚಿ… ನಾನು ಹಾಗೆ ಅಲ್ಲ. ನ್ನ್ಗಲ್ಲಿ ವಾರಕ್ಕೋದು ಹೊಸ ಹುಡುಗಿ ಬೇಕು. ಅದ್ಕೆ ನೀನೆಂತಿಯಾ” ಸಮಾಧಾನ ಪಡಿಸಿದ. +“ವಿಚಿತ್ರ ಮಗ ಹುಟ್ಟಿಬಿತ್ತಿದ್ದನಲ್ಲಾ” ಶಾಸ್ತ್ರಿಗಳು ಕೈ ಕೈ ಹಿಚುಕಿಕೊಂಡರು. +“ಇವ್ನಿಗೆ ಹುಚ್ಚು ಹಿಡಿದಿದೆಯೋ ಹೇಗೆ?” +ಮತ್ತೇನನ್ನೋ ಹೇಳಲು ಪ್ರಯತ್ನಿಸಿದ ಅಶ್ವಥ್ +“ನೀನು ಎಷ್ಟು ಬೇಗ ಮನೆ ಬಿಡ್ತೀಯೊ ಅಷ್ಟು ಒಳ್ಳೆಯದು. ಇನ್ನೈದು ಸ್ಥಾನಕ್ಕೆ ಗುರು ಬತಾನೆ. ನೀನು ಮೊದಲೇ ಕುಜನ ಬಲ ಇಲ್ಲದವನು” ಶಾಸ್ತ್ರಿಗಳು ಬಲವಂತದಿಂದ ಹೊರಡಿಸಿದರು. +ಅವರೆಲ್ಲ ಅಂಗಳಕ್ಕೆ ಬಂದಾಗ ಅಮೃತ ವೇಳೆ ಅಂತಿಮ ಸ್ಥಿತಿಯಲ್ಲಿತ್ತು. +ಮಗ ಹೋದ ಮೇಲೆ ಶಾಸ್ತ್ರಿಗಳು ಕೆಲವು ದಿನ ಅನ್ನ ನೀರು ಸರಿಯಾಗಿ ಮುಟ್ಟಲಿಲ್ಲ. +ಪ್ರಾತಃವಿಧಿ. ಸಂಧ್ಯಾವಂದನೆಗಳನ್ನು ಶಾಸ್ತ್ರೋಕ್ತವಾಗಿ ಮಾಡಲಿಲ್ಲ. ಏನು ಮಾಡಿದರೆ ಏನಿದೆ? ಮ್ಲೇಚ್ಚರ ನಾಡಿನಿಂದುದಿಸಿದವಂತೆ ತಾನೊಬ್ಬನೆ ಮೆರೆದಾಡಿದರೆ ಸಾಕಿತ್ತಲ್ಲವೆ? ಸೊಸೆಯನ್ನು ಹಾಗೆ… +“ಶಿವ ಶಿವಾ ರಾಮ ರಾಮಾ” +ಶಾಸ್ತ್ರಿಗಳು ಸೊಸೆ ಕಡೆ ಪ್ರಶ್ನಾರ್ಥಕವ್ +ಅಗಿ ನೋಡಿದರು. +ಆಲುಮೇಲು ಮುಖದಲ್ಲಿ ಪ್ರಾಯಶ್ಚಿತ್ತದ ಬೆಂಕಿ ಉರಿಯುತ್ತಿತ್ತು. +ಪಂಜಾಬಿ ದಿರಿಸು ಧರಿಸಿ ಮೆರೆಯಲು ಆಕೆ ಆಶಿಸಿದ್ದಳೇನು? +ಶಾಸ್ತ್ರಿಗಳು ಪೂಜಾ ಮಂದಿರ ಸೇರಿಕೊಂಡರು. ತಾಸುಗಟ್ಟಲೆ, ತಮ್ಮ ಇಚ್ಛಾ ದೈವವನ್ನು ಅರ್ಚಿಸಿದರು, ಪೂಜಿಸಿದರು. ತಮ್ಮ ವಂಶ್ದ ಗೌರವ ಕಾಪಾಡುವ ಬುದ್ದಿಯನ್ನು ತಮ್ಮ ಸುಪುತ್ರನಿಗೆ ದಯಪಾಲಿಸುವಂತೆ ಮೊರೆ ಇಟ್ಟರು. +ಶೃಂಗೇರಿ ಶಾರದಾ ಮಾತೆಯ ಫೋಟೊದ ಎಡಭಾಗದದಿಂದ ಪಾರಿಜಾತ ಪುಷ್ಪ ಉದುರಿತು. ಶಾಸ್ತ್ರಿಗಳು ಸಂತುಷ್ಟಗೊಂಡರು. ಅವನಿಗೆ ಶಾಸ್ತ್ರೊಕ್ತವಾದ ವಿದ್ಯೆ ಕೊಡಲು, ಮಹಾನ್ ಸಂಸ್ಕೃತನ್ನಾಗಿ ಮಾಡಲೆಂದೇ ಅಲ್ಲವೆ ತಾವು ಅವನನ್ನು ಸಂಸ್ಕೃತ ಪಾಠಶಾಲೆಗೆ ಸೇರಿಸಿದ್ದು. ಅವನು ದಾರಿ ತಪ್ಪಿದ್ದಕ್ಕೆ ತಾವು ಭಾಧ್ಯಸ್ಥರೇನು? ತಾವು ಅವನು ಮಿಲಿಟರಿ ನೌಕರಿ ಸೇರಿದ್ದಕ್ಕೆ ಭಾಧ್ಯಸ್ಥರೇನು? +ತಮ್ಮ ವಂಶದ ವೃಕ್ಷ ಪುಣ್ಯಶೇಷದಿಂದಲ್ಲವೇ ಶಾರದಾ ಮಾತೆ ಪ್ರಸಾದ ದಯಪಾಲಿಸಿದ್ದು. ಶಾಸ್ತ್ರಿಗಳು ಹರ್ಷಚಿತ್ತರಾದರು. ಮೋದಲಿನಂತೆ ಹೆಚ್ಚು ಚಟುವಟಿಕೆಯಿಂದ ದಿನಚರಿ ಮುಗಿಸತೊಡಗಿದರು. +ಅಶ್ವಥ್ ವರ್ಷಕ್ಕೊಂಡೆರಡು ಬಾರಿ ಬಂದು ಹೋಗುತ್ತಿದ್ದ. ದಿನಗಳೆಂದಂತೆ ಆತ ಹೆಚ್ಚು ಆಧುನಿಕವಾಗುತ್ತಿದ್ದ. ಇದ್ದ ಕೆಲವು ದಿನಗಳಲ್ಲಿ ಮನೆಯಲ್ಲು ಆಧುನಿಕತೆಯನ್ನು… ಸನತನತೆಯ ಕತ್ತು ಕಿವಿಚುವಂಥ ಗಾಳಿಯನ್ನು ಬೀಸಿ ಹೋಗುತ್ತಿದ್ದ. +ತನ್ನ ಮಗ ಮುಂದೇನಬೇಕೆಂದು ನಿರ್ಧರಿಸುವುದು ತಂದೆಯಾದ ತನ್ನ ಹಕ್ಕು ಎಂದು ವಾದ ಮಾಡುತ್ತಿದ್ದ. ಎಂದೊ ಸತ್ತು ಹೋಗಿರುವ ಸಂಸ್ಕೃತ ಎಂಬ ಶವದೊಂದಿಗೆ ತನ್ನ ಮಗನನ್ನು ಗಂಟು ಹಾಕಿ ಅವನ ಜೀವನವನ್ನು ಹಾಳು ಮಾಡಬೇಡಿರೆಂದು ಪರಿಪರಿಯಾಗಿ ಹೇಳಿದ. ಕನ್ನಡ ಇಂಗ್ಲಿಷ್ ಕಲಿಸಿ ಅವನ ಬಾಳಿಗೆ ಬೆಳಕು ಕೊಡಿರೆಂದು ಅಶ್ವಥ್ ಬಂದಾಗಲೆಲ್ಲ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದನು. +ಮಾವನವರ ಹೃದಯಕ್ಕೆ ನೋವಾಗುವಂತೆ ಮಾಡದಿರುವಂತೆ ಮಾತಾಡದಿರಲು ಅಲುಮೇಲು ಗಂಡನಿಗೆ ತಿಳಿಹೇಳುತ್ತಿದ್ದಳು. ಅಶ್ವಥ್ ನಾಗರೀಕತೆಯ ಹಲವು ರೂಪಗಳನ್ನು; ತಾಂತ್ರಿಕ ಜ್ಞಾನ ಪಡೆದು ಅಬಿವೃದ್ದಿ ಹೊಂದಿರುವ ನಗರಗಳ ಬಗ್ಗೆ ವಿವರಿಸುತ್ತಿದ್ದ. ಈ ಆಧುನಿಕ ಯುಗದಲ್ಲಿ ವೈದಿಕ ಅವಲಂಬಿಸಿ ಬದುಕುವುದು ಎಷ್ಟು ಕಷ್ಟಸಾಧ್ಯವೆಂಬ ಬಗ್ಗೆ ಹೇಳುತ್ತಿದ್ದ. +ಕ್ರಮೇಣ ಅಲುಮೆಲುಗೆ ಅರ್ಥವಾಯಿತಾದರೂ ಶಾಸ್ತ್ರಿಗಳ ಇಚ್ಛಾಶಕ್ತಿಯ ವಿರುದ್ಧ ಈಜುವ ಶಕ್ತಿ ಆಕೆಗಿರಲಿಲ್ಲ. +ಶಾಸ್ತ್ರಿಗಳ ಸನಾತನ ಮನಸ್ಸು ಕರುಳುಬಳ್ಳಿಯ ಯಾವ ನುಡಿಗೂ ಕರಗುವ ಪೈಕಿಯಾಗಿರಲಿಲ್ಲ. ಅದು ಕಡಿದಾದ ಕೊಡಚಾದ್ರಿ ಬೆಟ್ಟಕ್ಕಿಂತಲೂ ಗಟ್ಟಿಯಾಗಿತ್ತು ದುರ್ಗಮವಾಗಿತ್ತು. +ಶ್ರಾವಣಕ್ಕೆ ಶಾಮಾಶಾಸ್ತ್ರಿಗಳಿಗೆ ನಾಲ್ಕು ತುಂಬಿ ಐದರಲ್ಲಿ ಬಿತ್ತು. ಅಕ್ಷರಾಭ್ಯಾಸಕ್ಕೆ ಮತ್ತು ಉಪನಯನಕ್ಕೆ ಸೂಕ್ತ ಸಮಯ ಬಂತು. ಅಗ್ರಹಾರದ ಹಿರಿಯರೊಂದಿಗೆ ಈ ಬಗ್ಗೆ ಸಮಾಲೋಚಿಸಿದರು. ಕಂಚಿಯ ಜಗದ್ಗುರು ಚಂದ್ರಶೇಖರ ಸ್ವಾಮಿಗಳ ಅಮೃತ ಹಸ್ತದಿಂದ ’ಓಂ’ ಎಂದು ದೇವನಾಗರಿ ಲಿಪಿ ತಿದ್ದಿಸಿ ಮೊಮ್ಮಗನ ಭವಿಷ್ಯ ಬಂಗಾರವಾಗುವುದೆಂದು ಸೂಚಿಸಿದರು. ಪುಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡ ಅನೇಕರು ದೇಶ ವಿದೇಶಗಳಲ್ಲಿ ತುಂಬ ಹೆಸರು ಮಾಡಿರುವರೆಂದು ವಿವರಿಸಿದರು. ಅದು ಶಾಸ್ತ್ರಿಗಳಿಗೆ ಗೊತ್ತಿರದ ಸಂಗತಿ ಏನಲ್ಲ! ತಮ್ಮ ವಂಶದ ಹಿರಿಯರೆಲ್ಲ ಕಂಚಿಪೀಠದೊಂದಿಗೆ ಒಂದಿಲ್ಲೊಂದು ಅನುಭಾವದ ಸಂಬಂದ ಇತ್ತುಕೊಂಡಂಥವರೇ. ಮಗ ಅಶ್ವಥ್‌ನಿಗೆ ಇಂಥ ಎಚ್ಚರಿಕೆ ತೆಗೆದುಕೊಂಡಿದ್ದರೆ ಅವನು ಹೀಗೆ ಮಿಲಿಟರಿ ಸೆರುತ್ತಿರಲಿಲ್ಲ. +ಸೊಸೆಗೆ ವಿವರಿಸಿದರು. ಅಕೆಗೂ ಅರ್ಥವಾಗಲಿಲ್ಲ. ಪ್ರತಿಯೊಂದಕ್ಕು ಕವಲೆತ್ತಿನಂತೆ ತಲೆ ಅಡ್ಡಾಡಿಸುವುದನ್ನು ರೂಢಿಸಿಕೊಂಡಿದ್ದಳು. +ದೂರದ ಕಂಚಿಗೆಹೊರಡುವ ದಿನ ನಿಗದಿಪಡಿದಿದರು. ಮನೆ ಮುರುಕಟ್ಟಿನಲ್ಲಿದ್ದ ಚೂರು ಪಾರು ಬಂಗಾರ ಮಾರಿ ಹಣ ಜೋಡಿಸಿದರು. ಅದರೊಂದಿಗೆ ಮಗ ಕಳಿಸಿದ್ದ ಹಣವೂ ಇತ್ತು. +ಅವರು ಕಂಚಿಗೆ ಹೊರಟು ನಿಂತದ್ದನ್ನು ಅಗ್ರಹಾರದವರು ಬೆಂಬಲಿಸಿದರು. ರೈಲ್ವೇ ನಿಲ್ದಾಣಕ್ಕೆ ಕೆಲವು ಹಿರಿಯರು ತಮ್ಮ ಬಲಂಗೋಚಿಗಳೊಂದಿಗೆ ಹೋಗಿ ಶಾ‌ಆಸ್ತ್ರಿಗಳನ್ನು, ಅವರ ಕುಟುಂಬದ ಸದಸ್ಯರನ್ನೂ ಬೀಳುಕೊಟ್ಟು ವಾಪಸಾದರು. +ಪ್ರಯಾಣದಲ್ಲಿ ಅಹಿತಕರ ಸಂಘಟನೆಗಳು ಸಂಭವಿಸಲಿಲ್ಲ. ಹೊರಟ ಘಳಿಗೆ ಚೆನ್ನಾಗಿತ್ತು. ಶ್ರೀಗಳು ಅವರ ಪುಣ್ಯಕ್ಕೆ ಶ್ರೀಕ್ಷೇತ್ರದಲ್ಲಿದ್ದರು. ಸೂಕ್ತ ಫ಼ೀಜು ತೆತ್ತು ಮಗನಿಗೆ ಉಪನಯನ ಮಾಡಿಸಿದರು. +ಮಹಾರಝರ ಆಸ್ಥಾನ ವಿದ್ವಾನ್ ಶಾಮಾಶಾಸ್ತ್ರಿಗಳ ಮರಿಮೊಮ್ಮಗನನ್ನು ನೋಡಿ ಶ್ರೀಗಳು ಮೌನದಲ್ಲೂ ಸಂತೊಷ ವ್ಯಕ್ತ ಪಡಿಸಿದರು. ಶ್ರೀಕ್ಷೇತ್ರದಲ್ಲಿ ಎಲ್ಲಾ ಘಳಿಗೆಗಳೂ ಅಮೃತಮಯವೇ. ಮಂಗಲಮಯವೇ. ಶ್ರೀಗಳಿಂದ ಶಿಕ್ಷಣ ಶ್ರೀಕಾರ ಹಾಕಿಸಿಕೊಂಡವರು ಏನು ಆಗಿದ್ದಾರೆ? ಏನು ಕಥೆ? +“ನಿಮಗೆ ಗೊತ್ತಿದೆಯೋ ಇಲ್ಲವೋ, ಜವಹರಲಾಲ ನೆಹರೂ ಸ್ವತಂತ್ರ ಹೋರಾತಕ್ಕೆ ಅಂತ ಮದ್ರಾಸಿಗೆ ಬಂದಿದ್ದಾಗ, ತಮ್ಮ ಏಕಮಾತ್ರ ಪುತ್ರಿ ಇಂದಿರಾ ಪ್ರಿಯದರ್ಶಿನಿಗೆ ಇಲ್ಲಿಯೇ ಅಕ್ಷರಾಭ್ಯಾಸ ಮಾಡಿಸಿದ್ದು” ಜ್ಞಾನ ವೃದ್ಧರೋರ್ವರು ನುಡಿದರು. +ಹುಟ್ಟಿದಾರಭ್ಯ ಕೇವಲ ಪ್ರಾಣಾಯಾಮ, ಗಾಯತ್ರಿ ಮಂತ್ರಗಳಿಮ್ದಲೇ ಪಾರಮಾರ್ಥದ ಬದುಕು ಬದುಕುತ್ತಿರುವ ಶ್ರೀಗಳ ಸನ್ನಿದಿಯಲ್ಲಿ ಮಗುವನ್ನು ಕೂದ್ರಿಸಿದರು, +ದೈವದತ್ತ ಸಾಕಾರಮೂರ್ತಿಯಂಥ ಶ್ರೀಗಳು ಬಂದು ಪವಿತ್ರ್ ಆಸನದಲ್ಲಿ ಸುಖಾಸೀನರಾದರು. ಮಗುವಿನ ಪುತ್ತ ತಲೆಯನ್ನು ಸ್ಪರ್ಶಿಸಿದರು. ಹಾಗೆಯೇ ಶಿಖಿರಪ್ರಾಯವಾಗಿ ಕಂಗೊಳಿಸುತ್ತಿದ್ದ ಅದರ ಜುಟ್ಟನ್ನೂ ಸಹ. +ಕಾಮಾಕ್ಷಿ ದೇವಾಲಯದ ಘಂಟಾನಾದವಾಗುತ್ತಿರುವಾಗಲೇ ಮಗುವಿನ ಕೈಯಿಂದ ’ಓಂ’ ಒಂಬೊಂದು ದೆವನಾಗರಿ ಲಿಪಿಯ ಪವಿತ್ರ ಅಕ್ಷರವನ್ನು ತಿದ್ದಿಸಿದರು. +ಆ ಸನ್ನಿವೇಶದಿಂದ ಶಾಸ್ತ್ರಿಗಳು ಪುಳಕಿತಗೊಂಡರು. ಇನ್ನು ತಮ್ಮ ಮೊಮ್ಮಗನ ಬದುಕಿನ ಭಾಗ್ಯದ ಬಾಗಿಲು ತೆರಿಯಿತೆಂದೇ ಭಾವಿಸಿದರು. +ಕಂಚಿಯಲ್ಲಿ ಎರಡು ದಿನ, ತಿರುಪತಿಯಲ್ಲಿ ವೆಂಕಟೇಶ್ವರ ಸನ್ನಿಧಿಯಲ್ಲಿ ಎರಡು ದಿನ ಹಾಗೆಯೇ ಶ್ರೀಕೃಷ್ಣದೇವರಾಯರ ಪೂರ್ವಾಶ್ರಮವಾದ ಚಂದ್ರಗಿರಿಯಲ್ಲೊಂದು ದಿನವಿದ್ದು ಊರಿಗೆ ವಾಪಸ್ಸಾದರು. +ಆಗ್ರಹಾರದ ಎಲ್ಲರೂ ಬಂದು ಮಗುವಿನ ತಲೆಯ ಜುಟ್ಟನ್ನು ನೋಡಿದ್ದೇ ನೋಡಿದ್ದು. ಸ್ಪಶಿಸಿದ್ದೇ ಸ್ಪರ್ಶಿಸಿದ್ದು. ಹೊಗಳಿದ್ದೇ ಹೊಗಳಿದ್ದು. ತೀರ್ಥ ಪಡೆದದ್ದೇ ಪಡೆದದ್ದು.; ಪ್ರಸಾದ ಸ್ವೀಕರಿಸಿದ್ದೇ ಸ್ವೀಕರಿಸಿದ್ದು. +ಅಗ್ರಹಾರದ ಸಹ ನಿವಾಸಿಗಳು ಕೆಟ್ಟ ಕೈಯಿಂದ ಮುಟ್ಟಿದ್ದಕ್ಕೋ, ಕೆಟ್ಟ ಕಣ್ಣಿಂದ ನೋಡಿದ್ದಕ್ಕೋ ಏನೋ ಮಗು ಶಾಮು ಸಂಜೆ ಜ್ವರದಿಂದ ಹ್ಹಾಂ! ಹ್ಹೂಂ ಅನ್ನ ತೊಡಗಿತು. ಶಾಸ್ತ್ರಿಗಳು ಜ್ವರ ಸ್ಥಂಬನ ಮಂತ್ರ ಹಾಕಿದರು. ಮಗು ಮೆಟ್ತಿ ಬೀಳತೊಡಗಿತು. ತಾಮ್ರದ ತಗಡಿನ ಯಂತ್ರ ಮಂತ್ರಿಸಿ ಅದರ ಉಡಿದಾರಕ್ಕೆ ಕಟ್ಟಿದರು. ಅರುಣೋದಯ ಸಮಯದಲ್ಲಿ ಮಗನ ಹಣೆಗೆ ನೀಲಗಿರಿ ಎಣ್ಣೆ ಲೇಪಿಸುತ್ತಿದ್ದುದನ್ನು ಅದೇ ತಾನೆ ಅರ್ಚನಾ ಕೋಣೆಯಿಂದ ಶಾಸ್ತ್ರಿಗಳು ಕಂಡರು. +“ಮಗುವಿಗೆ ಜ್ವರ ಇಳಿದಿಲ್ಲವೇನಮ್ಮಾ?” ಎಂದು ಉಚ್ಚರಿಸಿದರೋ ಇಲ್ಲವೋ ಅಷ್ಟರಲ್ಲಿ ಈ ಮಗು ಮಾರುದ್ದ ದ ಭೇದಿ ಮಾಡಿಕೊಂಡಿತು. ಹಾಗೆ ಒನ್ನಿಷ್ಟು ಫೈವ್‌ನಂತೆ ವಂತಿಯನ್ನು ಸಹ. +ಮಧ್ಯನ್ನದ ಹೊತ್ತಿಗೆ ಅಲುಮೇಲು ಕಂಗಾಲಾಗಿ ಅಳತೊಡಗಿದಳು. +“ಮಾವನವರೇ ಮಗೂನ ಇಳಿಸಿಕೊಡ್ರಿ” ಎಂದು ಸೆರಗೊಡ್ಡಿದಳು. +“ಅದಕ್ಯಗಿಷ್ಟು ಕಂಗಲಾಗಿರುವಿ ತಾಯಿ. ಯಂತ್ರ ಮಂತ್ರಕ್ಕೂ ಇದು ಜಗ್ಗಲಿಲ್ಲವೆಂದ ಮೇಲೆ ಗ್ರಹದೋಷವಿರಬೇಕು ತಡೆ ನೋಡೋಣ” ಎಂದವರು ಪಂಚಾಂಗದ ಗಂಟು ಬಿಚ್ಚಿದರು. +ಸ್ವತಿ ನಕ್ಶತ್ರಕ್ಕೆ ಸವಾಲೆಸೆದಿರುವ ಗ್ರಹಗಳನ್ನು ತರಾಟೆಗೆ ತೆಗೆದುಕೊಂಡರು. ’ಇದೆಲ್ಲಾ ಮಂಗಳನ ಕೀಟಲೆ’ ಉದ್ಗರಿಸಿದರು. +ಅಗ್ರಹಾರದಲ್ಲಿದ್ದ ತಿರುಚೈಂದೂರು ತುರುಮಲಯಿಂಗಾರರ ಮನೆಗೆ ಹೋದರು. ಅವರು ಹತ್ತಾರು ಮಂದಿ ಬ್ರಿಟಿಷ್ ಉನ್ನತಾಧಿಕಾರಿಗಳಿಗೆ ಅವರವರ ಜಾತಕ ಬರೆದುಕೊಟ್ಟು ವಿಶ್ವವಿಖ್ಯಾತರಾಗಿದ್ದಂಥವರು. ಪಾಪ! ಗ್ರಹ ನಿಹಾರಿಕೆಗೆಗಳ ಮೇಲೆ ಸವಾರಿ ಮಾಡಿದ್ದಂಥ ಆ ಮಹಾನುಭಾವರು ವಾತಪಿತ್ತಕಫಗಳಂಥ ರೋಗ ರುಜಿನಗಳಿಂದ ನರಳುತ್ತಿದ್ದರು. ಕಳೆದ ಅಮಾವಾಸೆ ಸಂಧರ್ಭದಲ್ಲಿ ಊರ ಗೌಡನಿಂದ ಗೋದಾನ ಪಡೆಯುತ್ತಿರುವಾಗ ಜ್ಯೋತಿಷ್ಯ ಮಾರ್ತಾಂಡರ ದೇಹದ ವಾಮಭಾಗಕ್ಕೆ ಪಾರ್ಶ್ವವಾಯು ಬಡಿದುಬಿಡಬೇಕೆ? +ಶಾಸ್ತ್ರಿಗಳು ಹೋಗಿ ಅವರ ಬಲಭಾಗದಲ್ಲಿ ಕೂತು ಪಾನಕ ಸ್ವೀಕರಿಸಿ ಆರೋಗ್ಯ ಭಾಗ್ಯ ವಿಚಾರಿಸಿದರು. ನಂತರ ತಮ್ಮ ಮೊಮ್ಮಗನ ಬಗ್ಗೆ ಮತೆತ್ತಿದರು. ಅದನ್ನೆಲ್ಲ ತಿರುಮಲೈಮ್ಗಾರರ ಬಲಕಿವಿಯಲ್ಲಿ ಗಟ್ಟಿಯಾಗಿ ಹೇಳಬೇಕಾಗಿತ್ತು. ಅವರ ನಾಲಿಗೆಯ ಅರ್ಧ ಭಾಗದಿಂದ ಏನನ್ನೋ ಹೇಳಲು ಪ್ರಯತ್ನಿಸಿದರು. ದೇವನಾಗರಿ ಭಾಷೆ ಕೀರಕ್ ಕೀರಕ್ ಅಂತ ಹೋರಟಿತು. ಹಾಗೆ ಅರ್ಥ ಮಾಡಿಕೊಂಡು ಹೀಗೆ ಹೊರಟುಬಂದರು. +ಕ್ಷುದ್ರ ದೇವತೆಯೊಂದು ಮೊಮ್ಮಗನಿಗೆ ಬಡಿದುಕೊಂಡಿದೆ ಎಂದುಕೊಂಡು ಹೋಮ ಹವನ ಮಾಡಿದರು. ಎಳ್ಳು ಔಡಲ ಶೇಂಗಾ ಇವೇ ಮೊದಲಾದ ಪಂಚ ತೈಲದಲ್ಲಿ ಮಗನ ಪ್ರತಿಬಿಂಬ +ಮಾಡಿಸಿದರು. ಅದು ಮಾಡಿಸಿದ್ದೇ ತಡ ಶಮಣ್ಣ ಮತ್ತೊಮ್ಮೆ ನೀರು ನೀರಾದ ಭೇದಿ ಮಾಡಿಕೊಂಡಿತು. ಜೊತೆಗೆ ಒಂದು ಅದ್ಭುತವಾದ ವಾಂತಿಯನ್ನೂ ಸಹ. +ತನ್ನ ಮಗ ತನ್ನ ಕೈ ಬಿಡುತ್ತಿದ್ದಾನೆಂದು ಅಲುಮೆಲು ಆಕಾಶ ಕಳಚಿ ಬೀಳುವಂತೆ ಅಳತೊಡಗಿದಳು. +“ಮಾವನವರೇ, ಡಕ್ತ ಬಳಿಗೆ ಹೋಗೋಣ” ಅಕೆ ಒಂದೇ ಸಮನೆ ಪೀಡಿಸತೊಡಗಿದಳು. +ಕಾಯಿಲೆ ಕಸಾಲೆಗಳಿಗೆ ಇಂಗ್ಲಿಷ್ ಕಲಿತ ಡಾಕ್ತರ್ ಬಳಿಗೆ ಹೋಗುವುದೆಂದರೇನು? ರಾಮಾ! ರಾಮಾ! ಕಿವಿ ಮುಚ್ಚಿಕೊಂಡರು. ತಮ್ಮ ವಂಶದವಯಾರೂ ಇಂಗ್ಲಿಷ್ ಮಾತ್ರೆ ನೊಂಗಿರುವುದುಂಟೆ, ಸುಜಿ ಮಾಡಿಸಿಕೊಂಡಿರುವುದುಂಟೆ? +ಬೆಳೆಗ್ಗೆ ಬಂದ ಬೀಗರೂ ಸಹ ತಮ್ಮ ಮಗಳ ವಾದವನ್ನು ಸಮರ್ಥಿಸಿದರು. ಕೊನೆಗೂ ಒಪ್ಪಿಕೊಂಡರು ಶಾಸ್ತ್ರಿಗಳು. ಆಚಾರ ವಿಚಾರದಲ್ಲಿ ಪರಿನಿತಿ ಇರುವ ತಮ್ಮ ಗೋತ್ರದವರೇ ಆದ ಡಾಕ್ಟರ್ ಬಳಿಗೆ ಹೋದರು. +ಮಗುವಿನ ದೇಹ ತಪಾಸಣೆ ಮಾಡಿದ ಡಾಕ್ಟಗೆ ಶಾಸ್ತ್ರಿಗಳ ಮೆಲೆ ಸಿಟ್ಟು ಬಂತು. “ಇಷ್ಟೊಂದು ದಿಹೈಡ್ರೇಟಾಗಿ ಮಗು ಫ್ಯಾಟಲ್ ಕಂಡೀಷನ್ ತಲುಪಿದೆ, ಡಾಕ್ಟರ್ ಬಳಿಗೆ ಕರೆದುಕೊಂದು ಬರುವುದು ಬಿಟ್ಟು ಕುಂಡಲಿ ನೋಡ್ಕೊಂಡು ಕೂತಿದ್ದೀರಲ್ಲ ನೀವೇನು ಮನುಷ್ಯರೋ ರಾಕ್ಷಸರೋ” ಹೀಗೆ ಡಾಕ್ಟರ್ ಬಾಯಿಗೆ ತೋಚಿದಂಎ ಮಾತನಾಡಿದರು. +ಆ ಡಾಕ್ಟರ್ ಬೇರೆ‌ಆರೂ ಅಲ್ಲ. ದೂರದವಂತವರೂ ಅಲ್ಲ. ಅವರ ತಂದೆ ನಾಗಭೂಷಣ ಶರ್ಮ ಪಂದಿತರೂ ತಾವೂ ಗಳಸ್ಯ ಕಂಠಸ್ಯ. ಅಲ್ಲದೇ ಈ ಡಾಕ್ಟರನ ಜನ್ಮಕುಂಡಲಿಯನ್ನು ಬರೆದದ್ದು ತಾವೆ? ಇಂಗ್ಲಿಷ್ ಕಲಿತ ಇವರಿಗೆ ಆಧುನಿಕತೆಯ ಗರ ಬಡಿದಿದೆ. ಶಾಸ್ತ್ರಿಗಳು ಮೌನವಹಿಸಿದರು. +ಮಗು ಶಾಮಣ್ಣನ ಚಿಕಿತ್ಸೆ ಆಸ್ಪತ್ರೆಯಲ್ಲಿ ಇಡಿ ವಾರ ನಡೆಯಿತು. ಕ್ರಮೇಣ ವಾಂತಿ ಭೇದಿ ನಿಂತು ಮಗು ಚೇತರಿಸಿಕೊಂಡು ಮುಗುಳ್ನಗತೊಡಗಿತು. ಒಂದು ಒಳ್ಳೆ ಮಹೂರ್ತ ನೋಡಿ ಮಗುವನ್ನು ಮನೆ ತುಂಬಿಸಿಕೊಂಡರು. +ಮಗ ಅಶ್ವಥ್‌ಗೆ ತಂತಿ ಕಳಿಸಿದ್ದೇನೋ ನಿಜ. ಚೀನದವರು ಭಾರತದ ಗಡಿಯನ್ನು ಪ್ರವೇಶಿಸುವುದನ್ನು ತದೆಯಲು ತುಕುಡಿಯ ನೇತೃತ್ವ ವಹಿಸಿದ್ದಾನಾತ. ಶತೃಗಳು ಸಾಕಷ್ಟು ದೂರ ಹಿಮ್ಮೆಟ್ಟಲು ತಿಂಗಳುಗಳೇ ಹಿಡಿದವು. ಚಿಯಾಂಗ್ ಕುಂಯ್ ಎಂಬ ಶತ್ರು ಸೈನಿಕನೋರ್ವ ಗುಟ್ಟಾಗಿ ಗಡಿ ಪ್ರವೇಶಿಸಿ ಬಂದುಬಿಟ್ಟಿದ್ದ. ಆ ಎಕಾಂಗ ವೀರ ಅಶ್ವಥ್ ತುಕುದಿಯ ಮೇಲೆ ಇದ್ದಕ್ಕಿದ್ದಂತೆ ಗ್ರೆನೇಡ್ ಧಾಳಿ ಆರಂಭಿಸಿಬಿಟ್ಟ. ಮಧ್ಯರಾತ್ರಿಯಲ್ಲಿ ಅವನು ಸಾಕಷ್ಟು ಹೋರಾಡಿದ. ಇನ್ನೇನು ತಾನು ಸಾಯುತ್ತಿರುವೆನೆಂದಾಗ ಕೈ ಬಾಬನ್ನು ಬೀಸಿ ಅಶ್ವಥ್ ಕಡೆ ಎಸೆದ. ಅದು ಸೀದ ಬಂದದ್ದೆ ಅಶ್ವಥ್ ತೊಡೆ ಭಾಗಕ್ಕೆ ಬಡಿಯಿತು. ’ಜೈಹಿಂದ್” ಎಂದು ಜೋರ್ಗಿ ಕೂಗಿ ಅಶ್ವಥ್ ಮಾತೃಭೂಮಿಗೆರಗಿದ. ಕೂಡಲೆ ಮೂರ್ಛೆ ಹೋದ ಅವನನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. +ಅವನ ಇಚ್ಛೆಯಂತೆ ಅವನ ತಂದೆಯವರಾದ ಶಾಸ್ತ್ರಿಗಳಿಗೆ ತಿಳಿಸಲಿಲ್ಲ. ಅವನ ಎಡಗಾಲನ್ನು ವೈದ್ಯರು ಪೂರ್ತಿ ಕೊಯ್ದು ತೆಗೆದುಬಿಟ್ಟಿದ್ದರು. ಪೂರ್ಣ ಗುಣಮುಖನಾಗಲು ಕೆಲವು ತಿಂಗಳುಗಳೇ ಹಿಡಿದವು. ಕೊನೆಗೊಂದು ದಿನ ಅವನಿಗೆ ಕೊಡುವುದೆಲ್ಲವನ್ನು ಕೊಟ್ಟು, +ನಿವೃತ್ತಿ ಮುಂಜೂರು ಮಾಡಿದರು. ದೇಶ ರಕ್ಷಣೆಗಾಗಿ ತನ್ನ ಕಾಲನ್ನೇ ಬಲಿ ಕೊಟ್ಟ ಅಶ್ವಥ್‌ನನ್ನು ಸೇನಾ ಮುಖ್ಯಸ್ಥರೆಲ್ಲಾ ಕೊಂಡಾಡಿದರು. ಎಲ್ಲರ ಕಣ್ಣುಗಳು ನೀರಿನಿಂದ ತುಂಬಿದವು. ಆತ ವೇದಿಕೆಗೆ ಊರುಗೊಲು ಸಹಾಯದಿಂದ ಬಂದ. ಫೀಲ್ಡ್ ಮಾರ್ಷಲ್ ಎಕ್ಸ್‌ವೈಜೆಡ್‌ರವರು ತಮ್ಮ ಕೈಯಾರೆ ಅವನಿಗೆ ಶಾಲು ಹೊದಿಸಿದರಲ್ಲದೆ, ಪುಷ್ಪ ಕರಂಡಕ ನೀಡಿದರು. ಅಶೋಕ ಚಕ್ರ ದಯಪಾಲಿಸುವಂತೆ ರಾಷ್ತ್ರಪತಿಗಳಿಗೆ ಶಿಫಾರಸು ಮಾಡುವುದಾಗಿ ಘೋಷಿಸಿದರು. +ಸೇನೆಯ ಹಲವು ಪ್ರಮುಖರು ಅಶ್ವಥ್‌ನನ್ನು ರೇಲ್ವೆ ನಿಲ್ದಾಣದವರೆಗೆ ಹೋಗಿ ಬೀಳ್ಕೊಟ್ಟು ವಾಪಾಸಾದರು. +ಇತ್ತ ಮನೆಯಲ್ಲಿ ಶಾಸ್ತ್ರಿಗಳು ತಮ್ಮ ಮಗನಿಗಾಗಿ ಅಲುಮೇಲು ತನ್ನ ಗಂಡನಿಗಾಗಿ; ಆಗಲೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಅಡ್ಡಾಡುತ್ತಿದ್ದ; ಹಾಗೂ ಶುಕ್ಲಾಂಬರದರಂ… ಯಾರೇಂದು ತುಷಾರ ಹಾರದವಳ ತೊದಲು ತೊದಲಾಗಿ ಹೇಳುತ್ತಿದ್ದ ಮಗು ಶಾಮು ತನ್ನ ತಂದೆಗಾಗಿ, ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. +ರೋಮಾಂಚನ ಅಲೆಗಳನ್ನು ಹರಡಿಸುವಂಥ ಅಶ್ವಥ್ ನಾರಾಯಣ ಬರುವನೆಂಬ ಸುದ್ದಿ ಕೇಳಿ ಅಗ್ರಹಾರಕ್ಕೆ ಅಗ್ರಹಾರವೇ ಸ್ವಾಗತಕ್ಕೆ ಸಿದ್ಧವಾಗಿತ್ತು. ಅಗ್ರಹಾರದವರು ತಮ್ಮ ಸಂತೋಷವನ್ನು ದೈರೆಕ್ಟಾಗಿ ಪ್ರಶಂಸಿಸುವಂಥ ಪರಿಸ್ಥಿತಿ ಇರಲಿಲ್ಲ. ಅದೇ ಕೆಲವು ದಿನಗಳ ಹಿಂದೆ ಜ್ಯೋತಿಷ್ಯ ಮಾರ್ತಾಂಡ ತಿರುಚೈಂದೂರು ತಿರುಮಲೈಂಗಾರರು ಇಹಲೋಕ ತ್ಯಜಿಸಿದ್ದರು. ಇನ್ನೂ ಸುತಕದ ಛಾಯೆ ಮಸುಕು ಮಸುಕಾಗಿರುವಾಗಲೇ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದು ಅಗ್ರಹಾರಕ್ಕೆ ಆಗಮಿಸುತ್ತಿದ್ದಾನೆ. +ಶಾಸ್ತ್ರಿಗಳು ಮಗನನ್ನು ಸ್ವಾಗತಿಸಲು ಹೊರಟರು. ಸೊಸೆಯನ್ನು ಕರೆದರು. ಅಷ್ಟು ಸುಲಭವಾಗಿ ಆಕೆ ಬೀದಿಗೆ ಹೊರಡುವ ಸ್ಥಿತಿಯಲ್ಲಿರಲಿಲ್ಲ. ಆಕೆ ಮುಟ್ಟಾಗಿ ಮೂರು ದಿನ ಹೊರಗೆ ಕುಂಡ್ರಬೇಕಾಗಿತ್ತು. ಅದೂ ಅಲ್ಲದೇ ಅಮರಕೋಶದ ಮೊದಲ ಶ್ಲೋಕ ಬಾಯಿಪಾಠ ಮಾಡದ ಹೊರತು ಅನ್ನ ಹುಳಿ ಕೆನೆ ಮೊಸರು ಉಣ್ಣಕೂಡದೆಂದು ಮೊಮ್ಮಗನಿಗೆ ಕಟ್ಟಪ್ಪಣೆ ವಿಧಿಸಿದ್ದರು. +ಅದರಿಮ್ದ ತಾವೊಬ್ಬರೇ ಹೊರಟರು. ಕಾಲಮೀನ ಖಂಡಗಳು ಯಾಕೋ ನಿನ್ನೆಯಿಂದ ಸೇದುತ್ತಿದ್ದವು. ಆದರೂ ಪಾಣಿನಿಯ ಗತ್ತಿನಿಂದ ಒಮ್ದೊಂದೆ ಹೆಜ್ಜೆ ಹಾಕುತ್ತ ರೇಲ್ವೆ ನಿಲ್ದಾಣ ತಲುಪಿದರು. ಮಗ ಅಶ್ವಥ್ ಅಂತರಾಳದಿಂದ ಕಿತ್ತು ಬರುತ್ತಿದ್ದ. ಅವನನ್ನು ಯಾವಾಗ ನೋಡುವೆವೋ ಎಂಬ ಕಾತರ. ಹಾಳದ ರೈಲು ಬೇರೆ ನಲವತ್ತೈದು ಘಳಿಗೆ ತಡವಾಗಿ ಬರಲಿದೆ. +ಹೇಗೋ ಮಗ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದಿದ್ದಾನೆ. ದೈವಂಶ ಸಂಭೂತವಾದ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಮ್ಲೇಚ್ಛರಂತೆ ವರ್ತಿಸುತ್ತಿದ್ದಾನೆ. ಎಲ್ಲ ಮದ್ಯ ಅಮೇಧ್ಯದ ಫಲ., ಜೊತೆಗೆ ಸಹವಾಸ ದೋಷ. ತಮ್ಮ ಸಾನ್ನಿಧ್ಯದ ಪರಿಣಾಮದಿಂದ ಅವನನ್ನು ಬದಲಿಸಬೇಕು. ಸನಾತನ ಧರ್ಮ ಪರಿಪಾಲಿಸುವಂತೆ ಆಜ್ಞಾಪಿಸಬೇಕು. ನನ್ನ ಮೇಲೆ ಅವನಿಗೆ ಅತುಲ ಗೌರವ ಇಲ್ಲದಿಲ್ಲ.ತಮ್ಮಂತೆ ಅವನೂ ಕೂಡ ವೈದಿಕ ಕಲಿತು ಗುರು ಹಿರಿಯರ ವಿಶ್ವಾಸಕ್ಕೆ ಪಾತ್ರನಾಗಬೇಕು, ತಮ್ಮ ಕೈ ಅಡುಗೆಯನ್ನು ಮಗ ಊಟ ಮಾಡಲಿರುವನೆಂಬುದು ಅವರಿಗೆ ಹೆಮ್ಮೆ ತಂದಿತ್ತು. ಬಲಗೈ ಮೂಸಿಕೊಂಡರು. ಹುಳಿವಾಸನೆ ಹೊಡೆಯಿತು. ಕಾಯಿತುರಿ, ಶುದ್ಧ ಇಂಗು ಹಾಕಿ ಮಾಡಿದ್ದರು. +ಕಲ್ಲು ಬೆಂಚಿನ ಮೇಲೆ ಹಾಗೆ ಸ್ವಲ್ಪ ಹೊತ್ತು ತುಕಡಿಸಿದರು. ಘಂಟೆ ಮಾಡಿದ ಸದ್ದಿಗೆ ದಿಗ್ಗನೆ ಎಚ್ಚರಗೊಂಡರು. ಅವರಂತೆ ಇತರ ಮಂದಿಯೂ ಸಹ ಪ್ರಯಾಣಕ್ಕೆ ಹೊರಟಿರುವರೆಷ್ಟೋ +ಪಯಣಿಸಿ ಬಂದವರನ್ನು ಇದಿರುಗೊಳ್ಳಲು ಬಂದವರೆಷ್ಟೋ. ಪ್ರತಿಯೊಬ್ಬರ ಮನದಲ್ಲೂ ಹೊಯ್ದಾಟಗಳು. ಆತುರ, ಕಾತರಗಳೆಲ್ಲ ಮುಖದಲ್ಲಿ ಪ್ರತಿಬಿಂಬಿತಗೊಂಡಿದ್ದವು. ಎಲ್ಲರ ಗಮನವೂ ಮೂಡಣ ದಿಕ್ಕಿಗೇ. +ಅಂದುಕೊಂಡಿದ್ದಕ್ಕಿಂತ ಐದು ಘಲಿಗೆ ಮೊದಲೇ ಬಂತು ರೈಲು. ಹೆತ್ತ ತಾಯಿಯಂತೆ, ಅದು ಬಂದೊಡನೆ ಗಡಿಬಿಡಿ ಹೆಚ್ಚಿತು. ಏರುವವರೆಷ್ಟೋ? ಇಳಿಯುವವರೆಷ್ಟೋ? ಚಿಕ್ಕ ಪುಟ್ಟ ವ್ಯಾಪಾರಿಗಳ ಕೂಗು ನಿಲ್ದಾಣಕ್ಕೆ ಜೋಗುಳಪ್ರಾಯವಾಯಿತು. +ಶಾಸ್ತ್ರಿಗಳು ತಮ್ಮ ಮಗನಿರುವ ಬೋಗಿಗಾಗಿ ಹುಡುಕಾಟ. ನಡೆಸಿದರು. ಆರ್ಯ ವ್ಯಕ್ತಿತ್ವದ ಎತ್ತರದ ಆಳು ಅವನು. ದೂರದಿಂದಲೇ ತಮ್ಮನ್ನು ಗುರುತಿಸಿ ಅಪ್ಪಾಜಿ ಎಂದು ಕೂಗಬೇಕಾಗಿದ್ದವನು, ಎಲ್ಲರಿಗಿಂತ ಭಿನ್ನವಾಗಿ ಗೋಚರಿಸಬೇಕಾಗಿದ್ದವನು ಪುರುಷಸಿಂಹದಂತೆ ಕಣ್ಣೋಟ ಹರಿಸಬೇಕಾಗಿದ್ದವನು. +ರೈಲು ಎಂದಿಗಿಂತ ಹೆಚ್ಚು ಉದ್ದವಾಗಿತ್ತು. ಎಂದಿಗಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತು ತಂದಿತ್ತು. ಬೋಗಿಯಿಂದ ಬೋಗಿಗೆ ಆರ್ತರಾಗಿ ತಿರುಗಿದರು. ಪ್ರತಿಯೊಂದು ಕಿಟಕಿಯಲ್ಲಿ ಮುಖ ತೂರಿಸಿ “ಮಗನೇ ಅಶ್ವತ್ಥಾ ಎಲ್ಲಿದ್ದೀಯಪ್ಪಾ ನಾನು ಕಣೋ ನಿನ್ನ ತಂದೆ ನಿನಗಾಗಿ ಕಾಯುತ್ತಿರುವ ನಿನ್ನ ತಂದೆ ” ಕೂಗಿ ಹೇಳಿದರು. ಆದರೆ ಅವರಿಗೆ ತಮ್ಮ ಮಗ ದೊರಕಲಿಲ್ಲ. “ಪ್ರಯಶಃ ಈ ರೈಲಿಗೆ ಅವನು ಬಂದಿರಲಿಕ್ಕಿಲ್ಲ” ಇನ್ನೊಂದು ಬರಬಹುದೇನೋ! ಅದು ಬರುವುದು ಇನ್ನು ಸಂಜೆಗೇನೇ? +ಇಡೀ ಗ್ರಾಮದ ವಾತಾವರಣವನು ಒಂದು ಕ್ಷಣ ಬದಲಿಸಿದ ರೈಲು ತಾನಿನ್ನೇನು ಹೊರಡಲಿರುವುದಾಗಿ ಸಿಳ್ಳೆ ಹಾಕಿತು. ಹಳೆ ಪ್ರಯಾಣಿಕರೊಂದಿಗೆ ಹೊಸ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿತು. ಇದ್ದ ಒಂಭತ್ತು ಭೋಗಿಗಳನ್ನು ತಬ್ಬಿಕೊಂಡು ಹೊರಟ ತಾಯಿಯ್ಂತೆ. +ರೈಲು ಹೊರತು ಹೋದ ಮೇಲೆ ನಿಲ್ದಾಣ ಬಿಕೋ ಎನ್ನತೊಡಗಿತು. ನಿಲ್ದಾಣ ಬಿಕೋ ಎನ್ನ ತೊಡಗಿತು. ನಿಲ್ದಾಣದ ಪ್ರತಿಯೊಂದು ಮೂಲೆ ನಿಟ್ಟುಸಿರಿಡುತ್ತಿರುವಂತೆ ಭಾಸವಾಯಿತು. ಆಗಲೇ ಜನ ಒಬ್ಬೊಬ್ಬರಾಗಿ ಕರಗಿದರು. +ಮಗ ಬರಲಿಲ್ಲ. +ಬರಲೇಬೇಕಾಗಿದ್ದವನು ಬರಲಿಲ್ಲ. +ಶಾಸ್ರಿಗಳು ಭಾರವಾದ ಹೃದಯದಿಂದ ಗೇಟ್ ಕಡೆ ಹೆಜ್ಜೆಗಳನ್ನು ಎಣಿಸತೊಡಗಿದರು. +ಆಷ್ಟರಲ್ಲಿ ಅಪ್ಪಾಜಿ ಎಂಬೊಂದು ಕೂಗು ಕೇಳಿಸಿತು. +ಧ್ವನಿ ಬಂದ ದಿಕ್ಕಿನತ್ತ ತಿರುಗಿ ನೋಡಿದರು. +ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿ ಇದ್ದ. ಮುಖದ ಮೇಲೆ ಸಾಕಷ್ಟು ಗಡ್ಡ ಬೆಳೆದಿತ್ತು. ಮೈತುಂಬ ಶಾಲು ಹೊದ್ದಿದ್ದ.ಕಣ್ಣುಗಳು ಫಳಫಳ ಹೊಳೆಯುತ್ತಿದ್ದುವು. ಐದಾರು ಲಗೇಜುಗಳ ನಡುವೆ ನಿಂತಿದ್ದ. ಎರಡು ನಾಯಿಗಳು ಅವನ ಎರಡೂ ಪಕ್ಕ ನಿಂತು ತಮ್ಮಿಂದ ಏನಾದರೂ ಸಹಾಯ ಬೇಕೆ? ಎಂಬರ್ಥದ ನೋಟ ಬೀರುತ್ತಿದ್ದವು. +ಒಮ್ದು ಘಳಿಗೆ ದಿಟ್ಟಿಸಿ ನೋಡಿದ ನಂತರ ಶಾಸ್ತ್ರಿಗಳಿಗೆ ಅರ್ಥವಾಯಿತು. ಅವನು ತಮ್ಮ ಅಶ್ವಥ್ ನಾರಾಯಣ ಅಂತ. ಓಡಿಬಂದು ಅವನು ತಮ್ಮನ್ನು ತಬ್ಬಿಕೊಳ್ಳಲು ಪ್ರಯಿತ್ನಿಸಬೇಕಾಗಿತ್ತು. ಮ್ಲೇಚ್ಛರ ಸಹವಾಸದಿಂದ ಮೈಲಿಗೆಯಾಗಿತೀಯಾ ಮಗ್ನೆ. ಸ್ನಾನ ಮಾಡಿ ಶುಚಿರ್ಭೂತನಾಗಿ ಹತ್ತಿರ +ಬರುವಿಯಂತೆ ಎಂದು ತಾವು ಹೇಳಬೇಕಿತ್ತು. +ಅವನತ್ತ ಅವರು ಇಡತೊಡಗಿದ. ಒಂದೊಂದು ಹೆಜ್ಜೆ ಕಂಪಿಸತೊಡಗಿದವು. ತಾವು ವೇಗವಾಗಿ ಓಡುತ್ತಿರುವೆನೆಂದುಕೊಂಡರು. ಆದರೆ, ಅವನು ತಮ್ಮ ಕಡೆಗೆ, ತನ್ನ ತಂದೆಗೆ ಕಡೆಗೆ ಓಡಿಬರುತ್ತಿಲ್ಲ! ನಿಂತಲ್ಲಿಯೇ ನಿಂತಿದ್ದಾನೆ. +ಷಾಸ್ತ್ರಿಗಳು ಮಗನ ಸನಿಹದಲ್ಲಿ ನಿಂತರು. ನಖಶಿಖಾಂತ ನೋಡಿದರು. +ಆಪರಿಚರಂತೆ. +ಮುಲ ಸ್ವರೂಪ ಕಳೆದು ಕೊ‌ಓಂಡಿರುವ ಕರುಳನ್ನು ಗುರಿತಿಸುವವರಂತೆ. +“ಅಪ್ಪಾ ಯಾಕೆ ಹಾಗೆ ನೋಡ್ತಿದೀರಿ! ನಾನು ಕಣಪ್ಪಾ ನಿಮ್ಮ ಮಗ ಅಶ್ವತ್ಥ…” ಅಶ್ವತ್ಥ್ ಮೈ ಕವುಚಿದ ಶಾಲು ತೆಗೆದ. +ಒಂದು ಕಾಲಿಲ್ಲ… ಊರುಗೊಲಿದೆ +ಯಾಕೆ! ಹೀಗೆ! ಶಾಸ್ತ್ರಿಗಳಿಗೆ ತಲೆ ಸುತ್ತು ಬಂತು. ಅಶ್ವಥ್ ತಂದೆ ಬೀಳದ ಹಾಗೆ ಹಿಡಿದುಕೊಂಡ. ಅವರ ಕಣ್ಣುಗಳಿಂದ ನೀರು ದುಮ್ಮಿಕ್ಕಿತು. ಯಾರೊಬ್ಬರೂ ಮಾತಾಡಲಿಲ್ಲ. ಮೌನ ಆ ಕೆಲಸ ಮಾಡಿತು. ಗುರುತಿನ ಕೆಲವರು ಸಾಮಾನುಗಳನ್ನು ಟಾಂಗದಲ್ಲಿರಿಸಿ ಸಹಾಯ ಮಾಡಿದರು. ತಂದೆ ತಮ್ಮ ಪಕ್ಕ ಮಗನನ್ನು ಕುಳ್ಳಿರಿಸಿಕೊಂಡರು. ಬಲಗೈಯಿಂದ ಅವನು ಬೀಳದ ಹಾಗೆ ತಬ್ಬಿಕೊಂಡಿದ್ದರು. +ದೇಶಕ್ಕಾಗಿ ಒಂದು ಕಾಲು ಕೊಟ್ಟು ಬಂದಿರುವ ಗಂಡ; ಹೇಗೆ ಪ್ರತಿಕ್ರಿಯೆಸಿಬೇಕೋ ಅಲುಮೇಲಮ್ಮಗೆ ಅರ್ಥವಾಗಲಿಲ್ಲ. ಆಕೆಯ ಹೃದಯ ಕಟ್ಟೆಯೊಡೆಯಿತ್ತು. ಶ್ಲೋಕದ ಎರಡನೆ ಸಾಲನ್ನು ಬಾಯಿಪಾಠ ಮಾಡುತ್ತಿದ್ದ ಮಗನನ್ನು ಅಶ್ವಥ್ ಬರಸೆಳೆದು ಅಪ್ಪಿಕೊಂಡ, ಎತ್ತಿಕೊಂಡ. ಮುದ್ದಿಸಿದ. ” ಟ್ವಿಂಕಲ್ ಲಿಟ್ಲ್ ಸ್ಟಾರ್ ಓದೋದು ಬಿಟ್ಟು , ಹಾಳಾದ ಅಮರಕೋಶ ಓದ್ತಾ ಇದ್ದೀಯಲ್ಲ, ಶಾಮು ಡಾರ್ಲಿಂಗ್” ಎಮ್ದ. ಮಗು ತಾತನ ಕಡೆ ನೋಡಿತು. ದುಃಖದಲ್ಲಿ ಹೃದಯ ಬೇಯುತ್ತಿದ್ದ ಶಾಸ್ತ್ರಿಗಳು ಪ್ರತಿಕ್ರಿಯಿಸಲಿಲ್ಲ. +ಮಿಲಿಟರಿ ಸೇವೆಗೆ ಸೇರಿ ಸನಾತನ ಧರ್ಮಕ್ಕೆ ಅಪಚಾರ ಮಾಡಿ ಕಾಲು ಕಳ್ಕೊಂಡಿದ್ದರೂ ಠೇಂಕಾರದ ಮಾತುಗಳಿಗೇನು ಕಡಿಮೆ ಇಲ್ಲ – ಶಾಸ್ತ್ರಿಗಳು ಮನಸ್ಸಿನಲ್ಲಿ ಸಿಡುಕಿದರು. +ಒಂದು ಕಾಲು ಕಳೆದುಕೊಂಡಿದ್ದರೂ ಅಶ್ವಥ್ ಹೆಚ್ಚಿನ ಲವಲವಿಕೆಯಿಂದಿದ್ದ. ಗೃಹಕೃತ್ಯದ ಬಹುಪಾಲು ಆಗುಹೋಗುಗಳನ್ನು ತಾನೇ ಗಮನಿಸುತ್ತಿದ್ದ. ಹೆಂಡತಿ ಬೇಕು ಬೇಡಗಳನ್ನು ವಿಚಾರಿಸುತ್ತಿದ್ದ. +ತಂದೆಯವರು ತಮ್ಮ ಅರ್ಚನಾ ಸ್ಥಾನದಲ್ಲಿ ಕುಳ್ಳರಿಸಲು ಪ್ರಯತ್ನಿಸಿದ್ದುಂಟು. ವೈದಿಕ ಮಂತ್ರಗಳನ್ನು ಬಾಯಿಪಾಠ ಮಾಡು, ಸತ್ಯನಾರಾಯಣ ವ್ರತ ಮಾಡಿಸುವನ್ನು ಕಲಿತುಕೊಂಡರೆ ಶ್ರೀಮಂತರ ಪರಿಚಯವಾಗುತ್ತದೆ, ನಾಲ್ಕು ಕಾಸು ಸಂಪಾದಿಸಬಹುದು. ಹೆಂಡತಿ ಮಕ್ಕಳನ್ನು ಸುಖವಾಗಿಡಬಹುದೆಂದು ಹೇಳಿದ್ದುಂಟು. ಪವಿತ್ರ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಪ್ರಾತಃವಿಧಿ ಸಂಧ್ಯಾವಂದನೆಗಳನ್ನು ಮಾಡದಿದ್ದರೆ ಹೇಗೆ ಎಂದು ಸಿಡುಕಿದ್ದುಂಟು. +ಆದರೆ ಅವನು ತಂದೆಯ ಮಾತಿಗೆ ಮನ್ನಣೆ ಕೊಡಬೇಕಲ್ಲ? ಎಲ್ಲ ಮಾತುಗಳನ್ನು ಎಡಗಿವಿಯಿಂದ ಕೇಳಿ ಬಲಗಿವಿಯಿಂದ ಬಿಟ್ಟ. +ಆವನು ಪ್ರತಿಭಟಿಸುತ್ತಿದ್ದುದು ತನ್ನ ಮಗ ಶಾಮನನ್ನು ತಮ್ಮ ಸಂಸ್ಕೃತೀಕರಣಗೊಂಡ ದಾರಿಗೆ ಎಳೆಯಲು ಅವರು ಪ್ರಯತ್ನಿಸಿದಾಗ, +ಅಪ್ಪಾಜಿ, ಸಂಸ್ಕೃತ ವೈದಿಕ ಇವಲ್ಲ ನಿಮ್ ಕಾಲಕ್ಕೇನೆ ಮುಗಿದು ಹೋಗಲಿ. ಆದರೆ ನನ್ ಮಗನಿಗೆ ವೈದಿಕ ಗೈದಿಕ ಅಂತ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಬೇಕೆ? ಅವನ ಹೆತ್ತ ತಂದೆ ನಾನಿನ್ನೂ ಬದುಕಿದ್ದೀನಿ ಅವನ ಭವಿಷ್ಯ ರೂಪಿಸೋ ಜವಾಬ್ದಾರಿ ನನಗೆ ಬಿಟ್ಟುಬಿಡಿ” ಅಶ್ವಥ್ ಮುಲಾಜಿಲ್ಲದೆ ಮಾತಾಡಿಬಿಡುತ್ತಿದ್ದ. +ಅದನ್ನು ಕೇಳಿ ಶಾಸ್ತ್ರಿಗಳು ಕೆನೆಯುತ್ತಿದ್ದರು. +“ಖಬರ್ದಾರ್… ನನ್ ಮೊಗ್ಗಗ ಏನು ಆಗಬೇಕು? ಏನು ಬಿಡಬೇಕು ಎಂಬುದರ ಬಗ್ಗೆ ಯೋಚಿಸೋ ಅಧಿಕಾರ ನನಗೇ ಸೇರಿದ್ದು. ಶಾಮು ಹುಟ್ಟುವುದಕ್ಕಿಂತ ಮೊದಲೇ ಯೊಚಿಸಿ ನನ್ನ ತಂದೆಯವರ ಹೆಸರಿಟ್ಟಿದ್ದೀನಿ… ಕಂಚಿ ಪೂಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿದ್ದು ಯಾಕೆ ಗೊತ್ತೇನೋ?” +“ಇದ್ನೆಲ್ಲ ನೀವು ನನ್ ಕೇಳಿ ಮಾಡಲಿಲ್ಲ ನಾನಿಷ್ಟೇ ಹೇಳೋದು, ನೀವು ನಿಮ್ ಪಾಡಿಗೆ ಇರ್ರಿ ಅಷ್ಟೆ” +ಮಾವನವರಿಗೆ ಸಿಟ್ಟು ಬರಿಸಬೇಡಿ. ಆದ್ರಿಂದ ಅವ್ರ ಆರೋಗ್ಯ್ ಕೆಟ್ಟು ಹೋಗುತ್ತೆ. ಅವರಿರೋವಗೂ ಅವರಿಚ್ಛೆಯಂತೆ ನಡೆದ್ರೆ ತಪ್ಪೇನೀಗ? – ಅಲುಮೇಲು ಗಂಡನಿಗೆ ಸಮಾಧಾನ ಹೇಳಲು ಪ್ರಯತ್ನಿಸಿದಳು. +“ಈ ವಿಷಯದಲ್ಲಿ ನೀನು ಮೂಗು ತೂರಿಸಬೇಡ. ನಾನಿಂಥೋರ ಹೊಟ್ಟೆಯಲ್ಲಿ ದೊಡ್ಡ ತಪ್ಪು ಮಾಡಿದ್ದೇನಿ. ಉಪನಯನದ ನೆಪದಿಂದ ನನ್ನನ್ನು ಕುರೂಪಿಯನ್ನಾಗಿ ಮಾಡಲು ನೋಡಿದರು. ಸಂಸ್ಕೃತ ಶಾಲೆಗೆ ಸೇರಿಸಿ ನಿಷ್ಪ್ರಯೋಜಕನನ್ನಾಗಿಸಲು ಪ್ರಯತ್ನಿಸಿದರು. ಇದನ್ನೆಲ್ಲ ಪ್ರತಿಭಟಿಸಬೇಕೆಂದೇ ನಾನು ಡಿಫೆನ್ಸ್‌ಸರ್ವೀಸ್ ಸೇರಿದ್ದು. ಏನೆಲ್ಲ ಕುಡಿದೆ, ಏನೆಲ್ಲ ತಿಂದೆ. ಎಲ್ಲಾ ಜಾತಿ ಹೆಂಗಸರ ಸಹವಾಸ ಮಾಡಿದೆ” +“ನೀವೆಂಥ ಮನುಷ್ಯರು ಕಣ್ರೀ. ಕುಡಿದದ್ದು ಹೇಳ್ತೀರಿ. ತಿಂದದ್ದು ಹೇಳ್ತೀರಿ. ಅದೂ ಅಲ್ಲದೆ ಹೆಂಗಸರ ಸಹವಾಸ ಮಾಡಿದ್ದು ಹೇಳ್ತಿದ್ದೀರ. ನನ್ನಿಂದ ಇದೆಲ್ಲ ಕೇಳೋಕಾಗಲ್ಲ” ಅಲುಮೆಲು ಬಿಕ್ಕಿ ಬಿಕ್ಕಿ ಅಳತೋಡಗಿದಳು. +“ನಿನ್ನ ಹತ್ತಿರ ಅಲ್ಲದೆ ಮತ್ತಾರ ಹತ್ತಿರ ಹೇಳಿಕೊಳ್ಳಲಿ ಅಲು. ದೇಹದ ಮನಸ್ಸಿನ ಅಗತ್ಯ ತೀರಿಸಿಕೊಳ್ಳೋಕೆ ದಾರಿ ಹುಡುಕಿಕೊಳ್ಳದೊದ್ದರೆ ಆಗ್ತದೆಯೇ?” ಹೆಂಡತಿಯ ತಲೆ ನೇವರಿಸಿದ. +“ನೀವೇಳ್ತಿರೋದ್ನೆಲ್ಲ ಮಾವನವರು ಕೇಳ್ಸಿಕೊಂಡಾರು. ಪಕ್ಕದ ಕೋಣೆಯಲ್ಲಿದ್ದಾರೆ. ಮೆಲ್ಲಗೆ ಮಾತಾಡಿ… ಮಾತಾಡದಿದ್ದರೂ ಸರಿಯೇ?” +“ಕೇಳಿಸಿಕೊಳ್ಳಲಿ ಬಿಡು… ಅವರು ಕೇಳಿಸಿಕೊಳ್ಳಲಿ ಅಂತಾನೆ ನಾನು ಗಟ್ಟಿಯಾಗಿ ಮಾತಾಡ್ತಿರೋದು. ಈ ಇಪ್ಪತ್ತನೇ ಶತಮಾನದಲ್ಲೂ ನನ್ನ ಮಗನಿಗೆ ಸಂಸ್ಕೃತ, ವೈದಿಕ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಲು ಹೊರಟಿದ್ದಾರಲ್ಲ… ಇದನ್ನು ಹೇಗೆ ಸಹಿಸಲಿ?” +ಏಹ್ಯಗ್ನೇತಸ್ಯ ಮಂತ್ರಸ್ಯ | ರಹೋ ಗಣ ಪುತ್ರೋ ಗೌತಮ ಋಷಿಃ | ಅಗ್ನಿರ್ದೆವತಾಃ ತ್ರಿಷ್ಟುಪ್ +ಛಂದಃ | ಅಗ್ನಿರಾಹ್ವನೇ ವಿನಿಯೋಗಹ|| … ಪಕ್ಕದ ಕೋಣೆಯಲ್ಲಿ ಅಗ್ನಿ ಕಾರ್ಯದ ಮುಂದಿನ ಶಬ್ದ ಹೇಳದೆ ಶಾಸ್ತ್ರಿಗಳು ಒದ್ದಾಡಿದರು. +ಚಂಡಾಲ ಮಗ ಹುಟ್ಟಿ ಬಿಟ್ಟಿರುವನಲ್ಲ… ಹಣೆ ಹಣೆ ಚಚ್ಚಿಕೊಂದರು. +ತಮ್ಮನ್ನು ಬೈದರೆ ಬೈದುಕೊಳ್ಳಲಿ. ಆದರೆ ಸಂಸ್ಕೃತ ಸನಾತನ ಧರ್ಮವನ್ನು ಜರಿಯುವುದೇ… ಅದೂ ತಮ್ಮಂಥ ಪ್ರಕಾಂಡ ಪಂಡಿತರ ವಂಶದಲ್ಲಿ ಹುಟ್ಟಿ…. +ತಂಗಾಳಿಯಂಥ ಅವರು ಬಿರುಗಾಳಿಯ ವೇಷ ತೊಟ್ಟರು. +ದಡೀರನೆ ಬಾಗಿಲು ತೆರೆದು ಹೊರಗಡೆ ಬಂದರು. ಪಲ್ಲವರ ವಿರುದ್ಧ ಕೆರಳಿದ ಕದಂಬರ ಮಯೂರ ಶರ್ಮನಂತಾದರು. +“ಏನೋ ಚಂಡಾಲ ಪುತ್ರನೇ… ನೀನು ಮ್ಲೇಚ್ಛರ ಸಹವಾಸ ಮಾಡಿ ಬಾಯಿಗೆ ಬಂದಂತೆ ಆಡುತ್ತಿರುವಿ. ಶೂದ್ರ ನಡುವಳಿಕೆಯಿಂದ ಕಾಲು ಕಳೆದುಕೊಂಡಿರುವುದು ಸಾಲದೇನು? ಹಿರಿಯರ ಪುಣ್ಯ ವಿಶೇಷವಿರದಿದ್ದಲ್ಲಿ ಮತ್ತೇನು ಕಳೆದುಕೊಳ್ಳುತ್ತಿದ್ದೆಯೋ ಏನೋ?” ಬಿಚ್ಚಿದ ಜುಟ್ಟನ್ನು ಕಟ್ಟಿಕೊಳ್ಳುತ್ತ ನುಡಿದರು. +” ನಾನೂ ಅದೇ ಅಂದುಕೊಳ್ತಿದೀನಿ. ಪ್ರಾಣ ಕಳೆದುಕೊಂಡು ನಿಮಗೆ ನೆಮ್ಮದಿ ತರಲಿಲ್ಲಾಂತ” ಊರುಗೋಲಿಗಾಗಿ ತಡಕಾಡಿದ ಗಂಡನ ಬಾಯಿ ಮುಚ್ಚಿದಳು. ಅಲುಮೇಲು. ಇಂಥ ಮಾತು ಕೇಳಬೇಕಾಗಿ ಬಂದಿರೋ ತನಗೆ ಮುತ್ತೈದೆ ಸಾವು ಬರಬಾರದೆ ಎಂದು ಮರುಗಿದಳು. +ಹೆಂಡತಿಯನ್ನೇ ಊರುಗೋಲು ಮಾಡಿಕೊಂಡು ಕೋಣೆಯಿಂದ ಹೊರಗಡೆ ಬಂದ ಅಶ್ವತ್ಥ್. “ಅದೆಷ್ಟು ಕೋಪ ಬಂದುಬಿಟ್ಟಿದೆಯಲ್ಲಪ್ಪಾ ನಿಮ್ಗೆ .. ನಾನು ಹೇಳಿದ್ದರಲ್ಲಿ ತಪ್ಪೇನಿದೇಂತ… ದೇಶದ ರಕ್ಷಣೆ ಮಾಡೋರನ್ನ ಮ್ಲೇಚ್ಛರು ಅಂತ ಅವಹೇಳನ ಮಾಡಿದ್ದೀರಲ್ಲ …ಜನನೀ ಜನ್ಮಭೂಮಿಶ್ಚ ಅಂತ ಹೇಳೋರು ನೀವೇ. ಸ್ವರ್ಗಾದಪಿ ಗರೀಯಸಿ ಅಂತ ಹೇಳೋರು ನೀವೇ?” +“ಅದನ್ನೆಲ್ಲ ಹೇಳಿರೋದು ಶೂದ್ರರಿಗೆ ಕ್ಷತ್ರಿಯರಿಗೆ… ನಮ್ಮಂಥ ಬ್ರಾಹ್ಮಣರಿಗಲ್ಲ” +ಬ್ರಾಹ್ಮಣನಾದವನು ದೇಶವನ್ನು ರಕ್ಷಿಸಬಾರದೆಂತೀರೇನು?” +ಅವನು ರಕ್ಷಿಸದಿದ್ದರೆ ದೇಶಗಳೆಲ್ಲ ಎಲ್ಲಿತಿದ್ದವು. ರಾಜರುಗಳೆಲ್ಲ ಎಲ್ಲಿತಿದ್ದರು? ಬ್ರಾಹ್ಮಣನಾದವನು ಯಜ್ಞ ಯಾಗಾದಿ ನಿತ್ಯ ಕರ್ಮಗಳನ್ನು ಮಾಡುತ್ತ; ದೇವತೆಗಳನ್ನು ಸಂತೃಪ್ತಿ ಪಡಿಸುತ್ತ ದೇಶವನ್ನು ಸುಭಿಕ್ಷವಾಗಿಡಬೇಕು” +ತಂದೆಯಾಡಿದ ಮಾತು ಕೇಳಿ ಅಶ್ವತ್ಥ್‌ಗೆ ನಗುಬಂತು. ನಕ್ಕ. +“ಇಪ್ಪತ್ತನೇ ಶತಮಾನದಲ್ಲೂ ಈ ರೀತಿ ಯೊಚಿಸ್ತಿದ್ದೀರಲ್ಲ… ಇದಕ್ಕೇ ನಗಬೇಕೋ ಅಳಬೇಕೋ… ಆಧುನಿಕತೆಯ, ನಾಗರೀಕತೆಯ ಸಂಶೋಧನೆಯ ಫಲಗಳು, ಸವಲತ್ತುಗಳನ್ನೆಲ್ಲ ಬೇಕಂತೀರ… ಮೇಲೆ ಈ ಮಾತಾಡ್ತೀರಲ್ಲ… ಛೇ…. ಛೇ…” +“ಅದ್ಯಾವ ಸವಲತ್ತುಗಳೋ ನಾವು ಅನುಭವಿಸ್ತಿರೋದು?” +“ಮ್ಲೇಚ್ಛರು ಅಂತ ನಿಮ್ಮಿಂದ ಕರೆಸಿಕೊಳ್ತಿರೋ ಜನ ಕಂಡುಹಿಡಿರೋ ವಿದ್ಯುತ್ ನಿಮ್ಗೆ ಬೇಕು. ಅವರು ನಡೆಸ್ತಿರೋ ಬಸ್ಸು ತುಂಬೆಲ್ಲ ನೀವು ಪ್ರಯಾಣ ಮಾಡಬೇಕು… ಅವರು ಕಟ್ಟಿರೋ ವಾಟರ್ ಟ್ಯಾಂಕುಗಳ ನೀರು ಬೇಕು. ಅವರು ಬೆಳೆಸ್ತಿರೋ ದವಸ ಧಾನ್ಯ ನಿಮ್ಗೆ ಬೇಕು. ತಂದೆಯ ಮುಖ ನೋಡಿದ. ಅದು ಅಗ್ಗಿಷ್ಟಿಕೆಯಂತಾಗಿತ್ತು. ಮತ್ತೆ ಮುಂದುವರೆದು ಹೇಳಿದ. “ಇಪ್ಪತ್ತನೇ ಶತಮಾನದಲ್ಲಿ ಬದುಕುತ್ತಾ ಹತ್ತನೆ ಶತಮಾನದ ಬಗ್ಗೆ ಯೋಚಿಸ್ತಿರಲ್ಲ… +ನಿಮ್ಮಥೋರು ಆಗಿನ ಶೈಲಿಯಲ್ಲೇ ಯಾಕೆ ಬದುಕಬಾರದೂಂತ… ವಿದ್ಯುತ್ ಉಪಯೋಗಿಸಬೇಡಿ. ಅದೂ ಶೂದ್ರರು ಕಂಡು ಹಿಡಿದಿರೋದು. ಓಡಲೆಣ್ಣೆ ದೀಪ ಹಚ್ಚಿಕೊಳ್ಳ್ರಿ… ಶೂದ್ರರು ನಡೆಸೋ ಬಸ್ಸು ರೈಲು ಬಸ್ಸುಗಳಲ್ಲಿ ಪ್ರಯಾಣ ಮಾಡಬೇಡಿ. ಚಕ್ಕಡಿಗಳಲ್ಲಿ ಪಲ್ಲಕ್ಕಿಗಳಲ್ಲಿ ಪ್ರಯಾಣ ಮಾಡಿ…” ಇನ್ನೂ ಏನೇನೋ ಹೇಳಲಿದ್ದ. +“ಬಾಯಿಗೆ ಬಂದಂತೆ ಮಾತಾಡಿದ್ರೆ ರೌರವ ನರಕ ಪ್ರಾಪ್ತವಾದೀತು… ಹುಷಾರ್” ಶಾಸ್ತ್ರಿಗಳು ಕೃದ್ಧರಾಗಿ ಬೆತ್ತ ಝಳಪಿಸಿದರು.” ನೀನು ನಾನು ಎಲ್ಲರೂ ಅಗ್ರಹಾರದಲ್ಲಿ ವಾಸ ಮಾಡ್ತಿದ್ದೀವಿ ಎಂಬುದನ್ನು ಮರೀಮೇಡ. ಅಗ್ರಹಾರದ ರೀತಿ ನೀತಿಗಳನ್ನು ಉಲ್ಲಂಘಿಸಿದರೆ ಪರಿಣಮ ನೆಟ್ಟಗಾಗೋದಿಲ್ಲ…” +“ಕೇಳಿಸಿಕೊಳ್ಳಲಿ ಬಿಡಿ… ಅವರಿಂದ ಆಗೋದೇನಿದೆ?” +“ಎಲ್ಲಾ ತೊರೆದಿರುವ ನಿನಗೆ ಅಗ್ರಹಾರದ ಗೌರವ ಯಾವ ಲೆಕ್ಕ. …ಇದು ನಮ್ಮ ಮನೆ… ಹಿರಿಯರು ಹವನ ಹೋಮ ಯಜ್ಞ ಯಾಗ ಮಾಡಿದಂಥ ಮನೆ. ಈ ಮನೇಲಿ ಇರಬೇಕಾದೋರು ಸನಾತನ ಧರ್ಮ ಪಾಲಿಸಬೇಕು ಎಂಬುದನ್ನು ಮರೆಯಬೇಡ” ಶಾಸ್ತ್ರಿಗಳು ಕಡ್ಡಿ ಮುರಿದಂತೆ ಹೇಳಿದರು. +ಬೆಳಗಾಯಿತು. +ಅರ್ಚನಾ ಕೋಣೆಯಲ್ಲಿ ಎಂದಿನಂತೆ ವಿದ್ಯುದ್ದೀಪದ ಬದಲು ಹರಳೆಣ್ಣೆ ದೀಪ ಉರಿಯುತ್ತಿತ್ತು. ಅದರ ಬೆಳೆಕಿನಲ್ಲಿ ಶಾಸ್ತ್ರಿಗಳು… ಧಿಯೋಯೋನಃ ಪ್ರಚೋದಯಾತ್… ಹೇಳುತ್ತ ಪ್ರಾಣಾಯಾಮ ಮಾಡುವುದರಲ್ಲಿ ಮಗ್ನರಾಗಿದ್ದರು. ಪ್ರಾಯಶ್ಚಿತ್ತಕ್ಕಾಗಿಯೋ ಏನೋ ಶುಕ್ರ ಉದಯಿಸುವಕ್ಕೆ ಪೂರ್ವ ಸಮಯದಿಂದಲೇ ಗಾಯತ್ರಿ ಮಂತ್ರೋಚ್ಚಾರಣೆ ಆರಂಭಿಸಿದ್ದರು. ಅವರ ಕಂಚಿನ ಕಂಠ ಅಲೆ‌ಅಲೆಯಾಗಿ ಅಗ್ರಹಾರದ ನಿರ್ಮಲ ವಾತಾವರಣಕ್ಕೆ ವಿಶೇಷ ಮೆರುಗು ನೀಡಿತು. +ಆಶ್ವತ್ ಕೂಡ ಬೇಗ ಎದ್ದಿದ್ದ. ಸ್ನಾನ ಮಾಡಿ ಹೊರಬಿದ್ದ. ಊರೊಳಗಡೆ ಮಧ್ಯಾನ್ನದವರೆಗೆ ತಿರುಗಾಡಿದ. ಅವರನ್ನು ಕಂಡ, ಇವರನ್ನು ಕಂಡ, ಡಾಬಾದಲ್ಲಿ ಊಟ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಸಾಯಂಕಾಲ ಸಮೀಪಿಸಿತು. +ಅಷ್ಟೊತ್ತಿಗಾಗಲೆ ವಂಕದಾರಿ ವೆಂಕಪ್ಪಶೆಟ್ಟರ ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ಸಾಂಗೋಪಾಂಗವಾಗಿ ನೆರವೇರಿಸಿ ಪರಮೇಶ್ವರ ಶಾಸ್ತ್ರಿಗಳು ಮನೆಗೆ ಮರಳಿದ್ದರು. “ಏನು ಶಾಸ್ತ್ರಿಗಳೇ, ವೈದಿಕ ನಿಮ್ಮ ತಲೆಗೇ ಮುಗಿದು ಹೋಗುವುದೇನೋ” ಎಂಬ ಶಂಕೆ ಶೆಟ್ಟಿ ವ್ಯಕ್ತ ಪಡಿಸಿದ್ದರು. “ಮೊಮ್ಮಗನಿಗಾದ್ರೂ ನಿಮ್ಮ ದಾರಿಯಲ್ಲಿ ನಡೆಯೋದನ್ನು ಕಲಿಸಿಕೊಡಿ” ಎಂದರು ಶೆಟ್ಟರ ಧರ್ಮಪತ್ನಿ ಲಕ್ಷಮ್ಮ. ಮಗು ಶಾಮನ ತಲೆ ನೇವರಿಸಿ ದರ್ಭೆ ಕೌಪೀನಕ್ಕೆಂದು ಐವತ್ತು ರೂಪಾಯಿ ಬಕ್ಷೀಸು ಕೊಟ್ಟು ಕಳುಹಿದ್ದಳು. ಆ ಶೆಟ್ಟಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಶೋಬನ ಮುಗಿದ ಎರಡು ವರ್ಷದಿಂದ ಸತ್ಯನಾರಾಯಣ ವ್ರತವೇ ಮೊದಲಾದ ವ್ರತ ನಿಯಮಗಳನ್ನು ಮಾಡುತ್ತಲೇ ಬಂದಿದ್ದರು. ಮುಂದಿನ ವರ್ಷ ವಿದ್ಯಾರಣ್ಯರ ಕಾರ್ಯಕ್ಷೇತ್ರದಲ್ಲಿ ನಡೆಯಲಿರುವ ಪುತ್ರ ಕಾಮೇಷ್ಥಿಯಾಗದಲ್ಲಿ ಫಲಪ್ರಾಪ್ತಿಗಾಗಿ ಭಾಗವಹಿಸುವಂತೆ ಶಾಸ್ತ್ರಿಗಳು ಹಿಂದಿರುಗುವ ಮೊದಲು ಸೂಚಿಸಿದ್ದರು. +ಹಾದಿಯುದ್ದಕ್ಕೂ ಅವರು ಸ್ವೀಕರಿಸುತ್ತಿದ್ದ ನಮಸ್ಕಾರಗಳು ಎಷ್ಟೋ? ಮಾಡುತ್ತಿದ್ದ ಆಶೀರ್ವಾದಗಳು ಎಷ್ಟೋ? ಆಶೀರ್ವಾದಗಳಲ್ಲಿ ಎಷ್ಟೋ ಪರಪಾಟುಗಳಾಗಿ ಬಿಡುತ್ತಿದ್ದವು. +ವಿವಾಹಿತರೊಟ್ಟಿಗಿರಲಿ, ವಯಸ್ಕ ವಿಧವೆಯರಿಗೂ ’ಶೀಘ್ರ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಆಶಿರ್ವದಿಸಿಬಿಡುತ್ತಿದ್ದರು. ತಪಸ್ಸಿನ ಶಕ್ತಿವುಳ್ಳವರಾದ ತಾವು ತುಟಿ ಜಾರಿ ಆಶಿರ್ವದಿಸಿಬಿಟ್ಟೆವಲ್ಲಾ… ಎಂದವರು ಪೇಚಾಡಿಕೊಳ್ಳುತ್ತಿದ್ದರು. ಅವರು ಮಾಡುತ್ತಿದ್ದ ಆಶಿರ್ವಾದ ಫಲವೋ ಎಂಬಂತೆ ಅವರಿಂದ ಆಶೀರ್ವಾದ ಪೈಕಿ ’ಟ್ವೆಂಟಿಫೈವ್” ಪರ್ಸೆಂಟ್ ವಿಧವೆಯರು ಯಾರನ್ನಾದರೂ ಜೊತೆ ಮಾಡಿಕೊಂಡು ಓಡಿಹೋಗುತ್ತಿದ್ದರು ಮತ್ತು ಕೆಲವರು ನಿತ್ಯ ಸುಮಂಗಲಿಯರಂತೆ ಬಾಳುವೆ ಮಾಡುತ್ತಿದ್ದರು. ಅವರು ಒಂದು ವಯಸ್ಸಿನಲ್ಲಿದ್ದಾಗ ಕೆಲವರು ಅವರ ಮುಂದೆ ಬಿದ್ದು ಹೊರಳಾಡಿದ್ದುಂಟು. ಜಿತೇಂದ್ರಿಯರೆಂದು ಹೆಸರು ಪಡೆದಿದ್ದ ಅವರು ಯಾವಾಗಲೂ ತಮ್ಮ ಪವಿತ್ರ ಮರ್ಮಾಂಗೋಪಾಸನೆಯನ್ನು ತಂಗಲು ಬಟ್ಟೆಯಿಂದ ಮರೆಮಾಚಿಬಿಡುತ್ತಿದ್ದರು. ಅಂದು ಹಾಗಿದ್ದುದರಿಂದಲೇ ಅವರ ಮುಖದಲ್ಲಿ ತೇಜಸ್ಸಿಗೆ ಬರವಿಲ್ಲ. ಕಣ್ಣುಗಳಲ್ಲಿ ಕಾಂತಿಗೆ ಬರವಿಲ್ಲ. ಎಲ್ಲಾ ಬೆಳ್ಳಗಾಗಿದ್ದರೂ ಅವರ ಶಿಖಾಗ್ರದ ಜುಟ್ಟಿ ಮಾತ್ರ ಬೆಳ್ಳಗಾಗಿಲ್ಲ. ಹರವಾದ ವಕ್ಷಸ್ಥಳದ, ಎತ್ತರದ ಆಳು ಅವರು. ಎತ್ತರವಾದ ಅಳಾದ ಅವರು ಕೋಮಟಿಗಳ ಓಣಿಯಿಂದ ಅಗ್ರಹಾರದ ಕಡೆಗೆ ನಡೆಯುತ್ತಿದ್ದರೆ ನೋಡಲಿಕ್ಕೂ ಒಂದು ಚಂದ. ಅದೂ ಅಲ್ಲದೆ ಆ ಗಾಂಭೀರ್ಯಕ್ಕೆ ವಿಶೇಷ ಮೆರುಗು ನೀಡಿದಂತೆ ಅವರ ಪಕ್ಕದಲ್ಲಿ ಮೊಮ್ಮಗ ಶಾಮಾಶಾಸ್ತ್ರಿಯೂ; ಅವನ ತಲೆಯಲ್ಲಿ ವಿರಾಜಮಾನವಾಗಿರುವ ಜುಟ್ಟೇನು? ಭ್ರೂಮಧ್ಯೆ ಕುಂಕುಮಾಂಕಿತ ನಾಮವೇನು? ಹೆಗಲ ಮೇಲೆ ಉತ್ತರೀಯವೇನು? ಹೆಜ್ಜೆ-ಹೆಜ್ಜೆಗೊಂದಾದರೂ ಉಚ್ಚರಿಸುತ್ತಿರುವ ವಿಷ್ಣುನಾಮಾವಳಿ ಏನು? +ಮೊಮ್ಮಗ ತಾತನನ್ನು ನಡೆಸುತ್ತಿದ್ದನೋ? +ತಾತನೇ ಮೊಮ್ಮಗನನ್ನು ನಡೆಸುತ್ತಿದ್ದನೋ? +ಒಟ್ಟಿನಲ್ಲಿ‌ಆ ಹಳೇಬೇರು-ಹೊಸಚಿಗುರು ಬೀದಿಗೊಂದು ಆಭರಣವಿಟ್ಟಂತೆ ನಡೆಡೂ ನಡೆದೂ ಮನೆ ತಲುಪಿದರು. +ಅಷ್ಟು ಹೊತ್ತಿಗಾಗಲೇ ಅಶ್ವತ್ಥ್ ತನ್ನ ಕರುಳಿನ ಕುಡಿಯು ಗೈರು ಹಾಜರಿಯಿಂದ ಕೃದ್ಧನಾಗಿದ್ದ. ಅವನದು ಈಗ ಬೀದಿಮಕ್ಕಳೊಂದಿಗೆ ಬೆರೆತು ಮಣ್ಣಿನಲ್ಲಿ ಆಡುವ ವಯಸ್ಸು. ಆದರೆ ಅವನನ್ನು ವ್ರತ ಗಿತಗಳಿಗೆ ತನ್ನ ತಂದೆ ಕರೆದೊಯ್ದಿರುವುದನ್ನು ಕೇಳಿ ಕೆರಳಿದ್ದ. ತನ್ನ ಹೆಂಡತಿಯ ಮೇಲೂ ಹಾರಾಡಿದ್ದ. ಅದೇ ಹೊತ್ತಿಗೆ ಸರಿಯಾಗಿ ’ತಾತ ಮೊಮ್ಮಗ’ ಬಾಗಿಲ ಬಳಿ ಕಾಣಿಸಿಕೊಂಡರು. +ಬಾಗಿಲು ದಾಟುವ ಮಂತ್ರ ಶಾಸ್ತ್ರಿಗಳು ಬಾಲಕ ಶಾಮುವಿಗೆ ಇನ್ನೇನು ಹೇಳಿ ಕೊಡಬೇಕು. ಅಶ್ವತ್ಥ್‌ಗೆ ಏನು ತಿಳಿಯಿತೋ ಏನೋ ಮಗನ ಜುಟ್ಟಿಗೆ ಕೈಹಚ್ಚಿ ಊರುಗೋಲಿನಿಂದ ನಾಲ್ಕು ಬಾರಿಸಿದ. +ಅಷ್ಟು ಏಟುಗಳನ್ನು ಶಾಮು ಎಂದೂ ತಿಂದಿರಲಿಲ್ಲ. ಮೈಗೆ ಏಟಾಗಿರುವುದರಿಂದ ಅಳಬೇಕಾಗಿರುವುದು ಅನಿವಾರ್ಯ. ಅದರೆ ಸಂಸ್ಕೃತದಲ್ಲಿ ಅಳಬೇಕೋ ಇಂಗ್ಲಿಷಿನಲ್ಲಿ ಅಳಬೇಕೋ? ಸನಾತನತೆಯಲ್ಲಿ ಆಕ್ರಂದಿಸಬೇಕೋ? ಆಧುನಿಕ ಶೈಲಿಯಲ್ಲಿ ಆಲಾಪಿಸಬೇಕೊ? ಒಂದೂ ತಿಳಿಯದೆ ದುಃಖವನ್ನೆಲ್ಲ ಗಂಟಲಿಂದ ಜಠರಕ್ಕೆ ತಳ್ಳಿ ಮೌನವಾಗಿ ಉಳಿದುಬಿಟ್ಟ. +“ಇನ್ನೊಂದು ಸಾರಿ ಏನಾದರೂ ಈ ಬಫೂನ್ ವೇಷ ತೊಟ್ಟು ಕದೋರ ಹಿಂದೆ ಹೋದೀ ಅಂದ್ರೆ ಹುಟ್ಟ್ಲಿಲ್ಲಾ ಅನ್ನಿಸಿಬಿಡ್ತೀನಿ” ಎಂದು ಗುಡುಗುತ್ತಿರುವಾಗಲೇ ಶಾಸ್ತ್ರಿಗಳು ಬಂದು ಮಗನ ಕೆನ್ನೆಗೆ ಛಟಾರನೆ ಒಂದು ಏಟು ಬಿಟ್ಟರು. +“ಅವ್ನು ನನ್ನ ಮೊಮ್ಮಗ. ಅವ್ನು ನನ್ನ ನಿರ್ದೇಶನದಲ್ಲಿಯೇ ಬೆಳೀಬೇಕು” ಎಂದು ಶಾಸ್ತ್ರಿಗಳು. +“ಅವ್ನು ನನ್ನ ಮಗ. ಅವ್ನು ಏನಾಗಬೇಕೆಂದು ನಿರ್ಧರಿಸೋನು ನಾನು” ಎಂದು ಅಶ್ವತ್ಥ್ ನಾರಾಯಣನೂ. +ಅವರಿಬ್ಬರೂ ಸೇರಿಕೊಂದು ಮಗ ಶಾಮುವನ್ನು ಕೊಂದುಹಾಕಿಬಿಡುವರೆಂದೆನ್ನಿಸಿತು ಅಲುಮೇಲಮ್ಮನಿಗೆ. ಒಳಗೆ ಕರೆದೊಯ್ದು ಬಾಸುಂಡೆಗಳಿಗೆ ಲೇಹ್ಯ ಲೇಪಿಸಿದಳು. +ಆಷ್ಟು ಹೊತ್ತಿಗಾಗಲೇ ಬಾಲಕ ಶಾಮುನ ವಿಷಯದಲ್ಲಿ ತಂದೆ ಮಗನ ನಡುವೆ ಜಗಳ ಬೀದಿಪಾಲಾಗಿತ್ತು. ಈಸ್ಟ್ ಮನ್ ಕಲರ್ ಪಡೆದಿತ್ತು. +ಅಗ್ರಹಾರದಲ್ಲಿ ಆಗಲೇ ಎರಡು ಬಣಗಳು ಏರ್ಪಟ್ಟಿದ್ದವು. +ಬಾಲಕ ಶಾಮುವಿನ ಜವಾಬ್ದಾರಿ ತೀರ್ಥರೂಪವಾದ ಶಾಸ್ತ್ರಿಗಳಿಗೆ ಸೇರಿದ್ದು ಎಂಬುದು ಒಂದು ಪಂಗಡದ ವಾದವಾಗಿದ್ದರೆ, +ಇನ್ನೊಂದು ಪಂಗಡ ತಂದೆಯಾದವನೇ ಮಗನಾದವನ ಬದುಕಿನ ರೂವಾರಿ ಎಂದು ವಾದ ಮಂಡಿಸತೊಡಗಿತು. +ಶಾಸ್ತ್ರಿಗಳ ಗುಂಪು ಬಲಿಷ್ಠವಾಯಿತು. +ಆಶ್ವತ್ಥ್ ಕಾಲು ಕಳೆದುಕೊಂಡು ವಾಪಸು ಬರದಿದ್ದಲ್ಲಿ ಶಾಸ್ತ್ರಿಗಳೇ ತಮ್ಮ ಇಚ್ಛೆಗನುಸಾರವಾಗಿ ಸಂಸ್ಕೃತ ವೈದಿಕ ಎರಡೂ ಕಲಿಸುತ್ತಿರಲಿಲ್ಲವೇ? +ಬ್ರಾಹ್ಮ ಕುಲಸಂಜಾತರಿಗೆ ಬಾಲ್ಯದಲ್ಲಿ ಗುರುಕುಲ ಸಂಸ್ಕಾರ ದೊರೆಯಬೇಕೆಂದಲ್ಲವೆ ಶಾಸ್ತ್ರಿಗಳು ಒದ್ದಾಡುತ್ತಿರುವುದು. +ಕಂಚಿ ಕಾಮಕೋಟಿ ಶ್ರೀಗಳಿಂದ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿಸಬೇಕಾಗಿತ್ತಾದರೂ ಯಾಕೆ? +ಎಂಬಿತ್ಯಾದಿಯಾಗಿ ವಾದ ಮಂಡಿಸಿದವರೆಲ್ಲ ವಯೋವೃದ್ಧರೂ; ಜ್ಞಾನ ವೃದ್ಧರೂ ಆಗಿದ್ದರು ಎಂಬುದು ವಿಶೇಷ. +ಅಶ್ವತ್ಥ್ ಪರ ಗುಂಪಿನ ಬಹುಪಾಲು ಸದಸ್ಯರೆಲ್ಲ ವಯಸ್ಸಿನಿಂದ ನೋಡಿದರೆ ಕಿರಿಯರೇ? ಆಧುನಿಕತೆ ಎಂಬ ದ್ವೀಪಕ್ಕೆ ಸಿಂಹಲಂಘನ ಮಾಡಬೇಕೆಂಬ ಕನಸು ಕಾಣುತ್ತಿದ್ದವರೇ ಅವರೆಲ್ಲ. ಅವರಲ್ಲಿ ಬಹಳಷ್ಟು ಜನ ಜುಟ್ಟು ಮರೆಮಾಚುವಂತೆ ಕ್ರಾಪು ಬಿಡತೊಡಗಿದ್ದರು. ಶೂದ್ರ ಸ್ತ್ರೀಗಳ ಸಹವಾಸ ಮಾಡಲಿಕ್ಕೆಂದೇ ನಿರೋಧ್ ಬಳಕೆಯ ಬಗ್ಗೆ ಗುಟ್ಟಗಿ ತಾಲೀಮು ನಡೆಸಿದ್ದರು. ಗುಟ್ಟಾಗಿ ತಂಬಾಕು ಸೇವನೆ ಮಾಡುತ್ತಿದ್ದರು. ಮಂತ್ರಗಳನ್ನು ಅರ್ಧಕ್ಕೆ ಬಿಟ್ಟು ಮುಷ್ಟಿ ಮೈಥುನದ ಬಗ್ಗೆ , ಕಾಮದ ಹಲವು ರೂಪಗಳ ಬಗ್ಗೆ ಮೆತ್ತಗೆ ವಿಚಾರ ವಿನಿಮಯ ನಡೆಸುತ್ತಿದ್ದಂಥವರು. +ಆದರೆ ಅವರ ಬಂಡಾಯ ಪ್ರತಿಭಟನೆ ಧಿಡೀರನೆ ಪ್ರಕಟಗೊಳ್ಳುವಂತಿರಲಿಲ್ಲ. ಅವರು ಎಷ್ಟಿದ್ದರೂ ಅವಲಂಬಿತರು. +“ರೆಕ್ಕೆ ಬಲಿಯದ ಮುನ್ನ +ಹಕ್ಕಿ ಹಾರಲು ಹೋಗಿ +ಕಕ್ಕುತಲಿ ನೆತ್ತರನ್ನು +ಮುಕ್ಕದಿರುವುದೇ ಮಣ್ಣು…” +ಇಂಥವರು ಬಾಲಕ ಶಾಮುವಿನ ಸರ್ವ ಜವಾಬ್ದಾರಿ ಅವನ ತಂದೆ ಅಶ್ವತ್ಥ್‌ಗೆ ಸೇರಿದ್ದು ಎಂದು ಸಶಕ್ತವಾಗಿ ಮಾತಾಡಲು ಹೇಗೆ ಸಾಧ್ಯ? +ಶಾಸ್ತ್ರಿಗಳಿರೋವರೆಗೂ ಬಾಲಕ ಶಾಮುವಿನ ಜವಾಬ್ದಾರಿ ಅವರಿಗೇ ಸೇರಿದ್ದು; ಅಂಗವಿಹೀನ ಮಗನಾದವನೂ ಪರಾವಲಂಬಿಯೇ… ? ಅಗ್ರಹಾರದ ಪೂರ್ವಾಪರ ನಿಯಮಾವಳಿಗೆ ಪೂರಕವಾಗಿಯೇ ನಡೆದುಕೊಳ್ಳಬೇಕು ಇತ್ಯಾದಿ ಇತ್ಯಾದಿ ನಿರ್ಣಯಗಳು ಸ್ವೀಕಾರಗೊಂಡವು. +ಶಾಸ್ತ್ರಿಗಳು ಗಂಭೀರ ವದನರಾಗಿ ಜುಟ್ಟು ನೇವರಿಸಿಕೊಂಡರು. ತಮ್ಮ ಉತ್ತರೋತ್ತರ ಗಣ್ಯ ಅಧಿಕಾರಿಯಾದ ಮೊಮ್ಮಗನನ್ನು ಎತ್ತಿ ಮುದ್ದುಕೊಟ್ಟರು. +ರಾತ್ರಿ ಒಂದು ಹೊತ್ತಿನಲ್ಲಿ ಗಂಡನ ಆಜ್ಞೆ ಮೇಲೆ ಅಲುಮೆಲು ಮಗನನ್ನು ಶಾಸ್ತ್ರಿಗಳ ಕೋಣೆಯಿಂದ ಎತ್ತಿತಂದು ಮಗ್ಗುಲಲ್ಲಿ ಮಲಗಿಸಿಕೊಂದರೆ, ಇನ್ನೊಂದು ಹೊತ್ತಿನಲ್ಲಿ ಶಾಸ್ತ್ರಿಗಳೇ ಎದ್ದು ಹೋಗಿ ಮೊಮ್ಮಗನನ್ನು ಹೊತ್ತು ತಂದು ಮಲಗಿಸಿಕೊಂಡರು. +ಮಧ್ಯರಾತ್ರಿಯ ನಂತರ ಅಶ್ವತ್ಥ್ ಮಗನಿಗಾಗಿ ಹಾಸಿಗೆಯಲ್ಲಿ ತಡಕಾಡಿದ. ಹೆಂಡತಿಯ ತೊಡೆಯೇ ತಮ್ಮ ಶಾಮು ಎಂದು ಕ್ಷಣ ಹೊತ್ತು ಭಾವಿಸಿದ್ದುಂಟು. ಅದು ಮಗುವೆಂಬ ಭ್ರಮೆ ಹುಟ್ಟಿಸಿತೆಂದು ಗೊತ್ತಾದಾಗ ನಿದ್ರೆಯೇ ಬಾರದೆ ಒದ್ದಾಡಿದ. ಸಿಗರೇಟು ಮೇಲೆ ಸಿಗರೇಟು ಸುಟ್ಟ. +ಜಮೀನ್ದಾರೀ ವ್ಯವಸ್ಥೆಯ ಇನ್ನೊಂದು ಮಗ್ಗುಲೇ ಪುರೋಹಿತಶಾಹಿ ಎಂದುಕೊಂಡ. ತಾನು ದೈಹಿಕವಾಗಿ ಹೆಳವಗೊಂಡಿರುವುದರಿಂದ ಪಿತೃತ್ವ ನಿರಂಕುಶತ್ವದ ಮೊಟ್ಟೆ ಇಡುತ್ತದೆ ಎಂದುಕೊಂಡ. +ಇಂಥವರಿಂದ ಸಮಾಜದ ಏಳಿಗೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂಥವರ ಜೊತೆಗಿದ್ದರೆ ತಮ್ಮ ಕುಟುಂಬದ ಏಳಿಗೆಯೂ ಸಾಧ್ಯವಿಲ್ಲವೆಂದು ಆಲೋಚಿಸಿದ. +ಯಾರೊ ಪಂಚಾಯ್ತಿ ಹೇಳಿಬಿಟ್ಟರೂಂತ ಇದನ್ನೆಲ್ಲ ಒಪ್ಪಿಕೊಂಡು ಕೂತರೆ ಆಗದೆಂದೂ; ಈ ವ್ಯವಸ್ಥೆಯ ಪ್ರತಿನಿಧಿಗಳಿಗೆ ಶಾಕ್ ಕೊಡದಿದ್ದರೆ ಅಗ್ರಹಾರವೆಂಬ ಜೀವಂತ ಸಮಾಧಿಯೊಳಗೆ ಬದುಕಬೇಕಾಗುತ್ತದೆ ಎಂದೂ ಯೊಚಿಸಿ ಒಂದು ನಿರ್ಣಯಕ್ಕೆ ಬಂದ. +ಅಪ್ಪಟ ಶೂದ್ರ ಓಣಿಯಲ್ಲಿ ಒಂದು ಮನೆ ಬಾಡಿಗೆ ಹಿಡಿದ. ತಂದೆಯಾದ ಶಾಸ್ತ್ರಿಗಳಿಗೆ ತಿಳಿಸಿದ. ಶಾಸ್ತ್ರಿಗಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಒಂದು ಕ್ಷಣ ಮೌನವಾದರು. ಕಣ್ಣುಗಳಲ್ಲಿ ನೀರು ತುಂಬಿದವು. ಕಂಠ ಕಟ್ಟಿತು. ನುಡಿಯಲಾಗಲಿಲ್ಲ. ‘ಮೌನಂ ಸಮ್ಮತಿ ಲಕ್ಷಣಮ್’ +ಹೊಸ ಮನೆಯ ಮಾಲಿಕ ಶಿರಸ್ತೇದಾರ ದುರುಗಪ್ಪ. ಸಂಬಳದ ಹತ್ತರಷ್ಟು ಗಿಂಬಳ. ಹುಟ್ಟಿದ ಮನೆಯ ಪ್ರೀತಿಯಿಂದ ಹೊಸದಾಗಿ ಕಟ್ಟಿಸಿದ. ಅಡುಗೆ ಕೋಣೆ ಚಿಕ್ಕದುನ್ನುವುದು ಬಿಟ್ಟರೆ ಉಳಿದಂತೆ ಮನೆ ದೊಡ್ಡದಾಗಿತ್ತು. ಮನೆ ಮುಂದುಗಡೆ ಹತ್ತಾರು ಗಿಡಮರಗಳಿದ್ದವು. +ಬಾಡಿಗೆ ಹೆಚ್ಚೇನಿರಲಿಲ್ಲ. ಶೂದ್ರರೊಂದಿಗೆ ವಾಸಿಸಲು ಆತನ ಸುಶಿಕ್ಷಿತ ಮನಸ್ಸು ಒಪ್ಪಿರಲಿಲ್ಲ. ಆದ್ದರಿಂದ ಮೇಲ್ಜಾತಿಯವರು ವಾಸಿಸುವ ಕಡೆ ಹೊಸದೊಂದು ಮನೆ ಕಟ್ಟಿಸಿಕೊಂಡಿದ್ದ. ಆ ಮನೆಗೆ ಹೋಗಿದ್ದ ದುರ್ಗಪ್ಪ ತನ್ನ ಹೆಸರನ್ನು ನೋಟರಿ ಮೂಲಕ ದುರ್ಗಾಪ್ರಸಾದ್ ಎಂದು ಬದಲಾಯಿಸಿಕೊಂಡಿದ್ದ. ಆತನ ಹೆಂಡತಿ ಲಚ್ಚುಮಿ ಅದೇ ನೋಟರಿ ಮೂಲಕ ಝಾನ್ಸಿರಾಣಿ ಲಕ್ಶ್ಮೀಬಾಯಿ ಎಂದು ಬದಲಾಯಿಸಿಕೊಂಡಿದ್ದಳು. ಆರತಿಗಾರು ಕೀರುತಿಗೊಂದು ಪಡೆದುಕೊಂಡಿದ್ದರು. ಅವುಗಳೆಲ್ಲ ಕಾನ್ವ್ಂಟಿನಲ್ಲಿ ಓದುತ್ತಿದ್ದವು. ಝಾನ್ಸಿ ರಾಣಿಗೆ ತುಳಸಿ ಗಿಡದ ಮೇಲೆ ತುಂಬ ಭಕ್ತಿ. ಬಾಗಿಲ ಮುಂದೊಂದು ಬೃಂದಾವನ ಕಟ್ಟೆ. ಅದನ್ನು ಗಂಡನಿಗಿಂತ ಹೆಚ್ಚು +ಪ್ರೀತಿಸುತ್ತಿದ್ದಳು. ಅವರು ವಾರಕ್ಕೊಮ್ಮೆ ಗುಟ್ಟಾಗಿ ಕುರಿ ಕೋಳಿ ಬೇಯಿಸುತ್ತಿದ್ದರು. ಮೇಲೆ ತಾವು ಶುದ್ದ ಸಸ್ಯಾಹಾರಿಗಳೆಂದು ನಟಿಸುತ್ತಿದ್ದರು. +ಪಿ.ಡಿ.ಪ್ರಸಾದ್ ಉರುಫ್ ಪಾತ್ರೊಟ ದುರ್ಗಪ್ಪ ತಾನು ಹುಟ್ಟಿಬೆಳೆದಿರೋ ಮನೆಯನ್ನು ಶೂದ್ರರಿಗೆ ಬಾಡಿಗೆ ಕೊಡುತ್ತಿರಲ್ಲಿಲ್ಲ. ಮೇಲ್ಜಾತಿಯವರಿಗೆ ಬಾಡಿಗೆ ಕಡಿಮೆಯಾದರೂ ಕೊಡಲು ನಿಶ್ಚಯಿಸಿದ. ಆದ್ದರಿಂದ ಪರಮೇಶ್ವರ ಶಾಸ್ತ್ರಿಗಳ ಮಗ ಅಶ್ವತ್ಥ್ ನಾರಾಯಣಗೆ ಬಾಡಿಗೆ ನೀಡಿದ್ದ. +ಅಶ್ವತ್ಥ್ ಮತ್ತು ಅವನ ಹೆಂಡತಿಗೆ ಮನೆ ಇಷ್ಟವಾಯಿತಾದರೂ ಓಣಿ ಇಷ್ಟವಾಗಲಿಲ್ಲ. ಎಡ ಕಿಟಕಿಯಿಂದ ಮೀನು ಬೇಯಿಸುವ ವಾಸನೆ, ಬಲ ಕಿಟಕಿಯಿಂದ ಮಟನ್ ಬೇಯುತ್ತಿರುವ ವಾಸನೆ, ಕೇರಿಯಲ್ಲಿ ದಿನಂಪ್ರತಿ ಕುಡುಕರ ಗಲಾಟೆ. ಪ್ರತೀ ಮನೆಯಲ್ಲೂ ಒಂದಿಲ್ಲ ಒಂದು ಜಾನಪದ ಹಾಡುಗಳು. +ಇದಕ್ಕಿಂತ ಹೆಚ್ಚಾಗಿ ಮಾವನವರ ನೆನಪು ಕಾಡತೊಡಗಿತು. ವೃದ್ದಾಪ್ಯ ಬೇರೆ. ಒಂಟಿ ಬದುಕು. ಏನು ತಿಂದರೋ ಏನು ಬಿಟ್ಟರೋ? ಮೊಮ್ಮಗನನ್ನು ಎಂದೂ ಯಾವ ಕಾರಣಕ್ಕೂ ಬಿಟ್ಟಿದ್ದವರಲ್ಲ. +“ನೋಡಿ… ವೃದ್ಧ ತಂದೆಯ ಯೋಗಕ್ಷೇಮ ನೋಡ್ಕೋಳ್ಳೋದು ಮಕ್ಕಳದವರ ಧರ್ಮ, ಹೊಗಿ ಒಂದು ಮಾತು ಕರೆಯಬಾರದೆ?” ಗಂಡನನ್ನು ಕೇಳಿದಳು. +“ತಂದೆಮೇಲೆ ನನ್ಗೂ ಪ್ರೀತಿ ಇಲ್ಲಾಂತ ತಿಳ್ಕೋಬೇಡ. ಆದರೆ ಅದು ಮೊಂಡು ಹಠದ ಮುದುಕ. ಇಲ್ಲಿಗೆಲ್ಲಾ ಬಂದು ಇರೋ ಪೈಕಿಯಲ್ಲ” ಎಂದು ನಿಟ್ಟುಸಿರು ಬಿಟ್ಟ ಅಶ್ವತ್ಥ್. +ವೃದ್ಧ ತಂದೆಯನ್ನು ಕರೆಯುವುದು ತನ್ನ ಧರ್ಮ. ಬರುವುದು ಬಿಡುವುದು ಅವರಿಗೆ ಸೇರಿದ್ದು. …ಯೋಚಿಸಿ ಒಂದು ನಿರ್ಧಾರಕ್ಕೆ ಬಂದ . ಹೋದ ಕರೆದ. ಬರಲು ನಿರಾಕರಿಸಿದರು ಶಾಸ್ತ್ರಿಗಳು. +“ಮಗನೇ ಅಶ್ವತ್ಥೂ… ನಾನು ನಿನ್ನ ಹತ್ತಿರ ಒಂದು ಬೇಡಿಕೊಳ್ತಿದೀನಿ… ಅದನ್ನು ನಡ್ಸಿಕೊಡ್ತೀಯಾ” ಶಾಸ್ತ್ರಿಗಳು ಮುಖ ಸಪ್ಪಗೆ ಮಾಡಿಕೊಂಡೇ ಕೇಳಿದರು. +“ಅದೇನು ಕೇಳಪ್ಪಾ?” ಎಂದ ಅಶ್ವತ್ಥ್. +“ಅಕಸ್ಮಾತ್ನಾನು ಸತ್ತರೆ ದಯವಿಟ್ಟು ನೀನು ನನ್ನ ಶವಕ್ಕೆ ಅಗ್ನಿ ಸ್ಪರ್ಶ ಮಾಡಬೇಡ.” +“ಮತ್ತಾರು ಮಾಡಬೇಕು?” ಇಂಥ ಮಾತನ್ನು ನಿರೀಕ್ಷಿಸಿದ್ದ. +“ನನ್ ಮೊಮ್ಮಗ ಮಾಡಲಿ” +“ಯಾಕೆ?” +“ಅವನು ನನ್ನ ತಂದೆಯ ಹೆಸರು ಇಟ್ಟುಕೊಂಡಿದ್ದಾನೆ!” ಶಾಸ್ತ್ರಿಗಳು ಅಕ್ಕಿಯಲ್ಲು ಕಲ್ಲು ಆಯತೊಡಗಿದರು. +ತನಗೆ ತಾನೆ ಎಕ್ಕಡದಲ್ಲಿ ಹೊಡೆದುಕೊಂಡು ಪಶ್ಚಾತ್ತಾಪ ಮಾಡಿಕೊಳ್ಳಬೇಕೆನ್ನಿಸಿತು ಅಶ್ವತ್ಥ್‌ಗೆ. ಮನೆಗೆ ಬಂದು ಹೆಂಡತಿಗೆ ನಾಲ್ಕು ಮಾತು ಅಂದ. +ಮನೆ ಮುಂದೆ ತುಳಸಿಕಟ್ಟೆ ಕಟ್ಟಿಸಿಕೊಡಲು ಅಲುಮೇಲು ಗಂಡನನ್ನು ಕೇಳಿಕೊಂಡಳು. ಬಿಲ್‌ಕುಲ್ ನಿರಾಕರಿಸಿದ. +ಶೂದ್ರ ಜೀವನ ಶೈಲಿ ರೂಢಿಸಿಕೊಳ್ಳ ಸೂಚಿಸಿದ. +ಮಗ ಶಾಮುವಿನ ಜುಟ್ಟು ಕಟ್ ಮಾಡಿದ. ಸಮವಸ್ತ್ರ ತೊಡೆಸಿದ. ಎಬಿಸಿಡಿ ಪುಸ್ತಕಗಳನ್ನು ತಂದು ಚೀಲ ತುಂಬಿದ. ಸ್ವಲ್ಪ ದೂರದ ಕಾನ್ವೆಂಟ್ ಸ್ಕೂಲಿಗೆ ಹೋಗಿ ಸೇರಿಸಿದ. ಅದು ಪ್ರತಿದಿನ +ಒಂದೊಂದು ಪಾಠ ಒಪ್ಪಿಸಿ ಹೆತ್ತವರ ಮನಕ್ಕೆ ಮುದ ತಂದಿತು. +ಒಂದು ರಾತ್ರಿ ಶಾಸ್ತ್ರಿಗಳಿಗೆ ಬಿದ್ದ ಕನಸಿನಲ್ಲಿ ಸೀನಿಯರ್ ಶಾಮಾ ಶಾಸ್ತ್ರಿಗಳು ಕಾಣಿಸಿಕೊಂಡರು. ಮುಠ್ಠಾಳ ಎಂದರು. ಬುದ್ಧಿ ಇದೆ ಏನೊ? ಎಂದರು. ಮೊಗಲರ ಹೆಣ್ಣು ಮಕ್ಕಳಿಗೆ ಹೇಗೆ ಮದುವೆ ಯೋಗವಿಲ್ಲವೋ ಹಾಗೆ ಚತುರ್ವೇದಿಗಳಾದ ನಮ್ಮ ವಂಶದಲ್ಲಿ ಹುಟ್ಟಿದವರಿಗೆ ಇಂಗ್ಲಿಷ್ ಕಲಿಸಕೂಡದು. ನಾನೇ ಅಶ್ವತ್ಥ್‌ನ ಹೊಟ್ಟೆಯಲ್ಲಿ ಹುಟ್ಟಿ ಬಂದಿರೋದು ಎಂಬುದನ್ನು ಮರೆಯಬೇಡ” ಎಂದು ಮುಖಕ್ಕೆ ರಾಚಿದಂತೆ ಆಡಿಬಿಟ್ಟರು. +ಶಾಸ್ತ್ರಿಗಳು ದಿಗ್ಗನೆ ಎದ್ದು ಕುಳಿತರು. +ಆಪಃ ಪುನ್ಂಶ್ಚಿತ್ಯಸ್ಯ ಮಂತ್ರಸ್ಯ ಪೂತ ಋಷಿಃ +ಆಪೋ ದೇವತಾ ಅಸ್ವೀಚ್ಛಂದಃ | ಅಪಾಂಪ್ರಾಶನೇ ವಿನಿಯೋಗಃ +ಗೊಣಗಿದರು. +ಘಂಟಾ ಕಡಗವಿಲ್ಲದೆ ಅಂಗ ವಿಹೀನರಾಗಿರುವ ಅವರ ಪವಿತ್ರ ಆತ್ಮ ಅಲೆದಾಡುತ್ತಿರುವುದು. ಅವರ ಇಚ್ಛೆಗೆ ವಿರುದ್ಧ ನಡೆದುಕೊಳ್ಳುವುದು ಪಿತೃದ್ರೋಹವಾದೀತು. +ಓಂ ಕೇಶವಾಯ ಸ್ವಾಹಃ | ನಾರಾಯಣಾ ಸ್ವಾಹಾ | +ಲಗುಬಗೆಯಿಂದ ಪ್ರಾತಃ ವಿಧಿಗಳನ್ನು ಮುಗಿಸಿಕೊಂಡವರೇ ಉತ್ತರೀಯ ಹೆಗಲ ಮೇಲೆ ಹಾಕಿಕೊಂಡು ಹೊರಟರು. ತಮ್ಮ ತಪೋ ಶಕ್ತಿಯಿಂದ ಬಾಲಕ ಶಾಮು ಓದುವ ಕಾನ್ವೆಂಟ್ ಶಾಲೆ ಸಮೀಪಿಸಿದರು. ಪ್ರಣವಸ್ಯ ಪರ ಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ಎಂದು ಬಾಗಿಲು ದಾಟಿದರು. +ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತೀ ಅಂತ. ಅಚ್ಛಧವಳ ವರ್ಣೇ ಉಡುಪು ಧರಿಸಿದ್ದ ಹೆಡ್‌ಮಿಸ್ಸೆಸ್‌ಳನ್ನು ನೋಡಿದರು. +“ಹೆಲೋ ವೆಲ್‌ಕಂ ಸಾರ್.ವಾಟ್ ಕೆನ್ ಐ ಡು ಫಾರ್ ಯು” ಅಂತ ಆಕೆ ಸ್ವಾಗತಿಸಿ ಮುಕ್ತಾ ವಿದ್ರುಮ ಹೇಮ ನೀಲ ಧವಳ ಎಂದು ಶಕ್ತಿ ಸಂಚಯಮಾಡಿಕೊಂಡರು. ಆ ಮ್ಲೇಚ್ಛೆಗೆ ಇಷ್ಟವಾಗುವಂತೆ ಮಾತನಾಡಿದರು. ಅದೇ ಹೊತ್ತಿಗೆ ಬಾಲಕ ಶಾಮು ತನ್ನ ತಾತನನ್ನು ನೋಡಿತು. ಧಿಯೋಯೋನ ಜ್ಞಾನಾತ್ಮನೇ ಅಂತ ತಾತನ ಬಳಿಗೆ ಓಡಿಬಂತು. ತನ್ನ ಬಾಹುಗಳೆಂಬ ಹಾರವನ್ನು ತಾತನ ಕೊರಳಿಗೆ ಹಾಕಿತು. ತಮ್ಮ ಗಾಳಕ್ಕೆ ಮೊಮ್ಮಗನೆಂಬ ಮೀನು ಬಿತ್ತೆಂದು ಶಾಸ್ತ್ರಿಗಳು ಭಾವಿಸಿದರು. ಬಗೆಬಗೆಯ ಸಂಸ್ಕೃತದ ಟೆಕ್ನಿಕ್ ಉಪಯೋಗಿಸಿ ಅವನನ್ನು ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡರು. +ಪೃಥ್ವಿರಾಜ ಜಯಚಂದ್ರನ ಪುತ್ರಿ ಸ್ವಯಂವರೆಯನ್ನು ಅಪಹರಿಸಿಕೊಂಡೊಯ್ದ ರೀತಿಯಲ್ಲಿ ಮೊಮ್ಮಗನನ್ನು ತಮ್ಮ ಇಚ್ಛಾಶಕ್ತಿಯೆಂಬ ಚಿಮುಟಿಗೆಯಲ್ಲಿ ಹಿಡಿದು ಸೀದಾ ಸಂಸ್ಕೃತ ಪಾಠ ಶಾಲೆಗೆ ಸೇರಿಸಿಬಿಟ್ಟರು. +ಪ್ರೀತಿಯ ಮೊಮ್ಮಗನೇ ಯಾವ ಕಾರಣಕ್ಕೂ ಈ ವಿಷಯವನ್ನು ಆ ನಿನ್ನ ಕಂತುಪಿತನಿಗೆ ಹೇಳಕೂಡದೆಂದು ಕಟ್ಟಪ್ಪಣೆ ವಿಧಿಸಿದರು. +ಬ್ಯಾ ಬ್ಯಾ ಬ್ಲಾಕ್ ಷೀಪ್ ಎಂದು ಬಾಯಿಪಾಟ ಮಾಡಿದ್ದ ಆದು ಜಯ ನಿಖಿಲ ನಿಲಿಂಪಕೋಟೀರ ಕೋಟಿಪ್ರಭಾ ಪುಂಜ ಎಂದು ಓದತೊಡಗಿತು. +ಮನೆಯಲ್ಲಿ ಅದು ತಲೆ ಓಡಿಸಿತು. ಇಂಗ್ಲಿಷ್ ಪುಸ್ತಕದೊಳಗೆ ಸಂಸ್ಕೃತ ಶ್ಲೋಕಗಳಿದ್ದ ಪುಸ್ತಕ +ಅಡಗಿಸಿಟ್ಟು ಓದುವ ನಾಟಕವಾಡತೊಡಗಿತು. ಅದರ ಆ ತೆರನ ಆಟಕ್ಕೆ ಗೌರವಾನ್ವಿತ ಕಳ್ಳಾಟಕ್ಕೆ ಅನುಕೂಲ ವಾಗುವಂತೆ ಅದರ ಕಂತುಪಿತ ದಾರದ ಮಿಲ್ಲಿನಲ್ಲಿ ಕಾರಖೂನ ಕೆಲಸಕ್ಕೆ ಸೇರಿಕೋಡಿದ್ದ. ಬೆಳೆಗ್ಗೆಯಿಂದ ರಾತ್ರಿವರೆಗೆ ಒಂದೇ ಸಮನೆ ದುಡಿದೂ ದುಡಿದೂ ಸುಸ್ತಾಗಿ ಬಂದು ಸೇರಿದಷ್ಟು ಉಂಡು “ಓದ್ಕೊಂಡೇನೇ ಬರ್ಕೊಂಡೇನೋ” ಎಂದು ವಿಚಾರಿಸುತ್ತಾ ಆಕಳಿಸುತ್ತಿದ್ದ. ಮಗನನ್ನು ಸರ್ಕಲ್ ಇನ್ಸ್‌ಪೆಕ್ಟರನ್ನಾಗಿ ಮಾಡಬೇಕೆಂಬ ಕನಸು ಕಾಣುತ್ತ ಮಲಗಿ ಬಿಡುತ್ತಿದ್ದ. +ಅವನು ಕೆಲಸಕ್ಕೆ ಹೋಗಿದ್ದನ್ನು ಹೊಂಚು ನೋಡಿ ಶಾಸ್ತ್ರಿಗಳು ಮನೆಗೆ ಬಂದರು. ಬಾಗಿಲ ಮುಂದೆ ತುಳಸಿಕಟ್ಟೆ ಇಲ್ಲದಿರುವುದನ್ನು ನೋಡಿ ಖತಿಗೊಂಡರು. ಸೊಸೆ ಎಷ್ಟು ಕೇಳಿಕೊಂಡರೂ ಅವರು ಒಂದು ಹನಿ ನೀರು ಸಹ ಮುಟ್ಟಲಿಲ್ಲ. ಕಿಟಕಿ, ಗವಾಕ್ಷಿ ಮತ್ತಿತರ ನವರಂದ್ರಗಳಿಂದ ನುಸುಳುತ್ತಿರುವ ಅಮೇಧ್ಯದ ವಾಸನೆ ಬಗ್ಗೆ ತಕರಾರೆತ್ತಿದರು. ನವರಂದ್ರಗಳನ್ನು ತಾವೇ ಮುಚ್ಚಿಬಿಟ್ಟರು. ಸೊಸೆಗೆ ಸನಾತನ ಧರ್ಮ ಪಾಲಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮೊಮ್ಮಗ ಗುಟ್ಟಾಗಿ ಶ್ರದ್ಧೆಯಿಂದ ಸಂಸ್ಕೃತ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸೀದ ಊರಹೊರಗಿದ್ದ ಇಂದ್ರ ಧಾರಾ ತೊರೆಗೆ ಹೋದರು. ಹುಲುಲಿ ಹಳ್ಳಕ್ಕೆ ಅವರು ಇಟ್ಟ ಹೆಸರು. +ಇಂದ್ರಾಣಿ ಇಂದ್ರ ರೂಪಾ ಚ ಇಂದ್ರಶಕ್ತಿಃ ಪರಾಯಿಣೀ… ಎಂದು ಮೂಗು ಮುಚ್ಚಿಕೊಂಡು ಮುಳುಗೆದ್ದರು. ಯಾವುದಾದರು ಶವಸಂಸ್ಕಾರಕ್ಕೆಂದು ಬಂದವರೆಲ್ಲ ಅವರು ಆ ಇಂದ್ರಧಾರ ಉರುಫ್ ಹಾಲುಲಿಹಳ್ಳದಲ್ಲಿ ಮುಳುಗು ಹಾಕದೆ ಊರು ಪ್ರವೇಶಿಸುತ್ತಿರಲ್ಲಿಲ್ಲ. ಅಂದು ಅವರ ಇಚ್ಛಾ ಶಕ್ತಿಗೆ ವಿರುದ್ಧವಾಗಿ ಅನಾಮಧೇಯ ಕಳೇಬರವೊಂದು ಅವರ ಮನಸ್ಸನ್ನು ಆವರಿಸಿ ಮಲಿನ ಮಾಡಿತು. +ಆರು ಮೂರಾಗಲೀ ಮೂರು ಆರಾಗಲೀ… ಮೊಮ್ಮಗ ಶಾಮುವನ್ನು ಅವರ ಮುತ್ತಾತನ ಹಾಗೆ ಪ್ರಕಾಂಡ ಪಂಡಿತನನ್ನಾಗಿ ಮಾಡಬೇಕೆಂದು ಪದೇಪದೆ ಅಂದುಕೊಳ್ಳುತ್ತ ಅಗ್ರಹಾರದ ತಮ್ಮ ಮನೆಗೆ ವಾಪಸಾದರು. +ಅತ್ತ ಬಾಲಕ ಶಾಮು ಕಾನ್ವೆಂಟ್ ದ್ರೆಸ್ಸ್ ಹಾಕಿಕೊಂಡು ಸಂಸ್ಕೃತ ಪಾಠ ಶಾಲೆಯಲ್ಲಿ ಅಮರ ಕೋಶ ಕಲಿಯುತ್ತಿದ್ದಾಗ ಇತ್ತ ಪೋಸ್ಟ್‌ಮ್ಯಾನ್ ಅಶ್ವತ್ಥ್ ನಾರಾಯಣ ಕೈಗೆ ಕಾರ್ಡೊಂದನ್ನು ಕೊಟ್ಟು ತ್ರಿಣ್ ತ್ರಿಣ್ ಅಂತ ವಾಪಸಾದ. +ಅದು ಕಾನ್ವೆಂಟ್ ಸ್ಕೂಲಿನಿಂದ ಬಂದಿತ್ತು. ಓದಿದ ರಕ್ತ ಕುದಿಯಿತು. “ಎಲವೋ ಮಗನೇ” ಎಂದು ಸಿಂಹನಾದ ಮಾಡಿದ. ಮೊಲದಂಥ ಅಲುಮೇಲು ಓಡಿಬಂದಳು. +“ಕೋಪಾವೇಶದಿಂದ ಮಗನಿಗೇನಾದರೂ ಮಾಡೀರಿ?” ಎಂದಳು. +ಅವನು ಸೀದ ಸಂಸ್ಕೃತ ಶಾಲೆಗೆ ಹೋದ. ಕ್ರಾಪಿನ ನಡುವೆ ಹಲೋ ಹಲೋ ಎನ್ನುತ್ತಿದ್ದ ಜುಟ್ಟು ಹಿಡಿದು ಮೇಲೆತ್ತಿದ. ಛಟಾರನೆ ಕೆನ್ನೆಗೆರಡು ಬಿಟ್ಟ. +ಅಲ್ಲಿ ಅದನ್ನು ನೋಡಿದ ಸಂಸ್ಕೃತ ಪಂಡಿತರು ’ಓಂ ನಮೋ ಭಗವತೇ ಜ್ವಲ ಜ್ವಲ ಮಹಾರುದ್ರಾಯ’ ಎಂದು ಕೆನ್ನೆಕೆನ್ನೆ ಬಡಿದುಕೊಂಡರು. ಅವರ ಮೃದು ಪ್ರತಿಭಟಣೆ ಲೆಕ್ಕಿಸದೆ ಕುಯ್ಯೋ ಮರ್ರೋ ಅನ್ನುತಿದ್ದ ಮಗನನ್ನು ಕಂಕುಳಲ್ಲಿ ಅವುಂಚಿಕೊಂಡು ಕಾನ್ವೆಂಟ್ ಸ್ಕೂಲಿಗೆ ಬಿಸಾಕಿದನು. +ಕೆಲವು ದಿನಗಳಲ್ಲಿ ಇದು ಹೇಗೋ ಶಾಸ್ತ್ರಿಗಳಿಗೆ ತಿಳಿಯಿತು. ಜಾರು ಬಂಡೆ ಆಟ ಆಡುತ್ತಿದ್ದ ಮೊಮ್ಮಗನನ್ನು ಅಪಹರಿಸಿ ಒಯ್ದು ಸಂಸ್ಕೃತ ಪಾಠಶಾಲೆಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ +—————– +ಪಂಡಿತರು ಊರುಭಂಗ ನಾಟಕ ನೆನಪಿಸಿಕೊಂಡು ಗಡಗಡ ನಡುಗುತ್ತ ಧೂಮಕೇತುವಿನಂತೆ ಮೂಡಿ ಬಿಡುವ ಅವರ ಮಗ ಅಶ್ವತ್ಥ್ ಬಗೆಗೆ ಹೇಳಿದರು. ಯಾಕಿದ್ದೀತು ಅಂತ ಶಾಸ್ತ್ರಿಗಳು ಮೊಮ್ಮನನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡರು. ಕಾನ್ವೆಂಟ್ ಸ್ಕೂಲಿನ ಮ್ಲೇಚ್ಛ ಭಾಷೆಯಲ್ಲಿದ್ದ ಪುಸ್ತಕಗಳಿಗೆ ತಾವೇ ಅಗ್ನಿಸ್ಪರ್ಶ ಮಾಡಿದರು. ತಾವೇ ಸಂಸ್ಕೃತಾಭ್ಯಾಸ ಮಾಡಿಸಲು ನಿಶ್ಚಯಿಸಿದರು. +ಅಗ್ರಹಾರದ ಕೆಲ ಹಿರಿಯರು ಬಂದು ತಾತ ಮೊಮ್ಮಗನ ಸಾಮರಸ್ಯ ಕಂಡು ಸಂತಸ ಪಟ್ಟು ಶುಭ ಹಾರೈಸಿ ಹೋದರು. +ಶಾಸ್ತ್ರಿಗಳೂ ಮೊಮ್ಮಗನ ಆಸರೆ ಆಪ್ಯಾಯಮಾನವಾಗಿತ್ತು. ಪ್ರತಿಯೊಂದು ಕ್ಷಣವನ್ನು ಅವನೊಂದಿಗೇ ಕಳೆಯಲು ಪ್ರಯತ್ನಿಸುತ್ತಿದ್ದರು. ಅವನ ಎದೆಯ ಮೇಲಿನ ಎಲುಬುಗಳ ದರ್ಶನದಿಂದ ಮಮ್ಮಲನೆ ಮರುಗಿದರು. ಅವುಗಳನ್ನು ಮುಚ್ಚಲೆಂದೇ ರಾತ್ರಿ ತುಪ್ಪದಲ್ಲಿ ನೆನೆದ ಉತ್ತತ್ತಿಗಳನ್ನು ಮೊಮ್ಮಗನಿಗೆ ತಿನ್ನಿಸತೊಡಗಿದರು. ರುಚಿರುಚಿಯಾದ ತಿಂಡಿ ತೀರ್ಥ ದೊರಕಿತೆಂದ ಮೇಲೆ ಆ ಬಾಲಚಂದ್ರನು ಕೆಲವೇ ದಿನಗಳಲ್ಲಿ ತಂದೆತಾಯಿಯರನ್ನು ತಾತ್ಕಾಲಿಕವಾಗಿ ಮರೆತೇಬಿಟ್ಟನು. +ಆದರೆ ಮಿಲಿಟರಿ ರಿಟರ್ನ್‌ಡ್ ಅಶ್ವತ್ಥ್ ಮಗನನ್ನು ಮರೆಯಬೇಕಲ್ಲ! ಯುದ್ಧ ಘೋಷಿಸಿ ಕರೆದೊಯ್ಯಬೇಕೆಂದು ದಿನಕ್ಕೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಅಗ್ರಹಾರಕ್ಕೆ ಬರುತ್ತಿದ್ದನು. ಮನೆ ಬಾಗಿಲಿಗೆ ಬೀಗ ರಾರಾಜಿಸುತ್ತಿತ್ತು. +ಸುಮ್ಮನೆ ಕೂತು ಮನೆಯಲ್ಲಿದ್ದರೆ ಹೊಟ್ಟೆಗಾಗಲೀ; ಜುಟ್ಟಿಗಾಗಲಿ ಸುಮ್ಮನೆ ಬರುತ್ತದೆಯೇ? +ಮೊಮ್ಮಗನ ಕಾಲುಗುಣವೇನೋ? ಶಾಸ್ತ್ರಿಗಳಿಗೆ ದಿನಂಪ್ರತಿ ಕನಿಷ್ಠ ಐದಾದರೂ ಎಂಗೇಜ್‌ಮೆಂಟ್‌ಗಳಿರುತ್ತಿದ್ದವು. ಎಲ್ಲವೂ ಪ್ರತಿಷ್ಥರ, ಶ್ರೀಮಂತರ ಮನೆಯ ಆಫರುಗಳು, ಮಗುವಿನ ನಾಮಕರಣದಿಂದ ಹಿಡಿದು ಶವಸಂಸ್ಕಾರವರೆಗೆ. ಯಾವುದೇ ಆತಿಥ್ಯವನ್ನು ಮೊಮ್ಮಗನ ಕಾರಣಕ್ಕಾಗಿ ಶಾಸ್ತ್ರಿಗಳು ನಿರಾಕರಿಸುತ್ತಿರಲಿಲ್ಲ. ದಿನಕ್ಕೆ ಮೂರು ಹೊತ್ತು ಪುಷ್ಕಳವಾದ ಊಟ, ಕೈತುಂಬ ದಕ್ಷಿಣೆ ಜೊತೆಗೆ ಬಟ್ಟೆ ಬರೆ ಅದೂ ಇದೂ… ಹೆಚ್ಚಿಗೆ ಮಿಗಿಲುತ್ತಿದ್ದುದನ್ನು ತಾವೇ ಗುಟ್ಟಾಗಿ ಒಯ್ದು ಸೊಸೆಗೆ ಕೊಟ್ಟು ಬರುತ್ತಿದ್ದರು. ನಿನ್ನ ಗಂಡನಿಗೆ ಅದು ಇಷ್ಟ ಇದು ಇಷ್ಟ ಮಾಡಿಡು ಎಂದೂ; ಅವನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಪಿಸಿಪಿಸಿ ಹೇಳಿ ಬರುತ್ತಿದ್ದರು. ಈ ನಶ್ವರದೇಹ ಹೊತ್ತು ತಾವು ದುಡಿಯುವುದಾದರೂ ಯಾರಿಗಾಗಿ… ಮಗ ಸೊಸೆ ಮೊಮ್ಮಗ ಎಲ್ಲರೂ ಸುಖವಾಗಿರಬೇಕು ತಾನೆ? +ಧರ್ಮಾತ್ಮ ರಾವ್ ಬಹದ್ದೂರ್ ಗೋವಿಂದೇಗೌಡರು ತಮಗೆ ಇಳಿವಯಸ್ಸಿನಲ್ಲಿ ಹುಟ್ಟಿರುವ ಮಗನ ನಾಮಕರಣ ಮಾಡಲು ಬರಬೇಕೆಂದು ಶಾಸ್ತ್ರಿಗಳಿಗೆ ಆಮಂತ್ರಣ ನೀಡಿದರು. ನಾಮಕರಣದ ಜೊತೆ ಕುಂಡಲಿ ಜಾತಕ ಇತ್ಯಾದಿ. ಜೊತೆ ಗ್ರಾಮದ ಗಣ್ಯರಿಗೆ ಭಾರಿ ಭೋಜನ, ಶಾಸ್ತ್ರಿಗಳಿಗೂ ಸಂತೋಷವಾಯಿತು. ಕಾರಣ ಮೊಮ್ಮಗನಿಗೆ ವೈದಿಕದ ಎಲ್ಲಾ ವರಸೆ ತೊರಿಸಿದ್ದರು. ಆದರೆ ಮದುವೆಯಾದ ಮೂವತ್ತು ವರ್ಷಗಳ ನಂತರ ಹುಟ್ಟುವ ಮಗುವಿಗೆ ನಾಮಕರಣ ಮಾಡುವ ಬಗ್ಗೆ ತೋರಿಸಿರಲಿಲ್ಲ. +ನಿಗದಿತ ವೇಳಿಗೆ ಮುಂಚಿತವಾಗಿ ಅವರು ಮೊಮ್ಮಗನೊಂದಿಗೆ ಹೊರಟರು. ಗೌಡರ ಹೊಸಮನೆ ಊರ ಹೊರಗಡೆ ಇತ್ತು. ಹತ್ತು ವರ್ಷಗಳಷ್ಟು ಹಳೆಯದಾದ ತೆಂಗಿನ ಮರಗಳು ನೀರಿನ +ಅಭಾವದಿಂದ ಒಣಗಿ ಬೋಳಾಗಿ ಎಲ್ಲಿ ನಿಂತಿದ್ದವೋ, ಅವುಗಳ ನಡುವೆ ಗೌಡರ ಭಾರಿ ಮನೆ ಇತ್ತು. +ಗೌಡರು ಸಾಮಾನ್ಯದವರಲ್ಲ ಗ್ರಾಮದ ಅನೇಕರಿಗೆ ಗೊತ್ತಿರುವಂತೆ ಅವರು ಕೂಲಿ ಮಾಡುತ್ತಿದ್ದರು. ಒಂದು ರೊಟ್ಟಿಯಲ್ಲಿ ಒನ್ ಬೈಟು ಮಾಡಿ ಹೆಂಡತಿಯೊಂದಿಗೆ ಊಟ ಮಾಡುತ್ತಿದ್ದರು. ಶಾಸ್ತ್ರಿಗಳು ಎಂದೋ ಹೇಳಿದ್ದರಂತೆ “ನೀನು ಕೋಟ್ಯಾಧಿಪತಿ ಆಗುವಿ” ಎಂದು ತೆಂಗಿನಕಾಯಿ ಮಂತ್ರಿಸಿಕೊಟ್ಟಿದ್ದರಂತೆ ಅದನ್ನು ಮೂರು ಸಾರಿ ಪೂಜಿಸಲು ಹೇಳಿದ್ದರಂತೆ. ಅವರು ಹೇಳಿದ್ದರಿಂದಲೋ ಏನೋ ಗೌಡರು ಹತ್ತಿಪ್ಪತ್ತು ವರ್ಷಗಳಲ್ಲಿ ಕೋಟ್ಯಾಧೀಶ್ವರ ಆಗಿಯೇ ಬಿಟ್ಟರು. ಯಾವಯಾವುದೇ ಕಾರಣಕ್ಕೆ ಅವರು ಒಂದೊಂದು ಬಾರಿ ಜೈಲಿಗೆ ಹೋಗಬೇಕಾಗಿ ಬಂತು. ಆಗ ಶಾಸ್ತ್ರಿಗಳು “ನಮ್ಮ ಆರಾಧ್ಯದೈವವಾದ ಶ್ರೀಕೃಷ್ಣ ಪರಮಾತ್ಮ ಹುಟ್ಟಿದ್ದು ತುರಂಗದಲ್ಲಲ್ಲವೆ? ಅಲ್ಲಿಗೆ ಹೋಗಿ ಬಂದರೆ ಪರಿಶುದ್ದ ಚಿನ್ನವಾಗುವಿ” ಎಂದು ಹೇಳಿದ್ದಂತೆ ಗೌಡರು ಸವರನ್ನೇ ಸರಿ. ಮನೆ ಮರ್ಯಾದೆನೆಲ್ಲ ಪಣಕ್ಕಿಟ್ಟು ಲಕ್ಷಗಟ್ಟ್ಲೆ ಸಂಪಾದಿಸಿದ್ದಕ್ಕೆ ಉತ್ತರಾಧಿಕಾರಿ ಇಲ್ಲವೆಂದು ಮರುಗುತ್ತಿದ್ದ ಗೌಡರು ಇತ್ತಿಚಿಗೆ ಗಂಡುಮಗುವಿಗೆ ತಂದೆಯೇನೋ ಆದರು. ಆದರೆ ಹುಟ್ತಿರುವ ಮಗುವಿಗೆ ಬಾಯಿ ಇಲ್ಲ, ಎಡಗಣ್ಣೂ ಕುರುಡು… ಬಲಗಾಲುಗಿಡ್ಡು… ಎಂಥದೋ ಒಂದು ಹುಟ್ಟಿತಲ್ಲಾ ಎಂಬುದೇ ಸಂತೋಷ. ಇದಕ್ಕೆಲ್ಲ ಕಾರಣರಾದ ಶಾಸ್ತ್ರಿಗಳನ್ನು ಆಮಂತ್ರಿಸದೇ ಇದ್ದರೆಯೇ ಗೌಡರು? +“ನೋಡು ಮೊಮ್ಮಗನೇ ಶೂದ್ರರು ಹಣ ಸಂಪಾದಿಸಬಹುದು. ಆದರೆ ಜ್ಞಾನ ಸಂಪಾದಿಕೊಳ್ಳಲಾರರು. ಪ್ರತಿಯೊಂದಕ್ಕೂ ಪಂಡಿತರಾದ ನಮ್ಮಂಥ ಜ್ಞಾನಿಗಳನ್ನೇ ಅಶ್ರಯಿಸದೆ ಅವರಿಗೆ ಬೇರೆ ದಾರೀನೆ ಇಲ್ಲ” ಎಂದು ಶಾಸ್ತ್ರಿಘಳು ಶಾಮುಗೆ ದಾರಿಯುದ್ದಕ್ಕೆ ಹೇಳಿದರು. +ಬಾಲಕನಿಗೆ ಅದರ ಮೇಲೆ ಗಮನವಿದ್ದರೆ ತಾನೆ? ಅದರ ಗಮನವೆಲ್ಲ ಗೌಡರು ಉತ್ತಮ ಬ್ರಾಹ್ಮಣ ಬಾಣಸಿಗರಿಂದ ಮಾಡಿಸಿರಬಹುದಾದ ಬಗೆಬಗೆ ಖಾದ್ಯಗಳ ಕಡೆಗೆ ಇತ್ತು. ಮನೆಯ ಹೊರಗಡೆ ಅಡುಗೆಯ ಪರಿಮಳ ನಿರ್ಮಿಸಿದ್ದ ಪರಿಧಿ ಪ್ರವೇಶಿಸಿದರು. +ಗೋವಿಂದೇಗೌಡರು ತಾವು ನಿಜಕ್ಕೂ ಧರ್ಮಾತ್ಮರೇ ಎಂಬುದನ್ನು ಸಾಬೀತುಪಡಿಸಿಲಿಕ್ಕಾಗಿಯೋ ಎಂಬಂತೆ ಬರುತ್ತಿದ್ದ ಶಾಸ್ತ್ರಿಗಳನ್ನು ದಾರಿಯಲ್ಲಿಯೇ ಅಡ್ಡ ತರುಬಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿದರು. +“ಗೌಡರೇ… ಈ ಬಾಲಕ ನಮ್ಗೆ ಮೊಮ್ಮಗರಾಗಬೇಕು. ನಮ್ಮ ತ್ತೀರ್ಥರೂಪರ ಪಡಿ‌ಅಚ್ಚು. ಪೂಜ್ಯ ಕಂಚೀ ಜಗದ್ಗುರುಗಳ ಅಮೃತ ಹಸ್ತದಿಂದ ಇವರ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿದ್ದಾರೆ” ಶಾಸ್ತ್ರಿಗಳು ಶಾಮು ಡಾರ್ಲಿಂಗನನ್ನು ಗೌಡರಿಗೆ ಪರಿಚಯಿಸಿದರು. ತಮ್ಮ ಮೊಮ್ಮಗನಿಗೂ ಪಾಪದ ಮೊಟ್ಟೆ ಗೌಡ ಸಾಷ್ಟಾಂಗ ಹಾಕಲೆಂಬ ಉದ್ದೇಶದಿಂದಲೇ ಶಾಸ್ತ್ರಿಗಳು ಹಾಗೆ ನುಡಿದದ್ದು. ಆದರೆ ಗೌಡರು “ಓಹೋ… ಓಹೋ” ಎಂದು ತಲೆ ಅಲ್ಲಾಡಿಸಿ ಬಿಡುವುದೇ? ಶುದ್ದ ಶುದ್ರ ಮುಂಡೆಗಂಡ.. ಸ್ವಲ್ಪವೂ ಸಂಸ್ಕಾರವಿಲ್ಲ. +ನಾಮಕರಣ ಮಹೋತ್ಸವಕ್ಕೆ ಆ ಭಾಗದ ಎಮ್ಮೆಲ್ಲೇ ಮೊದಲಾದ ಗಣ್ಯರು ಬಂದಿದ್ದರು. ಶಾಸ್ತ್ರಿಗಳ ಮಂತ್ರೊಚ್ಚಾರಣೆ ಎಂದಿಗಿಂತ ಸ್ಪುಟವೂ ಸ್ಪಷ್ಟವೂ ಆಗಿತ್ತು. ಅವರ ಆ ಶಾರೀರವನ್ನು ಎಲ್ಲರೂ ಮುಕ್ತ ಕಂಠದಿಂದ ಹೋಗಳಿದರು. ತಮ್ಮ ಮನೆಯಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಾಗಿ ಶಾಸ್ತ್ರಿಗಳಿಗೆ ಪ್ರತಿಷ್ಥಿತರು ಭರವಸೆ ನೀಡಿದರು. +ಆ ಆನಂದದ ಸಾಗರದಲ್ಲಿ ಓಲಾಡುತ್ತಿದ್ದ ಶಾಸ್ತ್ರಿಗಳಿಗೆ ತಮ್ಮ ಬಿದಿಗೆ ಚಂದ್ರಮನಂಥ ಮೊಮ್ಮಗನನ್ನು ಗಣ್ಯರಿಗೆ ಪರಿಚಯಿಸಬೇಕೆಂಬ ಆಸೆಯಾಯಿತು. ನೊಡಿಕೊಳ್ಳುತ್ತಾರೆ ಪಕ್ಕದಲ್ಲಿರಬೇಕಾದ್ದ ಮೊಮ್ಮಗ ’ಲಾ ಪತಾ’. +” ಓ ಶಾಮಾ ಶಾಸ್ತ್ರಿಗಳೇ ” ಎಂದು ಗಂಭೀರ ಧ್ವನಿ ತೆಗೆದರು. +“ಗ್ರಾಂಡ್ ಪಾ ಐ ಯಾಮ್ ಇಯರ್” ಎಂಬ ಧ್ವನಿ ಕೇಳಿ ಬಂತು. +ತಿರುಗಿ ನೋಡಿದರು. ಮುಖದ ತುಂಬ ರಕ್ತ ನಿಂತಿತು. +ಅವರು ಏನು ನಡೆಯಬಾರದೆಂದು ಎಚ್ಚರವಹಿಸಿದ್ದರೋ? ಅದೇ ನಡೆದು ಹೋಗಿತ್ತು. ಅಶ್ವತ್ಥ್ ಮಗನನ್ನು ಎತ್ತಿಕೊಂಡಿದ್ದ. ತಾನೇ ಅದರ ಬಾಯಿಂದ ಇಂಗ್ಲಿಷ್ ನುಡಿಸಿದ್ದ. +ಅಶ್ವತ್ಥ್ ಇಲ್ಲಿರುವುದೆಂದರೇನು? ಶಾಸ್ತ್ರಿಗಳಿಗೆ ಆಶ್ಚರ್ಯ. +ಗೋವಿಂದೇಗೌಡರ ಸ್ಪಿನ್ನಿಂಗ್ ಮಿಲ್ಲಿನಲ್ಲಿ ಆತ ಅಸಿಸ್ಟೆಂಟ್ ಮೇನೇಜರಾಗಿ ಕೆಲಸ ಮಾಡುತ್ತಿದ್ದ. ಶಾಸ್ತ್ರಿಗಳ ಮೇಲಿನ ಗೌರವಕ್ಕೆ ಕಡಿಮೆ ಸಂಬಳದ ಅಸಿಸ್ಟೆಂಟ್ ಮೇನೇಜರು ಹುದ್ದೆಯನ್ನು ಧರ್ಮಾತ್ಮರು ದಯಪಾಲಿಸಿದ್ದರು. +ಅವರಿಬ್ಬರ ಜಗಳ ಲೋಕವಿಖ್ಯಾತ. +ಇವರಿಗೆ ಅವರೇ ಮಗ ನೋಡು. +ಅವರಿಗೆ ಇವರೇ ತಂದೆ ನೋಡು. +ಅವರಿಬ್ಬರ ಜಗಳದ ಕೇಂದ್ರ ಇದೇ ಹುಡುಗ ನೋಡು… +ಗಣ್ಯರು ತಲಾ ಒಂದೊಂದು ಗೊಣಗಿಕೊಂಡರು. +ಎಲ್ಲರೂ ನೋಡುನೋಡುತ್ತಿರಲು ಬಾಲಕ ಶಾಮು ಕುರಿತು ತಂದೆ ಮಗಗೂ ಕೋಳಿ ಜಗಳ ಆರಂಭವಾಯಿತು. ಅವರಿಬ್ಬರ ಜಗಳ ನಾಮಕರಣಕ್ಕೆ ಬಂದವರಿಗೆ ವಿಶೇಷ ಮನರಂಜನೆ ಒದಗಿಸಿತು. +ಸಂಸ್ಕೃತ ಗಿ/s ಇಂಗ್ಲಿಷೂ +ಇಂಗ್ಲಿಷ್ ಗಿ/s ಸಂಸ್ಕೃತವೂ +ಐದನೇ ಶತಮಾನ ಗಿ/s ಇಪ್ಪತ್ತನೇ ಶತಮಾನವೂ… ಹೀಗೆ… +ಹೇಗೋ ಗಣ್ಯರು ಬಂದಿದ್ದರಲ್ಲವೆ? ಅವರ ಮಾತು ಕೇಳುವುದು ಉಭಯರಿಗೂ ಕ್ಷೇಮವೇ. ಕೇಳದಿದ್ದರೆ ಉಭಯರೀರ್ವರ ಉಂಬಳಕ್ಕೆ ಖೋತಾ ಆಗುವ ಲಕ್ಷಣ ಗೋಚರಿಸಿತು. +ಗಣ್ಯರು ಹೇಳಿದ ರಾಜಿ ಸೂತ್ರದ ಪ್ರಕಾರ +ಬಾಲಕ ಶಾಮಾಶಾಸ್ತ್ರಿಗಳು ಸಂಸ್ಕೃತ ಇಂಗ್ಲಿಷು ಎರಡೂ ಕಲಿಯುವುದು? +ಬಾಲಕ ಶಾಮಾಶಾಸ್ತ್ರಿ ಕ್ರಾಪೂ ಜುಟ್ಟು ಎರಡೂ ಬಿಡುವುದು. +ಬಾಲಕ ಶಾಮಾಶಾಸ್ತ್ರಿ ವಾರದಲ್ಲಿ ಮೊದಲ ಮೂರುವರೆ ದಿನ ತಂದೆ ಮನೆಯಲ್ಲಿರುವುದು ಕೊನೆಯ ಮೂರುವರೆ ದಿನ ತಾತನ ಮನೆಯಲ್ಲಿರುವುದು. +ಬಾಲಕ ಶಾಮಾಶಾಸ್ತ್ರಿ ಶೂದ್ರರೋಣಿಗೂ ಅಗ್ರಹಾರಕ್ಕೂ ನಡುವೆ ಸೇತುವೆಯಾಗುವುದು. +ಅವರಿಬ್ಬರೂ ಒಪ್ಪಿಕೊಂಡರು. ಬೇರೆ ದಾರಿ ಇರಲ್ಲಿಲ್ಲ. ಅವು ವಾರದ ಮೊದಲ ದಿನಗಳಾದ್ದರಿಂದ ಅಶ್ವತ್ಥ ತನ್ನ ಮಗನನ್ನು ಎತ್ತಿಕೊಂಡು ಹೋದನು. +ಬುಧವಾರ ಮಧ್ಯಾಹ್ನ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ತಮ್ಮ ಜೊತೆ ಕಳುಹಿಸಿ ಕೊಡುವಂತೆ ಹಾಜರಿದ್ದು ಬಿಡುತ್ತಿದ್ದರು. +ಹೀಗೆ ಆ ಬಾಲಕನು ಉಭಯಚರವಾಗಿ ಬೆಳೆಯತೊಡಗಿತು. ಜುಟ್ಟು ಮತ್ತು ಕ್ರಾಪಿನ ವಿಷಯ ಉಭಯ ಬಣಗಳಲ್ಲಿ ಭಿನ್ನಾಭಿಪ್ರಯಗಳು ತಲೆದೋರದೆ ಇರಲ್ಲಿಲ್ಲ. ಒಂದು ವಾರದೊಳಗೆ ಜುಟ್ಟು ಮತ್ತು ಕ್ರಾಪು ಅವೆರಡು ತಮ್ಮ ಗಾತ್ರ ಕಳೆದುಕೊಂಡುಬುಬಿಡುತ್ತಿದ್ದವು. ಬಾಲಕನಿಗೆ ತುಂಬ ಫಜೀತಿಯಾಗತೊಡಗಿತು. +ಹೀಗೆ ದಿನಗಳು ಓಡುತ್ತಿರಲಾಗಿ… +ಪಿ.ಡಿ. ಪ್ರಸಾದ್ ಅಶ್ವತ್ಥ್‌ನನ್ನು ಮನೆಗೆ ಕರೆತಿಸುಕೊಂಡು ಆಹಾರ ಪಾನೀಯ ನೀಡಿ ಪ್ರೀತಿ ಪ್ರಕಟಿಸಿದ. ಉಭಯ ಕುಶಲೋಪರಿ ಕುರಿತಂತೆ ವಿಚಾರ ವಿನಿಮಯವಾಯಿತು. +“ಅಶ್ವತ್ಥ್ ನಾರಾಯಣರವರೇ… ಈಗಿರೋ ಮನೆ ಮಾರಬೇಕೂಂತ ಮಾಡೀವಿ… ನಿಮ್ಗೇನಾದ್ರೂ ತಗೊಳ್ಳೋ ಇಚ್ಛೆ ಐತೆ ಏನು?” ಪಿ.ಡಿ. ಪ್ರಸಾದ್ ಪ್ರಸ್ತಾಪಿಸಿದ. +ಮನೆ ಇಲ್ಲದವರಿಗೆಲ್ಲಿಯದು ಮಾನ! +ಅಶ್ವತ್ಥ್ ಇರೋ ವಿಷಯ ಹೆಂಡತಿ ಅಲುಮೇಲು ಬಳಿ ಪ್ರಸ್ತಾಪಿಸಿದ. ತಮ್ಮದೆನ್ನೋ ಮನೆಗೆ ಒಡೆಯರಾಗಬೇಕೆಂಬುದರ ಆಕೆಗೆ ಭಿನ್ನಾಭಿಪ್ರಾಯವಿರಲ್ಲಿಲ್ಲ. ಆದರೆ ಬ್ರಾಹ್ಮಣರಾದ ತಾವು ಶೂದ್ರಾದಿ ಶೂದ್ರರ ಕೇರಿಯೊಳಗೆ ವಾಸಿಸುವುದು ಎಷ್ಟು ಸಾಧು! ಇದಕ್ಕೆ ಪುಜ್ಯರಾದ ಮಾವನವರು ಒಪ್ಪುವರೇ? ಎಂಬ ಸಮಸ್ಯೆಗಳ ಬಗ್ಗೆ ಅಲುಮೆಲು ಮಾತ್ರ ತಲೆ ಕೆದೆಸಿಕೊಂಡಳು. +ಒಂದು ದಿನ ಅಶ್ವತ್ಥ್ ಹೆಂಡತಿಯನ್ನು ತಾಲ್ಲೂಕು ಕೇಂದ್ರವಾದ ಕೂಡ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಪಿ.ಡಿ. ಪ್ರಸಾದ್ ಮುಂತಾದವರಿದ್ದರು. ಅವರು ಹೇಳಿದ ಕಡೆ ಸಂಸ್ಕೃತದಲ್ಲಿ ಸಹಿ ಮಾಡಿದಳು. ಗಂಡನ ಸಹಾಯದಿಂದ ಹೆಬ್ಬೆಟ್ಟು ಒತ್ತುವ ಕಡೆ ಒತ್ತಿದಳು. +ಆಕೆಗೆ ಗೊತ್ತದದ್ದು ಊರಿಗೆ ಮರಳಿದ ಮೇಲೆ! +“ನೀವೆಂಥ ಕೆಲಸ ಮಾಡಿ ಬಿಟ್ಟಿರಲ್ಲ… ಹೋಗಿ ಹೋಗಿ ಮನೆಯನ್ನು ನನ್ನ ಹೆಸರಿಗೆ ಮಾಡಿಸುವುದೇನು?” ಗಂಡನ ಎದೆಯಲ್ಲಿ ಮುಖ ಹುದುಗಿಸಿ ಅತ್ತಳು. +ವಾರದ ಎರಡನೆಯ ಪಾಳೆಯಕ್ಕೆ ಬಂದ ಮೊಮ್ಮಗನಿಂದ ಈ ವಿಷಯ ಶಾಸ್ತ್ರಿಗಳು ತಿಳಿದು ಮುಖವನ್ನು ಯಜ್ಞಕುಂಡ ಮಾಡಿಕೊಂಡರು. +“ಅಗ್ರಹಾರದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಒಳ್ಳೆಯ ಮನೆ ಸಿಗುತ್ತಿತ್ತಲ್ಲ. ಅಂತೂ ಶೂದ್ರರನಡುವೆ ಶಾಶ್ವತವಾಗಿ ಬದುಕಲು ನಿಶ್ಚಯಿಸಿದಿ ಎಂದಂತಾಯಿತು” ಎಂದು ಮಗನ ಮನೆ ಮುಂದೆಯೂ; +“ಎಲವೋ ದುರುಗಪ್ಪನೆಂಬ ಮಾನವನೇ… ನಮ್ಮ ಮಗನಿಗೆ ಆ ಮನೆ ಮಾರಿರೋ ನಿನಗೆ ರೌರವ ನರಕ ಕಾದಿದೆ ನೆನಪಿಟ್ಟುಕೋ” ಎಂದು ಪಿ.ಡಿ. ಪ್ರಸಾದನ ಮನೆ ಮುಂದೆಯೂ ಆರ್ಭಟಿಸಿದರು. +ಅಗ್ರಹಾರದ ತಮ್ಮ ಮನೆಗೆ ಬಂದವರೆ ಹೊಸಮನೆ ತಮ್ಮ ಮಗನಿಗೂ ಅವನ ಕುಟುಂಬದ ಸರ್ವರಿಗೂ ಸರ್ವ ಮಂಗಳ ಉಂಟಾಗಲಿ ಎಂಬ ಉದ್ದೇಶದಿಂದ ಒಂದು ಹೋಮ ಮಾಡಿದರು. +ಹೀಗೆಯೇ ದಿನಗಳು ಓಡುತ್ತಿರಲಾಗಿ… +ಅಶ್ವತ್ಥ್‌ನ ಕಾಲು ಮುರಿದ ಭಾಗದಲ್ಲಿ ಯಮ ಯತನೆ ಕಾಣಿಸಿಕೊಂಡಿತು. ಅದು ಕ್ರಮೇಣ ಯಾವುದೇ ಇಲಾಜಿಗೆ ಬಗ್ಗದೆ ಇಡೀ ದೇಹಕ್ಕೆ ವ್ಯಾಪಿಸಿತು. +ಈ ಡಾಕ್ಟರಿಂದ ಆ ಡಾಕ್ಟರ ಕಡೆ ಅಲೆದಾಡಿದ. ಹತ್ತಾರು ಡಾಕ್ಟರುಗಳು ಬರೆದುಕೊಟ್ಟ ಮಾತ್ರೆ ನುಂಗಿದ್ದಾಯಿತು. ಔಷದ ಕುಡಿದಿದ್ದಾಯಿತು. ಹತ್ತಾರು ವಿವಿಧ ಸೂಜಿಗಳನ್ನು ಮಾಡಿಸಿಕೊಂಡಿದ್ದಾಯಿತು. +ಆಶ್ವತ್ಥ ಹಾಸಿಗೆಯಲ್ಲಿ ನೋವಿನಿಂದ ಹೊರಳಾಡತೊಡಗಿದ. ಅಲುಮೇಲು ಅನ್ನನೀರು ಬಿಟ್ಟು ಗಂಡನ ಶುಶ್ರೂಷೆಗೆಗೆ ತೊಡಗಿದಳು. ’ದೇವರೇ ಗಂಡನ ನೋವನ್ನು ನನಗೆ ವರ್ಗಾಯಿಸು’ ಎಂದು ಬೇಡಿಕೊಂಡಳು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಗಂಡನ ಮಲಮೂತ್ರ ಬಳಿದು ಹೊರಚಲ್ಲತೊಡಗಿದಳು. ಆಕೆಗೆ ಓಣಿಯ ಜನರೂ ಸಹಕರಿಸತೊಡಗಿದರು. ಅವರ ನೋವು ತಮ್ಮ ನೋವು ಎಂದು ಭಾವಿಸಿದರು. +“ಅಮ್ಮಾ ತಾಯಿ… ಯಜಮ್ನ್ರೀಗೆ ಯ್ಯೋಳಿ ಕಳಿಸ್ರಿ… ಇಂಥ ವತ್ತಿನಾಗ ಯಜಮಾನ್ರಾದೋರು ಮನ್ಯಾಗಿರಬೇಕು” ಎಂದು ಕೇರಿಯ ಯಜಮಾನ ಚವುಡಪ್ಪ ಪರಿಪರಿಯಾಗಿ ಕೇಳಿಕೊಂಡ. +“ಬೇಡ ಕಣೇ ಅವರ್ನ ಕರೆಸೋದು ಬೇಡ ಅವರು ಮನಸ್ಸಿಗೆ ತುಂಬ ನೋವು ಮಾಡಿಕೊಳ್ತಾರೆ..” ಎಂದು ಹೆಂಡತಿಯ ಬೇಡಿಕೆಯನ್ನು ರುಗ್ಣಶಯ್ಯೆಯಲ್ಲಿದ್ದ ಅಶ್ವತ್ಥ್ ನಿರಾಕರಿಸಿದ. +ಅದೇ ಹೊತ್ತಿಗೆ ಹೊರಗಡೆ ಗಲಾಟೆಯಾಯಿತು. +ಶಾಸ್ತ್ರಿಗಳು ಹೌಹಾರಿ ಬಂದುಬಿಟ್ಟಿದ್ದರು. +“ಅಶ್ವತ್ಥಾ… ನಮ್ಮ ಮಗ ಅಶ್ವತ್ಥ್ ನಾರಾಯಣನೇ… ನಾನು ನಿನ್ನ ಪಾಲಿಗೆ ಇಲ್ಲಾಂತ ತಿಳ್ಕೊಂಡಿ ಎನೋ?” ಎಂದು ಒಳಗಡೆ ಬಂದರು. +ಮೂಳೆ ತೇಲಿರುವ ಮಗನನ್ನು ಉತ್ಕಂಠಯಿಂದ ತಬ್ಬಿಕೊಂಡರು. +ಅವರು ಆ ಕ್ಷಣದಿಂದ ಅವರು ಅಲ್ಲಿಯೇ ಉಳಿದುಬಿಟ್ಟರು. +ಡಾಕ್ಟರ್ ರೋಗಿಯನ್ನು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಕೂಡಲೆ ಕರೆದೊಯ್ಯುವಂತೆ ಖಡಾಖಂಡಿತವಾಗಿ ಸೂಚಿಸಿದರು. +ತಮ್ಮ ಮಗನನ್ನು ಉಳಿಸಿಕೊಳ್ಳುವುದು ತಂದೆಯಾದ ತಮ್ಮ ಕರ್ತವ್ಯವೆಂದು ಬಗೆದರು. ಅಂದು ರಾತ್ರಿಯೇ ಅಗ್ರಹಾರದ ತಮ್ಮ ಪಿತ್ರಾರ್ಜಿತ ಮನೆಯನ್ನು ಕೊಳ್ಳುವಂತೆ ಅಷ್ಟಾವಧಾನಿ ಶ್ರೀನಿವಾಸ ರಾಮಾನುಜರನ್ನು ಕೇಳಿಕೊಂಡರು. ಕಾರಣ ಅವರ ಮಗ ಸರ್ಕಾರದ ದೊಡ್ಡ ಹುದ್ದೆಯಲ್ಲಿದ್ದ. ಸಾಕಷ್ಟು ಸಂಪಾದಿಸಿದ್ದ. ಇಂಥದೊಂದು ಮನೆಯನ್ನು ತಮ್ಮದಾಗಿಸಿಕೊಳ್ಳಲು ಅಷ್ಟಾವಧಾನಿಗಳು ಅನೇಕ ರೀತಿ ತಂತ್ರಗಳನ್ನು ಪ್ರಯೋಗ ಮಾಡಿ ವಿಫಲರಾಗಿದ್ದರು. +ತಮ್ಮಷ್ಟೇ ವಯಸ್ಸಿನವರಾದ ಪಂಡಿತ ಪರಮೇಶ್ವರ ಶಾಸ್ತ್ರಿಗಳು ಮಾಡಿಕೊಂಡ ಮನವಿಯನ್ನು ಸಹಾನುಭೂತಿಯಿಂದ ಕೇಳಿದರು. ಅಶ್ವತ್ಥ್‌ನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅವರೂ ಕಳವಳಗೊಂಡರು. +“ಮನೆ ವಿಷಯ ನಂತರ ಯೋಚಿಸೋಣ.. ಈಗ ಹಣ ಎಷ್ಟು ಬೇಕಾಗಿದೆ ಹೇಳಿ” ಸೊಂಟದಿಂದ ಬೀಗದ ಕೀ ಗೊಂಚಲು ತೆಗೆಯುತ್ತ ಕೇಳಿದರು. +ಶಾಸ್ತ್ರಿಗಳು ಎಷ್ಟು ಒತ್ತಾಯಿಸಿದರೂ ಅವರು ಮನೆ ಬರೆಸಿಕೊಳ್ಳಲಿಲ್ಲ. ಹಣಕ್ಕೆ ಸಂಬಂಧಿಸಿದಂತೆ ರಸೀತಿಯನ್ನೂ ಪಡೆಯಲಿಲ್ಲ. ನೋಟಿನ ಎರಡು ಕಂತೆಗಳನ್ನು ನೀಡಿದರು. +“ಅಶ್ವತ್ಥ್ ಕೇವಲ ನಿಮ್ಮೊಬ್ಬರ ಮಗ ಅಲ್ಲ… ಅವನು ನಮ್ಮೆಲ್ಲರ ಹುಡುಗ ಅವನು ಪೂರ್ಣ ಗುಣಮುಖನಾಗೋದು ನಮಗೆಲ್ಲ ಮುಖ್ಯ… ಹಣ ಮುಖ್ಯವಲ್ಲ… ಸಂಕೋಚ ಪಡದೆ ನಮ್ಮಿಂದ ಎಷ್ಟು ಹಣ ಬೇಕಾದರೂ ತಾವು ಒಯ್ಯಬಹುದು ಶಾಸ್ತ್ರಿಗಳೇ?” ಎಂದು ಅವರ ಎರಡೂ ಕೈಗಳನ್ನು ಹಿಡಿದು ಕೇಳಿಕೊಂಡರು. +ಸನಾತನತೆಯ ವಿಷಯದಲ್ಲಿ ಶಾಸ್ತ್ರಿಗಳು ಸಡಿಲಗೊಂಡಿರಿವುದರಿಂದ ಅಗ್ರಹಾರದ ಬಹುತೇಕ ಸದಸ್ಯರು ಸಂತಸಗೊಂಡರು. +ಅಶ್ವತ್ಥನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಅದೇ ಹೊತ್ತಿಗೆ ಗೋವಿಂದೇಗೌಡರು ಅಶ್ವತ್ಥ್‌ನನ್ನು ನೋಡಿಕೊಂದು ಹೋಗಲೆಂದು ಕಾರಿನಲ್ಲಿ ಬಂದರು. ತಮ್ಮಿಂದೇನಾಗಬೇಕು ಹೇಳಿ ಎಂದು ಕೇಳಿಕೊಂಡರು. ಹಣದ ಹೊಂದಾಣಿಕೆ ಮಾಡಿಕೊಂಡಿರುವುದು ತಿಳಿದು ಬೇಸರ ವ್ಯಕ್ತಪಡಿಸಿದರು. +“ಅಶ್ವತ್ಥನನ್ನು ಕಾರಿನಲ್ಲಿ ಕರೆದೊಯ್ಯಿರಿ” ಎಂದು ಹೇಳಿ ತಮ್ಮ ಅಂಬಾಸಿಡರ್ ಕಾರನ್ನು ಬಿಟ್ಟು ಹೋದರು. +ಆ ಕಾರಿನಲ್ಲಿ ಹೊರಟರು. ಬೆಂಗಳೂರು ತಲುಪಿದಾಗ ಬೆಳಗಾಗಿತ್ತು. ದೊಡ್ಡಾಸ್ಪತ್ರೆಗೆ ದಾಖಲು ಮಾಡಲಾಯಿತು. ದೊಡ್ಡ ಡಾಕ್ಟರ್ ಪ್ರಭಾಕರ್ ಅಶ್ವತ್ಥ್‌ನನ್ನು ಹುಡುಕಿಕೊಂಡು ಬಂದರು. ಆ ಒಳಗಾಗಿ ಅಷ್ಠಾವಧಾನಿಗಳು ತಮ್ಮ ಮಗ ವೇದವ್ಯಾಸನಿಗೆ ಈ ವಿಷಯ ತಿಳಿಸಿದ್ದರು. ಕೂಡಲೆ ವೇದವ್ಯಾಸ ತನ್ನ ಮಿತ್ರ ಪ್ರಭಾಕರನ್ನು ಸಂಪರ್ಕಿಸಿದ್ದ. +ಅಶ್ವತ್ಥನನ್ನು ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ ಸೇರಿಸಿಕೊಳ್ಳಲಾಯಿತು. ಪರಿಣಿತ ವೈದ್ಯರೆಲ್ಲ ರೊಗಿಯ ತಪಾಸಣೆ ಮಾಡಿದರು. ನಂಜು ದೇಹದಾದ್ಯಂತ ವ್ಯಾಪಿಸಿರುವುದನ್ನು ತಿಳಿದು ಖೇದಗೊಂಡರು. ಕೂಡಲೆ ಆಸ್ಪತ್ರೆಗೆ ಸೇರಿಸಿದ್ದಲ್ಲಿ ಇಷ್ಟೊಂದು ವಿಷಮಾವಸ್ಥೆ ತಲುಪುತ್ತಿರಲಿಲ್ಲವೆಂದರು. ಆಶ್ವತ್ಥ್ ಬದುಕುವ ಭರವಸೆ ನೀಡಲಿಲ್ಲ. +ಶಾಸ್ತ್ರಿಗಳನ್ನು, ಅಲುಮೇಲಮ್ಮನನ್ನು ವೈದ್ಯರು ಪರಿಪರಿಯಾಗಿ ಸಂತೈಸಿದರು. ಅವರು ಯಾವುದೇ ಶುಲ್ಕ ಪಡೆಯಲಿಲ್ಲ. ವೇದವ್ಯಾಸನ ಕಡೆಯವರೆಂದರೆ ಮುಗಿಯಿತು. ’ದೇವರ ಮೇಲೆ ಭಾರ ಹಾಕಿ ಬಿಡಿ’ ಎಂದು ಹೇಳಿ ಕಳುಹಿಸಿದರು. +ಊರಿಗೆ ಮರಳುವಾಗ ಅಶ್ವಥ್ ಕಾರು ನಿಲ್ಲುವಂತೆ ಸಂಜ್ಞೆ ಮಾಡಿದ. ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ. ತಂದೆಯನ್ನು ದೂರ ಹೋಗಲು ಹೇಳಿದ. ಅವರು ಅಲ್ಲಿ ಬಿಕ್ಕುತ್ತ ನಿಂತರು. +ಅಶ್ವತ್ಥ್ ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ, ಇನ್ನೆರಡು ಬೊಗಸೆಯಲ್ಲಿ ಆಕೆಯ ಮುಖ ಹಿಡಿದುಕೊಂಡ. ದಿಟ್ಟಿಸಿದ. ಆಳಕ್ಕಿಳಿದಿದ್ದ ಆಕೆಯ ಕಣ್ಣುಗಳಿಂದ ಬುಳುಬುಳನೆ ಹನಿ ಉದುರಿತು. ಅವನ ಮುಖ ತೊಯ್ದಿತು. ಮುದ್ದು ಕೊಡಲು ಹೇಳಿದ, ಕೊಟ್ಟಳು, ತಾನೂ ಕೊಟ್ಟ. +“ಅಲೂ… ನಂದೊಂದು ಮಾತು ನಡೆಸಿಕೊಡ್ತೀಯಾ? ಆಕೆಯ ತಲೆ ನೇವರಿಸಿದ. +“ಅದೇನು ಕೇಳಿ ಮೊದ್ಲು” +“ನನಗಿನ್ನೂ ಮೂವತ್ತು ದಾಟಿಲ್ಲ…” +“ಏನೀಗ?” +“ನಾನು ಸಾಯೋದಂತು ಖಚಿತ. ನೀನು ಬ್ರಹ್ಮಣ ವಿಧವೆ ಥರ ಬದುಕಬೇಕು. ನಿನ್ನ ತುಂಬ ಪ್ರೀತಿಸೋರನ್ನಾರನ್ನಾರನ್ನಾದ್ರು …” ಮುಂದಿನ ಮಾತು ಹೊರಬರದಂತೆ ಗಂಡನ ಬಾಯಿ ಮುಚ್ಚಿದಳು. +“ನೀವು ಹೀಗೆ ಮಾತಾಡೋದಾ?… ನಿಮ್ಮ ಮುಂದೆ ಕಣ್ಣು ಮುಚ್ಚೋ ಆಸೆ ನನ್ನದು. ಜ್ವರದ ತಾಪದಲ್ಲಿ ತೋಚಿದಂತೆ ಮತಾಡಬೇಡಿ …ಮಾತಾಡಿದ್ರೆ ನನ್ನಾಣೆ!” ಗಟ್ಟಿಯಾಗಿ ಗಂಡನನ್ನು ತಬ್ಬಿಕೊಂಡಳು. +ಕಕ್ಕಸ್ಸಿಗೆ ಹೋಗಿದ್ದ ಚಾಲಕ ಬಂದ. ಹೆಜ್ಜೆಗೊಂದು ನಿಟ್ಟುಸಿರು ಇಡುತ್ತ ಶಾಸ್ತ್ರಿಗಳು ಬಂದರು. +“’ದೇವರೇ’ ತಂದೆಯಾದ ನನ್ನ ಕಣ್ಣ ಮುಂದೆ ನನ್ನ ಮಗ ಸಾವಿನೊಂದಿಗೆ ಹೋರಾಡುತ್ತಿರುವುದನ್ನು ಹೇಗೆ ನೋಡಲಿ… ನಿನ್ನ ಸೇವೆ ಮಾಡಿದ ನಮಗೇ ಇಂಥ ಶಿಕ್ಷೆ ನೀಡಿದ್ದೀಯ… ಸಾವು ಕೊಡೋದಿದ್ದ್ರೆ ಮೊದಲು ಈ ವೃದ್ಧನಿಗೆ ಕೊಡು” ಕಣ್ಣು ಮುಚ್ಚಿದ ಅವರ ಮನಸ್ಸು ಒಂದೇಸಮನೆ ಚೀರುತ್ತಿತ್ತು. +ಊರು ಮುಟ್ಟಿದ ದಿನವೆಲ್ಲ ಅಶ್ವತ್ಥ್ ತುಂಬ ಲವಲವಿಕೆಯಿಂದ ಇದ್ದ. ಮಗನೊಂದಿಗೆ ಏನೆಲ್ಲ ಮಾತಾಡಿದ. ಹೆಂಡತಿಯ ಮುಡಿಯನ್ನು ಪ್ರೀತಿಯಿಂದ ಸವರಿದ. “ಅಪ್ಪಾಜಿ… ನಿನ್ ಜೊತೆ ಮಾತಾಡುವುದಿದೆ” ಎಂದ. ಶಾಸ್ತ್ರಿಗಳು ಹತ್ತಿರ ಕೂತುಕೊಂಡರು. “ಹೀಗೆಲ್ಲ ಮಾತಾಡಿ ಹೊಟ್ಟೆ ಉರಿಸಬೇಡವೋ” ಅಂದರು. +“ಚತುರ್ವೇದಗಳನ್ನು ಅರಗಿಸಿಕೊಂಡಿರೋರ ಹೊಟ್ಟೆ ಉರಿಯೋದೆಂದ್ರೇನು? ನಗಾಡಿದ. +“ಅಪ್ಪಾಜಿ.. ಶಾಮುನ ಬಗ್ಗೆ ನಾವಿಬ್ರು ಎಷ್ಟು ಜಗಳಾಡಿದ್ವಿ ಅಲ್ವಾ?” +“ಹೌದಪ್ಪಾ” +“ಅವನು ಮಾಮೂಲು ಜನರಂತೆ ಬದುಕಬೇಕು. ಅವನು ಸರ್ಕಾರಿ ನೌಕರನಾಗಬೇಕು. ಪ್ರಾಮಾಣಿಕರೆಯಿಂದ, ದಕ್ಷತೆಯಿಂದ ದುಡಿಬೇಕು” +“ಹಾಗೇ ಆಗಲೋ!” +“ಅಪ್ಪಾಜಿ… ನಂಗೆ ಅಂಟಿ ಕೂತ್ಕೊಳ್ಳಿ” ಎಂದ. ತಾನೇ ತಂದೆಯ ತೊಡೆಮೇಲೆ ತಲೆ ಇಟ್ಟು ಮಲಗಿದ. +“ನೀನೊಂದು ಮಾತು ಹೇಳಿದ್ದಿ. ನೆನಪಿದೆಯಾ? +“ಇಲ್ಲ ಕಣಪ್ಪಾ!” +“ನೀವು ಸತ್ರೆ ನಿಮ್ ಕಳೇಬರಕ್ಕೆ ಅಗ್ನಿ ಸಂಸ್ಕಾರ ಮಾಡೋದು ಶಾಮನೆ! ಅಲ್ವೆ!” ಅಶ್ವತ್ಥ್‌ಗೆ ನಗು ಬಂತು. ಜೋರಾಗಿ ನಗತೊಡಗಿದ. +ಶಾಸ್ತ್ರಿಗಳ ಕಣ್ಣಲ್ಲಿ ನೀರು ತುಂಬಿಕೊಂಡರು. ಅಡುಗೆ ಮನೆಯಿಂದ ಮಗನೊಂದಿಗೆ ಅಲುಮೇಲು ಓಡಿಬಂದಳು. ತನ್ನ ಗಂಡ ಎಷ್ಟೊಂದು ಸಂತೋಷವಾಗಿದ್ದಾರಲ್ಲ… ದೇವರೇ ಇವರು ಹೀಗೇ ನಗುತ್ತಿರಲಿ! +ನಗೆ ಆರೋಹಣ ಹಂತದಲ್ಲಿಯೇ ಅಂತರ್ಧಾನವಾಯಿತು. +ಅದುವರೆಗೆ ಎಲ್ಲರ ಕರುಳುಗಳಲ್ಲಿ ದುಖಃ ಇಟ್ಟಿದ್ದ ಮೊಟ್ಟೆಗಳೆಲ್ಲ ಮರಿಮಾಡಿದವು… ಅವು ಹೊರಬಂದದ್ದಾಗಲೀ; ರೆಕ್ಕೆ ಮೂಡಿದ್ದಾಗಲೀ; ಕೊಕ್ಕೆ ಮಸೆದದ್ದಾಗಲೀ’ ಬಿಸಿಬಿಸಿ ಕಣ್ಣೀರಿನಲ್ಲಿ ಈಜಾಡಿದ್ದಾಗಲೀ; ತಡವಾಗಲಿಲ್ಲ. +ಗಂಡ ತೀರಿಕೊಂಡಂದಿನಿಂದ ಕೇಶ ಮುಂಡನ ಮಾಡಿಸಿಕೊಂಡು ನಾರುಮಡಿಯನುಟ್ಟು ಜಪಮಾಲೆ ಹಿಡಿದು ಅಲುಮೇಲು ಕೋಣೆಯಲ್ಲಿ ಕುಳಿತುಬಿಟ್ಟರೆಂದರೆ ಮುಗಿಯಿತು. ಹೊರಬರುತ್ತಿದ್ದುದೇ ಕಡಿಮೆ. ಹೊರಬಂದರೂ ಮುಗುಳ್ನಗೆ ದೂರದ ಮಾತು. +ಆದ್ದರಿಂದ ಪರಮೇಶ್ವರ ಶಾಸ್ತ್ರಿಗಳೇ ಮೊಮ್ಮಗನ ಯವತ್ತೂ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರು. +ಆವರ ಜವಾಬ್ದಾರಿಗಳು ಒಂದೇ ಎರಡೇ. +ಮೊಮ್ಮಗ ಶಾಮುವನ್ನು ಭ್ರಷ್ಟಾಚಾರದ ವಾಸನೆ ಇಲ್ಲದ ಪ್ರಾಮಾಣಿಕ ಸರ್ಕಾರಿ ನೌಕರನನ್ನಾಗಿ ಮಾಡಬೇಕಿತ್ತು. ಇದು ತಮ್ಮಿಂದ ಸಾಧ್ಯವಿಲ್ಲದ ಮಾತು. +ಮೊಮ್ಮಗ ಶಾಮು ಎಂದರೆ ಸಾಮಾನ್ಯವೇನು? ಸಾಕ್ಷಾತ್ ತಮ್ಮ ತಂದೆಯವರ ಅಪರಾವತಾರ. ಸಂಸ್ಕೃತ ಕಲಿಸಿ ವೇದೋಪನಿಷತ್ತು; ದ್ವಾದಶ ಪುರಾಣಗಳ ಪರಿಚಯವನ್ನೆಲ್ಲ ಮಾಡಿಕೊಡಬೇಕು. +ಆದ್ದರಿಂದ ತಮ್ಮ ಮೊಮ್ಮಗನ ಕುರಿತಂತೆ ಶಾಸ್ತ್ರಿಗಳಾಗಿದ್ದ ಮಮಕಾರವಾಗಲೀ ಜವಾಬ್ದಾರಿಯಾಗಲೀ ಬಹಳ. ಕ್ರಾಪಿನೊಳಗೆ ಗಂಟಿನ ಮೆಲೆ ಗಂಟು ಹಾಕಿಕೊಂಡು ಜುಟ್ಟು ಯಾವ ಪ್ರಕಾರವಾಗಿ ಕ್ರಾಪಿನಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿದೆಯೋ ಹಾಗೆ ಶಾಮು ಶಾಸ್ತ್ರಿಗಳ ಕಣ್ಣಿಗೆ ಸಾಧ್ಯವಾದಷ್ಟು ಬೀಳದ ಹಾಗೆ ನೋಡಿಕೊಳ್ಳುತ್ತಿದ್ದನು. ಹೆಜ್ಜೆಯ ಕುಲುಕಿಗೆ ಲಟಕ್ಕನೆ ಕ್ರಾಪಿನಿಂದ ಹೊರಗಡೆ ಜುಟ್ಟು ಕಾಣಿಸಿಕೊಳ್ಳುವ ರೀತಿಯಲ್ಲಿ ಶಾಸ್ತ್ರಿಗಳು ದುತ್ತನೆ ಕಾಣಿಸಿಕೊಂದು ಬಿಡುತ್ತಿದ್ದರು. ಶುಕ್ರೋದಯಕ್ಕೂ ಪೂರ್ವದಲ್ಲಿ ಏಳಿಸುತ್ತಿದ್ದರು. ತಣ್ಣಿರಿನ ಸ್ನಾನ ಮಾಡಿಸುತ್ತಿದ್ದರು. ತಮ್ಮ ಜೊತೆ ಗಾಯತ್ರಿ, ಪ್ರಾಣಾಯಮಕ್ಕೆ ಕೂಡ್ರಿಸಿಕೊಳ್ಳುತ್ತಿದ್ದರು. ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತಕಾರಕಾಃ ಎಂದು ಗಟ್ಟಿಯಾಗಿ ಹೇಳಿಸುತ್ತಿದ್ದರು. ತದನಂತರ ಪುರುಷ ಸೂಕ್ತ ಅನಂತರ ಅಮರ ಸಿಂಹ , ಪಾಣಿನಿ, ನಾರದಸ್ಮೃತಿ ಮುಂತಾದುವುಗಳನ್ನು ಒಂದು ರೌಂಡು ಮುಗಿಸಲೇಬೇಕಿತ್ತು. ಅನಂತರ ಇಂಗ್ಲಿಷು ಹಾಳುಮೂಳು ಇತ್ಯಾದಿ. ಅನಂತರ ಅವನು ಸೇವಿಸಲೆಂದೇ ಶಾಸ್ತ್ರಿಗಳು ತಂದು ಕಟ್ಟಿದ್ದ ಗೋಮಾತೆಯ ಉಪಚಾರ, ನಂತರ ಜುಟ್ಟು ಮರೆಮಾಚದಂತೆ ತೋಪಿ ಧರಿಸಬೇಕು. ತದನಂತರ ಮೋಕ್ಷ ಪ್ರಾಪ್ತಿಗೆ ಸಾದಕ ಭಾದಕ ತತ್ವ ವಿಚಾರಗಳನ್ನು ಯೋಚಿಸುತ್ತ ಓಣಿಯ ಹಿಂದಿನಿಂದ ಊರ ಹೊರವಲಯದ ಮೂಲಕ ಗ್ರವಂಡು ಪ್ರವೇಶಿಸಿ ಸ್ಕೂಲು ತಲುಪಬೇಕು. ತರಗತಿಯಲ್ಲಿ ದುಷ್ಟರ ಸಂಗ ಮಾಡಬಾರದು. ಹೆಣ್ಣು ಮಕ್ಕಳ ಕಡೆ ಕಣ್ಣೆತ್ತಿ ನೋಡಬಾರದು, ಪರ ಧನ ಪರ ವಸ್ತುಗಳನ್ನು ಆಸೆ ಪಡಬಾರದು ಇತ್ಯಾದಿ ಇತ್ಯಾದಿ ನೀತಿ ನಿಯಮಗಳನ್ನು ಮೊಮ್ಮಗ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯತ್ನಿಸುತ್ತಿದ್ದರು. +ಪ್ರೌಢ ಶಾಲೆಗೆ ಸೇರಿದ ಪ್ರಥಮದಲ್ಲಿ ಅವನು ತಾತನವರು ರೂಪಿಸಿದ್ದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಎಂಬುದರಲ್ಲಿ ಅನುಮಾನವೇ ಇಲ್ಲ. ವಿದ್ಯಾ ವಿನಯ ಹೇತುಂ ಎಂಬಂತಿದ್ದ ಇಂದ್ರಿಯ ಜಯಃ ಕಾಮಕ್ರೊಧ ಲೋಭ ಮಾನ ಮದಹರ್ಷತ್ಯಾಗಾತ್ ಕಾರ್ಯಹ ಮಾಡಿದವನಂತಿದ್ದ. ತಲೆ ತಗ್ಗಿಸಿಕೊಂಡು ಕೂಡ್ರುತ್ತಿದ್ದ. ಮೇಷ್ಟ್ರು ಕೇಳುವ ಪ್ರಶ್ನೆಗೆ ಗಿಳಿಯಂತೆ ಉತ್ತರ ಕೊಡುತ್ತಿದ್ದ. ಆತನಿದ್ದ ತರಗತಿ ಒಣ ಒಣ ಭಣ ಭಣವಿರಲಿಲ್ಲ. ತರಗತಿ ಶಿಖಿರ ಪ್ರಾಯದಂತೆ ಹುಡುಗಿಯರುದ್ದರು. ಹುಡುಗಿಯರಿಗೆ ಕಳಸಪ್ರಾಯವಾದಂಥ ಚಿಗುರುಮೊಲೆ +ಗಳಿದ್ದವು. ತಮ್ಮ ಮೊಲೆಗಳಿಗೆ ಗೌರವ ಕೊಡುವ ನಿಮಿತ್ತ ಅವರಾರೂ ನೆಲ ನೋಡುತ್ತಿರಲಿಲ್ಲ. ಹುಡುಗಿಯರ ಕಡೆ ಹುಡುಗರು ನೋಡುತ್ತಿದ್ದರು. ಕೀಟಲೆ ಮಾಡುತ್ತಿದ್ದರು. ಆದ್ದರಿಂದ ಹುಡುಗಿಯರಿಗೆ ಖುಷಿಯಾಗುತ್ತಿತ್ತು. ಪ್ರತಿಯೊಬ್ಬರೂ ತಾವೇ ತ್ರಿಲೋಕ ಸುಂದರಿಯರೆಂದು ಬೀಗುತ್ತಿದ್ದರು. ಪಿಳ್ಳಂಗೋವಿ ಜುಟ್ಟಿನ ಶಾಮಾಶಾಸ್ತ್ರಿಯ ಗಮನವನ್ನು ಅವರು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಕಣ್ಣೆತ್ತಿ ನೋಡುತ್ತಿಲ್ಲ. ನೋಟು ಪುಸ್ತಕ ಮುಖಕ್ಕೆ ಅಡ್ಡ ಇರಿಸಿಕೊಂಡು ಅವರ ಕಾಲುಗಳ ಮೀನ ಖಂಡ ನೋಡುತ್ತಿದ್ದ. ಆಗ ಅವನ ಮೈ ಬಿಸಿಯಾಗುತ್ತಿತ್ತು. ಬಾಯಿ ಒಣಗಿಬಿಡುತ್ತಿತ್ತು. ಮತ್ತೆ ಮತ್ತೆ ನೋಡಬೇಕೆಂಬಾಸೆಯಾಗುತ್ತಿತು. ಹುಡುಗಿಯರ ಕಡೆ ನೋಡುವವರ ಬಗ್ಗೆ; ಅವರ ಕುರಿತು ಮಾತನಾಡುವವರ ಬಗ್ಗೆ ಅವನಿಗೆ ಭಾರಿ ಸಿಟ್ಟು ಬರುತ್ತಿತ್ತು. ಯಾಕೆಂದರೆ ಅವನು ಆ ಸ್ಕೂಲಲ್ಲಿದ್ದ ಎಲ್ಲಾ ತರಗತಿಯ ಹುಡುಗಿಯರನ್ನು ಪ್ರೀತಿಸುತ್ತಿದ್ದ. +ಇಂಥ ಸಭ್ಯಸ್ಥನಾದ ಅವನು ತನಗೆ ಗೊತ್ತಿಲ್ಲದಂತೆ ಒಂದು ಘಟನೆಗೆ ಸಿಲುಕಿಕೊಂಡ. ಒಂದು ಮಟ ಮಟ ಮಧ್ಯಾನ್ಹ ಗಣಿತದ ಮೇಸ್ಟ್ರು ವೆಂಕಣ್ಣಾಚಾರ್‌ರವರ ಮನೆಗೆ ಹೋದ. ಗಣಿತದ ಸಮೀಕರಣ ಅವನ ತಲೆ ತಿನ್ನುತ್ತಿತ್ತು. +ಮನೆ ಏನೋ ತಲುಪಿದ. ಬಾಗಿಲು ಮುಚ್ಚಿತ್ತು. ಹಿತ್ತಲ ಬಾಗಿಲಿಗೆ ಹೋದ. ಅದೂ ಮುಚ್ಚಿತ್ತು. ಕದನ ಕುತೋಹಲಿಯಾದ ಅವನು ಕಿಂಡಿಯಲ್ಲಿ ಇಣಿಕಿ ನೋಡಿದ. ವೆಂಕಣ್ಣ ಮಾಸ್ತರು ಜಲಜಾಕ್ಷಿಯದೇ ಆದ ಸಮೀಕರಣ ಬಿಡಿಸುತ್ತಿದ್ದರು. ಅಂಥ ಸಮೀಕರಣವನ್ನು ತನಗೂ ಬಿಡಿಸಬೇಕೆಂಬಾಸೆ. ಒಂದು ಕ್ಷಣದಲ್ಲಿ ನೀರುನೀರಾಗಿ ಬಿಟ್ಟ. ಮರಳಿದ ನಂತರ ಅವನು ಮಾಡಿದ ಘನ ಕಾರ್ಯವೆಂದರೆ – +ಹಾಸ್ಟೆಲ್‌ಗೆ ಹೋದವನೆ ಇದ್ದಿಲು ಚೂರನ್ನು ತೆಗೆದುಕೊಂಡ ಬಂದ. ಶಾಲೆಯ ಟೀನೋಪಾಲ್‌ನಲ್ಲಿ ಅದ್ದಿದಂಥ ಗೋಡೆಗಳು “ನನ್ನ ಮೇಲೆ ಬರೆ ಬಾ ನನ್ನ ಮೇಲೆ ಬರೆ ಬಾರೋ ಗಂಡಸೇ” ಎಂದು ಆಹ್ವಾನಿಸಿದಂತೆ ಭಾಸವಾಯಿತು. ಅರೆ ಇವರು ಪುರುಷತ್ವಕ್ಕೆ ಸವಾಲು ಎಸೆಯುತ್ತಿರುವವರಲ್ಲ. ಎಂದು ಸವಾಲು ಸ್ವೀಕರಿಸಿದ. ತಾನು ಗುಟ್ಟಗಿ ಪ್ರೀತಿಸುತ್ತಿದ್ದ ಜಲಜಾಕ್ಷಿಯ ಸಮೀಕರಣಕ್ಕೆ ಮೇಸ್ಟ್ರಾದ ವೆಂಕಣ್ಣಾಚಾರ್ ಕೈ ಹಾಕುವುದೆಂದರೇನು? ಮೇಸ್ಟ್ರು ತಂದೆಗೆ ಸಮಾನ; ಹೀಗೆ ಅವನಲ್ಲಿ ವಿದುರ ನೀತಿಗೆ ಬರವಿರಲ್ಲ. +ವೆಂಕಣ್ಣಾಚಾರ್ ಮತ್ತು ಜಲಜಾಕ್ಷಿ ಬಗ್ಗೆ ಗೋಡೆಗಳ ಮೇಲೆಲ್ಲ ಬರೆದುಬಿಟ್ಟ. ಅದು ಮರು ದಿನ ದೊಡ್ಡ ಸುದ್ದಿಯಾಗಿ ಬಿಟ್ಟಿತು. ಎಲ್ಲರ ಬಾಯಲ್ಲೂ ಆ ಪ್ರೇಮ ಪ್ರಕರಣದ ಸುದ್ದಿಯೇ. ವೆಂಕಣ್ಣಾಚಾರ್ ಸಹೋದ್ಯೋಗಿಗಳಂತೂ ಈ ಪ್ರೇಮ ಪ್ರಕರಣದ ದುರ್ಲಾಭ ಪಡೆಯ ತೊಡಗಿದರು. +ಜಲಜಾಕ್ಷಿಯನ್ನು ಸ್ಟಾಫ್ ರೂಮಿಗೆ ಕರೆಸುವುದು, ಕೈಯಿಂದ ಸವರುತ್ತ ಸಮಾಧಾನ ಪಡಿಸುವ ನಾಟಕ ಆಡುವುದು. ಆ ದುರುಳ ವೆಂಕಣ್ಣನ ಭಾರವನ್ನು ಹೂವು ಗಾತ್ರದ ನೀನು ತಡೆದುಕೊಂಡಿದ್ದೇ ಹೆಚ್ಚು ಎಂದು ಲೊಚಗುಟ್ಟುವುದು… ಇತ್ಯಾದಿ… ಇತ್ಯಾದಿ. +ಎಲ್ಲರೂ ವೆಂಕಣ್ಣ ಮೆಡಿಕಲ್ ಲೀವ್ ಗುಜರಾಯಿಸಿ ತಲೆ ಮರೆಸಿಕೊಳ್ಳಬಹುದೆಂದು ಬಗೆದಿದ್ದರು. ಆದರೆ ಅಂದು ಅರ್ಧ ಗಂಟೆ ಮುಂಚಿತವಾಗಿ ಹಾಜರಿ ಪುಸ್ತಕದಲ್ಲಿ ಸಹಿ ಗೀಚಿ ಮೇಸೆ ತಿರುವಿದ. +ನನ್ನ ಶಾಟಕ್ಕೆ ಸಮ… ಬೋಳಿ ಮಕ್ಳು… ಡಾಣಿ ಮಕ್ಳು ಅಂತ ಇಡಿ ಸ್ಟಾಫ್ ಮೇಲೆ ವಾಗ್ ಯುದ್ಧ ಘೋಷಿಸಿಬಿಟ್ಟ… ಪ್ರತಿ ತರಗತಿಗೆ ಹೋಗಿ ’ಯಾವ ಸೂಳ್ಯಾ ಮಕ್ಳು ಬರೆದದ್ದು ಅವರಿಗೇನು ಅಕ್ಕ ತಂಗೇರು ಇಲ್ವೇನು ಹಂಗೆ ಹಿಂಗೆ ಅಂತ ಉಚಿತೋಪನ್ಯಾಸ ನೀಡಿದ. +ಶಾಮ ಎಷ್ಟು ಬುದ್ದಿವಂತನೆಂದರೆ ಸಹಪಾಠಿಗಳು ಉಬ್ಬಿಸಿದ್ದಕ್ಕೆ ಉಬ್ಬಿ ತಾನೇ ಬರೆದದ್ದು ಅಂತ ಹೇಳಿಬಿಡಬೇಕೆ? ಅದೂ ಒಂದು ಸುದ್ದಿಯಾಯಿತು. ಸಂಸ್ಕೃತ ವಿದ್ವಾಂಸರಾದ ಪರಮೇಶ್ವರ ಶಾಸ್ತ್ರಿಗಳ ಏಕಮಾತ್ರ ಮೊಮ್ಮಗ ಇಂಥ ಕೆಲಸ ಮಾಡುತ್ತಾನೆಂದರೆ ನಂಬಲಿಕ್ಕೆ ಹೇಗೆ ಸಾಧ್ಯ! ಮಾಡಿದ್ದರೆ ಗ್ರಹಗತಿಗಳ ಪ್ರಭಾವವಿರಬಹುದು. +ಮರುಳಸಿದ್ದಪ್ಪ ಹುಲಿಕುಂಟಾಚಾರ್ರಂಥ ಸಜ್ಜನಿಕೆ ಹೆಸರಾದವರು ಅಲೋನಾಗಿ ಶಾಮನನ್ನು ಕರೆಸಿಕೊಂಡು, ಯಾರು ಮೇಲಿದ್ದರು! ಯಾರು ಕೆಳಗಿದ್ದರು ಎಂದು ಪೂಸಿ ಹೊಡೆದು ಕೇಳಿದರು. ವರ್ಣಿಸಬೇಕೆಂದು ಅವನ ನಾಲಿಗೆಯೂ ಚುಟಗುಡುತ್ತಿತ್ತು. ನೋಡಿದ ಸಂಗತಿ ಬಗ್ಗೆ ಗುಟ್ಟಾಗಿ ಕವಿತೆ ಕೂಡ ಬರೆದಿದ್ದ. ನೋಡಿದ ಸಂಗತಿಗೆ ಗರಮ್ ಮಸಾಲೆ ಹಚ್ಚಿ ಹೇಳಿಬಿಟ್ಟ. ಕೇಳಿ ಮೇಷ್ಟ್ರುಗಳಿಗೆ ’ವಯಸ್ಕರಿಗೆ ಮಾತ್ರ’ ಸಿನೆಮಾ ನೋಡಿದಷ್ಟು ಸಂತೋಷವಾಯಿತು. +ತರಗತಿಗೆ ಬಿರುಗಾಳಿಯಂತೆ ನುಗ್ಗಿದ ವೆಂಕಣ್ಣ ಶಾಮನ ಕ್ರಾಪಿನಲ್ಲಿ ಜುಟ್ಟು ಹುಡುಕಿ ತೆಗೆದು ಉಡದಂತೆ ಹಿಡಿದು ಅಲ್ಲಾಡಿಸಿಬಿಟ್ಟರು. ನೀನೇನು ಸ್ಕೂಲಿಗೆ ಬರೋದು ಓದೋಕೋ? ಅಥ್ವಾ ಇಂಥ ಹಲ್ಕಾ ಕೆಲಸ ಮಾಡ್ಲಿಕ್ಕೋ” ಎಂದು ಅವನ ಕೆನ್ನೆಗೆ ಪಟಪಟಾಂತ ಎರಡು ಬಾರಿಸಿ ಬಿಟ್ಟರು. ಆ ಏಟಿಗೆ ಅವನ ಮುಖ ಬೋಂಡಾದಂತೆ ಬುರಬುರನೇ ಊದಿಬಿಟ್ಟಿತು. ದುಃಖ, ಸಿಟ್ಟು ಎರಡೂ ಬಂದವು. ತಾತನಿಗೆ ಹೇಳಿ ಶಾಪಕೊಡಿಸಬೇಕೆಂದು ನಿರ್ಧರಿಸಿ ಮನೆಗೆ ಬಂದ, ಅಲ್ಲಿ ನೋಡುತ್ತಾನೆ ಜಲಜಾಕ್ಷಿ ಫಾದರ್ ’ಎನ್ರಿ ಶಾಸ್ತ್ರಿಗಳೇ ನಿಮ್ಮ ಹುಡುಗ ಇಂಥ ಕೆಲಸ ಮಾಡಬಹ್ದಾ’ ಎಂದು ಬಂದು ಬಿಟ್ಟಿರುವನು, ಶಾಸ್ತ್ರಿಗಳಿಗೆ ವಿವರಿಸಿ ಮನದಟ್ಟು ಮಾಡಿಕೊಟ್ಟ. ಕೃದ್ದರಾದ ಶಾಸ್ತ್ರಿಗಳು ತಮ್ಮ ನಾಗ ಬೆತ್ತದಿಂದ ಶಾಮುನ ಮೈಮೇಲೆ ದೇವನಾಗರಿಲಿಪಿ ಬರೆಯಬೇಕೆನ್ನುವಷ್ಟರಲ್ಲಿ ಸಂಸ್ಕೃತ ವಿದ್ವಾನ್ ನಾಗಭೂಷಣ ಶರ್ಮರು ಆಪದ್ಭಾಂದವರಂತೆ ಬಂದವರೆ ಬೆತ್ತ ಕಸಿದುಕೊಂಡರು. ಅವರು ಕಸಿದುಕೊಳ್ಳದಿದ್ದಲ್ಲಿ ಹೀರೋ ಶಾಮನ ಟೊಂಕ ಮುರಿದು ಹೋಗುತ್ತಿತ್ತು. +“ನಮ್ಮ ಸಂಸ್ಕೃತ ಪ್ರತಿಭಾವಂತ ವಿದ್ಯಾರ್ಥಿ ಶಾಮ ಈ ಕೆಲಸ ಮಾಡಿರುವನೆಂಬುವುದಕ್ಕೆ ನಿಮ್ಮ ಬಳಿ ಆಧಾರವಾದರೂ ಏನಿದೆ?” ಎಂದವರಸೆದ ವಾಗ್‌ಬಾಣಕ್ಕೆ ಹೆದರಿ ಎಲ್ಲರೂ ತಂತಮ್ಮ ಅಸ್ತ್ರಗಳನ್ನು ಉಪಸಂಹರಿಸಿಕೊಂಡರು. +ಅವತ್ತಿನಿಂದ ಶಾಮನ ಸ್ಟಾರ್ ವ್ಯಾಲ್ಯೂ ಜಾಸ್ತಿಯಾಯತು. +ಸಂಸ್ಕೃತ ಭಾಷೆಯ ಯಾವುದಾದರೂ ಗ್ರಂಥ ತೆರೆದೊಡನೆ ಸಮೀಕರಣ ಬೇಧಿಸುವ ಕ್ರಿಯೆಯ ದೃಶ್ಯ ಬಿಚ್ಚಿಕೊಳ್ಳಲಾರಂಭಿಸಿತು. ತಾನೂ ಅಂಥದೊಂದು ಕ್ರಿಯೆಯಲ್ಲಿ ಸಕ್ರಿಯಾತ್ಮಕವಾಗಿ ಭಾಗವಹಿಸಬೇಕೆಂಬ ಆಸೆ ಟ್ರವುಜರ್ರು ಧರಿಸಿಕೊಂಡಿತು. +ಜಲಜಾಕ್ಷಿಯ ಕಣ್ಣಿಗೆ ಬೀಳಬಾರದೆಂದು ಅವನು ನಡೆದಾಡಲು ಕೆಲವು ಕಳ್ಳ ಹಾದಿಗಳನ್ನು ಹುಡುಕಿಕೊಂಡಿದ್ದುಂಟು. ವ್ಹಿಸ್ಕಿಕುಡಿಯುವವನು ಚಿಕನ್ ತಿನ್ನದಿರುತ್ತಾನೆಯೇ, ಚಿಕನ್ ತಿಂದವರು ಸಿಗರೇಟು ಸೇದದಿರುತ್ತಾರೆಯೇ, ಸಿಗರೇಟು ಸೇದಿದವರು ತೊಡೆಸಂಧಿ ತುರಿಸಿಕೋಳ್ಳದಿರುತ್ತಾರೆಯೇ? +ಗ್ರವಂಡಿನ ಆಚೆ ತುದಿಯ ಅಶ್ವತ್ಥ್ ಮರದ ಬುಡದಲ್ಲಿ ಕಾವ್ಯಾಲಂಕಾರದ ಮರ್ಮ ಬಿಡಿಸುತ್ತ ಕೂತಿದ್ದ ಶಾಮು. ಕಾವ್ಯವೆಂದರೆ ಕಾಮ, ಕಾಮವೆಂದರೆ ಕಾವ್ಯ. ಒಂದು ಅರ್ಥವಾದರೆ ಇನ್ನೊಂದು ಅರ್ಥವಾದಂತೆಯೇ ಎಂಬ ತರ್ಕಕ್ಕೆ ಬಂದಿದ್ದ. ಎಲ್ಲಿದ್ದಳೋ ಏನೋ? ಜಲಜಾಕ್ಷಿ ದುತ್ತನೆ ಅವನ ಮೇಲೆ ಎರಗಿಬಿಟ್ಟಳು. +“ನನ್ ಮರ್ಯಾದೆ ಕಳೆದೆಯಲ್ಲಾ ನಾನು ನಿನಗೆ ಮಾಡಿದ್ದ ಅನ್ಯಾಯವಾದ್ರೂ ಏನು?” ಎನ್ನುತ್ತ ಅವನೊಂದಿಗೆ ಫೈಟಿಂಗಿಗೆ ಬಿದ್ದಳು. ಅವಳ ಬಲಿಷ್ಟ ಹಿಡಿತಕ್ಕೆ ಸಿಲುಕಿ “ಯಾರಾದರೂ ತನ್ನನ್ನು ರಕ್ಷಿಸಬಾರದೇ?” ಎಂದು ಕೂಗಿಕೊಂಡ. ಜೇನುಪಾತ್ರೆಯೊಳಗೆ ಕಳೆದ ನಾಲಿಗೆಯಂತಾಯಿತು ಅವನ ಪರಿಸ್ಥಿತಿ. +ಅವನದು ಅರಣ್ಯ ರೋದನವಾಗಿತ್ತು. +ಸುತ್ತ ಎರಡು ಫರ್ಲಾಂಗು ಅಂತರದೊಳಗೆ ಯಾರೂ ಇರಲಿಲ್ಲ . +ಘಳಿಗೆಗಳು ಕಳೆದಂತೆ ಆಕೆಯ ಉಡ ಹಿಡಿತ ದ್ವಿಗುಣಗೊಂಡಿತ್ತು. ಮರದ ಮೇಲೆ ರೆಸ್ಟ್ ತೆಗೆದುಕೊಳ್ಳ ತೊಡಗಿದ್ದ ಪಕ್ಷಿಗಳು ಕೀರ್ ಕೀರ್ ಶಬ್ದ ಮಾಡುತ್ತ ಆ ಫೈಟಿಂಗಿಗೆ ಶುಭ ಹಾರೈಸುತ್ತಿದ್ದವು. +“ಏನೋ… ನಿನ್ ಕೈಲೂ ಮಾಡ್ಲಿಕ್ಕಾಗಲ್ಲ, ಮಾಡೋನ ಕಂಡರೆ ಹೊಟ್ಟೆ ಉಸಿಕೊಳ್ತೀಯ… ಇವತ್ತು ಎರಡ್ರಲ್ಲೊಂದು ಫೈಸಲಾಗಬೇಕು… ಇಲ್ಲಾಂದ್ರೆ ನಿನ್ನ ಜುಟ್ಟು ಕಿತ್ತು ಬಾಯಲ್ಲಿಟ್ಟು ಬಿಡ್ತೀನಿ…” ಎಂದು ಅವನ ಚಲ್ಲಿಕಾದೊಳಗೆ ಕೈ ತುರುಕಿ ಮರ್ಮಾಂಗವನ್ನು ಗಟ್ಟಿಯಾಗಿ ಹಿಡಿದುಕೊಂಡಳು. +ಅವನ ಮೂಗಿಗೆ ಬಾಯಿಹಾಕಿ ಜೋರಾಗಿ ಹೊಸಕ ತೊಡಗಿದಳು. +ನೆಲದಂತರಾಳದಿಂದ ಜ್ವಾಲಾಮುಖಿ ನಿಮಿಷಾರ್ಧದಲ್ಲಿ ಡಮಾರೆಂದು ಸ್ಪೋಟಿಸಿಬಿಟ್ಟಿತು. ಅಂತರಂಗ ಬಹಿರಂಗವೆಲ್ಲಾ ಗಲೀಜಾಗಿಬಿಟ್ಟಿತು +“ಥೂ ನಿನ್ನ ಮುಖಕ್ಕೆ” ತೆಕ್ಕೆ ಸಡಲಿಸಿ ಮುಖಕ್ಕೆ ಕ್ಯಾಕರಿಸಿ ಉಗುಳಿದಳು. ” ಈಗ ಸಧ್ಯಕ್ಕೆ ಬಿಡ್ತಿದ್ದೀನಿ… ಕ್ಲಾಸಿನಲ್ಲಿ ನಿನ್ನ ಒಂದು ಕೈ ನೊಡ್ಕೊಳ್ಲಿಲ್ಲ… ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಬೇಬಿನೇ ಅಲ್ಲ” ಎಂದು ಭಲೆ ಶಪಥ ಮಾಡಿದಳು. ಅವಳು ಕಣ್ಣುಗಳೆಂಬ ವ್ಯಾನಿಟ್ ಬ್ಯಾಗಿನೊಳಗೆ ತನ್ನ ಮರ್ಮಾಂಗವನ್ನು ಅಪಹರಿಸಿ ಒಯ್ದು ಬಿಡುವಳೋ ಎಂದು ಹೆದರಿದ. ಚಡ್ಡಿಯೊಳಗೆ ಮುಖ ಕುಯ್ದು ಬಚ್ಚಿಟ್ಟುಕೊಂಡು ಬಿಟ್ಟ. ಗದಗಡ ನಡುಗುತ್ತ ಬಿರುಗಾಳಿಯಂತೆ ತರಗತಿ ಕಡೆಗೆ ಓಡಿದ ಅವಳ ಕಡೆಗೇ ನೋಡಿದ. +ಜಲಜ ಕೇವಲ ಗಣಿತದಲ್ಲಷ್ಟೇ ಹೆಚ್ಚಿಗೆ ಮಾರ್ಕ್ಸ್ ಪಡೆಯುತ್ತಿರಲಿಲ್ಲ. ತಾಲ್ಲೂಕು ಜಿಲ್ಲಾ ಮಟ್ಟದ ಒಲಂಪಿಕ್ ಕ್ರೀಡೆಗಳಲ್ಲಿ ಹತ್ತಾರು ಪದಕಗಳನ್ನು ದೋಚಿಕೊಂಡಿದ್ದಳು. ಅವಳು ಹೆಜ್ಜೆ ಹಾಕಿದಳೆಂದರೆ ಅವಳ ಬಟಕ್ಸುಗಳು ಆದಿತಾಳ ನುಡಿಸುತ್ತಿದ್ದವು. ಅವನ ಸುಸಂಸ್ಕೃತ ಪಂಚೇಂದ್ರಿಯಗಳೆಲ್ಲ ಅವಳ ಹಿಂದೆ ಅಷ್ಟು ದೂರ ನಡೆದು ವಾಪಸು ಬಂದವು. +ಹೀರೋ ಶಾಮಣ್ಣ ಮನೆಗೆ ಹೊರಟ. ಕುಡಿದಿರುವನೋ ಎಂಬಂತೆ, ಮನೆಗೆ ಹೋದೊಡನೆ ಗಪ್ಪನೆ ಮಲಗಿಬಿಟ್ಟ. ಕುಂತರೂ ನಿಂತರೂ ಗಂಡನು ಆಡುತ್ತಿದ್ದ ಆಟಗಳನ್ನು ನೆನೆಸಿಕೊಂಡು ದುಃಖವನ್ನು ಗಂಟಲಿಗೆ ತಂದುಕೊಂಡು ಮೌನವಾಗಿ ಉಳಿದುಬಿಡುತ್ತಿದ್ದ ಅಲುಮೇಲಮ್ಮನಿಗೆ ದಿಡೀರನೆ ಏಕ ಮಾತ್ರ ಪುತ್ರ ನೆನಪಾದ. ಹೋಗಿ ನೋಡುತ್ತಾಳೆ. ಮೈ ಸುಡುತ್ತಿದೆ. ಮೈ ಮೇಲೆ ಪ್ರಜ್ಞೆ +ಒಂಚೂರೂ ಇಲ್ಲ. ಜಲ… ಜಲ… ಜ್ವಾಲಮಾಲಿನೇ ಅಂತ ಏನೇನೋ ಬಡಬಡಿಸುತ್ತಿದ್ದನು. ಕಣ್ಣಾಲಿಗಳು ಮೇಲೆ ಕೆಳಗೆ ಇಳಿಯುತ್ತಿವೆ. ವಂಶೊದ್ದಾರಕ ಪ್ರೀತಿಯ ಪುತ್ರನ ಸ್ಥಿತಿನೋಡಿ ಆ ಮಹಾಸಾಧ್ವಿ ಹೌಹಾರಿದಳು. “ಮಾವನವರೇ… ಮಾವನವರೇ…” ಎಂದು ಕೂಗಿದಳು… ಗಂಡ ಇಹಲೋಕ ತ್ಯಜಿಸಿದಮೇಲೆ ಆಕೆ ಎಂದೂ ಅಷ್ಟು ಜೋರಾಗಿ ಕೂಗಿರಲಿಲ್ಲ… ಒಳಗಡೆ ನೋಡಿದಳು… ಅಂಗಳಕ್ಕೆ ಹೋಗಿ ಇಣುಕಿದಳು. ಆಕೆ ಅಂದಿನಿಂದೂ ಹಾಗೆ ಹೋಗಿ ಇಣುಕಿ ನೋಡಿರಲಿಲ್ಲ… ಪಾಪ! ಆಕೆಗೇನು ಗೊತ್ತು! ಪರಮೇಶ್ವರ ಶಾಸ್ತ್ರಿಗಳು ಅದ್ಭುತವಾಗಿ ಡ್ರೆಸ್ ಮಾಡಿಕೊಂಡು ವಿಜಯನಗರ ಮೈದಾನಕ್ಕೆ ಹೋಗಿ ಜನಜಂಗುಳಿಯ ನಡುವೆ ಸಿಕ್ಕಿ ಹಾಕಿಕೊಂಡಿರುವುದು? +ಎಲ್ಲಿ ನೋಡಿದರೂ ಜನವೋ ಜನ… ಒಬ್ಬರನ್ನು ಇನ್ನೊಬ್ಬರು ತುಳಿಯುತ್ತಿದ್ದಾರೆ. ಪೋಲೀಸಿನವರು ಸಮವಸ್ತ್ರಧರಿಸಿ ಹಾವುನುಂಗಿದರಂತೆ ಆಡುತ್ತಿದ್ದಾರೆ. ಎತ್ತರವಾದ ವೇದಿಕೆಯನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಲೌಡು ಸ್ಪೀಕರಿನಲ್ಲಿ ಸಣ್ಣ ಪುಟ್ಟ ನಾಯಕ ಮಣಿಗಳು “ಹಲೋ ಹಲೋ” ಎಂದು ಅರಚುತ್ತಿದ್ದಾರೆ. ಇಡೀ ಬಯಲನ್ನು ಆವರಿಸಿರುವ ಕೆಂಧೂಳಿಯಲ್ಲಿ ಮುಳುಗಿರುವ ಜನರು ಬೆಳಗಿನಿಂದ ಏನೂ ತಿಂದಂತಿಲ್ಲ, ಏನೂ ಕುಡಿದಂತಿಲ್ಲ ಒಂದು ರೀತಿಯ ಮಂಕು, ಆತುರ, ಭಯ, ಚಿದ್ವಿಲಾಸಗಳ ಕಲಸು ಏಲೋಗರವದು. ರಸಂ ಒಳಗದೆ ಕರಿಬೇವಿನ ಎಲೆಯಂಥ ಪರಿಸ್ತಿತಿ ಶಾಸ್ತ್ರಿಗಳದ್ದು. ಈ ಕಡೆ ಇದ್ದವರು ಆ ಕಡೆ ತಳ್ಳುವುದು! ಆ ಕಡೆ ಇದ್ದವರು ಈ ಕಡೆ ತಳ್ಳುವುದು, ಮೇಲೆ ಸೂರ್ಯ ಕೋಪದಿಂದ ಒಬ್ಬೊಬ್ಬರ ತಲೆ ಮೇಲೆ ಹಂಡೆ ಹಂಡೆ ಬಿಸಿಲು ಸುರಿಯುತ್ತಿರುವನು. ಶಾಸ್ತ್ರಿಗಳ ಬೋಳು ನೆತ್ತಿಯ ಮೇಲೆ ಎರಡು ಹಂಡೆಯಷ್ಟು, ಉಷ್ಣದ ಆ ಪ್ರಮಾಣದಿಂದ ಇಡೀ ತಲೆಯನ್ನು ರಕ್ಷಿಸುವುದು ಎಂಟು ದಶಕಗಳ ಹಳೆಯದಾದ ಜುಟ್ಟಿನ ಕೈಲಾದೀತೆ? +ಬರುವಾಗ ಸ್ರಕ್ಚಂದನಿತ್ಯಾದಿಗಳಿಂದ ಅಲಂಕರಿಸಿಕೊಂಡು ಮೇಲೆ ಗರಿಗರಿಯಾದ ಉತ್ತರೀಯ ಇಳಿ ಬಿಟ್ಟುಕೊಂಡು ಹೂವಿನ ತೇರಿನಂತೆ ನಡೆಯುತ್ತ ವಿಜಯನಗರ ಮೈದಾನ ಸೇರಿಕೊಂಡಿದ್ದರು. ಹಾಲಿನಲ್ಲಿ ಸಕ್ಕರೆ ಕರಗಿದಂತೆ ತಾವು ಹೀಗೆ ಕರಗಲಾರರೆಂದೇ ಭಾವಿಸಿದ್ದರು. ಗೋವಿಂದೇಗೌಡರು ಕಣ್ಣುಮುಚ್ಚಾಲೆ ಆಟ ಆಡಿಸುತ್ತಿದ್ದರು. ಅವಸರದಿಂದ ಮಾಡಲ್ಪಟ್ಟವರಂತೆ ಅಡ್ಡಾಡುತ್ತಿದ್ದ ಅವರು ಶಾಸ್ತ್ರಿಗಳು ಕಂಡರೂ ಅಂತ ಅಷ್ಟಾಂಗ ಪ್ರಣಾಮ ಸಲ್ಲಿಸಲು ಅದೇನು ಮನೆಯ ಪಡಸಾಲೆಯೇ? ನಿಜ ಹೆಳಬೇಕೆಂದರೆ ಇದನ್ನೆಲ್ಲ ಆ ಕೃಶಾಂಗರಿಗೆ ಹಚ್ಚಿಕೊಟ್ಟಿದ್ದೂ ಅವರೆ, ಇಷ್ಟು ಮಾಡಿಬಿಡಿ ನಿಮ್ಮ ಕೀರ್ತಿ ಪತಾಕೆ ದೇಶ ವಿದೇಶಗಲಲ್ಲಿ ಹರಡುವುದೆಂದು ಹವಾ ತುಂಬಿದ್ದೂ ಅವರೇ, ವಿಜಯನಗರ ಮೈದಾನದಲ್ಲಿ ತಮ್ಮ ಅದೃಷ್ಟವು ಖುಲಾಯಿಸಿ ಎಮ್ಮೆಲ್ಲೆ ಆಗಿಬಿಡಬಹುದು; ಮಂತ್ರಿ ಆಗಿ ಬಿಡಬಹುದು. ಈಗ ಸರಕಾರಕ್ಕೆ ತಾವು ಕಟ್ಟಲೇಬೇಕಾಗಿರುವ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿಯನ್ನು ಮಾಫಿ ಮಾಡಿಸಿಬಿಡಬಹುದು. ವಂಶದ ನೂರಾರು ಕುಡಿಗಳಿಗೆಲ್ಲ ಬಂಗಾರದ ತಟ್ಟೆಯಲ್ಲಿ ಗೋಡಂಬಿ, ಬಾದಾಮಿ ದ್ರಾಕ್ಷಿಯನ್ನು ಚಿನ್ನ ಚಮಚದಿಂದ ಬಾಯೊಳಗಿಟ್ಟುಕೊಳ್ಳುವ ವ್ಯವಸ್ಥೆಯನ್ನು ಚಿಟಿಕೆ ಹೊಡೆವುದರೊಳಗೆ ಮಾಡಿಬಿಡಬಹುದು ಎಂದೆಲ್ಲ ಲೆಕ್ಕ ಹಕಿ ಮೈದಾನದ ಇಡೀ ಉಸ್ತುವಾರಿಯನ್ನು ತಾವೇ ವಹಿಸಿಕೊಂಡು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರು. ಅದ್ದರಿಂದ ಅವರ್ ಕಣ್ಣು ಒಂದೇ ಒಂದು ನೋಟ ಹರಿಸುವುದು ಸಾಧ್ಯವಿರಲಿಲ್ಲ. ಎಲ್ಲಾ ಹೇಳಿಬಿಟ್ಟಿದ್ದೀನಿ ಶಾಸ್ತ್ರಿಗಳೇ… ನೀವು ನಿಮ್ ಹೆಸರೊಂದೆ ಹೇಳಿಬಿಟ್ರೆ ಸಾಕು. ನಿಮ್ಮನ್ನು +ಹೆಲಿಕಾಪ್ಟ್ರಿನಲ್ಲಿ ಹತ್ತಿಸಿಕೊಂಡು ಸೀದಾ ಡೆಲ್ಲಿಗೆ ಕರಕ್ಕೊಂಡ್ಹೋಗ್ತಾರೆ. ಎಂದು ಹೇಳಿದ್ದ ಅದೂ ಅರ್ಧ ನಿಮಿಷದಲ್ಲಿ. +ಕಂಕುಳದಲ್ಲಿದ್ದ ಪಂಚಂಗದ ಗಂಟು ತಮ್ಮ ಶತಮಾನದ ದಾಹ ತೀರಿಸಿಕೊಳ್ಳಲು ಅದೇ ದೇಹದಿಂದ ಪುಷ್ಕಳವಾಗಿ ಒಸರುತ್ತಿದ್ದ ಬೆವರನ್ನು ಕುಡಿಯ ತೊಡಗಿದ್ದಿತು. ದೋತರ ಕೂಡ ಬೆವರಿನಿಂದ ನೆನೆದು ಚಪ್ಪೆಗಂಟಿ ಕಾಣಿಸುತ್ತಿತ್ತು. +’ಥೂ ಈ ಪ್ರಧಾನ ಮಂತ್ರಿ ಹಾಳಾಗ’ ಎಂದು ಕೋಪದ ಭರದಲ್ಲಿ ತಾವು ನುಡಿದು ಬಿಡಬಹುದು. ಅಲ್ಲದೆ ತಾವು ನುಡಿದಿದ್ದೇ ವೇದವಾಕ್ಯ. ತಮ್ಮ ನುಡಿದಿದ್ದನ್ನು ಬದಲಿಸುವ ಶಕ್ತಿ ಆ ತ್ರಿಮೂರ್ತಿಗಳಿಗೂ ಮೀರಿದ್ದು. ತಾವು ಯಾರಿಗೆ ಜ್ಯೋತಿಷ್ಯ ಹೇಳಬೇಕೆಂದು ಕಾಯುತ್ತಿರುವೆವೋ ಅವರಿಗೇ ತಾವು ಶಾಪ ಕೊಡುವುದುಂಟೆ? +ಅಷ್ಟರಲ್ಲಿ ಜನರ ದೊಡ್ಡದೊಂದು ಗುಂಪು ಪ್ರಧಾನ ಮಂತ್ರಿಗೆ ಧಿಕ್ಕಾರ. ಇಂಡಿಕೇಟ್ ಕಾಂಗ್ರೆಸ್‌ನ ಇಂದಿರಾಗಾಂಧಿಗೆ ಧಿಕ್ಕಾರ ನಿಜಲಿಂಗಪ್ಪನವರಿಗೆ ಜಯವಾಗಲೀ, ಸಂಜೀವರೆಡ್ಡಿಗೆ ಜಯವಾಗಲೀ ಎಂದು ಜೋರಾಗಿ ಕೂಗತೊಡಗಿತು. ಇದ್ದಕ್ಕಿಂತೆ ಪೋಲಿಸರು ಅವರ ಮೇಲೆರಗಿ ಲಾಠಿಯಿಂದ ಚಚ್ಚತೊಡಗಿದರು. ಮತ್ತೆ ಕೂಗತೊಡಗಿದ ಆ ಸಿಂಡಿಕೇಟ್ ಕಾಂಗ್ರೆಸ್‌ನ ಕಾರ್ಯಕರ್ತರನ್ನು ದನಗಳನ್ನು ತುಂಬಿದಂತೆ ವ್ಯಾನಲ್ಲಿ ತುಂಬಿ ಕರೆದೊಯ್ದರು. +ನಿಜವಾಗಿಯೂ ಶಾಸ್ತ್ರಿಗಳಿಗೆ ಭಯವಾಯಿತು. +ಕಾಂಗ್ರೆಸ್ ಇಬ್ಭಾಗವಾದ ಬಗ್ಗೆ ತಿಳಿದುಕೊಂಡಿದ್ದರು. ಕಂಚಿ ಕಾಮಕೋಟಿ ಶ್ರೀಗಳು, ಶ್ರಿಂಗೇರಿ, ಉಡುಪಿ ಮೊದಲಾದ ಸ್ವಾಮಿಗಳ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತಾಳೀ ಜವಹರನ ಪುತ್ರಿ ಎಂದೇ ಅಕೆಯನ್ನು ಬೆಂಬಲಿಸಿದ್ದರು. +ತಿರುಪತಿ ವೆಂಕಟರಮಣನಿಗೆ ಇಂದಿರಾಗಾಂಧಿ ತಲೆಗೂದಲು ಕೊಡುವುದನ್ನು ನೋಡಬೇಕೆಂಬ ಅವರ ಹಳೆಯ ಆಸೆ. +ಆಕೆಯ ಮೇಲೆ ಅವರಿಗಿದ್ದ ಒಂದೇ ಒಂದು ಸಿಟ್ಟು ಎಂದರೆ ಆಕೆ ಪಾರ್ಸಿಯವನನ್ನು ಮದುವೆಯಾದದ್ದುದರ ಬಗ್ಗೆ. +ಹೀಗೆ ಪ್ರೀತಿ ಜೊತೆ ಸಿಟ್ಟು ಸೆಡವು ಎಲ್ಲಾ ಇಟ್ಟುಕೊಂಡು ಆಕೆಯ ಹಸ್ತ ಸಾಮುದ್ರಿಕ ನೋಡಿ ತಾವು ಪ್ರಸಿದ್ದರಾಗಬೇಕೆಂದು ಜನ ಜಂಗುಳಿಯಲ್ಲಿ ಸಿಲುಕಿಕೊಂಡಿದ್ದರು. ತುಂಬ ಹಸಿದಿದ್ದರು, ಬಾಯಾರಿದ್ದರು. ಆದರೆ ಸಿಕ್ಕ ಕಡೇಲೆಲ್ಲ ತಿನ್ನಲಿಕ್ಕೆ ಕುದಿಯಲಿಕ್ಕೆ ಅವರೇನು ಮಾಮೂಲು ನರರೇ! +ವೇದನೆಯೊಂದು ಅಂತರಾಳದಿಂದ ಕಿತ್ತು ಬಂತು. +ಅವರ ದೇಹದ ಕರುಳುಗಳಲ್ಲಿ ಸಂಕುಚಿತಗೊಂಡಿರುವ ಮಲವನ್ನು ದೂರದಿಂದಲೇ ಗ್ರಹಿಸಿಕೊಂಡಂತೆ ನಾಯಿಯೊಂದು ಜೋರಾಗಿ ಬೊಗಳತೊಡಗಿತು. ನಾಯಿ ಅಂದರೆ ನಾರಾಯಣ, ನಾರಾಯಣನೆಂದರೆ ನಾಯಿ. ಶ್ರೀಮನ್ನಾರಾಯಣನೇ ನಾಯಿ ಭಾಷೆ ಮೂಲಕ ನೀಡುವ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಯಾಕೋ ಅವರಿಗೆ ಅವರ ಮೊಮ್ಮಗ ನೆನಪಾಗಿ ಇದ್ದಕ್ಕಿದ್ದಂತೆ… +“ತಾತಾ… ತಾತಾ” ಹಾಸಿಗೆ ಮೇಲಿದ್ದ ಶಾಮು ಕಿಟಾರನೆ ಕಿರುಚಿತು. ಅದು ಆ ಐದು ನಿಮಿಷಗಳಲ್ಲಿ ಎಚ್ಚರಗೊಂಡಿದ್ದೆಷ್ಟೋ ಸಾರಿ! ಪ್ರಜ್ಞೆ ಕಳೆದುಕೊಂಡಿದ್ದು ಎಷ್ಟೋ ಸಾರಿ, ಎಚ್ಚರ +ತಪ್ಪಿದಾಗ ಜಲ… ಜಲ… ಜ್ವಾಲಮಾಲಿನಿ… ಬಿಡು… ಬಿಡು… ಕೈ ಹಾಕಬೇಡ… ಮುಟ್ಟಬೇಡ… ಹೀಗೆ ಎನೇನೋ ಕನವರಿಸುತ್ತಿದ್ದನು. ಎಚ್ಚರ ಬಂದಾಗ ಎದುರಿಗಿದ್ದ ಎಲ್ಲರೂ ಜಲಜಾಕ್ಷಿಯರೇ ಎಂದು ಭಾವಿಸಿ, ಅವಾರೆಲ್ಲಾತನ್ನ ಮೇಲೆ ಆಕ್ರಮಣ ನಡೆಸುತ್ತಾರೆ ಎಂದು ಬಗೆದು ತನ್ನ ಸಹಯಕ್ಕಾಗಿ ಸಾಕ್ಷಾತ್ ಚಾಮುಂಡೇಶ್ವರಿಯನ್ನು ಆಮಂತ್ರಿಸಲೋಸುಗ ಅಹಿಗಿರಿ ನಂದಿನಿ ನಂದಿತ ಮೋದಿನಿ ವಿಶ್ವವಿನೋದಿನಿ ನಂದನುತೆ ಎಂಬ ಶಂಕರ ವಿರಚಿತ ಸ್ತೋತ್ರ ಹೇಳುತ್ತಿದ್ದನು. ಮತ್ತೊಮ್ಮೆ ಎಚ್ಚರವಾದಾಗ ಶಂಕ ಚಕ್ರ ಗಧಾನ್ವಿತೆ ಎಂದು ಹೇಳುತ್ತಿದ್ದನು. +ಅಲುಮೇಲಮ್ಮನ ಹೆತ್ತ ಕರುಳು ಹೊತ್ತಿ ಉರಿಯ ತೊಡಗುವುದು… ನನ್ನ ಕಂದನಿಗೇನಾಯಿತೋ… ಯಾರಾದ್ರು ಉಳಿಸಿ ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಕಂದನನ್ನು ಅವುಚಿಕೊಂಡು ಚೀರುತ್ತಿದ್ದಳು. +ಆ ಸಾಧ್ವಿಯ ಮನವಿಗೆ ಓಗೊಟ್ಟು ಹತ್ತಾರು ಕಾಗೆಗಳು ಅಷ್ಟಲೋಕದಿಂದ ಆಗಮಿನಿಸಿ ಮನೆಯ ಮಾಳಿಗೆ ಮೇಲೆ ಕೂತು “ತಾಯಿ, ಆದಿಶಕ್ತಿ ಪರಬ್ರಹ್ಮ ಸ್ವರೂಪಿಣಿ ಹೆದರಬೇಡ… ನಾವಿದ್ದೇವೆ” ಎಂಬ ಅರ್ಥ ಬರುವಂತೆ ಕಾಽ ಕಾಽ ಎಂದ ಸಹಾಯ ಹಸ್ತ ಚಾಚತೊಡಗಿದವು. +ನಾವೂ ಪರೊಪಕಾರಾರ್ಥವಾಗಿ ಸದಾ ಸಿದ್ದವೆಂಬಂತೆ ಓಣಿಯ ಒಂದೆರಡು ಶ್ವಾನಕುಲ ಲಲನಾಮಣಿಗಳು ಅಂಗಳಕ್ಕೆ ಆಗಮಿಸಿ ವಿಶಿಷ್ಟವಾದ ಸ್ವರ ತೆಗೆಯಲಾರಂಭಿಸಿದವು. +ಸೊಳ್ಳೆಗಳು; ನೊಣಗಳು ಮುಗಿಬಿದ್ದು ಅಪರೂಪದ ಸೇವೆ ಮಾಡಲಾರಂಭಿಸಿದ್ದವು. +ಯಾರು ಕರೆದರೋ ಎನೋ, ಇಂಗ್ಲಿಷ್ ವರ್ಣಮಲೆಯ ಝಡ್ ಅಕ್ಷರವನ್ನು ಅಕ್ಷರಶಃಹೋಲುವ ಚಿರಂಜೀವಿಯೂ; ಇಚ್ಚಾಮರಣಿಯೂ ಆದ ಸದಾರೆವ್ವ ಬಾಯಲ್ಲಿದ್ದ ತೊಂಬುಲವನ್ನು ಹೆಜ್ಜೆ ಹೆಜ್ಜೆಗೆ ಒಂದೊಂದು ಬಂಡಿ ಉಗುಳುತ್ತ ಯವ್ವೋ… ಆಲವ್ವೋ… ಮೇಲವ್ವೋ… ನಮ್ ವುಡಗ್ನೀಗೆ ಅದ್ಯಾವ ಗಾಳಿ ಬಡಕೊಂಡೈತಿ… ವಂದ್ ಕೈಯಿ ನೋಡ್ಕಂಬ್ತೀನಿ… ಎಂದು ಬಂದಳು. +ಶಾಮು ಕಣ್ ತೆರುದು ನೊಡಿದ, +ಆಕೆ ಚಾಮುಂಡೇಶ್ವರಿಯೊ… ಜಲಜಾಕ್ಷಿಯೋ… ಒಂದು ಕ್ಷಣ ಅನುಮಾನಪಟ್ಟ. ಬಿಟ್ಟ ಕಣ್ ಬಿಟ್ಟಂತೆನೋಡ ತೊಡಗಿದ, ಕಿರಿಚಲಿಕ್ಕೆ ಪ್ರಯತ್ನಿಸುರುವವನಂತೆ ಮುಖ ಮಾಡಿದ. +ಆಕೆ ಲಟ್ಟಿಗೆ ತೆಗೆದಳು. ಒಣಮೆಣಸಿನಕಾಯಿ; ಉಪ್ಪು; ಕಸಬರಿಕೆಯ ಚೂರು ನೀವಾಳಿಸಿ ತೆಗೆದಳು. +ಘಾಟಿಗೆ ಶಾಮು ಕೆಮ್ಮು ತೊಡಗಿದ. +ಕಣ್ಣು ಮೂಗಿನಿಂದ ಹಳ್ಳ ಹರಿಯತೊಡಗಿತು… +’ಯಾರು ಕೊಣ್ಣು ಬುಟ್ಟಿದ್ರೋ ಅವ್ರ ಕೋಣ್ ಸೇದಿವೋಗ’ ಎಂದು ಹಿಡಿಹಿಡಿ ಶಾಪ ಹಾಕಿದಳು. “ತಾಯಿ ಇನ್ನೊಂದು ಜಾವತ್ಗೆ ನಿನ್ ಮೊಗ ಚಂಡು ಪುಟದಂತೆ ಪುಟೀತಾವೋಗ್ಲಿಲ್ಲಾ ನಾನು ಸಾವ್ಕಾರು ಉರುಕುಂದೆಪ್ಪನ ಸೂಳೆನೇ ಅಲ್ಲ” ಎಂದು ಹೇಷಾರವ ಮಾಡಿ ತನ್ನ ಗಿರಿ ಮೊಮ್ಮಗ ಒಬ್ನೇ ಐತೇಮ್ತ ಹೋಗಿ ಬಿಟ್ಟಳು. +ಯಾರೋ ಹೋಗಿ ಸೌಂದರ್ಯಾತಿಶಯಕ್ಕೆ ಹೆಸರಾದ ಉರುಕುಂದೆಪ್ಪನನ್ನ ಕರೆ ತಂದರು. ಅವನು ಇಂಗ್ಲಿಷ್ ವರ್ಣಮಾಲೆಯ ’ಎಸ್’ ಅಕ್ಷರವನ್ನು ಅಕ್ಷರಶಃ ಹೋಲುತ್ತಿದ್ದವನು. ತೊಂಬತ್ತು ವಸಂತಗಳನ್ನು ಎಣಿಸಿ ಜೇಬಿನಲ್ಲಿಟ್ಟುಕೊಂಡಿರುವ ಆತ ಆ ಕೇರಿಗೆಲ್ಲ ವೈದ್ಯಮಾರ್ತಾಂಡನೆಂದೇ ಹೆಸರಾಗಿದ್ದ. ಆತ ಮಾಡುತ್ತಿದ್ದ ವೈದ್ಯ ಎಂದರೆ ಬಳೆ ತುಂಡನ್ನು +ದೀಪದ ಕುದಿಗೆ ಹಿಡಿದು ಕಾಯಿಸಿ ರೋಗಿಯ ದೇಹದ ಅನುಕಟ್ಟಾದ ಭಾಗಕ್ಕೆ ಚುಟುಗಿ ಹಾಕುವುದು… +“ಅದೀ ಏನವ್ವಾ… ತಾಯಿ… ಅಲವ್ವಾ ಮೇಲವ್ವಾ… ನಮ್ ಕೇರಿಗೇ ಬೆಳ್ಳಿ ಚುಕ್ಕೆಯಂಗಿದ್ದ ಚಾಮಣ್ಗೆ ಗಾಳಿ ಸವುಡು ಬಡಕಂಡೈತಂತೆ… ನೋಡೇ ಬುಡ್ತೀನಿ ತಡಿ ಅದ್ನ ಒಂದ್ ಕೈಯಿ…” ಎಮ್ದು ಚಾಮಾಶಾಸ್ತ್ರಿಯ ಪಕ್ಕ ಕುಂತನು. +ಕಣ್ಣುಗಳನ್ನು ಹಾಗೇ ಮೇಲಿಂದ ಕೆಳಗಡೆ ಎರಡು ಸುತ್ತು ಹಾಯಿಸಿ ಮನಸ್ಸನ್ನು ಒಂದು ಹದಕ್ಕೆ ತಂದುಕೊಂಡನು. ಮನದಲ್ಲಿ ಸುಂಕಲಮ್ಮ, ದುರುಗಮ್ಮ, ಚವುಡಮ್ಮ, ದ್ಯಾಮಮ್ಮ ಮೊದಲಾದ ಏಳುನೂರು ಎಂಬತ್ತೆರಡು ಇಚ್ಛಾನು ದೇವತೆಗಳನ್ನು ನೆನೆದನು. +ಹಂಗೇ ಬಕ್ಕನಕ್ಕೆ ಕೈ ಇಟ್ಟನು. ಬಳೆ ಚೂರುಗಳು ಯಾವಾಗಲೂ ಬಕ್ಕಣದಲ್ಲಿ ಸ್ಟಾಕು. ಮುತ್ತೈದುಸಾವುಂಡವರ ಬಳೆ ಚೂರುಗಳವು. ಅವುಗಳ ಪೈಕಿ ಒಂದು ಚೂರು ತೆಗೆದು ದೀಪದ ಬೆಳಕಿಗೆ ಹಿಡಿದು ನೋಡಲಾಗಿ ಅದು ಮದುವೆಯಾದ ಎರಡನೇ ವರ್ಷದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಶಿವಪೂಜೆ ಕೊಟ್ರಗೌಡರ ಸೊಸೆ ಸುನಂದಮ್ಮಳ ಎಡಗೈಯ ಮೊದಲನೆಯ ಬಳೆಯ ಚೂರದು. +ದೀಪದ ಕುಡಿಗಿಡಿದು ಅದರ ಮೊನೆ ಕಾಯಿಸಿದನು. +ಕಂದನು ಆಲಮ್ಮನ ತೊಡೆ ಮೇಲೆ ಜಲ… ಜಲ… ಮಲಿಕ್ಕಂಡಿತ್ತು. ಹಂಗೇ ಮಲಿಕ್ಕೊಂಡು ಈಸ್ಟ್‌ಮನ್ ಕಲರ್ ಕನಸು ಕಾಣುತ್ತಿದ್ದ ಚಾಮಣ್ಣನ ಕುತ್ತಿಗೆಯ ಹಿಂಭಾಗಕ್ಕೆ ಮೂರು ಸಾರಿ ಚುಟಿಕಿ ಹಾಕುತ್ತಲೇ… ಅದು ದಿಗ್ಗನೆ ಎದ್ದು ಕೂತು‌ಅಯ್ಯೋ ಅಯ್ಯೋ ಅಂತ ರುದ್ರ ಚಮಕ ಹೇಳತೊಡಗಿತು. +ಆ ಕಡೆಯಿಂದ ಈ ಕಡೆಗೆ ಓಡಿತು. +ಈ ಕಡೆಯಿಂದ ಆ ಕಡೆಗೆ ಓಡಿತು. +ಇಂಗ್ಲೀಷು ಸಂಸ್ಕೃತವೆಂಬೆರಡು ಕಾದ ಕೂರ್ದಸಿಗಳಿಂದಲೇ ಬರೆ ಎಳೆಯಲಾಯಿತೆಂದು ಬಗೆದು ಉರುಕುಂದೆಪ್ಪನ ಕಡೆ ದುರುಗುಟ್ಟಿದನು… ಅಪರೂಪಕ್ಕೆ ದುರುಗುಟ್ಟಿ ನೋಡುವವರು ಮೂರ್ಛೆ ಬಂದು ಒರಗದೆ ಇರುವರೇನು? +ಜ್ಞಾನತಪ್ಪಿದ ತನ್ನ ಕರುಳಿನ ಕುಡಿಯನ್ನು ತನ್ನ ವಿಶಾಲವಾದ ತೊಡೆ ಮೇಲೆ ಹಾಕಿಕೊಂಡು ’ಅಯ್ಯೋ ಇನ್ನಾದರೂ ಕಂದಯ್ಯ ಸರಿ ಹೋಗಲಿಲ್ಲವಲ್ಲಾ… ಯಾರಾದರೂ ಹೋಗಿ ನಮ್ಮ ಮಾವನವರಾದ ಇದರ ತಾತನವರನ್ನು ಕರೆತರಬಾರದೆ’ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವಾಗ… +…ಶಾಸ್ತ್ರಿಗಳಿಗೆ ನಿಲ್ಲಲು ಶಕ್ತಿ ಉಳಿದಿಲ್ಲ. ತಲೆಸುತ್ತು ಬಂದಂತಾಗುತ್ತಿದೆ. ತನ್ನ ಯೌವನದಲ್ಲಿ ಗಂಡನನ್ನು ಕಳೆದುಕೊಂಡಾಕಿ; ಕಳೆದುಕೋಡು ಬಾಬ್ ಕಟ್ ಬಿಟ್ಟಾಕಿ; ಬಾಬ್ ಕಟ್ ಬಿಟ್ಟು ಅದರ ಮೇಲೊಂದು ಮುಸುಕು ಎಳೆದುಕೊಂಡಾಕಿ ಪ್ರಧಾನಿ ಶ್ರೀಮತಿ ಇಮ್ದಿರಾ ಗಾಂಧಿ ಈಗ ಆ ಊರಲ್ಲಿ ಇಳಿದು ಭಾಷಣ ಮಾಡಿದಳು. ಆಗ ಆ ಊರಲ್ಲಿಳಿದು ಮಾಡಿದಳು ಭಾಷಣ. +“ಭವ್ಯ ಭಾರತದ ಪ್ರಜೆಗಳೇ, ಈ ದೇಶವನ್ನು ಅಪತ್ತಿನಿಂದ ರಕ್ಷಿಸಲೆಂದೇ ಆ ಭಗವಂತನು ಕಳಿಸಿಕೊಟ್ಟಿರುವ ಪ್ರಿಯದರ್ಶಿನಿಯವರು ಇನ್ನು ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ. ನಿಮ್ಮ ದುಃಖ ಪರಿಹರಿಸಲಿದ್ದಾರೆ. ಬಡತನವನ್ನು ಓಡಿಸಲಿದ್ದಾರೆ. ಶಾಂತಚಿತ್ತರಾಗಿ ಸಹಕರಿಸಿ… +ಬೋಲೋ ಭಾರತ್…”ಒಂದೆರಡು ನೀಲಿ ಬಣ್ಣದ ವ್ಯಾನುಗಳು ಸುಂಯ್ ಅಂತ ಬಂದವು. ಎಲ್ಲರೂ ಗಬ್‌ಚಿಪ್… ವ್ಯಾನೊಂದು ಶಾಸ್ತ್ರಿಗಳ ಎದುರಿಗೆ ಢರ್‌ಡಸಕ್ಕೆಂದು ಡೇಗಿ ನಿಂತುಕೊಂಡಿತು.ಅದರಿಂದ ಮಿಂಚಿನಂತೆ ಒಬ್ಬ ನೆಗದ; ಶಾಸ್ತ್ರಿಗಳು ನಖಶಿಖಾಂತ ದಿಟ್ಟಿಸಿದ. ಅವರ ದೇಹದ ಮಾಂಸ ಖಂಡಗಳ ಆಕುಂಚನ, ಏಕಸನ ಅಳೆದ. ಹಲ್ಲು ಕಡಿದ. +“ಬುಡ್ಡಾ… ಕ್ಯಾ ಹೈ ನಾಮ್ ತೇರಾ? ಇನ್ ಮೆ ಕ್ಯಾ ಹೈ…”ಢಾಂ ಢೂಂ ಅಂತ ಪ್ರಶ್ನೆ ಕೇಳಿದ. +ಶಾಸ್ತ್ರಿಗಳಿಗೆ ಏನು ಹೇಳಬೇಕೋ ತೋಚಲಿಲ್ಲ ಬ್ಯಾ… ಬ್ಯಾ ಅಂದರು. ಛಡೋ ವ್ಯಾನ್ ಛಡೊ ಛಡೋರೇ ಬುಡ್ಡಾ… ” ಎಂದದ್ದೇ ಒಂದಿಬ್ಬರು ಶಾಸ್ತ್ರಿಗಳ ರೆಟ್ಟೆಗೆ ಕೈ ಹಚ್ಚಿ ವ್ಯಾನಿಗೆ ತಳ್ಳಿಬಿಟ್ಟರು. +ವ್ಯಾನ್ ಬುಸ್ ಅಂಥ ಓಡಿತು. ಠಾಣೆ ಮುಂದೆ ನಿಂತು ಕೊಂಡಿತು. ಅದರಿಂದ ಶಾಸ್ತ್ರಿಗಳನ್ನು ಇಳಿಸಿ ಠಾಣೆಗೆ ಕರೆದೊಯ್ದರು. ನಿನ್ನೆಯಿಂದ ಅವರಿಗೊಂದು ಸುಳುವು ಸಿಕ್ಕಿತ್ತು. ಇಷ್ಟು ವಯಸ್ಸಾಗಿರೋ; ಹೀಗಿರೋ ಇಂಥ ವ್ಯಕ್ತಿಯಿಂದ ಪ್ರಧಾನಿಗಳ ಪ್ರಾಣಕ್ಕೆ ಅಪಾಯ ಇದೇ ಅಂಥ. +ಶಾಸ್ತ್ರಿಗಳು ಅದೇ ರೀತಿ ಹೋಲುತ್ತಿದ್ದರು. ಅವರ ಕಂಕುಳಲ್ಲಿ ಕಿಮುಟು ಬಟ್ಟೆಯೊಳಗಿದ್ದ ಪಂಚಾಂಗದ ಗಂಟು ಆ ಮಹಾನ್ ಅಂಗರಕ್ಷಕರ ಅನುಮಾನವನ್ನು ಮತ್ತಷ್ಟು ದೃಢಗೊಳಿಸಿತ್ತು. +“ಅರೆ ಭಾಂಛೋದ್” ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಜಘನಕ್ಕೊಂದು ಏಟು ಬಿಟ್ಟ. +ಅವರು ಅಂಥದೊಂದು ಏಟನ್ನು ಎಂದೂ ನಿರೀಕ್ಷಿಸಿದವರಲ್ಲ. +ಅಸು ನೀಗುವುದೇ ಮೇಲೆಂದೆನಿಸಿತು. +ದುಃಖ ಮತ್ತು ಕೋಪ ಒನ್ ಇಷ್ಟು ಟೆನ್ ಪ್ರಮಾಣದಲ್ಲಿ ವ್ಯಕ್ತಗೊಂಡವು. +” ನಮ್ಮನ್ನು ಯಾರೂಂತ ತಿಳಿಕೊಂಡಿದ್ದೀರಿ, ನಾವು ಪ್ರಕಾಂಡ ವಿದ್ವಾಂಸ… ” ಇನ್ನು ಅವರ ಬಾಯಿಂದ ಮಾತು ಪೂರ್ಣ ಹೊರ ಬಿದ್ದಿರಲಿಲ್ಲ. +ಅಷ್ಟರಲ್ಲಿ ಮತ್ತೊಂದು ಏಟು ಬಿತ್ತು. +“ವಿಧ್ವಂಸ್ ಕಾರ್ಯ ಕರ್ತಾಕ್ಯಾ… ” +ಮಗದೊಂದು ಏಟು ಬಿತ್ತು. +ಶಾಸ್ತ್ರಿಗಳಿಗೆ ಭೂಮಿ ಬಾಯಿ ಬಾಯ್ತೆರೆದು ತಮ್ಮನ್ನು ನುಂಗಿಬಿಡಬಾರದೆ ಎಂದೆನಿಸಿತು. +” ರೇ ಬುಡ್ಡಾ ಆದ್ಮಿಽಽ… ಇಸ್‌ಮೇ ಆರ್ ಡಿ ಎಕ್ಸ್… ಏಕೆ ಫಾರ್ಟಿಸೆವೆನ್… ಬಾಂಬ್‌ವಗೈರಾ…ಕ್ಯಾ ಕ್ಯಾ ಛುಪಾಹೈ” ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಕಂಕುಳನ್ನು ಜೋರಾಗಿ ತಿವಿದ. +ಕುಂಡಲಿನೀ ಶಕ್ತಿ ಆಪೋಶನ ತೆಗೆದುಕೊಳ್ಳೂವಂಥ ನೋವಾಯಿತು. +“ಏನ್ರಪಾ… ನೀವು ಏನು ಹೇಳ್ತಿದೀರೋ… ಏನು ಮಾಡ್ತಿದೀರೋ; ನಮ್ಗೆ ಏಕೆ ಚಿತ್ರ ಹಿಂಸೆ ನೀಡುತ್ತಿರುವಿರೋ… ನಮಗೋಂದು ಅರ್ಥ ಆಗ್ತಾ‌ಇಲ್ಲ…ನಮ್ಮಂಥ ಜ್ಞಾನಿಗಲು ಕೈ ಮುಗಿದು ಕೇಳಿಕೊಂಡರೆ ನಿಮಗೆ ಶೇಯಸ್ ಅಲ್ಲ…” ಅಂಥ ಅವರು ಹೇಳಿಕೊಳ್ಳುತ್ತಿದ್ದುದನ್ನು ಆ ಅಂಗರಕ್ಷಕರು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ… +ಪ್ರಧಾನಿ ಪದವಿಯಿಂದ ಇಂದಿರಾಜಿಯವರನ್ನು ಉರುಳಿಸಲು ಸಿಂಡಿಕೇಟ್ನವರು ಈ ಮುದುಕನ ಮೂಲಕ ಸಂಚು ಮಾಡಿವರೆಂದೂ; ಅದರ ಬಗ್ಗೆ ವಿವರ ನೀಡುತ್ತಿರುವನೆಂದೂ ಬಗೆದರು… +ಅದರಲ್ಲೊಬ್ಬ ” ಹ್ಹಾ… ಐಸಾ… ನಿಜಲಿಂಗಪ್ಪಾಜಿ ಕೇ ಬಾರೆ… ಮೆ ಔರ್ ಕುಚ್… ಸಂಜೀವರೆಡ್ಡಿ +ಕೇ ಬಾರೆ ಮೆ ಔರ್ ಥೋಡಾ… ಎಂದು ಶಾಸ್ತ್ರಿಗಳನ್ನು ಮಾತಿನಿಂದ ಚಿಂದಿ ಮಾಡತೊಡಗಿದ. +ಮತ್ತೊಬ್ಬ ಅವರ ಕುಂಕುಳಕ್ಕೆ ಕೈ ಹಚ್ಚಿ ಜಗ್ಗಿದ. +ಗಂಟು ಕಿತ್ತು ಹೊರ ಬಂದು ಬಿತ್ತು. ಅದು ನೆಲಕ್ಕೆ ಬಿದ್ದದ್ದರಲ್ಲಿ ಜಗ್ಗಿದವರ ತಲೆ ಸಹಸ್ರ ಹೋಳಾಗುದೆಂದು ಎಚ್ಚರಗೊಂಡ ಒಂಬ್ಬ ಗಬಕ್ಕನೆ ಕೈಗೆ ಎತ್ತಿಕೊಂಡ… ಅದರೊಳಗಿನ ಒಂದೊಂದು ವಸ್ತು ಎಲ್ಲಿ ಸ್ಪೋಟಿಸಿ ಬಿಡುವವೋ ಎಂಬ ಆತಂಕದಿಂದ ಬಿಚ್ಚಿದ. +ಆಶ್ಚರ್ಯ! +ಅತ್ಯಾಶ್ಚರ್ಯ! +ಪರಮಾಶ್ಚರ್ಯ! +ಒಂದೂ ಮಾರಕಾಯುಧಗಳಿಲ್ಲವಲ್ಲ.!! +ಅವುಗಳ ಬದಲಾಗಿ ನುಜ್ಜು ಗುಜ್ಜಾಗಿರುವ ಪುಸ್ತಕಗಳು… +ಇವುಗಳಲ್ಲಿ ಎಂಥದೋ ನಿಗೂಢ ಸಂಚು ಅಡಗಿಸಿಟ್ಟಿರುವಂತಿದೆ ಈ ಬುಡ್ಡ ಎಂದು ಊಹಿಸಿದವರಾದ ಆ ದೈತ್ಯರು ಶಾಸ್ತ್ರಿಗಳ ದೇಹದ ಹಸಿ ಮಾಂಸ ಭಕ್ಷಿಸಿ ಮುಕ್ತಿಗೆ ಪಾತ್ರರಾಗಬೇಕೆಂದು ಒಂದೊಂದೆ ಹೆಜ್ಜೆ ಮುಂದಿಡಿತ್ತ ಬಂದರು. +“ಸಚ್ ಭೋಲೋ, ಸಚ್ ಭೋಲೋ,” ಎನ್ನ ತೊಡಗಿದರು. +ಇನ್ನೇನು ಇವರು ನನ್ನನ್ನು ಅಕಾಲ ದುರ್ಮರಣಕ್ಕೆ ತುತ್ತು ಮಾಡುತ್ತಾರೆಂದು ಹೌಹಾರಿ ಶಾಸ್ತ್ರಿಗಳು… ಅಪ್ಪಾಜಿ……… ಶಾಮಾಶಾಸ್ತ್ರೀಽಽಽ… ಎಂದು ಜೋರಾಗಿ ಕೂಗಿ ಬಿಡಲು… +ಶಾಮಾಶಾಸ್ತ್ರಿ ಈಗೀಗ ಪ್ರಜ್ಞೆ ಕಳೆದುಕೊಳ್ಳುವುದಾಗಲೀ; ಜಾಗ್ರತಾವಸ್ಥೆಯಲ್ಲಿ ಎಲ್ಲರನ್ನು ಆಕೆಯೇ ಎಂದು ಪರಪಾಟು ಬೀಳುವುದಾಗಲಿ ಇಲ್ಲ. +ಅದೇ ತಾನೆ ಎದ್ದು ಹಾಸಿಗೆಯಲ್ಲಿ ಕೂತಿದ್ದಾನೆ. +ತಾನು ಕವಿಯಾಗುವುದೋ? ಕಥೆಗಾರನಾಗುವುದೋ? ಕಾದಂಬರಿಕಾರನಾಗುವುದೋ? ಎಂಬಂಥ ಕನಸು ಕಾಣುತ್ತಿದ್ದಾನೆ. +ಮಹಾನ್ ಸಾಹಿತಿ ಥರ ಮುಖ ಮಾಡಿಕೊಂಡಿದ್ದಾನೆ. ವಸ್ತುಗಳೊಳಗೆ ಜೀವ ಹುಡುಕುತ್ತಾನೆ. ಜೀವಿಗಳೊಳಗೆ ವಸ್ತು ಹುಡುಕುತ್ತಾನೆ, ಜೀವಿ ಮತ್ತು ವಸ್ತು ಬೇರಲ್ಲ ಕಾಣಿಭೋ? ಜೀವಿ ಎಂದರೆ ವಸ್ತು. ವಸ್ತುವೆಂದರೆ ಜೀವ… ಜೀವವೆಂದರೆ ಸ್ವರ್ಗ, ವಸ್ತು ಎಂದರೆ ನರಕಽಽಽ… +ಹೀಗೆ ಅವನಿಗೆ ಹೊಳೆದದ್ದು ಒಂದೇ ಎರಡೇ, +ತಾನುಕಂಡ ಅನುಭವದಲ್ಲಿ ಏನೋ ಇದೆ ಎಂದುಕೊಂಡ. +ತನ್ನನ್ನು ಮುಗಿಸಲು ಬಂದಿದ್ದ ಜಲಜಾಕ್ಷಿ ತನ್ನ ಕುತ್ತಿಗೆಗೆ ಕೈ ಹಚ್ಚುವ ಬದಲು ಟೊಂಕದ ಕೆಳಗಡೆ ಕೈ ಹಚ್ಚಿದ್ದಾದರೂ ಯಾಕೆ? ಎದೆಗೆ ಮೊಲೆ ಹಚ್ಚಿದಳು, ತಿಕ್ಕಿದಳು. ಬಲವಾಗಿ ಅಪ್ಪಿದಳು, ಆ ಘರ್ಷಣೆಗೆ ಎದೆ ಮೇಲಿದ್ದ ರಾಮಮುದ್ರೆ ಬೆವರಿನ ಸೆಳೆವಿಗೆ ಸಿಕ್ಕು ಹರಿದು ಹೋಯಿತು. ಕಣ್ಣುಗಳಿಂದ ಬೆಂಕಿ ಉಂಡೆ ಉಗುಳುತ್ತ ಬಾಯಿಯನ್ನು ಮೂಗೆಗೆ ಹಾಕಿ ಬಿಟ್ಟಳು. ತಪ್ಪಿಸಿಕೊಂಡ ಸರಿ, ಇಲ್ಲೆಂದರೆ ಶಾಸ್ತ್ರಿಯ ಮೂಗು ಜಲಜಳ ದವಡೆಯಲ್ಲಿರುತ್ತಿತ್ತು. +ಜಜಳ ಆಕ್ರಮಣಕ್ಕೆ ಮತ್ತೊಮ್ಮೆ ತುತ್ತಾಗಬೇಕು +ಸೌಂದರ್ಯ ಲಹರಿ ಹೇಳಿಕೊಡೂಂತ ತಾತನವರನ್ನು ಕೇಳಿಕೊಳ್ಳಬೇಕು! +ತಾನಿಲ್ಲಿ ಇಷ್ಟು ಸಂಕಟಪಡುತ್ತ ನರಳಾಡುತ್ತಿದ್ದರೂ ಮುಖ ತೋರಿಸದೆ ಎಲ್ಲಿ ಮುಖ +ಮರೆಸಿಕೊಂದಿರಬಹುದೀ ತಾತ? +’ತಾತಾಽಽ’ ದುಃಖ ಒತ್ತರಿಸಿ ಬಂದು ಕೂಗಿದ… +ಈ ಮರಣಾಂತಕ ಸನ್ನಿವೇಶದಿಂದ ರಕ್ಷಿಸಲು ಅವತರಿಸಬಾರದೇ ವಿಷ್ಣು ಪರಮಾತ್ಮ ದ್ರೌಪದಿಯ ಮಾನರಕ್ಷಣೆ ಮಾಡಿದ ಪರಮಾತ್ಮನೇ ನನ್ನ ಪ್ರಾಣ ಕಾಪಾಡುವುದು ಕಷ್ಟವೇನು?… “ಭಕ್ತಿಪೂರ್ವಕವಾಗಿ ನಿವೇದಿಸಕೊಳ್ಳತೊಗಿದರು ಶಾಸ್ತ್ರಿಗಳು. +ಅವರಾಡುತ್ತಿದ್ದ ಮಾತುಗಳು ಅಂಗರಕ್ಷಕರಿಗೆ ಬೇರೆ ಬೇರೆ ಅರ್ಥ ಸ್ಪುರಿಸ ತೊಡಗಿದವು. ಪ್ರಧಾನಿ ವಿರುದ್ದ ನಡೆಯಬಹುದಾದ ಸಂಚಿನೊಳಗೆ ಮೂಸಾಳ್, ಗಜೇಂದ್ರ, ವಿಷ್ಣು ಅಗರ್ವಾಲ್ ಮುಂತಾದವರ ಬಗ್ಗೆ ಗೂಡಚಾರಿಗಳು ವಿವರ ಸಂಗ್ರಹಿಸಿ ಕಳಿಸಿದ್ದರು. +“ಬತಾವ್ರೇ ಬುಡ್ಡಾ… ಮುಸಾಳ್, ಗಜೇಂದ್ರ. ವಿಷ್ಣು… ಕಹಾ ಕಹಾ ಹೈ… ಬತಾವ್?” ಬತ್ತಳಿಕೆಯಿಂದ ಲಾಠಿ ಹಿರಿದು ಧಾಳಿ ನಡೆಸಲು ನಿರ್ಧರಿಸಿದರು. +ಆದೌ ಪಿತೌ ಮಾತಾ ಸಾಪತ್ನೀ ಜನನೀ ತಥಾ… +ಕೋಡ್ ಲಾಂಗ್ವೇಜ್ನಲ್ಲಿ ಎನೇನೋ ಮೆಸ್ಸೇಜ್ ಕೊಡ್ತಿದ್ದಾನೀ ಮುದುಕ ಎಂದುಕೊಂಡರು. +ಈ ಓಲ್ಡ್ ಈಜ್ ಗೋಲ್ದ್ ನಮಗೆಲ್ಲಾ ಹೆದರೋದಿಲ್ಲ. ಇದನ್ನು ಕೂಡಲೆ ದಿಲ್ಲಿಯ ಬ್ಲಾಕ್ ಕ್ಯಾಟ್ ಕಮ್ಯಾಂಡೋಸ್ ಹೆಡ್ ಕ್ವಾಟ್ರೆರ್ಸ್‌ಗೆ ಕಳುಹಿಸಬೇಕೆಂದು ನಿಶ್ಚಯಿಸಿದರು. ಪ್ರಧಾನ ಮಂತ್ರಿಗಳು ಬಂದು ಹೋಗುವವರೆಗೆ ತೆಪ್ಪಗೆ ಬಿದ್ದರಬೇಕಾದರೆ ಕ್ಲೋರೋಫಾರಂ ಕೊಡುವುದು ಒಳ್ಳೆಯದೆಂದು ನಿರ್ಧರಿಸಿಕೊಂಡರು. +ಅವರು ಇನ್ನೇನು ಶಾಸ್ತ್ರಿಗಳ ನೀಳ ನಾಸಿಕಕ್ಕೆ ಕ್ಲೋರೋಫಾರಂ ಇಡಬೇಕು ಅಷ್ಟರಲ್ಲಿ ಆ ನರಕದ ಬಾಗಿಲು ತೆರೆಯಿತು. +ಯಾರೋ ಸಿಂಡಿಕೇಟ್‌ನ ಭಯೋತ್ಪಾದಕ ದೊರಕಿರುವನಂತೆ, ಈಗ್ಲೇ ಹೈದರಾಬಾದ್ ಗೋಲಿಯ ರುಚಿ ತೋರಿಸ್ತೀನಿ ಎಂದು ಆರ್ಭಟಿಸುತ್ತಾ ಆ ಠಾಣೆಯ ಮುಖ್ಯಸ್ಥ ಕರುಣಕರ ಒಳ ನುಗ್ಗಿದ. +ಒಂದೊಂದು ಹೆಜ್ಜೆಗೆ ಒಂದೊಂದು ಆಯುಧ ಬಿಚ್ಚಿಕೊಳ್ಳುತ್ತ ನಡೆದ ಅವನಿನ್ನೇನು ಬೆಲ್ಟ್‌ನಿಂದ ಏಟು ಕೊಡಬೇಕು. ಅಷ್ಟರಲ್ಲಿ – +“ಕರುಣಾಕರ ನಾವು ಕಣೋ ಪರಮೇಶ್ವರ ಶಾಸ್ತ್ರಿಗಳು, ನಿನ್ನನ್ನು ನಿನ್ನ ತಾಯಿ ಗರ್ಭದಿಂದ ಬದುಕಿಸಿಕೊಟ್ಟವರು…” ಎಂದು ಪ್ರಾಣವನ್ನು ಗಂಟಲಿಗೆ ತಂದುಕೊಂಡು ನುಡಿದರು. +ಕರುಣಾಕರನಿಗೆ ದಿಗ್‌ಭ್ರಮೆ, ದೂರಕ್ಕೆ ಬೆಲ್ಟ್ ಎಸೆಯುತ್ತಾನೆ. ಮುಖ ಜಲಜಲ ಬೆವರುತ್ತಿದೆ ಬೇರ್ಗೊಯ್ದು ಬಿಸುಟ ಎಳೆಯ ಬಳ್ಳಿಯಂತೆ ಶಾಸ್ತ್ರಿಗಳ ಪಾದದ ಮೇಲೆ ಬೀಳುತ್ತಾನೆ. +ಶಾಸ್ತ್ರಿಗಳು ಅನಾಥ ರಕ್ಷಕ ಎಂದು ಅವನನ್ನು ಅಪ್ಪಿಕೊಳ್ಳುತ್ತಾರೆ. +ಅಂಗರಕ್ಷಕರಿಗೆ ಅವರ ತಪ್ಪಿನ ಅರಿವಾಗುತ್ತದೆ. ಅವರೂ ಕ್ಷಮೆ ಕೇಳಿಕೊಳ್ಳುತ್ತಾರೆ. ಪೋಲೀಸ್ ವ್ಯಾನಿನಲ್ಲಿ ಮನೆಗೆ ಮರುಳಲು ಹಿರಿಯರು ಹಿಂಜರಿಯುತ್ತಾರೆ. ಅಷ್ಟರಲ್ಲಿ ಅಂಗಳದಲ್ಲಿ ರಿಕ್ಷಾ ಬಂದು ನಿಲ್ಲುತ್ತದೆ. +“ಹರಳೆಣ್ಣೆ ಹಚ್ಚಿಕೊಂಡು ಮೈಗೆ ಬಿಸಿನೀರು ಹಾಕಿಕೊಂಡು, ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸಿ, ಮಲಗಿ ಬಿಡಿ ಒಳ್ಳೆಯ ನಿದ್ದೆ ಬರುತ್ತದೆ” ಎಂದು ಕರುಣಾಕರ ಸಲಹೆ ನೀಡುತ್ತ ಶಾಸ್ತ್ರಿಗಳನ್ನು ರಿಕ್ಷಾದಲ್ಲಿ ಕೂಳ್ಳರಿಸುತ್ತಾನೆ. +ರಿಕ್ಷಾ ಚಲಿಸುತ್ತದೆ. +“ಅಪ್ಪಾ ಶಾಮಾ…” ಚಲಿಸುತ್ತಿರುವ ರಿಕ್ಷಾದಲ್ಲಿ ಶಾಸ್ತ್ರಿಗಳು ಮುಲುಕುತ್ತಿರುವಾಗ… +ಶಾಮಾ ಶಾಸ್ತ್ರಿ ಅದೇ ತಾನೆ ಸ್ನಾನ ಮುಗಿಸಿದ. +ಅದೇ ಕೆಲವು ಕ್ಷಣಗಳ ಹಿಂದೆ ಅಲುಮೇಲಮ್ಮ ರಜಸ್ವಲೆಯಾಗಿ ಮುಂಬಾಗಿಲಿಗೆ ಮೂರು ಮಾರು ದೂರದಲ್ಲಿ ಕೂತಿದಾಳೆ. ಕೂತಲ್ಲಿಂದಲ್ಲಿಂದಲೇ ಮಗನ ನಿತ್ಯಕರ್ಮಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದ್ದಾಳೆ. +ಅದು ಅಲ್ಲಿದೆ ನೋಡು ಇದು ಇಲ್ಲಿದೆ ನೋಡು +ಇದನ್ನು ಅಷ್ಟು ಹಾಕು, ಅದನ್ನು ಇಷ್ಟು ಹಾಕು +ವೇದ ಪ್ರಮಾಣ ಪಡೆದಿರುವ ತಾಯಿ ಎಂದರೆ ಅವನಿಗೆ ಅತುಲ ಭಕ್ತಿ. ತಾಯಿಯ ನೆರಳೇ ಅವನು. ಅವನೇ ಆಕೆಯ ಹೃದಯಮಿಡಿತ. ಸ್ನಾನ ಮಾಡುವಾಗ ಅವನು ಆಕೆಯ ಬೆನ್ನು ಉಜ್ಜಬೇಕು, ಆಕೆ ಊಟ ಮಾಡುವಾಗ ತಟ್ಟೆಯಲ್ಲಿ ಜೊತೆಗೆ ಉಟ ಮಾಡಬೆಕು, ಆಕೆಯ ಜೊತೆಗೇ ಮಲಗಬೇಕು, ತನ್ನ ಒಂದು ಕಾಲನ್ನು ತಾಯಿಯ ಮೆಲೆ ಹಾಕಿರಬೇಕು. ಇವಿಷ್ಟರಲ್ಲಿ ಒಂದು ಹೆಚ್ಚು ಕಡಿಮೆಯಾದರೂ ಆಕೆ ಸಹಿಸಲಾರಳು. ಯಾಕೋ ಶಾಮೂ ನನ್ನ ಮೆಲೆ ಪ್ರೀತಿ ಕಡಿಮೆ ಮಾಡಿದೆಯಲ್ಲೋ ಎಂದು ಕಣ್ಣಲ್ಲಿ ನೀರು ತಂದುಕೊಂಡು ಬಿಡುವಳು. +ತಾಯಿಯ ಕಣ್ಣಿಂದ ಒಂದು ಹನಿ ನೆಲಕ್ಕುರುಳುವುದನ್ನು ಅವನು ಸಹಿಸುವುದಿಲ್ಲ. ಹಾಗೇನಾದರೂ ಉರುಳಿದರೆ ನೆಲ ಬರಡಾದೀತು. ಆ ಮನೆ ಮಠವಾದೀತು.. ಆದ್ದರಿಂದ ಆ ಸುಪುತ್ರ ತನ್ನ ತಾಯಿಯ ಇಚ್ಛೆಗೆ ಎಂದೂ ವಿರುದ್ಧ ನಡೆಯಲಾರ. ಆಕೆಯನ್ನು ಸದಾ ಸಂತೋಷದಿಂದ ಇಡಲು ಪ್ರಯತ್ನಿಸುತ್ತಾನೆ. +ದೂರದಿಂದ ಆಕೆ ನೀಡಿದ ಮಾರ್ಗದರ್ಶನದಲ್ಲಿ ಅಡುಗೆ ಮನೆಯನ್ನು ಶುಚಿಗೊಳಿಸಿದ. ಮುಸುರೆ ಪಾತ್ರೆಯನ್ನು ತಿಕ್ಕಿ ತೊಳೆದ, ಆಯಾ ಪ್ರಮಾಣದಲ್ಲಿ ದವಸ ಧಾನ್ಯ ಉಪಯೋಗಿಸಿ ಅಡುಗೆ ಮಾಡಿದ. +ಹುಳಿಯ ಪರಿಮಳ ನಾಲ್ದೆಸೆಗೆ ಹಬ್ಬಿತು. ಕೇರಿಯ ಜನರೆಲ್ಲ ಪರಿಮಳ ಆಸ್ವಾದಿಸಿದರು. ಅದೇ ತಾನೆ ನಿಂಬೆ ಹಣ್ಣು ಗಾತ್ರದಷ್ಟು ಮೊಲೆ ಮೂಡಿದ್ದ ಅನಸೂಯ ಹಿತ್ತಲಿಗೆ ಬಂದಳು. ಕಿಟಕಿಯಲ್ಲಿ ಶಾಮನ ಕಡೆ ನೋಡಿದಳು. ಶಾಮೂನ ಕಡೆ ಕಣ್ಣಗಲಿಸಿ ನೋಡುತ್ತಿದ್ದಾನೆ. ಆಕೆ ಅವನ ಸಹಪಾಠಿ. ಅವನ ಕಡೆ ಊಟಾ ಆಯ್ತಾ ಎಂಬಂತೆ ಸಂಜ್ಞೆ ಮಾಡಿದಳು. ಸ್ನಾನ ಆಯ್ತಾ ಎಂಬಂತೆ ಅರ್ಥ ಮಾಡಿಕೊಂಡ ತಲೆ ಅಲ್ಲಾಡಿಸಿದ, ಆಕೆಯ ಎದೆ ಮೇಲಿಂದ ಸೆರಗು ಜಾರಿತು. ಕಣ್ಣು ಕೋರೈಸಿದವು. ಎರಡು ಪುಟ್ಟ ಮೊಲೆಗಳು, ಅವುಗಳ ದರುಶನ ಮಾಡಿಸಲಿರುವೆನೆಂಬಂತೆ ನೋಡಿದಳು. ಕುಬುಸದ ಗುಂಡಿಗೆ ಕೈ ಹಚ್ಚಿದಳು. ಒಂದು ಬಂತು, ಎರಡು ಬಂತು, ಮೂರನೆಯದು ಎಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಬಿಚ್ಚು ಬಾ ಎಂಬಂತೆ ಸಂಜ್ಞೆ ಮಾಡಿದಳು ಅರ್ಧ ಬೆತ್ತಲೆ ಗೊಂಡಿರುವ ಚಿನ್ನದ ಮೊಲೆಗಳ ಅರ್ಧ ಭಾಗ ಸೂರ್ಯನ ಬೆಳ್ಳಿ ಬೆಳಕಿನಲ್ಲಿ ಥಳಥಳ ಹೊಳೆದವು. +ಪಂಚೇಂದ್ರಿಯಗಳು ಬಚ್ಚಲ ಮೋರಿಗೆ ಪುತಪುತನೆ ಉದುರಿದವು. ಅವುಗಳನ್ನು ಬಗೆಯಿಂದ ಆಯ್ದುಕೊಂಡ. ಆಯಾ ಜಾಗದಲ್ಲಿ ಅವುಗಳನ್ನು ಅಂಟಿಸಿಕೊಂಡ, ತಾಯಿ ಕೂಗಿದಳು. ಹೊರಗೆ ಓಡಿದ. +ತಾಯಿಯ ಬೋಳು ತಲೆ ತುರಿಸಿದ. ಆಕೆಯ ಅಪೇಕ್ಷೆಯಂತೆ ತೊಡೆಮೇಲೆ ತಲೆ ಇಟ್ಟು ಮಲಗಿದ, ಆಕೆಯ ಮುದ್ದು ಕೊಟ್ಟ, ಕಷಾಯ ಕೇಳಿದಳು. ಅಡುಗೆ ಮನೆಗೆ ಹೋಗಿ ಮಾಡಿ ತಂದ. ಆಕೆ ಕುಡಿಯುತ್ತಿರುವ… +“ರ್ರೀ ಯಾರಿದ್ದೀರಿ ಒಳಗಡೆ…” ಧ್ವನಿ ಕೇಳಿಸಿತು ಹೊರಗಡೆ. ಕೋಗಿಲೆಯಂಥ ದ್ವನಿ ಹೋಗಿ ನೋಡಿದ. +ಅರೆ : ಪಕ್ಕದ ಮನೆಯ ಅನಸೂಯ, ನಾಗರಹಾವುಗಳಂತೆ ಎರಡು ಜಡೆಗಳು… ಫುಳಫಳ ಹೊಳೆಯುತ್ತಿರುವ ಕಣ್ಣುಗಳು… ಒದ್ದೆಗೊಂಡಿರುವ ದುಪ್ಪನೆ ತಿಟಿಗಳು. +ಆಕೆಯೇ ತಲಬಾಗಿಲು ಪ್ರವೇಶಿಸಿದಳು. ತೂಗು ಮಂಚದ ಮೇಲೆ ಕುಳಿತು ಕೊಂಡಳು. ಗ್ರಾಮರ್ ಪುಸ್ತಕ ತಂದೀನಿ… ಎಂದು ಕೊಟ್ಟಳು… ತನಗೂ ಯಾವುದೋ ಒಂದು ಪುಸ್ತಕ ಪಡೆದುಕೊಂಡಳು. ಹೋಗುವಾಗ ಜಡೆಯ ಚುಂಗಿನಿಂದ ಅವನ ಮುಖಕ್ಕೆ ಸ್ಪರ್ಶಿಸಿದಳು… ಅವನು ನೀರುನೀರಾಗಿಬಿಟ್ಟ. +ಅವನ ತಾಯಿಯ ಜೊತೆ ಸ್ವಲ್ಪ ಮಾತಾಡಿ ಹೊರಡುವಾಗ ಶಾಮನ ಕಡೆ ನೋಡಿ ಕಣ್ಣು ಮಿಟಿಕಿಸುವುದನ್ನು ಮರೆಯಲಿಲ್ಲ… +ಕೋಣೆಯಲ್ಲಿ ಆಕೆ ಕೊಟ್ಟಿದ್ದ ಗ್ರಾಮರ್ ಎನ್ನಲಾದ ಪುಸ್ತಕ ತೆರೆದ. ಒಳಗಡೆ ಒಂದು ಸುಧೀರ್ಘ ಪ್ರಣಯಪತ್ರ… +ಅಕ್ಕರೆಯ ಶಾಮುಗೆ +ಸಕ್ಕರೆಯ ಸಿಹಿ ಮಾತು +ಹೀಗೆ ಆರಂಭಗೊಂದಿತ್ತು. ಜಲಜಾಕ್ಷಿ ಎಂಬ ಶೂರ್ಪನಖಿ ಗ್ರವ್ಂಡಿನಲ್ಲಿ ತನ್ನನ್ನು ರೇಪ್ ಮಾಡಲು ಪ್ರಯಿತ್ನಿಸಿದ್ದರ ಬಗ್ಗೆ; ಅವಳು ಜಾರಿರುವ ಅನೇಕ ಸಂಬಂದಗಳ ಬಗ್ಗೆ; ನಿಷ್ಕಲ್ಮಷವಾಗಿ ಪ್ರೀತಿಸುತ್ತಿರುವ ತನ್ನ ಬಗ್ಗೆ; ಜೊತೆಗೆ ಪ್ರೇಮ ಉಂಟುಮಾಡಿರುವ ಭಾವನೆಗಳು; ಅದರಿಂದ ಊಟ, ನಿದ್ರೆ ದೂರವಾಗಿರುವ ಬಗ್ಗೆ ಮತ್ತು ದೇಹದ ಯಾವ್ಯಾವ ಅಂಗಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ; ಹಾಗೆಯೇ ಮನಸ್ಸಿನ ಮತ್ತು ವ್ಯಕ್ತಿತ್ವದ ಯಾವ್ಯಾವ ಅಂಶಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ ವಿವರವಾಗಿ ಬರೆದಿದ್ದಳು ಆ ಭಾವೀ ಮಹಾಸತಿ! +ತನ್ನೇನಾದರೂ ಪ್ರೀತಿಸದಿದ್ದಲ್ಲಿ ತಾನು ಆತ್ಮಹತ್ಯೆಗೆ ಪ್ರಶಸ್ತ ಸ್ಥಳವಾದ ಕನ್ನೀರವ್ವನ ಬಾವಿಗೆ ಹುಣ್ಣಿಮೆಯ ರಾತ್ರಿ ಬೀಳುವುದಾಗಿ ಮತ್ತು ದೆವ್ವವಾಗಿಬಂದು ಹಿಡಿದುಕೊಳ್ಳುವುದಾಗಿಯೂ ಬರೆದು ಪತ್ರದ ಉಪಸಂಹಾರ ಮಾಡಿದ್ದಳು +ಅದನ್ನು ಓದಿದೊಡನೆ ಭಯವಾಯಿತು. ಯಾರ ಕೈಗೇನಾದರೂ ಸಿಕ್ಕಿದರೆ? ಪತ್ರವನ್ನು ಚೂರು ಚೂರು ಮಾಡಿದ. ಬಾಯಲ್ಲಿ ಇಟ್ಟು ಜಮಡಿ ನುಂಗಿ ಬಿಟ್ಟ, ತಾಮ್ರದ ತಂಬಿಗೆ ಎತ್ತಿ ಗಟಗಟ ನೀರು ಕುಡಿದ +ಅದು ಗ್ರಾಮರ್ ಪುಸ್ತಕವಾಗಿರಲಿಲ್ಲ… ಕಾದಂಬರಿಯಾಗಿತ್ತು. ಲಗು ಬಗೆಯಿಂದ ಒಂದೆರಡು ಪುಟ ಓದಿದ… ಪತ್ರದಲ್ಲಿ ಆಕೆ ಸೂಚಿಸಿದ ಭಾಗದ ಮೇಲೆ ಕಣ್ಣಾಡಿಸಿದ. +ಇಡೀ ದೆಹ ಧಗಧಗ ಹೊತ್ತಿ‌ಉರಿಯತೊಡಗಿತು. +ಲೈಟುಕಂಭದ ತುದಿಗೆ ಸಾವಿರ ಕ್ಯಾಂಡಲ್ ದೀಪ ದಗ್ಗನೆ ಹೊತ್ತಿಕೊಂಡಿತು +ಗಿಬಕ್ಕನೆ ಕಾದಂಬರಿ ಮುಚ್ಚಿ ಹಾಸಿಗೆ ಕೆಳಗಡೆ ಬಚ್ಚಿಟ್ಟ +ದಾಸವಾಳ ಗಿಡದ ಬುಡಕ್ಕೆ ಮೂತ್ರ ವಿಸರ್ಗಿಸಿ ಬಂದ +ಮತ್ತೆ ಒಂದು ಚೂರು ಓದಿ ದೇಹಕ್ಕೆ ಉತ್ತೇಜನ ಪಡೆಯಬೇಕೆನ್ನಿಸಿತು. +ಹಾಸಿಗೆ ಕೆಳಗೆ ಕೈ ತೂರಿಸಿದ, ಪುಸ್ತಕಕ್ಕೆ ಕೈ ಹಚ್ಚಿದ, ಯಾರೋ ಕೆಮ್ಮಿದಂತೆ ಸದ್ದಾಯಿತು. ತಿರುಗಿ ನೋಡಿದ. ಯಾರೂ ಇಲ್ಲ… ಚಿಲಕ ಹಾಕಿರುವ ಬಾಗಿಲು… ಹಲ್ಲಿಗಳಂಥ ಸರೀಸೃಪಗಳು ಶಾಸ್ತ್ರಿಗಳ ಧ್ವನಿಯನ್ನು ನಕಲು ಮಾಡುವುದುಂಟೇನು? +’ಎಚ್ಚರಿಕೆ ಕಾದಂಬರಿ ಪುಸ್ತಕಗಳನ್ನು ಓದಿ ವಂಶಕ್ಕೆ ಕಳಂಕ ತರದಿರು ಮಗುವೆ?’ +ಗತಿಸಿದ ಆಸ್ಥಾನ ವಿದ್ವಾನ್, ಕಾವ್ಯಾಲಂಕಾರ ಭೂಷಣ, ಪಾಣಿನಿಯ ಅಪರಾವತಾರ ಮುಂತಾದ ಬಿರುದಾಂಕಿತ ಶಾಮಾ ಶಾಸ್ತ್ರಿಗಳ ಭಾವ ಚಿತ್ರ ಮಾತಾಡುವುದೆಂದರೇನು? +ಭಯ ಸಂತೋಷ ಏಕಕಾಲಕ್ಕೆ ಉಂಟದವು. +ತುಲಸೀರಾಮಾಯಣ ಓದಲು ಪ್ರಯತ್ನದಲ್ಲಿರುವ ಅಮ್ಮನಿಗೆ ಹೇಳುವುದು ಸರಿಯಲ್ಲ. +ತಾತಗೆ ಹೇಳಿದರೆ ಅವರು ಖಂಡಿತ ಸಂತಸ ಪಡದೆ ಇರಲಾರರು! +ತಾತಾ… ಎಂದು ಕೂಗಿದ… +… ರಿಕ್ಷಾ ದಡಕೂ ದಡಕೂ ಓಡುತ್ತಿದೆ. ಅದರಲ್ಲಿ ಕೂತಿದ್ದ ಪಂಡಿತಪರಮೇಶ್ವರ ಶಾಸ್ತ್ರಿಗಳನ್ನು ದೇವರೇ ಕಾಪಾಡಬೇಕು. +ಅವರ ದೇಹದ ಎಲುಬುಗಳು ಒಂದೊಂದಾಗಿ ಸಡಿಲಗೊಳ್ಳುತ್ತಿವೆ. ಮೈ ಮೇಲಿನ ಬಟ್ಟೆ ಬಹು ಪಾಲು ಹರಿದಿರುವುದು. ಜುಟ್ಟು ಕೆದರಿ ಲೂಜುಲೂಜಾಗಿ ಕುತ್ತಿಗೆಯ ಹಿಂಭಾಗದ ಮೇಲೆ ಇಳಿ ಬಿದ್ದಿದೆ. ಕಿವಿಯಲ್ಲಿನ ಕರ್ಣಕುಂಡಲಗಳು ಬೆವರಿನಲ್ಲಿ ಹದವಾಗಿ ನೆನೆದು ಥಳಥಳ ಹೊಳೆಯುತ್ತಿವೆ. ಚಪ್ಪೆ, ಮೊಣಕಾಲು, ಬೆನ್ನಿನ ಮೇಲೆ ಬಾಸುಂಡೆಗಳು ಬೆಂಕಿಯಾಗಿ ಉರಿಯುತ್ತಿವೆ. ಮಾನಸ ಹಂಸದ ರೆಕ್ಕೆಗಳುದುರಿ ಅಸ್ತವ್ಯಸ್ತಗೊಂದಿರುವುದು. +ಇಷ್ಟೊಂದು ದುರವಸ್ಥೆಯಲ್ಲಿ ಶಾಸ್ತ್ರಿಗಳಿದ್ದುದನ್ನು ಆ ಗ್ರಾಮದ ಯಾರೂ ನೋಡಿರಲಾರರು! ಯಾರನ್ನಾದರೂ ರೇಪ್ ಮಾಡಲು ಸಿಕ್ಕಿ ಹಾಕಿಕೊಂದು ಕಡುಬು ತಿಂದಿರಬಹುದೀ ಶಾಸ್ತ್ರಿಗಳು ಎಂದು ಸುಲಭವಾಗಿ ಯಾರಾದರೂ ಊಹಿಸಿ ಬಿಡಬಹುದಿತ್ತು. +ನಾಗರ ಬೆತ್ತ ಕಾಲ ನಡುವೆ ಆಸರೆಯಾಗಿ ಊರಿ ಅದರ ನೆತ್ತಿಗೆ ಊರಿ ಮ್ಲಾನವಾಗಿರುವ ಅವರ ಮುಖ ಅರಳಿಸಲೆಂದೇ ರಿಕ್ಷ ತುಳಿಯುತ್ತಿರುವ ಈರನ್ನ ಹತ್ತಾರು ಪದಗಳ ಪಲ್ಲವಿ ಭಾಗಗಳನ್ನು ಮಾತ್ರ ಹಾಡಿದ ಅದೂ ಇದೂ ಜೋಕು ಹಾರಿಸಿದ. ಮೇಯರ್ ಮುತ್ತಣ್ಣ ನೋಡ್ದೆ ಸ್ವಾಮಿ ಭಲೇ ಭೇಷೈತೆ ಸ್ವಾಮೀ; ರಾಜ್ಕುಮಾರ್ನ ಜುಟ್ನ ದ್ವಾರಕೀಶು ಕತ್ರಿಸಿ ಮಾರಿ ಬಿಡ್ತಾನೆ ಸ್ವಾಮಿ… ಎಂದೆಂದೇನೋ ಹೇಳತೊಡಗಿದ. +ತಾನು ಆಡಿದ ಮಾತಿಗೆ ಶಾಸ್ತ್ರಿಗಳಿಂದ ಒಂದೂ ಪ್ರತಿಕ್ರಿಯೆ ಇಲ್ಲವಲ್ಲ? +ಈ ಪಂಡಿತಪ್ಪನೋರು ಪೋಲೀಸ್ ಠೇಷಣ್ಗೆ ಹೊಗಿದ್ದಾದ್ರೂ ಯಾಕೆ? +ಇದರಾಗೆಂಥದೋ ಗುಟ್ಟುಂತೆಂದು ಅಂದುಕೊಡ ಈರಣ್ಣ. +ಸತ್ಯವಂತರಿಗಿದು ಕಾಲವಲ್ಲ… ಗೊಣಗಿದ… +ಅವನಿಗೂ ದುಃಖ ಆವರಿಸಿತು. ಗಂಟಲಲ್ಲಿ ಶಬ್ದಗಳು ಶಾಬ್ದಿಕ ರೂಪ ಪಡೆಯಲಿಲ್ಲ, ನಿಟ್ಟುಸಿರು ಬಿಟ್ಟ. ಸತ್ವ ಅಡಗಿದ ಕಾಲುಗಳಿಂದ ರಿಕ್ಷ ತುಳಿದೂ ತುಳಿದೂ ಮನೆಯಮುಂದೆ ನಿಲ್ಲಿಸಲು ಒಳಗಿಂದ ಶಾಮಣ್ಣ ಓಡಿ ಬಂದ ತಾತಾ ಅಂದ. ಪ್ರತಿಕ್ರಿಯೆ ಇಲ್ಲ. +ಎಲ್ಲರೂ ಶಾಸ್ತ್ರಿಗಳನ್ನು ರಿಕ್ಷಾದಿಂದ ಕೆಳಕ್ಕಿಳಿಸಿದರು. +ಶಾಸ್ತ್ರಿಗಳು ಕೊಡಲು ಬಂದ ಹಣವನ್ನು ಸ್ವೀಕರಿಸಲು ರಿಕ್ಷಾದ ಈರಣ್ಣ ನಿರಾಕರಿಸಿದ. +ಈ ಘಟನೆ ನಡೆದ ಮೇಲೆ ಶಾಸ್ತ್ರಿಗಳು ದಿನದ ಬಹುಪಾಲನ್ನು ಮನೆಯಲ್ಲಿಯೇ ಕಳೆಯತೊಡಗಿದರು. ಅವರಿಗಾಗದವರು (ತುಂಬ ಕಡಿಮೆ) ಅವರನ್ನು ತಮಾಷೆ ಮಾಡುತ್ತಿದ್ದರು. +ಸಾಮುದ್ರಿಕ ಹೇಳೋ ನೆಪದಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಹಸ್ತ ಮುಟ್ಟಲು ಪ್ರಯತ್ನಿಸಿದ್ದು ಸಾಮಾನ್ಯ ಅಪರಾಧವೇನು? +ಗಂಡನ ಕಳಕೊಂದು ಮನೆಯಲ್ಲಿ ಮೂಲೆಹಿಡಿದಿರೋ ಸೊಸೆಯ ಹಸ್ತ ಪರಾಂಬರಿಸಬಹುದಾಗಿತ್ತಲ್ಲ! +ಹುಣುಸೆ ಮರಕ್ಕೂ ವಯಸ್ಸಾಗದೇನು! +ವಯಸ್ಸಾಗೋದಂದ್ರೆ ಹಣ್ಣಿನ ಥರ ಮಾಗೋದು ಕಣಪ್ಪಾ!… +ಇಷ್ಟೊಂದು ಅವಮಾನವಾದ ಮೇಲೂ ಬದುಕೋದೆಂದರೆ ಇವರೊಬ್ಬರೇ! +ಇಂಥ ಮಾತುಗಳನ್ನು ಕೇಳುವುದಾದರೂ ಯಾಕೆ ಅಂಥ ಶಾಸ್ತ್ರಿಗಳು ಸಾಮಾನ್ಯವಾಗಿ ಹೊರಗಡೆ ಹೋಗುತ್ತಿರಲ್ಲಿಲ್ಲ. ತಾವಾಯಿತು ತಮ್ಮ ಕುಟುಂಬದ ಸಮಸ್ಯೆಗಳಾಯಿತು. ತಮ್ಮ ಮೊಮ್ಮಗ ಶಾಮನ ಸಂಸೃತಾಭ್ಯಾಸ ಅಲ್ಲದೆ ಸಂಸೃತದಲ್ಲಿ ಒಂದು ಕಾವ್ಯ ಬರೆಯತೊಡಗಿದರು. +ಸೂರ್ಯ ಎಲ್ಲೂ ಹೊಗದಿರಬಹುದು. +ಆದರೆ ಗ್ರಹಗಳು ಅವನ ಸುತ್ತದೆ ಇರುತ್ತದೆಯೇ? +ಅವರು ಮನೆಯಲ್ಲಿರುತ್ತಿದುದೇ ತಮ್ಮ ಪುಣ್ಯ ವಿಶೇಷವೆಂದು ಕೆಲವರು ಭಾವಿಸದೆ ಇರಲ್ಲಿಲ್ಲ. ಪಶು ಸಮಸ್ಯೆ, ಮನೆ ಮಂದಿಯ ಸಮಸ್ಯೆ, ವ್ಯವಹಾರ ಸಮಸ್ಯೆ, ದಾಯಾದಿ ಸಮಸ್ಯೆ ಇಂಥ ಛಪ್ಪನ್ನಾರು ಸಮಸ್ಯೆಗಳಿಗೆ ಜನ ಶಾಸ್ತ್ರಿಗಳಿಂದ ಪರಿಹಾರ ಕಂಡುಕೊಳ್ಳತೊಡಗಿದರು. ಅವರಾಡುತ್ತಿದ್ದ ಮಾತನ್ನು ಗೌರವಿಸುತ್ತಿದ್ದರು. ಶ್ರದ್ದೆಯಿಂದ ನಡೆಯುತ್ತಿದ್ದರು. +ಪಕ್ಕದ ಮನೆಯ ಅನಸೂಯ ಅಂತ ಹೆಳಿದೆನಲ್ಲ ಅಕೆಯ ಅಪ್ಪ ಪುಟ್ಟ ಬೆಟ್ಟದಂತೆ ಇದ್ದ. ಈ ದೇಶದಲ್ಲಿ ಪ್ರಜಾಪ್ರಭುತ್ವ ಅವತರಿಸಿ ಮೊದಲನೆ ಚುನಾವಣೆಯಲ್ಲಿ ಮತ ಚಲಾಯಿಸಿದೊಡನೆ ನಾಪತ್ತೆಯಾಗಿ ಬಿಟ್ಟ, ಮೊದಲು ಆತನಿಗೆ ಕೆಲವು ಸಾಧುಗಳ ನಿಕಟ ಪರಿಚಯವಿತ್ತು. ದಿನಾ ರಾತ್ರಿ ಗಾಢವಾಗಿ ಚರ್ಚಿಸುತ್ತಿದ್ದ. ಅಮಾವಾಸ್ಯೆ ದಿನ ಬೆತ್ತಲಾಗಿ ಸುಡುಗಾಡಿನಲ್ಲಿ ಇಡೀ ರಾತ್ರಿ ಕಳೆಯುತ್ತಿದ್ದ. ಇಂಥಾತ ದೇಶಕ್ಕೆ ಸ್ವಾತಂತ್ರ ಬರುವುದನ್ನೇ ಕಾಯುತ್ತಿದ್ದ. ಮೊದಲ ಚುನಾವಣೆ ನಡೆಯುವುದನ್ನೇ ಕಾಯುತ್ತಿದ್ದ. ಮತ ಚಲಾಯಿಸಿದೊಡನೆ ಕೆಲವು ಸಾಧುಗಳನ್ನು ಬೆಟ್ಟಿ ಮಾಡಿದ್ದನ್ನು ಕೆಲವರು ನೋಡಿದರು. ನೋಡಿದವರೆಲ್ಲಾ ಮನೆಗೆ ಬಂದು ಹೇಳಿದರು. ಆತನ ಹೆಂಡತಿ ರುಕ್ಮಿಣಿ +ಮೊದಲೇ ತುಂಬು ಗರ್ಭಿಣಿ. ಹೊಟ್ಟೆ ಮತ್ತು ಎದೆಯ ಭಾಗವನ್ನು ಕೈಯಿಂದ ಬಡಿದುಕೊಳ್ಳುತ್ತ ವಾರ ದಿನಮಾನ ಅತ್ತಳು, ಕೂಲಿ ನಾಲಿ ಮಾಡಿ ಬದುಕನ್ನು ದೂಡಿದಳು. ಕೊನೆಗೊಂದು ದಿನ… ಅಂದರೆ ಹುಣ್ಣಿಮೆ ರಾತ್ರಿ ಎಣ್ಣೆಗೆಂಪು ಬಣ್ಣದ ಹೆಣ್ಣು ಕೂಸಿಗೆ ಜನ್ಮ ನೀಡಿದಳು. ಆಕೆ ತಾನು ತುಂಬ ಪ್ರೀತಿಸುತ್ತಿದ್ದ ಆತ್ರೇಯ ಮಹರ್ಷಿಯ ಪತ್ನಿ ಅನಸೂಯಳ ಹೆಸರಿಟ್ಟಳು. ಆ ಮಗು ದಿನಕ್ಕೊಂದು ಚಂದದಲ್ಲಿ ಬೆಳೆಯತೊಡಗಿತು. ಬೆಳೆದೂ ಬೆಳೆದೂ ಹತ್ತು ತುಂಬಿ ಹನ್ನೊಂದಕ್ಕೆ ಬಿದ್ದಾಗ ಋತುಮತಿಯಾಯಿತು. ಋತುಮತಿಯಾದ ವರ್ಷವೇ ಆಕೆ ಅಪ್ಪ ರುದ್ರಪ್ಪ ರುದ್ರನಾಯಕ ಎಂಬ ಹೆಸರು ಧರಿಸಿ ಪ್ರತ್ಯಕ್ಷನಾದ. ಗೇಣುವರೆ ಗಡ್ಡ, ಭೂಮಧ್ಯೆ ಕುಂಕುಮ ರೇಖೆ, ಎದೆ ತುಂಬ ಐವತ್ತಾರು ನಮೂನೆಯ ಸರಗಳಿತ್ಯಾದಿ… ಬೆರಳಿಗೊಂದೊಂದು ತರನ ಉಂಗುರಗಳು… ನೋಡಲಿಕ್ಕೆ ಭಯಾನಕವಿದ್ದ. ಈತನೇ ಗಂಡ ಎಂದು ಗುರುತಿಸಿದಳು. ಮನೆ ತುಂಬಿಸಿಕೊಂಡಳು. ಬಾಳುವೆ ಶುರುವಾಯಿತು. ಆತನ ಮನೆಗೆ ಎಲ್ಲಿಂದಲೋ ಯಾರ್ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಅವರೆಲ್ಲರಿಗೂ ರುದ್ರನಾಯಕನೆಂದರೆ ಭಯ ಮಿಶ್ರಿತ ಗೌರವ… ಓಣಿಯಲ್ಲೊಂದೇ ಅಲ್ಲ… ಇಡೀ ಊರು ತುಂಬ ಆತನ ಬಗ್ಗೆ ನೂರಿಪ್ಪತ್ತಾರು ಕಥೆಗಳು… ಭೂತ ಪ್ರೇತಗಳೆಲ್ಲ ಅವರ ಗುಲಾಮರಂತೆ, ಮಾಟದಿಂದ ಮಾತು ಕಳೆವನಂತೆ, ಮಂತ್ರದಿಂದ ಸೊಂಟ ಮುರಿವನಂತೆ, ಸ್ತ್ರೀವಶೀಕರಣ ಮಾಡುವನಂತೆ, ಕೂತಲ್ಲಿಂದ ಗಾವುದ ದೂರದಲ್ಲಿರುವನ ಪ್ರಾಣ ಕಳೆವನಂತೆ, ಹೆಣಗಳೊಂದಿಗೆ ಮಾತಾಡುವನಂತೆ. ಹೀಗೆ ಯಾವ ಯಾವ ಸುದ್ದಿಗಳೋ ಹಬ್ಬಿದವು. ಎಲ್ಲರೂ ತಿಳಿದಿರುವಂತೆ ರುದ್ರನಾಯಕ ತಾನೂ ಸುಖವಾಗಿದ್ದಾನೆ; ಹೆಂಡತಿ ರುಕ್ಮಿಣಿಯನ್ನು ಮತ್ತು ಪ್ರೀತಿಯ ಏಕಮಾತ್ರ ಪುತ್ರಿ ಅನಸೂಯಳನ್ನು ಸುಖವಾಗಿಟ್ಟಿದ್ದಾನೆ. +ಬಂಗಾರ ತಯಾರು ಮಾಡಬಲ್ಲವರು ಸುಖವಾಗಿರದೇನು ಮಾಡುತ್ತಾರೆ. +ಬಂಗಾರ ತಯಾರಿಸುವುದು ನಿಜವೋ ಸುಳ್ಳೋ! ಆದರೆ ಆತ ಕೆಲವರೊಂದಿಗೆ ದೂರದ ನಗರಕ್ಹೋಗಿ ನಾಲ್ಕರಿಂದ ಏಳು ದಿನಗಳವರೆಗೆ ಅಲ್ಲಿದ್ದು ಬರುತ್ತಾನೆ. +ಯಂತ್ರ; ಜೋತಿಷ್ಯ ವಿಷಯದಲ್ಲಿ ತನ್ನ ಪಕ್ಕದ ಮನೆ ಯ ಯಕಶ್ಚಿತ್ ಬ್ರಾಹ್ಮನನೋರ್ವ ಜನಪ್ರಿಯನಾಗುವುದೆಂದರೇನು? ರುದ್ರನಾಯಕ ಕೆಲವರ ಬಳಿ ತನ್ನ ಅಸಮಾಧಾನ ಪ್ರಕಟಿಸಿದ್ದುಂಟು. +“ಕ್ಷುದ್ರ ವಿದ್ಯೆ ಯಾಕೆ ಬೇಕು ಈ ಬ್ರಹ್ಮಣರಿಗೇಂತ?” ಎಂದು ಹಲವರ ಬಳಿ ಆತ ಗೊಣಗಾದಿದ್ದೂ ಉಂಟು. +ಗೊಣಗಿಸಿಕೊಂಡವರು ಶಾಸ್ತ್ರಿಗಳಿಗೆ ಸುದ್ದಿ ಮುಟ್ಟಿಸಿದರು. +ಅವರಿಗೆ ನಗು ಬಂತು. +ರುದ್ರನಾಯಕನ ಹೆಸರು ಕೇಳಿದ್ದುಂಟು, ಎಂದೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ಕ್ಷುದ್ರ ಶಕ್ತಿಗಳನ್ನು ಉಪಾಸನೆಯಿಂದ ಎಷ್ಟು ದಿನ ಅಧೀನದಲ್ಲಿಟ್ಟುಕೊಂಡಿರಲು ಸಾಧ್ಯ? ಅದರಿಂದ ಇನ್ನೊಬ್ಬರಿಗೆ ಹಾನಿ ಉಂಟು ಮಾಡಬಹುದೇ ಹೊರತು ಒಳ್ಳೆಯದು ಮಾಡಲಾದೀತೆ? ವೇದೊಪನಿಷತ್ತುಗಳನ್ನೆಲ್ಲ ಅರಗಿಸಿಕೊಂಡಿರೋ ತಮ್ಮನ್ನು; ಗಾಯತ್ರಿಯನ್ನು ನಾಲಿಗೆಯ ಮೇಲೆ ಪ್ರತಿಷಾಪಿಸಿಕೊಂಡಿರುವ ತಮ್ಮನ್ನು; ಪ್ರಾಣಾಯಾಮದಿಂದ ದೇಹದ ಸಮಸ್ತ ಶಕ್ತಿಯನ್ನು ಸಂವರ್ಧಿಸಿಕೊಂಡಿರುವ ತಮ್ಮನ್ನು ರುದ್ರನಾಯಕನಂಥ ಸಂಸ್ಕಾರ ಹೀನ ಏನು ಮಾಡಲು ಸಾಧ್ಯ? +ಅಲ್ಲಿ ಅವನೂ ಅವರಿವರ ಬಳಿ ಅದೇ ಅಂದು ಕೊಳ್ಳುತ್ತಿದ್ದ… +ಒಂದು ದಿನ ಎರಡು ಘಟಾನುಘಟಗಳು ಇಕ್ಕಟ್ಟಾದ ಓಣಿಯಲ್ಲಿ ಪರಸ್ಪರ ಎದುರಾದರು. ಒಂದೆರಡು ಕ್ಷಣ ದೃಷ್ಟಿ ಯುದ್ದ ಮಾಡಿದರು ಮತ್ತೊಂದೆರಡು ಕ್ಷಣ ತುಟಿಚಲನೆಯ; ಬೆನ್ನು ಸಂಚಲದ ಯುದ್ಧ ಮಾಡಿದರು. +ಆತಗೆ ಈತ ದಾರಿ ಬಿಡಲು ತಯಾರಿರಲಿಲ್ಲ. +ಈತಗೆ ಆತ ದಾರಿ ಬಿಡಲು ಸಿದ್ಧನಿರಲಿಲ್ಲ. +ಕೊನೆಗೆ ಆಕಡೆ ಓಣಿಯವರು ಆಕಡೆ ನಿಂತು, ಈಕಡೆ ಓಣಿಯವರು ಈಕಡೆ ನಿಂತು ಆತನನ್ನು ಈಕಡೆ ಕಳುಹಿಸಿದರು, ಈತನನ್ನು ಆಕಡೆ ಕಳುಹಿಸಿದರು. ದುರ್ದಾನ ತೆಗೆದುಕೊಂಡವರಂತೆ ಅವರವರ ಮನೆ ಸೇರಿಕೊಂದನಂತರವೂ ಅವರು ತೆಪ್ಪಗಿದ್ದಲ್ಲಿ ಶಾಮಾಶಾಸ್ತ್ರಿ ಮತ್ತು ಅನಸುಯರ ನಡುವಿನ ಸೇತುವೆ ತುಕ್ಕು ಹಿಡಿದು ಕುಸಿಯುತ್ತಿರಲಿಲ್ಲ. +ಶಾಸ್ತ್ರಿಗಳು ಮೊಮ್ಮಗನ ಜೊತೆಯಲ್ಲಿ ಸೊಸೆಯನ್ನು ಬೃಂದಾವನಕ್ಕೆ ಕಳಿಸಿಕೊಟ್ಟರು. ರಾಘವೇಂದ್ರಸ್ವಾಮಿಗಳು ಕನಸಿನಲ್ಲಿ ಬಂದು ಏನು ಅಪ್ಪಣೆ ಕೊಡಿಸುವರೋ ತಿಳಿದುಕೊಂಡು ಬನ್ನಿರೆಂದು ಹೇಳುವುದು ಮರೆಯಲಿಲ್ಲ, ಅವರು ಅತ್ತ ಹೋಗುತ್ತಲೇ ಇತ್ತ ಮನೆಯಲ್ಲಿ ಶತ್ರು ನಿರ್ಮೂಲನೆಗೆ ಸಂಬಂಧಿಸಿದಂಥ ಒಂದು ಹೋಮ ಮಾಡಿದರು. +ಮಾರನೆಯ ದಿನ ಮೊಮ್ಮಗ ಸೊಸೆ ತಂತಮ್ಮ ಮುಖಗಳನ್ನು ಸಪ್ಪಗೆ ಮಾಡಿಕೊಂಡು ಬಂದರು. ತಮ್ಮ ಹೋಮದ ಪ್ರಭಾವ ಅವರ ಮೇಲಾಗಿದೆ ಎಂದು ಖಿನ್ನರಾದರು. ಆದರೆ ವಸ್ತುಸ್ಥಿತಿ ಏನೆಂದರೆ ಶ್ರೀಕ್ಷೇತ್ರದಲ್ಲಿ ಮಠದ ಒಂದು ಮೂಲೆಯಲ್ಲಿ ರಾಘವೇಂದ್ರ ಸ್ಮರಣೆ ಮಾಡುತ್ತ ಅಲುಮೇಲು ಮಲಗಿದ್ದು ನಿಜ, ಕತ್ತಲಲ್ಲಿ ಯಾರೋ ಕಾಣಿಸಿಕೊಂಡರು, ನಾವೇ ಸ್ವಾಮಿಗಳು ಎಂದು ಹತ್ತಿರ ಬಂದರು, “ಓ ಪ್ರಭು ದರ್ಶನ ನೀಡಿ ಕೃತಾರ್ಥಳನ್ನಾಗಿ ಮಾಡಿದೆಯಾ” ಎಂದು ಭಕ್ತಿಪರವಶಳಾಗಿ ಕಣ್ಮುಚ್ಚಿಕೊಂದು ಮೈಮರೆತದ್ದು ನಿಜ, ಸ್ವಾಮಿಗಳು ಒಮ್ಮೆಗೆ ಕುಪ್ಪಳಿಸಿ ಆಕೆಯ ಮೈಮೇಲೆರಗಿ ಮೊಲೆ ಹಿಚುಕಿದ್ದೂ ನಿಜ, ಓಹ್ ದೇವರ ಚಿತ್ತ ಅಂತ ಆಕೆ ಕೆಲವು ಕ್ಷಣ ಹಿಚುಗಾಟವನ್ನು ಸಹಿಸಿಕೊಂಡದ್ದು ನಿಜ, ಸೆರೆ ವಾಸನೆ ಮೂಗಿಗಡರಿ ಸ್ವಾಮಿಗಳು ಸೆರೆ ಕುಡಿಯುವುದುಂಟೆ ಎಂದು ತನಗೆ ಪ್ರಶ್ನಿಸಿಕೊಂಡದ್ದು ನಿಜ, ಅರೆ ಅವನ್ಯಾರೋ ಪೊಕರಿ ಇರಬೇಕೆಂದು ಎದೆಗೆ ಕಾಲು ಕೊಟ್ಟು ಒದ್ದು ಲಬೋ ಲಬೋ ಬಾಯಿಬಡಿದುಕೊಂಡಿದ್ದು ನಿಜ, ಅಷ್ಟು ದೂರ ಮಲಗಿದ್ದ ಮಗ ಓಡಿ ಬಂದು ಅವನನ್ನು ಹಿಡಿದದ್ದು ನಿಜ, ಜನರೆಲ್ಲ ಸೇರಿ, ಏನೋ ಬುದ್ಧಿ ಇಲ್ದೆ ಇಂಥ ಕೆಲಸ ಮಾಡಿದ್ದಾನೆ ಕ್ಷಮಿಸಿ… ರಾಯರೇ ನೋಡಿಕೊಳ್ತಾರೆ… ಎಂದು ಬಿಡಿಸಿದ್ದು ನಿಜ, ಅವರು ಲಿಂಬರಾಮ್ ಬಿಟ್ಟ ಬಾಣದಂತೆ ಓಡೀ ಓಡಿ ಕತ್ತಲೆಯಲ್ಲಿ ಮರೆಯಾದದ್ದು ನಿಜ. +ಇಷ್ಟೆಲ್ಲ ನಿಜ ಸಂಗತಿಗಳನ್ನು ಹೋಗಿ ಶಾಸ್ತ್ರಿಗಳಿಗೆ ಹೇಳಲಾದೀತೇನು?… +ಅದೇ ಸೂರ್ಯೋದಯಕ್ಕೆ ರುದ್ರನಾಯಕನಿಗೆ ಮೂತ್ರ ಶಂಕೆಯಾಯಿತು. ಎಲ್ಲಾ ವಾಮಾಚಾರಿಗಳಂತೆ ಆತನೂ ಸಹ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ ಬೇಕಾಬಿಟ್ಟಿ ಮೂತ್ರವನ್ನಾಗಲೀ; ಮಲವನ್ನಾಗಲೀ ವಿಸರ್ಜಿಸುವುದಿಲ್ಲ, ತಮ್ಮ ದೇಹದ ಯಾವುದೇ ಕೂದಲು ಬೋಳಿಸುವಾಗಲೂ ಅಷ್ಟೇ ಮುತುವರ್ಜಿ, ರು.ನಾಯಕ, ಪ್ರತಿಸಾರಿ ಮೂತ್ರವಿಸರ್ಜಿಸುವ ಮೊದಲು ಎರಡುಗೇಣು ಆಳದ ಕುಣಿ ತೋಡಿ ಅದರಲ್ಲಿ ಮೂತ್ರ ವಿಸರ್ಜಿಸಿ, ತದನಂತರ ಅದನ್ನು ಮುಚ್ಚಿ ಬಿಡುವುದು ವಾಡಿಕೆ. ಮಲ ವಿಸರ್ಗಿಸುವಾಗಲೂ ಅಷ್ಟೆ. +ಅದಕ್ಕೆ ಬೇಕಾಗುವ ಹತಾರಗಳನ್ನು ತೆಗೆದುಕೊಂಡು ಅಗಸರ ಭಾವಿ ಹಿಂದಕ್ಕೆ ಹೋದ. +ಹಾರೆಯಿಂದ ತನ್ನ ಕಾಲನ್ನು ತಾನೆ ಜಜ್ಜಿಕೊಂಡ. ರಕ್ತ ಚಿಲ್ಲೆಂದಿತು. ಛುಪ್ ಅಂತ ಮಂತ್ರಿಸಿ ಬಟ್ಟೆ ಕಟ್ಟಿಕೊಂಡ, ಅದೊಂದು ಓಣಿಯಲಿ ದೊಡ್ಡ ಸುದ್ದಿಯಾಗಿಬಿಟ್ಟಿತು. +ಶಾಸ್ತ್ರಿಗಳು ಕಿಂಡಿಯಲ್ಲಿ ಅವಿತು ಕೂತು ರು.ನಾಯಕ ಕುಂಟುತ್ತ ತಿರುಗಾಡುತಿರುವುದನ್ನು ನೋಡಿ ಸಂತಸಪಟ್ಟರು. +ಇದಕ್ಕಾಗಿ ಶಾಸ್ತ್ರಿಗಳು ಹೋಮ ಮಾಡಿದರೆಂಬ ಸಂಗತಿ ರುದ್ರನಾಯಕನಿಗೆ ಹೇಗೋ ತಿಳಿದುಬಿಟ್ಟಿತು. ಶಾಸ್ತ್ರಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ. ಹೆಂಡತಿ ರುಕ್ಮಿಣಿಯನ್ನು ಮತ್ತು ಅನಸೂಯಳನ್ನು ಬಿಕ್ಕಿಮರಡಿ ಜಾತ್ರೆಗೆ ಕಳಿಸುವ ಏರ್ಪಾಡು ಮಾಡಿದ, ಬಿಕ್ಕಿಮರಡಿ ದುರುಗಮ್ಮ ಆತನ ಮನೆದೇವರು. ಆಕೆಯ ಹಾಳುಗುಡಿಯೊಳಗೇ ತಾನು ಹೆಚ್ಚಿನ ಉಪಾಸನೆ ಮಾಡಿರಿವುದು. ಆಕೆಯ ಪಾಳು ಗುಡಿ ಪಕ್ಕ ಎಂದೋ ಒಂದು ಕಾಡು ಇತ್ತು; ಆಕೆಯ ಗುಡಿ ಆಜುಬಾಜು ಒಂದೋ ಒಂದು ಊರು ಇತ್ತು, ಆಕೆಯ ಗುಡಿ ಮಗ್ಗುಲಲ್ಲಿ ಎಂದೋ ಹರಿದಿದ್ದ ಒಂದು ನದಿಯ ಗುರುತಿರುವುದು, ಇಂಥಾ ಅವಶೇಷಗಳ ನಡುವೆ ಗುಡಿ ಮಾತ್ರ ಉಳಿದುಕೊಂಡು ಬಂದಿದೆ. ಅವಶೇಷಗಳು ಪ್ರಣಯಿಗಳಿಗೆ ಆಶ್ರಯ ನೀಡುತ್ತವೆ. +ಜಾತ್ರೆ ಇರುವುದು ಬರುವ ಶುಕ್ರವಾರ, +ಕುಮಾರಿ ಅನಸೂಯಳಿಗೆ ಹೆಚ್ಚು ಸಂತೋಷವಾಯಿತು, +ಕುಪ್ಪಸದೊಳಗೆ ಪ್ರಣಯ ಪತ್ರ ಬರೆದಿಟ್ಟುಕೊಂಡು ’ರೀ ಅದೀರೆನ್ರೀ’ ಅಂತ ಬಾಗಿಲ ಬಳಿ ನಿಂತಳು. ಮನೆಯೊಳಗೆ ಅಲುಮೇಲಮ್ಮ ದೇವರ ಕೋಣೆಯೊಳಗೆ ತುಲಸಿ ರಾಮಾಯಣದ ಎಂಟನೆ ಅಧ್ಯಾಯದಲ್ಲಿ ಮಗ್ನರಾಗಿದ್ದರು, ಶಾಸ್ತ್ರಿಗಳು ಸಬ್‌ಇನ್ಸ್‌ಪೆಕ್ತರ್ ಕರುಣಾಕರನ ಮಗಳ ಕುಂಡಲಿ ಪರಿಶೀಲನೆಗೆಂದು ದಪ್ಪ ಕನ್ನಡಕದೊಳಗೆ ಹೋಗಿದ್ದರು. +ಶಾಮನ ಎದೆ ಡವದವ ಬಡಿದುಕೊಳ್ಳತೊಡಗಿತು. ಬಾಯಿ ಒಣಗಿತು, ತನ್ನ ಕನಸಿನ ಭಾಗ್ಯ ಬಯ್ಸದೆ ಬಂದು ಬಾಗಿಲಲ್ಲಿ ನಿಂತು ಪಿಳಿಪಿಳಿ ಕಣ್ಣು ಬಿಡುತ್ತಿರುವುದು, ಈ ಪುಳಿಚಾರೇಕೆ ಹಿಂಗ್ಮಾಡುತಿದೆ? ಆಕೆಯೇ ಒಳಗಡೆ ಹೋದಳು. ಶಾಸ್ತ್ರಿಯನ್ನು ಮೂಲೆಯ ಕತ್ತಲಿಗೆ ಗಬಕ್ಕನೆ ಎಳೆದುಕೊಂಡಳು. +ಕುಪ್ಪಸದೊಳಗಿದ್ದ ಪ್ರೇಮಕಾವ್ಯವನ್ನು ಅವನ ಕೈಯೊಳಗೆ ತೂರಿಸಿದಳು. ಹರಿಣಿಯಂತೆ ಹೊರ ಓಡಿದಳು. +ಒದ್ದೆಗೊಂಡ, ಕೋಣೆಗೆ ಹೋಗಿ ಕಾವ್ಯ ಓದಿದ, ತಾನೂ ಒಂದು ದಿಕ್ಕಿನಿಂದ ಚಿಕ್ಕಮರಡಿ ಜಾತ್ರೆ ತಲುಪಬೇಕೆಂದು ನಿರ್ಧರಿಸಿದ, ಅದೇನು ತಾನು ನೋದಿರದ ಜಾತ್ರೆ ಏನಲ್ಲ!. +ಆ ದಿನ ಚತುರ್ಯುಗ ದಾಟಿದ ಮೇಲೆ ಬಂತು. ಅದರೊಂದಿಗೆ ನಾಯಿಯೂ ಬಂತು, “ಏನಯ್ಯಾ ಶಾಸ್ತ್ರಿ ಹೊರಟೆಯಾ ಗುಡಲಕ್” ಎಂಬರ್ಥ ಬರುವಂತೆ ಬಾಲ ಅಲ್ಲಾಡಿಸಿ ಕುಂಯ್ ಕುಂಯ್ ಅಂತು. +ಹಚಾ ಹಚಾ ಅಂತ ಎಷ್ಟು ಗದರಿಸಿದರೂ ಅದು ಕೇರ್ ಮಾಡಲಿಲ್ಲ. ಬಾಡಿಗಾರ್ಡು ಕೆಲಸ ಮಾಡ್ತೀನಿ ಕಣಯ್ಯ ಅಂಥ ಹಿಂಬಾಲಿಸಿತು. ಅವನಿಗೋ ನಾಚಿಕೆ; ಜನಜಂಗುಳಿ ನಡುವೆ ಹೋಗಬೇಕೆಂದರೆ. ಜನರು ಬೇವಿನ ಮರದ ಮಗ್ಗಲು ನಡೆಯುತ್ತಿದ್ದರೆ ಇವನಾದರೋ ಹುಣಸೆ ಮರದ ಮಗ್ಗುಲು ನಡೆಯುತ್ತಿದ್ದನು. ಜೊತೆಯಲ್ಲಿ ಬಾಡಿಗಾರ್ಡಿಂಗ್ ಉಂಟು. ಇನ್ಯಾಕೆ ಭಯ? +ಹಾಗು ಹೀಗೂ ಎರಡು ಕಿಲೋಮೀಟರು ನಡೆದು ಬಿಕ್ಕಿಮರಡಿ ತಲುಪಿದ. ಅಲ್ಲಿ ಇಲ್ಲಿ ಹುಡುಕುವ ಕಣ್ಣುಗಳೊಡನೆ ಅಡ್ಡಾಡಿದ, ಮಿಠಾಯಿ ಗುಡಾರದ ಹಿಂದೆ ಯಾರೋ ಕುಂಡಿ ಚಿವುಟಿದಂತಾಯಿತು. ತಿರುಗಿ ನೋಡಿದ, ಅನಸೂಯಾ. +ಅಗೋ ಅಲ್ಲಿಗೆ ಬಾ ಕಾಯ್ತಿತೀನಿ ಎಂದು ಪಿಸಿ ಪಿಸಿ ನುಡಿದಳು. ಚಂಗ್ ಅಂತ ಮರು ಕ್ಷಣದಲ್ಲಿ ಮಾಯವಾಗಿ ಬಿಟ್ಟಳು. +ಅದನ್ನು ಯಾರು ನೋಡಿದರೋ! ಯಾರು ಬಿಟ್ಟರೋ! +ಶಾಮು ಲಗುಬಗೆಯಿಂದ ಹೆಜ್ಜೆ ಹಾಕತೊಡಗಿದ. ಕ್ರಾಪಿನೊಳಗೆ ಎರಡು ಗಂಟುಗಳಿದ್ದ ಜುಟ್ಟು ತಪ್‌ತಪ್ ಅಂತ ತಬಲದ ಶ್ರುತಿ ಸರಿಪಡಿಸುತ್ತಿತ್ತು. +ಜನರಿಂದ ದೂರವಿದ್ದ ಪಾಳು ಮಂಟಪ ಅದು. ಹಿಂದಿನ ದಿನ ಅಲ್ಲಿ ಕೋಳಿ ಕುರಿ ಬಲಿ ಕೊಟ್ಟು ಅಮ್ಮಗೆ ನೇವೇದ್ಯ ಮಾಡಿರುತ್ತಾರೆ. +ಇನ್ನು ಕೆಲವೇ ಕ್ಷಣಗಲ್ಲಿ ತಮ್ಮ ಪ್ರಣಯದ ಕ್ಲೈಮಾಕ್ಸ್ ಆರಂಭವಾಗಲಿದೆ. ಎಲ್ಲಾರೀತಿಯ ಪಟ್ಟುಗಳನ್ನು ಪ್ರತಿ ಹೆಜ್ಜೆಗೆ ಕಲಿಯ ತೊಡಗಿದ. ಬೆಚ್ಚಗಾಗುವುದು ತಣ್ಣಗಾಗುವುದು ನಡೆದೇ ಇತ್ತು. ನಾಯಿ ವೆಟೆನರಿ ದಾಕ್ಟರ್ ಶೈಲಿಯಲ್ಲಿ ಹಿಂಬಾಲಿಸಿತ್ತು. +ಆತ ಕಣ್ಣು ತೆರೆದಿದ್ದರೂ ಮುಚ್ಚಿದಂತೆ ಇದ್ದ… ಕನಸುಗಳುಬೆಚ್ಚಗೆ ಬಿಚ್ಚಿಕೊಳ್ಳ ತೊಡಗಿದ್ದವು. ಯಾರನ್ನೂ ಗುರುತಿಸುವ ಪೈಕಿ ಅವನಿರಲಿಲ್ಲ. ನೂರೆಂಟು ನಮೂನೆಯ ಭಯಗಳು ಹೃದಯ ಸಿಂಹಾಸನವನ್ನಾಲಂಕರಿಸಲು ಧರ್ಮ ಯುದ್ದ ಮಾಡತೊಡಗಿದ್ದವು. +ವಿ.ಡಿ.(ವೆಟರ್ನರಿಡಾಗ್) ಬೊವ್ ಅಂತು. ಹೆಣ್ಣು ಹುಲಿಯೊಂದು ಒಂದೇ ಏಟಿಗೆ ಕುಪ್ಪಳಿಸಿ ಎದುರಿಗೆ ನಿಂತು ’ಹೆಲೋ’ ಅಂತು, ಕಣ್ಣು ಬಿಟ್ಟು ನೋಡುತ್ತಾನೆ. ಕ್ಳೆದ ತಿಂಗಳು ಬಳ್ಳಾರಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಪಡೆದ ಜಲಜಾಕ್ಷಿ +ಆಕೆ ದರುಶನ ಮಾತ್ರದಿಂದ ಶಾಮನ ಹೊಟ್ಟೆ ರುಮ್ ಅಂತು. ಅರೆನುರಿದ ಗೊಬ್ಬರ ಕರುಳುಗಳಲ್ಲಿ ಮ್ಯಾರಥಾನ್ ಶುರು ಮಾಡಿತು. +ಏನೋ ಮಾತಾಡಲು ಹೋದ… ಬ್ಬೆ ಬ್ಬೆ ಅಂದ. +“ಮರ್ಯಾದೆಯಿಂದ… ನಾನು ಹೇಳಿದ ಕಡೆ ಬರ್ತೀಯೋ ಇಲ್ಲಾ ಹೊತ್ಕೊಂಡು ಹೋಯ್ದು ಬಿಡಲೋ… ” ಎಂದು ಆ ಗೊಬ್ಬರದಂಗಡಿ ಹುಡುಗಿ ತೊಡೆಯ ಮಾಂಸಖಂಡಗಳನ್ನು ಹುರಿ ಮಾಡಿದಳು. ಕಣ್ಣುಗಳಿಮ್ದ ಲೇಸರ್ ಕಿರನಗಳನ್ನು ಬಿಟ್ಟಳು. +ಕೈಗೆ ಸಿಕ್ಕರೆ ನಾಶವಾಗುವುದು ಖಚಿತವೆಮ್ದುಕೊಂಡ, ಹೆತ್ತ ಮಾತೃ ದೇವತೆಗಿಂತಲೂ ತನ್ನನ್ನು ತಾನು ಹೆಚ್ಚು ಪ್ರೀತಿಸುವವನಾದ ಅವನು ’ಸ್ಟಾರ್ಟ್’ ಎಂದು ಹೇಳಿದ. ಹುಲಿ ಲದ್ದಿ ವಾಸನೆಗೆ ಹೆದರಿ ಹರಿಣಿ ಓಡುವುದಲ್ಲಾ ಹಾಗೆ ಓಡಲಾರಂಸಿದ. ತಾನು ಅತ್ಯುತ್ತಮ ಓಟಗಾರನೆಂದು ಸಾಬೀತು ಪಡಿಸಲಿಕ್ಕಾಗಿ ಎಂಬಂತೆ ಓಡತೊಡಗಿದ, ಜಾತ್ರೆಯ ಒಂದು ಭಾಗದ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಿತು. +“ಒಬ್ಬ ಬ್ರಾಹ್ಮಣರ ಹುಡುಗ ಇಷ್ಟು ವೇಗವಾಗಿ ಓಡಬಲ್ಲನೆಂದರೆ ಈ ದೇಶ ಸರ್ವತೋಮುಖ ಅಭಿವೃದ್ದಿ ಸಾಧಿಸಿದಂತೆಯೇ ಸರಿ” ಸುಸಂಸ್ಕೃತನೊಬ್ಬ ಗೊಣಗಿದ, ಅವನು ತಾನು ಓಡುವ ರೀತಿಗೆ ತಾನೇ ಮೆಚ್ಚಿಕೊಂಡ, ತಾನು ಓಡಿದಮ್ತೆ ಅನಸೂಯಳ ತಂದೆ ಓಡಬಲ್ಲನೇನು? ತಾನು ಆತನ ಮಗಳನ್ನು ಪ್ರೀತಿಸುವುದು, ಹಾಳೂ ಮೂಳೂ ಎಲ್ಲಾ ಅವನಿಗೆ ಗೊತ್ತಾಗಿಬಿಟ್ಟರೆ? ಅವನು +ತನ್ನ ಮೇಲೆ ಮಾಟ ಮಂತ್ರ ಮಾಡಿ ಪುರುಷತ್ವ ನಾಶಪಡಿಸಿಬಿಟ್ಟರೆ? ಅಯ್ಯೋ ರುದ್ರನಾಯಕನೇ… +… ಹ್ರಾಂ ಹ್ರೀಂ… ಹ್ರೂಂ… ರುದ್ರನಾಯಕ ಚಕ್ರಬಂಧದ ನಡುವೆ, ತಲೆ ಬುರುಡೆಯ ಮುಂದಿರುವ ಮಣ್ಣಿನಗೊಂಬೆಯ ಕಡೆ ಒದೊಂದು ಜಾತಿಯ ಮುಳ್ಳನ್ನು ಮಂತ್ರಿಸಿ ಒಂದೊಂದು ರೀತಿಯಲ್ಲಿ ಅರ್ಚಿಸುತ್ತಿದ್ದಾನೆ… ತಲೆ ಬುರುಡೆಯ ಸುತ್ತ ಅದನ್ನು ತಿರಿಗುಸುತ್ತಾನೆ, ಎನೇನೋ ಮಂತ್ರಗಳು… ಎನೇನೋ ತಂತ್ರಗಳು… +ಪೂಜೆ ಮುಕ್ತಾಯವಾಯಿತು. ಎರಡು ಹನಿ ರಕ್ತವನ್ನು ಬೊಂಬೆಯ ಮೇಲೆ ಹನಿಸಿದ. “ಎಲವೋ ಕಾಳಿ” ಎಂದು ಘರ್ಜಿಸಿದ. ಅವನು ಆತನ ಶಿಷ್ಯ, ಹೊಸದಾಗಿ ಕೆಲಸ ಕಲಿಯಲು ಸೇರಿಕೊಂಡಿದ್ದಾನೆ. ಗಿರಿಜಾ ಮೀಸೆ ಬಿಟ್ಟು ಜೊರಾಗಿದ್ದಾನೆ.] +ರು.ನಾಯಕ ಶಿಷ್ಯನ ಕೈಗೆ ಗೊಂಬೆ ಕೊಟ್ಟ +ಈ ಶಾಸ್ಟ್ರಿಗಳನ್ನು ಸುಡುಗಾಡಿನಾಗೆ ತಲೆ ಕೆಳಗೆ ಮಾಡಿ ಹೂಳಿ ಬಾ” +ಕಾಳ ಗೊಂಬೆಯೊಡನೆ ಹೊರಟ. ಶಾಸ್ತ್ರಿಗಳ ಪ್ರಾಣ ಪಕ್ಷಿಯೇ ತನ್ನ ಕೈಲಿದೆ ಎಂಬ ಗತ್ತಿನಿಂದ. +ಶಾಸ್ತ್ರಿಗಳು ಅಮ್ದು ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ಅಂಗಳದ ಲಿಂಗಮುದ್ರೆ ಕಲ್ಲಿಗೆ ಎರಡು ಕೈ‌ಊರಿ ಅಂತರಂಗ ವ್ಯಾಪಿಸಿದ್ದ ವಾಯುದೇವರನ್ನು ಹೊರದುಡಲು ಗಟ್ಟಿಯಾಗಿ ತಿಣುಕಿದರು. ಡರ್ರರ್ರರ್ಽಽ ಎಮ್ಬೊಂದು ಭಯಂಕರ ಸವಂಡು ಇಡೀ ಕೇರಿ ಆದ್ಯಂತ ಮಾರ್ಮಲೆಯಿತು. +ಕೇರಿಯ ನಾಗರೀಕರು ಟೇಮಾತು… ಟೇಮಾತು… ಎಂದು… ಮೈಮೆಲೆ ಕವದಿ ಎಳೆದುಕೊಂಡರು. +ಆದರೆ ಪಂಚತೈಲದ ಬೆಳಕಿನಲ್ಲಿ; ಪಂಚಲೋಹದ ದರ್ಪಣದಲ್ಲಿ ತನ್ನ ಮುಖ ನೊಡುತ್ತಿದ್ದ ರುದ್ರನಾಯಕ ಅಮ್ಥೊಂದು ಸವುಂಡಿಗಾಗಿ ಆ ರಾತ್ರೆಯನ್ನು ಮೀಸಲಿಟ್ಟು ಕೂತಿದ್ದ. +ಇನ್ನೊಂದು ಸ್ವಲ್ಪ ಹೊತ್ತಿಗೆ ನೀರಿನ ವಾಂತಿ, ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮಿಶ್ರಿತ ಗಂಜಿ ವಾಂತಿ… ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮತ್ತು ಕಣ್ಣಿ ಕಣ್ಣಿ ಮಾಂಸದ ವಾಂತಿ. +ಸೂರ್ಯೊದಯದ ಹೊತ್ತಿಗೆ ಶಾಸ್ತ್ರಿಗಳ ಶವ ಸಂಸ್ಕಾರದ ಪೂರ್ವ ಸಿದ್ಧತೆ. +“ಲೋ ಕಾಳ ಕಟ್ಟಿಗೆ ಎಣ್ಣೆ ಎಲ್ಲಾ ಜೋಡಿಸಿಕೊಳ್ಳೋಕೆ ಹೇಳಿ ಬಾರ್ಲೇ” ಎಂದು ಗಲ್ಲಿ ಮೀಸೆಯ ಮೇಲೆ ಮೂಸೂಂಬೆ ಹಣ್ಣನ್ನು ಕೂಡ್ರಿಸಿಕೊಂದು ಗಹಗಹಿಸಿ ನಗಾಡಿದ. +ಶುಕ್ರೋದಯಕ್ಕೂ ಮುಂಚೆ ಎದ್ದ… ಶಾಸ್ತ್ರಿಗಳು ಮೃತರಾಗಿರಬಹುದೆಂದು ಭಾವಿಸಿದ. ಅವರು ಎಂದಿಗಿಂತ ಆರೋಗ್ಯದಿಂದಿರುವ ಸಂಗತಿ ಸೂರ್ಯೋದಯದ ನಂತರ ತಿಳಿಯಿತು. +ಏಚಲು ಬರಲಿನಿಂತ ಸುಲಭವಾಗಿ ಕೈಗೆ ಸಿಕ್ಕ ಕಾಳನನ್ನು ಥಳಿಸಲಾರಮ್ಸಿದ. ಅವನೂ ಮನುಷ್ಯ. ಅವನಿಗು ಸಿಟ್ಟು ಬಂತು. +“ನೀನಿ ಗುರೂ ಅಲ್ಲ… ನಾನು ಶಿಷ್ಯನು ಅಲ್ಲ…” ಎಂದು ಸೋಡಾ ಚೀಟಿಕೊಟ್ಟು ಕಾಳ ಸೀದ ಶಾಸ್ತ್ರಿಗಳ ಬಳಿಬಂದ, ಶಾಸ್ತ್ರಿಗಳಿಗೆ ಎಲ್ಲ ವಿವರಿಸಿ ಹೇಳಿ ಹೋಗಿಬಿಟ್ಟ. +ಈ ಘಟನೆಯಿಂದ ಅವರಿಬ್ಬರ ನಡುವೆ ಜಿದ್ದು ಬಲಗೊಂಡಿತು. +ಶಾಸ್ತ್ರಿಗಳು ತಮ್ಮ ಸಾತ್ವಿಕ ಸಿಟ್ಟಿನೆದುರು ಅವನ ತಾಮಸ ಸಿಟ್ಟಿನ ಆಟ ನಡೆಯೋದಿಲ್ಲ ಎಂದು ಗುಡುಗುಡಿಸಿದರೆ +ರುದ್ರನಾಯಕನು ತನ್ನ ತಾಮಸ ಸಿಟ್ಟಿನೆದುರು ಶಾಸ್ತ್ರಿಯ ಸಾತ್ವಿಕ ಸಿಟ್ಟು ಇಂಗು ತಿಂದ ಮಂಗ ಎಂದು ಅಪಹಾಸ್ಯ ಮಾಡಿದನು. +ಶಾಸ್ತ್ರಿಗಳ ಗಿರಾಕಿಗಳು ಶಾಸ್ತ್ರಿಗಳವೆ, ರುದ್ರನಾಯಕನ ಗಿರಾಕಿಗಳು ರುದ್ರನಾಯಕನವೆ, ಯಾಕೆ ಈ ಇಬ್ಬರು ಘಟನುಘಟಿಗಳ ನಡುವೆ ತಿಕ್ಕಾಟ – ಬೆಲ್ಲದ ಶೀನಪ್ಪನಂಥವರು ಅವರ ನಡುವೆ ಬಿಗುವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದುಂಟು. +ಆದರೆ ಆ ಟೈಟಾನ್‌ಗಳು ಅಷ್ಟಕ್ಕೆ ತೆಪ್ಪಗಾಗಬೇಕಲ್ಲ, ಒಂದು ದಿನ ರುಕ್ಮಿಣಿ ಮಾಳಿಗೆ ಮೇಲಿಂದ ಒಂದು ಮೆಣಸಿನಕಾಯಿ ತುಂಡು ತಂದು ಗಂಡನಿಗೆ ಕೊಟ್ಟಳು. ಅದನ್ನು ಶಾಸ್ತ್ರಿಯೇ ಮಂತ್ರಿಸಿ ಎಸೆದಿರಬೇಕೆಂದೂಹಿಸಿದ ಆತನು ನಿಂಬೆಹಣ್ಣನ್ನು ಮಂತ್ರಿಸಿ ಶಾಸ್ತ್ರಿಗಳ ಮಾಳಿಗೆ ಮೇಲೆ ಎಸೆದನು. ಹೀಗೆ ಆತ ಒಂದು ಎಸೆಯುವುದು, ಈತ ಒಂದು ಎಸೆಯುವುದು. +ಕ್ರಮೇಣ ಸಣ್ಣ ಸಣ್ಣ ಜಗಳ ಆಡತೊಡಗಿದರು. ರಾಜಕೀಯವಾಗಿಯೂ ಅವರ ಜಗಳ ಮಹತ್ವ ಪಡೆದುಕೊಂಡಿತು. ಇಂಡಿಕೇಟ್ ಕಾಂಗ್ರೆಸ್‌ನ ಇಂದಿರಾ ಗಾಂಧಿಗೆ ಹಸ್ತ ಹಸ್ತ ಸಾಮುದ್ರಿಕ ಹೇಳಲೆಂದು ಹೋಗಿಯಲ್ಲವೇ ತಾವು ಹೀನಾಯವಾಗಿ ಅವಮಾನಗೊಂಡಿದ್ದು, ಎಂಬ ಕಾರಣಕ್ಕಾಗಿ ಶಾಸ್ತ್ರಿಗಳು ಸಿಂಡಿಕೇಟ್ ಕಾಂಗ್ರೆಸ್ ಪರವಾಗಿ ಗ್ರಹತಾರೆ ಎಣಿಸುತ್ತಿದ್ದರು. ನಿಜಲಿಂಗಪ್ಪನವರನ್ನು ಬೆಟ್ಟಿಯಾಗಿ ಬಂದಿದ್ದರು ಕೂಡ. +ಶಾಸ್ತ್ರಿಗಳ ಕಾರಣಕ್ಕಾಗಿ ರುದ್ರನಾಯಕ ಇಂಡಿಕೇಟ್ ಕಾಂಗ್ರೆಸ್ ಪರ ನಿಲುವು ತಳೆದಿರಲಿಲ್ಲ. ಕೆಲವು ವರ್ಷ ಅವನು ’ಲಾ ಪತಾ’ ಆಗಿದ್ದನಲ್ಲ… ಆಗ ಅವನು ಹೃಷೀಕೇಶದಲ್ಲಿ ’ಭಂ ಭೂಂ’ ಎಂಬ ಶಾಕ್ತೇಯರ ಬಳಿ ಶಿಷ್ಯವೃತ್ತಿ ಮಾಡಿಕೊಂಡಿದ್ದನು. ಅವರು ಭೇತಾಳವನ್ನು ನಿಲುವಂಗಿ ಜೋಬಿನೊಳಗೆ ಇಟ್ಟುಕೊಂಡಿದ್ದಂಥವರು. ರುದ್ರನು ಮಾಡುತ್ತಿದ್ದ ಸೇವೆಯಿಂದ ಅವರು ಸಂಪ್ರೀತರಾದರು. ಶಿಷ್ಯನಿಗೆ ಏನಾದರೂ ಕೊಡದೆ ಇರಲಾದೀತೆ? ಅದೇ ಕೆಲವು ದಿನಗಳ ಹಿಂದೆ ದೆಹಲಿ ಮತ್ತು ಕುರುಕ್ಷೇತ್ರದ ನಡುವೆ ಪ್ರಯಾಣಿಕರಿದ್ದ ಒಂದು ರೈಲು ಒಂದು ಘೋರ ಅಪಘಾತಕ್ಕೀಡಾಯಿತು. ಅದರಲ್ಲಿ ಅಸುನೀಗಿದ ಅರವತ್ತು ಮಂದಿ ಪೈಕಿ ಅರವತ್ತು ಮಂದಿಯೂ ಅಸು ನೀಗಿದರು. ಆ ದೆವ್ವಗಳ ಪೈಕಿ ಕೆಲವು ಸತ್ತುದರಿಂದ ಹೇಗೋ ಖರ್ಚುಳಿಯಿತೆಂದುಕೊಂಡು ಹರಿದ್ವಾರ ನೋಡಿಕೊಂಡು ಹೃಷೀಕೇಶಕ್ಕೆ ಬಂದವು. ಅವುಗಳ ಪೈಕಿ ಎರಡು ದೆವ್ವಗಳು ಸಾಮಾನ್ಯದವಲ್ಲ. ಇಂದರಾಗಾಂಧಿಯ ಆಪ್ತೇಷ್ಟರಾದ ಛೋಪ್ರಾರ ಮಗ ಮತ್ತು ಮೆಹರಾರ ಮಗಳು, ಕಳೆದ ತಿಂಗಳಷ್ಟೇ ಹಂದರಕ್ಕೆ ಹತ್ತು ಲಕ್ಷ ಖರ್ಚುಮಾಡಿ ಮಾಡಿದ್ದ ಮದುವೆಗೆ ಇಂದಿರಾಗಾಂಧಿಯ ಸಂಪುಟಕ್ಕೆ ಸಂಪುಟವೇ ಹಾಜರಿತ್ತು. ಕೈಲಾಷ್ ಛೋಪ್ರಾ ಅಲ್ಕಾ ಮೆಹ್ರಾ ಹನಿಮೂನಿಗೆ ಹೊರಟು ಪ್ರಾಣ ಕಳೆದುಕೊಂಡಿದ್ದರು. ಅಪಘಾತದ ನಂತರವೂ ಛೋಪ್ರಾದಂಪತಿಗಳು ತೀರ್ಥಯಾತ್ರೆ ಮುಂದುವರಿಸಿ ಛೋಪ್ರಾವಂಶದವರ ದೈವಭಕ್ತಿಯನ್ನು ಎತ್ತಿಹಿಡಿದವು. ಅವೆರಡು ಸ್ವಾಮಿ ರಾಮರ ವೀರಭದ್ರಾಶ್ರಮ ನೋಡಿಕೊಂಡು ಭಂ ಭೂಂ ಆಶ್ರಮ ಪ್ರವೇಶಿಸಿ ಕಷ್ಟಕ್ಕೆ ಸಿಲುಕೊಂಡು ಬಿಟ್ಟಿದ್ದವು. +ಭಂ ಭೂಂ ಸ್ವಾಮಿಗಳು ತಮ್ಮ ಕ್ಷುದ್ರ ದೃಷ್ಟಿಯಿಂದ ನೋಡಿಬಿಟ್ಟರು. ಅವೆರಡನ್ನು ಬಂಧಿಸಿ ಬಾಟಲಿಯೊಳಗೆ ಹಾಕಿ ಬಿರುಡೆ ಹಾಕಿಬಿಟ್ಟಿದ್ದರು. +ಶಿಷ್ಯನ ಶಿಷ್ಯವೃತ್ತಿಯಿಂದ ಸಂಪ್ರೀತಗೊಂಡ ಅವರು ಆ ಬಾಟಲಿಯನ್ನು ರುದ್ರನ ಕೈಗೆ ಕೊಡುತ್ತ “ಇದು ಪರಮಾತ್ಮನ ಆತ್ಮಲಿಂಗವಿದ್ದಂತೆ. ಇದರೊಳಗೆ ಹೊಸದಾಗಿ ಮದುವೆಯಾಗಿರುವ ಪ್ರತಿಷ್ಟಿತ +ದಂಪತಿಗಳ ಆತ್ಮಗಳಿವೆ. ಉಪಯೋಗಿಸಿಕೋ” ಎಂದು ಹೇಳಿದರು. +ಯಾವ ಕಾರಣಕ್ಕೂ ನೆಲದ ಮೇಲೆ ಇಡಕೂಡದೆಂದು ಎಚ್ಚರಿಕೆ ನೀಡಿದರು. ವಾಪಸು ಮರಳುವಾಗ ರುದ್ರಗೆ ನಿದ್ದೆ ಬಂದು ಬಿಟ್ಟಿತು. ಅವನ ಕಂಕುಳಲ್ಲಿದ್ದ ಬಾಟಳಿ ಉರುಳಿ ಒಬ್ಬ ಮುದುಕನ ಬಳಿ ಹೋಯಿತು. ಆತ ಇದೇನು ಅಂತ ಬಿರುಡೆ ತೆಗೆದು ಬಿಟ್ಟ. ಅದರೊಳಗಿದ್ದ ಅಲ್ಕಾಮೆಹ್ರಾ ಮುದುಕನನ್ನು ಹಿಡಿದುಕೊಂಡು ಬಿಟ್ಟರೆ, ಕೈಲಾಷ್ ಛೋಪ್ರಾ ಮುದುಕಿಯನ್ನು ಹಿಡಿದುಕೊಂಡು ಬಿಟ್ಟಿತು. ಇದ್ದಕ್ಕಿಂತೆ ಮುದುಕ ತರುಣಿಥರ ಮಾತಾಡಲಾರಂಬಿಸಿದರೆ ಮುದುಕಿ ತರುಣನ ಥರ ’ಅರೆ ಮೇರ ಜಾನ್, ಮೇರ ದಿಲ್‌ರುಬಾ’ ಎಂದು ಮಾತಾಡ ತೊಡಗಿತು. ಆ ಮುದುಕಿ ಡಾರ್ಲಿಂಗ್ ಡಾರ್ಲಿಂಗ್ ಅಂತ ಮುದುಕನನ್ನೂ, ಮುದುಕನು ’ಕೈಲೂ ಐ ಲವ್ ಯೂ’ ಎಂದು ಸ್ತ್ರೀಕಂಠದಿಂದ ಮುದುಕಿಯನ್ನೂ ಆಲಿಂಗಿಸಿಕೊಂಡನು. +ಆ ಕಂಪಾಟ್‌ಮೆಂಟೊಳಗೇ ಅವೆರಡು ರೊಮಾನ್ಸಿಗಿಳಿದುಬಿಟ್ಟವು. ಪ್ರಯಾಣಿಕರೆಲ್ಲ ಮನರಂಜನೆಯೋ ಮನರಂಜನೆ, ಚಪ್ಪಾಳೆ ತಟ್ಟಿ, ಸೀಟಿ ಬಜಾಯಿಸಿ ಆ ಜೋಡಿಯನ್ನು ಉತ್ತೇಜಿಸಿದರು. ಆ ಗಲಾಟೆಗೆ ರುದ್ರನಾಯಕ ಎದ್ದ. ಗಾಬರಿಗೊಂಡ, ಕಂಕುಳಲ್ಲಿ ಬಾಟಲಿ ಇಲ್ಲ.ಅದು ಅಷ್ಟು ದೂರ ಉರುಳಿರುವುದೂ, ಅದಕ್ಕೆ ಬಿರಡೆ ಇಲ್ಲದಿರುವುದೂ ಆವೊಳಗಿನ ದೆವ್ವಗಳು ಮುದುಕ ಮುದುಕಿಯರನ್ನು ಹಿಡಿದಿರುವುದೂ ಎಲ್ಲ ಅರ್ಥವಾಯಿತು. ಅವುಗಳನ್ನು ಬಾಟಲಿಯೊಳಗೆ ಬಂಧಿಸುವುದು ಹೇಗೆ? +ರೋಮಾನ್ಸಿನಲ್ಲಿ ಮೈಮರೆತಿದ್ದ ಅವು ಹೇಗೋ ರುದ್ರನಕಡೆ ನೋಡಿ ಬಿಟ್ಟವು. ಅವು ಮೊದಲೆ ಬಾಲ್ಡ್‌ವಿನ್ ಕಾನ್ವೋಟ್ ಸ್ಕೂಲಿನಿಂದ ಬಂದಂಥವುಗಳು, ಅದರೊಂದಿಗೆ ಜಲಂದರ್‌ನ ಸ್ಕೂಲ್ ಆಫ್ ಮಾರ್ಷಲ್ ಆರ್ಟ್‌ನಲ್ಲಿ ತಲಾ ಮೂರು ಮೂರು ವರ್ಷ ಇದ್ದು ಬಂದಂಥವುಗಳು, ತಮ್ಮ ತೀರ್ಥ ಯಾತ್ರೆಯನ್ನು ಹಾಳು ಮಾಡಿದ ರುದ್ರನೆಂಬ ಹುಲುನರನನ್ನು ನೋಡಿ ಅವಕ್ಕೆ ಸಿಟ್ಟು ಬಂತು. ಅವೆರಡು ಇದ್ದಕ್ಕಿಂತೆ ಅವನ ಮೇಲೆ ಆಕ್ರಮಣ ಮಾಡಿದವು. ಅವನ ಅಂಗಿ ಹರಿದುಹಾಕಿಬಿಟ್ಟವು. ಅವನ ಮುಖ, ಮೈ ಪರಚಿಬಿಟ್ಟವು. ಕೈಲಾಷ್ ಎಂಬ ಮುದುಕಿ ಅವನ ಮೂಗಿಗೆ ಬಾಯಿ ಹಾಕಿದರೆ ಅಲ್ಕಾ ಎಂಬ ಮುದುಕ ಅವನ ಪೈಜಾಮದ ಲಾಡಿ ಉಚ್ಚಿ ಬಿಟ್ಟ, ಅಷ್ಟರಲ್ಲಿ ನಾಗಪೂರ್ ಬಂತು. ನಿಲ್ದಾಣದಲ್ಲಿ ರೈಲು ನಿಲ್ಲುತ್ತಲೇ ರುದ್ರ ಅಯ್ಯೋ ಅಯ್ಯೋ ಎಂದರಚುತ್ತ ಓಡತೊಡಗಿದನು. +ಪಾಸ್ಟ್ ಟೆನ್ಸ್ ಈಜ್ ಪಾಸ್ಟ್ ಟೆನ್ಸ್ ಅಲ್ಲವೆ? ಇದರಲ್ಲಿ ಎಷ್ಟು ನಿಜವೋ? +ಭಂ ಭೂಂ ಸಾಧುವಿನ ಪರಿಚಯವನ್ನು ಕಮಲಾಪತಿ ತ್ರಿಪಾಠಿ ತಮ್ಮ ಮುಂದೆ ಬೆಳೆದ ಹುಡುಗಿ ಇಂದಿರಾಗೆ ಮಾಡಿಸಿಕೊಟ್ಟರು. ಆಕೆಗೆ ಗ್ರಹಬಲಗಳ ಆಸರೆ ಪಡೆದು ಇಂದಿರಾ ಎಂದರೆ ಕಾಂಗ್ರೆಸ್, ಕಾಂಗೆಸ್ ಅಂದರೆ ಇಂದಿರಾ ಎಂದು ಹೊಗಳಿಸಿಕೊಳ್ಳುವುದು ಬೇಕಾಗಿತ್ತು. ಭಂ ಭೂಂ ಸಾಧುವನ್ನು ಆಕೆಯೇ ಖುದ್ದು ಸಂದರ್ಶಿಸಿ ಕೆಲ ಪ್ರಶ್ನೆ ಕೇಳಿದಳು. ಉತ್ತರಿಸಿದ. ಪವಾಡ ಮಾಡಿ ತೋರಿಸುವಂತೆ ಕೇಳಿದಳು. ತನ್ನ ಗಡ್ಡದೊಳಗಿಂದ ಉಂಗುರ ಸೃಷ್ಟಿಸಿಕೊಟ್ಟ ತಲೆಗೂದಲೊಳಗಿಂದ ಭಗವದ್ಗೀತೆ ಕಿತ್ತುಕೊಟ್ಟ. ಬರಿಗೈಯಿಂದ ಬೂದಿ ಸುರಿದ +’ತಾಯಿ ತಮಗೆ ತಿರುಪತಿ ವೆಂಕಟೇಶ್ವರನ ಲಡ್ಡಿನ ಮೇಲೆ ತುಂಬ ಭಕ್ತಿ ಎಂದು ಕೇಳಿದ್ದೇವೆ?” ಎಂದು ಗಡ್ಡ ನೀವಿದ. +“ಹೌದು… ಆ ವೆಂಕಟೇಶ್ವರನ ಆಶೀರ್ವಾದದಿಂದಾಗಿಯೇ ನಿಜಲಿಂಗಪ್ಪ, ಸಂಜೀವರೆಡ್ಡಿ +ಮುಂತಾದ ಓಲ್ಡ್ ಈಜ್ ಗೋಲ್ಡ್‌ಗಳೆಲ್ಲ ಅಪ್ಪಟ ಬ್ರಾಸ್‌ಗಳಾಗಿ ಮಾರ್ಪಟ್ಟರು” ಎಂದರು. ಅಲ್ಲೆಯೇ ಇದ್ದ ಆಕೆಯ ಸಹೋದ್ಯೋಗಿಗಳು “ಎಸ್ … ಕರೆಕ್ಟ್ ಮೇಡಂ” ಎಂದು ತಲೆ ಅಲ್ಲಾಡಿಸಿದರು. +ಭಂ ಭೂಂ ಸಾಧು ಎಲ್ಲರ ಕಡೆಗೊಮ್ಮೆ ನೊಡಿ ಮುಗುಳ್ನಕ್ಕ, ನಂತರ ಹ್ರಾಂ ಹ್ರೂಂ ಅಂತ ಮೇಲೆ ನೋಡಿದ, ಬಯಲಲ್ಲಿ ಕೈ ಆಡಿಸಿದ. ಆ ಕ್ಷಣದಲ್ಲಿ ಆತನ ಕೈಯಲ್ಲಿ ಥಳ ಥಳ ಹೊಳೆಯುತ್ತಿದ್ದ ಲಡ್ಡು, ಅಪ್ಪಟ ತುಪ್ಪದಲ್ಲಿ ಮಾಡಿರುವಂಥಾದ್ದು. ಅದರ ಮೇಲೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು ಲಕ ಲಕ ಅಂತಿದ್ದವು. +ಪ್ರಧಾನಿ ಇಂದಿರಾ ತಿನ್ನುವರೆಂದು ವೆಂಕಟೇಶ್ವರ ಸ್ಪೆಷಲ್ ಲಡ್ಡು ಕಳುಹಿಸಿದ್ದ. ಬಾಬ್ ಕಟ್ ಪ್ರಿಯದರ್ಶಿನಿ ಭಕ್ತ ಪರವಶಳಾಗಿ ಎದ್ದುನಿಂತುಬಿಟ್ಟರು. ತಾವೇ ಖುದ್ದ ಭಕ್ತಿ ಪೂರ್ವಕವಾಗಿಪ್ರಸಾದ ಸ್ವೀಕರಿಸಿದರು. ತಕ್ಷಣ ಆಕೆಯ ಅಂಗರಕ್ಷಕರು ಎಕ್ಸ್ಕ್ಯೂಜ್ಮಿ ಮೇಡಂ ಅಂತ ಮುನ್ನುಗ್ಗಿ ಬಂದರು. ಅವರು ಆ ಲಡ್ಡನ್ನು ತಲಾ ಒಂಚೂರು ಮುರಿದುಕೊಂಡರು. “ಒಬ್ರು ತಿಂದು ನೋಡ್ರಯ್ಯಾ ಸಾಕು, ನಮ್ಗೂ ನಮ್ಮ ಕೊಲೀಗ್ಸಿಗೂ ಉಳಿಸ್ರಯ್ಯಾ” ಎಂದು ಪ್ರಿಯದರ್ಶಿನಿ ಕೇಳಿಕೊಂಡರು. +ಅಪ್ಪಟ ತುಪ್ಪದಲ್ಲಿ ಮಾಡಿದ್ದು. ಅವರ ಬಿಡುವರೇನು? +“ತಿಂದ ಮೇಲೂ ಬದುಕಿದ್ದೇವೆ, ದೇವರ ದಯೆ… ಮೇಡಮ್ ಇನ್ನು ತಾವು ನಿರ್ಭಯವಾಗಿ ಸ್ವೀಕರಿಸಬಹುದು” ಎಂದು ಕ್ಯಾಪ್ಟನ್ ಸತೀಶ್ ಶರ್ಮ ಹೇಳಿದ. +ಮೇಡಂ ತಾವು ತಿಂದದ್ದು ಕಡಿಮೆ , ಬೇರೆಯವರಿಗೆ ಕೊಟ್ಟದ್ದೆ ಹೆಚ್ಚು. +ಕೊಟ್ಟದ್ದು ತನಗೆ ಅಂಥ ಸರ್ವಜ್ಞ ಹೇಳಿಲ್ಲವೆ? +ಅಂದಿನಿಂದ ಭಂ ಭೂಂ ಸಾಧು ಪ್ರಧಾನಿ ಇಂದಿರಾ ಗಾಂಧಿಯವರ‌ಆಪ್ತ ಕೂಟದ ಪ್ರಮುಖ ಸದಸ್ಯನಾಗಿಬಿಟ್ಟ. ಭಂ ಭೂಂ ಸಾಧು ಅದೆಷ್ಟು ಪವರ್‌ಫುಲೆಂದು ಲೋಕಕ್ಕೆ ಗೊತ್ತಾದದ್ದು ಆತನ ಆಶ್ರಮದ ವಿವರಗಳು ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಾಗ, ಅದನ್ನು ವರದಿಮಾಡಿದವನು ಪುರುಷತ್ವ ಕಳೆದುಕೊಂಡು ಭಂ ಭೂಂ ಆಶ್ರಮ ಸೇರಿಬಿಟ್ಟ. +ಇದನ್ನು ಓದಿದ ರುದ್ರನಾಯಕ ಭಂ ಭೂಂ ಜೊತೆ ಅಶರೀರವಾಣಿ ಮೂಲಕ ಮಾತಾಡಿದ, ಇದೂಕೂಡ ದೊದ್ದ ಸುದ್ದಿಯೇ. ಜಿಲ್ಲೆಯ ಇಂಡಿಕೇಟ್ ಜನರು ರುದ್ರನಾಯಕನ ಮೂಲಕ ಭಂ ಭೂಂ ಮೂಲಕ ಕಮಲಾಪತಿ ತ್ರಿಪಾಠಿಗೆ; ಕಮಲಾಪತಿ ತ್ರಿಪಾಠಿ ಮೂಲಕ ಇಂದಿರಾಜಿಗೆ ಒಂದು ನಿಚ್ಚಣಿಕೆಯನ್ನು ನಿರ್ಮಿಸಿಕೊಂಡಿರುವರೆಂಬುದು ಸುಳ್ಳು ಸುದ್ದಿಯೇನಲ್ಲ! +ಬಂದವರೆದುರು ರುದ್ರನಾಯಕ ಶಾಸ್ತ್ರಿಗಳ ಮೇಲೆ ಚಾಡಿ ಟೊಂಗು ಟುಸುಕು ಹೇಳಿಕೊಳ್ಳುತ್ತಿದ್ದುದುಂಟು. +’ಚ ಬ್ರಾಹ್ಮಣಂ ನಾವ ಮಾನಿತಂ ವೈ ಭೂಷ್ಣುಃ ಕೃಶಾನಪಿ ಕದಾಚನ’ ಅಂತ ಹೇಳಿದೆಯಪ್ಪಾ, ಹಿ ಪುರುಷಂ ನಿರ್ಧ ಹೇದವ ಮಾನಿತಮ್, ತಸ್ಮಾದೇ ತತ್ತ್ರಯಂ ನಿತ್ಯ ನಾವ ಮನ್ಯೇತ ಬುದ್ಧಿಮಾನ್ ಅಂತ ಹೇಳಿದೆಯಪ್ಪಾ, ಎಷ್ಟೇ ದುರ್ಬಲನಿದ್ದರೂ ಬ್ರಾಹ್ಮಣ ಅವಮಾನಿಸಿದವರನ್ನು ನಾಶ ಮಾಡದೆ ಬಿಡೋದಿಲ್ಲವೆಂದು ಸಾಕ್ಷಾತ್ ಕೌಟಿಲ್ಯನೇ ಹೇಲಿದಾನಪ್ಪಾ!” ಎಂದೊಬ್ಬ ಹಿರಿಯ ಆ ಶಾಸ್ತ್ರಿಗಳ ಗೊಡವೆಗೆ ಹೋಗದಿರುವಂತೆ ರುದ್ರನಾಯಕನಿಗೆ ಬುದ್ಧಿ ಹೇಳಿದನು. +ರುದ್ರನಾಯಕನಿಗೆ ಶಾಸ್ತ್ರಿಗಳು ತುಂಬ ಬಲಿಷ್ಟರಿದ್ದಾರೆಂದೆನಿಸಿತು. ಅವರಿಗಿಂತಲು +ಬಲಿಷ್ಟವಾಗಿರುವುದು ಬ್ರಾಹ್ಮಣ್ಯ. ಬ್ರಾಹ್ಮಣ್ಯಕ್ಕೆ ರೆಕ್ಕೆ ಮೂಡಿಸಿರುವಂಥ ಸಂಸ್ಕೃತ ಬೇರೆ. ಅವರನ್ನೂ, ಅವರ ಬ್ರಾಹ್ಮಣ್ಯವನ್ನೂ, ಅವರ ಸಂಸ್ಕೃತವನ್ನೂ ಸಮಯ ಸಿಕ್ಕಾಗ ವಿಚಾರಿಸಿಕೊಳ್ಳಬೇಕೆಂದು ನಿರ್ಧರಿಸಿದನು. +ಶಾಸ್ತ್ರಿಗಳು ಧ್ವನಿಗೆ ನಿಲುಕದ ರೀತಿಯಲ್ಲಿರುವರೆಂಬುದನ್ನು ತಿಳಿದುಕೊಂಡು ಕೆಮ್ಮುತ್ತಿದ್ದನು. ಶಾಸ್ತ್ರಿಗಳು ಕೇಳಿಸಿಕೊಳ್ಳದವರಂತಿದ್ದಾಗ ಮತ್ತೆ ಜೋರಾಗಿ ಕ್ಯಾಕರಿಸುತ್ತಿದ್ದರು. +ಶಾಸ್ತ್ರಿಗಳಿಗೆ ಇದೆಲ್ಲಾ ತಿಳಿದಿರದೇ ಇರಲಿಲ್ಲ. +ಶಾಸ್ತ್ರಿಗಳು ಇನ್ನೇನು ಮಾಡಲು ಸಾಧ್ಯ? ತಮ್ಮಂಥ ತಾಪಸಿಗಳೆದುರು ರುದ್ರನಂಥ ತಾಮಸಿಗಳು ಸೂರ್ಯನೆದುರಿಗಿಟ್ಟ ಸೊಡರಿನಂತೆ. +ತಮಗೆ ಬಿಡುವಿದ್ದಾಗ ಶಾಸ್ತ್ರಿಗಳು ತಮ್ಮ ಮಾನಸಹಂಸವನ್ನು ತೂರಿಬಿದುತ್ತಿದ್ದರು, ನಿರಾಕಾರ ಸ್ವರೂಪಿಯಾದ ಅದು ನಿಶ್ಶಬ್ದದಿಂದ, ನಿರಾಡಂಬರತೆಯಿಂದ ರುದ್ರನಾಯಕನ ಯಾಂತ್ರಿಕ ಗುಹೆಯನ್ನು ಪ್ರವೇಶಿಸುತ್ತಿತ್ತು. ಕ್ಷುದ್ರ ದೇವತೆಗಳ ಮುಂದೆ ಚೂರು ಚೂರಾದ ಆತ್ಮಗಳ ನಡುವೆ ಧ್ಯಾನಸ್ಥನಾಗಿ ಕೂತಿರುತ್ತಿದ್ದ ಆತನ ದೇಹವನ್ನು ಪ್ರವೇಶಿಸಲು ಪಂಚೇಂದ್ರಿಯಗಳ ಪೈಕಿ ಯಾವುದಾದರೊಂದನ್ನು ಅಥವಾ ನವರಂಧ್ರಗಳ ಪೈಕಿ ಯಾವುದಾದರೊಂದನ್ನು ಆಯ್ದುಕೊಳ್ಳುತ್ತಿತ್ತು, ಒಳಗೆ ಪ್ರವೇಶಿಸಿದ ಅದಕ್ಕೆ ಉಸಿರುಗಟ್ಟಿದ ಅನುಭವವಾಯಿತು. +ಈ ತಾಪಸಿಯ ಮನಸ್ಸು ಒಳಗ್ಡ್ದೆ ಯಾರನ್ನು ಕೇಳಿಬಂತು? +ಅಲ್ಲಿ ಯಾವ ಯಾವುದೋ ಅತಂಕಕಾರಿ ಮೀಟಿಂಗ್ ನಡೆಸಿದ್ದ ತಾಮಸೀಯ ಮನಸ್ಸುಗಳು ಗಲಿಬಿಲಿಗೊಂಡವು. ಅವೆಲ್ಲ ತಲಾ ಒಂದೊಂದು ಆಯುಧ ಹಿಡಿದು ಅದರೆದುರು ನಿಂತು ಮೀಸೆ ತಿರುವಿದವು. +ತಾಪಸಿಯ ಮನಸ್ಸಿಗೂ; ತಾಮಸಿಯ ಮನಸ್ಸುಗಳಿಗೂ ನಡುವೆ ಘೊರ ಕಾಳಗ ನಡೆಯಿತು. ತಾಪಸೀದು ಎಷ್ಟಿದ್ದರೂ ಪುಳಿಚಾರ್ ಮನಸ್ಸು, ಆ ನಾನ್‌ವೆಜ್ ಮನಸ್ಸುಗಳೊಂದಿಗೆ ಅದು ಎಷ್ಟು ಹೊತ್ತು ಹೋರಾಡಲು ಸಾಧ್ಯ? +ಶಿಖಿರಾಗ್ರ ಸರಿಪಡಿಸಿಕೊಳ್ಳುತ್ತ ’ಸಾಕಪ್ಪೋ ಸಾಕು’ ಎಂದು ವಾಪಸಾಯಿತು. +ಮೀಸೆ ಮಣ್ಣು ಮಾಡಿಕೊಂಡು ಹೇಡಿಯೆಂತೆ ವಾಪಸು ಬಂದ ತಮ್ಮ ಮನಸ್ಸಿಗೆ ಮುಖ ತೋರಿಸಬೇಡ ಎಂದು ಶಾಸ್ತ್ರಿಗಳು ಛೀಥೂ ಮಾಡಿದರು. +ರುದ್ರನಾಯಕನೆಂಬ ಮಂತ್ರವಾದಿಯೂ; ಪರಮೇಶ್ವರ ಶಾಸ್ತ್ರಿಗಳೆಂಬ ವೈದಿಕವಾದಿಗಳೂ ದಿನಂಪ್ರತಿ ಒಂದಲ್ಲಾ ಒಂದು ನೆವ ತೆಗೆದು ಮ್ಯಾಂವ್; ಮ್ಯಾಂವ್, ಎಂದೋ ಗವ್ ಗವ್ ಎಂದೋ ಕಚ್ಚಾಡುತ್ತ ತಮ್ಮ ಚಟುವಟಿಕೆಗಳಿಗೆ ಹಸಿರು ನಿಶಾನೆ ತೋರಿಸಿದ್ದುದು ಅನಸೂಯಾ ಎಂಬ ಹುಡುಗಿಗೂ, ಶಾಮಾಶಾಸ್ತ್ರಿ ಎಂಬ ಹುಡುಗನಿಗೂ ತುಂಬ ಒಳ್ಳೆಯದಾಗಿತ್ತು. +ಅನಸೂಯ ಎಂಬ ಚಿಕನ್ ಬಿರ್ಯಾನಿಯನ್ನು ಶಾಮ ಎಂಬ ಹೋರಿಕರು ಲಗಾಯಿಸಲಾದೀತೇನು? ಪೂರ್ತಿ ಕಬಳಿಸಿಯೇ ಬಿಡಬೇಕೆಂದು ಅದು ಹತ್ತಿರ ಬರುತ್ತಿತ್ತು. ಮೂಸುತ್ತಿತ್ತು. ಒಂದೆರಡು ಅಗುಳು ಚಪ್ಪರಿಸುತ್ತಿತ್ತು, ಗರಂ ಮಸಾಲೆ ಮತ್ತು ವನಸ್ಪತಿ ತೈಲ ಹೆಚ್ಚಾಗಿದೆ ಎಂದು ಪಿತುಗಿ ಬಿಡುತ್ತಿತ್ತು. ಮಲಗಿಕೊಂಡರೆ ನಿದ್ದೆ ಬರದೆ ಒದ್ದಾಡುತ್ತಿತ್ತು. ಯಾಕೋ ” ನಿದ್ದೆ ಬರ್ತಾ ಇಲ್ಲ ತಾತ” ಅಂತಿತ್ತು. +” ಮನೊಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಮ್ ಬುದ್ಧಿ ವತಾಂವರಿಷ್ಟಂ. ಅಂತ ಆಂಜನೇಯನನ್ನು ಪ್ರಾರ್ಥಿಸಪ್ಪಾ… ನಿದ್ರಾದೇವಿ ತಾನೇ ತಾನಾಗಿ ಒಲಿಯುತ್ತಾಳೆ” ಎಂದು ಶಾಸ್ತ್ರಿಗಳು ಉತ್ಕೃಷ್ಟ ಸಲಹೆ ನೀಡುತ್ತಿದ್ದರು. +ಆದರೆ ಶಾಮು ಅನಸೂಯಳನ್ನು ಕುರಿತು ಶರದೇಂದು ವಿಕಾಸ ಮಂದ ಹಾಸೇ ಅರವಿಂದ ಮಂದ ಸುಂದರೇ; ಸ್ಯಾಮರವಿಂದಾಸನ ಸುಂದರೇ! ಅನಸೂಯಾಂ ಭೋಜೇ ವದನಾ ವದನಾಂಬುಜೇಽಽಽ ಅಂತ ಎನೇನೋ ಹೇಳುತ್ತಿದ್ದನು. +ತಾತ ಮಲಗಿದ್ದು ಖಚಿತಪಡಿಸಿಕೊಂಡು ಆಕೆ ತನಗೆ ಬರೆದ ಪತ್ರಗಳ ಗಂಟು ಬಿಚ್ಚುತ್ತಿದ್ದನು. ಅದಲ್ಲಿನ ಒಂದೊಂದು ಅಕ್ಷರವನ್ನು ಕಣ್ಣಿಂದ ತಿನ್ನುತ್ತಿದ್ದನು. ಹುಚ್ಚನಂತೆ ನೆಕ್ಕುತ್ತಿದ್ದನು. ಸಾಕಾದ ಮೇಲೆ ಮತ್ತೆ ಗಂಟುಕಟ್ಟಿ ಮತ್ತೆ ಹಾಸಿಗೆಯ ಕೆಳಗೆ ಭದ್ರಪಡಿಸುತ್ತಿದ್ದನಾ ಭೂಪನು. +ಅವನಿಗೆ ನಿದ್ದೆ ಬರುತ್ತಿದ್ದುದು ಮಧ್ಯರಾತ್ರಿ ಕಳೆದ ನಂತರವೇ, ಅದು ನಿದ್ದೆ ಅಂದರೆನಿದ್ದೆ, ಕನಸುಗಳ ಮೇಲೆ ಕನಸುಗಳು. ಒಂದು ಕನಸು ಇನ್ನೊಂದರಂತ್ತಿರುತ್ತಿರಲಿಲ್ಲ. ಕಂಡ ಕನಸುಗಳಲ್ಲಿ ಅವನೂ ದೈಹಿಕವಾಗಿ ಪಾಲ್ಗೊಳ್ಳುತ್ತಿದ್ದ. ಅದು ಒಂದು ಹೊತ್ತಿನಲ್ಲಿ ಕೆಟ್ಟ ಅನುಭವವಾಗಿರುತ್ತಿತ್ತು. ನಿದ್ರಾ ಮಂಪರಿನಲ್ಲೂ ಅವನು ತನ್ನ ದೇಹದ ಬಗ್ಗೆ ತಾನೇ ಬೇಸರಪಟ್ಟುಕೊಳ್ಳುತ್ತಿದ್ದನು. +ಈ ದೇಹದಿಂದ ಏನು ಸುಖ? ಇದನ್ನು ಅಗ್ನಿಗೆ ತರ್ಪಣ ನೀಡಬೇಕೆಂದುಕೊಳ್ಳುತ್ತಿರುವಾಗಲೇ ತಾತ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡದ್ವಜ ಎಂದು ಗೊಣಗುತ್ತಿದ್ದರು. +ಏಳೋ ಶೂದ್ರರ ಥರ ಮಲಗಿದ್ದೀಯಲ್ಲ… ಎಂದು ಏಳುವವರೆಗೆ ಅವರು ಬಿಡುತ್ತಿರಲಿಲ್ಲ. ಅವನು ಐದನೇ ಕೂಗಿನವರೆಗೆ ಎಂದೂ ಮಲಗಿದವನಲ್ಲ. ಅವನು ಎದ್ದು ದೇಹದ ಅಗತ್ಯಗಳನ್ನು ಪೂರೈಸಿಕೊಂಡು ತಾತನೆದುರು ಕೂದ್ರುತ್ತಿದ್ದನು. ಧ್ಯಾನಸ್ಥ ಮನಸ್ಸಿನಿಂದ ಅವರ ಮೂಗನ್ನೇ ನಿಟ್ಟಿಸುತ್ತಿದ್ದನು. ಅದು ಥೇಟ್ ಅವಳ ಮೂಗಿನ ಥರ ಇತ್ತು. +” ನನ್ನ ಮೂಗಿನ ಮೇಲೇಕೋ ನಿನಗೆ ಕಣ್ಣು, ಯಾಕೊ ಸಂಧ್ಯಾವಂದನೆ ಕಡೆ ಮೊದಲಿನಹಾಗೆ ಗಮನ ಹರಿಯುತ್ತಿಲ್ಲ. ಅರುಣೋದಯದ ನಂತರ ಎದ್ದರೆ ಸಂಧ್ಯಾವಂದನೆ ಮಾಡಲಿಕ್ಕಾಗುವುದೇ? ಎಂದು ಅವರು ಪ್ರವರ ಪ್ರಾರಂಭಿಸುವುದು ಮಾಮೂಲು… +“ಸಂಧ್ಯಾವಾಸಂಧ್ಯಾ ಅಂತ ಅರ್ವಾಚೀನ ಹೇಳಿದೆ ಕಣಪ್ಪಾ. ಇದರ ಅವಯವಾರ್ಥದ ಪ್ರಕಾರ ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯೇ ಸಂಧ್ಯಾ ಈ ಶಕ್ತಿಯ ಉಪಾಸನೆಯೇ ಸಂಧ್ಯಾವಂದನೆ ಅಂತ ಕರೆದಿರೋದು… ನಿನ್ನ ಮುತ್ತಾತನವರು ಅಂಥ ಪರಮೇಶ್ವರಿ ಶೇಷ್ಠ ಉಪಾಸಕರಾಗಿದ್ದುದರಿಂದಲೇ ನಮ್ಮಂಥವರ ಜನನವಾಗಿದ್ದು… ” ಎಂದು ಅವರ ತಮ್ಮ ಜನ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಮಮೂಲು… +ಶಾಮಶಾಸ್ತ್ರಿ ಒಂದು ಕಣ್ಣು ಮುಚ್ಚಿಕೊಳ್ಳುತ್ತಾನೆ. +ಪರಮೇಶ್ವರಿಯ ರೂಪ ಮೈದಾಳುತ್ತಾಳೆ ಮಾನಸ ಗುರುಗುಹದೊಳಗೆ… +ಆಕೆ ಸಾಮಾನ್ಯಳಾಗಿರುವುದಿಲ್ಲ. +ಕರ್ದಮ ಮುನಿಯಿಂದ ದೇವಹೂತಿಯ ಗರ್ಭದಲ್ಲಿ ಬೆಳೆದು ಹೊರಬಂದಾಕೆ. +ಒಂಬತ್ತು ಸಹೋದರಿಯರನ್ನು ಪಡೆದಿದ್ದಳಾಕೆ… +ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬನಾದ ಬ್ರಹ್ಮಮಾನಸಪುತ್ರನನ್ನು ಮದುವೆ ಮಾಡಿಕೊಂಡಾಕಿ. +ಬ್ರಹ್ಮ ಎಂಬ, ವಿಷ್ಣು ಎಂಬ, ಮಹೇಶ್ವರ ಎಂಬ ತ್ರಿಮೂರ್ತಿಗಳಿಂದ ಪರೀಕ್ಷೆಗೆ ಒಳಪಟ್ಟು ಗೆದ್ದು ಗೋಲ್ಡ್ ಮೆಡಲ್ ಪಡೆದಾಕಿ. +ದತ್ತಾತ್ರೇಯ, ದುರ್ವಾಸ, ಚಂದ್ರ ಅಕಲ‌ಓಕಿತ ಪರಿಶೇ ಪೈಲ್ವಾರಂಥ ಮೂರು ಮಕ್ಕಳನ್ನು ಪಡೆದು ಮೀಸೆ ತಿರುವಿದಾಕಿ. +ಶ್ರೀರಾಮನು ವನವಾಸವೆಂಬ ಹನಿಮೂನಿಗೇಂತ ಬಂದಿದ್ದಾಗ ಹಲೋ; ಹಲೋ ಜಾನಕಿಯನ್ನು ಬರಮಾಡಿಕೊಂಡು ಆಕೆಗೆ ಅನೇಕ ಸ್ರೀ ಧರ್ಮ ರಹಸ್ಯಗಳನ್ನು ಭೋಧಿಸಿ ಆಕೆಯ ಮಾಂಗಲ್ಯ ಶಕ್ತಿಯನ್ನು ಸಮೃದ್ಧಗೊಳಿಸಿದಾಕಿ. +ಇಂಥ ಕತೆಗಳುಳ್ಳವಳಾದ ಆಕೆ ಈ ಜಂಬೂ ದೀಪದ ಛಪ್ಪನ್ನಾರು ಭಾಷೆಗಳಲ್ಲಿ ಸಿನಿಮಾ ತೆಗೆಸಿಕೊಂಡಾಕಿ… +…ಶಾಮಾಶಾಸ್ತ್ರಿಯ ಮನಸ್ಸೆಂಬ ಮಂಗಳಗ್ರಹದಲ್ಲಿ ಅನಸೂಯ ಎಂಬ ಚಂದ್ರ ಬಿಂಬವು ಪಲ್ಲವಿಸುತ್ತಿರಲು +ಶಾಸ್ತ್ರಿಗಳಿಗೆ ತಾವು ಯವಕರಾಗಿದ್ದಾಗ ಪ್ರಸಿದ್ಧ ಇಂಜಿನೀಯರ್ ಓರ್ವರ ಪತ್ನಿ ತ್ರಿಪುರ ಸುಂದರೀ ದೇವಿಯ ಪ್ರೇಮಪಾಶದಲ್ಲಿ ಬಿದ್ದುದನ್ನು ನೆನಪು ಮಾಡಿಕೊಂಡರು. +ಆಕೆಯ ಪ್ರೀಥ್ಯಥವಾಗಿ ಹಾಡಿದ್ದ ಹಾಡೊಂದನ್ನು ನೆನಪು ಮಾಡಿಕೊಂಡರು. ತ್ರಿಪುರ ಸುಂದರೀ ದೇವಿಗೆ ಶಂಕರಾಭರಣ ರಾಗ ಕಿವಿಗೆ ಬಿತ್ತೆಂದರೆ ಪಕ್ಕದಲ್ಲಿನ ಗಂಡನನ್ನೇ ಮರೆತು ಬಿಡುತ್ತಿದ್ದಳು. ಅದಕ್ಕೆ ಪೂರಕವಾಗಿ ಚತುಶ್ರ ಏಕತಾಳವೆಂದರೆ ತೊಟ್ಟಿಲಲ್ಲಿನ ಮಗನನ್ನೇ ಮರೆತು ಬಿಟ್ಟೆದ್ದು ಬರುತ್ತಿದ್ದಳು… ತಂದೆಯವರೊಡನೆ ಸತ್ಯನಾರಾಯಣ ಪೂಜಾ ವ್ರತ ಮಾಡಿಸಲೆಂದು ಅವರ ಮನೆಗೆ ಹೋಗಿದ್ದಾಗ ಪರಿಚಯವಾಗಿದ್ದು. +“ಪರಮೇಶ್ವರಽ ಪುಜೆಗೆ ಒಂದು ಹಾದು ಹೇಳಪ್ಪಾ!” ತಂದೆಯವರು ಹೊದಲ್ಲಿ ಬಂದಲ್ಲಿ ಹೀಗೆ ಅಪ್ಪಣೆ ಕೊಡಿಸುವುದು ಸ್ವಾಭಾವಿಕವಾಗಿತ್ತು. +ಪ್ರತಿಷ್ಠಿತ ವಲಯದಲ್ಲಿ ತಮ್ಮ ಸುಪುತ್ರನನ್ನು ಪ್ರತಿಷ್ಥಾಪಿಸುವ ಸನ್ನಾಹದಲ್ಲಿ ಒಂದು ಮಾತು ಹೆಚ್ಚು ಹೊಗಳುತ್ತಿದ್ದರು. +ಅಷ್ಟರಲ್ಲಿ ಪರಮೇಶ್ವರ ಶಾಸ್ತ್ರಿ ಇಂಜಿನಿಯರವರ ಕಣ್ಣಸೆಳೆವಿಗೆ ಕೊಚ್ಚಿ ಹೋಗಿದ್ದರು. ಆಕೆಯೂ ಶಾಸ್ತ್ರೀಯ ಸಂಗೀತದಲ್ಲಿ ಪರಿಶ್ರಮವುಳ್ಳವಳಾಗಿದ್ದಳೆಂಬುದನ್ನು ಕೇಳಿಬಲ್ಲರು. +ಆ ಸಂದರ್ಭದಲ್ಲಿ ಪಂಚ ಮಾತಂಗ ಮುಖ ಗಣಪತಿನಾ ಹಾಡಬೇಕಿತ್ತು. ಯಾಕೋ ಅವರಿಗೆ ಸತ್ಯನಾರಾಯಣನೇ ಶಂಕರಾಭರಣದ ಸಾಮಗಾನ ಪ್ರಿಯೆ ಹಾಡಲು ಪ್ರೇರಣೆ ನೀಡಿದ, ಎಷ್ತಾದರೂ ಅವನೂ ಒಳ್ಳೆಯ ಪ್ರೇಮಿ ಅಲ್ಲವೇ? +ಸಾಮಗಾನ ಪ್ರೀಯೇ ಕಾಮಕೋಟಿ ನಿಲಯೇ +ಶಂಕರಿ ಸುಂದರಿ ಸರತರ ಲಹರಿ +ಚಂಡಿಕೇ ನಿರ್ಯಜೇ ಕಾಮಿನಿ ಮೋದಿನಿ +ಪಾಹಿ ಗುರುಗುಹ ಜನನಿ ಕಾಮಾಕ್ಷಿ +ಎಂದು ಅದ್ಭುತ ಶಾರಿರದಿಂದ ಹಾಡಿಯೇ ಬಿಟ್ಟರು. ಆರೋಹಣ, ಅವರೊಹಣದಲ್ಲಿ +ತಿಲಮಾತ್ರ ವ್ಯತ್ಯಯವಿರಲಿಲ್ಲ. +ಇಂಜಿನಿಯರ್‌ರವರಂತೂ ನಾದ ಲೋಕದಲ್ಲಿ ಪಯಣಿಸಿದ್ದರು. ರೇಷ್ಮೆ ಉತ್ತರೀಯ ಹೊದಿಸಿ ಸನ್ಮಾನಿಸಿದರು. ಪರಮೇಶ್ವರ ಶಾಸ್ತ್ರಿಗಳ ಮನೆಯಿಂದ ವಾರಕ್ಕೆರಡು ಮೂರು ಬಾರಿಯಾದರೂ ಬುಲಾವ್ ಬರುತ್ತಿತ್ತು. +ಊರಲ್ಲಿದ್ದರೆ ಇಂಜಿನಿಯರ್‌ರವರು ತ್ಯಾಗರಾಜರ್ ಕೀರ್ತನೆಗಳನ್ನು ಅಪೇಕ್ಷಿಸುತ್ತಿದ್ದರು. ಪತಿದೇವರು ನಗರದಿಂದ ಹೊರಗೆ ಹೋಗಿದ್ದಾಗ ಅವರ ಪತ್ನಿ ತ್ರಿಪುರ ಸುಂದರಿ ದೇವಿಯವರಿಂದ… +ಅವರೀರ್ವರ ಸಂಗೀತ ಪ್ರೇಮಪ್ರಣಯಕ್ಕೆ ತಿರುಗಿತು. ಇಂಜಿನಿಯರ್‌ರವರು ಮಹಾರಾಜರಿಗೆ ತುಂಬ ಬೇಕಾಗಿದ್ದವರು, ಅವರಿಗೂ ಇವರ ಸಂಬಂಧೀಯ ವಾಸನೆ ಹತ್ತಿತಾದರೂ ಅದರ ಬಗ್ಗೆ ಪರಿಶೋಧಿಸಿ ನೋಡುವ ಗೋಜಿಗೆ ಹೋಗಿರಲಿಲ್ಲ. +ತ್ರಿಕಾಲ ಜ್ಞಾನಗಳಾದ ಶಾಮಾಶಾಸ್ತ್ರಿಗಳು ಉಪಾಸನ ಕೋಣೆಯಲ್ಲಿ ಮಗನನ್ನು ಕುಳ್ಳರಿಸಿಕೊಂಡು ತ್ರಿನೇತ್ರನಂತೆ ದುರುಗುಟ್ಟಿದರು. ಚಾಮುಂಡಿಯ ಕೈಯಲ್ಲಿದ್ದ ಬಾಣ ತೆಗೆದುಕೊಂಡು ಕೆಂಪಗೆ ಕಾಯಿಸಿದರು. +” ಮುಂದೆ ಎಂದಾದರೂ ನೀನು ಹಾಡಿದೀಯೆಂದರೆ ನಿನ್ನ ನಾಲಿಗೆ ಬಿದ್ದುಹೋಗಲಿ” ಎಂದವರೆ ಮಗನ ಬಾಯೊಳಗಿಂದ ನಾಲಿಗೆ ಜಗ್ಗಿ ಬರೆ ಎಳೆದುಬಿಟ್ಟರು. +ಶಂಕರಾಭರಣದ ಸಾಮಗಾನಪ್ರಿಯೆ ತ್ರಿಪುರ ಸುಂದರಿದೇವಿ ಶಾಸ್ತ್ರಿಗಳ ನೆನಪಿನ ಉಗ್ರಾಣವನ್ನು ಸೂರೆಮಾಡತೊಡಗಿದಳು. ಅವರಿಗೆ ಇಡೀ ಊರಿನ ಅರ್ಧ ಭಾಗಕ್ಕೆ ಕೇಳಿಸುವಂತೆ ಹಾಡುವ ಆಸೆ. ತಂದೆಯವರ ಲಕ್ಷ್ಮಣ ರೇಖೆ ನೆನಪಾಯಿತು. ಆ ಲಕ್ಷ್ಮಣರೇಖೆ ಇರದಿದ್ದಲ್ಲಿ ಶಾಸ್ತ್ರಿಗಳು ವೈದಿಕಕ್ಕಿಂತ ಹೆಚ್ಚು ಮಹತ್ವವನ್ನು ಸಂಗೀತಕ್ಕೆ ಕೊಡುತ್ತಿದ್ದರು. ಪ್ರಸಿದ್ಧ ಸಂಗೀತಗಾರರಾಗುತ್ತಿದ್ದರು. ತಾವು ಎಂದೂ ಯಾವ ಕಾರಣಕ್ಕೂ ಹಾಡುವಂತಿರಲಿಲ್ಲವೆಂಬುದೇನೋ ನಿಜ. ಆದರೆ ಅಷ್ಟಕ್ಕೆ ಸುಮ್ಮನಿರಲಾದೀತೆ? +ನಗರದಲ್ಲಿ ಕೆಲವು ಕಾಲ ಇದ್ದ ನಭೋಮಣಿರಾಗದ ನರಸಿಂಹಾಚಾರ್‌ರವರಿಂದ ಮೊಮ್ಮಗ ಶಾಮುವಿಗೆ ಸಂಗಿತಾಭ್ಯಾಸ ಮಾಡಿಸಿದ್ದರು ಎಂಬುದನ್ನು ಹೇಳಲು ಮರೆತಿದ್ದೆ. +“ಮಗೂ ಶಾಮೂಽಽಽ ಮುತ್ತು ಸ್ವಾಮಿ ದೀಕ್ಷಿತರ ಕೃತಿ ಸಾಮಗಾನ ಪ್ರಿಯೆ ಬತದಾ ಎಂದು ಮಗುವಿನಂತೆ ಕೇಳಿದರು. +ಬರದೆ ಏನು? ಶಾಮು ತಲೆ ಅಲ್ಲಾಡಿಸಿದ. +ಶಾಮು ಸಾಮಗಾನಪ್ರಿಯೆ ಅಂತ ಆರಂಭಿಸಿಯೇ ಬಿಟ್ಟ. ಅವನ ಸೊಗಸಾದ ಶಾರೀರ ಇಡೀ ಓಣಿಯನ್ನು ಪರವಶಗೊಳಿಸಿತು. ಅಡುಗೆ ಮನೆ ಯಲ್ಲಿ ಬತ್ತಿ ಹೊಸೆಯುತ್ತಿದ್ದ ಅಲುಮೇಲಮ್ಮನವರು ಸೀದ ಪೂಜಾಕೋಣೆಗೆ ಹೋಗಿ ದೇವತೆ ಮುಂದೆ ಧೀರ್ಘದಂಡ ಪ್ರಣಾಮ ಸಲ್ಲಿಸಿದರು. +…ಜನನೀ ಕಾಮಾಕ್ಷಿಽಽಽ ಎಂದು ಶಾಮು ಹಾಡುತ್ತ ಸಮ ಪಾತಳಿಗೆ ತಂದೊಡನೆಯೇ ಶಾಸ್ತ್ರಿಗಳ ದುಃಖದ ಕಟ್ಟೆ ಒಡೆಯಿತು. ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಮೊಮ್ಮಗನ ತೊಡೆ ಮೇಲೆ ತಲೆ ಇರುಸಿ ಗಾಢ ನಿದ್ರೆ ಹೋದರು ಕ್ರಮೇಣ. +ಶಾಮು ತಾತನ ತಲೆ ನೇವರಿಸಿದ. ಅವರನ್ನು ಮೃದುವಾಗಿ ಚುಂಬಿಸಿದ. +ರಥ ಸಪ್ತಮಿ ನಾಳೆ ಇದ್ದುದರಿಂದ ಶಾಮ ಹನ್ನೊಂದು ವಿಧದ ಪತ್ರೆ ಆಯ್ದು ತರಲು ಬೆತ್ತದ ಬುಟ್ತಿಯೊಡನೆ ಹೊರಟ. ಪತ್ರಿ ಮರದ ಬುಡದಲ್ಲಿರುವ ಲಕ್ಷ್ಮಿ ವಿಗ್ರಹದ ಬಗ್ಗೆ ಅಲುಮೇಲಮ್ಮಗೆ ತುಂಬ ಭಕ್ತಿ., ಪೂಜೆಯಿಂದ ವಂಚಿತಗೊಂಡಿರುವ ಅದಕ್ಕೆ ಪೂಜೆ ಆರಂಭಿಸಿದ್ದು ಆಕೆಯೇ. +ಹಾಗೆಯೇ ಪೂಜೆ ಸಲ್ಲಿಸಲು ಮತ್ತು ಆಕೆಯ ಸನ್ನಿಧಿಯಲ್ಲಿ ಆಹಾರ ಭಕ್ಷಿಸಲು ಸಲಹೆ ನೀಡಿ ಪರಿಕರಗಳ ಗಂಟಿನೊಡನೆ ಕಳಿಸಿದ್ದಳು ಮಗನನ್ನು. +ಶಾಮ ತಲುಪಿದ., ಮರದ ಬುಡದಲ್ಲಿರುವ ವಿಗ್ರಹಕ್ಕಾಗಿ ಹುಡುಕುತ್ತಿರುವಾಗ ಹ್ಹಾ! ಹ್ಹಾ! ಎಂದು ಚೀರುತ್ತಿದ್ದ ಸ್ತ್ರೀಕಂಠ ಕೇಳಿಸಿತು. ಅವನು ಬರುವನೆಂದು ಖಚಿತ ಪಡಿಸಿಕೊಂಡು ಅನಸೂಯ ಅಲ್ಲಿಗೆ ಬಂದಿದ್ದಳು. ಕೇದಿಗೆ ಪೊದೆ ಪರಿಮಳಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಳು. +ಬಿಡಿಸಿ ಕರೆತಂದ. ಜೊತೆಗೆ ಒಂದು ಕೇದಿಗೆ ಹೂವೊಂದನ್ನೂ ಸಹ. ಅದರ ಒಂದು ಎಸಳನ್ನು ಆಕೆಯ ಕಪ್ಪು ಮುಡಿಯೊಳಗಿರಿಸಿದ. ಅನಸೂಯಾಳೆಂಬ ಕರುಣಾರಸಾಲಯ ದೊರಕಿದ ಮೇಲೆ ಆಲಯವಿಲ್ಲದ ಲಕ್ಷ್ಮಿ ವಿಗ್ರಹದ ಗೊಡವೆ ತಮಗೇಕೆ? +ಅಮ್ಮ ಪೂಜೆಗೆಂದು ಕೊಟ್ಟಿದ್ದ ಸಾಮಗ್ರಿ ಬಿಚ್ಚಿದ, ರವೆಯುಂಡೆ, ಹರಳಿಟ್ಟು, ಕೋಡುಬಳೆ, ರಸಬಾಳೆ ಮುಂತಾದವು ಕಾಗೆ ಎಂಜಲು ಮಾಡಿ ಅವೆಲ್ಲವನ್ನೂ ಅವರು ಮುಗಿಸಿದರು. +ಅನೂ ತಮ್ಮ ಭಯಾನಕ ತಂದೆಯ ಬಗ್ಗೆ ಹೇಳಿಕೊಂಡಲು. +ಶಾಮು ತಮ್ಮ ಸಾತ್ವಿಕ ತಾತನ ಬಗ್ಗೆ ಹೇಳಿಕೊಂಡ. +ಸ್ವಲ್ಪ ಹೊತ್ತು ಅನೂ ಶಾಮುನ ತೊಡೆ ಮೇಲೆ ತಲೆ ಇರಿಸಿ ಮಲಗಿದಳು. +ಶಾಮೂ ಕೂಡ ಅನೂಳ ತೊಡೆ ಮೇಲೆ ತಲೆ ಇರಿಸಿ ಮಲಗಿದ. +“ಶಾಮೂ… ನೀನದೆಷ್ಟು ಚನ್ನಾಗಿ ಹಾಡಿದಿ ಗೊತ್ತಾ?” ನೆನಪಿಸಿಕೊಂಡವಲಂತೆ ದಿಗ್ಗನೆ ಕೇಳಿದಳು. ತಾನು ಗಟ್ಟಿಯಾಗಿ ಹಾಡಿದ್ದಕ್ಕೂ ಸಾರ್ಥಕವಾಯಿತೆಂದುಕೊಂಡ. +“ಕಾಲೇಜ್ ಡೇಗೆ ನೀನು ಹಾಡಲೇಬೇಕು!” ಪತ್ತು ಹಿಡಿದಳು ಮೀನಲೋಚನಿ, ಸಭಾ ಕಂಪನಿಯಾದ ಶಾಮನ ಎದೆ ಡವ ಡವ ಗುಟ್ಟತೊಡಗಿತು. +ಬಂಗಾರದ ಮನುಷ್ಯದಲ್ಲಿ ರಾಜಕುಮಾರನ ತೊಡೆ ಮೇಲೆ ಭಾರತಿ ಒರಗಿರುತ್ತಾಳಲ್ಲ; ಹಾಗೆ ಒರಗಿದ್ದ ಅನಸೂಯಳನ್ನು ನೋಡಿ ದರಾನಮತ್ಕಂಧರ ಬಂದ ಮೀಷನ್ನಿಮೀಲಿತ ಸ್ನಿಗ್ಧ ವಿಲೋಚಾಬ್ಜಮ್ ಎಂಬ ಜಗನ್ನಾಥ ಕವಿಯ ಶ್ಲೋಕ ನೆನಪಿಸಿಕೊಂಡ. ರೋಮಾಂಚನಗೊಂಡ. ಆ ಕಮಲನಯನೆಯ ಅಂತರ್ಭಾಗದಂತೆ ಕಂಡ ಪೋರ್ಕುಳ ಶೋಬೆಯನ್ನು ಸವಿದ. ಆ ಚಿಗರೆ ಕಣ್ಣುಗಳು ಪ್ರೇಮ ಕಟಾಕ್ಷವನ್ನು ಬೀರಿದವು. +ಅಂದು ರಥತಿರಥ ಸಂಖ್ಯಾಯನದ ದಿನ ತಾಯಿ ಅಲುಮೇಲಮ್ಮಗೆ ಮಗನ ನೆನಪು ತುಂಬಾ ಕಾಡಿತು. ಕಾಲೇಜು ಡೇ ಸಮಾರಂಭದಲ್ಲಿ ಯಾವ ಹಾಡು ಹಾಡಿ ಅನಸೂಯಾಳ ಇಚ್ಛೆ ಪೂರೈಸಬೇಕೆಂಬ ಚಿಂತೆಯಲ್ಲಿ ಶಾಮು ಮುಳುಗಿದ್ದ. “ಅಮ್ಮಾ ನನ್ಗೆ ನಾಚಿಕೆಯಾಗ್ತದೆ” ಎಂದರೂ ತಾಯಿ ಬಿಡಬೇಕಲ್ಲ? ಹಿತ್ತಲಲ್ಲಿ ಬಟ್ಟೆ ಸೆಳೆವ ಕಲ್ಲ ಮೇಲೆ ಮಗ ಸಂಕೋಚದಿಂದಲೇ ಕೂತ, ತಾಯಿ ಬಲವಂತಕ್ಕೆ ಬನಿಯನ್ ಬಿಚ್ಚಿದ, ತಾಯಿ ಬಲವಂತಕ್ಕೆ ಲುಂಗಿ ಕಳಚಿದ. ಬೆಳ್ಳುಳ್ಳಿ ಬೆಂದಿದ್ದ ಎಣ್ಣೆಯನ್ನು ಆಕೆ ಬೊಗಸೆಗೆ ಸುರುವಿಕೊಂಡಳು. ಎಷ್ಟು ಎತ್ತರ ಎಷ್ಟು ದಪ್ಪ ಆಗಿದ್ದಾನೆ. ತನ್ನ ಮಗ; +ಅವರು ಬದುಕಿದ್ದರೆ ಇಷ್ಟೆತ್ತರ ಬೆಳೆದಿರುವ ಮಗನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದರವರು!… ಮೊದಲಿನ ಹಾಗೆ ಈಗವನು ಪೀಚಲ್ಲ, ಮೈಗೆ ಎಣ್ಣೆ ಲೇಪಿಸಿದಳು. ಕೆಲವು ಭಾಗಗಳನ್ನು ಸ್ಪರ್ಶಿಸಲು ತನಗಿವನು ಆಸ್ಪದ ನೀಡುತ್ತಿಲ್ಲವಲ್ಲ! ತುಳಸೀ ರಾಮಾಯಣ ಪಾರಾಯಣ ಮುಗಿಯುವುದರೊಳಗೆ ಒಂದು ಒಳ್ಳೆ ಮನೆತನದ ಹೆಣ್ಣು ನೋಡಬೇಕು. ಒಂದು ಒಳ್ಳೆ ಮುಹೂರ್ತ ನೋಡಿ ಮದುವೆ ಮಾಡಬೇಕು. ಮಗ ಸೊಸೆಯರ ಸಂಸಾರ ನೋಡಿ ಸಂತೋಷಪಡಬೇಕು. ವರ್ಷದೊಳಗೆ ಸೊಸೆ ಹೆತ್ತು ಕೊಡುವ ಮೊಮ್ಮಗನನ್ನು ಎತ್ತಿ ಆಡುತ್ತ ಕಣ್ಣು ಮುಚ್ಚಿ ಬಿಡಬೇಕು. +ಉಸಿರಿನ ಮೇಲೆ ಉಸಿರು ಬಿಡುತ್ತ ಮಗನಿಗೆ ಸ್ನಾನ ಮಾಡಿಸಿದಳು. ತಾನೇ ಹೊಸ ಪಾಯಿಜಾಮ ಜುಬ್ಬ ತೊಡಿಸಿದಳು.ವಿವಿಧ ಕೋನಗಳಲ್ಲಿ ನಿಂತು ಮಗನನ್ನು ನೋಡಿ ಸಂತೋಷ ಅನುಭವಿಸಿದಳು. ಆ ಸಂತೊಷ ಆಕೆಯಲ್ಲಿ ಸಾವಿರಾರು ನೆನಪುಗಳನ್ನು ಉಕ್ಕಿಸಿತು. ಸಾವಿರಾರು ಭಾವನೆಗಳನ್ನು ಹೊರ ಚೆಲ್ಲಾಡಿತು ಆಕೆಯ ವೈಧವ್ಯದ ದುರ್ಬಲ ದೇಹ ಅಷ್ಟೊಂದು ಉದ್ವಿಗ್ನತೆಯನ್ನು ತಡೆದುಕೊಳ್ಳುವುದಾದರೂ ಹೇಗೆ? ಕೋಣೆಗೆ ಹೋಗಿ ಗಂಡನ ಫೋತೋದ ಮುಂದೆ ಬಿದ್ದು ಗೊಳೋ ಎಂದು ಅಳತೊಡಗಿದಳು. +ಆಕೆ ದುಃಖಿಸುತ್ತಿದುದನ್ನು ಶಾಸ್ತ್ರಿಗಳು ಗಾಯತ್ರಿ ಸಂದರ್ಭದಲ್ಲಿ ಕೇಳಿಸಿಕೊಂಡರು. ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಎಂದರು. ಶಿವ ಸಂಹೃದಯಂ ವಿಷ್ಣುಃ ಅಂದರು. ವಿಷ್ಣೋಶ್ಚ ಹೃದಯಂ ಶಿವಃ ಅಂದರು. ಯಥಾ ಶಿವ ಮಯೋ ವಿಷ್ಣು ಎಂದು ನುಡಿಯಲಾಗಲಿಲ್ಲ. ಅಂತರಾಳದಿಂದ ಮಗನ ನೆನಪು ದೇಹದ ಸಮಸ್ತ ಇಂದ್ರಿಯಗಳನ್ನು ಆಕ್ರಮಿಸಿ ಬಿಟ್ಟಿತ್ತು. ತನ್ನ ಸಾವನ್ನು ತಾನೇ ಆಮಂತ್ರಿಸಿಕೊಂಡಂಥ ಮಗ ಕೇವಲ ತಮಗೆ ಮಾತ್ರ ಇರಲು ಸಾಧ್ಯ. +ಅವನು ಬೆಳೆದದ್ದೂ ತಡವಾಗಲಿಲ್ಲ. ಕದ್ದು ಮಿಲಿಟರಿಗೆ ಓಡಿದ್ದೂ ತಡವಾಗಲಿಲ್ಲ. ವಂಶದ ಗೌರವವನ್ನು ಗಾಳಿಗೆ ತೂರಿ ಮ್ಲೇಚ್ಚರ ಸವವಾಸ ಮಾಡುವುದೂ ತಡವಾಗಲಿಲ್ಲ. ಅಯ್ಯೋ ಅವನಿಗೆ ಹಠ ಹಿಡಿದು ಮದುವೆ ಮಾಡಿದ್ದಲ್ಲಿ ಎಷ್ಟೊಂದು ಕಷ್ಟ ಅನುಭವಿಸಬೇಕಿತ್ತಲ್ಲ! ತಮ್ಮ ಶವ ಸಂಸ್ಕಾರಕ್ಕೆ ಮಗನನ್ನು ಹುಟ್ಟಿಸಿ ಕೊಟ್ಟ ಅವನಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ? ಹೌದಲ್ಲವೇ? ಎಷೊಂದು ದೊಡ್ಡವನಾಗಿದ್ದಾನೆ ತನ್ನ ಮೊಮ್ಮಗ! ಅವನು ದೊಡ್ಡವನಾಗಿರುವುದು ತಮ್ಮಿಂದ ಗುರುತಿಸಲಾಗಲಿಲ್ಲವಲ್ಲ… ಇದು ತಮ್ಮ ಅಕ್ಷಮ್ಯ ಅಪರಾಧವೇ ಸರಿ! +“ತಾಯಿ ಅಲುಮೆಲು… ಶಾಮಾ ಶಾಸ್ತ್ರಿ ಒಳಗಡೆ ಇರುವೆಯೇನಮ್ಮಾ?” ದ್ವಿತೀಯ ಮಾರ್ಜನೆ ಮುಗಿಸಿಕೊಂಡು ಕೂಗಿದರು ಶಾಸ್ತ್ರಿಗಳು. +ಕೋನೆಯಲ್ಲಿ ದುಃಖದ ಪರಾಕಾಷ್ಠೆ ತಲುಪಿದ್ದ ಅಲುಮೇಲಮ್ಮ ’ಸಹಸ್ರ ಪರಮಾಂ ದೇವಿ ಎಂದು ಕಣ್ಣು ಮುಚ್ಚಿಕೊಂಡಳು… +ಅದು ಕಿವಿಗೆ ಬಿದ್ದೊಡನೆ ಶಾಸ್ತ್ರಿಗಳಿಗೆ ರೋಮಾಂಚನವಾಯಿತು. ಎಷ್ಟೊಂದು ಸುಸಂಸ್ಕೃತಳಿದ್ದಾದಳ್ಳ ತಮ್ಮ ಸೊಸೆ? ಇಂಥ ಪತ್ನಿಯೊಡನೆ ಸುದೀರ್ಘ ದಾಮ್ಪತ್ಯ ಜೀವನ ನಡೆಸಲು ಮಗ ಅಶ್ವತ್ಥ ಪುಣ್ಯ ಮಾಡಿರಲಿಲ್ಲ. ಇಂಥ ಪ್ರಿಯವಾದ ತಮ್ಮ ಸೊಸೆ ತಮಗೆ ಪ್ರಿಯವಾದ ಶಬ್ದಗಳನ್ನು ನುಡಿದಳು! +ಸಹಸ್ರ ಪರಮಾಂ ದೇವಿ!…. ಮತ್ತೆ ಪುಲಕಿತರಾದರು ಶಾಸ್ತ್ರಿಗಳು. +ತ್ರಿಪುರ ಸುಂದರಿ ದೇವಿಯ ಮುಖ ಕಮಲವನ್ನು ಬೊಗಸೆಯಲ್ಲಿ ಹಿಡಿದು ಅದು ತಾವು ನುಡಿದ ಮಾತದು. ಸಾವಿರ ದಳದ ಪುಷ್ಪದ ರೀತಿಯಲ್ಲಿ ಘಮ್ಮನೆ ಆರಳಿದ್ದಳು ದೇವಿ. ಅವಳಿಗಿಂತ +ಕಿರಿಯನಿದ್ದ ತನ್ನಲ್ಲಿ ಪ್ರವಾಹ ಉಕ್ಕಿಸುತ್ತಿದ್ದ ದೇವಿಯ ಮುಖ ಅದಾಗಿತ್ತು. +ಮುಖದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯು ರಜಾಯತ ಎಂಬೊಂದು ತನ್ನ ಪ್ರಿಯವಾಕ್ಯ ಬರಬಹುದೇನೋ? ಶಾಸ್ತಿಗಳು ಮತ್ತೆ ಮತ್ತೆ ಪುಳಕಿತಗೊಂಡರು. ಯೌವನದ ಕ್ಷಣ ನೆನಪಿಸಿದ ಸಾಕ್ಷಾತ್ ದೇವಿಯೇ ಸರಿ… +ಅಯಾಚಿತವಾಗಿ ಮೇಲೆದ್ದು ನಡೆಯತೊಡಗಿದರು. ಅವರು ಹೋಗುವುದಕ್ಕು ಅವರ ಸೊಸೆ ತಲೆಬಾಗಿಲ ಬಳಿ ಬರುವುದಕ್ಕೂ ಸರಿ ಹೋಯಿತು. ನಖಶಿಖಾಂತ ನೋಡಿದರು. ಕ್ಷೀರೇಣ ಸ್ಥಾಪಿತಾ ದೇವಿ ಚಂದನೇನ ವಿಲೇಪಿತೇ ಅಂದಿತು ಅವರ ಮನಸ್ಸು, ಮೈತುಂಬ ವೈಧವ್ಯ ಲೇಪಿಸಿಕೊಂಡಿರುವ ಸೊಸೆ! ಅಪವಿತ್ರಹ್ ಪವಿತ್ರೊವಾ ವೈಧವ್ಯಕ್ಕೆ ತಾವೆಂದೂ ಒತ್ತಾಯಿಸಿರಲಿಲ್ಲ. ಒತ್ತಾಯಿಸದೇ ಇರಲಿಲ್ಲ ಕೂಡ… ಅವರ ಅಂತರಂಗದಲ್ಲಿ ಅಪರಾಧೀ ಭಾವ ಪ್ರಜ್ವಲಿಸಿತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವೆಂದರೆ ಶಂಕರಾಭರಣದ ಸಾಮಗಾನ ಪ್ರಿಯೆ ಕಾಮಕೋಟಿನಿಲಯೇ ಹಾಡಿ ಲೀಲಾಜಾಲವಾಗಿ ಬದುಕಿನಿಂದ ನಿಷ್ಕ್ರಮಿಸುವುದು… ಛೇ! ಛೇ! ಅಲುಮೇಲುಗಾಗಿ ಹಾಡಬಾರದು, ಪಿತ್ರುವಿನ ಏಕ ಪಕ್ಷೀಯ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿ ನಾಲಿಗೆ ಕಲೆದುಕೊಳ್ಳದೆ ಇರುವುದು. +ಶಾಸ್ತ್ರಿಗಳ ಅವಸ್ಥೆ ಅವಳು ಎಂದೂ ಊಹಿಸಿರಲಿಲ್ಲ. ತನಗೆ ವೈಧವ್ಯ ಮೆತ್ತಿದೆಯಲ್ಲ… ಹಾಗೆ… ಬೆವರು ಮೆತ್ತಿರುವ ಮುಖ, ಕೆದರಿದ ಶಿಖಾಗ್ರ… ಅವರ ಹೃದಯದ ಬಡಿತ ತನಗೆ ಕೇಳಿಸುತ್ತಿದೆ. +ಸ್ವಾಂತನಕ್ಕೆ ಒಂದು ಕಪ್ಪು ಗಜ್ಜರಿ ರಸ ತಂದು ಕೊಟ್ಟಳು. ತೂಗು ಮಂಚದ ಮೇಲೆ ಕೂಡ್ರಿಸಿ ಒಮ್ಮೇ ತೂಗಿದಳು. ನವಿಲು ಗರಿ ಬೀಸಣಿಗೆಯಿಂದ ಗಾಳಿ ಬೀಸಿದಳು. +ಒಂದು ಕ್ಷಣ ಕಣ್ಣು ಮುಚ್ಚಿದರು. ತನ್ನ ತಾಯಿಯೇ ಈಕೆ ಎಂದುಕೊಂಡರು. ಉಬ್ಬರವಿಳಿತ ಆರಿದ ಸಾಗರದಂತೆ ಕಂಗೊಳಿಸಿತು ಅವರ ಮನಸ್ಸು. +“ಮಾವನವರೇ, ತಮ್ಮಲ್ಲಿ ಒಂದು ಕೇಳಬೇಕೆಂದಿರುವೆ”. +“ಅದೇನು ಕೇಳು ತಾಯಿ, ಸಂಕೋಚ ಯಾಕೆ” ಎಂದು ಉದ್ವೇಗಪೂರ್ವಕವಾಗಿ ಸಂಭೋದಿಸಿದರು. +“ಶಾಮು ಈಗ ಬೆಳೆದು ನಿಂತಿದ್ದಾನೆ, ಅವನ ನಡುವಳಿಕೆ ಕೂಡ ಮೊದಲಿನ ಹಾಗಿಲ್ಲ…” +“ಹೌದಲ್ಲಾ… ತಾಯಿ… ಅವನು ಬೆಳೆದಿರೋದು ನಮಗೆ ಗೊತ್ತಾಗಲೇ ಇಲ್ಲ ನೋಡು! ಎಲ್ಲಿದ್ದಾನವನು…?” ಸೊಸೆಯ ಮಾತಿನ ಮರ್ಮ ಅರ್ಥ ಮಾಡಿಕೊಂಡರು. +ಮೊಮ್ಮಗನ ದೇಹದಲ್ಲಿ ಅಂಶವನ್ನು ಹಿರಿಯರಾದ ತಾವು ಗುರುತಿಸಬೇಕಲ್ಲವೇ?… ಆ ಅಂಶವನ್ನು ಗುರುತಿಸಿ ಅದರ ಅಗತ್ಯಗಳನ್ನು ತಾವು ಸಕಾಲದಲ್ಲಿ ಪೂರೈಸದಿರಲಾದೀತೇ… +“ಶಾಮೂ… ಅಪ್ಪಾಜಿ… ಶಾಮಶಾಸ್ತ್ರೀ… ಎಲ್ಲಿರುವೆ ತಂದೆ?”… +ಕಾಲೇಜು ಡೇ ಸಮಾರಂಭಕ್ಕೆ ಅದೇ ಆಗ ಶಾಸಕರಾಗಿ ಆಯ್ಕೆಯಾಗಿದ್ದ ಗೋವಿಂದೇಗೌಡರು ತಮ್ಮ ಆಪ್ತೇಷ್ಟರೊಂದಿಗೆ ಬಂದಿದ್ದರು. ಪ್ರತಿ ವಿದ್ಯಾರ್ಥಿ , ವಿದ್ಯಾರ್ಥಿನಿಯರ ಹೆತ್ತವರು, ಆಪ್ತರಿತ್ಯಾದಿ ಬಂದಿದ್ದರು. ಗಿಜಿ ಗಿಜಿ ಅನ್ನುತ್ತಿರುವ ಪ್ರಾಂಗಣ. ಸಂಜಯಗಾಂಧಿ ಎಂಬ ಹೊಸತು ಕೂಸಿನ ಬಗ್ಗೆ ಹಲವರು ಅಲ್ಲಲ್ಲಿ ಮಾತಾಡುತ್ತಿದ್ದರು. ಕಾಲೇಜಿನ ಮಾರ್ಕ್ಸ್‌ವಾದಿ ಶಿಕ್ಷಕ ಪ್ರಾಂಗಣದ ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳು ಅಂದಿನ ಕವಿಗೋಷ್ಥಿಗೆಂದೇ ಬರೆದಿದ್ದ ಕವಿತೆಗಳನ್ನು +ಪರಿಶೀಲಿಸುತ್ತಿದ್ದ. ಪ್ರತಿಯೊಂದು ಕವಿತೆಯಲ್ಲಿ ಕುಡುಗೋಲು ಕೋರೈಸುತ್ತಿತ್ತು. ಆ ಕುಡುಗೋಲುಗಳನ್ನು ಮಸೆದು ಮೊನಚು ಮಾಡತೊಡಗಿದ್ದ. ಶಾಮು ತನ್ನ ಒಂದು ನೀಳ್ಗವಿತೆ ನೀಡಿದ, ಯಮುನಾತೀರದಲ್ಲಿ‌ಋಷ್ನನ ನಿರೀಕ್ಷೆಯಲ್ಲಿರುವ ರಾಧೆಯ ಮನಸ್ಥಿತಿಯನ್ನು ಚಿತ್ರಿಸಿದ್ದ. “ಇಂದಿರಾಗಾಂಧಿ ಆಳುತ್ತಿರುವ ಸಂದರ್ಭದಲ್ಲಿ ಪ್ರೇಮ ಕಾಮದ ಬಗ್ಗೆ ಬರೆಯೋದು ಸಾಧುವಲ್ಲವೆಂದು” ಶಿಕ್ಷಕ ಕವಿ ಶಾಮುವಿಗೆ ಬುದ್ಧಿ ಹೇಳಿದ, “ಈ ವಯಸ್ಸಿನಲ್ಲಿ ಕ್ರಾಂತಿ ಬಗ್ಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ರೊಚ್ಚಿಗೆದ್ದು ಬರೆಯಬೇಕಪ್ಪಾ ಶಾಮಾಶಾಸ್ತ್ರಿ” ಎಂದು ಭಯಂಕರ ಬುದ್ಧಿ ಹೇಳಿದ. ಶಾಮಾಶಾಸ್ತ್ರಿಗೆ ತನ್ನ ಬ್ರಹ್ಮಣ್ಯದ ಬಗ್ಗೆ ಕೀಳರಿಮೆ ಮೂಡಿತು, ಹೊಟ್ಟೆಕಿಚ್ಚು ಮೂಡಿತು, ತಾವು ಶೂದ್ರರಾಗಿ ಹುಟ್ಟಿರುವುದೇ ಅಡ್ವಾಂಟೇಜ್ ಎಂದು ಭಾವಿಸಿದ್ದಾರೆ ಎಂದುಕೊಂಡ. +ತನ್ನ ಕವಿತೆ ಮತ್ತೊಮ್ಮೆ ಓದಿಕೊಂಡ, ಚನ್ನಾಗಿದೆ ಅನ್ನಿಸಿತು., ಪ್ರತಿಯೊಂದು ಅಕ್ಷರವನ್ನು ಸಾಣೆ ಹಿಡಿದಿದ್ದ. ಪ್ರತಿಯೊಂದು ಶಬ್ದವನ್ನು ಪುಟ್ಟ ಪುಟ್ಟ ಆಭರಣದಂತೆ ರೂಪಿಸಿದ್ದ… +ಅದರಲ್ಲಿ ತಾನು ಕೃಷ್ಣನಾಗಿದ್ದ. ಅನಸೂಯ ರಾಧೆಯಾಗಿದ್ದಳು. ಯಮುನಾ ನದಿ ಎಂದರೆ ಹುಲುಲಿ ಹಳ್ಳ. ರಿಜರ್ ಜಾಲಿ ಗಿಡಗಳೇ ತುಳಸಿ ವನ. ಅಗಸರ ಸಾಂಬಿಯಾನ ಕತ್ತೆಗಳು; ಗೌಡರ ಕಾಲಿಲ್ಲದ ಕುದುರೆ ಮುಂತಾದುವೆಲ್ಲ ಗೋವುಗಳು; ಶಿಳ್ಳೆಯೇ ವೇಣು… ಹೀಗೆ ಎನೇನೋ ಸಂಕೇತಗಳನ್ನು ಪ್ರತಿಮೆಗಳನ್ನು ಪೋಣಿಸಿ ಪೋಣಿಸಿ ಕವನ ಹೆಣೆದು ತಂದಿದ್ದ… +ಬಕಪಕ್ಷಿಗಳ ನಡುವೆ ಹಂಸಪಕ್ಷಿ ಯಾವ ಪ್ರಕಾರವಾಗಿ ಶೋಭಾಯಮಾನವಾಗಿ ಗೋಚರಿಸುತ್ತದೋ ಹಾಗೆ ಸಭಸದರ ನಡುವೆ ಅನಸೂಯಾ ದೇದಿಪ್ಯಮಾನವಾಗಿ ಹೊಳೆಯುತ್ತಿದ್ದಳು. ಎಕ್‌ಸ್ಟ್ರಾ ನಟಿಯರ ನಡುವೆ ಹೀರೋಯಿನ್ ಇರುತ್ತಾಳಲ್ಲ ಹಾಗೆ. +ನೀನು ಯಾವುದೇ ಕಾರಣ ಓದದಂತಿರಬೇಡ. ನೀನು ಓದಲೇಬೇಕು…ಎಂದು ಆಕೆ ಬರೆದಿದ್ದ ಚೀಟಿ ತಲುಪಿ ಆತನಲ್ಲಿ ಸಹಸ್ರ ಆನೆಯ ಬಲ ತುಂಬಿತು. +ಕ್ರಾಂತಿಕಾರಿ ಲೆಕ್ಚರರ್ ’ ಮೈಕ್ ಟೆಸ್ಟಿಂಗ್ ತ್ರೀಟುವನ್’ ಅಂದ, ತನ್ನ ಧ್ವನಿ ತಾನೇ ಕೇಳಿ ರೋಮಾಂಚನಗೊಂಡ. ಆತನೇ ಕಾರ್ಯಕ್ರಮ ನಿರ್ವಾಹಕ. ಅದು ಆತನ ನೆಚ್ಚಿನ ಕೆಲಸ. ಪ್ರತಿಯೊಂದಕ್ಕೆ ಕೆಂಪು ವಂದನೆಗಳು ಅಂತ ಹೇಳೋದೆಂದರೆ ಆತಗೆ ತುಂಬ ಇಷ್ಟ. ಅದನ್ನು ಹೇಳಲಿಕ್ಕೆಂದೇ ಹೋಚಿಮಿನ್ ಥರ ಗಡ್ಡ ಬಿಟ್ಟಿದ್ದ, ಮಾವೋನ ರೀತಿಯಲ್ಲಿ ಹುಬ್ಬುಗಳನ್ನು ಟ್ರಿಮ್ ಮಾಡಿದ್ದ. ಕ್ಯಾಸ್ಟ್ರೋ ಥರ ಉದ್ದ ಕಾಣಿಸಬೇಕೂಂತ ’ಹೈ ಹೀಲ್ಡ್’ ಶೂ ಧರಿಸುತ್ತಿದ್ದ. ಬೊಲಿವಿಯ್ದ್ ಕ್ರಾಂತಿಕಾರಿ ಕಾರ್ಮಿಕನ ಥರ ಕಾಣಿಸಬೇಕೂಂತ ಅವರ ಶೈಲಿಯ ಹ್ಯಾಟ್ ಧರಿಸುತ್ತಿದ್ದ. ತನ್ನ ಆರು ಸಾವಿರ ರುಪಾಯಿ ಸಂಬಳದ ಪೈಕಿ ಸುಮಾರು ಐವತ್ತು ರೂಪಾಯಿಗಳನ್ನು ಕ್ರಾಂತಿಕಾರಿ ಚಟುವಟಿಕೆಗಳಿಗೆ ಮೀಸಲಾಗಿರಿಸುತ್ತಿದ್ದ. +ಸ್ವಾಗತದಿಂದ ಹಿಡಿದು ವಂದನಾರ್ಪಣೆವರೆಗೆ ಆತನದೇ ಕೆಂಪು ಕೆಂಪು… ಆತ ಮೈಕೆದುರು ನಿಂತುಕೊಂಡನೆಂದರೆ ಮುಟ್ಟಾಗುತ್ತಿರುವನೆಂದೇ ಅರ್ಥ. +ಕಾಮ್ರೇಡ್ ಗೋವಿಂದೇಗೌಡರಿಗೆ ಎಂದು ಸಂಭೋದಿಸಿ ಕ್ರಾಮೇಡ್ ಶೈಲಿಯಿಂದ ಆ ಶಾಸಕ ಮಹೋದಯರ ಕಡೆಗೆ ನೋಡಿದ. +ಅವರಿಗೆ ’ಕಾಮ್ರೇಡ್’ ಎಂಬ ಪದದ ಅರ್ಥವಾಗಿದ್ದರೆ ತಾನೆ? +ಆತ ನೀಡುತ್ತಿರುವ ಬಿರುದಿರಬೇಕೆಂದು ಅವರು ಭಾವಿಸಿ ಹಸನ್ಮುಖಿಯಾದರು! +ಕೆಲವು ಮಠಗಳವರು ’ಶರಣ” ಎಂಬ ಸ್ಟಿಕ್ಕರ್ ಹಚ್ಚುತ್ತಾರಲ್ಲ ಹಾಗೆ. +ಹೀಗೆ ಎಲ್ಲರಿಗೂ ಅಂಥದೊಂದು ಲೇಬಲ್ಲು ಅಂಟಿಸಿ ಪುನೀತರನ್ನಾಗಿ ಮಾಡಿದ, ಕೆಲವರಿಗೆ ಲೆನಿನ್ ಎಂದೋ, ಏಂಗೆಲ್ಸ್ ಎಂದೋ; ಚಿಗುವೆರಾ ಎಂದೋ ಬಿರುದು ನೀಡಿ ಹಲೋ ಹಲೋ ಅನ್ನಿಸಿಕೊಂಡ. +ಪ್ರಾರ್ಥನೆ ಆತನೇ ಬರೆದ ಹಾಡನ್ನು ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಹಾಡಿ ಸಭಾಸದಸ್ಯರ ಅನುಕಂಪಕ್ಕೆ ಪಾತ್ರರಾದರು. +ಕೆಂಪು ವಂದನಾ ಪುಷ್ಪಗಳನ್ನು ನೀಡಿ +ಕೆಂಪು ಸ್ವಾಗತ ಕೋರುವೆವು ನೋಡಿ +ಇಂಥದೊಂದು ಹಾಡು ಅದಾಗಿತ್ತು. ಮುಖ್ಯವಾಗಿ ಜಗದ್ಗುರು ಎಂಟೊಂಭತ್ತು ಸಾವಿರ ಮಠದ ಕಾಲೇಜು ಅದಾಗಿತ್ತಲ್ಲವೆ? ಅದರ ಸಂಸ್ಥಾಪಕರಾದ ಜಗದ್ಗುರು ಶ್ರೀಮನ್ನಿರಂಜನ ಎತ್ತೇಂದ್ರ ಮಹಾಸ್ವಾಮಿಗಳ ಭಾವಚಿತ್ರ ಅನಾವರಣವನ್ನು ಇನ್ನೊಬ್ಬ ಜಗದ್ಗುರು ಬೆಳದಿಂಗಳೇಶವರರು ಮಾಡಬೇಕಿತ್ತು. +ನಮ್ಮ ಈ ಕೆಂಪು ಲೆಕ್ಚರರು ಫೊಟೋದಲ್ಲಿದ್ದ ಜಗದ್ಗುರುವಿಗೂ ಕಾಮ್ರೇಡು ಎಂದೂ ಅದನ್ನು ಅನಾವರಣ ಮಾಡಿದವರಿಗೆ ’ಡಬಲ್ಕಾಮ್ರೇಡು’ ಎಂದು ಸಂಭೋದಿಸಿದ. +ಜಗದ್ಗುರುಗಳು ಪ್ರಿನ್ಸಿಪಾಲರ ಕಿವಿಯಲ್ಲಿ ಬಾಯಿಯಿಟ್ಟು ’ಅಂತೂ ಇವನಾದ್ರು ನಮ್ಗೆ ಕಾಮ್ರೇಡ್ ಎಂದು ಬಿರುದು ಕೊಟ್ಟನಲ್ಲ. ನಾಳೆ ಈತನನ್ನು ನಮ್ಮ ಸನ್ನಿಧಾನಕ್ಕೆ ಕಳುಹಿಸಿ ಕೊಡಿ. ಒಂದಿಷ್ಟು ವಿಚಾರಿಸಿಕೊಳ್ಳೋದಿದೆ’ ಎಂದು ಪಿಸಿಪಿಸಿ ನುಡಿದರು. +ಕವಿಗೋಷ್ಠಿ ಮತ್ತಷ್ಟು ಕೆಂಪುವಿನಿಂದ ಕೂಡಿತ್ತು. +ಒಬ್ಬ ಕವಿ ಮಾಂಸಕ್ಕೆ ರಕ್ತ ಕಲೆಸಿ ಅದಕ್ಕೆ ಎಲುಬು ಬೆರೆಸಿ ಕಾಂಕ್ರೀಟು ಮಾಡಿ ಗುಡಿ ಕಟ್ಟಿ ಅದರಲ್ಲಿ ಭಾರತ ಮಾತೆಯನ್ನು ಪ್ರತಿಷ್ಠಾಪಿಸಿ ಮೆಚ್ಚುಗೆ ಗಳಿಸಿದರೆ, ಮತ್ತೊಬ್ಬ ಕವಿ ’ಹೊಡಿ ಬಡಿ ಕಡಿ’ ಎಂಬೀ ಮೂರು ಶಬ್ದಗಳನ್ನೇ ಉಪಯೋಗಿಸಿ ಸೊಗಸಾದ ಕವನ ವಾಚನ ಮಾಡಿದ. ಮಗದೊಬ್ಬ ಕವಿ ಉಳ್ಳವರ ಪಕ್ಕೆಲುಬುಗಳ ಪಟ್ಟಿ ಮಾಡಿದ. ಕವಯತ್ರಿಯೋರ್ವಳು ಮದುವೆಯಾಗಲಿರುವ ಗಂಡನ ಮೇಲೆ ಪಕ್ಕ ಅಬುದಾಬಿಯ ಎಣ್ಣೆ ಸುರಿದು ಬೆಂಕಿ ಹಚ್ಚಿ ಬಿಟ್ಟಳು. ಹೀಗೆ ಕವಿಗಳು ಒಬ್ಬರ ಹಿಂದೆ ಒಬ್ಬರು ನುಗ್ಗಿ ಕವಿತೆ ವಾಚಿಸಿ ಸಭಾಸದರ ಮುಖಗಳಿಗೆ ಹರಳೆಣ್ಣೆ ಲೇಪಿಸಿದರು. +ದೂರದಿಂದ ’ಓದೋ’ ಎಂದು ಅನಸೂಯ ಕಣ್ಣು ಮಿಟಿಕಿಸುತ್ತಿದ್ದಾಳೆ, ಒಂದು ಹೆಜ್ಜೆ ಮುಂದಕ್ಕೆ ಎರಡು ಹೆಜ್ಜೆ ಹಿಂದಕ್ಕೆ ಸರಿದು ಗೊಂದಲಕ್ಕೀಡಾದನು. +ನಗ್ನೋ ನಿಸ್ಸಂಗ ಶುದ್ಧ ಶ್ರೀಗುಣ ವಿರಹಿತೋ ಧ್ವಸ್ತ ಮೋಹಾಂದಕಾರೋ… ಅಂತ ಎನೇನೋ ಗೊಣಗಿ ಆವೇಶ ತಂದುಕೊಂಡು ಜೈ ಭಜರಂಗ ಬಲಿ ಅಂತ ವೇದಿಕೆಗೆ ನುಗ್ಗಿಬಿಟ್ಟ. ಆತನನ್ನು ಯಾವ ಕಾಮ್ರೇಡುಗಳಿಗೂ ತಡೆಯಲಾಗಲಿಲ್ಲ. +ಸನಾತನ ಹಿಂದೂ ಧರ್ಮ ಪುನರುತ್ಥಾನದ ಬಗ್ಗೆ ಕವಿತೆ ಓದ ಬಹುದೆಂದು ಅವನ ವೇಷ ಭೂಷಣಗಳಿಂದ ಅರ್ಥೈಸಿಕೊಂಡು ಕಾಮ್ರೇಡ್ ಜಗದ್ಗುರು ಓದಲಿ ಬಿಡಿ ಎಂದು ತಮ್ಮ ಮೂಗಿನಿಂದ ಸಂಜ್ಞೆ ಮಾಡಿದರು. +ಶಾಮು ಮೈಕ್‌ನೆದುರು ನಿಂತು ಗಂಟಲು ಸರಿ ಪಡಿಸಿಕೊಂಡ. ಒಮ್ಮೆ ಅನಸೂಯಳ ಕಡೆಗೆ ನೋಡಿದ, ಹಿಂದೆ ಕೂತಿದ್ದ ಒಬ್ಬ ಆಕೆಯ ಜಡೆಗೆ ಏನೋ ಕಟ್ಟುತ್ತಿರುವುದು ನೋಡಿದ. ಸಂಜ್ಞೆಗಳ +ಮೂಲಕ ಆ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ, ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಯೊಳಗೆ ಎಂಬಂತೆ ಗೊಬ್ಬರದಂಗಡಿ ಜಲಜಾಕ್ಷಿ ಸೈಡ್ ವಿಂಗಿನಿಂದ ಹೊರಬಂದು ನಿಂತಳು. ಮೀಸೆ ತಿರುವುತ್ತ ತೊಡೆತಟ್ಟುತ್ತ ಕವಿತೆಯ ಮೂಲ ಎಳೆ ಬಗ್ಗೆ ಸೂಚಿಸಿದಳು. +ಆ ಕಡೆ ಓದು ಎನ್ನುತ್ತಿರುವ ಅನಸುಯ ಈ ಕಡೆ ಓದಿದರೆ ಮುಂಜಿ ಮಾಡಿಸ್ತೀನಿ ಎಂದು ಸೂಚಿಸುತ್ತಿರುವ ಜಲಜಾಕ್ಷಿ ಎಂಬ ತಿಂಥಿಣಿ ದಳ ಸುಲೋಚನೆ… +ಏನಕೇನ ಪ್ರಕಾರೇಣ… ಓದಲೇಬೇಕೆಂದು ನಿರ್ಧರಿಸಿಬಿಟ್ಟ ಗಂಡುಗಲಿ. +ಹುಲುಲಿಹಳ್ಳದ ದಂಡೆ +ನೀರಬರುವುದ ಕಂಡೆ +…ಎಂದು ಓದಿದೊಡನೆ ಪ್ರೇಕ್ಷಕರು ಉಂಡೆ, ಕುಂಡೆ, ಸಂಡೆ, ಮಂಡೆ ಎಂಬಂಥ ಪ್ರಾಸ ರಸಭರಿತ ಶಬ್ದಗಳನ್ನು ಕೂಗಿದರು. ಜಲಜಾಕ್ಷಿ ಸೀಟಿ ಹೊಡೆದರೆ ಅನಸೂಯ ಹಣೆಹಣೆ ಚಚ್ಚಿಕೊಂಡಳು. ಜಗದ್ಗುರುಗಳು ಕೂಡ ನಗುತ್ತಾ ಸಾಕುಬಿಡಪ್ಪಾ ಎಂದರು. +ಸಾವಿಗೆ ಸಮಾನವಾದ ಇಂಥ ಅವಮಾನ ಅನುಭವಿಸುವುದಕ್ಕಿಂತ… +ಶಾಮುಗೆ ಏನು ತೋಚಿತೋ ಎನೋ… +ಸಾಮಗಾನ ಪ್ರಿಯೆ ಕಾಮ ಕೋಟಿ ನಿಲಯೇ +…ಎಂಬ ಮುತ್ತುಸ್ವಾಮಿ ದೀಕ್ಷಿತರ ಕೃತಿ ಸೊಗಸಾಗಿ ಹಾಡಿಬಿಟ್ಟನು. ಕೇಳಿದವರೆಲ್ಲ ಆನಂದ ಸಾಗರದಲ್ಲಿ ಈಜಾಡಿದರು. ಗೊಬ್ಬರದಂಗಡಿ ಟ್ರೇಡ್ಮಾರ್ಕ್ ಅಭಿನಂದಿಸುವ ನೆಪದಲ್ಲಿ ವೇದಿಕೆಗೆ ನುಗ್ಗಿ “ನಾಳೆ ಸೂರ್ಯಾಸ್ತದೊಳಗಾಗಿ ನಿನ್ನ ನಾನು ರೇಪ್ ಮಾಡ್ಲಿಲ್ಲ ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳೇ ಅಲ್ಲ” ಎಂದು ಪಿಸಿಪಿಸಿ ನುಡಿದಳು. ದಯವಿಟ್ಟು ನನ್ನ ಕೊಲೆ ಮಾಡಬೇಡ ಎಂಬಂತೆ ಆತ ಆಕೆಯ ಕಡೆ ನೋಡು ನೋಡುತ್ತಿದ್ದಂತೆ ಅಳು ಬಂದು ಬಿಟ್ಟಿತು. +ಸ್ವಾಮಿಗಳು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಂಕರಾಭರಣರಾಗದ ಬಗ್ಗೆ ಪ್ರಸ್ತಾಪಿಸಿದರು. ಇದರ ಕೃತಿಕಾರ ದೀಕ್ಷಿತರು ತಮ್ಮ ಮಠದಲ್ಲಿದ್ದ ಇತಿಹಾಸ ಬೆದಕಿದರು. ಹಾಗು ಹಾಡಿದ ಶಾಮನ ಬಗ್ಗೆ ಮೆಚ್ಚಿಗೆ ಸೂಚಿಸುತ್ತ ಈ ತರುಣ ಸಂಗೀತ ಕಲಿಯೋದಾದ್ರೆ ಎಲ್ಲ ಖರ್ಚನ್ನು ತಾವು ಭರಿಸುತ್ತೇವೆ ಈಂದು ಹೇಳಿದರು. ಭಾರಿ ಕರತಾಡನವಾಯಿತು. +“ಶಂಕರಾಭರಣದಲ್ಲಿ ಸ್ಟಾಲಿನ್ ಬಗ್ಗೆ ಹಾಡೋದಾದ್ರೆ ಮುಂದಿನ ಕವಿಗೋಷ್ಠಿಯಲ್ಲಿ ಅವಕಾಶ ಮಾಡಿಕೊಡ್ತಿನಿ” ಎಂತ ತನ್ನದೇ ಆದ ಶೈಲಿಯಲ್ಲಿ ಕ್ರಾಂತಿಕಾರ ಲೆಕ್ಚರರ್ ಅಭಿನಂದಿಸಿದ. ನಿನ್ನಂಥ ವಿಧ್ಯಾರ್ಥಿ ಪಡೆದಿರೋದಕ್ಕೆ ನಾವೆಲ್ಲ ತುಂಬ ಹೆಮ್ಮೆ ಪಡ್ತೀವಿ ಶಾಮಶಾಸ್ತ್ರಿ… ಈ ವರ್ಷ ಬಿ.ಎ. ಮುಗೀತದಲ್ಲ… ಮುಂದೇನ್ಮಾಡಬೇಕೆಂದಿರುವಿ… ಎಂದು ಪ್ರಿನ್ಸಿಪಾಲರು ಸಂತೋಷ ವ್ಯಕ್ತಪಡಿಸುತ್ತ ಮುಂದುವರಿದು ಹೇಳಿದರು. “ಅವಿವಾಹಿತ ಪ್ರತಿಭಾವಂತ ತರುಣರೆಂದರೆ ಸ್ವಾಮಿಗಳಿಗೆ ಇಷ್ಟ… ಹಾಗಂತ ಸಂಗೀತದ ಬಗ್ಗೆ ತಲೆ ಕೆಡಿಸಿ ಕೊಂಡಿಯೆ ಜೋಕೆ…” +ಆಫೀಸ್ ಕಡೆ ಹೊರಟಿದ್ದವರು ತಡೆದು ನಿಂತು ಶಾಸ್ತ್ರಿಯನ್ನು ಕರೆದರು. +“ಯಾವಾಗಲಾದ್ರು ಬಿಡುವುಸಿಕ್ಕಾಗ ಮನೆಕಡೆ ಬಂದು ಹೋಗು!” ಎಂದು ಹೇಳಿ ಹೋದರು. +ತನ ನಂತರ ಸಿಕ್ಕ ಅನಸೂಯಗೆ ಜಲಜಾಕ್ಷಿ ಮತ್ತಿ ಪ್ರಿನ್ಸಿಪಾಲರು ಅಭಿನಂದಿಸಿದ ಬಗೆಯನ್ನು ವಿವರಿಸಿದ. ಆಕೆಯ ಹೃದಯದ ಬಡಿತ ಹೆಚ್ಚಿತು. +“ಶಾಮೂ ಯಾಕೋ ಟೈಮು ಚೆನ್ನಾಗಿಲ್ಲ… ನನಗ್ಯಾಕೋ ಭಯ ಆಗ್ತಿದೆ… ಒಂದೆರಡು ದಿನ ಯಾರ ಕಣ್ಣಿಗೂ ಬೀಳದಂತೆ ಮನೇಲಿರು” ಆಕೆಯ ಮಾತು ಪೂರ್ಣಗೊಂದಲದಿಂದ ಕೂಡಿ ಇರಲಿಲ್ಲ. +ಗೊಬ್ಬರದಂಗಡಿ ಜಲಜಾಕ್ಷಿಗೆ ಗ್ಲೋಬಿನಂಥ ವಕ್ಷೋಜಗಳು ಇದ್ದಮಾತ್ರಕ್ಕೆ ಆಕೆ ಪೂರ್ಣ ಮಹಿಳೆ ಅಂತ ಹೇಳಲಿಕ್ಕಾಗದು. ದಿನಕ್ಕೆರಡು ಹೊತ್ತು ಬೀಫ್ ಲಗಾಯಿಸುವ ಆಕೆಯ ಹಿಂದೆ ನಾಕು ಮಂದಿ ಮುಂದೆ ಮೂರು ಮಂದಿ ಗಂಡಸರನ್ನು ಸದಾ ಇಟ್ಟುಕೊಂಡಿರುತ್ತಾಳೆ… ಆಕೆ ಪೋಲಿಸ್ ಸ್ತೇಷನ್ನೆದುರಿಗೆ ಶಾಮುನನ್ನು ಹಿಡಿದೆಳೆದೊಯ್ದು ರೇಪ್ ಮಾಡಿ ಬಿಡಲೂ ಬಹುದು. +ಇನ್ನು ಎರಡನೆಯದಾಗಿ ಪ್ರಿನ್ಚಿಪಾಲ ಶಿವರಾಮರಾಯರ ಧರ್ಮ ಪತ್ನಿ ರಾಜೇಶ್ವರಮ್ಮ ಎರಡಡಿಗೊಂದರಂತೆ ಹೆಣ್ಣು ಹೆತ್ತು ನೆಟ್ಟಿರುವಂಥವಳು… ಸೀರಿಯಲ್ ನಂಬರ್ ಮೂರು ಮತ್ತು ಆರು ಇವೆ, ನಾಲ್ಕನೆ ನಂಬರ್ ವುಮನ್ಸ್ ಕಾಲೇಜಿದುರಿಗೆ ತಳ್ಳೋ ಬಂಡಿಯಲ್ಲಿ ಶೇಂಗಾ ಮಾರುತ್ತಿದ್ದ ರಾಜಾಸಾಬನ ಹಿಂದೆ ಬಂಡಿ ಪುರಕ್ಕೆ ಓಡಿಹೋದಳಂತೆ… ಮೂರು ಮತ್ತು ನಾಲ್ಕು ನಂಬರಿಗಳಿಗೊಂದೊಂದು ಗಂಡು ಹುಡುಕಿ ಮೆಡಿಮಿಕ್ಸ್ ಹಚ್ಚಿ ತೊಳೆದುಕೊಂಡು ಪ್ರಿನ್ಸಿಪಾಲರು ಶ್ರೀಶೈಲದ ಕದಳೀವನ ಪ್ರವೇಶ ಮಾಡಿ ಸಲ್ಲೇಖನ ವ್ರತ ಮಾಡಿ ಪ್ರಾಣ ತ್ಯಾಗ ಮಾಡಬೇಕೆಂದು ನಿಸ್ಚಯಿಸಿರುವರಂತೆ… +ತಮ್ಮ ಪ್ರಾಣ ಪದಕ ಅನಸೂಯ ಹೇಳಿದ್ದರಲ್ಲಿ ನಿಜವಿಲ್ಲದಿರಬಹುದು ಆದರೆ ಸುಳ್ಳಿರಲಿಕ್ಕಿಲ್ಲ. ಇವೆರಡೂ ತನಗೆ ಭಯಾನಕ ಅಂಶಗಳೇ. ಆಕೆ ಹೇಳಿದಂತೆ ಕೋಣೆ ಪ್ರಸ್ತಾಶ್ರಮ ಪ್ರವೇಶಿಸಿದ. +“ನಾನು ನಿನಗೆ ಎಷ್ಟು ಸಾರಿ ಹೇಳಬೇಕೋ ದೀಕ್ಷಿತರ ಆ ಕೃತಿ ಹಾಡಕೂಡದಂತ…” ಶಾಸ್ತ್ರಿಗಳು ಖೇದದಿಂದ ನುಡಿದರು ಅವರು ದೂರನಿಂತು ಕೇಳುತ್ತಿದ್ದರು. ಪ್ರತಿ ಧ್ವನಿ ವಿಲಾಸಕ್ಕೆ ಕಣ್ಣು ತೇವ ಮಾಡಿಕೊಂಡಿದ್ದರು. ಯೌವನದ ನೆನಪುಗಳು ಒಮ್ಮೆಗೆ ಧಾಳಿ ಮಾಡಿ ಘಾಸಿಗೊಳಿಸಿಬಿಟ್ಟವು. +ಇಪ್ಪತ್ತೈದರ ಹರೆಯದ ನೆನಪುಗಳನ್ನು ಸಹಿಸುವ ಶಕ್ತಿ ಅವರ ತೊಂಬತ್ತೆರಡರ ವಯಸ್ಸಿನ ದೇಹಕ್ಕೆ ಹೇಗೆ ಸಾಧ್ಯ!? +ಆ ವಯಸ್ಸಿನಲ್ಲಿ ಆ ಚಟುವಟಿಕೆ ತಪ್ಪೋ ಸರಿಯೋ; ಅದೊಂದು ವಿಧಿ ನಿಯಮ – ಋಣಾನುಬಂಧೇ ರೂಪೇಣಾಂ… +ಕನ್ನಡಿಯಲ್ಲಿ ತಮ್ಮನ್ನು ಅಣಕಿಸುತ್ತಿರುವ ಪ್ರತಿಬಿಂಬ. ನಿಡಿದಾದ ಉಸಿರುಬಿಟ್ಟರು. +ಶಾಮಾಶಾಸ್ತ್ರಿಗೆ ನೋವಾಯಿತು. +“ನಿಮಗೆ ದುಃಖ ಆಗೋದಾದ್ರೆ… ನಾನು ದೀಕ್ಷಿತರ ಕೃತಿ ಹಾಡುವುದಿಲ್ಲ ತಾತ!” +ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡರು. +“ನಿನಗೆ ಸೊಗಸಾದ ಶಾರೀರವಿದೆ ಶಾಮೂ; ನೀನು ಹಾಡುತ್ತಲೇ ಇರಬೇಕು. ನನ್ನ ಎದೆಯಾಳದಲ್ಲಿ ಸತ್ತು ಹೋಗಿರುವ ನೆನಪುಗಳಿಗೆ ನೀನು ಜೀವ ತುಂಬಬೇಕು, ಆ ನೆನಪುಗಳ ಸಹಾಯದಿಂದ ನಾನಿನ್ನೂ ಬದುಕಬೇಕಿದೆ ಮಗೂ” +ಈ ನಡುವೆ ಕುಮಾರಿ ಅನಸೂಯಾ ಎಂಬ ಕನ್ಯಾಮಣಿಯ ಕುಟುಂಬಕ್ಕೆ ಸಂಬಂಧಿಸಿದಂತೆ ನಡೆದ ಕೆಲವು ದಾರುಣ ಘಟನೆಗಳು ಹೇಳುವುದು ಕೈಬಿಟ್ಟಿದ್ದೆ. ಶ್ರೇಣೀಕೃತ ಸಮಾಜದಲ್ಲಿ ಹುಟ್ಟಿ ಬೆಳೆದಿರುವ ಯಾವ ವರ್ಗದ ಪರವಾಗಿ ತಾತ್ವಿಕ ನಿಲ್ಲುವುದು ಎಂಬ ಕನ್‌ಫ್ಯೂಷನ್‌ನಲ್ಲಿದ್ದೆ ಮತ್ತು ಈಗಲೂ ಇರುವೆ. ಬದುಕುವ ಕ್ರಮ ಯಾರಿಗೆ ಸುಲಭ ಮತ್ತು ಯರಿಗೆ ಕಷ್ಟ ಎಂಬುವುದು ಲೇಖಕನಾಗಿ ಅರ್ಥಮಾಡಿಕೊಳ್ಳುವುದು ನನ್ನ ಜವಾಬ್ದಾರಿ, ನೀಚಸ್ಥಾನದಲ್ಲಿರುವ ಮನುಷ್ಯನ ಬಗ್ಗೆ ತೀರ ಎತ್ತರದ ದ್ವನಿಯಲ್ಲಿ ಮಾತಾಡುತ್ತಿದ್ದ ನಾನು ಪರಮೇಶ್ವರ ಶಾಸ್ತ್ರಿಗಳ ಪರವಾಗಿ ನಿಂತು ವಕಾಲತ್ತು ವಹಿಸಿರುವೆನೆಂದು ಗೊತ್ತು. ಬುದ್ಧಿ ಪೂರ್ವಕವಾಗಿಯೇ ಈ ಕೆಲಸ ಮಾಡಿರುವೆ ಮತ್ತು ಮಾಡುತ್ತಿರುವೆ ಸನಾತನೆಗೆ ಶಾಕ್ ಕೊಡದ ಹೊರತು ಶೂದ್ರ ವರ್ಗದೊಳಗಿನ ಸ್ಪಂದನಗಳು, ಜೀವನೋತ್ಸಾಹಗಳು ಫಳಫಳ ಹೊಳೆಯಲಾರವು. +ರುದ್ರನಾಯಕನಂಥ ಶೂದ್ರನಿಗೆ ಶಿಷ್ಟವರ್ಣಿಯ ನಂಬಿಕೆಗಳು: ದೇವರು ದಿಂಡರುಗಳು ಬೆಲೆ ಕೊಡೋದಿಲ್ಲ ಅವನ ಹತ್ತಿರವೂ ಸುಳಿಯುವುದಿಲ್ಲ: ರುದ್ರನಾಯಕನಿಗೆ ಬೇಕಾಗಿದ್ದುದು ಕಂಚಿಕಾಮಕೋಟಿ ಶ್ರೀಗಳಲ್ಲ ಮೈಗೆಲ್ಲ ಬೂದಿಬಳಕೊಂಡು ಸುಡುಗಾಡಲ್ಲಿ ವಾಸಮಾಡೋ ಸಾಧುಗಳು, ಅವಧೂತರು. ಮಾಟ ಮಂತ್ರ ಮಾಡಬೇಕು, ಉಳ್ಳವರನ್ನು ಮರಳು ಮಾಡಬೇಕು. ಹೀಗೆ ಮಾಡಿ ಮಾಡಿ ತಾನು ಉಳ್ಳವನಾಗಬೇಕು, ತಾನೂ ಚುಕ್ ಚುಕ್ ಮೋಟಾರು ಗಾಡಿಯಲ್ಲಿ ತಿರುಗಾಡಬೇಕು, ಹೆಂಡತಿ ರುಕ್ಮಿಣಿ ತನ್ನ ಕೈಹಿಡಿದು ಪಡಬಾರದ ಕಷ್ಟ ಪಟ್ಟು ತನ್ನ ಏಳ್ಗೆಗಾಗಿ ಸವೆದ ಶ್ರೀಗಂಧದ ಕೊರಡು, ಆಕೆಯ ಜೀವನವನ್ನು ಸುಖದ ಸುಪ್ಪತ್ತಿಗೆ ಮೇಲಿಟ್ಟು ಮೆರಸಬೇಕು. ಏಕಮಾತ್ರ ಪುತ್ರಿ ಅನಸೂಯ ತುಂಬ ಜಾಣೆ, ಚುರುಕು. ತಮಗೆ ಒಂದಿಷ್ಟು ಕಡಿಮೆ ಮಾಡಿಕೊಂಡು ಶಕ್ತಿ ಮೀರಿ ಓದಿಸಿದ್ದಾಯಿತು. ಸರಕಾರಿ ಸಂಬಳ ತಿಂಬೋ ವರನನ್ನು ಹುಡುಕಿ ಮದುವೆ ಮಾಡಬೇಕು, ವರದಕ್ಷಿಣೆ ಎಷ್ಟಾದರೂ ಸರಿಯೇ. ಮಗಳು ಸುಖವಾಗಿರಬೇಕು. ತಾನು ಗಳಿಸಿರುವ ಆಸ್ತಿಯಾದರೂ ಏನು? ಹಾಳಾದ ಭೂತಗಳು ಬಾಟಿಲಿಯಿಂದ ತಪ್ಪಿಸಿಕೊಳ್ಳದಿದ್ದರೆ ಚೆನ್ನಾಗಿತ್ತು. ಅವುಗಳನ್ನು ಹುಣಸೆ ಮರದ ಕೊಂಬೆಗೆ ಬಂಧಿಸಿಟ್ಟು, ಅವುಗಳಿಂದ ಎಲ್ಲೋ ಕೆಲಸ ಮಾಡಿಸಬಹುದಿತ್ತು. ಹಾಳಾದ ಶಾಸ್ತ್ರಿ ತನ್ನ ದುಡಿಮೆಗೆ ಕಲ್ಲು ಹಾಕಿರುವನಲ್ಲ! ಅಗ್ರಹಾರದಲ್ಲಿರುವವರು ಶೂದ್ರಕೇರಿಗೆ ಬಂದುಬಿಟ್ಟರೆ ಹೀಗೇ ಆಗುವುದು, ಮದ್ಯ ಅಮೇಧ್ಯದಿಂದ ಜಾತಿ ಬ್ರಷ್ಟನಾಗಿದ್ದ ಅಶ್ವತ್ಥಗೆ ತಾನೇ ಅಲ್ಲವೆ ಪ್ರಸಾದನನ್ನು ಪರಿಚಯಿಸಿದ್ದು, ಏನೋ ಪಾಪ ಸನಾತನ ತಂದೆಯನ್ನು ದೂರ ಮಾಡಿಕೊಂಡು ಬಂದಿದ್ದಾನಂತ, ಸತಿಸಾವಿತ್ರಿಯಂಥ ಹೆಂಡತಿಯನ್ನು; ಲೋಹಿತಾಶ್ವನಂಥ ಮಗನನ್ನು ಕಟ್ಟಿಕೊಂಡು ಅದೆಷ್ಟು ಒದ್ದಾಡುತ್ತಿದ್ದ. ಮಗನ ಮೇಲೆ ಕಕ್ಕುಲಾತಿಯಿಂದ ಶಾಸ್ತ್ರಿ ಅಗ್ರಹಾರವನ್ನು ತೊರೆದು ಬಿಡುವುದೇನು! ಕರುಳು ಎಲ್ಲಾ ಶಾಸ್ರ ಸಂಹಿತೆ, ಧರ್ಮ ಜಾತಿ ಮೀರಿ ಬೆಳೆಯುತ್ತದೆ., ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ., ಶಾಸ್ತ್ರಿ ಇಡೀ ಊರಿಗೆ ಅದ್ಯಾವ ಗಾಳಿ ಹಾಕಿರುವನೋ? ಗ್ರಹ, ನಕ್ಷತ್ರಗಳಿಗೆಲ್ಲ ತಾನೇ ವರಸುದಾರನೆಂಬಂತೆ ವರ್ತಿಸುತ್ತಿದ್ದಾನೆ. ಇಷ್ಟು ವಯಸ್ಸಾದರೂ ಹೇಗಿದ್ದಾನಲ್ಲ? ಹಲ್ಲು ಉದುರಿಲ್ಲ, ಜುಟ್ಟು ಮಾಸಿಲ್ಲ, ಬೆನ್ನೆಲುಬು ಬಾಗಿಲ್ಲ. ಮೈಖಂಡಗಳು ಎಲ್ಲೆಲ್ಲಿ ಎಷ್ಟೆಷ್ಟಿರಬೇಕೋ ಅಷ್ಟಷ್ಟೇ ಇವೆ, ಕಣ್ಣುಗಳು ಮಂಕಾಗಿಲ್ಲ. +ದೆವ್ವ ಪಿಶಾಚಿಗಳನ್ನು ವಾಕಿಂಗ್ ಹೋಗುವುದನ್ನು ವಾಕಿಂಗಿಗೆ; ಹನಿಮೂನಿಗೆ ಹೋಗುವುದನ್ನು ಹನಿಮೂನಿಗೆ ಕಳಿಸಿ ಬಿಡುವು ದೊರತಾಗಲೆಲ್ಲ ತನ್ನ ಅರ್ಥಿಕ ಸ್ಥಿತಿಗೆ ಶಾಸ್ತ್ರಿಯೇ +ಕಾರಣವೆಂದು ಅಶಾಸ್ತ್ರೀಯವಾಗಿ ಯೋಚಿಸಿದ್ದ ರುದ್ರನಾಯಕನಿಗೆ ಅಲುಮೇಲಮ್ಮನ ಮೇಲೆ ಅಪಾರಗೌರವ ಇತ್ತು. ಅದು ಹೇಳಿ ಕೇಳಿ ಮುಠ್ಠಾಳರು ವಾಸಿಸುತ್ತಿದ್ದ ಓಣಿ… ಎಲ್ಲರೂ ಸಜ್ಜನರೆಂದು ಹೇಳಳಿಕ್ಕಾಗದು, ಕೆಲವರು ಕುಡಿದ ಅಮಲಿನಲ್ಲಿ ಅಲುಮೇಲಮ್ಮನನ್ನು ಚುಡಾಯಿಸಿದ್ದಿದುಂಟು., ಕೆಲವರು ಎಳೆದಳಿರ ಮೃದುತಲ್ಪಕ್ಕೆ ಕಣ್ಸನ್ನೆಯಿಂದ ಆಮಂತ್ರಿಸುದ್ದಿದುಂಟು. ಅಂಥವರ ಪೈಕಿ ಕೆಲವರನ್ನು ಪತ್ತೆ ಮಾಡಿ ರುದ್ರನಾಯಕ ಮಗ್ಗುಲು ಮುರಿದು ಬುದ್ಧಿ ಕಲಿಸಿದ್ದ. ಒಂದಿಬ್ಬರಿಗೆ ಆತ ಮಾಟ ಮಾಡಿದನೋ! ಮಂತ್ರ ಹಾಕಿದನೋ! ಒಟ್ಟಿನಲ್ಲಿ ಅವರು ಹೆಳವರಾಗಿ ಬಸ್‌ನಿಲ್ದಾಣವನ್ನು ತಮ್ಮ ಖಾಯಂ ನಿವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವರು. ಆದ್ದರಿಂದ ಅಲುಮೇಲಮ್ಮ ಇರೊ ಮನೆ ಕಡೆ ಯಾರೊಬ್ಬರೂ ಕೆಟ್ಟಕಣ್ಣಿನಿಂದ ನೋಡುವ ಸಾಹಸ ಮಾಡುವುದಿಲ್ಲ. ಅವರ ಮಗ ಶಾಮನಿಗೆ ಕೂಡ ರುದ್ರನಾಯಕ ಅಪ್ರತ್ಯಕ್ಷವಾಗಿ ನೆರವು ನೀಡಿರುವುದುಂಟು. ಇಲ್ಲದಿದ್ದರೆ ಗೊಬ್ಬರದಂಗಡಿಯ ಜಲಜಾಕ್ಷಿಯ ಗರಡಿ ಮನೆಯ ಪಡ್ಡೆಗಳು ಅಟಕಾಯಿಸಿ ತೊಂದರೆ ಮಾಡುತ್ತಿದ್ದರು. ಆದರೆ “ನಾನೇ ಮಾಡ್ದೆ” ಎಂದು ರುದ್ರನಾಯಕ ದನಿ ಎತ್ತರಿಸಿ ಹೇಳುವ ಜಾಯಿಮಾನದವನಲ್ಲ. +ಆತ ಮೇಲ್ನೋಟಕ್ಕೆ ಭಯಾನಕವೆಂಬಂತೆ ಇದ್ದರೂ ಒಳಗಡೆ ಎಲ್ಲೋ ಒಂದು ಕಡೆ ಮಗುವಿನ ಮನಸ್ಸು ಇತ್ತು. ಅದು ಅವನನ್ನು ಮನುಷ್ಯನನ್ನಾಗಿ ಮಾಡಿತ್ತು. ಸ್ವಭಾವತಃ ಒಳ್ಳೆಯ ಮನಸ್ಸಿನವನಾದ ಆತ ಅದನ್ನು ಸಹಜವಾಗಿ ಎಲ್ಲೂ ಪ್ರಕಟಿಸುತ್ತಿರಲಿಲ್ಲ. ಮೇಲೆ ಮೇಲೆ ತನಗೆ ಎಲ್ಲರೂ ಹೆದರಬೇಕೆಂದು ಬಯಸುತ್ತಿದ್ದ. ಯಾರಲ್ಲೂ ಇಲ್ಲದ ಅತೀಂದ್ರಿಯ ಶಕ್ತಿ ತನಗಿರುವುದೆಂದು ತಿಳಿದುಕೊಡಿದ್ದ. ದೆಹಲಿಯ ಭಂಭೂಂ ಸಾಧುಗೆ ಅವರಿಂದ ಪತ್ರ ಬರೆಸುತ್ತಲೇ ಇದ್ದ. ಪ್ರಧಾನ ಮಂತ್ರಿಗೆ ಪ್ರಿಯವಾಗಿರುವ ಆತನಿಂದ ಒಂದಾದರೂ ಪತ್ರ ಬರಬಹುದೆಂದು ಕಾಯುತ್ತಿದ್ದ. ಆ ಅಂಥ ಪತ್ರವೇನಾದರೂ ಬಂದರೆ ಅದನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೆಂದು ಯೋಚಿಸಿದ. +ಆತ ಬರೆಯುತ್ತಿದ್ದುದು ಅನೇಕರಿಗೆ ಗೊತ್ತು. +“ಏನ್ರೀ ರುದ್ರನಾಯಕರೇ ದೆಹಲಿಯಿಂದ ಪತ್ರ ಬಂತೋ?’ ಎಂದು ವ್ಯಂಗ ಮಿಶ್ರಿತ ಧ್ವನಿ ಆಲಾಪಿಸುತ್ತಿದ್ದ ಹಿತೈಷಿಗಳಿಗೆ ಕೊರತೆ ಇರಲಿಲ್ಲ. +ಅವನೇನಾದರೂ ಸ್ವಲ್ಪ ಸಂತೋಷದಲ್ಲಿದ್ದನೆಂದರೆ – +“ಏನ್ರಿ ಸ್ವಾಮಿ, ಭಂಭೂಂ ಸಾಧು ಮಹಾರಾಜರಿಂದ ಸಂದೇಶ ಬಂದಂತಿದೆ” ಎಂದು ತಮ್ಮಷ್ಟಕ್ಕೆ ತಾವೇ ನಗೆಯಾಡುತ್ತಿದ್ದರು. +ಪ್ರತಿದಿನ ಇಂಥಾ ಒಂದಲ್ಲಾ ಒಂದು ಪ್ರಶ್ನೆಗಳನ್ನು ಆತ ನಿಭಾಯಿಸಬೇಕಾಗಿತ್ತು. ಈ ಇಂಥ ನಿಭಾಯಿಸುವಿಕೆಯಿಂದಾಗಿ ರಸ ವಿದ್ಯೆಯೂ ಅವನಿಗೆ ಕೈಕೊಟ್ಟಿತ್ತು. ಆ ಪಟ್ಟಣದಲ್ಲಿ ಆತನ ಬಗ್ಗೆ ಅನೇಕರು ಗುಸುಗುಸು ಮಾತಾಡುತ್ತಿದ್ದರು. ಯಾರಿಗಾದರೂ ಕಾಲಿನಲ್ಲಿ ಸೆಳವುಕಾಣಿಸಿಕೊಂಡು ಅದು ಬಿದ್ದು ಹೋಯಿತೆಂದಿಟ್ಟುಕೊಳ್ಳಿ. ಹಾಗೆ ಕಾಲು ಕಳೆದುಕೊಂಡವರು ರುದ್ರನಾಯಕನು ಮಾಡಿರಬಹುದಾದ ಮಾಟವೇ ಕಾರಣವಿರಬಹುದೆಂದು ಮಾತಾಡಿಬಿಡಲಾರಂಭಿಸುವರು. ಇನ್ನೊಬ್ಬ ತನ್ನ ಹೆಂಡತಿಯ ಗರ್ಭಪಾತಕ್ಕೆ ಕಾರಣ ಹುಡುಕಲು ಸೀದ ಮಾಳಿಗೆ ಮೇಲೆ ಹೋಗುವನು. ಅಲ್ಲಿ ಅವನಿಗೆ ಬಾಡಿದ ಲಿಂಬೆ ಹಣ್ಣು ಸಿಗುವುದು; ಅದನ್ನು ರುದ್ರನಾಯಕನೇ ತನ್ನ ಕಡೆಯವರಿಂದ ಎಸೆಸಿರಬಹುದೆಂದು ಮಾತಾಡಿಕೊಳ್ಳುವನು. ಇನ್ನೊಬ್ಬನ +ದೈತ್ಯಗಾತ್ರದ ಹಸು ಇದ್ದಕ್ಕಿದ್ದಂತೆ ಸತ್ತುಹೋದುದಕ್ಕೂ ಕಾರಣ ರುದ್ರನಾಯಕನೇ; ಮತ್ತೊನ್ನನ ಮಗಳು ಪ್ರೇಮ ಪ್ರಕರಣಕ್ಕೆ ಸಿಲುಕಿ ನಿಮ್ನ ಜಾತಿಯವನೊಂದಿಗೆ ಓಡಿಹೋದದ್ದಕ್ಕೂ ಕಾರಣ ರುದ್ರನಾಯಕನೇ, ಹೀಗೆ ಎಲ್ಲಾ ಅನಾಹುತಗಳಿಗೂ ಕಾರಣ ರುದ್ರನಾಯಕನೇ ಇರಬಹುದೆಂದು ಪಟ್ಟಣದ ಸಭ್ಯ ನಾಗರೀಕರು ಗುಸುಗುಸು ಮಾತಾಡಿಕೊಳ್ಳರಾರಂಭಿಸಿದರು. ಆದರೆ ಅವರಾರಿಗೂ ಅವನ ಕೊರಳಪಟ್ಟಿ ಹಿಡಿದು ಕೇಳುವ ಧೈರ್ಯವಂತೂ ಇರಲಿಲ್ಲ. ಕೆಲವರು ಕೇಳಿಯೇ ಬಿಡುವುದೆಂದೇನೋ ಮೀಸೆ ಮೇಲೇರಿಸಿಕೊಂಡು ಹೋಗೇನೋ ಹೋಗುತ್ತಿದ್ದರು. ಆದರೆ ನಾಯಕನ ಗಿರಿಜಾ ಮೀಸೆ , ಪೊದೆ ಹುಬ್ಬು, ಗುಳಾಪು ಕಣ್ಣು ನೋಡಿದೊಡನೆ ಧೋತರ ತಣ್ಣಿಗೆ ಮಾಡಿಕೊಂಡು ಮರಳಿ ಬಿಡುತ್ತಿದ್ದರು. ಅದರ ಪೈಕಿ ಒಂದಿಬ್ಬರು ರುದ್ರನಾಯಕನು ತನ್ನ ಕಣ್ನೋಟ ಮಾತ್ರದಿಂದ ತಮ್ಮ ಪುರುಷತ್ವ ನಾಶ ಮಾಡಿದನೆಂದು ತಂತಮ್ಮ ಹೆಂಡಂದಿರೆದುರುಲಬೋ ಲಬೋ ಬಾಯಿ ಬಡಿದುಕೊಂಡಿದ್ದು ಹೇಗೋ ಪಟ್ಟಣದ ತುಂಬ ದೊಡ್ಡ ಗುಲ್ಲಾಗಿಬಿಟ್ಟಿತು. ಚರಾಸ್ತಿನೂ ಕಳಕೊಂಡಾರು; ಸ್ಥಿರಾಸ್ತಿನೂ ಕಳಕೊಂಡಾರು; ಆದರೆ ಪುರುಷತ್ವವನ್ನು ಕಳಕೊಂಡು ಬದುಕಲು ಯಾರು ತಾನೆ ಸಿದ್ದ? +ಪಟ್ಟಣದಲ್ಲಿ ನಡೆಯುವ ಕಳ್ಳ ಸಾಗಾಣಿಕೆದಾರರ ಗುಂಪಿಗೂ; ರುದ್ರ ನಾಯಕನಿಗೂ ರಹಸ್ಯ ಒಪ್ಪಂದ ಏರ್ಪಟ್ಟಿದೆ ಎಂಬ ಸುದ್ದಿ ಕಿಯಿಯಿಂದ ಕಿವಿಗೆ ಹರಡಿತು. ಪೋಲೀಸ್ ಮೇಲಾಧಿಕಾರಿಗಳೂ ಈ ಕುರಿತು ತನಿಖೆ ನಡೆಸಿ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಠಾಣೆಗೆ ರಹಸ್ಯ ಸಂದೇಶ ಕಳುಹಿಸಿದರು. ಸ್ಥಳೀಯ ಠಾಣೆಯ ಇನ್ಸ್ಪೆಕ್ಟರ್ ದಮ್ಮಡಿ ಈರಪ್ಪ ಮಹಾನಾಸ್ತಿಕ ವಾದಿ, ದೇವರು ದಿಂಡರುಗಳೆಲ್ಲ ತನ್ನ ಹಾಸಿಗೆ ಕೆಳಗೆ ಎಂಬಂತೆ; ದೆವ್ವ ಪಿಶಾಚಿಗಳೆಲ್ಲ ತಲೆದಿಂಬಿನೊಳಗೆ ಎಂಬಂತೆ ಮಾತಾಡುತ್ತಿದ್ದ, ದಡಿಯನಾಗಿದ್ದ. ತಮ್ಮ ಪೋಲೀಸ್ ಇಲಾಖೆಯ ಮಹಾನಾಸ್ತಿ ಈಕಮೇವ ಮಹಾನಾಸ್ತಿಕನೆಂದರೆ ಕೊಟ್ಟೂರು ಪಟ್ಟಣದ ಠಾಣೆಯ ದಮ್ಮಡಿ ಈರಪ್ಪ ಮಾತ್ರನೆಂದು ರಾಜಧಾನಿಯ ಐಜಿಪಿ, ಡಿ‌ಐಜಿ ಕೇಡರಿನ ಅಧಿಕಾರಿಗಳೇ ಮಾತಾಡಿಕೊಳ್ಳುತ್ತಿದ್ದರು. ಅಂಥವರೇ ರುದ್ರನಾಯಕನಂಥ ವಾಮಾಚಾರಿಯನ್ನು ವಿಚಾರಿಸಿಕೋ ಎಂದು ಗ್ರೀನ್ ಸಿಗ್ನಲ್ ತೋರಿಸಿದರೆಂದರೆ ಏನಾಗಬೇಡ? ಹೇಗ್ಹಾಡಬೇಡ? +ಎಲೈ ಮಾನ್ನವಾ… ನಿನ್ನ ದೇಹದ ಸಮಸ್ತ ರೋಮಗಳನ್ನು ಬೋಳಿಸಿ ನಿನ್ನ ಹೊಟ್ಟೆಗೆ ಕಳಿಸದಿದ್ದರೆ ನಾನು ಕ್ಯಾಪ್ಟನ್ ದಮ್ಮಡಿ ಈರಪ್ಪನೇ ಅಲ್ಲ.ವೆಂದು ತಿಳಿಯಲೈಸಾರಥಿ ಅತಿಜಾಗ್ರತಿ” ಮಿಲಿಟರಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಕ್ಷಿಪ್ರ ವೇಗದಲ್ಲಿ ಕ್ಯಾಪ್ಟನ್ ಪದವಿ ಅಲಂಕರಿಸಿ; ಅಷ್ಟೇ ಕ್ಷಿಪ್ರವೇಗದಲ್ಲಿ ನಿವೃತ್ತಿ ಪಡೆದು ಅಷ್ಟೇ ಕ್ಷಿಪ್ರ ವೇಗದಲ್ಲಿ ಸಬ್‌ಇನ್ಸ್ಪೆಕ್ತರನೆಂಬ ರಾಜ್ಯ ಸರಕಾರಿ ನವುಕರಿ ಪಡೆದದ್ದೂ ಒಂದು ಇತಿಹಾಸವೇ! +ಭಾರತಿಯ ಕಾಲಮಾನದ ಪ್ರಕಾರ ಯಾರಾದಾರೂ ಹಂತಹಂತವಾಗಿ ಮೇಲೇರಿದಂತೆ ಅಪ್ಪಟ ಆಸ್ತಿಕರಾಗಿ ದೈವಭಕ್ತರಾಗಿ ಪರಿವರ್ತನೆಗೊಳ್ಳುವುದು ಸಾಮಾನ್ಯ; ಆದರೆ ಈ ಮಿಲಿಟರಿ ರಿಟರ್ನ್ಡ್‌ದು ತದ್ವಿರುದ್ಧ. +ಅವನನ್ನು ಎಳೆದುತರುವಂತೆ ಪ್ಯಾದೆಗಳಿಗೆ ಆಜ್ಞಾಪಿಸಿದ. ಅವು ’ನಾವು ಹೋಗೋದಿಲ್ಲ ನಮಗೆ ಡ್ಯೂಟಿಗಿಂತ ಪುರುಷತ್ವ ಮುಖ್ಯ’ ಎಂದುಬಿಡುವುದೇ. +ದಮ್ಮಡಿ ಈರಪ್ಪನೇ ರಿವಲ್ವಾರನ್ನು ಲೋಡು ಮಾಡಿಕೊಂಡು ಹೊರಟು ಬಿಟ್ಟ. +“ಬೇಡಿ ಸಾರ್ ದಯವಿಟ್ಟು ಬೇಡ… ನಿಮ್ಗಿನ್ನೂ ಮಕ್ಕಳಗಿಲ್ಲ… ಮರಿ ಆಗಿಲ್ಲ… ವಂಶೋದ್ಧಾರ +ಆಗೋದು ಬೇಡವೇ” ಎಂದು ಪ್ಯಾದೆಗಳು ಪರಿಪರಿಯಿಂದ ಕೇಳಿಕೊಂಡವು. +’ವಂಶ ಸೈ… ಸೊಂಟ ಸೈ… ಎಂದವನೆ ದಪ್ ದಪ್ ಹೆಜ್ಜೆ ಹಾಕುತ್ತ… ಇಕ್ಕೆಲದ ಮನೆಗಳನ್ನು ಗಡ ಗಡ ನಡುಗಿಸುತ್ತ ಹುಣಸೆ ಮರದ ತಣ್ಣೆಳನಲ್ಲಿದ್ದ ಆ ಮನೆ ಮುಂದು ನಿಂತು “ಎಲವೋ” ಎಂದು ಗರ್ಜಿಸಿದ. +ದೇವಿ ಉಪಾಸನೆಯಲ್ಲಿದ್ದ ನಾಯಕ. ತಾನೇ ಒಳಗಡೆ ಹೋದ, ರುಕ್ಮಿಣಿ ಮಾಂಗಲ್ಯವನ್ನು ಕಣ್ಣಿಗೆ ಒತ್ತಿಕೊಂಡಳು. ಏಕಮಾತ್ರ ಪುತ್ರಿ ಅನಸೂಯಾ ತನ್ನ ಪ್ರಿಯಕರ ಶಾಮಾಶಾಸ್ತ್ರಿಯನ್ನು ಸಂಧಿಸಿ ತಮ್ಮ ಪ್ರಣಯಕ್ಕೆ ವಿವಾಹ ರೂಪ; ಪೂರ್ವವಿಧಿಗಳ ಕುರಿತು ಚರ್ಚಿಸಲು ಕಡಲೇರ ತೋಪಿಗೆ ಹೋಗಿದ್ದಳು. +ಹೊರಗಡೆ ಅಂಗಳದಲ್ಲಿ ಓಣಿಯ ಕೆಲವು ಗಣ್ಯರು ನೆರೆದು ಉಸಿರು ಬಿಗಿಹಿಡಿದು ನಿಂತಿದ್ದರು. +ಒಂದು ಗಂಟೆ ಕಳೆಯಿತು, ಕಳೆದವು ಎರಡು ಗಂಟೆ, ರುದ್ರನ್ ನಾಯಕ ಮತ್ತು ಕ್ಯಾಪ್ಟನ್ ದಮ್ಮಡಿ ಈರಪ್ಪ ಪರಸ್ಪರ ಹೆಗಲಮೇಲೆ ಕೈಹಾಕಿಕೊಂಡು ಹೊರಬಂದು ಎಲ್ಲರನ್ನು ಆಶ್ಚರ್ಯದ ಕಡಲಲಿನಲ್ಲಿ ನೂಕಿದರು. +ಆಕ್ಷಣದಿಂದ ದಮ್ಮಡಿ ಈರಪ್ಪನಲ್ಲಿ ಅನೇಕ ಬದಲಾವಣೆಗಳಾದವು. ಆತನು ಅಪ್ಪಟ ದೈವಭಕ್ತನಾದ ಬಗ್ಗೆ; ಹೆಂಡತಿಯನ್ನು ತೊರೆದುದರ ಬಗ್ಗೆ; ಕಾಷಾಯಂಬರ ಧರಿಸಿದುದರ ಬಗ್ಗೆ; ವಾಯವ್ಯ ದಿಕ್ಕಿನ ಕಡೆ ಹೆಜ್ಜೆ ಹಾಕುತ್ತ ನಡೆದೂ ನಡೆದು ಕಣ್ಮರೆಯಾದುದರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. +ಇದೊಂದು ಕೊಟ್ಟೂರು ಪಟ್ಟಣದ ಇತಿಹಾಸದಲ್ಲಿ ನಡೆದ ಕಂಡರಿಯದ; ಕೇಳದ ಅದ್ಭುತ ಪವಾಡವೇ ಸರಿ ಎಂದು ಜನ ಮಾತಾಡಿಕೊಂಡರು. +ಒಂದು ದಿನ ಬೆಳೆಗ್ಗೆ ರುದ್ರನಾಯಕ ಅದ್ಭುತವಾದ ಡ್ರೆಸ್ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದ. ತಮ್ಮ ಗುರು ಭಂ ಭೂಂ ಸಾಧು ಕನಸಿನಲ್ಲಿ ಕಾಣಿಸಿಕೊಂಡು ದೆಹಲಿಯ ಕಡೆ ಪಯಣಿಸುವಂತೆ ಅಪ್ಪಣೆ ನೀಡಿದನೆಂದು ಹೇಳಿಕೊಂಡ. +ಮಾಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಮತ್ತು ಅನುರೂಪನಾದ ವರ ನೋಡಿ ಮದುವೆ ಮಾಡಿ ಬಿಡುವಂತೆ ಮತ್ತೆ ತಾನು ಮೂರು ತಿಂಗಳೊಳಗೆ ವಾಪಸ್ಸು ಬಾರದಿದ್ದಲ್ಲಿ ತವರು ಮನೆಗೆ ಹೋಗಿ ಆಶ್ರಯಪಡೆಯುವಂತೆ ಮತ್ತು ಸಂಬಂಧದ ಬಗ್ಗೆ ಹೆಚ್ಚಿಗೆ ಕುರಿತು ರೋಧಿಸದಿರುವಂತೆ ಹೇಳಿದ. +ಅಷ್ಟೇನೂ ದೊಡ್ಡದಲ್ಲದ ಒಂದು ಗಂಟಿನೊಡನೆ ರೇಲ್ವೇ ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಆತ ಏರಿದ ರೈಲು ಚಕ್‌ಬುಷ್ ಶಬ್ದ ಮಾಡುತ್ತ ಕಣ್ಮರೆಯಾಗುವ ತನಕ ತಾವು ನೋಡಿದ್ದಾಗಿ ಕೆಲವರು ಮಾತಾಡಿದರು. +ಪಟ್ಟಣದ ಬಹುಪಾಲು ನಾಗರೀಕರು ಸಮಾಧಾನದ ನಿಟ್ಟುಸಿರು ಬಿಟ್ಟರು ಎಂದ ಮಾತ್ರಕ್ಕೆ ರುಕ್ಮಿಣಿ ಅಂಡ್ ಕಂಪನಿ ಸಮಾಧಾನದಿಂದಿದ್ದರು ಎಂದು ಹೇಳುವಂತಿರಲಿಲ್ಲ. +ಪುರುಷ ಪ್ರಧಾನ ಸಮಾಜದಲ್ಲಿ ವಯಸ್ಸಿಗೆ ಬಂದಿರುವ ಮಗಳನ್ನು ಕಟ್ಟಿಕೊಂಡು ಏಗುವುದೆಂದರೆ ತಮಾಷೆಯ ಮಾತೇನು? ಸಮಾಜದ ಗೌರವ ಕಾಪಾಡಲಿಕ್ಕಾಗಿಯೇ ಗಳಿಗೆಗೊಂದು ಕಂಟಕಗಳು ಎದುರಾಗ ತೊಡಗಿದವು. +ಕಷ್ಟಗಳು ಮನುಷ್ಯಗೆ ಬರದೆ ಮರಕ್ಕೆ ಬರುವುದೇನಮ್ಮಾ ಎಂದೆನ್ನುತ್ತಿದ್ದವರೆಷ್ಟೋ? ಸ್ವಲ್ಪ +ಬದುಕುವ ಧೈರ್ಯ ಪ್ರಕಟಿಸಿದ್ದರೆ ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ ಎಂಬಂಥ ಗಾದೆ ಮಾತುಗಳನ್ನು ಜ್ಞಾಪಿಸುತ್ತಿದ್ದವರೆಷ್ಟೋ? ಮೂರು ತಿಂಗಳು ಅಂತ ಹೇಳಿದ್ದಾನಲ್ಲ… ಮೂರು ತಿಂಗಳು ನೋಡು ನಂತರ ನಿನ್ನ ದಾರಿ ನೀನು ನೋಡಿಕೋ ಎಂದು ಹೇಳುತ್ತಿದ್ದವರೆಷ್ಟೋ? ಆಕೆ ಕುಂತರೊಂದು ತಪ್ಪು ನಿಂತರೊಂದು ತಪ್ಪು ಕಂಡು ಹಿಡಿಯುತ್ತಿದ್ದವರೆಷ್ಟೋ? ಆಕೆಯ ಕಿವಿಗೆ ಬೀಳುವಂತೆ ಮಾತಿನಿಂದ ಕುಟುಕೀ ಕುಟುಕೀ ತಾವೂ ವೃಶ್ಚಿಕ ರಾಶಿಗೆ ಸೇರಿದವರೆಂದು ಸಾಬೀತು ಮಾಡುತ್ತಿದ್ದವರೆಷ್ಟೊ? +ರುಕ್ಮಿಣಿ ನಿಮ್ನ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ಸೂಕ್ಷ್ಮ ಪ್ರವೃತ್ತಿಯ ಹೆಂಗಸು. ಆಕೆ ಬಡತನ ಅನುಭವಿಸಿರಬಹುದು. ಆದರೆ ಹೃದಯ ಶ್ರೀಮಂತಿಕೆಗೆ ಕೊರತೆ ಇರಲಿಲ್ಲ. ಆಕೆಗೆ ಸರಿಸುಮಾರು ಐವತ್ತರಷ್ಟು ವಯಸ್ಸಾಗಿರಬಹುದು. ಆದರೆ ಮೂವತ್ತೈದರ ಹರೆಯದವಳಂತಿದ್ದಳು. ಆಕೆ ಸುಶಿಕ್ಷಿತಳಲ್ಲದಿರಬಹುದು. ಆದರೆ ಯಾವುದೇ ಸುಶಿಕ್ಷಿತರಿಗಿಂತ ಕಡಿಮೆ ಇರಲಿಲ್ಲ. ಆಕೆ ಗಂಡನ ಮುಖ ಸರಿಯಾಗಿ ನೋಡಿರದೆ ಇರಬಹುದು. ಆದರೆ ತನ್ನ ಕಾಲ ಹೆಬ್ಬೆರಳಿನ ಉಗುರಿನಲ್ಲಿ ಗಂಡನ ಪ್ರತಿಬಿಂಬವನ್ನು ನೋಡದೆ ಇರಲಿಲ್ಲ. ಅಕೆ ಸಾರ್ವತ್ರಿಕವಾಗಿ ಅಳದೆ ಇರಬಹುದು. ಆದರೆ ಆಕೆಯ ಹೃದಯವೆಂಬ ಪೌಲ್ಟ್ರಿಯಲ್ಲಿ ದುಃಖದ ಮೊಟ್ಟೆಗಳಿಗೆ ಬರವಿರಲಿಲ್ಲ. +ತನ್ನ ಪತಿಪರಮೇಶ್ವರನಿಂದ ಪತ್ರ ಇಂದು ಬಂದೀತು, ನಾಳೆ ಬಂದೀತು; ಬಂದೀತು ನಾಡಿದ್ದು ಎಂದು ರುಕ್ಮೀಣಿ ಕಾದಳು. ಪತ್ರ ಇಲ್ಲ ಗಿತ್ರ ಇಲ್ಲ ಶುಭಂ ಇಲ್ಲ. ದಿನಗಳೆದಂತೆ ಆಕೆಯ ಬದುಕಿನ ಬೇರುಗಳು ನಿತ್ರಾಣವಾಗ ತೊಡಗಿದವು. ಕ್ರಮೇಣ ಬದುಕೆಂಬ ಗಿಡ ಸೊರಗ ತೊಡಗಿತು. ಅದು ಇನ್ನಷ್ಟು ಒಣಗುವಂತೆ ಪಟ್ಟಣದ ಕೆಲವರು ಆಕೆಯ ಮನೆಗೆ ಎಡತಾಕ ತೊಡಗಿದರು. ನಿನ್ನ ಗಂಡ ನಮ್ಮ ಹತ್ತಿರ ಇಷ್ಟು ಸಾಲ ಮಾಡಿದ್ದಾನೆ; ಅಷ್ಟು ಸಾಲ ಮಾಡಿದ್ದಾನೆ, ಇಷ್ಟು ಅಂತ ಪೀಡಿಸತೊಡಗಿದರು. ಕೆಲವರು ಸಾಲಮುಟ್ಟಿಸಬಹುದಾದ, ಪ್ರಾಂಸರಿ ನೋಟುಗಳನ್ನು ಚೂರುಚೂರು ಮಾಡಿ ಮಾನ್ಸೂನಿಗೆ ತೂರಬಹುದಾದ ಸುಲಭ ಹಾದಿಯನ್ನು ಹೇಳತೊಡಗಿದರು. +ಶಾಸ್ತ್ರಿಯ ಮೊಮ್ಮಗ ಶಾಮು ದಿನದ ಬಹುಪಾಲು ವೇಳೆಯನ್ನು ಅಲ್ಲಿ ಕಳೆಯುತ್ತಾನೆ ಸರೆ! ಇಲ್ಲವಾದರೆ ಗತಿ ಏನು! ಅವನಲ್ಲಿ ಟೈಂಬಾಂಬುಥರ ಇರುತ್ತಿದ್ದುದು ಕೆಲವರಿಗೆ ಭಯ ಮೂಡಿಸಿತ್ತು. +ಆಡುವ ಮಾತಿನಲ್ಲಿ ಸೌಜನ್ಯದ ಕೊರತೆಯನ್ನು ಅವನು ಕೂಡಲೆ ಗುರುತಿಸಿ ಬಿಡುತ್ತಿದ್ದ. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿಬಿಡುತ್ತಿದ್ದ. +ತನ್ನ ಕಣ್ಣಿನೆದುರಿಗೆ ಅನಸೂಯಳ ಕುಟುಂಬದ ಪತನವನ್ನು ಸಹಿಸುವುದಾದರು ಹೇಗೆ? +’ಸಣ್ಣ ತಮ್ಮ ಇದ್ದಿದ್ದರೆ ಅವನೀ ಹೊತ್ಗೆ ನಿನ್ನಷ್ಟೆತ್ತರ ಇತಿದ್ದ’ ಅಂತ ಒಮ್ಮೆ ರುಕ್ಮಿಣಿ ಹೇಳಿದ್ದಳು. ಹೌದು ರುಕ್ಮಿಣಿಗೆ ಒಬ್ಬ ಎಂಟನೆ ನಂಬರಿನ ತಮ್ಮ ಇಲ್ಲದಿರಲಿಲ್ಲ ಶಾಮನಂಥದೇ ಮೂಗು ಅವನಿಗೂ ಇತ್ತು. ಅವನ ಕೈಕಾಲು ಬೆರಳು ನೋಡಿದ ಯಾರಿಗಾದರೂ ಅವನು ತುಂಬ ಎತ್ತರಕ್ಕೆ ಬೆಳೆಯುತ್ತಾನೆ ಎಂದು ನುಡಿಯದೆ ಇರಲಿಲ್ಲ. ಆದರೆ ಅವನು ಅಮೃತಾಪುರದ ಮಾರೆಮ್ಮನ ಕೊಳ್ಳದಲ್ಲಿ ಉರುಳಿ ಕಾಣೆಯಾಗಿದ್ದ. +ರುಕ್ಮಿಣಿ ಶಾಮನಲ್ಲಿ ತಮ್ಮನನ್ನು ಕಂಡುಕೊಡಿದ್ದಳು, ಅವನು ಅಕ್ಕಾ ಎಂದು ಕರೆದೊಡನೆ ಪುಳಕಿತಗೊಳ್ಳುತ್ತಿದ್ದಳು. +ಶಾಮ ತನ್ನ ಅನಸೂಯಳೊಂದಿಗೆ ಮಾತಾಡುವುದು ತಿರುಗಾಡುವುದು ಅವಳಿಗೆ ತುಂಬ ಪ್ರಿಯವಾಗಿತ್ತು. ಅದಕ್ಕೆ ಅವಕಾಶ ತಾನೇ ಕಲ್ಪಿಸಿಕೊಡುತ್ತಿದ್ದುದೂ ಉಂಟು. ತಮ್ಮ ಪತಿದೇವನಿಂದ +ಒದಗಬಹುದಾದ ಅಪಾಯಗಳನ್ನು ಕೇರಿಯ ಆರ್ಯನ್ ಶಾಸ್ತ್ರಿಗಳಿಂದುದ್ಭವಿಸಬಹುದಾದ ಅಪಾಯಗಳನ್ನು ತಾನೇ ಉಪಾಯಾಂತರದಿಂದ ಪರಿಹರಿಸಿತ್ತಿದ್ದುದುಂಟು. +ಮೊದ ಮೊದಲು ಶಾಮು ಅವರ ಮನೆಗೆ ಶುಕ್ಲ ಪಕ್ಷಕ್ಕೊಮ್ಮೆ ಕೃಷ್ಣ ಪಕ್ಷಕ್ಕೊಮ್ಮೆ ಬರುತ್ತಿದ್ದ. ಶುಕ್ಲ ಪಕ್ಷಕ್ಕೆ ಬಂದ ಶಾಮುನಿಗೆ ಒಣ ಕೊಬ್ಬರಿ ಕಲ್ಲು ಸಕ್ಕರೆ ಸಿಕ್ಕರೆ, ಕೃಷ್ಣ ಪಕ್ಷಕ್ಕೆ ತುಪ್ಪದಲ್ಲಿ ನೆನೆದ ಉತ್ತುತ್ತಿ ಹಣ್ಣು ಸಿಗುತ್ತಿತ್ತು. ದಕ್ಷಿಣ ದಿಕ್ಕಿನಿಂದ ಬಂದು ಮನೆಯ ನೈರುತ್ಯ ದಿಕ್ಕಿನ ಮೂಲೆಯಲ್ಲಿ ಕೂತುಸದ್ದಾಗದಂತೆ ತಿಂದು ಈಶಾನ್ಯ ಭಾಗದ ಮೂಲಕ ಹೊರ ಪುಸಗಿ ಬಿಡುತ್ತಿದ್ದ. ಒಮ್ಮೊಮ್ಮೆ ಅವನು ಬರಲಿಲ್ಲವೆಂದರೆ ಅನಸೂಯ ಯಾವುದಾದರೊಂದು ವಸ್ತುವಿನೊಳಗೆ ತಿನ್ನುವ ವಸ್ತುವನ್ನು ಅಡಗಿಸಿಟ್ಟುಕೊಂಡು ಅವನಿರುವಲ್ಲಿ ಹೋಗಿ ಕೊಡುತ್ತಿದ್ದಳು. ಅವನು ದಿಗಿಲಿನಿಂದ ತಿನ್ನುವುದನ್ನು ನೋಡಿ ಸಂತೋಷಪಡುತ್ತಿದ್ದಳು. +“ಶೂದ್ರರಿರೋ ಕಡೆ ಗಾಳಿ ಸೇವನೆ ಕೂಡ ವರ್ಜ್ಯ ಕಣೋ , ನಾಲಿಗೆ ಚಟಕ್ಕೆ ಬಿದ್ದು ಆಚಾರಕ್ಕೆ ಅಪಚಾರ ಮಾಡೀಯೆ ಜೋಕೆ?” ಶಾಸ್ತ್ರಿಗಳು ಮೊಮ್ಮಗನನ್ನು ಎಚ್ಚರಿಸದ ದಿನ ಯಾವುದು? +ಕದ್ದು ತಿನ್ನುವುದರಲ್ಲಿ, ಮಡಿವಂತಿಕೆಯ ಉಲ್ಲಂಘನೆಯಲ್ಲಿ ಸಿಗುವ ರೋಮಾಂಚನ ಆ ಯಯೊವೃದ್ಧರಿಗೆ ಅದು ಹೇಗೆ ತಿಳಿದೀತು? +ಐದು ಸಹಸ್ರ ವರ್ಷಗಳಿಂದ ಸ್ಪರ್ಷಕ್ಕೆ ಅನರ್ಹವೆಂದು ಭಾವಿಸುವ ಜಾತಿಯಿಂದ ಬಂದವನಾದ ತಾನು ನಿಮ್ನ ಜಾತಿಯ ಗೌರವ ವರ್ಣದ ಸುಕೋಮಲ ಕಾಯ ಸ್ಪರ್ಶಿಸಿ ಪಡೆಯುತ್ತಿರುವ ಆನಂದ ಆ ಜ್ಞಾನ ವೃದ್ಧರಿಗೆ ಅರ್ಥವಾದೀತಾದರೂ ಹೇಗೆ? +ಇಂಥ ಸ್ವೀಕಾರಕ್ಕೆ ಅರ್ಹವಲ್ಲದ ಸ್ಪರ್ಶದ ಸೆಳೆವಿಲ್ಲದಿದ್ದರೆಲ್ಲಿ ಶಾಕುಂತಳೆ ಹುಟ್ಟುತ್ತಿದ್ದಳು? ರುದ್ರನಾಯಕನ ಅಗಲುವಿಕೆಯಿಂದಾಗಿ ಸ್ಪರ್ಶ ಮಮಕಾರದ ರೂಪ ಪಡೆದಿತ್ತು. ರೋಮಾಂಚನ ವಿರುವ ಕಡೆ ಅಂತಃಕರಣ ಕರಗುತ್ತಿತ್ತು. +“ಅಯ್ಯೋ ಪಾಪ!… ವಾಮಾಚಾರ ಅವಲಂಸಿದವರಿಗೆ ಹೆಂಡತಿ ಏಕೆ? ಮಕ್ಕಳು ಏಕೆ? ತಾವೇನಾದರೂ ಆಗಲಿ… ವಯಸ್ಕ ಮಗಳೊಂದಿಗೆ ಆ ಸಾಧ್ವಿ ಈ ಸಮಾಜದಲ್ಲಿ ಈಜುವಳಾದರೂ ಹೇಗೆ?” ಶಾಸ್ತ್ರಿಗಳು ಅನುಕಂಪ ವ್ಯಕ್ತ ಪಡಿಸದ ದಿನವೇ ಇಲ್ಲ. +ಶಾಸ್ತ್ರಿಗಳಂತೆ ಅವರ ಸೊಸೆಯೂ ಅಷ್ಟೆ, +ಅದನ್ನು ಕೊಟ್ಟು ಬಾ ಇದನ್ನು ಕೊಟ್ಟು ಬಾ ಎಂದು ಮಗನ ಕೈಲಿ ಏನಾದರೊಂದು ಕೊಟ್ಟು ಕಳಿಸುತ್ತಿದ್ದಳು ಅಲುಮೇಲು… +ಇದು ತನ್ನ ಬದುಕಿನ ಸುವರ್ಣ ಅಧ್ಯಾಯವೆಂದೇ ಶಾಮಶಾಸ್ತ್ರಿ ಭಾವಿಸಿದ. ದಿನದ ಬಹುಪಾಲು ಸಮಯವನ್ನು ಅವರ ಮನೆಯಲ್ಲಿಯೇ ಕಳೆಯುತ್ತಿದ್ದ. ರುದ್ರನಾಯಕನಿಂದ ಬರಬಹುದಾದ ಪತ್ರವನ್ನು ತಾನೇ ಒಡೆದು ಓದಿ ಅವರಿಗೆ ಹೆಚ್ಚಿನ ಸಂತೋಷ ಉಂಟು ಮಾಡಬೇಕೆಂದುಕೊಂಡಿದ್ದ. +ಮೂರು ತಿಂಗಳು ಏಕೆ ಆರು ತಿಂಗಳು ಕಳೆದವು. +ರೈಲಿನಲ್ಲಿ ಪಯಣಿಸಿದ ಆತನ ಪತ್ರ ಬರಲೇ ಇಲ್ಲ. ಬರುವಖಾತ್ರಿಯೂ ಇರಲಿಲ್ಲ. +“ಮನಸ್ಸು ಕಲ್ಲು ಮಾಡಿಕೊಂಡು ಬದುಕಬೇಕಮ್ಮಾ” ನಾಯಕ ಮಾಡಿರುವ ಸಾಲ ನೆನೆಪಿಸುವ ನೆಪದಲ್ಲಿ ಮನೆಗೆ ಬಂದಿದ್ದ ಬಡ್ಡಿಲೇವಾದೇವಿಗಾರ ಮೂಲಿಮಣಿ ಚಂದ್ರಪ್ಪ ಸಂತೈಸಿದ. “ಎಷ್ಟು ಬೇಡವೆಂದರೂ ಕೇಳದೆ ಮನೆ ಒತ್ತೆ ಇಟ್ಟು ಐದು ಸಾವಿರ ರುಪಾಯಿ ಸಾಲವನ್ನು ಪಡೆದು ಐದು ವರ್ಷಗಳೇ ಆದವು ತಾಯಿ” ಮೊದಲೇ ಆತ ಆಸ್ತಮಾ ರೋಗಿ. ಕೊಕ್‌ಕೊಕ್ ಕೆಮ್ಮುತ್ತ ಹೇಳಿದ. ಯಾವ +ಪುರುಷಾರ್ಥಕ್ಕೆ ಯಾವ ಸುಖ ಸಂತೋಷಕ್ಕೆ ತಾನಿಷ್ಟೊಂದು ಸಂಪಾಸಿದೆನಮ್ಮಾ? ಎಂದು ಮರುಗಿದ. ಅನಸೂಯ ತಂದುಕೊಟ್ಟ ಚಹ ನಿರಾಕರಿಸಿದ್ದಕ್ಕೆ ತನ್ನ ದೇಹದೊಳಗೆ ವಾಸಮಾಡಿಕೊಂಡಿರುವ ವಾಸಿಯಾಗದ ಖಾಯಿಲೆಗ ಬಗ್ಗೆ ವಿವರಿಸಿದ. ಯಾವ ಯಾವ ಖಾಯಿಲೆ ಯಾವ ಯಾವ ವಯಸ್ಸಿನಲ್ಲಿ ಬಂತೆಂಬುದನ್ನೂ ಬಿಡದೆ ಹೇಳಿದ. +ತನ್ನ ಗಂಡ ಯಾವ ಕಾರಣಕ್ಕಾಗಿ ಐದು ಸಾವಿರ ಸಾಲ ಮಾಡಿರುವನೆಂಬುದು ರುಕ್ಮಿಣಿಗೆ ಅರ್ಥವಾಗಲಿಲ್ಲ. ಗಂಡಸರ ವ್ಯವಹಾರದಲ್ಲಿ ತಾನೆಂದಾದರೂ ಮೂಗು ತೂರಿಸಿರುವುದುಂಟೆ? +“ಸಾವ್ಕಾರ್ರೆ ಹಣಕಾಸಿನ ವ್ಯವಹಾರ ನನ್ಗೊಂದು ಅರ್ಥ ಆಗೋದಿಲ್ಲ… ಅವರು ಬಂದೇ ಬರ್ತಾರೆ. ಬರೋವಗೂ…” ಬಾಗಿಲ ಮರೆಯಲ್ಲಿ ಬಾಯಿಗೆ ಸೆರಗು ಅಡ್ಡ ಇಟ್ಟು ಹೇಳಿದಳು. +“ತಾಯಿ… ಇದೆಂಥ ಮಾತು ಆಡ್ತಿದ್ದೀಯಮ್ಮಾ… ನನ್ನೆಪ್ಪತ್ತು ವರ್ಷದ ಜೀವಮಾನದಲ್ಲಿ ನಾನೆಂದಾದ್ರೂ ದುಡ್ಡಿಗೆ ಆಸೆ ಪಟ್ಟಿದ್ದೇನಮ್ಮಾ… ಬಡ್ಡಿ ವ್ಯಾಪಾರ ಮಾಡ್ತಿರೋದೇ ನಾಕು ಮಂದೀಗೆ ಒಳ್ಳೇದಾಗ್ಲೀ ಅಂತ… ಬಂದ ಲಾಭದಲ್ಲಿ ನಗರೇಶ್ವರ ದೇವಾಲಯ ಕಟ್ಟೋದಕ್ಕೆ ಹತ್ತು ಸಾವ್ರ ಕೊಟ್ಟಿಡ್ಡೀನಮ್ಮಾ ಹತ್ತು ಸಾವ್ರ… ನೀನೆಂದಾದ್ರು ದೇವಸ್ತಾನಕ್ಕೆ ಕಲ್ಲಲ್ಲಿ ಕೆತ್ತಿರೋ ನನ್ನ ಹೆಸರು ಓದ್ಕೋ… ಅರ್ಥ ಆಗ್ತದೆ… ಹಸಿವು ಅಂತ ಬಂದೋರ್ಗೆ ಒಂದ್ತುತ್ತು ಹಾಕ್ದೆ ಎಂದೂ ವಾಪಸ್ ಕಳಿಸಿದ ವಂಶ ಅಲ್ಲಮ್ಮಾ ನಮ್ದು!…” ಚಂದ್ರಪ್ಪ ನಿಟ್ಟುಸಿರು ಬಿಟ್ಟು ಮುಂದುವರೆದು ಹೇಳಿದ “ನಾನೇಂದೂ ತೊಂದರೆಲ್ಲಿರೋಗೆ ಕಾಟ ಕೊಟ್ಟೋನಲ್ಲ… ಇಷ್ಟೊಂದು ವಯಸ್ಸಾಗದಿದ್ದಲ್ಲಿ ಅನುಕೂಲವಾದಾಗ ಕೊಡಿ ಅಂತ ಸುಮ್ನಿದ್ದು ಬಿಡ್ತಿದ್ದೆ… ಆದ್ರೆ ವಯಸ್ಸು ಬೇರೆ ಅಗಿಬಿಟ್ಟಿದೆಯಲ್ಲ… ಮನೇಲಿ ನನ್ಗಿಂತ ಎತ್ರ ಬೆಳ್ದಿರೋ ಮಕ್ಳು ಬೇರೆ ಮನೇಲಿದ್ದಾರೆ. ಅವರೂ ನನ್ನಂತೆ ತುಂಬ ಒಳ್ಳೆವರೆಂದ್ರೇ ಇಟ್ಕೋ… ಆದ್ರ್ ಅವ್ರ ಹೆಂಡ್ರು ಸುಮ್ಕಿರಬೇಕಲ್ಲ. ಆ ನನ್ ಸೊಸೆಯಂದಿರೂ ಒಳ್ಳೆಯವರಂತ ಇಟ್ಕೋ… ಆದ್ರೆ ಅವ್ರು ಹಡೆದಿರೋ ಮಕ್ಕಳು ಸುಮ್ಕಿರಬೇಕಲ್ಲ. ಆ ನನ್ ಮೊಮ್ಮಕ್ಳೂನಿ ಒಳ್ಳೆಯವ್ರುಂತ ಇಟ್ಕೋ. ಆದ್ರೆ ಅವರ ಮುಂದಿನ ಭವಿಷ್ಯ ಸುಮ್ಕಿರಬೇಕಲ್ಲ… ಆ ಅವ್ರ ಭವಿಷ್ಯ ಒಳ್ಳೆಯದೆಂದಿಟ್ಕೋ… ಆದ್ರೆ ” ಚಂದ್ರಪ್ಪ ಇನ್ನೂ ಮಾತಾಡಬೇಕೆಂದಿದ್ದ… ಅಷ್ಟರಲ್ಲಿ ರುಕ್ಮಿಣಿ ಪೆಟಾರಿಯಲ್ಲಿ ಅಡಗಿಸಿಟ್ಟಿದ್ದ ಒಂಚೂರು ಬಂಗಾರದ ಒಡವೆ ತಂದು ಆತನ ಮುಂದಿಟ್ಟಳು. +ಚಂದ್ರಪ್ಪ ತನ್ನ ಕಣ್ಣುಗಳೆಂಬ ಪಗಡಿಗಳಲ್ಲಿ ಚಿನ್ನ ತಿಕ್ಕಿ ನೋಡಿದ. ತನ್ನ ನೆತ್ತಿ ಮೇಲಿನ ತುಪ್ಪಳದ ತೂಕವೂ ಅದಕ್ಕಿಲ್ಲವೆಂದುಕೊಂಡ. +ಚಂದ್ರಪ್ಪ ತನ್ನ ಕಣ್ಣುಗಳೆಂಬ ಒರೆಗಲ್ಲಿಗೆ ಚಿನ್ನ ತಿಕ್ಕಿ ನೋಡಿದ. ಅವುಗಳಲ್ಲಿ ಚಿನ್ನಕ್ಕಿಂತ ಬೇರೆ ಲೋಹಗಳ ಪ್ರಭಾವೇ ಹೆಚ್ಚು . ತನ್ನ ಎಂಟನೇ ಮೊಮ್ಮಗನ ಅಂಗಾಲಿಗಿರುವ ಕಳೆ ಕೂಡ ಅವಕ್ಕಿಲ್ಲವೆಂದುಕೊಂಡ. +ಅನಧಿಕೃತ ಸಂಬಂಧೀ ಫಲವಾಗಿ ಹುಟ್ಟಿರುವ ಹೆಣ್ಣು ಕೂಸನ್ನು ವಿಶ್ವಾಮಿತ್ರ ನಿರಾಕರಿಸಿದ ಭಂಗಿಯಲ್ಲಿಯೇ ನವರಸಾಭಿನಯ ಪರಿಣಿತನಾದ ಚಂದ್ರಪ್ಪ ಭಗವದ್ಗೀತೆಯಂತೆ ಮುಖ ಮಾಡಿಕೊಂಡ. +“ಛೇ ಛೇ… ನಿನ್ನಂಥ ಪತಿವ್ರತೆಯ ಬಂಗಾರ ತಗೊಂಡು ನಾನ್ಯಾವ ನರಕಕ್ಕೋಗ್ಲಿ ತಾಯಿ… ಶಿವ ಶಿವಾ, ನಾನು ನಿನ್ಗೆ ಏನು ಅಪಚಾರ ಮಾಡಿದ್ದೀನಮ್ಮಾ… ನಿನ್ನ ಪರಮ ಭಕ್ಟನಾದ ನನ್ನನ್ನು ಇಂಥ ಅಗ್ನಿ ಪರೀಕ್ಷೆಗೆ ಯಾಕೆ ಗುರಿ ಮಾಡ್ತಿದ್ದೀ… ಶಿವ ಶಿವಾ…” ಚಂದ್ರಪ್ಪ ಗದ್ಗದಿತನಾದ. ಕಣ್ಣಲ್ಲಿ ನೀರು +ಮಿಂಚಿದವು. ಜೋಲು ಬಿದ್ದ ಗಲ್ಲದ ಮಾಂಸಖಂಡಗಳು ಕಂಪಿಸತೊಡಗಿದವು. ಇನ್ನೇನು ಈ ಭೂಮಿ ಬಯ್ಬಿರಿದು ತನ್ನನ್ನು ನುಂಗೇ ಬಿಡುತ್ತದೆ ಎನ್ನುವಂತೆ ಅಭಿನಯಿಸಿದ. +ರುಕ್ಮಿಣಿಗೆ ಒಂಥರಾ ಆಯಿತು. ಇಂಥಾ ಸಜ್ಜನರೂ ಭೂಮಿ ಮೇಲೆ ಇದ್ದಾರಲ್ಲ!… ಅದಕ್ಕೆ ಮಳೆ ಬೆಳೆ ಚೆನ್ನಾಗಿ ಆಗುತ್ತಿರುವುದು ಎಂದುಕೊಂಡಳು. ಮಾತಾಡುವ ಶಕ್ತಿ ಆಕೆ ಕಳೆದುಕೊಂಡಳು. ಆತನ ಸೌಜನ್ಯಕ್ಕೆ ಅಕೆಯ ಅಂತಃಕರಣ ಕರಗಿ ನೀರಾಗಿ ಹರಿಯಲಾರಂಭಿಸಿತು. +ಇಂಥ ಒಳ್ಳೆ ವ್ಯಕ್ತಿಯನ್ನು ನೋಡೋಕೆ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ… ಬರೀ ಬೇಟೆಗಾರರಿಂದ; ಸಂಚುಗಾರರಿಂದ ಪ್ರಪಂಚ ತುಂಬಿ ಹೋಗಿದೆ ಎನ್ನುತ್ತಿದ್ದ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ!… +ಅನಸೂಯಾಽಽ… +ಅಷ್ಟೊತ್ತಿಗಾಗಲೇ ಒಂದೆರಡು ಕಡೆ ನೌಕರಿಗೆ ಪ್ರಯತ್ನಿಸಿ. ಒಂಥರಾ ಇರುಸು ಮುರುಸಾಗಿ ಟಿಫಿನ್ ಬಾಕ್ಸ್‌ನಲ್ಲಿದ್ದ ಚಿತ್ರಾನ್ನದೊಡನೆ ಗವಿಮಠದ ಕಡೆ ಸೈಕಲ್ ಮೇಲೆ ಹೊರಟಿದ್ದ ಅನಸೂಯಾಳಿಗೆ ತಾಯಿಯ ಕೂಗು ಕೇಳಿಸಿತಾದರೂ ಹೇಗೆ?… +“ಮಗಳ ಹೆಸರೇನಮ್ಮಾ ಅದು! ಈಗಾಗ್ಲೆ ಆಕೆ ಸಾಕಷ್ಟು ಬೆಳೆದು ಮದುವೆ ವಯಸ್ಸಿಗೆ ಬಂದಿರಬಹುದಲ್ವೇ? ಅಂತೂ ನೀನೇ ಪುಣ್ಯವಂತೆಯಮ್ಮಾ… ನೀನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆಯೋ… ಅಂತೂ ಆ ದೇವ್ರು ಮಗಳೊಬ್ಬಳನ್ನು ನಿನಗೆ ಕೊಟ್ಟಿದ್ದಾನೆ… ನನಗೆ ಆ ದೇವ್ರು ಒಂದೇ ಒಂದು ಹೆಣ್ಣು ಸಂತಾನ ಕೊಡ್ಲಿಲ್ಲ ನೋಡು…” ನಿಟ್ಟುಸಿರು ಬಿಟ್ಟ ಚಂದ್ರಪ್ಪ ಹೆಣ್ಣು ಹಡೆದೀ ಅಂದ್ರೆ ಕುತ್ತಿಗೆ ಹಿಚುಗಿ ಸಾಯಿಸ್ತೀನಿ ಹುಷಾರ್ ಎಂದು ಪ್ರತಿಗರ್ಭ ಧರಿಸಿದಾಗಲೂ ತನ್ನ ಧರ್ಮಪತ್ನಿಯನ್ನು ತಪ್ಪದೆ ಬೆದರಿಸುತ್ತಿದ್ದ. ಅಂತೂ ಆಕೆಯ ಪುಣ್ಯ ಆಯುಷ್ಯ ಗಟ್ಟಿ, ಒಂದರ ಹಿಂದೆ ಒಂದರಂತೆ ಸಾಲಾಗಿ ಒಂಬತ್ತು ಗಂಡು ಮಕ್ಕಳನ್ನು ಹಡೆದು ಕೊಟ್ಟಳು. ಹತ್ತನೆಯದನ್ನು ಹಡೆಯುವಾಗ ಸತ್ತು ಸ್ವರ್ಗಕ್ಕೆ ಹೋದಳೋ ನರಕಕ್ಕೆ ಹೊದಳೋ! ಹೆತ್ತು ಕೊಟ್ಟ ಸಂತಾನದ ಪೈಕಿ ಎರಡು ಅಕಾಲ ಮರಣಕ್ಕೆ ತುತ್ತಾಗಿದ್ದವು. ಮೂರು ಕೈಕಾಲು ಸೊಟ್ಟ ಬಟ್ಟ ಒಂಥರಾ ಇದ್ದವು. ಎರಡರ ಪೈಕಿ ಒಂದು ಕಿವುಡು, ಇನ್ನೊಂದು ಮೂಕು, ಇನ್ನೊಂದರ ತಲೆ ಲೂಜು, ಇನ್ನೊಂದರ ದೇಹದ ಮೇಲೆ ಎಲ್ಲೂ ಒಂದು ರೋಮ ಇಲ್ಲವೇ ಇಲ್ಲ… ಅಂದರೆ ಚಂದ್ರಪ್ಪ ಗಂಡು ಸಂತಾನದ ನೇತಾರನೆಂದು ಹೆಮ್ಮೆಯಿಂದ ಕೊಕ್ ಕೊಕ್ ಕೆಮ್ಮಿ ಒಂದೊಂದು ಕಪ್ಪು ಕಫ ಕಕ್ಕುತ್ತಿದ್ದ. ಸಾಕಷ್ಟು ದೂರದೃಷ್ಟಿಯಿಂದ ಕೆಲವಕ್ಕೆ ವರೋಪಚಾರ ಪಡೆಯದೆ ಒಂದೇ ಒಂದು ಹೆಣ್ಣು ಸಂತಾನವಿರುವ ಶ್ರೀಮಂತರ ಹೆಣ್ಣು ತೆಗೆದಿದ್ದ… ಕೆಲವಕ್ಕೆ ಬೀಗರಿಂದ ಒಂದೆರಡು ಪುಟ್ಟ ವರದಕ್ಷಿಣೆ ಕಕ್ಕಿಸಿದ್ದ. ಹೀಗಾಗಿ ಆತನ ಮನೆ ಎಂಬೋ ಮನೆ ಗಿಜಿಗಿಜಿ ಅನ್ನುತ್ತಿರುವುದು ಲೋಕವಿದಿತ. +“ನನ್ಗೂ ಆ ದೇವ್ರು ಹೆಣ್ಣು ಕೊಟ್ಟಿದ್ರೆ ಅನಸೂಯ ಅಂತಾನೆ ಹೆಸರಿಡುತ್ತಿದ್ದೆನಮ್ಮಾ!” ಮತ್ತೊಂದು ನಿಟ್ಟುಸಿರು ದೂಡಿದನಾ ಮೆತ್ತನ್ನ ಮೆದಿಗಳ್ಳ. “ಅಲ್ಲಮ್ಮಾ ತಾಯಿ ಮಗ್ಳು ಓದ್ಕೊಂಡಿದ್ದಾಳಂತ ಕೇಳಿದ್ದೀನಿ… ಇದ್ನೆಲ್ಲಾ ಯಾಕೆ ಹೇಳ್ದೆ ಅಂದ್ರೆ… ಗಂಡು ನೋಡಿ ಮದುವೆ ಮಾಡಿ ಕೈ ತೊಳ್ಕೋ ಬಹುದಿತ್ತಲ್ಲಾಂತ. ಮನೇಲಿ ಕೈಗೆ ಬಂದಿರೋ ಮಗಳಿರೋದು ಅಂದ್ರೆ ಉಡೀಲಿ ಕೆಂಡ ಇಟ್ಕೊಂಡಂತೆಯೇ ಸರಿ… ಆ ದೇವರೇನಾದ್ರು ನನ್ಗೂ ಒಂದು ಹೆಣ್ಣು ಕೂಸು ಕೊಟ್ಟಿದ್ದ ಅಂದ್ರೆ +ಮೈನೆರೆಯೋಕೂ ಮೊದ್ಲೆ ಮದ್ವೆ ಮಾಡಿ ಮೈ ನೆರೆಯುತ್ಲೆ ಮದ್ವೆ ಮಾಡಿ ಗಂಡನ ಮನೆಗೆ ಕಳಿಸಿಬಿಡುತ್ತಿದ್ದೆ ಕಣಮ್ಮಾ…”ಚಂದ್ರಪ್ಪ ನಿಟ್ಟುಸಿರು ಬಿಟ್ಟ. +ಚಂದ್ರಪ್ಪ ಶೆಟ್ಟಿಯ (ಗ್ರಾಮದ ದೈವಸ್ಥರ ಪೈಕಿ ಒಂದಾದ ಕಶೆಟ್ಟರ ಗುಂಪಿಗೆ ಸೇರಿದ ಶಿವಪೂಜೆ ಶೆಟ್ರು ಕೊಟ್ರ ಬಸಪ್ಪನ ಮೊಮ್ಮಗನೀ ಚಂದ್ರಪ್ಪನು) ಮಾತುಗಳ ಮೊನೆಯಲ್ಲಿದ್ದ ಚೂರಿಗಳು ರುಕ್ಮಿಣಿಯನ್ನು ಅಣಕಿಸಿದವು. +“ನಮ್ಮಂಥ ಬಡವ್ರ ಮಗಳನ್ನು ತಂದುಕೊಳ್ಳೋ ದೊಡ್ಡ ಮನಸ್ಸು ಯಾರ್ಗಿದೇ ಸಾವ್ಕಾರ್ರೇ” ತನ್ನ ಕಣ್ಣ ಕೊನೆಗೆ ಇಣುಕಿ ಹಲೋ ಹಲೊ ಎಂದು ವಿಷ್ ಮಾಡುತ್ತಿದ್ದ ನೀರಿನ ಹನಿಯನ್ನು ಒರೆಸಿಕೊಂಡಳು.ರುಕ್ಮಿಣಿ ಅಲಿಯಾಸ್ ರುಕ್ಕಮ್ಮ. “ನೀವೇ ಗಂಡು ಹುಡುಕಿ ಪುಣ್ಯ ಕಟ್ಟಿಕೊಳ್ಳಬಾರದೇ?” +“ಎನಮ್ಮಾ ತಾಯಿ, ಎಂಥ ಮಾತಾಡ್ತಿದ್ದೀ… ಮೈನೆರದು ಒಂಬತತ್ತು ವರ್ಷ ಆಗಿರೋ ಹುಡುಗಿ ಗಂಡು ಹುಡ್ಕೊಂಡಿರೋದಿಲ್ಲೇನು. ಮೇಲಾಗಿ ವಿದ್ಯಾವಂತೆ” ಚಂದ್ರಪ್ಪ ತನ್ನ ಮೋಹಕ ಸಂಭಾಷಣೆಗೆ ತಾನೇ ಪರವಶನಾದ, ನಗು ಬಂತು ನಕ್ಕ. “ಇದ್ಕೆ ಸೂಕ್ತವಾದ ವ್ಯಕ್ತಿ ಎಂದರೆ ಪರಮೇಶ್ವರ ಶಾಸ್ತ್ರಿಗಳು ಕಣಮ್ಮಾ, ಅವನ ಒಂದು ಕೇಳಿದಿ ಅಂದ್ರೆ…” +“ಹ್ಹಾಂ… ಪರಮೇಶ್ವರ ಶಾಸ್ತ್ರಿಗಳೇ… ಅವ್ರೆಲ್ಲಿ ನಾವೆಲ್ಲಿ?”. ರುಕ್ಕಮ್ಮ ದಿಗ್ಭಾಂತಳಾದಳು. ಆಕೆಗೇನು ಗೊತ್ತು ತನ್ನ ಮಗಳು ಅನಸೂಯ ಶಾಮಾಶಾಸ್ತ್ರಿಯ ಮೈಗೆ ಮೈ ಅಂಟಿಸಿ ಕೂತು ಇದೇ ವಿಷಯ ಚರ್ಚಿಸುತ್ತಿರುವ ಸಂಗತಿ +“ಅನೂ… ನಮ್ಮಿಬ್ಬರ ಮದುವೆಗೆ ಈ ಹಾಳಾದ ಜಾತಿ ಬೇರೆ ಅಡ್ಡ ಬತಿದೆಯಲ್ಲಾ…” ಶಾಮು ಆಕೆಯ ಮುಂಗುರುಳು ನೇವರಿಸಿದ , ಮೂಗನ್ನು ಮೃದುವಾಗಿ ಹಿಂಡಿದ. +“ಹಾಗಾದ್ರೆ ನನ್ಗಿಂತ ನಿನ್ ಜಾತೀನೆ ನಿನ್ಗೆ ಇಷ್ಟ ಏನು?” ಕೊಂಚ ದೂರ ಸರಿದು ಕೂತಳು… ಕಾದ ಬಾಣಿಲೆಯಿಂದ ಆಚೆ ಕಡೆಗೆ ಕುಪ್ಪಳಿಸಿದ ಹಕ್ಕಿಯಂತೆ. +“ಹಾಗೇನಿಲ್ಲ… ತಾತ ತನ್ನ ಬೇಕಾದ್ರೆ ಬಿಟ್ಟಾರು ಬ್ರಾಹ್ಮಣ್ಯಕ್ಕೆ ಅಪಚಾರ ಮಾಡೋರಲ್ಲ” +“ನಿಮ್ತಾಯಿ!!” +“ಆಕೆ ಬ್ರಾಹ್ಮಣ್ಯದ ಅವತಾರ ಕಣೇ!” +ಪಾಪ! ಶಾಮನಿಗೇನು ಗೊತ್ತು, ತಮ್ಮ ತಾತನವರಾದ ಶಾಸ್ತ್ರಿಗಳು ತಮ್ಮ ಮನೆಯ ತೂಗು ಮಂಚದಮೇಲೆ ಕೂತಿರುವುದು! ಕೆಳಗೆ ಅಂದರೆ ನರಸಿಂಹದೇವರು ದರ್ಶನ ಕೊಟ್ಟಿರುವನೆನ್ನಲಾದ ಕಂಭಕ್ಕಾತು ಅಮ್ಮ ಕೂತಿರುವುದು! ಅವರೀರ್ವರು ತಮ್ಮ ಕಣ್ಮಣಿಯಂತಿರುವ ಶಾಮನ ಮದುವೆ ಕುರಿತು ಚರ್ಚಿಸುತ್ತಿರುವುದು. +ಶಾಸ್ತ್ರಿಗಳು ತಮ್ಮ ಮುಂದೆ ಛಪ್ಪನ್ನಾರು ಕುಟುಂಬಗಳಿಂದ ಬಂದಿದ್ದ ಜಾತಕಗಳನ್ನು ಹರಡಿ ಕೂತಿದ್ದರು. ಪ್ರತಿಯೊಂದು ಜಾತಕದ ಗ್ರಹ ತಾರೆ ನೀಹಾರಿಕೆಗಳನ್ನು ಅಷ್ಟೊತ್ತಿಗಾಗಲೇ ವಿವರಿಸಿ ಹೇಳಿದ್ದರು. ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ತಾವು ನಿಗೂಢ ವಲಯಗಳಿಂದ ಸಂಗ್ರಹಿಸಿದ್ದ ವಿವರಗಳನ್ನು ಹೇಳಿದ್ದರು. ಆಷ್ಟೊತ್ತಿಗೆ ಪ್ರತಿಯೊಂದು ಕುಟುಂಬದ ಆಯಾ ಸದಸ್ಯರು ಪಡೆದಿರೋ ಸಂಸ್ಕೃತ ಮೂಲದ ಶಿಕ್ಷಣದ ಬಗ್ಗೆ; ಆಯಾ ಸದಸ್ಯರ ಆಚಾರ ವಿಚಾರದ ಬಗ್ಗೆ; ಆಯಾ ಕುಟುಂಬದ ಹಿರಿಯರು ಪ್ರಾಣಾಯಾಮಕ್ಕೆ ತೆಗೆದುಕೊಳ್ಳುವ ಸಮಯದ ಬಗ್ಗೆ, ಗಾಯತ್ರಿ ಪಠನೆಗೆ ತೆಗೆದುಕೊಳ್ಳುವ ಏಕಾಗ್ರತೆ ಬಗ್ಗೆ; ಪ್ರತಿಯೊಂದು ಕುಟುಂಬ +ವಾಸಿಸುವ ಮನೆ ಮುಂದೆ ಇರುವ ತುಳಸೀ ಕಟ್ಟೆಯ ಒಳ, ಹೊರ ವಿನ್ಯಾಸದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದರು ಅಷ್ಟೊತ್ತಿಗೆ. +“ಅಮ್ಮಾ ನಾನಿರುವಾಗ ನೀನೇಕೆ ಚಿಂತೆ ಮಾಡುತ್ತಿರುವಿ ತಾಯಿ. ಪ್ರಾಚೀನ ಕಾಲದಲ್ಲಿ ಗಂಡನ ಚಿತೆಯೊಳಗೆ ಸಹಗಮನ ಮಾಡುತ್ತಿದ್ದರು. ಅಂಥ ಹೇಣ್ಣನ್ನು ತಂದು ಮದುವೆ ಮಾಡ್ತೀನಿ, ನೋಡ್ತಿರು”. ಒಂದು ಚಿಟಕೆ ನಶ್ಯವನ್ನು ಬೆಳ್ಳಿ ಭರಣಿಯಿಂದ ತೆಗೆದು ಚಿನ್ನದ ಭರಣಿಯಂಥ ಮೂಗಿನೊಳಗೆ ಲೇಪಿಸಿಕೊಂಡರು. (ಮೂಗು ಕಟ್ಟುವ ಸಮಸ್ಯೆ ನಿವಾರಣೆಗೆ ಕೆಂಜನಗೂಡು ಕೆಂಪ ಹನುಮಂತರಾಯರಿಂದ ಇತ್ತೀಚಿಗೆ ರೂಡಿಸಿಕೊಂಡಿದ್ದರು ಆ ಚಟವನ್ನು) +ಶುಭಸುಚಕವಾಗಿ ಎರಡು ಸೀನುಗಳು ಹೊರಬಂದವು. +ಯಾವತ್ತು ಹೊರಡ್ತೀರಿ… ಗುಣಸಾಗರದ ಅಗ್ರಹಾರಕ್ಕೆ… ದಶಾವಧಾನಿ ಶಿವರಾಮಯ್ಯನೋರು ಹಾಸಿಗೆ ಹಿಡಿದಿದ್ದಾರಂತೆ. ಮಗಳ ಮದುವೆ ಮಾಡಿ ವೈಕುಂಟ ಸೇರಬೇಕಂದೇ ಜೀವ ಹಿಡಿದಿರುವರಂತೆ”. ಇತ್ತೀಚೆಗೆ ಅಲುಮೇಲಮ್ಮ ಪ್ರತಿಯೊಂದು ಮಾತಿಗೂ ಅಂತೆ ಕಂತೆ ಸೇರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. +“ಮುಂದಿನ ಗುರುವಾರದ ಹೊತ್ತಿಗೆ ಶತತಾರ ನಕ್ಷತ್ರ ದ್ವಾದಶ ತಿಥಿಗೆ ಬರುತ್ತಲಿದೆ… ಅದಿರಲಿ ತಾಯಿ, ಅಗ್ರಹಾರದ ಶಿವರಾಮಯ್ಯನವರೇನೋ ದಶಾವಧಾನಿಗಳೆಂದು ನಾನೂ ಒಪ್ಪಿಕೊಳ್ಳುತ್ತೇನೆ. ಅವರ ಜಾತಕ ಕುಂಡಲಿ ಪ್ರಶಸ್ತವಾಗಿದೆ ಎಂದು ನಾನೂ ಒಪ್ಪಿಕೊಳ್ತೇನೆ… ಆದರೆ ಆ ಮಹಾನುಭಾವರು ತಮ್ಮ ಮಗಳು ಋತುಮತಿಯಾದ ತಿಥಿ ವಾರ ನಕ್ಷತ್ರಗಳನ್ನು ವಿವರ ಕಳಿಸಿಲ್ಲವಲ್ಲ… ಅದಕ್ಕೆ ಏನು ಮಾಡುವುದಮ್ಮಾ?” ಶಾಸ್ತ್ರಿಗಳು ಇನ್ನೊಂದು ಚಿಟಿಕೆ ನಶ್ಯೆ ಏರಿಸಿದರು. ತಮ್ಮ ಹೃದಯವೇ ಮೂಗಿನ ಮೂಲಕ ಹೊರ ಬಿದ್ದಿತೇನೋ ಎಂಬಂತೆ ಒಂಟಿ ಸೀನಿ ಸೀತರು. ಅದು ಅಶುಭ ಸೂಚಕ. ಅದರ ಆಯುರ್ವೇದಯುಕ್ತ ಪರಿಮಳ ಮನೆತುಂಬ ಹರಡಿತು. +ತಾನು ಶ್ರಾವಣ ಮಾಸದಲ್ಲಿ, ಶುಕ್ಲಪಕ್ಷದ ಐದನೇ ದಿನದಲ್ಲಿ, ಅಂದರೆ ಶುಕ್ರವಾರ ಪ್ರಾತಃಕಾಲ ಪುನರ್ವಸು ನಕ್ಷತ್ರದಲ್ಲಿ ಋತುಮತಿಯಾಗಿದ್ದನ್ನು ಪರಿಶೀಲಿಸಿದ ಮೇಲಲ್ಲವೆ ಶಾಸ್ತ್ರಿಗಳು ಮಗನಿಗೆ ತಂದುಕೊಂಡದ್ದು. +ಈ ಶಾಸ್ತ್ರ ಫಲದಿಂದಲೇ ತಾನು ಚೊಚ್ಚಲು ಗಂಡು ಮಗುವನ್ನು ಹೆತ್ತಿಂದಂತೆ. +ಲುಮೇಲಮ್ಮ ನಿಡಿದಾದ ಉಸಿರು ಬಿಟ್ಟಳು. +ಆಕೆಗೆ ಏನು ಉತ್ತರಿಸಬೇಕೋ ಅರ್ಥವಾಗಲಿಲ್ಲ. +“ನೀನೇನು ಯೋಚಿಸಬೇಡ ತಾಯಿ ನಾನೀಗಲೇ ಗುಣಸಾಗರಕ್ಕೆ ಹೋಗಿ ಬರುವೆನು. ಹಾಗೆ ಗುಟ್ಟಾಗಿ ಆಕೆ ಪುಷ್ಪವತಿಯಾದ ಕಾಲ ತಿಳಿದುಕೊಂಡು ಉಳಿದಿದ್ದನ್ನು ಆಮೇಲೆ ನಿರ್ಧರಿಸಿದರಾಯಿತು. ಒಟ್ಟಿನಲ್ಲಿ ಕುಂಭರಾಶಿಯವನಾದ ನಮ್ಮ ಶಾಮುವಿಗೆ ಮಾರ್ಗಶಿರ ಮಾಸದ ಅಭಿಜಿನ್ ಮುಹೂರ್ತದಲ್ಲಿ ಮದುವೆ ಮುಗಿಸುವ ಜವಾಬ್ದಾರಿ ನನಗೆ ಬಿಟ್ಟು ನೀನು ನಿಶ್ಚಿಂತೆಯಿಂದಿರು” ಎಂದು ಶಾಸ್ತ್ರಿಗಳು ಸ್ವಲ್ಪ ನರಳುತ್ತಿರುವಂತೆ ಕಂಡುಬಂದರು. ಮಾತಾಡಿ ಮಾತಾಡಿ ದವಡೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. +“ಮಧ್ಯಾನ್ನದ ಊಟಕ್ಕೆ ಸ್ವಲ್ಪ ಉಪ್ಪು ಹಾಕಿ ಗಂಜಿ ಮಾಡಿಬಿಡಮ್ಮಾ…… ನಿನ್ನೆ ಸಾಹುಕಾರ ಗೋವಿಂದೇಗೌಡರ ಶ್ರಾದ್ಧ ಮಾಡಿದ ಸುಸ್ತು ಇನ್ನೂ ಕಡಿಮೆಯಾಗಿಲ್ಲ. ಪುಳಿಯೋಗರೆ, ವಾಸನೆ ತಲೆ ಆವರಿಸಿಬಿಟ್ಟಿದೆ”. ತೂಗು ಮಂಚದ ಮೇಲೆ ’ವಿದ್ಯಾದಾನಂತು ದೇಹಿ ಮೇ’ ಎಂದು +ಗೊಣಗುತ್ತ ಕಣ್ಣು ಮುಚ್ಚಿದರು. ಅವರ ಕಮರುಡೇಗನ್ನು ಗುರುತಿಸಿ ಅಲುಮೇಲಮ್ಮ ಗಂಜಿ ಮಾಡಿಟ್ಟಿದ್ದಳು. ಎರಡು ಅಗುಳು ಉಪ್ಪುಹಾಕಿ ಕದಡಿದಳು. +ಗಲ್ಲ ಮತ್ತು ಮೂಗಿನ ಮೇಲೆ ನವೆ. ಅಲ್ಲಿ ಪುಟ್ಟ ಗುಳ್ಳೆಗಳು, ಮಾಸಿಕ ಮೈಲಿಗೆ ಮುನ್ಸೂಚಕವಾಗಿ ಮೂಡಿವೆ ರಾಯಭಾರಿಗಳಂತೆ. ಇನ್ನು ಇಷ್ಟು ಹೀಗೆ ಎಷ್ಟು ಕಾಲ ಮೈಲಿಗೆಯಾಗುತ್ತಿರಬೇಕೋ! ಮುಟ್ಟು ನಿಂತು ಹಲ್ಲು ಉದುರಿ, ಸೊಂಟ ಬಾಗಿ ಚರ್ಮ ಸುಕ್ಕು ಗಟ್ಟಿ ಕುರೂಪಿಯಾಗಿ ರಾಮ ರಾಮಾ ಅಂತ ಮೂಲೆ ಹಿಡಿದು ಕೂಡ್ರುವ ಕಾಲ ಇನ್ನೆಷ್ಟು ದೂರವಿರುವುದೋ. +ಹೊರಗಡೆ ಹೆಜ್ಜೆ ಇಟ್ಟರೆ ಸಾಕು, ಜೊಲ್ಲು ಸುರಿಸುವ ಆ ಗಂಡಸರ ಕಣ್ಣುಗಳ ದೃಷ್ಟಿ ಇಂಗಿ ಬಿಡಬಾರದೆ! ತನ್ನಮ್ಥ ಬೋಳಾದ ಮುಂಡೆಯಲ್ಲೂ ಸೌಂದರ್ಯ ಹುಡುಕೋ ಈ ಗಂಡಸರನ್ನು ಏನೆಂತ ಶಪಿಸುವುದು ದೇವರೇ! +ಇದ್ದಕ್ಕಿದ್ದಂತೆ ಅಲುಮೇಲಮ್ಮಗೆ ಮಗ ನೆನಪಾಗಿ ಬಿಟ್ಟ. ಅವನ ಸಮಕ್ಷಮದಲ್ಲಿ ಸ್ನಾನ ಮಾಡದೆ ಅವನಿಂದ ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟೊಂದು ದಿನಗಳದವಲ್ಲ! ಅವನನ್ನು ತಬ್ಬಿಕೊಂಡು ಮಲಗದೆ ಎಷ್ಟೊಂದು ದಿನಗಳದವಲ್ಲ! ಅವನಿಗೆ ಕೈ ತುತ್ತು ಮಾಡಿ ಉಣಿಸದೆ ಎಷ್ಟೊಂದು ದಿನಗಳದವಲ್ಲ! ತನ್ನ ಮಗನನ್ನು ಬಚ್ಚಲಲ್ಲಿ ಪೂರ್ತಿ ಬತ್ತಲೆ ಮಾಡಿ ಸ್ನಾನ ಮಾಡಿಸದೆ ಎಷ್ಟೊಂದು ದಿನಗಳಾದವಲ್ಲ! +ಅಯ್ಯೋ ದೇವರೆ, ಅವನನ್ನು ಏಕೆ ದೊಡ್ಡವನನ್ನಾಗಿ ಮಾಡಿದೆ! ಎಂದೂ ಇಲ್ಲದ ನಾಚಿಕೆ ಸಂಕೋಚ ಅವನಿಗೆ ಯಾಕೆ ಕೊಟ್ಟೆ? ಅವನು ಎಷ್ಟೇ ದೊಡ್ಡವನಾಗಲಿ; ಅವನು ನನ್ನ ಮಗ ನನಗೆ ಎಂದೆಂದೂ ಅವನು ಅಂಗೆಗಾಲಿಟ್ಟಾಡುವ ಮಗುವೆ, ಅವನನ್ನು ನನ್ನಿಂದ ದೂರ ಮಾಡಬೇಡ ತಂದೆಯೇ! +ಆಕೆಯ ಕಣ್ಣುಗಳಿಂದ ನೀರು ಇದ್ದಕ್ಕಿಂತೆ ದುಮ್ಮಿಕ್ಕ ತೊಡಗಿತು. ಆಕೆಯ ಸ್ತನಗಳು ಒದ್ದೆಯಾದವು. ಎದೆಯೊಳಗೆ ಉದ್ವೇಗಕ್ಕೆ ಸಿಲುಕಿ ಆಕೆಯ ವಕ್ಷ ಒಂದೇಸಮನೆ ಏರಿಳಿಯ ತೊಡಗಿದವು. ಆ ಸ್ತನಗಳೊಂದಿ ಆಟವಾಡಿದ ಗಂಡ ಮತ್ತು ಮಗ ಒಟ್ಟಿಗೆ ನೆನಪಾದರು. +ಗಂಡನಂತೂ ಇಲ್ಲ. ನಡು ನೀರಿನಲ್ಲಿ ಕೈ ಬಿಟ್ಟ, ಬಯಲಲ್ಲಿ ಬಯಲಾಗಿಬಿಟ್ಟ. +ಮಗನಿರುವನಲ್ಲ ಅವನು ಆ ಹಾಳಾದ ಹುಡುಗಿ ಜೊತೆ ಎಲ್ಲೆಲ್ಲಿ ಸುತ್ತುತ್ತಿರುವನೋ ಏನೋ ಛೇ!… ಛೇ!… ಅವನೂ ಅಷ್ಟೇ! ಅವಳು ಅಷ್ಟೇ! ಎಂದೂ ಸಭ್ಯತೆ ಮೀರಿ ವರ್ತಿಸುವವ್ವರಲ್ಲ. +“ಅಮ್ಮಾ ದ್ವಿವೇದುಲರವರ ಸಂಸ್ಕೃತ ಗ್ರಂಥಾಲಯಕ್ಕೆ ಹೋಗಿ ಕೌಟಿಲ್ಯನ ಅರ್ಥಶಾಸ್ತ್ರದ ಹದಿನೆಂಟನೆ ಅಧ್ಯಾಯ ನೋಡಿಕೊಂಡು ಬತೇನೆ… ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಕೌಟಿಲ್ಯನ ಬಗ್ಗೆ ಲೇಖನ ಕೇಳಿದ್ದಾರೆ” ಮಗ ಹೊರಡುವ ಮುನ್ನ ಮೊದಲು ಆಡಿದ್ದ ಮಾತುಗಳು. +ಈಗವನು ಲೈಬ್ರರಿಯಲ್ಲಿರಬಹುದು. ಮುಂದೆ ಹತ್ತಾರು ಗ್ರಂಥಗಳನ್ನು ಹರಡಿಕೊಂಡಿರ ಬಹುದು; ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ಮಗ್ನನಾಗಿರಬಹುದು… ಎಂದೆಲ್ಲ ಊಹಿಸಿ ಸಮಾಧಾನದ ಉಸಿರನ್ನು ಬಿಡುತ್ತಿದ್ದ ಆ ಸಾಧ್ವಿಗೇನು ಗೊತ್ತು… ಶಾಮು ಮತ್ತು ಅನಸೂಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ ಅಮೃತ ಶಿಲೆಯಿಂದ ಕಟ್ಟಿದ ಸಮಾದಿ ಮರೆಗೆ ಸರಿದು ಸರಿಸಮಾನವಾಗಿ ಬಿಕ್ಕುತ್ತಿದ್ದುದು. +“ನನ್ನ ನೀನೆ ಮದುವೆಯಾಗಬೇಕು ಕಣೋ ಶಾಮು… ನೀನಿಲ್ದೆ ಬದುಕೋ ಶಕ್ತಿ +ನನಗಿಲ್ಲ… ಯಾರೇ ಎದುರು ಬಿದ್ರೂ ಸರಿಯೆ ನಾವಿಬ್ರು ಜೊತೆಗೂಡಿ ಬಾಳಬೇಕು” ಅನಸೂಯ ಅವನ ಎದೆಮೇಲೆ ಮುಖವಿರಿಸಿ ಒಂದೇ ಸಮನೆ ಬಿಕ್ಕುತ್ತಿದ್ದಳು. +“ನನಗೂ ನಿನ್ ಜೊತೆ ಬಾಳಬೇಕೂಂತ ಆಸೆ ಇಲ್ಲಂತ ತಿಳಿಕೊಂಡಿದ್ದೀಯೇನೆ? ನಾನೋ ಅಥ್ವಾ ನೀನೋ… ಇಬ್ಬ್ರೂ ಒಂದೇ ಜಾತೀಲಿ ಹುಟಿಬಿಟ್ಟಿದ್ವೀ ಅಂದ್ರೆ ಇಷ್ಟೆಲ್ಲ ಸಮಸ್ಯೆ ಇತಿರಲಿಲ್ಲ…” +“ಈಗ ಹುಟ್ಟಿಬಿಟ್ಟಿದ್ದೀವಲ್ಲ. ಸಾಹಿತ್ಯದ ಬಗ್ಗೆ ಪ್ರೀತಿ ಇಟ್ಟುಕೊಂಡಿರೋನು ಯಾವಾಗ್ಲೂ ಮನುಷ್ಯನ ಬಗ್ಗೆ ಪ್ರೀತಿ ಇಟ್ಕೊಂಡಿತಾನೆ ಎಂಬ ಮಾತನ್ನು ನಿನ್ನಂಥೋರು ನಿಜ ಮಾಡ್ಬೇಕೋ ಶಾಮು. ನನ್ಗೆ ನೀನು ಮುಖ್ಯ ಆಗಬೇಕು ನಿನ್ಗೆ ನಾನು ಮುಖ್ಯ ಆಗ ಬೇಕು ಅಷ್ಟೇ. ನಮ್ಮಂಥೋಗೆ ಜಾತಿ ಕಂದಾಚಾರ ಮುಖ್ಯ ಆಗಬಾದು… ” +“ಈಗ ನಾನೇನು ಮಾಡ್ಬೇಕಂತ ಬಿಡಿಸಿಹೇಳು… ನಾನು ಸಾಹಿತಿಯಾಗಿರಬಹ್ದು. ಆದ್ರೆ ನನ್ಗೆ ಸಾಹಿತ್ಯದ ಪರಿಭಾಷೆ ಅರ್ಥ ಆಗೊದಿಲ್ಲ” +ನಾವು ಜಾತಿ ವ್ಯವಸ್ಥೆಯನ್ನು ಉಲ್ಲಂಗಿಸಬೇಕು. ಅದ್ಕೆ ನಾವಿಬ್ರು ಪರಸ್ಪರ ಮದುವೆಯಾಗಬೇಕು” +“ಇದ್ಕೆ ನಿಮ್ ತಾಯಿ ಒಪ್ತಾರೇನು?” +“ಅವರನ್ನು ಒಪ್ಸೋ ಜವಾಬ್ದಾರಿ ನನ್ಗೆ ಬಿಡು… ನಿಮ್ಮ ಮನೇಲಿ ನಿನ್ತಾತನವನ ಮತ್ತು ನಿನ್ತಾಯಿಯವರ್ನ ಒಪ್ಪಿಸಬೇಕು”. +“ಅವ್ರು ಒಪ್ಪದಿದ್ರೆ?” +“ಒಪ್ಪದಿದ್ರೇನಾಯ್ತು ನಾವಿಬ್ರು ಎಲ್ಲೋ ಒಂದು ಕಡೆ ಹೋಗೋಣ, ಮದುವೆಯಾಗೋಣ, ಇಬ್ರೂ ನೌಕರಿ ಸೇರೋಣ. ಜೀವನ ಸಾಗಿಸೋಣ. ಏನಂತಿ!” +“ನನ್ಗೊಂದ್ ಅರ್ಥ ಆಗ್ತಾ ಇಲ್ಲ!” +“ನೀನು ಹೀಗೆಯೋಚ್ನೆ ಮಾಡಿದ್ರೆ ಹೆಣ್ಣಾದ ನನ್ನ ಗತಿ ಏನು!” +“ಆಗ್ಲಿ ಅಮ್ಮನ್ನ ಒಂದು ಮಾತು ಕೇಳಿ ನೋಡ್ತೀನಿ’ +“ಬರೀ ಕೇಳೊದಲ್ಲ… ಒತ್ತಾಯಿಸಬೇಕು!” +“…” ನಿಟ್ಟುಸಿರು ಬಿಟ್ಟ. ಅದನ್ನು ಕೇಳಿಸಿಕೊಂಡ ಗುಬ್ಬಿಯೊಂದು ಪುರ್ರನೆ ಸೀದ ಅವರ ಮನೆಗೆ ಹಾರಿತು. +“ನಿನ್ನ ಒಡಹುಟ್ಟಿದವಯಾರೂ ಇಲ್ವೇನಮ್ಮಾ… ” ಎಂದು ಪ್ರಶ್ನಿಸುತ್ತಿದ್ದ ಕಶೆಟ್ಟಿ ಚಂದ್ರಪ್ಪನ ತಲೆ ಮೇಲೆ ಒಂದು ಸುತ್ತು ಗಸ್ತು ಹಾಕಿತು. ಹಾಗೆಯೇ ರುಕ್ಕಮ್ಮನ ತಲೆಯ ಮೇಲೂ, ಅಯ್ಯೋ, ಈ ಹಾಳಾದ ಹುಲು ನರರು ನಾನು ಹೇಳೋದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ನೆಲುವಿನ ಮೇಲೆ ಕೂತು ಒಂದೇ ಸಮನೆ ಚೀವ್ ಚೀವ್ ಅಂತು. ಅವರದ್ದು ಅವರಿಗಾಗಿದೆ ನಿನ್ನದೇನು ವರಾತ ಎಂದು ಒಲೆಯ ಮೇಲಿದ್ದ ಬೆಕ್ಕು ವರಾತ ತೆಗೆಯಿತು. +ರುಕ್ಕಮ್ಮ ಗುಬ್ಬಿ ಮತ್ತು ಬೆಕ್ಕನ್ನು ಗದರಿಸಲು ಪ್ರಯತ್ನಿಸಿ ಹೇಳಿದಳು, +“ಇದ್ದಾರೆ ಚಂದ್ರಪ್ಪನವ್ರೆ, ನನ್ಗೆ ಒಡಹುಟ್ಟಿದ ತಮ್ಮನೊಬ್ಬ ಇದ್ದಾನೆ. ಅವನು ಬೆಂಗಳೂರಲ್ಲೋ ಮೈಸೂರಲ್ಲೋ ಸಣ್ಣ ಪುಟ್ಟ ದಂಧೆ ಮಾಡ್ಕೊಂಡಿದ್ದಾನೆ”. +“ಅವನ ಮದ್ವೆ ಇನ್ನೂ ಆಗಿಲ್ಲ ತಾನೆ!” ಎಂದು ನುಡಿದ ಚಂದ್ರಪ್ಪನನೇ ಮ್ಯಾವ್ ಗುಟ್ಟುತ್ತ ದಿಟ್ಟಿಸಿತು ಬೆಕ್ಕು. +ಒಳ್ಳೆ ಮಾತಿನಿಂದ ಎದ್ದು ಹೋಗ್ತೀಯೋ… ಇಲ್ಲಾಂದ್ರೆ ಪರಚಿ ಬಿಡ್ಲೋ ಎಂಬರ್ಥದ ನೋಟ ಬೀರಿತು. +“ಆಗಿಲ್ಲ ಸಾಹುಕಾರ್ರೆ…” +“ಮತ್ತಿನ್ನೇನು ಪತ್ರ ಬರೆಸಿಬಿಡು… ಬಂದು ಬಿಡ್ಲಿ” +“ಮಗಳು ಒಪ್ಪಬೇಕಲ್ಲ!” +“ಯಾರಾದ್ರು ಕುರಿ ಕೇಳಿ ಮಸಾಲೆ ಅರಿತಾರೇನಮ್ಮಾ…” ಚಂದ್ರಪ್ಪ ಅಷ್ಟು ಹೊತ್ತು ಒಂಟಿ ಹೆಂಗಸೆದುರು ಕೂತು ಮಾತಾಡಿದ ಅನುಭವದವನಲ್ಲ. ಗಂಡನನ್ನು ದೂರ ಕಳಿಸಿ ಕೈಗೆ ಬಂದಿರೋ ಮಗ್ಳೊಡನೆ ಬದುಕುತ್ತಿರುವ ಹೆಣ್ಣು. ಸಾಲವನ್ನೇ ಕೊಟ್ಟಿರುವ ತಮಗೆ ಕರುಳು ಇಲ್ಲದೀತೆ! ಸಾಲ ಪಡೆದೋರು ಸುಖವಾಗಿದ್ದರೆ ಮಾತ್ರ ಸಾಲ ಕೊಟ್ಟವರುಸುಖವಾಗಿರುವರು ಎಂದು ನಂಬಿದಂಥ ಕಶೆಟ್ಟಿ ವಂಶ ತಮ್ಮದು. “ಏನೋ ತಾಯಿ ವಯಸ್ನಲ್ಲಿ ಹಿರಿಯ ಅಂತ ನಾಕು ಮಾತಾಡ್ದೆ… ನಿನ್ ಮಗ್ಳು ನಿಮ್ಮಾತು… ಕರೆದಾಗ ಬಂದು ಕೈಲಾದಷ್ಟು ಕೊಟ್ಟು ಅಕ್ಷತೆ ಹಾಕೋರು ನಾವು… ಅಂದ ಹಾಗೆ… ಮನೆ ಒತ್ತೆ ಇಟ್ಟು ಪಡೆದಿರೋ ಸಾಲದ ಬಗ್ಗೆ ಮತ್ತೊಮ್ಮೆ ನೆನಪಿಸ್ತಿದ್ದೀನಿ… ಕೊಟ್ಟಿರೋ ಸಾಲ ವಸೂಲಿ ಮಾಡ್ಕೊಂಡು ಬಂದ್ರೆ ಮಾತ್ರ ಈ ಮುದುಕ್ನೀಗೆ ಒಂದ್ತುತ್ತು ಅನ್ನ ಸಿಕ್ಕೋದು ಕಣಮ್ಮಾ… ಏನು ಮಾಡೋದು ಹೇಳು… ಕಾಲ ಹಂಗಿದೆ. ನಾನು ಬರ್ತೀನಿ ತಾಯಿ…” ಎಂದು ಎದ್ದು ಹೊರಟ. ದಾಟುವಾಗ ಬಾಗಿಲಿಗೆ ತಲೆ ಬಡಿಯಿತು. ಅಮ್ಮಾ ಅಂದರು. ಮನಸ್ಸು ಸಂತೆಯಾಗಿತ್ತು. ಆದ್ದರಿಂದ ನೋವಿನ ಅನುಭವ ಆಗಲಿಲ್ಲ. +ಓಂದೊಂದು ರೀತಿಯ ಹೆಜ್ಜೆ ಇಡುತ್ತ… ನಡೆದೂ ನಡೆದೂ ಆತನೇನೋ ಮರೆಯಾದ. ಆದರೆ ಆತ ತಮ್ಮನನ್ನು ನೆನಪಿಸಿದ್ದು ಮಾತ್ರ ಮರೆಯಾಗಲಿಲ್ಲ. +ಚಂದ್ರಪ್ಪ ತನ್ನ ಒಂದೇ ಮಾತಿನಲ್ಲಿ ಅಕ್ಕನ ಹೃದಯದೊಳಗೆ ತಮ್ಮನನ್ನು ಕೆತ್ತಿ ನಿಲ್ಲಿಸಿಬಿಟ್ಟಿದ್ದ. ಅಪ್ಪ ಸತ್ತಾಗ ಬಂದಿರಲಿಲ್ಲ. ಪತ್ರ ತಂತಿ ಸಕಾಲಕ್ಕೆ ಮುಟ್ಟಲಿಲ್ಲವಂತೆ ತಿಥಿ ದಿನ ಬಂದಿದ್ದ. ಊಟ ಮಾಡುತ್ತಿದ್ದವರು ಆತನನ್ನು ಸಿನಿಮಾ ನಟನಿಗೆ ಹೋಲಿಸಿದರು. ಅವನು ಹಾಗಿದ್ದ. ಹಾಗೆ ಬೆಳೆದಿದ್ದ. +“ಭಿಕ್ಷೆ ಬೇಡೋಗೆ ಮಗಳ್ನ ಕೊಟ್ಟು ಮದ್ವೆ ಮಾಡೇನು! ಆದ್ರೆ ಆ ನಿನ್ನ ತಮ್ಮನಿಗೆ ಮಾತ್ರ ನನ್ಮಗಳ್ನ ಕೊಡೋದಿಲ್ಲ” ರುದ್ರನಾಯಕ ಮಾತಿಗೆ ಮಾತು ಬಂದಾಗ ಹೇಳುತ್ತಲೇ ಇದ್ದ. ಮೊದಲಿಂದಲೂ ಅಷ್ಟೆ, ಅವರಿಬ್ಬರು ಪರಸ್ಪರ ಹಾವು ಮುಂಗುಸಿಯಂತೆ ಬುಸುಗುಟ್ಟುತ್ತಿದ್ದರು. +ಆದರೆ ಈಗ ಬುಸುಗುಟ್ಟುವವರು ಇಲ್ಲವಲ್ಲ. ಅವನೇನು ಕಡೇಲಲ್ಲ… ಒಡ ಹುಟ್ಟಿದ ತಮ್ಮಂದಿರ ಪೈಕಿ ಅವನೂ ಒಬ್ಬ . ಬಂಧು ಬಳಗ, ತಂದೆ ತಾಯಿ, ಒಡಹುಟ್ಟಿದವರು…ಎಲ್ಲರಿಂದ ಸಿಡಿದು ಸ್ವತಂತ್ರ ರೀತಿಯಲ್ಲಿ ಬದುಕುತ್ತಿರುವ ತಮ್ಮನವನು. ಅವನಿಗ್ರ್ ಮಗಳನ್ನು ಕಟ್ಟಿಹಾಕಿ ಕೈ ತೊಳೆದುಕೊಂಡರಾಯಿತು. ಹೀಗೆ ನಿರ್ಧರಿಸಿದ ಆಕೆಗೆ ಗುಬ್ಬಿ ಏನೋ ಸಲಹೆ ನೀಡಲು ಪ್ರಯತ್ನಿಸಿತು. ಬೆಕ್ಕು ಏನೋ ಸೂಚಿಸಲು ಎಚ್ಚರಿಸಲು ಪ್ರಯತ್ನಿಸಿತು. +ಅವನ ವಿಳಾಸ ಎಲ್ಲಿರುವುದೋ ಏನೋ? ಯಾವುದೇ ಸಾಮಾನು ಇಟ್ಟಲ್ಲಿ ಇರುತ್ತಿರಲಿಲ್ಲ. ನಗಂದಿ ಮೇಲೆ; ಟ್ರಂಕುಗಳೊಳಗೆ, ಸ್ಟಾಂಡಿನ ಮೇಲೆ; ಬೀರುವಾಗಳೊಳಗೆ ವಿಳಾಸಕ್ಕಾಗಿ ಬೆದಕಾಡತೊಡಗಿದಳು. ಸಾಮಾನುಗಳೆಲ್ಲ ಆಕೆಗೆ ಅರಿವಿಲ್ಲದಂತೆ ನೆಲದ ಮೇಲಲ್ಲ ಚಲ್ಲಾಪಿಲ್ಲಿಯಾಗಿದ್ದವು +“ಏನಮ್ಮಾ ಏನು ಮಾಡ್ತಿದ್ದಿ?” ಅದೇ ತಾನೆ ಬಂದ ಅನುಗೆ ಆಶ್ಚರ್ಯ. “ಅದೇನು +ಹುಡುಕುತ್ತಿದ್ದೀ ಹೇಳು… ನಾನೂ ಸಹಾಯ ಮಾಡ್ತೀನಿ” ಎಂದು ಆಕೆ ಒಂದೊಂದು ವಸ್ತುವನ್ನು ನೀಟಾಗಿ ಜೋಡಿಸಿದ ತೊಡಗಿದಳು. +“ಅದು ನೀನು ಹುಡುಕಿದ್ರೆ ಸಿಗುವಂಥ ವಸ್ತು ಅಲ್ಲ ಬಿಡಮ್ಮಾ… ” ರುಕ್ಕಮ್ಮ ಅಷ್ಟು ಸುಲಭವಾಗಿ ಗುಟ್ಟು ಬಿಟ್ಟುಕೊಡವ ಪೈಕಿ ಅಲ್ಲ. +ಆದರೆ ಗುಟ್ಟನ್ನು ಎಷ್ಟುಹೊತ್ತು ಹೊಟ್ಟೆಯಲ್ಲಿಟ್ಟುಕೊಳ್ಳಬಳ್ಳಳು! ಹಾಗೆ ನೋಡಿದರೆ ಯಾವ ಗುಟ್ಟೂ ಆಕೆಯ ಹೊಟ್ಟೆಯಲ್ಲಿರಲಿಲ್ಲ… ಅದನ್ನು ಹೊರಹಾಕದೆ ಆಕೆ ನಿದ್ರೆ ಮಾಡಲಾರಳು. +“ನಿನ್ನ ರಘೂ ಮಾವನ ಅಡ್ರಸ್ಸು ಹುಡುಕ್ತಿದೀನಮ್ಮಾ” +ತಾಯಿ ಮಾತು ಕೇಳಿ ಅನಸುಯ ಬೆಚ್ಚಿದಳು. +ಅವನನ್ನು ಚಿಕ್ಕವಳಿದ್ದಾಗ ನೋಡಿದ ನೆನಪು. ಆತನ ಸಾಹಸಗಳನ್ನು ಆಕೆ ಕೇಳಿಬಲ್ಲಳು. ತಾಯಿ ಮಗಳು ತಂತಮ್ಮ ಹೊಟ್ಟೆಯಲ್ಲಿದ್ದನ್ನು ಹೊರಹಾಕಿ ಮಾತಾಡಿದರು. ಹೆಣ್ಣಿಗೊಂದು ಗಂಡಿನ ಅಗತ್ಯದ ಬಗ್ಗೆ ಅವರೀರ್ವರಿಗೂ ಒಮ್ಮತ ಇತ್ತು. +“ಶಾಮುನ ಅಭಿಪ್ರಾಯ ಏನೂಂತ ತಿಳ್ಕೊಂಡ ನಂತರ ನೀನು ನಿನ್ನ ತಮ್ಮನ ಬಗ್ಗೆ ಯೋಚ್ನೆ ಮಾಡುವಿಯಂತೆ… ” ಅನಸೂಯ ಕುಂಬಳಕಾಯಿ ಕುಡುಗೋಲು ಎರಡನ್ನೂ ತಾಯಿಗೆ ಒಪ್ಪಿಸಿ ನಿಡಿದಾದ ಉಸಿರುಬಿಟ್ಟಳು. +“ಅವ್ನೇನೋ ಒಳ್ಳೆ ಹುಡುಗ, ಆದ್ರೆ ಅವನ ಮಾತ್ನ ಅವನ ತಾಯಿ ತಾತ ಕೇಳ್ತಾರಂತ ಏನು ಖಾತ್ರಿ?” ರುಕ್ಕಮ್ಮ ಸಮಸ್ಯೆ ಮುಂದಿಟ್ಟಳು. +“ಯಾರು ಒಳ್ಳೆಯವ್ರೋ ಯಾರು ಕೆಟ್ಟೋರೋ… ಒಂದೂ ಅರ್ಥ ಆಗೋದಿಲ್ಲಮ್ಮಾ… ನನ್ನ ಹಣೇಯಲ್ಲಿ ವಿಧಿ ಏನು ಬರೆದಿದೆಯೋ ಅದರಂತೆ ಬದುಕಬೇಕು ತಾನೆ… ” ಇನ್ನೊಂದು ನಿಟ್ಟುಸಿರು ಬಿಟ್ಟು ತಾಯಿಗೆ ಹತ್ತಿರ ಸರಿದುಕೂತಳು. “ಅಮ್ಮಾ… ನನಗೆ ತಾನೆ ಯಾರಿದ್ದಾರೆ ಮಗ ಅಂದ್ರೂ ನಾನೆ ಮಗ್ಳೂ ಅಂದ್ರೆ ನಾನೆ… ನಾನೆ ಎಲ್ಲಾದರೂ ನೌಕರಿ ಸೇರಿ ನಿನ್ನ ನೋಡ್ಕೊಳ್ತೀನಿ, ನನ್ನ ಮದುವೆ ಆಗು ಅಂತ ಮಾತ್ರ ಒತ್ತಾಯಿಸಬೇಡ.” +“ಅಂದ್ರೆ ನಿನಗೆ ಮದ್ವೆ ಮಕ್ಳು ಬೇಡವೇನು?” +ಮನಸ್ಸ ಯಾರ್ಗೋ ಕೊಟ್ಟು ದೇಹಾನ ಯಾರ್ಗೋ ಒಪ್ಪಿಸುವಂಥ ಮದುವೆ ನನಗೆ ಬೇಡಮ್ಮಾ ತೀಟೆಗೆ ಹುಟ್ಟೋ ಮಕ್ಳು ಮೊದಲೇ ಬೇಡ”. +ಮಗಳು ಎಂದೂ ನೊಂದು ಮಾತಾಡಿರಲಿಲ್ಲ +ಆಕೆ ಸಮಾಧಾನ ಇದ್ದಾಗ ಪ್ರಸ್ತಾಪಿಸಿದರಾಯಿತೆಂದು ರುಕ್ಕಮ್ಮ ಸುಮ್ಮನಾದಳು. +ಶಾಮು ಕೊಟ್ಟಿದ್ದ ಪತ್ರಿಕೆ ಎದುರಿಗಿತ್ತು. ಅದರಲ್ಲಿ ಅವನದೊಂದು ಕಥೆ ಪ್ರಕಟವಾಗಿತ್ತು. ಆ ಇಡೀ ಕಥೆ ಒಂದೇ ವಾಕ್ಯದಿಂದ ಹೆಣೆಯಲ್ಪಟ್ಟಿತ್ತು. ಯಾವುದೇ ಪ್ಯಾರಾಗಳಿರಲಿಲ್ಲ. ಫೂರ್ಣ ಪ್ರಮಾಣದ ಪಾತ್ರಗಳಿರಲಿಲ್ಲ. ಯಾವ ಪಾತ್ರಕ್ಕೂ ಖಚಿತ ಉದ್ದೇಶವಿರಲಿಲ್ಲ. ಅಕ್ಷರ ಶಬ್ದವಾಗುವಂತಿರಲಿಲ್ಲ. ಶಬ್ದ ವಾಕ್ಯವಾಗುವಂತಿರಲಿಲ್ಲ. ಆದರೂ ವಿಲಕ್ಷಣವಾದ ಆಕರ್ಷಣೆ ಆ ಕಥೆಯೊಳಗಿತ್ತು. ಆ ಕಥೆ ಕಥೆಗಾರನ ಅರಿವಿಗೂ ದಕ್ಕುವಂತಿರಲಿಲ್ಲ. ಕಥೆಗಾರನೊಳಗೆ ಕಥೆ ಇತ್ತೋ; ಕಥೆಯೊಳಗೆ ಕಥೆಗಾರನಿದ್ದನೋ; +ಕಿಟಕಿಯಿಂದ ಗಾಳಿಗೆ ಪತ್ರಿಯ ಪುಟಗಳು ಕದಲತೊಡಗಿದವು. ಎರಡನೆ ಪುಟದಲ್ಲಿ ಶಾಮನ ಭಾವಚಿತ್ರವಿತ್ತು. ಅಳುಕುತ್ತಲೇ ಅವನು ತೆಗೆಸಿಕೊಂಡಿದ್ದ ಛಾಯಾಚಿತ್ರ +ಅದಾಗಿತ್ತು. ತಾನು ಮಹಾನ್ ಕಥೆಗಾರನೆಂಬ ಅಹಂ ಅವನ ಕಣ್ಣುಗಳಲ್ಲಿತ್ತು. ಯಾರೋ ಫೋಟೋದಲ್ಲಿ ಶಾಮು ಸುಂದರವಾಗಿ ಬೀಳುವುದಿಲ್ಲ. ಅವನದು ಫೋಟೋಝನಿಕ್ ಫೇಸ್ ಅಲ್ಲವೇ ಅಲ್ಲ… +ಅನಸೂಯಳಿಗೆ ಕೂತಲ್ಲಿ ಕೂಡ್ರಲಾಗಲಿಲ್ಲ… ನಿಂತಲ್ಲಿ ನಿಲ್ಲಲಾಗಲಿಲ್ಲ. ಒಂಥರಾ ಚಡಪಡಿಕೆ. ಅವನ ಮನ ಗೆಲ್ಲಲು ತಾನು ಎಷ್ಟೊಂದು ಪೋಲಿ ಪೋಲಿಯಾಗಿ ವರ್ತಿಸುತ್ತಿದುದು ಸಭ್ಯತೆ ಮೀರಿ ಪ್ರವರ್ತಿಸುತ್ತಿದ್ದುದು ಎಲ್ಲವನ್ನು ನೆನಪು ಮಾಡಿಕೊಂಡಳು. ತನ್ನ ಬಗ್ಗೆ ತನಗೇ ಹೇಸಿಗೆ ಅನ್ನಿಸಿತು ಒಂದು ಕ್ಷಣ. ಸೂರ್ಯನ ಕಿರಣಗಳಿಗೆ ಹೊಗೆ ಮಂಜು ಕರಗಿದಂತೆ ಚೆಲ್ಲುತನವೆಲ್ಲ ಕರಗಿ ತನ್ನಲ್ಲಿ ವಿಶಿಷ್ಟ ಗಾಂಭೀರ್ಯ ಮೂಡಿದೆ. +ಬೇಟೆಗಾರನ ಗುರಿಯ ನೇರದಲ್ಲಿ ಬಂಧಿತವಾಗಿರುವ ಬಣ್ಣಬಣ್ಣದ ರೆಕ್ಕೆ ತೊಯ್ದ ಹಕ್ಕಿ ಯಂತೆ ಚಡಪಡಿಸ ತೊಡಗಿದಳು. +ಹಿತ್ತಲಿಗೆ ಹೋದಳು. ಕಿಟಕಿ ತೆರದೇನೋ ಇತ್ತು. ಆದರೆ ಅದರಾಚೆ ಶಾಮನ ಛಾಯೆ ಮಾತ್ರ ಇರಲಿಲ್ಲ ಈಗವನು ಮನೆಯಲ್ಲಿರುವುದೇನೊ ಖಚಿತ. ಹೆಂಗರುಳಿನ ಅವನೀಗ ಏನು ಮಾಡುತ್ತಿರಬಹುದು? ತಾಯಿಯ ಸೆರಗಿನಲ್ಲಿ ಮುದುಡುವ ಬದಲು ಅವನು ತಾತಗೆ ತಾಯಿಗೆ ಪ್ರಶ್ನೆ ಕೇಳಿರಬಹುದೇ???… +…ಅವನ ಚಡಪಡಿಕೆ ಏನೂ ಕಡಿಮೆಯದ್ದಾಗಿರಲಿಲ್ಲ. ಮನೆ ಪ್ರವೇಶಿಸುವಾಗಲೆ ಅವನು ಇಟ್ಟ ಒಂದೊಂದು ಹೆಜ್ಜೆ ಕಂಪಿಸುತ್ತಿತ್ತು. ತಾತನೆಲ್ಲಿ ಎದುರಾಗಿ ಬಿಡುವನೋ ಎಂಬ ಆತಂಕ ಅವನ ಪುಣ್ಯಕ್ಕೆ ಅವರು ಮನೆಯಲ್ಲಿರಲಿಲ್ಲ. ತನಗೆಂದೇ ಕನ್ಯಾನ್ವೇಷಣೆಗಾಗಿ ಗುಣಸಾಗರದ ಅಗ್ರಹಾರಕ್ಕೆ ಅವರು ಹೋಗಿರುವ ಸಂಗತಿ ಹೇಳಲೆಂದೇ ಗೋಡೆ ಮೇಲಿದ್ದ ಹಲ್ಲಿ ಲೊಚಗುಟ್ಟಿತು. +ಹತ್ತು ಹೆಜ್ಜೆ ಕ್ರಮಿಸಿ ಪಡಸಾಲೆ ಪ್ರವೇಶಿಸುವಷ್ಟರಲ್ಲಿ ಬೆವರಿಂದ ನೆನೆದು ಬನಿಯನ್ನು ಮೈಗೆ ಅಂಟಿಬಿಟ್ಟಿತ್ತು. ಬಾಯಿ ಒಣಗಿತ್ತು. ನಾಲಿಗೆ ನೀರಿಂದ ಹೊರ ಉಳಿದ ಮೀನಿನಂತಾಗಿತ್ತು. ಅಮ್ಮಾಽಽ ಎಂದು ಕೂಗಲೆಂದೇನೋ ಬಾಯಿ ತೆರೆದ, ಶಬ್ದ ಹೊರಡಲಿಲ್ಲ. +ಅಷ್ಟರಲ್ಲಿ ಅವನ ಹೆಜ್ಜೆ ಸದ್ದು ಕೇಳಿಸಿಕೊಂದು, ಅದು ತನ್ನ ಮಗನದೇ ಎಂದು ಕರುಳಿನಿಂದ ಗುರಿತಿಸಿಕೊಂಡು ಅಳುಮೆಲಮ್ಮ ಓಡಿ ಬಂದಳು. ಆಕೆ ಅಡುಗೆ ಮನೆಯಲ್ಲಿದ್ದಳೋ; ದೇವರ ಕೋಣೆಯಲ್ಲಿದ್ದಳೋ! ಕೈಲಿದ್ದುದು ಲತ್ತುಡಿಯೋ; ಬತ್ತಿ ಹೊಸೆದ ಅರಳೆಯೋ ಕಿಮುಟು ಹಿಡಿದ ರಾಮಾಯಣದ ಕಟ್ಟೋ… +ತನ್ನ ಕರುಳಿನ ಕುಡಿ ಗಂಟೆಗಟ್ಟಲೆ ಹೋಗಿಬಿಡುವುದೇನು? ನತದೃಷ್ಟ ತಾಯಿ ಮನೆಯಲ್ಲಿ ಒಂಟಿಯಾಗಿರುವಳೆಂಬ ಜ್ಞಾನವಾದರೂ ಇರಬಾರದೇನು? +ಮಗೂ; ಶಾಮೂ; ಎಷ್ಟು ಹೊತ್ತೋ ನೀನು ಹೋಗುವುದು. ನನ್ನ ಹಾಳಾದ ಬಲಗಣ್ಣು ಬೇರೆ ಒಂದೇ ಸಮನೆ ಬಡ್ಕೊಳ್ತಿತ್ತು ತಂದೆಯೇ… ಮತ್ತೆ ಬಂದು ಮುಖ ತೋರಿಸಿ ಹೋಗಿದ್ರೆ ನಾನು ಇಷ್ಟೊಂದು ಹೆದತಿರಲಿಲ್ಲ… ಅಲುಮೇಲಮ್ಮ ಓಡಿಬಂದವಳೇ ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಳು. ಅವನ ಗಲ್ಲಕ್ಕೆ ಮುದ್ದಿಸಿದಾಗ ಗೊತ್ತಾಯಿತಾಕೆಗೆ ಗಡ್ಡ ಬಿಟ್ಟಿರುವ ಸಂಗತಿ… ಛೇ! ಎಷ್ಟೊಂದು ಸೊರಗಿರುವನಲ್ಲ ತನ್ನ ಮಗ… +ಆಕೆಯ ಕಣ್ಣುಗಳಿಂದ ಒಂದೇ ಸಮನೆ ನೀರು ಹರಿಯಿತು. +ತಾಯಿಯ ಉದ್ವಿಗ್ನತೆಗೆ ಅವನು ಏನೆಂದು ಪ್ರತಿಕ್ರಿಯಿಸಿಯಾನು? ಆ ವಾತ್ಸಲ್ಯಪೂರ್ಣ +ಭಾವನೆಗಳು ಅಕ್ಷರದ ಚಿಮುಟಿಗೆ ಸಿಕ್ಕುವಂತಹುಗಳಲ್ಲ… +“ಕೇಳಿಬಿಡೋ ಶಾಮು… ಅಂಜಬೇಡ” ಮನದ ಮೂಲೆಯಿಂದ ಅನಸೂಯ ಕೂಗಿ ಎಚ್ಚರಿಸಿದಳು. ಆಕೆಯ ನೆನಪು ನಾಲಗೆಗೆ ಶಕ್ತಿ ನೀಡಿತು. +“ಅಮ್ಮಾ ನಿನ್ಗೆ ನಾನು ಸಂತೋಷವಾಗಿರೋದು ಬೇಕು ತಾನೆ?” ಪೀಠಿಕೆ ಹಾಕಿದ. +“ಹೌದಪ್ಪಾ… ನಿನ್ನಂಥ ಮಗ ಸಂತೋಷವಾಗಿರಬೇಕೆಂದೇ ಅಲ್ವೆ ನಾವಿನ್ನೂ ಬದುಕಿರೋದು?” +“ಹಾಗಿದ್ರೆ ಒಂದು ಕೇಳಲೇನು!” +“ಕೇಳೋ ಅದಕ್ಯಾಕೆ ಹಿಂಜರಿಕೆ!” ಎಂದು ಮಾತಾಡುತ್ತಲೆ ನೀರಿನ ಒಲೆಯಿಂದ ಬೆಂಕಿ ಹಿಡಿದಳು. ನಿಗಿ ನಿಗಿ ಉರಿಯುತ್ತಿದ್ದ ಕೆಂಡದುಂಡೆಗಳಿಗೆ ನೀರು ಸುರಿದಳು. ಅವು ಸುಯ್ ಎಂದು ಕಪ್ಪು ಬಣ್ಣಕ್ಕೆ ತಿರುಗಿ ಇದ್ದಿಲಿನ ರೂಪ ಧರಿಸಿದವು. +ನುಡಿಯಲೆಂದು ಅವನು ಬಾಯಿತೆರೆದ. ಆದರೆ ಕ್ಷೀಣ ಸ್ವರ ಬಚ್ಚಲಿನಲ್ಲಿ ಬತ್ತಲೆ ಕೂತಿದ್ದ ತಾಯಿಗೆ ಕೇಳಿಸೀತಾದರೂ ಹೇಗೆ! +“ಮಗೂ… ಯಾಕೆ ಅಲ್ಲೇ ನಿಂತಿದ್ದೀಯಾ; ನಿನ್ನ ಕೈಯಿಂದ ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟು ದಿನಗಳಾದ್ವೋ! ಕೂಗಿದಳು ತಾಯಿ ಬಚ್ಚಲೊಳಗಿಂದ +ಶಾಮುಗೆ ಸಂಕಟ ಸುರುವಾಯಿತು. +“ಅಮ್ಮಾ ನಾನೀಗ ಬೆಳೆದು ನಿಂತಿದ್ದೀನಿ!” +“ನನ್ನ ಶವಕ್ಕೆ ಚಿತೆ ಅಂಟಿಸುವ ಕ್ಷಣದಿಂದ ನೀನು ದೊಡ್ಡವನಾಗುವಿ ಮಗು, ಅಲ್ಲಿಯವರೆಗೆ ನೀನು ನನಗೆ ಮಗುವೆ” ತಾಯಿಯ ಆತುರಕ್ಕೆ ಕೊನೆ ಎಂಬುದಿರಲಿಲ್ಲ. +ಹೋಗದಿದ್ದಲ್ಲಿ ತಾಯಿ ತನ್ನನ್ನು ಎಲ್ಲಿ ಒಳಗೆ ಎಳೆದೊಯ್ಯುವಳೋ! ಅಳುಕಿದ. +ವಾತ್ಸಲ್ಯದ ಮಹಾಪೂರಕ್ಕೆ ಸಿಲುಕಿದ ಅದು ಅವನನ್ನು ಕೊಚ್ಚಿ ಕೊಂಡೊಯ್ಯಿತು ಸ್ನಾನದ ಕೋಣೆಗೆ; ಜ್ಞಾನದ ಸ್ನಾನದ ಕೋಣೆಗೆ, ಧ್ಯಾನ ಸ್ನಾನದ ಕೋಣೆಗೆ. +ಅವನು ಎಂದೂ ಅಷ್ಟು ವೇಗವಾಗಿ ಹೋದವನಲ್ಲ… ಹೋದ, ಹೋಗಿ ನೋಡಿದ, ಸಕಲ ತೀರ್ಥಗಳಿಂದ ತುಂಬಿ ತುಳುಕಾಡುತ್ತಿರುವ ಬಕೆಟ್. +ಎಷ್ಟು ಚಂದ ಕೂತಿರುವಳು ತಾಯಿ? +ಮೈಮೇಲೆ ಒಂಚೂರು ಬಟ್ಟೆ ಬರೆ ಇಲ್ಲವಲ್ಲ ವೇದ ಶಾಸ್ತ್ರಾದಿ ಸ್ಫೂರ್ಥೆಯ ಮೈಮೇಲೆ, ನಾಚಿಕೆ ಸಂಕೋಚದ ಬಂಧನದ ಬಿಡುಗಡೆ… ಈಕೆ ಸಾಮಾನ್ಯಳಲ್ಲ. ಮಾಧವ ಸೋದರಿ! ಮಹಿಷಾಸುರಾದಿ ಮರ್ಧಿನಿ! ಮಹಾ ಕೈಲಾಸ ವಾಸ ಪ್ರಿಯಕರಿ! ಮಹಾ ಕಾಮೇಶ್ವರಿ ಸಂಪತ್ಕರೀ! +ಕಾಮನೆಗಳನ್ನು; ಇಷ್ಟಾರ್ಥಗಳನ್ನು ಪೂರೈಸುವ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ನಗ್ನಳಾಗಿದ್ದಾಳೆನ್ನಿಸಿತು. ವಾತ್ಸಲ್ಯಪೂರ್ಣೆಯಾದ ಆದಿಶಕ್ತಿಯೇ ಬಚ್ಚಲಲ್ಲಿ ಬೆತ್ತಲೆಯಾಗಿದ್ದಾಳೆನ್ನಿಸಿತು. ಶುಂಭ ನಿಶುಂಭ ರಕ್ತಾಸುರ ಮಹಿಷಾಸುರರೇ ಮೊದಲಾದ ರಕ್ಕಸರನ್ನು ಸಂಹರಿಸುವ ಮೊದಲು ಶ್ರೀಗೌರಿ ಪವಿತ್ರ ಸ್ನಾನ ಮುಗಿಸಿದಳಲ್ಲ ಹಾಗೆ; +ಏಷ್ಟೊಂದು ಸುಂದರಿ ನನ್ನ ತಾಯಿ! +ತಾಯಿ ಅಗ್ನಿಯಿಂದ ಮಾಡಲ್ಪಟ್ಟವಳು. ಮುಟ್ಟಿದರೆ ಭಸ್ಮವಾದೀಯೆ ಜೋಕೆ! ಹೃತ್ಕರ್ಣದ +ಕವಾಟ ಡಭಾರನೆ ಬಾಗಿಲು ಮುಚ್ಚಿಕೊಂಡಿತು. +ತಾಯಿ ಸ್ವರ್ಣಪುತ್ಥಳಿಯಂಥವಳೇನೋ! ಅಪವಿತ್ರಗೊಳಿಸಿದೆ ಎಂದರೆ ರೌರವ ನರಕ ಪ್ರಾಪ್ತವಾದೀತು ಜೋಕೆ! ಹೃತ್ಕಾಟದ ಕಿಟಕಿ ಪಟಾರನೆ ಮುಚ್ಚಿಕೊಂಡಿತು. +ತನ್ನನ್ನೀ ಸ್ಥಿತಿಯಲ್ಲಿ ನೋಡಿ ಅದೆಷ್ಟು ದಿಗ್ಭ್ರಮೆ ಗೊಂಡಿರುವನಲ್ಲ ತನ್ನ ಮಗ . ಹೀಗೆ ಅವನೆಂದೂ ತನ್ನ ದೇಹವನ್ನು ನೋಡಿರಲಿಲ್ಲ. ದೇಹದ ನರನಾಡಿಯಲ್ಲಿ ರೋಮಾಂಚನ ಹರಿದಾಡಿತು. ಶ್ವೇತ ರಂದ್ರಗಳು ನಾಚಿಕೆಯ ಚಿಲುಮೆಯನ್ನು ಅರಳಿಸಿದವು. ದೇಹದ ಸಮಸ್ತ ರಕ್ತ ಸ್ತನಗಳಿಗೆ ಮತ್ತು ಕೆನ್ನೆಗಳಿಗೆ ನುಗ್ಗಿ ತುಂಬಿಕೊಂದಿತು. ಅಲುಮೇಲಮ್ಮ ಆ ವಿಚಿತ್ರ ಮನಸ್ಥಿತಿಯಲ್ಲೂ ಮಗನ ಮುಖ ನೋಡಲು ಪ್ರಯತ್ನಿಸಿದಳು. ಅರೆ! ಅವನು ಮಗನಲ್ಲ ಮಗನ ಮುಖವಾಡ ಧರಿಸಿರುವ ಧರಿಸಿ ನಿಂತಿರುವ ತನ್ನ ಗಂಡ. ಅದೇ ಕಣ್ಣು, ಅದೇ ಗಡುಸು ಮುಖ, ಅವೇ ಭಾವನೆಗಳು; ಒಂದು ಕ್ಷಣ ವಿಚಲಿತಳಾದಳು. ಪರವಶಳಾದಳು ಮೂರ್ಚೆಹೋದಂತಾಗಿ ಮತ್ತೆ ಚೇತರಿಸಿಕೊಂಡಳು. +“ಅಮ್ಮಾ!ಽಽ…” ಶಾಮು ತಾಯಿಯ ಅಂತಃಕರಣವನ್ನು ಮಾತಿನಿಂದ ಸ್ಪರ್ಶಿಸಿದ. ವಾಸ್ತವಕ್ಕೆ ಜರಿದಳು ತಾಯಿ. ನಾಚಿಕೆ, ಸಂಕೋಚ ಪಲ್ಲವಿಸಿದವು. +“ಮಗೂ ಶಾಮೂ…” ಸ್ತನಗಳನ್ನು ತನ್ನೆರಡು ಕೈಗಳಿಂದ ಬಿಗಿ ಹಿಡಿದು ಮರೆಮಾಚಿದಳು. ಮೊಣಕಾಲ ಚಿಪ್ಪಿನಲ್ಲಿ ಮುಖ ಹುದುಗಿಸಿದಳು… “ಬೇಡ… ಬೇಡ… ನೀನಿಲ್ಲಿ ನಿಲ್ಲಬೇಡ… ಹೊರಟು ಹೋಗು… ನೀನು ನನ್ನ ಶಾಮನಲ್ಲ… ನೀನು ದೊಡ್ಡವನಂತೆ ನೋಡುತ್ತಿರುವಿ… ನೀನಿಲ್ಲಿ ಇನ್ನೊಂದು ಕ್ಷಣ ನಿಂತಿದ್ದೇ ಆದರೆ ನಾನು ನಾಚಿಕೆಯಿಂದ ಸತ್ತೇ ಹೋಗ್ತೀನೆ…” ಮಾತೇನೋ ಆಡಿದಳು… ಮಾತುಗಳನ್ನು ಒರೆಹಚ್ಚಿದಳು… ಹೋಗಲಿದ್ದ ಮಗನನ್ನು ಮತ್ತೆ ತಡೆದಳು. +“ಇಲ್ಲ… ಮಗು… ಇಲ್ಲ… ನೀನು ಬೆಳೆದು ನಿಂತವನಲ್ಲ… ನೀನೊಬ್ಬ ಪುಟ್ಟ ಮಗುವೆ ನಿನ್ನೆರಡು ಪುಟ್ಟ ಕೈಗಳಿಂದ ಬೆನ್ನು ಉಜ್ಜು… ತಾಯ್ತನವ ಸ್ಪರ್ಶಿಸು, ತಾಯ್ತನವನೆಚ್ಚರಿಸು… ” ಆಜ್ಞಾಪಿಸಿದಳು ತಾಯಿ. +ತಾಯಿ ಎಳೆದ ಗೆರೆದಾಟುವುದುಂಟೆ ತಾನು!… ಸ್ಪರ್ಶಿಸುವ ಆಸೆಗೆ ಸಾವಿರ ರೆಕ್ಕೆಗಳು ಮೂಡಿದವು. ಎಷ್ಟೊಂದು ಬಣ್ಣ ತಳೆದಂತಿದೆ! +ಮುಟ್ಟಿದ, ಮಹಾಕಾವ್ಯ ಮುಟ್ಟುತ್ತಿರುವಂಥ ಅನುಭವವಾಯಿತವನಿಗೆ. +ಸೌಂದರ್ಯಾರಾಧನೆ, ಸೌಂದರ್ಯಾನುಭವ, ರಮಣೀಯತೆ, ಮಾಮವೀಯತೆ , ಲಾವಣ್ಯೀಯತೆಗಳ ಸಂಗಮದಾಳದಲ್ಲಿ ಮುಳುಗಿದ. +ಓo ಜoubಣ ಣhe meಣಚಿಟ is sಣಡಿoಟಿgeಡಿ ಣhಚಿಟಿ ಣhe ಠಿeಣಚಿಟ +ಃuಣ ಚಿಣ ಣimes ಣhe ಠಿeಣಚಿಟ is sಣಡಿoಟಿgeಡಿ ಣhಚಿಟಿ ಣhe meಣಚಿಟ +ವಿಗ್ರಹದ ಕಾಠಿಣ್ಯದೊಳಗಿಂದ ಪುಷ್ಪದೊಳಗಿಂದ ಕೋಮಲತೆ ಆವಿರ್ಭವಿಸುತ್ತದೆ. ಪುಷ್ಪದಳದ ಮೇಲೆ ತುಷಾರ ಧವಳ ಹರಿದಾಡುತ್ತಿರುವ ಅನುಭವ. +ಶನೈಃ ಶನೈಃ ಯನ್ನಾವತಾ ಮುಪೈತಿ +ತದೇವ ರೂಪಂ ಲಾವಣ್ಯತಾಂ… +ಕೋಮಲ ಭಾವನೆಗಳನ್ನು ಪಲ್ಲವಿಸುತ್ತಿರುವ ಮಾತೃಸ್ವರುಪ ಎಷ್ಟೊಂದು ಸುಂದರ? ಆ ಸೌಂದರ್ಯ ಅವನ ಮನಸ್ಸಿನೊಳಗೆ ನಂದನವನವನ್ನು ಸೃಷ್ಟಿಸಿತು. ಆ ನಂದನವನವದ ಮರ, ಗಿಡ, ಲತೆ ಹರಿದ್ವರ್ಣದೊಡಲಿಂದ ಸಕಲರಾಗಗಳು ತಾಳಲಯ ಶೃತಿ ಮೀರಿ ನುಡಿಯ ತೊಡಗಿದವು. ವ್ಯಕ್ತ ಜಗತ್ತು; ಅವ್ಯಕ್ತ ಜಗತ್ತು ಎರಡೂ ಒಂದಾಗುತ್ತಿರುವಂಥ ಅನುಭೂತಿ. ಸಕಲ ಪವಿತ್ರ ನದಿಗಳ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿರುವಂಥ ರಸಾನುಭೂತಿ… +ಸ್ಪರ್ಶದ ಉತ್ತುಂಗದ ಮೇಲೆ ವಿರಾಜಮಾನಳಾಗಿರುವ ತಾಯಿ ಸಸ್ಯಶಾಮಲತೆಯ ತಪ್ಪಲಿನಲ್ಲಿ ಅಂಬೆಗಾಲಿಟ್ಟು ಅಡ್ಡಾಡುತ್ತ ತಂಗಾಳಿಯೊಡನೆ ಸಂಭಾಷಿಸುತ್ತಿರುವ ಮಗ, ಮೂಕ ಪ್ರೇಕ್ಷಕನಂತಾಗಿತುವ ಅಲಕಾಪುರಿಯಂಥ ಸ್ನಾನದ ಕೋಣೆ… +“ಮಗೂ… ಎಚ್ಚರಾಗು ಮಗು ನನ್ನ ದೇಹ ಹಂಚಿಕೊಂಡು ರೂಪ ಪಡೆದಿರುವ ನಿನ್ನೊಳಗೆ ನಾನಿದ್ದೇನೆ ಕಣಪ್ಪಾ… ನಿನ್ನ ಬಾಲ್ಯ ಲೀಲೆಗಲಿಗೆ ಮೈದಾನವಾಗಿದ್ದ ಈ ದೇಹ ನಿನ್ನ ಪ್ರೌಡ ಸ್ಪರ್ಶದಿಂದ ಎಷ್ಟೊಂದು ಹಸನಾಯಿತಲ್ಲ!…” ತಾಯಿ ಎದ್ದು ನಿಂತಳು. ಮಳೆ ಬಿಲ್ಲು ನೆಲ ಮುಗಿಲೇಕವಾಗಿ ನಿಂತಂತೆ. ಅಸುರರ ರಕ್ತ ತರ್ಪಣದಿಂದ ಭೂಮಿಯನ್ನು ಫಲವತ್ತು ಮಾಡಿದ ಅಂಬೆಯಂತೆ. ಪರಿಮಳ ಪಲ್ಲವಿಸುವ ಶ್ರೀಗಂದ ವೃಕ್ಷದಂತೆ, ದೇವಲೋಕದ ಪಾರಿಜಾತದ ತರುವಿನಂತೆ… +“ಮಗು ಅದೇನೋ ಕೇಳಬೇಕೆಂದುಕೊಂಡಿದ್ದೆಯಲ್ಲ…” ಬಟ್ಟೆ ಧರಿಸಿದಳು ತಾಯಿ. ಸಹ್ಯಾದ್ರಿ ಹಸಿರು ಧರಿಸಿದಂತೆ, ಸಪ್ತವರ್ಣ ಸಮ್ಮಿಳಿತಧವಳಕಾಂತಿಯಂತೆ “ಯಾಕೆ ಸಂಕೋಚ ಮಗು ಕೇಳು…” +ಏನು ಕೇಳಬೇಕೆಂದಿದ್ದವನು ತಾನು! ನೆನಪಿನ ಕತ್ತು ಹಿಚುಕಿದ ಶಕ್ತಿಯ ಪ್ರಶ್ನೆಗೆ ಉತ್ತರವೆಲ್ಲಿದೆ ತನ್ನಲ್ಲಿ? ತಡಕಾಡಿದ ಶಾಮು… +“ನೆನಪು ಮಾಡಿಕೋ ಮಗು… ನೆನಪು ಮಾಡಿಕೋ… ನೆನಪು ಮಾಡಿಕೊಳ್ಳದಿದ್ದರೆ ನನ್ನ ಮೇಲಾಣೆ” ರವಿಕೆ ಧರಿಸಿದಳು ತಾಯಿ, ಅಯ್ಯೋ ತಾಯಿ ರವಿಕೆ ಧರಿಸಿದಳು… +ಪ್ರಶ್ನೆಯನ್ನು ಕೊಲ್ಲುವ ಶಕ್ತಿಯೇ ಪ್ರಶ್ನಿಸುವಂತೆ ಒತ್ತಾಯಿಸುತ್ತಿದೆಯಲ್ಲ! +ಆಸೆಯ ಮೇಲೆ ಗದಾ ಪ್ರಹಾರ ಮಾಡಿದ ತಾಯಿಯೇ ಆಕಾಂಕ್ಷೆಯ ಬಿಸಿಲುಗುದುರೆಯನ್ನೇರಿ ದಿಕ್ಕುಗಳಿಗೆ ಕಾಲೂರಿ ಪಯಣಿಸುತ್ತಿರುವಳಲ್ಲ… +ಭದ್ರ ಕೋಟೆಯಂತೆ ಹರಡಿರುವ ತಾಯ್ತನದ ರೆಕ್ಕೆ ಭೇದಿಸಿಕೊಂಡು ಹೊರ ಪ್ರಪಂಚಕ್ಕೆ ಪ್ರವೇಶ ಪದೆಯುವುದು ಹೇಗೆ? ತಾಯ್ತನದ ಪ್ರವಾಹದ ಮೇಲೆ ವೈಯಕ್ತಿಕ ಪ್ರೇಮದ ಕಾಗದದ ನಾವೆ ಹರಿಬಿಟ್ಟ ನನ್ನಂಥ ಮೂರ್ಖ ಇನ್ನೊಬ್ಬನುಂಟೆ! +ಆ ನಾವೆಯನ್ನೇ ಸುರಕ್ಷಿತ ಪಲ್ಲಕ್ಕಿ ಎಂದು ಭಾವಿಸಿ ಕೂತಿರುವ ಅನಸೂಯಾ ಈಜು ಬಾರದ ನಾನು ನಿನ್ನನ್ನು ಹೇಗೆ ರಕ್ಷಿಸಿಕೋಳ್ಳಲಿ!… +ಶಾಮನ ಹೃದಯದ ಶಿಥಿಲ ಬಿತ್ತಿಗಳ ಬಿರುಕುಗಳಿಂದ ಸಾವಿರ ಸಾವಿರ ಪಕ್ಷಿಗಳು ತಂತಮ್ಮ ಕರುಳ ಗೂಡುಗಳನ್ನು ಮರೆತು ನಿರಾಕಾರ ಮುಗುಲಿಗೆ ಚಿಮ್ಮಿದವು ಏಕಕಾಲಕ್ಕೆ… +ರಾಶಿಗಳಿಗೆ ಆಧಿಪತ್ಯ ಹಂಚಿರುವ ರೀತಿ ಯಾವ ಪ್ರಕಾರವಾಗಿ ಸ್ವೇಚ್ಛಾನು +ಸಾರಿಯಾಗಿಲ್ಲವೋ ಹಾಗೆ ಅನಸೂಯಳ ಗ್ರಹಗತಿ ಕೂಡ ಇಚ್ಛಾನುವರ್ತಿಯಾಗಿಲ್ಲ. ಭೂಮಿಯ ಸಮೀಪ ಚಂದ್ರಗ್ರಹದಂತಿದ್ದ ಶಾಮಾಶಾಸ್ತ್ರಿ ಭೂಮಿಯ ಅತ್ಯಂತ ದೂರವಿರುವ ಶನಿಯಂತಾಗಿಬಿಡಬೇಕೆ! +ಯಾವುದೇ ರಾಶಿಯಲ್ಲಿ ಗ್ರಹವು ತನ್ನ ಸಾಧಾರಣ ಅವಧಿಗಿಂತ ಹೆಚ್ಚು ಕಾಲ ಉಳಿದರೆ ಅದು ಸ್ತಂಭನ ಎನಿಸುತ್ತದೆಯೋ ಹಾಗೆಯೇ ಅನಸೂಯ ಉಚ್ಚವಸ್ಥೆಯಿಂದ ನೀಚಾವಸ್ಥೆಗಿಳಿಯುವ ಕ್ರಮದ ಗ್ರಹವಾಗಿಬಿಟ್ಟಳು. +ತನ್ನ ಮಿಥುನ ರಾಶಿ ರಾತ್ರಿ ಹೊತ್ತು ಪ್ರಬಲವಾಗಿರುತ್ತದೆ ಎಂದು ಖಚಿತಪಡಿಸಿಕೊಂಡೇ ಶಾಮು ಒಂದು ಶುಭ ರಾತ್ರಿಗಾಗಿ ತಡಕಾಡಿದ. ಇಂದಿರಾಗಾಂಧಿಯವರ ದುರಾಡಳಿತದ ಬಗ್ಗೆ ಭಾಷಣ ಮಾಡಿ ಕೊಟ್ಟೂರು ಪಟ್ಟಣದ ಮಹಾನ್ ಪ್ರಜೆಗಳನ್ನು ಎಚ್ಚರಿಸುವ ನಿಮಿತ್ತ ಜಾರ್ಜ್ ಫರ್ನಾಂಡಿಸರು ಸಮಾಜವಾದಿ ನಾಯಕ ಕಿಷನ್ ಪಟ್ನಾಯಕರ ಜೊತೆಗೂಡಿ ಇಂಥ ದಿನ ಇಂಥ ರಾತ್ರಿ ಆಗಮಿಸಲಿರುವರೆಂಬ ಸುದ್ದಿ ಅನಧಿಕವಾಗಿ ತಿಳಿದು ಸಂತೋಷಪಟ್ಟ. ಅನೇಕ ದ್ವಂದ್ವಗಳ ನಡುವೆಯೂ, ಆತ ವಿಚಾರ ಪ್ರಚೋದಕ ಭಾಷಣಗಳನ್ನು ಕೇಳಲು ಒಂಭತ್ತನೇ ಸ್ಥಾನದಲ್ಲಿರುವ ಚಂದ್ರನಂತೆ ತಹತಹಿಸುತ್ತಿದ್ದ. ಕ್ಷುದ್ರ ಗ್ರಹಗಳ ನಡುವೆ ಇರುವ ತಾರೆ ಎಷ್ಟು ಪ್ರಬಲವಾಗಿದ್ದರೂ ಕಾಂತಿಹೀನವಾಗುವಂತೆಯೇ ಪ್ರಧಾನಿ ಇಂದಿರಾಜೀಯೂ ಸಹ. ತಾರೆಯ ಶಕ್ತಿಯನ್ನು ಲಪಟಯಿಸುತ್ತಲೇ ಕ್ಷುದ್ರಗ್ರಹಗಳು ಬಲಿಷ್ಟಗೊಳ್ಳುತ್ತವೆ. ಕ್ಷುದ್ರಗ್ರಹಗಳ ಬೆಂಬಲವಿಲ್ಲದೆ ಯಾವುದೇ ತಾರೆಯಾವುದೇ ಬಲಿಷ್ಟವಾಗುವುದು. ಹಾಗೆಯೇ ಇಂದಿರಾಜಿ ಕ್ಯಾಬಿನೆಟ್ಟು, ಆಕೆ ತುಂಬ ಒಳ್ಳೆಯವಳು. ಷೋಡಷಿಯಾಗಿದ್ದಾಗ ಆಕೆಗೆ ಕೆಂಡದಿಂದ ಮಾಡಲ್ಪಟ್ಟ ನೀಳ ನಾಸಿಕವಿತ್ತು ಎನ್ನುವುದೇ ಭರತ ಖಂಡದ ಪುಣ್ಯ. ಕಾಶ್ಮೀರಿ ಬ್ರಾಹ್ಮಣರಿಗೆ ಮಾತ್ರ ಅಂಥ ಸುಂದರವಾದ ಮೂಗು; ಸಮುದ್ರ ಮಥನದ ಸಂದರ್ಭದಲ್ಲಿ ಲಕ್ಷ್ಮಿಗಿಂತ ಮೊದಲು ಜನಿಸಿದ ಜೇಷ್ಠೆಯ ಅಪರಾವತಾರವೇ ಸರಿ! ಮೃತ್ಯ ದೇವತೆಯನ್ನು ಪತಿಯನ್ನಾಗಿ ಪಡೆದ ಜೇಷ್ಠ ಸಾಮಾನ್ಯಳೇನು! ಆಕೆಯ ಅಧರ್ಮವನ್ನು ಹೆತ್ತಾಕಿ. ಎಷ್ಟೊಂದು ಸಾಮ್ಯವಿದೆ ಪ್ರಧಾನಿ ಇಂದಿರಾಜಿ ಮತ್ತು ಜೇಷ್ಠೆಯರ ನಡುವೆ! ಇಂದಿರಾಜಿಯ ಮಗ ಸಂಜಯಗಾಂಧಿ ಜೇಷ್ಠೆಯ ಮಗ ಅಧರ್ಮನಿಗಿಂತ ಯಾವುದರಲ್ಲಿ ಕಡಿಮೆ! +ಇಂಥ ಆಲೋಚನೆಗಳಿಂದ ಉದಯೋನ್ಮುಖ ಬರಹಗಾರನಾದ ಶಾಮಾ ಶಾಸ್ತ್ರಿ ಸ್ವಜಾತಿ ಪ್ರೇಮದಿಂದಾಗಿ ಇಂದಿರಾಜಿ ಪಾಳೆಯವನ್ನು ಬೆಂಬಲಿಸುವುದೋ, ವಿರೋದಿ ಪಾಳೆಯ ಬೆಂಬಲಿಸುವುದೋ ಎಂಬ ಗೊಂದಲದಲ್ಲಿ ಬಿದ್ದು ವಿಲಿವಿಲಿ ಒದ್ದಾಡುತ್ತಿದ್ದನು. ಅದರೆ ಯಾವುದೇ ತಾತ್ವಿಕ ಬಿಕ್ಕಟ್ಟು, ವೈಚಾರಿಕ ನೆಲೆಗಟ್ಟು ಅವನಿಗೆ ಇರಲಿಲ್ಲ. ನಿರಾಕರಣೆಯೇ ಅವನ ಮನಸ್ಸಿನ ಪ್ರಮುಖ ಬದಲಾವಣೆಯಾಗಿತ್ತು. ನೆನ್ನೆ ಮಾರ್ಕ್ಸ್‌ವಾದವನ್ನು ಪ್ರಸ್ತಾಪಿಸಿದ. ಇವತ್ತು ಲೋಹಿಯವಾದ ಪ್ರೀತಿಸುವನು. ನಾಳೆ ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಹಿಂದೂ ಸದ್ಧರ್ಮ ಸಿಂಹಾಸನವನ್ನು ಪ್ರೀತಿಸಬಹುದಾಗಿದ್ದನು. ಗಾಳಿಬೀಸುವ ಕಡೆ ಕೊಡೆ ಹಿಡಿಯುವುದರಲ್ಲಿ ಕಳೆದುಕೊಳ್ಳುವ ಗಂಟಾದರೂ ಏನು! +ಜಾರ್ಜ್ ಫೆರ್ನಾಂಡಿಸರ ಬಗ್ಗೆ, ಕಿಷನ್ ಪಾಟ್ನಾಯಕರ ಬಗ್ಗೆ ಅಲ್ಲಲ್ಲಿ ಚೌಚೌ ಓದಿಕೊಂಡಿದ್ದ ಅವನು ಅವರು ಸಿಂಪಲ್ಲಾಗಿ ಬದುಕುತ್ತಿದ್ದಾರೆನ್ನುವುದೇ ಅವನಿಗೆ ಇಷ್ಟವಾಗಿತ್ತು. ಡೌಲಾಗಿರುವವರ +ಬಗೆಗಿನ ಹೊಟ್ಟೆ ಕಿಚ್ಚಿಗಾಗಿಯೇ ಸಿಂಪಲ್ ಆಗಿಗಿರುವವರು ಸಿಂಪಲ್ಲಾಗಿರುವವರನ್ನು ಬೆಂಬಲಿಸುತ್ತಾರೆ. ಇದು ಈ ಖಂಡದ ಹಣೆಬರಹ. +ಇಂಥ ದಿನ, ಇಂಥ ರಾತ್ರಿ ಇಂಥ ಕಡೆ ಆಗಮಿಸಿ ಬದುಕಿನ ಉತ್ತರೋತ್ತರ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಾ ಎಂದು ಅನಸೂಯಳಿಗೆ ತಿಳಿಸುವುದ ಹಾಗೆ ಎಂಬ ಸಮಸ್ಯೆ ಪ್ರಧಾನವಾಗಿ ಕಾಡತೊಡಗಿತು. ಶೌಚವೊಂದನ್ನು ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಅನಸೂಯಳ ಮನೆಯನ್ನೇ ಅಶ್ರಯಿಸುತ್ತಿದ್ದ ಆ ಭೂಪತಿ ರಂಗ ಭಯೋತ್ಪಾದಕನಂತೆ ಮನೆಯೊಳಗೇ ಅಡಗಿ ಕೂತಿರುತ್ತಿದ್ದ. ಹೊರಗೆ ಹೋದ ಪಕ್ಷದಲ್ಲಿ ಅನಸೂಯ ತನ್ನ ಸ್ರಕ್ಚಂದನಲೇಪಿತ ಮುಖವನ್ನು ನೋಡಿಬಿಟ್ಟರೆ ಹೇಗೆ? ಭಗದತ್ತನಂಥ ಆಕೆ ತನ್ನ ಕಣ್ಣುಗಳಿಂದ ನಾರಾಯಣಾಸ್ತ್ರ ಪ್ರಯೊಗಿಸಿದರೆ ಹೇಗೆ? ಆ ಮಹಾಸ್ತ್ರವನ್ನು ತನ್ನ ಕೈಯಿಂದ ಸೆಳೆದು ಹೂಮಾಲೆಯನ್ನು ಧರಿಸಲು ತಾನೇನು ಶ್ರೀಕೃಷ್ಣ ಪರಮಾತ್ಮನಲ್ಲ. +ಊಹಾಸುರನಾದ ಶಾಮನಂಥವಳಲ್ಲ ಅನಸೂಯ… ಸ್ತ್ರೀ ಚಂಚಲ ಸ್ವಭಾವದವಳಲ್ಲ; ಸ್ತ್ರೀಯರ ಬುದ್ಧಿ ಮೊಣಕಾಲ ಕೆಳಗಲ್ಲ. ಅದೇನಿದ್ದರೂ ಗಂಡಸರಿಗೆ ಸಂಬಂಧಪಟ್ಟವುಗಳು ಎಂಬುದನ್ನು ಪ್ರೂವ್ ಮಾಡಲೋಸುಗವೇ ತಾನು ಅವತರಿಸಿರುವುದು ಎಂಬಂತಿದ್ದಳು ಆಕೆ… ಊರ್ಮಿಳೆಯಂತೆ ಆಕೆ ಪ್ರತಿಕ್ಷಣ ಶಾಮುವಿನಿಂದ ಬರಬಹುದಾದ ಮೇಘ ಸಂದೇಶಕ್ಕೆ ಕಾಯುತ್ತಿದ್ದಳು… +“ನಿಮ್ಮಾವ ರಾಘೂಗೆ ಪತ್ರಬರೆಯೋಣವೇನೇ… ಆ ಬ್ರಾಹ್ಮಣ ಹುಡುಗ ನಿನ್ನ ಮದ್ವೆಮಾಡ್ಕೊಳ್ತಾನೆ ಎಂಬ ಭ್ರಮೆಯಲ್ಲಿ ವಯಸ್ಸು ಕಳೀಬೇಡ… ” ರುಕ್ಕಮ್ಮ ತನ್ನ ತಮ್ಮನ ವಿಳಾಸವನ್ನು ಅಂಗೈಯಲ್ಲಿಟ್ಟುಕೊಂಡು ಮಗಳನ್ನು ಕೇಳುತ್ತಿದ್ದಳು… +ತನ್ನನ್ನು ತಾನೆ ಅಲಕ್ಷಿಸಿಕೊಂಡು ಕಾದ ಕಾವಲಿ ಮೇಲಿನ ನೀರ ಹನಿಯಂತೆ ತಳಮಳಿಸುತ್ತಿರುವ ಮಗಳನ್ನು ನೋಡಿ ಕರುಳನ್ನು ಕತ್ತರಿಸಿಕೊಳ್ಳುತ್ತಿದ್ದಳು. +“ನನ್ನ ಶಾಮು ಅಂದ್ರೆ ಏನ್ತಿಳ್ಕೊಂಡೀಯಮ್ಮಾಽಽ… ಇಂದಲ್ಲ ನಾಳೆ ಬಂದು ನನ್ನ ಕೈಹಿಡ್ದೇ ಹಿಡೀತಾನೆ” ಅನಸೂಯ ಗಂಟಲಿಂದೀಚೆಗೆ ಹೇಳುತ್ತಿದ್ದಳು +“ತಾಯೀನೆ ಸರ್ವಸ್ವ ಅಂತ ತಿಳಿಕೊಂಡಿರೋ ಅವ್ನು ನಿನ್ನ ಹೇಗೆ ಮದ್ವೆ ಆಗ್ತಾನಮ್ಮ?” ಕಣ್ಣಿನತುದಿಯಿಂದ ತುಷಾರ ಹಾರವನ್ನು ಚಿಮ್ಮುತ್ತ ತಾಯಿ ಹೇಳಿದಳು. “ಅದೂ ಅಲ್ದೆ ನಾವು ಕಪ್ಪು ಕುಲದೋರು. ಮಗಳ ಮದ್ವೆ ಧಾಂ ಧೂಂ ಅಂತ ಮಾಡಬೇಕಾದವ್ರೆ ದೇಶಾಂತರ ಬೇರೆ ಹೋಗಿದ್ದಾರೆ” ಮತ್ತೊಂದು ತುಶಾರದ ಹನಿ ಹೊಳೆಯಿತು. ನಿನ್ನ ರಾಘುಮಾಮಗೆ ಪತ್ರ ಬರೆದ್ರೆ ಎಲ್ಲಾ ಸರಿಹೋಗ್ತದೆ”. +“ಶಾಮುನಿಂದ ಸ್ಪಷ್ಟ ನಿರ್ಧಾರ ತಿಳ್ಕೊಂಡ ಮೇಲೆ ನೀನು ನನ್ನ ಕೋಡುಗಲ್ಲಿಗೆ ಕಟ್ಟಿಹಾಕಿದ್ರೂ ಸರಿಯೇ… ಕಾಲ ಮಿಂಚಿಲ್ಲ… ಕಾಯೋಣ.” +ಮರ್ಯಾದಾ ಪುರುಷೋತ್ತಮನ ಎಡಪಾದದ ತುದಿ ಬೆರಳುಗಳು ಎಂದು ಸೋಕುವುವೋ! ಕಾರ್ಗಲ್ಲು ಎಂದು ಸ್ತ್ರೀ ರೂಪ ಪಡೆಯಿತೋ! +ಆ ಶ್ರೀಪಾದದ ಸುದ್ದಿಲ್ಲ, ಸುಳಿವಿಲ್ಲ. ಹೀಗೆ ಎಷ್ಟು ದಿನಾಂತ ಕಾಯುವುದು! ಮಕರಂದ ಹಿಂಗಿ ಹೋಗುವ ಮೊದಲೆ ಕಾಣಿಸಿಕೊಳ್ಳಬಾರದೆ ತನ್ನ ಪ್ರೀತಿಯ ದುಂಬಿ! +ಅನಸೂಯ ಕೈಕಟ್ಟಿ ಕುಳಿತುಕೊಂಡುದುದಿಲ್ಲ… +ಬಾಡುವ ಕ್ಷಣ ಮನಗಂಡ ಪುಷ್ಪ ಇದ್ದುದರಲ್ಲಿಯೇ ಅಲ್ಪಸ್ವಲ್ಪ ಅಲಂಕರಿಸಿಕೊಂಡು ಚಲಿಸತೊಡಗಿದಂತೆ ಅನಸೂಯಾ ಯಾವುದಾದರೊಂದು ಪುಸ್ತಕ ಕೊಡುವ ನೆಪದಲ್ಲಿ ಶಾಸ್ತ್ರಿಗಳ ಮನೆಕಡೆ ನಡೆದಳು. +ಪ್ರತಿ ಹೆಜ್ಜೆ ಅಳುಕಿತು. ಎದೆಯ ದವದವ ಹೇಳತೀರದು. ಕಟ್ಟೆಯ ಬಂಧನದಲ್ಲಿದ್ದ ತುಳಸೀಗಿಡ ಮಿಸುಕಿ ಬಂದೆಯಾ ತಾಯಿ ಬಾ ಬಾ ಎಂದು ಸ್ವಾಗತಿಸಿತು… +ಆಕೆ ಹೋಗುವುದಕೂ ವಿಧವೆ ಹೊರಬರುವುದಕ್ಕೂ ಸರಿಹೋಯಿತು. +“ಶಾಮನಿರುವನೇನಮ್ಮಾಽಽ…” ಅನಸೂಯಳ ದ್ವನಿಯಲ್ಲಿ ಶಕ್ತಿ ಇರಲಿಲ್ಲ. +ಆ ಹುಡುಗಿ ತನ್ನ ಪ್ರಾಣಪದಕವನ್ನು ಎಲ್ಲಿ ಅಪಹರಿಸಿಕೊಂಡು ಹೋಗಿಬಿಡುವಳೋ! ರಾಮ ರಾಮಾಽ… ಮನೆಗೇ ಬಂದುಬಿಟ್ಟಿರುವಳಲ್ಲಾ! ಹಾಳಾದವಳು… ಅಲುಮೇಲಮ್ಮ ಹೌಹಾರಿದ್ದು ತಡವಾಗಲಿಲ್ಲ… ಚೇತರಿಸಿ ಕೊಂಡದ್ದೂ ತಡವಾಗಲಿಲ್ಲ… +“ನಮ್ಮ ಮನೆಗೆ ಬರಲು ನಿನ್ನ ಮನಸ್ಸು ಹೇಗೆ ಒಪ್ಪಿತಮ್ಮಾ… ಅನಸೂಯಾಽ… ಇದ್ದೊಬ್ಬ ಮಾಗನನ್ನು ನಿನ್ನ ಪಾಲುಮಾಡಿ ಹೇಗೆ ಬದುಕಲೇ ತಾಯಿ… ಕೌಟಿಲ್ಯನ ಅರ್ಥಶಾಸ್ತ್ರ ಓದುವ ನೆಪದಲ್ಲಿ ನಿನ್ನ ಅವನು ಗುಟ್ಟಾಗಿ ಕಾಣುವುದು… ನನ್ನ ಮರೆಯುವುದು… ಎಲ್ಲಾ ನನಗೆ ಗೊತ್ತು. ಮಗಳೇ… ಮಗ ತನ್ನ ತಾಯಿಯನ್ನು ಪ್ರೀತಿಸುವುದು ಸುಶಿಕ್ಷಿತೆಯಾದ ನೀನೆ ಅರ್ಥಮಾಡಿಕೊಳ್ಳದಿದ್ದರೆ ಹೇಗಮ್ಮಾ? ಅವನಿಂದ ದೂರ ಇರೋಕೆ ಇನ್ನಾದರೂ ಪ್ರಯತ್ನಿಸಿ ಪುಣ್ಯಕಟ್ಟಿಕೊಳ್ಳಬಾರದೇನೆ?” ತಾಯಿ ನಾಲಿಗೆ ಮೇಲೆ ಕರುಳು ತಂದುಕೊಂಡಳು ಕಣ್ಣುಗಳಲ್ಲಿ ಸೆರಗೊಡ್ಡಿದಳು. +ಹೃದಯ ವಿದ್ರಾವಕ ಕಾದಂಬರಿಯೆ ಮಾತಾಡುತ್ತಿರುವಂಥ ಅನುಭವವಾಯಿತು ಅನಸೂಯಾಳಿಗೆ. +“ಅಮ್ಮಾ, ಪರಸ್ಪರ ಪ್ರೀತಿಸಿದವರ ಸಂಕಟ ನಿಮಗೆ ಅರ್ಥವಾಗುವುದಿಲ್ಲವೇನು?” +“ಅದೆಲ್ಲ ಅರ್ಥವಾಗಿದ್ದರೆ ನಾನೇಕೆ ಹೀಗೆ ಅನಾಥಳಂತೆ ಮಾತಾಡ್ತಿದ್ದೆ… ನನಗೆ ಅರ್ಥ ಆಗೋದು ಒಂದೆ… ಅದು ನನ್ನ ಮಗನ ಬದುಕು ಮಾತ್ರ… ” +“ಆದರೆ, ನೀವು ಆತ್ಮಹತ್ಯ ಮಾಡ್ಕೋ ಅಂತ ಹೇಳಲಿಲ್ಲವಲ್ಲ… ಅದೇ ನನ್ನ ಪುಣ್ಯ” +“ನಮ್ಮಂಥವರ ಕುಟುಂಬದ ಸನಾತನ ಧರ್ಮ ಉಳಿಸೋಕೆ ನೀನು ಆತ್ಮಹತ್ಯೆ ಮಾಡಿಕೊಂಡ್ರೂ ತಪ್ಪಲ್ಲ ಮಗಳೇ… ಅದೆಲ್ಲ ಯಾಕೆ… ನೀನು ಶಾಮೂನ ಮರೆತು ಬೇರೊಬ್ಬ ಗಂಡನ್ನು ಮದುವೆಯಾಗಿ ಸುಖವಾಗಿರಬಹುದಲ್ಲವೇ?” +“ಬೇರೊಂದು ಮದುವೆಯಾಗೋಕು ಆತ್ಮಹತ್ಯೆ ಮಾಡಿಕೊಳ್ಳೋಕು ನಡುವೆ ಅಂಥ ವ್ಯತ್ಯಾಸವೇನಿದೆ ಹೇಳಿ” +“ಅದು ನಿನಗೆ ಬಿಟ್ಟಿದ್ದು ಮಗಳೆ ಬಾಯಿಂದ ನುಡಿದು ನಾನ್ಯಾವ ನರಕಕ್ಕೋಗ್ಲಿ…? ನಿನ್ಗೆ ಹೇಗೆ ತಿಳಿವುದೋ ಹಾಗೆ ಮಾಡು… ಆದರೆ ನಿನ್ನ ನೆರಳು ಬೀಳಿಸಿ ನಮ್ಮ ಮನೇನ ಅಪವಿತ್ರ ಮಾಡಬೇಡಾಂತ ಬೇಡಿಕೊಳ್ತಿದೀನಿ” ಅಲುಮೇಲಮ್ಮ ತನ್ನ ನಾಲಿಗೆ ಮೊನಚಿನ ಬಗ್ಗೆ ತಾನೇ ದಿಗ್ಭ್ರಮೆಗೊಂಡಳು… ಇನ್ನೊಂದು ಮನಸನ್ನು ಎಲ್ನೋಯಿಸಿದೆನೋ! ಇನ್ನೊಂದು ಹೆಣ್ಣಿನ ನಿಟ್ಟುಸಿರಿಂದ ತನ್ನ ವೈಧವ್ಯಕ್ಕೆ ಎಂಥ ಕಲಂಕ ಬಂದೀತೋ! ಆ ಸಾಧ್ವಿ ಅಳುಕಿದಳು… ಅಳುಕುತ್ತ ಅಳುಕುತ್ತ ಒಳಗೆ ಎರಡು ಹೆಜ್ಜೆ ಇಟ್ಟಳು… ಒಂದು ಹೆಜ್ಜೆ ಮುಂದಿಟ್ಟು ಬಾಗಿಲು ಮುಂದಕ್ಕೆ ಎಳೆದಳು…. +ಮುಚ್ಚುವ ತೆರೆಯುವ ನೋವಿನ ಪರಿಚಯವುಳ್ಳ ಬಾಗಿಲು ನಿಶ್ಶಬ್ದವಾಗಿ ಮುಚ್ಚಿಕೊಂಡಿತು… +ಆನಸೂಯಳ ಸ್ತ್ರೀತನಕ್ಕೆ ಅವಮಾನವಾಯಿತು. ನಿರ್ಬಂಡೆಯಂತೆ ಹೊಯ್ದಾಡುತ್ತಿದ ಹೃದಯ ಹೂವಿನಂತೆ ಅರಳಿತು. ಮತ್ತೊಂದು ಕ್ಷಣ ಕಲ್ಲಾಯಿತು. +ಥೂ ಸ್ತ್ರೀ ಜನ್ಮಕ್ಕಿಷ್ಟು ಬೆಂಕಿ ಬೀಳಲಿ. ಈ ಸಮಾಜದಲ್ಲಿ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಅರ್ಥಮಾಡಿಕೊಳ್ಳಲ್ಲಿಕ್ಕೆ ಆಸ್ಪದವಿಲ್ಲ… ಅರ್ಥ ಮಾಡಿಕೋ ಅಂಥ ಗಂಡಸಿಗೆ ಒತ್ತಾಯಿಸುವ ಹಕ್ಕು ತನಗೆಲ್ಲಿಯದು!… +ಶಾಮಾ ನೀನೆಂಥವನೆಂದು ನನಗೆ ಗೊತ್ತಾಗಿದ್ದರೆ ನಿನ್ನ ಸ್ಪರ್ಶದಿಂದ ಈ ದೇಹವನ್ನು ಅಪವಿತ್ರ ಮಾಡಿಕೊಳ್ಳುತ್ತಿದ್ದನೇನೋ? ನಿನ್ನ ಉದ್ದುದ್ದ ಮಾತುಗಳಿಗೆ ಮರುಳಾಗುತ್ತಿದ್ದೆನೇನು! ರಾಘು ಮಾಮನೇ ತನಗೆ ಸರಿಯಾದ ದಿಕ್ಕೆಂದು ಭಾವಿಸಿದಳು. +ಆಕೆಯ ದುರದೃಷ್ಟವೆಂಬಂತೆ ರಾಘು ಮಾಮನ ವಿಳಾಸ ಮತ್ತೆ ತಪ್ಪಿಸಿಕೊಂಡು ಬಿಡಬೇಕೇ! ಅದರ ಹುಡುಕಾಟದಲ್ಲಿ ಇನ್ನೇನು ತಾಯಿ ಮಗಳೀರ್ವರು ಮುಳುಗೇಬಿಟ್ಟರು ಎನ್ನುವಾಗ ಪಕ್ಕದ ಮನೆ ಹುಡುಗ ಸಾಂಬ ಅಬ್ದುಲ್‌ರಝಾಕ್‌ನಂತೆ ಕಾಣಿಸಿಕೊಂಡ. +“ಅಕ್ಕಾ… ನಿನ್ಗೊಂದು ಸೀ ಸುದ್ದಿ ತಂದೀನಿ” ಎಂದನಾ ಪೋರ. +“ಅದೇನದು ಹೇಳೋ” ಎಂದಳು. +“ಈಗಲಾದ್ರು ನನಗೊಂದೆಲ್ಡು ಪಪ್ಪಿ ಕೊಟ್ರೆ ಅದೇನೆಂದು ತಿಳಿಸೇಸೈ ಸಾರಥಿ. ಪಪ್ಪಿ ಕೊಡು ಅತಿ ಜಾಗ್ರತಿ” ಸಂಬನಿಗೊಂದು ಪ್ರಾಚೀನ ಆಸೆಯಿತ್ತು. ಅದೇನೆಂದರೆ ಓಣಿಯ ಪ್ರಸಿದ್ಧ ಸುಂದರಿಯಾದ ಆಕೆಯಿಂದ ಮುದ್ದಿಸಿಕೊಳ್ಳಬೇಕು! ತನ್ನ ಸಿಂಬಳಾಕೃತ ಕಪ್ಪನೆಯ ಮೂತಿಗೆ ಆಕೆಯಿಂದ ಮುದ್ದುಕೊಡಿಸಿಕೊಂಡು ಕೃತಾರ್ಥನಾಗಬೇಕೆಂಬುದು. +ಶ್ರೀರಾಮಚಂದ್ರನ ಮುದ್ರೆಯುಂಗುರ ಮುಷ್ಟಿಯಲ್ಲಿ ಹಿಡಿದುಕೊಂಡು ಬಾಲಾಂಜನೇಯನಂತೆ ನಿಂತಿರುವ ಸಾಂಬನಿಗೆ ಕೊಡೋ ಎಂದು ಪರಿಪರಿಯಾಗಿ ಪೀಡಿಸಿದಳು. ಆದರೆ ಆ ಮನುಷ್ಯಕುಲದ ತಾತಾಶ್ರೀಯು ಮುಷ್ಟಿ ಬಿಚ್ಚಿದರೆ ತಾನೆ! ತಾನು ಕೇಳಿದ್ದನ್ನು ಕೊಡದಿದ್ದರೆ ಕೊಡುವ ಪೈಕಿಯಲ್ಲ ಎಂದುಕೊಂಡಳು. ತಾನಾದರೋ ಸೊಸೈಟಿ ಮೂಲಕ ಸಕ್ಕರೆ ಕೊಡುವಂತೆ ಕಂಟ್ರೋಲಾಗಿ ಮುದ್ದು ಕೊಟ್ಟು ಪಡೆದ ಅನುಭವ ಉಳ್ಳವಳು. ತನ್ನ ಸೊಸೈಟಿಯ ಏಕಮಾತ್ರ ಗಿರಾಕಿ ಎಂದರೆ ಶಾಮನೊಬ್ಬನೆ. ಈ ಪೋರನಿಗೆ ಕೊಟ್ಟರೆ ತಾನು ಶಾಮಸುಂದರನಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಧರ್ಮ ಸಂಕಟಕ್ಕಿಟ್ಟುಕೊಂಡಿತು. ಪೋರನ ಮೂತಿ ಎಂಬ ಪಾರಿಜಾತ ಪುಷ್ಪ ನೋಡಿದಳು. ಜಗತ್ತಿನ ಎಲ್ಲಾ ಜನಾಂಗಗಳಿಂದ ಪಡೆದ ಹತ್ತಾರು ಶಾಂಪಲ್‌ಗಳಿಂದ ಮಾಡಲ್ಪಟ್ಟಂತಿರುವ ಪರ್ಸನಾಲಿಟಿವುಳ್ಳವನು. ದೇಹದ ಒಂದೊಂದು ಅಂಗ ಒಂದೊಂದು ಮಾದರಿಯೇ ಸರಿ! +“ಸಿಂಬಳ ಒರೆಸಿಕೊಂಡರೆ ಕೊಡುವೆನೈ ಮುದ್ದು ಸಾರಥಿ; ಒರೆಸಿಕೋ ಅತಿ ಜಾಗ್ರತಿ” ಎಂದು ನಾಟಕೀಯವಾಗಿ ನುಡಿದಳು. +“ಯಾಕಾಗಬಾರದು ಕನ್ಯಾಮಣಿ ನನ್ನ ಅರಗಿಣಿ” ಎಂದು ಅವನು ಅಷ್ಟೇ ನಾಟಕೀಯವಾಗಿ ನುಡಿದನು. ಬಲಗೈಯಿಂದ ಎಡ ಹೊಳ್ಳೆಯ ಸಿಂಬಳವನ್ನು ಎಡ ಗಲ್ಲಕ್ಕೂ ಬಲಹೋಳ್ಳೆಯ ಸಿಂಬಳವನ್ನು ಎಡಗೈಯಿಂದ ಬಲಗಲ್ಲಕ್ಕೂ ಲೇಪಿಸಿ ಅದ್ಭುತವಾಗಿ ಕಂಗೊಳಿಸಿದನು. +ಅದನ್ನು ನೋಡಿ ರುಕ್ಕಮ್ಮನಿಗೆ ನಗು ಬಂತಾದರೂ ನಗಲಿಲ್ಲ. ಆಕೆ ಎಂದೋ ನಗುವ ಹಕ್ಕನ್ನು ಕಳೆದುಕೊಂಡಿದ್ದಳು. ಯಾವ ಸೌಭಾಗ್ಯಕ್ಕೆ ತಾನು ನಗಬೇಕು! +ಅನಸೂಯಾಳಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಜೀವಮಾನದಲ್ಲಿ ತಾನೇಂದೂ ಅಳಲೇಕೂಡದೆಂದು ಪೂರ್ವಭಾವಿಯಾಗಿ ನಿರ್ಧರಿಸಿದ್ದಳು. ಯಾವನೋ ತನಗೆ ಮೋಸ ಮಾಡುವುದೆಂದರೇನು? ತನಗೆ ತಾನೇ ಮೋಸ ಮಾಡಿಕೊಂಡಂತಯೇ ಲೆಕ್ಕ. ಈ ದೇಶದಲ್ಲಿ ಹೆಣ್ಣು ತನ್ನ ಹೃದಯ ಕಲ್ಲು ಮಾಡಿಕೊಂಡೇ ಬದುಕಬೇಕು. +“ಮೂಗಿನೊಳಗಿನ ಸಂಪತ್ತಿನಿಂದ ಮೂತಿ ಅಲಂಕರಿಸಿಕೊಂಡಿರುವ ಸಾಂಬ ನೀನು ಕೇರಿಗೆಲ್ಲ ಹುಂಬ” ಎಂದಳು ಕಾವ್ಯಾತ್ಮಕವಾಗಿ. ಎಷ್ಟಿದ್ದರೂ ಆಕೆ ಶಾಮುವಿಗೆ ಕಾವ್ಯ ಗುರು ಅಲ್ಲದೆ, ಆಲಹಳ್ಳಿಗೆ ಶಿವತೀರ್ಥನ್ ಇದ್ದಂತೆ; ಕುಂವೀಗೆ ಮಲ್ಲೇಪುರಂ ಇದ್ದಂತೆ. +ತುಂಬಿದ ಕೊಡ ನೀರಿನಿಂದ ಅವನ ಮೂತಿ ತೊಳೆದು ತನ್ನ ಸೆರಗಿನಿಂದ ಒರೆಸಿ ಅದರ ಮೇಲೊಂದಿಷ್ಟು ಪಾಂಡ್ಸು ಪೌಡರು ಲೇಪಿಸಿ ಲಕಲಕ ಹೊಳೆಯುವಂತೆ ಮಾಡಿ ಬಲಗಲ್ಲಕ್ಕೊಂದು ಎಡಗಲ್ಲಕ್ಕೊಂದು ಲೊಚ್ ಲೊಚ್ ಮುದ್ದು ಕೊಟ್ಟು ಕೃತಾರ್ಥಳಾದಳು. ಆ ಪೋರನಿಗಿಂಥ ಎಷ್ಟೋ ಚಂದ ಇರುವ ತಮಗೂ ಮುದ್ದು ಕೊಡು ಅಂತ ಮೂತಿ ಮೂರುಕುಟ್ಟಗಳಲ್ಲಿದ್ದ ಮೂಷಕಗಳು ಇದ್ದಕ್ಕಿದ್ದಂತೆ ಸರಸರ ಹರಿದಾಡಿ ಮಣ್ಣು ಉದುರಿಸಿದವು. +“ಜಗದೇಕ ಸುಂದರಿಯಾದ ನಿನ್ನಿಂದ ಮುದ್ದು ಪಡೆದು ಅತಿಲೋಕಸುಂದರನಾದ ನಾನು ಪಾವನನಾದೆನೈ ಕಾಂತೆ! ತಗೋ ಶಾಮು ಮಾಮ ಕೊಟ್ಟಿರುವ ಈ ಚೀಟಿಯನ್ನು ಅತಿ ಗುಣವಂತೆ” ತನ್ನ ಮುಷ್ಟಿ ಎಂಬ ಓಪಿಡಿ ಜನರಲ್ ವಾರ್ಡಿನಲ್ಲಿ ಮರಣೋನ್ಮುಖನಾಗಿದ್ದ ಚೀಟಿಯನ್ನು ಅದರ ವಾರಸುದಾರಳಾದ ಅನಸೂಯಾ ಎಂಬ ವಾಸವದತ್ತೆಗೆ ಒಪ್ಪಿಸಿ ರುಕ್ಕಮ್ಮ ಕೂಡ ಮಾಡಿದ ಬೆಲ್ಲದ ಉಂಡೆಯನ್ನು ಶಿವಲಿಂಗೋಪಾದಿಯಲ್ಲಿ ದವಡೆಯ ಶೂನ್ಯಸಿಂಹಾಸನದಲ್ಲಿ ಪ್ರತಿಷ್ಠಾಪಿಸಿಕೊಂಡು ರೆವ್ವನೆ ಹೊರ ಓಡಲು ದೇವತೆಗಳು ಆಗಸದಿಂದ ಪುಷ್ಪ ಮಳೆ ಕರೆವಂತೆ ತೊಲೆ ಜಂತಿ ಸಂದುಗಳಿಂದ ಮೂಷಕ ರೂಪಿ ಯಕ್ಷ ಗಂಧರ್ವರು ಮತ್ತೆ ಮತ್ತೆ ಮಣ್ಣು ಉದುರಿಸುತ್ತಿದ್ದರು. +ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಚೀಟಿಯಲ್ಲಿ ಅಕ್ಷರಗಳನ್ನು ಅನುಕ್ರಮವಾಗಿ ಜೋಡಿಸಿ, ಡಾ. ಎಂ. ಎಂ. ಕಲಬುರ್ಗಿಯವರು ಕದಂಬರ ಕಾಲದ ಶಾಸನ ಓದುವಂತೆ ಓದಿದಳು. ಅನಸೂಯ… +ಕ್ರಾಪಿಗಿಂತ ಜುಟ್ಟಿಗೇ ಪ್ರಥಮ ಪೂಜೆ ಸಲ್ಲಿಸಲಾರಂಭಿಸಿರುವ ಶಾಮನೆಂಬ ವರರತ್ನ ಅದರಲ್ಲಿ ಕೆತ್ತಿರುವ ಅಕ್ಷರಗಳನ್ನು ತಾಯಿಗೆ ವಿವರಿಸಿದಳು. ಹೆತ್ತ ಮಹಾಮಾತೆಯನ್ನು ಸದಾ ಅಂಟರು ಪುಳುಕಿಯಂತೆ ಅಂಟಿರುವಂಥ ಆ ಉದಯೋನ್ಮುಖ ಕವಿ ಪತ್ರ ಬರೆಯುವಾಗಿನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಿದಳು. ನಾಡಿನ ಮುಖ್ಯ ಪತ್ರಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡ ಕವಿತೆಯನ್ನು ಅಭಿನಂದಿಸಿ ತಾನು ಕೊಟ್ಟ ’ಮೇಡಿನ್ ಚೈನಾ’ದ ಹೀರೋ ಪೆನ್ನಿನಿಂದಲೇ ಪತ್ರದ ಮೊದಲಿನ ನಾಲ್ಕು ಸಾಲುಗಳನ್ನು; ವಾಕ್ಯಂ ರಸಾತ್ಮಕಂ ಕಾವ್ಯಂ ಎಂದು ವಿವರಿಸಿದ್ದಕ್ಕೆ ಖುಷಿಗೊಂಡು ಅವರ ತಾನ ಖುಷಿಯಿಂದ ಕೊಟ್ಟಿದ್ಧಂಥ ಫೋರ್ಟ್ ಪೆನ್ನಿನಿಂದ ಕೊನೆಯ ಎರಡು ಸಾಲುಗಳನ್ನು ಅದು ಹೇಗೆ ಬರೆದಿರುವನು ನೋಡು ಎಂದು ವಿವರಿಸಿದಳು. +ರುಕ್ಕಮ್ಮ ಪತ್ರವನ್ನು ಎಲ್ಲ ದೃಷ್ಟಿಕೋನಗಳಿಂದ ನೋಡಿದಳು. ಬರಹಕ್ಕೆ ಬಳಸಿರುವ ಇಂಕು ಒಂದೇ ಆಗಿದ್ದರೂ ವಾಕ್ಯಗಳ ನಡುವೆ ಅಂತರಂಗದ ಅಗಾಧತನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಗಳನ್ನು ಯಾವ ಭಾವನೆಗಳಿಂದ ಅಭಿನಂದಿಸುವುದು! ಇಷ್ಟೊಂದು ಜಾಣ ಮಗಳು ತಾನು ಪ್ರೀತಿಸಿದವನನ್ನು ಕೈಹಿಡಿದರೆ ಅದಕ್ಕಿಂತ ಮಿಗಿಲಾದ ಸಂತೋಷ ಯಾವುದು!. ಆ ದೇವರೇ ಮದ್ಯಸ್ಥಿಕೆ ವಹಿಸಿ ಈಕೆ ಮತ್ತು ಆತನ ನಡುವೆ ಇರುವ ಅಂತರದ ಅಗಾಧತೆಯನ್ನು ಕಡಿಮೆ ಮಾಡಬಾರದೇಕೆ? ಹೀಗೆ ಯೋಚಿಸುತ್ತ ಹನಿಗೂಡಿದ ರುಕ್ಕಮ್ಮನ ಕಣ್ಣುಗಳಾದರೂ ಎಂಥವು? ಆ ಕಣ್ಣುಗಳ ಬೆಳಕಿನಲ್ಲಿ ರುದ್ರನಾಯಕ ದೇವಿಯ ಉಪಾಸನೆ ಮಾಡುತ್ತಿದ್ದ. ಆ ಕಣ್ಣುಗಳ ಬೆಳಕಿನಲ್ಲಿ ಸ್ನಾನಮಾಡಿ ರುದ್ರ ನಾಯಕ ಕುಜಗ್ರಹದ ಶಕ್ತಿಯನ್ನು ಆವಾಹಿಸಿಕೊಳ್ಳುತ್ತಿದ್ದ. +ರುಕ್ಕೂ ಸದಾ ನಿನ್ನ ಕಣ್ಣುಗಳು ಹೀಗೇ ಮಿನುಗುತ್ತಿರಬೇಕೆಂದು ಗದ್ಗದಿತನಾಗಿದ್ದ. ಅಂಥ ಕಣ್ಣುಗಳಲ್ನೀರು ತುಂಬುವುದೆಂದರೇನು? +ಅಂಥ ಕಣ್ಣುಗಳಿಂದ ಒಂದು ಹನಿ ನೆಲಕ್ಕುರುಳಿದರೆಲ್ಲಿ ಸಚರಾಚರಗಳು ದುಃಖದ ಕಡಲಲ್ಲಿ ಮುಳುಗುವುವೋ ಎಂದು ಹೆದರಿದ ಅನಸೂಯ ಸೆರಗಿನ ಚುಂಗನ್ನು ತಾಯಿಯ ಕಣ್ಣುಗಳಿಗೆ ಅಂಟಿಸಿದಳು. +“ಯಾಕಮ್ಮಾ ಕಣ್ಣಲ್ಲಿ ನೀರು ತಂದ್ಕೊಂಡಿ? ನೀನು ಬೇಡಾಂದ್ರೆ ನಾನ್ ಹೋಗದಿಲ್ಲ ಬಿಡು” ಕೈಯಲ್ಲಿದ್ದ ಚೀಟಿಯನ್ನು ಹರಿದು ಚೂರು ಚೂರು ಮಾಡಲೆಂದು ಮಡಿಚಿದಳು. ಆಕೆ ಹರಿಯದಿದ್ದಾಗ ತೊಲೆ ಸಂದಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಿದ್ದ ಮೂಷಕಕಕ್ಕೆ ನಿರಾಸೆಯಾಯಿತು. +ಶಾಮು ಆಕೆಗೆ ಬರೆಯುತ್ತಿದ್ದ ಎಷ್ಟೋ ಪ್ರೇಮಪತ್ರಗಳು ಉಪಾಯದಿಂದ ಅಪಹರಿಸಿ ಒಯ್ದು ತನ್ನ ಪ್ರಿಯತಮೆಗೆ ಒಪ್ಪಿಸಿ ಸಂತೋಷಪಡುವ ಪರಿಪಾಟ ಇಟ್ಟುಕೊಂಡಿತ್ತು. ಪ್ರತಿಯೊಂದು ಪ್ರೇಮಪತ್ರವನ್ನು ಮೊದಲದಿನ ಓದಿದ ನಂತರ ಅದನ್ನು ತನ್ನ ಸುಂದರ ವಕ್ಷಸ್ಥಳದಲ್ಲಿ ಭದ್ರಪಡಿಸುತ್ತಿದ್ದಳು ಅನಸೂಯ. ಆಕೆಯ ಬೆವರಿನಿಂದ ತೊಯ್ದು ಅದರಲ್ಲಿನ ಅಕ್ಷರಗಳ ಮೌಲ್ಯ ಹೆಚ್ಚುತ್ತಿತ್ತು. ಜೊತೆಗೆ ರುಚಿಯೂ ಕೂಡ. +ಇಲಿಯ ನಿರೀಕ್ಷೆಯಂತೆ ಚೀಟಿಯನ್ನು ಬ್ಲೌಜಿನೊಳಗೆ ಇರಿಸದೆ ಮುಷ್ಟಿಯಲ್ಲಿ ಭದ್ರಪಡಿಸಿದಳು. +“ನಾನ್ಯಾಕೆ ಕಣ್ಣಲ್ಲಿ ನೀತಂದ್ಕೊಳ್ಲೇ ಮಗಳೇ ನಿಮ್ಮಪ್ಪ ಇಷ್ಟೊತ್ಗೆ ವಾಪಸು ಬಂದಿದ್ರೆ ನಾನು ಇಷ್ಟೊಂದು ಚಿಂತೆ ಮಾಡಬೇಕಾಗಿಲಿಲ್ಲ ಕಣಮ್ಮಾ… ನಿನ್ನ ಚಿನ್ನದಂಥ ಮನಸ್ಸನ್ನು ಅರ್ಥ ಮಾಡ್ಕೊಂಡು ಮದ್ವೆ ಆಗೋಕೂ ಶಾಮಾ ಶಾಸ್ತ್ರಿ ಪುಣ್ಯ ಮಾಡಿಬೇಕು” ಒಂದು ನಿಟ್ಟುಸಿರು ಬಿಟ್ಟು ಮಗಳ ಮುಡಿ ನೇವರಿಸಿ ಮುಂದುವರೆದು ಹೇಳಿದಳು. +“ನೀನು ಹೋಗು… ಅವನ ಜೊತೆ ಮಾತಾಡಿ ನಿರ್ಧಾರ ಮಾಡ್ಕೊಂಡು ಬಾ… ತಾಯೀನ ತುಂಬ ಹಚ್ಕೊಂಡಿರೋ ಅವನ್ ಮನಸ್ಸಿಗೆ ನೋವಾಗುವಂತೆ ಮಾತಾಡಿ ಬಿಡಬೇಡ… ಹಣೆಯಲ್ಲಿ ಬರೆದಂತಾಗ್ತದೆ’ +ಆ ಕ್ಷಣ ಹೊರಡುವ ಉತ್ಸಾಹ ಕೂಡಲೆ ಪ್ರಕಟಿಸಲಿಲ್ಲ. ನಿಟ್ಟುಸಿರು, ಬೇಸರಗಳಿಂದ ಅಲಂಕೃತಗೊಂಡಿರುವ ಮುಖಕ್ಕೆ ಏನು ಹಚ್ಚಿಕೊಂಡರೆ ಏನು? ಕನ್ನಡಿ ಎದುರು ನಿಂತು ಮುಷ್ಠಿ ತೆರೆದಳು. ಪತ್ರ ಬೆವರಿನಿಂದ ಸಂಪೂರ್ಣ ನೆನೆದಿತ್ತು. ಅದರಲ್ಲಿನ ಯಾವೊಂದು ಅಕ್ಷರವೂ ಅರ್ಥವಾಗಿರುವ ಸ್ಥಿತಿಯಲ್ಲಿರಲಿಲ್ಲ. ಒಂಚೂರು ಅನ್ನದ ಉಂಡೆಯಂತಿದ್ದ ಅದನ್ನು ನಗಂದಿ ಮೇಲಿಡುತ್ತಲೆ ಮೂಷಕಕ್ಕೆ ಹೋದ ಜೀವ ಮರಳಿ ಬಂದಿತು. +“ಒಬ್ಬರ ಪ್ರೇಮಪತ್ರಾನ ಇನ್ನೊಬ್ರು ಓದಬಾರದೆಂಬ ಸಾಮಾನ್ಯ ತಿಳುವಳಿಕೆಯೂ ಈ ಇಲಿಗಳಿಗೆ ಇಲ್ಲವಾಯಿತಲ್ಲಾ” ಎಂಬರ್ಥ ಬರುವಂತೆ ಸಂದೂಕದ ಮರೆಯಲ್ಲಿದ್ದ ಬೆಕ್ಕು ಮ್ಯಾಂವ್ ಗುಟ್ಟಿ ಎಚ್ಚರಿಸಿತು. +“ಇನ್ನೊಬ್ರು ಓದಿದಾಗ್ಲೇ ಪ್ರೇಮ ಪತ್ರಗಳಿಗೆ ಹೆಚ್ಚಿನ ಬೆಲೆ ಬರೋದೂಂತ ಮಾರ್ಜಾಲ ಜಾತಿಗೆ ಅರ್ಥವಾಗುವುದಾದರೂ ಹೇಗೆ!. ನಮ್ಮ ಪರಮ ಶತ್ರುವಾದ ಮಾರ್ಜಾಲ ಕುಲಕ್ಕೆ ಧಿಕ್ಕಾರ ಅವುಗಳ ಬುದ್ಧಿವಾದಕ್ಕೆ ಧಿಕ್ಕಾರ” ಎಂದು ಚೀಂವ್ ಚೀಂವ್ ಭಾಷೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತ ಮೂಷಕ ಪ್ರೇಮ ಪತ್ರದಕಡೆ ಕಳ್ಳ ಹೆಜ್ಜೆ ಇಡತೊಡಗಿತು. +ಆದರೆ ಜಂತಿಯ ಸಂದಿಯಲ್ಲಿದ್ದ ಅದರ ಪ್ರಿಯತಮೆಗೋ ಭಯ ಅಂದರೆ ಭಯ, ನೋಟದ ಗುರಿಯ ಗಾಳ ಎಸೆದು ಕೂತಿರುವ ಮಾರ್ಜಾಲಕ್ಕೋ ಸಿಟ್ಟು, ತನ್ನ ಅಪ್ಪಣೆ ಮೀರಿ ಮೂಷಕ ಪ್ರೇಮಪತ್ರ ಲಪಟಾಯಿಸುವುದೆಂದರೇನು!… +“ಅಕ್ಕಾ ತಕ್ಕೊಳ್ಳೀ… ನಿನ್ ಪ್ರೇಮ ಪತ್ರಾನ ಆ ದರಿದ್ರ ಇಲಿ ಲಪಟಾಯಿಸುತ್ತಾ ಇದೆ. ಪ್ರೇಮದ ಗುಟ್ಟನ್ನು ಇಲಿಗಳು ಕಾಪಾಡೊಲ್ಲ ಕಣಮ್ಮಾ” ಎಂದು ತನ್ನ ಭಾಷೆಯಲ್ಲಿ ಹೆಲನ್ ಪರಿಪರಿಯಾಗಿ ಹೇಳಿತು. (ತೀಸ್ರಿಮಂಜಿಲ್‌ನಲ್ಲಿ ನರ್ತಕಿ ಹೆಲನ್ ಅಮೋಘ ಅಭಿನಯಕ್ಕೆ ಮನಸೋತು ಶಾಮು ಅದಕ್ಕೆ ಆ ಹೆಸರು ಇಟ್ಟಿದ್ದನು.) +ಎದೆ ತುಂಬ ಮುಡಿ ಹರಡಿಕೊಂಡಿದ್ದ ಅನಸೂಯ ಬೇರೆ ಸಂದರ್ಭದಲ್ಲಾಗಿದ್ದರೆ ಹೆಲೆನ್ನಳ ಭಾಷೆಯನ್ನು ಶತಾಯ ಗತಾಯ ಅರ್ಥಮಾಡಿಕೊಳ್ಳುತ್ತಿದ್ದಳು. +“ಹೆಲನ್ ಹಸ್ಕೊಂಡು ಅರಚ್ತಿದೆ. ಅಮ್ಮಾ ಅದ್ಕೆ ಅನ್ನ ಹಾಲು ಕಲೆಸಿಡೇ” ಬಾಚಿಕೊಳ್ಳುತ್ತ ಆಕೆ ಕೂಗಿದ್ದು ಕೇಳಿಸಿಕೊಂಡು ಬೆಕ್ಕಿಗೋ ಪ್ರಾಣಸಂಕಟ ಇಲಿಗೋ ಚಿನ್ನಾಟ. +ಆ ದರಿದ್ರ ಶಾಮಾಶಾಸ್ತ್ರಿಯ ಸಹವಾಸದಿಂದಾಗಿ ಅಪ್ಪಟ ವೆಜಿಟೇರಿಯನ್ನಾಗಿರುವ ಈ ಲಲನಾಮಣಿ ಗಂಡಸಾದ ತನಗೆ ಹೆಲನ್ ಎಂಬ ಹೆಸರಿಟ್ಟು ತಪ್ಪು ಮಾಡಿರೋದಲ್ದೆ ತನ್ನ ಭಾಷೆ ಅರ್ಥಮಾಡಿಕೊಳ್ಳಲಾಗದೆ ಪ್ರೇಮವನ್ನು ಜಗಜ್ಜಾಹಿರು ಮಾಡುತ್ತಿರುವಳಲ್ಲಾ ಎಂದು ಹೆಲನ್ ಮಮ್ಮಲನೆ ಮರುಗಿತು. +“ಲವ್ ಅಂದರೇನೆಂದು ಗೊತ್ತಿಲ್ಲದ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭನಿಗೆ ವಾಹನವಾಗಿರುವ ನಿಮಗೆ ಪ್ರೇಮಪತ್ರ ಲಪಟಾಯಿಸುವ ಹಕ್ಕು ಯಾವ ಬೋಳಿಮಗ ಕೊಟ್ಟ… ಒಳ್ಳೆ ಮಾತಿಂದ ಹೇಳ್ತಿದೀನಿ… ಚೀಟಿ ಬಳಿಗೆ ಬರಬೇಡ… ಹುಷಾರ್” ಹೆಲೆನ್ ಬೆದೆಗೆ ಬಂದಾಗ ಉಪಯೋಗಿಸುವ ಭಾಷೆ ಬಳಸಿ ಎಚ್ಚರಿಕೆ ನೀಡಿತು. ಅದರ ರೂಕ್ಷ ಸ್ವರಕ್ಕೆ ಬೇಸತ್ತು ಅನಸೂಯ ಬಾಚಣಿಕೆಯನ್ನು ಅದರತ್ತ ಎಸೆದಳು. ಅದನ್ನೇ ಪಾಶುಪತಾಶ್ತ್ರವೆಂದು ಭಾವಿಸಿ ಹೆಲೆನ್ ಹಿಡಿಹಿಡಿ ಶಾಪ ಹಾಕುತ್ತ ಅಲ್ಲಿಂದ ಓಡಿತು. +ಅದು ಓಡಿದ್ದು ನೋಡಿ ಮೂಷಕಕ್ಕೆ ಖುಷಿಯೋ ಖುಷಿ. ತನ್ನ ಪ್ರಿಯತಮೆಯ ಕಡೆಗೆ ನೋಡಿ ಕಣ್ಣು ಮಿಟುಕಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕನಂತೆ ಭಲೆ ಠೀವಿಯಿಂದ ಹೆಜ್ಜೆ ಹಾಕುತ್ತ ಪ್ರೇಮಪತ್ರ ಸಮೀಪಿಸಿತು. ತನ್ನ ಮೂತಿಯನ್ನು ಇಷ್ಟಗಲ ತೆರೆದು ಅದನ್ನು ಕಚ್ಚಿಕೊಂಡು ರೋಮಾಂಚನಗೊಂಡಿತು. ಎಂಥ ರೋಚಕ ಅನುಭವ ಪ್ರೇಮಪತ್ರ ಮುಟ್ಟುವುದೆಂದರೆ!. ಬರಿ ನೆನೆದರೇನುಂಟು ಪ್ರೇಮಪತ್ರದ ರುಚಿಯ… ಜೋಹನ್ಸ್‌ಬರ್ಗ್ನಲ್ಲಿ ಅಧಿಕಾರ ವಹಿಸಿಕೊಳ್ಳುವ ತನ್ನ ಗಂಡನ ಕಡೆ ವಿನ್ನಿಮಂಡೇಲಾ ನೋಡುತ್ತಿದ್ದಳಲ್ಲ… ಹಾಗೆ… ಅಂಥ ನೋಟ ಬೀರುತ್ತಿದ್ದ +ಪತ್ನಿಯ ಕಡೆ ಗಂಭೀರವಾದ ಹೆಜ್ಜೆ ಹಾಕತೋಡಗಿತು. +“ಸ್ವಾಗತಂಽಽ ಸುಸ್ವಾಗತಂಽಽ ದೊರಾ” ಅದರ ಪ್ರಿಯತಮೆ ಮಾಲಕೌಂಸ್ ಆಲಾಪನೆ ಮಾಡಿತು. ಜಂತಿಯ ಸಂದಿಯಿಂದ ಹಿಡಿಬಯಲನ್ನೇ ಸ್ಯಾಂಕಿ ಕೆರೆಯ) ಡಾ. ಜೀವರಾಜ್ ಆಳ್ವರ ಮನೆ ಎದುಗಿರುವ) ಪಾರ್ಕ್ ಎಂದೇ ಭಾವಿಸಿ ಅವೆರಡು ಭಲೆ ರೊಮಾಂಟಿಚ್ ಮೂಡಿನಲ್ಲಿ ಎದುರುಬದುರು ಕೂತುಕೊಂಡವು. ಪ್ರಿಯಕರ ತನ್ನ ಪ್ರಿಯತಮೆಯ ಎದುರಿಗೆ ಪ್ರೇಮಪತ್ರ ಹರಡಿತು. ಕೋಮಲಕಾಯದ ಹೆಣ್ಣು ಇಲಿ ಲವ್ ಲೆಟರಿನೊಳಗೆ ಬಗ್ಗಿ ಬಗ್ಗಿ ನೋಡಿತು. ಬೆವರಿಗೆ ಅಳಿಸಿಹೋಗಿದ್ದ ಅಕ್ಷರಗಳನ್ನು ನೋಡಿ ಮನನೊಂದಿತು. ನಿಲುಗನ್ನಡಿ ಎದುರು ಮ್ಲಾನವದನಳಾಗಿ ಕೂತಿದ್ದ ತರುಣಿ ಕಡೆ ನೋಡಿ ’ಅಯ್ಯೋ ಪಾಪ’ ಎಂದಿತು. +“ಪ್ರಿಯತಮೆ ತನ್ನ ಪ್ರಿಯತಮನ ಪತ್ರ ಬಂದ ನಂತರವೂ ಆಕೆ ಇಷ್ಟು ಮಂಕಾಗಿರುವಳಲ್ಲ… ಅಯ್ಯೋ ಪಾಪ” ಹೆಣ್ಣು ಸ್ತ್ರೀಸಹಜ ಮನೋಭಾವದಿಂದ ಖೇದ ವ್ಯಕ್ತಪಡಿಸಿತು. +“ಹೆಣ್ಣಿನ ಮನೋವೇದನೆಗೆ ಹೆಣ್ಣಾದ ನಿನಗೆ ಅರ್ಥವಾಗದಿದ್ದರೆ ಹೇಗೆ ಚಿನ್ನಾ… ಆ ಶಾಮಾಶಾಸ್ತ್ರಿ ಪ್ರೇಮವೆಂಬ ತುಪ್ಪವನ್ನು ಈ ಹುಡುಗಿಯ ನೀಳ ನಾಸಿಕದ ಮೇಲೆ ಹಚ್ಚಿ ಮಾಡಿರುವ ದೊಡ್ಡ ತಪ್ಪು ಕಣೆ. ಮೊದಲೇ ಅವನು ಹುಟ್ಟಿರುವುದ ಸಂಸ್ಕೃತ ಭೂಯಿಷ್ಠ ವಂಶದಲ್ಲಿ… ಸಂಸ್ಕೃತ ತಾಂಡವವಾಡುವ ಸ್ಥಳದಲ್ಲಿ ಪ್ರೇಮ ಸಾಯುಜ್ಯ ಜಾಗವಿರುವುದಿಲ್ಲ. ನೆನ್ನೆ ಕೋಡುಬಳೆ ವಾಸನೆ ಹಿಡಿದು ಶಾಸ್ತ್ರಿಗಳ ಮನೆಗೆ ಹೋಗಿದ್ದೆ.” +“ಓಹೋ ಕೋಡುಬಳೆ ತತೀನೆಂದು ಹೋಗಿದ್ದೆಯಲ್ಲ… ಕೋಡುಬಳೆ ಸಂಗತಿ ಹಾಳಾಗಲಿ… ಅಲ್ಲಿ ಏನೇನು ಮಾತುಕಥೆ ನಡೀತು ಎಂಬುದರ ಬಗ್ಗೆ ಹೇಳು. ಕೇಳಲು ಉತ್ಸುಕಳಾಗಿದ್ದೇನೆ” ಹೆಣ್ಣಿಲಿ ತನ್ನ ನಿರಾಭರಣದ ಕರ್ಣವನ್ನು ತನ್ನ ಪ್ರಿಯತಮನ ಬಾಯಿ ಬಳಿ ಇಟ್ಟಿತು. +“ಅದನ್ನೆಲ್ಲ ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ಬಂಗಾರ… ಉತ್ತಮ ನಕ್ಷತ್ರದಲ್ಲಿ ಋತುಮತಿಯಾದ ಕನ್ಯಾನ್ವೇಷಣೆಗೆ ಆ ವೃದ್ಧ ಶಾಸ್ತ್ರಿಗಳು ಯಾವುದೋ ಊರಿಗೆ ಹೋಗಿದ್ದರು. ಅರೆ ಬೆತ್ತಳಾಗಿದ್ದ ತಾಯಿ ಅಲುಮೇಲಮ್ಮಳ ತೊಡೆಮೇಲೆ ಶಾಮಾಶಾಸ್ತ್ರಿ ತಲೆ ಇಟ್ಟು ಮಲಗಿದ್ದ. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದು ತೊಡೆಯಸೀಳಿನಲ್ಲಿ ಇಂಗಿಹೋಗುತ್ತಿತ್ತು. “ಆ ಶೂದ್ರ ಹುಡುಗಿಯನ್ನು ಮದುವೆಯಾಗುವುದಾದರೆ ಮೊದಲು ನನಗೆ ವಿಷ ಕೊಡು” ಎಂದು ಆ ಮಹಿಳೆ ಖಡಾಖಂಡಿತವಾಗಿ ಕಣ್ಣೀರು ತೆಗೆದು ಮಾತಾಡುತ್ತಿದ್ದಳು. “ಅಮ್ಮಾ ಈ ಪ್ರಪಂಚದಲ್ಲಿ ತಾಯಿಯಾದ ನಿನಗಿಂತ ಬೆಲೆಬಾಳುವ ಹೆಣ್ಣು ಯಾರೂ ಇಲ್ಲ” ಎಂದು ಹೇಳುತ್ತಿದ್ದ. “ಮತ್ತೇಕೆ ಕಣ್ಣೀರು ತೆಗೆಯುತ್ತಿರುವಿ” ಎಂದು ತಾಯಿ ಪ್ರಶ್ನಿಸಿದಳು. “ಇಷ್ಟು ವರ್ಷಗಳ ಕಾಲ ನನ್ನನ್ನು ಪ್ರೀತಿಸಿದವಳನ್ನು, ನನಗೆ ಸೃಜನಾತ್ಮಕವಾಗಿ ದೇಹ ಮತ್ತು ಮನಸ್ಸು ಎರಡನ್ನು ಹಂಚಿಕೊಂಡವಳನ್ನು ಮರೆಯುವ ಕಷ್ಟ ನಿನಗೆ ಅರ್ಥವಾಗುವುದಿಲ್ಲ ತಾಯಿ” ಎಂದವನು ಗದ್ಗದಿತನಾಗಿ ಚಿನ್ನಾ”ಗಿ ಎಂದನು. +“ಅಂದರೆ ಅವನು ತಾನು ಮದುವೆಯಾಗುವುದಿಲ್ಲ ಎಂದು ಹೇಳಲಿಕ್ಕಾಗಿಯೇ ಅನಸೂಯಳಿಗೆ ಚೀಟಿ ಕಳಿಸಿದ್ದಾನೆಂದಾಯಿತು.” +“ಹೌದು. ಖಂಡಿತ ಅದಕ್ಕೇನೆ.” +“ಹಾಗಿದ್ದರೆ ಆಕೆಯನ್ನು ಅಲ್ಲಿಗೆ ಹೋಗದಂತೆ ತಡೆಯಬೇಕಲ್ಲ.” +“ತಡೆಯೋದಾದ್ರೂ ಯಾಕೆ ಚಿನ್ನಾಽಽ ಆಕೆಗೀಗಾಗ್ಲೇ ಎಲ್ಲಾ ಅರ್ಥವಾಗಿದೆ. ಆಕೆ ನೀಚ +ಕುಲದಲ್ಲಿ ಹುಟ್ಟಿರಬಹುದು. ಆದರೆ ಆಕೆ ಉಚ್ಚಕುಲ ಸಂಜಾತನಾದ ಶ್ಜಾಮಾಶಾಸ್ತ್ರಿಗಿಂತಲೂ ಬುದ್ಧಿವಂತೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಬಲ್ಲ ಮನೋದಾರ್ಡ್ಯ ಆಕೆಗುಂಟು.” +“ಮುಂದೇನಾಗಬಹುದು?” +“ಮಾತೆಂಬ ಚಿಮಣಿಯನ್ನು ಅಡ್ಡಗೋಡೆ ಮೇಲಿರಿಸುವುದಷ್ಟೆ ಶಾಮಾಶಾಸ್ತ್ರಿಗೆ ಗೊತ್ತು. ಮುಟ್ಟು ನಿಲ್ಲುವವರೆಗೆ ಕಾಯಬೇಕೆಂದು ಅವನು ಹೇಳಬಹುದು, ಅಥವಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇರಿ ಆಧ್ಯಾತ್ಮ ಕಲಿತು ಕಾಮವೇ ಮೊದಲಾದ ಮನೋವಾಂಛೆಗಳನ್ನು ನಿಗ್ರಹಿಸಿಕೊಂಡು ಮೋಕ್ಷ ಪಡೆ ಎಂದು ಸಲಹೆ ಮಾಡಬಹುದು.” +“ಅಲ್ಲಾ ಎಷ್ಟೊಂದು ಸ್ವಾರ್ಥಿಗಳೇ ಗಂಡಸರು. ನನಗ್ಯಾಕೋ ನಿನ್ ಬಗ್ಗೆ ಅನುಮಾನ ಡಾರ್ಲಿಂಗ್ಽಽ ಅವರಿಬ್ಬರ ಬಗ್ಗೆ ನೀನಿಷ್ಟೊಂದು ಆಸಕ್ತಿ ವಹಿಸಿರುವೆ ಅಂತ” ಹೆಣ್ಣಿಲಿ ಕುಡಿಗಣ್ಣಿಂದ ನೋಡಿತು. +ಪ್ರಿಯ ಸಖಿ ಮಾತು ಕೇಳಿ ಗಂಡಿಲಿ ತಿಕ ಬಡಕೊಂದು ನಗಾಡಿತು. +“ಈಸ್ತ್ರೀ ಜಾತಿಯೇ ಇಷ್ಟು ನೋಡು. ಆದ್ರೆ ಅನಸೂಯ ಮಾತ್ರ ಅಪವಾದ!” +“ಆಕೆ ಪರ ವಕಾಲತ್ತು ವಹಿಸ್ತಿರೋದು ಯಾಕೇಂತ!?” +“ಆಕೆ ಸ್ತ್ರೀ ಜಾತಿಗೇ ಒಂದು ಮುಕುಟಪ್ರಾಯವೆಂದು ಹೇಳಬಹುದು. ರೂಪದಲ್ಲೂ ಅಷ್ಟೇ ಗುಣದಲ್ಲೂ ಅಷ್ಟೇ. ಆಕೆ ಶಾಮಾಶಾಸ್ತ್ರಿಗೆ ಬೆಂಬಲವಾಗಿ ನಿಲ್ಲದಿದ್ದಲ್ಲಿ ಬಾಡಿ ಬಿಲ್ಡರ್ ಜಲಜಾಕ್ಷಿ ಕೈಯಲ್ಲಿ ಆ ಶಾಸ್ತ್ರಿ ಏನಾಗ್ತಿದ್ದನೋ ಏನೋ! ಜಲಜಾಕ್ಷಿ ರೇಪ್ ಮಾಡಲು ಪ್ರಯತ್ನಿಸಿದ್ದು; ಮೊಲೆ ಮುಟ್ಟು ಎಂದು ಶತ್ತಾಯಿಸಿದ್ದು; ಹುಸಿ ಬೆದರಿಕೆ ಹಾಕಿ ಪ್ರೇಮದ ಬಗ್ಗೆ ವಿಲಕ್ಷಣವಾದ ಒತ್ತಡ ತಂದದ್ದು ಎಲ್ಲ ಅನಸೂಯಳಿಗೆ ಗೊತ್ತಿಲ್ಲದಿಲ್ಲ. ಆಕೆ ಎಂದಾದ್ರೂ ಈ ಬಗ್ಗೆ ಮುಖ ಸಿಡರಿಸಿಕೊಂಡದ್ದುಂಟಾ?!” ಸಹಜವಾಗಿ ಗಂಡಿಲಿ ಹೇಳಿತು. +ಆದರೆ ಹೆಣ್ಣಿಲಿ ಒಂದೊಂದು ಮಾತಿಗೆ ಸಾವಿರ ಸಾವಿರ ಅರ್ಥ ಕಲ್ಪಿಸಿಕೊಂಡು ತನ್ನ ಪ್ರಿಯಕರನೂ ಆಕೆಯನ್ನು ಒಳಗೊಳಗೇ ಲವ್ ಮಾಡುತ್ತಿರಬಹುದೇ ಎಂಬ ಸಂದೇಹ ಕಾಡಿತು. ಮೂಷಕ ಸಹಜ ವಿಧ್ವಂಸಕ ಸ್ವಭಾವದಿಂದ ತಿಂಡಿ ತಿನಿಸುಗಳಿರೋ ಕಡೆ; ಉಗ್ರಾಣದ ಕಡೆ ಸುಳಿಯಬೇಕಾದ ತನ್ನ ಕಾಂತ ಹಗಲಿರುಳು ಅನಸೂಯಾಳ ಡ್ರಾಯಿಂಗ್ ರೂಂ; ಬೆಡ್ ರೂಂಗಳಲ್ಲಿ ಬಿಡಾರ ಹೂಡುತ್ತಿದ್ದುದು ನೆನಪಿಗೆ ತಂದುಕೊಂಡಿತು. ಆ ಕ್ಷಣ ಕಣ್ಣುಗಳು ಹನಿಗೂಡಿದವು. ಬಿಕ್ಕಿ ಬಿಕ್ಕಿ ಅಳತೊಡಗಿತು. +ಅಯ್ಯೋ ತನ್ನ ಕಾಂತೆಯ ಕಣ್ಣಲ್ಲಿ ನೀರೆ! ಗಂಡಿಲಿ ಗಾಬರಿಗೊಂಡಿತು. ಮೂಷಕ ಭಾಷೆಯಲ್ಲಿ ಪರಿಪರಿಯಾಗಿ ರಮಿಸಲು ಪ್ರಯತ್ನಿಸಿತು. ತಾನು ಗುಟ್ಟಾಗಿ ಅನಸೂಯಳನ್ನು ಪ್ರೀತಿಸುತ್ತಿರುವುದು; ಕದ್ದು ಮುಚ್ಚಿ ಆಕೆಯ ಕುಪ್ಪಸದ ಕಂಕುಳ ಭಾಗವನ್ನು; ಬ್ರಾದ ತುದಿಯನ್ನು; ಲಂಗದ ಆಯಕಟಿನ ಭಾಗವನ್ನು ಕಚ್ಚಿ ಕಚ್ಚಿ ಕಿಂಡಿ ಮಾಡಿರುವುದಾಗಲೀ; ಎಷ್ಟೋ ರಾತ್ರಿ ಆಕೆಯ ಹಾಸಿಗೆ ಏರಿ ಆಕೆ ಹೊದ್ದಿರುವ ಹೂವಿನ ಹಚ್ಚಡದೊಳಗೆ ಸುಳಿದಾಡಿ ಕಚಗುಳಿ ಇಡುತ್ತಿದ್ದುದಾಗಲೀ; ಶಾಸ್ತ್ರಿಮೇಲಿನ ಹೊಟ್ಟೆಕಿಚ್ಚಿನಿಂದ ಅವನು ಬರೆಯುತ್ತಿದ್ದ ಪ್ರೇಮ ಪತ್ರಗಳನ್ನು ಅಪಹರಿಸಿ ವಿರೂಪಗೊಳಿಸುತ್ತಿರುವುದಾಗಲೀ; ಇದಕ್ಕಿಂದ್ದಂತೆ ಆಕೆ ಎದುರಿಗೆ ದುತ್ತನೆ ಪ್ರತ್ಯಕ್ಷವಾಗಿ ಕಣ್ಣು ಮಿಟುಕಿಸಿ ರತಿಕ್ರೀಡೆಗೆ ಆಮಂತಿಸುತ್ತಿದ್ದುದಾಗಲೀ; ಈ ಎಲ್ಲ ಹೃದಯ ವಿಹಂಗಮ ಚೇಷ್ಟೆಗಳನ್ನು +ತನ್ನ ಪ್ರಾಣವಲ್ಲಭೆ ಸೂಕ್ಷ್ಮವಾಗಿ ಗಮನಿಸಿರಬಹುದೆಂಬ ಅನುಮಾನ ಮೂಡಿತು. +ಈಗಿನಿಂದಲೇ ಈಕೆಯ ದುಃಖವನ್ನು ಶಮನಗೋಳಿಸದಿದ್ದಲ್ಲಿ ತಮ್ಮ ಮಾನಸ ಸರೋವರದಂಥಹ ಸುಖಸಂಸಾರ ಉರಗಪತಾಕನು ಹೊಕ್ಕ ವೈಶಂಪಾಯನ ಸರೋವರವಾಗುವುದರಲ್ಲಿ ಸಂದೇಹವಿಲ್ಲವೆಂದೂಹಿಸಿತು. +“ಇಲ್ಲ ಕಣೇ ನೀನು ಹುಲು ಮಾನವರಂತೆ ಅಪಾರ್ಥ ಕಲ್ಪಿಸಿಕೊಂಡಿದ್ದೀಯಾ; ನಿನ್ನಾಣೆಯಾಗೂ, ನಮ್ಮ ಕುಲದೇವತೆಯಾದ ವಿನಾಯಕನ ಆಣೆಯಾಗೂ ನಾನು ನಿನ್ನ ಹೊರತು ಇನ್ನೊಂದು ಹೆಣ್ಣನ್ನು ಪ್ರೀತಿಸಿಲ್ಲ! ಕನಸು ಮನಸಲೂ ನಿನೆ ನಿನ್ನಾಣೆ ಶಾಮಾ ಶಾಸ್ತ್ರಿ ಮನೆಯಾಗಲಿ; ಅನಸೂಯಳ ಮನೆಯಾಗಲೀ ನನಗೆ ಬೇರೆ ಅಲ್ಲವೇ ಅಲ್ಲ. ನಗರದ ಪ್ರಸಿದ್ಧ ವಣಿಕರಾಗಿದ್ದ ಕುಪ್ಪಂ ವೆಂಕಟರಮಣ ಶ್ರೇಷ್ಟಿಗಳ ಬಗ್ಗೆ ನಿನಗೆ ಹಿಂದೊಮ್ಮೆ ವಿವರವಾಗಿ ಹೇಳಿದ್ದೆ. ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದಿ. ಘಂಟಾ ಶಾಮಾಶಾಸ್ತ್ರಿಗಳು ನಿಧನರಾದಾಗ ಕಾಶಿಗೆ ಹೋಗಿಬರುವ ವೆಚ್ಚ ಧರಿಸುವುದಾಗಿ ಹೇಳಿ ಹಣ ತರಲೆಂದು ಮನೆ ತಲುಪಿದ ಅವರನ್ನು ಅವರ ಹೆಂಡತಿ ಮಕ್ಕಳು ಉಗ್ರಾಣದ ಕೋಣೆಯಲ್ಲಿ ಬಂಧಿಸಿಟ್ಟಿದ್ದು; ತಮ್ಮ ಪೂರ್ವಿಕನಂತಿದ್ದ ಶ್ರೇಷ್ಠಿಯನ್ನು; ನಮ್ಮ ಪೂರ್ವಿಕರೆಲ್ಲ ಸೇರಿಕೊಂಡು ಬಗೆ ಬಗೆ ಹಿಂಸಿಸಿದ ಬಗ್ಗೆ ಹೇಳಿದ್ದೆ. ಹಾಗೆ ಅವತ್ತು ಆಕ್ರಮಣ ನಡೆಸಿದ ಗುಂಪಿನಲ್ಲಿ ನನ್ನ ಗಿರಿಗಿರಿ ಮುತ್ತಾತನಿದ್ದ, ಶವ ಸಂಸ್ಕಾರಕ್ಕೆ ಸಹಾಯಹಸ್ತ ಚಾಚಿದವನ ಮರ್ಮಾಂಗದ ತುದಿ ಕಚ್ಚಿದ್ದರ ಬಗ್ಗೆ ಪಶ್ಚಾತ್ತಾಪಪಟ್ಟಿದ್ದ. ವೇದಾಂತಿ ಪರಮೇಶ್ವರ ಶಾಸ್ತ್ರಿಗಳ ಸೇವೆ ಮಾಡಿ ಪಾಪದಿಂದ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿ ನಮ್ಮ ಗಿರಿಗಿರಿ ಮುತ್ತಾತ ತನ್ನ ಯಾವತ್ತೂ ಬಂಧು ಬಳಗದೊಂದಿಗೆ ಅಗ್ರಹಾರದ ಶಾಸ್ತ್ರಿಗಳ ಮನೆಗೆ ರಾತ್ರೋರಾತ್ರಿ ಸೇರಿಕೊಂಡುಬಿಟ್ಟ. ಬಾತ್ರೂಮಿನಲ್ಲಿ; ಅಡುಗೆಮನೆಯಲ್ಲಿ; ಉಗ್ರಾಣದ ಮನೆಯಲ್ಲಿ; ಶಯನ ಗೃಹದಲ್ಲಿ ಹೀಗೆ ಎಲ್ಲಿ ನೋಡಿದರೂ ನಮ್ಮ ಪೂರ್ವಿಕರೇ ಪೂರ್ವಿಕರು. ಚಿಂವ್ ಚಿಂವ್ ಗುಟ್ಟುತ್ತ ಬಗೆಬಗೆಯಾದ ಸೇವೆ ಮಾಡಿದ್ದೇ ಮಾಡಿದ್ದು. ಶಾಸ್ತ್ರಿಗಳು ಅರ್ಚನೆ ಮಾಡುವ ಕಡೆ; ವೈದಿಕ ಮಾಡುವ ಕಡೇಲೆಲ್ಲಾ ಹೋಗಿ ಮಂತ್ರೋಚ್ಚಾರಣೆಗೆ ಸರಿಯಾದ ಹಿನ್ನೆಲೆ +ಸಂಗೀತ ಒದಗಿಸಿದ್ದೇ ಒದಗಿಸಿದ್ದು. ಆದರೆ ನಮ್ಮ ಸೇವಾಕೈಂಕರ್ಯ ಶಾಸ್ತ್ರಿಗಳಿಗೆ ಅರ್ಥವಾಗಬೇಕಲ್ಲ? ಶಾಸ್ತ್ರಿಗಳು ತಮ್ಮ ಧರ್ಮಪತ್ನಿಯವರೊಡನೆ ಸಮಾಲೋಚಿಸಿ ನಮ್ಮ ಪರಮ ಶತ್ರುವಾದ ಮಾರ್ಜಾಲದ ಮರಿಯನ್ನು ಸಾಕಿಬಿಟ್ಟರು. ಅದಕ್ಕೆ ಹಾಲು ಹೈನದ ವ್ಯವಸ್ಥೆಗೆಂದು ದಿವಾನ್ ಗೋಪಾಲಯ್ಯ ಶಾಸ್ತ್ರಿಗಳಿಗೆ ಗೋದಾನ ಮಾಡಿ ಪುಣ್ಯ ಕಟ್ಟಿಕೊಂಡರು. ದಾನವಾಗಿ ಬಂದ ಹಸುವಾಗಿದ್ದರೂ ಹೇಗಿತ್ತು ಅಂತಿಯಾ? ಪ್ರಾಥಮಿಕ ಶಾಲಾ ಬಾಲಕ ಅದರ ಮೈ ಎಲುಬುಗಳನ್ನು ಸುಲಭವಾಗಿ ಎಣಿಸಿಬಿಡುವಂತಿತ್ತು ಅದರ ಫಿಸಿಕ್ಕು. ಸರಕಾರಿ ಪಾಠಶಾಲೆಯ ವಿಜ್ಞಾನ ಶಿಕ್ಷಕರು ಅನಾಟಮಿ ಪಾಠ ಮಾಡುವಾಗೆಲ್ಲ ತಮ್ಮ ತರಗತಿಯ ಮಕ್ಕಳನ್ನು ಶಾಸ್ತ್ರಿಗಳ ಮನೆಗೆ ಕರೆದುಕೊಂಡು ಬಂದು: ಇದು ಇಂಥ ಎಲುಬು: ಅದು ಅಂಥ ಎಲುಬು ಎಂದು ಪರಿಚಯ ಮಾಡಿಸಿಕೊಂಡು ಹೋಗುತ್ತಿದ್ದರು, ಪರಿಚಿಯಕೊಂಡ ಹಿಂಸೆಗೆ ಹಸು ನೆಲಕಚ್ಚಿಬಿಟ್ಟಿತೆಂದರೆ ಮುಗಿಯಿತು, ಅದನ್ನು ಮೇಲೆಬ್ಬಿಸಲು ಶಾಸ್ತ್ರೀ ದಂಪತಿಗಳು ತಿಣುಕಿ ಟಿಣುಕಿ ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನದ ಫಲವಾಗಿ ಹಸು ಎದ್ದು ನಿಂತುಕೊಂಡು ಮರು ಗಳಿಗೆಯಲ್ಲಿಯೇ ಆ ಆದಿದಂಪತಿಗಳು ಉಸ್ಸಪ್ಪೋ ಅಂತ ನೆಲಕಚ್ಚಿ ಬಿಡುತ್ತಿದ್ದರು. ಎಷ್ಟೋ ಮೇವು ಹಾಕಿ ಉಪಚಾರ +ಮಾಡಿದರೂ ಅಷ್ಟೆ. +ಮದ್ರಾಸ್‌ನ ರೋಗ ಪೀಡಿತ ಕಣ್ಣುಗಳಿಗೆ ಎರಡೆರಡು ಹಾಲುದುರಿಸುತ್ತಿದುದು ಬಿಟ್ಟರೆ ಮೂರನೆ ಹನಿ ಉದುರಿಸುತ್ತಿರಲಿಲ್ಲ. ಆ ಕೃಪಣ ಬಡಕಲು ಹಸು ಕೇವಲ ಪೂಜೆಗೇಂತ ಹಸು ಯಾಕಾದರೂ ಇರಬೇಕು, ದಾನ ಕೊಟ್ಟ ದಿವಾನರ ಮನೆಗೇ ಅದನ್ನು ಸಾಗಿಸಲು ಪ್ರಯತ್ನಿಸಿದ್ದುಂಟು. ಆದರೆ ಅದನ್ನು ಮರಳಿ ಪಡೆಯಲು ದಿವಾನರೇನು ದಡ್ಡರೇ! “’ಬೇಡ ಸ್ವಾಮಿ ಗೋ ಸಾವಿನ ಸುತಕದಿಂದ ನಮ್ಮ ಆಳಿ ಬಾಳುವ ಮನೆ ಹಾಳಾದೀತು. ಅದರ ಮರಣ ಅಗ್ರಹಾರದಲ್ಲೇ ಸಂಭವಿಸಲೆಂದೇ ತಮಗೆ ದಾನರೂಪದಲ್ಲಿ ಕೊಟ್ಟಿರುವುದು. ವೇದೋತ್ತಮ ಪಂಡಿತರಿರುವ ಅಗ್ರಹಾರದಲ್ಲಿ ಯಾವ ಸಾವು ಸಂಭವಿಸಿದರೂ ಸೂತಕವಾಗಲಾರದು’ ಎಂದು ಬಿಲ್‌ಕುಲ್ ನಿರಾಕರಿಸಿ ದಾನದ ಮರ್ಮ ತೋರಿಸಿಕೊಟ್ಟರು. ಅದರಿಂದ ಶಾಸ್ತ್ರಿದಂಪತಿಗಳು ನಿರಾಶರಾಗಲಿಲ್ಲ. ಗೋಮಾತೆಯನ್ನು ದೂರ ದೂರದಲ್ಲಿ ಬಿಟ್ಟು ಬರಲು ಪ್ರಯತ್ನಿಸಿದರು. ಎಲ್ಲೇ ಬಿಡಲಿ ಗೋಮಾತೆ ಮಾತ್ರ ಹಾಜರಾಗಿ ಬಿಟ್ಟು ’ಅಂಬಾಽಽಽ’ ಎಂದು ಕರುಳು ಕತ್ತರಿಸುವಂತೆ ಕೂಗುತ್ತಿತ್ತು. ಮತ್ತೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಅದು ಪುನಃ ಗರ್ಭ ಧರಿಸಿದರೆ ಅದರ ಮೈಮಾಟ ಸುಧಾರಿಸಬಹುದೆಂದು ಸಮರ್ಥ ಗೂಳಿಗಳ ಬಳಿಗೆ; ದಷ್ಟಪುಷ್ಟಹೋರಿಗಳ ಬಳಿಗೆ ಅದನ್ನು ಕರೆದೊಯ್ದು ರತಿಕ್ರೀಡೆಗೆ ಸಹಕರಿಸು ಎಂದು ತಿಳಿಹೇಳಿ ದೂರ ನಿಲ್ಲುತ್ತಿದ್ದರು. ಅಲ್ಲದೆ ಹೋರಿ/ಗೂಳಿಗಳ ಬಳಿಗೆ ಹೋಗಿ ತಮ್ಮ ಹಸು ದೈಹಿಕವಾಗಿ ದುರ್ಬಲಳು ಕಣಪ್ಪಾ, ನಿನ್ನ ಭಾರ ಹೊರುವಷ್ಟು ಸಾಮರ್ಥ್ಯ ಇವಳಿಗಿಲ್ಲ, ಪೂರ್ತಿ ಭಾರ ಬಿಡದಂತೆ ರತಿಕಾರ್ಯ ಜರುಗಿಸಿ ಗರ್ಭದಾನ ಮಾಡಿ ಪುಣ್ಯ ಕಟ್ಟಿಕೋ’ ಂದು ಪರಿಪರಿಯಿಂದಲಿ ಬೇಡಿಕೊಳ್ಳದಿರುತ್ತಿರಲಿಲ್ಲ. +ಅದಕ್ಕೆ ಅಂಗೀಕಾರ ಮುದ್ರೆ ಒತ್ತುವಂತೆ ಬ್ರುಸ್ ಬ್ರುಸ್ ಎಂದು ಮೂಗಿನಿಂದಲೂ ಬಾಯಿಂದಲೂ ಅವು ಸವಂಡು ಹೊರಡಿಸುತ್ತಿದ್ದವು. ಆದರೆ ಶಾಸ್ತ್ರಿಗಳು ಗೋಮಾತೆಗೆ ಸಂತಾನಭಾಗ್ಯವಿಲ್ಲವೆಂದು ನಿಟ್ಟುಸಿರಿಡುತ್ತಿದ್ದರೇ ಹೊರತು ಆ ಬಡಪಾಯಿ ಚತುಷ್ಪಾದಿ ಮೇಲೆ ಕೋಪಿಸಿಕೊಳ್ಳುತ್ತಿರಲಿಲ್ಲ. ಆದರೆ, ಆ ಶಾಸ್ತ್ರಕೋವಿದರ ಕ್ಷಮಾದಾನದಿಂದ ಗೋಮಾತೆ ನಿಜಕ್ಕೂ ದುಃಖಕ್ಕೀಡಾಗುತ್ತಿದ್ದಳು. ತನ್ನನ್ನು ಯಾರಾದರೂ ಅಪಹರಿಸಿಕೊಂಡೊಯ್ದು ಕಗ್ಗೊಲೆ ಮಾಡಬಾರದೆ ಎಂದು ಪ್ರತಿಕ್ಷಣ ಚಿಂತಿಸುತ್ತಿದ್ದಳು. ಒಂದು ದಿನ ಆಕೆಯೇ ಸ್ವ ಇಚ್ಛೆಯಿಂದ ಕಟುಕರ ಮನೆ ಬಾಗಿಲು ತಟ್ಟಿದಳು. ಕಟುಕರ ದಯಾನಂದನನ್ನು ತನ್ನನ್ನು ದಯವಿಟ್ಟು ಕಡಿದು ತುಂಡರಿಸಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾರ್ಥಿಸಿದಳು. ಅವನು ಆಕೆಯ ಕೋರಿಕೆಯನ್ನು ಮನ್ನಿಸಿದ. +ಗೋಮಾತೆಯ ಅವಸಾನ ಈ ಬಗೆಯದಾದರೆ ಕಾಂಬೋಜಿರಾಗದ ಲಕ್ಷ್ಮಿಕಾಂತರಾಯ ದೇಣಿಗೆ ರೂಪದಲ್ಲಿ ನೀಡಿದ ಮಾರ್ಜಾಲ ಕಥೆಯೇ ಇನ್ನೊಂದು ರೀತಿಯದಾಗಿತ್ತು. ಅದು ಜನ್ಮ ತಳೆದಿದ್ದು ಪುಳಿಯೋಗರೆಯವರ ಮನೆಯಲ್ಲಿ; ಸೇರಿಕೊಂಡಿರುವುದು ತಿಳಿಸಾರಿನವರ ಮನೆಯಲ್ಲಿ. ಹುಟ್ಟಿದ ಮತ್ತು ಸೇರಿಕೊಂಡ ಕೆಲ ದಿನಗಳಲ್ಲಿ ಆ ಮಾರ್ಜಾಲ ತನ್ನ ಬೇಟೆಗುಣವನ್ನು ಸಂಪೂರ್ಣ ಬಿಟ್ಟುಬಿಟ್ಟಿತ್ತು. ಆ ಸನಾತನೀಯ ವಾತಾವರನವೂ ಅದಕ್ಕೆ ಕಾರಣ. ನಮ್ಮ ಪೂರ್ವಿಕರಿಗಂತೂ ಉಲ್ಲಾಸವೇ ಉಲ್ಲಾಸ. ಒಂದು ದಿನ ಸೊಂಪಾಗಿ ನಿದ್ದೆ ಹೋಗಿದ್ದ ಆ ಮಾರ್ಜಾಲದ ಕೊರಳಿಗೆ ನಮ್ಮ ಪೂರ್ವಿಕರು ಘಂಟೆ ಕಟ್ಟಿ ಲೋಕಾರೂಡಿ ಮಾತನ್ನು ಸುಳ್ಳುಮಾಡಿಬಿಟ್ಟರು. ನಮ್ಮ ಪೂರ್ವಿಕರು +ನೀಡುತ್ತಿದ್ದ ಕಿರುಕುಳ ಉಪಟಳ ತಾಳಲಾರದೆ ಮಾರ್ಜಾಲ ತಿರುಪತಿಗೋ, ರಾಮೇಶ್ವರಕ್ಕೋ ಹೋಯಿತು. +ಹೀಗಾಗಿ ನಮ್ಮ ಪೂರ್ವಿಕರು ಎರಡು ಮೂರು ತಲೆಮಾರುಗಳವರೆಗೆ ಶಾಸ್ತ್ರಿಗಳ ಗೃಹಕೃತ್ಯದ ಸೇವೆಯನ್ನು ನಿರ್ವಿರಾಮವಾಗಿ ಮಾಡಿ ಸಾಯುಜ್ಯ ಹೊಂದಿದರು. ಅವರ ಶ್ರೇಷ್ಟ ವಂಶದವನಾದ ನಾನು ಶಾಮಾ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳದಿದ್ದರಾದೀತೇನು? ವೇದಾಗಮ ಅಲಂಕಾರ ಗ್ರಂಥಗಳ ಮೇಲೆಲ್ಲ ಹಿಕ್ಕಿ ಉದುರಿಸುವ ಸೇವೆ ಮಾಡುತ್ತ; ನಾನೂ ಪರಮೇಶ್ವರ ಶಾಸ್ತ್ರಿಗಳಂತೆ ಮಹಾಪಂಡಿತನಾಗಬೇಕೆಂಬ ಸತ್‌ಸಂಕಲ್ಪದಿಂದ ತಾಳೆಗರಿ ಕಟ್ಟುಗಳನ್ನು; ವೇದಾಗಮ ಶಾಸ್ತ್ರ ಗ್ರಂಥಗಳ ಶ್ಲೋಕ ಭಾಗಗಳನ್ನು ಸಾಧ್ಯವಾದಷ್ಟು ತಿಂದುಂಡು ಸುಖವಾಗಿದ್ದೆ. ಈ ಸಂದರ್ಭದಲ್ಲಿಯೇ ಶಾಮಾ ಶಾಸ್ತ್ರಿ ಮನಸ್ಸನ್ನು ಗೆದ್ದ ಸುಂದರಿಯನ್ನು ನೋಡುವ ಆತಂಕದಿಂದ ಹ್ರಾಂ ಹ್ರೀಂ ಹ್ರೂಂ ರುದ್ರನಾಯಕನ ಮನೆಯನ್ನು ಪ್ರವೇಶಿಸಿದ್ದು. ಅನಸೂಯಳಾನ್ನು ನೋಡಿದ್ದು, ಬೆಕ್ಕಸ ಬೆರಗಾಗಿದ್ದು. ಪರವಾ ಇಲ್ಲ, ಶ್ರೀಕೃಷ್ಣನ ಕೊಳಲನ್ನು ಹೋಲುವ ಜುಟ್ಟಿನ; ಆ ಜುಟ್ಟಿನ ಮೂಲಕ ಅನೇಕ ರಾಗಗಳನ್ನು ಹೊರಡಿಸಿ ಶಾಮಾ ಶಾಸ್ತ್ರಿ ತನಗೆ ಅನುರೂಪಳಾದ ಕನ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆಂದು ಹೆಮ್ಮೆ ಪಟ್ಟಿದ್ದು. ಆ ಸಂದರ್ಭದಲ್ಲಿಯೇ ಶಾಮಲ ಸುಂದರಿಯಾದ ನೀನು ಕಿಲಕಿಲಗುಟ್ಟುತ್ತ ಎದುರಾಗಿದ್ದು. ಬಿನ್ನಾಣ, ವೈಯಾರದಿಂದ ನನ್ನ ಮನ ಸೂರೆಗೊಂಡಿದ್ದು, ನಾನು ಆ ಕ್ಷಣದಿಂದ ನಿನ್ನನ್ನು ತ್ರಿಕರಣಪೂರ್ವಕವಾಗಿ ಪ್ರೀತಿಸತೊಡಗಿದ್ದು. ನಿನ್ನ ಇಚ್ಛೆಯಂತೆಯೇ ನಾನು ನಿನ್ನ ಮನೆಯೊಳಗೆ ಠಿಕಾಣಿ ಹೂಡಿದ್ದು… ಇಂಥ ಅದ್ಭುತ ಪ್ರೇಮಿಯಾದ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತ ದುಃಖಿಸುತ್ತಿರುವೆಯಲ್ಲ!… ಇದು ನ್ಯಾಯವೇನೆ ಬಂಗಾರ’ ಎಂದು ನಿರರ್ಗಳವಾಗಿ ಮಾತಾಡಿ ಉದ್ವಿಗ್ನಗೊಂಡಿತು ಗಂಡಿಲಿ. +ತನ್ನ ಪ್ರಿಯತಮನ ವಾಗ್ ವೈಖರಿಗೆ ಹೆಣ್ಣಿಲಿಯ ಮನದೊಳಗಿನ ಸಮಸ್ತ ಅನುಮಾನವು ವೈಶಾಖದ ಸೂರ್ಯನಿಗೆ ಹಿಡಿದ ಮಂಜುಗಡ್ಡೆಯಂತೆ ಕರಗಿಹೋಯಿತು. +’ಅನುಮಾನವೂ ಪ್ರೀತಿಯ ಒಂದು ಭಾಗವೆಂದು ತಿಳಿಯಲೈ ಕಾಂತಾ ಅತಿಗುಣವಂತ.” ಎಂದು ಹೆಣ್ಣಿಲಿ ತನ್ನ ಪ್ರಿಯಕರನನ್ನು ಉತ್ಕಟವಾಗಿ ಚುಂಬಿಸಿತು. +ಆ ಅಪರೂಪದ ಚುಂಬನದಿಂದ ಗಂಡಿಲಿಗೆ ಆನೆ ಬಲ ಸಂದಿತು. +“ನಮ್ಮೆಲ್ಲರ ಪ್ರೀತಿಯ ಕನ್ಯಾಮಣಿಯನ್ನು ಶಾಮಾಶಾಸ್ತ್ರಿ ವರಿಸುವಂತಾಗಲು ನಾವು ನಮ್ಮ ಕುಲದೇವತೆಯಾದ ಗಣನಾಯಕನನ್ನು ಸ್ತುತಿಸೋಣ” ಎಂದು ಚರ್ಚೆಗೆ ಶ್ರೀಕಾರ ಹಾಕಿತು ಗಂಡಿಲಿ. +ಪಾರ್ವತಿ ಪುತ್ರನೇ ಸಿದ್ಧಿ ವಿನಾಯಕ +ಕೊಡು ಸುದ್ಭುದ್ಧಿಯನು ಶಾಮಾಶಾಸ್ತ್ರಿಗೆ ಕೊನೆಯ ತನಕ +ಅವರಿಬ್ಬರನು ದೂರ ಮಾಡದಿರು ಆನೆ ಮುಖದವನೆ +ಅಲುಮೇಲಮ್ಮ ಬರದಿರಲಿ ಇವರ ಪ್ರೀತಿಗೆ ಅಡ್ಡ +ಹಾಕಲಿ ಅವರವರ ಮನೆ ಮುಂದೆ ಹಂದರ ಬಹು ದೊಡ್ಡ +ಹಾಕಲಿ ಅಕ್ಷತೆ ಹಿರಿಕಿರಿಯರೆಲ್ಲರು +ಉಂಡುಂಡು ಡೇಗಲು ಹಾಲು ಕೀರು +ಮೂಶಕ ದಂಪತಿಗಳು ತಮ್ಮ ಬಾಲಗಣೇಶನನ್ನು ಸ್ತುತಿಸಿ ಹಾಡುತ್ತಿರಲು ಶಾಸ್ತ್ರಿಗಳ ಮನೆ ಹಿತ್ತಲ +ಕಡೆಯಿಂದ ಯಾವುದೋ ಒಂದು ಸಂದೇಶ ಹೊತ್ತು ತಂದಿದ್ದ ಬಣ್ಣಬಣ್ಣದ ರೆಕ್ಕೆಯ ಪತಂಗವೊಂದು ಆ ಡ್ರಾಯಿಂಗ್ ರೂಮನ್ನು ಒಂದು ಕಡೆಯಿಂದ ಸರ್ವೆ ಮಾಡಿ ಅನಸೂಯಳ ಮುಡಿಮೇಲೆ ರತ್ನಾಭರಣೋಪಾದಿಯಲ್ಲಿ ಅಲಂಕೃತವಾಗಿ ಕೂತುಕೊಂಡಿತು. +ರೂಪು ತೇರಾ ಮಸ್ತಾನ ಪ್ಯಾರ್ ಮೇರಾ ದಿವಾನ ಎಂದು ರಿಕಾಟು ಸೊಸೂಟಿ ಬಯಲಿಂದ ಕೇಳಿ ಬರುತ್ತಿತ್ತು. ನಡುನಡುವೆ ಹಲೋ ಹಲೋ ಮೈಕ್ ಟೆಸ್ಟಿಂಗ್ ಒನ್ಟೂತ್ರೀ ಎಂದು ಪೋಣಿಸುತ್ತಿದ್ದುದು ಸಿನಿಮಾ ಹಾಡಿಗಿಂತ ಬೊಂಬಾಟಾಗಿತ್ತು. +ಮಾಳಿಗೆ ಮೇಲೆ ನಿಂತವರಿಗೆಲ್ಲ ಅದು ಸಲೀಸಾಗಿ ಕಾಣುತ್ತಿತ್ತು. ಆ ಧೂಳು, ಆ ಜನ, ಸದರಿ ಗ್ರಾಮಕ್ಕೆ ಹೊಸದು. ಎಲ್ಲಿ ಭಾಷಣ ಮಾಡುವುದೋ? ಅಲ್ಲಿ ಇಂದಿರಾ ಗಾಂಧಿಯನ್ನು ಬಯ್ಯುವರೆಂದೇ ಜನ ಸ್ವಾಭಾವಿಕವಾಗಿ ಅರ್ಥಮಾಡಿಕೊಂಡು ಬಿಡುತ್ತಿದ್ದರು. +ಆಕೆ ಅಂಥಾಕಿಯಲ್ಲ… ಆಕಿ ಹಡಕೊಂಡಿರೋದೈತಲ್ಲ… ಅದೇ ಹಂಗ ಮಾಡಿಸಾಕ್ಕತ್ತೈತಿ ಕೆಲವರು. ಹುಟ್ಟಿರೋದು ಸೆಗಣಿ ತಿನ್ನಂತತಿ, ತಾಯಿಯಾದಾಕಿ ತಿಂದ ಬಿಡೋದೇನು! ಅಂತಕೆಲವರು. ತಾಯಿ ಮಗ ಇಬ್ರೂ ಸೇಕೊಂಡು ಮಾಡಬಾರ್ದೆಲ್ಲ ಮಾಡ್ಯಾರಂತೆ… ಸಾವಿರಾರು ಮನೆ ಕೆಡವಿಸ್ಯಾರಂತೆ… ಲಕ್ಷಾಂತರ ಮಂದಿ ಮುದಕ ನರ ಕುಯ್ದರಂತೆ… ಇಡೀ ದೇಸದ ಮೂಗಿಗೆ ಮೂಗುದಾರ ಪೋಣಿಸಿ ತಮಗಿಷ್ಟ ಬಂದಂಗ ಕುಣಿಸಾಗಹತ್ಯಾರಂತೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ತನ್ನ ವಿರುದ್ಧವಾಗಲಿ ತನ್ ಮಗನ ವಿರುದ್ಧಾಗ್ಲಿ ಮಾತಾಡಿದ್ದವರನ್ನು ಪೋಲಿಸರು ಹಿಡಕೊಂಡುಹೋಗ್ತಾರಂತೆ… ಕನಸಿನಾಗ ಮಾತಾಡಿದ್ರೂ ಬಿಡೋದಿಲ್ಲವಂತೆ… ಎಬ ಸುದ್ದಿಯನ್ನು ರುಕ್ಕಮ್ಮ ಲೆಟ್ರಿನ್ನಿಗೆ ಹೋದಾಗ ಕೇಳಿಸಿಕೊಂಡದ್ದು ಆಕೆಯ ಗಾಬರಿಗೆ ಕಾರಣವಾಗಿತ್ತು. ಅದನ್ನೆಲ್ಲ ನೆನಪಿಸಿಕೊಂಡು ಮನಸ್ಸಿನಲ್ಲಿ ಇಂದರಾ ಗಾಂಧಿಗೆ ಕೋರೆ ಹಲ್ಲು ಕೆದರು ಜಡೆ; ಗುಳಾಪು ಕಣ್ಣು; ಸೀಳು ನಾಲಿಗೆ ಇತ್ಯಾದಿ ಮೇಕಪ್ಪು ಮಾಡುತ್ತ ರುಕ್ಕಮ್ಮ ಪಡಸಾಲೆಯ ಕಂಭಕ್ಕಾತು ಕೂತು ನಿಟ್ಟುಸಿರುಬಿಟ್ಟಳು. +“ಮಗಳೇ ಅನಸೂಯ” ಎಂದು ಕೂಗಿದಳು. +“ಹ್ಹಾಂ!” ಅನಸೂಯಾ ಸೆರಗನ್ನು ಹಲ್ಲಲ್ಲಿ ಕಚ್ಚಿ ಹಿಡಿದು ಬ್ರಾಗಾಗಿ ಹುಡುಕಾಟ ನಡೆಸಿದ್ದಳು. +“ಅಂಥ ಕಡೆ ನೀ ಹೋಗ್ಲೇಬೇಕೇನವ್ವಾ?” +“ಹೂನವ್ವಾ! ಎರಡಲೊಂದು ಪೈಸಲ್ ಮಾಡ್ಕೊಂಡು ಬರೋಕೆ ಹೋಗ್ಲೇಬೇಕು” ಭಗೀರಥ ಪ್ರಯತ್ನದಿಂದ ನಗಂದಿ ಗುಂಟ ನೇತಾಡುತ್ತಿದ್ದ ಬ್ರಾ ಪತ್ತೆ ಹಚ್ಚಿ ಬಿಟ್ಟಳು. ಅದರ ಆಯಕಟ್ಟಾದಭಾಗವನ್ನು ಕಡಿದು ತೂತು ಮಾಡಿದ್ದ ಗಂಡಿಲಿಯನ್ನು ಶಪಿಸಿದಳು. ಅಯ್ಯೋ ನನ್ನ ಗಂಡನನ್ನು ಬೈತಿದಾಳಲ್ಲ… ನಮ್ಮನ್ನು ಉಂಡು ನಮ್ಮ ಬಟ್ಟೆ ತೊಟ್ಟು ಅವಿವಾಹಿತೆ ಕೈಲಿ ನನ್ನ ಗಂಡ ಬಯ್ಯಿಸಿಕೊಳ್ಳುವಂತಾಯಿತಲ್ಲ… ಅಯ್ಯೋ ಸಿವನೇ ನನ್ನ ಗಂಡನನ್ನು ಬಯ್ದು ಪಾಪ ಕಟ್ಟಿಕೊಳ್ತೀರೋ ನೀನು ಯಾರನ್ನು ಹುಡುಕಿಕೊಂಡು ಹೋಗುತ್ತಿರುವೆಯೋ ಅವನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿ ನಿರಾಸೆಗೊಳಿಸಲಿ’ ಎಂದು ಒಂದು ಹಿಡಿ ಶಾಪ ಕೊಟ್ಟಿತು. ಶಾಪ ಕೊಡುವಾಗ ಅದು ಒದ್ದಾಡಿದ ಕಾರಣಕ್ಕೆ ಜಂತಿ ಸಂದಿಯಿಂದ ಗುಲಗಂಜಿ ಗಾತ್ರದಷ್ಟು ಮಣ್ಣು ಆಕೆಯ ಮುಡಿ ಮೇಲುದುರಿ ಅಲ್ಲಿದ್ದ ಪತಂಗಕ್ಕೆ ತೊಂದರೆ ಕೊಟ್ಟಿತು. ಎಲಾ ಕ್ಷುದ್ರ ಮೂಷಕವೇ ಅಂತ ಪತಂಗ ತೆರೆಯಲೆತ್ನಿಸಿದ ಮೂರನೆ ಕಣ್ಣಿಗೂ ಮಣ್ಣು ಬಿತ್ತು. ಅದು ಲಂಗದ ಮೇಲೆ ಕೂತು +ಕಣ್ಣುಜ್ಜಿಕೊಳ್ಳುತ್ತಿರುವಾಗ ಅನಸೂಯಾ ಬೇಕು ಬೇಕೋ; ಬೇಡಬೇಡವೋ ಎಂಬಂತೆ ಉಡುವುದನ್ನೆಲ್ಲ ಉಟ್ಟು, ತೊಡುವುದನ್ನೆಲ್ಲ ತೊಟ್ಟು; ಬಡಿಯುವುದನ್ನೆಲ್ಲ ಬಡಿದುಕೊಂಡು ರೆಡಿಯಾಗಿ ಹುತ್ತದೊಳಗಿಂದ ವಾಲ್ಮೀಕಿ ಮಹರ್ಷಿ ಹೊರಬರುವಂತೆ; ಮಜ್ಜಿಗೆ ಆಳದಿಂದ ಬೆಣ್ಣೆ ತೇಲಿದಂತೆ ಕೋಣೆಯಿಂದ ಹೊರಗಡೆ ಬಂದಳು +“ಏನವ್ವಾ ಹೀಗ್ಯಾಕ ಕೂತುಕೊಂಡಿದ್ದೀ?” ಮೇವಾಡದ ರಾಜನಂತೆ ಯುದ್ಧಕ್ಕೆ ಹೊರಟಿರುವ ತನ್ನನ್ನು ನಗುಮುಖದಿಂದ ಬೀಳ್ಕೊಡುವುದು ಬಿಟ್ಟು ರುದ್ರನಾಯಕನ ವೀರವನಿತೆ ಮ್ಲಾನವದನಳಾಗಿ ಕುಳಿತಿರುವುದರೆಂದರೇನು? ಅನಸೂಯ ತಾಯಿ ಕಡೆ ನೋಡಿದಳು. +“ನಿನ್ನ ಗಂಡು ಮಗನಂತೆ ಬೆಳೆಸಿದ್ದೀವಿ ಮಗಳೇ. ನೀನು ಓದಿಕೊಂಡಿರೋಕೆ, ನಿನ್ಗೆ ಬುದ್ಧಿಹೇಳೋ ಶಕ್ತಿ ಆ ದೇವ್ರು ನನಗೆ ಕೊಟ್ಟಿಲ್ಲ… ಆ ಬ್ರಾಂಬ್ರು ಹುಡುಗನತ್ತ ನಿಷ್ಠುರವಾಗಿ ಕೇಳಿ ಬಂದುಬಿಡು… ಆದ್ರೆ ಹತ್ತು ಆಗದಿದ್ರೆ ಇಪ್ಪತ್ತು” ಆಕೆ ಇಷ್ಟೊಂದು ವೀರಾವೇಶದಿಂದ ಮಾತಾಡಿದ್ದು ಅದೇ ಮೊದಲು. +“ಹೌದವ್ವಾ ಕಡ್ಡಿ ಮುರುದಾಂಗ ಮಾತಾಡಿ ಬತೀನಿ… ನನ್ ಹಣೇಲಿ ಯಾರು ಗಂಡ ಅಂತ ಐತೋ ಅವನಿಂದ ನನ್ ಕುತ್ತಿಗೀಗೆ ತಾಳೀ ಬೀಳೋದಂತೂ ಗ್ಯಾರಂಟಿ. ಅದನ್ಯಾರು ತಪ್ಪಿಸೋಕಾಗಲ್ಲ…” +“ನಮ್ಮಂಥ ಕಪ್ಪುಜನ ಎಷ್ಟು ಅಂಗಲಾಚಿದರೂ ಬ್ರಾಂಬ್ರು ಮನ್ಸು ಕರಗೋದಿಲ್ಲಾಂತ ನಿಮ್ಮಪ್ಪ ಹೇಳಿದ್ರು. ಕಾಡೋದು ಬ್ಯಾಡ, ಬೇಡೋದು ಬ್ಯಾಡ… ಹ್ಹೂಂ ಅಂದ್ರೂ ಸರೆ; ಹೂಂ ಅನದಿದ್ರೂ ಸರೆ” +“ಹೌದವ್ವಾ… ನಾನೂ ಹಂಗೇ ಅಂದ್ಕೊಂಡಿರೋದು ನನ್ಗೂ ಅನುಮಾನ. ಆದ್ರೂ ಹೋಗ್ತಿದೀನಿ. ನೀನು ಯಾವುದ್ಕೂ ಧೈರ್ಯವಾಗಿರು.” +“ನಾನೂ ಅಷ್ಟು ದೂರ ಬರಲೇನವ್ವಾ… ಅಲ್ಲಿ ಪೋಲಿಸರು ಬಾಳ ಮಂದಿ ಇತಾರಂತೆ” ಎಷ್ಟದರೂ ತಾಯಿ ದುಗುಡ ಪ್ರಕಟಿಸಿದಳು. +“ನಮ್ಮ ಶಾಮೂನೇ ಏನು ಮಾಡೋದಿಲ್ಲ. ಅಂದ ಮ್ಯಾಲ ಪೋಲಿಸರೇನು ಮಾಡ್ಯಾರು ಬಿಡೆವ್ವ… ಅವ್ರೂ ನಮ್ಮಂಗೆ ಮನುಷ್ಯರು. ನೀನು ಚಿಂತೆ ಮಾಡದೆ ಮನೇಲಿರು. ನಾನು ಸರ್ರಂತ ಹೋಗಿ ಬರ್ರಂತ ಬತೀನಿ.” +ಅನಸೂಯಾ ತಾಯಿಯ ತಲೆ ನೇವರಿಸಿ, ಪಾದಗಳಿಗೆ ಮಾಮೂಲು ಚಪ್ಪಲಿ ಧರಿಸಿಕೊಂಡು ಮಂತ್ರಿಸಿದ್ದ ತೆಂಗಿನಕಾಯಿ ಕೆಳಗಿನಿಂದ ಹಾಯ್ದು ವಿಕ್ಟೋರಿಯಾ ಮುಖಗಳಿದ್ದ ನಾಣ್ಯಗಳನ್ನು ಅಂಗುಲಂಗುಲಕ್ಕೊಂದೊಂದರಂತೆ ಜಡೆದಿದ್ದ ಹೊಸ್ತಿಲು ದಾಟಿದಳು. +ಇದನ್ನೆಲ್ಲ ನೋಡಿ ಒಣ ನಿಷ್ಟುರ ಕಟ್ಟಿಕೊಳ್ಳುವುದು ಯಾಕೇಂತ ಮುಳುಗುವ ಅವಸರದಲ್ಲಿದ್ದ ಸೂರ್ಯ ತನ್ನ ಕಿರಣಗಳನ್ನು ಉಪಸಂಹರಿಸಿಕೊಳ್ಳತೊಡಗಿದ್ದ. ಜನರ ಪದಾಘಾತದಿಂದಾಗಿ ಎದ್ದಿದ್ದ ಧೂಳು ಬಹುಪಾಲು ಕಿರಣಗಳನ್ನು ಮಂಕುಗೊಳಿಸಿತ್ತು. ಹೀಗಾಗಿ ಸಂಜೆ ಸಮಯ ಹೋಗಲು, ಬರಲು ಒಂಥರಾ ಮಜವಾಗಿತ್ತು. ಮನುಷ್ಯ ಮನುಷ್ಯನ ನಡುವೆ ಒಂದು ರೀತಿ ತೆರೆ ಎಳೆದಂತಿತ್ತು. ಆದ್ದರಿಂದ ಇವರು ಇಂಥವರೇ ಎಂದು ಎಂಟು ಫೂಟು ದೂರದಿಂದಲೂ ಗುರುತಿಸುವುದು ಸಾಧ್ಯವಿರಲಿಲ್ಲ. +ಕಾದಂಬರಿಯೊಳಗೆ ಕಥೆಯೇ ನಡೆಯುತ್ತಿರುವಂತೆ; ವಾಕ್ಯದೊಳಗಿನ +ವ್ಯಾಕರಣವೇ ನಡೆಯುತ್ತಿರುವಂತೆ ಅನಸೂಯಾ ಹೆಜ್ಜೆಗೊಮ್ಮೊಮ್ಮೆ ಚೀಟಿಯ ಸಾರಾಂಶ ನೆನಪು ಮಾಡಿಕೊಳ್ಳುತ್ತ ನಡೆಯತೊಡಗಿದ್ದಳು. ಅವನು ತನ್ನ ತಲೆಯೊಳಗಿನ ಕವಿತೆಗಳನ್ನು ಒಂದೊಂದಾಗಿ ತೆಗೆದು ಖಾಲಿಮಾಡಿರುವನೆನೆಸಿತು. ಅವನು ತನ್ನ ತಲೆಯೊಳಗಿನ ಛಂದಸ್ಸು, ಅಲಂಕಾರ ಬೆಟ್ಟಿಯಾದಾಗರೊಂದೊಂದರಂತೆ ಲಪಟಾಯಿಸಿ ಬಿಟ್ಟಿರುವನೆನ್ನಿಸಿತು. ಈಗ ತನ್ನಲ್ಲಿ ಉಳಿದಿರುವುದು ಅರ್ಥವಿಲ್ಲದ ಅಕ್ಷರಗಳು ಮಾತ್ರ. ವಾಕ್ಯದ ಸುತ್ರ ಕಳೆದುಕೊಂಡ ಶಬ್ದಗಳು ಮಾತ್ರ, ಪ್ರತಿಯೊಂದು ಶಬ್ದಗಳು ಖಚಿತ ಆಕಾರ ಪಡೆಯದೆ ಗುರುತ್ವಾಕರ್ಷಣೆ ಯಿಲ್ಲದ ಉಪಗ್ರಹದ ಮೇಲೆ ತೇಲಾಡುತ್ತಿರುವ ಘನವಸ್ತುಗಳು ಮಾತ್ರ. +ನೆನಪುಗಳನ್ನು ಒಂದರ ಹಿಂದೆ ಒಂದರಂತೆ ನೆನಪು ಮಾಡಿಕೊಳ್ಳುತ್ತ ಸೊಸೂಟಿಯ ಬಯಲು ಅಷ್ಟು ದೂರ ಇದೆ ಅನ್ನುವಷ್ಟಲ್ಲಿ ನಿಂತುಕೊಂಡಳು. ಆಕೆಯ ಚಂಚಲ ನೇತ್ರಗಳು ಗಾಳಿಗಿಟ್ಟ ಸೊಡರ ಕುಡಿಯಂತೆ ಸುತ್ತ ಹೊಯ್ದಾಡಿದವು. ಮೈತುಂಬ ಧೂಳು ಮೆತ್ತಿಕೊಂಡು ಕಾದಕಾವಲಿ ಮೇಲಿನ ಕೋಳಿಮರಿಗಳಂತೆ ಚಡಪಡಿಸುತ್ತಿರುವ ಸಾವಿರಾರು ಜನ ನಿಂತಲ್ಲಿ ನಿಲ್ಲುತ್ತಿಲ್ಲ. ಕೂತಲ್ಲಿ ಕೂಡುತ್ತಿಲ್ಲ. ಸಾಧಾರಣ ವೇದಿಕೆ ಮೇಲೆ ಬಲಿಪಶುವಿನಂತಿದ್ದ ಮೈಕು. ಪ್ರಧಾನ ಮಂತ್ರಿ ಕುರ್ಚಿಯೊಂದಿಗೇ ಅಲಹಾಬಾದಿನ ಆನಂದಭವನದಲ್ಲಿ ಹುಟ್ಟಿರುವಂಥ ಇಂದಿರಾಗಾಂಧಿ ಬಗ್ಗೆ ಏನೇನೋ ಹೇಳಲಿರುವ ಜಾರ್ಜ್ ಫರ್ನಾಂಡಿಸ್, ಕಿಶನ್ ಪತ್ನಾಯಕ ಈಗ ಬಂದಾರು? ಆಗ ಬಂದಾರು? ಎಂದು ಕಾಯುತ್ತಿರುವ ಮಂದಿ ನಡುವೆ ಗೊಬ್ಬರದಂಗಡಿಯ ಜಲಜಾಕ್ಷಿ ದುತ್ತನೆ ಕಾಣಿಸಿಕೊಂಡಳು. ಬಿಳಿ ಸೀರೆ; ಹಸಿರು ಕುಪ್ಪಸ ತೊಟ್ಟು; ಎಡ ಸ್ತನದ ಮೇಲೆ ಪಾರಿಜಾತದ ಹೂವಿನಂತ ಬ್ಯಾಡ್ಜು ಸಿಕ್ಕಿಸಿಕೊಂಡಿದ್ದ ಆಕೆಗೆ ಕಣ್ಣಿಗೆ ಬೀಳಬಾರದೆಂದು ಅನಸೂಯ ಪ್ರಯತ್ನಿಸಿದ್ದು ವಿಫಲವಾಯಿತು. ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರದಂತೆ ಆಕೆ ಒಮ್ಮೆ ಎಡಗೈಯನ್ನೂ, ಇನ್ನೊಮ್ಮೆ ಬಲಗೈಯನ್ನೂ ಅಭಯ ನೀಡುತ್ತಿರುವ ರೀತಿಯಲ್ಲಿ ಮೇಲಕ್ಕೆತ್ತಿ ಅಲುಗಾಡಿಸುತ್ತ, ಪುರುಷ ಪ್ರೇಮಿಗಿಂತ ತಾನೇನು ಕಡಿಮೆ ಇಲ್ಲವೆಂಬಂತೆ ಬಂದು ಎದುರಿಗೆ ನಿಂತುಕೊಂಡೇಬಿಟ್ಟಳು. +“ಅನಸೂಯಾ! ಬಾ ಬಂದು ಕೂತ್ಕೋ… ರಾಜಕೀಯ ಅರ್ಥ ಮಾಡ್ಕೊಂಡ್ರೆ ಎಲ್ಲಾ ಪುಳಿಚಾರು ಅರ್ಥವಾಗ್ತದೆ” ಎಂದು ಕೂಡ್ರಲು ಸೋಡಾ ಸಿದ್ದಲಿಂಗಪ್ಪನ ಬಾಡಿಗೆಯ ಮೂರುಕಾಲಿನ ಕುರ್ಚಿ ತೋರಿಸಿದಳು. +“ಬೇಡ ಬಿಡೆ… ಅದಿಲಿ… ಏನಿದು ನಿನ್ನವತಾರ?” ಜಡ ಒನಕೆಯ ಗೊಂಬೆಯಂಥ ಮನಸ್ಸಿನ ಅನಸೂಯ ಕೇಳಿದಳು. +“ಒಲಂಪಿಕ್ಸ್‌ನಲ್ಲಿ ಹಂಡ್ರೆಡ್ ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ತೊಗುಳ್ಳಿಕ್ಕಾಗಿಲ್ಲ. ರಾಜಕೀಯ ರಂಗದಲ್ಲಾದ್ರು ಧುಮುಕಿ ಕನಿಷ್ಟ ಲೊಕಲ್ ಮಟ್ಟದಲ್ಲಾದ್ರು ಮಿಂಚಬೇಕೆಂದು ನಿರ್ಧಾರ ಮಾಡ್ದೆ ಅನಸೂಯಾ; ಇಂದಿರಗಾಂಧಿ ವಿರುದ್ಧದ ನವನಿರ್ಮಾಣ ಚಳುವಳಿಗೆ ಒಳ್ಳೆ ಫ್ಯೂಚರಿದೆ, ಏನಾದ್ರು ಮಾತಾಡಿ ಕೆಲ ದಿನದ ಮಟ್ಟಿಗಾದ್ರು ಜೈಲಿಗೆ ಹೋಗಿ ಬಂದುಬಿಟ್ರೆ ಪೊಲಿಟಿಕಲ್ ಐಡೆಂಡಿಟಿ ಸಿಗೋದಂತೂ ಗ್ಯಾರಂಟಿ… ಮುಂದೊಂದಿನ ನಾನು ಮಿನಿಷ್ರಾದ್ರೂ ಆಶ್ಚರ್ಯಪಡಬೇಕಿಲ್ಲ. ಇವತ್ತಿನ ಪಾಲಿಟಿಕ್ಸಿಗೆ ನನ್ನಂಥ ಸದೃಡ ಮಹಿಳೆಯರ ಅಗತ್ಯ ತುಂಬಾ ಇದೆ. ಅದು ಅಲ್ಲದೆ ನನ್ನಂಥ ಬಾಡಿ ಬಿಲ್ಡಸು ಭಾಗವಹಿಸಿದಾಗ ಮಾತ್ರ ಯಾವುದೇ ಚಳುವಳಿಗೆ ಅರ್ಥ ಬರೋದು… ಒಂದು ದುರ್ದೈವದ ಸಂಗತಿ ಎಂದರೆ ಇಂದಿರಾಗಂಧಿಯಂಥ +ಉಕ್ಕಿನ ಮಹಿಳೆ ವಿರುದ್ಧ ನನ್ನಂಥ ಮಹಿಳೆಯರು ಹೋರಾಡಬೇಕಾಗಿ ಬಂದಿರೋದು… ಈಗ ನೀನೇನು ಮಾಡ್ತಿದೀಯಾ? ಪ್ರೇಮ ಪ್ರೀತಿ ಅಂತ ತಲೆಕೆಡಿಸಿಕೊಂಡು ಆ ಅರೆಹುಚ್ಚ ಶಾಮಾ ಶಾಸ್ತ್ರಿಯ ಹಿಂದೆ ಇನ್ನೂ ತಿರುಗಿತ್ತಿದೀಯಾ ಹೇಗೆ? ನಿನ್ನ ಮದುವೆ ಆಗೋ ಧೈರ್ಯ ಆ ಪುಳಿಯೋಗರೆಗಿಲ್ಲ. ಅಂಥೋರೆಲ್ಲ ಮುಷ್ಠಿ ಮೈಥುನ ಮಾಡಿಕೊಳ್ಲಿಕ್ಕಷ್ಟೆ ಲಾಯಕ್. ಆ ಪ್ರಾಕ್ರುತ ಜಾನುವಾರು ಮತ್ತು ನೀನೂ ನನ್ನಂಗೆ ಪಾಲಿಟಿಕ್ಸ್‌ಗೆ ಇಳ್ದುಬಿಡು. ಪಾಲಿಟಿಕ್ಸ್‌ಗೆ ನಿನ್ನಂಥ ಬ್ಯಾಕ್ವರ್ಡ್ ಕ್ಲಾಸ್ ಬ್ರಿಲಿಯಂಟ್ ಹುಡುಗೀರ ಅಗತ್ಯ ತುಂಬ ಇದೆ” ಭಾಷಣದ ತಾಲೀಮು ಮಾಡುತ್ತಿರುವಂತೆ ಜಲಜಾಕ್ಷಿ ಪಟಪಟಾಂತ ಮಾತಾಡಿದಳು. +ಅದನ್ನೆಲ್ಲಾ ಕೇಳಿ ಅನಸೂಯಾಗೆ ಆಶ್ಚರ್ಯವೋ ಅಶ್ಚರ್ಯ. ಎಷ್ಟೊಂದು ಚೆನ್ನಾಗಿ ಮಾತಾಡುವುದನ್ನು ಕಲಿತಿರುವಳಲ್ಲ ನನ್ನ ಗೆಳತಿ! ಕೆಳಗೂ ಮೇಲೂ ನೋಡಿದಳು. +“ನಾನು ಪಾಲಿಟಿಕ್ಸಿಗಿಳಿದು ಸಮಾಜ ಉದ್ಧಾರ ಮಾಡೋದು ಒತ್ತಟ್ಟಿಗಿಲಿ… ಇದ್ನ್ನೆಲ್ಲ ನಿನ ತಲೆಗೆ ತುಂಬ್ದೋರು ಯಾರೂಂತ?” ಎಂದು ಕೇಳಲು +ಬಾಡಿಬಿಲ್ಡರು ಕೆಮ್ಮಿ ಗಂಟಲು ಸರಿಪಡಿಸಿಕೊಂಡು, ಒಂದಿನ ತಮ್ಮ ಮನೆಗೆ ಕಾಫಿ ಪುಡಿ ಬಣ್ಣದ ಮಸಾಲೆ ಮಾಯಣ್ಣ ತನ್ನ ಮೂರಡಿ ಕಾಯವನ್ನು ಆರಡಿ ಮಾಡಿಕೊಂಡು ಬಂದದ್ದು, ಉಪ್ಪಿಟ್ಟು ತಿಂದ ಕೈಯನ್ನು ತೊಳೆದುಕೊಳ್ಳಲೆಂದು ಹಿತ್ತಲಿಗೆ ಹೋಗಿದ್ದಾಗ ಡಂಬಲ್ಸು; ಬುಲ್‌ವರ್ಕರ್ ಮುಂತಾದ ವ್ಯಾಯಾಮದ ಪರಿಕರಗಳನ್ನು ನೋಡಿದ್ದೂ; ಈ ಹುಡುಗಿ ಇಷ್ಟೆಲ್ಲಾ ಮಾಡ್ತಾಳ ಎಂದು ಆಶ್ಚರ್ಯಪಟ್ಟಿದ್ದು; ಆ ನಂತರ ’ಅಲ್ಲೋ ಗುರುಬಸ್ವಾ… ನಿನ್ ಕೈಲಂತೂ ಪಾಲಿಟಿಕ್ಸಿಗೆ ಬರೋದಾಗ್ಲಿಲ್ಲ, ನಿನ್ ಮಗಳನ್ಯಾಕ ಪಾಲಿಟಿಕ್ಸಿಗೆ ಇಳಿಸಬಾರ್ದು! ಇಂಥ ಪರ್ಸನಾಲಿಟಿ ಇರೋರಿದ್ರೇನೆ ಇಂದಿರಾ ವಿರೋದಿ ಚಳುವಳಿಗೆ ಶಕ್ತಿ ಬರೋದು, ನಾನು ಕಾಂಗ್ರೆಸ್ನೋನು ಅಂತ ಅನುಮಾನ ಪಡಬೇಡ, ಲೈಸನ್ಸೂ ಹಾಳೂ ಮೂಳೂ ಬೇಳೆ ಬೆಂದ ಕೂಡ್ಲೆ ಪ್ರಧಾನಿಯ ಸರ್ವಾಧಿಕಾರಿ ಮನೋಭಾವ ಪ್ರತಿಭಟಿಸಿ ನಾನೂ ಪಕ್ಷಾಂತರ ಮಾಡಿಬಿಡ್ತಿನಿ” ಎಂದು ಹೇಷಾರವ ಮಾಡಿದ್ದು; ಎರಡು ಸಾರಿ ಎಮ್ಮೆಲ್ಲೆಯಾಗಿ ಸಾಕಷ್ಟು ಆಸ್ತಿ ಮಾಡ್ಕೊಂಡಿರೋ ಮಾಯಣ್ಣನಿಗೆ ಮಗಳನ್ನು ಕಟ್ಟಿಬಿಡುವುದೆಂದು ಗುರುಬಸಪ್ಪಾ ದಂಪತಿಗಳು ಸಮಾಲೋಚಿಸಿ, ಒಪ್ಪಿಗೆ ಕೊಟ್ಟಿದ್ದೂ ಎಲ್ಲವನ್ನೂ ಕೂಲಂಕುಷವಾಗಿ ವಿವರಿಸಿದಳು ಜಲಜಾಕ್ಷಿ. +ಅದನ್ನೆಲ್ಲ ಕೇಳಿ ಅನಸೂಯ ದಿಗ್ಭ್ರಮೆಗೊಂಡಳು. +ಬೆಸ್ಟ್ ಆಫ್ ಲಕ್ ಎಂದು ಹೇಳಬೇಕೆನ್ನುವಷ್ಟರಲ್ಲಿ ಬುರ್ರ್ ಅಂತ ಕಪ್ಪು ಕಾರೊಂದು ಬಂದು ನಿಂತಿದ್ದು, ಅದರಿಂದ ಆವಿರ್ಭವಿಸುತ್ತಿರುವ ರೀತಿಯಲ್ಲಿ ನೆಸ್ ಕೆಫೆ ಬಣ್ಣದ ಕುಳ್ಳು ವ್ಯಕ್ತಿ ಭಲೆ ಸ್ಟೈಲಿನಿಂದ ನಡೆದು ಬಂದದ್ದು… ಹಾಯ್ ಎಂದು ಕೂಗಿದ್ದು ಎಲ್ಲಾ ಸರಿಹೋಯ್ತು. +“ಹಲೋ ಮಯೂ ಡಾರ್ಲಿಂಗ್ ಇಷ್ಟೊತ್ತು ಎಲ್ಲಿ ಹೋಗಿದ್ದೆ? ಒನ್‌ಮಿನಿಟ್ ಬಾ ಇಲ್ಲಿ” ಎಂದಳು. ಆತ ತನ್ನ ಕೈಯ ಸಮಸ್ತ ಬೆರಳುಗಳಿಗಿದ್ದ ಉಂಗುರಗಳನ್ನು ಝಳಪಿಸುತ್ತ ಹತ್ತಿರ ಬಂದ. +“ಅನಸೂಯಾ! ನಾನ್ ಹೇಳ್ತಿದ್ನಲ್ಲ! ಇವ್ರೆ ನನ್ನ ಉಡ್ಬೀ… ಸಿಂಗಟ್ಲೂರ್ ಕ್ಷೇತ್ರದಿಂದ ಎರಡು ಸಾರಿ ಎಮ್ಮೆಲ್ಲೆಯಾಗಿ ಎಲೆಕ್ಟಾಗಿದಾರೆ” ಎಂದು ಜಲಜಾಕ್ಷಿ ಹತ್ತಿರ ನಿಂತು ಪರಿಚಯಿಸಿದಳು. +“ಹಲೋ! ತುಂಬ ಸಂತೋಷವಾಯ್ತು. ನಿಮ್ಮನ್ನು ನೋಡಿ” ಕೈಮುಗಿದಳು. ಅಕ್ಕಿರೊಟ್ಟಿ ಮೇಲೆ ಹುಚ್ಚೆಳ್ಳು ಚಟ್ನಿ ನೆನಪಿಸಿಕೊಂಡಳು. +ಆ ಇಬ್ಬರು ಭವಿಷ್ಯತ್ ಕಾಲದ ದಂಪತಿಗಳು ಅಷ್ಟುದೂರ ಸರಿದು (ಅವರ ಉಸಿರು ಇವರಿಗೆ +ಬಡಿಸಿ ಇವರ ಉಸಿರು ಅವರಿಗೆ ಬಡಿಸಿ) ರಾಜಕೀಯ ಪರಿಭಾಷೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟುಸ್ಸಾ ಪುಸ್ಸಾ ಮಾತಾಡಿಕೊಂಡರು. ಮಸಾಲೆ ಮಾಯಣ್ಣನೆಂಬ ಆಗಸದಲ್ಲಿ ಫಳಫಳ ಹೊಳೆಯುವ ಬೆಳ್ಳಿಚುಕ್ಕಿಯಂಥ ಜಲಜಾಕ್ಷಿ ತನ್ನ ಜೀವನದ ಗೆಳತಿಯ ಬಳಿಗೆ ಓಡಿಬಂದಳು. +“ಜಾರ್ಜ್ ಫರ್ನಾಂಡಿಸ್ಸಿಗೆ ಗಾರ್ಲೆಂಡಾಕೋದ್ಕೆ ನನ್ನೇ ಆಯ್ಕೆ ಮಾಡಿದ್ದಾರೆ ಕಣೆ. ಕಣ್ತುಂಬ ನೋಡ್ವಂತಿ, ಆ ಶಾಮು ಇದ್ರೆ ಜೊತೆಗೆ ಕರೆದೊಯ್ಯಬೌದಿತ್ತು. ನೀನು ಬತೀ ಏನು? ಕಾನಲ್ಲಿ ಹೋಗೋಣ.’ ಚಟಪಟ ನುಡಿದಳು. +“ಇಲ್ಲ… ನನಗದೆಲ್ಲ ಆಗೋದಿಲ್ಲ… ನೀನು ಹೋಗಿ ಬಾ… ಬೆಸ್ಟ್ ಆಫ್ ಲಕ್”ಎಂದಳು ಅನಸೂಯ. +“ಆಗ್ಲಿ ನಿನ್ನಿಷ್ಟ. ಇಂದಿರಾಗಾಂಧಿ ವಿರೋಧಿ ಕವಿತೆ ಬರೆಯೋದ್ಕೆ ಆ ನಿನ್ನ ಶಾಮುಗೆಮ್ ಹೇಳು; ಇದ್ಕೆಲ್ಲ ಸಾಹಿತ್ಯದ ಅಗತ್ಯ ತುಂಬ ಇದೆ… ಬತೀನಿ” ಜಲಜಾಕ್ಷಿ ಬುಡುಬುಡು ಓಡಿ ಕಾರೊಳಗೆ ಮುಖ ಯಾರಿಗು ಕಾಣಬಾರದೂಂತ ಮರೆಮಾಚಿ ಸ್ಟೇರಿಂಗ್ ಮುಂದೆ ಕೂತಿದ್ದ ತನ್ನ ವುಡ್‌ಬೀ ಪಕ್ಕ ಕೂತುಕೊಂಡಳು. ಕಾರು ಬುರ್ರಂತ ಓಡಿಹೋಯಿತು. +ಒಂದು ಕ್ಷಣ ಭಯಂಕರ ಸುಂಟರಗಾಳಿಯಲ್ಲಿ ಸಿಕ್ಕು ಬಿಡುಗಡೆಗೊಂಡ ಅನಿರ್ವಚನೀಯ ಅನುಭವವಾಯಿತು ಅನಸೂಯಳಿಗೆ. +ಜನ ಎಷ್ಟು ವೇಗವಾಗಿ ಬದಲಾಗುತ್ತಿರುವರಲ್ಲ ಎಂದೆನಿಸಿತು. ರಾಜಕೀಯ ರಂಗವೆಂಬ ಅಖಾಡದೊಳಗೆ ಧೈರ್ಯವಾಗಿ ನುಗ್ಗಿರುವ ತನ್ನ ಗೆಳತಿ ಬಗ್ಗೆ ಹೆಮ್ಮೆ ತಾಳಿದಳು. +ಎಲ್ಲಿ ಹೋದನೀ ಶಾಮ ಎಂದು ಸುತ್ತ ಕಣ್ಣಾಡಿಸಿದ ಆಕೆಗೇನು ಗೊತ್ತು – ಶಾಮಾಶಾಸ್ತ್ರಿ ರಸ್ತೆ ಪಕ್ಕ ಅರಳಿ ಮರದ ದೊಡ್ಡೆ ಬಂಡೆಹಿಂದೆ ಜಲಜಾಕ್ಷಿಗೆ ಹೆದರಿ ಅವಿತುಕೊಂಡಿದ್ದುದು. ತಾನು ಕಣ್ಣಿಗೆ ಬಿದ್ದರೆಲ್ಲಿ ಬಾಡಿಬಿಲ್ಡರ್ ಅಪ್ಪಚ್ಚಿ ಮಾಡಿಬಿಡುವಳೋ ಎಂದು ಅವನು ಪ್ರತಿವಿದ್ಯಮಾನದವನ್ನು ಭಯದಿಮ್ದ ಇಣುಕಿ ನೋಡತೊಡಗಿದ್ದ. ಕಾರು ಅತ್ತ ಹೋದ ಕೂಡಲೆ ಇತ್ತ ಅವನು ಧೈರ್ಯವಾಗಿ ಅನಸೂಯಳಿಗೆ ಕಾಣಿಸಿಕೊಳ್ಳಬೇಕೆಂದು ನೆಲಕ್ಕೆ ಬಲವಾಗಿ ಅಂಟಿಕೊಂಡಿದ್ದ ಕಾಲನ್ನು ಕಿತ್ತೀಚೆ ಇಡಬೇಕೆಂದು ಪ್ರಯತ್ನಿಸಿದ. ಸರ್ಪಾಸ್ತ್ರ ಹೇಗೆ ಕರ್ಣನ ಬತ್ತಳಿಕೆ ಸೇರಿಕೊಂಡು ಬಿಟ್ಟಿತ್ತೋ ಹಾಗೆ ಕೆಂಪನೆಯ ವೃಶ್ಚಿಕವೊಂದು ಕುಡುತಿನಿ ಮಗ್ಗಿಯಿಂದ ಒಂಟಿಕಣ್ಣು ರಾಮನ ಬಂಡಿ ಈರಿ ಬಂದು ಅಲ್ಲಿ ಕಾಂಡದ ಮೇಲೆ ಕೂಂತುಬಿಟ್ಟಿತ್ತು. ಏನೋ ಆಪ್ಯಾಯಮಾನವಾದ ವಾಸನೆ ಶಾಮನ ಪುಷ್ಠಭಾಗದಿಂದ ಮೂಗಿಗೆ ಬಡಿದು ಅದು ಕೊಂಡು ನಿಗರಿಸಿ ಅಲರ್ಟಾಗಿ ಬಿಟ್ಟಿತ್ತು. ಆ ವಾಸನೆ ಯಾವುದಪ್ಪಾ ಎಂದರೆ; ತನ್ನ ತಾಯಿಯ ಮೈಲಿಗೆಯಾಗಿದ್ದ ಒಳ ಉಡುಪುಗಳೊಂದಿಗಿದ್ದ ಡ್ರಾಯರನ್ನು ಉಟ್ಟುಕೊಂಡಿಡು ಬಂದಿದ್ದುದು. ಅದರ ವಾಸನೆ ಹೆಂಗೆಂಗೆ ಬರುವುದೋ ಆ ಕೆಂಜೇಳು ಹಂಗಂಗೆ ಆಡತೊಡಗಿತು. ಅಲ್ಲಿಂದ ಬಹಿರಂಗವಾಗಿ ಕಾಣಿಸಿಕೊಳ್ಳಲು ಭೂಗತ ಹೋರಾಟಗಾರನಂತೆ ಅವನು ಕಾಂಡಕ್ಕೆ ಹೊಕ್ಕಳು ಭಾಗವನ್ನು ಅಂಟಿಸಿದ. ತಾನೆಲ್ಲಿ ಸತ್ತುಹೋಗಿಬಿಡುವೆನೋ ಎಂಬ ಪ್ರಾಣ ಭಯದಿಂದ ಅದು ಅವನ ಶಿಶ್ನದ ತುದಿಯನ್ನು ಕುಟುಕ್ಕನೆ ಕುಟಿಕಿಬಿಟ್ಟಿತು. ಆ ಕೂಡಲೆ ತನ್ನ ತೊಡೆ ಸಂದಿಯ ಆಯಕಟ್ಟಾದ ಭಾಗಕ್ಕೆ ಯಾರೋ ಸುಡುಸುಡುವ ಕೆಂಡದುಂಡೆಗಳನ್ನು ಎಸೆದು ಬಿಟ್ಟಂತೆ ಅನುಭವವಾಯಿತು. ಭೀಮಸೇನಂ ಗದಾಘಾತದೋಳೂರು ಭಗಮಂ ಮಾಡಿದೊಡನೆ ಅಭಿಮಾನಧನಂ ಚೀರಿಕೊಂಡಂತೆ ಶಾಮ +’ಮಾತೋಶ್ರೀ ಪಾಹಿಮಾಂ’ ಎಂದು ಗಟ್ಟಿಯಾಗಿ ಚೀರಿಕೊಂಡುಬಿಟ್ಟನು. ಅದು ಅಲ್ಲೆಲ್ಲ ಪ್ರತಿಧ್ವನಿಸಿತು. ಆ ರೌರವಕ್ಕೆ ಹೆದರಿ ಪಕ್ಷಿಗಳೆಲ್ಲ ಮರದಿಂದ ಪುರ್ರನೆ ಆಗಸಕ್ಕೆ ಹಾರಿದವು. ಯವುದೋ ಅಶರೀರವಾಣಿ ಕೇಳಿಸಿಕೊಂಡಂತೆ ಜನ ಕಂಗಾಲಾಗಿ ಜನ ಸುತ್ತಮುತ್ತ ನೋಡಿದರು. +ಅರಳೀ ಮರವೇ ಮಾತಾಡಿತೆಂದು ಅಪಾರ್ಥ ಮಾಡಿಕೊಂಡು ಆ ರಾಜಕೀಯ ಕಾರ್ಯಕರ್ತರು ಅಪ್ಪಿಕೊಳ್ಳಲೆಂದು ಮರದ ಕಡೆ ಉರವಣಿಸಿದರು. ಕೆಲವರು ಬೊಡ್ಡೆಗೆ ಕಿವಿಯಾನಿಸಿ ಸಂಸ್ಕೃತ ಭಾಷೆಯನ್ನು ಕೇಳುವ ಪ್ರಯತ್ನ ನಡೆಸಿದರು. ಕೆಲವರು ಮರಕ್ಕೆ ದೆವ್ವ ಬಡಕೊಂದೈತಿ ಎಂದು ಕಾಲಿಗೆ ಬುದ್ಧಿ ಹೇಳಿದರು. “ಪಾಪ! ದೇವ್ರಂಥಾಕಿ ನಮ್ ಇಂದ್ರಾ ಗಾಂಧೀನ ಬಯ್ದ್ರೆ, ಮರ ಮಾತಾಡದಂಗಿತದೇನು?” ಎಂದು ದೂರ ನಿಂತು ಚುಟ್ಟ ಸೇದತೊಡಗಿದರು. +ಆದ್ರೆ ನಮ್ಮ ಕಥಾನಾಯಕ ಶಾಮಾಶಾಸ್ತ್ರಿ ಅವರೆಲ್ಲ ತನ್ನನ್ನು ಒದೆಯಲಿಕ್ಕೇ ಬಂದರೆಂದೇ ಭಾವಿಸಿ ತೊಡೆ ಸಂದಿಯ ಅಗ್ಗಿಷ್ಟಿಕೆಯನ್ನು ಮೌನವಾಗಿ ಸಹಿಸಿಕೊಂಡನು. ಬಟ್ಟೆಯಿಂದ ದಾರ ಹೊರಬರುವಂತೆ ಹೊರಬಂದನು. ಅದೇ ಹೊತ್ತಿಗೆ ಶಾಮೂ ಎಂಬ ಧ್ವನಿ ಕೇಳಿಸಿ ಆ ಕಡೆ ತಿರುಗಿದನು. ಅನಸೂಯ ಕಂಡಳು. ಅಗ್ನಿ ಪ್ರವೇಶ ಮಾಡಿ ವೀರ ಸ್ವರ್ಗ ಸೇರಲುತ್ಸುಕದ ಸತಿಯಂತೆ ಗೋಚರಿಸಿದಳು. ಅನೂಽಽ ಎಂದು ಬಳಿಸಾರ್ದನು. ಆಕೆ ಕಿಮಕ್ಕೆನ್ನದಿರುವುದು ಕಂಡ ಆತನಿಗೆ ಆಶ್ಚರ್ಯ ಮತ್ತು ದುಃಖವಾಯಿತು. ಅವನು ತೊಡೆ ನಡುವೆ ಯಾಕೆ ತನ್ನೆರಡೂ ಕೈಗಳನ್ನಿರಿಸಿಕೊಂಡಿರುವನೆನ್ನುವುದೇ ಆಕೆ ಕಿಮಖ್ ಎನ್ನದಿರುವುದಕ್ಕೆ ಕಾರಣ. +ಆಕೆ ಶಾಮಾಽಽ ಎಂದಳು. ಅನೂ ಅಂದ. ಯಾಕೆ? ಏನಾಯ್ತು ಅಂದಳು ಚೇಳು ಕುಟುಕ್ತೂ ಅಂದ. ಎಲ್ಲಿ ಕುಟುಕ್ತೂ ಅಂದಳು. ಏನೋ ಒಂದು ನೆವ ಹುಡುಕಿಕೊಂಡಿರುವನೆಂದೇ ಆಕೆಗೆ ಅನುಮಾನ. ಕುಟಿಕಿರುವ ಜಾಗದ ಬಗ್ಗೆ ಅವನು ಏನು ಹೇಳಿಯಾನು! ಅವನ ಕಣ್ಣಲ್ಲಿದ್ದ ನೀರನ್ನು ಆಕೆ ಗಮನಿಸಲಿಲ್ಲ. +ಅವರಿಬ್ಬರು ಹಾಗೆ ನಡಕೋತ ಬಯಲ ಕೊನೆಗೆ ಹೋದರು. ಆ ಜಾಗ ಪ್ರಾಯಶಃ ನಿರ್ಮಾನುಷವಾಗಿತ್ತು. ಅಲ್ಲೊಂದು ಹಾಳುಗುಡಿ ಇತ್ತು. ದುರ್ಗದ ಪಾಲೇಗಾರ ಮೂರನೆ ಮುದ್ದು ಮದಕರಿ ನಾಯಕ ಗುಡೇಕೋಟೆಯ ವಿಜಯಶಾಲಿಯಾದ ನೆನಪಿಗೆ ಕಟ್ಟಿಸಿದ್ದಂತೆ. ಗುಡೆಕೋಟೆ ಮತ್ತು ದುರ್ಗದವರ ನಡುವೆ ಘೋರ ಯುದ್ಧ ನಡೆದು ಹತ್ತಾರು ಮಂದಿ ಸತ್ತು; ನೂರಾರು ಮಂದಿ ಕೈಕಾಲು ಕಳೆದುಕೊಂಡಿದ್ದು ಅದೇ ಬಯಲಿನಲ್ಲಂತೆ. ನಾಯಕ ತಾನು ಕಟ್ಟಿಸಿದ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಹೆಣ್ಣು ದೇವರಿಗೋ; ಗಂಡು ದೇವರಿಗೋ ಒಂದೂ ತಿಳಿಯದು. ರಜಸ್ವಲೆಯಾದವರಿಂದ ಹಿಡಿದು ಮುಟ್ಟುನಿಲ್ಲುವವರೆಗೆ ಸ್ತ್ರೀಯರೂ; ಗಡ್ಡ ಮೂಡಿದಂದಿನಿಂದ ಹಿಡಿದು ಗುದ್ದಿನ ಹಾದಿ ಹಿಡಿಯುವವರೆಗೆ ಗಂಡಸರೂ ಏಕಪ್ರಕಾರವಾಗಿ ನೂರಾರು ವರ್ಷಗಳಿಂದ ಖಾದ್ಯ ತೈಲ ಎರೆದೂ ಎರೆದೂ ಆ ಶಿಲ್ಪ ಬೋಡಾಗಿ ಬಿಟ್ಟಿರುವುದು. ಅಲ್ಲಿ ದೀಪ ಮುಡಿಸಲು ಆಳುವ ಸರಕಾರದಿಂದ ಪ್ರತಿ ತಿಂಗಳು ರುಷುವತ್ತು ಪಡೆಯುತ್ತಿರುವ ಅಧಿಕೃತ ಪೂಜಾರಿ ದಾಸರಿ ತಿಮ್ಮಪ್ಪ ಯುಕ್ತ ವಯಸ್ಸಿನಲ್ಲಿ ಹೆಂಡತಿ ಕಳೆಕೊಂಡ ಲಾಗಾಯ್ತು ಸಮಾನ್ಯವಾಗಿ ಅಲ್ಲಿಯೇ ಮಲಗಿಕೊಂಡಿರುತ್ತಿದ್ದ. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಟೆಂಪ್ಟೇಷನ್ ಹೆಚ್ಚಾದಾಗ ಚಲವಾದಿ ರಂಗಮ್ಮ ಎಂಬ ಅರವತ್ತು ವರ್ಷದ ಅಪ್ಸರೆ ಬಳಿಗೆ ಹೋಗಿ ಅವತ್ತಿನವರೆಗಿನ ದುಡಿಮೇನೆಲ್ಲ ಸುರಿದು ಏದುಸಿರು ಬಿಡುತ್ತ ಸಿನೆಮಾ ಟಾಕೀಸಿನ ಬಳಿಗೆ ಬಂದು ಅರ್ಧ ಚಾ ಉದ್ರಿ ಕುಡಿದು, ಎರಡು ಬೀಡಿ ಬಿಟ್ಟಿ ಸೇದಿ ಗುಡಿ ಕಡೆ ಸಾಷ್ಟಾಂಗ ಹಾಕುತ್ತಾ ಬರುತ್ತಿದ್ದ. +ಅವರ ಪುಣ್ಯಕ್ಕೆ ಅವನು ಅಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ. +“ಶಾಮೂ… ಅದೇನು ಮನಸ್ನಲೈತೋ ಹೇಳಿಬಿಡು” ಅನಸೂಯ ಮೊಟ್ಟಮೂದಲ ಬಾರಿಗೆ ಗದ್ಗದಿತಳಾಗಿದ್ದಳು. ಎಷ್ಟು ತಡೆದರೂ ಕಣ್ಣುಗಳು ಒದ್ದೆಯಾದವು. “ಮೂಗಿಗೆ ತುಪ್ಪ ಹಚ್ಚೋ ಮಾತು ಮಾತ್ರ ಆಡಬೇಡ” ಎಂದು ಕಡ್ಡಿ ಮುರಿದಂತೆ ನುಡಿದಳು. +ಈ ಭಾರತೀಯ ತರುಣಿ ಹೀಗೆ ನುಡಿಯುತ್ತಿರುವಳಲ್ಲ! ಗಂಟಲಲ್ಲಿರುವ ಬಿಸಿ ತುಪ್ಪವನ್ನು ನುಂಗುವುದು ಹೇಗೆ! ಉಗುಳುವುದು ಹೇಗೆ! ಶಾಮುಗೆ ಪಜೀತಿಗಿಟ್ಟುಕೊಂಡಿತು. ತನ್ನ ಇಷ್ಟದೇವತೆಗಳಾದ ಪಿತಾಮಹಾಶ್ರೀ; ಮಾತಾಶ್ರೀ ಒಟ್ಟಿಗೆ ಚಿಕ್ಕ ಮೆದುಳಿನಲ್ಲಿ ಪ್ರತ್ಯಕ್ಷರಾಗಿ “ಎಲೈ ವಂಶ ಜ್ಯೋತಿಯೆಽಽ ಯಾವುದೇ ಕಾರಣಕ್ಕೂ ನನಗೆ ಆತ್ಮಹತ್ಯೆಗೆ ಕಾರನವಾಗುವಂಥ ಮಾತುಗಳನ್ನು ಆಡಬೇಡ. ಕೆಲವು ಕಠಿಣ ಸಂಸ್ಕೃತ ಶಬ್ದಗಳಿಂದ ಕರ್ಣ ಕಠೋರವಾದ ವಾಕ್ಯ ಮಾಡಿ ನಾಲಿಗೆ ತುದಿಯಿಂದ ಚಿಮ್ಮಿ ಬಿಡು. ಇದರಿಂದ ಲೋಕ ಕಲ್ಯಾಣವಾಗುತ್ತದೆ” ಎಂದು ಅಪ್ಪಣೆ ಕೊಡಿಸಿದರು. +ಹಾಗೆ ಮಾಡುವುದರಲ್ಲಿ ನಾನು ನಿಸ್ಸೀಮನೇ. ಆದರೆ ತೊಡೆ ಸಂದಿಯ ಉರಿ ಮಾತಾಡದಂತೆ ಮಾಡಿರುವುದಲ್ಲ! +“ಅನಸೂಯಾ… ಚೇಳಿನಿಂದ ಕಟಿಕಿಸ್ಕೊಂಡಿರೋದೆ ಸಾಕಾಗಿದೆ. ಸ್ವಲ್ಪ ಶಮನವಾದ ಮೇಲೆ ಯಾವುದಾದರೊಂದು ಹೇಳುವುದೇನು! ಅಲ್ಲಿವರೆಗೆ ತಾಳ್ಮೆಯಿಂದಿರಲಾರೆಯಾ!” ನಾಟಕದ ಪಾತ್ರಧಾರಿಯಂತೆ ತಡೆದು ತಡೆದು ನುಡಿದ. +“ನನಗಾಗಿರೋ ನೋವು ಕಡಿಮೆ ಆಗಬೇಕೂಂದ್ರೆ ನೀನು ಹೇಳ್ಲೇಬೇಕು… ಇನ್ನೊಂದು ಗಳಿಗೆ ಕಾಯ್ಲಿಕ್ಕೂ ನಾನು ಸಿದ್ಧಳಿಲ್ಲ” ಅನಸೂಯಳಿಗೆ ಅನುವುಮಾಡಿಕೊಡಲೆಂದು ಗಾಳಿ ದೂರಹೋಗಿ ನಿಶ್ಶಬ್ದ ಆವರಿಸಿತು. +ಶಾಮುಗೆ ದಿಕ್ಕುಗಳು ಅದುಲುಬದಲುಗೊಂಡವೆಂದೆನಿಸಿತು. ತೊಡೆ ಸಂದಿಯಲ್ಲಿ ಮರಣಾಂತಿಕ ವೇದನೆಯನ್ನುಂಟುಮಾಡುತ್ತಿರುವ ನೋವು; ಎದೆಯ ತ್ರಾಸಿನೆರಡೂ ಪಗಡಿಗಳಲ್ಲಿ ತಾಯಿ ಮತ್ತು ಅನಸೂಯಾ; ತಾಯಿ ಇರುವ ಪಗಡೆ ನೆಲಕ್ಕೆ ತಾಕಿರುವುದೆಂದು ಹೇಗೆ ಹೇಳುವುದು? ಏನಾದರೂ ಹೆಚ್ಚುಕಡಿಮೆಯಾದರೆ ತಾಯಿ ಶಾಪಕೊಡದಿರುತ್ತಾಳೆಯೆ? ತಾತ ಕೂಡಲೆ ಆತ್ಮಹತ್ಯೆ ಮಾಡಿಕೊಂಡು ಬ್ರಹ್ಮ ಪಿಶಾಚಿಯಾಗಿ ಹೋದಲ್ಲಿ ಬಂದಲ್ಲಿ ಕಾಡದಿರುತ್ತಾನೆಯೇ? ಒಂದೊಂದು ನಿಟ್ಟುಸಿರು ಬಿಡುತ್ತ ಒಂದು ಕ್ಷಣ ಆಗಸದ ಕಡೆಗೂ ಮತ್ತೊಂದು ಕ್ಷಣ ನೆಲದ ಕಡೆಗೂ ನೋಡುತ್ತ ನಿಂತಿದ್ದ ಅವನು ಅಪ್ಪಿತಪ್ಪಿ ಅನಸೂಯಳ ಕಡೆಗೆ ನೋಡುವ ಧೈರ್ಯ ಮಾಡಲಿಲ್ಲ. ಅದಕ್ಕೆಲ್ಲ ಪ್ರಾಯಶ್ಚಿತ್ತಾರ್ಥವಾಗಿ ಚೇಳು ಕುಟುಕಿರುವುದು ಬೇರೆ? ಆದರೂ ಧೈರ್ಯ ಆವಹಿಸಿಕೊಂದು ಆಕೆಯ ಕಡೆಗೆ ತಿರುಗಿದ. +“ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿರೋ ನನ್ನ ಸಮಸ್ಯೆ ನಿನ್ಗೆ ಅರ್ಥ ಆಗಿರಬೌದೆಂದು ತಿಳ್ಕೊಂಡಿದೀನಿ. ನನಗ್ಯಾಕೋ ಹೆಜ್ಜೆ ಹೆಜ್ಜೆಗೆ ಮನುಸ್ಮೃತಿ ಗರುಡ ಪುರಾಣಗಳನ್ನೆಲ್ಲ ಎದುರಾಕಿಸಿಕೊಂಡೇನು. ಆದ್ರೆ ನನ್ತಾಯೀನ ಮಾತ್ರ ಎದುರಾಕ್ಕೊಳ್ಳೋ ಧೈರ್ಯನ ಆ ದೇವರು ನನಗೆ ಕೊಟ್ಟಿಲ್ಲ… ಏನು ಮಾಡೋದು? ನೀನೇ ಒಂದು ಪರಿಹಾರಾನ ಸೂಚಿಸಲಾರೆಯೇನು?” ತನ್ನ ಮುತ್ತಾತನ ಗಿರಿಮುತ್ತಾತರ ತಪೋಬಲದಿಂದಲೇ ಅವನಿಗೆ ಇಷ್ಟು ನಿರರ್ಗಳವಾಗಿ ಮಾತಾಡಲು +ಸಾಧ್ಯವಾಯಿತು. ಮರ್ಮಸ್ಥಾನ ಎಲ್ಲಿ ಉದುರಿಬಿಡುವುದೋ ಎಂಬ ಭಯದಿಂದ ಒಂದು ಕೈಯನ್ನು ಮಾತ್ರ ತೆಗೆದು ಮುಖದ ಬೆವರೊರಸಿಕೊಂಡ. ಬೆಳಗಿನಿಂದ ಭಾವಗೀತೆಯೊಂದನ್ನು ಬರೆಯುವ ಪ್ರಯತ್ನದಲ್ಲಿದ್ದಾಗ ಪೆನ್ನು ಕಾರಿಕೊಂಡ ಮಸಿಯನ್ನು ಸಮಯ ಸ್ಪೂರ್ತಿಯಿಂದ ಲುಂಗಿಯ ತುದಿಗೆ ಒರಸಿಕೊಂಡಿದ್ದ. ಅದರ ಇಂಕು ಮುಖದ ಹಲವು ಕಡೆ ಹತ್ತಿ ಬಿಟ್ಟಿತು. +“ಹುಚ್ಚಪ್ಪ ಇಷ್ಟು ಹೇಳೋಕ್ಯಾಕೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿ, ನೀನು ನನ್ನ ಮದ್ವೆ ಆಗದಿದ್ರೆ ಪ್ರಪಂಚ ಪ್ರಳಯ ಆಗೋದಿಲ್ಲ. ನಾನೂ ಭಗ್ನಪ್ರೇಮಿಯಂತೆ ಆತ್ಮಹತ್ಯೆ ಮಾಡ್ಕೊಳ್ಳೋದಿಲ್ಲ. ಅಥವಾ ನಿನ್ನ ನೆನಪಿನಲ್ಲಿ ಚಿರವಿರಹಿಯಾಗಿ ಕಾಲ ಕಳೆಯೋದಿಲ್ಲ. ಒಂದು ಮಾತು ಕೇಳೋಣ ಅಂತ ಬಂದೆ ಅಷ್ಟೆ” ಕಟ್ಟೆಯಿಂದ ಕೆಳಗಿಳಿದು ಚಪ್ಪಲಿಗಳಿಗೆ ಪಾದ ಪೋಣಿಸಿದಳು. ನನ್ನ ನಿರಾಸೆ ಅಂತ ಭಾವಿಸಿ ಬದುಕಿನ ಬಗ್ಗೆ ಉತ್ಸಾಹ ಕಳ್ಕೋಬೇಡ. ಇರೋವಷ್ಟು ಕಾಲ ಸ್ವಂತ ವ್ಯಕ್ತಿದಿಂದ ಬದುಕೋದನ್ನು ಕಲ್ತುಕೋ ಬರ್ತೀನಿ ತುಂಬ ಹೋತ್ತಾಯ್ತು” ಎಂದು ಹೊರಡಲುವಾದಳು. +“ಅನೂ ನಿಂತ್ಕೋ” ಶತಪದಿಯಂತೆ ನಡೆಯುತ್ತ ಬಂದ ಶಾಮು. +“ಮತ್ತೇನಿದೆ?” ಹಿಂತಿರುಗದೆ ಕೇಳಿದಳು. +“ಹೀಗೆ ಮಾಡಿದ್ರೆ ಹೇಗೆ?” ಉಗುಳು ನುಂಗಿದ. +“ಕೇಳೋದೇನಿದ್ರು ನೇರವಾಗಿ ಕೇಳೂಂತ ಎಷ್ಟು ಸಾರಿ ಹೇಳೋದು?” +“ನಾನು ಮದ್ವೆ ಆಗೋವಗೂ… ” +“ಹ್ಹಾಂ” +“ನಾನು ಮದ್ವೆಯಾದ್ಮೇಲೆ ಇಬ್ರೂ‌ಒಟ್ಟಿಗೆ…” ಮುಂದಿನ ಮಾತು ಹೇಳುವ ಮೊದಲೆ ಅನಸೂಯ ಕೆರಳಿದಳು. ಆಕೆಯ ಕಣ್ಣುಗಳು ಬೆಂಕಿಯ ಎರಡು ನಮೂನೆಗಳಂತೆ ಪ್ರಜ್ವಲಿಸಿದವು. +“ಇದೇ ಮಾತ್ನ ಬೇರೆ ಯಾರಾದ್ರು ಹೇಳಿದ್ರೆ ಕಪಾಳಕ್ಕೆರಡು ಬಿಡ್ತಿದ್ದೆ ಆಷ್ಟೆ… ಹುಷಾರ್… ಬರ್ತೀನಿ” ಅನಸೂಯ ದುರ್ದಾನ ತೆಗೆದುಕೊಂಡವಳಂತೆ ಹೊರಟುಹೋದಳು. +ಶಾಮಾಶಾಸ್ತ್ರಿ ಆಕಾಶ ತಲೆ ಮೇಲೆ ಹೊತ್ತುಕೊಂಡವನಂತೆ ಬಹಳ ಹೊತ್ತಿನವರೆಗೆ ಅಲ್ಲಿಯೇ ಕುಸಿದು ಕೂತಿದ್ದ. ಜಾರ್ಜ್ ಫರ್ನಾಂಡಿಸ್ ಮಾಡುತ್ತಿದ್ದ ಭಾಷಣ ಅಲೆ‌ಅಲೆಯಾಗಿ ಕೇಳಿಬರುತ್ತಿತ್ತು. ಆ ಭಾಷಣ ಕೇಳಿಸಿಕೊಳ್ಳುತ್ತ ಬರುವ ಚುನಾವಣೆಯಲ್ಲಿ ಇಂದಿರಾಗಾಂಧಿ ಪರ ಮತ ಚಲಾಯಿಸುವುದೋ? ವಿರುದ್ಧ ಚಲಾಯಿಸುವುದೋ? ಎಂದು ಯೋಚಿಸುತ್ತ ಬರುತ್ತಿದ್ದ ದಾಸರಿ ತಿಮ್ಮಪ್ಪ ತೀರ ಹತ್ತಿರ ಬಂದು ನೋಡಿದಾಗಲೇ ಗೊತ್ತಾದದ್ದು. ಚಲವಾದಿ ರಂಗಮ್ಮನೆದುರು ತಾನು ಅಸಹಾಯಕತೆಯಿಂದ ಕೂತಿದ್ದಂತೆಯೇ ಯಾರೋ ಕೂತಿರುವರೆಂಬುದು. +“ಯಾರದೂ” ಕಣ್ಣುಜ್ಜಿಕೋಳ್ಳುತ್ತ ಕೇಳಿದ. +’ಮಾತೋಶ್ರೀ ಪಾಹಿಮಾಂ’ +ತುಪ್ಪದ ದೀಪದ ಮಂಗಳಮಯ ಬೆಳಕಿನಲ್ಲಿ ಸ್ವಲ್ಪ ಹೊತ್ತಿನ ಹಿಂದೆ ವಿರಹೇನ ವಿಕಲ ಹೃದಯದ ಅಲಮೇಲಮ್ಮ ಮಲಗಿದ್ದಳು. ಎದೆಯ ವಕ್ಷಸ್ಥಳದ ಮೇಲೆ ಕೃಷ್ಣ ಯಜುರ್ವೇದದ ಮೈತ್ರಾಯಿಣಿ ಶಾಖೆಗೆ ಸೇರಿದ ಗ್ರಂಥವನ್ನು ತೆಗೆದಿಟ್ಟುಕೊಂಡಿದ್ದಳು. ಅತ್ತೈವ ಚ ಪಶುಂ ಹಿಂಸ್ಯಾನ್ನಾನ್ಯಥೇತ್ಯಬ್ರವೀನ್ಮನುಃ ಎಂಬ ವಾಕ್ಯವನ್ನು ಬಾಯಿಪಾಠ ಮಾಡುತ್ತಲೇ ಮಂಪರು ಹತ್ತಿತ್ತು. +ವ್ಯಾಸಪೀಠಕ್ಕೆ ತಲೆ ಕೊಟ್ಟಿದ್ದರಿಂದ ಅಪರೂಪದ ನಿದ್ದೆ ಒಲಿದಿತ್ತು. ಸಿಂದಾಮಣಿ ಕೋಮಟಿಗರ ಮನೆಯಲ್ಲಿ ಗರುಡ ಪುರಾಣ ಪ್ರವಚನಾರ್ಥವಾಗಿ ಪರಮೇಶ್ವರ ಶಾಸ್ತ್ರಿಗಳು ಕೆಲಹೊತ್ತಿನ ಹಿಂದೆ ವಿಶೇಷ ಸಂಧ್ಯಾವಂದನೆ ಮುಗಿಸಿ ಹೋಗಿದ್ದರು. ಮನುಸ್ಮೃತಿಯ ಐದನೇ ಅಧ್ಯಾಯದಲ್ಲಿ ಗುರ್ತಿಗೆ ನವಿಲು ಗರಿ ಇಟ್ಟಂತೆ ಪ್ರೀತಿಯ ಬೆಕ್ಕು ನಗಂದಿ ಮೇಲೆ ಹಿಂಗಾಲು ಮುಂಗಾಲುಗಳನ್ನುದ್ದವಾಗಿ ಚಾಚಿ ನಿದ್ದೆ ಹೋಗಿತ್ತು. ಹೀಗಾಗಿ ಯಾವ ಅಡೆ ತಡೆ ಇಲ್ಲದೆ ನಿದ್ದೆ ಒಲಿದಿತ್ತು. +’ಮಾತೋಶ್ರೀ ಪಾಹಿಮಾಂಽಽಽ’ +ಸೂರ್ಯಪುತ್ರನಾದ ವೈವಸ್ವತ ಮನು ತನ್ನ ತಪಸ್ಸಿಗೆ ಆಯ್ದುಕೊಂಡ ಬದರಿಕಾಶ್ರಮದ ಪಕ್ಕದಲ್ಲಿ ಚಾರಿಣಿ ಜುಳುಜುಳು ಹರಿದಂತೆ ಮನಸ್ಸಿನ ಘನಘೋರ ಮೂತಿಯಿಂದ ಯಾರೋ ಕೂಗಿದಂತೆ ಭಾಸವಾಯಿತು. +ಯಾರದಿರಬಹುದೀ ಧ್ವನಿ? +ತನಗಿನ್ನೊಂದು ಹುಟ್ಟಬಹುದಿದ್ದ ಮಗುವಿನ ದ್ವನಿ ಇದಾಗಿರಬಹುದೇ? ಹರೆಯದಲ್ಲಿ ಗಂಡನನ್ನು ಕಳೆದುಕೊಂಡಿರುವ ಮಾತ್ರಕ್ಕೆ ತನಗೆ ಮಾನವ ರೂಪ ಕೊಡಲಿಲ್ಲವೆಂದು ಅದು ರೋದಿಸುತ್ತಿರಬಹುದೇ? +ಮಾತೋಶ್ರೀ ಪಾಹಿಮಾಂ +ವ್ಯಾಧನ ಬಾಣದಿಂದ ಗಾಯಗೊಂಡ ಕ್ರೌಂಚ ಪಕ್ಷಿಯ ಆರ್ತರವದಂತೆ ಕೇಳಿ ಬರುತ್ತಿರುವ ಧ್ವನಿ ಯಾರದಿರಬಹುದು? ಪ್ರಶ್ನಿಯ ಗರ್ಭದಲ್ಲಿ ಶ್ರೀಮನ್ನಾರಾಯಣ ಮಿಸುಕಾಡಿದಂತೆ ಸುಪ್ತಾವಸ್ಥೆಯಿಂದ ಜಾಗೃತಾವಸ್ಥೆಗೆ ಬರುವ ಕಂಪನಕ್ಕೆ ಸಿಕ್ಕು ಮಗ್ಗುಲು ಬದಲಾಯಿಸಿದಳು ವ್ಯಾಸಪೀಠ ಕೀರ್‌ಕು, ಕೀರ್‌ಕು ಎಂದು ಸದ್ದು ಮಾಡಿತು. ಎದೆ ಮೇಲಿದ್ದ ಪ್ರಾಚೀನ ಗ್ರಂಥ ಪಕ್ಕಕ್ಕುರುಳಿ ಸ್ತನಕ್ಕೊತ್ತಿತು. +ಮಾತೋಶ್ರೀ ಪಾಹಿಮಾಂ… +ಪುಷ್ಪದ ಮೇಲೆ ಪತಂಗದ ಕಾಲುಗಳು ಗಾಯಮಾಡಿದಂತೆ; ಎಸಳು ಮುಲುಕಿದಂತೆ… ತಾಯಿ ಅಲುಮೇಲಮ್ಮ ಓಹ್ ಇದು ತೀರ ಪರಿಚಿತ ಧ್ವನಿ ಎಂದು ಗುರುತಿಸಿದಳು. ಇದು ಖಂಡಿತ ತನ್ನ ಕರುಳ ಕುಡಿಯದೆಂಬುದರಲ್ಲಿ ಸಂದೇಹವಿಲ್ಲ. +ಒಮ್ಮೆಗೆ ಸಾವಿರಾರು ನೆನಪುಗಳು ನುಗ್ಗಿಬಂದವು. +ತನ್ನ ಮಗ ಅದ್ಯಾರದೋ ಭಾಷಣ ಕೇಳಲೆಂದು ಹೋಗಿರುವುದು ನೆನಪಾಯಿತು. ಆ ಜನಜಂಗುಳಿ ನಡುವೆ ನಸು ಕೋಮಲ ಕಾಯದ ತನ್ನ ಮಗ ಏನಾದನೋ? +ಬಡಿದೆಬ್ಬಿಸಿದಂತೆ ಎದ್ದು ಕೂತಳು. ಮುಖದ ಮೇಲಿಂದ ಸುರಿದ ಬೆವರು ಪಕ್ಕದ ಅಣೆಕಟ್ಟಿನಲ್ಲಿ ನೆಲೆ ನಿಂತಿತು. ದೀರ್ಘವಾಗಿ ಉಸಿರಾಡತೊಡಗಿದಳು. ಅಕೆಯ ದುಗುಡಕ್ಕೆ ಬೆಂಬಲಾರ್ಥವಾಗಿ ಇಡೀ ಮನೆಗೆ ಮನೆಯೇ ಉಸಿರಾಡತೊಡಗಿತು. ಸಾವಿರಾರು ಮಂದಿ ಅದೃಶ್ಯ ರೀತಿಯಲ್ಲಿ ಮನೆಯ ಅಂಗುಲಂಗುಲದಲ್ಲಿ ಅಡಗಿ ಕೂತಿರುವಂತೆ ಭಾಸವಾಯಿತು. ಅದಕ್ಕೆ ಹಲೋ ಹಲೋ ಎನ್ನುತ್ತಿರುವ ರೀತಿಯಲ್ಲಿ ಹೃದಯ ಲಬ್‌ಡಬ್ ಅಂತ ಜೋರಾಗಿ ಬಡಿದುಕೊಳ್ಳತೊಡಗಿತು. +ಮಗೂ ಶಾಮೂ… ಶಾಮೂ… ಎಲ್ಲಿದ್ದೀಯಪ್ಪಾ?… ಏನಾಗಿದೆಯೋ?… ತಂದೆ ನಿನಗೆ… ನೀನು ಕ್ಷೇಮವಾಗಿರುವಿ ತಾನೆ…? ಮಾಡಿನ ಕಡೆ ಮುಖ ಮಾಡಿ ಜೋರಾಗಿ ಕೂಗಿದಳು… ಅದು ಅಲೆ ಅಲೆಯಾಗಿ ಹರಡಲು… +ದಾಸರಿ ತಿಮ್ಮಪ್ಪನಿಂದ ಬಿಡಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದ ಶಾಮನಿಗೆ ತಾಯಿಯ ಆತಂಕದ ಕರೆ ಕೇಳಿಸಿದಂತಾಯಿತು. ’ಬಿಡೋ ಬಿಡೋ’ ಎಂದು ಎಷ್ಟು ಹೇಳಿದರೂ ದಾಸರಿ ಬಿಡಲೊಲ್ಲನು. +“ನನ್ನಾಸೆ ಪೂರೈಸದಿದ್ರೆ ಅದೆಂಗ ಬಿಟ್ಟೇನು!… ಏನೂ ಆಗಕ್ಕಿಲ್ಲ… ನೀನೊಂದೆ ನಾನ್ಹೋಳಂದೆ ಕೇಳು…” ಎಂದು ಕೆವುಕೊಂಡು ಬಿದ್ದಿದ್ದ ದಾಸರಿ ಜೋಲು ಎದೆಗೆ ತನ್ನೆರಡು ಕಾಲುಗಳನ್ನು ಕೊಟ್ಟು ಝಾಡಿಸಿ ತಳ್ಳಲು ಅವನು ಅಷ್ಟು ದೂರ ಬಿದ್ದು ಗೋವಿಂದಾ ಎಂದನು. +ಏಕಬಾಕ ಲುಂಗಿ ಸರಿಪಡಿಸಿಕೊಂಡು ನಿಟಾರನೆ ನಿಂತನು. ತೊಡೆ ಸಂದಿನಲ್ಲಿ ಮತ್ತೊಮ್ಮೆ ದಗ್ ಅಂತು. ಒಂದು ಹೆಜ್ಜೆ ಮುಂದಿಡಕ್ಕಾಗಲೊಲ್ಲದು. ಇನ್ನೊಂದು ಕ್ಷಣ ಹಾಗೇ ನಿಂತುಬಿಟ್ಟಲ್ಲಿ ದಾಸರಿ ಪುನರ್ ಚೇತಿಸಿಕೊಂಡು ತನ್ನ ಪಾಕ್ಷಿಕದ ವಿಶೇಷಾಂಕವನ್ನು ಪೂರ್ಣಗೊಳಿಸದೆ ಬಿಡನು. ದೇಹದ ಸಮಸ್ತ ಜಂಘಾಬಲವನ್ನು ಕಾಲುಗಳಿಗೆ ತಂದುಕೊಂಡನು. ಸೂರ್ಯ ಶ್ವೇತಸ್ವ ಮಂತ್ರಸ್ಯ ಎಂದು ಶಕ್ತಿ ಸಂಚಯಿಸಿಕೊಂಡನು. ಶ್ರೀ ಪರಮೇಶ್ವರ ಪ್ರಿತ್ಯರ್ಥ ಎಂದೆನ್ನುವಷ್ಟರಲ್ಲಿ ದಾಸರಿ ತಿಮ್ಮ ಫಿನಿಕ್ಸ್ ಪಕ್ಷಿಯಂತೆ, ಯಗ್ನಕುಂಡದಲ್ಲಿ ಅಗ್ನಿ ಪ್ರಜ್ವಲಿಸಿದಂತೆ, ತ್ರಿವಿಕ್ರಮನಂತೆ ಎದ್ದು ನಿಂತು ’ಏಯ್ ಬ್ರಾಂಬ್ರ ಹುಡ್ಗಾ… ನನ್ಗೆ ನಿರಾಸೆ ಮಾಡಿ ಹ್ವಾದಿ ಅಂದ್ರೆ ನಿಂಗೆ ಒಳ್ಳೇದಾಗಕ್ಕಿಲ್ಲ ನೋಡು… ನಿಂತ್ಗ… ಒಂದೈದು ಮಿನಿಟ್ನಾಗ ಮುಗ್ಸಿ ಜ್ವಾಪಾನವಾಗಿ ಮನಿ ಮುಟ್ಟುಸ್ತೀನಿ’ ಎಂದು ತುಂಬ ದೈನ್ಯದಿಂದ ಬೇಡಿಕೊಳ್ಳುತ್ತ ಒಂದೊಂದು ಹೆಜ್ಜೆ ಇಡುತ್ತ ಮುಂದೆ ಬರತೊಡಗಿದನು. ಆ ಮಸುಕು ಬೆಳಕಿನಲ್ಲಿ ಆ ನಗ್ನಾಕೃತಿ ಘನ ಭೀಕರವಾಗಿದ್ದಿತು. ಅವನು ಇನ್ನೇನು ಹಿಡಿದೇ ಬಿಟ್ಟನೆನ್ನುವಷ್ಟರಲ್ಲಿ ಶಾಮನಿಗೆ ಅದೇನು ಸಕುತಿ ಬಂತೇನೋ ಕಿರ್ಧಬಲ ಓಡತೊಡಗಿದನು. ಓಡಲಾಗದಿದ್ದರೂ ದಾಸರಿ ಸುಮ್ಮನಿರುವನೇನು! ತನ್ನಾಜ್ಞೆಗಾಗಿ ಮೌನ ವ್ರತದಲ್ಲಿದ್ದ ನಾರಾನಿಗೆ ’ಛೂ’ ಎಂದನು. ಒಡನೆಯೇ ಅದು ಬೌ ಬೌ ಎಂದು ಅಪ್ಪಟ ಕನ್ನಡದಲ್ಲಿ ಬೊಗಳುತ್ತ ಹಿಂಬಾಲತ್ತಿತು. ಮುಂದೆ ಮುಂದೆ ಓಡುತ್ತಿರುವ ಅವನು, ಹಿಂದೆ ಹಿಂದೆ ಓಡುತ್ತಿರುವ ನಾರಾಣಿ, ಆ ಓಣಿ ದಾಟಿ ಈ ಓಣಿಗೆ ಬಂದಾಗ ಜಗದ್ರಕ್ಷಕ ಪಿಸಿ ತ್ರೀನಟ್ಟೂ ಒಂದು ವಾರದಿಂದ ಯಾರನ್ನೂ ಹೊಡೆದಿಲ್ಲವಲ್ಲ ಎಂದು ಕುದಿಯುತ್ತಿದ್ದನು ಅದು ಅಲ್ಲದೆ ಅವನು ಚಿಕ್ಕಂದಿನಿಂದ ನಾಯಿ ಹೊಡ್ದೂ ಹೊಡ್ದೂ ಸಾಕಷ್ಟು ಹೆಸರು ಸಂಪಾದಿಸಿದ್ದನು. ’ನೀನು ಪೋಲೀಸ್ ನೌಕರಿ ಸೇರಿದ್ದರೆ ಸರಿಹೋಗೋದು” ಎಂದು ಮನೆಯಲ್ಲಿ ತಂದೆತಾಯಿ ಶಾಲೆಯಲ್ಲಿ ಮಾಸ್ತರುಗಳು ಜೀವ ತಿನ್ನುತ್ತಿದ್ದರು. ಹೀಗಾಗಿ ಆತ ಪೋಲಿಸ್ ನೌಕರಿ ಸೇರೋದಕ್ಕೂ ಮೊದಲೆ ತನ್ನ ಹೆಸರಿನ ಉತ್ತರಾರ್ಧದಲ್ಲಿ ಪೋಲಿಸ್ ಎಂಬ ಪದದ ’ಕ್ಳಿಮ್ಮು’ಗೆ ಫೆವಿಕಾಲ್ ಲೇಪಿಸಿ ಅಂಟಿಸಿಕೊಂಡು ಬಿಟ್ಟಿದ್ದನು. ಅಂಥಾತ ಸಾರ್ವಜನಿಕರಿಗೆ ತೊಂದರೆ ಕೊಡುವ ನರಾಣಿಯನ್ನು ಸುಮ್ಮನೆ ಬಿಡುತ್ತಾನೇನು? ಜೋರಾಗಿ ಸೀಟಿ ಊದತೊಡಗಿದನು. ಪ್ರಧಾನಿ ವಿರೋಧಿ ಅಂತ ತಮ್ಮನ್ನು ಹೀಡಿದಾನು ಅಂತ ಜನ ಕ್ಳಿಮ್ಮುನಲ್ಲಿ ಬಾಲ ಇಟ್ಟುಕೊಂಡು ಪಿತುಗಲಾರಂಭಿಸಿದರು. ಇದೇ ಒಂಥರಾ ಮಜಾ ಅನ್ನಿಸಿತು ಪೀಸಿಗೆ. ಮತ್ತಷ್ಟು ಜೋರಾಗಿ ಊದುತ್ತ ಓಡೋಡಿ ಕೈಲಿದ್ದ ಲಾಠಿ ಕೋಲನ್ನು ಅಶ್ವತ್ಥಾಮ ’ಉತ್ತರ ಗರ್ಭಕ್ಕೆ ಪ್ರಳಯ’ ಎಂದು ಅಭಿಮಂತ್ರಿಸಿ ದರ್ಭೆಯನ್ನು ಪ್ರಯೋಗಿಸಿದಂತೆ ಪ್ರಯೊಗಿಸಲು ಅದು ಸೀದ ಹೋಗಿ ನಾರಾಣಿಯ ಹಿಂಗಾಲುಗಾಲಿಗೆ ಬಿದ್ದಿತು. ನಾರಾಣಿ ತೊಂಕ ಕಳೆದುಕೊಂಡು ಮುಗಿಲ ಕಡೆ ಮುಖಮಾಡಿ ಏಕಕಾಲಕ್ಕೆ ಸಮಸ್ತ ಶ್ಲೋಕಗಳನ್ನು ಲೋಕ +ವಿದ್ರಾವಕವಾಗಿ ಬೊಗಳತೊಡಗಿತು. ನಂತರ ಅವನು ಅದನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಿ ಕಣ್ಣಿನ ಮೂಲಕ ಪಾಪ ಕಟ್ಟಿಕೊಳ್ಳಬಾರದೆಂದು ಶಾಮಾ ಶಾಸ್ತ್ರಿ ಓಡಿ ಮುಖ್ಯ ರಸ್ತೆ ತಲುಪಿದನು. +ಅವನ ಆ ಅವಸ್ಥೆ ನೋಡಿ ನಗಬಹುದಾಗಿದ್ದವರೆಲ್ಲರೂ ಇಂದಿರಾ ವಿರೋಧಿ ಭಾಷಣ ಕೇಳಲು ಹೋಗಿದ್ದರು. ಅದು ಅವನ ಪುಣ್ಯ… ಓಂ ಕೇಶವಾಯ ಸ್ವಾಹ ಒಂದು ಆಚಮನ ಮಂತ್ರಗಳನ್ನು ಮನಸ್ಸಿನಲ್ಲಿ ಪಠಿಸುತ್ತ ಮನೆ ಕಡೆ ಹೆಜ್ಜೆ ಹಾಕಿದನು. ಪ್ರತಿ ಹೆಜ್ಜೆ ಇಡುವಾಗಲೂ ಅವನ ನಾಲಿಗೆ ಅಮ್ಮಾ… ಅಮ್ಮಾ ಎಂದು ನುಡಿಯುತ್ತಿದ್ದಿತು. +ಇತ್ತ ಕಡೆ ಅಲುಮೆಲಮ್ಮನ ಕರುಳು ಅಡಿಗಡಿಗೆ ಕಿತ್ತು ಬಾಯಿಗೆ ಬರತೊಡಗಿತ್ತು. ಆಕೆಯ ಹೃದಯ ಕವಾಟಗಳು ಶಾಮೂ ಶಾಮೂ ಎಂದು ಬಡಿದುಕೊಳ್ಳತೊಡಗಿದ್ದವು. ಬೋರಲು ಬಿದ್ದಿದ್ದ ವ್ಯಾಸಪೀಠಕ್ಕಿಂತ ಮಗನ ನೆನಪು ಹೆಚ್ಚಿನದು. ಮನು ಸ್ಮೃತಿಗಿಂತ ಮಾತೃತ್ವ ಹೆಚ್ಚಿನದು. ಆದ್ದರಿಂದ ಆಕೆ ಅವ್ಯಾವುದನ್ನೂ ಸರಿಪಡಿಸುವ ಗೋಜಿಗೆ ಹೋಗಲಿಲ್ಲ. +“ಯಾಕೆ ಇಷ್ಟೊಂದು ಗಾಬರಿಯಾಗಿರಿವಿ? ಏನಾಯ್ತು ಹೇಳಬಾರ್ದೇ ತಾಯೀ?” ಎಂದು ಬೆಕ್ಕು ನಗಂದಿ ಮೇಲಿಂದ ಜಿಗಿದು ಮ್ಯಾವ್ಗುಟ್ಟುತ್ತ ಆಕೆಯ ಕಾಲು ಸಂದಿಯಲ್ಲಿ ನುಸಿಯತೊಡಗಿತ್ತು. ಅದನ್ನು ಅಪಶಕುನವೆಂದು ಆಕೆ ಅದನ್ನು ಕಾಲಿನಿಂದ ಝಾಡಿಸಿ ತಳ್ಳಿದಳು. ಏನಾದ್ರು ಹೆಲ್ಪು ಮಾಡೋಣಾಂತ ಬಂದ್ರೆ ಇದ್ಯಾಕೆ ಹಿಂಗ್ ಮಾಡ್ತಾಳೆ ಒಟ್ಟಿನಲ್ಲಿ ನನಗೆ ಬುದ್ಧಿ ಇಲ್ಲವಷ್ಟೆ ಎಂದು ಬೆಕ್ಕು ಮುಖ ಕಮಲ ಸಿಂಡರಿಸಿಕೊಂಡು ಈ ಮನೆಗೂ ತನ್ನ ಋಣ ಸಂಬಂಧ ತೀರಿತೆಂಬಂತೆ ಮನೆ ಬಿಟ್ಟು ಹೊರಟುಹೋಯಿತು. ದುರ್ಯೋಧನಾಸ್ಥಾನದಲ್ಲಿ ಧನುವ ಬಿಸುಟು ತೊತ್ತಿನ ಮಗ ವಿದುರ ಹೊರಟು ಹೋದನಲ್ಲ ಹಾಗೆ. ಸಂಪ್ರದಾಯಸ್ಥರ ಮನೆಯಲ್ಲಿ ಬೆಕ್ಕು ಕ್ಷೇಮದಿಂದಿರುವುದಿಲ್ಲ ಕೂಡ. ಹಾಗೆಯೇ ಸಮ್ಪ್ರದಾಯಸ್ಥರಾದರೂ ಅಷ್ಟೆಯೇ. +“ಎಲ್ಲಿ ಹೋದನು? ಏನಾದನು?” ಅಲಮೇಲಮ್ಮ ತನ್ನ ಮಾವ ಮನೇಲಿ ಇಲ್ಲದಿರುವುದರಿಂದ ಮತ್ತಷ್ಟು ಬೇಸರಗೊಂಡಳು. ಪರಮೇಶ್ವರ ಶಾಸ್ತ್ರಿಗಳು ಬೆಳಗ್ಗೇನೇ ತಮ್ಮ ನಿವಾಸದ ತೊಲೆ ಜಂತಿಗೆಲ್ಲ ಕೇಳಿಸುವಂತೆ “ರಾಜಖಿಯ ಭಾಷಣ ಕೇಳೋಕೆ ಹೋಗೋದು ವೇದ ಪ್ರಾಮಾಣ್ಯವಲ್ಲ… ಹೋಗಿ ನಾನು ಕಾಲು ಊನ ಮಾಡಿಕೊಂಡಿದ್ದು ಸಾಕು. ಈ ದುರವಸ್ಥೆ ಮತ್ತಾರಿಗೂ ಬಾರದಿರಲಿ” ಎಂದು ಸೂಚ್ಯವಾಗಿ ಶಾಮುವನ್ನುದ್ದೇಶಿಸಿ ಹೇಳಿದ್ದರು. ಶಾಮು ತಿಳುವಳಿಕಸ್ಥ, ವಿದ್ಯಾವಂತ, ಸುಮ್ಮನಿದ್ದಾನು. ಆದರೆ ಅವನ ಮೈಯೊಳಗೆ ಹರೀತಿರೋ ಬಿಸಿ ರಕ್ತ ಸುಮ್ಮನಿರಬೇಕಲ್ಲ!… ಮೊದಮೊದಲು ಹೋಗುವುದಿಲ್ಲವೆಂದು ತನ್ನ ತೊಡೆ ಮೇಲೆ ಮಲಗಿಕೊಂಡಿದ್ದ. ಆತಂಕಗೊಂಡಿರುವಂತಿದ್ದ. ಕೆಲ ಸಮಯದ ನಂತರ ದಿಡೀರನೆ ಎದು “ಅಮ್ಮಾ ನನಗೇಕೋ ಜಾರ್ಜ್ ಫರ್ನಾಂಡಿಸನ ನೋಡೊ ಆಸೆಯಾಗಿದೆ! ಹೋಗಿ ಬತೀನಿ” ಅಂದ. ಅದಕ್ಕೆ ತಾನು, “ಅದೆಂಥ ಹೆಸರೋ; ನಾಲಿಗೇನೇ ಹೊರಳುವಲ್ದೂ! ಅವರೂ ನಮ್ಮಂತೆ ಬ್ರಾಹ್ಮಣ್ರಾ!” ಎಂದು ಪ್ರಶ್ನೆ ಹಾಕಿದ್ದಳು. ತಾಯಿಯ ಸಂತೋಷಕ್ಕಿಂತ ದೊಡ್ಡದೊಂದಿದೆ! ಲುಂಗಿಯನ್ನೇ ಸುತ್ತಿಕೊಳ್ಳುತ್ತ ಹ್ಹೂಂ ಅಂದಿದ್ದ. ಹೆಸ್ರಿನ ಕೊನೆಗೆ ಶರ್ಮನೋ ರಾವ್ ಅಂತ್ಲೋ ಇಟ್ಕೋಬಹುದಿತ್ತಲ್ಲ” ಎಂದು ತಾನು ಮುಗ್ದತೆಯಿಂದ ಕೇಳಿದ್ದಳು. ಅದಕ್ಕೆ ನಿರುತ್ತರವಾಗಿ ಶಾಮು ಗೋಧೂಳೀ ಸಮಯದಲ್ಲಿ ಹೋಗಿದ್ದ. ಅಷ್ಟರೊಳಗೆ ಇಷ್ಟೊಂದು ಹಳಹಳಿಕೆ. +ಅಲುಮೇಲಮ್ಮ ಓಣಿಯ ನಂಬಿಕಸ್ಥರನ್ನು ಕರೆದು ಹಿಂಗಿಂಗೇಂತ ಹೇಳಿ ಕಳಿಸಬೇಕೆಂದು ತಲೆಬಾಗಿಲಿಗೆ ಬಂದಳು. ಇನ್ನೇನು ಆಕೆ ಒಂದು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ತುಳಸೀ ಕಟ್ಟೆಯ ಹಿಂದೆ ಮಾನವಾಕೃತಿ ಕಾಣಿಸಿಕೊಂಡು ಅದು ಮರುಕ್ಷಣದಲ್ಲಿಯೇ ಅಪ್ಪಿಕೊಂಡುಬಿಟ್ಟಳು. +“ಶ್ಯಾಮಾ!!” ಒಮ್ಮೆಗೆ ಜಿಗಿದು ಮಗನನ್ನು ಬಲವಾಗಿ ಅಪ್ಪಿಕೊಂಡುಬಿಟ್ಟಳು. +ಬದುಕಿನ ಸುರಕ್ಷಿತ ವಲಯ ತಲುಪಿದ ಉದ್ವೇಗದ ಸೆಳವಿಗೆ ಸಿಲುಕಿ ಅವನು “ಅಮ್ಮಾ” ಎಂದ ಯುದ್ಧದಿಂದ ಮರಳಿ ಬಂದವನಂತೆ. +“ಅಯ್ಯೋ… ಶಿವಶಿವಾ… ನಾರಾಯಣ… ನನ್ನ ಶಾಮು ಯಾಕೆ ಹಿಂಗೆ ನಡೀತಾ ಇದ್ದಾನೆ. ತಾತನವ್ರ ಮಾತು ಕೇಳಿ ಮನೆಲಿದ್ದಿದ್ರೆ…” ತಾಯಿ ಮಗನನ್ನು ಎತ್ತಿ ಕೊಂಡೊಯ್ಯುತ್ತಿರುವಳೆಂಬಂತೆ ಒಳಗಡೆ ಕರೆದುಕೊಂಡು ಹೋದಳು. +“ಏನಾಯ್ತೂಂತ ಹೇಳಬಾರ್ದೇನೋ?” ಮುಖದಲ್ಲಿ ಮುಖ ಇಟ್ಟು ಕೇಳಿದಳು. +“ಏನಂತ ಹೇಳ್ಲಿ ಅಮ್ಮಾ!” ಎಷ್ಟು ಚಂದ ಅಮ್ಮಾ ಎಂದು ನುಡಿಯುತ್ತಿರುವುದಲ್ಲ ತನ್ನ ಕಂದ. ಯಾಕೆ ಮುಖ ತಗ್ಗಿಸಿಬಿಡ್ತಿದೆ. ಏನಾದರೂ ಗ್ರಹ ಪೀಡೆಗಳು ಕಾಟವೋ? ಯಾರಾದರೂ ಲಲನಾಮಣಿಯರು ಕಣ್ಣುಬಿಟ್ಟಿರಬಹುದೋ? ಹೇಳುವುದೇನಿದೆ? ಕೇಳುವುದೇನಿದೆ? ಮಾಡೋದ ಮಾಡಿದರಾಯ್ತು. +ಅಲುಮೇಲಮ್ಮ ವಿಳಂಬ ಮಾಡಲಿಲ್ಲ. ತಾಮ್ರದ ಬೋಗುಣಿಯಲ್ಲಿ ಪಂಚತೈಲ ಸುರಿದುಕೊಂಡು ಬಂದು ಅದರಲ್ಲಿ ಅವನ ಪ್ರತಿಬಿಂಬ ನೋಡಿಸಿದಳು. ಮೆನಸಿನಕಾಯಿ, ಉಪ್ಪು ಪೊರಕೆಯೇ ಮೊದಲಾದ ವಸ್ತುಗಳಿಂದ ನೀವಳಿಸಿ ಲಟಿಗೆ ತೆಗೆದಳು. ಅವನು ಹ್ಹಾ ಅನ್ನಲಿಲ್ಲ. ಉಸಿರು ಬಿಡಲಿಲ್ಲ. ಕಂಚಿಯಿಂದ ತಂದಿದ್ದ ಲೋಭಾನ ಹಾಕಿದಳು. ಇಷ್ಟೆಲ್ಲ ಮಾಡಿದ ಮೇಲೆ ಅವನ ಮುಖ ತಿಳಿಗೊಂಡಂತೆ ಕಂಡಿತು. +ಅವನ ಮುಖವನ್ನು ತನ್ನೆರಡು ಬೊಗಸೆಯಲ್ಲಿ ಹಿಡಿದುಕೊಂಡು, ಮೂಗಿಗೆ ಮೂಗು ತಾಕಿಸಿ (ಥೇಟ್ ಅವರಪ್ಪನದೇ ಮೂಗು, ಮೂಗಿನಲ್ಲಿ ಅವಿತುಕುಳಿತಿರುವರೋ ಹೇಗೆ? ಸ್ಪರ್ಶದ ಮಾತ್ರದಿಂದಲೇ ಯಾಕೆ ರೋಮಾಂಚನವಾಗಬೇಕು?) “ಮಗೂ ಏನಾಯ್ತೂ ಅಂತ ಈಗ್ಲಾದ್ರೂ ಬಾಯ್ಬಿಟ್ಟು ಹೇಳೋ? ಇಲ್ಲಾಂದ್ರೆ ಎದೆ ಒಡೆದ್ಹೊಗ್ತದೆ!” ಎಂದು ಅಂಗಲಾಚಿದಳು. +ತಾಯಿಯ ಪ್ರೀತಿಗೆ ಸಮನಾದುದುಂಟೇನು ಲೋಕದಲಿ. +ರಂಗೋಲಿಗಿಂತ ಮಿಗಿಲಾದುದುಂಟಯ್ಯಾ ಈ ಜಗದ ಬಾಗಿಲಲಿ. +ಇದ್ದಕ್ಕಿದ್ದಂತೆ ಶಾಮನ ಎದೆಯಲ್ಲಿ ಮೂಡಿದ ಪದ್ಯ ಮಿದುಳಿಗೆ ಫೋನ್ ಮಾಡಿತು. ಮಿದುಳು ’ಬರೆದು ಎಸೆದುಬಿಡು’ ಎಂದು ಆಜ್ಞೆ ವಿದಿಸಿತು. ಕೈಗೆ ನಿಲುಕುವಂತೆ ಪೆನ್ನು ಪುಸ್ತಕ ಇಲ್ವಲ್ಲ! ಸಿಡುಕಿದನು. +ತಾಯಿ ಹೇಳೋ ಅಂದಳು. ಮಗ ಹೊಳೆದ ಪದ್ಯ ಹೇಳಿದ. ಅದಲ್ವೋ ನೀನು ಸೊಟ್ ಸೊಟ್ಟ ನಡೀತಿರೋದು. ಹೊಲದಲ್ಲಿ ದುಡ್ಯೋ ಶೂದ್ರರ ಥರ ಅಸ್ತವ್ಯಸ್ತವಾಗಿರೋದ್ಯಾಕೋ… ಹೇಳೋ!” ಕೊರಳಪಟ್ಟಿ ಹಿಡಿದು ಜಗ್ಗಿದಳು. +“ಅಮ್ಮಾ…” ಉಗುಳು ನುಂಗಿದ. +“ಏನಪ್ಪಾ” +“ಹೇಗೆ ಹೇಳ್ಲಮ್ಮಾ!” +“ಹೇಳೋ ಮಗ್ನೇ ಮಗುವಿನ್ತರ ಹಠಮಾಡ್ಬೇಡಪ್ಪಾ!” +“ನನ್ಗೆ ನಾಚ್ಕೆಯಾಗ್ತದೆ!” +“ಈ ತಾಯಿಹತ್ರ ಅದೆಂಥದೋ ನಾಚ್ಕೆ!” +“ಮತ್ತೆ… ಮತ್ತೆ!!!” +“ಹೇಳೋ ಕಂದಾ!” +“ನನಗೆ ಚೇಳು ಕುಟುಕ್ತಮ್ಮಾ” ಗಂಟಲ ಅಣೆಕಟ್ಟು ಢಮಾರನೆ ಸ್ಪೋಟಿಸಿಬಿಟ್ಟಿತು. ಹೋ ಎಂದು ಅಳತೊಡಗಿದ. ಚೇಳು ಕುಟುಕಿದ್ದು ಕಾಲು ಭಾಗವಾಗಿದ್ದರೆ, ಅನಸೂಯ ಮುಖಕ್ಕೆ ರಾಚಿದಂತೆ ಮಾತಾಡಿದ್ದೂ; ದಾಸರಿ ತಿಮ್ಮ ರೇಪ್ ಮಾಡಲು ಪ್ರಯತ್ನಿಸಿದ್ದೂ; ನಂತರ ಅವನು ನಾಯಿ ’ಛೂ’ ಬಿಟ್ತಿದ್ದೂ ಇದೆಲ್ಲ ಒಂದರ ಮೇಲೆಂದು ಸೇರಿಕೊಂಡು ದುಃಖವನ್ನು ನೂಮಡಿಗೊಳಿಸಿಬಿಟ್ಟಿತು. ಪ್ರಪಂಚದ ಸಮಸ್ತ ದುರಂತ ಕಾವ್ಯ ನಾಟಕವೇ ಮೊದಲಾದ ಸಾಹಿತ್ಯ ಗಂಥಗಳಲ್ಲಿ ಅಭಿವ್ಯಕ್ತಗೊಂಡಿರುವ ದುಃಖವನ್ನು ಮೈತುಂಬ ಪಂಚೇದ್ರಿಯಗಳ ತುಂಬ ತುಂಬಿಕೊಂಡುಬಿಟ್ಟನು. ಗಂಟಲಿ ಮರು ನುಡಿಯಲರಿಯದೆ ಮತ್ತೆ ಕಟ್ಟಿ ಬಿಟ್ಟಿತು. ಮೂಗಿನ ಎರಡು ಹೊಳ್ಳೆಗಳಿಂದ ಹಾಲು ಜೇನಿನ ಹಳ್ಳ ಹರಿಯತೊಡಗಿತು. ಕಣ್ಣುಗಳೆರಡು ನಯಾಗರ ಜೋಗದ ಪಾತ್ರಗಳನ್ನು ಅಭಿನಯಿಸತೊಡಗಿದವು. +ತಾಯಿಯ ವಕ್ಷದ ಮೇಲೆ ತನ್ನ ಮುಖಾರವಂದವನ್ನಿರಿಸಿ ’ಅಮ್ಮಾ’ ಎಂದು ಮತ್ತೆ ಮತ್ತೆ ಬಿಕ್ಕಿದ. ಕಣ್ಣೀರು ವಕ್ಷದ ಕಣಿವೆಗುಂಟ ಅಗ್ನಿ ದಿವ್ಯದಂತೆ ಹರಿಯಿತು. +ತನ್ನ ಪ್ರಾಣಪದಕಕ್ಕೆ ಚೇಳು ಕುಟುಕುವುದೆಂದರೇನು! ಋತುಮತಿಯಾದಾಗ ಮೈಲಿಗೆ ಲಂಗದ ಮೇಲೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದ ಐದಾರು ಚೇಳುಗಳನ್ನು ನೋಡಿದ ಮಾತ್ರಕ್ಕೆ ಏಳರ ಜ್ವರ ಏಳು ದಿನಗಳ ಪರ್ಯಂತರ ಕಾಡಿದ್ದವು. ಚೇಳು ಕುಟುಕಿದವರ ಸಂದರ್ಶನ ಮಾಡಿ ಹೌಹಾರಿದ್ದಳು ಎಷ್ಟೋ ಸಲ. +“ಶಿವ! ಶಿವಾ!” ಕಣ್ಣು ಮುಚ್ಚಿಕೊಂಡಳು ತಾಯಿ +“ನನ ಕಂದಾ ಏನು ಹೇಳ್ತಿರುವೆಯೋ?” ಏನು ಮಾಡುವುದೀಗ? ಮಾವನವರಿದ್ದಿದ್ರೆ ಮಂತ್ರಿಸುತ್ತಿದ್ದರು… ” +ಕಂದ ಚೇಳು ಕುಟಿಕಿಸಿಕೊಂಡ ಸಂಕಟದಲ್ಲಿ ಇಷ್ಟು ದೂರ ನಡೆದು ಬಂದಿರುವನಲ್ಲ ಎಷ್ಟೊಂದು ತಾಕತ್ತಿರುವುದಿವನ ಮೈಯೊಳಗೆ! ಎಷ್ಟಾದರೂ ಇವನು ಸರ್ವಶಾಸ್ತ್ರಪಾರಂಗತನಾದ ಗಂಡಸಲ್ಲವೆ? +ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಹಾಗೇ ಜೋಪಾನವಾಗಿ ನಡೆಸಿಕೊಂಡು ಶಯನಗೃಹಕ್ಕೆ ನಡೆಸಿಕೊಂಡು ಹೋದಳು. ಮುಲುಕುತ್ತ, ನರಳುತ್ತ; ಅಡಿಗಡಿಗೆ ಅಮ್ಮಾ ಅಮ್ಮಾ ಅನ್ನುತ್ತ ನಡೆದನಾ ಗಂಡುಗಲಿ ಕುಮಾರ ರಾಮನು. +ಅರ್ಜುನನ ಹಸ್ತಲಾಘವದ ಶರಪಂಜರದ ಮೇಲೆ ಕುರುಪಿತಾಮಹ ಪವಡಿಸೋಪಾದಿಯಲ್ಲಿ ಶಾಮು ಮಲಗಿಕೊಂಡನು. +“ಕಂದಾ… ಚೇಳು ಕುಟಿಕಿದ ಜಾಗವನ್ನಾದರೂ ತೋಸೋ?” ದುಃಖಿತಳಾಗಿ ಕೇಳಿದಳು ವಾತ್ಸಲ್ಯ ಮೂರ್ತಿ. +ಇಂಥದೊಂದು ಪ್ರಶ್ನೆ ತಾಯಿಯ ಬಾಯಿಂದ ಉದುರುತ್ತಲೆ ಶಾಮು ಹೌಹಾರಿದ. +“ಹೋಗಮ್ಮ… ಎಲ್ಲೋ ಒಂದ್ಕಡೆ ಕುಟುಕ್ತು” ದುಃಖದ ವಲ್ಮೀಕದೊಡಲಿಂದ ನಾಚಿಕೆ ಒಡಮೂಡಿತು. +“ಹಾಗಂದ್ರೆ ಹೆಂಗಪ್ಪಾ” ಕಂದನ ದೇಹದ ಪ್ರತಿಯೊಂದು ಭಾಗವನ್ನು ಪರಾಮರ್ಶಿಸುತ್ತಾ ಕೇಳಿದಳು ತಾಯಿ.” “ನೀನು ಹೇಳದಿದ್ರೆ ಇಗೋ ನೋಡು ಮತ್ತೆ!” +“ಅಮ್ಮಾ ನನ್ಗೆ ನಾಚ್ಕೆ ಆಗ್ತದೆ” ವಧುವಿನಂತೆ ನಾಚುತ್ತಿರುವ ಮಗ. +ತಾಯಿಯಾದ ನನ್ನ ಬಳಿ ಅದೆಂಥದದೋ ನಾಚ್ಕೆ!” +“ಕುಟುಕಿರೋ ಜಾಗ!” +“ಜಾಗ!” +“ನಿನಗೆ ತೋರಿಸುವಂಥದಲ್ಲ!” +“ಅಂದ್ರೆ” +“ಥೂ! ಹೋಗಮ್ಮಾ!” +“ಛೀ ಹುಚ್ಚಪ್ಪ… ನಾನು ನೋಡ ಬಾರದಂಥ ಜಾಗ ಯಾವುದೋ ಇದೆ ನಿನ್ನ ದೇಹದಲ್ಲಿ?” +“ಇದೆ ಅದನ್ಕಟ್ಕೊಂಡೇನೀಗ?” +“ನಾನು ನಿನ್ನ ತಾಯಿ. ನನ್ನ ಏಕ ಮಾತ್ರ ಪುತ್ರ ನೀನು, ನಿನ್ನ ದೇಹ ನನ್ನ ಹಕ್ಕು.” +“ಅಮ್ಮಾ ದಯವಿಟ್ಟು… ಸ್ವಲ್ಪ ಹೊತ್ತು ಆಚೆ ಹೋಗ್ತೀಯಾ?” +“ಇಂಥ ಸಂಕಟದ ಸಮಯದಲ್ಲಿ ನಿನ್ನೊಬ್ನೆ ಬಿಟ್ಟು ಅದ್ಹೇಗೆ ಹೋಗ್ಲೋ?” +ಶಾಮನಿಗೆ ಫಜೀತಿಗಿಟ್ಟುಕೊಂಡಿತು. ಹೇಗೆ ಹೇಳೋದು! ಹೇಳಲಾಗದೆ ಹೇಗೆ ಇರೋದು? ಪಂಚವಿಂಶತಿ ನಾಚಿಕೆಯ ತ್ರಯೋದಶಿ ಹೊಂಡದಲ್ಲಿ ಲಿಬಿಲಿಬಿ ಒದ್ದಾಡತೊಡಗಿದ. ಯಾಕಾದರೂ ಮನೆಗೆ ಮರಳಿದೆನೋ? ನೋವು ಶಮನವಾಗುವವರೆಗೆ ಅಲ್ಲೆಲ್ಲೊ ಒಂದುಕಡೆ ಬಿದ್ದಿರಬಹುದಿತ್ತು. +ಹೇಳಪ್ಪಾ… ಹೆತ್ತಕರುಳು ಚೂರುಚೂರಾಗ್ತಿದೆ” ಅಲುಮೇಲಮ್ಮ ಚಂಡಿಹಿಡಿದವಳಂತೆ ಕೇಳಿದಳು. +“ನನ್ಗೆ ನಾಚಿಕೆ ಆಗ್ತದಮ್ಮಾಽಽ” ಗೋಗರಿದ. +“ನಾನು ಬದುಕಿರೋವಗೂ ನನ್ನೆದುರಿಗೆ ನಾಚ್ಕೆ ಪಡಬೇಡ… ನಾನು ನಿನ್ನ ತಾಯಿ. ತಾಯಿ ಎದುರು ಅದೆಂಥದೋ ನಾಚಿಕೆ.” +“ನಾನೀಗ ಮಗು ಅಲ್ಲ… ಬೆಳ್ದು ದೊಡ್ಡವನಾಗಿದ್ದೀನಿ.” +“ನಾನು ಸತ್ತ ಮೇಲೆ ಮೇಲೆಯೇ ನೀನು ದೊಡ್ಡವನಾಗೋದು.” +“ನೀನು ಸಾಯೋ ಮಾತಾಡಬೇಡಮ್ಮಾ ನನ್ಗೆ ದುಃಖವಾಗ್ತದೆ.” +“ಹಾಗಾದ್ರೆ ಹೇಳು ಮತ್ತೆ… ಇಲ್ಲಿ ಕುಟುಕ್ತಾ… ಇಲ್ಲಿ ಕುಟುಕ್ತಾ” ಅಲುಮೇಲಮ್ಮ ಮಗನ ದೇಹದ ಬಹುಪಾಲು ಭಾಗವನ್ನು ಮುಟ್ಟಿ ಮುಟ್ಟಿ ಕೇಳಿದಳು. +“ಅಲ್ಲೆಲ್ಲೂ ಅಲ್ಲ.” +“ಹಾಗಿದ್ರೆ ಎಲ್ಲಿ?” +“ಹೇಳೋಕೆ ನನ್ ಮನ್ಸು ಒಪ್ಪುತ್ತಿಲ್ಲ.” +“ಹೆತ್ತ ತಾಯಿಗಿಂತ ನಿನ್ಗೆ ನಿನ್ ಮನಸೇ ಹೆಚ್ಚಾಯ್ತೇನೋ?” +“ತಾತ ಬಂದ ಮೇಲೆ ಹೇಳ್ತೀನಿ” +“ನಿನಗೆ ಜನ್ಮ ಕೊಟ್ಟಿರೋದು ತಾತನಲ್ಲ. +“ಹೌದಮ್ಮಾ ನೀನೆ ನನ್ನ ಜನ್ಮದಾತೆ” +“ಹಾಗಿದ್ರೆ ನಿಸ್ಸಂಕೋಚವಾಗಿ ಹೇಳು ಮತ್ತೆ!” +ತತ್ಸರ್ವಂ ಶ್ರೀವಾಸುದೇವಾರ್ಪಣಮಸ್ತು… ಶಾಮು ಸರ್ವಸ್ವವನ್ನೂ ತನ್ನಿಷ್ಟ ದೈವಕ್ಕರ್ಪಿಸಿಬಿಟ್ಟ. ಯಾಕೆ ಹಠ ಮಾಡುತ್ತಿರುವಳೀ ತಾಯಿ; ತಂದೆ ಬದುಕಿದ್ದರೆ ತಾನೀ ಪರಿಯಾಗಿ ಮಾತೃತ್ವದ ಸಂಕೋಲೆಗೆ ಸಿಲುಕುವ ಸಂಧಿಗ್ದಕ್ಕೆ ಬಲಿಯಾಗುತ್ತಿರಲಿಲ್ಲ. +ಮಾತೃತ್ವ ಪಿತೃ ರೂಪಾಯಾ | ಪಿತೃತ್ವ ರೂಪಾಯ ಮಾತೃವೇ +ಮಾತೃತ್ವಸ್ಯ ಹೃದಯ್ಂ ಪಿತೃಃ | ಪಿತೃಶ್ಚ ಹೃದಯಂ ಮಾತೃಃ +ಎಂದು ಗೊಣಗಿಕೊಂಡ. ಪಾಲಕ ಮತ್ತು ಪೋಷಕ ಶಕ್ತಿಗಳ ತ್ರಿವೇಣಿ ಸಂಗಮದಂತಿರುವ ತನ್ನ ತಾಯಿ ಈ ಪರಿ ಮಾತೃತ್ವದ ಪಾರಾಕಾಷ್ಠೆ ತಲುಪಬಹುದೆಂದು ಗೊತ್ತಿದ್ದರೆ ತಾನು ಆ ಕಡೆ ಹೋಗುತ್ತಲೇ ಇರಲಿಲ್ಲ. +“…” ಶಾಮು ಹೇಳಲೆಂದು ಬಾಯಿ ಏನೋ ತೆರೆದ. ಶಬ್ದ ಹೊರಡಲಿಲ್ಲ. ಮುಚ್ಚಿದ. +“ಹೇಳೋ” ಅಲುಮೇಲಮ್ಮನ ಕಂಠ ಬಿಗಿಯಿತು. “ನೀನು ಹೇಳ್ಲಿಲ್ಲಾಂದ್ರೆ ನನ್ನಾಣೆ ನೋಡು.” +“ಆಣೆ!” ಬರಸಿಡಿಲಿನಂತೆ ಎರಗಿತು. ಶಿವಶಿವಾ, ಕಿವಿ ಮುಚ್ಚಿಕೊಂಡ. +ಚಿಕ್ಕಪುಟ್ಟ ಸಂಗತಿಗಳಿಗೆಲ್ಲ ಆಣೆ ಪ್ರಮಾಣ ಮಾಡುವ ತಾಯಿ ಈ ಪ್ರಪಂಚದಲ್ಲಿ ತನಗೊಂದೆ ಇರುವಳೋ ಮತ್ತಾರಿಗಾದರೂ ಇರುವಳೋ? +ಮಾತೃಸನ್ನಿಧಿಯ ಒಂದೊಂದು ಗಳಿಗೆಯೂ ಎಷ್ಟೊಂದು ಆತಂಕಕಾರಿಯಾಗಿರುವುದಲ್ಲ! +ಹೋಗಿ ಹೋಗಿ ಆ ಚೇಳು ತನ್ನನ್ನೇ ಕುಟುಕುವುದೇನು? ಹೋಗಿ ಹೋಗಿ ಅತ್ಯತಿಷ್ಟದ್ದಶಾಂಗುಲಂಗೇ ಕುಟುಕಬೇಕೇನು? ಒಟ್ಟಿನಲ್ಲಿ ನನ್ನ ಕರ್ಮ! ಪ್ರಭಾತಸಮಯ ಪ್ರಭಾಂ ಸಮಯದಲ್ಲಿ ಸೂರ್ಯನಿಗೆ ಅಶ್ರುತರ್ಪಣ ಮಾಡುತ್ತಿದ್ದ ಹಜಾಮರ ವೆಂಕೋಬಿಯ ಹೆಂಡತಿ ಇಠೋಬಿಯನ್ನು ನೋಡಿದ್ದು; ಸದರಿ ದಿನ ಏನಾದರೂ ಸಂಭವಿಸಬಹುದೆಂದು ಆ ಕ್ಷಣವೇ ಅಂದುಕೊಂಡು ಶೌಚ ಕಾರ್ಯಕ್ಕೆ ಹೋಗಿದ್ದ. ಅಬ್ಬಬ್ಬಾ ಅಂದರೆ ಅನಸೂಯಾ ತನ್ನ ಕಪಾಳಕ್ಕೆ ಎರಡು ಬಿಡಬಹುದು! ಇಲ್ಲವೆ ಇತ್ತೀಚಿಗೆ ರಾಜಕೀಯ ಸೇರಿರುವ ಬಾಡಿ ಬಿಲ್ದರ್ ತನ್ನನ್ನಟ್ಟಿಸಿಕೊಂಡು ಬರಬಹುದೆಂದುಕೊಳ್ಳುತ್ತ ಪ್ರಾತರ್ವಿಧಿಗಳನ್ನು ಮುಗಿಸಿದ್ದ. ಸೂರ್ಯಾಸ್ತದ ನಂತರ ಕಂಟಕದ ಸರಮಾಲೆಯೇ ಆರಂಭವಾಗಿರುವುದು ದುರದೃಷ್ಟಕರ ಸಂಗತಿ. +ತಾಯಿ ಮುಖ ಬಳ್ಳಾರಿ ಬಿಸಲಿಗೆ ತತ್ತರಿಸಿದ ಎಳೆಲತೆಯಂತಾಗಿರುವುದನ್ನು ಕಂಡ. ಮಮ್ಮಲನೆ ಮರುಗಿದ. ಹೇಳಿದರೆ ಅಶ್ಲೀಲದ ಪಾಪ ಸಂಚಯಕ್ಕೆ ತಾನು‌ಒಳ್ಳೆಯ ಚೀಲ… ಹೇಳಿಯೇ ಬಿಡಬೇಕೆಂದು ನಿರ್ಧರಿಸಿದ. ಸ್ವಧಾ ಸಮರ್ಪಯಾಮಿ… ತನಗೆ ತಾನು ತರ್ಪಣಕೊಟ್ಟುಕೊಂಡು ಬಾಯನ್ನು ಮೆಲ್ಲಗೆ ತೆರೆದ. +“ಅಮ್ಮಾಽಽ… ಆಣೆ‌ಇಟ್ಟು ನನ್ನನ್ನು ಧರ್ಮಸಂಕಟಕ್ಕೆಸಿಲುಕಿಸಿದ ನನ್ನಪ್ರೀತಿಯ ತಾಯೇ… ಇದೋ ಇಲ್ಲಿ ಚೇ…ಳು… ” ಎಂದು ಆ ಚಂದ್ರೋಪರಾಗ ಪರ್ವಣಿ ಪುಣ್ಯಕಾಲದಲ್ಲಿ ಶಾಮನು +ಕೈಯಿಂದ ಸಂಜ್ಞೆ ಮಾಡಿ ತೋರಿಸಿಬಿಟ್ಟನು. +ಸಕಲಗತನುಗತಂ ಶಂಕರಂ ಅಂತ ತನ್ನೆರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡುಬಿಟ್ಟ. +ಪ್ರೌಡೋಽಹಂ ಯೌವನಸ್ಥೋ ವಿಷಯ ವಿಷಧರೈಃ ಅಂತ ನಾಚಿ ಕೆಂಪಗಾಗಿದ್ದ ಮುಖವನ್ನು ಬೆಳಕಿನಿಂದ ಮರೆಮಾಚಿದ. +ಅದನ್ನು ಕೇಳಿದ ತಾಯಿ ಗುರುತ್ವಾಕರ್ಷಣೆ ಕಳೆದುಕೊಂಡಂತಾದಳು. ಅರ್ಧ ನಿಮೀಲಿತ ನೋಟದಿಂದ ಆ ಭಾಗ ನೋಡಿದಳು. ಆ ಭಾಗದ ಬಗ್ಗೆ ಆಕೆಗೆ ಸಿಟ್ಟು, ದುಃಖ, ಸಂತೋಷ ಒಟ್ಟೊಟ್ಟಿಗೆ ಬಂದವು. +“ಸಿಟ್ಟು!… ತನ್ನನ್ನು ತನ್ನ ಮಗನಿಂದ ದೂರ ಮಾಡುತ್ತಿರುವ ಕಂಕಲಾಡಿತನದ ಜಾಗವದು. ದಿನೇ ದಿನೇ ಮಗ ಆ ಕಡೆ ಧ್ಯಾನಸ್ಥನಾಗುತ್ತಿರುವನು, ತನ್ನಿಂದ ದ್ವಿದಳ ಧಾನ್ಯದಂತೆ ಬೇರ್ಪಡುತ್ತಿರುವನು. ಎಲ್ಲಾ ವಿಷಯಾಸಕ್ತಿಗಳ ಕೇಂದ್ರದಂತಿರುವ ಆ ಜಾಗವನ್ನು ತಾನಿದುವರೆಗೆ ನೋಡಿಯೇ ಇಲ್ಲ. ಮಾತೃತ್ವದ ಪರಮಾಧಿಕಾರದ ಮೇಲೆ ಧಾಳಿ ಮಾಡುವ ಆ ಸ್ವಯಂ ಚಾಲಿತ ಶಕ್ತಿಗೆ ದಿಕ್ಕಾರ! +’ದುಃಖ’ ಎಂಥ ಹುಚ್ಚಪ್ಪನಿದ್ದಾನೆ ತನ್ನ ಪ್ರೀತಿಯ ಮಗ! ಅದನ್ನೂ ತನ್ನಿಂದ ಮರೆಮಾಚುವಷ್ಟು ಸ್ವಾರ್ಥಿಯಾಗಿರುವನಲ್ಲ! ಅದವನಿಗೆ ಗುಣ, ತಾನು ಗೌಣ ಯಾಕೆ ಹೀಗಾಗ್ತಿದೆ! ತನನೆ ತನ್ನ ಮಗನ ತ್ರಿಕಾಲ ಸತ್ಯಗಳ ಮೇಲೆ, ದೈಹಿಕ ವಿಘಟನೆಗಳ ಮೂಲ ಸೆಲೆಯ ಬಗ್ಗೆ ತಾಯಿಯಾದ ತನಗೆ ಅಧಿಕಾರವಿಲ್ಲವೇನು? +’ಸಂತೋಷ’ ಅರೆ! ಮೊನ್ನೆ ಮೊನ್ನೆ ತಾನು ಎತ್ತಿ ಆಡಿಸಿ; ಮೊಲೆಯೂಡಿಸಿ; ಶೌಚವೇ ಮೊದಲಾದ ಸಹಜ ಕ್ರಿಯೆಗಳನ್ನು ಮಾಡಿಸಿ; ಸಂಬಂದ ವಾಚಕ ಪದ ವಿಶೇಷಣಗಳನ್ನು ಕಲಿಸಿ ಮಾತೃ ಮುಗ್ಧತೆಯ ಋಷ್ಯ ಶೃಂಗ ತುದಿಯ ಮೇಲೆ ನಿಂತಿದ್ದ ತನಗೆ ಅವನಿಷ್ಟೊಂದು ಬೆಳೆದು ದೊಡ್ಡವನಾಗಿರುವುದರಿಂದಲ್ಲವೇ ಈ ನಾಚಿಕೆ ಬಿಗುಮಾನಗಳಿತ್ಯಾದಿ! ತಾನು ಗಮನಿಸದಂಥ; ತನ್ನ ಮಾತ್ರುತ್ವದ ಅರಿವಿಗೆ ಬಾರದಿರುವಂಥ ಬೆಳವಣಿಗೆ ಅವನ ದೇಹದಲ್ಲಿ ಇರುವುದಾದರೂ ಯಾವುದು? ಅದರ ಪೂರ್ವೋತ್ತರ ಅಗತ್ಯಗಳನ್ನು ಪೂರೈಸುವ ಅಧಿಕಾರ ತನಗಿನ್ನಷ್ಟು ಬೇಗನೆ ದೊರಕುತ್ತಿರುವುದಲ್ಲವೆ! +ಎಷ್ಟೊಂದು ನಾಚಿಕೊಡಿರುವನಲ್ಲ ತನ್ನ ಮಗ, ತಾಯಿಯ ಸಾನ್ನಿಧ್ಯದಲ್ಲೂ ನಾಚಿಕೆ ಏನು? +“ಮಗೂ… ಮುಖವನ್ಯಾಕೆ ಹಾಗೆ ಮುಚ್ಕೊಂಡಿದ್ದೀಯೋ ಹುಚ್ಚಪ್ಪಾ… ಕೈ ತೆಗೆ… ನಿನ್ ಮುಖದ ಹೊಸ ಭಾವನೆಯನ್ನು ನೋಡೋ ಆಸೆಯಾಗಿದೆ…” ಅಲುಮೇಲಮ್ಮ ಬಲವಂತದಿಂದ ಮುಖದ ಮೇಲಿದ್ದ ಕೈಗಳನ್ನು ತೆಗೆದಳು. +ಅವನಲ್ಲಿ ಒಂದೆರಡು ಕ್ಷಣ ಹಿಂದಿದ್ದ ಗೊಂದಲವಿರಲಿಲ್ಲ. ಮಾತೃತ್ವದ ಗರಿಷ್ಠತೆಗೆ ಅರ್ಪಿಸಿಕೊಂಡಿದ್ದ ಅವನು ಅವನತಮುಖನಾದ… +ತಾಯಿ ತನ್ನ ಕೈಗಳನ್ನು ಮೇಲಿರಿಸಿದಳು… +ಮೆಲ್ಲಗೆ ನಿಧಾನವಾಗಿ ಕೆಳಗೆ ಸರಿಸಿದಳು. +ಸೃಷ್ಟಿ ಕಲೆಗೆ ಪ್ರಧಾನ ಸ್ವಯಂಚಾಲಿತ ಕೇಂದ್ರಕ್ಕೆ ಕುಟುಕಿರುವ ಚೇಳೇ ನಿನಗೆ ಧಿಕ್ಕಾರ!… ಏನೇನೋ ಗೊಣಗುತ್ತ ಕಣ್ಣು ಮುಚ್ಚಿದಳು ಅವನು ನಿರಾಕರಿಸಿದರೂ ಕೇಳದೆ ಕೈಗಳನ್ನು ಮತ್ತಷ್ಟು ಕೆಳಗೆ ಸರಿಸಿದಳು. +ಆ ದರಿದ್ರದ ಹುಡುಗಿ ಅನಸೂಯಳ ಸ್ಪರ್ಶ ಮೈಲಿಗೆಯ ಕಲ್ಪನೆ ಪ್ರಾಯಶ್ಚಿತ್ತವಾಗಿಯೇ ಚೇಳು ಕುಟುಕಿರಬಹುದೆಂದು ಆ ತಾಯಿ ಗೊಣಗುತ್ತಿರಲು… +ಬೆಂಗಳೂರಿನಲ್ಲಿದ್ದ ರಾಘೂ ಮಾಮನಿಗೆ ಪತ್ರಬರೆಯೋದಕ್ಕೂ ಮೂರು ದಿನ ಮೊಡಲು ಅನಸೂಯಾ ಮಾತಿನಿಂದ ಸಂಬಂಧ ಹರಕೊಂಡು ಬರೋದೇನೋ ಬಂದುಬಿಟ್ಟಳು. ಅದರ ಸಮಾಧಾನ ಎಂಬುದು ಪುರ್ರನೆ ಹಾರಿ ಹೋಗ ಬಿಡಬೇಕೇ ಹಾಳಾದ್ದು! ಬದು ಬಿಡೇ ಕಾಲ ಹಿಂಗೇ ಇರೋದಿಲ್ಲ. ಯಾವ ಘಳಿಗೇಲಿ ಏನಾಗ್ತದೋ ಬಲ್ಲೋಯಾರು? ನಾವು ಹೇಳಿ ಕೇಳಿ ಹೆಣ್ಣು ಮೂಳಗಳು, ಮೂರಾಗೋ ಕಡೆ ಆರಾಗಿ ಬಿಟ್ರೆ ಕನ್ನೀರವ್ವನ ಬಾವೀನೆ ಗತಿ. ಅದೂ ಅಲ್ದೆ ನಿಮ್ಮಪ್ಪನಿಂದ ಪತ್ರ ಇಲ್ಲ ಸುದ್ದಿ ಇಲ್ಲ… ಅವರೆಲ್ಲಿದ್ದಾರೋ? ಏನು ಮಾಡ್ತಿದಾರೋ? ಹಿಡಿದ ಕೆಲಸ ಮುಗಿಸ್ಕೊಂಡೇ ಬರುವ ಜಾಯಿಮಾನದವರು. ಹೆಂಡ್ತಿ ಮಕ್ಳು ಗ್ಯಾನ ಬ್ಯಾಡ್ವೇ? ಅವಯಾವಾಗಾದ್ರೂ ಬರ್ಲಿ… ನಿನ್ ತಲೆ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ನಾನು ನನ್ ದಾರಿ ನೋಡ್ಕೋತೀನಿ ನನ್ನ ಮಾತು ನೀನು ಕೇಳಿದ್ರೆ ತಾನೆ, ಆ ಬಾಂಬ್ರು ಹುಡುಗನ ಚಿಂತೆ ಹಚ್ಚಿಕೊಂಡು ದಿನ ನೂಕಬೇಡಾಂತ ಎಷ್ಟು ಹೇಳಿದೆ. ನೀನು ಕೇಳಿದ್ಯಾ? ಅಗಿದ್ದು ಆಗಿಹೋಯ್ತು. ಈಗಲಾದ್ರು ಪತ್ರ ಬರೆಯೋದು ಬ್ಯಾಡವೇನು ಎಂದು ರುಕ್ಕಮ್ಮ ಮಗಿ ಮಳೆ ಅಂಟಿಕೊಂಡಂತೆ ಒಂದೇ ಸಮನೆ ಎರಡು ದಿನಮಾನ ಅಂಟಿಕೊಂಡು ಬಿಟ್ಟಿದ್ದಳು. ಆಕೆಯ ಮಾತುಗಳಿಗೆಲ್ಲ ಅನಸೂಯ ತಲೆಕೆಡಿಸಿಕೊಳ್ಳಲಿಲ್ಲ. +“ಏನವ್ವಾ ಹಿಂಗಾಡ್ತಿಯಲ್ಲ… ಈಗ ನಿನ್ಗೆ ಕಡಿಮೆ ಅಗಿರೋದಾದ್ರು ಏನು? ನಿಮ್ಗೆ ಮಗ ಅಂದ್ರು ನಾನೆ ಮಗ್ಳು ಅಂದ್ರೂ ನಾನೇ. ನನ್ನನ್ಯಾಗೋ ಮದ್ವೆ ಮಾಡ್ಕೊಟ್ಟು ನೀನೇನು ಮಾಡಬೇಕೆಂಡಿರುವಿ? ಇಷ್ಟೊಂದು ಓಡ್ಕೊಂಡಿದ್ದೀನಿ. ಪ್ರಪಂಚಾನು ಅರ್ಥ ಮಾಡ್ಕೊಡದೀನಿ. ನಮ್ ಸಂಸಾರಾನೂ ಅರ್ಥ ಮಾಡ್ಕೊಡದೀನಿ… ಅಪ್ಪ ಅನ್ನಿಸ್ಕೊಂಡೋನು ಹೇಳ್ದೆ ಕೇಳ್ದೆ ಮನೆಬಿಟ್ಟು ಹೋಗಿದ್ದಾನೆ… ಅಪ್ಪ ಬಂದೇ ಬತಾನೆ… ಬಲಿ ಬಂದ ಮೇಲೆ ಆತನೇ ನಿಂತು ಮದ್ವೆ ಮಾಡ್ತಾನೆ…” ಎಂದು ಶಾಮನ ಪತ್ರಗಳನ್ನು ಅಡುಗೆ ಮನೆಯ ಯಜ್ಞ ಕುಂಡಕ್ಕೆ ’ಸಮರ್ಪಯಾಮಿ’ ಮಾಡುತ್ತಾ ಹೇಳಿದಳು. +“ಅಲ್ಲಿವಗೂ?” ಸ್ವಾತಿ ಸ್ಟೋರಿಗೆ ಕೊಡಬೇಕಿದ್ದ ವಯರ್ ಬುಟ್ಟಿಗಳ ಪೈಕಿ ಇಪ್ಪತ್ತನೆಯದು ಮತ್ತು ಕೊನೆಯದು ಹೆಣೆಯುತ್ತ ಪ್ರಶ್ನಾತ್ಮಕ ಚಿನ್ಹೆ ಇಟ್ಟಳು ರುಕ್ಕಮ್ಮ. +“ನನ್ಯಾವುದಾದರೊಂದು ನೌಕರಿ ನೋಡ್ಕೋತೀನಿ” ಎಂದು ಕೊನೆ ಪತ್ರವನ್ನು ಬೆಂಕಿಗೆಸೆದು ನಿಟ್ಟುಸಿರುಬಿಟ್ಟಳು ಅನಸೂಯಾ. ವರಲಕ್ಶ್ಮಿ ಫೈನಾನ್ಸ್ ಕಾರ್ಪೊರೇಷನ್ನಿನ ವೆಂಕಟರಾಮು ಬರೊ ತಿಂಗಳು ಒಂದರಿಂದ ಬಂದು ಹಾಜರಾಗಬಹುದೆಂದು ಹೇಳಿದ್ದ” +“ನೀನು ನೌಕರಿ ಸೇರುವುದು ಬ್ಯಾಡ. ನೀನು ದುಡಿದು ತಂದಿದ್ನ ನಾನು ತಿಂದು ಬದ್ಕೋದೂ ಬ್ಯಾಡ. ನಿನ್ ಮದ್ವೆ ಮಾಡಿ ಮುಗಿಸಿ ನಾನು ನನ್ನ ತವರ್ಮನೆಗೆ ಹೋಗ್ತೀನಿ” ಎಂದು ಕಡ್ಡಿ ಮುರಿದಂತೆ ಹೇಳಿದ್ದಳು. ತವರೂರಿಗೆ ಬರೋದಾದ್ರೆ ಎಂಟೆಕರೆ ಹೊಲ ಮಾಡಿಸಿ ಕೊಡುವುದಾಗಿ ಚಿಕ್ಕಪ್ಪ ಕಳೆದ ತಿಂಗಳು ಬಂದಿದ್ದಾದ ಹೇಳಿ ಹೊಗಿದ್ದ. +“ಹಾಗಾದ್ರೆ ಅಪ್ಪ ಬರೋವಗೂ ಕಾಯೋದು ಬ್ಯಾಡಾಂತಿ ಏನು?” ಒಂದು ಕೈಲಿ ಪತ್ರ ಮತ್ತೊಂದು ಕೈಲಿ ಪೆನ್ನು ಹಿಡಿದು ಕೇಳಿದಳು. +“ಅವು ಅಷ್ಟು ಬೇಗ ಬರಬೌದೆಂದ್ಕೊಂಡಿಲ್ಲ. ಬರೋದು ವರ್ಷಗಟ್ಲೆ ಆಗ್ತದಂತ ಹೇಳೇ ಹೋಗ್ಯಾರ… ನಿನ್ ಮದ್ವೆ ಮಾಡಿ ಮುಗಿಸಿದ್ರೆ ಅವ್ರೂ ಸಂತೋಷ ಪಡ್ತಾರೆ.” +ತಾಯಿ ಮಗಳಿಬ್ಬರೂ ಒಂದೇ ಸಲಕ್ಕೆ ನಿಟ್ಟುಸಿರುಬಿಟ್ಟರು. +ಅನಸೂಯಾ ತಾಯಿ ಹೆಸರಿನಲ್ಲಿಯೇ ರಾಘುಗೆ ಪತ್ರ ಬರೆದು ಮುಗಿಸಿದಳು. ಅದನ್ನು ದಬ್ಬಿಗೆ ಹಾಕುವಾಗ ಶಾಮುಗೆ ಚೇಳು ಕುಟುಕಿದ್ದು ಮರುಕಳಿಸಿತು. ಅದು ತನಗಾದರೂ ಕುಟುಕಬಾರದಾಗಿತ್ತ ಅಂದುಕೊಂಡಳು. ಕವಿ ಹೃದಯದ ಅವನಿಗೆ ಚೇಳು ಹೊಸ ಅನುಭವ ನೀಡಿರಬಹುದು. ಬರೀ ಇರುವೆಯಿಂದ ಕಚ್ಚಿಸಿಕೊಳ್ಳುತ್ತಾ ಕೂತಿದ್ದರೆ ಕವಿತೆ ಅರ್ಥವಾಗುವುದಾದರೂ ಹೇಗೆ? ಅವನು ಇರುವೆಯಿಂದಲೂ ಕಚ್ಚಿಸಿಕೊಂಡಿರಲಿಕ್ಕಿಲ್ಲ… ಜಲಜಾಕ್ಷಿ ನೀಡಿರುವಂಥ ಅನುಭವವನ್ನು ತನ್ನಿಂದ ನೀಡಲಾಗಲಿಲ್ಲ… ಆಕೆಯ ಜಾಯಮಾನ ಆಕೆಯದು; ತನ್ನ ಜಾಯಮಾನ ತನ್ನದು… +ಶತಪದಿಯಂತೆ ನಡೆಯುತ್ತಿದ್ದ ಶಾಮು ಮತ್ತೆ ಮತ್ತೆ ನೆನಪಾದ. ಅವನ ತಾಯಿ ತನ್ನ ಮಗನನ್ನು ಎತ್ತಿಕೊಂಡೇ ಓಡಾಡುತ್ತಿರಬಹುದು ಮನೆತುಂಬ. ವೃಶ್ಚಿಕ ಕುಟುಕಿದ್ದರಿಂದ ದೊಡ್ಡದೊಂದು ಕಂಟಕವೇ ಪರಿಹಾರವಾಗಿದೆ ಎಂದು ಶಾಸ್ತ್ರಿಗಾಳು ಭಾಗಿಸಿ ಗುಣಿಸಿ ಅಭಿಪ್ರಾಯಪಟ್ಟಿರಬಹುದು. ಆದರೆ ಶಾಮು ಎಂಬ ಆದಿಮಾನವನಿಗೆ ಅದಾವುದೂ ಅರ್ಥವಾಗಲಿಕ್ಕಿಲ್ಲ. ಅಲುಮೇಲಮ್ಮ ಮತ್ತು ಶಾಸ್ತ್ರಿಗಳ ಅಭಿಪ್ರಯಗಳ ಉಡಾವಣೆಯ ಸ್ತಳ ಮಾತ್ರ ಅವನು. ಡೋಲಾಯ ಮನಸ್ಸಿನ ಅವನನ್ನು ತಿದ್ದು ತಿಳುವಳಿಕೆ ತನಗೆ ಮಾತ್ರ ಇತ್ತು. ಕೈ ಹಿಡಿಯುವ ಯಾವ ವಧುವೂ ಅವನನ್ನು ತಿದ್ದುವುದು ಸಾಧ್ಯವಿಲ್ಲ… ಹೀಗೆ ಏನೇನೋ ಯೋಚಿಸುತ್ತ ಬೀದಿಯ ಕೊನೆಯಲ್ಲಿ… ಆರು ಬೆರಳು ವಂಶದ ಶೆಟ್ಟಿ ಅಂಗಡಿಯ ಕಂಭಕಿದ್ದ ಅಂಚೆ ಡಬ್ಬಿಯಲ್ಲಿ ಪತ್ರ ಹಾಕಿ ಬರುವಾಗ ಕೆಲವು ಪಡ್ಡೆಗಳು ತನ್ನ ಕಡೆಗೇ ಪಿಳಿಪಿಳಿ ನೋಡುತ್ತಿರುವುದನ್ನು ಗಮನಿಸಿದಳು. +ಒಂದಿಷ್ಟು ತರಕಾರಿ ಕೊಂಡುಕೊಂಡು ಹೋದರಾಯಿತು‌ಅಂತ ಎಡರಳ್ಳಿ ಸಣ್ಣೀರವ್ವನ ಬಳಿಗೆ ಹೋಗುತ್ತಿರುವಾಗ ಶಾಮು ತನ್ನ ತಾತನ ಜೊತೆ ಎಲ್ಲಿಗೋ ಹೊರಟಿರುವುದು ಕಂಡಿತು. ಅವರಿಬ್ಬರು ವಿಶೇಷ ಉಡುಪಿನಲ್ಲಿದ್ದರು. ಬಹುಶಃ ಯಾವುದಾದರೂ ವೈದಿಕಕ್ಕೊ, ಶ್ರಾದ್ಧಕ್ಕೋ ಹೊರಟಂತಿತ್ತು. ವೈದಿಕದ ಉಡುಪಿನಲ್ಲಿ ಶಾಮು ಶ್ರೀಕೃಷ್ನ ದೇವರಾಯನ ಅಪ್ಪಾಜಿ ತಿಮ್ಮರಸನಂತೆ ಕಾಣುತ್ತಿದ್ದ. ನೋವು ಕಡಿಮೆಯಾದಂತಿಲ್ಲ. ಕಾಲು ಸ್ವಲ್ಪ ಕಿಸಿದು ಹಾಕುತ್ತಿರುವನು. +ಅನಸೂಯಳನ್ನು ನೋಡಿದ ಕೂಡಲೆ ಮುಂಗುಸಿ ಕಂಡ ಹಾವಿನಂತೆ ತನ್ನ ತಾತನ ನೆರಳಿನಲ್ಲಿ ಅವಿತುಕೊಂಡನು. +ಅವನ ಆ ಅವಸ್ಥೆ ನೋಡಿ ಅನಸೂಯಾಳಿಗೆ ನಗು ಬಂತು. +ಆಕೆ ಕಾಯಿಪಲ್ಯೆ ಖರೀದಿಸಿದ ಸಣ್ಣಿರವ್ವನೂ ಹನ್ನೊಂದಕ್ಕೆ ಮದುವೆಯಾಗಿ ಹನ್ನೆರಡಕ್ಕೆ ಮೈನೆರತು ಹದಿನಾಲ್ಕನೇ ವಯಸ್ಸಿಗೊಂದು, ಹದಿನೈದನೇ ವಯಸ್ಸಿಗೊಂದರಂತೆ ಮಡಿಲು ತುಂಬಿಕೊಂಡು ಹದಿನಾರಕ್ಕೆ ರಂಡೆ ಪದವಿ ಪಡೆದಂಥಾಕೆಯೇ. ಸುಮಾರು ಐವತ್ತು ವರ್ಷ ಆಕೆಗೆ. ಅನಸೂಯಳ ಮೇಲೆ ಪ್ರೀತಿ. ಒಳ್ಳೇದು ಕೆಟ್ಟದ್ದು ವಿಚಾರಿಸಿ ವಿಚಾರಿಸದೆ ಎಂದೂ ಕಳಿಸಿದಾಕೆಯಲ್ಲ. +ಆಗಲೂ ಸಹ ವೀರವನಿತೆಯಂತೆ ಮಾತಾಡಿಸಿದಳು. +ಇಂಥವರಿಂದಲೇ ಜೀವನೋತ್ಸಾಹ ಪಡೆಯುವುದರಲ್ಲಿರುವ ದೈನ್ಯತೆಯನ್ನು ಅರ್ಥ +ಮಾಡಿಕೊಳ್ಳುತ್ತ ಅನಸೂಯ ಮನೆಗೆ ಮರಳಿದಳು. +“ಬಾ ತಾಯೀ… ಬಾರಮ್ಮಾ… ಕಾಯಿಪಲ್ಯೆ ತರಾಕ ಹೋಗಿದ್ದೇನಮ್ಮಾ; ಏನು ಕಾಲ ಬಂದೈತೇನೋ? ಏನು ತಗೊಂಡ್ರು ದುಬಾರಿ, ಕೊಳ್ಳಂಗಿಲ್ಲ ಬಿಡಂಗಿಲ್ಲ… ಹೇಗೋ ಒಂದ್ರೀತಿ ಬದುಕಬೇಕಲ್ಲ… ಉಪಾಸಯಿಲಿಕ್ಕಾಗ್ತದೇನು? ನಾನು ನೋಡಮ್ಮಾ ಬೀಡಿ, ಚಾ, ಕಾಫಿ ಎಲ್ಲ ಬಿಟ್‌ಬಿಟ್ಟೀನಿ. ಮನೇಲಿ ಯಾರಾದ್ರು ಬಂದ್ರೆ ಅವ್ರಿಗೆ ಮಾತ್ರ ಚಾ ಮಾಡ್ತೀನಿ ಅಷ್ಟೆ. ಹಾಸ್ಗೆ ಇದ್ದಷ್ಟು ಕಾಲು ಚಾಚಬೇಕು ನೋಡು. ಕಾಲ ಧರ್ಮ” ಮನೆ ಮುಂದುಗಡೆ ವರಾಂಡದಲ್ಲಿ ಹಾಕಿದ್ದ ಕುರ್ಚಿ ಮೇಲೆ ಕೂತು ತಲೆಬಾಗಿಲ ಮೇಲೆ ಕಣ್ಣು ಕೋರೈಸುತ್ತಿದ್ದ ಬಳ್ಳಾರಿ ಕನಕದುರ್ಗಾ, ಹುಲಿಗೆಮ್ಮ, ಸವದತ್ತಿ ಎಲ್ಲಮ್ಮ, ಮೈಸೂರಿನ ಚಾಮುಂಡಿ ಇವೇ ಮೊದಲಾದ ಎದ್ದು ಬರುತ್ತಾರೆನ್ನುವಂತಿದ್ದ ಶಕ್ತಿ ದೇವತೆಗಳ ಫೋಟೋಗಳ ಕಡೆಗೊಮ್ಮೆ, ಆತಂಕವನ್ನು ಮುಖದಲ್ಲಿ ಪ್ರಕಟಿಸುತ್ತಿದ್ದ ರುಕ್ಕಮ್ಮನ ಕಡೆಗೊಮ್ಮೆ ನೋಡುತ್ತ ಮಾತುಮಾತಿಗೊಮ್ಮೆ ನಿಟ್ಟುಸಿರು ಬಿಡುತ್ತ ತನ್ನ ಪಾಡಿಗೆ ತಾನು ಪ್ರಪಂಚವನ್ನೇ ತಲೆಮೇಲೆ ಹೊತ್ತುಕೊಂಡವನಂತೆ ಮಾತಾಡುತ್ತಿದ್ದ ಕಸೆಟ್ಟಿ ಚಂದ್ರಪ್ಪನ ಕಡೆಗೊಮ್ಮೆ ತೀಕ್ಷಣವಾಗಿ ನೋಡುತ್ತ ಮನೆ ಒಳಗಡೆ ಹೋದಳು ಅನಸೂಯಾ. +ಗಂಡ ರುದ್ರನಯಕನಿಂದ ಪತ್ರ ಬಂತೇ ಎನ್ನುವುದರ ಬಗ್ಗೆ; ಮಗಳು ಅನಸುಯಳ ಮದುವೆ ಬಗ್ಗೆ; ಒಂಟಿ ಹೆಂಗಸು ಹೇಗೆ ಜೀವನ ಸಾಗಿಸುವಿ ಎಂಬುದರ ಬಗ್ಗೆ; ಪುರುಷ ಪ್ರಧಾನ ಸಮಾಜದಲ್ಲಿ ಕಾಲ ಸೂಕ್ಷ್ಮವಾಗಿದೆ ಎನ್ನುವುದರ ಬಗ್ಗೆ; ತಾನು ದಿನಪತ್ರಿಗೆಗಳಲ್ಲಿ ಓದಿರುವ ಅಹಿತಕರ ಘಟನೆಗಳ ಬಗ್ಗೆ; ಬದಲಾಗುತ್ತಿರುವ ಹೊಸ ರಾಜಕೀಯ ವಾತಾವರಣದ ಬಗ್ಗೆ; ಋತುಮಾನಗಳು ಅದುಲುಬದಲಾಗಿರುವ ಬಗ್ಗೆ; ಋತುಮಾನಗಳು ಹೊತ್ತು ಗೊತ್ತಿಲ್ಲದೆ ಒಂದೇ ಸಮನೆ ಬೀಸುತ್ತಿರುವಬಗ್ಗೆ; ಹೊಸದಾಗಿ ರಾಜಕೀಯ ಪ್ರವೇಶ ಮಾಡಿ ಖಾದಿ ಸೀರೆ ಉಟ್ಟುಕೊಂಡು ಮಿಂಚುತ್ತಿರುವ ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಜಲಜಾಕ್ಷಿ ಬಗ್ಗೆ; ದೇಶವನ್ನೇ ಗಡಗಡ ನಡುಗಿಸುತ್ತಿರುವ ಇಂದಿರಾಗಾಂಧಿ ಬಗ್ಗೆ ಚಂದ್ರಪ್ಪ ತನ್ನ ಪಾಡಿಗೆ ತಾನು ಮಾತಾಡುತ್ತಿದ್ದುದು; ಪ್ರತಿಯೊಂದು ಮಾತಿಗೆ ಅನ್ಯಮನಸ್ಕಳಾಗಿ ತಾಯಿ ರುಕ್ಕಮ್ಮ ಹೂಂಗುಟ್ಟುತ್ತಿದ್ದುದೆಲ್ಲವನ್ನು ಕೇಳಿಸಿಕೊಳ್ಳುತ್ತ ಅಡುಗೆಮನೆಯೊಳಗೆ ಅಡುಗೆ ಮಾಡತೊಡಗಿದ್ದಳು ಅನಸೂಯ. +ತಮ್ಮ ಮನೆಯ ಮಾಲಿಕಿನ್‌ರವರ ಜೀವ ತಿನ್ನುತ್ತಿರುವ ಈ ಖಳನಿಗೆ ತಕ್ಕ ಶಾಸ್ತಿ ಮಾಡಬೇಕೆಂಬ ಉದ್ದೇಶದಿಂದ ಮೂಷಕ ದಂಪತಿಗಳು ಕಿರ್‌ಕಿರ್ ಸದ್ದು ಮಾಡುತ್ತ ಅವನ ನೆತ್ತಿ ಮೇಲಿದ್ದ ಜಂತಿ ಮೇಲೆ ಕೂತು ಆ ಚಕ್ರಬಡ್ಡಿ ಚಂಡಾಲ ಕಿಂಕರನ ಕಡೆ ತೀಕ್ಷ್ಣವಾಗಿ ನೋಡಿದವು. ಅವನು ಆಕಳಿಕೆ ಬಂದು ಮುಖ ಎತ್ತಿ ಬಾಯಿ ತೆರೆದೊಡನೆ ಅವು ತಮ್ಮ ಎಂಟು ಕಾಲುಗಳಿಂದ ಪುತಪುತನೆ ನುಸಿಮಣ್ಣನ್ನುದುರಿಸಿದವು. ಅದು ಸೀದ ಅವನ ಕಣ್ಣು, ಬಾಯಿಗೆ ಬಿತ್ತು. ಅವನು ಕಂಗಾಲಾಗಿ ಕಣ್ಣುಜ್ಜಿಕೊಳ್ಳುತ್ತ ಕೊಕ್‌ಕೊಕ್ ಕೆಮ್ಮುತ್ತ ಇಲಿಗಳನ್ನು ಶಪಿಸುತ್ತ ಎದ್ದು ನಿಂತನು. +“ತಂಗೀ… ರುಕ್ಕಮ್ಮಾ ನಿನ್ ಕಷ್ಟ ನೋಡಿ ಒತ್ತಾಯ ಮಾಡೋಕೆ ಮನ್ಸು ಒಪ್ತಿಲ್ಲಮ್ಮಾ ಬಾಡಿಗೆ ಬಾಕಿ ಹಾಳೂಮೂಳೂ ವಸೂಲುಮಾಡ್ಕೊಂಡ್ ಹೋದ್ರೇನೇ ಸೊಸಿ ಕೂಳು ಹಾಕೋದಮ್ಮಾ. ಬಂಗಾದಂತ ಮಗ್ನಿಗೆ ಅಂಥೋಳ್ನ ತಂದಿರೋದು ನನ್ ಕರ್ಮ ಈಗ ಹೋಗಿ ಏನೋ ಒಂದು ಹೇಳಿ ಸರಿ ಮಾಡ್ತೀನಿ. ಮುಂದಿನ್ತಿಂಗ್ಳು ನನ್ಗೊಂದು ದಾರಿ ತೋಸಿಬಿಡಮ್ಮಾ ಇನ್ನೂ ನಾನು ಚಪ್ರದಳ್ಳೀಗೆ ನಡ್ಕೋತ ಹೋಗಿ ಕುದಿರೆ ಕಾಲಿನ ಕಾಳಿಂಗಾಚಾರಿಯ ಕಾಲು ಹಿಡಕೋಳ್ಳೋದೈತಿ…” ಎಂದು ಕಸೆಟ್ಟಿ ಚಂದ್ರಪ್ಪ ಸಂಸಾರವೆಂಬ ಗೂಲಿ +ಗುಡ್ಡವನ್ನು ಬೆನ್ನ ಮೇಲಿಟ್ಟುಕೊಂಡಿರುವವನಂತೆ ಭಾರವಾದ ಹೆಜ್ಜೆ ಹಾಕುತ್ತ ಹೋದ ಕೂಡಲೆ ತಾಯಿ ರುಕ್ಕಮ್ಮ ನಿಡಿದಾದ ಉಸಿರು ಬಿಟ್ಟಿದ್ದು ಹಿತ್ತಲಲ್ಲಿ ರಾಶಿರಾಶಿ ಪಾತ್ರೆಗಳನ್ನು ಹಾಕಿಕೊಂಡು ಕೂತಿದ್ದ ಅನಸೂಯಳಿಗೆ ಕೇಳಿಸಿತು. +ರಾತ್ರಿ ತಾಯಿ ಮಕ್ಕಳಿಬ್ಬರೂ ನಿದ್ದೆ ಬಾರದೆ ತುಂಬ ಹೊತ್ತಿನವರೆಗೆ ಒದ್ದಾಡಿದರು. ಪರಸ್ಪರ ಹೇಳಿಕೊಳ್ಳುವಷ್ಟು ಸಾವಿರಾರು ಸಂಗತಿಗಳು ಅವರಿಬ್ಬರ ಹೃದಯಗಳಲ್ಲಿ ಕತಕತನೆ ಕುದಿಯುತ್ತಿದ್ದವು. ಹೇಳಿಕೊಲ್ಲುವುದಕ್ಕಿಂತ ಮೌನವೇ ಹೆಚ್ಚು ಸೂಕ್ತವೆಂದುಕೊಂಡರು. ಮಾತಾಡಿಕೊಂಡಲ್ಲಿ ಲಘು ಜಗಳವಾಗುವ ಸಾಧ್ಯತೆ ಇತ್ತು. ತಾಯಿಗೆ ಬೆನ್ನು ಮಾಡಿ ಮಗಳು ಬಲಗಡೆ ಕಿಟಕಿ ಕಡೆ ಮುಖ ಮಾಡಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದುದಕ್ಕೆ ಕಾರಣ ಇಲ್ಲದಿಲ್ಲ. +ಆ ಕಿಟಕಿಗೆ ಕೆಲವು ಫೂಟುಗಳ ದೂರದಲ್ಲಿಯೇ ಶಾಸ್ತ್ರಿಗಳ ಮನೆ ಇರುವುದಷ್ಟೆ. ಆ ಕಡೆಯಿಂದ ಹೌದೋ ಅಲ್ಲವೋ ಅನ್ನುವಂತೆ ಶಾಸ್ತ್ರಿಗಳ ಮನೆ ಕಡೆಯಿಂದ ಮಾತಾಡುತ್ತಿರುವ ಧ್ವನಿಯನ್ನು ಕರಾರುವಾಕ್ಕಾಗಿ ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲಿ ಮಾತಾಡುತ್ತಿರುವವರು ಯಾರು? ಅವರೇನು ಮಾತಾಡುತ್ತಿರಬಹುದು? ಯಾವುದರ ಬಗ್ಗೆ ಮಾತಾಡುತ್ತಿರಬಹುದು? ಎಂಬಂಥ ಕೆಲವು ಸಂದೇಹಗಳೇ ಆಕೆಯನ್ನು ನಿದ್ದೆ ಮಾಡಲು ಬಿಡಲಿಲ್ಲ. +ಎಲೈ ಸಂದೇಹಗಳೇ… ಇತ್ತ ಕಡೆ ಗಮನ ಕೊಡಿ. ಇದು ರುದ್ರನಾಯಕನ ಮಗಳು ಅನಸುಯಾ ಎಂಬ ಕನ್ಯಾಮಣಿ ಮಾಡುತ್ತಿರುವ ಪ್ರಾಚಾರ, ನೀವ್ಯಾಕೆ ಹೀಗೆ ಹೊತ್ತು ಗೊತ್ತಿಲ್ಲದೆ ಬಂದು ಪೀಡಿಸುತ್ತಿರುವಿರಿ. ಮಾಡಲಿಕ್ಕೆ ಬೇರೆ ಕೆಲಸವಿಲ್ಲವೇನು ನಿಮಗೆ? ಕೆಲವು ತಾಸುಗಳ ಹಿಂದೆಯಷ್ಟೇ ನಮ್ಮ ನಾಯಕಿ ಶಾಮನೆಂಬ ಲಂಗೋಟಿಯ ಪ್ರತಿಯೊಂದು ಅವಶೇಷಗಳನ್ನು ಅಗ್ನಿಗೆ ತರ್ಪಣ ಕೊಟ್ಟಾಕ್ಷಣವೇ ಕುಂ. ವೀರಭದ್ರಪ್ಪನೆಂಬ ಲಿಪಿಕಾರ ಬರೆಯುತ್ತಿರುವ “ಶಾಮಣ್ಣ” ಎಂಬ ಕಾದಂಬರಿಯ ಒಂದು ಪ್ರಮುಖ ಭಾಗ ಮುಗಿದಂತೆಯೇ ಲೆಕ್ಕ… ಆದ್ದರಿಂದ ನೀವು ಸಮಯ ಪ್ರಜ್ಞೆ ಇಲ್ಲದೆ ಟೊಂಗುಟುಸುಕು ಅಂತ ಏನೆಲ್ಲ ನೆನಪು ಮಾಡಿ ನಮ್ಮ ಕಥಾ ನಾಯಕಿಗೆ ತೊಂದರೆ ಕೊಡೋದ್ಯಾಕೆ?… ನಿಮ್ಮಿಂದಾಗಿಯೇ ಈಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ಹೊಟ್ಟೆ ತುಂಬ ಊಟ ಮಾಡುತ್ತಿಲ್ಲ. ತನ್ನ ಬಗ್ಗೆಯೇ ತನಗೆ ಖಬರಿಲ್ಲ… ಈ ಯುಕ್ತ ವಯಸ್ಸಿನಲ್ಲಿ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಮಾಡುತ್ತಿದ್ದರೇನೆ ಮೈಕೈ ತುಂಬಿಕೊಂಡು ಚೆನ್ನಾಗಿರ್ತಾರೆ, ಇಲ್ಲಾಂದ್ರೆ ಇಲ್ಲ… ದಯವಿಟ್ಟು ನೀವೆಲ್ಲ ಹೀಗೆ ತೊಂದರೆ ಕೊಡದೆ ಆಕೆ ಪಾಡಿಗೆ ಆಕೆಯನ್ನು ಬಿಟ್ಟುಬಿಡಿ… +ತನ್ನನ್ನು ಹಿತವಾಗಿ ನೇವರಿಸುತ್ತಿದ್ದ ಕೈಯನ್ನು ಮೃದವಾಗಿ ನೆಕ್ಕುತ್ತ ಬೆಕ್ಕು ಒಳಗೊಳಗೇ ಗೊರಗೊರ ಸದ್ದು ಮಾಡುತ್ತ ಸಂದೇಹಗಳಿಗೆ ವಿನಂತಿಸಿಕೊಂಡಿತು. “ಎಲೈ ಮಾರ್ಜಾಲವೇ ಆಕೆ ಅಲ್ಲೇ ಸ್ವಲ್ಪ ಸ್ಪರ್ಶಿಸಿದಾಕ್ಷಣ ಹಿಂದು ಮುಂದೆ ನೋಡದೆ ಆಕೆ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವೆಯಲ್ಲ!… ಆಕೆ ಸ್ವಲ್ಪ ಮುಟ್ಟಿದ್ರೇನೆ ನೀನು ರೋಮಾಂಚನ ಪಡುತ್ತಿರಬೇಕಾದರೆ ಮುಟ್ಟುತ್ತ ಮುಟ್ಟಿಸಿಕೊಳ್ಳುತ್ತಲೇ ಬೆಳವಣಿಗೆಯ ಒಂದು ಹಂತ ತಲುಪಿರುವ ಆ ಶಾಮನ ಸ್ಥಿತಿ ಹೇಗಿರಬೇಡ? ಈ ನಿನ್ನ ಕಥಾ ನಾಯಕಿಯ ಪರಿಸ್ಥಿತಿ ಹೇಗಿರಬೇಡ! ಸ್ತ್ರೀಯ ಸಮಸ್ತ ರೂಪ ವೈವಿಧ್ಯತೆಯನ್ನು ಶಾಮು ತನ್ನ ತಾಯಿಯಲ್ಲಿ +ಕಂಡುಕೊಳ್ಳುತ್ತಿರುವುದರಿಂದಾಗಿಯೇ ಸಂದರ್ಭ ಬಿಗಡಾಯಿಸಿರುವುದು. ಅವನು ಪರಿಸ್ಥಿತಿಯ ಕೂಸು ಮಾತ್ರ. ಅವನೂ ಈಗ ತಮ್ಮ ಮನೆಯಲ್ಲಿ ಗಾಢ ನಿದ್ದೆ ಮಾಡುತ್ತಿಲ್ಲ… ಅವನೂ ತನ್ನ ಕಣ್ಣುಗಳನ್ನು ಪಿಳಿಪಿಳಿ ತೆರೆದು ಈ ಕಡೆ ನೋಡುತ್ತಿದ್ದಾನೆ. ಅಡಿಗಡಿಗೆ ನಿಟ್ಟುಸಿರು ಬಿಡ್ತಿದಾನೆ. ಒಂದು ನಿಮಿಷದಲ್ಲಿ ಐದು ಸಾರಿ ಮಗ್ಗಲು ಬದಲಾಯಿತ್ತಿದ್ದಾನೆ. ಪರಿಸ್ಥಿತಿ ಬಿಗಡಾಯಿಸಲು ಅವನು ಇಷ್ಟಪಡೊ ವ್ಯಕ್ತಿಯಲ್ಲ. ಯೋಚಿಸುವುದಷ್ಟೇ ಗೊತ್ತವಗೆ, ನಿರ್ಣಯ ತಗೋಳಿಕ್ಕರಿಯನು. ಅವತ್ತು ಏನೋ ಹೆಳಲಿದ್ದ. ಮೊದಲಿಗೆ ರಾಜಕಾರಣಿ ವೇಷ ಧರಿಸಿದ್ದ ಜಲಜಾಕ್ಷಿ ಕಂಡು ಧೃತಿಯನ್ನು ಮುಕ್ಕಾಲು ಭಾಗ ಕೆಡೆಸಿದರೆ ಚೇಳು ಕುಟುಕುವುದರ ಮೂಲಕ ಧೃತಿಯ ಕಾಲು ಭಾಗವನ್ನೂ ಕೆಡೆಸಿಬಿಟ್ಟಿತು. ತಾಯಿಯ ಬಳಿಯಂತೂ ಅವನು ಯಾಕಾದ್ರೂ ಚೇಳು ಕಡಿಸಿಕೊಂಡು ಬಿಟ್ಟೆನೋ ಎಂದುಕೊಂದುಬಿಟ್ಟ. ಇಷ್ಟದರೂ ಅವನು ಎಚ್ಚರಗೊಂಡಿದ್ದಾನೆ. ದೂರ ಸಂವೇದಿ ಉಪಗ್ರಹದಂಥ ತನ್ನ ಮನಸ್ಸು ಈ ಕಡೆ ಉಡಾಯಿಸಿದ್ದಾನೆ. ಅಲ್ಲದೆ ಆಪ್ತ ಮಂತ್ರಾಲೋಚನಾ ಗೃಹದ ಕಡೆಗೆ ಪಂಚೇದ್ರಿಯಗಳನ್ನು ಅಟ್ಟಿರುವ ಶಾಮು ತುಂಬ ಒಳ್ಳೆಯವನು ಕಣಪ್ಪಾ ಮಾರ್ಜಾಲವೇ?” ಎಂದು ಸಂದೇಹಗಳು ಪಟಪಟ ನುಡಿಯೋದನ್ನು ನುಡಿದು ತಮ್ಮ ಕೆಲಸಕ್ಕೆ ತಾವು ಹೊರಟು ಹೋದವು. +ಅದೆಲ್ಲವನ್ನು ಕೇಳಿಸಿಕೊಂಡು ಮಾರ್ಜಾಲ ಚಿಂತೆಗೀಡಾಯಿತು. ಮುಂಗಾಲುಗಳಿಂದ ಮುಖ ಕೆರೆದುಕೊಂಡಿತು. ನಾಲಿಗೆಯಿಂದ ಮುಂಗಾಲುಗಲನ್ನು ನೇವರಿಸಿಕೊಂದಿತು. ನಂತರ ತನ್ನ ಮೂತಿಯನ್ನು ಅನಸೂಯಳ ಬಿಸಿಬಿಸಿ ಮುಖಕ್ಕೆ ಹತ್ತಿರ ಒಯ್ದು ಮೂಸಿತು. ಆಕೆಯ ಫಳಫಳ ಹೊಳೆವ ಕಣ್ಣುಗಳನ್ನು ನೋಡಿತು. +“ಮಲಿಕ್ಕಳ್ಳೇ ನಮ್ಮವ್ವ… ಹಿಂಗ್ಯಾಕೆ ಚಿಂತೆ ಮಾಡಲಾಕತ್ತಿ… ಬಂಗಾರದ ಗೊಂಬೆಯಂತಿರೋ ನೀನೆಲ್ಲಿ; ಅರಗಿನ ಗೊಂಬೆಯಂಗಿರೋ ಅವನೆಲ್ಲಿ… ಸಂಸ್ಕೃತಕಲ್ತುಕೊಂಡಿರೋರು ರೌಡಿಗಳಷ್ಟು ಅಪಾಯಕಾರಿಯಲ್ಲ… ಸುಮ್ನೆ ನಿದ್ದೆ ಮಾಡು, ಆಗ್ಲೆ ಶಾನೆ ಹೊಟ್ಟಾಗೈತೆ” ಎಂದು ಅರ್ಥ ಬರುವಂತೆ ಮಾರ್ಜಾಲ ಮ್ಯಾಂಗುಟ್ಟಿತು. ಅದರ ಅಂತರಂಗವನ್ನು ಅರ್ಥಮಾಡಿಕೊಂಡವಳಂತೆ ಅನಸೂಯ ಅದನ್ನು ಸ್ತನಗಳಿಗೆ ಅಪ್ಪಿಗೊಂಡಳು. ಮಾರ್ಜಾಲಕ್ಕೆ ’ಭೋ’ ಖುಷಿಯಾಯಿತು. ಅದು ಅದರ ಪ್ರಾಚೀನ ಆಸೆಯಾಗಿತ್ತು ಕೂಡ. +ಆಕೆಯ ಹೃದಯ ಭಾಗಕ್ಕಂಟಿಸಿದ್ದ ತನ್ನ ಮೈಯಿಂದ ಅದೇನನ್ನು ಹೀರಿಕೊಂಡಿತೋ ಏನೋ ಅದನ್ನು ತಾನು ಹೇಗೆ ಅರ್ಥಮಾಡಿಕೊಂಡಿತೋ ಏನೋ… +“ನೀನೇನೂ ಚಿಂತೆ ಮಾಡಬೇಡ… ಇಷ್ಟೊತ್ತಿನಾಗ ಆ ಶಾಸ್ತ್ರಿಗಳ ಮನ್ಯಾಗ ಏನು ಗುಸುಗುಸು ನಡೆಯಲಾಕತ್ತೈತಿ, ನೋಡ್ಕೊಂಡು ಬತೀನಿ” ಎಂದು ಮುಂತಾಗಿ ಮ್ಯಾವ್ ಗುಟ್ಟಿ ‘ಬಿಡೇ ಬಿಡೇ’ ಎಂದು ಬಿಡಿಸಿಕೊಂಡು ‘ಡಣ್’ ಅಂತ ಸೀದ ಕಿಟಿಕಿಗೆ ‘ಹೈಜಂಪ್’ ಮಾಡಿಬಿಟ್ಟಿತು. ಅಲ್ಲಿಂದ ಶಾಸ್ತ್ರಿಗಳ ಬೃಂದಾವನದ ಕಡೆ ಒಂದು ವಿಹಂಗಮ ನೋಟ ಬೀರಿತು. ಚರಾಚರಕ್ಕೆ ಕೇಳಿಸುವಂತೆ ಅದು ಮ್ಯಾವ್‌ಗುಟ್ಟಿದ್ದಕ್ಕೆ ಕಾರಣ ಇಲ್ಲದಿಲ್ಲ. ಅದು ಹೇಳಿ ಕೇಳಿ ಗಂಡು. ಸಸ್ಯಾಹಾರಿ ಎಂಬ ಶೀತವಲಯವನ್ನೂ; ಮಾಂಸಾಹಾರಿ ಎಂಬ ಉಷ್ಣವಲಯವನ್ನೂ ಒಟ್ಟಿಗೆ ನಿಭಾಯಿಸುತ್ತಲೇ ಸಮಶೀತೋಷ್ಣ ಜಾಯಮಾನವನ್ನು ಮೈಗುಡಿಸಿಕೊಂಡಿರುವ ಅದು ಆ ಕೇರಿಗೆ ಮೈಗೂಡಿಸಿಕೊಂಡಿರುವ ಜೋಕುಮಾರ ಸ್ವಾಮಿ. ಅದರ ಸ್ಟೈಲಿಗೆ ಮರುಳಾಗಿ ಕೋಮಟಿಗರ ಮನೆಗಳಿಂದ ಬರುವವೆಷ್ಟೋ ಬಡಾವಣೆ ಏರಿಯಾಗಳಿಂದ ಬರುವವೆಷ್ಟೋ. ಆಫೀಸರ್ಸ್ ಚಾಯ್ಸ್‌ಗಳು ಬರುವವೆಷ್ಟೋ. +ಒಂದೊಂದಾಗಿ ಬಂದವುಗಳನ್ನು ಹೇಗೋ ಸರಿ ಮಾಡಿ ಕಳಿಸುತ್ತಿದ್ದುಂಟು. ಆದರೆ ಎಲ್ಲಾ ಕಡೆಯವು ಒಟ್ಟಿಗೆ ಸೇರಿಬಿಟ್ಟರೇನು ಸಾಧ್ಯ?… ಅವೆಲ್ಲಿ ಕೇವಲ ಹೆಣ್ಣುಗಳಲ್ಲ… ಇತಿಹಾಸ ಪುಟ ಸೇರಿರುವ ವೀರ ವನಿತೆಯರೆಲ್ಲ ಬೆಕ್ಕಿನ ರೂಪ ತಳೆದಿರುವಂತೆ ಭಾಸವಾಗುವುವು. ಸಾಮೂಹಿಕವಾಗಿ ರೇಪ್ ಮಾಡಲರಿಯದಂಥ ಹೇಳಿಕೇಳಿ ಚತುಷ್ಪಾದಿಗಳವು. ಪುರುಷ ರತ್ನವಶ ಪಡೆಸಿಕೊಳ್ಳಲು ಪರಸ್ಪರ ಕಚ್ಚಾಡದೆ ವಿಧಿ ಇಲ್ಲ. ಮ್ಯಾವ್ ಎನ್ನುವುದು ಮ್ರಾಂಬ್ವುಽಽ ಎಂದು ಆಗುತ್ತಿತ್ತು. ಅದರ ಮೇಲಿದು; ಇದರ ಮೇಲದು; ಇವುಗಳ ಮೇಲೆ ಅವು; ಅವುಗಳ ಮೇಲಿವು; ಗಬಕ್ಕನೆ ಬಿದ್ದು; ಸಮಸ್ತ ಯುದ್ಧಗಳ; ಪ್ರಾಣಿಗಳ ಶಬ್ದಗಳ ಗೊಂಡಾರಣ್ಯವನ್ನು ಸೃಷ್ಟಿಸಿ ಇಡೀ ಓಣಿಗೆ ಕೇಳರಿಯದ ತಲೆನೋವನ್ನುಂಟು ಮಾಡಿ ಬಿಡುತ್ತಿದ್ದವು. ಕೇರಿಯ ಅಥಿರಥ ಮಹಾರಥರನ್ನೂ ಅವು ಕೇರು ಮಾಡುತ್ತಿರಲಿಲ್ಲ. +ಇದ್ರಂಗೆ ಮನುಷ್ಯೋರೂ ಲವ್ ಮಾಡಿಬಿಟ್ಟಿದ್ರೆ ಈ ಪ್ರಪಂಚೇನಾಗ್ತಿತ್ತು ಅಂತಲೋ! +ಲವ್ ಮಾಡೋದ್ನ ಬೆಕ್ಕುಗಳಿಂದ ನೋಡಿ ಕಲ್ತುಕೋಬೇಕು ಅಂತಲೋ +ಜನ ಮಾತಾಡುತ್ತಿದ್ದುದನ್ನು ಛಾವಣಿ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದ ಮಾರ್ಜಾಲ ಮಾತ್ರ ಯಾವ ತ್ರಿಲೋಕ ಸುಂದರಿಗೂ ಮರುಳಾಗುತ್ತಿರಲಿಲ್ಲ. ಅದು ಆಗಲೇ ಗುಟ್ಟಾಗಿ ಶಾಸ್ತ್ರಿಗಳ ಮನೆಯಲ್ಲಿ ಯಾವತ್ತೂ ಇರುವ ಕಾಮೋಷಿಯನ್ನು ಪ್ರೀತಿಸಿರುವುದು. ಅವೆರಡನ್ನೂ ಯಾರೊಬ್ಬರೂ ತಂದು ಸಾಕಿಕೊಂಡಿರಲಿಲ್ಲ. ಮಾರ್ಜಾಲದ ವೃತ್ತಾಂತವೇ ಹೃದಯ ವಿದ್ರಾವಕವಾದುದಾಗಿದೆ. ಅದರ ಅಜ್ಜಿ ಮಾಜಿ ಸಾರಿಗೆ ಸಚಿವ ರೇಣುಕಯ್ಯನವರ ಮನೆಯಾಕೆ. ಅಂದರೆ ಅವರು ಹಾಲಿ ಇದ್ದಾಗ ರಾಜ್ಯಪಾಲ ಗೋವಿಂದರಾಜರೇ ಬಹು ಪ್ರೀತಿಯಿಂದ ತಮ್ಮಿಬ್ಬಿರ ವಿಸ್ವಾಸದ ನೆನಪಿಗಾಗಿ ಒಂದು ಕೇಸರಿ ವರ್ಣದ ಹೆಣ್ಣು ಮರಿ ಕೊಟ್ಟಿದ್ದರು. ರಾಜ್ಯಪಾಲರು ಕೊಟ್ಟಿರುವುದೆಂದಮೇಲೆ ಸಚಿವ ರೇಣುಕಯ್ಯನವರು ಹೇಗೆ ಬಿಟ್ಟಾರು? ಅವರಿವರ ಮನೆಗೆ ಹೋಗುವುದೊಂದೇ ಅಲ್ಲದೆ ಕ್ಯಾಬಿನೆಟ್ ದರ್ಜೆಯ ಆಪ್ತಾಲೋಚನೆಗೂ ವಿಧಾನಸೌಧಕ್ಕೂ ಅದನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಸಹಾಯಕ ಸಚಿವೆ ಮಾಲತಿಯವರಂತೂ “ಎಷ್ಟೊಂದು ಮುದ್ದಾಗಿದೆ ಕಣ್ರಿ” ಎಂದು ಅದಕ್ಕೆ ಮುದ್ದು ಕೊಟ್ಟಿದ್ದೇ ಕೊಟ್ಟಿದ್ದು. ಆಗ ಸಚಿವ ರೇಣುಕಯ್ಯ ಆಕೆಯ ಮೊಲೆಯನ್ನು ಮಿಂಚಿನ ವೇಗದಲ್ಲಿ ಸವರಿ ಕೃತಾರ್ಥರಾಗಿಬಿಡುತ್ತಿದ್ದರು. ಮಹಿಳೆ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ರಾಜ್ಯ ಸಚಿವೆ ಬಲ್ಲಾಳ್‌ರವರಂತೂ ಅಧಿವೇಶನ ಮುಗಿಯುವವರೆಗೆ ರೇಣುಕಯ್ಯನವರ ಪಕ್ಕದಲ್ಲೇ ಕೂತಿದ್ದು “ರ್ರೀ… ಇದ್ನ ನಮ್ಗೆ ಕೊಟ್ ಬಿಡ್ರಿ” ಎಂದು ಕೇಳಿಯೇಬಿಟ್ಟಿದ್ದರು. +“ಅಲ್ರೀ ಕಾವೇರಿ, ಹೆಂಗ್ರಿ ಕೊಡ್ಲಿ… ಸಾಕ್ಷಾತ್ ರಾಜ್ಯಪಾಲ್ರೇ ತಮ್ಮ ಕೈಯಿಂದ ಕೊಟ್ಟಿರೋದು ಕಣ್ರಿ… ಅಪರೂಪದ ಪ್ರೆಸೆಂಟೇಷನ್ನಿದು, ಅದೂ ಅಲ್ದೆ ನಮ್ದು ಮೈನಾರಿಟಿ ಗೌರ್ಮೆಂಟು ಕ್ಲಿಷ್ಟ ಸಮಯದಲ್ಲಿ ನಮ್ಮನ್ನ ಕಾಪಾಡೋ ಶಕ್ತಿ ಇದಕ್ಕೆ ಮಾತ್ರ ಇರೋದು” ಎಂದು ಕೂಲಿಂಗ್ ಚಾಳೀಸೊಳಗಿಂದ ಕಣ್ಣು ಮಿಟುಕಿಸಿದ್ದ ಬೋಳು ಮುಖದ ರೇಣುಕಯ್ಯ. +ಸಾರಿಗೆ ಕುರಿತ ಚರ್ಚೆ ಸಮಯದಲ್ಲಂತೂ ಆ ಮುದ್ದು ಮುಖದ ಬೆಕ್ಕಿನ ಮರಿ ಒಳ್ಳೆ ಪಾರ್ಲಿಮೆಂಟೇರಿಯನ್ ಥರ ಪ್ರಮುಖ ಪಾತ್ರ ವಹಿಸಿತು. ‘ಸ್ವರ್ಗಾದಪಿ ಗರೀಯಸಿ’ ಎಂಬ ವಿರೋಧಿ ಪಕ್ಷದ ನಾಯಕ ‘ಹಿಂದೂ ಸುರತ್ರಾಣ’ ಸಾರಿಗೆ ಇಲಾಖೇಲಿ ಕೋಟ್ಯಾಂತರ್ರುಪಾ‌ಐ ಅವ್ಯವಹಾರ ಆಗಿದೆ. ಅದರ ದೊಡ್ಡ ರಖಮುನ್ನು ಸಾರಿಗೆ ಸಚಿವರು ಜೇಬಿಗಿಳಿಸಿದ್ದಾರೆ ಎಂದು +ಪ್ರಮುಖ ವಾರಪತ್ರಿಕೆ ಅಂಕಿ ಅಂಶಗಳ ಸಹಿತ ಪ್ರಕಟಿಸಿದೆ. ಕೂಡಲೆ ಸಚಿವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಒಂದು ಆಯೋಗ ರಚಿಸಬೇಕು, ಅದಕ್ಕೆ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಬೇಕು’ ಎಂದು ಗರ್ಜಿಸಿದಾಗ ಬೆಕ್ಕು ಮೈಕ್ರೋಫೋನ್ ಫಿಯರಿಲ್ಲದೆ ಮ್ಯಾಂವ್… ಮ್ಯಾಂವ್ ಎಂದು ಇಡೀ ಅಧಿವೇಶನವನ್ನು ನಗೆಗಡಲಿಗೆ ನೂಕಿತ್ತು. +ಬಡವರ ಬೆನ್ನೆಲುಬು ಪಕ್ಷದ ಏಕಮೇವ ಸದಸ್ಯ ಬೊಚ್ಚಣ್ಣನವರು ಮುಖ್ಯಮಂತ್ರಿಗಳ ಎಂಟನೇ ಮಗಳು ಸುಂದರಿಯರ ಮದುವೆಗೆ ಸಾರಿಗೆ ಸಂಸ್ಥೆಯ ನೂರು ಬಸ್ಸು ಓಡಿಸಿರುವ ಬಗ್ಗೆ ಸಂಬಂದಪಟ್ಟ ಸಚಿವರು ಕೂಡಲೆ ಹೇಳಿಕೆ ನೀಡಬೇಕೆಂದು ಹೇಳಿದಾಗಳೂ ಬೆಕ್ಕು ನಿರ್ಭಿಡೆಯಿಂದ ಮ್ಯಾಂವ್‌ಗುಟ್ಟಿತು. ಹೀಗೆ ಅದು ಪ್ರತಿಯೊಂದು ಪ್ರಶ್ನೆಗೂ ಮ್ಯಾಂವ್ ಉತ್ತರ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. +ಸಮಾಜವಾದಿ (ಮ್ಯಾಕ್‌ಡೌಲ್) ಪಕ್ಷದ ಪಟೇಲರು “ಎಂಥ ವಿಚಿತ್ರವಾಗಿದೆಯಲ್ಲ, ಸಾರಿಗೆ ಸಚಿವರು ಮ್ಯಾವ್ ಮ್ಯಾವ್ ಎನ್ನುತ್ತಲೆ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಅಭಿನಂದನಾ ಗೊತ್ತುವಳಿ ಮಂಡಿಸಬೇಕೆ”ಂದಾಗ ಎಲ್ಲ ಸದಸ್ಯರು ಪಕ್ಷಭೇದ ಮರೆತು ನಗಾಡಿದರು. +ಇದು ಹೇಗೋ ರಾಜ್ಯಪಾಲರಿಗೆ ಸುದ್ದಿ ಮುಟ್ಟಿತು. ಅವರು ಸಚಿವ ರೇಣುಕಯ್ಯನವರನ್ನು ಖಾಸಗಿಯಾಗಿ ಚಹಕ್ಕೆ ಬರಮಾಡಿಕೊಂಡರು. ‘ವಿಧಾನಸಭೆಗೆ ಬರೀ ಬೆಕ್ಕುಗಳನ್ನೇ ಚುನಾಯಿಸಿಬಿಟ್ಟರೆ ಹೇಗೆ ಎಂದು ಚರ್ಚಿಸಿದರು. ತಗೊಂಡಿಷ್ಟು ದಿನಗಳಾದ್ವು… ಇನ್ನು ಇದ್ಕೆ ನಾಮಕರಣ ಮಾಡಿಲ್ಲಾಂದ್ರೆ ಹೇಗ್ರಿ?” ಎಂದು ಶ್ರೀಮತಿ ಗೋವಿಂದರಾಜರು ಪ್ರಶ್ನಿಸಿದರು. ಇದೊಂದು ಅತ್ಯುತ್ತಮ ಸಲಹೆ ಎಂದೂ ಒಂದು ಒಳ್ಳೆ ಮೂಹೂರ್ತ ನೋಡಿ ‘ನಾಮಕರಣ ಮಹೋತ್ಸವ’ ನಡೆಸುವುದಾಗಿ ಅರಿಕೆ ಮಾಡಿಕೊಂಡು ರೇಣುಕಯ್ಯ ವಾಪಸಾದರು. +ನಾಮಕರಣ ಮಹೋತ್ಸವದ ಆಮಂತ್ರಣ ಪತ್ರಿಕೆಗಳು ದೇಶದ ಪ್ರಮುಖ ಜನನಾಯಕರಿಗೆಲ್ಲ ಹೋದವು. ಇಂದಿರಾಗಾಂಧಿಯವರು ತಮ್ಮ ಆಪ್ತರಲ್ಲೊಬ್ಬರಾದ ಕಾಂತಿಲಾಲ್ ಬೊರ್ಕಾರವರನ್ನು ಕಳಿಸಿಕೊಟ್ಟರೆಂದಮೇಲೆ ಕೇಳುವುದೇನಿದೆ? ನಾಮಕರಣ ಮಹೋತ್ಸವದ ನೆಪದಲ್ಲಿ ರಾಜಕೀಯ ವಿದ್ಯಮಾನ ಚರ್ಚಿಸುವ ಸಲುವಾಗಿ ಆಡಳಿತ ಪಕ್ಷದ ಬಹುತೇಕ ಹಿರಿ ಕಿರಿಯ ಮುಖಂಡರು ಲಿಂಗಬೇಧ ಮರೆತು ಹಾಜರಾದರು. ಎಲ್ಲಾ ವಿರೋಧಪಕ್ಷಗಳು ಅದನ್ನು ಬಹಿಷ್ಕರಿಸಿ ಕರತಾಳ ಆಚರಿಸಿದವು. +ಬೆಳ್ಳಿಯ ತೊಟ್ಟಿಲಲ್ಲಿ ಕಟ್ಟಿ ಮಲಗಿಸಿದ್ದ ಬೆಕ್ಕು ಹುಲುನರರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ತೆಪ್ಪಗಿತ್ತು. ಅತಿಥಿ ಅಭಾಗತರು ತಾವು ತಂದಿದ್ದ ಪ್ರೆಸೆಂಟೇಷನ್ನುಗಳನ್ನು ತೊಟ್ಟಿಲಲ್ಲಿ ಪೇರಿಸತೊಡಗಿದರು. ಆ ದುಬಾರಿ ಸಾಮಾನುಗಳಡಿ ಸಿಲುಕಿ ತಾನು ಅಪ್ಪಚ್ಚಿಯಾಗಿ ಬಿಡುವನೆಂದೂಹಿಸಿ ಬೆಕ್ಕು ಕಿಟರನೆ ಕಿರುಚಿಕೊಳ್ಳತೊಡಗಿತು. ಖ್ಯಾತ ಸಿನಿಮಾ ನಟ ಅನುನಾಸಿಕ್‌ರವರ ಸಂಗೀತ ರಸಮಯ ಕಾರ್ಯಕ್ರಮ ಇದ್ದುದರಿಂದ ಅದರ ಅರಣ್ಯ ರೋಧನ ಯಾರಿಗೂ ಕೇಳಿಸಲಿಲ್ಲ. ನಂತರ ಅದು ಕಾಣಿಕೆಗಳೆಂಬ ಚಕ್ರವ್ಯೂಹವನ್ನು ಬೇಧಿಸಿಕೊಂಡು ಚಂಗನೆ ಈಚೆ ನೆಗೆದು ಮೀಸೆ ತಿರುವಿ ಎಲ್ಲರ ಗಮನ ಸೆಳೆಯಿತು. ಈ ಪ್ರಕಾರವಾಗಿ ಇಡೀ ರಾಷ್ಟ್ರನಾಯಕರ ಗಮನ ಸೆಳೆದ ಆ ಬೆಕ್ಕಿಗೆ ಸಂಬಂದಪಟ್ಟ ಸಮಸ್ಯೆ ಎದುರಾದದ್ದು ಯಾವಾಗಪ್ಪ ಎಂದರೆ ನಾಮಕರಣ ಮಾಡುವಾಗ, ಅದಕ್ಕೆ ನಾಮಕರಣ ಮಾಡಲು ನಿಯುಕ್ತರಾಗಿದ ರಾಜೇಂದ್ರಾಚಾರ್‌ರವರು ಸಾಮಾನ್ಯರೇನು? ಅವರ ವಂಶದವರು ಏಕಕಾಲಕ್ಕೆ ತಾಂಜಾವೂರು +ಮತ್ತು ಪೆನುಗೊಂಡೆಯ ರಾಜರುಗಳ ಆಸ್ಥಾನ ಪುರೋಹಿತರಾಗಿದ್ದಂಥವರು. ವರದರಾಘವೇಂದ್ರಚಾರ್ಯರು ನಗರದಲ್ಲಿ ಖೋಡೆಯವರ ಕಾಯಂ ಪುರೋಹಿತ್ಯ ಮಾಡುತ್ತಿರುವರು. ಬೆಕ್ಕಿಗೆ ಹೆಸರು ಸೂಚಿಸಲು ಸಚಿವ ರೇಣುಕಯ್ಯನವರಿಗೆ ವಿನಂತಿಸಿಕೊಂಡರು. ಕಾಂತಿಲಾಲ್ ಬೋರ್ಕರವರು ಪ್ರಣಬ್ ಕುಮಾರ್ ಅಂದರೆ, ಒರಿಸ್ಸಾದ ಸತ್ಪತಿಯವರು ಜಗನ್ನಾಥ್ ಎಂದರು. ಬಿಹಾರದವರು ಮಿಶ್ರಾ ಎಂದರೆ ಮಹಾರಾಷ್ರದವರು ಚವ್ಹಾಣ ಎಂದರು. ಕರ್ನಾಟಕದವರು ಇಮ್ಮಡಿ ಪುಲಕೇಶಿ ಎಂದರೆ ತಮಿಳ್ನಾಡಿನ ಚೆಂಗಪ್ಪನ್ ಕಲೈಕುಡಚ್ಚಿ ಮಗ್ಗಳ್ ತಿಲಕಂ ಅಂತ ಏನೇನೋ ಹೇಳಿದರು. ಅವೆಲ್ಲ ಕೇಳುತ್ತ ಪುರೋಹಿತರು ಚಿನ್ನದ ಹಗ್ಗಕ್ಕೆ ಕಟ್ಟಿದ್ದ ಬೆಕ್ಕಿನ ಲಿಂಗ ಪರಿಶೀಲಿಸಲೋಸುಗ ಅದರ ಬಾಲವನ್ನು ಎತ್ತುವ ಪ್ರಯತ್ನ ಮಾಡಿದರು. ಅದು ಅಷ್ಟು ಸುಲಭವಾಗಿ ತನ್ನ ಲಿಂಗವನ್ನು ತೋರಿಸುವುದೆಂದರೇನು? ಮುಖ ಸಿಂಡರಿಸಿಕೊಂಡು ಪುರೋಹಿತರ ಕೈಯನ್ನು ಪರಚಿ ಗಾಯಗೊಳಿಸಿತು. ಅವರು ‘ಶ್ರೀರಾಮಾ’ ಎಂದು ನರಳಿದರು. ಅದರ ಲಿಂಗ ಪತ್ತೆ ಹಚ್ಚಲು ಫೀಲ್ಡ್ ಮಾರ್ಷಲ್ ಸನ್ಯಾಲ್‌ರವರನ್ನು ಕೇಳಿಕೊಂಡರು. ಅವರು ಎಷ್ಟಿದ್ದರೂ ದ್ವಿತೀಯ ಜಾಗತಿಕ ಭಾಗವಹಿಸಿದ್ದಂಥವರು. ಅವರು ತಮ್ಮ ಸಾಹಸ ಮನೋಗುಣವನ್ನು ಕ್ರೋಡೀಕರಿಸಿ ಅದರ ಬಾಲವನ್ನೆತ್ತಿ ನೋಡಿ “ಫೀಮೇಲ್” ಎಂದು ಉದ್ಗರಿಸಿದರು. ಆ ನಂತರ ಎಲ್ಲರೂ ತಲಾ ಒಂದೊಂದು ಹೇಳಿದ್ದು ಸಿನಿಮಾ ನಟಿಯರ ಹೆಸರುಗಳನ್ನು, ದೆಹಲಿ ಕಡೆಯ ಸಂಪರ್ಕ ಇಟ್ಟಿಕೋಳ್ಳುವ ಇರಾದೆಯಿಂದ ‘ಝಾನ್ಸಿ ಕಿ ರಾಣಿ’ ಎಂಬ ಹೆಸರನ್ನು ರೇಣುಕಯ್ಯ ಸೂಚಿಸಲು ಎಲ್ಲರೂ ‘ಓಕೇ’ ಮಾಡಿದರು. +‘ಝಾನ್ಸಿ ಕಿ ರಾಣಿ’ಯ ಕಥೆ ದುರಂತಮಯವಾಗಿದ್ದು ರಾಜ್ಯಪಾಲ ಗೋವಿಂದೇರಾಜರು ಮೇಘಾಲಯದ ರಾಜ್ಯಪಾಲರಾಗಿ ವರ್ಗವಾದಮೇಲೆಯೇ! ರಾಣಿಯ ಬದುಕು ಮತ್ತಷ್ಟು ಯಾತನಾಮಯವಾದದ್ದು ರೇಣುಕಯ್ಯ ಸಚಿವ ಸ್ಥಾನ ಕಳೆದುಕೊಂಡ ನಂತರ, ನಂತರ ಅದು ಬೀದಿ ಪಾಲಾದದ್ದು ಮಾಜೀ ಸಚಿವರ ಫ್ಯಾಮಿಲಿ ಅಫೈಸ್‌ಗಳು ಹೆಚ್ಚಾದ ನಂತರ. ಅದು ಎಲ್ಲೋ ಹೋಯಿತು. ಯಾರೋ ಸಾಕಿದರು. ಯಾರೋ ಹೊರ ತಳ್ಳಿದರು. ಹೀಗೆ ಮುಂದೊಂದಿನ ವಾಸಿಯಾಗದ ಚರ್ಮ ರೋಗಕ್ಕೆ ತುತ್ತಾದ ಝಾನ್ಸಿ ಕಿ ರಾಣಿಯನ್ನು ಅದರ ಐದಾರುಮಂದಿ ಮಕ್ಕಳೇ ಸೇರಲಿಲ್ಲ. ಮುನಿಸಿಪಾಲಿಟಿಯವರ ಕೊಚ್ಚೆ ಗುಂಡಿಯಲ್ಲಿ ಸತ್ತ ಝಾನ್ಸಿ ಕಿ ರಾಣಿಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಈ ಮಾರ್ಜಾಲವೂ ಒಂದು. +ಇದರ ಕಥೆ ಹೀಗಿದ್ದರೆ ಶಾಸ್ತ್ರಿಗಳ ಮನೆಯ ಕಾಮೋಷಿಯ ಜೀವನ ವೃತ್ತಂತ ವಂಶಾವಳಿ ಇನ್ನೊಂದು ರೀತಿಯದ್ದು. ಇದರ ವಂಶಜರು ಅಂಥ ಹೇಳಿಕೊಳ್ಳುವಂಥ ಹಿನ್ನೆಲೆಯಿಂದ ಬಂದವರಲ್ಲ. ಆಂಧ್ರ ಪ್ರದೇಶದ ತೆಲಂಗಾಣ ಬೊಮ್ಮಿರೆಡ್ಡಿಪಲ್ಲೆಯ ರೈತಕೂಲಿ ಸಂಘದ ಅಧ್ಯಕ್ಷ ತಿರುಪಾಲಯ್ಯ ಸಾಕಿಕೊಂಡಿದ್ದ ‘ಮುಕ್ತಿ’ ಬಗ್ಗೆ ಕೆಲವು ವಿವರಗಳು ಸಿಕ್ಕುತ್ತವೆ. ಅದೂ ತಿರುಪಾಲಯ್ಯ ಬರೆದಿರುವ ‘ಗುಡಿಸೆಲು ಕಾಗಡಾಲು’ ಎಂಬ ಮಹಾಕಾವ್ಯದಲ್ಲಿ ಹೋರಾಟಗಾರ ಕವಿ ತಿರುಪಾಲಯ್ಯ ‘ಪೋರಾಟಾಲು ವರ್ಧಿಲ್ಲಾಲಿ’ ಎಂಬ ನಿನಾದದೊಂದಿಗೆ ಎನ್‌ಕೌಂಟರ್‌ನಲ್ಲಿ ಅಸು ನೀಗಿದಾಗ ಮುಕ್ತಿಯನ್ನು ಶ್ರೀ ಕಾಕುಳಂ ಎಸ್ಪಿ ಜಗಪತಿಬಾಬು ಸಾಕಿಕೊಂಡ. ಜಗಪತಿಬಾಬು ಬೆಳಗ್ಗೆ ಜಾಗಿಂಗ್ ನಕ್ಸಲೈಟ್ಸು ಗುಂಡಿಟ್ಟು ಕೊಂದರು. ನಂತರ ಅದನ್ನು ಚಪ್ರಾಸಿ ಚಂಚಯ್ಯ ಸಾಕಿದ… ಹೀಗೆ ಅದರ ಕಥೆ ಕೂಡ ದುರಂತವಾಗಿ ಬೆಳೆಯುತ್ತದೆ. ಕಾಮೋಷಿಯ ತಾಯಿ ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪ್ರಸವಿಸಿದಳೋ? +ಸಂಶೋಧನೆ ಮಾಡದ ಹೊರತು ತಿಳಿಯದು. ಹೆತ್ತಾಕೆಯ ಮುಖವನ್ನು ಸಯಾಗಿ ನೋಡಿರದ ಕಾಮೋಷಿಯಲ್ಲಿ ಮಾರ್ಜಾಲ ಯಾವ ಆರ್ಷಣೆ ಕಂಡುಕೊಂಡಿತೋ ದಯಾಮಯನಾದ ಭಗವಂತನಿಗೇ ಗೊತ್ತು? ಅಂತೂ ದೇವರು ಜೊತೆಗೂಡಿಸಿದ. ಅವೆರಡೂ ಒಂದಾದವು. ಅನ್ಯೋನ್ಯದಿಂದಿರುವುವು. ಗಂಡಾದ ತಾನು ನಾನ್‌ವೆಜೆಟೇರಿಯನ್ನು; ಹೆಂಗಸಾದ ನೀನು ವೆಜೆಟೇರಿಯನ್ನೂ ಅಂಥ ಮಾರ್ಜಾಲವೇ ತೀರ್ಮಾನಿಸಿ ಏಕಪಕ್ಷೀಯವಾಗಿ ಇಲಾಖೆ ಹಂಚಿಕೆ ಮಾಡಿದ್ದು ವಿಚಾರಿಸಬೇಕಾದ ಸಂಗತಿ. ಇಬ್ಬರೂ ತಂತಮ್ಮ ಇಲಾಖೆ ನೋಡಿಕೊಂಡು ಸುಖವಾಗಿದ್ದಾರೆ. ದಿನಕ್ಕೆರಡು ಮೂರು ಬಾರಿಯಾದರೂ ಸಂಧಿಸಿ ಕಷ್ಟಸುಖ ಹಂಚಿಕೊಳ್ಳುವರೆಂಬುದೇ ಸಮಾಧಾನಕರ ಸಂಗತಿ. +ಮನೆಯ ಆತಂಕದ ಪರಿಸ್ಥಿತಿಯಿಂದಾಗಿ ಮಾರ್ಜಾಲ ಬೆಳಗಿನಿಂದ ಮನೆಬಿಟ್ಟು ಹೊರಗಡೆ ಬಂದೇ ಇಲ್ಲ. ಮನೆಯ ಯಜಮಾನರಾದವರು ಸಂತೋಷದಿಂದ ಇದ್ದರೆ ತಾನೆ ಚಿನ್ನಾಟ ರೊಮಾನ್ಸು ಎಲ್ಲ. ಕಾಮೋಷಿದೂ ಶಾಸ್ತ್ರಿಗಳ ಮನೆಯಲ್ಲಿ ಅದೇ ಕಥೆ. +ಕಿಟಕಿಯಲ್ಲಿಂದ ಹೊರನುಸುಳಿ ಮಾರ್ಜಾಲ ಮ್ಯಾವ್ (ಹಲೋ ಡಾರ್ಲಿಂಗ್) ಗುಟ್ಟಿತು. ಪತ್ತೆ ಇಲ್ಲ ಪ್ರಿಯತಮೆ? ಇಲ್ಲಿ ಹಾಳಾಗಿ ಹೋದಳಿವಳು? ಲಾಂಗ್ ಜಂಪಿಗೆ; ಹೈಜಂಪಿಗೆ ಹೆಸರಾದ ಅದು ಬೃಂದಾವನ ಕಟ್ಟೆ ಮೇಲೆ ನಿಂತು ಮತ್ತೊಮ್ಮೆ ಮ್ಯಾವ್ ಅಂತು. ಕೋಡುಬಳೆ ಪ್ರೀತಿಗಾಗಿ ಪುತ್ತಿ ಬಳಿ ಇಲಿಗಾಗಿ ಹೊಂಚಿ ಕೂತಿದ್ದ ಕಾಮೋಷಿ ತನ್ನ ಪ್ರಿಯತಮನ ಕರೆ ಕೇಳಿಸಿ ರೋಮಾಂಚನಗೊಂಡಿತು. ಹೊರ ಬಂದು ತನ್ನ ಬಾಲವನ್ನು ಅದರ ‘ಕ್ಳಿಮ್ಮು’ಗೆ ಬಡಿಸಿತು. +ಸಲ್ಪ ಹೊತ್ತು ಅವೆರಡು ಸ್ಪರ್ಶಿಸಿ ಮುದ್ದಿಸಿ ಉಭಯ ಕುಶಲೋಪರಿ ನಡೆಸಿದವು. ನಂತರವೇ ಶಾಮು ಮತ್ತು ಅನಸೂಯರ ಟಾಪಿಕ್ ಬಂದದ್ದು. ಮನುಷ್ಯರು ಹೀಗ್ಯಾಕಾಗ್ತಾರೆ ಎಂಬುದಕ್ಕೆ ಉತ್ತರವಿಲ್ಲ. +“ಶಾಸ್ತ್ರಿಗಳು ಇ‌ಅಮ್ಮ ಸೊಸೆ ಅಲುಮೇಲಮ್ಮನಿಗೆ ಏನೋ ಗುಟ್ಟಾಗಿ ಹೇಳ್ತಿರುವಂತಿದೆಯಲ್ಲ” ಎಂದು ಮಾರ್ಜಾಲ ಪ್ರಿಯತಮೆಯನ್ನು ಕೇಳಿತು. +ಅದು ಅವರ ಪರ್ಸನಲ್ಲು ಅಂತ ಕಾಮೋಷಿ, ಮತ್ತೆ ಒತ್ತಾಯಿಸಿದಾಗ ಅದು ನೀನೇ ನೋಡ್ಕೋ ಹೋಗು ಅಂತು. +ಮಾರ್ಜಾಲ ಕಾಮೋಷಿಯೊಂದಿಗೆ ಒಳಗಡೆ ಹೋಯಿತು. ಕಿಟಕಿಯ ಸಂದಿಯಲ್ಲಿ ನೋಡಿತು. +ಶಾಸ್ತ್ರಿಗಳ ಸೊಸೆ ಎದುರಿಗೆ ಜಾತಕ ಕುಂಡಲಿಗಳನ್ನು ಹರಡಿಕೊಂಡು ಕೂತಿದ್ದರು. ಗುಣಿಸಿ; ಭಾಗಿಸಿ ರಾಹುಕೇತು, ಮಂಗಳ, ಪುನರ್ವಸು ಅಂತ ಏನೇನೋ ಹೇಳುತ್ತಿದ್ದರು. ಕಣ್ಣಲ್ಲಿ ನಿದ್ದೆ ತುಂಬಿಕೊಂದಿದ್ದ ಅಲುಮೇಲಮ್ಮ ಹೂಗುಟ್ಟುತ್ತಿದ್ದಳು. +ನಂತರ ಪ್ರಸನ್ನ ವದನರಾಗಿ ಶಾಸ್ತ್ರಿಗಳು ದಢೀರನೆ ಎದ್ದು ನಿಂತರು. +ಕೈಮುಗಿದು – +ಕಣ್ಣು ಮುಚ್ಚಿ – +– ಆ ಬ್ರಹ್ಮಲೋಕಾದಾಶೇಷಾತ್ ಆಲೋಕಾಲೋಕ ಪರ್ವತಾತ್| ಯೇ ವಸಂತಿ ದ್ವಿಜಾ ದೇವಾಃ ತೇಭ್ಯೋ ನಿತ್ಯ ನಮೋ ನಮಃ| ಓಂ ಶಾಂತಿ ಶಾಂತಿ ಶಾಂತಿ| ಸರ್ವಾರಿಷ್ಠ ಶಾಂತಿರಸ್ತುಹೂಃ +ಎಂದು ಹೇಳಿ ಕಣ್ಣು ತೆರದು ಇಡಿಯಾಗಿ ಸೊಸೆಯನ್ನು ನೋಡಿದರು. +“ತಾಯಿ ಅಲುಮೇಲಮ್ಮಾ… ಬರೋ ಸೋಮವಾರ ಇಡೀ ದಿನ ಗುರು ವೃಶ್ಚಿಕ +ರಾಶಿಯಲ್ಲಿರುತ್ತಾನಮ್ಮಾ, ನಮ್ಮ ಮಗೂನ ಕುಂಡಲಿಗೆ ಯೊಗ್ಯವಾದ ಸ್ವಾತಿ ನಕ್ಷತ್ರ ಅಂದು ಸಾಯಂಕಾಲದವರೆಗೂ ಇತದೆ. ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಹೊಸಪೇಟೆಗೆ ಪ್ರಾಯಾಣ ಬೆಳೆಸಿ ಹುಡುಗಿ ನೋಡ್ಕೊಂಡು ಬಂದರಾಯ್ತು. ಶಾಮುಗೆ ಹೇಳು. “ಓಂ ಗಾಯತ್ರೀ” ಎಂದು ಪಂಚಾಂಗದ ಗಂಟುಕಟ್ಟಿ ನಗಂದಿ ಮೇಲೆ ಸರಿಸಿದರು. +ಮಾರ್ಜಾಲ ‘ಶುಭಸ್ಯ ಶೀಘ್ರಂ’ ಎಂದು ಹೇಳಿ ನಿಟ್ಟುಸಿರುಬಿಟ್ಟಿತು. +ಇಡೀ ಆ ಪುಟ್ಟ ನಗರವನ್ನು ಅವತ್ತು ಯಾಕೋ ಒಂದು ನಮೂನೆಯ ಅಲೌಕಿಕ ರೀತಿಯ ವಾತಾವರಣ ಆವರಿಸಿಬಿಟ್ಟಿತ್ತು. ಸ್ವಾಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದೊಂದು ಗುಟುಕು ಆಸಿ ಸೇವಿಸುತ್ತ ಇಸ್ಪೀಟು ಆಡುತ್ತಿದ್ದೆಂದರೆ ಲೆಕ್ಕ ಹಾಕುವುದು; ಮನೆಯೊಳಗೆ ತೆರೆದಿದ್ದ ತಂಬಿಟ್ಟಿನ ಡಬ್ಬಿ ಕಡೆ ಇಣುಕಿ ಹಾಕದೆ ಮೂಷಕ ದಂಪತಿಗಳು ಪರಸ್ಪರ ರೊಮಾನ್ಸಿಗಿಳಿದಿರುವುದನ್ನು ನೋಡುತ್ತ ಮಾರ್ಜಾಲ ಮಲಗಿತ್ತೆಂದರೆ ಲೆಕ್ಕ ಹಾಕುವುದು; ವ್ಯಾಪರಸ್ಥರು ಉದ್ರಿ ಪಡೆದವರ ಕಡೆ ಮಂದಸ್ಮಿತ ನೋಟ ಬೀರುತ್ತಿದ್ದರೆಂದರೆ ಲೆಕ್ಕ ಹಾಕುವುದು; ಹೀಗೆ ಎಲ್ಲಿ ನೊಡಿದರೂ ಅರಿಷಡ್ವರ್ಗಗಳನ್ನು ಮೀರಿ ನಿಂತು ಪಲ್ಲವಿಸುತ್ತಿರುವವರೇ ಎಲ್ಲ ಕಡೆ. ಅದೂ ಅಲ್ಲದೆ ವಾತಾವರನವು ಎಲ್ಲ ಕಡೆ ಉಲ್ಲಸಿತವಾಗಿತ್ತು. ಪಾಯ್ಖಾನೆ ಕಡೆಯಿಂದ ಬೀಸುತ್ತಿದ್ದ ಗಾಳಿಯಲ್ಲೂ ಸೇವಿಸಲು ಯೋಗ್ಯವಾದ ಪರಿಮಳ ಇರುವುದು ಆಗಸದಲ್ಲಿ ಸೂರ್ಯನ ಕಡೆ ಯಾರು ಎಷ್ಟೊತ್ತು ಬೇಕಾದರೂ ಬಿಡುಗಣ್ಣಿನಿಂದ ದಿಟ್ಟಿಸಬಹುದಾಗಿತ್ತು. ಹೀಗಾಗಿ ಬೇಸಿಗೆ ಕಾಲದ ಹಗಲು ಬೆಳದಿಂಗಳೆಂಬ ಭ್ರಮೆ ಹುಟ್ಟಿಸುವಂತಿತ್ತು. +ಇದೆಲ್ಲ ನೋಡಿ ಸೂಕ್ಷ್ಮ ಮನಸ್ತತ್ವದ ಕದನ ಕುತೋಹಲಿಗಳಿಗೆ ಪರಮಾಶ್ಚರ್ಯವೋ ಪರಮಾಶ್ಚರ್ಯ. ಅವರಲ್ಲಿ ಕೆಲವರು ಪರಿಶೋಧಿಸಿ ಕಾರಣ ಕಂಡುಕೊಳ್ಳದಿರುತ್ತಾರೆಯೇ? ಬ್ರಾಹ್ಮೀ ಮಹೂರ್ತದಲ್ಲಿ ಚುಮು ಚುಮು ನಸುಕಿನಲ್ಲಿ ವೇದಾಗಮ ಪುರಾಣಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವಂಥ ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗ ಶಾಮಾಶಾಸ್ತ್ರಿಯೊಂದಿಗೆ ಬಸ್ ನಿಲ್ದಾಣದಲ್ಲಿ ತಂಗಾಳಿಗೆ ಮೈಯೊಡ್ಡಿ ನಿಂತಿದ್ದನ್ನು ಕೆಲವರು ನೋಡಿದ್ದುಂಟು. ಆದರೆ ಅವರು ಮಹಾದೇವಿ ಹತ್ತಿ ಮೂಡಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು; ತಿಪ್ಪೇರುದ್ರನನ್ನು ಹತ್ತಿ ಪಡವಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು! ಅವರು ಊರು ಬಿಟ್ಟಿರುವುದರಿಂದಾಗಿ ಇರುವೆ ಎಂಬತ್ನಾಲ್ಕು ಜೀವಿಗಳೆಲ್ಲ ನಿರ್ಭಯದಿಂದ ಕಾಲಕ್ಷೇಪ ಮಾಡತ್ತಿರಬಹುದೆ ಎಂಬ ಸಂದೇಹ ಮೂಡುವುದು ಸಹಜ. ಯಾಕಂದರೆ ಅವರ ಹಾಜರಿಯಲ್ಲಿ ಗ್ರಾಮ ಒಂಥರಾ ಇದ್ದರೆ; ಅವರ ಗೈರುಹಾಜರಿಯಲ್ಲಿ ಗ್ರಾಮ ಇನ್ನೊಂಥರಾ ಇರುವುದು. ‘ಅವರಿಲ್ಲದ್ಕೆ ಮನೆ ಒಂಥರಾ ಇದೆ’ ಎಂದು ಅಲುಮೇಲಮ್ಮ ಅಂದುಕೊಂಡರೆ ಅದೊಂದು ರೀತಿ; ಅವ್ರಿಲ್ಲದ್ಕೆ ಓಣೀಗೆ ಕಳೆ ಇಲ್ಲ ಅಂತ ಓಣಿಯವರೂ ಅಂದ್ರೆ ಓಕೆ ಮಾಡಬಹುದು. ಆದರೆ ಇಡಿ ಗ್ರಾಮಕ್ಕೆ ಗ್ರಾಮವೇ ಅಂದುಕೊಂಡರೇನು ಮಾಡುವುದು? ದುಃಖದ ಜಾಗದಾಗ ಸಂತೋಷ ಇರೋದು! ಸಂತೋಷದ ಜಾಗದಾಗ ದುಃಖದ ಇರೋದು ಇಂಥ ವೈಪರೀತ್ಯಗಳಿಗೆಲ್ಲ ಏನನ್ನುವುದು? ಹೀಗಾಗಿ ಶಾಸ್ತ್ರಿಗಳ ಗೈರುಹಾಜರಿಯಲ್ಲಿ ಸದರೀ ಗ್ರಾಮವನ್ನು ಹೇಗೆ ಅರ್ಥಮಾಡಿಕೊಳ್ಳುವುದೋ! ಒಟ್ಟಿನಲ್ಲಿ ಸದರಿ ಗ್ರಾಮದ ಜೀವಜಗತ್ತು, ಸಸ್ಯ ಜಗತ್ತು ಮತ್ತು +ಮನುಷ್ಯ ಜಗತ್ತುಗಳ ಮನೋಭೂಮಿಕೆಯಲ್ಲಾಗಿರುವ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು ಮಾತ್ರ ಅಂಗೈ ಅಷ್ಟೇ ಸತ್ಯ. +ಇಡೀ ಗ್ರಾಮದ ಚರಿತ್ರೆಯಲ್ಲಿ ಕಂಡರಿಯದ ಕೇಳರಿಯದ ಘಟನೆಯೊಂದು ಜರುಗಲಿರುವುದರ ಮುನ್ಸೂಚನೆಯಾಗಿ ರೈಲೊಂದು ವಾಯುವೇಗದಲ್ಲಿ ಬಂದು ಸದರೀ ನಿಲ್ದಾಣದಲ್ಲಿ ನಿಂತುಕೊಂಡಿತು. ಅದು ಬಂದದ್ದಾಗಲಿ ಹತ್ತೋರು ಹತ್ತಿದ್ದಾಗಲೀ; ಇಳಿಯೋರು ಇಳಿದಿದ್ದಾಗಲೀ ಅದೇನು ಹೊಸ ಸಂಗತಿಯಲ್ಲ. ಹೊಚ್ಚ ಹೊಸ ಸಂಗತಿ ಯಾವುದಪ್ಪಾ ಅಂದರೆ ಆ೨೫೨ ನೇ ರಿಸರ್ವ್‌ಡ್ ಕಂಪಾರ್ಟ್‌ಮೆಂಟಿನಿಂದ ಐದೂ ಮುಕ್ಕಾಲಡಿ ಎತ್ತರ ಫೇರ್ ಕಲ್ಲರಿನ ಗುಂಗುರುಗೂದಲಿನ, ಕಣ್ಣಿಂಗೆ ಕೂಲಿಂಗ್ ಗಿಲಾಸ್ ಧರಿಸಿದ ವ್ಯಕ್ತಿಯೊಬ್ಬ ಇಳಿದಿದ್ದು; ಅವನು ಭಲೆ ಸ್ಟೈಲಿನಿಂದ ಯಾವತ್ತೂ ಲಗೇಜನ್ನು ಕೂಲಿಯೊಬ್ಬನ ಮೇಲಿರಿಸಿಕೊಂಡು ನಿಲ್ದಾಣದಿಂದ ಹೊರಬಂದದ್ದು; ಪೋರ್ಟಿಕೋದಲ್ಲಿ ಇಡೀ ಗ್ರಾಮವನ್ನು ಆಪೋಶನ್ ತೆಗೆದುಕೊಳ್ಳುವವನಂತೆ ಸಿಂಹಾವಲೋಕನ ಮಾಡಿದ್ದು; ಎಡಗೈ ತೋರುಬೆರಳಿನಿಂದ ಕೂಲಿಂಗ್ ಗಿಲಾಸನ್ನು ಹಿಂದಕ್ಕೆ ಸರಿಸಿ ಸರಿಪಡಿಸಿಕೊಂಡದ್ದು; ಜನರು ತನ್ನನ್ನು ಗಮನಿಸುತ್ತಿರುವರೆಂದು ಭಾವಿಸಿದ್ದು ಮತ್ತು ಗ್ರಾಮದ ಸಮಸ್ತ ಲವಲವಿಕೆಯನ್ನು ತನ್ನಲ್ಲಿ ಮೇಳಯಿಸಿಕೊಂಡು ನಡೆಯತೊಡಗಿದ್ದು. +ಆತ ಇಟ್ಟ ಹತ್ತು ಹೆಜ್ಜೆಗೆ ಜನರು ಮಂಕಾದರು. ಇನ್ನೊಂದಿಪ್ಪತ್ತು ಹೆಜ್ಜೆಗೆ ಕಟ್ಟಡಗಳು ಮಂಕಾದವು. ಇನ್ನೊಂದೈವತ್ತು ಹೆಜ್ಜೆಗೆ ತರುಲತೆಗಳು ಮಂಕಾದವು. ಇನ್ನೊಂದು ನೂರು ಹೆಜ್ಜೆಗೆ ಆಗಸದ ಸೂರ್ಯ ನಿಗಿನಿಗಿ ಉರಿಯತೊಡಗಿದ. ಇನ್ನೊಂದಿನ್ನೂರು ಹೆಜ್ಜೆಗೆ ಸ್ವಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಯಾರೋ ಅತಿರಿಕ್ತವಾಗಿ ರಾಜನನ್ನು ಸೇರಿಸಿದರೆಂಬ ಕಾರಣಕ್ಕೆ ವಿರೋದ ಪಕ್ಷದವರು ವಿರೋದ ಪಕ್ಷದವರಾದರು- ಆಡಳಿತ ಪಕ್ಷದವರು ಆಡಳಿತ ಪಕ್ಷದವರಾಗಿ ಮೀಸೆ ಮೇಲೆ ಕೈ‌ಇಟ್ಟುಕೊಂಡರು… +ಅಲಲಲಾ ಅನ್ನುವಷ್ಟರಲ್ಲಿ ಹರಕು ಜೀನ್ಸು ಚಡ್ಡಿ; ಮುರುಕು ಟೀ ಶರಟು ಧರಿಸಿದ್ದ ಸಿಂಬಳ ಗೊಣ್ಣಿಯ ಎರಡೂ ಮುಕ್ಕಾಲಡಿಯ ಕೆದರು ಕಿರಾಪಿನ ಹುಡುಗನೊಬ್ಬ ಕಿರ್ಧಬಲ ಓಡಲಾರಂಭಿಸಿದವನು ನಿರ್ದಿಷ್ಟ ಮನೆ ಮುಟ್ಟುವುದರೊಳಗಾಗಿ ಮೂರಡಿಯಷ್ಟೆತ್ತರದವನಾಗಿ ಟಪ್ ಟಪ್ ಎನೆ ಮುಚ್ಚಿದ್ದ ಬಾಗಿಲು ತಟ್ಟಿದ, ತಟ್ಟಿದ ಶಬ್ದಕ್ಕಿಂತ ಅವನು ಆಡುತ್ತಿದ್ದ ಉಸಿರು ಅಡಿಗೆಮನೆಯೊಳಗೆ ಕೇಳಿಸಿ ಕೆದರುಗೂದಲನ್ನು ತುರುಬಾಕಾದರದಲ್ಲಿ ಕಟ್ಟಿಕೊಳ್ಳುತ್ತ ‘ವೆನ್ನೆಲ್ಲೋ ಅಡಪಿಲ್ಲ’ ಲಗುಬಗೆಯಿಂದ ಬಂದು ಬಾಗಿಲು ತೆರೆದು ಆ ಹುಡುಗನನ್ನು ನೋಡಿ ವಿಸ್ಮಿತಳಾಗಿ ‘ಏನು’ ಎಂದು ಕೇಳಿದಳು. ಆಕೆಗೆ ಸಹಾಯಕವಾಗಿ ಮಾರ್ಜಾಲ ವಾಟೀಜ್ ಮ್ಯಾಟರ್ ಅಂತ ಮ್ಯಾಂವ್‌ಗುಟ್ಟುತ್ತ ಬಂತು. ತಾಯಿ ಯಾರೇ ಅದು ಅಂತ ಬಂದು ಇನ್ನೊಂದು ಮಗ್ಗುಲು ನಿಂತಳು ಬಾಲ ಮುಕುಂದ ನಾಲಿಗೆಯಿಂದ ಸಿಂಬಳ ಆಪೋಶನ ತೆಗೆದುಕೊಂಡು ಬಾಯಿ ಮುಚ್ಚುವ ಮೊದಲೇ ಇಷ್ಟಿದ್ದ ಅವರು ಅಷ್ಟೊಂದು ಯೋಚಿಸಿದರು. +“ಏನೋ?” ಎಂದು ಕೇಳಿದಳು. ಆಡಪಿಲ್ಲ. +“ಒಕ ಮುದ್ದಿಸ್ತೆ ಚೆಪ್ತಾನು” ಅಂದ ಬಾಲ ಮುಕುಂದ. +“ಥೂ ನಿನ್ನ!” ಎಂದು ನಿರಾಕರಿಸಿದಳು. +“ತರುವಾತ ಮುದ್ದಿಪ್ಪಿಚ್ಚುಕುಂಟಾನು…” ಬಾಲ ಮುಕುಂದ ಜಾರಿದ್ದ ಚಡ್ಡಿ ಮೇಲೆಳದು ಬಲ್ಲಮರಿ ಗೌರವ ಕಾಪಾಡಿಕೊಂಡ ಹೇಳಿದ “ಮೀ ಇಂಟಿಕೆವರೋ ಒಕರು ವಸ್ತೂ +ಉನ್ನಾರು… ಬಾಗ ಚೂಸುಕೋವಲೆನು ಪೋಗೊಟ್ಟುಕೊಂಟೆ ಮಳ್ಳಿ ದೊರಕರು ಜಾಗ್ರತ” ಎಂದು ಚಿರಂಜೀವಿಯಂತೆ ಡೈಲಾಗು ಹೊಡೆದು ತಾನೇ ಒಂದು ‘ಸೂಪರ್ ಡಿಲಕ್ಸು’ ಬಸ್ಸು ಎಂಬಂತೆ ಬುರ್ರ್… ಬುರ್ರ್… ಪೊಂಯ್ ಪೊಂಯ್ ಸದ್ದು ಮಾಡುತ್ತ ಅಂತರ್ಧಾನವಾದನು… +ಯಾರೂ ಏನ್ಕಥೆ? ಕೇಳಬೇಕೆಂದರೆ ಅವನು ‘ಲಾ ಪತಾ’ +ತಾಯಿ ಮಗಳು ಪರಸ್ಪರ ಮುಖ ನೋಡಿಕೊಂಡರು. ನನ್ ಮುಖಾನೂ ಸ್ವಲ್ಪ ನೋಡ್ರೆ ಭೇ… ಮಾರ್ಜಾಲ ಅರಚಿತು. +ಯಾರು ಬರುತ್ತಿರಬಹುದು. ತೀರ್ಥರೂನೇನಾದರೂ ಬರುತ್ತಿರಬಹುದೇ? ಆತ ಬರೊದೇನಿದ್ದರೂ ಮಧ್ಯರಾತ್ರಿಯಲ್ಲಿಯೇ! ಕಾಣೆಯಾಗುವುದೂ ಮಧ್ಯರಾತ್ರಿಯಲ್ಲಿಯೇ… ಮಾಟ ಮಂತ್ರಕ್ಕೆಲ್ಲ ತಿಲಾಂಜಲಿಯನ್ನಿತ್ತು ಮಟ ಮಟ ಮಧ್ಯಾನ್ನ ಬರುತ್ತಿರುವನೇನೋ ಪ್ರಾಣ ಬೇಕಾದರೂ ಬಿಟ್ಟಾನು! ವಾಮಾಚಾರವನ್ನು ಮಾತ್ರ ಬಿಡುವ ಪೈಕಿಯಲ್ಲ. +ಮತ್ತಾರಿರಬಹುದು? ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಮಾರ್ಜಾಲ ಮ್ಯಾವ್ ಗುಟ್ಟಿ ಕಾಳಜಿ ವ್ಯಕ್ತಪಡಿಸಿತು. ಕಾಗೆ ಕಾಕಾ ಅಂತೌ. ಹಲ್ಲಿ ಲೊಚಗುಟ್ತಿತು. ಇಲಿಗಳು ಪರಸ್ಪರ ಅಡ್ಡಾಡಿ ಸದ್ದು ಮಾಡಿದವು. ಹಿತ್ತಲಲ್ಲಿದ್ದ ಮಲ್ಲಿಗೆ ಬಳ್ಳಿ ಪುತುಪುತು ಹೂವುಗಳನ್ನುದುರಿಸಿತು. +ಶಕುನಗಳಿಗನುಕೂಲಕರವಾಗಿ ವ್ಯಕ್ತಿಯೊಬ್ಬ ಕಾಣಿಸಿಕೊಂಡ. ಅವನೊಂದಿಗೆ ಲಗೇಜಿನೊಂದಿಗೆ ಕೂಲಿ ಬಂದ. ತಾಯಿ ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ಅವನು ಆಕೆ ಕಡೆಗೊಮ್ಮೆ ಆಕೆಯ ಮಗಳ ಕಡೆಗೊಮ್ಮೆ ಆಪ್ಯಾಯಮಾನದಿಂದ ನೋಡಿದ. +“ಅಕ್ಕಾ… ನಾನು ರಘು… ನಿನ್ನ ತಮ್ಮ! ಅವನು ಅಷ್ಟು ಹೇಳಿ ಲೈನು ಕ್ಲಿಯರ್ ಮಾಡದಿದ್ದರೆ ಹೇಗೆ? +ಅರ್ಧ ನೋಟದಿಂದ ಅವನನ್ನು ಕಣ್ಣಿನಲ್ಲಿ ತುಂಬಿಕೊಂಡು ಅನಸೂಯಾ ಹಿತ್ತಲ ಕಡೆ ಓಡಿ ಮಲ್ಲಿಗೆ ಬಳ್ಳಿ ಅರಳಿಸಿದ್ದ ಹೂಗಳನ್ನು ನೋಡುತ್ತ ನಿಂತಳು. ಎಷ್ಟೇ ಓದಿಕೊಂಡಿದ್ದರೂ; ಎಷ್ಟೇ ಫೆಮಿನಿಸ್ಟು ಐಡಿಯಾಲಜಿ ತುಂಬಿಕೊಂಡಿದ್ದರೂ ಪ್ರಕಟವಾಗುವ ನಾಚಿಕೆಯನ್ನು ಮಾತ್ರ ಯಾವುದೇ ಹೆಣ್ಣಿಗೆ ತಡೆಯಲಾಗುವುದಿಲ್ಲ! +ಎಷ್ಟು ದಿನಗಳ ನಂತರ ತಾನು ತನ್ನ ತಮ್ಮನನ್ನು ನೋಡುತ್ತಿರುವುದು? ಆವಾಗ ಇಷ್ತಿದ್ದ? ಬಾಯಲ್ಲಿ ಬೆರಳಿಟ್ಟರೆ ಕಡಿಯಲಿಕ್ಕೆ ಬರುತ್ತಿರಲಿಲ್ಲ. ಈಗೆಂಗಾಗಿ ಬಿಟ್ಟಿರುವನಲ್ಲ ತನ್ನ ಮುದ್ದು ತಮ್ಮ! ಆಕೆಯ ಮುಖದ ತುಂಬ ವಾತ್ಸಲ್ಯದ ತೊರೆ ಜುಳುಜುಳು ಹರಿಯತೊಡಗಿತು. +“ರಘೂ! ರಘುರಾಮ!! ಉದ್ಗರಿಸಿದಳು. +ಕಾಲಿಗೆ ನೀರು ಕೊಟ್ಟಳು. ಅವನು ಕಾಲು ತೊಳೆದುಕೊಂಡು ಒಳಗಡೆ ಬಂದ. ಅಕ್ಕ ತೋರಿಸಿದ ಕುರ್ಚಿ ಮೇಲೆ ತಮ್ಮ ಕುಳಿತುಕೊಂಡ. ಒಂದು ನೋಟದಿಂದ ಮನೆ ವಾತಾವರಣ ಅರ್ಥ ಮಾಡಿಕೊಂಡ. ಅನಸೂಯ ಒಳಗಡೆ ಕಾಫಿ ಮಾಡಿದಳು. +“ಅನಸೂಯಾ… ಕಾಫಿ ತಗೊಂಡ್ಬಾರೆ… ಯಾಕೆ ನಾಚ್ಕೋತಿ… ಬಂದಿರೋದು ಬೇರೆ ಯಾರೂ ಅಲ್ಲ. ನಿನ್ನ ಸೋದರ ಮಾವ…” ಸಾಂದರ್ಭಿಕವಾಗಿ ರುಕ್ಕಮ್ಮ ಸಂಕ್ಷಿಪ್ತ ರೀತಿಯಲ್ಲಿ ಪರಿಚಯ ಭಾಷಣ ಮಾಡಿದಳು. +ಅನಸೂಯ ಕೈಯಲ್ಲಿ ಕಾಫಿ ಗ್ಲಾಸುಗಳಿದ್ದ ಟ್ರೇ ಹಿಡಿದುಕೊಂಡು ಹೊರಬಂದಳು. ದುಷ್ಯಂತನನ್ನು ಗಾಂಧರ್ವ ವಿವಾಹವಾಗುವಾಗ ಶಾಕುಂತಳ ತಲೆತಗ್ಗಿಸಿದ್ದಳಲ್ಲ ಹಾಗೆ. +ಬೆಳದಿಂಗಳಂತಿದ್ದ ಅಕ್ಕನ ಮಗಳ ಮುಖ ನೋಡುತ್ತ ರಘು ಕಾಫಿ ಕಪ್ಪು ತೆಗೆದುಕೊಂಡ . +“ನಮ್ ಅನಸೂಯಾ ಏನಕ್ಕಾ? ಎಷ್ಟೊಂದು ಬೆಳೆದು ದೊಡ್ಡವಳಾಗಿದ್ದಾಳಲ್ಲಕ್ಕಾ ನಾನು ಯಾರೋ ಅಂದ್ಕೊಂಡಿದ್ದೆ ಗುತೇ ಸಿಗ್ಲಿಲ್ಲ!” ನಗರದ ನುಡಿಗಟ್ಟಿನಲ್ಲಿ ಮಾತಾಡಿದ. +ಆಕೆಯ ಮುಖದ ಬಿಗುವು ಸಡಲಿತು. +ಕಾಫಿ ಕುಡಿದಿದ್ದಾಯಿತು. ಸ್ನಾನ, ಊಟದ ಏರ್ಪಾಡು ಮಾಡಲು ಅನಸೂಯ ಒಳಗಡೆ ಹೋದಳು. ಅಕ್ಕ ತಮ್ಮನ ನಡುವೆ ಮೌನ ಆವರಿಸಿತು. ತಮ್ಮೀರ್ವರಲ್ಲಿ ಮೊದಲು ಯಾರು ಮಾತು ಪ್ರಾರಂಭಿಸುವುದು? +ತವರು ಮನೆಯ ಅಭದ್ರ ಬದುಕು, ಮೊಮ್ಮಕ್ಕಳನ್ನು ಕಾಣುವ ಮೊದಲೆ ತೀರಿಕೊಂಡ ತಂದೆತಾಯಿ; ಇನ್ನೊಬ್ಬ ತಮ್ಮನನ್ನು ತಾನು ತಂದಿಟ್ಟುಕೊಂಡಿದ್ದು; ಅವನು ಶಾಲೆಗೆ ಹೋಗದೆ ಕದ್ದು ತಿರುಗುತ್ತಿದ್ದುದು. ಗಂಡ ಏನು ಸಿಕ್ಕರೆ ಅದರಿಂದಲೆ ಹೊಡೆಯುತ್ತಿದ್ದುದು, ಅವನು ಹೇಳದೆ ಕೇಳದೆ ಓಡಿಹೋದದ್ದು. ಎಲ್ಲವು ಒಂದೆ ಏಟಿಗೆ ನೆನಪಾಗುವುದು. +ರಘು ಮೀಸೆ ಮೂಡುವ ಮೊದಲೊಮ್ಮೆ ಬಂದಿದ್ದ. ಮೀಸೆ ಮೂಡಿದ ಮೇಲೊಮ್ಮೆ ಬಂದಿದ್ದ. ಹೀಗೆ ಬಂದು ಹಾಗೆ ಹೊರಟುಹೋಗಿದ್ದ. ಹೀಗಾಗಿ ಅವನ ನೆನಪು ಸರಿಯಾಗಿ ಯಾರಿಗೂ ಇಲ್ಲ. ‘ಅಕ್ಕಾ ನಾನು ನಿನ್ನ ತಮ್ಮ’ ಎಂದು ಹೇಳದಿದ್ದಲ್ಲಿ ಖುದ್ದ ರುಕ್ಕಮ್ಮನೇ ತಾನುಂಡಬಿಟ್ಟ ಮೊಲೆಯನ್ನುಂಡವನನ್ನು ಗುರುತಿಸುತ್ತಿರಲೇ ಇರಲಿಲ್ಲ. +ಅಕ್ಕ ತಮ್ಮ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಿಬ್ಬರಿಗೂ ಪರಸ್ಪರ ತೋಡಿಕೊಳ್ಳುವುದೇನೋ ಸಾಕಷ್ಟಿತ್ತು. ಒಡ್ಡಿನ ಒಂದು ಕಲ್ಲು ಕಿತ್ತರೆ ಯಾವ ಪ್ರಕಾರವಾಗಿ ಕೆರೆ ಕಿತ್ತುಕೊಂಡು ನುಗ್ಗುವುದೋ ಹಾಗೆಯೇ ಮನದ ದುಗುಡ ಎಂಬುದು ಕೂಡ. ಯಾರಾದರೊಬ್ಬರು ಸೋ ಎಂದರೆ ತಾನೆ ಉಳಿದುದೆಲ್ಲ. ಉದ್ವಿಗ್ನತೆಯಿಂದಾಗಿ ಸಾವಿರದೆಂಟು ಮಾತುಗಳ ಪೈಕಿ ಯಾವ ಮಾತನ್ನು ಹೇಗೆ ಪ್ರಾರಂಭಿಸಬೇಕೆಂದು ಆ ಕ್ಷಣ ಅವರಿಗೆ ಹೊಳೆಯಲಿಲ್ಲ. +“ಭಾವ ಎಲ್ಲಿ ಕಾಣಿಲ್ಲಲ್ಲ!” ಎಂದು ರಘು ಕೇಳಬೇಕೆನ್ನುವಷ್ಟರಲ್ಲಿ ಅಕ್ಕನೇ ಮುಂದೆ ಬಿದ್ದು ‘ಪತ್ರ ಮುಟ್ತಾ’ ಎಂದು ಕೇಳಿಬಿಡಬೇಕೆ! +“ಯಾವ ಪತ್ರ?” ಆಶ್ಚರ್ಯ ವ್ಯಕ್ತಪಡಿಸಿದ. ಒಂದು ಕ್ಷಣದಲ್ಲಿ ಪರಿಸ್ತಿತಿ ಅರ್ಥೈಸಿಕೊಂಡು “ಓಹೋ! ಅದು ಬಂತೂ ಬಂತೂ” ಅಂದ. +ವ್ಯವಹಾರದ ನಿಮಿತ್ತ ಆತ ಕಾರ್ಗಲ್ಲಿಗೆ ಕಳೆದ ಎರಡು ತಿಂಗಳ ಹಿಂದೆಯೇ ಬಂದಿದ್ದ. ಅಲ್ಲಿನ ಹೆಜ್ಜತ್ತಾಡಿ ಶ್ರೀಕೃಷ್ಣಭಟ್ಟರ ಭೂಮಿಯನ್ನು ಅವರಿಗೇ ಕೊಡಸುವ ನಿಮಿತ್ತ ಸೆಂಟರಲ್ ಕಮಿಟಿ ಕನ್ವೀನಿಯರ್ ಅಕ್ಬರ್ ರಘುವನ್ನು ನೇಮಿಸಿದ್ದ. ಮುಂದಿನ ವರ್ಷದ ಜನರಲ್ ಬಾಡಿ ಮೀಟಿಂಗಿನಲ್ಲಿ ರಘುವನ್ನೇ ಕಮಿಟಿ ಕನ್ವೀನಿಯರನ್ನಾಗಿ ನೇಮಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅವನು ಯಾವುದೇ ಸಮಸ್ಯೆಯನ್ನು ಬಿಗಡಾಯಿಸದ ಹಾಗೆ ನೋಡಿಕೊಳ್ಳುತ್ತಾನೆ. ಯಾರನ್ನೂ ದ್ವೇಷಿಸಲಾರ. ಯಾರಿಂದಲೂ ದ್ವೇಷಿಸಿಕೊಳ್ಳರಿಯ. ಏನೇ ಪರಪಾಟು, ಲೋಪ ದೋಷಗಳು ವ್ಯವಸ್ಥೆಯಲ್ಲಿ ಮಾತ್ರ ಇರಲು ಸಾಧ್ಯ. +ಖಿhe iಜeಚಿs oಜಿ ಣhe soಛಿieಣಥಿ ಚಿಡಿe ಣhe iಜeಚಿs oಜಿ ಣhe ಡಿuಟiಟಿg ಠಿಚಿಡಿಣಥಿ ಎಂದು ಮಾರ್ಕ್ಸ್ ಹೇಳಿರುವುದರ ಬಗೆಗೂ ಯೋಚಿಸುತ್ತಿರುವ ರಘು ಎಂದೂ ಉಗರಿನಿಂದ ಆಗುವ ಕೆಲಸಕ್ಕೆ ಕೊಡಲಿಯನ್ನು ಉಪಯೊಗಿಸುವುದಿಲ್ಲ. ಅಥವಾ ಕೊಡಲಿಯಿಂದಾಗುವ ಕೆಲಸಕ್ಕೂ ಅವನು ಉಗುರನ್ನೇ ಉಪಯೋಗಿಸುತ್ತಾನೆ. ಅದೇ ಅವನ ಜಾಣ್ತನ. ಇದರಿಂದಾಗಿ ಪಾರ್ಟಿಯ ಬಹುತೇಕ +ಸದಸ್ಯರಿಗೆ ರಘುನ ಮೇಲೆ ಪ್ರೀತಿ. +ಕಾರ್ಗಲ್ಲಿನಿಂದ ಸೀದ ಬೆಂಗಳೂರಿಗೆ ಬರಬೇಡವೆಂದು ಅಕ್ಬರ್ ಹೇಳಿದ್ದ. ಅದು ಅಲ್ಲದೆ ಒಡಹುಟ್ಟಿದ ಅಕ್ಕನನ್ನು ನೋಡಬೇಕೆನಿಸಿತು. ಅನಸೂಯಳ ನೆನಪು ಇತ್ತೀಚೆಗೆ ಆವರಿಸಿತ್ತು. ಅವಳ ಅಭಿಪ್ರಾಯ ತಿಳಿದುಕೊಂಡ ನಂತರವೇ ತನ್ನ ಮದುವೆ ಬಗ್ಗೆ ಯೋಚಿಸಬೇಕೆಂದು ನಿರ್ಧರಿಸಿದ್ದ. ಇವಕ್ಕೆಲ್ಲ ಕಳಸವಿಟ್ಟಂತೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಎಲ್ಲೋ ಭಾವ ರುದ್ರನಾಯಕನನ್ನು ನೋಡಿದಂತೆ ನೆನಪು. ಆತ ತುಂಬ ದೂರ ಹೋಗುವ ರೈಲಲ್ಲಿ ಕೂತಿದ್ದ ಮತ್ತೊಮ್ಮೆ ನೋಡಬೇಕೆನ್ನುವಷ್ಟರಲ್ಲಿ ಜಿ.ಟಿ ಬಂದು ಅಡ್ಡನಿಂತು ಬಿಟ್ಟಿತ್ತು. ಈ ಕಡೆಯಿಂದ ಹೋಗಿ ಆ ಕಡೆಗೆ ಬರಬೇನ್ನುವಷ್ಟರಲ್ಲಿ ಆ ಟ್ರೇನ್ ಹೋಗಿಬಿಟ್ಟಿತ್ತು. ತಾನು ನೋಡಿದ್ದು ರುದ್ರನಾಯಕ ಹೌದೋ ಅಲ್ಲವೋ ಅದು ಬೇರೆ ಪ್ರಶ್ನೆ. ನೀಳಗಡ್ಡಬಿಟ್ಟು ಕಾವಿ ನಿಲುವಂಗಿ ಧರಿಸಿದ್ದ ಆತ ತನ್ನ ಭಾವ ಆಗಿರಲಿಕ್ಕಿಲ್ಲಬಹುದು ಎಂದು ಮರು ಕ್ಷಣ ಸಮಾಧಾನ ತಂದುಕೊಂಡ ನೋಡಿರದಿದ್ದರೂ ಅಕ್ಬರ್‌ಗೆ ಪರಿಚಯ ಇಲ್ಲದಿರಲಿಲ್ಲ. ಸಾಂಧರ್ಭಿಕವಾಗಿ ತನ್ನ ಪರಮಪೂಜ್ಯ ಮಾವನವರಬಗ್ಗೆ ಅಷ್ಟಾದಶ ವರ್ಣನೆ ಮಾಡಿ ಹೇಳಿದ್ದ. ಚಿಕನ್ ಕಬಾಬ್‌ಗೆ ಬಳಸುವ ಎಲ್ಲಾ ಮಸಾಲೆ ಬೆರೆಸಿ ಕಮಿಟಿ ಸದಸ್ಯರ ಹೃದಯಗಳಲ್ಲಿ ರುದ್ರ ನಾಯಕನ ಭವ್ಯ ರೂಪವನ್ನು ಕಡೆದು ನಿಲ್ಲಿಸಿಬಿಟ್ಟಿದ್ದ. ಎಡಪಂಥೀಯ ವಿಚಾರಧಾರೆ ಅನುಷ್ಟನಕ್ಕೆ ಇಂಥವರ ಅಗತ್ಯ ತುಂಬ ಇರುವುದೆಂದೂ; ವಾಮಾಚಾರ ಎಂಬ ಪದದ ಪೂರ್ವಾಧವೇ ಎಡಪಂಥಕ್ಕೆ ಪುಷ್ಟಿಕೊಡುವುದೆಂದು ಇಡೀ ಕಮಿಟಿ ಅಭಿಪ್ರಾಯ ಪಟ್ಟಿತ್ತು. ರುದ್ರನಾಯಕನಂಥವರೊಬ್ಬರು ಇದ್ದುಬಿಟ್ಟರೆ ಮಾವೋ, ಲೆನಿನ್‌ರವರು ಕನಸಿಸಿದ ಸರ್ವೇ ಜನೋ ಸುಖಿನೋ ಭವಂತು ಸಮಾಜವನ್ನು ಪ್ರತಿಷ್ಟಾಪಿಸಿಬಿಡಬಹುದೆಂದು ಕಾಮ್ರೇಡ್ ಅಕ್ಬರ್ ಹೇಳಿದ್ದ. +ಕಾರ್ಗಲ್ಲಿನಲ್ಲಿ ಹೋಗಿ ಕೋಗಿಲೆ ಮನೆಯ ಗಣಪತಿಯಿಂದ ಶ್ರೀಕೃಷ್ಣ ಭಟ್ಟರಿಗಾಗಿರುವ ತೊಂದರೆ ನಿವಾರಿಸಿ ಬರುವಾಗ್ಗೆ ಹೇಗಾದರೂ ಮಾಡಿ ರುದ್ರನಾಯಕನನ್ನು ಪುಸಲಾಯಿಸಿ ಕರೆತಂದು ಕಮಿಟಿ ಎದುರು ಹಾಜರುಪಡಿಸಬೆಕೆಂದು ಅಕ್ಬರು ರಘುವನ್ನು ಬೀಳ್ಕೊಟ್ಟಿದ್ದ. +ಸ್ವಲ್ಪ ಡೌಲಿಗೆ ಹೃದಯ ಕರಗಿ ಬಿಡುವ ರುದ್ರನಾಯಕ ಮನೆಯಲ್ಲಿ ಕಂಡುಬರದಿದ್ದುದರಿಂದ ರಘು ತನಗಾದ ಬೇಸರವನ್ನು ತೋರಗೊಡಲಿಲ್ಲ. ಅಲ್ಲದೆ ಅಕ್ಕ ಬರೆದಿರಬಹುದಾದ ಪತ್ರವೂ ತನಗೆ ತಲುಪಿಲ್ಲ. ತನ್ನ ವಿಳಾಸಗಳೋ ದಿನಕ್ಕೊಂದರಂತೆ ಬದಲಾಗುತ್ತಿರುತ್ತವೆ. ಆಕೆ ಬರೆದ ಪತ್ರ ಯಾರ ವಿಳಸಕ್ಕೆ ಹೋಗಿರುವುದೇನೋ? ತಾನು ವಿಳಾಸ ರಹಿತನೆಂದು ತಿಳಿದರೆ ಅಕ್ಕ ಬೇಸರ ಮಾಡಿಕೊಳ್ಳುತ್ತಾಳೆ! +“ಹ್ಹಾ ಹ್ಹಾ! ಬಂತು; ಬಂತಕ್ಕ” ಎಂದ. ವ್ಯವಸ್ಥೆ ಬದಲಾಯಿಸುವವರು ಸಾಂದರ್ಭಿಕವಾಗಿ ಸುಳ್ಳುಹೇಳದಿದ್ದರಾಗುವುದೇ? +ಸುಳ್ಳುಹೇಳುತ್ತಿರುವನೋ? ಹೇಗೆ? ರುಕ್ಕಮ್ಮ ತಮ್ಮನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ರಘುಗೆ ಅಕ್ಕನ ಮುಖ ನೇರವಾಗಿ ನೋಡುವ ಧೈರ್ಯವಿರಲಿಲ್ಲ. ತಪೋಭಂಗಿಯಲ್ಲಿ ಕೂತಿರುವ ಭಾವನ ಫೋಟೋ ಕಡೆ ನೋಡಿದ. +“ಆಮೇಲೆ ನಿಧಾನವಾಗಿ ಎಲ್ಲ ಮಾತಾಡಿದ್ರಾಯ್ತು. ಮೊದ್ಲು ಸ್ನಾನ ಮಾಡಿ ಊಟ ಮಾಡು ನಡೆ” ರುಕ್ಕಮ್ಮ್ ನಿಟ್ಟುಸಿರು ಬಿಟ್ಟಳು. +ರಘುರಾಮ ಎದ್ದು ಸ್ನಾನ ಮುಗಿಸಿದ. ಎಷ್ಟೊ ದಿನಗಳ ನಂತರ ಒಳ್ಳೆಯ ಸ್ನಾನ ಮಾಡಿದ +ಅನುಭವವಾಯಿತು. ತಾಯಿಯ ಕಟ್ಟಾಜ್ಞೆಯಂತೆ ಅನಸುಯ ಊಟ ಬಡಿಸಿದಳು. ಎಷ್ಟೊ ದಿನಗಳ ಬಳಿಕ ಒಳ್ಳೆಯ ಊಟ ಮಾಡಿದ ಅನುಭವವಾಯಿತು. +ಬಡಿಸುತ್ತಿದ್ದ ಅನಸೂಯಳನ್ನು ಮಾತಾಡಿಸಿದರೆ ಚೆನ್ನಾಗಿತ್ತೂಂತ ಕೈತೊಳೆದುಕೊಳ್ಳುತಿರುವಾಗ ಅಂದುಕೊಂಡ. ಆಕೆ ತನ್ನ ಮುಖದಿಂದ, ಮಾತಾಡಲಿಕ್ಕೆ ಅನುಕೂಲವಾದ ವಾತಾವರಣ ನಿರ್ಮಿಸುತ್ತಿಲ್ಲ. ಎಷ್ಟೇ‌ಇದ್ದರೂ ಆಕೆ ಪದವೀಧರೆ ನಡುವಳಿಕೆಗಳ ಸೂಕ್ತ ಬಲ್ಲವಳು. +ತಾಯಿ ಬಣ್ಣದ ತಗಡಿನ ತುತ್ತೂರಿ ಕಂಠಪಾಟ ಮಾಡುತ್ತಿರುವಾಗ ಹುಟ್ಟುತ್ತಲೇ ಕಿಟಾರನೆ ಕಿರುಚಿಕೊಂಡಂಥವಳು. +ಅಡುಗೆ ಮನೆಯ ಬಾಗಿಲು ದಾಟುವಾಗ ಡರ್ರನೆ ಡೇಗಿದ. “ಸಯಾಗಿ ನೀಡಿದೇ ಇಲ್ವೇ ಮಾತಾಡ್ತಾ ನೀಡಬೇಕಾಗಿತ್ತು. ನನ್ತಮ್ಮ ಏನಂಕೊಂಡನೋ ಏನೋ” ಎಂದು ಗೊಣಗಿಡುತ್ತ ಅಕ್ಕ ಪಾತ್ರೆ ಪಡಗ ಮಾಡುತ್ತಿರುವ ಸದ್ದು ಕೇಳಿಸಿತು. +ಏನನ್ನೋ ಧೇನಿಸುತ್ತ ಹಾಗೆ ಒಂದು ಜೊಂಪು ನಿದ್ದೆ ಮಾಡಿದ. ಅವನು ಎಚ್ಚರಾಗುವ ಮೊದಲೆ ಅಕ್ಕ ಮಗಳು ಊಟ ಮುಗಿಸಿದ್ದರು. ಬಾಗಿಲಲ್ಲಿ ಇಣುಕಿ ಓಡುತ್ತಿರುವ ಮಕ್ಕಳು, ತಂತಮ್ಮ ಮನೆಗಳಿಂದಲೇ ಇಣುಕುತ್ತಿರುವ ದೊಡ್ಡವರು, ಚಿಕ್ಕವರು, ಅಕ್ಕ ಗದರಿಕೊಳ್ಳುತ್ತಿರುವುದು ಕೇಳಿಸಿಕೊಳ್ಳುತ್ತ ಹಾಗೆ ಅರೆ ಎಚ್ಚರದಲ್ಲಿ ಮಲಗಿಕೊಂಡಿದ್ದ. +ಏನೋ ಹಾಳಾದೋವೇನು? ಎಂದಾದ್ರೂ ಮಂದೀನ ನೋಡಿದ್ದಾರೋ ಇಲ್ಲೋ? ಗೂಬೆಗಳಂಗೆ ಯಾಕಾಡ್ತಿದ್ದಾವಂತೀನಿ ನಮ್ಮನ್ಯಾಗೇನು ಗೊಂಬೆ ಕುಣಿಯಾಕತ್ಯಾವೇನು? ರುಕ್ಕಮ್ಮ ಈ ಪ್ರಕಾರವಾಗಿ ಗೊಣಗಿಕೊಳ್ಳುತ್ತಿರುವಾಗಲೇ ಬಸವನ ಬಾವಿ ಮನೆಯ ಭವಾನಿ ಗಂಗವ್ವ ಕೈಲಿದ್ದ ಚುಟ್ಟಾ ಸೇದುತ್ತ ಹೊಗೆ ಎದೆಗೂಡಿಗಡರಿ ಕೊಕ್ ಕೊಕ್ ಕೆಮ್ಮುತ್ತ ಗತಕಾಲದಲ್ಲಿ ಗಂಡ ಊನ ಮಾಡಿದ್ದ ಬಲಗಾಲನ್ನು ಎಳೆದು ಹಾಕುತ್ತ, ಬಡಗೇರ ಮಾನಪ್ಪಾಚಾರಿ ಕೊಡಿಸಿದ್ದ ಬೆಂಡೊಲೆಗಳನ್ನು ಬಿಸಿಲಿಗೆ ಥಳಥಳಿಪುಸುತ್ತ “ಏನ್ಮಾಡೀಯಭೇ ರುಕ್ಕಮ್ಮ” ಎಂದು ಗುಬ್ಬಿ ಬೆದರಿ ಹಾರಿ ಹೋಗುವಂತೆ ಕೂಗುತ್ತ ಒಳಪ್ರವೇಶಿದಳು. ಗಂಡ ಬದುಕಿದ್ದಾಗೆಂದೂ ಆಕೆ ದ್ವನಿ ಎತ್ತರಿಸಿ ಮಾತಾಡಿದಾಕೆಯಲ್ಲ, ಮುಖ ಎತ್ತಿ ಇನ್ನೊಬ್ಬರನ್ನು ನೋಡಿದಾಕೆಯಲ್ಲ. ಸೂಳೇರ ಸಹವಾಸ ಮಾಡೀ ಮಾಡೀ ಗುಣವಾಗದ ಖಾಯಿಲೆಗಳನ್ನು ತೊಂಕದ ಕೆಳಗೆಲ್ಲ ಹೊತ್ತಿಸಿಕೊಂಡು ತಿಂಗಳ ದಿನಮಾನ ನರಳೀ ನರಳೀ ಕೊನೆ ಉಸುರು ಬಿಡುವಾಗ ಗಂಗೀ ನನ್ ಕೈಹಿಡ್ದ ನಿಂಗೆ ಸುಖಕೊಡ್ಲಿಲ್ಲ ಸಾಲ ಸೂಲ ಮಾಡಿ ನಿಂಗೇನು ಉಳುಸ್ದೆ ಸಾಯ್ತಿದ್ದೀನಿ… ಮುಂದೆ ನೀನೆಂಗ ಬದುಕ್ತೀಯೋ… ಅದು ನಿಂಗೆ ಬಿಟ್ಟಿದ್ದು… ಮತ್ತೆ ಮ… +” ಎಂದು ಏನೋ ಹೇಳಲು ಪ್ರಯತ್ನಿಸಿ ಮನೆಯಲ್ಲಿ ತನ್ನ ಶವ ಸಂಸ್ಕಾರಕ್ಕೂ ದಮ್ಮಡಿ ಬಿಡದೆ ಖಾಲಿ ಮಾಡಿ ಪ್ರಾಣ ಬಿಟ್ಟಿದ್ದ. ಬಡಗೇರ ಮಾನಪ್ಪ ಆ ಮೂರು ವರ್ಷಗಳ ಕಾಲ ಆಶ್ರಯ ಕೊಡದಿದ್ದಲ್ಲಿ ಈ ಭವಾನಿ ಗಂಗವ್ವ ಎಂದೋ ಕೊಲ್ಲಾಪುರ ಮಹಾಲಕ್ಷ್ಮಿ ಪಾದ ಸೇರಿಬಿಟ್ಟಿರುತ್ತಿದ್ದಳು. ಚುಟ್ಟ ಸೇದುವುದರ ಮುಲಕ ಪುರುಷ ಪ್ರಧಾನ ಸಮಾಜದಲ್ಲಿ ಒಂದು ಭದ್ರ ಬುನಾದಿ ಹಾಕಿಕೊಂದಿದ್ದ ಗಂಗವ್ವ ಓಣಿ ಜನ ಸದಾ ಸಂತೋಷವಾಗಿರಬೇಂದು ಬಯಸುವಾಕಿ. ಇಂಥ ಆಕಿ ಯಾರ ಮನೆಗೆ ಬೇಕಾದರೂ ಧೈರ್ಯವಾಗಿ ಹೋಗುತ್ತಿದ್ದಳು. ಕಷ್ಟಸುಖ ವಿಚಾರಿಸಿ ಬರುತ್ತಿದ್ದಳು. ದಿವಂಗತ ಮಾನಪ್ಪಾಚಾರಿಯ ಮಮ್ಮಗಳ ಮದುವೆಯ ಉಸ್ತುವಾರಿಗೆಂದು ಕಳೆದೆರಡು ತಿಂಗಳಿಂದ ಊರು ಬಿಟ್ಟಿದ್ದ ಆಕೆ ಕಳೆದ ವಾರವಷ್ಟೆ ಮರಳಿದ್ದಳು. +“ಗಂಗವ್ವತ್ತೆ… ಬಾ… ಕುಂತ್ಗ… ಊಟ ಆಯ್ತೇನು! ನನ್ನ್ತಮ್ಮ ಬಂದಾನತ್ತೆ…” ರುಕ್ಕಮ್ಮ +ಕೂಡ್ರಲು ಚಾಪೆ ಹಾಕಿದಳು. ನಮಲಲು ಎಲೆ ಅಡಿಕೆ ಚೀಲ ಸರಿಸಿದಳು. +“ಆಹ್… ನನ್ನ ಹಾಟಗಳ್ಳ… ಬಂದಾನೇನು? ಯಾವಾಗ ಬಂದ? ಏನ್ಕಥೆ? ನಾನು ಮಡಿಯುಡಿಯಿಂದ ನೀರು ತರುವಾಗ ಎಷ್ಟೊಂದು ಗೋಳೊಯ್ಕೊಳ್ತಿದ್ದನೆ? ಎಲ್ಲಿದ್ದಾನೆ ತೋಸು ಮತ್ತೆ” ಎಂದು ಕೂತು ರುಮಿರುಮಿ ಸುತ್ತ ನೋಡುತ್ತ ಗೋಟಡಿಕೆಯನ್ನು ಕಟುಮ್ಮನೆ ಕಡಿದಳು. +ವಿಶ್ವಕರ್ಮಿಣಿಯಾದ ಗಂಗವ್ವ ಮಾನಪ್ಪಾಚಾರಿ ತೀರೋವರೆಗೂ ಮಹಾ ಕಠೋರ ಸಂಪ್ರದಾಯಸ್ಥೆಯಾಗಿದ್ದಳು. ಪೂಜೆ ಪುನಸ್ಕಾರ ಮುಗಿಸಿ ಉಂಡು ಬರೋವರೆಗೂ ಆಕೆ ಹತ್ತಿರ ಯಾರೂ ಸುಳಿದಾಡುವಂತಿರಲಿಲ್ಲ. ಆಗಿನ್ನೂ ರಘುರಾಮ ‘ನಾನು ಪಂಜರದ ಹಕ್ಕಿ ನನಗಾರು ಗತಿ’ ಎಂದು ಓದಿಕೊಳ್ಳುತ್ತಿದ್ದ ವಯಸ್ಸಿನವನು. ಯಾರಾದರೂ ಮಡಿ ಆಚಾರ ಅಂತ ನಿಗರಾಡುತ್ತಿದ್ದರೆಂದರೆ ಹೋಗಿ ಅವರ ಆಚಾರ ಕುಲಗೆಡಸಿದ ನಂತರವೇ ತಟ್ಟೆಗೆ ಕೈಹಚ್ಚುತ್ತಿದ್ದನು. ಅವನ ಟೈಮುಪಾಸಿಗೆ ಗಂಗವ್ವ ತಕ್ಕ ಗಿರಾಕಿಯಾಗಿದ್ದಳು. ಆಕೆ ಮಡಿಯಿಂದ ನೀರು ತರುವಾಗ ಮಿಂಚಿನಿಂದ ಪ್ರತ್ಯಕ್ಷವಾಗಿ ಆಕೆಯ ತುಂಬಿದ ಕೊಡವನ್ನು ಮುಟ್ಟಿ ಓಡಿಬಿಡುತ್ತಿದ್ದನು. ಆಗ ಗಂಗವ್ವ ಎಲೋ ನನ್ ಹಾಟುಗಳ್ಳನೇ ಎನ್ನದೆ ಬಾಯಿ ಮುಚ್ಚುತ್ತಿರಲಿಲ್ಲ. +“ಅದೇನು, ಅನ್ಕೊಂಡೀಯೋ? ಅದನ್ನು ಮಾಡ್ವಂತೀ ಮೊದ್ಲು ಎಲೆ ಅಡಕೆ ಹಾಕ್ಕೊಂಡು ಆರಾಮು ತಗೋ” ಎಂದು ವಿಶೇಷ ಕಳೆಯಿಂದ ನುದಿದಳು! +ಅವರಿಬ್ಬರು ಪರಸ್ಪರ ಅದೂ ಇದೂ ಮಾತಾಡಿಕೊಳ್ಳತೊಡಗಿದರು. ತನ್ನ ಗಂಡನ ಸಮಾಚಾರದ ಬಗ್ಗೆ ಮುದುಕಿ ಅದೆಲ್ಲಿ ಪ್ರಸ್ತಾಪಿಸಿ ಬಿಡುವುದೋ ಎಂಬ ಆತಂಕದ ಬಗ್ಗೆ ರುಕ್ಕಮ್ಮ ಪ್ರತಿ ಮಾತನ್ನು ಜಾಗ್ರತೆಯಿಂದ ಮಾತಾಡುತ್ತಿದ್ದಳು. ಆದರೆ ಗಂಗವ್ವ ಯಥಾ ರೀತಿಯದು. +“ಅಲ್ಲೇ ನನ್ ಸೊಸೀಯೇ! ನಿನ ಗಂಡ ಹೆಂಡ್ತಿ ಮಗಳ್ನ ಬಿಟ್ಟು ಹೇಳ್ದೆ ಕೇಳ್ದೆ ಹೋಗಿ ಭಾಳ ದಿನ ಆಯ್ತಂತಲ್ಲೇ? ಅವ ಹೊಟ್ಟೆಗೇನು ತಿಂತಿದ್ದ ಅಂತೀನಿ… ಇಂಥ ಸುಮಾರು ದೂರಾಗ ಹರೇವಿರೋ ನಿನ್ನೂ; ಕೈಗೆ ಬಂದಿರೋ ಅನಸೂಯಾನ್ನೂ ಬಿಟ್ಟು ತಿಂಗಳಗಟ್ಟಳೆ ಹೋಗೋದೆಂದ್ರೇನು? ಅವನೊದೆ ಬರ್ಲಿ… ಕಿರಾಪು ಹಿಡ್ದು ಕೇಳ್ಳಿಲ್ಲಾ… ನಾನು ನೀಲ್ಗುಂದದ ನಾಗಪ್ಪಾಚಾರಿ ಮಗಳೇ ಅಲ್ಲ” ಬಾಯಲ್ಲಿ ಕವಳ ಒತ್ತರಿಸಿ ತುಂಬಿಕೊಳ್ಳದಿದ್ದಲ್ಲಿ ಆಕೆ ಇನ್ನೂ ನಾಲ್ಕು ಮಾತು ಹೆಚ್ಚಿಗೆ ಮಾತಾಡುವಾಕಿ. ಕವಳ ಉಗುಳಿ ಬಂದು ಮತ್ತೆ ಮಾತಾಡಲೆಂದು ಆಕೆ ತೆರೆದ ಬಾಯಿಯ ಮೇಲೆ ಕೂಡಲೆ ರುಕ್ಕಮ್ಮ ಕೈ ಇಟ್ಟಳು. ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ ವಿಷವನ್ನು ಗಂಡನ ಕೊರಳ ಮೇಲೆ ಪಾರ್ವತಿ ಕೈ ಇಟ್ಟು ತಡೆದಳಲ್ಲ ಹಾಗೆ. +“ಮೆಲ್ಲಗೆ ಮಾತಾಡತ್ತೆ… ನಿನ್ ಮೊಮ್ಮಗ ಮಲಕ್ಕಂಡಿದಾನೆ ಅವ್ನು ಕೇಳಿಸ್ಕೊಂಡ್ರೆ ಏನಂದ್ಕೊಂಡಾನು?” ಎಂದು ರುಕ್ಕಮ್ಮ ಪಿಸುಗುಟ್ಟಿದಳು. +“ಆಹ್; ಹೌದು, ಹಂಗಾದ್ರೆ ಅಲ್ಲಿ ಮಲಕ್ಕೊಂಡಿರೋನು ರಘುನೇನು?… ನನ್ ನಾಲ್ಗೆ ಬಿದ್ದು ಹೋಗ್ಲಿ… ಎಂಥಾ ಮಾತಾಡಿಬಿಟ್ನೆಲ್ಲ…” ತನ್ನ ಪಾಡಿಗೆ ತಾನು ಗೊಣಗಿಕೊಂಡು ಮುಂದುವರಿದು ಹೇಳಿದಳು. +“ಅವನೇ ರಘುರಾಮನೇನು? ಎಷ್ಟುದ್ದ ಎಷ್ಟಗಲ ಬೆಳೆದಿದ್ದಾನಲ್ಲ… ಈಗಿನ ಕಾಲದ ಹುಡುಗ್ರು ಇವತ್ತಿದ್ದಂಗ ನಾಳಿರೋಲ್ಲ, ನಾಳಿದ್ದಂಗ ನಾಡಿದ್ದಿರಲ್ಲ… ಆ ದೇವ್ರೆ ಇಲ್ಲಿಗೆ ಕಳಿಸಿ ಕೊಟ್ಟಾನೆ… ಅನಸೂಯಾಗೀವ್ನು ಹೇಳಿ ಮಾಡಿಸಿದ ಜೋಡಿ ನೋಡು… ಮದ್ವಿ ವಿಷ್ಯ ಮಾತಾಡಿಬಿಡು… ಕೈಗೆ ಬಂದಿರೋ ಮಕ್ಕಳ್ನ ಭಾಳ ದಿನ ಮನೇಲಿಟ್ಕೋಬಾರ್ದು…” ಎಂದು ಒಂದು ಮಾತನ್ನು ಹೆಚ್ಚಿಗೆ ಪ್ರಯೋಗಿಸಿತು. +ಅಡುಗೆ ಮನೆಯಲ್ಲಿ ಮೊಣಕಾಲ ಚಿಪ್ಪಿನೊಳಗೆ ಮುಖ ಹುದುಗಿಸಿಕೊಂಡುಕೂತಿದ್ದ ಅನಸೂಯ ಅ ಅದನ್ನು ಕೇಳಿಸಿಕೊಂಡು ನಿಟ್ಟುಸಿರುಬಿಟ್ಟಳು. +ಅದಕ್ಕೆ ಪೂರಕವಾಗಿ ರುಕ್ಕಮ್ಮ ಕೂಡ ನಿಡುಸುಯ್ದಳು. +“ಆಕೀಗೆ ಗಂಡನ್ನ ದೇವ್ರು ಎಲ್ಲಿಟ್ಟಿದ್ದಾನೋ? ಹೇಗೆ ಹೇಳೋದತ್ತೆ.. ಅದ್ರ ಬ್ಯಾರೆ.. ” +“ಎಂಥ ಮಾತಾಡ್ತೀಯೆ ನಮ್ಮವ್ವ… ಅಂಗೈಲಿ ತುಪ್ಪ ಇಟ್ಕೊಂಡು ಬೆಣ್ಣೆಗೆ ತಿರುಗಾಡ್ತಾರೇನೇ? ಒಡಹುಟ್ಟಿದ ತಮ್ಮ ಕಡೇಲಲ್ಲ..” +“ಅದೂ ಅಲ್ದೆ ಅವ್ರೂ..” +“ಯಾರು?” +“ನಿನ್ ಮಗ!” ಮುಂದಿನ ಮಾತು ಗಂಟಲಲ್ಲಿ ಇರುಕಿಕೊಂದಿತು. ಬಹಳ ತ್ರಾಸಿನಿಂದ ಮಾತಾಡಿದಳು. “ಮನೆ ಯಜಮಾನ್ರು ಮನೇಲಿಲ್ಲಾಂದ್ರೆ ಹೆಂಗತ್ತೆ ಮಗ್ಳು ಮದ್ವೆ ಮಾತಾಡೊದು? ನಾಕು ಮಂದಿಯಾದ್ರೂ ಏನಂದ್ಕೊಂಡಾರು? ಯವತ್ತೊ ಕನ್ನೀರವ್ವನ ಭಾವಿ ನೋಡ್ಕೊಂತಿದ್ದೆ. ಮಗಳಿರೋದ್ರಿಂದ ಸುಮ್ಕಿದ್ದೀನಿ… ” ಗಂಟಲ ಕಟ್ಟೆಯೊಡೆಯಿತು. ಗಂಗವ್ವನ ಹೆಗಲ ಮೇಲೆ ಮುಖ ಇಟ್ಟು ಗದ್ಗದಿಸಿ ಅಳತೊಡಗಿದಳು. +“ಛೀ ಹುಚ್ಚಿ ಸುಮ್ಕಿರು… ಮನಿ ಮನೆ ಯಜಮಾನಿಯಾಗಿ ಹಿಂಗ ಅಳ್ತಾರೇನು? ಆ ಹುಡ್ಗಿಯಾದ್ರು ಏನಂದ್ಕೊಂಡಾತು.. ” ಎಂದು ಸಮಾಧಾನಪಡಿಸಿದಳು. ತನ್ನ ಸೆರಗಿನಿಂದ ಆಕೆಯ ಮೂಗು ಕನ್ನು ಒರೆಸಿ “ರುದ್ರ ನಾಯ್ಕಂದು ಎಲ್ಲಾ ಗೊತ್ತಿರೋದೇ. ಅಂಥೊರಿಗ್ರ್ ಬದುಕ್ರೋ ಮಂದಿಗಿಂತ ಸತ್ತು ದೆವ್ವ ಆಗಿರೋರೆ ಮುಖ್ಯ. ಯಾವ್ಯಾವ ದೆವ್ವ ಹುಡುಕ್ಕೊಂಡು ಯಾವ್ಯಾವ ಸುಡುಗಾಡೀಲಿ ಅಲೀತಿದ್ದಾನೇನೋ.. ಅವತ್ತು ಯಾವತ್ತು ಬರ್ತಾನೇನೋ? ಅವನು ಬರೋಕೆ ವರ್ಷಗಳೇ ಆಗಬೌದು? ಅವನಿಗಾಗಿ ಕಾಯ್ತ ಮಗ್ಳ ಬದುಕು ಹಾಳು ಮಾಡಬೇಡ.. ಮಾಡೋದ್ನೆಲ್ಲ ಮಾಡಿ ಮುಗಿಸಿಬಿಡು… ಆಮೇಲೆ ಬೇಕಾದ್ರೆ ಅವ್ನು ಬಂದು ನಿನ್ಗೊಂದು ನಾಲ್ಕೇಟು ಹೊಡೀಲಿ. ಕುತ್ಗಿ ಹಿಚುಕಿ ಹಾಳು ಭಾವೀಗಾಕ್ಲಿ… ಯಾರು ತಡೆಯೋರು? ಗಂಡನ್ನ ಕಳೆಕೊಂಡಿರೋ ನನ್ನ ಬಾಳ್ವೇನೇ ತಗೋ… ಊರುಗೆದ್ರಿದ್ರೆ ನಾನು ಬದುಕೋಕಾಗ್ತಿತ್ತೇನು? ಮಂದಿ ಬೇಷಿದ್ರೂ ಸೇರೊಲ್ಲ, ಕೆಟ್ರೂ ಸೇರೊಲ್ಲ… ನಾವು ಧೈರ್ಯದಿಂದ ಬದುಕಬೇಕಷ್ಟೆ? ಪಟಪಟ ಮಾತಾಡಿಬಿಟ್ಟಿತು. ಯಾರು ಕೇಳಿಸಿಕೊಂಡರೆ ತನಗೇನೆಂಬಂತೆ ಮಲಗಿರುವಂತ ನಾಟಕವಾಡುತ್ತಿರುವ ರಘು ಎಂಬ ಮಹಾಶಯ ಕೂಡ ಕೇಳಿಸಿಕೊಂಡು ತನ್ನಕ್ಕನ ಬಾಳುವೆಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ‘ವಾಲ್ಯೂಂ’ ಹೆಚ್ಚು ಮಾಡಿತ್ತು. +ಬಲೇನೆ ರುಕ್ಮಿಣಿ… ಎದ್ಕೂಡ್ಲೆ ನಿನ್ತಮ್ಮನ್ನ ಒಂದು ಮಾತು ಕೇಳಿಬಿಡು… ಬಂಗಾರಂಥ ಹುಡುಗಿ. ಕೈ ಹಿಡಿಯೋಕೆ ಪುಣ್ಯ ಮಾಡಿರ್ಬೇಕು. ಕೇಳೋ ಧೈರ್ಯ ನಿನಗಿರದಿದ್ರೆ ನನ್ ಕರೀ… ಬಂದು ಚಣ್ಣ ಹಿಡ್ದು ಬುದ್ದಿ ಹೇಳ್ತೀನಿ… ಮದ್ವೆ ಹೆಂಗ ಮಾಡೋದಂತ ಹೆದರ್ಬೇಡ. ನಾನಿನ್ನು ಬದುಕಿದ್ದೀನಿ… ನನ್ಗೇನು ಮಕ್ಳಿಲ್ಲ ಮರಿಯಿಲ್ಲ… ತಿಳೀತಾ?…? ಎಂದು ಗಂಗವ್ವ ಸರ್ರಂತ ಒಂದು ದಮ್ಮು ಎಳೆಯುತ್ತ ಎದ್ದಳು. ಮೂಗು ಬಾಯಿಯಿಂದ ಹೊಗೆ ಬಿಡುತ್ತ ನ್ಯಾರೋಗೇಜಿನ ಹಾದಿಗುಂಟ ಉಗಿಗುಂಟ ಹೋಗುತ್ತಿರುವುದೇನೋ ಎಂಬಂತೆ ತಮ್ಮ ಮನೆ ಕಡೆ ಹಂಗೊಂದು ಹೆಜ್ಜೆ ಹಿಂಗೊಂದು ಹೆಜ್ಜೆ ಹಾಕುತ್ತ ಹತ್ತು ಹೆಜ್ಜೆಗೊಮ್ಮೆ ಕೆಮ್ಮುವುದರ ಮೂಲಕ ಸಮಸ್ತ ಓಣಿಗೆ ತನ್ನ ಅಸ್ತಿತ್ವವನ್ನು ಜಗಜ್ಜಾಹೀರುಪಡಿಸುತ್ತ… ಊರು ಹೋಗೆನ್ನುವ ಸುಡುಗಾಡು ಬಾ ಎನ್ನುವಷ್ಟು +ವಯಸ್ಸಿನ ಆಣೆಬಡ್ಡಿ ಭವಾನಿ ಗಂಗವ್ವ ಹೋದಳು. +ಆಕೆ ಬಂದು ಹೋದದ್ದರಿಂದ ರುಕ್ಕಮ್ಮನ ಹೃದಯದ ಭಾರ ಅರ್ಧಕ್ಕರ್ಧ ಕದಿಮೆಯಾಯಿತು. ತಮ್ಮ ನಿದ್ರಾಭಿನಯದ ನಡುವೆಯೂ ತಮ್ಮ ಮಾತುಗಳನ್ನು ಕೇಳಿಸಿಕೊಂಡಿರುವನೆಂದು ಆಕೆಗೆ ಗೊತ್ತು. ಒಂದೇ ಮಾತಿಗೆ ಅವನು ಅನಸೂಯಳ ಕೈಹಿಡಿದು ಕರೆದೊಯ್ದು ಸುಖವಾಗಿಟ್ಟುಕೊಂಡರೆ ತನಗದೇ ಸಾಕು! ಪ್ರಶ್ನಾತ್ಮಕವಾಗಿ ಒಳಗೆ ಕೂತಿದ್ದ ಮಗಳ ಕಡೆಗೊಮ್ಮೆ… ಬೆನ್ನು ಮಾಡಿ ಮಲಗಿದ್ದ ತಮ್ಮನ ಕಡೆಗೊಮ್ಮೆ ನೋಡಿದಳು. +ಅನಸೂಯ ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ರುಕ್ಕಮ್ಮ ಮೆಲ್ಲಗೆ ಹೆಜ್ಜೆ ಇಡುತ್ತ ಹೋಗಿ ‘ಏನೇ’ ಎಂದಳು. +“ಅವ್ವಾ… ನಾನಷ್ಟೊಂದು ಭಾರವಾಗಿದ್ದೀನಾ… ನಿನ್ಗೆ?” ಅನಸೂಯ ತಾಯಿ ಹೆಗಲ ಮೇಲೆ ಮುಖ ಇಟ್ಟು ಬಿಕ್ಕಿದಳು. +“ಅದೆಂಥ ಮಾತಾಡ್ತೀಯಾ ತಾಯಿ… ಇದೇ ಪ್ರಶ್ನೇನ ನಾನ್ಯಾರ್ರಿಗೆ ಕೇಳ್ಲಿ ಹೇಳು ಮತ್ತೆ” ರುಕ್ಕಮ್ಮ ಸಂತೈಸಿದಳು. ರಘು ಒಪ್ಪಿದರೆ ತನ್ನ ಅಭ್ಯಂತರವಿಲ್ಲವೆಂದು ಈ ಮೊದಲೇ ಹೇಳಿದ್ದಿರಿಂದ ಮತ್ತೆ ಆ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. +ಪೂರ್ಣ ಎಚ್ಚರ ಇದ್ದರೂ ಮಲಗಿದ್ದ ರಘು ಎಲ್ಲ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದ. ತನ್ನ ಅಕ್ಕ ಇಷ್ಟೊಂದು ಸಂಕಟವನ್ನು ಒಡಲಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿರುವುದು ತಿಳಿದು ಖೇದಗೊಂಡ. ಮತ್ತೆ ಮನೆ ಬಿಟ್ಟು ಹೋಗಿರುವ ಭಾವನ ಬಗ್ಗೆ ಸಿಟ್ಟು ಬಂತು. ರೈಲಿನಲ್ಲಿ ಕೂತಿದ್ದ ವ್ಯಕ್ತಿ ಭಾವನೇ ಎಂದುಕೊಂಡ. ಅದು ಉತ್ತರ ಭಾರತದ ಕಡೆ ಹೊರಟಿದ್ದ ರೈಲು. ಆತ ಕಾಶಿ ಕಡೆ ಹೋಗಿರಬಹುದೋ? ಹಿಮಾಲಯದ ಕಡೆ ಹೋಗಿರಬಹುದೋ? ಆತನ ಸಾವು ನೋವು ಸಂಭವಿಸಿರಲಿಕ್ಕಿಲ್ಲ. ಆತ ಪ್ರಚಂಡ ಆತ್ಮವಿಶ್ವಾಸದ ವ್ಯಕ್ತಿ. ಮುಂದೆಂದಾರರೊಂದು ದಿನ ಮರಳಿಬರದಿರಲಾರ. ಎಂದು ಬರುವನೋ! ಆತ ಬಂದರೆ ತನ್ನ ಮಗಳನ್ನು ತನಗೆ ಮದುವೆ ಮಾಡಿಕೊಡಲಿಕ್ಕಿಲ್ಲ. ತನ್ನ ಅಕ್ಕನ ಮಗಳನ್ನು ಮದುವೆಯಾಗುವುದು ತನ್ನ ಜನ್ಮಸಿದ್ಧ ಹಕ್ಕು. ಅಕ್ಕಗೆ ಸಂತೋಷವಾಗುವುದಾದರೆ ತಾನೇನೋ ಮದುವೆಯಾಗಲು ಸಿದ್ಧ… ಆದರೆ ಅನಸೂಯಾ ಒಪ್ಪಬೇಕಲ್ಲ! ಎಷ್ಟಿದ್ದರೂ ಅವಳು ವಿದ್ಯಾವಂತೆ. ತನ್ನಂಥ ಅರೆಬರೆ ವಿದ್ಯಾವಂತನನ್ನು ಇಷ್ಟಪಡುವಳೋ? ಇಲ್ಲವೋ? ತಾನು ಪದವೀಧರನಾಗಿರದಿರಬಹುದು. ತನಗಿರುವಷ್ಟು ಪ್ರಪಂಚ ಜ್ಞಾನ ಅವಳಿಗಿರಲಿಕ್ಕಿಲ್ಲ. ತಾನು ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲೆ… ಎರಡು ಮೂರು ಭಾಷೆಗಳಲ್ಲಿ ಸಮರ್ಥವಾಗಿ ಬರೆಯಲೂ ಬಲ್ಲೆ… ಗಂಟೆಗಟ್ಲೆ ನಿರರ್ಗಳವಾಗಿ ಭಾಷಣ ಮಾಡಬಲ್ಲೆ… ಮೂರು ಆರು ಮಾಡುವ ಆರು ಮೂರು ಮಾಡುವ ಚಾಕಚಕ್ಯತೆ ತನಗಿದೆ! ತಾನೆಂದೋ ಮದುವೆಯಾಗಿಬಿಡಬಹುದಾಗಿತ್ತು. ಆರ್ಗನೈಜಿಂಗ್ ಸೆಕ್ರೆಟರಿ ಅಂಜಲಿನಂಬೂದರಿ, ನಗರದ ಪ್ರಾಪರಟೀ ಡೀಲರ್ ಅಗರ್‌ವಾಲನ ಮಗಳು ನಿಧಿ, ವರಲಕ್ಷ್ಮಿವೆಂಕಟಂ ಸೀತಾರಾವ್ ಹೀಗೆ ಕೆಲವು ಪ್ರತಿಷ್ಟಿತ ತರುಣಿಯರು ತನಗಾಗಿ ಕಾಯುತ್ತಿದ್ದಾರೆ. ಅಕ್ಕನ ಮಗಳು ‘ನೋ’ ಎಂದಾಗ ಮಾತ್ರ ನಿಮ್ಮೊಬ್ಬರನ್ನು ಮದುವೆಯಾಗುವುದಾಗಿ ತಾನು ಹೇಳಿರುವುದುಂಟು. +ಗಾಡ ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವವನಂತೆ ರಘು ಮೆಲ್ಲಗೆ ಎದ್ದು ಕೂತ. ಗಟ್ಟಿಯಾಗಿ ಒಮ್ಮೆ ಆಕಳಿಸಿ ತಾನು ಎಚ್ಚರ ಗೊಂಡಿದ್ದನ್ನು ಪ್ರಕಟಿಸಿದ. ಅಕ್ಕ ಸೂಚಿಸಿದಂತೆ ಮುಖ +ತೊಳೆದು ಕೊಂಡು ಚಹ ಕುಡಿದ. ಅಯ್ಯೋ ಮರೆತಿದ್ದೆ ಅಂತ ಸೂಟ್‌ಕೇಸ್ ತೆರೆದ ಅನಸೂಯಳಿಗೆ ಎರಡೆರಡು ಸೀರೆ ತಂದಿದ್ದ ಹಾಗೆಯೇ ತನ್ನ ಭಾವನಿಗೆ ಪಾಲಿಸ್ಟರ್ ಪಂಚೆ, ಶರ್ಟಿಗೆ ರೇಷ್ಮೆ ಬಟ್ಟೆ ತಂದಿದ್ದ. ಇವೆಲ್ಲ ಯಾಕೆ ತಂದೆ ಅಂತ ಅಕ್ಕ ರಾಗ ತೆಗೆಯುತ್ತ ಸ್ವೀಕರಿಸಿದಳು. ಅನಸುಯಾ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ತನಗೊಂಚೂರು ಕೆಲಸ ಇದೆ ಅಂತ ರುಕ್ಕಮ್ಮ ಮನೆಯಿಂದ ಹೊರಗೆ ಹೋದಳು. ಮಗಳು ತಮ್ಮ ಪರಸ್ಪರ ಒಂದಿಷ್ಟು ಮಾತಾಡಿಕೊಳ್ಳಲಿ ಎಂಬ ಉದ್ದೇಶದಿಂದ. +ಈಗ ಇಡೀ ಮನೆಯಲ್ಲಿ ಉಳಿದಿರುವುದು ತಾವಿಬ್ಬರೇ! ತನ್ನ ತಾಯಿ ತನ್ನನ್ನು ಎಂಥ ಸಂದಿಗ್ಧತೆಗೆ ಸಿಲುಕಿಸದಳಲ್ಲ. ಅನಸೂಯಾ ನಾಚಿಕೆ ಮತ್ತು ಭಯದಿಂದ ಕಂಪಿಸುತ್ತಾ ಒಂದು ಮೂಲೆಯಲ್ಲಿ ನಿಂತುಕೊಂಡಳು. ಆಕೆಯ ಹೃದಯಬಡಿತ ಅಲ್ಲೆಲ್ಲ ವ್ಯಾಪಿಸಿತ್ತು. ಆಕೆಯ ಕಣ್ಣುಗಳು ಭೂವಿಜ್ಞಾನಿಯಂತೆ ನೆಲ ನೋಡುತ್ತಿದ್ದವು. ತನ್ನೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ಸಂಭಂದವಿರದ ವ್ಯಕ್ತಿ ಜೊತೆ ಹೇಗೆ ಮಾತಾಡುವುದು? ರಘು ತಾಯಿಯ ತಮ್ಮನಾಗಿರಬಹುದು! ತನ್ನ ಒಬ್ಬೇ ಒಬ್ಬ ಸೋದರ ಮಾವನಾಗಿರಬಹುದು! ಆದರೆ ಶಾಮನ ಬಳಿ ಮಾತಾಡಿದಷ್ಟು ಸಲೀಸಾಗಿ ಮಾತಾಡಲಾದೀತೇನು? +ಆಕೆಯ ಮೌನ ಸಮ್ಮತಿಯ ಲಕ್ಷಣವಲ್ಲ. ಸೋದರ ಮಾವನಾದ ತನ್ನನ್ನು ಆಕೆಯ ಮೊದಲುಯಾಕೆ ಮಾತಾಡಿಸಬಾರದು? ಸ್ವಲ್ಪ ಹೊತ್ತು ಕಾದು ಬಟ್ಟೆ ಬದಲಿಸಿದ. ಅವನಿನ್ನೇನು ಹೊರಗಡೆ ಹೊರಟೇಹೋಗುವನೆಂದು ಭಾವಿಸಿ ಮಾರ್ಜಾಲ ನಗಂದಿಯಿಂದ ಸೀದ ಕೆಳಗೆ ಧುಮಕಿತು. ಆ ದರಿದ್ರ ಶಾಮುನ ಬಗ್ಗೆ ಯೋಚಿಸೋದು ಬಿಟ್ಟು ರಘುನ ಮಾತಾಡಿಸೇ… ಏನಾದ್ರು ತಿಳ್ಕೊಂದು ಅವನು ಹೊರಟು ಹೋದಾನು. ಧೈರ್ಯದಿಂದ ಮಾತಾಡ್ಸು… ವಿದ್ಯಾವಂತರೂ ಹೆದರುವುದೇನು ” ಎಂಬರ್ಥ ಬರುವಂತೆ ಅದು ಮ್ಯಾವ್ ಅನ್ನುತ್ತಾ ಮಾಲಿಕಿನ್ ಕಾಲಿಗೆ ಮೈ ಹೊಸೆಯತೊಡಗಿತು. +“ನಾಚಿಕೆಯ ಪಾರಮಾರ್ಥಿಕತೆ ಹೆಣ್ಣಾಗಿದ್ರೆ ಗೊತ್ತಾಗ್ತಿತ್ತು. ಶಾಮುನ ಮತು ಬಿಡು ಅಂತ ಎಷ್ಟು ಸುಲಭವಾಗಿ ಹೇಳ್ತಿದ್ದೀಯಲ್ಲಾ… ಪ್ರೇಮದ ಬಗ್ಗೆ ವ್ಯಾಖ್ಯಾನ ಮಾಡುವುದು ಸಮಯ ಸಾಧಕ ಮಾರ್ಜಾಲಕ್ಕೆ ಹೇಗೆ ಸಾಧ್ಯ? ಅದು ಎಷ್ಟಿದ್ದರೂ ಹಚ್ಚಗಿದ್ದಲ್ಲು ಉಂಡು ಬೆಚ್ಚಗಿದ್ದಲ್ಲಿ ಮಲಗೋ ಜಾಯಮಾನದ್ದು. ಇನ್ನೂ ಅವನು ಬಂದು ಒಂದು ದಿನ ಕೂಡ ಕಳೆದಿಲ್ಲ. ಸಮೀಪದಿಂದ ಮಾತ್ರ ಸಾಮರಸ್ಯ ಸಾಮರಸ್ಯದಿಂದ ಮಾತ್ರ ಪರಸ್ಪರ ಹೃದಯ ಬಿಚ್ಚಿಕೊಳ್ಳೋದು ಸಾಧ್ಯ… ಅಲ್ವೇ ಡಾರ್ಲಿಂಗ್” ಹೆಣ್ಣು ಇಲಿ ತನ್ನ ಜೀವನ ಸಂಗಾತಿಗೆ ಹೇಳಿತು. ಮೂಷಕ ಹೌದೌದಂತ ತಲೆ ಅಲ್ಲಾಡಿತು. +ಇಲಿಗಳು ಮಾತಾಡಿಕೊಂಡಿದ್ದನ್ನು ಅರ್ಥಮಾಡಿಕೊಂಡವನಂತೆ ರಘು ಕುರ್ಚಿ ಮೇಲೆ ಕೂತು ಕಾಲಿಗೆ ಶೂಸ್ ಧರಿಸಿದ. +ಇವಳೆಂಥ ಹುಡುಗಿಯಪ್ಪಾ! ಇನ್ನೂ ತಲೆ ತಗ್ಗಿಸೇ ಇದ್ದಾಳೆ… ಬಿ.ಎ. ಓದಿಕೊಂಡಿರೋರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರೆ ಹೇಗೆ? +“ಅನಸೂಯಾ… ನಾನು ಹೊರಗಡೆ ಹೋಗಿ ಬಲಾ” ಬಾಗಿಲ ಬಳಿ ಹೋಗಿ ತಿರುಗಿ ನೋಡಿದ. ಅಕಸ್ಮಾತ್ ತನ್ನ ಕಡೆನೋಡಿ ಮತ್ತೆ ತಲೆ ತಗ್ಗಿಸಿದಳು. +“ರಘೂ… ಬಾ ಕೂತ್ಕೋ… ಅವ್ವ ಬಂದ ಮೇಲೆ ಹೋಗ್ವಂತಿ” ಕೊನೆಗೂ ಧೈರ್ಯ +ತಂದುಕೊಂಡು ಮಾತಾಡಿಸಿಯೇ ಬಿಟ್ಟಳು. +ರಘುಗೆ ಹುರುಪು ಬಂದಿತು. ಮತ್ತೆ ಷೂ ಕಳಚಿ ಆಕೆ ಹತ್ತಿರವಿದ್ದ ಸೋಫಾದ ಮೇಲೆ ಕುಳಿತುಕೊಂಡ. ನೆಲ ಬಗೆಯುತ್ತಿರುವ ಕಣ್ಣುಗಳ ಮುಖ ನೋಡಿದ. ಅವಳ ಒದ್ದಾಟ ಅರ್ಥವಾಯಿತು. ನಗು ಬಂತು. ಇದ್ದಕ್ಕಿದ್ದಂತೆ ನಗತೊಡಗಿದ… +“ಯಾಕೆ ನಗ್ತಿ?” ಆಕೆ ಗಾಬರಿಯಾದಳು. +“ನಗದೆ ಏನು ಮಾಡ್ಲಿ” ನಗೆಯನ್ನು ಮೀಸೆ ಕೆಳಗೆ ಬಚ್ಚಿಡುತ್ತ ಹೇಳಿದ, “ಅಲ್ಲ, ಎಂಥ ಹುಡುಗಿ ನೀನು ನಾವಿಬ್ರೂ ಮಾತಾಡಿಕೊಳ್ಲಿ ಅಂಥಾನೆ ಅಕ್ಕ ಹೊರಗಡೆ ಹೋಗಿದ್ದು. ಇದು ನಿನ್ಗೂ ಗೊತ್ತು. ಆದ್ರೂ ಏನೂ ಮಾತಾಡ್ದೆ ಸುಮ್ನೆ ನಿಂತಿದ್ದೀಯಲ್ಲ… ಇದ್ಕೆ ಏನು ಹೇಳೋದು?” ಆಕೆಯನ್ನು ನಿಟ್ಟಿಸಿದ. ಕಣ್ಣುಗಳು ಕವಿಗಳಾದವು. ಅವನ ಮನಸ್ಸಿನ ಪುಟಗಳಲ್ಲಿ ಮಹಾಕಾವ್ಯಕ್ಕೆ ಶ್ರೀಕಾರ ಹಾಕಿದವು. +“ಏನಂತ ಮಾತಾಡೋದು! ಮಾತಾಡ್ಲಿಕ್ಕೆ ಇರೊದಾದ್ರೂ ಏನು?” ಆಕೆ ಸೂಚ್ಯವಾಗಿ ನುಡಿದಳು. ಹಾಗೆಯೇ ನಲವತ್ತೈದು ಡಿಗ್ರಿ ಕೋನದಿಂದ ನುಡಿದಳು. ನಿಕಾನ್ ಕೆಮೆರಾ ಕ್ಲಿಕ್ ಎಂದಂತೆ. ರೂಪದಲ್ಲಿ ಮಾತುಗಾರಿಕೆಯಲ್ಲಿ ರಘುನೇ ಶಾಮುನಿಗಿಂತ ಎಷ್ಟೋ ವಾಸಿ. ಎಷ್ಟಿದ್ದರೂ ಪಟ್ಟಣದಲ್ಲಿ ವಾಸಿಸುತ್ತಿರುವವನು, ಅಲ್ಲಿ ಏನು ಮಾಡ್ಕೊಂಡಿದಾನೋ? +“ಅನಸೂಯಾ…” ಅಂದ. +“ಹ್ಹಾಂ!” ಅಂದಳು +“ಮುದುಕಿ ಜೊತೆ ಮಾತಾಡಿದ್ದೆಲ್ಲ ಕೇಳಿಸಿಕೊಂಡೆ!” ಎಂದ. +“ಹ್ಹಾಂ!” ಆಕೆ ದಿಗ್ಭ್ರಮೆ ವ್ಯಕ್ತಪಡಿಸಿದಳು. ದುಃಖದ ಕಟ್ಟೆ ಒಡೆಯಿತು. ಕಣ್ಣುಗಳಿಂದ ನೀರು ಹರಿಯತೊಡಗಿತು. “ರಘೂ” ಎಂದುದ್ಗರಿಸಿ. +“ಹಾಗಾದ್ರೆ ನೀನು ನನ್ನ ಮದ್ವೆ ಆಗ್ತೀಯಾ? +“ಆಗ್ತೀನಿ.” +“ನಿಮ್ಮಕ್ಕನ ಮೇಲಿರೋಪ್ರೀತಿಗಾಗಿಮದ್ವೆ ಆಗ್ತೀಯಾ… ಅಥವಾ… ” +“ಏನು ಮಾತಾಡ್ತೀಯ… ನಿನ್ನೇ ಮದ್ವೆ ಆಗಬೇಕೂಂತ ಯಾವತ್ತೋ ನಿರ್ಧರಿಸಿದ್ದೆ…” +“ಆದ್ರೆ… ನಿನ್ನತ್ರ ಒಂದು ವಿಷಯ ಮುಚ್ಚಿಡೋಕೆ ನಾನು ಸಿದ್ಧಳಿಲ್ಲ. ” +“ಮುಚ್ಚಿಡೊ ಅಂಥ ವಿಷಯ ಇರೊದಾದ್ರೂ ಏನು?. +“…….. ” ಉಗುಳು ನುಂಗಿ ಗಂಟಲು ಸರಿಪಡಿಸಿಕೊಂಡಳು. +“ಎಂಥ ಹುಚ್ಚಿ ಇದ್ದಾಳಿವ್ಳು… ಯಾವ್ದು ಹೇಳಬೇಕು. ಯಾವ್ದು ಹೇಳಬಾರ್ದು ಎಂಬ ಪರಿ ಜ್ಞಾನ ಇರೋದಾದ್ರೂ ಬೇಡ್ವೆ… ನಾನ್ಸೆನ್ಸ್… ಓದ್ಕೊಂಡಿದ್ದಾಳಂತೆ ಓದ್ಕೊಂಡಿದ್ದಾಳೆ. ಕಲ್ತಿರೋದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು ನೋಡು” ಜಂತಿ ಸಂದಿಯಲ್ಲಿ ಗಂಡಿಲಿ ಖೇದ ವ್ಯಕ್ತ ಪಡಿಸಿತು. +ಅದ್ಯಾಕೆ ನಿಂಗೆ ಹೊಟ್ಟೆ ಕಿಚ್ಚು ಅಂತೀನಿ” ಹೆಣ್ಣಿಲಿ ಬೇಸರದಿಂದ ನುಡಿಯಿತು. “ಪ್ರಪಂಚವೆಲ್ಲ ನಿನ್ನ ಹಾಗೆ ಇತದಂತ ತಿಳ್ಕೊಂಡಿ ಏನು! ಈಗಿವ್ಳು ಬಾಯಿ ಮುಚ್ಕೊಂಡಿದ್ರೆ ಜನ ಬಾಯಿ ಮುಚ್ಕೊಂಡಿತಾರೇನು?” +“ಯಾಕೆ ಚಿನ್ನಾ! ನನ್ನೂ ಪ್ರಪಂಚದ ಗಂಡಸರೊಂದಿಗೆ ಹೋಲಿಸ್ತೀಯಾ! ಪ್ರಪಂಚ ಕಟ್ಕೊಂಡು +ಏಗೋದ್ಯಾಕೆ? ಇದ್ರು ಆಡ್ಕೊಳ್ತಾರೆ, ಇಲ್ದಿದ್ರೂ ಆಡ್ಕೊಳ್ತಾರೆ! ಜನರನ್ನು ಮೆಚ್ಚಿಸೋಕಾಗಿ ಬದುಕಲಿಕ್ಕಾಗ್ತದೇನು?” +ಇದು ಮೊದ್ಲೇ ಮೇಲ್ ಡಾಮಿನೇಷನ್ ಸೊಸೈಟಿ ಕಣಪ್ಪಾ… ಇಡೀ ಸಾಮಾಜ ತನ್ನೆಲ್ಲ ಕಣ್ಣುಗಳ್ನ ಸದಾ ಹೆಣ್ಣೀನ ಕಡೀಗೆ ಗುರಿ ಇಟ್ಕೊಂಡು ಕೂತಿತದೆ… ಒಂಚೂರು ಅನುಮಾನ ಬಂದ್ರೂನೂವೆ ಸಾವಿರಾರು ಬಾಯಿಗಳು ಪಟಪಟಾಂತ ಮಾತಾಡೋಕೆ ಶುರುಮಾಡಿಬಿಡ್ತವೆ. +“ನಿನ್ನ ಮಾತೂ ಸರೆ ಬಿಡು… ನಿನ್ನಷ್ಟು ನಾನು ಜಾಣ ಇರಲಿಕ್ಕಿಲ್ಲ. ಇದನ್ನೆಲ್ಲ ಕೇಳಿ ರಘುರಾಮನೆಂಭೋನು ಈ ನಮ್ಮ ಹುಡುಗೀನ ಮದ್ವೆ ಆಗದಿದ್ರೆ ಎಂಬ ಭಯ ನನ್ನದು.” +“ಆದ್ರೆ ಆದಿತ್ಯವಾರ ಆಗದಿದ್ರೆ ಸೋಮವಾರ. ಆಗದಿದ್ರೆ ಆಗಲಿಲ್ಲ. ನಮ್ಮ ಅನಸೂಯ ಏನು ಅವಿದ್ಯಾವಂತೆಯಲ್ಲ . ಸಾಕಷ್ಟು ಓದ್ಕೊಂಡಿದ್ದಾಳೆ. ಕಾಲೇಜಿಗೇನೆ ಫಸ್ಟ್‌ಕ್ಲಾಸ್ ಮಾರ್ಕ್ಸ್ ತಗೊಂಡು ಪಾಸಾಗಿದ್ದಾಳೆ… ಯಾವುದಾದ್ರು ನೌಕರಿ ಸಿಕ್ಕೇ ಸಿಗ್ತದೆ… ಗಂಡಸಿನಂತೆ ಜೀವನ ನಡೆಸ್ತಾಳೆ…” +“ಆದ್ರೆ ಅವಿವಾಹಿತೆಯಾಗಿ…” +“ಹೌದು, ಅದ್ರಲ್ಲೇನು ತಪ್ಪಿದೆ? ಮದುವೆ ಮಾದ್ಕೊಳ್ಳದೇನೆ ಎಷ್ಟು ಜನ ಮಹಿಳೆಯರು ಧೈರ್ಯದಿಂದ ಜೀವನ ಮಾಡ್ತಿಲ್ಲ? ಅವರೆಲ್ಲರಂತೆಯೇ ಅನಸೂಯ” +“ನೀನು ಏನೇ ಹೇಳು ಬಂಗಾರ… ಒಂಟಿಯಾಗಿ ಹೆಣ್ಣು ಈ ಸಮಾಜದಲ್ಲಿ ಜೀವಿಸೋದು ಕಷ್ಟ. ಹೆಣ್ಣಿಗೊಂದು ಗಂಡು ಬೇಕೇ ಬೇಕು.” +“ಅದೆಲ್ಲ ನಿನ್ನಂಥ ಗಂಡಸರು ಸಹಸ್ರ ಸಹಸ್ರ ವರ್ಷಗಳಿಂದ ಹುಟ್ಟು ಹಾಕಿ ಬೆಳೆಸಿಕೊಂಡು ಬಂದಿರೋ ಬೆದರುಗೊಂಬೆ” ಗಂಡನ ತರ್ಕಕ್ಕೆ ಹೆಣ್ಣಿಲಿ ರೋಸಿತು. “ಅನಸೂಯಾಳ ಬದುಕಿನಲ್ಲಿ ಅಂಥ ಸಂದರ್ಭ ಬಲಿಕ್ಕಿಲ್ಲ ಎಂಬುದೇ ನನ್ನ ಭಾವನೆ. ” +“ಹಾಗಾದ್ರೆ ಸೋದರ ಮಾವನೇ ಅನಸೂಯಾಳನ್ನು ಮದುವೆಯಾಗ್ತಾನಂತೀಯಾ?” +“ಹೌದು ಖಂಡಿತ ಆಗ್ತಾನೆ.” +“ಎಲ್ಲಾ ತಿಳಿದ ನಂತರವೂ… ” +“ಹೌದು ಎಲ್ಲಾ ತಿಳಿದ ನಂತರವೂ!” +“ನೀನು ಏನೇ ಹೇಳು… ಮುಂದೆ ಪರಸ್ಪರ ದೈಹಿಕ ಆಕರ್ಷಣೆ ಕಡಿಮೆಯಾದ ಮೇಲೆ ಪರಸ್ಪರ ಅನುಮಾನಗಳು ತಲೆದೋರದೆ ಇರಲಿಕ್ಕಿಲ್ಲ.” +“ಎಲ್ಲ ಅನುಮಾನಗಳು ಎಲ್ರಿಗೂ ಬರೋದಿಲ್ಲ… ರಘೂನ ಮನಸ್ಸು ದೊಡ್ಡದು ಅಂಥ ಅನುಮಾನಕ್ಕೆ ಆಸ್ಪದ ಕೊಡದೆ ಅನಸೂಯಾಳನ್ನು ಸಯಾಗೆ ನೋಡ್ಕೊಳ್ತಾನೆ.” +“ಶಾಮಾಶಾಸ್ತ್ರೀಗೂ, ರಘೂಗೂ ಫರಕಿದೆ.” +“ಹೌದು! ಇಲ್ಲವೆಂದೋಯಾರು? ಎರಡು ದಿಕ್ಕುಗಳ ನಡುವೆ ಇರೋ ಅಷ್ಟು ವ್ಯತ್ಯಾಸವಿದೆ!” +“ಶಾಮೂನ ಮನಸ್ನಲ್ಲಿಟ್ಕೊಂಡು ರಘೂನ ಹೆಂಡತಿಯಾಗಿ ಬದುಕಬೇಕಲ್ಲ ನಮ್ಮ ಅನಸೂಯಾ.” +“ಸೂರ್ಯೋದಯಕ್ಕೆ ಪಾರ್ವಭಾವಿಯಾಗಿ ಕತ್ತಲೆ ಹೇಗೆ ಹಂತಹಂತವಾಗಿ ಕಡಿಮೆಯಾಗುವುದೋ ಹಾಗೇನೆ ರಘುನ ಸಾಮೀಪ್ಯದಿಂದ ಅನಸೂಯಾ ತ್ರಿಕರಣ ಪುರ್ವಕವಾಗಿ ದಾಂಪತ್ಯ ಜೀವನ ಸಾಗಿಸುತಾಳೆ… ನೋಡ್ತಿರು.” +“ಆಕೆಯ ಗಂಡನ ಮನೆಗೆ ನಾವಿಬ್ರೂ ಹೇಗಾದ್ರು ಮಾಡಿ ಹೊರಟುಹೋಗೋಣ.” +“ಹೌದೌದು. ಒಳ್ಳೆಯ ಐಡಿಯಾ.” +“ಹೇಗೆ ಅಷ್ಟು ದೂರ ಪ್ರಾಯಾಣ ಮಾಡೋದು.?” +“ಹೊಸದಾಗಿ ಮದುವೆಯಾದವರೆಂದಮೇಲೆ ತಿಂಡಿ ಡಬ್ಬಿಗಳು; ಹಾಸಿಗೆ ಸುರುಳಿ ಹೀಗೆ ಏನಾದರೊಂದು ಸಾಮಾನು ಇದ್ದೇ ಇತವೆ. ಅವುಗಳಲ್ಲಿ ಹೇಗೋ ಜಾಗ ದೊರಕಿಸಿಕೊಂಡು ನಾವಿಬ್ರು ಹೋದರಾಯಿತು.” +“ಹೌದು! ನೀನು ಹೇಳೋದೇನೋ ಸರಿ; ಅಲ್ಲೂ ಇಲ್ಲಿದ್ದಂತೆ ಯಾವುದಾದ್ರು ಬೆಕ್ಕು ಸಾಕ್ಕೊಂಡಿದ್ರೆ ಏನಪ್ಪ ಮಾಡೋದು?” +’ನಗರದ ಮಂದಿ ನಾಯಿ ಮೇಲೆ ತೋರಿಸಿದಷ್ಟು ಪ್ರೀತಿಯನ್ನು ಬೆಕ್ಕುಗಳ ಮೇಲೆ ತೋರಿಸೋದಿಲ್ಲ. ಬೆಕ್ಕು ಅವರಿಗೆ ಪೆಟ್ ಅನಿಮಲ್ಲಲ್ಲ. ಜೊತೆಗೆ ನಾನಿತೀನಲ್ಲ! ನೀನ್ಯಾಕೆ ಹೆದತಿ.” +“ಅದು ಸರಿ… ನೀನೋ ಮಹಾ ರಸಿಕ. ಮಾಸ್ಟರ್ ಇನ್ ಎರಾಟಿಕ್ ಆರ್ಟ್ಸ್; ನೀನೇನಾದ್ರು ಪಟ್ಟಣದ ಹುಡ್ಗೀಗೆ ಲೈನ್ ಹೊಡೆಯೋಕೆ ಶುರುಮಾಡಿದ್ರೆ ನಾನೇನು ಮಾಡ್ಲಿ?” +“ಈ ಹೆಂಗಸರಂದ್ರೆ ಇಷ್ಟೆ ನೋಡು. ಏನಾದರೊಂದು ಕ್ಯಾತೆ ತೆಗೀತಾನೆ ಇರ್ತಾರೆ, ನಾವಿಬ್ರೂ ಗಾಂಧರ್ವ ವಿವಾಹವಾಗಿ ಇಷ್ಟು ದಿನಗಳಾದ್ವು. ಯಾವತ್ತಾದ್ರು ಕಚ್ಚೆ ಹರಕ ಬುದ್ಧಿ ತೋಸಿದಿನೇನು?” ಹೆಂಡತಿ ಕಡೆ ಬೆನ್ನು ಮಾಡಿ ಮುಖ ಸಿಂಡರಿಸಿಕೊಂಡಿತು ಗಂಡಿಲಿ. +“ಲೋಕಾರೂಢಿ ಮಾತಾಡಿಯಾಕೆ ಸಿಟ್ಟು ಮಾಡ್ಕೊಂತಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡವರಂತೆ… ಎಲ್ಲಿ… ನನ್ ಜಾಣ… ಮುಖ ತಿರಿಗಿಸು… ಕಿಸ್ ಕೊಡ್ತೀನಿ ಮತ್ತೆ” ಹೆಣ್ಣಿಲಿ ಗಂಡಿಲಿಯನ್ನು ಪರಿಪರಿಯಾಗಿ ರಮಿಸತೊಡಗಿತು. +ಅನಸೂಯಳ ಕೈಹಿಡಿಯುವ ರಘುರಾಮ ಎಂಬ ತರುಣ ಬೆಂಗಳೂರಿನಿಂದ ಬಂದಿರುವನೆಂಬ ಸತ್ಯಸಂಗತಿ ಓಣಿ ತುಂಬಿ; ಊರು ತುಂಬಿ ಅಕ್ಕಪಕ್ಕದೂರುಗಳ ಕಡೆಗೂ ಜಿನಗತೊಡಗಿತು. ಯಾಕೆಂದರೆ ಅನಸೂಯಾ ಗುರುತಿಸಲ್ಪಡುತ್ತಿದ್ದುದೇ ವಾಮಾಚಾರ ರುದ್ರನಾಯಕನ ಮಗಳು ಎಂದೊಂದು ಬಗೆಯದ್ದಾಗಿದ್ದರೆ; ಗ್ರಾಮದ ಮತ್ತೊಂದು ಮಹಾನ್ ವೈದಿಕ ಕುಳವಾದ ಪರಮೇಶ್ವರ ಶಾಸ್ತಿಗಳ ಮೊಮ್ಮಗ ಶಾಮಾಶಾಸ್ತ್ರಿ ತಲೆಗೆ ಏನೇನೋ ತಿಕ್ಕಿ ಮೊನ್ನೆ ಮೊನ್ನೆವರೆಗೆ ತನ್ನ ವ್ಯಾನಿಟಿ ಬ್ಯಾಗಿನೊಳಗಿಟ್ಟುಕೊಂಡಿದ್ದಳು ಎಂಬುದಿನ್ನೊಂದು ರೀತಿಯದ್ದು. ಅನಸೂಯ ಇರದಿದ್ದರೆಲ್ಲಿ ಶಾಮು ಕಾಲೇಜು ಮುಗಿಸುತ್ತಿದ್ದ. ಅನಸೂಯ ಇರದಿದ್ದಲ್ಲಿ ಗೊಬ್ಬರದಂಗಡಿ ಜಲಜಾಕ್ಷಿ ಕೈಲಿ ಆ ಪುಳಿಯೋಗರೆ ಅಪ್ಪಚ್ಚಿಯಾಗಿ ಅಶ್ವತ್ಥ್ ಕಟ್ಟೆಯ ಮೇಲೆ ಪದ್ಮಾಸನ ಹಾಕಿಕೊಂಡಿರುತ್ತಿತ್ತು. ಅದೂ ಅಲ್ಲದೆ ಅದಕ್ಕೆ ಸಂಸ್ಕೃತ ಬಿಟ್ಟರೆ ಬೇರೆ ಇನ್ನೇನು ಬರುತ್ತಿತ್ತು? ಅನಸೂಯಾಳೇ ಅವನನ್ನು ಸಾರ್ವಜನಿಕವಾದ ಮನುಷ್ಯನನ್ನಾಗಿ ಮಾಡಿದಾಕಿ. ಆಕೆ ಶಾಮು ಇಬ್ಬರೂ ಸತಿಪತಿಗಳಾಗಿ ಬಿಟ್ಟಿದ್ದಲ್ಲಿ ಅದರ ಮಜವೇ ಬೇರಿರುತ್ತಿತ್ತು. ಅವಮಾನ ತಾಳಲಾರದೆ ಶಾಸ್ತ್ರಿಗಳು ತಾವೂ; ತಮ್ಮ ಸೊಸೆಯೂ ಏಕಕಾಲಕ್ಕೆ ದತ್ತೂರಿ ಕಷಾಯ ಕುಡಿದು ಅತ್ತ ಕೈಲಾಸಕ್ಕೆ ಹೋಗದೆ ಇತ್ತ ವೈಕುಂಟಕ್ಕೂ ಹೋಗದೆ ಅತಂತ್ರಸ್ಥಿತಿಯಲ್ಲಿ ಪ್ರೇತ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು. ಇದನ್ನೇ ಗ್ರಾಮದ ಬಹುಪಾಲು ವಖ್ತಾರರು ಯೋಚಿಸಿದ್ದುದು. ಅವರೆಲ್ಲ ಆ ಎರಡು ಧ್ರುವಗಳ ನಡುವಿನ ಒಡನಾಟಕ್ಕೆ ತಕ್ಕದಾದ ರಂಗಸಜ್ಜಿಕೆ ನಿರ್ಮಿಸಿ ತಾವು ಪ್ರೇಕ್ಷಕರಾಗಿ ನೈಪಥ್ಯದಲ್ಲಿ ಉಳಿದುಬಿಟ್ಟಿದ್ದರು. +(ಕೆಂಪು) +ಕೆಲವರು ಹಲವಾರು ರೀತಿಯಲ್ಲಿ ಇದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವುದುಂಟು. ಸದಾ ತನ್ನ ಸೆರಗಿಗೆ ಜೋತು ಬಿಳುವಮಗ ಅದೆಲ್ಲಿ ತಪ್ಫೋಗುವನೋ ಎಂದು ಅಲುಮೇಲಮ್ಮನೇ ಏನೋ ಒಂದು ಕರಾಮತ್ತು ಮಾಡಿ ಜೋಡಿ ಅಗಲಿಸಿದ್ದಾಳೆ ಎಂಬುದು ಒಂದು ತಂಡದ ತರ್ಕವಾದರೆ ಇನ್ನೊಂದು ತಂಡ ಯೋಚಿಸಿದ್ದೇ ಬೇರೆ, ಅನಸೂಯಳಂಥ ಅಪ್ಸರೆ ದ್ರಾಬೆಯಂಥ ಶಾಮಾಶಾಸ್ತ್ರಿಯನ್ನು ಪ್ರೀತಿಸುವುದುಂಟೇನು! ಒಂದೇ ಓಣಿಯವರು, ಒಂದೇ ಕಾಲೇಜಿನಲ್ಲಿ ಓದಿಕೊಂಡೋರು… ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರು ಲಿಂಗಭೇದವಿಲ್ಲದೆ ಜೊತೆಜೊತೆಯಾಗಿ ಅಡ್ಡಾಡಿದಾಕ್ಷಣ ಅವರಿಬ್ಬರಲ್ಲಿ ಲೈಂಗಿಕ ಸಂಭಂದ ಕಲ್ಪಿಸಿಕೊಳ್ಳೋದು, ಅವರಿಬ್ಬರು ಪರಸ್ಪರ ಮದುವೆ ಆಗ್ತಾರೆ ಎಂದು ಊಹಿಸಿಕೊಳ್ಳೋದೇ ಮೂರ್ಖತನವೆಂಬುದು ಹಲವರ ತರ್ಕ. ಇನ್ನು ಕೆಲವರು ಜಾರ್ಜ್ ಫರ್ನಾಂಡಿಸ್ ಬಂದ ಸಂಜೆ +ಶಾಮಾಶಾಸ್ತ್ರಿ ಆಕೆ ಮೇಲೆ ರೇಪ್ ಮಾಡಲು ಹೋದನೆಂದೂ; ಆಕೆ ತನ್ನ ಮೊಣಕಾಲಿಂದ ಅವನ ಮರ್ಮಾಂಗದ ಮೇಲೆ ಪ್ರಹಾರ ಮಾಡಿದಳೆಂದೂ; ವಂಶಾಭಿವೃದ್ದಿ ಆಗುವುದೋ ಇಲ್ಲವೋ ಎಂದು ಅಲುಮೇಲಮ್ಮ ಕಂಗಾಲಾಳೆಂದೂ; ವೈದ್ಯ ಮಾರ್ತಾಂಡ ಕುರುಬರ ಸೋಮಣ್ಣ ರಾತ್ರೋರಾತ್ರಿ ಲೇಹ್ಯ ಲೇಪಿಸಿ ಇಲಾಜು ಮಾಡಿದನೆಂದೂ ಆಡಿಕೊಂಡರು. ಇಂಥ ವಾದವನ್ನು ಪುಷ್ಟೀಕರಿಸುವ ಅಥವಾ ಅಲ್ಲಗಳೆಯುವ ರೀತಿಯಲ್ಲಿ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ಹೊಸಪೇಟೆಗೆ ಕನ್ಯಾನ್ವೇಷಣೆಗೆ ಕರೆದುಕೊಂಡು ಹೋಗದಿದ್ದರ ಬಗ್ಗೆ ಮಾತಾಡಿಕೊಂಡರು. ಇವರೆಲ್ಲರಿಗಿಂತ ಬಾಯಿ ಜೋರು ಮಾಡಿ ಶಾಸ್ತ್ರಿಗಳೇ ತಮ್ಮ ಮೊಮ್ಮಗ ಶಾಮನಿಗೆ ಹೊಸಪೇಟೆಯ ವೇದಾಂತ ರಾಜಗೋಪಾಲಾಚಾರ್ಯರ ಮೊಮ್ಮಗಳು ವರಲಕ್ಷ್ಮಿಯನ್ನು ಗೊತ್ತು ಮಾಡಿರುವುದಾಗಿ ಸುದ್ದಿ ಮಾಡಿದರು. ಈಶ್ವರ ದೇವರ ಎದುರು ಬಸವಣ್ಣನಂತೆ, ಚಾದಂಗಡಿ ಎದುರು ಬೀಡಿ ಅಂಗಡಿಯಂತೆ ಅವರು ಸದಾ ಬೆನ್ನ ಹಿಂದೆ ಕಟ್ಟಿಕೊಂಡು ಗ್ರಾಮದ ಪ್ರತಿಷ್ಟಿತರ ಮನೆಗಳಿಗೆ ಒಂದಲ್ಲಾ ಒಂದು ನೆವ ಹೂಡುಕಿಕೊಂಡು ಅಲೆದಿದ್ದೇ ಅಲೆದದ್ದು. ತಮ್ಮ ಮೊಮ್ಮಗನ ಮದುವೆ ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ತಮ್ಮ ಬಗ್ಗೆ ಇರುವ ಒಂದು ನಂಬುಗೆಯನ್ನು ಮೂಲೋತ್ಪಾಟನೆ ಮಾಡಲಿರುವುದನ್ನು ಸೂಚ್ಯವಾಗಿ ವಿಶದಪಡಿಸುವುದೇ ಅವರ ಓಡಾಟದ ಪ್ರಮುಖ ಕಾರಣವಾಗಿತ್ತು. ರುದ್ರನಾಯಕನ ಮಗಳಿಗೂ ತಮ್ಮ ಮೊಮ್ಮಗನಿಗೂ ಯಾವುದೇ +ಸಂಬಂದವಿಲ್ಲವೆಂಬುದನ್ನು ಅವರ ಪ್ರತಿಯೊಂದು ಮಾತೂ ಸಮರ್ಥಿಸುವಂತಿತ್ತು. ಕಲಿಯುಗದಿಂದಾಗುತ್ತಿರುವ ಉಪಟಳವನ್ನು ಶಾಮು ಸ್ವಜಾತಿ ಸ್ವಗೋತ್ರದಲ್ಲಿ +ಮದುವೆಯಾಗುವುದರ ಮೂಲಕ ತಡೆಯಲಿರುವುದನೆಂಬುದು. ತಾವು ನೋಡಿರುವ ಹುಡುಗಿ ಸಾಮಾನ್ಯಳೇನು? ಅವಳುದಿಸಿರುವ ವಂಶ ಸಾಮಾನ್ಯವೇನು? ವೇದಾಂತಿ +ರಾಜಗೋಪಾಲಾಚಾರ್ಯರು ಹೊಸಪೇಟೆ ಅಗ್ರಹಾರದಲ್ಲಿ ಈಗಷ್ಟೊಂದು ಸ್ತಿತಿವಂತರಲ್ಲದಿರಬಹುದು! ಒಂದು ಕಾಲಕ್ಕೆ ಅವರ ವಂಶದವರು ವಿಜಯನಗರದರಸರ ಬಳಿ ಜ್ಯೋತಿಷ್ಯ ಸಲಹೆದಾರರಾಗಿದ್ದರು. ಆನೆಗೊಂದಿ ಬಳಿ ಇರುವ ಎರಡು ಹಳ್ಳಿಗಳನ್ನು ಅವರಿಗೆ ಉಂಬಳಿಯಾಗಿ ನೀಡಿದ್ದರೆಂದು ವಿವರಿಸುವ ದತ್ತಿ ಶಾಸನ ತುಂಗಭದ್ರೆಯೊಳಗೆ ಹೂತುಹೋಗಿರುವುದಂತೆ. ಕಲಿಕಾಲದ ಮಹಿಮೆ. ಆ ಎರಡು ಹಳ್ಳಿಗಳು ಎಲ್ಲಿ ಹೋದವೋ ಏನೋ? ಟಿಪ್ಪು +ಸುಲ್ತಾನನ ಕಾಲದವರೆಗಿದ್ದ ಅವರು ಸಾವಿರಾರು ಎಕರೆ ಜಮೀನನ್ನು ರೆಟ್ಟೆಯಲ್ಲಿ ಬಲವಿದ್ದ ಶೂದ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡರಂತೆ, ಜ್ಯೋತಿಷ್ಯ +ಪಂಚಾಂಗಗಳನ್ನವಲಂಬಿಸಿಯೇ ಬದುಕಿದ ಹಿರಿಯರು ಕಿಲುಬು ಕಾಸಿಗೆ ಎಂದೂ ಕೈಚಾಚಿದವರಲ್ಲವಂತೆ. ಮನೆಯಲ್ಲಿ ಲಕ್ಷ್ಮಿಯ ವಾಸನೆ ನೆಲಸಿರದಿದ್ದರೂ, ವಾಙ್ ಮೇ ಮನಸಿ ಪ್ರತಿಷ್ಠಿತಾ ಮನೋ ಮೇ ವಾಚೇ ಪ್ರತಿಷ್ಠಿತಾ ಎಂಬ ಐತರೇಯ ಶ್ರುತಿಯಂತೆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದವರಂತೆ, ಮನಸ್ಸನ್ನು ಮಾತಿನೊಳಗಿಟ್ಟುಕೊಂಡು, ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಅಂತ ಹೇಗೋ ಒಂದು ರೀತಿ ಕಾಲ ಹಾಕುತ್ತಿದ್ದರಂತೆ. ಶಿವ ಮತ್ತು ವಿಷ್ಣು ಅವರ ಅಶನ ವಸನಕ್ಕೆ ಯಾವುದೇ ರೀತಿಯಲ್ಲಿ ಕಡಿಮೆಯಾಗದಂತೆ ನೋಡಿಕೊಂಡು ಬಂದಿರುವರಂತೆ, ಅಂಥ ವಂಶಸ್ಥರಾದ ವೇದಾಂತಿ +ರಾಜಗೋಪಾಲಾಚಾರ್ಯರು ಸಾಮಾಜಿಕವಾಗಿ ರಾಜಕೀಯವಾಗಿ ಒಳ್ಳೆಯ ಪ್ರಭಾವಶಾಲಿಗಳಾಂತೆ. ಅನೇಕ ರಾಜಕಾರಣಿಗಳು ಈಗಲೂ ಅವರನ್ನು ಕೇಳದೆ ಏನೂ ಕೆಲಸ ಮಾಡುವುದಿಲ್ಲವಂತೆ, ಅವರ ಧರ್ಮ ಪತ್ನಿಯೂ ಐದಾರು ಗಂಡುಮಕ್ಕಳನ್ನು ಹೆತ್ತು ಹೊತ್ತು ಅಮೃತ ಘಳಿಗೆಯಲ್ಲಿ ಕಣ್ಣು ಮುಚ್ಚಿದಳಂತೆ… ತಮ್ಮ ಪುತ್ರ ಸಂತಾನವನ್ನು ಅದ್ವಿತೀಯ ಪಂಡಿತರನ್ನಾಗಿ ಮಾಡುವ ಆಸೆಯೇನೋ ಇತ್ತಂತೆ. +ಆದರೆ ಅವು ಕಾಲ ಬದಲಾಗಿದೇಂತ ಇಂಗ್ಲೀಷು ಓದಿಕೊಂಡು ಐದಾರು ನಮೂನೆಯ ಲಾಭದಾಯಕ ಇಲಾಖೇಲಿ ಕೆಲಸ ಮಾದುತ್ತಿದ್ದವಂತೆ. ಲಾಂಚಮುಟ್ಟುತ್ತಿರಲ್ಲಿಲ್ಲವಂತೆ. ಕೆಟ್ಟಚಾಳಿಗಳೊಂದೂ ಇರಲಿಲ್ಲವಂತೆ. (ರಾಣಿಪೇಟೆಯ ಅನೇಕರು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ ನಗರದ ಅನೇಕರು ಅಂದುಕೊಳ್ಳುತ್ತಿರುವಂತೆ +ಅವರಿಗೆ ನಗರದ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ನಗರದ ಹಲವರು ಅಂದುಕೊಳ್ಳುವಂತೆ ಅವರಿಗೆ ನಗರದ ಎಲ್ಲಾ ಮಿಲಿಟರಿ ಹೋಟೆಲುಗಳು ಸಲದು ಬೀಳುತ್ತಿದ್ದವು) ಅವರು ಮನೆಯಿಂದ ಒಯ್ಯುತ್ತಿದ್ದ ನೀರನ್ನು ಮಾತ್ರ ಕುಡಿಯುತ್ತಿದ್ದರಂತೆ (ನೆಹರೂ ಕಲೋನಿಯ ನಿವಾಸಿಗಳು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ನಗರದ ಎಲ್ಲಾ ಬಾಗಳಲ್ಲಿ ಫೈಟಿಂಗ್ +ಮಾಡುತ್ತಿದ್ದರಂತೆ) ಅವರು ಪರನಾರಿ ಸಹೋದರರಾಗಿದ್ದರಂತೆ. (ಗಾಂಧೀ ನಗರದ ವಾಸಿಗಳ ಅಭಿಪ್ರಾಯದಂತೆ ಅವರೆಲ್ಲ ಇಡೀ ರಾತ್ರಿ ವೇಶ್ಯಾವಾಟಿಕೆಯಲ್ಲಿ ಕಳೆಯುತ್ತಿದ್ದರಂತೆ) ಅವರ ಪೈಕಿ ಒಬ್ಬರು ಅಪಘಾತದಲ್ಲಿ ಸತ್ತರೆ; ಇನ್ನೊಬ್ಬರು ಅರ್ಥವಾಗದ ಕಾಹಿಲೆಯಿಂದ ಸತ್ತರು. ಮತ್ತೊಬ್ಬ ದೇಶಾಂತರ ಹೋದ. +ಮಗದೊಬ್ಬ ಚಿತ್ತಭ್ರಮಣೆಯಾಗಿ ಕೋದಂಡರಾಮ ದೇವಸ್ಥಾನದ ಬಳಿ ದೇಹಿ ಎಂದು ಬಂದವರಿಗೆಲ್ಲ ವರನೀಡುತ್ತ ಯೋಗಿಯಾಗಿರುವನು. (ಅವರಿಗೆಲ್ಲ ಯುಕ್ತ ವಯಸ್ಸಿನಲ್ಲಿ ಮದುವೆ ಮಾಡಿಬಿಡಬಹುದಿತ್ತು. ಆದರೆ ಕೊಡೋಯಾರು? ಮಾಡಿಕೊಳ್ಳೋಯಾರು?) ಉಳಿದವನೊಬ್ಬನಿಂದಲೂ ಅಂತಿಮ ಯಾತ್ರೆ ಮಾಡಿಸಿಕೊಳ್ಳುವ ಪುಣ್ಯ ಆಚಾರ್ಯರ ಹಣೆಯಲ್ಲಿ ಬರೆದಿರಲಿಲ್ಲ. ಅವನೂ ಎರಡು ವರ್ಶಗಲ ಹಿಂದೆ ವಾತಪಿತ್ತ ಕಫವೇ ಮೊದಲಾದ ರೋಗಗಳ ಜೊತೆಗೆ ದೇಹದ +ಬಲಪಾರ್ಶ್ವ ಏನಕೇನ ಬಿದ್ದು ಹೋಗಲು ಅವನು ನರ ರೋಗ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದು ಬಿಡಬೇಕೆ? ಒಟ್ಟಿನಲ್ಲಿ ತಮ್ಮ ಪ್ರಾರಬ್ದ! ಸೊಸೆಯನ್ನೂ ಮೊಮ್ಮಗಳನ್ನೂ ಜ್ಯೋತಿಷ್ಯದ ಸಹಾಯದಿಂದ ಸಾಕಿ ಸಲಹಬೇಕಾಗಿ ಬಂದಿರೋದು! ಮೊಮ್ಮಗಳು ವರಲಕ್ಶ್ಮಿ ಪರಪುರುಶರ ಕಡೆ ಎಂದೂ ಮುಖ ಎತ್ತಿ ನೋಡಿದಾಕಿಯಲ್ಲ! ಸದಾ ಅವನತ ಮುಖಿ, ಆಚಾರ ವಿಚಾರದಲ್ಲಿ ತುಂಬ ಕಟ್ಟಿನಿಟ್ಟು, ಪ್ರಾಣ ಬೇಕಾದರೂ ಬಿಟ್ಟಾಳು, ಆದರೆ ಸಂಪ್ರದಾಯವನ್ನು ಮಾತ್ರ +ಬಿಡಲಾರಳು, ಸ್ವಲ್ಪ ಸ್ಥೂಲದೇಹಿ ಇರಬಹುದು, ಆದರೆ ಆಕೆಯ ಮುಖದಲ್ಲಿ ಎಂಥ ತೇಜಸ್ಸೂ ಏನು ಕಥೆ? ಮೂಗು ಸ್ವಲ್ಪ ಮೊಂಡಿರಬಹುದು. ಆದರೆ ಕಣ್ಣುಗಳಲ್ಲಿ ಎಂಥ ಬೇಳಕು ಏನು ಕಥೆ? ಮೇಲ್ದವಡೆಯ ಮುಂದಿನೆರಡು ಹಲ್ಲುಗಳು ಕೆಳದುಟಿಗಳ ಮೇಲೆ ಕೂಡ್ರುತ್ತಿರಬಹುದು. ಆದರೆ ಜಡೆ ಎಷ್ಟುದ್ದಾ +ಏನು ಕಥೆ? ಜನಿಸಿರೋದೂ ಸ್ವಾತಿ ನಕ್ಷತ್ರದಲ್ಲಿ, ರಜಸ್ವಲೆಯಾಗಿರುವುದೂ ಸ್ವಾತಿ ನಕ್ಷತ್ರದಲ್ಲೇ. ಪಂಚಮಹಾ ಪತಿವ್ರತೆಯರಂತೆ ಈಕೆಯೂ +ಪತಿವ್ರತೆಯಾಗುತ್ತಾಳೆಂಬುದರ ಬಗ್ಗೆ ಶಾಸ್ತ್ರಿಗಳು ಹೇಳಿಕೊಂಡಿದ್ದೇ ಹೇಳಿಕೊಂಡಿದ್ದು. ಎಲ್ಲಕ್ಕಿಂತ ಮುಖ್ಯವಾಗಿ ತಮಗೂ ರಾಜಗೋಪಾಲಾಚಾರ್ಯರಿಗು ನಡುವೆ ಅಂಥ ವ್ಯತ್ಯಾಸವಿರದಿದ್ದುದು, ತಮ್ಮದು ಪ್ರಸಿದ್ಧ ವಂಶ, ಅವರದ್ದೂ ಪ್ರಸಿದ್ಧ ವಂಶ, ತಮ್ಮ ಮಗನೂ ದುರ್ಮರಣವನ್ನಪ್ಪಿದ, ಅವರ ಮಕ್ಕಳೂ ಅಕಾಲ ದುರ್ಮರಣಕ್ಕೆ ತುತ್ತಾಗಿರುವರು. ತಮಗೂ ಒಬ್ಬ ವಿಧವೆ ಸೊಸೆ ಇರುವಳು, ತಮಗೂ ಒಬ್ಬ ಸಚ್ಚಾರಿತ್ರ್ಯದ ಮೊಮ್ಮಗ ಇರುವನು, ಅವರಿಗೂ ಸುಶೀಲೆಯಾದ ಮೊಮ್ಮಗಳಿರುವಳು. (ಆಕೆ ತಮ್ಮ ಶಾಮನಿಗಿಂತ ಒಂದೆರಡು ವರ್ಷ ಹಿರಿಯಳಿರಬಹುದು, ಗಂಡನನ್ನು ಸುಪರ್ದಿನಲ್ಲಿಡುವುದಕ್ಕೆ ವಯೋಮಿತಿ +ಹೆಚ್ಚಿದ್ದರಾಗುವುದೇನು!) ಜ್ಯೋತಿಷ್ಯ, ಕರಣ. ಯೋಗ, ತಿಥಿ, ವಾರ, ನಕ್ಷತ್ರಗಳೇ ಮೊದಲಾದ ಪಂಚಾಗಗಳಲ್ಲಿ ತಾವಿಬ್ಬರೂ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವವರು, ತಮ್ಮದು ಶಾಸ್ತ್ರಿಗಳ ವಂಶ, ಅವರದು ಆಚಾರ್ಯರ ವಂಶ, ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಆಚಾರ್ಯರು ರಾಜಕಾರಣಿಗಳ ಮೇಲೆ ತಮ್ಮ ಪ್ರಾಭಾವ ಬೀರಿ ಶಾಮನಿಗೆ ಸರಕಾರಿ ನೌಕರಿ ಸಿಗದಂತೆ ಮಾಡಲೊಪ್ಪಿರುವುದು. +ವಿವಾಹ ಪೂರ್ವ ಅಥವಾ ವಿವಾಹೋತ್ತರವಾಗಿ ಮೊಮ್ಮಗ ಶಾಮ ಪ್ರಸಿದ್ಧ ವೈದಿಕನಾಗಿ ಛಪ್ಪನ್ನಾರು ಹಳ್ಳಿಗಳಲ್ಲಿ ಹೆಸರುವಾಸಿಯಾದೊಡನೆ ತಾವು ಪರಮಾತ್ಮನ ಪರಮ ಸಾಯುಜ್ಯವನ್ನು ನಿಶ್ಚಿಂತೆಯಿಂದ ಪಡೆದುಬಿಡುವುದು. ಇದಕ್ಕೆಲ್ಲ ಶುಭಸೂಚಕವಾಗಿ ಮನೆ ಮುಂದಿನ ಕಟ್ಟೆಯೊಳಗಿನ +ತುಳಸಿಗಿಡ ಮೈತುಂಬ ಚಿಗುರು ಮುಡಿದುಕೊಂಡಿರುವುದು, ಕೋಗಿಲೆಯೊಂದು ಶಾಸ್ತ್ರಿಗಳು ಗಾಯತ್ರಿ ಜಪಿಸುವಾಗ ಮನೆ ಮುಂದಿನ ಕಣಗಿಲೆ ಗಿಡದೊಳಗೆ ಕೂತು ಕುಹೂ ಕುಹೂ ಎಂದು ಕೂಗುತ್ತಿರುವುದು, ಇದೆಲ್ಲಕ್ಕಿಂತ ಮುಖ್ಯವಾಗಿ ಕಾಮೋಷಿ ಎಂಬ ದರಿದ್ರ ಅಪಶಕುನದ ಬೆಕ್ಕು ಮನೆಯಿಂದ ಮೊನ್ನೆಯಿಂದಲೇ ತೊಲಗಿರುವುದು. ಮದುವೆಯ ಕಲ್ಪನೆಯಲ್ಲಿ ಗೃಹಕೃತ್ಯಗಳನ್ನು ಹಚ್ಚಿಸಿಕೊಂಡು ಅಲುಮೇಲಮ್ಮ ಸದಾ ನಿಮಗ್ನಳಾಗಿದ್ದರೆ, ಆಕೆಯ ಸುಪುತ್ರ ರಣಧೀರ ಕಂಠೀರವ +ನೌಕರಿಗಳಿಗೆ ಅರ್ಜಿ ಹಾಕುವ ನೆಪದಲ್ಲಿ ಅನಸೂಯಳ ಕಣ್ಣಿಗೆ ಬೀಳಕೂಡದೆಂದು ನಿರ್ಧರಿಸಿ ಕೋಣೆಯೊಳಗೆ ಹಗಲೆಲ್ಲ ಅವಿತುಕೊಂಡಿರುವನು. ಇನ್ನೂ ಶಾಸ್ತ್ರಿಗಳು ಮನೆಯಲ್ಲಿ ತುಳಸೀ ರಾಮಾಯಣ, ತೊರವೆ ರಾಮಾಯಣ ಅಂತ ಮನೇಲಿ ಕೂತುಕೊಂಡರಾಗುತ್ತದೆಯೇ? +ಗ್ರಾಮದ ಬಹುಪಾಲು ಮಂದಿ ಈ ‘ಜನ್ಮ ಜನ್ಮಲ ಅನುಬಂಧಂ’ದ ಬಗ್ಗೆ ಚರ್ಚಿಸಿಕೊಂಡರಾದರೂ ಇದನ್ನೇ ತಮ್ಮ ಚರ್ಚೆಯ ಮುಖ್ಯ ಭಾಗವನ್ನಗಿ ಸ್ವೀಕರಿಸಲಿಲ್ಲ ಎಂಬುದು ಉಲ್ಲೇಖಾರ್ಹ ಸಂಗತಿ. ತಾವು ಗುರಿ ಇಟ್ಟವರ ಬದುಕಿನಲ್ಲಿ ಸಂಭವಿಸಬಹುದಾದ ಅವಘಡಗಳ ಬಗ್ಗೆ ಸದಾ ತಲೆಕೆಡೀಸಿಕೊಳ್ಳುವ ಜನ ಶಾಸ್ತ್ರೋಕ್ತವಾಗಿ ಶಾಮ ಮದುವೆಯಾಗುವುದರ ಬಗ್ಗೆ ತಾವ್ಯಾಕೆ ತಲೆ ಕೆಡಸಿಕೊಂಡಾರು? ಅವನು ಪ್ರೇಮವೆಂಬ ಖೆಡ್ಡಾದಲ್ಲಿ ಬಿದ್ದು ಲಿಬಿಲಿಬಿ ಒದ್ದಾಡುವುದು, ಅನಸೂಯಳ ಸವಿನೆನಪಿನಲ್ಲಿ ಮೊಳ‌ಉದ್ದ ಗಡ್ಡ ಬಿಟ್ಟು, ಮಲಿನ ವಸನಂ ತೊಟ್ಟು, ಕೃಶಾಂಗನಾಗಿ, ನಿಡುಸುಯ್ಲಿಡುತ್ತ, +ಗೃಹಕೃತ್ಯಗಲಂ ಪರಿತ್ಯಾಜ್ಯಂ ಮಾಡಿ ಅನುಭಾವಿಯಂತೆ ಹಗಲಿರುಳುಗಳ ನಡುವೆ ಅರ್ಥ ಕಳೆದುಕೊಂಡು ಅಡ್ಡಾಡುತ್ತಿದ್ದಾಗ ಮಾತ್ರ ಅವನು ಮಾತಿನ ಆಟಿಕೆಯಾಗುವುದು ಸಾಧ್ಯ. ಕವಿ ಹೃದಯಿಯಾಗಿರುವ ಅವನ ಹೆಂಡತಿಯಾಗಲಿರುವ ಕಾವ್ಯ ಕನ್ನಿಕೆ ಹೇಗಿರಬಹುದೆಂಬ ಕುತೂಹಲ ಕೆಲವರಿಗೆ ಮಾತ್ರ ಹುಟ್ಟಿದ್ದು +ಅದೃಶ್ಯ ರೀತಿಯಲ್ಲಿ ಹೆಂಡತಿಯನ್ನು ಪಕ್ಕದಲ್ಲಿಟ್ಟುಕೊಂಡು ಹೋಗುತ್ತಿದ್ದ ಬರುತ್ತಿದ್ದ ಶಾಮ ಹಲವರಿಗೆ ಸಿಪಾಯಿಯಂತೆ ಗೋಚರಿಸಿದ್ದುಂಟು. ಇನ್ನೂ ಪರಿಶೀಲಾತ್ಮಕತೆಯಿಂದ ನೋಡಿದವರಿಗೆ ಅವನು ಹಲವು ರೂಪಗಳಲ್ಲಿ ಗೋಚರಿಸಬಹುದಾಗಿದ್ದ. ಜನ ಕೂಡ ಅದಕ್ಕೂ ರೆಡಿ ಇದ್ದರು, ಆದರೆ +ಅವರೆಲ್ಲರ ಗಮನವನ್ನು ಹರಣಮಾಡುತ್ತಿರುವ ರೀತಿಯಲ್ಲಿ ಘಟನೆಯೊಂದು ನಡೆಯಿತು. +ಹೆಚ್ಚು ತುಲನಾತ್ಮಕವಾಗಿ ನೋಡಿದವರಿಗೆ ಶಾಮಾಶಾಸ್ತ್ರಿಗಿಂತ ನೂರುಪಟ್ಟು ಮಿಗಿಲೆಂಬಂತೆ ಗೋಚರಿಸುವ ರಘುರಾಮ ಬಂದಿರೋದು, ಅನಸುಯಾಳನ್ನು ಅವನು +ಮದುವೆಯಾಗಲಿರುವುದು ಇದೆಲ್ಲ ಈ ಎರಡು ಮೂರು ದಿನಗಳಲ್ಲಿ ಹಳೆಯ ವಿಷಯವಾಗಿ ಬಿಟ್ಟಿತ್ತು. ಅವರಿಬ್ಬರ ಬಗ್ಗೆ ಜನ ಮಾತಾಡೋದನ್ನೇ ಮಾತಾಡಿ ಮುಗಿಸಿಬಿಟ್ಟಿದ್ದರಷ್ಟೆ, ಆದರೆ ರಘುರಾಮನೆಂಬುವನು ತನ್ನದೇ ಆದ ರೀತಿಯಲ್ಲಿ, ತನಗೆ ತಿಳಿದೋ; ತಿಳಿಯದೆಯೋ ಜನಸಮೂಹದ ಗಮನವನ್ನು ತನ್ನ ಕಡೆ ಸೆಲೆದುಕೊಂಡಿದ್ದ. ಅವನು ಬೆಂಗಳೂರಿನಲ್ಲಿ ಏನೆಂಬುದರ ಬಗ್ಗೆ ಜನ ಸಾಕಷ್ಟು ಮಾತಾಡಿಕೊಂಡರು. ಕೆಲವರು ಸಮಯ ಕಲ್ಪಿಸಿಕೊಂಡು +ಅವನನ್ನು ಸಂಧಿಸಿ, ವಿಧಾನಸೌಧ ನೋಡಿದ್ದೀರಾ ಎಂದೋ, ಲಾಲ್‌ಬಾಗೆಂಬುದು ಈ ಊರಷ್ಟು ಅಗಲ ಐತಂತೆ ಹೌದಾ ಎಂದೋ; ಅಲ್ಲೆಲ್ಲ ಕಾರ್ ಜೀಪುಗಳು ಇರುವೆ ಅಡ್ಡಾಡಿದಂತೆ ಅಡ್ಡಾಡ್ತವಂತೆ ನಿಜವೇ? ಎಂದೋ ಬಹುವಚನ ಗುಣವಿಷೇಶಣಗಳನ್ನು ಸೇರಿಸಿ ಕುತೋಹಲ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಹುಡುಗಿಯರು ಜೀನ್ಸು ಪ್ಯಾಂಟು ತೊಡುತ್ತಿರುವುದರ ಬಗ್ಗೆ; ಮುದುಕಿಯರು ಪಂಜಾಬಿ ಡ್ರೆಸ್ ತೊಡುತ್ತಿರುವುದರ +ಬಗ್ಗೆ; ಗಂಡು ಹೆಣ್ಣು ಸಾರ್ವಜನಿಕ ಪರ್ಸ್ಪರ ಮುದ್ದು ಕೊಡುಕೊಳ್ಳುತ್ತಿರುವುದರ ಬಗ್ಗೆ; ಅಲ್ಲಿ ಐದು ನಿಮಿಷಕ್ಕೊಂದು ಕೊಲೆ ಆತ್ಮಹತ್ಯೆ ಪ್ರಕರಣಗಳು ಪ್ರೇಮಪ್ರಕರಣಗಳಷ್ಟೇ ಸಲೀಸಾಗಿ ನಡೆಯುತ್ತಿವೆ ಎಂಬುದರ ಬಗ್ಗೆ; ಸಿನಿಮಾ ಯಾಕ್ಟರುಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ರಾಜಕುಮಾರ್ ಬಗ್ಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಡುತ್ತಿದ್ದರು. ರಘುರಾಮ ಮಾತ್ರ ಯಾವ ಪ್ರಶ್ನೆಗೂ ಬೇಸರಪಟ್ಟುಕೊಳ್ಳದೆ ಮಸಾಲೆ ಬೆರೆಸಿ ಉತ್ತರ ನೀಡಿ‌ಅವರನ್ನು +ಸಂತೃಪ್ತಿಗೊಳಿಸಿ ಗ್ರಾಮದಲ್ಲಿ ಪ್ರತಿಷ್ಟೆ ಹೆಚ್ಚಿಸಿಕೊಂಡಿದ್ದ. ಇವೆಲ್ಲಕ್ಕೂ ಕಳಸಪ್ರಾಯವಾಗಿ ಒಂದು ಘಟನೆ ನಡೆಯಿತು. ನೇರವಾಗಿ ನೋಡುವವರಿಗೆ ಇದೇನು ಗಮನಾರ್ಹ ಘಟನೆ ಎನಿಸದಿರಬಹುದು. +ಸದರೀ ಗ್ರಮದ ಉಡುಪಿ ಶ್ರೀಕೃಷ್ಣ ಭವನವೆಂಬುದು ಇಪ್ಪತ್ತೆರಡು ನಮೂನೆಯ ದೋಸೆಗಳಿಗೆ ಫೇಮಸೆಂದು ಬಂದ ಮಾರನೆ ದಿನವೇ ಗೊತ್ತಾಯಿತು. ಅವನು ಮೊದಲೇ ದೋಸೆ ಎಂದರೆ ಮೂಗು ಕೊಯ್ಯಿಸಿಕೊಳ್ಳುತ್ತಿದ್ದಂಥವನು. ಚಿಕ್ಕಂದಿನಿಂದಲೇ ಉಂಡಾಡಿ ಅಮರಪ್ಪ ತೋರಿಸಿದ ಮಸಾಲ ದೋಸೆಗೆ ಆಸೆಪಟ್ಟು ಸೂಲಗಿತ್ತಿ ಲಚ್ಚಮ್ಮನ ಮಗಳು ರೇಣುಕಾಗೂ ಓಬಳಾಪುರದ ಜಗಳಗಂಟಿ ತಿಂದಪ್ಪನ ಮಗ ಬಸವರಾಜುಗೂ ನಡುವೆ ಗೊಪ್ಯಾತಿಗೋಪ್ಯವಾಗಿ ನಡೆಯುತ್ತಿದ್ದ ಪ್ರಣಯದಾಟವನ್ನು ಪತ್ತೆ ಹಚ್ಚಿ ಏಕಕಾಲಕ್ಕೆ ದೋಸೆ ಮತ್ತು ಮಾವನ ಕೈಲಿ ಅಭೂತಪೂರ್ವ ಒದೆ ತಿಂದು ಹೆಸರುವಾಸಿಯಾಗಿದ್ದಂಥವನು. ಸಮಾಜ ಬದಲಾವಣೆಯ ಕ್ರಾಂತಿಕಾರಕ +ಕೆಲಸದ ನಡುವೆಯೂ ಯಾವ್ಯಾವ ಹೋತೆಲಲ್ಲಿ ಯವ್ಯಾವ ನಮೂನೆಯ ದೋಸೆ ಮಾಡುವರು ಎಂದು ಪತ್ತೆ ಹಚ್ಚುವಲ್ಲಿ ನಿಸ್ಸೀಮನಾಗಿರುವನು. ‘ಏನಯ್ಯಾ ನಿನಗೆ ಕ್ರಾಂತಿಗಿಂತ ದೋಸೇನೆ ಹೆಚ್ಚಾಯ್ತಲ್ಲ’ ಎಂದು ವ್ಯಂಗ ಆಡಿಸಿಕೊಂಡಿರುವನು, ಯಾವನೋ ಅಸಮಾನತೆಯನ್ನು +ಹೋಗಲಾಡಿಸುವ ಮೊದಲು ಗರಿಗರಿ ಎನ್ನುವ ಮಸಾಲೆ ದೋಸೆಯನ್ನು ತಿನ್ನಲೇಬೇಕು. ಮಸಾಲೆ ತಿನ್ನದ ಹೊರತು ಅವನಿಗೆ ಮಾರ್ಕ್ಸ್, ಏಂಗೆಲ್ಸ್, ಕ್ಯಾಸ್ಟ್ರೋ; ಚಿಗುವೇಲಾ ಯಾರೂ ಅರ್ಥವಾಗುವುದೇ ಇಲ್ಲ. ಹೋಗಲಿ ಪೊಂಗಲ್ ತಿಂದ ಮೇಲಾದರು ಗಾಂಧೀಜಿ ಅರ್ಥವಾಗುವುದು ಬೇಡವೆ? ದೋಸೆ ಮಾಡದ ಹೋಟೆಲ್‌ಗಳು ಅವನ ದೃಷ್ಟಿಯಲ್ಲಿ ಬಲಪಂಥಕ್ಕೆ ಸೇರಿದವುಗಳು. ಯಾವುದೇ ಹೊಟೆಲ್ಲಿಗೆ ಹೋದರೂ ಅವನ ಕಣ್ಣು ಕೆಂಪಗೆ ಮಾಡಿಕೊಂಡು ನೋಡುವುದು ತಿಂಡಿ ಹೆಸರುಗಳ ರೇಟಿನ ಬೋರ್ಡನ್ನು. +ದೋಸೆಗೆ ಬೋರ್ಡಿನಲ್ಲಿ ನೀಚಸ್ಥಾನ ದೊರಕಿದ್ದರಂತೂ ಅವನನ್ನು ಸಂತೈಸಲು ಕಾರ್ಮಿಕ ಖಾತೆಯ ಸಚಿವಾಲಯವೇ ಬರಬೇಕಿತ್ತು. ತಾನು ಕಾರ್ಲ್‌ಮಾರ್ಕ್ಸ್ ದಯದಿಂದ ಏನಾದರೂ ಮುಖ್ಯಮಂತ್ರಿ ಆದರೆ ಮಾಡುವ ಮೊಟ್ಟಮೊದಲನೆಯ ಕಾರ್ಯವೆಂದರೆ ಶಾಲಾ ಮಕ್ಕಳ ಮಧ್ಯಾಹ್ನದ ಉಪಹಾರಕ್ಕೆ ಮಸಾಲೆ ದೋಸೆಯನ್ನು ಒದಗಿಸುವುದಾಗಿ ತಮಾಷೆಗೆ ಹೇಳಿಕೊಳ್ಳುವುದುಂಟು. ಅವರು ಸದರೀ ಗ್ರಾಮಕ್ಕೆ ಬಂದಾಕ್ಷಣ ತನ್ನಕ್ಕ ದೋಸೆ ಮಾಡುವಳೆಂದು ಬಗೆದಿದ್ದ. ಈ ದೇಶದ ಶೂದ್ರರಿಗೆ ದೋಸೆ ಬಗ್ಗೆ ಕೊಂಚವಾದರೂ ಪರಿಜ್ಞಾನ ಇರುವುದು ಬೇಡವೇ? ಎಂದು ಮನಸ್ಸಿನಲ್ಲಿ ನಿರಾಸೆಯಿಂದ ಗೊಣಗಿಕೊಂಡಿದ್ದ. ಅನಸೂಯಾಲನ್ನು ತಾನು ಮದುವೆಯಾಗಲಿರುವುದು ಖಚಿತವಾದ ತಕ್ಷಣ ಅವನು ಆಕೆಗೆ ಹಾಕಿದ ಮೊದಲನೆ ಪ್ರಶ್ನೆ ಎಂದರೆ ದೋಸೆ ಮಾಡಲು ಬರುವುದೇನು? ಎಂದು. ಮಾಡಲು ಬಂದರೆ ಎಷ್ಟೆಷ್ಟು ಪ್ರಮಾಣದಾಲ್ಲಿ ಅಕ್ಕಿ; ಉದ್ದಿನಬೇಳೆ ಹಾಕುತ್ತಾರೆ, ರುಬ್ಬಿದ ಹಿಟ್ಟು ಬೆಳಗಿನ ಹೊತ್ತಿಗೆ ಊದಿಕೊಳ್ಳಲು ಕಾರನವೇನು? ಎಷ್ಟು ನಮೂನೆಯ ದೋದೆಗಳನ್ನು ಮಾಡಲು ಬರುತ್ತದೆ? ಇತ್ಯಾದಿ ಇಂಥ ಜುಜುಬಿ ಪ್ರಶ್ನೆಗಳಿಂದ ರೋಸಿ ಹೋಗಿ ಅನಸೂಯ”ಕ್ರಾಂತಿಕಾರಕ ಬದಲಾವಣೆ ಬರಬೇಕಿರೋದು ದೋಸೆಯಲ್ಲೋ! ಸಮಾಜದಲ್ಲೋ” ಎಂದು ಸಿಡಿಮಿಡಿಗೊಂಡಿದ್ದಳು. ದೋಸೆಯ ಮಹತ್ವ ಅರ್ಥವಾಗುವುದು ಮದುವೆಯಾದ ಮೇಲೆ ಎಂದು ತನಗೆ ತಾನು ಸಮಾಧಾನಪಡಿಸಿಕೊಂಡಿದ್ದ. ಇಂಥ ರಘು ಸದರೀ ಗ್ರಾಮದ ಹೊಟೆಲುಗಳ ತಿಂಡಿ ಜಾಯಮಾನದ ಬಗ್ಗೆ ಯೋಚಿಸತೊಡಗಿದ್ದು ತುಂಬ ತಡವಾಗಿಯೇ ಎನ್ನಬೇಕು. ಸದರೀ ಗ್ರಾಮದ ಬಹುತೇಕ ಹೊಟಲುಗಳಲ್ಲೆಲ್ಲ ಬರೀ ಮೊಂಡಾಳು ವಗ್ಗರಣೆ ಮೆನಸಿನಕಾಯಿ ಪುಗ್ಗಿ ಎಂದರೆ ಹಣೆಹಣೆ ಚಚ್ಚಿಕೊಳ್ಳುವುದೇನು! ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗಿರುವುದು ಸಾರ್ವಜನಿಕವಾಗಿ ದೋಸೆ ಅಪಮೌಲ್ಯಗೊಂಡಿರುವುದು ಎಂದು ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದು ಮಾಜಿ ಪುರಸಭಾ ಅಧ್ಯಕ್ಷರಾದ ಶಿವಪೂಜೆ ಕೊಟ್ರಗೌಡರ ಎದುರಿಗೆ, ಗೌಡರು ಎಂದರೆ ಸಾಮಾನ್ಯರಗಿರಲಿಲ್ಲ. ಬೆಂಗಳುರನ್ನು ಸರಕಾರಿ ಖರ್ಚು ವೆಚ್ಚದಲ್ಲಿ ನೋಡಬೇಕೆಂದೇ ಅವರು ಸ್ಥಳೀಯ ರಾಜಕಾರಣದಲ್ಲಿ ಆಸಕ್ತಿ ವಹಿಸಿದ್ದು. ಸಾವಿರಾರು ರುಪಾಯಿ ಖರ್ಚು ಮಾಡಿ ಎರಡುಸಾರಿ ಪುರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡರೂ ಆ ಸುವರ್ಣಾವಕಾಶ ಕೂಡಿ ಬಂದಿರಲಿಲ್ಲ. ಒಮ್ಮೆ ಅಂಥ ಅವಕಾಶವೇನೊ ಬಂಥು, ಆದರೆ ತಮ್ಮ ಕಟ್ಟಾ ಎದುರಾಳಿ ಉಪಾಧ್ಯಕ್ಷ ಸೂರಿಗಾಡು ಇಲ್ಲಸಲ್ಲದ ಮಾತುಗಳಿಂದ ಎಗರಾಡಿ ಬೆಂಗಳೂರಿಗೆ ಹೋಗಿ ಬಂದು ಬಿಡುವುದೇನು? ಊರಮುಂದಿನ ಹತ್ತೆಕರೆ ಮಸಾರೆ ಹೋದರೂ ಚಿಂತೆ ಇಲ್ಲ ಈ ಸಾರಿ ಎರಡನೇ ವಾರ್ಡಿಗೆ ನಿಂತುಕೊಂಡು ಬಿಡ್ರಿ ಎಂದು ಅದೇ ಸೂರಿಗಾಡು ಪುಸಲಾಯಿಸಿದ್ದುಂಟು. ಈ ಸಾರಿ ರಾಜ್ಯದ ಪುರಸಭಾ ಅಧ್ಯಕ್ಷರುಗಳು ರಾಜಧಾನಿ ಬೆಂಗಳೂರಿಗೆ ಹೋಗಿ ಬರುವ ಖರ್ಚು ಭರಿಸಲು ಸರಕಾರ ಸಿದ್ಧವಿದೆ ಎಂದು ಸತ್ಯಣ್ಣ ಶೆಟ್ಟಿ ಪಂಪು ಹೊಡೆದಿದ್ದುಂಟು. ಆದರೆ ಪ್ಯಾರಲಿಸಿಸ್ ಸ್ಟ್ರೋಕ್ +ಹೊಡೆಸಿಕೊಂಡಿರುವ ಗೌಡರು ಎಲೆಕ್ಷನ್‌ಗೆ ನಿಲ್ಲಬೇಕೆಂದಿದ್ದರು. ಹತ್ತೆಕರೆ ಹೊಲ ಮಾಡುವ ಉಪದ್ವಾನ ನಡೆಸಿದ್ದರು. ಆದರೆ ಮನೆ ಮಂದಿ ಸುಮ್ಮರಿರಬೇಕಲ್ಲ! ಖಡಾಖಂಡಿತವಾಗಿ ತಡೆದು ಮಂಚದಮೇಲೆ ಕುಕ್ಕರು ಬಡಿದಿದ್ದರು. ಮಂಚದ ಮೇಲೆ ‘ಉಮಹೇ’ ಮಾಡಿಕೊಳ್ಳುತ್ತಿದ್ದ ಗೌಡರಿಗೆ ಸದಾ ಬೆಂಗಳೂರಿನದೇ ಕನಸು. “ಇಲಾಜಿಗಾದರೂ ಬೆಂಗಳೂರಿಗೆ ಕರೆದುಕೊಂಡು ಹೋಗ್ರೋ” ಎಂದು ತನ್ನ ಸಂತಾನವಾದ ಪಂಚಪಾಂಡವರನ್ನು ಪೀಡಿಸುತ್ತಿದ್ದುದುಂಟು, ಮುಂದೊಂದು ದಿನ ಸಾಯಲಿರುವ ವ್ಯಕ್ತಿಗೆ ಬೆಂಗಳೂರು ಕರೆದೊಯ್ದು ಇಲಾಜು ಮಾಡಿಸಲೇನು ಅವರು ದಡ್ಡರೇ? +ರಘುರಾಮ ಎಂಬುವನು ಬೆಂಗಳೂರಿಂದ ಬಂದಿರುವನೆಂದೂ; ಅವನು ತಮ್ಮ ಖಾಸಾದೋಸ್ತು ರುದ್ರನಾಯಕನ (ರುದ್ರನಾಯಕನಿದ್ದಿದ್ದರೆ ತಾನೀ ಸ್ಥಿತಿಯಲ್ಲಿ ಬಿದ್ದಿರಬೇಕಿತ್ತೇ?)‘ಸಾಲ’ನೆಂದು ತನ್ನ ರಾಜಕೀಯ ಗುರು ಕುರಕುಂದಿ ಈರಣ್ಣನಿಂದ ತಿಳಿದುಕೊಂಡು ಮನೆಗೆ ಕರೆ ಕರೆಸಿಕೊಂಡು ಬೆಂಗಳೂರಿನ ವೈವಿಧ್ಯಮಯ ಬದುಕಿನ ಬಗ್ಗೆ (ಮೌಖಿಕವಾಗಿ+ಲಿಖಿತವಾಗಿ) ವಿಚಾರಿಸಿ ತಮ್ಮ ತಿಳುವಳಿಕೆ ಹೆಚ್ಚಿಸಿಕೊಂಡಿದ್ದರು. ಪ್ರಾಧಾನ ಮಂತ್ರಿಗಳ ಬಳಿ +ದುಭಾಷಿಗಳಿರುವಂತೆ ಸಹಾಯಕವಾಗಿ ಈರಣ್ಣ ಬೇರೆ ಇದ್ದನಲ್ಲ. ಗೌಡರೂ ಎಳೆ ಬಾಲಕರಂತೆ ರಾಜಕುಮಾನ ನೋಡಿದ್ದೀಯಾ? ಮುಟ್ಟಿದ್ದಿಯಾ? ಮಾತಾಡಿಸಿದ್ದೀಯಾ? ಎಂದು ಕೇಳಿದರು; ಅದಕ್ಕೆಲ್ಲ ‘ಹ್ಹೂಂ’ ಅಂದು ರಘು ಸದರಿ ಗ್ರಾಮದ ಜನರ ತಿಂಡಿ ಅಭಿರುಚಿ ಬಗ್ಗೆ ಚರ್ಚೆ ಆರಂಭಿಸಿದ್ದ. ಈ ಹಂತದಲ್ಲಿಯೇ ಗೌಡರು ದೇಶ ವಿದೇಶಗಳಲ್ಲಿ ದೋಸೆಗೆ ಹೆಸರಾಗಿರುವ ಉಡುಪಿ ಶ್ರೀಕೃಷ್ಣಭವನದ ಸುಳುವು ನೀದಿದ್ದರು. ಉದುಪಿಯ ಶ್ರೀಕೃಷ್ಣನ +ದರ್ಶನಾಕಾಂಕ್ಷಿಯಾಗಿ ಮಠದ ಬೆನ್ನು ಗೋಡೆಯಲ್ಲಿ ಕನಕದಾಸರು ಕನ್ನ ಕೊರೆದಂತೆ ಗ್ರಾಮದ ಅನೇಕರು ದೋಸೆ ತಿನ್ನುವ ಹೆಬ್ಬಯಕೆಯಿಂದ ಹೋಟೆಲನ್ನು ಅದರ ನವರಂದ್ರಗಳ ಮೂಲಕ ಪ್ರವೇಶಿಸುತ್ತಿರುವರೆಂದೂ ವಿವರಿಸಿದರು. ಆಗಲೇ ನಮ್ಮ ‘ಯ್ಯಾಂಟಿ ಹೀರೋ’ ರಘುರಾಮ ಉಡುಪಿ ಶ್ರೀ ಕೃಷ್ಣಭವನದ ದೋಸೆಗಳನ್ನು ಒಂದು ಕೈನೋಡಿಕೊಳ್ಳಬೇಕೆಂದು ಶಪಥ ಮಾಡಿದ್ದು. +ದೋಸೆ ಸೇವನೆಗೆ ಮಾಮೂಲು ರೀತಿಯಲ್ಲಿ ಹೋಗುವುದುಂಟೇನು? ರಘು ಸಫಾರಿ ಡ್ರೆಸ್ ತೊಟ್ಟುಕೊಂದು, ಬಗಲಲ್ಲಿ ಕಾರ್ಲ್‌ಮಾರ್ಕ್ಸ್‌ನ ದಾಸ್ ಕೆಪಿಟಲ್ ಇಟ್ಟುಕೊಂಡು ಕಾಲಿಗೆ ಪಾಯಿಂಟ್ ಷೂಸ್ ಹಾಕ್ಕೊಂಡು ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯಂತೆ ಮನೆ ಬಿಟ್ಟ. ಟಾಪ್ನಿಂದ ಬಾಟಮ್ಮೊರೆಗೆ ರೆಡ್ಡಂದ್ರೆ ರೆಡ್ಡು. ಭಾಷಣ ಮಾಡೊಕೆ ಹೊರಟಿದ್ದೀಯಾ? ಎಂದು ಕೇಳಿದಳು ಅನಸೂಯಾ. (ಎಷ್ಟಿದ್ದರೂ ಸೋದರಮಾವನಲ್ಲವೆ! ಅದಕ್ಕೆ ಸಲಿಗೆ) “ಕೇಳೊಕೆ ನೀನೂ ಬತೀಯೇನು?” ಎಂದು ಅವನು ತಮಾಷೆ ಮಾಡಿದ. ರಘುರಾಮ ದೋಸೆ ಲಗಾಸಲು ಹೊರಟಿರುವುದು ನೋಡಿದ ಎಂಥಾವರಿಗೂ ಗೊತ್ತಗಿ ಬಿಡುವಂತಿತ್ತು. +ಅಂಗಳದಲ್ಲಿ ಬಂದ ಕೂಡಲೆ ಓಣಿ ಹೆಂಗಸರೆಲ್ಲ ತಂತಮ್ಮ ಮನೆಯ ಕಿಟಕಿ ಮತ್ತಿತರ ಕಿಂಡಿಗಳಲ್ಲಿ ನಿಂತು ಪಿಳಿಪಿಳಿ ನೋಡತೊಡಗಿದರು – ಅವರೆಲ್ಲ ಬೆಂಗಳೂರಿನ ವೈಭವವೇ ಮನುಷ್ಯ ರೂಪ ಧರಿಸಿ ಹೊರಟಿದೆ ಎನ್ನುವಂತೆ, ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಅಂತ ರಾಘವಾಂಕ ಹೇಳಿದ್ದಾನಲ್ಲ ಹಾಗೆ. ಆಚೆಮನೆ ಸಾವಿತ್ರಿ ರಘುವನ್ನು ತೋರಿಸುವ ನಿಮಿತ್ತ ಅಲಮೇಲಮ್ಮನಿಗೆ ಐದಡಿ ಏಳಂಗುಲ ದೂರದಲ್ಲಿ ಕಿಟಕಿಯ ಜಾಲರಿಯಲ್ಲಿ ನಿಂತಿದ್ದಳು. ಹಲವಾರು ಹಸುಳೆಗಳ ಎಳೆ ನಗೆಯೇ ಆ ಯುಕನ ರೂಪ ಪಡೆದಿದೆ ಎಂಬುದಾಗಿ (ಆಗಲೆ ಮುಂದೆರಡು ಹಲ್ಲು ಕಳೆದುಕೊಂದಿದ್ದ)ಭಾವಿಸಿದ ಅಲುಮೇಲಮ್ಮಗೆ ಸಾವಿತ್ರಿ “ಆಯಪ್ಗೆ ದೋಸೆ ಎಂದ್ರೆ ಪಂಚಪಿರಾಣದಂತೆ” ಎಂದು ಪಿಸುಗುಟ್ಟಿದಳು. +ಬೆಂಗಳೂರಿನ ಯುವಕ ತಮ್ಮ ಹೋಟಲ್ಲಿಗೆ ದೋಸೆ ತಿನ್ನಲು ಬರಲಿರುವನೆಂದು ಅದ್‌ಹೇಗೋ ಅಶರೀರವಾಣಿ ಮೂಲಕ ತಿಳಿದುಕೊಂಡು ಮಾಲೀಕರಾದ ತಿಮ್ಮಣ್ಣ ಭಟ್ಟರು ಛಾಯಾ ಸ್ಟುಡಿಯೋದ ವೆಂಕಟೇಶಿಯನ್ನು ಕೆಮರಾದೊಂದಿಗೆ ರೆಡಿಮಾಡಿ ಇಟ್ಟಿದ್ದರು. ಕೂಲಿಂಗ್ ಗಿಲಾಸ್ ಧರಿಸಿದ್ದ ರಘು ಹೋಗುತ್ತಲೆ ಬರ್ರಿ ಬರ್ರಿ ಎಂದು ಸ್ವಾಗತಿಸುತ್ತ ದೋಸೆ ತಿನ್ನುವಾಗ ಹೊಡಿಯೋ ಎಂದು ಕೆಮೆರಾಮನ್ನಿಗೆ ಪಿಸಿಗುಟ್ಟಿದರು. ಮೂರು ಕಾಲು ಕುರ್ಚಿಮೇಲೆ ಫ಼್ಯಾನ್ ಸ್ವಿಚ್ ಹಾಕಿದರು. ಅದು ವಾತಾಪಿ ಗಣಪ ಜಿಂದಹೇ ಎಂದು ಹಂಸದ್ವನಿ ರಾಗದಲ್ಲಿ ಕುಯ್ಯೋ ಮರ್ರೋ ಎಂದು ತಿರುಗತೊಡಗಿತು. ಅವರು ಹಿಡಿ ಹಿಡಿ ಶಾಪ ಹಾಕುತ್ತಿದ್ದುದುತಮ್ಮ ದೋಸೆಗೋ ಸದರಿ ಗ್ರಾಮದ ಕೆ‌ಇಬೀಗೋ ಅರ್ಥವಾಗುತ್ತಿರಲಿಲ್ಲ. +ಮಾಣಿ ಇಷ್ಟುದ್ದ ಅಗಲದ ಭೂಪಟದಂತಿದ್ದ ದೋಸೆಯನ್ನು ತಂದಿಟ್ಟ. ಅದು ಗಮ್ಮನೆ ಪರಿಮಳ ಬೀರಿತು. . ಕೌಶಿಕಮುನಿ ತನ್ನ ಮೇಲೆ ಇಸಿ ಮಾಡಿದ ಬಲಾಕ ಪಕ್ಷಿ ಕಡೆ ದುರುಗುಟ್ಟಿ ನೋಡಿದಂತೆ ರಘು ಅದರ ಕಡೆ ನೋಡಿದ. ಕೆಮರಾ ಕ್ಲಿಕ್ ಅಂತು. ಅದಕ್ಕೆ ಕೈ ಹಚ್ಚಿದ. ಕೆಮರಾ ಕ್ಲಿಕ್ ಅಂತು. ಅದನ್ನು ಬಾಯಲ್ಲಿಟ್ಟುಕೊಂಡ. ಕೆಮರಾ ಕ್ಲಿಕ್ ಅಂತು. ಮಾತಾಡಿದಂತೆ ಮೂರು ಫೋತೋದ ಅಡ್ವಾನ್ಸ್ ಇಸುಕೊಂಡು ವೆಂಕಟೇಶಿ ಸಿಳ್ಳೆ ಹಾಕುತ್ತ ತ್ರೀ ಹಂಡ್ರಡ್ ಹಾಕಲು ಪ್ರಸಾದನ ಪಾನ್ ಶಾಪಿನ ಬಳಿಗೆ ಹೋಗುತ್ತಲೆ ಭಟ್ಟರು ದೋಸೆಯ ರುಚಿ ಹಾಗೂ ಹೋಟೆಲ್ ರುಚಿ ಹಾಗೂ ಶುಚಿ ಬಗ್ಗೆ ವಿಚಾರಿಸಿದರು. “ನೀವು ಏನೇ ಹೇಳಿ ಮಾರಾಯ್ರೆ ಆ ಶಾಮಾಶಾಸ್ತ್ರಿಗೆ ದೋಸೆ ಬಗ್ಗೆ ಆಸಕ್ತಿನೇ ಇಲ್ಲ ನೋಡಿ. ದಿನಕ್ಕೆರ್ಡು ಹೊತ್ತು ಮಂಡಾಳು ವಗ್ಗರನೆ ಪುಗ್ಗಿ ಇದ್ದುಬಿಟ್ಟರೆ ಮುಗಿಯಿತು ನೋಡಿ” ಎಂದು ಅವನನ್ನು ಪ್ಲೀಜು ಮಾಡಲು ಶತಪ್ರಯತ್ನ ಮಾಡಿದರು. +ಇಂಥ ದೋಸೆ ತಿಂದು ಬೆಂಗಳೂರಿನವರು ಐವತ್ತು ಪೈಸೆ ಹೆಚ್ಚಿಗೆ ಬಿಲ್ಲು ತೆತ್ತದಿದ್ದರೆ ಹೇಗೆ? ಮಾಣಿಗೆ ಕಣ್ಣು ಮಿಟುಕಿಸಿದರು. ಅವನು ಅದರಂತೆ ಆ ಪುಟ್ಟ ಕಾಗದದ ಮೇಲೆ ಮಹಾಕಾವ್ಯ ಬರೆಯುತ್ತಿರುವನೇನೋ ಎಂಬಂತೆ ಸಿಳ್ಳುಹಾಕುತ್ತ ಬಿಲ್ ಬರೆದು ರಘುನ ಕೈಗೆ ಕೊಡುತ್ತ ಮನಸ್ಸಿನಲ್ಲಿ (ಇಂದು ಸಂಜೆಯಿಂದ ಆರಂಭವಾಗುವ ಭೇದಿ ಮೂರು ದಿನವಾದರೂ ಕಡಿಮೆಯಾಗುವುದಿಲ್ಲ. ನೋಡ್ತಿರು) ಶುಭ ಕೋರಿದ. +ರಘು ಅದರ ಕಡೆ ನೋದಿದರೆ ತಾನೆ? ನೂರು ರೂಪಾಯಿ ನೋತನ್ನು ಬಿಲ್ಲಿನೊಂದಿಗೆ ಟೇಬಲ್ ಮೇಲೆ ಸರಿಸಿದ. ಭಟ್ಟರು ನೋಟನ್ನು ಬೆಳಕಿನಲ್ಲಿ ಹಿಂದು ಮುಂದು ನೋಡಿ ಖೋಟ ಅಲ್ಲವೆಂದು ಖಚಿತಪಡಿಸಿಕೊಂಡು ಚಿಲ್ಲರೆ ಕೊಡುವಾಗ ಅಕಸ್ಮಾತ್ ರಘು ಎಡಗೈಗೆ ಕಟ್ಟಿಕೊಂಡಿದ್ದ ವಾಚಿನ ಕಡೆ ನೋಡಿ ದಾಂತೋತಲೆ ಉಂಗ್ಲಿದಭಾನ ಮಾಡಿದರು. +“ಇದೇನು ಮಾರಾಯ್ರೆ… ಈ ವಾಚು ಹಿಂಗದೇ… ನಂಬರುಗಳು ಅಟಕ್ ಪಿಟಕ್ ಅಂತ ತಮ್ಮಷ್ಟಕ್ಕೆ ತಾವೆ ಬದಲಾಗ್ತಿದಾವಲ್ಲ… ಎಂಥ ಸೋಜಿಗ ಕಣ್ರಿ ಇದು….” ಎಂದು ಜೋರಾಗಿ ಉದ್ಗರಿಸಿದೊಡನೆ ಅಷ್ಟೊತ್ತಿಗಾಗಲೇ ಆ ಹೋಟಲಿನ ನವರಂದ್ರಗಳ ತುಂಬ ಜೀರಾಡುತ್ತಿದ್ದ ಸದರೀ ಗ್ರಾಮದ ಉಂಡಾಡಿ ಗುಂಡರು ‘ಹುರ್ರೇ’ ಎಂದು ಪ್ರತ್ಯಕ್ಷವಾಗಿ ತಮ್ತಮ್ಮ ಕಣ್ಣುಗಳನ್ನು +ಚಕಚಕ ಅಂತ ಕಿತ್ತು ಆ ವಾಚಿನ ಮೇಲಿಟ್ಟರು . ಎಂಥ ವಾಚದು? ನಭೂತೊ ನಭವಿಷ್ಯತಿ. ಅವರೆಲ್ಲರ ಮೇಲೆ ಮೀರಿದ ಕುತೋಹಲ ಒಂದು ಕ್ಷನ ರಘುಗೆ +ಅರ್ಥವಾಗಲಿಲ್ಲ. ತಾನು ಕಟ್ಟಿರುವ ಎಲೆಕ್ಟ್ರಾನಿಕ್ ವಾಚು ಅವರೆಲ್ಲರನ್ನೂ ಇಷ್ಟೋಂದು ಮಂತ್ರಮುಗ್ಧರನ್ನಾಗಿ ಮಾಡಬಹುದೆಂದು ಅವನು ಆ ಹಿಂದಿನ ಕ್ಷಣದವರೆಗೆ ಯೋಚಿಸಿರಲಿಲ್ಲ. ಅವನು ಹಾಗೆಯೇ ಇನ್ನೊಂದು ಕ್ಷಣ ಮೈಮರೆತುಬಿಟ್ಟಿದ್ದರಲ್ಲಿ ಅವರೆಲ್ಲರು ಆ ವಾಚಿನೊಂದಿಗೆ ಅವನ ಎಡಗೈಯನ್ನೂ ಅಪಹರಿಸದೆ ಇರುತ್ತಿರಲಿಲ್ಲ. ಅಂತೂ ನಸಿಬ ನೆಟ್ಟಗಿತ್ತು ಅದರಿಂದ ಹೇಗೋ ತಪ್ಪಿಸಿಕೊಂಡು ಮನೆ ಸೇರಿದ… +ತಮ್ಮನ ಅವಸ್ಥೆ ನೋಡಿ ರುಕ್ಕಮ್ಮ ಗಾಬರಿಯಾದಳು. ಬಾಗಿಲಿಗೆ ಕರ್ಟನ್ ಹಾಕುತ್ತಿದ್ದ ಅನಸುಯ ತನ್ನ ವುಡ್‌ಬೀಗೆ ಏನಾಯ್ತೂಂತ ಧಾವಿಸಿ ಬಂದಳು. ತಮ್ಮನ ಗತಕಾಲದ ಬಾಲಲೀಲೆಗಳೆಲ್ಲ ಎಲ್ಲಿ ಪುನರಾವರ್ತನೆಗೊಂಡವೋ ಎಂದು ರುಕ್ಕಮ್ಮ ಭಾವಿಸಿದ್ದು ಸಹಜ. ಕ್ರಾಂತಿಕಾರಿ ಭಾಷಣ ಮಾಡುವಾಗೆಲ್ಲಿ ತನ್ನ ವುಡ್‌ಬೀಯನ್ನು ಜನ ಅಟ್ಯಾಕ್ ಮಾಡಿಬಿಟ್ಟರೋ ಎಂದು ಅನಸೂಯಾ ಭಾವಿಸಿದ್ದು ಸಹಜ. ಕಾರ್ಲ್‌ಮಾರ್ಕ್ಸ್‌ನ ಕೆಂಪು ಪಟ್ಟೆಯ ಪುಸ್ತಕವನ್ನು +ಬಗಲಲ್ಲಿಟ್ಟುಕೊಂಡು ಮನೆಬಿಟ್ಟಾಗಲೇ ತಮ್ಮಿಬ್ಬರಿಗೆ ಅನುಮಾನ ಬಂದಿತ್ತು. ಏನಾದರೊಂದು ಅಹಿತಕರ ಘಟನೆ ಸಂಭವಿಸಬಹುದೆಂದು ಅವರು ಮೊದಲೇ ಊಹಿಸಿದ್ದರು. ಕಾಲ ಮೊದಲಿಗಿಂತ ತುಂಬ ಸುಮಾರಾಗಿರುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಕಡೆ ನೋಡುವುದೇ ಗುಮಾನಿಯಿಂದ. +ತನ್ನ ವಿರುದ್ಧ ಏನಾದರೊಂದು ಸಂಚು ನಡೆಸುತ್ತಿರಬಹುದೆ ಎಂಬ ಆತಮ್ಕ ಸಾರ್ವರ್ತ್ರಿಕ ವಾಗಿತ್ತು. +ಯಾರಾದರೂ ಹೊಸಬರು ಬಂದರೆಂದರೆ ಅವರು ಬುಡಮೇಲು ಕೃತ್ಯ ನಡೆಸಲಿಕ್ಕೆಂದೇ ಬಂದಿರಬಹುದೆಂದು ಸುಲಭವಾಗಿ ಊಹಿಸಿಬಿಡುತ್ತಿದ್ದರು. ಗ್ರಾಮದ ವಾತಾವರಣ ಹೀಗಿರುವಾಗಲೇ ರಘುರಾಮ ಬಂದಿರುವುದು. ಮೊದಮೊದಲು ಎಲ್ಲರು ಅವನನ್ನು ಅನುಮಾನದಿಂದಲೇ ನೋಡಿದರು. ಒಲ್ಲದ ಮನಸ್ಸಿನಿಂದ ಸ್ವಾಗತಿಸಿದರು. ರುದ್ರ ನಾಯಕನ ಭಾವ ಮೈದುನನೆಂದು ಗೊತ್ತಾದ ನಂತರವೇ ಎಲ್ಲರೂ ಸಮಾಧಾನದ ಉಸಿರುಬಿಟ್ಟಿದ್ದು. ಮೊದಲೇ ತಮ್ಮದು ಗಂಡಸರಿಲ್ಲದ ಮನೆ! ಯಾವ ಕ್ಷಣದಲ್ಲಿ ಎಂಬ ಆತಂಕ ಬೇರೆ; ರಘುರಾಮ ಮನೆ ಬಿಟ್ಟ ಕ್ಷಣದಿಂದ ಆರಂಭವಾಗುವ ಆತಂಕ ಕಡಿಮೆಯಾಗುತ್ತಿದ್ದುದು ಅವನು ಮನೆಗೆ ಮರಳಿದ ನಂತರವೇ. ತಾಯಿ ಮಗಳಿಬ್ಬರೂ ಸೇರಿ ಎಡಪಂಥೀಯ ವಿಚಾರಧಾರೆಯ ಗರಂ ಗರಂ ವಾಸನೆ ಬೀರುತ್ತಿದ್ದ ಪುಸ್ತಕಗಳನ್ನೆಲ್ಲ ಒಯ್ದು ಭತ್ತದ ಹೊಟ್ಟಿನ ಅಡಕಲ ಗಡಿಗೆಯೊಳಗೆ ಬಚ್ಚಿಟ್ಟರು. +ರಘುರಾಮ ಎದೆಗೆ ಸಾಕಷ್ಟು ಗಾಳ ಬೀಸಿಕೊಂಡು; ಎರಡು ತಂಬಿಗೆ ಬಸವನ ಬಾವಿ ನೀರು ಕುಡಿದು; ತಾನು ಗುಟ್ಟಗಿ ಪ್ರೀತಿಸುತ್ತಿದ್ದ ಪಾರ್ವತಿ, ಗೌರಿಯರನ್ನು (ಇವರಿಬ್ಬರು ಕಳೆದು ಐದು ವರ್ಷಗಳ ಹಿಂದೆ ಕೈಯಲ್ಲಿ ಬಂದೂಕು ಹಿಡಿಯದ ಹೊರತು ಸಮಾಜವನ್ನು ಬದಲಿಸುವುದು ಸಾಧ್ಯವಿಲ್ಲವೆಂದು ನಂಬಿ ಫೇಮೋಸ್ ನಕ್ಸಲೈಟು ಚಿರುಕಲ ನರಸಿಂಹುಲು ಸಂಗಡ ಆಂಧ್ರಮಹಾವಿಷ್ಣುವಿನ ನೆಲವೀಡಾದ ಶ್ರೀಕಾಕುಳಂ ದುರ್ಗಮ ಬೆಟ್ಟಗಳ ಕಡೆ ಹೋಗಿರುವರು) ನೆನೆಯುತ್ತ ಧೈರ್ಯ ತಂದುಕೊಂಡನು. ತಮ್ಮನ್ನು ಅನುಕ್ರಮವಾಗಿ ಸಂಭೋಗಿಸದಿದ್ದಲ್ಲಿ ನೀನು ಕ್ರಾಂತಿಕಾರಿ ಚಳುವಳಿಗೆ ನಾಲಾಯಕ್ಕು ಅಂತ ಅವರು ಹೇಳಿದ್ದ +ಮಾತ್ನ್ನು ನೆನಪು ಮಾಡಿಕೊಳ್ಳದಿದ್ದುದು ಅವನ ಪುಣ್ಯ ಹೇಗೇನಾದರೂ ನೆನಪಾಗಿ ಬಿಟ್ಟಿದ್ದಲ್ಲಿ ಅವನಿಂದ ಬೆವರನ್ನು ನಿಯಂತ್ರಿಸುವುದಾಗುತ್ತಿರಲಿಲ್ಲ. +ಈ ಪ್ರಕಾರವಾಗಿ ರಘುರಾಮ ಸಮಾಧಾನದ ಒಂದು ಹಂತ ತಲುಪಿದ ಮೇಲೆ ತನ್ನ ಬಾಳು ಬೆಳಗುವ ಹುಡುಗಿ ಮಾಡಿಕೊಟ್ಟ ಚಹ ಕುಡಿದು ತಾನು ಭಟ್ಟರ ಹೋಟಲಿಗೆ ಹೋಗಿದ್ದು ದೋಸೆ ತಿನ್ನುವಾಗ ಭಟ್ಟರು ಫೋಟೊ ತೆಗೆಸಿದ್ದು ಹೇಳುತ್ತಿದ್ದಂತೆಯೇ ಅನಸೂಯ ಫೋಟೊ ತೆಗೆಯಲು ಆಸ್ಪದ ಕೊಡಬಾರದಿತ್ತೆಂಬ ತಕರಾರೆತ್ತಿದಳು. ದೋಸೆ ತಿನ್ನುವುದೇನೋ ಐತಿಹಾಸಿಕ ಘಟನೆ ಏನು ಅಲ್ಲ. ಹಾಗೆಯೇ ದೋಸೆ ತಿನ್ನುವುದೇನೋ ಬುಡಮೇಲು ಕೃತ್ಯವೆನಿಸಿಕೊಳ್ಳಲಾರದು. ಆದರೆ ಫೋಟೊವನ್ನು ತೆಗೆದ ಮತ್ತು ತೆಗೆಯಲು ಪ್ರೇರಣೆ ನೀಡಿದ ವ್ಯಕ್ತಿ ಪೋಲಿಸ್ ಇನ್‌ಫಾರ್ಮರ್ರಾಗಿದ್ರೆ ಒದಗಲಿರುವ ಸಂಕಟವನ್ನು ತಡೆಯುವ ಬಗೆ ಹೇಗೆ? ಇದು ಸೂಕ್ಮೂಜ್ಞೆಯಾದ ಅನಸೂಯಳ ಆತಂಕದ ಒಂದು ನಮೂನೆ. ಎಷ್ಟದರೂ ಅವನು ತನಗೆ ಗೃಹಸ್ಥಾಶ್ರಮ ನೀಡಲಿರುವವನಲ್ಲವೆ? +ರಘು ಅವರ ಅತಂಕಗಳ ಕಾರಣಗಳನ್ನು ಅರ್ಥಮಾಡಿಕೊಂಡು ನಕ್ಕ. ತಾನು ಕಟ್ಟಿಕೊಂಡಿರು ಎಲೆಕ್ಟ್ರಾನಿಕ್ ವಾಚು ಸೃಷ್ಟಿಸಿದ ಅವಾಂತರದ ಬಗ್ಗೆ ಹೇಳುತ್ತ ನಗಾಡಿದ. ಅವನು ಬಂದು ಇಷ್ಟು ದಿನವಾದರೂ ತಾವವನ ವಾಚು ನೋಡದಿರುವುದರ ಬಗ್ಗೆ ತಾಯಿ ಮಗಳಿಬ್ಬರು ತಮಗೆ ತಾವೆ ಆಶ್ಚರ್ಯಪಟ್ಟುಕೊಂಡರು. ರುಕ್ಕಮ್ಮನಿಗಂತೂ ಎಲೆಕ್ಟ್ರಾನಿಕ್ ಎಂಬ ಪದ ಉಚ್ಚರಿಸಲು ಕಷ್ಟವಾಗಿ ಅಟಕ್ ಪಿಟಕ್ ಎಂದಳು. ಪದವೀಧರೆಯಾದ ಅನಸೂಯ ಆ ಕ್ಲಿಷ್ಟ ಪದದ ಅರ್ಥ ವಿವರಿಸಿದಳು. ಅವರಿಬ್ಬರು ಅವನ್ ಮುಂಗೈ ಅಲಂಕರಿಸಿದ್ದ ಅದನ್ನು ಶಾನೆ ಹೊತ್ತು ನೋಡಿದರು. ಅದು ಗಂಡಸಾದ ಅವನ ಮುಂಗೈಯ ಮೇಲಿರುವುದೇ ಕ್ಷೇಮವೆಂದೇ +ಬಗೆದರು. +ಪಂಕ್ಚುಯಾಲಿಟಿಯ ಪರಿಪಾಲಕನಾದ ಅವನು ಆತ್ಮಲಿಂಗೋಪಾದಿಯಲ್ಲಿ ಅದನ್ನು ಧರಿಸಿಯೇ ಸ್ನಾನ ಊಟ ಇತ್ಯಾದಿ ಮುಗಿಸಿ ಮಲಗಿಕೊಂಡ. ಅವನಿಗೆ ಡಿಸ್ಟರ್ಬ್ ಆಗುವುದೆಂದು ರುಕ್ಕಮ್ಮ ಮಗಳೊಂದಿಗೆ ಅಡುಗೆ ಮನೆಯಲ್ಲಿ ನಡೆಯಲಿರುವ ಮದುವೆಬಗ್ಗೆ; ಬಾರದಿರುವ ಮಾಲಿಕನ ಬಗ್ಗೆ; ಆರ್ಥಿಕ ಪರಿಸ್ಥಿತಿಯ ಬಗ್ಗೆ; ಚರಾಸ್ತಿ ಸ್ಥಿರಾಸ್ತಿ ಬಗ್ಗೆ; ಶಾಮನಿಗೆ ಗೊತ್ತು ಮಾಡಿರುವ ಹೊಸಪೇತೆಯ ಕನ್ಯಾಮಣಿಯ ಬಗ್ಗೆ; ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಿದ್ದರು. +ಇತ್ತ ಪಡಸಾಲೆಯಲ್ಲಿ ಹಿರಿಯೂರು ಕಡೆಯ ಚಿತ್ತರದ ಚಾಪೆ ಮೇಲೆ ಸರ್ಪ ಶಯನದ ಮೇಲೆ ಮಹಾವಿಷ್ಣು ಮಲಗಿರುವ ಶೈಲಿನಲ್ಲಿ ಅರೆ ಎಚ್ಚರ ಅರೆ ನಿದ್ರೆಯಲ್ಲಿ ಮಲಗಿಕೊಂಡಿದ್ದ ರಘುರಾಮ ವರ್ತಮಾನದ ದುರಂತ ಪರಿಹರಿಸಲು ತಾನು ಬುಡಮೇಲು ಕೃತ್ಯಕ್ಕೆ ತೊಡಗುವುದೋ ಎಂದು ಯೋಚಿಸುತ್ತಲೇ ಹಾಗೆ ನಿದ್ರೆ ಹೋಗಿದ್ದ. ಹಾಲೀ ಪ್ರಧಾನಿ ಸರ್ವಾಧಿಕಾರಿಣಿ ಥರ ಮಾಡಿಕೊಂಡಿರುವುದು, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳ ಮೂಲಕ ಕಡ್ಡಿ ಮುರಿದಂತೆ +ದೇಶವನ್ನು ಆಳುತ್ತಿರುವುದು, ಆಕೆಯ ಮುದ್ದು ಮಗ ಸಂಜಯಗಾಂಧಿ ಬಗ್ಗೆ ಒಂದು ನವರಸಭರಿತ ಕಾದಂಬರಿ ಬರೆಯಬೇಕು. ಅದು ಮೂರು ಮೊಳ ಗಡ್ಡಾ; ಒಂದು ಮಳ ಮೀಸೆಯೊಡನೆ ಹುಟ್ಟಬೇಕು. ಹುಟ್ಟುತ್ತಲೆ ಭಾರತವನ್ನು ಆಮೂಲಾಗ್ರ ಬದಲಾವಣೆ ಮಾಡಬೇಕೆಂದುಕೊಂಡು ಎರಡೂ ಕೈಯೊಳಗೆ ಎರಡೂ ನಮೂನೆಯ ಬಂದೂಕುಗಳನ್ನು ಹಿಡಿದುಕೊಂಡು; ಬಾಯಿಯಿಂದ ಇಂಡಿಯನ್ ಪೀನಲ್ ಕೋಡಿನ ಎಲ್ಲಾ ನಮೂನೆಯ ಕಲಮುಗಳನ್ನು ಪಟಪಟಾಂತ ಉಚ್ಚರಿಸುತ್ತ ಗಾಳಿಯಲ್ಲಿ +ಗಾಳಿಗಿಂತ ವೇಗವಾಗಿ ಅಡ್ಡಡಿ ಇಡೀ ಜಂಬೂದ್ವೀಪವನ್ನು ಗಡಗಡ ಅಂತ ನಡುಗಿಸಿಬಿಡಬೇಕು… ಅದರ ವಿರುದ್ಧ ಹೋರಾಡುವ +ಹೀರೋ ನಾನಾಗಬೇಕು… ಇದನ್ನು ಕುರಿತು ಕಾದಂಬರಿ ಬರೆಯಬೇಕೋ? ನಾಟಕ ಬರೆಯಬೇಕೋ? ಕ್ರಾಂತಿಯನ್ನೇ ಉಸಿರು ಮಾಡಿಕೊಂಡಿರುವ ನನಾಗೆ ಒಂದು +ವಾಕ್ಯ ಬರೆಯಲು ಬರುತ್ತಿಲ್ಲವಲ್ಲ… ಏನು ಮಾಡುವುದು. +ಯೋಚಿಸುದ್ದಿಂತೆ ಭಯಾನಕ ಕೂಸೊಂದು ತಾಯಿಯ ಕಿಬ್ಬೊಟ್ಟೆ ಸೀಳಿಕೊಂಡು ಹೊರಬರುವುದು… ಅದರ ಉಗುರುಗಳು ಮಾರಕಾಯುಧಗಳು. “ಎಲೆ ನನ್ ಮಗ್ನೆ ನನ್ ವಿರುದ್ಧಾನೇ ಕಿರಾಂತಿ ಮಾಡ್ತೀಯಾ ಈಗ ನಿನ್ನ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ” ಎನ್ನುತ್ತ ಅದು ತನ್ನ ಕಡೆಗೇ ಅಂಬೆಗಾಲಿಟ್ಟು ಬರುತ್ತಿರುವುದು. ಇನ್ನೊಂದು ಕ್ಷಣದಲ್ಲಿ ಆ ಕೂಸು ತನ್ನ ಕಥೆಯನ್ನೇ ಮುಗಿಸಿ ಬಿಡಲಿದೆ. ಚಿಟಾರನೆ ಚೀರಬೇಕು.. ಅಕ್ಕ ಮತ್ತು ಅಕ್ಕನ ಮಗಳನ್ನು ಸಹಾಯಕ್ಕೆ ಕರೆಯಬೇಕು.. +ಅಷ್ಟರಲ್ಲಿ ಬಾಗಿಲು ತಟ್ಟುತ್ತಿರುವ ಸದ್ದು. ಟಕ್… ಟಕ್… ಅಂತ. ಬಾಗಿಲಾಚೆ ಎಂಥದೋ ಪಿಸಿಪಿಸಿ ಮಾತುಗಳು; ಕೂಸು ತನ್ನೊಂದಿಗೆ ಯಾರನ್ನೋ ಕರೆದುಕೊಂಡು +ಬಂದಿರುವಂತಿದೆಯಲ್ಲ! ಅಕಸ್ಮಾತ್ ತನ್ನಕ್ಕ ಬಾಗಿಲು ತೆಗೆದುಬಿಟ್ಟರೆ!?… +ಅಷ್ಟರಲ್ಲಿ ರುಕ್ಕಮ್ಮ ನಡೆದಂತೆ… ಸರಕ್ ಪರಕ್ ಅಂತ ಬಾಗಿಲು ತೆರೆದಂತೆ…ಬಾಗಿಲಾಚೆ ಇರುವವರನ್ನು ನೋಡಿ ಅಕ್ಕ ಕಂಗಾಲಾದಂತೆ ಆಕೆಯ ದ್ವನಿ ಗಡಗಡ ನಡುಗುತ್ತಿರುವಂತೆ.. +“ಏನ್ರಿ ಯಾರು ಬೇಕಿತ್ರೀ?” +ನಿಮ್ಮನೆಗೆ ಬೆಂಗ್ಳೂರಿಂದ ಯಾರೋ ಬಂದಿದಾರಂತಲ್ಲ?” +“ನನ್ ಸದ್ಯ ತಮ್ಮನೆ! ರಘುರಾಮ ಅಂತ.. ಬೆಂಗ್ಳೂರಲ್ಲಿ ದೊಡ್ ಕೆಲಸದಲ್ಲಿದ್ದಾನೆ!” +“ಹ್ಹಾಂ! ಹ್ಹಾಂ! ಅವ್ನೆ ಅವ್ನೆ ಬೇಕು… ಎಲ್ಲಿ ಅವನು?” ಎಂದು ಕೇಳುತ್ತ ಯಾರೋ ಧಡ್ ಭಡ್ ಅಂತ ಒಳಗೆ ಬಂದಂತೆ.. ರಘುರಾಮ ಗೋಡೆಗೆ ಮುಖ ಮಾಡಿ ಮೈತುಂಬ ದುಪ್ಪಟ ಹೊದ್ದು; ಮೊಣಕಾಲುಗಳನ್ನು ಗದ್ದಕ್ಕೆ ಬಡಿಸಿಕೊಂಡು ತಾನು ಗಾಡ ನಿದ್ರೆಯಲ್ಲಿರುವಂತೆ ನಟಿಸತೊಡಗಿದ. “ಇಲ್ಲೆ.. ಮಲೊಕ್ಕೊಂಡಿದ್ದಾನೆ.. ಪಾಪ.. ಆಯಾಸ!” ಅವರನ್ನು ಅಲ್ಲಿಂದ ತೊಲಗಿಸಲು ಪ್ರಯತ್ನಿಸುತ್ತಿರುವ ಅಕ್ಕ. +“ಕೂಡ್ಲೆ ಎಬ್ಬಿಸ್ರಿ… ಹೊತ್ತಲ್ಲದ ಹೊತ್ನಲ್ಲಿ ಮಲಗಿದರೆ ದೇಶ ಉದ್ಧಾರಾಗೊದಾದ್ರು ಹೇಗೆ?” ಅಬ್ಬಾ! ಇವರಿಗೆ ಎಷ್ಟೊಂದಿದೆಯಲ್ಲ! ದೇಶದ ಬಗ್ಗೆ ಕಾಳಜಿ! ಅಕ್ಕ ಬಂದಳು. ಕೈಯಿಂದ ಮಿಸುಕಾಡಿಸಿದಳು. +“ತಮ್ಮಾ ರಘು ಎದ್ದೇಳೋ.. ನಿನ್ನ ಹುಡುಕ್ಕೊಂಡು.. ” ರಘು ಪ್ರತ್ಯುತ್ತರವಾಗಿ ಗೊರಕೆ ಬಾರಿಸ ತೊಡಗಿದ. ಕ್ರಾಂತಿಕಾರಿಗಳಾದವರಿಗೆ +ಗೊರಕೆಯ ಹಲವು ಸ್ವರೂಪಗಳು ಗೊತ್ತಿರಬೇಕು.. +“ಏನೋ ಸ್ವಾಮಿ.. ಎಷ್ಟು ಎಬ್ಬಿಸಿದ್ರೂ ಏಳ್ತಿಲ್ಲ.. ತುಂಬ ನಿದ್ದೆ ಬಂದಂತಿದೆ” ತನ್ನ ಪ್ರಯತ್ನ ವಿಫಲವಾದುದರ ಬಗ್ಗೆ ಅಕ್ಕ. ಬಂದಿದ್ದವರು, ಓಹ್ ಹಾಗೋ!” ಎಂದರು ‘ಯಾಕೆ ಎದ್ದೇಳಲ್ಲ ನೋಡೇ ಬಿಡ್ತೀವಿ’ ಎಂದರು. ಒಬ್ಬ ಕೈಲಿದ್ದ ಕೋಲಿನಿಂದ ತಿವಿದ ಇನ್ನೊಬ್ಬ ರಜಸ್ವಲೆಯಾಗಿ ಬಿಸಿಲಿಗೆ ತಲೆ ಒಣಗಿಸಿಕೊಳ್ಳುತ್ತ ಕೂತಿದ್ದ ಪಾಂಚಾಲಿಯ ಭವತ್ ಕೇಶಪಾಶ ಪ್ರಪಂಚಕ್ಕೆ ದುಶ್ಶಾಸನ ಕೈಹಚ್ಚಿದಂತೆ ಮೇಡಿನ್ ಸೋಲಾಪೂರ್ ಬೆಡ್‌ಶೀಟಿಗೆ ಕೈಹಚ್ಚಿ ಎಳೆದು ಮೂಲೆಗೆಸೆದು ಮಲಗಿದ್ದ ವ್ಯಕ್ತಿಯನ್ನು ಅನಾವರಣಗೊಳಿಸಿಬಿಟ್ಟ. +ಅನಂತರವೂ ಮಲಗಿದ್ದ ರಘು ಇನ್ನೊಮ್ಮೆ ಝಾಡಿಸಿ ತಿವಿದ ಮೇಲೆಯೇ ಹ್ಹಾಂ… ಹ್ಹೂಂ… ಅಂತ ಮಗ್ಗುಲು ಬದಲಾಯಿಸಿ; ಕಣ್ಣುಗಲನ್ನು ಉಜ್ಜಿಕೊಂದು ಒಮ್ಮೆ ಗಟ್ಟಿಯಾಗಿ ಆಕಳಿಸಿ ತೆರೆದು ನೋಡುತ್ತಾನೆ ಎದುರಿಗೆ ಇಬ್ಬರು ಪೋಲಿಸರು ಆಕಾಶಕ್ಕೂ ಭೂಮಿಗೂ ಏಕಾಗಿ ನಿಂತಿರುವಂತೆ ಗೋಚರಿಸಿದರು. +ಅಂದುಕೊಂಡಿದ್ದಂತೆ ಬಂದೇ ಬಿಟ್ಟಿದ್ದಾರವರು. ಸರಕಾರಿ ವಿರೋಧಿ ಚಟುವಟಿಕೆಗಳಿಗಾಗಿ ಬಂಧಿಸಲು ಸಂಸಿದ್ಧರಾಗಿ.. ತಮ್ಮ ಗುಂಪಿನ ಭೂಗತ +ಚಟುವಟಿಕೆಗಳನ್ನು ಹೇಗೋ ಪತ್ತೆ ಹಚ್ಚಿದ್ದಾರೆ. ಅಕ್ಬರ್‌ಗೆ ಈಗಾಗಲೆ ಹೈದರಾಬಾದ್ ಗೋಲಿ ರುಚಿ ತೋರಿಸಿರಬಹುದು. ತನ್ನನ್ನು ಏರೋಪ್ಲೇನ್ ಹತ್ತಿಸಿ ಬಹುದಿನದ ವಿಮಾನ ಪ್ರಯಾಣದ ಕನಸನ್ನು ಈಡೇರಿಸಲಿಕ್ಕಾಗಿ ಬಂದಿದ್ದಾರೆ. ಎಲಾ ಭಟ್ಟ ಅಂತೂ ಸುಳಿವು ನೀಡಿ ಬಿಟ್ಟಿರುವೆಯಾ.. ಕಟ ಕಟ ಹಲ್ಲು ಕಡಿದ. +ಧೈರ್ಯಗುಂದಿದರೆ ಕ್ರಾಂತಿಕಾರಿಗಳ ಬೇಳೆ ಬೇಯೋದಿಲ್ಲ. ಯಾವ ಕಾರಣಕ್ಕೂ ಒಳಗಿನ ಅಳುಕನ್ನು ತೋರಗೊಡಬಾರದು. +“ಓಹ್.. ಹಲೋ ಕಾನ್‌ಸ್ಟೇಬಲ್ಸ್.. ವಾಟ್ ಡು ಯು ವಾಂಟ್?” ಎಂದು ಭಲೇ ಗತ್ತಿನಿಂದ ಮಾತಾಡುತ್ತ ಎದ್ದು ಕುಳಿತ. ತಮ್ಮನ ಠಾಕುಠೀಕು ಉತ್ತರದಿಂದ ರುಕ್ಕಮ್ಮ ಹೆಮ್ಮೆಪಟ್ಟರು. ಆದರೆ ಆ ಫೀಸಿಗಳಿಗೆ ಇಂಗ್ಲೀಷ್ ಅರ್ಥವಾದರೆ ತಾನೆ? “ನಡೆಯಯ್ಯಾ ಸ್ಟೇಷನ್ಗೆ!” ಎಂದೊಮ್ಮೆಗೆ ರೋಫ್ ಹಾಕಿಬಿಡುವುದೇ? +ರಘು ನಿಜಕ್ಕೂ ದಿಗ್ಭ್ರಾಂತನಾದನು. ತಾನು ಕನಸಿನಲ್ಲಿ ಮತ್ತು ಮನಸಿನಲ್ಲಿ ಸರಕಾರದ ವಿರುದ್ಧ ಯೋಚಿಸಿದ್ದು ಈ ಅರಕ್ಷಕ ಮಹಾಶಯರಿಗೆ ಹೇಗೋ +ಗೊತ್ತಾಗಿರುವುದೆಂದುಕೊಂಡ. ಸರ್ವಾಧಿಕಾರಿಣಿಯ ಬೇಹುಗಾರಿಕೆ ಬಗ್ಗೆ ಅಚ್ಚರಿಪಟ್ಟ. “ಯಾಕ್ರೀ? ವೈ? ಎಂದು ವಿಹ್ವಲಗೊಂಡು ಕರ್ಟನ್ ಮರೆಯಲ್ಲಿದ್ದ ತನ್ನ ವುಡ್‌ಬೀ ಕಡೆ ನೋಡಿದ. +“ವೈಯೂ ಇಲ್ಲ ಪೈಯೂ ಇಲ್ಲ. ಸ್ಟೇಷನ್‌ಗೆ ಬನ್ನಿ. ಎಲ್ಲಾ ತಿಳೀತದೆ!” ಎಂದು ಪೀಸಿ ಹಿಂದಿನ ದಿನ ಹೊಡೆದುಕೊಂಡಿದ್ದ ಮೀಸೆ ತೀಡಿದ. +“ಯಾಕೆ ಬರ್ಬೇಕ್ರೀ? ಆಮೇಲೆ ಬರ್ತೀನಿ ಹೋಗಿ ನಾನು ನಿದ್ದೆ ಮಾಡಬೇಕಾಗಿದೆ!” ಇವರೇನು ಸಿ‌ಓಡಿ ಕಡೆಯವರಾ? ಸಿಬಿ‌ಐ ಕಡೆಯವರಾ? ಎಂದು +ಅನುಮಾನದಿಂದ ಅವರಕಡೆ ನೋಡುತ್ತಾ ನಿರಾಕರಿಸಿದ. +“ಬರ್ಬೇಕಂದ್ರೆ ಬರ್ಬೇಕಷ್ಟೆ” ಎಂದು ಇನ್ನೊಬ್ಬ ಪೀಸಿ ಕಳೆದ ವಾರ ಕಟ್ಟಿಸಿಕೊಂಡಿದ್ದ ಪಲ್ಗಳ ಸೆಟ್ಟಮ್ ಅನ್ನು ಜಿಹ್ವಾ ಸಂಚಲನದಿಂದ ಸರಿಪಡಿಸಿಕೊಂಡ. +ರುಕ್ಕಮ್ಮ ಕಣ್ಣಲ್ಲಿ ಬಿಸಿಲೇರಿ ವಾಟರನ್ನೇ ತಂದುಕೊಂಡಳು. “ಅಯ್ಯೋ ದೇವರೆ ಕೈಗೆ ಬಂದ ತುತ್ತನ್ನು ಬಾಯಿಗೆ ಬರುವ ಮೊದಲೇ ಕಿತ್ತುಕೊಳ್ಳುತ್ತಿರುವಿಯಲ್ಲ? ಇದು ನ್ಯಾಯವೇ?” +ಕರ್ಟನ್ನಿನ ಪಾರದರ್ಶಕ ಮರೆಯಲ್ಲಿ ಅನಸೂಯಾ ಸೆರಗನ್ನು ಬಾಯಿತುಂಬ ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಉದ್ವಿಗ್ನಗೊಂಡಳು. ಅದು ಹೇಗೋ ರಘುಗೆ ತಿಳಿಯಿತು. ಕಣ್ಣರಿಯದಿರ್ದೊಡೆ ಕರುಳರಿಯದೇನು! ಬರೋದಿಲ್ಲಂದ್ರೇನು ಮಾಡ್ತೀರಯ್ಯಾ?” ಎಂದು ನುಡಿಯನ್ನು ಝಾಸಿಬಿಟ್ಟ. ಅರೆ! ಈ ಹುಲುನರ ಹೀಗೆ ನುಡಿಯುತ್ತಿರುವನಲ್ಲ! ತಾವು ಡ್ರೆಸ್ ಮೇಲಿದ್ದರೂ ಅವರು ಪರಸ್ಪರ ನೋಡಿಕೊಂಡರು. +“ಏನಪ್ಪಾ? ನಿದ್ದೆ ಮಬ್ಬಿನಲ್ಲಿ ಬಾಯಿಗ್ ಬಂದಂಗ ಮಾತಾಡ್ತೀಯಲ್ಲಾ ನಾವ್ಯಾರು ಅಂದ್ಕೊಡೀಯಾ?” ಎಂದು ಮೀಸೆ ಪಲುಕಿದ. +“ನೀವು ಪೋಲಿಸರಂತ ಗೊತ್ತಪ್ಪಾ ಹೆದರೋಕೆ ನಾನೇನು ಹಳ್ಳಿ ಗುಗ್ಗು ಅಲ್ಲ” ಉಗುಳಬಾರದು ನುಂಗಬಾರದು ಸಂಕಟದ ಪರಿಯಾ! ಗತ್ತು ಹಾಕಿದ. ಇದು +ಹೆಂಡತಿಯಾಗುವವಳ ಎದುರುಗಡೆ ತನ್ನ ಪ್ರೆಸ್ಟೀಜಿನ ಪ್ರಶ್ನೆ +“ನೀನು ಹಳ್ಳಿ ಗುಗ್ಗು ಅಲ್ಲ ಅಂತ ನಮ್ಗೂ ಗೊತ್ತು. ಒಳ್ಳೆ ಮಾತಿಂದ ಹೊರಡು” ಎಂದ ಕ್ಲೋಸ್‌ಅಪ್‌ನವ. +“ಬರೋದಿಲ್ಲ ಹೋಗ್ರಿ!” +“ಬರೋದಿಲ್ಲ ಅಂದ್ರೆ ಹೊತ್ಕೊಂಡು ಹೋಗ್ತೀವಿ.. ಏನಂದ್ಕಂಡೀಯಾ?” ಡೈಯವನೂ ಮೀಸೆ ತಿರುವಿದ. +ಒಂದು ಕ್ಷಣ ರಘು ಹೌಹಾರಿಬಿಟ್ಟ. ಪಿಪೀಲಿಕದಾಲಿಗಿರದೇ ಗೋಷ್ಪದದ ಕೀಲಾಲ ವಿಲಯಾಂಬುವಿನವೊಲು ಎಂದು ತೊರವೆ +ರಾಮಾಯನದಲ್ಲಿ ಹೇಳಿರುವಂತೆ ಇರುವೆಯಂಥ ಅವನಿಗೆ ಎಮ್ಮೆಗಂಜಳವೇ ಜಲಪ್ರಳಯವೆಂಬಂತೆ ಕಂಡಿತು. ರುಕ್ಕಮ್ಮಗಂತೂ ಕರುಳು ಕಿತ್ತು ಬಾಯಿಗೆ ಬಂದುಬಿಟ್ಟಿತು. ಮಣ್ಣಿನ ಗೋಡೆ ತೊಳೆಯೋಕ್ಯಾಕೆ ಪ್ರಯತ್ನಿಸುತ್ತಿರುವ ನೀ ತಮ್ಮನು. “ರಘು ನಾಕು ಹೆಜ್ಜೆ ಹೋಗಿ ಬಂದುಬಿಡು ತಂದೆಯೇ. ಕನ್ನಡಿಗಾಗಿ +ಮೂಗುಕಳಕೊಳ್ಳೋದ್ಯಾಕಪ್ಪ” ಎಂದು ಗಗ್ಗರಿಸಿ ಕನಿಷ್ಟ ಬಿಲ್ಲೆಗಳ ಕಡೆ ತಿರುಗಿ “ನನ್ತಮ್ಮ ಬಂಗಾರದಂಥವ್ನಪ್ಪಾ.. ಯಾರ ಗೊಡವೆಗೆ ಹೋಗೋನಲ್ಲ.. ನಾಕು ಮಾತಾಡಿ ಕಳಿಸಿಕೊಡ್ರಿ” ಎಂದು ಕೈ ಮುಗಿದು ಕೇಳಿಕೊಂಡಳು. +ಅವರು ಉತ್ತರ ಕೊಡುವ ಮೊದಲೆ ರಘು “ಇವರೇನು ಹುಲಿಯಲ್ಲ ಸಿಂಹ ಅಲ್ಲ.. ನೀನ್ಯಾಕೆ ಹೆದತಿ.. ಸುಮ್ನಿರಕ್ಕ.. ಸೊಳ್ಳೆಗೆ ಹೆದರಿ ಯಾರಾದ್ರು ಇರೋ ಮನಿ +ಬಿಡ್ತಾರೇನು?” ಎಂದು ಸಡನ್ನ ಎದ್ದು ದೋಸೆ ತಿನ್ನಲಿಕ್ಕೆ ಹೋಗುವಾಗ ಯಾವ ರೀತಿ ಡ್ರೆಸ್ ಮಾಡಿಕೊಂಡಿದ್ದನೋ ಹಾಗೆ ಡ್ರೆಸ್ ಮಾಡಿಕೊಂಡನು. +ತಮ್ಮನ್ನು ಸೊಳ್ಳೆಗೆ ಹೋಲಿಸಿದ ಇವನು ನಿಜವಾಗಿಯೂ ಕ್ರಾಂತಿಕಾರಿಯೇ ಇರಬೇಕೆಂದು ಕನಿಷ್ಟ ಬಿಲ್ಲೆಗಳು ಸಂದೇಹಿಸಿ-ಪರಸ್ಪರ ಮುಖ ನೋಡಿಕೊಂಡು ಬದ್ಧ ಭ್ರುಕುಟಿಯಾದರು. ರಾಯರ ಕುದುರೆಯಿಂದ ಕಾಲು ತುಳಿಸಿಕೊಂಡಂಥ ಅನುಭವಕ್ಕೆ ಅವರು ಪಕ್ಕಾಗುತ್ತಿರಲು.. …ಇತ್ತ ಗುದ್ದಿದವನೂ ಅಲ್ಲ ಅತ್ತ ಗುದ್ದಿಸಿಕೊಡದವನೂ ಅಲ್ಲದ ರಘುರಾಮ ನೀರಡಿಸಿ +ಪಾಕಶಾಲೆಯಂ ಪೊಕ್ಕು ಅರ್ಥನಾಗಿ ಪಂಕಜನೇತ್ರೆಯಂ ನೋಡಲು ಆಕೆಯು ಬರಸೆಳೆದು ಬಿಗಿದಪ್ಪಿ ತನ್ನ ದೇಹದ ಸಮಸ್ತ ಶಕ್ತಿಯನ್ನು ಅವನ ದೇಹದೊಳಗೆ ತುಂಬಿ, ಕಿವಿಯೊಳಗೆ ಬಾಯಿ ಇಟ್ಟು ‘ಧೈರ್ಯಂ ಸರ್ವತ್ರ ಸಾಧನಂ’ ಎಂದು ಹೇಳಿ ಬೀಳ್ಕೊಡಲು.. ಅವನು ಹೊಚ್ಚ ಹೊಸ ಹುರುಪಿನಿಂದ ಪೋಲಿಸರ ಹಿಂದೆ ನಡೆಯುತ್ತ ಬಾಗಿಲು.. ಅಟುವಾಗ ಅಕ್ಕ ರುಕ್ಕಮ್ಮ, ‘ಜೋಪಾನ ತಮ್ಮಾ, ಸಿಟ್ಟಿನ ಕೈಗೆ ಬುದ್ಧಿ ಕೊಡಬ್ಯಾಡ.. +” ನೀನು ಬರೊವರೆಗೆ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೂಡ್ರುವೆನು’ ಎಂದು ಹೇಳಿದ್ದು ಕೇಳಿಸಿಕೊಂಡನು. +ಎರಡು ನಮೂನೆಯ ಆಭರಣಗಳಂಥ ಪೋಲಿಸರ ನಡುವೆ ಸೀಗೆಯೊಳಗಿನ ಬಾಳೆಯಂತೆ ಅವನು ನಡೆಯುತ್ತಿದ್ದುದನ್ನು. ಓಣಿಯ ಅಬಾಲ ವೃದ್ಧರೆಲ್ಲರು ‘ಅಯ್ಯೋ ದೇವರೆ ಎಂಥವರಿಗೆ ಎಂಥ ಕಾಲ ತಂದೆಯಲ್ಲಾ’ ಎಂದು ನೋಡುತ್ತ ಮಮ್ಮಲನೆ ಮರುಗಿದರು. +ಕಿಟಕಿಯ ಜಾಲರಿಯಲ್ಲಿ ನೋಡುತ್ತಿದ್ದ ಅಲುಮೆಲಮ್ಮನೂ ‘ಅಯ್ಯೋ ಪಾಪ ಇದೇನಿದು! ಎಂದು ದುಃಖಿತಳಾಗಿ ಅವನ ಕ್ಷೇಮ ಕೋರಲು ಕ್ಷೋಣಿಯಸ್ಯ ರಥೋಥಾಂಗಯುಗಳು ಚಂದ್ರಾರ್ಕ ಬಿಂಬದ್ವಯಂ ಎಂದು ಪರಮಾತ್ಮನನ್ನು ಪ್ರಾರ್ಥಿಸಿದಳು. +ರಾಗಕ್ಕೆ ಮೂಡಲು, ರೋಗಕ್ಕೆ ಪದುವಲು, ಭೋಗಕ್ಕೆ ತೆಂಕಲು, ಯೋಗಕ್ಕೆ ಬಡಗಲು ಎಂಬಂತೆ ಸರ್ವ ಪಾಪಗಳಿಗೆ ಮುಕ್ತಿ ಧಾಮದಂತೆ ಗ್ರಾಮದ ಹೃದಯ ಭಾಗದಲ್ಲಿ ಎಂದರೆ ತಮ್ಮ ಮನೆಗೆ ಈಶಾನ್ಯ ಭಾಗದಲ್ಲಿ; ಎಂದರೆ ರಕ್ತಪಿಪಾಸಿಣಿಯಾದ ದುರುಗಮ್ಮನ ಗುಡಿ ಪಕ್ಕ ಎಂದರೆ ನಕ್ಷತ್ರಾಕಾರದ ವೇದಿಕೆಯ ಮೇಲೆ ಕಳೆದ ನಲವತ್ತು ವರ್ಷಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಪೋಲೀಸು ಸ್ಟೇಷನ್ನು ಎಂಬ ನಾಮಾಂಕಿತ +ಕಟ್ಟಡವನ್ನು ತಾನು ನೋಡಿದ್ದು ಚಿಕ್ಕಂದಿನಲ್ಲಿ. +ರಘುರಾಮನ ಬಾಲ್ಯವನ್ನು ಮುದಗೊಳಿಸಿದ್ದಂಥ ಪರಮ ಪವಿತ್ರ ಕಟ್ಟಡ ಅದು. ಇಂದ್ರನ ವಜ್ರಾಯುಧಕ್ಕೂ ಅದನ್ನು ಜುಮ್ಮೆನಿಸುವುದು ಸಾಧ್ಯವಿರಲಿಲ್ಲ. ತನ್ನ ಕಾನೂನು ಬಾಹಿರ ಪ್ರಣಯದಾಟಗಳನ್ನು ಅದೆಲ್ಲಿ ಜಗಜ್ಜಾಹಿರು ಮಾಡಿಬಿಡುವನೋ ಎಂದು ಸ್ತ್ರೀವ್ಯಾಮೋಹಿಯೂ; ಸಕಲ ಗುಪ್ತ ರೋಗಗಳ ಆಶ್ರಯದಾತನೂ ಆಗಿದ್ದ ಅಂದಿನ ಎಸೈ ಬಿಳಿಗಿರಿರಂಗಯ್ಯಸ್ವಾಮಿ ಬಾಲಕನಿದ್ದ ತನ್ನ ಬೆನ್ನು ದಡವಿ ಬಾಯೊಳಗೆ ಸೊಂಟಿ ಪೆಪ್ಪರುಮೆಂಟಿಟ್ಟು ನೀನು ಮುಂದೆ ದೊಡ್ಡ ಮನುಷ್ಯನಾಗುವಿ ಎಂದು ಆಶೀರ್ವಾದ ಮಾಡಿದ್ದ. +ಆ ಒಂದಾನೊಂದು ನೆನಪುಗಳನ್ನು ಮೆದುರಂತರಾಳದಿಂದ ಕಿತ್ತು ಮೆಲುಕು ಹಾಕುತ್ತ ತನ್ನ ಕುರಿತು ರಸ್ತೆಯಲ್ಲಿ ಇಕ್ಕೆಲದಲ್ಲಿ ಸತ್‌ಪ್ರಜೆಗಳು ತಲಾ ಒಂದೊಂದು ಮಾತಾಡುತ್ತಿರುವುದನ್ನು ಲೆಕ್ಕಿಸದೆ ವೀರಪಾಂಡ್ಯ ಕಟ್ಟಬೊಮ್ಮನನಂತೆ ಧೀರೋದಾತ್ತವಾಗಿ ನಡೆಯುತ್ತ ಠಾಣೆಗೆ ಹತ್ತಿರ ಬಂದೇ ಬಿಟ್ಟ. +ಕಂದ, ಕೊಂದ, ತಂದ ಎಂಬೀ ಮೂರು ಲಿಂಗಾಕಾರದ ಶಬ್ದಗಳೊಳಗೆ ಅಡಕವಾಗಿರುವ ರಾಮಾಯಣದಂತೆ ವೇದಿಕೆ ಮೇಲೆ ಘನೀಭೂತಗೊಂಡು ಉಲ್ಲಾಸಮಯತೆಯಿಂದ ನಿಂತಿದ್ದ ಠಾಣೆ ಕಡೆ ನೋಡಿ ನಿಟ್ಟುಸಿರುಬಿಟ್ಟ. +ಒಂದೊಂದು ಮೆಟ್ಟಲಿಗೂ ಒಂದೊಂದು ಕಥೆ ಇರುವ ಭೋಜರಾಜನ ಸ್ವರ್ಣ ಸಿಂಹಾಸನದಂಥ ಠಾಣೆಯ ಕಡೆ ಏರೀ ಏರೀ ತಲುಪಿ ಒಳಗೆ ಪ್ರವೇಶಿಸುವ ಮುನ್ನ ಹಿಂತಿರುಗಿ ನೋಡಿದ ಅವನ ಕಣ್ಣಿಗೆ ದುರುಗಮ್ಮನ ಬೇವಿನ ಮರದ ಕೊಂಬೆ ರೆಂಬೆಗಳ ಮೇಲೆಲ್ಲ ಕದನ ಕುತೋಹಲಿಗಳು ಗೋಚರಿಸಿದರು. +ತಾನು ಬೇತಾಳ ಪಂಚವಿಂಶತಿ ಕಥೆಗಳ ಹಿರಣ್ಯಾಕ್ಷನಂಥ ಎಸೈ ಇರಬಹುದೆಂದು ಊಹಿಸಿದ್ದಕ್ಕೆ ವಿರುದ್ಧವಾಗಿ ನರಪೇತಲನೂ; ಪ್ರಾಚೀನ ಆಸ್ತಮಾ ರೋಗಿಯೂ ನೀಳಕಾಯನೂ ಆದಂಥ ವ್ಯಕ್ತಿಯೊಬ್ಬ ಕೊಕ್…. ಒಕ್ ಕೆಮ್ಮು ಬಂದು ಕಫವನ್ನು ಅಗ್ನಿಶಾಮಕ ಬಕೆಟ್ಟಿಗೆ ಉಗುಳುತ್ತ ಎಸೈ ಕುರ್ಚಿಮೆಲೆ ವಿರಾಜಮಾನನಾಗಿದ್ದ. +“ಹಲೋ ಸಾರ್” ಎಂದು ಕೇಳಿ ಬಂದ ದ್ವನಿ ಕಡೆ ತಲೆಯನ್ನು ಕೂಡಲೆ ಎತ್ತಿದ ತಪ್ಪಿಗೆ ಕೆಮ್ಮು ಒತ್ತರಿಸಿ ಬಂದುಬಿಟ್ಟು ಕೊಕ್ ಕೊಕ್ ಕೆಮ್ಮಿದ. ಅವನನ್ನು ನೋಡುತ್ತಲೆ ರಘುಗೆ ತೆಲುಗು ಸಿನೆಮಾ ನಟ ರಮಣಾರೆಡ್ಡಿ ನೆನಪಾದ. ಗ್ರಾಮಸ್ತರು ಪ್ರೀತಿಯಿಂದ ಟೈಗರ್, ಜೂಡೋ ಮಾಸ್ಟರ್, ಕರಾಟೆ ಕಲಿ ಎಂದು ಬಿರುದುಗಳನ್ನು +ಕೊಟ್ಟಿದ್ದರು. ಟೈಗರ್ ಬಂದ ಮೇಲೆ ಕಳ್ಳತನಗಳಾಗಿಲ್ಲ. ಜೂಡೋಮಾಸ್ಟರ್ ಬಂದ ಮೇಲೆ ಗ್ರಾಮಸ್ಥರು ಪರನಾರಿ ಸೋದರರಾಗಿರುವರು. +ಕರಾಟೆ ಕಲಿತು ಬಂದ ಮೇಲೆ ಸಾಲ ಕೊಡುವವರು ತಗೊಳ್ಳುವವರು ಸತ್ಯಹರಿಶ್ಚಂದ್ರನ ನೆಂಟರಿಷ್ಟರಾಗಿರುವರು. ರಘು ಆಶ್ಚರ್ಯದಿಂದ ನೋಡಿದ್ದ. ಎಸೈ ಎಂಬ ಸ್ಕೆಲಿಟನ್ನನ್ನು. ಸ್ಕೆಲಿಟನ್ನು ಪ್ರಶ್ನಾತ್ಮಕವಾಗಿ ನೋಡುತ್ತಿರುವಾಗಲೇ ಎದುರುಗಿದ್ದ ಲಟಗೂ ಪಟಗೂ ಕುರ್ಚಿಮೇಲೆ +ಕೂತುಕೊಂಡ. ಇನ್‌ವೆಸ್ಟಿಗೇಷನ್ನೋ; ಇಂಟರಾಗೇಷನ್ನೋ ಇನ್ನು ಶುರುಮಾಡುತ್ತಾನೆ. ತಾನು ಹುತಾತ್ಮನಾಗಿ ಇತಿಹಾಸದ ಪುಟ ಸೇರುತ್ತೇನೆ ಎಂದು ಕಲ್ಪಿಸಿಕೊಂಡ ತನ್ನ ಕಲ್ಪನೆಗೆ ತಾನೆ ನಕ್ಕ. +“ವಾಟ್ ಡು ಯು ವಾಂಟ್ ಫ್ರಂ ಮೀ” ರಘು ಬಬಲ್‌ಗಮ್ ಬಾಯಲ್ಲಿ ನಮಲುತ್ತ ಹೇಳಿದ. +“ಇಂಗ್ಲಿಷಿನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಳ್ಳುತ್ತಲೆ ಟೈಗರ್” ಎಲವೋ ತ್ರೀನಾಟ್ +ಟೂ ಹಡದೊಲೋರ ಹೋಟಲಿಗ್ಹೋಗಿ, ಓನ್ಲಿ ಒನ್ ಕಾಫಿ ತಗೊಂಡು ಬಾರೋ” ಎಂದು ಘರ್ಜಿಸಿದ. +ಓಹೋ ತಾನೊಬ್ನೇ ಕಾಫಿ ಕುಡ್ದು ಸ್ಟ್ರಾಂಗ್ ಇಂಟರಾಗೇಷನ್ನು ಸ್ಟಾರ್ಟ್ ಮಾಡ್ತಾನೆ ಎಂದುಕೊಳ್ಳುತ್ತ ರಘು ಬಬ್ಬಲ್‌ಗಮ್ಮನ್ನು ಮರಡೋನ ಫುಟ್ ಬಾಲನ್ನು ಆ ಮೂಲೆಯಿಂದ ಈ ಮೂಲೆಗೆ ತಿರುವಾಡಿದಂತೆ, ಆ ದವಡೆಯಿಂದ ಈ ದವಡೆಗೆ ಓಡಾಡಿಸಿದ. +“ಯಾಕೆ ಸಾರ್ ಹುಷಾರಿಲ್ವೆ” ಮಾತಿಗೆಳೆಯದಿದ್ದರಾಗುತ್ತದೆಯೆ? +“ಒನ್‌ಟ್ವೆಂಟಿ ಕಿಲೋ ಲಿಫ್ಟ್ ಮಾಡ್ತಿದ್ದೆ ಕಣಪ್ಪಾ.. ಎಂದು ಮುಖವನ್ನು ಒಂದು ಕ್ಷಣ ಮಾಡಿಕೊಂಡು ಹೇಳಿದರು. “ಅದಿರ್‍ಲಿ.. ನಾನು ಒಂದು ಕೇಳ್ತೀದೀನಿ…ನೀನು ಮಾತ್ರ ನಾನು ನಿನ್ನ ತಮ್ಮ ಅಂತ ತಿಳ್ಕೊಂಡು ನಿಜ ಹೇಳ್ಬೇಕು. ನೋಡು.” +ಆತ ನನಗೆ ತಮ್ಮ! ಆತನ ವಯಸ್ಸೇನು? ನನ್ನ ವಯಸ್ಸೇನು? ಏನು ಮಾತಾಡುತ್ತಿರುವನಲ್ಲ! +“ನನಗಿನ್ನೂ ಮದುವೇನೇ ಅಗಿಲ್ಲ ಸಾರ್ ಸ್ಟಿಲ್ ಐಯಾಮ್ ಬ್ಯಾಚುಲರ್. ನನಗಿನ್ನೂ ಬಿಲೋ ಟ್ವೆಂಟಿಫೈವ್.” +“ಹ್ಹಾ! ನೀನಿನ್ನೂ ಬ್ಯಾಚುಲರ್.. ನಿನಗಿನ್ನೂ ಟ್ವೆಂಟಿಫೈವ್. ನನಗಿಂತ ನೀನು ಯಂಗರ್ರೇನು?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತ ಕರಾಟೆ ಕಲಿ ” ಐ ಮ್ಯಾರೀಡ್ ವೆನ್ ಐ ವಾಜ್ ಟ್ವೆಲ್ವ್ ಇಯರ್ಸ್ ಓಲ್ಡ್.. ” +“ಇರಬೌದು… ನನ್ಯಾಕೆ ಕರೆಸಿದ್ರಿ ಹೇಳಿ?” ಹೋದ ಕೂಡಲೆ ಕನ್ನಡಿಯಲ್ಲಿ ನೋಡಿಕೊಳ್ಳಲು ನಿರ್ಧರಿಸುತ್ತ ಹೇಳಿದ. +ಅಷ್ಟರಲ್ಲಿ ಕಾಫಿ ಬಂತು. ಟೈಗರ್ ಬಸಿಯಲ್ಲೊಂದಿಷ್ಟು ಹಾಕಿಕೊಟ್ಟು, ತಾನು ಹ್ಹಾ… ಹ್ಹೂ… ಅನ್ನುತ್ತ ಕುಡಿಯತೊಡಗಿದ. +ಪೀಸಿಗಳೆಲ್ಲ ಮುಖ ಸಿಂಡರಿಸಿಕೊಂಡು ಟೈಗರನ್ನು ಶಪಿಸುತ್ತ ಅಲ್ಲಲ್ಲಿ ನಿಂತುಕೊಂಡಿದ್ದರು. +ರಘು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಟೈಗರ್ನ ಮೀಸೆ ಮೇಲೆ ಅದುವರೆಗೆ ವಿರಾಜಮಾನವಾಗಿದ್ದ ನೊಣ ಪುರ್ರನೆ ಹಾರಿ ಬಂದು ಬಸಿಯೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಕ್ರಾಂತಿಕಾರಿಯ ಸ್ವಾಭಿಮಾನವನ್ನು ಕಾಪಾಡಿತು. +ಟೈಗರ್ ನೊಣವನ್ನು ನೋಡಿ ತನ್ನ ಜಗಳಗಂಟಿ ಹೆಂಡತಿಯನ್ನು ನೆನಪಿಸಿಕೊಂಡು ಹಿಡಿಹಿಡಿ ಶಾಪ ಹಾಕಿದ. ನಾಲಿಗೆಯಿಂದ ಮೀಸೆಗಂಟಿದ್ದ ಕಾಫಿ ನೆಕ್ಕಿಕೊಂಡ. +ಇದನ್ನೆಲ್ಲ ನೋಡುತ್ತಿದ್ದ ರಘೂಗೆ ಮೈಪರಚಿಕೊಳ್ಳಬೇಕೆನ್ನಿಸಿತು. +“ನನ್ನ್ಯಾಕೆ ಕರೆಸಿದೆ, ಹೇಳಿ ಸ್ವಾಮಿ?” ರಘು ಕಡ್ಡಿ ಮುರಿದಂತೆ ಮಾತಾಡಿದ್ದು ಕಂಡು ಪೀಸಿಗಳಿಗೆ ಆಶ್ಚರ್ಯ. ಇಂದಿರಾಗಾಂಧಿಯವರ ಸಾಮ್ರಾಜ್ಯದಲ್ಲಿ ಇವನು ಪೋಲೀಸ್ರಿಗೆ ಹೆದರುತ್ತಿಲ್ಲವೆಂದು. +“ಎಷ್ಟು ವರ್ಷದಿಂದ.. ಅಂದರೆ ಹೌಮೆನಿಯರ್ಸಿಂದ ಬೆಂಗ್ಳೂರು ಸೇರ್‍ಕೊಂಡಿರುವಿ?” +ಟೈಗರ್ ಕೊಕ್ ಕೊಕ್ ಕೆಮ್ಮಿತು. +“ಅದನ್ನು ಕಟ್ಕೊಂಡೇನಾಗೋದೈತಿ?” ರಘು ಎಷ್ಟಿದ್ದರೂ ಕ್ರಾಂತಿಕಾರಿ, ಏಕ್‌ಮಾರ್ ದೋ ತುಕುಡಾ. +“ನಿನ್ತಮ್ಮನಾಗಿ ನಾನು.. ” +“ಅಲ್ಲ! ಗ್ರಾಂಡ್ ಫಾದರಾಗಿ.. ” ಮಾತನ್ನು ತಿದ್ದಿದ. +“ಏನೋ ಒಂದು… ಆ ವಯಲೆಂಟು ಸಿಟೀಲಿ ಏನು ಕೆಲ್ಸ ಮಾಡ್ತಿದ್ದೀ?” +“ಏನೋ ಒಂದು ಮಾಡ್ತಿದೀನಿ.” +“ಹಂಗಂದ್ರ ಸರಕಾರದ ವಿರುದ್ಧ ಮಸಲತ್ತೂ ಗಿಸಲತ್ತೂ.” +“ಮಸಲತ್ತು ಇಲ್ಲ ಗಿಸಲತ್ತೂ ಇಲ್ಲ. ಇಂದಿರಾಗಾಂಧಿಯವರೇನು ನಮ್ಮ ಸೋದರತ್ತೆ ಏನ್ರಿ +ಅದೆಲ್ಲ ಮಾಡೋಕೆ?” +“ಸೋದರತ್ತೆ ಅಂತೀಯಲ್ಲ.. ನವರಾಷ್ಟ್ರದ ನಿರ್ಮಾಪಕಿ ಅಂತ ಅನಬೇಕಪ್ಪಾ.” +“ಹ್ಹೂ ಆಗ್ಲಿ. ಆಕೆ ನವರಾಷ್ತ್ರದ ನಿರ್ಮಾಪಕಿಯೇ ಆಗಿರ್ಲಿ.. ಆದ್ರೆ ನಾನು +ದುಡೀಬೇಕು ತಿನ್ನಬೇಕು ಅಲ್ವೆ?” +“ಅದು ಸರಿ.” +ಟೈಗರು ಸೊಂಟದ ಮೇಲೊಂದು ಕೈ ಗಲ್ಲದ ಮೇಲೊಂದು ಕೈ ಇಟ್ಟುಕೊಂಡು ಸ್ವಲ್ಪ ಹೊತ್ತು +ಯೋಚಿಸಿದ. +“ಹಾಗಾದ್ರೆ ನೀನು ಬುಡಮೇಲು ಕೃತ್ಯದಲ್ಲಿ ತೊಡಗಿಲ್ಲ. ಅಂತಾಯ್ತು” ಟೈಗರ್ ಲೊಚಗುಟ್ಟಿತು. +“ನಾನ್ಯಾಕೆ ತೊಡಗ್ಲಿ ಸ್ವಾಮಿ.. ನಮ್ದೇ ನಮ್ಗೆ ಸಾಕಾಗಿದೆ!” +“ಆದ್ರೆ ನಮ್ಗೆ ಹಂಗನ್ನಿಸ್ತಾ ಇದೆಯಲ್ಲಾ! +“ಏನಾದ್ರೂ ಎವಿಡೆನ್ಸು.” +“ನೀನು ತೊಟ್ಕೊಂಡಿರೋ ಕೆಂಪು ಬಟ್ಟೆನೇ ಸಾಕು.. ನೀನು ಸಂಚುಗಾರ ಅಂತ ಸಾಬೀತು +ಮಾಡೋಕೆ!” +“ಹಂಗಂದ್ರೆ ಈ ದೇಶದ ಓಣಿಓಣಿಗಳಲ್ಲಿರೋ ಸಾಧು ಸಂತ್ರು, ಗುರು ಜಗದ್ಗುರುಗಳೆಲ್ಲರೂ ತೊಟ್ಟುಕೊಂಡಿರೋದು ಕೆಂಪು ಬಟ್ಟೆಯನ್ನೆ.. ಅವರನ್ನೆಲ್ಲ ಸಂಚುಗಾರರೂಂತ ಆರೋಪದ ಮೇಲೆ ಅರೆಷ್ಟು ಯಾಕೆ ಮಾಡಬಾರ್ದು ಮೊದ್ಲು!” +“ಭಲೆ ಚಾಲಾಕಿದ್ದಿ ಕಣಪ್ಪಾ.” +“ಈ ದೇಶದಲ್ಲಿರೋ ಅರವತ್ತೆಪ್ಪತ್ತು ಕೋಟಿ ಮಂದಿ ಮೈಯಲ್ಲಿ ಹರಿತಿರೋ ರಕ್ತದ ಬಣ್ಣಾನು ಕೆಂಪು ಎಂಬೋದನ್ನು ಮರೀಬೇಡಿ.” +“ಶಹಭಾಷ್” ಟೈಗರ್ ಒಂದು ಕ್ಷಣ ದಿಗ್ಭ್ರಮೆಗೊಂಡು ಮುಂದುವರಿದು ಕೇಳಿದ, +“ಇದನ್ನೆಲ್ಲ ನಾವು ಸರಿಮಾಡಿಬಿಡ್ತೀವಿ. ನಮ್ಗೇನು ಇದು ದೊಡ್ ವಿಷಯ ಅಲ್ಲ.. +ಎಂಥೆಂಥ ಕೇಸ್ನ ಮುಚ್ಚಿ ಹಾಕಿದ್ದೀವಿ.. ನಿನ್ನ ಕೇಸ್ನೂ ಮುಚ್ಚಿಹಾಕ್ತೀವಿ.. ಆದ್ರೆ..” +“ಆದ್ರೆ?” +“ಸ್ವಲ್ಪ ಕೈ ಬೆಚ್ಚಗೆ ಮಾಡಬೇಕಪ್ಪಾ” ಟೈಗರ್ ಪಿಸುಗುಟ್ಟಿದ. +“ನನ್ನ ಹತ್ರ ಅದೇನು ಇಲ್ಲ” +“ಇದೆ… ಮುಂಗೈಗೆ ಕಟ್ಕೊಂಡಿರೋ ಅಟಕ್ ಪಿಟಕ್ ವಾಚು!” +“ಅಟಕ್ ಅಲ್ಲ ಪಿಟಕ್ಕೂ ಅಲ್ಲ… ಎಲೆಕ್ಟ್ರಾನಿಕ್” +“ಅದ್ನ ಕೊಟ್ ಬಿಟ್ರೆ?” +ಅಷ್ಟರಲ್ಲಿ “ಯಾರ್ರಿ ಅವ್ರು ಎಸೈ.. ಅವರಿಗೆ ಹೇಳೋರು ಕೇಳೋರು ಇಲ್ಲವೇನು? +ಇವ್ರಿಂದಾಗಿ ಊರಿಗೆ ಯಾರೂ ಬರಂಗಿಲ್ಲ… ಹೋಗೋಹಂಗಿಲ್ಲ” ಎಂದು ಸ್ಟೆನ್‌ಗನ್ ಸ್ಪೋಟಿಸುತ್ತ ಗೊಬ್ಬರದ ಅಂಗಡಿ ಜಲಜಾಕ್ಷಿ ಒಳಗೆ ಬಂದುಬಿಟ್ಟಳು. +ಆಕೆಯನ್ನು ನೋಡುತ್ತಲೆ ಟೈಗರ್ ಲದ್ದಿ ಹಾಕಿದ. ಗಬಕ್ಕನೆ ಎದ್ದು, ‘ಬನ್ನಿ ಮೇಡಂ ಬನ್ನಿ ಮೇಡಮ್’ ಅಂತ ಎದ್ದು ಸ್ವಾಗತ ಕೋರಿದ. +ರಘು ಕೂಲಿಂಗ್ ಗ್ಲಾಸ್ ಧರಿಸಿದ್ದ ಆ ಶ್ವೇತಾಂಬರಿಯತ್ತ ಆಶ್ಚರ್ಯದಿಂದ ನೋಡಿದ. +“ನಮ್ಮಿಂದ ಏನಾಗಬೇಕು ಮೇಡಂ” ಟೈಗರ್ ಹಲ್ಲು ಗಿಂಜಿದ. +“ನಮ್ಮ ಪೈಕಿ ಒಬ್ಬರನ್ನು ಸ್ಟೇಷನ್ಗೆ ಕರೆಸಿಕೊಂಡಿದ್ದೀರಂತಲ್ಲ?” +“ಇವ್ರೇ! ಅವರು” +“ಓಹ್ ಇವರೇನಾ.. ” ಜಲಜಾಕ್ಷಿ ರಘು ಕೈ ಕುಲುಕಿ “ನೈಸ್ ಟು ಮೀಟ್ ಯು… ನಾನು +ಅನಸೂಯಾ ಕ್ಲಾಸ್ಮೇಟ್ಸ್” ಎಂದಳು. +ನಂಟರ ಟೈಗರ್ ಹ್ಯಾಪು ಮೋರೆ ಹಾಕ್ಕೊಂಡು ಮಾತು ಮಾತಿಗೆ ಸಾರಿಪಾರಿ ಹೇಳಿ +ಅವರಿಬ್ಬರನ್ನು ಬೀಳುಕೊಟ್ಟನು. +ತನ್ನನ್ನು ಸಂಕಟದಿಂದ ಪಾರು ಮಾಡಿದ ಈ ವೀರವನಿತೆ ಯಾರೂಂತ ಆಕೆಯ ಹಿಂದೆಯೇ ಬೆರಗಿನಿಂದಲೇ ನಡೆದ. +ಯಮನ ಕಾಟೇಜು ಪೊಕ್ಕುಳಿದು ಬಂದಾಯ್ತವನ ಪರಿಸ್ಥಿತಿ. +ನೆಮ್ಮದಿಯಿಂದ ಉಸಿರುಬಿಟ್ಟ. +“ಥ್ಯಾಂಕ್ಸ್ ಮೇಡಂ. ನಾನಿನ್ನು ಬರ್‍ತೀನಿ. +“ಬನ್ನಿ ಡ್ರಾಪ್ ಕೊಡ್ತೀನಿ” ಜಲಜಾಕ್ಷಿ ಕಾರಿನ ಬಾಗಿಲು ತೆಗೆದಳು. +“ಮತ್ತೆ ಯಾಕೆ! ನಡಕೊಂಡೇ ಹೋಗ್ತೀನಿ” ಫಾರ್ಮಾಲಿಟೀಸ್ ವಿಷಯದಲ್ಲಿ ರಘು ಯಾವತ್ತೂ ಒಂದು ಹೆಜ್ಜೆ ಮುಂದು. +“ಅಯ್ಯೋ ಬಾರಪ್ಪಾ… ನಿನ್ ಬಿಡೋ ನೆಪದಲ್ಲಿ ನಾನೂ ಅನೂನ ಮಾತಾಡಿಸಿದಂತಾಗ್ತದೆ” +ಎಂದು ಒತ್ತಾಯಿಸಿದ ಮೇಲೆ ನಿರಾಕರಿಸುವುದಾವುದೇನು? +ಆಕೆಯ ಒತ್ತಾಯದಿಂದ ಆಕೆಯ ಮಗ್ಗುಲು ಅಂದರೆ ಮುಂದುಗಡೆ ಸೀಟಿನಲ್ಲಿ ವಿರಾಜಮಾನನಾದ. +ದುರುಗಮ್ಮನ ಬೇವಿನ ಮರದ ಮೇಲೆಲ್ಲ ಕೂತಿದ್ದ ಕದನ ಕುತೋಹಲಿಗಳು ‘ಉಘೇ’ ಎನ್ನಲು ಜಲಜಾಕ್ಷಿ ಎಂಬ ರಾವಣನು ರಘುರಾಮ ಎಂಬ ಸೀತೆಯನ್ನು ಕಾರು ಎಂಬ ಪುಷ್ಪಕ ವಿಮಾನದಲ್ಲಿ ಅಪಹರಿಸುತ್ತಿರುವ ರೀತಿಯಲ್ಲಿ ಬುರ್ ಎಂದು ಸದ್ದು ಮಾಡುತ್ತ; ನೆಲ ಮುಗಿಲು ನಡುವೆ ಶೋಭಾಯಮಾನದವಾದ ಧೂಳು ಎಬ್ಬಿಸುತ್ತ, ತಗ್ಗು ದಿನ್ನಿಯೊಳಗೆ ಒಳ್ಳೆಯ ಸ್ಪ್ರಿಂಟರ್ ಥರಕುಪ್ಪಳಿಸುತ್ತ; ಹೆಜ್ಜೆಗೊಮ್ಮೊಮ್ಮೆ ಪುಂಯ್ ಪುಂಯ್ ಪುರ್ರ್ ಪುರ್ರ್ ಎಂದು ಕೇದಾರ ಗೌಳ ಹಾಡುತ್ತ; ಆನೆ ಹೋದ ಕಡೇಲೆಲ್ಲ ಹಾದಿ ಎಂಬಂತೆ ಹಾದಿ ಇಲ್ಲದ ಕಡೆ ಹಾದಿ ಮಾಡಿಕೊಂಡು ಓಡತೊಡಗಿತು. +ಓಡೀ ಓಡೀ ದಣಿದು ಶಾಸ್ತ್ರಿಗಳ ಮನೆ ಮುಂದೆ ಡರ್ರಡಸಕ್ಕೆಂದು ಸಿಂಹನಾದಗೈಯುತ್ತ ಅದು ನಿಂತು ಬಿಟ್ಟೊಡನೆ ಅಲುಮೇಲಮ್ಮ; ಶಾಸ್ತ್ರಿಗಳು ; ಶಾಮು, ಕಾಮೋಷಿ ಮೊದಲಾದ ಸಸ್ತನಿಗಳು ಹೊಸಪೇಟೆಯಿಂದ ಬೀಗರೇ ಬಂದುಬಿಟ್ಟಿರುವರೆಂದು ಅನ್ಯಥಾ ಭಾವಿಸಿ ಅಂಗಳಕ್ಕೆ ಓಡಿಬಂದರು. +ಧೂಳಿನೊಳಗೆ ಅನಾವರಣಗೊಂಡು ಕ್ರಮೇಣ ಗೋಚರಿಸಿದ ಜಲಜಾಕ್ಷಿ ಎಂಬ ರಾಹುವನ್ನೂ, ರಘುರಾಮ ಎಂಬ ಕೇತುವನ್ನೂ ನೋಡಿ ಇದ್ದಕ್ಕಿದ್ದಂತೆ ತಳ ಸಡಲಿದಂತಾಗಿ ಶಾಮು ಎಂಬ ಚಂದ್ರನು ಕಕ್ಕಸು ಎಂಬ ವಿಂಧ್ಯಾಪರ್ವತದ ಗವಿಯೊಳಗೆ ಪಲಾಯನ ಮಾಡುತ್ತಿದ್ದುದನ್ನು ಕಂಡು.. +“ಎಲೈ ಪುಳಿಯೋಗರೆ.. ಮರ್ಯಾದೆಯಿಂದ ಬರ್ತೀಯೋ ಇಲ್ಲವೋ?” ಎಂದು ಗೊಬ್ಬರದಂಗಡಿಗೆ ಗೊಬ್ಬರದಂಗಡಿಯೇ ‘ಧಡ್ ಧಡಿಲ್’ ಎಂದು ಗುಡುಗಲು.. +ಶಾಮನು ಶೋಕ ಸಂತಪ್ತ ಕವಿತೆಯಂತೆ ಸಹಗಮನ ಮಾಡಲಿರುವ ಸತಿಯಂತೆ ಭಾರವಾದ ಒಂದೊಂದೆ ಹೆಜ್ಜೆಗಳನ್ನು ಇಡುತ್ತ ಕಾರಿನ ಕಡೆ ನಡೆಯುತ್ತಿರಲು…. +“ಸ್ತ್ರೀ ಸ್ವಾತಂತ್ರ್ಯಂ ನ ಅರ್ಹತಿ” ಎಂದು ಶಾಸ್ತ್ರಿಗಳು ಅವನನ್ನು ತಡೆಯಲು +ಯತ್ನಿಸುತ್ತಿರಲು.. +“ಅಯ್ಯೋ ದೇವರೇ ನನ್ನ ಮಗನನ್ನು ಕಾಪಾಡು” ಎಂದು ಅಲುಮೇಲಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಒಳಗೆ ಓಡಲು +“ಏನೋ, ಸೀನ್‌ಕಾನರಿ.. ಎಷ್ಟು ದಿನಾಂತ ತುಳಸೀ ಕಟ್ಟೆಯೊಳಗೆ ಬಚ್ಚಿಟ್ಟುಕೊಂಡಿರ್ತೀಯಾ.. ಬಾ.. ಕಾರು ತಳ್ಳು” ಎಂದು ಜಲಜಾಕ್ಷಿ ಸುಗ್ರೀವಾಜ್ಞೆ ಮಾಡಿದಳು. +“ಯಾಕಿವರ್‍ನ ಗೋಳಾಡಿಸುತ್ತಿರುವಿರಿ?” ಎಂದು ರಘು ಒಂದು ಕ್ಷಣ ಜಾಣ್ತನದ ಪ್ರಶ್ನೆ ಹಾಕಿದ. +“ಇವ್ರೂ ನನ್ ಕ್ಲಾಸ್‌ಮೇಟ್ ಕಣ್ರಿ.. ನಾನಿವನನ್ನು ರೇಪ್ ಮಾಡೋಕೆ ಎರಡು ಸಾರಿ ಪ್ರಯತ್ನಿಸಿದ್ದೀನಿ” ಎಂಸು ಬಲಿಪಶು ಕಡೆ ತಿರುಗಿ “ಹೌದೋ ಅಲ್ಲವೋ” ಎಂದು ಕಣ್ಣು ಮಿಟುಕಿಸಿದಳು. +ಅದಕ್ಕೆ ಅವನು ವಿಧೇಯ ವಿದ್ಯಾರ್ಥಿಯಂತೆ ತಲೆ ಅಲ್ಲಾಡಿಸಿದನು. +“ಅಭ್ಯಾಸಾನುಸಾರಿಣೀ ವಿದ್ಯಾಬುದ್ಧಿ; ಕರ್ಮಾನುಸಾರಿಣೀ” ಎಂದು ಶಾಸ್ತಿಗಳು ಬಿಟ್ಟು ಬಿಡಮ್ಮಾ ಆದಿಶಕ್ತಿ ಅವನು ಮದುವೆಯಾಗೋ ಹುಡುಗ” +“ಅದನ್ನು ಪರೀಕ್ಷೆ ಮಾಡಬೇಕೂಂತಲೇ ನಾನು ಪ್ರಯತ್ನಿಸಿದ್ದು ಶಾಸ್ತಿಗಳೇ” ಎಂದು ಆಕೆ ತುಂಬ ಬೊಲ್ಡಾಗಿ ಉತ್ತರ ಕೊಟ್ಟಳು. +ವಿಧಿ ಲಿಖಿತಂ ಬುದ್ಧಿರನುಸರತಿ ಅಂತ ಹಣೆಹಣೆ ಚಚ್ಚಿಕೊಳ್ಳುತ್ತ ಒಳಗಡೆ ಹೋದರು. +ಶಾಮನ ಸುಪ್ತಾವಸ್ಥೆಯ ಮನಸ್ಸಿನ ನೂರೆಪ್ಪತ್ತರಡನೆಯ ಪುಟದ ಕೊನೇ ಪ್ಯಾರಾದಲ್ಲಿ ಜಲಜಾಕ್ಷಿಯ ರೂಪದ ಹಾಗೂ ಕಬಂಧ ಬಾಹುವಿನ, ಧೃತರಾಷ್ಟ್ರಾಲಿಂಗನದ ವರ್ಣನೆ ಇತ್ತು. ಆದ್ದರಿಂದ ಅವನು ಒಲ್ಲದ ಮನಸ್ಸಿನಿಂದ ಸಲ್ಲದ ಕಾರ್ಯವನ್ನು ಮಾಡಲು ಸಂಸಿದ್ಧನಾದನು. +ರಘು ಜಲಜಾಕ್ಷಿ ಕೂತಿದ್ದ ಕಾರಿನ ಹಿಂಭಾಗವನ್ನು ಎರಡೂ ಕೈಗಳಿಂದ ಸ್ಪರ್ಶಿಸಿದಾಗ ಅಸದಳ ಆನಂದವಾಯಿತು. ಜಲಜಾಕ್ಷಿಯ ಭಾರೀ ಜಘನಗಳನ್ನು ತಳ್ಳುತ್ತಿರುವೆನೆಂದು ಅವನು ಭಾವಿಸಿದ. ತಿಣುಕುತ್ತ ತಳ್ಳುತ್ತಲೆ ಅವನ ತಳ ಕ್ಲಾರಿನೇಟ್ ವಾದನ ಮಾಡಿತು. ಅಷ್ಟು ದೂರ ತಳ್ಳಿದ. ಕಾರು ಸ್ಟಾರ್ಟ್ ಆಗುತ್ತಲೆ ‘ಪಾಹಿಮಾಮ್ ಜಗನ್ಮಾತಾ’ ಎಂದು ಉದ್ಗರಿಸುತ್ತ ಮನೆಯೊಳಗೆ ಓಡಿ ತಲೆ ಮರೆಸಿಕೊಂಡನು. +ಪ್ರಾಯೋ ಗಚ್ಚತಿ ಯತ್ರ ದೈವಹತಕಃತತ್ರೈವ ಯಾಂತ್ಯಾಪದಃ ಎಂದು ಭರ್ತೃಹರಿ ಹೇಳಿರುವುದು ಸುಳ್ಳಾಗದು. +“ಅಡಸಿದಾಪತ್ತಿನಲಿ ಧೈರ್ಯವ ಹಿಡಿವುದೇ ಸುಪ್ರೌಢೀ ಅಂತ ಕೋಳಿವಾಡದ +ನಾರಣಪ್ಪನೋರು ಹೇಳಿರುವುದು ಸುಳ್ಳಲ್ಲವೋ” ಎಂದು ಶಾಸ್ತ್ರಿಗಳು ಮೊಮ್ಮಗನನ್ನು ಎದುರಿಗೆ ಕೂಡ್ರಿಸಿಕೊಂಡು ಪ್ರಾಪಂಚಿಕ ಜ್ಞಾನದ ಬಗ್ಗೆ ವಿವರಿಸುತ್ತಿರುವಾಗ.. +ಅತ್ತ.. +“ಈ ರಘು ನಿಜಕ್ಕೂ ಹುಲಿ ಕಣೇ ಅನಸೂಯಾ…ಪೋಲೀಸರನ್ನು ಯಾರು ಹೆದರಿಸುವರೋ ಅಂಥವರು ಹೆಂಡತಿಗೆ ಖಂಡಿತ ಹೆದರಿ ಬಾಳುವು ಮಾಡ್ಕೊಂಡು ಹೋಗ್ತಾರೆ ನೋಡು” ಎಂದು ಜಲಜಾಕ್ಷಿ ಅಣಿಮುತ್ತುಗಳನ್ನುದುರಿಸಿದಳು. “ಇಂಥವರು ತಮ್ಮ ಪ್ರತಿಭೆಯನ್ನು ಇಂದಿನ ರಾಜಕಾರಣಕ್ಕೆ ಧಾರೆ ಎರೆಯಬೇಕಿದೆ” ಎಂದು ರಾಜಕಾರಿಣಿಯ ಗತ್ತಿನಲ್ಲಿ ನುಡಿದಳು. +ಬ್ರಹ್ಮನ ಮುಖದಿಂದ ಜನಿಸಿದ ಕಾಮಧೇನುವೇ ಅಟಕ್ ಪಿಟಿಕ್ ವಾಚಿನ ರೂಪದಲ್ಲಿ ಅಲಂಕರಿಸಿರುವುದೋ ಎಂಬಂತಿದ್ದುದರ ಕಡೆ ಕುಡಿ ನೋಟ ಬೀರಿದಳು. ಇತಿಹಾಸದ ನಾಳಿನ ಪುಟದಲ್ಲಿ ಭಾರತದ ಭವಿಷ್ಯ ಬರೆಯಲಿರುವ ತಾನು ಯಕಃಚಿತ್ ವಾಚಿಗೆ ಪರವಶಳಾಗುವುದೆಂದರೇನು?…ದಿಕ್ಕುಗಳನ್ನು ಹಡುಕಿಕೊಂಡಲೆಯುವ ತನ್ನ ಎಮ್ಮೆಲ್ಲೆ ಡಾರ್ಲಿಂಗಿಗೆ ಹೇಳಿದರಾಯಿತು. ಕಂಕುಳದವರೆಗೆ ಕಟ್ಟಿಕೊಳ್ಳುವಷ್ಟು ತಂದುಕೊಡುವನು! +ಆಕೆ ತನ್ನ ಘನವಾದ ವಾಚಿನ ಕಡೆ ನೋಡುತ್ತಿರುವಾಗ ಅನಸೂಯಾ ಕಾಫಿಯೊಂದಿಗೆ ಚುರುಮುರಿ ತಂದುಕೊಟ್ಟಳು. ತನ್ನ ಕಿಲಾಸು ಮೇಟಿಗೆ ಕುರುಕುಲು ತಿಂಡಿ ಎಂದರೆ ತುಂಬ ಇಷ್ಟವೆಂದು ಆಕೆಗೆ ಗೊತ್ತಿಲ್ಲದಿಲ್ಲ. ಇಲ್ಲವಾದರೆ ಈ ಪಾಟಿ ದೇಹ ಬೆಳೆಸಿಕೊಳ್ಳುವುದು ಹೇಗೆ ಸಾಧ್ಯ? ಆಕೆ ಕಣ್ಣು ಮಿಟಿಕಿಸುವುದರೊಳಗಾಗಿ ತಿಂದು ಮುಗಿಸಿದಳು. ಕಾಫಿ ಕುಡಿಯುತ್ತ ಮದುವೆಯ ದಿನದ ಬಗ್ಗೆ ವಿಚಾರಿಸಿದಳು. ಕರವಸ್ತ್ರದಿಂದ ಬಾಯಿ ಒರೆಸಿಕೊಳ್ಳುತ್ತ ಒಳ್ಳೆ ಕ್ರಾಂತಿಕಾರಿಯನ್ನೇ ಮಾಡ್ಕೊಳ್ತಿದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. ತನ್ನ ಗೆಳೆತಿಯ ಕಿವಿಯೊಳಗೆ ಬಾಯಿಇಟ್ಟು ಡರ್ರನೆ ಡೇಗಿ ‘ಏನಾದ್ರು ಒಂಚೂರು ಶಾಂಪಲ್ ನೋಡಿದೇನು? ಎಂದೂ, ಆ ಶಾಸ್ತ್ರಿಯನ್ನು ಪ್ರೀತಿಸಿ ಮೋಸ ಹೋಗಿದ್ದಿ ಎಂದೂ, ಮದುವೆಗೆ ಮುಂಚೆ ಟೇಸ್ಟ್ ನೋಡೊದನ್ನು ಮರೆಯಬೇಡವೆಂದೂ; ಅದರಲ್ಲಿ ತಾನು ಎಕ್ಸ್‌ಪರ್ಟ್ ಎಂದೂ; ಇಲ್ಲದಿದ್ದಲ್ಲಿ ತನ್ನಿಂದ ವ್ಹೇಟ್‌ಲಿಫ್ಟ್ ಮಾಡಲಿಕ್ಕಾಗುತ್ತಿರಲಿಲ್ಲವೆಂದೂ ಪಿಸುಗುಟ್ಟಿದಳು. +ಇನ್ನೂ ಹೇಳುತ್ತಿದ್ದಳೇನೋ! ಆದರೆ ಓಣಿಯ ಹುಡುಗರೆಲ್ಲ ಕಾರಿನ ಪಾರದರ್ಶಕದ ಮೈಯೊಳಕೆ ಇಣುಕಿ ತಂತಮ್ಮ ಮುಖವನ್ನು ನೋಡಿಕೊಳ್ಳತೊಡಗಿದ್ದರು. ಕೆಲವರು ಪುಂಯ್ ಪುಂಯ್ ಅಂತ ಹಾರ್ನ್ ಮಾಡುತ್ತಿದ್ದರೆ ಮತ್ತೆ ಕೆಲವರು ಅದರ ಮೇಲೆ ಸ್ವಯಾರ್ಜಿತ ಜ್ಞಾನವನ್ನು ಧಾರೆಎರೆಯತೊಡಗಿದ್ದರು. ಈ ಕಾರಣದಿಂದಾಗಿ ಜಲಜಾಕ್ಷಿ ” ಅನೂ ಬರ್ತೀನಿ…ಮುಂದೆ ಹೇಗೋ ಎಮ್ಮೆಲ್ಲೆಯಾಗಿ ಬೆಂಗ್ಳೂರಲ್ಲಿರ್‍ತೀನಲ್ಲ… ಆಗ ವಿಚಾರಿಸಿಕೊಳ್ತೀನಿ” ಎಂದು ಬೀಳ್ಕೊಂಡು ಹೊರಟಳು. +ಆಕೆ ಮರೆಯಾಗುವವರೆಗೆ ರಘು ನೋಡಿದ. ಇಂಥಾಕಿ ತಮ್ಮ ಕ್ರಾಂತಿಕಾರಿಚಟುವಟಿಕೆಗಳಲ್ಲಿ ಇದ್ದುಬಿಟ್ಟಿದ್ದರೆ ಚಿಟಿಕೆ ಹೊಡೆವಷ್ಟರಲ್ಲಿ ಸಮಾನತೆಯನ್ನು ಸಾಧಿಸಿಬಿಡಬಹುದೆಂದುಕೊಂಡ. ಇಂಥಾಕಿಯ ತ್ರಿವರ್ಣದ ಭಾವಚಿತ್ರ ಇಟ್ಟುಕೊಂಡೇ ಅಮೀರರ ಮತ್ತು ಗರೀಬರ ನಡುವಿನ ಕಂದರ ಅಳಿಸಿಬಿಡಬಹುದೆಂದುಕೊಂಡ ರಘು ಒಂದು ನಿಡಿದಾದ ಉಸಿರುಬಿಟ್ಟನು. +ಅನಸೂಯ ಏನೋ ಹೇಳಬೇಕೆಂದು ಬಾಯಿ ತೆರೆದಳು. ಬೆಳಗಿನ ತಿಂಡಿಗೆ ಜೊತೆಯಾಗಿ ಶಾಸ್ತ್ರಿಗಳ ಮನೆಗೆ ಬರಬೇಕೆಂದು ಆರು ಬೊಟ್ಟಿನ ಪದ್ದಕ್ಕ ತುಸು ಹೊತ್ತಿನ ಹಿಂದೆ ಬಂದು ಹೇಳಿ ಹೋಗಿದ್ದಳು. ಜೊತೆಯಾಗಿ ಅಲ್ಲದಿದ್ದರೂ ರಘು ನನ್ನೊಬ್ಬನ್ನೇ ಕಳಿಸಬಹುದು! ತಿಂಡಿಯಲ್ಲಿ ಏನಾದರೂ ಹಾಕಿಬಿಟ್ಟರೆ ಎಂದು ಅನುಮಾನ ಕಾಡಿತು. ತಿಂಡಿ ತಿಂದಾದ ಮೇಲೆ ತಟ್ಟೆ ಕಪ್ಪು ತೊಳೆ ಎಂದು ಹೇಳಿಬಿಟ್ಟರೆ ಎಂಬ ಇನ್ನೊಂದು ಅನುಮಾನವೂ ಕಾಡಿತು. ಹೃದಯದೊಳಗೊಂದೂ ಬಚ್ಚಿಟ್ಟುಕೊಳ್ಳದೆ ಬಾಯಿಯಿಂದ ರಘು ಒಂದೇ ಸಮನೆ ಪುತುಪುತು ಮಾತಾಡಿಬಿಟ್ಟರೆ ಎಂಬ ಮತ್ತೊಂದು ಅನುಮಾನವೂ ಕಾಡಿತು. ಶಾಸ್ತ್ರಿಗಳಾಗಲೀ; ಅಲುಮೇಲಮ್ಮನಾಗಲೀ ರಘೂಗೆ ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಮುರಿದುಬಿಟ್ಟರೆ ಎಂಬ ಮಗದೊಂದು ಅನುಮಾನವೂ ಕಾಡಿತು. ಹೀಗೆ ಯೋಚಿಸುತ್ತಾ ಯೋಚಿಸುತ್ತಾ ತನ್ನ ಅನುಮಾನಗಳಿಗೆ ತನಗೇ ನಗು ಬಂದು ಅನುಸೂಯ +ಕಿಲಕಿಲ ನಕ್ಕಳು. +ಅಕ್ಕ ತಮ್ಮ ಇಬ್ಬರೂ ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದರು. +* +* +* +ಮರುದಿನ ಬೆಳೆಗ್ಗೆ ಸೂರ್ಯನ ಕಿರಣಗಳು ಸಚರಾಚರಗಳಿಗೆ ಹಲೋ ಹಲೊ ಅನ್ನುತ್ತಿರುವಾಗ ಆರು ಬೊಟ್ಟಿನ ಪದ್ದಕ್ಕ ಬರಬೇಕಂತೇ ಅಂತ ಮತ್ತೆ ಬಂದಳು. ಒಂದು ಪಟ್ಟದ ಹಿಂದೆಯೇ ಕುಡುಕ ಗಂಡನನ್ನು ತ್ಯಜಿಸಿರುವ ಪದ್ದಕ್ಕಗೆ ಮೂಲತಃ ಮಾಂಸಾಹಾರಿಯಾದರೂ ಅಪ್ಪಟ ಸಸ್ಯಾಹಾರಿಗಳ ಮನೆಯಲ್ಲಿ ಕಸಮುಸುರಿ ಮಾಡುವುದೆಂದರೆ ತುಂಬ ಮೋಜು. ಗಂಡಸರನ್ನು ತ್ಯಜಿಸಿದ ಪಾಪ ಪರಿಹಾರರ್ಥವಾಗಿ ಶಾಸ್ತ್ರಿಗಳ ಮನೆಯಲ್ಲಿ ಸೇವೆಗೆ ಸೇರಿಕೊಂಡಿದ್ದಳು. ಒಂದೆರಡು ತಿಂಗಳ ಹಿಂದೆ ಕೈಗೆ ಬಂದಿರುವ ಮಗನನ್ನು ಎಲ್ಲರಿಗೆ ತೋರಿಸಿಕೊಂಡು ಅಡ್ಡಾಡಿದ್ದಳು. ಕಸಮುಸುರಿಯಿಂದ ಕೂಡಿಟ್ಟಿದ್ದ ಗಂಟನ್ನು ಮಗನ ಕೈಗೆ ಕೋಡುತ್ತ ‘ನಿಮ್ಮಪ್ಪನ್ನ ಬೇಷಿ ನೋಡ್ಕಳಪಾ’ ಎಂದು ಕಣ್ತುಂಬಿ ಹೇಳಿ ಬೀಳ್ಕೊಟ್ಟಿದಳು. +“ಅನಸೂಯಮ್ಮನವರೇ.. ನಿಮ್ಮವರನ್ನು ಕರಕೊಂಡು ಬರಬೇಕಂತೆ.. ಅಲುಮೇಲಮ್ಮನವರು ಬಿಟ್ಟು ಬರಬೇಡ ಎಂದು ಹೇಳಿದ್ದಾರೆ!” ಪದ್ದಕ್ಕಗೆ ವ್ಯಾಕರಣ ಶುದ್ಧ ಮಾತಾಡುವುದೆಂದರೆ ಇತ್ತೀಚಿಗೆ ತುಂಬಾ ಖಯಾಲಿ. +ತಮ್ಮ ಮಗಳಾಗಲೀ; ತಮ್ಮನಾಗಲೀ ಅಲ್ಲಿಗೆ ಹೋಗುವುದು ರುಕ್ಕಮ್ಮಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. +ಆದರೆ ದೋಸೆ ವಾಸನೆ ಎಂಬ ಬಲೆಯಲ್ಲಿ ಬಂಧಿತನಾಗಿ ವಿಲಿವಿಲಿ ಒದ್ದಾಡುತ್ತಿದ್ದ ರಘುವನ್ನು ತಡೆಯುವುದು ಒಂದೆ, ಉಕ್ಕಿ ಹರಿಯುವ ನದಿಯನ್ನು ತಡೆಯುವುದು ಒಂದೆ. +“ಪದ್ದಕ್ಕ.. ನಾನಿಲ್ಲಿ ಮಾಡಿಟ್ಟಿರೋ ತಿಂಡಿ ಯಾರು ತಿನ್ನಬೇಕಮ್ಮಾ?.. ಅವಲಕ್ಕಿ ವಗ್ಗರಣೆ ಮಾಡಿ ಕಾಯ್ತಿದೀನಿ” ರುಕ್ಕಮ್ಮ ಬಚ್ಚಲಮನೆಯಿಂದಲೇ ಕೂಗಿದಳು. +ಸುತ್ತೆಲ್ಲ ಗುಡ್‌ಮಾರ್ನಿಂಗ್ ಹೇಳುತ್ತಿರುವ ಮಸಾಲೆ ದೋಸೆ ಪರಿಮಳ ಬೇರೆ, ಮಂತ್ರಮುಗ್ದನಾದ. ಪರವಶನಾದ. ಬ್ರಾಹ್ಮಣ ವಿಧವೆಯರು ರುಚಿಕರವಾದ ದೋಸೆ ತಯಾರಿಸುತ್ತಾರೆಂಬುದು ಅವನು ಕಂಡುಹಿಡಿದ ಸಿದ್ಧಾಂತಗಳಲ್ಲಿ ಒಂದು. ಉದ್ದಿನಬೇಳೆ ಪ್ರಮಾಣ ಕಡಿಮೆ ಇದ್ದರೂ ರುಬ್ಬಿದ ಹಿಟ್ಟು ಉಬ್ಬುವುದು ಅವರ ಮೇಲಿನ ಅಂತಃಕರಣದಿಂದಾಗಿಯೇ ಎಂಬುದು ಅವನು ಕಂಡುಕೊಂಡ ಹಲವು ಸತ್ಯಗಳಲ್ಲಿ ಒಂದು. +ಬರೀ ವಗ್ಗರಣೆ ಮಾಡುವುದರಲ್ಲಿಯೇ ಜೀವ ಸವೆಸಿದ ಅಕ್ಕನ ಕಡೆ ನೋಡಿದ. ಅಕ್ಕನಿಗೆ ದೋಸೆ ಮಾಡುವುದು ಗೊತ್ತಿದ್ದಲ್ಲಿ ಭಾವ ಮಾನವಾತೀತ ಶಕ್ತಿಯನ್ನು ಹಿಂಬಾಲಿಸಿ ಹೋಗುತ್ತಿರಲಿಲ್ಲವೇನೋ? +ಒಳಗಡೆ ಅಕ್ಕ ಕಾದ ಕಡಾಯಿಯಲ್ಲಿ ಎನೇನೋ ಹಾಕಿ ಚುಂಯ್ ಚುಂಯ್ ಅನ್ನಿಸುತ್ತಲೆ ಇರುವಳು. ಸೀರೆಗೆ ಕೈಯೊರಸಿಕೊಳ್ಳುತ್ತ ಆಕೆ ಅಕಸ್ಮಾತ್ ಪಡಸಾಲೆಗೆ ಬಂದಳು. +ಬೆಂಗಳೂರಿನಲ್ಲಿ ವಾಸಿಸುತ್ತಿರುವವನು ಎಂಬ ಅಕ್ಕರೆಯಿಂದ ಪದ್ದಕ್ಕ ರಘೂನ ಕಡೆಗೆ ಕಡೆಗೆ ನೋಡುತ್ತ ನೋಡುತ್ತ ಮುಖವನ್ನು ಸಾಕಷ್ಟು ಕೆಂಪಗೆ ಮಾಡಿಕೊಂಡಿದ್ದಳು. ಸಾಮಾನ್ಯ ಮನುಷ್ಯನನ್ನು ಮಾತಾಡಿಸಿದಂತೆ ಬೆಂಗಳೂರಿನವರನ್ನು ಮಾತಾಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಆಕೆ ಒರಳಲ್ಲಿ ಅವಲಕ್ಕಿ ಕುಟ್ಟುವ ಹಾಗೆ ಭಾಷೆಯನ್ನು ಅಲಂಕಾರವೆಂಬ ಒರಳಲ್ಲಿ ನಿಶ್ಶಬ್ದವಾಗಿ ಕುಟ್ಟುವ ತಾಲೀಮು ನಡೆಸಿದ್ದಳು. +ಪದ್ದಕ್ಕ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದುದ್ದನ್ನು ನೋಡಿ ರುಕ್ಕಮ್ಮ ಊಹಿಸಿದ್ದೇ ಬೇರೆ! ಗಂಡಿನ ಆಸರೆಯಿಂದ ವಂಚಿತಗೊಂಡಿರುವ ಹೆಣ್ಣುಗಳೆಂದರೆ ಆಕೆಗೆ ಎಲ್ಲಿಲ್ಲದ ಗುಮಾನಿ. ಒಮ್ಮೊಮ್ಮೆ ತನ್ನನ್ನು ತಾನೇ ಅನುಮಾನಿಸುತ್ತಿದ್ದ ಜಾಯಮಾನದಾಕಿಯೂ ಹೌದು. +“ಏನ್ ಪದ್ದಕ್ಕ? ಇನ್ನೂ ಇಲ್ಲೇ ನಿಂತಿದ್ದೀಯಲ್ಲೆ… ನಾನು ಹೇಳಿದ್ದು ಕಿವಿಗೆ ಬೀಳ್ಲಿಲ್ಲೇನು?” ಎಂದು ರುಕ್ಕಮ್ಮ ಕೈಯಲ್ಲಿದ್ದ ಸವುಟು ಝಳಪಿಸಿಬಿಡುವುದೇನು! +ಸೆಂಟಿನ ಗಾಳದಲ್ಲಿ ಸಿಕ್ಕಿಕೊಂಡಿದ್ದ ಪದ್ದಕ್ಕ ಬೆಚ್ಚಿ ಬಿದ್ದಳು. +“ಕಳಿಸ್ರಿ ರುಕ್ಕಮ್ಮನವರೇ.. ಇಲ್ಲಾಂದ್ರೆ ಅಮ್ಮನವರಿಗೆ ಬೇಸರವಾಗುತ್ತೆ” ವಯ್ಯಾರದಿಂದ ಹೇಳಿದಳು. +“ನೀವೆಂಗ ಮಾತಾಡ್ತಿದ್ದೀಯಲ್ಲ ಪದ್ದಕ್ಕ…” ರುಕ್ಕಮ್ಮ ತಮ್ಮನ ಕಡೆ ಕಣ್ಣಿಂದ ಸಂಜ್ಞೆಮಾಡುತ್ತ ” ಅವನೇನು ಚಿಕ್ಕ ಮಗೂನಾ ಎಲ್ಲಿಗೋಗ್ಬಾರ್ದು ಎಲ್ಲಿಗೋಗಬೇಕು ಅಂತ ಹೇಳಿಸಿಕೊಳ್ಳೋಕೆ” ಎಂದು ಒದ್ದೆ ಕೈಯನ್ನು ಸೀರೆಗೆ ಒರೆಸಿಕೊಂಡಳು. +ರಘೂ ಬಿಸಿತುಪ್ಪವನ್ನು ನುಂಗಲಾರ ಉಗುಳಲಾರ. +ಕೊನೆಗೂ ಧೈರ್ಯದಿಂದ – +“ಅಷ್ಟೊಂದು ಕರೀತಿದ್ದಾರಂದ್ರೆ ಹೋಗದಿದ್ರೆ ಹೇಗೆ?” ಎಂದ. +ಅವನೇ ಹೋಗಿಬರುವುದಾಗಿ ಹೇಳಿದ ಮೇಲೆ ತಮಗಿನ್ನೇನು ಕೆಲಸ? ಯಾರ ಮುಖವನ್ನು ನೋಡುವ ಧೈರ್ಯ ಮಾಡದೆ ಭಾವನ ಕಂದು ವರ್ಣದ ಪಂಚೆಯನ್ನು ಮಡೆಚಿ ಲುಂಗಿ ರೀತಿಯಲ್ಲಿ ಉಟ್ಟುಕೊಂಡು ಮೇಲೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ತೊಟ್ಟುಕೊಂಡು ಕನ್ನಡಿಯಲ್ಲಿ ಇಣುಕಿ ತನ್ನ ರೂಪಕ್ಕೆ ತಾನೆ ಬೆರಗಾದ. ಅವನು ಸಾಮಾನ್ಯವಾಗಿ ದೋಸೆ ಸೇವಿಸಬೇಕಾದ ಸಂದರ್ಭದಲ್ಲಿ ಧರಿಸುತ್ತಿದ್ದುದು ಕೆಂಪು ಬಣ್ಣದ ಅಂಗಿಯನ್ನು, ಆದರೆ ತಾನಿಂದು ದೋಸೆ ಲಗಾಯಿಸುತ್ತಿರುವುದು ಸಿದ್ಧಾಂತಿಗಳ ಮನೆಯಲ್ಲಿ. ಆದ್ದರಿಂದ ಸಾತ್ವಿಕವಾಗಿ ಕಾಣುವುದು ಮುಖ್ಯ. ಅದೂ ಅಲ್ಲದೆ ನಖಶಿಖಾಂತ ಸಜ್ಜನಿಕೆ ಪ್ರಕಟಿಸುವುದು ಅನಿವಾರ್ಯವಾಗಿತ್ತು. ಎಲಿಜಬೆತ್ ಟೇಲರ್ ಹಿಂದೆ ರಿಚರ್ಡ್ ಬರ್ಟನ್ ನಡೆದ ರೀತಿಯಲ್ಲಿ ಹತ್ತು ಹೆಜ್ಜೆ ನಡೆಯುವುವಷ್ಟರಲ್ಲಿ ‘ಮಾಮಾ’ ಎಂಬ ಕೋಮಲ ದ್ವನಿ ಕೇಳಿ ಬಂತು. ಗಕ್ಕನೆ ನಿಂತ. ಅನಸೂಯಾ ಬಂದಳು. ವೀರ ಯೋಧನಿಗೆ ಸ್ತ್ರೀರತ್ನ ಶುಭ ಹಾರೈಸದಿದ್ದರಾದೀತೇ? ಅವನ ಹಣೆಗೆ ಶ್ರೀಗಂಧದ ಬೊಟ್ಟಿಟ್ತು, ಮುಂಗೈಗೆ ಅಟಕ್ ಪಿಟಕ್ ವಾಚು ಕಟ್ಟಿದಳು. “ಮಾಮಾಽಽ… ಅವಲಕ್ಕಿ ವಗ್ಗರಣೆಗೆ ಹೊಟ್ಟೇಲಿ ಒಂಚೂರು ಜಾಗ ಖಾಲಿ ಇರ್ಲಿ ಮಹರಾಯ… ” ಎಂದು ಪಿಸುಗುಟ್ಟಿದಳು. ರುಕ್ಕಮ್ಮ ಸಿಡುಕಿ ಪಾಕಶಾಲೆಯಂ ಪೊಕ್ಕಳು. ಆಯ್ತು.. ಆಯ್ತು ಅನ್ನುತ್ತ ರಘು ತಲೆಹೊಸ್ತಿಲು ದಾಟಿದ. +ಕಿರ್ದಬಲ ಓಡಿ ಪದ್ದಕ್ಕ ಮುನ್ಸೂಚನೆ ನೀದಿದ್ದರಿಂದ ಸ್ವಾಗತಿಸಲು ಅಲುಮೇಲಮ್ಮ ಖುದ್ದ ತನ್ನ ಪುತ್ರರತ್ನವನ್ನು ಕಳಿಸಿದಳು. ದೋಸೆಯೂ, ಕ್ರಾಂತಿಕಾರಿಯೂ ಎಂಬ ಕವನವನ್ನು ತಲೆ ತುಂಬಿಟ್ಟುಕೊಂದಿದ್ದ ಶಾಮಾ ಶಾಸ್ತ್ರೀ ತುಳಸಿ ಗಿಡದ ಬಳಿ ಕಾಯುತ್ತ ನಿಂತಿದ್ದ. ತಾನು ಒಳಗೊಳಗೇ ಹೊಟ್ಟೆಕಿಚ್ಚು ಪಡುತ್ತಿರುವ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಬಂದುಬಿಡುವನು! ಹಸ್ತಲಾಘವದ ಮೂಲಕ ತನ್ನ ವ್ಯಕ್ತಿತ್ವವನ್ನು ಅಳತೆ ಮಾಡಿದರೇನು ಮಾಡುವುದು?.. ಹೀಗೆ ಯೋಚಿಸುವಷ್ಟರಲ್ಲಿ ರಘು ಮೂಗರಳಿಸಿಕೊಂಡು ಬಂದೇ ಬಿಡುವುದೇ! ‘ಹಲೋ ಶಾಮಾ ಶಾಸ್ತ್ರಿ’ ಎಂದು ತಾನೇ ಮುಂದುಬಿದ್ದು ಕೈಹಿಡಿದುಬಿಡುವುದೆ! ಕೀಲು ಸಡಿಲುವಂತೆ ಕುಲುಕಿಬಿಡುವುದೆ! “ನಿಮ್ಮ ಪರಿಚಯ ಆಗುತ್ತಿರುವುದರಿಂದ, ತುಂಬ ಸಂತೋಷವಾಗ್ತಿದೆ!” ಎಂದು ಅಸ್ಖಲಿತವಾಗಿ ನುಡಿದುಬಿಡುವುದೆ? +ಎಲ್ಲಿ ತಮ್ಮ ವಂಶೋದ್ಧಾರಕನ ಕೈ ದೇಹದಿಂದ ಬೇರ್ಪಟ್ಟಿತೋ ಎಂದು ಲಗುಬಗೆಯಿಂದ ಧ್ಯಾನಾಸಕ್ತರಾಗಿದ್ದ ಶಾಸ್ತ್ರಿಗಳು ಕೋಣೆಯಿಂದ ಓಡಿಬಂದರು. +‘ಬಾರಪ್ಪಾ ಬಾ’ ಎಂದು ಮೂರು ಮೊಳ ದೂರ ನಿಂತು ಬರಮಾಡಿಕೊಂಡರು. “ನಮಸ್ಕಾರ” ಅಂದ. +ಸಾಮಾಜಿಕ ಬದಲಾವಣೆಯನ್ನು ಬಿಲ್‌ಕುಲ್ ನಿರಾಕರಿಸುವಂಥ ಸನಾತನತೆಯಿಂದಲೇ ಮಾಡಲ್ಪಟ್ಟಂತಿರುವ ದಿವ್ಯ ಮೂರ್ತಿಯನ್ನು ನಖಶಿಖಾಂತ ದಿಟ್ಟಿಸಿದ. +ಶಾಸ್ತ್ರಿಗಳು ದಿಟ್ಟಿಸಿದರು. +ಭ್ರೂ ಮದ್ಯೆ ಸ್ರಕ್ಚಂದನ ತಿಲಕ! +ಮುಖದ ತುಂಬ ದೇದೀಪ್ಯ ಮಂದಹಾಸ! +ಸಾಕ್ಷಾತ್ ಶ್ರೀ ಮನ್ಮಹಾ ವಿಷ್ಣುವೇ ಶೂದ್ರ ರೂಪ ಧರಿಸಿ ತಮ್ಮ ಮುಂದೆ ನಿಂತಿರುವಂತೆ ಒಂದು ಕ್ಷಣ ಭಾಸವಾಯಿತು. +ತಮ್ಮ ಕಲ್ಪನೆಗೆ ತಾವೇ ಪಷ್ಚಾತ್ತಾಪಪಟ್ಟುಕೊಂಡರು. +ತಿಂಡಿಗೆ ಆಮಂತ್ರಿಸಿರುವ ಸೊಸೆಯನ್ನು ಮನದಲ್ಲಿ ಟೀಕಿಸಿದರು. +ಈ ಬಗ್ಗೆ ಸೊಸೆಗೂ ತಮಗೂ ಬ್ರಾಹ್ಮೀ ಮಹೂರ್ತದಲ್ಲಿ ನಡೆದ ಜಟಾಪಟ ಮರುಕಳಿಸಿತು. ದೈಹಿಕವಾಗಿ ದುರ್ಬಲಗೊಂಡಂತಹ ತಮ್ಮಂಥವರು ಕೇವಲ ದೃಷ್ಟಿಯುದ್ಧ ಮಾಡಲಿಕ್ಕೆ ಮತ್ತು ನಿಟ್ತುಸಿರು ಬಿಡಲಿಕ್ಕೆ ಮಾತ್ರ ಅರ್ಹರು. +ಪೌರೋಹಿತ್ಯದ ಸಾತ್ವಿಕ ಪರಿಮಳದೊಂದಿಗೆ ದೋಸೆಯ ಮಾದಕ ಪರಿಮಳವೂ ಬೆರೆತು ವಿಚಿತ್ರವಾದ ವಾಸನೆ ಸೃಷ್ಟಿಸಿದ್ದ ಹಾದಿಯಲ್ಲಿ ಹಿತಮಿತವಾದ ಹೆಜ್ಜೆ ಹಾಕುತ್ತ ನಡೆದು ಅವರು ಸೂಚಿಸಿದ ಜಾಗದಲ್ಲಿ ಕೂಡ್ರಲು ಒಪ್ಪಲಿಲ್ಲ. “ಛೇ, ಛೇ, ಹಿರಿಯರೂ ಪೂಜ್ಯರೂ ಆದ ತಮಗೆ ಸರಿಸಮಾನವಾಗಿ ಕೂತುಕೊಳ್ಳುವುದೇ” ಎಂದು ನೀಚ ಸ್ಥಾನದಲ್ಲಿ ಕೂತುಕೊಂಡ. ಬೆಂಗಳೂರಿನವನಾಗಿದ್ದರೂ ಎಷ್ಟೊಂದು ನಯ ವಿನಯ ಎಂದು ಶಾಸ್ತ್ರಿಗಳು ಮೈ ಸಡಿಲ ಬಿಟ್ಟರು. +‘ಏನು ಮಾಡ್ತಿ, ಏನು ಕಥೆ’ ಎಂದೆಲ್ಲ ಕೇಳಿದರು. +‘ಇಂಥದ್ದು ಮಾಡ್ತೀನಿ, ಇಂಥಾದ್ದು ಕಥೆ’ ಎಂದು ಸವಿವರವಾಗಿ ಹೇಳಿದ. +ಮರು ಕ್ಷಣ ಶಾಸ್ತ್ರಿಗಳ ಕಣ್ಣಲ್ಲಿ ಬೆಂಗಳೂರು ಕಣ್ಣಲ್ಲಿ ಮೈದಾಳಿ ಹಲೋ ಹಲೊ ಎಂದಿತು. ಬೆಂಗಳೂರು ಬಗ್ಗೆ ಏನಾದರೂ ಹೇಳಿಕೊಳ್ಳಬೇಕೆಂಬ ಆಸೆ ಶಾಸ್ತ್ರಿಗಳಿಗೆ ಬಹಳ ದಿನಗಳಿಂದ ಇತ್ತು. ವಿನಮ್ರತೆಯಿಂದ ಕೇಳೋರು ಕಲಿಕಾಲದಲ್ಲಿ ಸಿಗಬೇಕಲ್ಲ. +ಗುರುಹಿರಿಯರಿಯರಿಗೆ ಸಾಕಷ್ಟು ಗೌರವ ಕೊಡುವ ರಘು ತಾವು ಅರಸುತ್ತಿದ್ದ ಅನರ್ಘ್ಯ ರತ್ನವೆಂಬ ಭಾವನೆ ಬಂತು. +ಸನಾತನ ಧರ್ಮದ ಮೇಲೆ ಗುರುಹಿರಿಯರ ಮೇಲೆ ಸಾಕಷ್ಟು ಭಯಭಕ್ತಿ ಇದ್ದುದರಿಂದಲೇ ಮಾಗಡಿ ಕೆಂಪೇಗೌಡರಿಗೆ ಬೆಂಗಳುರು ಪಟ್ಟಣ ಸ್ಥಾಪನೆ ಮಾಡಲು ಸಾಧ್ಯವಾಯಿತೆಂದೋ, ಪೌರೋಹಿತ್ಯದ ಪುಣ್ಯದಿಂದಲೇ ಅದು ಬಿದಿಗೆ ಚಂದ್ರಮನಂತೆ ದಿನಕ್ಕೊಂದು ಚಂದದಲ್ಲಿ ಬೆಳೆದು ಜಂಬೂದ್ವೀಪದಾದ್ಯಂತ ಕೋಟ್ಯಾದೀಶ್ವರರನ್ನು ಸೂಜಿಗಲ್ಲಿನಂತೆ ನಿರಂತರ ಅಕರ್ಷಿಸುತ್ತಿರುವುದೆಂದೂ ಪ್ರವರ ಆರಂಭಿಸಿದರು. ಕೆಲವು ಸುಂದರ ಸ್ಥಳಗಳಿಗೆ ‘ಮ್ಲೇಚ್ಚ’ ಹೆಸರಿಟ್ಟಿರುವುದನ್ನು ಖಂಡಿಸಿದರು. ಲಾಲ್‌ಬಾಗ್ ಎಂಬುದಕ್ಕೆ ಬೃಹದಾರಣ್ಯಕವೆಂಬ ಹೆಸರನ್ನೂ; ಕಬ್ಬನ್ ಪಾರ್ಕ್ ಎಂಬುದಕ್ಕೆ ಬೃಂದಾವನವೆಂಬ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು. ಆದರೆ ಆ ನಗರ ನಿವಾಸಿಗಳಾದ ಸುಶಿಕ್ಷಿತರು ಕೋಟು ಪ್ಯಾಂಟುಗಳೊಳಗೆ ಅವಿತುಕೊಂಡಿರುವ ಸನಾತನಿಗಳೆಂದು ನುಡಿದರು. ಬೀದಿಗೇಳೇಳು ದೇವಾಲಯಗಳನ್ನು ಕಟ್ಟಿಸಿ ಅವಕ್ಕೆ ಪವಿತ್ರ ಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸಿ ಧರ್ಮ ರಕ್ಷಿಸಿಕೊಂಡು ಬರುತ್ತಿರುವ ಅಲ್ಲಿನ ಪ್ರತಿಯೊಬ್ಬ ವಿದ್ಯಾವಂತನಿಗೂ ‘ಹಿಂದೂ ಧರ್ಮ ಸುರತ್ರಾಣ’ ಎಂಬ ಬಿರುದು ಕೊಡುವಂತೆ ಎಲ್ಲರೂ ಸರಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು. +“ಶಾಸ್ತ್ರಿಗಳೇ ನಿಮ್ಮವರೇ ಆದ ಮುಖ್ಯಮಂತ್ರಿಗಳಾಗಿರೋದು! ನಿಮ್ಮಂಥವರು ಒಂದು ಮಾತು ಹೇಳಿದರೆ ಅವರು ಕಾರ್ಯಗತ ಮಾಡೇತೀರುವವರು” ಪೂಸಿ ಹೊಡೆಯುವುದರಲ್ಲಿ ರಘು ನಿಷ್ಣಾತ. ಎಷ್ಟಿದ್ದರೂ ಅವನು ಬೆಂಗಳುರಿನ ನಿವಾಸಿಯಲ್ಲವೆ… +“ಹೌದಲ್ಲವಾ.. ಗುಂಡುರಾಯರು ನಮ್ಮವರೇ ಅಲ್ಲವೆ? ಅಬ್ಬಾ.. ಎಂಥ ವ್ಯಕ್ತಿತ್ವ ಅವರದ್ದು! ಎಂಥ ತೇಜಸ್ವಿ ಮುಖ ಅವರದು.. ಅಂಥವರು ಸುಖಾಸೀನರಾಗಿರೋದ್ರಿಂದ್ಲೆ ನಾಡು ಸುಭಿಕ್ಷವಾಗಿರೋದು” ಶಾಸ್ತ್ರಿಗಳು ಒಂದು ಕ್ಷಣ ಗುಂಡೂರಾಯರ ಭರ್ಜರಿ ವ್ಯಕ್ತಿತ್ವದ ಕಲ್ಪನೆಯಿಂದ ಅರ್ಧ ನಿಮಾಲಿತ ನೇತ್ರವದನರಾಗಿ ಸ್ವಲ್ಪ ಮುಂಜರುಗಿ ಪಿಸುಗುಟ್ಟುವ ರೀತಿಯಲ್ಲಿ ಹೇಳಿದರು. “ಅಂದ ಹಾಗೆ ನಮ್ಮಂಥ ಬಡ ಬ್ರಾಹ್ಮಣರಿಗೆ ಏನಾದರೂ ವ್ಯವಸ್ಥೆ ಮಾಡಿದ್ದಾರೋ ಅವರು” +“ಬ್ರಾಹ್ಮಣ ಸಮ್ಮವೇಶ, ಸಮ್ಮೇಳನಗಳಿರುವ ಕಡೇಲೆಲ್ಲ ಹೋಗಿ ‘ಬ್ರಾಹ್ಮಣರೇ ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಭಾಶಣ ಮಾಡ್ತಿದಾರೆ ಸ್ವಾಮಿ!” +“ಆ ಬ್ರಾಹ್ಮಣ ವಿರೋಧಿ ದೇವರಾಜ ಅರಸ ಹೇಗೆ?” +“ಅವರಂತೂ ಅಪ್ಪಟ ಶೂದ್ರರ ಪರ ಬಿಡಿ. ಉಳುವವನೇ ಭೂಮಿಗೆ ಒಡೆಯ ಎಂಬಂಥ ಕಾನೂನು ತಂದಿರೋದು ಅವರೇ ಸ್ವಾಮಿ” +“ಹೌದಲ್ಲ.. ಎಂಥ ಕಲಿಕಾಲ ಬಂಥಪ್ಪ ಅಂತೀನಿ.. ನಮ್ಮ ಬ್ರಾಹ್ಮಣರ ಇನಾಮು ಭೂಮಿಗಳೆಲ್ಲ ಶೂದ್ರರ ಪಾಲು ಮಾಡ್ತಿದ್ದಾರಲ್ಲ ಈ ಶೂದ್ರರು.. ನೀನು ಏನೇ ಹೇಳು ರಘುರಾಮ. ನೀನು ಪುರುಷೋತ್ತಮನಾದ ಶ್ರೀರಾಮನ ಹೆಸರು ಇಟ್ಟುಕೊಂಡಿದ್ದೀಯಂತ ಒಂದು ಮಾತು ಹೇಳಬೇಕೆಂದಿದ್ದೇನೆ.. ಈ ದೇಶದಲ್ಲಿ ಬ್ರಾಹ್ಮಣರಿಗೆ ಅನ್ಯಾಯ ಮಾಡೋ ಶೂದ್ರರಿಗೆ ಖಂಡಿತ ಒಳ್ಳೇದಾಗೋದಿಲ್ಲ ನೋಡ್ತಿರು.. ಬ್ರಾಹ್ಮಣರ ವಿರೋಧ ಕಟ್ಟಿಕೊಂಡ ಎಂಥೆಂಥ ಸಾಮ್ರಾಜ್ಯಗಳು ಮಣ್ಣು ಮುಕ್ಕಿದವು.. ” +ಶಾಸ್ತ್ರಿಗಳು ತಮ್ಮ ದೈಹಿಕ ಸ್ಥಿತಿ ಅಲಕ್ಷಿಸಿ ಇನ್ನೂ ಎನೇನೋ ಹೇಳಲಿದ್ದರು. ಮದುವೆ ಆಗಲಿರುವ ಹುಡುಗನ ತಲೇನೆಲ್ಲ ಎಲ್ಲಿ ತಿಂದು ಬಿಡುವರೋ ಎಂಬ ಆತಂಕದಿಂದ ಅಲುಮೇಲಮ್ಮ ಕಳಿಸಿದ್ದರಿಂದ ಕರೆಯಲೆಂದು ಶಾಮಾಶಾಸ್ತ್ರಿ ಬಂದ. +ವಯೊವೃದ್ಧರೂ, ಜ್ಞಾನವೃದ್ಧರೂ ಆಡಿದ ಮಾತುಗಳನ್ನು ಕೇಳೀ ಕೇಳೀ ರಘು ಎಂಬ ಹುಲು ನರನಿಗೆ ದೋಸೆ ಬಗೆಗಿದ್ದ ಆಸಕ್ತಿ ಕುತೋಹಲ ಎಲ್ಲ ಕರಗಿ ಹೋಗಿತ್ತು. ಸಾಮಾಜಿಕ ಬದಲಾವಣೆಗಿರುವ ಅಡ್ಡಿ ಆತಂಕಗಳ ಒಂದು ಮುಖ ಅರ್ಥವಾಯಿತು. +“ಶಾಸ್ತ್ರಿಗಳೇ, ದೋಸೆ ಬಗ್ಗೆ ತಮ್ಮ ಅಭಿಪ್ರಾಯವೇನು>” ಎಂದು ರಘು ಅಚಾನಕ್ ಕೇಳಿಬಿಟ್ಟ. ಯಾವ ಮುನ್ಸೂಚನೆಯೂ ನೀಡದೆ ಅವನ ನಾಲಿಗೆ ಮಾತಾಡಿಬಿಟ್ಟಿತು. ಶಾಸ್ತ್ರಿಗಳಿಗಿಂತ ಮೊದಲು ಅವನೇ ಕಂಗಾಲಾದನು. +“ದೋಸೆ ಹಿಂದೂ ಧರ್ಮೀಯರ ಸೇವನೆಗೆ ಯೋಗ್ಯವಾದುದಲ್ಲ.. ಎಲ್ಲ ಅನಿಷ್ಟಗಳಿಗೂ ಮಸಾಲ ದೋಸೆಯೇ ಕಾರಣ.. ಎಲ್ಲಾ ನಮೂನೆಯ ದೋಸೆಗಳನ್ನು ಹಿಂದೂ ದೇಶದಿಂದ ಉಚ್ಛಾಟಿಸಬೇಕು” ಶಾಸ್ತ್ರಿಗಳ ಮೊಗ ಜಮದಗ್ನಿಯ ಮುಖದಂತೆ ಕಂಡಿತು ಒಂದು ಕ್ಷಣ. +ಅದನ್ನು ಕೇಳುತ್ತಲೆ ರಘೂನ ವೃಷಣಗಳು ಚಿಕ್ಕದಾಗಿಬಿಟ್ಟವು. +ಕೇಳಿ ಎಂಥ ಕೆಲಸ ಮಾಡಿಬಿಟ್ಟೆ ಎಂದುಕೊಂಡ. +“ಹಾಗಿದ್ರೆ ತಾವು ದೋಸೆಯನ್ನು.. ” +“ಖಂಡಿತ ಇಲ್ಲ.. ಖಂಡಿತ ಇಲ್ಲ.. ದೋಸೆಯ ವಾಸನೆಯೇ ಹಿಂದೂ ಧರ್ಮದ ಬೆಳವಣಿಗೆಗೆ ಅಪಾಯಕಾರಿ. ಅದಕ್ಕೂ ನಮಗೂ ಎಣ್ಣೆ ಶೀಗೆಕಾಯಿ ಸಂಬಂಧ” ರಘೂನ ಮಾತನ್ನು ಮಾರ್ಗಮಧ್ಯದಲ್ಲಿ ತುಂಡರಿಸುತ್ತ ನುಡಿದರು. +“ತಾಬು ಅಪ್ಪಣೆ ಕೊಡಿಸಿದ್ದು ನೂರಕ್ಕೆ ನೂರರಷ್ಟು ಸತ್ಯ ನೋಡಿ. ಉದ್ದಿನ ಬೇಳೆ ಎಂಬ ದ್ವಿದಳ ಧಾನ್ಯದ ಸಹವಾಸ ಮಾಡಿ ಅಕ್ಕಿ ಕುಲಗೆಟ್ಟು ಹೋಯ್ತು ನೋಡಿ.. ಕೋಟ್ಯಂತರ ಹುಳಗಳನ್ನು ಹಿಟ್ಟಿನ ರೂಪದಲ್ಲಿ ಕಾವಲಿ ಮೇಲೆ ಬೇಯಿಸೋದೆಂದ್ರೇನು! ಅದೂ ತಮ್ಮಂಥ ಬಹುಶ್ರುತರ ಮನೆಯಲ್ಲಿ…ಶಾಂತಂ ಪಾಪಂ” ವಿವೇಕ ಚೂಡಾಮಣಿಯಂಥ ರಘು ತನ್ನ ಕೈಗಳಿಂದ ತನ್ನ ಕೆನ್ನೆಯನ್ನು ತಪತಪ ಬಡಿದುಕೊಂಡ. +ಹಾವಿನ ಸುಂದರ ಹೆಡೆಯನ್ನು ಸ್ಪರ್ಶಿಸಿದ ಅನುಭವವಾಯಿತು ಶಾಸ್ತ್ರಿಗಳಿಗೆ. +ಕೂಡಲೆ ಮೊಮ್ಮಗನ ಮುಖದೊಳಗೆ ಮುಖವಿಟ್ಟರು. +“ಕೇಳಿದೆ ಏನೋ.. ರಘು ವಾಲ್ಮೀಕಿ ಮಹರ್ಶಿಯಂತೆ ಮಾತಾಡ್ತಿರೋದನ್ನು.. ದೋಸೆ ಮಾಡಬಾರ್ದೂಂತ ಬಡಕೊಂಡೆವು. ನಮ್ಮ ಮಾತನ್ನು ಕೇಳಿದಿರಾ ನೀವೀರ್ವರು; ನಮ್ಮ ಆಚಾರ ವಿಚಾರ ಪರಂಪರೆಗಳನ್ನೆಲ್ಲ ಗಾಳಿಗೆ ತೂರಿ ದೋಸೆ ಮಾಡಲು ನಿರ್ಧರಿಸಿಬಿಟ್ಟಿರಿ. ದೋಸೆ ತಿನ್ನೋರು ನೀವು, ಮುಂದೆ ಅನುಭವಿಸುವವರು ನೀವು.. ಇಂದೋ ನಾಳೆಯೊ ವೈಕುಂಠ ವಾಸಿಗಳಾಗಲಿರುವ ನಮ್ಮ ಮಾತೆಂದರೆ ಅಷ್ಟು ಅಲಕ್ಷೆ..” ಇಡೀ ಜೀವಮಾನದಲ್ಲಿ ಶಾಸ್ತ್ರಿಗಳು ಅಪರೂಪಕ್ಕೆ ಕೋಪಾರುಣನೇತ್ರರಾಗಿದ್ದರು. +ಅವರ ದ್ವನಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ.. ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕುವುದನ್ನು ಬಿಟ್ಟು ಅಲುಮೇಲಮ್ಮ ಬೆಂಕಿ ಮೇಲೆ ಸುರಿದುಬಿಟ್ಟಳು. ಒಂದೇ ಕ್ಷಣದಲ್ಲಿ ಅದರ ಕರುಕು ವಾಸನೆ ಗೃಹವನ್ನವರಿಸಿ ಬಿಟ್ಟಿತು. +ವಯಸ್ಸದಂತೆಲ್ಲ ಮಾವನವರು ವಿಚಿತ್ರವಾಗಿ ಆಲೋಚಿಸುತ್ತಿರುವರಲ್ಲ.. ಎಂದು ನೊಂದಳು. +“ಹೋಗಪ್ಪಾ.. ಹೋಗು” ಎಂದು ಶಾಸ್ತ್ರಿಗಳು ಮುಂದೇನನ್ನೋ (ಬಹುಶಃ ತಿಂದು ಹಾಳಾಗಿ ಹೋಗು ಎಂದು ಹೇಳುತ್ತಿದ್ದರೇನೋ) ಹೇಳಲಿದ್ದರು. +ಅಷ್ಟರಲ್ಲಿ ಒಂದು ದೊಡ್ಡದು ಎನ್ನಬ್ನಹುದಾದಂತ ಗುಂಪೊಂದು ಕೇಕೆ ಶಿಳ್ಳಿ ಮೊದಲಾದ ನಾದ ನಿನಾದ ಮಾಡುತ್ತ ಬಂದು ಬೃಂದಾವನ ಕಟ್ಟೆಯ ಆಚೆ ಜಮಾಯಿಸಿಬಿಟ್ಟಿತು. ತಾರುಣ್ಯದ ಹೊಸ್ತಿಲ ಆಚೆ ಈಚೆ ಇದ್ದ ಹಲವರು ಶಾಸ್ತ್ರಿಗಳೇ ಶಾಸ್ತ್ರಿಗಳೇ ಎಂದು ಕೂಗುತ್ತಿದ್ದರು. ಒಂದು ಕ್ಷಣ ಏನೋ ಎಂತೋ ಎಂಬೊಂದು ಗಾಬರಿ ಆವರಿಸಿಬಿಟ್ಟಿತು. +ಶಾಮ ತನ್ನ ತಾತನವರ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ; ಶಾಸ್ತ್ರಿಗಳು ತಮ್ಮ ಕರುಳಿನ ಕುಡಿ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ ನೋಡಿದ ರಘು ಗುಂಪನ್ನು ವಿಚಾರಿಸುವ ಹೋಣೆ ಹೊತ್ತುಕೊಂಡು “ಏನ್ರಪ್ಪಾ? ಯಾಕ್ರಪ್ಪಾ?” ಎಂದು ಗುಂಪನ್ನು ವಿಚಾರಿಸಿದ. ಮೊನ್ನೆ ಮೊನ್ನೆಯವರೆಗೆ ಸರಕಾರಿ ಆಸುಪತ್ರೆಯ ರೋಗತುಲಿಕಾ ತಲ್ಪದ ಮೇಲೆ ವಾರ ದಿನಮಾನ ಮಲಗಿದ್ದು ಬಂದಿದ್ದ ಸಾಂಬ ಆ ಗುಂಪಿನ ಮುಖಂಡತ್ವ ವಹಿಸಿದ್ದ. ಆ ಸದರಿ ಗುಂಪು ಮಾಡಿದ್ದ ಘನಕಾರ್ಯ ಏನಪ್ಪಾ ಅಂದರೆ? +ಅದನ್ನು ಸವಿವರವಾಗಿ ಹೇಳಬೇಕೆಂದರೆ ದೊಡ್ಡ ಕಥಿಯೇ ಆಗುತ್ತದೆ. +ಶಾಸ್ತ್ರಿಗಲ ಮನೆಯಲ್ಲಿ ಮನೆ ಮಗಳಂತೆ ಕೋಷಿ ಎಂಬ ಬೆಕ್ಕೂ; ಅನಸೂಯಾಳ ಮನೆಯಲ್ಲಿ ಅರ್ಜುನ ಎಂಬ ಮಾರ್ಜಾಲವೂ ಇತ್ತಷ್ಟೆ. ಅವೆರಡೂ ಸಲೀಮ, ಅನಾರ್ಕಲಿಯಂತೆ ಅನ್ಯೋನ್ಯವಾಗಿದ್ದವಷ್ಟೆ. ಅವೆರಡು ಮಾರ್ಜಾಲ ಕುಲಕ್ಕೆ ಸೇರಿದವುಗಳಾಗಿದ್ದರೂ ಮಾನವಕುಲ ಹಿತಚಿಂತನೆಯನ್ನು ಸದಾ ಬಯಸುತ್ತಿದ್ದವಷ್ಟೆ! ಅದರಲ್ಲೂ ಶಾಮ ಮತ್ತು ಅನಸೂಯರ ಸಂಭಂದ ಬೆಸೆಯಲು ಅವೆರಡೂ ನಾನಾ ನಮೂನೆಯ ಹಿಕಮತ್ತುಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗಿಸುತ್ತಿದ್ದವಷ್ಟೆ! ತಮ್ಮ ಗುರಿ ಮಣ್ಣುಗೂಡಿದ ಮೇಲೆ ಪರಸ್ಪರ ಸಂಧಿಸಿ ಮನುಷ್ಯರು ಕೃತಘ್ನರು ಎಂದು ತೀರ್ಮಾನಿಸಿದ್ದವಷ್ಟೆ! ಇಂಥದೊಂದು ಟೆನ್ಷನ್ನಿಂದಾಗಿ ಅದ್ಭುತ ಪ್ರೇಮಿಗಳಾಗಿದ್ದ ಅವಕ್ಕೆ ಕೆಲವು ದಿನಗಳಿಂದ ರತಿ ಕ್ರೀಡೆಯಲ್ಲಿ ಭಾಗವಹಿಸಲಾಗಿರಲಿಲ್ಲವಷ್ಟೆ! +ಈ ಕಾರಣಗಳಿಂದಾಗಿಯೋ ಅಥವಾ ಬೇರಾವ ಕಾರಣದಿಂದಾಗಿಯೋ ಅವೆರಡೂ ಸದಾ ಮಂಕಾಗಿರುತ್ತಿದ್ದವು. ತನ್ನ ಪ್ರಿಯತಮೆಯ ಬಳಿ ಏನೆಲ್ಲ ಹೇಳಿಕೊಳ್ಳುತ್ತಿದ್ದ ಅರ್ಜುನ ಕನಿಷ್ಟ ಅಟಕ್ ಪಿಟಕ್ ವಾಚಿನ ಬಗೆಗೂ ಹೇಳಿಕೊಂಡಿರಲಿಲ್ಲ. ವಾಚನ್ನು ನೋಡಲು ಹೋಗಿ ಅನಸೂಯಳಿಂದ ಒದೆ ತಿಂದಿತ್ತು. ಯಾಕೆ ತನ್ನ ಪ್ರಿಯತಮ ಮಂಕಾಗಿರುವನೆಂದು ಯೋಚಿಸೀ ಯೋಚಿಸೀ ಕೋಷಿ ತಾನೂ ಮಂಕಾಗಿತ್ತು. +ಹೀಗೆ ಮಂಕಾಗಿರುವ ಯಾವ ಪ್ರಾಣಿಗೂ ಅಪಾಯದ ಅರಿವು ಇರುವುದಿಲ್ಲವೆಂಬುದು ಅಂಗೈಯ ಹುಣ್ಣಿನಷ್ಟೆ ಸತ್ಯವೆಂಬುದನ್ನು ಸಾಧಿಸಿ ತೋರಿಸಲಿಕ್ಕಾಗಿಯೋ ಎಂಬಂತೆ ಹರಪನಹಳ್ಳಿ ಕಡೆಯ ಕೊರಚರಟ್ಟಿಯ ಅಲೆಮಾರಿ ತಂಡವೊಂದು ತಂಡೊಪತಂಡವಾಗಿ ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಚಿಕ್ಕ ಚಿಕ್ಕ ಜೋಪಡಿಗಳನ್ನು ಕಟ್ಟಿಕೊಂಡು ಬೀಡು ಬಿಟ್ಟಿತ್ತು. ವಯಸ್ಕ ಗಂಡಸರು ರಾತ್ರಿ ಹೊತ್ತು ಚಿಕ್ಕಪುಟ್ಟ ಕಳ್ಳತನಕ್ಕೆ ಹೋದರೆ ಹೆಂಗಸರು ಅವರಿವರ ಬಳಿ ಮಲಗಿಕೊಂಡು ನಾಲ್ಕು ಕಾಸು ಸಂಪಾದಿಸುವರು. ಮಾಂಸಪ್ರಿಯರಾದ ಅವರು ಕೋಳಿ ಕುರಿಗಿಂತ ಆಸೆಪಡುತ್ತಿದ್ದುದು ಬೆಕ್ಕು ಮತ್ತು ಇಲಿ ಮಾಂಸಕ್ಕೆ. ಇಂಥ ಆಹಾರ ಮೂಲಗಳನ್ನು ಹುಡುಕಲು ಅವರ ಪೈಕಿ ಅನೇಕರು ಕಂಕುಳಲ್ಲಿ ಚಿಕ್ಕಪುಟ್ಟ ಬಲೆ, ಪಂಜರಗಳನ್ನು ಹುದುಗಿಸಿಕೊಂಡು ಓಣಿ ಓಣಿ ಅಲೆಯುವರು. ಇಲಿಗಳಂತೆ ಸದ್ದು ಮಾಡಿ ಇಲಿಗಳನ್ನು ಆಕರ್ಷಿವುದು, ಅವು ಬಂದೊಡನೆ ಅರೆ ಜೀವ ಮಾಡಿ ಜೋಳಿಗೆಗೆ ಹಾಕಿಕೊಳ್ಳುವುದು, ಬೆಕ್ಕುಗಳಂತೆ ಸದ್ದು ಮಾಡಿ ಬೆಕ್ಕುಗಳನ್ನು ಆಕರ್ಷಿವುದು, ಅವು ಬಂದೊಡನೆ ಗೋಣು ತಿರುವಿ ಸಾಯಿಸಿ ಜೋಳಿಗೆಗೆ ಹಾಕಿಕೊಳ್ಳುವುದು. ತಮ್ಮ ಕ್ಯಾಂಪಿನ ಬಳಿಗೆ ಹೋಗಿ ಅವುಗಳನ್ನು ಬೆಂಕಿಯಲ್ಲಿ ಬೇಯಿಸುವುದು, ಹೆಂಗಸರು ಮೈಮಾರಿ ಗಳಿಸಿದ್ದಂಥ ಹಣದಲ್ಲಿ ಸಾರಾಯಿಯನ್ನೋ; ಹೆಂಡವನ್ನೋ ತರಿಸುವುದು, ಕುಡಿದು ತಿಂದು ಪರಸ್ಪರ ತೆಕ್ಕೆ ಮುರಿಬಿದ್ದು ದಿಕ್ಕುಗಳು ನಡುಗುವಂತೆ ಗಲಾಟೆ ಮಾಡುತ್ತ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುವುದು, ಹಾಗೆ ಉರುಳುರುಳಾಡುತ್ತಲೇ ನಿದ್ದೆ ಹೋಗಿ ಗೊರಕೆ ಹೊಡೆಯಲಾರಂಭಿಸಿಬಿಡುವುದು. ಇದು ಇವರ ದಿನಚರಿ. ಆದರೂ ಇವರ ದಿನಚರಿ ಮಧ್ಯಮ ವರ್ಗದ ಮಂದಿ ಊಹಿಸಿಕೊಳ್ಳುವಷ್ಟು ಸುಲಭವಾಗಿರುವುದಿಲ್ಲ. ಇವರ ಪ್ರತಿಯೊಂದು ಚಟುವಟಿಕೆಯನ್ನು ನಿಯಂತ್ರಿಸುವಂಥ ಒಂದು ಪ್ರತಿಭಟನಾತ್ಮಕ ತಂಡ ಗ್ರಾಮದಲ್ಲಿ ಹುಟ್ತಿಕೊಂಡು ಬಿಟ್ತಿರುತ್ತದೆ. ಆ ನಾಗರೀಕರ ತಂಡದ ಸದಸ್ಯರು ಉಂಡಾಡಿ ಗುಂಡರೆಂದು ಹೆಸರು ಪಡೆದಿದ್ದರೂ ಸೀನ್ ಕಾನರಿ; ರೋಗರ್‌ಮೋರ್, ಟಿಮೋಟಿ ಡಲ್ಟನ್‌ರಂಥ ಜೇಮ್ಸ್ ಬಾಂಡರಿಗಿಂತ ಕಡಿಮೆ ಇರುವುದಿಲ್ಲ. ಈ ಜೇಮ್ಸ್‌ಬಾಂಡರು ಸದಾ ತಮ್ಮ ಕಣ್ಣುಗಳನ್ನು ಮೂಷಕ ಮಾರ್ಜಾಲ ಹಂತಕರ ಮೇಲೆ ಕಣ್ಣು ಇಟ್ತಿರುತ್ತದೆ. ಈ ಜೇಮ್ಸ್ ಬಾಂಡರೊಂದೇ ಅಲ್ಲದೇ, ಕಂದಾಯ ಅರಕ್ಷಕರೇ ಮೊದಲಾದ ಮಂದಿಯನ್ನು ಚಾಣಾಕ್ಷತನದಿಂದ ನಿಭಾಯಿಸುತ್ತಲೇ ಅಲೆಮಾರಿ ಮಂದಿ ತಮ್ಮ ಕಾರ್ಯ ಸಾಧಿಸಬೇಕು ಮತ್ತು ಬದುಕಬೇಕು. ಪರಿಸ್ಥಿತಿ ಹೀಗಿರುವಾಗ ಅಲೆಮಾರಿಯ ಒಂದಿಬ್ಬರು ಶಾಸ್ತ್ರಿಗಳಿದ್ದ ಓಣಿಯ ಆಚೆಬದಿ ಚೀವ್ ಚೀವ್ ಎನ್ನುತ್ತಲೋ; ಮ್ಯಾಂವ್ ಮ್ಯಾಂವ್ ಅನ್ನುತ್ತಲೋ ಕಾರ್ಯ ನಿರತರಾದರು. ಐದಾರು ಇಲಿ ಬುಡಕಗಳನ್ನು ಸುಲಭವಾಗಿ ಹಿಡಿದಿದ್ದೂ ಆಯಿತು. ಕಳೆದೆರಡು ದಿನಗಳಿಂದ ಆ ಓಣಿಗೆ ಎರಡು ಕಣ್ಣುಗಳಂತಿದ್ದ ಎರಡು ಬೆಕ್ಕು ಗಳ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು. ‘ಇವತ್ತು ಹಿಡದೇ ತರಬೇಕಲೆ’ ಎಂದು ನಿರ್ಧರಿಸಿದರು. ಆಯಾ ಮನೆಗಳ ಆಜುಬಾಜುಗಳಲ್ಲಿ ಕೋಶಿಯಂತೆ ಸದ್ದು ಮಾಡಿ ಮಾರ್ಜಾಲ ಹಿಡಿದು ಸಾಯಿಸಿದರು. ಮಾರ್ಜಾಲದ ಥರ ಸದ್ದು ಮಾಡಿ ಕೋಷಿಯನ್ನು ಹಿಡಿದು ಸಾಯಿಸಿದರು. ಆದರೆ ಅವು ಅವರ ಕೈಗೆ ಬೀಳುವ ಮೊದಲು ಸಾಕಷ್ಟು ಪ್ರತಿರೋದ ಒಡ್ಡಿದವು. ಆದರೆ ಅವುಗಲ ಆಟ ನಡೆಯದಿದ್ದರೂ, ಅವು ಮರಣಾಂತಿಕವಾಗಿ ಮಾಡಿದ ಘನ ಘೋರ ಸದ್ದಿಗೆ ಜೇಮ್ಸ್ ಬಾಂಡುಗಳು ಎಚ್ಚತ್ತು ಬಂದು ‘ಬೆಕ್ಕು ತಿಂಭೋ ಸೂಳ್ಯಾ ಮಾಕ್ಳಾ’ ಎಂದು ಮುಗಿಬಿದ್ದು ಸಾಕ್ಷಿ ಸಮೇತ ಅವರನ್ನು ಹಿಡಿದುಬಿಟ್ಟರು. ತಾವು ಹಿಡಿದಂಥ ಎರಡು ಮುದ್ದಾದ ಬೆಕ್ಕುಗಳ ಕಳೇಬರಗಳೊಂದಿಗೆ, ಅಲೆಮಾರಿಗಳಿಬ್ಬರನ್ನು ಕೇಕಕಣ ಎಂದು ಮೆರವಣಿಗೆ ಮಾಡುತ್ತ ಶಾಸ್ತ್ರಿಗಳಮನೆ ಕಡೆ ಬಿಜಯಂಗೈದು ಬಂದಿದ್ದರು. ಅವರೆಲ್ಲರ ಉದ್ದೇಶ ಇದ್ದದ್ದು ಶಾಸ್ತ್ರಿಗಳ ಕೈಯಿಂದ ಪೂಜೆ ಮಾಡಿಸುವುದಲ್ಲದೆ ಹಿಡಿ ಹಿಡಿ ಶಾಪ ಹಾಕಿಸಬೇಕು ಮತ್ತು ಸದರೀ ಕಳೆಬರಗಳಿಗೆ ಇದೇ ಪವಿತ್ರ ವಾತಾವರಣದಲ್ಲಿ ಶಾಸ್ತ್ರೋಕ್ತ ಸಂಸ್ಕಾರ ನಡೆಯಬೇಕು ಎಂಬುದು. ಸತ್ತಿರುವ ಈ ಎರಡು ಬೆಕ್ಕುಗಳ ಜಾಯಮಾನ ಗ್ರಾಮಕ್ಕೇ ಗೊತ್ತಿರುವಂಥಾದ್ದು. ಇವೆರಡು ಅಪ್ಪಿತಪ್ಪಿ ಬೆಕ್ಕಿನ ಜನುಮ ಪಡೆದಿರುವವಷ್ಟೆ. ಇವೆರಡರೊಳಗಿದ್ದದ್ದು ಮಾನವ ಹೃದಯಗಳು; ಲೈಲಾ ಮಜ್ನೂ ಹೃದಯಗಳೆಂದರೂ ಸರಿಯೆ, ಈ ಮನೆಯಿಂದ ಆ ಮನೆಗೆ ಟಣಕ್ಕೆಂದು ಜಿಗಿದು ಮ್ಯಾಂವ್ ಗುಟ್ಟುವುದು. ಮ್ಯಾಂವ್ ಎಂಬ ಶಬ್ದ ಸಾಮಾನ್ಯದ್ದೇನು? ಬಿಲಾವರಿ ಅಸಾವರಿ ರಾಗಳಿಗಿಂತ ಕಡಿಮೆಯಿದ್ದಿರಲಿಲ್ಲ. ಅವೆರಡೂ ಮನೆಯ ಛಾವಣಿ ಏರಿ ಮ್ಯಾಂವ್ ಗುಟ್ಟಲಾರಂಭಿಸಿದರೆ ಸಿಂಗ್ ಬ್ರದರ್ಸ್‌ರವರ ಜುಗಲ್‌ಬಂದಿಗಿಂತ ಮಿಗಿಲಾಗಿರುತ್ತಿತ್ತು. ಇಂಥ ಅಪರೂಪದ ಬೆಕ್ಕುಗಳನ್ನು ಕೊರಚರಟ್ಟಿಯ ನರಮಾಂಸ ಭಕ್ಷಕರು ಕೊಲೆಮಾಡಿ ಬಿಟ್ಟಿರುವುರಲ್ಲಾ?.. ಇವತ್ತು ಈ ಬೆಕ್ಕುಗಳನ್ನು ತಿಂದವರು ನಾಳೆ ಹುಡುಗರುಪ್ಪಡಿಯನ್ನು ಬಿಡುವರೇನು? ನಾಳೆ ಹುಡುಗರುಪ್ಪಡಿಯನ್ನು ತಿನ್ನುವವರು ನಾಡಿದ್ದು ವಯಸ್ಕರನ್ನು ಬಿಡುವರೇನು?.. +ನರಪೇತಲ ಸಾಂಬ ಆ ಒಂದು ಕ್ಷಣ ಕುಂತಕನೊಡನೆ ಮಮ್ಮಟ ಮೇಳವಿಸಿದಂತೆ ಅಭೂತಪೂರ್ವವಾಗಿ ಹೊಳೆಯತೊಡಗಿದ. +“ಶಾಸ್ತ್ರಿಗಳೆ.. ಈ ಘೋರ ಅನ್ಯಾಯವನ್ನು ಹೇಗೆ ಸರಿಪಡಿಸುವಿರಿ ಶಾಸ್ತ್ರಿಗಳೇ?” ಅಸು ನೀಗಿರುವ ಈ ಎರಡು ದುರಂತ ಕಾವ್ಯಗಳಿಗೆ ನಿಮ್ಮ ಮಂತ್ರಶಕ್ತಿಯಿಂದ ಮರುಜನ್ಮ ನೀಡಲಾರಿರೇನು?” ಹೃದಯ ತುಂಬ ವೀಕಾಗಿ ಬಿಟ್ಟಿರುವುದೆಂದೂ ತಿಂಗಳ ದಿನಮಾನ ಗಟ್ಟಿಯಾಗಿ ಆವೇಶದಿಂದ ಮಾತಾಡಬೇಡವೆಂದು ಸರಕಾರಿ ವೈದ್ಯ ರಾಮಪ್ಪ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಸಾಂಬ ವೀರಾವೇಶದಿಂದಲೂ; ವ್ಯಾಕರಣ ಶುದ್ಧವಾಗಿಯೂ ಏಕ್‌ಧಂ ಮಾತಾಡಿ ಕೊಕ್ ಕೊಕ್.. ಕೆಂ ಕೆಂ ಕೆಮ್ಮುತ್ತ ಎಲ್ಲರ ಕಡೆಗೊಮ್ಮೆ ಸಿಂಹಾವಲೋಕನ ಮಾಡಿದನು. ಗುಂಪಿನಲ್ಲಿದ್ದ ಆಪದ್ಭಾಂದವನೋರ್ವ ಜೋರಾಗಿ ಸೀಟಿ ಹಾಕಿ ಮೆಚ್ಚುಗೆ ಸೂಚಿಸಿದನು. +ರಘೂನ ಹಿಂದೆ ನಿಂತಿದ್ದ ಶಾಮನಿಗೆ ಸಾಂಬ ಕಾವ್ಯ ಗುರುವಿನಂತೆ ಗೋಚರಿಸಲು.. +ವ್ಯಾಸಪೀಥವನ್ನು ಎಡಗಾಲಿಂದಿದೊದ್ದು ‘ಶಾಂತಂ ಪಾಪಂ’ ಅಂತ ಬಂದ ಶಾಸ್ತ್ರಿಗಳಿಗೆ ಶಂಕರಾಚಾರ್ಯ ಭಗವತ್ಪಾದರಿಗೆ ಎದುರಾದ ಶ್ವಪಚ ಚಂಡಾಲನಂತೆ ಗೋಚರಿಸಲು.. +ಕಾವಲಿ ಮೆಲೆ ದೋಸೆ ಸೀದು ಹೋಗುತ್ತಿರುವುದನ್ನು ಲೆಕ್ಕಿಸದೆ ಎಡಗೈಲಿ ಸವುಟು, ಬಲಗೈಲಿ ಚುಚ್ಚಗ ಧರಿಸಿಕೊಂಡೇ ಬಂದ ಅಲುಮೇಲಮ್ಮನಿಗೆ ಶ್ರೀಕೃಷ್ಣಾವತಾರ ಸಮಾಪ್ತಿಯಾದೊಡನೆ ಉದಿಸಿ ಭೂದೇವಿಯನ್ನು ಶೋಕ ತಪ್ತೆಯನ್ನಾಗಿ ಮಾಡಿದ ಕಲಿಯಂತೆ ಗೋಚರಿಸಲು.. +ಕಲಿಯುಗದ ಅಂತ್ಯದಲ್ಲಿ ಸಂಬಲವೆಂಬ ಗ್ರಾಮದ ವಿಷ್ಣುಯಶ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿ ಪರುಶುರಾಮನಿಂದ ವಿದ್ಯಾಭ್ಯಾಸ ಪಡೆದ ಕಲ್ಕಿ ಮಹಾಶಯನಂತೆ ಮುಂಚೂಣಿಯಲ್ಲಿದ್ದ ರಘುರಾಮನೆಂಬ ಕಾಮ್ರೇಡಿಗೆ ಸಾಂಬನು ಕ್ರಾಂತಿಯ ಬೆಳೆ ತೆಗೆಯಲು ಯೋಗ್ಯವಾದ ಫಲವತ್ತಾದ ಹೊಲವೇ ಮೈವೆತ್ತು ನಿಂತಿರುವಂತೆ ಗೋಚರಿಸಲು +“ಅಯ್ಯಯ್ಯೋ ನಿಮ್ಮನೆ ಹಾಳಾಗ ನಿಮ್ ಹೆಂಡ್ರು ರಂಡ್ಯಾಗ.. ಸತ್ತಿರೋ ಬೆಕ್ಕುಗಳ್ನ ಶಾಶ್ತ್ರಿಗಳ ಮನೆ ಬಾಗಿಲಿಗೆ ತಂದಿದ್ದೀರಲ್ಲೋ ನಿಮ್ ಕೈಗೆ ಕರಿನಗ್ರಾವ್ ಕಡಿಯಾ.. ತೊಲಗ್ರೋ ಆಚೆ.. ನಮ್ಮಪ್ನೋರ ಮನಸ್ಸಿಗೆ ನೋವಾದ್ರೆ ಊರಿಗೆ ಒಳ್ಳೇದಾಗೋದಿಲ್ಲ..” ಎಲ್ಲಿದ್ದಳೇನೋ ಪದ್ದಕ್ಕ ಒನಕೆ ಓಬವ್ವನಂತೆ ಸೀರೆ ಎತ್ತಿ ಕಚ್ಚೆ ಬಿಗಿದು ತೋರುತೊಡೆಗಳನ್ನು ಪುಟಿಸುತ್ತಾ ಸಾಂಬನ ಉಸಿರಳತೆಯಲ್ಲಿ ನಿಂತು ಹೇಷಾರವ ಮಾಡಲು ಎಲ್ಲರೂ ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟು ಕೊಂಡರು. +“ಓಹೋ ಪದ್ಮಾವತಿಽಽ ಕಮಲನಯನೇ.. ಶಾಸ್ತ್ರಿಗಳ ಮನೆಯ ಹುಳಿಯ ಪ್ರಭಾವದಿಂದ ಅದ್ಭುತವಾಗಿ ಮಾತಾಡುತ್ತಿರುವೆಯಲ್ಲ.. ನೀನಾಡಿದ ಮಾತುಗಳಿಗೆ ಧಿಕ್ಕಾರವಿರಲಿ. ತೊಲಗಾಚೆ” ಹೀಗೆಂದು ಮಾತಾಡಿದ ಸಾಂಬ ಕೆಲ ವರ್ಷಗಳ ಹಿಂದೆ ಇದೇ ಪದ್ದಕ್ಕನನ್ನು ತೋಪಿನಲ್ಲಿ ಕೆಳಗೆ ಕೆಡವಿಕೊಂಡು ದೊಡ್ಡ ಸುದ್ದಿ ಮಾಡಿದ್ದನು. ತೊಡೆ ಮತ್ತು ಮೊಲೆಗಳ ಮೇಲೆ ನಖಕ್ಷತ ಮಾಡಿ ಆಕೆಯ ಗಂಡನಿಂದಲೂ; ಆಕೆಯ ಕಳ್ಳ ಪ್ರೇಮಿಗಳಿಂದಲೂ ಮೈ ಮೆತ್ತಗಾಗುವಂತೆ ಒದೆಸಿಕೊಂಡಿದ್ದನು. ಗತಕಾಲದ ತಾನು ಮಾಡಿದ ಗುರುತು ಆಕೆಯ ತೊಡೆಯ ಮೇಲೆ ಇರುವುದನ್ನು ಗಮನಿಸಿ ಭಗವಾನ್ ಬಾಹುಬಲಿ ವಿಗ್ರಹದಂತೆ ಮಂದಸ್ಮಿತನಾದನು. ಅವನ ಮೇಲೆ ಘಟ್ಟ ಸೋಪಾನಗಳ ಕೆಳಪಟ್ಟಿಯಲ್ಲಿ ದೇವದಾರು ಆ ಒಂದು ಕ್ಷಣ ಹಲೋ ಹಲೋ ಎಂದು ಮಿಸುಕಾಡಿತು. +“ನಂ ಅನಸೂಯಾಳ ಬೆಕ್ಕು ಕೊಂದೋನು ಯಾವನು ನನ್ನಾಟಗಳ್ಳ.. ಅವನ ಬೇರು ಬಗೆದು ಕೊಡ್ತೀನಿ ತೋರಿಸ್ರಿ ಅವನ್ನ..” ರುಕ್ಕಮ್ಮನ ಏಕಮೇವ ಪ್ರಥಿನಿಧಿಯಾದ ಭವಾನಿ ಗಂಗವ್ವ ಬುಸುಬುಸು ಬೀಡಿ ಎಳೆಯುತ್ತ ಇನ್ನೇನು ಅಲ್ಲಿ ಬರ್‍ತಿದಾಳೆನ್ನುವಷ್ಟರಲ್ಲಿ ಪದ್ದಕ್ಕನಿಗೂ ಸಾಂಬನಿಗೂ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿ ತೆಕ್ಕೆಮುರಿ ಬಿದ್ದು ಕೆಳಗೆ ಉರುಳಾಡಲಾರಂಭಿಸಿಬಿಟ್ಟಿದ್ದರು. ಅವರೀರ್ವರ ಜುಗಲ್ ಬಂದಿಯನ್ನು ಪ್ರೋತ್ಸಾಹಿಲೋಸುಗ ತಟ್ಟುತ್ತಿದ್ದ ಚಪ್ಪಾಳೆಗಲೆಷ್ಟೋ, ಹೊಡೆಯುತ್ತಿದ್ದ ಶಿಳ್ಳೆ ಸೀಟಿಗಳೆಷ್ಟೋ? +ಪರಿಶೆ ಪೈಕಿ ಪೈಲ್ವಾನಳಂತಿದ್ದ ಪದ್ದೆಕ್ಕಗೆ ದರ್ಭೆ ಕಡ್ಡಿಯಂತಿದ್ದ ಸಾಂಬ ಯಾವ ಲೆಕ್ಕ? ಸಾಂಬನೂ ಮಾಜಿ ಪೈಲ್ವಾನನೇ. ಕಂಡ ಕಂಡ ಹೆಂಗಸರೆದುರಿಗೆಲ್ಲ ತನ್ನ ದೇಹದ ಮುನ್ನೂರಾರವತ್ತೈದು ಮಾಂಸ ಖಂಡಗಳನ್ನು ಕುಣಿಸೀ.. ಕುಣಿಸೀ ಸೊರಗಿ ಕಡ್ಡಿಯಂತಾಗಿಬಿಟ್ತಿದ್ದಂಥವನು. ಕರಿಣಿಯಂಥ ಪದ್ದಕ್ಕ ಕ್ಷಣಾರ್ಧದಲ್ಲಿ ಚಿತ್ ಮಾಡಿದಳಲ್ಲದೆ; ಮಣ್ಣಿಗೆ ಬೆನ್ನು ಮಾಡಿದ ಅವನೆದೆಯ ಮೇಲೇರಿ ಕೂತು ಮುಖ್ಯವಾಗಿ ತನ್ನ ಮಾಲ್ಕಿನ್ ಅಲಮೇಲಮ್ಮನ ಕಡೆ ನೋಡಿದಳು. ತನಗೆ ಒಂದು ತುತ್ತು ಅನ್ನ ನೀದುವಾಕೆಯನ್ನೂ ಪರೋಕ್ಷವಾಗಿ ಬೆದರಿಸಲು ಈ ಸುವರ್ಣಾವಕಾಶವನ್ನು ಬಳಸಿಕೊಂದಿದ್ದಳು. +ಆಕೆಯ ಗಂಡುಬೀರಿತನಕ್ಕೆ ಪ್ರೇಕ್ಷಕರೆಲ್ಲ ಬೆರಗಾದರು. +“ಒನ್.. ಟೂ.. ತ್ರೀ.. ಫೋರ್..” ಬಾಕ್ಸಿಂಗ್ ರೆಫ್ರೀ ಥರ ಒಬ್ಬ ಲೆಕ್ಕಹಾಕತೊಡಗಿದ. +“ಥೂ ನಿನ್ನ ಮುಖಕ್ಕೆ ಮಂಗಳಾರತಿ ಎತ್ತ.. ಸೀರೆ ಉತ್ಕೊಂಡು ಬಳೆ ಹಾಕ್ಕೊಂಡು ಎಲ್ಲವ್ವನ ಗುಡಿಗೆ ಹೋಗೋ” ಎಂದೊಬ್ಬ ಛೀಮಾರಿ ಹಾಕಿದರೆ, +“ನಿನ್ನ ಬಾಸ್ ಅಂಥ ತಿಳ್ಕೊಂಡಿದ್ದಕ್ಕೆ ನಮ್ಮನ್ನ ನಾವು ಎಕ್ಕಡ್ದೀಲೆ ಹೊಡ್ಕೊಂತೀವಿ” ಎಂದು ಇನ್ನೊಬ್ಬ ಥೂ ಮಾಡಿದನು. +ಈ ಮುಂಡೆ ತನ್ನನ್ನು ಅಪಮೌಲ್ಯಗೊಳಿಸಿಬಿಟ್ಟಳಲ್ಲಾ!.. ಎಂದು ಚಿಂತಿಸುತ್ತ ಸಾಂಬ ಗತಪ್ರಾಣನಾಗುವವನಂತೆ ತುಂಬ ತಿಣುಕಾಡತೊಡಗಿದನು. +ಹಾಗೆ ಅವನು ತನ್ನ ಕಾಲ ಇಕ್ಕಳದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವಾಗ ಮೇಲೆ ಅಮರಿದ್ದ ಪದ್ದಕ್ಕ ಗತಕಾಲದ ದಿನಗಳನ್ನು ಮೆಲುಕು ಹಾಕಿದಳು. ಈ ರಾಸ್ಕಲ್ ತಾನು ತೋಪಿನಲ್ಲಿ ಹೋಗುತ್ತಿರುವಾಗ ಸರಕ್ಕನೆ ಬರಸೆಳೆದದ್ದು.. ಒಂದೇ ಏಟಿಗೆ ಕೆಳಗೆ ಕೆಡವಿಕೊಂಡು ಬಿಟ್ಟಿದ್ದು; ನಿಮಿಷಾರ್ಧದಲ್ಲಿ ವಸ್ತ್ರಗಳನ್ನು ತೊಲಗಿಸಿದ್ದು; ಖಾರಪುಡಿ ಕುಟ್ಟುವ ಮೆಷನ್ನಿನಂತೆ ದಢಡಧನೆ…ಇದನ್ನೆಲ್ಲ ತಾನು ಆಗಾಗ್ಗೆ ನೆನಪಿಸಿಕೊಂಡು ಬಿಸಿ ಏರಿದ್ದುಂಟು. ಅತೀವ ಸಂತೋಷ ರೋಮಾಂಚನ ಅನುಭವಿದ್ದುಂಟು. ಇಂಥ ಪುಣ್ಯಾತ್ಮ ಕಾಲಾನುಸಾರ ಬಡಕಲಾಗಿರಬಹುದು. ಇವನು ನೀಡಿದ ಅನುಭವಗಳನ್ನು ಮರೆತು ಕೆಳಗೆ ಕೆಳಗೆ ಕೆಡವಿಕೊಂಡು ಬಿಟ್ಟು ಅವಮಾನ ಮಾಡಿಬಿಟ್ಟಿರುವೆನಲ್ಲಾ! ಸಮಸ್ತ ಜನರೆದುರು ನಗೆಪಾಟಲು ಮಾಡಿರುವೆನಲ್ಲಾ!…ತಾವಿಬ್ಬರು ಒಮ್ಮೆ ಕೂಡಿದ್ದೆವೆಂದರೆ ಮುಗಿಯಿತು, ಸುಖ ದುಃಖಗಳೆರಡರಲ್ಲೂ ಕೂಡಿದಂತೆಯೇ ಲೆಕ್ಕ!.. +ಹೀಗೆ ಯೋಚಿಸುತ್ತ ವೀರವನಿತೆಯಾದ ಪದ್ದಕ್ಕ ತಾನು ಕೆಳಗೆ ಅಂಗಾತವಾಗಿ ಮೇಲೆ ಸಾಂಬನನ್ನು ಎಳೆದುಕೊಂಡುಬಿಟ್ಟಳು. ಈ ಅಚಾನಕ್ ಘಟನೆಯಿಂದ ದಿಗ್ಭ್ರಾಂತನಾದ ಅವನು ಆಕೆಯ ಕಿವಿಯಲ್ಲಿ ಧನ್ಯವಾದಗಳು ಅಂತ ಹೇಳಿದವನು ಆಮೇಲೆ ಮುಖ ಎತ್ತಿ ” ಈ ಸಾಂಬ ಶಿವನನ್ನು ಏನೆಂದು ತಿಳಿದುಕೊಂಡಿರುವಿರಿ ಎಲೈ ಕಾಂತೆ ಸುಗುಣವಂತೆ” ಎಂದು ಕೇಕೆ ಹಾಕಿದನು. +ಅವನ ಅಭಿಮಾನಿಗಳು ಶೀಟಿ ಹಾಕಿ ಉಘೇ ಅಂದರು. +ಇಂಥದೊಂದು ಚೋದ್ಯಕ್ಕೆ ಅದುವರೆಗೆ ಬೆರಗಾಗಿದ್ದ ಭವಾನಿ ಗಂಗವ್ವ ಸೀರೆಯನ್ನು ತುಸು ಮೇಲೇರಿಸಿದಳು. ಚುಟ್ಟವನ್ನು ತುಟಿಯ ಕೊನೆ ಮಗ್ಗುಲು ಸಿಕಿಸಿಕೊಂದು ಮೂಗು ಬಾಯಿಯಿಂದ ದಾವಾನಲ ಸಮಾನವಾದ ಹೊಗೆ ಬಿಟ್ಟಳು. +“ನಿಮ್ ಬಾಯಿಗೆ ನನ್ನಾಟುಯ್ಯಾ… ನಾಚ್ಕೆ ಹೇಸ್ಗೆ ಐತೊ ಇಲ್ರೋ ನಿಮ್ಗೆ.. ಇದೇನು ಓಣಿ ಅಂದ್ಕೊಂಡೀರೋ ಬಯ್ಲಾಟದ ಠೇಜು ಅಂದ್ಕೊಂಡೀರೋ.. ” ಎನ್ನುತ್ತ ಮುಂದೆ ಮೂರು ಮಾರು ಕುಪ್ಪಳಿಸಿದಳು. +ಸಾಂಬನೆಂಬ ಜಿರಳೆಯನ್ನು ತನ್ನೆರಡೂ ಕೈಗಳಿಂದ ಮುಗಿಲೆತ್ತಿ ಅಲ್ಲೇ ಇದ್ದ ಕಿರುಗಟ್ಟೆಯ ಮೇಲೆ ಕುಕ್ಕರಿಸಲು ಆ ಮಹಾಶಯನು ವ್ಯಾಸಪೀಠವನ್ನಲಂಕರಿಸಿದ ಬಾಸನ ಊರುಭಂಗ ನಾಟಕದ ತಾಳೆಗರಿ ಕಟ್ಟಿನಂತೆ ಹೊಳೆದನು. +“ಎಲೇ ಚಿನಾಲಿ.. ನಿನೇನು ಹೆಣ್ಣೋ.. ಇಲ್ಲಾ ದೆವ್ವವೋ.. ” ಕೆಳಗೆ ಅಂಗಾತ ಬಿದ್ದು ಕಾಳೋರಗದಂತೆ ಬುಸುಗುಟ್ಟಿತಿರ್ಪ ಪದ್ದಕ್ಕನ ಕೊರಳಿಗೆ ಕೈಹಚ್ಚಿ ಹಿಡಿದೆತ್ತಿದಳು. ಆಕೆಯ ಬಿಚ್ಚಿಕೊಂದಿದ್ದ ಕುಪ್ಪಸದ ಗುಂಡಿಗಳನ್ನು ಹಾಕಿದಳು. ತ್ರಿವರ್ಣ ದ್ವಜದಂತೆ ಹಾರಾಡುತ್ತಿದ್ದ ಸೆರಗನ್ನು ಎದೆ ತುಂಬ ಹೊದ್ದಿಸಿದಳು. +“ಅತ್ತೆಮ್ಮಾ.. ಬಿಡು ನನ್ನ.. ಆ ಸಾಂಬನಿಗೆಗೊಂದು ಗತಿ ಕಾಣಿಸುವೆನು” ಎಂದು ಕುಕಿಲ್ದ ಆಕೆಯ ಕೆನ್ನೆಗೆ ಪಟಾರನೆ ಒಂದು ಏಟು ಕೊಟ್ಟಳು. +ಬರಸಿಡಿಲಿನಂತೆರಗಿದ ಏಟಿಗೆ ತತ್ತರಿಸಿದ ಪದ್ದಕ್ಕ ತನ್ನ ವ್ಯಾಕರಣ ಶುದ್ಧವಾದ ಭಾಷೆಯನ್ನು ಆ ಕ್ಷಣವೇ ಕಳೆದುಕೊಂಡು “ಅಯ್ಯಯ್ಯೋ ಯಾರಾದ್ರು ಬಂದು ಬುಡುಸಿಕೊಳ್ರೆಪ್ಪೋ.. ಈ ಮುದಿ ದೆವ್ವ ನನ್ನ ಸಾಯಿಸಲಾಕ ಹತ್ಯಾತ್ರೆಪೋ” ಎಂದು ಲಭೋ ಲಭೋ ಬಾಯಿಬಡಿದುಕೊಳ್ಳತೊಡಗಿದಳು. +“ನನ್ನ ಮುದಿ ದೆವ್ವ ಅಂತೀ ಭೋಸೂಡಿ” ಅಂತ ಗಂಗವ್ವ ಮತ್ತೊಂದು ಕೆನ್ನೆಗೆ ಛಳೀರನೆ ಏಟು ಬಿಟ್ಟಳು. +“ಅಯ್ಯಯ್ಯೋ” ಅರಣ್ಯ ರೋಧನ ಮಾಡಲಾರಂಭಿಸಿದ ಪದ್ದಕ್ಕನನ್ನು ಆಲಂಗಿಸಿಕೊಂದು ಹುಚ್ಚಿ ಅಳಬ್ಯಾಡ ಸುಮ್ಕಿರು.. ಸಣ್ ಹುಡುಗರಂತೆ ಅಳತೀಯಲ್ಲೇ.. ಎಲ್ರ ಎದುರಿಗೆ ಆ ಸಾಂಬನನ್ನು ಮ್ಯಾಲೆಳೆಕೊಂಡೆಯಲ್ಲ ಇದು ಸರಿ ಏನು?” ಎಂದು ಪರಿಪರಿಯಾಗಿ ರಮಿಸುತ್ತ.. ಚೆಂಡಿಹಿಡಿದ ಮಗುವನ್ನು ತಾಯಿ ಸಮಧಾನಪಡಿಸುತ್ತಿರುವ ಹಾಗೆ.. ಕರೆದುಕೊಂಡು ತನ್ನ ಮನೆಯ ಕಡೆಗೆ ಹೋದಳು. +ಹೀರೋಯಿನ್ನೇ ಹೋದ ಮೇಲೆ ಸಿನಿಮಾ ನಡೆಯುವ ಬಗೆಯಾದರೂ ಹೇಗೆ? +ಸರಕಾರೀ ಪುರಾನ ಕಡತದಿಂದ ನುಜ್ಜುಗುಜ್ಜಾದ ಎವಿಡೆನ್ಸು ಹೊರಬರುವಂತೆ ಸಾಂಬನು ಕಿರುಗಟ್ಟೆ ಮೇಲಿಂದೆದ್ದೊಡನೆ ಬಿರುಗಾಳಿಗೆ ಸಿಕ್ಕ ವಯಸ್ಸಾದ ಅಡಿಕೆ ಮರದಂತೆ ವಾಲಾಡತೊಡಗಿದನು. ಎಲ್ಲಿ ತಮ್ಮ ಬಾಸು ಬೋರ್ಗೊಯ್ದು ಬಿಸುಟ ಎಳೆ ಬಳ್ಳಿಯಂತೆ ಭೂದೇವಿ ಮೇಲೊರಗಿ ಬಿಡುವನೋ ಎಂದು ಹೆದರಿದ ಸಿಬಿಐ ಕ್ಯಡರಿನ ಜೇಮ್ಸ್ ಬಾಂಡುಗಳು ತಮ್ಮ ಕೈಲಿದ್ದ ಬೆಕ್ಕುಗಳ ಕಳೆಬರಗಳನ್ನೆಸೆದು ಪೊಡರ್ವ ಸಿಡಿಲಿನ ರವಕೆ ಕೂಡೆಗಳೇಂ ತಡೆಪುವೆ ಎಂಬಂಥ ಒಸರುವ ಮಾತುಗಳನ್ನಾಡುತ್ತ ಓಡೋಡಿ ತಮ್ಮ ಬಾಸ್‌ನನ್ನು ಹಿಡಿದುಕೊಂಡರು. ಅವನು ಅವನಿಗೊರಗಿದರೆಲ್ಲಿ ಭೂಮಿ ಸುಟ್ಟು ರಾಗಿರೊಟ್ಟಿಯಾಗಿ ಬಿಡುವುದೋ ಎಂಬಂತೆ. +ಸಾಂಬ ಎಂಬ ಕರುವಿನ ಮೇಲೆ ಹತ್ತಾರು ಬೊಕ್ಕೆಗಳೆದ್ದಂತೆ ಅಭಿಮಾನಿಗಳು ಅವನನ್ನು ಹಾಗೆ ಅಮರಿಕೊಂಡು ಹಿಂದೆ ಬಂದರೆ ಒದೆಯಬೇಡಿ ಮುಂದೆ ಬಂದರೆ ಹಾಯಬೇಡಿ ಕಂದನಿವ ನಿಮ್ಮವನೆಂದು ಕಾಣಿರಿ ಎಂದು ಬೆಂದ ಹುಣ್ಣುಗಳಂಥ ಜನರ ನಡುವೆ ದಾರಿ ಮಾಡಿಕೊಂಡು ಹಾಗೇ ನಡೆಸಿಕೊಂಡು ನ.. ಡೆ.. ಸಿ.. ಕೊಂ.. ಡು ಮಣ್ಣಿನ ಮನೆಯನ್ನು ದಾಟಿ, ಓಣಿಗಳನ್ನು ದಾಟಿ ಸರಕಾರಿ ಆಸುಪತ್ರೆಯ ಕಡೆ ಹೋಗಲು.. +ಮಾರ್ಜಾಲಕ್ಕೆ ತುಸು ಜೀವ ಬಂದು ಮಿಸುಕಾಡಿದಂತಾಯ್ತು.. +ಆರೇನು ಮಾಡುವರು ಆರಿಂದೇನಹುದು! ಪೂರ್ವ ಜನ್ಮದ ಕರ್ಮವಿಧಿ ಬೆನ್ನು ಬಿಡದು! ಎಂಬರ್ಥ ಬರುವಂತೆ ಮ್ಯಾಂವ್ ಗುಟ್ಟಿ ತನ್ನ ಬಲಗಾಲನ್ನು ಪ್ರಿಯತಮೆ ಕಾಮೋಷಿಯ ಕಳೆಬರದ ಮೇಲೇರಿ ಒಂದು ಧೀರ್ಘ ಉಸಿರೆಳೆದು ಅದು ಬಿಟ್ಟ ಪ್ರಾಣವು ಕ್ಷಣಕ್ಕೊಂದು ಛಂದದಲ್ಲಿ ಊರ್ಧ್ವಮುಖವಾಗಿ ಚಲಿಸುತ್ತಾ ಚ.. ಲಿ.. ಸು.. ತ್ತಾ ಪರಮಾತ್ಮನ ಪೂರ್ನ ಕುಂಭದ ಜೀವ ಕಳಸದಲ್ಲಿ ಲೀನವಾಗಳು.. +ನೆರೆದಿದ್ದ ಜನವು ಅವಧೂತರೋಪಾದಿಯಲ್ಲಿ ನಿಟ್ಟುಸಿರುಬಿಟ್ಟು ಹಗುರಾಗಲು.. +ಪರಮೇಶ್ವರ ಶಾಸ್ತ್ರಿಗಳು ಆಪತ್ಕಾಲೇ ನಾಸ್ತಿ ಮರ್ಯಾದಾ ಎಂದು ಗೊಣಗುತ್ತಲಿರುವಾಗಲೇ ಅವರ ಸುಸಂಸ್ಕೃತ ಹೃದಯದ ಬಲ ಹೃತ್ಕವಾಟದ ಮಗ್ಗುಲ ಗುಗ್ಗುಳ ಕಾಂತಿ ಹೀನವಾಗತೊಡಗಿತು. ತಮ್ಮ ಬಾಳ ಸೊಡರದೆಲ್ಲಿ ಸದರಿ ಗ್ರಾಮದ ಪ್ರಜೆಗಳ ಬಿಸಿಯುಸಿರಿಗೆ ನಂದಿ ಬಿಡುವುದೋ ಎಂದು ಹೆದರಿ ಸಾಧ್ವಿ ಅಲುಮೇಲಮ್ಮ ತಮ್ಮ ಸುಪುತ್ರ ಶಾಮನ ಸಹಾಯ ಪಡೆದು ತಮ್ಮ ಮಾವನವರನ್ನು ಹಾಗೇ ಒಳಗಡೆ ನಡೆಸಿಕೊಂಡು ಹೋಗಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿಸುತ್ತಿರಲು.. +ಜನರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. +ಬೆಣ್ಣೆಯ ಋಣ ತೀರಿಸಿದ ಎಣ್ಣೆಯಂತೆ +ವಸ್ತ್ರದ ಋಣ ತೀರಿಸಿದ ಅನ್ನದಂತೆ +ಹೆಣ್ಣಿನ ಋಣ ತೀರಿಸಿದ ಹೊನ್ನಿನಂತೆ +ಮಣ್ಣಿನ ಋಣ ತೀರಿಸಿದ ಕ್ಷಣದಂತೆ +ಅವರೆಲ್ಲ ಒಬ್ಬೊಬ್ಬರಾಗಿ ಅಲಿಂದ ಕರಗಿ ಹೋಗುತ್ತಿರಲು.. +ಅದುವರೆಗೆ ಅದನ್ನೆಲ್ಲ ನೋಡುತ್ತ ನಿಂತಿದ್ದ ರಘೂಗೆ ನಶ್ವರ ಬದುಕು ನೀರಮೇಲಣ ಗುಳ್ಳೆ ಅನ್ನಿಸಿಬಿಟ್ಟಿತು. ಪ್ರಾಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತವರ ಸಂಗಡಿಗರ ಸರ್ವಾಧಿಕಾರಿ ಮನೋಭಾವದ ಜೊತೆಗೆ ವಿರೋಧ ಪಕ್ಷದವರ ಗದ ಮುರುಗಿ ಆಟ ಅಕ್ಬರ್‌ನಂಥವರ ನೇತೃತ್ವದ ಭೂಗತ ಚಟುವಟಿಕೆ ಎಲ್ಲ ಕಣ್ಣಿಗೆ ಕಟ್ಟಿದಂತೆ ನೆನಪಾದವು. ಸಾಮಾಜಿಕ ಬದುಕೇ ಸೀಳಿಹೋಗಿ ದ್ವಿದಳಧಾನ್ಯದೋಪಾದಿಯಲ್ಲಿ ಗತಪ್ರಾಣವಾಗಿ ಬಿದ್ದಿರುವ ರೀತಿಯಲ್ಲಿ; ಮಾನವ ಮನಸ್ಸಿನ ಎರಡು ದೇಹಗಳೇ ಉರುಳಿರುವ ರೀತಿಯಲ್ಲಿ ಬಿದ್ದಿರುವ ಆ ಎರಡು ಕಳೇಬರಗಳನ್ನು ತಿಂದಾದರೂ ತಂತಮ್ಮ ದೇಹದ ಪಂಚಭೂತಗಳನ್ನು ತಣಿಸಿಕೊಳ್ಳಲು ಆಸ್ಪದ ಮಾಡಿಕೊಡಬೇಕೆಂದರೆ ಕೊರಚರಿಬ್ಬರು ಆಗಲೆ ಅಲ್ಲಿಂದ ಪರಾರಿಯಾಗಿಬಿಟ್ಟಿರುವರು. +ಪದವೀಧರನೂ, ಉದಯೋನ್ಮುಖ ಬರಹಗಾರನೂ ಆದ ಶಾಮಾಶಾಸ್ತ್ರಿಯ ಸಹಾಯ ಪಡೆಯುವುದು ಅನಿವಾರ್ಯವಾಯಿತು. ಪದ್ದಕ್ಕಳ ರೌದ್ರಾವತಾರವನ್ನೆ ಕನ್ನಲ್ಲಿ ತುಂಬಿಕೊಂಡು ದಿಗ್ಭ್ರಮಿತಳಾಗಿ ತಾಯಿ ತಾತನವರ ಎಡಪಾರ್ಶ್ವದಲ್ಲಿ ಕೂತಿದ್ದರಿಂದ ಕಾವಲಿಗೆ ಸೀದು ಅಂಟಿಕೊಂಡಿದ್ದ ದೋಸೆಯನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದ ಶಾಮಾಶಾಸ್ತ್ರಿ ರಘುರಾಮನ ಒಂದೇ ಕೂಗಿಗೆ ಹೊರಬಂದನು. +ಹೊಸದಾಗಿ ಮದುವೆಯಾದ ಷೋಡಷಿ ಗಂಡನ ಲಘು ಸಂಜ್ಞೆಗೆ ಡವಗುಟ್ಟುವ ಎದೆಯೊಡನೆ ಹೊರಬರುತ್ತಾಳಲ್ಲ ಹಾಗೆ.. “ನೀವು ಬೆಳಗಿನ ಉಪಹಾರಕ್ಕಾಗಿ ಬಂದಿರುವಾಗಲೇ ಈ ಅಹಿತಕರ ಘಟನೆ ನಡೆದುಬಿಡಬೇಕೆ!: ಎಂದು ಹೇಳಲಾಗದೆ ಕಂಪಿಸುವ ತುಟಿಗಳೊಡನೆ ಅವನು ಇವನನ್ನು ನೋಡಿದರೆ.. +“ಮನುಷ್ಯನ ಜೀವನ ಒಂದು ಚುಂಬನ ಇದ್ದ ಹಾಗೆ.. ಹಂಚಿಕೊಡದಿದ್ದರೆ ಅದರಿಂದ ಏನೂ ಉಪಯೋಗವಿಲ್ಲ.. ನನ್ನಂಥ ಅತಿಥಿ, ನಿನ್ನಂಥ ಮೀನು ಎರಡು ಮೂರು ದಿನಗಳೊಪ್ಪತ್ತಿನಲ್ಲಿ ಕೊಳೆತು ನಾರದೆ ಇರುವುದಿಲ್ಲ” ಎಂದು ಏನೇನೋ ಅರ್ಥಗರ್ಭಿತವಾಗಿ ಹೇಳಲು ಪ್ರಯತ್ನಿಸುತ್ತ ಇವನು ಅವನ ಮುಖವನ್ನು ನೋಡಿದನು. +“ಥೂ! ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ…ಸತ್ತಿರೋದು ನಾವಲ್ಲ್ರೋ ನೀವು.. ಹಿಟ್ಟಿನ ಗೂಳಿಯಲ್ಲಿ ಮಾಡಿದ ಬೊಂಬೆಗಳಾದ ನೀವು ನಮ್ಮ ಹಾಗೆ ವಿಲವಿಲನೆ ಒದ್ದಾಡಿ ಸಾಯುವ ದಿನ ದೂರವಿಲ್ಲ” ಎಂದು ಅರ್ಥ ಬರುವಂತೆ ಆ ಎರಡು ಕಳೇಬರಗಳು ಅವರಿಬ್ಬರನ್ನು ಅಣಕಿಸಿದವು. +ಕಳೆದ ವಾರ ಓತಿಕ್ಯಾತ ಸತ್ತಿದ್ದಕ್ಕೂ ದೊಡ್ಡ ರಂಪಾಟ ಮಾಡಿದ್ದ ಅವಿವಾಹಿತೆ ಸಾವಿತ್ರಿ ಹೋಗಬೇಡೆ.. ಸತ್ತಿರೋವ್ನ ಕಂಡ್ರೆ ನಿನ್ನ ಬುದ್ಧಿ ನೆಟ್ಟಗಿರೋಲ್ಲ” ಎಂದು ಹೆತ್ತವರು ಹಾಕಿದ ಲಕ್ಶ್ಮಣ ಗೆರೆಯನ್ನು ಲೆಕ್ಕಿಸದೆ ಓಡಿ ಬಂದವಳೆ “ಅಯ್ಯಯ್ಯೋ ಏನು ಕರ್ಮ ಮಾಡಿದ್ರೋ, ಹೀಗೆ ಸಾಯೋಕೆ…ಬದಿಕಿರೋ ಮಟ ಒಬ್ಬರನ್ನೊಬ್ಬ್ರು ಹರಕೊಂಡು ತಿಂದ್ರಿ.. ಒಂದಿನ ನೆಟ್ಟಗೆ ಕುಂತು ಮಾತಾಡ್ಲಿಲ್ಲ ’ ಎಂದೇನೋ ಅಬ್ಬರಿಸತೊಡಗಿದಳು…ಆಕೆ ಅವುಚಿಕೊಂಡ ಕಾಮೋಷಿಯನ್ನು ಆಕೆಯನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಸಾಕುಸಾಕಾಗಿಹೋಯಿತು ಅವರೀರ್ವರಿಗೆ.. +ಆಕೆ ಲಭೋ ಲಭೋ ಬಾಯಿ ಬಡಿದುಕೊಳ್ಳುತ್ತಿದ್ದುದನ್ನು ಲೆಕ್ಕಿಸದೆ ಶಾಮ ಕಾಮೊಷಿಯನ್ನು ಕೈಗೆ ತೆಗೆದುಕೊಂಡವನೆ ಅರ್ಥವಾಗದ ನೆನಪುಗಳಿಂದ ಜಜ್ಜಿ ಹೋಗಿ ಕಣ್ಣು ತುಂಬಿಕೊಂಡು ಬಿಟ್ಟನು. ತನ್ನ ಹೃದಯವೇ ಅಂಗೈ ತುಂಬಿಕೊಂಡು ಬಿಟ್ಟಿರುವಂತೆ ಭಾಸವಾಯಿತು. ಮಸಾಲೆದೋಸೆ ಕಾವಲಿಗೆ ಸೀದು ಹೋದಂತೆ ಅವನ ಕಾಲುಗಳು ನೆಲಕ್ಕೆ ಕಿತ್ತಿಡಲಾರದಷ್ಟು ಅಂಟಿಕೊಂಡು ಬಿಟ್ಟವು. ನೆನಪುಗಳಿಗೆ ಅಕ್ಷರ ಮತ್ತು ಶಬ್ದ ರೂಪ ಕೊಟ್ಟರೆಲ್ಲಿ ರಘುವೇ ಮೊದಲಾದ ನರಮಾನವರು ತನ್ನನ್ನು ಅದೆಲ್ಲಿ ರಮಿಸಿ ತಮಗೆ ತಾವೇ ದೊಡ್ಡವರಾಗಿ ಬಿಡುವರೋ ಎಂದು ಅವುಡುಗಚ್ಚಿಕೊಂಡನು. ಅವುಡುಗಚ್ಚಿಕೊಂಡೇ ತನಗೆ ಸ್ವಾಂತನ ಶಿಕ್ಷಣ ನೀಡದೆ ಹೋದ ತಾತನನ್ನು; ತಾಯಿಯನ್ನು ಶಪಿಸಿದನು. ಇನ್ನೊಬ್ಬರಿಗೆ ಸಮಾಧಾನ ಹೇಳುವ ಪಾಠ ಕಲಿಯದ ತಾನು ಯಾವ ಪುರುಷಾರ್ಥಕ್ಕೆ ಬದುಕಿರುವುದೆಂದುಕೊಂಡನು. +ಕೈಯಲ್ಲಿ ಮಾರ್ಜಾಲದ ಕಳೇಬರ ಹಿಡಿದುಕೊಂಡಿದ್ದ ರಘು ಅವನ ಹೆಗಲ ಮೇಲೆ ಕೈ ಇರಿಸಿ ಧೈರ್ಯದಿಂದ ಮುಂದೆ ಹೆಜ್ಜೆ ಇರಿಸುವಂತೆ ಸನ್ನೆ ಮಾಡಿದನು. +ಆ ಸ್ಪರ್ಶದಿಂದಾಗಿ ಶಕ್ತಿ ಸಂಚಲನದಿಂದ ಒಂದೊಂದಾಗಿ ಹೆಜ್ಜೆ ಇಕ್ಕ ತೊಡಗಿದ ಅವನು ಮುಂದೆ ಮುಂದೆ.. ಮಹಾತ್ಮಾಗಾಂಧೀಜಿಯವರ ಶವ ಹೊತ್ತು ಕೊಂಡಿರುವವನಂತೆ.. ರಘುಪತಿ ರಾಘವ ರಾಜಾರಾಂ ಪದ ನೆನಪು ಮಾಡಿಕೊಳ್ಳುತ್ತಿರುವವನಂತೆ.. ಅದರೊಂದಿಗೆ ಸೋಹ್ನಿ ಮಹಿಪಾಲ್; ಹೀರಾ ರಾಂಜಾ; ಲೈಲಾ ಮಜ್ನೂ; ರೋಮಿಯೋ ಜೂಲಿಯಟ್ ಮುಂತಾದ ಅಮರ ಪ್ರೇಮಿಗಳ ಅಮರ ಪ್ರೇಮ ಕಥಾನಕಗಳನ್ನು ನೆನಪು ಮಾಡಿಕೊಳ್ಳುತ್ತಿರುವವನಂತೆ ಹಿಂದೆ ಹಿಂದೆ ಹೆಜ್ಜೆ ಇಕ್ಕಲಾರಂಭಿಸಿದ ರಘುರಾಮ.. +ಅವರಿಬ್ಬರು ಮಾಳಿಗೆ ಮೇಲೆ ಬೀದಿ ಬದಿ; ಕಿಟಕಿ ಬಾಗಿಲೇ ಮುಂತಾದ ಕಡೆ ಬಾಯಿಗೆ ಬಟ್ಟೆ ಇಟ್ಟುಕೊಂಡು ನಿಂತಿದ್ದ ಮಂದಿಗೆ ಹೇಗೆ ಕಾಣುತ್ತಿದ್ದರಪ್ಪಾ ಅಂದರೆ ಸಂಪೂರ್ಣ ರಾಮಾಯಣವನ್ನು ಹಾಡಿನ ಮೂಟೆಯಲ್ಲಿ ಎದೆಯೊಳಗಿಟ್ಟುಕೊಂಡು ಒಂದು ಕೈಲಿ ಅಜೇಯವಾದ ಧನಸ್ಸು! ಇನ್ನೊಂದು ಕೈಲಿ ತಂಬೂರಿಯನ್ನಿಟ್ಟುಕೊಂಡು ಅಶ್ವಮೇಧದ ಅಂಕಣದ ಕಡೆ ನಡೆಯುತ್ತಿದ್ದ ಪುರಾಣ ಪ್ರಸಿದ್ಧ ಅವಳಿ ಜವಳಿಗಳಾದ ಲವಕುಶರು ನಡೆಯುತ್ತಿದ್ದಾರೇನೋ ಎಂಬಂತೆ. +ಜನ ಬಿಕ್ಕಿಬಿಕ್ಕಿ ನೋಡುತ್ತಿರುವಾಗ ಅವರು ನಡೆಯುತ್ತ ಬಸವನ ಬಾವಿ ತಗ್ಗಿನ ಕಡೆ ನಡೆದಿಳಿದು ಕಣ್ಮರೆಯಾದರು. +* +* +* +ಅರ್ಥ ಬರುವಂತೆ ಇವನು ಅವನನ್ನು ನೋಡಿದನು. +‘ಪೊನ್ನಂ ರನ್ನಂ ಕೂಡಿದೊಡೆನ್ನೀ ವಾಗ್ವಧುಗೆ ಭೂಷಣಂ ಪೆರತುಂಟೇ’ +ಈ ಪ್ರಕಾರವಾಗಿ ತಂತಮ್ಮ ಕೈಗಳಲ್ಲಿ ಮೂಷಕ ವೈರಿಗಳ ಕಳೇಬರವನ್ನು ಕೈದು ಮಾಡಿಕೊಂಡು ಅವರು ಧೀರೋದಾತ್ತವಾದ ಹೆಜ್ಜೆ ಇಕ್ಕುವ ಪರಿಯನ್ನು ಓಣಿಯ ಮಂದಿ ಕಣ್ತುಂಬ ನೋಡಿದರು. ಅವಾವುದಕ್ಕೂ ಬೇಸರಿಸದೆ ಅವರು ದ್ವಿದಳ ಧಾನ್ಯ ಎರಡು ಹೋಳಾದ ಪರಿಯಂತೆ, ಒಂದು ಕಾವ್ಯದ ಅಲಂಕಾರ ಛಂದಸ್ಸುಗಳಂತೆ; ಒಂದು ಆತ್ಮದ ಎರಡು ದೇಹಗಳಂತೆ, ತಮ್ಮ ನಾಲ್ಕೂ ಪಾದಗಳಿಂದ ಭೂಮಿಯನ್ನು ಅಳೆಯುತ್ತಿರುವವರಂತೆ ತಮ್ಮ ಪಾಡಿಗೆ ತಾವು ನಡೆಯುತ್ತಿದ್ದರು. +ಆ ಓಣಿ ದಾಟಿ ಈ ಓಣಿಗೆ ಬಂದರು. +ತಂತಮ್ಮ ಕೈಗಳಲ್ಲಿರ್ದ ಕಳೇಬರಗಳಿಗೆ ತಾವೇ ಮುಖ ಸೊಟ್ಟ ಮಾಡಿಕೊಳ್ಳತೊಡಗಿದರು. +ತಂತಮ್ಮ ದೇಹಗಳನ್ನೇ ಕೈಲಿ ಹಿಡಿದುಕೊಂಡವರಂತೆ ಪ್ರತಿ ಹೆಜ್ಜೆಗೂ ಕಂಪಿಸತೊಡಗಿದರು. +ತಾವರಸುವ ತಿಪ್ಪೆ ದೂರ ಸರಿಯುವಂತೆ ಭಾಸವಾಯಿತವರಿಗೆ. +ಉರಿಯ ಸರಿಗೇರಿದ ಪತಂಗಗಳಂತೆ ಹೆಜ್ಜೆ ತಪ್ಪತೊಡಗಿದರು. +ಕುರುಡರು ಹಿಡಿದುಕೊಂಡ ಕನ್ನಡಿಯಂತೆ +ಮೂರ್ಖರ ಕೈಯಲ್ಲಿನ ದಂಡಿಯ ಕಾವ್ಯಾದರ್ಶ ಗ್ರಂಥದಂತೆ +ಹೋರಾಡಲರಿಯದವನು ತೊಟ್ಟ ಕವಚದಂತೆ.. +ಹೆಬ್ಬುಲಿಯ ಕೂಸನು ಬೇಡುವ ಕೊಬ್ಬಿದ ನರಿಗಳಂತೆ.. +ಅವನು ಹಿಂದೆ ಇವನು ಮರೆ ಮಾಚುತ್ತ, ಇವನ ಹಿಂದೆ ಅವನು ಮರೆಮಾಚುತ್ತ ಅಸ್ಪಷ್ಟ ಹೆಜ್ಜೆಯನ್ನಿಕ್ಕುತ್ತ ನಡೆಯುತ್ತೊರ್ದ ಅವರನ್ನು ಊರೇ ಹೊರಗೆ ನೂಕಿತೆಂಬಂತೆ ಸಾಕಷ್ಟು ಹೊರಗಡೆ ಬಂದಿರ್ದರು. +ಇವನ ಕಾಲಲ್ಲಿ ಸೊಂಟ ಊನ ಮಾಡಿಕೊಂಡಿದ್ದ ನಾರಾಣಿ ಮಸೀದಿ ಮೇಲೆ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಘ್ರಾಣೇಂದ್ರಿಯ ಚುರುಕುಗೊಂಡು ಆಲೆ ಕುಣಿಯೊಳಗೆ ದುತ್ತನೆ ನೆಗೆದು ಒಂದೇ ಓಟ ಪೂರೈಸಿ ಎದುರಿಗೆ ನಿಂತು ಗುರ್ ಗುಟ್ಟಲಾರಂಭಿಸಿತು. +‘ನಾರಾಯಣೊ ಹರಿಃ’ ಅಂತ ಒಂದು ಹೆಜ್ಜೆ ಹಿಂದಿಟ್ಟು ಉರುಳಿ ಬೀಳುವುದರಲ್ಲಿದ್ದ ಶಾಮನನ್ನು ರಘು ಗಟ್ಟಿಯಾಗಿ ಹಿಡಿದುಕೊಂಡ. ಅವನ ಕೈಲಿ ಸೈಂಧವನ ತಲೆಯಂತೆ ಅನಿಶ್ಚಿತ ಸ್ಥಿತಿಯಲ್ಲಿದ್ದ ಕಳೇಬರ ಗಾಳಿಗೊಡ್ಡಿದ್ದ ಸೊಡರಂತೆ ಹೊಯ್ದಾಡಿತು. ಅದು ಕೆಳಗೆ ಬಿದ್ದರೆಲ್ಲಿ ಭೂಮಿ ನಾಶವಾಗುವುದೋ ಎಂಬ ಆತಂಕದಿಂದ ನಾರಾಣಿ ಮತ್ತೊಮ್ಮೆ ಗುರುಗುಟ್ಟಿತು. ಜಿಗಿಯಲು ಮುಂದೆರಡು ಪಾದಗಳನ್ನು ನೆಲಕ್ಕೂರಿ ತನ್ನೆರಡು ಕಂಗಳಿಂದ ಕಾಳ್ಗಿಚ್ಚನ್ನು ಉಗುಳ ತೊಡಗಿತು. ಅರೆ! ಅದು ಇನ್ನೇನು ಬೊಗಳೇಬಿಟ್ಟಿತು! ಅರೆ! ಅದಿನ್ನೇನು ನೆಗೆದೇ ಬಿಟ್ಟಿತು! ಅರೆ! ಅದಿನ್ನೇನು ಕಳೇಬರಗಳ ಸಹಿತ ತಮ್ಮನ್ನೂ ಕಬಳಿಸಿಯೇ ಬಿಟ್ಟಿತು ಎಂದು ಆ ಕೂಡಲೆ ಭಾವಿಸಿದ ಆ ಸತ್ಕುಲ ಪ್ರಸುತರು ತಂತಮ್ಮ ಪ್ರಾಣಗಳನ್ನು ಅಂಗೈಲಿಟ್ಟುಕೊಂಡು ಜಲಧಿಯೊಳುಬ್ಬೆದ್ದ ತೆರಯಲಿ ಮಂದರ ಮುಳುಗುವಂದದಿ ನತದೃಷ್ಟ ಕಳೇಬರಗಳನ್ನು ನೆಲಕ್ಕೀಡಾಡಿ ಝಳದ ಜಾಡಿಗೆ ಹೆದರಿದ ರಾಹುಕೇತುಗಳಂತೆ ಓಡತೊಡಗಿದರೆಂಬಲ್ಲಿಗೆ ಕುಂವೀ ಎಂಬ ಹುಲು ನರ ವಿರಚಿತ ‘ಶಾಮಣ್ಣ’ ಎಂಬ ಮಹಾ ಕಥಾನಕದ ಪ್ರಥಮಾಶ್ವಾಸಂ ಸಮಾಪ್ತಿಯಾದುದು. +‘ಜಯ ಮಂಗಳಂ ನಿತ್ಯ ಶುಭ ಮಂಗಳಂ’ +***** +ಮುಂದುವರೆಯುವುದು +ಕೀಲಿಕರಣ: ಎಂ ಎನ್ ಎಸ್ ರಾವ್ +ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೆವೇದ್ಯಾದಿಗಳು ಮುಗಿದಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು, ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು. […] +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +ಅರ್ಪಣೆ ಪ್ರಿಯ ಮಿತ್ರರಾದ ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_511.txt b/Kannada Sahitya/article_511.txt new file mode 100644 index 0000000000000000000000000000000000000000..a474bc9ebf3b1958c5583037bb098d64b0e21716 --- /dev/null +++ b/Kannada Sahitya/article_511.txt @@ -0,0 +1,64 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ +ಹಾಳಾದ ಕಾರಖಾನೆ ! +ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ +ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ +ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ ! +ಎಲ್ಲಿ ಬಿರುಗಾಳಿಯಲಿ ಮಗುಚಿ ಮೋಡದ ದೋಣಿ +ಚಿಕ್ಕೆ ತಳಕಂಡವೋ,- +ಹಗಲು ಕಾಮನಬಿಲ್ಲ ಸೇತುವೆಯು ಮುರಿದಿರುಳ +ರಹದಾರಿ ಬಂದಾಯಿತೋ- +ಇಲ್ಲಿಯವರಿಗೇ ಮೊದಲು ನೆಲೆಯಿಲ್ಲ +ಅಲ್ಲಿಯವರನು ಕುರಿತ ಯೋಚನೆಗೆಲ್ಲಿ ಅವಕಾಶ ? +ಇಂದಿನ ಮುಖ್ಯ ರಾದ್ದಾಂತವಾಗಿದೆ ನೋಡಿ +ಉಳಿದದ್ದು ಮುಂದೆ ನೋಡೋಣ ಸಾವಕಾಶ. +* * * * +ಸೆಳಕಿನ ಹಿಂದೆ ಸೆಳಕು ಬೆಳಕಿನ ಹಿಂದೆ ಸೆಳಕು +ನಡುನಡುವೆ ಕುಲುಕುತಿಹುದಲ್ಲ ಇದು ಯಾವ ಬೆಳಕು ! +ದಿಕ್ಕು ದಿಕ್ಕುಗಳಿಂದ ತೂರಿಬಿಟ್ಟಂತಿಹುದು ಹಸುರು ಸರ್ಚಲೈಟು +ಕಾಡುನಾಡೆನ್ನದೆಯೆ ಹುಲ್ಲು ಹಸುರಾಣಿಯಲಿ ಅದರ ಝೋಕು ! +ಒಳಗೆ ಬೆಚ್ಚಗೆ ಕುಳಿತು ಚಹವ ಗುಟುಕರಿಸುತ್ತ +ಆಗಾಗ ಕಿಟಕಿಯಲಿ ಹಣಿಕಿದರೆ ಸಾಕು +ಇನ್ನೇನು ಬೇಕು ?- +ಆಹಾ ! ಹೀಗೆಯೇ ಸಾಗಲಿ ಈ ಜಗತ್ತು. +ಮರದ ಪೊಟರೆಯೊಳೊಂದೆ ಗಿಳಿಯಮರಿ-ಕಿಲಿ ಕಿಲಿ +ಜಿನುಗು ಮಳೆಯಲಿ ತೋಯ್ದು ತೆಪ್ಪಗಿವೆ ಉಳಿದೆಲ್ಲ ಹಕ್ಕಿಪಕ್ಕಿ +ತೊಟ್ಟಿಲಲಿ ಮಗುವಿನೆಳನಗೆಯ ತಲಕಾವೇರಿ ! +ಅಂಗಳದ ಕಸಗಂಟೆಯಲಿ ರಸದ ವಿಜಯಧ್ವಜವನೆತ್ತಿಗೆವೆ ಗುಲಾಬಾಕ್ಷಿ; +‘ರಸೋವೈಸಃ’ +ಮದುಗುಣಿಕೆ ಊದಿವೆ ತುತೂತುತ್ತು ತೂರಿ. +ಕಂಪೌಂಡುಗೋಡೆಯ ಮೇಲು ಬರೆದಿದ ಹಸಿರು ತನ್ನ ಸಂಪೂರ್‍ಣ ಹೆಸರು. +ಬೆಳ್ಳಗೆ ನಿರಿಯ ಚಿಮ್ಮುತ ಬಂದು +ನೆಲವ ಮೋಹಿಸಿ ಮತ್ತೆ ಬಾನಿಗೇರಿದೆ ಮಳೆಯಥಳಕು ! +ನೀರೆಲ್ಲ ಬಸಿದು ರೇವೆ ಮಣ್ಣನು ಹರವಿ +ನಿಶ್ಚಿಂತ ನಿಂತಿಹುದು ಜೀವಝರಿಯು ; +ತೊಳೆದ ಮನಸಿನ ತೋಟದಲ್ಲಿ ಮೂಡಿವೆ ನೂರು ಡೇರೆಹೂ ಮರಿನೇಸರು. +ಎದೆ ಎದೆಗಳಲ್ಲಿ ಕುಣಿದು ಕೋಲಾಟವಾಡಿದೆ ಅದೇ : +‘ಚೆಲುವಯ್ಯ ಚೆಲುವೋ…. ಚೆಲುವಯ್ಯ ಚೆಲುವೋ ’ +* * * * +ಅದಕಾಗಿ ಇದಕ್ಕಾಗಿ ಬೆದಕುತಿಹುದಲ್ಲ ಮನ- +ಅದಕಿಹುದೆ ಬೇರೆ ಬದುಕು ? +ತೊಟ್ಟು ಕುಣಿಯುತ್ತಿಹುದು ನಿಮಿಷ ನಿಮಿಷಕ್ಕೊಂದು ಬೇರೆ ಪೋಷಾಕು ! +ಸಾಧನೆ ಸತ್ಯದಾರಾಧನೆಗಳೆಂದರದಕೆ ತಲೆಬೇನೆ, +ಈಗಿರುವ ಮೆದುಳೊ ? ಖಾಲಿ ಖಜಾನೆ. +ಇಷ್ಟರ ಮೇಲೆ ಹೇಗೆ ನಡೆದೀತು, ವರ್ಷಗಟ್ಟಲೆ ಈ ನಮ್ಮ ಕಾರಖಾನೆ- +ಇಲ್ಲವೆಂದರು ಬೇರೆ ಎಲ್ಲಿಂದ ತರುವದಿದೆ ಹೇಳಿ, +ಅದು ಮೊಟ್ಟ ಮೊದಲೇ ಬ್ರಹ್ಮ ಕೊಟ್ಟ ಆಸ್ತಿ ! +ಸಂಪು ಹೂಡಿದರೂ ನಡೆಯುವುದಿಲ್ಲ +ಅದರ ಮಾಲಕನು ಅಷ್ಟಿಷ್ಟಕ್ಕೇ ಹಣಿಯುವುದಿಲ್ಲ ಮಾರಾಯಾ +ಆದುದಾಗಲಿ, ಕೊನೆಗೆ ಆಗಿಯೇ ಬಿಡಲಿ ಕುಸ್ತಿ +ನೋಡೋಣ ಒಂದು ಕೈ ! +ಗೆದ್ದರೂ ಸೈ, ಗೆದೆಯದಿದ್ದರೂ ಸೈ. +***** +೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […] +ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […] +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_512.txt b/Kannada Sahitya/article_512.txt new file mode 100644 index 0000000000000000000000000000000000000000..535a0ceced8874d0b097b058ba411715d50c2f10 --- /dev/null +++ b/Kannada Sahitya/article_512.txt @@ -0,0 +1,1132 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದನೆಯ ದೃಶ್ಯ +(ಹೊಲೆಯರ ಹಟ್ಟಿ. ಕೇರಿಗಳು ಕೂಡುವ ವಿಶಾಲ ಜಾಗ. ಒಂದು ಅರಳಿ ಕಟ್ಟೆ. ರಂಗದ ಎಡಭಾಗಕ್ಕೆ ಒಂದು ಮುರುಕಲು ಸೂರು ರಂಗದತ್ತ ಉಚಾಯಿಸಿದೆ. ಬಲ ಭಾಗದಲ್ಲಿ ಒಂದು ಬಿದಿರ ನೆರಕೆ. ಬೆಳಕು ಬಿದ್ದಾಗ ರಂಗದ ಮೇಲೆ ಉಜ್ಜ ಮಾತ್ರ ಇದ್ದಾನೆ; ಕುಡಿಯುತ್ತಾ ಹಾಡುತ್ತಿದ್ದಾನೆ) +ಉಜ್ಜ: ನೂರುತಲೆ ಮಾರವ್ವಂಗೆ ಕೊಟ್ಟೇ ಕೋಳಿ +ಹೊಲೇರುಜ್ಜ ನಾನ್ಕಣವ್ವ ಹೇಳಿಕೇಳಿ +ಹೆಂಡಕುಡದು ಹಾಡಬೇಕು ನನ್ನಾಕೂಡಬ್ಯಾಟೆಗೆ ಬಂದು ಹಿಡೀಬೇಕು ನನ್ನಾ ಜಾಡ +ಶರಣಾಗ್ಬಿಟ್ಟ ನಮ್ಮ ರುದ್ರ ಬಸ್ಯಾರಿನಾಗ +ನಾನು ಸಹಿತ ಮಾತು ಕೊಟ್ಟೆ ಬಸವಣ್ಣಾರಿಗ- +ಮಾತು ಕೊಟ್ಟ ಮೂರು ತಾಸು ತೆಪ್ಪಾಗಿದ್ದೆ +ಕ್ವಾಪ ಬ್ಯಾಡ ಅಂತ ಹೆಂಡಕ್ಕಡ್ಡಾ ಬಿದ್ದೆ…. +ಕೆಂಚಾ! ಎಲ್ಲೋದನಲಾ ಆ ಗೂಬೆ ಕೆಂಚ (ಧ್ವನಿಯೆತ್ತರಿಸಿ) ಎಲಾ ಕೆಂಚ ಸೂಳೆ ಮಗನೆ! ಬ್ಯಾಡವಾದಾಗ ಕೊಳ್ಳಿ ದೆವ್ವದಂಗೆ ಕುಣಕಂತ ಬರ್ತಿ, ಬಾರಲಾ ಅಂದ್ರೆ — ಎಲ್ಲಿ ನೆಗದುಬಿದ್ದು ಹೋದ್ಯಲಾ ಕೆಂಚ? +(ಬುರುಡೆ ಎತ್ತಿಕೊಂಡು ಕುಡಿದು ತೋಳಿನಿಂದ ಒರಸಿಕೊಂಡು ಎದ್ದು ನಾಲ್ಕು ಹೆಜ್ಜೆ ಹಾಕುವನು. ಕೆಂಚ ಅವನ ಬೆನ್ನ ಹಿಂದೆ ಬಂದು ಮೆತ್ತಗೆ ಕೈ ಹಾಕಿ ಬುರುಡೆ ಕಿತ್ತುಕೊಳ್ಳುವನು) +ಕೊಡಲೇ ಕೊಡಲೇ — ಮುದುಕ ಗಂಟಲು ಹರಕಣೋ ಮುಟ್ಟ ಬಡಕೊಂಡ್ರೂ ಬರಾಕಿಲ್ಲ. ಬಂ….ದು ನನ್ನವ್ವನ್ನ ಕಿತ್ಕೊಂತೀಯಾ? +(ಎಂದು ಕೆಂಚನನ್ನು ಬೆನ್ನಟ್ಟಿ ಹೋಗುವನು. ಉಜ್ಜ ಪಕ್ಕದಿಂದ ಕೋಲೆಳೆದುಕೊಂಡಾಗ ಕೆಂಚ ನಕ್ಕು ಬುರುಡೆ ನೆಲಕ್ಕಿಟ್ಟು ನಿಲ್ಲುವನು. ಉಜ್ಜ ಅದನ್ನು ಎತ್ತಿಕೊಂಡು ಕೂತು ಮಾತನಾಡತೊಡಗುವನು) +ಏನಂತೋ ಕೆಂಚ ಕಲ್ಯಾಣಪಟ್ಟಣದ ಸಮಾಚಾರ? +ಕೆಂಚ : ಸುದ್ದಿ ಸಮಾಚಾರ ಯಾಕಪ್ಪಾ ನಿಂಗೆ? ನೀನಾತು ನಿನ್ನ ಹೆಂಡಾತು. ಕುಂತ್ರು ಹೆಂಡ, ನಿಂತ್ರು ಹೆಂಡ, ಮಗಳು ಮನೀಗೆ ಬಂದ್ಲು ಅಂತ ಹೆಂಡ, ಮನಿಂದ ಗಂಡನ ತಾವ ಹೋದ್ಲು ಅಂತ ಹೆಂಡ, ಹೊತ್ತು ಮೂಡ್ತಂತ ಹೆಂಡ, ಮುಣುಗ್ತು ಅಂತ ಹೆಂಡ, ನಿನ್ನ ಹೆಂಡದ ವಾಸ್ನಿಗೆ ಆಕಾಸದಾಗೆ ಹದ್ದು ಸೈತ ಬರಾಕಿಲ್ಲ- +ರುದ್ರ : ಹೌದೋ, ಹದ್ದು ಸೈತ ಬರಾಕಿಲ್ಲ ಅಂತಿ — ನೀನು ಬಂದ್ಯಲ್ಲೋ? +ಕೆಂಚ : (ವಿಷಯ ಬದಲಿಸಿ) ಅದಲ್ಲಪ್ಪ ಯಜಮಾನ; ಇದಕ್ಕೇನಂತಿ ಹೇಳು. +ಉಜ್ಜ : ಯಾದಕ್ಕಪ್ಪ, ಪಂಚಾತಿಗಿಲ್ಲದೆ ಹೇಳು. +ಕೆಂಚ : ನಿಂಗಿದನ್ನ ಹ್ಯಂಗಪ್ಪ ಹೇಳೋದು? +ಉಜ್ಜ : ಯಾಕಲಾ ಹಂಗೆ ಬೆದೆ ಎದ್ದ ಹುಡುಗಿ ಹಂಗೆ ಆಡ್ತಿ? ಮಗನೆ, ನಾನೋ ಕುಡಿದಿರೋನು, ನೀನೋ?- +ಕೆಂಚ : ನೋಡು ಯಜಮಾನಪ್ಪ, ಬಾಯಿಬಿಟ್ರೆ ಬಡ್ಡೀ ಸೂಳೇ ಬೆಂಡ್ಳಿ ಬೋಸುಡಿ ಬಿಟ್ಟು ಬ್ಯಾರೇ ಮಾತೇ ಹೊರಡಲ್ಲೆ ನಿನ್ನ ಬಾಯಿಂದ? ನಿನ್ನ ತಾವ ಯಾರಪ್ಪ ಮಾತಾಡೋದು? ಕಣ್ಣು ಮುಚ್ಚಿ ಕಣ್ಣು ತೆಗೆಯೋದ್ರಾಗೆ ಹೇಳಿದ್ದ ಮರೀತಿ. ಅಣ್ಣ ಕುಡೀಬ್ಯಾಡಂತ ಹೇಳಿ ನಾಕು ದಿನಾಗಿಲ್ಲ- +ಉಜ್ಜ : ಎಲಾ ನಿನ್ನವ್ವನ! ನನೀಗೆ ಬುದ್ಧಿ ಹೇಳಾಕೆ ಬಂದೇನಲಾ? ನಿನ್ನವ್ವ ಮೈನೆರೆತಾಗ ನಾನಾಗಲೆ ಹತ್ತು ಹುಡುಗ್ಯಾರಿಗೆ ಸೀರೆ ಉಡಸಿದ್ದೆ. ನಂಗೆ ಕಲಿಸ್ತೀಯಾ? ಎಲ್ಲಿ ಇನ್ನೊಂದು ಪಟ್ಟ ಹೇಳು, ಯಾರೋ ಅವನು ಅಣ್ಣ? ಯಾವನಲಾ ಅವನು? +ಕೆಂಚ : (ಗಟ್ಟಿಯಾಗಿ ನಕ್ಕು) ಬಸವಣ್ಣ ಕಣೋ ನಾನಂತಿರೋದ — ಬಸವಣ್ಣ! +(ಜನ ಸೇರತೊಡಗುವರು, ಮೊದಲನೆ ವ್ಯಕ್ತಿ ಬಂದಾಗ ಕೆಂಚ ಅವನನ್ನು ಉತ್ಸಾಹದಿಂದ ಕರೆಯುವನು) +ಕೆಂಚ : ಬರ್ಯಪ್ಪಾ ಬರ್ರಿ, ಉಜ್ಜಣ್ಣ ಕತಿ ಹೇಳ್ತಾನೆ ಬರ್ರಿ. +ವ್ಯಕ್ತಿ ೧ : ಹೌದ? ಎಂಥ ಕತೀನಪ್ಪ? ಹೌದೇನಪ್ಪ ಉಜ್ಜಣ್ಣ? +(ಉಜ್ಜ ಅವನ ಕಡೆ ಗಮನ ಹರಿಸಿದೊಡನೆ ಕೆಂಚ ಅವನಿಂದ ಬುರುಡೆ ಕಿತ್ತುಕೊಂಡು ಪಕ್ಕಕ್ಕೆ ತಿರುಗಿ ಕುಡಿಯುವನು) +ಉಜ್ಜ : ಕತಿ? ಕತಿ? ಎಂಥ ಕತಿಯೋ ಕೆಂಚ? ಎಲಾ ಹಡಾಣಿ ನನ ಮಗನೆ! +(ಎಂದು ಕೆಂಚನ ಕೈಯಿಂದ ಬುರುಡೆಯನ್ನು ಗಬಕ್ಕನೆ ಕಿತ್ತುಕೊಳ್ಳುವನು) +ಕೆಂಚ : ಅಂದ್ಯಲ್ಲೋ, ಮಗನ ಕತಿ ಹೇಳ್ತೀನೀ ಅಂತ! ಕೊಡೋ ಕೊಡೋ! +(ಕೊಂಚ ಗದ್ದಲ ಆಗುವುದು, ಐದಾರು ಜನ ಬರುವರು. ಮುಂದೆ ಕೊಂಚಕಾಲ ಕೆಂಚ ಉಜ್ಜ ಹೆಂಡಕ್ಕೆ ಹೊಂಚು ಹಾಕುತ್ತಲೇ ಇದ್ದಾರೆ. ಅದರಿಂದಾಗಿ ಬುರುಡೆ ಕೈನಿಂದ ಕೈಗೆ ಹೋಗುತ್ತಾ ಒಬ್ಬರನೊಬ್ಬರು ಹಿಂಬಾಲಿಸುತ್ತಾ ‘ಕತೆ’ ಬೇರೆಬೇರೆ ಜಾಗದಲ್ಲಿ ಸಾಗುತ್ತದೆ. ನಿರ್ದೇಶಕರು ‘ವ್ಯಕ್ತಿ’ಗಳ ಮಾತುಗಳನ್ನು ಯಥಾವತ್ತಾಗಿ ವಿಂಗಡಿಸಿಕೊಳ್ಳಬಹುದು- ಒಂದು ರೀತಿಯ ಗುಂಪು ಗೊಂದಲದ ವಾತಾವರಣ ಕಲ್ಪಿಸುವುದಕ್ಕಾಗಿ) +ಉಜ್ಜ : ನಾನಾ? ಯಾವಾಗಂದೆ? +ಕೆಂಚ : ಇದೇ ಈಗಂದೆ ಅಂತೀನಿ. ಹೇಳಪ್ಪ. +ವ್ಯಕ್ತಿ ೧ : ಹೇಳಪ್ಪ ಅತೀ ಕೇಳಿಸ್ಕೋಬ್ಯಾಡ, ಹೇಳು. +ವ್ಯಕ್ತಿ ೨ : ಯಾಕ್ಹಿಂಗೆ ಮಾಡ್ತಾನಲೆ ಇವನು? +ವ್ಯಕ್ತಿ ೩ : ಹೇಳ್ತಾನೆ ಸುಮ್ನಿರು. +ಉಜ್ಜ : (ಹಾಡುವನು) +ನನ್ಮಗಾ ಯಾಕಪ್ಪ ಹಿಂಗ್ಮಾಡಿದ +ಹಡದಪ್ಪ ನನ್ನನ್ನೆ ದಂಗ್ಮಾಡಿದ +ಹೋಳೀತಾವ ಕೂತ್ಗಂಡು ನಕ್ಕಾಡಿದ‌ಉ ಮಗ +ಮಾತೀನ ಸುಗ್ಗೀನೆ ಒಕ್ಯಾಡಿದ…. +ಒಕ್ಯಾಡಿದ, ಮಗ ಒಕ್ಯಾಡಿದ, +ಎಲ್ಲಾರ ಜೊತೆಗಾರ ನಕ್ಕಾಡಿದ; +ಹಲವು ಹನ್ನೊಂದು ತಾವ ಹೊಕ್ಕಾಡಿದ‌ಉ ಮಗ +ಯಾಕಪ್ಪ ಹೇಳೀರಿ ಹಿಂಗ್ಮಾಡಿದ….. +(ಹಾಡು ಕೇಳಿ ಇನ್ನೊಂದೆರಡು ಜನ ಬಂದು ಗದ್ದಲವಾಗುವುದು. ಅಲ್ಲಿದ್ದವರು ಆಗಲೇ ಉಜ್ಜನ ಹಾಡಿನೊಂದಿಗೆ ಸೇರಿಕೊಂಡು ಹಾಡುತ್ತಾ, ಮೇಳವಾಗಿ ಕುಣಿಯುತ್ತಿರುವರು. ಹೊಸತಾಗಿ ಬಂದವರು ಹಾಡಿನ ಕೊನೆಯಲ್ಲಿ ‘ಯಾಕಪ್ಪ? ಈ ಮುದಿಯಾಗೆ ಬುದ್ಧಿ ಕೆಡ್ತ?’ ‘ಶರಣಾದ ಮ್ಯಾಲೆ ಹುಚ್ಚು ಹೆಚ್ಚಾತು’ ಇತ್ಯಾದಿ ಮಾತಾಡಿಕೊಳ್ಳುವರು. ಜನ ಹಾಡು, ನಗೆ ಮತ್ತು ಟೀಕೆಯ ಸಂಭ್ರಮದಲ್ಲಿ ಉಜ್ಜನ ಮಾತು ಕೇಳಿಸಿಕೊಳ್ಳುವುದಿಲ್ಲ. ಆದ್ದರಿಂದ ಉಜ್ಜ ಕಟ್ಟೆ ಹತ್ತಿ ಭಾಷಣದ ದಾಟಿಯಲ್ಲಿ ಮಾತಾಡುವನು.) +ವ್ಯಕ್ತಿ ೧ : ಹ್ಯಂಗೈತಲ್ಲಲಾ ಪದ! +ವ್ಯಕ್ತಿ ೪ : ಮುದುಕನ ಮೈಯ್ಯಾಗೆ ನೆಣ ಜೋರೈತಿ ಇನ್ನ! +(ನಗುವರು) +ವ್ಯಕ್ತಿ೨ : ಅದೆಂಥದೋ ವದರ್ತಾನೆ, ಇರ್ರೋ. +ವ್ಯಕ್ತಿ ೬ : ವದರಲಿ, ವದರ್ಲಿ. +ಉಜ್ಜ : ಏನ್ರಪ್ಪಾ, ನಾನನ್ನೋದು ಕೇಳ್ರಿ (ಗದ್ದಲ) ಏನ್ರಲೇ ಕತ್ತೇ ಬಡ್ಡೀ ಮಕ್ಕಳಾ, ನನ್ನ ಕತೆ ಕೇಳ್ರಿ (ಮತ್ತೂ ಗದ್ದಲ, ನಗೆ) ಎಲೆ ನಾಯಿಗುಟ್ಟಿದ ಸೂಳೆ ಮಕ್ಕಳ್ರಾ, ಮುಚ್ಕಂಡ್ ನಾ ಹೇಳೋದು ಕೇಳ್ರಿ (ಜನ ಕೊಂಚ ಸುಮ್ಮನಾಗುವರು) ಏನ್ರಪಾ, ಕತೀ ಬೊಗಳಂತ ಹೇಳಿ ಯಾಕಿಂಗೆ ವದರತೀರಿ (ಗಾದೆ ಹೇಳುತ್ತಾ) ಕತೀ ಕೇಳಿದ ಮ್ಯಾಲೆ ಮತಿ ಹ್ಯಂಗೆ ಬಂದಾತು ನಿಮಗೆ. +ವ್ಯಕ್ತಿ ೩ : ಬೈತಾನಲ್ಲಲೇ- +ವ್ಯಕ್ತಿ ೨ : ಇವನ ಕತಿಂದಾನೇ ಊರು ಹಾಳಾತು. +ವ್ಯಕ್ತಿ ೧ : ಕೇಳ್ತದವಿ ಹೇಳಪ್ಪೋ. +ಕೆಂಚ : ನೋಡ್ರಪ್ಪ, ಕೇಳ್ತವಿ ಅಂದಮ್ಯಾಲೆ ಕೇಳ್ಬಕು. ಕೇಳ್ರಿ, ಎಲ್ರೂ ಕೇಳ್ರಿ, ನೋಡಪ ಉಜ್ಜಣ್ಣ, ಆ ಬಂಡೇ ಇತ್ತ ತತ್ತ- +ಉಜ್ಜ : ಸುಂಕಿರಲೇ ಹುಚ್ಚನನ ಮಗನೇ- +ಕೆಂಚ : (ಬುರುಡೆ ಇಸಿದುಕೊಂಡು) ಯಜಮಾನ್ರು ಹೇಳೋದನ್ನ ಎಲ್ರೂ ಕೇಳಬಕು. ನಮ್ಮೂರ ಶರಣ ಉಜ್ಜಪ್ಪ ಹೇಳೋದ್ನ ಕೇಳಬಕ್ರಪೋ- +ಉಜ್ಜ : (ಕತೆ ಹೇಳುವ ಧಾಟಿಯಲ್ಲಿ) ಬಸಣ್ಣ ಬಂದ್ರು, ಬಸಣ್ಣ ಹ್ವಾದ್ರು- ನಿಮಗೆ ಬಂದದ್ದಾರಾ ಏನಪ್ಪ? ‘ಬಸಣ್ಣ’‘ಬಸಣ್ಣ’ ಅಂತ ಬಾಯಿಬಡಕಂಡದ್ದೆ ನಿಮಗೆ ಬಂದದ್ದು. +ವ್ಯಕ್ತಿ ೨ : ಅದು ಹ್ಯಂಗಪ್ಪ? ಎಲ್ರೂ ಶರಣಾಗಲಿಲ್ಲವಾ? +ಉಜ್ಜ : ಸುಂಕಿರಲೆ ಹೇಳೋತಂಕ. ಬಂದ್ರಾಪಾ ಬಸಣ್ಣ; ದೇವರ ಮಗ ಬಂದಂಗ್ಬಂದ್ರು. ನನ್ನ ಮಗ ರುದ್ರ ಅವರ ಸಂಗ್ತೀಗಿದ್ದ, ನೆಳ್ಳಿದ್ದಂಗೆ, ಮಗನ ಹೆಗಲ ಮ್ಯಾಲೆ ಕೈ ಹಾಕಿ ಬಸಣ್ಣ, “ರುದ್ರಾ ನೀ ಶರಣಾಗು” ಅಂದ್ರು. ಅಲ್ಲೋ ಕರಿಬಸ್ಯ, ನಿನ್ನ ಹೆಗಲ ಮ್ಯಾಲೆ ಬಸಣ್ಣಾರ ಗಾಳಿ ತಾಕೇತೇನಲ? ಅದಕೂ ಪಡಕೊಂಡು ಬರಬೇಕು ಕಣಲಾ. (ಇನ್ನೊಬ್ಬನಿಗೆ) ಏನ್ಲಾ ಚನಬಸ್ಯ ನಿನ್ನ ಹೆಗಲ ಹತ್ರಾನಾದ್ರೂ ಬಂದ್ರ ಬಸಣ್ಣ? +ವ್ಯಕ್ತಿಗಳು: ಇಲ್ಲಪ್ಪ ಇಲ್ಲ, ಮುಂದ್ಕೇಳು. +ಉಜ್ಜ : ಅದಕ್ಕಂತಾನೆ ಮಗ ರುದ್ರ “ನೀವಂಬೋದು ಹೆಚ್ಚೋ ನಾ ಆಗೋದು ಹೆಚ್ಚೋ ಬಸಣ್ಣ? ನಾನಿವತ್ತಿನಿಂದ ಶರಣಾದೆ.” ಅದಕ್ಕೆ ಬಸಣ್ಣ “ಭಲೇ” ಅಂತಾರೆ. ಆಮ್ಯಾಲೆ ಬಸಣ್ಣ ನಂತಾವ ಬರ್ತಾರೆ. ನನ್ನ ಕಣ್ಣಾಗೆ ಕಣ್ಣು ಹಾಕಿ “ಉಜ್ಜಣ್ಣ” ಅಂತಾರೆ. ನಾನು “ಬಸಣ್ಣಾರೆ” ಅಂತೀನಿ….. +ವ್ಯಕ್ತಿ ೪ : ಹಂಗಂದ್ರೇನಪ್ಪ. ನಿಂದೊಳ್ಳೇ ಮಾತಾತಲ್ಲ! +ಉಜ್ಜ : “ಹೆಂಡ ತಕಾಬಾರದು ಉಜ್ಜಣ್ಣ” ಅಂತಾರೆ. ಮಗ ಸಹಿತ ಬಂದು “ಬ್ಯಾಡಪ್ಪ ಇನ್ನ ಹೆಂಡ, ಕಂಡ” ಅಂತಾನೆ. +“ಯಾಕ್ಲಾ ಮಗನೆ, ಯಾಕ್ಲಾ?” ಅಂತೀನಿ. “ಶರಣ್ರು ಹೆಂಡ ಕಂಡ ತಕ್ಕಳ್ಳಾಕಿಲ್ಲ” ಅಂತಾನೆ. “ಹಂಗಾರ ಶರಣ್ರು ಹ್ಯಂಗಪ್ಪ ಬದುಕ್ತಾರೆ?” ಅಂತ ನಾನು ಅಂತೀನಿ. “ಹ್ಯಂಗಂದ್ರೆ- ಬಸಣಾರಂಗೆ” ಅಂತಾನೆ ಮಗ. ನಾನದ್ಕೆ “ಹಂಗಾದ್ರೆ ಸೈ ಬಿಡು- ತಕ್ಕಳ್ಳಾಕಿಲ್ಲ” ಅಂತೇನಿ. +ಕೆಂಚ : ಆಮೇಲೇನಾತು ಹೇಳು. ಕೇಳ್ರಪೋ- +ಉಜ್ಜ : ಅಲ್ಲ ಬಸಣಾರು ಬಂದು ಹೋದ ಎಲ್ಡು ದಿನದಾಗೆ ನನಮಗ ಹ್ಯಂಗಾದ! ಅಂವ ದೊರೆ ಮಗನಂಗೆ ಓಡಾಡದೇನು, ಬ್ರಾಂಬರ ಥರ ತಿದ್ದಿ ತಿದ್ದಿ ಮಾತಾಡದೇನು, ನನ್ನ ತಾವ ಬಂದು ಬಾಯಿಗೆ ಮೂಗಿಟ್ಟು ವಾಸನೆ ನೋಡಾದೇನು? ಅಪ್ಪ ಕುಡದನೋ ಬಿಟ್ಟನೋ ಅಂತ ಬಾಯಿಗೆ ಮೂಗಿಡ್ತಾನೆ ಮಗ! ಅದಕ್ಕಂದೆ, “ಮಗಾ, ಹಿಂಗ್ಯಲ್ಲ ಅಪ್ಪನ ಮ್ಯಾಲೆ ಮಗ ಕಣ್ಣಿಡಬಾರದು” ಅಂದೆ. ‘ಹಂಗಾರೆ ನೋಡಪ್ಪ ಈ ಸಂಕ್ರಾಂತಿ ತಂಕ ಕುಡಕ-ಆಮೇಲೆ ಒಂದು ತೊಟ್ಟೂ ಹೆಂಡ ಮುಟ್ಟಬ್ಯಾಡ” ಅಂದ. (ಜನರಿಗೆ) ಆಮೇಲೇನಾತು ಅನ್ರಲೇ. +ಜನ : ಸರಿಯಪ್ಪ, ಹೇಳು. ಆಮೇಲೇನಾತು? +ಉಜ್ಜ : ಮನಸಿಗೆ ಬಲೆ ಪಿಚ್ ಅನ್ನುಸ್ತು. ತಲೆ ಕೆರಕಂಡೆ. ಹೊತ್ತರೆ ಎದ್ದವನೆ ಪಾರಿತಾವ ಹೋಗಿ, ಏನವ್ವ ಪಾರಿ- +ವ್ಯಕ್ತಿ ೪ : ಪಾತರಗಿತ್ತಿಪಾರಕ್ಕ ! ಆಕೀನ ಬಿಡಂಗಿಲ್ಲ ನೀನು? +ವ್ಯಕ್ತಿ ೫ : ಆಕೀನ ಯಾಕೆ ಬಿಟ್ಟಾನು? +ಉಜ್ಜ : ಹ್ಯಂಗಲಾ ಬಿಡ್ತಿ? ಬಿಟ್ಟೇನಲಾ ಮಾಡ್ತಿ? ಹೆಂಡ ಬಿಡು, ಕಂಡ ಬಿಡು, ಹೆಂಗಸು ಬಿಡು- ಏನೇನಲಾ ಬಿಡೋದು? ಆ? ನಿನ್ನ ತಲೀಗೆ ಆಕೀದೊಂದು ಮೊಲಿ ಬೆಲಿಲ್ಲವೋ? ಕೇಳು. ಆಕೀನ ಕೇಳಿದೆ, “ನೋಡೇ ಪಾರಿ, ನಂಜೀವ ಕಣೆ ನೀ. ಹುಟ್ಟಿಸಿದ ಮಗ ಹಿಂಗಾದನಲ್ಲ ಏನ್ಮಾಡ್ಲಿ ಹೇಳೀಗ” ಎಂದೆ. ಬೆರಕೀ ಹೆಂಗಸಾಕೆ. ಅಂದ್ಲು. “ಹುಚ್ಚ ನನ ಗಂಡ್ಸೇ, ಹುಚ್ಚು ನನ ಗಂಡಸೇ ನಿನ್ನ ಮಗನೇನು ಗಂಡಸಲ್ಲವಾ, ಹೋಗು, ಅಂವ ಹೋದ ಹೋದ ತಾವ ಹೋಗು, ಅವಂದೂ ಹುಳುಕು ತಿಳೀತತಿ”. ಪಾರೀಗೆ ಲೊಚಕ್ ಅಂತ ಮುದ್ದು ಕೊಟ್ಟು ಬಂದೆ. ಮಗ ಹೋದಕಡೆ ಹೋದೆ. ಗದ್ದೀಗೆ ಹೋದ, ಅಲ್ಲಿಗೆ ಹೋದೆ. ಕೆರೀಗೆ ಹೋದ, ಅಲ್ಲಿಗೆ ಹೋದೆ. ಪ್ಯಾಟೀಗೆ ಹೋದ, ಅಲ್ಲಿಗೆ ಹೋದೆ-ಗಿಡ ಗೆಂಟಿತಾವ ಹೆಗ್ಗಣದಂಗೆ ಹೊಕ್ಕಂಡು ಹೋದೆ…. ಒಂದಿನ ಹೊಳೀ ದಂಡೆಮ್ಯಾಲೆ ಸಿಕ್ಕ ಕೈಗೆ…. +ಜನರು : ಏನು ಮಾಡ್ತಿದ್ದಿ ? ಏನು ಮಾಡ್ತಿದ್ದಿ? +ಉಜ್ಜ : ಹೇಳಲಾ? ಏನು ಮಾಡ್ತಿದ್ದ ಹೇಳಲಾ? +ಜನರು : ಹೇಳಪ್ಪಾ ಅಂದ್ರೆ. +ವ್ಯಕ್ತಿ ೨ : ಹೇಳೋ ಮಂಜಾಳಾಗ… +ಉಜ್ಜ : ಏನ ಮಾಡ್ತಿದ್ದ…. ಆ ಗೊಂಬಿ ಥರದ ಬ್ರಾಂಬ್ರ ಹುಡುಗಿ ತಾವ ನಗ್ಯಾಡ್ತಿದ್ದ. ಬ್ರಾಂಬ್ರ ಆಕೀ ಮಕ ಕೆಂಪಗೆ ಬಿಂದಿಲಿ ಹೂವಾಗಂಗೆ ಕಿಲಕಿಲ ನಗಿಸ್ತಿದ್ದ! (ನಕ್ಕು ಹೆಮ್ಮೆಯಿಂದ) ಅಲ್ಲ, ಕುಡಿಬ್ಯಾಡಂತ ನಂಗಂದು ಆ ಹೆಂಗಸರ ತಾವ ಹೋಗ್ತಾನಲ್ಲ ಮಗ! ‘ಎಲಾ ಮಗನೆ, ಬ್ರಾಂಬ್ರ ಹುಡುಗೀ ತಾವ ಮಾತಾಡಂಗಾದ್ಯ?’ ಅಂದಕಂಡೆ. ನನ್ಯಾಕಲ ಹೆಂಡ ಬಿಡಲಿ ಅಂತ- +(ಜನ ಕುತೂಹಲದಿಂದ ‘ಯಾರಲಾ ಹುಡುಗಿ?’ ‘ಯಾತ್ಕಲಾ ಮಾತಾಡ್ತಿದ್ದಿ?’‘ಬಾಂಬ್ರು ಸುಮ್ಕೇ ಬಿಟ್ಟಾರ?’ ಮುಂತಾದ ಮಾತು; ಗದ್ದಲ. ಉಜ್ಜನ ಮಗ ರುದ್ರ ಬರುವನು. ಈಚೆಗೆ ಶರಣನಾದವ; ಬಟ್ಟೆ ಕೊಂಚ ಶುಭ್ರವಾಗಿವೆ.) +ಕೆಂಚ : ನಿನ್ನ ಮಗನೇ ಬಂದ ಬಿಡು ಮಾರಾಯ! ಜಾಗಬಿಡು, ಜಾಗಬಿಡು; ಬಾರಪ್ಪ ಇತ್ತಕಡೆ ಬಾ. +ರುದ್ರ : ಏನು? ಏನು ಬೇಕು ನಿಮಗೆ? +ವ್ಯಕ್ತಿಗಳು: ನಿನ್ನಪ್ಪ ಕತಿ ಹೇಳ್ತಿದ್ದ ಕಣೋ. +ರುದ್ರ : ಕತಿ? ಅವನ ಕತಿ ಗೊತ್ತಿಲ್ಲವಾ ನಂಗೆ? +ಉಜ್ಜ : (ಉತ್ಸಾಹದಿಂದ) ನೋಡ್ರೋ, ನೋಡ್ರೋ ಎಷ್ಟು ವೈನಾಗಿ ಮಾತಾಡ್ತದೆ, ಬ್ರಾಂಬ್ರಂಗೆ ನೋಡ್ರೋ! +ರುದ್ರ : ವೈನಾಗಿ ಮಾತಾಡೋದು ಖರೆ. ಏನಿದೆಲ್ಲ ರಂಪ? ನಿಮಗೆ ಮಾಡಾಕೆ ಕೆಲಸವಿಲ್ಲವಾ? ಬಸವಣ್ಣ ಬಂದು ವಾರ ಆಗಿಲ್ಲ? ಜಂಗುಳಿ ದನದಂಗೆ ವದರಾಡ್ತೀರಿ. (ತನ್ನ ಅಪ್ಪನಿಗೆ) ನೀನು- +ಉಜ್ಜ : ಏನ್ಲಾ ಮಗ? ನನಮ್ಯಾಲೆ ಯಾಕಲಾ ಕಣ್ಣು? ನಾ ಕುಡಿದಿಲ್ಲಪೋ- +ರುದ್ರ : ಮಾತು ಬೇರೆ ದಂಡ. ಬಸವಣ್ಣ ಗಿಣೀಗೆ ಹೇಳಿದಂಗೆ ಹೇಳಿದ್ರು (ಕೆಂಚನನ್ನು ನೋಡಿ) ಏನ್ಲಾ ಏ ಗೂಬೆ ಕೆಂಚ, ಕೋತಿ ಹಂಗೆ ಮೂತಿ ಮಾಡಬ್ಯಾಡ. ನಿಂಗೆ ಮರ್ವಾದಿ ಮಾನ ಇಲ್ಲ? +ಕೆಂಚ : ನೋಡಪ್ಪ ಶರಣ ರುದ್ರಪ್ಪ, ನೀನಾನು ನಿನ್ನ ಬಸವಣಾರು ಆತು- ನನ್ನ ಹ್ವಾರೇವಕೆ ಬರಬ್ಯಾಡ. ಬಸಣಾರಲ್ಲ, ಜವರಾಯನೇ ಬಂದ್ರೂ ಕೋಳಿ ತಿಂಬೋದು ಬಿಡಕಾಗಲ್ಲ, ಗೊತ್ತಾತ? +ರುದ್ರ : ಹಂಗಾದರೆ ಆತು. ನಾನ್ಯಾಕೆ ಈ ಊರಾಗಿರ್ಲಿ? ನಾನ್ಯಾಕೆ ಅಣ್ಣಂಗೆ ಮಾತುಕೊಟ್ಟು ಮೋಸ ಮಾಡ್ಳಿ? ನಿಮ್ಮನ್ನ ಕಟ್ಕೊಂಡು ಯಾಕೆ ಹೊಳೀಗೆ ಹಾರ್ಲಿ? +ವ್ಯಕ್ತಿಗಳಿಬ್ಬರು: (ಹೊಡೆದು) ಕೆಂಚ ನನಮಗನೆ, ಬಸಣಾರಿಗಿಂತ ನಿನ್ನ ಕೋಳೀನೆ ದೊಡ್ಡದಾತಾ ನಿಂಗೆ? +ವ್ಯಕ್ತಿ ೫ : ನಿನ್ನ ಕೋಳಿ ಕಾಲು ಮುರಿತೇವಿ ನೋಡು. +ವ್ಯಕ್ತಿ ೧ : ನೋಡಪ್ಪ ರುದ್ರ, ಅವನ್ನ ದಾರೀಗೆ ತರ್ತೇವಿ ಬಿಡು. +ವ್ಯಕ್ತಿ ೬ : ನೀ ಹೇಳಿದಂಗೇ ನಾವು ಮಾಡೋರು. +ಉಜ್ಜ : (ಗಟ್ಟಿಯಾಗಿ) ಮಗನೇ, ಆ ಬ್ರಾಂಬ್ರ ಹೆಣ್ಣಿನ ತಾವ ಏನು ನಕ್ಕಾಡತಿದ್ದೆ, ಹೇಳು. +ಎಲ್ಲರೂ: ಹೇಳಪ್ಪ, ಅದು ಹೇಳು. +ವ್ಯಕ್ತಿ ೧ : ಹೇಳಾಕೇ ಬೇಕು. +ವ್ಯಕ್ತಿ ೨ : ಬಿಂಕಿಲ್ಲದೆ ಹೇಳಪ್ಪ. +ವ್ಯಕ್ತಿ ೫ : (ರುದ್ರ ಹೇಳುವುದರಲ್ಲಿದ್ದಾಗ) ಅದು ಸರ್ರೆ ರುದ್ರಪ್ಪ, ನಂದೊಂದು ಅನುಮಾನೈತಿ ನೋಡು- +ವ್ಯಕ್ತಿಗಳು/ಉಜ್ಜ : ಇವನೇನೋ ಹಾಕಿದ್ನಲ್ಲಪ್ಪ ಕೊಕ್ಕೆ. +ವ್ಯಕ್ತಿ ೪ : ಬಡಬಡ ವದರಲೇ. +ವ್ಯಕ್ತಿ ೧ : ಮೊಲ ಎದ್ದೋಡುವಾಗ ನಾಯಿ ಉಚ್ಚೆಗೆ- +ರುದ್ರ : ಇರ್ರಿ. ಸುಮ್ನಿರಿ. ಹೇಳ್ಳಿ. +ವ್ಯಕ್ತಿ ೬ : ಬಸಣಾರನಕ ಚಲೋ ಮನುಷ್ಯ. ಬಂದ್ರು, ನಮ್ಮನ್ನೆಲ್ಲ ಶರಣ್ರ ಮಾಡಿದ್ರು, ನೋಡಪ್ಪ ನಂದೊಂದು ಮಾತೈತಿ- +ವ್ಯಕ್ತಿ ೩ : ಇವನಾಪನಾ. ಹೇಳಲೇ. +ವ್ಯಕ್ತಿ ೬ : ಶರಣಾಗ್ತೇನಿ ಸರಿ. ಶೆಟ್ರ ಹತ್ರ ನಾನೂರು ವರ ಸಾಲೈತಿ ನಂದು- ಸಾಲ ಇಟ್ಟಗಂಡು ಹ್ಯಂಗಪ್ಪ ನಾ- +ವ್ಯಕ್ತಿಗಳು: ಹೋಗಲೇ ದನ ಕಾಯೋನೇ- +ನಿನ್ನ ಯಾವನಲೇ ಶರಣ ಅಂತಾರೇ- +ಶೆಟ್ರ ಮನ್ಯಾಗೆ ದೇಕು ಹೋಗು- +ವ್ಯಕ್ತಿ ೧ : ನಿನ್ನ ಹುಡುಗಿ ಸುದ್ದಿ ಹೇಳಪಾ ರುದ್ರು- +ವ್ಯಕ್ತಿ ೨ : ಆಕಿ ಹ್ಯಂಗದಾಳೆ? +ವ್ಯಕ್ತಿ ೧ : ಕ್ಯಂಪಗದಾಳ, ತೊಂಡೇಹಣ್ಣಿನಂಗೆ? +ವ್ಯಕ್ತಿ ೩ : ಪಾರಿ ಹಂಗದಾಳ, ಹಲಸಿನ ಮರದಂಗೆ? +ವ್ಯಕ್ತಿ೪ : ಈರಭದ್ರಿ ಹಂಗ? ಗೊಜಮಟ್ಟೆ ಹಂಗ? +ವ್ಯಕ್ತಿ ೫ : ಸಿದ್ದಲಿಂಗೀ ಹಂಗ? ತೆಳ್ಳಗೆ? ನಾಯಿ ಹೊಡಿಯೋ ಕೋಲಿನಂಗ? +ಉಜ್ಜ : ಲೇ ಮಕ್ಕಳಾ ಒಸಿ ನಾಲಿಗೆ ಕಚಿಗಳ್ರೋ-ಯಾಕ್ರೋ ಪರ ಪರ ಪರಕಳ್ತೀರಾ? ಆ? +ವ್ಯಕ್ತಿ ೬ : ನನ್ನ ಶೆಟ್ರ ಹತ್ರದ ಸಾಲ- +ವ್ಯಕ್ತಿ ೨ : (ಅವನ ತಲೆಗೆ ತಟ್ಟಿ) ಮುಚ್ಚಗಳಲೇ. +ವ್ಯಕ್ತಿ ೧ : ಬೋಸುಡಿಕೆ, ನಿಂಗೊಬ್ಬನಿಗೇ ಏನೋ ಕಷ್ಟ? +ವ್ಯಕ್ತಿ ೭ : ನನ್ನ ಮಗಳು ಮೈ ನೆರೆದು ನಿಂತಾಳೆ, ಅದಕ್ಕೇನಂತಿ? +ವ್ಯಕ್ತಿ ೩ : ನನ್ನ ಆಕಳಿಗೆ ಹುಲಿ ಹಿಡದೈತಿ, ಅದಕ್ಕೇನಂತಿ? +ವ್ಯಕ್ತಿ ೪ : ನನ್ನ ಜ್ವಾಳದ ಹಗೇವಿಗೆ ಹುಳ ಬಿದ್ದಾವೆ, ಅದಕ್ಕೇನಂತಿ? +ವ್ಯಕ್ತಿ ೫ : ನನ್ನ ಹೆಣತೀಗೆ- +ಕೆಂಚ : ನಿನ್ನ ಹೆಣತಿ, ನಿನ್ನ ಜ್ವಾಳ, ನಿನ್ನ ಆಕಳು, ನಿನ್ನ ಮಗಳು- ನಿಮ್ಮ ಗೋಳಿಗೆ ಬೆಂಕಿ ಬೀಳ್ತು- ಹೇಳಪ್ಪ ರುದ್ರಣ್ಣ. +ವ್ಯಕ್ತಿಗಳು: ಅದನ್ನೇ ನಾ ಹೇಳಾದು. +ಹೇಳಲಿ ಬಿಡ್ರಪ್ಪ ಅಂತೀನಿ +ಸುಮ್ಮನಿರ್ರೋ ಸುಮ್ಮನಿರ್ರೋ. +ಉಜ್ಜ : ಈ ಮುಂಡೇಗಂಡ್ರ ತಾವ ಯಾಕೆ ಹೇಳ್ತಿ ಬಿಡಲೇ ಮಗ- +ರುದ್ರ : (ಗಟ್ಟಿಯಾಗಿ) ಕೇಳಂಗಿದ್ರ ಕೇಳಿ… ಶಾಸ್ತ್ರಿ ಅಂತ ಪಂಡಿತರಿದಾರೆ-ಆಕಿ ಅವರ ಮಗಳು. ಊರ ನಾಕು ಮಂದಿಗೆ ತಿಳಿದಿರ್ಲಿ ಅಂತ ಹೇಳಿದಿನಿ. +ವ್ಯಕ್ತಿಗಳು: ಹ್ಯಂಗದಾಳಪ್ಪ? +ಮದುವ್ಯವಾಗಪ್ಪ? +ರುದ್ರ : ನೀವೆಲ್ಲ ಶರಣರಾದ ಮ್ಯಾಲೆ ಮದುವೆ. ನೀವು ಕುಡಿಯೋದು ಬಿಟ್ಟು, ತಿನ್ನೊದು ಬಿಟ್ಟು, ಸುಳ್ಳು ಬಿಟ್ಟು, ಹಾದರ ಬಿಟ್ಟು- +ಉಜ್ಜ : ಮಗಾ, ಹಂಗಾದರೆ ಯಲ್ಲ ಬಿಟ್ಟು-ಏನಪ ಮಾಡಬೇಕು? +(ನಗುವರು. ರುದ್ರ ಸಿಟ್ಟಿನಿಂದ ಹೊರಡುವನು) +ವ್ಯಕ್ತಿಗಳು: ನೋಡು ರುದ್ರ, ನೀ ಹಾಕಿದ ಗೆರೆ ದಾಟಾಕಿಲ್ಲ- +ನಿನ್ನ ಬಿಟ್ರೆ ನಮಗ್ಯಾರು, ಹೇಳು- +ಕೋಪ ಮಾಡಬ್ಯಾಡ- +(ಅಂದರೆ ರುದ್ರ ಸುಮ್ಮನೆ ಹೋಗುವನು) +ಉಜ್ಜ : (ಮತ್ತೆ ಹೆಂಡ ದೊರಕಿಸಿಕೊಂಡು ಕುಡಿಯುತ್ತಾ) ಗೊತ್ತಾತೇನ್ರೋ! ನೀವಿನ್ನು ಕುಡಿಯಾಂಗಿಲ್ಲ! ಸೂರು ಮ್ಯಾಲಿನ ಹಲ್ಲಿ ಹಂಗೆ ಲಚಲಚ ನೀರು ಕುಡಿದು ಬಿದ್ದಿರಬೇಕು! ಒಂದ್ ತೊಟ್ ಮುಟ್ಟಂಗಿಲ್ಲ! ಶರಣ್ರು ನೀವೆಲ್ಲ! ಸಿವಶರಣ್ರು! ಹಾಲು ಕುಡಕೋ, ಔಸ್ತಿ ಕುಡಕೋ, ಗಂಜಿ ಕುಡಕೋ- ಒಂದು ಹನಿ ಹ್ಯಂಡ ಮುಟ್ಟಬ್ಯಾಡ! +ಕೆಂಚ : ಸಾಕಪ್ಪ ನಿನ್ನ ಕತೆ. ಬಾ, ಮನೀಗೆ ಹೋಗಿ ಮಲಕ್ಕೊ. +ಉಜ್ಜ : ಮಲಗ್ತಾನಂತೆ ಮಗ! ಹೋಗಲೇ ಗೂಬೆ ಕೆಂಚ! ಹೋಗ್ತನಿ. ಕಾರೆಕಂಟಿ ತಾವ ಮಗನ ಮಜಾ ನೋಡ್ತಿನಿ! ಹರಿಯೋ ಹೊಳೀತಾವ ಮಗ ನಗಾದು ಕೇಳ್ತಿನಿ! ನನ್ನ ಮಗ ನಗೋದು ಕೇಳ್ತಿನಿ! +ವ್ಯಕ್ತಿಗಳು: ಅಲ್ಲೋ ಹುಚ್ಚು ಮುದುಕ… +ಮಗ ಮಾಡಿದ್ರೆ ಇವನಿಗೇನಪ್ಪ- +(ಉಜ್ಜ ಹೋಗುವನು. ಜೊತೆಗೆ ಕೆಂಚ ಕೂಡ) +ವ್ಯಕ್ತಿ ೨ : ಹೋಗಲಿ ಬಿಡಪ್ಪ, ಇದು ನಿಜಾನ? +ವ್ಯಕ್ತಿ ೧ : ಯಾವುದು? +ವ್ಯಕ್ತಿ ೨ : ಸಂಕ್ರಾಂತಿ ತಂಕ ಕುಡಕೋಬೈದಂತೆ, ಹೌದ? ಬಸಣ್ಣಾರೆ ಹೇಳಿದಾರಂತೆ- +ವ್ಯಕ್ತಿ ೪ : ನಾಳೆಯೇ ಸಂಕ್ರಾಂತಿ ಅಲ್ಲವೇನೋ? +(ಅಷ್ಟರಲ್ಲಿ ಕೆಂಚ ಹೊಸತೊಂದು ಬುಂಡೆ ಎತ್ತಿಕೊಂಡು ಬರುವನು) +ಕೆಂಚ : ಕೇಳ್ರಪೋ ಕೇಳಿ. ಬಸಣ್ಣ ಬರಲಿ, ಬಸಪ್ಪ ಬರಲಿ, ನಾ ಮಾತ್ರ ಬಿಡಾಕಿಲ್ಲ. ಅಲ್ಲ, ಸೂರ್ಯ ಹುಟ್ಯಾನು ಹ್ಯಂಗ? ಚಂದ್ರಪ್ಪ ಬೆಳಗ್ಯಾನು ಹ್ಯಂಗ? ಹೊಳೆ ಹರಿದಾತು ಹ್ಯಂಗ? ಈ ಮುದಿಯ ಸಂಕ್ರಾತಿ ತಂಕ ಕುಡಿದು ಬಿಟ್ಟು ಬಿಡ್ತಾನಂತೆ! ಕಾರೆಕಂಟಿ ತಾವ ಜಾಗ ಇರಾಕಿಲ್ವ ಅವಗೆ? ಬಣವೆ ಸಂದ್ಯಾಗೆ ಜಾಗ ಇರಾಕಿಲ್ಲವಾ? (ವ್ಯಕ್ತಿಯೊಬ್ಬನಿಗೆ) ಏನಂತಿಯೋ ಕರಿಯಾ? ಮಾತಾಡಲೇ- +ವ್ಯಕ್ತಿ ೫ : ಎಲಾ ಗೂಬೆ ಕೆಂಚ, ಗೂಸ ಬೀಳ್ತವೆ! +ವ್ಯಕ್ತಿ ೨ : ಊರಿಂದ ಹೊರಕ್ಕೆ ಗದುಮಿಬಿಡ್ತೇವಿ ನೋಡು, ಮೈ ಮರಿಬ್ಯಾಡ. +ಕೆಂಚ : (ಮತ್ತು ಏರುತ್ತಿದೆ) ನಿಮ್ಮಪ್ಪಂದೇನ್ಲಾ ಹಟ್ಟೀ, ನಿನ್ನಜ್ಜಂದ? (ಅವರು ಸ್ವಲ್ಪ ಅಂಜಿದ್ದು ಕಂಡು ಹೆಚ್ಚು ಧೈರ್ಯದಿಂದ) ಕೇಳ್ರೋ ಕಕವ ನನಮಕ್ಕಳಾ, ಬಸಣ್ಣ ಜ್ವಾಳಾನ ಮುತ್ತು ಮಾಡಿದ್ದು ಸುಳ್ಳಂತೆ! ಮಳೆ ಬರಸಿದ್ದು ಸುಳ್ಳಂತೆ! ಸತ್ತ ಎತ್ತಿಗೆ ಜೀವ ಬರಸಿದ್ದು ಸುಳ್ಳಂತೆ! ಎಲ್ಲ ಸುಳ್ಳಂತೆ! ಬರೇ ಸುಳ್ಳಂತೆ! +ವ್ಯಕ್ತಿಗಳು: ನಿಂಗ್ಯಾರಲಾ ಹೇಳಿದ್ರು? +ಬಸಣ್ಣ ನಿಂಗೆ ವಲ್ಲದಿದ್ರೆ ಬ್ಯಾಡ- ಮುಚ್ಚಿಕಂಡಿರು! +ನಿಂಗಿವತ್ತು ಗಾಚಾರ ಕಾಡೇತಿ. +ಹಡಾಣಿ ನನಮಗನೆ, ನಿನ್ನ ಚರಗ ಚಲ್ತೇವಿ ನೋಡು! +ಲೇ ಬೆಪ್ಪ, ಮುಚ್ಚೋ- +ಕೆಂಚ : (ಕುಡಿಯುತ್ತಾ ಮತ್ತನಾಗಿ) ಬಸಣ್ಣ ಬರ್ಲಿ, ಕಸಣ್ಣ ಬರ್ಲಿ, ಮೂಡೋ ಹೊತ್ತು ಮೂಡೇ ಮೂಡ್ತತಿ, ರಾಗಿ ಬೀಸೋ ಕೈ ಬೀಸ್ತಾನೇ ಇರತತಿ; ತಪ್ಪಾಕಿಲ್ಲ ಗಿಣಿರಾಯ, ತಪ್ಪಾಕಿಲ್ಲ! ಕಲ್ಲೂ ನೀರೂ ಕರಗೋ ಸರಿಹೊತ್ತಿನಾಗೆ ಹೆಂಗಸಿನ ತಾವ ಅಡ್ಡಾಗಿ ಬಾಯ್‌ಬಾಯಿ ಬಿಡೋದು ತಪ್ಪಾಕಿಲ್ಲ; ಬನದಾಗೆ ಹುಲಿ ವದರೋದು ತಪ್ಪಾಕಿಲ್ಲ; ಕಡವ ಬಂದು ಬಣವೇನ ಗುಮ್ಮೋದು ತಪ್ಪಾಕಿಲ್ಲ; ನಾನು ನೀನು ಚಮಡ ಸುಲಿಯೋದು ತಪ್ಪಾಕಿಲ್ಲ; ಹೇಳ್ರಪಾ! ಹಂದಿ ಬಂತು, ಗದ್ದೆ ಹೊಗತು ಅಂತ ಇಟ್ಕೋ- ಏನಪ್ಪಾ ಮಾಡ್ತಿ ಆವಾಗ? ಬಂದು ಗಢರ್ ಅಂದ್ರೆ ಏನು ಮಾಡ್ತಿ ಅಂತೇನಿ? +(ಇಷ್ಟರಲ್ಲಿ ಜನ ಗದ್ದಲ ಮಾಡುವರು. ಗೊಣಗುವರು. ರೇಗುವರು) +‘ಎಲಾ ಹಂದ್ಯಪ್ಪ, ಬಸವಣ್ಣ ಕೊಲಬ್ಯಾಡ ಅಂದಾರೆ, ಅಂತೀಯ’? ‘ನನ್ನ ಬೇಕಾದ್ರೆ ಕೊಲ್ಲು’ ಅಂತೀಯಾ? ಹೇಳ್ರಲೇ- +ವ್ಯಕ್ತಿ ೪ : ಹುಚ್ಚಿಡದ ಹಂದಿ ಹಂಗೆ ವದರತಾನಲೇ- +ಕೆಂಚ : ಯಾಕೋ ವದರಬ್ಯಾಡದು? ನೀನು ಮಾತ್ರ ವದರಬಕ? +ವ್ಯಕ್ತಿ ೫ : ತಕೋಳೋ ಮಗನೇ ಖರ್ಚಿಗೆ! (ಹೊಡೆಯುವನು) +ಕೆಂಚ : (ಹೆದರಿದ್ದರೂ ಮೊಂಡುತನದಿಂದ) ಬಸಣ್ಣಗೆ ಇಬ್ಬರು ಹೆಂಡ್ರಲ್ಲವಾ? ಅವರನ್ನೇನು ಪೂಜೆ ಮಾಡ್ತಾನಾ? +(ಕೆಂಚನನ್ನು ‘ಮುಚ್ಚು’‘ಬೋಸುಡಿಕೆ’‘ಹೊಲೆಯ’ ಇತ್ಯಾದಿಯಾಗಿ ಬೈಯುತ್ತ ಎಳೆದಾಡುವರು. ಆದರೂ ಆತ ಮಾತಾಡುತ್ತ ಹೆದರುತ್ತ ಇರುವನು) +ಹೊಡಕಳ್ರೋ- ನನ್ನ ಮೈಯಾಗಿನ ಹೆಂಡ ಕಾಪಾಡ್ತತಿ, ನನ್ನ! ನನ್ನವ್ವ ಕಾಪಾಡ್ತಾಳೆ ನನ್ನ! ಹೊಡದು ಹೊಡದು ಹಾಳಾಗ್ರಿ ನನ್ನ ಮಕ್ಕಳಾ! ಬ್ರಾಂಬ್ರ ಹುಡುಗ್ಯಾರ ಮ್ಯಾಲೆ ಕಣ್ಣು ನನ್ನ ಮಕ್ಕಳಿಗೆ! ಬ್ರಾಂಬ್ರು ಯಾಕ್ರಪ್ಪ ಬಂದಾರು ಹಟ್ಟಿಗೆ! ಯಾಕಪ್ಪ ಬಂದಾರು! ಹೋಡೀಬ್ಯಾಡ್ರೋ! ಹೋಡೀಬ್ಯಾಡ್ರೋ! ಯಾರನ್ನಾರಾ ಮದುವ್ಯಾಗ್ರೋ, ಹೋಡೀಬ್ಯಾಡ್ರೋ. +(ಇತ್ಯಾದಿಯಾಗಿ ಚೀರಾಡುತ್ತ ರಂಗದ ಮೇಲೆ ವೃತ್ತ ತಿರುಗಿ ಓಡುವನು. ಕೆಂಚನ ಕೈಯಿನ ಹೆಂಡದ ಬುರುಡೆ ಬಿದ್ದಿರುವುದು. ಕೆಂಚನನ್ನು ಅಟ್ಟುವ ಅವಸರದಲ್ಲಿದ್ದಾಗ ‘ವ್ಯಕ್ತಿ ೫’ ಮಾತ್ರ ಹಿಂದಕ್ಕುಳಿದು ಅದನ್ನೆತ್ತಿಕೊಂಡು ಅದರ ಹನಿ ಬಸಿದುಕೊಳ್ಳುತ್ತಿದ್ದಾಗ- ಜನ ಇತ್ತ ಗಮನ ಹರಿಸಿರುವರು-) +ವ್ಯಕ್ತಿಗಳು- ಇಲಾ ಇವನ-ಇವನೂ ಕೆಂಚನಂಗಾದನಲೇ- +ನಾಯಿ ನನಮಗನೆ- +(ಇತ್ಯಾದಿ ಬೈಯುತ್ತಾ ಬೆನ್ನಟ್ಟುವರು. ಕತ್ತಲು) +ಎರಡನೆಯ ದೃಶ್ಯ +(ನದಿಯ ದಂಡೆ- ಹಿಂದಿನ ದೃಶ್ಯದ ಗುಡಿಸಲು, ನೆರಕೆ ತೆಗೆದು ಒಂದೆರಡು ಮರ, ಗಿಡ ತೋರಿದರೆ ಸಾಕು. ಮೊದಲು ಮೂರು ಜನ ಹುಡುಗಿಯರು ಕೊಡಗಳೊಂದಿಗೆ ಪ್ರವೇಶಿಸುವರು. ಸುಸಂಸ್ಕೃತ ಬ್ರಾಹ್ಮಣರ ಉಡುಪು ಧರಿಸಿದ ಚೆಲುವೆಯರು. ಅವರು ಮಾತನಾಡುತ್ತಾ ಬರುತ್ತಿರುವಾಗ ಎದುರಿಂದ ಉಜ್ಜ ಪ್ರವೇಶಿಸುವುದನ್ನು ಅವರು ಗಮನಿಸುವುದಿಲ್ಲ. ನಕ್ಕು, ಅವರ ಗಮನ ಸೆಳೆಯದೆ, ರಂಗದ ಹಿಂಭಾಗದ ಮರದ ಪಕ್ಕದಲ್ಲಿ ಕೂತು ಕಾಣಿಸುವನು. ಹುಡುಗಿಯರು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರೂ ಹಿಂದೆ ಬರುತ್ತಿರುವ ಉಷಾಳನ್ನು ಚುಡಾಯಿಸುತ್ತಿದ್ದಾರೆ; ಹಿಂದೆ ತಿರುತಿರುಗಿ ನೋಡುತ್ತ ನಗುತ್ತ ಮಾತಾಡುತ್ತಾರೆ) +ಉಮಾ : (ಹರಟೆಯಲ್ಲಿ ಈಕೆ) ಯಾಕೆ ರಮಾ ಹೀಗೆ ಆಮೆ ಹಾಗೆ ಬರ್ತಿದ್ದೀ. ಬೇಗಬೇಗ ಬಾರೇ. +ರಮಾ : ಸುತ್ತ ನೋಡ್ತಾ ಬರ್ತಿದ್ದೀನಮ್ಮ. +ಸುಮಾ : ಯಾಕಮ್ಮ ಸುತ್ತ ನೋಡ್ತಿದ್ದೀ? +ರಮಾ : ಹದ್ದಿಗೆ ವಯಸ್ಸಾದ ಹಾಗೆ ಆಗಿದೆ- ಅಷ್ಟೂ ತಿಳಿಯಲ್ಲವೇನೇ ನಿನಗೆ? +(ನಗುವರು) +ಉಮಾ : ಇವತ್ತು ಬರಲಿಕ್ಕಿಲ್ಲ ಕಣೇ. ಬೇಗ ಬೇಗ ಕಾಲು ಹಾಕೇ. +ರಮಾ : ಬರೋದು ಬಿಡೋದು ನನಗಲ್ಲವಾ ಗೊತ್ತಿರಬೇಕಾದ್ದು? ತೆಪ್ಪಗಿರು. +ಸುಮಾ : ಹಾಗಾದ್ರೆ ಬರ್ತಾನೆ, ಅಲ್ಲವಾ? +ರಮಾ : ಬರ್ತಾನೆ? ಯಾರೇ ಅವನು? +ಸುಮಾ : ಮೀಸೆ ಬಿಟ್ಟುಕೊಂಡು, ಗಿರಿಕಿ ಚಡಾವು ಹಾಕ್ಕೊಂಡು- +ಉಮಾ : ಕಿವಿಯಲ್ಲಿ ಹತ್ತೊಂಟಿ ಇಟ್ಟುಕೊಂಡು- +ಸುಮಾ : ಕೈಯಲ್ಲಿ ಉಂಗುರ ಹಾಕ್ಕೊಂಡು- +(ನಗುವರು. ಅವರು ನಾಲ್ಕು ಹೆಜ್ಜೆ ಹೋದಾಗ ಹಿಂದೆ ನಿಧಾನಕ್ಕೆ ಉಷಾ ಪ್ರವೇಶ. ಅವರು ಆಕೆಯತ್ತ ನೋಡುತ್ತ ಅವಳಿಗೆ ಕೇಳಿಸುವಂತೆ ಮಾತಾಡುತ್ತಲೇ ಇರುವರು) +ಉಮಾ : ನನಗೇನೋ ಇದು ಸರಿಹೋಗಲ್ಲಮ್ಮ. +ರಮಾ : ಯಾಕಮ್ಮ ಸರಿಹೋಗಲ್ಲ? ನಾನು ಪಂಡಿತರ ಮಗಳಲ್ಲವ? +ಉಮಾ : ಅದಲ್ಲ, ಹಳ್ಳಿ ಮುಕ್ಕನಿಗಾಗಿ ನೀನು ಪರದಾಡೋದು. +ರಮಾ : ಕಗ್ಗಲ್ಲು, ಕಗ್ಗಲ್ಲು ಕಣೇ ಅವನು. +ಸುಮಾ : ಶ್ಶೀ! ಗಂಜಳದ ವಾಸನೆ! +ಉಮಾ : ಯಾಕ್ಲಾ, ಬಾರ್ಲಾ, ಹೋಗ್ಲಾ -ಅನ್ನೋ ಭಾಷೆ. +ಸುಮಾ : ಗಬ್ಬು ಬೆವರ ವಾಸನೆ. +ಉಮಾ : ಕೆಸರಲ್ಲಿ ಮುಳುಗಿ ಗೊಜಮೊಟ್ಟೆ ಹಿಡೀತಾನೆ! +ಸುಮಾ : ಎಲೆಯಡಿಕೆ ಹಾಕ್ಕೊಂಡು ಪಿಚಕ್ಕಂತ ಉಗೀತಾನೆ. +ಉಷಾ : ಉಮಾ! ನನ್ನ ತಂಟೆಗೆ ಬರಬೇಡ! +(ನಿಂತು ಕೇಳುತ್ತಿದ್ದವಳು. ಎತ್ತರದ ಧ್ವನಿಯಲ್ಲಿ) +ಉಮಾ : (ಗೆಳತೀಯರಿಗೆ) +ತಂಟೆ ಪಂಟೆ, +ಕಾರೆ ಕಂಟೆ, +ಕೂತುಕೊಂಡು +ತಿಂದೂ ಉಂಡು +ರಮಾ : ಹ್ಯಾಗಿತ್ತವ್ವ? +ಸುಮಾ : ಹೇಳು ಹ್ಯಾಗಿತ್ತವ್ವ? +(ನಗುವರು) +ರಮಾ : ನಂಗ್ಯಾಕೋ ಕಾಲುನೋವು ಕಣೆ. +(ಎಂದು ನಟಿಸುತ್ತಾ ಕೂರುವಳು. ಉಷಾ ಮುನಿಸಿನಿಂದ ನಿಂತಿರುವಳು. ಮುಂದಿನ ಅವರ ಮಾತಿನ ಸಮಯದಲ್ಲಿ ‘ರುದ್ರ’ ಅನ್ನುವವರೆಗೆ ಅವಳ ಗಮನ ಬೇರೆ ಕಡೆಗೆ) +ಉಮಾ : ಹೌದೇನೆ? ಕೂತುಬಿಟ್ಟೆಯಾ? ಅಯ್ಯೋ ಪಾಪ, ನಾವೀಗ ಹೊರಟು ಹೋದ್ರೆ ಏನವ್ವ ನಿನ್ನ ಗತಿ? +ಸುಮಾ : ಹುಲಿ ಬರುತ್ತೆ ಕಣೇ ಹುಲಿ! +ರಮಾ : ಬಾಯಿಗೆ ಬಂದದ್ದು ಬೊಗಳಬ್ಯಾಡ. ಎಂಥ ಹುಲಿಯೇ? +ಉಷಾ : (ಮುನಿಸಿನಿಂದ) ನಿನ್ನ ತಲೇಲಿದೆ ಹುಲಿ! +ರಮಾ : (ಗಮನಿಸದೆ, ಸುಮಾಗೆ) ಅದರ ಹೆಸರೇನೇ? +ಸುಮಾ : ರುದ್ರ ಅಂತ, (ಉಮಾಗೆ) ಅಲ್ಲವೇನೆ? +(ನಗುವರು) +ಉಮಾ : ಅದರ ಹೆಸರು ರುದ್ರ ಅಂತ. +ಉಷಾ : (ಉಮಾ ಕಡೆಗೆ ಹೆಜ್ಜೆ ಹಾಕಿ) ತೆಪ್ಪಗೆ ಬಾಯಿ ಮುಚ್ಚಿರ್ತೀಯಾ- +ಉಮಾ : (ದೂರ ಹೋಗುತ್ತಾ) ರುದ್ರ ಅಂತ… ಹುಲಿ ಇತ್ತಂತೆ. ತುಂಬಾ ತಮಾಷೆ ಹುಲಿ ಗೊತ್ತ? ಮೆಲ್ಲ ಮೆಲ್ಲಗೆ, ಕಳ್ಳನ ಹಾಗೆ ನಡೀತಿತ್ತಂತೆ. ಇದ್ದಕ್ಕಿದ್ದಂತೆ ಛಂಗನೆ ನೆಗೀತಿತ್ತಂತೆ (ಉಷಾ ಹೆಜ್ಜೆ ಇಡುವಳು. ಉಮಾ ದೂರ ಸರಿಯುವಳು) ಗುರ್ ಗುರ್ ಅಂತ ಸದ್ದು ಮಾಡ್ತಾ ಹೀ…ಗೆ… ಬಂತಂತೆ (ರಮಾ ತೋರಿಸಿ ಸುಮಾಗೆ) ಈಕೇನ್ನ ನೋಡ್ತಾ ಹೀ…ಗೆ ನಾಲಗೇನ ತುಟಿಗೆ ಸವರಿ ‘ಹ್ಯಾಂಗಿದ್ದೀಯಾ?’ ಅಂತಂತೆ. ಅದಕ್ಕವಳು. ‘ಹೀಗೆ ಇದ್ದೀನಿ ಹುಲಿರಾಯ. ಸಾಯ್ಲಿಲ್ಲ. ಬದುಕ್ಲಿಲ್ಲ’ ಅಂತಾಳಂತೆ. +ಸುಮಾ : ಆಗ? ಆಮೇಲೆ? ಹುಲಿರಾಯ ಏನಂದ? +ಉಮಾ : ಯಾಕೇ ಹುಡುಗಿ ಹಿಂಗೆ ಬ್ಯಾಸರಾಪಡ್ತಿ -ಹೊಳೆ ಹಾರಲಾ ನಿಂಗಾಗಿ? ಬೆಟ್ಟ ದಾಟಲಾ ನಿಂಗಾಗಿ? ಶಿವನ ನೆತ್ತಿಯ ಚಂದ್ರ ಬೇಕಾ? ಲಕ್ಷ್ಮೀಯ ಕತ್ತಿನ ಮುತ್ತು ಬೇಕಾ?-ಅಂತಂತೆ. +ಉಷಾ : (ಕೋಪದಿಂದ ಹೆಜ್ಜೆ ಹಾಕಿ) ಉಮಾ! ಉಮಾ! +ರಮಾ : (ಎದ್ದು) ಯಾವಾಗ ಬಂದೆಯೆ? +ಉಷಾ : ನಿಮ್ಮ ಕತೆ ಕೇಳಿ ಕೇಳಿ ಹುಚ್ಚು ಹಿಡಿಯುತ್ತೆ- +(ರಮಾ, ಸುಮಾ, ಉಮಾ ದೂರ ದೂರಕ್ಕೆ ಹೋಗಿ ಉಷಾಳಿಗೇ ಹಾಡುವರು) +ಉಮಾ : ಹುಚ್ಚಲ್ಲವ್ವ, ನಮಗೆ ಹುಚ್ಚಲ್ಲವ್ವ, +ರಮಾ : ನಿನಗಂತು ಹುಚ್ಚಲ್ಲ, ಹುಚ್ಚಲ್ಲವ್ವ +ಸುಮಾ : ಮಾತಾಡೋ ಹುಲಿರಾಯ ಗೊತ್ತೇನವ್ವ, +ಉಮಾ : ನಿಮಗೆ-ಹಾಡುವ ಹುಲಿರಾಯ ಗೊತ್ತೇನವ್ವ? +ರಮಾ : ಭರಣೀಯ ಮಳೆಯಲ್ಲಿ +ಧರಣೀಯ ಉಳುವಂಥ- +ಸುಮಾ : ಮಾತಾಡೋ ಹುಲಿರಾಯ ಗೊತ್ತೇನವ್ವ, +ಉಮಾ : ನಿಮಗೆ- ಹಾಡೂವ ಹುಲಿರಾಯ ಗೊತ್ತೇನವ್ವ? +ರಮಾ : ಹೊಲೆಬೆವರ ಘಮಘಮಾ +ತಮಟೆಯ ಢಮಢಮಾ +ಸುಮಾ : ಹಟ್ಟೀಯ ಹುಲಿರಾಯ +ಉಮಾ : ಮಟ್ಟೀಯ ಹುಲಿರಾಯ +ರಮಾ : ಮಾತಾಡೋ ಹುಲಿರಾಯ ಗೊತ್ತೇನವ್ವಾ +ಸುಮಾ, ಉಮಾ : ನಿಮಗೆ-ಹಾಡೂವ ಹುಲಿರಾಯ ಗೊತ್ತೇನವ್ವ? +(ಈ ಹಾಡು ಕೇಳಿ ಸಿಟ್ಟಿನಿಂದ ಉಷಾ ಉಮಾ ಹತ್ತಿರ ಬಂದು) +ಉಷಾ : ಏನದು ನೀನು ಹೇಳ್ತಿರೋದು. +ಉಮಾ : (ಮುಂಚಿನಂತೆಯೇ) ಎಲ್ಲರಿಗೂ ಗೊತ್ತಿರೋದು. +ಉಷಾ : ನಿನ್ನ ಕಣ್ಣು ಕಿತ್ತುಬಿಡ್ತೇನೆ. +ಉಮಾ : ಕಣ್ಣು ಕಿತ್ತರೆ ಏನು ಬರುತ್ತೆ. ಬೇಕಾದರೆ ಸುಳ್ಳು ಹೇಳ್ತೇನೆ. ಹೇಳ್ಲಾ? ಅವನ ಕಂಡ್ರೆ ಒಂಚೂರು ಇಷ್ಟ ಇಲ್ಲಮ್ಮ ಉಷಾಗೆ- +ಉಷಾ : ನಾಚಿಕೆಗೆಟ್ಟು ಮಾತಾಡಬೇಡ. +ಉಮಾ : (ನಾಚಿಕೆ ಸಂಪೂರ್ಣ ಬಿಟ್ಟು) ಹ್ಯಾಗೆ ಕೋಪ ಬರುತ್ತೆ! ಈ ಒಳಗೊಂದು ಹೊರಗೊಂದು ಎಷ್ಟು ದಿನ ನಡಿದೀತು! ಕೊನೆಗೊಂದು ದಿನ ಎಲ್ಲವನ್ನೂ ಒಪ್ಪಿಕೊಂಡು ತೆಪ್ಪಗೆ ಬದುಕಬೇಕಾಗುತ್ತೆ. ನನಗ್ಗೊತ್ತಿಲ್ಲವಾ- +ಉಷಾ : ಏನೇ, ಏನೇ ನಿನಗ್ಗೊತ್ತಿರೋದು? +ರಮಾ : ಜಗಳ ಕಾಯಬೇಡ್ರೇ- +ಉಮಾ : (ಲೆಕ್ಕಿಸದೆ) ನಿನ್ನ ತಂದೆ ಬೇಡ. ನಿನ್ನ ತಾಯಿ ಬೇಡ! ಅಪ್ಪನ ಜುಟ್ಟು, ಅಮ್ಮನ ಮಡಿ ಕಂಡ್ರೆ ಫಕಫಕ ನಗೆ ಬರುತ್ತೆ ನಿಂಗೆ! ರುದ್ರ, ರುದ್ರ, ಹಗಲೂ ರಾತ್ರಿ ರುದ್ರ! ರುದ್ರ, ಕೊಟ್ಟಿಗೆ ಹ್ಯಾಗಿರುತ್ತೆ, ಹಬ್ಬ ಹ್ಯಾಗಿರುತ್ತೆ, ಹಸು ಹ್ಯಾಗಿರುತ್ತೆ, ಬೆವರು ಹ್ಯಾಗಿರುತ್ತೆ- ಗಂಗಾಳ, ಗಂಜಳ, ಹುಲ್ಲು; ಮೂರ್ಹೊತ್ತೂ ಅದೇ- +ಉಷಾ : (ಮತ್ತಷ್ಟು ಸಿಟ್ಟಿನಿಂದ) ದರಿದ್ರವೇ, +(ಎಂದು ಛಂಗನೆ ಹಾರಿ ಉಮಾ ಜಡೆ ಹಿಡಿದುಕೊಂಡು ಎಳೆದು ಎರಡು ಏಟು ಕೊಡುವಳು. ಹಿಂದುಗಡೆ ಉಜ್ಜ ಮುಂದೆ ಬರಲು ಯೋಚಿಸಿ ಹಿಂಜರಿಯುವನು. ಇನ್ನಿಬ್ಬರು ಹುಡುಗಿಯರು ಬಿಡಿಸಿಕೊಳ್ಳಲು ಹೋದರೂ ಬಿಡದೆ ಕಿತ್ತಾಡುತ್ತಿರುವರು. ಒಬ್ಬಳ ಕುಪ್ಪಸ ಹರಿದಿದೆ; ಇನ್ನೊಬ್ಬಳ ಸೆರಗು ನೆಲಕ್ಕೆ ಬಿದ್ದಿದೆ. ಅವರ ಸದ್ದು ಕೇಳಿ ಬಂದವನಂತೆ ರುದ್ರ ಬಂದು ನಿಂತು ನೋಡುತ್ತಿದ್ದಾನೆ. ಅವರ ಜಗಳ ನಿರ್ದೇಶಿಸುತ್ತಿದ್ದಾನೆ) +ರುದ್ರ : ಹಂಗಲ್ಲ, ಹಂಗಲ್ಲ, ಎಡಗೈ ಇತ್ಲಾ ಕಡೆ ಹಾಕು- ಛೇ, ಹಂಗಲ್ಲ- +(ಉಷಾ ಹೊರತು ಮಿಕ್ಕವರು ಕೊಡ ಎತ್ತಿಕೊಂಡು ಓಡುವರು. ಉಷಾ ಮುನಿಸಿನಿಂದ ಸೀರೆ ಕೊಡವಿಕೊಂಡು) +ಉಷಾ : ನಿನ್ನನ್ನೇನು ಕರೆಸಲಿಲ್ಲ ಇಲ್ಲಿಗೆ. +ರುದ್ರ : ನೀನು ಕರೆದೆ ಅಂತ ನಾನು ಹೇಳ್ಳಿಲ್ಲ. ಅಲ್ಲಿ, ಅತ್ಲಾಕಡೆ ಹುಲ್ಲು ಹತ್ತೇತಿ- ಕೊಡವಲಾ? +ಉಷಾ : ಕೊಡುವುತೀಯಾ? ಹ್ಞೂ? +ರುದ್ರ : (ಕೈ ನೋಡಿಕೊಂಡು) ಕೈ ಚೊಕ್ಕ ಇಲ್ಲ- +(ಅವನ ಹಿಂಜರಿಕೆಗೆ ಉಷಾ ಗಟ್ಟಿಯಾಗಿ ನಗುವಳು) +ರುದ್ರ : (ಅವಮಾನಿತನಾಗಿ) ಉಸಾ… ನಾಳ್ಳಲ್ಲ ನಾಳಿದ್ದು… ಸಂಕ್ರಾಂತಿ…. +ಉಷಾ : (ಇನ್ನೂ ನಕ್ಕು) ಏನದು ಉಸಾ… ಉಸ್-ಉಸ್…. ಉಸಾ….. +ರುದ್ರ : (ಅವಮಾನದಿಂದಲೇ) ನಿನ್ನ ಹೆಸರು -ಉಸಾ. +ಉಷಾ : (ನಗೆ ತಡೆದುಕೊಂಡು) ನನ್ನ ತಂದೆ ಹೇಳ್ತಿದ್ದರು- ಶೂದ್ರ ಮುಂಡೇವಕ್ಕೆ ಮಾತು ಬರಲ್ಲ ಅಂತ. +ರುದ್ರ : ಈಗ ಮಗಳೂ ಅದನ್ನೇ ಹೇಳ್ತಿದಿ. +ಉಷಾ : ಅಪ್ಪ ಹೇಳಿದ್ದು ಸರಿ. ಆದರೆ ಮಾತು ಬೇಕೇ ಬೇಕು ಅಂತ ನನಗೆ ಅನ್ನಿಸೋಲ್ಲ, ಕೋಪ ಬೇಡ. +ರುದ್ರ : ನಾಳಿದ್ದು ಸಂಕ್ರಾಂತಿ… ದೊ…ಡ್ಡ ಹಬ್ಬ. +ಉಷಾ : (ಅದನ್ನೇ ಹೇಳುತ್ತ, ಅಣಕಿಸಿ) ನಾಳಿದ್ದು ಸಂಕ್ರಾಂತಿ, ದೊ…ಡ್ಡ ಹಬ್ಬ. ಅದಕ್ಕೆ ನಾನೇನು ಮಾಡಬೇಕು? +ರುದ್ರ : ಹಿಂಡ್ ಹಿಂಡು ಜನ ಸೇರ್ತಾರೆ. ನಮ್ಮೂರು ಕುರಿ ರೊಪ್ಪದಂಗಿರ್ತತಿ. ಜನ ಪರಮಾಣ ಮಾಡ್ತಾರೆ; ಕೆಟ್ಟ ಚಾಳೀನೆಲ್ಲ ಬಿಡ್ತಾರೆ; ಭಜನೆ ಮಾಡ್ತಾರೆ. ಆಚೆ ನಾಳಿದ್ದಿನಿಂದ ಒಳ್ಳೆರಾಗ್ತಾರೆ! ಬಸವಣ್ಣ ಬರ್ತಾರೆ- ಉಸಾ…. +ಉಷಾ : ನನ್ನ ಹೆಸರು ಉಷಾ. +(ಇಲ್ಲಿಂದ ಅವರು ದೈಹಿಕವಾಗಿ ಪ್ರೇಮಿಸುವ ತನಕ ಉಷಾ ರುದ್ರನನ್ನು ಅಣಕಿಸುವ ಮೂಲಕ, ಹೀಯಾಳಿಸುವ ಮೂಲಕ, ಅವನ ಕತೆಗಳಲ್ಲಿ ಕುತೂಹಲ ತೋರುವ ಮೂಲಕ ಅವಳಿಗೆ ಇಷ್ಟವಾದ ರುದ್ರನ ಮೂಲಭೂತ ಗುಣ ಹೊರಗೆಳೆಯಲು ಯತ್ನಿಸುತ್ತಾಳೆ. ಅವನ ಸನಾತನ ಹಿನ್ನೆಲೆಯನ್ನು ಕೆಂಪು ಕಂಬಳಿಯಾಗಿ ಬಳಸುತ್ತಾಳೆ; ತನ್ನ ಪ್ರಯತ್ನದಲ್ಲಿ ಯಶಸ್ಸು ದೊರೆತಾಗ ಸಂತೋಷಿಸುತ್ತಾಳೆ. ಆದರೆ ಅದು ಕ್ಷಣಿಕವೆಂಬುದು ರುದ್ರ ಬಸವಣ್ಣನವರ ಪ್ರಭಾವದಲ್ಲಿ ಬೆಳೆಯುವುದರಲ್ಲಿ ಗೊತ್ತಾಗುತ್ತದೆ) +ರುದ್ರ : (ಹೇಳಲು ಪ್ರಯತ್ನಿಸುತ್ತಾ) ಉಷಾ…. +ಉಷಾ : ಉ…ಷಾ. +ರುದ್ರ : ಉ….ಷಾ ಈ ಹಿರ್ದಾತಾ? +(ನಗುವರು) +ಉಷಾ : ಹಿದ್? ಹಿರ್ದ್? ಹಿರ್ದಾತು! (ನಗುವಳು) ಹಂದಿ ಕೂಗಿದಂಗೆ ಕೂಗ್ತಿ- +ರುದ್ರ : ಕೂಗಿದಂಗಿಲ್ಲ- ವದರಿದಂಗೆ +(ನಗುವರು) +(ಗಂಭೀರವಾಗಿ) ನೀ ಬರಾಕೇಬೇಕು ಬಿಡು. ನಮ್ಮೂರ ಮಂದಿ ನೋಡಬೇಕು; ಕೊಳಕು ಮಂದೀನ, ಹುಳುಕು ಮಂದೀನ ನೋಡೇ ತೀರಬೇಕು. +ಉಷಾ : ಬಂದೇನಪ್ಪ ನಾ ಮಾಡೋದು ? ಹುಲಿ ಇದಾವ ಅಲ್ಲಿ? +ರುದ್ರ : ಹ್ಞೂ, ಮನಾಮನಿ! ಎಷ್ಟು ಬೇಕು ನಿಂಗೆ? +ಉಷಾ : ಒಂದು ಸಾಕು! ಕರಡಿ? +ರುದ್ರ : (ಅವಳ ಆಸಕ್ತಿಗೆ ಅನುಸಾರ) ಅದಾವೆ ಮರಾಯತಿ, ಆದಾವೆ. ಎಷ್ಟು ಕಲ್ಡಿ ಬೇಕು ನಿಂಗೆ? ನಾಕ? ಹತ್ತ? ಸಾವರವ? ನೀನು ಕಲ್ಡಿ ಹಿಡಕಂಡು ಆಡಿ ಆಡಿ ಸುಸ್ತಾಗಿ ಉಪ್ಪಿನಕಾಯಿ ಹಾಕೊಂಡು ತಿನ್ನಬೈದು. ಆನೆ ಅದಾವೆ: ಹಂದಿ, ಕಿರುಬ, ಸಾರಗ: ನಮ್ಮ ಹಿತ್ತಲದಾಗೇ ಕಚ್ ಬುಸ್ ಕಚ್ ಬುಸ್ ಅಂತ ಕಿತ್ತಾಡ್ತವೆ. ಗದ್ದೈತಿ, ಹೊಲೈತಿ, ಹೆಂಡೈತಿ, ಕೆರೆ ತುಂಬ ನೀರೈತಿ; ಮೊಸಳೆ, ಮೀನು ಅದರ ತುಂಬ ತುಂಬಿದಾವೆ- ಆತ? ಸಾಕಾದೀತ? (ಕುತೂಹಲ ಕೆರಳಿಸುತ್ತ) ಮತ್ತೊಂದು ಜಾನುವಾರೈತಿ ಉಸೀ, ಮೂರು ಹೊತ್ತು ಕಣ್ ಕೆಂಪಗೆ ಮಾಡ್ಕಂಡು ಹಾಡ್ತತಿ, ಗೊತ್ತ? ಹಾಡ್ತತಿ. ಹಾಡಬ್ಯಾಡ ಅಂದ್ರೆ ಕುಣೀತೈತಿ, ಚೌಡವ್ವ ಮಾರವ್ವನ ತಾವ ಹೋಗಿ ಅಡ್ಡ ಬಿದ್ದು ಪೂಜೆ ಮಾಡಿ ಹಾರಾಡ್ತತಿ. ‘ಕುಣಿಬ್ಯಾಡ ಹಾಡಬ್ಯಾಡ’ ಅಂದ್ರ ಮರ ಹತ್ತಿ ಕೂತು ಚಂದ್ರ ಚುಕ್ಕಿಪಕ್ಕಿ ಎಲ್ಲ ಲೆಕ್ಕ ಹಾಕ್ತತಿ- +ಉಷಾ : ಏನದು? ಯಾವ ಪ್ರಾಣಿ? +ರುದ್ರ : ನನ್ನ ಕಂಡ್ರ ಭಾಳ ಆಸೆ ಅದಕ್ಕೆ. ಹೊಲೇರ ಹೊಟ್ಯಾಗ, ಎಂಥ ಹುಡುಗ ಹುಟ್ಟಿದಾನಲ್ಲ ಅಂತ ಎಗರಾಡ್ತತಿ. ಅದಕ್ಕೆ ನಾ ಕುಡದ್ರ ಚಂದ, ಕುಡೀದಿದ್ರ ಚಂದ, ನಿಂತ್ರ ಚಂದ, ಕೂತ್ರ ಚಂದ. +ಉಷಾ : (ಕುತೂಹಲ ತಡೆಯಲಾರದೆ) ಏನದು? ಯಾವದಪ್ಪ ಹೇಳು- +ರುದ್ರ : ನನ್ನ ಅಪ್ಪ! ನನ್ನ ಹೆತ್ತ ಅಪ್ಪ! +(ನಗುವರು. ಹಿಂದುಗಡೆ ಉಜ್ಜ ಸಿಟ್ಟಿನಿಂದ ಎಂಬಂತೆ ಕೈ ತೋರುತ್ತ ಬರುವನು; ಮನಸು ಬದಲಿಸಿ ಮರೆಯಾಗಿ ಹೋಗುವನು) +ಅದು ಹ್ಯಂಗೆ ಅಂವ ಮನಸ್ಯಾಗಿ ಹುಟ್ಟಿದನೋ ಅಂತ… ಬಸವಣ್ಣ ಬಂದ್ರು, “ಉಜ್ಜಪ್ಪ ಶರಣಾಗು” ಅಂದ್ರು. ಹಿಂದೆ ಮುಂದೆ ನೋಡಿದೆ ಆಗಿಬಿಟ್ಟನಲ್ಲ! ಇಬೂತಿ ಹಚ್ಚಿಕೊಂಡು ಓಡಾಡಿದ್ದೇನು, ರುದ್ರಾಕ್ಷಿ ಸರ ಅಂಗಿ ಮ್ಯಾಲೆ ಹಾಕ್ಕಂಡಿದ್ದೇನು, ಗಿಡದಾಗಿನ ಹೂನೆಲ್ಲ ತಂದು ಪೂಜೆ ಮಾಡಿದ್ದೇನು. +(ಅಷ್ಟರಲ್ಲಿ ಉಷಾ ಕಲ್ಲಿನ ಮೇಲೆ ಕೂತು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿರುವಳು. ಉಜ್ಜ ನೆಲದ ಮೇಲೆ ಕೂತಿದ್ದಾನೆ) +ಅಪ್ಪನ ಇಬೂತ್ಯಾಗೆ ಅವನು ಗೊತ್ತೇ ಸಿಕ್ತಿರಲಿಲ್ಲ! ಹ್ಯಂಗಪ್ಪ ಇಂವ ಹಿಂಗಾದ ಅಂತ ಅವತ್ತೇ ಸಂಜೆ ನೋಡ್ತೀನಿ- ಮುಡಿಕೆ ಮನೆ ಪಾರೀ ತಾವ ಹಾಡ್ತಿದಾನೆ, ಕುಣೀತ ಕುಡೀತಿದಾನೆ! ಪಾರಿ ಹಿಡ್‌ಕಂಡ್ ತಿರುಗಿಸ್ತಿದಾನೆ! ಆಕೆ ಕಬ್ಬಿನ ಗಾಣಕ್ಕೆ ಸಿಕ್ಕಂಗೆ ಬರ್ರೋ ಅಂತ ಚೀರ್ತಿದಾಳೆ! +ಉಷಾ : ಪಾರಿ ಯಾರು? +ರುದ್ರ : ಪಾತರಗಿತ್ತಿ ಹಡಾಣಿ ಪಾರಿ- ನಿನಗ್ಗೊತ್ತಿಲ್ಲ, ಇದು- ಬಸವಣ್ಣ ಪಾರೀನ್ನೂ ಶರಣಿ ಮಾಡಿದ್ರು- ಅವಳಾದ್ದು ಶರಣಿ ಅಲ್ಲ, ಬೆರಣಿ! ಬಸವಣ್ಣ ಊರಾಚೆಗೆ ಕಾಲು ಹಾಕಿದ್ದೇ ತಡ ಕರಕೊಂಡು ಬಿಟ್ಳು ಅಪ್ಪನ್ನ! ಯಾಕವ್ವ ಪಾರಕ್ಕ ನನ್ನಪ್ಪನ್ನ ನೀನು ಹಿಂಗ್ಮಾಡ್ತಿ, ಅವನ ಹಾರ್ತಕ್ಕೆ ಅವನ್ನ ಬಿಡಬಾರದ- ಅಂದೆ. “ನಿನ್ನಪ್ಪನೇನು ಕಟ್ಟಿಗಂಡೀದೆನಲಾ! ಅವನೇ ಬಂದಾನೆ ತೀಟೆನಾಯಿ ಬಂದಂಗೆ” ಅಂದ್ಲು. ಅಂದು ಬಿಟ್ಟು ಹಾಡಾಕೆ ಹತ್ತಿದಳು…. +ಉಷಾ : ಹಾಡಿದಳ? +ರುದ್ರ : ಹ್ಯಂಗೆ ಹಾಡಿದ್ಲು ಅಂತ! ಆಕಿ ಗುಡ್ಲಿನ ಸೂರು ಆಳೆತ್ತರಕ್ಕೆ ಹಾಕಿ ದೊಬಕ್ ಅಂತ ಬಿತ್ತು! ಕಾಲು ಕಿತ್ತರು ನೋಡು ಜನ! (ನಗುವರು) ಅಂಥ ಪದ ಕೇಳ್ತಾ ಅಪ್ಪ ಹಾಯಾಗಿ ತಲೆಯಾಡಿಸ್ತಿದ್ದ! +ಉಷಾ : ನಿಮ್ಮಪ್ಪ ಆಗಬೇಕಾದ್ದು ಶರಣಲ್ಲ. +ರುದ್ರ : ಮತ್ತೇನು? ಅಪ್ಪನ ಮಾತಿರಲಿ ಅತ್ತ; ಬರ್ತೀಯಲ್ಲ? ನಮ್ಮೂರಿಗೆ ಖರೇವಂದ್ರು ಬರ್ತೀಯಲ್ಲ? +ಉಷಾ : ‘ದಶಿ ಮಂದಾಯತೇ ತೇಜೋ ದಕ್ಷಿಣಸ್ಯಾಂ ರವೇರಪಿ’ +(ಕಲಿಯುವ ಹುಡುಗನಂತೆ, ಆದರೂ ತನ್ನ ಆಶೆ ಬಿಟ್ಟುಕೊಡದೆ) +ರುದ್ರ : ಹಂಗಂದ್ರೇನು? +ಉಷಾ : ಅರ್ಥ… ನಿನಗೆ ಅರ್ಥವಾಗೋಲ್ಲ. +ರುದ್ರ : ಯಾಕೆ ತಿಳಿಯಾಕಿಲ್ಲ? ನೆಟ್ಟಗೆ ಹೇಳಿದ್ರೆ ಎಲ್ಲ ತಿಳೀತತಿ. +ಉಷಾ : ನೆಟ್ಟಗೆ…ಹೇಳೋಲ್ಲ, ಯಾಕೆಂದ್ರೆ ನಂಗೆ ನೆಟ್ಟಗೆ ಬರೋಲ್ಲ. +ರುದ್ರ : ಸುಳ್ಳು ನಿನಗ್ಗೊತ್ತು. +ಉಷಾ : (ಹಂಗಿಸುತ್ತ) ಬಸವಣ್ಣನವರನ್ನ ಕೇಳು, ಹೇಳ್ತಾರೆ. +‘ದಿಶಿ ಮಂದಾಯತೇ ತೇಜೋ ದಕ್ಷಿಣಸ್ಯಾಂ ರವೇರಪಿ’ +ರುದ್ರ : (ನೆನಪಿಡಲು ಪ್ರಯತ್ನಿಸುತ್ತ) ದಿಸಿ… ಮಂದಯತ್ತೆ….. +ಉಷಾ : ಶೂದ್ರ ಮುಂಡೇವಕ್ಕೆ- +ರುದ್ರ : (ಮುಂದುವರಿಸಿ)- ಮಾತು ಬರಾಕಿಲ್ಲ. ತಿಳಿವಳಿಕೆ ಬರಾಕಿಲ್ಲ. ನಾವು ಕತ್ತೆಗಳು, ಕಾಡುಪ್ರಾಣಿಗಳು, ಇವತ್ತಲ್ಲದಿದ್ದರೆ ನಾಳೆ- +ಉಷಾ : (ಮಂದಹಾಸ ಬೀರುತ್ತ) ಇವತ್ತಲ್ಲ ನಾಳೆ ನೀನೂ ಸಹ ನಾಮಕ್ಕೆ ಬದಲು ವಿಭೂತಿ ಹಾಕಿ ಮಂತ್ರ ಮಣ ಮಣ ಹಾಡ್ತಾ ಓಡಾಡ್ತಾ, ದೊಡ್ಡ ಪಂಡಿತರ ಹಾಗೆ ರೇಷ್ಮೆ ಪಂಚೆ ಹಾಕಿಕೊಂಡು ಆಸ್ಥಾನದಲ್ಲಿ ಕೂತು ಜ್ಞಾನದ ತೇಗು- +ರುದ್ರ : (ವ್ಯಂಗ್ಯ ತಿಳಿಯದೆ) ನಮಗೂ ಎಲ್ಲ ಗೊತ್ತಾಗುತ್ತೆ. ನಮ್ಮನ್ನ ಕಲಿತವರಿಂದ ದೂರ ಇಡಾಕಾಗಲ್ಲ; ನಾವು ಬಂದ್ರೆ ಗಾವುದ ದೂರ ಓಡೋ ನೀವೆಲ್ಲಾ ಕೊನೆಗೆ ತಿಳ್ಕೋಬೇಕಾಗುತ್ತದೆ; ಇವರೂ ಮನುಸ್ಯರು ಅಂತ- +ಉಷಾ : ನಾನು ಅದನ್ನೇ ಹೇಳ್ತಿದ್ದೆ. ಎಲ್ಲ ಗುಡಿ, ಮನೆ, ಮಠಗಳಲ್ಲಿ ಓಡಾಡ್ತಿ; ತಿಳೀದ ಜನಕ್ಕೆ ಬುದ್ಧೀ ಹೇಳ್ತಾ ತೃಪ್ತಿ ಪಡ್ತಿ. ದೊರೆಗಳೆದುರು, ವಿದ್ವಾಂಸರೆದುರು ಕೂತು ಮುಗುಳ್ನಗ್ತಿ- ಈಗ ಬಸವಣ್ಣ ಮಾಡ್ತಿದಾರಲ್ಲ? +ರುದ್ರ : ನನ್ನ ಮಕಕ್ಕೆ ಬೇಕಾದ್ರೆ ಉಗಿ. ಬಸವಣ್ಣನ ತಂಟೆಗೆ ಬಂದ್ರೆ- +ಉಷಾ : (ನಗುತ್ತಾ) ಬಂದರೆ…. +ರುದ್ರ : ನಿನ್ನನ್ನ ಹೆಬ್ಬರಳಿನಿಂದ ನೆತ್ತಿತಂಕ ಸಿಗದು ತೋರಣ ಕಟ್ಟೀನಿ- +ಉಷಾ : (ನಗುತ್ತಲೇ) ಕಟ್ಟಿ- +ರುದ್ರ : ಕಟ್ಟಿ ಎಲ್ಲರಿಗೂ ತೋರಿಸ್ತೇನಿ- +ಉಷಾ : ತೋರಿಸಿ- +ರುದ್ರ : (ಸ್ಫೋಟಿಸಿ ಅವಮಾನಿತನಾಗಿ) ನಿನಗೆ ಹ್ಯಂಗೆ ಗೊತ್ತಾಗಬೇಕು? ನಿನಗೆ ಹ್ಯಂಗಾದರೂ ಗೊತ್ತಾಗಬೇಕು? ಇವತ್ತು ಹೋದೀತು ಕತ್ತಲು, ನಾಳೆ ಬೆಳಕು ಹರದು ಎಲ್ಲ ಬೆಳ್ಳಂಬೆಳ್ಳಗಾಗಿ ಎಲ್ಲ ನೋಡೇವು ಅಂತ ಕಾಯ್ತಿದೀವಿ: ನಾವೆದ್ದೆವೂ ಅಂದ್ರೆ ಕೆಳಗೆ ಹಾಕಿ ಅಮುಕ್ತೀರಿ ನೀವೆಲ್ಲ! ನಿಮ್ಮನ್ನೆಲ್ಲ ಗೊದ್ದ ಹೊಸಕಿದಂತೆ ಹೊಸಕಿ ಹಾಕ್ತವಿ ನಾವು! ರಕ್ತ ಹೀರಿ- +ಉಷಾ : ರಕ್ತ ಹೀರಿ! ರಕ್ತ ಹೀರೋ ಜನ ನೋಡಿದ್ದೇನೆ ನಾನೂ! ವಿಭೂತಿ ಕಾವಿ ಹಾಕ್ಕೊಂಡು ಅನ್ನ ಛತ್ರದ ಹತ್ರ ನಿಂತು ಬಸವಣ್ಣ ಬಸವಣ್ಣ ಅಂತ ಗೋಳಿಡೋ ಜನ ನೋಡಿದೇನೆ ನಾನು! ಸಂಸ್ಕೃತದ ಮಾತನ್ನೇ ಕನ್ನಡದಲ್ಲಿ ಹೇಳಿಕೊಂಡು ಕುಣಿದಾಡೋ ಜನ ನೋಡಿದ್ದೇನೆ ನಾನು! +ರುದ್ರ : ಇನ್ನಾ ಮಾತು ಬೆಳಸಿದ್ರೆ- +ಉಷಾ : (ಕ್ರಮೇಣ ರೇಗುತ್ತ) ಭಂಡಾರದ ಹಣ ತಗೊಂಡು ಸೋಮಾರಿ ಜಂಗಮ ಜನಕ್ಕೆ ರೊಟ್ಟಿ ಚೂರು ಹಾಕಿದ ಬಸವಣ್ಣ- +ರುದ್ರ : ಉಷಾ! +ಉಷಾ : ತಮ್ಮ ಬಾಲ ಹಿಡಿಯದಿದ್ದವರು ಭವಿಗಳು, ಮೂರ್ಖರು ಅಂತ- +ರುದ್ರ : (ಕೋಪ ಹೆಚ್ಚುತ್ತಿದೆ) ಬಾಯಿ ಮುಚ್ಚು, ಇಲ್ಲದಿದ್ರೆ- +ಉಷಾ : ಜನಕ್ಕೆ ಬೇಕಾದ್ದು ಅನ್ನ, ಬಸವಣ್ಣನವರ ಸಿಹಿಮಾತಲ್ಲ. ಸುಖ-ಬಸವಣ್ಣನವರ ಹೊಸ ಮಂತ್ರಗಳಲ್ಲ- +(ರುದ್ರ ಕೋಪದಿಂದ ಹುಲಿಯಂತೆ ಅವಳ ಕಡೆ ತೆವಳುತ್ತಿದ್ದಾನೆ. ಉಷಾಗೆ ಕೂಡ ಅವನ ಚಲನೆ ಭಯ ಹುಟ್ಟಿಸಿದೆ. ಅವನ ಕ್ರೌರ್ಯವನ್ನು ಹೊಡೆದೆಬ್ಬಿಸುವುದರಲ್ಲಿ ನಿಜವಾದ ರುದ್ರನನ್ನು ಹೊರ ತರುವುದರಲ್ಲಿ ಯಶಸ್ಸು ಗಳಿಸಿದ್ದಾಳೆ; ಈ ಕ್ಷಣದಲ್ಲಿ ಆತ ಬಸವಣ್ಣನವರ ಸಿದ್ಧಾಂತದಿಂದ ದೂರ) +ಉಷಾ : (ತಾತ್ಸಾರದಿಂದ) ಯಾಕೆ ತೆವಳ್ತಿ? +(ಮೌನ) +ಏನು ಮಾಡ್ತಿ? +(ಮೌನ) +ನಿನ್ನಿಂದ ನನ್ನ ಮುಟ್ಟೋಕ್ಕಾಗೋಲ್ಲ. +(ಈಗ ತಮ್ಮಟೆಯ ಸದ್ದು ಆರಂಭವಾಗಿದೆ. ಕಾಡುಪ್ರಾಣಿಗಳ ಆರ್ಭಟದಂತೆ ಗದ್ದಲ. ರುದ್ರ ಬೆವತಿದ್ದಾನೆ; ಉಷಾ ಕೊಂಚ ದೂರ ಸರಿಯುತ್ತಾಳೆ- ಬಂಡೆಯ ಮೇಲೆಯೇ) +ರುದ್ರ : (ಕ್ರೌರ್ಯದಿಂದ) ಯಾಕೆ, ಯಾಕೆ? +ಉಷಾ : (ಗಂಭೀರವಾಗಿ, ಸ್ಪಷ್ಟವಾಗಿ, ಸವಾಲಾಗಿ) ನೀನು ಹೊಲೆಯ. +(ಮೌನ) +ನಾನು ಬ್ರಾಹ್ಮಣ ಸ್ತ್ರೀ. +ರುದ್ರ : (ಹಿಂಜರಿದವನು….. ಸಿಟ್ಟಿನಿಂದ) ಕೊಳಕುಮುಂಡೆ! +(ಎಂದು ಅವಳ ಅಡಿಯ ಬೆರಳು ಹಿಡಿದುಕೊಳ್ಳುವನು. ಉಷಾ ಎಳೆದುಕೊಂಡರೆ ಬಿಡುವುದಿಲ್ಲ) +ಉಷಾ : (ಖಡಾಖಂಡಿತ ಎಂಬಂತೆ) ಬಿಡು. +ರುದ್ರ : ದರಿದ್ರವೇ- +(ಎಂದು ಅವಳ ಕಾಲು ಹಿಡಿದು ಎಳೆಯುವನು. ಈಗಾಗಲೇ ತಮ್ಮಟೆಯ ಸದ್ದು ಹೆಚ್ಚಾಗುತ್ತದೆ. ನೆಲಕ್ಕೆ ಬಿದ್ದ ಅವಳ ಕಾಲುಗಳನ್ನು ಅಪ್ಪಿದೊಡನೆ ಚೀರುವಳು. ತಮ್ಮಟೆಯ ಸದ್ದು ಹೆಚ್ಚಾದಂತೆ ಕೇವಲ ಏದುವ ಸದ್ದು- ಪ್ರೇಕ್ಷಕರಿಗೆ ಕೇಳಿಸಬಹುದು. ಕೇಳಿಸದಿರಬಹುದು. ತಿಂದು ಹಾಕುವವನಂತೆ ಅವಳನ್ನು ಪೂರ್ತಿ ಬಳಸುವನು. ಕ್ರಮೇಣ ಕತ್ತಲು ಆವರಿಸುವುದರೊಂದಿಗೆ ತಮ್ಮಟೆಯ ಗಟ್ಟಿ ಸದ್ದು, ಕತ್ತಲು ಕಡಿಮೆಯಾಗುತ್ತದೆ. ಅದರೊಂದಿಗೆ ತಮ್ಮಟೆಯ ಸದ್ದೂ ಕರಗುತ್ತದೆ) +(ಬೆಳಕಿನಲ್ಲಿ ಮೂರು ದಿಕ್ಕಿನಿಂದ ಸುಮಾ, ರಮಾ, ಉಮಾ ಪ್ರವೇಶ. ವಿಚಿತ್ರ ಅನುಭವಕ್ಕೆ ಸಿಕ್ಕಂತೆ ಮೂವರೂ ದಿಗ್ಭ್ರಾಂತರಾಗಿದ್ದಾರೆ. ರುದ್ರ, ಉಷಾ ಈಗ ರಂಗದ ಮೇಲಿಲ್ಲ. ಮೌನ. ಅವರು ಮಾತು ಆರಂಭಿಸುತ್ತಿದ್ದಂತೆ ಉಜ್ಜನ ಪ್ರವೇಶ- ಸರಿತೋರಿದರೆ ತೆಳು ತಮ್ಮಟೆಯ ಸದ್ದಿನೊಂದಿಗೆ) +ಉಮಾ : (ಕರೆಯುತ್ತಾ) ಉಷಾ! ಏ ಉಷಾ! +ರಮಾ : ಉಷಾ! +ಉಜ್ಜ : (ಪ್ರವೇಶಿಸಿ) ಅಲ್ಲ, ನಮ್ಮ ಹುಡುಗ ಎಲ್ಲೋದಾಂತ! ರುದ್ರೂ! +( ಆ ಮೂವರೂ ಮಾತಾಡುವುದಿಲ್ಲ; ಉಷಾ, ರುದ್ರರಿಂದ ಉತ್ತರವಿಲ್ಲ) +ಬ್ಯಾಡ ಕಣೋ ಹೊನ್ನಾಳಿ ಅಗಸ ಕೆಟ್ಟಂಗೆ ಕೆಟ್ಟೋಗ್ತಿ ಅಂದೆ. ನನ್ನ ಮಾತ್ಯಾಕೆ ಕೇಳ್ಯಾನು? ಅಂಥ ಚಲೊತ್ತಿನ ಜಾಜಿ ಹೂನಂಥ ಕೂಸು ತಡಕೊಂಡಾತ! +(ಹುಡುಗಿಯರನ್ನು ಕುರಿತು) +ಏನ್ರವ್ವ, ಏನು ಸಮಾಚಾರ? ನೀರು ತರ್ತ, ಅಡುಗೆ ಆಡ್ತ, ಜಗಳ ಕಾಯ್ತ, ಹಿಂಗೇ ಇದ್ದು ಬಿಡ್ತೀರೋ, ಏನಾರ ಮದುವಿ ಗಿದುವಿ? +ಉಮಾ : ಮುದಿಯಾ, ನಿನ್ನ ದಾರಿ ನೀನು ನೋಡಿಕೋ-ರಮಾ : ನಮ್ಮ ಮದುವೆ ತಂಟೆ ಯಾಕೆ ಇವನಿಗೆ? +ಸುಮಾ : (ಕರೆಯುತ್ತಾ) ಉಷಾ! +ಉಜ್ಜ : ಅದೇನವ್ವ ನಾನಂತಿರೋದು, ಅದೇನೋ ಅಂತಾರಲ್ಲ ಹೊಲೇರ ಕೈಗೆ ಮೈ ಕೊಡಬ್ಯಾಡ, ಬ್ರಾಂಬ್ರ ಕೈಗೆ ಮನಸ್ ಕೊಡಬ್ಯಾಡ ಅಂತ- +ಉಮಾ : ಲೇ ಹೊಲೆಯಾ, ನೀನು ನಿನ್ನ ದಾರಿ ಹಿಡಿದೆಯೋ ಸರಿ. ಇಲ್ಲದಿದ್ರೆ ಬಿಜ್ಜಳರಿಗೆ ಹೇಳಿ ಈ ರುದ್ರನ ಜೊತೀಗೆ ನಿನ್ನ ಚರ್ಮಾನೂ- +ಉಜ್ಜ : ಬಿಜ್ಜಳರು ಯಾವಾಗಿಂದ ಚರ್ಮ ಸುಲಿಯಾಕೆ ಹತ್ತಿದ್ದವ್ವ? ಅದು ನನ್ನ ಕೆಲಸ! ಹೊಲೇರ ಕೆಲಸ! ನನ್ನ ಮಗ ರುದ್ರ- +ರಮಾ/ಸುಮಾ : ಇವನ ಮಗಂತಲ್ಲೇ- +ಉಮಾ : ಬರ್ರೇ ಆ ಮುದಿಗೊಡ್ಡಿನ ಹತ್ರ ಏನು? +ಉಜ್ಜ : (ಅವರು ಹೋಗಲಿದ್ದಾಗ) ಆ, ಗೊಡ್ಡಾ ನಾನು! ಮುದಿಯನಾ ನಾನು! ಏನ್ರವ್ವೋ ಒಂಚೂರು ನಿಲ್ರಿ. +(ನಿಂತಾಗ) +ನನ್ನ ಮಗ ಎಲ್ಲೋದ ಹೇಳ್ರಿ. ಯಾಕಪ್ಪ ಈ ಸಾವಾಸ ಅಂತ ನಾನು ಅತ್ತಲಾಗೆ ಹೋಗಿ ಅಡಿಕೆ ಕಡೀತ ನಿಂತಿದ್ದೆ. ನೀವು ನೋಡ್ತಾ ನಿಂತಿದ್ದಂಗೆ ಕಾಣ್ತತಿ. ಹೇಳ್ರವ್ವ, ಹುಡುಗಿ ಚೀರತಲ್ಲ ಅಂತ ಬಂದ್ರೆ (ನಗುತ್ತ) ಪತ್ತೇನೇ ಇಲ್ಲ. ದೊಡ್ಡಾಟದ ದೇವರಂಗೆ ಮಂಗಮಾಯ! +ಉಮಾ : ನಿನ್ನ ಹಾಳುಹರಟೆ ಬೇಕಿಲ್ಲ. +ರಮಾ : ಬರ್ರೇ- (ಹೋಗುವರು) +ಉಜ್ಜ : (ಅವರತ್ತ ನೋಡುತ್ತಾ) ಅಲ್ಲ, ಈ ಬ್ರಾಂಬ್ರ ಹೆಂಗಸರಿಗೆ ಏನು ಧಿಮಾಕು- ಗೊಡ್ಡು ಅಂತಾರಲ್ಲ. ಗೊಡ್ಡ ನಾನು? ರುದ್ರನ ಹುಟ್ಟಿಸಿರೋನು ಗೊಡ್ಡ? ಕಿಸಕಿಸ ಮಾತಾಡಿಕೋತ ಹೋಗೇ ಬಿಡ್ತವೆ ಈ ಹಾಳು ಹೆಂಗಸ್ರು. ಬಿಜ್ಜಳರಾಜರ ಹತ್ರ ಏನು ಹೇಳ್ತವೋ! +ನೂರು ತಲೆ ಮಾರವ್ವಂಗೆ ಕೊಟ್ಟೆ ಕೋಳಿ- +ನಾ ಕೊಟ್ಟೇ ಕೋಳಿ- +ಹೊಲೇರುಜ್ಜ ನಾನ್ಕಣವ್ವ ಹೇಳಿ ಕೇಳಿ, +ನಾ ಹೇಳಿ ಕೇಳಿ- +ಮೂರನೆಯ ದೃಶ್ಯ +(ಬಿಜ್ಜಳನ ಮನೆಯ ಮುಂಭಾಗ. ಹತ್ತಾರು ಜನ ಬ್ರಾಹ್ಮಣರು, ಜೈನರು, ಕುತೂಹಲಿಗಳಾದ ಶೂದ್ರರು. ಕೆಲವರು ಬ್ರಾಹ್ಮಣರು ಮತ್ತು ಜೈನರ ಕೈಯಲ್ಲಿ ಭಿತ್ತಿಪತ್ರಗಳಿವೆ: “ಇವತ್ತು ನೀವು, ನಾಳೆ ನಾವು ಬಲಿ” “ಶರಣರಿಗೆ ಧಿಕ್ಕಾರ” “ಸನಾತನ ಧರ್ಮಕ್ಕೇ ಜಯ” “ಜೈನರೂ ಎಚ್ಚರಗೊಳ್ಳಲಿ” “ಅತ್ಯಾಚಾರ!” “ಬಿಜ್ಜಳರ ದುರಾಡಳಿತಕ್ಕೆ ಧಿಕ್ಕಾರ!” “ಸತ್ಯಕ್ಕೇ ಜಯ” “ಸಂಭವಾಮಿ ಯುಗೇ ಯುಗೇ” ಇತ್ಯಾದಿ) +ಬ್ರಾಹ್ಮಣ ೧ : ನಮ್ಮ ಪ್ರಾರ್ಥನೆ- +ಬ್ರಾಹ್ಮಣರು : ಧರ್ಮ ರಕ್ಷಣೆ! +ಬ್ರಾಹ್ಮಣ ೨ : ಹಗಲು ದರೋಡೆ- +ಬ್ರಾಹ್ಮಣರು : ನಿಲ್ಲಬೇಕು. +ವ್ಯಕ್ತಿ ೧ : ಒಂದೀಟು ನಿಲ್ಲಪ್ಪಾ! ನಿಮಗೀಗ ಆಗ್ಬೇಕಾದರೂ ಏನು? ಯಾಕಿಂಗೆ ವದರಿಕೋಳ್ತೀರಿ? +ಬ್ರಾಹ್ಮಣ ೧: ನೀನೇನು ಬಿಜ್ಜಳನೇನೋ? +ಬ್ರಾಹ್ಮಣ ೩ : ಇಲ್ಲಿಂದ ತೊಲಗು. +ಬ್ರಾಹ್ಮಣ ೨ : ಹೋಗಿ ಹೆಂಡ ಕುಡಿದು ಬಾ. +ವ್ಯಕ್ತಿ ೧ : ತೆಲಿಗಿಲಿ ನೆಟ್ಟಗಿಲ್ಲೇನ್ಲೇ ಇವನಿಗೆ- +ವ್ಯಕ್ತಿ ೨ : ವದರಿಕೊಂಡು ಗಂಟಲು ಹರಕಳ್ಳಲಿ ಬಾರೋ. +(ಹಿಂದಕ್ಕೆ ಸರಿಯುವನು -ವ್ಯಕ್ತಿ ೧ರೊಂದಿಗೆ) +ಬ್ರಾಹ್ಮಣ ೧ : ಪಂಡಿತ ಶಾಸ್ತ್ರಿಗಳಿಗೆ- +ಬ್ರಾಹ್ಮಣರು : ಮಾನಭಂಗ. +ಬ್ರಾಹ್ಮಣ ೧ : ಅವರ ಪುತ್ರಿಯ ಮೇಲೆ- +ಬ್ರಾಹ್ಮಣರು : ಅತ್ಯಾಚಾರ! +ಜೈನ ೧ : (“ಜೈನರೂ ಎಚ್ಚರಗೊಳ್ಳಲಿ” ಹಿಡಿದಿರುವಾತ) ಇವತ್ತು ಇವರು- +ಜನರು : ನಾಳೆ ನಾವು! +ಜೈನ ೧ : ಶಿವಶರಣರಿಗೆ- +ಜನರು : ಧಿಕ್ಕಾರ! +ಬ್ರಾಹ್ಮಣ ೧ : ವೇದಪುರಾಣ- +ಬ್ರಾಹ್ಮಣರು : ಪಂಚಪ್ರಾಣ! +ಬ್ರಾಹ್ಮಣ೧ : ಕೊಲ್ಲುತ್ತಿವೆ- +ಬ್ರಾಹ್ಮಣರು : ಕತ್ತೆ ಕೋಣ! +ಬ್ರಾಹ್ಮಣ ೨ : ಬ್ಯಾ ಬ್ಯಾ ಬ್ಯಾ- +ಬ್ರಾಹ್ಮಣರು : ಬ್ಯಾ ಬ್ಯಾ ಬ್ಯಾ +ವ್ಯಕ್ತಿ ೨ : ಯಾರಲಾ ಮಗನೇ ಕತ್ತೆ ಕ್ವಾಣಾ? +ವ್ಯಕ್ತಿ ೪ : ಯಾರಲಾ ಕೊಂದ್ ಹಾಕ್ತಿರೋದು? +ಬ್ರಾಹ್ಮಣ ೩ : ನಿಮ್ಮನ್ನುದ್ದೇಶಿಸಿ ನಾವು ಹೇಳಿಲ್ಲ. +ವ್ಯಕ್ತಿ ೫ : ಮತ್ತೇನು ನಿಮ್ಮಪ್ಪನ್ನೇನೋ- +ಜೈನ : ಹೊಡೆದಾಟಾಗುತ್ತೆ, ಸುಮ್ಮನೆ ಹೋಗಿ, ಯಾರಿಗೆ ತೊಂದರ್ಯಾಗೇತೋ ಅವರು ಕೂಗ್ತಾರೆ. ನಿಮಗೆ ಯಾಕೆ ಹೋಗಿ. +ಬ್ರಾಹ್ಮಣ ೧ : ಹಗಲು ಶರಣ- +ಬ್ರಾಹ್ಮಣರು : ರಾತ್ರಿ ಹೊಲೆಯ. +ಬ್ರಾಹ್ಮಣ ೨ : ನೋಡಲು ಮೊಲ- +ಬ್ರಾಹ್ಮಣರು : ಅಪ್ಪಟ ಹುಲಿ. +ಬ್ರಾಹ್ಮಣ ೧ : ಮಾಡಲೇಬೇಕು- +ಬ್ರಾಹ್ಮಣರು : ಹೊಲೆಯರ ಪಚನ. +ವ್ಯಕ್ತಿ ೪ : ಯಾರಲಾ ಹೊಲಿಯಾ? +ವ್ಯಕ್ತಿ ೫ : ಪಚನ ಮಾಡೋದು ಅಂದ್ರೇನ್ಲ? +ಬ್ರಾಹ್ಮಣ ೧ : ನಿಮಗಲ್ಲ ನಾವು ಹೇಳಿದ್ದು. +ವ್ಯಕ್ತಿ೧ : ಮತ್ತಾರಿಗೋ, ನಿಮ್ಮ ಅಜ್ಜಂಗೇನೋ? +ವ್ಯಕ್ತಿ ೨ : ನಿಮ್ಮವ್ವನ ಮಿಂಡಂಗೇನೋ? +ಬ್ರಾಹ್ಮಣ : ಅಶ್ಲೀಲ ಮಾತಾಡಬೇಡಿ. +ವ್ಯಕ್ತಿ ೫ : ಮತ್ತೆ ಬೈತಾನ್ನೋಡು? ಸೂಳೆಮಗನೆ ಹಂಗಂದ್ರೇನೋ? +ವ್ಯಕ್ತಿ ೪ : ಕೊಡೋ ಅವನಿಗೆ ನಾಕು- +ಬ್ರಾಹ್ಮಣ ೨ : ಅದೇನು ಹೋಳಿಗೆಯಲ್ಲ ಕೊಡೋಕೆ- +ವ್ಯಕ್ತಿ ೪ : ಹೋಳಿಗೆ ಕೊಡ್ತಾರಂತೆ ಮಗಂಗೆ, ಹೋಳಿಗೇ- +ವ್ಯಕ್ತಿ ೧ : ಕರಿಗಡಬು ಆಗಾಕಿಲ್ಲವಾ? +ವ್ಯಕ್ತಿ ೨ : ಯಾಕ್ಲ, ಕರ್ಜಿಕಾಯಿ ತಗೊಳ್ಳೋ, (ನಗುವರು) +ಬ್ರಾಹ್ಮಣ ೧ : (ಘೋಷಣೆ ಕೂಗುತ್ತ) ಹಗಲು ದರೋಡೆ- +ಬ್ರಾಹ್ಮಣರು : ನಿಲ್ಲಬೇಕು! +ಬ್ರಾಹ್ಮಣ ೧ : ಶೂದ್ರರಿಗೆ- +ಬ್ರಾಹ್ಮಣರು : ಧಿಕ್ಕಾರ! +(ಒಬ್ಬ ಶೂದ್ರ ಭಿತ್ತಿಪತ್ರವೊಂದನ್ನು ಕಿತ್ತುಕೊಳ್ಳಲು ಕೈ ಹಾಕುವನು) +ಬ್ರಾಹ್ಮಣ ೧ : ನಮ್ಮನ್ನು ಸ್ಪರ್ಶಿಸಿದರೆ ಒಳ್ಳೆದಾಗಲಿಕ್ಕಿಲ್ಲ. +ಬ್ರಾಹ್ಮಣ ೨ : ಹೋಗಿ, ಸುಮ್ಮನೆ ದಾರಿ ಹಿಡಿದು ಹೋಗಿ. +ವ್ಯಕ್ತಿ ೧ : ಮುಟ್ಟಿದ್ರೆ ಅದೇನಾಗ್ತದೆ ನೋಡ್ತೆನಲೆ. +(ಮುಟ್ಟುವನು) +ಬ್ರಾಹ್ಮಣ ೧ : (ಅವನನ್ನು ಭಿತ್ತಿ ಪತ್ರದಿಂದ ತಿವಿದು) ಮುಟ್ಟಬೇಡ ಅಂದ್ರೆ ಮುಟ್ತಾನೆ- ಹೋಗೋ- ಮುಠ್ಠಾಳ! +ಶೂದ್ರನೊಬ್ಬ: (ಅವನ ಕೆನ್ನೆಗೆ ಕೊಟ್ಟು) ಎಲಾ ನಾಯಿ! +ಬ್ರಾಹ್ಮಣ ೧ : (ತಿರುಗಿ ಕೊಟ್ಟು) ಶೂದ್ರ ಮುಂಡೇದೇ- +(ಜಗಳ ಹೆಚ್ಚಾಗುವುದು) +ಬ್ರಾಹ್ಮಣ ೧ : (ಘೋಷಣೆ) ಶೂದ್ರರ ದಬ್ಬಾಳಿಕೆಗೆ- +ಬ್ರಾಹ್ಮಣರು/ಜೈನರು : ಧಿಕ್ಕಾರ. +(ಜಗಳದಲ್ಲಿ ಯಾರು ಏನು ಮಾಡುತ್ತಿದ್ದಾರೆ ಗೊತ್ತಾಗುವುದಿಲ್ಲ. ಗದ್ದಲ, ಶೂದ್ರನೊಬ್ಬ ದೊಣ್ಣೆ ಎತ್ತಿದ್ದು ಕಾಣಿಸುವುದು; ಸದ್ದು; ಒಬ್ಬ ಸತ್ತು ನೆಲಕ್ಕೆ ಬೀಳುವನು. ಸೈನಿಕರು ಬರುವರು; “ಹೋಗಿ, ಹೊರಟು ಹೋಗಿ” ಎಂದು ಹೇಳುತ್ತಾ ಹೊಡೆಯುವರು. ವ್ಯಕ್ತಿಗಳು ಹೋಗುವರು; ಕೆಲವರು ಶೂದ್ರರು, ಜೈನರು, ಬ್ರಾಹ್ಮಣರು ಇದ್ದಾರೆ. ಈ ಗದ್ದಲವಾಗುತ್ತಿದ್ದಾಗಲೇ ಬಿಜ್ಜಳ ಮನೆಯ ಮೆಟ್ಟಿಲ ಮೇಲೆ ಕಾಣಿಸಿಕೊಳ್ಳುವನು) +ಬಿಜ್ಜಳ : (ಗಟ್ಟಿಯಾಗಿ ಖಂಡಿತವಾಗಿ) ಎಲ್ಲರೂ ನಿಲ್ಲಿ. ಏನಿದೆಲ್ಲ? ಯಾರು ಇದನ್ನು ಆರಂಭಿಸಿದ್ದು? +ಕೆಲವು ಬ್ರಾಹ್ಮಣರು : ಪ್ರಭುಗಳು- +ಕೆಲವು ಬ್ರಾಹ್ಮಣರು : ನ್ಯಾಯ ದೊರಕಿಸಬೇಕು. +ಬಿಜ್ಜಳ: ಎಂಥ ನ್ಯಾಯ? ಯಾತಕ್ಕೆ ಗದ್ದಲ? ದಿನಬೆಳಗಾದರೆ ಬಂದು ಕಿರುಚುವುದು ನಿಮ್ಮ ಉದ್ಯೋಗವಾಗಿಹೋಗಿದೆ. ಮೊನ್ನೆ ಜೈನರು, ನಿನ್ನೆ ಶೈವರು, ಇವತ್ತು ನೀವು. ಯಾಕೆ ಹಾಗೆ ನಿಂತು ನೋಡುತ್ತಿದ್ದೀ? ಬಾಯಿ ಬಿಟ್ಟು ಹೇಳು. +ಬ್ರಾಹ್ಮಣ ೩ : ಪ್ರಭುಗಳು ಮನ್ನಿಸಬೇಕು. ಪ್ರಮಾದವಾಗಿದೆ, ಸನಾತನ ಧರ್ಮಕ್ಕೆ ಕಳಂಕ ಬಂದಿದೆ- +ಬಿಜ್ಜಳ : ಧರ್ಮ! ಧರ್ಮ! ಅದಕ್ಕೆ ಯಾವುದಾದರೊಂದು ಕಳಂಕ ಯಾವಾಗಲೂ ಬಂದೇ ಬರುತ್ತೆ. ಮನುಷ್ಯರಿಗೇನಾಗಿದೆ ಹೇಳು. +ಬ್ರಾಹ್ಮಣ ೧ : ಶೂದ್ರನೊಬ್ಬ ಆಸ್ಥಾನ ಪಂಡಿತರ ಮಗಳ ಮೇಲೆ ಅತ್ಯಾಚಾರ +ಮಾಡಿದ್ದಾನೆ. ಪಂಡಿತರು ಮಗಳನ್ನು ಹುಡುಕಿಸುತ್ತಿದ್ದಾರೆ- +ಬ್ರಾಹ್ಮಣ ೨ : ನಿತ್ಯ ನಮ್ಮ ದೇವಸ್ಥಾನಗಳ ಮೇಲೆ, ಸ್ನಾನಘಟ್ಟಗಳ ಮೇಲೆ ದಾಳಿಯಾಗುತ್ತಿದೆ. +ಬ್ರಾಹ್ಮಣ ೩ : ನಮ್ಮ ಆಚಾರ ವ್ಯವಹಾರಗಳ ಮೇಲೆ ಅತ್ಯಾಚಾರವಾಗುತ್ತಿದೆ. +ಬ್ರಾಹ್ಮಣ ೧ : ಇದು ಜಗತ್ತಿಗೇ ಗೊತ್ತಿರುವ ಸುದ್ದಿ. +ಬಿಜ್ಜಳ : ನಾನು ಹಾಗಾದರೆ ಈ ಜಗತ್ತಿನಲ್ಲಿ ಇಲ್ಲ ಎಂದು ಅರ್ಥವೇನು? ನಿಮ್ಮ ಘೋಷಣೆ ನನ್ನ ಈ ಮನೆಗೆ ಅಲಂಕಾರ ಎಂದು ತಿಳಿದಿದ್ದೀ ಏನು? +(ಹೆಣವನ್ನು ನೋಡಿ) ಈತನನ್ನು ಕೊಂದವರು ಯಾರು? +(ಮೌನ) +(ಬ್ರಾಹ್ಮಣರಿಗೆ) ನೀವೇನು? +ಬ್ರಾಹ್ಮಣ೧ : ಅಲ್ಲ ಪ್ರಭು. ಇಲ್ಲಿ ಸೇರಿದ ಶರಣರು- +ಬ್ರಾಹ್ಮಣ ೨ : (ಇದ್ದಬದ್ದ ಧೈರ್ಯ ಕೂಡಿಸಿಕೊಂಡು ಘೋಷಣೆ) ಶರಣರಿಗೆ- +ಬ್ರಾಹ್ಮಣರು : ಧಿಕ್ಕಾರ! +ಬಿಜ್ಜಳ : (ಅಸಹಾಯಕನಾಗಿ, ಏರಿದ ಸಿಟ್ಟಿನಿಂದ) ಬಾಯಿಮುಚ್ಚು! ಮತ್ತೊಮ್ಮೆ ಕೂಗಿದರೆ ನಿಮ್ಮ ಗಂಟಲು ಕತ್ತರಿಸುತ್ತೇನೆ. (ಶೂದ್ರರಿಗೆ) ನೀವು ಈ ಕಡೆ ಬನ್ನಿ (ಬರುವರು) ನೀವೇನು ಕೊಂದದ್ದು? +ಶೂದ್ರರು : ಅಲ್ಲ ಪ್ರಭು- +ಬಿಜ್ಜಳ : ನೀವು ಶರಣರೇನು? +ಶೂದ್ರರು : ಅಲ್ಲ ಪ್ರಭು. +ಶೂದ್ರರು : ಹೌದು ಪ್ರಭು. +(ಗಜಿಬಿಜಿ ಮಾತಾಡಿಕೊಳ್ಳುವರು) +ಬಿಜ್ಜಳ : ಯಾವನು ಶೂದ್ರ, ಯಾವನು ಶರಣ ಎಂದು ಗೊತ್ತು ಹಚ್ಚುವುದೇ ಕಷ್ಟ. ನಿಮ್ಮ ಶರಣತ್ವದ ಫಲ ಈ ಹೆಣ. (ಬ್ರಾಹ್ಮಣರಿಗೆ) ನೀವೀಗ ಹೋಗಿ. +ಬ್ರಾಹ್ಮಣ ೧ : ಪ್ರಭುಗಳಲ್ಲಿ ವಿಜ್ಞಾಪನೆ- +ಬ್ರಾಹ್ಮಣ ೨ : ನ್ಯಾಯ ದೊರಕಿಸಿಕೊಡಬೇಕು- +ಬಿಜ್ಜಳ : ಆ ಹುಡುಗಿಯ ಹೆಸರೇನು? +ಬ್ರಾಹ್ಮಣ ೧ : ಉಷಾ, ಪ್ರಭು. +ಬಿಜ್ಜಳ : ಹುಡುಗನ ಹೆಸರೇನು? +ಬ್ರಾಹ್ಮಣ ೧ : ರುದ್ರ ಅಂತ ಪ್ರಭು. ಹೊಲೆಯರವನು- +ಬಿಜ್ಜಳ : ನಿಮಗೆ ಎಲ್ಲ ಗೊತ್ತಿರುವಂತಿದೆ! ಹಾಗಾದರೆ ಹೇಳಿ, ಈ ಶವ ಇಲ್ಲಿ ಬೀಳಲು ಯಾರು ಕಾರಣ? +ಬ್ರಾಹ್ಮಣ : ( ತಮ್ಮ ಮೇಲೆ ಬರುವುದು ನೋಡಿ) ಗೊತ್ತಿಲ್ಲ ಪ್ರಭು. +ಬಿಜ್ಜಳ : ಗೊತ್ತಿಲ್ಲ, ಗೊತ್ತಿಲ್ಲ! ಯಾರೊಬ್ಬರಿಗೂ ಗೊತ್ತಿಲ್ಲ! ಹೆಣ ಮಾತ್ರ ಈ ಮನೆಯೆದುರು ದಿನಕ್ಕೊಂದರಂತೆ ಬೀಳುತ್ತವೆ! (ಶೂದ್ರರಿಗೆ) ನಿಮ್ಮ ಶರಣತ್ವ ನನಗೆ ಗೊತ್ತು. (ಬ್ರಾಹ್ಮಣರಿಗೆ) ನೀವು ದೂರನ್ನು ಸರಿಯಾಗಿ ಹೇಳುತ್ತಿಲ್ಲ. +ಬ್ರಾಹ್ಮಣ ೧ : (ಗೊಂದಲದಿಂದ) ಪ್ರಭುಗಳು ಮನ್ನಿಸಬೇಕು! +ಬಿಜ್ಜಳ : ಮತ್ತೆ ಅದೇ ಮಾತು. ಹೇಳಿ ಅದು ಅತ್ಯಾಚಾರ ಯಾಕೆ? ಪ್ರೇಮ ಯಾಕಿರಬಾರದು? +ಬ್ರಾಹ್ಮಣ ೩ : ಸನಾತನ ಧರ್ಮ ಕೆಡಿಸುವುದಕ್ಕೆ ಏನನ್ನು ಬೇಕಾದರೂ ಮಾಡಬಲ್ಲ ಶರಣರಿಗೆ ಪ್ರೇಮ- +ಬಿಜ್ಜಳ : ಉದ್ಧಟತನದ ಮಾತು (ಇನ್ನೊಬ್ಬನಿಗೆ) ನೀನು ಹೇಳು. +ಬ್ರಾಹ್ಮಣ ೨ : ವಾತಾವರಣದಲ್ಲಿ ಎಷ್ಟು ಹಿಂಸೆ ಇದೆಯೆಂದರೆ ಪ್ರೇಮದ ಮಾತು +ಅಸಂಗತವಾಗುತ್ತದೆ, ಪ್ರಭು. +ಬಿಜ್ಜಳ : (ನಕ್ಕು) ಜಾಣ ಬ್ರಾಹ್ಮಣ. +ಬ್ರಾಹ್ಮಣ೪ : ಶವ ಕೂಡ ಸಿಕ್ಕಿಲ್ಲ, ಪ್ರಭು. +ಬಿಜ್ಜಳ : ಯಾರ ಶವ? +ಬ್ರಾಹ್ಮಣ ೩ : ಉಷಾದೇವಿಯ ಶವ- +ಬಿಜ್ಜಳ : ಅವಳು ಸತ್ತಿದ್ದಾಳೋ, ಬದುಕಿದ್ದಾಳೋ ಎಂಬುದಕ್ಕೆ ಮುಂಚೆ ಶವದ ಯೋಚನೆ! ಎಂಥ ಮೂರ್ಖರು ನೀವು! ಹುಡುಗಿಯ ತಂದೆ ಶಾಸ್ತ್ರಿಯವರು ಆಗಲೇ ಅರಮನೆಯಲ್ಲಿದ್ದಾರೆ, ನೀವು ಹೋಗಿ; ಸೈನಿಕರೆ ಈ ಶವವನ್ನು ಎತ್ತಿಕೊಂಡು ಹೋಗಿ. ಈ ಹುಡುಗ-ಹುಡುಗಿಯರನ್ನು ಕರೆತನ್ನಿ. ಸಾಕ್ಷಿಗಳೆಲ್ಲ ಬರಲಿ. +(ಬಿಜ್ಜಳ ಹೋಗುವನು. ಬ್ರಾಹ್ಮಣರೂ ಹೋಗುವರು) +(ಹೊಲೆಯರು ಸುತ್ತುತ್ತ ಹಟ್ಟಿಗೆ ಬಂದಂತೆ, ಅವರು ಗುಜು ಗುಜು ಮಾತಾಡಿಕೊಳ್ಳುತ್ತಿದ್ದಾಗ ರಾಜಭಟನೊಬ್ಬ ಬಂದು) +ಭಟ : ಇಲ್ಲಿ ರುದ್ರ ಎಂಬ ವ್ಯಕ್ತಿ ಯಾರು? +ರುದ್ರ : (ಜನರ ಮಧ್ಯದಿಂದ ಬಂದು) ನಾನು. +ಭಟ : ರುದ್ರನ ಅತ್ಯಾಚಾರಕ್ಕೆ ತುತ್ತಾದ- +ರುದ್ರ : ಬಾಯಿಗೆ ಬಂದಂತೆ ವದರಬೇಡ. ಯಾರು ಬೇಕು ಹೇಳು. +ಭಟ : (ಮೌನತಾಳಿ) ಉಷಾ ಎಂಬ ಹೆಣ್ಣು ಮಗಳು ಇದ್ದಾಳೆಯೋ? +(ಜನ ಗುಜಗುಟ್ಟುವರು, ಉಷಾ ಬಂದು ನಿಲ್ಲುವಳು. ಉಜ್ಜನೂ ಮುಂದೆ ಬರುವನು) +ಉಜ್ಜ : ಏನಪ್ಪಾ ಬೇಕು ನಿಂಗೆ? +ಭಟ : ನಿಮ್ಮಿಬ್ಬರನ್ನೂ ಬಿಜ್ಜಳರು ಬರಹೇಳಿದ್ದಾರೆ. +ಉಷಾ : ಯಾಕೆ? +ಭಟ : ಅದನ್ನು ವಿವರಿಸಲು ವ್ಯವಧಾನವೂ ಇಲ್ಲ ಮತ್ತು ಅದಕ್ಕೆ ರಾಜಾಜ್ಞೆಯೂ ಇಲ್ಲ. +ಉಷಾ : ನಾನು ಬರುವುದಕ್ಕೆ ಆಗುವುದಿಲ್ಲ. +ಭಟ : ನೀನು? +ರುದ್ರ : (ಉಷಾಗೆ) ನೀನು ಯಾಕೆ ಬರೋಕ್ಕಾಗಲ್ಲ? +ಉಷಾ : ನಾನಿನ್ನೂ ಊರು ನೋಡಿಲ್ಲ. +ಹೊಲಗದ್ದೆ ನೋಡಿಲ್ಲ. +ಕಾಡು ನೋಡಿಲ್ಲ. +ಕೆಂಚ : (ದೂರದಲ್ಲಿ ಕುಡಿಯುತ್ತಾ) +ಬನದ ಹಟ್ಟಿ ಗುಡ್ಡದಾಗ ಕುಣೀತೈತಿ +ಹುಲಿ ಕುಣೀತೈತಿ- +ಅದರ ಕಣ್ಣೀನಾಗೇ ಹೊತ್ತು ಉರಿತೇತಿ +ಹೊತ್ತು ಉರಿತೈತಿ- +ಭಟ : (ಉಷಾಗೆ) ಇದು ರಾಜಾಜ್ಞೆಯ ಉಲ್ಲಂಘನೆ. +ಉಷಾ : ಹೌದು. +ಭಟ : ನಿನಗೆ ಶಿಕ್ಷೆಯ ಭಯ ಇರುವಂತಿಲ್ಲ. +ಉಷಾ : ಇಲ್ಲ. +ಭಟ : ಸರಿ. ಬಿಜ್ಜಳರಿಗೆ ಏನನ್ನು ಹೇಳಬೇಕು. +ಉಷಾ : ಕಾಡಿಗೆ ಹೋದದ್ದಾಗಿ ಹೇಳು. +ಭಟ : (ಗಟ್ಟಿಯಾಗಿ) ಹಳ್ಳಿಯ ಸಮಸ್ತರೇ- ನೀವೇ ಸಾಕ್ಷಿ. ನೀವೆಲ್ಲ ಉಷಾ ದೇವಿಯ ಮಾತು ಕೇಳಿದ್ದೀರಿ. +(ಎಂದು ರುದ್ರನ ಜೊತೆಗೆ ಹೋಗುವನು. ಕೆಂಚ ಅರ್ಧಂಬರ್ಧ ಹುಲಿಯ ಕುಣಿತದಲ್ಲಿ ತೊಡಗುವನು.) +ನಾಲ್ಕನೆಯ ದೃಶ್ಯ +(ಬೆಳಕು ಬಂದಾಗ ಬಿಜ್ಜಳನ ಮಂತ್ರಾಲೋಚನೆಯ ಕೋಣೆಯಲ್ಲಿ ಶಾಸ್ತ್ರಿಗಳು, ಸುಮಾ, ಉಮಾ ಮತ್ತು ರಮಾ ಕಾಣಿಸುತ್ತಾರೆ. ಇತ್ತೀಚಿನ ದುರಂತದಿಂದಾಗಿ ಶಾಸ್ತ್ರಿಗಳ ಮುಖ ವೇದನೆಯಿಂದ ತುಂಬಿದೆ. ‘ಬಿಜ್ಜಳ ಮಹಾರಾಜರು ಆಗಮಿಸುತ್ತಿದ್ದಾರೆ, ಸ್ವಾಮಿ’ ಎಂದು ದ್ವಾರಪಾಲಕ ಪ್ರಕಟಪಡಿಸುತ್ತಾನೆ. ಬಿಜ್ಜಳ ಪ್ರವೇಶಿಸುವಾಗ ಮಾತಾಡುತ್ತಲೇ ಇದ್ದಾನೆ. ಶಾಸ್ತ್ರಿ ಮತ್ತು ಹುಡುಗಿಯರು ಎದ್ದು ನಿಂತು ನಮಸ್ಕರಿಸಿದ್ದನ್ನು ಆತ ಗಮನಿಸುವುದಿಲ್ಲ.) +ಬಿಜ್ಜಳ : (ಪ್ರವೇಶಿಸುತ್ತಲೇ) ಏನು ಜನ! ಅವರ ಕೂಗು ಕೇಳಿ ಸಾಮಾನ್ಯರಿಗೆ ಗರ್ಭಪಾತವಾಗಬೇಕು! ಕೂತುಕೊಳ್ಳಿ ಶಾಸ್ತ್ರಿಗಳೆ. ಇದು ನಾನು ತಿಳಿದಿದ್ದಕ್ಕಿಂತ ಗಂಭೀರವಾಗಿದೆ. ಮಾತೆತ್ತಿದರೆ ಧರ್ಮದ ವಿಚಾರ. ಈ ದೇಶದ ಪ್ರತಿಯೊಬ್ಬನೂ ಸ್ವರ್ಗ, ಧರ್ಮ, ಆಧ್ಯಾತ್ಮ ಬಿಟ್ಟು ಬೇರೆ ನಾಲಿಗೆ ಹೊರಳಿಸೋಲ್ಲ. ನಿಮಗೇನನ್ನಿಸುತ್ತೆ ಶಾಸ್ತ್ರಿಗಳೆ, ಜನ ಈ ದಿನಗಳಲ್ಲಿ ಕೂಡ ಉಪ್ಪು, ಮೆಣಸಿನಕಾಯಿ, ಈರುಳ್ಳಿ ವಿಚಾರ ಮಾತಾಡ್ತಾರೆ ಅಂತೀರ? +ಶಾಸ್ತ್ರಿ : (ಗೊಣಗುತ್ತ) ಈರುಳ್ಳಿ ಮಾತು ಹೆಚ್ಚಾಗುತ್ತಿದೆ, ಪ್ರಭು. +ಬಿಜ್ಜಳ : ಏನಂದಿರಿ? +ಶಾಸ್ತ್ರಿ : ಈರುಳ್ಳಿ ಮಾತು ಈಚೆಗೆ ಹೆಚ್ಚಾಗುತ್ತಿದೆ. +(ಹುಡುಗಿಯರು ನಗುವರು) +ಬಿಜ್ಜಳ : ಇದು ಎದ್ದು ಕಾಣುವ ಇನ್ನೊಂದು ಗುಣ. ಬಾಯಿ ಬಿಟ್ಟರೆ ವ್ಯಂಗ್ಯ! ನಿಮ್ಮ ದುಃಖದ ಗಳಿಗೆಯಲ್ಲೂ ಹೇಗೆ ತಮಾಷೆ ಮಾಡಬಲ್ಲಿರಿ! ಮನುಷ್ಯ ಅಂದರೆ ಹೀಗಿರಬೇಕು. ತಮ್ಮ ಭಗವದ್ಗೀತೆ ಇದನ್ನೇ ತಾನೇ ಹೇಳೋದು? +(ವಿಷಯ ಬದಲಿಸುತ್ತ) +ನಿನ್ನೆಯ ಘಟನೆ ನಡೆದಾಗ ಮಗಳು ಎಲ್ಲಿದ್ದಳು? +ಶಾಸ್ತ್ರಿ : ಈ ಮೂವರೂ ಜೊತೆಗಿದ್ದರು ಪ್ರಭು. +(ಬಿಜ್ಜಳ ಹುಡುಗಿಯರತ್ತ ನೋಡುವನು) +ಉಮಾ : ಹೊಳೆಯ ದಂಡೆಯಲ್ಲಿ ಪ್ರಭು. +ಬಿಜ್ಜಳ : ಏನು ಮಾಡುತ್ತಿದ್ದಿರಿ? +ಸುಮಾ : ನೀರು ತರಲು ಹೋಗಿದ್ದೆವು ಪ್ರಭು. +ಬಿಜ್ಜಳ : (ಶಾಸ್ತ್ರಿಗೆ) ಈ ಹುಡುಗಿಯರೇ ಯಾಕೆ ನೀರು ತರಬೇಕು? +ಶಾಸ್ತ್ರಿ : ಮಡಿಯಲ್ಲಿ ನೀರು ತರುವುದು- +ಬಿಜ್ಜಳ : ಮಡಿ, ಮಡಿ! ನಿಮ್ಮ ಮಡಿಯಿಲ್ಲದಿದ್ದರೆ ಯಾವ ವಿಧವೆಯಾದರೂ ನೀರು ತರಬಹುದಿತ್ತು, ಶೂದ್ರನಾದರೂ ತರಬಹುದಿತ್ತು. ಈ ಎಲ್ಲ ಗೋಳು ತಪ್ಪುತ್ತಿತ್ತು. ಘಟನೆ ನಡೆದಾಗ ನೀವು- +ಇರಲಿ. ಅಂಥ ಪ್ರಶ್ನೆ ಎಲ್ಲಕ್ಕೂ ನಿಮ್ಮಲ್ಲಿ ಉತ್ತರ ಇವೆ. ಕಾಲಹರಣ ಬೇಡ. (ಹೆಚ್ಚು ಆರಾಮಾಗಿ ಪ್ರಶ್ನಿಸುತ್ತಾ) ಈಕೆ ಯಾರ ಮಗಳು?ಶಾಸ್ತ್ರಿ : ಶಂಕರ ದೀಕ್ಷಿತರ ಮಗಳು, ಉಮಾ ಅಂತ ಹೆಸರು. ಈಕೆ (ಸುಮಾ ಸೂಚಿಸಿ) ಗೋಪಾಲ ಪಂಡಿತರ ಮಗಳು. (ರಮಾ ಸೂಚಿಸಿ) ಈಕೆ ಶ್ರೀಕಾಂತ ದ್ವಿವೇದಿಗಳ ಮಗಳು. +ಬಿಜ್ಜಳ : ಒಟ್ಟಿನಲ್ಲಿ ಎಲ್ಲರೂ–(ವಿಷಯ ಬದಲಿಸಿ) ಶಾಸ್ತ್ರಿಗಳೆ, ಸುತ್ತಿ ಬಳಸಿ ಮಾತಾಡಬೇಡಿ. ನಿಮಗೆ ಬೇಕಾದದ್ದು ರುದ್ರನ ತಲೆದಂಡ ತಾನೆ? ಈ ಜವಾಬ್ದಾರಿ ನನಗಿರಲಿ. ಈ ನಡುವೆ ಕೆಲವು ಆತಂಕ ಇವೆ; ಬಸವಣ್ಣನವರ ಶರಣ ಸೈನ್ಯ ಕೈ ಕಟ್ಟಿ ಕೂರುವುದಿಲ್ಲ, ಆದರೆ ನಾನು ಸಂಕ್ರಾಂತಿಯ ಬಲಿಯ ಬಗ್ಗೆ ನಿರ್ಧರಿಸಿದ್ದೇನೆ. +(ಅವನ ಮಾತು ಕೇಳಿ ಸ್ತಬ್ಧರಾದ ನಾಲ್ವರು, ಮೌನ) +ಒಂದೊಂದು ಸಲ ನಿಮ್ಮನ್ನೂ ಬಸವಣ್ಣನವರನ್ನೂ ನೋಡಿದರೆ ನಾನೆಂಥ ದಡ್ಡ ಅನ್ನಿಸುತ್ತೆ. +ಶಾಸ್ತ್ರಿ : ಬಸವಣ್ಣನವರು ಭಂಡಾರ ವಹಿಸಿಕೊಂಡ ಮೇಲೆ ನಮ್ಮ ರಾಜ್ಯದ ದೇವಾಲಯಗಳಿಗೆ ಹೊಸ ಕಳೆ ಬಂದಿದೆ. +ಬಿಜ್ಜಳ : ಅನಗತ್ಯ ಕೊಂಕು ಬೇಡ, ಹೇಳಿ. +ಶಾಸ್ತ್ರಿ : ಕೊಂಕಲ್ಲ ಪ್ರಭು. ವಾಸ್ತವ ಸಂಗತಿ ಮುಂದಿಡುತ್ತಿದ್ದೇನೆ. ತ್ರಿಪುರಾಂತಕ ದೇವಾಲಯದಲ್ಲಿ ಹದ್ದು ಕಾಗೆಗಳು ಗೂಡು ಕಟ್ಟಿಕೊಂಡಿವೆ; ಬ್ರಹ್ಮ ದೇವಾಲಯದ ಛಾವಣಿ ಛಿದ್ರವಾಗಿದೆ; ನಾರಸಿಂಹ ಕಟ್ಟಡ ಶಿಥಿಲಗೊಂಡು ಮುಂದಿನ ಮಳೆಗಾಲದಲ್ಲಿ ನೆಲಸಮವಾಗಲಿದೆ. ಅರ್ಚಕರಾಗಲು ಕೂಡ ಜನ ಹಿಂಜರಿಯುತ್ತಿದ್ದಾರೆ; ಮಲಯವತಿ ದೇವಾಲಯದಲ್ಲಿ ಕಳುವಾದ ಒಡವೆ ಸಿಕ್ಕಿಲ್ಲ; ಅಲ್ಲಿಯ ಅರ್ಚಕನ ಮೇಲೆ ತಪ್ಪು ಹೊರಿಸಲಾಗಿದೆ. ಆದರೆ ಅದು ಅರ್ಚಕ ಮಾಡಿದ ಕಳುವಲ್ಲ ಎಂಬುದು ಮಕ್ಕಳಿಗೆ ಕೂಡ ಗೊತ್ತಿದೆ. +ಬಿಜ್ಜಳ : ಆಪಾದನೆಯ ಪಟ್ಟಿಯೇ ಇರುವಂತಿದೆ. +ಶಾಸ್ತ್ರಿ : ಸಂಸ್ಕೃತದ ಒಂದು ಶಬ್ದ ಕೇಳಿದರೂ ಜನ ಸಿಟ್ಟಿಗೇಳುವ, ಗೇಲಿ ಮಾಡುವ ಕಾಲ ಬಂದಿದೆ. ಬ್ರಾಹ್ಮಣರು ಊರು ಬಿಟ್ಟು ಹೋಗುತ್ತಿದ್ದಾರೆ. +(ಮೌನ) +ಶರಣರ ಉದ್ಧಟತನ ಹೆಚ್ಚುತ್ತಿದೆ. ಹೊಲೆಯರು ನದಿಯ ದಂಡೆಯ ಮೇಲೆ ಸಾಲಾಗಿ ನಿಂತು ಬ್ರಾಹ್ಮಣರು ನೀರು ಮುಟ್ಟದಂತೆ ಮಾಡುತ್ತಿದ್ದಾರೆ. +ಬಿಜ್ಜಳ : ಶಾಸ್ತ್ರಿಗಳೆ, ಇದನ್ನು ಕೇಳಿ ಕೇಳಿ ನನಗೆ ಸಾಕಾಗಿಹೋಗಿದೆ. +ಶಾಸ್ತ್ರಿ : ದೊರೆಗಳು ಒಮ್ಮೆ ದೂರು ಕೇಳಿದ ಮೇಲೆ ಮತ್ತೆ ಅದನ್ನೇ ಇನ್ನೊಮ್ಮೆ ಕೇಳುವಂತಾದರೆ- +ಬಿಜ್ಜಳ : (ಕಿರಿಕಿರಿಗೊಂಡು) ಕೇಳುವಂತಾದರೆ? +ಶಾಸ್ತ್ರಿ : ಕ್ಷಮಿಸಬೇಕು, ಪ್ರಭು. +ಬಿಜ್ಜಳ : (ಎದ್ದು) ಯಾಕೆ ಕ್ಷಮೆ? ನಾನು ಮತ್ತೆ ಮತ್ತೆ ಮೊರೆ ಕೇಳಿದರೆ- +ಶಾಸ್ತ್ರಿ : ಹಾಗಲ್ಲ, ಪ್ರಭು. +ಬಿಜ್ಜಳ : ಹೌದು ನಾನು ದುರ್ಬಲ. ಈ ಗೋಳು ಒಂದು ದಿನದ್ದಲ್ಲ. ನೀವೇ ಯಾಕೆ ಕಚ್ಚಾಡಿಕೊಂಡು ಒಂದು ನಿರ್ಧಾರಕ್ಕೆ ಬರಬಾರದು? ಅದು ನಿಮ್ಮಿಂದ ಆಗುವುದಿಲ್ಲ. ನಿಮ್ಮ ಹೆಂಗಸರು ಹೊಲೆಯರನ್ನು ನೋಡದಂತೆ ಯಾಕೆ ಮಾಡಬಾರದು? ಅದು ನಿಮ್ಮಿಂದ ಆಗುವುದಿಲ್ಲ. ಈ ದೇಶದಲ್ಲಿ ಯಾರು ನಿಜವಾದ ಶರಣ, ಯಾರು ಅಲ್ಲ ಅಂತ ಒಂದು ಪಟ್ಟಿ ಯಾಕೆ ಸಿದ್ಧಪಡಿಸಬಾರದು? ಅದು ಆಗುವುದಿಲ್ಲ! ತರುಣಿಯರೇ ಏಳಿ, ಕೊಂಚ ಹೀಗೆ ಬನ್ನಿ (ಅವರು ಮೆಲ್ಲಗೆ ಸುತ್ತುವಂತೆ ಸೂಚಿಸುವನು) ನೀವು ಕೂತಾಗ ಇಷ್ಟು ಚೆನ್ನಾಗಿದ್ದೀರಿ ಅನ್ನಿಸಿರಲಿಲ್ಲ! ವೇದ ಪುರಾಣದ ಸಂತೋಷದಲ್ಲಿ ಬೆಳೆದವರು ತಾನೆ? ಕಾಳಿದಾಸನ ವರ್ಣನೆಗೆ ಅನುಸಾರ ರೂಪುಗೊಂಡವರು ತಾನೆ? +(ಅಷ್ಟರಲ್ಲಿ ಸೇವಕ “ಬಸವಣ್ಣನವರು ಪ್ರಭು” ಎಂದು ತಿಳಿಸುವನು. ಬಿಜ್ಜಳ ಬಸವಣ್ಣನವರನ್ನು ಕರೆತರಲು ಸೂಚಿಸುವನು. ಅಷ್ಟರಲ್ಲಿ ಹುಡುಗಿಯರು ನಿಂತಿರುವರು. ಬಸವಣ್ಣ ಬಂದೊಡನೆ) +ಬಿಜ್ಜಳ : ಬನ್ನಿ ಬಸವಣ್ಣ, ಒಳ್ಳೆಯ ಸಮಯಕ್ಕೆ ಬಂದಿರಿ. ಆಕೆ ನೋಡಿ- ಉಮಾ, ಶಂಕರ ದೀಕ್ಷಿತರ ಮಗಳು, ಇವರಿಬ್ಬರು ಉಮಾದೇವಿಯ ಗೆಳೆತಿಯರು. ಇವರ ಮೂರನೆಯ ಗೆಳೆತಿಯ ಮೇಲೆ ಅತ್ಯಾಚಾರವಾಗಿದೆಯಂತೆ- ಶರಣನೊಬ್ಬನಿಂದ, ಎಂಥ ಮಾತು! +(ಬಸವಣ್ಣನವರ ಪ್ರತಿಕ್ರಿಯೆಗೆ ಕಾಯದೆ, ಶಾಸ್ತ್ರಿಗೆ-) +ನೀವು ನಿಮ್ಮ ಜಾತಿಯ ಬಗ್ಗೆ ಉದ್ದುದ್ದ ಮಾತಾಡಿದ್ದೀರಿ. ಈಗ ಮಾತಾಡಿ- ನಮ್ಮ ಬಸವಣ್ಣ ನಿಮಗೆ ತಕ್ಕ ಉತ್ತರ ಕೊಡುತ್ತಾರೆ. ನನ್ನ ಭಂಡಾರಿ ಬಸವಣ್ಣ ಯಾವುದೊಂದು ಧರ್ಮವನ್ನೂ ನಿರ್ಲಕ್ಷಿಸಬಲ್ಲರು ಅನ್ನಿಸುವುದಿಲ್ಲ; ವಿಶಾಲ ಮನಸ್ಸು ಅವರದು. ಅವರ ಅನುಯಾಯಿಗಳಾದ ಶಿವಶರಣರು ತಪಃಶಕ್ತಿಯುಳ್ಳ ಭಕ್ತರು. +(ಈ ಮಾತುಗಳು ವ್ಯಂಗ್ಯವೇ ಇಲ್ಲವೆಂಬಂತೆ ಹೇಳುತ್ತಿದ್ದಾನೆ) +ಅವರು ಇದ್ದಲ್ಲಿ ಋಷ್ಯಾಶ್ರಮದ ವಾತಾವರಣ ಮೂಡುತ್ತದೆ; ದೇವಾಲಯದ ಪ್ರಶಾಂತತೆ ನೆಲಸುತ್ತದೆ. ಅಲ್ಲವೇ ಶಾಸ್ತ್ರಿಗಳೇ? ಸುಳ್ಳು ಹೇಳಬೇಡಿ. +ಶಾಸ್ತ್ರಿ : ದೊರೆಗಳ ಮಾತನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ- +ಬಿಜ್ಜಳ : ಬಸವಣ್ಣನವರೆ? +ಬಸವಣ್ಣ : (ಯಾವ ಭಾವನೆಯನ್ನೂ ತೋರದೆ) ತಮ್ಮ ಪ್ರಶಂಸೆಗೆ ಕೃತಜ್ಞ ಪ್ರಭು. +ಬಿಜ್ಜಳ : ಆಹಾ! ಪಲಾಯನದ ಮಾತು! ಗಟ್ಟಿ ಗಂಟಲಲ್ಲಿ ನಾನು ಅರಚಿದೊಡನೆ ಒಪ್ಪುತ್ತೀರಿ. ಕೊಂಚ ಮೆತ್ತಗಾದರೆ ನನ್ನ ಬೆನ್ನೇರುತ್ತೀರಿ. ಈ ಮಧ್ಯೆ ನಿಮ್ಮ ಅಭಿಪ್ರಾಯದ ಬೆಳಕಲ್ಲಿ ನಾನು ತಪ್ಪು ಮಾಡುತ್ತೇನೆ. ಆದ್ದರಿಂದ ಪ್ರಜೆಗಳ ಅಭಿಪ್ರಾಯ ಕೇಳಬೇಕೆಂದು ಮನಸ್ಸಾಗುತ್ತದೆ. ಅವರ ಕೂಗು ಕೇಳಿ ಹುಮ್ಮಸ್ಸು ಬರುತ್ತದೆ. ನಮ್ಮ ವರದಿಗಾರ ಭಟ್ಟನ ಹತ್ತಿರ ಕತೆಯೊಂದಿದೆ, ಕೇಳುತ್ತೀರ? +ಶಾಸ್ತ್ರಿ/ಬಸವಣ್ಣ : ನಮ್ಮ ಅಭ್ಯಂತರವಿಲ್ಲ. +ಬಿಜ್ಜಳ : ಕತೆ ಹೇಳುವುದರಲ್ಲಿ ನಿಪುಣ ನಮ್ಮ ಭಟ್ಟ. +(ಕರೆಯುತ್ತ) ಭಟ್ಟಾ! (ಆತ ಬರುವನು) +ಸಭಿಕರು ಸೇರಿದ್ದಾರೆ. ಧರ್ಮಪುರಿಯ ರಾಜನ ಕತೆ ಹೇಳು. +(ಭಟ್ಟನ ಕೈಯಲ್ಲಿ ತಾಳ ಇವೆ; ಹರಿಕಥೆ ಹೇಳುವವರ ಹಾಗೆ ಇದ್ದಾನೆ. ಬಿಜ್ಜಳ ನಿಂತ ಹುಡುಗಿಯರಿಗೆ ಕೂರಲು ಸೂಚಿಸುವನು. ಭಟ್ಟ ಎರಡು ಸಲ ತಾಳ ಹಾಕಿ ಕಥೆ ಆರಂಭಿಸುವನು.) +ಭಟ್ಟ: ನಗರ ಧರ್ಮಪುರಿ. ಅಲ್ಲಿಯ ದೊರೆ, ಅಗ್ನಿರಾಜ. +ಚೆಲುವು ಮೈವೆತ್ತಂತ ದೇಶ, ಕಾರ್ಯಕ್ಕೆ ಹೆಸರಾಂತ ಚಕ್ರವರ್ತಿ- +(ಹಾಡು) ಧರ್ಮಪುರಿಯ ಸೌಭಾಗ್ಯವನ್ನು ಹೇಗೆ +ನಾನು ಬಣ್ಣಿಸಿ +ತೃಪ್ತಿ ಪಡೆವೆ ಸ್ವರ್ಗಸುಖವ ನಿಮ್ಮ +ಗಳಿಗೆ ಉಣ್ಣಿಸಿ; +ಭೂಸ್ವರ್ಗದ ರತ್ನಹಾರ ಎಂದು +ಖ್ಯಾತಿಗೊಂಡಿದೆ; +ಯೌವನದೆದೆ ಚಿಲುಮೆಯಂತೆ +ವಿಂಧ್ಯಶ್ರೇಣಿಯಲ್ಲಿದೆ. +ಹೀಗಿರಲಾಗಿ ಅಗ್ನಿರಾಜನು ಬಹಳ ಕಾಲ ಸಂತೋಷ ಸಾಗರದಲ್ಲಿ ಓಲಾಡುತ್ತಿದ್ದ; ಪ್ರಜೆಗಳ ಅಭಿಪ್ರಾಯದಂತೆ, ಮಂತ್ರಿ ಸಾಮಂತರ ಸೂಚನೆಯಂತೆ, ತನ್ನ ಆತ್ಮಸಾಕ್ಷಿಯ ಅಣತಿಯಂತೆ ರಾಜ್ಯಭಾರ ನಡೆಸುತ್ತಿದ್ದ. ಅಲ್ಲಿ ಅನ್ನ ವಸ್ತ್ರಭೂಷಣಗಳಿಗೆ, ಭಕ್ಷ್ಯ ಭೋಜನ ಧನಕನಕಗಳಿಗೆ ಕೊರತೆಯೆಂಬುದಿರಲಿಲ್ಲ. +ಆ ಅಗ್ನಿರಾಜನಿಗೆ ಒಬ್ಬಳೇ ಮಗಳು. ಹೆಸರು ಕೃತ್ತಿಕೆ. ತ್ರಿಲೋಕ ಸುಂದರಿಯಾದ, ಪ್ರಭಾ ಪುತ್ಥಳಿಯಾದ ಇವಳಿಗೆ ಅನುರೂಪನಾದ ರಾಜಕುಮಾರನಿಗಾಗಿ ಅನ್ವೇಷಣೆ ನಡೆಸಿ ಅಗ್ನಿರಾಜ ಬಹಳವಾಗಿ ಸಂಕಷ್ಟಗಳನ್ನು ಅನುಭವಿಸಿ ನಿರಾಶನಾದ. ಹೀಗಿರಲಾಗಿ ಒಮ್ಮೆ ತನ್ನ ರಾಜೋದ್ಯಾನದಲ್ಲಿ ತುಂಬು ಹುಣ್ಣಿಮೆಯ ಚಂದ್ರನ ಬೆಳಕಲ್ಲಿ ನಿಡುಸುಯ್ಯುತಿರಲಾಗಿ ಉದ್ಯಾನದ ಲತಾ ಸಮೂಹದ ನಡುವೆ ನಿಂತು ಯೌವನದಲ್ಲಿ ಮೈಮರೆತ ತನ್ನ ಪುತ್ರಿಯನ್ನು ಕಂಡು ಅಂದು ಅಗ್ನಿರಾಜನ ಶೋಕ ಉತ್ತುಂಗಸ್ಥಿತಿ ಮುಟ್ಟಿತು. +ಮರುದಿನ ಪ್ರಾತಃಕಾಲ ಅಗ್ನಿರಾಜ ಒಂದು ನಿರ್ಧಾರಕ್ಕೆ ಬಂದ. ತನ್ನ ರಾಜ್ಯದ ಪ್ರತಿಯೊಂದು ನಗರದಲ್ಲಿ ಡಂಗುರ ಸಾರಿಸಿದ. ಡಂಗುರದವರು ಕೂಗಿ ಕೂಗಿ ಹೇಳುತ್ತಾರೆ…ಜನ ಗುಂಪು ಗುಂಪಾಗಿ ನಿಂತು ಉತ್ತರ ಕೊಡುತ್ತಾರೆ…. +(ಭಟ್ಟ ಡಂಗೂರದವರನ್ನು ಅನುಕರಿಸುತ್ತಾ ಸುತ್ತ ಹೋಗಿ ತಾಳವನ್ನು ತಮ್ಮಟೆಯಾಗಿ ಬಳಸುತ್ತಾ ಹೇಳುತ್ತಾನೆ.) +ಡಂಗುರ : ಪ್ರಜೆಗಳೇ ಹೇಳಿ, ಈ ರಾಜ್ಯದ ಅತ್ಯಂತ ಸುಂದರವಾದ ವಸ್ತು ಯಾರಿಗೆ ಸೇರಬೇಕು? +ಜನ : (ನೇಪಥ್ಯದಿಂದ ನೂರಾರು ಧ್ವನಿಗಳ ಉತ್ತರ) +ಮಹಾರಾಜರಿಗೇ. +ಡಂಗುರ : ಮತ್ತೊಮ್ಮೆ ಹೇಳಿ. ಈ ದೇಶದ ಪ್ರಭಾಪುತ್ಥಳಿಯಂಥ, ಮಿನುಗು ನಕ್ಷತ್ರದಂಥ ವಸ್ತು ಯಾರಿಗೆ ಸೇರಬೇಕು? +ಜನ : ಮಹಾರಾಜರಿಗೆ, ಮಹಾಪ್ರಭುಗಳಿಗೆ. +ಬಿಜ್ಜಳ : (ಚಪ್ಪಾಳೆ ತಟ್ಟಿ) ಕೇಳಿದಿರಾ? ಹೀಗೆ ಅಗ್ನಿರಾಜನೆಂಬ ಚಕ್ರವರ್ತಿ ತನ್ನ ಮಗಳನ್ನೇ ವರಿಸಿದ. ಈ ವಿಚಾರ ಗೊತ್ತಾದೊಡನೆ ಹೊರಗೆ ಸಂತೋಷ ತೋರುತ್ತಿದ್ದರೂ ಒಳಗೆ ಜನ ಕೋಪದಿಂದ ಕುದಿಯುತ್ತಿದ್ದರು. +ಭಟ್ಟ : (ಮುಂದುವರಿಸುತ್ತ) ಕೋಪದಿಂದ ಕುದಿದ ಪ್ರಜೆಗಳು, ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಎಲ್ಲೆಲ್ಲೂ ಹಬ್ಬಿದ ಕ್ಷಾಮ, ಕ್ರೌರ್ಯ. +ಬಿಜ್ಜಳ : (ಅವನಿಗೆ ಸನ್ನೆ ಮಾಡಿ ನಿಲ್ಲಿಸುತ್ತ) ನನಗೆ ಈ ಕತೆ ಕೇಳಿದ ರಾತ್ರಿ ನಿದ್ರೆ ಬರಲಿಲ್ಲ. ನಾನು ನನ್ನ ಮಗಳನ್ನು ಮದುವೆಯಾಗಿಲ್ಲವೆಂದು ನೀವೆಲ್ಲ ಬಲ್ಲಿರಿ. ಆದರೆ ಕತೆ ಯಾಕೋ ನನ್ನ ಆಳಕ್ಕೆ ಇಳಿದಿತ್ತು. ನನ್ನ ಮನಸ್ಸನ್ನು ಅಲ್ಲಾಡಿಸಿತ್ತು. +ಭಟ್ಟ : ಮಹಾಪ್ರಭು ಬಿಜ್ಜಳರಿಗೆ ಅವೊತ್ತೊಂದು ಕನಸು ಬಿತ್ತು. +ಬಸವಣ್ಣ : ವ್ಯಕ್ತಿ ತನ್ನ ಕನಸನ್ನು ತಾನೇ ಕಾಣುತ್ತಾನೆ, ಅಲ್ಲವೇ ಪ್ರಭು. +ಬಿಜ್ಜಳ : ರಾಜನ ಕನಸು ಹಾಗಲ್ಲ, ಕೇಳಿ. +ಭಟ್ಟ : (ಪದ್ಯ ಹೇಳುವನು- ಹಾಡುವುದಿಲ್ಲ) +ಬಿಜ್ಜಳ ದೊರೆಗಳು ನಿರ್ಧರಿಸಿದರು +ಪ್ರಜೆಗಳ ಬದುಕನು ಈಕ್ಷಿಸಲು +ಜಂಗಮವೇಷದಿ ಅರಮನೆ ಬಿಟ್ಟರು +ನ್ಯಾಯಧರ್ಮಗಳ ರಕ್ಷಿಸಲು; +ಕಗ್ಗತ್ತಲು ಹಬ್ಬಿದೆ ಸುತ್ತ, +ಬೆಳೆದಿವೆ ಭಯಭ್ರಾಂತಿಯ ಹುತ್ತ +ಸದ್ದು, ಗದ್ದಲ, ಕ್ರಾಂತಿ, ರಕ್ತ- +ಬಿಜ್ಜಳ : ಆಮೇಲೆನಾಯ್ತು, ಅಲಂಕಾರವಿಲ್ಲದೆ ಹೇಳು. +ಭಟ್ಟ : ಕಗ್ಗತ್ತಲು ಮುಸುಕಿದೆ. ಜನ ಹಬ್ಬ ಆಚರಿಸುತ್ತಿದ್ದಾರೆ. ದೊಂದಿಯ ಬೆಳಕಲ್ಲಿ ಕುಣಿಯುತ್ತಿದ್ದಾರೆ. ದೊಡ್ಡದಾಗಿ ಹಾಡುತ್ತಿದ್ದಾರೆ. ಬಿಜ್ಜಳ ಪ್ರಭುಗಳು ಅವರ ಹತ್ತಿರ ಹೋದರು, ಅವರೆಲ್ಲ ಕಾವಿಯಲ್ಲಿದ್ದರು; ಮಂತ್ರಗಳನ್ನು ಹಾಡುತ್ತಿದ್ದರು, ಕುಣಿಯುತ್ತಿದ್ದರು. ಅವರ ಕುಣಿತಕ್ಕೆ ಅವರ ಮಾಂಸಖಂಡಗಳು ಮಿಂಚಿನಂತೆ ಹೊಳೆಯುತ್ತಿದ್ದವು. “ನಾನು ದೊರೆ ಬಂದಿದ್ದೇನೆ, ನಿಲ್ಲಿಸಿ” ಅಂದರು ಬಿಜ್ಜಳರು, ಅವರು ನಿಲ್ಲಿಸಲಿಲ್ಲ. ಇನ್ನೂ ಹತ್ತಿರ ಹೋಗಿ ನೋಡಿದರು. ಚಿಕ್ಕ ಮನುಷ್ಯನೊಬ್ಬನ ಸುತ್ತ ವೃತ್ತ ವೃತ್ತವಾಗಿ ಜನ ನರ್ತಿಸುತ್ತ ಬೆಂಕಿಗೆ ಎಣ್ಣೆ ಸುರಿಯುತ್ತಿದ್ದರು. ಜ್ವಾಲೆ ಆಕಾಶಕ್ಕೆ ಚಾಚುತ್ತಿತ್ತು. ಬಿಜ್ಜಳ ನೋಡುತ್ತ ನಿಂತರು. ಅವರ ಕುಣಿತ ಬಿಜ್ಜಳರಿಗೆ ಕೂಡ ಚೆಂದವಾಗಿ ಕಂಡಿತ್ತು. ತಾವೂ ಕುಣಿಯಬೇಕು ಅನ್ನಿಸಿತ್ತು, ಆದರೆ ಬೆಂಕಿ ದೊಡ್ಡದಾಯಿತು; ಗದ್ದಲ ಹೆಚ್ಚಾಯಿತು. +ಬೆಂಕಿ ತಮ್ಮ ಸುತ್ತ ಬೆಳೆಯುತ್ತಿರುವುದು ರಾಜನಿಗೆ ತಿಳಿಯಿತು. ‘ನನ್ನನ್ನು ಸುಡಬೇಡಿ’ ಅಂದರು ರಾಜರು. ಅವರು ಕೇಳಲಿಲ್ಲ, ಬೆಂಕಿ ಆರಿಸಲಿಲ್ಲ. ರುಳ ಹೆಚ್ಚಾಯಿತು. ‘ನಾನು ರಾಜ’ ಎಂದರು ಬಿಜ್ಜಳರು. ಅವರು ಕೇಳಲಿ….. +ಬಿಜ್ಜಳ : ಆಗ ನನ್ನ ಕನಸು ಮುಗಿಯಿತು. ಹೊರಗೆ ಗದ್ದಲವಿತ್ತು. ಬಂದು ನೋಡಿದರೆ ಅತ್ಯಾಚಾರದ ಸುದ್ದಿ! ನನಗೆ ಗೊಂದಲ! ಯಾವುದು ಯಾಕೆ ಎಂಬುದು ಗೊತ್ತಾಗುವುದಿಲ್ಲ. ಹೀಗೆ ಗೊಂದಲ ತುಂಬಿದ ಕ್ಷಣದಲ್ಲಿ ಬಸವಣ್ಣನವರಾಗಿದ್ದರೆ– +ಬಸವಣ್ಣ : (ಗಂಭೀರವಾಗಿ) ನಾನು ಗೊಂದಲದ ವೇಳೆಯಲ್ಲಿ ಸಂಗಮನನ್ನು ನೆನೆಯುತ್ತೇನೆ. +ಬಿಜ್ಜಳ : ಆದರೆ ನಾನು ನಿಮ್ಮ ಕೂಡಲ ಸಂಗಮನನ್ನು ನೆನೆದರೆ ಬ್ರಾಹ್ಮಣರ ಗುಂಪು ಬೊಬ್ಬೆ ಹಾಕುತ್ತದೆ; ಅವರ ಶ್ರೀಹರಿಯನ್ನು ನೆನೆದರೆ ನಿಮ್ಮ ಶರಣರು ಬೊಬ್ಬೆ ಹಾಕುತ್ತಾರೆ. ಏನು ಮಾಡುವುದೆಂದು ಗೊತ್ತಿಲ್ಲದೆ ನಾನು ನನ್ನನ್ನೇ ನೆನೆದುಕೊಳ್ಳುತ್ತೇನೆ. (ನಕ್ಕು) ಒಮ್ಮೆ ಹಾಗೆ ನೆನೆದುಕೊಳ್ಳುತ್ತಿದ್ದಾಗ ಪದ್ಮಿನಿ, (ಬಸವಣ್ಣನವರಿಗೆ) ಪದ್ಮಿನಿ ಯಾರೆಂದು ಗೊತ್ತಲ್ಲ? +ಬಸವಣ್ಣ: ಮಹಾರಾಣಿಯವರು ಯಾರಿಗೆ ಗೊತ್ತಿಲ್ಲ? +ಬಿಜ್ಜಳ : ಮಹಾರಾಣಿಯಲ್ಲ, ಮಹಾ ಹೆಂಗಸು. ಅವಳನ್ನು ನಾನಿನ್ನೂ ಮದುವೆಯಾಗಿಲ್ಲವೆಂದು ಎಷ್ಟು ಸಲ ಹೇಳಬೇಕು?(ವಿಷಯ ಬದಲಿಸುತ್ತ) ಆ ಪದ್ಮಿನಿ ನನ್ನ ಹತ್ತಿರ ಬಂದು, “ದೊರೆಗಳ ಮನಸ್ಸಿನಲ್ಲಿ ಸುಂದರ ಕಲ್ಪನೆ ಮೂಡಿದೆ” ಅಂದಳು. “ಕಲ್ಪನೆಯಲ್ಲ ಪದ್ಮಿನಿ, ವಾಸ್ತವ ಸಂಗತಿ” ಅಂದೆ. ಅದಕ್ಕವಳು, “ಅಂಥ ವಾಸ್ತವ ಕಲ್ಪನೆ ಯಾವುದು?” ಎಂದಳು. “ನಮ್ಮ ರಾಜ್ಯದ ಶರಣರ ಬಗ್ಗೆ ಯೋಚಿಸುತ್ತಿದ್ದೇನೆ. ಕಲ್ಪನೆಯಲ್ಲ” ಅಂದೆ. “ಅಂಥ ಶರಣರ ಕಲ್ಪನೆ ಯಾವುದು?” ಅನ್ನುತ್ತಾಳೆ ಹೆಣ್ಣು! ತಮ್ಮ ಮನಸ್ಸು ಮುಟ್ಟಿದ್ದೆಲ್ಲ ಕಲ್ಪನೆ ಹೆಂಗಸರಿಗೆ. ಬಸವಣ್ಣ, ನಿಮ್ಮ ಕ್ರಾಂತಿ ಆಕೆಗೆ ಕಲ್ಪನೆ! +ಶಾಸ್ತ್ರಿ : ಆದರೆ- +ಬಿಜ್ಜಳ : ಏನು ಶಾಸ್ತ್ರಿಗಳೆ? +ಶಾಸ್ತ್ರಿ : ಶರಣರಿಂದ ಕೊಲೆ, ಅತ್ಯಾಚಾರ, ದರೋಡೆ, ಮೋಸ ನಡೆದಾಗ ಅದು ಕಲ್ಪನೆಯ ಲೋಕದಿಂದ ಈ ಲೋಕಕ್ಕೆ ಬರುತ್ತದೆ ಪ್ರಭು. +ಬಿಜ್ಜಳ : ನನ್ನೆದುರು ನೀವು ಕಿತ್ತಾಡುವುದು ಸಲ್ಲ. +ಬಸವಣ್ಣ: ಶಾಸ್ತ್ರಿಗಳೆ, ನಿಮ್ಮೊಂದಿಗೆ ವಿರಸ ನನಗೆ ಇಷ್ಟವಿಲ್ಲ. +ಬಿಜ್ಜಳ : ವಿರಸವಲ್ಲ. ಹೆಂಗಸರಂತೆ ಶಾಸ್ತ್ರಿಗಳು ಉತ್ಪ್ರೇಕ್ಷಿಸಿದ್ದಾರೆ. ಅಷ್ಟೆ. ಭಟ್ಟ, ನಿನ್ನ ಕಾಲ ಹಾಳು ಮಾಡುವುದಕ್ಕೆ ಇಷ್ಟವಿಲ್ಲ. ಈ ಸುಭಿಕ್ಷದ ಬಗ್ಗೆ ಬಸವಣ್ಣನವರಿಗೆ ವರದಿ ಮಾಡಿ ನಿನ್ನ ಕೆಲಸದ ಮೇಲೆ ನೀನು ಹೋಗು- +ಭಟ್ಟ : (ಯಾಂತ್ರಿಕವಾಗಿ ದೊಡ್ಡ ದನಿಯಲ್ಲಿ ಹೇಳುವನು) +ಶರಣರು ಉಚ್ಛ್ರಾಯಕ್ಕೆ ಬರುತ್ತಿರುವ ಕಳೆದ ಐದು ವರ್ಷ ಹಿಂದಿನ ಐದು ವರ್ಷಗಳಿಗಿಂತ, ಈ ಅವಧಿಯಲ್ಲಿ ಸುಮಾರು ಎರಡು ಸಾವಿರ ಹೆಚ್ಚು ಕೊಲೆ: ನಾನೂರೈವತ್ತು ದರೋಡೆ ಪ್ರಕರಣಗಳು; ಎಂಟುನೂರು ಕಳ್ಳತನ; ಐನೂರ ನಲವತ್ತು ಅತ್ಯಾಚಾರಗಳು; ದೇವಸ್ಥಾನಗಳಿಂದ ಆಭರಣಗಳ ಅಪಹರಣ; ವ್ಯಭಿಚಾರದ ಅಸಂಖ್ಯ ಪ್ರಕರಣಗಳು; ಆರುನೂರು ಆತ್ಮಹತ್ಯೆ ಪ್ರಕರಣಗಳು: ಗಲಭೆಗಳಲ್ಲಿ ಸತ್ತವರು ಅಸಂಖ್ಯ; ಬೆಳೆಗಳನ್ನು ಭಸ್ಮ ಮಾಡಿದ ಪ್ರಸಂಗಗಳು, ಮತೀಯ ಗಲಭೆಗಳು- +ಬಿಜ್ಜಳ : ಸಾಕು ಹೋಗು. (ಹೋಗುವನು) ಶಾಸ್ತ್ರಿಗಳೆ, ತೃಪ್ತಿಯಾಯಿತೆ? ಬಸವಣ್ಣ, ತಾಳ್ಮೆ ಕಳೆದುಕೊಳ್ಳಬೇಡಿ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಈಗ ಈ ಹುಡುಗಿಯರನ್ನು ಪ್ರಶ್ನಿಸಬೇಕು. ವ್ಯರ್ಥ ಕಾಲಹರಣವಾಯಿತು. +ಬಸವಣ್ಣ : (ಕೊಂಚ ವ್ಯಂಗ್ಯದಿಂದ) ದೊರೆಗಳ ಮನರಂಜನೆಗೆ ಪ್ರಜೆಗಳ ಅಭ್ಯಂತರವಿಲ್ಲ. +ಬಿಜ್ಜಳ : (ನಕ್ಕು) ನಿಮ್ಮ ಮನರಂಜನೆಗೆ ನಾನು ಭಟ್ಟನಿಂದ ಕತೆ ಹೇಳಿಸಿದೆ. ಈಗ ಈ ಅತ್ಯಾಚಾರದ ವಿಚಾರ. +ಬಸವಣ್ಣ : (ಸಂಯಮದಿಂದ; ಸ್ಪಷ್ಟ ಗಂಟಲಲ್ಲಿ) ರುದ್ರ ನಡೆಸಿದ್ದು ಅತ್ಯಾಚಾರವೆಂಬ ಸೂಚನೆ ಕೊಡುತ್ತಿದ್ದೀರಿ. ಅದು ನಿಜವಿದ್ದರೆ ದುರುದೃಷ್ಟಕರ. ಆದರೆ ರುದ್ರನ ಬಗ್ಗೆ ವಿಶ್ವಾಸ ಬೇರೆ ಬಗೆಯದು. (ಹುಡುಗಿಯರಿಗೆ) ತಾಯಿ, ಇದು ಎಷ್ಟು ಮುಖ್ಯ ಪ್ರಶ್ನೆಯೆಂಬುದು ನಿಮಗೆ ಗೊತ್ತಿರಬೇಕು. ಎರಡು ಧರ್ಮಗಳ ಹಿತಾಸಕ್ತಿ ಇಲ್ಲಿದೆ. ರಾಜ್ಯದ ಶಾಂತಿ, ಸೌಖ್ಯ ನಿಮ್ಮ ಉತ್ತರವನ್ನವಲಂಬಿಸಿದೆ. ನೀವು ಕಂಡದ್ದನ್ನು ಕಂಡ ಹಾಗೆ, ಯಾವ ಭಯ ದಾಕ್ಷಿಣ್ಯವೂ ಇಲ್ಲದೆ ಉತ್ತರಿಸಬೇಕು. +ಹೇಳಿ ತಾಯಿ, ಈ ಪ್ರಸಂಗ ನಡೆದ ಸ್ಥಳದಲ್ಲಿ ನೀವಿದ್ದಿರಾ? +ಉಮಾ : ನಾವು ಒಟ್ಟಿಗೆ ನೀರು ತರಲು ಹೋಗಿದ್ದೆವು. +ಬಸವಣ್ಣ : ಆ ಸ್ಥಳದಲ್ಲಿ ನೀವು ರುದ್ರನನ್ನು ನೋಡಿದಿರಾ? +ರಮಾ : ನೋಡಿದೆವು. +ಬಸವಣ್ಣ : ಅವರ ಮಾತು ಕೇಳಿಸಿಕೊಂಡಿರಾ? +ಸುಮಾ : ಇಲ್ಲ, ನಾವು ದೂರಕ್ಕೆ ಹೋದೆವು. +ಬಸವಣ್ಣ : ಹಾಗಾದರೆ ನೀವು ಈ ಘಟನೆಯನ್ನು ಪ್ರತ್ಯಕ್ಷ ಕಂಡವರಲ್ಲ? +ಬಿಜ್ಜಳ : (ಅಸಹನೆಯಿಂದ) ಎಂಥ ಗೊಡ್ಡು ಪ್ರಶ್ನೆ ಕೇಳುತ್ತೀರಿ! +(ಹುಡುಗಿಯರಿಗೆ) ಹುಡುಗಿಯರೇ, ಹೇಳಿ ನೀವು ಬ್ರಾಹ್ಮಣರಲ್ಲವೇ? +ಹುಡುಗಿಯರು : ಹೌದು ಪ್ರಭು. +ಬಿಜ್ಜಳ : ರುದ್ರನ ಬಗ್ಗೆ ನಿಮಗೇನನ್ನಿಸುತ್ತದೆ? +(ಮೌನ) +ಅವನು ಕೇವಲ ಹೊಲೆಯ ಅನ್ನಿಸುತ್ತದೆಯೆ? +(ಮೌನ) +ಅವನು ಸುಂದರ ಅನ್ನಿಸುತ್ತದೆಯೆ? +(ಮೌನ) +ಅವನು ಶರಣ ಅನ್ನಿಸುತ್ತದೆಯೆ? +(ಮೌನ) +ನಾನು ನಿಮ್ಮನ್ನೇ ಕೇಳುತ್ತಿದೇನೆ! ಹೇಳಿ! ಯಾಕೆ ತೆಪ್ಪಗಿದ್ದೀರಿ! +(ಹುಡುಗಿಯರು ಅಳತೊಡಗುವರು) +ಬಸವಣ್ಣ : ಅಳಬೇಡಿ ತಾಯಿ. ದೊರೆಗಳ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಿ. +ದೊರೆಗಳೆದುರು ಸ್ತ್ರೀಯರು ಅತ್ತದ್ದನ್ನು ನೋಡಿದ್ದು ಇದೇ ಮೊದಲು. +ಬಿಜ್ಜಳ : ಬಸವಣ್ಣನವರಿಗೆ ನಗುವುದು ಕೂಡ ಗೊತ್ತಿದೆ. ನನ್ನೆದುರು ಸ್ತ್ರೀಯರು ನಕ್ಕು ನಲಿದಾಡುತ್ತಾರೆ ಅಂತ- +ಬಸವಣ್ಣ : ಹಾಗಲ್ಲ ಸ್ವಾಮಿ, ತಮ್ಮ ಹೃದಯ ಎಷ್ಟು ಮೃದು ಅಂದರೆ- +ಬಿಜ್ಜಳ : (ನಕ್ಕು) ಜಾಣ ಬಸವಣ್ಣ! ಶಾಸ್ತ್ರಿಗಳೇ ನಾನು ಬಸವಣ್ಣನವರೊಂದಿಗೆ ಮಾತಾಡುವುದಿದೆ. ಈ ಅಳುಬುರುಕ ಹುಡುಗಿಯರನ್ನು ನನ್ನ ಅಂತಃಪುರದಲ್ಲಿ ಬಿಟ್ಟು ಹೋಗಿ, ವಿಚಾರಿಸುತ್ತೇನೆ. +(ಶಾಸ್ತ್ರಿ ಮತ್ತು ಹುಡುಗಿಯರು ಹೋಗುವರು) +ಬಸವಣ್ಣನವರೇ, ನಿಮ್ಮ ರಾಜ್ಯದಲ್ಲಿ ಹಾಡಹಗಲಿನಲ್ಲಿ ಕನ್ಯೆಯರ ಮೇಲೆ ಹೊಲೆಯರ ಅತ್ಯಾಚಾರ ನಡೀತಿದೆ. +(ಮೌನ) +ಶರಣರಿಂದ ಇವತ್ತೊಂದು ಕೊಲೆ. +(ಮೌನ) +ಮಾತಾಡಿ. +(ಬಸವಣ್ಣ ಒಬ್ಬರೇ ಇರುವುದರಿಂದ ಹೆಚ್ಚು ಹೆಚ್ಚು ಒತ್ತಿ ಹೇಳುತ್ತಾನೆ. ಪರಿಸ್ಥಿತಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ) +ಬಸವಣ್ಣ : ಮೊದಲನೆಯದಾಗಿ, ಇದು ನನ್ನ ರಾಜ್ಯವಲ್ಲ, ತಮ್ಮ ರಾಜ್ಯ. +(ಮೌನ) +ಬಿಜ್ಜಳ : ಎರಡನೆಯದಾಗಿ? +(ಮೌನ) +ಬಸವಣ್ಣ : ಎರಡನೆಯದಾಗಿ, ಆತ ಹೊಲೆಯನಲ್ಲ, ಶಿವಭಕ್ತ, ಮೂರನೆಯದಾಗಿ- +(ಮೌನ) +ಬಿಜ್ಜಳ : ಹೇಳಿ. +ಬಸವಣ್ಣ : ಅದು ಅತ್ಯಾಚಾರವಲ್ಲ, ಪ್ರೇಮಪ್ರಕರಣ. +ಬಿಜ್ಜಳ : ತಿಂಗಳ ಕೆಳಗೆ ನಾನು ಒಬ್ಬ ಬ್ರಾಹ್ಮಣನಿಗೆ ತಲೆದಂಡ ವಿಧಿಸಿದೆ. +ಬಸವಣ್ಣ : ಗೊತ್ತು. +ಬಿಜ್ಜಳ : (ಲಕ್ಷಿಸದೆ) ನೀವು ಹೇಳುತ್ತಿರುವಂಥ ಪ್ರೇಮಪ್ರಕರಣಕ್ಕಾಗಿ. +ಬಸವಣ್ಣ : ಅದು ತಮ್ಮ ಚಿತ್ತ. +ಬಿಜ್ಜಳ : ಆದರೆ ಮುಖ್ಯ; ಬ್ರಾಹ್ಮಣ ತಪ್ಪಿತಸ್ಥ ಅಲ್ಲ ಅಂತ ಗೊತ್ತಿದ್ದರೂ ಕೂಡ- ತಲೆದಂಡ ಹಾಕಿದೆ. ಆದರೆ ನನ್ನ ಸಂತೋಷಕ್ಕಾಗಿ ಅಲ್ಲ. ಪ್ರಜೆಗಳ ನೆಮ್ಮದಿಗಾಗಿ. +ಬಸವಣ್ಣ : (ನಗುವನು) +ಬಿಜ್ಜಳ : (ಕೊಂಚ ಅಸಹನೆಯಿಂದ) ಇಷ್ಟು ನಿಮಗೆ ಗೊತ್ತಾದೀತೆಂದು ತಿಳಿದಿದ್ದೇನೆ. ಇವು ಪ್ರೇಮ ಪ್ರಕರಣಗಳಲ್ಲ. ಜಾತಿ ಜಾತಿಗಳ ದಬ್ಬಾಳಿಕೆ. ಅವರು ಪ್ರೇಮಿಸುವುದು ಮನುಷ್ಯರನ್ನಲ್ಲ–ಅತ್ಯಾಚಾರ ನಡೆಸುವುದು ಜಾತಿಗಳ ಮೇಲೆ. +ಬಸವಣ್ಣ : ಅವು ನನಗೆ ಅರ್ಥವಾಗದ ಮಾತುಗಳು. +ಬಿಜ್ಜಳ : ತಪ್ಪು ಮಾಡಿದವರನ್ನು ಹತ್ತಿಕ್ಕಬೇಕಾದ್ದು ನನ್ನ ಕೆಲಸ. ತಪ್ಪು ಇಲ್ಲದಾಗ ಕೂಡ. +ಬಸವಣ್ಣ : (ನಕ್ಕು) ಇಲ್ಲದಾಗ ಕೂಡ? +ಬಿಜ್ಜಳ : ಜನರನ್ನು ಹತೋಟಿಯಲ್ಲಿಡಲು ತಪ್ಪನ್ನು ಹುಡುಕಿಕೊಂಡು ಹೋಗುವುದು ಕರ್ತವ್ಯ. +ಬಸವಣ್ಣ : ದೊರೆಗಳ ಬೇಟೆ ಬೇರೆ ಬೇರೆ ರೂಪ ಪಡೆಯಬಲ್ಲದು. +ಬಿಜ್ಜಳ : ಇದು ತಮಾಷೆಯ ಮಾತಲ್ಲ. +ಬಸವಣ್ಣ : ನನಗೆ ಗೊತ್ತು ಪ್ರಭು. +ಬಿಜ್ಜಳ : ಆದರೆ ನಗುತ್ತಿದ್ದೀರಿ. +ಬಸವಣ್ಣ : ನಾನು ನಗದಿದ್ದರೆ ನಗು ಅನ್ನುತ್ತೀರಿ, ನಕ್ಕರೆ ನಗಬೇಡ ಅನ್ನುತ್ತೀರಿ. ಆದರೆ… ಆದರೆ….. +ಬಿಜ್ಜಳ : ಯಾಕೆ ಗಂಟಲು ಕೆಟ್ಟವರ ಹಾಗೆ ಒದ್ದಾಡುತ್ತೀರಿ? +ಬಸವಣ್ಣ : (ಗಂಭೀರವಾಗಿ) ತಮ್ಮ ಪ್ರಜೆಗಳ ನೆಮ್ಮದಿಗಾಗಿ ಅವರ ತಪ್ಪಿಗಾಗಿ ಹಾತೊರೆಯುವುದಾಗಿ ಹೇಳಿದ್ದೀರಿ. ಆದರೆ ನನ್ನ ಮಾತನ್ನು ಸ್ವಲ್ಪ ಕೇಳಿ. ತಮಗೆ ಅಪ್ರಿಯವೆನಿಸಿದರೂ ಹೇಳಲೇಬೇಕೇಂದು ನನಗನ್ನಿಸಿದೆ. +ಬಿಜ್ಜಳ : ಹೇಳಿ. +ಬಸವಣ್ಣ : ನಾನು ಅಧಿಕಾರಕ್ಕೆ ಅಂಟಿ ಕೂತವನಲ್ಲ. ನೀವು ಇಷ್ಟಪಟ್ಟಾಗ ನನ್ನನ್ನು ಮನೆಗೆ ಕಳಿಸಬಹುದು. +ಬಿಜ್ಜಳ : ನಾಂದಿ ಮುಗಿಯಿತಲ್ಲ, ಹೇಳಿ. (ಕುಳಿತುಕೊಳ್ಳುವನು) +ಬಸವಣ್ಣ : ಅರಮನೆಯ ಪಲ್ಲಂಗದ ಮೇಲೆ ಒರಗಿ ಸುಂದರ ಕಂಠಗಳ ಧ್ವನಿ ಕೇಳುವವರಿಗೆ ಬೀದಿಯ ಗೋಳು ತಟ್ಟುವುದು ಕಷ್ಟ. ತಮ್ಮ ಕಿರೀಟದ ಒಂದು ವಜ್ರ ಈ ದೇಶದ ಅರ್ಧ ಹೊಟ್ಟೆಗಳಿಗೆ ಅನ್ನ ಕೊಡಬಲ್ಲದು. ಚನ್ನಕೇಶವನ ಮುತ್ತಿನ ಹಾರ ಅನೇಕರ ಕಂಬನಿ ಒರಸಬಲ್ಲದು. ಇದನ್ನು ಹಲವೊಮ್ಮೆ ಹೇಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ. ಈ ರಾಜ್ಯದ ಪ್ರತಿಯೊಂದು ವಿಗ್ರಹವೂ ಬಡಜನರ ಮೂಕ ವೇದನೆಯ ಘನರೂಪವಾಗಿದೆ. ನಿಮ್ಮ ವೈದಿಕರ ಮಂತ್ರ ಅರಮನೆಯ ಗೋಡೆಗಳೊಳಗೇ ಸುತ್ತಿ ಸತ್ತು ಹೋಗಿದೆ. ಇದನ್ನು ಹೇಗೆ ಸಮರ್ಥಿಸುತ್ತೀರಿ? ನಿಮ್ಮ ಎಲ್ಲ ಕನಸು ಈ ಗೋಳಿನ ಮಧ್ಯದಿಂದ ಆರಂಭವಾಗಬೇಕು. +(ಮೌನ) +ಈ ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ನಿಮ್ಮ ಆಸಕ್ತಿ. ಇದರಲ್ಲಿ ನಿಮ್ಮ ಸುಖ ಕೂಡ ಅಡಗಿದೆಯೆಂದು ನಿಮಗೆ ಗೊತ್ತು. ಆದ್ದರಿಂದ ಭಟ್ಟರಂಥವರಿಂದ ಕತೆ ಹೇಳಿಸುತ್ತೀರಿ! ಎಲ್ಲರಲ್ಲಿ ಭಯ ಹರಡುತ್ತೀರಿ. +ನನಗೆ ಮಾತ್ರ ಈ ಎಲ್ಲದರ ಹಿಂದಣ ಮೌಢ್ಯ ದುರಂತಮಯವಾಗಿ ಕಾಣುತ್ತದೆ. ಕೊಚ್ಚೆಯಲ್ಲಿ ನರಳುವ ವ್ಯಕ್ತಿ ನಿಮ್ಮತ್ತ ನೋಡಿ ಕೈ ಜೋಡಿಸುತ್ತಾನೆ; ನಿಮ್ಮ ಪ್ರತಿಯೊಂದು ಆಸ್ತಿಯ ಲೆಕ್ಕವಿಡುತ್ತಾನೆ. ನಿಮ್ಮನ್ನು ಆಶ್ಚರ್ಯಪಡಿಸಲೇ ಸ್ವಾಮಿ? ನಿಮ್ಮ ಕಣ್ಣಿಗೆ ಎಲ್ಲೆಲ್ಲೂ ಶರಣರು ಬೀಳುತ್ತಾರೆ; ಯಾಕೆಂದರೆ ಅವರು ಎಚ್ಚೆತ್ತವರು. ಈ ದೇಶದಲ್ಲಿ ಇನ್ನೂ ಮುಕ್ಕಾಲುಭಾಗ ಜನ ಶರಣರಾಗದೆ ಇದ್ದಾರೆ; ನನ್ನ ಮಾತು ಕೇಳಿ ನಗುತ್ತಾರೆ. ಭಟ್ಟರಂತೆ ನಾನು ಕೇಳುತ್ತೇನೆ. +ಪ್ರಜೆಗಳೇ, ನನ್ನ ಪ್ರಶ್ನೆಯನ್ನು ಕೇಳಿ. +(ಭಟ್ಟನಿಗಿಂತ ಹೆಚ್ಚು ಗಂಭೀರವಾಗಿ ಜನರನ್ನುದ್ದೇಶಿಸಿ ಕೇಳುತ್ತಾನೆ) +ಬಿಜ್ಜಳ ಮಹಾರಾಜರ ಪಟ್ಟದ ಕುದುರೆಯ ಬೆಲೆ ಎಷ್ಟು? +ಜನ : (ನೂರಾರು ಕಂಠಗಳು ನೇಪಥ್ಯದಿಂದ) ಲಕ್ಷ ವರಹ. +ಬಸವಣ್ಣ : ಬಿಜ್ಜಳರ ಕಿರೀಟದ ಪಚ್ಚೆಗೆ? +ಜನ : ಲಕ್ಷ ವರಹ. +ಬಸವಣ್ಣ : ಬಿಜ್ಜಳ ಮಹಾರಾಜರು? +ಜನ : ಅಭಿನವ ದೇವೇಂದ್ರ. +ಬಸವಣ್ಣ : (ನಕ್ಕು) ವ್ಯಂಗ್ಯವಾಗಿ ಅಲ್ಲ. ಸಂತೋಷದಿಂದ ಹಾಗೆ ಹೇಳುತ್ತಾರೆ ಜನ! ದೂರದ ನಕ್ಷತ್ರಗಳ ಗುಟ್ಟು ಕಂಡುಹಿಡಿದ ಜ್ಞಾನಿಗಳಂತೆ ಹೆಮ್ಮೆಯಿಂದ +ಹೇಳುತ್ತಾರೆ! ತಮಗೆ ಗೊತ್ತಿದೆಯೋ ಇಲ್ಲವೋ- ಜನ ಮಾತ್ರ ತಮ್ಮ ಕುದುರೆಗಳ ಚುಕ್ಕೆ ಚಿತ್ತಾರಗಳ ಲೆಕ್ಕ ಇಟ್ಟು ಹರ್ಷಿಸುತ್ತಾರೆ; ತಮ್ಮ ಅಂತಃಪುರದ ಹೆಂಗಸರ ಮೂಗುತಿಗಳ ಸೌಂದರ್ಯ ಬಣ್ಣಿಸುತ್ತಾರೆ; ತಮ್ಮ ಹೆಬ್ಬಾಗಿಲ ಕಂಬಗಳನ್ನು ನೆನೆದು ಹಿಗ್ಗುತ್ತಾರೆ. ಆದರೆ ನನಗೆ ಚಳಿಗಾಲದಲ್ಲಿ ಅಂಗೈ ಅಗಲ ಬಟ್ಟೆಯಿಲ್ಲದೆ +ನಡುಗುವ ಹಸುಳೆಗಳನ್ನು ನೋಡಿ ಭಯವಾಗುತ್ತದೆ; ತಮ್ಮ ಸನಾತನಿಗಳ ಮಂತ್ರಗಳ ಗದ್ದಲಗಳ ಕಿವುಡಾದ ಹೊಟ್ಟೆಗಿಲ್ಲದ ಜನ ನೋಡಿ ನನ್ನ ದಿಗ್ಭ್ರಮೆ ಇಮ್ಮಡಿಯಾಗುತ್ತದೆ. ತಮ್ಮ ಕನಸುಗಳು ಮೈ ಪಡೆಯಬೇಕಾದ್ದು ಅಲ್ಲಿ; ಎಲ್ಲರನ್ನೂ ಮೂಕರನ್ನಾಗಿ ಇಡುವುದರಲ್ಲಲ್ಲ. ಮತ್ತೆ ನನ್ನ ಹಳೆಯ ಮಾತು ಹೇಳುತ್ತೇನೆ. ಈ ನಿಮ್ಮ ವ್ಯವಸ್ಥೆಗೆ ಜೀವ ತರುವುದಾದರೆ ನಾನು ತಮ್ಮ ಆಶ್ರಯದಿಂದ ಮುಕ್ತನಾಗಲು ಸಿದ್ಧ; ಈ ನನ್ನ ಜನರಿಗೆ ಕಿಂಚಿತ್ತು ಒಳಿತು ಮಾಡಬಲ್ಲನಾದರೆ ನಾನು ಎಲ್ಲದರಿಂದ ಬಿಡುಗಡೆ ಪಡೆಯಬಲ್ಲೆ. +ಬಿಜ್ಜಳ : (ಮೆಲ್ಲಗೆ, ತನ್ನ ಜವಾಬ್ದಾರಿ ಅರಿತು) ಆದರೆ…. ನನ್ನ ಬಿಡುಗಡೆ ಹೇಗೆ? +ಬಸವಣ್ಣ : ಅದನ್ನು ತಾವು ಬಗೆಹರಿಸಿಕೊಳ್ಳಬೇಕು. +ಬಿಜ್ಜಳ : ನಿಮಗೆ ಬಿಡುಗಡೆ ಸುಲಭ. ವೈದಿಕರ ಜನಿವಾರ ಕಿತ್ತು ಹೊರಬಂದಿರಿ ನೀವು; ಆದರೆ ನನ್ನ ಬಂಧನ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. +(ಮೌನ) +ನಾನು ಈ ವ್ಯವಸ್ಥೆಗೆ ಅಂಟಿಕೊಳ್ಳಬೇಕಾಗಿದೆ. +(ಮೌನ) +ವ್ಯವಸ್ಥೆಗಾಗಿ ತಿಂಗಳಿಗೊಂದು ಬಲಿ ಕೊಡಬೇಕಾಗಿದೆ. ಹೇಳಿ, ಶರಣರೆಂದು ಹೇಳಿಕೊಂಡು ಅತ್ಯಾಚಾರ ನಡೆಸುವವರ ಬಗ್ಗೆ ನೀವೇನೆನ್ನುತ್ತೀರಿ? +(ಮೌನ) +ಶರಣತ್ವ ಮುರಿದ ಗಳಿಗೆಯಲ್ಲಿ ಈ ರಾಜ್ಯದ ಗತಿ ಏನು? +(ಮೌನ) +ತಪ್ಪು ಮಾಡಿದ ಒಬ್ಬ ಶೂದ್ರನನ್ನು ಹಿಡಿಯುವುದು ಸುಲಭ; ಆದರೆ ತಪ್ಪು ಮಾಡಿದ ಒಬ್ಬ ಶರಣನನ್ನು ಶಿಕ್ಷಿಸುವುದು ಕಷ್ಟ- ಅಲ್ಲವೆ? +ಬಸವಣ್ಣ : ಅದು ಹೇಗೆ? +ಬಿಜ್ಜಳ : (ಅಣಕಿಸುವ ಕೊಲ್ಲುವ ಧ್ವನಿಯಲ್ಲಿ) ಹೀಗೆ. ತಾವು ತಮ್ಮ ಶರಣರಿಗೆ ಬೊಕ್ಕಸದ ದುಡ್ಡು ಹಂಚಿದಿರಿ. ನಮ್ಮ ಸೈನಿಕರಿಗೆ ಸಂಬಳ ಕೊಡುವ ಹಣವಿರಲಿಲ್ಲ. +ಬಸವಣ್ಣ : ಮೊದಲನೆ ಸುಳ್ಳು. +ಬಿಜ್ಜಳ : ಹೇಳುವವರೆಗೆ ಇರಿ. ಅದು ಹೇಗೋ ಜನಕ್ಕೆ ಗೊತ್ತಾಯಿತು. ನಿಮ್ಮ ಶತ್ರುಗಳೆಲ್ಲ ನನ್ನಲ್ಲಿ ಬಂದು ನಿಮ್ಮ ಮೇಲೆ ತಮ್ಮ ಇಪ್ಪತ್ತಾರನೇ ಚಾಡಿ ಹೇಳಿದರು- +ಬಸವಣ್ಣ : ಆಗ ನೀವು ನನ್ನನ್ನು ಕರೆಸಿ ಕೇಳಿದಿರಿ; ನಾನು ಉತ್ತರಿಸಲಿಲ್ಲ. ನೀವು ನನ್ನ ತಲೆದಂಡ ಕೇಳುವುದು ಸಾಧ್ಯವಿತ್ತು. ಆದರೆ ನೀವು ಕೇಳಲಿಲ್ಲ. ಯಾಕೆಂದರೆ ನಾನು ನಿಮಗೆ ಬೇಕು. ಎರಡನೆಯ ತಪ್ಪು ತಿಳುವಳಿಕೆ. +ಬಿಜ್ಜಳ : ಆದರೆ ಅದಕ್ಕಿಂತ ಮುಖ್ಯ! ನನ್ನಿಂದ ನಿಮ್ಮ ತಲೆ ಹಾರಿಸಲು ಆಗುತ್ತಿರಲಿಲ್ಲ. +ಬಸವಣ್ಣ : ಯಾಕೆ? +ಬಿಜ್ಜಳ : ಚಾಡಿ ಹೇಳಿದವರು ಸಾವಿರವಾದರೆ ಶರಣರು ಹತ್ತಾರು ಸಾವಿರ. +ಬಸವಣ್ಣ : ಅದು ನನ್ನ ತಪ್ಪಾಗಿದ್ದರೆ- +ಬಿಜ್ಜಳ : ಈ ರಾಜ್ಯಕ್ಕೆ ನಾನೋ ದೊರೆ ಅಥವಾ ನೀವೋ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತದೆ. ಈ ವಿಷಯ ನಿರ್ಧಾರವಾಗಬೇಕು. ಹೇಳಿ, ಈ ರುದ್ರ ಯಾರು? +ಬಸವಣ್ಣ : (ಗಂಭೀರವಾಗಿ, ನಿರ್ದಾಕ್ಷಿಣ್ಯವಾಗಿ) ನಿಮ್ಮ ದೃಷ್ಟಿಯಲ್ಲಿ ಹೊಲೆಯ, ನನ್ನ ದೃಷ್ಟಿಯಲ್ಲಿ ಶರಣ. +ಬಿಜ್ಜಳ : ಶರಣ! ಶರಣ! ಆತ ಹೇಗೆ ಶರಣ? +ಬಸವಣ್ಣ : ತಮ್ಮ ಪ್ರಜೆಗಳ ಬಗ್ಗೆ ತಮಗೆ ಭಟ್ಟ ಮಾಹಿತಿ ಕೊಡುವನೆಂದಿದ್ದೆ. +ಬಿಜ್ಜಳ : ಶರಣನಾಗಲು ಏನು ಯೋಗ್ಯತೆ ಬೇಕು? +ಬಸವಣ್ಣ : ಹಾಗಾದರೆ ಭಟ್ಟ ಮಾಹಿತಿ ಕೊಟ್ಟಿಲ್ಲ? +ಬಿಜ್ಜಳ : ನನ್ನ ಪ್ರಶ್ನೆಗೆ ಉತ್ತರ ಹೇಳಿ? +ಬಸವಣ್ಣ : ನನ್ನ ಮಾತು ಮೊದಲು ಕೇಳಿ. ಅಗ್ನಿರಾಜನ ಕತೆಯಲ್ಲಿ ಮುಖ್ಯವಾದದ್ದನ್ನು ಭಟ್ಟ ಹೇಳಲಿಲ್ಲ. +ಬಿಜ್ಜಳ : ಯಾವುದನ್ನ? +ಬಸವಣ್ಣ : ತನ್ನ ಮಗಳಲ್ಲಿ ಅನುರಕ್ತನಾದ ಅಗ್ನಿರಾಜ ಮೊದಲು ಅಭಿಪ್ರಾಯ ಕೇಳಿದ್ದು ರಾಜ್ಯದ ಸುಶಿಕ್ಷಿತರನ್ನು, ಅವರು ಆ ಮದುವೆ ಸಲ್ಲದು ಅಂದರು. ಅದಕ್ಕೆ ರಾಜ ಆ ವಿದ್ಯಾವಂತರನ್ನೆಲ್ಲ ರಾಜ್ಯದಿಂದ ಅಟ್ಟಿದ. ಆಮೇಲೆ- +ಬಿಜ್ಜಳ : ಆಮೇಲೇನು? +ಬಸವಣ್ಣ : ಮಗಳನ್ನು ಮದುವೆಯಾಗಿ ಅಟ್ಟಹಾಸದಿಂದ ಮೆರೆದ. +ಬಿಜ್ಜಳ : ನೀವಿನ್ನೂ ಈ ರುದ್ರ ಯಾರೆಂದು ಹೇಳಿಲ್ಲ. +ಬಸವಣ್ಣ : ನೀವೇ ಕೇಳಿಕೊಳ್ಳಬಹುದು, ಇನ್ನು. +ಬಿಜ್ಜಳ : ಉದ್ಧಟತನದ ಮಾತು. +ಬಸವಣ್ಣ : ನಿಮಗೆ ಹಾಗೆ ಕಾಣಿಸುತ್ತದೆ. +ಬಿಜ್ಜಳ : ಮತ್ತೆ ಕೆಣಕುತ್ತಿದ್ದೀರಿ. +ಬಸವಣ್ಣ : ಸತ್ಯ ನಿಮಗೆ ಉದ್ಧಟತನದ್ದು. ಉದಾಹರಣೆಗೆ- +ಬಿಜ್ಜಳ : ಏನು? +ಬಸವಣ್ಣ : ಹೊರಗಡೆ ಕೆಲವೇ ನಿಮಿಷಗಳ ಹಿಂದೆ ಆದ ಕೊಲೆ- +ಬಿಜ್ಜಳ : ನಿಮ್ಮ ಶರಣರು ಮಾಡಿದ್ದು. +ಬಸವಣ್ಣ : ಬಹಳ ಸಲ ನಿಮ್ಮನ್ನು ನಾನು ಮೂರ್ಖ ಅಂದಿಲ್ಲ. ಈಗ ಅನ್ನಬೇಕಾಗಿದೆ. +ಬಿಜ್ಜಳ : ಹೀಗೆ ನನ್ನನ್ನು ಬೈದು…. +ಬಸವಣ್ಣ : ನಾನು ತಪ್ಪಿಸಿಕೊಳ್ಳಲಾರೆ, ಅಲ್ಲವೆ? ಆದರೆ ಈ ಕೊಲೆ ಮಾಡಿದ್ದು ಶರಣರಲ್ಲ, ಬ್ರಾಹ್ಮಣರು. +ಬಿಜ್ಜಳ : (ನಂಬದೆ, ಆಶ್ಚರ್ಯ ಹತ್ತಿಕ್ಕಿ) ನಿಮಗೆ ಹೇಗೆ ಗೊತ್ತಾಯಿತು? +ಬಸವಣ್ಣ : ನಾನು ಜನರ ಜೊತೆಗಿದ್ದೇನೆ, ನೆನಪಿರಲಿ, ಅವರ ಉಸಿರಿನ ಲಯಬದ್ಧತೆ ಕೂಡ ನಾನು ಬಲ್ಲೆ. ಕೊಲೆ ಮಾಡಿ ಆಪಾದನೆಯನ್ನ ದೊಡ್ಡದು ಮಾಡೋದಕ್ಕೆ ಯತ್ನಿಸಿದ್ದಾರೆ. +ಬಿಜ್ಜಳ : ಇದನ್ನ ನಂಬಬಹುದೇ? +ಬಸವಣ್ಣ : (ಹೊರಟು) ನಂಬಬೇಡಿ. ನಾನು ಹೊರಟೆ. ಈ ಅಧಿಕಾರ ನನಗೆ ಬೇಡವೆಂದು ಅನೇಕ ಸಲ ಹೇಳಿದ್ದೇನೆ. ಹೇಳಿ ಹೇಳಿ ನನಗೇ ನನ್ನ ಮಾತಲ್ಲಿ ನಂಬಿಕೆ ಹೊರಟು ಹೋಗುತ್ತಿದೆ. ಅತ್ತ ಇತ್ತ ಸುಳಿವ ಮನಸ್ಸಿಗೆ ಕಡಿವಾಣ ಹಾಕಬೇಕಾಗಿದೆ. ನನ್ನನ್ನು ನಾನು ಹೆಳವನ್ನ ಮಾಡಿಕೊಳ್ಳಬೇಕಾಗಿದೆ. ದಯವಿಟ್ಟು ನನ್ನನ್ನು ನಂಬಿ. ನನ್ನನ್ನು ಈ ಬಂಧನಗಳಿಂದ ಬಿಡಿಸಿ. +(ಮೌನ, ಬಸವಣ್ಣ ನಿಧಾನಕ್ಕೆ ಮಾತಾಡುವನು) +ನನ್ನನ್ನು ವಿಶ್ವಾಸದಿಂದ ನಡೆಸಿಕೊಂಡಿದ್ದೀರಿ. ನಮ್ಮಿಬ್ಬರ ಮನಸ್ಸು ಕಹಿಯಾಗುವುದಕ್ಕೆ ಮುನ್ನ ನಾನು ಹೊರಡಬೇಕು. +(ಹೋಗುತ್ತಿರುವನು) +ಬಿಜ್ಜಳ : ಬಸವಣ್ಣಾ! +(ಬಸವಣ್ಣ ನಿಲ್ಲುವನು) +ಹೋಗಕೂಡದು. +(ಮೌನ, ಧ್ವನಿ ತಗ್ಗಿಸಿ) +ಇದು- ಅಪ್ಪಣೆಯಲ್ಲ, ಬೇಡಿಕೆ. +(ಮೌನ) +ನಾನು ಯಾರನ್ನೂ ಎಂದೂ ಬೇಡಿಲ್ಲ. ಬೇಡುತ್ತಿದ್ದೇನೆ. ಇತ್ತ ತಿರುಗಿ. +(ಬಸವಣ್ಣ ತಿರುಗಿ ಕತ್ತು ತಗ್ಗಿಸಿ ನಿಂತಿರುವನು) +ನೀವಿಲ್ಲದೆ ನನಗೆ ಬದುಕಿಲ್ಲ ಅನ್ನುವುದು ನಿಮಗೆ ಗೊತ್ತಿದೆ. ನಾನು ನಿಮ್ಮ ಶರಣನಲ್ಲ, ಆದರೂ ನನ್ನ ಮಾತಲ್ಲಿ ನಂಬಿಕೆಯಿದೆ ನಿಮಗೆ. ಪುಸ್ತಕ, ಹೆಂಗಸು, ಸ್ನೇಹಿತರು, ಸಿಂಹಾಸನ- ಎಲ್ಲ ತೊರೆದು ನಿಮ್ಮೊಂದಿಗೆ ಮೈ ಮರೆತಿದ್ದೇನೆ, ನಾನು. ನೀವು ದೇವಸ್ಥಾನದೊಳಗೆ ಕಾಲಿಡುವುದಿಲ್ಲ, ಶರಣರಲ್ಲದವರ ಮನೆಯತ್ತ ತಿರುಗಿ ಕೂಡ ನೋಡುವುದಿಲ್ಲ, ಬಿದ್ದ ಬಸದಿಗಳನ್ನು ಕಟ್ಟಿಸುವುದಿಲ್ಲ- ಆದರೆ ಅದೆಲ್ಲದರ ವಿರುದ್ಧ ಒಂದು ಮಾತಾಡಿಲ್ಲ ನಾನು. +(ಮೌನ) +ನಿಮ್ಮ ಕೆಲಸದಲ್ಲಿ ನನಗೆ ನಂಬಿಕೆಯಿದೆ. ಆದರೆ ನಿಮ್ಮಿಂದ ಹೊರಳಿ ಜನರನ್ನು ನೋಡಿದೊಡನೆ ನನಗೆ ನಗೆ ಬರುತ್ತದೆ. ಅಸಹ್ಯವಾಗುತ್ತದೆ, ನೀವು ಇಲ್ಲಿಂದ ಹೋದರೆ ಸಹಸ್ರಾರು ಜನ ಶರಣರು ತಬ್ಬಲಿಗಳಾಗುತ್ತಾರೆ. +(ಮೌನ) +ನನಗೆ ಮತ್ತೊಂದರಲ್ಲಿ ನಂಬಿಕೆಯಿದೆ. +ಬಸವಣ್ಣ : ಯಾವುದರಲ್ಲಿ? +ಬಿಜ್ಜಳ : ನನ್ನ ಅಧಿಕಾರದಲ್ಲಿ. +ಬಸವಣ್ಣ : ಈಗೇನು ಮಾಡಬೇಕು ನಾನು? +ಬಿಜ್ಜಳ : ಹೇಳಿ, ಒಬ್ಬ ಶರಣನಾಗಿದ್ದಾನೆ ಎಂಬುದಕ್ಕೆ ಏನು ಗುರುತು? +ಬಸವಣ್ಣ : ಅಂಥ ಪ್ರಶ್ನೆಗಳು ಸುಲಭ, ಚರ್ಚೆಗೆ ಕಷ್ಟ. +ಬಿಜ್ಜಳ : ಕಷ್ಟ! ಯಾಕೆ ಕಷ್ಟ! ಎಂಥ ಭಾವನೆಯನ್ನೂ ಮಾತಲ್ಲಿ ತುರುಕಿ ಒಪ್ಪಿಸಬಲ್ಲ ನಿಮಗೆ ಹೇಗೆ ಕಷ್ಟ? +(ಮೌನ. ಕ್ರೌರ್ಯದಿಂದ) +ನೀನು ಬ್ರಾಹ್ಮಣ! ಸಂಸ್ಕೃತದಿಂದ ರಾಜಮಹಾರಾಜರನ್ನು ಹತೋಟಿಯಲ್ಲಿಡುತ್ತಿದ್ದ ನೀನು ಈಗ ಕನ್ನಡದಿಂದ ಶೂದ್ರರನ್ನು ಶರಣರನ್ನಾಗಿಸಿ ಹತೋಟಿಯಲ್ಲಿಡುತ್ತೀದ್ದೀ! +ಬಸವಣ್ಣ : ಅದು ದೊಡ್ಡ ಆಪಾದನೆ. ತಮ್ಮ ದಂಡದಿಂದ ಹತೋಟಿ ಸಾಧ್ಯವಾಗದೇ ಹೋದರೆ- +ಬಿಜ್ಜಳ : ಆಪಾದನೆಯಲ್ಲ, ಸತ್ಯ. ಎಲ್ಲರೂ ಶರಣರಾಗಲು, ಇದ್ದಕ್ಕಿದ್ದಂತೆ ಭಕ್ತರಾಗಲು ಹೇಗೆ ಸಾಧ್ಯ? ಕುಡಿಯುವ, ಕೊಂದು ತಿನ್ನುವ ಅಭ್ಯಾಸ ನಿಮ್ಮ ಮಾತುಗಳಿಂದ ತೊಳೆದುಹೋಗುತ್ತದೆಂದು ನಂಬುವುದು ಹೇಗೆ ಸಾಧ್ಯ? ಬಸವಣ್ಣ, ನೀವು ಕುರಿ ಕೊಲ್ಲುವುದನ್ನು ತಪ್ಪಿಸಿದರೆ ಈ ಜನ ಮನುಷ್ಯರನ್ನು ಕೊಲ್ಲುತ್ತಾರೆ! ನಾವಿವತ್ತು ನಿಮ್ಮ ರುದ್ರನನ್ನು ಬಲಿಕೊಡದಿದ್ದರೆ ಈ ಜನ ನನ್ನನ್ನು ಬಲಿ ಕೊಡುತ್ತಾರೆ +(ಧ್ವನಿ ತಗ್ಗಿಸಿ) ನಿಮ್ಮ ಕಾವಿ ಧರಿಸಿದ ಶರಣ ಜನ ಸಾಲುಸಾಲಾಗಿ ಊಟದ ಮನೆಗೆ ಹೋಗುತ್ತಿರುವುದನ್ನು ನೋಡಿ ನಕ್ಕಿದ್ದೇನೆ ಬಸವಣ್ಣ. ಭಕ್ತರಿಗೆ ಹೊಟ್ಟೆ ಕೂಡ ಇದೆಯೆಂಬುದನ್ನು ಕಂಡು ವಿಸ್ಮಯಗೊಂಡಿದ್ದೇನೆ. ಅವರ ಈ ಭಜನೆಯ ಗದ್ದಲ ನನಗೆ ತಮಾಷೆ ಅನ್ನಿಸಿದೆ. ಈ ಊಟ, ಈ ಭಜನೆಯ ಅವಸರದಲ್ಲಿ ಪಾಳುಬಿದ್ದ ಗದ್ದೆಗಳನ್ನು ನೀವು ನೋಡಿಲ್ಲ. ಬ್ರಾಹ್ಮಣರ ಮಂತ್ರಗಳಂತೆಯೇ +ಶರಣರ ವಚನಗಳು ಕೂಡ ಉತ್ತು ಬೆಳೆ ಕೊಡಲಾರವು. +ನಾಳೆ ಸಂಕ್ರಾಂತಿ, ಸೂರ್ಯ ತನ್ನ ಪಥ ಬದಲಿಸುವ ವೇಳೆ, ಭೂಮಿಗೆ ರಕ್ತ ಎರೆಯಬೇಕು. +ಬಸವಣ್ಣ : ಈ ರಕ್ತದಾಹ ನನಗೆ ಅರ್ಥವಾಗುತ್ತಿಲ್ಲ. +ಬಿಜ್ಜಳ : ತಮ್ಮ ಅಹಿಂಸೆಯ ಹುಚ್ಚು ಕೂಡ ನನಗೆ ಅರ್ಥವಾಗುತ್ತಿಲ್ಲ. ಯೋಚಿಸಿ. ಮುಂಗಾರಲ್ಲಿ ಹೊಡೆವ ಸಿಡಿಲಿಗೆ ಹಿಂಸೆ, ಅಹಿಂಸೆಯ ಪರಿವೆಯಿಲ್ಲ! ಉಕ್ಕುವ ಸಮುದ್ರ ಸಾವಿರಾರು ಜೀವಗಳನ್ನು ಕೊಂದು ಹಿಂಸೆ, ಅಹಿಂಸೆಯ ತೊಳಲಾಟವಿಲ್ಲದೆ ಹಿಂದಕ್ಕೆ ಸರಿಯುತ್ತದೆ, ಬಿರುಗಾಳಿಗೆ ಸಿಕ್ಕ ಮರ ಬಿದ್ದೊಡನೆ ಅಕ್ಕಪಕ್ಕದ ಹಕ್ಕಿ ಪಕ್ಷಿಗಳು ನೆಲಕ್ಕೆ ಬಿದ್ದು ಸಾಯುತ್ತವೆ. ಭೂಮಿಯ ಒಡಲಿಂದ ಕತ್ತು ಚಾಚುವ ಸಸಿಗಳು ಹಲವೊಮ್ಮೆ ಶಕ್ತಿ ಸಾಲದೆ ಕಮರಿಹೋಗುತ್ತವೆ. ಸಂಕ್ರಾಂತಿಯಂದು ಸೂರ್ಯ ದಕ್ಷಿಣಕ್ಕೆ ಸರಿಯುತ್ತಾನೆ, ಗರ್ಭಿಣಿ ಭೂಮಿತಾಯಿಯ ಬಯಕೆ ತೀರಿಸಬೇಕಾದ್ದು ನನ್ನ ಕರ್ತವ್ಯ. +(ಹೊರಗಡೆ ಘೋಷಣೆಗಳ ಗದ್ದಲ ಶುರುವಾಗುತ್ತದೆ) +ವ್ಯಾಘ್ರ ಇದ್ದಕ್ಕಿದ್ದಂತೆ ಕೂಗುತ್ತಿದೆ…. +ಬಸವಣ್ಣ : ಮನುಷ್ಯ ಜಗತ್ತು ಬಿಟ್ಟು ದೊರೆಗಳು ನಿಸರ್ಗದ ಸಂಕೇತಗಳಲ್ಲಿ ಮುಳುಗುತ್ತಿದ್ದೀರಿ. +ಬಿಜ್ಜಳ : ಅದು ಕೇವಲ ವ್ಯಂಗ್ಯವಾದೀತು- +ಬಸವಣ್ಣ : ಹೇಗೆ? ಹೇಗೆ ವ್ಯಂಗ್ಯ? ಸಮುದ್ರ, ಬಿರುಗಾಳಿ, ಬಿರು ಮಳೆಗಳ ಉದಾಹರಣೆಯಲ್ಲಿ ವಾಸ್ತವ ಸ್ಥಿತಿಯಿಂದ ತಪ್ಪಿಸಿಕೊಳ್ಳುವವನು ಮನುಷ್ಯ ಮಾತ್ರ. ಇಂಥ ಹೋಲಿಕೆಗಳು ಸಮುದ್ರದ ಆಸಕ್ತಿ ಕೆರಳಿಸಬಲ್ಲವೆಂದು ನನಗನ್ನಿಸುವುದಿಲ್ಲ. ತಮಗೂ ಗೊತ್ತಿರಬೇಕು- ಹುಲಿಗಳ ಜಗತ್ತಿನಲ್ಲಿ ಬಡ ಹುಲಿ ಶ್ರೀಮಂತ ಹುಲಿ ಪುರೋಹಿತ ಹುಲಿ ಹೊಲೆಯ ಹುಲಿ ಇರುವುದಿಲ್ಲ; ಇದೆಲ್ಲಾ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು-ಕೀಳಿನ ಪರಿವೆಯಿಲ್ಲ. ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಅದು ಮನುಷ್ಯನ ಕೈಯಲ್ಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ. +ಬಿಜ್ಜಳ : ಅದನ್ನೇ ನಾನು ಹೇಳುತ್ತಿರುವುದು (ಎಂದು ತರ್ಕದ ಸೋಲಿನಿಂದ ನಕ್ಕು) ನನಗೆ ನಿಮ್ಮಷ್ಟು ಸೊಗಸಾಗಿ ಹೇಳಬರುವುದಿಲ್ಲ- ಅಷ್ಟೇ, (ಹೆಚ್ಚು ಗಂಭೀರವಾಗಿ) ನಾನು ಮತ್ತು ನೀವು ಮಾಡುವ ಎಲ್ಲ ವರ್ಗೀಕರಣ ಮೀರಿ ಸೂರ್ಯ ಬೆಳಗುತ್ತಾನೆ; ಅಂದರೆ- ನಮ್ಮ ಪಾಠ, ಪ್ರವಚನ… ವಚನಗಳನ್ನು ಮೀರಿ ಜೀವಶಕ್ತಿ ಉಕ್ಕುತ್ತದೆ. ಇದಕ್ಕೆ ಅಡ್ಡ ಬಂದಾತ… ಜೀವ ವಿರೋಧಿ ತಾನೆ? +(ದೂತನೊಬ್ಬ ಪ್ರವೇಶಿಸುತ್ತಾನೆ) +ದೂತ : ಪ್ರಭುಗಳು ಮನ್ನಿಸಬೇಕು. ತಮ್ಮ ಅಪ್ಪಣೆಯಂತೆ ರುದ್ರನನ್ನು +ಕರೆತರಲಾಗಿದೆ. +ಬಿಜ್ಜಳ: ಉಡುಗಿ ಎಲ್ಲಿ? +ದೂತ: ಷಾದೇವಿ ಬರಲು ನಿರಾಕರಿಸಿದರು. +ಬಸವಣ್ಣ : ಆಕೆ? +ದೂತ: ಕೆ ಬೇಟೆಗೆ ಹೋದರು. +ಬಿಜ್ಜಳ: ಅರಿ, ಹೋಗು, ರುದ್ರನನ್ನು ಕಳುಹಿಸು. (ದೂತ ಹೋಗುವನು) ನೋಡಿದಿರಾ! ನಮ್ಮ ಮಾತಿಗೆ ಉದಾಹರಣೆ ದೊರೆಯುತ್ತಿದೆ! +ನಗುವನು) +ಬಸವಣ್ಣ: ಉಡುಗಿ ವಿಚಿತ್ರವಾಗಿ ತೋರುತ್ತಾಳೆ. +ಬಿಜ್ಜಳ : ದರೆ ನನಗೆ ಮಾತ್ರ ಕ್ಷಣಕ್ಷಣಕ್ಕೆ ಈ ಪ್ರಕರಣದಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ! ಈ ‘ಪ್ರೇಮ’ ನಿಜಕ್ಕೂ ಗೂಢಾರ್ಥಗಳಿಂದ ಕೂಡಿದೆ. +ರುದ್ರ ಬರುವನು. ಬಿಜ್ಜಳ ಹೆಚ್ಚು ಲವಲವಿಕೆಯಿಂದಿದ್ದಾನೆ) +ರ್ರುದ್ರ : ಉದ್ರ ಅಂತ ಪ್ರಭು. +ಬಿಜ್ಜಳ : ಇನ್ನ ಹೆಂಡತಿ ಯಾಕೆ ಬರಲಿಲ್ಲ. +ರ್ರುದ್ರ : ಅಂದಿನ್ನೂ ಮದುವ್ಯಾಗಿಲ್ಲ ಸ್ವಾಮಿ. +ಬಿಜ್ಜಳ : ತುಂಟತನದಿಂದ) ನೀನಿನ್ನೂ ಮದುವೆಯಾಗದ ಹುಡುಗಿ ಯಾಕೆ ಬರಲಿಲ್ಲ? +ರ್ರುದ್ರ : ಕೀಗೆ ತುಂಬಾ ದಣಿವಾಗಿತ್ತು ಸ್ವಾಮಿ. +ಬಿಜ್ಜಳ : ಉಳ್ಳು, ಆಕೆ ಬೇಟೆಗೆ ಹೋದಳೆಂದು ನನ್ನ ಸೇವಕ ಹೇಳುತ್ತಾನೆ. ಬ್ರಾಹ್ಮಣರ ಹುಡುಗಿಯೊಬ್ಬಳು ಬೇಟೆಗೆ ಹೋದದ್ದು ಇದೇ ಮೊದಲ ಸಲ, ಅಲ್ಲವೇ ಬಸವಣ್ಣ? ಅಥವಾ ಎರಡನೆ ಸಲವೋ? +ಬಸವಣ್ಣ : ಆವೇ ಹೇಳಬೇಕು. +ಬಿಜ್ಜಳ : ತ….ಆಕೆಯ ಮೊದಲ ಬೇಟೆ, ಅಲ್ಲವೆ? (ರುದ್ರನಿಗೆ) ನೀನು ಶರಣ ಆದದ್ದು ಯಾವಾಗ? +ರ್ರುದ್ರ : ಊರು ವಾರದ ಕೆಳಗೆ ಪ್ರಭು. +ಬಿಜ್ಜಳ : ಈನು ಶರಣ ಅನ್ನೋದಕ್ಕೆ ಗುರುತೇನು? +ರ್ರುದ್ರ : ಎಲ್ಲ ಗುರುತನ್ನ ಕಿತ್ತೊಗೆಯೋದೆ ಶರಣತನ ಅಂದ- +ಬಿಜ್ಜಳ : ಂತ ಬಸವಣ್ಣ ಹೇಳಿದ್ದಾರೆ. ಉತ್ತರಿಸಿ, ಶರಣನಾಗಲು ನಿನ್ನ ಯೋಗ್ಯತೆ ಏನು? +ರ್ರುದ್ರ : ಉತ್ತರಕ್ಕಾಗಿ ತಡಕಾಡುತ್ತ) ಯಂಥೋರೂ ಶರಣ ಆಗ್ಬಹುದು ಅಂತ- +ಬಿಜ್ಜಳ : ಂತ ಬಸವಣ್ಣ ಹೇಳಿದ್ದಾರೆ! +ಬಸವಣ್ಣ : ಉದ್ರ ಎದೆಗೆಡಬೇಡ, ಪ್ರಭುಗಳು ನಿನ್ನ ಮೇಲೆ ಕೋಪಗೊಂಡಿದ್ದಾರೆ- +ಬಿಜ್ಜಳ : ಉಳ್ಳು, ನನಗೇಕೆ ಕೋಪ ಬರಬೇಕು? ನೀವೇ ಹೇಳಿ ಬಸವಣ್ಣ, ನನಗೇಕೆ ಕೋಪ ಬರಬೇಕು? +ಬಸವಣ್ಣ : ಗತಾನೆ ತಾವು ರುದ್ರನ ಅತ್ಯಾಚಾರ- +ಬಿಜ್ಜಳ : ತತ್ತರಿಸುತ್ತ)- ಅತ್ಯಾಚಾರ! ನೋಡಿ, ನಿಮ್ಮ ಬಾಯಲ್ಲೇ ಅತ್ಯಾಚಾರದ ಮಾತು ಬರುತ್ತವೆ. ಈ ಮಾತುಗಳೇ ಒಂದು ಸಮಸ್ಯೆ. ಪ್ರೇಮಾ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ- ಯಾವುದನ್ನ ಮಾಡಲು ಹೋಗಿ ಯಾವುದನ್ನ ಮಾಡುತ್ತೇವೋ ದೇವರೇ ಬಲ್ಲ; ಅದರಲ್ಲಿ ನಿನ್ನದು ಯಾವುದು? +ರ್ರುದ್ರ : ಂದರೆ…. +ಬಸವಣ್ಣ : ಓಡಿದಿರಾ ಪ್ರಭು! ಪ್ರೇಮಿಸಿದ ವ್ಯಕ್ತಿಗೆ ತನ್ನ ಪ್ರೇಮದ ವಿಚಾರವೇ ಗೊತ್ತಿಲ್ಲ! ಅದಕ್ಕೆ ಹೆಸರಿಟ್ಟು ಪಾಪ ಮಾಡುವವರು ನಮ್ಮಂಥವರು. +ಬಿಜ್ಜಳ : ನಾದರೂ ಇರಲಿ; ನಾಳೆ ಸಂಕ್ರಾಂತಿ ಹಬ್ಬಕ್ಕೆ ನಾನು ಮತ್ತು ಬಸವಣ್ಣ ನಿಮ್ಮ ಊರಿಗೆ ಬರುತ್ತೇವೆ. +ಬಸವಣ್ಣ : ರಭುಗಳು ನನಗೆ ತಿಳಿಸಿರಲಿಲ್ಲ. +ಬಿಜ್ಜಳ : ಗ ತಿಳಿಸುತ್ತಿದ್ದೇನೆ. +ಬಸವಣ್ಣ: ಗಲಿ ಪ್ರಭು. +ರ್ರುದ್ರ : ಅಂತೋಷ ಪ್ರಭು. +ಬಸವಣ್ಣ : ಓಗು. ದೊರೆಗಳ ಆಗಮನಕ್ಕೆ ಊರಲ್ಲಿ ಸಿದ್ಧತೆ ನಡೆಸು- +ರುದ್ರ ಹೊರಡುವನು) +ಬಿಜ್ಜಳ : ಇಲ್ಲು, ನಾಳೆ ನಾನು ಮುಖ್ಯವಲ್ಲ. ಬಸವಣ್ಣ ನಿಮ್ಮ ಅತಿಥಿ. ಶರಣ ಬಸವಣ್ಣನವರ ಆಗಮನಕ್ಕೆ ಸಿದ್ಧತೆ ಮಾಡು. ನಿಮ್ಮೂರ ಶರಣರನ್ನು ನಾನು ನೋಡಬೇಕಾಗಿದೆ. ಶರಣರ ಸಭೆಯಲ್ಲಿ ಭಾಗವಹಿಸಬೇಕೆಂದು ಆಸೆಯಾಗಿದೆ. +ರ್ರುದ್ರ : ಪ್ಪಣೆ ಪ್ರಭು. +(ರುದ್ರ ಹೋಗುವನು) +ಬಿಜ್ಜಳ : ಗ ನಮ್ಮ ಜಗಳ ಬಗೆಹರಿಯಿತು. ದಯವಿಟ್ಟು ಮತ್ತೆ ನನ್ನ ಮನಸ್ಸು ಕಲಕುವ ಶರಣಗಿರಣರ ವಿಚಾರ ಎತ್ತಬೇಡಿ. +ಬಸವಣ್ಣ : ಆನಿನ್ನು ಹೋಗಿ- +ಹೊರಡುವನು) +ಬಿಜ್ಜಳ : ಊತುಕೊಳ್ಳಿ. ನೀವಿಲ್ಲದಿದ್ದಾಗ ನನಗೆ ಏಕಾಂತತೆಯ ಭಯ. ಏನನ್ನಾದರೂ ಮಾತಾಡಿ. +ಬಸವಣ್ಣ ನಿಲ್ಲುವನು) +ಬಸವಣ್ಣ : ರಭುಗಳಿಗೆ ವಿಶ್ರಾಂತಿ ಬೇಕೆಂದು ಕಾಣುತ್ತದೆ. +ಬಿಜ್ಜಳ : ಅತ್ತೆ ನನ್ನ ಕಿರೀಟ, ವಜ್ರ, ಆನೆ, ಕುದುರೆಗಳ ಲೆಕ್ಕ ಹಾಕಿ ನನಗೆ ತಲೆನೋವು ತರಬೇಡಿ. +ಬಸವಣ್ಣ : ಕೂತು ಯೋಚಿಸಿ) ಆಶ್ಚರ್ಯ ಪ್ರಭು. ನಾನು ಸಮಾಜದ ಅನ್ಯಾಯ, ದಬ್ಬಾಳಿಕೆಗಳನ್ನು ಪ್ರತಿಭಟಸಿತ್ತೇನೆ. ಆದರೆ ಅನ್ಯಾಯಕ್ಕೆ ತುತ್ತಾದ ಜನ ಬಂದು ಕಿರೀಟ, ಒಬ್ಬ ರಾಜರನ್ನ ನೋಡಿ ತಮ್ಮೆಲ್ಲ ನೋವನ್ನು ಮರೆಯುವುದನ್ನು ನೋಡಿ ಬೆರಗಾಗಿದ್ದೇನೆ. ಇದನ್ನು ಹೇಗೆ ವಿವರಿಸಲಿ? ಅವರಿಗೆ ಇದರಿಂದ ಸಂತೋಷವಾಗುವುದಾದರೆ ಅದನ್ನು ಸಂತೋಷವಲ್ಲ ಎಂದು ಹೇಗೆ ಹೇಳಲಿ? +ಬಿಜ್ಜಳ : ನಿಜವಾದ ಪ್ರೀತಿಯಿಂದ) ಇದು ನಿಜವಾದ ಬಸವಣ್ಣ. ನನ್ನ ವ್ಯವಸ್ಥೆ, ನಿಮ್ಮ ಕ್ರಾಂತಿ- ಎರಡನ್ನೂ ಮೀರಿದ್ದು ಇದ್ದೀತು- ಅಲ್ಲವೆ? +ಬಸವಣ್ಣ : ಅನ್ನ ಮಾತಲ್ಲೇ ನನ್ನನ್ನು ಸಿಕ್ಕಿಸಿ ಬೇಕಾದರೆ ಸಾಯಿಸಿ, ಆದರೆ- +ಬಿಜ್ಜಳ : ದರೆಗೀದರೆಯ ಸೆರೆಯಲ್ಲಿ ಸಿಕ್ಕು ನರಳಬೇಡಿ. ಕೊಂಚ ಮಂದಹಾಸ ಬೀರಿ ಬಸವಣ್ಣ. ನಾನು ನನ್ನ ಮಾತಲ್ಲಿ ಸಿಕ್ಕು, ನೀವು ನಿಮ್ಮ ಮಾತಲ್ಲಿ ಸಿಕ್ಕು ಸಾಯುತ್ತೇವೆ. ಇಲ್ಲಿ ಪಟ್ಟ ಸುಖ ಮಾತ್ರ ಎಲ್ಲೆಲ್ಲೂ ಹಬ್ಬುತ್ತೆ, ಆದರೆ- +ಬಸವಣ್ಣ : ಇಮ್ಮ ಆದರೆಗೀದರೆ- +ಬಿಜ್ಜಳ : ಇಮ್ಮ ಪ್ರಭಾವ! ಮೊದಲು ನಿಮ್ಮನ್ನು ಮೆಚ್ಚಿದ್ದು ಕೇವಲ ನಿಮಗಾಗಿ! ಆಮೇಲೆ ನಿಮ್ಮ ಮಾತೂ ನನ್ನ ಬೆನ್ನಟ್ಟಿದವು. ನಿಮ್ಮ ಹಾಗೆ ಕೊಂಚವೂ ನಗದೆ, ಹೀಗೆ ಹಲ್ಲುಕಚ್ಚಿ- +ಇದ್ದಕ್ಕಿದ್ದಂತೆ ನಕ್ಕು) +ಅರತೇಬಿಟ್ಟಿದ್ದೇ ! ಓ ಹೋ ಹೋ! +ಬಸವಣ್ಣ : ನು? +ಬಿಜ್ಜಳ : ಅನ್ನ ಹಲ್ಲೊಂದು ಬಿದ್ದುಹೋಗಿದೆ! ಚಕ್ರವರ್ತಿಯ ಹಲ್ಲು ಬಿದ್ದಿದೆ! ನಿನ್ನೆ ರಾತ್ರಿ ಆ ಕೇರಳದ ಜನ- +ಬಸವಣ್ಣ : ತುಂಟತನದಿಂದ) ಜನ ಅಲ್ಲ, ಕೇರಳದ ಹುಡುಗಿಯರು- +ಬಿಜ್ಜಳ : ಓಡಿ! ನೋಡಿ! ನೀವೇ ನನ್ನ ಅಶ್ಲೀಲ ಯೋಚನೆಗೆ ಕಾರಣ! +ಬಸವಣ್ಣ : ಒಳ್ಳೇ ಕಾರ್ಯದಲ್ಲಿ ಹಲ್ಲು ಬಿದ್ದಿದೆ. ಅದಕ್ಕೆ- +ಬಿಜ್ಜಳ : ಈವೆಷ್ಟೇ ಗಂಭೀರವಾಗಿ ಕಂಡರೂ- +ಗಂಭೀರವಾಗಿ, ಸ್ಪಷ್ಟವಾಗಿ, ತನಗೇ ಎಂಬಂತೆ) +ಬಸವಣ್ಣ : ಆಂಭೀರ್ಯ! ನಿಜವಾದ ಗಾಂಭೀರ್ಯ ನೋವಿನಲ್ಲಿದೆ ಬಿಜ್ಜಳರೇ. ನನ್ನ ನೋವು ಒಂದು ಬಗೆಯದಲ್ಲ. (ಹೆಚ್ಚು ಲವಲವಿಕೆಯಿಂದ) ಉದಾಹರಣೆಗೆ, ನಿಮ್ಮ ಹಲ್ಲನ್ನು ಎಲ್ಲಿ ಎಸೆದಿರಿ? ನಾಳೆ ಚಕ್ರವರ್ತಿಗೆ ಹಲ್ಲು ಬಿದ್ದಿದೆ ಅಂತ ಡಂಗುರ ಸಾರಿ; ಇಡೀ ದೇಶವೇ ಆಶ್ಚರ್ಯ ಸಂಭ್ರಮದಿಂದ ಎದ್ದು ನಿಲ್ಲುತ್ತದೆ. ನಾಳೆ ನಾನು ಜೋಳದ ರಾಶಿಯನ್ನು ಮುತ್ತಾಗಿಸಲಿ; ಇಡೀ ದೇಶವೇ ನನ್ನ ಮನೆಯೆದುರು ನೆರೆಯುತ್ತದೆ. ಅಂಥ ವೇಳೆಯಲ್ಲಿ ನನ್ನ ಧೈರ್ಯವೆಲ್ಲ ಹೊರಟು ಹೋಗಿ ಭಿಕಾರಿಯಂತಾಗಿ ಸಂಗಮನ ಮರೆ ಹೋಗುತ್ತೇನೆ. ಕೆಲವು ಸಲ ಈ ಜನರ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾ- +ಬಿಜ್ಜಳ : ನಕ್ಕು) ಈಗ ನಿಮ್ಮ ಮುಖ ಹೇಗೆ ಕಾಣುತ್ತೆ! +ಬಸವಣ್ಣ : ಮಂದ ನಗೆ) ಹೇಗೆ? +ಬಿಜ್ಜಳ : ಯೋಚಿಸುತ್ತಾ) ಚಂದ್ರನ ಹಾಗೆ?-ಛಿ! +ಬಸವಣ್ಣ : ಆಕೆ? +ಬಿಜ್ಜಳ : ಉಖ ನಿಜಕ್ಕೂ ಚಂದ್ರನ ಹಾಗೆ ಗುಂಡಗಿದ್ದರೆ, ಸೀಳಿದ್ದರೆ, ಬಾಗಿದ್ದರೆ, ಎಷ್ಟು ಅಸಹ್ಯ! ಅದಕ್ಕೆ ನೋಡಿ ನನಗೆ ಕಾವ್ಯ ವರ್ಣನೆ ಬೇಸರ ತರುತ್ತೆ. +ಬಸವಣ್ಣ : ಮುಗುಳ್ನಗುತ್ತ) ಕಾವ್ಯ ಬದುಕಿಗೆ ಕಂಪು ಕೊಡುತ್ತೆ ಪ್ರಭು. +ಬಿಜ್ಜಳ : ಔದು. ಕೆಲವರಿಗೆ ಕಂಪು ಕಾವ್ಯದಿಂದ ಬರುತ್ತೆ, ಮತ್ತೆ ಕೆಲವರಿಗೆ ಕನ್ಯೆಯರಿಂದ ಬರುತ್ತೆ, ಕನ್ಯೆಯರಿಗೆ ಅಭಾವ ಬಂದಾಗ ಕಾವ್ಯಕ್ಕೆ, ಧರ್ಮಕ್ಕೆ ಹೋಗುತ್ತೇವೆ. ನಿಮ್ಮ ಹರ್ಷದ ಗಳಿಗೆಯಲ್ಲಿ ಹೇಳಿದ್ದೀರಿ- ನೆನಪಿದೆಯ: ಗಂಧವತೀ ಪೃಥವೀ. +ಬಸವಣ್ಣ : ಎನಪಿಲ್ಲ. +ಬಿಜ್ಜಳ : ಈವು ಮಾತಾಡುತ್ತೀರಿ; ನಾನು ಮಾತಿನ ಹಿಂದಿನ ಕಂಪ ಹುಡುಕುತ್ತೇನೇ. ಬಡವರ ಚಿಂದಿಬಟ್ಟೆಗಳ ಮೇಲೆ ಕಣ್ಣು ನೆಟ್ಟ ನಿಮಗೆ ಅವರ ಗಂಧವತೀ ಪೃಥಿವಿಯ ಇರವು ಹೇಗೆ ತಿಳಿಯಬೇಕು- +ಬಸವಣ್ಣ : ಅನ್ನ ಮಾತಲ್ಲಿ ನನ್ನ ಸಿಕ್ಕಿಸಬೇಡಿ- +ಬಿಜ್ಜಳ : ಧ್ವನಿಯೆತ್ತರಿಸಿ, ಮುಖ್ಯಾಂಶಕ್ಕೆ ಬಂದು) ಭೂಮಿಯ ವಾಸನೆ ನೋಡಿ ಎಷ್ಟು ದಿನವಾಯಿತು! ಹುಡುಗಿಯೊಬ್ಬಳು ಈ ವಾಸನೆಗೆ ಮರುಳಾಗಬಹುದೆಂಬ ಸಂದೇಹ ಕೂಡ ನಿಮಗೆ ಬರುತ್ತಿಲ್ಲ. +ಬಸವಣ್ಣ ಕುತೂಹಲದಿಂದ ನೋಡುತ್ತಿದ್ದಾಗ) +ಆಳೆಯ ಸಂಕ್ರಾಂತಿ ನಮಗೆ ಮತ್ತೊಮ್ಮೆ ಭೂಮಿಯ ವಾಸನೆ ತರಬೇಕು. ಮಾತಿನಲ್ಲಿ ಮುಳುಗಿದ ನಮಗೆ ನಾಳೆ ರುದ್ರನ ರಕ್ತ ಭೂಮಿಯ ನೆನಪು ಮಾಡಿಕೊಡಬೇಕು! +ಕತ್ತಲು) +ಐದನೆಯ ದೃಶ್ಯ +ಮೊದಲನೆ ದೃಶ್ಯದಂತೆ. ಸಂಕ್ರಾಂತಿ ಹಬ್ಬದ ಸಿದ್ಧತೆ ನಡೆದಿದೆ. ಗರಿಯುಳ್ಳ ಕಬ್ಬು ಮತ್ತು ಮಾವಿನ ಸೊಪ್ಪು ಕಟ್ಟುತ್ತಿರುವ ಹಳ್ಳಿಗರು. ಮೊದಲ ಮತ್ತು ಮೂರನೆ ದೃಶ್ಯದ ‘ವ್ಯಕ್ತಿ’ಗಳೂ ಇದ್ದಾರೆ. ಉಜ್ಜ ಉತ್ಸಾಹದಿಂದ ಹಾಡಿಕೊಳ್ಳುತ್ತ ಕೆಲಸ ಮಾಡುವವರಿಗೆ ನೆರವಾಗುತ್ತಿದ್ದಾನೆ. ನಾಲ್ಕೈದು ಜನ ಅವನ ಮೇಳದಂತೆ-ಕೆಲಸ ಮಾಡುತ್ತಲೇ-ಹಾಡಿನ ಸಾಲುಗಳನ್ನು ಪುನರುಚ್ಚರಿಸುತ್ತಾರೆ) +ಉಜ್ಜ : (ಹಾಡುವನು) +ಗೆದ್ದೇ ಗೆಲ್ತಾನಂತ ನಾನು ಮುಂಚೆ ಹೇಳಿದ್ದೆ! ಮಗ, +ಕಡವೆ ದಾಟಿ ಬರ್ತಾನಂತ ಕೂಗಿ ಹೇಳಿದ್ದೆ; +ಏಳು ಹೆಡೆಯ ಹಾವ ಹಿಡಿದು ಬರ್ತಾನಂದಿದ್ದೆ ! ಮಗ, +ಹತ್ತು ಮೆಟ್ಟಿನ ಹುಲಿಯ ಗೆದ್ದು ಬರ್ತಾನಂದಿದ್ದೆ…. +ಹೊಲೇರ ಹಟ್ಟಿ ಹ್ಯಂಗೆ ನೋಡು ಚಂದಾಗೈತಿ! ಈಗ +ಊರ ಮುಂದಲ ಕರೀಯವ್ವ ಕುಣದಂಗೈತಿ… +ಗೆದ್ದೇ ಗೆಲ್ತಾನಂತ ನಾನು…. +ವ್ಯಕ್ತಿ ೧ : ಪದ ಹೇಳ್ತಾ ಕುಂತುಬಿಟ್ಯಲ್ಲ ಉಜ್ಜಣ್ಣ, ಮಗ ಎಲ್ಲಿ? +ಉಜ್ಜ : (ಹಾಡುವನು) +ಆಜರವನ ಕರೆಸಿಕೊಂಡು ಪಗಡಿಯಾಡ್ತಾರೋ! +ಅಂಗ, ಆಜುಬಾಜಿನ ಜನಗಳೆಲ್ಲ ಕುಣಿದಾಡ್ತಾರೋ- +ವ್ಯಕ್ತಿ ೨: ಈ ಮುದುಕ ನೆಟ್ಟಗೆ ಮಾತಾಡದ್ನೆ ಮರತಂಗೈತಿ ಮಾರಾಯ. +ಉಜ್ಜ : (ಇನ್ನೂ ಜೋರಾಗಿ) +ಅಸವಣ್ಣಾರು ಅವನ ಜೋತಿ ಓಡಾಡ್ತಾರೋ! +ಅಂಗ, ಹೊಲ್ಯಾರ ಹುಡುಗ ಮಚ್ಚಿಕಳ್ಳಲೇ, +ಇಂಗ್ಯಾತಕೋ. +ವ್ಯಕ್ತಿ ೪ : ವನಿಗೆ ಹುಚ್ಚೇ ಹತ್ತೆತಿ ಕಣೋ. +ವ್ಯಕ್ತಿ ೩: ಹುಜ್ಜಪ್ಪ, ಹುಜ್ಜಪ್ಪ, ನಿನ್ನ ಪದ ಕೇಳಿ ಕೇಳಿ ನಮ್ಮ ಕಿವಿ ತೂತು ಬಿದ್ದು ಹೋಗಿದಾವೆ, ಗೊತ್ತಾತಾ? ಸಂಕ್ರಾಂತಿ ಹಬ್ಬ ಬಂತು ಅಂತ ಅದ್ಯಾಕಪ್ಪ ಅಷ್ಟು ಹಿಗ್ಗತೀ? +ವ್ಯಕ್ತಿ ೧ : ಸಂಕ್ರಾಂತಿ ಅಂತ ಅಲ್ಲಪ್ಪ. ಮಗಂಗೊಂದು ಹೆಣ್ಣು ಸಿಗ್ತು ಅಂತ. +ವ್ಯಕ್ತಿ ೪ : ಅಲ್ಲ ಕಣಲೇ, ಇವತ್ತಿಗೆ ಹೆಂಡಗಿಂಡ ಕಂಡಗಿಂಡ ಎಲ್ಲ ನಿಲ್ಲಸಬೇಕಲ್ಲ? +ವ್ವ್ಯಕ್ತಿ ೫ : ಹೂ ನಿನ್ನ ! ಸೊಸಿ ಕಣೋ, ಸೊಸಿ ನೆನಸಿಕೊಂಡು ಅಂತಾನೆ ಪದ. +ವ್ಯಕ್ತಿ ೪ : ಅಲ್ಲೊ ಉಜ್ಜಣ್ಣ, ನಿನ್ನ ಸೊಸೀ ಎಲ್ಲಿ, ಕಣ್ಣೀಗೆ ಬೀಳ್ತಿಲ್ಲವಲ್ಲ? +ಉಜ್ಜ : ನನ್ನ ಸೊಸೀ ನಿನ್ನ ಕಣ್ಣೀಗೆ ಹೆಂಗಲೇ ಬೀಳ್ತಾಳೆ, ಹುಚ್ಚನನ ಮಗನೆ. ನೀನೇನು ನನ್ನ ಸೊಸೀ ಮಂಗನ ಮುಸುಡಿ ಈರಭದ್ರಿ ಅಂತ ತಿಳಿದ್ಯಾ? ಆ ಮುಡಿಕಮನಿ ಹೂಸುಬುರುಕಿ ಅಂತ ತಿಳಕೊಂಡ್ಯ? ಅಗಸೆಮನಿ ಒಂಟಿಕಾಲಿನ ಕರಿಬಸವಿ ಅಂದು ಕೊಂಡ್ಯ? ಪಂಡಿತರ ಮಗಳು ಕಣೋ ಬೆಳವ, ಪಂಡಿತ್ರ ಮಗಳು? ಹಾರವಯ್ಯನ ಹಕ್ಕೀನ ಹಾರಿಸಿಕೊಂಡು ಬಂದು ಮಡಿಕ್ಕೊಂಡವನೆ ಭೀಮಸೇನ ಮಗ, ನೋಡಾಕೆ ಆಸ್ಯಾದ್ರೆ ಆ ಬೇಲಿ ತಾವ ಓತಿಕಾಟನ ಹಂಗೆ ಕುಂತು ಪಿಳಿಪಿಳಿ ಕಣ್ ಬಿಟ್ಟು ನೋಡ್ತೀರು. ಕೆಂಚನ ಸಂಗಡ ಗದ್ದೀತಾವ ಹೋಗ್ಯಾಳ ಗದ್ದೀತಾವ! +ವ್ಯಕ್ತಿ ೪ ಆ , ಆಗಲೇ ಗದ್ದೀತಾವ ಹೋದಳಾ? ಅಲ್ಲ ಬ್ಯಾಟಿ ಆಡಾಕೆ ಹೋದ್ಲು ಅಂತ- +ಉಜ್ಜ : ಗದ್ದಿಕಡಿಂದ ಗಿಡಕ್ಕೋಗ್ತಾಳೆ. ಗಿಡಕ್ಕೆ ಹೋಗಿ ಬ್ಯಾಟಿ ಆಡಿಕಂಡು ಬರ್ತಾಳೆ, ಗೊತ್ತಾತಾ? +ಈ ಮಾತು ಕೇಳಿ ಜನ ಕುತೂಹಲದಿಂದ ಹೆಚ್ಚು ಗದ್ದಲ ಮಾಡುತ್ತ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವರು) +ವ್ಯಕ್ತಿ ೧ : ಬ್ಯಾಟಿಗೆ ಹೋದಳಂತಲ್ಲಪ್ಪ ಈ ಪ್ಯಾಟಿ ಹುಡುಗಿ! +ವ್ಯಕ್ತಿ ೨ : ಬ್ಯಾಟಿ ಬಿಡ್ರಿ ಅಂದ್ರಲ್ಲ ಬಸಣ್ಣಾರು! +ವ್ಯಕ್ತಿ ೩ : ಬ್ಯಾಟಿ ಹ್ಯಂಗಪ್ಪ ಬಿಡಾಕಾದೀತು, ನನ್ನ ಬಾಯಾಗೆ ಆಗಲೇ ನೀರು ಸುರಿಯಾಕ ಹತ್ತೇತಿ, ಸುಮ್ಕಿರಲೇ. +ವ್ಯಕ್ತಿ ೨ : ಮತ್ಯಾಕಪ್ಪ ಬಸವಣ್ಣಗೆ ಮಾತು ಕೊಡಬೇಕಿತ್ತು? +ವ್ಯಕ್ತಿ ೩ : ಮಾತಿಗೆ ಮಾತಾತು, ಕೆಲಸಕ್ಕೆ ಕೆಲಸಾತು. ಹಂಗೈತಿ ಹೊಡೆತ! +(ಎಂದು ಚಪ್ಪಾಳೆ ತಟ್ಟಿ ನಗುವನು) +ವ್ಯತ್ತಿ ೨ ಲ್ಲಪ್ಪ ಉಜ್ಜಣ್ಣ, ನಿನ್ನ ಮಗಂಗೆ ರಾಜರು ಹೇಳಿಕಳಿಸಿದ್ರು ಅಂದ್ಯಲ್ಲಪ್ಪ, ಖರೇನಾ? +ವ್ಯಕ್ತಿ ೪ : ನಿಂತ ಕಾಲುಮ್ಯಾಲೆ ನಿಂತಂಗೇ ಬಂದುಬಿಡು ಅಂದ್ರಂತೆ, ಹೌದಾ? +ವ್ಯಕ್ತಿ ೧ : ರುದ್ರ ಉಟ್ಟಬಟ್ಟ್ಯಾಗೆ ಒಂದೇ ಕಿರ್ದಿಗೆ ಕಾಲುಕಿತ್ತನಂತೆ? +ವ್ಯಕ್ತಿ ೨ : ಏನು ಮಾಡ್ತಾರೋ ರಾಜರು ಅಂತ ಅಂಜಿದನಂತೆ? +ಉಜ್ಜ : ಯಾಕಪ್ಪ ಹೆದರಿಕಂತಾನೇ? ಅವನೇನು ನಿನ್ನಂಗೆ ಗುಬ್ಬಚ್ಚೀನ? +ವ್ಯಕ್ತಿ ೨ : ನಂಗ್ಯಾಕೋ ಗುಬ್ಬಚ್ಚೀಂತಿ, ತರಲೆ ಮುದುಕ? +ವ್ಯಕ್ತಿ ೧ : ನಿನ್ನ ಮಾತು ಅತೀ ಆತು ಕಣೋ ಉಜ್ಜಣ್ಣ. +ಉಜ್ಜ : ನೀವು ಕೇಳೋದ್ಯಾಕೆ, ಮಾತು ಬ್ಯಾಡ ಅನ್ನೋದ್ಯಾಕೆ. ಒಳ್ಳೆ ಪಡಿಸೆಂಟು ನನಮಕ್ಕಳ ಸಾವಾಸ….. +ವ್ವ್ಯಕ್ತಿ ೫ : ಮಂಗಗಳ ಸುದ್ಯಾಕೆ ಹೇಳಪ್ಪ. +ವ್ಯಕ್ತಿ ೧ : ಬ್ಯಾಸರಾಗೇತಿ ಹೇಳಪ್ಪ. +ವ್ಯಕ್ತಿ ೨ : ಬ್ಯಾಡಾಂದ್ರೆ ಬಿಡ್ತೀಯಾ ನೀನು, ಹೇಳು, ಹೇಳು, ಹೇಳು, ಹೇಳಿ ಸಾಯಿಸ್ತಿ ನಮ್ಮ, ಹೇಳು. +ಎಲ್ಲರೂ : ಏಳಪ್ಪ, ಸುಮ್ಕಿರಲೇ ಹೇಳ್ಳಿ. ಹೇಳಪ್ಪ, ಹೇಳು- +ಉಜ್ಜ : ನನ್ನ ಮಾತು ಬೇಕಾದ್ರೆ ಒಂದು ತೊಟ್ಟು ಚೌಡವ್ವನ ಕೊಡು. +ವ್ಯಕ್ತಿ ೨ : ಈ ಹದ್ದಿನ ತಲಿಗಿಲಿ ನೆಟ್ಟಗಿಲ್ಲ ಕಣೋ. +ವ್ಯಕ್ತಿ ೩ : ಹಂಗಂದ್ರೇನಪ್ಪ? +ಉಜ್ಜ : ಚೌಡವ್ವ ಅಂದ್ರೆ ತಿಳೀದ ನೀವು ಹೆಂಗಪ್ಪ ನನ್ನ ಮಾತು ತಿಳ್ಕಂತೀರಿ? +ವ್ಯಕ್ತಿ ೨ : ಗೊತ್ತಪ್ಪ, ನಿನ್ನ ಚೌಡವ್ವ ಗೊತ್ತಿಲ್ಲವಾ? ಕೆಂಚ ಬಂದನೇನು ನೋಡ್ರೋ ಅವನ ಹತ್ರ ಚೌಡವ್ವ ಇರತತಿ. +ವ್ಯಕ್ತಿ ೪ : ಹಂಗಂದ್ರೇನೂಂತ- +ವ್ಯಕ್ತಿ ೨ : ಹಂಗಂದ್ರೆ ಹೆಂಡ, ಭೂತ ಅಂದ್ರೆ ಕಂಡ. ತಿಳೀತ? +ಒಬ್ಬ ಅಷ್ಟರಲ್ಲಿ ಗುಡಿಸಲಿಗೆ ಹೋಗಿ ಹೆಂಡ ತಂದಿರುವನು) +ವ್ವ್ಯಕ್ತಿ ೫ : ಕಾ ತಗೋ, ನಿನ್ನ ಚೌಡವ್ವ. +ಉಜ್ಜ : (ಆನಂದದಿಂದ) ತಂದ್ಯ ಚೌಡವ್ವನ್ನ. (ಕುಡಿಯುವನು) ಹ್ಞು ಕೇಳ್ರಪ್ಪ. (ಗದ್ದಲ ಮಾಡುತ್ತಿರುವ ಜನರನ್ನು ಕುರಿತು) ಕೇಳ್ರೋ ನನ್ನ ಸರದಾರ್ರ! ನನ್ನ ಸೊಸೀ- +ವ್ಯಕ್ತಿ ೨ : ಅಲ್ಲಪ್ಪ ಬಸವಣ್ಣಾರು- +ಉಜ್ಜ : ಮಾತೆತ್ತಿದರೆ ಬಸಣ್ಣ, ಬಸಣ್ಣ ಅಂತ ಗುಬ್ಬೀ ಹಂಗೇ ಬಾಯ್ಬಿಡ್ತೀಯಲ್ಲಲೇ- +ಎಂದು ವ್ಯಕ್ತಿ ೨ಕ್ಕೆ ಗುದ್ದುವನು. ಗುದ್ದಿಸಿಕೊಂಡವನು ‘ಹೋ’ ಎಂದು ಸರಿಯುವನು; ಇತರರು ನಗುವರು. ಉಜ್ಜ ಮಾತ್ರ ಬಹಳ ಗಂಭೀರವಾಗಿ) +ಏಳ್ರೋ ಕೆಲಸಕ್ಕೆ ಬಾರದ ದಡ್ಡ ನನಮಕ್ಕಳಾ! ಕೇಳ್ರಿ. ನೆನ್ನೆ ಸಂಜೀಕಡೀಗೆ ನನ್ನ ಮಗ ಹೊಂಟನಲ್ಲ- +ವ್ಯಕ್ತಿ೧ ಔದಪ್ಪ, ಹೊಳೀ ಕಡೆ ಹೊಂಟ, ಹುಡುಗೀತಾವ- +ಉಜ್ಜ : (ಹೆಮ್ಮೆಯಿಂದ ಸುಳ್ಳು ಸೇರಿಸುತ್ತ) ಹ್ಯಂಗೆ ಹೊಂಟ ಅಂತೀ- ಆ ಹುಡುಗೀ ಹೊತ್ತುಕಂಡ್ ಬರದಿದ್ರೆ ನಾ ಉಜ್ಜಣ್ಣನ ಮಗ ಅಲ್ಲ ಅಂತ ಹೊಂಟ. ನಂಗೂ ಅನುಮಾನಿತ್ತು- ಇಂವ ನನ ಮಗನೇನೋ ಸೈ- ಆದರ ಈ ಹಾರವರ ಹೆಣ್ಣ ಹ್ಯಂಗಪ್ಪ ತರತಾನೆ ಅಂತ ನಾನೂ ಹೊಂಟೆ. ಅವನು ಮುಂದೆ, ನಾನು ಹಿಂದೆ; ಮಗ ಮಾಡಾಕೆ, ನಾ ನೋಡಾಕೆ, ಅಲ್ಲಿ ನೋಡ್ತೀನಿ- +ವ್ಯಕ್ತಿ ೨ : (ಹೊಡೆಸಿಕೊಂಡ ಸಿಟ್ಟಿನಿಂದ) ಅದೆಲ್ಲಾ ಗೊತ್ತು ಬಿಡೋ. +ಉಜ್ಜ : ಗೊತ್ತಿದ್ರೆ ಇನ್ನೊಂದು ಪಟ ಕೇಳಿದ್ರೆ ನಿನ್ನಜ್ಜನ ಗಂಟೇನು ಹೋಗ್ತದೋ? ಕೇಳು. ಹುಡುಗಿ ಅಂತಾಳೆ. “ನಿಮ್ಮೂರಾಗೆ ಏನೇನೈತಿ?” ಅಂತ. ರುದ್ರ ಅಂತಾನೆ “ನಮ್ಮಪ್ಪ ಅದಾನೆ, ನಮ್ಮ ಆಕಳದಾವೆ, ನಮ್ಮ ಜನ ಅದಾರೆ” ಅಂತ. ಹುಡುಗಿ ಬಾಯಿಬಾಯಿ ಬಿಟ್ಕಂಡು ಕೇಳ್ತವಳೆ! ಇನ್ನೇನು ಬಂದ ಕೆಲಸ ಆತಲ್ಲ ಅಂತ ನಾ ಮನೀಗೆ ಬಂದೆ. ಬೈಗಾಗಿತ್ತು. ಪಡವಲ ದಿಕ್ಕೆಲ್ಲ ಹರೇದ ಹೆಂಗಸಿನ ತುಟೀ ಹಂಗೆ ಕೆಂಪಗಾಗೈತಿ. ಜಂಗಳಿ ದನ ಧಡಧಡ ಊರಿಗೆ ಬರತಾ ಇದಾವೆ. ಆಕಾಸದಾಗೆ ಚುಕ್ಕಿ ಮಿನಮಿನ ಅಂತ ಮಕ್ಕಳಂಗೆ ನಗ್ತಿದಾವೆ…. +ವ್ಯಕ್ತಿ ೩ : ಅದೆಲ್ಲ ಇರ್ಲಿ, ಹೇಳಪ್ಪ. +ಉಜ್ಜ : ಜಗಲಿ ಮ್ಯಾಲೆ ಕುಂತು ನೋಡ್ತೀನಿ- ದೂರದಾಗೆ ಬರ್ತೀದಾನೆ ನನ್ನ ಸರದಾರ! ಅವನ ಮಗ್ಗುಲಾಗೆ ಹುಡುಗಿ! ಕೈ ತಗಂಡು ಹಿಂಗೆ (ಎಂದು ಒಬ್ಬನ ಸೊಂಟಕ್ಕೆ ಕೈ ಹಾಕಿ ತೋರುವನು) ಆಕೀ ಸೊಂಟದ ಸುತ್ತ ಹಾಕಿದಾನೆ. ಹ್ಯಂಗಿದಾಳೆ ಹುಡುಗಿ- ಥಳಥಳ ಬೆಳಗಿಟ್ಟ ಗಿಂಡಿ ಹಂಗೆ ಹೊಳೀತಿದಾಳೆ! ಎಲಾ ಮಗನೆ ಹೊಲೇರ ಹಟ್ಟಿಗೆ ಚೌಡವ್ವ ಬಂದಂಗಾತು ಅಂತ ತಕತಕ ಕುಣೀತಿದೇನಿ ನಾನು! ನಾ ಕುಣೀತಿದ್ರೆ ಆಕೆ ಏನ್ ಮಾಡಿದ್ಲು ಗೊತ್ತ? +ವ್ಯಕ್ತಿಗಳು : ಏನು ಮಾಡಿದ್ಲು? ಏನು ಮಾಡಿದ್ಲು? +ಉಜ್ಜ : (ಪ್ರದರ್ಶಿಸುತ್ತ) ಧಡಧಡ ಓಡಿ ಬಂದು ನನ್ನ ರಟ್ಟೆ ಹಿಡಕಂಡು ಕುಣಿಯಾಕ್ ಹತ್ತಿದ್ಲು! ಕುಣದ್ಲು, ಕುಣದ್ಲು, ಕುಣದ್ಲು- ನನ್ನ ತಲೆ ಗಿರಾಗಿರಾ ತಿರುಗೋತಂಕ ನನ್ನ ಮಗ ನಿಂತು ನೋಡ್ತಾ ಹೊಟ್ಟೇಕಿಚ್ಚು ಪಡೋತಂಕ ಕುಣದ್ಲು! ನನ್ನ ಕಿವಿ ತಾವ ಅಂತಾಳೆ, “ಮಾವಯ್ಯ, ಮಾವಯ್ಯ” ಅಂತ ನಾನಂತನೀ, “ಅಮ್ಮಯ್ಯ, ಅಮ್ಮಯ್ಯ” ಅಂತ. +ಇಬ್ಬರು ಮ್ಯಾಲೇನಾತು? ಆಮ್ಯಾಲೆ? +ಉಜ್ಜ : ಹೇಳೋತಂಕ ಮುಚ್ಚಕಂಡಿರು! “ಬಾರವ್ವ ಸೊಸಿ, ಒಳಗೆ” ಅಂದೆ. ನಗ್ತಾಳೆ, ನನ್ನ ಸೊಸಿ ನಗ್ತಾಳೆ. ಬಾಳೆಗಿಡ ಗೊನಿ ಬಿಟ್ಟಂಗೆ! ಬರತಾಳ ಒಳಗೆ- ಗಂಗಾಳ ಚೆಂಬು, ಚಟ್ಟಿಗೆ, ಗುಡಾಣ, ಬಾಂಡ್ಳಿ, ಬಲೆ, ಕುಕ್ಕೆ- ಎಲ್ಲಾ ಮುಟ್ಟುತಾಳೆ. ಮುಟ್ಟಿ ಮುಟ್ಟಿ ನೋಡ್ತಾಳೆ! ಆರು ತಿಂಗಳ ಕೂಸಿನಂಗೆ! ಕೋಳೀ ಕುಕ್ಕೆ ತಗದು ತತ್ತೀ ಕೈಯಾಗೆ ಹಿಡಕಂಡು ಮುಸಮುಸ ನಗ್ತಾಳೆ! ಕಂಬಳಿ ಹೊದ್ಕೊಂಡು ಎಷ್ಟು ಬೆಚ್ಚಗೈತಿ!” ಅಂತ ಉಲ್ದಾಡ್ತಾಳೆ! +ವ್ಯಕ್ತಿ ೪ : ಸೊಸಿ ಅಂದ್ರೆ ಹಿಂಗಿರಬಕಪ್ಪ. +ಉಜ್ಜ : ಮತ್ತೆ! ಮತ್ತೆ! ಆ ಕೆಂಚ- +ವ್ಯಕ್ತಿ ೨ : ಹಡಾಣಿ ಕೆಂಚ! ಅವನೂ ಸರಣನಲ್ಲವೇನೋ? +ಬಸವಣ್ಣ- +ಉಜ್ಜ : ಶರಣಾಗಾನ ಸುಮ್ಮಕಿರಲೇ ಬಸ್ಯಾರಿಕೆ! +ಊಡಲಮನಿ ನಿಂಗಿ ಶರಣ್ಯಾಗ್ತಾಳಂತೆ! ಅಗಸೆಮನಿ ಕುಂಟಿ ವಚನ ಹಾಡ್ತಾಳಂತೆ! ಈರಭದ್ರಿ ಬಸಣ್ಣೋರ ಹಿಂದೆ ಹೋಗ್ತಾಳಂತೆ! ನನ್ನ ಸೊಸೀ ನೋಡ್ರೋ, ಗಿಣೀ ಹಂಗೆ ಹಾಡ್ತಾಳೆ, ನವಲಿನಂಗೆ ಕುಣೀತಾಳೆ, ಮೊಗೀನಂಗೆ ಮಾತಾಡ್ತಾಳೆ! ಬ್ಯಾಟೀ ಆಡ್ತಾಳೆ! (ನಕ್ಕು) ಬ್ರಾಂಬ್ರ ಜಾತಿಗೆ ಕಲ್ಲು ಬಿತ್ತು! ಅಲ್ಲೋ ನಿಂಗ್ಯ, ನಿನ್ನ ಸೊಸೀ ನನ್ನ ಸೊಸೀ ಇದುರು ಒಂದು ಗುಂಜಿನ ತೂಕ ಬಂದಾಳೇನು! ಆ? ಅಲ್ಲೋ, ಊರ ಮರ್ವಾದಿ ನೋಡ್ರೋ! ಈ ಹೊಲೇರ ಹಟ್ಯಾಗೆ ಬ್ರಾಂಬ್ರು. +ವ್ಯಕ್ತಿ೧ ಆಲಿಡಾಕಿಲ್ಲ, ಬ್ರಾಂಬ್ರು. +ವ್ಯಕ್ತಿ ೩ : ನೋಡಿದ್ರೆ ಹೋಗಿ ಮೈ ತೊಳಕಂತಾರೆ ಅಂತೀನಿ. +ವ್ಯಕ್ತಿ ೪ : ಚಣಕ್ಕನೆ ಹಾರಿ ಮಂತ್ರ ಹೇಳ್ತಾರಪ್ಪ! +ವ್ಯಕ್ತಿ ೨ ನೆನಪಿಸುತ್ತ) ಅಲ್ಲಪ್ಪ, ನಿನ್ನ ರುದ್ರ- +ವ್ಯಕ್ತಿ ೩ : ಬಿಜ್ಜಳ ರಾಜರು ಕರಿಸಿದ್ರಂತೆ? +ಉಜ್ಜ : ಅದ ಹೇಳಾಕೇ ಅಲ್ಲ ಬಂದದ್ದು… ಮಗ ರುದ್ರ (ಜಾಗ ತೋರಿಸಿ) ಇಲ್ಲಿ ನಿಂತಿದ್ದ. ಬಂದ ಒಬ್ಬ ರಾಜರ ಬಂಟ. ಅವನ ನೋಡಿ ಸೊಸೀ ಕೆಂಡ ಆದಳು. ಅವನು ಹಿಂಗೆ ಮಿಮಿರ ನೋಡ್ತಾನೆ, ಸೊಸೀ ಹಿಂಗೆ ತಿನ್ನೋಳಂಗೆ ನೋಡ್ತಾಳೆ. ಬಂಟ ಅಂತಾನೆ “ಇಲ್ಲಿ ರುದ್ರ ಅಂಬೋನು ಯಾರು?” ನನ್ಮಗ “ನಾನೇ ರುದ್ರ” ಅಂತಾನೆ. “ರಾಜರು ನಿನ್ನ ಕರೀತಿದಾರೆ, ಬಾ” ಅಂತಾನೆ. ರುದ್ರ ಹೊರಟು ನಿಂತಾನೆ, ಆಗ ಸೊಸಿ- +ವ್ಯಕ್ತಿಗಳು : ನಂದ್ಲು? ಏನಂದ್ಲು? +ಉಜ್ಜ : (ನಾಟಕವನ್ನೇ ಆಡುತ್ತಿದ್ದಾನೆ) “ಅವನು ಬರಲ್ಲ ಹೋಗು” “ಯಾಕವ್ವ ಯಾಕೆ ಬರಾಕಿಲ್ಲ, ಅವನ ಜೋಡಿ ನೀನೂ ಬರಬೇಕಂತೆ ಬಾ” “ನಾನ್ಯಾಕೆ ಬರ್ಲಿ? ನಾನ್ಯಾತಕ್ಕಂತೆ?” “ಯಾತಕ್ಕೆ ಗೀತಕ್ಕೆ ಕೇಳಬ್ಯಾಡ, ತ್ಯಪ್ಪಗೆ ಬಾ” ಅಂತಾನೆ ಸರದಾರ. ಅದಕ್ಕಂತಾಳೆ ಸೊಸಿ “ಕಪಿ ತರ ಬಂದೆ, ಕಪಿ ತರ ಹೋಗು. ನಾ ಬ್ಯಾಟಿಗೆ ಹೋಗ್ತೇನಿ.” +ವ್ಯಕ್ತಿ ೪ : ಮಗ ಸುಂಕೇ ಹೋದ್ನ? +ಉಜ್ಜ : ಹೊಂಟ ಮಗ, ಸೊಸಿ “ಬ್ಯಾಡ, ಹೋಗಬ್ಯಾಡ” ಅಂದ್ಲು. ಮಗ ಅಂತಾನೆ, “ಕಲ್ಯಾಣದಾಗ ಶರಣರ ಕೆಲಸೈತಿ, ಹೋಗಾಕೇ ಬೇಕು” “ಹಾಳಾಗಿ ಹೋಗು” ಅಂತಾಳೆ ಸೊಸಿ! “ಕೆಂಚಾ, ಕೆಂಚಾ” ಅಂದ್ಲು, ಕೆಂಚ ಬಂದ. ಸೊಸಿ ಅಂತಾಳೆ, “ಬ್ಯಾಟಿಗೆ ಹೋಗಾನ ಹೊಲ್ಡು”. +ವ್ಯಕ್ತಿ ೨ : ಅಲ್ಲಪ್ಪ ಸಂಕ್ರಾಂತಿ ಹೊತ್ತಿಗೆ ಬಸವಣ್ಣ- +ಉಜ್ಜ : (ಕೆಟ್ಟದ್ದನ್ನು ನೆನೆದವನಂತೆ) ಅದೇನ್ಲೇ ಮಂಗ? ಯಂಥದೋ ಬಸಣ್ಣ? ನಿಂಗೆ ಬ್ಯಾರೇ ಮಾತೇ ಬರಲ್ಲವೇನೋ? ಇವತ್ತು ರಾತ್ರಿ ತಂಕ ಚೌಡವ್ವ, ನಾಳೆ ಬಸಣ್ಣ! ಅಲ್ಲ (ಕುಡಿದು) ಕುಡಿಬ್ಯಾಡ ಅಂತಾರೆ, ತಿನ್ನಬ್ಯಾಡಾಂತಾರೆ, ಮಲಗಬ್ಯಾಡಾಂತಾರೆ, ವದರಬ್ಯಾಡಾಂತಾರೆ- ಅಂತಾರೆ, ಅಂತಾರೆ! ಬಸಣ್ಣ, ನೀವು ಹೊತ್ತಿನಂಗೆ, ಬೆಳದಿಂಗ್ಳಪ್ಪನಂಗೆ, ಚೌಡವ್ವನಂಗೆ! ಇವತ್ತೊಂದಿನ ನನ್ನ ಕೈ ಬಿಡಪ್ಪ! +ಜನ ಗುಜುಗುಜು ಮಾತಾಡಿಕೊಳ್ಳುವರು. ಹೊರಗೆ ಮತ್ತು ರಂಗದ ಮೇಲೆ ಸದ್ದಾಗುವುದು. ಉಜ್ಜ ಮೇಲಿನ ಮಾತುಗಳನ್ನು ಗಟ್ಟಿಯಾಗಿ ಹೇಳಬೇಕಾಗುತ್ತದೆ. ಮಾತು ನಿಷ್ಪ್ರಯೋಜಕವಾಗಿ ಹಾಡಹತ್ತುವನು. ಜನರ ಗಮನ ಮಾತ್ರ ಬೇರೆ ಕಡೆಗೆ ಹೋಗುತ್ತಿದೆ) +ಔಡವ್ವ, ಭೂತಪ್ಪ, ಕೊಳ್ಳೀಯ ದೆವ್ವಪ್ಪ, +ಉಣಿದಾರ್ರಿ ದಿನಾಲು ನನ್ನ ಸುತ್ತ; +ಅಸವಣ್ಣ ಬರುತಾರೆ, “ಉಜ್ಜಣ್ಣ” ಅನುತಾರೆ, +ಅಪ್ಪಿದರೆ ಕೊಯ್ಯುತಾರೆ ನನ್ನ ಕತ್ತ! +ಹುಡುಗನೊಬ್ಬ ಜನರೆಲ್ಲರ ಗದ್ದಲ ಮೀರಿಸಿ ಕೂಗುತ್ತ ಬರುತ್ತಾನೆ- ಸಾರಿ ಹೇಳುವವನಂತೆ. ಜನ ಅವನನ್ನು ಪ್ರಶ್ನಿಸುತ್ತಾರೆ) +ಹುಡುಗ ಬ್ಯಾಟಿಂದ ಬರ್ತದಾರೆ ಬ್ಯಾಟಿಂದ. ಕೇಳ್ರಪೋ ಬರ್ತದಾರೆ! +ವ್ಯಕ್ತಿಗಳು : ಅತ್ತಣಾಗಿಂದ? ಎಲ್ಲದಾರೋ? +ಹುಡುಗ ಎಂಗನ ಗುಡ್ಡದಿಂದ ಬಂದ್ರು! ಬಂದ್ರು! +ದೂರದಲ್ಲಿ ತಮ್ಮಟೆಯ ಸದ್ದು ಕೇಳಿಬರುತ್ತದೆ. ಅದು ಜನರ ಮತ್ತು ಹುಡುಗನ ಮಾತಿನೊಂದಿಗೆ ಹತ್ತಿರ, ಹತ್ತಿರ ಬರುತ್ತದೆ) +ಉಜ್ಜ : (ಎಲ್ಲರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ) ಲೇ ಹುಚ್ಚ, ಯಾರೋ ಬರ್ತಿರೋದು? +ಹುಡುಗ ಸಮ್ಮ ಕೆಂಚ ಬರ್ತದಾರೆ! ಹುಲಿ ಹಿಡ್ಕಂಡು ಬರ್ತದಾರೆ, ತಮ್ಮಟೆ ಹೊಡಿತಾ ಬರ್ತದಾರೆ! +ವ್ಯಕ್ತಿಗಳು : ಹುಡುಗನನ್ನು ಹಿಡಿದುಕೊಂಡು, ಕುತೂಹಲ ತಾಳಲಾರದೆ) +ಎಲ್ಲಿ ಸಿಗ್ತಲೆ ಹುಲಿ? +ಯಾರೋ ಹೊಡೆದದ್ದು? +ಹ್ಯಂಗೆ ಹಿಡದ್ರೋ? +ಹುಡುಗ ಇಡ್ರಪೋ, ಕೆಂಗನ ಗುಡ್ಡದ ತಾವ ಹಿಡದ್ರಂತೆ! ಹಿಡದ್ರಂತಪೋ ಹುಲೀನ! +ವ್ಯಕ್ತಿಗಳು : ಇಡದ್ರಂತೋ, ಹೊಡೆದ್ರಂತೋ +ಹುಲೀನೋ ಕಿರಬಾನೋ? +ಮರೀನೋ, ದೊಡ್ಡದೋ? +ಹುಡುಗ ಎಲ್ಲ ಮಾಹಿತಿಯನ್ನು ವದರುತ್ತಾ) ದೊಡ್ಡ ಹುಲೀನ್ರಿ, ಹಿಡದಾರ್ರೀ, ಕಿರುಬಲ್ರೀ, ನಿಮ್ಮ ಕಿವಿ ಕೇಳಸಲ್ಲವಾ? ಹುಲಿ! ಹುಲಿ! ಬಿಡ್ರೀ ನಾ ಹೋಗ್ತನೀ! +ಹುಡುಗ ಬಿಡಿಸಿಕೊಂಡು ಓಡುವನು) +ವ್ಯಕ್ತಿಗಳು ಕುತೂಹಲದಿಂದ ಹೊರಗೆ ನೋಡುತ್ತಾ ಮಾತಾಡುವರು. ತಮ್ಮಟೆಯ ಸದ್ದು ಹತ್ತಿರ ಬರುತ್ತ ದೊಡ್ಡದಾಗಿ ಇವರ ಮಾತೂ ದೊಡ್ಡದಾಗಿ ಕೊನೆಗೆ ಮಾತು ಕೇಳಿಸದಾಗುವುದು) +ವ್ಯಕ್ತಿ ೧ : ಅರೆ, ಹೌದ್ರೋ, ಹುಲೀನೆ! +ಉಜ್ಜ : ಹ್ಯಂಗೈತೆ ನೋಡ್ರೋ ನನ್ನ ಸೊಸೀ ಹುಲಿ! +ವ್ಯಕ್ತಿಗಳು : ಅಂಕ್ರಾಂತಿ ದಿನವೇ ಹುಲಿ ಬಂದಂಗಾತು? +ಬಸವಣ್ಣ ಬಂದ್ರೆ ಏನಂತಾರೆ ಅಂತ! +ಉಜ್ಜನ ಸೊಸೆ ಜೋರೈದಾಳೆ ಕಣೋ! +ಉಜ್ಜ : ಹೆಂಡ್ತಿ ನೋಡಾಕೆ ನನ್ ಮಗ ಇದ್ದಿದ್ರೆ! +ವ್ಯಕ್ತಿ ೨ : ಅಲ್ಲ, ರುದ್ರ ಇಷ್ಟತ್ತು ಏನ್ಮಾಡ್ತಾನೆ, ಅಂತ! +ಜೋಡು ತಮ್ಮಟೆಯ ಸದ್ದು ಹತ್ತಿರ ಹತ್ತಿರ ಬಂದು ಮೇಲಿನ ಮಾತಿನಿಂದ ಮುಂದಕ್ಕೆ ಕೇಳಿಸದಂತಾಗುತ್ತದೆ. ಇನ್ನೇನು ಹುಲಿ ರಂಗಕ್ಕೆ ಪ್ರವೇಶಿಸಬೇಕು ಅನ್ನುವಾಗ ಭೀಕರ ಸದ್ದು. ಜನರ ಗುಂಪು ದೊಡ್ಡದಾಗುತ್ತದೆ. ಜನ ದಾರಿಬಿಡುತ್ತಿದ್ದಂತೆ ಕೆಂಚ ಹುಲಿ ವೇಷದಲ್ಲಿ ಗತ್ತಿನ ಹೆಜ್ಜೆ ಹಾಕಿ ಕುಣಿಯುತ್ತ ಪ್ರವೇಶಿಸುತ್ತಾನೆ. ಅವನು ಹೆಜ್ಜೆ ಹಾಕುತ್ತ ಮುಂದೆ ಬಂದಂತೆ ಅವನ ಕೊರಳಿನ ದಪ್ಪ ಹಗ್ಗ ಕಾಣಿಸುತ್ತದೆ; ಹಿಡಿದ ವ್ಯಕ್ತಿ ಉಷಾ ತರುವಾಯ ಕಾಣಿಸುತ್ತಾಳೆ. ಪೂರ್ತಿ ಹಳ್ಳಿ ಉಡುಪು ಧರಿಸಿದ್ದಾಳೆ; ಅವಳ ಭುಜದ ಮೇಲೆ ಸತ್ತ ಕಾಡುಕೋಳಿಗಳಿವೆ. ತಮ್ಮಟೆಯ ಲಯಕ್ಕೆ ತಕ್ಕಂತೆ ಸುತ್ತಣ ಜನರೊಂದಿಗೆ, ಅವರನ್ನು ಹುರಿದುಂಬಿಸುತ್ತ ಚಪ್ಪಾಳೆ ತಟ್ಟುತ್ತಿದ್ದಾಳೆ. ತಮ್ಮಟೆ, ಚಪ್ಪಾಳೆ, ಸಾಧ್ಯವಾದರೆ, ತಮಾಷೆಯ ಪರಿಣಾಮ ಆಗದಂತೆ ಶಿಳ್ಳೆ, ಕೇಕೆಯ ಪ್ರೋತ್ಸಾಹದೊಂದಿಗೆ ನೃತ್ಯ-ನಿರ್ದೇಶಕನ ಸಾಮರ್ಥ್ಯ ಅವಲಂಬಿಸಿ- ಎರಡು ಮೂರು ನಿಮಿಷ ಸಾಗಬೇಕು. +ಋತ್ಯ ತೀವ್ರ ಸ್ಥಿತಿ ಮುಟ್ಟಿದಾಗ ಇಬ್ಬರು ಕಾವಿಬಟ್ಟೆಯ ಶರಣರು ಬಂದು ರಂಗದ ಎಡಭಾಗದಿಂದ ಏನನ್ನೋ ಸಾರಿ ಹೇಳುವಂತೆ ತೋರುತ್ತದೆ. ಅವರ ಸದ್ದಿಗೆ ಜನ ಮಣಿಯದಿರಲು ಒಬ್ಬಿಬ್ಬರನ್ನು ಹಿಡಿದು ಅಲ್ಲಾಡಿಸುವರು. ಅದರಿಂದಲೂ ಸದ್ದು ನಿಲ್ಲದಿರಲು ಕೊನೆಗೆ ತಮ್ಮಟೆಯ ಕೋಲು ಕಸಿದುಕೊಳ್ಳುವರು. ಸದ್ದು ನಿಲ್ಲುತ್ತದೆ; ಜನರ ಗಮನ ಅವರ ಕಡೆ ಹೋಗುತ್ತದೆ) +ಶರಣ ೧ : ಏಳಿ, ಎಲ್ಲರೂ ಕೇಳಿ (ಕೊಂಚ ಗದ್ದಲ) ಎಲ್ಲರೂ ಸದ್ದು ಮಾಡದೆ ಕೇಳಬೇಕು! ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲಿಗೆ ಜಗಜ್ಯೋತಿ ಬಸವಣ್ಣನವರು ಬಿಜ್ಜಳ ಮಹಾರಾಜರೊಂದಿಗೆ ಆಗಮಿಸುತ್ತಾರೆ. ನಿಮ್ಮ ಶರಣನಾದ ರುದ್ರನ ಆಮಂತ್ರಣದ ಮೇರೆಗೆ ಬರುತ್ತಿದ್ದಾರೆ. +ಮುಂದಿನ ಮಾತು ಸಾಗುತ್ತಿದ್ದಾಗ ಉಷಾ ಸ್ತಬ್ಧಳಾಗಿ ನಿಲ್ಲುವಳು) +ಲ್ಲರೂ ಭಜನೆಗೆ ಸಿದ್ಧರಾಗಬೇಕೆಂದೂ ಇದು ಶರಣರ ಆದರ್ಶ ಗ್ರಾಮವೆಂಬುದನ್ನು ಬಿಜ್ಜಳರಿಗೂ ಬಸವಣ್ಣನವರಿಗೂ ಸಿದ್ಧಪಡಿಸಿ ತೋರಬೇಕೆಂದೂ ರುದ್ರ ತಿಳಿಸಿದ್ದಾನೆ. ನಿಮ್ಮ ಮುಂದಾಳು ರುದ್ರನಿಗೆ ಯಾವ ಬಗೆಯಲ್ಲೂ ನಿರಾಶೆಯಾಗದಂತೆ ಸಿದ್ಧತೆಯಾಗಬೇಕೆಂದು ಅಪ್ಪಣೆಯಾಗಿದೆ. +ಮೌನ) +ಕೆಂಚ : ಯಾರದ್ದು ಬುದ್ದಿ ಅಪ್ಪಣೆ? +ಶರಣ ೨ : ಅಹಾರಾಜ ಬಿಜ್ಜಳರು ಮತ್ತು ಬಸವೇಶ್ವರರ ಅಪ್ಪಣೆ. +ಉಜ್ಜ : ಇನ್ನೆಷ್ಟು ತಾಸಿನಾಗೆ ಬಂದಾರು, ಶರಣಪ್ಪ? +ಶರಣ ೧ : ಆವ ಗಳಿಗೆಯಲ್ಲಾದರೂ ಬರಬಹುದು. +ಉಜ್ಜ : (ಕುಡಿದಿರುವುದರಿಂದ) ಒಂಚೂರು ತಡಮಾಡಿದ್ರೇನಾಗ್ತಿತ್ತು? +ಶರಣ ೨ : ದನ್ನು ನಿರ್ಧರಿಸುವವರು ನಾವಲ್ಲ. +ವ್ಯಕ್ತಿ ೨ : ರುದ್ರ ಏನು ಮಾಡ್ತಿದ್ದ ಅಲ್ಲಿ? +ಶರಣ ೧; ತ ಬಸವಣ್ಣನವರ ಜೊತೆಗಿದ್ದಾನೆ. +ವ್ಯಕ್ತಿ ೨ : ಏನು ಮಾಡ್ತಿದಾನೆ? +ಶರಣ ೨ : ಅರಣರಿಗೆ ಕೈತುಂಬ ಕೆಲಸ ಇರುತ್ತೆ. +ವ್ಯಕ್ತಿ ೩ : ಎಲ್ರೂ ಬಟ್ಟೆ ಬದಲಿಸ್ಕೋಳ್ರೋ. +ಜನ ತ್ವರೆಯಿಂದ ಓಡಾಡುವರು) +ವ್ವ್ಯಕ್ತಿ ೫ : , ಅದು ನನ್ನ ಅಂಗಿ ಕಣೋ. +ಉಜ್ಜ : ಲೇ ಕೆಂಚ. +ಕೆಂಚ ಆಗಲೇ ತ್ವರೆಯಿಂದ ಓಡಾಡುತ್ತಿರುವನು) +ಓಗಿ ನಿನ್ನ ಚಿಟ್ಟೆಪಟ್ಟೆ ಬಣ್ಣ ತ್ವಳಕೋ, ಹುಡುಗಾ! ಹುಡುಗಾ! ಒಂದು ಚರಿಗೆ ನೀರು ತತ್ತ- ನನ್ನ ತಲೀಮ್ಯಾಲೆ ಹಾಕು! +ವ್ಯಕ್ತಿ ೧ : ಧೋತ್ರ ಹಂಗೇ ಇರ್ಲಿ ಬಿಡಲೇ- ಅಂಗಿ ಬ್ಯಾರಾದ್ರೆ ಸಾಕು. +ಮಾತಾಡುತ್ತಲೇ ಲಗುಬಗೆಯಿಂದ ಜನ ಹೊರಗೋಡಿ ಒಳಗೆ ಬಂದು ಬಟ್ಟೆಗಳನ್ನು ಬದಲಿಸುತ್ತಿದ್ದಾರೆ. ಉಷಾ ಈಗ ತನ್ನ ಕೈಯಲ್ಲಿರುವ ಹಗ್ಗ ಹಾಗೆ ಹಿಡಿದು ನಿಂತಿರುವಳು; ಕೆಂಚ ನಿಧಾನಕ್ಕೆ ತನ್ನ ಬಣ್ಣ ಒರೆಸಿಕೊಂಡು ಅಂಗಿ ಹಾಕಿಕೊಳ್ಳುವನು. ಹುಡುಗ ಪಾತ್ರೆಯಲ್ಲಿ ನೀರು ತಂದು ಉಜ್ಜನ ತಲೆ ಮೇಲೆ ಸುರಿಯುವನು. ಜನ ಅಂಗಿಗಳಿಗಾಗಿ ಕಚ್ಚಾಡುತ್ತ ಸಿಡುಕಾಡುತ್ತ ಗದ್ದಲ ಮಾಡುತ್ತ ಹಾಕಿಕೊಳ್ಳುತ್ತಿದ್ದಾರೆ. ಸೊಂಟದ ಕೆಳಗಿನ ಬಟ್ಟೆಗಳು ಹಾಗೇ ಇವೆ. ಈ ಮಧ್ಯೆ ಕೆಲವರು ಬಿಜ್ಜಳ ಬಸವಣ್ಣನವರಿಗಾಗಿ ಮಂಚ ಹಾಕಿ ಅದರ ಮೇಲೆ ಕುಳಿತುಕೊಳ್ಳಲು ಬೆತ್ತದ ಮೋಡ ಇಡುತ್ತಾರೆ. ಎಲ್ಲ ಸಿದ್ಧವಾಗಿದೆ. ಉಷಾ ಮಾತ್ರ ಹಾಗೇ ನಿಂತಿದ್ದಾಳೆ. ಉಜ್ಜ ಪೇಚಾಡುತ್ತ ಓಡಾಡುತ್ತಿದ್ದಾನೆ, ಅವನಿಗೆ ಅಂಗಿ ಸಿಕ್ಕುವುದೇ ಇಲ್ಲ. “ನಂಗೇ ಅಂಗಿಲ್ಲ- ಹುಡುಗ, ಲೇ ಅಂಗೀ” ಎಂದು ಕೂಗಾಡುತ್ತಿದ್ದಾನೆ. ಅಷ್ಟರಲ್ಲಿ ಹೊರಗಡೆ ಸದ್ದು, ಸೇವಕ ಪ್ರವೇಶಿಸುತ್ತಾನೆ) +ಸೇವಕ ಆಜಾಧಿರಾಜ, ಭುಜಬಲಮಲ್ಲ, +ವೈರೀಭಕಂಠೀರವ, +ತ್ರಿಭುವನ ಮಲ್ಲ, +ಭುವನೈಕ ವೀರ, +ಬಿಜ್ಜಳ ಮಹಾರಾಜರು ಆಗಮಿಸುತ್ತಿದ್ದಾರೆ- +ಬಿಜ್ಜಳ, ಬಸವಣ್ಣ, ಅಂಗರಕ್ಷಕರು, ರುದ್ರ ಮುಂತಾದವರ ಪ್ರವೇಶ. ಬೇಕಾದರೆ “ಬಿಜ್ಜಳರಿಗೆ- ಜಯವಾಗಲಿ” “ಬಸವಣ್ಣನವರಿಗೆ ಜಯವಾಗಲಿ” ಎಂದು ಘೋಷವಿರಬಹುದು. ಮುಂದಿನ ಸ್ಥಳಗಳಲ್ಲಿ ಕೂರುವ ದೃಶ್ಯ; ಉಷಾ ರಂಗದ ಅಂಚಿನಲ್ಲಿ ಆಸಕ್ತಿ ಇಲ್ಲದೆ ಕೂತಿದ್ದಾಳೆ; ಉಜ್ಜ ತೋಯ್ದ ಬಟ್ಟೆಯಲ್ಲಿ ಎದ್ದು ಕಾಣುತ್ತಾನೆ. ನಿಶ್ಯಬ್ದವನ್ನು ಕಲಕಿ ವಚನಗಾನ ಆರಂಭವಾಗುತ್ತದೆ) +ಬಸವಣ್ಣ ಮತ್ತು ಹಲವರು : ಕಳಬೇಡ, ಕೊಲಬೇಡ- +ಸಭಿಕರು ಅಳಬೇಡ, ಕೊಲಬೇಡ- +ಬಸವಣ್ಣ ಮತ್ತು ಹಲವರು : ಉಸಿಯ ನುಡಿಯಲು ಬೇಡ- +ಸಭಿಕರು ಉಸಿಯ ನುಡಿಯಲು ಬೇಡ- +ಬಸವಣ್ಣ ಮತ್ತು ಹಲವರು : ಉನಿಯಬೇಡ- +ಸಭಿಕರು ಉನಿಯಬೇಡ- +ಬಸವಣ್ಣ ಮತ್ತು ಹಲವರು : ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ- +ಸಭಿಕರು ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. +ಉಜ್ಜ : ಇದಿರ ಹಳಿಯಲು ಬೇಡ, ತನ್ನ ಬಣ್ಣಿಸ- +ಉಜ್ಜ ಮಾತ್ರ ಕೊನೆಯ ಸಾಲನ್ನು ಕೊಂಚ ಗಟ್ಟಿ ಕಂಠದಲ್ಲಿ ತಪ್ಪು ಹೇಳಿದ್ದಾನೆ; ಬಸವಣ್ಣ ಗಮನಿಸಿ ಮತ್ತೆ ಅದೇ ಸಾಲು ಹೇಳುತ್ತಾರೆ; ಗೊಂದಲದಿಂದ ಉಜ್ಜ “ಇದಿರಬೇಡ- ಇದಿರಬೇಡ-” ಮುಂತಾಗಿ ಹೇಳಿ ಇನ್ನೂ ಹದಗೆಡಿಸುತ್ತಾನೆ. ಸಭಿಕರು “ಯಾರು?” “ಯಾಕೆ?” “ಉಜ್ಜ” ಇತ್ಯಾದಿ ಮಾತಾಡಿಕೊಂಡು ಕೊಂಚ ಗುಜುಗುಜು) +ರ್ರುದ್ರ : ವಚನವನ್ನು ಗಂಭೀರವಾಗಿ ಮಾತಾಡಿ ಮುಗಿಸುತ್ತಾನೆ) +ಅನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ- +ಂತ ನಮ್ಮ ಬಸವದೇವರು ಅಪ್ಪಣೆ ಕೊಡಿಸಿದ್ದಾರೆ. ನಾವು ಮರಿಬಾರದಂಥ ಒಂದು ಮಾತು ಅಂದ್ರೆ ನಾವು ಬಸವನ ಮಕ್ಕಳು; ಶಿವಶರಣರು. ಅವರು ಹಾಕಿದ ಗೆರೆ ದಾಟಬಾರ್ದು; ಅವರ ಮಾತಿಗೆ ಚಕಾರ ಎತ್ತಬಾರ್ದು. ಇವತ್ತು ಸಂಕ್ರಾಂತಿ. ಬಸವಣ್ಣನವರಿಗೆ ನಾವು ಮಾತು ಕೊಟ್ಟಿದ್ದೇವೆ; ಅದಕ್ಕೆ ತಕ್ಕಂತೆ ನಾವು ಮನುಷ್ಯರ ಥರ, ಶರಣರ ಥರ ನಡಕೋಬೇಕು. ನಮ್ಮ ಹಳೇ ಜಾಡು ಬದಲಿಸಿ ಹೊಸ ದಾರಿ ಹಿಡಿಬೇಕು. ನಮ್ಮ ದೊರೆಗಳು ಸಹಿತ ನಮ್ಮನ್ನು ಹರಸೋಕೆ ದಯಮಾಡಿಸಿದಾರೆ; ಬಿಜ್ಜಳ ಮಹಾರಾಜರು- +ಬಿಜ್ಜಳ : ಅವನ ಮಾತನ್ನು ಅಷ್ಟಕ್ಕೆ ಕತ್ತರಿಸಿ) ಅದಕ್ಕಿಂತ ಮುಂಚೆ ಮಾಡಬೇಕಾದ ಕೆಲಸ ಬೇಕಾದಷ್ಟಿದೆ ರುದ್ರ. ಉಷಾ ಎಲ್ಲಿ? +ಜನರ ಗುಜುಗುಜು. ಉಷಾ ಎದ್ದು ನಿಲ್ಲುವಳು) +ದ್ದೀಯಾ! ಕೂತುಕೋ ತಾಯಿ. ನಿಮ್ಮೆಲ್ಲರ ಸಮ್ಮುಖದಲ್ಲಿ ನಾನಿವತ್ತು- +ಉಷಾ ಕೂರುವಳು) +ಬಿಜ್ಜಳನ ಮಾತು ಕತ್ತರಿಸುತ್ತ. ಆದರೆ ಅದು ಗೊತ್ತಾಗದಷ್ಟು ಗಂಭೀರವಾಗಿ) +ಬಸವಣ್ಣ : ಅರಣರೆ, ನಿಮ್ಮನ್ನು ನೋಡಿ ನನಗೆ ಸಂತೋಷವಾಗಿದೆ. ಇಂದು ಇಲ್ಲಿ ಬಹುಮುಖ್ಯ ಕಾರ್ಯವಿದೆ. ಅದು ಎಷ್ಟು ಮುಖ್ಯ ಎಂಬುದು ನಿಮಗೆ ಇನ್ನು ಒಂದೆರಡು ಕ್ಷಣದಲ್ಲೇ ಗೊತ್ತಾಗುತ್ತದೆ. ಅದಕ್ಕೆ ಮುಂಚೆ ಎರಡು ಮಾತು. ನನಗೆ ಬಂದ ಸುದ್ದಿಯ ಪ್ರಕಾರ- +ಬಿಜ್ಜಳ : ನಗುತ್ತ) ತಮಗೂ ಗೂಢಚಾರರು ಇರುವಂತಿದೆ- +ಬಸವಣ್ಣ : ಅರಣರ ಬಗ್ಗೆ ಶರಣರಿಂದ ಗೊತ್ತಾಗುತ್ತದೆ, ಪ್ರಭು. (ಸಭೆಗೆ) ನಾನು ಎಲ್ಲವನ್ನೂ ಕೂಲಂಕಷವಾಗಿ ಯೋಚಿಸಿದ್ದೇನೆ, ನಮ್ಮ ದೊರೆ ಬಿಜ್ಜಳ ಪ್ರಭುಗಳೊಂದಿಗೆ ಚರ್ಚಿಸಿದ್ದೇನೆ. ನೀವು ಶರಣರಾಗಬೇಕೆಂದು ಎಂದೂ ಒತ್ತಾಯ ಪಡಿಸಿದವನಲ್ಲ ನಾನು; ಅಂದಮೇಲೆ ನಿಮ್ಮ ತಪ್ಪುಗಳನ್ನು ಟೀಕಿಸಲು ಹಿಂಜರಿದವನಲ್ಲ, ಮನಸ್ಸು ಚಂಚಲ; ಅದು ಶರಣತ್ವದಿಂದ ಜಾರುವುದು, ಸಂಗಮನಿಂದ ದೂರ ಸರಿಯುವುದು ಸುಲಭ. ಈ ಬಗೆಯ ‘ಸುಲಭ’ಕ್ಕೆ ನಿಮ್ಮಲ್ಲಿ ಹಲವರು ತುತ್ತಾಗಿದ್ದಾರೆ; ನನಗೆ ಕೊಟ್ಟ ಆಶ್ವಾಸನೆಯನ್ನು ಮುರಿದಿದ್ದಾರೆ. ರಾಜ್ಯದಲ್ಲಿ ಶರಣರ ಲಾಂಛನದಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ ಅತಿಯಾಗಿದೆ; ಎಲ್ಲೆಲ್ಲೂ ಕಗ್ಗತ್ತಲು ಹಬ್ಬುತ್ತಿದೆ. ಇದು ಬಿಜ್ಜಳರನ್ನೂ ಕಾಡುತ್ತಿರುವ ಸಮಸ್ಯೆ. ನನ್ನಿಂದ ಯಾರಿಗಾದರೂ ಕಿಂಚಿತ್ತು ಅನ್ಯಾಯವಾದರೆ ನಿಮ್ಮ ಅಣ್ಣ ನಾನಲ್ಲ; ನನ್ನ ಆದರ್ಶಜೀವಿಗಳು ನೀವಲ್ಲ. ನಾವೆಲ್ಲ ಪರಸ್ಪರರ ಕಣ್ಣು ತಪ್ಪಿಸಿ ತಪ್ಪು ಮಾಡಬಹುದು. ಆದರೆ ನಮ್ಮ ಕಣ್ಣುಗಳಿಂದ ನಮಗೆ ಬಿಡುಗಡೆಯಿಲ್ಲ; ಸಂಗಮನಿಗೆ ಮೋಸ ಮಾಡಲು ಆಗುವುದಿಲ್ಲ. +ಬಸವಣ್ಣ ಉಜ್ಜನ ಕಡೆಗೆ ನೋಡುವನು. ಉಜ್ಜ ಎದ್ದು ನಿಂತು ತಲೆ ತಗ್ಗಿಸುವನು) +ರ್ರುದ್ರ : ಅಪ್ಪನಿಗೆ) ನೀನಿವತ್ತು ಮನಸ್ಸು ಮಾಡಬೇಕು- +ಉಜ್ಜ : (ಬಸವಣ್ಣನಿಗೆ) ನನ್ನೊಡೆಯ, ನನ್ನಾಣೆ- +ಬಸವಣ್ಣ : ಆಕು. ಈಗಲಾದರೂ ನನ್ನೆದುರು ಭಾಷೆ ಕೊಡು. ಸಂಕ್ರಾಂತಿ ನಿನ್ನ ಬದುಕಲ್ಲಿ ಅರ್ಥಪೂರ್ಣವಾಗಲಿ (ರುದ್ರನಿಗೆ) ರುದ್ರ- +ರುದ್ರ ಪ್ರಮಾಣ ಮಾಡಿಸಲು ಉದ್ಯುಕ್ತ) +ರ್ರುದ್ರ : ಉಜ್ಜನ ಹತ್ತಿರ ಹೋಗಿ) ಶರಣ, ನಾನಂದಂತೆ ಅನ್ನು. +ಉಜ್ಜ ತಲೆತಗ್ಗಿಸಿ ನಿಂತು ರುದ್ರನ ಮಾತು ಒಪ್ಪಿಸುವನು) +ರ್ರುದ್ರ : ಆನು ಉಜ್ಜ. +ಉಜ್ಜ : ನಾನು ಉಜ್ಜ. +ರ್ರುದ್ರ : ಆನು ಇವತ್ತಿನಿಂದ ಹೊಲೆಯನಲ್ಲ. +ಉಜ್ಜ : ನಾನು ಇವತ್ತಿನಿಂದ ಹೊಲೇನಲ್ಲ. +ರ್ರುದ್ರ : ವತ್ತಿನಿಂದ ಸಾಯೋತಂಕ- +ಉಜ್ಜ : ಇವತ್ತಿನಿಂದ ಹೋಯಾತಂಕ- +ರ್ರುದ್ರ : ಅಸವದೇವರ ಮಾತು ದಾಟುವುದಿಲ್ಲ. +ಉಜ್ಜ : ಬಸವದೇವರ- ದೇವರ- +ರ್ರುದ್ರ : ಆತು ದಾಟಾಕಿಲ್ಲ- +ಉಜ್ಜ : ಮಾತು ದಾಟಾಕಿಲ್ಲ- +ರ್ರುದ್ರ : ಆ ಶರಣ, ನಾ ಭಕ್ತ- +ಉಜ್ಜ : ನಾ ಶ್ಯರಣ, ನಾ ಬಕ್ತ- +ರ್ರುದ್ರ : ಆ ಕೊಲ್ಲಾಕಿಲ್ಲ, ಕುಡಿಯಾಕಿಲ್ಲ, ತಿನ್ನಾಕಿಲ್ಲ. +ಉಜ್ಜ : (ಮೌನ) +ರ್ರುದ್ರ : ಆ ಕೊಲ್ಲಾಕಿಲ್ಲ. +ಉಜ್ಜ : (ಮೌನ) +ಜನ ಹೇಳಿಕೊಡುವರು-‘ಕೊಲ್ಲಾಕಿಲ್ಲ ಅನ್ನೋ’ ‘ಅಸ್ಟೂ ಗೊತ್ತಿಲ್ಲೇನ್ಲ?’ ಹಾಳು ಮುದುಕ, ಇತ್ಯಾದಿ. ಉಜ್ಜ ಕಲ್ಲಿನಂತೆ ನಿಂತೇ ಇದ್ದಾನೆ. ಬಿಜ್ಜಳ ಮುಗುಳ್ನಗುತ್ತಿದ್ದಾನೆ. ಜನರ ಗದ್ದಲ. ರುದ್ರ ಗಟ್ಟಿಯಾಗಿ ರೇಗಿದ ಧ್ವನಿಯಲ್ಲಿ ಮಾತಾಡುತ್ತಿದ್ದಾನೆ) +ರ್ರುದ್ರ : ಒಲ್ಲಾಕಿಲ್ಲ! +ಉಜ್ಜ : (ಮಾತಾಡುವುದಿಲ್ಲ) +ರ್ರುದ್ರ : ಇನ್ನ ಗಂಟಲಿಗೇನಾಗೇತಿ? ಹೇಳು. +ಜನ ‘ಹೇಳೋ’ ‘ಹೇಳೋ’ ಅನ್ನುವರು) +ರ್ರುದ್ರ : ಸಿಟ್ಟಿನಿಂದ) ವದರು! +ಅಲ್ಲಾಡಿಸುವನು) +ಉಷಾ ಎದ್ದು ನಿಂತು ತನ್ನ ಕೈನ ಹಗ್ಗ ಧಡ್ಡನೆ ಎಸೆಯುವಳು; ಎಲ್ಲರ ಗಮನ ಆಕೆಯ ಕಡೆಗೆ ಹರಿಯುವುದು) +ಬಿಜ್ಜಳ : ನು ತಾಯಿ? +ರ್ರುದ್ರ : ನು? +ಉಷಾ ಹಿಂಸೆ ಸಾಕು. ಇದು ವಿಚಿತ್ರ ಹಿಂಸೆ. +ರ್ರುದ್ರ : ಂಥ ಹಿಂಸೆ? +ಉಷಾ ಸ್ಪಷ್ಟವಾಗಿ ನಿಶ್ಯಬ್ದವನ್ನು ಸೀಳಿ) ಕೆಲವರಿಂದ ಕೆಲವು ರೀತಿಯ ಪ್ರಮಾಣ ಮಾತ್ರ ಸಾಧ್ಯ. ಅದು ಗೊತ್ತಾಗದ ನೀನೆಂಥ ಶರಣ? +ರುದ್ದ ಗಂಡಸಿನ ಸೊಕ್ಕಿನಿಂದ) ನಿಂಗಿದು ತಿಳಿಯೊಲ್ಲ, ತೆಪ್ಪಗಿರು. +ಉಷಾ ಆಕೆ? +ಬಿಜ್ಜಳ : ಬಗೆಹರಿಸುತ್ತಾ) ಈ ಬಗ್ಗೆ ಭಿನ್ನಾಭಿಪ್ರಾಯ ಇರುವಂತಿದೆ ಬಸವಣ್ಣ, ನೀವು ಮಧ್ಯೆ ಪ್ರವೇಶಿಸದಿದ್ದರೆ ಎಲ್ಲ ಬಗೆಹರಿಸುತ್ತೇನೆ. +ಬಸವಣ್ಣ : ಅಗೆಹರಿಸಿ ಪ್ರಭು. +ಬಿಜ್ಜಳ : ತೀರ್ಮಾನಿಸುವ ಧಾಟಿಯಲ್ಲಿ) ಈಗ, ನಾನು ಮಾತಾಡುವುದಕ್ಕೆ ಮುಂಚೆ ಉಷಾದೇವಿಯ ಪ್ರಮಾಣ ಏಕೆ ತೆಗೆದುಕೊಳ್ಳಬಾರದು? +ಜನ ‘ಹೆಂಗಸಿಂದ್ಯಾಕೆ’‘ತಗಳ್ರೀ’‘ಮಾತಂದ್ರೆ ಮಾತಪ್ಪ’ ಅನ್ನುವರು; ಉಷಾ ಎದ್ದು ನಿಲ್ಲುವಳು) +ಬಿಜ್ಜಳ : ಣೆ ತೆಗೆದುಕೊಳ್ಳುತ್ತೀಯಾ ತಾಯಿ? +ಉಷಾ ಖಂಡಿತವಾಗಿ) ಇಲ್ಲ ಪ್ರಭು. +ಬಿಜ್ಜಳ : ಅತ್ಯುತ್ಸಾಹದಿಂದ, ಸಭೆಗೆ) ಕೇಳಿ, ನಾನು ಮತ್ತು ಬಸವಣ್ಣ ಮುಖ್ಯ ಕೆಲಸದ ಮೇಲೆ ಬಂದಿದ್ದೇವೆ. ರುದ್ರ ನಿಮ್ಮ ಮುಖಂಡ, ಈ ಊರ ಶರಣರ ಮುಂದಾಳು. ಈತನ ಮೇಲೆ ನಮ್ಮ ರಾಜ್ಯದ ಒಂದು ಪಂಗಡ ಕೆಲವು ಆಪಾದನೆ ಮಾಡಿದೆ; ನಾನು ಮಾತ್ರ ಅದನ್ನು ನಂಬಿಲ್ಲ. ಶರಣರ ಶರಣತ್ವದ ಬಗ್ಗೆ ನನಗೆ ಸಂದೇಹ ಇಲ್ಲ; ರುದ್ರನ ಶರಣತ್ವದಲ್ಲಿ ಸಹ ಸಂದೇಹವೇ ಇಲ್ಲ. ಆದರೆ ರಾಜ್ಯದ ಕಟ್ಟಳೆ, ವ್ಯವಸ್ಥೆ ಕಾಪಾಡಬೇಕಾದ್ದು ನನ್ನ ಕರ್ತವ್ಯ. ಆಪಾದನೆ ಬಂದಾಗ ಅದನ್ನು ಗಮನಿಸಬೇಕಾದ್ದು ನನ್ನ ಜವಾಬ್ದಾರಿ. ಇಲ್ಲಿಂದ ಕೊಂಚ ದೂರದಲ್ಲಿಯೇ ಈ ಸಭೆಯ ತೀರ್ಮಾನಕ್ಕಾಗಿ ಈ ಪಂಗಡದ ಜನ ಕಾಯುತ್ತಿದ್ದಾರೆ; ನೀವು ಕಿವಿಗೊಟ್ಟು ಕೇಳಿದರೆ ಅದರ ಬಡಿತ ನಿಮಗೆ ಕೇಳಿಸೀತು. ಆಡಳಿತ ಯಂತ್ರ ನಡೆಸುವ ನಾನು ಯಾವ ಧರ್ಮಕ್ಕೂ ಸೇರಿದವನಲ್ಲ. ಇನ್ನೊಂದು ಅರ್ಥದಲ್ಲಿ ಎಲ್ಲ ಧರ್ಮಗಳೂ ನನ್ನವು. ಇದನ್ನು ನೀವು ನೆನಪಿಡಬೇಕು. ರುದ್ರನ ಪ್ರೇಮ ಪ್ರಕರಣವನ್ನು ಜನ ಹಲವು ರೀತಿಯಲ್ಲಿ ನೋಡುತ್ತಿದ್ದಾರೆ; ಇದು ಪ್ರೇಮವೋ, ಕಾಮವೋ, ನಿಜವೋ, ಸುಳ್ಳೋ ನಾವು ಈಗ ನೋಡಬೇಕಾಗಿದೆ. ಅತ್ಯಾಚಾರಕ್ಕೆ ಈ ರಾಜ್ಯದಲ್ಲಿ ಶಿಕ್ಷೆ ತಲೆದಂಡ. +ಷಾ, ಕೊಂಚ ಮುಂದೆ ಬಾ. ನನ್ನ ಭಾರ ನಿನಗೆ ಗೊತ್ತಿದೆ. ನನ್ನ ವಿಶ್ವಾಸವೂ ನಿನಗೆ ಗೊತ್ತಿದೆ. ನಿನ್ನನ್ನು ಬರಹೇಳಿದಾಗ ನೀನು ಬರಲಿಲ್ಲ, ಅದು ಸಾಮಾನ್ಯವಾಗಿ ರಾಜಾಜ್ಞೆಯ ಉಲ್ಲಂಘನೆ. ಆದರೆ ನಾನು ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಪ್ರೇಮಕ್ಕೆ-ಅದು ಪ್ರೇಮವಾಗಿದ್ದರೆ- ನನ್ನ ಸಂಪೂರ್ಣ ಬೆಂಬಲವಿದೆ. ಹೇಳು ರುದ್ರನದು ಪ್ರೇಮವೋ ಬಲತ್ಕಾರವೋ? +ಮೌನ, ಎಲ್ಲರೂ ಉಷಾ ಕಡೆ ನೋಡುತ್ತಿದ್ದಾರೆ) +ಏಳು, ಮಾತಾಡು, ನನ್ನ ಪೂರ್ಣ ರಕ್ಷಣೆಯಿದೆ. +ಉಷಾ ಸ್ಪಷ್ಟವಾಗಿ, ಗಂಭೀರವಾಗಿ) ಬಲಾತ್ಕಾರ. +ಎಲ್ಲೆಲ್ಲೂ ಗದ್ದಲ, ಕೆಲವರು ಏಳಲು ಯತ್ನಿಸುವರು. ಬಸವಣ್ಣನವರೂ ಎದ್ದು ನಿಲ್ಲುವರು. ‘ಹುಚ್ಚಿ’‘ಹಾದರಗಿತ್ತಿ’‘ಹಾರವರ ರಂಡೆ’ ಇತ್ಯಾದಿ ಗದ್ದಲ. ಬಿಜ್ಜಳ ಗದ್ದಲವಾಗಲು ಕೊಂಚ ಕಾಲ ಕೊಡುವನು. ಆಮೇಲೆ ಚಪ್ಪಾಳೆ ತಟ್ಟಿ, ಗದ್ದಲ ನಿಲ್ಲದಿರಲು ಎತ್ತರಿಸಿದ ಕಂಠದಲ್ಲಿ, ಎಲ್ಲರಿಗೂ ಕೇಳಿಸುವಂತೆ-) +ಬಿಜ್ಜಳ : ದು ಬಲತ್ಕಾರದ ಪ್ರಕರಣವೆಂದು ಉಷಾದೇವಿ ಹೇಳಿದ್ದಾಳೆ; ರುದ್ರ +ಮರಣದಂಡನೆಗೆ ಗುರಿಯಾಗಿದ್ದಾನೆ. +ಈಗಾಗಲೇ ಗದ್ದಲ ಮಾಡುತ್ತಿರುವ ಉಜ್ಜ ಎದ್ದು ನಿಂತು ಕೂಗತೊಡಗುತ್ತಾನೆ. ಜನ ಅವನನ್ನು ಹಿಡಿದುಕೊಂಡರೂ ಅವನು ಕಿತ್ತಾಡುತ್ತಾ ಕೂಗಾಡುತ್ತಿದ್ದಾನೆ-) +ಉಜ್ಜ : ಸುಳ್ಳು! ಆಕಿ ಸುಳ್ಳು ಬೊಗಳ್ತಿದಾಳೆ! ನಾನು ಕಣ್ಣಾರೆ ಕಂಡಿದೀನಿ! (ಹಿಡಿದವರೊಂದಿಗೆ ಜಗಳವಾಡುತ್ತ) ಬಿಡ್ರೊ ನನ್ನ, ನನ್ನ ಮಗ ಸಾಯಾಕೆ ನಾ ಬಿಡಲ್ಲ! ಕೊಲ್ಲಬ್ಯಾಡ್ರೋ ನನ್ನ ಮಗನ್ನ! ಕೊಲ್ಲಬ್ಯಾಡ್ರೋ ಅವ ಏನೂ ಮಾಡಿಲ್ಲ! +ರ್ರುದ್ರ : ಗಟ್ಟಿಯಾಗಿ ತನ್ನೆಲ್ಲ ಕ್ರೋಧದಿಂದ) ಸಾಕು, ನಿನ್ನ ವದರಾಟ ನಿಲ್ಸು. +ಉಜ್ಜ : ಯಾಕೆ? ಮಾತಾಡಬ್ಯಾಡಂತೀ? +ರ್ರುದ್ರ : ಅಸವಣ್ಣ ಅದಾರೆ, ದೊರೆ ಅದಾರೆ, ಅವರಿಗೆಲ್ಲ ಗೊತ್ತೈತಿ. +ಉಜ್ಜ : ಗೊತ್ತಾಗಲ್ಲ! ಅವರಿಗೆ ಹ್ಯಂಗೆ ಗೊತ್ತಾದೀತು? ಹ್ಯಂಗಪ್ಪ ಗೊತ್ತಾಗ್ತತಿ ನನ್ನ ದುಕ್ಕ? ಕೂಗ್ತನಿ-ಪರಪಂಚಕ್ಕೆ ಕೇಳಂಗೆ ಕೂಗ್ತನಿ- ಮೋಸ! ಎಲ್ರೂ ಕೂಡಿ ನನ್ನ ಮಗನ್ನ ಕೊಲ್ತಾರೆ! +ರ್ರುದ್ರ : ಅವನನ್ನು ಹಿಡಿದು ಗಟ್ಟಿಯಾಗಿ) ಕೊಂದ್ರೆ ಸಾಯೋನು ನಾನು, ನೀನಲ್ಲ. ಬಸವಣ್ಣ ಸಾಯಿ ಅಂದ್ರೆ ನಾ ಸಾಯ್ತಿನಿ. +ಉಜ್ಜ : (ದುಃಖ, ಕೋಪದಿಂದ) ಹೆತ್ತವನ ಹೊಟ್ಯುರಿ ನಿಂಗೆ ಹ್ಯಂಗೆ ಗೊತ್ತಾದೀತು? +ಬಿಜ್ಜಳನಿಗೆ) ಸುಳ್ಳ ಬೊಗಳ್ತಾನೆ ನನ್ನೊಡೆಯಾ. ನಾನೇ ಕಣ್ಣಾರೆ ನೋಡೀನಿ. ಆಕಿ ಮಾತು ನಂಬಬೇಡಿ ನನ್ನೊಡೆಯಾ. +ಬಿಜ್ಜಳ : ಉಳ್ಳು ಹೇಳಿದರೆ ನಿನ್ನ ತಲೆ ಹಾರುತ್ತೆ. ಹೇಳು ನೀನೆಲ್ಲಿದ್ದೆ ಆಗ? +ಉಜ್ಜ : ಹೊಳೀತಾವ- +ಬಸವಣ್ಣ : ಗಟ್ಟಿ, ಗಂಭೀರ ಕಂಠದಲ್ಲಿ) ರುದ್ರ , ಇತ್ತ ಬಾ (ಬರುವನು) ಯಾಕೆ ಹೀಗಾಯಿತು ? (ಮೌನ) +ಕೆ ಹೇಳಿದ್ದು ಸುಳ್ಳಲ್ಲವೆ? (ಮೌನ) +ಇನಗೆ ಗೊತ್ತಿದೆ. ಆಕೆಗೆ ಗೊತ್ತಿದೆ. ನಿನ್ನನ್ನು ಬಲ್ಲ ಎಲ್ಲರಿಗೂ ಗೊತ್ತಿದೆ. +(ಮುನಿಸಿನಿಂದ) ಬಲಾತ್ಕಾರ ಮಾಡಿದ್ದು ಆಕೆ; ನೀನಲ್ಲ. +ಬಿಜ್ಜಳ : ಗ ಅವನಿಗೆ ಹೇಳಿಕೊಟ್ಟು ಪ್ರಯೋಜನವಿಲ್ಲ. ಆದರೂ-ಮಾತಾಡು ರುದ್ರ. (ಮೌನ) +ಬಸವಣ್ಣ : ಆತಾಡು. ಮಾತಾಡುವುದಕ್ಕೆ ನಿನಗೇನಾಗಿದೆ? +ರ್ರುದ್ರ : ಅನಗೆ ಏನೂ ಗೊತ್ತಾಗ್ತಿಲ್ಲ ಸ್ವಾಮಿ (ಧ್ವನಿಯೆತ್ತರಿಸಿ ಸ್ಪಷ್ಟವಾಗಿ) ಏನೂ +ತಿಳೀತಿಲ್ಲ. +ಬಸವಣ್ಣ : ಲ್ಲ, ಗೊತ್ತಾಗ್ತಿದೆ, ಹೇಳಲು ಹೆದರಿಕೆ. ಹೆಣ್ಣು ಬಲಾತ್ಕಾರ ಮಾಡಿದಳು ಅಂತ ಒಪ್ಪಿಕೊಳ್ಳೋದಕ್ಕೆ ಹೆದರಿಕೆ. ನಿನ್ನ ಗಂಡಸುತನದ ಬಗ್ಗೆ ಹೆಮ್ಮೆ ನಿನಗೆ; ಜನ ನಕ್ಕಾರೆಂಬ ಭಯ ನಿನಗೆ, ನಿನ್ನ ಶೂದ್ರತ್ವದ ಬಗ್ಗೆ ಅಹಂಕಾರ, ಅದಕ್ಕೇ ನಿನ್ನ ಧ್ವನಿ ಹೊರಡುತ್ತಿಲ್ಲ. +ರ್ರುದ್ರ : ಅನ್ನ ಮನಸ್ಸಿನ್ನೂ ಯಾಕೆ ಗೊತ್ತಾತ್ತಿಲ್ಲ? ನನಗೆ ಏನೂ ತಿಳೀತಿಲ್ಲ. ಅಂತ ಯಾಕೆ ಗೊತ್ತಾಗ್ತಿಲ್ಲ? (ಮೌನ. ಉಷಾ ಹತ್ತಿರ ಹೋಗಿ) +ಆಕೆ ? ಏನಾಗಿತ್ತು ನಿಂಗೆ? (ಮೌನ) +ಅನ್ನ ತಲೆದಂಡ ಯಾಕೆ ಬೇಕಾಗಿತ್ತು? ಯಾಕೆ ಹಾಗೆ ನಗ್ತಾ ನಗ್ತಾ ಮಾತಾಡ್ತಿದ್ದೆ? ಯಾಕೆ ನನ್ನ ಮೆಚ್ಚಿ ಪದ ಹೇಳ್ತಿದ್ದೆ. +ಬಿಜ್ಜಳ : ಔದೆ ಉಷಾ? ನಿಜವೆ? +ಉಷಾ ಔದು. +ಬಿಜ್ಜಳ : ಆಗಾದರೆ ಹ್ಯಾಗೆ ಬಲಾತ್ಕಾರ? +ಉಷಾ ಮೌನ) ನನ್ನ ಬಳಿ ಮಾತಾಡುತ್ತಿದ್ದವ ಬೇರೆ. ಆತ ಬಂದು ಮೈಮೇಲೆ ಬಿದ್ದ. ಆತ ನನಗೆ ಬೇಕಾದವನಾಗಿದ್ದ; ಆದರೆ ನಾನು ಎದ್ದು ನೋಡಿದಾಗ ಆತ ಇರಲಿಲ್ಲ. ಅಲ್ಲಿದ್ದವನು ಶರಣ ರುದ್ರ. ಇದು ಅತ್ಯಾಚಾರವಲ್ಲದೆ ಮತ್ತೇನು? +ಬಿಜ್ಜಳ : ಈನು ಬದಲಾವಣೆ ಬಗ್ಗೆ ಹೇಳುತ್ತಿದ್ದೀ. +ಉಷಾ ಔದು ಪ್ರಭು. +ಬಿಜ್ಜಳ : ಈನು ಕಂಡದ್ದು ಬೇರೆ, ಆಮೇಲೆ ಇದ್ದದ್ದು ಬೇರೆ. +ಉಷಾ ಔದು ಪ್ರಭು. +ಬಿಜ್ಜಳ : ರುದ್ರ ಬೇರೆ, ಈ ರುದ್ರ ಬೇರೆ. +ಉಷಾ ದುಃಖದಿಂದ) ಹೌದು ಪ್ರಭು. +ಬಸವಣ್ಣ : ಆನು ಮಾತಾಡಲೇ? +ಬಿಜ್ಜಳ : ಗಮನಿಸದವನಂತೆ) ಇಂದು ಸಂಕ್ರಾಂತಿ. ನಿನ್ನೆ ನೋಡಿದ್ದು ಇವತ್ತಿಲ್ಲ. ಇವತ್ತಿನದು ನಾಳೆ ಬೇರೆಯಾಗಿರುತ್ತದೆ. ಈ ರಾಜ್ಯಕ್ಕೆ ಇವತ್ತಿನಿಂದ ಶಾಂತಿ ದೊರೆಯಬೇಕು. ರುದ್ರನ ತಲೆದಂಡ ನಮ್ಮೆಲ್ಲರಿಗೆ ಪಾಠವಾಗಬೇಕು; ನಮ್ಮ ಧರ್ಮ, ಪ್ರೇಮ, ಕಾಮದ ಬಗ್ಗೆ ನಮ್ಮ ಮನಸ್ಸು ಹೆಚ್ಚು ನಿಷ್ಠುರವಾಗಿ ಸೂಕ್ಷ್ಮವಾಗಿ ಯೋಚಿಸುವಂತಾಗಬೇಕು. ನನ್ನ ಈ ರಾಜ್ಯಕ್ಕೆ ಪ್ರೇಮ, ಮತ್ತಷ್ಟು ಪ್ರೇಮ ಬೇಕು. ಇದು ನಮ್ಮ ರಾಜ್ಯದ ಎಲ್ಲರಿಂದ ದೊರೆಯಬೇಕಾಗಿದೆ. ಶೂದ್ರರಿಂದ, ಶರಣರಿಂದ, ವೈದಿಕರಿಂದ, ಜಿನಪಂಥಿಗಳಿಂದ -ಎಲ್ಲರಿಂದ ಪ್ರೇಮ, ವಿಶ್ವಾಸ ದೊರೆಯಬೇಕಾಗಿದೆ. +ಗ ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಿ. ರುದ್ರ ಮತ್ತು ಅವನ ತಂದೆ ನಮ್ಮ ಹತೋಟಿಯಲ್ಲಿರಲಿ. +ಎಲ್ಲರೂ ಹೋಗುವರು. ಸೈನಿಕರು ರುದ್ರ ಮತ್ತು ಉಜ್ಜನನ್ನು ಕರೆದೊಯ್ಯುವರು. ರಂಗದ ಅಂಚಿನಲ್ಲಿ ಉಷಾ ಮತ್ತು ಕೆಂಚ ಇದ್ದಾರೆ. ಅಲ್ಲಿ ಮಬ್ಬುಗತ್ತಲಿದೆ. ಹೋಗುವ ಮುನ್ನ ಬಿಜ್ಜಳ ಮತ್ತು ಬಸವಣ್ಣ ಮಾತಾಡುತ್ತಾರೆ) +ಬಸವಣ್ಣ : ಅತೀವ ನೋವಿನಿಂದ) ಇದು ತಲೆದಂಡವಲ್ಲ, ಕೊಲೆ. +ಬಿಜ್ಜಳ : ದಕ್ಕಿಂತ ಮುಖ್ಯ ಪ್ರಶ್ನೆ. ಯಾರು ಮಾಡಿದ ಕೊಲೆ? ನಿಮ್ಮ ಉತ್ತರ ನನಗೆ ಗೊತ್ತು; ನನ್ನ ಉತ್ತರ ನಿಮಗೆ ಗೊತ್ತು. ಅದು ಕೇವಲ ವಾದವಾದೀತು. ಬಸವಣ್ಣ, ವಾದವನ್ನು ಮೀರಿದ್ದು ತಾನೇ ಸತ್ಯ? +ಬಸವಣ್ಣ : ಅನ್ನ ಮಾತಿಗೆ ನೀವು ಅವಕಾಶ ಕೊಡಲಿಲ್ಲ. +ಬಿಜ್ಜಳ : ಕುರುಡ ನೆವ) ಉಷಾ ಪ್ರೀತಿ ಕೂಡ ಮಾತಿಗೆ ಮೀರಿದ್ದು, ಅಲ್ಲವೆ? ಬನ್ನಿ. +ಹೋಗುವರು. ಕತ್ತಲಿನಿಂದ ಉಷಾ ಮೆಲ್ಲಗೆ ಬೆಳಕಿನ ಹತ್ತಿರ ಬರುವಳು. ಬೆಳಕು ಕ್ರಮೇಣ ಮಂದವಾಗುತ್ತಿದೆ. ಕೆಂಚ ನಿಧಾನಕ್ಕೆ ರಂಗಮಧ್ಯಕ್ಕೆ ಬರುತ್ತಾನೆ. ಉಷಾ ವೇದಿಕೆಯ ಅಂಚಿನಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುವಳು. ತಮ್ಮಟೆಯ ಸದ್ದು ಮೆಲ್ಲಗೆ ಆರಂಭವಾಗುವುದು. ಕೆಂಚ ಉಷಾಳ ಸುತ್ತ ಮೆತ್ತಗೆ ಕುಣಿಯುತ್ತಾನೆ- ಹುಲಿಯ ನೆನಪು ಬರುವಂತೆ. ಕತ್ತಲು ಹಬ್ಬಿದಂತೆ ತಮ್ಮಟೆಯ ಸದ್ದು ಹೆಚ್ಚಾಗುತ್ತದೆ). +***** +ಗಣ್ಣ ಪದ ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ ಸಣ್ಣ ಹುಡುಗರು ನಾವು ಬಣ್ಣಕ ಹೆದರವರು ಚೆನ್ನಾಗಿ ಕೇಳರಿ ನಮ್ಮ ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ ಬುದ್ಧಿವಂತರ […] +ಋತುಮಾನದ ಹಕ್ಕಿ [ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು] ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_513.txt b/Kannada Sahitya/article_513.txt new file mode 100644 index 0000000000000000000000000000000000000000..5467802568850e4796d939d0245ac7a223d16a56 --- /dev/null +++ b/Kannada Sahitya/article_513.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನಗೆ ದಿಕ್ಕೇ ತೋಚದಾಯಿತು. +ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ ಮಾತುಗಳನ್ನು ಕೇಳಲು ಅಲ್ಲಿ ಯಾರೂ ತಯಾರಿರಲಿಲ್ಲ. ಅವರೆಲ್ಲರೂ ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಲಾಗದೆ ಮನಸ್ಸು ಬಗ್ಗಡವಾಗಿರಬಹುದು. ನಿರ್ವಾತ ಪ್ರದೇಶವನ್ನು ವಾತಾವರಣ ತನ್ನ ಹತ್ತು ದಿಕ್ಕುಗಳಿಮದ ಅಮುಕುತ್ತಿರುವ ರೀತಿಯಲ್ಲಿ ಕುಬ್ಜವಾಗಿರುವುದು ಹೃದಯ. ಅದಕ್ಕೆ ಸಾಂತ್ವನ ಹೇಳುವ ಚೈತನ್ಯ ಉಡುಗಿ ಹೋಗಿತ್ತು. ಕೂತಲ್ಲಿಂದಲೇ ನೀರು ತಂದು ಕೊಡಬಲ್ಲವರಿಗಾಗಿ ಕಣ್ಣಾಡಿಸಿದೆ. ಕಣ್ಣಿಗೆ ಅಡ್ಡಗೋಡೆ ಇಟ್ಟಂತೆ ಸ್ಥೂಲ ಕಾಯದ ವ್ಯಕ್ತಿ ಹಾಯುತ್ತಿರುವನು. ಆತನೇ ಬೆಳಿಗ್ಗೆ ಬಂದು ನನ್ನನ್ನು ಎಚ್ಚರಿಸಿದ್ದು. ಬಾಗಿಲು ಮುರಿದ ರೀತಿಯಲ್ಲಿ ಧಡ ಧಡ ಬಡಿದಿದ್ದ…. ಸಮಸ್ತ ಓಣಿಗೆ ಕೇಳಿಸುವಂತೆ ಕೂಗಿದ್ದ. ರಜೆ ದಿನವಾಗಿದ್ದರಿಂದ ಮೇಲೇಳಬಾರದೆಂದು ನಿದ್ದೆ ಹೋಗಿದ್ದೆ; ಎದ್ದು ಬಾಗಿಲು ತೆರೆಯುವುದು ಅನಿವಾರ್ಯವಾಗಿತ್ತು. ಅಸ್ತವ್ಯಸ್ತ ಉಡುಗೆಯಲ್ಲಿದ್ದ ನನ್ನ ಮುಂಗೈ ಹಿಡಿದು ಎಳೆದೊಯ್ದಿದ್ದ. ಸರವೊತ್ತಿನಲ್ಲಿ ಸ್ವಪ್ನಸ್ಖಲನಕ್ಕೀಡಾಗಿ ಒಳಚಡ್ಡಿ ಕಟುಗಿಟ್ಟು ಹೆಜ್ಜೆ ಹೆಜ್ಜೆಗೆ ಇರುಸು ಮುರುಸಾಗುತ್ತಿತ್ತು. ಹರೆರೆಗೆಗೆಂದು ತವರಿಗೆ ಹೋಗಿದ್ದ ಹೆಂಡತಿ ಹೆಜ್ಜೆಹೆಜ್ಜೆಗೆ ನೆನಪಾದಳು. ಗುಡಿಗೆ ಸಮೀಪಿಸಿದ ನಂತರವೇ ನಾರಾಣಿಯ ಕೊಲೆಯಾಗಿರುವ ವಿಷಯ ತಿಳಿದು ದೇಹದ ಶಕ್ತಿ ಉಡುಗಿತು. ನಾರಾಣಿಯ ಹೆಣ ದೇವಾಲಯದ ಅಂಗಳದಲ್ಲಿ ಉದ್ದೋಕೆ ಬಿದ್ದಿರುವುದು ಕಂಡಿತು. ಕಪ್ಪಗೆ ಊದಿಕೊಮಡಿರುವುದು ಅದರ ಮುಖ….. ನಿಸ್ಸಂದೇಹವಾಗಿ ನಾರಾಣಿಯ ಕೊಲೆ ಆಗಿದೆ. ಭಯದಿಂದ ಕಂಪಿಸಿದ ದೇಹದ ಮೂಲೆಯಲ್ಲಿ ಸಂತೋಷದ ಎಳೆ ಮತ್ತಷ್ಟು ಭಯಾನಕವಾಗಿ ಕಾಣಿಸಿಕೊಂಡಿತು. +ಗುಂಪಿನಲ್ಲಿ ಗೌಡ ಕುಲಕರ್ಣಿ ಕಾಣಿಸಿಕೊಂಡಿರುವರು. ತಳವಾರರೆಂದರೆ ತಳವಾರರು! ಕುರಿಯೊಂದನ್ನು ಕಾಯಲು ನಾಲ್ಕು ತೋಳಗಳು. ಮೊನ್ನೆ ನಡೆದ ಘಟನೆಯನ್ನು ಅನುಲಕ್ಷಿಸಿ ಕೊಲೆಯ ಪಟ್ಟಿ ನನ್ನ ತಲೆಗೆ ಕಟ್ಟಿರುವುದು ಅಂಗೈಯಷ್ಟೆ ಸ್ಪಷ್ಟ. ನಾನು ಆವತ್ತು ತಾಳ್ಮೆಯನ್ನು ಸಂದರ್ಭಕ್ಕೆ ಬಲಿಕೊಡಬಾರದಿತ್ತು; ಆಗುವುದು ಆಗಿ ಹೋಗಿದೆ! ಉಳಿದಿರುವುದೆಂದರೆ ಈ ಅಪವಾದಿಂದ ಮುಕ್ತನಾಗುವ ಮಾರ್ಗ ಹುಡುಕುವುದು. ಮಾರ್ಗ ಸರಳವಾಗಿಲ್ಲ. ಅಲ್ಲದೆ ಇದು ಮಾತೃರಾಜ್ಯವಲ್ಲ. ಹತ್ತಿರದಿಂದ ಬಲ್ಲವರೊಬ್ಬರೂ ಈ ನಾಲ್ಕು ಸಾವಿರ ಮನೆಗಳಲ್ಲಿಲ್ಲ. ನಾನಿದ್ದ ಎರಡು ವರ್ಷದವಧಿಯಲ್ಲಿ ಊರೊಳಗೆ ಅಡ್ಡಾಡಿ ಕಾಲಕ್ಷೇಪ ಮಾಡಿರಲಿಲ್ಲ. ಆದ್ದರಿಂದ ಜನ ನನಗೆ ಹತ್ತಿರ ಹೇಗಾದಾರು! ಊರ ರಾಜಕೀಯದ ಬಗ್ಗೆ ಮಾತಾಡಲು ನಾನು ಕುಲಕರ್ಣಿ ರಾಮಣ್ಣನ ಹಿಂದೆ ತಿರುಗಲಿಲ್ಲ. ವೀರನಗೌಡ ನಡೆಸುತ್ತಿರುವ ಕ್ಲಬ್ಬಿನಲ್ಲಿ ಕೂತು ಇಸ್ಪೀಟು ಆಡಲಿಲ್ಲ. ಗ್ರಾಮದ ಕೆಲವು ಹಿರಿಯರೂ ಅಷ್ಟೆ; ನನ್ನನ್ನು ಹೆಣದೊಂದಿಗೆ ಸಮೀಕರಿಸಿ ಮಾತಾಡತೊಡಗಿದರು. ಗಾಯತ್ರಿ ಮಂತ್ರವನ್ನು ನಡು ನೀರಿನಲ್ಲಿ ಕೈಬಿಟ್ಟು ಬಂದ ನಮ್ಮ ಹೆಡ್‌ಮಾಸ್ಟರ್‍ ಲಕ್ಷ್ಮೀ ನರಸಯ್ಯನನ್ನು ಗೌಡ ಕುಲಕರ್ಣಿ ಆದರದಿಂದ ಬರಮಾಡಿಕೊಂಡರು. ಮೊದಲೇ ನಮ್ಮ ಹೆಚ್ಚೆಮ್ ಅಂಗಿಯೊಳಗೆ ಹಲ್ಲಿ ತೂರಿದಂತೆ ಶತಪದಿಯಂತೆ ವರ್ತಿಸುವ ಗೊಂದಲ ಮನಸ್ಸಿನಾತ…. ಈತನನ್ನು ನೋಡಿ ಎರಡು ವರ್ಷದ ಹಿಂದೆಯೇ ಮುಂದೆ೩ ಹೀಗೆ ನಡೆಯಬಹುದೆಂದುಕೊಂಡಿದ್ದೆನೆಂದು ಬೀಡಿ ಹಚ್ಚಿಕೊಂಡ. ತಮ್ಮ ಶಿಕ್ಷಣ ಸಂಸ್ಥೆಗೆ ಅಂತೂ ಕೆಟ್ಟ ಹೆಸರು ತಂದೆಯಲ್ಲೋ ಎಂದು ಶಪಿಸಿದ. ಪೊಲೀಸರು ಬಂದು ಒಳಗೆ ಹಾಕಿ ಒದೆಯುತ್ತರೆಂದು ಜನರು ಮೆಚ್ಚುವಂತೆ ಮಾತಾಡುವಾಗ ನನ್ನ ಸಹೋದ್ಯೋಗಿ ಶೀನಪ್ಪ ಬಂದದ್ದು. ಬಂದಕೂಡಲೆ ಸರಕಾರಿ ನೌಕರರಾದ ನಾವೆಲ್ಲಾ ಒಂದೇ; ನೀವು ಊರವರ ಪರ ವಹಿಸಿ ಮಾತಾಡುವಿರಲ್ಲಾ ಎಂದು ಹೆಚ್ಚಮ್‌ನನ್ನು ತರಾಟೆಗೆ ತೆಗೆದುಕೊಂಡ. ಅವರಿಬ್ಬರು ಪರಸ್ಪರ ವಾದಿಸಿದರು. ಸೀನಿಯಾರಿಟಿ ಪ್ರಕಾರ ನೊಡಿದರೆ ಶೀನಪ್ಪ ನಮ್ಮ ಹೈಸ್ಕೂಲು ಹೆಚ್ಚೆಮ್ಮಾಗಬೇಕಿತ್ತು. ಊರಿನ ರಾಜಕೀಯದಿಮದಾಗಿ ಅದು ಅವನ ಕೈತಪ್ಪಿತ್ತು. ಅವರಿವರ ಮಧ್ಯೆ ಏನೇ ಇರಲಿ ಒಬ್ಬರಾದರೂ ನನ್ನ ಪರವಾಗಿ ಮಾತಾಡುವವರಿರುವರಲ್ಲ. ಎಂಬುದಷ್ಟೇ ನನಗೆ ಸಮಾಧಾನವಾಗಿತ್ತು. ಶೀನಪ್ಪ ಇರದಿದ್ದರೆ ಅಥವಾ ಇದ್ದೂ ಆಸ್ಥೆ ವಹಿಸಿ ಬಾರದಿದ್ದಲ್ಲಿ ನಾನು ಕೂತಲ್ಲಿಯೇ ನಾಮಾವಶೇಷವಾಗುತ೫ತಿದ್ದೆನೇನೋ? ನಾನು ಬರೀ ಬನಿಯನ್; ಲುಂಗಿ ಮೇಲಿರುವುದು ಕಂಡು ಶೀನಪ್ಪ ತುಂಬ ಕನಿಕರ ಪಟ್ಟ. ನೀವು ಕೊಲೆ ಮಾಡಿರಬಹುದು ಅಥವಾ ಮಾಡದಿರಬಹುದೆಂದು ಪಲ್ಲವಿ ಶುರು ಮಾಡಿದ. ಸ್ಥೂಲಕಾಯದ ವ್ಯಕ್ತಿಯಿಂದ ಬೀಗದ ಚಾವಿ ಪಡೆದು ಮನೆಗೆ ಹೋಗಿ ತೆಳು ಗುಲಾಬಿ ಬಣ್ಣದ ಶರ್ಟ್ ತಂದ. ಮುಖಮಾರ್ಜನ ಮಾಡಿದ್ಡೂ ಆತನ ಸಹಾಯದಿಮದಲೇ. ಕೇವಲ ತಾಸಿನೊಳಗಾಗಿ ಮಣ ಪ್ರಮಾಣದ ಋಣಭಾರ ಹೇರಿದ. ಹೆಣದ ಸರಹದ್ದಿನಲ್ಲಿ ನನಗೆ ಆತ ತರಿಸಿದ ತಿಂಡಿ ತಿನ್ನಲಾಗಲಿಲ್ಲ. ಬರೀ ಚಹ ಸೇವಿಸಿದೆ. ನಂತರ ಹೊಟ್ಟೆ ತೊಳಸಲಾರಂಭಿಸಿತು. ಗಂಟಲವರೆಗೆ ನುಗ್ಗಿ ಬಂದು ಎಷ್ಟೋ ಸಾರಿ ವಾಪಸು ಹೋಯಿತು ಅದು. ಇನ್ನೇನು ವಾಂತಿ ಮಾಡಿ ಬಿಡುತ್ತೇನೆನ್ನಿಸಿ ಕೆಲವೊಮ್ಮೆ ತಲೆಯನ್ನು ಬಿಗಿ ಹಿಡಿದೆ. ತಲೆಯೊಳಗೆ ಸುಂಟರಗಾಳಿಯೇ ಎದ್ದಿತ್ತು. ಸುಂಟರಗಾಳಿಯ ತುಂಬ ನೆನಪುಗಳು; ಎಲ್ಲವೂ ಚಲ್ಲಾ ಪಿಲ್ಲಿ, ವೆಟರ್‍ನರಿ ಕಾಂಪೌಂಸ್ರು ಮಲ್ಲನ್ನ ಮತ್ತು ಗ್ರಾಮೀಣ ಬ್ಯಾಂಕಿನ ಅರವಿಂದರ ಜೊತೆ ತೇರುಗಡ್ಡೆಯ ಬಳಿ ನಿಮತು ಶೀನಪ್ಪ ಮಾತಾಡುತ್ತಿರುವುದರ ಕಡೆ ನನ್ನ ಗಮನ ಅಷ್ಟಾಗಿ ಇರಲಿಲ್ಲ. ನನಗಿದ್ದ ಭಯವೆಂದರೆ ನಾರಾಣಿಯ ಹೆಣದ್ದು, ಕೊಲೆ ಎರಡನೆ ಸಿನಿಮಾ ಬಿಟ್ಟ ನಂತರ ನಡೆದಿರಬೇಕೆಂದು ಕೆಲವರು ಊಹಿಸಿದ್ದರು ಆಗಲೆ. ಕೊಲೆ ಮಾಡಿದವರು ಹೆಣವನ್ನು ದೇವಸ್ಥಾನದ ಮುಂದೆಯೇ ಬಿಟ್ಟು ಹೋಗಿರುವುದರಿಂದ ಇಷ್ಟೆಲ್ಲ ತೊಂದರೆ. ಹೀಗೆ ನಡೆಯುವುದೆಂದು ಮೊದಲೆ ಗೊತ್ತಿದ್ದರೆ ಊರಿಗೆ ಹೋಗಿಬಿಡಬಹುದಿತ್ತು! ಅಥವಾ ನೂರಿನ್ನೂರು ಕೊಟ್ಟು ನಾರಾಣಿಯನ್ನು ದುರ ಸಾಗು ಹಾಕಬಹುದಿತ್ತು! ಆ ಪೈಕಿಯಲ್ಲ ನಾರಾಣಿ. ಅಷ್ಟು ಪರಿಚಯ; ಇಂಥೋನ್ನ ಪರಿಚಯ ಆದ ಬಗೆ ನೆನೆಸಿಕೊಮಡರೆ ಈಗಲೂ ಮೈ ಜುಂ ಎನ್ನುವುದು; ಅಷ್ಟೇ ವಿಚಿತ್ರವೆನಿಸುವುದು. ನಾನು ನಾರಾಣಿಯನ್ನು ಪ್ರಪ್ರಥಮವಾಗಿ ನೋಡಿದ್ದು ಸುಮಾರು ಆರು ವರ್ಷ ಹಿಂದೆ. ಆಗ ನಾನು ಪೆದ್ದು ಕಡಬೂರಿನಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದೆ. ಪೆದ್ದಕಡಬೂರು ಎಂದರೆ ಅಂಡಮಾನ್ ಎಂತಲೇ ಕರೆಯುವುದು. ಆದವಾನಿ ಮತ್ತು ಪತ್ತಿಕೊಂಡದ ನಡುವೆ ಒಂಭತ್ತನೆ ಮೈಲಿಕಲ್ಲಿಗೆ ದಕ್ಷಿಣ ದಿಕ್ಕಿನಲ್ಲಿ ಮೂರುವರೆ ಮೈಲಿ ದುರದಲ್ಲಿರುವ ಪುಟ್ಟ ಗ್ರಮ. ಮನೆಗಳ ಸಂಖ್ಯೆ ಮುನ್ನೂರು ಚಿಲ್ಲರೆ; ಜನಸಂಖ್ಯೆ-ಸುಮಾರು ಹನ್ನೆರಡು ನುರು ಚಿಲ್ಲರೆ. ಆ ಉರಿನ ಸರಹದ್ದಿನಲ್ಲಿ ಕೊಲೆ ಸುಲಿಗೆಗಳು ಸರ್ವೇಸಾಮಾನ್ಯ. ನಮಗೆ ಏನಾದರೂ ಬೇಕಿದ್ದರೆ ಆರು ಮೈಲಿ ದೂರದ ಹೊಳಗುಂದಿಗೆ ನಡೆದೇ ಹೋಗಬೇಕಿತ್ತು. ಅದು ಆಷಾಡ ಮಾಸ, ಯಾವ ಹೊಲದಲ್ಲೂ ನರಮಾನವರ ಸುಳಿವಿರುವುದಿಲ್ಲ. ಒಂದು ಮಧ್ಯಾಹ್ನ ನಡೆದು ಹೊಳಗುಂದಿಯ ಕಡೆ ಹೆಜ್ಜೆ ಹಾಕುತ್ತಿದ್ದೆ. ನೆತ್ತಿಯನ್ನು ಚುಚುವ ಸೂರ್ಯನ ಬಿಸಿಲು. ನನಗೆ ಜೊಗೆಯಾಗಿ ಯಾರೂ ಇರಲಿಲ್ಲ. ಕಡದಮ್ಮನಹಳ್ಳ ದಾಟಿ ದಿಬ್ಬದ ಮೇಲೆ ಬಂದಿದ್ದೆ. ಕಡದಮ್ಮ ಎಂಬ ಮಹಿಳೆ ಎಂದೋ ಆತ್ಮಹತ್ಯೆ ಮಾಡಿಕೊಂಡಳೆಂಬ ಕಾರಣಕ್ಕೆ ಅದು ಕಡದಮ್ಮನ ಹಳ್ಳವಾಗಿತ್ತು. ಎರಡು ಫರ್ಲಾಂಗ್ ದುರದಲ್ಲಿ ಹುಲುಲಿ ಹಳ್ಳ. ಆ ಹಳ್ಳದಲ್ಲಿ ಇಕ್ಕೆಲಗಳಲ್ಲಿ ಆಳೆತ್ತರದ ರಿಜರಿಮುಳ್ಳಿನ ಪೊದೆಗಳಿದ್ದವು. ಹುಲುಲಿ ಹಳ್ಳ ಪ್ರವೇಶಿಸಿದ ಕೂಡಲೆ ಒಂದು ಮಾನವಾಕೃತಿ ಗೋಚರಿಸಿತು; ಅದೂ ಧುತ್ತನೆ, ಆರಡಿ ಎತ್ತರದ ಮನುಷ್ಯ ಆತನಾಗಿದ್ದ. ಕುರುಚಲು ಗಡ್ಡ; ಗೆಬರು ಮೀಸೆ, ಕೆಂಡವಾಗಿದ್ದ ಕಣ್ಣುಗಳಿಂದಾಗಿ ಆತನ ಮುಖ ವ್ಯಗ್ರವಾಗಿ ಕಾಣುತ್ತಿತ್ತು. ಹರಕು ಕಂಬಳಿಯೊಳಗೆ ತನ್ನ ಮೈಮುಚ್ಚಿಕೊಂಡಿದ್ದ. ಕೈಯಲ್ಲಿ ಕಟ್ಟಿಗೆಯ ತುಂಡು ಹಿಡಿದುಕೊಮಡಿದ್ದ. ಹಾದಿ ಬಡಿಯುವ ಮನುಷ್ಯನಂದು ಕೂಡಲೇ ಅರ್ಥವಾಯಿತು. ಅವನ್ನನು ಎದುರಿಸುವಂಥ ತಕ್ಕ ಮೈಕಟ್ಟು ನನಗೂ ಇತ್ತು. ಹೆದರಿಕೆಯಾದರೂ ಸಹಿಸಿಕೊಂಡೆ. ಮೊದಲಿಗೆ ಬೀಡಿ, ಕಡ್ಡಿ ಕೇಳಿದ. ಸೇದುವುದಿಲ್ಲೆಂದು ಉತ್ತರಿಸಿದೆ. ಅನತಿ ದೂರದಲ್ಲಿ ಆತ ನನ್ನೊಂದಿಗೆ ಹೆಜ್ಜೆ ಹಾಕತೊಡಗಿದ್ದ. ಪುಟ ೨೯ ೨ನೇ ಸಾಲು. ನನ್ನ ಮೈತುಂಬ ಕಣ್ಣಿದ್ದವು. ಮೌನವಾಗಿ ನಡೆಯುವುದು ಅಸಹನೀಯವೆನ್ನಿಸಿತು. ಯಾವೂರು ಅಂತ ಮೌನ ಮುರಿದೆ. ದುರುಗುಟ್ಟಿ ನೋಡಿದ. ಕೂಡಲೇ ಉತ್ತರ ಕೊಡಲಿಲ್ಲ. ಬನ್ನಿ ಮಂಕಾಳಮ್ಮನ ಕಟ್ಟೆ ಬಂದಿತು, ಅದಕ್ಕೆ ನಮಸ್ಕರಿಸಿದೆ. ನಂತರ ಅವನು ಮಾತು ಆಡತೊಡಗಿದ. ವಾರ-ಹತ್ತು ದಿನಗಳ ಹಿಂದೆ ದೇವಿ ಕ್ಯಾಂಪ್‌ನಲ್ಲಿ ನಡೆದ ಆಕೆಳ್ಳ ವೆಂಕಟೇಶ್ವರರಾವ್ ಕೊಲೆ ಕಡೆಗೆ ನನ್ನ ಗಮನ ಸೆಳೆದ. ಆ ಕೊಲೆ ಮಾಡಿದ ವ್ಯಕ್ತಿ ತಾನೆಂದು ಬಾಳೆಹಣ್ಣು ಸುಲಿದಂತೆ ನುಡಿದ. ಸಾಕ್ಷಿಯಾಗಿ ಬಟ್ಟೆ ಮೇಲಿದ್ದ ರಕ್ತದ ಕಲೆಗಳನ್ನು ತೋರಿಸಿದ. ನಾನು ನಂಬಲಿಲ್ಲೆಂದು ಗ್ರಹಿಸಿ ಟೊಂಕದ ಸಂಧಿಯಿಂದ ಬಾಕು ತೆಗೆದು ಘಳಪಿಸಿದ. ಆತನ ಮಾತಿಗಾಗಲಿ; ತೋರಿಸಿದ ಬಾಕಿಗಾಗಲೀ ನಾನು ಹೆದರಲಿಲ್ಲ (ಹೆದರಬೇಕಿತ್ತು ಅಂತ ಅನಂತರ ಅನ್ನಿಸಿತು). ಅದಕ್ಕೆ ಆತನಿಗೆ ಆಶ್ಚರ್ಯವಾಗಿರಬೇಕು. ತಾನು ಮಾಡಿರುವ ನಾಲ್ಕು ಕೊಲೆಗಳ ಬಗ್ಗೆ ಸವಿವರವಾಗಿ ಹೇಳಿದ, ಸಹೃದಯದಿಂದ ಕೇಳುವವರಿಗಾಗಿ ಆವತ್ತಿನವರೆಗೆ ತಡಕಾಡುತ್ತಿದ್ದವನಂತೆ. ಆತ ಬಾಡಿಗೆ ಕೊಲೆಗಾರನೆಂದು ನನಗೆ ಹೊಳೆಯಿತು. ಒಂದೊಂದಾಗಿ ಹೇಳುತ್ತ ಆತ ಉದ್ವಿಗ್ನಗೊಂಡ, ಸಿಟಟಿನಿಮದ ಮುಖ ಬಿಗಿದ. ಆಗಾಗ್ಗೆ ದುಂಖದಿಂದ ಕಂಪಿಸಿದ. ತನ್ನ ಹೆಂಡಿರು ಮಕ್ಕಳ ಬಗ್ಗೆ ಹೇಳುವಾಗ ನನ್ನೆರಡು ಕೈಗಳನ್ನು ಬಲವಾಗಿ ಹಿಡಿದುಕೊಮಡ. ನನ್ನ ಮುಂಗೈಗೆ ಹಣೆ ಹಚ್ಚಿ ಅಲತೊಡಗಿದ; ಚಿಕ್ಕ ಮಗುವಿನಂತೆ. ನನ್ನ ಮುಂಗೈ ಆತನ ಕಣ್ಣೀರಿನಿಂದ ತೇವಗೊಂಡಿತ್ತು. ಆ ಅಶ್ರುತಾರ್ಪಣಕ್ಕೆ ನಾನು ಕರಗಿಹೋದೆ. ಆತ ಅಂದರೆ ನಾರಾಣಿ ತನ್ನ ಬಗ್ಗೆ ಸುಮಾರು ದೂರ ಹೇಳಿದ. ನಾನೂ ಅಷ್ಟೆ, ನಾನೂ ಹೇಳಿಕೊಂಡೆ. ಹೊಳಗುಂದಿ ಸಮೀಪಿಸಿದ್ದೆವು. ಸ್ವಲ್ಪ ದೂರ ಕ್ರಮಿಸಿದರೆ ಹಾದಿ ಪಕ್ಕ ಪೊಲೀಸ್ ಠಾಣೆ ಬರುತ್ತಿತ್ತು. ನನ್ನಿಂದ ಆತ ಅಗಲಿಹೋಗುವುದು ಒಳ್ಳೆಯದೆನಿಸಿತು. ಎಲ್ಲಿಯಾದರೂ ಆಹಾರ ಕೊರಕಿಸಿಕೊಂಡ ತಿನ್ನಲು ಹೇಳಿ ಹತ್ತು ರೂಪಾಯಿ ಕೊಡಲು ಹೋದೆ. ಎಷ್ಟು ಒತ್ತಾಯಿಸಿದರೂ ಅದನ್ನು ಪಡೆಯಲು ನಾರಾಣಿ ನಿರಾಕರಿಸಿದ ಮತ್ತು ಎಡಕ್ಕಿದ್ದ ಕಾಲು ಹಾದಿಗುಂಟ ಕೆರೆ ಹಾದಿಗುಂಟ ಕೆರೆ ಅಂಗಳದ ಕಡೆ ನಡೆದು ಮರೆಯಾಗಿ ಹೋದ. +ಅವನು ನನಗೆ ಬೆನ್ನು ಮಾಡಿ ನಡೆದ ಶೈಲಿ; ಅವನು ಕ್ರಮಿಸಿದ ದಿಕ್ಕು; ನನಗಿನ್ನೂ ಚೆನ್ನಾಗಿ ನೆನಪಿರುವುದು. ಪೊಲೀಸರಿಗೆ ಬೇಕಾಗಿರುವ ಒಬ್ಬ ಕ್ರಿಮಿನಲ್ ಅಪರಾಧಿಯ ಜೊತೆ ಒಂದೂವರೆ ತಾನು ಕಳೆದದ್ದು ಅವಿಸ್ಮರಣೀಯ ಅಂತ ಭಾವಿಸಿದ್ದೆ. ಅವನ ಕಲ್ಲೆದೆಯನ್ನು ಸೀಳಿ ಹರಿದ ಕಣ್ಣೀರು ನನ್ನನ್ನು ಪರವಶನನ್ನಾಗಿ ಮಾಡಿತ್ತು. ಅಲ್ಲದೆ ಆತ್ಮೀಯನೊಬ್ಬನಿಗಾಗಿ ತಡಕಾಡುತ್ತಿದ್ದೆ. ನನಗಿದ್ದ ನೂರಾರು ಗೆಳೆಯರಲ್ಲಿ ಯಾರಿಗೂ ಸಹೃದಯತೆ ಕೇಳುವ; ಅಥವಾ ಹೇಳುವ ಆತ್ಮೀಯ ಗುಣ ಇರಲಿಲ್ಲ. ಹೆಂಡತಿಯಲ್ಲೂ ಅಷ್ಟೇ; ಹುಟ್ಟಿದಂದಿನಿಂದ ತಂದೆ-ತಾಯಿಯರ ಒಡಹುಟ್ಟಿದವರ ಪ್ರೀತಿ ಮಮತೆಯಿಂದ ವಂಚಿತನಾಗಿ ಬೆಳೆದ ನಾನು ನಾರಾಣಿಯಲ್ಲಿ ಅಂಥ ಆತ್ಮೀಯ ಸೆಲೆ ಗುರುತಿಸಿದಲ್ಲಿ ತಪ್ಪೇನು? +ನನ್ನ ಕಣ್ಣುಗಳು ಹನಿಗೂಡಿದವು. ಒರೆಸಿಕೊಂಡೆ. ಇಲ್ಲ….ಇಲ್ಲ….ನಾನು ಹಾಗೆ ಪರಿಭಾವಿಸಿದ್ದು ತಪ್ಪು…. ಮರುಭೂಮಿಯ ಮೇಲೆ ನದಿ ಹರೆಇದು ಕಣ್ಮರೆಯಾದಂತಾಗಿತ್ತು ನನ್ನ ಹೃದಯ. ಕೊನೆ ಕ್ಷಣದಲ್ಲಿ ಕೈಕೊಟ್ಟ ಆತ್ಮೀಯತೆ ಎಷ್ಟನೆಯದೋ? ಹೆಣದ ಕಡೆ ನೋಡಿ ನಿಟ್ಟುಸಿರಿಟ್ಟೆ. +ಏನೋ ನಿರ್ಧರಿಸಿರುವವನಂತೆ ಶೀನಪ್ಪ ಬಂದ. ಹಣ ಎಷ್ಟಿದೆ ಎಂದು ಕೇಳಿದ. ಅದು ಇರಲಿಲ್ಲ. ಯಾಕಂತ ಕೇಳಿದೆ. ನಿಮ್ಮೂರ್‍ಗೆ; ನಿಮ್ಮಿಸ್ಸೆಸ್ಗೂ ಟೆಲಿಗ್ರಾಂ ಮಾಡಿ ಸುದ್ದಿ ಮುಟ್ಟಿಸ್ತೀನಿ ಅಂದ. ಈ ಅವಸ್ಥೆಯಲ್ಲಿ ನಾನು ಯಾರಿಗೂ ಕಾಣಿಸಿಕೊಳ್ಳುವುದು ಇಷ್ಟವಿರಲಿಲ್ಲ. ನನ್ನವರು ತನ್ನವರು ಗ್ರಾಮಸ್ಥರಿಗಿಂತ ಭಿನ್ನರೇನಲ್ಲ. ಅವರ ಪೈಕಿ ಯಾರೊಬ್ಬರೂ ನನ್ನನ್ನು ಅರ್ಥಮಾಡಿಕೊಂಡ ಸಂದರ್ಭ ನನಗೆ ನೆನಪಾಗುವುದು ಸಾಧ್ಯವಿಲ್ಲ. ಆದ್ದರಿಂದ ನನಗ ಈ ವಿಷಯದಲ್ಲಿ ಗಲ್ಲಾದರೂ ಚಿಂತೆ ಇಲ್ಲ… ಅವರಾರೂ ಬರುವುದು ಬೇಡ ಅಂತ ಖಂಡಿತವಾಗಿ ಹೇಳಿದೆ. “ನಿಮ್ಮ ಮಿಸೆಸ್ಸಾದ್ರೂ ಬರೋದು ಬೇಡ್ವಾ” ಎಂದು ಶೀನಪ್ಪ ಪ್ರಶ್ನಿಸಿದ. ನನ್ನ ಹೆಂಡತಿಯ ಸೂಕ್ಷ್ಮ ಹೃದಯ ಈ ಪ್ರಕರಣದಿಂದಾಗಿ ಹೋಲಾಗಬಹುದು. ಆಕೆಯೂ ಬರುವುದು ಬೇಡ ಅಂಎ. “ಏಯ್ ನಿನ್ ಕುಟಾಗೇನು’ ಒಬ್ನೇ ಜೈಲ್ನಲ್ಲಿ ಕೊಳೀಬೇಕಂತ ಮಾಡೀ ಏನು…. ನಿನ್ ಮರ್ಯಾದೆ ಹೋದ್ರೂ ಒಂದೆ ನಮ್ ಮರ್ಯಾದೆ ಹೋದ್ರೂ ಒಂದೆ” ಎಂದು ಶೀನಪ್ಪ ಮಲ್ಲನನ್ನು, ಅವರಿಂದರನ್ನು ಹಿಂದಿಟ್ಟುಕೊಂಡು ಅಂಚೆ ಕಛೇರಿಗೆ ಹೋದ. ಅವನತ್ತ ಕಲ್ಲು ತೂರಬೇಕೆನ್ನಿಸಿತು. ಅಷ್ಟೊತ್ತಿಗೆ ಹೆಚ್ಚೆಮ್ ಗೌಡ ಕುಲಕರ್ಣಿಯವರ ಜೊತೆ ಸಮಾಲೋಚಿಸುತ್ತಿದ್ದ. ಅವರ ಮಾತಿನ ವರಸೆ ಗಮನಿಸಿ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಬರಬಹುದೆಂದು ಊಹಿಸಿದೆ. ನಾನು ಮೃತ್ಯುವಿಗಿಂತ ಹೆದರುವುದು ಪೊಲೀಸರಿಗೆ. ಪೊಲೀಸರ ಕ್ರೌರ್ಯದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತಿಳಿದಿರುವುದೊಂದೇ ಅಲ್ಲ; ವಕೀಲ ಗೆಳೆಯ ಪಂಡತಾರಾಧ್ಯ ಪೊಲೀಸರ ಬಗ್ಗೆ ದೃಷ್ಟಾಂತ ಸಹಿತ ವಿವರಿಸಿರುವನು. ಅದೂ ಸಾಲದೆಂಬಂತೆ ನಾರಾಣಿಯ ಜೈಲಿನ ಅನುಭವಗಳೇ ಸಾಕಷ್ಟಿರುವವಲ್ಲ. +ಅವತ್ತು ಮುಂಗೈ ತೇವ ಮಾಡಿಹೋದ ನಾರಾಣಿಯನ್ನು ಮರೆಯಲಿಕ್ಕೆ ನನ್ನಿಂದ ಸಾಧ್ಯವಾಗಲೇ ಇರಲಿಲ್ಲ. ನಂತರ ಅವನನ್ನು ಒಂದೆರಡು ಬಾರಿ ಆದೋನಿಯಲ್ಲಿ ನೋಡಿದ್ದುಂಟು. ಎಲ್ಲ ರಾದ್ಧಾಂತಗಳಿಂದ ಮುಕ್ತನಾಗಿರುವವನಂತೆ ಯಾವ ಗೌಡರಿಗೂ ಕಡಿಮೆ ಇಲ್ಲದವನಂತೆ ಗೋಚರಿಸಿದ್ದ. ಆನಂದ ಭವನದಲ್ಲಿ ನನಗೆ ಕಾಫಿ ತಿಂಡಿ ಕೊಡಿಸಿ ನನ್ನ ಸುತ್ತ ಅನ್ನದ ಬಲೆ ನೇಯಲೆತ್ನಿಸಿದ್ದ. ನಾನು ಯಾವ ಋಣದಲ್ಲಿ ಸಿಲುಕಿಕೊಂಡೇನು! ಆದರೆ ಅನ್ನದ ಋಣದಲ್ಲಿ ಮಾತ್ರ ಯಾವ ಕಾರಣಕ್ಕೂ ಸಿಲುಕಲಾರೆನೆಂದು ಅವಿದ್ಯಾವಂತನೂ, ಅಸಂಸ್ಕೃತನೂ ಆದ ನಾರಾಣಿ ಹೇಗೆ ಗ್ರಹಿಸಿಯಾನು! ಅವನು ಮನಸ್ಸಿನೊಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಜುಲಾಬಿ ಮಾತ್ರೆ ನುಂಗಿದವನಂತೆ ಜಾಡಿಸುತ್ತಿದ್ದ. ಆದ್ದರಿಂದ ಅವನೊಂದಿಗೆ ಇದ್ದಗ ಹತ್ತರದ ಬಂಧುವಿನೊಂದಿಗೆ ಇದ್ದ ಅನುಭವವಾಗುತ್ತಿತ್ತು. +ನಂತರ ನಾರಾಣಿ ನನಗೆ ಭೆಟ್ಟಿಯಾಗಿದ್ದು ತಮ್ಮ ಮೇಲೆ ಕಾದಂಬರಿ ಬರೆದೀ ಏನಲೇ ಅಂತ ಪೆದ್ದ ಕಡಬೂರಿನ ಜಂಗಮರು ನನ್ನ ಮೇಲೆ ಸೆಡ್ಹೊಡೆದಿದ್ದಾಗ ಅವನು ಪೆದ್ದ ಕರಬೂರಿನ ನನ್ನ ಮನೆಗೆ ಸೀದ ಬಂದು ಪರಾಂಬರಿಸಿದ. “ಯಾರು ನಿಮ್ಮನ್ನು ಅವಮಾನಗೊಳಿಸಿದ್ದು ಅವರ ದೇಹದ ಯಾವ ಅಂಗಗಳೆಂದರೆ ನಿಮಗೆ ಇಷ್ಟ, ಹೇಳಿರಿ ಮೇಷ್ಟೆರ ಈಗಲೆ ತಂದು ಕೊಡುವೆನು” ಮಾಯಾಬಜಾರ್‌ನ ಘಟೋತ್ಕಜನಂತೆ ನುಡಿದ. ಅದೇ ಊರಲ್ಲಿ ಕುಖ್ಯಾತ ಕೊಕ್ಕಬುಕ್ಕ ನಾರಾಣಿಯು ಹಾಕಿದ ಉಗುಳನ್ನು ಯಾವ ಕಾರಣ ದಾಟಲಾರನಂತೆ. ಅವನು ಅವನನ್ನು ಪರಿಚಯಿಸಿ ನನಗೆ ಒಳ್ಳಯದು ಮಾಡಲು ಹೇಳಿ ಸಂಜೆ ಹೇಳದೆ ಕೇಳದೆ ಕಾಣೆಯಾಗಿಬಿಟ್ಟ. +ಅದೇ ನಾರಾನಿ ಕೊಲೆಯಾದನೆಂದರೆ ಇನ್ನೂ ನಂಬಲಾಗಲಿಲ್ಲ ನನಗೆ. ತಲೆ ಎತ್ತಿದೆ, ಏರಿದ್ದ ಬಿಸಿಲಿಗೆ ಅದರ ಮುಖ ಮತ್ತಷ್ಟು ಕಪ್ಪಾಗಿದೆ. ಅದರ ಮೈಮೇಲೆ ಹತ್ತಾರು ರಕ್ತದ ಕಲೆಗಳು, ಕನಿಷ್ಠ ಮುವ್ವರಾದರೂ ಅವನನ್ನು ಚೂರಿಯಿಮದ ಇರಿದಿರಬಹುದು. ಕಲ್ಲು ಬಂಡೆಗಳ ಮೇಲೂ ರಕ್ತದ ಗುರುತುಗಳಿರುವವು. ಸಾಯುವಾಗೇನಾದರೂ ನಾರಾಣಿ ನನ್ನನ್ನು ನೆನೆದಿರಬಹುದೆ! …. ಇಲ್ಲ…. ಅವನು ಹಾಗೆ ನೆನೆಯುವ ಪೈಕಿಯಲ್ಲ. ಉಪ್ಪಿಕ್ಕಿದವರ ಮನೆಯಲ್ಲಿ ಎಷ್ಟೆಷ್ಟು ತೊಲೆ ಜಂತಿಗಳಿವೆ ಎಂದು ಕರಾರುವಾಕ್ಕಾಗಿ ಹೇಳಬಲ್ಲವನಾಗಿದ್ದ ನಾರಾಣಿ. ಮತ್ತೆ ಮನಸ್ಸು ನೆನಪುಗಳ ಬಗ್ಗಡವಾಗುವುದು…. ಎರಡು ಮೂರು ಕಡೆ ಟೆಲಿಗ್ರಾಂ ಕೊಟ್ಟು ಬಂದಿದ್ದ ಶೀನಪ್ಪ ಊಟಕ್ಕೇಳಲು ನನ್ನನ್ನು ಒತ್ತಾಯಿಸಿದ. ತಳವಾರರ ಕಾವಲಲ್ಲಿ ಹೋಟೆಲ್ಲಿಗೆ ಹೋಗಿ ನಾನು ಊಟ ಮಾಡಬಹುದಿತ್ತು. ಯಾವ ಸಮುದ್ರ ಹೊಕ್ಕರೂ ಪಾಪಿಗೆ ಮೊಣಕಾಲ ಮಟ್ಟ ನೀರು…. ನನ್ನ ಪಂಚೇಂದ್ರಿಯಗಳನ್ನೆಲ್ಲ ನಾರಾಣಿಯ ಹೆಣ ವ್ಯಾಪಿಸಿದೆ. ಮನಸ್ಸಿಗಷ್ಟೇ ಅಲ್ಲ… ಹೊಟ್ಟೆಯಲ್ಲೂ ಸಹ. ಆದ್ದರಿಂದ ಕೆಟ್ಟ ಹಸಿವೆಯಲ್ಲೂ ಹೆಣದ ವಾಸನೆಯ ಕಮರು ಡೇಗುಗಳನ್ನು ಡೇಗಿದೆ; ಎರಡು ಮೂರು ಬಾರಿ…. ತನಗೂ ಊಟ ಇಳಿಯುವುದಿಲ್ಲೆಂದ ಶೀನಪ್ಪ “ಪೊಲೀಸರ ಕೈ ಬೆಚ್ಚಗೆ ಮಾಡಲು ಹಣ ಬೇಕಲ್ಲ… ಎಷ್ಟಿಟ್ಟಿರುವೆ” ಎಂದು ಪಿಸು ನುಡಿದ. ನಾನು ಇಲ್ಲೆಂದೆ. ನಂತರ ಹೆಚ್ಚೆಮ್ ಬಳಿ ಚರ್ಚಿಸಿ ಮುಂಗಡವಾಗಿ ಸಂಬಳ ಅಕ್ವಿಟೆನ್ಸಿಗೆ ಸಹಿ ಹಾಕಿಸಿಕೊಂಡ ನನ್ನಿಂದ…. ಅದರ ಆಧಾರದಿಂದ ಈಡಿಗರ ವೆಂಕಟಸ್ವಾಮಿ ಬಳಿ ಹಣ ಪಡೆಯಲು ಶೀನಪ್ಪ ಹೋದನು. ಎಲ್ಲರ ಲೇವಾದೇವಿ ಅಲ್ಲಿಯೇ, ಆದರೆ ನನ್ನದು ತಡವಾಗಿ ಶುರುವಾಯಿತು. ಅಷ್ಟೇ ವ್ಯತ್ಯಾಸ, ನನಗೂ ಇತರರಿಗೂ ನಡುವೆ; ದುಡ್ಡು ಕೊಟ್ಟು ದುರ್ಜನರಿಂದ ದೂರವಿರಬೇಕೆಂದು ಹಿರಿಯರು ಹೇಳಿದ್ದಾರೆ. ಅದು ನನಗೂ ಗೊತ್ತು! ಹಾಗೆ ನಾನು ಎಷ್ಟು ಸಾರಿ ಪ್ರಯತ್ನಿಸಲಿಲ್ಲ. ಆದರೆ ನಾರಾಣಿ ದುರ್ಜನರ ಪೈಕಿ ದುರ್ಜನ. ಹುಲಿ ಚರ್ಮ ಕಳಚಿದ ಆಕಳು ಎಂದು ಮಾರು ಹೋಗಿದ್ದೆ; ಅವನ ವ್ಯಕ್ತಿತ್ವಕ್ಕೆ…. ಆದರೆ ನನ್ನ ಭ್ರಮೆಯ ಆಕಳೊಳಗೆ ಏಳು ಪಟ್ಟೆಯ ಹುಲಿ ಇತ್ತು…. ಅದರ ಅರಿವಾಗುವ ಹೊತ್ತಿಗೆ ಅದರ ಸೂಕ್ಷ್ಮಾತಿಸೂಕ್ಷ್ಮ ಬಲೆಯೊಳಗೆ ನಾನು ಬಂಧಿಯಾಗಿದ್ದೆ…. +ಕವಿತಾಳದ ಜಟ್ಟಿ ನಾರಾಯಣ ರೆಡ್ಡಿಗೆ ಬಡೇಲಡುಕು ದುಗ್ಗಾ ನಾರಾಣಿಯ ಬಗ್ಗೆ ಸರ್ವಗೊತ್ತು; ನಿಮ್ಮಂಥೋರು ಇಂಥವರ೫ ಸಹವಾಸ ಮಾಡಬಾರದೆಂದು ಸೂಕ್ಷ್ಮ ಹೇಳಿದ್ದೆ. ಅದಕ್ಕೆ ನಾನು ನಕ್ಕಿದ್ದೆ. ಒಂದೆರಡು ತಿಂಗಳಲ್ಲಿ ನಡೆಯಲಿರುವ ನನ್ನ ಮದುವೆಗೆ ನಾರಾಣಿಯನ್ನು ಖುದ್ದು ಆಹ್ವಾನಿಸಲೆಂದು ಅದೋನಿಯ ಜಮಾ ಮಸೀದಿವರೆಗೆ ಹುಡುಕಾಡಿದ್ದೆ. ಅವನು ಸಿಕ್ಕಿರಲಿಲ್ಲ…. ತದನಂತರ ನಾನು ಪೆದ್ದ ಕಡಬೂರಿನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡದೆ. ನಂತರ ಎರಡು ವರ್ಷದಲ್ಲಿ ನಡೆದ ಕೆಲ ಘಟನೆಗಳಿಮದಾಗಿ ನಾನು ಸುಣ್ಣದಂತೆ ಅರಳಿದೆ…. ಬ್ರಮೆಗಳ ಚಿಪ್ಪಿನಿಂದ ಹೊರ ಬಂದೆ. +ಈ ಪಂದಿಕೊನೆ ಗ್ರಾಮದಲ್ಲಿ ಹೊಸದಾಗಿ ಹೈಸ್ಕೂಲು ಸುರುವಾಗಿತ್ತು. ಕನ್ನಡ ಹೇಳುವವರು ಬೇಕಾಗಿದ್ದರು. ಅರ್ಜಿ ಹಾಕಿಕೊಂಡೆ. ಕೆಲಸ ಸಿಕ್ತು ಸೇರಿಕೊಂಡೆ. ಇನ್ನೊಂದು ನಮೂನೆಯ ಜೀತವೇ ಸರಿ. ಜೀತಕ್ಕೆ ಕೆಲವೇ ತಿಂಗಳಲ್ಲಿ ಒಗ್ಗಿ ಹೋಗಿದ್ದೆ. ಶಾಲೆ ಬಿಟ್ಟರೆ ಮನೆ; ಮನೆ ಬಿಟ್ಟರೆ ಶಾಲೆ; ಹೀಗಾಗಿ ನಾನು ಆರಕ್ಕೇರುವುದಾಗಲೀ ಮೂರಕ್ಕಿಳಿಯುವುದಾಗಲೀ ಮಾಡಿರಲಿಲ್ಲ. ಇಂಥ ನಾನು ನಾರಾಣಿನನ್ನು ಮತ್ತೆ ನೋಡಿದ್ದು ತೀರಾ ಆಕಸ್ಮಿಕ. ಅವತ್ತು ನಾನು ಅಮಾವಾಸ್ಯೆಯ ಜನರ ನಡುವೆ ಶಾಲೆ ಕಡೆಗೆ ನಡೆದೆ. ಸ್ವಲ್ಪ ದೂರದಲ್ಲಿ (ಅಂದರೆ ಈಗ ಹೆಣ ಮಲಗಿರುವುದಲ್ಲ! ಅಲ್ಲಿ) ನಾರಾಣಿ ಗುಂಪಲ್ಲಿ ಗೋವಿಂದ ಅಂತ ನಿಂತಿರುವುದು ಕಮಡಿತು. ಮೊದಲಿಗೆ ಅವನನ್ನು ಗುರುತಿಸಲಾಗಲಿಲ್ಲವಾದರೂ ಆಮೇಲೆ ಹೆಚ್ಚೆಮ್‌ರಿಂದ ಪರವಾನಗಿ ಡೆದು ಕಣ್ಣಳತೆಯಿಂದ ತಪ್ಪಿಸಿಕೊಂಡಿದ್ದ ಅವನನ್ನು ಹುಡುಕಲೆಂದು ಹೊರಟೆ. ಹೋಟೆಲ್‌ಗಳಲ್ಲಿ; ತೇರುಗಡ್ಡೆಯ ನೆರಳಲ್ಲಿ; ಅರಳೆ ಮರದ ಬಳಿ ಎಲ್ಲ ಕಡೆ ಹುಡುಕಿದ ನನಗೆ ಅವನು ಗುಡಿಯ ಹಿಂದೆ ಸಿಕ್ಕನು. ನಾನು ಅವನನ್ನು ನಾರಾಣಿ ಅಂತ ಗುರುತಿಸಿದೆ. ಅವನು ನನ್ನನ್ನು ಮೇಸ್ಟ್ರೇ ಅಂತ ಗುರುತಿಸಿದನು. ಮೊದಲ ನೋಟಕ್ಕೆ ಅವಧೂತನಂತೆ ಅರ್ಥವಾದ ಅವನೊಂದಿಗೆ ಮಧ್ಯಾಹ್ನದ ಊಟ ಮಾಡಿದೆ. ಅವನು ಸೂತ್ರ ಬದ್ಧ ಗೊಂಬೆಯಂತೆ ಅದು ಮಾಯೆ; ಇದು ಮಾಯೆ ಅಂತ ಮಾತಾಡಿದನು. ತಾನು ಭಾಷೆಯನ್ನು ಇಷ್ಟು ಸ್ವಚ್ಫವಾಗಿ ಮಾತಾಡಲು ಸಾಧ್ಯವಾದದ್ದು ಗುತ್ತಿ ಜೈಲಿನಲ್ಲಿ ಆರು ತಿಂಗಳ ಸಜೆ ಅನುಭವಿಸುತ್ತಿರುವಾಗ ಎಂದು ಹೇಳಿದನು. ಕೂಡ್ರುವಾಗ, ನಿಲ್ಲುವಾಗ, ತಿನ್ನುವಾಗ, ಕುಡಿಯುವಾಗ, ಮಲಗುವಾಗ ಹೀಗೆ ಪ್ರತಿಯೊಂದು ಕೆಲಸಕ್ಕೆ ಮೊದಲು ಅವನು ಶಿವನಾಮಸ್ಮರಣೆ ಮಾಡುವುದು ಕಂಡು ಪೂರ್ಣ ಪ್ರಮಾಣದ ನಾಸ್ತಿಕನಾದ ನಾನು ಅಚ್ಚರಿಗೊಂಡೆನು. ಒಟ್ಟಿನಲ್ಲಿ ಪೂರ್ಣ ಬದಲಾಯಿಸಿರುವನಲ್ಲ ನಾರಾಣಿ ಎಂದೇ ನನಗೆ ಸಂತೋಷ. ಅವನು ಮತ್ತು ನಾನು ದಿನಕ್ಕೊಮ್ಮೆಯಾದರೂ ಪರಸ್ಪರ ಸಂಧಿಸುತ್ತಿದ್ದೆವು; ಕಷ್ಟ ಸುಖದ ಬಗ್ಗೆ; ಬಡತನ ಸಿರಿತನದ ಬಗ್ಗೆ; ಒಳ್ಳೆಯದು ಕೆಟ್ಟದ್ದರ ಬಗ್ಗೆ; ಲೌಕಿಕ ಅಲೌಕಿಕದ ಬಗ್ಗೆ ಚರ್ಚಿಸುತ್ತಿದ್ದೆವು. ಅವನು ನನ್ನ ಅಭಿಪ್ರಾಯವನ್ನು ಅಲ್ಲಗಳೆಯುತ್ತಿದ್ದನು. ನಾನು ಅವನ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯದಿಂದ ತಳ್ಳಿ ಹಾಕುತ್ತಿದ್ದೆನು. ಪರಸ್ಪರ ಯಾರು ಯಾರ ಮೇಲೂ ಕೋಪಿಸಿಕೊಂಡಿದ್ದಿಲ್ಲ. ಬದಲಾಗಿ ಪರಸ್ಪರ ಗೌರವ ಹೆಚ್ಚಿಸಿಕೊಂಡಿದ್ದೆವು. ಆದರೆ ಅವನು ಏನು ತಿನ್ನುತ್ತಿದ್ದನೋ? ಎಲ್ಲಿ ಮಲಗುತ್ತಿದ್ದನೋ? ಅಂತೂ ಅವನು ಗುಡಿಯ ಸಾಧು ಸಜ್ಜನರೊಂದಿಗೆ ಸದಾ ಬೆರೆತಿರುತ್ತಿದ್ದನು ಎಂದು ಮಾತ್ರ ಬಲ್ಲೆ. +ಒಂದು ರಾತ್ರಿ ಹೆಂಡತಿ ಬಳಿ ಅವನ ಬಗ್ಗೆ ಮಾತಾಡುತ್ತಿದ್ದೆ. ಬಹಳ ವರ್ಷಗಳಿಂದ ಬೀಳು ಬಿದ್ದಿರುವ ಎಂಟೆಕೆರೆ ಹೊಲದ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತು. ಸಿರಿಯಾಗಿ ಹೊಲದ ದೇಕರಿಕೆ ನೋಡುವ ಮಹಾನುಭಾವರಿರಲಿಲ್ಲ. ಮಾಡಿದರೆ ಮನೆ; ಹೂಡಿದರೆ ಹೊಲ ಎಂಬ ಗಾದೆಯೇ ಇದೆ. ಹೊಲಕ್ಕೆ ಬಾವಿ ತೋಡಿಸಿ; ಎತ್ತು ಬಂಡಿ ಅಣಿಮಾಡಿ ಅದರ ಉಸ್ತುವಾರಿ ನೋಡಿಕೊಳ್ಳಲು ನಾರಾಣಿಯನ್ನು ಬಿಟ್ಟರೆ ಹೇಗೆ ಎಂದು ಅವಳೊಂದಿಗೆ ಚರ್ಚಿಸಿದೆ. ಅವಳೂ ನನ್ನ ಅಭಿಪ್ರಾಯವನ್ನು ಅನುಮೋದಿಸಿದ್ದಳು. ಸೂಕ್ತಕಾಲ ಬಂದಾಗ ನಾರಾಣಿಗೆ ಯೋಜನೆಯನ್ನು ವಿವರಿಸಬೇಕೆಂದು ನಿರ್ಧರಿಸಿದೆ. +ನಾಲ್ಕು ದಿನಗಳ ನಂತರ ನಾರಾಣಿ ದೈನ್ಯತೆಯೇ ಮೂರ್ತಿವೆತ್ತಂತೆ ಹತ್ತು ರೂಪಾಯಿಗಾಗಿ ಅಂಗಲಾಚಿದ. ಅವಶ್ಯಕತೆ ಬಿದ್ದಾಗ ನಿಸ್ಸಂಕೋಚದಿಂದ ಹಣ ಕೇಳಿ ಪಡೆಯಲು ಹೇಳಿ ಹತ್ತು ರೂಪಾಯಿ ಕೊಟ್ಟೆನು. ಮರಳಿ ಕೊಡುವುದಾಗಿ ಹೇಳಿ ಹೊರಟುಹೋದನು. ಹೀಗೆಯೇ ಅವನು ಆಗಾಗ್ಗೆ ನನ್ನಿಂದ ಐದೋ, ಹತ್ತೋ ಪಡೆಯುತ್ತಿದ್ದುದುಂಟು. ಅವನು ಕೇಳಿದಾಗಲೆಲ್ಲ ಕೊಡ್ತೀರಲ್ಲ…. ನೀವೇನು ಹಣದ ಗಿಡವನ್ನು ಮನೆಯ ಹಿತ್ತಲಲ್ಲಿ ನೆಟ್ಟಿರುವಿರೇನು ಎಂದು ಸಹೋದ್ಯೋಗಿ ಶೀನಪ್ಪ ಛೀಡಿಸಿದಾಗ ನಾನು ಮುಗುಳ್ನಕ್ಕಿದೆ. ನನ್ನಿಂದ ಪಡೆದ ಹಣವನ್ನು ಅವನು ಯಾವ ಕೆಲಸಕ್ಕೆ ಉಪಯೋಗಿಸುತ್ತಿರಬಹುದೆಂಬ ಅನುಮಾನ ಬಂತು. ಒಂದು ದಿನ ಅವನು ಕುಡಿದು ತೂರಾಡುತ್ತಿದ್ದುದ್ದನ್ನು ದೂರದಿಂದಲೇ ನೋಡಿ ಮನಸ್ಸಿಗೆ ತುಂಬ ನೋವು ಮಾಡಿಕೊಂಡೆ. ಈ ಸಾರಿ ಏನಾದರೂ ಕೇಳಲು ಬಂದರೆ ಚೆನ್ನಾಗಿ ಉಗಿದು ಕಳಿಸಬೇಕೆಂದು ನಿರ್ಧರಿಸಿದೆ. ಕೇವಲ ಎರಡು ದಿನಗಳಲ್ಲಿ ಸ್ಕೂಲಲ್ಲಿದ್ದ ನನ್ನ ಬಳಿಗೆ ಬಂದ. ಐದು ರೂಪಾಯಿ ಕೊಡಿ ಅಂತ ಸವಿನಯದಿಂದ ಕೇಳಿದ. ನಾನು ಕೆಂಡಮಂಡಲವಾಗಿ ಬಯ್ದೆ; ತಪ್ಪಾಯ್ತು ಮೇಷ್ಟ್ರೆ ಕುಡಿಯೋದಿಲ್ಲ ಎಂದು ಕಾಲಿಗೆ ಬಿದ್ದು ಬೇಡಿಕೊಮಡ. ನನ್ನ ಕರುಳು ಕಲಕಿದ. ಐದು ರೂಪಾಯಿ ಪಡೆದೊಯ್ದ. +ನಂತರ ಸುಮಾರು ದಿನಗಳು ಅವನನ್ನು ನಾನು ನೋಡಲಿಲ್ಲ. ಹೆಂಡತಿಯನ್ನು ಊರಿಗೆ ಕಳಿಸಿ ಬಂದು ಮನೆಯಲ್ಲಿ ಒಂಟಿಯಾಗಿ ಇದ್ದೆ. ಏನಾದರೂ ಬರೆಯಲೆಂದರೆ ಪೆನ್ನೊಳಗೆ ನಾರಾಣಿ ತುಂಬಿಬಿಡುತ್ತಿದ್ದ. +ಒಂದು ದಿನ ಸ್ಕೂಲಿಗೇ ಅಂತ ತೇರುಗಡ್ಡೆಯವರೆಗೆ ಬಂದಿದ್ದೆ, ಆಗ ಒಮ್ಮೆಗೆ ಅವನು ಎದುರಿಗೆ ಪ್ರತ್ಯಕ್ಷನಾಗಿ ‘ಭಲಲಲೈ ಸಾರಥಿ….ಬದುಕು ಅತಿ ಜಾಗೃತಿ’ ಎಂದು ಕೇಕೆ ಹಾಕಿದ. ಗಾಬರಿಯಾಯಿತು. ಕುಡಿದಿದ್ದ ವಾಸನೆ ಮುಖಕ್ಕೆ ರಾಚಿತು. ನಾರಾಣಿಯ ಮೈಯೊಳಗೆ ಪಿಶಾಚಿ ಏನಾದರೂ ಹೊಕ್ಕೊಂಡಿದಿಯಾ? “ಕುಡಿದೀನಿ ನೋಡೋ…. ಹರ್‍ಕೊಳ್ಳೋ ಹರ್‍ಕೋ” ಎಂದು ಮತ್ತೆ ಕೆಕ್ಕರಿಸಿದ. ಸುತ್ತ ಜನ ನರೆರೆಯಲಾರಂಭಿಸಿದರು…. ಸಹಿಸಿಕೊಂಡೆ…. ಕ್ಯಾಕರಿಸಿ ಕಫ ಉಗುಳಿದ ನಾರಾಣೀ ಕೆಕ್ಕರಿಸಿ ನೋಡಿದ. ಅಲ್ಲಿಂದ ತೊಲಗಿದ. +ನಾರಾಣಿಯ ಕಾಟ ನಿಜವಾಗಿ ಆವತ್ತಿನಿಂದ ಶುರುವಾದದ್ದು… ಅದನನ್ನು ನೆನೆಪಿಸಿಕೊಂಡರೆ ಈಗಲೂ ಮೈ ಜುಂ ಎನ್ನುವುದು…. ಆತ್ಮೀಯತೆ ಪಾತಾಳ ಸೇರಿ ಏಕಾಕಿತನದ ಭಯಂಕರ ಸಾಕ್ಷಾತ್ಕಾರವಾಗಿತ್ತು, ನಿಟ್ಟುಸಿರಿಟ್ಟೆ. ಬೀಸಿದ ಗಾಳಿಗೆ ಚದುರಿದ ತಲೆಗೂದಲು ಕೈಉಇಂದ ಸರಿಪಡಿಸಿಕೊಂಡೆ. ನಾರಾಣಿಯಂಥವರು ಬದುಕಿರುವಾಗಲೂ ಅಪಾಯಕಾರಿ; ಸತ್ತಾಗಲೂ ಅಪಾಯಕಾರಿ…. ಬೀಸಿದ ಕಡೆ ಹಾರುವ ತರಗಲೆಯಂತೆ ಕೂತಿರುವ ನಾನೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ…. ಸತ್ತವನ ಗುಣಾವಗುಣಗಳನ್ನು ಹಂಚಿಕೊಂಡವರಂತೆ ಸುತ್ತ ನೋಡುತ್ತ ನಿಂತಿರುವ ಜನ. ಅವನ ನೆಟ್ಟ ನೋಟವನ್ನು ಎದುರಿಸಲಾಗಲಿಲ್ಲ. ಇನ್ನೂ ಪೋಲೀಸರು ಬರಲಿಲ್ಲ ಎಂದು ಮಿಡುಕುತ್ತಿರುವ ಗೌಡ ನನಗೆ ದೂರವಿರಲಿಲ್ಲ. ಈ ಮೇಷ್ಟ್ರು ಮಾಡಿರೋ ಕೆಲಸಕ್ಕೆ ನಾವು ಉಪವಾಸ ವನವಾಸ ಸಾಯಬೇಕಾಗಿದೆ ಎಂದು ಕುಲಕರ್ಣಿ-ರಾಮಣ್ಣ ಮಾತಾಡಿದ್ದೂ ಕೇಳಿಸಿತು. ಮೊತ್ತೊಂದು ಕಡೆ ಹೆಚ್ಚೆಮ್ ತಲೆಗೆ ಕೈಹೊತ್ತು ಕೀತಿದ್ದನು. ಶೀನಪ್ಪ ನನ್ನ ಬಳಿಗೆ ಬಂದು ನಮ್ಮೂರಿನಿಮದ ಪಂದಿಕೊನೆಗೆ ಇರುವ ಬಸ್ಸುಗಳ ಬಗ್ಗೆ ವಿಚಾರಿಸತೊಡಗಿದದ. ಕೊಟ್ಟೂರನ್ನು ಎಷ್ಟು ಗಂಟೆಗೆ ಬಿಟ್ಟರೆ ಪಮದಿಕೊನೆಯನ್ನು ಎಷ್ಟು ಗಂಟೆಗೆ ಸೇರಬಹುದು ಎಂದು ಆತ ಕೇಳಿದ ಪ್ರಶ್ನೆಗೆ ಉತ್ತರಿಸುವ ಮೊದಲು ಉಗುಳು ನುಂಗಲು ನೋಡಿದೆ, ಅದು ಬಾಯೊಳಗೆ ಇರಲಿಲ್ಲ. ಗುಡಡೆ ಕಡೆಯಿಮದ ಬಂದ ಸೈಕಲ್ ಸವಾರ ಸಿವ್ಲಿಂಗ ಪೋಲೀಸರ ಜೀಪು ಸುಳುವಾಯಿ ಬಳಿ ಇರುವ ಹಳ್ಳದ ಹುದುಲಲ್ಲಿ ಸಿಗಿಬಿದ್ದಿರುವುದಾಗಿ ಸುದ್ದಿ ತಂದನು. ಇದರಿಂದ ಗೌಡ ಗಲಿಬಿಲಿಗೊಂಡ. ಗ್ರಾಮಕ್ಕೂ ಪೋಲೀಸರಿಗೂ ನಡುವೆ ಸೇತುವೆಯಂತಿರುವಾತ. ಸೇತುವೆ ಬದುಕಿರಬೇಕಾದರೆ ಅದರ ಎರಡು ದಡಗಳೂ ಆರೋಗ್ಯವಾಗಿರುವುದು ಮುಖ್ಯ. ಪೋಲೀಸರನ್ನು ಕರೆತರಲು, ಜೀಪನ್ನು ಕೆಸರಿನಿಂದ ಮೇಲೆತ್ತಲು ಕೆಲವು ಜನರಿಗೆ ಎತ್ತು ಬಂಡಿಕೊಟ್ಟು ಕಳಿಸಿದನು. ಊಟಗೀಟ ಮಾಡೋದಿದ್ರೆ ಮಾಡಿ ಬಿಡಪ್ಪ. ಪೋಲೀಸ್ರು ಬರೋದ್ಕಿಂತ ಮೊದ್ಲೆ ಎಂದು ಹೆಚ್ಚೆಮ್ ಲಕ್ಷೀನರಸಯ್ಯ ನನ್ನ ಕಿವಿಯ ಬಳಿ ಕಡ್ಡಿ ಮುರಿದನು. ನಾನು ಹೆಣದ ಸಮಕ್ಷಮ ಊಟ ಮಾಡುವ ತಪ್ಪು ಮಾಡುವುದು ಸಾಧ್ಯವಿರಲಿಲ್ಲ. ಹೆಣ ಅನ್ನದ ರೂಪದಲ್ಲಿ ದೇಹ ಸೇರಿಬಿಡಬಹುದೆಂಬ ಭಯವಿತ್ತು. ಸೂರ್ಯನ ಬಿಸಿಲು ಲಂಬವಾಗಿ ಬಿದ್ದಿತ್ತು. ಹೆಣ ತೆರೆದ ಕನ್ನಡಿಯಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ನನಗೆಗೊತ್ತಿರುವಂತೆ ನಾರಾಣಿಯ ಪೊದೆ ಹುಬ್ಬುಗಳ ಕೆಳಗೆ ಕಣ್ಣುಗಳು ತುಂಬ ಆಳದಲ್ಲಿದ್ದವು. ಆದರೆ ಈಗ ಹಾಗಿದಲ್ಲ, ಕೊಲೆ ನಡೆದಾಗ ಅವನು ಭಯದ ಮೊಟ್ಟೆ ಸೇರಿಕೊಂಡಿರಬಹುದಾದ ಕಾರಣಕ್ಕಾಗಿ ಕಣ್ಣು ಗುಡ್ಡೆಗಳು ತೀರಾ ಮೇಲೆ ಬಂದು ಬಿಟ್ಟಿದ್ದವು. ನಾರಾಣಿಯ ಆತ್ಮ ತನ್ನ ಹೆಣ ನೋಡಿ ಭ್ರಮನಿರಸಗೊಮಡಿರಬಹುದು…. +ಎಂದೋ ಮರೆತಿದ್ದ ನಾನು ಮತ್ತೆ ಅವನನ್ನು ನೆನಪು ಮಾಡಿಕೊಂಡಿದ್ದು ಮೊದಲ ದೊಡ್ಡ ತಪ್ಪು. ಮಾಡಿದ್ದುಣ್ಣೋ ಮಾರಾಯ ಎಂಬ ನಾಣ್ಣುಡಿಯಂತೆ ನಾನು ಅನುಭವಿಸದೆ ವಿಧಿ ಇರಲಿಲ್ಲ. ನಾರಾಣಿ ಅವತ್ತು ಕುಡಿದು ಒಂದು ಸಲಕ್ಕೆ ಮಾತ್ರ ಮುಖಾಮುಖಿಯಾಗಿರಲಿಲ್ಲ. ಕುಡಿದು ವಾರಕ್ಕೆರಡು ಬಾರಿಯಾದರೂ ನನ್ನನ್ನು ಸಂಧಿಸುತ್ತಿದ್ದ. ಸಂಧಿಸಿದಾಗೆಲ್ಲ ತನ್ನ ಪ್ರಹರ ಶುರು ಮಾಡುತ್ತಿದ್ದ. ತಾನು ಸಿಕ್ಷೆ ಅನುಭವಿಸಿದ ಜೈಲುಗಳ ಬಗ್ಗೆ ರೈಲು ಬಿಡುತ್ತಿದ್ದ. ನಾನು ತಾಳ್ಮೆಯಿಂದ ಕೇಳುತ್ತಿದ್ದೆ. ತಾಳಿದವನು ಬಾಳಿಯಾರು ಎಂದು ನಂಬಿದ್ದೆ. ಐದು ಕೊಡು ಅಂತ ಜಬರ್ದಸ್ತಾಗಿ ಕೇಳುತ್ತಿದ್ದ. ತೊಲಗಿದರೆ ಸಾಕು ಅಂತ ಕೊಟ್ಟು ಬಿಡುತ್ತಿದ್ದೆ. ಅದು ಕೇವಲ ತಾತ್ಕಾಲಿಕ ಉಪಸಮನ ಮಾತ್ರ. ಐದು ಕೇಳುತ್ತಿದ್ದವನು ಕಾಲ ಕಳೆದಂತೆ ಹತ್ತು ಕೇಳಲು ಶುರು ಮಾಡಿದ…. ನನಗೆ ಭೂತದರ್ಶನ ಕೊಡುತ್ತ ಅಲೆಯತೊಡಗಿದ ನಾರಾಣಿ…. ಕೊಡದಿದ್ದರೆ ಹೀನಾಮಾನವಾಗಿ ಬಯ್ಯುವನು. ಅವನಿಗೆ ನಾನು ಮಾಡಿರುವ ದ್ರೋಹ; ಅನ್ಯಾಯ ಏನೂ ಇರಲಿಲ್ಲ…. ಗೆಳೆಯ ಶೀನಪ್ಪ ನನ್ನ ಪರವಾಗಿ ಒಮ್ಮೆ ನಾರಾಣಿಯನ್ನು ಸಂಧಿಸಿ ಗೌರವಸ್ಥರು ಹೇಗೆ ಗೌರವದಿಂದ ಬದುಕಲು ಸಾಧ್ಯ ನೀನು ಹೀಗೆಲ್ಲ ಬಯ್ಯುತ್ತಿದ್ದರೆ ಎಂದು ಹೇಳಿದನಂತೆ. ಅದಕ್ಕೆ ನಾರಾಣಿ ಆಟಾಟೋಪ ಪ್ರದರ್ಶಿಸಿದನಂತೆ. “ನಾನು ಯಾರ್‍ನಾದ್ರು ಬಯ್ತೀನಿ…. ಏನಾದ್ರೂ ಮಾಡ್ತೀನಿ… ಯಾರ್‍ನೀನು ಕೇಳೋಕೆ… ಬರೇಲಡಕು ದುಗ್ಗಾ ನಾರಾಣಿ ಎಂದರೆ ಏನಂತ ತಿಳ್ಕೊಂಡೀರಿ ನೀವೆಲ್ಲ…. ನನ್ನ ಹೆಸರು ಹೇಳಿದ್ರೆ ಹರಿಯೋ ಹಾವು ನಿಲ್ಲಬೇಕು…. ತಿಳೀತಾ…. ಕೈಕಾಲು ಮುರಿದ್ರೆ ಮೂರ್‍ತಿಂಗ್ಳು…. ಕಡಿದ್ರೆ ಮೂರು ವರ್ಷ ಶಿಕ್ಷೆ ಆಗ್ತದೆ ಅಷ್ಟೆ…. ಅವ್ನ ಬಗ್ಗೆ ನನಗೆಲ್ಲ ಗೊತ್ತೈತೆ…. ಯಾರು ಏನು ಹೇಳೋದು ಬೇಕಾಗಿಲ್ಲ….” ಶೀನಪ್ಪ ಇಂಥ ಮಾತುಗಳನ್ನು ತಡೆದುಕೊಂಡಿರುವುದೇ ಹೆಚ್ಚು. ನನಗೆ ಆತ ಸವಿವರವಾಗಿ ವರ್ಣಿಸಿದ. ನನಗೆ ನಿಜವಾಗಲೂ ಭಯವಾಯಿತು. ಆವತ್ತಿನಿಂದ ನನಗೆ ನಿದ್ದೆಯಾಗಲೀ ಊಟವಾಗಲೀ ಸೇರದಾಯಿತು. ಕನಸಿನಲ್ಲೂ ಅಷ್ಟೆ; ಹೆಂಡತಿಗೆ ಬದಲು ನಾರಾಣೀ ಕಾಣಿಸಿಕೊಳ್ಳುತ್ತಿದ್ದ. ಒಂದು ದಿನ ನಾನೇ ನಿರ್ಧರಿಸಿದೆ. ನಾರಾಣಿಯನ್ನು ತರುಬಿ ನನ್ನನ್ನು ಯಾಕೆ ಹೀಗೆ ಕಾಡ್ತೀಯಾ…. ನಾನು ನಿನಗೆ ಮಾಡಿರೋ ಅನ್ಯಾಯವಾದರೂ ಏನೂ ಅಂತ ಹಾಗೆ ಅಂದುಕೊಂಡಂತೆ ಒಮ್ಮೆ ಕೇಳಿಯೇ ಬಿಟ್ಟೆ. ಅದಕ್ಕೆ ಆತ ಉತ್ತರಿಸಲಿಲ್ಲ ಸೌಮ್ಯ ಮುಖ ಪ್ರಕಟಿಸಿದ. ತಾನು ಕಣ್ಣಿಗೆ ಬೀಳದಿರಲು ನೂರುಪಾಯಿ ಕೇಳಿದ. ನನಗೆ ತುಂಬ ಅಸಹ್ಯವೆನಿಸಿತು. ಪೀಡೆ ತೊಲಗಲಿ ಕೊಡುವುದೆಂದು ನಿರ್ಧರಿಸಿದೆ. ಮರುದಿನ ಹೇಳಿದ ಟೈಮಿಗೆ ಬಂದ. ಮತ್ತೊಮ್ಮೆ ಕೇಳುವುದಿಲ್ಲವೆಂದೂ, ಕಾಡಿಸುವುದಿಲ್ಲೆಂದು ಅವನಿಂದ ಆಣೆ ಪ್ರಮಾಣ ಮಾಡಿಸಿ ನೂರು ರೂಪಾಯಿ ಕೊಟ್ಟು ಸಾಗು ಹಾಕಿದೆ. ಪೀಡೆ ಮತ್ತೆಂದು ಕಾಡಲಾರದೆಂದುಕೊಂಡೆ. ನಾನು ನಿರಮ್ಮಳವಾಗಿದ್ದುದು ಕೇವಲ ಹದಿನೈದು ದಿನಗಳು ಮಾತ್ರೆ. ಹದಿನಾರನೆಯ ದಿನ ಗುಡಿಯ ಎದುರಿಗೇ ವಕ್ರಿಸಿಬಿಟ್ಟ ನಾರಾಣಿ. ನನಗೆ ಸಿಟ್ಟು ನರನರದಲ್ಲೂ ಪ್ರವಹಿಸಿತು. ನೂರು ಕೇಳಿದ. ಕೊಡೊಲ್ಲಂದೆ, ಎಪ್ಪತ್ತೈದು ಅಂದ ಕೊಡಲ್ಲ ಅಂದೆ, ಐವತ್ತೂ ಅಂದ…. ಕೊಡೊಲ್ಲ ಅಂದೆ…. ಕೊನೆಗೆ ಇಪ್ಪತ್ತೈದಾದ್ರೂ ಕೊಡ್ತೀಯೋ ಇಲ್ಲ ಎಂದು ಕೇಳಿದ. ನನಗೆ ತಡೆಯಲಾಗಲಿಲ್ಲ… ಏನಲೇ ಸಾಲ ಕೊಟ್ಟೋನಂಗೆ ಕೇಳ್ತೀ… ನಾನು ನಿನ್ಗೆ ಬಾಕಿಯಾ; ನಿಮ್ಮಪ್ಪಗೆ ಬಾಕಿಯಾ… ಎಂದು ರೆಟ್ಟೆ ಏರಿಸಿದೆ. ಸುತ್ತ ಜನ ಸೇರಿದ್ದರು. ನಮ್ಮ ಹೆಚ್ಚೆಮ್ಮೂ ಇದ್ದ. ಬಂದ ಜಗಳ ಬಿಡಿಸಲು, ಬೀದೀಲಿ ನೀಂತು ಗಟ್ಟಿಯಾಗಿ ಮಾತಾಡಿ ನಮ್ಮ ಇನ್‌ಸ್ಟಿಟ್ಯೂಷನ್ ಮರ್ಯಾದೆ ಕಳೀತಿಯಲ್ಲಪ್ಪಾ, ಆತೇನು ಕೇಳ್ತಾನೋ ಅದ್ನ ಕೊಟ್ಟು ಬಿಡು ಎಂದು ಉಪದೇಶಿಸಿದ. ಏನ್ಸಾರ್‍ ನೀವೂ ಈ ಥರ ಮಾತಾಡೋದೇನು ಅಂದೆ…. ಹೌದು…. ಆತ ನಮ್ಮನ್ಯಾಕೆ ಕೇಳಬಾರದು… ನಿನ್ನನ್ನೇ ಯಾಕೆ ಕೇಳಬೇಕು ಎಂದಾಡಿದ ಹೆಚ್ಚೆಮ್ಮನ ಮಾತು ಕೇಳಿ ಜನ ಹೌದೆಂದರು. ನನಗೆ ವಿಚಿತ್ರವೆನಿಸಿತು. ಜನರ ಸ್ವಭಾವ…. ನನ್ನ ಬಲ ಜಗ ಬಲ….. ಇಪ್ಪತ್ತೈದು ಕೊಡ್ತಿಯೋ ಇಲ್ಲೋ ಅಂತ ನಾರಾಣಿ ಹಾದಿಗೆ ಅಡ್ಡ ನಿಂತ. ಕೊಡಲ್ಲ ಹೋಗಲೇ ಎಂದೆ ಎಲ್ಲದಕ್ಕೂ ತಯಾರಾಗಿ. ನಾಳೆ ಸಂಜೆ ಹೊತ್ತಿಗೆ ಐವತ್ತೂ ಕೊಡಬೇಕಾಗ್ತದೆ ಹುಷಾರ್‍ ಎಂದ. ಎದೆಮೇಲೆ ಬಂದ ಅವನನ್ನು ಜಾಡಿಸಿ ತಳ್ಳಿದೆ. ಅವನು ಅಷ್ಟು ದೂರ ಜೋಲಿ ಹೋದ…. ನಾನು ಸೀದ ಮನೆಗೆ ಹೋದೆ. ಏನಪ್ಪಾ ಮಾಡುವುದು ಅಂತ ಯೋಚಿಸಿದೆ. ರಜೆ ಇಟ್ಟುಬಿಟ್ಟರೆ ಹೇಗೆನ್ನಿಸಿತು. ಇಡಲು ರಜಗಳು ಬೇರೆ ಇರಲಿಲ್ಲ…. ನಾಳೆ ಮಟ್ಟಿಗೆ ಅವನಿಮದ ಕಣ್ಮರೆಯಾಗಿ ಹೋಗುವುದೆಂದು ನಿರ್ಧರಿಸಿದೆ. +ಮರುದಿನ ಸೂರ್ಯೋದಯಕ್ಕೆ ಮೊದಲೆ ಮನೆಗೆ ಬೀಗ ಜಡಿದು ಬಳ್ಳಾರಿ ಕಡೆ ಹೊರಟೆ. ನಾಳೆಯೋ ನಾಡಿದ್ದೋ ಸಾಯಲಿರುವ ಮುದುಕನಂತೆ ಬಳ್ಳರಿಯಲ್ಲಿ ವರ್ತಿಸಿದ್ದೆ. ತಿನ್ನಬಾರದನ್ನು ತಿಂದೆ; ಕುಡಿಯಬಾರದನ್ನು ಕುಡಿದೆ; ನೋಡಬಾರದನ್ನು ನೋಡಿದೆ. ಹೀಗೆ ಅಡ್ಡಾದಿಡ್ಡಿ ಕಾಲಕ್ಷೇಪ ಮಾಡಿ ರಾತ್ರಿ ಎಂಟರ ಹೊತ್ತಿಗೆ ಪಂದಿಕೊನೆ ಬಸ್ಸು ಹತ್ತಿದೆ. ನಾರಾಣಿ ಕೊಟ್ಟಿರುವ ಅವಧಿ ಮೀರಿತಲ್ಲ ಎಂಬ ಸಂತೋಷದಿಂದ ಬಸ್ಸಿನ ತುಂಬ ಅರಳಿದ್ದೆನು. ಮನಸ್ಸು ತುಂಬ ಹಗುರವಾಗಿತ್ತು. ಬಸ್ ಪಂದಿಕೊನೆ ಸೇರಿದಾಗ ರಾತ್ರಿ ಹತ್ತೂಕಾಲಾಗಿತ್ತು. ಇಡೀ ಊರೆಗೆ ಊರೇ ಮಲಗಿತ್ತು. ಬಸ್ಸಿನಿಮದ ಇಳಿದವರು ನಾವು ಕೆಲವೇ ಜನ. ನಾನು ಅಷ್ಟು ಠೀವಿಯಿಮದ ಮನೆ ಕಡೆ ನಡೆದದ್ದು ಅದು ಎರಡನೇ ಸಲವಿರಬೇಕು. ಊಟ ಸೊನ್ನೆ, ಅವಲಕ್ಕಿ ಹಸಿ ಕೊಬ್ಬರಿ ತಿಂದು ತುಂಬಿಗೆ ನೀರು ಕುಡಿದು ಮಲಗಿಬಟ್ಟರಾಯಿತೆಂದು ಯೋಚಿಸುತ್ತ ಬೀಗ ತೆಗೆದು ಮನೆ ಪ್ರವೇಶಿದೆ. ಒಳಗೆಲ್ಲ ಕತ್ತಲು ದಟ್ಟವಾಗಿ ಕವಿದಿತ್ತು. ಸ್ವಿಚ್‌ಗಾಗಿ ಗೋಡೆಗುಂಟ ತಡಕಾಡಿದೆ. ಕೊನೆಗೂ ಸಿಕ್ಕಿತು ಹಾಕಿದೆ. ಬೆಳಕು ಕೋಣೆಯ ತುಂಬ ಚಿಲ್ಲನೆ ಹರಿಯಿತು. ಮೂಲೆ ಕಡೆ ನೋಡಿದ ಕೂಡಲೆ ಎದೆ ಧಸಕ್ಕೆಂದಿತು, ಅಲ್ಲಿ ಆರಾಂ ಕುರ್ಚಿಯಲ್ಲಿ ಮೈಚೆಲ್ಲಿ ಒಬ್ಬ ವ್ಯಕ್ತಿ ಕೂತಿರುವನು. ಅವನು ನಿಜಕ್ಕೂ ನಾರಾಣಿಯೇ ಹೌದು! ಮೈ ಬೆವೆತರೂ ಚೇತರಿಸಿಕೊಂಡೆ ಮರು ಕ್ಷಣ. ಅವನು ನಗುತ್ತಿರುವನು. ನನಗೆ ಸಿಟ್ಟು. ಅವನು ಒಳಗೆ ಬಂದ ಹೇಗೆ! ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದೆ. ಹಾಕಿದ ಬೀಗ ಹಾಕಿದಂತೆಯೇ ಇದೆ. +‘ನೀನೇನು ಮನುಷ್ಯನೋ ರಾಕ್ಷಸನೋ’ ಮುಂದೆ ಮಾತಾಡಲಾಗಲಿಲ್ಲ. ಕಂಠ ಕಟ್ಟಿತು. ಪೋಲೀಸ್‌ಗೆ ಕಂಪ್ಲೈಂಟ್ ಕೊಡಲಾ ಅನ್ನಿಸಿತು. ಪ್ರಯೋಜನವಿಲ್ಲೆನಿಸಿತು. ಸರಸರ ಒಳಗೆ ಅಡ್ಡಾಡಿ ನೋಡಿದೆ. ಅಡುಗೆ ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುವವು. ಅವಲಕ್ಕೆ, ಕೊಬ್ಬರಿ, ಸಕ್ಕರೆ, ದ್ರಾಕ್ಷಿ, ಗೋಡಂಬಿ ಎಲ್ಲ ತಿಂದು ಮುಗಿಸಿರುವನು. ಬೋರ್ನ್‌ವಿಟಾ ಡಬ್ಬಿಯಲ್ಲಿ ಆ ಪುಡಿಯೇ ಇರಲಿಲ್ಲ. ತಲೆಯನ್ನು ಪರಪರ ಕೆರೆದುಕೊಂಡೆ. ಹೊರಗೆ ಬಂದೆ. +ಇಲ್ಲಿಂದ ಹೋಗ್ತಿಯೋ ಅಥ್ವ ಕುತ್ತಿಗೆ ಹಿಡಿದು ತಳ್ಳಲೋ ಎಂದು ಗದರಿಸಿದೆ. ತಾಕತ್ತು ಇದ್ರೆ ತಳ್ಳು ನೋಡೇಬಿಡ್ತೀನಿ ಎಂದು ಸವಾಲು ಹಾಕಿದ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನಿಗೆದುರು ಕುರ್ಚಿ ಹಾಕಿಕೋಮಡು ಕುಳಿತೆ. ಆತ ನನ್ನನ್ನು; ನಾನು ಆತನನ್ನು ಪರಸ್ಪರ ಮಿಕಿಮಿಕಿ ನೋಡತೊಡಗಿದೆವು; ಹೀಗೆ ಸ್ವಲ್ಪೊತ್ತು. +“ನಿನಗೆ ಬೇಕಾಗಿರೋದಾದ್ರೂ ಏನು ಬೊಗ್ಳೋ” ನಾನು ಅವುಡುಗಚ್ಚಿದೆ. +“ನನಗೆ ಏನು ಬೇಕೆಂದು ನಿನ್ಗೆ ಗೊತ್ತೈತಿ” ನಿರ್ವಿಕಾರದಿಂದ ನುಡಿದ. +ಜೀಬಿನಿಂದ ತೆಗೆದು ಇಪ್ಪತ್ತೈದು ಕೊಡಹೋದೆ… ಹೂಹ್ಹು! ಬಿಲ್ಕುಲ್ ನಿರಾಕರಿಸಿದೆ. ಕಾಡಿದೆ, ಕೊನೆಗೆ ಬೇಡಿಕೊಮಡೆ. ಆತ ಕರಗಲಿಲ್ಲ. ಸುಮಾರು ಅರ್ಧ ತಾಸಿನ ನಂತರ ನಾನೇ ಸೋತುಹೋದೆ. ಕೊನೆಗೆ ಇನ್ನು ಇಪ್ಪತ್ತೈದು ಕೊಟ್ಟೆ. ಅಲಕ್ಷೆಯಿಮದ ಕಿತ್ತುಕೊಮಡ. ಈ ನೋಟು ಹರಿದಿದೆ ಬೇರೆ ಕೊಡು ಎಂದು ಆಜ್ಞೆ ಮಾಡಿದ. ಸರಿ ಕೊಟ್ಟೆ. ಗಂಭೀರವಾಗಿ ಅಲ್ಲಿಂದ ಕದಲಿಹೋದ. ನನ್ನೆದೆಮೇಲಿಂದ ಹೆಬ್ಬಂಡೆ ಸರಿದ ಹಾಗೆ. ಅವನು ಒಳಗೆ ಬಮದ ಬಗೆ ಹೇಗೆ? ಗವಾಕ್ಷಿಯಿಂದಲೋ! ಕಿಟಕಿಯಿಂದಲೊ! ಅರ್ಥವಾಗಲಿಲ್ಲ (ಇವತ್ತಿನವರೆಗೂ). +ಆ ಘಟನೆಯನ್ನು ಯಾಕಾದರೂ ನೆನಪು ಮಾಡಿಕೊಂಡೆನೋ ಏನೋ! ಎದೆ ಮೇಲೆ ಬೆವರು ಕಾಣಿಸಿಕೊಮಡಿತು. ಹೊಟ್ಟೆಯೊಳಗೆ ಉರಿಯುತ್ತಿರುವ ಹಸಿವೆ. ಹೊಟ್ಟೆಯ ಆ ಕಿಚ್ಚಿಗೆ ಹೆಣವೂ ಬೆಂದಲ್ಲಿ ಆಶ್ಚರ್ಯವಿಲ್ಲ ಆಗಾಗ್ಗೆ ತಲೆತಿರುಗಿದಂತೆ; ಚಿತ್ರಸ್ವಾಸ್ಥ್ಯ ಕಳೆದುಕೊಳ್ಳುತ್ತಿರುವಂತೆ. +ಸಿವ್ಲಿಂಗ್ ಸೈಕಲ್ ಮೇಲೆ ರೆವ್ವ್ ಅಂತ ಬಂದ. ಎತ್ತಿನಬಂಡೀಲಿ ಪೊಲೀಸ್ರು ಬರ್‍ತಿದಾರೆ ಎಂಬ ಸುದ್ದಿ ಬಿತ್ತರಿಸಿದ. ಕೂಡಲೆ ಜನ ಅದರಲ್ಲೂ ಗೌಡ ಕುಲಕರ್ಣಿ ಕುಂಡಿ ಮೇಲೆ ಬಡಿದಂತೆ ಕ್ರಿಯಾಶೀಲರಾದರು. ಶೀನಪ್ಪ ಬಂದು ನಿಂತು ನನ್ನ ಭುಜ ತಟ್ಟಿದ. ಧೈರ್ಯವಾಗಿರು ಅಂದ. ನನಗೆ ಕಣ್ಣೀರು ತುಂಬಿ ಬಂದವು. ನನಗ್ಯಾಕೋ ಭಯ ಆಗ್ತದೆ ಎಂದು ಗದ್ಗದಿತನಾದೆ. ಟೆಲಿಗ್ರಾಂ ಕೊಟ್ಟಿರುವ ಫಲವಾಗಿ ಹೆಂಡತಿ, ಅಜ್ಜಿ ಬರಬಹುದು; ಬಂದವರು ನನ್ನನ್ನು ತಬ್ಬಿಕೊಂಡು ಧೈರ್ಯ ಹೇಳಬಹುದು…. ಹೆಂಡತಿಗೆ ಮುಟ್ಟು ನಿಂತದ್ದು ಫೆಬ್ರುವರೆಇಯಲ್ಲೋ ಮಾರ್ಚಿನಲ್ಲೋ…. ಈಗ ಆರೇಳು ತಿಂಗಳ ವಯಸ್ಸಿನ ಗರ್ಭವಿರಬಹುದು; ಹೊಟ್ಟೆಯೊಳಗೆ ಭೆಳೆಯುತ್ತಿರುವುದು ಗಂಟೋ ಹೆಣ್ಣೋ! ಯಾವುದೋ ಒಂದು!…. ಆಕೆ ಮಾತ್ರ ಆರೋಗ್ಯದಿಂದಿದ್ದೆ ಅಷ್ಟೆ ಸಾಕು? ಮೊದಲೇ ಆಕೆ ಸೂಕ್ಷ್ಮ ಮನಸ್ಸಿನವಳು…. ನನ್ನೀ ಸ್ಥಿತಿ ಕಂಡು ಅಪಘಾತವಾದರೆ ಆಕೆಗೆ!…. ಗರ್ಭಪಾತವಾದರೆ! ನನ್ನ ಮನಸ್ಸು ಹೊಯ್ದಾಡಿತು. +ಪೋಲೀಸರಿದ್ದ ಬಂಡಿ ಪೂರ್ವ ದಿಕ್ಕಿನಲ್ಲಿ ಕಂಡಿತು. ನಡುಗಿದೆ. ಪೋಲೀಸರೊಂದಿಗೆ ಅಪರಾಧಿ ಸ್ಥಾನದಲ್ಲಿರುವ ನಾನು ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಓನಾಮ ಗೊತ್ತಿಲ್ಲ. ವಿದ್ಯಾವಂತನೂ, ಸುಸಂಸ್ಕೃತನೂ ಆದ ನಾನು ಯಾಕೆ ಹೆದರುವುದು! ಉಪ್ಪು ತಿಂದಿದರೆ ನೀರು ಕುಡಿಯಲು ಸೈ ಸತ್ಯಮೇವ ಜಯತೆ! ದೇಹದ ಸಮಸ್ತ ಶಕ್ತಿಯನ್ನು ನಾಲಗೆಗೆ ತಂದುಕೊಂಡೆ. +ಬಂದು ನಿಂತ ಬಮಡಿಯಿಮದ ಪೊಲೀಸರೂ; ಇನ್ಸ್‌ಪೆಕ್ಟರೂ ಕೆಳಕ್ಕಿಳಿದರು. ವೀರನಗೌಡ ಇನ್ಸ್‌ಪೆಕ್ಟರಿಗೆ ನನ್ನನ್ನು ಪರಿಚಯ ಮಾಡಿಸಿದ. ಎಜ್ಯುಕೇಟೆಡ್ ಅಂತ ಕೈಗೆ ಹಗ್ಗ ಕಟ್ಟಿಲ್ಲವೆಂದು ಹೇಳಿದ. ಇನ್ಸ್‌ಪೆಕ್ಟರ್‍ ಐಸೀ ಅಂದ. ಆತ ತುಂಬ ಸ್ಮಾರ್ಟಾಗಿದ್ದ. ವಯಸ್ಸು ನನ್ನಷ್ಟೇ ಇರಬಹುದು…. ಜನ ಕಿಕ್ಕಿರಿಯಲಾರಂಭಿಸಿದ್ದರು…. ನಾನು ಏನೋ ಹೇಳಲು ಬಾಯಿ ತೆರೆದೆ… ಕೇವಲ ಬಿಕ್ಕಿದೆ…. ನನ್ನ ಪರವಾಗಿ ಎಂಬಂತೆ ಹೆಚ್ಚೆಮ್ ಇನ್ಸ್‌ಪೆಕ್ಟರ್‍ ಬಳಿ ಏನೋ ಉಸುರುತ್ತಿದ್ದ; ತನ್ನ ಮಾಮೂಲಿ ಆಕ್ಸ್‌ಫರ್ಡ್ ಶೈಲಿಯಲ್ಲಿ. ಪೋಲೀಸರು ನನ್ನನ್ನು ಕಣ್ಣಿಂದ ಅಳೆಯುತ್ತಿದ್ದರು. +ಮಾಡುವ ಮಹಜರೆಲ್ಲ ಮುಗಿಸಿದರು…. ಹೆಣದ ಬಳಿ ಪೋಲೀಸರನ್ನು ಕಾವಲಿರಿಸಿ ನನ್ನನ್ನು ತಮ್ಮೊಂದಿಗೆ ಚಾವಡಿ ಕಡೆ ಕರೆದೊಯ್ದರು. ವಲ್ಲೆಸಾರ್‍ ಎಂದರೂ ಕೇಳದೆ ನನಗೂ ತಿಂಡಿ ಕಾಫಿ ಕೊಟ್ಟರು… ಅವರ ಸದ್ವರ್ತನೆ ಕಂಡು ನಾನು ಆಶ್ಚರ್‍ಯ ಚಕಿತನಾದೆ… ಪೋಲೀಸ್ ಇಲಾಖೆಯಲ್ಲೂ ಇಂಥ ಒಳ್ಳೆಯವರುಂಟಾ ಎನ್ನಿಸಿತು. +ಇನ್ಸ್‌ಪೆಕ್ಟರ್‍ ನನ್ನೊಂದಿಗೆ ಸ್ನೇಹದಿಂದಲೇ ಮಾತುಕತೆ ಪ್ರಾರಂಭಿಸಿದರು. ಯಾವೂರು; ಏನ್ಕತೆ; ಅಲ್ಲಿಂದ ಇಲ್ಲಿಗೆ ಯಾಕೆ ಬಂದ್ರೀ? ತಂದೆ ತಾಯಿ ಇದ್ದಾರ? ಸತ್ತಿದ್ದಾರ? ಶಿಕ್ಷಣ ಎಲ್ಲಾಯ್ತು? ಎಲ್ಲಿಯವರೆಗೆ? ಮದುವೆಯಾಗಿದೆಯಾ? ಮಕ್ಕಳೆಷ್ಟು?…. ಇತ್ಯಾದಿ ಇತ್ಯಾದಿ ಬಗ್ಗೆ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ನಾನು ಶಾಂತಚಿತ್ತದಿಮದ ಉತ್ತರ ಕೊಟ್ಟೆ…. ಅಂತೂ ಬಚಾವಾಗ್ತೀನಿ ಅಂತ ಒಳಗೊಳಗೆ ಖುಷಿಪಟ್ಟೆ. +ಸುಳುವಾಯಿಯ ಹುದಲಿಂದ ಜೀಪು ಸಂಜೆಗೆ ಬಂತು. ಇನ್ಸ್‌ಪೆಕ್ಟರ್‍ ಹೆಣದ ಜೊತೆಗೆ ನನ್ನನ್ನೂ ಅಮೃತಾಪುರಕ್ಕೆ ಕರೆದೊಯ್ದರು. ಠಾಣೆಯಲ್ಲಿ ಅವತ್ತು ರಾತ್ರಿ ಕಳೆಯಬೇಕಾಯಿತು; ಅದು ಮನೆಗಿಂತ ಹೆಚ್ಚು ಭಾವಿಸಿದೆ…. ನಿದ್ದೆ ಹೋದಾಗ ಸುಂದರವಾದ ಕನಸುಗಳನ್ನು ಕಂಡೆ. +ಸೂರ್ಯೋದಯಕ್ಕೂ ಮೊದಲೆ ಠಾಣೆ ಕಿಚಗುಡತೊಡಗಿತು. ಕರ್ನಾಟಕದ ನನ್ನೂರಿನಿಮದ ನನ್ನ ತಮ್ಮ, ನಿಂಗಮ್ಮಜ್ಜಿ ಮತ್ತು ಹೆಂಡತಿ ಬಂದಿದ್ದರು. ಅವರೆಲ್ಲ ನನ್ನ ಸುತ್ತ ನೆರೆದು ಎಂಥಾ ಕೆಲಸ ಮಾಡಿಬಿಟ್ಟೆಲ್ಲೋ…. ಇಂಥ ಕೆಲಸನ ನಮ್ ವಂಶದಲ್ಲಿ ಯಾರು ಮಾಡಿರಲಿಲ್ವಲ್ಲೋ ಎಂದು ಒಮ್ಮೆಗೆ ತಾರಕಕ್ಕೇರಿದರು. ನಾನು ಮಾಡಿಲ್ಲ, ಈ ಕೆಲಸ. ಬಾಯಿಮುಚ್ಚಿಕೊಮಡು ಸುಮ್ಕಿರ್‍ರಬೇ ಎಂದರೂ ಅವರು ಕೇಳಬೇಕಲ್ಲ? ನೀವಿಂಥೋರಂತ ಮೊದ್ಲೆ ತಿಳಿದಿದ್ರೆ ನಾನ್ ನಿಮ್ಮನ್ ಮದ್ವೆ ಆಗ್ತಿರಲಿಲ್ಲ ಎಂದು ಹೆಂಡತಿ ಅಬ್ಬರಿಸಿದಳು….. ಹುಟ್ಟುಓ ಮಗು ಕೊಲೆಗಾರನ ಮಗು ಎಂದು ಕರೆಸಿಕೊಳ್ಳುವುದಲ್ಲ ಎಂದು ಹಲುಬಿದಳು ನನ್ನ ಪ್ರೀತಿಯ ಹೆಂಡತಿ. ಆಕೆ ಹೀಗೆ ಯೋಚಿಸದೆ ನುಡಿಯಬಹುದೆಂದುಕೊಂಡಿರಲಿಲ್ಲ. ನನ್ನ ತಮ್ಮ ದುರ್ಧಾನ ತೆಗೆದೊಮಡವನಂತೆ ಗುಲ್ ಮೊಹರ್‍ ಮರದಡಿ ಕೂತಿದ್ದ. ನನಗೆ ಇವರೆಲ್ಲರಿಗಿಂತ ನಾರಾಣಿಯೇ ಆತ್ಮೀಯ ಬಂಧುವೆನಿಸಿದನು, ನಿಟ್ಟುಸಿರಿಟ್ಟೆನು. ನಿಂಗಮ್ಮಜ್ಜಿ ತನ್ನ ಪಾಡಿಗೆ ತಾನು ಸಂಸಾರದ ಪ್ರಹರ ಹೇಳತೊಡಗಿತ್ತು. ಇನ್ಸ್‌ಪೆಕ್ಟರ್‍ ಬರುವ ಹೊತ್ತಾಯ್ತು ಅಂತ ಅವರೆಲ್ಲರನ್ನು ಹೊರಗೆ ಕಳಿಸಿದ ಪೇದೆ. +ಸರಿ ಸುಮಾರು ಹತ್ತು ಗಂಟೆಗೆ ಎಸೈ ಬಂದರು. ಸೂಕ್ಷ್ಮವಾಗಿ ಗಮನಿಸಿದರು. ಪಂದಿಕೊನೆಯಿಂದ ಗೌಡ, ಕುಲಕರ್ಣಿ, ಹೆಚ್ಚೆಮ್ ಲಕ್ಷ್ಮೀನರಸಿಂಹಯ್ಯ, ಶೀನಪ್ಪ ಮತ್ತಿತರರು ಬಂದಿದ್ದರು. ನನ್ ಮೊಮ್ಮಗನ್ನ ಬಿಡ್ರಪೋ ಅಂತ ನಿಂಗಜ್ಜಿಯೂ; ನನ್ನ ಗಂಡನ್ನ ಬಿಟ್ಟು ಪುಣ್ಯ ಕಟ್ಟಿಕೊಳ್ರಿ ಅಂತ ನನ್ನ ಹೆಂಡತಿಯೂ; ಎಸೈಗೆ ಕನ್ನಡ ಅರ್ಥವಾಗುವುದು ಸಾಧ್ಯವಿರಲಿಲ್ಲ. ಸೆಲ್‌ನಲ್ಲಿದ್ದ ನಾನು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದೆ. ಎಸೈ ಜೊತೆ ಎಲ್ಲರೂ ಅಲಾಯದವಾಗಿ ಮಾತಾಡಿದರು. ನಮ್ಮ ಸೀನಪ್ಪನೂ ಸಹ…. +ನಂತರ ನನ್ನನ್ನು ತಮ್ಮ ಟೇಬಲ್ ಬಳಿಗೆ ಬರಮಾಡಿಕೊಮಡರು ಎಸೈ…. ನಿಜ ಹೇಳಿ ಮೇಷ್ಟ್ರೇ…. ನೀವು ಅವನ್ನ ಕೊಲೆ ಮಾಡಿದ್ದು ನಿಜ ತಾನೆ! ಅವರು ತಲುಗಿನಲ್ಲಿ ಮಾತಾಡಿದರು. ನಾನು ಆಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಗ್ರಾಮಸ್ಥರಿಗೆ ನಿಮ್ಮ ಬಗ್ಗೆ ಅನುಮಾನವಿರುವುದಲ್ಲ, ಇದಕೇನು ಹೇಳುವಿರಿ ಎಂದವರು ಕೇಳಿದಾಗ ನಾನು ನಿರ್ವಂಚನಿಯಿಂದ ಆದಿಯಿಂದ ಅಂತ್ಯದವರೆಗೆ ಹೇಳಿದೆ. +ನಾರಾಣಿ ನಮ್ಮ ಮನೆಯಿಂದ ಕದಲಿದ ಮೇಲೆ ಸುಮ್ಮನಿರಲಿಲ್ಲ…. ಬುತ್ತಿ ಹಲ್ಲು ಹತ್ತಿದ ನಾಯಿಯಂತೆ…. ಪದೇ ಪದೇ ಅಟಕಾಯಿಸಿದನು. ಮತ್ತೊಂದು ದಿನ ಗುಡಿ ಎದುರು ಲೇ ಮೇಷ್ಟ್ರೇ ಇಪ್ಪತ್ತು ಕೊಡ್ತೀಯೋ ಇಲ್ಲೋ ಎಂದು ಜಬರ್ದಸ್ತಾಗಿ ತರುಬಿದನು. ಯಾವ ಕಾರಣಕ್ಕೂ ಹಣ ಕೊಡಬಾರದೆಂದು ನಾನು ಅವತ್ತೇ ನಿರ್ಧರಿಸಿದ್ದೆ. ಆದ್ದರಿಂದ ಅವನ ಬೆದರಿಕೆಗೆ ಮಾಗಲಿಲ್ಲ. ಒದೆಯುವಷ್ಟು ಸಿಟ್ಟು ಬಂದು ಅವನ ಮೈಗೆ ಕೈಹಚ್ಚಿದೆ ಅವನೂ ಅಷ್ಟೆ! ಆದರೆ ನನ್ನ ಕೈಯೇ ಹೆಚ್ಚಾಗಿತ್ತು. ಜನ ಸುತ್ತು ನಿಮತು ನೊಡುತ್ತಿದ್ದರೇ ಹೊರತು ಜಗಳ ಬಿಡಿಸುವ ನರಮಾನವರಿರಲಿಲ್ಲ. +“ಲೇ ಕೆಲವು ದಿನದೊಳಗಾಗಿ ನಿನಗೊಂದು ಗತಿ ಕಾಣಿಸ್ಲಿಲ್ಲ ನನ್ನ ಹೆಸ್ರು ದುಗ್ಗಾ ನಾರಾಣೀನೇ ಅಲ್ಲ” ಅವನು ಶಪಥ ಮಾಡಿದನು. +“ನಾನೇನು ಕೈಗೆ ಬಳೆ ತೊಟ್ಕೊಂಡಿಲ್ಲಲೇ…. ನಿನ್ನ ಕಾಲಾಗೇನಾಗ್ತದೆ…. ನಾನೂ ನಿನ್ನ ಹುಟಟಿಲ್ಲ ಅನ್ನಿಸ್ತೀನಿ….” ಇಷ್ಟೆ ನಾನು ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಮಾತಾಡಿದ್ದು. ಅದನ್ನೆಲ್ಲ ಜನ ಕೇಳಿಸಿಕೊಂಡಿದ್ದರು. +ಇದನ್ನೆಲ್ಲ ಸವಿವರವಾಗಿ ಎಸೈಗೆ ಹೇಳಿದೆ…. ಅಲ್ಲದೆ ನನ್ನ ಪರವಾಗಿ ಶೀನಪ್ಪ ಮತ್ತಿತರರು ವಿನಂತಿಸಿದ್ದರು. ಅಲ್ಲದೆ ಎಸೈಗೆ ಏನು ಮೋಡಿ ಮಾಡಿದ್ದರೋ ಏನೋ ಆತ ಅವತ್ತು ಸಂಜೆ ನನ್ನನ್ನು ಬಿಡುಗಡೆ ಮಾಡಿದರು. +ನಾರಾಣಿಯೊಮದಿಗೆ ನನ್ನ ಒಡನಾಟದ ಘಟನೆ ನನಗೆ ದೊಡ್ಡ ಪಾಠವನ್ನೇ ಕಲಿಸಿತ್ತು. ನಮ್ಮ ಅಜ್ಜಿ, ಹೆಂಡತಿ ಮತ್ತಿರರು ಕೆಲಸ ಬಿಡಬೇಡ…. ಹೊಟಟೆಗೆ ಮಣ್ಣು ತಿನ್ನೋದಾ ಅಂತ ಎಷ್ಟು ಹೇಳಿದರೂ ಕೇಳದೆ ನಾನು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದೆ. ನನ್ನ ಹುಟ್ಟಿದ ಊರಲ್ಲಿ ಕೈಲಾದಷ್ಟು ಕೆಲಸ ಮಾಡಿ, ಹಿಂಡಿ ರೊಟ್ಟಿ ಉಂಡು ನಿಶ್ಚಿಂತೆಯಿಂದಿರುವೆ. +* * * +ಕೀಲಿಕರಣ ದೋಶ ತಿದ್ದುಪಡಿ: ರಾಮಚಂದ್ರ +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ […] +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. […] +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_514.txt b/Kannada Sahitya/article_514.txt new file mode 100644 index 0000000000000000000000000000000000000000..f905c418baef37c959e69a20f501462ccd8c33b1 --- /dev/null +++ b/Kannada Sahitya/article_514.txt @@ -0,0 +1,205 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೇಳಿದರ ಕತಿಗಿತಿ ಅಂದೀರಿ ದೇವರೂ +ಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥ +ಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತ +ಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡ +ಪದಾರ್ಥ ಮಾಡಬಲ್ಲ; ಹೊಸೆಯಬಲ್ಲ +ಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿ +ಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳ +ಪನ್ನು ಜೋಕುಗಳ ಕಟ್ಟಬಲ್ಲ. +ಹೇಳಿದರ ಕತೆಗಿತಿ ಅಂದೀರ ದೇವರೂ +ಕಿವಿಗೊಟ್ಟು ಕೇಳಿರಿ ಹೇಳುವೆನೀತನ ೧೦ +ನಿವಳ ಹಕೀಕತ್ತ +ನವ್ಯ ಕಾವ್ಯದ ಹೊರಗೆ ಕೂತ ಸರಸ್ವತೀ +ಕೊಡು ನನಗೆ ತಾಕತ್ತ. +ವಿಳಾಸವಂತ ಎಂದೆನಲ್ಲ-ಮನೆಯಿಂದ ಅವನಿಗೂ ಊರಿನ ಕೇರಿಯ ರಸ್ತೆಯ ಪಕ್ಕದಲ್ಲಿ,- +ಎಲ್ಲಿ ಊರಿನ ಮೂರು ರಸ್ತೆಯ ವಕ್ರಕೂಟದ ಮಾಟವೋ +ಎಲ್ಲಿ ಮುದಿ ಎತ್ತೊಂದು ಮಲಗಿದೆ ಮೈಗೆ ಸಾವಿರ ನೊಣಗಳೋ +ಎಲ್ಲಿ ಎತ್ತಿನ ತುದಿಯ ಬಾಲನು ಕಣ್ಣಿಗೊತ್ತುವ ಜನಗಳೋ +ಎಲ್ಲಿ ಟ್ರಕ್ಕಿನ ಸರ್ಪನೆರಳಲಿ ಕಿರಿಚಿ ಓಡುವ ಸ್ಕೂಟರೋ +ಅಲ್ಲೆ ಅಲ್ಲೇ ಅವನ ಮನೆಯುಂಟು. ಅಲ್ಲಿಗೂ ಹೋಗುವ ಜನ- ೨೦ +ಜನಗಣತಿಯಧಿಕಾರಿ, ಚುನಾವಣೆಯ ಹುರಿಯಾಳು, ಅರಿಷಿಣಕುಂಕುಮದ ಗರತಿ, ಹಾಲಿನ ಗೌಳಿ, ತರಕಾರಿಯ ಥರಥರ ಮಂದಿ. +ಅಕೋ ಬಂದ ಬಂದ! ಅವನೆಂಬಂಥ ಮತಿವಂತ ಕುಲಗೋತ್ರಗಳ ವಿಷಯ ನನಗೆ ಗೊತ್ತಿರದಂಥ, ರಹಿತಾದಿ ಮಧ್ಯಂತ, ಬಿರುದುಬಾವಲಿ ರಹಿತ ಕಥಾನಾಯಕ ಬಂದಂಥವನು ಎತ್ತಿದ ಬಾಲದ ತುದಿ ಮುಟ್ಟಿ ಕಣ್ಣಿಗೊತ್ತಿಕೊಂಡಂಥವನು ನಾಕೈದು ಸಲ ಪ್ರದಕ್ಷಿಣೆಹಾಕಿ ಮಹಮನೆಗೆ ಬಂದು ಬಾಗಿಲು ತಟ್ಟಿದಂಥವನಾದಾಗ-ಸುವಿಶಾಲವಾದ ಆಳೆತ್ತರ ಆಳಗಲದ ಒಂದು ಮೊಲೆ ಬಂದು ಬಾಗಿಲು ತೆರೆದು ಮಾಮೂಲಿನಂತದರ ತುದಿ ಅವನ ಕಿವಿ ತುರಿಸಿ ಮಾಮೂಲು ನಗೆ ನಕ್ಕು ಒಳಬಂದು ಬಾಗಿಲಿಕ್ಕಿಕೊಂಡು- +ತಾಳ್ರಿ- ನಿಮಗೆ ಈ ಮನೆಯ ವಿಚಾರ, ಹೊಸದಾಗಿ ಬಂದಿದ್ದೀರಲ್ಲ-ಹೇಳ ೩೦ +ಬೇಕು. ನೋಡ್ರಿ ಇದೊಂದು ರೂಮು, ರೂಮಿಗಂಟಿ ಬಾಕೀ ಮನೆ. ಬಾಕೀ ಮನೆ ವಿಚಾರ ಇತ್ತ ನಮಗೂ ಗೊತ್ತಿಲ್ಲ, ಅತ್ತ ನಾಯಕನಿಗೂ ಗೊತ್ತಿಲ್ಲ. +ರೂಮಿನ ಮೂರು ಗೋಡೆ ಕಲ್ಲುಮಣ್ಣಿನದೆ. ನಾಲ್ಕನೇ ಕರಿಗೋದೆಯಿದೆಯಲ್ಲಾ ಮೊಲೆಗೂ ಅವನಿಗೂ ಮದುವೆಯಾದಾಗ ಇರಲಿಲ್ಲ. ಅಥವಾ ಅಪಾರ್ಥವಾಗದಂತೆ ಹೇಳಬೇಕೆಂದರೆ ಅವನು ಮದುವೆಯಾದದ್ದು ಮೊಲೆಯನ್ನಲ್ಲ-ಹೆಂಗಸನ್ನೆ. ಸುಳ್ಳು ನಾ ಯಾಕೆ ಬೆರೆಸಲಿ? ಇಬ್ಬರೂ ಚೆಲುವರೆ. ಆದರೆ ಅಗ್ನಿಸಾಕ್ಷಿಯಾಗಿ ಸರ್ವಸಮಸ್ತರ ಎದುರು ಅವನು ಕಟ್ಟಿದ್ದ, ಆಕೆ ಕಟ್ಟಿಸಿಕೊಂಡಿದ್ದ ಕರಿಮಣಿ ತಾಳಿ ಅವರಿಬ್ಬರಿಗಿಂತ ಸುಂದರವಾಗಿತ್ತು ಚೆಲುವಾಗಿತ್ತು. ಅಷ್ಟೇ ಯಾಕೆ ಮದುವೆಗೆ ಬಂದಿದ್ದ +ಅಚ್ಚ ಮುತ್ತೈದೇರು ಮೆಚ್ಚಿ ಕೊಂಡಾಡಿದರು ೪೦ +ಹೆಚ್ಚೀನ ತಾಳಿಯ ಹೊಗಳಿ +ದಾರಕೆ ಬೆಲೆಯೆಷ್ಟು ಕರಿಮಣಿಗೆ ಬೆಲೆಯೆಷ್ಟು +ಬಂಗಾರಕೆಷ್ಟು ಬೆಲೆ ಹೇಳಿ +ಎಲ್ಲಿ ಮಾಡಿಸಿದಿರಿನ್ನೆಲ್ಲಿಂದ ತಂದೀರಿ +ಎಷ್ಟೊಂದು ಹಣವ ತೆತ್ತೀರಿ +ಕರಕುಶಲ ಪತ್ತಾರ ಮೊದಲು ಹೇಳಿದ್ದೆಷ್ಟು +ನೀವು ಕೊಟ್ಟದ್ದೆಷ್ಟು ಹೇಳ್ರಿ. +ಎಂದು ಮುಟ್ಟಿಮುಟ್ಟಿ ನೋಡಿ ತಟ್ಟಿತಟ್ಟಿ ಕೇಳಿದರೆ ಅದ ಕೇಳಿಕೇಳಿ ಅದ ಕೇಳಿಕೇಳಿ ಅವನಿಗೆ ಹೆಮ್ಮೆಯಾದದ್ದು ನಿಜ. ಅಷ್ಟೇ ಅಲ್ಲ, ಅಷ್ಟೇ ಆಗಿದ್ದರೆ ನಿಮ್ಮೆದುರಿಗೆ ಇದೆಲ್ಲಾ ಯಾಕೆ ಹೇಳುತ್ತಿದ್ದೆ-ಆ ದಿನ ಹಿರಿಯರೆಲ್ಲ ಅವರಿಬ್ಬರನ್ನು ಬಿಟ್ಟು ಆ ತಾಳಿಗೇ ಆಶೀರ್ವದಿಸಿದರು. ೫೦ ಅದಕ್ಕೆ ಆಯುರಾರೋಗ್ಯ ಅಷ್ಟಪುತ್ರ ಸುಖ ಸೌಭಾಗ್ಯ ಹಾರೈಸಿದರು. ಅವರ ತುಟಿಯಂಚಿನ ಐರನಿ ಗುರುತಿಸಿ ಅವನು ಹಾಗೆಂದು ಹೇಳಿದರೆ ‘ಕೆಟ್ಟ ಅಭಿರುಚಿ’ಯೆಂದರು. +ಹೇಳಿದರ ಕತಿಗಿತಿ ಅಂದೀರ ದೇವರೂ, ಅಂದಿನಿಂದ ಅವನೂ ಒಬ್ಬ ಮನುಷ್ಯನಾದ. ಈಗ ಜನ ಅವನ ನಂಬುತ್ತಾರೆ. ಮದುವೆ ಮುಂಜಿ ವಿಧಿ ಆಚರಣೆಗಳಿಗೆ ಆಮಂತ್ರಿಸುತ್ತಾರೆ. ಬೆಳೆದ ಹುಡುಗಿಯರ ತಂದೆಯರು, ಸುಂದರಿಯರ ಗಂಡಂದಿರು, ರೋಟರಿ ಕ್ಲಬ್ಬು ಅಕ್ಕಪಕ್ಕ ನೆರೆಹೊರೆ ಅಂಗಡಿ ಶೆಟ್ಟಿ ವಿಶ್ವಾಸದಿಂದ ಇರುತ್ತಾರೆ. ಸ್ವಲ್ಪ ಹಿಂದುಮುಂದಾಯಿತು ಕ್ಷಮಿಸಿರಿ. ಹೀಗೇ ಹೇಳಬೇಕಿತ್ತು-ತಾಳಿಯಿತ್ತಲ್ಲ ಇಬ್ಬರಿಗೂ ಅಚ್ಚುಮೆಚ್ಚಿನದಾಯಿತು. ನೀವು ಪ್ರೀತಿಯಿಂದ ಏನನ್ನಾದರೂ ನೋಡತೊಡಗಿದರೆ ಅದು ಬೆಳೆಯತೊಡಗುತ್ತದೆಂದು ನಂಬಿಕೆಯಿದೆ ಗೊತ್ತಾ? ಮೊದ ೬೦ +ಮೊದಲು ಅದರೊಂದಿಗೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಹೌದು. ಆಮೇಲೆ ಭಾರೀ ಸರಳ. ತಾಳಿಯಿತ್ತಲ್ಲ, ಅವರಿಬ್ಬರ ಪ್ರೀತಿಯಿಂದಿರಬೇಕು-ಬೆಳೆಯತೊಡಗಿತು, ಹೀಗೆ: +ಪ್ರಸ್ತದ ದಿವಸ +ಮನೆತುಂಬಿದ ನೆಂಟರ ಕಣ್ಣಲ್ಲಿ +ಅಶ್ಲೀಲ ಹನಿಮೂನೊಂದು ಹೊಳೆಯುವುದ ನೋಡಿ +ಕುಲುಕುಲು ನಕ್ಕು ಖುಶಿಖುಶೀ ಪಡುವಾಗ +ಹಾ- +ಮೈವಾಡದ ನೆನಪಾಯಿತು! +ಸ್ವಲ್ಪ ವಿಷಯಾಂತರವಾಗುತ್ತದೆ ಕ್ಷಮಿಸಬೇಕು. ಆದರೂ ಮಹತ್ವದ ಮಾತು ಬಿತ್ತು. ೭೦ +ಅದಕ್ಕೇ ಹೇಳುತ್ತೇನೆ: ಅವನಜ್ಜ ಸಾಯುವಾಗೊಂದು ಕೋತಿಯ ಮೈಚರ್ಮ ಕೊಟ್ಟಿದ್ದ: +ತಗೋ ಮಗಾ +ಸಿಕ್ಕಿದೆಯಂತ ಸಿಕ್ಕಸಿಕ್ಕಲ್ಲಿ ಬಿಚ್ಚಬೇಡ, +ಹಡಬಿಯರ ಹರಿತ ಬೆರಳಿಗೆಚ್ಚರ ತಪ್ಪಬೇಡ +ಟೊಂಕದ ಬೆದೆಯ ಹದವರಿತು ತೋರಿಸು ನಿನ್ನ +ಹನುಮಂತನವತಾರ, ಮರೆಯಬೇಡ ನೀನು +ಕೋತಿಗೆ ಕುಮಾರ. +ಆಗಲೆಂದನು ಅವನು | +ಮೈವಾಡವೆಂದು ಹೊಸ | ೮೦ +ಹೆಸರು ಕೊಟ್ಟನು ಅವನು | +ಧರಿಸಿಕೊಂಡನು ಮೈಗೆ | +ಮರವೇರಿದನು ಹೊಂಗೆ | +ಹುಣಿಸೆ ಮಾಮರ ಅತ್ತಿ | +ಹರಿದು ತಿಂದನು ಹತ್ತಿ | +ಸರಿಕರೆದುರಿಗೆ ಹಾಕಿ | +ಮೆರೆದಾಡಿದನು ಶೋಕಿ | +ಸ್ಕೂಲು ಕಾಲೇಜುಗಳ | +ವಾರ್ಷಿಕೋತ್ಸವ ನಿವಳ | +ಅವಕಾಶಗಳಲೆಲ್ಲ | ೯೦ +ಬಲ್ಲವರ ನಗಿಸಿದ | +ಕಾಲೇಜಿನಲ್ಲಿರಲು | +ಫುಟ್‌ಬಾಲ್ ಖಯಾಲಿ ಬಲು | +ಗೋಲು ಏಟಿಗೆ ನಾಲ್ಕು | +ಹೊಡೆದ ಹೊಡೆಯದ್ ಅವನ್ | +ಹುಡಿಗಿಯರ ಅರೆಡಜನ್ | +ತೊಡೆಯ ಬೆವರಿಸಿದ | +ಆ ಪೈಕಿ ಇಬ್ಬರಿಗೆ | +ಅವನ ಚಂಡಿಕೆಯೊಳಗೆ | +ಬೆರಳನಾಡಿಸಿದಂತೆ | ೧೦೦ +ಹಿಡಿದು ಎಳೆದೆಳೆದಂತೆ | +ಕನಸಾಯಿತಂತೆ | +ಬಂತಂತೆ ಕರುಣೆ ಆ ಬಾಲೆಯರ ಕಣ್ಣ ಕನಸಿಗೆ ಮೈಯ ಹಸಿವೆಗೆ. ಅಂಗಾಂಗಗಳ ಸಂದುಗೊಂದಿಯ ಚಡಪಡಿಕೆಗೆ ಕೋತಿಯ ಮೈವಾಡ ತೊಟ್ಟು ರೂಮಿನಲ್ಲಿ ಫುಟ್ ಬಾಲವಾಡಿದ್ದನಂತೆ! ಅಂತೆ ಇದು ಹಳೆಯ ಕತೆ. +ಹೇಳಿದರ ಕತಿಗಿತಿ ಅಂದೀರಿ, ನೆನಪಾಯಿತು: ಪ್ರಸ್ತದ ದಿವಸ ಈ ಮೈವಾಡದ ನೆನಪಾಯಿತು. ತೊಟ್ಟ. ಹಾಸಿಗೆಯ ಮೇಲಿನ ಹೆಣ್ಣು ಹುಣಿಸೇ ಹಣ್ಣಿನ ಹಾಗೆ ಕಂಡು +ಅಕಾ ಅಕಾ ಅಂದು +ಗಪಾಗಪಾ ತಿಂದ. +ಪಿತ್ತ ನೆತ್ತಿಗೆ ಏರಿ ೧೧೦ +ಹಾಸಿಗೆಗೆ ಬೆಂಕೀ ಹಚ್ಚಿ, +ಹಚ್ಚದ ಕಿಚ್ಚಿನಲ್ಲಿ ಫುಟ್‌ಬಾಲನಾಡತೊಡಗಿದಾಗ- +ಸಂದುಸಂದುಗಳಲ್ಲಿ ಬೆಂಕಿಯ ಜಳ +ಬುಗ್ಗೆಂದು ಹೊತ್ತಿದಾಗ-ಘಮಘಮ ಗಾಳಿ ತುಂಬಿದ +ಬಿದಿರು ಮೆಳೆಯಂತೆ +ಅದುರಿ ಚೆದುರಿ ಚೆಲ್ಲಾ ಪಿಲ್ಲಿ ಒಡಮುರಿದು ಒಟ್ಟಾದಾಗ- +ಕುಡಿವರಿದ ತೋಳತೀಟೆಗೆ ಕೈಕಟ್ಟಿ +ಹುರಿಮಾಡಿ ಹೊಸೆವಾಗ +ಕಣ್ಣಿನ ತುಂಬ ಹಂಬಲವಿಂಬಾಗಿ ಸೂಸಾಡುವಾಗ +ಯಾರೋ ಓಡಿ ಬಂದು ಜಿಗಿದಾಡುವ ಕೋತಿಯನ್ನು ಹಿಡಿದು ಚೆನ್ನಾಗಿ ಬೆನ್ನು ಬಾರಿಸಿ ೧೨೦ ಕಿತ್ತಾಡಿದರು. ಕತ್ತಿಗೆ ಕೈಹಾಕಿ ಹಿಂದಕ್ಕೆಳೆದರು. ಏನು ಎಂತಂತ ಅನ್ನೋದರಲ್ಲಿ ಕೆನ್ನೆಗೆರಡೇಟು ಬಿಗಿದು ಮೈವಾಡ ಹಿಡಿದು- +ಯಾರೊ : ಏ ಕೋತಿ, ಸ್ವಲ್ಪ ಕಿರುಚೊ. +ಅವನು : ಯಾಕಲೇ ಮಗನ ಬಾಯಿಗಿಬಂಧಾಂಗ ಆಡತಿ? ತಲಿಗಿಲಿ ನೆಟ್ಟಗಿಲ್ಲಾ? +ನೀ ಯಾರು ಏನಂತ ಹೇಳ್ತೀಯೋ ಇಲ್ಲಾ ಪೋಲೀಸರಿಗಿ ಹೇಳಲೊ? +ಯಾರೊ : ಏ ಇನ್ನಷ್ಟ ಜೋರಿನಿಂದ ಒದರು. +ಅವನು : (ಇನ್ನೂ ಜೋರಿನಿಂದ)ಮತ್ತ ಅದನ್ನ ಅಂತಾನಲ್ಲೊ! ಯಾಕ +ಬಾಯಾಗ ಹಲ್ಲ ಇದ್ದದ್ದ ಸಮ ಆಗವೊಲ್ದೇನ? ಸುಮ್ಮನ ಹೊರ +ಬೀಳ್ತೀಯೊ, ಹಲ್ಲ ಕೀಳಂತೀಯೊ? +ಯಾರೊ : ಇನ್ನ ಸಾಕು ಸುಮ್ಮನ ಬಿದ್ದುಕೊ. ೧೩೦ +ಮೈವಾಡ ಸುಮ್ಮನೆ ಕೆಳಗೆ ಬಿತ್ತು. ಮೊದಲಿನ ಕೆಲನಿಮಿಷ ಕೈಕಾಲು ಅಲುಗಿಸಲಿಕ್ಕೂ ಭಯ. ಎದ್ದು ಲೈಟ್‌ಹಚ್ಚಿದ. ಆಮೇಲಾಮೇಲೆ ನೋಡಿದರೆ ತನ್ನ ಮೈಕಪ್ಪಿನೊಂದಿಗೆ ಹೆಣ್ಣಿನ ಮೈ ಬಿಳಿ ವ್ಯತ್ಯಾಸಗೊಂಡಿತ್ತು. ಕಾಣದ ಅಂಗಾಂಗಗಳ ಕಲ್ಪಿಸಿ ಇಬ್ಬರಿಗೂ ಅಂಟಿಸಿಕೊಂಡು ಇಡಿಯಾಗಬಯಸಿದ. ತನ್ನಂತೇ ಕೈಬಾಯಿ ತನ್ನಂತೆ ಕಿವಿ ಮೂಗು ತನ್ನಂತೆಯೇ ಅಂತ ಅಂತೆವೊಲ್ ಹಾಗೆಗಳ ಚಾಚಿ ಒಂದಾಗಬಯಸಿದ. ಎಚ್ಚೆತ್ತ ಅವಳು ‘ನೋಡಬಾರದೆ ಮೊಲೆಯೆಷ್ಟು ಊದಿಕೊಂಡಿದೆ’ ಅಂದಳು. ‘ನಿನಗೆ ದಣಿವಾಗಿಲ್ಲವೆ’ ಅಂದ. ಮಲಗಿದ. ಮಣಮುಕ್ಕ ಹಾವಿನ ನೆನಪಾಯಿತು: +ಮಣಮುಕ್ಕ ಹಾವಿಗೆ ಎರಡೂಕಡೆ ಎರಡು ತಲೆ +ಮೈತುಂಬ ಕಾಲು ತಿನ್ನುವುದು ಮಣ್ಣ +ಸ್ವಂತಕ್ಕೆ ಹುತ್ತಿಲ್ಲ ಅದೂ ಸಾಲದ್ದಕ್ಕೆ ೧೪೦ +ಕಣ್ಣಿಲ್ಲ, ಗೊತ್ತಿಲ್ಲ ಸ್ವಂತ ಬಣ್ಣ. +ಅವರಿವರ ಹುತ್ತದಲಿ ನುಗ್ಗಿ ಐಷಾರಾಮ +ಐಹಿಕದ ಬಗೆಗೆಷ್ಟು ಯೋಚಿಸೋಣ +ಕಾಣದೊಡೆಯರ ಏಟು ಒದೆ ತಿವಿತ ಮೂದಲಿಕೆ +ಲೋಕವೇ ಇಂತೆಂಬ ಮುಸಾಫಿರ ತೀರ್ಮಾನ. +ಇದ್ದೆರಡು ತಲೆಯಲ್ಲಿ ಬಾಲ ಯಾವುದು ಎಂದು +ಎರಡಕ್ಕು ಕೊನೆಯಿರದ ಪರದಾಟವೆ. +ಮುಂದೆ, ಹೊರಟದ್ದೆ ತಲೆ ಹಿಂದೆ ಇದ್ದುದೆ ಬಾಲ +ಹಿಂದುಮುಂದುಗಳ ನಿರ್ಧರಿಸಬಹುದೆ? +ಹುತ್ತದಲಿ ತಲೆಯೊಂದು ಹೊಕ್ಕು ಗುದ್ದುತ್ತಿರಲು ೧೫೦ +ಇನ್ನೊಂದು ಕೂರುವುದು ಯೋಚಿಸುತ್ತ +ಕಲೆ ಗಣಿತ ಜ್ಯಾಮಿತಿಯ ಪರಿಮಿತಿಯ ಪರಿಘಕ್ಕೆ +ಸುತ್ತಿ ಬರೆವುದು ಸೊನ್ನೆ ತನ್ನ ಸುತ್ತ. +ಸೊನ್ನೆಯಂಚಿನಗುಂಟ ಬಣ್ಣಬಣ್ಣದ ಭ್ರಾಂತಿ- +ಬಾ ರಾಜಾ ಏನು ಸುಖ ತಾಜಾ ತಾಜಾ +ಎಲ್ಲೋಡಿ ಅಡಗಿದರು ಅಲ್ಲಿಂದ ಎಳೆಯುವುದು +ಮಣ್ಣೊಳಡಗಿದ ತಲೆಗೆ ಮಣ್ಣಿನ ಮಜ. +ಅತ್ತ ಎಳೆಯುವುದದು ಇತ್ತ ಇದು ಎಳೆಯುವುದು +ಎಳೆತದಲ್ಲಿದ್ದೀತೆ ಸುಖದ ನೋವು? +ನರನರಕವಾಗುತ್ತ ಅದಕಿದೂ ಇದಕದೂ ೧೬೦ +ಸಂಶಯವೆ ನಾಚಿಕೆಯೆ ಶೇಷವೇನು? +ಬೆಳೆಗ್ಗೆದ್ದಾಗ ಮೊಲೆಯೂದಿ ಕೊಡದಷ್ಟಾಗಿತ್ತು ಸ್ವಾಮೀ ಕೊಡದಷ್ಟಾಗಿತ್ತು. ತಾಳಿಯಿತ್ತಲ್ಲ ತಾಳಿ-ಅದರ ಕರಿಮಣಿಗಳು ಪೇಪರ್ ವೇಟ್‌ದಷ್ಟು ದೊಡ್ಡ ಕರೀಕರೀ ಗುಂಡುಗಳಾಗಿದ್ದವು ಸ್ವಾಮೀ ಗುಂಡುಗಳಾಗಿದ್ದವು. ಅದರ ಮಾರನೇ ದಿನ ಇನ್ನೂ ಇಷ್ಟು ದೊಡ್ಡದಾಗಿ ಕಟ್ಟಿದ ಕಟ್ಟೆಯಾಗಿ ನಿಂತ ಗೋಡೆಯಾಗಿ ಬೆಳೆಬೆಳೆದು ಮನೆಯಲ್ಲೊಂದು ಕೋಣೆ ಖರ್ಚಿಲ್ಲದೆ ಹೆಚ್ಚಾಯಿತು ಸ್ವಾಮಿ ಕೋಣೆ ಹೆಚ್ಚಾಯಿತು. ಗೋಡೆಯಾಚೆಗೆ ಅವಳ ಮುಖ, ಈಚೆ ಮೊಲೆ! ಮುಖವಿರುವ ಕೋಣೆಯಲ್ಲಿ ಏನಿದೆಯಂತ ಅತ್ತ ಅವನಿಗೂ ಗೊತ್ತಿಲ್ಲ, ಇತ್ತ ನಮಗೂ ಗೊತ್ತಿಲ್ಲ. +ಏನಿರಬಹುದು? +ಐಲೆಂಡಿರಬಹುದು, ೧೭೦ +ಭೂಗೋಳ ಇತಿಹಾಸ ಕುದುರೆಸವಾರ ಕೈಕಾಲಾಳು ಚೇಟಿ ಚಾರ ಮೊಳಕಾಲನೂರಿದ ರಾಜಕುಮಾರ ಪರಿಪರಿಯುಪಚಾರ ಪರಿಚಾರ…ಕನವರಿಕೆಯಂತೆ ಆಗೀಗ ಅಲ್ಲಿಂದ ಮಾತು ಕೇಳಿಸುವುದುಂಟು. ಬರೀ ಪ್ರತ್ಯಯಗಳು. ಅವನ ಗೊರಕೆ ಹೆಚ್ಚಾದಂತೆ ಅಲ್ಲಿಯ ನಗು ಕೇಕೆ ಗದ್ದಲ ಗಲಾಟೆ ಹೆಚ್ಚುತ್ತದೆ; ಗೊರಕೆ ಬಿಟ್ಟನೋ ಮೊಲೆಗೆ ನವಿರೆದ್ದು ಒದ್ದೆಯಾಗಿ ಸುಸೂಕ್ಷ್ಮ ಆಕುಂಚನ ಪ್ರಸರಣ ಉಕ್ಕುಸೊಕ್ಕು ಗರ್ದೀಗಮ್ಮತ್ತಾಗಿ +ಅಬಾಬಾ ಕಾ ಅಲ್ಲಿ ಕಾ ಇಲ್ಲಿ +ಎಲ್ಲಿ ನೋಡಿದರಲ್ಲಿ ಚಿಗುರಿರುತ್ತದೆ +ಯಾಕೆ ವಿಷಯಾಂತರವಾಯಿತೆಂದು ಗೊತ್ತಾಯಿತಲ್ಲ. ಕಾವ್ಯದ ಆರಂಭದಲ್ಲಿ ಮಾಮೂಲು ಬಾಗಿಲು ೧೮೦ +ತಟ್ಟಿದನಲ್ಲ, ಮಾಮೂಲು ಮೊಲೆಬಂದು ಬಾಗಿಲು ತರೆಯಿತಲ್ಲ-ಮಾಮೂಲಿನಂತರದ ತುದಿ ಅವನ ಕಿವಿತುರಿಸಿ ಮಾಮೂಲು ನಗೆನಕ್ಕು ಮಾಮೂಲು ಒಳಬಂದು ಮಾಮೂಲು ಬಾಗಿಲಿಕ್ಕಿಕೊಂಡ. +ಮಾಮೂಲುಗಳಾಗಿ ರಾತ್ರಿಯಾಗಿ ಮೊಲೆ ಗುಡುಗುತು: ಕರಿದೇವರೆಲ್ಲಿ?(ಕರಿದೇವರೆಂದರೆ ಆ ಕುಟುಂಬದ ಉಪಭಾಷೆಯಲ್ಲಿ ಮೈವಾಡ ತೊಟ್ಟಾಗಿನ ಅವನು ಎಂದರ್ಥ). ಮನಸ್ಸಿರಲಿಲ್ಲ. ಸುಮ್ಮನಾಗಿ ಕೂತು ಮಾಮೂಲಿನಂತೆ ಅಲ್ಲಲ್ಲಿ ಹರಿದ ಮೈವಾಡ ಹೊಲಿದು ರಿಪೇರಿ ಮಾಡತೊಡಗಿದ. ಮೊಲೆ ಮತ್ತೆ ಮತ್ತೆ ಗುಡುಗಿ ಪೀಡಿಸತೊಡಗಿತು. ಎದ್ದುಬಂದು ಮೈವಾಡ ತೊಡಿಸಿತು. ಮೇಲೆ ಕೂತು ನಿಧನಿಧಾನ ಹುಪ್ಪಾಹುಮ್ಮಾ ಜೈಬಜರಂಗಾ ಸುರುಮಾಡಿದ. +ಇತ್ತ ಇನ್ನೊಂದು ತಲೆ ಸಿಗರೇಟು ಹೊತ್ತಿಸಿ ಯೋಚಿಸತೊಡಗಿತು: +ಈ ಸಿಗರೇಟು ತಾನು ಯಾವಾಗಲೋ ಸೇದಿದ್ದೆನಲ್ಲಾ! ನಿನ್ನೆ-ಮೊನ್ನೆ- ೧೯೦ +ಬಹುಶಃ ಚಿಕ್ಕವನಿದ್ದಾಗ-ತನ್ನಜ್ಜ ಮುತ್ತಜ್ಜ-ಹೊಗೆ ಕೂಡ ದಿನನಿತ್ಯದಂತೇ ಹಾರಿ ಇಂಗಿ ಹೋಯ್ತು. ತನಗೆ ಸಾವಿರಾರು ವರ್ಷ ವಯಸ್ಸಾಗಿರಬೇಕೆನ್ನಿಸಿತು. ತನ್ನ ಮೀಸೆ ಥೇಟು ತನ್ನಪ್ಪನಂತೆ-ಅವನ ಮೀಸೆ ಅವನಪ್ಪನಂತೆ ಅವನಪ್ಪನ ಮೀಸೆ ಅವನಪ್ಪನಂತೆ-ಬಹುಶಃ ಈ ಮೀಸೆಯಗುಂಟ ಇಳಿದರೆ ಮೈತುಂಬ ಮೀಸೆಯ ಮೈವಾಡದಂಥ ವ್ಯಕ್ತಿ ಸಿಕ್ಕಬಹುದು. ಆತ ಹೇಳಬಹುದು: ಹೇಗಿದ್ದಿ? ಮದುವೆಯಾಯ್ತ? ಮಕ್ಕಳು ವಂಶೋದ್ದಾರಕರು? ನಾನೊಂದು ಪಡಿಯಚ್ಚು ಕೊಟ್ಟಿದ್ದೆನಲ್ಲ, ಅದಿನ್ನೂ ಇದೆಯಾ? ಜೋಪಾನವಾಗಿ ಮುಂದುವರಿಸು. ಇರಲಿ ಗೌರವ ಹಿರಿಯರ ಬಗ್ಗೆ ನನ್ನ ಬಗ್ಗೆ ಕುಲದ ಬಗ್ಗೆ ಪರಂಪರೆಯ ಬಗ್ಗೆ-ಹೀಗೆನ್ನಬಹುದಾತ. ಅದಕ್ಕೇ ಅನಿಸುತ್ತದೆ: ತನ್ನ ಕಣ್ಣಿಗೆ ಮೂಗು ನಾಲಗೆಗೆ ಚರ್ಮ ಮನಸ್ಸಿಗೆ ಸಾವಿರಾರು ವರ್ಷ ವಯಸ್ಸು. ಇನ್ನು ಮೇಲೆ ಇತಿಹಾಸ ಬೆಳೆಯುವುದಿಲ್ಲ, ೨೦೦ +ಡಿಕ್ಶನರಿ ಬೆಳೆಯುವುದಿಲ್ಲ. ಅಕ್ಷರಗಳ ಸಂಖ್ಯೆಯೆಲ್ಲಿ ಬೆಳೆದಿದೆ? ಥತ್. +ಕುಟುಂಬ ದೇಶ ಸಮಾಜ ದೇವರು ಹೆಣ್ಣು-ಛೇ ಛೇ ಈ ಪದಗಳ ಅರ್ಥವೇನು? ಡಿಕ್ಶನರಿಯಲ್ಲಿದೆ ಅಲ್ಲವೆ? ಜನಗಳೆಲ್ಲ ಡಿಕ್ಶನರಿಯ ಶಬ್ದಗಳ ಹಾಗೆ ಕಾಣುತ್ತಾರೆ. ಡಿಕ್ಶನರಿಯೇ ಇದ್ದಮೇಲೆ ಈ ಜನಗಳೇಕೆ ಇರಬೇಕು? ಅಥವಾ ಈ ಜನಗಳಿದ್ದರೆ ಡಿಕ್ಶನರಿಯೇಕೆ ಬೇಕು? ಅಥವಾ ಅವರಿಗೆ ಡಿಕ್ಶನರಿಯ ಅರ್ಥ ಬೇರೆ ಇರಬಹುದೆ? ಅಥವಾ ಇವರಿಗೆ ಲೋಕದಲ್ಲಿ ಮತ್ತು ಡಿಕ್ಶನರಿಯಲ್ಲಿ-ಹೀಗೆ ಎರಡೆರಡು ಅಸ್ತಿತ್ವಗಳಿವೆಯೆ? ಓಹ್ ಡಿಕ್ಶನರಿಯ ಅರ್ಥಕ್ಕೆ ಹುಟ್ಟಿದ ಮನುಷ್ಯರೆಷ್ಟು ಬೋರ್ ಮಾಡುತ್ತಾರಂತ. ಅಥವಾ ಮನುಷ್ಯ ಅಂದರೇನು- +ಸಣ್ಣ ಸೊನ್ನೆಯ ಮೇಲೆ ಥರಥರ ನಮೂನೆ ಬಣ್ಣ +ಬಳಿದು ಊದಿ ಉಬ್ಬಿಸಿ, ಆಮೇಲೆ ಬೇಕಾದರೆ ೨೧೦ +ಕೈ ಮೈ ಕಾಲು ಬರೆದು ಕಣ್ಣು ಮೂಗು ಕೊರೆದು +ಶೀತೋಷ್ಣ ಇಲಾಸ್ಟಿಕ್ ಪ್ರಸರಣ ಅಕುಂಚನ +ಚುಂಬನ ಘರ್ಷಣ ಅತನೀತನವಳಿವಳ ಹೆಸರಿಟ್ಟು +ಸಾಮಾಜಿಕವಾಗಿಸಿದರೆ +ಒಪ್ಪಿಕೊಳ್ಳುತ್ತೇವೆ, ಪರರ ಒಪ್ಪಿಸುತ್ತೇವೆ. +ಇದೂ ಡಿಕ್ಶನರಿಗೆ ಹುಟ್ಟಿದ ಅರ್ಥವಲ್ಲವೆ? +ಬುದ್ದಿವಂತಿಕೆ-ಎಂಥ ಚಿತ್ರಹಿಂಸೆ ಕೊಡುತ್ತದಂತ! ಗಾಯಗಳಿದ್ದಲ್ಲೆಲ್ಲ ಜ್ಞಾನದ ತಂತು ಹರಿದಾಡುವಂತೆ ಮಾಡುತ್ತದೆ. ಕಾಣಬಾರದಲ್ಲಿ ಗಾಯಗಳು ಕಾಣತೊಡಗುತ್ತವೆ. ನೋಡನೋಡುವುದರಲ್ಲಿ ಅವು ಹುಣ್ಣಾಗಿ ಒಡೆದು ಕೀವು ರಕ್ತ ಬಸಿಯತೊಡಗುತ್ತದೆ.ನಿಕ ಹೇಳಬೇಕೆಂದರೆ ಹುಣ್ಣು ಉಸಿರಾಡುತ್ತದೆ, ಮಾತಾಡುತ್ತದೆ, ೨೨೦ +ತಿನ್ನುತ್ತದೆ, ನಗಬಲ್ಲದು ಕೂಡಾ ತನ್ನ ನೋಡಿ, ಮನೆ ಮಾರು ರಸ್ತೆ ಪೇಟೆ ಪುಸ್ತಕ ಜನ ಡಿಕ್ಶನರಿ ನೋಡಿ. ಅದು ಹ್ಯಾಗೆ ಇಷ್ಟೊಂದು ಡುಪ್ಲಿಕೇಟ್ ಪ್ರತಿ ಸಾಧ್ಯವಾಯ್ತು? ಜನಾಂಗಜನಾಂಗ ಹೋಗಲಿ, ದೇಶ ದೇಶ ಹೋಗಲಿ, ಭಾಷೆಭಾಷೆಗಳಲ್ಲಿ ಕೂಡ ವ್ಯತ್ಯಾಸ ಉಳಿಯದಿದ್ದರೆ ಹೇಗೆ? ಇಂಗ್ಲೀಷ್ ಮಾತಾಡಿದರೆ ಕನ್ನಡದ ಹಾಗೆ ಕೇಳಿಸುತ್ತದೆ. ಕನ್ನಡ ಇಂಗ್ಲೀಷ್‌ದಂತೆ ಸಂಸ್ಕೃತದಂತೆ ಜರ್ಮನ್ ಚೀನಾದಂತೆ……. +ಸಿಗರೇಟು ಸುಟ್ಟು ಬೂದಿಯಾಗಿ ಕೆಳಗೆ ಬಿತ್ತು,ಕೈ ಸುಡಲಿಲ್ಲ.ಯಾಕೆಂದರೆ ಸುಟ್ಟು ಸುಟ್ಟು ಕೈ ದಡ್ಡು ಬಿದ್ದಿತ್ತು. ಮೈವಾಡದ ಕಡೆ ನೋಡಿದ: +ಮೊಲೆಯ ಚೂಪು ತುದಿ ಬಾಯೊಳಗಿತ್ತು +ಕೈಯಿಂದ ಕಾಲಿಂದ ತಬ್ಬಿಕೊಂಡಿತ್ತು +ಗಿರಗಿರ ತಿರುಗುತ ಏರುತ ಇಳಿಯುತ ೨೩೦ +ಜಾರಿ ತೂರಿ ಹಾರ್‍ಯಾಡಿ ಕುಣಿಯುತ +ತೇಪೆಯ ತೊಗಲಿನ ಬಾಲಿಲ್ಲದ ಕಪಿ +ಮೊಲೆಯ ಸುತ್ತುತಿತ್ತು-ಸೀಪುತ +ಮೊಲೆಯ ಸುತ್ತುತಿತ್ತು|| +ಇದೆಲ್ಲದರ ಅರ್ಥ ಕಂಡುಹಿಡಿಯಲೇಬೇಕೆಂದು ಎದ್ದ. ಹೋಗಿ ಕುಣಿಯುವ ಕೋತಿಯ ಮೈವಾಡ ಕಳಚಿದ. ಮುದ್ದೀ ಮಾಡಿದ. ಬಗಲಲ್ಲಿ ಹಿಡಿದ. ಮಧ್ಯರಾತ್ರಿಯಾಗಿತ್ತು ಹೊರವಂಟ. ಮೊಲೆ ಗುರ್ ಎಂದಿತು. ದಾದು ಮಾಡದೆ ಹೊಂಟ. ಸಿಕ್ಕಾಪಟ್ಟೆ ಕಿರುಚುತ್ತ ಬೆನ್ನು ಹತ್ತಿತು. ಓಡಿದ. ರಸ್ತೆಯಲ್ಲಿ ನಿಂತಿದ್ದ ಎತ್ತಿನ ಬದಿ ಅಡಗಿದ. ಎತ್ತು ಓಡತೊಡಗಿತು, ಅದರೊಂದಿಗೆ ಇವನೂ ಓಡಿದ. ರಸ್ತೆಯಲ್ಲಿ ನಿಂತಿದ್ದ ಎತ್ತಿನ ಬದಿ ಅಡಗಿದ. ಎತ್ತು ಓಡತೊಡಗಿತು, ಅದರೊಂದಿಗೆ ಇವನೂ ಓಡಿದ. ಓಡಿದಲ್ಲೆಲ್ಲ ಗೋಡೆಯಿತ್ತು. ಗೋಡೆಯೆಂದ ಮೇಲೆ ಅದಕ್ಕೊಂದು ಬಾಗಿಲಿರಬೇಕು. ಎಲ್ಲಿ +೨೪೦ ಬಾಗಿಲು? ಮುಂದಿರಬಹುದು, ಓಡಿದ. ಆ ಮುಂದಿರಬಹುದು, ಓಡಿದ ಓಡಿದ ಓಡಿದ. ಅದೋ ತುದಿ ಮೊದಲಿಲ್ಲದ ಭಯಂಕರ ಗೋಡೆ. ಈ ಗೋಡೆಯನ್ನು ಈ ಮೊದಲು ಗಮನಿಸಲೇ ಇಲ್ಲವಲ್ಲ! ಓಡುತ್ತೋಡುತ್ತ ಗೋಡೆ ಒಡೆಯುವುದು ಸಾಧ್ಯವೇ ಎಂದು ತಲೆಯಿಂದ ಹಾದ. ನೋವಾಯುತಷ್ಟೆ. ಮತ್ತೆ ಓಡಿದ ಓಡಿ ಓಡಿ ಬೆಳಗಾಯಿತು. ನೋಡಿದರೆ ಎಲ್ಲಿದ್ದರೋ ಅಲ್ಲೇ, ಮನೆ ಮುಂದೇ ಇದ್ದರು. “ಹಾಗಿದ್ದರೆ ಬೆಳತನಕ ಓಡಿದ್ದು ಸುಳ್ಳೇ? ಏನಿದರ ರಹಸ್ಯ?” ಎಂದ….. +ಹೇಳಿದರ ಕತೆಗಿತಿ ಅಂದೀರಿ ದೇವರೂ, +ಹೇಳಲೆ?-ನಾ ಬಲ್ಲೆ- +ನೀವು ಹೊಗಳುವ ಕೀರ್ತಿಗೆ ಅವಾರ್ಡಿಗೆ ೨೫೦ +ಹೊದಿಸುವ ಶಾಲಿಗೆ ಅಂಟಿಸುವ ಪದ್ಮಶ್ರೀಗೆ +ತಕ್ಕ ಹಾಗೆ ಸ್ವಾಮೀ ಈ ತನಕ ಬದುಕಿನ +ಮೈಮ್ ಮಾಡಿದ್ದೇನೆ. +ನನ್ನ ನಗೆ ಜೋಕು ಮಾತು ಸಂಸ್ಕೃತಿ ನಾಗರೀಕತೆ +ಎಸ್‌ನೋಗಳನ್ನೆಲ್ಲ ಸಾಮಾಜಿಕವಾಗಿಸಿದ್ದೇನೆ, +ನಿಮ್ಮ ಸಣ್ಣ ಜೋಕಿಗೆಷ್ಟೊಂದು ನಗೆ ನಕ್ಕು +ಸಕ್ಕರೆಯ ಬ್ರಾಂತಿಗಳನುಂಡುಂಡು ತೇಗಿದ್ದೇನೆ, +ಕುಣಿದಿದ್ದೇನೆ ಬಣ್ಣ ಬಳದತ್ತಿದ್ದೇನೆ- +ಸಾಕು +ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. +ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು. ೨೬೦ +ಶಬ್ದವೇ ನನ್ನ ಶಬ್ದವೇ +ತೋರು ನಿಜವನ್ನ +ನನ್ನಳತೆಯ, ಮನುಷ್ಯನಳತೆಯ ಸತ್ಯವನ್ನ. +ಓಡಿದ್ದರ ರಹಸ್ಯ ಕೇಳಿದ್ದನಲ್ಲ-ಎತ್ತು ಹೇಳಿತು : +“ಏನ ಹೇಳಲಿ ಸಾಬರ” ಹೆಂಗ ಹೇಳಲಿ? ಅತ್ತರ ಅಗ್ಗ, ನಕ್ಕರನಗ್ಗೇಡ, ನಗೋವಾಗೆಲ್ಲ ಕಣ್ಣಾಗ ನೀರ ತುಂಬತಾವ, ಏನ ಹೇಳಲ ಸಾಬರ” ಹೇಂಗ ಹೇಳಲ? +ಅಂದುಕೊಂಡಿದ್ದೆ : ನಾ ಗಾಣದೆತ್ತು, ನನ್ನ ಯಾರೋ ಹೂಡ್ಯಾರ, ಕಣ್ಣ ಕಟ್ಯಾರ, ಸುಳ್ಳಲ್ಲ ಖರೆಖರೆ ನಂಬಿ ತಿರುಗಿದೆ, ತಿರುಗಿದೆ, ತಿರುಗೇ ತಿರುಗಿ ಗುದಮುರಿಗಿ ಹಾಕಿದೆ. ಅಂದುಕೊಂದಿದ್ದೆ : ತಿರುಗೋದಕ್ಕೊಂದ ಗುರಿ, ಗೊತ್ತ ಐತಿ. ನಾವು ರಾತ್ರಿ ನೋಡಿದಿವಲ್ಲ; ಆ ಗೋಡೆಯಾಚೆ ನನ್ನ ಹೂಡಿದ ಗಾಣಿಗ್ಯಾ ಇದ್ದಾನ. ಅದ” ನನ್ನ ೨೭೦ +ಗುರಿ, ಅಲ್ಲಿ ಬರೇ ಹಸುರು ಅಥವಾ ಅಲ್ಲಾ ಪ್ರಶ್ನದ ಉತ್ತರ ಅದ. ಈಗ ನನ್ನ ಮೈಂಯಾಲ ನೊಣ ಕೂರತಾವ ನೋಡ್ರಿ ಆ ನೊಣಕ್ಕೆ ಅಲ್ಲಿ ಜಾಗಾನ” ಇಲ್ಲ. ಅಥವಾ ನೊಣ ಇರಬಹುದೋ? ನೊಣ ಇದ್ದರ ಹುದಲ ಖಾತ್ರಿ. ಗಾಣಿಗ್ಯಾನ ಏಟ ಸಹಿಸಬಹುದು; ಈ ನೊಣ ಮಾತ್ರ ಸಹಿಸೋದು ಸಾಧ್ಯ” ಇಲ್ಲ ತಗೀರಿ. ನೊಣ ಅಂದರ ಅಂತಿಂಥ ನೊಣ ಏನ್ರಿ? ಅವುಗಳ ಮೋತಿಗೆ ಕನಿಷ್ಠ ಪಕ್ಷ ಜೋಡ ಸೂಜಿ ಇರಬೇಕು. ಇವೆಂಥಾ ಜಾಣ ನೊಣ ಗೊತ್ತೇನ್ರಿ? ಮೊದಮೊದಲು ಸಣ್ಣಾಗಿ ಚುಚ್ಚಿ ಚುಚ್ಚಿ ಅಕ್ಕೀಕಾಳಿನಷ್ಟು, ಆಮ್ಯಾಲ ತಾವ” ಹೊಕ್ಕ ಹೊರಬರೋವಷ್ಟು ಹುಣ್ಣ ಮಾಡಿ ಹಾರ್‍ಯಾಡತಾವ. ಮಾಡಿದ ತೂತನ್ನ ಸ್ವಂತಕ್ಕ ಮನಿಮಾಡಿಕೊಂಡು ಮರಿ ಹಾಕಿ ಮೂರು ಸಾಕು ಎರಡು ಬೇಕಿನ ಚಿಕ್ಕ ಚೊಕ್ಕ ಸಂಸಾರ ಮಾಡಿಕೊಂಡು ಬದುಕತಾವ. ನಾನೇನೂ ಸುಮ್ಮನಿರೋಣಿಲ್ಲರೀ ಮತ್ತ; ಬಾಲದಿಂದ ೨೮೦ +ಹೊಡೀತೀನಿ. ಹೊಡೆದಾಗೊಮ್ಮಿ ಸಾಯತಾವ, ಹಾರ್‍ಯಾಡತಾವ ಮತ್ತ ಬರತಾವ-ಛೇಛೇ ಈ ಸಂಸಾರಗಳಿಂದ, ನೋಡ್ರಿ ಸಾಹೇಬರ ನನ್ನ ಮೈಚರ್ಮ ಈಗ ಗೋಣೀಚೀಲಧಾಂಗ-ಒಣಗ ಹಾಕಿದ ಮೀನ ಬಲೀ ಹಾಂಗ ಆಗೇತಿ ನೋಡರಿ. ಬೇಕಾದರ ಜಿದ್ದ ಕಟ್ಟಿರಿ, ನನ್ನ ಮೈಮ್ಯಾಲ ಸಾವಿರ ಸಂಸಾರ ಅವ” ನೋಡ್ರಿ. ಯಾಕಂದರ ನಡೀಲಿ, ಓಡಲಿ ಕನಿಷ್ಠ ಒಂದ ಸಾವಿರ ಕಡೆ ನನ್ನ ಮೈ ನೋಯತೈತಿ ! +ಇದಕ್ಕಲ್ಲರಿ ನನಗ ಸಿಟ್ಟ ಬರೋದು-ನನ್ನ ಮೈಮ್ಯಾಲ ಕೂರತಾವ, ಕೂರಲಿ; ನನ್ನ ಮಾಂಸ ತಿಂತಾವ ತಿನ್ನಲಿ-ಆದರ ಅಸಹ್ಯ ಕಿರಚತಾವ ನೋಡ್ರಿ-ಛೇಛೇ ಶಾಸ್ತ್ರೀಯ ಸಂಗೀತಕ್ಕ, ಸುಬ್ಬಲಕ್ಷ್ಮಿ ಪೂರ್ವಿ, ಛಾಯೋನಟದ ಜೋಶಿ, ಮನ್ಸೂರರ ಭೈರವಿ, ಖಾನರ ಗುಣಕಲಿಗೆ ತಲಿಹಾಕಿದ ಮಗಾ ನಾನು ಅಂದರ ನಾ ಹೇಳೋದಿಷ್ಟು ಸಾಹೇಬರ: ನೋವಿಗೇನೂ ಅರ್ಥ ಇಲ್ಲಂತಿರೇನು? ೨೯೦ +ನಿನ್ನಿ ಮತ್ತ ಕಾಡಿಗೆ ಹೋಗಿದ್ದೆ: ಇಲ್ಲೆ ಸನೇದಾಗೊಂದ ಕಾಡ ಐತಿ, ಸಡವಾದಾಗ ನೀವೂ ಒಮ್ಮಿ ಹೋಗಿ ಬರ್ರಿ ಬೇಕಾದರ. ನೀವು ಭಾಳಂದರ ಟ್ರೇನಿನಾಗ ಕೂತಾಗ ಕಾಡ ನೋಡಿದವರು. ನೀವು ಹೆಂಗಸರಿಗೆ ಹೋಲಿಸೋ ಬಳ್ಳಿ, ಅವೆಲ್ಲ-ಈ ಕಾಡಿನಲ್ಲಿ ಅಲ್ಪ. ನೆನಪಿನಾಗಿಡಿರಿ: ಮರ ನುಂಗೋ ಬಳ್ಳಿ, ಹುಲೀ ತಿಂಬೋ ನವಿಲು, ಅಯ್ಯೋ ಇರಿವೀಯಂಥಾ ಇರಿವಿಗೆ ಸಿಟ್ಟ ಬರತೈತ್ರಿ-ಈ ಕಾಡಿನಾಗ ! +ನೀವು ಒಮ್ಮಿ ಹೊಕ್ಕಿರೋ ನಿಮಗ ಅನ್ನಸ್ತದ: ಈ ಕಾಡು ನನಗ ಮಾತ್ರ ತನ್ನ ರಹಸ್ಯ ತೋರಸ್ತದಲ್ಲಪ ! ಅಂತ. ಆದರ ಅದಲ್ಲ, ಖರೇ ಅಂದರ ಅದು ಒಳಗೊಳಗ” ಅಂದಕೊಳ್ಳತದ: ಮೂರ್ಖ, ನಾ ಜಗತ್ತಿನಾಗಿದ್ದಲ್ಲೆಲ್ಲಾ ಮುಟ್ಟಿದವಳು, ಅಪ್ಪಿಕೊಂಡವಳು. ಅವರಿವರೆನ್ನದೆ ಎಲ್ಲರಿಗೂ ತೆರೆದಿಟ್ಟುಕೊಂಡವಳು. ೩೦೦ +ನೀ ಕಂಡು ಕೇಳರಿಯದ ಪಾಪ ಮಾಡಿದವಳು,-ಅಂತ. ಅಷ್ಟ” ಅಲ್ಲರಿ-ತನ್ನ ಮೀಸಲ ಒಡಪದ ಅರ್ಥ ನಿಮಗ ಮಾತ್ರ ತರೆದಿಟ್ಟಾಂಗ, ನಿಮ್ಮನ್ನ ಬಿಟ್ಟ ಉಳಿದವರನ್ನೆಲ್ಲಾ ನೋಡಿ ಅಪಹಾಸ್ಯ ಮಾಡಿಧಾಂಗ ನಾಟಕ ಮಾಡತೈತಿ. ನೀವು ಈ ನಾಟಕ ನಂಬಿದಿರೋ ಕಾಡಿನಾಚೆ ಇರೋದೆಲ್ಲ ಮಾಯೆ. ಎಲ್ಲಿ ತೊಂದರೆ ಅಂದರ-ನೀವೆಷ್ಟು ಆಳಕ್ಕಿಳಿದರೂ ಇದರ ತಳಿ ಮುಟ್ಟಿಲ್ಲ ಅಂತ ಅನ್ನಿಸಿ ಇಳಿಯೋ ಹಂಬಲ ಬರಬರತ ಜಾಸ್ತಿಯಾಗಿ ನೀವ” ಕಾಡಾಗತೀರಿ, ಕಾಡ” ನೀವಾಗತೀರಿ. ಆಯಿತಲ್ಲ, ನಿಮ್ಮನ್ನೀಗ ಕಾಡಿನಿಂದ ಬೇರ್ಪಡಿಸೋದಂದರ ನಿಮ್ಮನ್ನ ನೀವ” ಖೂನಿ ಮಾಡಿಧಾಂಗ! ಏನಂತೀರಿ? +ಆದರ ಖರೋಖರಂದರ, ಸಾಹೇಬರ, ಈ ಕಾಡಿಗೆಷ್ಟು ಮಿತಿ ಅವ ಗೊತ್ತೇನ್ರಿ? ಒಂದ ದಿನಧಾಂಗ ಇನ್ನೊಂದು ದಿನಾ ಇರೋಲ್ಲಾಂತ ಅನ್ನಸ್ತದಲ್ಲ- ೩೧೦ +ಅದೆಲ್ಲಾ ಸುಳ್ಳರೀ ಸಾಹೇಬರ ಸುಳ್ಳು. ಅದರ ಕಲರ ಕಾಂಬಿನೇಷನ್ ಭಾಳ ಕಮ್ಮಿ. ಅಷ್ಟಾಗಿ ಪ್ರಗತಿ, ಬದಲಾವಣೆ ಅಂತೀರಲ್ಲ-ಸಾಧ್ಯ” ಇಲ್ಲ. ಸಸಾರ ಮಾಡಿ ಹೇಳಲ್ರಿ? ಮೂರು ಋತುಮಾನ ಅವ. ಈ ಕಾಡಿನ ಹತ್ತಿರ ಮೂರು ಬಣ್ಣ ಅವ. ಒಂದೊಂದು ಋತುಮಾನಕ ಒಂದೊಂದು ಬಣ್ಣ. ಒಮ್ಮೊಮ್ಮಿ ಅದಲಿ ಬದಲಿ, ಎರಡೆರಡು ಅಥವಾ ಹೆಚ್ಚು-ಒಟ್ಟು ಹದಿನೆಂಟು; ಅಷ್ಟ! ಹಿಂಗ್ಯಾಕಂದ್ರಿ? ಈ ಕಾಡಿಗೆ ರಿಪೀಟ್ ಮಾಡೋದ” ಫ್ಯಾಷನ್ನರಿ ! +ನನಗ ಚಿಂತಿ ಕಡಿಮಿ ಆಂತ ತಿಳೀಬ್ಯಾಡ್ರಿ. ಇಲ್ಲಿ ನೋಡ್ರಿ, ನನ್ನ ಕೊಂಬು ಯಾಕ ಮುರದಾವ ಹೇಳ್ರಿ? ಈ ಗೋಡೆಯಾಚೆ ಏನೋ ಇರಬೇಕಂತ ತಿರುಗಿದೆ ಬಾಗಲ” ಸಿಗಲಿಲ್ಲ, ಸಿಟ್ಟಿಗೆದ್ದ ಗೋಡೆ ಒಡೆಯೋಣಾಂತ ಹಾದೆ ಹಾದೆ. ಬಂತೇನು? ಕೊಂಬು ಮುರಕೊಂಡೆ ಅಷ್ಟೆ. ಈ ಗೋಡೆಯಾಚೆ ಏನೈತಿ ಅಂತ ಗೊತ್ತೇನ್ರಿ? ೩೨೦ +ಖಾಲಿ! ಆ ಖಾಲಿಗೆ ಸಾಂಪ್ರದಾಯಕವಾಗಿ ಹೆಸರೇನು ಗೊತ್ತಾ?-ದೇವರು! ನನಗ ಈಗ ಅನಿಸೋದಂದರ ಇಷ್ಟ: ನಾನೂ ದೇವರ” ಸಾಹೇಬರ, ಆದರ ನಿಮ್ಮರ್ಥದೊಳಗಲ್ಲ-ಹೋಗಲಿ, ನಿಮ್ಮ ದೇವರೂ ನಿಮ್ಮ ಡಿಕ್ಶನರಿ ಬುದ್ದಿಗೆ ಹುಟ್ಟಿದವನು! ಹೌದಂತೀರೋ ? ಅಲ್ಲಂತೀರೋ ? +ನಿನ್ನಿ ಓಡತ್ತಿದ್ದವಲ್ಲ-ಆಗ ನನಗೆಷ್ಟು ನಾಚಿಕಿ ಬಂತ ಗೊತ್ತೇನ್ರಿ? ಮೂಗ ಕಳಚಿ ಬಿದ್ದಬಿಟ್ಟಿತಲ್ಲಾ! ನೋಡ್ರಿ ಇನ್ನ” ನೆತ್ತರ ಸೋರತೈತಿ! ಹೌದರಿ? ಏನ ಹೇಳಲಿ ಸಾಹೇಬರ, ಹೆಂಗ ಹೇಳಲಿ?” +ನಿಜ. ಎತ್ತಿಗೆ ಮೂಗಿರಲಿಲ್ಲ. ಮನೆಗೋಡಿ ಬಂದು ಕನ್ನಡಿ ನೋಡಿಕೊಂಡ. ಹೇಳಿದರ ಕತಿಗಿತಿ ಅಂದೀರಿ ದೇವರೂ ಅವನಿಗೂ ಮೂಗಿರಲಿಲ್ಲ! ಅದರ ಸ್ಥಳದಲ್ಲೊಂದು ಹುಣ್ಣಿತ್ತು. ಬಾಯೊಂದಿಗೆ ಅದೂ ಸೇರಿ ದೊಡ್ಡ ತೂತು ಬಿದ್ದಿತ್ತು! ೩೩೦ +ಇನ್ನು ಮೇಲೆ ಹೊರಗಡೆ ಹೋಗೋದು ಹೇಗೆ?-ಎಂದು ಮೂಗಿನ ಮೇಲೆ ಕೈ ಇಟ್ಟುಕೊಂಡೇ ಹೊರಗಡೆ ನೋಡಿದ-ಅರೆ ಯಾರಿಗೂ ಮೂಗಿಲ್ಲ! +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_515.txt b/Kannada Sahitya/article_515.txt new file mode 100644 index 0000000000000000000000000000000000000000..ca88a2bf20e0f15305d39f3c4fd140b4a9ceb485 --- /dev/null +++ b/Kannada Sahitya/article_515.txt @@ -0,0 +1,118 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“…ರಾತ್ರಿ ಆಯ್ತು ಅಂದ್ರೆ ದುಷ್ಟ ಮೃಗಗಳ ಸಂಚಾರ….. ಆದ್ರೂನು ಆ ಕ್ರೂರಿ ತಾಯಿ ಮಗು ಇಡೀ ರೊಟ್ಟಿ ಬೇಕು ಅಂತ ಹಠ ಮಾಡ್ತದೆ ಅಂತ ಸಿಟ್ಟುಗೊಂಡು, ಆ ಪುಟ್ಟ ಮಗೂನ ಅಂಗ್ಳಕ್ಕೆ ದಬ್ಬಿ, ಅಗ್ಳಿ ಹಾಕ್ಕೊಂಡು ಬಂದು ಮತ್ತೆ ರೊಟ್ಟೀ ತಟ್ಟಕ್ಕೆ…” +“ಅವ್ವ… ಕಥೆ ಹೇಳೋ ಹೊತ್ಗೆ ಅದ್ಯಾಕೆ ಹಾಗೆ ಅಳ್ತೀಯವ್ವ?” +“ಇಲ್ಲ ಮಗ. ಅಳ್ತಾ ಇಲ್ಲ ಮಗಾ..” +ಪಕ್ಕದಲ್ಲಿ ಮಲಗಿದ್ದ ಮಗ ಶೀನು ಏನು ಹೇಳಿದರೂ ಕೇಳಲೊಲ್ಲ. ತಾಯಿಯ ಉತ್ತರಕ್ಕಾಗಿ ಒಂದೇ ಸಮನೆ ಪಟ್ಟು ಹಿಡಿದಿದ್ದಾನೆ. ಏನು ಮಾಡಿದರೂ ನಿದ್ದೆ ಹೋಗಲೊಲ್ಲನು. ಕಥೆ ಹೇಳಿ ಹೇಗೆ ತಾನೆ ಸಂತೈಸಿಯಾಳು ಅಬ್ಬಕ್ಕ? +“ಇಕೋ ರಾತ್ರಿ ಮಸ್ತಾಯ್ತು. ಕಥೆ ಕೇಳ್ತಾ ನಿದ್ದೆ ಮಾಡು ಮಗಾ. ಆಮೇಲೆ ಆ ಕೂಸಿಗೆ ಬಾಳ ಭಯ ಆಗಿ…” +ಇಲ್ಲ ಏನಾರೂ ಶೀನು ಕೇಳನು. ಸೀರೆಯ ಅಂಚಿನಿಂದ ಅಬ್ಬಕ್ಕ ಕಣ್ಣೊರೆಸಿಕೊಂಡು ಮಗನ ಬೆನ್ನು ಸವರುತ್ತ ಪುಸಲಾಯಿಸುವ ಧ್ವನಿಯಲ್ಲಿ ಹೇಳಿದಳು: +“ಮಾತಾಡಬೇಡ ಮಗಾ. ತೊಟ್ಟಿಲಲ್ಲಿ ಮಲಗಿದ್ದ ಕೂಸೆದ್ದೀತು. ಈಗ ಕಥೆ ಕೇಳು… ಹೇಳ್ತೀನಿ.. ಆ ಕೂಸು ಅಷ್ಟು ಗಟ್ಟಿಯಾಗಿ ಅತ್ತರೂ ಆ ಪಾಪಿ ತಾಯಿ…” +“ಊಹು.. ನಂಗೆ ಕಥೇ ಬೇಡ. ಬೆಳಗ್ನಿಂದ ಯಾಕೆ ಒಂದೇ ಸಮ್ನೆ ಹಾಗೆ ಅಳ್ತಾ ಇದಿ ಹೇಳು.” +ಎಂಟು ವರ್ಷವಾಗಿದ್ದರೂ ಬಲು ಬುದ್ಧಿ ಈ ಹಸುಳೆಗೆ! ತಾಯಿಯೆಂದರೆ ಪ್ರಾಣ. +ಯಾರಿಗಾದರೂ ಎದೆ ತೋಡಿ ತೋರಿಸದೆ ನಿರ್ವಾಹವಿಲ್ಲ. ಅಷ್ಟು ನೋಯುತ್ತಿದೆ ಅಬ್ಬಕ್ಕನ ಹೆತ್ತ ಕರುಳು. ಶೀನುವಿಗಾದರೂ ಹೇಳಬಾರದೇಕೆ?… +ಹೇಳಬಹುದು…. ಆದರೆ ಹೇಗೆ? +“ನಿಂಗೊಂದು ಹಿರೀ ಅಣ್ಣ ಇತ್ತು ಮಗಾ… ಇವತ್ತು ಅದ್ರ ಹುಟ್ಟಿದ ಹಬ್ಬ.” +“ಈಗೆಲ್ಲಿದ್ದಾನವ್ವ, ಅಣ್ಣ…? +ಏನೆಂದು ತಾನೆ ಉತ್ತರ ಹೇಳಿಯಾಳು ಅಬ್ಬಕ್ಕ? ಯೋಚಿಸಿದಂತೆಲ್ಲಾ ‘ಅಮಾಸೆ’ಯ ಕತ್ತಲೇ ಅವಳ ಎದೆ ತುಂಬಿ ಕಪ್ಪು ಹೊಯ್ಯುತ್ತದೆ. +ಅಣ್ಣ ಎಲ್ಲಿ ಹೋದನೆಂದು ಹೇಳಿಯಾಳು? ದಂಡು ಸೇರಿದನೆ? ಎಲ್ಲೋ ದೂರದಲ್ಲಿ ಹೋಟೆಲು ಸೇರಿದನೆ? ಗಿರಿಣಿ ಸೇರಿದನೆ? ಪೇಟೆಯಲ್ಲಿ ಕಂಡಕಂಡವರ ಸಾಮಾನು ಹೊತ್ತು ಕೂಲಿ ಮಾಡುವನೆ? ದಿಕ್ಕಿರದ ಪರದೇಶಿಯಂತೆ ಪ್ರಾಣಬಿಟ್ಟನೆ? ತಾಯಿಯನ್ನು ತೊರೆದ ಆ ಮಗುವಿಗೆ ಸುಖವೆ, ದುಃಖವೆ? ಏನು? ಏನುತಾನೆ ಹೇಳಿಯಾಳು? +ಅವನನ್ನು ನೋಡದೆ ಎಂಟು ಹತ್ತು ವರ್ಷವಾದರೂ ಈಗಲೂ ತಾಯಿ ಮಗನನ್ನು ಗುರುತಿಸಬಲ್ಲಳು. +ಹೆಸರು ಚೆಲುವನೆಂದು, ಹೆಸರಿನಂತೆಯೇ ನೋಡುವರ ದೃಷ್ಟಿ ತಗಲುವಂತಹ ಚೆಲುವನವನು! +ನಸುಗಪ್ಪಿನ ಎತ್ತರದ ಆಳು. ಕೋಲುಮುಖ, ಬೇವಿನೆಸಳಂತಹ ಕುಡಿ ಹುಬ್ಬು, ಹಚ್ಚೆ ಹೊಯ್ದ ಎತ್ತರದ ಹಣೆ, ತುದುಯಲ್ಲಿ ಬಾಗಿದ ಮೂಗು,. ಶಿವನ ಕೈಯಲಗು ಹೊಳೆದಂತಹ ನೋಟದ ಆ ಚಿಕ್ಕ ದುಂಡು ಕಣ್ಣುಗಳು. ಸ್ವಲ್ಪ ಗಾಂಭೀರ್ಯದಿಂದ ತುಸು ಗರ್ವದಿಂದ ಬಿಗಿದ ಮುದ್ರೆಯ ದಪ್ಪ ತುಟಿಗಳು. ಒರಟು ಗುಂಗುರು ಕೂದಲಿನ ಆ ದೊಡ್ಡ ತಲೆ, ನಿದ್ದೆಯಿಂದ ಈಗತಾನೇ ಎದ್ದು ಬಂದಂತೆ ಆ ನಿಧಾನವಾದ ನಡಿಗೆ… +ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ ಅಬ್ಬಕ್ಕನಿಗೆ. ಹತ್ತು ಹನ್ನೆರಡು ವರ್ಷ ಕಣ್ಣು ಗೊಂಬೆಯಂತೆ ಸಾಕಿದ ಚೆಲುವನ ರೂಪವನ್ನು ಹೇಗೆ ತಾನೆ ಮರೆತಾಳು ಅವಳು? +“ಅಣ್ಣ ಎಲ್ಲಿದ್ದಾನೆ ಹೇಳವ್ವ?” +“ನಿನ್ನ ಅವ್ವನ ಮ್ಯಾಲೆ ಸಿಟ್ಟು ಮಾಡಿ ದೂರ ಹೊಂಟ್ಹೋದ” +ಇದಕ್ಕಿಂತ ಹೆಚ್ಹು ಅಬ್ಬಕ್ಕ ಹೇಳಲಾರಳು. ಹೇಳಿದರೂ ಹೇಗೆ ತಿಳಿದೀತು ಈ ಮಗುವಿಗೆ? +“ಹೋಗೋದು ಬ್ಯಾಡ ಅಂತ ನೀಯಾಕೆ ಹೇಳಿಲ್ಲವ್ವ?” +ಚೂರಿಯಂತೆ ನೆಡುತ್ತಾದೆ ಈ ಮಾತು ಅಬ್ಬಕ್ಕನ ಎದೆಯಲ್ಲಿ. ಅವನು ಹಾಗೆ ಅಟ ತೊಟ್ಟು ಹೊರಟೇಬಿಡುತ್ತಾನೆ ಎಂದು ತೋರಿದ್ದರೆ ಅವಳು ಸೆರಗೊಡ್ಡಿ ಬೇಡಿಕೊಳ್ಳುತ್ತಿರಲಿಲ್ಲವೆ? ಏನೋ ಹಾಳು ಸಿಟ್ಟಿನ ಭರದಲ್ಲಿ ಅವಳು ನಾಲ್ಕು ಬಿರುನುಡಿಯಾಡಿದ್ದು ನಿಜ. ಅಷ್ಟಕ್ಕೇನೇ ಅವ… +“ಅಪ್ಪಯ್ಯ ಯಾಕೆ ಬ್ಯಾಡ ಅನ್ಲಿಲ್ಲವ್ವ?” +ಶೀನು ಈ ಮಾತು ಆಡಿದ ಬಳಿಕ ಇನ್ನು ಹೇಳದೆ ವಿಧಿಯಿಲ್ಲ… ಎಷ್ಟು ದಿನವೆಂತ ಈ ಮಗುವಿನಿಂದ ಬಚ್ಚಿಡುವುದು ಸಾಧ್ಯ? +“ನಿನ್ನಪ್ಪಯ್ಯ ಬೇರೆ, ಅವ್ನಪ್ಪಯ್ಯ ಬೇರೆ ಮಗ, ಅವ್ನಪ್ಪಯ್ಯ ಸತ್ತೋದಮೇಲೆ…” +ಬೇರೆ ಕೂಡಿಕೆ ಮಾಡಿಕೊಂಡಳು ಅಬ್ಬಕ್ಕ.ಅವನ ಅಪ್ಪಯ್ಯ ಅವನು ಹುಟ್ಟುವಾಗಲೇ ತೀರಿಕೊಂಡರು. ಆಮೇಲೆ ಹದಿಮೂರು ವರ್ಷವೂ ಎಂತೆಂತಲೋ ಕೂಲಿ ನಾಲಿ ಮಾಡಿ ಒಬ್ಬಂಟಿಯಾಗಿ ಚೆಲುವನನ್ನು ಸಾಕಿದ ಮೇಲೆ ಈ ಕೂಡಿಕೆಯಾದದ್ದು… ಆ ವಿಷಯದಲ್ಲೇ ಅವಳಿಗೂ ಮಗನಿಗೂ ವೈಮನಸ್ಯ ತಲೆದೋರಿ… +ಇವೆಲ್ಲವನ್ನೂ ಹೇಳಿದರೆ ಆ ಮಗು ಶೀನುವಿಗೆ ಹೇಗೆ ತಿಳಿದೀತು? … ಎಂತಲೇ ಏನೂ ಅರ್ಥವಾಗದೆ ಮಗು ಮಾತನಾಡದೆ ಕಣ್ಣನ್ನು ಪಿಳಿಪಿಳಿ ಬಿಡುತ್ತ ಸುಮ್ಮನಾಗಿದೆ. +ಆಮೇಲೆ…ಒಂಟಿಯಾಗಿ ಬಾಳಲಾರದೆ ಆ ಹೊಸ ಮೋಹಕ್ಕೆ ಸಿಲುಕಿ… +ಹಾಗೆ ತಾನು ಮಾಡಬಾರದಿತ್ತೋ ಏನೋ? +ಆದರೆ ಅವಳ ಜಾತಿಯಲ್ಲದು ಆಗುವುದಿಲ್ಲವೆ? ಐದು ಮಕ್ಕಳ ತಾಯಿ ಮೀಟಿ ಮೊನ್ನೆ ತಾನೆ ಆಗಲಿಲ್ಲವೆ? ಹೀಗಿದ್ದಾಗ ತನ್ನದು ತಪ್ಪೆ? +ಆದರೆ ಹದಿಮೂರು ವರ್ಷ ಪ್ರಾಯಕ್ಕೆ ಬಂದ ಪ್ರೀತಿಯ ಮಗ ಹೇಳಿದರೂ ಕೇಳದೆ ಆದದ್ದು? +ಹಾಗಾದರೆ ಚೆಲುವ ಕಂಡ ಕಂಡವರ ಚಾಡಿಗೆ ಒಲಿದು ತನ್ನೆದುರು ನಿಲ್ಲುವುದೆ? ಅದು ಸರಿಯೆ? ಕೈಯಾರೆ ಸಾಕಿದ ತಾಯಿಯ ಎದುರು ಕೈಯೆತ್ತಿ ನಿಲ್ಲುವುದೆ? ತಾಯಿ ಏನೋ ಕೋಪದ ಭರದಲ್ಲಿ ಏನಾದರೂ ಅಂದರೆ ಮನೆ ಬಿಟ್ಟು ಹೊರಟು ಹೋಗುವುದೆ? ಮಗನಾದವನಿಗೆ ಹೇಳಿಸಿದ ವರ್ತನೆಯೆ ಅದು? +ಅಯ್ಯೋ ತಾಯಿಯನ್ನರಿಯದ ಚೆಲುವ! ಅವ್ವನ ಆಳವನ್ನರಿಯದ ಹಸುಳೆ! ಪ್ರಾಯ ಬಂತೆಂದು ಹೊತ್ತು ಹೆತ್ತವಳನ್ನೂ ತೊರೆದು… +…ಎಂಟೊಂಬತ್ತು ವರ್ಷವಾಯಿತು. ಒಮ್ಮೆಯಾದರೂ ನೋಡುವ ಆಸೆ ಇಲ್ಲದೆ ಹೋಯಿತೆ ಮಗುವಿಗೆ? +“ಅವ್ವ…ಘಟ್ಟದ ಕೆಳಗಿಂದ ಅಪ್ಪಯ್ಯ ಎಂದು ಬರ್ತಾರವ್ವ?…ಅವ್ರು ಬಂದ್ರೆ ನಿಂಗೆ ಅಳೋಕೆ ಬಿಡಲ್ಲ” +-ಎಷ್ಟು ಮುದ್ದಾಗಿ ಮಾತಾಡುತ್ತೆ ಈ ಹಸುಳೆ ಶೀನು! ಅದು ಹೇಳುವುದೂ ಸುಳ್ಳಲ್ಲ…ತನ್ನನೊಲಿದು ಕೈ ಹಿಡಿದವನು ಅಂಥವನೆ. ಎಂದೂ ಕಂಬನಿ ಕರೆಯಲು ಬಿಡುವವನಲ್ಲ, ಇಲ್ಲದಿದ್ದರೆ ತಾನು ಅವನ ಕೈಹಿಡಿಯುತ್ತಿದ್ದಳೆ? +ಅವನ ಆ ತೀಡಿದ ಮೀಸೆ. ಕವಳ ಜಗಿದು ಕೆಂಪಾದ ಸದಾ ಮುಗುಳು ನಗುವ ಆ ತುಟಿಗಳು. ಎಲೆವಸ್ತ್ರದ ಮುಂಡಾಸಿನಿಂದ ಇಣುಕಿ ನೋಡುವ ಆ ನೀಳವಾದ ಕೂದಲು. ಆ ಹೊಳೆಯುವ ದೊಡ್ಡ ದೊಡ್ಡ ಒಂಟಿಗಳು. ಕೂಲಿ ಆಳುಗಳ ಜೊತೆ ಅವನು ಸೇರೆಗಾರಿಕೆ ನಡೆಸುವ ಆ ಠೀವಿ. +ದೇವರಂತಹ ಮನುಷ್ಯ… +ಅವಳ ಅವ್ವ ಬತ್ತ ಕುಟ್ಟುವಾಗ ಹಾಡುತ್ತಿದ್ದ ಆ ಪದದಲ್ಲಿ ವರ್ಣಿಸಿದಂತೆಯೇ +ಹಾಸಿಗೆಯ ಹಾಸೆಂದ +ಮಲ್ಲಿಗೆಯ ಮುಡಿಯೆಂದ +ಬ್ಯಾಸೆತ್ತರ ಮಡದಿ ಮಲಗೆಂದ +ಬ್ಯಾಸೆತ್ತರ ಮಡದಿ ಮಲಗೆಂದ ನನ ನೋಡಿ…” +ತೌರೂರನ್ನೇ ಏಕೆ? ಪ್ರಪಂಚವನ್ನೇ ಮರೆ ಎಂದ ರಸಿಕ ಅವನು… ಹೌದು! ತುಂಬು ಜವ್ವನದ ತನಗೆ ಆಗ ಎಲ್ಲವೂ ಮರೆತದ್ದು ಆಶ್ಚರ್ಯವಲ್ಲ. ಆ ಮೋಹದಲ್ಲಿ ಮಗನ ಮೇಲಿನ ವಾತ್ಸಲ್ಯವೂ ಕ್ಷಣಕಾಲ ಮರೆಯಿತೋ ಏನೋ? ಅದಕ್ಕೇ ಅಲ್ಲವೇ ಎಂದೂ ದುಡುಕದವಳು ಅಂದು ದುಡುಕಿದ್ದು. ಪ್ರೀತಿಯ ಮಗನನ್ನೂ ಜರಿದು ದೂರಿದ್ದು. ತನ್ನ ಸುಖಕ್ಕೆ ಅಡ್ಡಿಯಾದ ಚೆಲುವನನ್ನು ಧಿಕ್ಕರಿಸಿ ನಡೆದದ್ದು… +ಅಯ್ಯೋ! ತಾನು ಪಾಪಿಯಲ್ಲವೆ? ಅದು ಎಂತಹ ಮೋಹ? ಯಾವ ತಾಯಿಯ ಕರುಳೂ ಹಾಗೆ ಮಾಡಿರಲಿಕ್ಕಿಲ್ಲ. ಆಗ ನಾಲ್ಕು ಜನ ಆಡಿಕೊಂಡಂತೆ ತಾನು ಸೂಳೆಗಿಂತಲೂ ಅತ್ತತ್ತವಾಗಿ ನಡೆಯಲಿಲ್ಲವೆ? +ತನ್ನನ್ನೊಲಿದವನು ಸಾಭ್ಯಸ್ಥ. ಆದರೆ ಆ ಹಾಳು ಮೋಹದ ದೆಸೆಯಿಂದಲೇ ಈಗ ಕೈತಪ್ಪಿ ಹೋದನಲ್ಲವೇ ಮಗ? +ಎಲ್ಲಿ ಹೋಗುತ್ತ ಯಾವ ಹುಲಿಯ ಬಾಯಿಗೆ ತುತ್ತಾದನೋ? ಯಾವ ಕಳ್ಳಕಾಕರ ಕೈಗೆ ಸಿಕ್ಕನೊ, ಯಾವ ನದಿಗೆ ದುಃಖ ತಡೆಯಲಾರದೆ ಹಾರಿಕೊಂಡನೊ, ಎಲ್ಲಿ ಒಬ್ಬಂಟಿಗನಾಗಿ ಹಸಿದು ಒದ್ದಾಡಿದನೊ? ತಾಯಿ ಇದ್ದೂ ಇಲ್ಲದ ಪರದೇಶಿಗೆ ಏನಾಯಿತೊ? +ಇವತ್ತು ಅವನ ಹುಟ್ಟಿದ ಹಬ್ಬ. ಈಗ ಒಡನೆ ಇದ್ದಿದ್ದರೆ ಅವನಿಗೆ ವರ್ಷ ಇಪ್ಪತ್ತೆರಡು. ಸೊಸೆಯನ್ನು ಮನೆಗೆ ತಂದು ಮೊಮ್ಮಗನನ್ನು ಆಡಿಸುವ ಪುಣ್ಯ ನನಗೆಲ್ಲಿ? ತಾನು ತಾಯಿಯೇ?… ಅಲ್ಲ ರಾಕ್ಷಸಿ! ಪಿಶಾಚಿ! ಕಡುಪಾಪಿ!… +“ಅವ್ವ ಅಳಬೇಡಾಂದ್ರೆ ಕೇಳಲ್ವೇನವ್ವ?…” +“ನಿಂಗೆ ಇನ್ನೂ ನಿದ್ದೇನೇ ಹತ್ತಿಲ್ವಾ ಮಗಾ?” +“ನೀನಳ್ತಾ ಇದ್ರೆ ನಾನು ನಿದ್ದೇನೇ ಮಾಡಲ್ಲ” +“ಅಳ್ತಾ ಇಲ್ಲ ಶೀನು… ನಿದ್ದೆ ಮಾಡು…” +“ನಿನ್ನ ಬಿಟ್ಟು ಹೋಗಿದ್ದು ಅಣ್ಣಂದೇ ತಪ್ಪು… ನೀನ್ಯಾಕೆ ಅಳಬೇಕವ್ವ?… ಹೋಗ್ಲಿ ಬಿಡು ಆ ಕಥೆ ಮುಂದೇನಾಯ್ತು ಹೇಳು… ಆ ಮಗು ಅಳ್ತಾ ಇದ್ದಾಗ… +“… ಅಳ್ತಾ ಇದ್ರೂನೂ ನಂನ್ನಂಥಾ ಕ್ರೂರಿ ತಾಯಿಗೆ ಕರುಣೆನೇ ಬರ್ಲಿಲ್ಲ… ಆಗ ಬಿದ್ರು ಹಿಂಡ್ಲ ಬುಡ್ದಲ್ಲಿ ಸಟ ಸಟಾಂತ ಶಬ್ದ ಅಂದ್ಹಗೆ ಕೇಳಿಸ್ತು. ಏನೂಂತ ಹೆದ್ರಿಕೇಂದ ಮಗು ಪುಟ್ಟ ಕಣ್ಣನ್ನು ದೊಡ್ಡಕ್ಕೆ ಅರಳಿಸಿ ನೋಡ್ದಾಗ ಒಂದು ಹೆಬ್ಬುಲಿ! +ಕೂಸು ಗಡಗಡ ನಡಗ್ತಾ ಅದರ ಪುಟ್ಟ ಕೈಯಿಂದ ಬಾಗ್ಲನ್ನ ದಡದಡ ಬಡೀತ ಅದ್ರ ಪೊಟ್ಟು ಪೊಟ್ಟು ಮಾತ್ನಲ್ಲೇ… ಅರ್ಧ ರೊಟ್ಟಿ ಸಾಕವ್ವ- ಬಾಗ್ಲು ತೆಗ್ಯೆವ್ವ, ಕಣ್ಣು ಪಿಳಿಪಿಳೀ- ಬಾಲ ಪಟಪಟಾ…’ ಅಂತ ಬೇಡಿಕೊಳ್ಳಕ್ಕೆ ಶುರು ಮಾಡ್ತು. +ಹುಲೀಂತ ಹೇಳಕ್ಕೆ ಪಾಪದ್ದಕ್ಕೆ ಬಾಯಿ ಬರಲ್ಲ. ಆ ನಂನಥ ಕ್ರೂರಿ ತಾಯಿಗೆ ಕೂಸು ಕಿರುಚಿಕೋತಿದೇಂತ ಎಗ್ಗೂ ಇಲ್ಲ- +‘ಅರ್ಧ ರೊಟ್ಟಿ ಸಾಕವ್ವ – ಬಾಗ್ಲು ತೆಗ್ಯವ್ವ- ಕಣ್ಣು ಪಿಳಿಪಿಳೀ- ಬಾಲ ಪಟಪಟಾ’…ಕೂತಿದ್ದ ತಾಯಿ ಹೊರ್ಗೆ ಬಂದು ಬಾಗ್ಲು ತೆಗ್ದು ನೋಡಿದ್ಲು… +ಎಲ್ಲಿದೆ ಹಸುಗೂಸು?… ಹುಲಿಯ ಬಾಯಿಯ ಪಾಲು!” +…ನೀಚೆ ತಾಯಿಯ ದೆಸೆಯಿಂದ, ಪಾಪಿ ತಾಯಿಯ ದೆಸೆಯಿಂದ, ಮಗ- ಕೈಗೆ ಬಂದ ಮಗ- ಹುಲಿಯ ಬಾಯಿಗೆ ತುತ್ತು. +ಹುಲಿಯ ಬಾಯಿಗೋ? +ಯಾವ ಅಡವಿಯ ಪಾಲಿಗೋ? +ಯಾವ ನದಿಯ ಮಡಿಲಿಗೋ? +ಎಲ್ಲೋ! ಏನೋ!! ಎಂತೋ!!! +ಅಯ್ಯೋ…ಅಮ್ಮ…ನನ್ನಮ್ಮ… +ಬಂದಾನೋ?… +ಬಾರಾನೋ??… +ಆ ನನ್ನ ಹಿರಿಯ ಮಗ, ನನ್ನ ಕನ್ಣೀನ ಗೊಂಬೆಯಾಗಿದ್ದ ಆ ಚೆಲುವ, ತಾನೇ ಕೈಯಾರ ಮನೆ ಬಿಟ್ಟು ಓಡಿಸಿದ ಆ ಹಸುಳೆ. ಆ ಮುದ್ದು ಮಗ- +ಬಂದಾನೋ?… +ಬಾರಾನೋ??… +ದಾರಿ ಕಾದು ಕಾದು ಬೇಸತ್ತಿದ್ದಾಳೆ ಅಬ್ಬಕ್ಕ… ತನ್ನ ಹಟ್ಟಿಯ ಹೊರಗೆ, ಹಾವಿನಂತೆ ಸುರುಳಿ ಸುರುಳಿಯಾಗಿ ಸುತ್ತಿ ಬೆಟ್ಟಗುಡ್ಡಗಳ ಕಾಡುಮೇಡುಗಳ ನಡುವೆ ಬಳಸಿ ಎಲ್ಲಿಗೋ, ದೂರ, ದೂ…ರ.. ತನ್ನ ಮಗನನ್ನು ಒಯ್ದು ದಾರಿಯನ್ನು ಕಾಯ್ದು ಕಾಯ್ದು ಕಣ್ಣಿರೆರೆದು ಹಂಬಲಿಸಿದ್ದಾಳೆ… +ಬಂದಾನೋ? +ಬಾರಾನೋ??… +ಬಂದರೆ ತಿನ್ನಲು ಮಾಡಿಟ್ಟ ಹಲಸಿನಹಣ್ಣಿನ ಚೆಟ್ಟು ಕೊಡುತ್ತಾಳೆ. ಉಡಲು ಒಳ್ಳೆಯ ವಸ್ತ್ರ ತಂದು ಕೊಡುತ್ತಾಳೆ… ತನ್ನದೆಂದು ಕೂಡಿಟ್ಟ ಆ ಬೆಳ್ಳಿಯ ಮುನ್ನೂರು ರೂಪಾಯಿಗಳನ್ನು ಖರ್ಚುಮಾಡಿ ಮದುವೆ ಮಾಡಿಸುತ್ತಾಳೆ… ಅವನು ಮನೆಯಲ್ಲೇ ಕೂತು ತಿಂದರೂ ಸರಿಯೆ ತನ್ನ ಗಂಡನಿಂದ ಒಂದು ಬಿರುನುಡಿಯೂ ಬರದಂತೆ ನೋಡಿಕೊಳ್ಳುತಾಳೆ… ಆದರೆ ಚೆಲುವ… +ಬಂದಾನೋ?… +ಬಾರಾನೋ?… +ಆ ತನ್ನ ಮುದ್ದು ಹಸುಳೆ… +ಬಂದಾನೋ?…..ಬಾರಾನೋ??… ಬಂ… ದಾ… ನೋ… ಬಾ… ರಾ… ನೋ??… ಬಂದಾ…??? +…ಏನಿದು ಹೊರಗೆ ಶಬ್ದ?? +“ಅವ್ವ… ಅವ್ವಾ… ಅವ್ವಾ…” +…ಯಾರ ಧ್ವನಿ?… +ಮಧ್ಯಾಹ್ನದ ರಣರಣ ಬಿಸಿಲಿಗೆ ದಣಿದ ಧ್ವನಿ!… ಮೃದುವಾದ ಪ್ರೇಮಮಯವಾದ ಬಳಲಿದ ‘ಅವ್ವಾ’ ಎನ್ನುವ ಧ್ವನಿ! +ಅಯ್ಯೋ ಬಾಗಿಲು ತೆರೆಯುವುದರೊಳಗೆ ಏಕೆ ಹೀಗೆ ಎದೆ… +…ಆಹ್! ನೀ ಬಂದೆಯಾ ಕಂದಾ… ಈಸು ದಿನದ ಮೇಲಾದರೂ ಬಂದೆಯಾ ಮಗನೆ… ನಿನ್ನ ಅವ್ವನ ತಪ್ಪನ್ನು ಕ್ಷಮಿಸಿದೆಯಾ ಚೆಲುವ… +ಕೂತುಕೋ ಮಗನೆ… ಎಷ್ಟು ಬಡವಾಗಿದೆ ನಿನ್ನ ದೇಹ!. +ನೀರಡಿಸಿ ಬಂದೆಯಾ?… ಹಸಿದು ಬಂದೆಯಾ?… ಎಲ್ಲಿ ಎಲ್ಲಿ ಪರದೇಶಿಯಂತೆ ಅಲೆಯಿತು ನನ್ನ ಕಂದ?… ನನ್ನ ಮುದ್ದು ಚೆಲುವ?… +ಎಣ್ಣೆ ಹಚ್ಚಿ ಮೀಯಿಸುವೆ ಮಗನೆ. ನನ್ನ ಬಿಟ್ಟು ಎಲ್ಲಿಗೂ ಹೋಗಬೇಡ… ತಾಯಿಯ ಹೆತ್ತ ಕರುಳಿಗೆ ಬೆಂಕಿಯಿಕ್ಕಬೇಡ, ಕಂಡೆಯಾ?… ನಿನ್ನ ತೊರೆದು ನಾನಿನ್ನು ಈ ಜೀವ ತೇಯಲಾರೆ… +ಅಯ್ಯೋ!… ಅಯ್ಯೋ!… +ಇದೇನು ಕಂದಾ? ಮತ್ತೆಲ್ಲಿಗೆ ಹೊರಟು ನಿಂತಿ?… ಅವ್ವನನ್ನು ಯಾಕಾರೂ ತೊರೆಯುವೆ ಮಗನೆ? ಅದೇಕೆ ಹಾಗೆ ದೂರ ದೂರ ಮಂಜಿನಂತೆ ಕರಗಿ ಕರಗಿ ಮಾಯವಾಗುತ್ತಿದ್ದೀಯಾ ಚೆಲುವಾ? ನಾ ನಿನಗೆ ಬ್ಯಾಡವೆ??… +ಯಾಕೆ ಹಾಗೆ ನಿನ್ನ ಕಣ್ಣಲ್ಲಿ ತಿರಸ್ಕಾರ?… ಬೇಡ… ಹಾಗೆ ದುರುಗುಟ್ಟಿ ನೋಡಬೇಡ ಮಗನೆ… ನಿನಗಾಗಿ ಅವರನ್ನು, ನನ್ನ ಪ್ರಾಣವಾದ ಅವರನ್ನು ಬೇಕಾದರೂ ತೊರೆಯುವೆ ಚೆಲುವ… ಆದರೆ ಇವು ಈ ಎರಡು ಹಸುಳೆಗಳೂ ನನ್ನ ಹೊಟ್ಟೆಯಲ್ಲಿ ಹುಟ್ಟಿದವು. ನಿನ್ನಂತೆಯೇ ನನ್ನ ಮಕ್ಕಳು… ನಿನ್ನ ತಮ್ಮಂದಿರು, ಚೆಲುವಾ… ನಿನ್ನನ್ನು ಅಣ್ಣನೆಂದು ಪ್ರೀತಿಸುತ್ತಾರೆ ಕಂದಾ… ತುಂಬ ತುಂಬ ಪ್ರೀತಿಸುತ್ತಾರೆ ಚೆಲುವಾ… ಇವುಗಳನ್ನು ಖಂಡಿತ ತೊರೆಯಲಾರೆ ಮಗನೇ… ನನಗಾಗಿ ನಿನ್ನ ದಮ್ಮಯ್ಯ!… +ನನಗಾಗಿ ನಿಲ್ಲು… ಕಂದಾ… ನನ್ನಾಣೆ ನಿಲ್ಲು… ಚೆಲುವಾ!… ಚೆ…ಲು… +“ಅವ್ವಾ… ಅವ್ವಾ… ಅವ್ವಾ… ಇದ್ಯಾಕವ್ವ ನಿದ್ದೇಲಿ ಹಿಂಗೆ ಹಂಬಲಿಸ್ತಿ? ನಿನಗೇನಾಯ್ತವ್ವ?” +ಪಕ್ಕದಲ್ಲಿ ಆಗತಾನೆ ಜೊಂಪುಹತ್ತಿ ಮಲಗಿದ್ದ ಎಂಟು ವರ್ಷದ ಹಸುಳೆ ಶೀನು ಧಿಗ್ಗನೆದ್ದು ಅಬ್ಬಕ್ಕನ ಮೈಯಲುಗಿಸಿ ಕರೆಯುತ್ತದೆ… ತೊಟ್ಟಿಲಿನಲ್ಲಿನ ಹಸುಗೂಸು ತಾಯಿಯ ಹಾಲಿಗಾಗಿ ಹಂಬಲಿಸಿ ಅಳುತ್ತದೆ… +ಅಬ್ಬಕ್ಕ ಉಕ್ಕಿಹರಿಯುವ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸಿಕೊಳ್ಳಲು ಯತ್ನಿಸುತ್ತ ಮಗುವಿಗೆ ಮೊಲೆಯುಣಿಸುತ್ತಾಳೆ… +ಆ ನೀರವ, ಗಂಭೀರ ಕತ್ತಲಿನಲ್ಲಿ… ದುಃಖತಪ್ತ ಎದೆಯಿಂದ ಹಾಲು ಹರಿಯುತ್ತದೆ, ಸಿಹಿಯಾದ ಹಾಲು. +ಆದರೆ ತಾಯಿಯ ಕಣ್ಣಿನಿಂದ ನೀರೂ ಸುರಿಯುತ್ತದೆ. ಉಪ್ಪಾದ ನೀರು. +ಅನಂತವಾಗಿ… +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […] +ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_516.txt b/Kannada Sahitya/article_516.txt new file mode 100644 index 0000000000000000000000000000000000000000..c577f407d1a17b1f67762bac056bc6bce94c1c73 --- /dev/null +++ b/Kannada Sahitya/article_516.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಪಂತುವರಾಳಿ ತಾಳ — ಅಟ್ಟ +ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ | +ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| +ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ | +ಅಟ್ಟು ಉಣ್ಣದ ವಸ್ತುಗಳಿಲ್ಲವೊ || +ಗುಟ್ಟು ಕಾಣಿಸಿಬಂತು ಹಿರಿದೇನು ಕಿರಿದೇನು | +ನೆಟ್ಟನೆ ಸರ್ವಜ್ಞನ ನೆನೆಕಾಣೊ ಮನುಜ ||೧|| +ಜಲವೆ ಸಕಲ ಕುಲಕೆ ತಾಯಿಯಲ್ಲವೆ ಆ | +ಜಲದ ಕುಲವನೇನಾದರೂ ಬಲ್ಲಿರಾ? || +ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ | +ನೆಲೆಯನರಿತು ನೀ ಹರಿಯನು ನೆನೆ ಮನುಜ ||೨|| +ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ +ಹರಿಮಯವೆಲ್ಲವೆನುತ ತಿಳಿದು || +ಸಿರಿಕಾಗಿನೆಲೆಯಾದಿಕೇಶವರಾಯನ | +ಚರಣಕಮಲವನು ಕೀರ್ತಿಸುವನೆ ಕುಲಜ ||೩|| +ರಾಗ — ಕಾಂಬೋದಿ ತಾಳ — ಝಂಪೆ ಬಾಯಿ ನಾರಿದ ಮೇಲೆ ಏಕಾಂತವೆ | ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | ಬಣ್ಣಗುಂದಿದ ಮೇಲೆ ಬಹುಮಾನವೆ || […] +ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […] +ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_517.txt b/Kannada Sahitya/article_517.txt new file mode 100644 index 0000000000000000000000000000000000000000..3b962cdc4ffc67b443f1a151558bfc0b2191b651 --- /dev/null +++ b/Kannada Sahitya/article_517.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು ತಟ್ಟಿದರೆಂದರೆ ಹೇಗಾಗಬೇಡ? ಬಾಗಿಲು ತಟ್ಟುತ್ತಿರುವವರು ಅವರಿರಬಹುದೆ! ಇವರಿರಬಹುದೆ ಎಂದು ಯೋಚಿಸುವ ಮೊದಲು ನಾನು ನನ್ನ ಹೆಂಡತಿ ಅನ್ನಪೂರ್ಣಳೊಂದಿಗೆ ವಾದಕ್ಕಿಳಿದಿದ್ದೆ. ವಸಂತರಾವ್ ದೇಶಪಾಂಡೆಯವರ ಬಗ್ಗೆ ನಾನು ವಕಾಲತ್ತು ವಹಿಸಿದ್ದರೆ ಆಕೆ ಮೈಸೂರು ಅನಂತಸ್ವಾಮಿಯವರ ಬಗ್ಗೆ ವಕಾಲತ್ತು ವಹಿಸಿದ್ದಳು. ಏರುತ್ತಿರುವ ಮನೆ ವೆಚ್ಚ, ಬಿಡುವಿಲ್ಲದ ಗೃಹಕೃತ್ಯಗಳ ಬಗ್ಗೆ ಮಾತಾಡುತ್ತ ಮಾತಾಡುತ್ತ ರಾಜಕಾರಣದ ಬಗ್ಗೆ ತಿರುಗಿದ್ದೆವು; ರಾಜಕಾರಣದ ಬಗ್ಗೆ ಮಾತಾಡುತ್ತ ದೇಶದ ಪ್ರಧಾನ ಮಂತ್ರಿಗಳನ್ನೇ ಬಲಿತೆಗೆದುಕೊಂಡ ಉಗ್ರಗಾಮಿ ಕೃತ್ಯಗಳ ಬಗ್ಗೆ ಮಾತಿನ ಹಾದಿ ಬದಲಿಸಿದ್ದೆವು; ಅಲ್ಲಿಂದ ಯುವ ಪ್ರಧಾನಿಯವರ ಸಮಾಧಿ ಬಳಿ ನಡೆದ ಶಾಸ್ತ್ರೀಯ ಸಂಗೀತ ಕಛೇರಿ ಬಗ್ಗೆ ತಾರಕಕ್ಕೇರಿದ್ದೆವು. ಚಲನಚಿತ್ರ ಸಂಗೀತಾಭೀಮಾನಿಗಳೇ ಬಹುಸಂಖ್ಯಾತರಿರುವ ಭಾರತದೇಶದ ಪ್ರಧಾನಿ ಸಮಾಧಿ ಬಳಿ ಚಿತ್ರಸಂಗೀತ ಕಾರ್ಯಕ್ರಮ ಇಡುವುದು ಬಿಟ್ಟು ಅರ್ಥವಾಗದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇಟ್ಟು ತಲೆ ತಿನ್ನುವುದು ಯಾಕೆ ಅಂತ ಅನ್ನಪೂರ್ಣ ತಕರಾತು ಎತ್ತಿದ್ದು ವಿಚಿತ್ರವಾಗಿತ್ತು. ಕ್ರಮೇಣ ಆಕೆ ಲಘು ಸಂಗೀತಕ್ಕೆ ಪಟ್ಟು ಹಿಡಿದಳು. ನಾನು ಸಂಗೀತದ ಮಾತೃಸ್ಥಾನದ ಬಗ್ಗೆ ವಕಾಲತ್ತು ವಹಿಸಿದೆ. ಕನಿಷ್ಠ ಪಕ್ಷ ವಸಂತರಾವ್ ದೇಶಪಾಂಡೆ; ಜಿತೇಂದ್ರ ಅಭಿಷೇಕಿಯವರ ಮರಾಠಿ ನಾಟ್ಯ ಸಂಗೀತವನ್ನಾದರೂ ಆಸ್ವಾದಿಸುವುದು ಅಭ್ಯಾಸ ಮಾಡಿಕೊಳ್ಳಬೇಕೆಂದು ವಾದಿಸತೊಡಗಿದೆ. ನನ್ನ ಧ್ವನಿಯಲ್ಲಿ ಗಂಡಸಿನ ಸರ್ವಾಧಿಕಾರಿತ್ವ ಇರುವುದನ್ನು ಮನಗಂಡು ವಾದವನ್ನು ಮೆದುಗೊಳಿಸಿದೆ. ನನ್ನ ವ್ಯಕ್ತಿತ್ವದಿಂದ ಪ್ರಖರವಾಗಿ ಪ್ರಕಟವಾಗುತ್ತಿದ್ದ ಪೌರುಷವನ್ನು, ಪಾಂಡಿತ್ಯವನ್ನು, ಧಿಮಾಕನ್ನು ತೆಗೆದು ಹಾಕಿದೆ. +ಆಕೆಯ ಅಭಿರುಚಿಯನ್ನು ಇನ್ನೇನು ನಾನು ಗೌರವಿಸಬೇಕೆನ್ನುವಷ್ಟರಲ್ಲಿ ಬಾಗಿಲು ತಟ್ಟುವ ಸದ್ದು ಮತ್ತೆ ಮತ್ತೆ ಕೇಳಿಬಂತು. ಬಾಗಿಲು ತಟ್ಟುತ್ತಿರುವವರು ಅವರಾಗಿರಬಹುದೆ ಅಂತ ನಾನು; ಇವರಾಗಿರಬಹುದೆ ಅಂತ ಆಕೆಯೂ ವಾದಿಸಿದೆವು. ಬಾಗಿಲ ಹೊರಗೆ ನಿಂತಿರುವ ವ್ಯಕ್ತಿಯನ್ನು ಒಳಗೆ ಬರಮಾಡಿಕೊಳ್ಳುವ ಅಳುಕು ಇಬ್ಬರಿಗೂ ಇರಲು, ಗೋಡೆ ಗಡಿಯಾರ ಒಂಬತ್ತು ಬಡಿಯಿತು. ನೆಲದ ಮೇಲೆ ಕರ್ತೃ ಕರ್ಮ ಕ್ರಿಯೆಗಳೇ ವಾಕ್ಯದಿಂದ ಬೇರೆಯಾಗಿ ಚೆಲ್ಲಾಪಿಲ್ಲಿಯಾಗಿರುವಂತೆ ಮೂರು ಮಕ್ಕಳು ಮಲಗಿ ಮಗ್ಗುಲು ಬದಲಾಯಿಸುತ್ತಿದ್ದುವು. ಅವು ನಿದ್ರಾಸ್ಥಿತಿಯಲ್ಲಿಯೇ ವರ್ತಮಾನ, ಭೂತ, ಭವಿಷ್ಯತ್ಗಳೆಂಬ ತ್ರಿಕಾಲಗಳನ್ನು ಪ್ರತಿನಿಧಿಸುತ್ತಿದ್ದುದು ಸೋಜಿಗದ ಸಂಗತಿಯಾಗಿತ್ತು. ಇನ್ನೂ ಹಾಲು ಅನ್ನ ಕಲೆಸಿಡದ ಕಾರಣಕ್ಕೆ ಬೆಕ್ಕು ಗೂಡಿನೊಳಗೆ ಕೂತು ಹಿಡಿ ಹಿಡಿ ಶಾಪ ಹಾಕುತ್ತಿತ್ತು. ಅರ್ಧಕಟ್ಟಿದ್ದ ಸೊಳ್ಳೆಪರದೆಯೊಳಗಡೆ ಬಂಧನಕ್ಕೊಳಗಾಗಿದ್ದ ನೂರಾರು ಸೊಳ್ಳೆಗಳು ನೂರಾರು ನಮೂನೆಯ ತಂತಿವಾದ್ಯಗಳಂತೆ ಬೇಕಾಬಿಟ್ಟಿ ನುಡಿಯತೊಡಗಿದ್ದವು. ಬಾಗಿಲು ತೆರೆದ ಕೂಡಲೆ ದುತ್ತನೆ ಒಳಗೆ ಪ್ರವೇಶಿಸಿ ಬಿಡುವ ಆಗಂತುಕನಿಗೆ ಸದ್ಯದ ವಸ್ತುಸ್ಥಿತಿ ಬೇಸರವನ್ನುಂಟುಮಾಡೀತೆಂದು ಯೋಚಿಸಿದ ಪತ್ನಿ ಮಕ್ಕಳನ್ನು ಒಂದೊಂದಾಗಿ ಒಳಗಡೆ ಹೊತ್ತುಕೊಂಡೊಯ್ದಳು. ಅರೆ! ಮೊದಲು ಈಕೆ ನನ್ನ ಕ್ಷುದ್ಬಾಧೆಯನ್ನು ತಣಿಸುವುದು ಬಿಟ್ಟು ಇದೇನು ಮಾಡುತ್ತಿರುವಳೆಂದು ಬೆಕ್ಕು ಗೂಡಿನಿಂದ ದುತ್ತನೆ ಜಿಗಿದು ಆಕೆಯ ಕಾಲಿನ ನಡುವೆ ನುಸಿಯತೊಡಗಿತು. ಸನ್ನಿವೇಷಕ್ಕೆ ಗೌರವವರ್ಣ ಬಿಳಿ ನಿಶಾನೆ ನೀಡಿದ ಅನಂತರವೇ ಆಕೆ ಬಾಗಿಲು ತೆರೆಯುವಂತೆ ಸೂಚಿಸಲು ನಾನು ಹೋದೆ ಬಾಗಿಲು ತೆರೆಯಲೆಂದು. +ಋತುಕಾಲಕ್ಕೊಂದೊಂದು ಸ್ವರೂಪ ಮುಡಿಯುತ್ತಿದ್ದ ಬಾಗಿಲ ಚಿಲಕ ಸರಿಸುವುದು ಸುಲಭ ಸಾಧ್ಯದ ಕೆಲಸವಾಗಿರಲಿಲ್ಲ. ಅದನ್ನು ಮಾಡುವಾಗ ನಿಂಗಣ್ಣಾಚಾರಿ ಆಕಾಶ ಉದುರುವಂತೆ ಗೊಣಗಾಡುತ್ತಿದ್ದ. ಬೇಕೆಂದೇ ಒಂದೊಂದು ಋತುವಿಗೆ ಒಂದೊಂದು ರೀತಿಯಲ್ಲಿ ಆಕಾರ ಬದಲಿಸುವಂತಹ ಕಟ್ಟಿಗೆ ಕೊಂಡು ಬಾಗಿಲು ಮಾಡಿದ್ದು. ಆತ ಎರಡು ರಂಧ್ರಗಳನ್ನು ಮಾಡಿದ್ದ. ರಂಧ್ರಗಳು ಎಷ್ಟು ಕಿರಿಕಿರಿ ಮಾಡುತ್ತಿದ್ದವೆಂದರೆ ಚಿಲಕವನ್ನು ಹಾಕಿದರೆ ತೆಗೆಯಲಿಕ್ಕೆ ಬರುತ್ತಿರಲಿಲ್ಲ. ತೆಗೆದರೆ ಹಾಕಲಿಕ್ಕೆ ಬರುತ್ತಿರಲಿಲ್ಲ. ಅದನ್ನು ಹಾಕುವವರಿಗೆ; ತೆಗೆವವರಿಗೆ ತಕ್ಕುದಾದ ಇಚ್ಛಾಶಕ್ತಿ ಬೇಕೇ ಬೇಕಿತ್ತು. ಆ ಶಕ್ತಿಯನ್ನು ಸೃಜನಶೀಲ ಕ್ರಿಯೆಗೆ ಧಾರೆ ಎರೆಯುತ್ತಿದ್ದುದರಿಂದ ಬಾಗಿಲು ಆಗುಹೋಗುಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು. ಆಕೆ ಪೂರ್ತಿ ಒಳಗಿದ್ದುದರಿಂದ ನಾನು ಒಂದು ಕಾದಂಬರಿಗೆ ಸಾಕಾಗುವಷ್ಟು ಪ್ರತಿಭೆಯನ್ನು ಉಪಯೋಗಿಸಿ ಬಾಗಿಲು ತೆರೆಯಲು ನಿರ್ಣಯಿಸಿದೆ. ಒಂದು ಕಿರು ಕಥೆ ಬರೆದಷ್ಟೆ ಸಲೀಸಾಗಿ ಬಾಗಿಲು ತೆರೆದೆ. +ಝೀರೋ ಕ್ಯಾಂಡಲಿನಂತೆ ಉರಿಯುತ್ತಿದ್ದ ಅರವತ್ತು ಕ್ಯಾಂಡಲು ಬೆಳಕಿನಲ್ಲಿ ಇಡೀ ಬಾಗಿಲು ತುಂಬಿನಿಂತಿದ್ದ ವ್ಯಕ್ತಿಯ ಮಂದ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿತ್ತಾದರೂ ರುಂಡ ಮಾತ್ರ ಮಸುಕಿನಲ್ಲಿ ಅವಿತುಕೊಂಡಿರುವಂತಿತ್ತು. ಯಾರದು ಅಂದೆ, ಹಗಲ ತುಂಬ ಅಡ್ಡಾಡಿದ್ದ ಕಣ್ಣುಗಳಲ್ಲಿ ಅಳಿದುಳಿದ ಬೆಳಕನ್ನು ಉಪಯೋಗಿಸಿ ಮುಖ ಗುರುತಿಸಲು ಪ್ರಯತ್ನಿಸಿದೆ. ಇಡೀ ದೇಹ ಶುಕ್ಲಪಟಲದ ಮೇಲಿದ್ದ ಬೆಳಕನ್ನು ಮುಕ್ಕಾಲುವಾಸಿ ಉಪಯೋಗಿಸಿಕೊಂಡಿದ್ದರಿಂದ ಈ ಮುಖವನ್ನು ಎಲ್ಲೋ ನೋಡಿದಂತಿದೆಯಲ್ಲಾ! ಈ ನೈಜಾಮಶೈಲಿಯ ಪರಿಮಳವನ್ನು ಎಲ್ಲೋ ಆಸ್ವಾದಿಸಿದಂತಿದೆಯಲ್ಲಾ! ಎಂದು ಯೋಚಿಸುತ್ತಲೇ “ಅರೇ! ನರಸಿಂಹಲು ವಡವಾಟಿ…. ಏನಿದು ಸರ್‍ಪ್ರೈಜ್” ಅಂದೆ. ವಡವಾಟಿ ನೈಜಾಂಶೈಲಿಯಲ್ಲಿ ಆಲಿಂಗಿಸಿಕೊಂಡರು. ಕೃತಿ ಸಹೃದಯವನ್ನು ಸೇರಿದಂತೆ; ಅಂತಃಕರಣ ಸಹಾನುಭೂತಿಯನ್ನು ಅಪೋಶನ ತೆಗೆದುಕೊಂಡಂತೆ; ಹಿಗ್ಗಿದ ರೀತಿಯಲ್ಲಿ ಬಾಗಿಲೇ ಹೊಯ್ದಾಡಿತು. ನನ್ನ ಆತ್ಮೀಯ ವ್ಯಕ್ತಿ; ನಾಡಿನ ಹೆಮ್ಮೆಯ ಕ್ಲಾರಿನೆಟ್ ವಾದಕನನ್ನು ಹೇಗೆ ಸ್ವಾಗತಿಸಿದೆನೋ! ಹೇಗೆ ಕರೆದೊಯ್ದು ಸೋಫಾದ ಮೇಲೆ ಕೂಡ್ರಿಸಿದೆನೋ! ನನಗೇ ತಿಳಿಯದು! ಯಡದೊರೆ ಶೈಲಿಯಲ್ಲಿ ಹುಬ್ಬು ಬಿರಿದು ಮುಳುಗುತ್ತಿದ್ದ ವಡವಾಟಿಯವರು ಯಾಕೆ ನತದೃಷ್ಟ ಭಗ್ನ ಶಿಲ್ಪದಂತಿರುವರೋ ಅರ್ಥವಾಗಲಿಲ್ಲ. +ಅಷ್ಟರಲ್ಲಿ ಅನ್ನಪೂರ್ಣ ಚಹಾ ತಂದಳು. ಪರಿಚಯಿಸಿದೆ. ಏನಾದ್ರು ಅಡುಗೆ ಮಾಡು ಅಂದೆ. ಬಿಸಿಬೇಳೆಭಾತ್ ಮಾಡ್ತಿದೀನಿ ಅಂದಳು. ನನ್ಗೆ ಊಟಮಾಡಾಕ್ಯ ಮನಸ್ಸಿಲ್ಲ ಕುಂವೀ ಅಂದ್ರು ವಡವಾಟಿ. ಯಾಕ್ರಿ ಅಂದೆ-ಆತಂಕದಿಂದ. ದಾರ್ಯಾಗ ನಡೀಬಾರ್‍ದು ನಡೆದೋಯ್ತು ಅಂದರು. ನನಗೆ ಶಾಕ್ ಆಯ್ತು. ಅಂಥಾದ್ದೇನು ನಡೀತು ಹೇಳ್ರಲ್ಲ ಅಂದೆ. ಹ್ಯಾಂಗ್ರಿ ಹೇಳ್ಲಿ ಅಂದರು. ಕುಕ್ಕರು ಹಾಕುತ್ತಿದ್ದ ಶಿಳ್ಳೆಗೆ ಓಗೊಟ್ಟು ಅನ್ನಪೂರ್ಣ ಅಡುಗೆಮೆನೆಗೆ ಹೋಗಿದ್ದಳು. ಪ್ರಯಾಣದ ನಡುವೆ ನಡೆದಿರಬಹುದಾದರೂ ಏನಿರಬಹುದು? ಹಾಗಿರಬಹುದೆ ಹೀಗಿರಬಹುದೆ? ಕಥೆಗಾರತ್ವದ ಸಹಜಲಕ್ಷಣ ಪ್ರಕಟವಾಗುತ್ತಿತ್ತು. ಒಂದೊಂದು ಕಲ್ಪನೆ ನನಗೆ ಅಸಹನೀಯವಾಗುತ್ತಿತ್ತು. +ಇನ್ನೊಬ್ಬರ ದುಃಖದಲ್ಲಿ ಸಂತೋಷದಲ್ಲಿ ಸೃಜನ ಶೀಲತೆಯ ದೃಷ್ಟಿಯಿಂದ ಪಡೆಯಬಹುದಾದ ಲಾಭ ಕುರಿತು ಯೋಚಿಸುವ ಹಡಬೆ ಮನಸ್ಸಿನ ಲೇಖಕ ನಾನು ಮೊದಲೆ. ಒಮ್ಮೊಮ್ಮೆ ಮನುಷ್ಯ ಸಹಜ ಪ್ರವೃತ್ತಿಗಳಿಂದ ದೂರ ನಿಂತು ಬಿಡುಗಣ್ಣಿನಿಂದ ಬೇರೊಂದು ಬದುಕಿನಿಂದ ಲಾಭ ಪಡೆಯುವ ಕೆಟ್ಟ ಚಾಳಿ ನನ್ನಲ್ಲಿಲ್ಲದಿಲ್ಲ. ಒಂದು ರೀತಿ ನೋಡಿದರೆ ನನ್ನಂಥ ಲೇಖಕೀಯ ಮನುಷ್ಯನಿಗೆ ಮನುಷ್ಯ ಸಂಬಂಧಗಳೇ ಇರುವುದಿಲ್ಲವೇನೋ! ಆದ್ದರಿಂದ ವಡವಾಟಿ ಪ್ರಯಾಣಿಸುತ್ತಿರುವಾಗ ನಡೆದಿರಬಹುದಾದ ಘಟನೆ ಕುರಿತು ಆತ ವಿವರಿಸದೆ ಇದ್ದರೆ ಸಾಕೆನಿಸಿತು. ಆ ನಿಗೂಢ ಘಟನೆಗೆ ಮುಖ ಮೂಗು, ರೆಕ್ಕೆ ಪುಕ್ಕ ಮೂಡಿಸಿ ಒಂದು ಕಥೆ ಬರೆದು ಯಾವುದಾದರೂ ಪತ್ರಿಕೆಗೆ ರವಾನಿಸಿ ಒಂದಿಷ್ಟು ಲಾಭ ಪಡೆಯುವ ಹವಣಿಕೆಯಲ್ಲಿ ನಾನಿರುವಾಗ ವಡವಾಟಿ ತಾವು ಕೊಟ್ಟಿರುವ, ಕೊಡಬೇಕೆಂದಿರುವ ಪ್ರೋಗ್ರಾಮುಗಳ ಬಗ್ಗೆ; ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನು ಮತ್ತು ತಮ್ಮ ಕ್ಲಾರಿನೇಟ್ಟಿನ ಅವಿಸ್ಮರಣೀಯ ಜುಗಲಬಂದಿಯ ಬಗ್ಗೆ, ತಲೆ ಅಲ್ಲಾಡಿಸುವ ಜನ ಸಂಭಾವನೆ ಎಣಿಸುವಾಗ ಮಾಡುವ ಮಿಜಿ ಮಿಜಿ ಬಗ್ಗೆ; ಹೀಗೆ ಎಷ್ಟೋ ವಿಷಯಗಳ ಬಗ್ಗೆ ವಿವರಿಸಿದರು. ಅವರ ಧ್ವನಿ ಆರಕ್ಕೇರುತ್ತಿರಲಿಲ್ಲ ಮೂರಕ್ಕಿಳಿಯುತ್ತಿರಲಿಲ್ಲ. ಅವರ ಯಾವ ಮಾತೂ ಆಸಕ್ತಿ ಕುದುರಿಸುವಂತಿರಲಿಲ್ಲ. +ನನ್ನ ಆಸಕ್ತಿ ಇದ್ದದ್ದು ನಡೆದಿರಬಹುದಾದ ಘಟನೆ ಬಗ್ಗೆ ಎಲ್ಲಿವರೆಗೆ ಹೀಗೆ ಸುಲಭವಾಗಿ ಆಲೋಚಿಸುತ್ತ ಹೋಗುವುದು? ಆ ಘಟನೆ ಬಗ್ಗೆ ಆತ ಹೇಳಿದರೆ ಹೇಗೆ? ಹೇಳದಿದ್ದರೆ ಹೇಗೆ? ಎಂದು ಯೋಚಿಸುವ ಹೊತ್ತಿಗೆ ಬಿಸಿಬೇಳೆಭಾತಿನ ಪರಿಮಳ ಇಡೀ ಮುವತ್ತೈದು ಚದರದ ಮನೆತುಂಬ ಹರಡಿತ್ತು. ಆ ಪರಿಮಳದೊಳಗಿಂದ ಮೂಡಿಬಂದವಳಂತೆ ಮೂಡಿಬಂದ ಪತ್ನಿ ಊಟ ರೆಡಿ ಅಂದಳು. ವಡವಾಟಿಗೆ ತುಂಬ ಬಲವಂತ ಮಾಡಬೇಕಾಯಿತು. ಸಂಡಾಸೇ ಮೊದಲಾದ ಕ್ರಿಯೆಗಳನ್ನು ಮುಗಿಸಿದ ಅನಂತರ ಕಣ್ಣು ಒದ್ದೆ ಮಾಡಿಕೊಂಡೇ ತುತ್ತು ಮುಟ್ಟಿದ್ದು, “ನಂದರ್ಧ ಪ್ರಾಣ ಹೋದಂಗಾಗೇತ್ರೀ” ಎಂದು ಬಿಕ್ಕುತ್ತ ನೀರು ಕುಡಿದರು. ಆತನ ಆ ಅವಸ್ಥೆ ನೋಡಿ ನನಗೆ ಒಂಥರಾ ಸಂಕಟವಾಯಿತು. ಇವರ ಸಂಕಟವಾದರೂ ಏನಿರಬಹುದು? ಅದನ್ನು ಬಗೆಹರಿಸುವುದು ಹುಲುನರನಾದ ನನ್ನಿಂದ ಸಾಧ್ಯವಾದೀತೆ? ಅವರು ಹೇಳಿದರೆ ತಾನೆ ತಿಳಿಯುವುದು! ಹೇಳಲೆಂದು ಕಂಠದವರೆಗೆ ತಂದುಕೊಳ್ಳುತ್ತಿದ್ದರು. ಹೇಳಲಾರದೆ ಬಿಕ್ಕಿ ನೀರು ಕುಡಿಯುತ್ತಿದ್ದರು. ಆ ಮಹಾನ್ ಕ್ಲಾರಿನೆಟ್ ವಾದಕ ಸಂತೃಪ್ತಿಯಾಗಿ ಊಟ ಮಾಡದೆ ಕೈತೊಳೆದುಕೊಂಡೆದ್ದರು. ನಾನೂ ಹಾಗೆ ಮಾಡಿದೆನು. +ಕೋಣೆಯಲ್ಲಿ ತಾಂಬೂಲ ಸವಿಯುವಾಗಲೂ ಹಾಗೇ ಆಯಿತು. ಗಟ್ಟಿಯಾಗಿ ಕೇಳಿ ಬಿಡುವುದೆಂದು ನಿರ್ಧರಿಸಿದೆ. ಅಲ್ಲದೆ ಕೇಳಿಯೇ ಬಿಟ್ಟೆ, “ಹ್ಯಾಂಗ ಹೇಳ್ಲಿ ಕುಂವೀ…. ನನ್ ಪ್ರಾಣನೇ ಕಳ್ಕೊಂಡಾಗೈತಿ…..” ದುಃಖ ಒತ್ತರಿಸಿ ಬಂತು. ತಡೆದುಕೊಂಡು “ನನ್ ವಾದ್ಯ ಕಳವಾಯಿತ್ರಿ” ಮಗುವಿನಂತೆ ಗೋಳೋ ಅಂತ ದುಃಖಿಸಿ ದುಃಖಿಸಿ ಅಳತೊಡಗಿದರು. ಮಾಡಿಕೊಂಡ ಹೆಂಡತಿ ಕಳಕೊಂಡವರೂ ಇಷ್ಟು ಅತ್ತಿರಲಿಕ್ಕಿಲ್ಲ. ಆಫ್ಟರಾಲ್ ಒಂದು ವಾದ್ಯ ಕಳೆದುಹೋದರೆ ಇಷ್ಟು ದುಃಖಿಸುವುದೇನು? ನನಗೆ ಏನು ಹೇಳುವುದೂ ತೋಚಲಿಲ್ಲ. ನಾನು ಅದನ್ನು ಹತ್ತಾರು ಕಡೆ ನೋಡಿದ್ದೆ. ಅದೇನು ಅಷ್ಟು ಆಕರ್ಷಕವಾಗಿರಲಿಲ್ಲ. ಮೂಲಬಣ್ಣ ಹೋಗಿ ಹಳತಾಗಿತ್ತು. ಅದರ ಕೆಲವು ಲೋಹದ ಭಾಗಗಳು ಬೆರಳಾಡಿಸಿ ಬೆರಳಾಡಿಸಿ ಸವೆದು ವಿಕಾರವಾಗಿ ಕಾಣಿಸುತ್ತಿದ್ದವು. ವಾದಕನ ಜೀವನ ಶೈಲಿ ಬದಲಾಗಿತ್ತು. ಆದರೆ ವಾದ್ಯ ಬದಲಾಗಿರಲಿಲ್ಲ. ಅವರ ಕೈಯಲ್ಲಿ ಅದು ಕೋರೈಸುವಂತೆ ಕಾಣಿಸುತ್ತಿರಲಿಲ್ಲ. ಮ್ಯಾಂಚೆಸ್ಟರ್‍ಗೆ ಹೋದಾಗಲಾದರೂ ವಡವಾಟಿ ಹೊಸದೊಂದು ವಾದ್ಯ ಖರೀದಿಸಿರಬಹುದೆಂದುಕೊಂಡಿದ್ದೆ. ಆದರೆ ಆತ ತನ್ನ ತುಟಿ ನಡುವಿನ ನಗೆಯನ್ನು, ವಾದ್ಯವನ್ನು ಬದಲಾಯಿಸುವುದು ಸಾಧ್ಯವಿರಲಿಲ್ಲ. +ಆತ ಆಡುತ್ತಿದ್ದ ಮಾತುಗಳು ಕರುಳಿನಿಂದ ಹೊರಡುತ್ತಿದ್ದವು. ಅದರ ಪ್ರಾಮುಖ್ಯದ ಅರಿವಿದ್ದೂ ನಾನು “ಇನ್ನೊಂದು ಕೊಂಡರಾಯ್ತು ಬಿಡಿ” ಅಂದೆ. “ಏನ್ರೀ ಕುಂವೀ ನೀವು ಲೇಖಕರಾಗಿ ಭಾವನಾತ್ಮಕ ಸಂಬಂಧವನ್ನು ಅರ್ಥಮಾಡಿಕೊಳ್ತಿಲ್ಲವಲ್ಲ” ಅಂದರು. ಅದರಿಂದ ನನಗೆ ತುಂಬ ನಾಚಿಕೆಯಾಯಿತು. ನಾನ್ಯಾಕೆ ಒಳ್ಳೆಯ ಲೇಖಕನಾಗಿಲ್ಲವೆಂದು ಆಗ ಯೋಚಿಸಿದೆ. ಮಹಾದೇವ, ತೇಜಸ್ವಿಯಂಥವರಂತೆ ಒಳ್ಳೆಯ ಕಥೆ ಬರೆಯಲಾಗದಿರುವುದರ ಸೂಚನೆಯನ್ನು ವಡವಾಟಿ ಸೂಚ್ಯವಾಗಿ ನೀಡಿದರು. ಯಾಕೆ ಬೇಕೂಂತ ಧಿಮಾಕು ದೂರ ಇಟ್ಟು ಮೌನಿಯಾಗಿ ಬಿಟ್ಟೆ. ಔಪಚಾರಿಕವಾಗಿ ಅದು ಹ್ಯಂಗೆ ಹೋಯ್ತು; ಎಲ್ಲಿಗೆ ಹೊಂಟಿದ್ರಿ; ಬಸ್ಸಿನ್ಯಾಗ ಹೋಯ್ತೋ ರೈಲಿನಾಗೆ ಹೋಯ್ತೋ ಅಂತ ಹಿತೈಷಿಯಂತೆ, ಅಭಿಮಾನಿಯಂತೆ ಕೇಳಿದೆ. ಕ್ಲಾರಿನೆಟ್ಟಿನಂಥ ವಾದ್ಯ ಕಳೆದಿದ್ದರಿಂದಲೇನೋ ಹೊರಗಡೆ ಗಾಳಿ ಹುಚ್ಚು ಹಿಡಿದು ಬೀಸತೊಡಗಿತ್ತು. ತೆಂಗಿನ ಗರಿಗಳು ತಾವೂ ಒಂದೊಂದು ವಾದ್ಯಗಳೆಂಬಂತೆ ವಿಚಿತ್ರ ಸದ್ದು ಮಾಡುತ್ತಿದ್ದವು. ನಮ್ಮ ಓಣಿಯಲ್ಲಿಯೇ ಆರಕ್ಷಕ ಠಾಣೆ ಇದ್ದುದರಿಂದಲೇನೋ ಹೊರಗೆ ಒಳಗೆ ಮಲಗಿದ್ದ ಜನ ಬೆಚ್ಚಿಬೀಳುತ್ತಿದ್ದರು. ಕೆಟ್ಟದಾಗಿ ಕನವರಿಸುತ್ತಿದ್ದರು. ಕಬ್ಬಿಣದ ಕಿಂಡಿಗಳಿಂದ ಹೊರಗೆ ನೋಡಿದ ನನಗೆ ಇಡೀ ಓಣಿಗೆ ಲಕ್ವ ಬಡಿದಿರಬಹುದೇನೋ ಎಂಬಂತೆ ಕಂಡುಬಂದಿತು. ವಡವಾಟಿ ಅಪರೂಪದ ಏರಿಳಿತಗಳಿದ್ದ ಧ್ವನಿ ಸಾಧಿಸಿ ಕಳೆದ ವಾದ್ಯದೊಂದಿಗಿನ ತಮ್ಮ ಮೂರು ದಶಕದ ಸಂಬಂಧ ಕುರಿತು ಹೇಳುತ್ತಿದ್ದರು. ತಮ್ಮ ಗುರು ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರ ಬಗ್ಗೆ; ಅದಕ್ಕೂ ಪೂರ್ವದಲ್ಲಿ ತಾವು ಮದುವೆ ಮುಂಜಿ ಬ್ಯಾಂಡ್ ಪಾರ್ಟಿಗಳಲ್ಲಿ ಹತ್ತು ಐದಕ್ಕೆ ಕ್ಲಾರಿನೆಟ್ ಬಾರಿಸುತ್ತಿದ್ದುದರ ಬಗ್ಗೆ; ದಾರಿದ್ರ್‍ಯದ ನಡುವೆಯೂ ಅಹರ್ನಿಶಿ ಸಂಗೀತಾಭ್ಯಾಸ ಮಾಡಿದ್ದರ ಬಗ್ಗೆ; ಹೇಳಿಕೊಂಡು ಮನಸ್ಸು ಹಗುರಮಾಡಿಕೊಂಡರು. ಉತ್ತಮ ತಬಲಾವಾದಕರಾಗಿದ್ದ ತಮ್ಮ ತಂದೆ ಬುಡ್ಡಪ್ಪನವರ ಬಗ್ಗೆ; ಶ್ರೇಷ್ಠ ಶಹನಾಯಿ ವಾದಕರಾಗಿದ್ದ ತಾತ ಹೋಬಳಪ್ಪನವರ ಬಗ್ಗೆ ಹೇಳುವಾಗ ಕಣ್ಣು ತುಂಬಿಕೊಂಡರು. +ನಾನು ಅವರ ಕ್ಲಾರಿನೆಟ್ ವಾದನವನ್ನು ಕೇಳಿರುವ ಅಪರೂಪದ ಕ್ಷಣಗಳನ್ನು ನೆನಪಿಸಿಕೊಂಡೆ. ಮೀಂಡ್ ಹಾಗೂ ಗಮಕ ಪ್ರಕಾರಗಳನ್ನು ವೇಗವಾಗಿ ನುಡಿಸಲು ವಡವಾಟಿ ಮಾತ್ರ ಸಮರ್ಥರಾಗಿದ್ದರು. ದೃತ್ಲಯದ ಆವೇಗದೊಂದಿಗೆ ಭೈರವಿಯ ಹಂತಕ್ಕೆ ತಲಪಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿ ಮಾಡುವುದರಲ್ಲಿ ವಡವಾಟಿ ಸಿದ್ಧಹಸ್ತರು. ಇತರೇ ವಾದ್ಯಗಳೊಂದಿಗೆ ವಡವಾಟಿಯವರ ಜುಗಲ್ಬಂದಿಯೂ ಅಷ್ಟೇ ಸುಪ್ರಸಿದ್ಧ. ಕಳೆದೆರಡು ವರ್ಷದ ಹಿಂದೆ ಮೈಸೂರಿನಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೋದಂಡರಾಮರ ನಾಗಸ್ವರದೊಂದಿಗಿನ ಅಥವಾ ಮದ್ರಾಸಿನಲ್ಲಿ ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನಿನೊಂದಿಗಿನ ಜುಗಲ್ಬಂದಿಯನ್ನಾಗಲೀ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಮುಂಬಯಿಯ ಸೂರಸಿಂಗಾರ್‍ ಸಂಸ್ಥೆಯವರು ಮಿತ್ರ ವಡವಾಟಿಯವರಿಗೆ ‘ಸೂರಮಣಿ’ ಪ್ರಶಸ್ತಿ ನೀಡಿದಾಗ ಹೆಚ್ಚು ಸಂತೋಷಪಟ್ಟವನು ನಾನು. ಇಂಥ ಕೀರ್ತಿ ಭಾಜನಕ್ಕೆ ಕಾರಣವಾದ ವಾದ್ಯದ ಬಗ್ಗೆ ಅಸಡ್ಡೆಯ ಮಾತಾಡಿದೆನಲ್ಲಾ! ಪಾಪ ನರಹಿಂಹಲು ಎಷ್ಟು ನೊಂದುಕೊಂಡರೇನೋ! ದೇವರೆ ಅರಿತು ನುಡಿಯುಂತೆ ಮಾಡು. ಕೈಕೈ ಹಿಚುಕಿಕೊಂಡೆ. ಆದರೆ ಅನ್ಯಥಾ ಭಾವಿಸುವಷ್ಟು ವಡವಾಟಿ ಸಿಲ್ಲಿಯಾಗಿರಲಿಲ್ಲ. ಆತ ತಮ್ಮ ಪಾಡಿಗೆ ತಾವು ಹೇಳುತ್ತಲೇ ಇದ್ದರು. ಹೊಸಪೇಟೆಯ ಹೊರವಲಯದಲ್ಲಿ ನೋಡಿಕೊಂಡಾಗ ಕ್ಲಾರಿನೆಟ್ಟಿನ ಪೆಟ್ಟಿಗೆ ಇತ್ತಂತೆ. ಹೊಸಪೇಟೆ ಬಸ್ಸು ನಿಲ್ದಾಣದಲ್ಲಿ ನೋಡಿಕೊಂಡಾಗ ನಾಪತ್ತೆಯಾಗಿತ್ತಂತೆ. ಅಲ್ಲಿ ಇಲ್ಲಿ ಹೇಳಿಕೊಂಡರಂತೆ. ಇಲ್ಲಿ ಅಲ್ಲಿ ಹುಡುಕಾಡಿದರಂತೆ; ಸಿಗದೆ ಹೋದರೆ ತಾನು ಮುಂದೆಂದೂ ಕ್ಲಾರಿನೆಟ್ಟೇ ನುಡಿಸುವುದಿಲ್ಲವೆಂದು ಶಪಥ ಸಹ ಮಾಡಿಬಿಟ್ಟರಂತೆ; ಮತ್ತೆ ಗದ್ಗದಿತರಾದರು. ಹೇಗೆ ಸಂತೈಸಬೇಕೆಂದು ನನಗೆ ತಿಳಿಯಲಿಲ್ಲ. ಅವರ ವ್ಯಾಕುಲತೆ ವಿಚಿತ್ರವಾಗಿ ಕಂಡಿತು. ನನಗೆ ಗೊತ್ತು ಅವರು ತಮ್ಮ ವಾದ್ಯ ಇಡುವ ಪೆಟ್ಟಿಗೆ ನೋಡಿದ ಎಂಥವರಿಗೂ ಅದು ನಗನಾಣ್ಯ ತುಂಬಿದ ಪೆಟ್ಟಿಗೆಯಂತೆ ಭಾಸವಾದರೆ ಅಚ್ಚರಿಯಿಲ್ಲ. ಷಹಜಾನ್ ಚಕ್ರವರ್ತಿ ಕೂಹಿನೂರು ವಜ್ರವನ್ನು ಅಂಥ ಪೆಟ್ಟಿಗೆಯಲ್ಲಿಟ್ಟಿರಲಿಲ್ಲವೇನೋ! ಪೆಟ್ಟಿಗೆ ಒಳಹೊರಗಿನ ಡೆಕೋರೇಷನ್ನೇ ಹಂಗಿತ್ತು. ಪವಿತ್ರವಾದುದನ್ನು ದುಬಾರಿಯಾದುದರೊಳಗೆ ಇಟ್ಟರೆ ಕಳುವಾಗದೆ ಇದ್ದೀತೆ! “ವಡವಾಟಿ…. ಆದದ್ದಾಯ್ತು. ಆ ಪೆಟ್ಟಿಗೇನ ಕಳುವು ಮಾಡ್ದೋರ್‍ಗೆ ಖಂಡಿತ ನಿರಾಸೆ ಆಗಿರತೈತಿ. ನಿಮ್ಮನ್ನು ಬಯ್ಕೊಂಡಿರ್‍ತಾರೆ. ಹೊಸಪೇಟೇಲಿ ತಾವರಗಿ ಅಂತ ಸರ್ಕಲ್ ಇನ್ಸ್ಪೆಕ್ಟರಿದ್ದಾರೆ. ಖಂಡಿತ ಹುಡುಕಿಸಿ ಕೊಡ್ತಾರೆ, ಚಿಂತೆಮಾಡದೆ ನಿದ್ದೆ ಮಾಡ್ರಿ” ಅಂತ ಹೇಳಿದೆ. +ಇಡೀ ರಾತ್ರಿ ನಿದ್ದೆಯಲ್ಲಿ ವಡವಾಟಿ ನನ್ ಕ್ಲಾರಿನಿಟ್ಟೂ ನನ್ ಕಾರಿನೆಟ್ಟೂ ಅಂತ ಕನವರಿಸುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನನಗೂ ದುಃಖ ಒತ್ತರಿಸಿ ಬಂದಿತು. ಜೀವಂತ ಮನುಷ್ಯನೊಳಗೆ ಕ್ರಮೇಣ ಆವರಿಸಿಕೊಂಡು ಪ್ರಭುತ್ವ ಸ್ಥಾಪಿಸಿಬಿಡುವ ನಿರ್ಜೀವ ವಸ್ತುವಿಗಿರುವ ಶಕ್ತಿಯಾದರೂ ಎಂಥದ್ದು! ಸ್ಪರ್ಶ ಮತ್ತು ದೃಷ್ಟಿಯಿಂದ ನಿರ್ಜೀವ ವಸ್ತುವಿನೊಳಗೆ ಪ್ರಾಣಸಂಚಾರವನ್ನು ಕಲ್ಪಿಸಿಕೊಳ್ಳುವುದರಲ್ಲಿ ನಮ್ಮ ಪವಿತ್ರ ಭಾರತ ದೇಶವು ಹೆಸರಾಗಿಹುದು. ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮವೂ ಸಾಕಷ್ಟು ಶ್ರದ್ಧಾಳುಗಳ ಸಮಕ್ಷಮದಲ್ಲಿ ನಡೆಯುವುದು ಇದಕ್ಕಾಗಿಯೇ ಇದ್ದೀತು. ಇನ್ನು ವಡವಾಟಿ ಸುಪ್ರಸಿದ್ಧ ಕಲಾವಿದನಾಗಿದ್ದರೂ ಆತ ಹುಲುನರನೇ. ಹೀಗೆ ಯೋಚಿಸುತ್ತ ಯಾವಾಗಲೋ ನಿದ್ರಾದೇವಿಗೆ ವಶನಾದೆನು ಎನ್ನುವುದೇ ಸುಳ್ಳು. ನನಗೂ ಏನೇನೋ ಕನಸು ಕನವರಿಕೆಗಳು. +ಸೂರ್ಯೋದಯಕ್ಕೂ ಪೂರ್ವಕಾಲದಲ್ಲಿ ನಾನೇ ವಡವಾಟಿಯವರನ್ನು ಎಬ್ಬಿಸಿದೆನೋ, ವಡವಾಟಿಯವರೇ ಹುಲುನರನೆಂದು ಹೆಸರಾದ ನನ್ನನ್ನು ಎಬ್ಬಿಸಿದರೋ? ಒಟ್ಟಿನಲ್ಲಿ ಇಬ್ಬರೂ ನಸುಕಿನಲ್ಲಿ ಮಾತನಾಡುತ್ತ ಕೆರೆಕಡೆ ಹೋಗಿಬಂದಾಗಲೇ ಹೊಹೋ ಎದ್ದಿದ್ದೇವೆ ಎಂದು ಗೊತ್ತಾದದ್ದು. ಸ್ನಾನವೇ ಮೊದಲಾದ ಪ್ರಾತಃಕಾಲದ ವಿಧಿಗಳನ್ನು ಪೂರೈಸುವ ಹೊತ್ತಿಗೆ ಅನ್ನಪೂರ್ಣ ಬಿಸಿಬಿಸಿ ಮಂಡಾಳು ಒಗ್ಗರಣೆ ಮಾಡಿದ್ದಳು. ಅದನ್ನು ಸೇವಿಸುವಾಗ ವಾರ್ತೆಗಳು ಬಂದವು. ಅದರ ತುಂಬ ಭಯ ಮತ್ತು ಹಿಂಸೆಯ ಸುದ್ದಿಗಳೇ. ಅದೇತಾನೆ ಬಂದ ದಿನಪತ್ರಿಕೆಯನ್ನು ಗುಂಡುಸೂಜಿಯಿಂದ ಚುಚ್ಚಿದರೆ ರಕ್ತ ಹನಿಯಬಹುದೆನಿಸಿ ಬಿಟ್ಟಿತು. ಅದನ್ನು ಮುಟ್ಟಿದಾಗ ಕಳೇಬರವನ್ನು ಮುಟ್ಟಿದ ಅನುಭವವಾಗುತ್ತಿತ್ತು. ಅಂಥ ಸುದ್ದಿಗಳಿಂದಾದ ವೃತ್ತಪತ್ರಿಕೆಗಳು ಕಳೇಬರಗಳಾಗದಿರುವವೇ! +ಹಾಗೂ ಹೀಗೂ ಹೊರಟು ಸುಸೂತ್ರವಾಗಿ ಹೊಸಪೇಟೆ ತಲಪಿ ನೆಮ್ಮದಿಯ ಉಸಿರುಬಿಟ್ಟು ಸರ್ಕಲ್ ಇನ್ಸ್ಪೆಕ್ಟರ್‍ ತಾವರಗಿಯವರನ್ನು ಕಂಡೆವು. “ಓಹೋ ಬನ್ನಿ ಸಾಹೇಬರೇ” ಎಂದು ತಮ್ಮ ಇತಿಹಾಸ ಪ್ರಸಿದ್ಧ ನಗೆಯಿಂದ ಸ್ವಾಗತಿಸಿ ಸತ್ಕರಿಸಿದರು. ಹಿಂಗಿಂಗೇ ಅಂತ ಹೇಳಿದೆ. ಅವರು ತುಂಬ ಸಂತೋಷಪಟ್ಟರು. ಕಳವು ಮಾಡಿದವನು ಅದನ್ನು ಬ್ಯಾಂಡ್ ಕಂಪೆನಿಯವರಿಗೇ ಮಾರಿರಬೇಕೆಂದು ಅವರು ತರ್ಕಿಸಿದರು. ಮಂಗಲವಾದಕರಾದ ನಗರದ ಎಲ್ಲ ಮಂಗಲಿಗಳ ಬಳಿಗೆ ಪೀಸಿಗಳನ್ನು ಓಡಿಸಿದರು. ಹಾಗೆ ಕೆಲವು ಕಡೆ ಫೋನು ಸಹ ಮಾಡಿದರು. ಸ್ವಲ್ಪ ಹೊತ್ತು ಅದೂ ಇದೂ ಹರಟಿದೆವು. ನಮ್ಮ ಪ್ರಯತ್ನವೂ ಇರಲಿ ಅಂತ ಹುಡುಕಲು ಹೊರಡಲುದ್ಯುಕ್ತರಾದೆವು. ಅದೇ ಸಮಯಕ್ಕೆ ಅವರ ಶ್ರೀಮತಿಯವರು ಜ್ಯೂಸ್ ತಂದರು. ಕುಡಿಯುವಾಗ ತಾವರಗಿಯವರು ಇತ್ತೀಚೆಗೆ ಕರ್ನಾಟಕಕ್ಕೂ ನುಸುಳಿರುವ ಉಗ್ರಗಾಮಿಗಳನ್ನು ಕುರಿತು ಮಾತನಾಡಿದರು. ಅನಂತರ ನಾವು ಹೊರಟೆವು. +ಕೃಷ್ಣದೇವರಾಯ ತನ್ನ ಮೆಚ್ಚಿನ ರಾಣಿ ಚಿನ್ನಾದೇವಿಯ ಹೆಸರಿನಲ್ಲಿ ನಿರ್ಮಿಸಿದ್ದ ಆ ನಗರ ಇತಿಹಾಸ ಪ್ರಸಿದ್ಧ ಕೊಚ್ಚೆಗಳಿಗೆ ಹೆಸರಾಗಿತ್ತು. ಸುತ್ತಬಾರದ ಕಡೆ ಸುತ್ತಿದೆವು. ನಗರದ ಎಲ್ಲಾ ಬ್ಯಾಂಡ್ ಮಾಸ್ಟರ್‍ ಬಳಿಗೆ ಹೋಗಿ ಗೋಳು ತೋಡಿಕೊಂಡೆವು. ಅವರೆಲ್ಲ ಚಹಾದೊಂದಿಗೆ ಪ್ರಕಟಿಸಿದ ಅನುಕಂಪವನ್ನು ಗತ್ಯಂತರವಿಲ್ಲದೆ ಸ್ವೀಕರಿಸಿದೆವು. ಅನುಕಂಪದ ಭಾರದಿಂದ ವಡವಾಟಿ ಜಗ್ಗಿಹೋದರು. ನನ್ನ ಪ್ರೀತಿಯ ಸಂಗೀತಗಾರನ ಮುಖ ಮುದುಡಿದ್ದು ನೋಡಿ ಏನು ಮಾಡುವುದಪ್ಪಾ ಶಿವನೆ ಎಂದು ಕೈಕೈ ಹಿಚುಕಿಕೊಂಡೆ. ನಮ್ಮ ಮುಖಗಳನ್ನು ನೋಡಿದ ಎಂಥವರೂ ‘ಏನೋ ಕಳೆದುಕೊಂಡಿರುವ’ರೆಂದು ಸುಲಭವಾಗಿ ಊಹಿಸಬಹುದಾಗಿತ್ತು. +ಎಲ್ಲಿ ಬ್ಯಾಂಡಿನ ಸದ್ದು ಬರುವುದೋ ಅಲ್ಲಿಗೆ ಓಡುತ್ತಿದ್ದೆವು. ಮದುವೆ ಮೆರವಣಿಗೆಯ ಬ್ಯಾಂಡು ಸೆಟ್ಟು; ಶ್ರೀಮಂತ ವರ್ತಕನ ಶವದ ಮೆರವಣಿಗೆಯ ಬ್ಯಾಂಡುಸೆಟ್ಟು ಹೀಗೆ ಎಲ್ಲ ತಪಶೀಲು ಮಾಡಿದೆವು. ಕೊಟ್ಟೂರಿನಿಂದ ಸಮಾಳ ನಂದಿಕೋಲು ಸಂಘದ ಬೆಣ್ಣೆ ಬಸವರಾಜನನ್ನೂ ಕೇಳಿನೋಡಿದೆವು. ಆದರೆ ಪ್ರಯೋಜನವಾಗಲಿಲ್ಲ. +ಸಿಕ್ಕಿರಬಹುದೇನೋ ಅಂತ ತಾವರಗಿಯವರ ಬಳಿಗೆ ದೋಸೆ ತಿನ್ನುವುದನ್ನು ಬಿಟ್ಟು ಓಡಿದೆವು. ಸುಮ್ಮನೆ ಕೂತಿರದಿದ್ದ ಅವರು “ಹೆದರಬ್ಯಾಡ್ರಿ ಸಾಹೇಬ್ರ…. ಧೈರ್ಯ ತಂದ್ಕೊಳ್ರಿ” ಅಂದರು. ಕಳ್ಳನನ್ನು ಹುಡುಕಲು ಪೋಲೀಸರೊಂದಿಗೆ ಮಾಜಿ ಕಳ್ಳರನ್ನೂ ಬಿಟ್ಟಿದ್ದರು. ಒಂದು ಹಳೆಯ ಕ್ಲಾರಿನೆಟ್ಟಿನಂಥ ವಾದ್ಯವೂ ತಮ್ಮ ತಲೆಯನ್ನು ಇಷ್ಟು ತಿನ್ನಬಹುದೆಂದು ಅವರು ಅಂದುಕೊಂಡಿರಲಿಲ್ಲ. +ನಾವು ಅಲ್ಲಿಂದ ಹೊರಟು ಹುಡುಕುತ್ತ ಹುಡುಕುತ್ತ ಬಸ್ ನಿಲ್ದಾಣಕ್ಕೆ ಬಂದೆವು. ಅಲ್ಲಿಂದ ಬಜಾರಕ್ಕೆ ಹೋದೆವು. ಅಲ್ಲಿಂದ ಗಲ್ಲಿಗಳಿಗೆ ಹೋಗಿ ರೈಲ್ವೆ ಸ್ಟೇಷನ್ನಿಗೆ ಬಂದೆವು. ಪ್ಲಾಟ್ಫಾರಮಿನ ಪಡುಗಡೆಯಲ್ಲಿ ಜನ ಗುಂಪು ಸೇರಿದ್ದು ನಮ್ಮ ಗಮನಕ್ಕೆ ಬಂತು. ಅಲ್ಲಿ ಹಾವಾಡಿಸುವವರು ಅಥವಾ ಆರುಕಾಲಿನ ಮನುಷ್ಯ ಇರಬಹುದಂತ ಅಲ್ಲಿಗೆ ಹೋದೆವು. “ಏಯ್ ದೂರ ಸರೀರಿ, ಹತ್ರ ಹೋಗಬ್ಯಾಡ್ರಿ….. ಈಗ ಸ್ಫೋಟಿಸಬಹುದು….. ಆಗ ಸ್ಫೋಟಿಸಬಹುದು….. ಯಾರೋ ಪಾಪಿಗಳು ಬಾಂಬಿಟ್ಟು ಹೋಗ್ಯಾರ….” ಎಂದು ಗೊಣಗುತ್ತ ಜನ ಹತ್ತಿರವೂ ಹೋಗದೆ ದೂರವೂ ಸರಿಯದೆ ಒದ್ದಾಡುತ್ತಿದ್ದರು. ಏನದು ನೋಡೇ ಬಿಡೋಣ ಅಂತ ಜನರೊಳಗೆ ತೂರಿಕೊಂಡು ಹೋದೆವು. ಅಲ್ಲಿದ್ದ ವಸ್ತುವನ್ನು ನೋಡಿ ವಡವಾಟಿಗಾದ ಸಂತೋಷ ಅಷ್ಟಿಷ್ಟಲ್ಲ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹುಡುಕುತ್ತಿದ್ದ ಕ್ಲಾರಿನೆಟ್ ಬಾಕ್ಸ್ ಅಲ್ಲಿ ಬಿಕೋ ಅಂತ ಬಿದ್ದಿತ್ತು. ಅದರೊಳಗೆ ಕ್ಲಾರಿನೆಟ್ ಇರುವುದೋ ಇಲ್ಲವೋ! ಕೇವಲ ಬಾಕ್ಸ್ ಮಾತ್ರವೋ! ಬಾಕ್ಸ್ ಮಾತ್ರ ಅದ್ಭುತ ಅಲಂಕಾರದಿಂದ ಹೊಳೆಯುತ್ತ ಎಲ್ಲರ ಭಯಕ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ಅದನ್ನು ಪಡೆಯಲು ಹೋಗಲಿದ್ದ ವಡವಾಟಿಯವರನ್ನು ತಡೆದೆ. ಪೋಲೀಸನೊಬ್ಬ ದುತ್ತನೆ ಪ್ರವೇಶಿಸಿ ಎಲ್ಲರನ್ನೂ ದೂರ ಸರಿಸಿದ. ಅದರ ಬಳಿಗೆ ಸುಳಿವ ಧೈರ್ಯ ಯಾರಿಗೂ ಬರಲಿಲ್ಲ. ಅವರಿಗೇನು ಗೊತ್ತು ಅದರ ತಳಬುಡ? ಮುಟ್ಟಿದರೆ ಸಾಕು ಸ್ಫೋಟಿಸುತ್ತದೆಂಬಂತೆ ಜನ ಮೂಕವಿಸ್ಮಿತರಾಗಿದ್ದರು. ಅಷ್ಟರಲ್ಲಿ ಏನಾಯಿತು? ಬಾಲಕನೋರ್ವ ಜನರ ಗುಂಪೊಳಗಿಂದ ತೂರಿಬಂದ. ಐದಾರು ವರ್ಷ ವಯಸ್ಸಿನ ಆ ಬಾಲಕ ಅನಾಥ ಎಂಬ ಪದಕ್ಕೆ ಪರ್ಯಾಯವೆಂಬಂತಿದ್ದ. ಹಿಂದುಮುಂದು ಯಾರೂ ಇರದಿದ್ದ ಅವನಿಗೆ ಭಯದ ಕಾಳಜಿ ಇರಲಿಲ್ಲ. ಅವನಿಗೆ ಆಡಲೊಂದು ಆಟಿಗೆ ಬೇಕಾಗಿತ್ತು. ಅದು ಅಲ್ಲಿದೆ! ತನ್ನಂತೆ ಅದೂ ಲಾವಾರಿಸ್. ಅದಕ್ಕೆ ತಾನು ಗತಿ; ತನಗೆ ಅದು ಗತಿ. ಜನ ಎಷ್ಟು ತಡೆಯಲೆತ್ನಿಸಿದರೂ ಬಾಲಕ ಮುಂದೆ ಮುಂದೆ ನಡೆದ. ಜನ ತಾವು ಸತ್ತೇ ಹೋಗುತ್ತೇವೆ ಎಂದು ಭಾವಿಸಿ ಹಿಂದೆ ಹಿಂದೆ ಸರಿದರು. ಆದರೆ ಆ ಬಾಲಕ ಆ ಪೆಟ್ಟಿಗೆ ಕಡೆ ಹೋಗುತ್ತಿದ್ದ ರೀತಿ ನೋಡಿದ ನನಗೆ ಶ್ರೀ ಕೃಷ್ಣಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್ಟಿಆರ್‍ ಮಯನ ಸಭೆಗೆ ಹೋದ ದೃಶ್ಯ ನೆನಪಾಯಿತು. ಬಾಲಕ ಪೆಟ್ಟಿಗೆಗೆ ಕೈ ಹಾಕಿದೊಡನೆ ಜನ ಅಂಗೈಲಿ ಪ್ರಾಣ ಹಿಡಿದುಕೊಂಡು ಓಡಿದರು. ಬಾಲಕ ಪೆಟ್ಟಿಗೆ ತೆರೆದ. ಅದರೊಳಗಿಂದ ಕ್ಲಾರಿನೆಟ್ ಎತ್ತಿಕೊಂಡ. ಅಪೂರ್ವ ನಗೆ ಮೇಳೈಸಿದ್ದ ಅವನು ಅದರೊಂದು ತುದಿಯನ್ನು ಬಾಯಲ್ಲಿಟ್ಟುಕೊಂಡು ಪೀಯ್…..ಪೀಯ್ ಅಂತ ನುಡಿಸತೊಡಗಿದ. +ವಡವಾಟಿ ನನ್ನ ಹೆಗಲ ಮೇಲೆ ಮುಖ ಇಟ್ಟು ಬಿಕ್ಕಿ ಬಿಕ್ಕಿ ಕಣೀರಧಾರೆ ಹಸಿರಿದರು. ಅದನ್ನು ವರ್ಣಿಸುವ ಶಕ್ತಿ ನನ್ನ ಶಬ್ದಗಳಿಗಿರಲಿಲ್ಲ. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […] +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […] +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_518.txt b/Kannada Sahitya/article_518.txt new file mode 100644 index 0000000000000000000000000000000000000000..0caa3b7e57b7a2182fa47cd65371794943477e67 --- /dev/null +++ b/Kannada Sahitya/article_518.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ ಹಲವಾರು ದಿನಗಳಿಂದ ಒಬ್ಬರ ನಂತರ ಇನ್ನೊಬ್ಬರು ಅತಿಥಿಗಳು ಬಂದು, ಅವರ ಆದರ ಸತ್ಕಾರದಲ್ಲೇ ಹಣ್ಣಾದ ಅವರು ಈ ಮೂರು ಬಿಡುವಿನ ದಿನಗಳನ್ನು ಬಹು ಸುಖವಾಗಿ ಕಳೆಯಲಿದ್ದರು. ಮುನ್ನಾದಿನ ರಾತ್ರಿಯೇ ಅವರು ಈ ವಿಷಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೇ ನಿರ್ಧರಿಸಿಕೊಂಡಿದ್ದರು. +ಮೂರನೇ ಮಜಲೆಯ ಕೋಣೆಯ ಹೊರಗೆ ಮೈಚಾಚಿದ ಆ ಬಾಲ್ಕನಿಯಿಂದ ಕಾಣುವ ದೃಶ್ಯ ಅವರ ನಿತ್ಯ ಪರಿಚಯದ್ದು. ಕಟ್ತಡಕಟ್ಟಡದ ಮುಂದೆಯೇ ಉದ್ದೋ‌ಉದ್ದವಾಗಿ ಹರಿದ ಹರವಾದ ಕಪ್ಪು ಡಾಂಬರ ರಸ್ತೆ. ಈ ಹೆದ್ದಾರಿಗೆ ಶಾಖೋಪಶಾಖೆಗಳಾಗಿ ಬೆಳೆದ ಅನೇಕ ಕಿರಿ ಡಾಂಬರ ರಸ್ತೆಗಳು. ರಸ್ತೆಗಳ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಆಳೆತ್ತರದ ಪಾಗಾರಗಳು ಸುತ್ತುವರಿದ ಕಾಂಪೌಂಡುಗಳ ಮಧ್ಯದಲ್ಲಿ ಯಾವ ಒಂದು ನಿರ್ದಿಷ್ಟವಾದ ಯೋಜನೆ ಇಲ್ಲದೇ ಕಟ್ಟಿದ-ತಮ್ಮಿಂದ ತಾವೇ ಎದ್ದು ನಿಂತಿವೆಯೇನೋ ಎಂಬಂತೆ ತೋರುವ-ಅಂದಗೇಡಿಯಾದ, ವಿವಿಧ ಎತ್ತರಗಳ ಕಟ್ಟಡಗಳು. ಅವೆಲ್ಲವುಗಳ ಮಧ್ಯದಲ್ಲೇ ಎದ್ದು ತೋರುವ ಆ ಎತ್ತರದ ಕ್ಲಾಕ್‌ಟೋವರ…ಅಲ್ಲಿ ಇಲ್ಲಿ ಹೆಸರಿಗಾಗಿ ಇದ್ದುಕೊಂಡ ತೆಂಗಿನ ಮರಗಳು, ಹೂವರಳದ ಗುಲ್‌ಮೊಹರದ ಗಿಡಗಳು. ಏನಿದೆ ಅವುಗಳಲ್ಲಿ ನೋಡುವಂತಹದು? ಆದರೂ ಇಂದಿನ ತಮ್ಮ ಉಲ್ಲಸಿತ ಮನಃಸ್ಥಿತಿಯಲ್ಲಿ ಅವೆಲ್ಲವುಗಳ ಬಗ್ಗೆ ನಿತಾಂತ ಮಮತೆ ಎನಿಸಿತು-ಎಲ್ಲಿಲ್ಲದ ಆತ್ಮೀಯತೆ ಎನಿಸಿತು. ರಸ್ತೆಯ ಮೇಲೆ ಎಡಬಿಡದೇ ನಡೆದ ವಾಹನಗಳ ಓಡಾಟ, ಜನರ ಚಟುವಟಿಕೆಗಳೂ ತುಂಬ ಪ್ರಿಯವೆನಿಸಿದುವು-ಕಾರಣವಿಲ್ಲದೇನೇ ಹಿತವೆನಿಸಿದುವು. ರಸ್ತೆಯ ಒಂದು ಭಾಗವನ್ನು ಸರಿಮಾಡಲು ಬಂದ ದೊಡ್ಡ ಸ್ಟೀಮರೋಲರ ಒಂದು ಗದ್ದಲಮಾಡುತ್ತ ಹಿಂದೆ-ಮುಂದೆ ಉರುಳುತ್ತಿತ್ತು. ಅದರ ಕರ್ಕಶವಾದ ಗಡಗಡಾಟವೂ ಅವರ ಕಿವಿಗೆ ಇಂದು ಹಿತವೆನಿಸಿತು…. +ಹೀಗಿರುವಾಗ, ಇದ್ದಕ್ಕಿದ್ದಂತೆಯೇ ಜಾನಕಿ ಒಮ್ಮೆಲೇ ಕಾತರಗೊಂಡವಳಂತೆ ನುಡಿದಳು : +“ಅವರು ನಮ್ಮಲ್ಲೇ ಬರುತ್ತಿದ್ದರೆಬರುತ್ತಿದ್ದಾರೆ.” +ಕಳವಳ ತುಂಬಿದ ಅವಳ ಕನ್ಣುಗಳುಕಣ್ಣುಗಳು ದೂರದ ರಸ್ತೆಯೊಂದರ ಕೊನೆಯಲ್ಲಿ ಯಾರನ್ನೋ ಏನನ್ನೋ ಹುಡುಕುತ್ತಿದ್ದವು. ಕನಸಿನಲ್ಲಿ ಬಡಬಡಿಸುತ್ತಿದ್ದವರ ಮಾತುಗಳಂತೆ ಬಂದ ಅವಳ ಈ ಅರ್ಥಹೀನ ಮಾತುಗಳು ರಾಮಕೃಷ್ಣನ ಸುಖಸ್ವಪ್ನಕ್ಕೆ ಭಂಗ ತಂದಿದ್ದವು. ಅವನು ಮನಸ್ಸಿನ ಬೇಸರವನ್ನು ವ್ಯಕ್ತಪಡಿಸುತ್ತ ಕೇಳಿದ : +“ಯಾರೇ ಅವರು?”-ನಮ್ಮಲ್ಲೇ ಬರುತ್ತಿದ್ದವರು? ನಿದ್ದೆ ಇನ್ನೂ ಪೂರ ಆಗಲಿಲ್ಲವೇನೇ?” +ಜಾನಕಿಗೂ ಪೂರ್ಣ ಖಾತರಿ ಆಗಲಿಲ್ಲ ತಾನು ಇನ್ನೂ ನಿದ್ದೆಯಲ್ಲಿಲ್ಲವಲ್ಲ ಎನ್ನುವುದರ ಬಗ್ಗೆ! ಕೆಲಹೊತ್ತು ಅವಳಿಂದ ಯಾವ ಮಾತೂ ಹೊರಡಲಿಲ್ಲ. ‘ಅರೆ! ಇದೀಗ ನೋಡಿದ್ದೆ, ಈಗ ಎಲ್ಲಿ ಅದೃಶ್ಯರಾದರೋ’ ಎನ್ನುವ ಭಾವದಿಂದ ಅಡ್ಡತಿಡ್ಡವಾಗಿ ಹರಿದ ಆ ರಸ್ತೆಗಳಲ್ಲಿ ದೃಷ್ಟಿ ಹಾಯಿಸಹತ್ತಿದಳು. ತನಗಾದುದು ಬರಿಯ ಭಮೆಭ್ರಮೆ ಇರಲಿಕ್ಕಿಲ್ಲ ತಾನೇ ಎಂದೂ ಅವಳಿಗೆ ಅನಿಸದಿರಲಿಲ್ಲ. ಕೆಲ ಹೊತ್ತಿನವರೆಗೆ ಅವಳಿಗೆ ಅಲ್ಲಿ ಯಾರೂ ಕಣ್ಣಿಗೆ ಬೀಳಲಿಲ್ಲ. ಆದ್ದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನವೆನಿಸಿತು. ಆದರೆ ಅವಳ ಈ ಸಮಾಧಾನ ಬಹಳ ಹೊತ್ತಿನವರೆಗೆ ಬಾಳಲಿಲ್ಲ. ಮರುಕ್ಷಣವೇ ಅವಳು ಸಣ್ಣ ಚೀರುದನಿಯಲ್ಲೇ ಅಂದಳು: +“ಅದೋ! ಅವರೀಗ ಕಾಣುತ್ತಾರೆ.” +ಹೆಂಡತಿಯ ಈ ಗಾಬರಿ ತುಂಬಿದ ಮಾತುಗಳಿಂದ ತುಂಬ ಅಚ್ಚರಿಪಟ್ಟು ರಾಮಕೃಷ್ಣ ತಿರುಗಿ ಅವಳತ್ತ ಲಕ್ಷ್ಯವಿತ್ತ. +“ಅದೋ ಅಲ್ಲಿ-ಇಲ್ಲಿಂದ ಒಂದು…ಎರಡು…ಮೂರು…ನಾಲ್ಕು, ಅಹುದು ನಾಲ್ಕನೇ ರಸ್ತೆಯ ಕೊನೆಯಲ್ಲಿ ಕಂಡಿರಾ?… ಇದೋ ಹೀಗೆ ಬನ್ನಿ. ಈ ಮುಂದಿನ ಕಟ್ಟಡ ಹಾಗೂ ಕ್ಲಾಕ್ ಟಾವರುಗಳ ನಡುವಿನ ಅವಕಾಶದಲ್ಲಿ ನೋಡಿ…ದೃಷ್ಟಿಗೆ ಬಿದ್ದರೇ?…ಹಾಂ!ನೋಡಿ ನೋಡಿ, ಕ್ಲಾಕ್ ಟಾವರಿನ ಹಿಂದಿನ ಕಾಂಪೌಂಡಿನ ಗೋಡೆಯ ಆಚೆ ಅವರ ತಲೆಗಳಷ್ಟೇ ಕಾಣಿಸುತ್ತವೆ. ಒಬ್ಬ ಗಂಡಸು, ಒಬ್ಬ ಹೆಂಗಸು ಹಾಗೂ ಜತೆಗೆ ಟ್ರಂಕು ಹೊತ್ತುಕೊಂಡು ಬಂದ ಆಳು…” +“ಅಯ್ಯೋ ಜಾನಕಿ, ಇಂದು ನಿನಗಾದದ್ದಾದರೂ ಏನು? ಹೀಗೇಕೆ ಮಾಡುತ್ತೀ? ಏನೋ ದುಃಸ್ವಪ್ನ ಕಂಡು ಹೆದರಿದವಳಂತೆ? ಇಲ್ಲಿಂದ ಅವರ ಪರಿಚಯ ತಿಳಿಯುವುದುಳಿಯಲಿ, ಮೋರೆಗಳೇ ಕಾಣುವುದಿಲ್ಲ. ಬರಿಯೇ ಕಂಡ ತಲೆಗಳು, ಆಳಿನ ತಲೆಯ ಮೇಲಿನ ಟ್ರಂಕು ಇವನ್ನಷ್ಟೇ ನೋಡಿ ಅವರು ನಮ್ಮ ಮನೆಗೇ ಬರುತ್ತಿದ್ದಾರೆಂದು ಊಹಿಸಿದೆಯಲ್ಲ! ಯಾರೋ ಏನೋ ಎಲ್ಲಿಗೆ ಬಂದಾರೋ! ಇತ್ತಿತ್ತ ಇಂತಹದರ ಭ್ರಮೆಯೇ ಆಗುತ್ತಿರಬೇಕು, ಅತಿಥಿಗಳನ್ನು ಆಧರಿಸಿ ದಣಿದ ನಿನ್ನ ಮನಸ್ಸಿಗೆ,” ಹೆಂಡತಿಯ ವಿವೇಕಶೂನ್ಯವಾದ ಭೀತಿಯನ್ನು ನಿವಾರಿಸುವಂತೆ ಹೇಳಿದ ರಾಮಕೃಷ್ಣ. ಆದರೆ ಹಾಗೆ ಹೇಳುವಾಗ ಏಕೋ ಅರ್ಥವಾಗದ ಭೀತಿಯೊಂದು ತನ್ನ ಮನಸ್ಸನ್ನೂ ಕವಿಯಹತ್ತಿದ ಅನುಭವವಾಗಿ ತುಸು ಅಸ್ವಸ್ಥಗೊಂಡ. ಆದರೂ ಅದನ್ನು ತೋರಗೊಡದೆ ಇನ್ನೂ ಬೆದರಿದ ಕಂಗಳಿಂದ ರಸ್ತೆಗಳನ್ನು ಅರಸುತ್ತಿದ್ದ ತನ್ನ ಹೆಂಡತಿಯ ಲಕ್ಷ್ಯವನ್ನು ಬೇರೆಯೆಡೆ ಹರಿಯಿಸುವ ಉದ್ದೇಶದಿಂದ, “ಬಾ… ಎಷ್ಟು ಹೊತ್ತು ಹಾಗೆಯೇ ನೋಡುತ್ತ ನಿಂತೀಯೆ? ಕೆಲ ಹೊತ್ತು ರಮ್ಮಿಯಾದರೂ ಆಡೋಣ. ಹೇಗಾದರೂ ಊಟಕ್ಕೆ ಹೊರಗೇ ಹೋಗುವವರಿದ್ದೇವೆ. ಅಡುಗೆ ಗೊಂದಲವೇನಿಲ್ಲ,” ಎಂದು ಹೇಳಿ ಕೋಣೆಯೊಳಗಿನ ಸೋಫಾ ಒಂದರ ಮೇಲೆ ಹೋಗಿ ಕುಳಿತು ಹೆಂಡತಿಯ ಹಾದಿಯನ್ನೇ ನೋಡಹತ್ತಿದ. ಆದರೆ ಹೆಂಡತಿ ನಿಂತಲ್ಲಿಂದ ಕದಲದೇ ಇದ್ದುದನ್ನು ಕಂಡು ಅತ್ಯಂತ ಸಹಾನುಭೂತಿಯ ದನಿಯಲ್ಲಿ ಅಂದ: “ಛೀ ಕಾನಕೀಜಾನಕೀ, ಈಗ ಸುಳ್ಳೇ ಹುಚ್ಚಿಯಂತೆ ಮಾಡಬೇಡ, ಯಾರಾದರೂ ನಮ್ಮಲ್ಲೇ ಬರುವವರಿದ್ದರೆ ಒಂದು ಪತ್ರವನ್ನಾದರೂ ಬರೆದು ತಿಳಿಸದೇ ಇರುತ್ತಿದ್ದರೇ?….” +ಈ ಮಾತಿಗೆ ಜಾನಕಿ ಒಮ್ಮೆಲೇ ಕೆರಳಿ ಒಳಗೆ ಬಂದು ‘ಧಡ್’ ಎಂದು ಗಂಡನ ಎದುರಿಗಿದ್ದ ಸೋಫಾದಲ್ಲಿ ಕುಪ್ಪಳಿಸುತ್ತ, “ಅದೇ ಅದೇ ಅಷ್ಟೊಂದು ಬಾಕಿ ಇದೆ… ಹೇಲದೇಹೇಳದೇ ಕೇಳದೇ ಒಮ್ಮೆಲೇ ಒಳಗೆ ನುಗ್ಗಿ ತಮ್ಮದೇ ಮನೆ ಎನ್ನುವಂತೆ ತಳವೂರಿ ನಮ್ಮನ್ನೇ ಹೊರಗೋಡಿಸುವುದೊಂದು ಬಾಕಿಯುಳಿದಿದೆ…ಬರುವ ಮೊದಲು ಪತ್ರ ಬರೆದಾದರೂ ಸುದ್ದಿ ತಿಳಿಸಿ ಬರುವ ಅತಿಥಿಗಳು! ಆಹಾ, ಎಂತಹ ಒಳ್ಳೆಯವರು! ನಮ್ಮ ಅಣ್ಣತಮ್ಮಂದಿರೇ? ನೆಂಟರಿಷ್ಟರೇ? ಹತ್ತಿರದ ಗೆಳೆಯರೇ? ಆದರೂ ಬಂದು ಹೋಗಿಲ್ಲಲೇ?ಹೋಗಿಲ್ಲವೇ? ಮಾಡಿಸಿಕೊಳ್ಳುವ ಸರಬಾಯಿಯೆಲ್ಲವನ್ನು ಮಾಡಿಸಿಕೊಂಡೂ ಹೋಗುವಾಗ ನಮಗೇ ಇಲ್ಲದ ಹೆಸರಿಟ್ಟು ಹೋದವರಿಲ್ಲವೇ…” +“ಜಾನಕೀ ಜಾನಕೀ ಪ್ಲೀಜ್, ಈಗ ನಿಲ್ಲಿಸಿದರಾಗದೇ? ಈಗ ಎಲ್ಲ ಬಿಟ್ಟು ಈ ಹಾಳು ಪುರಾಣ ಬೇಕೇ? ಮೂರು ದಿನ ರಜೆ ಇದೆ. ಆರಾಮಾಗಿ ಸುಳದಲ್ಲಿ ಕಳೆಯೋಣ…ಈಗ ರಮ್ಮಿಯಾಡೋಣವೇ? ಯಾವುದಾದರೂ ‘ಮಾರ್ನಿಂಗ ಷೋ’ಕ್ಕೆ ಆದರೂ ಹೋಗಬಹುದಿತ್ತು. ಆದರೆ ಯಾವುದೂ ಒಳ್ಳೆಯ ಚಿತ್ರವಿಲ್ಲ.” +ರಾಮಕೃಷ್ಣನ ಈ ಮಾತುಗಳನ್ನು ಕಿವಿಯಲ್ಲಿ ಹಾಕಿಕೊಳ್ಳದೇ ತನ್ನದೇ ವಿಚಾರಗಳ ಗುಂಗಿನಲ್ಲಿದ್ದ ಜಾನಕಿ ಎಂದಳು: ‘ಅವರನ್ನು ನಿಂದಿಸಿ ಏನು ಉಪಯೋಗ? ನಾವು ಅಷ್ಟು ಮೆತ್ತಗೆ: ಕಡಿಯುವವರು ಮೆತ್ತಗಿದ್ದಲ್ಲಿ ಕಡಿಯದೇ ಇನ್ನೆಲ್ಲಿ ಕಡಿದಾರು? ಈಗ ಇದೇ ಕಟ್ಟಡದಲ್ಲೇ ಇದ್ದ ಇನ್ನುಳಿದ ಮನೆಗಳಲ್ಲಿ ಯಾಕೆ ಯಾರೂ ಬರುವುದಿಲ್ಲ? ಎಷ್ಟು ಚೊಕ್ಕವಾದ ಸಂಸಾರ-ರಜೆಯ ದಿನಗಲುದಿನಗಳು ಬಂದ ಕೂಡಲೇ ಏನಾದರೊಂದು ಹೊಸ ಕಾರ್ಯಕ್ರಮ. ನಮ್ಮಲ್ಲಿ? ‘ಏನಕ್ಕಾ ಈ ಹೊತ್ತು ಎಲ್ಲೂ ಹೊರಗೆ ಹೋಗುವುದಿಲ್ಲವೇ?’ ಎಂದು ಯಾರಾದರೂ ನೆರೆಹೊರೆಯವರು ಕೇಳಿದರೆ ನನ್ನದು ಸದಾ ಒಂದೇ ಉತ್ತರ:‘ಇಲ್ಲ…ಇಂದು ನಮ್ಮಲ್ಲಾರೋ ಬರುವವರಿದ್ದಾರೆ!’ ‘ಯಾರು?’ ಎಂದು ಕೇಳಿದರೆ ಉತ್ತರ ಕೊಡಲು ಶಕ್ಯವಿದೆಯೇ? ‘ಯಾರೋ ತಾಯಿ, ನಾನಿನ್ನೂ ಕಂಡಿಲ್ಲ. ಇವರ ಗೆಳೆಯರೊಬ್ಬರ ಪರಿಚಯದವರಂತೆ…ಯಾವದೋ ಪರೀಕ್ಷೆಗಾಗಿ ಮುಂಬಯಿಗೆ ಬರುತ್ತಾರಂತೆ…!’ ಎಲ್ಲ ಎಲ್ಲ ಇಂಥವರೇ! ಯಾವನೋ ಗೆಳೆಯನ ಗೆಳೆಯ, ಅಣ್ಣನ ದೂರದ ಪರಿಚಯದವ, ತಮ್ಮನ ಇನ್ನಾರೋ…ಮುಂಬಯಿಯಲ್ಲಿ ಪರೀಕ್ಷೆಗೆ ಕೂಡುವವರು, ಇಂಟರವ್ಯೂಕ್ಕೆ ಬರುವವರು, ಮುಂಬಯಿ ನೋಡಲು ಬಂದವರು, ಯಾವುದೋ ಹಾಳು ಜಡ್ಡು ಎಂದು ಚಿಕಿತ್ಸೆಗೆ ಬಂದವರು….” +“ಓ! ಜಾನಕೀ ಜಾನಕೀ ಜಾನಕೀ… ಇಂದು ನಿನಗಾದದ್ದಾದರೂ ಏನು…?” +“ಇಲ್ಲ ಇಲ್ಲ, ಇಂದಿನಿಂದ ನನ್ನಿಂದ ಸಾಧ್ಯವಿಲ್ಲ. ನಿಮಗೆ ಅವರ ಬಗ್ಗೆ ಅಷ್ಟೊಂದು ಆತ್ಮೀಯತೆಯ ಪುಳಕವಿದ್ದರೆ…” +“ಈಗ ನಿಲ್ಲಿಸಿದರಾಗದೇ?… ಹಿಂದಿನ ಆ ಹಾಳು ಪುರಾಣವನ್ನೆಲ್ಲ ನೆನೆದು ಈಗ ಕನ್ಣುಕಣ್ಣು ಮುಂದಿದ್ದ ಈ ಬಿಡುವಿನ ದಿನ ಹಾಳುಗೆಡಹುತ್ತೀಯಲ್ಲ…” +“ನಿನ್ನೆಯೇ ಕೆಳಗಿನ ಮನೆಯ ಕಾಳೇಯವರ ಹೆಂಡತಿ ಕೇಳುತ್ತಿದ್ದಳು. ‘ಏನೇ ತಂಗೀ, ಈ ಮೂರು ದಿನವಾದರೂ ನಿಮ್ಮಲ್ಲಾದರೂ ಅತಿಥಿಗಳಿಲ್ಲವಲ್ಲ? ಎಷ್ಟೊಬ್ಬರು ಬರಹೋಗುವವರವ್ವ ನಿನ್ನ ಮನೆಯಲ್ಲಿ? ಪಾಪ, ಲಗ್ನವಾಗಿ ಒಂದು ವರುಷ ಕೂಡ ಆಗಲಿಲ್ಲ….ಅವರಿಗಾದರೂ ಅಷ್ಟು ತಲೆಯಿರಬೇಡವೇ? ನಿಜವಾಗಿ ನೋಡಿದರೆ ಲಗ್ನವಾದ ಮೊದಲು ಕೆಲವು ದಿನಗಳ ಮಟ್ಟಿಗಾದರೂ ಗಂಡಹೆಂಡಿರಿಬ್ಬರಿಗೆ ಪೂರ್ಣ ಏಕಾಂತದ ಅವಶ್ಯಕತೆ ಇರುತ್ತದೆ…” +ಅದಾಗ, ಕೆಳಗೆ ಕಾಂಪೌಂಡಿನ ಗೇಟು ತೆರೆದ ಸದ್ದು ಕೇಳಿ ಬಂದು ಅದರ ಹಿಂದೆಯೇ ಯಾರೋ, ‘ಸಾವಿತ್ರೀ ಸದನ ಇದುವೇನೆ?’ ಎಂದು ಕೇಳಿದ್ದು ಕೇಳಿಸಿತು. ಸ್ಫುಟವಾದ ಗಂಡು ದನಿಯ ಪ್ರಶ್ನೆ. ಮರುಕ್ಷಣ ‘ಮೇಲೆ ಹೋಗುವ ದಾರಿಯೆಲ್ಲಿ?’ ಎಂಬ ಹೆಣ್ಣುದನಿಯ ಪ್ರಶ್ನೆ ಕೇಳಿಸಿತು. ಇನ್ನೂ ಕ್ಷಣಕಾಲ ಬಿಟ್ಟು ಮಾಳಿಗೆಯ ಮೆಟ್ಟಿಲುಗಳ ಮೇಲೆ ಸ್ವಷ್ಟವಾದ ಹೆಜ್ಜೆಗಳು…ಖಟ್ ಖಟ್ ಖಟ್ ಎಂದು ಮೇಲೆ ಬರುತ್ತಿದ್ದವು. ಜಾನಕಿ ಕಿವಿ ನಿಗುರಿಸಿ ಶ್ವಾಸೋಛ್ವಾಸ ನಿಲ್ಲಿಸಿ ಕೇಳುತ್ತಿದ್ದಳು…. ಒಳ ಮನಸ್ಸಿನಲ್ಲೇ ಅವರು ಏರಿಬಂದ ಮೆಟ್ಟಿಲುಗಳನ್ನು ಎಣಿಸುತ್ತಿದ್ದಳು. ಎಣಿಸುತ್ತಿದ್ದಂತೇ ಅವಳ ಮೋರೆ ವಿವರ್ಣವಾಗತೊಡಗಿತು. ಭೀತಿ-ಕಾತರಗಳು ಮೊತ್ತವಾಗಿ ಮೂಡಿದ ಕಂಗಳೆರಡೂ ಕೋಣೆಯ ಕದದ ಮೇಲೆ ಊರಿದ್ದವು. ಹೆಂಡತಿಯ ಈ ವಿಚಿತ್ರ ಮುಖಭಾವವನ್ನು ಕಂಡು ರಾಮಕೃಷ್ಣನಲ್ಲೂ ಭೀತಿ ಮೊಳೆಯಹತ್ತಿತು. ಅವನೂ ಭಯಗ್ರಸ್ತ ಏಕಾಗ್ರದೃಷ್ಟಿಯಿಂದ ಬಾಗಿಲೆಡೆಗೇ ನೋಡುತ್ತಿದ್ದ…ಎಡಬಿಡದೇ ಮೇಲೆ ಮೇಲೆ ಬರುತ್ತಿದ್ದ ಹೆಜ್ಜೆಯ ಆವಾಜನ್ನು ಕಿವಿ ಆನಿಸಿ ಕೇಳುತ್ತಿದ್ದ. ಇದ್ದಕ್ಕಿದ್ದಂತೆ ಎದೆಯ ಗುಂಡಿ, ಹಣೆಗಳ ಮೇಲೆ ತೆಳುವಾದ ಬೆವರು ಮೂಡಹತ್ತಿತು. ತುಟಿ ಬಣ್ಣಗೆಟ್ಟವು…ಹೆಜ್ಜೆಗಳು ಮೂರನೇ ಮಜಲೆಗೆ ಬಂದೊಡನೆಯೇ ಗಂಡಹೆಂಡಿರಿಬ್ಬರೂ ‘ಅದೋ ಅವರು ಇಲ್ಲೇ ಬರುತ್ತಿದ್ದಾರೆ’ ಎಂಬ ಭೀತಿಯ ಭಾವ ಮೂಡಿದ ಕಂಗಳಿಂದ ಒಬ್ಬರನ್ನೊಬ್ಬರು ನೋಡಿ ಒಮ್ಮಲೇ ಸೋಫಾದಿಂದ ಎದ್ದು ನಿಂತರು…ಹೆಜ್ಜೆಗಳು ತಮ್ಮ ಬಾಗಿಲೆಡೆಗೇ ಬರುವುದನ್ನು ಕೇಳುತ್ತಾ ನಿಂತರು. ಇಬ್ಬರ ಎದೆಗಳೂ ಡವಡವ ಎನ್ನುತ್ತಿದ್ದವು… ಮುಂದಿನ ಒಂದು ಕ್ಷಣವನ್ನು ಅವರು ಒಂದು ಯುಗವೆಂಬಂತೆ ಕಳೆದರು. +ಆದಾಗ, ಕದದ ಮೇಲೆ ಯಾರೋ ಜೋರಿನಿಂದ ಬಡಿದ ಸದ್ದು! +ರಾಮಕೃಷ್ಣ ಜಾನಕಿಯವರಿಗೆ ಏಕೊ ಹಾಗೆ ಬಡಿದವರು ಸಿಟ್ಟುಗೊಂಡಿದ್ದಾರೆಂದು ಕಾರಣವಿಲ್ಲದೆಯೇ ಅನಿಸಿತು. ಲಗುಬಗೆಯಿಂದ ಕದವನ್ನು ಸಮೀಪಿಸಿ ರಾಮಕೃಷ್ಣ ನಡುಗುವ ಕೈಗಳಿಂದ ಕದ ತೆರೆದ. ಕಣ್ಣ ಮುಂದೆ ನಿಂತವರನ್ನು ನೋಡು ರಾಮಕೃಷ್ಣ ಜಾನಕಿಯರು ದಿಙ್ಮೂಢರಾದರು. ಗರುಡನನ್ನು ನೋಡಿ ಕಂಗಾಲಾಗಿ ಮೈ ಮುದುಡಿಕೊಂಡ ಹಾವಿನಂತಾದರು. ಆಳೆತ್ತರದ ಕಪ್ಪುಬಣ್ಣದ ಆಜಾನುಬಾಹು ಗಂಡಸು. ಕಬ್ಬಿಣವನ್ನು ಎರಕಹೊಯ್ದು ಮಾಡಿದಂತಹ ಕೆಚ್ಚು ತುಂಬಿದ ಮುಖಕ್ಕೆ ಗೇಣುದ್ದದ ಪೊತ್ತೆ ಮೀಸೆಗಳು ವಿಚಿತ್ರ ಉಗ್ರತೆಯನ್ನು ತಂದಿದ್ದವು. ಪಾದಗಳನ್ನೂ ಮುಚ್ಚುವಂತೆ ಉದ್ದವಾಗಿ ಉಟ್ಟ ಶುಬ್ರಶುಭ್ರವರ್ಣದ ಧೋತರ. ಮೈಯಲ್ಲಿ ಅದೇ ಬಣ್ಣದ ತೆಳುವಾದ ನಿಲುವಂಗಿ. ಅಂಗಿಯ ತೋಳುಗಳನ್ನು ಮೊಣಕೈವರೆಗೆ ಮಡಚಿಕೊಂಡದ್ದರಿಂದ ಹೊರದೋರುವ ವಜ್ರಬಲ ಅಭಿವ್ಯಕ್ತಿಸುವ ಕಪ್ಪು ಕೈಗಳು, ಬಿರುಸಾದ ಸೆರೆಗಳು ಉಬ್ಬಿತೋರುವ ದಪ್ಪವಾದ ಕೊರಳು, ಪ್ರಚಂಡವಾದ ದರ್ಪಸಾರುವ ಹರವಾದ ಎದೆ. ಜೊತೆಗೆ ಬಂದ ಹೆಂಗಸೂ ಹಾಗೆಯೇ-ಅವನ ಹೆಂಡತಿಯಾಗಲು ಶೋಭಿಸುವ ಮೈಕಟ್ಟಿನವಳು. ಅವನದೇ ಬಣ್ಣ, ಕಪ್ಪು. ಕಚ್ಚೆ ಹೊಡೆದುಟ್ಟ ೬ ವಾರಿನ ಸೀರೆ, ಬಿಗಿದು ಮುಡಿಕಟ್ಟಿದ ಕೂದಲು, ಮೊಣಕೈವರೆಗೆ ಮುಚ್ಚಿದ ಹಳೇಕಾಲದ ರವಿಕೆ ಮೋರೆ ಕೊರಳು, ಕೈಗಳು ಅದೇ ಗಂಡಸಿನ ದರ್ಪವನ್ನು ಸಾರುತ್ತಿದ್ದವು. ಏಕೋ ತಮ್ಮ ಜನ್ಮದಲ್ಲೇ ಈವರೆಗೆ ನೋಡಿ ಗೊತ್ತಿರದ-ಹೇಳದೇ ಕೇಳದೇ ತಮ್ಮ ಬಾಗಿಲಿನಲ್ಲಿ ಬಂದು ಹಾಜರಾದ ಈ ಅಪರಿಚಿತರು ಈ ಲೋಕದ ವ್ಯಕ್ತಿಗಳಲ್ಲ ಎಂಬ ಭಾವನೆ ರಾಮಕೃಷ್ಣನ ಮನಸ್ಸಿನಲ್ಲಿ ಮೂಡಿ ಮೈ ನವಿರುಗೊಳಗಾಯಿತು. ಎಲ್ಲೋ ಪುರಾಣ, ಇತಿಹಾಸಗಳಲ್ಲೋ, ರೋಮಾಂಚಕಾರೀ ಕತೆಕಾದಂಬರಿಗಳಲ್ಲೋ ಓದಿ ತಿಳಿದ ವ್ಯಕ್ತಿಗಳಿಬ್ಬರು ಒಮ್ಮೆಲೇ ಜೀವ ಪಡೆದು ತನ್ನ ಕಣ್ಣಮುಂದೆ ನಿಂತಿದ್ದಾರೆ ಎನಿಸಿತು. ತನಗಾದುದು ಬರಿಯ ಭ್ರಮೆಯಲ್ಲ ತಾನೇ? ಆದರೆ ಬಂದವರ ಜತೆಗೆ ಬಂದ, ಅವರ ಟ್ರಂಕನ್ನು ಹೊತ್ತು ತಂದ, ತನ್ನ ಪರಿಚಯದ ಆ ಆಳು ಇದು ಭ್ರಮೆಯಲ್ಲವೆಂದು ಸಾರುತ್ತಿದ್ದ. ಅವರಿಬ್ಬರನ್ನು ಕಂಡು ತನ್ನಂತೆಯೇ ಭಯದಿಂದ ಮುದ್ದೆಯಾದ ತನ್ನ ಹೆಂಡತಿಯ ಮೋರೆಯ ಮೇಲಿನ ಕಂಗಾಲ ಭಾವವೂ ಈ ಮಾತನ್ನೇ ಸಮರ್ಥಿಸುತ್ತಿತ್ತು….. ಬೇರೆ ಯಾರದೋ ಮನೆಗೆ ಬಂದವರು ದಾರಿ ತಪ್ಪಿ ತಮ್ಮ ಮನೆಗೆ ಬಂದಿರಲಿಕ್ಕಿಲ್ಲ ತಾನೇ? ತಮ್ಮ ಮನೆಯ ಬಾಗಿಲ ಮೇಲೆ ತನ್ನ ಹೆಸರಿನ ಹಲಗೆಯನ್ನು ತೂಗಿರಲಿಲ್ಲ. ತಮ್ಮ ಮನೆಗೇ ಬಂದಿದ್ದರೆ ಈ ಮೊದಲು ಎಂದಿಗೂ ಬಂದಿರದ ಈ ಅಪರಿಚಿತರಿಗೆ ಇದೇ ತಮ್ಮ ಮನೆಯೆಂದು ತಿಳಿದ ಬಗೆ ಹೇಗೆ?-ಕೇಳಿ ನೋಡೋಣವೇ?… ರಾಮಕೃಷ್ಣನಿಗೆ ಆ ಧೈರ್ಯವಾಗಲಿಲ್ಲ. ನಾಲಗೆ ಅದಾಗಲೇ ಒಣಗಿ ಕೊರಡಾಗಿತ್ತು. ಮೇಲಾಗಿ ಬಂದವರು ಅವನಿಗೆ ಈ ಅವಕಾಶ ಕೊಟ್ಟರಲ್ಲವೇ! ತಮ್ಮನ್ನು ಬೆದರಿದ ಕಂಗಳಿಂದ ನೋಡುತ್ತ ನಿಂತ ರಾಮಕೃಷ್ಣ ಜಾನಕಿಯರ ಕಡೆಗೆ ಅವರಿಬ್ಬರು ಬರಿಯೆ ಎರಡು ಕ್ಷುದ್ರ ಜಂತುಗಳು ಎಂಬಂತೆ ನೋಡಿ, ಟ್ರಂಕು ಹೊತ್ತು ನಿಂತ ಆಳಿಗೆ, ಕೋಣೆಯ ಮೂಲೆಯೊಂದರತ್ತ ಬೊಟ್ಟು ತೋರಿಸಿ “ಅಲ್ಲಿಡು” ಎಂದು ಆಜ್ಞೆಮಾಡಿದ ಆ ಗಂಡಸು. ಆ ದನಿಯಲ್ಲಿಯ ದರ್ಪ, ಅಧಿಕಾರ ನೋಡಿ ರಾಮಕೃಷ್ಣ ತತ್ಥರ ನಡುಗಿದ. ಏಕೋ ಹೇಳದೇ ಕೇಳದೇ, ಚಿಕ್ಕಂದಿನಲ್ಲಿ ನೋಡಿದ ಬಯಲಾಟದೊಳಗಿನ ದುಷ್ಟಪಾತ್ರವೊಂದರ ನೆನಪು ಅವನ ಮನಸ್ಸಿನಲ್ಲಿ ಮಿಂಚಿನಂತೆ ಸುಳಿದು ಮಾಯವಾಯಿತು. ಆಳು ಕೂಡಲೇ ಕೋಣೆಯೊಳಗೆ ನಡೆದು ಅವರು ಇಡಲು ಹೇಳಿದ ಜಾಗದಲ್ಲಿ ಟ್ರಂಕನ್ನು ಇಟ್ಟು ಅವಸರ ಅವಸರವಾಗಿ ಕೂಲಿ ಕೇಳುವ ಮೊದಲೇ ಬಾಗಿಲ ಕಡೆಗೆ ಹೆಜ್ಜೆಯಿಡಹತ್ತಿದ, ಅದಾಗಲೇ ಕೋಣೆಯೊಳಗೆ ಕಾಲಿಟ್ಟ ಆ ಗಂಡಸು ಅವನನ್ನು ದುರುಗುಟ್ಟಿ ನೋಡಿ ಗುಡುಗಿದ “ಏ ಕುರಿಯ ಗಂಡ, ಕೂಲಿ ಬೇಡವೇನೋ? ಎಷ್ಟು ರೊಕ್ಕ?” ಆಳು ಪುಕ್ಕ ದನಿಯಲ್ಲಿ ಹೇಳಿದ, “ಎಂಟಾಣೆ.” ಆಗ ಆ ಗಂಡಸು ರಾಮಕೃಷ್ಣನತ್ತ ತಿರುಗಿ “ಅವನಿಗೆ ಎಂಟಾಣೆಯನ್ನು ಕೊಟ್ಟು ಕಳಿಸಿಬಿಡು.” ದನಿಯಲ್ಲಿ ಅದೇ ಅಧಿಕಾರವಿತ್ತು. ರಾಮಕೃಷ್ಣ ಒಮ್ಮೆಲೇ ‘ಇವನು ಯಾವಾಗೊಮ್ಮೆ ತನ್ನ ಮನೆಗೆ ಬಂದಾನು, ಹೀಗೆ ಆಜ್ಞೆ ಮಾಡಿಯಾನು, ತಾನು ಅದನ್ನು ಪಾಲಿಸೇನು ಎಂದು ಕಾಯುತ್ತಾ ನಿಂತವನಂತೆ ಕೂಡಲೇ ಒಳಕೋಣೆಗೆ ನುಗ್ಗಿ ಗೋಡ್ರೇಜ್ ಕಪಾಟಿನೊಳಗಿಟ್ಟ ತನ್ನ ಕಾಕೇಟಿಗಾಗಿಪಾಕೇಟಿಗಾಗಿ ಹುಡುಕಾಡಹತ್ತಿದ. ಅದು ಕೂಡಲೇ ಕೈಗೆ ಹತ್ತದ್ದರಿಂದ ಪಿಸುಮಾತಿನಲ್ಲೇ ಜಾನಕಿಯನ್ನು ಕರೆಯಹತ್ತಿದ. ಆದರೆ ಅದಾಗಲೇ ಜಾನಕಿಯನ್ನು ಆ ಹೆಂಗಸು ಬೇರೊಂದು ಕೆಲಸಕ್ಕೆ ನೇಮಿಸುತ್ತಿದ್ದಳು; “ನಮ್ಮಿಬ್ಬರದೂ ಝಳಕವಾಗಬೇಕಾಗಿದೆ. ಕೂಡಲೇ ನೀರು ಕಾಯಿಸಲು ಇಡು ತಾಯಿ.” ಜಾನಕಿಯು ಒಡನೆಯೇ ಸ್ಟೋವ್ ಹೊತ್ತಿಸಲು ಅಡುಗೆ ಮನೆಗೆ ಧಾವಿಸಿದಳು. ಇತ್ತ ಹಣದ ಪಾಕೀಟನ್ನು ಹುಡುಕುತ್ತಿದ್ದ ರಾಮಕೃಷ್ಣ ಅದು ಕೂಡಲೇ ಸಿಗದ್ದರಿಂದ ಗಾಬರಿಗೊಂಡು ಗೋಡ್ರೇಜ್ ವಾರ್ಡ್‌ರೋಬಿನಲ್ಲಿ ಹ್ಯಾಂಗರುಗಳ ಮೇಲೆ ತೂಗುಹಾಕಿದ್ದ ತನ್ನ ಪೇಂಟು, ಕೋಟುಗಳನ್ನೆಲ್ಲ ಭರಭರನೆ ಹೊರತೆಗೆದು, ಕಿಸೆ ನೋಡಿ ನೆಲದ ಮೇಲೆ ಒಗೆಯುತ್ತಿದ್ದ. ನಿಮಿಷಾರ್ಧದಲ್ಲಿ ಕಪಾಟಿನೊಳಗಿನ ಅರಿವೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಕೋಣೆಯ ನೆಲದ ಮೇಲೆಲ್ಲಾ ಹರಡಿ ಬಿದ್ದಿದ್ದುವು. ಆದರೆ ಪಾಕೀಟು ಮಾತ್ರ ಸಿಗಲಿಲ್ಲ. ಆಗ ಸಿಟ್ಟಿನಿಂದ, ಅದಕ್ಕಿಂತಲೂ ಹೆಚ್ಚಾಗಿ ಭೀತಿಯಿಂದ ತನ್ನ ಹೆಂಡತಿ ತನ್ನ ಸಹಾಯಕ್ಕೆ ಬರದದ್ದನ್ನು ಕಂಡು ಒಳಗೊಳಗೇ ಅವಳನ್ನು ಶಪಿಸಹತ್ತಿದ….ಮರುಕ್ಷಣ, ಒಳಗೆ ಹೋದ ಇವನು ಹೊರಗೆ ಬರದೇ ಇದ್ದುದನ್ನು ಕಂಡು ಬೇಸತ್ತ ಆ ಅಪರಿಚಿತ ಗಂಡಸು ಮೆಲ್ಲನೆ ಕೋಣೆಯ ಬಾಗಿಲಲ್ಲಿ ಬಂದು ದಾರಿಗಟ್ಟಿ ನಿಂತವರ ಹಾಗೆ ತನ್ನ ಎರಡೂ ಕೈಗಳನ್ನು ಬಾಗಿಲಿನ ಚೌಕತ್ಟಿನಚೌಕಟ್ಟಿನ ಮೇಲೆ ಇಟ್ಟು ನಿಂತ. ಆಗ ಅವನ ಭವ್ಯ ಆಕೃತಿ ಆ ಚಿಕ್ಕ ಬಾಗಿಲನ್ನು ಪೂರ್ಣವಾಗಿ ವ್ಯಾಪಿಸಿ ನಿಂತ ಭಾಸವಾಗಿ ರಾಮಕೃಷ್ಣನ ಜಂಘಾಬಲವೇ ಉಡುಗಿ ಹೋಯಿತು. ಅವನ ಚಟುವಟಿಕೆಗಳಲ್ಲಿಯ ಅವ್ಯವಸ್ಥೆ ಇನ್ನೂ ಹೆಚ್ಚಿತು. ಆಗ ಆ ಗಂಡಸು ಬಾಯಬಿಟ್ಟ: +“ಓ!ಇದೆಂತಹ ಹುಚ್ಚು ಗಬಾಳಿತನ. ಇದೇ ಇದೇ ಏನು ಅರಿವೆ ಇಡುವ ರೀತಿ? ಇದು ಮನೆಯೋ ದನಗಳ ಕೊಟ್ಟಿಗೆಯೋ? ಯಾಕೆ, ಹಣ ಇನ್ನೂ ಸಿಗಲಿಲ್ಲವೇ? ಎಷ್ಟು ಹೊತ್ತು ಆ ಬಡವನನ್ನು ಕಾಯಿಸುತ್ತೀ? ಹಣ ಇಲ್ಲದಿದ್ದರೆ ಬಾಯಬಿಟ್ಟು ಹೇಳಬಾರದೇ?-ಇಷ್ಟೆಲ್ಲ ಹಗರಣ ನಡೆಸುವ ಬದಲು?” +ಮಾತಿನಲ್ಲಿ ಅದೇ ದರ್ಪ! ಅದೇ ಅಧಿಕಾರ! +“ಇಲ್ಲ ಇಲ್ಲ, ಹಣ ಬೇಕಾದಷ್ಟಿದೆ. ಪಾ…ಪಾ…ಪಾಕೀ…ಹಾಂ ಇದು ಸಿಕ್ಕಿತು…” ಎಂದು ಏನೋ ಗುಣಿಗುಣಿಸುತ್ತ ಕೊನೆಗೊಮ್ಮೆ ಕೈಗೆ ಸಿಕ್ಕ ಪಾಕೀಟಿನೊಳಗಿಂದ ಎಂಟಾಣೆಯ ನಾಣ್ಯ ಒಂದನ್ನು ಹೊರತೆಗೆದು ದಾರಿಗಡ್ಡ ನಿಂತ ಆ ವ್ಯಕ್ತಿಯನ್ನು ಬದಿಗೆ ಸರಿ ಎನ್ನುವ ಧೈರ್ಯವಾಗದೇ ಅಡುಗೆಯ ಮನೆಯ ದಾರಿಯಿಂದಲೇ ಹೊರಗೆ ಹೋಗಲು ಯತ್ನಿಸಿದ. ಆಗ ತಿರುಗಿ ಗುಡುಗಿತು ಆ ಗಂಡಸಿನ ಅಧಿಕಾರವಾಣಿ: +“ಏ ಏ ಮುಠಾಳಮುಠ್ಠಾಳ, ಅಲ್ಲಿಂದ ಯಾಕೆ ಓಡುತ್ತೀಯೋ? ಇಲ್ಲಿಂದ ಹೋಗಲ್ಲ…ಅವನು ಈ ಬದಿಯ ಬಾಗಿಲಲ್ಲೇ ನಿಂತಾನೆ.” ಹಾಗೆ ಗುಡುಗಿ ತುಸು ಬದಿಗೆ ಸರಿದು ನಿಂತಾಗ ಸಿಕ್ಕ ಸಣ್ಣ ಅವಕಾಶದೊಳಗಿಂದಲೇ ಹೊರಗೆ ನುಸುಳಿ, ರಾಮಕೃಷ್ಣ ಟ್ರಂಕು ಹೊತ್ತು ಬಂದವನು ನಿಂತ ವರಾಂಡಕ್ಕೆ ಬಂದ. ಆದರೆ ಆ ಹೊತ್ತಿಗೆ ಆ ಆಳು ಅಲ್ಲಿಂದ ಅದೃಶ್ಯನಾಗಿದ್ದ. “ಅಯ್ಯೋ ದೊಡ್ಡ ಘಾತವಾಯಿತಲ್ಲ’ ಎನ್ನುವಂತೆ ರಾಮಕೃಷ್ಣ ಕೂಡಲೇ ಓಡಿ- ಮೂರೂ ಮಜಲೆಗಳ ಮೆಟ್ಟಿಲುಗಳನ್ನು ಇಳಿದು ಹೊರಗೆ ಕಂಪೌಂಡಿನ ಗೇಟಿನವರೆಗೆ ಹೋಗಿ ನೋಡಿದ. ಆಳು ಮನುಷ್ಯ ಕನ್ಣಿಗೆ ಬೀಲಲಿಲ್ಲಕಣ್ಣಿಗೆ ಬೀಳಲಿಲ್ಲ. “ಅಯ್ಯೋ ‘ಅವನು’ ಕೇಳಿದರೆ ಏನು ಮಾಡಲೀ?” ಎಂದು ಚಿಂತಾಕ್ರಾಂತನಾಗಿ ಮಾಳಿಗೆಯ ಮೆತ್ಟಿಲುಗಳನ್ನುಮೆಟ್ಟಿಲುಗಳನ್ನು ಭರಭರನೆ ಏರಿ ಬಂದು ತಿರುಗಿ ತಮ್ಮ ಮನೆಯನ್ನು ಸೇರುವ ಹೊತ್ತಿಗೆ ‘ಇದು ತಮ್ಮ ಮನೆ’ ಎಂಬ ಅರಿವು ಪೂರ್ಣವಾಗಿ ಅಳಿಸಿಹೋಗಿತ್ತು. ಇದು ‘ಅವರ’ಮನೆ, ತಾನು ‘ಅವರ’ ದಾಸಾನುದಾಸ ಎಂಬಂತೆ ನಮ್ರನಾಗಿ ಮನೆಹೊಕ್ಕು, ಅದಾಗಲೇ ಸೋಫಾದಮೇಲೆ ಆಸನರೂಢನಾದಆಸನಾರೂಢನಾದ ಆ ಗಂಡಸನ್ನು ಸಮೀಪಿಸಿಮೆಲ್ಲನೇ ಉಸುರಿದ: “ಆ ಆಳು ಮನುಷ್ಯ ಹಣ ಪಡೆಯುವ ಮೊದಲೇ ಹೋಗಿಬಿಟ್ಟ.” ಏನೋ ಮಹಾಪರಾಧ ಮಾಡಿದ ದನಿಯಿತ್ತು ಆ ಮಾತಿನಲ್ಲಿ. +“ಹೋಗಿಬಿಟ್ಟನಲ್ಲ? ಚೆನ್ನಾಯಿತು, ನಿನ್ನ ಎಂಟಾಣೆ ಉಳಿದುಕೊಂಡವು” ಎಂದು ತಿರಸ್ಕಾರದಲ್ಲಿ ನುಡಿದು….“ನನ್ನನ್ನೇನು ನೋಡುತ್ತಾ ನಿಂತಿ? ಹೋಗು ಹೋಗು, ಒಳಗೆ ಹೋಗು… ಆ ಅರಿವಿ ಗಿರಿವಿ ಎಲ್ಲ ಚೊಕ್ಕ ಮಾಡಿ ಇಡು. ಹಾಗೂ ಅಡಿಗೆಯ ಮನೆಯಲ್ಲಿ ನಿನ್ನ ಹೆಂಡತಿ ಘೋಟಾಳೆ ಮಾಡಿ ಕುಳಿತಾಳೆ ನೋಡು. ಅವಳಿಗೂ ತುಸು ಸಹಾಯ ಮಾಡು…ಅಬ್ಬಬ್ಬ! ಎಂತಹ ಗಬಾಳ ಜನರು…ನೀವು ವ್ಯವಸ್ಥೆ ಎನ್ನುವುದನ್ನು ಎಲ್ಲಿ ಕಲಿಯುವವರೊ!” +ಇಡೀ ಕಟ್ಟಡದಲ್ಲೇ ಅತ್ಯಂತ ಸುವ್ಯವಸ್ಥಿತ, ಚೊಕ್ಕವಾದ ಸಂಸಾರ ನಡೆಸುವ ಗಂಡಹೆಂಡಿರೆಂದು ಹೆಸರಾದ ತಮ್ಮ ಬಗ್ಗೆ ಆಡಿದ ಈ ಮಾತುಗಳಿಂದ ರಾಮಕೃಷ್ಣನಿಗೆ ಎಳ್ಳಷ್ಟೂ ಕೆಡಕೆನಿಸಲಿಲ್ಲ. ‘ತಾನು’,ತನ್ನ ಹೆಂಡತಿ’. ‘ತನ್ನ ಮನೆ’ ಎಂಬ ಪ್ರಜ್ಞೆಯೇ ನಾಶವಾದಂತಿತ್ತು. ಏಕೋ ಆ ಕ್ಷಣದ ಮಟ್ಟಿಗಂತೂ ತಾನು ಈ ಜಗತ್ತಿನಲ್ಲೇ ಅತ್ಯಂತ ಅವ್ಯವಸ್ಥೆಯ ಮನುಷ್ಯ ಎಂಬ ಭಾವನೆ ಅವನಲ್ಲಿ ಮೊಳೆತು ತನಗೇ ಕೆಡುಕೆನಿಸಿತು… +ಮರುಗಳಿಗೆ ಅವನು ಜಾನಕಿಗೆ ನೆರವಾಗಲು ಅಡುಗೆಯ ಮನೆಗೆ ನಡೆದ. ಇಬ್ಬರೂ ಕೂಡಿ ಬಂದವರ ಸ್ನಾನದ ವ್ಯವಸ್ಥೆ ಮಾಡುವಾಗ; ಸ್ನಾನ ಮುಗಿದುದೇ ಚಹದ ಸಿದ್ಧತೆಯಲ್ಲಿದ್ದಾಗ; ತದನಂತರದ ಊಟ, ಮದ್ಯಾಹ್ನದಮಧ್ಯಾಹ್ನದ ನಿದ್ದೆ, ಸಂಜೆಯ ಚಹ, ರಾತ್ರೆಯ ಊಟ- ಈ ಎಲ್ಲವುಗಳನ್ನೂ ಅತ್ಯಂತ ಜಾಗರೂಕತೆಯಿಂದ ಒಂದರ ನಂತರ ಒಂದನ್ನು ಸುವ್ಯವಸ್ಥಿತವಾಗಿ ಪಾರುಗಾಣಿಸುವಾಗ ರಾಮಕೃಷ್ಣ ಜಾನಕಿಯರು ತಾವಿಬ್ಬರೂ ಗಂಡಹೆಂಡಿರೆಂಬುದನ್ನೇ ಮರೆತಂತಿತ್ತು. ತಾವಿಬ್ಬರೂ ಈ ಮನೆಯಲ್ಲಿಯ ಪರಸ್ಪರ ಸಂಬಂಧವಿಲ್ಲದ ಚಾರಕರು ಎಂಬ ಭಾವ ಅವರ ಅಂದಿನ ಚಟುವಟಿಕೆಗಳಲ್ಲಿ ಆದ್ಯಂತವೂ ಒಡೆದು ಕಾಣುತ್ತಿತ್ತು. ಅದೇ ಬಗೆಯ ಕಾತರ; ಸುವ್ಯವಸ್ಥೆ ಓರಣಗಳ ಬಗೆಗೆ ಜಾಗರೂಕತೆ-‘ಅವರಿಂದ ಶಹಭಾಸಗಿರಿ’ ಪಡೆಯಬೇಕು ಎನ್ನುವಂತೆ! ‘ಅವರ’ ಊಟವಾದ ಮೇಲೆಯೇ ತಮ್ಮ ಊಟ. ‘ಅವರ’ ಚಹ ಮುಗಿದ ಮೇಲೆಯೇ ತಮ್ಮ ಚಹ, ಮದ್ಯಾಹ್ನದಮಧ್ಯಾಹ್ನದ ಊಟ ಮುಗಿದ ಮೇಲೆ ‘ಅವರು’ ಹೊರಗಿನ ಕೋಣೆಯಲ್ಲಿ ನಿದ್ದೆ ಮಾಡುತ್ತಿದ್ದಾಗ, ಒಳಗಿನ ಕೆಲಸಬೊಗಸೆಗಳಲ್ಲಿ ನಿರತರಾಗಿದ್ದಾಗ ಪರಸ್ಪರರಲ್ಲಿ ಮಾತನಾಡುವಾಗಲೂ ಅದೇ ಧಾಟಿ, ‘ಗದ್ದಲ ಮಾಡಿದ್ದೀಯಾ ಜೋಕೆ! ಹೊರಗೆ ಮಲಗಿದ್ದಾರೆ.’ +ತಾವಿಬ್ಬರೂ ಗಂಡಹೆಂಡಿರು, ಈ ಮನೆಯ ಯಜಮಾನರು. ಆದರೆ ಈ ಅಪರಿಚಿತ ಆಗಂತುಕರ ದುಷ್ಟ ಸಮ್ಮೋಹನ ಪ್ರಭಾವಕ್ಕೆ ಒಳಗಾಗಿ ತಾವು ಇದನ್ನೆಲ್ಲ ಮರೆತಿದ್ದೆವು, ಎನ್ನುವ ಅರಿವು ರಾಮಕೃಷ್ಣ ಜಾನಕಿಯರಿಗೆ ಬಂದದ್ದು ತೀರ ತಡವಾಗಿ. ರಾತ್ರೆ ಬಂದವರಿಗೆ ಹಾಸಿಗೆ ಹಾಸಿಕೊಟ್ಟು ಅವರ ಮುಂದಿನ ಆಜ್ಞೆಯನ್ನು ಕಾಯುವವರಂತೆ ಮಲಗುವ ಕೋಣೆಯಲ್ಲಿ ಬಾಗಿಲಲ್ಲಿ ನಿಂತಾಗ ಆ ಗಂಡಸು ಆಜ್ಞಾಪಿಸಿದ್ದ: “ಏನು ನಮ್ಮನ್ನು ನೋಡುತ್ತ ನಿಂತಿರಿ? ನೀವು ಗಂಡಹೆಂಡಂದಿರು ನಿಮ್ಮ ಕೋಣೆಗೆ ಹೋಗಿ ಮಲಗಿಕೊಳ್ಳಿ”. ರಾಮಕೃಷ್ಣ ಕೂಡಲೇ ತನ್ನ ಕೋಣೆಯ ಕದ ಮುಚ್ಚಹತ್ತಿದ. ಅವನು ಕದ ಮುಚ್ಚುತ್ತಿರುವಾಗಲೇ ಆ ಗಂಡಸು ತಿರುಗಿ ಅಂದ; “ನಾವು ಬೆಳಿಗ್ಗೇ ಎದ್ದು ಹೋಗಬೇಕು; ನಿಮಗೆ ನಸುಕಿಗೆ ಎದ್ದು ಅಭ್ಯಾಸವಿದೆಯೋ ಇಲ್ಲವೋ. ನೀವು ಏಳುವುದು ಬೇಡ. ನಾನು ಬೆಳಿಗ್ಗೆ ಬಂದ ಆ ಆಳಿಗೆ ಆಗಲೇ ಹೇಳಿ ಇಟ್ಟಿದ್ದೇನೆ.” ‘ಈಗ ಹೇಗಾದರೂ ಕೋಣೆಯ ಕದ ಮುಚ್ಚಿದೆ, ನಮ್ಮ ಕೋಣೆಯಲ್ಲಿ ನಾವೀಗ ಭದ್ರರಾಗಿದ್ದೇವೆ’ ಎಂಬ ಭಾವನೆಯಿಂದಲೋ ಅಥವಾ ಹೇಗಾದರೂ ಅಕಸ್ಮಾತ್ತಾಗಿ ಬಂದೊದಗಿದ ಪೀಡೆ ಕೊನೆಗೊಮ್ಮೆ ತೊಲಗುತ್ತದಲ್ಲ ಎಂಬ ಸುದ್ದಿಯಿಂದಲೋ ರಾಮಕೃಷ್ಣ ಜಾನಕಿಯರಿಗೆ ಆ ಗಂಡಸಿನ ದನಿಯಲ್ಲೀಗ ಮೊದಲಿನ ಕಾಠಿಣ್ಯವಾಗಲೀ, ಅಮಾನುಷತೆಯಾಗಲೀ ತೋರಲಿಲ್ಲ. ಮರುಕ್ಷಣ, ಬೆಳಗಿನಿಂದ ಪಡೆದ ಮಾನಸಿಕ ಯಾತನೆಯ ಅರಿವು ಈಗ ಆಯಿತೆನ್ನುವಂತೆ ಇಬ್ಬರೂ ನಿರ್ವಿಣ್ಣರಾಗಿ ಹಾಸಿಗೆಯ ಮೇಲೆ ಒರಗಿದರು. ಬೆದರಿದ ಕಂಗಳಿಂದ ಒಬ್ಬರನ್ನೊಬ್ಬರು ನೋಡುತ್ತ ಪಿಸು ಮಾತಿನಲ್ಲೇ ಮಾತನಾಡಹತ್ತಿದರು. +“ಬಂದವರು ಯಾರೆಂದು ತಿಳಿಯಿತೇ?” +“ಇಲ್ಲ ನನಗಿದಾವುದರ ಅರ್ಥವೇ ಆಗುತ್ತಿಲ್ಲ: ನಮಗೆ ಇದು ಯಾರಾದರೂ ಮೋಡಿ ಗೀಡಿ ಹಾಕಿಲ್ಲ ತಾನೇ?” +ಅದಾಗ ಹೊರಗಿನ ಕೋಣೆಯಿಂದ ಹೆಣ್ಣುದನಿ ನುಡಿಯಿತು: +“ಈಗ ಆ ದೀಪ ಆರಿಸಿ ಸುಮ್ಮನೇ ಮಲಗಿದರಾಗದೇ?” +ಕೂಡಲೇ ರಾಮಕೃಷ್ಣ ಆಜ್ಞಾಧಾರಕ ಬಾಲಕನ ಹಾಗೆ ಹಾಸಿಗೆಯಿಂದ ಎದ್ದು ದೀಪವನ್ನಾರಿಸಿದ! ಆದರೆ ಹಾಗೆ ಆರಿಸುತ್ತಿರುವಾಗ ಅವನ ಮನಸ್ಸು ಷಂಢ ಸಿಟ್ಟಿನಿಂದ ಚೀರಿತು: ‘ಅಬ್ಬಾ ಇವರ ದರ್ಪವೇ; ಉದ್ಧಟತನವೇ! ನಮ್ಮ ಏಕಾಂತತೆಯ ಮೇಲೂ ಇವರ ದಾಳಿಯಲ್ಲ!’ ಆದರೆ ಅದನ್ನು ಪ್ರತಿಭಟಿಸಬೇಕು ಎನ್ನುವ ಸತ್ವ ಮಾತ್ರ ಅವನ ವ್ಯಕ್ತಿತ್ವದಲ್ಲಿ ಆಗ ಉಳಿದಿರಲಿಲ್ಲ. ಮನಸ್ಸಿಗಾದ ಅತೀವ ದಣುವಿನಿಂದಲೋ ತಮ್ಮ ಸತ್ವಹೀನತೆಯ ಅರಿವಿನಿಂದಲೋ ಇಬ್ಬರೂ ನಿದ್ದೆಯ ಮೊರೆಹೊಕ್ಕರು… +* +* +* +ಮರುದಿನ ಬೆಳಿಗ್ಗೆ ರಾಮಕೃಷ್ಣನಿಗೆ ಎಚ್ಚರವಾಗುವ ಹೊತ್ತಿಗೆ ದಿನಕ್ಕಿಂತ ಬಹಳ ತಡವಾಗಿತ್ತು. ರಸ್ತೆಯ ಬದಿಯ ಕಿಡಕಿಯೊಳಗಿಂದ ಮುಂಜಾವಿನ ಎಳೆ ಬೆಳಕು ಕೋಣೆ ತುಂಬ ಹಬ್ಬಿತ್ತು. ರಾಮಕೃಷ್ಣ ಹಾಸಿಗೆಯಲ್ಲಿ ಎದ್ದು ಕುಳಿತವನೇ ಮಗ್ಗುಲಲ್ಲೇ ಇನ್ನೂ ನಿದ್ದೆಯಲ್ಲಿದ್ದ ತನ್ನ ಹೆಂಡತಿಯ ನಿಷ್ಪಾಪ ಮುಗ್ಧ ಮೊಗವನ್ನು ನೋಡಿದವನೇ ಪ್ರೀತಿ ಉಕ್ಕಿ ಬಂದು ಮೃದುವಾಗಿ ಚುಂಬಿಸಿದ. ಅತ್ಯಂತ ಉಲ್ಲಸಿತ ಮನಸ್ಥಿತಿಯಲ್ಲಿ ಹೊರಕೋಣೆಗೆ ಬಂದ. ಆಗ ಅವನ ಲಕ್ಷ್ಯ ತುಸು ತೆರೆದುಕೊಂಡಿದ್ದ ಬಲಬದಿಯ ಬಾಗಿಲ ಕಡೆಗೆ ಹೋಯಿತು. ‘ಅರೇ ರಾತ್ರೆ ಇದನ್ನು ಮುಚ್ಚುವುದನ್ನೇ ಮರೆತೆವೇ?’ ಎಂದು ಆತಂಕಪತ್ತೂಆತಂಕಪಟ್ಟೂ ಲಗುಬಗೆಯಿಂದ ಅದನ್ನು ಸಮೀಪಿಸುವಾಗ ಮೆಲ್ಲನೆ ನಿನ್ನೆಯ ಅನುಭವ ನೆನಪು ಮೂಡಹತ್ತಿತು: ದುಗುಡದ ಕಾರ್ಮೋಡ ತಿರುಗಿ ಮನಸ್ಸನ್ನು ಆವರಿಸಹತ್ತಿತು. ಆದರೂ ಇದ್ದುದರಲ್ಲೇ ತುಸು ಸಮಾಧಾನ-‘ಅಹಾ! ಕೊನೆಗೂ ಒಮ್ಮೆ ಇಲ್ಲಿಂದ ತೊಲಗಿದರಲ್ಲ’ ಎಂದು. ‘ಅಥವಾ ಅವರು ಬಂದುದಾದರೂ ಅಹುದೇ? ಇಲ್ಲವೇ ತಾನು ಕಂಡದ್ದು ಬರಿಯೇ ಒಂದು ಕೆಂಗನಸೇ? ತನ್ನ ಮೆತ್ತಗಿನ ಸ್ವಭಾವದ ಪರಿಚಯವಿದ್ದ ತನ್ನ ಗೆಳೆಯರಾರಾದರೂ ತನ್ನ ತಮಾಷೆ ಮಾಡಬೇಕೆಂದು ಈ ಸುಳ್ಳು ನಾಟಕ ಹೂಡಿರಲಿಕ್ಕಿಲ್ಲವಷ್ಟೇ? ಅಥವಾ ತಮ್ಮ ಊರಿನವರೇ ಯಾರಾದರೂ…ಅಯ್ಯೋ ನಾನಾಗಿಯೇ ಬಂದವರಿಗೆ ಈ ಪ್ರಶ್ನೆ ಕೇಳಲಿಲ್ಲವಲ್ಲ! ಯಾರಿರಬಹುದು? ಹೇಳದೇ ಕೇಳದೇ ಬಂದು ನಮ್ಮ ಮನೆಯಲ್ಲಿ ನಮ್ಮ ಮೇಲೇ ಅಧಿಕಾರ ನಡೆಸಿ ಹೋದ ಈ ವಿಲಕ್ಷಣ ಅಪರಿಚಿತರು ಯಾರಿರಬಹುದು?’ ಮರುಕ್ಷಣ ಅವನ ಮನಸ್ಸು ಸಿಟ್ಟಿನಿಂದ ಬುಸುಗುಟ್ಟಿತು: ‘ಅಲ್ಲ ಅಲ್ಲ, ಅದು ಮುಖ್ಯವಾದ ಪ್ರಶ್ನೆಯೇ ಅಲ್ಲ. ಬಂದವರು ಬೇಕಾದವರು ಇರಲೊಲ್ಲರೇಕೆ? ಆದರೆ ನಮ್ಮ ಮನೆಗೆ ಬಂದವರ ಹೆಸರನ್ನು ನಾವೇ ಕೇಳಲಿಲ್ಲವಲ್ಲ. ಆ ನಮ್ಮ ಸ್ವಾತಂತ್ರ್ಯವನ್ನು ನಾವಾಗಿಯೇ ಬಿಟ್ಟುಕೊಟ್ಟೆವಲ್ಲ….ಮುಖ್ಯವಾಗಿ ನಾವು ನೀರಿಲ್ಲದವರು-ಸತ್ವಹೀನರು!’ ರಾಮಕೃಷ್ಣನಿಗೆ ತನ್ನ ನಡತೆಯ ಬಗ್ಗೆ ತನಗೇ ಸಿಟ್ಟು ಬಂತು. ತಿರಸ್ಕಾರ ಮೂಡಿತು: ‘ನಮ್ಮ ಮನೆಯಲ್ಲಿ ನನಗಿದ್ದ ಸ್ವಾತಂತ್ರ್ಯವನ್ನು ನಾನಾಗಿಯೇ ಚೆಲ್ಲಿಕೊಟ್ಟೆ-ಥೂ ಮೂರ್ಖ-ಹೇಡಿ ಹೇಡಿ…’ +ಸೋಫಾದಿಂದ ಧಡಕ್ಕನೆ ಎದ್ದವನೇ ರಾಮಕೃಷ್ಣ ಹೊರಗೆ ಬಾಲ್ಕನಿಗೆ ಬಂದ. ಬಾಲ್ಕನಿಯ ಗೋಡೆಯೊಂದರ ಮೇಲೆ ತೂಗಹಾಕಿದ ಕೆಲೆಂಡರ್ ಒಂದರ ಮೇಲೆ ಅವನ ಲಕ್ಷ್ಯ ಹೋಯಿತು. ಕೆಂಪು ಬಣ್ಣದ ಮೂರು ತಾರೀಖುಗಳು ನಿನ್ನೆ ಇಂದು ನಾಳೆ ರಜೆ ಎಂದು ಸಾರುತ್ತಿದ್ದವು. ಏಕೋ ಅವನ್ನು ನೋಡಿದ ಕೂಡಲೇ ರಾಮಕೃಷ್ಣನಿಗೆ ತಡೆಯಲಾಗದ ಸಿಟ್ಟು ಬಂದಿತು. ಕೆಲೆಂಡರನ್ನು ಸಮೀಪಿಸಿ ಆ ಹಾಳೆಯನ್ನು ಕಿತ್ತು ಚೂರುಚೂರಾಗಿ ಹರಿದೊಗೆದ. ಗಾಳಿಯಲ್ಲಿ ತೂರಿದ ಆ ಕಾಗದದ ಚೂರುಗಳು ಚೆಲ್ಲಾಪಿಲ್ಲಿಯಾಗಿ ಕೆಳಗಿಳಿಯುವುದನ್ನೇ ನೋಡುತ್ತಿದ್ದಾಗ ಅವನ ಲಕ್ಷ್ಯ ಒಮ್ಮೆಲೇ ಮುಂದಿನ ರಸ್ತೆಯ ಮೇಲೆ ಹೋಯಿತು. ನಿನ್ನೆ ನೋಡಿದ ಆ ಸ್ಟೀಮ್‌ರೋಲರ್ ತಿರುಗಿ ಬಂದಿತ್ತು- ರಸ್ತೆಯನ್ನು ಸರಿಗೊಳಿಸಲು. ‘ಗಡಗಡ’ ಗುಡುಗುತ್ತ ಹಿಂದೆಮುಂದೆ ಉರುಳುವಾಗ ಅದರ ಭಾರದ ಕೆಳಗೆ ರಸ್ತೆಯ ಮೇಲೆ ಹಾಸಿದ ಕಲ್ಲುಗಳು ಒಂದರ ನಂತರ ಒಂದು ಸಪಾಟಾಗುತ್ತಿದ್ದವು. ಸ್ಟೀಮ್‌ರೋಲರಿನಿಂದ ತುಸು ಅಂತರದಲ್ಲಿ ಬಿದ್ದ ದೊಡ್ಡ ಕಲ್ಲೊಂದು ರಾಮಕೃಷ್ಣನ ಲಕ್ಷ್ಯವನ್ನು ಸೆಳೆಯಿತು. ಎಲ್ಲಿಲ್ಲದ ಕುತೂಹಲ ಕೆರಳಿಸಿತು. ರಾಮಕೃಷ್ಣ ನೆಟ್ಟ ದೃಷ್ಟಿಯಿಂದ ಅದನ್ನೇ ನೋಡಹತ್ತಿದ. ಉಳಿದವುಗಳಿಗಿಂತ ತುಸು ದೊಡ್ಡದಾದ ಆ ಕಲ್ಲು ಆ ರೋಲರಿನ ಭಾರವನ್ನು ಹೇಗೆ ಪ್ರತಿಭಟಿಸೀತೋ ಎನ್ನುವುದನ್ನು ನೋಡಲು ಆತುರಗೊಂಡ. ಸ್ಟೀಮ್‌ರೋಲರು ಮೂರು ನಾಕ್ಲುನಾಲ್ಕು ಸಲ ಅದರ ಹತ್ತಿರ ಹತ್ತಿರ ಬಂದು ಹಿಂದೆ ಹೊರಳಿತು. ರಾಮಕೃಷ್ಣನ ಕುತೂಹಲ ಕ್ಷಣಕ್ಷಣಕ್ಕೆ ಹೆಚ್ಚಹತ್ತಿತು. ಏನೋ ದಿವ್ಯ ಘಟನೆಯೊಂದನ್ನು ಪ್ರತ್ಯಕ್ಷ ನೋಡಲಿದ್ದವನಂತೆ ಆ ಕೊನೆಯ ಕ್ಷಣವನ್ನು ಕಾಯಹತ್ತಿದ. ಕೊನೆಗೊಮ್ಮೆ ಆ ಕಲ್ಲೂ ಸ್ಟೀಮ್‌ರೋಲರಿನ ಪ್ರಚಂಡ ಭಾರದ ಕೆಳಗೆ ‘ಗುಡುಪ್’ ಎಂದು ಉಳಿದವುಗಳೊಂದಿಗೆ ಸಪಾಟಾಯಿತು. ಏಕೋ ಆ ಕಲ್ಲಿನ ಬಗೆಗೆ ಮೊದಲೊಮ್ಮೆ ತೀವ್ರವಾದ ತಿರಸ್ಕಾರವೆನಿಸಿತು: ಮರುಕ್ಷಣ ಅದರ ಬಗ್ಗೆ ಅರ್ಥವಾಗದ ಸಹಾನುಭೂತಿ ರಾಮಕೃಷ್ಣನ ಹೃದಯವನ್ನು ಮೆಲ್ಲನೇ ಆವರಿಸಹತ್ತಿತು. +***** +(೧೯೫೯) +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ […] +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_519.txt b/Kannada Sahitya/article_519.txt new file mode 100644 index 0000000000000000000000000000000000000000..603fc04eea02341e6c475cf356c7a683a970bf41 --- /dev/null +++ b/Kannada Sahitya/article_519.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಾಂಬೋದಿ +ತಾಳ — ಅಟ್ಟ +ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ | +ಕುರುಹ ಪೇಳಿ ಕುಳೀತಿದ್ದ ಜನರು ||ಪ|| +ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ | +ಗಂಟಲು ಮೂರುಂಟು ಮೂಗಿಲ್ಲವು || +ಕುಂಟಮನುಜನಂತೆ ಕುಳಿತಿಹುದು ಮನೆಯೊಳಗೆ | +ಎಂಟುಹತ್ತರ ಅನ್ನವನು ಭಕ್ಷಿಸುವುದು ||೧|| +ನುಡಿಯುತಲುಂಬುದು ನಡುನೆತ್ತಿಯಲಿ ಬಾಯಿ | +ಕಡುನಾದದ ಗಾಯನ ಮಾಡುತಿಹುದು || +ಅಡವಿಯೊಲು ಹುಟ್ಟುವುದು ಅಗಲಿ ಎರಡಾಗುವುದು | +ಬಡತನವು ಬಂದರೆ ಬಹಳ ರಕ್ಷಿಪುದು ||೨|| +ಕಂಜವದನೆಯರ ಕರದಿ ನಲಿದಾಡುವುದು | +ಎಂಜಲು ತಿನಿಸುವುದು ಮೂಜಗಕೆ || +ರಂಜಿಪ ಮಣಿಯ ಸಿಂಹಾಸನದ ಮೇಲಿಪ್ಪ | +ಕುಂಜರವರದಾದಿಕೇಶವ ತಾ ಬಲ್ಲ ||೩|| +ಮಾನವ ಜನ್ಮ ದೊಡ್ಡದು, ಇದ ಪಂತುವರಾಳಿ ಅಟ್ಟ ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ ಪ ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ […] +ರಾಗ — ಕಾಂಬೋದಿ ತಾಳ — ಝಂಪೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ |ನೀ ದೇಹದೊಳಗೊ ನಿನ್ನೊಳು ದೇಹವೊ ||ಪ|| ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ |ಬಯಲು ಆಲಯವೆರಡು ನಯನದೊಳಗೊ ||ನಯನ ಬುದ್ಧಿಯ ಒಳಗೊ […] +ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_52.txt b/Kannada Sahitya/article_52.txt new file mode 100644 index 0000000000000000000000000000000000000000..274861bfea595cb7af99d4a0f1e2db25adf0f5bc --- /dev/null +++ b/Kannada Sahitya/article_52.txt @@ -0,0 +1,321 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಡಿ +ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು ಎಂದು ಸ್ವಾತಿ ತನ್ನ ಆದರ್ಶ ಭಾನುವಾರದ ಬಗ್ಗೆ ಸ್ನೇಹಿತರಲ್ಲಿ ಹೇಳುತ್ತಾಳೆ. ಜೊತೆಗೇ ಈ ಕಲ್ಪನೆಯ ಹುಟ್ಟಿನ ಹಿಂದಿನ ಕತೆಯನ್ನೂ ವಿವರಿಸುತ್ತಾಳೆ. ಬಾಲ್ಯದಲ್ಲಿ ನೆಲ್ಲೂರಿನ ಅಜ್ಜನ ಮನೆಯ ಅಟ್ಟದ ಮೇಲೆ ಅತಿಥಿಗಳಿಗೆಂದು ಸಾಲಾಗಿ ಜೋಡಿಸಿಟ್ಟ ಚಾಪೆಗಳನ್ನು ಕಾಲಿನಿಂದ ತಳ್ಳಿ ತೆರೆಯುವ ಆಟ ರಜೆಗೆಂದು ಅಲ್ಲಿಗೆ ಬಂದ ಮಕ್ಕಳಿಗೆಲ್ಲ ಪ್ರಿಯವಾದದ್ದು. ಒಳಗೆ ನಾನಾ ವಿನ್ಯಾಸಗಳಿದ್ದ ಆ ಚಾಪೆಗಳನ್ನು ಬಿಚ್ಚುವ ಮೊದಲು ಒಳಗಿನ ಚಿತ್ರ ಯಾವುದೆಂದು ಊಹಿಸಬೇಕು. ನಂತರ ನಿಧಾನ ಬಿಚ್ಚುತ್ತ ಹೋದಹಾಗೆ, ಹುಲಿ ಆನೆ ರಂಗೋಲಿ ದಟ್ಟ ಕಾಡು ಹೀಗೆ ಬಗೆಬಗೆಯ ಚಿತ್ರಗಳು ತುಸುವೇ ತೋರಿಸಿಕೊಳ್ಳುತ್ತ ಹೋದಹಾಗೆ, ಉದ್ವೇಗದಿಂದ ಮಕ್ಕಳ ಗಲಾಟೆ ತಾರಕಕ್ಕೇರುವುದು. ಈ ಆಟದ ದೆಸೆಯಿಂದಾಗಿ ಒಬ್ಬರಿಗೆ ಗೊತ್ತಾಗದಂತೆ ಒಬ್ಬರು ಸುತ್ತಿಟ್ಟ ಚಾಪೆಗಳ ಸ್ಥಾನವನ್ನು ಬದಲಿಸುತ್ತಲೇ ಇರುತ್ತಿದ್ದರು. ಸುಮಾರು ಮೂವತ್ತು ಚಾಪೆಗಳು ಸದಾ ಸ್ಥಾನ ಬದಲಿಸುತ್ತಿದ್ದು ಒಳಗಿನ ಚಿತ್ರಗಳನ್ನು ಊಹಿಸುವುದು ಸುಲಭವಾಗಿರಲಿಲ್ಲ. +‘ಈ ಭಾನುವಾರ ಏನು ಮಾಡಿದೆ?’ ಎಂಬ ಪ್ರಶ್ನೆಗೆ ‘ಚಾಪೆ’ ಎಂಬ ಉತ್ತರ ಸಿಕ್ಕಿದರೆ ಅದು ಏನೆಂಬುದು ಅವಳ ಗುಂಪಿನ ಎಲ್ಲರಿಗೂ ಅರ್ಥವಾಗುತ್ತಿತ್ತು. ಸ್ವಾತಿಯ ‘ಚಾಪೆ ಭಾನುವಾರ’ ಅಂದರೆ ನಿದ್ದೆ ಮುಗಿದು ತಾನಾಗಿ ಎಚ್ಚರಾಗಬೇಕು – ನಿತ್ಯದಂತೆ ಏಳು ಗಂಟೆಯ ಅಲಾರಂ ಸದ್ದಿಗಲ್ಲ. ನಂತರದ ಒಂದು ಗಂಟೆಯ ಅವಧಿಯಲ್ಲಿ ಸಿದ್ಧಳಾಗಿ ಕೆಲಸಕ್ಕೆ ಹೊರಡುವ ಧಾವಂತವಿಲ್ಲದೇ ಬೇಕಾದಷ್ಟು ಸಲ ಟೀ ಕುಡಿಯಬೇಕು. ಬರೀ ತಲೆಬರಹಗಳ ಮೂಲಕ ನುಗ್ಗಿ ಹೋಗುವ ಬದಲು ಪೇಪರಿನ ಸುದ್ದಿಗಳನ್ನು ಓದಬೇಕು. ಏಳೂವರೆಗೆ ಬರುವ ಕೆಲಸದವಳಿಗೆ ಬಾಗಿಲು ತೆರೆಯುವ ಅಗತ್ಯವೇ ಬಾರದ ಹಾಗೆ ಆವತ್ತು ಅವಳಿಗೆ ರಜೆ. ಒಟ್ಟಿನಲ್ಲಿ ನಿಶ್ಚಿತ ಆಕಾರವಿಲ್ಲದೆ, ಕಟ್ಟುಪಾಡುಗಳಿಲ್ಲದೆ ದಿನ ತೆರೆದುಕೊಳ್ಳುತ್ತ ಹೋದರೆ, ಅದರ ಸ್ವಚ್ಛಂದತೆ ಅನುಭವಕ್ಕೆ ಬರುತ್ತದೆಂಬುದು ಅವಳ ನಂಬಿಕೆ. +ಭಾನುವಾರದ ಚಟುವಟಿಕೆಗಳೆಲ್ಲ ಹೆಚ್ಚಾಗಿ ಅವಳ ಬೆಡ್‌ರೂಮಿನಲ್ಲೇ ಜರುಗುತ್ತವೆ. ಬೆಳಿಗ್ಗೆ ಎದ್ದು ಟೀ ಕುಡಿಯುತ್ತ ಪೇಪರು ಓದುವುದು ಹಾಸಿಗೆಯ ಮೇಲೆ ಕುಳಿತೇ. ಅವಳ ಮಂಚದ ಎದುರಿಗಿರುವ ಕಿಟಕಿಯಿಂದ ಹಲಸಿನ ಮರ ಕಾಣಿಸುತ್ತದೆ. ಕಿಟಕಿಯ ಪಕ್ಕ ಬಾಲ್ಕನಿಗೆ ಹೋಗುವ ಬಾಗಿಲಿದೆ. ಮಂಚದ ಇನ್ನೊಂದು ಪಕ್ಕ ಕುರ್ಚಿಯಿದೆ. ಈ ಕುರ್ಚಿಯಲ್ಲೇ ಅವಳು ಕೂತು ಓದುವುದು. ಹಾಗೆ ದಿನದ ಬಹುಭಾಗವನ್ನು ಒಂದೋ ಈ ರೂಮಿನಲ್ಲಿ, ಇಲ್ಲವಾದರೆ ಅದಕ್ಕೆ ಹೊಂದಿಕೊಂಡ ಬಾಲ್ಕನಿಯಲ್ಲಿ ಕಳೆಯುವುದೆಂದರೆ ಅವಳಿಗೆ ಖುಷಿ. +ಚಳಿಗಾಲದ ಈ ಭಾನುವಾರ ಅನಿರೀಕ್ಷಿತವಾಗಿ ಬಂದ ಮಳೆ ಅದೇ ಆಗ ನಿಂತು ಬಿಸಿಲು ಹರಡತೊಡಗಿತ್ತು. ಮರದ ಎಲೆಗಳ ಮೇಲೆ ಕೂತ ಹನಿಗಳು ಬಿಸಿಲಿಗೆ ಹೊಳೆಯುವುದನ್ನು ನೋಡುತ್ತ, ಬಿಂದುಗಳು ಕೂಡಿ ದೊಡ್ಡ ಹನಿಯಾಗಿ, ಎಲೆಯಿಂದ ಜಾರುವಾಗ ಪಳಕ್ಕನೆ ಮಿಂಚಿ ಕೆಳಗೆ ಮಣ್ಣಲ್ಲಿ ಮಾಯವಾಗುವುದನ್ನು ನೋಡುತ್ತ ಮೂರನೆಯ ಮಹಡಿಯ ತನ್ನ ಮನೆಯ ಬಾಲ್ಕನಿಯಲ್ಲಿ ಕೂತ ಸ್ವಾತಿ ಹಿಂದಿನ ಸಂಜೆ ಮನೋಹರನ ಜೊತೆ ಆಡಿದ ಮಾತುಗಳನ್ನು ನೆನೆಸಿಕೊಳ್ಳುತ್ತಿದ್ದಳು. ಇನ್ನೂ ಏನನ್ನು ಹೇಳಿದ್ದರೆ ಸ್ಪಷ್ಟವಾಗಬಹುದಿತ್ತು ಎಂದು ಯೋಚಿಸುತ್ತಿದ್ದಳು. ಅವರ ನಡುವಿನ ಮಾತಿನ ಕಾವಿನಲ್ಲಿ, ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ಭಾವಿಸಿಕೊಂಡ ಕೆಲವು ಸಂಗತಿಗಳನ್ನು ಸ್ವಾತಿ ಮನೋಹರನಿಗೆ ಹೇಳಲು ಪ್ರಯತ್ನಿಸಿದ್ದಳು. ಸ್ವಾತಂತ್ರ್ಯದ ಹಂಬಲ, ಅದರ ಸರಹದ್ದುಗಳು, ಕಾಲಿಗೆ ತೊಡರಿಕೊಳ್ಳುವ ಭೋಳೆ ಪ್ರೀತಿಯ ಜಂಜಡಗಳು, ಅತಿಪ್ರೀತಿಯ ಭಾರಗಳು ಎಂದೆಲ್ಲ ತೀವ್ರವಾಗಿ ಮಾತಾಡುತ್ತ ತನ್ನ ವಾದಕ್ಕೆ ಒತ್ತು ಕೊಡಲು ಸ್ವಂತ ಅನುಭವಕ್ಕೇ ಕೈ ಹಾಕಿದಳು. ಅವಳ ಮತ್ತು ಶಂಕರನ ಸಂಬಂಧದ ಕುರಿತು ಹೇಳಲು ಶುರುಮಾಡಿದವಳು ಎಲ್ಲಿ ನಿಲ್ಲಿಸಬೇಕೋ ತಿಳಿಯದೇ ಒದ್ದಾಡಿದಳು. ಮಾತಿನಲ್ಲಿ ಇಡಲು ಹೋಗಿದ್ದರಿಂದ, ವಾದಸರಣಿಗೆ ಒಪ್ಪುವಂತೆ ಘಟನೆಗಳನ್ನು ಹೆಕ್ಕಿದ್ದರಿಂದ ಎಲ್ಲವೂ ಆಯಾ ಅರ್ಥಗಳನ್ನು ಪಡೆದವೋ, ನಿಜಕ್ಕೂ ಅದರ ಹಿಂದೆ ತಾನು ಹೇಳಬೇಕಾದ್ದೇ ಇತ್ತೋ ಅನ್ನುವುದು ಅವಳಿಗೂ ಅಷ್ಟು ಸ್ಪಷ್ಟವಾಗಿರಲಿಲ್ಲ. +‘ಭೋಳೆ ಪ್ರೀತಿಯ ಜಂಜಡಗಳು’ ಈ ಮೂರು ಶಬ್ದಗಳನ್ನು ನಿಧಾನವಾಗಿ ಉಚ್ಚರಿಸಿ ಮನೋಹರ ಹೇಳಿದ್ದ: ‘ಎಷ್ಟು ಚೆನ್ನಾಗಿ ಹೇಳಿದಿರಿ. ಈವರೆಗೆ ವಿವರಿಸಿದ್ದಕ್ಕೆಲ್ಲ ಈ ಮಾತುಗಳಿಂದ ಹೊಸ ಅರ್ಥ ಬಂದ ಹಾಗಿದೆ.’ +ಕೆಳಗೆ ಗೇಟಿನ ಹತ್ತಿರ ಶಂಕರ ಬಂದು, ಬೈಕು ನಿಲ್ಲಿಸುತ್ತಿರುವುದು ಕಾಣಿಸಿತು. ಇಷ್ಟು ಬೇಗ ಭಾನುವಾರ ಆರಂಭಿಸುವ ಮನಸ್ಸಿರಲಿಲ್ಲ. ಇನ್ನೂ ಸ್ವಲ್ಪ ಹೊತ್ತು ಮಳೆ ನಿಂತ ನಂತರದ ಬಿಸಿಲನ್ನು ನೋಡಬೇಕೆಂದಿದ್ದಳು. ತನ್ನನ್ನು ನೋಡಲು ಈವತ್ತು ಬರಬೇಡ ಎಂದು ನಿನ್ನೆಯೇ ಅವನಿಗೆ ಹೇಳಿದ್ದರೂ ಶಂಕರ ಬರುತ್ತಾನೆಂದು ಗೊತ್ತಿತ್ತು. ಇಷ್ಟು ಬೇಗ ಬರುತ್ತಾನೆಂದುಕೊಂಡಿರಲಿಲ್ಲ ಅಷ್ಟೇ. +ತಾನು ಸ್ನಾನ ಮಾಡದೇ ಕೂತಿದ್ದನ್ನು ಕಂಡು ಅವನು ಸೂಕ್ಷ್ಮವಾಗಿ ಸಿಡುಕುತ್ತಾನೆ ಎಂದು ಅಪೇಕ್ಷಿಸಿದ ಸ್ವಾತಿಗೆ ಆಶ್ಚರ್ಯವಾಗುವ ಹಾಗೆ ಅವನು ಏನೂ ಹೇಳದೆ, ಒಂದು ಕುರ್ಚಿ ಎಳಕೊಂಡು ಅವಳ ಜೊತೆ ಬಾಲ್ಕನಿಯಲ್ಲಿ ಕೂತ. ಕೈಗಳನ್ನು ನಿಡಿದಾಗಿ ಚಾಚಿ ತುಸು ಮೈಮುರಿದ ಸ್ವಾತಿಯ ಆಲಸ್ಯವನ್ನು ಗಮನಿಸಿದವನಂತೆ ‘ಟೀ ಮಾಡಲೇನು?’ ಎಂದು ಕೇಳಿದ. +‘ನೀನೀಗ ಸಿಡಿಸಿಡಿ ಸಿಡಿಯುತ್ತ ಅವಸರ ಮಾಡುತ್ತೀಯೆಂದುಕೊಂಡಿದ್ದೆ’ ಅಂದಳು. +‘ನಿನ್ನ ಉಪದೇಶವನ್ನು ಗಂಭೀರವಾಗಿ ತಗೊಂಡಿದ್ದೇನೆ. ಏನೂ ಮಾಡದೇ, ಏನು ಮಾಡಬೇಕೆಂದು ಯೋಚನೆ ಕೂಡ ಮಾಡದೇ ಪ್ರತಿ ದಿನದಲ್ಲಿ ಸ್ವಲ್ಪ ಕಾಲವನ್ನಾದರೂ ಕಳೆಯಲು ಪ್ರಯತ್ನಪಡುತ್ತಿದ್ದೇನೆ.’ ಅಂದ. +‘ನಿನ್ನ ಈ ಪ್ರಯತ್ನಕ್ಕೆ ಬಹುಮಾನವಾಗಿ ನಾನೇ ಟೀ ಮಾಡುತ್ತೇನೆ’ ಎಂದವಳು ಎದ್ದು ಹೊರಟಳು. ಶಂಕರ ಅವಳ ಹಿಂದೆಯೇ ಅಡಿಗೆ ಮನೆಗೆ ಬಂದ. ಅವಳು ಟೀ ಮಾಡುವಾಗ ಮಾತಾಡುತ್ತ ನಿಂತವನು ಅಲ್ಲಿದ್ದ ಬಿಸ್ಕಿಟ್ ಪೊಟ್ಟಣವನ್ನು ಎತ್ತಿಕೊಂಡ. ಮಾತಾಡುತ್ತ ಅದನ್ನು ತಿರುಗಿಸಿ ತಿರುಗಿಸಿ ನೋಡಿದ. ಅದರ ಮೇಲೆ ಮುದ್ರಿಸಿದ ಏನನ್ನೋ ಓದಲು ಪ್ರಯತ್ನಿಸಿದ. ಅವಳಿಗೆ ಇರಿಸುಮುರಿಸಾಯಿತು. ಕಸಿವಿಸಿಯಾಯಿತು. ಹೇಗಾದರೂ ಮಾಡಿ ಅವನ ಕೈಯಿಂದ ಅದನ್ನು ಇಸಕೊಳ್ಳಬೇಕೆಂದು ‘ಈಗ ತಿನ್ನುತ್ತೀಯಾ?’ ಎಂದು ಕೇಳುತ್ತ ಅವನತ್ತ ಕೈಚಾಚಿದಳು. +‘ನನಗೆ ಬೇಡ. ನೀನು ತಗೋ’ ಎಂದವನು ಪೊಟ್ಟಣವನ್ನು ಅವಳ ಕೈಗಿತ್ತ. ಅದನ್ನೆತ್ತಿ ಒಳಗಿಟ್ಟಳು. +ಅವಳು ಹಾಲು ಕಾಯಿಸುತ್ತಿದ್ದಾಗ ಶಂಕರ ‘ಈವತ್ತು ನನ್ನ ಕ್ಲಾಸ್‌ಮೇಟ್ ಒಬ್ಬ ಎಷ್ಟೋ ವರ್ಷಗಳ ನಂತರ ನನ್ನನ್ನು ಹುಡುಕಿಕೊಂಡು ಬಂದ. ಬಾಬು ಅಂತ. ಅವನಿಗೆ ನಮ್ಮ ಬಗ್ಗೆ ಹೇಳಿದ್ದಕ್ಕೆ, ನಿನ್ನನ್ನು ನೋಡಲು ಹೊರಟೇಬಿಟ್ಟಿದ್ದ. ಇನ್ನೊಮ್ಮೆ ಬಂದಾಗ ಭೆಟ್ಟಿ ಮಾಡಿಸುತ್ತೇನೆಂದು ಹೇಳಿದೆ.’ ಅಂದ. +ಸ್ವಾತಿಗೆ ಇದು ಇಷ್ಟವಾಗಲಿಲ್ಲ. ಆದರೆ ಯಾಕೆ ಇಷ್ಟವಾಗಲಿಲ್ಲ ಎಂದು ಸರಿಯಾದ ಮಾತುಗಳಲ್ಲಿ ಅವನಿಗೆ ತಲುಪುವ ಹಾಗೆ, ಅದರಿಂದ ಅವನ ಅಭಿಮಾನ ಭಂಗವಾಗದ ಹಾಗೆ ಹೇಗೆ ಹೇಳುವುದೋ ಗೊತ್ತಾಗಲಿಲ್ಲ. ಕೆಲಕಾಲದಿಂದ ಇದನ್ನು ಯೋಚಿಸಿ ಸುಸ್ತಾಗಿದ್ದಳು. ಅವನ ವರ್ತನೆಯಲ್ಲಿ ಇದೇ ಅಂತ ಯಾವ ತಪ್ಪನ್ನೂ ಹುಡುಕುವುದು ಸಾಧ್ಯವಿರಲಿಲ್ಲ. ಅವನು ಬಿಸ್ಕಿಟ್ ಪೊಟ್ಟಣ ಕೈಯಲ್ಲಿ ಹಿಡಿದಾಗಲೂ ಹೀಗೆಯೇ ಅನಿಸಿತ್ತು. ಅವನು ಅದರ ಮೇಲಿನ ಬೆಲೆಯನ್ನು ನೋಡುತ್ತಾನೋ, ಅಲ್ಲಿ ಬರೆದಿರುವ ನಾನಾ ವಿಟಮಿನ್‌ಗಳ ಹೆಸರುಗಳನ್ನು ಓದುತ್ತಾನೋ ಅವಳಿಗೆ ಗೊತ್ತಾಗಿರಲಿಲ್ಲ. ಆ ವಿವರಗಳನ್ನು ಗಮನಿಸಿದಾಗ ಅವನ ಮನಸ್ಸಲ್ಲಿ ಏನೇನು ಆಗುತ್ತಿರಬಹುದು ಎಂದು ಯೋಚಿಸಿದಳು. ಆದರೂ ಇದು ಸರಿಯಲ್ಲ ಎಂದು ಯಾವುದನ್ನೂ ಸ್ಪಷ್ಟವಾಗಿ ಬೆರಳು ಮಾಡಿ ತೋರಿಸುವುದು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಬಿಸ್ಕಿಟ್ ಪೊಟ್ಟಣವನ್ನು ತೆಗೆದು ನೋಡುವುದೇನು ತಪ್ಪು? ಆದರೆ ಅವನು ತನ್ನ ಅನುಮತಿಯಿಲ್ಲದೇ ಸೂಕ್ಷ್ಮವಾಗಿ ತನ್ನ ಸರಹದ್ದಿನೊಳಗೆ ಅತಿಕ್ರಮಣ ಮಾಡುತ್ತಿದ್ದಾನೆಂದು ಅವಳಿಗೆ ಅನಿಸುತ್ತಿತ್ತು. ನಮ್ಮ ಬಗ್ಗೆ ಹೇಳಿದೆ ಅಂದರೆ ಏನು? ತನ್ನ ಬಗ್ಗೆ ತಾನು ಎದುರಿಗೆ ಇಲ್ಲದಿರುವಾಗ ಏನೇನು ಹೇಳಿರಬಹುದೆಂದು ಊಹಿಸತೊಡಗಿದಳು. +ಹಿಂದೊಮ್ಮೆ ಚಂದ್ರಕಾಂತನೆಂಬ ಸ್ನೇಹಿತನಿಗೆ ಸ್ವಾತಿಯ ಬಗ್ಗೆ ಹೇಳಿದಾಗ ‘ಅವಳಿಗೆ ಮಾಡಿದ್ದೀಯಾ?’ ಎಂದು ಕೇಳಿದನಂತೆ. ಇದನ್ನು ಹೇಳುವಾಗ, ಕೇಳಿ ತನಗೆ ಏನು ಅನಿಸೀತೆಂಬುದರ ಪರಿವೆ ಶಂಕರನಿಗೆ ಇರಲಿಲ್ಲವೇ ಎಂಬುದು ಸ್ವಾತಿಯನ್ನು ಬಾಧಿಸಿತ್ತು. ಅದಕ್ಕೂ ಮಿಗಿಲಾಗಿ, ಅದನ್ನು ಹೇಳುವಾಗ ಅವನ ಮುಷ್ಟಿ ಕಟ್ಟಿದ ಮುಂಗೈ ಅವನಿಗರಿವಿಲ್ಲದೇ ವಿಚಿತ್ರ ಫಾಜೀಲ ರೀತಿಯಲ್ಲಿ ತುಸು ಅಲುಗಾಡಿದ್ದು ಗಮನಕ್ಕೆ ಬಂದಿತ್ತು. ಸ್ನೇಹಿತರ ನಡುವಿನ ಆ ಮಾತುಗಳು ಅಷ್ಟಕ್ಕೇ ನಿಲ್ಲುವುದಿಲ್ಲ ಅನ್ನುವುದು ಅವಳಿಗೆ ಗೊತ್ತು. ಇದರಲ್ಲಿ ತನ್ನ ತಪ್ಪೇನೂ ಇಲ್ಲ, ಅವನು ಹಾಗೆಲ್ಲ ಮಾತಾಡಿದರೆ ನಾನೇನು ಮಾಡಲಿ ಎಂದು ಶಂಕರನ ವಾದ. ಆದರೆ ಅದು ಇಷ್ಟೇ ಅಲ್ಲ ಎಂದು ಅನಿಸಿದ್ದನ್ನು, ಕ್ಲೀಷೆಯಾದ ಸ್ತ್ರೀವಾದದ ಭಾಷಣದ ಮಾತುಗಳಂತಲ್ಲದೇ ಹೇಗೆ ಹೇಳುವುದೋ ಗೊತ್ತಾಗದೇ ಒದ್ದಾಡಿದ್ದಳು. +ಶಂಕರ ಭಾನುವಾರ ಬೆಳಿಗ್ಗೆ ಸ್ವಾತಿಯನ್ನು ನೋಡಲು ಬಂದನೆಂದರೆ ಏನೋ ಒಂದು ಕಾರ್ಯಕ್ರಮ ಹಾಕಿಕೊಂಡೇ ಬಂದಿರುತ್ತಾನೆ. ಅವನು ತನಗೆ ಬೇರೆ ಏನಾದರೂ ಕೆಲಸ ಇದೆಯೋ ಎಂದು ಕೇಳುವುದು ಕೂಡ ಇಲ್ಲ ಎಂದು ಅವಳಿಗೆ ಕಸಿಕಸಿ. ಹೇಳಹೋದರೆ ಅವನಿಗೆ ಅರ್ಥವಾಗುವುದೇ ಇಲ್ಲ. ಪರಸ್ಪರ ಜೊತೆ ಇರುವುದಕ್ಕಿಂತ ಮಿಗಿಲಾದ ಸುಖ ಯಾವುದಿದೆ ಎಂಬ ಧಾಟಿಯಲ್ಲಿ ಮಾತಾಡುತ್ತ, ಅವಳ ಜೊತೆ ಕಾಲ ಕಳೆಯುವ ಯಾವುದೇ ಅವಕಾಶಕ್ಕಾಗಿ ತಾನು ಏನನ್ನಾದರೂ ಮಾಡಬಲ್ಲೆ ಅಥವಾ ಮಾಡದೇ ಇರಬಲ್ಲೆನೆಂದು ಹೇಳುತ್ತಿದ್ದ. ಹೀಗೆ ಮುಂದೆ ಮುಂದೆ ಹಾಕುತ್ತ ಹೋಗಿ ಅವನ ಬೈಕಿನ ಸರ್ವಿಸಿಂಗ್ ಮಾಡಿಸಲು ಕೊನೆಗೆ ರಜೆ ಹಾಕಬೇಕಾಯಿತು. ಇದು ತಪ್ಪು, ಹಾಗೆ ಮಾಡಕೂಡದು, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಹಲವು ಮಗ್ಗಲುಗಳು, ತೋರುವುದಕ್ಕಿಂತ ತೋರದಿರುವ, ಕೇವಲ ಭಾವಿಸುವುದಕ್ಕೆ ಮಾತ್ರ ಸಾಧ್ಯವಿರುವ ಮಗ್ಗಲುಗಳು ಹಲವು ಎಂದು ಹೇಳಿದರೆ ತಬ್ಬಿಬ್ಬಾಗಿಬಿಡುತ್ತಿದ್ದ. +‘ನಿನ್ನ ಪಾಡಿಗೆ ನಿನ್ನ ಕೆಲಸಗಳನ್ನು ಮಾಡಿಕೊಂಡಿರು. ನನ್ನನ್ನು ನನ್ನಷ್ಟಕ್ಕೆ ಬಿಡು. ನಾವು ಹೀಗೆ ಬೇರೆಬೇರೆಯಾಗಿ ಇದ್ದೂ ನಮ್ಮ ಆಸಕ್ತಿಗಳೋ ದೈನಿಕವೋ ಪರಸ್ಪರ ಸಂಧಿಸುವ ಗಳಿಗೆಗಳಲ್ಲಿ ಮಾತ್ರ ಸೇರಬೇಕು. ಅಂಥ ಕ್ಷಣಗಳನ್ನು ಸೃಷ್ಟಿಸಲು ವಿಶೇಷವಾಗಿ ಪ್ರಯತ್ನಿಸತೊಡಗಿದೊಡನೆ ಸಂಬಂಧದ ಸಹಜತೆ ಹೋಗಿಬಿಡುತ್ತದೆ. ದಿನ ಕಳೆದ ಹಾಗೆ ಇದೊಂದು ಭಾರ ಅನಿಸತೊಡಗುತ್ತದೆ. ನೀನು ಹೀಗೆಲ್ಲ ವಿಶೇಷ ಶ್ರಮ ವಹಿಸತೊಡಗಿದೊಡನೆ ನನ್ನ ಮನಸ್ಸಿಗೂ ರಗಳೆಯಾಗತೊಡಗುತ್ತದೆ. ಎಷ್ಟೇ ಸಣ್ಣ ಸಂಗತಿಯಿರಲಿ ತ್ಯಾಗ ಮಾಡಬೇಡ. ನೀನಿರುವ ಹಾಗೆ ಇರು, ನಾನಿಲ್ಲದಿರುತ್ತಿದ್ದರೆ ಹೇಗೆ ಇರುತ್ತಿದ್ದೆಯೋ ಹಾಗೆ ಇರು’ ಎಂದು ಸ್ವಾತಿ ಹೇಳಿದ್ದಳು. ಆದರೆ ಅವಳನ್ನು ಖುಷಿಪಡಿಸಲು, ತಾನು ಸಹಜವಾಗಿದ್ದೇನೆಂದು ಅವಳಿಗೆ ತೋರಿಸಿಕೊಳ್ಳಲು ಅವನು ಬಹಳ ಒದ್ದಾಡುತ್ತಿದ್ದ. ತನ್ನ ಪಾಡಿಗೆ ತಾನಿದ್ದೇನೆಂದು ಸೂಚಿಸಲು ತಡವಾಗಿ ಬಂದ. ಮಾತಾಡದೇ ಕೂತ. ಕರೆದಲ್ಲಿ ಬರಲಿಲ್ಲ. ಬೇರೆ ಯಾರ ಜೊತೆಗೋ ಊಟಕ್ಕೆ ಹೋದ. ಅವನ ಗ್ರಹಿಕೆಯಲ್ಲಿ, ಅವಳ ತಳಮಳ ತನಗೆ ಅರ್ಥವಾಗಿದೆಯೆಂದು ತೋರಿಸಿಕೊಳ್ಳಲು ಅವನು ಆಡುವ ಮಾತುಗಳಲ್ಲಿ ಅತಿ ಸರಳವಾಗಿ ತೋರುವ ತನ್ನ ವಿಚಾರಗಳು ಮತ್ತು ಕ್ರಿಯೆಗಳು ಅವಳಿಗೆ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತಿದ್ದವು. +ಟೀ ಸಿದ್ದವಾದೊಡನೆ ಒಂದು ಕಪ್ಪನ್ನೆತ್ತಿಕೊಂಡು ‘ಬಾಲ್ಕನಿಯಲ್ಲಿ ಕೂರೋಣವೇ?’ ಅಂದ. +‘ಬೇಡ. ತುಂಬಾ ಗಾಳಿ. ಇಷ್ಟು ಹೊತ್ತೂ ಅಲ್ಲೇ ಕೂತಿದ್ದೆ. ಇಲ್ಲೇ ಒಳಗೆ ಕೂರೋಣ’ ಎಂದು ಬೆಡ್‌ರೂಮಿಗೆ ಹೋದಳು. ಶಂಕರ ಹಿಂಬಾಲಿಸಿದ. +ಶಂಕರನ ಸೂಕ್ಷ್ಮ ಅತಿಕ್ರಮಣ ಅನುಭವಕ್ಕೆ ಬಂದಿದ್ದು ಅವನ ಪರಿಚಯವಾದ ಹೊಸದರಲ್ಲೇ. ಅವರಿಬ್ಬರೂ ಆ ದಿನ ಸಂಜೆ ಒಂದು ಸಂಗೀತ ಸಭೆಗೆ ಹೋಗುವುದಿತ್ತು. ಅಲ್ಲಿಗೆ ಕರೆದೊಯ್ಯಲು ಶಂಕರ ಮನೆಗೆ ಬಂದಾಗ, ಅವಳು ತಾನು ಬರೆದ ಎರಡು ಪತ್ರಗಳಿಗೆ ಅಂಟು ಹಚ್ಚುತ್ತಿದ್ದಳು. ಅವಳು ತಯಾರಾಗಿ ಬರುವವರೆಗೂ ಅವನು ಮುಳ್ಳಿನ ಮೇಲೆ ಕೂತಂತಿದ್ದ. ಇಬ್ಬರೂ ಸಂಗೀತ ಸಭೆಗೆ ಹೋಗಿ, ನಂತರ ಅವನ ಒತ್ತಾಯದಿಂದ ಜೊತೆಗೆ ಊಟಕ್ಕೆ ಹೋಗಿ, ಮತ್ತೆ ಅವನ ಒತ್ತಾಯದಿಂದ ಐಸ್‌ಕ್ರೀಮ್ ತಿಂದು ಮನೆಗೆ ಬರುವ ವೇಳೆಗೆ ರಾತ್ರಿ ಹನ್ನೊಂದಾಗಿತ್ತು. +ಮಲಗುವ ಮುನ್ನ ಅವಳ ಗಮನ ಅಲ್ಲಿಟ್ಟ ಕವರುಗಳತ್ತ ಹೋಯಿತು. ಅವು ಅವಳಿಟ್ಟ ಕ್ರಮದಲ್ಲಿ ಇರಲಿಲ್ಲ. ತಾನು ಮೇಲ್ಗಡೆ ಇಟ್ಟ ಪತ್ರ ಯಾವುದು ಎಂದು ಸ್ಪಷ್ಟವಾಗಿ ನೆನಪಿದ್ದರಿಂದ ಯಾರೋ ಅದನ್ನು ಎತ್ತಿ ನೋಡಿದ್ದಾರೆ ಅನ್ನುವುದು ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಎರಡೂ ಪತ್ರಗಳನ್ನು ಎತ್ತಿ ನೋಡಿದ ನಂತರ, ಮತ್ತೆ ಇಟ್ಟ ಬಗೆಯಲ್ಲಿ ಒಂದು ರೀತಿಯ ಉದಾಸೀನ ಕಂಡಿತು. ಅವಳು ಒಂದರ ಅಂಚು ಇನ್ನೊಂದರ ಮೇಲೆ ಬರುವಂತೆ ನೇರವಾಗಿ ಇಟ್ಟಿದ್ದಳು. ಈಗ ಅವು ನಿರ್ಲಕ್ಷ್ಯದಿಂದ ಟೇಬಲ್ಲಿನ ಮೇಲೆ ವಾಪಸು ಎಸೆದಂತೆ ಕಂಡವು. ತಾನು ಬಟ್ಟೆ ಹಾಕಿಕೊಳ್ಳಲು ಹೋದಾಗ ಇದನ್ನು ಶಂಕರನೇ ತೆಗೆದು ನೋಡಿದ್ದಾನೆನ್ನುವುದರಲ್ಲಿ ಅವಳಿಗೆ ಯಾವ ಅನುಮಾನವೂ ಇರಲಿಲ್ಲ. +ಆ ಸಂಜೆಯಿಡೀ ಅವಳಿಗೆ ಯಾಕೋ ರಗಳೆಯಾಗುತ್ತಲೇ ಇತ್ತು. ಒಂದು ಹುಡುಗಿಯ ಜೊತೆ ಓಡಾಡುವುದೆಂದರೆ ಅವಳನ್ನು ಹೊಟೇಲಿಗೆ ಕರೆದೊಯ್ಯುವುದು, ಅವಳಿಗೆ ಐಸ್‌ಕ್ರೀಂ ತಿನ್ನಿಸುವುದು ಮುಂತಾದ ಟೀವಿಗಳಿಂದ ಪ್ರೇರಿತವಾದ ಮಧ್ಯಮವರ್ಗದ ಹಾದಿಯನ್ನೇ ಅವನು ಹಿಡಿದಿದ್ದರಿಂದ ಅವಳಿಗೆ ತನ್ನ ಬಗ್ಗೇ ತುಸು ನಾಚಿಕೆಯೂ ಆಗಿತ್ತು. ಮಧ್ಯಮವರ್ಗದ ಡೇಟಿಂಗ್ ಅಂದರೆ ಸ್ಟ್ಯಾಂಡರ್ಡ್ ಥಾಲಿ ಊಟದ ಹಾಗೆ ಎಂದು ಅವಳು ತಮಾಷೆ ಮಾಡುತ್ತಿದ್ದಳು. ಈ ಎಲ್ಲ ಕಿರಿಕಿರಿಯ ಜೊತೆ ಅವನು ತನ್ನ ಪತ್ರಗಳನ್ನು ಎತ್ತಿ ನೋಡಿದ್ದು ಸಿಟ್ಟು ಬರಿಸಿತು. ಆ ಕ್ಷಣದಲ್ಲಿ ಇದನ್ನು ರುಜುಪಡಿಸಿ ಇದೆಲ್ಲದರಿಂದ ಬಿಡುಗಡೆಯಾಗಬೇಕೆಂದು ಬಯಸಿದಳು. ಇಡೀ ರಾತ್ರಿ ಅದೇ ಯೋಚನೆ. ಅವನಿಗೆ ಇದನ್ನೆಲ್ಲ ಹೇಗೆ ಬಲವಾಗಿ ಹೇಳುವುದು ಎಂದು ಮನಸ್ಸಿನಲ್ಲೇ ಮಾತುಗಳನ್ನು ರೂಪಿಸಿಕೊಳ್ಳತೊಡಗಿದ ಹಾಗೆ, ತನ್ನ ಆಪಾದನೆಗೆ ಶಕ್ತಿಯಿಲ್ಲ ಅನ್ನುವುದು ಗೊತ್ತಾಗತೊಡಗಿತು: ಅವನು ಬರೀ ಅವುಗಳನ್ನು ಎತ್ತಿ ಇಟ್ಟಿರಬಹುದು; ಬಿಚ್ಚಿ ನೋಡಿಲ್ಲವಲ್ಲ. ರುಜುಪಡಿಸುವುದು ಏನನ್ನು ಅನ್ನುವುದೂ ಅವಳಿಗೆ ಹೊಳೆಯಲಿಲ್ಲ. +ಅಂದಿನಿಂದ ಅವನನ್ನು ಪರೀಕ್ಷಿಸಲು ನಾನಾ ಉಪಾಯಗಳನ್ನು ಹೂಡತೊಡಗಿದಳು. ಶಂಕರ ಬಂದಾಗಲೆಲ್ಲ ಅವನೊಬ್ಬನೇ ಕೋಣೆಯಲ್ಲಿರುವ ಪ್ರಸಂಗ ಸೃಷ್ಟಿಸಿ ಏನೇನನ್ನು ತೆಗೆದು ನೋಡುತ್ತಾನೆ ಎಂದು ಗಮನಿಸತೊಡಗಿದಳು. ಅಲ್ಲಿ ಟೇಬಲ್ಲಿನ ಮೇಲೆ ಒಂದು ಪತ್ರ ಇಡುವುದು, ಇಟ್ಟು ಅದರ ಮೇಲೆ ಒಂದು ಕಾಗದದ ಚೂರನ್ನು ಇಡುವುದು, ಅವನಿಗೆ ಏಕಾಂತವನ್ನು ಒದಗಿಸುವುದು ಮತ್ತು ಹಿಂದಿರುಗಿ ಬಂದ ಮೇಲೆ ಆ ಕಾಗದದ ಚೂರು ಇದ್ದಲ್ಲೇ ಇದೆಯೋ ಎಂದು ಪರೀಕ್ಷಿಸುವುದು. ಅದು ಇಲ್ಲದಿದ್ದರೆ ಅವನು ಅದನ್ನು ತೆಗೆದು ನೋಡಿದ್ದು ಖಂಡಿತ. ಅವನು ಆ ಬಗ್ಗೆ ಹೇಳದೇ ಇದ್ದರೆ ಆ ಪತ್ರದಲ್ಲಿರುವ ಸಂಗತಿಗಳ ಬಗ್ಗೆ ಸುತ್ತಿ ಬಳಸಿ ಮಾತಾಡುವುದು. ಅವನು ಮಾತಲ್ಲಿ ಮೈಮರೆತು ತನ್ನ ಗುಟ್ಟನ್ನು ಬಿಟ್ಟುಕೊಡುತ್ತಾನೋ ನೋಡುವುದು. ಬರುಬರುತ್ತ ಇದೆಲ್ಲ ಒಂದು ರೀತಿಯ ಆಟವಾಯಿತು. ದಿನವೂ ಒಂದೊಂದು ವ್ಯೂಹ ತಯಾರಾಗತೊಡಗಿತು. ಅವನು ಯಾವ ಗಡಿಯನ್ನು ದಾಟಿದಾಗ ಇದನ್ನೆಲ್ಲ ನಿಲ್ಲಿಸಬೇಕೆಂಬುದು ಅವಳಿಗೂ ಸ್ಪಷ್ಟವಾಗಿಲ್ಲದ್ದರಿಂದ ಮತ್ತು ದಿನೇ ದಿನೇ ಇಷ್ಟವಿರಲಿ ಇಲ್ಲದಿರಲಿ ಸಂಬಂಧ ಮುಂದುವರಿಸುವ ಸೂಚನೆ ಅವನು ಕೊಡುತ್ತಿದ್ದುದರಿಂದ ಇವಲ್ಲ ತನ್ನ ಕೈಮೀರುತ್ತಿದೆಯೆಂದು ಅವಳಿಗೆ ಅನಿಸತೊಡಗಿತು. +ಒಂದು ಸಂಗತಿ ಮಾತ್ರ ಸ್ಪಷ್ಟವಾಯಿತು. ಅವನು ತಾನಾಗಿಯೇ ಅವಳ ಕಪಾಟನ್ನೋ ಡ್ರಾಯರನ್ನೋ ತೆಗೆದು ನೋಡುತ್ತಿರಲಿಲ್ಲ. ಅವಳ ಮೇಲೆ ಗೂಢಚರ್ಯೆ ಮಾಡುತ್ತಿರಲಿಲ್ಲ. ಕಪಾಟಿನಲ್ಲಿ ಅವಳಿಟ್ಟ ಕಾಗದದ ಚೂರುಗಳು, ಕೂದಲ ಎಳೆಗಳು ದಿನಗಟ್ಟಳೆ ಇದ್ದ ಹಾಗೆಯೇ ಇರುತ್ತಿದ್ದವು. ಆದರೆ ಅಲ್ಲೇ ಎದುರಿಗೆ ಕೈಯಳತೆಯಲ್ಲಿರುವ ಎಲ್ಲವನ್ನೂ ತೆಗೆದು ನೋಡುತ್ತಿದ್ದ. ಆ ಬಗ್ಗೆ ಅವನಿಗೆ ಯಾವುದೇ ಸಂಕೋಚ ಇದ್ದ ಹಾಗಿರಲಿಲ್ಲ. ಟೀ ಕುಡಿಯುತ್ತ ಕೂತಾಗ ಅಲ್ಲಿ ಎದುರಿಗೆ ಅವಳ ಪರ್ಸು ಇದ್ದಲ್ಲಿ, ಅದರ ಜೊತೆ ಆಟ ಆಡುತ್ತ, ಅವಳು ಉಸಿರು ಬಿಗಿಹಿಡಿದು ನೋಡುತ್ತಿದ್ದ ಹಾಗೆ ಅದನ್ನು ತೆಗೆದು ಒಳಗೊಮ್ಮೆ ನೋಡಿಯೇಬಿಡುವನು. ಟೇಬಲ್ಲಿನ ಮೇಲಿಟ್ಟ ಚಿಕ್ಕಪುಟ್ಟ ಚೀಟಿಗಳನ್ನು ಎತ್ತಿ ನೋಡುವನು. ಚೀಟಿಯಲ್ಲಿರುವ ಫೋನ್ ನಂಬರು ಕುತೂಹಲ ಕೆರಳಿಸುವುದು. ಅದನ್ನು ನೋಡಿ ಏನೂ ಹೇಳದೇ ಹಾಗೇ ಮಡಚಿಡುವನು. ಅಲ್ಲಿ ಸಿಕ್ಕಿಸಿಟ್ಟ ಎಲೆಕ್ಟ್ರಿಸಿಟಿ ಬಿಲ್ಲನ್ನು ತಿರುಗಿಸಿ ನೋಡುವನು. ಅವನು ಮೊತ್ತ ಎಷ್ಟೆಂದು ನೋಡಿದನೆಂದು ಅವಳಿಗೆ ಭಾಸವಾಗುತ್ತಿತ್ತು. ಚಪ್ಪಲಿ ಹಾಕಿಕೊಳ್ಳುವಾಗ ಎದುರಿನ ಟೇಬಲ್ಲಿನ ಮೇಲೊಂದು ಮದುವೆಯ ಆಮಂತ್ರಣ ಪತ್ರಿಕೆ ಇದ್ದಲ್ಲಿ ಅದನ್ನು ತೆರೆದು ನೋಡುವನು. ಯಾರಿಗೆ ಮದುವೆ ಎಂದು ತನಗೆ ಸಂಬಂಧವಿಲ್ಲದಿದ್ದರೂ ಕೇಳುವನು. ಯಾವ ದುರುದ್ದೇಶವೂ ಇಲ್ಲದ ಅವನ ಸರಳ ಪ್ರಶ್ನೆಗೆ ಉತ್ತರಿಸದೇ ಇರುವುದು ಅವಳಿಗೆ ಕಷ್ಟವಾಗುತ್ತಿತ್ತು. +ಯಾಕೆ ಈ ಸಂಬಂಧವನ್ನು ಮೊಳಕೆಯಲ್ಲೇ ತುಂಡರಿಸಲಿಲ್ಲ ಎಂಬ ಯೋಚನೆ ಬಂದಾಗಲೆಲ್ಲ ಸ್ವಾತಿಗೆ ಬೇರೆ ಬೇರೆ ಉತ್ತರಗಳು ಸಿಕ್ಕಿವೆ. ಸ್ವಾತಿಯ ಅಮ್ಮ ನಿರುಪಮಾ ಹೋಗುವ ನೃತ್ಯ ಶಾಲೆಗೆ ಶಂಕರನ ಅಮ್ಮನೂ ಹೋಗುತ್ತಾಳೆ. ದೂರದ ಪರಿಚಯ ಅಷ್ಟಕ್ಕೇ ಉಳಿಯಬಹುದಿತ್ತು. ಬೆಂಗಳೂರಿಗೆ ಬರದೇ ಇಬ್ಬರೂ ಹೈದರಾಬಾದಿನಲ್ಲೇ ಇದ್ದಿದ್ದರೆ ಅದು ದೂರದ ಪರಿಚಯವಾಗೇ ಇರುತ್ತಿತ್ತು. ಮೊದಮೊದಲು ಅವನ ಮುಗ್ಧತೆ ಖುಷಿಕೊಡುತ್ತಿತ್ತು. ಕೈ ಹಿಡಿದಾಗ ಕಂಪಿಸಿದ್ದನಲ್ಲ. +ಇಬ್ಬರೂ ನಾಟಕಕ್ಕೆ ಹೋಗಿದ್ದರು. ನಡುವೆ ಅವಳೇ ಮುಂದಾಗಿ ಅವನ ಕೈ ಹಿಡಿದಳು. ಬೆರಳುಗಳನ್ನು ಹೆಣೆದು ಮೃದುವಾಗಿ ಅಮುಕಿದಳು. ಅವನು ಕಂಪಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮೊದಲ ಮುತ್ತಿಗೆ ಅವನು ಇಡೀ ದಿನ ಅಮಲೇರಿ ಕುಳಿತಿದ್ದ. +ಮುಂದೆ ಮುಗ್ಧತೆ ಭೋಳೆತನವೆಂದು ಅನಿಸಲಿಕ್ಕೆ ಶುರುವಾಯಿತು. ಅವನಿಗೆ ತನ್ನ ಬಗ್ಗೆ ಏನು ಭಾವನೆಗಳು ಹುಟ್ಟತೊಡಗಿವೆ ಎಂದು ಅವಳಿಗೆ ಗೊತ್ತಿಲ್ಲದಿರಲಿಲ್ಲ. ತನ್ನ ಮಾತುಗಳಲ್ಲಿ ಅವನು ಅದನ್ನು ಇಡುತ್ತ ಹೋದ ಹಾಗೆ ಅವಳಿಗೆ ಒಳಗೊಳಗೇ ಭಯವಾಗತೊಡಗಿತು. ತನ್ನ ಭೋಳೆತನದಲ್ಲಿ ಅವಳನ್ನು ಕಟ್ಟಿಹಾಕುತ್ತ ಹೋದ. ತಾನು ಅವನಿಂದ ಕಿತ್ತುಕೊಂಡು ಹೋದರೆ ಅವನಿಗೆ ಆಗುವ ಆಘಾತವನ್ನು ನೆನೆದು ನಿಷ್ಪಾಪಿಯನ್ನು ನೋಯಿಸಿದೆನೆನ್ನುವ ಪಾಪಪ್ರಜ್ಞೆಯಿಂದ ಬಿಡಿಸಿಕೊಳ್ಳಲಾರದೇ ಒದ್ದಾಡಿದಳು. ಮಾತೆತ್ತಿದರೆ ಪ್ರೀತಿ ಪ್ರೇಮ, ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದೆಲ್ಲ ಅನ್ನುತ್ತಿದ್ದ ಅವನಿಂದ ದೂರವಾಗಲು ಆಫೀಸಿನ ಸಹೋದ್ಯೋಗಿ ಸಲೀಮನ ಜೊತೆ ಸಲಿಗೆ ತೋರಿಸಿದಳು. ನಿನ್ನ ಬಗ್ಗೆ ಪೂರ್ತಿ ವಿಸ್ವಾಸವಿದೆ ಎಂದು ಹೇಳಿ ಶಂಕರ ಅವಳನ್ನು ಇನ್ನಷ್ಟು ಕಂಗೆಡಿಸಿದ್ದ. ತಾನು ಏನು ಮಾಡಿದರೂ ಸಹಿಸಿಕೊಳ್ಳುವ ಅವನ ಸಹನೆಯೇ ಅಸಹನೀಯವಾಗತೊಡಗಿತು. ಪ್ರೀತಿ ಪ್ರೀತಿ ಅನ್ನುತ್ತ ಅವನು ಏನನ್ನಾದರೂ ಸಹಿಸಲು ತಯಾರಾಗಿದ್ದ. ಪಾಪಪ್ರಜ್ಞೆಯ ಹುಟ್ಟೇ ತನ್ನ ಸ್ವಾತಂತ್ರ್ಯಕ್ಕೆ ಮಾರಕ ಎಂದು ಅವಳಿಗೆ ತಿಳಿಯತೊಡಗಿತ್ತು. ಯಾವುದನ್ನು ಉಲ್ಲಂಘಿಸುತ್ತ ಇರುವುದರಿಂದ ತನ್ನ ಸ್ವಾತಂತ್ರ್ಯದ ಬಗ್ಗೆ ತನಗೆ ವಿಶ್ವಾಸ ಇರುತ್ತದೆ ಎಂದು ಅವಳಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. +ಹೇಳಬಹುದಾಗಿದ್ದ ಮಾತುಗಳಲ್ಲಿ ಮತ್ತೆ ಮತ್ತೆ ಎಲ್ಲವನ್ನೂ ಎಷ್ಟೊಂದು ಬಾರಿ ಮನಸ್ಸಲ್ಲೇ ಮರುಕಳಿಸಿಕೊಂಡಿದ್ದಳು. ಒಮ್ಮೆ ಮಾತಿನ ನಡುವೆ ಅವನು ‘ಮದುವೆಯಾಗುವವರ ನಡುವೆ ಯಾವುದೇ ಗುಟ್ಟುಗಳಿರಬಾರದು’ ಎಂದು ಹೇಳಿದ್ದಕ್ಕೆ ಕೆಂಡವಾಗಿದ್ದಳು. ದೇಹವನ್ನು ಹಂಚಿಕೊಂಡ ಮೇಲೆ ಎಲ್ಲ ಮುಗಿಯಿತು ಎಂಬ ಅವನ ನಿಲುವು, ಬಾಯಿಬಿಟ್ಟು ಹೇಳದಿದ್ದರೂ ಅವಳಿಗೆ ಗೊತ್ತಾಗಿತ್ತು. ‘ನಿನ್ನ ಜೊತೆ ಮಲಗಿದ್ದರಿಂದ ನನ್ನ ಎಲ್ಲ ಗುಟ್ಟುಗಳೂ ತಿಳಿಯಿತೆಂದು ಭಾವಿಸಬೇಡ’ ಎಂಬ ಮಾತಿನಿಂದ ಅವನು ತುಸು ವಿಚಲಿತನಾಗಿದ್ದ. ದೈಹಿಕ ಮಿಲನ ಗಂಡು ಹೆಣ್ಣಿನ ಸಂಬಂಧದ ತುರಿಯಾವಸ್ಥೆಯನ್ನು ಸೂಚಿಸುತ್ತದೆಂಬ ಅವನ ನಂಬಿಕೆಯನ್ನು ಸಡಿಲಿಸುವುದು ಹೇಗೆಂದು ಗೊತ್ತಾಗಲಿಲ್ಲ. +‘ಸಣ್ಣ ಸಣ್ಣ ಸಂಗತಿಗಳಲ್ಲೇ, ಆ ರಹಸ್ಯಗಳಲ್ಲೇ ವ್ಯಕ್ತಿತ್ವದ ಆಕರ್ಷಣೆಯಿರುವುದು. ಅವುಗಳನ್ನು ವಿನಾಕಾರಣ ಬಿಚ್ಚಲು ಹೋಗಬಾರದು. ಇವೇ ಪರಸ್ಪರರ ನಡುವಿನ ಸ್ಪೂರ್ತಿಯ ಚಿಲುಮೆಗಳು. ಅವುಗಳನ್ನು ಬತ್ತಿಸಬಾರದು. ದಂಡಯಾತ್ರೆ ಹೋಗಿ ಗೆದ್ದೊಡನೆ ಹುಟ್ಟುವ ಶೂನ್ಯವೇ ಇಲ್ಲೂ ಹುಟ್ಟುತ್ತದೆ. ಇದೆಲ್ಲವೂ ಘನತೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅವಕಾಶಗಳು. ರೋಗಿಗೆ ಹಾಸಿಗೆಯಲ್ಲೇ ಎಲ್ಲ ಆಗಬೇಕಾದಾಗಲೂ ಸುತ್ತಲಿನ ಜನ ಅದನ್ನೇ ಮಾತಾಡಿಕೊಂಡಿರಬಾರದು. ರೋಗಿಯ ಘನತೆಗೆ ಅಗತ್ಯವಾದ ಅವಕಾಶವನ್ನು ಮೌನದಲ್ಲಿ ಒದಗಿಸಿಕೊಡಬೇಕು.’ ಇದೆಲ್ಲವೂ ಅವಳ ಮನಸ್ಸಲ್ಲಿ ಹುಟ್ಟುತ್ತಿತು. ಅವಳ ಅಮ್ಮ ಅವಳ ಅಜ್ಜಿಯನ್ನು ಕೊನೆಗಾಲದಲ್ಲಿ ನೋಡಿಕೊಂಡ ಬಗೆಯನ್ನು ಹೇಳಬೇಕೆಂದುಕೊಂಡಿದ್ದಳು. ಆದರೆ ಹೇಳಿರಲಿಲ್ಲ. +ಟೀ ಕಪ್ಪು ಕೈಯಲ್ಲಿ ಹಿಡಿದು ಸ್ವಾತಿ ಬೆಡ್‌ರೂಮಿಗೆ ಹೋಗಿ ಹಾಸಿಗೆಯ ಮೇಲೆ ಕಾಲು ಚಾಚಿ ಕೂತಳು. ಶಂಕರ ಹಾಸಿಗೆಯ ಪಕ್ಕದ ಕುರ್ಚಿಯ ಮೇಲೆ ಕೂತ. +‘ಬೇಕಾದರೆ ಯಾವುದಾದರೂ ಒಂದು ಸಿನೇಮಾ ನೋಡಬಹುದು’ ಅಂದ. +‘ಈ ವಾತಾವರಣದಲ್ಲಿ ಹೊರಗೆ ಹೋಗುವುದೇ ಬೇಡ ಅನಿಸುತ್ತಿದೆ. ಮತ್ತೆ ಮಳೆ ಬಂದರೂ ಬರಬಹುದು’ ಅಂದಳು. +ಅಲ್ಲೇ ಪಕ್ಕದ ಟೇಬಲ್ಲಿನ ಮೇಲೆ ಅವಳ ಪುಟ್ಟ ಟೇಪ್‌ರೆಕಾರ್ಡರ್ ಇತ್ತು. ಮಾತಾಡುತ್ತ ಕೂತ ಅವನ ಚಾಚಿದ ಕೈ ಟೇಪ್‌ರೆಕಾರ್ಡರನ್ನು ನಿರುದ್ದಿಶ್ಯವಾಗಿ ಸವರುತ್ತಿತ್ತು. ಅವನ ಬೆರಳುಗಳು ಅದರ ಗುಂಡಿಗಳ ಮೇಲೆ ತುಸು ಕಾಲ ನಿಂತವು. ಅವನು ಮುಂದೆ ಬಗ್ಗಿದ ಮತ್ತು ಒಳಗೆ ಕ್ಯಾಸೆಟ್ ಇರುವುದನ್ನು ಗಮನಿಸಿ ಅದರ ಪ್ಲೇ ಬಟನ್ನನ್ನು ಒತ್ತಿಬಿಟ್ಟ. ಒಮ್ಮೆಲೇ ದೊಡ್ಡ ದನಿಯೊಡನೆ ಒಂದು ಭಜನೆ ಶುರುವಾಯಿತು. ಅದೊಂದು ಭಾವುಕ ಪ್ರಾರ್ಥನೆ. ಅವಳ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ಒಂದು ಮರಾಠಿ ಭಜನೆ. ಒಂದು ವರ್ಷದ ಹಿಂದೆ ಅದೊಂದು ಕ್ಯಾಸೆಟ್‌ನಲ್ಲಿ ಸಿಗುವುದು ಗೊತ್ತಾಗಿ ತರಿಸಿಕೊಂಡಿದ್ದಳು. ಕೆಲವೊಮ್ಮೆ ಮಲಗುವಾಗ ಅದನ್ನು ಕೇಳಿಸಿಕೊಳ್ಳುವುದು ಅವಳಿಗೆ ವಿಚಿತ್ರವಾದ ಸಮಾಧಾನ ಕೊಡುತ್ತಿತ್ತು. ಇದು ಅವಳೊಬ್ಬಳಿಗೇ ಗೊತ್ತಿರುವ, ಅವಳು ಮತು ಅಜ್ಜಿಯ ಮಧ್ಯೆ ಇದ್ದ ಸಂಬಂಧದ ಒಂದು ಭಾಗವಾಗಿತ್ತು. ಹಿಂದಿನ ರಾತ್ರಿ ಅದನ್ನು ಕೇಳಿಸಿಕೊಳ್ಳುವಾಗ, ನಡುವೆ ನಿದ್ದೆ ಒತ್ತಿ ಬಂದಿದ್ದರಿಂದ ಅರ್ಧದಲ್ಲೇ ನಿಲ್ಲಿಸಿದ್ದಳು. ಈಗ ಅನಿರೀಕ್ಷಿತವಾಗಿ ಆ ಹಾಡು ಬರತೊಡಗಿದೊಡನೆ ಅವಳಿಗೆ ಕಸಿವಿಸಿಯಾಯಿತು. ಅದಕ್ಕೆ ಸರಿಯಾಗಿ ಶಂಕರನೂ ‘ಇದನ್ನೆಲ್ಲ ಕೇಳಿಸಿಕೊಳ್ಳುತ್ತೀಯೇನು?’ ಎಂದು ಒಂದು ರೀತಿಯ ದನಿಯಲ್ಲಿ ಕೇಳಿದಾಗ ರೇಗಿಹೋಯಿತು. ಧಡಕ್ಕನೆದ್ದು ಆರಿಸಿಬಿಟ್ಟಳು. ಮರಾಠಿಯ ಗಂಧಗಾಳಿಯಿಲ್ಲದ ಅವನಿಗೆ ಆ ಹಾಡು ಹೇಗೆ ಕೇಳಿಸಿರಬಹುದೆಂದು ಊಹಿಸಿದಳು. ಇದನ್ನು ತಾನು ಕೇಳಿಸಿಕೊಳ್ಳುವುದಕ್ಕೂ, ಸಂಗೀತದ ಬಗ್ಗೆ ತನಗೆ ಇರುವ ರುಚಿ ಮತ್ತು ಅಭಿಪ್ರಾಯಕ್ಕೂ ಇರುವ ಸಂಬಂಧ ಅವನಿಗೆ ಅರ್ಥವಾಗುವಂಥದ್ದಲ್ಲ ಎಂದು ಹೇಳಬೇಕೆಂದು ಬಯಸಿದಳು. ಈ ಹಾಡನ್ನು ತಾನು ಕೇಳುತ್ತ ಮಲಗುವುದು ಒಂದು ಅತ್ಯಂತ ವೈಯಕ್ತಿಕ ಕ್ರಿಯೆ ಅನ್ನಿಸಿ, ತನ್ನ ರಹಸ್ಯವೊಂದನ್ನು ಅವನು ಒಡೆದುಬಿಟ್ಟ ಅನಿಸಿ, ತನ್ನ ಮತ್ತು ಅಜ್ಜಿಯ ಸಂಬಂಧದ ನಡುವೆ ತಲೆತೂರಿಸುತ್ತಾನೆ ಅನಿಸಿ ಒಮ್ಮೆಲೇ ರೇಗಿಬಿಟ್ಟಳು. +‘ಅದನ್ನು ಹಾಕಬೇಡ ಶಂಕರ್…. ನೀನು ಹೀಗೆಲ್ಲ ಮಾಡಬಾರದು…. ನನ್ನ ಸ್ವಂತ ವಿಷಯದಲ್ಲಿ ಕೈ ಹಾಕಬಾರದು….’ ಎಂದುಬಿಟ್ಟಳು. ಅವಳು ಆಡಿದ ಮಾತುಗಳಿಗಿಂತ ಅವಳ ದನಿಯಲ್ಲಿದ್ದ ಕಠೋರತೆಗೆ, ಸಟ್ಟನೆ ಎದ್ದು, ತನ್ನ ಟೀ ಕಪ್ಪನ್ನು ಅಲ್ಲೇ ಹಾಸಿಗೆಯ ಮೇಲೆ ಇಟ್ಟು, ಅವನನ್ನು ದಾಟಿ ಟೇಪ್‌ರೆಕಾರ್ಡರಿನ ಗುಂಡಿಯೊತ್ತಿ ನಿಲ್ಲಿಸಿದ ರಭಸಕ್ಕೆ ಶಂಕರ ತಬ್ಬಿಬ್ಬಾದ. ಅವಳು ಹತ್ತಿರದಿಂದ ಹಾದು ಹೋದಾಗ ಅವಳಿಂದ ಹೊಮ್ಮಿದ ಅವಳಿಗೇ ವಿಶಿಷ್ಟವಾದ ಮೈಗಂಧ ಅವನನ್ನು ಮೃದುಗೊಳಿಸಿತು. ಆದರೆ ಅದಕ್ಕೂ, ಅವಳು ತೋರಿಸಿದ ಕಾಠಿಣ್ಯಕ್ಕೂ ಸಂಬಂಧ ಇಲ್ಲದ ಹಾಗೆ ಅನಿಸಿತು. +ತಾನು ತೋರಿಸಿಕೊಳ್ಳಬೇಕಾಗಿ ಬಂದ ಭಾವವಿಕಾರದಿಂದ ಪೆಚ್ಚಾದಳು. ಅವಳು ಟೀ ಕಪ್ಪನ್ನು ಹಾಸಿಗೆಯ ಮೇಲಿನಿಂದ ಎತ್ತುತ್ತಿದ್ದ ಹಾಗೆ, ಬೆಡ್‌ಶೀಟ್ ಮೇಲೆ ಕಂಡ ವೃತ್ತಾಕಾರದ ಟೀ ಗುರುತು ಅವಳನ್ನು ಇನ್ನಷ್ಟು ರೇಗಿಸಿತು. +‘ಹೋಗಲಿ ಬಿಡು….ನಿನಗೆ ಇಷ್ಟವಿಲ್ಲದಿದ್ದರೆ ನಾನೇ ಆರಿಸುತ್ತಿದ್ದೆನಲ್ಲ’ ಎಂದು ಅವನು ಹೇಳಿದ್ದೇ ಅವಳ ತಾಳ್ಮೆ ತಪ್ಪಿತು. +‘ನಿನಗೆ ಅರ್ಥವಾಗುವುದಿಲ್ಲ…. ಇದು ಬರೀ ಇದೊಂದೇ ಅಲ್ಲ….ಟೇಪ್‌ರೆಕಾರ್ಡರ್ ಆರಿಸುವ ಸಂಗತಿ ಮಾತ್ರ ಅಲ್ಲ….ನನ್ನ ವೈಯಕ್ತಿಕತೆಯ ಬಗ್ಗೆ, ಆ ಸ್ವಾತಂತ್ರ್ಯದ ಬಗ್ಗೆ ನಿನಗೆ ಗೌರವವೇ ಇಲ್ಲ….’ ಎಂದು ಹೇಳಹೊರಟವಳು ಬರೀ ಮಾತಿನ ಮೂಲಕ ಅವನನ್ನು ಮುಟ್ಟಲು ಸಾಧ್ಯವಿಲ್ಲ ಅನಿಸಿ ಸುಮ್ಮನಾದಳು. +‘ನಿನಗೆ ಏನು ಬೇಕೋ ಅದನ್ನು ಮಾಡುವಾ….ಜೊತೆಗಿರುವಾಗ ನಿನಗೆ ಹಾಡು ಹಾಕಬಾರದು ಅಂತಿದ್ದರೆ ನನ್ನ ಅಭ್ಯಂತರವೇನೂ ಇಲ್ಲ…. ಏನೂ ಬೇಡ ಅಂದರೆ ಸುಮ್ಮನೇ ಕೂತಿರುತ್ತೇನೆ….’ ಎಂದು ಅವನು ಶಾಂತವಾಗಿ ಹೇಳಿದ್ದು ಇನ್ನಷ್ಟು ಕೆಣಕಿತು. +ಇದಾವುದೂ ಅವನನ್ನು ತಲುಪುತ್ತಿಲ್ಲ ಅನ್ನುವುದು ಸ್ಪಷ್ಟವಾಯಿತು. ಅವನಿಗೆ ಸಿಟ್ಟೂ ಬಂದಿಲ್ಲವೇ ಎಂದು ಸ್ವಾತಿಗೆ ಅನುಮಾನವಾಯಿತು. ಅವನಿಗೆ ಸಿಟ್ಟು ತರಿಸುವ ಸಂಗತಿಗಳೇ ಬೇರೆಯಾಗಿದ್ದವು: ಅವಳು ಹೊತ್ತಿಗೆ ಸರಿಯಾಗಿ ತಯಾರಾಗಿ ಹೊರಡದೇ ಇದ್ದರೆ, ಏನನ್ನೋ ಮರೆತು ಮತ್ತೆ ಹಿಂದಿರುಗಿದರೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅದೂ ನಿಜವಾದ ಸಿಟ್ಟೋ ಕರಕರೆಯೋ ಅವಳಿಗೆ ಗೊತ್ತಾಗುತ್ತಿರಲಿಲ್ಲ. ಅವನಿಗೆ ನಿಜವಾಗಿ ಸಿಟ್ಟು ಬರಬೇಕು, ಅವನು ಸ್ಫೋಟಿಸಬೇಕು ಎಂದು ಬಯಸಿದಳು. +‘ನಿಜವಾಗಿಯೂ ನಾನು ಹೇಳಿದ ಹಾಗೆ ಮಾಡುತ್ತೀಯೇನು?’ +‘ನಿನ್ನಾಣೆ’ +‘ಹಾಗಾದರೆ ಇನ್ನು ನನ್ನನ್ನು ನೋಡಲು ಬರಬೇಡ. ನಾನಿದನ್ನು ಗಂಭೀರವಾಗಿ ಹೇಳುತ್ತಿದ್ದೇನೆ. ಈ ಕ್ಷಣದ ಸಿಟ್ಟಿನಿಂದ ಅಲ್ಲ. ನನಗೆ ಯಾವ ಪ್ರಶ್ನೆಗಳನ್ನೊಪೊ ಕೇಳಬೇಡ. ಈಗಲೇ ಹೋಗು. ಎಷ್ಟೋ ದಿವಸಗಳಿಂದ ಹೇಳಬೇಕೆಂದುದನು ಈಗ ಹೇಳುತ್ತಿದ್ದೇನೆ.’ +ತನ್ನ ಮಾತಿನ ಶಕ್ತಿಯಿಂದ ಅವಳೇ ಕಂಗೆಟ್ಟಳು. ಅವನನ್ನು ನೋಡಲಾಗದೇ ಕಿಟಕಿಯಾಚೆ ನೋಡಿದಳು. ಕೈಯಲ್ಲಿದ್ದ ಟೀ ಕಪ್ಪನ್ನು ಟೇಬಲ್ಲಿನ ಮೇಲಿಟ್ಟು ಅವನು ಮಾತಾಡದೇ ಎದ್ದು ಹೋದ. ಬಾಗಿಲು ತೆರೆದ ಸದ್ದು, ಮತ್ತೆ ಮುಚ್ಚಿದ ಸದ್ದು ಕೇಳಿಸಿತು. +ಪರಕಾಯ +ಎದ್ದು ನಿಂತು ಕಶ್ಯಪ್ ನಾಟಕೀಯವಾಗಿ ತನ್ನನ್ನು ಪರಿಚಯಿಸಿಕೊಂಡ. +‘ನಾನು ಎಂ.ಆರ್.ಕಶ್ಯಪ್…. ಕೀಟಶಾಸ್ತ್ರಜ್ಞ….. ಪಶ್ಚಿಮ ಘಟ್ಟಗಳ ಅಧ್ಯಯನಕ್ಕೆಂದು ಇಲ್ಲಿಗೆ ಎರಡು ವರ್ಷಗಳ ಸಲುವಾಗಿ ಬಂದಿದ್ದೇನೆ. ನಾನು ಮಾಡುತ್ತಿರುವ ಕೆಲಸ ವಿಶೇಷವಾಗಿ ಚಿಟ್ಟೆಗಳಿಗೆ ಸಂಬಂಧಿಸಿದ್ದು. ಚಿಟ್ಟೆಗಳನ್ನು ಅಧ್ಯಯನ ಮಾಡುವ ಮೂಲಕ ಇಡೀ ಪಶ್ಚಿಮ ಘಟ್ಟಗಳ ಪರಿಸರದ ಬಗ್ಗೆ ಒಳನೋಟಗಳನ್ನು ಪಡೆಯಬಹುದು. ಈಗಿನ ನನ್ನ ಪ್ರಯತ್ನವೂ ಅದೇ.’ ಅವನು ಮಾತಾಡಿದಾಗ ತನ್ನ ಮಾತಿಗೆ ವಿದೇಶಿ ಧಾಟಿ ಬರದ ಹಾಗೆ ಮಾಡಲು ಪ್ರಯತ್ನ ಪಡುತ್ತಿದ್ದಂತೆ ಅನಿಸುತ್ತಿತ್ತು. +ಸಂಜೆಯ ಕತ್ತಲು ನಿಧಾನವಾಗಿ ಗಾಢವಾಗುತ್ತಿತ್ತು. ಆಗಾಗ ಬೀಸುವ ಗಾಳಿಯಿಂದಾಗಿ ತುಸು ಚಳಿಯಾಗುತ್ತಿತ್ತು. ಭಾರತೀಯ ವಾಸ್ತುಶಿಲ್ಪಗಳಲ್ಲಿ ಹೊಸಾಹತುಶಾಹಿಯ ಪ್ರಭಾವದ ಬಗ್ಗೆ ವಾಸವನ್ ವ್ಯವಸ್ಥೆ ಮಾಡಿದ್ದ ಮಾತುಕತೆ ಮತ್ತು ಚರ್ಚೆಯಲ್ಲಿ ಭಾಗವಹಿಸಿ ಅದರ ನಂತರ ಎಂದಿನಂತೆ ಕ್ಲಬ್ಬೊಂದರಲ್ಲಿ ಎಲ್ಲರೂ ಸೇರಿದ್ದರು. ವಾಸ್ತುಶಿಲ್ಪಿಗಳೇ ಸೇರಿ ಮಾಡಿಕೊಂಡ ಈ ಸಂಘಟನೆಯ ಚರ್ಚೆಯ ವಸ್ತುಗಳು ಹೇಗಿರುತ್ತಿದ್ದವೆಂದರೆ, ಬರೀ ಅವರೇ ಸೇರಿದರೆ ಸಭೆ ಹತ್ತು ನಿಮಿಷಗಳಲ್ಲಿ ಮುಗಿದು ಹೋಗುತ್ತಿತ್ತು. ಹಾಗಾಗಿ ಬೇರೆ ಕ್ಷೇತ್ರಗಳಲ್ಲಿದ್ದು ಭಿನ್ನವಾಗಿ ಯೋಚಿಸುವ ಜನರನ್ನು ಅವರು ಸದಾ ಸ್ವಾಗತಿಸುತ್ತಿದ್ದರು. ಮನೋಹರ ಅಲ್ಲಿ ಹೋಗಲು ಅವನ ಸ್ನೇಹಿತ ಮತ್ತು ಅದರ ಸಂಚಾಲಕರಲ್ಲೊಬ್ಬನಾದ ವಾಸವನ್ ಕಾರಣನಾಗಿದ್ದ. ಮನೋಹರ ಈ ವೇದಿಕೆಯನ್ನು ಪಾಪಪ್ರಜ್ಞಾಹರಣ ಮೇಳ ಎಂದು ತಮಾಷೆ ಮಾಡುತ್ತಿದ್ದ. ಸಂಸ್ಕೃತಿ ಮತ್ತು ಪರಂಪರೆಯ ಅರಿವಿಲ್ಲದೇ, ಬರೀ ತಾಂತ್ರಿಕ ಜ್ಞಾನ ಮಾತ್ರ ಇರುವ ವಾಸ್ತುಶಿಲ್ಪಿಗಳು ಈ ದೇಶದ ಸೌಂದರ್ಯವನ್ನು ಹೊಲಸೆಬ್ಬಿಸಿ, ಆ ಪಾಪವನ್ನು ಬೌದ್ಧಿಕ ಕಸರತ್ತಿನಿಂದಾದರೂ ತೊಳಕೊಳ್ಳಲು ಹವಣಿಸುತ್ತೀರೆಂದು ತಮಾಷೆ ಮಾಡುತ್ತಿದ್ದ. ಅಷ್ಟೇ ಅಲ್ಲ, ಉಳಿದ ಕ್ಷೇತ್ರಗಳಲ್ಲಿರುವ ಇಂಥ ಜನರೇ ನಿಮ್ಮ ಸಂಘಟನೆಗೂ ಬರುವರೆಂದು ಅವನು ಅಗಾಗ ಗಂಭೀರವಾಗಿ ರೇಗಿಸಿ ವಾಸವನ್‌ಗೂ ಇದು ನಿಜವೇನೋ ಎಂಬ ಅನುಮಾನ ಬರುವ ಹಾಗೆ ಆಗಿತ್ತು. +ಕ್ಲಬ್ಬಿನ ಹೊರಗೆ ಗಾರ್ಡನ್ನಿನಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಆವತ್ತಿನ ಸಭೆಗೆ ಬಂದ ಸುಮಾರು ಐವತ್ತು ಜನರಲ್ಲಿ ಸಭೆ ಮುಗಿದ ನಂತರ, ಹೋಗುವವರು ಹೋದ ಮೇಲೆ ಉಳಿದ ಇಪ್ಪತ್ತೆರಡು ಜನ ಇಲ್ಲಿ ಸೇರಿದ್ದರು. ಕ್ಲಬ್ಬಿನ ಹಿಂಭಾಗದಲ್ಲಿದ್ದ ಹುಲ್ಲು ಹಾಸಿನ ಮೇಲೆ ಮೇಜುಗಳನ್ನು ಸಾಲಾಗಿ ಜೋಡಿಸಿದ್ದರು. ಸುತ್ತಲೂ ಎತ್ತರದ ಮರಗಳಿದ್ದವು. ಇನ್ನೊಂದು ಭಾಗದಲ್ಲಿರುವ ಈಜುಕೊಳದ ಅರ್ಧ ಭಾಗ ಇಲ್ಲಿಂದ ಕಾಣುತ್ತಿತ್ತು. ಎಲೆಗಳ ಎಡೆಯಿಂದ ಬೀಸುವ ಗಾಳಿ ಸುಂಯ್ಯಸುಂಯ್ಯನೆ ಸದ್ದು ಮಾಡುತ್ತಿತ್ತು. ಚಳಿಗೆ ಒಣಗಿ ಉದುರಿದ ಎಲೆಗಳು ಸುತ್ತಲೂ ಹರಡಿದ್ದವು. ತಿಳಿ ಹಸಿರು ಬಣ್ಣದ ಕುರ್ಚಿಗಳನ್ನು ಟೇಬಲ್ಲುಗಳ ಸುತ್ತ ಜೋಡಿಸಿದ್ದರು. +ಆವತ್ತಿನ ಸಭೆಗೆ ಟೈ ಮತ್ತು ಕೋಟು ಹಾಕಿಕೊಂಡು ಬಂದ ಕಶ್ಯಪ್ ತನ್ನ ಭಿನ್ನವಾದ ವೇಷಭೂಷಣಗಳಿಂದಲೇ ಎಲ್ಲರ ಗಮನ ಸೆಳೆದಿದ್ದ. ಆ ಗುಂಪಿಗೆ ಅವನು ಅಪರಿಚಿತ. ಅವನು ಯಾರ ಅತಿಥಿ ಅಥವಾ ಗೆಳೆಯನಾಗಿ ಈ ಸಭೆಗೆ ಬಂದ ಎಂದು ಅನೇಕರಿಗೆ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಅವನ ಮಾತಿನಿಂದ ಎಲ್ಲರೂ ಪ್ರಭಾವಿತರಾಗಿದ್ದರು. ಗ್ರೀಕ್ ಕಲಾಪ್ರಜ್ಞೆಯಿಂದ ಹಿಡಿದು ಈವತ್ತಿನ ಭಾರತೀಯ ವಾಸ್ಥುಶಿಲ್ಪದವರೆಗೆ ಅವನು ಮಾತಾಡುವ ರೀತಿಗೆ ಬೆರಗಾಗಿದ್ದರು. ತಾನು ಮಾತಾಡುವ ವಿಷಯ ಅಲ್ಲಿ ಸೇರಿದವರಿಗೆ ಹೊಸದಲ್ಲವೆಂಬ ರೀತಿಯಲ್ಲಿ ಅವನು ವ್ಯವಹರಿಸುತ್ತಿದ್ದುದು ಎಲ್ಲರಿಗೆ ಇಷ್ಟವಾಯಿತು. +ಕಶ್ಯಪ್ ತನ್ನ ಪಕ್ಕದ ವ್ಯಕ್ತಿಯ ಜೊತೆ ಕೆರೆಗಳನ್ನು ಹೇಗೆ ಉಳಿಸಬೇಕೆಂಬ ಬಗ್ಗೆ ಗಂಭೀರವಾಗಿ ವಿವರಣೆ ಕೊಡುತ್ತಲಿದ್ದ. ಪ್ರತಿಯಬ್ಬರ ಬಳಿ ಬಂದ ವೇಟರ್‌ಗೆ ತಮಗೆ ಬೇಕಾದ ಡ್ರಿಂಕ್ ಹೇಳಿದ ನಂತರ ಎಲ್ಲರೂ ತುಸು ಹಗುರಾದರು. ಕುರ್ಚಿಯಲ್ಲಿ ಒರಗಿ ಮೈ ಸಡಿಲಿಸಿದರು. +ಅವನ ಪರಿಚಯದ ಅಗತ್ಯ ಇರದ ಹಾಗೆ ಅವನ ಬಗ್ಗೆ ಆಗಲೇ ಸಾಕಷ್ಟು ವಿವರಗಳು ಟೇಬಲ್ಲಿನ ಸುತ್ತ ಹರಡತೊಡಗಿದ್ದವು. ಅವನು ಸಭೆಗೆ ಬರಲು ತಾನೇ ಕಾರಣನೆಂಬ ರೀತಿಯಲ್ಲಿ ವಾಸವನ್ ಹೇಳತೊಡಗಿದ್ದ. +‘ಈ ಸಭೆಗೆ ಇವರು ಬರಬೇಕಾಗಿದ್ದು ಪಾಂಡೆಯವರ ಅತಿಥಿಯಾಗಿ. ಪಾಂಡೆ ಈವತ್ತು ಬೆಳಿಗ್ಗೆ ಫೋನ್ ಮಾಡಿ ಮೈಸೂರಿಗೆ ಹೋಗಬೇಕಾಗಿದೆ, ಹಾಗಾಗಿ ನಾನು ಬರುವುದಿಲ್ಲ; ನನ್ನ ಜೊತೆ ಕಶ್ಯಪ್ ಅಂತ ಇಂಟರೆಸ್ಟಿಂಗ್ ವ್ಯಕ್ತಿಯೊಬ್ಬರು ಬರುವವರಿದ್ದರು… ನಾನು ಬರದಿದ್ದರೂ ಅವರು ಬರಬಹುದು ಎಂದು ಹೇಳಿದರು. ಹತ್ತೇ ನಿಮಿಷದಲ್ಲಿ ಕಶ್ಯಪ್ ಫೋನ್ ಮಾಡಿ ನಾನು ಸಭೆಗೆ ಬರಲೇ ಎಂದು ಕೇಳಿದರು. ಅದು ಆದದ್ದು ಹೀಗೆ….’ +ಕಶ್ಯಪ್ ಹಾಕಿಕೊಂಡ ತಿಳಿನೀಲಿ ಬಣ್ಣದ ಕೋಟು ಮತ್ತು ಕೆಂಪು ಬಣ್ಣದ ಗೆರೆಗೆರೆಯ ಟೈ ಅಲ್ಲಿದ್ದವರಿಗೆ ತುಸು ಓರೆಯಾಗಿ ಕಂಡರೂ ಅವನಿಗದು ಸರಿಯಾಗಿ ಒಪ್ಪುತ್ತಿತ್ತು. ಎತ್ತರ ಮತ್ತು ದೇಹ ಸೌಷ್ಠವದಿಂದಾಗಿ ಒಳ್ಳೆಯ ಆಟಗಾರನಂತೆ ಕಾಣುತ್ತಿದ್ದ ಅವನ ವ್ಯಕ್ತಿತ್ವಕ್ಕೆ ಗೋಲಾಕಾರದ ಕನ್ನಡಕ ಒಂದು ರೀತಿಯ ಗಾಂಭೀರ್ಯವನ್ನು ಕೊಟ್ಟಿತ್ತು. ಅವನು ತನ್ನನ್ನು ಪರಿಚಯಿಸಿಕೊಂಡಾಗ, ತನ್ನ ಪಕ್ಕ ಕೂತ ವ್ಯಕ್ತಿಯೊಡನೆ ಮಾತಾಡುವಾಗ, ಬಾಯಿ ಓರೆ ಮಾಡಿದಾಗ, ಮುಂದಕ್ಕೆ ತುದಿಯಲ್ಲಿ ತುಸು ಬಾಗಿದ ಅವನ ಮೂಗು ನೋಡಿದಾಗ ಅವನನ್ನು ಎಲ್ಲೋ ನೋಡಿದ್ದೇನೆಂದು ಮನೋಹರನಿಗೆ ಅನಿಸಿತು. ಚುಚ್ಚಿದ ಮುಳ್ಳು ತೆಗೆಯಲು, ಸೂಜಿಯ ಮೊನೆಯಿಂದ ಮುಳ್ಳಿನ ತುದಿಯನ್ನು ಸ್ಪರ್ಶಿಸಲು ಪಡುವ ಪ್ರಯತ್ನದಂತೆ ಈ ಗುರುತಿನ ಸಾಮ್ಯತೆ ಅವನ ಮನಸ್ಸನ್ನು ಕೆದಕುತ್ತ ಕಿರಿಕಿರಿ ಹುಟ್ಟಿಸತೊಡಗಿತು. +ವಾಸವನ್ ಕಶ್ಯಪನ ಪಕ್ಕ ಕೂತು ನಗರದ ಅತ್ಯಂತ ಹಳೆಯ ಕ್ಲಬ್ಬುಗಳಲ್ಲಿ ಒಂದಾದ ಇದರ ಇತಿಹಾಸವನ್ನು ಹೇಳತೊಡಗಿದ. +‘ಇದು ಒಬ್ಬ ನಿವೃತ್ತ ದೀವಾನರ ಚಪಲತೆಯಿಂದ ಹುಟ್ಟಿಕೊಂಡದ್ದು. ಮನೆಯವರ ರಗಳೆ ಇಲ್ಲದೇ ನಾಲ್ಕು ಜನ ಸ್ನೇಹಿತರು ಸೇರಿ ಇಸ್ಪೀಟು ಆಡಲು ಮಾಡಿಕೊಂಡ ಜಾಗ. ತಮ್ಮ ಪ್ರಭಾವ ಉಪಯೋಗಿಸಿ ಈ ಹಳೆಯ ಕಟ್ಟಡವನ್ನು ಮಂಜೂರು ಮಾಡಿಸಿಕೊಂಡರು. ಆಮೇಲೆ ಅದಕ್ಕೊಂದು ಆಡಳಿತ ಮಂಡಳಿಯೂ ಆಗಿ ಸನ್ಯಾಸಿಯ ಸಂಸಾರದ ಹಾಗೆ ಬೆಳೆಯಿತು. ಸದಸ್ಯರಿಗೇನೂ ಕೊರತೆ ಇರಲಿಲ್ಲ. ಎಲ್ಲರೂ ದೊಡ್ದದೊಡ್ಡವರೇ. ಆಮೇಲೆ ಕಾಫಿಯ ವ್ಯವಸ್ಥೆ, ತಿಂಡಿಗಾಗಿ ಕಿಚನ್ ತಯಾರಾಯಿತು. ಹಳೆಯ ಫೈಲುಗಳಲ್ಲಿ ಆಡಳಿತ ಮಂಡಳಿಯ ಮೀಟಿಂಗ್ ವಿವರಗಳಿವೆ. ಅವುಗಳನ್ನು ಸುಮ್ಮನೇ ಇದ್ದಂತೆ ದಾಖಲಿಸಿದರೂ ಸಾಕು ಈ ಕ್ಲಬ್ಬು ಎಲಿಂದ ಇಲ್ಲಿಯವರೆಗೆ ಬಂತು ಅನ್ನುವುದೂ, ಅದರ ಜೊತೆಗೇ ಒಂದು ವರ್ಗದ ಸಾಮಾಜಿಕ ಜೀವನದ ಪಲ್ಲಟಗಳೂ ಸ್ಪಷ್ಟವಾಗಿ ಕಾಣಿಸುತ್ತವೆ.’ +ಅದರ ಆಡಳಿತ ಮಂದಳಿಯಲ್ಲಾದ ಬದಲಾವಣೆ ಹೇಗೆ ಅದರ ಕಟ್ಟಡದ ವಿಸ್ತರಣೆಯಲ್ಲಿ ವ್ಯಕ್ತವಾಗಿದೆಯೆಂಬುದು ಅವನ ವೈಚಾರಿಕ ಅರ್ಥವಂತಿಕೆಯ ಮಾತುಗಾರಿಕೆಯಲ್ಲಿ ರಸವತ್ತಾಗಿತ್ತು. ಮೊದಲು ಇಲ್ಲಿ ಬಾರ್ ಇರಲಿಲ್ಲ. ನಂತರ ಅದನ್ನು ಸೇರಿಸಲು ಏನು ಮಾಡಿದರು, ಹೇಗೆ ಅದನ್ನೊಂದು ಬೇರೆ ಕಟ್ಟಡದ ಭಾಗವಾಗುವಂತೆ ಮಾಡಿ ಪ್ರತ್ಯೇಕ ಮಡಿವಂತಿಕೆಯನ್ನು ಕಾಪಾಡಿಕೊಂಡರು; ಸದಸ್ಯರು ಆಚೆ ಗಾರ್ಡನ್ನಿನಲ್ಲಿ ಕೂತು ಕುಡಿಯುವ ವ್ಯವಸ್ಥೆಯನ್ನು ಹೇಗೆ ನಾಜೂಕಾಗಿ ನಿರ್ವಹಿಸಿ ಎಲ್ಲ ನಿಯಮಗಳ ನಡುವೇ ಅದನ್ನು ಸೇರಿಸಿಕೊಂಡರು ಎಂದು ವಿವರಿಸಿದ. ಇಲ್ಲಿಗೆ ಭೇಟಿ ಕೊಡುತ್ತಿದ್ದ ನಗರದ ಖ್ಯಾತನಾಮರನ್ನೆಲ್ಲ ವಾಸವನ್ ಹೆಸರಿಸಿದ. ತನ್ನ ಮಾತುಗಳು ಮತ್ತು ಹೊಸ ಹೆಸರುಗಳು ಅವನಿಗೆ ಅರ್ಥವಾಗುತ್ತಿಲ್ಲ ಎಂಬ ಅನುಮಾನ ಬಂದು ಮಾತನ್ನು ತುಸು ನಿಧಾನಗೊಳಿಸಿದ. +ಅವನ ಮಾತು ನಿಲ್ಲತೊಡಗಿದ ಹಾಗೆ ಕಶ್ಯಪ್ ‘ಇಲ್ಲಿ ಬರುತ್ತಿದ್ದ ಖ್ಯಾತ ಸಾಹಿತಿ ಯಾರು ಗೊತ್ತೇನು?’ ಎಂದು ಕೇಳಿದ. ವಾಸವನ್‌ಗೆ ತುಸು ಗಲಿಬಿಲಿಯಾಯಿತು. ಅವನು ತನ್ನ ನೆನಪಿಗೆ ಹೊರೆಯಾಗದ ದಿವಾನರನ್ನೂ ಮೇಯರರನ್ನೂ ಸಿನಿಮಾ ತಾರೆಯರನ್ನು ಸೇರಿಸಿದ್ದನೇ ವಿನಹ ಈ ಸಾಹಿತಿಯ ವಿಷಯ ಅವನಿಗೆ ಗೊತ್ತಿರಲಿಲ್ಲ. ಈ ಕ್ಲಬ್ಬಿಗೆ ಅಕಸ್ಮಾತ್ತಾಗಿ ಬಂದೂ, ಇಲ್ಲಿ ಬರುತ್ತಿದ್ದ ಖ್ಯಾತ ಸಾಹಿತಿಯ ಬಗ್ಗೆಯೂ ತಿಳಿದುಕೊಂಡ ಕಶ್ಯಪನ ಬಗ್ಗೆ ವಾಸವನ್‌ಗೆ ತುಸು ಬೆರಗಾಯಿತು. ಕಶ್ಯಪ್ ತನ್ನ ಎತ್ತರದ ದನಿಯಲ್ಲಿ ಈ ಪ್ರಶ್ನೆ ಕೇಳಿದ್ದರಿಂದ ಅದು ಟೇಬಲ್ಲಿನ ಸುತ್ತ ಕೂತ ಇಡೀ ಗುಂಪಿಗೆ ಕೇಳಿದ ಪ್ರಶ್ನೆಯಂತೆ ಇತ್ತು. ಅಲ್ಲಿದ್ದ ರಾಘವೇಂದ್ರರಾವ್ ಎಂಬ ಹಳಬರೊಬ್ಬರು ಆ ಸಾಹಿತಿಯ ಹೆಸರು ಹೇಳಿದರು. ಇಷ್ಟು ವರ್ಷ ಯಾವುಯಾವುದೋ ದೇಶದಲ್ಲಿದ್ದು ಬಂದ ಅವನು, ಇಲ್ಲಿಯವರಿಗಿಂತ ಹೆಚ್ಚು ಇಲ್ಲಿಯ ಬಗ್ಗೆ ಮಾತಾಡುವುದು ಕೆಲವರಿಗೆ ಇರಿಸುಮುರಿಸನ್ನೂ, ಕೆಲವರಿಗೆ ಅವನ ಬಗ್ಗೆ ಮೆಚ್ಚುಗೆಯನ್ನೂ, ಕೆಲವರಿಗೆ ತಮ್ಮ ಬಗ್ಗೇ ಅಭಿಮಾನವನ್ನು ಹುಕ್ಕಿಸಿತು. +ಅದೊಂದು ಮಧ್ಯಂತರದಂತೆ ಇತ್ತು. ಕೆಲವರು ಎದ್ದು ಒಂದು ಸುತ್ತು ಹೋಗಿ ಬಂದರು. ಮನೋಹರನ ಪಕ್ಕ ಕೂತವರೊಬ್ಬರು ಕಶ್ಯಪನಿಗೆ ಈ ನಗರದ ಕೆರೆಗಳ ಬಗ್ಗೆ ವಿವರಿಸ ತೊಡಗಿದ್ದರು. ಯಾವ ದೀವಾನರ ಕಾಲದಲ್ಲಿ ಲಾಲ್‌ಬಾಗ್ ಸಂರಕ್ಷಣೆ ಸರಿಯಾಗಿ ಶುರುವಾಯಿತು ಎಂದು ಅವನು ಹೇಳತೊಡಗಿದೊಡನೆ ಅವರಿಗೆ ಅಪರಿಮಿತ ಆಸಕ್ತಿ ಬಂದು ಕಶ್ಯಪನನ್ನು ತನ್ನ ಪಕ್ಕ ಕರೆದರು. ಇಬ್ಬರ ಮಾತುಕತೆಯ ನಡುವೆ ಅವರ ಹೆಸರು ಜಗನ್ನಾಥ ಎಂದು ಗೊತ್ತಾಯಿತು. ತಾನು ದೆಹಲಿಯ ಯಾವುದೋ ಒಂದು ಸಂಸ್ಥೆಯ ನಿಯತಕಾಲಿಕವೊಂದರ ಸಂಪಾದಕನಾಗಿದ್ದೆನೆಂದು ವಿವರಿಸುತ್ತಿದ್ದರು. ಹೇಗೆ ತನ್ನ ಕೆಲಸ ಯಾವ ಪತ್ರಿಕೋದ್ಯಮಿಯ ಕೆಲಸಕ್ಕೂ ಕಡಿಮೆಯಾಗಿರಲಿಲ್ಲ, ಆದರೂ ಇಷ್ಟು ಹಿರಿಯನಾದ ತನ್ನನ್ನು ಪತ್ರಿಕೋದ್ಯಮದ ಯಾರೂ ತಮ್ಮಲ್ಲೊಬ್ಬನೆಂದು ಗುರುತಿಸುವುದಿಲ್ಲ ಎಂದು ಹೇಳುತ್ತಿದ್ದರು. ಅವರ ಮಾತುಗಳಿಂದ ಬೇಜಾರಾಗಿಯೋ, ಪಕ್ಕ ಕೂತವನ ಜೊತೆ ಅಗತ್ಯವಾದ ಸೌಜನ್ಯವೆಂದೋ ಅಂತೂ ಕಶ್ಯಪ್ ಮನೋಹರನತ್ತ ತಿರುಗಿ ಕೈಕುಲುಕಲು ಕೈ ಚಾಚಿದ. ಮನೋಹರ ತನ್ನ ಹೆಸರು ಹೇಳಿದ. +ಕೈಕುಲುಕುತ್ತ ಕಶ್ಯಪ್ ಅಭ್ಯಾಸಬಲದಿಂದೆಂಬಂತೆ ತನ್ನ ಹೆಸರನ್ನು ಮತ್ತೆ ಹೇಳಿದ. ಅವನು ಹಾಗೆ ಹೇಳುವಾಗ, ಹತ್ತಿರದಿಂದ ಅವನನ್ನು ನೋಡಿದಾಗ ಅವನು ಕಾಶೀಶನ ಹಾಗೆ ಕಾಣುತ್ತಾನೆ ಎಂದು ಮನೋಹರನಿಗೆ ಫಕ್ಕನೆ ಅನಿಸಿತು. ಇದ್ದರೂ ಇರಬಹುದು ಎಂಬ ಅನುಮಾನ ಹುಟ್ಟಿತು. ಅವನು ತನ್ನ ಗ್ಲಾಸನ್ನೆತ್ತಿ ಕುಡಿಯುವಾಗ ಪಕ್ಕದಿಂದ ಮತ್ತೊಮ್ಮೆ ನೋಡಿದ. ಅವನ ಕನ್ನಡಕದಲ್ಲಿ ಕ್ಲಬ್ಬಿನ ದೀಪ ಪ್ರತಿಬಿಂಬಿಸುತ್ತಿತ್ತು. +‘ಯಾವ ಊರು ನಿಮ್ಮದು?’ ಎಂದು ಮನೋಹರ ಕೇಳಿದ. +‘ಗೋವಾದ ಹತ್ತಿರ ಒಂದು ಸಣ್ಣ ಊರು…. ಊರಿಗೆ ಹತ್ತಿರವಾಗಿ ಇರಬಹುದು ಅನ್ನುವ ಆಕರ್ಷಣೇ ನನ್ನನ್ನು ಈ ಪ್ರಾಜೆಕ್ಟ್‌ಗೆ ಕೈ ಹಾಕುವಂತೆ ಮಾಡಿತು…. ಇಲ್ಲವಾದರೆ ನಾನಂತೂ ಎಲ್ಲ ಬಿಟ್ಟು ಬರುವವನೇ ಅಲ್ಲ….’ ಅಂದ. +‘ನಾನು ಉತ್ತರ ಕನ್ನಡದವನು… ನಿಮ್ಮ ಊರಿಗೆ ಬಹಳ ಹತ್ತಿರ’ ಎಂದು ಮನೋಹರ ಹೇಳಿದಾಗ ಕಶ್ಯಪನ ಉತ್ಸಾಹ ಕಣ್ಣಿಗೆ ಕಾಣುವಂತೆ ಪ್ರಕಟಗೊಂಡಿತು. +‘ಅರರೇ…. ಹಾಗಾದರೆ ನನ್ನ ಮಾತು ನಿಮಗೆ ಅರ್ಥವಾಗುತ್ತದೆ… ನಾನು ಮಾಡುವ ಕೆಲಸ ಪಶ್ಚಿಮ ಘಟ್ಟಗಳ ಬಗ್ಗೆಯಾದರೂ ಇದರ ಮಧ್ಯದಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆ ಅಂದರೆ ಆ ಪರ್ವತಶ್ರೇಣಿಯ ಒಂದು ಸ್ಯಾಂಪಲ್ ಇದ್ದ ಹಾಗೆ. ಅಲ್ಲಿಯ ಕೀಟ ಸಂಪತ್ತಿನ ಅಧ್ಯಯನ ಮಾಡಿದರೆ ಸಾಕು, ಇಡೀ ಘಟ್ಟದ ಬಗ್ಗೆ ಒಂದು ಕಲ್ಪನೆ ಬರುತ್ತದೆ…. ಉತ್ತರ ಕನ್ನಡ ಜಿಲ್ಲಿಯಲ್ಲಿ ಯಾವ ಊರು ನಿಮ್ಮದು?’ +‘ಕುಮಟೆ…. ಅಲ್ಲಿ ಕಾಲೇಜಿನವ್ರೆಗೂ ಓದಿದೆ. ಆಮೇಲೆ ಎಲ್ಲೆಲ್ಲೋ ಹೋಗಬೇಕಾಯಿತು’ +‘ನಾನು ಅತ್ಯಂತ ಇಷ್ಟಪಡುವ ಜಿಲ್ಲೆ ಅದು…. ಅಲ್ಲಿಯಂಥ ಸಸ್ಯಸಂಪತ್ತು ಎಲ್ಲಿಯೂ ಇಲ್ಲ…. ಆಮೇಲೆ ಅಲ್ಲಿಯ ಜನ ಕೂಡ… ಅತ್ಯಂತ ಸ್ನೇಹಪರರು…. ಜನ ಬೇಕು ಅನ್ನುತ್ತಾರಲ್ಲ ಆ ಥರದವರು…. ನಾನು ನನ್ನ ಬಾಲ್ಯದ ಬಹು ಭಾಗವನ್ನು ಅಲ್ಲಿಯ ಆಸುಪಾಸಿನ ಕಾಡಿನಲ್ಲಿ ಕಳೆದಿದ್ದೇನೆ…. ಆಮೇಲೆ ಅಧ್ಯಯನದ ಸಲುವಾಗಿ ಒಂದು ವರ್ಷ ದಾಂಡೇಲಿಯ ಕಾಡಿನಲ್ಲಿ ಕಳೆದಿದ್ದೇನೆ…. ಅವು ನನ್ನ ಅತ್ಯಂತ ಸಾಹಸದ ದಿನಗಳು….’ ಅವನ ಮಾತು ಮುಂದುವರಿದಂತೆಲ್ಲ ಅಲ್ಲಿಯ ಕಾಡು, ಎತ್ತರದ ಮರಗಳು, ಕಾಡುಗಳ್ಳರು ಮತ್ತು ಕಳೆದುಹೋಗುತ್ತಿರುವ ಸೌಂದರ್ಯ ಚ್ತ್ರವತ್ತಾಗಿ ಮೂಡತೊಡಗಿತು. ಕಶ್ಯಪನ ಉತ್ಸಾಹಕ್ಕೆ ಎಣೆ ಇರಲಿಲ್ಲ. +‘ನೀವೂ ಆರ್ಕಿಟೆಕ್ಟರೋ?’ ಕನ್ನಡಕ ಕೈಯಲ್ಲಿ ಹಿಡಿದು, ಅದರ ಗಾಜನ್ನು ಕರವಸ್ತ್ರದ ತುದಿಯಿಂದ ಒರೆಸುತ್ತ ಕಶ್ಯಪ್ ಕೇಳಿದ. ಹ್ಹಾ ಹ್ಹಾ ಎಂದು ಬಾಯಿಯಿಂದ ಗಾಜಿನ ಮೇಲೆ ಉಸಿರು ಬಿಟ್ಟು ತೇವ ಮಾಡಿಕೊಂಡು ಒರೆಸತೊಡಗಿದ. +‘ಇಲ್ಲ. ವಾಸವನ್ ನನ್ನ ಸ್ನೇಹಿತ. ನಾನು ಇಲ್ಲಿ ಬಂದದ್ದು ಸಹವಾಸ ದೋಷದಿಂದ. ನಾನು ಓದಿದ್ದು ಸಮಾಜಶಾಸ್ತ್ರ. ಆಮೇಲೆ ಒಂದು ಮಾಸ್ ಕಮ್ಯುನಿಕೇಶನ್ಸ್ ಕೋರ್ಸ್. ಆನಂತರ ಒಂದು ಜಾಹೀರಾತು ಕಂಪನಿ ಸೇರಿದೆ. ಆ ಕೆಲಸದ ನಿಮಿತ್ತ ಎಲ್ಲೆಲ್ಲೋ ಓಡಾಡಿದೆ. ನಂತರ ಒಂದು ಇಂಗ್ಲಿಷ್ ವಾರಪತ್ರಿಕೆಯ ಮಾರ್ಕೆಟಿಂಗ್ ವಿಭಾಗ ಸೇರಿಕೊಂಡೆ. ಅದರ ಸಲುವಾಗಿ ಡೆಲ್ಲಿಗೆ ಹೋದೆ. ಈಗ ಒಂದು ವರ್ಷದಿಂದ ಇಲ್ಲಿಯ ಒಂದು ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.’ +‘ಕರ್ನಾಟಕದ ಜನ ರಾಜ್ಯ ಬಿಟ್ಟು ಹೋಗುವುದಿಲ್ಲ ಎಂಬ ಮಾತಿಗೆ ಅಪವಾದದ ಹಾಗಿದ್ದೀರಲ್ಲ.’ +‘ಎಲ್ಲಿ ಅಪವಾದ? ವಾಪಸ್ಸು ಬಂದಿದ್ದೇನಲ್ಲ. ಉತ್ತರ ಕನ್ನಡದ ಜನ ಮೊದಲಿನಿಂದಲೂ ಮುಂಬೈಗೆ ವಲಸೆ ಹೋದವರೇ. ಶಾಲೆ ಕಾಲೇಜು, ಆಮೇಲೆ ಅಷ್ಟೇ ಸಹಜವಾಗಿ ಮುಂದಿನ ಮೆಟ್ಟಿಲೋ ಎಂಬಂತೆ ಮುಂಬೈ…. ಈಗ ಅದೂ ನಿಧಾನ ಬದಲಾಗಿದೆ. ನನ್ನ ಹಾಗೆ ಬೇರೆ ಕಡೆ ಹೋಗುವವರೂ ಇದ್ದಾರೆ. ಆದರೆ ಬೆಳೆಯುತ್ತಿದ್ದ ಹಾಗೆ ಊರು ಬಿಟ್ಟು ಹೋಗುವುದು ಮಾತ್ರ ಬದಲಾಗಿಲ್ಲ. ಬಹುಶಃ ಮೊದಲಿನಿಂದಲೂ ಅದಕ್ಕೆ ತಯಾರಿ ಒಳಗೊಳಗೇ ನಡೆಯುತ್ತಲೇ ಇರುತ್ತದೆಯೇನೋ….’ +‘ನನ್ನ ದೃಷ್ಟಿಯಲ್ಲಿ ಒಂದೇ ಕಡೆ ಇರುವುದೆಂದರೆ ಸ್ವರ್ಗ. ನೆಮ್ಮದಿ ಅಂದರೆ ಏನೆಂದು ಗೊತ್ತಿರುವವರು ಮಾತ್ರ ಹಾಗಿರುತ್ತಾರೆ. ನಮ್ಮ ಹಾಗೆ ಅತಂತ್ರರು ಅದನ್ನು ಅರಸಿಕೊಂಡು ಅಲೆಯುವುದು. ನಿಮ್ಮನ್ನೂ ಇದರಲ್ಲಿ ಸೇರಿಸಿಕೊಂಡ ನನ್ನ ಸಲಿಗೆಯನ್ನು ತಪ್ಪು ತಿಳಿಯಬೇಡಿ.’ +‘ನೀವು ಇತ್ತೀಚೆಗೆ ಉತ್ತರ ಕನ್ನಡಕ್ಕೆ ಹೋಗಿದ್ದೀರಾ?’ +‘ಏಳು ವರ್ಷಗಳ ಹಿಂದೆ ಹೋಗಿದ್ದೆ. ತದಡಿಯಲ್ಲಿರುವ ಡೇನಿಶ್ ಯೋಜನೆಯಲ್ಲಿ ನನ್ನ ಹೆಂಡತಿಯ ಸ್ನೇಹಿತನೊಬ್ಬನ ಅತಿಥಿಯಾಗಿ. ಗಂಗಾವಳಿಯ ಗುಂಟ ಹೋಗಬೇಕೆನ್ನುವುದು ನನ್ನ ಯೋಜನೆ…. ಇದು ನನ್ನ ಜೀವನದ ದೊಡ್ದ ಆಸೆಗಳಲ್ಲಿ ಒಂದು. ಈಗ ಅದಕ್ಕಾಗಿಯೇ ರೂಪರೇಷೆಗಳನ್ನು ತಯಾರು ಮಾಡುತ್ತಿದ್ದೇನೆ. ಈ ನದಿ ಸಮುದ್ರ ಸೇರುವಲ್ಲಿಂದ ಶುರು ಮಾಡಿ , ಅದರ ಗುಂಟ ಹೋದರೆ ಇಡೀ ದಾರಿಯಲ್ಲಿ ಪಶ್ಚಿಮ ಘಟ್ಟಗಳ ಚಿಟ್ಟೆಗಳ ಒಂದು ಬಹುಮುಖ್ಯ ಸ್ಯಾಂಪಲ್ ಸಿಗುತ್ತದೆ ಎಂದು ನನ್ನ ನಂಬಿಕೆ. ಅದಕ್ಕೆ ಬೇಕಾದ ತಯಾರಿ ಈಗ ನಡೆಸುತ್ತಿದ್ದೇನೆ…. ಒಂದಲ್ಲ ಒಂದು ದಿನ ಇದನ್ನು ಮಾಡಲೇಬೇಕು ಎಂದು ಆಸೆ ನನಗೆ…. ಹತ್ತು ದಿನಗಳಲ್ಲಿ ಇಡೀ ಪ್ರಯಾಣ ಮತ್ತು ಸ್ಯಾಂಪಲ್ ಸಂಗ್ರಹಣೆ ಮುಗಿಸಬಹುದು… ಈ ಬಾರಿ ಇಲ್ಲಿ ಎರಡು ವರ್ಷ ಇರುತ್ತೇನಲ್ಲ…. ವಾಪಸು ಹೋಗುವ ಮುಂಚೆ ಈ ಗಂಗಾವಳಿ ಯಾತ್ರೆ ಮಾಡಲೇಬೇಕು ಎಂದು ನನ್ನೊಳಗೇ ನಿರ್ಧರಿಸಿದ್ದೇನೆ…. ಇದಕ್ಕೆ ಅಗತ್ಯವಾದ ದುಡ್ಡು ಕೂಡ ದೊರಕಿದೆ….’ +‘ನಿಮಗೆ ಸಹಾಯ ಬೇಕಾದರೆ ಕೇಳಿ…. ನನ್ನ ಪರಿಚಯದವರು ಈಗ ಅಲ್ಲಿ ಫಾರೆಸ್ಟ್ ಆಫೀಸರ್ ಆಗಿದ್ದಾರೆ’ ಎಂದು ಮನೋಹರ ಅವನ ಉತ್ಸಾಹ ಕಂಡು ಹೇಳಿದ. +‘ನನಗೆ ಬೇಕಾದವರು ನಿಮ್ಮಂಥವರೇ… ಇಂಡಿಯಾದಲ್ಲಿ ಹೇಗೆ ಗೊತ್ತಲ್ಲ… ಫಾರೆಸ್ಟ್ ಆಫೀಸರನ ಕೃಪೆ ಇಲ್ಲದೇ ಯಾವ ವಿಜ್ಞಾನಿಗೂ ಕಾಡಿನಲ್ಲಿ ಕಾಲು ಹಾಕಲು ಸಾಧ್ಯವಿಲ್ಲ…. ನಾನು ಮುಂದಿನ ವಾರವೇ ನಿಮ್ಮನ್ನು ನೋಡಿತ್ತೇನೆ….’ ಅಂದ. +ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳು ಪರಸ್ಪರ ವಿನಿಮಯವಾದವು. ಅಲ್ಲಿಗೆ ಎರಡನೇ ಸುತ್ತಿನ ಆರ್ಡರ್ ತಗೊಳ್ಳಲು ಬಂದ ವೇಟರ್‌ಗೆ ತಮ್ಮ ತಮ್ಮ ಆಯ್ಕೆಯನ್ನು ಹೇಳಿದರು. ‘ಉಸಳಿ ಉಸಳಿ’ ಎಂದು ಜನಾಗ್ರಹದ ಮೂಲಕ ಉಸಳಿ ಬಂತು. ನಡುನಡುವೆ ಜನ ಎದ್ದು ಕುರ್ಚಿ ಖಾಲಿಯಾದಾಗಲೆಲ್ಲ ಕಶ್ಯಪ್ ಅಲ್ಲಿಗೆ ಹೋಗಿ ಅಕ್ಕಪಕ್ಕ ಕೂತವರ ಜೊತೆ ಮಾತು ಶುರುಮಾಡಿ ಅವರನ್ನು ಪರಿಚಯಿಸಿಕೊಳ್ಳಿತ್ತಿದ್ದ. ಅವನ ಈ ಉತ್ಸಾಹದಿಂದ ಇಡೀ ಸಂಜೆಗೆ ಹೊಸತನದ ಕಳೆ ಬಂದಿತ್ತು. ಇಲ್ಲವಾದರೆ ಕೂತಲ್ಲೇ ಕೂತು ಕುಡಿದು, ಪಕ್ಕ ಯಾರು ಇರುತ್ತಾರೋ ಅವರ ಜೊತೆ ಒಂದಷ್ಟು ಮಾತಾಡಿ, ಮಾತಾಡಿದ್ದನ್ನು ಅಲ್ಲೇ ಮರೆತು ಹೊರಡುತ್ತಿದ್ದರು. ಈವತ್ತು ಈತ ಬಂದು ಕುರ್ಚಿಗಳನ್ನು ಬದಲಾಯಿಸುತ್ತ, ಎಲ್ಲರ ಜೊತೆ ಮಾತಾಡಿ ಇಡೀ ಸಂಜೆಗೆ ಹೊಸ ಹುರುಪು ತಂದುಕೊಟ್ಟಿದ್ದ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿ ತನ್ನ ವ್ಯಕ್ತಿತ್ವದ ಛಾಪು ಬಿಟ್ಟಿದ್ದ. +ಲಲೀಕ್ ಗ್ಲಾಸ್, ಗ್ಲೆನ್ ವಿಸ್ಕಿ +ಕಶ್ಯಪನ ಮನೆ ಹುಡುಕಲು ತಡವಾಗಲಿಲ್ಲ. ನೀಲಿ ಜೀನ್ಸ್ ಮತ್ತು ಟೀ ಶರ್ಟು ತೊಟ್ಟ, ಕಾಲಿಗೆ ಕೊಲ್ಹಾಪುರಿ ಚಪ್ಪಲಿ ಹಾಕಿದ್ದ ಕಶ್ಯಪ್ ಬಾಗಿಲು ತೆರೆದು ಸ್ವಾಗತಿಸಿಸಿದ. +ಮನೆಯೊಳಗೆ ಅಡಿಗೆಯ ಪರಿಮಳ ಹಬ್ಬಿತ್ತು. ದೀವಾನಖಾನೆಯ ಒಂದು ಅಂಚಿನಲ್ಲಿ ಕರಿಮರದ ಕನ್ನಡಿಯ ಕಪಾಟಿತ್ತು. ಅದರ ಮೇಲಿದ್ದ ಹಿತ್ತಾಳೆಯ ಸ್ಟ್ಯಾಂಡ್‌ನಲ್ಲಿ ಬೆಳಗಿಸಿಟ್ಟ ಎರಡು ಮೋಂಬತ್ತಿಗಳು. ಮನೋಹರನನ್ನು ಬಿಟ್ಟರೆ ಬೇರೆ ಯಾರದೇ ಸುಳಿವಿರಲಿಲ್ಲ. ಆ ದೊಡ್ಡ ಕೋಣೆಯ ಒಂದು ಬದಿಗೆ, ಅಡಿಗೆಮನೆಯ ಬಾಗಿಲಿಗೆ ಹೊಂದಿಕೊಂಡಂತೆ ಊಟದ ಟೇಬಲ್ಲಿತ್ತು. ಅದಕ್ಕೆ ದಪ್ಪ ಗಾಜಿನ ಟಾಪ್. ಅದರ ಮೇಲಿದ್ದ ಹೂದಾನಿಯ ತುಂಬ ಹೂಗಳು. ಕಿಟಕಿಗಳಿಗೆ ಕೆನೆ ಬಣ್ಣದ ಪರದೆಗಳು. ಕೋಣೆಯ ಇನ್ನೊಂದು ಪಕ್ಕ ಕೂರುವ ವ್ಯವಸ್ಥೆ- ಅಲ್ಲಿ ಬೆತ್ತದ ಕುರ್ಚಿಗಳು, ಬೆತ್ತದ ಸೋಫಾ, ಬೆತ್ತದ ಟೇಬಲ್ಲಿತ್ತು. ಅದಕ್ಕೆ ಹೊಂದಿಕೊಂಡಂತೆ ಗೋಡೆಗೆ ತಾಗಿ ಇಟ್ಟ ದೊಡ್ಡದೊಂದು ಪುಸ್ತಕದ ಕಪಾಟು ಇಡೀ ಗೋಡೆಯನ್ನೇ ವ್ಯಾಪಿಸಿದಂತಿತ್ತು. ಮನೆಯ ಒಳ ಬರುತ್ತಿದ್ದಂತೆ ಒಂದು ಪಕ್ಕ ಬಿಚ್ಚಿಟ್ಟ ಚಪ್ಪಲಿ ಶೂಗಳನ್ನು ನೋಡಿ ಮನೋಹರನೂ ತನ್ನ ಶೂಗಳನ್ನು ಅಲ್ಲಿಯೇ ಬಿಚ್ಚಿಟ್ಟ. +‘ನಿಮಗಾಗಿ ಸ್ಪೆಶಲ್ ಊಟ ತಯಾರಾಗ್ತಾ ಇದೆ…. ಗೋವಾದ ಚಿಕನ್ ಕರಿ’ ಎಂದು ಹೇಳಿ ಕಶ್ಯಪ್ ‘ಆವತ್ತು ಕ್ಲಬ್ಬಿನಲ್ಲಿ ನೀವು ಚಿಕನ್ ತಿಂದದ್ದು ಗಮನಿಸಿದೆ. ಹಾಗಾಗಿ ನಿಮ್ಮನ್ನು ಕೇಳದೇ ಈ ಅಡಿಗೆಯನ್ನು ನಾನೇ ನಿರ್ಧರಿಸಿಬಿಟ್ಟೆ’ ಅಂದ. +‘ಇಲ್ಲದಿದ್ದರೂ ಈ ಮಸಾಲೆಯ ಪರಿಮಳ ಮಾಂಸಾಹಾರಿಯಾಗಿ ಪರಿವರ್ತನೆಯಾಗಲು ಸಾಕು’ ಎಂದು ಮನೋಹರ ನಕ್ಕ. +‘ನನ್ನ ಹೆಂಡತಿ ಇಡೀ ದಿನ ಹೊರಗೆ ಎಲ್ಲೋ ಹೋಗಿದ್ದಳು…. ಈಗ ತಾನೇ ಬಂದಳು… ಸ್ನಾನ ಮಾಡಿ ತಯಾರಾಗ್ತಾ ಇದಾಳೆ.. ಇನ್ನೇನು ಬಂದುಬಿಡುತ್ತಾಳೆ…. ನಾವು ಅಷ್ಟರವರೆಗೂ ಕಾಯಬೇಕಾಗಿಲ್ಲ…. ಬಿಯರಿನಿಂದ ಶುರುಮಾಡುತ್ತೀರೇನು? ವಿಸ್ಕಿ ಇದೆ… ವೈನ್ ಇದೆ ಗೋವಾದ್ದು…’ +‘ನನಗೆ ಬಿಯರ್ ಇರಲಿ’ +‘ನನಗೂ ಬಿಯರಿನಿಂದ ಆರಂಭಿಸಲು ಇಷ್ಟ. ಆದರೆ ನಂತರ ಮಾತ್ರ ನನ್ನ ಆಯ್ಕೆ ವಿಸ್ಕಿ… ವಿಸ್ಕಿ ಆಫ್ಟರ ಬಿಯರ್ ಈಸ್ ನಾಟ್ ರಿಸ್ಕಿ ಅನ್ನುವ ಮಾತನ್ನು ವಿಸ್ಕಿ ಆಫ್ಟರ ಎನಿಥಿಂಗ್ ಈಸ್ ನಾಟ್ ರಿಸ್ಕಿ ಎಂದು ನನ್ನ ಮಟ್ಟಿಗೆ ಬದಲಾಯಿಸಿಕೊಂಡಿದ್ದೇನೆ… ಒಳ್ಳೆಯ ಗ್ಲೆನ್ ವಿಸ್ಕಿ ಸಿಕ್ಕರೆ ನನಗೆ ಪರಮ ಸಂತೋಷ… ಈ ಊರಿನಲ್ಲಿ ಅದನ್ನು ದೊರಕಿಸುವುದು ಸಾಧ್ಯವೇ ಇಲ್ಲದ ಮಾತು. ಯಾರಾದರೂ ಹೊರದೇಶದಿಂದ ಬರುವಾಗ ತರಿಸುತ್ತೇನೆ. ಕಾದಿರಿಸಿದ ಬಾಟಲಿಗಳಲ್ಲಿ ಒಂದನ್ನು ನಿಮಗೆಂದು ಈವತ್ತು ತೆರೆಯುತ್ತೇನೆ…’ +ಉದ್ದನೆಯ ಗಾಜಿನ ಗ್ಲಾಸುಗಳಲ್ಲಿ ಬಿಯರ್ ಸುರಿಯುತ್ತ ಅವನು ಮತ್ತೆ ಮಾತು ಮುಂದುವರಿಸಿದ. +‘ನಿಮಗೆ ಪರ್‍ವಾಗಿಲ್ಲ ಅಂತಾದರೆ ಇಲ್ಲೇ ಅಡಿಗೆ ಮನೆಯ ಬಾಗಿಲಲ್ಲೈ ಒಂದು ಕುರ್ಚಿ ಹಾಕಿಕೊಡುತ್ತೇನೆ…. ಈವತ್ತಿನ ಅಡಿಗೆ ಭಟ್ಟ ನನೇ…. ಅಡಿಗೆ ಮಾಡುವುದೆಂದರೆ ನನಗೆ ಬಹಳ ಇಷ್ಟ…. ಈಗ ತಾನೇ ಶುರುಮಾಡಿದ್ದೇನೆ…. ಅರ್ಧ ಗಂಟೆಯಲ್ಲಿ ಎಲ್ಲ ಮುಗಿಸಿಬಿಡುತ್ತೇನೆ…. ಸ್ವಾತಿ ಕೂಡ ಅಷ್ಟರೊಳಗೆ ಬಂದುಬಿಡುತ್ತಾಳೆ…. ನಿಮ್ಮನ್ನು ಭೆಟ್ಟಿಯಾಗಲಿ ಎಂದೇ ಅವಳನ್ನೂ ಕರೆದೆ…. ತುಂಬಾ ಚುರುಕಾದ ಹುಡುಗಿ….’ +ನೀಳವಾದ ಗ್ಲಾಸಿನಲ್ಲಿದ್ದ ಬಂಗಾರದ ಬಣ್ಣದ ಬಿಯರು ಸಂಬಾರ ಜಿನಸುಗಳ ವಾಸನೆಯ ಜೊತೆ ಹಿತವಾಗಿತ್ತು. ಅಡಿಗೆ ಮನೆಯ ಬಾಗಿಲು ದಾಟಿ ಒಳಹೋಗುತ್ತಿದ್ದ ಹಾಗೆ, ಬಲಪಕ್ಕ ಇದ್ದ ಜಾಗದಲ್ಲಿ ಹಾಕಿದ ಕುರ್ಚಿಯ ಮೇಲೆ ಮನೋಹರ ಕೂತ. ಊಟದ ಟೇಬಲ್ಲಿನಿಂದ ಎಳೆತಂದ ಕುರ್ಚಿಯಾದ್ದರಿಂದ ಮೈಚೆಲ್ಲಿ ಕೂರುವಂತಿರಲಿಲ್ಲ. ತನ್ನ ಗ್ಲಾಸನ್ನು ಕಶ್ಯಪ್ ಅದಿಗೆ ಮನೆಯ ಕಲ್ಲುಕಟ್ಟೆಯ ಮೇಲಿಟ್ಟ. ಗ್ಯಾಸಿನ ಜ್ವಾಲೆಗೆ ಅದರೊಳಗಿನ ಬಿಯರು ವಿಚಿತ್ರ ಬಣ್ಣದಲ್ಲಿ ಹೊಳೆಯುತ್ತಿತ್ತು. ಒಂದು ಪಕ್ಕ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಇಟ್ಟಿದ್ದ. ಮೂರು ದೊಡ್ಡ ದೊಡ್ಡ ಬೆಳ್ಳುಳ್ಳಿಗಳನ್ನು ಸುಲಿಯಲು ಆರಂಭಿಸಿದ. ಅದೆಲ್ಲ ಟಿವಿ ಪ್ರಸಾರದ ಅಡಿಗೆ ಕಾರ್ಯಕ್ರಮದಂತೆ ಆಕರ್ಷಕವಾಗಿತ್ತು. ಸತತವಾಗಿ ಮಾತಾಡುತ್ತ, ಕೈಗೆ ಒಂದು ನಿಮಿಷವೂ ಪುರುಸತ್ತು ಕೊಡದೇ, ಪಳಗಿದ ಕಲಾಕಾರನ ಹಾಗೆ ಅವನು ಸರಸರನೆ ಕೆಲಸ ಮಾಡುತ್ತಿದ್ದ. +ಸುಲಿದ ಬೆಳ್ಳುಳ್ಳಿಯ ತೊಳೆಗಳನ್ನು ಕಚಕಚ ಕತ್ತರಿಸಿದ. ನೀರಲ್ಲಿ ನೆನೆಸಿಟ್ಟ ಕೊತ್ತಂಬರಿ ಸೊಪ್ಪಿನ ಕಟ್ಟು ಎತ್ತಿಕೊಂಡ. +‘ಇಂಡಿಯನ್ ಬಿಯರಿನಲ್ಲಿ ಕೊಬ್ಬಿನ ಅಂಶ ಜಾಸ್ತಿ. ಅದರ ಜೊತೆ ನಮ್ಮ ಮಧ್ಯಮ ವರ್ಗದ ಗಂಡಸರಿಗೆ ವ್ಯಾಯಾಮವೂ ಕಡಿಮೆ…. ಬಿಯರು ಕುಡಿದು ಜೊತೆಗೆ ಕರಿದ ಪಕೋಡಗಳನ್ನು ತಿಂದರೆ ಬೊಜ್ಜು ಬರಲು ಅದಕ್ಕಿಂತ ಒಳ್ಳೆಯ ಫಾರ್ಮುಲಾ ಬೇಕೇ?….’ +ಅವನ ಕೈಯಲ್ಲಿ ಕೊತ್ತಂಬರಿ ಚೂರಾಗತೊಡಗಿತು. +‘ಇದೋ ನೋಡಿ ಈ ಕಡಾಯಿ…. ಕಬ್ಬಿಣದ್ದು… ಈ ರೀತಿಯ ಅಡಿಗೆಗಳಿಗೆ ಇಂಥದ್ದಿಲ್ಲದಿದ್ದರೆ ಸಾಧ್ಯವೇ ಇಲ್ಲ…. ಹೋದಲ್ಲೆಲ್ಲ ಇದನ್ನು ಹೊತ್ತುಕೊಂಡು ಓಡಾಡಿದ್ದೇನೆ…. ಹಾಗೆ ನೋಡಿದರೆ ನನಗೆ ಬೇಕಾದ್ದು ಎಲ್ಲವೂ ಇಲ್ಲಿಲ್ಲ…. ನನ್ನ ಐಡಿಯಲ್ ಕಿಚನ್ ಗೋವಾದಲ್ಲಿ ಮಾತ್ರ ಇರಲು ಸಾಧ್ಯವಿದೆ…. ಒಂದು ಕಟ್ಟಿಗೆ ಒಲೆ ಇರಬೇಕು…. ಪಕ್ಕದಲ್ಲಿ ಕೆಂಡಗಳು ನಿಗಿನಿಗಿ ಅನ್ನುತ್ತಿರಬೇಕು…. ಹಿಂದೆ ಹಿತ್ತಿಲಲ್ಲಿ ತಾಜಾ ಕೊತ್ತಂಬರಿ, ಒಗ್ಗರಣೆ ಎಲೆ, ಶುಂಠಿ ಬೆಳೆದಿರಬೇಕು…. ಆಗ ತಾನೇ ಹಿಡಿದ ಮೀನು ಇರಬೇಕು. ಅಮೇರಿಕಾದಲ್ಲಿದ್ದಾಗ ಒಲೆ ಗಿಲೆ ಅಂತ ಕೆಂಡ ತಂದು ಸ್ವಲ್ಪ ಮಟ್ಟಿಗೆ ಏನೋ ಮಾಡಿಕೊಂಡೆ…. ಆದರೆ ಅದು ವಿಫಲ ಕನಸಿನ ಹಾಗಾಯಿತು…. ಅದಲ್ಲದೇ ನಮ್ಮ ಕಡೆಯ ಸೊಪ್ಪುಗಳು ಆ ಹವಾಮಾನದಲ್ಲಿ ಹೇಗೆ ಬೆಳೆಯಬೇಕು?.’ +ಅರಿಶಿನದ ನೀರಿನಲ್ಲಿ ಅದ್ದಿಟ್ಟ ಚಿಕನ್ ತುಂಡುಗಳನ್ನು ತೆಗೆದು, ನೀರು ಬಸಿದು ಹೋಗುವವರೆಗೆ ಎತ್ತಿ ಹಿಡಿದು, ನಂತರ ತಳಕ್ಕೆ ತೂತುಗಳಿರುವ ಪಾತ್ರೆಯೊಂದರಲ್ಲಿ ಹಾಕತೊಡಗಿದ. +‘ಅರಿಶಿನದ ನೀರಲ್ಲಿ ನೆನೆಸುವುದರಿಂದ, ಬೇಯಿಸಿದ ನಂತರವೂ ಸಂಬಾರ ಜಿನಸಿನ ಪರಿಮಳ ಉಳಿಯುತ್ತದೆ….. ಇದು ನಮ್ಮ ಮನೆತನದ ಅಡಿಗೆಯ ಪದ್ಧತಿಯೇನಲ್ಲ… ಆದರೆ ನನ್ನ ಬಾಲ್ಯದಲ್ಲಿ ನೋಡಿದ್ದು….. ನಮ್ಮ ಮನೆಯಲ್ಲಿ ಮೀನು ಬಿಟ್ಟರೆ ಬೇರೆ ಯಾವ ಮಾಂಸವನ್ನೂ ತಿನ್ನುತ್ತಿರಲಿಲ್ಲ…. ಚಿಕನ್ ಅಭ್ಯಾಸವಾದದ್ದು ನನ್ನ ಅಜ್ಜನಿಂದಾಗಿ….. ಅವನ ಕಾಡು ತಿರುಗುವ ಹುಚ್ಚಿನಿಂದಾಗಿ ಗಂಟು ಬಿದ್ದ ಹವ್ಯಾಸಗಳು ಇವೆಲ್ಲ….’ +ಕಬ್ಬಿಣದ ಕಪ್ಪು ಕಡಾಯಿಯನ್ನು ಗ್ಯಾಸಿನ ಮೇಲೆ ಇಟ್ಟು ಬೆಂಕಿಯನ್ನು ಪೂರ್ತಿ ದೊಡ್ಡದು ಮಾಡಿದ. ಅವನ ಕಂದು ಮುಖ ಮಿರಿಮಿರಿ ಮಿಂಚುತ್ತಿತ್ತು. ಹಣೆಯ ಮೇಲೆ ಬೆವರಿನ ಸಾಲುಗಳು ಕೂಡತೊಡಗಿದ್ದವು. ಕಪೋಲದ ಮೇಲೆ ಕೂದಲುಗಳು ಅಲ್ಲಲ್ಲಿ ಬೆಳ್ಳಗಾಗಿದ್ದವು. ಕಡಾಯಿಯ ಒಳಭಾಗವನ್ನು ಬಟ್ಟೆಯಿಂದ ಒರೆಸಿದ. ಒಂದು ಹನಿ ನೀರು ಸಿಡಿಸಿ ಅದು ಸಾಕಷ್ಟು ಕಾದಿದೆಯೋ ಎಂದು ಪರೀಕ್ಷಿಸಿದ. ನಂತರ ಎಣ್ಣೆ ಹಾಕಿದ. ಕತ್ತರಿಸಿಟ್ಟ ಪದಾರ್ಥವಳನ್ನೆಲ್ಲ ಒಂದೊಂದಾಗಿ ಹಾಕುತ್ತ ಹುರಿಯತೊಡಗಿದ. +‘ಈ ಪೋರ್ಚುಗೀಸರಿದ್ದಾರಲ್ಲ, ಅವರ ನಾಲಿಗೆಯ ರುಚಿಗ್ರಹಣವೇ ಬೇರೆ ರೀತಿಯದು…. ಸಂಬಾರ ಜಿನಸು ಅವರಿಗೆ ಪ್ರಿಯವಾಗಿದ್ದರೂ ಅವರು ಕಟು ರುಚಿಯ ಕಡೆಗೆ ವಾಲಿದವರಲ್ಲ… ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ಒಬ್ಬ ಬರೆದ ದಾಖಲೆಗಳಿವೆ…. ಅವನ ಡೈರಿಯನ್ನೇ ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ…. ಅವನು ಇಂಡಿಯಾಕ್ಕೆ ಬಂದು ಗೋವಾ ಮತ್ತು ಅದರ ದಕ್ಷಿಣ ಭಾಗಗಳಲ್ಲಿ ವಾಸಮಾಡಿ ಸಂಗ್ರಹಿಸಿದ ವಿವರಗಳು….. ಆ ಭಾಗದ ಸಾಮಾನ್ಯ ಜನ ಸುಮಾರು ಇನ್ನೂರು ಬಗೆಯ ಸಸ್ಯಗಳನ್ನು ತಿನ್ನುತ್ತಿದ್ದರು ಎಂದು ಬರೆದಿದ್ದಾರೆ…. ಅದರ ಜೊತೆಗೇ ಅಲ್ಲಿಯ ಕೊಂಕಣಿಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕೂಡ ಹಲವು ವಿಷಯ ಸಂಗ್ರಹಿಸಿದ್ದಾನೆ….’ +ಅವನು ತನ್ನೊಳಗೆ ಹಾಕಿದ ಜೀನಸುಗಳನ್ನೆಲ್ಲ ಆ ಕಪ್ಪು ಕಡಾಯಿ ಹುರಿದು ಕೆಂಪಗೆ ಮಾಡತೊಡಗಿತು. +‘ಈಗ ನನ್ನ ಗೋವನ್ ಕರಿಯ ಮೊದಲ ರಹಸ್ಯವನ್ನು ತೋರಿಸುತ್ತೇನೆ’ ಎಂದು ಕಶ್ಯಪ್ ವೈಟ್ ವೈನಿನ ಬಾಟಲೊಂದನ್ನು ತೆರೆದ. ಅದರಿಂದ ಒಂದು ಗ್ಲಾಸ್ ವೈನ್ ತೆಗೆದು ಆ ಕಡಾಯಿಗೆ ಸುರಿದ. ಅದು ಬುಸ್ಸಬುಸ್ಸನೇ ಆವಿಯಾಗುತ್ತ ಅಡಿಗೆ ಮನೆಯ ತುಂಬ ವಿಚಿತ್ರವಾದ ಘಾಟನ್ನೂ, ತೆಳ್ಳನೆಯ ಆವಿಯಂಥ ಹೊಗೆಯನ್ನೂ ತುಂಬಿಸಿತು. +‘ವೈನ್ ಬಿಸಿಯಾದದ್ದೇ ಅದರಲ್ಲಿಯ ಆಲ್ಕೋಹಾಲ್ ಹೋಗಿಬಿಡುತ್ತದೆ…. ಅದರ ಬದಲು ವಿನೆಗರ್ ಕೂಡ ಹಾಕಬಹುದು…. ಆದರೆ ನಾನು ಅಡಿಗೆಯಲ್ಲಿ ನಾಟಕೀಯತೆಯನ್ನು ಬಯಸುವವನು….’ +ಕಟ್ಟಿಗೆಯ ಸೌಟಿನಿಂದ ಕಡಾಯಿಯನ್ನು ಮರುಕಳಿಸತೊಡಗಿದ. ಅರೆದಿಟ್ಟ ಮಸಾಲೆ ಬಿದ್ದೊಡನೆ, ನೀರು ಬೆಂಕಿಗೆ ಬಿದ್ದಂತೆ ಸದ್ದು ಮಾಡುತ್ತ ಕಡಾಯಿ ಶಾಂತವಾಯಿತು. ನಂತರ ಹಾಗೇ ನಿಧಾನ ಕಾವು ಏರುತ್ತ ಮಸಾಲೆ ಕುದಿಯತೊಡಗಿತು. ಅದರಲ್ಲಿ ಕೋಳಿಯ ತುಂಡುಗಳು ಸೇರಿದವು. +‘ನನ್ನ ಅಡಿಗೆಯಿಂದ ಅನೇಕ ರೇಂಜರುಗಳನ್ನೂ, ಫಾರೆಸ್ಟ್ ಆಫೀಸರರನ್ನೂ, ಸ್ನೇಹಿತರನ್ನೂ, ಪಿ‌ಎಚ್‌ಡಿ ಗೈಡನ್ನೂ, ಅಷ್ಟೇ ಯಾಕೆ ನನ್ನ ಹೆಂಡತಿಯನ್ನೂ ಗೆದ್ದಿದ್ದೇನೆ ನಾನು…. ಅನೇಕ ಹುಡುಗಿಯರನ್ನೂ ಸಹ….’ ಎಂದು ಕಶ್ಯಪ್ ಕಣ್ಣು ಮಿಟುಕಿಸಿದ. +ಇಬ್ಬರ ಬಿಯರ್ ಗ್ಲಾಸ್‌ಗಳನ್ನು ಮತ್ತೆ ತುಂಬಿಸಿದ. +‘ನನ್ನ ಎರಡನೆಯ ರಹಸ್ಯ ಈಗ ಹೇಳುತ್ತೇನೆ’ ಅನ್ನುತ್ತ ಎಣ್ಣೆಯ ಒಂದು ಬಾಟಲು ತೋರಿಸಿದ. +‘ಈ ತೆಂಗಿನ ಎಣ್ಣೆಯ ಪರಿಮಳ ಚೂರು ಸವರಿ ಹೋದ ಹಾಗಿರಬೇಕು…. ಆಗ ಈ ಕೋಳಿ ಕರಿಗೆ ಒಂದು ರೀತಿಯ ಘನತೆ ಬರುತ್ತದೆ…. ರುಚಿ ಅಂದರೆ ಬರೀ ನಾಲಿಗೆಯ ರುಚಿಯಷ್ಟೇ ಅಲ್ಲ…. ಪಂಚೇಂದ್ರಿಯಕ್ಕೂ ಅನುಭವಕ್ಕೆ ಬರಬೇಕು…. ಆಗಲೇ ಅದು ಸಾರ್ಥಕ….’ +ಅಡಿಗೆ ಅಂದರೆ ಅದೊಂದು ಮಹತ್ವವಾದ ಯಜ್ಞವೆಂಬಂತೆ ಅವನು ಮಾತನಾಡುತ್ತಿದ್ದ. ಸೌಟು ಹಿಡಿದಾಗ, ಹವಿಸ್ಸನ್ನು ಕೊಡುತ್ತಿರುವ ಯಜ್ಞದ ಅಧ್ವರ್ಯುವಿನಂತೆ ಕಂಡ. ಕಟ್ಟಿಗೆ ಸೌಟಿನಿಂದ ಚೂರು ಸಾರನ್ನು ಅಂಗೈಗೆ ಬೀಳಿಸಿಕೊಂಡು ನೆಕ್ಕಿದ. ಕಡಾಯಿಗೆ ಮುಚ್ಚಳ ಹಾಕಿ, ಒಂದು ತುದಿಯಲ್ಲಿ ಅರೆತೆರೆದಿಟ್ಟು, ಸಣ್ಣ ಉರಿಯಲ್ಲಿ ಕುದಿಯಲು ಬಿಟ್ಟ. +‘ಇದರ ಜೊತೆ ತಿನ್ನಲಿಕ್ಕೆ ಗೋವಾದ ಬನ್ ರಂದಿದ್ದೇನೆ…. ಅದು ಸಿಗುವ ಜಾಗಗಳೂ ಈ ಊರಲ್ಲಿವೆ. ಒಂದು ದಿನ ಗೋವದ ಸ್ನೇಹಿತರೊಬ್ಬರನ್ನು ನೋಡಲು ಹೋಗಿದ್ದೆ. ಅವರ ಮಗುವೊಂದು ಕೈಯಲ್ಲಿ ಬನ್ ಹಿಡಿದು ಆಚೆ ಬಂತು…. ಅದನ್ನು ನೋಡಿದ್ದೇ ಗೋವಾದ ಬನ್ ಎಂದು ಗೊತ್ತಾಯಿತು….’ +ಅವನ ಮಾತು ಮುಗಿಯುತ್ತಿದ್ದಂತೆ ನಡುಮನೆಯ ಮೆಟ್ಟಲಿಳಿದು ಬರುತ್ತಿದ್ದ ಹೆಂಗಸು ಮನೋಹರನ ಕಣ್ಣಿಗೆ ಬಿದ್ದಳು. ಆ ಕಬ್ಬಿಣದ ಮೆಟ್ಟಿಲುಗಳು ಚಕ್ರಾಕಾರವಾಗಿ ಸುರುಳಿ ಸುತ್ತಿ ಸುತ್ತಿ ಮೊದಲ ಮಹಡಿಯಿಂದ ಇಳಿದಿದ್ದವು. ಅದಕ್ಕೆ ಸೋನೇರಿ ಬಣ್ಣ ಹಚ್ಚಲಾಗಿತ್ತು. ಕಡುನೀಲಿ ಬಟ್ಟೆ ತೊಟ್ಟ ಅವನ ಹೆಂಡತಿ ಚಪ್ಪಲಿಗಳ ಹಿಮ್ಮಡಿಯಿಂದ ಟಕ್ಕಟಕ್ಕನೆ ಸದ್ದು ಮಾಡುತ್ತ ಇಳಿದು ಬಂದಳು. ಅವಳು ಬರುತ್ತಿದ್ದ ಹಾಗೇ ಮನೋಹರ ಎದ್ದು ನಿಂತ. +ಅವಳು ‘ನಾನು ನಿಧಿ’ ಎಂದು ಕೈಚಾಚಿದಳು. ಅವಳ ಕೈಕುಲುಕುತ್ತ ಮನೋಹರ ಹೆಸರು ಹೇಳಿದ. +‘ಪರಿಚಯ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲದಷ್ಟು ಇವನು ನಿಮ್ಮ ಬಗ್ಗೆ ಹೇಳಿದ್ದಾನೆ….’ ಅನ್ನುತ್ತ ಅಡಿಗೆಯ ತಯಾರಿಯತ್ತ ಗಮನಿಸಿದಳು. ‘ಏನು ನಡೆಸಿದ್ದಾನೆ ನನ್ನ ಗಂಡ?…. ಮಾತಿನಲ್ಲೇ ಅಡಿಗೆ ಮುಗಿಸಿ ಮಾತಿನಲ್ಲೇ ಊಟವನ್ನು ಹಾಕುತ್ತಾನೆ ಬೇಕಾದರೆ….. ಕಶ್ಯಪ್ ಏನಾದರೂ ಮಾಡಬೇಕೇನು?’ +‘ಏನೂ ಬೇಡ…. ಕೆಲವೇ ನಿಮಿಷಗಳಲ್ಲಿ ಎಲ್ಲ ರೆಡಿ…. ಗ್ಲಾಸುಗಳನ್ನು ಟೇಬಲ್ಲಿನ ಮೇಲಿಡಬಹುದು…. ಅವನಿಗೆ ಬಿಯರ್ ಬೇಕೋ ನೋಡುತ್ತೀಯಾ?’ +ಮನೋಹರ ತನಗೆ ಮತ್ತೆ ಬಿಯರ್ ಬೇಡವೆಂದ. ನಿಧಿ ಕಶ್ಯಪನ ಹತ್ತಿರ ನಿಂತಾಗ ಅವಳ ಎತ್ತರ ನೋಡಿ ಅವನಿಗೆ ಸರಿಯಾದ ಜೋಡಿಯೆಂದು ಮನೋಹರ ಅಂದುಕೊಂಡ. +ಹಗಲು ತಲುಪುವಲ್ಲಿ ಕತ್ತರಿಸಿಕೊಂಡ ಅವಳ ಕೂದಲು ತುಸು ಗುಂಗುರಾಗಿತ್ತು. ಅಚ್ಚ ಕಪ್ಪಾಗಿತ್ತು. ಕಟ್ಟದೇ ಹಾಗೇ ಜೊಂಪೆಜೊಂಪೆಯಾಗಿ ಇಳಿಬಿಟ್ಟಿದ್ದಳು. ಸಪೂರ ಸದೃಢ ದೇಹ. ತುಸು ತಿಳಿ ನೀಲಿ ಬಣ್ಣದ ದೊಡ್ಡ ಕಣ್ಣುಗಳು. ಅಷ್ಟೇನೂ ತುಂಬಿಕೊಂಡಿಲ್ಲದ ಎದೆ. ಬೆಳ್ಳಗಿನ ಮೈಬಣ್ಣ. +‘ಮನೋಹರ ಉತ್ತರ ಕನ್ನಡವನು ಗೊತ್ತೇನು?’ ಎಂದು ಅದೊಂದು ಪದವಿಯೋ, ಬಿರುದೋ ಎಂಬಂತೆ ಕಶ್ಯಪ್ ಅವಳಿಗೆ ಹೇಳಿದ. +‘ಹಾಗಾದರೆ ನಿನ್ನ ಮಾತಿನ ಸತ್ಯಾಸತ್ಯತೆಯನ್ನು ಇವನಿಂದ ಪರೀಕ್ಷಿಸಿಕೊಳ್ಳಬಹುದು ಅನ್ನು’ ಎಂದು ಅವಳು ಸ್ವಲ್ಪ ತುಂಟತನದಿಂದ, ಅವನನ್ನು ಒಂದಿಷ್ಟು ನಿಯಂತ್ರಿಸುವವಳಂತೆ ಹೇಳಿದಳು. +‘ಇವರು ನನ್ನ ಮಾತುಗಳನ್ನು ಒಪ್ಪಿಕೊಂಡ ನಂತರವಾದರೂ ನಿಮಗೆಲ್ಲ ನಂಬಿಕೆ ಬಂದೀತು’ ಎಂದು ಕಶ್ಯಪ್ ಬಿಯರು ಹೀರಿದ. +‘ಸ್ವಾತಿ ಎಷ್ಟು ಗಂಟೆಗೆ ಬರುತ್ತೇನೆಂದಿದ್ದಳು?’ ಎಂದು ನಿಧಿ ಕೇಳಲಿಕ್ಕೇ ಬಾಗಿಲು ಬಡಿದ ಸದ್ದಾಯಿತು. +‘ಅವಳೇ ಅವಳೇ’ ಎಂದ ಕಶ್ಯಪ್. ‘ಅವಳು ಯಾವಾಗಲೂ ಮೊದಲು ಬಾಗಿಲು ಬಡಿಯುವುದು. ತೆರೆಯದಿದ್ದರೆ ಮಾತ್ರ ಬೆಲ್ ಬಾರಿಸುವುದು’. +ನಿಧಿ ಬಾಗಿಲು ತೆರೆದಳು. ಜೀನ್ಸ್ ಮತ್ತು ಶರ್ಟು ತೊಟ್ಟು, ಹೆಗಲಿಗೊಂದು ಬ್ಯಾಗ್ ಏರಿಸಿಕೊಂಡ ಚೂಪು ಮೂಗಿನ ಹುಡುಗಿಯೊಬ್ಬಳು ಒಳಬಂದಳು. ಕಶ್ಯಪ್ ಮಾತಿನ ಮುಂದಾಳತ್ವ ವಹಿಸಿದ. +‘ಅಂತೂ ಬಂತಲ್ಲ ಸವಾರಿ…. ಇವರೇ ಮನೋಹರ್….. ನಿಮ್ಮ ಹಾಗೇ ಇವರೂ ಜಾಹೀರಾತಿಗೆ ಸಂಬಂಧಿಸಿದ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವುದು…. ಮುಖ್ಯವಾಗಿ ಇವರು ಉತ್ತರ ಕನ್ನಡ ಜಿಲ್ಲೆಯವರು…. ನನ್ನ ಗಂಗಾವಳಿ ಯಾತ್ರೆಗೆ ಸಹಾಯ ಮಾಡುವ ಭರವಸೆ ಕೊಟ್ಟಿದ್ದಾರೆ….’ +ಸ್ವಾತಿ ಮತ್ತು ಮನೋಹರ ಪರಸ್ಪರ ಹಲೋ ಅಂದರು. ಮತ್ತೆ ಕಶ್ಯಪನೇ ಮುಂದುವರಿಸಿದ. +‘ಸ್ವಾತಿ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅವಳದು ಸಾಹಿತ್ಯ ಮತ್ತು ಜರ್ನಲಿಸಂ ಹಿನ್ನೆಲೆ….. ಅವಳೊಂದು ಪೇಪರಿಗೂ ಕೆಲಸ ಮಾಡಿದ್ದಳು…. ಈಗಲೂ ಆಗಾಗ ಬರೆಯುತ್ತಾಳೆ…. ಹಾಗೆ ನನ್ನನ್ನು ಒಮ್ಮೆ ಇಂಟರ್‌ವ್ಯೂ ಮಾಡಲಿಕ್ಕೆ ಅಂತ ಬಂದಾಗ ಮೊದಲ ಬಾರಿ ಭೆಟ್ಟಿಯಾದೆವು…. ಈಗ ಪಶ್ಚಿಮಘಟ್ಟಗಳ ಉಳಿವಿನ ಅಗತ್ಯದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಲು ಧನಸಹಾಯ ಸಿಕ್ಕಿದೆ… ಈ ಗಂಗಾವಳಿ ಯಾತ್ರೆಯಿಂದಲೇ ಅದು ಶುರುವಾಗಲಿ ಎಂದು ನಾನು ಹೇಳುವುದು…. ಅವಳಿಗೂ ಅದು ಈಗ ನಿಜ ಅನ್ನಿಸಿದೆ. ಅವಳ ಸಂಸ್ಥೆಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾಳೆ. ಅಷ್ಟಾದರೆ ಕೆಲಸ ಶುರು ಮಾಡಲು ತಡಮಾಡಬೇಕಾಗಿಲ್ಲ. ಆದರೆ ಸಿನೇಮಾ ಅಂದರೆ ಗೊತ್ತಲ್ಲ. ಪ್ರತಿಯೊಂದೂ ಗೊತ್ತಿರಬೇಕು. ಅಲ್ಲಿ ಅನಿಶ್ಚಯಕ್ಕೆ ಜಾಗವಿಲ್ಲ….’ +ಆ ಅದು +ಏಳನೇ ಇಯತ್ತೆಯ ವಾರ್ಷಿಕ ಪರೀಕ್ಷೆಯ ನಂತರದ ಬೇಸಿಗೆಯ ರಜೆಯಲ್ಲಿ ಮನೋಹರ ಅಂಕೋಲೆಯ ಚಿಕ್ಕಪ್ಪ ಯಶವಂತನ ಮನೆಗೆ ಬಂದಿದ್ದ. ಬೇಸಿಗೆಯ ಧಗೆಯಲ್ಲಿ ಹೊರಗೆ ಆಡಲು ಸಾಧ್ಯವಾಗುತ್ತಿದ್ದುದು ಸಂಜೆಯ ಹೊತ್ತು ಮಾತ್ರ. ಪ್ರತಿ ಸಂಜೆ ಗಾಂಧಿ ಮೈದಾನದಲ್ಲಿ ವಾಲಿಬಾಲ್ ಆಡುವ ಹುಡುಗರ ಟೋಳಿಯಲ್ಲಿ ಮನೋಹರ ಸೇರಿಕೊಂಡ. ಅಲ್ಲಿಯೇ ಕಾಶೀಶನ ಪರಿಚಯವಾಗಿದ್ದು. ಚೆನ್ನಾಗಿ ಸ್ಮ್ಯಾಶ್ ಹೊಡೆಯುತ್ತಾನೆಂದು ಅವನನ್ನು ಎಲ್ಲರೂ ತಮ್ಮ ಪಂಗಡಕ್ಕೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದರು. ಎರಡೂ ಪಂಗಡಗಳ ನಾಯಕರನ್ನು ಆರಿಸಿದ ನಂತರ ಅವರು ಒಬ್ಬರಾದ ಮೇಲೊಬ್ಬರಂತೆ ಉಳಿದ ಹುಡುಗರನ್ನು ಆಯ್ದುಕೊಳ್ಳುತ್ತಿದ್ದರು. ಈ ಎಲ್ಲ ನಡೆಯುವಾಗ ಕಾಶೀಶ ಒಂದು ಕೈಯಿಂದ ವಾಲಿಬಾಲನ್ನು ನೆಲಕ್ಕೆ ಬಡಿದು ಪುಟಿಸುತ್ತ ತನ್ನಷ್ಟಕ್ಕೆ ನಿಂತಿರುತ್ತಿದ್ದ. ಅವನ ಪರಿಚಯವಾದ ಮೊದಲ ದಿನ ಅವನ ಹೆಸರನ್ನು ಕೇಳಿದಾಗ ಮನೋಹರ ತಾನು ತಪ್ಪಾಗಿ ಕೇಳಿಸಿಕೊಂಡಿದ್ದೇನೆಂದು ಭಾವಿಸಿದ್ದ. ಅಂಥ ಹೆಸರನ್ನು ಈ ಮೊದಲು ಅವನು ಕೇಳಿರಲಿಲ್ಲ. ಆಮೇಲೆ ಒಮ್ಮೆ ಅದರ ಬಗ್ಗೆ ಮಾತನಾಡುವಾಗ, ಅದು ತಮ್ಮ ಮನೆತನದ ದೇವರ ಹೆಸರೆಂದು ಹೇಳಿದ. +ಮನೋಹರನಿಗಿಂತ ನಾಲ್ಕೈದು ವರ್ಷ ದೊಡ್ಡವನಾದ ಅವನಿಗೆ ತೆಳುವಾಗಿ ಗಡ್ಡ ಮೀಸೆಗಳು ಹುಟ್ಟಿದ್ದವು. ತಲೆಯ ಕೂದಲನ್ನು ಅವನು ಪದೇ ಪದೇ ಒತ್ತಿ ಕೂರಿಸಿಕೊಳ್ಳೂತ್ತಿದ್ದ ರೀತಿ. ರೇಸಿಂಗ್ ಸೈಕಲ್ ಎಂದು ಹುಡುಗರು ಹೇಳುತ್ತಿದ್ದ ವಿಶಿಷ್ಟ ಹ್ಯಾಂಡಲಿನ ಕೆಂಪು ಬಣ್ಣದ ಅವನ ಸೈಕಲ್ಲು, ಅದರ ಮುಂದಿನ ಬ್ರೇಕ್ ಹಾಕಿದಾಗಲೆಲ್ಲ ಕಿಣಿಕಿಣಿ ಸದ್ದು ಮಾಡುತ್ತಿದ್ದ ಚಕ್ರಕ್ಕೇ ಜೋಡಿಸಿದ ಬೆಲ್ಲು. ಅವನು ಹಾಕುತ್ತಿದ್ದ ಬಾಬ್ಬಿ ಕಾಲರಿನ ಶರ್ಟುಗಳು, ಅವನ ಹತ್ತಿರ ಹೋದರೆ ಬರುತ್ತಿದ್ದ ಪೌಡರಿನ ಸುವಾಸನೆ, ಅವನ ಬಳೀಯಿದ್ದ ಹಿಂದಿ ಸಿನೇಮಾದ ಹಾಡಿನ ಚಿಕ್ಕ ಚಿಕ್ಕ ನಾಲ್ಕಾಣೆಯ ಪುಸ್ತಕಗಳು – ಇವೆಲ್ಲವೂ, ಆದರೆ ಇದೇ ಅಂತ ಗೊತ್ತಾಗದ ಯಾವುದೋ ಒಂದು ಮನೋಹರನಿಗೆ ಕಾಶೀಶನ ಬಗ್ಗೆ ಗಢವಾದ ಆಕರ್ಷಣೆಯನ್ನು ಹುಟ್ಟಿಸಿತು. ಸಂಜೆ ವಾಲಿಬಾಲ್ ಆಡಿದ ನಂತರ ಎಲ್ಲರೂ ಗಜೂನ ಅಂಗಡಿಯಲ್ಲಿ ಲಿಂಬೂ ಸೋಡಾ ಕುಡಿದರೆ ಕಾಶೀಶ ಲಿಂಬೂ ಶರಬತ್ ಕುಡಿಯುತ್ತಿದ್ದ. ದುಡ್ಡಿಟ್ಟುಕೊಳ್ಳಲು ಅವನ ಹತ್ತಿರ ಒಂದು ಪರ್ಸ್ ಕೂಡ ಇತ್ತು. ಎರಡೂ ಬದಿಗೆ ಕಾಲು ಬಿಟ್ಟುಕೊಂಡು ಅವನು ಸೈಕಲ್ ಕ್ಯಾರಿಯರ್ ಮೇಲೆ ಕೂರುತ್ತಿದ್ದ ರೀತಿ ಮನೋಹರನಿಗೆ ಬಹಳ ಹಿಡಿಸುತ್ತಿತ್ತು. ಹುಡುಗರೆಲ್ಲ ಹೇಳುವ ಹಾಗೆ ಅವನಿಗೊಂದು ‘ಅದಿತ್ತು’. ಆ ಅದು ಎಂದರೇನೆಂಬುದು ಯಾರಿಗೂ ಸ್ಪಷ್ಟವಾಗಿ ಮಾತಿನಲ್ಲಿ ಹೇಳಲು ಗೊತ್ತಿಲ್ಲದಿದ್ದರೂ ಹಾಗಂದರೇನೆಂದು ಎಲ್ಲರಿಗೂ ಅರ್ಥವಾಗುತ್ತಿತ್ತು. +ಹೊಸದಾಗಿ ಸೈಕಲ್ ಕಲಿತ ಹುಡುಗರೆಲ್ಲ ಗಂಟೆಗೆ ಹತ್ತು ಪೈಸೆ ಕೊಟ್ಟು ಬಾಡಿಗೆ ಸೈಕಲ್ಲು ಓಡಿಸುತ್ತಿದ್ದರು. ಡಬ್ಬಲ್ ರೈಡ್ ಮಾಡಬಾರದೆಂದು ಸೈಕಲ್ ಕೊಡುವ ಮುಂಚೆ ನೂರು ಸಲ ಹೇಳುತ್ತಿದ್ದ ಬಾಡಿಗೆ ಅಂಗಡಿಯ ಪುಡಿಸ್ಯಾಬನ ಕಣ್ಣಳವಿನ ಆಚೆ ಹೋಗಿದ್ದೇ ಇನ್ನೊಬ್ಬರನ್ನು ಹತ್ತಿಸಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಅವನು ಸೈಕಲ್ಲಿನ ಕ್ಯಾರಿಯರ್ ಕಿತ್ತು, ಮುಂದುಗಡೆಯ ಅಡ್ದಸಲಾಕೆಗೆ ಎರಡೆರಡು ಬೋಲ್ಟುಗಳನ್ನು ಕೂರಿಸಿದರೂ ಹುಡುಗೆರು ಅದರ ಮೇಲೆ ಬಟ್ಟೆ ಸುತ್ತಿಟ್ಟು ಕೂರುತ್ತಿದ್ದರು. ಅವನು ಬೇಡವೆನ್ನುವುದು ಯಾಕೆಂದು ಅರ್ಥವಾಗದಿದ್ದ ಹಾಗೇ ಡಬ್ಬಲ್ ಮಾಡುವ ಹುಡುಗರ ಹುಚ್ಚೂ ಅರ್ಥವಾಗುತ್ತಿರಲಿಲ್ಲ. ನಿಯಮ ಮೀರುವವರನ್ನು ಹಿಡಿಯಲು ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರನ್ನು ಆಗಾಗ ಗಾಂಧಿ ಮೈದಾನಕ್ಕೆ ಕಳಿಸುತ್ತಿದ್ದ. ಅಲ್ಲಿ ಸಿಕ್ಕಿಬಿದ್ದವರಿಗೆ ಡಬ್ಬಲ್ ಬಾಡಿಗೆ ಹಾಕುತ್ತಿದ್ದ. ಈ ಸ್ಯಾಬನ ಪ್ರಭಾವದಿಂದ ಡಬ್ಬಲ್ ಮಾಡಿದರೆ ಸೈಕಲ್ ಹಾಳಾಗುತ್ತದೆಂದು ಊರಿನ ಬಹುತೇಕ ಜನ ನಂಬಿದಂತಿತ್ತು. ಯಾಕೆ ಡಬ್ಬಲ್ ಮಾಡಬಾರದೆಂದು ಸ್ಯಾಬನನ್ನು ಕೇಳಿದರೆ ಅವನು ಅದನ್ನು ತನ್ನ ವಿರುದ್ಧ ಹೂಡಿದ ಬಂಡಾಯವೆಂದು ಭಾವಿಸಿ ಜಗಳಕ್ಕೇ ಇಳಿಯುತ್ತಿದ್ದುದರಿಂದ ಎಲ್ಲರೂ ಅವರವರ ತಿಳಿವಳಿಕೆಗೆ ತಕ್ಕಂತೆ ಅದನ್ನು ಅರ್ಥೈಸಿಕೊಂಡಿದ್ದರು. ಕಾಶೀಶನೂ ತನ್ನ ಸೈಕಲ್ ಮೇಲೆ ಯಾರನ್ನೂ ಕೂರಿಸಿಕೊಳ್ಳುತ್ತಿರಲಿಲ್ಲ. ಸಂಜೆ ಆಟ ಮುಗಿಸಿ ಮನೆಗೆ ಹೋಗುವಾಗ ಮನೋಹರನ ಮನೆಯವರೆಗೂ ತನ್ನ ಸೈಕಲ್ ತಳ್ಳಿಕೊಂಡು ಬರುವನು. ತನ್ನ ಸೈಕಲ್ ಮೇಲೆ ಡಬ್ಬಲ್ ರೈಡ್ ಮಾಡಬಾರದೆಂಬ, ತಾನೇ ಹಾಕಿಕೊಂಡ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ. ಅದಕ್ಕೆ ಕಾರಣವೇನು ಎಂಬುದನ್ನು ಮನೋಹರನಿಗೆ ವಿವರಿಸಿದವನು ಅವನೇ. +‘ನೋಡು..ಸೈಕಲ್ ಮೇಲೆ ಕೂತವನ ಭಾರ ಅದರ ಚಕ್ರಗಳ ಮೇಲೆ ಹೀಗೆ ಬೀಳಬೇಕೆಂದು ಇದರ ಡಿಸೈನ್ ಈ ರೀತಿಯಾಗಿದೆ… ಅದಕ್ಕಿಂತ ಹೆಚ್ಚಿನ ಭಾರ ಹಾಕಿದರೆ ಚೈನಿಗೆ ಅದನ್ನು ಎಳೆಯುವ ಶಕ್ತಿ ಇರುವುದಿಲ್ಲ. ಹಾಗೂ ಡಬ್ಬಲ್ ಮಾಡಿದೆ ಅನ್ನು, ಅದೇನೂ ನಿಂತು ಹೋಗುವುದಿಲ್ಲ…ಆದರೆ ಚೈನಿನಲ್ಲಿ ಎಳೆತ ಉಂಟಾಗಿ, ಅದು ತುಸು ಸಡಿಲಾಗಿ ಜೋತುಬೀಳುತ್ತದೆ…’ +ಹೀಗೆ ಅವನು ಹೇಳಿದ ನಂತರ ಸೈಕಲ್ ಚೈನುಗಳನ್ನು ನೋಡಿದಾಗಲೆಲ್ಲ ಅವು ಸಡಿಲಾಗಿವೆಯೇ ಎಂದು ಮನೋಹರ ಗಮನಿಸತೊಡಗಿದ. +ಆಟದ ಬಯಲಿನಿಂದ ಮನೆಯವರೆಗೂ ಒಟ್ಟಿಗೆ ನಡೆಯುವಾಗ ಅವರಿಬ್ಬರೂ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಂಕೋಲೆಯ ಹುಡುಗರಾರೂ ಕಾಶೀಶನ ಜೊತೆ ಹೆಚ್ಚು ಸೇರುತ್ತಿರಲಿಲ್ಲ. ಕಾಶೀಶನ ಮಾತಿನಲ್ಲಿ ಅವನಿಗೆ ದೊಡ್ಡವರ ಪ್ರಪಂಚದ ಜೊತೆ ಒಂದು ರೀತಿಯ ಸಂಬಂಧ ಇದ್ದುದು ಗೊತ್ತಾಗುತ್ತಿತ್ತು. ಮನೋಹರನಿಗೆ ಆವರೆಗೂ ಗೊತ್ತಿರದ ಸಂಗತಿಗಳನ್ನು ಕುರಿತು ಕಾಶೀಶ ಹೇಳುತ್ತಿದ್ದ. +‘ಲಾರಿ ಡ್ರೈವರ್ ಗಜುನ ಅಣ್ಣ ಒಬ್ಬ ಇದ್ದಾನೆ….ಅವನು ಇನ್ನೂ ಎಕ್ಸ್‌ಪರ್ಟ್ ಡ್ರೈವರ್… ಇಡೀ ಬಾಂಬೆ ರೂಟಲ್ಲಿ ಅವನ ಹಾಗೆ ಯಾರೂ ಇಲ್ಲ. ಅವನು ಬ್ರೇಕ್ ಉಪಯೋಗಿಸದೇ ಬರೀ ಗೇರ್ ಮೇಲೆಯೇ ಗಾಡಿಯನ್ನು ಕಂಟ್ರೋಲ್ ಮಾಡುತ್ತಾನೆ…’ +ಮನೋಹರನಿಗೆ ಬ್ರೇಕ್ ಅನ್ನುವುದು ಗೊತ್ತಾಗುತ್ತಿತ್ತು. ಆದರೆ ಗೇರ್ ಹೇಗೆ ಕೆಲಸ ಮಾಡುತ್ತದೆ, ಅದು ಇರುವುದಾದರೂ ಯಾಕೆ ಗೊತ್ತಿರಲಿಲ್ಲ. ಆದರೆ ತನ್ನ ಅಜ್ಞಾನವನ್ನು ಕಾಶೀಶನೆದುರು ಪ್ರದರ್ಶಿಸುವ ಮನಸ್ಸಾಗದೇ ಸುಮ್ಮನಾಗುತ್ತಿದ್ದ. ಅವರ ಮಾತುಗಳ ಮಧ್ಯೆ ನಾನಾ ವಿಷಯಗಳು ಬಂದು ಹೋಗುತ್ತಿದ್ದವು. +‘ಮುಂಬೈಯಲ್ಲಿ ಹ್ಯಾಗೆ ಗೊತ್ತೇನು? ಸ್ಮಗ್ಲಿಂಗ್ ಎಕ್ಸಪರ್ಟ್ ಇರ್‍ತಾರೆ. ಪೋಲೀಸರ ಕಣ್ಣೆದುರಿಗೇ ಮಾಲು ಎತ್ತಿಕೊಂಡು ಹೋದರೂ ಅವರಿಗೆ ಗೊತ್ತಾಗುವುದಿಲ್ಲ.’ +ಸ್ಮಗ್ಲಿಂಗ್ ಅಂದರೆ ಏನೆಂಬುದರ ಬಗ್ಗೆ ಹಿಂದಿ ಸಿನೇಮಾದಿಂದ ಪಡೆದ ಜ್ಞಾನದಿಂದಲೇ ಮನೋಹರ ಚರ್ಚಿಸುತ್ತಿದ್ದ. ರಾತ್ರಿ ಹೊತ್ತು ಸಮುದ್ರ ದಂಡೆಯ ಮೇಲೆ ದೋಣಿಯಿಂದ ಇಳಿಸುವ ಪೆಟ್ಟಿಗೆಗಳ ಹೊರತು ಅವನಿಗೆ ಬೇರೇನೂ ಗೊತ್ತಿರಲಿಲ್ಲ. ಭಟ್ಕಳದಿಂದ ಬಂದ ಕೆಲವರು ಸ್ಮಗ್ಲಿಂಗ್ ಮಾಲು ಎಂದು ನೇಲ್‌ಕಟರ್‌ಗಳನ್ನೂ ಟೇಪ್‌ಗಳನ್ನೂ ಮಾರುವುದನ್ನು ನೋಡಿದ್ದ. ಅವರೆಲ್ಲ ರಾತ್ರಿಯ ಹೊತ್ತು ಭಟ್ಕಳದ ಬಂದರಿನಲ್ಲಿ ಪೆಟ್ಟಿಗೆಗಳನ್ನು ಇಳಿಸುತ್ತಾರೆಯೇ ಎಂದೂ ಯೋಚಿಸಿದ್ದ. +ಅವನು ಹೇಳಿದ ಒಂದು ಜೋಕ್ ಮಾತ್ರ ಅರ್ಥವೇ ಆಗಿರಲಿಲ್ಲ. ‘ಜೀಯಾ ಬೇಕರಾರಹೈ, ನರ್ಗಿಸ್ ಭೀಮಾರ ಹೈ’ ಎಂದು ಹಾಡಿನ ಸಾಲನ್ನು ಕೊಂಚ ಬದಲಾಯಿಸಿ ಮುಂದೆ ರಾಜಕಪೂರ್ ಎಂದೇನೋ ಹೇಳಿದ್ದ. ಅದು ಅರ್ಥವಾದವನ ಹಾಗೆ ಮನೋಹರ ನಕ್ಕಿದ್ದ. ಮಾತು ಅಲ್ಲಿಗೇ ಮುಗಿದು ಹೋಗಿತ್ತು. ಅವನು ಏನು ಹೇಳಿದ್ದ ಅನ್ನುವುದು ಗೊತ್ತಾಗದೇ, ಅದು ಮತ್ತೆ ನೆನಪಾಗದೇ, ಅದರ ಬಗ್ಗೆ ನಾನಾ ಊಹಾಪೋಹಗಳು ಎದ್ದಿದ್ದವು. ಮುಂದೆ ಈ ಹಾಡು ಕಿವಿಗೆ ಬಿದ್ದಾಗಲೆಲ್ಲ, ಅರ್ಥವಾಗದೇ ಹೋದ ಕಾಶೀಶನ ಜೋಕ್ ನೆನಪಾಗುತ್ತಿತ್ತು. +ಮುಂಬೈಗೆ ಹೋಗುವ ದಾರಿಯಲ್ಲಿರುವ ಖಂಡಾಲಾ ಘಟ್ಟ ದಾಟಿ ಹೋಗುವ ವಿವರಣೆ ಅವನ ಮಾತುಗಳಲ್ಲಿ ಒಂದು ದುರ್ಗಮ ಯಾತ್ರೆಯಂತೆ ತೋರುತ್ತಿತ್ತು. ಅವನು ಒಮ್ಮೆಯೂ ಮುಂಬೈಗೆ ಹೋಗಿರಲಿಲ್ಲವದರೂ, ಅದರಿಂದ ಅವನ ಮಾತಿನ ನಾಟಕೀಯತೆಯೇನೂ ಕಡಿಮೆಯಾಗುತ್ತಿರಲಿಲ್ಲ. +‘ಘಟ್ಟ ಅಂದರೆ ಘಟ್ಟ ಅದು. ಹೀಗೆ ನೆಟ್ಟಗೆ…. ನನ್ನ ಕೈ ನೋಡು…. ಹೀಗೆ…. ಗಾಡಿ ಹೆವಿ ಇದ್ದರೆ ಇನ್ನೂ ಕಷ್ಟ…. ಎಲ್ಲಾ ಗಾಡೀನೂ ಫಸ್ಟ್ ಗೇರಲ್ಲೇ ಹೋಗಬೇಕು. ಸ್ವಲ್ಪ ಮಿಸ್ ಆದರೂ ಫಡ್ಚ…. ಅಲ್ಲಿ ಓವರ್‌ಟೇಲ್ ಇಲ್ಲ. ಒಂದರ ಹಿಂದೆ ಒಂದು ಹೋಗಬೇಕು…. ಅಲ್ಲಿ ಭೊಗದೆಗಳು ಇದ್ದಾವೆ…. ಹಾಗಂದರೆ ಸುರಂಗಗಳು…. ಅವುಗಳಲ್ಲಿ ಹೋಗುವಾಗ ಕತ್ತಲಾದ ಹಾಗೆ ಅನಿಸಿಬಿಡುತ್ತದೆ. ಹಗಲಿನಲ್ಲೂ ಹೆಡ್‌ಲೈಟ್ ಹಾಕಿಕೊಂಡೇ ಹೋಗಬೇಕು…. ಅಷ್ಟು ಎಕ್ಸ್‌ಪರ್ಟ್ ಅಲ್ಲದವರು ರಾತ್ರಿ ಘಟ್ಟದ ಮೇಲೆ ಹೋಗುವುದೇ ಇಲ್ಲ. ಬೆಳಕಾಗುವವರೆಗೂ ಕಾದು ಆಮೇಲೆ ಹೋಗುತ್ತಾರೆ….’ +ಖಂಡಾಲಾ ಘಟ್ಟದ ವಿವರಗಳನ್ನು ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ರೋಚಕವಾಗಿ ಅವನು ಹೇಳುತ್ತಿದ್ದ. ‘ಖಂಡಾಲಾಚಾ ಘಾಟಿ ವರಿ ಜಾವೂಯಾ’ ಎಂದು ಒಂದು ಮರಾಠಿ ಹಾಡು ಹೇಳಿ ಅದನ್ನು ಇನ್ನಷ್ಟು ರಮ್ಯವಾಗಿಸಿದ್ದ. +‘ಮುಂಬೈಯಲ್ಲಿ ಯಾರೂ ಯಾರನ್ನೂ ಕೇರ್ ಮಾಡುವುದಿಲ್ಲ. ಅಲ್ಲಿ ಊರೊಳಗೆ ಓಡಾಡಲಿಕ್ಕೆ ಲೋಕಲ್ ರೈಲುಂಟು. ರೈಲು ಬಂದದ್ದೇ ನುಗ್ಗಿ ಹೋಗಬೇಕು. ಅದು ಬರುತ್ತದೆ, ಒಂದೇ ನಿಮಿಷ ನಿಲ್ಲುತ್ತದೆ. ಹತ್ತಿದ್ದಾರೋ ಇಳಿದಿದ್ದಾರೋ ಅಂತ ಕಾಯದೇ ಹೊರಟು ಬಿಡುತ್ತದೆ…. ಒಂದೇ ನಿಮಿಷ ಅಷ್ಟೇ…. ಟೈಮ್ ಅಂದರೆ ಟೈಮ್…. ಅಲ್ಲಿಯ ರೈಲು ಉಪಯೋಗಿಸುವುದನ್ನು ಕಲಿತರೆ ಅಲ್ಲಿ ಬದುಕಲು ಕಲಿತ ಹಾಗೇ ಎಂದು ನನ್ನ ಅಂಕಲ್ ಹೇಳುತ್ತಿದ್ದರು. ನನ್ನ ರಿಸಲ್ಟ್ ಆಗಿದ್ದೇ ಅವರ ಹತ್ತಿರ ಹೋಗುತ್ತೇನೆ…. ಅಲ್ಲಿ ಎಲಿಫಿನ್‌ಸ್ಟನ್ ಕಾಲೇಜು ಸೇರುತ್ತೇನೆ….’ ಅವನ ಬಾಯಲ್ಲಿ ಅದು ಜಗದ್ವಿಖ್ಯಾತ ಕಾಲೇಜಿನಂತೆ ಕೇಳಿಸಿತು. +ಕಾಶೀಶನಿಗೂ ಉಳಿದ ಹುಡುಗರಿಗೂ ನಡುವೆ ಮಾತಿಗೆ ನಿಲುಕದ ಒಂದು ಅಂತರವಿದೆಯೆಂದು ಮನೋಹರನಿಗೆ ಅನಿಸುತ್ತಿತ್ತು. ಒಮ್ಮೆ ಯಾವುದೋ ಮಾತಿಗೆ ನಿನ್ನ ಮನೆಗೆ ಬರುತ್ತೇನೆಂದು ಮನೋಹರ ಹೇಳಿದ್ದಕ್ಕೆ ಅವನಿಗೆ ಖುಷಿಯಾಗಿಬಿಟ್ಟಿತು. +‘ನಿನ್ನ ಮನೆಯಲ್ಲಿ ನನ್ನ ಬಗ್ಗೆ ಹೇಳಿದ್ದೀಯಾ?’ ಎಂದು ಕಾಶೀಶ ಕೇಳಿದ. +‘ಹೌದು…. ಇದು ನನ್ನ ಚಿಕ್ಕಪ್ಪನ ಮನೆ…. ಅವರಿಗೆ ನಿನ್ನ ಬಗ್ಗೆ ಹೇಳಿದ್ದೇನೆ….’ ಎಂದು ಮನೋಹರ ಸುಳ್ಳು ಹೇಳುವಾಗಲೇ ಆ ದಿನವೇ ಮನೆಯಲ್ಲಿ ಅವನ ಬಗ್ಗೆ ಹೇಳಬೇಕೆಂದು ನಿರ್ಧರಿಸಿಕೊಂಡ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳಬೇಕೆನ್ನುವುದು ನೆನಪಾಗಿ ‘ನಿನ್ನ ತಂದೆ ಏನು ಮಾಡುತ್ತಾರೆ?’ ಅಂದ. +‘ಅವರಿಲ್ಲ’ ಎಂದು ಕಾಶೀಶ ಹೇಳಿದ ನಂತರ ಮತ್ತೆ ಬೇರೇನೂ ಕೇಳಲು ಅವನಿಂದಾಗಲಿಲ್ಲ. +ಆ ದಿನ ರಾತ್ರಿ ಊಟಕ್ಕೆ ಕೂತಾಗ ಮನೋಹರ ಕಾಶೀಶನ ವಿಷಯ ಹೇಳಿದ. ಅವನ ಜೊತೆ ಚಿಕ್ಕಪ್ಪನೂ ಊಟಕ್ಕೆ ಕೂತಿದ್ದರು. ಅವರಿದ್ದರೆ ಯಾವುದಕ್ಕಾದರೂ ತನಗೆ ಅನುಮತಿ ಸಿಗುವುದೆಂದು ಅವನಿಗೆ ಗೊತ್ತಿತ್ತು. +‘ಏನೋ ಸಾವಕಾರ…. ಏನು ಮಾಡ್ತಾ ಇದ್ದಿ?’ ಎಂದು ಚಿಕ್ಕಪ್ಪ ಕೇಳಿದಾಗ ಇದೇ ಸಂದರ್ಭವೆಂದು ಕಾಶೀಶನ ಬಗ್ಗೆ ಹೇಳಿದ. +‘ಕಾಶೀಶ ಅಂತ ಹೊಸ ದೋಸ್ತ ಸಿಕ್ಕಿದ್ದಾನೆ…. ಚಲೋ ಹುಡುಗ’ +‘ಚಲೋ ಹೌದೇ ಅಲ್ಲವೋ ಅಂತ ನಾವು ಹೇಳಬೇಕೋ ನೀನೋ?…. ನಿನಗೆಲ್ಲಾ ಚಲೋನೇ’ ಎಂದು ಚಿಕ್ಕಮ್ಮ ತಲೆ ಹಾಕಿದರು. +‘ಯಾರ ಮನೆ ಹುಡುಗ?’ ಅವರು ಕೇಳದೇ ಇರಲಿ ಎಂದು ಮನೋಹರ ಬಯಸುತ್ತಿದ್ದ ಪ್ರಶ್ನೆಯನ್ನು ಚಿಕ್ಕಪ್ಪ ಕೇಳಿಯೇ ಬಿಟ್ಟರು. +‘ಗೊತ್ತಿಲ್ಲ…. ದಿನಾ ಸಂಜೆ ಆಡಲಿಕ್ಕೆ ಬರುತ್ತಾನೆ…. ತುಂಬಾ ಚೆನ್ನಾಗಿ ಸ್ಮ್ಯಾಶ್ ಹೊಡೆಯುತ್ತಾನೆ…. ನೆಟ್‌ಗೆ ಹತ್ತಿರ ನಿಂತುಕೊಂಡು ಅವನು ಹೊಡೆದರೆ ತಗೊಳ್ಳಲಿಕ್ಕೇ ಆಗುವುದಿಲ್ಲ….’ +‘ಆವನ ಮನೆ ಎಲ್ಲಿ?’ +‘ದೇವಿಕೆರೆಯಲ್ಲಿ’ +‘ಅಲ್ಲಿ ಎಲ್ಲಿ ಎಂದು ಗೊತ್ತಿದೆಯೋ?’ +ತಾನು ಅವನ ಮನೆಗೆ ಬರುತ್ತೇನೆಂದು ಹೇಳಿದಾಗ ಕಾಶೀಶ ಕೊಟ್ಟ ವಿವರಗಳನ್ನು ನೆನಪಿಸಿಕೊಂಡು ಮನೋಹರ ಹೇಳತೊಡಗಿದ. +‘ಅಲ್ಲಿ ವೆಂಕಟರಮಣ ದೇವಸ್ಥಾನ ಇದೆಯಲ್ಲ…. ಅದರ ಎದುರಿಗೇ ಒಂದು ರಸ್ತೆ ಇದೆಯಲ್ಲ…. ಅದು ಸುತ್ತು ಹಾಕಿ ದೇವಸ್ಥಾನದ ಹಿಂದೆ ಹೋಗುತ್ತದೆ…. ಹಾಗೇ ಹೋದರೆ ಅಲ್ಲಿ ಎಡಗಡೆಗೆ ಒಂದು ದೊಡ್ಡ ಮನೆ ಇದೆಯಲ್ಲ…. ಎದುರಿಗೆ ತೆಂಗಿನ ಮರಗಿರ ಇದೆಯಲ್ಲ…. ಅದೇ ಮನೆ….’ +‘ಅಲ್ಲಿಗೆ ಹೋದವನ ಹಾಗೆ ಮಾತಾಡುತ್ತೀಯಾಲ್ಲೋ…. ಹೋಗಿದ್ದೀಯೋ ಹೇಗೆ?’ ಎಂದು ಚಿಕ್ಕಮ್ಮ ಕೇಳುತ್ತ ಮನೋಹರನ ಎದುರಿಗೇ ಬಂದು ನಿಂತುಬಿಟ್ಟಿದ್ದಳು. ಅಷ್ಟು ಹೊತ್ತಿಗಾಗಲೇ ಅವನು ಕೊಟ್ಟ ವಿವರಣೆಯಿಂದ ಆದ ಅಸಮಾಧಾನ ಅವಳ ದನಿಯಲ್ಲಿ ಒಡೆದು ತೋರುತ್ತಿತ್ತು. ಅವಳ ಚಹರೆ ಬದಲಾಗಿ ಹೋಯಿತು. ಮಾತಿಗೆ ಉಪದೇಶದ ಜೊತೆ ಸ್ಪಷ್ಟ ಸೂಚನೆಯ ಧಾಟಿ ಬಂದಿತ್ತು. +‘ದೋಸ್ತ ದೋಸ್ತ ಎಂದು ಯಾರ ಯಾರ ಜೊತೆಯೋ ಸೇರಬೇಡ…. ರಜೆಗೆಂದು ಬಂದವನು ರಜೆ ಮುಗಿಸಿ ಹೋಗು…. ಹೆಸರು ಹಚ್ಚಿಕೊಂಡು ಹೋಗುವ ಹಾಗೆ ಮಾಡಬೇಡ…. ಅವರ ಮನೆಯವರು ಸರಿಯಿಲ್ಲ…. ನಿನಗೆ ಅದೆಲ್ಲ ಗೊತ್ತಾಗುವುದಿಲ್ಲ…. ಸಂಗತಿ ಸಂಗದೋಷ…. ಇನ್ನು ಅವನಿಂದ ದೂರ ಇರು….’ +‘ಅವನು ಒಳ್ಳೇ ಹುಡುಗ….’ ಎಂದು ಮನೋಹರ ಕಾಶೀಶನನ್ನು ಬಿಟ್ಟುಕೊಡುವ ಮನಸ್ಸಿಲ್ಲದೇ, ತನ್ನ ಸ್ನೇಹಿತನ ಬಗ್ಗೆ ಅವರಾಡಿದ ಮಾತುಗಳನ್ನು ವಿರೋಧಿಸುವುದು ಕರ್ತವ್ಯವೆಂಬಂತೆ ಹೇಳಿದ. +‘ಅವರೆಲ್ಲ ಹಾಗೇ…. ಸಕ್ಕರೆ ಹಚ್ಚಿಯೇ ಮಾತಾಡುವುದು…. ರಕ್ತದಲ್ಲೇ ಇರುತ್ತದದು….’ +ಚಿಕ್ಕಮ್ಮನ ಕಠೋರವಾದ ಪ್ರತಿಕ್ರಿಯೆಗೆ ಕಾರಣ ಸ್ಪಷ್ಟವಾಗಿ ಗೊತ್ತಾಗದೇ ಎಲ್ಲವೂ ನಿಗೂಢವಾಗಿ, ಇನ್ನಷ್ಟು ಆಕರ್ಷಕವಾಗಿ ಕಾಣತೊಡಗಿತು. ಇಷ್ಟಾದರೂ ಚಿಕ್ಕಪ್ಪ ಮಾತ್ರ ಏನೂ ಮಾತಾಡದೇ ಊಟ ಮಾಡುತ್ತಿದ್ದರು. ಚಿಕ್ಕಮ್ಮನ ಅಭಿಪ್ರಾಯವನ್ನು ಇನ್ನಷ್ಟು ಒತ್ತಿ ಹೇಳಲೂ ಇಲ್ಲ. ವಿರೋಧಿಸಲೂ ಇಲ್ಲ. +ಮರುದಿನವೇ ಮನೋಹರ ಜೊತೆಯ ಹುಡುಗರಲ್ಲಿ ಕಾಶೀಶನ ಬಗ್ಗೆ ವಿಚಾರಿಸಿದ. ಅವನು ಯಾರ ಮನೆಯವನು, ಅವರು ಏನು ಮಾಡುತ್ತಾರೆ ಇತ್ಯಾದಿ ಪ್ರಶ್ನೆಗಳನ್ನು ತಲುಪುವ ಮೊದಲೇ ಪ್ರಕಾಶ ‘ಅವನು ಸೂಳೆ ಚಂಪಾಳ ಮನೆಯವನು’ ಎಂದು ಹೇಳಿದ. ಅವನ ಮಾತಿನ ರೀತಿಯಿಂದ ಮನೋಹರನಿಗೆ ಯಾಕೋ ಬಹಳ ಬೇಜಾರಾಯಿತು. +‘ಅವಳಿಗೆ ತಮ್ಮನಾಗಬೇಕು ಅನಿಸುತ್ತದೆ…. ನನಗೆ ಸರಿಯಾಗಿ ಗೊತ್ತಿಲ್ಲ’ ಎಂದೂ ಪ್ರಕಾಶ ಸೇರಿಸಿದ. +ಗಂಡು ಹೆಣ್ಣಿನ ನಡುವಿನ ಲೈಂಗಿಕ ಕ್ರಿಯೆಗಳೇನೆಂಬುದು ಮನೋಹರನಿಗೆ ಗೊತ್ತಿದ್ದರೂ ಆ ಭಾವಪ್ರಪಂಚದ ವ್ಯಾಪಾರಗಳಿನ್ನೂ ಅಮೂರ್ತವಾಗಿಯೇ ಇದ್ದವು. ಆದರೂ ಅವನು ಸೂಳೆ ಎಂದು ಹೇಳದೇ ಇರಬಹುದಿತ್ತು ಎಂದು ಮುಂದೆ ಈ ಪ್ರಸಂಗ ನೆನಪಾದಾಗಲೆಲ್ಲ ಮನೋಹರನಿಗೆ ಅನಿಸುತ್ತಿತ್ತು. +ಯಾರಿಗೂ ಹೇಳದೆ ಮನೋಹರ ಕಾಶೀಶನ ಮನೆಗೆ ಹೋದ. ಆಗ ಬೆಳಗಿನ ಹತ್ತು ಗಂಟೆಯಾಗಿತ್ತು. ಕಾಶೀಶ ಅವನಿಗಾಗಿ ದಣಪೆಯಲ್ಲೇ ಕಾಯುತ್ತಿದ್ದ. ಮಾವು ಮತ್ತು ತೆಂಗಿನ ಮರಗಳು, ಬಾಳೆಯ ಗಿದಗಳು ಇದ್ದ ಆ ದೊಡ್ದ ಮಹಡಿ ಮನೆಯ ಅಂಗಳದಲ್ಲೇ ಬಾವಿಯಿತ್ತು. ಗಡಗಡೆಯಿಂದ ಇಳಿದ ಹಗ್ಗವನ್ನು ಬಾವಿಯ ಕಟ್ಟೆಯ ಮೇಲೆ ಸುರುಳಿ ಸುರುಳಿಯಾಗಿ ಇಟ್ಟಿದ್ದರು. ಬಾವಿಯ ಮೇಲೆ ಒಂದು ಚಪ್ಪರವಿದ್ದು ಅದಕ್ಕೆ ಬಳ್ಳಿ ಹಬ್ಬಿಸಿದ್ದರು. ಮನೆಯ ಮಾಡುಗಳ ಮೇಲೆ ಕೂತವನೊಬ್ಬ ಹಂಚುಗಳನ್ನು ಸ್ವಚ್ಛ ಮಾಡುತ್ತಿದ್ದ. +ಮನೆಯೊಳಗೆ ಹೋಗುತ್ತಿದ್ದ ಹಾಗೇ ವಿಶಾಲವಾದ ಕೋಣೆಯಿತ್ತು. ಅಲ್ಲಿ ಕುರ್ಚಿ ಮತ್ತು ಕಪ್ಪು ಕಟ್ಟಿಗೆಯ ಸೋಫಾ ಜೋಡಿಸಿಟ್ಟಿದ್ದರು. ಅವುಗಳ ಮೇಲೆ ತೆಳ್ಳನೆಯ ಮೆತ್ತೆ ಹಾಸಿತ್ತು. ಎರಡರ ಬೆನ್ನಿಗೂ, ಒರಗುವಲ್ಲಿ, ಕಸೂತಿ ಹಾಕಿದ ಬಟ್ಟೆಗಳನ್ನು ಹಾಕಿದ್ದರು. ನಡುವೆ ಇಟ್ಟ ಟೇಬಲ್ಲಿನ ಮೇಲ್ಭಾಗಕ್ಕೆ ಗಾಜು ಕೂರಿಸಿದ್ದರು. ಕಾಶೀಶ ಮನೋಹರನನ್ನು ಒಳಗೆ ಬರಮಾಡಿಕೊಂಡು ಕುರ್ಚಿಯಲ್ಲಿ ಕೂರಿಸಿ ಎಲ್ಲೋ ಮಾಯವಾದ. ಅವನಿಗೆ ಖುಷಿಯಾಗಿದ್ದು ಅವನ ನಡಿಗೆಯಲ್ಲೇ ಗೊತ್ತಾಗುತ್ತಿತ್ತು. ಟೇಬಲ್ಲಿನ ಮೇಲಿನ ಗಾಜಿನಲ್ಲಿ ಎದುರಿಗಿದ್ದ ಕಿಟಕಿಯೂ, ಅದರಾಚೆಯ ಮರಗಿಡಗಳೂ ಪ್ರತಿಫಲಿಸುತ್ತಿದ್ದವು. ಅಲ್ಲಿದ್ದ ಮರದ ಶೋಕೇಸಿನಲ್ಲಿ ಬಣ್ಣಬಣ್ಣದ ಸಣ್ಣ ಬೊಂಬೆಗಳನ್ನೂ, ನಾಟ ಎಳೆಯುತ್ತಿರುವ ಆನೆಯ ಗಂಧದ ಪ್ರತಿಮೆಯೊಂದನ್ನು ಜೋಡಿಸಿಟ್ಟಿದ್ದರು. ಗೋಡೆಗಳ ಮೇಲೆ ಅನೇಕ ಚಿತ್ರಗಳನ್ನು ತೂಗುಹಾಕಿದ್ದರು. ಸೊನೇರಿ ಬಣ್ಣ ಹಚ್ಚಿದ ಕಟ್ಟಿಗೆಯ ಚೌಕಟ್ಟಿನಲ್ಲಿದ್ದ ಆ ಚಿತ್ರಗಳನ್ನೇ ಸೋಡುತ್ತ ಮನೋಹರ ಕೂತ. ತಿಳಿನೀರ ಕೊಳದಲ್ಲಿ ವಿಹರಿಸುವ ಹಂಸಗಳ ಚಿತ್ರವಿತ್ತು. ಅವರ ಮನೆಯಲ್ಲಿ ಏನೋ ಸುವಾಸನೆ ತುಂಬಿದಂತಿತ್ತು. ಟೇಬಲ್ಲಿನ ಮೇಲೆ ಮರಾಠಿ ಪತ್ರಿಕೆಗಳಿದ್ದವು. ಎಲ್ಲವನ್ನೂ ಅಷ್ಟೊಂದು ಶುಭ್ರವಾಗಿ ಆಯಾ ಜಾಗದಲ್ಲಿ ಜೋಡಿಸಿಟ್ಟಿದ್ದನ್ನು ಅಂಕೋಲೆಯ ಯಾರ ಮನೆಯಲ್ಲೂ ಮನೋಹರ ನೋಡಿರಲಿಲ್ಲ. +ಕಾಶೀಶ ಒಳಗಡೆಯಿಂದ ಒಂದು ಟ್ರೇಯಲ್ಲಿಟ್ಟ ಗ್ಲಾಸುಗಳಲ್ಲಿ ಶರಬತ್ತು ತಗೊಂಡು ಬಂದ. ಗ್ಲಾಸುಗಳ ಮೇಲೆ ಸಸುಗೆಂಪು ಬಣ್ಣದ ವಿನ್ಯಾಸಗಳಿದ್ದವು. ಆ ಶರಬತ್ತಿಗೂ ಒಂದು ರೀತಿಯ ತೆಳುವಾದ ಸುವಾಸನೆಯಿದ್ದಂತೆ, ಆ ಸುವಾಸನೆಗೊ ಒಂದು ವಿಚಿತ್ರ ಅಮಲಿದ್ದಂತೆ ಮನೋಹರನಿಗೆ ಅನಿಸಿತು. ಆ ಕೋಣೆಯ ಕಿಟಕಿಗಳಿಗೆಲ್ಲ ತೆಳ್ಳನೆಯ ಪರದೆಗಳಿದ್ದವು. ಗಾಳಿಗೆ ಅವು ಮೆಲ್ಲನೆ, ಇಷ್ಟಿಷ್ಟೇ ತೂಗುತ್ತಿದ್ದವು. ಮನೆಯ ವಾತಾವರಣ, ಸುವಾಸನೆ, ಬಣ್ಣಗಳು, ಆಸನಗಳು, ಅವನು ಕೊಟ್ಟ ಶರಬತ್ತು – ಎಲ್ಲವೂ ಯಾವುದೇ ಒಜ್ಜೆಯಿಲ್ಲದ, ಹಗುರವಾದ, ಸ್ವೇಚ್ಛೆಯ ಭಾವನೆ ಕೊಡುವಂತಿದ್ದವು. +ಶರಬತ್ತು ಕುಡಿದಾದ ಮೇಲೆ ‘ನನ್ನ ಕೋಣೆಗೆ ಬಾ’ ಎಂದು ಕಾಶೀಶ ಮನೊಹರನನ್ನು ಅಟ್ಟದ ಮೇಲೆ ಕರಕೊಂಡು ಹೋದ. ಅವನಿಗೇ ಒಂದು ಪ್ರತ್ಯೇಕವಾದ ಕೋಣೆಯಿದ್ದದ್ದು ಮನೋಹರನಿಗೆ ವಿಶೇಷವೆನಿಸಿತು. ಅವನ ಕೋಣೆಯೂ ಈಗ ತಾನೇ ಯಾರೋ ಜೋಡಿಸಿಟ್ಟಹಾಗಿತ್ತು. ನೆಲದ ಫರಸಿ ಕಲ್ಲುಗಳು ಇದೀಗ ಒರೆಸಿಟ್ಟ ಹಾಗಿದ್ದವು. ಆ ಮನೆಯ ಅನೇಕ ಕೋಣೆಗಳಲ್ಲಿ ವಾಸಿಸುತ್ತಿರಬಹುದಾದ ಬೇರೆ ಯಾರ ಸದ್ದಾಗಲೀ, ಸುಳಿವಾಗಲೀ ಇರಲಿಲ್ಲ. ಮನೆ ನಿಶ್ಯಬ್ಧವಾಗಿತ್ತು. ಆಚೆ ಗಡಗಡೆಯ ಸದ್ದಾಗಿ, ಕೊಡ ನೀರಿಗೆ ಅಪ್ಪಳಿಸಿದ್ದು ಕೇಳಿಸಿತು. ಹೆಂಚು ಸರಿಮಾಡಲು ಹತ್ತಿದವನು ಆಗಾಗ ಯಾರನ್ನೋ ಉದ್ದೇಶಿಸಿ ಗಟ್ಟಿಯಾಗಿ ಮಾತಾಡುತ್ತಿದ್ದ. ಕಾಗೆಯೊಂದು ಕೂಗುತ್ತಿತ್ತು. +ಕಾಶೀಶನ ಪುಸ್ತಕಗಳನ್ನೆಲ್ಲ ಕಪಾಟಿನಲ್ಲಿ ಜೋಡಿಸಿಡಲಾಗಿತ್ತು. ಟೇಬಲ್ಲಿನ ಮೇಲೆ ಪೆನ್ನು ಇಡುವ ಸ್ಟ್ಯಾಂಡ್ ಇತ್ತು. ಕಶೀಶ ತನ್ನ ಬಳಿಯಿದ್ದ ಅನೇಕ ಇಂಗ್ಲಿಷ್ ಪುಸ್ತಕಗಳನ್ನು ತೋರಿಸಿದ. ಅವುಗಳಲ್ಲಿ ಬಣ್ಣಬಣ್ಣದ ಸುಂದರ ಚಿತ್ರಗಳಿದ್ದವು. ಮುಂಬೈಯಲ್ಲಿದ್ದ ತನ್ನ ಚಿಕ್ಕಪ್ಪನೇ ಇದನ್ನೆಲ್ಲ ಕಳಿಸುವುದೆಂದು ಹೇಳಿದ. ಮೆಟ್ರಿಕ್ ಮುಗಿಸಿದ ನಂತರ ಮುಂಬೈಗೆ ಹೋಗುವುದನ್ನೂ, ಅಲ್ಲೇ ಕಾಲೇಜು ಸೇರುವುದನ್ನೂ ಮತ್ತೆ ಹೇಳಿದ. ರಾಜೇಶಖನ್ನಾನ ಮದುವೆಗೆ ತನ್ನ ಚಿಕ್ಕಪ್ಪನಿಗೆ ಆಮಂತ್ರಣ ಬಂದಿತ್ತೆಂದು ಹೇಳಿದ. +ಅಲ್ಲಿಂದ ಅವನು ಮನೋಹರನನ್ನು ಬಿಸಿಲು ಮಚ್ಚಿಗೆ ಕರಕೊಂಡು ಹೋದ. ಅಲ್ಲಿ ಒಬ್ಬಳು ಆಗ ತಾನೇ ತಲೆಗೆ ಎಣ್ಣೆ ಹಾಕಿಕೊಂಡು, ಅಂಗೈಗೆ ಹತ್ತಿದ ಪಸೆಯನ್ನು ತೋಳುಗಳಿಗೆ ಒರೆಸಿಕೊಳ್ಳುತ್ತಿದ್ದಳು. ಹೂಗಳ ಚಿತ್ರವಿದ್ದ ಗುಲಾಬಿ ಬಣ್ಣದ ಸೀರೆಯುಟ್ಟಿದ್ದಳು. ಕಾಶೀಶ ಅವಳು ಯಾರೆಂದು ಹೇಳಲಿಲ್ಲ. ಅವಳೇ ಚಂಪಾ ಇರಬಹುದೆಂದು ಮನೋಹರ ಊಹಿಸಿದ. ಇವರಿಬ್ಬರೂ ಬಂದೊಡನೆ ಅವಳು, ಹರಡಿದ್ದ ತನ್ನ ಕೂದಲನ್ನು ಎರಡೂ ಕೈಗಳಿಂದ ಎತ್ತಿ ಹಿಂದಕ್ಕೆ ಕಟ್ಟಿಕೊಂಡಳು. ಆ ಗಂಟಿನ ಬಿಗುವಿನಿಂದ ತಪ್ಪಿಸಿಕೊಂಡ ಕೂದಲೆಳೆಗಳು ಅವಳ ಕೆನ್ನೆಯ ಮೇಲೆ, ಕಿವಿಯ ಹಿಂದೆ, ಹಣೆಯ ಮೇಲೆ ಹರಡಿದವು. ಎಣ್ಣೆ ಪೆಸೆಯಿಂದಾಗಿ, ಅವಳ ತೋಳುಗಳ ಮೇಲಿನ ತೆಳುವಾದ ರೋಮಗಳು ಬಿಸಿಲಿಗೆ ಎದ್ದು ಕಾಣುತ್ತಿದ್ದವು. ತುಂಬಿಕೊಂಡ ಬೆಳ್ಳಗಿನ ಕೆನ್ನೆಯ ಮೇಲೆ ಅಲ್ಲಲ್ಲಿದ್ದ ಮೊಡವೆ ಕಲೆಗಳು ಕೆಂಪಾಗಿದ್ದವು. ಅವಳ ಮುಂಗೈ ಮೇಲೆ ಒಂದು ಗಾಯದ ಕಲೆಯಿತ್ತು. ಅವಳು ಮನೋಹರನನ್ನು ಪ್ರೀತಿಯಿಂದ ಮಾತನಾಡಿಸಿ ತನ್ನ ಕೋಣೆಗೆ ಕರಕೊಂಡು ಹೋದಳು. ಹಾಗೆ ಹೋಗುವಾಗ ತನ್ನ ಕೈಯನ್ನು ಅವನ ಭುಜದ ಮೇಲೆ ಇರಿಸಿದ್ದಳು. ಆ ಕೋಣೆಯಲ್ಲಿಯೂ ಎಲ್ಲವೂ ಓರಣವಾಗಿ ಶುಭ್ರವಾಗಿತ್ತು. ಕೋಣೆಯಲ್ಲಿ ಎಲ್ಲೋ ಅಗರಬತ್ತಿ ಹಚ್ಚಿ ಇಟ್ಟಿದ್ದರು. ಅದರ ಹಗುರಾದ ಸುವಾಸನೆ ಮತ್ತು ತೆಳ್ಳಗಿನ ಹೊಗೆ ಅಲ್ಲಿ ಹರಡಿತ್ತು. +ಆ ದೊಡ್ಡ ಕೋಣೆಯ ಒಂದು ಭಾಗದಲ್ಲಿ ವಿಶಾಲವಾದ ಮಂಚವಿತ್ತು. ಅದರ ಎರಡೂ ಕಡೆ ತಿಳಿನೀಲಿ ಬಣ್ಣದ ಚಿಕ್ಕ ಚಿಕ್ಕ ಸಂಗಮರವರಿ ಕಲ್ಲುಗಳನ್ನು ಜೋದಿಸಿದ್ದರು. ಆ ಕಲ್ಲುಗಳ ಮೇಲೆ ಬಳ್ಳಿಯ ಬಿಳಿಯ ಚಿತ್ತಾರಗಳಿದ್ದವು. ಸೊಳ್ಲೆ ಪರದೆ ಕಟ್ಟಲೆಂದು ಇದ್ದ ಚೌಕಟ್ಟು ಮಂಚದ ನಾಲ್ಕೂ ಕಡೆಗಿದ್ದ ಸಪೂರವಾದ ಉರುಟು ಕಂಬಗಳ ಮೇಲೆ ನಿಂತಿತ್ತು. ಮಂಚದ ಎದುರು ಚಿಕ್ಕ ರತ್ನಗಂಬಳಿ ಹಾಸಿತ್ತು. ಅವಳು ಮನೋಹರನನ್ನು ಮಂಚದ ಮೆತ್ತನೆಯ ಹಾಸಿಗೆಯ ಮೇಲೆ ಕೂರಿಸಿ ಮುಂಬೈಯ ಸುಪ್ರಸಿದ್ಧ ಸುತರಫೇಣಿ ತಿನ್ನಲು ಕೊಟ್ಟಳು. ಅನೇಕ ದಿನಗಳ ನಂತರ ತಿಂದ ಆ ಅಪರೂಪದ ತಿಂಡಿ ಮನೋಹರನಿಗೆ ಅಸಾಮಾನ್ಯ ರುಚಿಯೆನಿಸಿತು. +ಮನೋಹರ ಎಂ. ಎ. ಮೊದಲ ವರ್ಷದಲ್ಲಿದ್ದಾಗ, ನಡುವೆ ರಜೆಯಲ್ಲಿ ಊರಿಗೆ ಬಂದವನು ದೂರದ ಸಂಬಂಧೀಕರೊಬ್ಬರ ಮಗನ ಮದುವೆಗೆಂದು ಅವನ ಅಮ್ಮನನ್ನು ಕರೆದುಕೊಂಡು ಅಂಕೋಲೆಗೆ ಬಂದ. ಮದುವೆಯ ಊಟ ಮುಗಿಸಿ ಬಂದು, ಒಂದು ಪುಸ್ತಕ ಹಿಡಿದು ಹಾಸಿಗೆಯಲ್ಲಿ ಅಡ್ಡಾದವನಿಗೆ ಹಾಗೇ ಕಣ್ಣು ಹತ್ತಿತ್ತು. ನಡುವೆ ಎಚ್ಚರವಾದದ್ದು ಕೇಳಿಬರುತ್ತಿದ್ದ ಬಿಕ್ಕುವ ದನಿ ಮತ್ತು ಗದ್ಗದ ಮಾತುಗಳಿಂದ. ಚಿಕ್ಕಮ್ಮ ಯಶೋದೆ ಮತ್ತು ಅವನ ಅಮ್ಮ ಪಕ್ಕದ ಕೋಣೆಯಲ್ಲಿ ಮಾತಾಡುತ್ತಿದ್ದದ್ದು ಪೂರ್ತಿ ಮುಚ್ಚಿರದ ಬಾಗಿಲ ಸಂದಿಯಿಂದ ಆಚೆ ಕೇಳಿಬರುತ್ತಿತ್ತು. +ಯಶವಂತ ಚಿಕ್ಕಪ್ಪ ಮತ್ತು ಚಂಪಾಳ ನಡುವೆ ಬೆಳೆದ ಸಂಬಂಧದ ಬಗ್ಗೆ ಮಾತುಗಳು ನಡೆದಿದ್ದವು. ಅವಳನ್ನು ಇಟ್ಟುಕೊಂಡಿದ್ದ ಮುಂಬೈಯ ರಾವ್‌ವಕೀಲರು ಅಕಸ್ಮಾತ್ ಅಪಘಾತದಲ್ಲಿ ಅಕಾಲ ಮರಣಕ್ಕೀಡಾದ ಬಳಿಕ ಇದೆಲ್ಲ ನಡೆದಿತ್ತು. ಯಶೋದೆ ಮೊದಲ ಬಾರಿಗೆ ಅದನ್ನು ಮನೋಹರನ ಅಮ್ಮನಲ್ಲಿ ಹೇಳಿಕೊಳ್ಳುತ್ತಿದ್ದಳು. ಬೇರೆಯವರಿಂದ ಸುದ್ದಿ ಈಗಾಗಲೇ ಮಟ್ಟಿದೆಯೆಂಬ ಅನುಮಾನವೂ ಅವಳಿಗಿದ್ದುದು ಅವಳ ಮಾತಿನಲ್ಲೇ ಗೊತ್ತಾಗುತ್ತಿತ್ತು. +‘ಯಾರದೋ ಮಾತು ಕೇಳಿಕೊಂಡು ಕಣ್ಣೀರು ಹಾಕಬೇಡ ಯಶೋದೆ….ಜನ ನೂರು ಹೇಳುತ್ತಾರೆ…ಪುಕ್ಕ ಬಿದ್ದರೆ ಹಕ್ಕಿ ಹಾರಿತು ಅನ್ನುತ್ತಾರೆ….ಅಷ್ಟು ಖಂಡಿತವಾಗಿ ಹೇಳಬೇಡ….ಇಲ್ಲದಿರುವ ವಿಷಯ ಕೆಲವು ಸಲ ಬಾಯಿಬಿಟ್ಟು ಹೇಳುವುದರಿಂದಲೇ ಘಟಿಸಿಬಿಡುತ್ತದೆ…ಹಾಗೆ ಹೇಳಲಿಕ್ಕೆ ನೀನೇನು ನೋಡಿದ್ದೀಯೇನು?….’ +‘ಅಯ್ಯೋ ಇಷ್ಟು ಸಾಲದೆಂದು ಅದೊಂದು ಬೇರೆ ಸ್ವತಃ ನೋಡಬೇಕೇನು? ಇದು ಈವತ್ತು ನಿನ್ನೆಯದಲ್ಲ ಕಾವೇರಿ; ಎರಡು ವರ್ಷಗಳಿಂದ ನಡೆಯುತ್ತಿದೆಯಂತೆ….ಒಂದು ದಿವಸ ನಮ್ಮ ಬೊಮ್ಮಯ್ಯನೇ ಬಂದು ನನಗೆ ಹೇಳಿದ….’ +‘ನೀನು ಯಶವಂತನನ್ನೇ ನೇರವಾಗಿ ಕೇಳಿಬಿಡಬೇಕಿತ್ತು’ +‘ಯಾವಾಗಲೋ ಕೇಳಿಯಾಯಿತು…ಹಾಂ ಅನ್ನಲಿಲ್ಲ ಹೂಂ ಅನ್ನಲಿಲ್ಲ…ಇಲ್ಲ ಅನ್ನುವ ಶಬ್ದ ಅವರ ಬಾಯಿಂದ ಬರಲಿಲ್ಲ…ಯಾರಿಗೋ ಹೇಳುತ್ತಿದ್ದೇನೆ ಅನ್ನುವ ರೀತಿಯಲ್ಲಿ ನಡೆದುಬಿಟ್ಟರು… ಮನೆಯಲ್ಲಿ ಬೆಳೆಯುತ್ತಿರುವ ಮಗಳು ಇದ್ದಾಳೆ; ಅವಳೆದುರು ದಿನಾ ಈ ವಿಷಯ ಎತ್ತಿ ಜಗಳ ಮಾಡಲಿಕ್ಕಾಗುತ್ತದೆಯೆ? ಇಬ್ಬರೇ ಇರುವ ಸಂದರ್ಭ ಹುಡುಕಿ ಮಾತಾಡಬೇಕು..ಇವರೋ ಕೈಗೆ ಸಿಗಬೇಕಲ್ಲ…ನಾನು ಎಲ್ಲಾ ರೀತಿಯಿಂದ ಹೇಳಿದ್ದಾಯಿತು, ಹಂಗಿಸಿದ್ದಾಯಿತು… ರಾವ್ ವಕೀಲರ ಎಂಜಲು ತಿನ್ನಲು ಹೋಗಬೇಡಿ ಅಂದೆ. ಅವರು ಮಲಗಿದ ಹಳೆಯ ಹಾಸಿಗೆಯದು ಅಂತಂದೆ….ಇವರು ಏನನ್ನಾದರೂ ಕಿವಿಯ ಮೇಲೆ ಹಾಕಿಕೊಂಡರೆ ತಾನೇ?….’ +‘ಅಣ್ಣನಿಂದ ಒಂದು ಮಾತು ಹೇಳಿಸಿ ನೋಡಬಹುದೇನೋ…. ಇವರಿಗೆ ಹೇಳುತ್ತೇನೆ….’ +‘ಅದೂ ಆಗಿಹೋದರೆ ಆಮೇಲೆ ಯಾರ ಹೆದರಿಕೆಯೂ ಇಲ್ಲದೇ ರಾಜಾರೋಷವಾಗಿ ಓಡಾಡಬಹುದಲ್ಲ…. ಬೊಮ್ಮಯ್ಯ ಏನು ಹೇಳಿದ ಗೊತ್ತೇನು? ಇತ್ತೀಚೆಗೆ ಮಿಲ್ಲಿನ ಕಡೆ ಲಕ್ಷ್ಯವೇ ಇಲ್ಲವಂತೆ…. ಕೆಲವೊಮ್ಮೆ ಬೆಳಿಗ್ಗೆ ಅವಳ ಮನೆಗೆ ಹೋದವರು ಸಂಜೆಯವರೆಗೂ ಅಲ್ಲೇ ಇರುತ್ತಾರಂತೆ…. ಕತ್ತಲಾದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಅಲ್ಲಿ ಹೊಗಿ ಬರುತ್ತಾರೆ ಅಂದರೆ ನಾನು ಯಾರಿಗೂ ಹೇಳದೆ ಹೇಗೋ ಸಹಿಸಿಕೊಂಡಿರುತ್ತಿದ್ದೆ…. ಇದು ಹಾಗಲ್ಲ…. ತಡೆಯೋಣ ಅಂದರೆ ಯಾವ ದಿವಸ ಅಲ್ಲಿ ಹೋಗುತ್ತಾರೆಂದು ನನಗೆ ಗೊತ್ತಾಗುವುದಾದರೂ ಹೇಗೆ? ಕೆಲಸದ ಮೇಲೆ ಕುಮಟೆಗೋ ಕಾರವಾರಕ್ಕೋ ಆಗಾಗ ಹೋಗಿಬರುವುದು ಮೊದಲಿನಿಂದಲೂ ಇದ್ದದ್ದೇ. ಈಗ ಅಲ್ಲಿ ಹೋಗುತ್ತೇನೆಂದು ನನ್ನ ಹತ್ತಿರ ಸುಳ್ಳು ಹೇಳಿ ಇವಳ ಮನೆಗೆ ಹೋಗುತ್ತಾರೋ ಏನೋ….’ +‘ನೀನಾಗಿಯೇ ಇದನ್ನು ಯಾರ ಹತ್ತಿರವೂ ಹೇಳಲಿಕ್ಕೆ ಹೋಗಬೇಡ ಯಶೋದಾ…. ನೀನೇ ಹೇಳಿಬಿಟ್ಟರೆ ಆಮೇಲೆ ಜನ ಯಾವ ಮುಲಾಜಿಲ್ಲದೇ ನಿನ್ನ ಎದುರೇ ಮಾತಾಡತೊಡಗುತ್ತಾರೆ…. ಏನೂ ಆಗಿಲ್ಲ ಎಂಬ ಹಾಗೆ ಇರು…. ಯಶವಂತನಿಗೂ ಅದರ ಬಗ್ಗೆ ಅಳುಕಿರಲಿ…. ಇಲ್ಲವಾದರೆ ಯಾವ ಅಂಕೆಯೂ ಇಲ್ಲದೇ ಹೋಗಿಬಿಡುತ್ತದೆ….’ +ಇದೆಲ್ಲವೂ ಕಷ್ಟವಾಗುತ್ತ ಹೋದ ಹಾಗೆ ಅದರಲ್ಲಿರುವ ರೋಚಕತೆಯೂ, ಸ್ವಾರಸ್ಯವೂ ಯಶವಂತನಿಗೆ ಹೆಚ್ಚಾಗುತ್ತ ಹೋಗುತ್ತದೆ ಎಂಬುದನ್ನು ಯಾರೂ ಯೋಚಿಸಿದಂತಿರಲಿಲ್ಲ. ಮನೋಹರನ ಮನಸ್ಸಿನಲ್ಲಿ, ಅವನ ಓರಗೆಯವರ ಜೊತೆ ಪೋಲಿತನದ ಅತಿಮಾತುಗಳಲ್ಲಿ ಹುಟ್ಟಿಕೊಂಡ ಸೂಳೆಯ ಚಿತ್ರಕ್ಕೂ ಈಗ ಅವನು ಕೇಳುತ್ತಿದ್ದ ಯಶವಂತ ಚಂಪಾಳ ಪ್ರಕರಣದಿಂದ ಹುಟ್ಟಿದ ಚಿತ್ರಕ್ಕೂ ಅಜಗಜಾಂತರವಿತ್ತು. ಚಿಕ್ಕಪ್ಪ ಅಲಿ‌ಇ ಹೋಗಿ ಹಗಲಿಡೀ ಇರುವ ಸಂಗತಿಯೇ ಅವನ ಕಣ್ಣ ಮುಂದೆ ಬರುತ್ತಿತ್ತು. ಅವರ ಸಂಬಂಧ ಬರೀ ಕೆಲವು ನಿಮಿಷಗಳ ಏದುಸಿರ ಕೆಲಸಕ್ಕೆ ಸಂಬಂಧಿಸಿದ್ದಲ್ಲ ಎಂದು ಅನಿಸುತ್ತಿತ್ತು. ಸಾಕಷ್ಟು ಜಮೀನು, ರೈಸ್ ಮಿಲ್ಲು, ವ್ಯಾಪಾರ ಎಂದು ಸ್ವಂತ ಪರಿಶ್ರಮದಿಂದ ಮೇಲೆ ಬಂದ ಚಿಕ್ಕಪ್ಪ, ಸಮಾಜದಲ್ಲಿ ಸಲ್ಲಲು ತಕ್ಕ ರೀತಿಯಲ್ಲಿ ಬದುಕುತ್ತಿದ್ದ ಚಿಕ್ಕಪ್ಪ, ಯಾವುದೋ ಅವ್ಯಕ್ತದ ಬೆನ್ನು ಹತ್ತಿ ಹೋಗುತ್ತಿದ್ದಾನೆಂದು ಸ್ಪಷ್ಟವಿತ್ತು. +ತಾನು ಚಂಪಾಳ ಮನೆ ನೋಡಿರದಿದ್ದರೆ ತನಗೆ ಈ ಬಗ್ಗೆ ಬೇರೆಯೇ ಗ್ರಹಿಕೆಗಳಿರುತ್ತಿದ್ಚವೆಂದು ಮನೋಹರನಿಗೆ ಅನಿಸಿತು. ಈ ಸಲ ಅವನು ಚಿಕ್ಕಪ್ಪನ ಮನೆಯನ್ನು ಎಂದಿಗಿಂತ ಸೂಕ್ಷ್ಮವಾಗಿ ಗಮನಿಸಿದ. ಒಂದು ಸಂಸಾರ, ಒಂದು ಮದುವೆ ಇಲ್ಲಿ ಹಳತಾಗುತ್ತಿದೆ; ಸಂಬಂಧ ಪುನಃ ಪುನಃ ಚಿಗುರಲು ಅಗತ್ಯವಾದ ಯಾವುದನ್ನೂ ಈ ಮನೆ ಒದಗಿಸುತ್ತಿಲ್ಲ ಅನಿಸತೊಡಗಿತು. ಅದೇ ಜಾಗದಲ್ಲಿ ವರ್ಷಗಟ್ಟಲೆ ಇದ್ದ ಮಂಚ, ಕನ್ನಡಿಯ ಕಪಾಟುಗಳು, ಕೂರುವ ಆಸನಗಳು, ಅದೇ ಅಡಿಗೆ ಅದೇ ದೈನಿಕ – ಯಾವುದೋ ಒಂದು ಸ್ಥಾಯೀತನ ಈ ಮನೆಯನ್ನು ಹೊಕ್ಕು, ಇಲ್ಲಿರುವವರ ಮನಸ್ಸನ್ನು ಹಿಡಿದು ಕೊಳೆ ಹಾಕಿದಂತಿತ್ತು. ಆದರೆ ಯಾವ ಮನೆಯೂ ಹಾಗಿರಲಿಲ್ಲ. ಇಲ್ಲೆಲ್ಲ ಒಂದು ರೀತಿಯ ಉಪೇಕ್ಷೆಯ, ಅನಾಸಕ್ತಿಯ ಛಾಯೆಯಿತ್ತು. ದನಿಕಗಳೂ ಪ್ರೇಮಕಾಮಗಳೂ ಕರ್ತವ್ಯದ ಹಳಿಹಿಡಿದು ರೋಮಾಂಚವನ್ನು ಕಳಕೊಂಡಿದ್ದವು. +ಚಂಪಾಳ ಮನೆಗೆ ಹೋಗಿದ್ದನ್ನು ನೆನೆಸಿಕೊಂಡಾಗಲೆಲ್ಲ ತಾನು ನೋಡಿದ್ದೆಷ್ಟು, ಅದಕ್ಕೆ ತನ್ನ ಮನಸ್ಸು ಸೇರಿಸಿದ್ದೆಷ್ಟು ಎಂಬುದರ ಬಗ್ಗೆ ಮನೋಹರನಿಗೆ ಯಾವಾಗಲೂ ಗೊಂದಲವಾಗುತ್ತಿತ್ತು. ಅಲ್ಲಿ ತಾನು ನೋಡಿದ್ದು ಚಂಪಾಳನ್ನೋ ಅಥವಾ ಆ ಮನೆಯಲ್ಲಿದ್ದ ಬೇರೆ ಯಾವುದೋ ಹೆಂಗಸನ್ನೋ ಎಂಬುದು ಕೂಡಾ ಖಚಿತವಾಗಿ ಗೊತ್ತಿರಲಿಲ್ಲ. ತಾನು ನೋಡಿದವಳು ಅವಳ ಅಕ್ಕನೋ ತಂಗಿಯೋ ಇದ್ದಿರಬಹುದಲ್ಲ. ಕಲ್ಪಿಸಿಕೊಂಡಾಗ ಮನಸ್ಸಿಗೆ ಬರುವ ಹಾಗೇ ಅವಳು ಇದ್ದಾಳೋ ಅಥವಾ ಒಮ್ಮೆ ನೋಡಿದ ರೂಪ ಮನಸ್ಸಲ್ಲಿ ಬೆಳೆಬೆಳೆದು ಈಗ ಬೇರೆಯದೇನೋ ಕಣ್ಣ ಮುಂದೆ ನಿಲ್ಲುತ್ತಿದೆಯೋ ಗೊತ್ತಾಗುತ್ತಿರಲಿಲ್ಲ. +ಅವಳ ಮನೆಯಲ್ಲಿ ಗೋಡೆಗೆ ತೂಗುಹಾಕಿದ್ದ ಚಿತ್ರಗಳು – ಶಕುಂತಲೆಯನ್ನು ದುಂಬಿಯಿಂದ ರಕ್ಷಿಸಲು ಬಂದ ದುಷ್ಯಂತ, ತಿಳಿನೀಲಿ ಸಮುದ್ರದ ನೊರೆನೊರೆಯ ತೀರ, ತುಂಬಿದ ಕೊಡ ಹಿಡಿದ ಕನ್ಯೆ, ಮೊಸರು ಬಾಯಿಗೆ ಮೆತ್ತಿಕೊಂಡ ಬಾಲಕೃಷ್ಣ – ಎಲ್ಲವೂ ಕಣ್ಣಮುಂದೆ ಮೂಡುತ್ತಿತ್ತು. ಕಪ್ಪಾಗಿ ಮಿರಿಮಿರಿ ಮಿಂಚುವ ಮಂಚದ ಕಾಲುಗಳಿಗೆ ಕುಸುರಿಯಿತ್ತು. ಮಂಚದ ಮೇಲೆ ಹಾಸಿದ, ಹೂಗಳ ವಿನ್ಯಾಸದ ವಸ್ತ್ರ, ದಿಂಬುಗಳನ್ನೂ ಮುಚ್ಚಿಕೊಂಡಿತ್ತು. ಮಂಚದ ಎದುರು ನೆಲಕ್ಕೆ ಹಾಸಿದ ರತ್ನಗಂಬಳಿ ತಿಳಿನೀಲಿ ಬಣ್ಣದ್ದಿತ್ತು. ಚಂದಮಾಮದ ಚಿತ್ರಗಳಲ್ಲಿ ತೋರಿಸುವಂತೆ ಯಾವುದೋ ಮಾಯಾಲೋಕದ ಪಲ್ಲಂಗದಂತಿದ್ದ ಅದರ ಮೇಲಿನ ಮೃದುವಾದ ಹಾಸಿಗೆಯ ಮೇಲೆ ಚಂಪಾ ಕೂತಿದ್ದಳು. ಜರತಾರಿ ಸೀರೆಯುಟ್ಟಿದ್ದಳು. ಒಂದು ಕಾಲನ್ನು ಮಡಚಿ ಮಂಚದ ಮೇಲಿಟ್ಟು, ಇನ್ನೊಂದನ್ನು ಕೆಳಗೆ ಇಳಿಬಿಟ್ಟಿದ್ದಳು. ಕೂದಲನ್ನು ಹಿಂದಕ್ಕೆ ಬಾಚಿ ತುರುಬು ಕಟ್ಟಿಕೊಂಡಿದ್ದಳು. ತುರುಬು ತುಂಬ ಹೂವಿತ್ತು. ಮಂಚದ ಮೇಲೆ ಲಕಲಕ ಹೊಳೆಯುವ ತಾಂಬೂಲದ ಬೆಳ್ಳಿಯ ಹರಿವಾಣವಿತ್ತು. ಅದರೊಳಗಿದ್ದ ನಾನಾ ರೀತಿಯ ಚಿಕ್ಕಚಿಕ್ಕ ಬಟ್ಟಲುಗಳಲ್ಲಿ ತಾಂಬೂಲದ ವಿವಿಧ ಸಾಮಗ್ರಿಗಳಿದ್ದವು. ತೆರೆದ ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಪರದೆಗಳು ತೂಗುತ್ತಿದ್ದವು. ಯಶವಂತ ಬಂದದ್ದೇ, ಎಂದಿನಿಂದಲೋ ಅವನ ಹಾದಿ ಕಾಯುತ್ತಿದ್ದ ಹಾಗೆ ಬಳಿಸಾರಿ ಕೈ ಹಿಡಿಯುವಳು. ಕೈಹಿಡಿದು ಕೂರಿಸುವಳು. ಆಳುಕಾಳುಗಳ ಮೇಲೆ ಸದಾ ರೇಗುತ್ತ, ರೈಸ್ ಮಿಲ್ ರಿಪೇರಿಯ ಬಗ್ಗೆ ಗೊಣಗುತ್ತ, ಒಂದು ಶಬ್ದ ಮಾತಾಡದೇ ತಲೆಬಗ್ಗಿಸಿ ಊಟಮಾಡುತ್ತ, ರಾತ್ರಿ ಕೂತು ದುಡ್ಡೆಣಿಸಿ ಉದ್ದುದ್ದ ಪುಸ್ತಕಗಳಲ್ಲಿ ಲೆಕ್ಕ ಬರೆಯುತ್ತ ಇರುವ ಯಶವಂತ ಚಿಕ್ಕಪ್ಪನ ಮೋರೆ ಪ್ರಸನ್ನತೆಯಲ್ಲಿ ಅರಳುವುದು. ಚಂಪಾವತಿ ತಾಂಬೂಲ ಕಟ್ಟಿ ಅವನ ಬಾಯಲ್ಲಿ ಅದನ್ನು ಇಟ್ಟು ಮುಗುಳುನಗುವಳು….. +ಅಷ್ಟೇ. ಮನೋಹರನ ಅತಿ ರಮ್ಯ ಕಲ್ಪನೆ ಅಲ್ಲೇ ಥಟ್ಟಂತ ಕೊನೆಯಾಗುವುದು. ಯಶವಂತ ಮತ್ತು ಚಂಪಾಳ ನಡುವಿನ ದೈಹಿಕ ಸಮಾಗವನ್ನು ಕಲ್ಪಿಸಿಕೊಳ್ಳಲು ಮನಸ್ಸು ಹಿಂಜರಿಯುವುದು. ಯಾವ ಗಳಿಗೆಯಲ್ಲಿ, ಯಾವ ಸನ್ನೆಯ ಮೂಲಕ ಚಿಕ್ಕಪ್ಪನಿಗೆ ಸಂಸಾರದ ಸ್ಥಾಯೀತನ, ಆ ಸ್ತಬ್ದತೆ ಅರಿವಿಗೆ ಬಂತು ಎಂಬ ಪ್ರಶ್ನೆ ಮತ್ತೆ ಮತ್ತೆ ಬೆನ್ನಟ್ಟಿ ಬರುವುದು. +ಋಣಾನುಬಂಧ +ಮದುವೆ ಸಡಗರದ ಮನೆಗೆ ಮನೋಹರ ಬಂದು ತಲುಪಿದಾಗ ಬೆಳಗಿನ ಹನ್ನೊಂದರ ಸಮಯ. ಮದುವೆಗಿನ್ನೂ ಮೂರು ದಿನಗಳಿದ್ದರೂ ಅಲ್ಲಿ ಆಗಲೇ ಮದುವೆ ಮನೆಯ ಕಳೆಯೇರಿತ್ತು. ಹೊರಗೆ ಅಂಗಳ ಸಾರಿಸಿ ದೊಡ್ದ ಚಪ್ಪರ ಹಾಕಿದ್ದರು. ಅವತ್ತೇ ಕಟ್ಟಿದ್ದೆಂದು ಗೊತ್ತಾಗುವಷ್ಟು ಮಾವಿನ ತೋರಣ ನಳನಳಿಸುತ್ತಿತ್ತು. ತುಳಸಿಲಗ್ನದ ಅಲಂಕಾರದ ಕುರುಹುಗಳಿನ್ನೂ ತುಳಸಿಕಟ್ಟೆಯ ಮೇಲಿದ್ದವು. ಎಷ್ಟೋವರ್ಷಗಳ ನಂತರ ಮನೆಯ ಗೋದೆಗಳು, ಕಿಟಕಿ ಬಾಗಿಲುಗಳಿಗೆಲ್ಲ ಹೊಸ ಬಣ್ಣ ಹಚ್ಚಿದ್ದರು. ಮನೆ ತುಂಬ ಜನ. ಮಕ್ಕಳ ಗಲಾಟೆ. ಎಲ್ಲಾ ಕೋಣೆಗಳಲ್ಲೂ ಬಂದವರ ನಾನಾ ಸಾಮಾನುಗಳು ಹರಡಿದ್ದವು. ಬಾಯಿ ಅರೆತೆರೆದ ಬ್ಯಾಗುಗಳಿಂದ ಹೊರಚಾಚಿದ ಬಟ್ಟೆಗಳು. ಕೆಂಪು ಕಾಗದದಲ್ಲಿ ಸುತ್ತಿ ಮದುವೆಗೆಂದು ತಂದ ಉಡುಗೊರೆಗಳು. ಅರ್ಧ ಮಡಚಿಟ್ಟ ಭಾರವಾದ ಜಮಖಾನೆಗಳು. ಹೂವಿನ ಘಮಘಮ. ವಿನಾಕಾರಣ ನಾಚುತ್ತ ಓಡಾಡುವ ಹುಡುಗಿಯರು. ಸ್ನಾನ ಮುಗಿಸಿಕೊಳ್ಳಿರೋ ಎಂದು ಬೆಳಗಿನಿಂದ ಕೂತಲ್ಲೇ ಕಿರಿಕಿರಿ ಮಾಡುವ ಶಾಲತ್ತೆ. ಈ ಎಲ್ಲ ಅವ್ಯವಸ್ಥೆಯಲ್ಲೊಂದು ಸಂಭ್ರಮವಿತ್ತು. ಇಂಥ ಗದ್ದಲದ ನಡುವೆಯೂ ಹೆಂಗಸರು ತಮ್ಮ ಗಂಡಂದಿರ ತಿಂಡಿಯಾಯಿತೋ, ಸ್ನಾನಕ್ಕೆ ಬಿಸಿ ನೀರು ಇತ್ತೋ, ಮಗನಿಗೆ ಹಾಲು ಆಯಿತೋ ಎಂದೆಲ್ಲ ಸೂಕ್ಷ್ಮವಾಗಿ ಸ್ವಕುಟುಂಬ ಚಿಂತನೆ ಮಾಡುತ್ತಿದ್ದರು. ಕೈಗೆ ಮದರಂಗಿ ಹಚ್ಚಿಕೊಂಡ ಹುಡುಗಿಯರ ಗುಂಪೊಂದು ಸೆರೆಸಿಕ್ಕ ಸೈನಿಕರ ಹಾಗೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ಓಡಾಡುತ್ತಿತ್ತು. ಹೊರಗೆ ಚಪ್ಪರದ ಮೂಲೆಯಲ್ಲಿ ಇಸ್ಪೀಟಾಟದ ಟೋಳಿ ನಾನಾ ರೀತಿಯ ಅಟ್ಟಹಾಸ ಮಾಡುತ್ತಿತ್ತು. ‘ತುರುಫಿನ ಎಕ್ಕಾ ನನ್ನದು…. ತುರುಫಿನ ಎಕ್ಕಾ’ ಎಂದು ಯಾರೋ ಕೂಗಾಡುತ್ತಿದ್ದರು. ಎಲ್ಲವನ್ನೂ ಪಣಕ್ಕೆ ಇಟ್ಟವರಂತೆ ಆತಂಕದ ಮುಖದಲ್ಲಿ ಮುಂದಿನ ಎಲೆಯನ್ನು ನಿರೀಕ್ಷಿಸುತ್ತ ಗುಂಪು ಅದರಲ್ಲೇ ಮಗ್ನವಾಗಿತ್ತು. +‘ಈ ಸಲ ಜೋರಾಗಿದೆಯಲ್ಲ ಇಸ್ಪೀಟಿನ ಟೋಳಿ’ ಎಂದ ಮನೋಹರ. +‘ನಮ್ಮ ಪಾಂಡು ಭಾವಯ್ಯ ಇದ್ದ ಮೇಲೆ ಜಬರದಸ್ತಾಗಲೇಬೇಕಲ್ಲ…. ಆಡಿದ್ದಾರೆ ನಿನ್ನೆ ರಾತ್ರಿ ಎರಡರವರೆಗೂ…’ ಎಂದು ಅಭಿಮಾನದಿಂದ ಯಶವಂತ ಹೇಳಿದ. ಅದು ಕಿವಿಗೆ ಬಿದ್ದಿತೋ ಎಂಬಂತೆ ಪಾಂಡುಭಾವ ಮನೋಹರನನ್ನು ನೋಡಿ ಆಟಕ್ಕೆ ಕೂತಲ್ಲಿಂದಲೇ ಕೈಯೆತ್ತಿ ಸ್ವಾಗತಿಸಿದರು. ಮನೋಹರ ಬಂದಿದ್ದು ಯಶವಂತನಿಗೆ ಬಹಳ ಖುಷಿಯಾಗಿತ್ತು. ಯಶವಂತ ಅವನನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದ ಹಾಗೆ ಶಾಲತ್ತೆ ಅಡ್ಡಗಟ್ಟಿದಳು. ಅವಳೊಂದು ಕಡೆ ಕೂತು ತನ್ನ ಎದುರು ಯಾವುದೇ ಅಪರಿಚಿತ ಮುಖ ಹಾದರೂ ನಿಲ್ಲಿಸಿ ‘ನೀನು ಯಾರ ಮಗ? ಯಾರ ಮಗಳು?’ ಎಂದು ವಿಚಾರಿಸಿ ಮುಂದಿನ ಪೀಳಿಗೆಯ ಮುಖಪರಿಚಯ ಮಾಡಿಕೊಳ್ಳುವಳು. ಮನೋಹರನನ್ನೂ ನಿಲ್ಲಿಸಿ ‘ಯಾರೋ ನೋಡ್ತೆ’ ಅಂದಳು. +‘ನಮ್ಮ ಮನೋಹರ…. ನಮ್ಮ ದೇವಣ್ಣನ ಮಗ…’ ಎಂದು ಯಶವಂತ ಹೇಳಿದ. +‘ಚಲೋದಾಯ್ತು… ಸರೀ ತಯಾರಿಗೆ ಬಂದು ತಲುಪಿದ. ಮನೆತನದ ಹುಡುಗ ಅಂದ ಮೇಲೆ ಜವಾಬ್ದಾರಿ ಅವನ್ದೇ ಅಲ್ವೇ…. ತಂಗಿ ಮದುವೆಗೆ ಅಂವ ಅಲ್ದೇ ಯಾರು ಮಾಡಬೇಕು ತಯಾರಿ…’ ಎಂದವಳು ಮುಂದೆ ಹೋಗಲು ಬಿಟ್ಟಳು. +ಮನೋಹರನ ಬ್ಯಾಗನ್ನು ಅಟ್ಟದ ಮೇಲಿನ ಯಶವಂತನ ಕೋಣೆಯಲ್ಲಿ ಇರಿಸಲಾಯಿತು. ಬಚ್ಚಲು ಖಾಲಿ ಇದೆ ಎಂದು ಯಾರೋ ಅಂದದ್ದು ಕೇಳಿಸಿ ಸೀದಾ ಅವನನ್ನು ಸ್ನಾನಕ್ಕೆ ಕಳಿಸಿದರು. ಮದುವೆ ಮನೆಯಲ್ಲಿ ಅಪರೂಪವಾದ ಒಣಗಿದ ಟವಲ್ಲನ್ನು ಯಾರೋ ಹುಡುಗ ತಂದು ಕೊಟ್ಟ. ಸ್ನಾನ ಮುಗಿಸಿ ಬಂದವನನ್ನು ಗಂಜಿ ಊಟಕ್ಕೆ ಕೂರಿಸಿದರು. ಎಲ್ಲೋ ಹಿತ್ತಿಲಲ್ಲಿದ್ದ ಯಶೋದೆ ಒಳಬರುವ ಮುಂಚೆ ಕೆಲಸದ ಆಯುವಿಗೆ ಹೇಳುತ್ತಿದ್ದ ಮಾತುಗಳು ಕೇಳಿಸಿದವು. +‘ಅಂವ ಬಂದೇ ಬರ್‍ತಾನೆ ಅಂತ ನಾ ಹೇಳಿದ್ದೆ. ಇವರು ಆಗೂದಿಲ್ಲವೇ, ಅವನಿಗೆ ರಜೆ ಸಿಗಬೇಕಲ್ಲ… ಮದ್ವೆಗೂ ಬರ್‍ತಾನೋ ಇಲ್ಲವೋ…. ಇಷ್ಟು ಅವಸರದಲ್ಲಿ ಮುಹೂರ್ತ ಇಟ್ಟರೆ ಎಲ್ಲರಿಗೂ ಬರ್‍ಲಿಕ್ಕೆ ಆಗಬೇಕಲ್ಲ ಅಂದರು… ನಾನು ಹೇಳಿದ ಹಾಗೇ ಆಯ್ತು…. ಎಲ್ಲಿ ಅಂವ?’ +ವರ್ಷಗಟ್ಟಲೇ ಪ್ರಯತ್ನಿಸಿದರೂ ಎಲ್ಲೆಲ್ಲೂ ಕೂಡಿ ಬರದ ಮಗಳ ಮದುವೆಯ ಗಳಿಗೆ ಈಗ ಸನ್ನಹಿತವಾಗಿದೆಯೆನ್ನುವ ಉತ್ಸಾಹ ಅವಳ ಪ್ರತಿ ಮಾತಿನಲ್ಲಿ, ವಿನಾಕಾರಣ ಚಲನೆಗಳಲ್ಲಿ ವ್ಯಕ್ತವಾಗುತ್ತಿತ್ತು. +‘ನಾನು ಬರದೇ ಇರುತ್ತೇನೆಯೇ ಚಿಕ್ಕಮ್ಮ… ಎಲ್ಲಿ ಸುನಂದೆ?’ ಎಂದು ಮನೋಹರ ಕೇಳಿದ. +‘ಇದ್ದಾಳೆ ಇದ್ದಾಳೆ… ಇಲ್ಲೇ ಶಂಭು ಮನೆಗೆ ಹೂ ಕಟ್ಟುವ ನಾರು ತರಲಿಕ್ಕೆ ಹೋಗಿದ್ದಾಳೆ… ಒಂದು ರಾಶಿ ಆಬೋಲಿ ಬಿದ್ದಿದೆ ಮನೆಯಲ್ಲಿ… ಕೂತಲ್ಲೇ ಒಂದೊಂದು ಮಾಲೆ ಕಟ್ಟಿ ಹಾಕಿದರೆ ನಾಳೆ ಬರುವವರಿಗೆ ಒಂದೊಂದು ತುಂಡಾದರೂ ಮುಡಿಗೆ ಅಂತ ಕೊಡಬಹುದಲ್ಲ…. ನಾಳೆ ದೇವಕಾರ್ಯ; ಸತ್ಯನಾರಾಯಣ ಪೂಜೆ… ಬೀಗರ ಕಡೆಯಿಂದ ಸುಮಾರು ಜನ ಬಂದರೂ ಬರಬಹುದು….’ +‘ಅಡಿಗೆಯವರು ಯಾರು?’ +‘ಹಳದೀಪುರದ ಬಾಬಟಿಯನ್ನು ಕರೆಸಿದ್ದೇವೆ. ಸದ್ಯ ಇಂಥಾ ಅವಸದಲ್ಲೂ ಅವನು ಸಿಕ್ಕ…. ಈವತ್ತಿನವರೆಗೆ ಮಾತ್ರ ಈ ಗಂಜಿ ಊಟ…. ಆಮೇಲೆ ಜನ ಜಾಸ್ತಿಯಾದ ನಂತರ ಇದೆಲ್ಲ ಎಲ್ಲಿ ಆಗುತ್ತದೆ? ಗಂಜಿ ನಾವೇ ಮಾಡಬೇಕು ಒಳಗಡೆ…. ಗಂಜಿಗಿಡುವುದು ಅಂದರೆ ಬಾಬುಟಿ ತನ್ನ ಅಂತಸ್ತಿಗೆ ಕಡಿಮೆ ಎಂದು ತಿಳಿಯುತ್ತಾನೆ….’ +ಮನೋಹರನಿಗೆ ಬಸಳೇ ಪಲ್ಯ ಬಡಿಸುತ್ತ, ಉಪ್ಪಿನಕಾಯಿ ಹಾಕುತ್ತ, ಗಂಜಿ ಹಾಕಲೇ ಎಂದು ಎರಡೆರದು ಬಾರಿ ಕೇಳುತ್ತ ಯಶೋದೆ, ಸುನಂದೆಯ ಮದುವೆ ಕೂಡಿ ಬಂದ ಬಗ್ಗೆ’ ಅವಳನ್ನು ಮದುವೆಯಾಗುವ ಹುಡುಗನ ಬಗ್ಗೆ ಹೇಳತೊಡಗಿದಳು. ಅವನಿಗೆ ಸಿರ್ಸಿಯ ಅರ್ಬನ್ ಬ್ಯಾಂಕಿನಲ್ಲಿ ಕೆಲಸವಂತೆ. ಬಿಕಾಂ ಮಾಡಿದ್ದಾನಂತೆ. ಹುಡುಗನ ಅಮ್ಮ ಯಶೋದೆಯ ತವರಿನ ಕಡೆಯಿಂದ ದೂರದ ಸಂಬಂಧವೇ ಆಗಬೇಕಂತೆ… ‘ಸಂಬಂಧ ಅಂದರೆ ಇಟ್ಟುಕೊಂಡರೆ ಮಾತ್ರ ಇರುವುದಿಲ್ಲವೇ?’ ಎಂದೂ ಅಂದಳು. ಒಬ್ಬನೇ ಮಗನಂತೆ. ತಂದೆಯಿಲ್ಲದ ಹುಡೂಗನನ್ನು ತಾಯಿಯೇ ಬೆಳೆಸಿದಳಂತೆ. +‘ಅಲ್ಲ ಈ ಋಣಾನುಬಂಧ ನೋಡು…. ಇಲ್ಲವಾದರೆ ಎಲ್ಲೆಲ್ಲೂ ಅವಳಿಗೆ ಜಾತಕ ಕೂಡಿ ಬರದೇ ಇದ್ದುದು, ಕೂದಿ ಬಂದವರಿಗೆ ಹುಡುಗಿ ಪಾಸಾಗದೇ ಇರುವುದು, ಎಲ್ಲಾ ಆದ ಕಡೆ ಅವರು ಮೊಸರಲ್ಲಿ ಕಲ್ಲು ಹುಡುಕುವುದು ಇದೆಲ್ಲ ಇಷ್ಟು ವರ್ಷ ನಡೆದರೂ ಈ ಹುಡುಗ ಕಣ್ಣೆದುರೇ ಇದ್ದಾನೆ, ಅವನಿಗೆ ಎಲ್ಲೂ ಕೂಡಿ ಬರುತ್ತಿಲ್ಲ ಎಂದು ಆ ಶಾಮಣ್ಣ ಹೇಳುವವರೆಗೂ ನಮಗೆ ಹೊಳೆದೇ ಇರಲಿಲ್ಲ…. ಇದು ಇಲ್ಲೇ ಆಗಲಿ ಎಂದು ಇಷ್ಟು ವರ್ಷ ಇವಳಿಗೆ ಎಲ್ಲೂ ಆಗಲಿಲ್ಲವೋ ಯಾರಿಗೆ ಗೊತ್ತು?…. ಹೇಳಿದರೆ ಯಾರೂ ನಂಬುವುದಿಲ್ಲ. ಅಷ್ಟು ಸರಸರ ಅಂತ ಎಲ್ಲ ಎಂಟೇ ದಿವಸಗಳಲ್ಲಿ ನಡೆದುಹೋಯಿತು ನೋಡು…. ಅವನು ಬಂದದ್ದು, ಹುಡುಗಿ ನೋಡಿ ಅಂತ ಕಾಲಲ್ಲೇ ಪಾಸು ಮಾಡಿದ್ದು, ಇವರು ಜಯವಂತ ದೇಸಾಯಿಯವರನ್ನು ಕರೆದುಕೊಂಡು ಮಾತಾಡಲು ಹೋದವರು ಸಕ್ಕರೆ ತಿಂದೇ ಬಂದಿದ್ದು…. ಎಲ್ಲ ಎಂಟೇ ದಿವಸಗಳಲ್ಲಿ ಆಗಿಹೋಯಿತು….’ +‘ಅವನ ಹೆಸರನ್ನೇ ಹೇಳಲಿಲ್ಲವಲ್ಲ ಚಿಕ್ಕಮ್ಮ’ ಎಂದು ಮನೋಹರ ತುಸು ರೇಗಿಸುವ ದನಿಯಲ್ಲಿ ಹೇಳಿದ. +‘ಗಣಪತಿ’ ಎಂದು ಅಳಿಯನ ಹೆಸರು ಹೇಳುವಾಗ ಅವಳೇ ತುಸು ನಾಚಿದಳು. +ಸುನಂದ ಬಂದೊಡನೆ ‘ಗಣಪ ಬಂದ, ಕಾಯಿಕಡುಬು ತಿಂದ’ ಎಂದು ಶುರುಮಾಡಿ, ಪ್ರಾಸಬದ್ದವಾಗಿ ಒಂದಕ್ಕೊಂದು ಸೇರಿಸಿ ಮುಂದುವರಿಸಿಕೊಂಡು ಹೋಗುತ್ತ ಹುಡುಗಿಯರು ಸುನಂದೆಯನ್ನು‌ಉ ಕಿಚಾಯಿಸಿದರು. ಎಲ್ಲವೂ ತನ್ನ ಮದುವೆಯ ನಿಮಿತ್ತವೆಂಬ ಅರಿವಿನಿಂದ ಹುಟ್ಟಿದ ಪ್ರಾಮುಖ್ಯತೆಯನ್ನು ಅವಳು ಆನಂದಿಸುತ್ತಿದ್ದಂತಿತ್ತು. ಕಣ್ಣಲ್ಲಿ ವಿಶೇಷ ಕಾಂತಿಯಿತ್ತು. ಮನೋಹರನಿಂದ ಕೆನ್ನೆ ಹಿಂಡಿಸಿಕೊಂಡು ಸುನಂದೆ ನಾಚಿದಳು. +ಮನೆಯ ಹಿಂಭಾಗದಲ್ಲಿ ಹಾಕಿದ್ದ ಅಡಿಗೆ ಚಪ್ಪರದಿಂದ ನಾನಾ ರೀತಿಯ ಸುವಾಸನೆಗಳು ಹೊಮ್ಮುತ್ತಿದ್ದವು. ಹೊಗೆ ಗಾಳಿಯ ದಿಕ್ಕಿಗೆ ಓಡುತ್ತಿತ್ತು. ಕೈತೊಳೆಯಲು ಹೋದಾಗ ಬಾಬುಟಿ ತನ್ನ ಬಗ್ಗೆ ಸಹಾಯಕರಿಗೆ ಹೇಳುವುದನ್ನು ಮನೋಹರ ಕೇಳಿಸಿಕೊಂಡ. ತರಕಾರಿ ಹೆಚ್ಚುತ್ತ, ಸಾರು ಕುದಿಸುತ್ತ ಎಲ್ಲಿಂದ ಎಲ್ಲಿಗೋ ಅವರ ಮಾತುಗಳು ಅಲೆಯುತ್ತಿದ್ದವು. ಮದುವೆ ಮನೆಗೆ ಆಹ್ವಾನಿಸದೇ ಬಂದು ಇಷ್ಟಿಷ್ಟು ತಿಂದು, ಕೆಲವೊಮ್ಮೆ ತಿಂದಿದ್ದು ಅತಿಯಾಗಿ ಕಾರಿಕೊಳ್ಳುವ ಗುಂಡಬಾಳೆ ವೆಂಕಟೇಶ ಬಂದರೂ ಬರಬಹುದೆಂದು ಮಾತಾಡಿಕೊಳ್ಳುತ್ತಿದ್ದರು. ಮಾರನೇ ದಿನ ದೇವಕಾರ್ಯಕ್ಕೆ ಬೀಗರ ಕಡೆಯಿಂದ ಯಾರು ಯಾರು ಬರಬಹುದೆನ್ನುವ ಬಗ್ಗೆ ಅಡಿಗೆ ಮೇಳದಲ್ಲಿ ಚರ್ಚೆ ಶುರುವಾಗುತ್ತಲಿತ್ತು. ಯಾರಾದರೂ ತುಂಬಿದ ಬಸುರಿಯರು ಇದ್ದಾರೋ ಹೇಗೆ ಎಂದು ಕೂಡ ಮಾತು ಹರಿಯಿತು. ಬಾಣಂತಿ ಸೂತಕ ತಗುಲದ ಹಾಗೆ ಒಂದು ಪೂಜೆ ಮಾಡಿ, ಮಂಗಲದೀಪ ಹಚ್ಚಿ ಇಟ್ಟರೆ ಅದರ ಬಾಧೆಯಿಲ್ಲವೆಂದು ಬಾಬುಟಿ ಅಧಿಕಾರ ವಾಣಿಯಿಂದ ಹೇಳುತ್ತಲಿದ್ದ. +ಮನೋಹರನ ಗಂಜಿ ಊಟ ಮುಗಿಯುವುದನ್ನೇ ಕಾಯುತ್ತಿದ್ದವನ ಹಾಗೆ ಯಶವಂತ ಬಂದು ‘ಬಾ…ಬಾ’ ಎಂದು ಅವನನ್ನು ಮಹಡಿಯ ಮೇಲಿನ ತನ್ನ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ಹೊಸ ಬಣ್ಣದ ವಾಸನೆಯಿತ್ತು. ಕಿಟಕಿಯಿಂದ ಕೆಳಗೆ ನೋಡಿದರೆ ಚಪ್ಪರದ ಮೇಲೆ ಒಣಗಲು ಹಾಕಿದ ಸಂಡಿಗೆಗಳು ಕಾಣಿಸುತ್ತಿದ್ದವು. +‘ಈ ಮದುವೆಯ ತಯಾರಿ ಸಾಕಾಗಿಹೋಯಿತು. ಊರ ಜನ ಆಯ್ತ ಸಮಯಕ್ಕೆ ಹೆಗಲು ಕೊಟ್ಟರು. ಇಲ್ಲವಾದರೆ ನನ್ನೊಬ್ಬನಿಂದ ಇದು ಆಗುವ ಮಾತಲ್ಲ ನೋಡು…. ಬೆಂಗಳೂರಿನಲ್ಲದರೆ ದುಡ್ಡು ಕೊಟ್ಟರೆ ಆಯಿತು, ಮದುವೆಯ ದಿನ ದಿಬ್ಬಣ ತಗೊಂಡು ಹೋಗಬಹುದು… ಇಲ್ಲಿ ಎಲ್ಲ ನಾವೇ ಮಾಡಬೇಕಲ್ಲ…’ +ಮಾತಾಡುತ್ತ ಯಶವಂತ ಚಾಪೆ ಹಾಕಿದ. ಹಾಸಿದ ಚಾಪೆಯ ಮೇಲೆ ಕೂತು ಉದ್ದನೆಯ ಖಾತಾಪುಸ್ತಕದಂಥ ಹಾಳೆಗಳನ್ನು ಬಿಚ್ಚತೊಡಗಿದ. ‘ಜವಳಿ ಪಟ್ಟಿ… ನೀನೊಂದು ಸಲ ನೋಡಿಬಿಡು…. ನಮ್ಮ ದೇವಣ್ಣನ ಬದಲಿಗೆ’ ಅಂದ. +ಈ ಜವಳಿ ಪಟ್ಟಿಯನ್ನು ನೋಡುವುದೆಂದರೆ ಅದರ ಜವಾಬ್ದಾರಿಯನ್ನು ಭಾಗಶಃ ಹೊತ್ತುಕೊಂಡ ಹಾಗೆ. ಮದುವೆಯ ತಯಾರಿಯ ಮುಖ್ಯ ಭಾಗಗಳಲ್ಲೊಂದಾದ ಇದನ್ನು ಯಾರು ಕೂತು ತಯಾರಿಸಬೇಕು ಅನ್ನುವದರಿಂದ ಮೊದಲಾಗಿ, ಯಾರಿಗೆ ಸೀರೆ, ಯಾರಿಗೆ ಪಂಚೆ, ಕುಟುಂಬಕ್ಕೆ ಯಾರು ಯಾರು ಸೇರಿದವರೆಂಬುದನ್ನು ವ್ಯಾಖ್ಯೈಸುವುದು ಹೇಗೆ – ಮದುವೆಯಾಗಿ ಹೋದ ಹುಡುಗಿಯರಲ್ಲಿ ಯಾರನ್ನು ಈ ವ್ಯಾಖ್ಯೈಯಲ್ಲಿ ಸೇರಿಸಬಹುದು, ಯಾರಿಗೆ ಕುಬಸದ ಖಣ, ಯಾರು ಅವರವರ ಮನೆಯ ಶುಭಕಾರ್ಯಗಳಿಗೆ ತಮಗೆ ಏನೇನು ಕೊಟ್ಟಿದ್ದರೆಂಬ ಋಣಭಾರ – ಎಲ್ಲವನ್ನೂ ಪರಿಗಣಿಸಿ ಮಾಡಬೇಕಾದ ಪಟ್ಟಿ. ಕುಟುಂಬಕ್ಕೆ ಯಾರು ಹತ್ತಿರ, ಎಷ್ಟು ಹತ್ತಿರ ಅನ್ನುವ ತರತಮ ಪ್ರಾಮುಖ್ಯವನ್ನು ಇದು ಬಿಂಬಿಸುತ್ತಿತ್ತು. +‘ಮುಂಬೈಯಿಂದ ರಾಯಕರನ ಮಾಲು ಬರಲೇ ಇಲ್ಲ. ಅದ್ಯಾವುದೋ ಮಿಲ್ಲಿನಲ್ಲಿ ಹರತಾಳ ನಡೆಯುತ್ತಿದೆಯಂತೆ. ಮಗನನ್ನು ಅಹಮದಾಬಾದಿಗೆ ಕಳಿಸಿ ಅಂತೂ ತರಿಸಿದ್ದಾನೆ. ಇಲ್ಲದಿದ್ದರೆ ಈವತ್ತು ಜವಳಿ ಖರೀದಿಗೆ ಹುಬ್ಬಳ್ಳಿಗೆ ಹೊರಡುವುದೆಂದೇ ಅಂದುಕೊಂಡಿದ್ದೆವು’. ಎಂದು ಹೇಳುತ್ತ ಯಶವಂತ ಮೂರು ಉದ್ದುದ್ದ ಹಾಳೆಗಳನ್ನು ಮನೋಹರನಿಗೆ ಕೊಟ್ಟ. ಅವುಗಳಲ್ಲಿ ಹೆಸರುಗಳಿದ್ದವು. ಅವುಗಳ ಮುಂದೆ ಏನೇನೋ ಶರಾಗಳಿದ್ದವು. ಯಶವಂತ ಅವುಗಳನ್ನು ವಿವರಿಸತೊಡಗಿದ. +‘ನಮ್ಮ ಗಂಗತ್ತೆಗೊಂದು ಸೀರೆ ಅಂತ ಆಯ್ತು… ಗಂಡ ಇಲ್ಲದಿದ್ದರೇನಾಯಿತು? ಜಾನಕಿ ನಮ್ಮ ಮನೆತನದೊಳಗೆ ಬಂದ ಹೆಣ್ಣಲ್ಲವೇ? ಅವಳ ತವರಿನ ಕಡೆಯವರಿಗೊಂದು ಮರ್ಯಾದೆ ಅಂತ ಏನಾದರೂ ಕೊಡಬೇಕಲ್ಲವೇ? ಆಮೇಲೆ ಹೆರವಟ್ಟೆಯ ಕಮಲಳಿಗೂ ಒಂದು ಸೀರೆ. ಅವಳ ಮಗನ ಮದುವೆಗೆ ಯಾರಿಗೆ ಕೊಡದಿದ್ದರೂ ಯಶೋದೆಗೊಂದು ಸೀರೆ ಕೊಟ್ಟಿದ್ದಳು… ಗೋಪಾಲನ ಹೆಂಡತಿಗೂ ಒಂದು. ಸಂಬಂಧದ ಪ್ರಕಾರ ಕೊಡಬೇಕಾಗಿಲ್ಲ; ಆದರೆ ಇಬ್ಬರ ಮಕ್ಕಳ ಮುಂಜಿಗೂ ಒಂದೊಂದು ಸೀರೆ ಕೊಟ್ಟಿದ್ದಾನೆ. ಒಬ್ಬಳೇ ಮಗಳಾದ್ದರಿಂದ ಕೊಡುವವರಿಗೆಲ್ಲ ಈ ಸಂದರ್ಭದಲ್ಲೇ ಕೊಟ್ಟುಬಿಡುವುದು. ಮುಂದೆ ಹೇಗೋ ಏನೋ… ಋಣಭಾರ ಯಾಕೆ ಹೇಳು? ಈ ಕಡೆ ಇನ್ನೊಂದು ಹಾಳೆಯ ಮೇಲೆ ಬರೆದಿದೆಯಲ್ಲ, ಅದೆಲ್ಲ ಪ್ಯಾಂಟು ಪೀಸುಗಳನ್ನು ಕೊಡುವುದಕ್ಕೆ. ಅದು ಆ ಕಡೆ ಇರುವುದು ಶರ್ಟು ಪೀಸು… ನಮ್ಮ ಮಿಲ್ಲಿನ ಕೆಲಸಗಾರರನ್ನು ಇದರಲ್ಲಿ ಸೇರಿಸಿಲ್ಲ. ಅವರದ್ದು ದೊಡ್ಡ ಪಟ್ಟಿಯೇ ಇದೆ. ನಮ್ಮ ಬೊಮ್ಮಯ್ಯ ಹೆಂಡತಿಗೊಂದು ಸೀರೆ ಅಂತ ಮಾತಾಡಿಕೊಂಡಿದ್ದೇವೆ… ಅದೆಲ್ಲ ಬೇರೆ ಇಟ್ಟಿದ್ದೇನೆ… ಅದು ಮದುವೆಯ ಗೌಜಿ ಮುಗಿದ ನಂತರ ಕೊಡುವ ಸಂಗತಿಗಳು….’ +ಯಾವ ರೀತಿಯ ಸೀರೆ, ಅದರ ಅಂದಾಜು ಬೆಲೆ, ಅದನ್ನು ಕೊಡಲು ಇರುವ ಕಾರಣಗಳನ್ನೆಲ್ಲ ಯಶವಂತ ವಿವರಿಸುತ್ತ ಹೋದ ಹಾಗೆ ಮನೋಹರ ಕೈಯಲ್ಲಿದ್ದ ಹಾಳೆಗಳನ್ನು ಸುಮ್ಮನೇ ನೋಡುತ್ತ ಕೂತ. ಹೆಸರುಗಳು, ಅವುಗಳ ಮುಂದೆ ಸೀರೆ ನಮೂನೆ, ಅಂದಾಜು ಬೆಲೆ ಬರೆದಿತ್ತು. ಇಡೀ ಕುಟುಂಬದ ಸಂಬಂಧಗಳನ್ನು ಈ ಸಂಕೀರ್ಣ ಜಾಲದಲ್ಲಿ ಕೂರಿಸಿದ ಬಗೆಯನ್ನು, ಅದರ ಹಿಂದಿನ, ತನಗೆ ಅರ್ಥವಾಗದ ತತ್ವವನ್ನು ಮನೋಹರ ಬೆರಗಿನಿಂದ ನೋಡಿದ. ಪ್ರತಿ ಹೆಸರನ್ನು ಸೇರಿಸಲು ಒಂದು ವಿಶಿಷ್ಟ ತರ್ಕವಿತ್ತು. ಹಿಂದಿನ ಹೆಸರು ಸೇರಿಸಿದ್ದಕ್ಕೂ, ಮುಂದಿನದಕ್ಕೂ ನೇರವಾದ ಸಂಬಂಧವೇ ಇರದಂತೆ ತೋರುತ್ತಿತ್ತು. ಯಾವ ಕಾರಣಗಳಿಗಾಗಿ ಹಿಂದಿನ ಹೆಸರು ಸೀರೆಯ ಗುಂಪಿಗೆ ಸೇರಿಸಿತ್ತೋ ಅದೇ ಕಾರಣಕ್ಕಾಗಿ ಮುಂದಿನ ಹೆಸರು ಪಂಚೆಯ ಗುಂಪಿಗೆ ಸೇರಿತ್ತು. ಬಿಟ್ಟ ಹೆಸರುಗಳ ಬಗ್ಗೆ ವಿವರವನ್ನು ಯಶವಂತ ಕೊಡುತ್ತಲಿದ್ದ. ಸಂಬಂಧಗಳು, ಋಣಭಾರಗಳು, ಸೌಜನ್ಯಗಳು, ಇಷ್ಟಾನಿಷ್ಟಗಳು, ಎಂದೋ ಆದ ಅವಮಾನಗಳು, ಮುಯ್ಯಿಗಳು ಈ ದೀರ್ಘ ಪಟ್ಟಿಯ ಸಂಯೋಜನೆಯಲ್ಲಿ ಅದರ ಭಾಗ ಆಗುವುದರ ಮೂಲಕ ಎಷ್ಟೋ ಅಷ್ಟೇ ಆಗಿರುವುದರ ಮೂಲಕ ಕೂಡ ಅಭಿವ್ಯಕ್ತಿಯನ್ನು ಪಡೆದಂತಾಗಿತ್ತು. +ಮಧ್ಯಾಹ್ನ ಮೂರು ಗಂಟೆಗೆ ಜವಳಿ ಖರೀದಿಗೆ ಹೊರಟಾಗ ಯಶವಂತನ ಒತ್ತಾಯದಿಂದಾಗಿ ಮನೋಹರನೂ ಅವರ ಜೊತೆ ಹೋಗಬೇಕಾಯಿತು. +‘ಹೋಗುವವರು ನಾನು, ಯಶೋದೆ ಮತ್ತು ಸುನಂದಾ ಮಾತ್ರ…. ಮೂರು ಜನವಾಗುತ್ತದಲ್ಲ – ಅದಕ್ಕೇ ನೀನು ಬಂದರೆ ಸರಿಹೋಗುತ್ತದೆ. ಬೇರೆ ಯಾರನ್ನೂ ಕರಕೊಂಡು ಹೋಗುವ ಮನಸ್ಸಿಲ್ಲ ನನಗೆ.’ ಎಂದು ಯಶವಂತ ಹೇಳಿದ್ದರಿಂದ ಬೇರೆ ದಾರಿಯಿರಲಿಲ್ಲ. +‘ನಾನೊಂದು ನಾಲ್ಕನೆಯ ನಗ ಅಷ್ಟೇ…. ಜವಳಿಯ ಬಗ್ಗೆ ನನಗೇನೂ ಗೊತ್ತಿಲ್ಲ’ +‘ಆಯ್ತಪ್ಪ, ಒಂದು ನಗವಾಗಿಯೇ ಬಾ ನೀನು. ನಾವು ಮಾಡುವುದನ್ನು ಕೂತು ನೋಡು ಅಷ್ಟೇ’ ಎಂದು ಯಶವಂತ ಒತ್ತಾಯಿಸಿದ. +ಖರೀದಿಗೆ ಬರುವುದು ಗೊತ್ತಿದ್ದರಿಂದ ರಾಯಕರ ಇಂಥ ಸಂದರ್ಭಗಳಿಗೆಂದೇ ಮೀಸಲಾದ ಅಂಗಡಿಯ ಒಳಭಾಗದ ಕೋಣೆಯಲ್ಲಿ ಚಾಪೆಗಳನ್ನು ಹಾಸಿ, ಒರಗು ದಿಂಬುಗಳನ್ನು ಜೋಡಿಸಿ ವ್ಯವಸ್ಥೆ ಮಾಡಿದ್ದ. ಹೊಸ ಸ್ಟಾಕಿನಿಂದ ಇವರು ನೋಡಬಹುದಾದ ರೀತಿಯ ಸೀರೆಗಳನ್ನು ಆಗಲೇ ತೆಗೆದಿಟ್ಟಿದ್ದ. ಹೋದದ್ದೇ ಶರಬತ್ತು ಕೊಟ್ಟು ಉಪಚರಿಸಿದ. +‘ಕುಯ್ಯಬೇಡ ಮಾರಾಯ – ಸರಿಯಾದ ಬೆಲೆ ಹಾಕು’ ಎಂದು ಯಶವಂತ ವ್ಯಾಪಾರ ಆರಂಭಿಸುವ ಸೂಚನೆ ಇತ್ತ. +‘ನೀವು ಬೇಕಾದ್ದು ಆರಿಸಿ ರಾಯರೇ… ಬೆಲೆ ನೋಡಬೇಡಿ…. ಕೊನೆಯಲ್ಲಿ ಒಟ್ಟೂ ಸೇರಿಸಿ ರಿಬೇಟು ಕೊಡೂತ್ತೇನೆ, ಎಂದು ರಾಯಕರ ತನ್ನ ವ್ಯಾಪಾರಿ ಭಾಷೆ ಶುರುಮಾಡಿದ. +ಯಶವಂತ ತನ್ನ ಹಿಡಿರ ಸಡಲಿಸದೇ ‘ನಿನ್ನ ಅಂಗಡಿಯಲ್ಲಿ ಬೆಲೆ ನೋಡದೇ ವ್ಯಾಪಾರ ಮಾಡಿದರೆ ದಿವಾಳಿ ಎದ್ದ ಹಾಗೇ’ ಅಂದ. +ಗಾಜಿನ ಬಾಗಿಲುಗಳಿದ್ದ ಕಟ್ಟಿಗೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಿಟ್ಟ ಬಟ್ಟೆಗಳು. ಹೊಸ ಬಟ್ಟೇ ಸುತ್ತಿ ಬಂದ ಉರುಟಾದ ಕಟ್ಟಿಗೆಯ ಕೋಲುಗಳನ್ನು, ಎರಡು ಕಪಾಟುಗಳ ನಡುವಿನ ಸಂದಿಯಲ್ಲಿ ಒಟ್ಟಿ ಇಡಲಾಗಿತ್ತು. ಆಯತಾಕಾರದ ರಟ್ಟುಗಳನ್ನು ಒಂದು ಮೂಲೆಯಲ್ಲಿ ಪೇರಿಸಿಟ್ಟಿದ್ದರು. ಹೊಸಬಟ್ಟೆಯ ವಾಸನೆ, ಸೀರೆಯ ಮಡಿಕೆ ಬಿಚ್ಚುವಾಗ ಅದರೊಳಗಿನ ತೆಳ್ಳನೆಯ ಪೇಪರು ಬಟ್ಟೆಗೆ ಸವರುವ ಸದ್ದು, ನೂರಾರು ವಿನ್ಯಾಸಗಳು, ಬಣ್ಣಗಳು – ಈ ಎಲ್ಲದರ ನಡುವೆ ಜವಳಿ ಪಟ್ಟಿಯನ್ನು ಎದುರಿಗಿಟ್ಟುಕೊಂಡು ಆಯ್ಕೆಯ ಚರ್ಚೆ ಶುರುವಾಯಿತು. ಮದುವಣಗಿತ್ತಿಯದು ಮುಗಿಯಲಿ ಎಂದು ಸುನಂದೆಯ ಸೀರೆಗಳನ್ನು ಮೊದಲು ಆರಿಸಲಾಯಿತು. ‘ಯಾವುದಾದರೂ ತಗೋ’ ಎಂದು ಯಶವಂತ ಪದೇ ಪದೇ ಹೇಳಿದರೂ ಅಪ್ಪನಿಗೆ ಭಾರವಾಗಬಹುದೆನ್ನುವ ಆತಂಕ ಮತ್ತು ತನ್ನ ಜೀವನದಲ್ಲಿ ಈ ಸಂಭ್ರಮ ಒಂದು ಬಾರಿ ಮಾತ್ರ ಎನ್ನುವ ಅರಿವಿನಿಂದ ಹುಟ್ಟಿದ ದ್ವಂದ್ವವನ್ನು ಮೀರಲು ಅವಳಿಗೆ ತುಸು ಹೊತ್ತು ಹಿಡಿಯಿತು. ತನ್ನೆಲ್ಲ ಸೀರೆಗಳನ್ನು ಅವಳೇ ಆರಿಸಿದಳು. ಮನೋಹರನ ಅಭಿಪ್ರಾಯ ಕೇಳಿದಾಗ ಅವನು ಕೊಟ್ಟ ಸಲಹೆಗಳಿಂದ ಖುಷಿಪಟ್ಟಳು. ಉಳಿದ ಸೀರೆ ಪಂಚೆ ಶರ್ಟಿನ ಬಟ್ಟೆಗಳು ಅಂತ ಮುಂದಿನ ಖರೀದಿ ಶುರುವಾಯಿತು. ಈ ನಡುವೆ ಚಹಾ ಚೂಡಾ ಬಂತು. +ಎಲ್ಲವೂ ಮುಗಿಯುವ ವೇಳೆಗೆ ಸಂಜೆಯಾಯಿತು. ಇನ್ನೇನು ರಾಯಕರನಿಗೆ ಹೇಳಿ ಲೆಕ್ಕ ಮಾಡಿಸಬೇಕು ಅನ್ನುವ ಹೊತ್ತಿಗೆ ಯಶವಂತ ಎರಡು ಸಾವಿರದ ಸೀರೆಯ ಗುಂಪಿನಿಂದ ಒಂದನ್ನು ಎತ್ತಿ ಪಕ್ಕದಲ್ಲಿ ತಾವು ಕೊಂಡ ಸೀರೆಗಳ ಜೊತೆ ಇಟ್ಟ. ಪಟ್ಟಿಯಲ್ಲಿದ್ದ ಎಲ್ಲರಿಗೂ ಕೊಂಡುಕೊಂಡಾಗಿತ್ತು. ಆ ಬೆಲೆಯ ಸೀರೆ ಯಶೋದೆಗೆ ಮತ್ತು ಸುನಂದಗಲ್ಲದೇ ಬೇರೆ ಯಾರಿಗೂ ತೆಗೆದಿರಲಿಲ್ಲ. ಅರೆ ಯಾರನ್ನಾದರೂ ಮರೆತೆವೋ, ಮಗಳಿಗೆ ಇನ್ನೊಂದು ಇರಲಿ ಎಂದು ತೆಗೆದಿಟ್ಟನೋ ಎಂದೆಲ್ಲ ಸುನಂದೆಯೂ ಯಶೋದೆಯೂ ಯೋಚಿಸಿದರು. ಯಶವಂತ ಯಾರಿಗೆ ಅಂತ ಹೇಳಲೂ ಇಲ್ಲ. +ಯಶೋದೆ ‘ಇದ್ಯಾಕೆ ಇನ್ನೊಂದು?’ ಅಂದಳು. +‘ಚಂಪಾಗೆ’ ಎಂದು ಯಶವಂತ ಹೇಳಿದ್ದೇ ಥಟ್ಟನೆ ಒಂದು ಕ್ಷಣ ಮೌನ ಆವರಿಸಿತು. ಮರುಕ್ಷಣವೇ ಯಶೋದೆ ಸ್ಫೋಟಿಸಿದಳು. ಆರಿಸಿ ತನ್ನೆದುರಿಗೆ ಪೇರಿಸಿಟ್ಟ ಸೀರೆಗಳ ರಾಶಿಯನ್ನು ಧಡಾರನೆ ನೂಕಿದಳು. +‘ನಾನು ಯಾಕೆ? ಆ ಭೋಸುಡಿಯೇ ನಿಮ್ಮ ಜೊತೆ ಧಾರೆಗೆ ಕೂಡಲಿ…. ಎಲ್ಲರ ಎದುರಿಗೆ ನಮ್ಮ ಮಾನ ಮೂರು ಕಾಸಾಗಲಿ’ ಎಂದು ಹೇಳುತ್ತ ಹೇಳುತ್ತ ಯಾವುದನ್ನು ಎಷ್ಟು ಹೇಳಬೇಕು ಎಂಬ ಪರಿಜ್ಞಾನ ತಪ್ಪಿ ಹೋದವಳ ಹಾಗೆ, ಗಂಡನಿಂದಾದ ಈ ವಂಚನೆಯನ್ನು, ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದವಳ ಹಾಗೆ ತನ್ನಿಂದ ಶಕ್ಯವಿರುವ ಅತ್ಯಂತ ಕಟುವಾದ ಮಾತುಗಳಿಂದ ಚಂಪಾಳನ್ನು ಬಯ್ಯತೊಡಗಿದಳು. ಭೋಸುಡಿ ರಂಡೆ ಮುಂಡೆ ಸೂಳೆ ಎಂದು ಏನು ಹೇಳಿದರೂ ಯಶವಂತನನ್ನು ಕೆರಳಿಸಲಾಗದೇ ಹತಾಶಳಾಗಿ ದೊಡ್ಡ ದನಿ ತೆಗೆದು ಅಳಲಾರಂಭಿಸಿದಳು. ಇವರ ಮಾತುಗಳನ್ನು ಕೇಳಿಸಿಕೊಂಡಿರದ ಅಂಗಡಿಯ ಆಳು, ಕ್ಷಣಾರ್ಧದಲ್ಲಿ ಬದಲಾದ ಈ ಸನ್ನಿವೇಶದಿಂದ ಗಾಬರಿಯಾಗಿ, ಸೀರೆಗಳನ್ನು ಮತ್ತೆ ಜೋಡಿಸಬೇಕೋ ಇಲ್ಲವೋ ತಿಳಿಯದೇ ಯಜಮಾನರನ್ನು ಕರೆಯಲು ಹೊರಗೋಡಿದ. ಹೊರಗೆ ಅಂಗಡಿಯಲ್ಲಿದ್ದ ನಾಲ್ಕೈದು ಗಿರಾಕಿಗಳು ಏನು ಅನಾಹುತವಾಯಿತೆಂದು ತಿಳಿಯದೇ, ಸಹಾಯಕ್ಕೆ ಧಾವಿಸಬೇಕೇ ಬೇಡವೋ ಗೊತ್ತಾಗದೇ, ಸಂದಿಗ್ಧದಲ್ಲಿ ಕೋಣೆಯ ಬಾಗಿಲಿನಿಂದ ಇಣುಕತೊಡಗಿದರು. ‘ಏನಿಲ್ಲ… ನಮ್ಮ ನಮ್ಮೊಳಗಿನ ಮಾತು…’ ಎಂದು ಯಶವಂತ ಅವರನ್ನು ಹೊರಗೆ ಕಳಿಸಿ ಬಾಗಿಲು ಅಡ್ಡ ಮಾಡಿದ. ಅಷ್ಟರಲ್ಲಿ ಯಶೋದೆ ಆಣೆ ಪ್ರಮಾಣ ಮಾಡತೊಡಗಿದ್ದಳು. ಮದುವೆಗೇನಾದರೂ ಚಂಪಾ ಬಂದರೆ ನೇಣು ಹಾಕಿಕೊಂಡು ಬಿಡುತ್ತೇನೆಂದಳು. ಸುತ್ತಲೂ ಇದ್ದ ಕಪಾಟುಗಳ ಗಾಜಿನ ಬಾಗಿಲುಗಳಲ್ಲಿ ಕೂತವರೆಲ್ಲಾ ತುಂಡುತುಂಡಾಗಿ ಪ್ರತಿಫಲಿಸುತ್ತಿದ್ದರು. ಎದುರು ಗೋಡೆಗೆ ಒರಗಿಸಿಟ್ಟ ದೊಡ್ಡ ಕನ್ನಡಿಯಲ್ಲಿ ಕೊಂಚ ಸೊಟ್ಟಾಗಿ ಕಾಣುವ ಎಲ್ಲರ ಮುಖಗಳನ್ನು, ಯಶೋದೆಯ ಇದ್ವೇಗಭರಿತ ಹಾವಭಾವಗಳನ್ನು ಕಂಡಾಗ ತನಗೆ ಸಂಬಂಧಪಡದ ಯಾವುದೋ ಚಲನಚಿತ್ರವನ್ನು ನೋಡುತ್ತಿರುವಂತೆ ಮನೋಹರನಿಗೆ ಭಾಸವಾಯಿತು. +ಯಶವಂತ ಈ ರಂಪದಿಂದ ವಿಚಲಿತನಾಗಲಿಲ್ಲ. ಈ ನಿರ್ಧಾರವನ್ನು ಅವನು ಯಾವಾಗಲೋ ಮಾಡಿದಂತಿತ್ತು. ಯಶೋದೆ ಅತ್ತು ಸಮಾಧಾನ ಮಾಡಿಕೊಳ್ಳಲಿ ಎಂದು ಕಾಯುವಂತೆ ದಿಂಬಿಗೊರಗಿ ಕೂತುಬಿಟ್ಟ. ಯಶವಂತ ಮತ್ತು ಚಂಪಾಳ ಸಂಬಂಧ ಇಡೀ ಊರಿಗೆ ಗೊತ್ತಿರುವ ಗುಟ್ಟಾದರೂ, ಈಗ ಅದನ್ನು ಈ ರೀತಿ ಪ್ರಕಟಿಸುವ ಅಗತ್ಯವೇನೆಂದು ಯಾರಿಗೂ ಅರ್ಥವಾಗಲಿಲ್ಲ. ಯಶೋದೆ ಮತ್ತು ಸುನಂದೆಗೆ ಎದೆಲ್ಲ ಹೊಸ ಸಂಗತಿಯಲ್ಲದಿದ್ದರೂ, ಹೀಗೆ ಅದನ್ನು ಸ್ವೀಕರಿಸಲು ಅವರು ಸಿದ್ದರಾಗಿರಲಿಲ್ಲ. +ಸುನಂದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ನೋಡಿ ಮನೋಹರನಿಗೆ ಪಿಚ್ಚೆನಿಸಿತು. ಅವಳ ಮದುವೆ ಯಾವಾಗಲೋ ಆಗಬೇಕಿತ್ತು. ಯಶವಂತ – ಚಂಪಾಳ ಪ್ರಕರಣದಿಂದಲೇ ಅವಳಿಗೆ ಬಂದ ಸಂಬಂಧಗಳೆಲ್ಲ ಮೊದಲ ಹಂತವನ್ನೇ ದಾಟುತ್ತಿರಲಿಲ್ಲ. ಅದಕ್ಕೆ ಕಾರಣ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಅದು ಏನೆಂಬುದು ಎಲ್ಲರಿಗೂ ಗೊತ್ತಿತ್ತು. ಹೇಗೆ ಈ ಸಂಬಂಧ ಒಂದು ಮಾಯೆಯಂತೆ ಕೂಡಿಬಂತು ಎಂದು ಯಶೋದೆ ಪದೇಪದೇ ವಿವರಿಸುವಾಗ ಈ ಎಲ್ಲವನ್ನೂ ನಿರಾಕರಿಸಲು, ಮುಚ್ಚಿಡಲು ಬಯಸುತ್ತಿದ್ದಾಳೆಂಬುದು ಮನೋಹರನಿಗೆ ಗೊತ್ತಾಗಿತ್ತು. ಈಗ ಈ ಸೀರೆಯ ಸಂಗತಿ ಹೊರಗೆ ಗೊತ್ತಾದರೆ ಮತ್ತೆ ಕೊನೆಯ ಗಳಿಗೆಯಲ್ಲಿ ಏನಾದರೂ ಸಮಸ್ಯೆಯಾದರೂ ಆದೀತು ಎಂದು ಆತಂಕ ಅವಳಲ್ಲಿದ್ದಂತಿತ್ತು. +‘ಏನೂ ಅಗುವುದಿಲ್ಲ…. ಅವಳು ಊರಿನ ಎಲ್ಲರ ಹಾಗೆ ಮದುವೆಗೆ ಬಂದು ಹೋಗುತ್ತಾಳೆ’ ಎಂದು ಮನೋಹರ ಯಶೋದೆಗೆ ಸಮಾಧಾನ ಹೇಳಿದ. +‘ಅಯ್ಯೋ.. ಯಾರ ಮನೆಯ ಮದುವೆಗಾದರೂ ಅವಳನ್ನು ಕರೆಯುತ್ತಾರೇನೇ… ಇದುವರೆಗೂ ಯಾವ ಮದುವೆಗೂ ಅವಳನ್ನು ಕರೆದದ್ದಿಲ್ಲ… ಅವಳು ಹೋದದ್ದಿಲ್ಲ… ಅವಲಕ್ಷಣವನ್ನು, ಅಪಶಕುನವನ್ನು ಬಾ ಎಂದು ಯಾವ ಬಾಯಲ್ಲಿ ಹೇಳಲಿ?’ ಅವಳ ಪ್ರಲಾಪ ಒಂದೇ ಸಮನೆ ಮುಂದುವರೆಯಿತು. ಈ ಸೀರೆಯನ್ನು ಆಯ್ಕೆ ಮಾಡುವ ಮೂಲಕ ಚಂಪಾಗೆ ಯಶವಂತ ಕೊಡಮಾಡಿದ ಸ್ಥಾನಮಾನವೇ ಅವಳಿಗೆ ಭರಿಸಲಾಗದ ದುಃಖ ಕೊಟ್ಟಿತ್ತು. ಅವಳಿಗೆ ಸೀರೆಯನ್ನೇ ಕೊಡಬೇಕೆಂದಿದ್ದರೆ ಅವನಿಗೆ ಬೇಕಾದಾಗ ಕೊಡಬಹುದಿತ್ತು. ಅದನ್ನು ಪ್ರತ್ಯೇಕವಾಗಿ ಅವನೇ ಬಂದು ಕೊಳ್ಳಬಹುದಿತ್ತು. ಇದು ಬರಿ ಸೀರೆಯ ಪ್ರಶ್ನೆ ಅಲ್ಲವೆಂದು ಅವಳಿಗೂ ಗೊತ್ತಿತ್ತು. +ಯಶವಂತ ಮಾತ್ರ ಗಟ್ಟಿಯಾಗಿ ನಿಂತಿದ್ದರಿಂದ ಯಶೋದೆಯ ಯಾವ ಅಸ್ತ್ರಗಳೂ ನಾಟಲಿಲ್ಲ. ತನ್ನ ನಿರ್ಧಾರ ಹೇಳಿ ಆಗಿದೆ ಎಂಬಂತೆ ಅವನು ದಿಂಬಿಗೊರಗಿ ಕೂತುಬಿಟ್ಟಿದ್ದ. ಅವನು ಯಶೋದೆಯನ್ನು ಸಮಾಧಾನಪಡಿಸಲು ಹೋಗಲೂ ಇಲ್ಲ. ಅವಳು ಮದುವೆಗೆ ಬರುವಳೋ ಇಲ್ಲವೋ ಎಂಬುದನ್ನು ಆಮೇಲೆ ಬಗೆಹರಿಸೋಣವೆಂದು ಯಶವಂತನಿಗೆ ಕೇಳುವ ಹಾಗೆಯೇ ಹೇಳಿ, ಅವಳನ್ನು ಸಮಾಧಾನಪಡಿಸಿ, ಜವಳಿಯ ಅಂಕ ಮುಗಿಸಬೇಕಾದರೆ ಮನೋಹರನಿಗೆ ಸಾಕುಸಾಕಾಗಿತ್ತು. ಅತ್ತು ಮುಖ ಬಾಡಿದ್ದು ಗೊತ್ತಾಗದಿರಲಿ ಎಂದು ತಾಯಿ ಮಗಳು ಪ್ರಯತ್ನಿಸಿದಷ್ಟೂ ಅದು ಢಾಳಾಗಿ ಎದ್ದು ಕಾಣುತ್ತಿತ್ತು. +ಋಣಾನುಬಂಧ +ಮದುವೆ ಸಡಗರದ ಮನೆಗೆ ಮನೋಹರ ಬಂದು ತಲುಪಿದಾಗ ಬೆಳಗಿನ ಹನ್ನೊಂದರ ಸಮಯ. ಮದುವೆಗಿನ್ನೂ ಮೂರು ದಿನಗಳಿದ್ದರೂ ಅಲ್ಲಿ ಆಗಲೇ ಮದುವೆ ಮನೆಯ ಕಳೆಯೇರಿತ್ತು. ಹೊರಗೆ ಅಂಗಳ ಸಾರಿಸಿ ದೊಡ್ದ ಚಪ್ಪರ ಹಾಕಿದ್ದರು. ಅವತ್ತೇ ಕಟ್ಟಿದ್ದೆಂದು ಗೊತ್ತಾಗುವಷ್ಟು ಮಾವಿನ ತೋರಣ ನಳನಳಿಸುತ್ತಿತ್ತು. ತುಳಸಿಲಗ್ನದ ಅಲಂಕಾರದ ಕುರುಹುಗಳಿನ್ನೂ ತುಳಸಿಕಟ್ಟೆಯ ಮೇಲಿದ್ದವು. ಎಷ್ಟೋವರ್ಷಗಳ ನಂತರ ಮನೆಯ ಗೋದೆಗಳು, ಕಿಟಕಿ ಬಾಗಿಲುಗಳಿಗೆಲ್ಲ ಹೊಸ ಬಣ್ಣ ಹಚ್ಚಿದ್ದರು. ಮನೆ ತುಂಬ ಜನ. ಮಕ್ಕಳ ಗಲಾಟೆ. ಎಲ್ಲಾ ಕೋಣೆಗಳಲ್ಲೂ ಬಂದವರ ನಾನಾ ಸಾಮಾನುಗಳು ಹರಡಿದ್ದವು. ಬಾಯಿ ಅರೆತೆರೆದ ಬ್ಯಾಗುಗಳಿಂದ ಹೊರಚಾಚಿದ ಬಟ್ಟೆಗಳು. ಕೆಂಪು ಕಾಗದದಲ್ಲಿ ಸುತ್ತಿ ಮದುವೆಗೆಂದು ತಂದ ಉಡುಗೊರೆಗಳು. ಅರ್ಧ ಮಡಚಿಟ್ಟ ಭಾರವಾದ ಜಮಖಾನೆಗಳು. ಹೂವಿನ ಘಮಘಮ. ವಿನಾಕಾರಣ ನಾಚುತ್ತ ಓಡಾಡುವ ಹುಡುಗಿಯರು. ಸ್ನಾನ ಮುಗಿಸಿಕೊಳ್ಳಿರೋ ಎಂದು ಬೆಳಗಿನಿಂದ ಕೂತಲ್ಲೇ ಕಿರಿಕಿರಿ ಮಾಡುವ ಶಾಲತ್ತೆ. ಈ ಎಲ್ಲ ಅವ್ಯವಸ್ಥೆಯಲ್ಲೊಂದು ಸಂಭ್ರಮವಿತ್ತು. ಇಂಥ ಗದ್ದಲದ ನಡುವೆಯೂ ಹೆಂಗಸರು ತಮ್ಮ ಗಂಡಂದಿರ ತಿಂಡಿಯಾಯಿತೋ, ಸ್ನಾನಕ್ಕೆ ಬಿಸಿ ನೀರು ಇತ್ತೋ, ಮಗನಿಗೆ ಹಾಲು ಆಯಿತೋ ಎಂದೆಲ್ಲ ಸೂಕ್ಷ್ಮವಾಗಿ ಸ್ವಕುಟುಂಬ ಚಿಂತನೆ ಮಾಡುತ್ತಿದ್ದರು. ಕೈಗೆ ಮದರಂಗಿ ಹಚ್ಚಿಕೊಂಡ ಹುಡುಗಿಯರ ಗುಂಪೊಂದು ಸೆರೆಸಿಕ್ಕ ಸೈನಿಕರ ಹಾಗೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ಓಡಾಡುತ್ತಿತ್ತು. ಹೊರಗೆ ಚಪ್ಪರದ ಮೂಲೆಯಲ್ಲಿ ಇಸ್ಪೀಟಾಟದ ಟೋಳಿ ನಾನಾ ರೀತಿಯ ಅಟ್ಟಹಾಸ ಮಾಡುತ್ತಿತ್ತು. ‘ತುರುಫಿನ ಎಕ್ಕಾ ನನ್ನದು…. ತುರುಫಿನ ಎಕ್ಕಾ’ ಎಂದು ಯಾರೋ ಕೂಗಾಡುತ್ತಿದ್ದರು. ಎಲ್ಲವನ್ನೂ ಪಣಕ್ಕೆ ಇಟ್ಟವರಂತೆ ಆತಂಕದ ಮುಖದಲ್ಲಿ ಮುಂದಿನ ಎಲೆಯನ್ನು ನಿರೀಕ್ಷಿಸುತ್ತ ಗುಂಪು ಅದರಲ್ಲೇ ಮಗ್ನವಾಗಿತ್ತು. +‘ಈ ಸಲ ಜೋರಾಗಿದೆಯಲ್ಲ ಇಸ್ಪೀಟಿನ ಟೋಳಿ’ ಎಂದ ಮನೋಹರ. +‘ನಮ್ಮ ಪಾಂಡು ಭಾವಯ್ಯ ಇದ್ದ ಮೇಲೆ ಜಬರದಸ್ತಾಗಲೇಬೇಕಲ್ಲ…. ಆಡಿದ್ದಾರೆ ನಿನ್ನೆ ರಾತ್ರಿ ಎರಡರವರೆಗೂ…’ ಎಂದು ಅಭಿಮಾನದಿಂದ ಯಶವಂತ ಹೇಳಿದ. ಅದು ಕಿವಿಗೆ ಬಿದ್ದಿತೋ ಎಂಬಂತೆ ಪಾಂಡುಭಾವ ಮನೋಹರನನ್ನು ನೋಡಿ ಆಟಕ್ಕೆ ಕೂತಲ್ಲಿಂದಲೇ ಕೈಯೆತ್ತಿ ಸ್ವಾಗತಿಸಿದರು. ಮನೋಹರ ಬಂದಿದ್ದು ಯಶವಂತನಿಗೆ ಬಹಳ ಖುಷಿಯಾಗಿತ್ತು. ಯಶವಂತ ಅವನನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದ ಹಾಗೆ ಶಾಲತ್ತೆ ಅಡ್ಡಗಟ್ಟಿದಳು. ಅವಳೊಂದು ಕಡೆ ಕೂತು ತನ್ನ ಎದುರು ಯಾವುದೇ ಅಪರಿಚಿತ ಮುಖ ಹಾದರೂ ನಿಲ್ಲಿಸಿ ‘ನೀನು ಯಾರ ಮಗ? ಯಾರ ಮಗಳು?’ ಎಂದು ವಿಚಾರಿಸಿ ಮುಂದಿನ ಪೀಳಿಗೆಯ ಮುಖಪರಿಚಯ ಮಾಡಿಕೊಳ್ಳುವಳು. ಮನೋಹರನನ್ನೂ ನಿಲ್ಲಿಸಿ ‘ಯಾರೋ ನೋಡ್ತೆ’ ಅಂದಳು. +‘ನಮ್ಮ ಮನೋಹರ…. ನಮ್ಮ ದೇವಣ್ಣನ ಮಗ…’ ಎಂದು ಯಶವಂತ ಹೇಳಿದ. +‘ಚಲೋದಾಯ್ತು… ಸರೀ ತಯಾರಿಗೆ ಬಂದು ತಲುಪಿದ. ಮನೆತನದ ಹುಡುಗ ಅಂದ ಮೇಲೆ ಜವಾಬ್ದಾರಿ ಅವನ್ದೇ ಅಲ್ವೇ…. ತಂಗಿ ಮದುವೆಗೆ ಅಂವ ಅಲ್ದೇ ಯಾರು ಮಾಡಬೇಕು ತಯಾರಿ…’ ಎಂದವಳು ಮುಂದೆ ಹೋಗಲು ಬಿಟ್ಟಳು. +ಮನೋಹರನ ಬ್ಯಾಗನ್ನು ಅಟ್ಟದ ಮೇಲಿನ ಯಶವಂತನ ಕೋಣೆಯಲ್ಲಿ ಇರಿಸಲಾಯಿತು. ಬಚ್ಚಲು ಖಾಲಿ ಇದೆ ಎಂದು ಯಾರೋ ಅಂದದ್ದು ಕೇಳಿಸಿ ಸೀದಾ ಅವನನ್ನು ಸ್ನಾನಕ್ಕೆ ಕಳಿಸಿದರು. ಮದುವೆ ಮನೆಯಲ್ಲಿ ಅಪರೂಪವಾದ ಒಣಗಿದ ಟವಲ್ಲನ್ನು ಯಾರೋ ಹುಡುಗ ತಂದು ಕೊಟ್ಟ. ಸ್ನಾನ ಮುಗಿಸಿ ಬಂದವನನ್ನು ಗಂಜಿ ಊಟಕ್ಕೆ ಕೂರಿಸಿದರು. ಎಲ್ಲೋ ಹಿತ್ತಿಲಲ್ಲಿದ್ದ ಯಶೋದೆ ಒಳಬರುವ ಮುಂಚೆ ಕೆಲಸದ ಆಯುವಿಗೆ ಹೇಳುತ್ತಿದ್ದ ಮಾತುಗಳು ಕೇಳಿಸಿದವು. +‘ಅಂವ ಬಂದೇ ಬರ್‍ತಾನೆ ಅಂತ ನಾ ಹೇಳಿದ್ದೆ. ಇವರು ಆಗೂದಿಲ್ಲವೇ, ಅವನಿಗೆ ರಜೆ ಸಿಗಬೇಕಲ್ಲ… ಮದ್ವೆಗೂ ಬರ್‍ತಾನೋ ಇಲ್ಲವೋ…. ಇಷ್ಟು ಅವಸರದಲ್ಲಿ ಮುಹೂರ್ತ ಇಟ್ಟರೆ ಎಲ್ಲರಿಗೂ ಬರ್‍ಲಿಕ್ಕೆ ಆಗಬೇಕಲ್ಲ ಅಂದರು… ನಾನು ಹೇಳಿದ ಹಾಗೇ ಆಯ್ತು…. ಎಲ್ಲಿ ಅಂವ?’ +ವರ್ಷಗಟ್ಟಲೇ ಪ್ರಯತ್ನಿಸಿದರೂ ಎಲ್ಲೆಲ್ಲೂ ಕೂಡಿ ಬರದ ಮಗಳ ಮದುವೆಯ ಗಳಿಗೆ ಈಗ ಸನ್ನಹಿತವಾಗಿದೆಯೆನ್ನುವ ಉತ್ಸಾಹ ಅವಳ ಪ್ರತಿ ಮಾತಿನಲ್ಲಿ, ವಿನಾಕಾರಣ ಚಲನೆಗಳಲ್ಲಿ ವ್ಯಕ್ತವಾಗುತ್ತಿತ್ತು. +‘ನಾನು ಬರದೇ ಇರುತ್ತೇನೆಯೇ ಚಿಕ್ಕಮ್ಮ… ಎಲ್ಲಿ ಸುನಂದೆ?’ ಎಂದು ಮನೋಹರ ಕೇಳಿದ. +‘ಇದ್ದಾಳೆ ಇದ್ದಾಳೆ… ಇಲ್ಲೇ ಶಂಭು ಮನೆಗೆ ಹೂ ಕಟ್ಟುವ ನಾರು ತರಲಿಕ್ಕೆ ಹೋಗಿದ್ದಾಳೆ… ಒಂದು ರಾಶಿ ಆಬೋಲಿ ಬಿದ್ದಿದೆ ಮನೆಯಲ್ಲಿ… ಕೂತಲ್ಲೇ ಒಂದೊಂದು ಮಾಲೆ ಕಟ್ಟಿ ಹಾಕಿದರೆ ನಾಳೆ ಬರುವವರಿಗೆ ಒಂದೊಂದು ತುಂಡಾದರೂ ಮುಡಿಗೆ ಅಂತ ಕೊಡಬಹುದಲ್ಲ…. ನಾಳೆ ದೇವಕಾರ್ಯ; ಸತ್ಯನಾರಾಯಣ ಪೂಜೆ… ಬೀಗರ ಕಡೆಯಿಂದ ಸುಮಾರು ಜನ ಬಂದರೂ ಬರಬಹುದು….’ +‘ಅಡಿಗೆಯವರು ಯಾರು?’ +‘ಹಳದೀಪುರದ ಬಾಬಟಿಯನ್ನು ಕರೆಸಿದ್ದೇವೆ. ಸದ್ಯ ಇಂಥಾ ಅವಸದಲ್ಲೂ ಅವನು ಸಿಕ್ಕ…. ಈವತ್ತಿನವರೆಗೆ ಮಾತ್ರ ಈ ಗಂಜಿ ಊಟ…. ಆಮೇಲೆ ಜನ ಜಾಸ್ತಿಯಾದ ನಂತರ ಇದೆಲ್ಲ ಎಲ್ಲಿ ಆಗುತ್ತದೆ? ಗಂಜಿ ನಾವೇ ಮಾಡಬೇಕು ಒಳಗಡೆ…. ಗಂಜಿಗಿಡುವುದು ಅಂದರೆ ಬಾಬುಟಿ ತನ್ನ ಅಂತಸ್ತಿಗೆ ಕಡಿಮೆ ಎಂದು ತಿಳಿಯುತ್ತಾನೆ….’ +ಮನೋಹರನಿಗೆ ಬಸಳೇ ಪಲ್ಯ ಬಡಿಸುತ್ತ, ಉಪ್ಪಿನಕಾಯಿ ಹಾಕುತ್ತ, ಗಂಜಿ ಹಾಕಲೇ ಎಂದು ಎರಡೆರದು ಬಾರಿ ಕೇಳುತ್ತ ಯಶೋದೆ, ಸುನಂದೆಯ ಮದುವೆ ಕೂಡಿ ಬಂದ ಬಗ್ಗೆ’ ಅವಳನ್ನು ಮದುವೆಯಾಗುವ ಹುಡುಗನ ಬಗ್ಗೆ ಹೇಳತೊಡಗಿದಳು. ಅವನಿಗೆ ಸಿರ್ಸಿಯ ಅರ್ಬನ್ ಬ್ಯಾಂಕಿನಲ್ಲಿ ಕೆಲಸವಂತೆ. ಬಿಕಾಂ ಮಾಡಿದ್ದಾನಂತೆ. ಹುಡುಗನ ಅಮ್ಮ ಯಶೋದೆಯ ತವರಿನ ಕಡೆಯಿಂದ ದೂರದ ಸಂಬಂಧವೇ ಆಗಬೇಕಂತೆ… ‘ಸಂಬಂಧ ಅಂದರೆ ಇಟ್ಟುಕೊಂಡರೆ ಮಾತ್ರ ಇರುವುದಿಲ್ಲವೇ?’ ಎಂದೂ ಅಂದಳು. ಒಬ್ಬನೇ ಮಗನಂತೆ. ತಂದೆಯಿಲ್ಲದ ಹುಡೂಗನನ್ನು ತಾಯಿಯೇ ಬೆಳೆಸಿದಳಂತೆ. +‘ಅಲ್ಲ ಈ ಋಣಾನುಬಂಧ ನೋಡು…. ಇಲ್ಲವಾದರೆ ಎಲ್ಲೆಲ್ಲೂ ಅವಳಿಗೆ ಜಾತಕ ಕೂಡಿ ಬರದೇ ಇದ್ದುದು, ಕೂದಿ ಬಂದವರಿಗೆ ಹುಡುಗಿ ಪಾಸಾಗದೇ ಇರುವುದು, ಎಲ್ಲಾ ಆದ ಕಡೆ ಅವರು ಮೊಸರಲ್ಲಿ ಕಲ್ಲು ಹುಡುಕುವುದು ಇದೆಲ್ಲ ಇಷ್ಟು ವರ್ಷ ನಡೆದರೂ ಈ ಹುಡುಗ ಕಣ್ಣೆದುರೇ ಇದ್ದಾನೆ, ಅವನಿಗೆ ಎಲ್ಲೂ ಕೂಡಿ ಬರುತ್ತಿಲ್ಲ ಎಂದು ಆ ಶಾಮಣ್ಣ ಹೇಳುವವರೆಗೂ ನಮಗೆ ಹೊಳೆದೇ ಇರಲಿಲ್ಲ…. ಇದು ಇಲ್ಲೇ ಆಗಲಿ ಎಂದು ಇಷ್ಟು ವರ್ಷ ಇವಳಿಗೆ ಎಲ್ಲೂ ಆಗಲಿಲ್ಲವೋ ಯಾರಿಗೆ ಗೊತ್ತು?…. ಹೇಳಿದರೆ ಯಾರೂ ನಂಬುವುದಿಲ್ಲ. ಅಷ್ಟು ಸರಸರ ಅಂತ ಎಲ್ಲ ಎಂಟೇ ದಿವಸಗಳಲ್ಲಿ ನಡೆದುಹೋಯಿತು ನೋಡು…. ಅವನು ಬಂದದ್ದು, ಹುಡುಗಿ ನೋಡಿ ಅಂತ ಕಾಲಲ್ಲೇ ಪಾಸು ಮಾಡಿದ್ದು, ಇವರು ಜಯವಂತ ದೇಸಾಯಿಯವರನ್ನು ಕರೆದುಕೊಂಡು ಮಾತಾಡಲು ಹೋದವರು ಸಕ್ಕರೆ ತಿಂದೇ ಬಂದಿದ್ದು…. ಎಲ್ಲ ಎಂಟೇ ದಿವಸಗಳಲ್ಲಿ ಆಗಿಹೋಯಿತು….’ +‘ಅವನ ಹೆಸರನ್ನೇ ಹೇಳಲಿಲ್ಲವಲ್ಲ ಚಿಕ್ಕಮ್ಮ’ ಎಂದು ಮನೋಹರ ತುಸು ರೇಗಿಸುವ ದನಿಯಲ್ಲಿ ಹೇಳಿದ. +‘ಗಣಪತಿ’ ಎಂದು ಅಳಿಯನ ಹೆಸರು ಹೇಳುವಾಗ ಅವಳೇ ತುಸು ನಾಚಿದಳು. +ಸುನಂದ ಬಂದೊಡನೆ ‘ಗಣಪ ಬಂದ, ಕಾಯಿಕಡುಬು ತಿಂದ’ ಎಂದು ಶುರುಮಾಡಿ, ಪ್ರಾಸಬದ್ದವಾಗಿ ಒಂದಕ್ಕೊಂದು ಸೇರಿಸಿ ಮುಂದುವರಿಸಿಕೊಂಡು ಹೋಗುತ್ತ ಹುಡುಗಿಯರು ಸುನಂದೆಯನ್ನು‌ಉ ಕಿಚಾಯಿಸಿದರು. ಎಲ್ಲವೂ ತನ್ನ ಮದುವೆಯ ನಿಮಿತ್ತವೆಂಬ ಅರಿವಿನಿಂದ ಹುಟ್ಟಿದ ಪ್ರಾಮುಖ್ಯತೆಯನ್ನು ಅವಳು ಆನಂದಿಸುತ್ತಿದ್ದಂತಿತ್ತು. ಕಣ್ಣಲ್ಲಿ ವಿಶೇಷ ಕಾಂತಿಯಿತ್ತು. ಮನೋಹರನಿಂದ ಕೆನ್ನೆ ಹಿಂಡಿಸಿಕೊಂಡು ಸುನಂದೆ ನಾಚಿದಳು. +ಮನೆಯ ಹಿಂಭಾಗದಲ್ಲಿ ಹಾಕಿದ್ದ ಅಡಿಗೆ ಚಪ್ಪರದಿಂದ ನಾನಾ ರೀತಿಯ ಸುವಾಸನೆಗಳು ಹೊಮ್ಮುತ್ತಿದ್ದವು. ಹೊಗೆ ಗಾಳಿಯ ದಿಕ್ಕಿಗೆ ಓಡುತ್ತಿತ್ತು. ಕೈತೊಳೆಯಲು ಹೋದಾಗ ಬಾಬುಟಿ ತನ್ನ ಬಗ್ಗೆ ಸಹಾಯಕರಿಗೆ ಹೇಳುವುದನ್ನು ಮನೋಹರ ಕೇಳಿಸಿಕೊಂಡ. ತರಕಾರಿ ಹೆಚ್ಚುತ್ತ, ಸಾರು ಕುದಿಸುತ್ತ ಎಲ್ಲಿಂದ ಎಲ್ಲಿಗೋ ಅವರ ಮಾತುಗಳು ಅಲೆಯುತ್ತಿದ್ದವು. ಮದುವೆ ಮನೆಗೆ ಆಹ್ವಾನಿಸದೇ ಬಂದು ಇಷ್ಟಿಷ್ಟು ತಿಂದು, ಕೆಲವೊಮ್ಮೆ ತಿಂದಿದ್ದು ಅತಿಯಾಗಿ ಕಾರಿಕೊಳ್ಳುವ ಗುಂಡಬಾಳೆ ವೆಂಕಟೇಶ ಬಂದರೂ ಬರಬಹುದೆಂದು ಮಾತಾಡಿಕೊಳ್ಳುತ್ತಿದ್ದರು. ಮಾರನೇ ದಿನ ದೇವಕಾರ್ಯಕ್ಕೆ ಬೀಗರ ಕಡೆಯಿಂದ ಯಾರು ಯಾರು ಬರಬಹುದೆನ್ನುವ ಬಗ್ಗೆ ಅಡಿಗೆ ಮೇಳದಲ್ಲಿ ಚರ್ಚೆ ಶುರುವಾಗುತ್ತಲಿತ್ತು. ಯಾರಾದರೂ ತುಂಬಿದ ಬಸುರಿಯರು ಇದ್ದಾರೋ ಹೇಗೆ ಎಂದು ಕೂಡ ಮಾತು ಹರಿಯಿತು. ಬಾಣಂತಿ ಸೂತಕ ತಗುಲದ ಹಾಗೆ ಒಂದು ಪೂಜೆ ಮಾಡಿ, ಮಂಗಲದೀಪ ಹಚ್ಚಿ ಇಟ್ಟರೆ ಅದರ ಬಾಧೆಯಿಲ್ಲವೆಂದು ಬಾಬುಟಿ ಅಧಿಕಾರ ವಾಣಿಯಿಂದ ಹೇಳುತ್ತಲಿದ್ದ. +ಮನೋಹರನ ಗಂಜಿ ಊಟ ಮುಗಿಯುವುದನ್ನೇ ಕಾಯುತ್ತಿದ್ದವನ ಹಾಗೆ ಯಶವಂತ ಬಂದು ‘ಬಾ…ಬಾ’ ಎಂದು ಅವನನ್ನು ಮಹಡಿಯ ಮೇಲಿನ ತನ್ನ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ಹೊಸ ಬಣ್ಣದ ವಾಸನೆಯಿತ್ತು. ಕಿಟಕಿಯಿಂದ ಕೆಳಗೆ ನೋಡಿದರೆ ಚಪ್ಪರದ ಮೇಲೆ ಒಣಗಲು ಹಾಕಿದ ಸಂಡಿಗೆಗಳು ಕಾಣಿಸುತ್ತಿದ್ದವು. +‘ಈ ಮದುವೆಯ ತಯಾರಿ ಸಾಕಾಗಿಹೋಯಿತು. ಊರ ಜನ ಆಯ್ತ ಸಮಯಕ್ಕೆ ಹೆಗಲು ಕೊಟ್ಟರು. ಇಲ್ಲವಾದರೆ ನನ್ನೊಬ್ಬನಿಂದ ಇದು ಆಗುವ ಮಾತಲ್ಲ ನೋಡು…. ಬೆಂಗಳೂರಿನಲ್ಲದರೆ ದುಡ್ಡು ಕೊಟ್ಟರೆ ಆಯಿತು, ಮದುವೆಯ ದಿನ ದಿಬ್ಬಣ ತಗೊಂಡು ಹೋಗಬಹುದು… ಇಲ್ಲಿ ಎಲ್ಲ ನಾವೇ ಮಾಡಬೇಕಲ್ಲ…’ +ಮಾತಾಡುತ್ತ ಯಶವಂತ ಚಾಪೆ ಹಾಕಿದ. ಹಾಸಿದ ಚಾಪೆಯ ಮೇಲೆ ಕೂತು ಉದ್ದನೆಯ ಖಾತಾಪುಸ್ತಕದಂಥ ಹಾಳೆಗಳನ್ನು ಬಿಚ್ಚತೊಡಗಿದ. ‘ಜವಳಿ ಪಟ್ಟಿ… ನೀನೊಂದು ಸಲ ನೋಡಿಬಿಡು…. ನಮ್ಮ ದೇವಣ್ಣನ ಬದಲಿಗೆ’ ಅಂದ. +ಈ ಜವಳಿ ಪಟ್ಟಿಯನ್ನು ನೋಡುವುದೆಂದರೆ ಅದರ ಜವಾಬ್ದಾರಿಯನ್ನು ಭಾಗಶಃ ಹೊತ್ತುಕೊಂಡ ಹಾಗೆ. ಮದುವೆಯ ತಯಾರಿಯ ಮುಖ್ಯ ಭಾಗಗಳಲ್ಲೊಂದಾದ ಇದನ್ನು ಯಾರು ಕೂತು ತಯಾರಿಸಬೇಕು ಅನ್ನುವದರಿಂದ ಮೊದಲಾಗಿ, ಯಾರಿಗೆ ಸೀರೆ, ಯಾರಿಗೆ ಪಂಚೆ, ಕುಟುಂಬಕ್ಕೆ ಯಾರು ಯಾರು ಸೇರಿದವರೆಂಬುದನ್ನು ವ್ಯಾಖ್ಯೈಸುವುದು ಹೇಗೆ – ಮದುವೆಯಾಗಿ ಹೋದ ಹುಡುಗಿಯರಲ್ಲಿ ಯಾರನ್ನು ಈ ವ್ಯಾಖ್ಯೈಯಲ್ಲಿ ಸೇರಿಸಬಹುದು, ಯಾರಿಗೆ ಕುಬಸದ ಖಣ, ಯಾರು ಅವರವರ ಮನೆಯ ಶುಭಕಾರ್ಯಗಳಿಗೆ ತಮಗೆ ಏನೇನು ಕೊಟ್ಟಿದ್ದರೆಂಬ ಋಣಭಾರ – ಎಲ್ಲವನ್ನೂ ಪರಿಗಣಿಸಿ ಮಾಡಬೇಕಾದ ಪಟ್ಟಿ. ಕುಟುಂಬಕ್ಕೆ ಯಾರು ಹತ್ತಿರ, ಎಷ್ಟು ಹತ್ತಿರ ಅನ್ನುವ ತರತಮ ಪ್ರಾಮುಖ್ಯವನ್ನು ಇದು ಬಿಂಬಿಸುತ್ತಿತ್ತು. +‘ಮುಂಬೈಯಿಂದ ರಾಯಕರನ ಮಾಲು ಬರಲೇ ಇಲ್ಲ. ಅದ್ಯಾವುದೋ ಮಿಲ್ಲಿನಲ್ಲಿ ಹರತಾಳ ನಡೆಯುತ್ತಿದೆಯಂತೆ. ಮಗನನ್ನು ಅಹಮದಾಬಾದಿಗೆ ಕಳಿಸಿ ಅಂತೂ ತರಿಸಿದ್ದಾನೆ. ಇಲ್ಲದಿದ್ದರೆ ಈವತ್ತು ಜವಳಿ ಖರೀದಿಗೆ ಹುಬ್ಬಳ್ಳಿಗೆ ಹೊರಡುವುದೆಂದೇ ಅಂದುಕೊಂಡಿದ್ದೆವು’. ಎಂದು ಹೇಳುತ್ತ ಯಶವಂತ ಮೂರು ಉದ್ದುದ್ದ ಹಾಳೆಗಳನ್ನು ಮನೋಹರನಿಗೆ ಕೊಟ್ಟ. ಅವುಗಳಲ್ಲಿ ಹೆಸರುಗಳಿದ್ದವು. ಅವುಗಳ ಮುಂದೆ ಏನೇನೋ ಶರಾಗಳಿದ್ದವು. ಯಶವಂತ ಅವುಗಳನ್ನು ವಿವರಿಸತೊಡಗಿದ. +‘ನಮ್ಮ ಗಂಗತ್ತೆಗೊಂದು ಸೀರೆ ಅಂತ ಆಯ್ತು… ಗಂಡ ಇಲ್ಲದಿದ್ದರೇನಾಯಿತು? ಜಾನಕಿ ನಮ್ಮ ಮನೆತನದೊಳಗೆ ಬಂದ ಹೆಣ್ಣಲ್ಲವೇ? ಅವಳ ತವರಿನ ಕಡೆಯವರಿಗೊಂದು ಮರ್ಯಾದೆ ಅಂತ ಏನಾದರೂ ಕೊಡಬೇಕಲ್ಲವೇ? ಆಮೇಲೆ ಹೆರವಟ್ಟೆಯ ಕಮಲಳಿಗೂ ಒಂದು ಸೀರೆ. ಅವಳ ಮಗನ ಮದುವೆಗೆ ಯಾರಿಗೆ ಕೊಡದಿದ್ದರೂ ಯಶೋದೆಗೊಂದು ಸೀರೆ ಕೊಟ್ಟಿದ್ದಳು… ಗೋಪಾಲನ ಹೆಂಡತಿಗೂ ಒಂದು. ಸಂಬಂಧದ ಪ್ರಕಾರ ಕೊಡಬೇಕಾಗಿಲ್ಲ; ಆದರೆ ಇಬ್ಬರ ಮಕ್ಕಳ ಮುಂಜಿಗೂ ಒಂದೊಂದು ಸೀರೆ ಕೊಟ್ಟಿದ್ದಾನೆ. ಒಬ್ಬಳೇ ಮಗಳಾದ್ದರಿಂದ ಕೊಡುವವರಿಗೆಲ್ಲ ಈ ಸಂದರ್ಭದಲ್ಲೇ ಕೊಟ್ಟುಬಿಡುವುದು. ಮುಂದೆ ಹೇಗೋ ಏನೋ… ಋಣಭಾರ ಯಾಕೆ ಹೇಳು? ಈ ಕಡೆ ಇನ್ನೊಂದು ಹಾಳೆಯ ಮೇಲೆ ಬರೆದಿದೆಯಲ್ಲ, ಅದೆಲ್ಲ ಪ್ಯಾಂಟು ಪೀಸುಗಳನ್ನು ಕೊಡುವುದಕ್ಕೆ. ಅದು ಆ ಕಡೆ ಇರುವುದು ಶರ್ಟು ಪೀಸು… ನಮ್ಮ ಮಿಲ್ಲಿನ ಕೆಲಸಗಾರರನ್ನು ಇದರಲ್ಲಿ ಸೇರಿಸಿಲ್ಲ. ಅವರದ್ದು ದೊಡ್ಡ ಪಟ್ಟಿಯೇ ಇದೆ. ನಮ್ಮ ಬೊಮ್ಮಯ್ಯ ಹೆಂಡತಿಗೊಂದು ಸೀರೆ ಅಂತ ಮಾತಾಡಿಕೊಂಡಿದ್ದೇವೆ… ಅದೆಲ್ಲ ಬೇರೆ ಇಟ್ಟಿದ್ದೇನೆ… ಅದು ಮದುವೆಯ ಗೌಜಿ ಮುಗಿದ ನಂತರ ಕೊಡುವ ಸಂಗತಿಗಳು….’ +ಯಾವ ರೀತಿಯ ಸೀರೆ, ಅದರ ಅಂದಾಜು ಬೆಲೆ, ಅದನ್ನು ಕೊಡಲು ಇರುವ ಕಾರಣಗಳನ್ನೆಲ್ಲ ಯಶವಂತ ವಿವರಿಸುತ್ತ ಹೋದ ಹಾಗೆ ಮನೋಹರ ಕೈಯಲ್ಲಿದ್ದ ಹಾಳೆಗಳನ್ನು ಸುಮ್ಮನೇ ನೋಡುತ್ತ ಕೂತ. ಹೆಸರುಗಳು, ಅವುಗಳ ಮುಂದೆ ಸೀರೆ ನಮೂನೆ, ಅಂದಾಜು ಬೆಲೆ ಬರೆದಿತ್ತು. ಇಡೀ ಕುಟುಂಬದ ಸಂಬಂಧಗಳನ್ನು ಈ ಸಂಕೀರ್ಣ ಜಾಲದಲ್ಲಿ ಕೂರಿಸಿದ ಬಗೆಯನ್ನು, ಅದರ ಹಿಂದಿನ, ತನಗೆ ಅರ್ಥವಾಗದ ತತ್ವವನ್ನು ಮನೋಹರ ಬೆರಗಿನಿಂದ ನೋಡಿದ. ಪ್ರತಿ ಹೆಸರನ್ನು ಸೇರಿಸಲು ಒಂದು ವಿಶಿಷ್ಟ ತರ್ಕವಿತ್ತು. ಹಿಂದಿನ ಹೆಸರು ಸೇರಿಸಿದ್ದಕ್ಕೂ, ಮುಂದಿನದಕ್ಕೂ ನೇರವಾದ ಸಂಬಂಧವೇ ಇರದಂತೆ ತೋರುತ್ತಿತ್ತು. ಯಾವ ಕಾರಣಗಳಿಗಾಗಿ ಹಿಂದಿನ ಹೆಸರು ಸೀರೆಯ ಗುಂಪಿಗೆ ಸೇರಿಸಿತ್ತೋ ಅದೇ ಕಾರಣಕ್ಕಾಗಿ ಮುಂದಿನ ಹೆಸರು ಪಂಚೆಯ ಗುಂಪಿಗೆ ಸೇರಿತ್ತು. ಬಿಟ್ಟ ಹೆಸರುಗಳ ಬಗ್ಗೆ ವಿವರವನ್ನು ಯಶವಂತ ಕೊಡುತ್ತಲಿದ್ದ. ಸಂಬಂಧಗಳು, ಋಣಭಾರಗಳು, ಸೌಜನ್ಯಗಳು, ಇಷ್ಟಾನಿಷ್ಟಗಳು, ಎಂದೋ ಆದ ಅವಮಾನಗಳು, ಮುಯ್ಯಿಗಳು ಈ ದೀರ್ಘ ಪಟ್ಟಿಯ ಸಂಯೋಜನೆಯಲ್ಲಿ ಅದರ ಭಾಗ ಆಗುವುದರ ಮೂಲಕ ಎಷ್ಟೋ ಅಷ್ಟೇ ಆಗಿರುವುದರ ಮೂಲಕ ಕೂಡ ಅಭಿವ್ಯಕ್ತಿಯನ್ನು ಪಡೆದಂತಾಗಿತ್ತು. +ಮಧ್ಯಾಹ್ನ ಮೂರು ಗಂಟೆಗೆ ಜವಳಿ ಖರೀದಿಗೆ ಹೊರಟಾಗ ಯಶವಂತನ ಒತ್ತಾಯದಿಂದಾಗಿ ಮನೋಹರನೂ ಅವರ ಜೊತೆ ಹೋಗಬೇಕಾಯಿತು. +‘ಹೋಗುವವರು ನಾನು, ಯಶೋದೆ ಮತ್ತು ಸುನಂದಾ ಮಾತ್ರ…. ಮೂರು ಜನವಾಗುತ್ತದಲ್ಲ – ಅದಕ್ಕೇ ನೀನು ಬಂದರೆ ಸರಿಹೋಗುತ್ತದೆ. ಬೇರೆ ಯಾರನ್ನೂ ಕರಕೊಂಡು ಹೋಗುವ ಮನಸ್ಸಿಲ್ಲ ನನಗೆ.’ ಎಂದು ಯಶವಂತ ಹೇಳಿದ್ದರಿಂದ ಬೇರೆ ದಾರಿಯಿರಲಿಲ್ಲ. +‘ನಾನೊಂದು ನಾಲ್ಕನೆಯ ನಗ ಅಷ್ಟೇ…. ಜವಳಿಯ ಬಗ್ಗೆ ನನಗೇನೂ ಗೊತ್ತಿಲ್ಲ’ +‘ಆಯ್ತಪ್ಪ, ಒಂದು ನಗವಾಗಿಯೇ ಬಾ ನೀನು. ನಾವು ಮಾಡುವುದನ್ನು ಕೂತು ನೋಡು ಅಷ್ಟೇ’ ಎಂದು ಯಶವಂತ ಒತ್ತಾಯಿಸಿದ. +ಖರೀದಿಗೆ ಬರುವುದು ಗೊತ್ತಿದ್ದರಿಂದ ರಾಯಕರ ಇಂಥ ಸಂದರ್ಭಗಳಿಗೆಂದೇ ಮೀಸಲಾದ ಅಂಗಡಿಯ ಒಳಭಾಗದ ಕೋಣೆಯಲ್ಲಿ ಚಾಪೆಗಳನ್ನು ಹಾಸಿ, ಒರಗು ದಿಂಬುಗಳನ್ನು ಜೋಡಿಸಿ ವ್ಯವಸ್ಥೆ ಮಾಡಿದ್ದ. ಹೊಸ ಸ್ಟಾಕಿನಿಂದ ಇವರು ನೋಡಬಹುದಾದ ರೀತಿಯ ಸೀರೆಗಳನ್ನು ಆಗಲೇ ತೆಗೆದಿಟ್ಟಿದ್ದ. ಹೋದದ್ದೇ ಶರಬತ್ತು ಕೊಟ್ಟು ಉಪಚರಿಸಿದ. +‘ಕುಯ್ಯಬೇಡ ಮಾರಾಯ – ಸರಿಯಾದ ಬೆಲೆ ಹಾಕು’ ಎಂದು ಯಶವಂತ ವ್ಯಾಪಾರ ಆರಂಭಿಸುವ ಸೂಚನೆ ಇತ್ತ. +‘ನೀವು ಬೇಕಾದ್ದು ಆರಿಸಿ ರಾಯರೇ… ಬೆಲೆ ನೋಡಬೇಡಿ…. ಕೊನೆಯಲ್ಲಿ ಒಟ್ಟೂ ಸೇರಿಸಿ ರಿಬೇಟು ಕೊಡೂತ್ತೇನೆ, ಎಂದು ರಾಯಕರ ತನ್ನ ವ್ಯಾಪಾರಿ ಭಾಷೆ ಶುರುಮಾಡಿದ. +ಯಶವಂತ ತನ್ನ ಹಿಡಿರ ಸಡಲಿಸದೇ ‘ನಿನ್ನ ಅಂಗಡಿಯಲ್ಲಿ ಬೆಲೆ ನೋಡದೇ ವ್ಯಾಪಾರ ಮಾಡಿದರೆ ದಿವಾಳಿ ಎದ್ದ ಹಾಗೇ’ ಅಂದ. +ಗಾಜಿನ ಬಾಗಿಲುಗಳಿದ್ದ ಕಟ್ಟಿಗೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಿಟ್ಟ ಬಟ್ಟೆಗಳು. ಹೊಸ ಬಟ್ಟೇ ಸುತ್ತಿ ಬಂದ ಉರುಟಾದ ಕಟ್ಟಿಗೆಯ ಕೋಲುಗಳನ್ನು, ಎರಡು ಕಪಾಟುಗಳ ನಡುವಿನ ಸಂದಿಯಲ್ಲಿ ಒಟ್ಟಿ ಇಡಲಾಗಿತ್ತು. ಆಯತಾಕಾರದ ರಟ್ಟುಗಳನ್ನು ಒಂದು ಮೂಲೆಯಲ್ಲಿ ಪೇರಿಸಿಟ್ಟಿದ್ದರು. ಹೊಸಬಟ್ಟೆಯ ವಾಸನೆ, ಸೀರೆಯ ಮಡಿಕೆ ಬಿಚ್ಚುವಾಗ ಅದರೊಳಗಿನ ತೆಳ್ಳನೆಯ ಪೇಪರು ಬಟ್ಟೆಗೆ ಸವರುವ ಸದ್ದು, ನೂರಾರು ವಿನ್ಯಾಸಗಳು, ಬಣ್ಣಗಳು – ಈ ಎಲ್ಲದರ ನಡುವೆ ಜವಳಿ ಪಟ್ಟಿಯನ್ನು ಎದುರಿಗಿಟ್ಟುಕೊಂಡು ಆಯ್ಕೆಯ ಚರ್ಚೆ ಶುರುವಾಯಿತು. ಮದುವಣಗಿತ್ತಿಯದು ಮುಗಿಯಲಿ ಎಂದು ಸುನಂದೆಯ ಸೀರೆಗಳನ್ನು ಮೊದಲು ಆರಿಸಲಾಯಿತು. ‘ಯಾವುದಾದರೂ ತಗೋ’ ಎಂದು ಯಶವಂತ ಪದೇ ಪದೇ ಹೇಳಿದರೂ ಅಪ್ಪನಿಗೆ ಭಾರವಾಗಬಹುದೆನ್ನುವ ಆತಂಕ ಮತ್ತು ತನ್ನ ಜೀವನದಲ್ಲಿ ಈ ಸಂಭ್ರಮ ಒಂದು ಬಾರಿ ಮಾತ್ರ ಎನ್ನುವ ಅರಿವಿನಿಂದ ಹುಟ್ಟಿದ ದ್ವಂದ್ವವನ್ನು ಮೀರಲು ಅವಳಿಗೆ ತುಸು ಹೊತ್ತು ಹಿಡಿಯಿತು. ತನ್ನೆಲ್ಲ ಸೀರೆಗಳನ್ನು ಅವಳೇ ಆರಿಸಿದಳು. ಮನೋಹರನ ಅಭಿಪ್ರಾಯ ಕೇಳಿದಾಗ ಅವನು ಕೊಟ್ಟ ಸಲಹೆಗಳಿಂದ ಖುಷಿಪಟ್ಟಳು. ಉಳಿದ ಸೀರೆ ಪಂಚೆ ಶರ್ಟಿನ ಬಟ್ಟೆಗಳು ಅಂತ ಮುಂದಿನ ಖರೀದಿ ಶುರುವಾಯಿತು. ಈ ನಡುವೆ ಚಹಾ ಚೂಡಾ ಬಂತು. +ಎಲ್ಲವೂ ಮುಗಿಯುವ ವೇಳೆಗೆ ಸಂಜೆಯಾಯಿತು. ಇನ್ನೇನು ರಾಯಕರನಿಗೆ ಹೇಳಿ ಲೆಕ್ಕ ಮಾಡಿಸಬೇಕು ಅನ್ನುವ ಹೊತ್ತಿಗೆ ಯಶವಂತ ಎರಡು ಸಾವಿರದ ಸೀರೆಯ ಗುಂಪಿನಿಂದ ಒಂದನ್ನು ಎತ್ತಿ ಪಕ್ಕದಲ್ಲಿ ತಾವು ಕೊಂಡ ಸೀರೆಗಳ ಜೊತೆ ಇಟ್ಟ. ಪಟ್ಟಿಯಲ್ಲಿದ್ದ ಎಲ್ಲರಿಗೂ ಕೊಂಡುಕೊಂಡಾಗಿತ್ತು. ಆ ಬೆಲೆಯ ಸೀರೆ ಯಶೋದೆಗೆ ಮತ್ತು ಸುನಂದಗಲ್ಲದೇ ಬೇರೆ ಯಾರಿಗೂ ತೆಗೆದಿರಲಿಲ್ಲ. ಅರೆ ಯಾರನ್ನಾದರೂ ಮರೆತೆವೋ, ಮಗಳಿಗೆ ಇನ್ನೊಂದು ಇರಲಿ ಎಂದು ತೆಗೆದಿಟ್ಟನೋ ಎಂದೆಲ್ಲ ಸುನಂದೆಯೂ ಯಶೋದೆಯೂ ಯೋಚಿಸಿದರು. ಯಶವಂತ ಯಾರಿಗೆ ಅಂತ ಹೇಳಲೂ ಇಲ್ಲ. +ಯಶೋದೆ ‘ಇದ್ಯಾಕೆ ಇನ್ನೊಂದು?’ ಅಂದಳು. +‘ಚಂಪಾಗೆ’ ಎಂದು ಯಶವಂತ ಹೇಳಿದ್ದೇ ಥಟ್ಟನೆ ಒಂದು ಕ್ಷಣ ಮೌನ ಆವರಿಸಿತು. ಮರುಕ್ಷಣವೇ ಯಶೋದೆ ಸ್ಫೋಟಿಸಿದಳು. ಆರಿಸಿ ತನ್ನೆದುರಿಗೆ ಪೇರಿಸಿಟ್ಟ ಸೀರೆಗಳ ರಾಶಿಯನ್ನು ಧಡಾರನೆ ನೂಕಿದಳು. +‘ನಾನು ಯಾಕೆ? ಆ ಭೋಸುಡಿಯೇ ನಿಮ್ಮ ಜೊತೆ ಧಾರೆಗೆ ಕೂಡಲಿ…. ಎಲ್ಲರ ಎದುರಿಗೆ ನಮ್ಮ ಮಾನ ಮೂರು ಕಾಸಾಗಲಿ’ ಎಂದು ಹೇಳುತ್ತ ಹೇಳುತ್ತ ಯಾವುದನ್ನು ಎಷ್ಟು ಹೇಳಬೇಕು ಎಂಬ ಪರಿಜ್ಞಾನ ತಪ್ಪಿ ಹೋದವಳ ಹಾಗೆ, ಗಂಡನಿಂದಾದ ಈ ವಂಚನೆಯನ್ನು, ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದವಳ ಹಾಗೆ ತನ್ನಿಂದ ಶಕ್ಯವಿರುವ ಅತ್ಯಂತ ಕಟುವಾದ ಮಾತುಗಳಿಂದ ಚಂಪಾಳನ್ನು ಬಯ್ಯತೊಡಗಿದಳು. ಭೋಸುಡಿ ರಂಡೆ ಮುಂಡೆ ಸೂಳೆ ಎಂದು ಏನು ಹೇಳಿದರೂ ಯಶವಂತನನ್ನು ಕೆರಳಿಸಲಾಗದೇ ಹತಾಶಳಾಗಿ ದೊಡ್ಡ ದನಿ ತೆಗೆದು ಅಳಲಾರಂಭಿಸಿದಳು. ಇವರ ಮಾತುಗಳನ್ನು ಕೇಳಿಸಿಕೊಂಡಿರದ ಅಂಗಡಿಯ ಆಳು, ಕ್ಷಣಾರ್ಧದಲ್ಲಿ ಬದಲಾದ ಈ ಸನ್ನಿವೇಶದಿಂದ ಗಾಬರಿಯಾಗಿ, ಸೀರೆಗಳನ್ನು ಮತ್ತೆ ಜೋಡಿಸಬೇಕೋ ಇಲ್ಲವೋ ತಿಳಿಯದೇ ಯಜಮಾನರನ್ನು ಕರೆಯಲು ಹೊರಗೋಡಿದ. ಹೊರಗೆ ಅಂಗಡಿಯಲ್ಲಿದ್ದ ನಾಲ್ಕೈದು ಗಿರಾಕಿಗಳು ಏನು ಅನಾಹುತವಾಯಿತೆಂದು ತಿಳಿಯದೇ, ಸಹಾಯಕ್ಕೆ ಧಾವಿಸಬೇಕೇ ಬೇಡವೋ ಗೊತ್ತಾಗದೇ, ಸಂದಿಗ್ಧದಲ್ಲಿ ಕೋಣೆಯ ಬಾಗಿಲಿನಿಂದ ಇಣುಕತೊಡಗಿದರು. ‘ಏನಿಲ್ಲ… ನಮ್ಮ ನಮ್ಮೊಳಗಿನ ಮಾತು…’ ಎಂದು ಯಶವಂತ ಅವರನ್ನು ಹೊರಗೆ ಕಳಿಸಿ ಬಾಗಿಲು ಅಡ್ಡ ಮಾಡಿದ. ಅಷ್ಟರಲ್ಲಿ ಯಶೋದೆ ಆಣೆ ಪ್ರಮಾಣ ಮಾಡತೊಡಗಿದ್ದಳು. ಮದುವೆಗೇನಾದರೂ ಚಂಪಾ ಬಂದರೆ ನೇಣು ಹಾಕಿಕೊಂಡು ಬಿಡುತ್ತೇನೆಂದಳು. ಸುತ್ತಲೂ ಇದ್ದ ಕಪಾಟುಗಳ ಗಾಜಿನ ಬಾಗಿಲುಗಳಲ್ಲಿ ಕೂತವರೆಲ್ಲಾ ತುಂಡುತುಂಡಾಗಿ ಪ್ರತಿಫಲಿಸುತ್ತಿದ್ದರು. ಎದುರು ಗೋಡೆಗೆ ಒರಗಿಸಿಟ್ಟ ದೊಡ್ಡ ಕನ್ನಡಿಯಲ್ಲಿ ಕೊಂಚ ಸೊಟ್ಟಾಗಿ ಕಾಣುವ ಎಲ್ಲರ ಮುಖಗಳನ್ನು, ಯಶೋದೆಯ ಇದ್ವೇಗಭರಿತ ಹಾವಭಾವಗಳನ್ನು ಕಂಡಾಗ ತನಗೆ ಸಂಬಂಧಪಡದ ಯಾವುದೋ ಚಲನಚಿತ್ರವನ್ನು ನೋಡುತ್ತಿರುವಂತೆ ಮನೋಹರನಿಗೆ ಭಾಸವಾಯಿತು. +ಯಶವಂತ ಈ ರಂಪದಿಂದ ವಿಚಲಿತನಾಗಲಿಲ್ಲ. ಈ ನಿರ್ಧಾರವನ್ನು ಅವನು ಯಾವಾಗಲೋ ಮಾಡಿದಂತಿತ್ತು. ಯಶೋದೆ ಅತ್ತು ಸಮಾಧಾನ ಮಾಡಿಕೊಳ್ಳಲಿ ಎಂದು ಕಾಯುವಂತೆ ದಿಂಬಿಗೊರಗಿ ಕೂತುಬಿಟ್ಟ. ಯಶವಂತ ಮತ್ತು ಚಂಪಾಳ ಸಂಬಂಧ ಇಡೀ ಊರಿಗೆ ಗೊತ್ತಿರುವ ಗುಟ್ಟಾದರೂ, ಈಗ ಅದನ್ನು ಈ ರೀತಿ ಪ್ರಕಟಿಸುವ ಅಗತ್ಯವೇನೆಂದು ಯಾರಿಗೂ ಅರ್ಥವಾಗಲಿಲ್ಲ. ಯಶೋದೆ ಮತ್ತು ಸುನಂದೆಗೆ ಎದೆಲ್ಲ ಹೊಸ ಸಂಗತಿಯಲ್ಲದಿದ್ದರೂ, ಹೀಗೆ ಅದನ್ನು ಸ್ವೀಕರಿಸಲು ಅವರು ಸಿದ್ದರಾಗಿರಲಿಲ್ಲ. +ಸುನಂದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ನೋಡಿ ಮನೋಹರನಿಗೆ ಪಿಚ್ಚೆನಿಸಿತು. ಅವಳ ಮದುವೆ ಯಾವಾಗಲೋ ಆಗಬೇಕಿತ್ತು. ಯಶವಂತ – ಚಂಪಾಳ ಪ್ರಕರಣದಿಂದಲೇ ಅವಳಿಗೆ ಬಂದ ಸಂಬಂಧಗಳೆಲ್ಲ ಮೊದಲ ಹಂತವನ್ನೇ ದಾಟುತ್ತಿರಲಿಲ್ಲ. ಅದಕ್ಕೆ ಕಾರಣ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಅದು ಏನೆಂಬುದು ಎಲ್ಲರಿಗೂ ಗೊತ್ತಿತ್ತು. ಹೇಗೆ ಈ ಸಂಬಂಧ ಒಂದು ಮಾಯೆಯಂತೆ ಕೂಡಿಬಂತು ಎಂದು ಯಶೋದೆ ಪದೇಪದೇ ವಿವರಿಸುವಾಗ ಈ ಎಲ್ಲವನ್ನೂ ನಿರಾಕರಿಸಲು, ಮುಚ್ಚಿಡಲು ಬಯಸುತ್ತಿದ್ದಾಳೆಂಬುದು ಮನೋಹರನಿಗೆ ಗೊತ್ತಾಗಿತ್ತು. ಈಗ ಈ ಸೀರೆಯ ಸಂಗತಿ ಹೊರಗೆ ಗೊತ್ತಾದರೆ ಮತ್ತೆ ಕೊನೆಯ ಗಳಿಗೆಯಲ್ಲಿ ಏನಾದರೂ ಸಮಸ್ಯೆಯಾದರೂ ಆದೀತು ಎಂದು ಆತಂಕ ಅವಳಲ್ಲಿದ್ದಂತಿತ್ತು. +‘ಏನೂ ಅಗುವುದಿಲ್ಲ…. ಅವಳು ಊರಿನ ಎಲ್ಲರ ಹಾಗೆ ಮದುವೆಗೆ ಬಂದು ಹೋಗುತ್ತಾಳೆ’ ಎಂದು ಮನೋಹರ ಯಶೋದೆಗೆ ಸಮಾಧಾನ ಹೇಳಿದ. +‘ಅಯ್ಯೋ.. ಯಾರ ಮನೆಯ ಮದುವೆಗಾದರೂ ಅವಳನ್ನು ಕರೆಯುತ್ತಾರೇನೇ… ಇದುವರೆಗೂ ಯಾವ ಮದುವೆಗೂ ಅವಳನ್ನು ಕರೆದದ್ದಿಲ್ಲ… ಅವಳು ಹೋದದ್ದಿಲ್ಲ… ಅವಲಕ್ಷಣವನ್ನು, ಅಪಶಕುನವನ್ನು ಬಾ ಎಂದು ಯಾವ ಬಾಯಲ್ಲಿ ಹೇಳಲಿ?’ ಅವಳ ಪ್ರಲಾಪ ಒಂದೇ ಸಮನೆ ಮುಂದುವರೆಯಿತು. ಈ ಸೀರೆಯನ್ನು ಆಯ್ಕೆ ಮಾಡುವ ಮೂಲಕ ಚಂಪಾಗೆ ಯಶವಂತ ಕೊಡಮಾಡಿದ ಸ್ಥಾನಮಾನವೇ ಅವಳಿಗೆ ಭರಿಸಲಾಗದ ದುಃಖ ಕೊಟ್ಟಿತ್ತು. ಅವಳಿಗೆ ಸೀರೆಯನ್ನೇ ಕೊಡಬೇಕೆಂದಿದ್ದರೆ ಅವನಿಗೆ ಬೇಕಾದಾಗ ಕೊಡಬಹುದಿತ್ತು. ಅದನ್ನು ಪ್ರತ್ಯೇಕವಾಗಿ ಅವನೇ ಬಂದು ಕೊಳ್ಳಬಹುದಿತ್ತು. ಇದು ಬರಿ ಸೀರೆಯ ಪ್ರಶ್ನೆ ಅಲ್ಲವೆಂದು ಅವಳಿಗೂ ಗೊತ್ತಿತ್ತು. +ಯಶವಂತ ಮಾತ್ರ ಗಟ್ಟಿಯಾಗಿ ನಿಂತಿದ್ದರಿಂದ ಯಶೋದೆಯ ಯಾವ ಅಸ್ತ್ರಗಳೂ ನಾಟಲಿಲ್ಲ. ತನ್ನ ನಿರ್ಧಾರ ಹೇಳಿ ಆಗಿದೆ ಎಂಬಂತೆ ಅವನು ದಿಂಬಿಗೊರಗಿ ಕೂತುಬಿಟ್ಟಿದ್ದ. ಅವನು ಯಶೋದೆಯನ್ನು ಸಮಾಧಾನಪಡಿಸಲು ಹೋಗಲೂ ಇಲ್ಲ. ಅವಳು ಮದುವೆಗೆ ಬರುವಳೋ ಇಲ್ಲವೋ ಎಂಬುದನ್ನು ಆಮೇಲೆ ಬಗೆಹರಿಸೋಣವೆಂದು ಯಶವಂತನಿಗೆ ಕೇಳುವ ಹಾಗೆಯೇ ಹೇಳಿ, ಅವಳನ್ನು ಸಮಾಧಾನಪಡಿಸಿ, ಜವಳಿಯ ಅಂಕ ಮುಗಿಸಬೇಕಾದರೆ ಮನೋಹರನಿಗೆ ಸಾಕುಸಾಕಾಗಿತ್ತು. ಅತ್ತು ಮುಖ ಬಾಡಿದ್ದು ಗೊತ್ತಾಗದಿರಲಿ ಎಂದು ತಾಯಿ ಮಗಳು ಪ್ರಯತ್ನಿಸಿದಷ್ಟೂ ಅದು ಢಾಳಾಗಿ ಎದ್ದು ಕಾಣುತ್ತಿತ್ತು. +ಚಂದ್ರಹಾಸ +ಎರಡು ದಿನಗಳಲ್ಲಿ ಮದುವೆ ಮನೆ ಖಾಲಿಯಾಗಿತ್ತು. ಮನೋಹರ ಹನ್ನೊಂದರ ಬಸ್ಸು ಹಿಡಿಯಬೇಕೆಂದು ಸ್ನಾನ ಮುಗಿಸಿ ಹೊರಡಲು ತಯಾರಾಗುತ್ತಿದ್ದ. ಆಗ ಯಶೋಧೆ ‘ಯಾರೋ ನಿನ್ನನ್ನು ನೋದಲು ಬಂದಿದ್ದಾರೆ’ ಎಂದು ಕರೆದಳು. ಯಾರಿರಬಹುದು ಎಂದು ಆಶ್ಚರ್ಯ ಪಡುತ್ತ ಮನೋಹರ ಮಹಡಿಯಿಂದ ಕೆಳಗಿಳಿದು ಬಂದು ನೋಡಿದರೆ, ಚೌಕಳಿ ಶರ್ಟು ಮತ್ತು ಜೀನ್ಸ್ ತೊಟ್ಟ ಸುಮಾರು ಮೂವತ್ತರ ಒಬ್ಬ ವ್ಯಕ್ತಿ ಅಂಗಳದಲ್ಲಿ ನಿಂತಿದ್ದ. ದಣಪೆಯಲ್ಲಿ ಅಡ್ಡ ನಿಲ್ಲಿಸಿದ ಮೋಟರ್‌ಬೈಕ್ ಅವನದೇ ಎಂಬುದು ಗೊತ್ತಾಯಿತು. ಅವನ ಮೋರೆಯ ಮೇಲೆ ತುಸು ಉಡಾಫೆಯ ಕಳೆಯಿದ್ದಂತಿತ್ತು. +‘ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು. ನಾನು ಕಶೀಶ ತಮ್ಮ ಚಂದ್ರಹಾಸ. ಒಂದು ನಿಮಿಷದ ಮಾತಿಗೆ ನೀವು ಹೊರಗೆ ಎಲ್ಲಾದರೂ ಸಿಗುತ್ತೀರಾ?’ ಅಂದ. +ಅವನಿಗೆ ಈ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಒಂದು ಕ್ಷಣವೂ ಇರುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗಿತ್ತು. ಕಾಶೀಶನ ತಮ್ಮ ಅಂದರೆ ಚಂಪಾಳ ತಮ್ಮನೂ ಅನ್ನುವುದು ತುಸು ತಡವಾಗಿ ಮನೋಹರನಿಗೆ ಹೊಳೆಯಿತು. +‘ನಾನೀಗ ಹನ್ನೊಂದರ ಬಸ್ಸಿಗೆ ಹೊರಟಿದ್ದೇನೆ. ಬಸ್‌ಸ್ಟಾಂಡಿನ ಕ್ಯಾಂಟೀನಿನಲ್ಲಿ ಸಿಗಬಹುದು’ ಎಂದ ಮನೋಹರ. +‘ಅಲ್ಲಿ ಯಾವಗಲೂ ಬಹಳ ಗದ್ದಲ. ಈ ಹೊತ್ತಿನಲ್ಲಿ ಕೂರಲಿಕ್ಕೆ ಕೂಡ ಜಾಗ ಸಿಗದೇ ಹೋಗಬಹುದು. ಜಹಿಂದ್ ಹೊಟೇಲಿಗೆ ಹೋಗೋಣವೇ? ದಾರಿಯಲ್ಲೇ ಇದೆ.’ +‘ಆಯಿತು ಬರಿತ್ತೇನೆ. ಇನ್ನೊಂದು ಹತ್ತು ನಿಮಿಷಗಳಲ್ಲಿ ಹೊರಡುತ್ತೇನೆ’ +ಮನೋಹರ ಜೈಹಿಂದ್ ಹೊಟೇಲಿಗೆ ಹೋದಾಗ, ಚಂದ್ರಹಾಸ ಬದಿಯ ಓಣಿಯಲ್ಲಿ ಬೈಕ್ ನಿಲ್ಲಿಸಿ, ಒಂದು ಕೈಯಲ್ಲಿ ಹೆಲ್ಮೆಟ್, ಇನ್ನೊಂದರಲ್ಲಿ ಚಿಕ್ಕ ಬ್ಯಾಗ್ ಹಿಡಿದು ಕಾಯುತ್ತ ನಿಂತಿದ್ದ. ಮನೋಹರನನ್ನು ಅಟ್ಟದ ಮೇಲೆ ಸ್ಪೆಶಲ್ ರೂಮುಗಳಿದ್ದಲ್ಲಿಗೆ ಕರಕೊಂಡು ಹೋದ. ಯಾರೂ ಇಲ್ಲದ ಒಂದರಲ್ಲಿ ಇಬ್ಬರೂ ಕೂತು ತಕ್ಷಣ ಪ್ರತ್ಯಕ್ಷನಾದ ಮಾಣಿಗೆ ಒಂದೊಂದು ಚಹ ಹೇಳಿದರು. ಮನೋಹರ ಅವಸರ ತುಂಬಿದ ಮುಖದಿಂದ ಅವನತ್ತ ನೋಡಿದಾಗ ಆತ ನೇರವಾಗಿ ವಿಷಯಕ್ಕೇ ಬಂದ. +‘ನಾನು ಕಾಶೀಶನ ತಮ್ಮ. ಚಂದ್ರಹಾಸ. ನಿಮಗೆ ಕಾಶೀಶ ಗೊತ್ತಿದ್ದಾನೆಂದು ತಿಳಿಯಿತು. ಅವನಿಗೆ ಒಂದು ಮಾತು ಕೇಳಿ, ಉತ್ತರ ಪಡೆಯಬೇಕಿತ್ತು. ಅದಕ್ಕೆ ನಿಮ್ಮ ಸಹಾಯ ಬೇಕಿತ್ತು.’ +‘ನನಗೆ ಅವನು ಗೊತ್ತಿದ್ದಾನೆಂದು ನಿಮಗೆ ಹೇಳಿದವರು ಯಾರು?’ +‘ನನಗೆ ಗೊತ್ತಾಯಿತು.’ +‘ಗೊತ್ತಾಯಿತು ಅಂತ ಯಾವುದೋ ಅಶರೀರವಾಣಿ ಕೇಳಿದೆ ಅನ್ನುವ ರೀತಿಯಲ್ಲಿ ಹಮ್ಮಿನ ಮಾತಾಡಿದರೆ ಎದ್ದು ಹೋಗುತ್ತೇನೆ. ನನಗೆ ಪುರಸತ್ತಿಲ್ಲ. ಬಸ್ಸು ತಪ್ಪಿ ಹೋಗುತ್ತದೆ.’ +‘ಸಿಟ್ಟಾಗಬೇಡಿ. ನಿನ್ನೆ ನೀವು ಬಂದಾಗ ನಾನು ದಿನೂ ಅಂಕಲ್ ಮನೆಯ ಹಿತ್ತಲಲ್ಲಿದ್ದೆ. ನಂತರ ಹಿಂದಿನ ಬಾಗಿಲಿನಿಂದ ಒಳಗೆ ಬಂದೆ. ನೀವು ಆಡುವ ಮಾತುಗಳನ್ನು ಅಕಸ್ಮಾತ್ ಕೇಳಿಸಿಕೊಂಡೆ. ನಾನು ಎದುರು ಬಂದರೆ ದಿನೂ ಅಂಕಲ್ ಹೇಳಬೇಕೆನಿಸಿದ್ದನ್ನು ಹೇಳಲಾರರು ಅನಿಸಿ ಒಳಗೇ ಉಳಿದೆ. ಅವರ ಎದುರಿಗೆ ಇದೆಲ್ಲ ಬೇಡ ಅಂತಲೇ ನಾನು ನಿನ್ನೆ ನಿಮ್ಮನ್ನು ಮಾತಾಡಿಸಲಿಲ್ಲ.’ +‘ಕಾಶೀಶನನ್ನು ನಾನು ನೋಡಿದ್ದು ಇಪ್ಪತ್ತೈದು ವರ್ಷಗಳಿಗೂ ಹಿಂದೆ. ಅವನ ಹಾಗೇ ಇರುವ ಯಾರೋ ಒಬ್ಬರನ್ನು ನೋಡಿದಾಗ ನನಗೆ ಅವನ ನೆನಪಾಯಿತೆಂದು ಈ ಸಲ ಇಲ್ಲಿ ಬಂದಾಗ ವಿಚಾರಿಸಿದೆ. ಅಷ್ಟರ ಹೊರತು ನನಗೆ ಬೇರೆ ಯಾವ ಉದ್ದೇಶವೂ ಇರಲಿಲ್ಲ.’ +‘ನಿಮಗೆ ಸಿಕ್ಕ ಆ ವ್ಯಕ್ತಿ ಅಣ್ಣನೇ ಎಂದು ನನಗೆ ಖಾತರಿಯಾಗಿದೆ. ಅವನು ನೋಡಲು ಹೇಗಿದ್ದ ಎಂದು ನೀವು ನಿನ್ನೆ ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಅವನ ಬಗ್ಗೆ ಜನ ಮಾತಾಡುವುದನ್ನು ಕೇಳಿದ ನನಗೆ, ಅವನು ನೀವು ಹೇಳಿದ ಹಾಗೆ ಅಸಾಮಾನ್ಯ ಬುದ್ಧಿವಂತನಾಗಿರುವುದರಲ್ಲಿ ಕೂಡ ಸಂಶಯವೇ ಇಲ್ಲ ಅನಿಸುತ್ತದೆ.’ +ಮನೋಹರನಿಗೆ ಈ ವ್ಯವಹಾರದಿಂದ ದಿಗಿಲಾಯಿತು. ತನ್ನ ಸರಳ ಕುತೂಹಲವನ್ನು ಸಂಕೀರ್ಣಗೊಳಿಸಲು ಇಷ್ಟವಿರಲಿಲ್ಲ. ಇದು ಬಿಡಿಸಿಕೊಳ್ಳಲು ಕಷ್ಟವಾಗುತ್ತ ಹೋಗುವ ಹುದಲಿನಂತೆ ಕಂಡಿತು. ಕಾಶೀಶನಿಗೆ ತಾನೊಂದು ಖಚಿತ ಕೊಂಡಿಯೆಂಬಂತೆ ಇವನು ವರ್ತಿಸುತ್ತಿರುವುದರಿಂದ ತುಸು ಅಧೀರನಾದ. +‘ನಾನು ಹೇಳುವುದನ್ನು ಪೂರ್ತಿ ಕೇಳಿ. ನಾವು ಯಾರೂ ಅವನ ಪಾಲಿಗೆ ಇಲ್ಲ ಎಂದು ಭಾವಿಸಿಕೊಂಡೇ ಅವನು ಮನೆ ಬಿಟ್ಟು ಹೋಗಿರಬಹುದು. ಆದರೆ ನಾವು ಯಾರೂ ಅವನ ಬಗ್ಗೆ ಹಾಗೆ ತಿಳಿದುಕೊಳ್ಳದಿರುವುದೇ, ಹಾಗೆ ಭಾವಿಸಲು ಸಾಧ್ಯವಾಗದಿರುವುದೇ ನಮ್ಮ ದುರಂತ. ಅವನು ಇಲ್ಲದಿದ್ದರೂ ಇದ್ದಾನೆ ಎಂದು ಭಾವಿಸಿ ಜೀವಿಸುವ ಕಷ್ಟಗಳು ಎಂತೆಂಥವೆಂದು ನಿಮಗೆ ಗೊತ್ತಿಲ್ಲ. ಅವನು ನಾಪತ್ತೆಯಾಗಿ ಅಮ್ಮನನ್ನು ಬಹಳ ಸತಾಯಿಸಿಬಿಟ್ಟ. ಹಾಗೆಯೇ ದಿನೂ ಅಂಕಲ್‌ನನ್ನು ಕೂಡ. ಅವನು ಓಡಿಹೋಗಲು ಕಾರಣ ತಾವೇ ಎಂದು ನಮ್ಮ ಮನೆಯವರೆಲ್ಲ ಅವರವರ ಪಾಪಪ್ರಜ್ಞೆ ಕುಟುಕಿದ ಗಳಿಗೆಗಳಲ್ಲಿ ಅಂದುಕೊಂಡರು. ನಾನು ಮಾತ್ರ ಹಾಗೆ ಬಳಲುವುದರಿಂದ ಬಚಾವಾದೆ. ಯಾಕೆಂದರೆ ಅವನನ್ನು ನಾನು ಕಡೇ ಸಲ ನೋಡಿದಾಗ ನನಗೆ ಬರೀ ಐದು ವರ್ಷ. ಅವನು ಅಮ್ಮ ಸಾಯುವ ಹೊತ್ತಿಗೂ ಬರಲಿಲ್ಲ. ಈಗ ನನಗೆ ಇರುವುದು ಒಂದು ಬೇರೆಯೇ ಸಮಸ್ಯೆ….’ +ಚಂದ್ರಹಾಸನಿಗೆ ಅಲ್ಲಲ್ಲಿ ಕೆಲವು ಕೂದಲು ಬಿಳಿಯಾಗಿದ್ದವು. ಅವನು ದಣಿದಂತೆ ಕಾಣಿಸುತ್ತಿದ್ದ. ಕೈಹಿಡಿದದ್ದೆಲ್ಲ ಹಾಳಾಗುವ ಕಾಲದಲ್ಲಿ ಹುಟ್ಟುವ ಆಯಾಸ ಅವನ ಮೋರೆಯ ಮೇಲೆ ಇದ್ದಂತೆ ಮನೋಹರನಿಗೆ ಅನಿಸಿತು. +‘ಅಮ್ಮ ತನ್ನ ಆಸ್ತಿಯನ್ನು ನಾವು ಮೂರು ಜನ ಮಕ್ಕಳ ಹೆಸರಿಗೆ ಮಾಡಿದ್ದಾಳೆ. ತಾನು ಸಾಯುವವರೆಗೂ ಅವಳು ಕಾಶೀಶ ಬದುಕಿದ್ದಾನೆ, ಈಗಲೋ ಈವತ್ತೋ ಬರುತ್ತಾನೆ ಎಂಬಂಥ ನಂಬಿಕೆಯಲ್ಲೇ ಇದ್ದಳು. ಅವಳು ಆ ಕಾಗದ ಪತ್ರಗಳನ್ನು ಮಾಡಿಸುವಾಗಲೇ ಅವನ ಹೆಸರು ನಡುವೆ ತರಬೇಡ ಎಂದು ಹೇಳಬೇಕೆಂದು ನನಗೆ ಅನಿಸಿತ್ತು. ಆದರೆ ಅವಳ ಹತ್ತಿರ ಈ ಸಂಗತಿಯನ್ನು ಎತ್ತುವ ಪ್ರಶ್ನೆಯೇ ಇರಲಿಲ್ಲ. ಹಾಗೇನಾದರೂ ಹೇಳಿದರೆ, ಅದು ಅವನು ಬದುಕಿಲ್ಲ ಎಂದು ಹೇಳೆದಂತಾಗುತ್ತದೆ ಎಂದವಳು ಭಾವಿಸುತ್ತಿದ್ದರಿಂದ ಆ ಗೋಜಿಗೆ ಹೋಗಲಿಲ್ಲ. ಅವಳನ್ನು ಯಾವುದಕ್ಕೂ ಒತ್ತಾಯಿಸಲಿಲ್ಲ. ಕೊನೆಗಾಲದಲ್ಲಿ ಸ್ವಲ್ಪ ಬುದ್ಧಿ ಕೆಟ್ಟವಳಂತೆ ಆಡುತ್ತಿದ್ದಳು. ಅಂಕೋಲೆಯ ಮನೆ ಮತ್ತು ಬೇಲೆಕೇರಿಯ ಹತ್ತಿರ ಇರುವ ಸ್ವಲ್ಪ ಹೊಲ ಎಲ್ಲವೂ ಅಮ್ಮನ ಹೆಸರಿನಲ್ಲಿತ್ತು. ಈಗ ಅದು ನಾವು ಮೂವರಿಗೆ ಸೇರಿದ್ದು. ಅಮ್ಮ ಸತ್ತು ಎರಡು ವರ್ಷವಾಯಿತು. ಈಗ ನಾನು ನನ್ನ ಪಾಲು ತಗೊಂಡು, ಅದನ್ನು ಮಾರಿ ಬಿಸನೆಸ್ ಮಾಡಬೇಕೆಂದಿದ್ದೇನೆ. ಹುಬ್ಬಳ್ಳಿಗೆ ಹೋಗುತ್ತೇನೆ. ಅಲ್ಲಿ ನನ್ನ ಗೆಳೆಯನೊಬ್ಬನಿದ್ದಾನೆ. ಅವನ ಜೊತೆ ಸೇರಿ ವ್ಯಾಪಾರ ಶುರುಮಾಡುತ್ತೇನೆ. ಆಸ್ತಿ ಪಾಲು ಮಾಡಲಿಕ್ಕೆ ಚಂಪಕ್ಕ ಒಪ್ಪಿದ್ದಾಳೆ. ಈಗ ಸಮಸ್ಯೆ ಎಂದರೆ ಕಾಶೀಶನ ಸಹಿ ಇಲ್ಲದೇ, ಇದು ಆಗುವುದಿಲ್ಲ. ಅವನು ಪಾಲು ಮಾಡಲು ಒಪ್ಪಿಗೆ ಕೊಟ್ಟಿದ್ದಲ್ಲದೇ ಇದು ಆಗುವುದಿಲ್ಲ. ಅವನ ಪಾಲನ್ನು ಅವನು ಏನು ಬೇಕಾದರೂ ಮಾಡಲಿ, ಈ ವ್ಯವಸ್ಥೆಗೆ ಸಹಿ ಮಾಡಬೇಕು ಅಷ್ಟೇ.’ +ಚಂಪಾಳ ಮನೆ ಪಾಲಾಗಿ, ಇವನು ತನ್ನ ಪಾಲು ಮಾರುವುದು ಅಂದರೆ ಆ ಇಡೀ ಮನೆಯನ್ನು ಮಾರಿ ಚಂಪಾ ಬೇರೆ ಕಡೆ ಹೋಗಬೇಕಾಗಬಹುದೆನ್ನುವ ಸಾಧ್ಯತೆಯನ್ನು ಯೋಚಿಸಿ ಮನೋಹರನಿಗೆ ತುಸು ದಿಗಿಲಾಯಿತು. +‘ಮನೆ ಪಾಲು ಮಾಡಿ ನೀವು ಆ ಮನೆ ಮಾರುವುದು ಅಂದರೆ ಚಂಪಾ ಮನೆ ಬಿಡಬೇಕಲ್ಲವೇ?.’ +‘ಇಲ್ಲ, ಅವಳು ಅಲ್ಲಿಂದ ಹೋಗುವುದಿಲ್ಲ. ಮನೆಯ ಹಿತ್ತಲ ಭಾಗ ನನಗೆ ಕೊಟ್ಟರೆ ಸಾಕು ಅಂತ ಹೇಳಿದ್ದೇನೆ. ಮುಂದಿನ ಭಾಗದ ಹಿತ್ತಿಲು ಅಣ್ಣನಿಗೆ. ಹಿಂದಿನ ಹಿತ್ತಿಲಿಗೆ ಪ್ರತ್ಯೇಕವಾದ ದಾರಿಯೂ ಇದೆ. ಹಾಗಾಗಿ ಅದನ್ನು ಮಾತ್ರ ಮಾರಬಹುದು. ಇದರ ಬಗ್ಗೆ ಕಾಗದ ಪತ್ರ ಎಲ್ಲ ಮಾಡಿಸಿಕೊಂಡು ಬಂದಿದ್ದೇನೆ. ಅವನ ಸಹಿಯೊಂದು ಬೇಕು ಅಷ್ಟೇ.’ +ಚಂದ್ರಹಾಸ ಬ್ಯಾಗಿನಿಂದ ಕಾಗದಪತ್ರಗಳ ಕಟ್ಟನ್ನು ತೆಗೆದ. ಎರಡು ದಪ್ಪ ರಟ್ಟುಗಳ ನಡುವೆ ಹಸಿರು ಬಣ್ಣದ ಮುದ್ರೆಗಳ ಸ್ಟ್ಯಾಂಪ್ ಪೇಪರುಗಳಿದ್ದವು. ಮನೋಹರ ಇವುಗಳನ್ನು ಒಯ್ದು ಕಾಶೀಶನಿಂದ ಸಹಿ ಮಾಡಿಸಿ ತರುತ್ತಾನೆ ಎಂಬುದು ಖಾತ್ರಿಯೆಂಬಂತೆ ಅವನು ಅದರಲ್ಲಿ ಸಹಿ ಮಾಡಬೇಕಾದ ಜಾಗಗಳನ್ನು ತೋರಿಸಲು ಹಾಳೆಗಳನ್ನು ತಿರುವತೊಡಗಿದ. +‘ನೋಡು ಚಂದ್ರಹಾಸ, ನನಗೆ ನಿನ್ನ ಸಮಸ್ಯೆ ಅರ್ಥವಾಗುತ್ತದೆ. ಆದರೆ ಇದಕ್ಕೆ ನಾನೇನೂ ಮಾಡುವಂತಿಲ್ಲ. ನನಗೆ ಗೊತ್ತಿರುವ ವ್ಯಕ್ತಿಗೆ ಕಾಶೀಶನ ಹೋಲಿಕೆ ಇದೆ ಎಂದು ನನಗೆ ಒಮ್ಮೆ ಅನಿಸಿದ ಮಾತ್ರಕ್ಕೆ ಅವನೇ ಕಾಶೀಶನಾಗುವುದಿಲ್ಲ.’ +ತನ್ನ ಮಾತುಗಳನ್ನು ಕೇಳಿಸಿಕೊಂಡರೆ ಮನೋಹರನಿಗೆ ಮನವರಿಕೆಯಾಗುತ್ತದೆ ಎಂದು ಖಂಡಿತ ನಂಬಿದವನಂತೆ ಚಂದ್ರಹಾಸ ವಿವರವಾಗಿ ಹೇಳತೊಡಗಿದ: +‘ನೀವೊಂದು ಸಲ ಪ್ರಯತ್ನಿಸಿ ನೋಡಿ. ಅವನಿಗೆ ಇಲ್ಲಿಯ ಪರಿಸ್ಥಿತಿ ಹೇಳಿದರೆ ಹೀಗೆಲ್ಲ ಆಯಿತು ಅಂತ ಹೇಳಿದರೆ ಮನಸ್ಸು ಬದಲಾಯಿಸಬಹುದು. ಅಮ್ಮ ಅವನನ್ನೇ ನೆನೆದು ಸತ್ತಳು ಅಂತ ಹೇಳಿ. ಅವನು ಮನೆಗೆ ಮಾಡಬೇಕಾದ ಕರ್ತವ್ಯಗಳನ್ನೆಲ್ಲ ನನ್ನ ಕೈಲಾದಷ್ಟು ಮಾಡಿದ್ದೇನೆ ಎಂದು ಹೇಳಿ. ಈಗ ನನ್ನ ಭವಿಷ್ಯ ಅವನ ಸಹಿಯ ಮೇಲೆ ನಿಂತಿದೆ ಎಂದು ಹೇಳಿ. ಈ ಆಸ್ಥಿಯನ್ನು ಅವನ ಒಪ್ಪಿಗೆಯಿಲ್ಲದೇ ಮಾರಲು ಸಾಧ್ಯವೇ ಇಲ್ಲ. ಅವನು ಬದುಕಿಲ್ಲವೆಂದು ಹೇಳಿ, ಅವನಿಗೆ ವಾರಸುದಾರರು ಯಾರೂ ಇಲ್ಲವೆಂದು ಹೇಳಿ ಇದನ್ನೆಲ್ಲ ಮುಗಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಹಾಗೆ ಮಾಡಿದರೆ ಅಮ್ಮನಿಗೆ ಅನ್ಯಾಯ ಮಾಡಿದಂತೆ. ಅದಕ್ಕಿಂತ ಹೆಚ್ಚಾಗಿ ಚಂಪಕ್ಕ ಇದಕ್ಕೆ ಒಪ್ಪುವುದಿಲ್ಲ. ಮತ್ತು ಇದೆಲ್ಲ ಕೋರ್ಟಿನಲ್ಲಿ ವರ್ಷಗಟ್ಟಳೆ ನಡೆಯುವ ವ್ಯವಹಾರಗಳು. ನನಗೆ ಇಂಥ ಅವಕಾಶ ಪದೇ ಪದೇ ಸಿಗುವುದೂ ಇಲ್ಲ. ನನಗೆ ತುರ್ತಾಗಿ ಹಣ ಬೇಕು. ಈಗ ಇದೆಲ್ಲ ಆದರೆ, ನಾನು ಹಿತ್ತಿಲು ಮಾರಿ ವ್ಯಾಪಾರ ಶುರುಮಾಡಿದರೆ, ಮಾಡಿದ ಹಾಗೆ; ಇಲ್ಲವಾದರೆ ಮತ್ತೆ ಯಾವತ್ತಿಗೂ ಇದು ಆಗುವ ಮಾತಲ್ಲ. ನಾನು ಈ ಊರಲ್ಲೇ ಇದ್ದರೆ ಗೆರೆಟೆ ಹಿಡಿಯುವ ಪರಿಸ್ಥಿತಿ ಬರುತ್ತದೆ. ನೀವು ಇನ್ನೊಂದು ಸಲ ಕೇಳಿ ನೋಡಿ. ಅವನು ಬರುವುದು ಬೇಡ. ನಮ್ಮನ್ನು ನೋಡುವುದು ಬೇಡ. ಅವನ ಪಾಲಿಗೆ ನಾವೆಲ್ಲ ಸತ್ತು ಹೋಗಿದ್ದೇವೆಂದು ಅಂದುಕೊಂಡಿದ್ದಾನಲ್ಲವೆ? ಹಾಗೆ ಅಂದುಕೊಂಡೇ ಇರಲಿ. ಇದಕ್ಕೆ ಸಹಿ ಹಾಕಿ ಇದೆಲ್ಲದರಿಂದ ಕಳಚಿಕೊಂಡು ಬಿಡಲಿ. ನಾವು ಅವನ ಪಾಲಿಗೆ ಇಲ್ಲ ಎಂದು ಅವನೇ ಒಮ್ಮೆ ಹೇಳಿ, ಕಾಡುತ್ತಿರುವ ಅವನ ಭೂತದಿಂದ ನಮ್ಮನ್ನು ಬಿಡುಗಡೆಗೊಳಿಸಲಿ.’ +ಮನೋಹರ ಟೇಬಲ್ಲಿನ ಕೆಳಗೆ ಕೈ ಒಯ್ದು ಗಡಿಯಾರ ನೋಡಿಕೊಂಡ. ಹನ್ನೊಂದರ ಬಸ್ಸು ಸಿಗುವ ಸಾಧ್ಯತೆಗಳಿಲ್ಲ ಅನಿಸಿತು. ಅವನ ಹಿಂಜರಿಕೆ ಇನ್ನೂ ಕಡಿಮೆಯಾಗಿಲ್ಲದ್ದನ್ನು ಗಮನಿಸಿ ಚಂದ್ರಹಾಸ ಮುಂದುವರಿಸಿದ. +‘ನಾನು ಬಿ.ಎ. ಮಾಡಿದೆ. ವರ್ಷಗಟ್ಟಲೆ ಬರೀ ಅರ್ಜಿ ಹಾಕುವುದರಲ್ಲೇ ಕಳೆದೆ. ಒಂದು ಚಾ ಕುಡಿಯಲಿಕ್ಕೂ ಅಮ್ಮನೋ ಅಕ್ಕನೋ ದುಡ್ಡು ಕೊಡಬೇಕಿತ್ತು. ಹೀಗೆ ಎಷ್ಟು ದಿನ ನಡೆಯುತ್ತದೆ? ಟ್ರಕ್ಕಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅದು ನನಗೆ ಆಗಲಿಲ್ಲ. ಈಗ ಪೆಟ್ರೋಲು ಪಂಪಿನಲ್ಲಿ ಕೆಲಸ ಮಾಡುತ್ತೇನೆ. ಕಾಲೇಜು ಓದಿ ಏನು ಬಂದ ಹಾಗಾಯಿತು? ಐನೂರು ರೂಪಾಯಿ ಪಗಾರ ನನಗೆ. ಈಗ ಇದು ಆಗದಿದ್ದರೆ ಮತ್ತೆ ಯಾವಾಗಲೂ ಅಗುವುದಿಲ್ಲ ಎಂದು ನನ್ನ ಮನಸ್ಸಿಗೆ ಗೊತ್ತಿದೆ….’ ಮಾತಾಡಿ ಮುಗಿಸುತ್ತಿದ್ದ ಹಾಗೆ ಚಾ ಕಪ್ಪನ್ನೆತ್ತಿ ಒಂದೇ ಗುಟುಕಿಗೆ ಉಳಿದದ್ದನ್ನು ಕುಡಿದುಬಿಟ್ಟ. +ಮನೋಹರನ ಮೌನವನ್ನು ಹೇಗೆ ಅರ್ಥೈಸುವುದೆಂದು ಚಂದ್ರಹಾಸನಿಗೆ ಗೊತ್ತಾಗಲಿಲ್ಲ. +‘ಅವನ ಫೋನ್ ನಂಬರು ಅಥವಾ ವಿಳಾಸ ಕೊಟ್ಟರೆ ನಾನೇ ಹೋಗಿ ಮಾತಾಡುತ್ತೇನೆ. ಅವನ ಪಿತ್ತ ಇಳಿಸುತ್ತೇನೆ. ಅವನೇನೋ ತಪ್ಪಿಸಿಕೊಂಡು ಹೋದ. ನಾನು ಇಲ್ಲಿ ಸಿಕ್ಕಿ ಬಿದ್ದಿದ್ದೇನೆ. ಅವನು ಕೊಡಬೇಕಾದ ಕರ್ತವ್ಯಗಳನ್ನು ನಾನು ಮಾಡಿದ್ದೇನೆ….’ ಚಂದ್ರಹಾಸನ ದನಿಯಲ್ಲಿ ಈಗ ಸಿಟ್ಟು ಸೇರಿಕೊಂಡಿತ್ತು. +ಯಾವುದರ ಬಗ್ಗೆಯೂ ಖಚಿತತೆ ಇಲ್ಲದೇ ಕಶ್ಯಪನ ವಿಳಾಸ ತಾನು ಕೊಡುವುದು ಉಚಿತವಲ್ಲ ಎಂದು ಮನೋಹರನಿಗೆ ಅನಿಸಿತು. ಚಂದ್ರಹಾಸನ ಬಗ್ಗೆ ಮರುಕವಾಯಿತು. ಅವನ ಆರ್ತವಾದ ಮುಖದಲ್ಲಿ ಸುಳ್ಳಿನ ಛಾಯೆಯಿರಲಿಲ್ಲ. ಅವನಿಗೆ ಸಹಾಯ ಮಾಡುವುದು ಹೇಗೆಂದು ಮಾತ್ರ ಗೊತ್ತಾಗಲಿಲ್ಲ. +‘ನೀವು ಈ ಪೇಪರುಗಳನ್ನು ತಗೊಂಡು ಹೋಗಿ. ಎಂಟು ದಿವಸ ಇಟ್ಟುಕೊಳ್ಳಿ. ನಿಮಗೆ ಮಾತಾಡಬೇಕು ಅನಿಸಿದರೆ ಮಾತಾಡಿ. ಇಲ್ಲವಾದರೆ ಇವುಗಳನ್ನು ಹಿಂದಕ್ಕೆ ಕಳಿಸಿ. ನಿಮಗೆ ಅವನೇ ನನ್ನ ಅಣ್ಣ ಅಂತ ಖಾತರಿಯಾದರೆ ನನಗೆ ಒಂದು ಮಾತು ತಿಳಿಸಿಬಿಡಿ. ನಾನೇ ತಕ್ಷಣ ಬಂದುಬಿಡುತ್ತೇನೆ. ಈ ನಂಬರಿಗೆ ಫೋನ್ ಮಾಡಿ ಮೆಸೇಜ್ ಇಟ್ಟರೆ ನನಗೆ ಸಿಗುತ್ತದೆ. ನನ್ನ ವಿಳಾಸ ಈ ಚೀಟಿಯಲ್ಲಿದೆ.’ +ಸುಮ್ಮನೇ ಈ ಪೇಪರುಗಳನ್ನು ತಗೊಂಡು ಇದನ್ನು ಸದ್ಯಕ್ಕೆ ಮುಗಿಸಬೇಕು ಎಂದು ಮನೋಹರ ನಿರ್ಧರಿಸಿದ. ಬೆಂಗಳೂರಿಗೆ ಹೋದ ನಂತರ ಎಲ್ಲವನ್ನೂ ಹಿಂದಕ್ಕೆ ಕಳಿಸಬಹುದು ಎಂದು ತನ್ನಲ್ಲೇ ತರ್ಕ ವಿತರ್ಕ ಹೂಡಿ ಕೈಚಾಚಿದ. ಚಂದ್ರಹಾಸನಿಗೆ ಖುಷಿಯಾಯಿತು. ಎಲ್ಲಿ ಸಹಿ ಮಾಡಬೇಕೆಂದು ಪೆನ್ಸಿಲ್ಲಿನಲ್ಲಿ ಗುರುತು ಮಾಡಿದ್ದನ್ನು ಹೇಳಿದ. ಎಲ್ಲವನ್ನೂ ಮರಳಿ ಕಟ್ಟಿ, ಒಂದು ಕಂದು ಕಾಗದದ ಕವರಿನಲ್ಲಿ ಹಾಕಿ, ಅದನ್ನು ಮತ್ತೊಂದು ಪ್ಲ್ಯಾಸ್ಟಿಕ್ ಕವರಿನಲ್ಲಿಟ್ಟು, ಅದಕ್ಕೆ ರಬ್ಬರ್ ಬ್ಯಾಂಡ್ ಹಾಕಿ ಮನೋಹರನ ಕೈಯಲ್ಲಿಡುತ್ತ ‘ಬಹಳ ಬಹಳ ಉಪಕಾರವಾಯಿತು’ ಅಂದ. +ಚಹಾ ಕುಡಿದ ಬಿಲ್ಲನ್ನು ಮನೋಹರನೇ ಕೊಟ್ಟ. +ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […] +“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_520.txt b/Kannada Sahitya/article_520.txt new file mode 100644 index 0000000000000000000000000000000000000000..331f90ece462e62a7559031d36951e74126ecc6a --- /dev/null +++ b/Kannada Sahitya/article_520.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? +ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; +ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ +ನವಿರು ವಸ್ತ್ರದಸಂಖ್ಯ ಥಾನು ಥಾನು. +***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. ***** +ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_521.txt b/Kannada Sahitya/article_521.txt new file mode 100644 index 0000000000000000000000000000000000000000..e3fc27bf3a7be31e28d82cee488015ef7bd7365f --- /dev/null +++ b/Kannada Sahitya/article_521.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಂಬನಿಯೆ, ನೀನೀಸು ದಿನವಲ್ಲಿ ಹುದುಗಿದ್ದೆ +ಯಾವ ಹೃದಯದ ತಳವ ಸೋಸುತಿದ್ದೆ? +ನಾನು ನೀನೂ ಅವಳಿ-ಜವಳಿಯೆಂಬುದ ಮರೆತು +ಯಾರ ನಿಟ್ಟುಸಿರೊಡನೆ ಬೆರೆಯುತಿದ್ದೆ? +ಇಂದು ನಾನಾಗಿಯೇ ಕರೆವೆ ಕನಿಕರಿಸಿ ಬಾ +ಇಳಿಸು ನನ್ನೆದೆ ಭಾರ ದುಃಖಪೂರ! +ಮರಮಳೆಗೆ ಕೆರೆ ತುಂಬಿ ಕೋಡಿ ಬಿದ್ದಾಕ್ಷಣದಿ +ಕೊಚ್ಚಿಕೊಂಡೊಯ್ವತೆರ ಮಲೆತ ನೀರ! +ಕಂಬನಿಯೆ, ಅನುಭವದ ಖಣಿಯ ಮಣಿಯೆ! +ಬಾಳುದ್ದಕೂ ನಾನು ನಿನಗೆ ಋಣಿಯೆ? +ಕಂಡವರಿಗೆಲ್ಲ ನೀ ಸಿಕ್ಕಬಹುದೆ? +ನೀನಿರದ ಸುಖ ಜಗಕೆ ದಕ್ಕಬಹುದೆ? +***** +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ ಅರಸದಿದ್ದರು ಕಾಲ ತೊಡಕುವೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_522.txt b/Kannada Sahitya/article_522.txt new file mode 100644 index 0000000000000000000000000000000000000000..9e3c43e618f20da4fcc3ac7a10bfeda5af2340cc --- /dev/null +++ b/Kannada Sahitya/article_522.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ಮೂರು +ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು ಬಂಗಾರವನ್ನು ಕೊಟ್ಟದ್ದು, ಅದರಿಂದ ಉದ್ಭವಿಸಿದ ಹೊಸ ಸಮಸ್ಯೆಯನ್ನು ವಿವರಿಸಿ, ತಾಳೆಗರಿ-ಗ್ರಂಥಗಳನ್ನೆಲ್ಲ ಬಿಚ್ಚಿ ಧರ್ಮಶಾಸ್ತವೇನೆನ್ನುತ್ತದೆಂದು ಹುಡುಕುತ್ತ ಕೂತರು. ಯಾವತ್ತಿನಿಂದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಉಳಿದ. ಅಗ್ರಹಾರದಲ್ಲಿ ಕೊನೆಗೆ ನಿಲ್ಲುವುದು ಸನಾತನಧರ್ಮವನ್ನು ಹಿಡಿದ ತನ್ನ ತಪಸ್ಸೋ ಅಥವ ಅವನ ರಾಕ್ಷಸ ಸ್ವಭಾವವೋ ಎಂದು ಅವರ ಹಠ. ಯಾವ ಶನಿಕಾಟದಿಂದ ಅವನು ಹೀಗಾದನೋ ಎಂದು ನೊಂದು, ದೇವರ ದಯದಿಂದ ಅವನು ಉದ್ಧಾರವಾಗಲಿ ಎಂದು ಅವರು ವಾರದಲ್ಲಿ ಎರಡು ದಿನ ರಾತ್ರೆ ಊಟ ಬಿಟ್ಟು ಒಪ್ಪತ್ತು ಮಾಡುತ್ತಿದ್ದರು. ಅಲ್ಲದೆ ಅವನ ಬಗ್ಗೆ ಅವರ ಹೃದಯದಲ್ಲಷ್ಟು ಪಶ್ಚಾತ್ತಾಪ, ಕಳವಳ ಇರೋಕ್ಕೆ ಕಾರಣ ಅವನ ತಾಯಿಗೆ ತಾನು ಕೊಟ್ಟಿದ್ದ ವಚನ ’ನಿನ್ನ ಮಗನ ಹಿತಾನ್ನ ಕಾಯುತ್ತೇನೆ, ಅವನನ್ನು ಒಳ್ಳೆಯ ಮಾರ್ಗಕ್ಕೆ ತರುತ್ತೇನೆ’-ಹೀಗೆ ಸಾಯುವ ಮುದುಕಿಗೆ ಧೆರ್ಯ ಹೇಳಿದ್ದರು. ಆದರೆ ನಾರಣಪ್ಪ ಮಾರ್ಗ ಹತ್ತಲಿಲ್ಲ; ಬುದ್ಧಿವಾದ ಕಿವಿಗೆ ಹಾಕಿಕೊಳ್ಳಲಿಲ್ಲ. ತಾನು ವೇದ ಹೇಳಿ, ಮಂತ್ರಗಳನ್ನು ಬಾಯಿಪಾಠ ಮಾಡಿಸಿ ಬೆಳೆಸಿದ ಗರುಡನ ಮಗ ಶ್ಯಾಮ, ಲಕ್ಷ್ಮಣನ ಅಳಿಯ ಶ್ರೀಪತಿ-ಇಬ್ಬರನ್ನೂ ತನ್ನ ವರ್ಚಸ್ಸಿನಿಂದ ಕಸಿದುಕೊಂಡ. ಶ್ಯಾಮನಿಗೆ ಮನೆ ಬಿಟ್ಟು ಓಡಿಸಿ ಮಿಲಿಟರಿ ಸೇರಲು ಪ್ರೇರೇಪಿಸಿದ. ಗರುಡಾ ಲಕ್ಷ್ಮಣರು ತಂದ ದೂರುಗಳನ್ನು ಕೇಳಿ ಕೇಳಿ ಸಾಕಾಗಿ ಅವರು ಒಂದು ದಿನ ಅವನಲ್ಲಿಗೆ ಹೋಗಿದ್ದರು. ಸುಪ್ಪತ್ತಿಗೆಯ ಮೇಲೆ ಮಲಗಿದ್ದವ ತನ್ನನ್ನು ಕಂಡು ಎದ್ದು ಕೂರುವಷ್ಟು ಮರ್ಯಾದೆ ತೋರಿಸಿದ. ಆದರೆ ಹಿತಾ ಹೇಳಲು ಹೋದರೆ ಯದ್ವಾತದ್ವ ಮಾತಾಡಿದ. ಬ್ರಾಹ್ಮಣ ಧರ್ಮವನ್ನ ಜರಿದ : ’ಇನ್ನು ನಿಮ್ಮ ಶಾಸ್ತ ನಡೆಯೋದಿಲ್ಲ. ಮುಂದೆ ಬರೋದು ಕಾಂಗ್ರೆಸ್ಸು. ಪಂಚಮರನ್ನ ದೇವಸ್ಥಾನದೊಳಕ್ಕೆ ಬಿಡಬೇಕು’ ಎಂದೆಲ್ಲ ಏನೇನೊ, ಅಸಂಬದ್ಧ ಪ್ರಲಾಪಿಸಿದ. ಬೇಡವೋ ಎಂದೆ. ಆ ಶ್ರೀಪತಿಯನ್ನ ಅವನ ಹೆಂಡತಿಯಿಂದ ದೂರ ಮಾಡಬೇಡವೋ ಎಂದೆ. ಅಹಹಾ ಎಂದು ನಕ್ಕುಬಿಟ್ಟ. ಸುಖ ಕೊಡದ ಹುಡುಗಿಯ ಕೂಡ ಯಾರು ತಾನೇ ಸಂಸಾರ ಮಾಡುತ್ತಾರೆ ಆಚಾರ್ಯರೇ, ಗೊಡ್ಡು ಬ್ರಾಹ್ಮಣರನ್ನ ಬಿಟ್ಟರೆ-ಎಂದು ಮೂದಲಿಸಿದ. ’ಸಂಬಂಧಾಂತ ನನಗೆ ಭ್ರಾಂತಿ ಹಿಡಿದ ಹುಡುಗಿನ್ನ ಕಟ್ಟಿ ಹಾಳುಮಾಡಬೇಕೂಂತ ಇದ್ದಿರಲ್ಲ-ನೀವು-ಬ್ರಾಹ್ಮಣರು-ನಿಮ್ಮ ಧರ್ಮ ನಿಮಗೇ ಇರಲಿ-ಇರೋದು ಒಂದು ಆಯುಷ್ಯ. ನಾನು ಚಾರ್ವಾಕವಂಶದವ ’ಋಣಂ ಕೃತ್ವಾ ಘೃತಂ ಪಿಬೇv’-ಎಂದ. ಈ ಭೌತಶರೀರ ಶಾಶ್ವತವಲ್ಲಪ್ಪ ಎಂದು ಬೋಧಿಸಿದೆ; ಬೇಡಿದೆ; ’ನೀನು ಏನೇ ಮಾಡು, ಹುಡುಗರನ್ನಾದರೂ ಹಾಳುಮಾಡಬೇಡ’ ಎಂದು ಅಂಗಲಾಚಿದೆ. ಅದಕ್ಕೂ ನಕ್ಕುಬಿಟ್ಟ. ’ಮುಂಡೆಯರ ಆಸ್ತಿಗೆ ಮುಟ್ಟುಗೋಲು ಹಾಕಿ, ಮಾಟಮಂತ್ರ ಮಾಡಿಸಿ, ಕೆಟ್ಟದ್ದು ಬಗೆಯುವ ಗರುಡ ನಿಮ್ಮ ಪ್ರಕಾರ ಬ್ರಾಹ್ಮಣನೋ?’ ಎಂದು ಗೇಲಿ ಮಾಡಿದ. ’ಕೊನೆಯಲ್ಲಿ ಗೆಲ್ಲೋದು ನಾನೋ, ನೀವೋ? ನೋಡುವ ಆಚಾರ್ಯರೆ, ಎಷ್ಟು ದಿನ ಈ ಬ್ರಾಹ್ಮಣ್ಯ ಉಳಿಯುತ್ತೆ ಅಂತ? ಈ ಬ್ರಾಹ್ಮಣ್ಯದ ಮರ್‍ಯಾದೇನೆಲ್ಲ ನಾನು ಬೇಕಾದರೆ ಒಂದು ಹೆಣ್ಣಿನ ಸುಖಕ್ಕೆ ಸುಳಿದು ಹಾಕಿಬಿಡ್ತೇನೆ. ನೀವಿನ್ನು ಹೊರಡಿ. ಹೆಚ್ಚಿಗೆ ಮಾತಾಡಿ ನಿಮ್ಮನ್ನು ನೋಯಿಸೋಕ್ಕೆ ಇಷ್ಟವಿಲ್ಲ’ ಎಂದುಬಿಟ್ಟಿದ್ದ. ಇಂತಹ ಪ್ರಾಣಿಗೆ ಬಹಿಷ್ಕಾರ ಹಾಕಿಸೋಕ್ಕೆ ನಾನು ಯಾಕೆ ಅಡ್ಡಬಂದೆ? ಭೀತಿಯೋ? ಪಶ್ಚಾತ್ತಾಪವೋ? ಕೊನೆಗೆ ನಾನೇ ಗೆಲ್ಲುವೆನೆಂಬ ಹಟವೋ? ಅಂತೂ ಅವನು ಅಂದ ಹಾಗೆ-ಬದುಕಿದ್ದಾಗ ಹೇಗೋ ಹಾಗೆ ಈಗ ಸತ್ತು ನನ್ನ ಬ್ರಾಹ್ಮಣ್ಯದ ಸತ್ವಪರೀಕ್ಷೆ ಮಾಡುತ್ತಿದ್ದಾನೆ. ಕೊನೆಯ ಸಾರಿ ನಾರಣಪ್ಪನನ್ನು ನೋಡಿದ್ದೆಂದರೆ ಮೂರು ತಿಂಗಳ ಹಿಂದೆ ಚತುರ್ದಶಿಯ ಒಂದು ಸಂಜೆ. ಅವತ್ತು ಬೆಳಿಗ್ಗೆ ಅವ ಮುಸಲ್ಮಾನರನ್ನ ಕರೆದುಕೊಂಡು ಹೋಗಿ, ಗಣಪತಿದೇವಸ್ಥಾನದ ಹೊಳೆಯ ದೇವರ ಮೀನನ್ನು ಹಿಡಿದು, ಅಗ್ರಹಾರದಲ್ಲಿ ಎಲ್ಲರ ಕಣ್ಣೆದುರು ಎತ್ತಿಕೊಂಡು ಹೋದ ಎಂದು ಗರುಡಾಚಾರ್ಯ ದೂರು ತಂದಿದ್ದ. ಮೇಲಕ್ಕೆ ಬಂದು ಕೆಯಿಂದ ಅಕ್ಕಿಯನ್ನು ತಿಂದು, ಹೊಳೆಯಲ್ಲಿ ನಿರಂಬಳ ಕ್ರೀಡಿಸುವ ಆ ಆಳೆತ್ತರದ ಮೀನುಗಳನ್ನು ಹಿಡಿದರೆ ರಕ್ತಕಾರಿ ಸಾಯುತ್ತಾರೆಂಬ ನಂಬಿಕೆಯನ್ನು ನಾರಣಪ್ಪ ನಿರ್ಲಕ್ಷಿಸಿದನೆಂದು ಪ್ರಾಣೇಶಾಚಾರ್ಯರಿಗೆ ಗಾಬರಿಯಾಯಿತು: ಇವ ಹೀಗೆ ದಾರಿ ಹಾಕಿಕೊಟ್ಟ ಮೇಲೆ ಶೂದ್ರಾದಿಗಳಾಗಿ ಎಲ್ಲರಿಗೂ ನ್ಯಾಯಧರ್ಮದ ಅಂಕೆ ತಪ್ಪಿ ಹೋಗದೆ ಇರುತ್ತದೋ? ದೆವ ಭಯದಿಂದಲಾದರೂ ಸಾಮಾನ್ಯರಲ್ಲಿ ಇಷ್ಟಾದರೂ ಧರ್ಮಬುದ್ಧಿ ಈ ಕಲಿಗಾಲದಲ್ಲಿ ಉಳಿದಿರೋದು. ಅದೂ ನಾಶವಾದರೆ? ಈ ಭೂಮಿಯನ್ನು ಎತ್ತಿಹಿಡಿಯೋ ಶಕ್ತಿ ಇನ್ನೆಲ್ಲಿ ಉಳಿದಿರುತ್ತೆ? ಈಗ ತಾನು ಸುಮ್ಮನಿರೋದು ಅತ್ಯಂತ ಅನುಚಿತವೆಂದು ದಡದಡನೆ ನಡೆದು ನಾರಣಪ್ಪನ ಮುಖಕ್ಕೆ ಮುಖಕೊಟ್ಟು ಅವನ ಪಡಸಾಲೆಯಲ್ಲಿ ನಿಂತರು. ಕುಡಿದಿದ್ದ ಎಂದು ಕಾಣುತ್ತದೆ : ಕಣ್ಣು ಕೆಂಪಾಗಿತ್ತು, ಕ್ರಾಪು ಕೆದರಿತ್ತು… ಆಗ-ತನ್ನನ್ನು ಕಂಡೊಡನೆ ಧಡ್ಡನೆದ್ದು ಬಟ್ಟೆಯಿಂದ ಬಾಯಿ ಮುಚ್ಚಿಕೊಂಡನಲ್ಲವೆ? ಅವನ ಸ್ವಭಾವ ಚಕ್ರವ್ಯೂಹದಂತೆಂದು, ಅದರೊಳಕ್ಕೆ ತನಗೆ ಹೋಗಲು ಪ್ರಾಯಶಃ ಎಡೆಯಿಲ್ಲವೆಂದು ಕೆಲವೊಮ್ಮೆ ಪರಿತಪಿಸುತ್ತಿದ್ದ ಆಚಾರ್ಯರಿಗೆ, ಅವನ ಗರ್ವದ ರಾವಣತ್ವದಲ್ಲಿ ತನ್ನನ್ನು ಕಂಡು ಅಂಜುವಷ್ಟಾದರೂ ಬಿರುಕು ಬಿಟ್ಟಿದ್ದು ನೋಡಿ, ಒಳಗಿನಿಂದ ಸಾತ್ವಿಕಶಕ್ತಿ ನುಗ್ಗಿದಂತಾಗಿ ಆಶೋದಯವಾಯಿತು. ಈಗ ಮಾತು ವ್ಯರ್ಥವೆಂದು ಅವರಿಗೆ ಗೊತ್ತು. ತನ್ನೊಳಗಿನ ಸಾತ್ವಿಕ ಗಂಗಾಜಲ ಅವನೊಳಕ್ಕೆ ಮೌನವಾಗಿ ನುಗ್ಗದ ಹೊರ್ತು ಅವನು ಅರಳುವವನಲ್ಲವೆಂದು ಅವರಿಗೆ ಗೊತ್ತು. ಗರುಡನಂತೆರಗಿ ಅವನನ್ನು ಜರ್ಜರಗೊಳಿಸಿ ಒಳಗಿನ ಅಮೃತವನ್ನು ಪುಟಿಸಬೇಕೆಂದು ಕಾಮದಂತಹ ಆಸೆ ಎದ್ದಿತು. ಕಠೋರವಾಗಿ ನೋಡಿದರು. ಸಾಮಾನ್ಯ ಪಾಪಿ ಅಂಜಿ, ಹೇಸಿ, ಭೂಗತವಾಗಬೇಕು-ಹಾಗೆ ನೋಡಿದರು. ಇವನ ಕಣ್ಣಿಂದ ಪಶ್ಚಾತ್ತಾಪದ ಎರಡು ಹನಿ ನೀರು ಬೀಳಲಿ ಸಾಕು. ತನಗಿಂತ ಐದು ವರ್ಷ ಕಿರಿಯವನಾದ ನಾರಣಪ್ಪನನ್ನು ಭ್ರಾತೃವಾತ್ಸಲ್ಯದಿಂದ ಹಿಡಿದಪ್ಪಿಬಿಡುತ್ತೇನೆಂದು ಕಾಮಿಸಿ ನೋಡಿದರು. ನಾರಣಪ್ಪ ತಲೆತಗ್ಗಿಸಿದ. ಭರ್ರನೆ ಹಾರಿ ಕವಿದುಕೊಂಡ ಗರುಡನ ತೊಡೆಗೆ ಸಿಕ್ಕಿದವನಂತೆ, ಕ್ಷಣ ಹುಳುವಾದಂತೆ, ಮುಚ್ಚಿದ ಬಾಗಿಲೊಂದನ್ನು ತುಸು ತೆರೆದು ಇಣುಕಿ ತಬ್ಬಿಬ್ಬಾದ ಹಾಗೆ-ಕಂಡ… ಇಲ್ಲ. ಬಾಯಿಂದ ಬಟ್ಟೆಯನ್ನು ತೆಗೆದು, ಕುರ್ಚಿಯ ಮೇಲೆ ಬಿಸಾಕಿ, ಗಹಗಹಸಿ ನಕ್ಕ: “ಚಂದ್ರೀ, ಎಲ್ಲಿ ಬಾಟಲು? ಆಚಾರ್ಯರಿಗಷ್ಟು ತೀರ್ಥ ಕೊಡು” “ಬಾಯಿ ಮುಚ್ಚು!” ಪ್ರಾಣೇಶಾಚಾರ್ಯರು ಸರ್ವಾಂಗ ಕಂಪಿಸುತ್ತ, ತಮ್ಮ ವರ್ಚಸ್ಸಿನಿಂದ ಥಟ್ಟನೆ ನುಣುಚಿಕೊಂಡವನನ್ನು ಕಂಡು, ಮೆಟ್ಟಲಿಳಿಯುವಾಗ ಪಾದತಪ್ಪಿದವರಂತೆ ಹತಾಶರಾದರು. “ಆಹಾ! ಆಚಾರ್ಯರಿಗೂ ಸಿಟ್ಟು ಬರುತ್ತದಲ್ಲವೆ? ಕಾಮಕ್ರೋಧಾದಿಗಳು ನಮ್ಮಂತಹವರಿಗೆ ಮಾತ್ರವೆಂದು ತಿಳಿದಿದ್ದೆ. ಕಾಮಾನ ತುಳಿದವನಿಗೆ ಕೋಪ ಮೂಗಿನ ತುದೀಲೇ ಇರುತ್ತಂತೆ… ದೂರ್ವಾಸ, ಪರಾಶರ, ಭೃಗು, ಬೃಹಸ್ಪತಿ, ಕಾಶ್ಯಪ-ಚಂದ್ರೀ, ಎಲ್ಲಿ ಬಾಟಲು? ಅಲ್ಲ ಆಚಾರ್ಯರೇ, ನಿಮ್ಮ ಋಷಿಗಳು ಸೆ ಬೇಕಾದರೆ. ಮೀನಿನ ವಾಸನೆಯವಳನ್ನ ದೋಣಿಯಲ್ಲೆ ಕೆಡೆಸಿ ಸುಗಂಧಿ ಮಾಡಿದವನ ಹೆಸರೇನು? ಅಂತಹ ಪರಂಪರೇಲಿ ಬಂದ ಈ ಅಗ್ರಹಾರದ ಬಡ ಬ್ರಾಹ್ಮಣರನ್ನ ನೋಡಿರಪ್ಪ…” “ನಾರಣಪ್ಪ, ಬಾಯಿ ಮುಚ್ಚು” ಎಂದೆ. ಚಂದ್ರಿ ಬಾಟಲು ತರದಿದ್ದುದನ್ನು ಕಂಡು ನಾರಣಪ್ಪ ರೇಗಿ ಸ್ವತಃ ಉಪ್ಪರಿಗೆಗೆ ದಡದಡನೆ ಹತ್ತಿ ಸಾರಾಯಿಯನ್ನು ತಂದು ಬಟ್ಟಲು ತುಂಬಿಸಿದ. ಚಂದ್ರಿ ಬೇಡವೆಂದು ಅವನ ಕೆ ಹಿಡಿಯಹೋದರೆ ಅವಳನ್ನು ನೂಕಿದ. ಪ್ರಾಣೇಶಾಚಾರ್ಯರು ಕಣ್ಣುಮುಚ್ಚಿ ಹೊರಡಲೆಂದು ಬೆನ್ನು ತಿರುಗಿಸಿದರು. “ಆಚಾರ್ಯರೆ, ಸ್ವಲ್ಪ ನಿಲ್ಲಿ” ಎಂದ. ತಾನೀಗ ಹೊರಟುಬಿಟ್ಟರೆ ಭೀತನಂತೆ ಕಾಣಿಸುವೆನೆಂದು ಹೆದರಿ ಪ್ರಾಣೇಶಾಚಾರ್ಯರು ಯಾಂತ್ರಿಕವಾಗಿ ನಿಂತರು. ಸಾರಾಯಿಯ ವಾಸನೆ ಅಸಹ್ಯವಾಯಿತು. “ಕೇಳಿ” ಎಂದು ನಾರಣಪ್ಪ ಆಜ್ಞೆಮಾಡಿ, ಬಟ್ಟಲಿನಿಂದ ಒಂದು ಗುಟುಕು ಕುಡಿದು ವಕ್ರವಾಗಿ ನಗುತ್ತ ಹೇಳಿದ: “ಕೊನೆಗೆ ಗೆಲ್ಲೋದು ನಾನೋ ನೀವೋ-ನೋಡುವ. ನಾನು ಬ್ರಾಹ್ಮಣ್ಯದ ನಾಶಮಾಡ್ತೇನೆ. ಮಾಡಿಯೇ ತೀರ್‍ತೇನೆ. ನನ್ನ ದುಃಖವೆಂದರೆ ನಾಶ ಮಾಡೋಕ್ಕೆ ಈ ಅಗ್ರಹಾರದಲ್ಲಿ ಬ್ರಾಹ್ಮಣ್ಯಾನೇ ಉಳಿದಿಲ್ಲಲ್ಲಾಂತ-ನಿಮ್ಮೊಬ್ಬರನ್ನ ಬಿಟ್ಟರೆ, ಗರುಡ, ಲಕ್ಷ್ಮಣ, ದುರ್ಗಾಭಟ್ಟ-ಅಹಹಾ-ಎಂಥ ಬ್ರಾಹ್ಮಣರಯ್ಯ? ನಾನೇನಾದರೂ ಬ್ರಾಹ್ಮಣನಾಗಿ ಉಳಿದಿದ್ದರೆ ನಿಮ್ಮ ಗರುಡಾಚಾರ್ಯ ನನ್ನನ್ನ ಆಪೋಶನಾ ತಗೊಂಡುಬಿಡ್ತಿದ್ದ. ಅಥವಾ ಆಸ್ತಿ ಮೇಲಿನ ಆಸೆಗೆ-ಹೇಲಿನಲ್ಲಿ ಬಿದ್ದಿರೋ ಕಾಸನ್ನ ನಾಲಗೇಂದ ನೆಕ್ಕಿ ತೆಗಿಯೋ ಆ ಲಕ್ಷ್ಮಣ ತನ್ನ ಇನ್ನೊಂದು ನರಪೇತಲ ನಾದಿನಿಯನ್ನ ನನಗೆ ಕಟ್ಟಿರುತ್ತಿದ್ದ. ಒಟ್ಟಿನಲ್ಲಿ-ಜುಟ್ಟು ಬಿಟ್ಟು, ಅಂಗಾರ ಹಾಕಿ ನಿಮ್ಮ ಕಟ್ಟೆ ಮೇಲೆ ಕೂತು, ನೀವು ಹೇಳೋ ಪುರಾಣಾನ್ನ ಕೇಳಿಸಿಕೊಂಡು ಇರಬೇಕಾಗಿತ್ತು…” ನಾರಣಪ್ಪ ಇನ್ನೊಂದು ಗುಟುಕು ಕುಡಿದು ತೇಗಿದ. ಒಳಗಿನಿಂದ ಭಯಗ್ರಸ್ತಳಾಗಿ ನೋಡುತ್ತ ನಿಂತಿದ್ದ ಚಂದ್ರಿ ಕೆಮುಗಿದು ಹೋಗಿರೆನ್ನುವಂತೆ ಸಂಜ್ಞೆಮಾಡಿದಳು. ಪ್ರಾಣೇಶಾಚಾರ್ಯರು ಮತ್ತೆ ತಿರುಗಿದರು-ಕುಡುಕನ ಜೊತೆ ಏನು ಹರಟೆ ಅಂತ. “ಆಚಾರ್ಯರೆ, ಕೇಳಿ ಇಲ್ಲಿ. ನಿಮ್ಮ ಮಾತನ್ನೇ ಯಾವತ್ತೂ ಅಗ್ರಹಾರ ಕೇಳ್ತಾ ಇರಬೇಕೆಂದು ಯಾಕೆ ಗರ್ವ? ಸ್ವಲ್ಪ ನನ್ನ ಮಾತನ್ನೂ ಕಿವಿಗೆ ಹಾಕಿಕೊಳ್ಳಿ. ನಾನೊಂದು ಪುರಾಣ ಹೇಳ್ತೇನೆ. ಕೇಳಿ! “ಒಂದು ಅಗ್ರಹಾರದಲ್ಲಿ ಒಬ್ಬ ಪರಮಪೂಜ್ಯ ಆಚಾರಿಯಿದ್ದ-ಒಂದಾನೊಂದು ಕಾಲದಲ್ಲಿ. ಅವನ ಹೆಂಡತಿ ಸದಾ ರೋಗಿಯಾದ್ದರಿಂದ ಸ್ತೀಸುಖವೇನೆಂದು ತಿಳಿಯದ ಅವನ ತೇಜಸ್ಸು-ಅಂದರೆ ಅವನ ಖ್ಯಾತಿ-ಊರೂರು ಹರಡಿತ್ತು. ಅಗ್ರಹಾರದಲ್ಲಿ ಉಳಿದ ಬ್ರಾಹ್ಮಣರು ಪರಮಪಾಪಿಗಳು. ಅನ್ನಮೂಲ, ಕಾಂಚನಮೂಲವಾದ ಸರ್ವಪಾಪಗಳನ್ನೂ ಮಾಡಿದವರು. ಅದರೆ ತಮ್ಮ ಪಾಪಾನ್ನ ಹೇಗೂ ಈ ಅಚಾರಿ ಮಾಡುವ ಪುಣ್ಯ ಮುಚ್ಚುತ್ತಲ್ಲಾಂತ ಅವರು ಇನ್ನಷ್ಟು ಪಾಪಾನ್ನ ಸಲೀಸಾಗಿ ಮಾಡತೊಡಗಿದರು. ಈ ಆಚಾರಿಯ ಪುಣ್ಯ ಏರಿದಷ್ಟೂ ಅವರ ಪಾಪಾನೂ ಏರಿತು. ಒಂದು ದಿನ ಒಂದು ತಮಾಷೆಯಾಯಿತು. ಏನು ಆಚಾರ್ಯರೆ, ಕೇಳಿಸಿಕೊಳ್ಳುತ್ತಿದ್ದೀರೇನು? ನಾವು ಮಾಡೋ ಕರ್ಮಕ್ಕೆಲ್ಲ ತದ್ರೂಪವಾದ ಫಲ ಹೇಗೋ ಹಾಗೆ ತದ್ವಿರುದ್ಧವಾದ ಫಲಾನೂ ಪ್ರಾಪ್ತವಾಗುತ್ತದೆ ಎಂಬೋದು ನನ್ನ ಕತೆಯ ನೀತಿ. ಕೇಳಿಸಿಕೊಂಡು ಉಳಿದ ಬ್ರಾಹ್ಮಣರಿಗೂ ಹೇಳಿ. “ಏನದು ತಮಾಷೇಂದರೆ ಆ ಅಗ್ರಹಾರದಲ್ಲಿ ಒಬ್ಬ ಯುವಕನಿದ್ದ. ಅವನ ಕೆಹಿಡಿದ ಹೆಂಡತಿ ಅವನ ಜೊತೆ ಮಲಗ್ತಾ ಇರಲಿಲ್ಲ-ಮಾತೃವಾಕ್ಯ ಪರಿಪಾಲನಾರ್ಥವಾಗಿ. ಆ ಯುವಕ ಈ ಆಚಾರಿ ಪುರಾಣ ಓದೋದನ್ನ ಕೇಳಲಿಕ್ಕೆಂದು ಪ್ರತಿ ಸಂಜೆಯೂ ಹಾಜರು. ಕಾರಣ-ಜೀವನದಲ್ಲಿ ಅನುಭವ ಇಲ್ಲದಿದ್ದರೂ ಈ ಆಚಾರಿ ಕಾವ್ಯಗೀವ್ಯಾಂದರೆ ಬಲೇ ರಸಿಕ. ಒಂದು ದಿನ ಕಾಳಿದಾಸನ ಶಕುಂತಲೆಯ ವರ್ಣನೆ ನಡೆದಿತ್ತು. ಮುಟ್ಟ ಹೋದರೆ ಚಿಗುಟಿದಾಂತ ತಾಯಿಯ ಹತ್ತಿರ ಹೋಗಿ ದೂರು ಹೇಳುವ ಹೆಂಡತಿಯಿಂದ ಬೇಸತ್ತ ಈ ಯುವಕನಿಗೆ ಆಚಾರಿಯ ವರ್ಣನೆಯಿಂದ ತನ್ನ ಮೆಯೊಳಗೆ ಒಂದು ಹೆಣ್ಣು ಬೆಳೆದಂತಾಗಿ, ತೊಡೇಲಿ ಕಿಚ್ಚು ಉರಿದು-ಅಂದರೆ ಏನೂ ಅಂತ ನಿಮಗೆ ಗೊತ್ತೆ, ಆಚಾರ್ಯರೇ?-ಆಚಾರಿ ಜಗುಲಿಂದ ಜಿಗಿದ, ಓಡಿದ. ಹೆಚ್ಚು ಕೇಳಿಸಿಕೊಳ್ಳೊ ಸಹನೆಯಿಲ್ಲದೆ ಸೀದ ಹೊಳೆಗೆ ತಣ್ಣೀರಿನಲ್ಲಿ ಮೀಯಲೆಂದು ಓಡಿದ. ಪುಣ್ಯವಶಾv ಅಲ್ಲೊಬ್ಬಳು ಹೊಲತಿ. ಬೆಳದಿಂಗಳು. ಪುಣ್ಯವಶಾv ಅವಳ ಮೆಮೇಲೆ ಅಷ್ಟೇನು ವಸ್ತವಿಲ್ಲದೆ ನೋಡಬೇಕೆಂದು ಅವನು ಬಯಸಿದ ಅಂಗಾಂಗಗಳೆಲ್ಲ ನಿರಾಯಾಸವಾಗಿ ಕಣ್ಣಿನ ಎದುರಿನಲ್ಲೆ. ನಿಮ್ಮ ಋಷಿ ಒಲಿದ ಮತ್ಸ್ಯಗಂಧೀ ತರಹದವಳು ಅವಳು. ಇವಳೇ ಶಕುಂತಳಾಂತ ಭ್ರಮಿಸಿ ಈ ಬ್ರಾಹ್ಮಣ ಯುವಕ ಅವಳನ್ನ ಅಲ್ಲೇ ಸಂಭೋಗಿಸಿಬಿಟ್ಟ-ಚಂದ್ರಸಾಕ್ಷಿಯಾಗಿ. “ಈಗ, ಅರ್ಥಮಾಡಿ ಹೇಳಿ, ಅಚಾರ್ಯರೆ: ಆ ಆಚಾರೀನೇ ಬ್ರಾಹ್ಮಣ್ಯಾನ್ನ ಹಾಳುಮಾಡಿದಂತೆ-ಹೌದೋ ಅಲ್ಲವೋ? ಅದಕ್ಕೇ ಹಿರಿಯರು ಹೇಳ್ತಾ ಇದ್ದದ್ದು: ವೇದ ಪುರಾಣ ಓದಿರೊ, ಆದರೆ ಅದಕ್ಕೆ ಅರ್ಥಮಾಡಲಿಕ್ಕೆ ಹೋಗಬೇಡಿರೊ-ಅಂತ. ಕಾಶಿಗೆ ಹೋಗಿ ಬಂದವರಲ್ಲವ ನೀವು? ನೀವೇ ಹೇಳಿ? ಬ್ರಾಹ್ಮಣ್ಯ ಯಾರಿಂದ ಕೆಟ್ಟಿತು?” ನಾರಣಪ್ಪನ ಮಾತನ್ನು ನಿಶ್ಚಲವಾಗಿ ನಿಂತು ಕೇಳುತ್ತ ಕೇಳುತ್ತ ಪ್ರಾಣೇಶಾಚಾರ್ಯರಿಗೆ ಕಳವಳವಾಯಿತು: ಕುಡುಕನ ತಲೆ ಕೆಟ್ಟ ಮಾತೋ? ನಿಜವೋ, ತನ್ನಿಂದ ಅಂತಹ ಪ್ರಮಾದವಾಗಿರೋದು ಶಕ್ಯವೋ? “ಪುಣ್ಯಕ್ಕೆ ನಾಲಿಗೆಯಿಲ್ಲಪ್ಪ, ಪಾಪಕ್ಕಿದೆ.” ಪ್ರಾಣೇಶಾಚಾರ್ಯರು ನಿಟ್ಟುಸಿರಿಟ್ಟು, “ದೇವರೇ ನಿನಗೆ ಕರುಣೆ ತೋರಿಸಬೇಕು-ಅಷ್ಟೇ” ಎಂದರು. “ನೀವು ರಸಭರಿತವಾದ ಪುರಾಣ ಓದುತ್ತೀರಿ: ಆದರೆ ಗೊಡ್ಡಾಗಿ ಬಾಳೂಂತ ಬೋಧಿಸ್ತೀರಿ. ಆದರೆ ನನ್ನ ಮಾತಿಗೆ ಒಂದೇ ಅರ್ಥ: ಹೆಣ್ಣಿನ ಜೊತೆ ಮಲಗು ಎಂದರೆ ಹೆಣ್ಣಿನ ಜೊತೆ ಮಲಗು; ಮೀನು ತಿನ್ನು ಎಂದರೆ ಮೀನು ತಿನ್ನು. ನಿಮಗೆಲ್ಲ ಒಂದು ಬುದ್ಧಿವಾದದ ಮಾತು ಹೇಳಲಾ, ಆಚಾರ್ಯರೆ? ಮೊದಲು ನಿಮ್ಮಗಳ ಆ ರೋಗಗ್ರಸ್ತ ಹೆಂಡಿರನ್ನ ಹೊಳೆಗೆ ನೂಕಿ. ಪುರಾಣದ ಋಷಿಗಳಂತೆ ಒಳ್ಳೆ ಮೀನುಸಾರು ಮಾಡಬಲ್ಲ ಒಬ್ಬ ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ. ಕಣ್ಣು ಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನುಭವ ಆಗಿರದಿದ್ದರೆ ನನ್ನ ಹೆಸರು ನಾರಣಪ್ಪನಲ್ಲ” ಎಂದು ಕಣ್ಣು ಮಿಟುಕಿಸಿ ಬಟ್ಟಲಿನಲ್ಲಿದ್ದ ಸಾರಾಯಿಯನ್ನು ಗಟಗಟನೆ ಕುಡಿದು ಹೇಂii ಎಂದು ತೇಗಿದ. ತನ್ನ ರೋಗಗ್ರಸ್ತ ಹೆಂಡತೀನ್ನ ಇವ ಹೀಗೆ ಚುಚ್ಚುತ್ತಿರಬಹುದೆಂದು ಆಚಾರ್ಯರು ಪೂರ್ಣ ವ್ಯಗ್ರರಾಗಿ “ಥೂ ನೀಚ” ಎಂದು ಬೆದು ಮನಗೆ ಬಂದುಬಿಟ್ಟರು. ಅವತ್ತು ರಾತ್ರಿ ಜಪಕ್ಕೆ ಕೂತರೆ ಚಿತ್ತವೃತ್ತಿಯ ನಿರೋಧ ಸಾಧ್ಯವಾಗಲಿಲ್ಲ. ಪರಮಾತ್ಮ ಎಂದು ಕಳವಳಪಟ್ಟರು. ಸಂಜೆ ಹೊತ್ತು ರಸಭರಿತ ಕತೆಗಳನ್ನ ಓದೋದು ಬಿಟ್ಟು ವ್ರತದ ನೀತಿಕತೆಗಳನ್ನು ಹೇಳತೊಡಗಿದರು. ಪರಿಣಾಮ-ತನಗೆ ಪುರಾಣ ಹೇಳುವುದರಲ್ಲಿದ್ದ ಹುಮ್ಮಸ್ಸೇ ಮಾಯವಾಯಿತು. ಜೀವತುಂಬಿದ ಕಣ್ಣುಗಳಿಂದ ನೋಡುತ್ತ, ಕೇಳುತ್ತ ತನ್ನ ಹೃದಯಕ್ಕಷ್ಟು ಗೆಲುವು ತರುತ್ತಿದ್ದ ಹುಡುಗರು ಬರೋದನ್ನು ನಿಲ್ಲಿಸಿದರು. ಪುಣ್ಯಸಂಪಾದನಾಕಾಂಕ್ಷಿಗಳಾದ, ಕತೆ ಮಧ್ಯದಲ್ಲಿ ಆಕಳಿಸುತ್ತ ಹರಿನಾಮ ಸ್ಮರಣೆ ಮಾಡುವ ವಿಧವೆಯರು, ವೃದ್ಧರು ಮಾತ್ರ ಬರಹತ್ತಿದರು. ತಾಳೆಗರಿ ಓಲೆಗಳನ್ನು ಓದುತ್ತ, ಚಿಂತಿಸುತ್ತ ಕೂತಿದ್ದ ಪ್ರಾಣೇಶಾಚಾರ್ಯರು ಹೆಂಡತಿ ನರಳಿದ್ದನ್ನು ಗಮನಿಸಿ, ಮಧ್ಯಾಹ್ನದ ಔಷಧಿ ಇನ್ನೂ ಕೊಟ್ಟಿಲ್ಲ ಅಲ್ಲವೆ ಎಂದು ಬಟ್ಟಲಲ್ಲಿ ಮದ್ದನ್ನು ತಂದು, ಹೆಂಡತಿಯನ್ನು ಎತ್ತಿ ಎದೆಗಾನಿಸಿಕೊಂಡು ಅವಳ ಬಾಯಲ್ಲಿ ಹೊಯ್ದು, ’ಮಲಗಿ ನಿದ್ದೆ ಮಾಡು’ ಎಂದರು. ನಡುಮನೆಗೆ ಬಂದು ’ಧರ್ಮಶಾಸ್ತದಲ್ಲಿ ಇದಕ್ಕೆ ಉತ್ತರವಿಲ್ಲ ಅಂದರೆ ಏನು ಅರ್ಥ’ ಎಂದು ಹಟ ತೊಟ್ಟು ಓದತೊಡಗಿದರು. +ಅಧ್ಯಾಯ : ನಾಲ್ಕು +ಇತ್ತ ಪಾರಿಜಾತಪುರದಿಂದ ಬಿಸಿಲಿನಲ್ಲಿ ಹಸಿವಿನಲ್ಲಿ ಹರಿ ಹರಿ ಎಂದು ನಡೆದುಬಂದು ಮನೆಯಲ್ಲಷ್ಟು ವಿಶ್ರಮಿಸಿಕೊಳ್ಳೋಣೆಂದರೆ ಬ್ರಾಹ್ಮಣರಿಗೆ ಅವರ ಕಾಂತೆಯರ ಪ್ರಭುಸಂಮಿತಿ ಪ್ರಾರಂಭವಾಯಿತು. ಮುಖ್ಯವಾಗಿ ಗರುಡಾಚಾರ್ಯ, ಲಕ್ಷ್ಮಣಾಚಾರ್ಯರಿಗೆ. ಗರುಡಾಚಾರ್ಯನ ಏಕಮಾತ್ರ ಸಂತಾನವಾದ ಅವನ ಮಗ ಶ್ಯಾಮ ಮನೆಯಿಂದ ಓಡಿಬಿಟ್ಟು ಮಿಲಿಟರಿ ಸೇರಿದ್ದಕ್ಕೆ ಬಗೆಬಗೆಯ ಕಾರಣಗಳನ್ನು ಅಗ್ರಹಾರದಲ್ಲಿ ಹೇಳುತ್ತಾರೆ. ತಂದೆಯ ಶಿಕ್ಷೆ ತಡೆಯಲಾರದೆ ಹೋದ ಎಂದು ಗರುಡಾಚಾರ್ಯನನ್ನು ಕಂಡರೆ ಆಗದವರು ಅಂದರೆ, ನಾರಣಪ್ಪನನ್ನು ಕಂಡರೆ ಆಗದ ಎಲ್ಲರೂ ಅವನ ಪ್ರೇರಣೆಯಿಂದ ಮಿಲಿಟರಿ ಸೇರಿದ ಎಂದು ಅನ್ನುತ್ತಾರೆ. ಅಲ್ಲದೆ ಪ್ರಾಣೇಶಾಚಾರ್ಯರಿಂದ ಪಾಠ ಹೇಳಿಸಿಕೊಂಡೂ ಹೀಗೆ ಅವ ಓಡಿಹೋಗುವ ದುರ್ಬುದ್ಧಿ ಮಾಡಿರಬೇಕಾದರೆ-ಲಕ್ಷ್ಮಣಾಚಾರ್ಯನ ಮತ-ಗರುಡ ನಾರಣಪ್ಪನ ತಂದೆಯ ಮೇಲೆ ಮಾಡಿಸಿದ ಮಾಟ ಈಗ ಗರುಡನ ಮೇಲೆಯೇ ತಿರುಗಿಬಿದ್ದದ್ದು. ಸೃಷ್ಟಿಸಿದವನನ್ನೇ ಸುಟ್ಟು ಬಿಡಲು ಹೋದ ಭಸ್ಮಾಸುರನಂತೆ ಈ ಮಾಟ ಮಂತ್ರಗಳು. ಗರುಡ ಮಾಟ ಮಾಡಿಸದಿದ್ದರೆ, ’ಸತ್ಕುಲದಲ್ಲಿ ಹುಟ್ಟಿದ ನಾರಣಪ್ಪ ಹೀಗೇಕೆ ಚಾಂಡಾಲನಾಗುತ್ತಿದ್ದ’ ಎಂದು ತನ್ನ ತಾಯಿಯ ಕುಲಕ್ಕೆ ಕಳಂಕ ತಟ್ಟಿತೆಂದು ನೋಯುತ್ತಿದ್ದ ಲಕ್ಷ್ಮಣಾಚಾರ್ಯನ ಹೆಂಡತಿ ಅನಸೂಯ ಹೇಳುತ್ತಾಳೆ. ಚಾಂಡಾಲ ನಾರಣಪ್ಪನ ಪ್ರೇರಣೆಯಿಂದ ಕೆಗೆ ಬಂದ ಮಗ ಕೆಟ್ಟು ಓಡಿದನೆಂದು ಗರುಡಾಚಾರ್ಯನ ಹೆಂಡತಿ ಸೀತಾದೇವಿ ಅನ್ನ ನೀರು ಬಿಟ್ಟು ಸೊರಗಿ, ಮಮ್ಮಲ ಮರುಗಿ, ಹಗಲು ರಾತ್ರೆ ದಾರಿ ಕಾದು, ಮೂರು ತಿಂಗಳಾದ ಮೇಲೆ, ಶ್ಯಾಮನಿಂದ-ತಾನು ಪುಣೆಯಲ್ಲಿರುವುದಾಗಿಯೂ, ಮಿಲಿಟರಿ ಸೇರಿರುವುದಾಗಿಯೂ, ಪತ್ರ ಬರೆದುಕೊಟ್ಟು ಸೇರಿದ ಮೇಲೆ ಆರುನೂರು ರೂಪಾಯಿಗಳನ್ನು ಕೊಡದ ಹೊರ್ತು ಬಿಟ್ಟು ಬರುವಂತಿಲ್ಲವೆಂದೂ-ತಾಯಿಗೆ ಕಾಗದ ಬಂದಿತ್ತು. ಸೀತಾದೇವಿ ಸೊಂಟದ ಮೇಲೆ ಕೆಯಿಟ್ಟು, ನಾರಣಪ್ಪನನ್ನು ದಾರಿಯಲ್ಲಿ ನಿಲ್ಲಿಸಿ ಬಯ್ದು, ಅತ್ತು, ಮಗನಿಗೆ ’ಮಾಂಸಾಹಾರ ಮಾಡಬೇಡ, ಸ್ನಾನಸಂಧ್ಯಾವಂದನೆ ಬಿಡಬೇಡ’ವೆಂದು ಕಾಗದ ಬರೆಸಿದ್ದಳು. ಮಗನಿಗೆ ಒಳ್ಳೆಯ ಬುದ್ಧಿಬರಲೆಂದು ಶುಕ್ರವಾರದ ರಾತ್ರೆಯ ಊಟ ಬಿಟ್ಟಳು. ಗರುಡಾಚಾರ್ಯರು ದೂರ್ವಾಸಕೋಪತಾಳಿ, ’ಅವನು ಸತ್ತಂತೆ ನನ್ನ ಪಾಲಿಗೆ, ಈ ಸೂರಿನೊಳಕ್ಕೆ ಅವನು ತಲೆಯಿಕ್ಕಲಿ, ಸೀಳಿಬಿಡುತ್ತೇನೆ, ಎಂದು ಕೆಂಜಗದ ಇರುವೆ ಮೆಗೆ ಹತ್ತಿದವರಂತೆ ಕುಣಿದರು. ಸೀತಾದೇವಿ, ’ಗಂಡನಿಗೊಂದಷ್ಟು ಸಮಾಧಾನ ಕೊಡಪ್ಪ, ಮಗನ ಮೇಲಿನ ಪ್ರೀತಿ ಉಳಿಸಪ್ಪ’ ಎಂದು ತುಳಸಿಯನ್ನು ಪ್ರಾರ್ಥಿಸಿ ಶನಿವಾರವೂ ಒಪ್ಪತ್ತು ಮಾಡತೊಡಗಿದಳು. ಉರಿಯುವ ಬೆಂಕಿಗೆ ತುಪ್ಪ ಹಾಕುವೋಪಾಧಿಯಲ್ಲಿ ಮಾಧ್ವದ್ವೇಷಿ ದುರ್ಗಾಭಟ್ಟ, “ಮಿಲಿಟರಿಯಲ್ಲಿ ಸ್ನಾನ ಸಂಧ್ಯಾವಂದನೆ ಮಾಡುವಂತಿಲ್ಲ, ಬಲಾತ್ಕಾರವಾಗಿ ಮಾಂಸ ತಿನ್ನಿಸುತ್ತಾರೆ”೦ದು ಹೇಳಿ ಗರುಡಾಚಾರ್ಯನಿಗೆ ತಲೆ ಎತ್ತದಂತೆ ಮಾಡಿದ್ದ. ಮನೆಗೆ ಬಂದ ಸೀತಾದೇವಿಗೆ ಚಂದ್ರಿಯ ಆಭರಣ ತಮಗೆ ಸೇರಿದ್ದೇ ಆದರೆ ಮಗನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳಲು ಒಂದು ಮಾರ್ಗವಾದಂತಾಗುವುದೆಂದು ಹಿಗ್ಗಿದಳು. ತನ್ನ ಯಜಮಾನರು ನಾರಣಪ್ಪನ ಶವಸಂಸ್ಕಾರ ಮಾಡೋದು ಸಾಧ್ಯವಿರಲಿಕ್ಕೇ ಬೇಕು ಧರ್ಮಶಾಸ್ತದ ಪ್ರಕಾರ. ತನ್ನ ಗಂಡನಿಗಿಂತ ಮುಂಚೆ ಎಲ್ಲಿಯಾದರೂ ಲಕ್ಷ್ಮಣಾಚಾರ್ಯ ಒಪ್ಪಿಬಿಟ್ಟರೆ? ಅಥವ ಆ ಮಡಿಮೆಲಿಗೆಯಿಲ್ಲದ ಪಾರಿಜಾತಪುರದವರು ಒಪ್ಪಿಬಿಟ್ಟರೆ? ಚಡಪಡಿಸಿದಳು. ಮಾರುತಿಗೆ ಹಣ್ಣುಕಾಯಿಯ ಹರಕೆ ಹೇಳಿಕೊಂಡಳು-“ದೇವರೇ ನನ್ನ ಗಂಡನೇ ಸಂಸ್ಕಾರ ಮಾಡುವಂತಾಗಲಪ್ಪ.” ಈಗ ಅವಳ ಕಣ್ಣಿಗೆ ನಾರಣಪ್ಪ ಮಾಂಸಾಹಾರ ಮಾಡಿದ್ದು ಅಂತಹ ಭಯಂಕರ ಪಾಪದ ಹಾಗೆ ಕಾಣಲಿಲ್ಲ. ನಾಳೆ ತನ್ನ ಮಗನೇನಾದರೂ ಮನಗೆ ಹಿಂದಕ್ಕೆ ಬಂದರೆ ಅಗ್ರಹಾರದ ಅನ್ಯಾಯದ ನಾಲಿಗೆಗಳು ಅವನ ಮೇಲೆಯೂ ಹೇಳದೆ ಇರುತ್ತವೋ? ತನ್ನ ಮಗನಿಗೇನಾದರೂ ಬಹಿಷ್ಕಾರ ಹಾಕಿದಲ್ಲಿ ಏನು ಗತಿ? ನಾರಣಪ್ಪನ ಮೇಲೆ ಬಹಿಷ್ಕಾರ ಹಾಕಿಸಲು ಮುಂದೆ ಬಾರದಿದ್ದ ಪ್ರಾಣೇಶಾಚಾರ್ಯರನ್ನು ಹಿಂದೆ ದೂರುತ್ತಿದ್ದವಳು ಈಗ ಗೌರವದಿಂದ ಸ್ಮರಿಸಿದಳು: ಅವರು ಕರುಣಾವಂತರು; ನನ್ನ ಮಗನ ಪಾಪವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡು ಖಂಡಿತಾ ಸಲಹುತ್ತಾರೆ; ಸಂಶಯವಿಲ್ಲ. ಮನೆಗೆ ಬಂದ ಮೇಲೆ ನೆಲದ ಮೇಲೆ ಒರಗುತ್ತಿದ್ದಂತೆ, ಕಣ್ಣೀರಿಡುತ್ತ ಕಾಡಿದ ಸೀತಾದೇವಿಗೆ ಗರುಡಾಚಾರ್ಯರು ’ಅವನು ನನ್ನ ಪಾಲಿಗೆ ಸತ್ತಂತೆ, ಆ ದುಷ್ಟನ ಮಾತೆತ್ತಬೇಡ’ ಎಂದು ಬಿಟ್ಟರು. ಆದರೆ ಹೆಂಡತಿಯ ಸೂಚನೆ ತೊಣಚಿಯಂತೆ ಅವರನ್ನು ಹೊಕ್ಕು ಕಾಡಿತು. ಏನೇ ನಾಶವಾಗಲಿ, ಪುತ್ರನಾಶ ಬೇಕಾದರೂ ಆಗಲಿ, ತನ್ನ ಬ್ರಾಹ್ಮಣ್ಯದ ನಾಶಕ್ಕೆ ತಾನು ತಯಾರಿಲ್ಲ. ಆದರೆ ಪ್ರಾಣೇಶಾಚಾರ್ಯರೇನಾದರೂ ಸೆ ಅಂದರೆ ಎಲ್ಲ ಸುಗಮವಾಗಿಬಿಡುತ್ತದೆ. ತಾನು ಸತ್ತ ಮೇಲೆ ತನಗೆ ಪಿಂಡ ಹಾಕಬಲ್ಲ ಏಕಮಾತ್ರ ಪುತ್ರನನ್ನು ಆಗ ಮಿಲಿಟರಿಯಿಂದ ಬಿಡಿಸಿಕೊಳ್ಳಬಹುದು. ಹೆಂಡತಿಗೆ “ಅದು ಆಗದ ಮಾತು. ಬಾಯಿ ಮುಚ್ಚು” ಎಂದು ಗದರಿಸಿ ಕಳ್ಳನ ಹಾಗೆ ಪ್ರಾಣೇಶಾಚಾರ್ಯರ ಮನೆಗೆ ಗರುಡಾಚಾರ್ಯ ನಡೆದ. ಅಂಗಳದಲ್ಲಿ ಕೂತಿದ್ದ ಚಂದ್ರಿಯ ಮುಖ ನೋಡದೆ ಆಚಾರ್ಯರ ನಡುಮನಗೆ ಬಂದ. ಪ್ರಾಣೇಶಾಚಾರ್ಯರು ತಲೆ ಎತ್ತದೆ ತಾಳೆಗರಿ ಗ್ರಂಥಗಳನ್ನು ಓದುತ್ತ ಕೂತವರು: “ಕೂತುಕೊ ಗರುಡಾ. ಪಾರಿಜಾತಪುರದವರು ಧರ್ಮಶಾಸ್ತದಲ್ಲಿ ಹೇಳಿದಂತೆ ಮಾಡೋಣ ಎಂದರಂತೆ. ಒಂದು ಲೆಕ್ಕಕ್ಕೆ ಅವರಂದಿದ್ದು ಸರಿ” ಎಂದು ತಿರುಗಿ ಓದುತ್ತ ಕೂತರು. ಗರುಡ ಗಂಟಲು ಕೆರೆದುಕೊಂಡು, “ಮನುಸ್ಮೃತಿ ಏನೆನ್ನುತ್ತೆ, ಆಚಾರ್ಯರೆ…?” ಎಂದ. ಪ್ರಾಣೇಶಾಚಾರ್ಯ್ಯ ತಲೆಯಾಡಿಸಿದರು. “ಧರ್ಮಶಾಸ್ತದಲ್ಲಿ ತಮಗೆ ತಿಳಿಯದೇ ಇರೋದು ಏನಿದೆ? ಅದಕ್ಕಲ್ಲ ನಾನು ಅನ್ನೋದು. ಏನು. ಅವತ್ತು-ಏನು-ಟೀಕಾಚಾರ್ಯರ ಪುಣ್ಯದಿನ-ಏನು-ಮಠದಲ್ಲಿ ಶ್ರೀಗುರುಗಳ ಎದುರು ಕಂಬದ ಎಲೆಯಲ್ಲಿ ತಾವು ಕೂತು ವ್ಯಾಸರಾಯಮಠದ ಆ ಮಹಾಪಂಡಿತರ ಜೊತೆ-ಏನು-ತಾವು ವಾದಿಸಿದ್ದನ್ನ ನಾನು ಕೇಳಿಲ್ಲವೆ? ’ಬಿಂಬೋಸಿ, ಪ್ರತಿಬಿಂಬೋಸ್ಮಿ’ ಎಂಬೋದನ್ನ ಮಧ್ವಮತದ ಪ್ರಕಾರ ಅರ್ಥಮಾಡಿ ಹೇಳಿ ಅಂತ ನೀವು ಹಾಕಿದ ಸವಾಲಿಗೆ ಅವರು ತತ್ತರಿಸಿಹೋದರು. ಏನು. ನಾಲ್ಕು ಗಂಟೆಕಾಲ ನಡೀತು ಅವತ್ತಿನ ಊಟ. ಅದ್ದರಿಂದ ತಮಗೆ ಸೂಚನೆ ಕೊಡಲಿಕ್ಕೆ ಬಂದೆಂತ ತಾವು ಭಾವಿಸಬಾರದು. ತಮ್ಮ ಎದುರು ನಾನು ಸಿಂಗಲೀಕ. ಏನು.” ತಮ್ಮನ್ನು ಮೆಚ್ಚಿಸಿ ತನ್ನ ಕಡೆಗೆ ಎಳೆದುಕೊಳ್ಳಲು ಗರುಡ ಯತ್ನಿಸುತ್ತಿರೋದು ನೋಡಿ ಆಚಾರ್ಯರಿಗೆ ಅಸಹ್ಯವಾಯಿತು. ಧರ್ಮಶಾಸ್ತದಲ್ಲಿ ಏನಿದೆ, ಏನಿಲ್ಲ ಇವನಿಗೆ ಬೇಡ. ತನ್ನ ಬಾಯಿಂದ ಆಗಲಿ ಎಂದು ಬಂದರೆ ಸಾಕು, ಆಗ ಯಾರೂ ದೋಷ ಹುಡುಕೋದಿಲ್ಲವಲ್ಲ-ಎಂದು ತಿಳಿದು ಹೀಗೆ ತನ್ನನ್ನು ಅಟ್ಟಕ್ಕೇರಿಸುತ್ತಿದ್ದಾನೆ. ಅದಕ್ಕೆ ಕಾರಣ: ಆ ಬಂಗಾರ, ಔದಾರ್ಯದ ಫಲ ಅದರ ತದ್ವಿರುದ್ಧ. ನಾರಣಪ್ಪ ಹೇಳಿದ ಹಾಗೆ ಈಗ ತಾನು ಮರುಕಕ್ಕೆ ಕರಗಿಬಿಡಬಾರದು. ಗಟ್ಟಿಯಾಗಿ ನಿಂತು ಧರ್ಮಶಾಸ್ತ ಏನೆನ್ನುತ್ತದೋ ಹಾಗೆ ಮಾಡಬೇಕು. “ತ್ರಿಕಾಲಜ್ಞರಾದ ಋಷಿಗಳು ಇದನ್ನು ಯೋಚಿಸದೆ ಹೋಗಿರೋದು ಸಾಧ್ಯವೇ? ಏನು.” ಗರುಡನ ಮಾತಿಗೆ ಉತ್ತರ ಕೊಡದೆ ಆಚಾರ್ಯರು ಓದುತ್ತಲೇ ಹೋದರು. “ವೇದಾಂತವೆಂದು ಕರೆಯಲು ಕಾರಣ, ಏನು, ಇದರ ತತ್ವದ ಅಂತ್ಯ ಅಂತ ತಾವೇ ಅಪ್ಪಣೆ ಕೊಡಿಸಿದ್ದಿರಿ ಅಲ್ಲವೆ, ಆಚಾರ್ಯರೆ? ವೇದಾಂತದಲ್ಲಿ ಉತ್ತರವಿಲ್ಲದೆ ಇರೋಕ್ಕೆ ಸಾಧ್ಯವೊ? ಒಬ್ಬ ಬ್ರಾಹ್ಮಣನ ಶವ ಅಗ್ರಹಾರದಲ್ಲಿದ್ದ ಮೇಲೆ, ಏನು, ಕೇರಿಯ ಬ್ರಾಹ್ಮಣರು ತಮ್ಮ ಬ್ರಾಹ್ಮಣ್ಯದ ವಿಧಿನಿಯಮಗಳನ್ನು ಸಾಂಗವಾಗಿ ನಡೆಸಿಕೊಂಡು ಹೋಗೋದಕ್ಕೆ ಅಡ್ಡಿಯಾದ ಮೇಲೆ, ಏನು, ಬರೇ ಊಟ ಮಾಡುವಂತಿಲ್ಲವೆಂದು ನಾನು ಈ ಪ್ರಶ್ನೇನ ಎತ್ತುತೇನೆಂದಲ್ಲ…ಏನು.” ಪ್ರಾಣೇಶಾಚಾರ್ಯರು ಇದಕ್ಕೂ ಉತ್ತರ ಕೊಡಲಿಲ್ಲ. ತಾನು ಹೇಳಿಕೊಟ್ಟ ವೇದಾಂತ, ಪುರಾಣ, ತತ್ವ ಎಲ್ಲವನ್ನೂ ಈಗ ತನಗೆ ವಾಪಸ್ಸು ಒಪ್ಪಿಸುತ್ತಿದ್ದಾನೆ ಗರುಡ. ಕಾರಣ? ಹೊನ್ನು! ಅಯ್ಯೋ ಮನುಷ್ಯನ ಬಾಳೇ ಎನ್ನಿಸಿತು. “ಅಲ್ಲದೆ ತಾವು ಹೇಳಿದ್ದು ನಿಜ ಅನ್ನಿಸಿತು ನನಗೆ. ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲವಲ್ಲ! ಅವನಿಗೆ ನಾವು ಬಹಿಷ್ಕಾರ ಹಾಕಿಸಲಿಲ್ಲವಲ್ಲ. ಏನು. ಬಹಿಷ್ಕಾರವನ್ನೇನಾದರೂ ಹಾಕಿಬಿಟ್ಟಿದ್ದರೆ ಅವ ತುರುಕಾ ಆಗಿ ನಾವೆಲ್ಲ ಈ ಅಗ್ರಹಾರಾನ್ನ ಬಿಡಬೇಕಾಗಿ ಬಂದು ಬಿಡ್ತಿತ್ತಲ್ಲ; ಏನು.” “ಧರ್ಮಶಾಸ್ತ ಏನು ಅನ್ನುತ್ತೋ ಹಾಗೆ ಮಾಡೋದೂಂತ ನನ್ನ ನಿರ್ಧಾರ, ಗರುಡ” ಎಂದು ಅವನ ಮಾತನ್ನ ನಿಲ್ಲಿಸಲು ಗ್ರಂಥದಿಂದ ತಮ್ಮ ಕಣ್ಣುಗಳನ್ನೆತ್ತಿ ಹೇಳಿ ಮತ್ತೆ ಓದಲು ಪ್ರಾರಂಭಿಸಿದರು. “ಧರ್ಮಶಾಸ್ತದಲ್ಲಿ ಪಶ್ಚಾv ಉತ್ತರ ಸಿಗಲಿಲ್ಲ ಎನ್ನಿ. ಸಿಗಲಿಕ್ಕಿಲ್ಲ ಎಂದಲ್ಲ ನನ್ನ ಮಾತು. ಏನು. ಒಂದು ವೇಳೆ ಸಿಕ್ಕದೆ ಹೋದರೆ ಆಪದ್ಧರ್ಮ ಅಂತ ಒಂದು ಇದೇಂತ ತಾವು ಹಿಂದೊಮ್ಮೆ ಅಪ್ಪಣೆ ಕೊಡಿಸಿದ್ದುಂಟಲ್ಲ. ಒಬ್ಬ ಮನುಷ್ಯನ ಪ್ರಾಣಾ ಉಳಿಸಲು ಗೋಮಾಂಸಾನ್ನ ಕೊಡಬೇಕಾಗಿ ಬಂದರೆ ಗೋಮಾಂಸಕ್ಕೂ ದೋಷವಿಲ್ಲಾಂತ-ಏನು-ತಾವೇ ಹೇಳಿದ್ದಿಲ್ಲವೆ? ಏನು-ತಾವು ಹೇಳಿದ ಒಂದು ಕತೆಯ ಪ್ರಕಾರ ವಿಶ್ವಾಮಿತ್ರ ಋಷಿ ಭೂಮಿಯಲ್ಲಿ ಕ್ಷಾಮ ತಲೆದೋರಿದಾಗ ಒಮ್ಮೆ, ಹಸಿವು ತಾಳದಾಗಿ, ಜೀವಾನ ಉಳಿಸಿಕೊಳ್ಳೋದೇ ಪರಮಧರ್ಮ ಅಂತ, ಏನು, ಸತ್ತ ನಾಯಿಯ ಮಾಂಸಾನ್ನೂ ತಿನ್ನಹೋದನೆಂದು, ಏನು…” “ತಿಳಿಯಿತು ಗರುಡ. ಈಗ ನಿನ್ನ ಮನಸ್ಸಿನಲ್ಲಿರೋದು ಹೇಳಿಬಿಡು” ಎಂದು ಪ್ರಾಣೇಶಾಚಾರ್ಯರು ತಲೆಬೇಸರ ಬಂದು ತಾಳೆಗರಿ-ಗ್ರಂಥಗಳನ್ನು ಮುಚ್ಚಿ ಕೇಳಿದರು. “ಏನೂ ಇಲ್ಲಪ್ಪ” ಎಂದು ಗರುಡಾಚಾರ್ಯ ನೆಲ ನೋಡಿದ. ಮತ್ತೆ ಆಚಾರ್ಯರಿಗೆ ಉದ್ದಂಡ ನಮಸ್ಕಾರ ಮಾಡಿ ಎದ್ದು ಕೂತು: “ಶ್ಯಾಮನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳದಿದ್ದರೆ ನನ್ನ ಶವಸಂಸ್ಕಾರ ಮಾಡೋರು ಯಾರು ಹೇಳಿ, ಆಚಾರ್ಯರೆ. ತಮ್ಮ ಅನುಮತಿ ದೊರಕಿಬಿಟ್ಟರೆ, ಏನು…” ಎಂದು ಅನ್ನುತ್ತಿರುವಂತೆ ಲಕ್ಷ್ಮಣಾಚಾರ್ಯ ಬಂದು ನಿಂತಿದ್ದ. +ತನ್ನ ತಂಗಿಯ ಕೊರಳಿನಲ್ಲಿರಬೇಕಾಗಿದ್ದ ಆಭರಣ ಪರವಶವಾಯಿತೆಂದು, ಈ ಸೂಳೆಯಿಂದಾಗಿ ಅವಳು ಸತ್ತಳೆಂದು ಕಣ್ಣೀರಿಡುತ್ತ ಮನೆಗೆ ಬಂದ ಲಕ್ಷ್ಮಣಾಚಾರ್ಯನ ಹೆಂಡತಿ ಅನುಸೂಯಳಿಗೆ ಕಣ್ಣೀರು ಕ್ರಮೇಣ ನಾರಣಪ್ಪನ ಬಗ್ಗೆಯೂ ಹರಿಯಹತ್ತಿತ್ತು. ಎಷ್ಟೆಂದರೂ ಅವ ತನ್ನ ಸೋದರಮಾವನ ಮಗನಲ್ಲವೆ? ಮಾವ ಬದುಕಿದ್ದರೆ, ತಂಗಿ ಜೀವದಿಂದಿದ್ದರೆ ಆ ಗರುಡ ಮಾಟ ಮಾಡಿಸಿರದಿದ್ದರೆ, ನಮ್ಮ ನಾರಣಪ್ಪ ಹೀಗೆ ಬುದ್ಧಿ ಕೆಟ್ಟು, ಅಷ್ಟೊಂದು ಚಿನ್ನ ಪರಭಾರೆ ಮಾಡಿ, ಹೀಗೆ ಪರದೇಶಿಯಂತೆ, ನಿರ್ಗತಿಕನಂತೆ ಸತ್ತು, ಶವಸಂಸ್ಕಾರೆವಿಲ್ಲದೆ ಕೊಳೆಯಬೇಕಾಗಿತ್ತೇ ಎಂದು ಗೊಳೋ ಎಂದು ಅಳಹತ್ತಿದಳು. ’ಅವನು ಏನೇ ಮಾಡಲಿ, ಕರುಳಿನ ಬಳ್ಳಿ ಕಡಿಯುತ್ತದ ಪರಮಾತ್ಮ’ ಎಂದು ಗೋಡೆಗೊರಗಿ ಕಣ್ಣೀರು ಹಾಕಿದಳು. ಆದರೆ ಮರುಕ್ಷಣ ಕಣ್ಣೆದುರು ಮೋಟು ಜಡೆಯನ್ನು ಬಿಗಿಯಾಗಿ ಕಟ್ಟಿ, ಬುಗುಡಿ ಮೂಗುಬಟ್ಟು ಧರಿಸಿ, ಉದ್ದ ಕುಂಕುಮವಿಟ್ಟು ಕುಳ್ಳಗೆ ಗುಂಡಗೆ ಇದ್ದ ಮಗಳು ಲೀಲಾವತಿ ಸುಳಿದು ಎದೆ ಕಲ್ಲಾಯಿತು: “ಶ್ರೀಪತಿ ಯಾವತ್ತು ಬರುತ್ತೇನೆಂದು ಹೇಳಿ ಹೋದನೆ?” ಎಂದು ಹತ್ತನೆಯ ಬಾರಿಗೆ ಕೇಳಿದಳು. ಲೀಲಾವತಿ ’ಗೊತ್ತಿಲ್ಲ’ ಎಂದುಬಿಟ್ಟಳು. ಪರದೇಶಿ ಹುಡುಗಾಂತ ಅವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರೆ ತನ್ನ ಒಡಹುಟ್ಟಾದ ನಾರಣಪ್ಪನೇ ಅವನ ತಲೆ ತಿರುಗಿಸಿಬಿಡಬೇಕೇ? ತನ್ನ ಮೊಟ್ಟೆಯನ್ನ ತಾನೇ ತಿನ್ನುವ ಸರ್ಪವಾದ ಅವ ತನ್ನ ಪಾಲಿಗೆ. ಏನೇನು ಹಚ್ಚಿದನೊ ತನ್ನ ಅಳಿಯನ ತಲೆಗೆ? ಮನೆಯಲ್ಲಿ ತಿಂಗಳಿಗೆ ಎರಡು ದಿನ ನಿಲ್ಲುವುದಿಲ್ಲ. ಯಕ್ಷಗಾನದ ಮೇಳಗಳ ಬೆನ್ನುಹತ್ತಿ ಊರೂರು ಅಲೆಯುತ್ತಾನೆ. ಪಾರಿಜಾತಪುರದ ಹುಡುಗರ ಸಹವಾಸ ಮಾಡುತ್ತಾನೆ. ಅಲ್ಲೊಂದು ಇಲ್ಲೊಂದು ಅವನಿಗೆ ಸೂಳೆಗಳಿವೆಯೆಂದು ಅವಳಿಗೆ ದುರ್ಗಾಭಟ್ಟರ ಹೆಂಡತಿಯಿಂದ ಸುದ್ದಿ ತಲ್ಪಿದೆ. ಕದ್ದು ಮುಚ್ಚಿ ಶ್ರೀಪತಿ ನಾರಣಪ್ಪನ ಮನೆಗೆ ಹೋಗಿಬಂದಾಗಲೇ ಗೊತ್ತಾಯ್ತು ಅವಳಿಗೆ-ಕೆಟ್ಟ ಅಂತ. ಕೆಟ್ಟ ದಾರಿ ಹಿಡಿದ ಅಂತ. ಪ್ರಾರಬ್ಧ, ಏನೇನನ್ನು ಅವನು ಅಲ್ಲಿ ಕುಡುದನೋ, ತಿಂದನೋ! ಆ ಚಂದ್ರಿಯ ವಯ್ಯಾರಕ್ಕೆ ಬಲಿಯಾಗದವರು ಇಲ್ಲ. ಅಳಿಯನಿಗೆ ತಕ್ಕ ಬುದ್ಧಿ ಕಲಿಸಲೆಂದು ಅನಸೂಯ ಮಗಳಗೆ ಹಚ್ಚಿಕೊಟ್ಟಳು “ನಿನ್ನ ಗಂಡನಿಗೆ ಒಪ್ಪಬೇಡ. ಹೀಗೆ ತೊಡೆಯನ್ನ ಗಂಟುಹಾಕಿಕೊಂಡು ಕೌಂಚಿ ಮಲಗಿಬಿಡು. ಬುದ್ಧಿ ಬರಲಿ.” ಲೀಲಾವತಿ ಹಾಗೆಯೇ ಮಾಡಿದಳು. ಗಂಡ ರಾತ್ರೆ ತನ್ನನ್ನು ಬಳಚಲು ಬಂದರೆ ’ಚೂಟಿದರು, ಕಚ್ಚಿದರು’ ಎಂದು ಅಳುತ್ತ ತಾಯಿಯ ಮಗ್ಗುಲಿನಲ್ಲಿ ಬಂದು ಮಲಗಲು ಪ್ರಾರಂಬಿಸಿದಳು. ಶ್ರೀಪತಿಗೆ ಇದರಿಂದ ಬುದ್ಧಿ ಬಂದಂತೆ ಕಾಣಲಿಲ್ಲ. ತಾನು ತನ್ನ ಗಂಡನಿಂದ ಮನಸ್ಸಿನ ಇಷ್ಟವನ್ನು ನಡೆಸಿಕೊಂಡ ಹಾಗೆ ಈಗ ನಡೆಯಲಿಲ್ಲ. ಶ್ರೀಪತಿ ಜುಟ್ಟನ್ನು ತೆಗೆಸಿ ನಾರಣಪ್ಪನಂತೆ ಕ್ರಾಪು ಬಿಟ್ಟ. ಕೆಯಲ್ಲಿ ಒಟ್ಟಾದ ದಕ್ಷಿಣೆ ದುಡ್ಡಿನಲ್ಲಿ ಒಂದು ಬ್ಯಾಟರಿಯನ್ನು ಕೊಂಡುಕೊಂಡ. ಸಂಜೆಯ ಹೊತ್ತು ಶಿಳ್ಳೆಹಾಕಿ ಅಗ್ರಹಾರ ಸುತ್ತುವುದಕ್ಕೆ ಶುರುಮಾಡಿದ. ಮೊದಲೇ ಜ್ವರಗಡ್ಡೆಯಿಂದ ಕೃಶನಾಗಿ, ಕಣ್ಣುಗಳು ಹೂತುಬಿದ್ದು ಇವತ್ತೋ ನಾಳೆಯೋ ಎನ್ನುವಂತೆ ಕಾಣುತ್ತಿದ್ದ ಲಕ್ಷ್ಮಣಾಚಾರ್ಯ ಬಿಸಿಲು ಮತ್ತು ಹಸಿವಿನಿಂದ ಇನ್ನಷ್ಟು ನರಪೇತಲನಾಗಿ ಮನೆಗೆ ಬಂದು ಬಿದ್ದದ್ದೇ ತಡ ಅನಸೂಯ ಅವನನ್ನು ಕಾಡತೊಡಗಿದಳು : ತನ್ನ ಸೋದರಮಾವನ ಮಗ ತಾನೇ ನಾರಣಪ್ಪ? ಅವನು ಏನೇ ಕುಲಗೆಡಲಿ, ಅವನ ಹೆಣಾನ್ನ ಶೂದ್ರರು ಎತ್ತಿ ಸಾಗಿಸಿದ್ದೇ ಆದರೆ ತಾನು ಪ್ರಾಣ ಇಟ್ಟುಕೊಳ್ಳುವವಳಲ್ಲ. ಪ್ರಾಣೇಶಾಚಾರ್ಯರದು ಮೃದುಸ್ವಭಾವ. ಗರುಡ ಊರು ಹಾಳು ಮಾಡುವ ಪ್ರಚಂಡ, ಗಟ್ಟಿಗ, ನಿಮ್ಮ ಹಾಗೆ ಭೋಳೇ ಅಲ್ಲ. ಅವನೆಲ್ಲಾದರೂ ಶವಸಂಸ್ಕಾರಕ್ಕೆ ಅಪ್ಪಣೆ ಪಡೆದುಬಿಟ್ಟರೆ ಆಭರಣವೆಲ್ಲ ಮೊದಲೇ ಗರ್ವದಿಂದ ತಿರುಗೋ ಸೀತಾದೇವಿಗೆ ಸೇರಿಬಿಡುತ್ತೆ. ಅವರ ಅನಿಷ್ಟ ಬುದ್ಧಿಗೆ ದೇವರು ತಕ್ಕದು ಮಾಡಿದಾ ಎನ್ನಿ. ಇಲ್ಲದಿದ್ದರೆ ಶ್ಯಾಮ ಮನೆ ಬಿಟ್ಟೋಡಿ ಮಿಲಿಟರಿ ಸೇರುತ್ತಿದ್ದನೆ? ಈಗ ನನ್ನ ಅಳಿಯನ ಮೇಲೆ, ನನ್ನ ಸೋದರಮಾವನ ಮಗ ನಾರಣಪ್ಪನ ಮೇಲೆ ಅನ್ನುತ್ತಾರಲ್ಲಾ-ಇವರು-ಇವರ ಮಗ ಶ್ಯಾಮ ಆಚಾರಾನ್ನ ನಡೆಸಿಕೊಂಡು ಬರುತ್ತಿದ್ದಾನೆಂಬೋದು ಏನು ಖಾತ್ರಿ. ಗರುಡಾ ಹೋಗಿ ಪ್ರಾಣೇಶಾಚಾರ್ಯರ ಮನಸ್ಸನ್ನ ಒಲಿಸಿಕೊಳ್ಳಲಿಕ್ಕೆ ಬಿಡಬೇಡಿ. ನೀವೂ ಹೋಗಿ. ಅವನು ಈಗ ಅಲ್ಲಿ ಹಾಜರು-ನೀವಿಲ್ಲಿ ದಂಡಕ್ಕೆ ಬಿದ್ದುಕೊಂಡಿರೋವಾಗ-ನನಗೆ ಗೊತ್ತಿಲ್ಲವ? ಎಂದು ಹೊರಕ್ಕೆ ಬಂದು ಗರುಡಾಚಾರ್ಯನ ಮನೆಯ ಮುಂಭಾಗ ಹಿಂಭಾಗವನ್ನೆಲ್ಲ ಪರೀಕ್ಷಿಸಿ ಗಂಡನನ್ನು ಬಲಾತ್ಕಾರವಾಗಿ ದೂಡಿದ್ದಳು. ಶಿವಪೂಜೆಯ ನಡುವೆ ಕರಡಿ ಬಿಟ್ಟಂತೆ ಬಂದ ಕುಚೇಲಸ್ವರೂಪದ ಲಕ್ಷ್ಮಣಾಚಾರ್ಯನನ್ನು ಕಂಡು ಗರುಡಾಚಾರ್ಯನಿಗೆ ರೋಷಾತಿರೋಷವಾಯಿತು. ಉ ಉ ಎನ್ನುತ್ತ ಮುಂಭಾಗದ ಹೊಟ್ಟೆಯನ್ನು ಒಂದು ಕೆಯಿಂದ ಹಿಡಿದು, ಇನ್ನೊಂದು ಕೆಯಿಂದ ನೆಲವನ್ನು ಊರಿ ಕೂತವನನ್ನು ನುಂಗಿಬಿಡುವಂತೆ ನೋಡಿದ. ಜುಗ್ಗಾತಿಜುಗ್ಗ, ಜಿಪುಣಾಗ್ರೇಸರ, ತಾಯಿಗ್ಗಂಡ ಎಂದೆಲ್ಲ ಅನ್ನಬೇಕೆಂಬ ಆಸೆಯನ್ನು ಪ್ರಾಣೇಶಾಚಾರ್ಯರು ಎದುರಿದ್ದಾರಲ್ಲ ಎಂದು ಅದುಮಿಕೊಂಡ. ಎರೆದುಕೊಳ್ಳಲು ಒಂದು ಚಮಚಾ ಎಳ್ಳೆಣ್ಣೆಯನ್ನೂ ಕೊಳ್ಳದಂತಹ ವಜ್ರಮುಷ್ಟಿಯ ಬ್ರಾಹ್ಮಣಾಧಮ ಇವ. ಅಗ್ರಹಾರದಲ್ಲಿ ಯಾರಿಗೆ ತಿಳಿದಿಲ್ಲ? ಎರದುಕೊಳ್ಳಿ ಎಂದು ಹೆಂಡತಿ ಕಾಡಿದರೆ ಬೆಳಿಗ್ಗೆ ಎದ್ದು ನಾಲ್ಕು ಮೆಲಿ ನಡೆದು ಕೊಂಕಣಿಯ ಅಂಗಡಿಗೆ ಹೋಗುತ್ತಾನೆ. ’ಏನೋ ಕಾಮತ, ಒಳ್ಳೆಣ್ಣೆ ತರಸಿದ್ದೀಯ ಹೇಗೆ? ಏನು ಬೆಲೆ? ಮಾಲು ಹೇಗಿದೆ? ಮುಗ್ಗಲೋ ಹೇಗೆ, ನೋಡುವ’ ಎಂದು ಕೆಯ್ಯೊಡ್ಡಿ ಎರಡು ಚಮಚಾ ಹಾಕಿಸಿಕೊಂಡು ಮೂಸಿದಂತೆ ನಟಿಸಿ ’ಚಿಂತೆಯಿಲ್ಲ. ಆದರೂ ಬೆರಕೆ ಕಣಯ್ಯ, ಯಾವತ್ತು ಹೊಸ ಮಾಲು ಬರೋದು ಹೇಳು, ನಮ್ಮ ಮನೆಗೊಂದು ಡಬ್ಬ ಆಗಬೇಕು’ ಎಂದು ತಲೆಗೆ ಅದನ್ನು ಸವರಿಕೊಳ್ಳುತ್ತಾನೆ. ಮತ್ತೆ ಮೆಣಸಿನಕಾಯಿ ಚೀಲಕ್ಕಿ ಕೆಹಾಕಿ ’ಒಂದು ಮಣಕ್ಕೇನು ಬೆಲೆ’ ಎಂದು ವಿಚಾರಿಸಿ ಒಂದು ಮುಷ್ಟಿ ಮೆಣಸಿನಕಾಯಿಯನ್ನು ಲೋಕಾಭಿರಾಮವಾಗಿ ಮಾತನಾಡುತ್ತ ತನ್ನ ಚೀಲಕ್ಕೆ ಸಾಗಿಸುತ್ತಾನೆ. ಅಲ್ಲಿಂದ ಸೀದ ಇನ್ನೊಂದು ಮೆಲಿ ನಡೆದು ಶೆಣೆ ಅಂಗಡಿಯಲ್ಲಿ ’ಕಾಮತನಂಗಡಿಯಲ್ಲಿ ಎಷ್ಟು ದುಬಾರಿಯಪ್ಪ’ ಎಂದು ಕಾಮತನನ್ನು ಹಳಿದು, ಇನ್ನೆರಡು ಚಮಚಾ ಎಳ್ಳೆಣ್ಣೆ, ಮುಷ್ಟಿ ಮೆಣಸಿನಕಾಯಿ. ಮನೆಗೆ ಬಂದು ಸ್ನಾನ, ಅಡಿಗೆ. ಮತ್ತೆ ಅವರಿವರ ತೋಟಕ್ಕೆ ಹೋಗಿ ಬಾಳೆಲೆ ಕೊಯ್ದು ತಂದು, ಅದನ್ನು ಒಣಗಿಸಿ ದೊನ್ನೆ ಮಾಡಿ ಮಾರಿ ಒಂದಿಷ್ಟು ಕಾಸು ಸಂಪಾದನೆ. ಜನಿವಾರ ಮಾರಿ ಇನ್ನಷ್ಟು ಕಾಸು. ಊಟದ ಕರೆಗೆಂದು ಹದ್ದಿನ ಹಾಗೆ ಕಾದಿರುತ್ತಾನೆ. ಈಗ ಬಂಗಾರದ ಮೇಲೆ ಇವನ ಕಣ್ಣು ನೆಟ್ಟಿದೆ. ಏನಾದರೂ ಸೆ-ಇವನಿಗೆ ಅದು ದಕ್ಕದಂತೆ ಮಾಡಬೇಕು. “ನಾರಾಯಣ ನಾರಾಯಣ” ಎನ್ನುತ್ತ ಏದುಸಿರುಬಿಡುತ್ತ, ಬೆವರನ್ನು ಒರೆಸಿಕೊಂಡು ಲಕ್ಷ್ಮಣಾಚಾರ್ಯ : “ಆಚಾರ್ಯರೇ, ಧರ್ಮಶಾಸ್ತದ ಪ್ರಕಾರ ಅಡ್ಡಿಯಿಲ್ಲವಾದರೆ ಶವಸಂಸ್ಕಾರ ಮಾಡೋಕ್ಕೆ ನನ್ನದೇನೂ ಅಡ್ಡಿಯಿಲ್ಲ. ಎಷ್ಟೆಂದರೂ ಅವ ನನ್ನ ಷಡ್ಡಕ ಅಲ್ಲವೆ? ತಮ್ಮ ಅಪ್ಪಣೆಯಾದರೆ ಶವಸಂಸ್ಕಾರದ ಹಕ್ಕು ನನಗಲ್ಲದೆ ಬೇರೆ ಯಾರಿಗೂ ಇಲ್ಲ” ಎಂದು ಮುಚ್ಚಿದ್ದ ಕಣ್ಣನ್ನು ಬಿಟ್ಟ. ಗರುಡಾಚಾರ್ಯ ಪೆಚ್ಚಾದ. ಇದಕ್ಕೆ ಯಾವ ಅಸ್ತವಿದೆ ತನ್ನಲ್ಲಿ? ಶವಸಂಸ್ಕಾರ ಮಾಡೋ ಅರ್ಹತೆಯ ಪ್ರಶ್ನೆ ಬಂದರೆ-ಏನು-ನನ್ನದೇನೂ ಅಡ್ಡಿಯಿಲ್ಲ. ನೀನೇ ಮಾಡಂತೆ. ಬೇರೆಯವರ ಪಾಪಾನ್ನ ಸ್ವೀಕರಿಸಲಿಕ್ಕೆ ಎಂದೇ ಬ್ರಾಹ್ಮಣಜನ್ಮ ಬಂದಿರೋದು ತಾನೆ? ಆದರೆ ಆ ಬಂಗಾರ ಮಾತ್ರ ಕೋರ್ಟಿಗೆ ಹೋಗಬೇಕು. ಅಥವಾ ಧರ್ಮಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು.” ಪ್ರಾಣೇಶಾಚಾರ್ಯರು ಅತ್ಯಂತ ವ್ಯಥಿತರಾದರು. ಒಂದು ವೇಳೆ ಶವಸಂಸ್ಕಾರದ ಪ್ರಶ್ನೆ ಇತ್ಯರ್ಥವಾದರೂ ಈ ಬಂಗಾರದ ಪ್ರಶ್ನೆ ಇತ್ಯರ್ಥ ಮಾಡೋದು ಸುಲಭವಲ್ಲ. ಘಳಿಗೆ ಘಳಿಗೆಗೂ ತನ್ನ ಜವಾಬ್ದಾರಿ ಹೆಚ್ಚುತ್ತಿದೆ. ನಾರಣಪ್ಪನ ಸವಾಲು ತ್ರಿವಿಕ್ರಮ ಪಾದವಾಗಿ ಬೆಳೆಯುತ್ತಿದೆ…. ಅಷ್ಟರಲ್ಲಿ ಬಡವ ದಾಸಾಚಾರ್ಯನ ನಾಯಕತ್ವದಲ್ಲಿ ಉಳಿದ ಬಡಬ್ರಾಹ್ಮಣರು ಬಂದು ಸೇರಿದರು. “ಆಚಾರ್ಯರೆ….” ದಾಸಾಚಾರ್ಯ ಹೊಟ್ಟೆಯನ್ನು-ಅಳುವ ಮಕ್ಕಳ ಬೆನ್ನನ್ನು ತಾಯಿ ಸವರುವಂತೆ-ಸವರುತ್ತ ಹೇಳಿದ: “ನನಗೆ ಆರೋಗ್ಯ ನೆಟ್ಟಗಿಲ್ಲ-ನಿಮಗೆ ಗೊತ್ತು. ಆಹಾರವಿಲ್ಲದೇ ಇದ್ದರೆ ನನ್ನ ಪ್ರಾಣಕ್ಕೇ ಅಪಾಯ. ನೀವು ಒಂದು ಮಾರ್ಗ ತೋರಿಸಬೇಕು. ಅಥವ ಆ ಆಪದ್ಧರ್ಮದ ಪ್ರಕಾರ ಏನು ಮಾಡಬಹುದೆಂದಾದರೂ ಆಜ್ಞೆ ಮಾಡಬೇಕು. ಹೆಣವನ್ನು ಅಗ್ರಹಾರದಲ್ಲಿಟ್ಟುಕೊಂಡು ಊಟ ಮಾಡಬಹುದೋ ಹೇಗೋ ಹೇಳಿ. ಅಲ್ಲದೆ ಇದು ನಡುಬೇಸಗೆ. ಇನ್ನೊಂದು ದಿನದೊಳಗೆ ಹೆಣ ವಾಸನೆ ಬಂದು ನಾರೋದು ಖಂಡಿತ. ನನ್ನ ಮನೆಯೋ ಅವನದ್ದಕ್ಕೆ ಹತ್ತಿರ. ಯಾರಿಗೂ ಅದು ಒಳ್ಳೆಯದಲ್ಲ. ಅಗ್ರಹಾರದ ಹಿತದ ದೃಷ್ಟಿಯಿಂದ ಲಕ್ಷ್ಮಣಾಚಾರ್ಯ ಅಥವ ಗರುಡಾಚಾರ್ಯ ಒಂದು ತೀರ್ಮಾನಕ್ಕೆ ಬರಬೇಕು.” +ಸಂಜೆಯಾಯಿತು. ಆದರೆ ಸಂಧ್ಯಾವಂದನವಿಲ್ಲ. ಊಟವೂ ಇಲ್ಲ. ಪ್ರಾಣೇಶಾಚಾರ್ಯರಿಗೆ ಕೆಗೇನೂ ಕೆಲಸವಿಲ್ಲದೆ ರಗಳೆಯಾದಂತಾಗಿ ಒಳಗಿಂದ ಹೊರಕ್ಕೆ, ಹೊರಗಿಂದ ಒಳಕ್ಕೆ, ಓಡಾಡಿದರು. ಅಂಗಳದಲ್ಲಿ ಕೂತಿದ್ದ ಚಂದ್ರಿಗೆ “ಮೇಲೆ ಬಂದು ಕೂತುಕೊ” ಎಂದರು. ಹೆಂಡತಿಯನ್ನು ಮಗುವಿನಂತೆ ಎರಡು ಕೆಯಲ್ಲಿ ಹಿತ್ತಿಲಿಗೆ ಎತ್ತಿಕೊಂಡು ಹೋಗಿ ಮೂತ್ರ ಹೊಯ್ಯಿಸಿ, ತಿರುಗಿ ಎತ್ತಿ ತಂದು ಹಾಸಿಗೆಯ ಮೇಲೆ ಮಲಗಿಸಿದರು. ಸಂಜೆಯ ಔಷಧವನ್ನು ಕುಡಿಸಿ, ತಿರುಗಿ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಶಾಸ್ತಗಳನ್ನು ತಿರುವಿಹಾಕುತ್ತ ಕೂತರು. +ಅಧ್ಯಾಯ : ಐದು +ಶಿರ್ನಾಳಿಗೆ ಹಿಂದಿನ ರಾತ್ರೆ ಕೇಳೂರು ಮೇಳದವರ ಜಾಂಬುವಂತಿ-ಕಲ್ಯಾಣ ನೋಡಹೋಗಿದ್ದ ಶ್ರೀಪತಿಗೆ ನಾರಣಪ್ಪ ಶಿವಮೊಗ್ಗೆಯಿಂದ ಬಂದವನು ಹಾಸಿಗೆ ಹಿಡಿದು ಮಲಗಿದ್ದೂ ತಿಳಿಯದು, ಸತ್ತದ್ದೂ ತಿಳಿಯದು. ತಿಳಿದಿದ್ದರೆ ಅಗ್ರಹಾರದಲ್ಲೆಲ್ಲ ಗುಪ್ತವಾಗಿ ತನಗೆ ಆಪ್ತನಾದ ಗೆಳೆಯನೊಬ್ಬನ ಸಾವಿನಿಂದಾಗಿ ಅವನಿಗೆ ವ್ಯಥೆಯಾಗುತ್ತಿತ್ತು. ಅವನು ಮನೆಬಿಟ್ಟು ಹೊರಟು ವಾರದ ಮೇಲಾಗಿದೆ. ಕೇಳೂರು ಮೇಳದ ಭಾಗವತನ ಸ್ನೇಹಮಾಡಿ ಅವನು ಬಿಡಾರಬಿಟ್ಟಲ್ಲಿ ಆಟದವರ ಜೊತೆ ತಂಗಿ, ಊಟ ಮಾಡಿ, ರಾತ್ರೆ ಆಟ ನೋಡಿ, ಹಗಲು ನಿದ್ದೆಮಾಡಿ, ಬಿಡುವಿನಲ್ಲಿ ಅಕ್ಕಪಕ್ಕದ ಹಳ್ಳಿಯ ಜನರಲ್ಲಿಗೆ ಹೋಗಿ ಮೇಳದವರಿಗೆ ವೀಳ್ಯಕೊಟ್ಟು ಸ್ವಾಗತಿಸುವಂತೆ ಪ್ರಚಾರಮಾಡಿ, ಸರಸ-ಕುಶಲ-ಸಂಭಾಷಣೆಯಲ್ಲಿ ಲೋಕವನ್ನು ಒಂದು ವಾರ ಮರೆತಿದ್ದು, ಇವತ್ತು ರಾತ್ರೆ ಕೆಯಲ್ಲಿ ಬ್ಯಾಟರಿ ಹಿಡಿದು ಕಾಡಿನ ಕತ್ತಲಲ್ಲಿ ತನ್ನ ಧೆರ್ಯಕ್ಕಾಗಿ ಗಟ್ಟಿಯಾಗಿ ಒಂದು ಪದ ಹೇಳುತ್ತ ಬರುತ್ತಿದ್ದಾನೆ. ಮೇಲಕ್ಕೆ ಬಾಚಿದ ಅವನ ಕ್ರಾಪಿನ ಕೂದಲು ಕ್ಷೌರವಿಲ್ಲದೆ ಕತ್ತಿನ ತನಕ ಬೆಳೆದಿರಲು ಕಾರಣ ತನಗೊಂದು ಸ್ತೀವೇಷವನ್ನು ಮುಂದಿನ ವರ್ಷ ಕೊಡುವುದಾಗಿ ಭಾಗವತ ಕೊಟ್ಟ ಆಶ್ವಾಸನೆ. ಎಷ್ಟೆಂದರೂ ಪ್ರಾಣೇಶಾಚಾರ್ಯರು ತಿದ್ದದ ನಾಲಿಗೆ ತಾನೇ? ನಿನ್ನ ವಾಕ್ಯಸರಣಿ ಗಂಟಲು ಪರಿಶುದ್ಧವಾಗಿದೆಯೆಂದು ಭಾಗವತ ಮೆಚ್ಚಿದ್ದ. ಅಲ್ಲದೆ ಆಚಾರ್ಯರಿಂದ ಒಂದಿಷ್ಟು ಸಂಸ್ಕೃತ ತರ್ಕ ಪುರಾಣ ಕೇಳಿ ಯಕ್ಷಗಾನದ ಗಹನವಾದ ಸಂಭಾಷಣೆಗೆ ಅವಶ್ಯವಾದ ಸಂಸ್ಕೃತಿಯೂ ಇದೆ ತನ್ನಲ್ಲಿ. ಮೇಳದಲ್ಲೊಂದು ಪಾರ್ಟು ಸಿಕ್ಕಿದ ಮೇಲೆ ಬೊಜ್ಜದ ಒಡೆ, ಬೊಜ್ಜದ ಪಾಯಸ, ಹಲಸಿನ ಹಣ್ಣಿನ ಮುಳಕಕ್ಕೆಂದು ಬದುಕುವ ಬ್ರಾಹ್ಮಣರ ಕೊಂಪೆಯಿಂದ ಪಾರಾಗಬಹುದು ಎಂದು ಶ್ರೀಪತಿಗೆ ಹರ್ಷ ತುಂಬಿ ಕತ್ತಲೆಯಲ್ಲಿ ಕಾಡಿನಲ್ಲಿ ಭಯವಾಗುತ್ತಿಲ್ಲ. ಅಲ್ಲದೆ ಪೂಜಾರಿ ಶೀನನ ಗುಡಿಸಲಿನಲ್ಲಿ ಕುಡಿದಿದ್ದ ಹೆಂಡ ಹಿತವಾಗಿ ತಲೆಗೆ ಏರಿ ಕಾಡಿನ ಗಾಢವಾದ ಮೌನ ಅವನಲ್ಲಿ ನಡುಕ ಹುಟ್ಟಿಸುತ್ತಿಲ್ಲ. ಎರಡು ಸೀಸೆ ಹೆಂಡ; ಒತ್ತಿದೊಡನೆ ಬೆಳಕು ಚೆಲ್ಲುವ, ಹಳ್ಳಿಯ ಜನರಿಗೆ ಪರಮಾಶ್ಚರ್ಯ ವಸ್ತುವಾದ ಬ್ಯಾಟರಿ-ಹೀಗೆ ಸಶಸ್ತನಾಗಿ ಹೊರಟಮೇಲೆ ದೆವ್ವವೆಲ್ಲಿ, ಭೂತವೆಲ್ಲಿ? ದೂರ್ವಾಸಪುರ ಹತ್ತಿರವಾದಂತೆ ಅವನ ಮೆ ತನಗೆ ಕಾದಿರುವ ಸುಖದ ಕಲ್ಪನೆಯಿಂದ ಬೆಚ್ಚಗಾಯಿತು. ಅವನ ಹೆಂಡತಿ ತೊಡೆಯನ್ನು ಗಂಟು ಹಾಕಿ ಕೌಂಚಿ ಮಲಗಿದರೇನಂತೆ? ಬೆಳ್ಳಿಯಿದ್ದಾಳಲ್ಲ. ಬೆಳ್ಳಿ ಹೊಲತಿಯಾದರೇನಂತೆ? ನಾರಣಪ್ಪ ಹೇಳುವುದಿಲ್ಲವೆ-ಕಾಳಿಯಾದರೇನು? ಬೋಳಿಯಾದರೇನು? ಬೆಳ್ಳಿ ಕಾಳಿಯೂ ಅಲ್ಲ ಬೋಳಿಯೂ ಅಲ್ಲ. ಬಚ್ಚ-ಗಲ್ಲದ, ಬತ್ತಿದ ಮೊಲೆಯ, ಬೇಳೆಹುಳಿ ವಾಸನೆ ಬರುವ ಬಾಯಿಯ ಯಾವ ಬ್ರಾಹ್ಮಣ ಹುಡುಗಿ ಅವಳಿಗೆ ಸಮ? ಕೆಗೆ ತೊಡೆಗೆ ಭರ್ತಿಯಾಗಿ ಸಿಗುವ, ಮರಳಿನಲ್ಲಿ ಮಣ್ಣಿನಲ್ಲಿ ಎಣೆಯಾಡುವ ಹಾವಿನಂತೆ ತನ್ನ ಜೊತೆ ಹೊರಳುವ ಬೆಳ್ಳಿಗೇನು ಕೊರತೆ? ಇಷ್ಟು ಹೊತ್ತಿಗೆ ಅವಳು ಗುಡಿಸಲಿನ ಎದುರು ಮಡಿಕೆಯಲ್ಲಿ ಕಾಯಿಸಿದ ಬಿಸಿನೀರು ಸ್ನಾನ ಮಾಡಿ, ಅವಳಪ್ಪ ತಂದ ಹುಳಿ ಹೆಂಡವನ್ನಷ್ಟು ಕುಡಿದು ಬೆಚ್ಚಗೆ ಹದವಾಗಿರುತ್ತಾಳೆ : ಶ್ರುತಿ ಮಾಡಿದ ಮೃದಂಗದಂತೆ. ಅಚ್ಚಕಪ್ಪೂ ಅಲ್ಲ, ಬಿಳುಚಿದ ಬಿಳಿಯೂ ಅಲ್ಲ-ಬೀಜಕ್ಕೆ ಫಲವತ್ತಾದ ಎಳೆಬಿಸಿಲಿನಲ್ಲಿ ಕಾದ ಮಣ್ಣಿನ ಬಣ್ಣ ಅವಳ ಮೆ; ಶ್ರೀಪತಿಯ ನಡೆಯುವ ಹೆಜ್ಜೆ ನಿಲ್ಲುತ್ತದೆ. ಖುಷಿಗೆ ಬ್ಯಾಟರಿಯೊತ್ತಿ ಬೆಳಕು ಮಾಡಿ ಆರಿಸುತ್ತಾನೆ. ಮತ್ತೆ ಹತ್ತಿಸಿ ಅರಣ್ಯದ ಸುತ್ತ ಬೆಳಕನ್ನು ಚೆಲ್ಲಿ ರಾಕ್ಷಸವೇಷ ಹಾಕಿ ಬಂದ ಆಟದವನಂತೆ ಹಿಗ್ಗುತ್ತಾನೆ. ಥೆ ಥೆ ತಕಥೆಥೆಥೆಥೆ : ಕುಣಿಯುತ್ತಾನೆ. ಕುಮ್ಮಚಟ್ಟು ಹಾಕಿ ತನಗೆ ಮಂಡಿಯ ಮೇಲೆ ಸುತ್ತುವುದಕ್ಕೆ ಬರುತ್ತದೊ ನೋಡುವ ಎಂದು ಪ್ರಯತ್ನಿಸಿ ಮಂಡಿಗೆ ಪೆಟ್ಟಾಗಿ ಎದ್ದು ನಿಲ್ಲುತ್ತಾನೆ. ಅರಣ್ಯದ ನಿರ್ಜನತೆ, ಬ್ಯಾಟರಿಯ ಬೆಳಕಿಗೆ ಗಾಬರಿಯಾದ ಹಕ್ಕಿಗಳ ರೆಕ್ಕೆಯ ಪಟಪಟದಿಂದ ಇನ್ನಷ್ಟು ಮದವುಕ್ಕುತ್ತದೆ. ಕರೆದ ಕೂಡಲೆ ಹಾಜರಾಗುತ್ತವೆ: ನವರಸಭಾವಗಳು. ಕೋಪವೇ, ಬೀಭತ್ಸವೇ, ರೌದ್ರವೇ, ಭಕ್ತಿಯೇ, ಶೃಂಗಾರವೇ-ಒಂದರಿಂದೊಂದಕ್ಕೆ ಸಲೀಸಾಗಿ ಜಾರುತ್ತದೆ ಅವನ ಕಲ್ಪನೆ. ಈಗ ಲಕ್ಷ್ಮೀದೇವಿ ನಸುಕಿನಲ್ಲೆದ್ದು ಯಕ್ಷಗಾನದ ಧಾಟಿಯಲ್ಲಿ ಉದಯರಾಗದ ಕೀರ್ತನೆಯನ್ನು ಶೇಷಶಾಯಿಗೆ ಹಾಡುತ್ತಿದ್ದಾಳೆ…ಏಳು…ನಾರಾಽಽಽಯಣನೆ +ಏಳು ಲಕ್ಷ್ಮೀರಮಣಽಽ +ಏಳಯ್ಯಽಽ ಬೆಳಽಽಗಾಯಿತೂ… ಶ್ರೀಪತಿಯ ಕಣ್ಣಿನಲ್ಲಿ ನೀರೇ ಬಂದುಬಿಡುತ್ತದೆ. ಗರುಡ ಬಂದು ಎಬ್ಬಿಸುತ್ತಾನೆ-’ಏಳು ನಾರಾಯಣನೆ.” ನಾರದ ಬಂದು ತಂಬೂರಿ ಬಾರಿಸುತ್ತ ಎಬ್ಬಿಸುತ್ತಾನೆ-’ಏಳು ಲಕ್ಷಮೀರಮಣ.’ ಸಮಸ್ತ ಪಶುಪಕ್ಷಿಗಳು, ವಾನರ, ಕಿನ್ನರ, ಯಕ್ಷ, ಗಂಧರ್ವಾದಿಗಳು ಬೇಡಿಕೊಳ್ಳುತ್ತಾರೆ-’ಏಳಯ್ಯ ಬೆಳಽಽಗಾಯಿತು.’ ಶ್ರೀಪತಿ ಮತ್ತೆ ಲಾಸ್ಯದಲ್ಲಿ ಉಟ್ಟ ಪಂಚೆಯನ್ನು ಸೀರೆಯಂತೆ ಹಿಡಿದು ಕೆಯಾಡಿಸಿ, ಕತ್ತು ಕೊಂಕಿಸಿ ಕುಣಿದ. ಶೀನನ ಹೆಂಡ ಏರೇ ಬಿಟ್ಟಿತಲ್ಲ, ನಾರಣಪ್ಪನಲ್ಲಿಗೆ ಹೋಗಿ ಇನ್ನಷ್ಟು ಏರಿಸಿಬಿಡಬೇಕೆಂದುಕೊಂಡ. ಯಕ್ಷಗಾನದ ಸ್ತೀಪಾತ್ರಗಳೆಲ್ಲ ನೆನಪಾಗುತ್ತವೆ. ಪುರಾಣಗಳಲ್ಲಿ ಹೆಣ್ಣಿನ ಮೋಹಕ್ಕೆ ಬಲಿಯಾಗದ ಋಷಿಯೇ ಇಲ್ಲ. ವಿಶ್ವಾಮಿತ್ರನ ತಪೋಭಂಗ ಮಾಡಿದ ಮೇನಕೆ-ಹೇಗಿದ್ದಿರಬೇಕು ಅವಳು? ಚಂದ್ರಿಗಿಂತ ಸುಂದರಿಯಿದ್ದಿರಬೇಕು. ಯಾರ ಕಣ್ಣಿಗೂ ಹರಕು ತುಂಡುಟ್ಟು ಗೊಬ್ಬರ ಎತ್ತಲು ಬರುವ ಬೆಳ್ಳಿಯ ರೂಪು ಬೀಳದಿದ್ದುದು ಪರಮಾಶ್ಚರ್ಯ. ಅದರಲ್ಲಿ ಆಶ್ಚರ್ಯವೂ ಇಲ್ಲ ಎನ್ನಿ. ಬ್ರಾಹ್ಮಣಾರ್ಥದ ಗೊಡ್ಡುಗಳ ಕಣ್ಣಿಗೆ ಏನು ತಾನೇ ಕಂಡೀತು? ಸಾರಿ ಸಾರಿ ಮಕ್ಕಳಿಗೆನ್ನುವಂತೆ ಪ್ರಾಣೇಶಾಚಾರ್ಯರು ವಿವರಿಸುತ್ತಾರೆ: ವೇದವ್ಯಾಸರು ಎಷ್ಟು ಪುಳಕಿತರಾಗಿರಬೇಕು! ಉದಯಕಾಲದಲ್ಲಿ ಅವರು ಎದ್ದು ಉಷೆಯನ್ನು ಕಂಡಾಗ ಭಗವಂತ ಈ ಮಾತುಗಳನ್ನು ಅವರ ಬಾಯಿಂದ ಆಡಿಸಿದಾಗ ’ಸ್ನಾನ ಮಾಡಿ ಶುಭ್ರಳಾದ ಪುಷ್ಪವತಿಯ ತೊಡೆಯ ಹಾಗೆ’ : ಆಹಾ ಎಂತಹ ಧೀರ ಕಲ್ಪನೆ, ಸುಂದರ ಉಪಮೆ. ಆದರೆ ಬ್ರಾಹ್ಮಣರಿಗೆ ಅದು ಬರಿಯ ಮಂತ್ರ, ಉದ್ಯೋಗಕ್ಕೊಂದು ಮಾರ್ಗ. ರಾಜನ ವೇಷ ಹಾಕುವ ಕುಂದಾಪುರದ ನಾಗಪ್ಪ ಎಷೊಂದು ಗಮ್ಮತ್ತಿನಲ್ಲಿ ಮಾತನ್ನಾಡುತ್ತಾನೆ: ಈ ದುಂಬಿಗಳೋ ಈ ಪಾರಿಜಾತ, ಸಂಪಿಗೆ, ಮಲ್ಲಿಗೆ, ಕೇದಗೆ ಬೆಳೇದ ಈ ವನವೋ, ಇಲ್ಲಿ ಏಕಾಂಗಿಯಾಗಿ, ಅವನತವದನೆಯಾಗಿ, ದುಃಖದಿಂದ ಬಾಧಿತಳಾಗಿ ಕಾಣುವ ಎಲೆ ರಮಣಿ, ನೀನು ಯಾರು? ಶ್ರೀಪತಿ ಮುಗುಳ್ನಗುತ್ತ ನಡೆಯುತ್ತಾನೆ. ಅಗ್ರಹಾರದಲೆಲ್ಲ ಸೌಂದರ್ಯವನ್ನು ಕಾಣುವ ಕಣ್ಣಿರುವುದೆಂದರೆ ಇಬ್ಬರಿಗೆ ಮಾತ್ರ: ನಾರಣಪ್ಪನಿಗೆ, ಚಂದ್ರಿಗೆ. +***** +ಮುಂದುವರೆಯುವುದು +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ […] +“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” “ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” “ಹ್ಞೂಂ ಬಾ, […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_523.txt b/Kannada Sahitya/article_523.txt new file mode 100644 index 0000000000000000000000000000000000000000..95bc030d578d82278371c4a15fd46df87e0dfa2b --- /dev/null +++ b/Kannada Sahitya/article_523.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು ಹೇಗೆ ಎಂಬ ಪ್ರಶ್ನೆಯೂ ಮುಂದಿರುವುದರಿಂದ ಅಲ್ಲಲ್ಲಿ ಚುಚ್ಚು ಮಾತುಗಳಿದ್ದರೆ ಅದರ ಅಗತ್ಯದ ಕುರಿತಂತೆ ಸಹೃದಯರು ಮನಗಾಣುತ್ತಾರೆ ಎಂಬ ಭರವಸೆಯೂ ಇದೆ. ಆದುದರಿಂದ ಧೈರ್ಯ ಮಾಡಿದ್ದೇನೆ. +“ಕನ್ನಡದಲ್ಲಿ ಒಂದೇ ರೀತಿಯ ಸ್ಟಾಂಡರ್ಡೈಸೇಶನ್ ಇಲ್ಲ” ಎಂದು ಹೇಳಿದ ಬೆನ್ನಲ್ಲೇ ’ಸಾಹಿತಿಗಳಿಂದ ಕನ್ನಡ ಉಳಿದು-ಬೆಳೆಯುತ್ತದೆ ಎಂಬ ನಂಬಿಕೆ ಇಲ್ಲ, ಏನಿದ್ದರು ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಯುವಕರಿಂದ ಮಾತ್ರ ಕನ್ನಡ ಉಳಿಯಬಲ್ಲದು’ – ಎನ್ನುವ ಅರ್ಥ ಬರುವ ಮಾತುಗಳನ್ನು, ಪರಿಚಿತರಾದ ಕೆ ಎನ್ ಹರಿಕುಮಾರ್ ಹೇಳಿದಾಗ ಅದನ್ನು ಗಟ್ಟಿಯಾಗಿ ವಿರೋಧಿಸುವ ಧ್ವನಿ ನನ್ನಲಿರಲಿಲ್ಲ. +hಣಣಠಿ://ತಿತಿತಿ.e-ಣಚಿಠಿಚಿಚಿಟ.ಛಿom ಮೂಲಕ ವಿದ್ಯುನ್ಮಾನ ಅಂಚೆಯ ಸೇವೆ ಸಲ್ಲಿಸುತ್ತಿರುವ ಕಾವೇರಿ ಕಮ್ಯೂನಿಕೇಶನ್ಸ್‌ನ ಶ್ರೀ ಕೆ ಎನ್ ಹರಿಕುಮಾರ್‌ರವರು ಹೇಳಿದಾಗ ಅದನ್ನು ಸಂಪೂರ್ಣವಾಗಿ ಒಪ್ಪುವುದನ್ನಾಗಲಿ – ನಿರಾಕರಿಸುವುದಾಗಲಿ ಎರಡೂ ಸಾಧ್ಯವಿರಲಿಲ್ಲ. ಜೊತೆಗೆ ಆಗ ನಾನು ಅಮೆರಿಕೆಯತ್ತ ಹೊರಟಿದ್ದೆ. ಮಾತುಗಳನ್ನು ಬೆಳೆಸುವುದಕ್ಕಾಗಲಿ, ಆ ಕುರಿತಂತೆ ಅಲೋಚಿಸುವುದಕ್ಕಾಗಲಿ ಕಾಲಾವಕಾಶವಿರಲಿಲ್ಲ. ಈಗಿನ ನನ್ನ ಅನುಭವದ ವ್ಯಾಪ್ತಿಯಲ್ಲಿ ಮಾತನಾಡುವುದಾದರೆ: ಸಾಹಿತಿಗಳಿಂದ ಕನ್ನಡ ಉಳಿಯುತ್ತದೋ ಇಲ್ಲವೋ- ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕನ್ನಡಿಗ ಯುವಕ-ಯುವತಿಯರಿಂದ ಕನ್ನಡ ಉಳಿಯುವ ಯಾವ ಸೂಚನೆಯೂ ಈವರೆಗೆ ಬಂದಿಲ್ಲ. ವಾಸ್ತವವಾಗಿ ಅವರು ಕನ್ನಡದಿಂದ ದೂರ ಹೋಗುತ್ತಿದ್ದಾರೆ ಎನ್ನುವುದು ಹೆಚ್ಚು ನಿಜವಾಗಬಹುದೇನೊ. +ಇಂಗ್ಲೀಷೂ ಸೇರಿದಂತೆ ಜಗತ್ತಿನ ಯಾವ ಭಾಷೆಗೂ ಇಂದಿಗೂ ಮಾಹಿತಿ ತಂತ್ರಜ್ಞಾನ ಕ್ಸೇತ್ರ ಒಂದೇ ರೀತಿಯ ’ಎಲ್ಲರೂ ಸಮಾನವಾಗಿ ಬಳಸಬಹುದಾದ- ಏಕರೂಪ’ ಸ್ಟಾಂಡರ್ಡೈಸೇಶನ್ ಇಲ್ಲ ಎಂಬುದೇ ನಿಜ- ಹರಿಕುಮಾರ್‌ರವರ ಮತುಗಳನ್ನು ಇಲ್ಲಿ ಕಾಣಿಸಿರುವ ಉದ್ದೇಶ: ಅವರಂತೆಯೇ ವಾದ ಮಾಡುವವರು ಅನೇಕರು ಇದ್ದಾರೆ, ಆ ವಾದ ಕೇವಲ ಕಾಲಕ್ಷೇಪದ ಒಂದು ಪರಿಯಾದರೆ ತಲೆ ಕೆಡಿಸಿಕೊಳ್ಳಲೇ ಬೇಕಾದ್ದಿಲ್ಲ. ಆದರೆ ಅದೇ ಒಂದು ನಂಬಿಕೆಯಾಗುತ್ತಿರುವಂತೆ ಕಾಣಿಸುತ್ತಿದೆ. ’ಅಲ್ಲಿ ನೋಡಿ ಏನೆಲ್ಲ ಇದೆ, ಇಲ್ಲೇನಿದೆ ಮಣ್ಣು’ ಎಂಬ ಉಪೇಕ್ಷೆಯೂ ಸೇರಿಕೊಂಡಿದೆ. ಆದುದರಿಂದ ಈ ವಾದವನ್ನು /ಉಪೇಕ್ಷೆಯನ್ನು, ಕನ್ನಡಸಾಹಿತ್ಯಕಾಂ ನನ್ನು ಪುನರ್‌ರೂಪಿಸಲು ನಾನು ತೊಡಗಿಕೊಂಡನಂತರದ ದಿನಗಳಲ್ಲಿ ಅನುಭವಿಸಿದ ಕಷ್ಟಗಳ ಹಿನ್ನೆಲೆಯಲ್ಲಿ ಪರೀಕ್ಷಿಸಲು ಬಯಸಿದ್ದೇನೆ. ಅವರ ಮಾತು/ವಾದ/ಉಪೇಕ್ಷೆ ಅರ್ಧ ನಿಜ ಅರ್ಧ ಉತ್ಪ್ರೇಕ್ಷೆ. ಕನ್ನಡದಲ್ಲೂ ಒಂದೇ ರೀತಿಯಲ್ಲಿ ’ಎಲ್ಲರೂ ಸಮಾನವಾಗಿ ಬಳಸಬಹುದಾದ- ಏಕರೂಪ’ (ಸ್ಟಾಂಡರ್ಡೈಸೇಶನ್) ಇಲ್ಲ. ಇಂಗ್ಲಿಷ್‌ನಲ್ಲಿಯೂ ಇಲ್ಲ. (ಈ ಕುರಿತಾಂತೆ ಯಾರೂ ಮಾತನಾಡುವುದಿಲ್ಲ, ಅಲ್ಲಿ ಎಲ್ಲವೂ ಚಂದವಾಗಿಯೇ ಇದೆ ಎಂಬ ಪೂರ್ವಭಾವಿ ನಿರ್ಣಯ. ಆ ಕುರಿತಂತೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕನ್ನಡದಲ್ಲಿ ಇಲ್ಲ, ಅಷ್ಟರ ಮಟ್ಟಿಗಂತೂ ನಿಜ ಎಂಬುದನ್ನು ಮನಗಂಡಿದ್ದೇನೆ. ಈ ಮನಗಾಣುವಿಕೆಯ ಹಿನ್ನೆಲೆಯಲ್ಲಿ ಕನ್ನಡಸಾಹಿತ್ಯ.ಕಾಂ ನನ್ನು ಪುನರ್‌ರೂಪಿಸತೊಡಗಿದಾಗ ನನ್ನ ಹುಡುಕಾಟ, ಎದ್ದ ಪ್ರಶ್ನೆಗಳು, ಇರುವ ಮಿತಿಗಳಲ್ಲೇ ಕಂಡುಕೊಂಡ ಪರಿಹಾರಗಳ ಅನುಭವದ ಹಿನ್ನೆಲೆ ಇದೆ. ಈ ಅನುಭವ ಹರಿಕುಮಾರ್‌ರ ಮಾತುಗಳನ್ನು ಕೇಳಿದಾಗ ಆಗಿದ್ದ ಅಸಮಾಧಾನವನ್ನು ಬದಿಗಿಟ್ಟು ನೋಡುವ ಪಕ್ವತೆಯನ್ನು ತಂದುಕೊಟ್ಟಿದೆ. ಮೊದಲರ್ಧ ಮಾತುಗಳನ್ನು ಒಪ್ಪಿಕೊಂಡು- ಉಳಿದರ್ಧ ಮಾತುಗಳನ್ನು ಏಕೆ ನಿರಾಕರಿಸುತ್ತೇನೆಂಬ ಕಾರಣಗಳಿಗೆ ನಂತರ ಬರುತ್ತೇನೆ. +ಕನ್ನಡಸಾಹಿತ್ಯ.ಕಾಂ ಪುನರ್‌ರೂಪಿಸಬೇಕಾದ ಅಗತ್ಯವೇನಿತ್ತು? (ಪುನರ್‌ರೂಪಿಸುವ ಸಾಹಸಕ್ಕಿಳಿದು ತಪ್ಪು ಮಾಡಿದೆ ಎಂದು ಆಗಾಗ್ಯೆ ಅನ್ನಿಸಿದ್ದೂ ಸುಳ್ಳಲ್ಲ) +-ಎಂಬ ಪ್ರಶ್ನೆ ಸಹಜವಾದುದೆ. ಮೂರು ವರ್ಷಗಳ ಹಿಂದೆ ಈ ವೆಬ್‌ಸೈಟ್ ರೂಪಿಸಿದಾಗ ಇದ್ದ ಚಾರಣಿಕೆಗಳ ಮಿತಿಗೆ ತಕ್ಕಂತೆ ಪುಟಗಳ ವಿನ್ಯಾಸ ಮಾಡಿದ್ದೆ. ಕನ್ನಡ ಸಾಹಿತ್ಯ.ಕಾಂ ಆರಂಭಿಸಿದಾಗ ಕೈಗೆಟುಕುವಂತಿದ್ದದ್ದು ಶೈಶವಾವಸ್ಥೆಯಲ್ಲಿದ್ದ ’ಬರಹ’೨. ಚಾಲ್ತಿಯಲ್ಲಿದ್ದದ್ದು ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೪ ಹಾಗು ನೆಟ್‌ಸ್ಕೇಪ್ ೪.೪. ಇವುಗಳಿಗೆ ತಕ್ಕಂತೆ ಬರಹ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿ, ಅಕಸ್ಮಾತ್ ವೆಬ್‌ಸೈಟಿಗೆ ಬಂದವರು ನಿರಾಶೆಯಾಗದಿರಲೆಂದು ಡೈನಾಮಿಕ್ ಫಾಂಟ್ಸ್ ಬಳಸಿದ್ದೆ. ಎರಡು ಚಾರಣಿಕೆಯಲ್ಲಿ ಇದ್ದುದರಲ್ಲಿ ಉತ್ತಮವಾಗಿ ಕಾಣಿಸುತ್ತಿದ್ದ ಪುಟಗಳನ್ನು ನೋಡುತ್ತ, ಒಮ್ಮೊಮ್ಮೆ, ಬಂದದ್ದನ್ನೆಲ್ಲ ಓದುತ್ತ, ಅಕ್ಷರಗಳು ಒಡ್ಡುತ್ತಿದ್ದ ಮಾಯೆಯಿಂದ- ಅತ್ಯುತ್ತಮವಾದ ವೆಬ್‌ಸೈಟ್ ಮಾಡಿದ್ದೇನೆಂಬ- ಒಮ್ಮೊಮ್ಮೆ ಅಹಂಕಾರದಿಂದ, ಒಮ್ಮೊಮ್ಮೆ ಹೆಮ್ಮೆಯಿಂದ ಬೀಗುತ್ತಿದ್ದ ನಾನು, ಅಂತರ್ಜಾಲದಲ್ಲಾಗುತ್ತಿದ್ದ- ತಾಂತ್ರಿಕತೆಯಲ್ಲಾಗುತ್ತಿದ್ದ ಪ್ರಗತಿಯನ್ನು ಗಮನಿಸಿದರೂ ಏಕೋ ಉಪೇಕ್ಷೆಸಿದ್ದೆ, ಸೋಮಾರಿತನ ಕಾರಣವಿರಬಹುದು. ನಂತರ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೫, ೫.೫, ೬ ಹಾಗು ನೆಟ್‌ಸ್ಕೇಪ್ ೪.೭, ೫, ೬, ೬.೧, ೭, ಆಪೆರಾ, ಮೊಜಿಲ್ಲಾ ಮುಂತಾದ ಚಾರಣಿಕೆಗಳು ಚಾಲ್ತಿಗೆ ಬರಲಾರಂಬಿಸಿದವು. ನಮ್ಮ ವೆಬ್‌ಸೈಟ್‌ನ ಪಠ್ಯ ಯಾವುದೇ ನಿಯಂತ್ರಣಕ್ಕೆ ಬರಲಾಗದಷ್ಟು ಬೆಳೆದು ಬಿಟ್ಟಿತ್ತು. ಮೊದಲು ರೂಪಿಸಿದ್ದ ಪುಟಗಳು ಇತ್ತೀಚಿನ ಚಾರಣಿಕೆಗಳಲ್ಲಿ ಕೆಟ್ಟದಾಗಿ ಕಾಣುತ್ತಿದ್ದುದನ್ನು ಗಮನಿಸಿದಾಗ ನಾನು ಸ್ವಲ್ಪ ಹೌಹಾರಿದ್ದೆ. ಪಠ್ಯವನ್ನೆಲ್ಲ ಪುನರ್‌ರೂಪಿಸದಿದ್ದರೆ ಹೊಸ ಚಾರಣಿಕೆಗಳನ್ನು ಬಳಸುತ್ತಿರುವವರು ಕಿರಿಕಿರಿ ಅನುಭವಿಸುತ್ತಾರೆ ಎಂದನ್ನಿಸಿತು. ಜೊತೆಗೆ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾಗಿ ಯುನಿಕೋಡ್ ಸೌಲಭ್ಯದ ಆಕರ್ಷಣೆಯೂ ಸೇರಿಕೊಂಡಾಗ ಈಗಲೇ ಇರುವ ಪಠ್ಯವನ್ನೆಲ್ಲ ಪುನರ್ ರೂಪಿಸದಿದ್ದರೆ ನಂತರ ಕೆಲಸ ಮತ್ತಷ್ಟು ಕಠಿಣವಾಗಿಬಿಡುತ್ತದೆ ಎಂಬ ಆತಂಕ ಆರಂಭವಾಯಿತು. ನನ್ನೊಳಗೆ ನಾನೆ ’ಅಡ್ವಾನ್ಸ್ಡ್ ಬ್ರೌಸರ್’ಗಳಲ್ಲಿ ಪುಟಗಳು ಕಾಣುತ್ತಿದ್ದ ರೀತಿಯ ಬಗೆಗೆ ಕಿರಿಕಿರಿ ಅನುಭವಿಸಲಾರಂಭಿಸಿದೆ. ಸರಿ, ಪುನರ್ ರೂಪಿಸಲಾರಂಭಿಸಿದಾಗ ಒಂದೊಂದೇ ತೊಡಕುಗಳು ಬಿಚ್ಚಿಕೊಳ್ಳಲಾರಂಭಿಸಿ ಕನ್ನಡಕ್ಕೆ ಇರುವ ತೊಡಕುಗಳೆಲ್ಲವೂ ಗಮನಕ್ಕೆ ಬರಲಾರಂಭಿಸಿದವು. +ಈಗಾಗಲೇ ಹೇಳಿದಂತೆ ನೆಟ್‌ಸ್ಕೇಫ್ ೪ ರನಂತರದ ಚಾರಣಿಕೆಗಳು ಡೈನಾಮಿಕ್ ಫಾಂಟ್ಸ್‌ಗಳನ್ನು ಬೆಂಬಲಿಸುತ್ತಿದ್ದವು. ನೆಟ್‌ಸ್ಕೇಪ್ ೬ ಹಾಗು ನಂತರದ ಚಾರಣಿಕೆಗಳು ಈ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಮೊಜಿಲ್ಲಾ ಆಪರಾ ಚಾರಾಣಿಕೆಗಳು ಸಹ ಡೈನಾಮಿಕ್ ಫಾಂಟ್ಸ್‌ಗಳನ್ನು ಬೆಂಬಲಿಸುವುದಿಲ್ಲ. ಇದ್ದ ಬೆಂಬಲವನ್ನು ಹಿಂತೆಗೆದುಕೊಂಡದ್ದು ಅಂತರ್ಜಾಲದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿರುವ ಭಾಷೆಗಳು ಮತ್ತಷ್ಟು ಬಿಕ್ಕಟ್ಟನ್ನು ಎದುರಿಸುವ ಸಂದರ್ಭ ಬಂದಿದೆ. ನನ್ನ ಪರವಾಗಿ ಕಿಶೋರ್ ಹೆಬ್ಬಾರ್ ನೆಟ್‌ಸ್ಕೇಪ್ ಸಂಸ್ಥೆಗೆ ಬರೆದಾಗ ಅಲ್ಲಿಂದ ಬಂದ ಉತ್ತರದಲ್ಲಿ: ” ಜಾವ ತಂತ್ರದ ದುರ್ಬಳಕೆ” ಎಂಬ ಸಾಲಿತ್ತು. ಅಂದರೆ ನೆಟ್‌ಸ್ಕೇಪ್ ಹಾಗು ಮೊಜಿಲ್ಲಾ ಇದನ್ನು ಅಚಲವಾದ ಧೋರಣೆಯನ್ನಾಗಿ ನಿರ್ಣಯಿಸಿವೆ. ಇದು ಒಂದು ರೀತಿಯಲ್ಲಿ ಸರಿಯಾದ ನಿರ್ಣಯವೆ. ಇದರ ಬಗೆಗೆ ಬೇರೊಂದು ರೀತಿಯಲ್ಲಿಯೂ ಯೋಚಿಸಬಹುದು. ’ಜಾವಾದ ಈ ಸೌಲಭ್ಯವನ್ನು ಬಳಕೆಯನ್ನು ಬೆಂಬಲಿಸಿದರೆ ಇಂಗ್ಲಿಷ್ ಹೊರತಾಗಿ ಬೇರೆಲ್ಲ ಭಾಷೆಗಳಿಗೆ ಅಂತರ್ಜಾಲದಲಿ ತಮ್ಮವೇ ಆದ ಒಂದೇ ರೀತಿಯ ಸ್ಟಾಂಡರ್ಡೈಸೇಶನ್ ಬರುವುದು ಹೇಗೆ? ಎಲ್ಲಿಯತನಕ ಏಕರೂಪ ಬಳಕೆ (ಸ್ಟಾಂಡರ್ಡೈಸೇಶನ್) ಇರುವುದಿಲ್ಲವೋ ಅಲ್ಲಿಯನಕ ಗೊಂದಲ, ಕಿರಿಕಿರಿ, ಒಬ್ಬೊಬ್ಬರೂ ಒಂದೊಂದನ್ನು ಬಳಸುತ್ತಿರುತ್ತಾರೆ: ಕಂಪಾಟಬಿಲಿಟಿ ಇರುವುದಿಲ್ಲ. ಈ ಸಂದರ್ಭದ ದುರ್ಲಾಭವನ್ನು ಪಡೆಯಲು ಅನೇಕ ದೊಡ್ಡ ದೊಡ್ಡ ಸಂಸ್ಥೆಗಳು ಕಾಯುತ್ತಿರುತ್ತವೆ. ಸ್ಟಾಂರ್ಡ್ಡಿಸೇಶನ್ ಅಗತ್ಯಕ್ಕಾಗಿಯಾದರೂ ಜಾವಾದ ಈ ದುರ್ಬಳಕೆ ನಿಲ್ಲಬೇಕು.’ ಈ ರೀತಿ ಆಲೋಚಿಸಿದನಂತರ ಎದುರಾದದ್ದು ಮತ್ತೊಂದು ಸಮಸ್ಯೆ: ನನ್ನ ಬಳಿ ಇರುವುದು ವಿಂಡೋಸ್ ೯೮ (ಏರಡನೇ ಆವೃತ್ತಿ) ವಿಂಡೋಸ್ ಎಕ್ಸ್ ಪಿ ಇರಲಿಲ್ಲ. ಲೈನೆಕ್ಸ್‌ನಲ್ಲಿ ಕನ್ನಡಕ್ಕೆ ಬೆಂಬಲ ಇಲ್ಲ. ಯುನಿಕೋಡ್.ಆರ್ಗ್ ನಿರ್ಣಯಿಸಿದ್ದ ಯುನಿಕೋಡ್ ವ್ಯವಸ್ಥೆಯನ್ನು ವಿಂಡೋಸ್ ಎಕ್ಸ್ ಪಿ ಬಳಕೆಗೆ ತಂದಿತ್ತು. ಆನ್‌ಲೈನ್‌ನಲ್ಲಿ ಸಿಕ್ಕ ಗೋಪಿನಾಥ್ ತಾತಾಚಾರ್‌ರೊಡನೆ ಚರ್ಚಿಸಿದಾಗ ಅವರು ವಿಂಡೋಸ್ ಎಕ್ಸ್ ಪಿ ಗೆ ತಗಲುವ ವೆಚ್ಚಭರಿಸಲು ಗೆಳೆಯರನ್ನು ಸಂಪರ್ಕಿಸುವುದಾಗಿ ಹೇಳಿದರು. ಅವರ ಪ್ರಯತ್ನದಿಂದಾಗಿ ಅವರ ಸ್ನೇಹಿತರಾದ ಭಾರ್ಗವ್ ವಿಜಾಪುರ್ ವಿಂಡೋಸ್ ಎಕ್ಸ್ ಪಿಗಾಗಿ ಆಗಬಹುದಾದ ಖರ್ಚನ್ನು ಭರಿಸಿದರು. ಇಬ್ಬರಿಗೂ ಕೃತಜ್ಞತೆಗಳು. +ವಿಂಡೋಸ್ ಎಕ್ಸ್ ಪಿ ಬಂದನಂತರ: +ಯುನಿಕೋಡ್ ಕೀಬೋರ್ಡ್ (ಕೀಲಿಮಣೆ) ಹಾಗು ಬರಹದ ಕೀಬೋರ್ಡ್ ಮತ್ತು ಗಣಕ ಪರಿಷತ್ ವಿನ್ಯಾಸಗೊಳಿಸಿ- ಕರ್ನಾಟಕ ಸರ್ಕಾರ ಮಾನ್ಯ ಮಾಡಿರುವ ಕೀಲಿಮಣೆಯ ನನ್ನ ಎದುರಿಗಿದ್ದವು . ತೊಡಕು ಆರಂಭವಾಗುವುದು ಇಲ್ಲಿ. ಅಮೆರಿಕಾದ ಕೀಲಿಮಣೆಯನ್ನು ಆಧರಿಸಿದ ಶಬ್ಧ ಹಾಗು ಇಂಗ್ಲಿಷ್ ಮೂಲವಾಗುಳ್ಳ ಕೀಲಿಮಣೆ ಹಾಗು ಕನ್ನಡಕ್ಕಾಗಿ ಯುನಿಕೋಡ್ ನಿರ್ಣಯಿಸಿರುವ ಕೀಲಿಮಣೆ ಹಾಗು ಕಗಪ (ಕನ್ನಡ ಗಣಕ ಪರಿಷತ್) ಮೂರಕ್ಕೂ ಸಂಬಂಧವೇ ಇಲ್ಲ. ಯುನಿಕೋಡ್.ಆರ್ಗ್ ಕನ್ನಡಕ್ಕೆ ಆಧರಿಸಿರುವುದು ಕೇಂದ್ರಸರ್ಕಾರದ ಹಿನ್ನೆಲೆಯುಳ್ಳ “ಅ‌ಆಂಅ” ನ ’ISಅII’ ’IಓSಅಖIPಖಿ’. ಹಾಗಾದರೆ- ಗಣಕ ಪರಿಷತ್ ರೂಪಿಸಿ ಕರ್ನಾಟಕ ಸರ್ಕಾರ ಮಾನ್ಯಗೊಳಿಸಿರುವ ಕಗಪ ಕೀಲಿಮಣೆ? ಬರಹದಲ್ಲೇನೋ ಮೂರೂ ಕೀಲಿಮಣೆಗೂ ಅವಕಾಶ ಮಾಡಿಕೊಡಲಾಗಿದೆ. ಬರಹ.ಕಾಂ ನಲ್ಲಿ ಯುನಿಕೋಡ್ ಕೀಲಿಮಣೆ ಬಳಕೆ ಕುರಿತಂತೆ ಮಾರ್ಗದರ್ಶಿ ’ಡಾಕ್ಯುಮೆಂಟ್’ ಇದ್ದಿದ್ದರೆ ಚೆನ್ನಿತ್ತು. +ಈ ಮೂರು ಕೀಲಿಮಣೆಯಲ್ಲಿ ಬಳಕೆಯಾಗಬಹುದಾದ್ದು ಯಾವುದು? ಬೇಕಿರಲಿ, ಬೇಡದಿರಲಿ ವಿಂಡೋಸ್ ಎಕ್ಸ್ ಪಿಯಲ್ಲಿ ಅಳವಡಿಕೆಯಾಗಿರುವ ಯುನಿಕೋಡ್. ಏಕೆಂದರೆ ಅದರ ಹಿನ್ನೆಲೆಯಲ್ಲಿ ವಿಂಡೋಸ್ ಎಕ್ಸ್ ಪಿ ಇದೆ. ಲೈನೆಕ್ಸ್‌ನಲ್ಲಿ ಪ್ರಾದೇಶಿಕ ಭಾಷೆಗಳು ಗಟ್ಟಿಯಾದ ಹೊರತು ಈ ಮೈಕ್ರೊಸಾಫ್ಟ್‌ನ ವ್ಯವಹಾರಕ್ಕೆ ಚ್ಯುತಿಯಂತೂ ಇಲ್ಲ- ಗಟ್ಟಿಯಾಗುತ್ತಲೇ ಹೋಗುತ್ತದೆ. ಅಕಸ್ಮಾತ್ ಲೈನೆಕ್ಸ್ ಉತ್ಸಾಹಿಗಳು ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿದರೂ ಸಹ ಅವರಿಗೂ ಸಹ ಅಂತಾರಾಷ್ಟ್ರಿಯ ಮಾನ್ಯತೆಯುಳ್ಳ ಯುನಿಕೋಡ್.ಆರ್ಗ್ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. (ವೈಯಕ್ತಿಕವಾಗಿ ನಾನಂತೂ ಈ ಮೈಕ್ರೊಸಾಫ್ಟ್ ಸಿಧ್ಧಾಂತಗಳನ್ನು ವಿರೋಧಿಸುವವ). +ಈ ಎಲ್ಲ ಸಮಸ್ಯೆಗಳನ್ನು ಗಮನಿಸುತ್ತಲೇ, ಯುನಿಕೋಡ್ ಹಾಗು ಬರಹ ಎರಡು ಅವೃತ್ತಿಯನ್ನು ರೂಪಿಸುವುದು ಎಂಬ ನಿರ್ಣಯಕ್ಕೆ ಬಂದೆ. ಈಗಾಗಲೆ ’ಬರಹದ’ ಕನ್ನಡ ಕೀಲಿಮಣೆಗೆ ಬೆರಳುಗಳು ಸುಮಾರಾಗಿ ಒಗ್ಗಿಹೋಗಿದೆ. ಯುನಿಕೋಡ್ ಆಧಾರಿತ ವಿಂಡೋಸ್ ಎಕ್ಸ್ ಪಿ ಯ ಕನ್ನಡ ಕೀಬೋರ್ಡನ್ನು ಹೊಸದಾಗಿ ಕಲಿಯುವ ಸಂಕಟ. ಜೊತೆಗೆ ಊಖಿ‌ಒ‌ಐ ಒಂದು ರೀತಿಯಲ್ಲಿ ಹಿನ್ನೆಲೆಗೆ ಸರಿದು ಘಿ‌ಒ‌ಐ ಚಲಾವಣೆಗೆ ಬರುವ ಎಲ್ಲ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. (ಊಖಿ‌ಒ‌ಐ ಖಿಚಿgsಗಳಿಂದ ಮುಕ್ತಿ ಸಿಕ್ಕಿ ನಮ್ಮದೇ ಆದ ತಾರ್ಕಿಕವಾದ ಪುಟಗಳ ವಿನ್ಯಾಸಕ್ಕೆ ಅವಕಾಶ ಮಾಡಿಕೊಡಲು ಅನುವಾಗುವಂತೆ ಅಂತರ್ಜಾಲವನ್ನು ತಯಾರಿಗೊಳಿಸುವ ಘಿ‌ಒ‌ಐ ಉದ್ದೇಶವನ್ನು ನಿಜಕ್ಕೂ ಸ್ವಾಗತಿಸಬಹುದು. ಕೀಲಿಮಣೆಯಲ್ಲಿ ಏಕರೂಪತೆ ಘಿ‌ಒ‌ಐ ನಲ್ಲಿ ಸ್ವಚ್ಛಂದ !!! ನಮ್ಮ ಹಂಬಲಗಳಲ್ಲಿ ಇದೆಂತಹ ವಿಪರ್ಯಾಸ…) ಸರಿ ಘಿ‌ಒ‌ಐ ಬಗೆಗಿರುವ ಪುಸ್ತಕಗಳನ್ನು ಗುಡ್ಡೆಹಾಕಿಕೊಂಡೆ. ನಿಧಾನಕ್ಕೆ ಒಂದೊಂದನ್ನೇ ಅರಗಿಸಿಕೊಳ್ಳಲಾರಂಭಿಸಿದೆ. (ಈ ವೇಳೆಯಲ್ಲಿ ನನಗೆ ಊಖಿ‌ಒ‌ಐನಲ್ಲಿ ಪ್ರಥಮ ಪಾಠ ಬೋಧಿಸಿದ ವಸುದೇಂದ್ರಶ್ರಾಫ್‌ನವರನ್ನು ನೆನೆಯಬೇಕು..) ಘಿ‌ಒ‌ಐ ಗೆ ಬೇಕಾಗಿರುವ ಸಿದ್ದತೆ ಈಗಲೇ ಮಾಡಿಕೊಳ್ಳೋಣ ಎಂದು ನಿರ್ಣಯಿಸಿ, ಸದ್ಯಕ್ಕೆ ಘಿ‌ಒ‌ಐನಲ್ಲೂ ಒಂದೇ ಬಗೆಯಾದ ’ಏಕರೂಪತೆ’ ಇಲ್ಲದಿರುವುದರಿಂದ ಕನಿಷ್ಟ ಘಿ‌ಊಖಿ‌ಒ‌ಐ ಬಳಸೋಣ ಎಂಬ ನಿರ್ಣಯಕ್ಕೆ ಬಂದೆ. ಅದು ಸುಲಭವಾಗಿತ್ತು. ಆದರೆ ಈ ಯುನಿಕೋಡ್‌ನ ಕೀಲಿಮಣೆ ಬಳಸುವುದು—ಬೆರಳುಗಳೆಲ್ಲ ನೋಯಲಾರಂಬಿಸಿದವು.- ರಾತ್ರಿ ಹೊತ್ತು ಮಾನಿಟರ್‌ನ ಗ್ಲೇರ್‌ಗೆ ಕಣ್ಣುಗಳು ಉರಿಯಲಾರಂಬಿಸಿದವು. ಸುಮಾರು ಇದೇ ವೇಳೆಗೆ ನಮ್ಮ ಶೇಷಾದ್ರಿವಾಸುರವರು (ಜಗತ್ತಿಗೆ ಕನ್ನಡ ಹಂಚಿದವರು) ಬರಹ ೫ ರ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಪಠ್ಯವನ್ನೆಲ್ಲ ಯುನಿಕೋಡ್‌ನಲ್ಲಿ ಉಳಿಸುವ ಸೌಲಭ್ಯವಿದ್ದದರಿಂದ ನನ್ನ ಕೆಲಸ ಸುಲಭವಾಯಿತು. ವಾಸುರವರಿಗೆ ಕನ್ನಡಸಾಹಿತ್ಯ.ಕಾಂ ಪರವಾಗಿ ಧನ್ಯವಾದಗಳು. +ಇದರ ಪರಿಣಾಮ ಯುನಿಕೋಡನ್ನು ಕನ್ನಡದಲ್ಲಿ ವ್ಯಾಪಕವಾಗಿ ಬಳಕೆಗೆ ತಂದಿರುವ ಪ್ರಥಮ ವೆಬ್‌ಸೈಟ್ ಕನ್ನಡಸಾಹಿತ್ಯ.ಕಾಂ. +-ಈಗ ಪುನಃ ಹರಿಕುಮಾರ್‌ರ ಉತ್ತಾರಾರ್ಧದ ಮಾತಿಗೆ ಬರುವ ಮುನ್ನ ಕರ್ನಾಟಕದಲ್ಲಿನ ಪರಿಸರವನ್ನು ಅತ್ಯುನ್ನತ ಮಟ್ಟದ ತಂತ್ರಜ್ಞಾನದ ಸೇವೆ ಸಲ್ಲಿಸುತ್ತಿರುವ ಪರಿಸರದ ನಡುವೆ ಇರುವ ಕನ್ನಡದ ವಾತಾವರಣವನ್ನು ಗಮನಿಸೋಣ. +ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನನ ಕ್ಷೇತ್ರದ ಪರಿಸರ: ನಮ್ಮ ಮುಖ್ಯಮಂತ್ರಿಯವರಾದ ಎಸ್ ಎಂ ಕೃಷ್ಣರವರ ಪ್ರಕಾರ ರೂ ೧೩.೦೦೦ ಕೋಟಿ ಮೌಲ್ಯವನ್ನು ರಫ್ತು ಮಾಡಲಾಗಿದೆ. ಕರ್ನಾಟಕ ಜಗತ್ತಿನ ನಕಾಶೆಯಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ಪ್ರಮುಖ ಸ್ಥಾನದಲ್ಲಿದೆ…ಇದರಲ್ಲಿ ಕನ್ನಡದ ಯುವಜನತೆಯ ಪಾಲೂ ಸಹ ದೊಡ್ಡದೇ ಆಗಿರಲು ಸಾಧ್ಯ. ಇಂತಹ ವಾತಾವರಣವಿರುವ ಕಡೆ ಕನ್ನಡವನ್ನು ಹೇಗೆ ಅರ್ಥೈಸಬೇಕು? ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕನ್ನಡವನ್ನು ಒಗ್ಗಿಸುವುದಾಗಲಿ ಅಥವ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಕನ್ನಡಕ್ಕೆ ಒಗ್ಗಿಸುವು ನಿಟ್ಟಿನಲ್ಲಾಗಲಿ ಏನಾದರೂ ಪ್ರಯತ್ನಗಳು ನಡೆದಿವೆಯೆ? ಗಣಕ ಪರಿಷತ್ ಹಾಗು ಕರ್ನಾಟಕ ಸರ್ಕಾರಗಳು ಸೃಷ್ಟಿಸಿರುವ ಗೊಂದಲಗಳ ಕಡೆ ಗಮನ ಹರಿಸಿದಾಗ: ಮಾಹಿತಿ ತಂತ್ರಜ್ಞಾನ ಕ್ಸೇತ್ರದಿಂದ ಕನ್ನಡಕ್ಕೇ ಏಕ ರೂಪ ಬಳಕೆಯ ನಿಟ್ಟಿನಲ್ಲಿ ಏನಾದರೂ ಕಾರ್ಯಗಳಾಗಿವೆಯೆ? ಆಗಿದೆ: ಕನ್ನಡ ಕೀಲಿಮಣೆಯ ವಿನ್ಯಾಸ ಹಾಗು ಅದನ್ನಾಧರಿಸಿದ ನುಡಿ ಎಂಬ ತಂತ್ರಾಂಶ. ಇದರಿಂದ ಏಕರೂಪ ಬರುವ ಭರವಸೆ ಇಟ್ಟುಕೊಳ್ಳಬಹುದೆ? ಇರುವ ಗೊಂದಲಗಳನ್ನು ಪರಿಶೀಲಿಸಿದರೆ ಸದ್ಯದ ಪರಿಸ್ಥಿತಿಯನ್ನು ಗಂಭೀರವಾಗಿ ನೋಡದೆ ಹೋದರೆ ಖಂಡಿತ ಸಾಧ್ಯವಿಲ್ಲ. +ಕಾರಣಗಳು: +೧. ಈಗಾಗಲೇ ಆತುರಾತುರವಾಗಿ ಯಾವುದರ ಪರಿಣಾಮವನ್ನೂ ಯೋಚಿಸದೆ ಗಣಕ ಪರಿಷತ್ ಹಾಗು ಕರ್ನಾಟಕ ಸರ್ಕಾರಗಳೆರಡೂ ಕನ್ನಡಕ್ಕೆಂದೇ ಕೀಲಿಮಣೆಯ ಏಕರೂಪವನ್ನು ಪ್ರಕಟಿಸಿ ಮಾನ್ಯತೆ ನೀಡಿಬಿಟ್ಟಿವೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಸೇತ್ರದಲ್ಲಾಗಲಿ, ಅಂತರ್ಜಾಲದಲ್ಲಾಗಲಿ ಏಕರೂಪ ಬಳಕೆ ಬರಲು ಸಾಧ್ಯವಿಲ್ಲ. ಕಾರಣ ಸ್ಪಷ್ಟವಾಗಿದೆ: ಯುನಿಕೋಡ್, +೨. ಕೇಂದ್ರ ಸರ್ಕಾರದ ಪೋಷಿತ ಸಂಸ್ಥೆಗಳು ಭಾರತದ ಬಹುಭಾಷ ಬಳಕೆಗೆ ಅನುಗುಣವಾದ ISಅII ಆಧಾರಿತ IಓSಅಖIPಖಿ ಕೀಲಿಮಣೆಯನ್ನು ಅಭಿವೃದ್ಧಿಗೊಳಿಸಿ ಆಚರಣೆಗೆ ತಂದಿದೆ. (ಇದರಲ್ಲಿ ರೋಮನ್ ಸ್ಕ್ರಿಫ್ಟ್‌ನ ಅನುಕೂಲವಿದೆ. ಅದು ಸಾಮಾನ್ಯ ಬಳಕೆಗೆ ಸಾಕು. ಆದರೆ ಏಕರೂಪ ಬಳಕೆ ಸಾಧ್ಯವಿಲ್ಲ.) ಇದು ಇಲ್ಲಿಗೆ ನಿಂತಿದ್ದರೆ ಪರವಾಗಿರಲಿಲ್ಲ. ಅಂತರ್ಜಾಲ ಎಂಬುದೊಂದಿದೆ- ಜಗತ್ತಿನಾದ್ಯಂತ ಕನ್ನಡಿಗರಿದ್ದಾರೆ- ಕನ್ನಡ ಭಾಷೆಯನ್ನು ಅಂತರ್ಜಾಲ ಮಾಧ್ಯಮದ ವಾತಾವರಣಕ್ಕೆ ಹೊಂದಿಸಬೇಕಾಗಿದೆ- ಇಲ್ಲದಿದ್ದರೆ ಸಾಮಾನ್ಯರ ವರ್ತುಲವನ್ನು ಬಿಟ್ಟು ಆಚೆಗೆ ಹೋಗುತ್ತಿರುವವರನ್ನು (ವಿಶೇಷವಾಗಿ ಯುವ ಜನಾಂಗ) ಮತ್ತಷ್ಟು ಆಚೆ ಇಟ್ಟಂತಾಗುತ್ತದೆ. ಸಾಕಷ್ಟು ಪ್ರಧಾನ ಪಾತ್ರ ವಹಿಸುತ್ತಿರುವ ಈ ನವತಾಂತ್ರಿಕ ಶಿಕ್ಷಿತ ವರ್ಗವನ್ನು ಆಚೆಗೆ ಇಟ್ಟಾಗಲೇ ಡಿಜಿಟಲ್ ಡಿವೈಡ್ ಎಂಬ ಕಂದರ ಮತ್ತಷ್ಟು ಅಗಲವಾಗುತ್ತ ಹೋಗಿ ಮತ್ತೊಂದು ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬ ಸಾಮಾಜಿಕ ಹೊಣೆಗಾರಿಕೆಯನ್ನೂ ಸಹ ಮರೆತಂತಾಗುತ್ತದೆ. ಈ ವಾಸ್ತವವನ್ನು ಈಗ ಮನಗಾಣದೆ ಹೋದರೆ ಮುಂದಿನ ಸಾಮಾಜಿಕ ಬಿಕ್ಕಟ್ಟನ್ನು ಈಗಲೇ ಎದುರಿಸಬೇಕಾಗುತ್ತದೆ. ಆದುದರಿಂದ ಏಕ ರೂಪ ಬಳಕೆ ಅನಿವಾರ್ಯ. (ಈ ಡಿಜಿಟಲ್ ಡಿವೈಡ್ ಕುರಿತಂತೆ ಪ್ರಕಾಶ್ ಬೆಳವಾಡಿಯವರ ’ಸ್ಟಂಬಲ್’ ಚಿತ್ರದ ಕುರಿತಂತೆ ಸಣ್ಣ ಟಿಪ್ಪಣಿಯೊಂದನ್ನು ಕೆಳಗೆ ನೋಡಬಹುದು) +೩. ಯುನಿಕೋಡ್.ಆರ್ಗ್ ಈಗಾಗಲೇ ಕನ್ನಡಕ್ಕೆ ಏಕರೂಪ ಸಾಧ್ಯತೆಯನ್ನು ನಿರ್ಣಯಿಸಿಯಾಗಿದೆ. ಇದರಲ್ಲಿ ಯಾರ (ಅಂದರೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕರ, ಕನ್ನಡ ಸಂಸ್ಕೃತಿ ಇಲಾಖೆ/ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಥವ ಗಣಕ ಪರಿಷತ್, ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಾರ್ವಜನಿಕ ಸಂಸ್ಥೆಗಳ ಪಾತ್ರ ಎಷ್ಟೆಷ್ಟು ಎಂಬ ಮಾಹಿತಿಯಂತೂ ಲಭ್ಯವಿಲ್ಲ!!!!). ಯುನಿಕೋಡ್.ಆರ್ಗ್ ನಿರ್ಣಯಿಸಿರುವ ಕನ್ನಡ ಏಕರೂಪತೆಯನ್ನು ಮೈಕ್ರೋಸಾಫ್ಟ್ ಸಂಸ್ಥೆ ಈಗಾಗಲೇ ಒಪ್ಪಿಕೊಂಡು ಅದನ್ನು ವಿಂಡೋಸ್ ಎಕ್ಸ್ ಪಿ ಯಲ್ಲಿ ಅಳವಡಿಸಿಬಿಟ್ಟಿದೆ. +– ಈಗ ಈ ಮೂರರ ನಡುವೆ ಯಾವುದೇ ತೆರನಾದ ಏಕರೂಪತೆಯಿಲ್ಲದಿರುವುದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಆ ಯುನಿಕೋಡ್‌ನ ಏಕರೂಪ ನಿರ್ಣಯವೂ ಸಹ ಕನ್ನಡವನ್ನು ಅಂತರ್ಜಾಲದಲ್ಲಾಗಲಿ, ಮಾಹಿತಿ ತಂತ್ರಜ್ಞಾನದಲ್ಲಾಗಲಿ ಅಳವಡಿಸುವುದರಲ್ಲಿ ಎಂತೆಂತಹ ಕಷ್ಟಗಳಿವೆ ಎಂಬುದಕ್ಕೆ ಉದಾಹರಣೆಯಾಗಿ ಯುನಿಕೋಡ್ ವಿಭಗದ ಪುಟಗಳನ್ನು ನೋಡಿ. ಟ್ರೂ ಟೈಪ್ ಫಾಂಟ್ಸ್‌ಗಳಿಗೂ ಅದರ ವಿಸ್ತರಣೆಯಾದ ಓಪನ್ ಟೈಪ್ ಫಾಂಟ್ಸ್ ಸರಳವಾಗಿರಬೇಕಿತ್ತು. ಬದಲಿಗೆ ಅವುಗಳು ಹೆಚ್ಚು ಜಾಗವನ್ನು ಆಕ್ರಮಿಸಿ ಪುಟಗಳು ಚಾರಣಿಕೆಗಳಲ್ಲಿ ಮೂಡಿಬರುವುದು ಅತ್ಯಂತ ನಿಧಾನವಾಗುತ್ತಿದೆ. (ಓಪನ್ ಟೈಫ್ ಫಾಂಟ್ಸ್‌ಗಳು ಕನ್ನಡಕ್ಕೆ ಈಗ, ಸಧ್ಯದಲ್ಲಿ ಲಭ್ಯವಿರುವುದು: ಏರಿಯಲ್ ಎಮ್ ಏಸ್ ಯುನಿಕೋಡ್, ತುಂಗಾ ಹಾಗು ಸಂಪಿಗೆ) +IಓSಅಖIPಖಿ ನ ಅಗತ್ಯ +ಭಾರತ ಬಹುಭಾಷೆಗಳ ಹಿನ್ನೆಲೆಯುಳ್ಳ ರಾಷ್ಟ್ರ. ಮಾಹಿತಿ ತಂತ್ರಜ್ಞಾನದಲ್ಲಿ ಎಲ್ಲದಕ್ಕೂ ಏಕರೂಪವಿದ್ದರೆ ಅನುಕೂಲ ಎನ್ನುವುದು ತಾರ್ಕಿಕವಾದ ಅಗತ್ಯ ಹಾಗು ವಾಸ್ತವದ ಅಗತ್ಯ ಕೂಡ. ಭಾರತೀಯ ಭಾಷೆಗಳ ಲಿಪಿ ವಿನ್ಯಾಸ (ಅಕ್ಷರ ವಿನ್ಯಾಸ) ಒಂದೊಂದೂ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿವೆ. ಆದರೆ ಇಂಗ್ಲಿಷ್ನಲ್ಲಿರುವುದು ಇಪ್ಪತ್ತಾರು ಅಕ್ಷರಗಳಷ್ಟೆ. ಅದಕ್ಕೆ ತಕ್ಕಂತೆ ಅವರು ತಮ್ಮ ಅಗತ್ಯಗಳನ್ನು ರೂಪಿಸಿಕೊಂಡಿದ್ದಾರೆ. ಅದನ್ನೇ ಭಾರತೀಯ ಭಾಷೆಗಳಿಗೆ ಅನ್ವಯಿಸಾಲಗುವುದಿಲ್ಲ. ಸಾಧುವೂ ಅಲ್ಲ. ಹೀಗಾಗಿ ಂSಅII ಯನ್ನು ಕೈಬಿಟ್ಟು ISಅIIಯ ಹಾದಿ ತುಳಿಯಿತು. ಅಂದರೆ ಭಾರತೀಯ ಭಾಷೆಗಳಿಗನುಗುಣವಾದ ವಿನ್ಯಾಸ. ಅಂತರ್ಜಾಲದ ಸಾಧನಗಳು, ಪರಿಸರ ಇತ್ಯಾದಿಗಳಲ್ಲಿ ಏಕರೂಪ ತರುವ ಪ್ರಯತ್ನ. ಜಗತ್ತಿನ ಎಲ್ಲ ಭಾಷೆಗಳಿಗೂ ಅನುಕೂಲ ಪರಿಸರ ಕಲ್ಪಿಸಬೇಕು ಎಂದು ಹೊರಟಿರುವ ಯುನಿಕೋಡ್.ಆರ್ಗ್‌ಗೆ ಇಂಗ್ಲಿಷ್ ಹೊರತು ಪಡಿಸಿದರೆ ಬೇರೆ ಭಾಷೆಗಳ ಅರಿವಿರುವುದು ಕಷ್ಟ. ಅದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. +ಇಂತ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ (ಮುಖ್ಯವಾಗಿ: ಕನ್ನಡ ಪ್ರಾಧಿಕಾರ, ಕನ್ನಡ ಹಾಗು ಸಂಸ್ಕೃತಿ ಇಲಾಖೆ ಹಾಗು ಮಾಹಿತಿ ತಂತ್ರಜ್ಞಾನ ಇಲಾಖೆ) ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಕರ್ನಾಟಕದ ಕನ್ನಡ ಯುವಜನಾಂಗ, ಇರುವ ಮಿತಿಯಲ್ಲೇ ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿರುವ ಗಣಕ ಪರಿಷತ್ ಆಗಲಿ, ಆಸಕ್ತಿಯಿರುವ ಬೇರಿನ್ನಾರೆ ಆಗಲಿ ಇರುವ ಸಂದಿಗ್ಧವನ್ನು ಅರಿತುಕೊಳ್ಳಬೇಕಿತ್ತು. ಅಥವ ’ಮುಂದೆ ಬರಬಹುದಾದ ಬಿಕ್ಕಟ್ಟುಗಳನ್ನು’ ಮನಗಾಣಬೇಕಿತ್ತು. ಇದು ಆಗದೆ ಇರುವುದರಿಂದ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಏಕರೂಪ ಬಳಕೆಗೆ ಧಕ್ಕೆ ಬಂದಿದೆ. ಒಂದು ಕಡೆ ಅಂತರ್ಜಾಲದಲ್ಲಿ ಎಲ್ಲ ಭಾಷೆಗಳಿಗೂ ಏಕ ರೂಪ ಕೊಡಲು ಹೊರಟಿರುವ ಯುನಿಕೋಡ್.ಆರ್ಗ್, ಭಾರತದ ಎಲ್ಲ ಭಾಷೆಗಳಿಗೂ ಏಕರೂಪ ಬಳಕೆಯ ಪರಿಸರ ನಿರ್ಮಿಸಲು ಹೊರಟಿರುವ ಕೇಂದ್ರ ಸರ್ಕಾರ ಪೋಷಿತ ಸಂಸ್ಥೆಗಳು ಹಾಗು ಇರುವ ಸಂಕಟದ ಅರಿವೇ ಇಲ್ಲದಂತೆ ವರ್ತಿಸುತ್ತಿರುವ ಕರ್ನಾಟಕ ಸರ್ಕಾರ. (ಗಣಕ ಪರಿಷತ್‌ಗೆ ಏನಾಗಿದೆ? ಎಂಬ ಪ್ರಶ್ನೆ ಸಹ ಇಲ್ಲಿ ಸಹಜವಾದುದೆ). +ಹೊಣೆಗಾರಿಕೆಯ ಅರಿವಿರುವವರೆಲ್ಲ ಒಂದೆಡೆ ಸೇರಿ ಕನ್ನಡಕ್ಕೆ ಏಕರೂಪ ಶಿಷ್ಟತೆಯನ್ನು ಕೊಡುವತನಕ ಇನ್ನೂ ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗಿದೆಯೋ ತಿಳಿಯದು. +ಈ ಮಧ್ಯೆ ಲೈನೆಕ್ಸ್ ಎಂಬ ಉತ್ಸಾಹಿಗಳು: +ಲೈನೆಕ್ಸ್‌ನಲ್ಲಿ ಕನ್ನಡದ ತಂತ್ರಾಂಶ ಇನ್ನೂ ಈವರೆಗೂ ಇಲ್ಲದಿರುವುದು ಅತಿಯಾದ ಆದರ್ಶಗಳನು ಹೊಂದಿರುವ ಲೈನೆಕ್ಸ್ ಕನ್ನಡ ಉತ್ಸಾಹಿಗಳ ಗಮನಕ್ಕೆ ಬರದಿರುವುದು ಅವರೊಳಗಿನ ವಿಪರ್ಯಾಸ ಹಾಗು ಉಪೇಕ್ಷೆಯನ್ನಲ್ಲದೆ ಬೇರಿನ್ನೇನನ್ನೂ ತೋರಿಸುವುದಿಲ್ಲ. ಅಲ್ಲಲ್ಲಿ ಸಣ್ಣ ಪ್ರಯತ್ನಗಳು ನಡೆದಿರುವುದು ನನ್ನ ಗಮನಕ್ಕೆ ಬರದೆ ಇಲ್ಲ. ಆದು ಯಾವುದೇ ರೀತಿಯಲ್ಲೂ ಸಾಲದು ಎಂಬುದಷ್ಟೆ ನನ್ನ ವಾದ. ಒಮ್ಮೊಮ್ಮೆ ಇವರ ಲೈನೆಕ್ಸ್ ಸಿಧ್ಧಾಂತ ಬೊಗಳೆಯೇನೋ ಎಂದು ತಂತ್ರಜ್ಞಾನದ ಅಲ್ಪ ಅನುಭವವಿರುವ ನನ್ನಂತಹವನಿಗೆ ಅನ್ನಿಸಿದರೆ ಅದು ನ್ಯಾಯವಾದ ಅನ್ನಿಸಿಕೆ ಎಂದೇ ನನ್ನ ಭಾವನೆ. ಈ ಲೈನೆಕ್ಸ್ ಉತ್ಸಾಹಿಗಳೆಲ್ಲ ಯಾರ ಪರವಾಗಿ ಯಾರ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದನ್ನು ಅವರವರ ಪ್ರಾದೇಶಿಕ ಭಾಷೆಗಳ ಸಂದರ್ಭದಲ್ಲಿ ಇಟ್ಟು ನೋಡಿದಾಗ ಇವರಿಗೆಲ್ಲ ’ರಾಜಕೀಯವಾಗಿ ಸರಿಯಾಡ ನಿಲುವು ತೆಗೆದುಕೊಂಡಿದ್ದೇವೆ ಎಂಬ ಸ್ವರತಿ-ಸ್ವಮುಕ್ತಿ ಭಾವ ಮಾತ್ರ ಮುಖ್ಯ ನಿಜವಾದ ಕೆಲಸವಲ್ಲವೇನೋ ಎಂಬ ಅನುಮಾನವೂ ಬರುತ್ತದೆ. +ಉಳಿದಂತೆ ಭಾರತದಲ್ಲಿ ಓದು ಮುಗಿಸಿ ಅವಕಾಶವಂಚಿತರಾಗಿದ್ದೇವೆ ಎಂಬ ಹಿನ್ನೆಲೆಯಲ್ಲಿ ಅತ್ಯುತ್ತಮ ಜೀವನ ಶೈಲಿಯನ್ನರಸಿ, ಅತ್ಯುತ್ತಮ ವೃತ್ತಿ ಪರಿಸರವನ್ನರಸಿ ಗುಳೆ ಹೋಗಿರುವ ಅನಿವಾಸಿ ಕನ್ನಡಿಗರಲ್ಲಿ ಬಹುತೇಕ ಜನರು ಯುವಜನಾಂಗವೆ. ತಾಂತ್ರಿಕವಾಗಿ ಸುಶಿಕ್ಷಿತರೆ, ’ಬರಹ’ ಬಿಟ್ಟರೆ ಬೇರಿನ್ನಾವ ಪ್ರಯತ್ನ ಒಂದೂ ಆಗಿಲ್ಲ. ಬಹುಶ ಇವರೂ ಸಹ ಲೈನೆಕ್ಸ್ ಮಂದಿಯೋ? ಇವರು ಏನು ಮಾಡಿಯಾರು: ಪಾಪ. ಕನ್ನಡಕ್ಕೆ ಬದುಕು ಅರ್ಪಿತ ಎಂದು ಕರಾರೇನನ್ನೂ ಬರೆದುಕೊಟ್ಟಿಲ್ಲವಲ್ಲ. +-ಹರಿಕುಮಾರ್‌ರವರ ಉತ್ತರಾರ್ಧದ ಮಾತುಗಳನ್ನೂ ಏಕೆ ನಿರಾಕರಿಸಿದ್ದೇನೆ ಎಂಬುದಕ್ಕೆ ಇನ್ನೂ ಹೆಚ್ಚಿನ ಕಾರಣಗಳನ್ನು ವಿವರಿಸಬೇಕಾಗಿಲ್ಲ ಎಂದಂದುಕೊಂಡಿದ್ದೇನೆ. +ಮೂರು ಚಿತ್ರಗಳ ಬಗೆಗೆ ಕೆಲವು ಸಾಲುಗಳು.. +ಗಿರೀಶ್ ಕಾಸರವಳ್ಳಿಯವರ ದ್ವೀಪ, ಅಪರ್ಣಾಸೆನ್‌ರವರ ಮಿಸೆಸ್ ಅಂಡ್ ಮಿಸ್ ಅಯ್ಯರ್ ಹಾಗು ಪ್ರಕಾಶ್‌ಬೆಳವಾಡಿಯವರ ’ಸ್ಟಂಬಲ್’- ಈ ಮೂರು ಚಿತ್ರಗಳನ್ನು ಇದ್ದ ಅಗಾಧ ಕೆಲಸದ ಮಧ್ಯದಲ್ಲೇ ಬಿಡುವು ಮಾಡಿಕೊಂದು ನೋಡಿದೆ. ಒಳಗೆ ಎಲ್ಲೋ ಏನೋ ಅಸಮಾಧಾನ. ಕೆದಕಿ ನೋಡಿದಾಗ ತಟಕ್ಕನೆ ಅನ್ನಿಸಿದ್ದು ಬಹುಶಃ ಇವರನ್ನೆಲ್ಲ ಈ ಮಣಿರತ್ನಂ ಎಂಬ ನಿರ್ದೇಶಕ ಕಾಡಿದ್ದಾನೆ. ಅದು ಒತ್ತಟ್ಟಿಗಿಟ್ಟರೂ ನಮ್ಮನ್ನು ಇಂದಿಗೂ ಕಾಡುತ್ತಿರುವ ಅತ್ಯಂತ ಜ್ವಲಂತ ಸಮಸ್ಯೆಗಳನ್ನು ಈ ನಿರ್ದೇಶಕರು ಲಘುವಾಗಿ ಕಾಣಬಾರದಾಗಿತ್ತು ಎಂದೇ ಅನ್ನಿಸುವುದು. ಇತ್ತ ಸಾಮಾಜಿಕ ಬಧ್ಧತೆಯೂ ಇಲ್ಲದೆ ಅತ್ತ ವೈಯಕ್ತಿಕ ಸಿನಿಮಾ ಕೂಡ ಮಾಡಲಾಗದ ಇಬ್ಬಂದಿ ಸ್ಥಿತಿಗೆ ಇವರೆಲ್ಲ ತಮ್ಮನ್ನು ತಾವು ನೂಕಿಕೊಂಡಿದ್ದಾರೋ ಎನ್ನುವ ಅನುಮಾನದೊಂದಿಗೆ ನನಗೆ ನಾನೇ ಹುಸಿ ಸಮಾಧಾನ ಮಾಡಿಕೊಂಡೆ. ಸಮಾಜಿಕ ಸಮಸ್ಯೆಗಳನ್ನು ಸಶಕ್ತವಾಗಿ ಪ್ರತಿನಿಧಿಸಬಲ್ಲ ವ್ಯಾಪಕತೆಯ ಶಕ್ತಿ ಇವರುಗಳು ರೂಪಿಸಿರುವ ಪಾತ್ರಗಳಿಗೆ ಇಲ್ಲದಂತಾಗಿ ಹೋಗಿ ಸಾಮಾಜಿಕ ಸಮಸ್ಯೆಗಳು ಕೇವಲ ಹಿನ್ನೆಲೆಯಾಗಿ ಬಂದು ಹೋಗಿಬಿಡುವ ಮತ್ತೊಂದು ತೆಳುಕಾರಣವಾಗಿ ಚಿತ್ರದಲ್ಲಿ ಕಾಣಿಸಿಕೊಂಡಿವೆ. ಇಲ್ಲಿ ಹೆಚ್ಚಿಗೆ ನನ್ನ ಅನುಮಾನಗಳನ್ನು ತೆರೆದಿಟ್ಟರೆ ಇಂತಹ ಪ್ರಯತ್ನಗಳು ನಿಂತುಹೋದಾವೇನೊ ಎಂಬ ಭಯದಿಂದ ಸುಮ್ಮನಾಗಬೇಕಿದೆ. ಏನೇ ಇದ್ದರೂ ಇವರಿಗೆಲ್ಲ ಇನ್ನೂ ಸಾಮಾಜಿಕ ಬಧ್ಧತೆ ಸತ್ತಿರಲಾರದು ಎಂಬ ಆಶಾಭಾವನೆಯಿಂದ ಇವರುಗಳ ಚಿತ್ರಗಳನ್ನು ಪುನಃ ನೋಡಬಲ್ಲೆ..ಇವರುಗಳ ಚಿತ್ರಗಳಿಗೆ ಕಾಯಬಲ್ಲೇ ಎಂದು ಧೈರ್ಯವಾಗಿ ಹೇಳಬಲ್ಲೆ.. +ದ್ವೀಪ ಚಿತ್ರ ಕುರಿತಂತೆ ನಮ್ಮ ಶಿವಕುಮಾರ್ ಬರೆದಿರುವ ವಿಮರ್ಶೆಯನ್ನೂ ತಡವಾಗಿಯಾದರೂ ಪ್ರಕಟಿಸಲಾಗಿದೆ..ಜೊತೆಗೆ ಗಿರೀಶ್ ಕಾಸರವಳ್ಳಿಯವರೊಂದಿಗೆ ಪ್ರೀತಿ ಬಿ ನಾಗರಾಜ್‌ರ ಸಂದರ್ಶನವೂ ಪ್ರಕಟಿಸಲಾಗಿದೆ. ಅಲ್ಲದೆ ದ್ವೀಪ ಕಾದಂಬರಿಯೂ ಇದ್ದು ಈ ಸಂಚಿಕೆಗೆ ಒಂದು ರೀತಿಯ ಥೀಮ್ಯಾಟಿಕ್ ಸ್ವರೂಪ ಬಂದಿದ್ದರೆ ಅದು ಕೇವಲ ಕಾಕತಾಳಿಯ. +-ಶೇಖರ್‌ಪೂರ್ಣ +***** +೭.೦೩.೨೦೦೩ +ಅರುಣ್‌ಶರ್‍ಮರ ಪ್ರತಿಕ್ರಿಯೆ +ಶೇಖರ್‌ಪೂರ್ಣ ಅವರೆ, +ನಿಮ್ಮ ಲೇಖನ ತುಂಬಾ ಚೆನ್ನಾಗಿತ್ತು. ಯೂನಿಕೋಡಿನ ಮುಖ್ಯ ಅಗತ್ಯ ಅಂದರೆ ಅದರ “ಟೆಕ್ಸ್ಟ್ ಪ್ರೋಸೆಸಿಂಗ್ ” ಸಾಮರ್ಥ್ಯ. ಪದಗಳನ್ನು ಹುಡುಕಲಿಕ್ಕೆ (ಸರ್ಚ್) ಮತ್ತು ಕ್ರಮವಾಗಿ ಇಡಲಿಕ್ಕೆ (ಸರ್ಚ್) ತುಂಬಾ ಸುಲಭ. ನಿಮ್ಮ ಓದುಗರಿಗೆ ಇವತ್ತು ಈ ವಿಷಯಗಳಲ್ಲಿ ಆಸಕ್ತಿ ಇಲ್ಲದೇ ಇರಬಹುದು. ಆದರೆ ನಮ್ಮಂಥ ಗಣಕಯಂತ್ರ ಉತ್ಸಾಹಿಗಳಿಗೆ ಅದರಿಂದ ತುಂಬಾ ಉಪಯೋಗ ಇದೆ. +ಕೀಲಿಮಣೆ ವಿಷಯದಲ್ಲಿ ತುಂಬಾ ತಲೆ ಕೆಡಿಸಿಕೊಳ್ಳಬೇಡಿ. ಇಂಗ್ಲಿಷ್‌ನಲ್ಲೂ ೨-೩ ಕೀಲಿಮಣೆಗಳಿವೆ (ಕ್ವೆರ್ಟಿ, ಡ್ವೋರಕ್, ). ಒಂದಕ್ಕಿಂತಾ ಹೆಚ್ಚು ಭಾರತೀಯ ಭಾಷೆಗಳನ್ನು ಮಾತಾಡುವವರಿಗೆ ‘ಇನ್‌ಸ್ಕ್ರಿಪ್ಟ್’ ತುಂಬಾ ಅನುಕೂಲವಾಗುತ್ತೆ. +ನಿಮ್ಮ ಲೇಖನದಲ್ಲಿ ನೀವು “ಲಿನಕ್ಸ್” ಉತ್ಸಾಹಿಗಳ ಬಗ್ಗೆ ಮಾತಾಡುತ್ತೀರ. ಅದರ ಬದಲು “ಮುಕ್ತ ತಂತ್ರಾಂಶ”ದ ಬಗ್ಗೆ ಮಾತಾಡಿದರೆ ಚೆನ್ನಾಗಿತ್ತು. ಅಂತರ್ಜಾಲದಲ್ಲಿ ಲಿನಕ್ಸ್ ಅಲ್ಲದೇ ಇತರ ಉಚಿತ/ಮುಕ್ತ ‘ಓ‌ಎಸ್’ ಗಳೂ ಇವೆ. ನಾನು ಫ್ರೀ ಬಿ‌ಎಸ್‌ಡಿ() ಯ ಲೇಖಕರಲ್ಲಿ ಒಬ್ಬ. ಲಿನಕ್ಸ್ ನಲ್ಲಿ ಆದರ್ಶ ಹೆಚ್ಚು, ಹಣ, ವ್ಯವಹಾರ ಕಡಿಮೆ. ಇದಕ್ಕೆ ಕಾರಣ ಅಂದರೆ, ಕನ್ನಡ ಲಿನಕ್ಸ್ ಮಾಡಿ ಮಾರುವುದನ್ನು ನಿಶೇಧಿಸಲಾಗಿದೆ. ಫ್ರೀ ಬಿ‌ಎಸ್‌ಡಿಗೆ, ಈ ಸಮಸ್ಯೆ ಇಲ್ಲ. +-ಅರುಣ +ಕನ್ನಡ ಗಣಕ ಪರಿಷತ್ತು (ಜಿ. ಎನ್. ನರಸಿಂಹ ಮೂರ್ತಿ. ) – ಪ್ರತಿಕ್ರಿಯೆ +ಬೆಂಗಳೂರು ೧೮. ೦೩. ೨೦೦೩ +ಪ್ರಿಯ ಶ್ರೀ ಶೇಖರ ಪೂರ್ಣ, +ಕನ್ನಡ ಸಾಹಿತ್ಯ,ಕಾಂನ ಇತ್ತೀಚಿನ ಸಂಚಿಕೆಯಲ್ಲಿ ಮಾಹಿತಿ ತಂತ್ರeನ ಹಾಗೂ ಕನ್ನಡದ ಕುರಿತು ವಿವರವಾಗಿ ಚರ್ಚಿಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ಆದರ ಈ ನಿಟ್ಟಿನಲ್ಲಿ ಕನ್ನಡ ಗಣಕ ಪರಿಷತ್ತು ಮತ್ತು ಕರ್ನಾಟಕ ಸರ್ಕಾರ ಗೊಂದಲ ಹುಟ್ಟು ಹಾಕಿದೆ ಎಂಬ ಯೂನಿಕೋಡ್ ಬಗ್ಗೆ ಎಲ್ಲ ತೀರ್ಮಾನ ಆಗಿ ಹೋಗಿದೆ ಎಂಬ ಅಭಿಪ್ರಾಯಗಳನ್ನು ನಿಮ್ಮ ಲೇಖನ ಬಿಂಬಿಸುತ್ತದೆ. +ಈ ಕುರಿತು ನನ್ನ ಪ್ರತಿಕ್ರಿಯೆಯನ್ನು ಈ ಮುಂದಿನಂತೆ ದಾಖಲಿಸಿದ್ದೇನೆ. ಸಾಧ್ಯವಾದರೆ ಪ್ರಕಟಿಸಬೇಕೆಂದು ವಿನಂತಿ. +೧. ಯೂನಿಕೋಡ್ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಕಾಣಿಸುವುದಿಲ್ಲ. ಯೂನಿಕೋಡ್‌ನ ಅಂತಿಮ ಆವೃತ್ತಿ ಕನ್ನಡಕ್ಕೆ ಸಂಬಂಧಿಸಿದ ಹಾಗೆ ಪ್ರಕಟವಾಗಿಲ್ಲ, ಯೂನಿಕೋಡ್ ‘ಇನಸ್ಕ್ರಿಪ್ಟ್’ ಕೀಲಿಮಣೆ ವಿನ್ಯಾಸವನ್ನು ಕನ್ನಡಕ್ಕೆ ಕಡ್ಡಾಯ ಮಾಡಿಲ್ಲ. ಮಾಡುವುದು ಸಾಧ್ಯವೂ ಇಲ್ಲ. ಯೂನಿಕೋಡ್ ಸಂಕೇತ ವ್ಯವಸ್ಥೆಗೂ ಕೀಲಿಮಣೆ ವಿನ್ಯಾಸಕ್ಕೂ ನೇರವಾದ ಸಂಬಂಧವಿಲ್ಲ. ಇನ್ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸದಲ್ಲಿ ಅನೇಕ ತೊಡಕುಗಳಿವೆ. ಉದಾಹರಣೆಗೆ ಅನೇಕ ಕೀಲಿಗಳಲ್ಲಿ ಸ್ವರಚಿಹ್ನೆಗಳು ಕುಳಿತಿವೆ. ಅವನ್ನು ನೆನಪಲ್ಲಿರಿಸಿಕೊಳ್ಳುವುದು ಒಂದು ಸಂಗತಿಯಾದರೆ ಅವು ಇರುವ ಚಹ್ನೆ, ಅಂಕಿಗಳು ಬೇಕಾದಾಗಲೆಲ್ಲ ಬೇರೆ ಅಕ್ಷರಶೈಲಿಯ ಆಶ್ರಯ ಬೇಕಾಗುತ್ತದೆ. ಭಾರತೀಯ ಭಾಷೆಗಳೆಲ್ಲವೂ ಅನನ್ಯವಾಗಿದ್ದು ಎಲ್ಲ ಒಳಗೊಂಡ ಏಕರೂಪತೆ ಸಾಧ್ಯವಿಲ್ಲ. ಎಂದೇ ಇಸ್ಕಿ ವಿಫಲವಾಗಿದೆ. ನಮ್ಮಲ್ಲಿ ಎಕ್ಸ್‌ಪಿ ವ್ಯಾಪಕವಾಗಿ ಬಂದಿಲ್ಲ. ಬಂದರೂ ಯೂನಿಕೋಡ್ ಮಾತ್ರ ಬಳಸಬೇಕೆಂದಿಲ್ಲ. ಯೂನಿಕೋಡ್‌ಗೆ ಸಂಬಂಧಿಸಿದಂತೆ ಕನ್ನಡಕ್ಕೆ ಅಗತ್ಯವಾದ ಬದಲಾವಣೆಗಳನ್ನು ಸೂಚಿಸಿರುವ ಪತ್ರವನ್ನು ಕನ್ನಡ ಗಣಕ ಪರಿಷತ್ತು ಕೇಂದ್ರ ಸರ್ಕಾರದ ಟಿ. ಡಿ. ಐ. ಎಲ್. ಗೆ ಕರ್ನಾಟಕ ಸರ್ಕಾರದ ಮೂಲಕ ಈಗಾಗಲೇ ಕಳಿಸಿದೆ. ಈ ಬದಲಾವಣೆಯನ್ನು ಯೂನಿಕೋಡ್ ಒಪ್ಪಿ ಅನುಷ್ಠಾನಗೊಳಿಸದ ಹೊರತು ಯೂನಿಕೋಡ್ ಕನ್ನಡದ ಬಳಕೆಗೆ ಒಗ್ಗುವುದಿಲ್ಲ. ಹೀಗಾಗಿ ಯೂನಿಕೋಡ್ ಬಳಕೆ ಕನ್ನಡದ ಮಟ್ಟಿಗೆ ಸದ್ಯಕ್ಕೆ ದೂರದ ಮಾತು. ಆದರೆ ಎಲ್ಲ ಪೂರ್ವ ಸಿದ್ಧತೆ ನಡೆಯಬೇಕು. ಕನ್ನಡ ಗಣಕ ಪರಿಷತ್ತು ಈಗಾಗಲೇ ನುಡಿಯಿಂದ ಯೂನಿಕೋಡ್‌ಗೆ ಮಾಹಿತಿ ಪರಿವರ್ತನೆಗೆ ಸೌಲಭ್ಯವನ್ನು ರೂಪಿಸಿದೆ. ಯೂನಿಕೋಡ್‌ಗೆ ಕೀಲಿಮಣೆ ವ್ಯವಸ್ಥೆಯನ್ನು ರೂಪಿಸುವುದು ಕಷ್ಟವಾಗುವುದಿಲ್ಲ. ಕನ್ನಡ ಗಣಕ ಪರಿಷತ್ತು ಮತ್ತು ಕರ್ನಾಟಕ ಸರ್ಕಾರ ಏಕರೂಪ ಕೀಲಿಮಣೆ ವ್ಯಷ್ಥೆಯನ್ನು ರೂಪಿಸಿ ಗೊಂದಲ ಉಂಟು ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದು ಗೊಂದಲವನ್ನು ಕಳೆದು ಅನುಕೂಲ ಸ್ಥಿತಿಯತ್ತ ನಡೆಯಲು ಇರಿಸಿದ ಮಹತ್ವದ ಹೆಜ್ಜೆ . ಇದರತ್ತ ಗಮನ ಹರಿಸುವ ಯಾರೂ ಕನ್ನಡದ ಕುರಿತು ಹೆಮ್ಮೆ ಪಡಬಹುದಾಗಿದೆ. ಕೇವಲ ಕೆಲವು ಭಾರತೀಯ ಭಾಷೆಗಳಲ್ಲಿ ಮಾತ್ರ ಈ ಬಗೆಯ ಶಿಷ್ಟೀಕರಣ ನಡೆದಿದೆ. ಇತರ ಅನೇಕ ಭಾಷೆಯವರು ಈ ಬೆಳವಣಿಗೆಯನ್ನು ಅಸೂಯೆಯೊಡನೆಯ ಮೆಚ್ಚುಗೆ ವ್ಯಲ್ತಪಡಿಸಿದ್ದಾರೆ. ನಾನು ಈ ಮೂಲಕ ತಾವೂ ತಮ್ಮ ಓದುಗರೂ ಇದನ್ನು ಬೆಂಬಲಿಸಲು ಈ ಮೂಲಕ ವಿನಯಪೂರ್ವಕವಾಗಿ ವಿನಂತಿಸುತ್ತೇನೆ. ಈಗಾಗಲೇ ಸರ್ಕಾರದ ಹಲವು ಇಲಾಖೆಗಳಲ್ಲಿ ನುಡಿಯನ್ನು ಯಶಸ್ವಿಯಾಗಿ ಅಂತರಜಾಲದ ಭಾಷೆಯಾಗಿ ಮತ್ತು ದತ್ತ ಸಂಸ್ಕರಣೆಗಾಗಿ ಬಳಸಲಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಇಂತಹ ಶಿಷ್ಟತೆ ಇಲ್ಲದಿದ್ದಲ್ಲಿ ವಿದ್ಯುನ್ಮಾನ ಆಡಳಿತ ಕನಸಾಗುತ್ತದೆ. ಗೊಂದಲದ ತವರಾಗುತ್ತದೆ. +೨. ಜತೆಗೆ ಈಗಾಗಲೇ ಕನ್ನಡವನ್ನು ಲೀನಕ್ಸ್‌ಗೆ ಹೊಂದಿಸಲು ಪ್ರಯತ್ನಗಳಾಗುತ್ತಿವೆ. ಕನ್ನಡಕ್ಕೆ ಒಂದು ‘ಆಫೀಸ್’ ನಂತಹ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಒಂದು ಜಾರಣಿಕೆಯೂ ಸೇರಿದೆ. ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಇದನ್ನು ಕನ್ನಡ ಜನತೆಗೆ ಒಪ್ಪಿಸಲು ಕನ್ನಡ ಗಣಕ ಪರಿಷತ್ತು ಪ್ರಯತ್ನಿಸುತ್ತಿದೆ. +೩. ಮಾಡ್ಯುಲಾರ್‌ನವರು ರೂಪಿಸಿರುವ ಲೈನಕ್ಸ್ ಸಂಪಾದಕದಲ್ಲಿ ನುಡಿಯ ಕೀಲಿಮಣೆ ವಿನ್ಯಾಸವನ್ನೂ ನೀಡಿದ್ದಾರೆ ಎಂಬುದು ಇದೀಗ ತಾನೇ ತಿಳಿದ ಸುದ್ದಿಯಾಗಿದೆ. +ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕ ಸರ್ಕಾರ ಮತ್ತು ಕನ್ನಡ ಗಣಕ ಪರಿಷತ್ತು ಯಾವುದೇ ನಿರ್ಧಾರವನ್ನು ಆತುರದಲ್ಲಿ ಅಥವಾ ಮುಂದಿನ ಪರಿಣಾಮವನ್ನು ಅರಿಯದೇ ತೆಗೆದುಕೊಂಡಿವೆ ಎಂಬುದು ಸರಿಯಲ್ಲ ಎಂದು ಸ್ಪಷ್ಟವಾಗಿದೆ ಎಂದು ಭಾವಿಸಿದ್ದೇನೆ. ಕನ್ನಡದ ಹಿತ ಎಲ್ಲಕ್ಕಿನ್ನ ದೊಡ್ಡದು ಎಂಬುದೇ ಕನ್ನಡ ಗಣಕ ಪರಿಷತ್ತಿನ ಆಶಯ, ನಂಬಿಕೆ. +ಕನ್ನಡದ ಬಳಕೆಗೆ ಇರುವ ತಾಂತ್ರಿಕ ಅಡಚಣೆಗಳಿಗೆಲ್ಲ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕನ್ನಡ ಗಣಕ ಪರಿಷತ್ತು ಸದಾ ಶ್ರಮಿಸುತ್ತದೆ. ಅಂತರಜಾಲ ಕುರಿತಾದ ಸಮಸ್ಯಗಳೂ ಇದಕ್ಕೆ ಹೊರತಲ್ಲ. ಅವಸರ ಬೇಡ. ನಿಧಾನಕ್ಕೆ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳೋಣ. ಕನ್ನಡದ ಉಳಿವಿಗೆ ಬೆಳವಣಿಗೆಗೆ ಕಂಕಣಬದ್ಧರಾಗೋಣ. +ಜಿ. ಎನ್. ನರಸಿಂಹ ಮೂರ್ತಿ. +ಕಾರ್ಯದರ್ಶಿ, +ಕನ್ನಡ ಗಣಕ ಪರಿಷತ್ತು. +‘ಬರಹ’ ದ ವಾಸುರವರ ಪ್ರತಿಕ್ರಿಯೆ: +ಶ್ರೀ ಶೇಖರ್‌ಪೂರ್ಣ ಅವರಿಗೆ ನಮಸ್ಕಾರ, +ಮೊಟ್ಟ ಮೊದಲಿಗೆ ಅಂತರಜಾಲದಲ್ಲಿ ಕನ್ನಡದಲ್ಲಿ ಹೊಸ-ಹೊಸ ಪ್ರಯೋಗಗಳನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು. ಕರ್ನಾಟಕ ಸರ್ಕಾರ ನಿಗಧಿಪಡಿಸಿದ ಫ಼ಾಂಟುಗಳನ್ನು ವೆಬ್‌ಸೈಟಿನಲ್ಲಿ ಬಳಕೆಗೆ ಮೊಟ್ಟಮೊದಲಿಗೆ ತಂದವರು ನೀವು. ಈಗ ಯೂನಿಕೋಡ್ ಅನ್ನೂ ಸಹಾ ಬಳಕೆಗೆ ತಂದಿದ್ದೀರಿ. ಅವಿಷ್ಕಾರಕ್ಕೆ ಅವಶ್ಯಕತೆಯೇ ಕಾರಣ ಎಂದು ಹೇಳಿರುವಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಅದರಲ್ಲಿರುವ ಕುಂದು-ಕೊರತೆಗಳು ಕಾಣಿಸಿಕೊಂಡು ಇನ್ನಷ್ಟು ಉತ್ತಮಪಡಿಸಲು ದಾರಿಯಾಗುತ್ತೆ. +ಇಂದು ಕನ್ನಡ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಶಿಷ್ಟೀಕರಣಗಳಿವೆ: +೧) ಯೂನಿಕೋಡ್: ಕನ್ನಡದಲ್ಲಿ ಮಾಹಿತಿಯನ್ನು ಶೇಖರಿಸಿಡಲು ಯೂನಿಕೋಡ್‌ನವರು ಮಾಡಿರುವ ಶಿಷ್ಟೀಕರಣ. ವಿಂಡೊಸ್ ಎಕ್ಸ್.ಪಿ, ಲಿನಕ್ಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕನ್ನಡ ಯೂನಿಕೋಡ್ ಲಭ್ಯವಿದೆ. +೨) ಇನ್‌ಸ್ಕ್ರಿಫ್ಟ್ ಕೀಲಿಮಣೆ: ಸಿ-ಡ್ಯಾಕ್ ನವರು ಮಾಡಿರುವ ಎಲ್ಲಾ ಭಾರತೀಯ ಭಾಷೆಗಳಿಗೂ ಅನ್ವಯವಾಗುವ ಕೀಲಿಮಣೆ. ಸಿ-ಡ್ಯಾಕ್ ನವರ ತಂತ್ರಾಂಶಗಳು, ವಿಂಡೋಸ್ ಎಕ್ಸ್.ಪಿ ಮತ್ತು ಲಿನಕ್ಸ್ ಈ ಕೀಲಿಮಣೆಯನ್ನು ಅಳವಡಿಸಿವೆ. +೩) ಕ.ಗ.ಪ (ಕನ್ನಡ ಗಣಕ ಪರಿಷತ್ತು) ಕೀಲಿಮಣೆ: ಗಣಕ ಕೀಲಿಮಣೆಯ ಮೂಲಕ ಕನ್ನಡದಲ್ಲಿ ಟೈಪ್ ಮಾಡಲು ಸರ್ಕಾರ ಅನುಮೋದಿಸಿರುವ ಕೀಲಿಮಣೆ. ಸದ್ಯಕ್ಕೆ ಬರಹ ಮತ್ತು ನುಡಿ ಇದನ್ನು ಅಳವಡಿಸಿವೆ. +೪) ಕನ್ನಡ ಟ್ರೂಟೈಪ್ ಫ಼ಾಂಟುಗಳು: ಕನ್ನಡ ಫ಼ಾಂಟುಗಳಲ್ಲಿ ಇರಬೇಕಾದ ಅಕ್ಷರಗಳು(ಗ್ಲಿಫ಼್) ಮತ್ತು ಅವುಗಳ ಸಂಕೇತಗಳು(ಕೋಡ್) ಕುರಿತು ಸರ್ಕಾರ ಮಾಡಿರುವ ಶಿಷ್ಟೀಕರಣ. ಸದ್ಯಕ್ಕೆ ಬರಹ ಮತ್ತು ನುಡಿ ಇದನ್ನು ಅಳವಡಿಸಿವೆ. +ಇನ್ಸ್‌ಕ್ರಿಪ್ಟ್, ಯೂನಿಕೋಡ್, ಕ.ಗ.ಪ ಮುಂತಾದವುಗಳಿಂದ ಗಣಕಗಳಲ್ಲಿ ಕನ್ನಡದ ಅಭಿವೃದ್ಧಿ ಎತ್ತಲೋ ಸಾಗುತ್ತಿದೆ ಎಂಬ ಅಭಿಪ್ರಾಯ ನಿಮ್ಮ ಲೇಖನದಲ್ಲಿದೆ. ಇದು ಸರಿಯಲ್ಲ ಎಂದೇ ನನ್ನ ಅಭಿಪ್ರಾಯ. ಮೊಟ್ಟಮೊದಲಿಗೆ ಕನ್ನಡ ಫ಼ಾಂಟುಗಳು, ಯೂನಿಕೋಡ್, ಕೀಲಿಮಣೆ ಇತ್ಯಾದಿಗಳು ಪ್ರತ್ಯೇಕವಾದ ವಿಚಾರಗಳಾಗಿವೆ. ಇವುಗಳಲ್ಲಿ ಒಂದಕ್ಕೊಂದು ಜೊತೆ ಮಾಡಿ ಹೋಲಿಸುವುದು ಸರಿಯಲ್ಲ. ಗಣಕದಲ್ಲಿ ಯಾವುದೇ ಭಾಷೆಯನ್ನು ಅಳವಡಿಸುವ ಸಂದರ್ಭದಲ್ಲಿ (ಉದಾಹರಣೆಗೆ ಕನ್ನಡ) ಮೂರು ತಾಂತ್ರಿಕ ಘಟ್ಟಗಳು/ಸವಾಲುಗಳನ್ನು ಗುರುತಿಸಬಹುದು. +ಗಣಕಕ್ಕೆ ಮಾಹಿತಿಯನ್ನು ಉಣಿಸುವುದು. (ಇನ್‌ಪುಟ್) +ಗಣಕದಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು. (ಸ್ಟೋರೇಜ್) +ಗಣಕದಿಂದ ಹೊರಗೆ ಮಾಹಿತಿಯನ್ನು ಪಡೆಯುವುದು. (ಔಟ್‌ಪುಟ್) +ಈ ಮೂರು ಘಟ್ಟಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು. ಇಲ್ಲಿ ಒಂದು ಘಟ್ಟದಿಂದ ಇನ್ನೊಂದಕ್ಕೆ ಮಾಹಿತಿ ರವಾನೆಯಾಗುತ್ತದೆಯೇ ಹೊರತು ಒಂದು ಘಟ್ಟ ಹೇಗೆ ಕೆಲಸ ಮಾಡುತ್ತಿದೆ ಎಂಬ ವಿವರ ಇನ್ನೊಂದು ಘಟ್ಟಕ್ಕೆ ಬೇಕಾಗಿಲ್ಲ. ಉದಾಹರಣೆಗೆ, ಕ.ಗ.ಪ ಕೀಲಿಮಣೆ ಮೂಲಕ ಮಾಹಿತಿಯನ್ನು ಟೈಪ್ ಮಾಡಿ, ಯೂನಿಕೋಡ್ ರೂಪದಲ್ಲಿ ಶೇಖರಿಸಿಟ್ಟು, ಬೇಕಾದಾಗ ಬರಹ ಟ್ರೂಟೈಪ್ ಫ಼ಾಂಟುಗಳನ್ನು ಬಳಸಿ ತೆರೆಯ ಮೇಲೆ ಕಾಣಿಸಬಹುದು. ಅಥವಾ, ಬರಹ ಲಿಪ್ಯಂತರಣ ಕ್ರಮ ಉಪಯೋಗಿಸಿ ಮಾಹಿತಿಯನ್ನು ಟೈಪ್ ಮಾಡಿ, ಅದೇ ರೂಪದಲ್ಲೇ ಶೇಖರಿಸಿಟ್ಟು ಬೇಕಾದಾಗ ಯೂನಿಕೋಡ್‌ಗೆ ಪರಿವರ್ತಿಸಿ ತೆರೆಯ ಮೇಲೆ ಕಾಣಿಸಬಹುದು. +ಆದ್ದರಿಂದ ಗಣಕಕ್ಕೆ ಮಾಹಿತಿಯನ್ನು ಉಣಿಸುವಾಗ ಜನರು ತಮ್ಮ ಅವಶ್ಯಕತೆಗೆ, ಅನುಕೂಲಕ್ಕೆ ತಕ್ಕಂತೆ ಬರಹದ ಲಿಪ್ಯಂತರಣ ಕ್ರಮದಲ್ಲೋ, ಕ.ಗ.ಪ ಕೀಲಿಮಣೆ ಬಳಸಿಯೋ, ಅಥವಾ ಮೈಕ್ರೋಸಾಫ಼್ಟ್ ಅಳವಡಿಸಿರುವ ಇನ್‌ಸ್ಕ್ರಿಫ್ಟ್ ಕೀಲಿಮಣೆಯನ್ನೋ ಬಳಸಬಹುದು. ಮುಂದೆ, ಒ.ಸಿ.ಆರ್ ಮೂಲಕ ಅಥವಾ ವಾಯ್ಸ್ ರೆಕಗ್ನಿಷನ್ ಮೂಲಕವೂ ಕನ್ನಡವನ್ನು ಉಣಿಸುವ ಕಾಲ ಬರಬಹುದು. ಕನ್ನಡದಲ್ಲಿ ಮಾಹಿತಿಯನ್ನು ಶೇಖರಿಸಿ ಇಡುವಾಗ ನಮ್ಮ ಅನುಕೂಲಕ್ಕೆ ತಕ್ಕಂತೆ ಯೂನಿಕೋಡ್ ರೂಪದಲ್ಲೋ, ಬರಹ ಲಿಪ್ಯಂತರಣ ಕ್ರಮದಲ್ಲೋ, ಅಥವಾ ಬರಹ ಫ಼ಾಂಟ್‌ಗಳ ಗ್ಲಿಫ಼್ ಸಂಕೇತಗಳಾಗಿಯೋ ಶೇಖರಿಸಿಡಬಹುದು. ಮಾಹಿತಿಯನ್ನು ಗಣಕದ ಪರದೆಯ ಮೇಲೆ ತೋರಿಸುವಾಗ ಟ್ರೂಟೈಪ್ ಫ಼ಾಂಟ್‌ಗಳನ್ನು ಬಳಸಿಯೋ, ಅಥವಾ ಯೂನಿಕೋಡ್ ಆಧಾರಿತ ಓಪನ್ ಟೈಪ್ ಫ಼ಾಂಟುಗಳನ್ನೋ (ತುಂಗಾ) ಬಳಸಬಹುದು. ಇಲ್ಲಿ ಮುಖ್ಯವಾಗಿ ನಮಗೆ ಬೇಕಾಗಿರುವುದು ಮಾಹಿತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸುವ ಸವಲತ್ತು. +ಮೈಕ್ರೋಸಾಫ಼್ಟ್ ಎಕ್ಸ್.ಪಿ ಯಲ್ಲಿ ಇನ್‌ಸ್ಕ್ರಿಪ್ಟ್, ಯೂನಿಕೋಡ್, ಓಪನ್‌ಟೈಪ್ ಫ಼ಾಂಟ್ ತಂತ್ರಗಳನ್ನು ಬಳಸಿ ಕನ್ನಡದ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಗಣಕಗಳಲ್ಲಿ ಕನ್ನಡವನ್ನು ಬಳಸಲು ವಿಂಡೋಸ್ ಎಕ್ಸ್.ಪಿ ಯನ್ನೇ ಉಪಯೋಗಿಸಬೇಕು, ಮತ್ತು ಇನ್‌ಸ್ಕ್ರಿಪ್ಟ್ ಕೀಲಿಮಣೆಯನ್ನೇ ಬಳಸಿ ಕನ್ನಡವನ್ನು ಟೈಪ್ ಮಾಡಬೇಕು ಎಂಬ ಯಾವ ಕಾನೂನು ಇಲ್ಲ. ಮುಂದೆ, ಬರಹ ಲಿಪ್ಯಂತರಣ ಕ್ರಮದ ಮೂಲಕವೋ, ಅಥವಾ ಕ.ಗ.ಪ ಕೀಲಿಮಣೆ ಮೂಲಕವೋ ಟೈಪ್ ಮಾಡಿ ಯೂನಿಕೋಡ್ ಸಂಕೇತಗಳನ್ನು ನೇರವಾಗಿ ಪಡೆಯಬಹುದು. ಅಥವಾ, ಮಾಹಿತಿಯನ್ನು ಬೇರೇ, ಬೇರೆ ರೂಪಗಳಲ್ಲಿ ಶೇಖರಿಸಿಟ್ಟು, ನಮಗೆ ಬೇಕಾದಾಗ ಯೂನಿಕೋಡ್ ಅಥವಾ ಇನ್ಯಾವುದೇ ರೂಪಕ್ಕೆ ಪರಿವರ್ತಿಸಬಹುದು. +ಸಧ್ಯದಲ್ಲಿ ಬರಹದ ಲಿಪ್ಯಂತರಣ ಕ್ರಮದ ಮೂಲಕ ಕನ್ನಡವನ್ನು ಗಣಕಕ್ಕೆ ಉಣಿಸುವುದು ಅತ್ಯಂತ ಸುಲಭವೂ, ಜನಪ್ರಿಯವೂ ಆದ ಕ್ರಮವಾಗಿದೆ. ಇದರ ಜೊತೆಗೆ ಸರ್ಕಾರ ಅನುಮೋದಿಸಿರುವ ಕ.ಗ.ಪ ಕೀಲಿಮಣೆಯನ್ನು ಬಳಸುವುದು ಇನ್ನೊಂದು ಮಾರ್ಗವಾಗಿದೆ. ಕ.ಗ.ಪ ಕೀಲಿಮಣೆಯು ಇನ್‌ಸ್ಕ್ರಿಫ್ಟ್, ಅಥವಾ ಇತರ ಟೈಪ್‌ರೈಟರ್ ಕೀಲಿಮಣೆಗಳಿಗೆ ಹೋಲಿಸಿದರೆ ಸರಳವೂ, ಉಪಯುಕ್ತವೂ ಆಗಿದೆ. ಬರಹದಲ್ಲಿ ಲಿಪ್ಯಂತರಣ ಕ್ರಮದ ಜೊತೆಗೆ ಕ.ಗ.ಪ ಕೀಲಿಮಣೆಯನ್ನು ಬಳಸುವ ಅವಕಾಶವನ್ನೂ ನೀಡಲಾಗಿದೆ. ಯಾರಿಗೇ ಯಾವುದು ಅನುಕೂಲವಾಗಿ ಕಂಡುಬರುವುದೋ ಅದನ್ನು ಅವರು ಉಪಯೋಗಿಸಬಹುದು. (ಬರಹ ತಂತ್ರಾಂಶವನ್ನು ಉಪಯೋಗಿಸುವವರಲ್ಲಿ ಕ.ಗ.ಪ ಕೀಲಿಮಣೆಯನ್ನು ಬಳಸುವವರ ಸಂಖ್ಯೆ ೧% ಗಿಂತಲೂ ಕಡಿಮೆ!). ಬರಹ ೫.೦ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕನ್ನಡದ ಸಧ್ಯದ ಎಲ್ಲಾ ಅಗತ್ಯಗಳನ್ನೂ ಪೂರೈಸಬಹುದಾಗಿದೆ. ಇದರಲ್ಲಿ ಯೂನಿಕೋಡ್ ಸಹಾ ಸೇರಿದಂತೆ ೭ ವಿವಿಧ ರೂಪಗಳಲ್ಲಿ ಕನ್ನಡದ ಮಾಹಿತಿಯನ್ನು ಸಂಗ್ರಹಿಸಿ ಇಡಬಹುದಾಗಿದೆ. ಬೇಕಾದಾಗ ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಬಹುದಾಗಿದೆ. ಕನ್ನಡ ಅಕ್ಷರಾನುಕ್ರಮದಲ್ಲಿ ವಿಂಗಡಣೆ ಮಾಡಬಹುದಾಗಿದೆ, ಡೇಟಾಬೇಸ್ ಬಳಸಿಕೊಂಡು ದತ್ತ-ಸಂಸ್ಕರಣೆಯನ್ನೂ ಮಾಡಬಹುದಾಗಿದೆ. ಗಣಕಗಳಲ್ಲಿ ಇಂಗ್ಲಿಷಿನಷ್ಟೇ ಸುಲಭವಾಗಿ ಕನ್ನಡವನ್ನೂ ಬಳಸಬಹುದಾಗಿದೆ. ಆದರೆ ಈ ತಂತ್ರಾಂಶಗಳ ತಂತ್ರಜ್ಞಾನದ ಸಂಪೂರ್ಣ ಉಪಯೋಗವೇ ಸಧ್ಯಕ್ಕೆ ಆಗುತ್ತಿಲ್ಲ. ಇಂಗ್ಲಿಷಿಗೆ ಹೋಲಿಸಿದರೆ ಗಣಕಗಳಲ್ಲಿ ಕನ್ನಡದ ಬಳಕೆ ಇನ್ನೂ ಶೈಶವಾವಸ್ಥೆಯಲ್ಲಿ ಇದೆ. ಸಧ್ಯಕ್ಕೆ ಗಣಕಗಳಲ್ಲಿ ಕನ್ನಡದ ಬಳಕೆ ಆಗುತ್ತಿರುವುದು ಪತ್ರಿಕೋದ್ಯಮ, ಪಬ್ಲಿಷಿಂಗ್ ಕ್ಷೇತ್ರಗಳಲ್ಲಿ ಮಾತ್ರ. ಶಿಕ್ಷಣ, ವಿಜ್ಞಾನ/ತಂತ್ರಜ್ಞಾನ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತಿಲ್ಲ. ಈ ಕ್ಷೇತ್ರಗಳಲ್ಲೂ ಗಣಕಗಳಲ್ಲಿ ಕನ್ನಡ ಕಾಣಿಸಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ನಾವು ಜೀವನಪರ್ಯಂತ ಬರಹ, ಕ.ಗ.ಪ, ಇನ್‌ಸ್ಕ್ರಿಪ್ಟ್ ಇತ್ಯಾದಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳಬೇಕೆಂದೇನೂ ಇಲ್ಲ. ಗಣಕಗಳಲ್ಲಿ ಕನ್ನಡದ ಹಣೆಬರಹವನ್ನು ತೀರ್ಮಾನಿಸುವುದು ಈ ತಂತ್ರಾಂಶಗಳೇ ಆಗಬೇಕೆಂದಿಲ್ಲ. ಅದನ್ನು ತೀರ್ಮಾನಿಸುವವರು ಕನ್ನಡವನ್ನು ಬಳಸುವ ಜನರು. ಈ ತಂತ್ರಾಂಶಗಳನ್ನು ಹೆಚ್ಚು ಹೆಚ್ಚು ಜನ, ಬೇರೇ ಬೇರೇ ಕ್ಷೇತ್ರಗಳಲ್ಲಿ ಬಳಸಿದಾಗ ಮಾತ್ರ ಹೊಸ ಅಗತ್ಯಗಳು ಕಂಡು ಬರುತ್ತವೆ. ಈಗಿರುವ ಪರಿಹಾರಗಳು ಹಳತಾಗುತ್ತವೆ. ಹೊಸ ಪರಿಹಾರಗಳ ಅವಶ್ಯಕತೆ ಉಂಟಾಗುತ್ತೆ. ಹಾಗಾದಾಗ, ಈಗಿರುವ ಸ್ಟ್ಯಾಂಡರ್ಡ್ ಗಳನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವೂ ಕಾಣಿಸಿಕೊಳ್ಳಬಹುದು. +ಬರಹ, ಕ.ಗ.ಪ, ಯೂನಿಕೋಡ್ ಇತ್ಯಾದಿ ಕನ್ನಡದಲ್ಲಿ ಯಾವುದೇ ಸಮಸ್ಯೆಗಳನ್ನು ಹುಟ್ಟು ಹಾಕಿಲ್ಲ. ಬದಲಿಗೆ ಕನ್ನಡವನ್ನು ಹೇಗೆ ಬೇರೆ ಬೇರೆ ರೀತಿ ಬಳಸಬಹುದೆಂದು ತೋರಿಸಿಕೊಟ್ಟಿವೆ. ಇವೆಲ್ಲವೂ ಕನ್ನಡದ ಸಮಸ್ಯೆಗಳನ್ನು ಬೇರೆಬೇರೆ ಕೋನಗಳಿಂದ ನೋಡಿ ಪರಿಹಾರವನ್ನು ಸೂಚಿಸಿವೆ. ಕನ್ನಡಕ್ಕೆ ಒಂದು ಗಟ್ಟಿಯಾದ ಫ಼್ರೇಮ್‌ವರ್ಕ್ ಹಾಕಿಹೊಟ್ಟಿವೆ. ೫ ವರ್ಷಗಳ ಹಿಂದೆ ಗಣಕಗಳಲ್ಲಿ ಕನ್ನಡವನ್ನು ನೋಡುವುದು ಆಶ್ಚರ್ಯಕರ ವಿಷಯವಾಗಿತ್ತು. ಜನಸಾಮಾನ್ಯರು ಗಣಕಗಳಲ್ಲಿ ಕನ್ನಡವನ್ನು ಉಪಯೋಗಿಸುವುದು ಕನಸಿನ ಮಾತು ಆಗಿತ್ತು. ಅಂತರಜಾಲದಲ್ಲಿ ಸಂಜೆವಾಣಿ, ಪ್ರಜಾವಾಣಿ ಬಿಟ್ಟರೆ ಮೂರನೆಯ ವೆಬ್‌ಸೈಟನ್ನು ಹುಡುಕುವುದು ಅಸಾಧ್ಯವಾಗಿತ್ತು. ಇಂದು ಪ್ರಪಂಚಾದ್ಯಂತ ಕನ್ನಡಿಗರ ಗಣಕಗಳಲ್ಲಿ ಕನ್ನಡ ತಂತ್ರಾಂಶಗಳು ಸ್ಥಾಪಿತವಾಗಿವೆ. ನೂರಾರು ಹವ್ಯಾಸಿ ಕನ್ನಡ ತಾಣಗಳು ಕಾಣಿಸಿಕೊಂದಿವೆ. ಅಬಾಲವೃದ್ಧರೂ ಕನ್ನಡದಲ್ಲಿ ಪತ್ರ ವ್ಯವಹಾರ, ದಾಖಲೆಗಳನ್ನು ತಯಾರಿಸಬಹುದಾಗಿದೆ. ಗಣಕಗಳಲ್ಲಿ ಕನ್ನಡದ ಅಭಿವೃದ್ಧಿ ಆಶಾದಾಯಕವಾಗಿದೆ. ಇನ್ನೂ ಕೆಲವು ಕೆಲಸಗಳು ಆಗಬೇಕಿವೆ. ಇವು ಆದಷ್ಟು ಬೇಗ ಕಾರ್ಯಗತವಾಗಲಿ ಎಂದು ಹಾರೈಸೋಣ. +ಯೂನಿಕೋಡ್ ನವರು ಕನ್ನಡಕ್ಕೆ ನಿಗಧಿ ಮಾಡಿರುವ ಅಕ್ಷರ ಗಳಲ್ಲಿ ಕೆಲವು ಕನ್ನಡಕ್ಕೆ ಅಗತ್ಯವಲ್ಲದವು ಇವೆ. ಮತ್ತೆ ಕೆಲವು ಅಗತ್ಯವಾದ ಅಕ್ಷರಗಳು ಬಿಟ್ಟುಹೋಗಿವೆ. ಇದರ ಜೊತೆಗೆ ಮೈಕ್ರೊಸಾಫ಼್ಟ್ ನವರ “ತುಂಗಾ” ಯೂನಿಕೋಡ್ ಫ಼ಾಂಟಿನಲ್ಲೂ ಕೆಲವು ಬದಲಾವಣೆಗಳ ಅಗತ್ಯವಿದೆ. ಯೂನಿಕೋಡ್‌ನ ಕನ್ನಡ ಸಾರ್ಟಿಂಗ್ ವ್ಯವಸ್ಥೆಯಲ್ಲೂ ಕೆಲವು ಬದಲಾವಣೆ ಆಗಬೇಕಿದೆ. ಈ ಎಲ್ಲಾ ಅಂಶಗಳು ಮುಂದಿನ ಅವೃತಿಗಳಲ್ಲಿ ಸರಿಹೋಗಲಿ. +ಎಲ್ಲಾ ಕನ್ನಡ ತಂತ್ರಾಂಶಗಳೂ ತಮ್ಮ ಟ್ರೂಟೈಪ್ ಫ಼ಾಂಟುಗಳಿಗೆ ಸರ್ಕಾರ ಅನುಮೋದಿಸಿರುವ ಶಿಷ್ಟತೆಯನ್ನು ಬಳಸಲಿ. ಮತ್ತು ತಮ್ಮ ಈಗಿರುವ ಫ಼ಾಂಟುಗಳಿಂದ ಶಿಷ್ಟವಾದ ಫ಼ಾಂಟುಗಳಿಗೆ ಪರಿವರ್ತಿಸಲು ಸೌಲಭ್ಯವನ್ನು ಕಲ್ಪಿಸಲಿ. ಮತ್ತು ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಯೂನಿಕೋಡ್‌ಗೆ ಪರಿವರ್ತಿಸಲು ಸೌಲಭ್ಯವನ್ನು ಕಲ್ಪಿಸಲಿ. +ಎಲ್ಲಾ ಕನ್ನಡ ತಂತ್ರಾಂಶಗಳೂ ಸರ್ಕಾರ ಅನುಮೋದಿಸಿರುವ ಕ.ಗ.ಪ ಕೀಲಿಮಣೆಯನ್ನು ಅಳವಡಿಸಲಿ. ಇದರಿಂದ ಬಳಕೆದಾರರು ಒಂದು ಕನ್ನಡ ತಂತ್ರಾಂಶದಿಂದ ಇನ್ನೊಂದಕ್ಕೆ ವರ್ಗವಾದರೆ ಯಾವುದೇ ಅಡಚಣೆಯಿರುವುದಿಲ್ಲ. ಈ ಕೀಲಿಮಣೆಯ ಜೊತೆಗೆ ಬೇಕಾದರೆ, ಲಿಪ್ಯಂತರಣ ಕೀಲಿಮಣೆಯನ್ನೋ (ಬರಹದಲ್ಲಿರುವಂತೆ), ಅಥವಾ ಇನ್ನೂ ಉತ್ತಮವಾದ, ಸರಳವಾದ ಕ್ರಮವನ್ನು ಅಳವಡಿಸಿದರೆ ಸ್ವಾಗತಿಸೋಣ. +ಸರಕಾರದ ಎಲ್ಲಾ ಇಲಾಖೆಗಳು ಕನ್ನಡದ ಮೂಲಕ ಕೆಲಸ ನಡೆಸುವಂತಾಗಲಿ, ತನ್ಮೂಲಕ ಕನ್ನಡ ಅಕ್ಷರಗಳಿಗೆ ಬೇಡಿಕೆ ಹೆಚ್ಚಾಗಲಿ. ಕನ್ನಡಿಗರಿಗೆ ಕನ್ನಡ ಒಂದು ಹವ್ಯಾಸವಾಗದೆ, ಅದೇ ಬದುಕಾಗಲಿ. +-ಶೇಷಾದ್ರಿವಾಸು +ಯೂನಿಕೋಡ್, ವಿಂಡೋಸ್ ಎಕ್ಸ್‌ಪಿ ಮತ್ತು ಕನ್ನಡ +(ಮಾರ್ಚ್ ೨೦೦೩ ರ ಸಂಪಾದಕೀಯಕ್ಕೆ ಪ್ರತಿಕ್ರಿಯಾತ್ಮಕ ಲೇಖನ) +ಇತ್ತೀಚೆಗೆ ವಿಂಡೋಸ್ ಎಕ್ಸ್‌ಪಿ ಗಣಕ ಕಾರ್ಯಾಚರಣ ವ್ಯವಸ್ಥೆಯು ಬಳಕೆಗೆ ಬರುತ್ತಿದೆ. ಇದರೊಂದಿಗೆ ಯೂನಿಕೋಡ್ ಎಂಬ ಹೊಸ ಸಂಕೇತ ವ್ಯವಸ್ಥೆಯೂ ಜಾರಿಗೆ ಬರುತ್ತಿದೆ. ಈ ಎರಡೂ ವ್ಯವಸ್ಥೆಗಳಿಂದ ಗಣಕಗಳ ಬಳಕೆದಾರರಿಗೆ ಅನೇಕಾನೇಕ ಅನುಕೂಲತೆಗಳು ಒದಗುತ್ತಿವೆ. ಗಣಕಗಳಲ್ಲಿ ಇಂಗ್ಲಿಷ್ ಬಳಸುವವರು ವಿಂಡೋಸ್‌ನ ೯೫,೯೮, ೨೦೦೦, ಎನ್‌ಟಿ ಮುಂತಾದ ವಿವಿಧ ಆವೃತ್ತಿಗಳಿಂದ ವಿಂಡೋಸ್ ಎಕ್ಸ್‌ಪಿ ಆವೃತ್ತಿಗೆ ಬದಲಾಯಿಸಿಕೊಳ್ಳಲು ಯಾವ ತಾಂತ್ರಿಕ ಸಮಸ್ಯೆಗಳೂ ಉಂಟಾಗುವುದಿಲ್ಲ. ಈ ನೂತನ ಆವೃತ್ತಿಯಲ್ಲಿ ನೀಡಿರುವ ಹೆಚ್ಚಿನ ಸೌಲಭ್ಯಗಳನ್ನು ಅರಿತು ಬಳಸಿಕೊಳ್ಳುವುದಷ್ಟೇ ಬಳಕೆದಾರರ ಕೆಲಸವಾಗಿದೆ. ಅಂತೆಯೇ ಇಂಗ್ಲಿಷ್ ಮಾಧ್ಯಮದಲ್ಲಿನ ವ್ಯವಹಾರಗಳಿಗೆ ಯೂನಿಕೋಡ್ ಸಂಕೇತ ವ್ಯವಸ್ಥೆಯೂ ಯಾವ ಗೊಂದಲಗಳನ್ನೂ ಉಂಟುಮಾಡುವುದಿಲ್ಲ. ಯೂನಿಕೋಡ್ ವ್ಯವಸ್ಥೆಯು ಗಣಕದ ಆಂತರಿಕ ವ್ಯವಹಾರ ಮತ್ತು ಗಣಕ ಕಾರ್ಯಾಚರಣ ವ್ಯವಸ್ಥೆಯ ತಾಂತ್ರಿಕ ಕ್ರಿಯೆಗಳಿಗೆ ಸಂಬಂಧಿಸಿದ್ದು. ಇದು ಬಳಕೆದಾರರ ತಿಳಿವಳಿಕೆಗೆ ಬರುವುದಿಲ್ಲ ಮತ್ತು ಬಳಕೆದಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಬಳಕೆದಾರರು ತಮ್ಮಲ್ಲಿರುವ ಗಣಕದಲ್ಲೇ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯನ್ನು ಅನುಸ್ಥಾಪಿಸಿಕೊಂಡರೆ ಸಾಕು. ಎಂದಿನಂತೆ ಗಣಕವನ್ನು ಚಾಲನೆಗೊಳಿಸಿ ಈಗಾಗಲೇ ಬಳಸುತ್ತಿರುವ ಕೀಲಿಮಣೆಯನ್ನೇ ಎಂದಿನಂತೆಯೇ ಬಳಸಬಹುದು. ಕನ್ನಡಕ್ಕೆ ಸಂಬಂಧಿಸಿದಂತೆಯೂ ಈಗಿರುವ ಕೀಲಿಮಣೆ ವಿನ್ಯಾಸ ಅಂತೆಯೇ ಬಳಕೆಗೆ ದೊರಕುತ್ತದೆ. +ಆದರೆ ಯೂನಿಕೋಡ್ ಸಂಕೇತ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ಗಣಕಗಳಲ್ಲಿ ಕನ್ನಡವನ್ನು ನೀಡುವ ಹಾದಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಲಿಪಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ. +ಆಸ್ಕಿ (ಎ‌ಎಸ್‌ಸಿ‌ಐ‌ಐ – ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್‌ಮೇಶನ್ ಇಂಟರ್‌ಚೇಂಜ್) ಮತ್ತು ಇಸ್ಕಿ (ಐ‌ಎಸ್‌ಸಿ‌ಐ‌ಐ – ಇಚಿಡಿಯನ್ ಸ್ಕ್ರಿಪ್ಟ್ ಕೋಡ್ ಫಾರ್ ಇನ್‌ಫರ್‌ಮೇಶನ್ ಇಂಟರ್‌ಚೇಂಜ್) ಸಂಕೇತಗಳು +ಯಾವುದೇ ಭಾಷೆಯ ಅಕ್ಷರಗಳನ್ನು ಗಣಕಗಳಲ್ಲಿ ದ್ವಿಮಾನಾಂಕ ಸಂಕೇತಗಳಾಗಿ ಶೇಖರಿಸಿಡಲಾಗುತ್ತದೆ (ಅಂದರೆ ೦ ಮತ್ತು ೧ ಎರಡೇ ಸಂಕೇತಗಳನ್ನು ಬಳಸುವ ಸಂಖ್ಯೆಗಳು). ಇಂತಹ ಪ್ರತಿ ಸಂಖ್ಯೆಗೂ ಗರಿಷ್ಠ ಎಂಟು ಅಂಕಿ ಸ್ಥಾನಗಳೆಂದು ನಿಗದಿಪಡಿಸಲಾಗಿದೆ. ಇದನ್ನೇ ಆಸ್ಕಿ ಎಂದು ಕರೆಯುತ್ತಾರೆ. ಈ ಗರಿಷ್ಠ ಮಿತಿಯ ಕಾರಣದಿಂದ ಅಕ್ಷರಗಳನ್ನು ಪ್ರತಿನಿಧಿಸಲು ೨೫೬ ಅವಕಾಶಗಳಿರುತ್ತವೆ. ಇಂಗ್ಲಿಷ್‌ನಲ್ಲಾದರೋ ‘ಎ’ ಯಿಂದ ‘ಝಡ್’ ವರೆಗೆ ಸಣ್ಣಕ್ಷರಗಳನ್ನೂ ಸೇರಿದಂತೆ ಇಂಗ್ಲಿಷ್‌ಗಾಗಿ ಗಣಕದಲ್ಲಿ ಒಟ್ಟು ೫೨ ಅವಕಾಶಗಳು ಮಾತ್ರ ಸಾಕು. ಕನ್ನಡದಲ್ಲಾದರೋ ಸ್ವರಗಳು, ವ್ಯಂಜನಗಳು, ವ್ಯಂಜನಗಳೊಡನೆ ಸ್ವರಗಳು ಸೇರಿದ ಗುಣಿತಾಕ್ಷರಗಳು, ಒಂದಕ್ಕಿಂತ ಹೆಚ್ಚು ವ್ಯಂಜನಗಳು ಸೇರಿದ ಸಂಯುಕ್ತಾಕ್ಷರಗಳು ಮುಂತಾಗಿ ಸಹಸ್ರಾರು ಸಂಖ್ಯೆಯ ಅಕ್ಷರಗಳಾಗುತ್ತವೆ. ಅದೃಷ್ಟವಶಾತ್ ಗಣಕಗಳ ಉನ್ನತ ತಾಂತ್ರಿಕತೆಯ ಕಾರಣದಿಂದ ಸುಮಾರು ೧೫೦ ಅಕ್ಷರಭಾಗಗಳಿಂದ ಇವೆಲ್ಲವನ್ನೂ ಪಡೆಯಬಹುದಾಗಿದೆ. ಕನ್ನಡಕ್ಕೆ ಬೇಕಾದ ಈ ಅಕ್ಷರಭಾಗಗಳು ಮತ್ತು ಇವುಗಳಿಗೆ ಆಸ್ಕಿ ಸಂಕೇತಗಳನ್ನು ಕರ್ನಾಟಕ ಸರ್ಕಾರವು ನಿಗದಿಗೊಳಿಸಿದೆ. ಆದರೆ, ಈ ರೀತಿಯ ಸಂಕೇತೀಕರಣದಿಂದ ಗಣಕಗಳಲ್ಲಿ ದಾಖಲಾಗುವ ಮಾಹಿತಿಗಳ ಅಕಾರಾದಿ ವರ್ಗೀಕರಣ, ಸೂಚೀಕರಣ ಮುಂತಾದ ಭಾಷಾ ಸಂಬಂಧಿತ ಅತ್ಯಗತ್ಯ ಕ್ರಿಯೆಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದಲೇ ಈ ಮಾಹಿತಿಗಳನ್ನು ಸ್ವರ ವ್ಯಂಜನಗಳ ಮೂಲಾಕ್ಷರಗಳನ್ನಾಗಿ ಪರಿವರ್ತಿಸಿ ಅವುಗಳಿಗೆ ಸಂಕೇತಗಳನ್ನು ಗೊತ್ತುಪಡಿಸಿ ಮೇಲ್ಕಂಡ ಭಾಷಾ ಸಂಸ್ಕರಣೆ ಕಾರ್ಯಗಳನ್ನು ಕೈಗೊಳ್ಳಬೇಕು (ಉದಾಹರಣೆಗೆ ಕನ್ನಡ ಪದವನ್ನು ಗಣಕದೊಳಗೆ ಕನ್‌ನಡ ಎಂದು ಪರಿವರ್ತಿಸುವುದು). ಇಂತಹ ಕ್ರಯೆಗಳಿಗೆ ಸೂಕ್ತವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬಹುದು. ಈ ತಾತ್ಕಾಲಿಕ ಬದಲೀಕರಣ ಮತ್ತು ಸಂಕೇತೀಕರಣಗಳು ಗಣಕಗಳ ಆಂತರಿಕ ಕ್ರಿಯೆಗಳು. ಒಟ್ಟಿನಲ್ಲಿ ಕನ್ನಡ ಅಥವಾ ಇತರ ಭಾಷೆಗಳಿಗೆ (೧) ಅಕ್ಷರಭಾಗಗಳ ಸಂಕೇತೀಕರಣ ಮತ್ತು (೨) ಮೂಲಾಕ್ಷರಗಳ ಸಂಕೇತೀಕರಣ ಎರಡೂ ಅವಶ್ಯಕ. +ಸಾಮಾನ್ಯವಾಗಿ ಎಲ್ಲ ಭಾರತೀಯ ಭಾಷೆಗಳೂ ಒಂದೇ ರೀತಿಯ ರಚನೆಯನ್ನು ಹೊಂದಿರುವುದರಿಂದ ಒಂದು ಭಾರತೀಯ ಭಾಷೆಯಿಂದ ಮತ್ತೊಂದು ಭಾರತೀಯ ಭಾಷೆಗೆ ಲಿಪ್ಯಂತರಣ ಸಾಧ್ಯತೆ ಸುಲಭವಾಗುತ್ತದೆ. ಆದ್ದರಿಂದ ಎಲ್ಲ ಭಾರತೀಯ ಭಾಷೆಗಳ ಮೂಲಾಕ್ಷರಗಳಿಗೆ (ಸ್ವರಗಳು ಮತ್ತು ವ್ಯಂಜನಗಳು) ಸಮಾನ ಆಸ್ಕಿ ಸಂಕೇತಗಳನ್ನು ನಿಗದಿಪಡಿಸಲಾಗಿದೆ. ಈ ಸಂಕೇತ ವ್ಯವಸ್ಥೆಯನ್ನು ಇಸ್ಕಿ ಎಂದು ಕರೆಯಲಾಗಿದೆ. ಇಸ್ಕಿಗೆ ಸಂಬಂಧಿಸಿದಂತೆ ‘ಅ’ ಸ್ವರಯುಕ್ತವಾದ ವ್ಯಂಜನಗಳನ್ನು (ಕ, ಗ ಇತ್ಯಾದಿ) ಮೂಲವಾಗಿಟ್ಟುಕೊಳ್ಳಲಾಗಿದೆ. ಆದರೆ ‘ಅ’ಕಾರ ಸೇರಿದ ವ್ಯಂಜನಗಳನ್ನು ಮೂಲವಾಗಿಟ್ಟುಕೊಳ್ಳುವುದರಿಂದ ಗಣಕಗಳಲ್ಲಿ ಭಾಷಾಸಂಸ್ಕರಣೆ ಮಾಡುವಾಗ ಸಮಸ್ಯೆಗಳಾಗುವುದರಿಂದ ಮೂಲವ್ಯಂಜನಗಳನ್ನೇ (ಕ್, ಗ್ ಇತ್ಯಾದಿ) ಸಂಕೇತೀಕರಣಗೊಳಿಸಬೇಕು ಎಂಬ ಕೂಗು, ಒತ್ತಾಯಗಳಿವೆ. ಈ ಎರಡೂ ವಿಧಾನಗಳ ಪರ ಹಾಗೂ ವಿರುದ್ಧವಾದ ವಾದ ವಿವಾದಗಳು ತೀವ್ರತರವಾದ ವಾಕ್ ಸಮರಗಳಿಗೆ ಕಾರಣವಾಗಿವೆ. ಸದ್ಯದಲ್ಲಿ ‘ಅ’ ಸ್ವರಯುಕ್ತ ಸಂಕೇತೀಕರಣವೇ ಜಾರಿಯಲ್ಲದೆ. +ಯೂನಿಕೋಡ್ +ಯೂನಿಕೋಡ್ ಎಂಬುದು ೧೬ ಅಂಕಿಸ್ಥಾನಗಳುಳ್ಳ ಎಲ್ಲ ಭಾಷೆಗಳಿಗೆ ನಿಗದಿತವಾಗಿರುವ ಸಂಕೇತಗಳ ಸೂಚಿ. ಇದನ್ನೇ ಎಲ್ಲ ಭಾಷೆಗಳೂ ಅಧಿಕೃತ ಅಂತಾರಾಷ್ಟ್ರೀಯ ಶಿಷ್ಟತೆ ಎಂದು ಪರಿಗಣಿಸಿ ಬಳಸುತ್ತಾರೆ. ಹೀಗೆ ಹೊಸದಾಗಿ ರೂಪಿತವಾಗಿರುವ ೧೬ ಅಂಕಿಸ್ಥಾನಗಳುಳ್ಳ ಯೂನಿಕೋಡ್‌ನಲ್ಲಿ ಭಾರತೀಯ ಭಾಷೆಗಳಿಗೆ ಎಂಟು ಅಂಕಿಸ್ಥಾನಗಳುಳ್ಳ ಇಸ್ಕಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿದೆ. ಗಣಕಕ್ಕೆ ಊಡಿಸುವ ಎಲ್ಲ ಮಾಹಿತಿಗಳನ್ನೂ ಯೂನಿಕೋಡ್ ಸಂಕೇತಗಳನ್ನಾಗಿಯೇ (ಮೂಲಾಕ್ಷರ ಸಂಕೇತಗಳನ್ನಾಗಿ) ಗಣಕಗಳಲ್ಲಿ ಶೇಖರಿಸಿಡಲಾಗುವುದು. ಗಣಕಗಳೊಳಗೆ ಈ ಸಂಕೇತಗಳನ್ನು ಅಕ್ಷರಭಾಗ ಸಂಕೇತಗಳನ್ನಾಗಿ ಪರಿವರ್ತಿಲಾಗುವುದು. ಈ ಸಂಕೇತಗಳಿಗೆ ಗೊತ್ತುಪಡಿಸಿದ ಅಕ್ಷರಭಾಗಗಳು ಅಂದವಾಗಿ ಜೋಡಣೆಗೊಂಡು ತೆರೆಯಮೇಲೆ ಮೂಡುತ್ತವೆ ಅಥವಾ ಕಾಗದದ ಮೇಲೆ ಮುದ್ರಣಗೊಳ್ಳುತ್ತವೆ. ಇದಿಷ್ಟು ಯೂನಿಕೋಡ್ ವೃತ್ತಾಂತ. +ಯೂನಿಕೋಡ್‌ನ ಉಪಯುಕ್ತತೆ ಮತ್ತು ಸದ್ಯದಲ್ಲಿ ಯೂನಿಕೋಡ್‌ಗೆ ಬದಲಾಯಿಸುವಾಗ ಕನ್ನಡವು ಎದುರಿಸುತ್ತಿರುವ ಸಮಸ್ಯೆಗಳನ್ನು ಈಗ ಪರಿಶೀಲಿಸೋಣ. +ಉಪಯುಕ್ತತೆ: +ಬಹುಮುಖ್ಯವಾಗಿ ಗಣಕಗಳಲ್ಲಿ ಬಹುಭಾಷಾ ಬಳಕೆಯು ಸುಲಭವಾಗುತ್ತದೆ. ಅಂದರೆ ಒಂದೇ ಅಕ್ಷರಶೈಲಿಯಲ್ಲಿ (ಉದಾ: ಟೈಮ್ಸ್ ರೋಮನ್) ಬೇರೆ ಬೇರೆ ಭಾಷಾ ವಿಭಾಗಗಳಿರಲು ಸಾಧ್ಯ. ಆದ್ದರಿಂದ ಒಂದು ಅಕ್ಷರಶೈಲಿಯನ್ನು ಆಯ್ದುಕೊಂಡರೆ ಸಾಕು. ಅದರಿಂದಲೇ ವಾಕ್ಯದಲ್ಲಿ ನಮಗೆ ಬೇಕಾದ ವಿವಿಧ ಭಾಷಾ ಮಾಹಿತಿಗಳನ್ನು ಕೀಲಿಸಬಹುದು. +ಎಲ್ಲ ಭಾಷೆಗಳಿಗೆ ಆಗುವಂತೆ ಅನ್ವಯಿಕ ತಂತ್ರಾಂಶಗಳನ್ನು ಸಾರ್ವತ್ರೀಕರಿಸಬಹುದು. +ಅಂತರಜಾಲ, ವಿದ್ಯುನ್ಮಾನ ಅಂಚೆ ಸೌಲಭ್ಯಗಳು ಬಹುಭಾಷಾ ಮಾಧ್ಯಮದಲ್ಲಿರುವಂತೆ ಮಾಡಬಹುದು. +ಒಟ್ಟಿನಲ್ಲಿ ಗಣಕಗಳು ಎಲ್ಲ ಭಾಷಾಬಾಂಧವರ ಆಶೋತ್ತರಗಳಿಗೆ ಸುಲಭವಾಗಿ ಸ್ಪಂದಿಸುವಂತೆ ಮಾಡಬಹುದು. +ಸಮಸ್ಯೆಗಳು: +ಸುಮಾರು ಆರುವರ್ಷಗಳ ಹಿಂದೆಯೇ ಭಾರತೀಯ ಭಾಷೆಗಳಿಗೆ ಯೂನಿಕೋಡ್ ಸಂಕೇತಗಳನ್ನು ನಿರ್ಧರಿಸುವಾಗ ಇಸ್ಕಿಯನ್ನೇ ಆಧಾರವಾಗಿಟ್ಟುಕೊಳ್ಳಲಾಯಿತು. ಇದರಿಂದಾಗಿ ಇಸ್ಕಿಯಿಂದ ಉಂಟಾಗುತ್ತಿದ್ದ ಸಮಸ್ಯೆಗಳು ಯೂನಿಕೋಡ್‌ನಲ್ಲೂ ಕಂಡುಬರುತ್ತಿವೆ. ಈಗ ೮ ಅಂಕಿಸ್ಥಾನಗಳನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಗೊಂಡಿರುವ ವಿವಿಧ ಭಾಷಾ ಲಿಪಿ ತಂತ್ರಾಂಶಗಳು ಸಾಮಾನ್ಯವಾಗಿ ಅಕ್ಷರಭಾಗ ಸಂಕೇತಗಳನ್ನೇ ಗಣಕಗಳಲ್ಲಿ ಶೇಖರಿಸಿಡುತ್ತಿವೆ. ಆದ್ದರಿಂದ ಇಸ್ಕಿ ತಂದೊಡ್ಡುವ ಸಮಸ್ಯೆಗಳಿಂದ ದೂರವಾಗಿವೆ; ಭಾಷಾ ಸಂಸ್ಕರಣೆಗಾಗಿ ಆಯಾ ಭಾಷೆಗಳಿಗೆ ಪ್ರತ್ಯೇಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ ಯೂನಿಕೋಡ್ ಪದ್ಧತಿಗೆ ಬದಲಾಗುವಾಗ ಈಗಾಗಲೇ ಅಧಿಕೃತಗೊಂಡಿರುವ ಮೂಲಾಕ್ಷರಗಳು ಮತ್ತು ೧೬ ಅಂಕಿಸ್ಥಾನದ ಯೂನಿಕೋಡ್ ಸಂಕೇತಗಳನ್ನೇ ಬಳಸುವುದು ಅನಿವಾರ್ಯ. ಇದರಿಂದ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಮನಗಂಡ ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆಯು ಏರ್ಪಡಿಸಿದ್ದ ಸಭೆಗಳಲ್ಲಿ ಎಲ್ಲ ಭಾರತೀಯ ಭಾಷಾಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸ್ತುತ ಇರುವ ಯೂನಿಕೋಡ್ ಶಿಷ್ಟತೆಗಳಲ್ಲಿ ಪ್ರತಿಭಾಷೆಗೂ ಸಂಬಂಧಿಸಿದಂತೆ ಹಲವಾರು ಅಕ್ಷರಗಳು ಮತ್ತು ಸಂಕೇತಗಳು ಸೇರ್ಪಡೆಯಾಗಬೇಕಾದ ಅವಶ್ಯಕತೆಗಳು ಕಂಡುಬಂದವು. ಈ ಸೇರ್ಪಡೆಗಳನ್ನು ಅಂಗೀಕರಿಸಿ ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ನೂತನ ಆವೃತ್ತಿಯನ್ನು ಅಧಿಕೃತವಾಗಿ ಪ್ರಕಟಿಸುವವರು ‘ಯೂನಿಕೋಡ್ ಕನ್ಸೋರ್ಷಿಯಮ್’ ಎಂಬ ಅಂತಾರಾಷ್ಟ್ರೀಯ ಪರಿಷತ್ತು. ಈ ಬದಲಾವಣೆಗಳನ್ನು ಮಾಡಬೇಕೆಂಬ ಬೇಡಿಕೆಗಳನ್ನು ಮಂಡಿಸಿ ಒತ್ತಾಯಿಸಬೇಕಾದವರು ಈ ಪರಿಷತ್ತಿನ ಅಧಿಕೃತ ಸದಸ್ಯತ್ವವನ್ನು ಪಡೆದಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರeನ ಇಲಾಖೆ. ಈ ಇಲಾಖೆಗೆ ಸರಿಯಾದ ಮಾಹಿತಿಗಳನ್ನು ಒದಗಿಸುವುದು ಆಯಾ ಭಾಷಾ ಸರ್ಕಾರಗಳ ಜವಾಬ್ದಾರಿ. ಕನ್ನಡಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯು ೧೯೯೯ ನೇ ಇಸವಿಯಲ್ಲಿ ಆರಂಭವಾಯಿತು. ಹಲವಾರು ಹಿರಿಯ ಕನ್ನಡ ಭಾಷಾವಿದ್ವಾಂಸರು ಹಾಗೂ ಗಣಕ ತಜ್ಞರೊಡನೆ ವಿಪುಲವಾಗಿ ಚರ್ಚಿಸಿ ೨೦೦೦ನೇ ಇಸವಿಯವೇಳೆಗೆ ಕನ್ನಡಕ್ಕಾಗಿ ಯೂನಿಕೋಡ್ ದಾಖಲೆಯನ್ನು ಸಿದ್ಧಪಡಿಸಲಾಯಿತು. ಆ ವರ್ಷ ನವೆಂಬರ್ ತಿಂಗಳಲ್ಲಿ ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆಯು ಏರ್ಪಡಿಸಿದ್ದ ಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಆಗ ನಡೆದ ಚರ್ಚೆಗಳು ಮತ್ತು ಹೊರಬಂದ ಸಲಹೆಗಳು ಮುಂತಾದವನ್ನು ಪರಿಗಣಿಸಿ ಮತ್ತೆ ಹಲವಾರು ವಿಚಾರಗಳನ್ನು ಪರಿಶೀಲಿಸಿದ ನಂತರ ೨೦೦೧ ನೇ ಇಸವಿಯಲ್ಲಿ ನಡೆದ ಸಭೆಯಲ್ಲಿ ‘ಕನ್ನಡಕ್ಕಾಗಿ ಯೂನಿಕೋಡ್’ ವರದಿಯನ್ನು ಅಂತಿಮಗೊಳಿಸಲಾಯಿತು. ಇದನ್ನು ಕೇಂದ್ರಸರ್ಕಾರದ ಮಾಹಿತಿ ತಂತ್ರeನ ಇಲಾಖೆ ಹಾಗೂ ಯೂನಿಕೋಡ್ ಕನ್ಸೋರ್ಷಿಯಮ್ ಸಂಸ್ಥೆಗೆ ಕಳುಹಿಸಲಾಗಿದೆ. ಇದನ್ನೇ ಅಧಿಕೃತವೆಂದು ಘೋಷಿಸಿ ಯೂನಿಕೋಡ್‌ನ ಮುಂದಿನ ಆವೃತ್ತಿಯಲ್ಲಿ ಅಳವಡಿಸಬೇಕಾಗಿದೆ. ಅಲ್ಲಿಯವರೆಗೆ ಕನ್ನಡಕ್ಕೆ ತೊಂದರೆ ತಪ್ಪಿದ್ದಲ್ಲ. +ಹೀಗೆ ಸಿದ್ಧವಾಗಿರುವ ಯೂನಿಕೋಡ್ ಮೂಲಾಕ್ಷರಗಳು ಹಾಗೂ ಹಲವು ಅಕ್ಷರಚಿಹ್ನೆಗಳ ೧೬ ಅಂಕಿಸ್ಥಾನ ಸಂಕೇತಗಳನ್ನು ಗಣಕಗಳಲ್ಲಿ ಕನ್ನಡದ ಲಿಪಿಯ ದಾಖಲೆಗಾಗಿ ಬಳಸಬೇಕಾಗಿದೆ. ಹೀಗೆ ದಾಖಲಾಗುವ ಸಂಕೇತಗಳನ್ನು ತೆರೆಯಮೇಲೆ ಮೂಡುವ ಅಕ್ಷರಭಾಗಗಳ ಬೇರೊಂದು ಸಂಕೇತ ವ್ಯವಸ್ಥೆಗೆ ಪರಿವರ್ತಿಸಬೇಕು. ಈ ಅಕ್ಷರಭಾಗಗಳ ಶಿಷ್ಟತೆ ಆಗಬೇಕು ಮತ್ತು ಅಕ್ಷರಗಳನ್ನು ತೆರೆಯ ಮೇಲೆ ಮೂಡಿಸುವ / ಕಾಗದದ ಮೇಲೆ ಮುದ್ರಿಸುವ ಪ್ರಕ್ರಿಯೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬೇಕು. ಇದು ಖಾಸಗಿ ಪ್ರಯತ್ನವಾಗಬಹುದು (ಈಗಾಗಲೇ ಇರುವ ನುಡಿ, ಬರಹ, ಶ್ರೀಲಿಪಿ ಇತ್ಯಾದಿ ಲಿಪಿ ತಂತ್ರಾಂಶಗಳ ಯೂಲಿಕೋಡ್ ಆವೃತ್ತಿಗಳಾಗಬಹುದು) ಅಥವಾ ಅತಿಮುಖ್ಯವಾಗಿ ಮೈಕ್ರೋಸಾಫ಼್ಟ್ ಕಂಪನಿಯವರೇ ತಮ್ಮ ವಿಂಡೋಸ್ ಎಕ್ಸ್‌ಪಿ ಆವೃತ್ತಿಯಲ್ಲಿ ಕನ್ನಡವನ್ನು ನೀಡಬಹುದು. ಈ ಯಾವುದೇ ಪ್ರಯತ್ನವಾಗಲೀ ಅದು ಕನ್ನಡದ ಜಾಯಮಾನಕ್ಕೆ ಅನುಗುಣವಾಗಿರಬೇಕು; ಭಾಷೆ ಹಾಗೂ ಬರವಣಿಗೆಯ ಎಲ್ಲ ಸಾಧ್ಯತೆಗಳಿಗೂ ಸ್ಪಂದಿಸಬೇಕು; ಅಕಾರಾದಿ ವರ್ಗೀಕರಣ ಮುಂತಾದ ಅನೇಕ ಭಾಷಾ ಸಂಬಂಧಿತ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿಕೊಂಡಿರಬೇಕು. ಖಾಸಗಿಯಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಅವರುಗಳು ವಿಂಡೋಸ್‌ನಲ್ಲಿ ಪ್ರತ್ಯೇಕ ಭಾಷಾ ಇಂಜಿನ್‌ಅನ್ನು ಅಳವಡಿಸಬಲ್ಲರು ಮತ್ತು ಅದರಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಉಪಾಯಗಳನ್ನು ಅಳವಡಿಸಬಲ್ಲರು. +ಗಣಕಗಳಲ್ಲಿ ಕನ್ನಡವೇ ಅಲ್ಲದೆ ಇತರ ಭಾರತೀಯ ಭಾಷೆಗಳನ್ನು ನೀಡಲು ಮೈಕ್ರೋಸಾಫ಼್ಟ್‌ನ ಪ್ರಯತ್ನ ಸಾಗಿದೆ. ಮೈಕ್ರೋಸಾಫ಼್ಟ್ ಕಂಪನಿಯವರೇ ನೇರವಾಗಿ ಈ ಕ್ರಯೆಗಳಲ್ಲಿ ಪಾಲ್ಗೊಂಡು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವನ್ನು ನೀಡುವುದು ಅತ್ಯುತ್ತಮ ಮಾರ್ಗ. ಈ ಹಾದಿಯಲ್ಲಿ ಅವರು ಮುನ್ನಡೆದಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ. ಈ ದಿಸೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನು ಅವರಿಗೆ ಸ್ಪಷ್ಟವಾಗಿಯೂ ವಿವರವಾಗಿಯೂ ತಿಳಿಸಲಾಗಿದೆ. ಈ ದಿಕ್ಕಿನಲ್ಲಿ ಗಣಕಗಳಲ್ಲಿ ದಾಖಲಾಗುವ ಭಾರತೀಯ ಭಾಷೆಗಳ ಮೂಲಾಕ್ಷರಗಳ ಯೂನಿಕೋಡ್ ಸಂಕೇತಗಳನ್ನು ವೀಕ್ಷಣೆ / ಮುದ್ರಣಕ್ಕಾಗಿ ಅಕ್ಷರ ಸಂಕೇತಗಳನ್ನಾಗಿ ಪರಿವರ್ತಿಸಲು ಮೈಕ್ರೊಸಾಫ಼್ಟ್ ಕಂಪನಿಯು ಒಂದು ತಂತ್ರಾಂಶವನ್ನು ಸಿದ್ಧಪಡಿಸಿದೆ. ಯಾವುದೇ ಭಾರತೀಯ ಭಾಷೆಗಾದರೂ ಈ ನಿರ್ದಿಷ್ಟ ತಂತ್ರಾಂಶವನ್ನು ಬಳಸುತ್ತಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿರಬಹುದು. ಏಕೆಂದರೆ ಭಾರತೀಯ ಭಾಷೆಗಳು ಬಹುಪಾಲುಮಟ್ಟಿಗೆ ಪರಸ್ಪರ ಸಮಾನ ರಚನೆ ಹಾಗೂ ಅಕ್ಷರಗಳನ್ನು ಹೊಂದಿದ್ದರೂ ಪ್ರತಿಭಾಷೆಯೂ ಪ್ರತ್ಯೇಕವಾಗಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಕನ್ನಡದಲ್ಲಿ (ಕಾರ್‍ಯ, ಕಾರ್ಯ), (ಮೂರ್ತಿ, ಮೂರ್‍ತಿ) ಮುಂತಾಗಿ ಒಂದೇ ಪದವನ್ನು ಎರಡು ರೀತಿಯಲ್ಲಿ ಬರೆಯಬೇಕಾಗಿದೆ. ಸಧ್ಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಇಂತಹ ಹಲವಾರು ವೈಶಿಷ್ಟ್ಯತೆಗಳು ಕನ್ನಡದಲ್ಲೇ ಅಲ್ಲದೆ ಇತರ ಭಾಷೆಗಳಲ್ಲೂ ಇವೆ. ಇವುಗಳಿಗೆ ಸರಿಯಾಗಿ ಸ್ಪಂದಿಸಲು ಮೈಕ್ರೋಸಾಫ಼್ಟ್ ಕಂಪನಿಯವರು ಈಗ ಬಳಸುತ್ತಿರುವ ಸಮಾನ ತಂತ್ರಾಂಶದಲ್ಲಿ ಆಯಾ ಭಾಷಾಧಾರಿತ ಪ್ರತ್ಯೇಕ ತಂತ್ರಾಂಶ ವಿಭಾಗಗಳಿರಬೇಕಾಗಬಹುದು. +ಒಟ್ಟಿನಲ್ಲಿ ಮೈಕ್ರೋಸಾಫ಼್ಟ್ ಕಂಪನಿಯವರು ಕನ್ನಡಕ್ಕಾಗಿ ಸಿದ್ಧಪಡಿಸಿರುವ ತಂತ್ರಾಂಶಗಳನ್ನು ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ವಿಂಡೋಸ್ ಎಕ್ಸ್‌ಪಿಯನ್ನು ಬಳಸುವಾಗ ಕನ್ನಡಕ್ಕೆ ಸಂಬಂಧಿಸಿದಂತೆ ಈಗ ಕಂಡುಬರುವ ಕೊರತೆಗಳು ನಿವಾರಣೆಯಾಗಲು ಸಾಧ್ಯವಾಗಬಹುದು. ಈ ಮಧ್ಯೆ ಕನ್ನಡಕ್ಕೆ ಸಂಬಂಧಿಸಿದಂತೆ ಸೂಚಿಸಿರುವ ಬದಲಾವಣೆಗಳನ್ನು ಯೂನಿಕೋಡ್ ಕನ್ಸೋರ್ಷಿಯಮ್‌ನವರು ಯೂನಿಕೋಡ್ ಆವೃತ್ತಿಯಲ್ಲಿ ಅಳವಡಿಸಬೇಕೆಂದೂ ಒತ್ತಾಯಿಸಬೇಕಾಗಿದೆ. +ಚಿ ವಿ ಶ್ರೀನಾಥಶಾಸ್ತ್ರೀ +ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್ತು +ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆವರಣ +ನರಸಿಂಹರಾಜ ಕಾಲೊನಿ, ಬೆಂಗಳೂರು ೫೬೦ ೦೧೯ +ದೂ. (೦೮೦) ೬೬೧೫೯೭೨ +ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […] +ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ […] +ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_524.txt b/Kannada Sahitya/article_524.txt new file mode 100644 index 0000000000000000000000000000000000000000..506e41efde04cf950433bcddfec577176e977b81 --- /dev/null +++ b/Kannada Sahitya/article_524.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತೋಡಿ-ಚಾಪು +ಗುಮ್ಮನ ಕರೆಯದಿರೆ ಅಮ್ಮ ನೀನು ಪ +ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು +ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ +ಹೆಣ್ಣುಗಳಿರುವಲ್ಲಿ ಪೋಗಿ ಅವರ +ಕಣ್ಣು ಮುಚ್ಚುವುದಿಲ್ಲವೆ +ಚಿಣ್ಣರ ಬಡಿಯೆನು, ಅಣ್ಣನ ಬೈಯೆನು +ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ೧ +ಬಾವಿಗೆ ಪೋಗೆ ಕಾಣೆ ಅಮ್ಮ ನಾನು +ಹಾವಿನೊಳಾಡೆ ಕಾಣೆ +ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ +ದೇವರಂತೆ ಒಂದು ಠಾವಿಲಿ ಕೂಡುವೆ ೨ +ಮಗನ ಮಾತನು ಕೇಳುತ ಗೋಪಿ +ಮುಗುಳು ನಗೆ ನಗುತ +ಜಗದೊಡೆಯ ಶ್ರೀ ಪುರಂದರ ವಿಠಲನ +ಬಿಗಿದಪ್ಪಿಕೊಂಡಳು ಮೋಹದಿಂದಲಾಗ +***** +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ರಾಗ — ಕಾಂಬೋದಿತಾಳ — ಅಟ್ಟ ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ |ಕುರುಹ ಪೇಳಿ ಕುಳೀತಿದ್ದ ಜನರು ||ಪ|| ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ |ಗಂಟಲು ಮೂರುಂಟು ಮೂಗಿಲ್ಲವು ||ಕುಂಟಮನುಜನಂತೆ […] +ರಾಗ — ಕಲ್ಯಾಣಿತಾಳ — ಝಂಪೆ ವರವ ಕೊಡು ಎನಗೆ ವಾಗ್ದೇವಿ – ನಿನ್ನ |ಚರಣಕಮಲಂಗಳನು ದಯಮಾಡು ದೇವಿ ||ಪ|| ಶಿವಮೊಗದ ನಸುನಗೆಯ ಬಾಲೆ |ಎಸೆವ ಕರ್ಣದಿ ಮುತ್ತಿನೋಲೆ ||ನಸುನಗುವ ಪಲ್ಲ ಗುಣಶೀಲೆ – […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_525.txt b/Kannada Sahitya/article_525.txt new file mode 100644 index 0000000000000000000000000000000000000000..6ff9153372698a6c9f0b58e2541bbbdf0a9f948a --- /dev/null +++ b/Kannada Sahitya/article_525.txt @@ -0,0 +1,64 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಟ್ಟುಸಿರನೆಳೆದು +ದಾಟಿತು ಕೊನೆಯರೈಲು : +(ತಕ್ಕೊ ಕೈಮರದ ಕರಡೀಸಲಾಮು !) +ಕೈಯ ಚಾಚಿದ ನೆರಳು ಚಲಿಸುತ್ತಿದೆ…..! +ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! +ಅಸ್ಥಿ ಪಂಜರದೊಡಲ ತುಂಬುತ್ತಿದೆ! +ಕೈಯಕೋಲನು ಮೀಟಿ +ಸೇತುವೆಯ ದಾಟಿ +ಕೈಯ ಚಾಚಿದ ನೆರಳು ತೆರಳುತ್ತಿದೆ +ನೆರಳು ನರಳುತ್ತಿದೆ! +ತೊಗಲಬಾವಲಿಯಂತೆ ಜೋತಿರುವ ಜೋಪಡಿಯ ನೆರಳು +ಅಕರಾಳ ವಿಕರಾಳ ನೆರಳು! +ಅದರ ಮಡಿಲಲ್ಲಿ ಅದೋ……. ಎರಡು ಕಣ್‌ ಕಪ್ಪಡಿ! +ನಂದಿದಾಶೆಯ ಮನದ ತುಕುಡಿ ತುಕುಡಿ!! +ಹೊರಗೆ…….. +ಕೈಬೀಸಿ ಕರೆವ ಈಚಲಗರಿಯ ನೆರಳು +ಮರುಳು! +ನಟ್ಟಿರುಳು ಕೊರಳ ಹಿಸುಕಿದ ತೆರದಿ ನರಿಯ ಕೂಗು! +ಕೊಳ್ಳಿದೆವ್ವದ ಸೋಗು. +ಗೂಬೆ ಜೋಗುಳ ಕೇಳಿ +ಜೋಪಡಿಯೊಳಿರುಳು ಜೋಂಪಿಸಿತು. +ಅಸ್ಥಿಪಂಜರ ಕುಳಿತು +ಬೀದಿಯಲ್ಲಿ ಆಯ್ದ ಕೊರೆ ಬೀಡಿ ಕಿಡಿಗೆ +ಕತ್ತಲೆದೆ ತಿದಿಯಿಂದ ಹೊಗೆಯೆಳೆದು ನೂಕಿ- +ನೆರಳಿನನಿಮಿತ್ತ ಷೋಕಿ! +* * * * +ಬೆಳಕು ಹರಿಯಿತು …….. +ಯುಗಯುಗದ ಹೊಳವು ಹೊಡಮರಳಿತು! +ಒಡಲ ಹಸಿವೆಗೆ ಸೋತು +ಕೈಕೋಲನಾತು +ನೆರಳು ನಾಲಿಗೆ ಚಾಚಿ ಚಲಿಸುತ್ತಿದೆ; +ಅದೋ…….! +ಕೂಗಳತೆಯಲ್ಲಿಹುದು ರೈಲು ನಿಲ್ದಾಣ. +ನೆರಳು…… +ನೆರಳಿನದೊಂದು ಪರಿವಾರವೇ ನಿಂದು +ಕೈ ಚಾಚುತಿದೆ ನರಗೆ : “ನಾರಾಯಣ!” +ಪುರಿಬಾಜಿ, ಬ್ರೆಡ್ಡು, ಬಿಸ್ಕೀಟು, ಬಿಸಿಬಿಸಿ ಚಹ +ಕಪ್ಪುಬಸಿಗಾನ ಸನ್ಮಾನ … … +ಮುಸುರೆಯರಸುವ ನಾಯಮೊಲೆಗೆ ಜೋತಾಡುತಿವೆ ಬೀತಕುನ್ನಿ +“ಕಾಗೆ ಒಂದಗುಳ ಕಂಡರೆ ಕರೆಯದೇ ತನ್ನ ಬಳಗವನು?!” +ಕೈಯಚಾಚಿದ ನೆರಳು ಜೊತೆಗೂಡಿತೆನ್ನಿ! +ಹೊಸನಾತ ……ಹೊಸನಾತ! +ಬಂದು ನಿಂತಿತು ರೈಲು ಮತ್ತೊಂದು; +ನೂಕು ನುಗ್ಗಲಿನಲ್ಲಿ ತೆವಳಿಕೊಂಡೇ ಬಂದು +ನೆರಳು ಕೈಚಾಚಿತದೊ ಬಾಗಿ ನಿಂದು! +* * * * +ಹೊಗೆಯುಗುಳಿ ದಾಟಿತು +ಕೊನೆಯ ರೈಲು +ಕೈಯ ಚಾಚಿದ ನೆರಳು ತೆವಳುತ್ತಿದೆ +ನೆರಳು ನರಳುತ್ತಿದೆ! +***** +ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […] +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +೧ ಇದು ಬಾಳಕೊರಡ ಮುಡಿ- ಮೇಲೆ ಕಾಣದ ಕೈಯ ಕರಗಸವು ರೌರವದಿ ಕೊರೆಯುತಿದೆ ಕೊರಡಿನೆದೆ ಬಿರಿಯುತಿದೆ ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_526.txt b/Kannada Sahitya/article_526.txt new file mode 100644 index 0000000000000000000000000000000000000000..fe4d888f93a123041b6f1565836076b2908d738d --- /dev/null +++ b/Kannada Sahitya/article_526.txt @@ -0,0 +1,416 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತೃತೀಯಾಸ್ವಾಸಂ +ನನಗೆ ಶಾಮ ಇಷ್ಟವಾಗಲಿಕ್ಕೆ ಕಾರಣ ಅವನು ಹೆಚ್ಚು ಗಲಿಬಿಲಿಗೊಳ್ಳುತ್ತಿದ್ದುದು. ಗಲಿಬಿಲಿಯ ಕಾರ್ಯ ಕಾರಣ ಹೆಚ್ಚು ಅಸ್ಪಷ್ಟವಾಗಿತ್ತು. ಲೇಕಖ ಸಹಜ ಸ್ವಭಾವದಿಂದ ಅವನ ಗೊಂದಲಪೂರ್‍ಣ ವ್ಯಕ್ತಿತ್ವದ ಮಹತ್ವದ ಅನ್ವೇಷಕನಾಗಿದ್ದೆ. ಸ್ತ್ರೀಲಿಂಗವಾಚಕ ನುಡಿದ ಕಡೆ ಪುಲ್ಲಿಂಗ ನುಡಿದುಬಿಡುತ್ತಿದ್ದ; ಕರ್‍ತು ಇರಬೇಕಾದ ಕಡೆ ಕರ್ಮವೋ; ಕರ್ಮ ಇರಬೇಕಾದ ಕಡೆ ಕರ್ತೃ ಪ್ರಯೋಗವಾಗಿಬಿಡುತ್ತಿತ್ತು. ಕೂಡ್ರ ಬೇಕಾದ ಕಡೆ ನಿಲ್ಲುತ್ತಿದ್ದ ನಿಲ್ಲಬೇಕಾದ ಕಡೆ ಕೂಡ್ರುತ್ತಿದ್ದ. ಇನ್ನೊಂದು ವಿಚಿತ್ರವೆಂದರೆ ಅಳ್ಬೇಕಾದ ಕಡೆ ನಗುತ್ತಿದ್ದುದು ನಗಬೇಕಾದ ಕಡೆ ವಿಷಾದದ ಕವಚದೊಳಗೆ ಮುಖವನ್ನು ಮರೆಮಾಚಿಕೊಳ್ಳುತ್ತಿದ್ದನು. ಸಾರ್ವಜನಿಕವಾಗಿ ಅವನು ನಗೆಪಾಟಲಿಗೀಡಾಗಿ ಬಿಡುತ್ತಿದ್ದುದು ನನಗೆ ಅಸಹನೀಯವಾಗುತ್ತಿತ್ತು. ಇತರರಂತೆ ನಾನು ಅ ವನನ್ನು ವಿಕ್ಷಿಪ್ತರ ಪಟ್ಟಿಗೆ ಸೇರುಸಿತ್ತಿರಲಿಲ್ಲ. ದೋಸೆಗೆ ರಘು ಮಹಾಶಯ ಐತಿಹಾಸಿಕ ಮಹತ್ವ ನೀಡಲು ಕಾರಣವಾಗಿದ್ದ ಉಡುಪಿ ಶ್ರೀಕೃಷ್ಣಭವನಕ್ಕೋ; ಜಠರ ಸಂಬಂಧೀ ವ್ಯಾದಿಗಳ ತವರಾದ ವಗ್ಗರಣೆ, ಮೆಣಸಿನ ಖ್ಯಾತಿಯ ನಾಗಣ್ಣನ ಚಹಾದಂಗಡಿಗೋ; ಗುಹ್ಯ ಸಂಬಂಧೀ ರೋಗಗಳನ್ನು ತೊಡೆ ನಡುವಿರಿಸಿಕೊಂಡು ನರಳಿ ಸಜೀವ ಸಮಾಧಿಯಾಗಿದ್ದ ಜಗದ್ಗುರುವಿನ ಹೆಸರಲ್ಲಿದ್ದ ಉದ್ಯಾನವನಕ್ಕೋ ಕರೆದೊಯ್ದು ಅಂಟಿಕೊಂಡಂತೆ ಕೂತು ಸಾಹಿತ್ಯದ ಆಗುಹೋಗುಗಳ ಕುರುತಿ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಅನಕ್ಷಸ್ಥರಂತೆ ತೇಜೋಹೀನನಂತೆ ವರ್ತಿಸುತ್ತಿದ್ದ ಅವನು ಕ್ರಮೇಣ ಚರ್ಚೆಯಲ್ಲಿ ಪಾಲ್ಗೊಳ್ಲುತ್ತಿದ್ದ. ಮುಖ್ಯವಾಗಿ ಕಾವ್ಯದ ಫಾರಂ ಬಗ್ಗೆ ಪ್ರಖರವಾಗಿ ಮಾತಾಡುತ್ತಿದ್ದ. ಕುವೆಂಪು ಕವಿತೆಗಳನು ಓದಲಿಷ್ಟಪಡುತ್ತಿದ್ದ. ಬೇಂದ್ರೆ ಕವಿತೆಗಳನ್ನು ಹಾಡುವ ರೀತಿಯಲ್ಲಿ ಗೊಣಗುತ್ತಿದ್ದ. ಕುಮಾರವ್ಯಸನ ನಂತರ ಕನ್ನದದಲ್ಲಿ ಮಹತ್ವದ ಕವಿ ಹುಟ್ಟಲಿಲ್ಲ ಎಂದು ಮಿದುಕುತ್ತಿದ್ದ; ಅನೇಕ ಪಾಶ್ಚಿಮಾತ್ಯ ಕವಿಗಳ ಮೂಲಕ ಕುವೆಂಪುರವರು ಯಾಗೆ ಗ್ರೇಟೂ ಅಂತ ನಾನು ವಾದಿಸಲು ಪ್ರಯತ್ನಿಸುವ ಭರದಲ್ಲಿ ಇಂಗ್ಲೀಷ್ ಕವಿತೆಯ ಚೂರುಗಳನ್ನು ಕೋಟ್ ಮಾಡಿದ್ನೆಂದರೆ ಅವನು ಜೀವ ಕಳೆದುಕೊಂಡವನಂತೆ ಕೂತು ಬಿಡುತ್ತಿದ್ದ. ಪರಾವರ್ತಿತ ಕ್ರಿಯೆಯಿಂದ ಹೊರಬಂದು ನಾನು ಡೈರೆಕ್ಟಾಗಿ ಬೇಂದ್ರೆ ಎಂಬ ಕಿನ್ನರ ಲೋಕಕ್ಕೆ ಹೋಗಿಬಿಡುತ್ತಿದ್ದೆ. ಅವನು ಚೇತರಿಸಿಕೊಳ್ಳುತ್ತಲೇ ಇರಲಿಲ್ಲ. ಅದಕ್ಕೆ ತುಂಬ ಸಮಯ ಹಿಡಿಯುತ್ತಿತ್ತು. ಆ ಅವಧಿಯಲ್ಲಿಯೇ ಅವನು ತನಗರಿಯದಂತೆ ಮಾತು ಮತ್ತು ಬರಹದಲ್ಲಿ ಪರಪಾಟುಗಳನ್ನು ಮಾಡುತ್ತಿದ್ದುದು. ಈ ಅವಧಿಯಲ್ಲಿಯೇ ನಾನು ಫ್ರಾಯ್ಡನನ್ನು ಮೊರೆ ಹೋಗಿದ್ದು. ಸ್ಲಿಪ್ ಆಫ್ ಟಂಗ್, ಸ್ಲಿಪ್ ಆಫ್ ರೈಟಿಂಗ್; ಸ್ಲಿಪ್ ಆಫ್ ರೀಡಿಂಗ್ ಹೀಗೆ ಅನೇಕ ರೀತಿಯಲ್ಲಿ ಫ್ರಾಯ್ಡ್ ವ್ಯಾಖ್ಯಾನಿಸಿದ್ದು ನನಗೆ ಓದಲು ಸಾಧ್ಯವಾಗಿದ್ದು ಶಾಮನ ನಡುವಳಿಕೆಯ ಪ್ರೇರಣೆಯಿಂದಲೇ. ಈ ರೀತಿಯ ಭಾವನೆಗಳ ಪರಾವರ್ತಿತ ಸ್ಖ್ಲಲನಗಳಿಗೆ ಮೂಲ ಕಾರಣ ಹುಡುಕುವ ಪ್ರತ್ನದಿಂದಲೇ ಅವನಿಗೆ ನಾನು ಮತ್ತಷ್ಟು ಹತ್ತಿರವಾದದ್ದು. ಶಾಮನ ಮಾನಸಿಕ ಅಸಮತೋಲನ ಹೆಚ್ಚುತ್ತಿರುವುದನ್ನು ಗುರುತಿಸಿಯೇ ನಾನವನನ್ನು ಅದೇ ಇನ್ನು ವಾರಪತ್ರಿಕೆಯೊಂದನ್ನು ಆರಂಭಿಸಿದ ಡಾಕ್ಟರ್ ಕಮಲಾಕರನಿಗೆ ಪರಿಚಯಿಸಿದ್ದು. ಆಂಧ್ರ ಮೂಲದವನದ ಕಮಲಾಕರ ಚೆನ್ನಾರೆದ್ದಿ ನೇತೃತ್ವದ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಭಾಗವಹಿಸಿ, ಹೋರಾಡುತ್ತಲೇ ತ್ರಿಪುರನೇನಿ ಶ್ರೀನಿವಾಸ್‌ರವರ ‘ಗಾಯಂ ಪಡ್ಡ ಗುಲಾಬಿ’ ಕವಿತಾ ಸಂಕಲನವನ್ನು ಕಆಂಕುಳಲ್ಲಿಟ್ಟುಕೊಂಡುನಕ್ಸಲೈಟಾಗುವ ಕನಸು ಕಾಣುತ್ತ, ಕನಸಿನೊಳಗೆ ಪೋಲಿಸರಿಗೆ ಅರೆಸ್ತಾಗುತ್ತಾ; ತಪ್ಪಿಸಿಕೊಳ್ಳುತ್ತ; ಪ್ರತಿನಿತ್ಯ ಪೋಲೀಸ್ ಎನ್‌ಕೌಂಟರಲ್ಲಿ ಸಾಯುತ್ತ, ಇನ್ನೇನು ಕ್ರಾಂತಿಯ. ಸಂಪೂರ್ಣ ಸಮಾಜ ಬದಲಾವಣೆಯ ಹುಚ್ಚು ಹಿಡಿದು ತೆಲಂಗಾಣದ ಪ್ರತಿ ಬೀದಿ ಬೀದಿಯಲ್ಲಿ ನಿರ್ನಾಮವಾಗುತ್ತಾನೆ ಎನ್ನುವಾಗ ಸದರಿ ಗ್ರಾಮದ ತನ್ನ ಒಡಹುಟ್ಟಿದ ಅಕ್ಕನ ಮನೆಗೆ ಸೇರಿಕೊಂಡು ಬಿಟ್ಟಿದ್ದ. ತನ್ನ ಮಗಳನ್ನು ಮದುವೆ ಮಾಡಿಕೊಂಡರೆ ಕೋಟಿ ಗಾಯಾಲ ವೀಣಾ ತೆಲಂಗಾಣ ತಮ್ಮನ ಮನಸ್ಸಿನಿಂದ ಉದುರಿ ಹೋಗಬಹುದೆಂಬ ಆಸೆಯಿಂದ ಒಡಹುತ್ತಿದ ಅಕ್ಕ ಗತಿಸಿದ ತನ್ನ ಗಂಡನ ಗ್ರಾಚ್ಯೂಟಿ, ಪಿಎಫೂ ವಗೈರೆಯನ್ನೆಲ್ಲ ತಮ್ಮನ ಮುಂದಿಟ್ಟು ಸ್ವಂತ ಉದ್ಯೋಗ ಆರಂಭಿಸಿ ನಿನ್ನ ಕಾಲ ಮೇಲೆ ನೀನು ನಿಂತುಕೊಂಡು ಕನ್ಯಾದಾನ ಸ್ವೀಕರಿಸು ಎಂದು ಗೋಗರೆದಿದ್ದ್ದ್ದಳು. ಆ ಹಣವನ್ನು ಬಂಡವಾಳವಾಗಿರಿಸಿಕೊಂಡು ‘ಕಮಲಾಕರ ಖಡ್ಗ’ ಎಂಬೊಂದು ವಿಚಿತ್ರ ಹೆಸರಿನ ವಾರಪತ್ರಿಕೆಯನ್ನು ಶುರು ಮಾಡಿದ್ದ. ಭ್ರಷ್ಟರಿಗೆ ಸಿಂಹಸ್ವಪ್ನ, ಕ್ರಾಂತಿಯ ಕೈಗನ್ನಡಿ ಇತ್ಯಾದಿ ಘೋಷಣೆಗಳಿಂದಾಗಿಸದರೀ ನಗರದ ಉಳ್ಳವರು ಪರ್ಸಿನೊಂದಿಗೆ ಪತ್ರಿಕೆಯನ್ನು ಇರಿಸಿಕೊಳ್ಳತೊಡಗಿ ಅದಕ್ಕೊಂದು ನೆಲೆ ಕಲ್ಪಿಸಿದ್ದರು. ಪ್ರತಿ ಪತ್ರಿಕೆಯೊಂದಿಗೆ ಆತ ತನ್ನ ಬಗ್ಗೆ ತಾನೇ ಒಂದೊಂದು ರೀತಿಯ ಗಾಸಿಪ್ ಹಬ್ಬಿಸಿಕೊಳ್ಳುತ್ತಿದ್ದ. ಪೋಲಿಸರನ್ನೇ ಕೊಂದಿರುವನೆಂದೋ ಹೀಗೆ ಒಂದಲ್ಲಾ ಒಂದು ಮುದ್ರಿಸಿದ ಪತ್ರಿಕೆಯ ಪ್ರತಿಯೊಂದುಸಂಚಿಕೆಯೂ ಜನರ ಜೇಬಿನೊಳಗೆ ಆಶ್ರಯ ಪಡೆಯುತ್ತಿದ್ದವು. ಸಮಾಜದ ಭಯ ಮತ್ತು ಕೀಳಭಿರುಚಿಯನ್ನೇ ಬಂಡವಾಳವಾಗಿಟ್ಟುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡ. ಳು ಸಾವಿರ ರೂಪಾಯಿ ಬೆಲೆ ಬಾಳುವ ಕೂಲಿಂ ಗ್ಲಾಸ್ ಧರಿಸಿಕೊಂಡೇ ಶೌಚ ಇತಾದಿ ಕೆಲಸ್ ಕಾರ್ಯ ಪೂರೈಸುತ್ತಿದ್ದ. ಅಂಬಾಸಾಡರ್ ಕಾರು ಖರೀದಿಸಿದ್ದ. ನಾಕು ಮಂದಿ ಕಣ್ಣಿಗೆ ಹುಳ್ಳಗೆ ಬೆಳ್ಳಗೆ ಕಾಣುತ್ತಿದ್ದ.. ಅನಸೂಯಾ, ರಘು, ಶಾಮನನ್ನು ಕೇಂದ್ರವಾಗಿರಿಸಿಕೊಂಡು ರೋಮಾಂಟಿಕ್ಕಗಿರೋ ಕಾದಂಬರಿ ಬರೆದುಕೊಡು ಎಂದೂ, ಕೈತುಂಬ ಸಂಭಾವನೆ ಕೊಡುವೆನೆಂದೂ ನನಗೆ ಪುಸಲಾಯಿಸುತ್ತಿದ್ದ. ಅಂಬರೀಷ್, ಲಕ್ಷ್ಮೀ, ವಿಷ್ಣುವರ್ಧನ್ ಹಾಕ್ಕೊಂಡು ತಾನೇ ಸಿನಿಮಾ ಮಾಡುವುದಾಗಿಯೂ ಆಸೆ ತೋರಿಸುತ್ತಿದ್ದ. ನಾನೀ ವಸ್ತುವನು ಇಟ್ಟುಕೊಂಡು ಕಾದಂಬರಿ ಬರೆಯುವ ಪ್ರಯತ್ನ ಮಾಡಿದ್ದುಂಟು. ಆದರೆ ಕೈ ನನಗರಿವಿಲ್ಲದಂತೆ ಕಮಲಾಕರನ ಬಗ್ಗೆ ಬರೆಯಲು ಮುನ್ನುಗ್ಗುತ್ತಿತ್ತು. ಗಣೇಶನನ್ನು ಮಾಡಲು ಹೋಗಿ ಅವರ್ಪ್ಪನನ್ನು ಮಾಡಿದರೆ ಎಂಬ ಫಜೀತಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾಅರಂಟಿ ಅಂತ ನಾನು ಬರೆದ ಹಾಳೆಗಳನ್ನು ಚೂರು ಚೂರು ಮಾಡಿ ನಮ್ಮ ಓಣಿಯ ಇಥಿಹಾಸ ಪ್ರಸಿದ್ಧ ಬಸವನ ಬಾವಿಯಲ್ಲಿ ಹಾಕಿ ನಿರಮ್ಮಳವಾಗಿದ್ದು ಬಿಟ್ಟೆ. ಶಾಮ ತನ್ನ ಬಗ್ಗೆ ತಾನೆ ಬರೆಯಲೆಂಬ ಇರಾದೆ ನನಗಿತ್ತು. ಆದರೆ ಶಾಮನನ್ನು ಅವನಿಗೆ ಪರಿಚಯಿಸಲು ನಾನೆಂದೂ ಪ್ರಯಿತ್ನಿಸ್ದಿದವನಲ್ಲ. ತುರ್ತು ಪರಿಸ್ಥಿತಿ ವಿರೋಧಿ ಕವಿ ಸಮ್ಮೇಳನದಲ್ಲಿ ಶ್ರೀಶ್ರೀಯವರ ಕವಿತೆಯೊಂದನ್ನು ಅನುವಾದಿಸಿ ಓದಲಿಕೆಂದು ಬಂದಿದ್ದ ಕಮಲಾಕರ ಪುಣ್ಯಕ್ಕೆ ಶಾಮನ ಪಕ್ಕದಲ್ಲಿ ಕೂತಿದ್ದ. ಬೆಕ್ಕಿನ ಮಗ್ಗುಲು ಕೂತ ಇಲಿಯಂತೆ ಜಾಗ ಬದಲಾಯಿಸಲು ಶಾಮ ಪ್ರಯತ್ನಿಸುತ್ತಿರುವುದನ್ನು ನೂರಕ್ಕೆ ನೂರರಷ್ಟು ರಾಜಕಾರಣಿಯಾಗಿದ್ದ ಗೊಬ್ಬರದಂಗಡಿ ಜಲಜಾಕ್ಷಿ ಗಮನಿಸುತ್ತ ನನ್ನ ಕಿವಿಯಲ್ಲಿ ಪಿಸಿಪಿಸಿ ಗುನುಗಿ ಕಿಸಕ್ಕನೆ ನಕ್ಕಳು. ನಾನು ಜಲಜಾಕ್ಷಿಯೊಡನೆ ಸೇರಿಕೊಂಡು ತನ್ನ ವಿರುದ್ಧ ಮಸಲತ್ತು ಮಾಡುತ್ತಿರುವನೆಂದು ಅನಗತ್ಯ ಅರ್ಥಮಾಡಿಕೊಂಡು ಶಾಮ ಕವಿತೆ ಇದ್ದ ಹಾಳೆಯನ್ನು ತಿರುಗುಮುರುಗಾಗಿ ಹಿಡಿದುಕೊಂಡಿದ. ಕವಿತೆ ಸಾದರ ಪಡಿಸುವಾಗಲೂ ಹಾಳೆಯಲ್ಲಿ ತಲೆಕೆಳಗಾಗಿರುವ ಅಕ್ಷರಗಳಿಗೆ ತಾನೆ ಬೆರಗಾದನೆ ಹೊರತು ಸರಿಪಡಿಸಿಕೊಳ್ಳುವ ಸಾಮಾನ್ಯ ಜ್ಞಾನ ಅವನಿಗೆ ಹೊಳೆಯಲಿಲ್ಲ. ಅವನು ಆ ಒದ್ದಾಟದಲ್ಲಿರುವಾಗಲೇ ತಲೆಯಿಂದ ಮೂಡಿದ ಬೆವರು ಅಕ್ಷರಗಳ ಮೇಲೆ ಬಿದ್ದು ಅಸ್ಪಷ್ಟತೆಯನ್ನು ದ್ವಿಗುಣಗೊಳಿಸಿದವು. ಇದರಿಂದ ಕಾವ್ಯ ರಸಿಕರು ರೋಸಿ ಹೋ ಹೋ ಅಂದರು. ಸಿಳ್ಳೆ ಕೇಕೆ ಹಾಕಿದರು. ಜೇಬಲ್ಲಿದ್ದ ಕರವಸ್ತ್ರ ತೆಗೆದು ಬೆವರೊರೆಸಿಕೊಳ್ಳುವ ನೆಪದಲ್ಲಿ ಗಲಭೆ ಪೀಡಿತ ಮುಖ ಮರೆಮಾಚಿಕೊಳ್ಳಬೇಕೆಂಬ ಸಾಮಾನ್ಯ ಜ್ಞಾನದಿಂದ ವಂಚಿತನಾಗಿ ಮತ್ತೆ ಇಲಿಯಂತೆ ಮುದುಡಿ ಕಮಲಾಕರನ ಮಗ್ಗುಲು ಕುಳಿತುಕೊಂಡ. ತನ್ನೊಳಗಿನ ಸಾಹಿತ್ಯ ಸೃಜನಶೀಲತೆಯನ್ನು ನಿರ್ನಾಮ ಮಾಡುವ ಮಸಲತ್ತು ಗುಟ್ಟಾಅಗಿ ನಡೆದಿರುವುದೆಂದೂ; ನಾನೇ ಆ ಮಸಲತ್ತಿನ ನೇತೃತ್ವ ವಹಿಸಿರುವುದಾಗಿಯೂ ಅನುಮಾನಿಸಿದ. ಇದನ್ನು ಪೂರ್ವಭಾವಿಯಾಗಿ ಅರ್ಥಮಾಡಿಕೊಂಡು ನಾನಲ್ಲಿಗೆ ಎದ್ದುಹೋದೆ. ನನ್ನೊಂದಿಗೆ ಗರಿಗರಿ ಖಾದಿ ಸೀರೆ ಉಟ್ಟಿದ್ದ ಜಲಜಾಕ್ಷಿಯೂ ಎದ್ದುಬಂದಳು. ಕಮಲಾಕರನ ಮಾತಿಗೆ ಕಟ್ಟುಬಿದ್ದು ಕವಿ ಸಮ್ಮೇಳನವನ್ನು ಅದರ ಪಾಡಿಗೆ ಅದನ್ನು ಬಿಟ್ಟು ನಾವು ನಾಲ್ಕು ಮಂದಿ ಒಂದೆರಡು ಗುಟುಕು ಚಹ ಕುಡಿದು ನಮ್ಮ ನಮ್ಮ ತನುವ ಸಂತೈಸಿಕೊಳ್ಳಲೆಂದು ನಾಗಣ್ಣನ ‘ಈರಸೈವ ತೀ ಕಾಫಿ ಕ್ಲಬ್ಬಿ’ಗೆ ಹೋದೆವು. ಕ್ರಾಂತಿಯ ಆತ್ಮ ಕಾವ್ಯವೆಂದೋ, ಕಾವ್ಯದ ಆತ್ಮ ಕ್ರಾಂತಿಯೆಂದೋ ಕಮಲಾಕರನೂ; ಕಾವ್ಯದ ಸೂಕ್ಷ್ಮ ಶರೀರದೊಳಗೆ ರಾಕ್ಷಾಕಾರದ ಕ್ರಾಂತಿಯನ್ನು ತುರುಕಿ ಕಾವ್ಯವನ್ನು ಕುರೂಪ ಗೊಳಿಸಿರುವುದು ಸಲ್ಲದೆಂದು ವಾದಮಾಡತೊಡಗಿದೆವು. ಕವ್ಯದ ಎರಡು ನಮೂನೆಗಳು ತಾವೇ ಎಂಬಂತೆ ಜಲಜಾಕ್ಷಿ ಮತ್ತು ಶಾಮ ಮಿಕಿ ಮಿಕಿ ನೋಡುತ್ತಿದ್ದರು.ಟೇಬಲ್ ಕೆಳಗೆ ಒಂದು ಕಾಲಿನಿಂದ ಶಾಮನನ್ನೂ; ಇನ್ನೊಂದು ಕಾಲಿನಿಂದ ಕಮಲಾಕರನನ್ನೂ ತುರಿಸಿ ಸುಪ್ತ ಬಯಕೆಗಳನ್ನು ಉದ್ದೀಪಿಸುವ ತುಂಟ ಪ್ರಯತ್ನದಲ್ಲಿದ್ದ ಜಲಜಾಕ್ಷಿ ಮಮ್ಮಟ, ಆನಂದವರ್ಧನ, ಕುಂತಕರೇ ಸ್ತ್ರೀ ವೇಶ ದರಿಸಿರುವಂತೆ, ಲೌಕಿಕ ಮಹಾಕವ್ಯವೇ ಸ್ತ್ರೀ ರೂಪ ಧರಿಸಿರುವಂತೆ; ಅಪುರ್ವ ತೇಜಸ್ಸಿನಿಂದ ಗೋಚರಿಸುತ್ತಿದ್ದಳು. ಪಾದ ಸ್ಪರ್ಶದಿಂದ ಉತ್ತೇಜಿತನಾದ ಸಂಪಾದಕ ಆಕೆಯ ಮಗ್ಗುಲು ಬಂದು ಕೂತ. ನಾನು ಮಾಡೋ ಕೇಟಿ ಮುಂದೆ ಕವಿತೆ ಏನು ಮಹಾ ಎಂಬ ಅಹಂಕಾರದಿಂದ ನಾಗಣ್ಣ ಮಾತಾಡುತ್ತಿದ್ದ. ಹೀಗಾಗಿ ವಾತಾವರಣ ಗೋಜಲಾಯಿತು. ಪೋಲೀಸರೇ ನಾಗಣ್ಣನ ರೂಪದಲ್ಲಿರುವರೇನೋ ಎಂಬ ಅನುಮಾನದಿಂದಾಗಿ ಚಹದಂಗಡಿ ಮಾಲಿಕನ ಮಾತನ್ನು ಸಾರಾ ಸಗಟು ತಿರಸ್ಕರಿಸುವುದು ಸಧ್ಯವಿರಲಿಲ್ಲ. ಹೀಗಾಗಿ ಎದ್ದು ಬಂದೆವು. ಸಂಪಾದಕ ಮಿತ್ರ ಶಾಮನನ್ನು ತಮ್ಮ ಪತ್ರಿಕೆಗೆ ಏನಾದರೂ ಬರೆದುಕೊಡುವಂತೆ ಕೇಳಿಕೊಂಡ. ಬೆವರಿನಿಂದ ಒದ್ದೆಯಾದ ಕವಿತೆಯನ್ನು ಪರಿಷ್ಕರಿಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಇಸಿದುಕೊಂಡ. ಕಮಲಾಕರನೂ; ಜಲಜಾಕ್ಷಿಯೂ ಕಥೆ, ಕಾದಂಬರಿಗಳಂತೆ ಅತ್ತ ಹೊರಟರೆ ತಾನೂ ಶಾಮನೂಎರಡು ದುರ್ಬಲ ಕವಿತೆಗಳಂತೆ ಇತ್ತ ಹೊರೆತೆವು. ದಾರಿ ಉದ್ದಕ್ಕೂ ಅವನು ಮಂಕಾಗಿದ್ದ. ಆ ಮಂಕನ್ನು ಭೇದಿಸುವ ಪ್ರಯತ್ನದಲ್ಲಿ ನಾನು ಏನೇನೋ ಮಾತಾಡುತ್ತಿದ್ದೆ. ಬಹಳ ಹೊಟ್ಟಿನ ತನಕ ಮೌನವಾಗಿದ್ದ. ಅವನು ಇದ್ದಕ್ಕಿದ್ದಂತೆ ಕಮಲಾಕರನಿಗೂ , ಜಲಜಾಕ್ಷಿಗೂ ನಡುವೆ ಅನೈತಿಕ ಸಂಬಂಧ ಇರುವುದಂತೆ ನಿಜವಾ ಎಂಬೊಂದು ಅದ್ಬುತ ವಾಕ್ಯ ಉದುರಿಸಿದ. ಶಾಕ್ ಆದರೂ ನಾನದನ್ನು ತೋರಗೊಡಲಿಲ್ಲ. ಆದ್ದರಿಂದ ನನಗೆ ಆಶ್ಚರ್ಯವ್ವಗಲೀ; ಬೇಸರವಾಗಲೀ ಆಗಲಿಲ್ಲ. ನಾನು ಮೌನವಹಿಸಿದೆ. ಅವನು ಗ್ರಾಮಫೊನ್ ರಿಕಾರ್ಡಿನಂತೆ ಕಾನೂನು ಬಾಹಿರ ಲೈಂಗಿಕ ಚಟುವಟಿಕೆಗಳಿಂದ ಸಮಾಜ ಹಾಳಾಗುತ್ತಿರುವ ಬಗ್ಗೆ ಮಾತಾಡತೊಡಗಿದ. ಕನಿಷ್ಟ ನನ್ನಿಂದ ಆತ ಹ್ಹಾಂ … ಹ್ಹೂ… ಬಯಸಿದ್ದ. ನಾನು ಗೊಂಬೆಯಂತೆ ನಡೆದೆ. +ವಾರೊಪ್ಪತ್ತಿನಲ್ಲಿ ‘ಕಮಲಾಕರ ಖಡ್ಗ’ ಪತ್ರಿಕೆಯಲ್ಲಿ ಶಾಮನ ‘ಊಸರವಳ್ಳಿ’ ಎಂಬೊಂದು ಕಥೆ ಪ್ರಕಟವಾಯಿತು. ಊರಿನ ಪ್ರತಿಯೊಬ್ಬ ಗಣ್ಯ ವ್ಯಕ್ತಿ ಇದು ತನ್ನ ಕುರಿತು ಬರೆದದ್ದೆ ಎಂದು ಆರೋಪಿಸಿಕೊಳ್ಳತೊಡಗಿದ. ನಂತರವೇ ನಾನದನ್ನು ಗಮನಿಸಿದ್ದು. ಒಂದೇ ಉಸುರಿಗೆಓದಿಸಿಕೊಂಡಿತು. ಸೀತಾರಾಮನ ಪಾತ್ರದಲ್ಲಿ ನಾನಿದ್ದೇನೆ ಅಂತ ಒಂದು ಕ್ಷಣ ಅನ್ನಿಸಿಬಿಟ್ಟಿತು. ಎಷ್ಟೊಂದು ಒಳ್ಳೆಕಥೆ ಬರೆಯಲು ಸಾಧ್ಯವಾಗಿದೆ ಈ ಕುಂಬಾರ ಹುಳು ಮನಸ್ಸಿನ ಶಾಮನಿಗೆ ಅಂತ ಅಂದುಕೊಂಡೆ. ಕವಿಗೆ ಕವಿ ಮುನಿವಂ ಅನ್ನುವಂತೆ ಅವನ ಬಗ್ಗೆ ಹೊಟ್ಟೆ ಎಂಬ ಹುಲ್ಲುಮೆದೆಯೊಳಗೆ ಈರ್ಷೆ ಒಂಬ ಬೆಂಕಿಯ ಚೂರು ಕಾಣಿಸಿಕೊಂಡಿತು. ನನ್ನ ಬಗ್ಗೆ ನನಗೇ ಅಸಹ್ಯ ವಾಯಿತು. ಪೊಡೆಯೊಳ್ ಪಂಕ ತುಂಬಿಟ್ಟು ಕೊಂಡು ಅವನ ಬಳಿಗೆ ಹೋಗುವುದು ಅಭಿನಂದಿಸುವ ನಾಟಕವಾಡುವುದು ಸರಿ ಕಾಣಲಿಲ್ಲ. ಅವನು ಅಪರೂಪಕ್ಕೆ ಬರೆದಿರುವ ಒಳ್ಳೆಯ ಕಥೆ, ಸೃಜನಶೀಲತೆಗೆ ಪ್ರೇರಣೆ ನೀಡುವುದೇ ಅದರ ದೊಡ್ಡ ಗುಣ. ನಾನೂ ಒಂದು ಕಥೆ ಬರೆಯಬೇಂದುಕೊಂಡೆ. ಇಂಥ ಪತ್ರಿಕೆಯಲ್ಲಿ ಇಂಥದೊಂದು ಕಥೆ ಬಂದಿದೆ ಗಮನಿಸಿ, ಚರ್ಚಿಸಿಅಂತ ಅನೇಕ ಬರಹಗಾರ ಮಿತ್ರರಿಗೆ ಪತ್ರ ಬರೆದೆ. ದೊಡ್ಡ ಮನಸ್ಸಿನ ಕೆಲವರು ಓದಿ ಅವನಿಗೂ; ನನಗೂ ಪತ್ರ ಬರೆದರು. ಅಂಥ ಕೆಲವು ಪ್ರಶಂಸಾ ಪತ್ರಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದ. ನಾನು ಅಭಿನಂದಿಸಿದೆ. ಇದು ಅವರ ಬಗ್ಗೆ ಇರಬೌದಾ? ಇವರ ಬಗ್ಗೆ ಇರಾಬೌದಾ? ಅಂತ ಕೇಳಿದೆ ಚಪಲಚಿತ್ತನಾಗಿ. ಜ್‌ಆಡರ ಗೋವಿಂದ, ಸಣ್ರುದ್ರ, ಮಾಜಿ ಛೇರ್ಮನ್ನು ವೆಮ್ಕಟೇಶ ಇಂಥ ಕೆಲವರು ಅಟ್ಯಾಕ್ ಮಾಡಲು ಪ್ರಯತ್ನಿಸಿದರೆಂದೂ; ಲೌಕಿಕ ಕಥೆ ಬರೆದುದಕ್ಕೆ ಮತ್ತು ಮುಂದೊಮ್ದು ದಿನ ತನ್ನ ಬಗ್ಗೇಗೆ ಬರೆದುಬಿಡಬಹುದೆಂದೂ ತಾತನವರು ಬೇಸರ ಮಾಡೊಕೊಂಡಿರುವರೆಂದೂ ವಿವರಿಸಿದ. ಯಾವುದೇ ಒಂದು ಒಳ್ಳೆಯ ಕಥೆಯ ಯಶಸ್ಸು ಇದೇ ಎಂದು ಮತ್ತೆ ಅಭಿನಂದಿಸಿದೆ. ಕಮಲಾಕರನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಕಥೆಯೇ ‘ಊಸರವಳ್ಳಿ’ ಎಂದು ಶಾಮ ನನ್ನ ಕಿವಿಯಲ್ಲಿ ಪಿಸುಗುಟ್ತಿದ. ಓದಿದ ಕಥೆ ಮತ್ತೊಂದು ಕಣ್ಣೊಳಗೆ ಬಿಚ್ಚಿಕೊಂಡಿತು. ಅವನು ಹೇಳಿದ್ದು ಸರಿ ಅನ್ನಿಸಿತು. ಕಮಲಾಕರ ಮತ್ತು ಜಲಜಾಕ್ಷಿಯ ನಡುವೆ ಅನೈತಿಕ ಸಮ್ಬಂಧ ಇರುವುದೆಂಬ ಕಲ್ಪನೆಯೇ ಒಂದು ಕಥೆಯನ್ನು ಹುಟ್ಟು ಹಾಕಿತ್ತು. ತಾನು ಯಾರ ಬಗ್ಗೆ ಬರೆದಿರುವೆನೋ ಅವನೇ ತನ್ನ ಪತ್ರಿಕೆಯಲ್ಲಿ ಪ್ರಕತಿಸಿ ನೂರೈವತ್ತು ರುಪಾಯಿ ಸಂಭಾವನೆ ಕಳುಹಿಸುರುವನೆಂದಮೇಲೆ ಇದು ಶಾಮನ ದೊಡ್ಡ ಸಾಧನೆಯೇ ಸರಿ ಅಂದುಕೊಂದೆ. ನಂತರ ಗೊತ್ತಾಯಿತು. ಬೇರೆ ಬೇರೆ ಉಪನಾಮಗಳನ್ನಿಟ್ಟುಕೊಂಡು ನಾಡಿನ ಹತ್ತಾರು ಲೈಂಗಿಕ ಕಾಮ ಪ್ರಚೋದಕ ಮಾಸ ಪತ್ರಿಗೆಗಳಿಗೆ ಲೇಖನಗಳನ್ನು ಅವನು ಬರೆಯುತ್ತಿದ್ದುದು. ಕೆಲವನ್ನು ಓದಿದೆ. ನಿಸ್ಸಂದೇಹವಾಗಿ ಕಾಮ ಪ್ರಚೋದಿಸುವಂತಿದ್ದವು. ನನಗೆ ತಿಳಿದಮಟ್ಟಿಗೆ ಅವನು ಒಮ್ಮೆ ಕೂಡ ಸಂಭೋಗ ಮಾಡಿದವನಲ್ಲ. ಬೆಳಕಿನಲ್ಲಿ ತನ್ನ್ ಶಿಶ್ನವನ್ನು ತಾನು ನೋಡಿ ಆನಂದಿಸುತ್ತ ಮುಷ್ಟಿಮೈಥುನ ಮಾಡಿಕೊಂಡವನಲ್ಲ. ಅಂಥವನು ಕಾಮದ ಬಗ್ಗೆ ಇಷ್ಟೊಂದು ಕರಾರುವಾಕ್ಕಾಗಿ ಆಲೋಚಿಸಿ ಬರೆಯುವುದೆಂದರೇನು? ಯವುದರ ಬಗ್ಗೆ ತನಗೆ ಗೊತ್ತಿಲ್ಲವೋ? ದೌರ್ಬಲ್ಯವಿರುವುದೋ? ಪೂರ್ವಾಗ್ರಹ ಭಾವನೆ ಇರುವುದೋ? ಅದನ್ನು ಮರೆಮಾಚಲೋಸುಗ ಮನುಷ್ಯ ಪ್ರಪಂಚಕ್ಕೆ ಪೋಜು ಕೊಡುತ್ತಿರುವನೆಂಬ ಅನುಮಾನ ಬಂತು. ಅವನು ಅಶ್ಲೀಲವನ್ನು ವೈಭವೀಕರಿಸಿ ಬರೆಯುತ್ತಿದ್ದಾಗ ತನ್ನನ್ನೂ; ತನ್ನ ಹೆಸರನ್ನೂ ಮರೆಮಾಚುತ್ತಿದ್ದಾನೆಂದು ತದನಂತರ ಗ್ರಹಿಸಿದೆ. ಸಂಭೋಗದ ಸುಖ ಅನುಭವಿಸಿದನೆಂದರೆ ನಿರಮ್ಮಳವಾಗಿರುತ್ತಾನೆಂದುಕೊಂಡೆ. ಜುಟ್ಟು ಜನಿವಾರವನ್ನು ಅದುಮಿಡುವ ರೀತಿಯಲ್ಲಿ ಅದೂ ಆಗಿತ್ತು. ಹೇಗಾದರೂ ಮಾಡಿ ಅವನನ್ನು ಸಂಭೋಗಕ್ಕೆ ತೊಡಗಿಸಬೇಕೆಂದು ನಿರ್ಧರಿಸಿದ ಮರುದಿನವೇ ಪೋಸ್ಟ್‌ಮ್ಯಾನ್ ತನಾ ಲಟುಕಾಪುಟುಕಾ ಸೈಕಲ್ ಮೇಲೆ ಏದುಸಿರು ಬಿಡುತ್ತ ಬಂದ. ಯಾವುದಾರೊಂದು ಪತ್ರಿಕೆಯವರು ನನ್ಗೆ ಕಥೆ ಕೇಳಿದ್ಯಾರೇನಂತ “ಏನ್ರಾಮಣ್ಣ? ಯಾವಾರ ಲೆಟರ್ಸು, ಅದಾವಂತ” ಕೇಳಿದೆ. ಕೂಡಲೆ ಚಂದಾ ಸಂದಾಯ ಮಾಡತಕ್ಕದ್ದು. ಈ ನೋಟೀಸು ಮುಟ್ಟಿದ ಹದಿನೈದು ದಿನಗಳೊಳಗಾಗಿ ನಿಮ್ಮಿಂದ ಚಂದಾಹಣವಾಗಲೀ; ಬಿಟ್ಟಿಯಾಗಿ ಪತ್ರಿಕೆ ಓದುತ್ತಿರುವುದರ ಬಗ್ಗೆ ಹೇಳಿಕೆ ಓಳಗೊಂಡ ಪತ್ರವಾಗಲೀ ಬಾರದಿದ್ದ ಪಕ್ಷದಲ್ಲಿ ನೀವು ಈ ಭೂಮಿಮೇಲಿಲ್ಲವೆಂದು ಪತ್ರಿಕೆಯ ಆಡಳಿತ ವರ್ಗ ಭಾವಿಸಿ ಪತ್ರಿಕೆ ಕಳುಹಿಸುವುದನ್ನು ನಿಲ್ಲಿಸಲಾಗುವುದೆಂದು ಒಕ್ಕಣಿಕೆ ಇದ್ದ ಚಂದಾದಾರರ ಪತ್ರವನ್ನು ಅವನ ಕೈಗಿತ್ತ. ಅದರಲ್ಲಿರುವ ಒಕ್ಕಣಿಕೆಯನ್ನು ಓದಿರದ ರಾಮಣ್ಣನ ಕಡೆ ಕೃತಜ್ಞತಾಪೂರ್ವಕವಾಗಿ ನೋಡುತ್ತಿರಲು ಅವನು “ಎಲ್ಲಿ ಸಾರ್ ನಿಂ ಫ್ರೆಂಡು ಕವಿಗಳು ಕಾಣಿಸ್ತಿಲ್ಲ …” ಅಂತ ಕೇಳಿದ. ಆಗಲೇ ಮನೆಗೆ ಹೋಗಿ ಬಂದಿರಬಹುದಾಗಿದ್ದ ಅವನನ್ನು “ಯಾಕಪ್ಪಾ ಏನ್ಸಮಾಚಾರ” ಎಂದು ಕೇಳಿದೆ. ಅರ್ಧ ಕೇಟಿ ಕುಡಿಸಿದರೆ ಯಾರ ಪತ್ರವನ್ನಾದರೂ ಯಾರಿಗಾದರೂ ಕೊಡುವ ಸ್ವಭಾವದ ಅವನು ಸದರೀ ಗ್ರಮದಲ್ಲಿ ಗುಟ್ಟಗಿ ನಡೆಯುತ್ತಿದ್ದ ಅನೇಕ ಪ್ರೇಮ ಪ್ರಕರಣಗಳನ್ನು ಬಟಾಬಯಲು ಮಾಡಿದ್ದ. ಹೀಗಾಗಿ ಯಾವ ಪ್ರೇಮಿಯೂ ತಲೆಎತ್ತಿ ನಿಸೂರಗಿ ಅಡ್ಡಾಡುವುದು ಅಸಾಧ್ಯವಾಗಿತ್ತು. ಅಂಥ ಅವನು ಪಂಚರಂಗೀ ಲಕೋಟೆಯನ್ನು ತನ್ನ ಬತ್ತಳಿಕೆಯಿಂದ ಝಳಪಿಸಿದ. ಅವನಿಗೆ ಯಾರೂ ಪ್ರೆಮಪತ್ರ ಬರೆಯಲಾರರು ಎಂಬ ಖಾತ್ರಿಯಿಂದಲೂ; ಅದು ಸರ್ಕಾರಿ ದಫ್ತರೊಳಗಿಂದ ಎದ್ದು ಬಂದಂತಿರುವುದೆಂಬ ನಂಬಿಕೆಯಿಂದ ನಾನೇ ಪಡೆದುಕೊಂಡೆ. ಬಾಲ ವಿಧವೆಯೂ, ಸಕೇಶಿಯಾದ, ಶಿಕ್ಷಕಿಯೂ ಆದ ರಮಾಬಾಯಿಗೆ ಬಂದಂಥ ಪ್ರೇಮಪತ್ರವನ್ನು ಅದನ್ನು ಬರೆದವನ ಹೆಂದತಿಯೂ; ಆರು ಮಕ್ಕಳ ತಾಯಿಯೂ ಆದಫ ದಕ್ಷಾಣಮ್ಮನಿಗೆ ಕೊಟ್ಟು ಗಂಡ ಹೆಂದಿರೆ ಶೋಭನದ ಮಂಚವನ್ನು ಇಬ್ಬಾಗ ಮಾಡಿ ಈಗ ಒದೆಯಿಸಕೊಳ್ಳಬಹುದು. ಆಗ ಒದೆಯಿಸಿಕೊಳ್ಳಬಹುದೆಂಬ ಚಿಂತೆಯಿಂದಲ್ಲೇ ಪ್ರತಿಕ್ಷಣಗಳನ್ನು ದೂಡುತ್ತಿದ್ದ ರಾಮಣ್ಣ, “ಕಟ್ಟೇಮನಿ ಕೊತ್ರೇಶಿಗೊಂದೀಟು ಬುದ್ಧಿ ಹೇಳ್ರಿ … ” ಎಂದು ಪ್ರತಿಯಾಗಿ ಹೇಳಿದನು. “ನನ್ನೆಂಡ್ತೀನ ನನ್ನಿಂದ ದೂರ ಮಾಡಿರೋ ರಾಮಣ್ಣೀ ಊರಾಗಿರ್ಬೇಕೊಂದು, ಇಲ್ಲಾ ನಾವಿರ್ಬೇಕೊಂದು” ಎಂದು ಪ್ರತಿಜ್ಞೆ ಮಾಡುವ ಪೂರ್ವದಲ್ಲಿ ಮಧ್ಯ ವಯಸ್ಕ ಕೊಟ್ರೇಶಿ ತನ್ನ ಶ್ವೇತವರ್ಣದ ಮೀಸೆ ತಿರುವಿದ್ದ ನನ್ನೆದುರಿಗೆ. “ಯಾರು ಯಾರಿಗಾದ್ರೂ ಲವ್ ಲೆಟ್ಟ್ರು ಬರ್‍ಕೊಳ್ಳಿ? … ಈ ರಾಮಣ್ಣ ಯಾಕ ಇಉದ್ರಾಗ ತಲೆತೂರಿಸೋದು” ಅಂತ ಊರ ಮಂದಿ ಕನಿಷ್ಟ ಮಟ್ಟದ ಅನುಕಂಪ ವ್ಯಕ್ತಪಡಿಸದಿದ್ದಾಗಲೇ ರಾಮಣ್ಣ ನನಗೀ ಮಾತು ಹೇಳಿದ್ದು. “ಎಂಥೆಂಥ ಲವ್ ಲೆಟ್ಟ್ರು ಬರ್ತಾವಂತೀರಿ? … ಒಂದೊಂದು ಲೆಟ್ಟ್ರೋದಿ ಒಂದೊಂದ್ಕಥಿ ಬರೆದು ಬಿಡ್ತೀರಿ ನೋಡ್ರಿ … ಬೇಕಂದ್ರೆ ತಂದು ತೋರಿಸ್ತೀನಿ” ಎಮ್ದು ಹೇಳಲು ನಾಚಿಕೆ ಪಟ್ಟಿರದ ರಾಮಣ್ಣಗೆ ಧೈರ್ಯ ಃಏಳಿಕಳುಹಿಸಿದೆ. +ಶಾಸ್ತ್ರಿಗಳ ಒತ್ತಾಯಕ್ಕೆ ಪ್ರಾಣಾಯಾಮ ಕಲಿಯಲು ಎರಡು ದಿನಗಳ ಹಿಂದೆಯೇ ಹತ್ತಿರದ ವೆಂಕಟಾಪುರಕ್ಕೆ ಹೋಗಿದ್ದ ಶಾಮ ಇವತ್ತು ಸಂಜೆಯ ಹೊತ್ತಿಗೆ ಬರಬಹುದೆಂದು ಅಲುಮೇಲಮ್ಮ ನವರು ಆರು ಮೊಳ ದೂರದಿಂದಲೆ ಹೇಳುತ್ತಲೆ ವಾಪಸಾದೆ. ಮಹಿಳಾ ಸಂಘಟನೆ ಪುರುಷ ಚೈತನ್ಯದ ಸಹಕಾರವಿಲ್ಲದಿದ್ದರೆ ದುರ್ಬಲವಾಗುತ್ತದೆ ಎಂದು ಧೃಡವಾಗಿ ನಂಬಿದ್ದ ಜಲಜಾಕ್ಷಿ ತಾಲೂಕು ಮಟ್ಟದ ಕಾರ್ಯಕ್ರಮವೋಂದರಲ್ಲಿ ಬೋರ್ಡ್‌ಮೆಂಬರಾಗಿ ಭಾಗವಹಿಸಿ ಅದೇ ತಾನೆ ಬಂದಿಳಿದಿದ್ದಳು. ತಾನು ಭಾಷಣ ಮಾಡ್ತಿರೋ ಫೋಟೋ ಕೊಡಲಿಕ್ಕೇಂತ ‘ಖಡ್ಗ’ದ ಪತ್ರಿಕೆಯ ಕಛೇರಿಗೆ ಬಂದಾಗಲೇ ಅಲ್ಲಿದ್ದ ನನ್ನನ್ನು ಭೇಟಿಯಾಗಿದ್ದು. ಪುರುಷ ಮತ್ತು ಸ್ತ್ರೀ ಚೈತನ್ಯವೊಂದರ ಎರಡು ಮುಖಗಳು ಎಂದು ವಾದಿಸುತ್ತಲೆ ನನ್ನ ಕೈಲಿದ್ದ ಲಕೋಟೆ ನೋಡಿ ‘ಹೊಸ್ದೇನೋ ಬರ್‍ಕೊಂಡು ಬಂದಂಗದೀರಿ?… ಅದೇ ನಮ್ಮಿಂದ್ರಾ ಗಂಧೀನ ಬಯ್ದು ಕವಿತಾ ಬರೆದಂಗಿದೀರಿ ಹೌದಲ್ಲೊ’ ಎಂದು ಇಸಿದುಕೊಂಡು ‘ಓಹ್ … ರಸಿಕ ರಾಜ ಶಾಮನ್ದು’ ಎಂದು ಉದ್ಗರಿಸಿದಳು. “ಹೆಣ್ಣಿನ ಮನಸ್ಸು ಅರ್ಥ ಮಾಡ್ಕೊಳ್ಳದವನು ಅದೆಂಗ ಬ್ಯಾಂಕನಲ್ಲಿ ರೊಕ್ಕ ಎಣಿಸ್ತಾನ್ರಿ” ಎಂದು ಮತ್ತೆ ಲಕೋಟೆ ತುಂಬಿಸಿದಳು. ಆಕೆಯ ಮಾತು ಒಂಚಣ ಗಲಿಬಿಲಿ ಗೊಳಿಸಿತು. ಯೋಚಿಸಿದ್ದಷ್ಟು ಅರ್ಥ ಪರಂಪರೆ ಬಿಚ್ಚಿಕೊಳ್ಳುವಷ್ಟು ಮಾತು. ಆಕೆ ಹೇಳಿದ್ದು ನಿಜ. ಹೆಣ್ಣು ತಟ್ಟಿದರೆ ತಡೆಯಲಾರದ ಬಾಗಿಲುಳ್ಳವನು, ಹೆಣ್ಣಿನ ಹೃದಯದವರೆಗೆ ಹೋಗಿ ವಾಪಸ್ಸು ಬಂದು ಬಿಡುವ ಸಂಚೋಚ ಪ್ರವೃತ್ತಿಯವನು ನಮ್ಮ ಶಾಮ … ತಮ್ಮ ಮೊಮ್ಮಗ ಅಪ್ಪಟ ಬ್ರಹ್ಮಚಾರಿ ಎಂದೇ ನಂಬಿರುವ ಶಾಸ್ತ್ರಿಗಳು ಪ್ರಕಾಂಡ ಪಂಡಿತರೇನೋ ನಿಜ. ಆದರೆ ಬ್ರಹ್ಮಚಾರಿ ಎಂಬ ಪದದ ಸುಳುಹು ಹೊಳಹುಗಳೇ ತಿಳಿದಿಲ್ಲವಲ್ಲ ಅವರಿಗೆ. ಃಡಿಚಿhmಚಿಛಿhಚಿಡಿಥಿಚಿ meಚಿಟಿs sexuಚಿಟ ಚಿbsಣiಟಿeಟಿಛಿe ಎಂದೇ ನಂಬಿರುವ ಅನೇಕರಂತೆ ಅವರೂ ಕೂಡ, ಃಡಿಚಿhmಚಿಛಿhಚಿಡಿಥಿಚಿ meಚಿಟಿs veಜಚಿ, ವೇದವನ್ನು ಕರಗತ ಮಾಡಿಕೊಂಡಿರುವವನೆಂಬುದು ಒಂದು ಅರ್ಥವಾದರೆ, ಅದರ ಇನ್ನೊಂದು ಅರ್ಥ ಆಯುರ್ವೇದದಲ್ಲಿ ಅರ್ಥಪೂರ್ಣವಾಗಿ ಹೇಲಲ್ಲಗಿದೆ.ಹೆಂಡತಿಯೊಂದಿಗೆ ಮಾತ್ರ ಆಕೆಯ ಫಲವಂತಿಕೆ ಸಮಯದಲ್ಲಿ ಸಂಭೋಗಿಸುವುದು. ಆದರೆ ಪ್ರತಿರಾರಿ ಸಂಭೋಗದ ಕನಸು ಕಾಣುತ್ತ, ಹೊಸಕಾಡುತ್ತ, ಸ್ಖಲಿಸುತ್ತ ಆನಂದಿಸು ಶಾಮ ಅದು ಹೇಗೆ ಬ್ರಹ್ಮಚಾರಿಯಾದಾನು! +ಯಾವ ನಾಯಕನನ್ನು ಆ ದೇಶದ ಯಾವ ಯಾವ ಸೆರೆಮನೆಗಳಲ್ಲಿರಿಸಿದ್ದಾರೆ ಎಂಬ ವಿವರ ಪಡೆಯಲು ಕಮಲಾಕರ ಹೋದೊಡನೆ ಜಲಜಾಕ್ಷಿ ತುಟಿ ಚಲಿಸಿದಳು, ಸಣ್ಣ ಪತ್ರಿಕೆಯ ಸಂಪಾದಕನ ಕೊಠಡಿಯಂತೆಯೇ ಗೊಂದಲದಿಂದ ತುಂಬಿರುವ ಆಕೆ ಮತ್ತು ನಾನು. +“ಅವನು ಇಂಟರ್ವ್ಯೂ ಹೇಗೆ ಫೇಸ್ ಮಾಡ್ತಾನೋ ಆ ದೇವ್ರಿಗೇ ಗೊಟ್ಟು? ಯಾರಾದ್ರು ದೃಷ್ಟಿಸಿ ನೋಡಿದ್ರೆ ಎದುರಿಸಲಾರ್ದೋನವ್ನು ಅಲ್ಲೊಂದೇ ಅಲ್ಲ … ಎಲ್ಲೂ ಸಕ್ಸಸ್ಸಾಗೋಲ್ಲ ನೋಡ್ತಿರಿ” ಎಂದಳು. +“ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಹೊರಗಡೆ ಬಂದ್ರೆ ಇದೆಲ್ಲ ಸಾಧ್ಯವಾಗುತ್ತೆ” ಎಂದೆ. +“ಈದೇಶದಲ್ಲಿ ಈ ಕಾಂಪ್ಲೆಕ್ಸಿರೋದೆ ಎರಡು ನಮೂನಿ ಮಾಂದಿಗೆ ಮಾತ್ರ. ಒಂದನೆಯದಾಗಿ ಬ್ರಹ್ಮಚಾರತ್ವದ ಸೋಗಿನಲ್ಲಿ ಮುಷ್ಟಿಮೈಥುನ ಮಾಡ್ಕೊಳ್ತಿರೋರ್ಗೆ ಎರಡನೆಯದಾಅಗಿ ಇಂಗ್ಲೀಷ್‌ನಲ್ಲಿ ಮಾತಾಡ್ಲಿಕ್ಕಾಗದವರಿಗೆ. ಇವೆರಡು ಅವನಿಗೆ ಅಪರಿಚಿತ” ಎಂದಳು. +“ಮತ್ತೆ ಅವನನ್ನು ಹೇಗೆ ಸರಿಪಡಿಸಬೌದಂತೀಯಾ?” +“ನನ್ಜೊತೆ ಅವನೊಂದ್ನಾಲ್ಕು ದಿನ ಇರ್ಲಿ ನೋಡು … ಮೈಚಳಿ ಬಿಡಿಸಿ ಕಳಿಸ್ತೀನಿ” ಎಂದು ನಕ್ಕಳು. +ಎಂಎಲ್ಲೆ ಮಸಾಲೆಯವರು ಇಂಥ ಚಾಣಾಕ್ಷೆಯನ್ನು ಕಟ್ಟಿಕೊಂದು ಅದು ಹೇಗೆ ಏಗುತ್ತಿರುವರೋ ಎಂದಿತ್ಯಾದಿ ನಮ್ಮಂಥ ಮಧ್ಯಮವರ್ಗದ ಮಂದಿ ಯೋಚಿಸುವುದು ಸುಲಭ. +ಅವನು ಹೋಮೋ ಸೆಕ್ಸುಯಲ್ಲಂಥ ಏನೋ ಹೇಳುತ್ತಿರುವಾಗ ಅಮ್ಮಾವ್ರೇ ಅಂತ ಕಾರಿನ ಚ್ಚಲಕ ಕಂಚುಕೋಟಿ ಬಂದ. ಕೂಲಿಂಗ್ ಗ್ಲಾಸ್ ಧರಿಸುತ್ತ “ನೋಡಿ … ನೀವು ಹುಶಾರಾಗಿರ್ರಿ … ನಿಮ್ಮಿಬ್ರ ಸಂಬಂಧದ ಬಗ್ಗೆ ಮಂದಿ ಏನೇನೋ ಆದ್ಕೋತಾರೆ … ಒಟ್ನಲ್ಲಿ ನೀವು ಅವನ್ನ ದಾರೀಗೆ ತರ್ತೀರೋ … ದಾರಿ ತಪ್ಪಿಸ್ತೀರೋ … ಕಾದು ನೋಡ್ತೀವಿ …” ಎಂದು ಭಾರಿ ಜಘನದ ಆಕೆ ಹೋದಳು. +ಆಕೆಗೆ ಶಾಮನಿಗೊಂದೇ ಅಲ್ಲದೆ ಮಾತಿನ ಬುತ್ತಿಯನ್ನು ನನ್ನ ಬುಡಕ್ಕೂ ಇಟ್ಟಿದ್ದಳು. ಸದಾ ಮುದುಡಿಕೊಂಡಿರುವ ಮನುಷ್ಯನನ್ನು ಹಚ್ಚಿಕೊಳ್ಳುವುದು ಬೇರೆಯವರಿಗೊಂದೇ ಅಲ್ಲ … ನನಗೂ ಇಷ್ಟವಿರಲಿಲ್ಲ … ಆದರೆ ಬೇರ್ಪಡಿಸಲಾಗದಂಥ ಕಕ್ಕುಲಾತಿ ಬೆಳೆದುಬಿಟ್ಟಿರುವುದು. ಯಾರ್ಯ್ ಏನೇ ಅನ್ನಲಿ? ಏನೇ ಅರ್ಥ ಕಲ್ಪಿಸಿಕೊಳ್ಳಲಿ? ಅವನಲ್ಲಿ ಮನೆಮಾಡಿಕೊಂಡಿರುವ ಹಿಂಜರಿಕೆ ಹೋಗಲಾಡಿಸಿದ ಕೀರ್ತಿಯ ಭಾಜನಕ್ಕೆ ನಾನು ಪಾತ್ರನಾಗಲೇಬೇಕೆಂದು ನಿರ್ಧರಿಸಿದೆ. +ಕೈಯಲ್ಲಿ ಒಂದಿಷ್ಟು ಹಾಳೆ ಹಿಡಿದುಕೊಂಡು ಬಂದು “ಬರೋ ಸಂಚಿಕೆಯ ಗುಪ್ತ ಸಮಾಲೋಚನೆ ಸೆಕ್ಷನ್ನ ಸ್ವಲ್ಪ ನಿಭಾಯಿಸ್ತೀಯಾ? ಜಲಜಾಕ್ಷಿ ಇದ್ದಿದ್ರೆ ಆಕೆಗೆ ವಹಿಸಬೌದಿತ್ತು.” ಎಂದು ಶುರು ಮಾಡಿದ ಕಮಲಾಕರನಿಗೆ ಗುದ್ದುವಷ್ಟು ಸಿಟ್ಟು ಬಂತು. +ಬರುವಾಗ ಒಂಥರಾ ಇದ್ದು ಹೋಗುವಾಗ ಇನ್ನೊಂಥರಾ ಆಗಿದ್ದ ನಾನು ತಲೆ ಸಿಡಿಯುತ್ತಿರುವ ನೆಪ ಹೇಳಿ ಜಾರಿಕೊಂಡೆ. +ಜಲಜಾಕ್ಷಿ ವ್ಯಕ್ತಪಡಿಸಿದ ಸ್ವಚ್ಛ ಅಭಿಪ್ರಾಯಗಳನ್ನು ಉಗುಳಲಾರದೆ; ನುಂಗಲಾರದೆ ವಿಲವಿಲ ಒದ್ದಾಡುತ್ತಿದ್ದ ’ಸಿಂಹಮಂ ಮೊಲ ಕೊಂದ ಕಥೆ’ ಓದಲಿಕ್ಕಾಗಲಿಲ್ಲ. ಜಗತ್ತಿನ ಏಕಾಗ್ರತೆಯನ್ನು ಕದಡಲಿಕ್ಕೆಂದೇ ಹುಟ್ಟುರುವಂತಿದ್ದ ನಮ್ಮಜ್ಜಿ ಒಂದೇ ಸಮನೆ ವಟವಟ ಹಚ್ಚಿಬಿಟ್ಟಿತ್ತು. ಕಳೆದ ಮೂವತ್ತು ವರ್ಷಗಳಿಂದ ತಾನು ಜೋಪಾನ ಮಾಡಿಕೊಂಡು ಬಂದಿದ್ದ ಸೂಜಿಯನ್ನು ಆಕೆಯ ತಂಗಿ ಅಂದರೆ ನಮ್ಮ ತಾಯಿಯ ತಾಯಿ ಎದುರು ಮನೆಯ ಜಮ್ಬೂರು ನಾಗವ್ವೆಗೆ ಕೊಟ್ಟದ್ದು ಮತ್ತು ಆಕೆ ಅದನ್ನು ಮುರಿದು ಎರಡು ತುಂಡು ಮಾಡಿಕೊಟ್ಟುದ್ದುದೆಲ್ಲ ಆಕೆ ಕೆರಳುವುದಕ್ಕೆ ಕಾರಣವಾಗಿತ್ತು. ಅನೇಕಾನೇಕ ಜೀವಂತ, ನಿರ್ಜೀವಂತ ಅವಶೇಷಗಳಿಂದಲೇ ತುಂಬಿರುವ ನಮ್ಮನೆಯ ಛೀಫ್ ಕ್ಯೂರೇಟರ್ ನಿಂಗವ್ವಜ್ಜಿಯನ್ನು ನಮ್ಮ ದೊಡ್ಡವ್ವ ಪುರಾತನ ಸೀರಣಿಗೆ ವಿಚಾರ ಪ್ರಸ್ತಾಪಿಸಿ ಮತ್ತಷ್ಟು ಕೆರಳಿಸಿದಳು… ಮಾತಿಗೆ ಮಾತು ಬೆಳೆದು ಒಬ್ಬೊಬ್ಬರು ಒಂದೊಂದು ಮೂಲೆ ಹಿಡಿದು ಕುಳಿತುಕೊಳ್ಳಲು ಬೆಕ್ಕು ಒಲೆಯ ಬೂದಿಯನ್ನು ಮುಂಗಾಲುಗಳಿಂದ ಕೆರೆಯತೊಡಗಿತು. ವಿವಿಧ ಹಂತಗಳಲ್ಲಿ ತಲುಪಿದ್ದ ಮೂರು ಕಥೆಗಳ ಹಸ್ತಪ್ರತಿಗಳು ಹಲಗೆ ಸಂದಿಯಿಂದ ಬೀಸಿದ ಗಾಳಿಗೆ ಕೋಣೆ ತುಂಬ ಚಲ್ಲಾಪಿಲ್ಲಿಯಾದವು. ಅವುಗಳೊಳಗಿನ ಪತ್ರಗಳೆಲ್ಲ ತಮ್ಮ್ ಅಬಗ್ಗೆ ಕಥೆಗಾರ ಇಷ್ಟೊಂದು ತಿರಸ್ಕಾರ ಭಾವನೆ ಉಳ್ಳವನಾಗಿದ್ದಾನಲ್ಲ … ನಾವೇ ಇರದಿದ್ದರೆ … ಬ್‌ಏಕಾದ ಹಾಗೆ ಬಾಗದೆ ಹೊಗಿದ್ದಿದ್ದರೆ ಇವನನ್ನು ಯಾರು ಮೂಸುತ್ತಿದ್ದರು ಎಂದಾಲೋಚಿಸುತ್ತ ಎದ್ದು ಬಂದು ನನ್ನ ಸುತ್ತ ಮಂಡಿಯೂರಿ ಕೂತು ಹಿಡಿ ಹಿಡಿ ಶಾಪ ಹಾಕುತ್ತಿರುವಂತೆ ಭಾಸವಾಯಿತು. ಕೂಡಲೆ ಆ ಕಥೆಯೊಳಗೆ ಈ ಕಥೆ ಸೇರಿಸಿ ಈ ಕಥೆ ಕಥೆಯೊಳಗೆ ಆ ಕಥೆ ಸೇರಿಸಿಟ್ಟು ಅದರ ಮೇಲೆ ಮ್ಯಾಕ್ಡ್ವ್‌ವ್ಲು ವ್ಹಿಸ್ಕಿಯ ಪೇಪರ್ವೇಟ್ ಇರಿಸಿದೆ. ಅದೇ ಹೊತ್ತಿಗೆ ಸರಿಯಾಗಿ ಕಂಕುಳಲ್ಲಿ ‘ಯಾಜ್ಞವಲ್ಕ್ಯ ಸ್ಮೃತಿ’ಯ ಹೆಬ್ಬೊತ್ತಿಗೆ ಇರಿಸಿಕೊಂದು ಶಾಮ ‘ಇದಾನೇನಜ್ಜಿ’ ಅಂತ ಬಂದ.ಅವನೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಗೌರವ. ಮಗ ಅಂದ್ರೆ ಶಾಮನಂತಿರಬೇಕು. ಎಂದು ನನ್ನ ವಾರಿಗೆ ಹುಡುಗರಿಗೆಲ್ಲ ಹೇಳುತ್ತಿತ್ತು. ಉಳ್ಳವರು ಶಿವಾಲಯ ಮಾಡುವರೆಂಬುದು ಆ ಪ್ರಾಚೀನ ಅವಶೇಷಕ್ಕೆ ಹೇಗೆ ಗೊತ್ತಾಗಬೇಕು? ತಾತ, ಮೊಮ್ಮಗ ಮಂತ್ರಿಸಿ ಕೊಟ್ಟಿರುವ ತಾಯಿತಗಳನ್ನು ಸೊಂಟಕ್ಕೂ; ರಟ್ಟೆಗೂ ಏಕಪ್ರಕಾರವಾಗಿ ಕಟ್ಟಿಕೊಂಡಿರುವ ಮುದುಕಿ “ಬಾ ಸ್ವಾಮಿ ಬಾ …” ಅಂತ ಕರೆದು ಕರಿ ಕಂಬಳಿ ಹಾಸಿ ಕುಂಡ್ರಿಸಿ ನನ್ನನ್ನು ಕೂಗಿ ಕರೆಯಿತು. ತಗಲಿಕೊಂತುಂತ ಹೊರಬಂದು ನನ್ನ ಪ್ರಾಣ ಮಿತ್ರನನ್ನು ನಖಶಿಖಾಂತ ನೋಡಿದೆ. ಪ್ರಾಣಾಯಾಮವನ್ನು ಗಾಯತ್ರೀ ಮಂತ್ರೊಚ್ಚರಣೆ ಮೂಲಕ ಕಲಿಯಲು ಪ್ರಯತ್ನಿಸೀ ಪ್ರಯತ್ನಿಸಿ ಸೊರಗಿ ಅಂಗ ವಿಕೃತಿ ಮಾಡಿಕೊಂಡು ಬಂದಿದ್ದ. ಅಂಗಿ ಚಲ್ಲಾಣ ಸಿಕ್ಕಿಸಿಕೊಂಡು ಒಂದೊಂದು ಗಳಿಗೇಗೆ ಒಂದೊಂದು ನಮೂನಿ ವರ್ತಿಸುತ್ತಿದ್ದ. ಅವನೊಡನೆ ಅಂಗಳ ದಾಉವ ಮೊದಲು ಲಕೋಟೆಇದ್ದ ಜೇಬು ಮುಟ್ತಿಕೊಂಡೆ. “ಗಂಡಹೆಂಡ್ರಂಗೆ ಹೊಂಟ್ರಪ್ಪ ಹೊರಾಗೆ” ಅಂತ ಆಡಿಕೊಳ್ಳುತ್ತಿರುವವರಂತೆ ನಮ್ಮ ಮನೆಗಳನ್ನು ದಾಟೀ ದಾತೀ ಊರಮ್ಮನ ಬಯಲೀಚೆ ಬೀದಿಗೆ ಬಂದೆವು … ಹಂಗ ಹೋಗೋದು ಬ್ಯಾಡ … ಈ ಕಡೆಯಿಂದ ಹೋಗೋಣ ಎಮ್ದ ಶಾಮು … ಅನಸೂಯಾಳ ಮನೆ ಆ ಕಡೆ ಇದ್ದುದರಿಂದ ಹಾಗೆ ಹೇಳಿದನೆಂದುಕೊಂಡೆ. ಅದೂ ಅಲ್ಲದೆ ಆಕೆ ಗಂಡನೊಡನೆ ಬಂದು ಎರಡು ದಿನಗಳೇ ಕಳೆದಿರುವವಂತೆ. ತನ್ನನ್ನೆಲ್ಲಿ ಆಕೆಯಾಗಲೀ ಆಕೆಯ ಗಂಡನಾಗಲೀ ಮಾತಾಡಿಸಿ ಬಿಡುವರೋ ಎಂಬ ಹಿಂಜರಿಕೆಯಿಂದಾಗಿಯೇ ಅವನು ತಾತನ ಮಾತಿಗೆ ಮಣೆ ಹಾಕಿ ಪ್ರಾಣಾಯಾಮದ ತರಗತಿಗೆ ತಗುಲಿಕೊಂಡಿದ್ದಂತೆ… ತುಂಬು ತೊಡೆಯ ಗಾಯತ್ರಿ ಎಂಬ ಶ್ರೀಮಂತ ತರುಣಿಯ ವಕ್ಷಸ್ಥಳದ ಏರಿಳಿತಕ್ಕೆ ಬೆವರಿಳಿದು ಶಾಮ ಒಂದು ದಿನ ಮೊದಲೇ ಬಂದುಬಿಟ್ಟಿರುವನಂತೆ. ಅನಸೂಯಳೂ … ಆಕ್ಜೆಯ ಗಂದನೂ ಮಾತಾಡಿಸಿಕೊಂದು ಹೋಗುವುದಕ್ಕೆ ಬೃಂದಾವನದ ಬಳಿ ಕಾಣಿಸಿಕೊಳ್ಳುತ್ತಲೆ ಶಾಮ ಹಿತ್ತಿಲ ಬಾಗಿಲ ಮೂಲಕ ತಪ್ಪಿಸಿಕೊಂಡು ಬಂದುಬಿಟ್ಟಿರುವನಂತೆ… ತಪ್ಪಿಸಿಕೊಳ್ಳುವುದನ್ನೇ ಬದುಕಿನ ಪರಮ ಮೌಲ್ಯವೆಂದು ಭಾವಿಸಿರುವ ಶಾಮ ಬಜಾರ ಸಮೀಪಿಸಿದಂತೆ ಕ್ರಾಪಿನೊಳಗೆ ಜುಟ್ಟನ್ನೂ; ಅಂಗಿಯೊಳಗೆ ಜನಿವಾರವನ್ನೂ ಮರೆಮಾಚಿಕೊಂಡ. ಚಿಂಪಾಂಜಿಯನು ಚುಂಬಿಸುತ್ತಿರುವ ಬೋಡೆರೆಕ್‌ಳ ನಗನ ದೃಶ್ಯದ ಪೋಸ್ತರ್ ಕಡೆಗೆ ಕಳ್ಳನೋಟ ಬೀರಿ ಎಡವಿದ. ಮತ್ತೆ ಸಾವರಿಸಿಕೊಂಡು ನಡೆಯತೊಡಗಿದ. +ಗ್ರಾಮದ ಹತ್ತಾರು ನಾಯಿಗಳು ಹಿಂಗಾಲೆತ್ತಿ ಉಚ್ಚೆ ಹೊಯ್ದು ನೆಲ ಗೆಬರಿ ಹೋಗುವ ಜಾಗವನ್ನು ಒಂದುವರೆ ಕಿಲೋಮೀತರ್ ನಡೆದು ತಲುಪುವ ಹೊತ್ತು ನೆಟ್ಟಗಿರಲಿಲ್ಲ. ಅವರು ತಮ್ಮನ್ನು ಗಮನಿಸುತ್ತಿರಬಹುದೇ/ ಇವರು ನಮ್ಮನ್ನು ಗಮನಿಸುತ್ತಿರಬಹುದೇ? ಎಂದು ಯೋಚಿಸುವುದರ ಜೊತೆಗೆ ತಾನು ಎಲ್ಲರನ್ನು ಗಮನಿಸುತ್ತ ನನ್ನೊಂದಿಗೆ ನವ ವಧುವಿನಂತೆ ಲಜ್ಜಾಭರಣಾಲಂಕಾರ ಮಾಡಿಕೊಂಡು ನಡೆಯುತ್ತಿದ್ದ ಶಾಮ ಮಾತಾಡುವ ಶಾಸ್ತ್ರಕ್ಕೆ ಅದು ಇದು ಪ್ರಸ್ತಾಪಿಸಲು ಪ್ರಯತ್ನಿಸಿದ. ಗ್ರಾಮದ ಕಳ್ಳ ಪ್ರೇಮ ವ್ಯವಹಾರಗಳ ಬಗೆಗೋ ಅಥವಾ ಬಂಡಾಯದ ಬಗ್ಗೆ ಹೀಗೆ ಏನಾದರೊಂದು ಅವನು ಮಾತಾಡಲಿರುವುದನ್ನು ಅದಕ್ಕೂ ಮೊದಲೇ ಅವನ ಮುಖ ಹೇಳಿಬಿಡುತ್ತಿತ್ತು. ಆದ್ದರಿಂದ ಅವನ ಮಾತುಗಳಲ್ಲಿ ನನಗೆ ಆಸಕ್ತಿ ಇರದಿದ್ದರೂ ಸುಮ್ಮನೆ ಹೂಂಗುಟ್ತುತ್ತಿದ್ದೆ. ಮದುವೆ ಆಗಿರೋರೂ ಕಳ್ಳ ವ್ಯಭಿಚಾರ ಮಾಡ್ತಿದ್ರೆ ದೇಶ ಉಳಿದೀತಾ ಅಂತಂದ. “ಅದು ಅವರವರ ವೈಯಕ್ತಿಕ ವಿಷಯ … ಅದ್ರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳೋದು ಬಿಡಯ್ಯ” ಅಂತಂದುದಕ್ಕೆ ಅವನು ಮುಖವನ್ನು ಇಷ್ಟಗಲ ಮಾಡಿಕೊಂಡ. “ಹಾಗಿದ್ರೆ ನೀನು ಯಾರ್ನಾದ್ರೂ ಪ್ರೇಮಿಸಿದ್ದೀಯಾ” ಎಂದು ಪ್ರಶ್ನೆ ಹಾಕಿದ. “ಹೂಂ ಅಂತ ಇಟ್ಕೋ ಅದ್ರಲ್ಲಿ ತಪ್ಪೇನೀಗ” ಎಂದೆ ಬೇಸರದಿಂದ, ನಿಟ್ಟುಸಿರು ಬಿಟ್ಟ. ಅವನಿಗೆ ಬೇಸರವಾಯಿತೆಂದುಕೊಂಡು, “ಪ್ರೇಮ, ಕಾಮ ಇವೆಲ್ಲ ಮನುಷ್ಯರ ಸಹಜ ವ್ಯಾಪಾರಗಳು ಕಣಯ್ಯಾ … ಅದಿರ್ಲಿ … ನಿನ್ಗೆ ಗೊತ್ತು ಮಾಡಿರೋ ಹುಡುಗಿ ಮನೆಗೆ ಏನಾದ್ರೂ ಹೋಗಿದ್ಯಾ?” ಎಂದು ಕೇಳಿದೆ. ಇದ್ಯಾಕೆ ಇವನಿಗೆ ಬೇಕಿತ್ತು ಎಂಬಂತೆಯೋ; ಇಂಥ ಪ್ರಶ್ನೆಯನ್ನು ಕೇಳಲು ಯಾಕಿಷ್ಟು ತಡ ಮಾಡ್ದಿ ಎಂಬಂತೆಯೋ ಮಖ ಮಾಡಿಕೊಂಡು ನನ್ನ ಕಡೆ ನೋಡಿ ಕ್ರಮೇಣ ಪ್ರಕಾಶ ಹೆಚ್ಚಿಸಿಕೊಳ್ಳುವ ದೀಪದಂತೆ ಗೆಲುವಾದ. “ಹೋಗಿದ್ದೆ ಆದ್ರೆ ಮನೆ ಒಳಗಡೆ ಮತ್ರ ಹೋಗಲಿಕ್ಕಾಗದೆ ವಾಪಸಾಗಿಬಿಟ್ಟೆ.” ಎಂದು ಮತ್ತೊಂದು ನಿಟ್ಟುಸಿರು ಬಿಟ್ಟ. “ಹಾಗಿದ್ರೆ ನೀನು ಹುಡುಗಿನಾದ್ರು ಬೆಟ್ಟಿ ಆದ್ಯಾ” ಎಂದು ಅಡ್ಡ ಪ್ರಶ್ನೆ ಹಾಕಿದೆ. “ಇಲ್ಲಪ್ಪಾ … ನನ್ ಪುಣ್ಯಕ್ಕೆ ಆಕೆ ಅಂಗಳದಲ್ಲಿ ರಂಗೋಲಿ ಹಾಕ್ತಿದ್ಳು … ಮಾತಾಡಿಸಿದ್ರೆ ಏನಾದ್ರಂದ್ಕ್ಕೊಂಡಾಳಂತ ಬಂದುಬಿಟ್ಟೆ” ಎಂದ. ನನಗೆ ಅಯ್ಯೋ ಎನಿಸಿತು. “ಹೋಗ್ಲಿ ಒಂದು ಪತ್ರವನ್ನಾದರು ಹಾಕ್ಬೇಕಿತ್ತು” ಎಂದು ಕೇಳಿದೆ. ಜೇಬಿನಿಂದ ಒಂದು ಲಕೋಟೆ ತೆಗೆಯುತ್ತ ” ಇನ್ನೂ ಪೂರ್ಣಗೊಳಿಸ್ಲಿಕ್ಕಾಗದೆ ಇಟ್ಕೊಂಡು ತಿಂಗಳ ಮೇಲಾತು” ಎಂದು ಕೊಟ್ಟ. ಓದಲು ಹಿಂಜರಿದ ನಾನುಅವನ ಒತ್ತಾಯಕ್ಕೆ ಮಣಿದು ನೋಡ್ತೀನಿ … ಕೇವಲ ‘ಪ್ರೀತಿಯವರೂ’ ಅಂತ ಮಾತ್ರ ಇರುವುದು ಕಂಡು ಆಶ್ಚರ್ಯವಾಯಿತು. ಎರಡು ಶಬ್ದಗಳನ್ನೂ ಸ್ಪಷ್ಟವಾಗಿ ಬರೆಯಲಾಗಿಲ್ಲ. ಕಾಟು ಹೊಡ್ದೂ ಹೊಡ್ದೂ ಅಂತು ಅಷ್ಟು ಬರೆದಿದ್ದ “ಉಳಿದಿದ್ಯಾಕ ಬರೆದಿಲ್ಲ?” ಅಂತ ಕೇಳಿದ್ದಕ್ಕೆ ಉಗುಳು ನುಂಗಿದ. ಕವರ್ ಕೊಟ್ಟೆ. ಹೃದಯವೆಂಬಂತೆ ಜೋಬಲ್ಲಿ ಭದ್ರಪಡಿಸಿದ. +ಹೀಗೆ ಮಾತಾಡ್ತಾ ಮಾತಾಡ್ತಾ ಅಂತೂ ಇಂತೂ ನಮ್ಮ ನಿರ್ದಿಷ್ಟ ಜಾಗ ತಲುಪಿದೆವು. ಅಲ್ಲಿ ಆಗಲೆ ಕೆಲವು ಕಾಲೇಜು ವಿದ್ಯಾರ್ಥಿಗಳು ಕೂತುಕೊಂಡಿದ್ದರು. ಅವರು ಬೇಗ ಇಲ್ಲಿಂದ ಕದಲಬಾರದೆ! ಎಂಬಂತೆ ಅವರತ್ತ ನೋಉತ್ತಿದ್ದ. ಅವರು ನಗುತ್ತಿದ್ದುದು, ಮಾತಾಡುತಿದ್ದುದು, ನೋಡುತ್ತಿದ್ದುದು ತನ್ನ ಕುರಿತೇ ಎಂದು ಭಾವಿಸಿದಂತಿತ್ತು. ಹೊತ್ತು ಪೂರ್ತಿ ಮುಳುಗಿ ಬೆಳಕು ಬಟಾಬಯಲಾಗುತ್ತಲೆ ಅವರು ಶಿಳ್ಳೆ ಹಾಕುತ್ತ ಹೋದರು. ಅವರು ಸೆಕ್ಸ್ ಬಗ್ಗೆ ಚರ್ಚಿಸಿರಬಹೆದೆಂದುಕೊಂದ. ಶೈಕ್ಷಣಿಕ ವ್ಯವಸ್ತೆ ಕೆಟ್ಟು ಹೋಯ್ತುಂತ ನಿಟ್ಟುರು ಶ್ರೀನಿವಾಸರಾಯರ ಥರ ಗೊಣಗಿದ. ನಾನು ಪ್ರತಿಕ್ರಿಯಸದಿದ್ದಾಗ ರಾಮಣ್ಣ ಹೇಳ್ದಾ ಅಂದ … ಕೈಚಾಚಿದ. ಅವರಿವರ ಗುಪ್ತ ವ್ಯವಹಾರಗಳನ್ನು ಚರ್ಚಿಸಲಿಕ್ಕೆ ತಕ್ಕ ವ್ಯಕ್ತಿ ಶಾಮಶಾಸ್ತ್ರಿ ಎಂದುಕೊಂಡಿರಬಹುದಾದ ರಾಮಣ್ಣ ಹೇಳಿದ್ದರಲ್ಲಿ ಆಶ್ಚರ್ಯವಿಲ್ಲವೆಂದುಕೊಂಡೆ. ಯಾವುದೇ ಲಕೋಟೆಯನ್ನು ಭೇದಿಸದೆ ಓದುವ ನಿಷ್ಣಾತ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಣ್ಣನೂ; ಒಂದು ಎಳೆ ದೊರಕಿದ ಕೂಡಲೆ ಅದಕ್ಕೆ ಅದ್ಭುತ ರೀತಿಯಲ್ಲಿ ದ್ಡೆಕೊರೇಟ್ ಮಾಡಿಬಿಡುವ ಶಾಮಾಶಾಸ್ತ್ರಿಯೂ … +ಓದುತ್ತಿದ್ದಂತೆಯೇ ಶಾಮ ಕಂಪನಕ್ಕೀಡಾದ … ಬರೋ ಹನ್ನೊಂದಕ್ಕೆ ಇಂತ್ರು ಇರುವುದರಿಂದ ಹಾಗೆ ಅವನಲ್ಲಿ ನಡಕ ಹುಟ್ಟಿದ್ದು. ಅವತ್ತು ತ್ರಯೋದಶಿ ಬೇರೆ. ಆದಿನ ತಾನು ಅಂಗಳ ತುಳಿಯುವಂತಿಲ್ಲ. ತಾತ ಏನಂತಾರೋ ಏನೋ? … ಪಂಚಾಂಗವೇ ಪ್ರಪಂಚವೆಂದು ಭಾವಿಸಿರುವ ಆ ಸನಾತನಿಯನ್ನು ಹೇಗೆ ಒಪ್ಪಿಸುವುದು? ಒಂದು ಪಕ್ಷದಲ್ಲಿ ಅವರು ಒಪ್ಪಿದರೆಂದಿಟ್ಟುಕೊಂಡರೆ ಬಳ್ಳಾರಿಯಂಥ ದೂರದ ದೇಶಕ್ಕೆ ಹೋಗಿಬರುವುದಾದರೂ ಹೇಗೆ> ಒಂದು ಪಕ್ಷದಲ್ಲಿ ಹೋದೆ ಅಂತ ಇಟ್ಟುಕೊಂಡರೆ ನಡೆಯುವ ಸಂದರ್ಶನ್ವನ್ನು ಹೇಗೆ ಎದುರಿಸುವುದು? +“ನಮ್ಮ ಮನೆಯವರ್ನ ನೀನೆ ಒಪ್ಪಿಸಬೇಕು” ಎಂದು ಶರತ್ತು ವಿಧಿಸಿದ. ಚೂರುಪಾರು ಸಂಸ್ಕೃತ ಸ್ಲೋಕಗಳನ್ನು ಉದುರುಸುತ್ತಿದ್ದ ನನ್ನ ಮಾತಿಗೆ ಶಾಸ್ತ್ರಿಗಳು ಬೆಲೆ ಕೊಡುವರೆಂಬ ಭರವಸೆ ನನಗಿದ್ದುದರಿಂದ ನೀನೇನು ಯೋಚ್ನೆ ಮಾಡಬೇಡವೆಮ್ದು ಹೇಳಿ ಧೈರ್ಯ ತುಂಬಿದೆ. +ಶವಸಂಸ್ಕಾರ ಮುಗಿದೊಡನೆ ಊರ ಕಡೆ ಹೆಜ್ಜೆ ಹಾಕುತ್ತಾರಲ್ಲ ಹಾಗೆ ನಾವಿಬ್ಬರು ದಾರಿ ಎಂಬ ಸರಳರೇಖೆ ಗುಂಟ ಹೆಜ್ಜ ಹಾಕಿ ಊರಮ್ಮನ ಬಯಲ ಕವಲ ಕವಲ ಹಾದಿ ತಲುಪಿದೆವು. ನಿಯಾನ್ ದೀಪದ ಬೆಳಕಿನಲ್ಲಿ ಸುಂಕ ವಸೂಲಿ ಮಾಡುವವರಂತೆ ಸಣ್ಣೀರವ್ವನ ಮೊಂಡು ಬಾಲದ ನಾಯಿ ನಮ್ಮನ್ನು ಅಡ್ಡ ತರುಬಿ ಗುರ್ ಗುಟ್ಟತೊಡಗಿತು. ಹೆದರಿ ನನ್ನ ಬೆನ್ನ ಹಿಂದೆ ಅವಿತುಗೊಳ್ಳುವ ಪ್ರಯತ್ನದಲ್ಲಿದ್ದ ಅವನನ್ನೀಚೆಗೆ ಎಳೆದು ಕಲ್ಲು ತಗೊಂಡು ಹಾಕು ಎಂದು ಇಷ್ಟಲಿಂಗೋಪಾದಿಯಲ್ಲಿ ಬಿದ್ದದ್ದ ಕಲ್ಲನ್ನು ತಗೊಂಡು ಅವನ ಕೈಗೆ ಕೊಟ್ಟೆ. ಹೀಗೆ ಹೊಡೆಯುವುದು ಅಹಿಂಸೆ ಎಂದೋ? ನಾಯಿಯ ರೋಷ ಹನ್ನೆರಡು ವರ್ಷ ಎಂದೋ! ಯೋಚಿಸುತ್ತ ನಿಂತಿದ್ದ ಅವನತ್ತ ದುರುಗುಟ್ಟಿ ಗುರ್‍ಗುಡತೊಡಗಿತು. ಪಾಪ – ಪುಣ್ಯ ಧರ್ಮ – ಕರ್ಮಗ್ಳ ಸೂಕ್ಷ್ಮ ಅರಿತಿರುವ ನಾನಿರುವಾಗ ಅವನ್ಯಾಕೆ ಯಃಕಶ್ಚಿತ್ ಶ್ವಾನೋಪಸುಂದನಿಗೆ ಹೆದರುವುದು! ಮನಸ್ಸಿನಲ್ಲಿ ಇಷ್ಟ ದೈವ ಪ್ರಾರ್ಥಿಸಿ ಅಭಿಮಂತ್ರಿಸಿ ಎಸೆದುಬಿಟ್ಟ. ಶರವೇಗದಲ್ಲಿ ಎರಗಿದ ಕಲ್ಲಿನೇಟು ಡುಬ್ಬಕ್ಕೆ ತಗಲಲು ಅದು ಕುಯ್ಯೊ ಮರ್ರೊ ಎಂದು ರಾಗಾಲಾಪನೆ ಮಾಡುತ್ತ ಪುರಸಭಾ ಗಟಾರಕ್ಕೆ ಮೂತ್ರ ವಿಸರ್ಜನೆ ಮಾಅಲು ಕುಳಿತಿದ್ದ ಬಾಯಿ ಬಡುಕಿ ಸಣ್ಣೀರವ್ವನ ಬಳಿಗೆ ‘ಪಾಹಿಮಾಂ’ ಅಂತ ದೂರು ಕೊಂಡೊಯ್ದಿತು. ತನ್ನ ನಾಯಿ ತನ್ನ ಸಣ್ಣಕರುಳೊಳಗೆ ಸಮ್ಕಟಕ್ಕೆ ಈಡಾಗಿರುವುದೆಂದು ಭಾವಿಸಿದ ಆಕೆ “ಯಾವಾನಲೋ ನನ್ನಾಟಗಳ್ಳ … ನನ್ನಾಯಿ ಹೊಡ್ದೋನು?” ಎಂದು ಗರ್ಜಿಸುತ್ತ ಬದ್ಧ ಭ್ರುಕುಟಿಯಾಗಿ ನಮ್ಮೆದರು ನೆಲಮುಗಿಲಿಗೇಕಾಗಿ ನಿಂತಳು. ಬೊಂಬಾಯಿಗಿಂತಲೂ ಅಗಲವುಳ್ಳ ಬಾಯಿಗೆ ಒಡತಿಯಾದ ನಿಂಗಮ್ಮಜ್ಜಿಯ ಮೊಮ್ಮಗ ಇವನೆಂತಲೂ; ನವಗ್ರಹಗಳನ್ನು ಅಂಗೈಯಲ್ಲಿತ್ತುಕೊಂಡಿರುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಅವನೆಂತಲು ಭಾವಿಸಿ ತಣ್ಣಗಾಗಿ … “ನಾಯಿ ನಾರಾಯಣಿದ್ದಂಗ್ರಪ್ಪಾ … ಹೊಡೀಬಾರ್ದು” ಎಂದು ಹಿತವಚನ ನುಡಿದು ನಮ್ಮನ್ನು ಬೀಳ್ಕೊಟ್ಟಳು. +ನಾಯಿ ಹೊಡೆಯುವುದರ ಮೂಲಕ ವಂಚೂರು ಆತ್ಮವಿಸ್ಜ್ವಾಸದಿಂದ ಗೆಲುವಾದ ಶಾಮ ಖಚಿತವಾದ ಹೆಜ್ಜೆ ಇಡುತ್ತ ತನ್ನ ಮನೆ ಕಡೆಗ್ರ್ ತಾನೂ; ಶಿಲ್ಪಗಳಿಗೆ ಕುಷ್ಟರೋಗ ಎಂಬ ಸಚಿತ್ರ ಲೇಖನವನ್ನು ಪೂರ್ಣಗೊಳಿಸಬೇಕೆಂದಿದ್ದ ನಾನೂ ನಮ್ಮ ದಾರಿ ಹಿಡಿದೆವು. +ಕೋರಿಶೆತ್ರು ಸಣ್ಣೀರಜ್ಜ ದೆವ್ವವಾಗಿ ತಾನು ಹೂತಿಟ್ಟಿರೋ ಗುಪ್ತಧನವನ್ನು ಕಾಯುತ್ತಿದ್ದಾನೆಂಬ ವದಂತಿಗಳಿಂದಲ್‌ಏ ತುಂಬಿರುವ ಪಾಳುಮನೆ ಸಂದಿಯಲ್ಲಿ ತುರುಗುವಾಗ್ಗೆ ನಿಂಗಮ್ಮಜ್ಜಿ ಕಚ್ಚೆ ಬಿಕ್ಕೋತ ಎದುರಾಗಿ “ನನ್ನಾಟಗಿತ್ತಿ ಕುಂಟ್ನಳ್ಳಿ ಸಣ್ಣಿ ನಿನ್ತಡವಿದಂಳಂತಲ್ಲೆಲೋ … ನಿಂಗೇನಂದ್ಲಾ ನನ ಗಂಡನ ಸೂಳೆ” ಎಂದು ನನ್ನನ್ನು ಕಕ್ಕಾವಿಕ್ಕಿ ಗೊಳಿಸಿತು. ಅದರವು ನಾಯಿ ಕಿವಿ ಅಂದುಕೊಂಡೆ. “ಆಕೆ ನಂಗೇನು ಅಂದಿಲ್ಲ ಬಿಟ್ಟಿಲ್ಲ … ಸುಮ್ಮನ್ಯಾಕೆ ಕಾಲ್ಕೆದರಿ ಜಗಳಾಓಕೆ ಹೊಂಟಿ. ನಡೆಯಬೇ ನಡೆ” ಎಂದು ರಟ್ಟೆ ಹಿಡಿಯಲು ಹೋದರದು ಕೊಸರಿ, “ಎಮ್ಥ ಸೂಗದಿಯಲ್ಲೋ …ರಂಡೆ ಮುಂಡೇರ ಕೂಡಾ ಅನಬಾರ್ದು ಅನ್ನಿಸಿಕೊಂಡು ಬಂದ್ ಬಿಟ್ಯಾ … ಕೇರು ಬಡಿಯೋದು ಬಿಟ್ಟು … ನನ ಬಿಡು … ಈ ಓಣ್ಯಾಗ ಆಕೆ ಇರಬೇಕೊಂದು ಇಲ್ಲ್ ನಾವಿರಬೇಕೊಂದು … ಈ ಎಲ್ಲಾರಿಗೊಂದು ಪೈಸಲ್ಲು ಆಗ್ಲ್ರ್ಬೇಕು ಇವತ್ತು” ಎಂದು ಹಠವಂ ಮಾಡುತ್ತಿರಲು ಆಕೆಯ ಗೂನು ಬೆನ್ನು ತಂಗಿ “ಹ್ಹಾ … ಹ್ಹಾ … ಜಗಳಾಡೋಕೆ ಹೊಂತಾಳ … ಪರಾಕ್ರಮಿ… ಕೈಯ ಹಿಡ್ದ ಗಂಡನ್ನ ನುಂಗಿ ನೀರ್ಕುಡ್ದ್ದಾಕಿ. ಇನ್ನಾ ತಾಟಗಿತ್ತಿ ಸಣ್ಣೀನ ಬಿಟ್ಟೀಯ ನೀನು … ನಿನ ಬೊಂಬಾಯಿ ಬಂದ್ ಮಾಡ್ಕೊಂಡು ಮನೀಗೆ ಹೊಂಡವ್ವ ಹೊಂಡು … ಉದುಕಾ ಮುದ್ದಿ ತಣ್ಣಗಾತತೆ” ಎಂದು ಸಮ್ಮೋಹನಾಸ್ತ್ರ ಬೀರಿತು. ಉದುಕಾ ಮುದ್ದೆ ಎಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಬಾಯಿ ತುಂಬಿದ ಜೊಲ್ಲನ್ನು ಪಿಚಕ್ಕಂತಾಚೆ ಉಗುಳಿ ಎದೆ ಸೆಟಿಸಿ ಮುಖ ಮುಗಿಲಿಗೆತ್ತಿ “ಲ್ಯೇ ಸಣ್ಣಿ … ಇವತ್ತು ನೀ ಬದ್ಕೊಡಬೇ … ಇನ್ನೊಂದ್ಸಾರಿ ನನ್ನ ಮೊಮ್ಮಗನ ತಂಟೆಗೆ ಬಂದಿ ಅಂದ್ರ ನಿನ ಸಾಮಾನಿಗೆ ಕೇಉ ಬಡ್ಡೇನು” ಎಂದು ಹೇಷಾರವ ಮಾಡಲು ನಮ್ಮ ಷೇಕ್ಯಾಂಡ್ನಾಯಿ ಕಲ್ಡಿ ಬೊವ್ವೋ ಅಂತ ಬೊಗುಳಿ ಮೆಚ್ಚಿಗೆ ಸೂಚಿಸಿತು. ಬೀಸತೊಡಗಿದ ಗಾಳಿಗೆ ಕೂಲಾಗುತ್ತ ಇಡೀ ಸತಮಾನದ ತಾಳೆಗರಿ ಗ್ರಂಥಗಳಿಂದ ಆ ಇಬ್ಬರು ಜ್ಞಾನ ವೃದ್ಧೆಯರೊಂದಿಗೆ ನಾನು ಕಾಲು ಹಾಕಿದೆ. +ಕುಂಟ್ನಳ್ಳಿ ಸಣ್ಣಿಗೂ, ಕುಂಬಾರ ನಿಂಗಮ್ಮಜ್ಜಿಗೂ ಫೈಟಿಂಗು ನಡೆಯುತ್ತದೆ ಎಂಬ ಭರವಸೆಯಿಂದ ಅಂಗಳದ ತುಂಬ ನಿಂತಿದ್ದ ಕುಂಟು ಬಸವಿ, ಅಂಬೂರಿ ಸಿದ್ದಿ; ಸುಡುಗಾಡು ರುದ್ರಿಯೇ ಮೊದಲಾದ ಓಣಿಯ ಶಾಕಿಣಿ, ಡಾಕಿಣಿಯರು ಒಲ್ಲದ ಮನಸ್ಸಿನಿಂದ ನಮ್ಮ ನಿಂಗಮ್ಮಜ್ಜಿಯನ್ನು ಸ್ವಾಗತಿಸುತ್ತ, :ಓಣ್ಯಾಗ ಆ ಸಣ್ಣೀದುರುವಣ್ಗಿ ಹೆಚ್ಚಾಗೇತಿ … ಆಕೀದು ಉದುರು ಬಡ್ಡು ಬರ್ಬೇಕಿತ್ತಬೇ … ಆವಾಗ ಸೈ ಅಂತಿದ್ವಿ. ಗಂಡ ಉಳ್ಳ ಮಗ್ಳೂನ ತುರುಕ್ರೋನ್ಗೆಮಲಗಾಕಿರೋದಲ್ದೆ ಈಗ ನಮ್ಮಿಬ್ಬರಬದ್ರೀಗೆ ಕಲೆ ಬಿದ್ದಾಳೇನು! … ಬಸವನ ಬಾವಿಗೆ ನೀರಿಗೋದಾಗ ಏನೋ ಗುಸುಗುಸು ಮಾತಾಡ್ತಿದ್ನೇ ಮುಂದುಮಾಡ್ಕೊಂಡು … ಏನೋ ಹರೇದ ಹುಡುಗಿ ಮಾತಾಡಿಸ್ತೂಂತ ನಮ್ಮೋನು ಮಾಡಿರಬೌದು ಬಿಡು”… ಎಂದು ನಿಂಗಮ್ಮಜ್ಜಿ ಸಿಟ್ಟಿಗೆ ಹೊಸ ಆಯಾಮ ನೀಡಿದರು… “ಏನಲೋ ಔದಾ” ಅಂತ ಮೂರನೇ ಕಣ್ಣನ್ನು ನನ್ನತ್ತ ತಿರುಗಿಸಿತು. ಮಹಿಳಾ ಮಣಿಗಳ ಪತ್ತೆ ತರದೂದು ಅರ್ಥವಾಗದೆ ನಾನು ಬಾಯಿ ಬಾಯಿ ಬಿಟ್ಟೆ. ಸಣ್ಣಿರವ್ವನ ಮಗಳು ಸರಸಿಯನ್ನು ನಾನು ಮೂರನೆ ಇಯತ್ತೆ ಓದುವಾಗ ಗುಟ್ಟಗಿ ಲವ್ ಮಾಡುತ್ತಿದ್ದುದೇನೊ ಖರೆ, ಆಕೆಯೂ ಅಷ್ಟೆ. ಮಾದರ ಶಿವಣ್ಣ ಕಪಲಿ ಭಾವಿಯಲ್ಲಿ ಲಂಗ ಮೇಲಕ್ಕೆತ್ತಿ ‘ಮಾಡಲೇ ಮಾಡು’ ಎಂದು ಪುಸಲಾಯಿಸಿದಾಗ ನಾನು ಇಷ್ತಗಲ ಕಂಣು ಬಿಟ್ಟುಕೊಂಡು ಆ ಜಾಗ ನೋಡಿ ಅಲ್ಲಿ ಏನೂ ಕಾಣದಿದಾಗ ಜಲಜಲ ಬೆವತು ವಲ್ಲೆವ್ವೋ ವಲ್ಲೆ ಎಂದು ಕೂಗುತ್ತ ವಾಪಸಾಗಿದ್ದೆ. ಆ ಒಂದು ಘಟನೆ ಬಿಟ್ಟರೆ ಸರಸಿಯೊಂದಿಗೆ ನನ್ನ ಯಾವುದೇ ಅನೈತಿಕ ಸಂಭಂದ ಮಾನಸಿಕವಾಗಿ; ದೈಹಿಕವಾಗಿ ಇಲ್ಲ. ಲೈಗಿಕವಾಗಿ ದುರ್ಬಲ ಇರುವ ಕಂಪ್ಲಿ ಲಿಂಗಮೂರುತಿಯನ್ನು ಮದುವೆ ಮಾಡಿಕೊಂಡಿರುವ ಆಕೆ ದೇಹದ ತಣುವಿಕೆಗಾಗಿ ಯಾರೊಂದಿಗಾದರೂ ಮಲಗಿಕೊಳ್ಳಲಿ! ಅದು ಇವರಿಗೇಕೆ ಬೇಕು? ಒಂತಿಯಾಗಿ ಸಿಕ್ಕ ಸಂದರ್ಭದಲ್ಲಿ ನಾವಿಬ್ಬರು ಮಾತಾಡುತ್ತಿದ್ದ ಮಾತ್ರಕ್ಕೆ ಸಂಬಂಧ ಕಲ್ಪ್[ಇಸುವುದೇ? … ಈ ಪ್ರಕಾರವಾಗಿ ಕಕ್ಕಾಬಿಕ್ಕಿಯಾಗಿರುವ ನನ್ನನ್ನು ಕಾಪಾಡಲೆಂದು ಅಡುಗೆಮನೆಯಲ್ಲಿ ಮುದ್ದೆ ತಟ್ಟುತ್ತಿದ್ದ್ದ ದೊಡ್ಡವ್ವ ರವುಷದಿಮ್ದ ಹೊರಬಂದು ‘ನನ ಮಗ ಗಂಡ್ಸು ಯಾರತ್ರಾರ ಮಕ್ಕಂಬ್ಲಿ … ನಿಮಗ್ಯಾಕ ಬೇಕ್ರಬೇ ನೀವೇನು ಸುದ್ದಾ” ಎಂದು ಆರ್ಭಟಿಸಲು ಅವರೆಲ್ಲ ತಂತಮ್ಮ ಹಾದಿ ಹಿಡಿದರು… ರುಚಿಯಾಗೇ ಇದ್ದರೂ ನಾನು ಒಂದು ಮುದ್ದೆ ನುಂಗಿ ಕೈತೊಳೆದುಕೊಂಡು ನನ್ನ ರೂಮು ಸೇರಿಕೊಂಡೆ. ಹಾಳೆಗಳ ,\ಮೇಲೆ ಮುಂಗಾಲು ನೆಕ್ಕಿಕೊಳ್ಳುತ್ತ ಮಲಗಿದ್ದ ಬೆಕ್ಕು ಹಲೋ (ಮ್ಯಾಂವ್) ಅಂತು. ಎದುರುಗಡೆ ನೇತುಹಾಕಿದ್ದ ಹೆಮಮಾಲಿನಿ ಫೋಟೊ ಸಣ್ಣಿರವ್ವನ ಫೋಟೋ ಆದಂಗಾಯಿತು. ಅದರ ಪಕ್ಕದಲ್ಲಿ … ಇನ್ನೊಂದು ಪಕ್ಕದಲ್ಲಿ; ಹಿಂದುಗಡೆ ಹೀಗೆ ಅನೇಕ ಕಡೆಗಳಲ್ಲಿದ್ದ ರೇಖಾ, ಮ್ರ್ಲಿನ್ ಮನ್ರೋ; ಸೊಫಿಯಾ ಇವರೆಲ್ಲ ಓಣಿಯ ಹೆಂಗಸರ ಮುಖವಾಡ ಧರಿಸಿರುವಂತೆ ಭಾಸವಾಯಿತು. ಅವಿವಾಹಿತ ತರುಣ ರಾಜಕುಮಾರ್ವನೋರ್ವನಿಗೆ ಸಾರ್ವಜನಿಕರ ಸಮಕ್ಷಮ ಚುಂಬಿಸಿ, ಎದೆಗಾರಿಕೆ ಪ್ರಕಟಿಸಿ ದಿನಬೆಳಗಾಗುವುದರೊಳಗೆ ಅಂತರಾಷ್ಟ್ರೀಯಖ್ಯಾತಿ ಗಳಿಸಿದ ಮಧ್ಯಮ ವರ್ಗದ ಹದಿಹರೆಯದ ಹುಡುಗಿ ಶಶಿಕಲಾಳ ಒಳಗಿಂದ ಸರಸ್ವತಿ ಒಡಮೂಡುತ್ತಿರುವಳೆಂದು ಭಾವಿಸಿ ಚಾಪೆ ಮೇಲೆ ಮೈಚೆಲ್ಲಿ ಕಣ್ಣು ಮುಚ್ಚಿದೆ. ನನ್ನ ಮತ್ತು ನನ್ನಂಥವರ ಅಂತರಂಗ ಮತ್ತು ಬಹಿರಂಗಗಳ ಎಲ್ಲ ಮಗ್ಗುಲುಗಳ ಮೇಲೆ ಸದಾ ನಿಗಾ ಇಟ್ಟು ಸದುವು ಸಿಕ್ಕರೆ ಆಕ್ರಮಣ ಮಾಡಲು ಓಣಿಯ ಅನೇಕರು ಹೊಂಚು ಹಾಕಿರುವರೆಂದು ಅಚಾನಕ್ ಅಂದುಕೊಂಡೆ. ಗಲಿಬಿಲಿಗೀಡಾದೆ. ’ಬಗಸಿ ನುಗ್ಗೆಸೊಪ್ಪಿನ ಉದುಕಾ ಮಾಡಿದ್ರು ಉಣ್ಣಿಲ್ವಲ್ಲೋ ನೀನು’ ಎಂದು ದೊಡ್ಡವ್ವ ಕಲ್ಡಬತ್ತದೊಳಗೆ ಎಲೆಅಡಿಕೆ ಹಾಕಿ ಕುಟ್ಟತೊಡಗಿದ. ಸದ್ದು ಕೇಳಿಸಿಕೊಳ್ಳುತ್ತಲೆ ಈ ಊರು ಯಾವಾಗ ಬಿಡುವೆನೋ ಎಂದೆನಿಸಿತು. ಊರನ್ನು ಶಾಮ ಬಿಟ್ಟರೂ ನನ್ನೊಳಗೆ ಬೆಚ್ಚಗಿರುವ ಉರಿನಿಂದ ಬಿಡುಗಡೆಯಾಗಬೇಕಲ್ಲ! ಪರಿತ್ಯಕ್ಕ್ತತೆ ಎಂಬುದೇ ಭ್ರಮೆ ಎನಿಸಿತು. ಆ ಭ್ರಮೆಯೊಳಗೆ ಕರಗಿ ಹೋದೆ … ಕವಿದ ನಿದ್ದೆಯೊಳಗೆ ಕಂಡ ಕನಸಿನಲ್ಲಿ ಸರಸಿಯೊಂದಿಗೆ ಸಂಭೋಗ ಮಾಡಿದಂಥ ಕನಸು ಬಿದ್ದಿತೆಂದು ಅರ್ಥವಾದಾಗ ಒದ್ದೆಯಿಂದ ಊರುಗಳೊಂದು ಬೆಸೆದುಕೊಂಡಿದ್ದವು. ಅದರ ವಾಸನೆಗೆ ಮೂಗು ಹಿಗ್ಗಲಿಸಿಕೊಂಡು ಮಹಾ ಮಳ್ಳಿಗನಂತೆ ಮೈಹೊಸಕುತ್ತ ಬಂದ ಬೆಕ್ಕು ಅಂಗಾಲಿಗೆ ತಗುಲಿದಾಗ ಮೃತ್ಯು ಸ್ಪರ್ಶಿಸಿದಂತೆ ದಿಗ್ಗನೆಚ್ಚರಗಿ ಅದನ್ನಾಚೆ ಜಾಡಿಸಿದೆ. ಅದು ನಾನು ಸ್ಖಲಿಸಿಕೊಂಡ ಸಮಾಚಾರವನ್ನು ಬಿತ್ತರಿಸುವ ರೀತಿಯಲ್ಲಿ ಅರಚುತ್ತ ಹೋಯಿತು. +“ಬೆಕ್ಕನ್ಯಾಕೆ ಹೊಡ್ದ್ಯೋ … ದೇವ್ರಿದ್ದಂಗದು … ಅದು ನೊಂದ್ಕೊಂಡ್ರೆ ಪಾಪ ಬರತೈತಿ” ಎಂದು ಸಿದ್ದಮ್ಮಜ್ಜಿ ಬಾಯಲ್ಲಿ ಮುಂಗೈ ಇಉ ಕೂತಲ್ಲಿಂದ ಕೂಗಿತು. +ಮಲಗುವುದೋ! ಏಳುವುದೋ ! ಎಂಬ ಗೊಂದಲದಲ್ಲಿದ್ದ ನಾನು ಮಲಗುವುದು ಸಾಧ್ಯವಿಲ್ಲವೆಂಬಂತೆ ಹೊತ್ತು ಮಾರುದ್ದ ಏರಿತ್ತು; ಮೈ ಮುರಿದೆದ್ದು ಆಕಳಿಸುತ್ತ ಕೋಣೆಯೊಳಗಿಂದೀಚೆ ಬಂದೆ. +ಬೆಳಗಿನ ಸಮಯವನ್ನು ನಮ್ಮೋಣಿಯ ಹೆಂಗಸರು ಅನುಭವಿಸುವುದನ್ನು ನೋಡುವುದೇ ಒಂದು ಸೋಜಿಗದ ಸಂಗತಿ. ಸಿದ್ದವ್ವ ಕಾಲು ಕಿಸಿದು ಕೂತುಕೊಂಡು ಎಡಗೈಯ ಅರ್ಧ ಭಾಗ ಗಂಅಲ ಮಟ ತೂರಿಸಿ ಕಫ ಕಿತ್ತು ಸಾರಣೆ ಮಾಡತೊಡಗಿದ್ದುದು ಅರ್ಧ ಊರಿಗೆ ಕೇಳಿಸುತ್ತಿತ್ತು. ಇನ್ನೊಂದು ಕಡೆ ಗಂಡಸತ್ತ ಆರು ತಿಂಗಳಿಗೆ ಹುಟ್ಟಿದ ತನ್ನ ಮೂರು ವರ್ಷದ ಮಗನನ್ನು ಅಂಗಳದ ಕಲ್ಲ ಮೇಲೆ ಕೂಡ್ರಿಸಿಕೊಂಡು ಬಸವಿ ಇಟ್ಟಿಗೆ ಹುಡಿಯಿಂದ ಹಲ್ಲುಜ್ಜುವ ಬಗ್ಗೆ; ನಾಲಿಗೆ ಕೆರೆಯುವ ಬಗ್ಗೆ; ಗಂಟಲಿನಿಂದ ಕಫ ಕೀಳುವ ಬಗೆ ಬಗ್ಗೆ ಎಂದಿನಂತೆ ತರಬೇತಿ ಕೊದಲಾರಂಭಿಸಿದ್ದಳು. ಉರಿಸಿಕೊಂಡು ತಿಂದು ಸತ್ತ ಗಂಡನ ಮೇಲಿನ ಕೋಪವನ್ನು ಆ ನೆಪದಲ್ಲಿ ತನ್ನ ಮಗನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಇನ್ನೊಂದು ಕಡೆ ಇನ್ನೊಂದು ನಮೂನಿ ಸೀನು … ಇಂಥಪ್ಪ ಹಲವು ಸೀನುಗಳನ್ನು ತಂತಮ್ಮ ನಿಗದಿತ ಜಾಗಗಳಲ್ಲಿ ಕೂತುಕೊಂಡು ಆನಂದಿಸುತ್ತಿದ್ದ ನಾಯಿಗಳು; ಕಾಗೆಗಳು ಇತ್ಯಾದಿ … ಮುಖ ತೊಳೆದುಕೊಳ್ಳುವವರ ವಕ್ಷ ಸ್ಥಳಗಳನ್ನು ಕಳ್ಳ ಕಿಂಡಿಂದಿಣುಕಿ ನೋಡುತ್ತಿದ್ದ ಕನ್ನಡ ಪಂಡಿತರು ಪಕ್ಕದ ಮನೆ ಜಾಲರಿ ಮರೆಯಲ್ಲಿ; ಹಿತ್ತುಲಲ್ಲಿ ಹೆಂಡತಿ ತಮ್ಮನ್ನು ಸಾಪಳಿಸುತ್ತ ಇರುವಳು ಎಂಬ ಪರಿವೆಯ್ ಇಲ್ಲದೆ. +ಚಾವತ್ತು ಪೂರ್ಣ ಪ್ರಮಾಣದಲ್ಲಿ ಕೋಣೆ ಬಿಟ್ಟು ಹೊರ ಬರಲಾಗಲಿಲ್ಲ. ಕನಸು ಕಂಡಿರೋ ಅಳುಕು. ನಾನು ಕಂಡಿರೋ ಕನಸು ಅವರಿಗೆ ಗೊತ್ತಾಗಿದೆ ಎಂಬ ಅಳುಕು, ಊರುಗಳ ನಡುವಿನ ಅಂಟನ್ನು ಬೆಕ್ಕು, ನಾಯಿಗಳು ಘ್ರಾಣಿಸಿವೆ ಎಂಬ ಅಳುಕು, ಶಾಮನ ವ್ಯಕ್ತಿತ್ವ ನನ್ನಲ್ಲಿ ಪುನರಾವರ್ತನೆಯಾಗುತ್ತಿರುವ ಅನುಮಾನ ಬಂತು, ಎಲ್ಲ ಬಿಟ್ಟುಕೊಟ್ಟು ಓಡಬೇಕು, ವಾಯು ಮತ್ತು ಮನಸ್ಸಿಗಿಂತ ಮಿಗಿಲಾಗಿ … ಅಸಹನೀಯವದದ್ದನ್ನು; ಅಶ್ಲೀಲವಾದುದನ್ನು ಎಲ್ಲವನ್ನು ಕೂಡಲೆ ವಿಸರ್ಜಿಸಿ ನಿರುಮ್ಮಳತೆ ಸಾಧಿಸಬೇಕೆಂಬ ಉತ್ಕಠೇಚ್ಛೆ … ಹೊರಟೆ … ಪವಿತ್ರ ಗಂಗಾಜಲದೊಂದಿಗೆ. ಹಸಿರು ಮೊಗೆಯುತ್ತಿರುವ ಗದ್ದೆಗಳ ನಡುವೆ ಮೇರೆಗಳ ಮೇಲೆ; ಪಾರ್ಥೇನಿಯಂ ಮರೆಯಲ್ಲಿ ಕೆಮ್ಮುತ್ತ ಕ್ಯಾಕರಿಸುತ್ತ ವಿಸರ್ಜನಾಸೀನರಾಗಿರುವ ತರಾವರಿ ಮಂದಿ … ಮೂವ್ವತ್ತೆರಡು ವರ್ಷದ ಮಗನ ತಂದೆಯಾಗಿದ್ದು ಒಂದೂವರೆ ವರ್ಷದ ಮಗನಿಗೂ ತಂದೆಯಾಗಿರುವ ಹಾಯಸ್ಕೂಲು ಕಿಲಾರ್ಕು ಗುರುಸಿದ್ದಪ್ಪ್ಪ ವಿಸರ್ಜನಾಂಗದಿಂದ ಮೊಳೆ ವ್ಯಾಧಿಯನ್ನೂ; ಬಾಯಿಂದ ಶ್ವಾಸಕೋಶದ ವ್ಯಾದಿಯನ್ನೂ ಏಕ ಕಾಲಕ್ಕೆ ಪ್ರಕಟಿಸುತ್ತ ಕೂತು ಎಷ್ಟು ಹೊತ್ತಾಗಿರುವುದೋ! ಆತ ಎದ್ದು ಬರುವುದು ಸೆಕೆಂಡ್ ಬೆಲ್ ಹೊಡೆಯುವ ಮೇಲೆಯೇ; ಪರಮೇಶ್ವರ ಶಾಸ್ತ್ರಿಗಳು ಆತನನ್ನು ಕಲಿಯುಗದ ಧೃತರಾಷ್ಟ್ರನಿಗೆ ಹೋಲಿಸಿರುವುದ ಸಮಂಜಸವಾಗೇ ಇದೆ. ಎಲ್ಲಾ ಸೈರಿಸಿಕೊಂಡು … +ಹೇಗೋ ಒಂದು ಮುಗಿದಿ ಬುಡ್ಡೇಕಲ್ಲು ದಾಟಿ ಕೋಟೆ ಗೋಡೆ ಏರಿ ಮೇಲೆ ಬರುವುದಕ್ಕೂ ಶೂದ್ರತ್ವ ಬ್ರಾಹ್ಮಣತ್ವಗಳನ್ನು ಏಕಕಾಲಕ್ಕೆ ಪ್ರಕಟಿಸುತ್ತ ಉಗ್ಗು ನಾರಾಣಿ ಎದುರಿಗೆ ಬರುವುದಕ್ಕೂ ಸರಿಹೋಯಿತು. ಜೋಕುಮಾರನನ್ನು ಬಚ್ಚಿಡುವ ಹಾಸುಗಲ್ಲಿನ ಯಜಮಾನ ವೆಂಕೋಬನ ಹಿರೇಮಗನಾದ ನಾರಾಣಿ ಶಾಸ್ತ್ರಿಗಳ ಮನೆ ಮೈಲಿಗೆ ಸಹವಾಸ ಮಾಡಿದಂದಿನಿಂದ ತುಸು ಗ್ರಾಂಥಿಕವಾಗಿ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುವಂಥ ಸಭ್ಯಸ್ಥ “ಏನ್ರೀ ಶೋಮಿ … ಯಶ್ಟು ಹೊಟ್ತಿನಿಂದ ತಮ್ಮನ್ನು ಹುಡುಕುವುದು? ಮನೆಗೆ ಹೋಗಿದ್ದೆ ಮನೆಯಲ್ಲಿರಲಿಲ್ಲ … ಅಜ್ಜಿ ಮಾತು ಕಟ್ಟಿಕೊಂಡು ಕೋಣೆಯಲ್ಲಿಣುಕಿದೆ. ನಿಮ್ಮ ಲುಂಗಿ ನೆಕ್ಕುತ್ತಿದ್ದ ಬೆಕ್ಕು ದುರುಗುಟ್ಟಿ ನೋಡಲು ಹೆದರಿ ಬಸವನ ಬಾವಿ ಕಡೆ ಬಂದೆ. ಅಲ್ಲಿ ಕೂತಿರುವುದು ನೀವೆ ಅಂದುಕೊಂಡು ಕಾದೆ ಕಾದೆ. ಅಂತೂ ದೇವರ ದಯೆಯಿಣ್ದ ಎದ್ದು ಬಂದಿರಿ … ದೇವರು ದೊಡ್ಡವನು… ಯಾಕೆಂದರೆ ನೀವು ಕೂತಿದ್ದ ಜಾಗದಲ್ಲಿ ನಾನು ಹಿಂದೊಮ್ಮೆ ಘಟಸರುಪ ನೋಡಿದ್ದೆ … ಅದರ ಮೈ ಮೇಲೆ ಗೇಣುದ್ದದ ಕೂದಲಿದ್ದವು… ಅಬ್ಬಾ! ಅದರ ಸೀಳು ನಾಲಿಗೆ …” ಮಾತಿಂದಲೇ ನನ್ನ ಕೊಲೆ ಮಾಡಲಿಕ್ಕೆಂದೇ ಬಂದಿರುವನೆನ್ನಿಸಿ “ಅದೇನು ಹೇಳಬೇಕೆಂದಿದ್ದೀಯೋ ಅದ್ನೆರ್ಡು ಮಾತ್ನಲ್ಲಿ ಹೇಳಿ ಪುಣ್ಯ ಕಟ್ಕೋ ಮಾರಾಯ …ತಲೆ ತಿನ್ಬೇಡ” ಎಂದು ಕೇಳಿದೆ. ಕೂಡಲೆ ಶಾಸ್ತ್ರಿಗಳನ್ನು ಕಾಣಬೇಕಂತೆ ಎಂದು ಹೇಳಿದ. “ಬರ್ತೀನಿ ನೀನು ಹೋಗು!” ಎಂದೆ. ಅವನು ಹೋದ. ಒಂದೇ ಪ್ರಮಾಣದಲ್ಲಿರದ ಎರಡು ಕಾಲುಗಳಿಂದ ಅವನು ಬೀಸು ಹೆಜ್ಜು ಹಾಕಿದ. +ನಾನು ಬಂದೊಡನೆ ಕೂಡಲೆ ಕೋಣೆಗೆ ನುಗ್ಗಿ ನೋಡುತ್ತೇನೆ. ಹಾಳಾದ ಬೆಕ್ಕು ಲುಂಗಿಯೊಡನೆ ಚಿನ್ನಾಟ ಆಡುತ್ತಿರುವುದು.ಲುಂಗಿಯನ್ನು ಬಚ್ಚಲಿಗೆಸೆದು ಜಗಳ ಮಾಡುತ್ತಿದ್ದಾಗ ಮುದುಕಿ “ಲೋ ನೀನಿವತ್ತು ಹುಟ್ಟಿದ್ದಿನ … ಐದು ನಮೂನಿ ಎಣ್ಣ್ಯಾಗ ಮಾರಿ ನೋಡಿಕ್ಯಾ … ಹಂಗೆ ಹನ್ಮನ್ನ ಗುಡಿಗೋಗಿ ತುಪ್ಪ ದೀಪ ಹಚ್ಚಿ … ಸಣ ಮಾಡಿಕ್ಯಾ… ನಿನ್ನ ಗ್ರಹಗತಿ ಸುದ್ದಿಲ್ಲಾಂತೆ … ಹಿರೇರ ಮಾತ್ನ ಮೀರಬೇಡ… ಎಂದಾರಂಭಿಸಿ ಯಾವ ಯಾವ ನಮೂನಿ ಎಣ್ಣೆಯನ್ನು ಎಲ್ಲೆಂದ ಜೋಡಿಸಿಕೊಂಡು ಬಂದುದರ ಬಗ್ಗೆ ಹೊಸ ವ್ಯಾಖ್ಯಾನ ಮಂಡಿಸಿತು. ಒಂದೊಂದು ಎಣ್ಣೆಗೆ ಸಂಭಂದಿಸಿದ ಒಬ್ಬೊಬ್ಬ ವ್ಯಕ್ತಿಯ ಕುಲಗೋತ್ರ ಜಾಲಾಇಸಿತು. ನಿರಂತರವಾಗಿ ಮಾತಾಡುತ್ತಿದ್ದ ಅದನ್ನು ಅದರಪದಿಗೆ ಬಿಟ್ಟು ನಾನು ನನ್ನ ಕೆಲಸ ಮುಗಿಸಿಕೊಂಡು ಹೊರಗೆ ಬಿದ್ದೆ. +ಸರಸಿ ಕಣ್ಣಿಗೆ ಬಿದ್ದಾಳೆಂಬ ಭಯದಿಂದ; ಅಂತೂ ಕನಸಿನಲ್ಲಾದ್ರೂ ನನ್ನ ಸಂಭೊಗಿಸಿದೀಯಲ್ಲ ಎಂದು ಕಂಣಿಂದ ಕೇಳ್ಯಾಳೆಂಬ ಆತಂಕದಿಂ, ಅವರ ಸಾಕು ನಾಯಿ ಗುರುಗುಟ್ಟಿ ಸಣ್ಣಿರವ್ವನ ಗಮನವನ್ನು ನನ್ನ ಕಡೆಗೆ ಸೆಳೆದೀತೆಂಬ ಅಂಜಿಕೆಯಿಂದ … ಇನ್ನೇನು ಊರಮ್ಮನ ಬಯಲು ಪ್ರವೇಶಿಲಿದ್ದ ನಾನು ಹೊರಳಿ ನನ್ನ ಜವಳಾಕಾರ್ಯ ಮಾಡಿದ್ದ ಕೆಲಸೇರ ಗುರವಪ್ಪನ ಮೂರು ಗೋಡೆ ಮನೆಯ ಮುಂದೇಸಿನಿಂದ ಹಾದು ರುದ್ರ ನಾಯಕನ ಆಟವಾಳಿಗೆ ಮನೆ ಮುಂದೆ ತೇಲಿ ನಡುಗೆ ಮಂದಗೊಳಿಸಿದೆ. ನಾನೆಂದೂ ಮಾತಾಡಿಸಿರದಿದ್ದರೂ ಮುಖ ಪರಿಚಯವಿರುವ ಅನಸೂಯಳ ಗಂಡನಾದವನು ಹೇಗಿರುವನೆಂಬ ಕುತೋಹಲದಿಂದ ಹಾಗೇ ವಾರೆಗಣ್ಣಿನಿಂದ ನೋಡಿದೆ. … ಬಾಯಿತುಂಬ ನೊರೆ ಇಟ್ಟುಕೊಂಡು ಬ್ರಷ್ ಮಾಡುತ್ತಿರುವ ಮಟ್ಟಸ ವ್ಯಕ್ತಿಯೇ ಆಕೆಯ ಗಂಡನಿರಬೇಕೆಂದುಕೊಂಡೆ… ಆತನೂ ಚಿರಪರಿಚಿತನಂತೆ ನನ್ನತ್ತ ನೋಡಿದ. ಅದೇ ಹೊತ್ತಿಗೆ ಹಿತ್ತಲ ಲಘು ಬೆಳಕಿನಲ್ಲಿ ತಲೆ ಒಣಗಿಸಿಕೊಂದು ಹೊರಗಡೆ ಬಂದ ಅನಸೂಯಾ “ರ್ರೀ… ರ್ರೀ…” ಎಂದು ಕೂಗಿದ್ದು ಕೇಳಿಸಿತು. ನನ್ನನ್ನೇ ಆಕೆ ಕೂಗಿದ್ದು ಎಂದು ಖಾತ್ರಿ ಮಾಡಿಕೊಂಡ ನಂತರ ನಿಂತೆ. ಒಳಗೆ ಕರೆದಳು. ಹೋದೆ. ಕೂಡ್ರಲು ಕುರ್ಚಿ ತೋರಿಸಿದಳು. ಕೂತೆ…. ಮುಖ ತೊಳೆದುಕೊಂಡು ಬಂದ ಗಂಡನನ್ನು ಪರಿಚಯಿಸಿದಳು. ಕೈ ಕುಲುಕಿದ… ನಾನೂ ಅಷ್ಟೆ. ಬೆಂಗಳೂರಲ್ಲಿ ಒಂದು ಸ್ವಂತ ಚಿಕ್ಕ ಉದ್ದಿಮೆ ಸ್ಥಾಪಿಸಬೇಕೆಂದಿರುವುದು ಮತ್ತು ಅದು ದೋಸೆಗೆ ಸಂಬಂಧಪಟ್ಟಿದ್ದೇ ಆಗಿರಬಹುದೆಂದು ಇತ್ಯಾದಿ ಕಲ್ಮಷವಿಲ್ಲದೆ ಹೇಳಿದ. ನಾನು ನನ್ನ ಬಗ್ಗೆ ಏನು ಹೇಳಿಕೊಳ್ಳುವುದು? ಅಷ್ಟರಲ್ಲಿ ಅನಸೂಯಾ ಕಳೆದ ಮಾಹೆಯ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಥೆಯೊಂದರ ಬಗ್ಗೆ ಗಂಡನ ಗಮನ ಸೆಳೆದು ನೆನಪಿಸಿದಳು. ಆತ ‘ಹೊ’ ಎಂದ. ..ನನ್ನ ಕಥೆಯ ನಾಯಕನೊಂದಿಗೇ ಮಾತಾಡಬೇಕಾಗಿ ಬಂದಿದ್ದರಿಂದ ಮಾತುಗಳಿಗಾಗಿ ತಡವರಿಸಿದೆ. ಕ್ರಾಂತಿ ಎಂಬ ಶೀರ್ಷಿಕೆಯಡಿ ಉಡುಪಿ ಹೋಟಲ ಮಾಸಾಲೆ ದೋಸೆ ಕಡೆ ಗ್ರಾಮದ ಗಮನವನ್ನು ಸೆಳೆಯುವುದರ ಮೂಲಕ ಬದಲಾವಣೆಗೆ ಕಾರಣನಾಗುವ ಯುವಕ ಪಾತ್ರ ಅದ್ದಗಿತ್ತು. +“ಶಿವ ಪೂಜೆ ಕೊಟ್ರ ಗೌಡ್ರು ಜೀವ ಬಿಡೋ ಒಂದು ಗಳಿಗೆ ಮೊದಲು ಹೋಟ್ಲಿಂದ ಮಸಾಲೆ ತರಿಸ್ಕೊಂಡಿದ್ರಂತೆ ಹೌದೆ?” ಎಂದು ರಘು ನನ್ನ ಕೇಳಿದ. +ನನಗೆ ಆಶ್ಚರ್ಯವಾಯಿತು. +ಶಿವಪೂಜೆ ಕೊಟ್ರ ಗೌಡ ನಮ್ಮ ಮನೆತನಕ್ಕೆ ಅಷ್ಟು ದೂರದವನೇನೂ ಅಲ್ಲ. ಆಸ್ತಿ ಅಂತಸ್ತು ಕಾರಣದಿಂದ ಊರಿಗಿಂತ ಭಿನ್ನವಾಗಿ ಊಳಿದ ಅವರು ತಮ್ಮ ಇಳಿವಯಸ್ಸಿನಲ್ಲಿ ಹೆಂಡತಿ ಮಕ್ಕಳು ಸೊಸೆಯರಿಂದ ಬೇಬಿಷ್ಠೆಗೊಳಗಾಗಿದ್ದರೆಂದು ಕೇಳಿದ್ದೆ. ಲಕ್ವಾ ಹೊಡೆದು ಮಂಚಕ್ಕೆ ಸೋಪ್ತಿಯಾಗುವ ಮೊದಲು ಅವರು ಸಂಜೆಯಾಯಿತೆಂದರೆ ಜೀತದಾಳಿನಿಂದ ಬಾಡಿಗೆ ಪಡೆದ ಗೊಂಗಡಿಯೊಳಗೆ ಮರೆ ಮಾಚಿಕೊಂಡು ಉಡುಪಿ ಹೋಟಲನ್ನು ಹಿಂಬಾಗಿಲಿಂದ ಪ್ರವೇಶಿಸಿ ಗುಟ್ಟಾಗಿ ದೋಸೆ ತಿಂದು ಉದ್ರಿ ಬರೆಸಿ ಹೋಗುತ್ತಿದ್ದರೆಂಬುದು ಗೊತ್ತಾದದ್ದೇ ಅವರು ಲಿಂಗೈಕ್ಯರಾದ ಮೇಲೆ … +” ನಿಮ್ಮ ತಂದೆಯವರು ಇಷ್ಟು ದೋಸೆ ತಿಂದದ್ದು ಇಷ್ಟು ಕೊಡಬೇಕಾಗಿದೆ ಮಹಾರಾಯ್ರೇ” ಎಂದು ಮನೇ ಬಾಗಿಲಿಗೇ ಬಂದ ಭಟ್ಟರನ್ನು ಗೌಡರ ಮನೆಮಂದಿಎಲ್ಲ ಭೂತ ಬಿಡಿಸಿದ್ದು ಜಗಜ್ಜಾಹಿರಾದ ಮೇಲೆಯೇ. ಜೀತದಾಳು ಲಸುಮ ದೊಡ್ಡ ಗೌಡರಿಗೆ ತನ್ನ ಗೊಂಗಡಿ ಬಾಡಿಗೆ ಕೊಟ್ಟಿದ್ದ ಮೊತ್ತವನ್ನು ಹೇಗೆ ವಸೂಲು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಭಟ್ಟರು ಕೋರ್ಟಿನಲ್ಲಿ ದಾವೆ ಹಾಕಿರುವರಂತೆ… ಐನೂರು ಚಿಲ್ಲರೆ ಮುಖದ ಮೇಲೆ ಎಸೆಯದಿದ್ದರೆ ಈ ಪೀಕಲಾಟವೇ ಇರುತ್ತಿರಲಿಲ್ಲವೆಂದು ಪ್ರತಿವಾದಿಗಳಿಗೆ ವಕೀಲರು ಬುದ್ಧಿ ಹೇಳಿದ್ದೂ ಉಂಟಂತೆ… ಕೊಡಗಿನ ಅಂತಿಮ ಅರಸ ಚಿಕ್ಕವೀರ ರಾಜೇಂದ್ರ ತಾನು ಭ್ರಷ್ಟನಾದ ಮೇಲೆ ಈಸ್ಟ್ ಇಂಡಿಯಾ ಕಂಪನಿ ಮೇಲೆ ಹೂಡಿದ್ದ ಖಟ್ಲೆಗೂ ಇದಕ್ಕೂ ಅಷ್ಟು ವ್ಯತ್ಯಾಸವಿಲ್ಲವೆಂದು ವಾದ ವಿವಾದ ಕೇಳುವಾಗ ಮುನಸೀಫರು ಸ್ವತಃ ಅಭಿಪ್ರಾಯ ಪಟ್ಟರಂತೆ… ಖಟ್ಲೆ ನಡೆಯುತ್ತಿರುವಾಗ ಶಿವಪೂಜೆ ಗೌಡರೂ; ಮಸಾಲ ದೋಸೆಯೂ ಎಂಬೊಂದು ಲೇಖನವನ್ನು ಕಮಲಾಕರ ಖಡ್ಗ ಪ್ರಕಟಿಸಿ ಸದರೀ ಗ್ರಾಮದಲ್ಲಿ ಹೊಸ ಜಿಜ್ಞಾಸೆಯನ್ನೇ ಸೃಷ್ಟಿಸಿತು ಎಂಬುದು ಗಮನಾರ್ಹ ಸಂಗತಿ. ಐಬಿ ಹತ್ತಿರ ಡ್ರಾಗನ್ ಹಾರ್ಟ್ ಬಾರಂಡ್ರೆಸ್ಟೋರೆಂಟ್ ಸುರು ಮಾಡಿದ ಮೂರನೆ ವಾರದಲ್ಲಿಯೇ ಶಿವಪೂಜಾ ಸುರೇಶ ಗೌಡರು “ಲೇ ಕಮಲಾಕರ… ನಮ್ತಂದ್ಯೋರು ಮಸಾಲೆ ತಿಂತಿದ್ರೂಂತ ಸುಳ್ಳು ಬರ್ದು ಮರ್ಯಾದೆ ಕಳಿತೀಯೇನೊ… ಡೆಫಮೇಷನ್ ಕೇಸ್ ಹಾಕಿ ಸೊಂಟ ಮುರೀತೀನಿ ನೋಡ್ತಿರು” ಎಂದು ರೋಫ್ ಹಾಕಿ ಹೋದನು. ಅದಕ್ಕೆ ಕಮಲಾಕರ ಎಳ್ಳಷ್ಟೂ ವಿಚಲಿತನಾಗಲಿಲ್ಲ. ಮರುದಿನ … ಖಡ್ಗದ ಮುಖಪುಟದಲ್ಲಿ ಬಳ್ಳಾರಿ ಬ್ರೀಜ್ ಹೋಟಲಲ್ಲಿ ಶಿವಪೂಜೆ ಸುರೇಶ್ ಗೌಡರು ಬೀಫ್ ತಿನ್ನುತ್ತಿರುವ ಫೋಟೋ ಪ್ರಕಟವಾಗಿ ಬಿಡಬೇಕೆ? ಆ ಫೋಟೊ ಇದ್ದ ಸಂಚಿಕೆ ಕಾಳಸಂತೆಯಲ್ಲಿ ಮಾರಾಟವಾಗಿದ್ದೊಂದು ಸಣ್ಣ ಪತ್ರಿಗೆಗಳ ಇತಿಹಾಸ ಸಂಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿ. ಅವನಿಗೆ ಹೆಣ್ಣು ಕೊಟ್ಟ ಮಾವ ಮುನ್ನೂರು ಮೈಲಿ ದೂರದೂರಿಂದ ಬಿರುಗಾಳಿಯಂತೆ ಬಂದು ಅತ್ತು ರಂಪಾಟ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯಾದ ತಮ್ಮ ಮಗಳನ್ನು ಸಂತೈಸುತ್ತ “ನೀನೂದ್ಕೊಂಡಿದ್ದುದು ನೋಡಿ ಕೋಳಿ ತಿಂತಿರ್ಭವುದೆಂದ್ಕೊಂಡಿದ್ನೇ ಹೊರ್ತು ಈ ದೇಶದ ಪವಿತ್ರ ಪ್ರಾಣಿಯನ್ನೂ ತಿಂತಿ ಅಂತ ಅಂದ್ಕೊಂಡಿರ್‍ಲಿಲ್ವೋ ಅಳಿಯನೆಂಬ ಮುಠ್ಥಾಳ, ನಿನ್ ತಂದೆಯವರು ಭಟ್ರೋಟ್ಳ ಮಸಾಲೆ ತಿಂತಿದ್ಕೇನೆ ಅಷ್ಟು ಎಗರಾಡ್ತಿದ್ಯಲ್ಲಾ… ಈಗವ್ರು ಬದುಕಿದ್ರೆ ನಿಂಗ್ಯಾವ ಶಿಕ್ಷೆ ಕೊಡ್ತಿದ್ರೋ… ಇನ್ನು ನಿನ್ಗೂ ನನ್ ಮಗ್ಳಿಗೂ ಯಾವ ಸಂಬಂಧ ಇಲ್ಲ… ದೈವರ್ಸ್ ಫಾರಂ ಕಳಿಸ್ತೀನಿ ಮುಕ್ಳಿಬಾಯಿ ಮುಚ್ಕೊಂಡು ಸೈನ್ ಹಾಕಿ ಕಳಿಸು…” ಎಂದು ಮೊದಲೇ ರಾಜಕೀಯ ವರ್ಚಸ್ಸಿನ ವ್ಯಕ್ತಿಯಾದ ಅವರು ಮಗಳು; ಮೊಮ್ಮಕ್ಕಳೊಂದಿಗೆ ಪ್ರಾಯಶ್ತಿತ್ತಕ್ಕೆಂದು ಲಿಂಗಾನಂದ ಸ್ವಾಮಿಗಳ ಆಶ್ರಮವಿರುವ ಕಲಘಟಗಿ ಕಡೆಗೆ ಹೋದರು. +ಇದೆಲ್ಲ ನಡೆಯುವುದಕ್ಕೂ ಮೊದಲೇ ಅಂದರೆ ಕೊಟ್ರಗಊಡರು ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿರುವಾಗ ಎಷ್ಟು ಹೊತ್ತಾದರೂ ಪ್ರಾಣ ಹೋಗಲಿಲ್ಲವೆಂಬುದಾಗಿ ಕೇಳಿದ್ದೆನೆಯೆ ಹೊರತು ಅಂತಿಮ ಕ್ಷಣದಲ್ಲಿ ಮಸಾಲೆ ಬಯಸಿದ್ದರೆಂಬುದಲ್ಲ… ಕೇವಲ ಮುನ್ನೂರಾ ನಲವತ್ತೆಂಟು ಗಜಗಳಷ್ಟು ದೂರವಿರುವ ಮನೆಯ ವಿದ್ಯಮಾನಗಳು ಭೂತಗನ್ನಡಿ ಹಿಡಿದುಕೊಂಡು ಕೂತಿರುವ ನನಗೆ ಗೊತ್ತಾಗುವುದಕ್ಕಿಂತ ಮೊದಲು ನೂರಾರು ಮೈಲಿ ದೂರದ ನಗರದಲ್ಲಿರುವ ನವ ವಿವಾಹಿತ ತರುಣನಾದ ರಘುರಾಮನೆಂಬ ಮಹಾಶಯನಿಗೆ ಹೇಗೆ ತಿಳಿಯಲು ಸಾಧ್ಯ? ಎಂದು ಮಂಡೆ ತುರಿಸಿಕೊಂಡೆ. +ಅನಸೂಯ ತಂದುಕೊಟ್ಟ ಕಾಫಿ ಕುಡಿಯುತ್ತಿರುವಾಗ್ಗೆ ಅವನೆ ದೋಸೆಯನ್ನು ತನ್ನ ಚಪ್ಪಟೆ ಆತ್ಮಕ್ಕೆ ಹೋಲಿಸಿಕೊಂಡ. ಈ ದೇಶದ ದುಡಿಯುವ ಪ್ರತಿಯೊಬ್ಬರಿಗೆ ಕಡಿಮೆ ಬೆಲೆಯ ರುಚಿರುಚಿಯಾದ ಮಸಾಲೆ ದೋಸೆಯನ್ನು ಸಪಲೈ ಮಾಡುವಂಥ ಘನ ಸರಕಾರ ಎಂದು ಬರುವುದೋ ಎಂದು ನಿಟ್ಟುಸಿರು ಬಿಟ್ಟ. ಅನಸೂಯ ಒಳಗೆ ಹೋದೊಡನೆ ಹತ್ತಿರ ಜರುಗಿ … “ನಿಮ್ಗಿನ್ನು ಗೊತ್ತಿಲ್ಲ… ದಿನಕ್ಕೊಂದು ಮಸಾಲೆ ತಿನ್ನೋರ್ಗೆ ಕಾಯಿಲೆ ಕಸಾಲೆ ಬರೊಲ್ಲ … ಶೀಘ್ರ ಸ್ಖಲನ, ಸ್ವಪ್ನಸ್ಖಲನ ಮೊದಲಾದ ಲೈಂಗಿಕ ದೌರ್ಬಲ್ಯಗಳು ದೂರ ಆಗ್ತವೆ” ಎಂದು ಪಿಸುಗುಟ್ಟಿದ. +ಅದನ್ನು ಕೇಳಿ ನನಗೊಂಥರಾ ಆಯಿತು. ನನಗರಿವಿಲ್ಲದಂತೆ ನಾನು ಉಗುಳು ನುಂಗಿದ್ದನ್ನು ಗ್ರಹಿಸಿದ ಆ ಸೂಕ್ಷ್ಮಮತಿ ” ಅನೂ … ಅನೂ … ಅರ್ಧ ಕೇಜೀದು ದೋಸೆ ಪಾಕೆಟ್ ತಗೊಂದ್ಬಾ” ಎಂದು ಕೂಗಿದ… ಓಣಿಗೆಲ್ಲ ಕೇಳಿಸುವಂತೆ… +ಆಕೆ ತಂದುಕೊಡುತ್ತ, “ಸರಿ ಹೋಯ್ತು ತಗೊಳ್ಳಿ” ಎಂದಳು. +ಅದೊಂದು ಆಕರ್ಷಕವೂ ಬಣ್ಣ ಬಣ್ಣದ ಪಾಕೆಟ್ಟೂ ಅದಾಗಿತ್ತು… :ಎಚ್ಚರಿಕೆಯಿಂದ ಓದ್ಕೊಳ್ಳಿ ದೋಸೆ ತಯಾರಿಕೆಗೆ ಸಂಬಂಧಪಟ್ಟ ಲಿಟರೇಚರ್ ದಕ್ಷಿಣ ಭಾರತದ ಐದು ಭಾಷೆಗಳಲ್ಲಿದೆ …” ಎಂದು ಸೂಚಿಸಿದ. +ಓದುತ್ತಿದ್ದಂತೆ ನನಗೆ ಆಶ್ಚರ್ಯವಾಯಿತು. +ಅನಸೂಯ ಹೊಸ ಸೀರೆ ಉಟ್ಟು ಲಕ್ಷ್ಣಣವಾಗಿ ಗಂಡನ ಪಕ್ಕ ಕೂತುಕೊಂಡು- +“ಹೇಗಿದ್ದಾನ್ರೀ? … ನಿಮ್ಮ ಫ್ರೆಂಡು … ನಮ್ಮೆಜಮಾನರನ್ನು ಪರಿಚಯ ಮಾಡಿಸೋಣಾಂದ್ರೆ ಅವನು ಸಿಕ್ಕೇ ಇಲ್ಲ … ಕದ್ದು ಮುಚ್ಚಿ ಓಡಾಡ್ತಿದ್ದಾನೆ. .. ಬೆಂಗಳೂರಿಗೆ ಬಂದ್ರೆ ಬಂದು ನಮ್ಮನೇಲಿರೊದಕ್ಕೆ ಹೇಳಿ … ನೀವೂ ಅಷ್ಟೆ … ಸುಮ್ನೆ ಲಾಡ್ಗಿಗೆ ಹಣ ಸುರಿಯೋದ್ಯಾಕೆ?” ಎಂದು ಹೇಳಿ ವಿಳಾಸ ಇರೋ ಕಾರ್ಡು. ಫೋನು ನಂಬರು ಕೊಟ್ಟಳು. +ಶಾಮನ ಬಗ್ಗೆ ಏನೂಂತ ಪ್ರತಿಕ್ರಿಯಿಸುವುದು? ಉತ್ತರ ರೂಪದಲ್ಲಿ ನಿಟ್ಟುಸಿರು ಬಿಟ್ಟೆ. +ಹನ್ನೊಂದು ಗಂಟೆಯ ಬಸ್ಸಿಗೆ ಹೊರಡಲಿದ್ದ ಅವರಿಗೆ ಶುಭ ಹಾರೈಸಿ ದೋಸೆ ಪಾಕೆಟ್ಟಿನೊಂದಿಗೆ ಮನೆ ದಾಟಿದೆ. +ರಘುರಾಮ ವೆರ್ರಿ ಇಂಟರೆಸ್ಟಿಂಗ್ ಅಂಡ್ ಜನರಸ್ ಪರ್ಸನ್ ಅನಿಸಿತು. ದೋಸೆಯ ಕಲ್ಪನೆ ಆತನ ಭವಿಷ್ಯವನ್ನು ಹೇಗೆ ರೂಪಿಸುವುದೋ ಕಾದು ನೋಡಬೇಕು! ಒಟ್ಟಿನಲ್ಲಿ ಅನಸೂಯಳಿಗೆ ಒಳ್ಳೇ ಗಂಡ ದೊರಕಿದ್ದಾನೆ… ದೇವರು ಅವರಿಬ್ಬರನ್ನು ಸುಖವಾಗಿಡಬೇಕು… +ಬೃಂದಾವನ ದಾಟುತ್ತಿರುವಾಗ ಎದುರಾದ ಶಾಮ ನನ್ನ ಕಡೆಗೊಮ್ಮೆ; ಕೈಲಿದ್ದ ದೋಸೆ ಪಾಕೆಟ್ಟಿನ ಕಡೆಗೊಮ್ಮೆ ನೋಡಿ ನಿಟ್ಟುಸಿರುಬಿಟ್ಟ. ನಿಷೇದಿತ ಪ್ರದೇಶಕ್ಕೆ ಹೋಗಿ ಬಂದಿರುವೆಯಲ್ಲ ಎಂಬಂತೆ ದುರುಗುಟ್ಟಿನೋಡಿದ. ಮೌನವಾಗಿ ಒಳಗೆ ಕರೆದೊಯ್ದ. +ವ್ಯಾಸಪೀಠದ ಮೇಲಿದ್ದ ಕಂದುವರ್ಣದ ಹೆಬ್ಬೊತ್ತಿಗೆಯಲ್ಲಿ ಕಣ್ಣಿಟ್ಟಿದ್ದ ಶಾಸ್ತ್ರಿಗಳು ಮುಖ ಎತ್ತದೇನೆ ಕೂಡ್ರುವಂತೆ ಸೂಚಿಸಿದರು. ಕೂತುಕೊಂಡೆ. ಅನತಿ ದೂರದಲ್ಲಿದ್ದ ಬಾಗಿಲ ಮರೆಯಲ್ಲಿ ಅಲುಮೇಲಮ್ಮ ನಾರುಮಡಿಯೊಳಗೆ ತಮ್ಮಿಡಿ ದೇಹ ಮರೆಮಾಚಿ ಪಿಳಿಪಿಳಿ ಕಣ್ಣು ಬಿಡುತ್ತ ಕೂತುಕೊಂಡರರು. ಇನ್ನೊಂದು ಮೂಲೆಯಲ್ಲಿ ಶಾಮ ಸದ್ವಿನಯಶಾಲಿಯಂತೆ ನ್ಯಾಯಾಧೀಶನೆದುರು ಆರೋಪಿಯಂತೆ ನಿಂತುಕೊಂಡ. ಅಲ್ಲೆ ಒಂದು ಪಕ್ಕ ಬ್ಯಾಂಕ್ ರಿಕ್ರೂಟ್‌ಮೆಂಟ್ ಕಮಿಟಿಯಿಂದ ಬಂದಿದ್ದ ಕವರು ದೇಹವನ್ನರುಸುವ ದ್ರೋಣಾಚಾರ್ಯರ ಆತ್ಮದಂತೆ ವಿಲವಿಲನೆ ಒದ್ದಾಡುತ್ತಿತ್ತು. +ತೆಂಗಿನಕಾಯಿ ಅಭಿಮಂತ್ರಿಸಿ ಕಟ್ಟಿದ್ದ ಮಾಡಿನಡಿ ಕೂತಿದ್ದ ಬೆಕ್ಕು ಮ್ಯಾಂವ್ (ಮಾತಾಡ್ರಯ್ಯ ಯಾಕೀ ಮೌನ?) ಎಂದಿತು. ಅಲುಮೇಲಮ್ಮ ನಿಮಿಷಕ್ಕೊಂದಾರ್ತಿ ಬಿಡುತ್ತಿದ್ದ ನಿಟ್ಟುಸಿರು ಗೋಡೆಗಳಿಗೆಟೆದು ಮಾರ್ದನಿಸುತ್ತಿತ್ತು. ಶಾಮ ಕ್ರಮೇಣ ಕಂಪನಕ್ಕೀಡಾದುದನ್ನು ಗ್ರಹಿಸಿದೆ. ಇಂಥ ಹಲವು ಚಕ್ಕುಬಂದಿಗಳ ನಡುವೆ ಮ್ಲಾನವದನರಾಗಿದ್ದ ಶಾಸ್ತ್ರಿಗಳ ನೋಡಿದೆ… ಚರ್ಮ ಮಡಚಿಕೊಂಡು ಮೂಳೆಗಟ್ಟಿರುವ ಕೃಶ ಶರೀರದ ಮೇಲೆ ವೃದ್ಧಾಪ್ಯದ ಕೇತುಗಳಂತೆ ಮಿಸುಗುತ್ತಿರುವ ರೋಮಾವಳಿ. ಗ್ರಂಥ ಪುಟವನ್ನು ಖಚಿತವಾಗಿ ತೆರೆಯಲಾಗದ ದುರ್ಬಲ ಬೆರಳುಗಳು… ಕಂಣನ್ನು ಕಿರಿದಾತಿ ಕಿರಿದು ಮಾಡಿಕೊಂಡು ಅಕ್ಷರಗಳನ್ನು ಗುರುತಿಸುವ ರೀತಿಯೇ ಅನನ್ಯವಾಗಿ ಕಂಡಿತು. ಸೊಸೆಗಾಗಿಯೋ; ಮೊಮ್ಮಗನಿಗಾಗಿಯೋ ಮೃತ್ಯುವನ್ನು ನೂಕುತ್ತಿರುವವರಂತೆ ಕಂಡರು. +“ಯಾಕೆ ಶಾಸ್ತ್ರಿಗಳೇ ಬರ್ಹೇಳಿದಿರಂತೆ!: ಮೌನ ಅಸಹನೀಯವಾಗಿ ನಾನೇ ನುಡಿದೆ. +ನೀನು ಹೀಗೆ ಮಾತಾಡಿ ಯಜಮಾನರ ಮೌನ ಕದಡಬಾರದಿತ್ತೆಂಬಂತೆ ಶಾಮ ನನ್ನ ಕಡೆ ವಾರೆಗಣಿಂದ ನೋಡಿದ. +ನೀನು ಮಾಡಿದ್ದು ಸರಿ ಎಂಬಂತೆ ಪರದೆ ಮರೆಯಿಂದ ಅಲುಮೇಲಮ್ಮನವರು ನನ್ನ ಕಡೆ ನೋಡಿದರು. +ಶಾಸ್ತ್ರಿಗಳು ನಿಧಾನವಾಗಿ ಹೊತ್ತಿಗೆಯಿಂದ ಮುಖ ಎತ್ತಿ ನನ್ನ ಕಡೆ ವಶೀಕರಣ ಮಾಡಲಿರುವವರಂತೆ ಒಂಚಣ ನೋಡಿದರು. ನಿಡುಸುಯ್ದರು. ವರ್ತಮಾನದ ಮೂರು ತಿಂಗಳ ಮಗುವಿನಂತಿರುವ ಅವರು ಏನು ನುಡಿವರೋ? ಏನೋ? +“ಯಾವ ಘನಂದಾರಿ ಕೆಲಸ ಕಡಿಯೋಕೆ ಲಾಂಗ್ ಲೀವ್ ಹಾಕ್ತಿದ್ದೀಯಯ್ಯಾ? … ಕೈ ಕಾಲು ಸುಮ್ನೆ ಇಟ್ಕೊಳ್ಳೊ ಹುಡುಗನಲ್ಲ ನೀನು! ಇಷ್ಟೇ ಇಷ್ಟು ತಲೆನೋವಾದೋನು ನೀನು ಇನ್ನು ಊರಿಗೆ ಹೋದಮೇಲೆ ಏನೇನು ಮಾಡ್ತೀಯೋ! ಯಾರಾರ್ನ ಎದುರಾಕ್ಕೊಳ್ತೀಯೋ ಆ ದೇವ್ರಿಗೇ ಗೊತ್ತು!”… ಎಂದು ಬಿಡಿಸಿ ಸಾಹೇಬರು ಪಿತೃ ಸ್ತಾನದಲ್ಲಿ ಕುಂತು ಹಿತವಚನ ನುಡಿದು ರಜೆ ಮುಂಜೂರು ಮಾಡಿದ್ದು ನೆನಪಾಯಿತು. +“ಮಾ ಬಡಿನಿ ಮಾಲಮಾದಿಗೋಳ್ಳು ಉಂಡೇ ಕೇರಿಕಿ ತೀಸ್ಕೋ ಪೋಯಿನವಾಡು ಮಾ ಚೇತಿಕಿ ದೊರಕ್ಕ ಪೋತಾಡಾ… ವಾಡಂತು ಚೂಸ್ಕೊಂಟಾಮು… ರೇಪೋ ಎಲ್ಲುಂಡೊ ವಾಡಿಕಿ ಪೂಜಾಲು ಪುನಸ್ಕಾರಾಲು ಜರಿಪಿಸ್ತಾಮು” ಎಂದು ಊರಿನ ಮುಖಿಯಾ ಜಗನ್ನಾಥ ರೆಡ್ಡಿ ಶಪಥ ಮಾಡಿದ್ದರಿಂದಲ್ಲವೆ ತಾನು ಅವರಿವರ ಮಾತಿಗೆ ಕಟ್ಟು ಬಿದ್ದು ಲಾಂಗ್ ಲೋವ್ ಅಪ್ಲೆ ಮಾಡಿದ್ದು. +ಅಲ್ಲಿಯದು ಒಂದು ನಮೂನಿ ಬದುಕು! ಇಲ್ಲಿಯದು ಇನ್ನೊಂದು ನಮೂನಿ ಬದುಕು. ಸನಾತನತೆಯನ್ನು ಪೊರೆದು ಪೊಷಿಸುತ್ತಿರುವ ಆ ಜಮೀನ್ದಾರರ ಊರುಗಳಲ್ಲಿದ್ದಿದ್ದರೆ ಶಾಸ್ತ್ರಿಗ್ಳು ಇಲ್ಲಿಗಿಂತ ಹೆಚ್ಚು ಸುಖವಾಗಿರುತ್ತಿದ್ದರೆಂದುಕೊಂಡೆ. +ಕಣ್ಸನ್ನೆಗೆ ಮಣಿದು ಶಾಮ ಲಕೋಟೆಯನ್ನು ಅವರ ಕೈಗೆ ಕೊಟ್ಟ. +ಅದರಲ್ಲಿದ್ದುದು ಅವರಿಗೆ ಅರ್ಥವಾದರೆ ತಾನೆ! +ನನಗೆ ಓದಿ ಹೇಳುವಂತೆ ಸೂಚಿಸಿದರು. ಓದಿ ಟೀಕಾತಾತ್ಪರ್ಯ ಸಹಿತ ವಿವರಿಸಿದೆ. ದಿನಾಂಕ ಸಮಯ ಸಮಯ ಎಲ್ಲವನ್ನು ಪಂಚಾಂಗದ ಭಾಷೆಗೆ ಪರಿವತಿಸಿ ಗುಣಿಸಿ ಭಾಗಿಸಿ ಕೂಡಿ ಕಳೆದು ಒಂದು ನಿಟ್ಟುಸಿರು ಬಿಟ್ಟರು. +ಲಕೋಟೆ ಕೈಗೆಟಗಿದ ತೇದಿ ಸಮಯ ಇತ್ಯಾದಿ ಎಲ್ಲವನ್ನೂ ಸಹ ಬೇರೆ. ದಿನಕ್ಕೆ ಹೋದರಾಗದೆ? ಆ ದಿನವೇ ಹೋಗಬೇಕೆ? ಒಂದು ದಿನ ಮೊದಲು ಹೋಗಿ ಬಂದರಾಗದೆ? ಇತ್ಯಾದಿ ಇತ್ಯಾದಿ ಪ್ರಶ್ನೆಗಳು, ಸಂದೇಹಗಳು! ಅವಕ್ಕೆಲ್ಲ ಏನೆಂದು ಉತ್ತರಿಸುವುದು! ಆ ದಿನ ಹಾಜರಿರಬೇಕಾದ ಅಗತ್ಯ ತಿಳಿಸಿದೆ. ಇರಲಿಕ್ಕೊಂದು ಮನೆ ಬಿಟ್ಟರೆ ಬೇರೆ ಇರುವುದಾದರೂ ಏನು? ಚರಾಸ್ತಿ ಎಂದರೆ ಇದೊಂದೆ ಚಿರಾಸ್ತಿ ಎಂದರೆ ಇದೊಂದೆ. ಮದುವೆ ಆಗಲಿರುವ ಹುಡುಗನಿಗೊಂದು ನೌಕರಿ ಇರದಿದ್ದರೆ ಹೇಗಂತ. +ಅದಕ್ಕೂ ಒಂದೆರಡು ದಿವಸ ಮೊದಲು ಹೊಸಪೇಟೆಯ ಹೆಣ್ಣಿನ ಕಡೆಯವರಿಂದಲೂ ಬಂದಿದ್ದ ಪತ್ರದಲಿ ಇದನ್ನೇ ಪ್ರಸ್ತಾಪಿಸಲಾಗಿತ್ತಂತೆ. +ಸರ್ಕಾರಿ ನೌಕರಿ ಸೇರೋದು ನಿನಗಿಷ್ಟ ಇದೆಯಾ ಎಂದು ಶಾಸ್ತ್ರಿಗಳು ಶಾಮನನ್ನು ವಿಚಾರಿಸಿದರು. ಅವನೆ ತಲೆ ಅಲ್ಲಾಡಿಸಿದ್ದು ಕಂಡು ಕೋಪಗೊಂಡರು. ಒಂದಿಷ್ಟು ವೈದಿಕ ಕಲ್ತುಕೊಂಡಿದ್ದ್ರೆ ಗೌರವದಿಂದ ಬದುಕಬಹುದಿತ್ತಾ? ಎಂದು ಶುರು ಮಾಡಿದರು. ಗತಕಾಲವನ್ನು ಕೆದರುತ್ತಲೇ ಹೋದರು. ಕೆದರಿದ ಆಳದಲ್ಲಿ ಶಾಮನನ್ನು ಹೂತು ಹಾಕುತ್ತಿರುವವರಂತೆ ಕಂಡರು. ರಾಹು ವಾಸ ಮಾಡುತ್ತಿರುವ ದಿಕ್ಕಿನಲ್ಲಿರೋ ನಗರಕ್ಕೆ ಹೇಗೆ ತಮ್ಮ ಮೊಮ್ಮಗನನ್ನು ಕಳಿಸುವುದೆಂದೂ; ಅದೂ ಅಲದೆ ನಾಮ ನಕ್ಷತ್ರ ಇರೋ ದಿನ ತ್ರಯೋದಶಿ ಕೂಡ … ಅಪ್ಪಿತಪ್ಪಿ ಹಿರಿಯರೂ; ಜ್ಯೋತಿಷ್ಯಾಸ್ತ್ರವೇ ಮೊದಲಾದ ಗ್ರಂಥಗಳು ಖಡಾಖಂಡಿತವಾಗಿ ಹೇಳಿರುವುದೆಂದು ಅವರು ಮಂಡಿಸಿದ ಹೊಸ ವ್ಯಾಖ್ಯಾನದಿಂದಾಗಿ ನಖಶಿಖಾಂತ ಕಂಪಿಸಿದೆ. ಇನ್ನು ಇವರನ್ನು ಒಪ್ಪಿಸುವುದು ಅಸಾಧ್ಯವೆಂಬ ಭಾವನೆ ಮೂಡಿತು. +“ಶಾಸ್ತ್ರಿಗಳೇ ನೀವು ದೊಡ್ಡವರು … ತಿಳಿದಂಥೋರು … ಇವೆಲ್ಲದರ ಜೊತೆಗೆ ಅವನ ಭವಿಷ್ಯದ ಬಗ್ಗೆ ಯೋಚಿಸೋದೂ ಮುಖ್ಯ … ಮತ್ತೊಂದು ಇಂಟ್ರೂ ಬರ್ತದೆಂದು ನಂಬ್ಲಿಕ್ಕಾಗದು … ನೀವು ಮಾಡಿದ ಪುಣ್ಯದಿಂದ ಹೇಗೋ ಬಂದಿದೆ… ಇದರ ಮೇಲೆ ನಿಮ್ಮಿಷ್ಟ” ಎಂದು ನಾನು ನಿಟ್ಟುಸಿರು ಬಿಟ್ಟೆ. +“ಲೋ ಈ ಸಾರಿ ಏನಾದ್ರು ಪಂಚಾಂಗ ಗಿಂಚಾಂಗಾಂತ ಮಿಸ್ ಮಾಡ್ಕೊಂಡಿ ಅಂದ್ರೆ ನೀನು ಜನ್ಮದಲ್ಲೇ ಉದ್ಧಾರಾಗೋಲ್ಲ” ಎಂದು ನಾನು ಅವನಿಗೆ ಹಿಂದಿನ ದಿನವೇ ಹೇಳಿದ್ದನ್ನು ಕಣ್ಸನ್ನೆ ಮೂಲಕ ನೆನಪಿಸಿಕೊಟ್ಟೆ. +ದೇಹದ ಸಮಸ್ತ ಶಕ್ತಿಯಾನ್ನು ನಾಲಿಗೆಗೆ ತಂದುಕೊಂಡಂತವನಂತೆ ಅವನು – +” ಇಲ್ಲ ತಾತ… ಇದೊಡ್ಸಾರಿ ಒಪ್ಕೊಂಡು ಸಹಕರಿಸಿ … ನಾನು ಇಂಟ್ರೂಗೆ ಹೊಗ್ಲೇಬೇಕು” ಎಂದು ಅವನು ನುಡಿದಿದದ್ದು ನನಗೆ ಆಶ್ಚರ್ಯ ಮತ್ತು ಗಾಬರಿ ಒಟ್ಟೊಟ್ಟೊಗೆ ಆದವು. +ಶಾಸ್ರಿಗಳು ಅಸಹಾಯಕತೆಯಿಂದ ನೋಡಿದರು. +ಪರದೆಯಿಂದೀಚೆ ಬಂದು ಅಲುಮೇಲಮ್ಮ ಮಾವನವ್ರೇ … ಕಾಲ ಬದಲಾಗಿದೆ … ಅದ್ಕೆ ತಕ್ಕಂತೆ ಹೊಂದ್ಕೊಂಡ್ರೇನೆ ಬದುಕು. … ದಯವಿಟ್ಟು ತುಂಬು ಹೃದಯದಿಂದ ಮಗೂಗೆ ಆಶೀರ್ವಾದ ಮಾಡಿ ಕಳಿಸಿ … ನನ್ ಮಗ್ನೂ ನಾಲ್ಕು ಮಂದಿ ಮಕ್ಳಂಗೆ ಸುಖವಾವಿ ಬಾಳಬೇಕು… ದೇವರಿಟ್ಟಂತಾಗ್ತದೆ” ಎಂದದ್ದು ಕೂಡ ಬಹುದೊಡ್ಡ ಪವಾಡವೇ ಎಂದುಕೊಂಡೆ … +“ಆಯ್ತು” ಎಂದವರೆ ಶಾಸ್ತ್ರಿಗಳು ಸೀದ ಒಳಗಡೆ ನಡೆದು ಮಂಚದ ಮೇಲೆ ಒರಗಿಕೊಂಡರು. ಅವ್ರು ಮರುಗುವಾಗ ಕೀರ್ಕು ಕೀರ್ಕು ಎಂಬ ಸದ್ದು ಬಂತು. +ಶಾಸ್ತ್ರಿಗಳು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿರುವುದರಿಂದ ಅವರಿಬ್ಬರ ಪೈಕಿ ಯಾರ ಮುಖವೂ ಗೆಲುವಾಗಿರಲಿಲ್ಲ … ಆತಂಕದ ಕ್ಷಣಗಳನ್ನು ಎಣಿಸುತ್ತಿರುವವರಂತೆ ಅವರು ಗೋಚರಿಸಿದರು. ಶಾಮನ ಭುಜದ ಮೇಲೆ ಕೈಯಿಟ್ಟು ಧೈರ್ಯ ಹೇಳಿದೆ. +ಬೃಂದಾವನ ಕಟ್ಟೆ ದಾಟುವಾಗ ಬೇರೊಂದು ಬಾಗಿಲಿಂದ ಬಂದ ಅಲುಮೇಲಮ್ಮ ನನ್ನ ಕೈ ಹಿಡಿದು ಕಂಣಲ್ಲಿ ನೀರು ತಂದುಕೊಂಡರು. +“ನೀನೂ ನನ್ನ ಮಗ ಇದ್ದಂಗೆ ಕಣಪ್ಪ … ಶಿವ ಅಂದುಕೊಂಡಂತಾಗಲಿ … ಸರ್ಕಾರಿ ನೌಕರಿ ಸಿಗದಿದ್ರೆ ಅವನು ಸಂಸಾರ ತೂಗಿಸೋದಾದ್ರು ಹ್ಯಾಗೆ?” ಎಂದು ಕಣ್ಣೊರೊಸಿಕೊಂಡು, +ಇನ್ನೊಬ್ಬ ಮಗ ಇದ್ದಿದ್ರೆ ವೈದಿಕ ಕಲಿಸಬೌದಿತ್ತಪ್ಪಾ … ಆದ್ರೆ ಏನು ಮಾಡೋದು ಹೇಳು!” ಎಂದು ಗದ್ಗದಿತಳಾದಳು. +ಮಂಗಳಾರತಿ ಕೊಟ್ಟರೆ ಉಷ್ಣ; ತೀರ್ಥ ಕೊಟ್ಟರೆ ನೆಗಡಿ ಎಂಬ ಸ್ವಭಾವದ ನಾನು ಒಂದು ಕ್ಷಣ ವಿಚಲಿತನಾದೆ. ಕಂಠ ಕಟ್ಟಿ ಬಂದು +“ನೀವೇನು ಚಿಂತೆ ಮಾಡ್ಬೇಡ್ರಮ್ಮಾ … ದೇವ್ರಿದ್ದಾನೆ” ಎಂದು ಅವರ ಭಾಷೆಯಲ್ಲಿ ಹೇಳಿದೆ. +ಅಷ್ಟು ದೂರದವರೆಗೆ ಶಾಮ ನನ್ನ ಜೊತೆಗೆ ಬಂದ. “ನನ್ನ ಜೊತೆ ನೀನೂ ಬರಬೇಕು” ಎಂದು ನನ್ನನ್ನು ಪೇಚಿನಲ್ಲಿ ಸಿಕ್ಕಿಸಿದ. ಉತ್ತರಿಸಲಾಗದೆ ಉಗುಳು ನುಂಗಿದೆ. ತ್ರಯೋದಶಿ ದಿನವೇ ನಾನು ನನ್ನ ಮೇಲಿನ ಸಂಪೂರ್ಣ ಅಧಿಕಾರದಿಂದ ದೂರವಾಗುತ್ತಿರುವುದು. ರಜೆ ಅಂದಿಗೆ ಮುಗಿಯುತ್ತಿದೆ. “ಆ ರೋಜು ನುವ್ವು ಡ್ಯೂಟಿಕಿ ರಿಪೋರ್ಟ್ ಚೇಸುಕುಂಟೇನೇ ತೆಸರಿ. ಲೇಕಪೋತೆ ಉದ್ಯೋಗಂ ಪೋಗೊಟ್ಟುಕೊಂಟಾವು… ಉಪ್ಪು ತಿನ್ನೋಡು ನೀಳ್ಳು ತ್ರಾಗವಲಸಿಂದೇ” ಎಂದು ಬಿಡಿಓ ಸಾಹೇಬರು ಕಡ್ಡಿ ಮುರಿದಂತೆ ಹೇಳಿದ್ದು ನೆನಪಾಯಿತು. ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡರೆ “ನೀ ಅಂತು ಚೂಸ್ಕುಂಟಾನು” ಎಂದು ಶಪಥ ಮಾಡಿರುವ ಜಗನ್ನಾಥ ರೆಡ್ಡಿ ನೆನಪಾದ. ಯಾವ ಕಡೆಗಂತ ಸಾಯುವುದು? ಇದನ್ನೆಲ್ಲ ಬಿಡಿಸಿ ಹೇಳಿದರೆ ಶಾಮ ಅರ್ಥ ಮಾಡಿಕೊಳ್ಳುವ ಪೈಕಿಯಲ್ಲ. ಒಂದು ನಮೂನಿ ಮನುಷ್ಯ. +“ಶಾಮ ನನಗವತ್ತು ಬರ್ಲಿಕ್ಕಾಗ್ತದೋ ಇಲ್ವೋ?… ಅವತ್ತು ನಾನು ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳದಿದ್ದ್ರೆ ಮತ್ತೆ ಅಂತರ್ ಪಿಶಾಚಿ ತರ ಅಲೆಯಬೇಕಾಗುತ್ತೆ. ಕಟ್ಟಿದ ಬುತ್ತಿಯಂಥವನು ನಾನು. ಜೊತೆಗೆ ಜಲಜಾಕ್ಷಿಯನ್ನು ಕರೆದುಕೊಂಡು ಹೋಗು… ನೀನು ಒಂದು ಕಡೆ ಸೆಟಲ್ ಆಗಬೇಕೂಂತ ಅವಳಿಗೂ ಆಸೆ ಇದೆ…” ಎಂದೆ. +“ಆಕೆ ಬೇಡ” ಒಂದು ನಿಟ್ಟುಸಿರು ಬಿಟ್ಟು ಹೇಳಿದ. “ಸರೆ ಬಿಡು… ನಾನೊಬ್ನೆ ಹೋಗಿ ಬರ್ತೀನಿ… ಏನಾಗ್ಬೇಕೋ ಅದಾಗ್ತದೆ ಅಷ್ಟೆ” ಎಂದು ದುರ್ದಾನ ತೆಗೆದುಕೊಂಡವನಂತೆ ಹೋಗಿಬಿಟ್ಟ. +ಅವನು ಮರೆಯಾಗುವವರೆಗೆ ನಿಂತಿದ್ದು ನಾನು ಮನೆಗೆ ವಾಪಸಾದೆ… +ಸಾವಿರ ಸಾವಿರ ಕಥೆ ಕಾದಂಬರಿಗಳಿಗೆ ಒಮ್ಮೆಗೆ ಜೀವ ಬಂದು ಮಾತಾಡಲಾರಂಭಿಸಿದರೆ ಕೇಳುಗರ ಪರಿಸ್ಥಿತಿ ಹೇಗಾಗಬೇಡ? ನಮ್ಮ ಓಣಿಯ ಜಾಯಮಾನವೇ ಅಂಥಾದ್ದು. ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಎಂಬ ಬೃಹತ್ಕಾದಂಬರಿಯ ಎಲ್ಲ ಪಾತ್ರಗಳನ್ನು ಸಮಗ್ರವಾಗಿ ಪ್ರಕಟಿಸುತ್ತಿರುವ ರೀತಿಯಲ್ಲಿ ನಮ್ಮ ನಿಂಗಮ್ಮಜ್ಜಿಯ ವರ್ಣನೆ, ಓಣಿಯ ಸಚರಾಚರ ಕ್ರಿಯೆಗಳ ಮೇಲೆ ಸದಾ ಹತೋಟಿ ಸಾಧಿಸಿ ವಟಗುಟ್ಟುತ್ತಲೇ ಇರುತ್ತದೆ… ಸಮಾಜದ ಬದುಕನ್ನೇ ನಿರ್ದೇಶಿಸುವ ಅದರ ವರ್ತನೆ ವಿಸ್ಮಯಕರವಾದುದು. ಇವರನ್ನೆಲ್ಲ ಅವರವರ ಪಾಡಿಗೆ ಬಿಟ್ಟುಕೊಟ್ಟು ನೂರಾರು ಮೈಲಿ ದೂರದ ಆ ಊರಿಗೆ ನಾನು ಓಡಿಬಿಡಬೇಕು. ಬದುಕುವುದಾದರೆ ಅಲ್ಲೆ ಬದುಕಬೇಕು. ಸಾಯುವುದಾದರೆ ಅಲ್ಲೆ ಸಾಯಬೇಕು… ಹೋಗಿ ಹೆಚ್ಚಲು ನಾನು ಸವತೆಕಾಯಿಯಲ್ಲ ಎಂಬುದನ್ನು ಹಲಾಲ್‌ಟೋಪಿ ಜಗನ್ನಥ ರೆಡ್ಡಿಗೆ ಮನವರಿಕೆ ಮಾಡಿಕೊಡಬೇಕು. ಕನಸಿನಲ್ಲಿ ಮನಸ್ಸಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುವ ಸಿಂಬಳಗೊಣ್ಣಿ ಮಕ್ಕಳನನ್ನು ಸಂತೈಸಬೇಕು… ಇಲ್ಲಿ ಬದುಕುವುದಕ್ಕಿಂತ ಅಲ್ಲಿ ಸಾಯುವುದು ಎಷ್ಟೋ ಮೇಲು ಎಂದುಕೊಂಡೆ. +ಅಲ್ಲಿದ್ದ ಎರಡು ಮೂರು ದಿನಗಳಲ್ಲಿ ಯಾವುದೇ ಕರೆ ಶಾಸ್ತ್ರಿಗಳ ಮನೆಯಿಂದ ಬರಲಿಲ್ಲ. ಶಾಮನೂ ನನ್ನನ್ನು ಕಾಣುವ ಪ್ರಯತ್ನ ಮಾಡಲಿಲ್ಲ… ಬಾಂಬೆ ಟೈಲರಿಮಾಮು “ಕ್ಯಾಜಿ ಮಾಸ್ತರು … ನಿಮ್ ಜಿಗ್ರಿ ದೋಸ್ತು ಶಾಮರಾವ್ ಪ್ಯಾಂಟ್ ಶರ್ಟೂ ಹೊಲಿಯಾಕ ಕೊಟ್ಟಿರುವರೆ’ಂದು ಹೇಳಿದ. “ಯಾರಿಗೂ ಹೇಳಬೇಡ ಸಾಬು” ಎಂದು ಹೇಳಿರುವುದಾಗಿಯೂ ಹೇಳಿದ… ಆ ಉಡುಪಿನಲ್ಲಿ ಅವನನ್ನು ಕಲ್ಪಿಸಿಕೊಂಡು ಸಂತೋಷಪಟ್ಟೆ, ಆಧುನಿಕವಾಗಿ ಸಮಾಜಕ್ಕೆ ಗೋಚರಿಸಲು ಅವನು ಪ್ರತ್ನಿಸುತ್ತಿರುವುದೇ ಸಂತೋಷದ ಸಂಗತಿ. ಬಾಯಾರಿದ ಕುದುರೆ ತಾನೇ ನೀರು ಹುಡುಕಿಕೊಂಡು ಹೋಗಬೇಕೆ ಹೊರತು ನೀರೇ ಬಾಯಾರಿದ ಕುದುರೆಯನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ. ಅವನು ತನ್ನ ಬದುಕನ್ನು ತಾನು ರೂಪಿಸಿಕೊಳ್ಳುತ್ತಾನೆ… ಸದ್ಯದ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನು ತಾನು ಭದ್ರಪಡಿಸಿಕೊಳ್ಳುವುದು ಅವನಿಗೆ ಅನಿವಾರ್ಯ. ನನ್ನಂಥವರು ಹತ್ತಿರವಿದ್ದಷ್ಟೂ ಅವನಿಗೆ ತೊಂದರೆ! “ಅವನ ಬಗ್ಗೆಯಾಕೆ ಅಷ್ತೊಂದು ಹಚ್ಕೊಂತಿ… ಅವನ ಪಾಡಿಗೆ ಅವನನ್ನು ಬಿಟ್‌ಬಿಡು… ಜುಟ್ಟು ಮರೆಮಾಚಲಿಕ್ಕೆ ಕ್ರಾಪು ಬಿಡು ಅಂತ ನಾವ್ಯಾರಾದ್ರು ಅವನಿಗೆ ಹೇಳಿದ್ವಾ? ಇಂಥ ಇಬ್ಬಂದಿ ಮನುಷ್ಯರು ಹೆತ್ತವರ ಬೆನ್ನಿಗೆ ಭಾರಾಗ್ತಾ ಹೋಗ್ತಾರಯ್ಯಾ… ಒಂದು ಸಾರಿ ಅನುಕಂಪದ ರುಚಿ ನೋಡ್ದೋರು ಮತ್ತೆ ಮತ್ತೆ ಅದನ್ನೇ ನಿರೀಕ್ಷಿಸ್ತಾ ಇರ್ತಾರೆ… ಅನುಕಂಪ ಸೂಚಿಸೋದೇ ಕ್ಷಮಿಸಲಾರದ ಅಪರಾದ” ಎಂದು ಕಮಲಾಕರನೂ ನಿಷ್ಠುರವಾಗಿ ಹೇಳಿದ… “ಇಂಥವರು ತಾವಿರೋ ವ್ಯವಸ್ಥೇನ ಸ್ಪಿಲ್ಟ್ ಮಾಡ್ತಾನೇ ಇರ್ತಾರೆ… ಇಂಥೋರಿಂದಲೇ ಲೆಫ್ಟ್ ಮೂವ್‌ಮೆಂಟ್ಸು ಯಾರ್ಗೂ ಅರ್ಥ ಆಗದಂಗಾಗಿರೋದು… ಈ ಸಮಾಜಕ್ಕೆ ಅಗತ್ಯ ಇರೋದು ಇಂಥ ಮೃದ್ವಂಗಿಗಳೇ ಹೊರತು ನನ್ನಂಥೋರು ನಿನ್ನಂಥೊರಲ್ಲ … ನೋಡ್ತಿರು, ಮುಂದೆ ನಮ್ಮೆಲ್ಲರಿಗಿಂತ ಶಾಮ ಸಮಾಜದ ಎಲ್ಲ ವರ್ಣಗಳ ಜನರಿಗೆ ಬೇಕಾದೋನಾಗಿ ಸುಖವಾಗಿರ್ತಾನೆ… ಅಂದರಿಕೆ ಮಂಚೋಡು ಅಂತ ಅನ್ನಿಸ್ಕೋತಾನೆ… ಇದ್ನೆಲ್ಲ ಬಿಟ್ಟುಕೊಟ್ಟು ನೀನು ನಿನ್ನ ಕೆಲಸ ಮಾಡ್ತಿರೋ ಊರಿಗೆ ಬದುಕಾದ್ರೂ ಬದುಕು. ಇಲ್ಲಂದ್ರೆ ಕೊಲೆ ಆದ್ರು ಆಗು…ನನ್ ಪತ್ರಿಕೆಗೆ ಒಂದೊಳ್ಳೆ ನ್ಯೂಸಾದ್ರು ಸಿಗ್ತದೆ… ಸಾಯ್ಲಿಕ್ಕಿಷ್ಟ ಇರದಿದ್ದ್ರೆ … ಇಲ್ಲದ ರಿಸ್ಕ್ ತಗೊಂಡು ಬದುಕಲಿಕ್ಕೆ ಇಷ್ಟ ಇರದಿದ್ರೆ ರಾಜಿನಾಮೆ ಬಿಸಾಕಿ ಬಂದುಬಿಡು… ನನ್ ಪತ್ರಿಕೇಲಿ ವಾರಕ್ಕೊಂದಿಷ್ಟು ಬರೆವಂತೆ. ಹೆಚ್ಚಿನರದಿದ್ರೂ … ನೀನು ಸಾಯದ ಹಾಗೆ ನೋಡ್ಕೋತೀನಿ… ಹ್ಹ…ಹ್ಹ… ಹ್ಹ…” ಎಂದು ನಗಾಡಿದ…ಕಮಲಾಕರ ಶಾಮನ ಉತ್ತರಾರ್ಧದ ಬದುಕಿಗೆ ಪೂರ್ವ ಪೀಠಿಕೆ ಬರೆಯುತ್ತಿದ್ದಾನೆಂದುಕೊಂಡೆ… ಆದರೆ ಶಾಮನನ್ನು ಆತ ಮೃದ್ವಂಗಿ ಹೋಲಿಸಿದ್ದು ನನಗೆ ಅಷ್ಟು ಸರಿ ಕಾಣಲಿಲ್ಲ… ಇನ್ನೊಬ್ಬರು ಅವನಲ್ಲಿ ಸುಲಭವಾಗಿ ಅವಿತುಕೊಳ್ಳಬಹುದಿತ್ತು… ಆದರೆ ಅದು ಸುರಕ್ಷಿತ ತಾಣವಲ್ಲವೆಂಬುದು ಸುಸ್ಪಷ್ಟ. +ಅದೇ ಹೊತ್ತಿಗೆ ಹೇಳಿಕಳಿಸಿದಂತೆ ಜಲಜಾಕ್ಷಿ ಬಂದಳು. ಮಹಿಳಾ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ಜಿಲ್ಲಾ ಮೆಂಬರಾಗಿ ಕಳೆದ ವಾರವಹ್ಟೆ ನೇಮಕಗೊಂದಿದ್ದ ಆಕೆ ಹೆಚ್ಚು ಲವಲವಿಕೆಯಿಂದಿದ್ದಳು. ಅಭಿನಂದಿಸಿದ್ದೂ ಆಯಿತು. ಸ್ವೀಕರಿಸಿದ್ದೂ ಆಯಿತು. ಊರಿಗೆ ಹೊರಟಿದ್ದೀಯಂತೆ ಅಂದಳು. ಹ್ಹೂಂ ಅಂದೆ. ಮತ್ತೆ ಎಂದು ಬರ್ತೀಯಾ? ಎಂದಳು. ಬದುಕಿದ್ರೆ ದಸರೆ ರಜೆಗೆ ಎಂದೆ. “ಯಾಕೆ ಡೌಟಾ” ಅಂದಳು. “ಹ್ಹೂಂ” ಅಂದೆ. “ಯಾಕಪ್ಪಾ” ಅಂದಳು… ಅದೆಲ್ಲ ಒಂದೆರಡು ಮಾತ್ನಲ್ಲಿ ಹೇಳಕ್ಕಾಗೊಲ್ಲ ಮಾರಾಯ್ತಿ” ಅಂದೆ. “ಅಷ್ಟು ಡೇಂಜರಸ್ಸಾ ನೀನಿರೋ ವಿಲೇಜು” ಅಂದಳು…. “ಇಡ್ನಾಪ್ ಮಾಡೋರ ಥರಾ ಆಡ್ಡಾಡ್ತಿರೋ ಮಂದಿಯಿಂದ್ಲೇ ತುಂಬಿರೋ ಟಿಪಿಕಲ್ ವಿಲೇಜು ಕಣಮ್ಮಾ” ಅಂದೆ. “ನಿಮ್ಮಂಥ್ರು ಎಲ್ಲೂ ಉದ್ಧಾರಾಗೊಲ್ಲ… ರಿಜೈನ್ ಮಾಡ್ಬಿಟ್ಟು ಲೋಕಲ್ ಪಾಲಿಟಿಕ್ಸ್ ಸೇರ್ಕೋ” ಅಂದಳು… ನಾನು ನಕ್ಕೆ. ‘ಅದಿರ್ಲಿ … ನನ್ನ ಜೊತೇಲಿ ಕರ್ಕೊಂಡು ಹೋಗೂಂತ ಆ ಪುಕ್ಕಲಿಗೆ ನೀನೆ ಹೇಳಿದೆಯಂತೆ ಹೌದಾ’ ಎಂದು ಕೇಳಿದಳು. ‘ಹೌದು ಇದ್ನ ನಿನಗ್ಯಾರು ಹೇಳಿದ್ರು?’ ಅಂದೆ. +‘ಅವ್ನೆ ಊರ್ತುಂಬ ಹೇಳ್ಕೊಂಡು ಅಡ್ಡಾಡ್ತಿದಾನೆ’ ಎಂದಳು. “ಕರೆದ್ರೆ ಹೋಗಿಬಾ ಜಲಜಾಕ್ಷಿ…” ಎಂದೆ. ಮೈಚಳಿ ಬಿಟ್ಟು ಕರೀಲಿ ಹೋಗಿ ಬರ್ತೀನಿ… ಹೇಗೋ ನನ್ಗೂ ಕೆಲಸ ಇದೆ ಅಲ್ಲಿ’ ಎಂದಳು. ಅವನು ಅಷ್ಟು ಸುಲಭವಾಗಿ ಕರೆಯುವ ಪೈಕಿ ಅಲ್ಲ ಅಂದುಕೊಂಡೆ. ಕರೆಯುವಂತೆ ಪ್ರೇರೇಪಿಸುವ, ಅಂಥ ಮಾನಸಿಕ ಸ್ಥಿತಿಯನ್ನು ನಿರ್ಮಾಣ ಮಾಡುವುದು ಕೂಡ ಅಷ್ಟು ಸುಲಭ ಸಾಧ್ಯವಿಲ್ಲವೆಂದುಕೊಂಡೆ. +ಪತ್ರಿಕಾ ಕಛೇರಿಯಿಂದ ಹೊರಗಡೆ ಬಂದಾಗ ಶಿವಪೂಜೆ ಸುರೇಶ್ಗೌಡ ಸಿಕ್ಕು “ಎಷ್ಟು ಜನರನ್ನ ಹಾಳುಮಾಡ್ಬೇಕೂಂತ ಮಾದ್ಯಾನ್ರಿ ಆ ನಿಮ್ಮ ಫ್ರೆಂಡು… ನಾನು ಬೇಯ್ಸಿದ ಗೆಣಸು ತಿಂಥಾ ಇದ್ದುದ್ನೇ ಫೋಟೊ ತೆಗೆಸಿ ಬೀಫ್ ತಿಂತಿದ್ದೇಂತ ಅಪಪ್ರಚಾರ ಮಾಡಿದ ಅವನ್ನ ನಾನು ಸುಮ್ನೆ ಬಿಟ್ಟೇನಾ… ನೋಡ್ತಿರಿ ಏನು ಮಾಡ್ತೀನಂತ…” ಎಂದು ಹಲ್ಲು ಕಡಿದ. ಮಿಲಿಟರಿ ಹೋಟಲಲ್ಲಿ ಬೇಯಿಸಿದ ಗೆಣಸೂ ಮಾರಾಟಮಾಡುವರೆಂಬ ಅಪರೂಪದ ಸಂಗತಿ ತಿಳಿಸಿದ ಆ ಮಹಾಶಯನಿಗೆ ಮನದಲ್ಲಿ ಧನ್ಯವಾದಗಳನ್ನು ಅರ್ಪಿಸಿ ಹೇಳಿದೆ. “ಹಾಗೇನಾದ್ರೂ ಅವನ ತಂಟೆಗೆ ಹೋದೀರಾ ಗೌಡ್ರೆ… ಅವನು ಮೊದಲೇ ಮಾಜಿ ನಕ್ಸಲೈಟು… ಇಂಥದ್ನೆಲ್ಲ ಕೇರ್ ಮಾಡೊ ಮನುಷ್ಯನಲ್ಲ… ಪ್ರಾಯಶ್ಚಿತ್ತ ಮಾಡಿಸಿಕೊಂಡು ಹೆಂಡ್ತೀನ ಕರ್ಕೊಂಡು ಬಂದು ಸುಖವಾಗಿರ್ರಿ” ಎಂದೆ. ಮತ್ತೆ ಕಿಡಿಕಿಡಿ ಆದ… “ಅದೊಂದು ಮಾತ್ನ ಮಾತ್ರ ಹೇಳ್ಬೇಡ್ರಿ … ಮೇಸ್ಟ್ರೇ… ಉಗುಳಿದ ತಂಬೂಲಾನ ಮತ್ತೆ ಬಾಯಲ್ಲಿಟ್ಕೊಂಡು ನಮ್ಮ ಸಿವ ಪೂಜೆ ಮನತನಕ್ಕೆ ಅವಮಾನ ಮಾಡೋನಲ್ಲ ಈ ಸುರೇಶಗೌಡ…” ಎಂದು ಮೀಸೆ ತಿರುವಿದ… “ಇಂಥೋರ ಸಾವಾಸ ನಿಮ್ಮಂಥೋರಿಗೆ ಸರಿ ಅಲ್ಲ… +ದೂರ ಇದ್ದು ಬಿಡಿ… ಈ ಕಮಲಾಕರ ನಿಮ್ಮ ಮೇಲೂ ಏನಾದ್ರೂ ಬರೀಬೌದು…” ಎಂದು ಬುದ್ಧಿ ಹೇಳಿ ಗರಂ ಮಸಾಲೆ ದಿನಸಿಗೆ ಹೆಸರಾದ ನಾಅಣೆಕೇರಿ ಶೆಟ್ರು ಅಂಗಡಿ ಕಡೆ ಹೋದ… +ನಾನು ಹೊರಡುವ ದಿನ ಹತ್ತಿರವಾದಂತೆ ನನ್ನ ನೌಕರಿಯ ಸ್ಥಳವಾದ ವಾಗಿಲಿ ಗ್ರಾಮದ ಸಾವಿರಾರು ಮುಖಗಳು ಕನಸಿನಲ್ಲಿ ಪ್ರಕಟವಾಗತೊಡಗಿದವು. ಕಾಲು ಹಾದಿಯಲ್ಲಿ ಕೆಸರಲ್ಲಿ ಬಲಗಾಲ ಬಾಟಾ ಕಳೆದುಹೋದಂತೆ, ರಿಜರು ಜಾಲಿ ಮರೆಯಿಂದ ಐದಾರು ಮಂದಿ ಒಮ್ಮೆಗೆ ಮುಗಿಬಿದ್ದಂತೆ, ಸಣಕಲು ನಾಯಿ ಅಟ್ಟಿಸಿಕೊಂಡು ಬಂದಂತೆ…ಜಗನ್ನಾಥ ರೆಡ್ಡಿಯ ಗುಳಾಪು ಕಂಣುಗಳ ಝಳಪಿಗೆ ಹಾದಿ ಮಂಕಾಗಿ ತಡವರಿಸಿದಂತೆ… ಬುರ್ರ ಕಥೆಯ ಬಾಬಯ್ಯ ಮತ್ತು ಸಂಗಡಿಗರುಬಿದ್ದು ಬಿದ್ದು ನಗುತ್ತಿರುವಂತೆ. ನಾನೇ ನನ್ನ ಚದುರಿಹೋದ ಅಂಗಾಂಗಗಳನ್ನು ಜೋಡಿಸಿ ಒಪ್ಪ ಓರಣ ಮಾಡುತ್ತಿರುವಂತೆ… ಸಮುದ್ರದ ಪೆಟ್ರೋಲಿಯಂ ರಾಡಿಯೊಳಗೆ ಹಾರಲಾಗದೆ ಒದ್ದಾಡುತ್ತಿರುವ ಭಾರಿ ರೆಕ್ಕೆಯ ಹಕ್ಕಿಯಂತೆ… +ಅತ್ತ ಹೊರಗಡೆ ಚುಮು ಚುಮು ನಸುಕಿನಲ್ಲಿ ಹನುಮಕ್ಕ ಹುಂಜವನ್ನು ಅಷ್ಟು ದೂರ ಅಟ್ಟಿಸಿಕೊಂಡು ಹೋಗಿ ಬಂದ ದಣಿಕೆಯಲ್ಲಿ ತನ್ನ ಮೊಮ್ಮಗನಾದ ಇನ್ನು ಗೃಹಸ್ತಾಶ್ರಮದ ಬಗ್ಗೆ ಅದೇ ತಾನೆ ಕಕ್ಕಸ್ಸು ಮುಗಿಸಿಕೊಂಡು ಬಂದಿದ್ದ ಶಂಬಯ್ಯನವರ ಬಳಿ ಉದ್ದೋಕೆ ಅಡ್ಡ ಬಿದ್ದು ಪ್ರವರಾಲಾಪನೆ ಶುರು ಮಾಡಿತ್ತು. “ಅದ್ನ ತೋರ್ಸಿದ್ರೆ ಅದನ್ನೊಪ್ಪಕೊಳ್ಳವಲ್ಲ…ಇದ್ನ ತೋರ್ಸಿದ್ರೆ ಇದನ್ನೊಪ್ಪಕೊಳ್ಳವಲ್ಲ… ಇವ್ನೀಗೆ ಹೆಂಡ್ತಿ ಆಗೋಳು ಈ ದೇಸದಾಗ ಯಾವ ಮೂಲ್ಯಾಗದಾಳಾ ಸೋಮಿ… ಸಣ್ಣೀಯ ಗಂಡನ ಬಿಟ್ಟ ಮಗ್ಳು ಗಂಟು ಬಿದ್ದಾಳಂತ… ದಿನಾಲು ಸವತ್ತಿಗೆ ಬಂದು ಮಕ್ಕಂಡು ಸಿಂಬಳದಾಗ ಬಿದ್ದ ನೊಣ ಒದ್ದಾಡದಂಗ ಒದ್ದಾಡ್ತಾನೆ ಸೋಮಿ… ಸರ್ಯಾಗಿ ಉಂಬುವಲ್ಲ… ಸರ್ಯಾಗಿ ನಿದ್ದೆ ಮಾಡುವಲ್ಲ… ಇವಂದೊಂದೂ ಅರ್ಥವಾಗವಲ್ದು. ರವ್ವೋಟು ಗ್ರಹಗತಿ ಇಚಾರಿಸಿ…ಹೊತ್ತುಟ್ಟುತ್ಲೇ ಜಾತಕ ಕುಂಡ್ಲಿ ತಗಂಬಂದು ತೋರಿಸ್ತೀನಿ…” ಎಂದೆಂದೇ ಸಮನೆ ನಾಲಗೆ ಬಡಕೊಳ್ಳತೊಡಗಿತ್ತು. ಅದಕ್ಕೆ ಪ್ರತಿಯಾಗಿ ಶಂಬಯ್ಯನವರು ನಿಟ್ಟುಸಿರುಬಿಟ್ಟು… “ನೀನೂ ನಾನೂ ಮಾಡೊದಿದರಾಗೇನೈತೆ ನಿಂಗವ್ವಾ… ಒಂದು ದೇವರ ನಂಬವೊಲ್ಲ… ಒಂದು ದಿಂಡರು ನಂಬುವಲ್ಲ… ಗುರಿ ಹಿರೇರ ಮೇಲೆ ಭಕುತಿ ಎಂಬುದು ಮೊದಲೇ ಇಲ್ಲ… ಇಂಥೊರ್ಗೆ ಹೇಳೇದು ಕೇಳೋದು ಉಂಟೇನು… ನಾಳೆ ಅಮ್ಮಾಸ್ಯೆ ಒಳ್ಗೆ ಬೆಳ್ಳಿ ಆಕಳ ಮಾಡಿಸಿ ನಮ್ಗೆ ದಾನ ಕೊಡು ಎಲ್ಲ ಸರಿಹೋಗತೈತಿ… ನೀನು ಎಮ್ಮೆ ಕರ ತೋರಿಸಿದ್ರು ಕಣ್ಮುಚ್ಚಿ ತಾಳಿ ಕಟ್ತಾನೆ ಹೇಳಿಲ್ಲಾಂದಿ ಕೇಳಿಲ್ಲಾಂದಿ ಮತ್ತೆ.. ಹ್ಹಾಂ!” ಎಂದಂದರು. ಅದಕ್ಕೆ ಮುದುಕಿ ಸಂತೋಷದಿಂದ ಉಬ್ಬಿ ಹೋಗಿ “ಹಂಗೆ ಮಾಡು ಶಿವಾ… ಅವನಂಗ ತಾಳಿ ಕಟ್ಟಿದಾಂದ್ರೆ ಬೆಳ್ಳೀದು ಯಾಕೆ ಬಂಗಾರದ್ದು ಮಾಡಿಸಿಕೊಟ್ಟೇನು!… ಹೆಂಗಾರ ಮಾಡಿ ನಮ್ಮ ಗಾಳೆಪ್ಪನ ಮಗ್ಳು ಚಂಬಸ್ವೀನ ಮದ್ವೆ ಆಗೋಂಗ ಮಾಡಿಬಿಡ್ರಿ… ಅದು ಕೈಯಿಗೆ ಬಂದು ಬರೋಬ್ಬರಿ ಎಳ್ಡು ತುಂಬಿ ಮೂರು ತಿಂಗಳಾಗ ಬಿದ್ದೈತಿ… ಎಲ್ಡು ಮೂರು ಸಾವ್ರ ಖರ್ಚು ಮಾಡಿ ಮನಿ ಮುಂದ ಕನ್ಯಾದಾನ ಮಾಡಿಕೊಡ್ತೀನಂತ ಒಂದೇ ಸಮ್ನೆ ಗಂಟು ಬಿದ್ದೈತಿ ನಮ್ ಗಾಳೆಪ್ಪ…” ಎಂದು ರಾಗ್ ಎಳೆಯಿತು. ಅದಕ್ಕಿದ್ದು ಶಂಭಯ್ಯನವರು “ಯಾರು ಬೇಡಂತಾರ ನಿಂಗವ್ವಾ… ಇನ್ನು ಒಳ್ಳೆದಾತಲ್ಲ… ಏನು ಬಿಟ್ರು ಕಳ್ಳುಬಳ್ಳಿ ಬಿಡಬಾರ್ದು ನೋಡು… ಅವನ್ಗೆ ಜಳಕಾಪಳಕಾ ಮಾಡ್ಸಿ ನಮ್ಮತ್ರ ಕರ್ಕೊಂಡ್ಬಾ…ನವಗ್ರಹದ ಅಂತ್ರ ಮಂತ್ರಿಸಿ ಕಟ್ಟಿ ನಾಕು ಬುದ್ಧಿ ಮಾತು ಹೇಳ್ತೀನಿ…” ಎಂದು ಅಪ್ಪಣೆ ಮಾಡಿ ಮತ್ತೆ ಕಕ್ಕಸ್ಸು ಜೋರಾಗಿ ಬರಲು ವಿಸರ್ಜನೆಗೆಂದು ಮತ್ತೆ ಬಸವನ ಬಾವಿ ತಗ್ಗಿನ ಕಡೆ ಓಡಿದರು. ನಮ್ಮ ಓಣಿಯ ಗಡಿಯಾರವೆಂದೇ ಹೆಸರಾಗಿರುವಾಸಿಯಾಗಿರುವ ಅವರು ಒಂದೊಂದು ವರ್ತನೆ ದಿನದ ನಿರ್ದಿಷ್ಟ ಸಮಯವನ್ನು ಟಾಂ ಟಾಂ ಹಾಕುವುದು. ನಸುಕಿನಲ್ಲಿ ಜಿರಕೂ ಪುರಕೂ ಸದ್ದು ಮಾಡುತ್ತ ತಂಬಿಗೆಯೊಡನೆ ಹೋಗುವುದು ಬೆಳ್ಳಿ ಚುಕ್ಕಿ ಉದಿಸಿದ ಸೂಚನೆಯನ್ನು ನೀಡಿದರೆ ರಾತ್ರಿ ಲಿಂಗಮುದ್ರೆ ಕಲ್ಲಿಗೆ ಎರಉ ಕೈಗಳನ್ನೂರಿ ಬಲವಾಗಿ ತಿಣುಕಿ ಡರ್ರೋಽಽ ಎಂದು ಜಘನಗಳಿಂದ ಭುಂಗಾ ಊದಿದರೆ ಹತ್ತು ಗಂಟೆ ದಾಟಿದೆ ಎಂದೇ ಅರ್ಥ. ಹೀಗೆ ಒಂದೊಂದು ಸಮಯಕ್ಕೆ ಒಂದೊಂದು ಸವಂಡು ಮಾಡುತ್ತ ಓಣಿಯ ದಿನಚರಿಯನ್ನು ನಿರ್ದೇಶಿಸುವ ಅವರೆಂದರೆ ನಮ್ಮ ನಿಂಗಮ್ಮಜ್ಜಿಯೇ ಮೊದಲಾಗಿ ಎಲ್ಲರಿಗೂ ವಿಶೇಷ ಗೌರವ. ಆದರೆ ನಾನು ಮಾತ್ರ ಮಂಡೆ ಸೋರೆ ಕಾಯಿಗೆ ಬುದ್ಧಿ ಬಂದಂದಿನಿಂದ ನನ್ನ ಪವಿತ್ರ ಮಸ್ತಿಷ್ಟವನ್ನುಅಂಟಿಸಿದವನಲ್ಲ… ಊರಿಗೆ ಬಂದವನು ನೀರಿಗೆ ಬಾರದಂಗಿರ್ತೀಯಾ ಎಂದು ಅವರೂ ಕಾಯುತ್ತಿರುವರು… ಅದಕ್ಕೆ ನಮ್ಮಜ್ಜಿಯ ಸಪೋರ್ಟು ಬೇರೆ… +ಇವರ ಡೈಲಾಗುಗಳಿಂದಾಗಿ ಕನಸುಗಳೆಲ್ಲ ಚದುರಿ ಹೋಗಿ ಎಷ್ಟೋ ನಿರುಮ್ಮಳವಾದೆ… ಇಲ್ಲಿ ಬದುಕುವುದಕ್ಕಿಂತಾ ಅಲ್ಲಿ ಕೊಲೆಯಾಗುವುದನ್ನೇ ಚಲೋ ಎಂದು ಮತ್ತೆ ಅಂದುಕೊಂಡೆ… ತನ್ನಾಯುಷ್ಯದ ಕಾಲು ಭಾಗವಿರುವ ನನ್ನ ಸಂಸ್ಕಾರ ಕೈಯಾರ ನೆರವೇರಿಸಿದ ನಂತರವೇ ಮುದುಕಿ ತನ್ನ ನಾಲಿಗೆಯನ್ನು ಲಾಕರಿನಲ್ಲಿ ಭದ್ರಪಡಿಸುವುದು. ಸತಿ ಹೋಗುವ ಮಹಿಳೆ ಚಿತೆ ಏರುವ ಪೂರ್ವದಲ್ಲಿ ವರ್ತಿಸುತ್ತಾಳಲ್ಲ ಹಾಗೆ ನಾನು ನನ್ನ ಕಿವಿತಳ ತಮಟೆಗೆ ಅಟೆಯುತ್ತಿದ್ದ ಯಾವ ಶಬ್ದಕ್ಕೂ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ ಮಠದಲ್ಲಿ ಎರಡನೆ ಪೂಜೆ ಮುಗಿವ ವೇಳೆಗೆ ನನ್ನ ಯಾವತ್ತೂ ಕಾರ್ಯಕ್ರಮಗಳನ್ನು ಪೂರೈಸಿದೆ… ಮುವ್ವರು ಮನೆಯ ಒಂದೊಂದು ಮೂಲೆ ಹಿಡಿದು ಬಿಸಿಯುಸಿರು ಬಿಡತೊಡಗಿದ್ದರು. +“ಲೋ ಸೋಮೇರ್ಗೆ ಅಡ್ಡಬಿದ್ದು ಹೋಗೋ… ಹೋಗೋದು ಹೋಗ್ತಿ” ಎಂದು ನಿಂಗಮ್ಮಜ್ಜಿ ಪರಪರ ತಲೆ ತುರಿಸಿಕಂತು. +“ಸುಮ್ನಾಗಿರಾಕ್ನು ಗಂಟ್ತಗಂತೀಯಬೇ ನಮ್ಮವ್ವಾ, ಆ ಹುಡುಗನ ಜೀವ ಯಾಕ ತಿಂತೀ?” ಎಂತು ಅದರ ತಂಗಿ… +“ಹೋಗಿ ಹೋಗಿ ಆ ಘನವಾದಾಕೀನ್ಯಾಕ ತಡವ್ತೀಯೇ…ಆಕೆಂಗಾರ ಮಾತಾಡ್ಕಳ್ಳಿ… ನೀನೊಂದೆ ಬಾಯಿ ಬಡ್ಕಂಡಿರು” ಅಂತಂದಳು ನಮ್ಮ ದೊಡ್ಡವ್ವ… +ಕೆರೆದು ಕೇರು ಬಡಿಸಿಕೊಂಡಂತಾಗಿ ನಿಂಗಮ್ಮಜ್ಜಿ ದಿಗ್ಗನೆದ್ದು ಬದ್ಧಭ್ರುಕುಟಿಯಾಗಿ ನನ್ನ ಮೇಗಣ ಸಿಟ್ಟನ್ನೆಲ್ಲ ಕ್ರೋಡೀಕರಿಸಿ ” ನನ್ನೇ ಘನುವಾದಾಕಿ ಅಂತಿ ಏನಬೇ” ಎಂದು ಖಾಸಾ ತಂಗಿಯ ಮೇಲೆ ಏರಲು ಹೋಗಲು ಧರ್ಮರಕ್ಷಣೆಗಾಗಿ ಕುರುಕ್ಷೇತ್ರ ಆರಂಭವಾಯಿತೆಂದೂಹಿಸಿ ನಾನು ಬ್ಯಾಗೆಂಬ ಬೇತಾಳವನ್ನು ಹೆಗಲಿಗೆ ನೇತು ಹಾಕಿಕೊಂದು ಸಿಂಹದ ಗವಿಯೊಳಗಿಂದ ಹರಿಣ ಓಡುವಂತೆ ಮನೆಯಿಂದ ಹೊರಬಿದ್ದೆ. ಕಣಗಿಲೆ ಮತ್ತು ದಾಸವಾಳ ಗಿಡಗಳ ನಡುವೆ ಶತಪಥ ಹಾಕುತ್ತಿದ್ದ ಶಂಬಯ್ಯರನ್ನು ಹಾದು ಶರಣ ಗುರುಬಸವ ಮಗುವಾಗಿ ಆಡಿ ಬಂಜೆಯೋರ್ವಳ ತಾಯ್ತನ ಪೊರೆದನೆನ್ನಲಾದ ತೊಟ್ಟಿಲು ಮಠದ ಮುಂದಿನಿಂದ ಕರಗಲ್ಲು ದಾಟಿ ತೇರು ಬೀದಿಯಲ್ಲಿ ತೇಲಿದಾಗ ಊರಿಗೆ ತಲೆನೋವಾಗಿರುವ ಕೆರೆಕಟ್ಟೆ ಪಕ್ಕೀರ ರಂಗಾರಿಯರ ಹುಡುಗಿಯನ್ನು ಚುಡಾಯಿಸಿ ಬೀದಿಜಗಳಕ್ಕಿಳಿದಿರುವ ದೃಶ್ಯ ಎದುರಾಯಿತು. ಬಾಯಿ ಸತ್ತ ಪಾಂಡುರಂಗ “ಇಂಥೋರೆ ಊರಲ್ಲಿದ್ರೆ ನಮ್ಮಂಥೋರು ಬಾಳುವೆ ಮಾಡುವುದಾದ್ರು ಹೆಂಗ್ರೀ… ನೀವಾರ ಆ ಲುಚ್ಛಾಗೆ ಬುದ್ಧಿ ಹೇಳ್ರಿ ಎಂದು ಕಲೆ ಬಿದ್ದ…” ನನ್ನನ್ನು ಊರಿಗೆ ಹೋಗದ ಹಾಗೆ ತಡೆದು ನಿರ್ನಾಮ ಮಾಡುವ ಸಂಚೊಂದು ನಡೆಯುತ್ತಿರುವುದೆಂದು ಭಾವಿಸಿ “ನಿಮ್ಗೆ ನೀವು ಮೆಡುವ ಚಡಾವು ಎಲ್ಲಿವರ್ಗೂ ಅರ್ಥ ಆಗಲ್ವೋ ಅಲ್ಲಿವರ್ಗೆ ನೀವು ಎದೆ ಸೆಟ್‌ಎಸಿ ಬದುಕಲಾರಿರಿ” ಎಂದು ನಾನಾದರೂ ಯಾಕೆ ಹೇಳಬೇಕು? ಎಂದು ಅವನನ್ನು ತಳ್ಳಿಕೊಂಡು ದಲಿತ ಮಹಿಳೆ ಶರಣೆಗೆ ತುಪ್ಪದಾರತಿ ಬೆಳಗುವ ಬಯಲಿಗೆ ಬಂದಾಗ ರೈತರ ದಾಂಧಲೆಯಲ್ಲಿ ನಡೆದ ಗೋಲಿ ಬಾರಿನಲ್ಲಿ ಎಡಗಾಲನ್ನು ಕಳೆದುಕೊಂದಿರುವ ಸ್ವಾತಿ ಸ್ಟೋರಿನ ಚಂಬಸಪ್ಪ “ರೀ ಸಾರೂ…ಎಲ್ಲೋ ಹೊಂಟಂಗೈತೆ” ಬರುವುದು ಕಂಡು ಎದೆ ಧಸಕ್ಕಂತು. ಅರೆ ಇವನು ಬಾಕಿ ಕೇಳ್ತಾನೆಂದುಕೊಂಡು ಕೇಳಿಸಿಯೂ ಕೇಳದವನಂತೆ ಲಗುಬಗೆಯಿಂದ ಹೆಜ್ಜೆ ಹಾಕಿ ಹೇಗೋ ಒಂದು ರೀತಿ ಗುಜರೀ ಸ್ವರೂಪ ತಳೆದಿದ್ದ ಬಸ್‌ಸ್ಟ್ಯಾಂಡ್ ತಲುಪಿ ನೆಮ್ಮದಿಯ ಉಸಿರು ಬಿಟ್ಟೆ… ಬಸ್ಸು ಹೋಗದಿದ್ದರೆ ಎಂಬಾತಂಕ ಮರುಕ್ಷಣ ಆವರಿಸಿಬಿಟ್ಟಿತು… ಪುರ್ವ ದಿಕ್ಕಿನ ಕಡೆ ಹೊರಡುವ ಯಾವುದೇ ಬಸ್ಸು ಹತ್ತಿ ಕೊಂಕಣ ಸುತ್ತಿಯಾದರೂ ಮೈಲಾರ ತಲುಪಿ ಕೊಡಲಿ ಕುಡುಗೋಲುಗಳಿಗೆ ಎದೆಯೊಡ್ಡಿ ನಿಲ್ಲಬೇಕೆಂದು ನಿರ್ಧರಿಸಿದೆ. ಯಾರಾದರೂ ಬಂದು ನಿನ್ನ ಕೊನೆಯಾಸೆ ಏನೆಂದು ಕೇಳಿಯಾರೆಂಬ ಭಯದಿಂದ ಅವರು ಬಂದರೆ ಇತ್ತ ತಿರುಗಿದೆ. ಇವರು ಬಂದರೆ ಅತ್ತ ತಿರುಗಿ ಹೇಗೋ ಒಂದು ರೀತಿ ಬಚಾವಾಗುತ್ತಿರುವಾಗ ಮುಗಿಲು ಮಟ ಧೂಳೆಬ್ಬಿಸಿಕೊಂಡು ಬಂದ ಬಸ್ಸನ್ನು ಅದು ನನ್ನಪ್ಪನ ಮನೆಯ ಆಸ್ತಿ ಎಂದು ಭಾವಿಸಿ ಒಂದರಲ್ಲಿ ನುಗ್ಗಿ ಮೂಲೆಯಲ್ಲಿ ಅಡಗಿ ಕೂತೆ. ನೈರುತ್ಯ ವಲಯದ ಯೂನಿಯನ್ನವರು ಕಳೆದೆಂಟು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹದ ಬಗ್ಗೆ ಡ್ರೈವರು ಡ್ರೈವರುಗಳೊಂದಿಗೆ; ಕಂಡಕ್ಟರು ಕಂಡಕ್ಟರುಗಳೊಂದಿಗೆ ಚರ್ಚಿಸುತ್ತಿರುವಾಗ ಚಾಕಲಿ ನಾರಾಣಿ ಕಣ್ಣವಪೆ ಒದ್ದೆಗೆ ಬೀದಿ ಧೂಳು ಅಂಟಿಸಿಕೊಂದು ಬಂದು ಅಂತೂ ಇಂತೂ ನನ್ನನ್ನು ಪತ್ತೆ ಹಚ್ಚಿ “ಇಂಥ ಸಮಯದಲ್ಲಿ ನಿಮಗೆ ಹೇಗೆ ಮನಸು ಬಂತು ಮಾರಾಯರೆ; ಯಜಮಾನರು ಅನ್ನ ಮುಟ್ಟುವಲ್ಲರು; ನೀರು ಮುಟ್ಟುವಲ್ಲರು. ಹಾಸಿಗೆ ಹಿಡಿದು ಮಲಗವರೆ… ಮೃತ್ಯುಂಜಯ ಮಂತ್ರ ಜಪಿಸಿರೆಂದು ಅಮ್ಮ ಹೇಳಿದರೆ ಕಿವಿಮೇಲೆ ಹಾಕ್ಕಳ್ಳರು… ಒಂದೊಂದು ಕ್ಷಣ ಬದುಕುತ್ತಿರುವ ತಪ್ಪಿಗೆ ನಿಟ್ಟುಸಿರು ಇಡುತ್ತಿರುವರು… ಶಾಮಣ್ಣರನ್ನು ತಡೆಯಬಾರ್ದೇನು? ಪಾಲನೆ ಪೋಷಣೆ ಮಾಡಿದ ತತನವರಿಗಿಂತ ಅವರಿಗೆ ನೌಕರಿ ಸೇರುವ ಹಂಬಲವೇ ಹೆಚ್ಚಾಗರುವಂತಿದೆ ಸ್ವಾಮಿ… ನಿಮ್ಮ ಮೈಲಿಗೆ ಮಡಿ ಮಾಡಿ ನಿಮ್ಮ ಋಣ ತೀರಿಸೇನು! ದಯವಿಟ್ಟು ಬಸ್ಸು ಇಳಿದುಬಿಡಿ ನನ್ನಪ್ಪಾ… ನಾನು ಹೇಳುತ್ತಿರುವುದು ಸತ್ಯ… ಸತ್ಯವನ್ನಲ್ಲದೆ ಬೇರೇನೂ ಹೇಳುತ್ತಿಲ್ಲ… ದೇವರ ಮೇಲೆ…” +ಬಸ್ಸು ಒಮ್ಮೆಗೆ ವೇಗ ಹೆಚ್ಚಿಸಿಕೊಂಡು ಹೊರಟು ಬಿಟ್ಟಿತು. ಕಿಟಕಿಯಲ್ಲಿ ತಲೆ ಚಾಚಿ ಹಿಂತಿರುಗಿ ನೋಡಿದೆ. ಕುಲು ಕಣಿವೆಯ ಬೆಳಗ ಮಬ್ಬಿನೊಳಗೆ ಬಿರಿದ ಪುಷ್ಪ ನೆಲದ ಪಾಲಾಗಿರುವಂತೆ, ಪಾರಿಜಾತ ವೃಕ್ಷದ ತರಗೆಲೆಯಂತೆ ವ್ಯಾವಹಾರಿಕ ಲಾಭ ಕಳೆದುಕೊಂಡಿರುವ ಅನುನಾಸಿಕ ವಿಸರ್ಗ್ರಾಕ್ಷರದಂತೆ. +ಹುಚ್ಚು ಸೂಳ್ಯಾ ಮಕ್ಕಳು… ಇವರಿಗೂ ಕೆಲಸ ಬೊಗುಸೆ ಇಲ್ಲವೆಂದರೆ ನನಗೂ ಇಲ್ಲವೆಂದು ತಿಳಿದುಕೊಂಡಿದ್ದಾರೆ… ಎರವಲು ತಂದ ಸ್ವಾಂತನದ್ ಮೇಲೆ ಬದುಕುವ ಬದುಕೆ? ನಿಟ್ಟುಸಿರುಬಿಟ್ಟೆ. +* +* +* +ನ ಕಾಲಸ್ಯ ಪ್ರಿಯಃ ಕಶ್ಚಿನ್ನ ದ್ವೇಷಃ ಕುರುಸತ್ತಮ +ನ ಮಧ್ಯಸ್ಥಃ ಕ್ವಚಿತ್ ಕಾಲಃ ಸರ್ವಂಕಾಲಃ ಪ್ರಕರ್ಷತಿ|| +ಎಂಬೊಂದು ಮಾತು ಮಹಾಭಾರತದಲ್ಲಿ ಬರುತ್ತದೆ. ಕಾಲನಿಗೆ ಪ್ರಿಯರೆಂಬುದಾಗಲೀ ಶತ್ರುಗಳೆಂಬುವವರಾಗಲೀ ಇರುವುದಿಲ್ಲ. ಅವನೆಂದೂ ಮೀಡಿಯೇಟರು ಕೆಲಸ ಮಾಡುವುದಿಲ್ಲ… ಎಲ್ಲರನ್ನೂ; ಎಲ್ಲವನ್ನೂ ತೆಕ್ಕೆಗೆಳೆಕೊಂಡು ಹೋಗುತ್ತಿರುತ್ತಾನೆ. +* +* +* +ಈ ದೇಶದಲ್ಲಿ ಒಳ್ಳೆಯದಾಗಲೀ; ಕೆಟ್ಟದ್ದಾಗಲೀ ಅರ್ಥಪೂರ್ಣವಾಗಲೀ ಏನೊಂದೂ ನಡೆಯಲು ಸಧ್ಯವಿಲ್ಲವೆಂಬುದಕ್ಕೆ ವಾಗಿಲಿ ಸೇರಿಕೊಂಡು ಹಲವು ದಿನಗಳು ಕಳೆದರೂ ನನ್ನ ದೇಹದ ಒಂದೇ ಒಂದು ರೋಮ ಕೊಂಕದಿರುವುದೇ ನಿದರ್ಶನ. ನಾನು ದೀರ್ಘಾವದಿ ರಜೆಯ ಮೇಲೆ ಹೋದ ಕೆಲವು ದಿನಗಳಲ್ಲಿ ವಾಗಿಲಿ ಮತ್ತು ಪುಲಿಕುರ್ತಿ ಬೆಸೆಯದ ಹಳ್ಳಗಳ ಕೊರಕಲಲ್ಲಿ ಕೊಳೆತು ಊದಿಕೊಂಡು ಬಿಸಿಲಿಗೆ ಡಮಾರೆಂದು ಒಳಗಿನದೆಲ್ಲ ಹೊರಗಡೆ ಬಂದು ಅಕರಾಳವಿಕರಾಳವಾಗಿದ್ದ ಹೆಣವೊಂದು ಪತ್ತೆಯಾಯಿತಂತೆ… ಕಳ್ಳ ಸಂಭೋಗಕ್ಕೆ ಅನುವಾದ ಜಾಗ ಅರಸಿಕೊಂಡು ಪರಗುಣಿ ಮಾಗಿಯ ನವಣೆ ಸಾಲಿನೊಳಗಿಂದ ಕವುರಟ್ಲು ನಿಂಗಿಯೂ; ತರಗುಣಿ ಬೋಗಿಯ ಬಿಳಿ ಜೋಳದ ಬೆಳಸೆ ಸಾಲಿನೊಳಗಿಂದ ಪರುವುಟ್ಲು ಸಾಂಬಿಯಾನೂ ಚತುಷ್ಪಾದಿಗಳಂತೆ ತೆವಳುತ್ತ ಬಂದು ಹಳ್ಳ ತಲುಪಿ ನಿಸೂರಾದರು… ಇಲ್ಲಿ ಮಲಿಕ್ಕೊಂಡ್ರೆ ಅವರಿಗೆ ಕಾಣಬೌದು. ಅಲ್ಲಿ ಮಲಿಕ್ಕೊಂಡ್ರೆ ಇವರಿಗೆ ಕಾಣಬೌದಂತ ರಿಜರಿ ಜಾಲಿ ಅಡೀಕೆ ತೆವಳುತ್ತ ಸಾಗಿರಲು ನಿಂಗಿ ಮೂಗುನಿಗರಿಸಿಕೊಂಡು ಇಲ್ಲೆಲ್ಯಾರೋ ಬುತ್ತಿ ಇತ್ತಂಗೈತೆ ಹುಳಿ ಮೊಸ್ರು ಬಾನ ಕಲಸಿಟ್ಟಂಗೈತೆ… ಬದ್ನೆಕಾಯಿಪದಾರ್ರ; ಹುಂಚ್ಕಾಯಿ ಸಟ್ಟಣಿ ಅದರೊಟ್ಟಿಗಿಟ್ಟಂಗೈತೆ ಅಂಬಲು ಸಾಂಬಿಯಾನು ದೋತರ ಮೇಲೆತ್ತಿ ಈ ಸುಡುಗಾಡಾಗ್ಯಾರು ಅದ್ನೆಲ್ಲೆ ತಂದಿಟ್ಟಿದ್ದಾರೋ ಮೂಳಿ… ಸುಮ್ಕೆ ಮಲಿಕ್ಕ ಎಂದು ಗದರಿ ಕೆಳಗೆ ಕೆಡವಿಕೊಂಡನು. ಅದಕ್ಕೆ ಅರಳದೆ ನಿಂಗಿಯು “ನಾನು ಸುಳ್ಳೇಳಿದ್ರು ನನ್ ಮೂಗು ಸುಳ್ಳೇಳಲ್ಲೆಲ್ಲೋ ಸಾಂಬಿ… ಖರೇವಂದ್ರು ಬುತ್ತಿ ವಾಸಣೆ ಬರಲಿಕ್ಕತ್ತೈತೆ… ಅದ್ಯಾರ್ಯಾರ ಆಗಿರ್ಲಿ… ಮೊದ್ಲುಂಬಾಂಣು… ಹೊಟ್ಟೆ ಹಸಿದೈತೆಲೋ… ಬಾಡ್ಕಾವ್ ಅದ್ಯಾಕಂಗವಸ್ರ ಮಾಡ್ತಿ… ನೀನೇನು ಉಂಬಾಕ್ಕಿಡ್ತೀಯಾ… ತಿಂಬಕಿಡ್ತೀಯಾ… ಬಡ್ಕೊಂಡ್ ಹೋತಿ… ನನ್ ಕಸ್ಟ ನೊಂಗೊತ್ತು?… ನಿಂಗೇನು ಸೆಂಟ ಗೊತ್ತಾತ್ತೈತಿ?… ಮದ್ಲೆನದಂತ ನೋಡ್ಕಬರಾಣು…” +ಬಾಯಾಗಿಟ್ಕಂಬಾದಾಗಿದ್ರೆ ಉಂಡು ಬಿಡಾಣು… ಒಡ್ಲಾಗ ಕೂಳಿದ್ರೆ ಏನು ಮಾಡಿದ್ರು ಛಂದಿರತೈತಿ… ನಾನು ಹೆಣ ಮಲಿಕ್ಕಂಡಂಗೆ ಮಲಿಕ್ಕಂಬಾದು… ನಿಂದು ನೀನು ತೀರಿಸ್ಕೊಂಡು ಪೆಂಟೆ ಕಿತ್ತೋದಂದ್ರೆ ಹೆಂಗೆ?…” ಅಂತ ಎದ್ದು ಕುಂತು ಕಂಣಿಗೆ ನೀರು ತಂದುಕೊಂಡು ಬತ್ತಿದ್ದ ಹಳ್ಳದ ಗೌರವ ಕಾಪಾಡಿಕೊಂಡಳು. +ಆಕೆ ಯಾವತ್ತೂ ಹಿಂಗ ಮಾಡಿದಾಕಿಯಲ್ಲ… ಒಡಲಾಗೆ ಕೂಳಿಲ್ಲದ್ದು ಹಿಂಗೆ ಮಾತಾಡಿಸ್ತದೆ… ನಾನೆಂದೂ ಒಂದು ಹಿಡಿ ಬಾನ ಕೊಟ್ಟು ಒಡಲು ಕೈ ಹಿಡಿದು ನಡಿಸಿದೋನಲ್ಲ… ಈಕೆ ಮಾತಿಗೆ ಗೌರವ ಕೊಡೋಣಂದರೆ ಬುತ್ತಿ ವಾಸಣೆ ಒಂಚೂರು ಮೂಗಿಗಟೀವಲ್ಲದು… +“ವಯ್… ಬುತ್ತಿ ವಾಸಣೆ ಯಲ್ಲೈತಭೇ ನಿನ್ನೌವ್ನ… ಏನೋ ನೆವತಕ್ಕೋಡು ಸವದೋತನ್ನಂಗೆ ಮಾಡ್ತಿಯಲ್ಲೆ…” ಎಂದು ಮೂಸಿ ಮೂಸಿ ಹೇಳಿದನು… +“ಯಯ್ ಹಿಂಗಾಕಾಯ್ತಲೋ ನಿನ್ಮೂಗು… ಅದನ್ನ ಕುಯ್ದು ಕುರ್‍ಕುಂದಿ ನಾಗ್ನೀಗೆ ಕೊಡು… ಒಂದ್ ಜತಿ ಕಾಲ್ಮರಿ ಕೊಡ್ತಾನೆ…” ಎಂದು ಸೋಟಿ ತಿವಿದಳು. +“ನಗಡ್ಯಾಗಿ ಮೂಗು ಕಟ್ಕೊಂಡೈತಿ ಬಿಡು… ಅದ್ಕೆ ವಾಸ್ಣೆ ಹಿಡಿವಲ್ದು ಹಾಳಾದ್ದು… ಬೇಕಾರ ಮೂಗ ತೊಗ್ಲು ಕುಯ್ದು ಕಾಲ್ಮರಿ ಮಾಡ್ಸಿ ನಿಂಗೇ ತೊಡಿಸ್ತೀನಿ… ಬಾಯಿ ಮುಚ್ಕೊಂಡು ಬಿದ್ಕ… ಇಂಥೊತ್ನಾಗೆ ಬುತ್ತಿ ಯಾಕ ಬಗಸ್ತಿ… ಜ್ವಾಳದ ಬೆಳ್ಸಿ ಸುಟ್ ಕೊಡ್ತೀನಂತ ಅಮ್ಯಾಕ” ಎಂದು ಆಕೆಯ ಮೊಲೆಗಳನ್ನು ಎಲ್ಡು ಕಯ್ಯಿಗಳಿಂದ ಹಿಚುಗಲತ್ತಿ ಕಿಪ್ಪ್ಪೊಟ್ಟೆ ಮೇಲೆ ಕೂಕಂಡನು… +ಬಲವಾದ ಮನುಶ್ಯೋಳಾದ ನಿಂಗಿ ಒಮ್ಮೆಗೆ ಜಾಡಿಸಿ ತಳ್ಳೂತ್ತಲೆ ಅವನು ಅಷ್ಟು ದೂರ ಅಂಗಾತಲೆ ಬಿದ್ದನು. +“ನೀನೇನೋ ಮಣುಸೋನೋ…ರಾಕ್ಷಸನೋ… ಬುತ್ತಿ ವಾಸಣೆ ಬಡುದ್ರೆ ನಂಗೊಂದ ನಮೂನಿ ಆಕೈತೆಲೋ ಬಾಡ್ಯಾ… ಉಂಡರೆ ಸೈ… ಇಲ್ಲಾಂದ್ರಿಲ್ಲ” ಎಂದು ಎದ್ದು ನಿಂತು ಪರಪರಾಂತ ತೊಡೆ ಸಂದಿ ಕೆರೆದುಕೊಂಡಳು. +ಅಷ್ಟುದ್ದ ಇದ್ದೋನು ಇಷ್ಟುದ್ದದವನಾಗಿ ಅವನು ಮಕ್ಕಂಡಲ್ಲಿಂದ ಎದ್ದು ಬಂದು… ಆಯ್ತಲೇ ಆತು… ನಿನ ಮಯ್ಯಿ ಬೆವರ ವಾಸಣೆಯಂಥ ಇನ್ನೊಂದು ವಾಸಣೆ ಮೂಗಿಗೆ ತಗುಲವಲ್ದು… ನಿನಂದಂಗಾಗ್ಲಿ ಹುಡುಕೋಣು ನಡೆ” ಎಂದು ಆಕೆಯ ‘ಸೆಗಲ ಬಂಟಕ್ಕೆ’ ಕಯ್ಯಿ ಹಾಕಿದನು. +ಅವರೀರ್ವರು ಬೇಟೆಗಾರರಂತೆ ದೇಹವೆಂಭೋ ದೇಹಗಳನ್ನು ತುಸುವೇ ಬಗ್ಗಿಸಿ ನಾಟ್ಯಗತಿಯಲ್ಲಿ ಹೆಜ್ಜೆಹಾಕತೊಡಗಿದರು ಮುಂದು ಮುಂದಕ… ಅವರೀರ್ವರ ಮೂಗುಗಳೆಂಭೋ ಮೂಗುಗಳು ರಾಯಲಪಾಡು ಜಾತಿ ನಾಯಿಗಳಂತೆ ಅವರನ್ನು ಬಿಟ್ಟು ಮುಂದು ಮುಂದಕ ಹೋಗಿದ್ದವು… +ಒಂದೊಂದೆ ಹೆಜ್ಜೆಗೆ ವಾಸನೆ ಎಂಬೋದು ಒಂದೊಂದು ರೂಪ ಧಾರಣ ಮಾಡತೊಡಗಿತು. ಒಂದೊಂದು ನಾಡಿ ಬಡಿತಕ್ಕೆ ಒಂದೊಂದು ನಮೂನಿ ಸಂವೇದನೆ ರವಾನಿಸತೊಡಗಿತು… ಅರಳಿದ್ದ ಮೂಗುಗಳನ್ನು ಅಕುಂಚನಗೊಳಿಸಬೇಕೆಬುವಷ್ಟರಲಿ ನರಿಗಳೆರಡು ಹೋ ಹೋ ಹೋ ಎಂದರಚುತ್ತ ಆಕ್ರಮಣ ಮಾಡುವಂತೆ ಎದುರಿಗೆ ಸಾಮು ತೆಗೆಯತೊಡಗಿದವು. ಸಾಂಬಿಯಾ ನಿನ್ನೌವ್ನ ಅಂತ ಕಯ್ಯಿಗೆ ಸಿಕ್ಕ ಕಲ್ಲೊಂದನ್ನು ಎತ್ತಿ ಪ್ರಯೋಗ ಮಾಡಲು ಅವು ಹ್ಹೋ ಹ್ಹೋ ಹ್ಹೋ “(ನಮ್ಮಾಟು ತಿಂಬಲಾಕ ಬಂದೀರ… ನಿಮ್ಮ ಕಳ್ಳೆವವಾರಾನ ಯಲ್ರಿಗೂ ಟಾಂಟಾಂ ಹಾಕ್ತೀವಿ” ಎಂಬಂತೆ) ತಂತಮ್ಮ ಮುಕುಳಾಗ ಬಾಲ ತುಂಬಿಕೊಂಡು ಓಡಿ ರಿಜರಿ ಪೊದೆಯೊಳಗೆ ಅಂತರ್ಧಾನವಾದವು. +ಇದೇನು ಕರುಮವೋ ಅಂತ ಮೂಗುಗಳನ್ನು ಮುಚ್ಚಿಕೊಳ್ಳುವಷ್ಟರಲ್ಲಿ ರಣ ಹದ್ದೊಂದು ಬಾಯಲ್ಲಿ ಎಂಥದೋ ಒಂದು ಕಚ್ಚಿಕೊಂಡು ಕೇಕಕಣ ಅಂತ ಸಬುದ ಮಾಡುತ್ತ ವಿಮಾನದಂಗೆ ರೆಕ್ಕೆ ಬಿಚ್ಚಿಕೊಂಡು ಮುಗುಲಿಗೆ ನೆಗೆಯಿತು. +ಸಾಮಾನು ಮುದುಡಿ ಹಿಂಗಿ ಹೋಗಿ ಎದೆ ಮೂಲಕ ಬಾಯಿಗೆ ಬಂದಂದಾಗಿ ಸಾಂಬಿಯು “ನನ್ನೆದಿ ಬಡಕಂತತಿ… ಓಗ್ಗಿ ಬಿಡಾಣು ಬಾರೇ ನಿಂಗಿ” ಎಂದು ಒಂದೆರಡು ಹೆಜ್ಜೆ ಹಿಂದೆ ಇಟ್ಟ. +“ಅದ್ಕಾರ ಎದಿ ಬಡ್ಕಳ್ಳಲ್ಲ… ಇದಕಾರ ಬಡಕಂತತ… ನೋಡೇ ತಿರಾಣು… ಮುಕ್ಕಿ ಮುಚ್ಕೊಂಡು ಬಾರಲೋ ನನ್ನಾಟಗಳ್ಳ” ಎಂದು ನಿಂಗಿ ಗದರಿಸಿದೇಟಿಗೆ ಹಿಂದೆ ಬಂದನು… +ಅವರು ಹಂಗೆ ಸಪ್ತಪದಿ ತುಳಿದು ಮುಂದೆ ಹೋಗಿ ನೋಡಲು ಹೆಣವೆಂಬುದು ಹೊಟ್ಟೆ ಹೊಡಕಂಡು ಬಕಬಾರಲೆ ಬಿದ್ದಿತ್ತು… ಅಲ್ಲಲ್ಲಿ ಹರಕೊಂಡಿದ್ದ ತವುಜರೊಳಗಿಂದ ಮಿಡಿ ನಾಗರ ಬುಸ್ಸಂತ ಹೆಡೆ ಬಿಚ್ಚುತ್ತಲೆ ಬುಳ್ಳಂತ ಮೂತ್ರ ವಿಸರ್ಜಿಸಿಕೊಂಡು ಅರ್ಧಬಲ ಓಡಿದರು. +ನೀವಿಬ್ಬರು ಯಾಕ ಹೋಗಿದ್ದೀರಿ ಎಂಬ ಪ್ರಶ್ನೆ ಕೇಳುವುದರ ದ್ವಾರ ಯಾರಾದರು ತಮ್ಮ ಹಾದರ ಬಟಾ ಬಯಲ ಮಾಡ್ಯಾರೆಂಬ ಅದುರಿಕೆಯಿಂದ ನಿಂಗಿ ಬಾಯಿಗೆ ಅರಿವೆ ಇಟ್ಟುಕೊಂಡಿರಲು ಸಾಂಬಿಯಾನು “ಕಟ್ರಳ್ಳದಾಗ ಹೆಣ ಬಿದ್ದೈತಿ” ಎಂದು ಕೂಗುತ್ತಾ ಕರಗಲ್ಲಿನಿಂದ ಚಾವಡಿ ಕಟ್ಟೆವರೆಗೆ ಹೋಗಲು… +ವಾಗಿಲಿ ಮಂದಿ ಕಿವಿ ಬಾಯಿಗೆ ತಂದುಕೊಂಡೋ; ಕಿವಿಗೆ ಬಾಯಿ ತಂದುಕೊಂಡೋ ಹುಟ್ಟು ಮಾರ್ಗದರ್ಶೀಲೆ ಕಟ್ರಳ್ಳ ಎಲ್ಲೈ ತೆಲ್ಲೈತಂತ ಓಡಿ ಹೆಣದ ದರುಶನ ಪಡೆದು ಅದರ ಕುರಿತು ತರಾವರಿ ಕಥೆ ಪೇರಿಸಿ ಘನವಾದ ಭವನ ನಿರ್ಮಿಸಿತು. ಕ್ರಮೇಣ ಕಟ್ಟುದ ಕಟ್ಟಿ ಅದರೊಳಗೆ ವೀರಭದ್ರಪ್ಪನೆಂಬಭಿದಾನದ ನನ್ನನ್ನು ಪ್ರತಿಷ್ಟಾಪನೆ ಮಾಡಿತು. +ಅಂತು ಚೂಸುಕುಂಟಾನು ಎಂಬ ಭೀಷ್ಮ ಪ್ರತಿಜ್ಞೆ ಮಾಡಿದ್ದ ಜಗನ್ನಾಥರೆಡ್ಡಿಯು ತಲೆ ಮರೆಸಿಕೊಂಡು ಅಂತರ್ಧಾನನಾದನು. ಕುಲಕರ್ಣಿ ರಾಘಪ್ಪ; ಬಡಿಗೇರ ಮಾನಪ್ಪ; ಕುಂಟುಗೌಡರೆಂಬುವರೇ ಮೊದಲಾದವರ ಸಮಕ್ಷಮದಲ್ಲಿ ಎಸೈ ಮಾರ್ತಾಂಡ ಸಾಹೇಬನು ಪಂಚನಾಮೆ ನಡೆಸಿ ಅದರ ನಕಲುಪ್ರತಿಗಳನ್ನು ಹತ್ತು ತೆಗೆಸಿ ಹತ್ತು ಕಡೆ ಕಳುಹಿಸಿದನು… +ಅಸಿಸ್ಟೆಂಟು ಟೀಚರು ತಿಮ್ಮಯ್ಯ ಶೆಟ್ಟಿ ಗಹಗಹಿಸಿ ನಗುತ್ತ ನಡೆಸಿದ ಸಂತಾಪ ಸೂಚಕ ಸಭೆಯಲ್ಲಿ ನನ್ನ ಗುಣಗಾನ, ಸೊಕ್ಕು, ಸೆಡವು ವರ್ಣಿಸಿದ್ದೇ ವರ್ಣಿಸಿದ್ದಂತೆ… +ಅಡ್ಡ ದಾರೀಲಿ ಕೆಂಪು ಬಸ್ಸಿನಿಂದಿಳಿದು ನಡೆದು ಬರುವಾಗ ದಾಸರಯಂಕೋಬ ‘ಇಂಕಾ ಮೀರು ಬ್ರತಿಕೇ ಉನ್ನಾರಾ’ ಎಂದು ಪ್ರಶ್ನೆ ಕೇಳಿದ್ದಕ್ಕೂ ಮೊದಲು ಬಿಡಿಓ ಪರಂಧಾಮಯ್ಯ ‘ಪೀಡೆ ಕಳೀತಂತ ಇಟ್ಕೊಂಡು ಎಲ್ರಿಗೂ ಒಳ್ಳೆಯವನಾಗಿ ಕೆಲಸ ಮಾಡ್ಕೊಂಡು ಹೋಗಪ್ಪಾ’ ಎಂದು ಆಶೀರ್ವಾದ ಮಾಡಿದ್ದ. ದಾಸರವ ಹಿಂಗ್ಯಾಕ ಕೇಳುತ್ತಿರುವನೆಂದೊಂದು ಕ್ಷಣ ಅರ್ಥವಾಗದೆ ಮಿಕಿಮಿಕಿ ನೋಡಿ ಮುಂದುವರಿದಿದ್ದೆ. ನಾನು ಬದುಕಿರುವ, ಮತ್ತು ಬದುಕಿರುವ ಸಂಗತಿ ಕಿವಿಗೆ ಬೀಳುತ್ತಲೆ ತಳವಾರ ಗುರುವನ ಮೂಲಕ ರಿಂದಮ್ಮ ನನ್ನನ್ನು ಉಪ್ಪರಿಗೆ ಮನೆಗೆ ಕರೆಸಿಕೊಂಡು ಕಾಫಿ ಕೊಟ್ಟು ಸನ್ಮಾನ ಮಾಡಿ ದೇವರು ದೊಡ್ಡವನೆಂದು ವೆಂಕಟರಮಣನ ಪಟದ ಮುಂದೆ ತುಪ್ಪದ ದೀಪ ಹಚ್ಚಿ ಕೈ ಮುಗಿದಳು. ಆಕೆಯ ತವರೂರಿನ ಮೂರು ಹರಿದಾರಿ ವಿಸ್ತೀರ್ಣದ ಹೊಲದ ನಡುವೆ ಬವಣೆಯೊಳಗೆ ಮನೆ ಮಾಡಿಕೊಂಡು ತಲೆಮರೆಸಿಕೊಂಡಿದ್ದ ತನ್ನ ಪತಿ ಪರಮೇಶ್ವರ ಜಗನ್ನಾಥ ರೆಡ್ಡಿಯನ್ನು ಕರೆತರಲು ಸಾರೋಟನ್ನು ಕಳಿಸುವ ವ್ಯವಸ್ಥೆ ಮಾಡಿದಳು. ಅವತ್ತು ರಾತ್ರಿಯೇ ಜೀವಾವಧಿ ಕೈದಿತನ ಅನುಭವಿಸಿದವನಂತೆ ಮೊಳವರೆ ಗಡ್ಡ ಬಿಟ್ಟುಕೊಂಡು ಬಂದ ಜಗನ್ನಾಥ ರೆಡ್ಡಿಯ ಕರ್ಮಕ್ಕೆ ನಾದಿರ ಗೋವಿಂದ ಬೇರೆ ಹೆಂಡತಿ ನೋವು ತಿಂಥಿದ್ದಾಳೆಂದು ಕೈರುಪ್ಪಳಿಗೆ ಹೋಗಿದ್ದ. ಅವನು ಬಂದು ಬೋಳಿಸಿದ ನಂತರವೇ ರೆಡಿ ಚಾವಡಿ ಕಟ್ಟೆ ಮೇಲೆ ಸಮಾಧಾನದ ಉಸಿರು ಬಿಡುತ್ತ ವಿರಾಜಮಾನನಾಗಿದ್ದು. “ಯಾವೋನು ಯಾವ ಬಾವಿಗಾದ್ರು ಬಿದ್ಕಳ್ಳಿ… ನನ್ನ ಗಂಟೇನು ಹೋಗ್ತದೆ?” ಎಂದು ಸ್ವಇಚ್ಚೆಂದ ನುಡಿದದ್ದಲ್ಲದೆ ಬೇಕು ಬೇಕಾದವನ್ನು ಕರೆಸಿ ಹೋಳಿಗೆ ಊಟ ಹಾಕಿಸಿದ್ದು.. +ನಿಂಗಿಯೂ ಸಾಂಬಿಯೂ ದಿನಗಳ ಮೇಲೆ ಕಟ್ರಳ್ಳದಲ್ಲಿ ಕಾಣಿಸಿಕೊಂಡ ಶವ ನನ್ನ ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿತು. ಅದು ನನ್ನದೇ ಯಾಕಾಗಿರಬಾರದು ಎಂಬ ಅನುಮಾನ ಕಾಡತೊಡಗಿದ ಏಳನೆ ದಿನಕ್ಕೆ ನನ್ನ ಸ್ವಾಸ್ಥಿಯಿಂದ ಜಲಜಾಕ್ಷಿ ಬರೆದ ಸುದೀರ್ಘ ಪತ್ರ ಬಂತು. ಬರಲಿರುವ ಶಾಸನ ಸಭಾ ಚುನಾವಣೆಯಲ್ಲಿ ತನಗೇ ಟಿಕೆಟ್ ಕೊಡುವುದೆಂದು ಹೈಕಮಾಂಡು ನಿರ್ಧರಿಸಿರುವ ಬಗ್ಗೆ; ಸುರೇಶ ಗೌಡ ಬೀಫ್ ತಿನ್ನುವ ಹುಡುಗಿಯನ್ನು ಮದುವೆಯಾಗಿ ಜಾಗ ಖಾಲಿ ಮಾಡಿರುವ ಬಗ್ಗೆ; ಖಡ್ಗದ ಸಂಸ್ಥಾಪಕ ಸಂಪಾದಕ ಕಮಲಾಕರಗೆ ಪತ್ರಿಕಾ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿರುವ ಬಗ್ಗೆ; ಲೈಂಗಿಕ ಪುಷ್ಟಿಗೆ ‘ಅರ’ ಅನಸೂಯಾ ರಘುರಾಮ) ಕಂಪನಿಯ ದೋಸೆ ತಿನ್ನಿರಿ ಎಂದು ವೃತ್ತ ಪತ್ರಿಗೆಗಳಲ್ಲಿ ಪ್ರಕಟವಾಗುತ್ತಿರುವ ಜಾಹಿರಾತುಗಳ ಬಗ್ಗೆ; ಮಾತಾಡಿಸುವ ನೆಪದಲ್ಲಿ ಶಾಮ ಮನೆಗೆ ಹೋಗಿ ಅನಸೂಯಾ ದಂಪತಿಗಳ ಬೆಂಗಳೂರು ವಿಳಾಸ ಬೆದಕಾಡಿ ಪಡೆದುಕೊಂಡಿರುವ ಬಗ್ಗೆ; ಪರಮೇಶ್ವರ ಶಾಸ್ತ್ರಿಗಳು ಪಾರ್ಶವಾಯು ಪೀಡಿತರಾಗಿಮಲಗಿರುವ ಬಗ್ಗೆಸುದೀರ್ಘವಾಗಿ ಬರೆದ ನಂತರ ಮೂಲೆಯಲ್ಲಿ ಚಿಕ್ಕದಾಗಿ ಶಾಮನಿಗೆ ಪ್ರಸಿದ್ಧ ಬ್ಯಾಂಕೊಂದರಲ್ಲಿ ಅಪಾಂಟ್ಮೆಂಟ್ ಆಗಿದ್ದು ಅವನು ಸದ್ಯಕ್ಕೆ ಇಪ್ಪತ್ತೊಂದೂವರೆ ಕಿಲೋಮೀಟರು ದೂರದಲ್ಲಿರುವ ಕೊತ್ತಲಿಗೂ ಕೊಟ್ಟೂರಿಗೂ ಡೇಲಿ ಅಪ್ ಅಂಡ್ ಡೌನು ಮಾಡುತ್ತಿರುವನೆಂದೂ; ಎಷ್ಟೇ ಕೆಲಸವಿದ್ದರೂ ಒಂದೆರಡು ದಿನಗಳಮಟ್ಟಿಗಾದರೂ ಬಿಡುವುಮಾಡಿಕೊಂಡು … ತೇದಿಯಂದು ನಡೆಯಲಿರುವ ‘ಸ್ತ್ರೀಶಕ್ತಿಯೇ ದೇಶದ ಶಕ್ತಿ’ ಎಂಬ ಮಹಾಸಮ್ಮೇಳನದಲ್ಲಿ ಬಂದು ಭಾಗವಹಿಸಿ ವಂದನಾರ್ಪಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದೂ ಬರೆದಿದ್ದಳು. +ಹೆಲ್ತು ವರ್ಕರು ಇಮಾಮನಿಂದಾಗಿ ಇಂಗ್ಲೀಷಿನ ಸಾಂಕ್ರಾಮಿಕಕ್ಕೆ ತುತ್ತಾಗಿದ್ದ ಮಕ್ಕಳಿಗೆ ‘ಕಮಲಳ ಊಟ, ಬಸವನ ಆಟ’ ಹತ್ತು ಸಲ ಬರೆಯುವಂತೆ ಸೂಚಿಸಿ ಹರಳೆಣ್ಣೆ ಮುಖದ ತಿಮ್ಮಯ್ಯ ಶೆಟ್ಟಿಗೆ ಅದರ ಉಸ್ತುವಾರಿ ವಹಿಸಿ ಜಲಜಾಕ್ಷಿಯ ಪತ್ರವನ್ನು ಒಂದೊಂದು ನಮೂನಿ ಅರ್ಥಮಾಡಿಕೊಳ್ಳುತ್ತ ಕೂತೆ… ಹುಣುಸೆಹಣ್ಣು ಗೊತ್ತಿರದ ಹುಡುಗರು ಎಪಿಪಿಎಲ್‌ಇಯಾಪಿಲ್ ಬರೆದಂತೆ ಕಟ್ಟಾಜ್ಞೆ ವಿಧಿಸುವ ನೆಪದಲ್ಲಿ ಹಿಂದೆ ಮುಂದೆ ತಿರುಗಾಡುತ್ತಾ ಶೆಟ್ಟಿ ನಾನು ಓದುತ್ತಿದ್ದ ಪತ್ರದಲ್ಲಿ ಇಣುಕಿ ನೋಡುತ್ತಿದ್ದ. ಮಧ್ಯರಾತ್ರಿಯಲ್ಲಿ ಎದ್ದು ಬಂದು ತನ್ನ ಮುಖದ ಒಂದು ಭಾಗವನ್ನು ಬಳಪ ಮಾಡಿಕೊಂಡು ಶಾಲಾ ಗೊಡೆಯ ಮೇಲೆ ಜಲಜಾಕ್ಹಿಗೆ ವೀರಭದ್ರಪ್ಪ ಎಂದು ಬರೆದಾನೆಂಬ ಭಯದಿಂದ ಬಂದಿದ್ದ ಪತ್ರವನ್ನು ನಿಸ್ಸಂಕೋಚವಾಗಿ ಓದುವಂತೆ ಅವನಿಗೆ ಕೊಟ್ಟೆ, “ನಿಮ್ಮ ಪರ್ಸನಲ್ ಮ್ಯಾಟ್ರು” ಎಂದು ಮೊದಮೊದಲು ಹಿಂಜರಿದ ಅವನು ಕೊನೆಗೂ ಇಸಿದುಕೊಂಡು ಓದಲು ಪ್ರತ್ನಿಸಿದ. ಈಸ್ಟ್ ಇಂಡಿಯಾ ಕಂಪೆನಿ ಕಾಲದ ದಸ್ತಾವೇಜು ಓದುತ್ತಿರುವ ರೀತಿಯಲ್ಲಿ ಅಂತೂ ಇಂತೂ ಓದಿ ಮುಗಿಸಿ ಮುಖದಿಂದ ಮತ್ತಷ್ಟು ಎಣ್ಣೆ ಬಸಿದು ನಿರಾಶನಾಗಿ ಹಿಂದಿರುಗಿಸಿ ಜೀವ ಕಳೆದುಕೊಂಡವನಂತೆ ಸ್ಟೂಲಿನ ಮೇಲೆ ಹೋಗಿ ಕೂತುಕೊಂಡ. +ಆ ಪತ್ರದಲ್ಲಿದ್ದ ಯಾವ ಪಾಯಿಂಟ್ ಬಗ್ಗೆ ಆಲೋಚಿಸುವುದು ಮತ್ತು ಬರೆಯುವುದು! ಮಂಕಾಗಿ ಒಂದು ಕ್ಷಣ ಊರುಕುಂದಿ ಮಗಳು ತಿಮ್ಮಿಯ ಸಿಂಬಳ ತುಂಬಿಕೊಂಡಿದ್ದ ಮೂಗನ್ನೇ ಶೂನ್ಯವೆಂದು ಭಾವಿಸಿ ನಿಟ್ಟಿಸುತ್ತ ಕೂತುಕೊಂಡೆ. +“ಸಾಲ್ಯಾಗ ಯಸ್ರು ಬರಿಸಿ ಬರೋಬ್ಬರಿ ಮೂರ್ತಿಂಗ್ಳು ತುಂಬ್ಕಂತು… ಯಲ್ಡಕ್ಕಸರ ಕಲಿಸಿದ್ದೊಂದು ಬುಟ್ರೆ … ಗೊರುಮೆಂಟಿನೋರು ಕಡೀಲಿಂದ ಏನು ಬಾನ ಕೊಡಿಸಿದ್ದು ಅರಿವೇ ಕೊಡಿಸಿದ್ನಾ… ಇಲ್ಲದ್ನೇಳಿ ಕರ್ಕಂಡ್ಬಂದು ಸೇರಿಸ್ಕೊಂಡ್ನಲ್ಲ… ಪಿಳ್ಳೇನ ಗೋಡ್ರು ವಲಕೆ ಗುಬ್ಬಿ ಕಾಯಲಾಕ ಕಳಿಸಿದ್ದಿದ್ರೆ ಯಲ್ಡೊಪ್ಪತ್ತು ಪಿಳ್ಳೇಗೆ ಬಾನನಾರ ಸಿಕ್ತಿತ್ತು…” ಹೊರಗಡೆ ಊರಮ್ಮನ ಬೇವಿನ ಮರದ ಬುಡದಲ್ಲಿ ಉದ್ದೋಕೆ ನಿಂತ್ಕಂಡು ಉರುಕುಂದಿ ನನ್ಗೆ ಕೇಳಿಸ್ಲೀ ಅಂತ ಗಟ್ಟಿಯಾಗಿ ಮಾತಾಡುತ್ತಿದ್ದ… +“ಸಾಲೆ ಬ್ಯಾಡ ಕಸಾಲೆ ಬೇಡ… ಸಿಲೇಟು ವಕ್ಕಟ್ಟು ಬಂದ್ಬಿಡೆವ್ವೋ ಥಾಯಿ… ಸಾಲಿ ಕಲ್ತು ನೀನೇನಾಫೀಸರಾಗೋದೈತಿ” ಎಂದು ನನ್ನ ಪಿತಾಶ್ರೀ ಧಮಕಿ ನೀಡುತ್ತಿದ್ದುದಕ್ಕೆ ಪ್ರತಿಯಾಗಿ ಅಕ್ಕಸರ ತಲೀಗೆ ಹತ್ತುವುದೆಂಗ? ಈ ಹೊತ್ಗೆ. ಕುಡ್ದು ಬಂದೈತೆ ಮೂಳ ನಾಡ ಮೂಳ” ಎಂದು ಗೊಟಗುಟ್ಟುತ್ತ ತಿದ್ದುತ್ತಿತ್ತು. +ಸೋಲೂಪ ಹೊತ್ತಿನಲ್ಲಿ ಸುಂಕಲಿ ತನ್ನ ಬೀಸೋ ಕಲ್ಲು ಗಾತ್ರದ ತುರುಬನ್ನು ಎತ್ತೆತ್ತಿ ಕುಣಿಸುತ್ತ “ವ್ಯೋನೇ… ಗೋಡನತ್ರ ಅಯವತ್ತಿಸ್ಕಂಡ್ಬಂದು ಕುಡುದ್ರಿಂದ ಬಾಯಿಗೆ ಬಂದಂಗ ಅನಲಾಕತ್ತಿಯಲ್ಲ… ಅಯಪ್ಪಾದ್ರ ಸುಮಕದಾನ… ನಾನಾದ್ರ ಬಾಯಾಗ ಉಚ್ಚೆ ವಯ್ತಿದ್ದೆ… ಮಗು ಸಾಲಿ ಕಲೀಲಿ… ಅದ್ನ ನೋಡಿ ಸಂತೋಷಪಡೋದು ಬಿಟ್ಟು ಬಾನ್ ಕ್ವಡ್ಲಿಲ್ಲ… ಬಟ್ಟೆ ನೋಡ್ಲಿಲ್ಲ… ಅನಲಕತ್ತೀಯಲ್ಲ… ಅಯಪ್ಪೇನು ನಿನಗಂಟ್ತಿಂದಾನೇನು?” ಇವೇ ಮೊದಲಾದ ವಾಗ್‌ಪಾಶಗಳಿಂದ ತನ್ನ ಗಂಡನನ್ನು ಹೆಡ ಮುರಿಗೆ ಕಟ್ಟಿಎಳೆದೊಯ್ದಳು. +ಇಂಥ ಕುಸುಮ ಬಾಲೆಯರು ಎಷ್ಟೋ? ಕುಡಿದಾಗೊಂದು ನಮೂನಿ; ಕುಡಿಲಿಲ್ಲದಾಗೊಂದು ನಮೂನಿ… ಯಾರಾದರೂ ಹಚ್ಚಿಕೊಟ್ಟಾಗೊಂದು ನಮೂನಿ; ತಮ್ಮ ಪಾಡಿಗೆ ತಾವು ನಿಸೂರಿಕಿದ್ದಾಗೊಂದು ನಮೂನಿ… +ನನ್ನೀ ವಾಲಿಗ್ರಾಮ ಈ ದೇಶದ ನೂರು ವಿಶ್ವವಿದ್ಯಾಲಯಗಳಿಗೆ ಸಮ… ಒಂದು ವಿಶ್ವವಿದ್ಯಾಲಯದಲ್ಲಿ ಒಬ್ಬ ಮನುಷ್ಯ ನೂರು ವರ್ಷ ಕಲಿಯುವುದನ್ನು ಈ ಸುಗ್ರಾಮ ಕೇವಲ ಹತ್ತೇ ದಿನಗಳಲ್ಲಿ ಗ್ರಾಮ ಭಾರತದ ವಿರಾಟ್ರೂಪವನ್ನು ತೋರಿಸಿಬಿಡುತ್ತದೆ. ಅಬ್ಸರ್ವೇಷನ್ ಕೆಪೇಸಿಟಿ ಇರುವವರ್ಯಾರೇ ಆಗಲಿ ಬಂದೀ ಸದರೀ ಗ್ರಾಮದಲಿದ್ದ ಪಕ್ಷದಲ್ಲಿ ಬರಹಗಾರ ಅಥವಾ ಸಮಾಜ ಶಾಸ್ತಜ್ಞ; ಅಥವಾ ಮಾನವ ಶಾಸ್ತ್ರಜ್ಞ ಅಥವಾ ಜಾನಪದ ವಿದ್ವಾಂಸ… ಹೀಗೆ ಯಾವುದೊಂದಾದರೊಂದು ಜ್ಜಾನ ಶಾಖೆಯಲ್ಲಿ ಪ್ರಭುತ್ವ ಸಾಧಿಸಬಹುದು…. ಒಂಚೂರಾಗಲೀ ಯಾವುದೇ ಮಾಲಿನ್ಯವಿರದೀ ಪ್ರದೇಶದಲ್ಲಿದ್ದು ಆರೋಗ್ಯವಂತನಾಗಬಹುದು.. ಅಥವಾ ಕಂದಾರೆಮ್ಮನ ಗುಡಿಯೊಳಗಿರುವ ಕಲ್ಲು ಗುಂಡುಗಳನ್ನೆತ್ತಿ ಬಾಡಿ ಬಿಲ್ಡರಾಗಿಬಿಡಬಹುದು ಅಥವಾ ಆಯತಪ್ಪಿ ರೂಕ್ಷ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಅತ್ಯುತ್ತಮ ಕೊಲೆಗಾರನಾಗಿ ಬಿಡುವ ಅವಕಾಶವನ್ನು ತಳ್ಳಿಹಾಕುವಂತಿಲ್ಲ. +“ಯಂಥೋಥೋರ್ಗೆ ಇಲ್ಲಿ ಎಂಟ್ದಿನ ಇರಲಿಕ್ಕಾಗಿಲ್ಲ… ನೀನಿಲ್ಲಿದ್ದು ಸಾಲೆ ಹೇಳಿಂದೇನು ಕಡ್ದು ಗುಡ್ಡ ಹಾಕ್ತೀಯೋ ನಾ ಬೇರೆ ಕಾಣೆ. ಸುಮ್ನೆ ಗೌಡ್ರು ಜೊತೆ ಇಸ್ಪೀಟಾಡ್ತಾ ಕಾಲ ಕಳೆ… ಸಾಲಿ ಹೇಳೊ ಮನಸ್ಸಿದ್ದ ಪಕ್ಷದಲ್ಲಿ ಗೌಡ್ರು ಮಕ್ಕಳಿಗೊಂದೆ ಸಾಲೆ ಹೇಳಿ ಶಾಣೇರ್ನ ಮಾಡು ಬ್ಯಾಡನ್ನಲ್ಲ… ಇದು ಮೊದ್ಲೇ ರೌಡಿ ಕೊಂಪೆ… ಒಂದು ಹೋಗಿ ಇನ್ನೊಂದಾಗಬಾರ್ದು. ನೀನಿನ್ನು ಮುಂದೆ ಮದ್ವಿ ಪದ್ವಿ ಆಗಿ ಸಂಸ್ಕಾರ ಮಾಡೋ ಹುಡುಗ… ಕಾಟಿಗ್ರು ಮುಂಡೇವ್ಕೆ ಇದ್ಯೆ ಹೊತ್ತೋದಿಲ್ಲ… ಹತ್ತಿದ್ರೆ ಅವು ದೊಡ್ಡೋರು ಸಣ್ಣೋರನ್ನದಂಗೆ ತಲೆಮ್ಯಾಲತ್ತಿಕುಂಡ್ರುತಾವ” ಎಂದು ಕಲಕರ್ಣಿ ಸಾಂಪ್ರತು ಹೇಳಿದ್ದ ಮಾತು ನೆನಪಾಗುವುದು. +ಅದಕ್ಕೆ ಪ್ರತಿಯಾಗಿ ಜಗ್ನಾತ್ರೆಡ್ಡಿ “ನಾನು ಬಡ್ಕೊಂಡೆ ರಾಘವಪ್ಪ… ಮೇಸ್ಟ್ರೂನ ಹಾಕಂಗಿದ್ರೆ ಬ್ರಾಂಬ್ರೂನ ಹಾಕ್ರೀಂತ ಬಿಡಿಓಗೆ ಹೇಳ್ದೆ… ಅವ್ನು ಕೇಳಿದ್ನಾ… ಇರ್ಲಿ… ಇರ್ಲಿ… ಅದೆಷ್ಟು ದಿನ ಉರೀತಾನೋ ಉರೀಲಿ… ನೋಡೋಣು” ಎಂದು ಬಿಸಿಯುಸಿರೆಂಬ ಸರುಪಾಸ್ತ್ರ ಬಿಟ್ಟಿದ್ದ. +ಇಂಥ ತರಾವರಿ ಮಾರಕಾಸ್ತ್ರಗಳಿಂದ ತಪ್ಪಿಸಿಕೊಳ್ಳುತ್ತ ಹೇಗೋ ಒಂದು ರೀತಿಯಲ್ಲಿ ಬದುಕಿರುವ ಬದುಕುತ್ತಿರುವ ಇಂಥ ಹಳ್ಳಿಗಲಿದ್ದರೆ ಮಾತ್ರ ಜಲಜಾಕ್ಷಿಯಂಥವರು ಮಾಡುವ ಸಂಘಟನೆಗಳಿಗೆ ಅರ್ಥ ಬರುತ್ತದೆ. ತಲೆಗೊಂಚೂರು ಎಣ್ಣೆ ಕಾಣದೆ, ಹೊಟ್ಟೆಗೊಂಚೂರು ಬೆಣ್ಣೆ ಕಾಣದೆ ಅಬಡಾ ದಬಸ್ಡಾ ಪಶುಗಳಿಂದತತ್ತ ಬದುಕುತ್ತಿರುವ ಗ್ರಾಮೀಣ ಮಹಿಳೆಯರನ್ನು ದೂರ ಇಟ್ಟು ಅದ್ಯಾವ ಸಂಘಟನೆ ಮಾಡ್ತಾಳೋ ನಾಬೇರೆ ಕಾಣೆ! ಇಂಥ ಕ್ಷುದ್ರ ಬದುಕಿನೊಂದಿಗೆ ಒಡನಾಡಿರುವ ನನ್ನಂಥವರಿಂದ ಒಂದುಪನ್ಯಾಸ ಕೊಡಿಸಲಿಕ್ಕೇನಾಗಿತ್ತು ಧಾಡಿ ಅಂತ. ನನಗೆ ವಂದನಾರ್ಪಣೆ ಕೆಲಸಕ್ಕೆ ಆಕೆ ಸೋಪ್ತಿ ಮಾಡಿರುವುದು ಕಂಡು ನಗಬೇಕೋ? ಅಳಬೇಕೋ? ಒಂದೂ ಅರ್ಥವಾಗಲಿಲ್ಲ. ಬರಲಿರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲಿಕ್ಕೆ ಸಂಘಟನೆ; ಸಮ್ಮೇಳನದಂಥ ಗಿಮಿಕ್ ಶುರು ಮಾಡಿದಾಳೆಂದು ಅರ್ಥಮಾಡಿಕೊಳ್ಳಲು ತ್ರಾಸು ಪಡಬೇಕಾಗಿಲ್ಲ. +ಅದೇ ಹೊತ್ತಿಗೆ ಹೆಲ್ತುವರ್ಕಮಾಮು “ಹೆಲ್ಲೋ ಗುಡ್‌ಮಾರ್ನಿಂಗೂ… ಹೌ ಆರ್ ಯು” ಎಂದು ತನ್ನ ಮಾಮೂಲು ಇಂಗ್ಲೀಷು ವರಸೆಯಿಂದ ವಕ್ಕರಿಸುತ್ತ ನನ್ನ ಕೈಲಿದ್ದ ಪತ್ರದೊಳಗಿಣುಕಿ ನೋಡಿದ… ಲವ್ವು ಲೆಟರಸ್ಸೂನ ಬರೆಯೋಕೆ ಇಂಗಲೀಸು ಲ್ಯಾಂಗವೇಜೇ ಚಲೋ ಐತೆ ನೋಡ್ರಿ… ಈ ಇಲೇಜರ ಸೂ ಥೆಪ್ಟ್ ಮಾಡಿದ್ರೆ ನಿಮ್ಮಂಥೋರ ಕರಿಯರ್ರೇ ಹಾಳಾಗಿ ಬಿಡ್ತದೆ ನೋಡ್ರಿ…” ಎಂದು ತಲೆ ತಿನ್ನ ತೊಡಗಿದ ಅವನ ಮುಖಕ್ಕೆ ಉಗಿದು ಓಡಿಸುವ ಆಸೆ ಆಯಿತು. ದುರುಗುಟ್ಟಿ ನೋಡಿದೆ. ಆಗ ಅವನು ಉಗುಳು ನುಂಗಿ “ಹೆಲೋ ಮೈ ಡಿಯರ್ ರಿಕೆಟ್ಟೂ; ಹೆಲ್ಲೊ ಮೈ ದಿಯರ್ ಬೆರ್ರಿ ಬೆರ್ರಿ” ಎಂದುಮಕ್ಕಳಿಗೆ ರೋಗಗಳ ಹೆಸರಿಟ್ಟು ಹೆಲ್ತು ಚೆಕಪ್ಪಿಗೆ ತೊಡಗಿದ. ಅವನು ತಮ್ಮನ್ನು ಇಂಗ್ಲೀಷ್ ಭಾಷೆಯಿಂದ ಗುರುತಿಸುತ್ತಿದ್ದುದರಿಂದ ಮಕ್ಕಳು ರೋಮಾಂಚನಗೊಂಡು ಪ್ರತಿಕ್ರಿಯಿಸುತ್ತಿದ್ದೆವು. +“ನೋಡು ಇಮಾಮು… ರೋಗಗಳ ಹೆಸರಿಟ್ಟು ಹುಡುಗರ್ನ ಕರೀಬ್ಯಾಡಾಂತ ಎಷ್ಟ್ ಸಾರಿ ಹೇಳ್ಬೇಕು: ಎಂದು ಗದರಿದೆ. +ತಮ್ಮಕ್ಕನನ್ನು ಬಿಡಿಓಗೆ ಅಡ್ಡ ಹಾಕಿರುವ ಅವನ ವರ್ತನೆಯನ್ನು ವಿರೋಧಿಸುವ ಗೋಜಿಗೆ ಹೊಗುತ್ತಿರಲಿಲ್ಲ. +“ವಾಡ್ ದೂ ಯು ಮೀನ್?” ಅಂದ. +“ವಾಟು ಇಲ್ಲ ಮೀನೂ ಇಲ್ಲ ಕಣಪ್ಪಾ… ನಿನ್ನೆಲ್ತು ಚೆಕ್ಕಪ್ ಸಾಕು ಮಾಡಿ ಹೊರಗ್‌ಹೋಗು” ಅಂದೆ. ಎಲ್ಲ ಇದ್ದೂ ಇಲ್ಲದಂತಿರುವ ಅಥವ ಇರದಿದ್ದರೂ ಇದ್ದಂತೆ ವರ್ತಿಸುವ ಹೆಡ್ಲಾಂಗ್‌ಫೆಲೋ (ಇಮಾಮ ಇಟ್ಟಿರುವ ವಿಶೇಷಣ) ಲಕ್ಹ್ಮಿರೆಡ್ಡಿ ಇದ್ದ ಎರಡು ಹಲ್ಲುಗಳ ನಡುವೆ ಒಂದು ಕೋರೆ ಗಣೇಶ ಸಿಕ್ಕಿಕೊಂಡು ಬಂದ ರವುಡೂರು ಲಕ್ಷ್ಮಿ ರೆಡ್ದಿ “ಹೋಗ್ಲಿ ಬುಡ್ರಿ ಮೇಷ್ಟರೇ… ಯಲ್ತಿಲ್ದಿದ್ರೆಂಗ ವುಡ್ರು ಥೇಲೀಗೆ ಓದು ಅತ್ತತೈತಿ” ಎಂದು ಅಡ್ಡ ಬಾಯಿ ಹಾಕಿದ. +ಊರಾಳುವ ಜಗನ್ನಾಥರೆಡ್ಡಿಯ ಸಾರೋಟಿನ ಸಾರಥಿಯಾಗಿ ಕಾರ್ಯನಿರ್ವಹಿಸುತ್ತ ಇಪ್ಪತ್ತಾರು ವರ್ಷಗಳನ್ನು ನುಲಿ ಮುಪ್ಪಾಗಿರುವ ಆತಗೆ ಟವುಜರು ಹಾಕಿಕೊಂಡು ಟಸ್ಸಾಪುಸ್ಸಾಂತ ಇಂಗ್ಲೀಶು ಮಾತಾಡುವವರೆಂದರೆ ಎಲ್ಲಿಲ್ಲದ ಮೋಜು. +“ಲಕ್ಷ್ಮೀ ರೆಡ್ಡಿ … ಸ್ವಲ್ಪ ಬಾಯ್ಮುಚ್ಕೊಂಡೋಗ್ತೀಯಾ…” ಎಮ್ದು ಗದರಿಸಿದೆ. +ತನ್ನ ಏಕಮಾತ್ರ ಅಭಿಮಾನಿಯಾದ ಲಕ್ಷ್ಮಿರೆಡ್ಡಿಯನ್ನು ಗದರಿಸಿದ್ದು ಇಮಾಮನಿಗೂ ಹನುಮಂತ ದೇವರಂತಿರುವ ತನ್ನನ್ನು ಗದರಿಸಿದ್ದರಿಂದ ಲಕ್ಷ್ಮೀರೆಡ್ಡಿಗೂ ಏಕಕಾಲಕ್ಕೆ ಸರಿಬರಲಿಲ್ಲ. +ಎಲಾ ನಿನ್ನ ನೋಡ್ಕೋತೀವಿ ಎಂಬಂತೆ ಮುಖ ಮಾಡಿಕೊಂಡರು. +ಸಹ ಶಿಕ್ಷಕರು, ಮಕ್ಕಳು ಬೆರಗಿನಿಂದ ನೋಡುತ್ತಿದ್ದಂತೆಯೇ ಆ ದಮನಕ, ಕರಟಕರು ಪರಸ್ಪರ ಕೈ ಹಿಡಿದುಕೊಂಡು ದಪ್‌ದಪ್ ಹೆಜ್ಜೆ ಹಾಕುತ್ತ ಅಲ್ಲಿಂದ ಕದಲಿದರು. +ನಾವು ಕೆಲಸ ಮಾಡುತ್ತಿರುವುದೇ ಪನಿಷ್ಮೆಂಟ್ ಪ್ಲೇಸಾದ್ದರಿಂದ ಯಾರಿಗೆ ಯಾಕೆ ಸೊಪ್ಪು ಹಾಕುವುದು? ಅದೂ ಅಲ್ಲದೆ ನಾನು ದೋಂಟ್ ಕೇರ್ ಮಾಸ್ಟರೆಂದೇ ಹೆಸರಾಗಿರುವವನು ಬೇರೆ! ಆದ್ದರಿಂದ ಅಸ್ಟು ಸುಲಭವಾಗಿ ಇಂಥಿಂಥ ಕಂಟಕ ಎದುರಾಗುತ್ತದೆ ಎಂದು ಬುದ್ಧಿ ಹೇಳುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. +ಜಗನ್ನಥರೆಡ್ಡಿಯಿಂದ ಬುಲಾವ್ ಮಾಡಿಸಿ ಲಕ್ಷ್ಮಿರೆಡ್ಡಿ ತಕ್ಕಶಾಸ್ತಿ ಮಾಡಿಸುತ್ತಾನೆ ಲಕ್ಷ್ಮೀರೆಡ್ಡಿ ಎಂದೇ ನನ್ನ ಸಹೋದ್ಯೋಗಿಗಳೆಲ್ಲ ಪರಿಭಾವಿಸಿದರು. ಊರ ಕರಗಲ್ಲಿನಂತಿರುವ ಲಕ್ಶ್ಮೀರೆಡ್ಡಿ ಮಾಡಬಾರದ್ದನೆಲ್ಲವನ್ನು ಮಾಡಿ ರವಡೂರು ತ್ಯಜಿಸಿ ವಾಲಿಗೆ ಬಂದು ಆಶ್ರಯ ಪಡೆದಿರುವಂಥ ವ್ಯಕ್ತಿ, ಸಕಲ ಜೀವಂಗಳಿಗೆ ಸದಾ ಕೇಡು ಬಯಸುವ ಆತ ಗುಣಸ್ವಭಾವದಲ್ಲಿ ಸರ್ಪಕ್ಕಿಂತಲೂ ಮಿಗಿಲು, ಜಗನ್ನಥರೆಡ್ಡ್ಡಿಯನ್ನು ಎದುರು ಹಾಕ್ಕೊಂಡು ಬದುಕಬಹುದಾದರೂ ಲಕ್ಷ್ಮೀರೆಡ್ಡಿಯನ್ನು ಎದುರು ಹಾಕಿಕೊಂಡರೆ ತಾಪತ್ರಯಗಳ ಸರಮಾಲೆಯನ್ನೇ ಎದುರು ಹಾಕಿಕೊಂಡಂತೆಯೇ ಲೆಕ್ಕ. ನನ್ನ ಎದೆಯ ಬಾಂಡಲೆಯೊಳಗೆ ಲಕ್ಷ್ಮೀರೆಡ್ಡಿ ಎಂಬ ದ್ವಿದಳ ಧಾನ್ಯ ಬೇಯುವುದೋ ಇಲ್ಲವೋ ನೋಡೇ ಬಿಡಬೇಕು ಎಂದು ನಿರ್ಧರಿಸಿದೆ. +ಮತ್ತೆ ಮತ್ತೆ ಓದಿಸಿಕೊಂಡಿತು ಜಲಜಾಕ್ಷಿಯ ಪತ್ರ. ಒಂದೊಂದು ಒಂದೊಂದು ಕಥಾ ಸಂಕೀರ್ತನ ಮಾಡುವ ಪತ್ರ. ಬರುವಾಗ ಶಾಸ್ತ್ರಿಗಳನ್ನು ಮಾತಾಡಿಸಿ ಬಂದಿದ್ದರೆ ಹಗುರಾಗಿ ಬದುಕಬಹುದಿತ್ತು. ಶಾಮ ಪ್ರಥಮಬಾರಿಗೆ ಅವರ ಮಾತು ಉಲ್ಲಂಘಿಸಿ ಇಂತ್ರೂ ಹೋಗಿದ್ದು; ನೌಕರಿ ಸಿಕ್ಕಿದ್ದು ಇತ್ಯಾದಿ ಅವನ ವರ್ತನೆ ವಿವರದಲ್ಲಿ ನನ್ನ ಪಾತ್ರವಿದೆ ಎಂದು ನಂಬಿದ್ದರೆ ಅದು ನನ್ನ ಕರ್ಮ. ಅದಕ್ಕೆ ನಾನು ಹೇಗೆ ಕಾರಣ? +ನನಗೆ ಎರಡು ಕೋಣೆಯ ಮನೆ ಬಾಡಿಗೆಗೆ ಕೊಟ್ಟಿರುವ ಗುರುವಪ್ಪ ಆತಂಕದಿಂದ ಬಂದು “ವ್ಯೊನ್ರಿ ಮೇಷ್ಟ್ರೆ ಆ ಮೂಳ ಲಚ್ಚಿಮೀ ರೆಡ್ಡೀನ ಯಾಕೆ ತಡುವಾಕೋದ್ರಿ… ಅವನೊಂದಿದ್ರೆ ನಾಕು ವ್ಯೋಳೋ ಮನುಸ್ಯಾ… ಪೀಡೆ ಬಗೆ ಅರೀತು… ಆರಾಮಿರ್ತೀರಿ ಅಂದ್ಕಂಡಿದ್ದೆ… ಯೀಗ್ನೋಡ್ರಿ ಮತ್ತೊಂದ್ತಲಿನವ್ವು ತಂದ್ಕಂಡೀರಿ” ಎಂದು ನಿಟ್ಟುಸಿರು ಬಿಟ್ಟ. +ನನಗೆ ಮತ್ತೆ ತಲೆ ಚಿಟ್ಟಂತು. ಈ ಗುರಪ್ಪನೂ ಅಷ್ಟೆ, ಇಲೀನ ಹುಲಿ ಅನ್ನೋ ಮನುಷ್ಯ… ಅದು ಯಾವ ಧೈರ್ಯದಿಂದ ಕಪಟ್ರಾಳ್ ವೆಂಕಟರೆಡ್ಡೀನ ಕಡಿದನೋ ಏನೋ?… +“ಏನು ಗುರಪ್ಪಾ… ಅದೇನಾಯ್ತೂಂತ ಹಿಂಗ ಮಾತಾಡ್ತಿದ್ದೀ… ಆ ಲಕ್ಷ್ಮೀರೆಡ್ಡಿಯ ತಳಬುಡ ಎಲ್ಲ ಗೊತ್ತು ನನ್ಗೆ… ಇಂಥ ಕೊಂಪೇಲಿ ಆ ಧೈರ್ಯ ಇರೋದ್ರಿಂದ್ಲೇ ನಾನು ಕೆಲಸ ಮಾಡ್ತಿರೋದು… ಅದೇನಾಯ್ತು? ಹೇಳು” ಅಂದೆ… ಉಸ್ತಾದನೆಂಬ ಗೌರವ ಕೊಟ್ಟು. +ಬರೀ ಮನಸ್ಸೊಂದೆ ಪೆಡಸಿದ್ರೆ ಇಂಥಲ್ಲೆಲ್ಲ ಜೀವ್ನ ಮಾಡೋದು ಕಷ್ಟ ಮೇಷ್ಟ್ರೇ… ನಿಮ್ಮೆತ್ರಕ್ಕೆ ಸರಿಯಾಗಿ ಮೈನೂ ಗಟ್ಟಿಮುಟ್ಟಾಗಿ ಮಾಡ್ಕೋಬೇಕು ಎಂದು ಬಂದ ಹೊಸತರಲ್ಲಿ ನನ್ನಿಂದ ಬಗೆಬಗೆ ಕಸರತ್ತು ಮಾಡಿಸಿದ್ದ; ಹೊಟ್ಟೆ ಸೊಂಟದ ಮಾಂಸವನ್ನು ತೋಳಿಗೆ ರವಾನಿಸಿದ್ದ… ಅಂಥವನು ಏಳರ ಜ್ವರ ಹುಟ್ಟಿಸುವುದೆಂದರೇನು. +ಅರ್ಜುನ ನೆಲಮೂಸುತ್ತ ಬಂದು ನಮ್ಮಿಬ್ಬರ ನಡುವೆ ಮೈಚಾಚಿ ಮಲಗಿಕೊಂಡಿತು. ಅದರ ಮೈ ನೇವರಿಸುತ್ತ ಗುರಪ್ಪ “ಅದೇನೆಂಬುದು ನಂಗೊಂದು ಗೊತ್ತಿಲ್ಲ ಮೇಷ್ಟ್ರೇ… ರೆಡ್ಡಿ, ಗೌಡ, ಕುಲಕರ್ಣಿ ಎಲ್ಲಾರು ಕಾಯಾಕ ಹತ್ಯಾರಂತೆ… ನೀವು ಲಗೂನ ಹೋಗ್ಬೇಕಂತೆ…” ಎಂದೊಂದು ನಿಟ್ಟುಸಿರುಬಿಟ್ಟು ನಿಮ್ಮ ಯಿಂದಕ ನಾನೂ ಬರ್ತೀನಿ. ಯದರ್ಕೋಬೇಡ್ರಿ” ಎಂದ ಧೈರ್ಯ ತುಂಬುವವನಂತೆ. +“ಕರ್ಯೋರಾದ್ರು ಯಾರು?” +“ಲಚ್ಚುಮೀರೆಡ್ಡಿ” +“ಎಲ್ಲಿದಾನೆ” +“ಬಚ್ಚಲ ಕಟ್ಟೆತಾವ” +“ನೀವೇ ವಾದ್ರೆ ಬೇಷಿತ್ತು?” +“ಗುರಪ್ಪ… ಹೇಳ್ದಷ್ಟು ಮಾಡು” ಎಂದೆ ನಿಷ್ಟುರತೆಯಿಂದ… +ಆತ ಒಲ್ಲದ ಮನಸ್ಸಿನಿಂದ ಹೋದ, ಚಾವತ್ತಿನಲ್ಲಿ ಲಕ್ಷ್ಮೀರೆಡ್ಡಿಯೊಂದಿಗೆ ಬಂದ. ಏನ್ಸಮಾಚಾರವೆಂಬಂತೆ ಆ ಮಾಜಿ ಜಮೀನ್ದಾರನ ಕಡೆ ನೋಡಿದೆ. +“ಬರ್ಬೇಕಂತೆ ಮೇಷ್ಟ್ರೆ” ಎಂದ ಗಡುಸು ಧ್ವನಿಯಿಂದ +“ಬರ್ತೀನಿ ನೀನು ಹೋಗು” ಎಂದೆ ಅಷ್ಟೇ ಗಡುಸಿನಿಂದ. ಅವನು ಹತ್ತು ಹೆಜ್ಜೆಗೊಮ್ಮೊಮ್ಮೆ ಕ್ಯಾಕರಿಸಿ ಉಗುಳಿ ಒಂದೊಂದು ಮೈಲಿಗಲ್ಲು ಸೃಷ್ಟಿಸುತ್ತ ಹೋದ. +ಕನಸಿನಲ್ಲಿ ಬಸುರಾಗಿ ಬೆಳಗಾಗುತ್ತಲೆ ಹಡೆಯಲು ಕೌದಿ ಹುಡುಕಾಡುವ ಗ್ರಾಮದ ಅನೇಕರ ಪೈಕಿ ಇವನೂ ಒಬ್ಬ. +ಗುರಪ್ಪನನ್ನು ಅಲ್ಲೆ ಕುಂಡ್ರಿಸಿ ನಾನೊಬ್ಬನೆ ಹೊರಟೆ… ಓಣಿಯ ಜನ ಆಯಕಟ್ಟಾದ ಜಾಗದಲ್ಲಿ ನಿಂತು ನೋಡುತ್ತಿದ್ದರು. +ಜಗನ್ನಾಥ ರೆಡ್ಡಿಒಯ ಉಪ್ಪರಿಗೆ ಮನೆಯನ್ನು ಹೊರ ವಲಯದ ಐದು ಕಿಲೋಮೀಟರು ದೂರದಿಂದಲೇ ಗುರುತಿಸುವುದು ಸುಲಭ. ನೂರಾರು ಮಂದಿ ಏಳೆಂಟು ವರ್ಷ ಕಷ್ಟಪಟ್ಟು ಕಟ್ಟಿರುವ ಮನೆಯಂತೆ ಅದು. +ಐದುಮಂದಿ ತುಂಬು ಗರ್ಭಿಣಿಯರನ್ನು ಬಲಿಕೊಟ್ಟು ಅದನ್ನು ಶಾಂತಿ ಮಾಡಲಾಗಿರುವುದಂತೆ. ಹೀಗೆ ಎಷ್ಟೆಷ್ಟೋ ಕಥೆಗಳನ್ನು ಒಳಗೊಂಡಿರುವ; ಸೃಷ್ಟಿಸುತ್ತಿರುವ ಆ ಮನೆ ಕೈ ಬೀಸಿ ಕರೆಯುತ್ತಿರುವಂತೆ ಹತ್ತಿರವಾದೆ. +ಮನೆಯ ಮಹಾದ್ವಾರದ ಮುಂದೆ ಏಳೆಂಟು ಮಂದಿ ಕಟ್ಟಾಳುಗಳು ತಲಾ ಒಂದೊಂದು ಬಡಿಗೆ ಹಿಡಿದುಕೊಂಡು ಕೆಕ್ಕರಿಸಿ ನೋಡುತ್ತಿದ್ದುದರ ಕಡೆ ಕೇರು ಮಾಡದೆ ಬಾಗಿಲು ದಾಟಿದೆ. +ಜಗನಾಥರೆಡ್ಡಿ ಪಡಸಾಲೆ ಮೇಲಿದ್ದ ಆ ಮನೆಯಷ್ಟೆ ಹಳೆಯದಾದ ಸಾಗುವಾನಿ ಮರದ ಕುರ್ಚಿಯಲ್ಲಿ ಕೂಕಂಡಿದ್ದ. ಗೋಡೆ ಮೇಲೆ ಅಲಂಕಾರಕ್ಕೆ ನೇತು ಹಾಕಿದ್ದ ಕತ್ತಿ ಗುರಾಣಿ, ತುಪಾಕಿಗಾಳು… ಅವುಗಳನ್ನು ಬಳಸಿ ಎಷ್ಟು ದಿನವಾಯಿತೋ ಏನೋ? ಗಿರಿಜಾ ಮೀಸೆಯ ಮುಖದ ತಾತ ಮುತ್ತಾತಂದಿರ ಫೋಟೋಗಳು ಅಷ್ಟೇ ಜೇಡೆಣೆದು ಬೇಬಿಷ್ಟೆಗೆ ಒಳಗಾಗಿದ್ದವು. +ಕೆಳಗಡೆ ಅಲ್ಲಲ್ಲಿ ಊರು ಮಡುವ ಗೌಡ, ಕುಲಕರ್ಣಿ ಮುಂತಾದವರು ಮುಖ ಬಿಕ್ಕೊಂಡು ಅಲ್ಲಲ್ಲಿ ಕೂತಿದ್ದರು. ನನ್ನ ಕಡೆ ದುರುಗುಟ್ಟಿ ನೋಡಿದರು. ಲಕ್ಷ್ಮೀರೆಡ್ಡಿ ಜೋಡು ನಳಿಗೆಯ ಬಂದೂಕೇ ತಾನೆಂಬಂತೆ ಒಂದು ಮೂಲೆಯಲ್ಲಿ ಕೂತುಕೊಂಡ. +ನಾನು ಸೀದ ಪಡಸಾಲೆ ಮೇಲೇರಿ ರೆದ್ದಿಯ ಪಕ್ಕದಲ್ಲಿ ಮತ್ತೊಂದು ಕರಿಮತ್ತಿ ಕುರ್ಚಿಮೇಲೆ ಕೂತುಕೊಂಡೊಡನೆಎಲ್ಲರ ಹೃದಯಗಳ ಬಡಿತ ದ್ವಿಗುಣಗೊಂಡಿತು. ಎಷ್ಟು ಸೊಕ್ಕಿದ್ದೀತಪ್ಪಾ ಇವ್ನೀಗೆ… ಮೇಷ್ಟ್ರಾಗೆ ಇಷ್ಟು ಧಿಮಾಕು ತೋರ್ಸ್ತಿದಾನೆ. ಇನ್ನು ಕಲೆಕ್ಟ್ರು ಆಗಿದ್ರೆ ಇನ್ನೆಷ್ಟು ಧಿಮಾಕು ತೋರಿಸ್ತಿದ್ನೋ ಎಂಬಂತೆ ನನ್ನ ಕಡೆ ನೋಡುತ್ತಿದ್ದವರು ವಾಸ್ತವಾಗಿ ಅಂಥವರಲ್ಲ. ರೆಡ್ಡಿ ಸಮಕ್ಷಮ ಹಾಗೆ ವರ್ತಿಸುತ್ತಿದ್ದರೋ? +ಧಡೂತಿ ಬೆಕ್ಕೊಂದು ರೆಡ್ಡಿಯ ಕಾಲಸಂದಿಯಲ್ಲಿ ಹೊಸೆಯುತ್ತ ಮ್ಯಾಂಗುಟ್ಟತೊಡಗಿದಾಗ ಪರದೆ ಆಚೆಕಡೆ ‘ಬಾ ಕೋಶ್’ ಎಂದು ಹೆಣ್ಣು ಬಹುಳಃ ಅವರ ಅವಿವಾಹಿತ ಮಗಳು ಮೂವತ್ತು ವಯಸ್ಸಿನ ಪುಷ್ಪವತಿ ಇರಬಹುದು. ಬಾಗಿಲ ಮರೆಯಲ್ಲಿ ತಲೆತುಂಬ ಸೆರಗು ಹೊದ್ದು ಕೂತಿರುವ ತುಂಬು ಗರ್ಭಿಣಿ ಹೆಂಗಸು ಬಹುಶಃ ರೆಡ್ಡಿಯ ಐದನೆ ಪತ್ನಿ ಇರಬಹುದು. ಅದೇ ತಾನೆ ಕೆಮ್ಮುತ್ತ; ಮೀಸೆಗಂಟಿದ್ದನ್ನು ನಾಲಿಗೆಯಿಂದ ಒರೆಸಿಕೊಳ್ಳುತ್ತ ಬಂದ ಮೂವತ್ತೆಂಟು ವಯಸ್ಸಿನ ವ್ಯಕ್ತಿ ರೆಡ್ಡಿಯ ದ್ವಿತೀಯ ಸುಪುತ್ರ ಪುರುಷೋತ್ತಮ ರೆಡ್ಡಿ ವಿಧೇಯತೆಯಿಂದ ಒಂದು ಮೂಲೆಯಲ್ಲಿ ಕೂತುಕೊಂಡ. ಕರ್ಚಿಕಾಯಿ ಕಡಿಯುತ್ತ ತೊದಲುಗಾಲು ಇಡುತ್ತ ಬಂದ ರೆಡ್ಡಿಯವರ ಹದಿಮೂರನೆಯ ಸುಪುತ್ರ ರಘುನಂದನರೆಡ್ಡಿ ತಳವಾರನ ಮೇಲೆ ಬುಳ್ಳನೆ ಉಚ್ಚೆ ಹೊಯ್ದು ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ. +ಮೇಷ್ಟ್ರನ್ನ ಇಲ್ಲೆ ಜೀವ ಸಮಾಧಿ ಮಾಡಿಬಿಡುವುದೇ? ಅಂಗ ಊನ ಮಾಡಿ ಹೊರಗೆ ಸಾಗಹಾಕುವುದೆ? ಎಂಬಂತೆ ಪರಸ್ಪರ ಮುಖ ನೋಡಿಕೊಳ್ಳುವುದರಿಂದ ಬೇಸತ್ತು “ಏನ್ರೆಡ್ಡಿಯವ್ರೆ ಬರಹೇಳಿದ್ದರಂತೆ” ಎಂದು ನಾನೆ ಮೌನ ಮುರಿದೆ. +ರೆಡ್ಡಿ ನನ್ನತ್ತ ದುರುಗುಟ್ಟಿ ಒಂಚಣ ನೋಡಿ ಮರುಕ್ಷಣ ಕಣ್ಣಾಲಿ ಸಡಿಲಿದರು. “ನಿಮ್ಮೂರ್ಯಾವುದಂದ್ರಿ?” ಎಂದು ಕೇಳಿದರು. +“ಕೊಟ್ಟೂರು! ಯಾಕೆ?” ಎಂದೆ ಆಶ್ಚರ್ಯದಿಂದ. +“ಬಳ್ಳಾರಿ ತಾಲ್ಲೂಕು ಕೂಡ್ಲಿಗಿ ಜಿಲ್ಲೇಲಿರೋ ಕೊಟ್ಟುರು ತಾನೆ?” ಎಂದು ಕೇಳಿದ ಮಾನಪ್ಪಾಚಾರಿ ಸಾಮಾನ್ಯನಲ್ಲ. ದೇವಿ ಪುರಾಣ ನಾಲಿಗೆ ತುದಿ ಮೇಲಿಟ್ಟುಕೊಂಡಿರುವ ಪ್ರಚಂಡ ವ್ಯಕ್ತಿ. +“ಅಲ್ಲ… ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕ್ನಲ್ಲಿರೋ ಕೊಟ್ಟುರು” ಎಂದು ವ್ಯಂಗ ಸರಿಪಡಿಸಿದೆ. +“ನಿಮ್ಮೂರಾಗ ಯಾರೋ ಬ್ಯಾಂಬ್ರು ವಳ್ಳೆತ್ನಾಗ ಜೋತಿಷ್ಯ ಹೇಳ್ತಾರಂತಲ್ಲ”ಎಂದು ಕೆಳಗೇರಿ ಮುಖಿಯಾ ಚೌಡಪ್ಪ ತಾನು ಕೂತಿದ್ದ ಚಪ್ಪಲಿ ಗೂಡಿನಿಂದ ನುಡಿದ. +“ಇರಬೌದು!” ಎಂದೆ ಆಸಕ್ತಿ ತೋರದೆ… +“ನೀನೂ ಅವ್ರ ಮೊಮ್ಮಗ್ನೂ ಗೆಣೆಕಾರರಂತೆ!” ಎಂದು ಸೊಟ್ಟ ಮೂತಿ ನಾಗಪ್ಪ ಬಗೆದ. ನನ್ನ ಪೂರ್ವಾಪರ ತಿಳಿದುಕೊಂಡೇ ಚರ್ಚೆಗೆ ಆರಂಭಿಸಿರುವರೆಂದು ಊಹಿಸಿದೆ. ಆಷ್ಟರಲ್ಲಿ ಗುರುವಪ್ಪ ಬಂದು ಒಂದು ಕಡೆ ಕೂತುಕೊಂಡ. ಅವನ ಆಗಮನದಿಂದ ನನಗೆ ಬಲಬಂದಂತಾಯಿತು. +“ಇರಬೌದು” ಎಂದೆ. +ಮತ್ತೆ ಅವರೆಲ್ಲ ಪರಸ್ಪರ ಮೂತಿ ನೋಡಿಕೊಂಡರು. +“ನಿಮ್ಮ ಗೆಣೆಕಾರ ಕೊತ್ತಲಗಿ ಬ್ಯಾಂಕಿನಾಗ ಅದಾನಂತೆ…” ಎಂದ ಸುರವತ್ತಿ ಸಿದ್ರಾಮಜ್ಜ. +“ಇರಬೌದು!” ಅಂದೆ… +“ಇರಬೌದಿರಬೌದಂದ್ರೆ ಹೆಂಗ ಮೇಸ್ಟ್ರೇ ಸೊಲೂಪ ಬುಡುಸಿಯ್ಯೋಳ್ರಲ್ಲ!” ಎಂದು ಪುರುಷೋತ್ತಮರೆಡ್ಡಿ ಕೂಕಂಡಲ್ಲಿಂದ ಘೀಂಕರಿಸಿದ. +ಅವರ ಉಡಾಫೆ ಪ್ರಶ್ನೆಗಳಿಂದ ಮೊದಲೇ ರೋಸಿದ್ದ ನಾನು – +“ಹಿಂಗೆಲ್ಲ ಸುತ್ತೀಬಳ್ಸ್ ಕೇಳಿ ಕೇಳಿ ನನ್‌ತಲೆ ತಿನ್‌ಬ್ಯಾಡ್ರಿ… ಅದೇನು ನಿಮ್ ಮನಸ್ನಲ್ಲೈತೋ ನೇರವಾಗಿ ಕೇಳಿಬಿಡ್ರಿ” ಎಂದು ಒಂದೇ ಏಟಿಗೆ ಅವರನ್ನು ಅವಕ್ಕಾಗಿಸಿದೆ. +ಮಾನಪ್ಪಚಾರಿಯೇ ಕೂಕಂಡಲ್ಲಿಂದ ಎದ್ದು ಬಂದು ಸುತ್ತಾನ್ನಾಕಡೆ ಪರೀಕ್ಷಾರ್ಥವಾಗಿ ನೋಡಿ ಗುಟ್ಟುರಟ್ಟಾಗಬಾರಲೆಂದು ಖಚಿತಪಡಿಸಿಕೊಂಡು ಒಂದು ಕ್ಷಣ ಕಣ್ಣುಮುಚ್ಚಿ ದೇವಿಕುರಿತು ಧೇನಿಸಿ ತೆರದ. +“ನೋಡಪ್ಪಾ ಮೇಸ್ಟ್ರೇ… ನೀನು ಮಾಡಿದ್ದೆಲ್ಲ ನಾವು ಹೊಟ್ಟೇಲಿ ಹಾಕ್ಕಂತಿವಿ… ನಾವು ಮಾಡಿರೋದೆಲ್ಲ ನೀನೂ ಹೊಟ್ಟೇಲಿ ಹಾಕ್ಕೊಂಡು ನಮ್ ಸಾವ್ಕಾರ್ರಿಗೆ ಒಂದ್ ಸಾಯ್ ಮಾಡ್ಬೇಕಪ್ಪಾ” ಎಂದ. +“ಆಯ್ತು…ಬಿಡ್ಸಿ ಹೇಳ್ರಿ?” ಅಂದೆ. +“ಈವ್ಯವಹಾರ ಬಲು ಸೂಕ್ಷ್ಮ ಐತೆ ಮೇಸ್ಟ್ರೇ… ನಿಮ್ಗೆ ಹೆಂಗ ಹೇಳ್ಬೇಕೋ ಅರ್ಥ ಅಗುವಲ್ದು… ನಮ್ಮ ಸಾವುಕಾರ್ರು ಜಗ್ನಾಥ್ರೆಡ್ಡಿ ಎಂಥೋರಂತ ನಿಮ್ಗೆ ಬಿಡಿಸಿ ಹೇಳಬ್ಕಾಗಿಲ್ಲ… ತಲೆಮಾರಿನಿಂದ ನಡೆದ ಮನ್ತನೆ… ಇವ್ರು ತಂದೆಯೋರು ಸೀತಾರಾಮ್ರೆಡ್ಡಿಯೋರು ಕೆಮ್ಮಿದ್ರೂಂದ್ರೆ ಊರಿಗೆ ಊರೇ ಗಪ್ಚಿಪ್… ಅವ್ರು ಸಾರೋಟನಾಗೆ ಬಂದ್ರೂ ಅಂದ್ರ ಮನುಷ್ಯರೊಂದೆ ಯಾಕೆ ನಾಯಿ ಬೆಕ್ಕು ಕೂಡ ಓಡಿ ತಲೆ ಮರೆಸ್ಕೊಂಡ್ತಿದ್ವೂಂದ್ರೆ ನೀವೇ ಲೆಕ್ಕ ಹಾಕಿ… ಇನ್ನಿವರ ತಾತ ಸರ್ದಾರ್ ಪಾಪಿರೆಡ್ಡಿಯವರಂತೂ ತಮ್ ಮೀಸೆಮ್ಯಾಲೆ ಮೂರ್ಮೂರುನಿಂಬೆ ಹಣ್ಣು ಕುಂದ್ರಿಸುತ್ತಿದ್ರು… ಅವ್ರು ಇಪ್ಪತ್ತೂರ್ನ ಆಳ್ತಿದ್ದಿದ್ನ ನೋಇ ಕುಂಪಿಣಿ ಸರಕಾರ ಮೂಗಿನ ಮೇಲೆ ಬೆರಳಿಟ್ಟ್ಕೊಂಡ್ತು ಅಂದ್ರೆ ನೀವೇ ಲೆಕ್ಕ ಹಾಕ್ರಿ… ಎಡಗೈಲಿ ತಗಂತಿದ್ರು ಬಲಗೈಲಿ ಕೊಡ್ತಿದ್ರು. ಎಷ್ಟ್ ಜನ್ರ ತಲೆ ಕಡಿಸಿದ್ರು ಏನ್ಕಥೆ?…” +ರಾಘಪ್ಪ ಮುಂದೇನೋ ಹೇಳ್ಬೇಕೆಂದಿರುವಾಗ ರೆಡ್ಡಿ ಕೆಮ್ಮಿ ಮಾತು ದಾರಿ ತಪ್ದಿದೆ ಎಂದು ಸೂಚಿಸಿದರು. +“ಆ ಕಾಲಾನೇ ಹಂಗಿತ್ತು… ನೀವ್ ನೋಡ್ರಿ… ಗೋಡೆ ಮೇಲೆ ಹೆಂಗದಾರೆ…” ಎಂದು ಒಂದೊಂದು ಸ್ಥಿರ ಚಿತ್ರಗಳ ಪರಿಚಯ ಮಾಡಿಕೊಟ್ಟ. +ನಾನು ಕೂತಿದ್ದ ಕುರ್ಚಿಗೆ ಮುಳ್ಳು ಮೂಡುತ್ತಿರುವಂತೆ ಭಾಸವಾಗಿ ಮಿಸುಕಾಡತೊಡಗಿದೆ. +ಅಷ್ಟರಲ್ಲಿ ನಪುಂಸಕಲಿಂಗಕ್ಕೆ ಹೆಸರಾಗಿದ್ದ ಶಿವಲಿಂಗಯ್ಯ ವಯ್ಯಾರದಿಂದ ಒಳಗಡೆ ಬಂದು ಎಲ್ಲರಿಗೂ ಕೊಟ್ಟ, ನನಗೂ ಸಹ. +ರೆಡ್ಡಿಯ ಸೂಚನೆಯಂತೆ ಮಾನಪ್ಪಾಚಾರಿ +“ಲೇ ಗುರುವ… ಪರಗುಣಿ ಮಾಗಿ ಹೊಲಕ್ಕೋಗಿ ಆಳುಗಳೇನೇನು ಮಾಡ್ತಾರನೋಡ್ಕೊಂಡ್ಬಾ ಹೋಗು” ಎಂದು ಹೇಳಿದ. +ಅವನೊಂಚೂರು ಮಿಸುಕಾಡಲಿಲ್ಲ. +“ಆತ ನಮ್ಮವ… ಇರ್ಲಿ… ನೀವು ಹೇಳೋದು ಹೇಳ್ರಿ ಪರವಯಿಲ್ಲ…”ಎಂದೆ. +ರಾಘಪ್ಪಾಚಾರಿ ಒಂದು ದಮ್ಮು ಬುಡ್ಡಾ ವಂಶಾವಳಿಯನ್ನು ವರ್ಣನೆ ಮಾಡಿ ಹೇಳಿದ್ದಾದ ಮೇಲೆ ಮುಖ್ಯ ವಿಷಯಕ್ಕೆ ಬಂದ. +ಬುಡ್ಡಾ ಜಗನ್ನಾಥರೆಡ್ಡಿಯವರಿಗೂ ತಂಗರಡೋಣಿ ತಮ್ಮಾರೆಡ್ಡಿಯವರಿಗೂ ತಲೆತಲೆ ಮಾರುಗಳಿಂದ ಇರುವ ದ್ವೇಶದ ಬಗ್ಗೆ, ತಮ್ಮಾರೆಡ್ಡಿಯ ಭಾವಮೈದುನ ತಿರುವೆಂಗಳರೆಡ್ಡಿ ಆಳುವ ಪಕ್ಷದ ಎಮ್ಮೆಲ್ಲೆಯಾಗಿರುವ ಬಗ್ಗೆ; ಅವನ ವಶೀಲಿಯಿಂದ ತಮ್ಮ ದೂರದ ಸಂಭಂದಿಯಾದ ರಾಮಕ್ರಿಷ್ಣಾರೆಡ್ಡಿ ಎಂಬ ಸಬ್‌ಇನ್ಸ್ಪೆಕ್ಟರನ್ನು ತಂದು ಕೂಡಿಸಿರುವ ಬಗ್ಗೆ; ಒಂದು ಚಿಕ್ಕ ಅಪರಾಧ ಸಿಕ್ಕರೆ ಸಾಕು ಜಗನ್ನಾಥರೆಡ್ಡಿಯನ್ನು ಅರೆಸ್ಟ್ ಮಾಡಿ ದರ ದರ ಎಳೆದೊಯ್ದು ಲಾಕಪ್ಪಿಗೆ ಕೂಡುವುದಾಗಿ ಆ ಎಸೈ ಶಪಥ ಮಾಡಿರುವ ಬಗ್ಗೆ, ದೊಡ್ಡ ಜಮೀನ್ದಾರರಾಗಿ ಜಗನ್ನಥರೆಡ್ಡಿ ಅಪರಾಧ ಮಾಡದೆ ಹೇಗೆ ಇರಲು ಸಾಧ್ಯ ಎಂಬ ಬಗ್ಗೆ; ತಮ್ಮಾರೆಡ್ಡಿ ಕರ್ನೂಲಿನಿಂದ ಐದುಮಂದಿ ಬಾಡಿಗೆ ಕೊಲೆಗಾರರನ್ನು ಕರೆಸಿ ಜಗನ್ನಾಥರೆಡ್ಡಿಯನ್ನು ಮುಗಿಸಲು ಸಂಚು ಮಾಡಿರುವ ಬಗ್ಗೆ ಎಲ್ಲವನ್ನು ಸೂರು ಕಡಿಮೆ ಮಾಡಿಕೊಂಡು ರಾಘಪ್ಪ ವರ್ಣನೆ ಮಾಡಿ ಹೇಳಿ ಮುಗಿಸಿದ. +ಜಗನ್ನಾಥರೆಡ್ಡಿ ತನ್ನ ಹೃದಯವೆಂಬ ಅಗ್ಗಿಷ್ಟಿಕೆಯಲ್ಲಿ ತಮ್ಮಾರೆಡ್ಡಿಯನ್ನು ಜೀವಂತ ದಹಿಸುತ್ತ ಉಸಿರಮೇಲೆ ಉಸಿರು ಬಿಟ್ಟ. +ವಾಗಿಲಿಯ ಬುಡ್ಡಾ ಕುಟುಂಬಕ್ಕೂ; ತಂಗರದೋಣಿ ಪೊಬ್ಬಾತ್ತಿ ಕುಟುಂಬಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧವಿದೆ ಎಂದು ನನಗೆ ಗೊತ್ತಿತ್ತು. +ನಾನು ದೀರ್ಘಾವದಿ ರಜೆ ಮೇಲೆ ಊರಿಗೆ ಹೋಗಿದ್ದಾಗ ನಾನೇನಾದರೂ ತಂಗರದೋಣಿ ರೆಡ್ಡಿಯವರಿಂದ ಸಹಾಯ ಯಾಚಿಸಿರಬಹುದೇ ಎಂದು ಇವರು ತಮ್ಮ ಜವಾರಿ ಪತ್ತೆದಾರರಿಂದ ವಿವರ ತಿಳಿದುಕೊಂಡಿರುವುದೂ ಗೊತ್ತಿತ್ತು. +ರೆಡ್ಡಿ ಯಕಶ್ಚಿತ್ ಕೊಲೆಯೊಂದರ ಪಂಚನಾಮೆಗೆ ಹೆದರಿ ಬೀಗರೂರರ ಬಣವೆಯೊಳಗೆ ತಲೆ ಮರೆಸಿಕೊಂಡಿದ್ದಾಗ ಗುರವಪ್ಪ ಪಕಪಕ ನಗಾಡಿ ಇವನು ಇವನು ನಿಜವಾಗಿ ಸೀತಾರಾಮರೆಡ್ಡಿಗೆಹುಟ್ಟಿದವನಲ್ಲವೆಂದೂ, ಅವನ ತಾಯಿ ಅಗಸರ ಯಂಕೋಬಿಯನ್ನು ಇಟ್ಟುಕೊಂಡಿದ್ದಳೆಂದೂ ಹೇಳಿದ್ದು ನೆನಪಾಗಿ ತಲೆ ಎತ್ತಿ ಸೀತಾರಾಮರೆಡ್ಡಿಯವರ ಫೋಟೊದಲ್ಲಿ ಮಗ್ಗುಲಿದ್ದ ಮಧ್ಯವಯಸ್ಕ ಮಹಿಳೆಯ ಫೋಟೊ ಕಡೆ ನೋಡಿ ತಲೆ ತಗ್ಗಿಸಿದೆ. +ಜಗನ್ನಾಥರೆಡ್ಡಿಯವರಿಗೂ ತಮ್ಮ ಜನನದ ಪೂರ್ವಾಪರ ಇವನಿಗೆ ಗೊತ್ತಾಗಿರಬಹುದೇ? ಪ್ರಚಂಡ ಗುರುವನೇನಾದರೂ ಗುಟ್ಟು ಬಿಟ್ಟುಕೊಟ್ಟಿರಬಹುದೇ ಎಂದು ಯೋಚಿಸಿ ನಮ್ಮಿಬ್ಬರ ಕಡೆ ಒಮ್ಮೆ ನೋಡಿ ಮುಖದ ಬಿಗುವು ಸಡಲಿಸಿಕೊಂಡು ಮೆಲ್ಲಗೆ ಕೈ ಚಾಚಿ ನನ್ನ ಬೆನ್ನು ಸವರಿದ. +ಇದರಿಂದ ನನಗೆ ಒಂಥರಾ ಇರುಸು ಮುರುಸಾಯಿತು. “ಏನು ಮಾಡೋದಪ್ಪಾ… ನಿಮ್ಮಂಥ ಸಾಮಾನ್ಯ ಮನುಷ್ಯರಾಗಿ ಹುಟ್ಟಿದ್ರೆ ಇಂಥ ಸಮಸ್ಯೇನೇ ಇರ್ತಿರ್ಲಿಲ್ಲ… ಅದೂ ಅಲ್ದೆ ಈ ದೇಶಕ್ಕೆ ಸ್ವಾತಂತ್ರ ಬಂದು ಕೊಡಬಾರ್ದಕಷ್ಟ ಕೊಡ್ತಿದೆ. ಈ ಇಂದ್ರಾಗಾಂಧಿ ಎಂಭೋಳು ಸುಡುಗಾಡು ಕಾಯ್ದೆ ಮಾಡಿ ನಮ್ಮ ಹಿರೇರು ಸಂಪಾದಿಸಿದ ಭೂಮೀನೆಲ್ಲ ಕಿತ್ಕೊಳ್ಳೊಕೆ ಶುರು ಮಾಡ್ಯಾಳ… ನೀನೂ ನನ್ ಮಗ ಇದ್ದಂತೆ… ನನ್ ಯೋಗಕ್ಷೇಮ ಬಯಸೋದು ಕೂಡ ನಿನ್ ಕರ್ತವ್ಯ ತಾನೆ?” ಎಂದು ಮುಂತಾಗಿ ಆತ ಮಾತಾಡತೊಡಗಿದ್ದು ನನಗೆ ಆಶ್ಚರ್ಯವಾಯಿತು. +ಜಮೀನ್ದಾರಿ ವ್ಯವಸ್ತ್ಥೆಯ ತರಾವರಿ ನಡುವಳಿಕೆಗಳ ಬಗ್ಗೆ ಸದಾ ಅನುಮಾನ ಇಟ್ಟುಕೊಂಡಿರುವ ಮನುಷ್ಯನಾದ ನಾನು ನೀಚಸ್ಥಾನದಲ್ಲಿ ಕುಳಿತಿದ್ದವರ ಕಡೆ ಒಮ್ಮೆ ನೋಡಿದೆ. ಅವರೆಲ್ಲ ವಿಶೇಷ ವಿಧೇಯತೆ ತುಳುಕಿಸುತ್ತ ಕೂಕಂದಿದ್ದರು. +ಮಾನಪ್ಪಾಚಾರಿ ಮೆಲ್ಲಗೆ ಮುಖ ತಿರುವಿ “ಸಾಹುಕಾರ್ರು ಹೇಳೆದು ಖರೇವು ಮೇಸ್ಟ್ರೇ. ಸತ್ಯವನ್ನು ನುಂಗ್ಲಿಕ್ಕಾಗ್ದೆ ಉಗುಳಿಕ್ಕಾಗ್ದೆ ಒದ್ದಾಡೋದ್ರ ಬಗ್ಗೆ ನೀನಾಗಲೀ, ನೀವಾಗ್ಲೀ ತಪ್ ತಿಳಿಬಾರ್ದು ನೋಡು…” ದ್ವನಿ ಸ್ವಲ್ಪ ತಗ್ಗಿಸಿ “ಆ ತಮ್ಮಾರೆಡ್ಡಿ ಎಂಥ ನೀಚ ಅದಾನ ಗೊತ್ತಾ ಮೇಸ್ಟ್ರೇ?”… ಕರನುಲಿನ ಆ ನಾಕುಮಂದಿಯಿಂದ ಉಳ್ಕೊಂಡ್ರೆ ಮಾಟ ಮಾಡಿಸಿಯಾದ್ರು ಮುಗಿಸ್ಬೇಕಂತ ಉಯ್ಯಲವಾಡದಿಂದ ಮಂತ್ರ ಮಾಡೊರ್ನ ಕರೆಸ್ಯಾನಂತೆ… ಆಯ್ತವಾರ ಅಮಾಸೆ ಬಂದಿತ್ತು ನೋಡು… ಅವತ್ರಾತ್ರಿ ಸುಡುಗಾದ್ನಾಗೆ ಅವ್ರೆಲ್ಲ ಏನೇನೋ ಮಾಡಿದ್ರಂತೆ… ಸಾಹ್ಕಾರ್ರ ಗೊಂಬಿ ಮಾಡಿ ಇಲ್ಲೆಲ್ಲೋ ಉಗಿದಿಟ್ಟಾರ. ಅದೆಲ್ಲಿ ಎಂಬುದೇ ತಿಳಿವಲ್ದು?” ಎಂದು ತಲೆ ಕೆರೆದುಕೊಂಡ. +ರಾಘಪ್ಪ ತಾನೇನು ಕಡಿಮೆ ಎಂಬಂತೆ ಎದ್ದು ನಿಂತು ಸುತ್ತ ಒಮ್ಮೆ ನೋಡಿದನು. “ನಿಮ್ಮೂರಲ್ಲಿ ಪರಮೇಶ್ವರ ಶಾಸ್ತ್ರಿಗಳೆಂಭೋರು ಅದಾರಂತಲ್ಲ…” ಎಂದು ಆತ ಹೇಳುತ್ತಲೆ ಮುಂದಿನದೆಲ್ಲ ಅರ್ಥವಾಗಿ ನೆಮ್ಮದಿ ಉಸಿರುಬಿಟ್ಟೆ. +ನನಗೆ ನಗಬೆಕೋ ಅಳಬೆಕೋ ತಿಳಿಯಲಿಲ್ಲ. ಅವರಿಗೆ ಶಾಸ್ತ್ರಿಗಳು ಲಕ್ವ ಹೊಡೆದು ಮಲಗಿದ್ದಾರೆಂಬ ಸಂಗತಿಯನ್ನು ಹೇಗೆ ಹೆಳುವುದು? +ಒಂದು ದಿನ ಹೋಗೋಣವೆಂದರು. ಆಗಲಿ ಎಂದೆ. +ಬೇಡ… ಅಡುಗೆ ಮಾಡಿಕೊಂಡಿದ್ದೀನೆಂದರೂ ರೆಡ್ಡಿಯವರು ಊಟ ಮಾಡೇ ಹೋಗುವಂತೆ ಬಲವಂತ ಮಾಡಲು ನನ್ನನ್ನು ಬಚ್ಚಲು ಮನೆಗೆ ಕರೆದೊಯ್ದರು. ಬಚ್ಚಲು ಮನೆ ಅಂದರೆಬಚ್ಚಲು ಮನೆಯದು. ಐವತ್ತು ಮಂದಿ ಏಕಕಾಲಕ್ಕೆ ಜಳಕ ಮಾದುವಷ್ತು ವಿಶಾಲವಾಗಿತ್ತು. ಸದಾ ಉರಿಯಾಡುತ್ತಿರುವ ಒಲೆ ಮೇಲೆ ಬಾವಿಯನ್ನು ಹೋಲುವ ಐದಾರು ತಂಬಿಗೆಗಳು. +ಶಿವ್ಲಿಂಗಯ್ಯ ವೈಯ್ಯಾರದಿಂದ ಬಂದು ಬಿಸಿನೀರಿಗೆ ತಂಣ್ನೀರು ಬೆರೆಸಿಕೊಡುತ್ತ “ನೀರು ಕಾದದ ಜಳಕ ಮಾಇ ಬಿಡ್ಬೇಕ್ರಿ… ದೊಡ್ಸಾವ್ಕಾರ್ರು ಒಂದೊಂದು ತಾಸು ಜಳಕ ಮಾಡ್ತಿದ್ದ್ರು… ನೀವೂ ಜಳಕಾ ಮಾಡ್ನೋಡ್ರಿ ಗಪ್ಪಂತ ನಿದ್ದೆ ಬಂದು ಬಿಡ್ತದೆ” ಎಂತು ಮುಂತಾಗಿ ಕೊರೆದ, ನಾನು ಕಿವಿಮೇಲೆ ಹಾಕ್ಕೊಳ್ದದೆ ಕೈ ಕಾಲು ಮುಖ ತೊಳೆದುಕೊಂಡು ಹೊರಗಡೆ ಬಂದೆ. ನನಗಾಗಿ ಕಾಯುತ್ತಿದ್ದ ಆಸ್ತಮಾ ರೋಗಿ ಪುರುಶೋತ್ತಮರೆಡ್ಡಿ ನನ್ನನ್ನು ಕರೆದೊಯ್ದು ಮನೆಯನ್ನೆಲ್ಲ ತೋರಿಸಿಕೊಂಡು ಬಂದ. ಬರುವ ಹೊತ್ತಿಗೆ ವಿಶಾಲವಾದ ಊತದ ಮನೆಯಲ್ಲಿ ಮಾನಪ್ಪ, ರಾಘಪ್ಪ ರೆಡ್ಡಿಯವರೇ ಮೊದಲಾದ ಇಪ್ಪತ್ತಾರು ಮಂದಿ ಊಟಕ್ಕೆ ಕೂತಿದ್ದರು. ಸೂಚನೆ ಮೇರೆಗೆ ನಾನು ರೆಡ್ಡಿಯವರ ಪಕ್ಕದಲ್ಲಿದ್ದ ಅಡ್ಡಣಿಗೆ ಮುಂದೆ ಕೂತುಕೊಂಡೆ. ತಮ್ಮೀ ಮನೆಯೊಳಗೆ ಆ ಕಾಲದಲ್ಲಿ ಅಷ್ಟು ಜನ ಉಂಬಿದ್ರು… ತಮ್ಮ ತಾನವರ ಕಾಲದಲ್ಲಿ ವಿಕ್ಟೋರಿಯಾ ರಾಣಿಯೇ ಊಟಕ್ಕೆ ಬರ್ತೀನಂತ ಹೇಳಿ ಕಳಿಸಿದ್ಲು… ಎಂದು ಮುಂತಾಗಿ ರೆಡ್ಡಿಯವರು ಹೇಳುತ್ತಿರುವಷ್ಟರಲ್ಲಿ ಊಟ ಬಡಿಸುವ ಪ್ರಕ್ರಿಯೆ ಆರಂಭವಾಯಿತು. ಗೌಡ್ರಿ ಮತ್ತಾಕೆಯ ಹೆಣ್ಣು ಮಕ್ಕಳು, ಗಂಡು ಮಕ್ಕಳು ಮೊಮ್ಮಕ್ಕಳು ತಲಾ ಒಂದೊಂದು ತಿನಿಸಿನ ಗುತ್ತಿಗೆ ಹಿಡಿದು ಬಡಿಸಲಾರಂಬಿಸಿದರು. ಊಟ ಮಾಡಿ ಮುಗಿಸುವ ಹೊತ್ತಿಗೆ ಅರ್ಧ ತಾಸು ಹಿಡಿಯಿತು. ನಂತರ ಹಣ್ಣು ಹಂಪಲು, ತಾಂಬೂಲ ಇತ್ಯಾದಿ ಸಮಾರಾಧನೆ. +ನಾನು ಹೊರಡುವುದಾಗಿ ಎದ್ದೆ… ಬೀಳ್ಕೊಡುತ್ತ ರೆಡ್ಡಿಯವರು “ನಾವು ಹೇಳಿದ್ನ ಮನಸ್ಸಿನಲ್ಲಿಟ್ಕೊಳ್ಳಪ್ಪಾ… ಆದಷ್ಟು ಬೇಗ ಕೊಟ್ಟೂರಿಗೆ ಹೋಗಿ ಶಾಸ್ತಿಗಳನ್ನು ಕಂಡು ಬಂದ್ರೆ ಒಳ್ಳೆಯದು” ಎಂದು ಹೇಳಿ ಬೀಳ್ಕೊಟ್ಟರು. +ಗುರಪ್ಪನೊಂದಿಗೆ ಹೊರಟ ನನ್ನ ಹಿಂದೆಯೇ ಅಷ್ಟು ದೂರದವರೆಗೆ ಬಂದ ಮಾನಪ್ಪ, ರಾಘಪ್ಪ “ನಿಮ್ಮಂಥ ಅದೃಷ್ಟವಂತ್ರು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಮೇಸ್ಟ್ರೇ” ಎಂದರು. ನಾನು ಯಾಕೆ ಅನ್ನಲು ರಾಘಪ್ಪ “ಜಗನ್ನಾಥರೆಡ್ಡಿಯವರ ಪಕ್ಕದಲ್ಲಿ ಕೂತುಕೊಂಡು ಊಟ ಮಾಡೋದೆಂದ್ರೆ ಸಾಮಾನ್ಯ ಸಂಗತಿಯೇ. ಎಂಥೆಂಥ ಕಲೆಕ್ಟರಿಗೇ ಇದು ಸಾಧ್ಯವಾಗಿಲ್ಲ. ಅಂಥದ್ರಲ್ಲಿ ನೀವು…” ಎಂದು ಮೆಚ್ಚಿಗೆ ವ್ಯಕ್ತಪಡಿಸಿದ. +“ಹೆಂಗಾರ ಮಾಡಿ ಆ ತಮ್ಮಾರೆಡ್ಡಿ ನೆಗ್ದು ಬೀಳೋ ಹಂಗ ಪರಮೇಶ್ವರ ಶಾಸ್ತ್ರಿಗಳಿಂದ ಮಾಟ ಮಾಡಿಸ್ಲೇ ಬೇಕಪ್ಪಾ ಮೇಸ್ಟ್ರೇ, ಉಂಡಿದ್ದು, ಹಾಲುಮುಟ್ಟಿ ಪ್ರಮಾಣ ಮಾಡ್ದಂಗೆ ಎಂಬೋದ್ನ ಮರಿಬ್ಯಾಡ.” ಎಂದು ಮಾನಪ್ಪಾಚಾರಿ ಕಿವಿಯಲ್ಲಿ ಪಿಸುಗುಟ್ಟಿದ. +ಅವರಿಬ್ಬರು ಕವಲು ದಾರಿಯಲ್ಲಿ ತಲಾ ಒಂದು ದಿಕ್ಕು ಆಯ್ದುಕೊಂಡು ಹೋದರು. ನನ್ನ ಜೊತೆಯಲ್ಲಿ ನಿರಮ್ಮಳವಾಗಿ ಹೆಜ್ಜೆ ಹಾಕುತ್ತಿದ್ದ ಗುರಪ್ಪ “ಈ ಪರಪಂಚ್ದಾಗ ಯಾರನ್ನಂಬಿದ್ರು ಓ ಯಿಬ್ರೂನ್ನ ಮಾತ್ರ ನಂಬಾರ್ದು ನೋಡ್ರಿ… ಇವರ್ನ ನಂಬ್ದೋರ್ಯಾರೂ ಉದ್ಧಾರಾಗಿಲ್ಲ…” ಎಂದು ಶುರು ಮಾಡಿದ, ರೆಡ್ಡಿ ಮಗ್ಗುಲ ಕೂತು ಉಂಡಿದ್ದು ಒಂದು ಪೂರ್ವ ಜನ್ಮದ ಸುಕೃತ ಎಂಬ ಮಾತಿಗೆ “ಸೂಳ್ಯಾಮಗ, ಮಾದಿಗ್ರು, ಬ್ಯಾಗೇರು ಮುಂಡೇರ ಸಂಗಾಟ ಒಂದೇ ತಟ್ಟೇಲಿ ಅವ ಉಂಭೋದು ಯಾರ್ಗಾರ ಗೊತ್ತಿಲ್ಲಾಂತ ತಿಳ್ಕೊಂಡಾವ…” ಎಂದು ಹೇಳುತ್ತ ಹೆಜ್ಜೆ ಹಾಕಿದ. +ಪರಮೇಶ್ವರ ಶಾಸ್ತ್ರಿಗಳ ಕೀರ್ತಿ ಇಷ್ಟು ದೂರದವರೆಗೆ ಹೇಗೆ ಹಬ್ಬಿತು ಎಂಬುದರ ಬಗ್ಗೆ ಶೋದಿಸಿದಾಗ ಪಾಮುಲಕುರ್ತಿಯ ಸಿದ್ದಾರೆಡ್ಡಿ ಬೊಮ್ಮಲಾಟಪಲ್ಲಿಯಲ್ಲಿ ತೊಗಲುಗೊಂಬೆ ಆಟದ ಉದ್ಘಾಟನೆಗೆಂದು ಹೋಗಿದ್ದಾಗ ಕುಂಟಲಗಿತ್ತಿ ದುರ್ಗಮ್ಮೋರು ಎಂಬಾಕೆಯ ಪರಿಚಯವಾಗಿ ತಮ್ಮೂರಾದ ಕೊತ್ತಲಗಿಯಲ್ಲಿ ಬಗೆಬಗೆಯ ಬೆಲೆವೆಣ್ಣುಗಳಿರುವುದರ ಸುಳಿವು ನೀಡಿ ಆಮಂತ್ರಿಸಿದಳಂತೆ… ಬೆನ್ನು ಭಾಗದಲ್ಲಿ ಮಾಯ ಹುಣ್ಣಿನಿಂದ ನರಳುತ್ತಿರುವ ಸಿದ್ದಾರೆಡ್ಡಿ ಒಂದು ಸುಂದರವಾದ ಬ್ರೀಫ್ ಕೇಸಿನೊಂದಿಗೆ ಕೊತ್ತಲಗಿಗೆ ಮರುದಿನವೇ ಪ್ರಯಾಣ ಬೆಳೆಸಿದನಂತೆ. ತನ್ನ ವಯಸ್ಸಿನ ಕಾಲುಭಾಗದಷ್ಟು ವಯಸ್ಸಿನ ಮತ್ತು ಅಭಿಮನ್ಯುವಿನ ಕಾಳಗದಲ್ಲಿ ಉತ್ತರೆ ಪಾತ್ರ ವಹಿಸುತ್ತ ಕಲಿಯುಗದ ಉತ್ತರೆ ಎಂದೇ ಖ್ಯಾತಳಾಗಿರುವ ರಂಗಮ್ಮ ರತಿಕ್ರೀಡೆಯ ಸಮಯದಲ್ಲಿ ರೆಡ್ಡಿಯ ಬೆನ್ನುದಡವುದಾಗ ಕೈಗೆ ಲೋಳೆಲೋಳೆಯಂಥದು ಹತ್ತಿ ಮುಖ ಕಿವಿಚಿಕೊಂದು ಸ್ರವಿಸುವುದನ್ನು ಪೂರ್ತಿ ನಿಲ್ಲಿಸಿ ಅನಾನುಕೂಲತೆಯನ್ನುಂಟು ಮಾಡಿದಳಂತೆ. +ಅಷ್ಟಿಷ್ಟಿದ್ದಾದ್ದಾನ್ನು ಇಷ್ಟು ಮಾಡಿಕೊಂಡು ಮನೆದೇವರಾದ ಚಿನ್ನೋಬಿಲದ ನರಸಿಂಹದೇವರ ನಾಮಸ್ಮರಣೆ ಮಾಡುತ್ತ ಅಂಗಳದ ಕಟ್ಟೆ ಮೇಲೆ ಬೋರಲು ಮಲಗಿದ್ದಾಗ ಹೆಣ್ಣು ನಾಯಿಯೊಂದು ದುಪ್ಪಟಿಯೊಳಗೆ ಮೂತಿ ತೂರಿಸಿ ಹುಣ್ಣು ನೆಕ್ಕ ತೊಡಗಿದಾಗ ದಿಗ್ಗನೆ ಎಚ್ಚರಗೊಂಡು ಲಬೋ ಲಬೋ ಬಾಯಿ ಬಡಿದುಕೊಂಡನಂತೆ. ಆಗ ಕೋಮಟಿಗರ ರಾಘವೇಂದ್ರಶೆಟ್ಟಿಯು ಡುಬ್ಬದ ಮೇಲೆ ಕಾಲು ಹಾಕಿಕೊಂಡು ಮಲಗಿದ್ದ ರಂಗಮ್ಮ ಎಡಪಾರ್ಶದ ಕೋಣೆಯಿಂದಲೂ; ಚಂದ್ರಶೀಲಾ ಮಿಲಿಟರಿ ಹೋಟಲ್ಲಿನ ವಿಠೋಬನ ಮೇಲೆ ರೊಟ್ಟಿ ಮುಗಚಿದಂತೆ ಮಲಗಿದ್ದ ಆಕೆಯ ತಾಯಿಯಾದ ವೆಂಕಮ್ಮನು ಬಲಪಾರ್ಶ್ವದ ಕೋಣೆಯಿಂದಲೂ, ಸ್ವತಂತ್ರ್ಯ ಹೋರಾಟಗಾರನೂ, ಗಾಂಧೀಜಿಯ ಚಿತಾಭಸ್ಮ ಸ್ಮಾರಕದ ರುವಾರಿಯೂ ಆದ ಕಸ್ತೂರೆಪ್ಪ ತೊಡೆ ಸಂಧಿಯೊಳಗೆ ಮುಖ ಹುದುಗಿಸಿಮಲಗಿದ್ದ ಆಕೆಯ ಅಜ್ಜಿಯಾದ ಬಸಮ್ಮನು ಮಾಳಿಗೆ ಮೇಲಿಂದ ದಡ ಬಡ ಇಳಿದುಬಂದು ವಾಸ್ತವ ಅರ್ಥ ಮಾಡಿಕೊಂಡು “ಅಯ್ಯೋ ಮೂಳ… ಆಂಧ್ರದೋನಾಗಿ ಈ ಹೆಣ್ನಾಯಿ ನೆಕ್ಕಿದ್ಕೆ ಹೆದ್ರಿ ಬಾಯಿ ಬಡ್ಕೊಳ್ಳೋದೇನು?” ಎಂದು ಉದ್ಗರಿಸಿದಳಂತೆ. +ಇದ್ಯಾವುದೋ ತಾಟಗಿತ್ತಿಯು ಮಾಡಿಸಿರಬಹುದಾದ ಮಾಟವೆಂದೇ ವರ್ಣಿಸಿ ಇದಕ್ಕೊಂದು ಪರಮೇಶ್ವರ ಶಾಸ್ತ್ರಿಗಳ ಕೈಯಿಂದ ಅಂತ್ರ ಕಟ್ಟಿಸಬೇಕೆಂದು ನಿರ್ಧರಿಸಿದರಂತೆ. ಬಂದ ಕೆಲವೇ ದಿನಗಳಲ್ಲಿ ಲಲಿತಕಲೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಶಾಮಣ್ಣನ ಸಹಾಯದಿಂದ ಶಾಸ್ತ್ರಿಗಳ ಕೈಯಿಂದ ಅಥವಾ ಅವರನ್ನೇ ಹೋಲುವ ಬೆಣ್ಣೆಹಳ್ಳಿ ಚಂಡ್ರಯ್ಯ ಶಾಸ್ತ್ರಿಗಳಿಂದ ಮಂತ್ರಿಸಿ, ತಂತ್ರಿಸಿ ಕಟ್ಟಿಸಿತಂದ ಅಂತ್ರವನ್ನು ಶಿಶ್ನಕ್ಕೆ ಬಡಿಯುವಂತೆ ಕಿಪ್ಪೊಟ್ಟೆ ಕೆಳಗಿನ ಬೆಳ್ಳಿ ಉಡುದಾರಕ್ಕೆ ಕಟ್ಟಿ ಲೋಬಾನದ ಹೊಗೆ ಹಾಕಿದರಂತೆ. ಎಂಟೇ ದಿನದಲ್ಲಿ ಹುಟ್ಟಿದಾರ್ಭ್ಯ ಬೆನ್ನ ತ್ವಚೆಯಲ್ಲಿ ಮನೆಮಾಡಿಕೊಂಡಿದ್ದ ಹುಣ್ಣು ಮಂಗಮಾಯವಾಯಿತಂತೆ. +ತಮ್ಮಾರೆಡ್ಡಿಯನ್ನು ಹಾಡುಹಗಲೆ ಮುನಸೋಬನ ಕೋರ್ಟು ಎದುರುಗಡೆ ಕಡಿದು ಚೆಲ್ಲಾಡುವಂಥ ಮಹಾನುಭಾವರಿಗಾಗಿ ಹುಡುಕಾಡುತ್ತ ಜಗನ್ನಾಥ ರೆಡ್ಡಿ ಪಾಮುಲಪರ್ತಿಗೆ ಹೋಗಿದ್ದಾಗ ಸಿದ್ದಾರೆಡ್ಡಿಯನ್ನು ಬೆನ್ನುಮೇಲಿದ್ದ ಹುಣ್ಣಿಸ್ಪರ್ಶಿಸಲು ತಡಕಾಡಿದರಂತೆ, ಆ ಜಾಗದಲ್ಲಿ ಆಸ್ಟ್ರೇಲಿಯಾ ಖಂಡದಷ್ಟು ಇದ್ದ ಮಾಯ್ದಜಾಗ ನೋಡಿ ಅಚ್ಚರಿ ಪ್ರಕಟಿಸಿದ ಈ ರೆದ್ದಿಯವರಿಗೆ ಆ ರೆಡ್ಡಿ ಇದಿಷ್ಟು ಕಥೆ ಹೇಳಿದನಂತೆ, ಹಾಗೆಯೇ ತಾನು ಅಲ್ಲಿದ್ದಷ್ಟು ದಿನ ಪರಮೇಶ್ವರ ಶಾಸ್ರ್ತಿಗಳ ಬಗ್ಗೆ ಕೇಳಿಕೊಂಡುಂಡ ಘಟನೆಗಳನ್ನೂ ಸಹ, ಅಲ್ಲಿಂದ ಬಂದಮೇಲೆ ತನ್ನ ಗುಪ್ತಚಾರರ ತಂದ ನೀದಿದ ವರದಿಗಳ ಆಧಾರದ ಮೇಲೆ ನಮ್ಮೂರಿನಲ್ಲಿ ಸ್ಥಾವರಲಿಂಗೋಪಾದಿಯಲ್ಲಿ ನೆಲೆಗೊಂಡಿರ್ವ ಮೇಸ್ಟ್ರೇ ಯೊಗಕ್ಷೇಮ ವಹಾಮ್ಯಂ, ಅಂತ್ರ ಮಾಡಿಸಿ ಕಟ್ಟಿಸಲಿಕ್ಕೆ ಅರ್ಹ ವ್ಯಕ್ತಿ ಎಂಬ ನಿರ್ಧಾರಕ್ಕೆ ಬಂದಿದ್ದಂತೆ, ಅಲ್ಲಿಂದ ಮರಳಿದ ಅವರ ಕೈಗೆ ಭಗಿನಿ ತುಂಬಿದ ಗಳಾಸನ್ನು ನೀಡುತ್ತ ರವುಡೂರು ಲಕ್ಷ್ಮಿ ರೆಡ್ಡಿ “ಆ ಮೇಸ್ತ್ರ ನಾಲಿಗೆ ತುಂಡು ಮಾಡಿ ಕರಗಲ್ಲಿಗೆ ನೈವೆದ್ಯ ಮಾಡಬೇಕೆಂದು ಹೇಳಿದನಂತೆ, “ಲೇ ಭೊಸೂಡಿಮಗ್ನೇ ಹಂಗೇನಾದ್ರು ಆ ಸೂಳ್ಯಾಮಗ್ನಿಗೆ ಮಾಡಿದ್ದೀ ಅಂದ್ರ ನಾವು ಊರಾಗೆರೋದು ಕಷ್ಟ ಆಗೀತು. ಈಗ್ನಿಂದೀಗ್ಲೆ ಹೋಗಿ ಅತಿಜಾಗ್ರತೆಯಿಂದ ಕರ್ಕೊಂಡು ಬಾ” ಎಂದು ಅಟ್ಟಿದನಂತೆ. +ನಾನು ಉಪ್ಪರಿಗೆ ಮನೇಲಿ ರೆಡ್ದಿಯವರ ಪಕ್ಕ ಕೂತು ಉಂಡು ಸತ್ಕಾರಗೊಂಡು ಬಂದನಂತರ ಒಂದೊಂದು ದಿನ ಒಂದೊಂದು ಅನುಭವವಾಯಿತು. ಕಾಟಿಗ್ರು ಮಂದಿ ಪೈಕಿ ಸುಂಕ, ಗಾದಿಗರೇ ಮೊದಲಾದವರು ಹೆಂಗೆ ಕೂಕಂಡಿದ್ರಿ… ಹೆಂಗೆ ಉಂಡ್ರಿ… ಯ್ಯೋನ್ಯೋನುಂಡ್ರಿ? ಸಾವ್ಕಾರ್ಗೆ ಎಲೆ ಅದ್ಕೆ ಮಡ್ಚಿ ಕೊಟ್ಳಂತೆ ಖರೇವಾ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಕೇಳುವವರೆ? ಇಷ್ಟಕ್ಕೆ ಇಷ್ಟು ಪುಲಕಿತಗೋಳ್ಳುವ ಮಂದಿ ಇನ್ನು ತಾನೇನಾದರೂ ದಸರೆಗೆ ಮೈಸೂರಿಗೆ ಹೋಗಿ ಹತ್ತು ಸಾವಿರ ರೂಪಾಯಿ ಫೀಜು ತೆತ್ತು ಯುವರಾಜರು ನಡೆಸುವ ದಾವತ್ತಿನಲ್ಲಿ ಕೂತು ಕೂಳು ತಿಂದೆನೆಂದರೆ ಇನ್ನೆಷ್ಟು ಸಂಭ್ರಮ ಪಡುವರೋ? ಎಂದುಕೊಂಡೆ. +ಅವತ್ತಿನಿಂದ ನಾನು ನನ್ನ ಕೈಯಾರ ಶುದ್ಧ ಅಡುಗೆ ಮಾಡಿಕೊಂಡು ಉಂಬಲಾಗಲಿಲ್ಲ. ಉಪ್ಪರಿಗೆ ಮನೆಯಿಂದ ಒಂದು ಹೊತ್ತು ಶಿವ್ಲಿಂಗ ಊಟ ತಂದು ಕೊಡುವುದು! ಇನ್ನೊಂದು ಹೊಟ್ಟು ಗೌಡರ ಮಗಳು ಮೈನೆರೆದು ಹದಿನಾರು ವರ್ಷ ದಾಟಿರುವ ಪುಷ್ಪಾವಾತಿ ಆಳುಗಳಿಂದ ಊಟ ಹೊರಿಸಿಕೊಂಡು ಬರುವುದು, ಹೆಂಗೆ ಸಲಿಗೆ ಬೆಳೆದು ಕನ್ನಡದ ತ್ರಿವೇಣಿಯವರ ತೆಲುಗು ಅನುವಾದಿತ ಕಾದಂಬರಿಯಾದ “ವೆಂಡಿಮಬ್ಬುಲು” (ಬೆಳ್ಳಿಮೋಡ) ಇಸಿದುಕೊಂಡು ಹೋಗಿ ಒಂದೇ ರಾತ್ರಿಗೆ ಒಂದೇ ಏಟಿಗೆ ಓದಿ ಮುಗಿಸಿಕೊಂಡು ಬೆಳೆಗ್ಗೆ ತಂದುಕೊಟ್ಟು ಮತ್ತ್ಯಾವುದಾರ?… ಎಂದು ರಾಗ ತೆಗೆದಳು… ಯುದ್ದನಪೂಡಿಸುಲೋಚನಾರಾಣಿಯ ಕಾದಂಬರಿಗಳನ್ನೆಲವನ್ನು ಓದಿ ಮುಗಿಸಿರುವುದಾಗಿಯೂ, ತಾನು ಅಲ್ಪಸ್ವಲ್ಪ ಕೂಚಿಪುಡಿ ಅಭ್ಯಾಸ ಮಾಡಿರುವುದಾಗಿ ಹೇಳಿಕೊಳ್ಳುವಷ್ಟರಮಟ್ಟಿಗೆ ಸಲಿಗೆ ಬೆಳೆಸಿದಳು. ನನಗಿಂತ ನಾಲ್ಕೈದು ವರ್ಷ ಹಿರಿಯಳ್ಳೆನ್ನಬಹುದಾದ ಆಕೆ ಹೆಚ್ಚು ತನ್ನ ವಕ್ಷ ಸ್ಥಳ ತೋರಿಸುತ್ತ, ನಾನು ಮಹಾ ಸಭ್ಯಸ್ಥನಂತೆ ಕದ್ದು ಮುಚ್ಚಿ ನೋಡಿದಾಗ ರೋಮಾಂಚನಗೊಳ್ಳುತ್ತ “ನಮ್ಮಪ್ಪ ಒಳ್ಳೆಯವರಲ್ಲ… ಎಲ್ಲಿಗಾದ್ರು, ಓಡಿಹೋಗೋಣವೇನು?” ಎಂದು ಇದ್ದಕ್ಕಿದ್ದಂತೆ ಕೇಳಿಬಿಟ್ಟಳು. ನಾನು ‘ಹ್ಹಾಂ’ ಎಂದು ಆಶ್ಚರ್ಯ ಪ್ರಕಟಿಸಿದಾಗ “ಸುಮ್ನೆ ಜೋಕ್ ಮಾಡ್ದೆ… ತಪ್ಪು ತಿಳ್ಕೋಬೇದ್ರಿ” ಎಂದು ಮುಂಗೈ ಅದುಮಿದಳು. ಮರು ದಿನ ಆಕೆಯ ಆಮಂತ್ರಣದ ಮೇರೆಗೆ ಅವರ ಬಿಳಿಜೋಳದ ಹೊಲದ ಕಡೆ ಹೊರಡಬೇಕೆಂದಿದ್ದಾಗ “ಗುರಪ್ಪ ನಿಮ್ಗೆ ಬುದ್ಧಿ ಐತೋ ಇಲ್ವೋ” ಎಂದು ತಡೆದ. ಆಕೆ ಮಾತುಕಟ್ಟಿಕೊಂಡೇನಾದರೂ ಹೋಗಿದ್ದಲ್ಲಿ ಪಾಕಶಾಸ್ತ್ರ ಪ್ರವೀಣ ಶಿವ್ಲಿಂಗಯ್ಯಗೆ ಆದ ಗತಿಯೇ ನನಗೂ ಆಗುತ್ತಿತ್ತು ಎಂಬುದರಲ್ಲಿ ಸಂದೇಹವಿರಲಿಲ್ಲ. ಅನಂತರ ನನಗೆ ಪುಷ್ಪಾವತಿಯ ಮುಖಾರವಿಂದ ಗೋಚರಿಸಲಿಲ್ಲ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. +ಗುರುವಾರದಂದು ಚಾವಡಿ ಕಟ್ಟೆ ಮೇಲಿದ್ದ ಜಗನ್ನಥರೆಡ್ಡಿಯವವರು ಸ್ಕೂಲಿನಲ್ಲಿ ಐದನೆ ತರಗತಿ ಮಕ್ಕಳಿಗೆ ದೊಡ್ಡ ಮಗ್ಗಿ ಕಲಿಸುತ್ತಿದ್ದ ನನ್ನ ಕರೆಯಿಸಿಕೊಂದು “ನೀವು ಹಿಂಗ ಹೋಗ್ರಿ… ನಾವು ಹಂಗೆ ಬರ್ತೀವಿ. ನಾವು ಪಾರ್ಟಿ ಮನುಷ್ಯೋರು… ಒಂದ್‌ಹೋಗಿ ಒಂದು ಆಗ್ಬಾರ್ಧು… ಹೋಗಿ ಮುಂಗಡ ಕಂಡು ಪರಮೇಶ್ವರ ಶಾಸ್ತ್ರಿಗಳಿಗೆ ನಮ್ಮ ಬಗ್ಗೆ ಒಂದ್ಮಾತು ಹೆಚ್ಗೇ ಹೇಳಿಟ್ಟಿರ್ರಿ…” ಎಂದು ಹೇಳಿದರು. ತಾಂಬೂಲದೊಂದಿಗೆ ಉತ್ತರ ಭಾರತದ ಪರಿಷ್ಕೃತ ಹೊಗೆಸೊಪ್ಪಿನ ಸೇವನೆಯನ್ನು ಅಭ್ಯಾಸ ಮಾಡಿಕೊಂಡಿದ್ದ ಅವರು ಎರಡು ಬಾರಿ ಎರಡು ದಿಕ್ಕಿಗೆ ಉಗುಳಿ ‘ಹೋಬ್ಬ’ ಎಂದು ಡೇಗಿದರು. ಅದು ಸದರೀ ಗ್ರಾಮಕ್ಕೆಲ್ಲ ಕೇಳಿಸಿತು. ಕಾಟಿಗ್ರ ಮಕ್ಕಳುಮರಿ ರೋಮಾಂಚನಗೊಂಡವು. +ಅಂದುಕೊಂಡ ದಿನ ನಾನು ದೊಗಳೆಚೀಲ ಹೆಗಲೇರಿಸಿ ಹೊಂಟಾಗ ಹಾದಿ ನಡುವೆ ಕರಿಸಿದ್ದೇಶ್ವರನ ಕಟ್ಟೆಗೆ ವಿಶೇಶ ಪೂಜೆ ಸಲ್ಲಿಸಲು ಬಂದಿದ್ದ ಪುಷ್ಪಾವತಿ ಪ್ರಸಾದ ಕೊಡುವ ನೆಪದಲ್ಲಿ ನನ್ನ ತುರುಬಿ “ಜ್ವಾಳದ ಹೊಲಕ್ಕೆ ಬರ್ಲಿಕ್ಕಾಗದಿದ್ರೆ ನವಣೆ ಹೊಲಕ್ಕೆ ಬರಬಹುದಿತ್ತು” ಎಂದು ಗೊಣಗಿದಳು. ಕೊಬ್ಬರಿಯ ಒಂದು ತುಂಡನ್ನು ಕೈಲಿಡುತ್ತ “ಯಾವ ಅಂತ್ರ ಕಟಿಸಿದ್ರೂ ನಮ್ಮಪ್ಪ ಉಳಿಯೋದು ಕಷ್ಟ ಇದರಲ್ಲಿ ತಮ್ಮಾರೆಡ್ಡಿದೇನು ತಪ್ಪಿಲ್ಲ, ಒಬ್ಬ ಹೆಂಡರನ್ನ ಇನ್ನೊಬ್ರು ಮುಟ್ಟಿದ್ರೆ ಯಾರು ಸುಮ್ಕಿರ್ತಾರೆ ಹೇಳು? ನಮ್ಮಪ್ಪ ಸತ್ರೆ ನನ್‌ಮದ್ವೆ ಆದ್ರು ಆಗತೈತೆ… ಯಾರ ಜೊತೆಗಂತೀಯಾ? ಅದೇ ತಮಾರೆಡ್ಡಿ ಮಗನ ಕಥೆ ಕಾದಂಬರಿ ಮನುಷ್ಯನಾದ ನಿಂಗೆ ಗೊತ್ತಿರ್ಲಿ ಅಂತ ಹೇಳ್ದೆ ಅಷ್ಟೆ” ಎಂದು ತೆಲಂಗಾಣದ ಶೈಲಿಯ ತೆಲುಗಿನಲ್ಲಿ ಗುನುಗುಟ್ಟಿದಳು. +ಒಂದು ಹುತ್ತದಲ್ಲಿ ಎಷ್ಟೊಂದು ನಮೂನಿ ಹಾವುಗಳು! ನನಗೆ ಒಂದು ಕ್ಷಣ ಕಾಲಲ್ಲಿ ನಡುಕ ಹುಟ್ಟಿತು. ಶ್ರೀಕಾಕುಳಂ ಅದಿಲಾಬಾದ್ ಕರೀಂನಗರದ ಕಡೆಯ ಕಾದಂಬರಿಗಳ ಪಾತ್ರಗಳು ವಲಸೆ ಬಂದು ವಾಗಿಲಿ ಗ್ರಾಮದಲ್ಲಿ ತಲೆಮರೆಸಿಕೊಂದಿವೆ ಎನ್ನಿಸಿತು. ಒಂದೊಂದು ವ್ಯಕ್ತಿಯೊಳಗಿಂದ ಆಯಾ ಪಾತ್ರಗಳನ್ನು ಬೇರ್ಪಡಿಸಿ ಅವುಗಳನ್ನು ಅವುಗಳ ಮೂಲ ಸ್ವರೂಪ ಕೊಟ್ಟು ಓದುವ ಚೌಕಟ್ಟಿನ ಕಾರ್ಯಕ್ಷೇತ್ರಕ್ಕೆ ಓಡಿಸಬೇಕೆನ್ನಿಸಿತು. ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ಸನ್ನಿವೇಶಕ್ಕೆ ಅನುಗುಣವಾಗಿ ಪ್ರಕಟವಾಗುವ ಪ್ರತಿಕ್ರಿಯಿಸುವ ಪಾತ್ರಗಳು ಒಂದೇ ಎರಡೇ! ಇದು ಆಗದ ಮಾತು ಎಂದುಕೊಂಡು ಕುರುಕಂದಿ ನಾಗಿಯ ಬೈತಲೆಯಂತೆ ಉದ್ದೋಕೆ ಬಿದ್ದಿದ್ದ ಹಾದಿ ಕಡೆ ನೋಡಿ ನಿಟ್ಟುಸಿರುಬಿಟ್ಟೆ. +* +* +* +“ಅಯ್ಯೋ ಬಂದೇನಪ್ಪಾ… ನನ್ಮೊಗ್ನೇ… ಅಂತೂ ಬಂದೆಲ್ಲ… ಒಂದು ಪತ್ತುರ ಗಿತ್ತುರನಾರ ಅಕಾಕಗೇನಾಗಿತ್ತಂತೀನಿ… ಹಂಗ ಸೆಟಗಳ್ಳಾಕೆ ನಾವು ಮಾಡಿರೋದಾದ್ರೇನಂತ?…” ಎಂದು ಮುಂತಾಗಿ ಮನೆಯೊಳಗೆ ಕಾಲಿಡುತ್ತಲೆ ನಂಗಮ್ಮಜ್ಜಿ ಪ್ರವರ ಆರಂಭಿಸಿತು. “ನೀನೋದ್ಮೇಲೆ ನಾವು ಅನುಭೊಗಿಸಿದ್ದು ಒಂದೇ ಯಲ್ಡೇ… ಅಲಲಲಲಾ… ನಿಮ್ಮಪ್ಪೆಂಭೋನದಾನಾವ್ನೂ… ಜೀವನ್ದಾಗ ಒಂದೇ ಒಂದ್ಸಾರಿ ದೇವ್ರಿಗೆ ಕಯ್ಯೆತ್ತಿ ಮುಗಿದಿದ್ದ ನಿಮ್ಮಪ್ಪ ತನ್ ಸೂಳೆ ಚಿಮಣಿ ಅರಕೆ ಬೇಡ್ಕೊಂಡಿದ್ಲೂಂತ… ಗಜಪ್ರದಾಗ ಈಸೂರ ದೇವರ್ಗುಡಿ ಕಟ್ಟಿಸಿದಾನಲ್ಲೋ… ಮನಿ ಯಿರೇಮಗ್ನಾಗಿ ನೀನವ್ನ ಕೊಳ್ಳಪಟ್ಟಿ ಹಿಡ್ದು ಹಿಂಗಲ್ಲ ಹಂಗ ಅಂತ ಕೇಳ್ದೆ ವಾಗ್ಲೀಲಿಗೆ ವೋಗಿಬುಟ್ಟೆಲ್ಲಾ… ನೀನೊಂದು ಗಂಡ್ಸೇನು?…” ಎಂದು ಮುನುಸೋಬನಧರ ಕೈಕುಟ್ಟಿ ಕುಟ್ಟಿ ಹೇಳುತ್ತಿರಲು, +ಮಣಕದ ಕೆಚ್ಚಲು ತುರಿಸುತ್ತ ಅದಕ್ಕೆ ರೋಮಾಂಚನ ಮಾಡುತ್ತಿದ್ದ ಅದರ ತಂಗಿ ಸಿದ್ದಮ್ಮಜ್ಜಿ ಚಿಟಿಕೆಯಲ್ಲಿ ಉಣ್ಣೆ ಹಿಡಿದುಕೊಂಡೇ ಬಂದು “ಅಲಲಲಾ ಅದೇನು ಬಾಯಿ ಕೊಟ್ಟಾನ ಆ ದೇವ್ರು ನಿಂಗೆ ಅಂತೀನಿ… ಆತ ಬರೋದೊಂದೇ ತಡ ಓಣಿಗೆಲ್ಲ ಕೆಳಿಸೋಂಗ ಸುರುವು ಮಾಡಿಬಿಟ್ಟೆಲ್ಲ ರಾಮಾಯಣಾನ… ನನ್ನಳಿಯಬೇಕಾದ್ದು ಮಾಡ್ತಾನ… ಅದ್ನೆಲ್ಲ ಯಾಕೆ ಆ ಹುಡುಗನ್ತಲೆ ತುಂತೀ ಅಂತ, ಯಂಗಿದ್ದೀ ಏನ್ಲಥೀಂತ ಕೇಳಿದ್ರೆ ಸೈಯವ್ವಾ…” ಎಂದು ಕ್ರಾಸ್ ಕ್ವಶ್ಚೆನ್ನು ಹಾಕಲು… +ಅದರ ಅಕ್ಕ, ನಿಂಗಮ್ಮಜ್ಜಿ ಬದ್ಧ ಭ್ರುಕುಟಿಯಾಗಿ ಕುಪ್ಪಳಿಸಿ ಎದೆಗೆ ಎದೆಯಾನಿಸಿ ನಿಂತುಕೊಂಡು “ಯ್ಯೋನಲೇ ಸಿದ್ದೀ… ನೀನೇ ಬಲು ಹಡದಾಕಿ ಅನ್ನಂಗೆ ಮಾತಾಡ್ತೀಯಲ್ಲ… ನನ್ನೊಟ್ಯಾಗೂ ಒಂದ್ಮಗು ಆಗಿದ್ರೆ ಹಿಂಗ ಮಾತಾಡ್ತಿದ್ಯಾ?… ಮಯ್ಯಿ ನೆರೆಯೋಕೂ ಮೊದ್ಲೆ ಗಂಡಂಭೋನು ನೆಗ್ದು ಬೀಳ್ದಿದ್ರೆ ನಾನು ಒಂದ್ಯಾಕ ಹತ್ತಡೀತ್ತಿದ್ನೆ ಭೇ ಹತ್ತು…” ಎಂದು ಹೇಳುತ್ತ ನನ್ನ ಕಡೆ ತಿರುಗಿ, “ಯ್ಯೋನಲೋ… ನಾನೇನು ನಿಂಗೆ ಕಡೇಲಕಿ ಆದಿನ್ಯಾ…ನೀನು ಮಲಿತಿಂಬುವಾಗ ತೊಡೆ ಮೇಲಿಂದ ಕೆಳಕ್ಕಿಸ್ತಿರಲಿಲ್ಲವೋ… ತುಪ್ಪದಾಗ ಉತ್ತುತ್ತಿ ಹಣ್ ತೇದು ಡಬರಿ ಡಬರಿ ನೆಕ್ಕಿಸ್ತಿದ್ನೆಲ್ಲೋ… ಹ್ಹಾಂ ಅಂದಬಾಯಿ ಮುಚ್ತಿರ್ಲಿಲ್ಲ ನೀನು… ತೊಟ್ಲಾಗ ಹಾಕಿ ರಟ್ಟೆ ಅಂಬೋದು ಬೀಳೋ ಮಟ ಬೆಳ್ಳಂಬೆಳಗು ತೂಗುತಿದ್ನೆಲ್ಲೋ… ಅದೆಲ್ಲ ಮಾಡ್ದೇ ನೀನಿಷ್ಟಿದ್ಯೋನು ಅಷ್ಟೆತ್ತರಾದ್ಯಾ!” ಎಂದು ಭೂತಕಾಲ ಎಂಬ ತಿಪ್ಪೆಯನ್ನು ಕೆದರಲು; ಸಿದ್ದಮ್ಮಜ್ಜಿ “ಸೈ ಬಿಡವ್ವಾ… ಕಾಲುಕೆದ್ರಿ ಜಗಳಾ ತೆಗೆಯಾಕೆ ಏನಾದ್ರಂತಿ… ಅದ್ನೇನು ನಾವೆಲ್ಲ ಅಂತೀವಾ.. ಇನ್ನೂ ಹುಡ್ಗ ಮಕಾ ತೊಳ್ಕೊಂಡು ಒಂದ್ಕಪ್ಪು ಕಾಪಿ ಕುಡಿಯಾಕೆ ಗತಿಯಿಲ್ಲ.. ಆಗ್ಲೆ ಸುರುವು ಮಾಡ್ದೆಲ್ಲ.. ಇದು ತಪ್ಪಂದ್ವಿ… ಅದು ಬಿಟ್ಟು…”ಎಂದು ಮುಂದೇನೋ ಹೇಳುತ್ತಿರಲು… +ನಿಂಗಮ್ಮಜ್ಜಿ ಕಣ್ಣೊರೆಸಿಕೊಳ್ಳುತ್ತ; ಸೆರಗಿನಿಂದ ಎದೆಯ ಮೆಲೆ ಗಾಳಿ ಹಾಕಿಕೊಳ್ಳುತ್ತ; ಸಿಂಬಳ ಸೀದು ಮಾರು ದೂರ ಎಸೆಯುತ್ತ… “ಎಲವೋ ಕುಂಟಲಗಿತ್ತಿ ಸಿದ್ದೀ… ಬಾಯಿ ಮುಚ್ಚಲೇ, ಬಾಯಿ ಮುಚ್ಚು… ನಾನುರ್ಲು ಹಾಕ್ಕೊಂಡು ಸಾಯ್ತೀನಿ… ಅದೆಂಗ ಬದುಕ್ತೀರೋ ಬದುಕ್ರಿ” ಎಂದು ಹಗ್ಗ ಹುಡುಕಲು ಒಳಗಡೆ ಹೋಗಿ ನಗಂದಿ ಕಡೆ ಕೈ ಚಾಚಿತು. +ಸಿದ್ದಮ್ಮಜ್ಜಿ ಅದನ್ನು ತಡೆದು “ನೀನ್ಯಾಕ ಸಾಯ್ತಿಯವ್ವಾ… ದಿಕ್ಕು ದೆಸೆ ಇಲ್ದೋರು… ನಾವು ಸಾಯ್ತೀವಿ… ಕೂಳಿಗೆ ಭಿದ್ದಿರೋದ್ರಿಂದ್ಲಲ್ಲ ನೀನಂಗ ಮಾತಾಡ್ತಿರೋದು… ನನ್ಗಂಡೆಂಭೋನು ಪೀಲೇಗು ಬಂದು ನೆಗ್ದು ಬೀಳ್ದಿದ್ರೆ ನಾವು ಎಲ್ಲರಂಗೆ ರೆಟ್ಟಿಮುರ್ದು ದುಡ್ಡು ಉಂಬ್ತಿದ್ವಿ…ಆ ದೇವ್ರು ಆವಾಗ್ಲೆ ನಮ್ಮನ್ನೆಲ್ಲ ತಿಂದು ತೇಗ್ಬಾರ್ದಾಗಿತ್ತೆ… ಅಯ್ಯಯ್ಯೋ ಮಕ್ಳುಮರಿ ಕಟ್ಕೊಂಡು ಏಟೊಂದ ವನ್ವಾಸ ಪಟ್ನೇ ಅವ್ವಾ… ಎತ್ತಿನ ಬೂದಾಳಾಗ ಹೆಂಗೋ ಕೂಲಿನಾಲಿ ಮಾಡ್ಕೊಂಡು ಹೊಟ್ಟೆ ಹೊರೀತಿದ್ನೋಳ್ನ ನೀನೇ ಅಲ್ಲ ಕರ್ಕೊಂದು ಬಂದು ಮನೇಲಿಟ್ಕಂಡಿದ್ದು… ನಮ್ಮ ಪಾಡಿಗೆ ನಾವು ಇದ್ದಿದ್ದ್ರೆ ನೀನ್ಯಾಕೆ ಹಿಂಗ ಅಂಗಿಸ್ತಿದ್ದೀ… ಅಯ್ಯಯ್ಯೋ… ಎಂದು ಸುಡ್ಗಾಡಿಗಿಕ್ತೀಯಪ್ಪಾ ಸಿವ್ನೇ… ಅನಬಾರ್ದು ಅನ್ನಿಸ್ಕೊಂದು ಭೂಮಿಗೆ ಭಾರಾಗಿ ಇನ್ನೂ ಬುದುಕ್ಬೇಕಾ… ಎಂಥೆಂಥೋರ್ಗೆ ಆ ಸಿವ ಸಾವು ಕೊಡ್ತಾನೆ. ನನ್ನನ್ನು ಕೂಡ್ಲೀಗಿ ರೋಡ್ಗೆ ಕರ್ಕೊಂಡೋಗುವಲ್ಲ…” ಎಂದು ಮುಂತಾಗಿ ನಸೀಬ ಹಳಿಯುತ್ತ ಕುಕ್ಕುರುಗಾಲೀಲೀಲೆ ಕೂತು ಮೂಗು ಕಂಣಿಂದ ಒಂದೇಸಮನೆ ಹಳ್ಳ ತೆಗೆಯುತ್ತ ಅಳತೊಡಗಿದಳು. +ನಮ್ಮ ದೊಡ್ಡವ್ವ ಇಂಥದೆಲ್ಲ ಮಾಮೂಲೆಂಬಂತೆ ತನ್ನ ಪಾಡಿಗೆ ತಾನು ನೀರು ತರುತ್ತಿದ್ದಾಕಿ ನನ್ನನ್ನು ಬಚ್ಚಲಿಗೆ ಕಳುವಿ ಒಲೆ ಮುಂದೆ ಚಾ ಡಬರಿ ಇಟ್ಟಳು. +ಅಷ್ಟರಲ್ಲಿ ನಿಂಗಮ್ಮಜ್ಜಿ ತನ್ನ ತಂಗಿ ಸಿದ್ದಮ್ಮಜ್ಜಿಯನ್ನು ಬಗೆಬಗೆಯ ಮಾತುಗಳಿಂದ ರಮಿಸಿ ಒಂದು ಹದಕ್ಕೆ ತಂದಿತು. ನೋಡುನೋಡುವಷ್ಟರಲ್ಲಿ ಆ ‘ಅಪೂರ್ವ ಸೋದರಿಂಗಳ್’ ಕುಲುಕುಲು ನಗುತ್ತ ಒಂದಾಗಿ ಆಕೆಗೆ ಈಕೆ ತೊಂಬಲ ಕುಟ್ಟಿಕೊಟ್ಟಳು. ಈಕೆಗೆ ಆಕೆ ತೊಂಬಲ ಕುಟ್ಟಿಕೊಟ್ಟಳು. ಅವರು ಗುದ್ದಾಡುವುದಾಗಲೀ; ಒಂದಾಗುದಾಗಲೀ ತಡವಾಗುತ್ತಿರಲಿಲ್ಲ. ಅವರು ಜಗಳವಾಡುವರೆಂದರೆ ಅದು ಓಣಿಯ ಸೌಭಾಗ್ಯವೆಂದೇ ಓಣಿಯ ಜನರು ಭಾವಿಸುತ್ತಿದ್ದರು. ಅವರೀರ್ವರ ಜಗಳ ಬಿಡಿಸಲೆಂದೇ ಹೋಗಿದ್ದ ಸಣ್ಣಿ ನಿಂಗಮ್ಮಜ್ಜಿಯ ಆಜನ್ಮ ಶತ್ರುವಾಗಿ ರೂಪಗೊಂಡಿದ್ದುದು ಇತಿಹಾಸದ ಬಹು ದೊಡ್ಡ ವ್ಯಂಗವೇ ಸರಿ. +ಸಿದ್ದಮ್ಮಜ್ಜಿ ತಂದು ಕೊಟ್ಟ ಕಾಫಿ ಕುಡಿದಾದ ಮೇಲೆ-ಸಮಶೀತೋಷ್ಣವಲಯದಂತಾಗಿ ತಾನು ಕಂಡ ಕನಸಿನ ಟಾಪಿಕ್ಕು ಎತ್ತಿಕೊಂಡಳು- “ನೀನೋಗಿದ್ದೇ ವೋಗಿದ್ದು… ನಿನ್ನಕಡೀಕೆ ಬಲು ದ್ಯಾಸ ಆಗಿಬಿಟ್ತಪ್ಪೋ… ಹೊಟ್ಟ್ಯಾಗ ಒಂದ್ನಮೂನಿ ಸಂಕಟ ಆಗಲಿಕ್ಕತ್ತು ಕಣಪ್ಪಾ… ನೀನು ನಗಿಚಾಟಕಿ ಅನ್ಕೋಬೌದಪ್ಪ, ಎತ್ತಿ ಬೆಳಿಸ್ದ ಒಡ್ಲು ಕನಪ್ಪಾ… ಎತ್ತಿ ಆಡಿಸಿದ ಕಯ್ಯಿವು… ನೀನು ಸುಳ್ಳೇಳಿದ್ರು ಕೇಳ್ತಿ… ಖರೇನೇಳಿದ್ರೂ ಕೇಳ್ತಿ… ಕಣ್ರೆಪ್ಪೀಗ್ರೆಪ್ಪಿ ಅಂಟಿಸಿಲ್ಲ… ಮಕ್ಕಂಡ್ವೀಂದ್ರ ಕಣಸಿನ ಮ್ಯಾಲೆ ಕಣಸು… ಒಂದೊಂದು ಕಣಸಿನಾಗ ನೀನೊಂದೊಂದು ರೂಪ ಪಡಕೋತ್ತಿದ್ದಿ… ಅಯ್ಯಯ್ಯೋ… ಈನಾಲಿಗಿಂದ ಅದೆಂಗ ಹೇಳ್ನಲ್ಲಪ್ಪ?… ಮೇರಾಲಮು ಬಸ್ಸಿಗೆ ಹೆಣ ಏರ್ಕೊಂಡು ಬಂದ್ರು… ಹಿಂದೊಂದಾರು ಮಂದಿ …ಮುಂದೊಂದ್ನಾರು ಮಂದಿ ಆತಗೋತ ಬಂದ್ರು… ನೀನು ನಗು ನಗ್ತಾ ಸತ್ತೋದವರಂಗೆ ಮಲಕ್ಕೊಂಡಿದ್ದೀ… ಅಯ್ಯೊ ಮೊಮ್ಮಗ್ನೇ ನಮ್ಮನ್ನ ನಡೋ ನೀರ್ನಾಗೆ ಬಿಟ್ಟೊಂಟೋದ್ಯಾ… ಅಂತ ನಾನು ಚೀರಿಕೊಂಡಿದ್ಕೆ ಎಲ್ರೂ ಎಚ್ಚರಾಗಿ ಓಡಿಬಂದ್ರು… ಏನೇನು ಅಂತ ಕೇಳಿದ್ರು ಎಲ್ಲ ಹೇಳ್ಬಿಟ್ಟೆ… ಕನಸಿನಾಗ ಸತ್ರ ಒಳ್ಳಿದಾಗ್ತದ ತಗಾ ಅಂತ ಸಂಬಯ್ನೋರು ಹೇಳಿದ್ರು… ಯಾಕಿದ್ದೀತಪ್ಪಾ?… ಕಾಲ ಸುಮಾರೈತೆ… ನಮ್ಮನ್ಯಾವಾಗ ಆ ಸಿವಾ ಸುಡುಗಾಡಾಗ ಇಕ್ತಾನೋ ಹೇಳ್ಲಿಕ್ಕೆ ಬರೋದಿಲ್ಲ… ನಿಮ್ಮ ಗಾಳೆಪ್ಪ ಮಾವನ ಮಗ್ಳೂನ ಮದ್ವಿ ಆಗಿಬಿಡು… ಹತ್ತಾಳಿಗೆ ಅಡ್ಗೆ ಮಾಡಿ ರೊಟ್ಟಿ ಬುತ್ತಿ ಕಟ್ಟತೈತೆ ಅದು ಈ ವಯಸ್ಸಿಗೆ…” ಎಂದು ಆಡುತ್ತಿದ್ದ ಅದನ್ನು ಅದರ ಪಾಡಿಗೆ ಬಿಟ್ಟು ನಾನು ಶಾಮ ಪಾಲೀಷು ಮಾಡಿ ಅನಸೂಯಾಳ ಬೆಂಗಳೂರು ವಿಳಾಸ ಒಯ್ದಿರುವನೆನ್ನಲಾದ ಕೋಣೆಗೆ ಬಂದೆ… ಲೋಹಿಯಾರ ಕ್ಲಾಸ್ಟ್ ಸಿಸ್ತಂ ಪುಸ್ತಕದಲ್ಲಿ ಎರಿಕ್ ಫ್ರಾಮ್‌ರ ೧ದ ಆರ್ಟ್ ಆಫ್ ಲವ್ವಿಂಗ್’ ಪುಸ್ತಕದಲ್ಲಿ ಡ್ಶಾಂಗೇರ ಭಗವದ್ಗೀತೆ ಕುರಿತಂಥ ಪುಸ್ತಕದಲ್ಲಿ; ನನ್ನ ಹಲವು ಹಸ್ತಪ್ರತಿಗಳಲ್ಲಿ, ಅವರಿಂದ ಬಂದ ಪತ್ರಗಳಲ್ಲಿ… ನನ್ನ ಹ್ಯಾಪ್ ಮೋರೆ ಇರುವ ಸ್ಥಿರ ಚಿತ್ರಗಳಲ್ಲಿ, ಅಂಬೇಡ್ಕರ, ಶಂಕರಾಚಾರ್ಯರ ಫೋಟೋಗಳ ಹಿಂದುಗಡೆಯಲ್ಲಿ; ಪಂಚಾಂಗ ಜ್ಯೋತಿಷ್ಯವೇ ಮೊದಲಾದ ಪುಸ್ತಕಗಳಲ್ಲಿ, ಗೂಳೂರು ಸಿದ್ದೋಣ್ಣೊಡೆಯರ ಶೂನ್ಯ ಸಂಪಾದನೆ ತಾಳೆಗರಿ ಗ್ರಂಥದಲ್ಲಿ, ಹೀಗೆ ಎಲ್ಲೆಂದರಲ್ಲಿ ಹುಡುಕೀ ಹುಡುಕೀ ಸುಸ್ತಾದೆ. ಅದು ಸಿಗದಿರಲು ಜಲಜಾಕ್ಷಿ ಬರೆದಿರುವುದು ಸರೆ ಎಂದುಕೊಂಡೆ. ಶಾಮನ ಕೈಗೆ ಅದು ಸಿಕ್ಕಿರಬೇಕು? ಅದನ್ನು ತೆಗೆದುಕೊಂಡೊಯ್ದು ಅವನು ವರ್ತಮಾನದ ದುರ್ಬೀನಿನ ಮೂಲಕ ಭೂತಕಾಲವನ್ನು ಯಾವ ರೀತಿ ಪರಿಗ್ರಹಿಸಿರಬಹುದೆಂಬುದರ ಬಗ್ಗೆ ಕುತೋಹಲ ಮೇರೆ ಮೀರಿತು. ಇದಕ್ಕೆ ಪುಷ್ಟಿ ನೀಡುವಂತೆ ದೊಡ್ಡಪ್ಪ ಬಂದು ಅವರಿವರಿಂದ ಬಂದಿರುವ ಪತ್ರಗಳನ್ನು ನನ್ನ ಕೈಗೆ ಕೊಡುತ್ತ ಶಾಮಣ್ಣನು ಬಂದಿದ್ದ ಮತ್ತು ಅವನ ಮದುವೆ ಇಷ್ಟರಲ್ಲಿ ಇರುವ ಮತ್ತು ಜಲಜಾಕ್ಷಿ ತನ್ನ ಮಹಿಳಾ ಸಂಘಟನೆಯ ವೃದ್ಧ ಮಹಿಳೆಯರ ವಿಭಾಗದ ಮುಖ್ಯಸ್ಥೆಯನ್ನಾಗಿ ನಿಂಗಮ್ಮಜ್ಜಿಯನ್ನು ನೇಮಕ ಮಾಡಿರುವ ಇಂತಪ್ಪ ಅನೇಕ ಸಂಗತಿಗಳ ಬಗ್ಗೆ ಎರಡೇ ಮಾತಿನಲ್ಲಿ ಹೇಳಿ ಮುಗಿಸಿದಳು. ಆ ಧಿಮಾಕಿನಲ್ಲಿ ನಿಂಗಮ್ಮಜ್ಜಿ ತನ್ನ ನಾಲಿಗೆಯನ್ನು ಉದ್ದ ಮಾಡಿಕೊಂಡಿರುವುದಾಗಿ ಭಾವಿಸುತ್ತ ಬಂದಿದ್ದ ಕಾರ್ಡು ಅಂತರ್ದೇಶೀಯ ಪತ್ರ, ಲಕೋಟೆ, ಬುಕ್‌ಪೋಸ್ಟ್‌ಗಲನ್ನು ಒಂದೊಂದಾಗಿ ತಿರುವಿ ಹಾಕ ತೊಡಗಿದೆನು. ಚಂದ್ರಶೇಖರ ಪಾಟೀಲರು ಪುಕ್ಕಟೆ ಸಂಕ್ರಮಣ ಪತ್ರಿಕೆ ಓದುವುದು ಘೋರ ಪಾಪ, ಕೂಡಲೆ ಚಂದಾ ಸಂದಾಯ ಮಾಡಿ ಪುಣ್ಯವಂತರಾಗುವುದು ಎಂದೊಂದು ಕಾರ್ಡಿನಲ್ಲಿ ಬರೆದಿದ್ದಾರೆ, ಬಾಚಿಗೊಂಡನಹಳ್ಳಿಯ ವಿರೂಪಾಕ್ಷಗೌಡರು… ಖಡ್ಗದಲ್ಲಿ ಪ್ರಕಟವಾಗಿದ್ದ ನನ್ನ ಕೆಟ್ಟ ಕವಿತೆ ಓದಿ ನೀನು ಕೊಟ್ಟೂರಿನ ಕುಮಾರವ್ಯಾಸನೆಂದು ಹೆಸರಾಗುವ ದಿನ ದೂರವಿಲ್ಲವೆಂದು ಬರೆದಿದ್ದರು. ನಿಮ್ಮ ಕವಿತೆಗಳಿಗೆ ಮುನ್ನುಡಿ ಬರೆಯಲು ನಾನು ಮಾಡಿರುವ ಅಪರಾಧವಾದರೂ ಏನೂಂತ ಕಾಳೇಗೌಡರು ಬರೆದಿದ್ದರೆ ಮೈಸೂರಿನ ಪುಟ್ಟಸ್ವಾಮಿ ಎಂಬ ವಕೀಲರು ಕೂಡಲೆ ನೂರು ರೂಪಾಯಿ ಚಂದಾಕಟ್ಟಿ ತಮ್ಮ ಅಖಿಲ ಭಾರತ ಚುಟುಕು ಕಾವ್ಯ ಪರಿಷತ್ತಿನ ಮೆಂಬರಾಗಬೇಕೆಂದು ಬರೆದಿದ್ದರು. ನನಗೆ ಅನೇಕ ಪ್ರಣಯ ಪತ್ರಗಳನ್ನು ಬರೆದಿರುವ ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿನಿಯಾದ ಕು. ಸರೋಜ ನೀನೇ ಯಾಕೆ ಆಗಿರಬಾರದು ಎಂದು ಮಂಗ್ಳೂರು ವಿಜಯ ಎಂಬ ಕ್ರಾಂತಿಕಾರಿ ಪತ್ರ ಬರೆದಿದ್ದರೆ ಕಾಳಮುದ್ದನದೊಡ್ಡಿಯಿಂದ ಸರಸ್ವತಿ ವರಪುತ್ರ ಎಂಬ ಕಾವ್ಯನಾಮದಿಂದ ಪ್ರಸಿದ್ಧನಾಗಿರುವ ಹಳೇಕೋಟೆ ದೊಡ್ಡೇಗೌಡರ ಶಿವರಾಮೇಗೌಡ ಎಂಬುವರು ‘ಮನುಕುಲದ ಮಹಾಕಾವ್ಯ’ ಎಂಬೊಂದು ಮಗ್ಗೀಪುಸ್ತಕ ಕಳಿಸಿದ್ದನು. ಸುಲೋಚನಾ ಎಂಬ ಹೆಸರಿನಲ್ಲಿ ಬಂದಿದ್ದ ಪ್ರೇಮಪತ್ರವನ್ನು ಧಾರವಾಡದ ಪೀಜಿ ಮೆನ್ಸ್ ಹಾಸ್ಟಲ್ಲಿನ ಗಂಡು ಹುಡುಗರೇ ಬರೆದಿರಬೇಕೆಂಬ ಸಂಶಯ ಕಾಡತೊಡಗಿತು. ಅಥವಾ ಪೋಸ್ ಮ್ಯಾನ್ ರಾಮಣ್ಣನ ಸಹಾಯದಿಂದ ಶಾಮನೇ ಬರೆದಿರಬೇಕೆಂಬ ಸಂದೇಹ ಕಾಡತೊಡಗಿತು. ವಾಗಿಲಿ ಜಗನ್ನಾಥ ರೆಡಿ ಎಂಬ ಜಮೀನ್ದಾರನೂ; ಡಾ.ಕಮಲಾಕರನೆಂಬ ಮಾಜಿ ನಕ್ಸಲೈಟನೂ ಎಂಬ ಶೀರ್ಷಿಕೆಯ ಅಡಿ ಬರೆದಿದ್ದ ಕಥೆ ಕಳಿಸಿದ್ದ ಪತ್ರಿಕೆಯಿಂದ ತಿರಸ್ಕೃತಗೊಂಡು ಮನೆಗೆ ಮುಟ್ಟುವ ಹಾದಿಯಲ್ಲಿ… ಖಡ್ಗ ಪತ್ರಿಕೆಯ ಸಂಪಾದಕನ ಕೈಗೆ ಎಟುಕಿಗೆ ಬಂದಿರಬಾರದೇಕೆ ಎಂಬ ಅನುಮಾನ ಕಾಡತೊಡಗಿತು. ಆ ಆರು ಹಾಳೆಯ ಗಾತ್ರದ ಪುಟ್ಟ ಕಥೆಯನ್ನು ಏಳು ಮಡಿಕೆ ಮಡಚಿ ಕಿಟ್ಟೆಲ್ ಡಿಕ್ಷನರಿ ಅಡಿ ತಳ್ಳಿದೆ. ಇದೆಲ್ಲ ನೋಡಿ ಆದ ಮೇಲೆ ಆ ಪತ್ರಗಳು ಸೃಷ್ಟಿಸಿದ ತಲ್ಲಣ ಅನುಭವಿಸುತ್ತಲೇ ಗಂಡಸಾದರೆ ನನ್ನ ಓಪನ್ ಮಾಡಿ ಓದಬಲ್ಲೆ ಏನು? ಎಂದು ಸವಾಲು ಹಾಕುವಂತೆ ಇಷ್ಟಗಲ; ಅಷ್ಟುದ್ದ ಬಿದ್ದುಕೊಂಡಿದ್ದ ಲಕೋಟೆಯನ್ನು ಬಹಳ ಹೊತ್ತಿನವರೆಗೆ ಮುಟ್ಟಬೇಕೆಂಬ ಭಾವನೆ ಬರಲೇ ಇಲ್ಲ. ಬೇರೆಯವರಿಗೆ ಬಂದ ಪತ್ರಗಳು ಒತ್ತಟ್ಟಿಗಿರಲಿ. ನನಗೆ ಬಂದ ಪತ್ರಗಳನ್ನು ನನಗೇ ಓದಲಿಕ್ಕೆ ಹಿಂದೆಗೆತ, ಒಂದೊಂದು ಪತ್ರ ವಿಶೇಷ ಅರ್ಥ ಪ್ರಕಟಿಸುತ್ತ ಹೋಗಿ ಅಸ್ವಸ್ಥತೆಯನ್ನು ಉದ್ದೀಪಿಸುತ್ತದೆ. ಯಾವ ಪುರುಷಾರ್ಥಕ್ಕೆ ನಾವು ಅಕ್ಷರ ಕಲಿಯಬೇಕಾಯಿತು. +ಅಚ್ಚ ಶೇಂಗಾ ಬೀಜದ ವರ್ಣದ ಆ ಲಕೋಟೆಯನ್ನು ಕೈಗೆತ್ತಿಕೊಂಡು ಅನುಭವಿ ಪೋಸ್ಟ್‌ಮಾಸ್ತರನ ಥರ ತೂಗಿ ನೋಡಿದೆ. ಬಹುಶಃ ಒಳಗಡೆ ಐದಾರಾದರೂ ಹಾಳೆಗಳಿರಬಹುದು? ವಿಳಾಸವನ್ನು ಬೇಕೆಂದೇ ಹಿಂದುಮುಂದು ಬರೆದಿರುವಂತಿದೆ. ಓಳಗಡೆ ಯಾವ ಗ್ರಹಚಾರ ತುಂಬಿಕೊಂಡಿರುವುದೋ? ಯಾಕಿದ್ದೀತು? ನೋಡದೆ ಇರುವುದೆ ಚಲೋ ಎಂದುಕೊಂಡು ಅದನ್ನು ಮೂಲೆಗೆಸೆದೆ. +ಕರ್ನೂಲಿನ ಪಾಪುಲರ್ ಷೂಸ್ ಮಾರ್ಟಿನಲ್ಲಿ ಕೊಂಡಿದ್ದ ಬ್ರಿಟಿಷರ ಕಾಲದಲ್ಲಿ ಅಂಚೆ ಪೇದೆಗಳು ಉಪಯೋಗಿಸುತ್ತಿದ್ದರೆನ್ನಲಾದ ಬೆಲ್ಟ್ ಚಪ್ಪಲಿಗಳನ್ನು ಮೆಟ್ಟಿಕೊಂಡು ಅಂಗಳಕ್ಕಿಳಿದು ಊರಮ್ಮನ ಬಯಲ ಕಡೆ ಹೆಜ್ಜೆ ಹಾಕಿದೆ. ಶಾಸ್ತ್ರಿಗಳ ಮನೆಗೆ ಹೋಗಿ ಅವರ ಕ್ಷೇಮ ಸಮಾಚಾರ ವಿಚಾರಿಸಬೇಕಿತ್ತು. ಹಾಗೆ ಬ್ಯಾಂಕಲ್ಲಿ ಉದ್ಯೋಗಿಯಾಗಿರುವ ಶಾಮನ ಬಗೆಗೂ ಸಹ. ಇನ್ನೇನು ಎಡಗಡೆ ಹೊರಳಬೇಕೆನ್ನುವಷ್ಟರಲ್ಲಿ ಅಚಾನಕ್ಕಾಗಿ ನನ್ನ ದೃಷ್ಟಿ ಹೆಂಚಿನ ಮನೆ ಕಡೆ ಹೋಯಿತು. ಕಟ್ಟೆ ಮೇಲೆ ಸಣ್ಣವ್ವ ನಶ್ಶೆಪುಡಿ ತಿಕ್ಕುತ್ತ ಕೂತಿದ್ದರೆ, ಆಕೆಯ ಮಗಳು ತನ್ನ ದುಂಡನೆಯ ಜಘನಗಳನ್ನು ಅತ್ತಿತ್ತ ಹೊರಳಾಡಿಸುತ್ತ ಕಸಗುಡಿಸುತ್ತಿದ್ದಳು. ಆಕೆಯ ದೃಷ್ಟಿ ಅಷ್ಟೇ ಅಚಾನಕ್ಕಾಗಿ ನನ್ನತ್ತ ಹೊರಳಿಬಿಟ್ಟಿತು. ಎಲ್ಲಿ ತನ್ನನ್ನು ಮಾತಾಡಿಸಿ ನಾನು ಕಂಡಿದ್ದ ಕನಸಿಗೆ ನನಸಿನ ವ್ಯಾಖ್ಯೆ ಬರೆಯುವಳೋ ಎಂದು ಅಳುಕಿನೊಂದಿಗೆ ಓದಲಾರದೆ ಬಿಟ್ಟುಬಂದಿದ್ದ ಲಕೋಟೆ ಓಪನ್ ಮಾಡಿ ಓದುವ ಆಸೆ ದ್ವಿಗುಣಗೊಂಡಿತು. ಆಕೆ ಏನಾದರೂ ಬಯ್ಕೊಳ್ಳೀ ಅಂತ ನಾನು ಮತ್ತೆ ಮನೆಗೆ ಹೋದೆ. ತಿಪ್ಪೇರುದ್ರಸ್ವಾಮಿಯಿಂದ ಅದೇ ತಾನೆ ಇಳಿದುಬಂದಿದ್ದ ನನ್ನ ತಂಗಿ ವೀರಮ್ಮ ತನ್ನ ಅತ್ತೆ ತನ್ನನ್ನು ಉರಿಸಿಕೊಂಡು ತಿನ್ನುತ್ತಿರುವ ಬಗ್ಗೆ ಮತ್ತು ಕೂಡಲೆ ಬಂದು ತೋಳ್ಬಲ ಝಳಪಿಸಿ ಆಕೆಯ ಬಾಯಿಯನ್ನು ಮುಚ್ಚುವಂತೆ ಮಾಡು ಎಂಬ ಬಗ್ಗೆ ವರಾತ ಶುರು ಮಾಡಿದಳು. ದೊಡ್ಡ ತುರುಬನ್ನು ಈ ಇಳಿವಯಸ್ಸಿನಲ್ಲಿ ವಿಶೇಷ ವಿನ್ಯಾಸದಿಂದ ಕಟ್ಟಿಕೊಳ್ಳುವ ಅತ್ತೆಯ ಮಗನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡಬೇಡವೆಂದು ನಾನು ನಮ್ಮಪ್ಪನಿಗೆ ಬಡಿದುಕೊಂಡಿದ್ದುಂಟು. ಮದುವೆಯಾದ ನಂತರವೂ ತಾಯಿಯ ಸೆರಗಿಗೆ ಜೋತು ಬೀಳುವ ಅಳಿಯ ಈ ಹತ್ತು ವರ್ಷದವಧಿಯಲ್ಲಿ ಒಮ್ಮೆಯೂ ಹೆಂಡತಿಯೊಡನೆ ಆತ್ಮಗೌರವದಿಂದ ವರ್ತಿಸುದುದಿಲ್ಲ. ಅಂಥವನನ್ನು ಕಟ್ಟಿಕೊಂಡ ಮೇಲೆ ತಾಪತ್ರಯ ಅನುಭವಿಸದೆ ಇರಲು ಸಾಧ್ಯವಿಲ್ಲ. ನನ್ನ ಮಾತುಗಳು ನಮ್ಮ ಕೌಟುಂಬಿಕ ಪರಿಸರದಲ್ಲಿ ಚಲಾವಣೆಯಾಗುವುದಿಲ್ಲಾಂತ ಗೊತ್ತು! ನಾನು ಏನು ಹೇಳುವುದು? +ನಾನು ಲಗುಬಗೆಯಿಂದ ಕೋಣೆಯೊಳಗೆ ನುಗ್ಗಿ ಮೂಲೆಯಲ್ಲಿ ಪ್ರಶ್ನಾರ್ಥಕ ಚಿನ್ಹೆ ಹೊತ್ತು ಬಿದ್ದಿದ್ದ ಲಕೋಟೆಯನ್ನು ಕೈಗೆತ್ತಿಕೊಂಡೆ! ಡವಡವ ಗುಡುವ ಎದೆಯೊಡನೆ ಅವಸರ ಬವಸರದಿಂದ ಓಪನ್ ಮಾಡಿದೆ. ನಿರೀಕ್ಷಿಸಿದಂತೆ ಐದಾರು ಹಾಳೆಗಳಿದ್ದವು. ಯಾರಾದರೂ ಉದಯೊನ್ಮುಖರು ಇನ್ನೊಬ್ಬ ನನ್ನಂಥ ಉದಯೊನ್ಮುಖರಿಗೆ ಓದಲಿಕ್ಕೆಂದು ಕಳಿಸಿದ ಕಥೆ ಇರಬಹುದೆಂದುಕೊಂಡಿದ್ದು ಬಿಚ್ಚಿ ನೋಡಿದೊಡನೆ ಸುಳ್ಳಾಯಿತು. ಒಂದು ಆಶ್ಚರ್ಯವೆಂದರೆ ಬೆಂಗಳೂರಿಂದ ಅನಸೂಯ ಬರೆದಿದ್ದ ಸುದೀರ್ಘ ಪತ್ರ ಅದಾಗಿತ್ತು. ಕಿಟಿಕಿ ಬಾಗಿಲು ಮುಚ್ಚಿ ಬೆಡ್ಲ್ಯಾಂಪ್ ಬೆಳಕಿನಲ್ಲಿ ಅದನ್ನು ಓದಲಾರಂಭಿಸಿದೆ. +ಪ್ರೀತಿಯ ಸಹೋದರ ಶ್ರೀಯುತ….ರವರಿಗೆ +ದೂರದ ಬೆಂಗಳೂರಿನಲ್ಲಿರುವ ನಾನು ನಿಮಗೆ ಅಷ್ಟು ಪರಿಚಯವಿಲ್ಲದಿದ್ದರೂ ಈ ಪತ್ರದ ಮೂಲಕ ನಮಸ್ಕರಿಸುತ್ತ ಕೆಲವು ವಿಷಯಗಳನ್ನು ಸಾದರಪಡಿಸಲಿಚ್ಛಿಸಿರುವೆ, ನಮ್ಮ ತಂದೆ ರುದ್ರನಾಯಕ (ಕಾನಾಲಿಯ ಪಾಳೆಗಾರರ ವಂಶದವರೆಂಬ ನೆಪಕ್ಕೆ ನಾಯಕ ಎಂಬ ವಿಶೇಷಣವನ್ನು ತನಗೆ ತಾನೆ ಹಚ್ಚಿಕೊಂಡಿದ್ದ. ಪ್ರಾಥಮಿಕ ಶಾಲೆಗೆ ಸೇರಿಸುವಾಗ ನನ್ನ ಹೆಸರಿನ ಉತ್ತರಾರ್ಧದಲ್ಲಿ ನಾಯಕ ಎಂದು ಸೇರಿಸಿದ್ದ. ಕಾಲ ಗತಿಸಿದಂತೆ ಅದು ನನ್ನ ಹೆಸರಿನಿಂದ ಉದುರಿ ಹೋಯಿತು. ಅದೊಂದು ದೊಡ್ಡ ಕಥೆ, ಮುಂದೆ ನೀವು ಕಥೆಗಾರರೆಂದು ಹೆಸರು ಮಾಡಿದಾಗ ಇಂಥ ವಿಶೇಷಣಗಳು ಉದುರಿ ಹೋಗುವ ಪ್ರಕ್ರಿಯೆ ಬಗ್ಗೆ ಸೃಜನಶೀಲವಾಗಿ ಯೋಚಿಸುವರಂತೆ) ಇದ್ದಕ್ಕಿದ್ದಂತೆ ಅಂತರ್ಧಾನವಾದದ್ದು ನಿಮಗೆ ಗೊತ್ತೇ ಇದೆ. ನನ್ನನ್ನು ಕಟ್ಟಿಕೊಂಡು ಏಗಿದ ನನ್ನ ತಾಯಿ ಅನೇಕ ಅಪಾದನೆಗಳ ನಡುವೆಯೂ ನನಗೆ ಶಿಕ್ಷಣದ ಸಂಸ್ಕಾರ ಕೊಟ್ಟು ದೊಡ್ಡವಳನ್ನಾಗಿ ಮಾಡಿದ್ದೂ ಒಂದು ದೊಡ್ಡ ಕಥೆಯೆ, ನೀವು ಕೋಡಿಹಳ್ಳಿಯಿಂದ ಕೊಟ್ಟೂರಿಗೆ ವಲಸೆ ಬರುವ ಮೊದಲೆ ನಾನು ಗೊಬ್ಬರದಂಗಡಿ ಜಲಜಾಕ್ಷಿ, ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗನಾದ ಶಾಮಾ ಪರಸ್ಪರ ಆಕರ್ಷಿತರಾದೆವೋ ದೇವರಿಗೇ ಗೊತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ನನಗೆ ಇಷ್ಟವಾದದ್ದು ಶಾಮನ ಮನೆ ಮಾಡಿಕೊಂಡಿದ್ದ ಸಂಕೋಚ, ಆಮೆಯಂತೆ ಅಂಗಾಂಗಗಳನ್ನು ಒಳಗೆ ಎಳೆದುಕೊಳ್ಳುವಂಥ ಮುದುಡು ಗುಣ, ತನ್ನ ಮನೆಯ ಸಾಂಪ್ರದಾಯಿಕ ವಾತಾವರಣದ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸುವಂತೆ ನಾನು ಅನೇಕ ರೀತಿಯ ಪ್ರೇರಣೆಗಳನ್ನು ನೀಡುತ್ತಿದ್ದುದು ಮಾತ್ರ ನಿಜ. ಅಂಥ ರೇಖೆಗಳ ಮೇಲೆ ಕಾಲು ಎತ್ತಿ ಇಟ್ಟು ಹಾಗೇ ಹಿಂದೆ ತೆಗೆದುಕೊಂಡು ಬಿಡುತ್ತಿದ್ದ. ಭುಜಕ್ಕೆ ತಗುಲಿಸಿಕೊಂಡು ಅಡ್ಡಾಡುತ್ತಿದ್ದುದೇ ಸಂಪೂರ್ಣ ಕ್ರಾಂತಿ ಎಂದು ತಿಳಿದುಕೊಂಡುಬಿಡುತ್ತಿದ್ದ. ಹಾಗೆ ಒಳಗೊಳಗೆ ಕೋಕಾ; ವಾತ್ಸಾಯನರೇ ಮುಂತಾದವರನ್ನು ಕಲ್ಪಿಸಿಕೊಂಡು ಗುಟ್ಟಾಗಿ ಸ್ಖಲಿಸುತ್ತಿದ್ದ ಎಂಬುದನ್ನು ನಾನು ಊಹಿಸುತ್ತಿದ್ದೆ. ಸಾಮೀಪ್ಯದಿಂದ ಸ್ಪರ್ಶ; ಸ್ಪರ್ಶದಿಂದ ಪಾಣಿಗ್ರಹಣ ಸಂಭವಿಸಿ ಮಹತ್ತರವಾದ ಬದಲಾವಣೆಗೆ ನಾವು ಕಾರಕರಾಗಬಹುದೆಂದುಕೊಂಡಿದ್ದೆವು. ಮುಖ್ಯವಾಗಿ ನಾನು, ವಾಲ್ಮೀಕಿ ರಾಮಾಯಣದಲ್ಲಿ ದಶರಥ ತನ್ನ ಪ್ರೀತಿಯ ಮಗ ರಾಮನಿಗೆ ಪಟ್ಟ ಕಟ್ಟಬೇಕೆಂದಾಗ ಮಂಥರೆ ಕೈಕೆಗೆ ಸನ್ನಿಕರ್ಷಾತ್ ಚ ಸೌಹಾರ್ದಂ ಜಾಯತೇ ಸ್ಥಾವರೇಷ್ಟಪಿ ಎಂಬೊಂದು ಅರ್ಥಪೂರ್ಣವಾದ ಮಾತೊಂದನ್ನು ಹೇಳುತ್ತಾಳೆ, ದಶರಥಗೆ ಸಾಮೀಪ್ಯವಿರುವ ರಾಮನ ಮೇಲೆ ಪ್ರೀತಿ ಇದ್ದಷ್ಟು ದೂರದ ಸೋದರ ಮಾವನ ಮನೆಯಲ್ಲಿರುವ ಭರತನ ಮೆಲೆ ಪ್ರೀತಿ ಇಲ್ಲಾಂತ. ಹತ್ತಿರದ ಮನೆಯವರಾದ ಶಾಮನ ಬಗ್ಗೆ ನನ್ನಲ್ಲಿ ಅದಾವ ಆಕರ್ಷಣೆ ಇತ್ತೋ? ಅವನು ಲಘುಸ್ಪರ್ಶಕ್ಕೆ ಸದರಿ ಹಾತೊರೆಯುತ್ತಿದೆನೇ ಹೊರತು ಪೂರ್ಣಪ್ರಮಾಣದ ಒಳಗೊಳ್ಳುವಿಕೆ ಬಗ್ಗೆ ಅವನೆಂದೂ ಹಾತೊರೆಯಲೇ ಇಲ್ಲ. ಅವನೊಳಗಿದ್ದ ಸಂಕೋಚ ಭೇದಿಸಲು ಜಲಜಾಕ್ಷಿ ಆತದ ಮೈದಾನದಲ್ಲಿ ಕೆಲವೊಮ್ಮೆ ಪ್ರಯತ್ನಿಸಿದ್ದುಂಟು. ಕದ್ದು ಮುಚ್ಚಿ ಸ್ಪರ್ಶಿಸಲು ಪ್ರಯತ್ನಿಸುವ ಮಾತು ಆಮೂಲಕ ತಾದ್ಯಾತ್ಮ ಹೊಂದುವ ಅವನ ಬಗ್ಗೆ ತಲೆಕೆಡಿಸೋ ಬೇಡ ಎಂದು ಆಕೆ ಅನೇಕ ಸಾರಿ ನನಗೆ ಪರಿಪರಿಯಾಗಿ ಹೇಳಿದ್ದುಂಟು. ಸ್ಪರ್ಶದ ಸವಲತ್ತುಗಳಿಂದ ವಂಚಿತರಾದವರ ಬಗ್ಗೆ ನನಗೆ ಮೊದಲಿಂದಲೂ ಒಂದು ರೀತಿಯ ಕುತೋಹಲ. ಯಾಕೆಂದರೆ ಈ ದೇಶದ ಹಣೆ ಬರಹವೇ ಅಂಥಾದ್ದು. ಈ ಸಮಾಜದಲ್ಲಿ ಯಾರಿಗೆ ಯಾರನ್ನು ಸ್ಪರ್ಶಿಸುವ ಅಧಿಕಾರವಿದೆ ಹೇಳಿ? ಕೇವಲ ಮುಟ್ಟಲಿಕ್ಕೆ ಪ್ರಯತ್ನಿಸುವವರನ್ನು ನಾವು ಅನೇಕ ಕಡೆ ನೋಡುತ್ತಲೇ ಇದ್ದೇವೆ. ಈ ದೃಷ್ಟಿಯಿಂದ ನನ್ನಂಥೋರು ಮೋಹಿನಿ ಭಸ್ಮಾಸುರ ಕಥೆಯನ್ನು ಅರ್ಥ ಮಾಡಿಕೊಳ್ಳುವುದೇ ಬೇರೆ ಥರ. ಇದಕ್ಕಿಂಥ ಹೆಚ್ಚಿನದೇನನ್ನೂ ಮಾಡಲು ಶಾಮನಿಗೆ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಅವನ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಲೇ ಹೋದೆ. ಕೊನೆಗೆ ನಾನು ಅಂದುಕೊಂಡಂತೆಯೇ ಆಯ್ತು. ಅವನು ನನಗೆ ಕೈಕೊಟ್ಟ ಎಂದು ಹೇಳುವ ಅಪರಾಧ ಮಾಡಲಾರೆ, ಎಲ್ಲ ಹೆಂಗಸರು ಹೊಟೆಕಿಚ್ಚು ಪದುವಂಥ ರಘು ಗಂಡನಾಗಿ ನನಗೆ ದೊರಕಿದ್ದಾನೆ. ಈ ದೂರದೂರಿನಲ್ಲಿ ನನ್ನನ್ನು ಸಾಧ್ಯವಾದಷ್ಟು ಸುಖವಾಗಿಡಲು ಪ್ರಯತ್ನಿಸುತ್ತಲೇ ಇದ್ದಾನೆ. ಗೃಹಕರ್ಮಗಳಿಗೆ ಅಗತ್ಯವಾದ ಎಲ್ಲ ಸವಲತ್ತುಗಳನ್ನು ನನಗೆ ಕಲ್ಪಿಸಿಕೊಟ್ಟಿದ್ದಾನೆ. ನನ್ನ ತಾಯಿಯೂ ಇಲ್ಲಿ ನಮ್ಮೊಂದಿಗಿದ್ದು ಮೊಮ್ಮಗನನ್ನೋ; ಮೊಮ್ಮಗಳನ್ನೋ ಎತ್ತಿಕೊಳ್ಳುವ ಸಂಭ್ರಮವನ್ನು ಪ್ರತಿ ತಿಂಗಳಿಗೊಮ್ಮೆ ಪ್ರಕಟಿಸುತ್ತಲೇ ಇದ್ದಾಳೆ, ರಘು ಇತ್ತೀಚೆಗೆ ನನ್ನ ಹೆಸರಿನಲ್ಲೇ ಒಂದು ಪುಟ್ಟ ಕೈಗಾರಿಕೆ ಸ್ಥಾಪಿಸಿದಾನೆ. ಒಂದು ಕಾಲದಲ್ಲಿ ಇವನೊಂದಿಗೆ ಎಡಪಂಥೀಯ ಚಟುವಟಿಕೆಯಲ್ಲಿದ್ದು ಈಗ ಬಲಪಂಥೀಯರಾಗಿ ಆಳುವ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಅನೇಕರು ಆರ್ಥಿಕ ಸಹಾಯ ಕೊಡಿಸಿ ಗೃಹ ಕೈಗಾರಿಕೆ ಗಟ್ಟಿಮುಟ್ಟಾಗುವಂತೆ ನೋಡಿಕೊಳ್ಳುತ್ತಿದ್ದ್ದಾರೆ. ಲೈಂಗಿಕ ಶಕ್ತಿ ಸಂವರ್ಧನೆಗೆ ಯಾವಾಗಲೂ ‘ರಅ’ ಬ್ರಾಂಡಿನ ಇನ್‌ಸ್ಟಾಂಟ್ ದೋಸೆ ಹಿಟ್ಟನ್ನೇ ಉಪಯೋಗಿಸಿ ಎಂಬ ಜಾಹಿರಾತು ದಕ್ಷಿಣ ಭಾರತದ ಎಲ್ಲ ನಿಯಮಿತ ಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದನ್ನು ನೀವು ನಾಳೆಯಿಂದ ಗಮನಿಸಬಹುದೆಂದು ಕೊಂಡಿರುವೆ. ಕೆಲವೇ ದಿನಗಳಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ಅದರ ಹೋಲ್‌ಸೇಲ್ ಏಜೆಂಟ್ಸ್ ಹುಟ್ಟಿಕೊಂಡಿದ್ದಾರೆ. ಮುಖ್ಯವಾಗಿ ಮಧ್ಯಮ ವರ್ಗದವರನ್ನು ನಮ್ಮ ಕಂಪನಿಯ ದೋಸೆಹಿಟ್ಟು ಆಕರ್ಷಿಸುತ್ತಿರುವುದು ಹೆಚ್ಚಿರುವ ಬೇಡಿಕೆಯನ್ನು ನಿಭಾಯಿಸುವುದೇ ನಮಗೆ ಕಷ್ಟವಾಗಿದೆ. ರಾಜ್ಯ ಸರಕಾರದ ಆರೋಗ್ಯ ಖಾತೆಯ ಮಂತ್ರಿಗಳಾದ ತಿಂದಪ್ಪ ಮೆಣಸಿನಕಾಯಿಯವರ ಲೈಂಗಿಕ ಶಕ್ತಿ ಪಕ್ಷಾಂತರ ತಲೆ ನೋವಿನ ನಡುವೆ ಕಡಿಮೆಯಾಗಿತ್ತಂತೆ… ಅವರು ‘ರಅ’ ಬ್ರಾಂಡಿನ ದೋಸೆ ತಿಂದ ಮೇಲೆ ಸುಧಾರಿಸಿರುವುದಂತೆ. ಯಾವ ದೇಶದಲ್ಲಿ ಲೈಂಗಿಕ ಶಕ್ತಿ ಸಮತೋಲವಾಗಿರುವುದೋ ಆ ಸಮಾಜ ಆರೋಗ್ಯಕರವಾಗಿರುತ್ತದೆಂದೂ… ಸಮಾಜದ ಎಲ್ಲರೂ ಜಾತಿ, ಲಿಂಗ, ವಯಸ್ಸು ಪರಿಗಣನೆಗೆ ತೆಗೆದುಕೊಳ್ಳದೆ ‘ರಅ’ ಬ್ರಾಂಡಿನ ಮಸಾಲದೋಸೆಯನ್ನು ವಾರಕ್ಕೆ ಮೂರು ಬಾರಿಯಾದರೂ ಸೇವಿಸಲೇಬೇಕೆಂದೂ; ಇದಕ್ಕೆ ಅಗತ್ಯವಾದ ಅರ್ಥಿಕ ನೆರವನ್ನು ಸಬ್ಸಿಡಿಯೊಂದಿಗೆ ಸರಕಾರ ನೀಡುವುದೆಂದೂ ಫರ್ಮಾನ್ ಹೊರಡಿಸಿದಾರೆ ಎಂದು ಹೇಳಿದರೆ ನೀವು ನಗಬಹುದು., ನಗರದಲ್ಲಿರುವ ವಿಶ್ವವಿಖ್ಯಾತ ಲೈಂಗಿಕ ತಜ್ಞ್ದರಾದ ಡಾ. ಇಬ್ರಾಹಿಂ ಸೂದ್‌ರವರು ‘ರಅ’ ಬ್ರಾಂಡಿನ ದೋಸೆಹಿಟ್ಟನ್ನು ಪರೀಕ್ಷೆಗೊಳಪಡಿಸಿ ಲೈಂಗಿಕ ಶಕ್ತಿಯನ್ನು ಉದ್ದೀಪಿಸುವ ನಿಘೂಡ ವಸ್ತುಗಳು ಅದರಲ್ಲಿ ಅಡಕವಾಗಿರುವವೆಂದು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ; ಪೂರ್ವ ಚೈನಾ ಮತ್ತು ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ದೊರಕುವ ಗಿಡಮೂಲಿಕೆಗಳನ್ನು ಬಳಸಿಕೊಂದು ದೋಸೆಹಿಟ್ಟನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಮ್ಮ ರಘು ಸೂದ್‌ರವರು ಏರ್ಪಡಿಸಿದ್ದ ಅಖಿಲ ಭಾರತ ಲೈಂಗಿಕ ತಜ್ಞ್ರರ ಸಮ್ಮೇಳನದಲ್ಲಿ ಒಂದೂವರೆ ತಾಸು ಭಾಷಣ ಮಾಡಿ ತಲೆದೂಗುವಂತೆ ಮಾಡಿದ್ದೊಂದು ಉಲ್ಲೇಖಾರ್ಹ ಸಂಗತಿ. +ಸಮ್ಮೇಳನದಲ್ಲಿ ನಮ್ಮ ದೋಸೆ ಹಿಟ್ಟನ್ನು ರಿಯಾಯಿತಿ ಬೆಲೆಯಲ್ಲಿ ವಿತರಿಸಲಾಯಿತು. ವೈದ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಅದನ್ನು ಕೊಂಡರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಅವರು ತಮ್ಮ ಮಖಗಳನ್ನು ಮತ್ತು ಅಭಿಪ್ರಾಯಗಳನ್ನು ಜಾಹಿರಾತು ಮತ್ತಿತರ ವ್ಯಾವಹಾರಿಕ ಸಂದರ್ಭಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲು ನಮ್ಮ ಕಂಪನಿಗೆ ಪರವಾನಗಿ ಕೊಟ್ಟಿದ್ದಾರೆ. ಜಾತಿವಿನಾಶ, ವರ್ಗವಿನಾಶ ಕುರಿತಂಥ ಭೂಗತ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಾಕಷ್ಟು ಪಳಗಿರುವ ನಮ್ಮ ರಘುಗೆ ಎಲ್ಲರೂ; ಎಲ್ಲಾದ್ದೂ ಸುಲಭವಾಗಿ ನಿಲುಕುತ್ತದೆ. ನನ್ನ ಮದುವೆಯಾಗದಿದ್ದರೆ ಅವನು ಬಾಹ್ಯ ಮತ್ತು ವ್ಯಾವಹಾರಿಕ ಜಗತ್ತಿಗೆ ಕಾಣಿಸಿಕೊಳ್ಳುತ್ತಿರಲಿಲ್ಲವೆಂದರೂ ಸರಿಯೇ. ಅಂತರ್ಗತ ಮತ್ತು ಬಾಹಿರ್ಗತ ಜಗತ್ತುಗಳ ನಡುವೆ ಇರುವ ಸರಳ ರೇಖೆಯ ಮೇಲೆ ಅಂಗುಲು ಹುಳುವಿನಥರ ಮೈ ಹೊಸೆಯುತ್ತ ಇತ್ತಿಂದಿತ್ತ ಅತ್ತಿಂದಿತ್ತ ತೆವಳುತ್ತಲೇ ಇದ್ದು ಬಿಡುತ್ತಿದ್ದ ಎಂಬುದನ್ನು ನೆನಪಿಸಿಕೊಂದರೆ ನನಗೆ ಭಯವಾಗುತ್ತದೆ. ಇಂಥದೊಂದು ಉದ್ದಿಮೆ ಸ್ಥಾಪಿಸಲು ನಾನು ಯಾವ ಪ್ರೇರಣೆ ನೀಡಿದೆನೋ ಅರ್ಥವಾಗುತ್ತಿಲ್ಲ. ಸೂಡಿ, ಕೋಡಿ; ಚಾಡಿಯೇ ಮೊದಲಾದ ಮಠಗಳ ಮಠಾಧೀಶರ ಬಗ್ಗೆ ನಿನಗೆ ಗೊತ್ತಿರಲಿಕ್ಕೂ ಸಾಕು. ಈ ದೇಶದ ಯಾರೇ ಪ್ರಧಾನ ಮಂತ್ರಿ, ರಾಷ್ಟ್ರಪತಿಗಳು ನಮ್ಮ ರಾಜ್ಯಕ್ಕೆ ಬಂದಾಗಲೆಲ್ಲ ಈ ಮಠಗಳಿಗೆ ಹೋಗಿ ವಿಶೇಷ ಅರ್ಚನೆ ಮಾಡಿಸಿ ಸ್ವಾಮಿಗಳ ಆಶೀರ್ವಾದ ಪಡೆದು ಪುನೀತರಾಗುತಾರೆಂಬುದು ಸರ್ವವೇದ್ಯ ಸಂಗತಿ. ಇಂಥ ಪ್ರಭಾವಶಾಲಿ ಮಠದ ಸ್ವಾಮಿಗಳು ಒಂದು ಒಪ್ಪಂದಕ್ಕನುಗುಣವಾಗಿ ನಾಡಿನ ಪ್ರಸಿದ್ಧ ಇನ್‌ಸ್ಟಾಂಟ್ ಫುಡ್ ತಯಾರಿಕಾ ಕಂಪನಿಗಳಿಗೆ ಆಶೀರ್ವಾದದ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಚೆಟ್ನಿ, ಗುಲಬ್ ಜಾಮೂನು, ಪುಳಿಯೋಗರೆ ಬಿಸಿಬೇಳೆಬಾತಿವೇ ಮೊದಲಾದ ಮಿಕ್ಸುಗಳ ಉತ್ಪಾದನೆಗೆ ಅವರ ಬೆಂಬಲವಿದ್ದೇ ಇರುತ್ತದೆ. ನಮ್ಮ ರಘು ದೋಸೆ ಹಿಟ್ಟಿನ ಫಾರ್ಮುಲಾ ತಯಾರಿಸಿದ್ದಾನೆಂಬ ಸುಳಿವು ಸಿಗುತ್ತಲೆ ಪಟ್ಟಭದ್ರರು ತಂದ ಅಡ್ಡಿ ಆತಂಕಗಳು ಒಂದೇ ಎರಡೇ? ರಘುನಂಥ ಶೂದ್ರ ಮುಂಡೇದು ಇನ್ಸ್‌ಸ್ಟಾಂಟ್ ಫುಡ್ ಘಟಕ ಸ್ಥಾಪಿಸುವುದೆಂದರೇನು? ಎಂದು ಮಠಾಧೀಶರ ಬಳಿಗೆ ದೂರು ಒಯ್ದರಂತೆ. +ಆ ಶೂದ್ರ ಮುಂಡೇಗಂಡ ಬಂದರೆ ನಾವು ಯಾರೂ ಆಶೀರ್ವದಿಸಬಾರದೆಂದು ಅಖಿಲ ಕರ್ನಾಟಕ ಮಠಾಧೀಶರ ಸಂಘ (ರಿ) ತೀರ್ಮಾನಿಸಿತಂತೆ. ಹಾಗೆ ತೀರ್ಮಾನಿಸದಿದ್ದಲ್ಲಿ ನಮ್ಮ ರಘು ಈ ಉದ್ದಿಮೆಯಲ್ಲಿ ಯಶಸ್ಸು ಸಾಧಿಸುತ್ತಿರಲಿಲ್ಲ. ಲೈಂಗಿಕ ಸಮಸ್ಯೆಗಳ ನಿವಾರಣೆ ಎಂಬ ಆಲೋಚನೆ ಹೊಳೆಯುತ್ತಿರಲಿಲ್ಲ. ಯಾರು ಎಷ್ಟು ಅಡ್ಡಗಾಲು ಹಾಕಿದರೂ ನಮ್ಮ ಉದ್ದಿಮೆಯ ಬೆಳವಣಿಗೆಯನ್ನು ಕುಂಠಿತಗೊಳಿಸಲು ಸಾಧ್ಯವಿಲ್ಲ.. ಮುಂದಿನ ಕೆಲವೇ ದಿನಗಳಲ್ಲಿ ’ರಅ’ ಮಾರ್ಕಿನ ದೋಸೆಯ ಮಿಕ್ಸ್ ಪಾಕೆಟ್‌ಗಳು ಈ ದೇಶದ ಪ್ರತಿಯೊಂದು ಮನೆ ಮನೆಯಲ್ಲಿ ಕಾಣಸಿಗುತ್ತವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಘಂಟಾ ಘೋಶವಾಗಿ ಹೇಳಬಲ್ಲೆ. ಇದು ಎಷ್ಟು ಎಷ್ಟರ ಮಟ್ಟಿಗೆ ಬೋಗಸ್ ಎಂಬುದು ಎಲ್ಲಾ ಲೈಂಗಿಕ ದುರ್ಬಲರಿಗೆ ಗೊತ್ತಿರದಿದ್ದರೂ ಲೇಖಕರಾದ ನಿಮಗೂ ಗೊತ್ತು ಎಂದು ಭಾವಿಸುವೆ. ಬರೆಯುವ ಕ್ರಿಯೆಯೊಳಗೆ ಲೇಖಕ ತನ್ನನ್ನು ತಾನು ಎಷ್ಟೋ ಸಂಧರ್ಬದಲ್ಲಿ ಮರೆಮಾಚುತ್ತಾನೆ. ನೀವು ಬರಹದ ಮೂಲಕ ಅನಾವರಣಗೊಳ್ಳುವ ಹಾದಿಯಲ್ಲಿರುವ ಮನುಷ್ಯರೆಂದೇ ಸ್ಪಷ್ಟವಾಗಿ ಬರೆಯುತ್ತಿರುವೆ. ಒಂದು ಆಶ್ಚರ್ಯವೆಂದರೆ ನಮ್ಮ ಉದ್ದಿಮೆ ಮಹಾ ಬೊಗಸ್ಸೆಂಬುದು ನನಗೂ ಗೊತ್ತು. ಆದರೆ ಎಲ್ಲರಂತೆ ನಾವೂ ಸಮಾಜದ ದೌರ್ಬಲ್ಯದ ಎಳೆಯನ್ನೇ ಬಂಡವಾಳ ಮಾಡಿಕೊಂಡು ಬದುಕಬೇಕಲ್ಲವೆ? ಈ ಸಮಾಜದಲ್ಲಿ ಜಾತಿ ಅಥವ ಹಣ ಎರಡರ ಪೈಕಿ ಒಂದು ಇರಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ಈಗಿನ ಸ್ಥಿತಿಯಲ್ಲಿ ಇದು ಅನಿವಾರ್ಯ. ನನ್ನ ಗಂಡ ನನಗೆ ಯಾವ ವಿಷಯದಲ್ಲೂ ಕಡಿಮೆ ಮಾಡಿಲ್ಲವೆಂಬುದನ್ನು ಮಾತ್ರ ಮತ್ತೆ ಮತ್ತೆ ನಿಮಗೂ, ನಿಮ್ಮ ಅಂಜುಬುರುಕ ಶಾಮನಿಗೂ ಸ್ಪಷ್ಟಪಡಿಸುತ್ತಿರುವೆ. ನಿಜ ಹೇಳಬೇಕೆಂದರೆ ಅವನು ಇಲ್ಲಿಗೆ ಬರದಿದ್ದಲ್ಲಿ ನಾನು ನಿಮಗೆ ಇಷ್ಟು ಸುಧೀರ್ಘವಾದ ಪತ್ರ ಬರೆಯುತ್ತಲೇ ಇರಲಿಲ್ಲ. ಒಂದು ಒಳ್ಳೆಯ ಮನೆ, ಮನೆಯಲ್ಲಿ ಕೆಲಸ ಮಾಡಲು ಆಳುಕಾಳು, ಒಡವೆ ವಸ್ತ್ರ ಅಲ್ಲದೆ ಮುಕ್ತ ಮನಸ್ಸಿನ ಚರ್ಚೆ; ಅಂದುಕೊಂಡಿದ್ದನ್ನು ನಿರ್ಭಿಡೆಯಿಂದ ಪಡೆಯುವ ಅಧಿಕಾರ ಕೊಡುವ ಶಕ್ತಿ ರಘುಗಲ್ಲದೆ ಬೇರೆ ಯಾವ ಗಂಡಸಿಗೆ ಇದೆ ಹೇಳಿ? ನಮ್ಮ ಮಿತಿಯೊಳಗೆ ನಾವು ಸುಖವಾಗಿದ್ದೇವೆ. ಭೂತಕಾಲದಲ್ಲಿ ಉದುರಿಹೋಗಿರುವ ವಿಶೇಷಣಗಳನ್ನು ಮತ್ತೆ ಧರಿಸಲು ಸಂಕೋಚಪಡದಂಥ ವಾತಾವರಣ ನಿರ್ಮಾಣವಾಗಿದೆ. ಇಷ್ಟು ಪೀಟಿಕಾ ಸ್ವರೂಪದಲ್ಲಿ ನಿಮಗೆ ಯಾಕೆ ಬರೆಯಬೇಕಾಗಿ ಬಂತೆಂಬುದು ನಿಮಗೀಗಾಲೇ ಅರ್ಥವಾಗಿರಬೇಕು. ಶಾಮ ಇಲ್ಲಿಗೆ ಬಂದಿದ್ದ. ಅವನು ಒಮ್ಮೆ ಬಂದು ನಾಲ್ಕು ದಿನವಿದ್ದು ವ್ವೈವಾಹಿಕ ಬದುಕಿನ ಸೂಕ್ಷ್ಮಗಳನ್ನು ವಿಶಾಲತೆಯನ್ನು ಅರ್ಥ ಮಾಡಿಕೊಳ್ಳಲೆಂದೇ ಅಲ್ಲವೆ! ನಾನು ನಿಮಗೆ ನಮ್ಮ ವಿಳಾಸ ಕೊಟ್ಟಿದ್ದು? ಅವನು ಹಳೆಗೆಳೆಯನಂತೆ ಬಂದು ಕಾಲಿಂಗ್ ಬೆಲ್ ಒತ್ತಿದ್ದರೆ ನನಗೆ ಅಷ್ಟು ಬೇಸರವಾಗುತ್ತಿರಲಿಲ್ಲ. ಆದರೆ ಅವನು ಮಗುಚಿದ ಕೆಟ್ಟ ಪುಟ ಮತ್ತೆ ಮತ್ತೆ ತೆರೆದುಕೊಂಡಂತೆ ಬಂದು ಕಾಣಿಸಿಕೊಂಡದ್ದೇ ಬೇಸರದ ಸಂಗತಿ. +ಒಂದು ದಿನವೆಂದರೆ ಸುಮಾರು ಹದಿನೈದು ದಿನದ ಹಿಂದೆ ಒಂದು ಬೆಳೆಗ್ಗೆ ಕಾಂಪೌಂಡೊಳಗೆ ಕ್ರೋಟಾನ್ ಗಿಡಗಳ ನಡುವೆ ಆಳೆತ್ತರ ಬೆಳೆದಿರುವ ದುಂಡುಮಲ್ಲಿಗೆ ಬಳ್ಳಿಯನ್ನು ತಂದು ಹಚ್ಚಿದ್ದು ಕೊಟ್ಟೂರಿನ ನಮ್ಮ ಮನೆಯ ಹಿತ್ತಲಿಂದಲೇ. ಬಾಡಿಗೆದಾರರ ದಿಕ್ಕಲ್ಲಿದೆ ಬೀಗ ಜಡಿದಿರುವ ನಮ್ಮ ಮನೆಯ ಹಿತ್ತಲಲ್ಲಿ ಅಂದರೆ ಬಚ್ಚಲ ಕಟ್ಟೆಯ ಪಕದಲ್ಲಿ ಅದರ ಮಾತೃಬಳ್ಳಿ ಈಗಲೂ ಹಚ್ಚಗೆ ಅನನ್ಯ ಸದೃಶವಾಗಿರಬಹುದು. ಅದು ಈ ವಾತಾವರಣ ಇಷ್ಟು ಬೇಗ ಹೊಂದಿಕೊಂಡು ಕ್ರೋಟಾನ್ಗಳನ್ನು ಮೀರಿಸುವಂತೆ ಬೆಳೆಯಬಹುದೆಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಹಚ್ಚಿದ್ದೂ ತಡವಾಗಲಿಲ್ಲ. ಅದು ಬೆಳೆದಿದ್ದೂ ತಡವಾಗಲಿಲ್ಲ. ನಮ್ಮ ಬಡಾವಣೆಯವರೆಲ್ಲ ಅದರ ಸಮೃದ್ಧ ಬೆಳವಣಿಗೆ ಕಂಡು ಈಗಲೂ ಆಶ್ಚರ್ಯಪಡುತ್ತಾರೆ. ಕೆಳಗಡೆ ಸ್ಟೂಲು ಹಾಕಿಕೊಂದು ಅದರ ಮೇಲೆ ಸುಮಾರು ಎರಡು ಗಂಟೆ ಹೊತ್ತು ನಿಂತ ರಘು ಉದಯಪುರ್‍ದಿಂದ ತಂದಿರುವ ಬುಟ್ಟಿಯಲ್ಲಿ ಹೂವು ಬಿಡಿಸಿ ತುಂಬುವುದೆಂದರೆ ನಮ್ಮ ತಾಯಿಗೆ ಎಲ್ಲಿಲ್ಲದ ಸಂತೋಷ. ಒಂದೊಂದು ಹೂವು ಬಿಡಿಸುತ್ತ ತನ್ನ ಗಂಡ ಎಲ್ಲಿಯಾದರೂ ಕಾಣಿಸಬಹುದೆಂದು ಬೀದಿ ಕಡೆ ನೋಡುವುದು ಆಕೆಗೆ ಅಭ್ಯಾಸವಾಗಿ ಹೋಗಿದೆ. (ನನಗೂ ಹಾಗೆ ಅನ್ನಿಸುತ್ತದೆ. ಒಮ್ಮೊಮ್ಮೆ. ಮಧ್ಯವಯಸ್ಕರ್ಯಾರಾದರೂ ಕಂಡರೆ ಅವರು ಅಥವಾ ಅವರಲ್ಲಿ ನನ್ನ ತಂದೆಯಾಕಿರಬಾರದು? ಆತನ ವ್ಯಕ್ತಿತ್ವದ ಒಂದಂಶವಾದರೂ ಯಾಕಿರಬಾರದು? ಎಂದು ನೋಡುತ್ತಲೇ ಅನೇಕ ಪರಪಾಟುಗಳನ್ನು ಅನುಭವಿಸಿದ್ದೇನೆ. ಆದರೂ ನಮ್ಮ ತಂದೆ ಮುಂದೆ ಒಂದಲ್ಲಾ ಒಂದು ದಿನ ಬಂದೇ ಬರುತ್ತಾರೆ ಎಂಬ ಭರವಸೆ ನಮಗಿದೆ. ಕಥೆಗಾರನಾದ ನಿಮಗೆ ಈ ಮಹಾಶಯನನ್ನು ಖಂಡಿತ ಪರಿಚಯಿಸುತ್ತೇನೆ) ಪಟ್ಟಣದ ರೀತಿ ರಿವಾಜು ಅಷ್ಟಾಗಿ ಗೊತ್ತಿಲ್ಲದ ನಮ್ಮ ತಾಯಿ ಅರ್ಧ ಬುಟ್ಟಿ ಹೂವು ಬಿಡಿಸಿದ ನಂತರ ಎದುರಿಗೆ ರಸ್ತೆ ಆಚೆ ಬದಿಯಲ್ಲಿದ್ದ ವ್ಯಕ್ತಿಯ ಕಡೆಗೆ ಅಚಾನಕ್ಕಾಗಿ ನೋಡಿದಳು. ಎಲ್ಲೋ ನೋಡಿದಂಥ ನೆನಪು ಕಾ‌ಇತು. ಸ್ಪಷ್ಟವಾಗಿ ನೋಡಿ ಗುರುತಿಸಬೇಕೆಂದರೆ ಆ ವ್ಯಕ್ತಿ ತನ್ನ ಮುಖ ಸರಿಯಾಗಿ ತೋರಿಸುತ್ತಿರಲಿಲ್ಲ. ನೋಡಿದ ಕೂಡಲೆ ಮೆಡಿಚಲ್ ಶಾಪಿನಲ್ಲಿ ಏನೋ ಖರೀದಿಸುವವನಂತೆ ನಿಂತುಕೊಂಡು ಬಿಡುವುದೋ? ಅಥವಾ ಎತ್ತರಿಕ್ಕಿದ್ದ ಅಂಚೆ ಡಬ್ಬಿಯ ಹಿಂದೆ ಅವಿತಿಟ್ಟುಕೊಳ್ಳುವುದೋ ಮಾಡುತ್ತಿದ್ದ? +ಅದರಿಂದ ಕ್ರಮೇಣ ಗಾಬರಿ ಹೆಚ್ಚಿ ಓಡಿ ಬಂದಳು ಒಳಗಡೆ. ಆಕೆ ಹಿಂದೆಂದೂ ಅಷ್ಟು ಗಾಬರಿಯಿಂದ ವರ್ತಿಸಿದುದಿಲ್ಲ. ಆ ತಂಪಿನಲ್ಲೂ ಆಕೆ ಅಷ್ಟು ಬೆವಯುತ್ತಿದ್ದುದನ್ನು ನೋಡಿ “ಏನು ಯಾಕಮ್ಮಾ?” ಎಂದು ಕೇಳಿದೆ. ಆಕೆ ‘ಹಿಂಗಿಂಗೆ’ ಅಂತ ಹೇಳಿದಳು. ನಾನು ಕುತೋಹಲದಿಂದ ಆಕೆಯನ್ನು ಮುಂದೆ ಕಳಿಸಿ ನಾನು ಹಿಂದೆಯೇ ಬಂದೆ. ಆಳೆತ್ತರವಿದ್ದ ಎರಡುಕ್ಯಾಕ್ಟಸ್ ಗಿಡಗಳ ಮರೆಯಿಂದ ಆ ಕಡೆ ನೋಡಿದೆ. ಸಫಾರಿ ತೊಟ್ಟು ತಲೆಗೆ ಹ್ಯಾಟ್ ಹಾಕ್ಕೊಂಡಿದ್ದ ಆ ವ್ಯಕ್ತಿ ಎಷ್ಟು ಪ್ರಯತ್ನಿಸಿದರೂ ತನ್ನ ಮುಖ ತೋರಿಸಲಿಲ್ಲ. “ಯಾರಾದ್ರು ತಮ್ಮನ್ನು ವಾಚ್ ಮಾಡಬಹುದು ಹುಷಾರಿಂದ ಇರಿ” ಎಂದು ರಘು ಹಿಂದಿನ ದಿನವೇ ಹೇಳಿದ್ದು ನೆನಪಾಯಿತು. ಸರಕಾರಿ ಗೂಢಚರ್ಯೆ ಕಡೆಯವರು ಇದ್ದಿರಬಹುದು, ಅಥವಾ ತುರ್ತುಪರಿಸ್ಥಿತಿ ಬಗ್ಗೆ ರೋಸಿ ಯಾರಾದರೂ ಸರಕಾರದ ವಿರುದ್ಧ ಪಿತೂರಿ ನಡೆಸಿರಬಹುದೆಂದು ನಿಗಾ ಇಟ್ಟವರಿರಬೇಕೆಂದೂ, ಅವರು ಮೊದಲಿಯಾರ್ ಕುಟುಂಬಕ್ಕೆ ಸೇರಿದವರೆಂದು ಖುಷಿಯಿಂದ ಬಂದು ಹೇಳುತ್ತಿದ್ದುದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನಾನು “ನಿಗೂಢ ವ್ಯಕ್ತಿಯೊಬ್ಬ ಬೆಳಗಿನಿಂದ ನಮ್ಮ ಮನೆ ಕಡೆ ನಿಗಾ ಇಟ್ಟಿರುವನೆಂದು ಹೇಳಿದೆ. ಅವನು ಒಳ್ಳೆ ಶೆರ್ಲಾಕ್ ಹೋಮ್ಸ್ ಥರ ಇರುವನೆಂದು ಹೇಳಿದೆ. ಬಿಡುತ್ತಿದ್ದ ಪ್ಯಾಂಟನ್ನು ಮತ್ತೆ ಏರಿಸಿಕೊಂಡು ರಘು ಆ ಕಡೆ ಹೋದ, ಅಲ್ಲಿ ಅಂಥ ಅನುಮಾನಾಸ್ಪದ ವ್ಯಕ್ತಿ ಕಾಣ್ದಿದಿದ್ದಾಗ, ತಮ್ಮ ಬ್ರಾಂಡಿನ ದೋಸೆಯನ್ನು ಎರಡು ದಿನಕ್ಕೊಪ್ಪತ್ತಾದರೂ ತಿಂದು ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದ ತಿಟ್ಟೆವೆಂಕಟರತ್ನಂರವರನ್ನು ಕೇಳಿದ. ಒರುಮನಿಷಿ ಉದಯಂ ನುಂಡಿ ಪತ್ತು ಮಣಿವರಿಕ್ಕೆ ನಿಂತಿದ್ದುದಾಗಿಯೂ ಪೇರು ಕೇಳಿದರೆ ರಾಜಾರಾವ್ ಎಂದೂ; ಎಂದ ಊರು ಎಂದು ಕೇಳಿದರೆ ತಿರುಮನ ಕೂಡಲು ಎಂದೂ, ಇನ್ನೂ ವಿವರ ಕೇಳಲು ತಮ್ಮ ತಂದೆ ತಾತ ಮುತ್ತಾತ ನವರು ವಿಶ್ವವಿಖ್ಯಾತ ಮೃದಂಗ ವಾದಕರೆಂದೂ; ತಾನು ಇಂಥ ವಂಶದಿಂದ ಬಂದವನೆಂದೂ ಹೇಳಿದನೆಂದು ರತ್ನಂ ವಿವರಿಸಿದನು. ಕಂಣಿಗೆ ಕಪ್ಪು ಕರ್ಣದ ಕೂಲಿಂಗ್ ಗ್ಲಾಸ್ ಧರಿಸಿದ್ದರಿಂದ ಸಹಜಗಣ್ಣೋ ಮೆಳ್ಳೆಗಂಣೋ ಎಂದು ಗುರುತಿಸಲಾಗಲಿಲ್ಲವೆಂದೂ ಹೇಳಿದನು. ಅಲ್ಲಿಂದ ರಘು ಯಾರೋ ತಲೆಕೆಟ್ಟವನಿರಬೇಕೆಂದು ಹೇಳಿ ನಮ್ಮನ್ನು ಸಹಜಸ್ಥಿತಿಗೆ ತಂದ. ಊಟವಾದ ನಂತರ ಕೆಲವು ಡಾಕ್ಯುಮೆಂಟಿಗೆ ನನ್ನ ಸಹಿ ಹಾಕಿಸಿಕೊಂಡು “ಇದು ಹೇಳಿ ಕೇಳಿ ಬೆಂಗಳೂರು ಸಿಟಿ… ಜನ ಒಂದೊಂದು ನೋಟಕ್ಕೆ ಒಂದೊಂದು ರೀತಿ ಕಾಣಿಸ್ತಿರ್ತಾರೆ? ಧೈರ್ಯದಿಂದಿರಿ” ಎಂದು ಹೇಳಿ ದಿನದ ಗುತ್ತಿಗೆ ಮೇಲೆ ತಂದಿದ್ದ ಬೂದುಬಣ್ಣದ್ ಕಾರಿನಲ್ಲಿ ಹೊರಟು ಹೋದ ಆಫೀಸಿಗೆ. +ನಾವೇನೋ ನಿರುಮ್ಮಳವಾಗಿ ಇರಬೇಕೆಂದು ನಿರ್ಧರಿಸಿದೆವು. ಆದರೆ ನಮ್ಮ ತಾಯಿಯು ಆಗಾಗ್ಗೆ ಹೊರಗಡೆ ಹೋಗುವುದು. ಯಾವುದಾದರೊಂದು ಗಿಡದ ಮರೆಯಲ್ಲಿ ನಿಂತು ಆಕೆ ಅಲ್ಲಿ ನೋಡುವುದು, ಕಂಡ ಪ್ರತಿಯೊಬ್ಬರೂ ಆ ನಿಘೂಡ ವ್ಯಕ್ತಿಯೇ ಎಂದು ಪರಿಭಾವಿಸುವುದು. ಹೀಗೆ ನಡೆದಿತ್ತು. ‘ಆರಾಮಾಗಿರಮ್ಮಾ’ ಎಂದರೂ ಆಕೆ ಕೇಳುತ್ತಿರಲಿಲ್ಲ. ಆ ಬಡಾವಣೆಯ ಆಚೆ ಈಚೆ ಮೂಲೆಯಲ್ಲಿರುವ ಮೂರು ನಾಲ್ಕು ಮನೆಗಳನ್ನು ಕಳ್ಳರು ಹಾಡುಹಗಲೆ ನುಗ್ಗಿ ದೋಚಿಕೊಂಡು ಹೋಗಿದ್ದರು. ಕಳ್ಳರು ನೋಡಲು ಕಳ್ಳರಂತೆ ಇರುವುದಿಲ್ಲವೆಂದೂ ಅವರು ಯಾವುದೇ ವೇಷದಲ್ಲಿ ಬಂದು ತಮ್ಮನ್ನು ಮರುಳುಗೊಳಿಸಬಹುದೆಂದೂ ವಾದಿಸತೊಡಗಿದಳು. ಅನಾವಶ್ಯಕವಾಗಿ ತೆರೆದುಕೊಂಡಿವೆ ಎಂದು ಭಾವಿಸಿ ಕೆಲವು ಉಪಯುಕ್ತ ಕಿಟಿಕಿ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಿ ಬಂದಳು. ಆಕೆಯದು ಅನುಚಿತ ವರ್ತನೆ ಎಂದು ನಾನು ಭಾವಿಸುವುದು ಸಾಧ್ಯವಿಲ್ಲವೆಂಬಂತೆ ಕೆಲಸದ ಹುಡುಗಿ ರಾಧಮ್ಮಾಳ್ ಬಂದವಳೆ “ಯಾರೋ ಒಬ್ಬಾತ ನನ್ನ ಮರೆಗೆ ಕರೆದೊಯ್ದು ಎನೇನೋ ಕೇಳಿದ್ನಮ್ಮ” ಎಂದು ಸಮಸ್ಯೆಗೆ ಪೂರ್ವ ಪೀಠಿಕೆ ಹಾಕಿದಳು. +ನಾವು ವಿಚಾರಿಸಲಾಗಿ ಆಕೆ ಎಲ್ಲ ಹೇಳಿದಳು. ನಿಘೂಡವ್ಯಕ್ತಿ ಮುಖ್ಯವಾಗಿ ನನ್ನ ಬಗೆಗಂತೆ. ಮನೆಯಲ್ಲಿ ಯಾರ್ಯಾರಿತಾರೆ? ತಾಯಿಯನ್ಯಾಕೆ ತಂದಿಟ್ಟುಕೊಂದರು? ಗಂಡ ಹೆಂಡತಿ ದಿನಂಪ್ರತಿ ಜಗಳ ಆದುವರೋ ಇಲ್ಲವೋ? ಗಂಡನೊಂದೇ ಅಲ್ಲದೆ ಬೇರೆಯಾರಾದರೂ ಗಂಡಸರು ಮನೆಗೆ ಬಂದು ಹೋಗುವುದುಂಟಾ? ಅನಸೂಯ ಎಂಬ ಹೆಸರನ್ನು ಆಕೆಯ ಗಂಡ ಷಾರ್ಟ್‌ಫಾರಂನಲ್ಲಿ ಏನೆಂದು ಕರೆಯುತ್ತಾನೆ? ಆಕೆ ರಾತ್ರಿ ಹೊತ್ತು ನೈಟಿ ಉಡುವಳೋ ಇಲ್ಲವೋ? ಹೊರಗಡೆ ಎಲ್ಲಿಗಾದರೂ ಹೋಗಿ ಬರುವಾಗೇನಾದರೂ ಪಂಜಾಬಿಡ್ರೆಸ್ಸು ಉಡುವಳೋ? ಗಂಡ ಹೆಂಡತಿ ಒಟ್ಟಿಗೆ ಮಲಗುವರೋ? ಇಲ್ಲ ಬೇರೆ ಕೋಣೆಯಲ್ಲೋ? ರಾತ್ರಿ ಮಲಗುವಾಗ ಯಾವ ಯಾವ ಕೋಣೆಗೆ ಅಲಿಘರ್ನಲ್ಲಿ ತಯಾರಿಸಲಾದ ವಿಶೇಷ ಪತ್ತಗಳನ್ನು ಹಾಕುವರೋ ಇಲ್ಲವೋ? ರಾತ್ರಿ ಹೊತ್ತಿನ ಪಹರೆಗೆ ತುಂಬ ವಯಸ್ಸಾದ ಘೂರ್ಕಾನನ್ನು ನೇಮಿಸಿಕೊಂಡಿದ್ದರೆ ಚೆನ್ನಾಗಿತ್ತು?” ಎಂದು ಮುಂತಾಗಿ ಹುಚ್ಚಾಪಟ್ಟೆ ಪ್ರಶ್ನೆಗಳನ್ನು ಕೇಳಿದನಂತೆ. ರಾಧಮ್ಮಾಳ್ ಹೇಳಿದ್ದನ್ನು ಕೇಳಿ ನನಗೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂತು. ಅವನನ್ನು ಹಿಡಿದು ತದಕಬೇಕೆಂದುಕೊಂಡೆ. ಆದರೆ ಅವನು ಕೈಗೆ ಸಿಗಬೇಕಲ್ಲ ಎಂದುಕೊಂಡು ಸುಮ್ಮನಾದೆ. ಇಷ್ಟೆಲ್ಲವನ್ನು ಪ್ರಮಾಣಿಕವಾಗಿ ಹೇಳಿದ ಆ ಹನ್ನೊಂದು ವರ್ಷದ ಹುಡುಗಿಯನ್ನು ಮೈದಡವಿ ಅಭಿನಂದಿಸಿದೆ. ರಘು ಬಂದ ಮೇಲೆ ಇದನ್ನೆಲ್ಲ ಚಾಚೂ ತಪ್ಪದೆ ಹೇಳಿದೆ. “ಇವನ್ಯಾರೋ ಚಂಬಲ್ ಕಡೆಯ ಮನುಷ್ಯನಿರಬೇಕೆ”ಂದು ನಗೆಯಾಡುತ್ತ ಕ್ರಮೇಣ ಗಂಭೀರನಾಗಿ ಬಲಗೈಯ ತೋರು ಬೆರಳಿಂದ ಎಡಗೆನ್ನೆಯನ್ನು ತುರಿಸಿಕೊಂಡ. +ಆ ರಾತ್ರಿ ಎಷ್ಟು ಹೊತ್ತಾದರೂ ನಮಗೆ ಮಾಡಲು ಸಾಧ್ಯವಾಗಲಿಲ್ಲ. ಫೋನಿನ ಮೂಲಕವೂ ವ್ಯಕ್ತಿ ನಮಗೆ ತೊಂದರೆ ಕೂಡ ತೊಡಗಿದ. ಹನ್ನೆರಡು ಗಂಟೆಯೊಳಗೆ ಸುಮಾರು ಹತ್ತು ಸಾರಿಯಾದರೂ ಫೋನು ಬಡಿದುಕೊಂಡಿರಬಹುದು. ನಾವು ಹಲೋ ಅನ್ನುತ್ತಿದ್ದೆವಾದರೂ ಆ ಕಡೆಯಿಂದ ಉತ್ತರವಿರುತ್ತಿರಲಿಲ್ಲ. ಕೊನೆಗೊಮ್ಮೆ ಸಿಟ್ಟು ಬಂದು ಫೋನ್ ಎತ್ತಿಕೊಂಡು “ಯಾರೋ ನೀನು… ರ್‍ಯಾಸ್ಕ್ಲ್… ಬಾಸ್ಟರ್ಡ್… ಹೀಗೆ ಸುಮ್ನೆ ತೊಂದ್ರೆ ಕೊಡ್ತಿದ್ದೀಯಲ್ಲ… ನಿನ್ಗೆ ನಾಚ್ಕೆ ಹೇಸ್ಗೆ ಆಗ್ತಿಲ್ವೇ… ನಿನ್ನಂಥ ಸ್ಯಾಡಿಸ್ಟನನ್ನು ಜೈಲಿಗೆ ಹಾಕಿ ಒದ್ದಾಗಲೇ ಬುದ್ಧಿ ಬರೋದು! ನಿನ್ಗೆ ಅಕ್ಕ ತಂಗೇರ್ಯಾರೂ ಇಲ್ವೇನೋ ಕೈಗೊಂದೆ ಸಿಕ್ರೆ ನೀನು ಕೈಕಾಲು ಮುರಿಸ್ಕೊಂಡು ಹ್ಯಾಂಡೀಕ್ಯಾಪ್ಡಾಗ್ತೀಯಾ ಹುಷಾರ್” ಎಂದು ಆವೇಷದಲ್ಲಿ ಜೋರಾಗಿ ಮಾತಾಡಿ ಬಿಟ್ಟೆ. ಆ ಕಡೆಯಿಂದ ನಿಟ್ಟುಸಿರು ಬಿಟ್ಟು ರಿಸೀವರ್ ಇಟ್ಟ ಸದ್ದು ಕೇಳಿಸಿತು. “ಹೀಗೆ ಮಾತಾಡಬಾರ್ದಿತ್ತೂಂತ” ರ್ಘು ಸಮಾಧಾನ ಮಾಡಿದ. ಮರುದಿನ ತಾನು ಎಲ್ಲಿಗೂ ಹೋಗದೆ ಆ ವ್ಯಕ್ತಿಯನ್ನು ಕಂಡು ಹಿಡಿಯುವುದಾಗಿ ಧೈರ್ಯ ಹೇಳಿದ. +ಹೇಲಿದ್ದಂತೆ ರಘು ಮರು ದಿನ ಎಲ್ಲಿಗೂ ಹೊಗಲಿಲ್ಲ. ಕೆಲವು ಮಾಜಿ ಪಿತೂರಿಗಾರರನ್ನು ಇಟ್ಟುಕೊಂಡು ನಿಘೂಡ ವ್ಯಕ್ತಿಯ ಪರಿಶೋಧನಾ ಕೆಲಸದಲ್ಲಿ ಇದೀ ದಿನ ಕಳೆದ, ದಣಿದು ಕೊಂಡನೇ ಹೊರತು ಆ ವ್ಯಕ್ತಿಯ ಬಗ್ಗೆ ಯಾವ ಸುಳಿವೂ ದರಕಲಿಲ್ಲ. ಆ ರಾತ್ರಿ ಅಂಥ ಯಾವುದೇ ಘಟನೆ ಫೋನ್ ಠ್ರಿಣ್ ಗುಡುವ ಮೂಲಕವಾಗಲೀ ಅಥವಾ ಬಾಗಿಲು ತಟ್ಟುವ ಅಥವ ಕಾಲಿಂಗ್‌ಬೆಲ್ ಒತ್ತುವುದರ ಮೂಲಕವಾಗಲೀ ಸಂಭವಿಸಲಿಲ್ಲವಾದರೂ ನನ್ನೆದೆಯ ಬಡಿತ ನಮ್ಮವರಿಗೆ ಕೇಳಿಸುತ್ತಿತ್ತು. ನಮ್ಮವರ ಎದೆಬಡಿತ ನನಗೆ ಕೇಳಿಸುತ್ತಿತ್ತು. ಆದರೆ ನಮ್ಮ ತಾಯಿಯ ಎದೆ ಬಡಿತ ಮಾತ್ರ ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ಇಂಥದೊಂದು ವಿಚಿತ್ರ ಬೇಗೆಯಲ್ಲಿ ಬೇಯುತ್ತ ನಾವ್ಯಾರೂ ತುಂಬ ಹೊತ್ತಿನ ತನಕ ನಿದ್ದೆ ಮಾಡಲಾಗಲಿಲ್ಲವೆಂಬುದನ್ನು ನಿಮಗೆ ತಿಳಿಸಬಯಸುವೆ. +ಯಾರು ನಿದ್ದೆ ಹೋದರೋ ಇಲ್ಲವೋ ನಾವೆಲ್ಲರೂ ಪರಸ್ಪರ ಪರಿಶೀಲಿಸುತ್ತಿದ್ದೆವು. ಅರೆ ಮಂಪರಿನಲ್ಲಿ ನಾನೊಂದು ಹೇಳುವುದು! ಅದನ್ನು ರಘು ಬೇರೆ ಥರ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವುದು. ವರಾಂಡದಲ್ಲಿ ಮಲಗಿದ್ದ ನಮ್ಮ ತಾಯಿ ಮಾತ್ರ ಆ ರಾತ್ರಿ ಕಿಟಿಕಿ ಬಾಗಿಲುಗಳ ಪ್ರತಿಯೊಂದು ಸದ್ದನ್ನು ಮರೆಯಲಾರದಷ್ಟು ಅರ್ಥ ಮಾಡಿಕೊಂಡಳು. +“ನಾನು ಹೇಳ್ಲಿಲ್ಲ್ವೇ ಅನೂ… ಅಂಥಾದ್ದೇನು ನಡೆಯೊಲ್ಲಂತ! ಸಮಜಕ್ಕೆ ಆತಂಕಕಾರಿಯಲ್ಲದ ನಮ್ಮ ಬಗ್ಗೆ ಯಾರು ಗುಟ್ಟಾಗಿ ಹೊಂಚುವುದು ಸಾಧ್ಯ? ಹಾಗೇನಾದ್ರು ಹೊಂಚಿದ್ದರೆ ಅಂಥವರ ತಲೆ ನೆಟ್ಟಿಗಿಲ್ಲದಿರಬೌದು. ಇದು ಹೇಳಿ ಕೇಳಿ ಬೆಂಗಳೂರು ನಗರ… ನಮ್ಮ ಹಾಗೆ ಎಂಥೆಂಥವರು ಬಂದು ಸೇರ್ಕೊಂಡಿದ್ದಾರೋ ಏನೋ? ತಕ್ಷಣ ಮಾಡಲಿಕ್ಕೆ ಒಂದು ಉದ್ಯೋಗ ದೊರಕದಿದ್ದಲ್ಲಿ ಹೊತ್ತು ಹೋಗಲು ಯಾರಾದ್ರು ಹೀಗೆ ಅಪಾಯಕಾರಿಯಲ್ಲದ ರೀತಿಯಲ್ಲಿ ಹಿಂಸೆ ಕೊಡುತ್ತಿರಬಹುದು? ಇನ್ನೇನು ಸಿಕ್ಕೇ ಬಿಟ್ಟೆ ಎನ್ನುವಷ್ಟರಲ್ಲಿ ಆ ಮನುಷ್ಯನಿಗೆ ಯಾವುದಾದರೊಂದು ಕೆಲಸ ಸಿಕ್ಕಿ ನೆಮದಿ ಲಭಿಸಿರಬೌದು. ನೆನ್ನೆದಿನ ಮರೆತು ಇಂದಿನ ಬಗ್ಗೆ ಯೋಚಸು ಅಷ್ಟೆ. ಬಹಳ ದಿನಗಳಿಂದ ನೀನು ಒಂದು ಸಿನಿಮಾ ನೋಡಬೇಕೆಂದಿದ್ದೆಯಲ್ಲ, ನಾವೆಲ್ಲ ಒಟ್ಟಿಗೆ ಕೂತು ನೋಡಬಹುದಾದಂತ ಸಿನಿಮಾ ಒಂದು ಬಹಳ ದಿನಗಳ ನಂತರ ಈ ನಗರದ ಮೂಲೆಯಲ್ಲಿರುವ ತಾಕೀಸಿನಲ್ಲಿ ಕಾಣಿಸಿ ಕೊಂಡಿದೆ. ಈ ಸಂಜೆ ಹೋಗೋಣ. ಸಾಧ್ಯವಾದ್ರೆ ಒಂದು ಹೋಟೆಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬರೋಣ. ರೆಡಿಯಾಗಿರು. ಹಾಗೇ ನಿಮ್ಮ ತಾಯಿ ಅಂದ್ರೆ ನಮ್ಮ ಅಕ್ಕನವರನ್ನೂ ಸಹ” ಎಂದು ಮುಂತಾಗಿ ಹೇಳುತ್ತಲೆ ರಘು ಕಂಪನಿಯ ಆಫೀಸಿಗೆ ಹೋದ. ವ್ಯವಹಾರ ಹೆಚ್ಚು ಕುದುರಿದಂತೆಲ್ಲ ಅವನ ಭಾಷೆ ತುಂಬ ಸುಧಾರಿಸಿದೆ ಎಂದು ಹೇಳಲು ನನಗೆ ಹೆಚ್ಚು ಸಂತೋಷವಾಗುತ್ತಿದೆ. +ಬೆಳೆಗ್ಗೆ ಹತ್ತು ಗಂಟೆ ಸಮಯದಲ್ಲಿ ಮತ್ತೆ ನಮ್ಮ ತಾಯಿ ಆ ವ್ಯಕ್ತಿಯ ಹಿಂಭಾಗವನ್ನು ನೋಡಿದಳಂತೆ. ಕಂಣಿಗೆ ಕಪ್ಪ್ಪು ಚಾಳೇಸ ಧರಿಸಿದ್ದ ಅವನನ್ನು ಅಷ್ಟು ದೂರದಿಂದ ಗುರುತಿಸುವುದು ಸಾಧ್ಯವಾಗಲಿಲ್ಲವೆಂದು ಹೇಳಿದಳು. ಮೆಡಿಚಲ್ ಶಾಪಿನ ತಿಟ್ಟೆ ವೆಂಕಟರತ್ನಂರವರು ಹತ್ತು ಅಡಿ ದೂರದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತರಬಲೋಸುಗ “ರ್ರೀ… ಏನ್ರೀ ಮೃದಂಗವಾದಕ ಮೊಮ್ಮಗಂದಿರೇ ಬನ್ನಿ ನಿಲ್ಲಿ ಸ್ವಲ್ಪ” ಎಂದು ಜೋರಾಗಿ ಕೂಗಿದರಂತೆ. ಹೋಗಿ ಹಿಡಿಯಬೇಕೆಂದಾಗ ಎರಡು ಭಯಗಳು ಕಾಡಿದವಂತೆ. ಒಂದನೆಯದಾಗಿ ನಾನು ಅತ್ತ ಹೋಗಲು ಅಂಗಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿರುವ ಪದವೀಧರ ಯುವಕ ಗಲ್ಲಾಪೆಟ್ಟಿಗೆಯಲ್ಲಿರುವ ಹಣವನ್ನು ಲಪಟಾಯಿಸಿದರೆ? ಎಂಬುದು. ಎರಡನೇದಾಗಿ ಮೃದಂಗವಾದಕನ ಮೊಮ್ಮಗನೆಂದು ಹೇಳಿಕೊಂಡ ವ್ಯಕ್ತಿ ಕೇಂದ್ರ ಗುಪ್ತಚಾರರ ದಳದ ಉದ್ಯೋಗಿಯಾಗಿದ್ದರೆ ಎಂಬುದು. ಹೀಗೆ ಆತ ತನ್ನ ಅಸಹಾಯಕತೆ ತೋಡಿಕೊಂಡ ಸ್ವಲ್ಪ ಹೊತ್ತಿಗೆ ರಘು ಬಂದ. ಆತ ಹಿಂದೆಂದೂ ಅಷ್ಟೊಂದು ಬೇಸರಗೊಂಡಿರಲಿಲ್ಲ. “ಆ ಬೋಳಿಮಗ ನನ್ನ ಕೈಗೊಂದ ಸಿಕ್ಲಿ…” ಎಂದು ಮುಂತಾಗಿ ಸಿದಿಮಿಡಿಗುಟ್ಟಿದ. ಕಾರಣವಿಲ್ಲದೆ ರಘು ಸಿದಿಮಿಡಿಗುಟ್ಟುವ ಜಾಯಮಾನದವನಲ್ಲ ಅದಕ್ಕೆ ಕಾರಣವಿಷ್ಟೆ. +ಹಿಂದಿನ ದಿನ ನಮ್ಮ ಮನೆಯ ಆಜುಬಾಗಿನಲ್ಲಿ ಸುಳಿದಾಡಿದ ಹ್ಯಾಟಿನ ವ್ಯ್ಕ್ತಿಯೇ ಕಂಪನಿಯ ಕಛೇರಿ ಕಡೆ ಮತ್ತು ಉದ್ದಿಮೆ ಸ್ಥಳಕ್ಕೆ ಹೋಗಿದ್ದನಂತೆ, ಗುಟ್ಟಾಗಿ ಕೆಲಸ ಮಾಡುವವರನ್ನು ಬೈಟು ಕಾಫಿ ಕುಡಿಸಿ ಬೇಕು ಮಾಡಿಕೊಂಡನಂತೆ, ತಾನು ಮುದಕರನ್ನು ಯುವಕರನ್ನಾಗಿ ಮಾಡುವ ಇಡ್ಲಿ ಮಿಕ್ಸ್ ತಯಾರಿಸುವ ಉದ್ದಿಮೆ ಸ್ಥಾಪಿಸುವುದಾಗಿಯೂ, ಉತ್ತರ ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಯಾದ ಓಂ ಪ್ರಾಕಶ್ ಗ್ರೋವರ್ ಅವರು ದಕ್ಷಿಣ ಭಾರತ ಪ್ರವಾಸ ಮಾಡುತ್ತಿದ್ದಾಗ ಬಂಡೀಪುರದಲ್ಲಿನ ಖ್ಯಾತ ನರ್ತಕಿ ಮಂಜು ಬಾಷಿಣಿಯನ್ನು ಗಾಂಧರ್ವ ವಿವಾಹವಾದನೆಂದೂ, ತನ್ನ ಗೈರುಹಾಜರಿಯಲ್ಲಿ ಸದಾ ನೋಡುತ್ತ ಇರುವ ಸಲುವಾಗಿ ವಜ್ರದುಂಗುರವನ್ನು ಆಕೆಯ ಬಲಗೈಯ ತೋರು ಬೆರಳಿಗೆ ತೊಡಿಸಿದನೆಂದೂ; ಅದನ್ನು ನೋಡುತ್ತಲೆ ಆಕೆ ಗರ್ಭಧರಿಸಿ ತನ್ನನ್ನು ಶುಭ ಮುಹೂರ್ತದಲ್ಲಿ ಹೆತ್ತು ತನಗೆ ಶಾಂಪ್ರಕಾಶ್ ಗ್ರೋವರ್ ಎಂದು ನಾಮಕರಣ ಮಾಡಿ ಬೆಳೆಸಿ ದೊಡ್ಡವನನ್ನಾಗಿ ಮಾಡಿರುವಳೆಂದೂ; ಕಳೆದ ಮಾಹೆ ಇಪ್ಪತ್ತೆಂಟರಂದು ಹರಿದ್ವಾರದ ಬಳಿ ಹರಿವ ಪವಿತ್ರ ಗಂಗಾ ನದಿಯಲ್ಲಿ ದೇಹತ್ಯಾಗ ಮಾಡಿರುವ ಪಿತಾಶ್ರೀ ಗ್ರೋವರ್ ಬರೆದಿಟ್ಟಿರಬಹುದಾದ ಉಯಿಲಿನಲ್ಲಿ ತನ್ನ ಹೆಸರಿಗೆ ಕೋಟ್ಯಂತರ ರುಪಾಯಿ ಆಸ್ತಿ ಬರೆದಿಟ್ಟರಬಹುದೆಂದೂ ತಾನು ಅದನ್ನು ವಶಪಡಿಸಿಕೊಳ್ಳಲೋಸುಗ ಬರುವ ಮಾಹೆಯ ಕೃಷ್ಣ ಪಕ್ಷದಂದು ವಿಂದ್ಯಾಚಲ ದಾತಲಿರುವುದಾಗಿಯೂ ಹೇಳಿಕೊಂಡನಂತೆ. ಹಾಗೆ ಮಾತಾಡುತಾ ರಘು ದೋಸೆ ಮಿಕ್ಸಿನಲ್ಲಿ ಮಹದೇಶ್ವರ ಬೆಟ್ಟದಲ್ಲಿ ಹೇರಳವಾಗಿ ವಾಸಿಸುವ ಸುಗ್ರೀವ ಜಾತಿಯ ಕಪಿಗಳ ತರಡು ಬೀಜಗಳನ್ನು ಮಿಕ್ಸ್ ಮಾಡುತ್ತಿರುವನಂತೆ ಎಂಬ ಪ್ರಶ್ನೆ ಹಾಕಿದನಂತೆ, ಹಳದಿ ವರ್ಣದ ಪಾಕೆಟ್‌ಗಳಲ್ಲಿನ ಪುಡಿ ಮಂಗಗಳ ತರ‌ಉ ಬೀಜದ್ದಿರಬಹುದೆಂದು ಕಾರ್ಮಿಕರು ಅನುಮಾನಿಸುವುದರ ಮೂಲಕ ಅವನಿಗೆ ಅನ್ಯೋನ್ಯವಾದರಂತೆ. ಹಾಗೆಯೇ ಆ ನಿಗೂಧ ವ್ಯಕ್ತಿ ರಘುಯ್ ಆಗಲೀ. ಅವನ ಪತ್ನಿ (ನಾನು) ಯಾಗಲೀ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಹಾಕುವ ಮೊದಲು ಕೆಲವು ದೃಷ್ಟಾಂತಗಳನ್ನು ನೀಡಿದನಂತೆ. ಅವನ ಮಾತಿಗೆ ಚಿತ್ರಕ ಶಕ್ತಿಗೆ ಬೆರಗಾಗಿ ಕಾರ್ಮಿಕರು ದೊಡ್ಡವರು ಸ್ವಾಮಿ ಅವರು ದೊಡ್ಡವರು, ಅವರು ಗೊತ್ತಿದ್ದೋ ಅಥವಾ ಊಹಿಸಿಯೋ ಮಾತಾಡಿದರೆ ಮಣ್ಣು ತಿನ್ನಬೇಕಾಗುತ್ತದೆ ಎಂದು ನಿಟ್ಟುಸಿರು ಬಿಟ್ಟರಂತೆ, ಇಷ್ಟೆಲ್ಲ ಹೇಳಬಾರದನ ಹೇಳಿ! ಎಷ್ಟೆಲ್ಲ ಕೇಳಬಾರದನ್ನೆಲ್ಲ ಕೇಳಿ ಅವನು ಗೋಲ್ಡನ್ ಜುಬ್ಲಿ ಗ್ಯಾರೇಜಿನಲ್ಲಿ ಬಿಟ್ಟು ಬಂದಿರುವ ತನ್ನ ಕಂಟೆಸ್ಸಾ ಕಾರು ರಿಪೇರಿಯಾಗಿರುವುದೋ ಇಲ್ಲವೋ ಎಂದು ಗೊಣಗುತ್ತ ಅಲ್ಲಿಂದ ಕದಲಿದನಂತೆ. +ಇದನ್ನೆಲ್ಲ ಹೇಳಿ ರಘು ಕಂಣು ಕೆಂಪಗೆ ಮಾಡಿಕೊಂಡ. ಅವನನ್ನು ಸಂತೈಸುವ ಅವಕಾಶ ನನಗೆ ದೊರಕಬಹುದೆಂದು ನಾನು ಕನಸು ಮನಸಲ್ಲೂ ಯೋಚಿಸಿರಲಿಲ್ಲ ಕಥೆಗಾರರೇ! ಸಂತೈಸುವ ಅವಕಾಶದ ಅನುಭವ ಎಷ್ಟೊಂದು ಸುಂದರ ಗೊತ್ತೆ? ಆದರೆ ಅಂಥ ಅವಕಾಶ ಜೀವನದಲ್ಲಿ ಒಂದೆರಡು ಬಾರಿ ಮತ್ತೆ ದೊರಕಲೆಮ್ದು ಆಷಿಸುತ್ತೇನೆ. ಇದರ ಬಗ್ಗೆ ಫ್ರಾಯ್ಡೂ-ಗೀಯ್ಡೂ; ಪ್ರಾಮೂ-ಗೀಮೂ ಚೆನ್ನಾಗಿ ಓದಿಕೊಂಡಿರಬಹುದಾದ ನಿಮಗೆ ವರ್ಣಿಸಿ ತಲೆ ತಿನ್ನದೆ ಮುಂದೇನಾಯ್ತೂಂತ ಹೇಳುತ್ತೇನೆ ಕೇಳಿ, ಮುಂದಿನ ಘಟನೆಯನ್ನು. ನೀವು ಯಾವ ರೀತಿ ಪರಿಗ್ರಹಿಸುವಿರೋ? ಅದು ನಿಮಗೆ ಬಿಟ್ಟಿದ್ದು. +ಸಿನಿಮಾಕ್ಕೆ ಅವನೇ ಬಲವಂತದಿಂದ ಒಪ್ಪಿಸಿದೆ. ಆಗಲೆ ಅವನು ಮೂರು ದಿನಗಳ ಹಿಂದೆಯೇ ಟಿಕೆಟ್ ಖರೀದಿಸಿ ಗುಟ್ಟಾಗಿ ಇಟ್ಟಿದ್ದ. ಅದೂ ಅಲ್ಲದೆ ನನ್ನ ಮನಸ್ಸು ಚೆನ್ನಾಗಿಲ್ಲ ಎಂದರೂ ಕೇಳದೆ ಅವನಿಗೆ ನಾನೇ ಸಫಾರಿ ಡ್ರೆಸ್ಸ್ ತೊಡಿಸಿ ಜೇಬಿನಲ್ಲೊಂದು ಗುಲಾಬಿ ಹೂವು ಸಿಕ್ಕಿಸಿದೆ. ರಘು ಆ ಉಡುಪಿನಲ್ಲಿ ಅಷ್ಟು ಆಕರ್ಷಕವಾಗಿ ಕಾಣಿಸಬಹುದೆಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ! ಬೇಸರದಿಂದ ಮುಖ ಬಿಕ್ಕೊಂಡಿದ್ದುದೂ ಅದಕ್ಕೆ ಕಾರಣವಿರಬಹುದು. ಆದರೆ ಅದರಲ್ಲಿ ನಿವು ಮಾತ್ರ ಸಫಾರಿ ಡ್ರೆಸ್ ಹೊಲಿಸಿ ತೊಡಬೇಡಿ. ಸಫಾರಿ ಡ್ರೆಸ್ ತೊಟ್ಟಿರುವ ಕಥೆಗಾರರ ಬರಹಗಳನ್ನು ನಮ್ಮ ಕರ್ನಾಟಕದ ಓದುಗರು ಅನುಕಂಪದ ಆಧಾರದ ಮೇಲೂ ಓದಲಾರರು. ಆದ್ದರಿಂದ ಸಫಾರಿ ಹೊಲಿಸುವುದಿದ್ದರೆ ಮರು ಯೋಚಿಸಬೇಕೆಂದು ನಿಮ್ಮ ಅಭಿಮಾನಿ ಓದುಗಳಾಗಿ ಹೇಳುತ್ತಿರುವುದಕ್ಕೆ ತಪ್ಪು ತಿಳಿಯಬೇಡಿ. ಎಷ್ಟಿದ್ದರೂ ನನ್ನ ಗಂಡ ಸಫಾರಿ ಡಧರಿಸಿದರೆ ಸುಂದರವಾಗಿ ಕಾಣಿಸುತ್ತಾರೆ ಎಂದರೆ ತಪ್ಪೇನು ಇಲ್ಲ. +ಒಂದು ರೀತಿ ಹೇಳಬೇಕೆಂದರೆ ನಾವು ಹೊರಟಾಗ ಇವರು ಸಿನಿಮಾ ನೋಡಲಿಕ್ಕೆ ಹೊರಟಿರುವರೆಂದು ಊಹಿಸಲು ಎಂಥವರಿಗೂ ಸಾಧ್ಯವಿರಲಿಲ್ಲ. ನೋಡುಗರಿಗೆ ಇವರು ಶವ ಸಂಸ್ಕಾರ ಮುಗಿಸಿಕೊಂಡು ಹೊರಟಿರುವರೇನೋ ಎಂಬಂತೆ ಕಾಣುತ್ತಿದ್ದೆವು ಎಂದರೆ ದಯವಿಟ್ಟು ನಗಬೇಡಿ. +ಮನೆಗೆ ಹಾಕಿದ್ದ ಬೀಗದ ಬಗ್ಗೆ; ಕಾವ್ಲಿರುವ ಸುರ್ಜಿತ್‌ಸಿಂಗ್‌ನ ಗುಣಧರ್ಮಗಳಬಗ್ಗೆ; ಅಪರಿಚತರೊಡನೆ ಸಲಿಗೆಯಿಂದ ಬಾಲ ಅಲ್ಲಾಡಿಸುವ ಪೊಮೆರಿಯನ್ ನಾಯಿ ಬಗ್ಗೆ ನಮ್ಮ ತಾಯಿ ಚಿಂತಿಸುತ್ತಿದ್ದರೆ; ನನ್ನ ಗಂಡ ರಘು ಮಹದೇಶವರ ಬೆಟ್ಟದ ತಪ್ಪಲಲ್ಲಿರುವ ಮಂಗಗಳ ತರಡು ಬೀಜದ ಹುಡಿಯನ್ನು ದೋಸೆ ಮಿಕ್ಸಿಗೆ ಬೆರೆಸಿದರೆ ತಿಂದವರ ಲೈಂಗಿಕ ಶಕ್ತಿ ಹೆಚ್ಚಬಹುದೇ ಎಂದು ಯೋಚಿಸುತ್ತಾ ಮಂಕಾಗಿದ್ದನು. ನಾನು ಮಾತ್ರ ಆ ನಿಘೂಡ ವ್ಯಕ್ತಿ ಸತತ ಎರಡು ದಿನಗಳಿಂದ ಕೊಡುತ್ತಿರುವ ತೊಂದರೆಗಳು ಬದುಕಿಗೆ ಅವಶ್ಯಕವೋ? ಅನಾವಶ್ಯಕವೋ? ಎಂದು ಚಿಂತಿಸುತ್ತ ಮಂಕಾಗಿದ್ದೆನು. +ನಾವು ಚಿತ್ರಮಂದಿರ ತಲುಪುವ ಹೊತ್ತಿಗೆ ಚಲನಚಿತ್ರ ಶುರುವಾಗಿ ಹದಿನೈದು ನಿಮಿಷಕ್ಕೂ ಹೆಚ್ಚಾಗಿತ್ತು. ಮಧ್ಯ ವಯಸ್ಕರಿಂದ ಕಿಕ್ಕಿರಿದಿದ್ದ ಚಿತ್ರಮಂದಿರದೊಳಗಡೆ ನಾಯಕಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮೂರ್ತಿಯನ್ನು ಪೂಜಿಸುತ್ತ ಭಕ್ತಿ ಪರವಶಳಾಗಿ ಹಾಡುತ್ತಿದ್ದಳು. ಆಕೆಯ ಒಂದು ಪಕ್ಕದಲ್ಲಿ ತೊನ್ನು ರೋಗದಿಂದ ನರಳುತ್ತಿದ್ದ ಆಕೆಯ ಅತ್ತೆಯೂ; ಇನ್ನೊಂದು ಪಕ್ಕದಲ್ಲಿ ಕುಷ್ಠವ್ಯಾಧಿ ಪೀಡಿತನಾಗಿದ್ದ ಆಕೆಯ ಗಂಡನೂ ಅರೆ ನಿಮೀಲಿತ ನೇತ್ರರಾಗಿ ತಲೆ ಅಲ್ಲಾಡಿಸುತ್ತಿದ್ದರು. ಸಾಮಾನ್ಯವಾಗಿ ಉತ್ತರಾರ್ಧದಲ್ಲಿ ಬರಬೇಕಿದ್ದ ದೃಶ್ಯಗಳು ಆರಂಭದಲ್ಲಿ ನಿರ್ದೇಶಕ ಜಾಣತನದಿಂದ ಅಳವಡಿಸಿದ್ದರಿಂದಾಗಿ ಆ ಚಿತ್ರವು ಮಧ್ಯ ವಯಸ್ಕ ಗೃಹೋಪಜೀವಿಗಳನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸತೊಡಗಿತ್ತು. ಕಿರು ಟಾರ್ಚಿನ ಮಂಕು ಬೆಳಕಿನಲ್ಲಿ ಚಿತ್ರಮಂದಿರದ ನೌಕರ ತೋರಿಸಿದ ಆಸನಗಳಲ್ಲಿ ನಾವು ಮುವ್ವರು ಕೂತುಕೊಂಡೆವು. ಪರಪುರುಷನ ಪಕ್ಕದಲ್ಲಿ ಕೂತಿದ್ದ ನನ್ನ ತಾಯಿಯೂ; ಪರಸ್ತ್ರೀಯ ಪಕ್ಕದಲ್ಲಿ ಕೂತಿದ್ದ ನನ್ನ ಗಂಡನೂ ಸಾಕಷ್ಟು ಇರಸು ಮುರಸು ಅನುಭವಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನಾನು ಸ್ತ್ರೀಯ ಪಕ್ಕ ಹೋಗಲು ಗಂಡ ರಘು ಈ ಪಕ್ಕ ಬಂದನು. ಅದು ಹೇಳಿ ಕೇಳಿ ಪತಿ ಭಕ್ತಿಯನ್ನು ಸಾರಿ ಸಾರಿ ಹೇಳುತ್ತಿದ್ದ ಚಲನಚಿತ್ರ ಅದಾಗಿತ್ತು. ರಘು ಇಂಥದೊಂದು ಚಿತ್ರ ತೋರಿಸಬಹುದೆಂದು ನಾನು ಅಂದುಕೊಂಡಿರಲಿಲ್ಲ. ನನ್ನ ಗಂಡನ ಬಗ್ಗೆ ಆ ಕ್ಷಣ ನನ್ನಲ್ಲಿ ಒಂದಿಷ್ಟು ಬೇಸರ ಮೂಡಿ ಮರೆಯಾಯಿತು. ವಿವಾಹಿತ ಗೃಹಿಣಿ ವಿವಾಹೇತರ ಸಂಬಂಧ ಇಟ್ಟುಕೊಳ್ಳುವ ವಸ್ತು ಆಧರಿಸಿ ಚಲನಚಿತ್ರ ನಿರ್ಮಿಸುವ ಯೋಜನೆ ವಿವರಿಸಿ ಜಲಜಾಕ್ಷಿಯಿಂದ ನಗೆಪಾಟಲಿಗೀಡಾಗಿದ್ದ ನಾನು ಹೆಚ್ಚು ಕಡಿಮೆ ತನ್ಮಯತೆಯಿಂದಲೇ ಚಿತ್ರ ನೋಡತೊಡಗಿದೆ. ಇಂಟರ್ವೆಲ್ಗೆ ಅರ್ಧ ಗಂಟೆ ಇರುವಂತೆ ಹಿಂದಿನ ಸೀಟಿನಲ್ಲಿ ಕೂತಿದ್ದವನಿಂದ ಕಿರುಕುಳ ಆರಂಭವಾಯಿತು. ಅದು ಅಕಸ್ಮಿಕ ಎಂದುಕೊಳ್ಳುವಂತಿರಲಿಲ್ಲ. ಕಾಲಿನ ಬೆರಳುಗಳಿಂದ ಜಘನ ಮೀಟುವುದು; ಕೈಯಿಂದ ಭುಜ ಸವರುವುದು ಮಾಡುತ್ತಿದ್ದ. ತಿರಸ್ಕರಿಸಲಾರದಂಥ ಸ್ವೀಕರಿಸಲಾರದಂಥ ಅಂತಹ ಅನುಭವವನ್ನು ಎಷ್ಟು ಹೊತ್ತು ಸಹಿಸಲು ಸಾಧ್ಯ? ನಾನು ಹಿಂದಕ್ಕೆ ಮುಂದಕ್ಕೆ ಅಕ್ಕ ಪಕ್ಕ ಸರಿದರೂ ಅವನು ಕೊಡುತ್ತಿದ್ದ ಕಿರುಕುಳ ನಿರ್ವಿರಾಮವಾಗಿ ಮುಂದುವರಿಯಿತು. ನಾನು ಹಿಂದಕ್ಕೆ ತಿರುಗಿ ನಿನಗೇನು ಅಕ್ಕ ತಂಗಿಯರಿಲ್ವೇ ಎಂದು ಮಾಮೂಲು ಡೈಲಾಗು ಹೊಡೆಯಬೇಕೆಂದು ಎರಡುಮೂರು ಬಾರಿ ಪ್ರಯತ್ನಿಸಿದೆ. ಅವನು ಮಹಾತ್ಮಗಾಂಧಿ ವಿಗ್ರಹದಂತೆ ಕೂತುಕೊಂಡಿರುತ್ತಿದ್ದ. ಮತ್ತೆ ಬೆರಳುಗಳನ್ನು ತಾಕಿಸುತ್ತಿದ್ದ. ಇಂಟರ್ವಲ್ ಬಿಟ್ಟಾಗ ಅವನಿಗೆ ರಘುನಿಂದ ಕಪಾಳ ಮೋಕ್ಷ ಮಾಡಿಸಬೇಂದು ನಿರ್ಧರಿಸಿದೆ. ಹಿಂದೆ ಕೂತಿರುವವನನ್ನು ಸ್ವಲ್ಪ ವಿಚಾರಿಸಿಕೊಳ್ಳಿ ಎಂದು ನಾನು ಹೇಳುವಷ್ಟರಲ್ಲಿ ಇಂಟರ್ವಲ್ ಬಿಟ್ಟಿತು. ನಾವು ಹಿಂತಿರುಗಿ ನೋಡಿದೆವು… ಆದರೆ ಅವನು ಆಗಲೆ ಬಾಗಿಲ ಜಂಗುಳಿಯ್ಲ್ಲಿದ್ದ. ನಮ್ಮ ತಾಯಿಯಂತೂ “ಅವ್ನೇ ಕಣೇ. ಅಲ್ಲಿರೋದು ಅವ್ನೇ” ಎಂದು ಚೀರಿದಳು. ನಮ್ಮ ರಘು ಕೂಡಲೆ ರಟ್ಟಿ ಏರಿಸಿ ಅಲ್ಲಿಗೆ ಹೋಗುವಷ್ಟರಲ್ಲಿ ಆ ಮಹಾಶಯ ತಪ್ಪಿಸಿಕೊಂಡು ಬಿಟ್ಟ. “ಸೂಳ್ಯಾಮಗ ಸಿಕ್ಕಬೇಕಿತ್ತು” ಎಂದು ರಘು ರೆಟ್ಟಿ ಇಳಿಸಿದ. ಚಲನಚಿತ್ರ ಮುಗಿಯುವವರೆಗೆ ಅವನು ಕೂತಿದ್ದ ಜಾಗ ಖಾಲಿ ಇತ್ತು. +ನಾವು ಸಿನಿಮಾ ಬಿಟ್ಟ ಮೇಲೆ ಮನೆ ತಲುಪುವಷ್ಟರಲ್ಲಿ ಹತ್ತೂ ಮುಕ್ಕಾಲು ಮೇಲಾಗಿತ್ತು. ನಾವು ಹೋದೊಡನೆ ಸಿಂಗ್ ಯಾರೋ ಒಬ್ಬ ಬಂದು ಕೊಟ್ಟಿದುದಾಗಿ ಹೇಳಿ ಒಂದು ಲಕೋಟೆಯೊಂದನ್ನು ಕೈಗಿತ್ತ. ನಾವು ಆತಂಕಾಶ್ಚರ್ಯದಿಂದ ಬಿಚ್ಚಿ ನೋಡಿದರೆ ಒಂದೂ ಅಕ್ಷರ ಮೂಡಿರದ ಬಿಳಿಹಾಳೆಗಳೆರಡು ಅದರಲ್ಲಿದ್ದವು. ಅದರಿಂದ ನಮಗೆ ಒಂದು ರೀತಿಯ ನಿರಾಸೆ ಆಯಿತೆಂದೇ ಹೇಳಬೇಕು. ಆ ನಂತರದ ದಿನಗಳಲ್ಲಿ ದಿನಕ್ಕೊಮ್ಮೆಯಾದರೂ ಈ ಮತ್ತು ಇಂಥ ಘಟನೆಗಳ ಬಗ್ಗೆ ನೆನಪಿಸಿಕೊಳ್ಳುತ್ತಿದ್ದೆವು. ಈ ಘಟನೆ ನಮ್ಮ ಬದುಕಿನ ಅಂತರ್ ವಲಯದಲ್ಲಿ ಒಂದು ಪ್ರಾಚೀನ ಶಾಸನದಂತೆ ನಿಂತು ಬಿಟ್ಟಿದೆ. +ಈ ಘಟನೆಗಳ ಕೇಂದ್ರ ಪಾತ್ರ ಖಂಡಿತವಾಗಿ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಶಾಮನೆಂದೇ ಊಹಿಸಿ ಹೇಳಬಲ್ಲೆ. ಚಿತ್ರಮಂದಿರದ ಮಸುಕು ಕತ್ತಲೆಯಲ್ಲಿ ಸ್ಪರ್ಶ್ದ ಮೂಲಕ ತಾನು ಶಾಮನೆಂದೇ ಸುಳಿವು ನೀಡಿದನೆಂದು ಭಾವನೆ. ಆದರೆ ನನ್ನ ಊಹೆಯನ್ನು ರಘುನ ಕಿವಿಯಲ್ಲಿ ಬಿಚ್ಚುವ ಗೋಜಿಗೆ ಹೋಗಿಲ್ಲ. ಖಂಡಿತ ಅವನು ಶಾಮನೇ. ಆದರೆ ಅಂಜುಬುರುಕನಾದ ಅವನು ವೇಷ ಮತ್ತು ಭಾಷೆ ಮರೆ ಮಾಚಿಕೊಂಡು ಬಂದು ವರ್ತಮಾನ ತಲ್ಲಣಿಸುವಂತೆ ವರ್ತಿಸಿ ಹೋದದ್ದೇ ಆಶ್ಚರ್ಯ. ಖಂಡಿತ ಅವನೊಳಗೆ ಅವನಿಲ್ಲ. ಅಂತರಂಗದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಲ್ಲವನ್ನು ಬಚ್ಚಿಟ್ಟುಕೊಂಡು ಮಹಾಮಳ್ಳಿಗನಂತೆ ವರ್ತಿಸುತ್ತಿದ್ದಾನೆಂದು ಅರ್ಥಪೂರ್ಣವಾದ ಕಥೆ ಬರೆಯಬಹುದಾದ ನೀವು ಅರ್ಥಮಾಡಿಕೊಳ್ಳಬೇಕು. ನಾನು ಈ ಪತ್ರದಲ್ಲಿ ಪ್ರಸ್ತಾಪಿಸಿರುವ ಲಕ್ಷಣಗಳನ್ನು ಆಧರಿಸಿ ಶಾಮ ಹೌದೋ? ಅಲ್ಲವೋ? ಎಂಬುದನ್ನು ಖಚಿತ ಪಡಿಸಿಕೊಂಡು ನೀನು ನನಗೆ ಪತ್ರ ಬರೆಯಬೇಕೆಂದು ಕೋರುತ್ತೇನೆ. ನಮ್ಮ ಶಾಮ ಹಾಗೆ ಮಾಡಲು ಸಾಧ್ಯವಿಲ್ಲವೆಂದು ನೀವು ಪತ್ರ ಬರೆದರೆ ನನಗೆ ಆಗುವ ನಿರಾಶೆ ಅಸದಳ. ಹಾಗೆಂದು ತಪ್ಪು ವರದಿಕೊಡಬೇಕೆಂದೇನೂ ಇಲ್ಲ. ಬರೆಯುವಿರಿ ಎಂದು ಭಾವಿಸುವೆ. +ಒಂದು ಶತಮಾನವೇ ಮನುಷ್ಯ ರೂಪದಲ್ಲಿ ಜೀವಿಸುತ್ತಿದೆ ಎಂಬಂತೆ ನಮ್ಮ ಓಣಿಯಲ್ಲಿ ಅದೂ ನಮ್ಮ ಮನೆಗೆ ಹತ್ತಿರದಲ್ಲಿರುವ ಪರಮ ಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಆರೋಗ್ಯ ಚೆನ್ನಾಗಿರುವುದೆಂದು ಭಾವಿಸುವೆ. ಅವರ ನೊಸಲಿಗೆ ನೀಲಗಿರಿ‌ಎಣ್ಣೆ ಲೇಪಿಸುವ ಅವಕಾಶ ನನ್ನ ಜೀವನದಲ್ಲಿ ಮುಂದೆಂದೂ ಸಿಗಲಾರದಷ್ಟು ಅವರೆಲ್ಲ ತುಂಬ ಸರಿದಿದ್ದಾರೆ. ಇರಲಿ; ಅವರೆಲ್ಲರ ಬಗ್ಗೆ ನನಗೆ ಎಂದೆಂದೂ ಗೌರವ ಇರುತ್ತದೆ. +ಜಲಜಾಕ್ಷಿ, ಕಮಲಾಕರ ಮೊದಲಾದವರಿಗೆ ನನ್ನ ನೆನಪು ತಿಳಿಸುವುದು. ನಮಗೆ ಪತ್ರ ಬರೆಯುವಿರಿ ತಾನೆ? +ನಿಮ್ಮ ವಿಶ್ವಾಸಿ, +ಅನಸೂಯಾ. +ಸುಧೀರ್ಘ ಪತ್ರ ಒಂದೇ ಏಟಿಗೆ ಓದಿಸಿಕೊಂಡಿತು. ನೂರಾರು ಪುಸ್ತಕಗಳ ಅನುಭವವಾಯಿತು. ಅನಸೂಯಾ ಅಧ್ಭುತವಾಗಿ ನನ್ನೊಳಗೆ ಬೆಳೆದು ನಿಂತುಬಿಟ್ತಿದ್ದಳು. ಪತ್ರ ಓದಿದ ನನ್ನಂಥ ಕುಬ್ಜ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಎನ್ನಿಸಿತು. ಅರಿವಿನ ಪರಿಧಿ ಹೆಚ್ಚಿಸುವಂತೆ ಬರೆದ ಆಕೆಗೆ ಕೃತಜ್ಞತೆಗಳನ್ನು ಅರ್ಪಿಸಿದೆ. ಅದಿರಲಿ ಆಕೆ ಸುಧೀರ್ಘ ಪ್ರಸ್ತಾಪಿಸಿದ ವ್ಯಕ್ತಿ ಶಾಮ ಹೌದೇ? ಅಲ್ಲವೇ? ಬಾಯಲ್ಲಿ ಬೆರಳಿಟ್ಟರೆ ಕಡಿಯಲಾರದ ಮುಗ್ಧ ಬೆಂಗಳೂರಿನಂಥ ನಗರಕ್ಕೆ ಹೋಗುವುದೆಂದರೇನು? ಹಾಗೆ ವರ್ತಿಸುವುದೆಂದರೇನು! ದೇವರೆ ಆ ವ್ಯಕ್ತಿ ಶಾಮ ಅಲ್ಲವಾಗಿರಲಿ? ದೇವರೇ ಪತ್ರದಲ್ಲಿನ ಸಂಗತಿ ಈ ಅಡ್ನಾಡಿ ಗ್ರಾಮದ ಮೂರನೆ ವ್ಯಕ್ತಿಗೆ ತಿಳಿಯದಿರಲಿ? ಒಂದಿಷ್ಟು ಓದಲು ಬಲ್ಲ, ಬರೆಯಲು ಬಲ್ಲ ನನ್ನ ತಂಗಿಗೆ ಈ ಪತ್ರ ಸಿಕ್ಕರೆ ಕಷ್ಟ! ಲಗುಬಗೆಯಿಂದ ಪತ್ರವನ್ನು ಲಕೋಟೆಯೊಳಗಿರಿಸಿ ಕಪಾಟಿನೊಳಗಿಟ್ಟು ಬೀಗ ಹಾಕಿ ನೆಮ್ಮದಿಯ ಉಸಿರು ಸುಯ್ದೆ. +“ನೋಡ್ದೇನವ್ವಾ ನಿಮ್ಮಣ್ಣನ ಧಿಮಾಕು… ಒಂದೀಟು ತಂಗಿ ಬಂದಾಳಂಥ ಕುಂತೂ. ನಿಂತೂ ಮಾತಾಡಿದ್ನೇನವ್ವಾ… ಓದು ಕಲ್ತೋರ ಹಣೆ ಬರಾನೆ ಇಷ್ಟು. ನಾ ನಮ್ಮಪ್ಬ್ರ್ ಬಡ್ಕೊಂಡೆ ನಮ್ಮ ಜನ್ದಾಗೆ ಈಟು ಓದಿದ್ದು ಸಾಕು. ಮುಂದೊದಿಸ್ಬೇಡಾಂತ… ಕೇಳಿದ್ನೇ ಅವ್ನು. ಕುಣಕಂತ ಓದಿಸ್ಬಿಟ್ಟ. ಈಗ್ನೋಡು ಈ ಓದ್ದೋನು ನನ್ನೋರು ತನ್ನೋರನ್ದಂಗೆ ಏಟು ಮೆರೀತಾನೆ.” ಎಂದು ಒಂದರೊಳಗೆ ಇನ್ನೊಂದು ಬೆರೆಸಿ ರಂಪಾಟ ಆರಂಭಿಸಿ ನನ್ನ ಪ್ರೀತಿಯ ತಂಗಿಯ ಕಿವಿ ಚುಚ್ಚಲಾರಂಭಿಸಿದ್ದ ನಿಂಗಮ್ಮಜ್ಜಿ ಮುಂದುವರೆದು ಹೇಳಿತು ” ಎಲೋ… ಅದೇನು ರೂಮ್ನಾಗೆ ಕೂಕೊಂಡು ಕಡಿತ್ತಿದ್ದೀಯಲೋ … ಹೊಂಡ್ಬಾರ್ದೇನೋ ರವ್ವೋಟು ಹೊರಕ… ನಿನ್ತಂಗ್ನು ನಿನ್ ಸಿರಿ ಸಮ್ಪತ್ತು ಕೇಳಾಕೆ ಬಂದಿಲ್ಲೆಲ್ಲೋ… ನಿಮ್ಮತ್ತಿ ಉರುವಣಿಗೀಗೆ ರೋಸಿ ಬಂದಾಳ… ಬಂದೀಟು ಕಷ್ಟ ಸುಖ ಕೇಳಲೋ… ನೀನು ಜಮಡಿ ಬಿಟ್ಟ ಮಲಿ ಕುಡ್ದು ಬೆಳ್ದ ಹುಡ್ಗಿ ಮ್ಯಾಲ ರವ್ವೋಟು ಕನಿಕರ ತೋರ್ಸು… ನೀನು ಹೆಣ್ಣಾಗಿ ಹುಟ್ಟಿದ್ರೆ ಗೊತ್ತಾಗ್ತಿತ್ತು.” ಇನ್ನೂ ನಾನು ಬೆಕ್ಕಿಗೆ ಹೆದಸ್ರುವ ಇಲಿಯಂತೆ ಬಿಲದ ಹೊರಗಡೆ ಕಾಲಿಡದಿದ್ದಾಗ “ಲೇ ಸಿದ್ದಿ ಆ ನಿನ್ ಮೊಮ್ಮಗ್ನ ಹೊರಗೆಳ್ಕಂಡ್ಬಾರೆ. ಏನು ನೋಡ್ಕೊಂತ ಕೂಕ್ಕಂಡಿದ್ದೀ… ಮಾ ಮಳ್ಳಿಯಂಗ” ಎಂದು ತನ್ನ ಒಡಹುಟ್ಟಿದ ತಂಗಿ ಮೇಲೆ ಹರಿಹಾಯಿತು. “ಅಲಲಲಾ… ಅದೇನು ಬಾಯವ್ವ ನಿಂದು. ತಂದೆ ಮಕ್ಳೂನ ಬೇರೆ ಮಾಡಿದ್ದಲ್ದೆ ಈಗ ಒಡಹುಟ್ದೋರ್ನ ಅಗಲಸಾಕ ಹೊಂಟೀಯಲ್ಲವ್ವಾ ಪರಾಕ್ರಮಿ. ಆ ಹುಡ್ಗ ಬಂದ್ ರವ್ವೋಟೋತ್ತಾಗಿಲ್ಲ. ಆಗ್ಲೇ ಸುರುವು ಮಾಡ್ಬುಟ್ಟೀಯಲ್ಲ… ನಿಂದೇನು ನಾಲ್ಗೇನೂ ನಾಗರಾವೋ? ಆ ಹುಡುಗ ನಿನ್ ಬಾಯಿಗೆ ಹೆದರಿ ಊರಿಗೆ ಬರ್ಬೇಕೋ ಬ್ಯಾಡವೋ…” ಎಂದು ಮುಂತಾಗಿ ಪ್ರತ್ಯುತ್ತರಾಸ್ತ್ರಗಳನ್ನು ‘ನಭೂತೊ ನಭವಿಷ್ಯತಿ’ ಎಂಬಂತೆ ಪ್ರಯೋಗಿಸುತ್ತ ಕೋಣೆ ಬಾಗಿಲಲ್ಲಿ ನಿಂತು “ನೀನಿಲ್ಲೆ ಬರೋದು ಬ್ಯಾಡ ಬಾಯಿಗ್ಬಂದಂಗೆ ಅನ್ನಿಸ್ಕೊಳ್ಳೋದು ಬ್ಯಾಡಪ್ಪಾ… ನಿನ್ನನ್ನ ಉಂಡು ನಿನ್ ಬಟ್ಟೆ ನೀನ್ತೊಟ್ಟು ಇನ್ನೊಬ್ರು ಕುಟಾಗೆ ಯಾಕನ್ನಿಸ್ಕಂತಿ. ಎತ್ಲಾಗಾದ್ರು ಹೋಗ್ಬಿಡು ಕಂಣಿಗೆ ಕಾಣ್ದಂಗೆ…” ಎಂದು ಗೂನು ಬೆನ್ನು ಸೆಟೆಸಿ ನಿಂತುಕೊಂಡಳು. ಒಡಹುಟ್ಟಿದ ತಂಗಿಯ ಸ್ವಂತ ಮೊಮ್ಮಕ್ಕಳಾಗಿರೋದಲ್ಲವೆ ಅಗಲಿಸಲು ಪ್ರಯತ್ನ ಮಾಡುತ್ತಿರುವುದು? ಸ್ವಾಭಿಮಾನಧನಿಕಳಾದ ನಿಂಗಮ್ಮಜ್ಜಿ ಕಚ್ಚೆ ಬಿಗಿದು “ಏನಲೇ ಭೋಸೂಡಿ. ಈಗಲೆ ನಿನ್ನ ಕಡ್ದು ಚೂರು ಮಾಡಿ ಈ ನೆಲದಾಗೂತಿಡ್ಲಿಲ್ಲಾಂದ್ರೆ ನಾನು ಗೂಳೆಪ್ನ ಹೆಂಡ್ತಿ ನಿಂಗಿಯೇ ಅಲ್ಲ! ಎಂದು ಶಪಥ ಮಾಡಿ ಕುಪ್ಪಳಿಸಲು ನಾನು ನಿರ್ವಿಕಾರ ಚಿತ್ತದಿಂದ ಹಾಳು ಬಾವಿಗೆ ಬಿದ್ಕಳ್ಳಿ” ಎಂದು ಹೊರಗೆ ಹೊಂಟೆ. ಕಾಳಗ ಕದನ ರಣತುಂಗಳಿಗೆ ನಮ್ಮ ಮನೆತನ ಸ್ವಾತಂತ್ರ್ಯ ಸಂಗ್ರಾಮದಿಂದಲೂ ಹೆಸರುವಾಸಿ. ಪ್ರಥಮ ಸ್ವಾತಂತ್ರ್ಯ ಸಮರದ ಕಲಿಗಳೇ ಮರುಜನ್ಮ ತಾಳಿ ನಿಂಗಮ್ಮಜ್ಜಿ ಸಿದ್ದಮ್ಮಜ್ಜಿ ಹುಟ್ಟಿರುವರೆಂಬುದು ನನ್ನ ಭಾವನೆ, ಇವರೇ ಮುಂದೆ ಎಲ್‌ಇಟಿ‌ಇ ಮುಖ್ಯಸ್ಥ ಟೈಗರ್ ಪ್ರಭಾಕರನಾಗಿ ಹುಟ್ಟಿರಲೂ ಬಹುದು ಕೂಡ. ಕಾಲು ಕೆದರಿ ಜಗಳ ತೆಗೆಯ ಬಹುದಾದ ಇಂಥವರು ಗಂಟಲಲ್ಲಿಟ್ಟುಕೊಂಡ ಬಿಸಿ ತುಪ್ಪದ ಥರ. ಉಗುಳುವುದು ಕಷ್ಟ, ನುಂಗುವುದಂತೂ ಮೊದಲೇ ಕಷ್ಟ, ಕಾಡ ತೂಸಿನಲ್ಲಿ ಹಸಿನೆಣ ತುಂಬಿರುವ ಈ ಪಿರಂಗಿಗಳು ಸ್ಪೋಟಕ್ಕೆ ಮೊದಲು ಮಾಡುವ ಗಲಾಟೆಯೇ ಜಾಸ್ಟಿ ಎಂದು ಮುಂತಾಗಿ ಯೋಚಿಸಿದ್ದು ತೊಟ್ಟಿಲು ಮಠದ ಗಡಿ ದಾಟುವವರಿಗೆ ಮಾತ್ರ. ಆ ಕೂಡಲೆ ಶ್ರೀಮತಿ ಅನಸೂಯ ತನ್ನ ಪತ್ರದಲ್ಲಿ ಪ್ರಕಟಿಸಿದ್ದ ಶಾಮನ ಉಪದ್ವಾಪಿ ಕಾಡಲು ಶುರುಮಾಡಿತು. +ಶಾಮ ನಿಘೂಡ ವ್ಯಕ್ತಿಯಾಗಿ ಕಾಡಿದ್ದರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಅನಸೂಯಳಿಗಿದೆಯೋ ಇಲ್ಲವೋ? ಆದರೆ ನನಗೆ ಮಾತ್ರ ಇದೆ ಎಂದುಕೊಂಡೆ. ಮಾನಸಿಕವಾಗಿ ಆರೋಗ್ಯದಿಂದಿರಬೇಕಾದರೆ ಅಂತರಂಗದಲ್ಲಿ ಯಾವುದೇ ವ್ಯಕ್ತಿ ಬೇರೆ ಬೇರೆ ರೂಪ ತಾಳಬಾರದು! ತಾಳುತ್ತಿರುವನೆಂದರೆ ಕೂಡಲೆ ಸರಿಪಡಿಸಿಕೊಳ್ಳಬೇಕು. ಎಲ್ಲದಕ್ಕೂ ಮೊದಲು ಅವನು ಸಫಾರಿ ಸೂಟ್ ಹೊಲಿಸಿರುವನೋ ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಬಾಂಬೆ ಟೈಲರಿಮಾಮನ ಬಳಿಗೇ ಹೋಗಬೇಕೆಂದು ನಿರ್ಧರಿಸಿದೆ. ಕುರಾನಿನಲ್ಲಿ ಬಳಕೆಯಾಗಿರುವ ಭಾಷೆ ಮೇಲೆ ಸಂಸ್ಕೃತದ ಪ್ರಭಾವ ನಿಚ್ಚಳವಾಗಿ ಕಾಣಿಸುತ್ತಿದೆ ಎಂದು ಹೇಳಲು ಶುರು ಮಾಡಿದ ನಂತರವೇ ಇಮಾಮ ಶಾಮನಿಗೆ ಹತ್ತಿರವಾಗಿದ್ದನಂತೆ. ಯಾಜ್ಞವಲ್ಕ ಸ್ಮೃತಿ ಮತ್ತು ಕುರಾನು ಪರಸ್ಪರ ನೆಂಟಸ್ತನ ಬೆಳೆಸಿದರೆ ಹೇಗಿರುತ್ತದೋ ಹಾಗೆಯೇ ಶಾಮ ಮತ್ತು ಇಮಾಮರ ನಡುವೆ ಇದ್ದ ಗೆಳೆತನ. ಅವನ ಟೈಲರಂಗಡಿಗೆ ಶಾಮ ಬೆಟ್ಟಿಕೊಡದ ದಿನವೇ ಇಲ್ಲ ಎನ್ನಬಹುದು. ಅವನು ನಾರುಮಡಿಯುಟ್ಟು ಸಾಂಪ್ರದಾಯಿಕವಾದ ಜುಟ್ಟು ಬಿಟ್ಟು ಆಧುನಿಕ ಉಡುಪು ಹೊಲಿಸಲು ಹೆಸರಾಗಿರುವ ಆ ಅಂಗಡಿಯೊಳಗೆ ಸ್ಟೂಲಿನ ಮೇಲೆ ಕೂಡುವುದು, ಪ್ಯಾಂಟು ಹೊಲಿಯುವಾಗ ಕಾದಂಬರಿ ಪ್ರಕಾರದ ಬಗೆಗೂ, ಬುಷ್ಷರ್ಟು ಹೊಲಿಯುವಾಗ ಕಥಾಪ್ರಕಾರದ ಬಗೆಗೂ; ಸುಸ್ಕಿಕ್ಷಿತ ಯುವತಿಯರ ಬ್ಲವುಜು ಹೊಲಿಯುವಾಗ ಕಾವ್ಯ ಪ್ರಕಾರದ ಬಗೆಗೂ; ಅಶಿಕ್ಷಿತ ಹಳ್ಳಿ ಮಹಿಳೆಯರ ಕುಬುಸ ಹೊಲಿಯುವಾಗ ಜಾನಪದ ತ್ರಿಪದಿ ಸಾಹಿತ್ಯದ ಬಗೆಗೂ ಇಮಾಮು ಶಾಮನೊಡನೆ ಚರ್ಚೆ ಆರಂಭಿಸುತ್ತಿದ್ದುದನ್ನು ನಾನು ಕೆಲವೊಮ್ಮೆ ನೋಡಿರುವುದುಂಟು. ಚರ್ಚೆಯಲ್ಲಿ ಭಾಗವಹಿಸಿರುವುದೂ ಉಂಟು. ಕೆಲವೊಮ್ಮೆ ನನ್ನ ತರ್ಕ ಒಪ್ಪಿಕೊಂಡರೂ ಶಾಮನಷ್ಟು ನಾನು ಇಮಾಮನಿಗೆ ಹತ್ತಿರವಾಗಿಲ್ಲ. +ನಾನಲ್ಲಿಗೆ ತಲುಪುವ ಮೊದಲು ಇಮಾಮನ ಹಿನ್ನೆಲೆ ಕುರಿತು ತುಸು ಹೇಳುವುದು ಒಳ್ಳೆಯದೆಂದುಕೊಳ್ಳುತ್ತೇನೆ. ಬಾಂಬೆ ಟೈಲರನೆಂದು ಕೊಟ್ಟೂರು ಮತ್ತದರ ಕಂದಾಯ ಹಳ್ಳಿಗಳ್ಲ್ಲೆಲ್ಲ ಹೆಸರು ಮಾಡಿರುವ ಇಮಾಮ ಅಥವಾ ಮಹಮ್ಮದ್ ಇಮಾಮುದ್ದೀನ್ ಸದರೀ ಗ್ರಾಮದಲ್ಲಿ ಏಕ್ ಮೀನಾರ್ ಮಸೀದಿಕಟ್ಟಿಸಿದ ಮಹಮದ್ ಸಲಾವುದ್ದೀನ್ ಸಾಹೇಬರ ಏಕಮಾತ್ರ ಪುತ್ರನು. ಮಕ್ಕಳಿಲ್ಲದೆ ಕೊರಗುತ್ತಿದ್ದ ಸಲಾವುದ್ದೀನ್ ಸಾಹೇಬರು ಉತ್ತರ ಭಾರತದ ಅಜ್ಮೀರಿಗೆ ಹೋಗಿ ಹಜರತ್ ಖ್ವಾಜಾ ಮೊಹಿದ್ದೀನ್ ಚಿಸ್ತಿಯವರ ದರಗಾ ಷರೀಫ್ ಬಳಿ ಎರಡು ರಾತ್ರಿ ಮಲಗಿದರೂ ಶರಣರು ಕನಸಿನಲ್ಲಿ ಕಾಣಿಸಿಕೊಂದು ಸಂತಾನದ ಬಗ್ಗೆ ಭರವಸೆ ಕೊಡಲಿಲ್ಲ. ಆ ದಂಪತಿಗಳು ದೆಹಲಿಗೆ ಬಂದು ನಿಜಾಮುದ್ದೀನ್ ಔಲಿಯಾರವರ ದರಗಾದ ಬಳಿ ವಸ್ತಿ ಮಾಡಿದರು. ಮೂರನೆ ರಾತ್ರಿ ಹಜರತ್ ಫಕೀರನ ವೇಷದಲ್ಲಿ ಕಾಣಿಸಿಕೊಂಡು ಏಕ್ಮಿನಾರ್ ಮಸೀದಿ ಕಟ್ಟಿಸಿದಲ್ಲಿ ಪುತ್ರ ಸಂತಾನವಾಗುದೆಂದು ಅಪ್ಪಣೆ ಕೊಡಿಸಿದರು. ಅದನ್ನು ಅವರು ತಾವು ಪ್ರಯಣಿಸುತ್ತಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಗಂಡನಿಗೆ ಹೇಳಿದರು. ಆಸ್ತಿ ಐಶ್ವರ್ಯಕ್ಕಿಂತ ಪುತ್ರ ಸಂತಾನವೇ ಹೆಚ್ಚೆಂದು ಭಾವಿಸಿದ ಸಲಾವುದ್ದೀನ ಸಾಹೇಬರು ಊರಿಗೆ ಮರಳಿದೊಡನೆ ಇದ್ದ ಬದ್ದ ಆಸ್ತಿಯನ್ನೆಲ್ಲ ಮಾರಿ ಮುಸ್ಲಿಮರ ಕೇರಿಯೊಳಗೆ ಮಸೀದಿ ಕಟ್ಟಿಸಿದರು. ಕೆಲ ತಿಂಗಳಲ್ಲೇ ಅವರಿಗೆ ಪುತ್ರ ಸಂತಾನವಾಯಿತು. ನಿಜಾಮುದ್ದೀನ್ ಎಂದು ನಾಮಕರಣ ಮಾಡಿದ್ದರೂ ಅದು ಹುಟ್ಟಿದೋಡನೆ ತಂದೆಯನ್ನು ನುಂಗಿ ನೀರು ಕುಡಿದು ಇಮಾಮು ಎಂಬ ಹೊಸ ಹೆಸರು ಧರಿಸಿ ಬಡತನದ ಬೇಗೆಯಲ್ಲಿ ಬೆಳೆಯಿತು. ಅದು ಕರೀಮನ ಸೈಕಲ್ ಶಾಪಿನಲ್ಲಿ ಹಗಲೆಲ್ಲ ದುಡಿದು ತನ್ನ ತಂದೆ ಕಟ್ಟಿಸಿದ್ದನೆಂಬ ಅಭಿಮಾನದಿಂದ ಏಕ್‌ಮಿನಾರ್ ಮಸೀದಿಯಲ್ಲಿ ಮಲಗುವುದು ಮಾಡುತ್ತಿತ್ತು. ಅದನ್ನು ಸಂತೂಕ್ಚಂದ್‌ನ ಜವಳಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ಮೌಲಾಲಿ ಸಾಹೇಬ ಸಹಿಸಲಿಲ್ಲ. ಮಾತಿಗೆ ಮಾತು ಬಂದು ಇಮಾಮನೆಂಬ ಬಾಲಕನನ್ನು ಒದ್ದು ಮಸೀದಿಯಿಂದ ಹೊರಹಾಕಿ ಮುಸ್ಲಿಂ ಭಾಂದವರಿಂದ ಸೈ ಅನ್ನಿಸಿಕೊಂಡರು. ಅದರಿಂದ ಕ್ರುದ್ಧನಾದ್ ಇಮಾಮನು ತಾನು ಹಣ ಗಳಿಸಿಕೊಂಡೇ ಊರಲ್ಲಿ ಕಾಲಿಡುವುದಾಗಿ ಶಪಥ ಮಾಡಿದನು. ವೃದ್ಧ ಮಾತೆ “ನಕ್ಕೊ ಬೇಟಾ ನಕ್ಕೋ ಬೇಟಾ” ಎಂದು ತಡೆದರೂ ಕೇಳದೆ ಇಮಾಮು ಕೊತ್ತಲಿಗಿಗೆ ಹೋಗುವುದಾಗಿ ಹೇಳಿ; ಗುಂತಕಲ್ ಮೂಲಕ ದಾದರ್ ಎಕ್ಸ್‌ಪ್ರೆಸ್‌ನ ಕಕ್ಕಸ್ಸುಕೋಣೆಯಲ್ಲಿ ಅವಿತು ಪಯಣಿಸಿ ಬೊಂಬೈ ತಲುಪಿದನು. ಅಲ್ಲಿ ಕೆಲವು ತಿಂಗಳ ಭೂಗತ ದೊರೆ ಹಾಜಿ ಮಸ್ತಾನ್ ಸಾಹೇಬರ ಆಪ್ತ ವಲಯದಲ್ಲಿ ಕೆಲಸ ಮಾಡಿ ಅಲ್ಲಿಂದ ದುಬಾಯ್‌ಗೆ ಪ್ರಯಾಣ ಬೆಳೆಸಿದನು. ದುಬೈಯಲ್ಲಿ ಕೆಲವು ತಿಂಗಳಿದ್ದು ಅಲ್ಲಿಂದ ಇರಾನ್‌ಗೆ ಪ್ರಾಯಣ ಬೆಳೆಸಿದನು. ಇರಾನಿಗಿಂತ ಇರಾನನ್ನು ಆಳುತ್ತಿದ್ದ ಷಾ ತುಂಬ ಸೊಗಸಾಗಿ ಕಂಡಿದ್ದರಿಂದ ಅಲ್ಲೇ ಇದ್ದು ಬಿಟ್ಟನು. +ಷಾ ರವರು ಮುವ್ವರು ಪುತ್ರಿಯರಿಗೆ ಪಂಜಾಬಿ ಡ್ರೆಸ್ ಹೊಲಿದು ಕೊಡುವಷ್ಟರ ಮಟ್ಟಿಗೆ ಅವನು ದರ್ಜಿಯಾಗಿ ಪ್ರಸಿದ್ಧನಾಗಿದ್ದನಂತೆ. ತಮ್ಮ ತರುಣಿಯರು ಬುರುಖಾದೊಳಗೆ ಪಂಜಾಬಿ ಡ್ರೆಸ್ ತೊಟ್ಟುಕೊಂಡು ಅದ್ದಾಡುತ್ತಿರುವುದು ಅಯತುಲ್ಲಾ ಖೋಮೇನಿಯ ಬಂಧು ಬಳಗದವರಿಗೆ ತಿಳಿಯುವ ಹೊತ್ತಿಗೆ ಅವನು ಲಕ್ಷಾಂತರ ದೀನಾರುಗಳನ್ನು ಸಂಪಾದಿಸಿಬಿಟ್ಟಿದ್ದನಂತೆ. ಅಪಾದನೆ ಹೊರಿಸಲು ನಂತರ ಮರಣದಂಡನೆ ವಿಧಿಸಲು ಇನ್ನೊಂದೈದು ತಿಂಗಳು ಇದೆ ಎನ್ನುವಾಗ ಅವನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಭಾರತಕ್ಕೆ ನುಸುಳಿದನಂತೆ. ಸಾವಿರ ಮೈಲಿಯೊಳಗೆ ಎರಡು ನಮೂನಿ ಕಳ್ಳತನಕ್ಕೆ ತುತ್ತಾಗಿ ಕೊಟ್ಟೂರು ಸೇರಿ ಇಂಥ ಎಷ್ಟೋ ಕಥೆಗಳಳನ್ನು ಹೇಳುತ್ತ ‘ಬಾಂಬೆ ಟೈಲರ್’ ಎಂದು ಹೊಸ ಗಿರಾಕಿಗಳನ್ನು ಆಕರ್ಷಿಸಿದನಂತೆ. ಪೋಸ್ಟ್‌ಮ್ಯಾನ್ ರಾಮಣ್ಣನ ಮೂಲಕ ಇಂಥ ಇಮಾಮನನ್ನು ಪರಿಚಯ ಮಾಡಿಕೊಂಡ ಶಾಮು ದಿನಾಲು ಅಲ್ಲಿ ಒಂದು ತಾಸಾದರೂ ಕುತುಕೊಳ್ಳುವುದು, ಇರಾನಿನ ತರುಣಿಯರ ಲೈಂಗಿಕ ಆಸಕ್ತಿ ಕುರಿತಂತಹ ಕಥೆಗಳನ್ನು ಕೇಳಿ ಆನಂದಿಸುವುದನ್ನು ಅಭ್ಯಾಸ ಮಾಶಿಕೊಂಡನಂತೆ. ಸಧ್ಯಕ್ಕೆ ಮೂವರು ಪತ್ನಿಯರೊಂದಿಗೆ ಹನ್ನೆರಡು ಮಂದಿ ಮೊಮಕ್ಕಳೊಂದಿಗೆ ಸುಖವಾಗಿರುವ ಇಮಾಮನೆಂದರೆ ಗ್ರಾಮದ ಎಲ್ಲರಿಗೂ ಅಚ್ಚುಮೆಚ್ಚು. +ಇಂಥ ಇಮಾಮ ನಾನು ಹೋದಾಗ ಗ್ರಾಮದ ಮಾಜಿ ಎಮ್ಮೆಲ್ಲೆ ದಮ್ಮಡಿ ಮೂಗವ್ವನ ಮಗ ಕುಂಟಿರಯ್ಯನ ಮೂರನೆ ಮಗಳಾದ ಅಂಬಿಕಾಳ ಓಳ ಉಡುಪುಗಳಿಗೆ ಗುಂಡಿ ಹಚ್ಚುವುದರಲ್ಲಿ ಮಗ್ನನಾಗಿದ್ದ. ನಾನು ಹೋದೊಡನೆ ‘ಆಯಿಯೇ…ಸಾಬ್ ಆಯಿಯೇ ಬೈಠಿಯೇ ಸಾಬ್ ಬೈಠಿಯೇ…’ ಎಂದು ತೋರಿಸಿದ ಮೂರು ಕಾಲಿನ ಕುರ್ಚಿಯ ಮೇಲೆ ಹುಷಾರಿಂದ ಕುಳಿತುಕೊಂಡೆ. “ಅರೆ ಹೋ ಕರೀಂ ಕಾ ಬಚ್ಚಾ ಸುಲೇಮಾನ್.. ಶೆಟ್ಟಿ ಹೂಟ್ಲೂಕು ಹೋಗಿ ಎರಡರ್ಧ ಜಾಕ್‌ಪಾಟ್ ಮಡಿಸ್ಕೊಂಡು ಬಾರ್ಲೇ… ನಮ್ಮ ಶಾಮಣ್ಣಾಕಿ ದೋಸ್ತು ಭಾಳ ದಿನ್ಕೆ ಬಂದಾರೆ” ಎಂದು ಹೇಳಿ ಗದುಮಿದ. +“ಅಲ್ಲಾ ದೊಡ್ಡೋನು… ಅವನ ದಯೆಯಿಂದ ನೀವು ಬಹುತ್ ಅಚ್ಚಾ ಆದೀರಿ… ನೀವು ಒಂದು ಕಡೆಯಿಂದ ನೋಡಿದ್ರೆ ಹೋಸ್ಲಿ ಮುಬಾರಕ್ ಸಾಹೆಬ್ರು ಕಂಡಂಗೆ ಕಾಣ್ತಿದೀರಿ. ಅಂದ ಹಾಗೆ ನಿಮ್ಮ ಖೂನ್ ಅಗೈತೆಂಬ ಸುದ್ದಿ ಹಬ್ಬಿತ್ತಲ್ಲ ಮಾರಾಯ್ರೆ. ಯಾರು ಹೇಳಿದ್ದಂತೀರಿ? ಅದೇ ನಿಮ್ಮ ದೋಸ್ತು ಶಾಮಣ್ಣೋರು. ಅವರ್ಗೆ ಯಾರು ಹೇಳಿದ್ದಂತೀರಿ? ಅದೇ ಪೋಸ್ಟ್‌ಮನ್ ರಾಮಣ್ಣೋರು… ಅವರ್ಗೆ ಯಾರು ಹೇಳಿದ್ದಂತೀರಿ… ಅದೇ” ಎಂದು ಹೇಳತೊಡಗಿದ್ದು ನನಗೆ ಆಶ್ಚರ್ಯ ಮತ್ತುಭಯ ಏಕಕಾಲ್ಕಕುಂಟಾದವು. +ಎದುರಿಗಿದ್ದ ನಿಲುವುಗನ್ನಡಿಯಲ್ಲಿ ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿದಂತೆ ಭಾಸವಾಯಿತು. ಇಲ್ಲಿಗೆ ಬಂದ ತಪ್ಪಿಗೆ ಎಕ್ಕಡದಿಂದ ಹೊಡೆದುಕೊಳ್ಳುವಷ್ಟು ಸಿಟ್ಟು ಬಂತು. +“ಹಂಗಲ್ಲ ಇಮಾಮು, ನಾನು ಯಾಕೆ ಬಂದೇ ಅಂದ್ರೆ…” ಎಂದು ಹೇಳುವಷ್ಟರಲ್ಲಿ ಅವನೇ ಒಳ ಉಡುಪಿನ ದಾರ ಕಡಿದು ಸೂಜಿ ಬೇರ್ಪಡಿಸುತ್ತ “ಆರಾಮಶೀರು ಬೈಠೀಯೆ ಜನಾಬ್… ನೀವು ಯಾಕ ಬಂದಿದೀರಂತ ನಂಗೊತ್ತು. ಅದೇ ವಿಶಯ ತಿಳ್ಕೊಳ್ಳಿಕ್ಕೆ ತಾನೆ” ಎನ್ನಲು ನಾನು ಸುಡುವ ಭೂಮಿಗೆ ಬಿದ್ದ ಒಂದು ಹಿಡಿ ನೀರಿನಂತಾಗಿ ಬಿಟ್ಟೆ. +ಬಾಯಿ ಒಣಗಿ ಮುಂದೇನು ಮಾತಾಡಬೇಕೆಂದು ತೋಚದಾಗಿ ಅವನತ್ತ ಒಂದುಕ್ಷಣ ಮಿಕಿಮಿಕಿ ನೋಡಿದೆ. ಅವನು ಮಾತ್ರ ನೀರೋ ಚಕ್ರವರ್ತಿಯಂತೆ ತನ್ನಪಾಡಿಗೆ ತಾನು ಪಿಟೀಲು ಬಾರಿಸುತ್ತಲೇ ಇದ್ದ. +ಇವರೆಲ್ಲರಿಗೆ ವಾಗಿಲಿ ಗ್ರಾಮದಲ್ಲಿ ನನ್ನ ಸುತ್ತ ನಡೆದಿರುವ ಘಟನೆಗಳ ಪೂರ್ವ ಪರಿಚಯ ಇರುವಂತಿದೆಯಲ್ಲಾ? ಪ್ರಾಯಶಃ ಅಲ್ಲಿಂದ ಯಾರಾದರೂ ಬಂದು ಹೋಗಿರಬೇಕು? ಇಲ್ಲವೆ ಪತ್ರ ಬರೆದಿರಬೇಕು. ಅದು ಈ ಅಲಾಲುಕೋರರ ಕೈಗೆ ಸಿಕ್ಕಿ ಹಲವುಬಣ್ಣ ಧರಿಸಿರಬಹುದು? ಆದರೆ ನಮ್ಮ ಮನೆಯಲ್ಲಿ ನಿಂಗಮ್ಮಜ್ಜಿಯೇ ಮೊದಲಾದವರ್ಯಾರೂ ಚಕಾರ ಎತ್ತದಿದ್ದುದು ಎಂಥ ದುರಂತ? ಮುಂದೆಂದಾದರು ಸತ್ತರೆ ಈ ಊರಲ್ಲಿ ಮಾತ್ರ ಹೆಣ ದಫನ್ ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಕೃತು ನಿಶ್ಚಯ ಕೈಗೊಂಡೆ. +ಅದೇ ಹೊತ್ತಿಗೆ ಸುಲೇಮಾನು ಎಂಬ ಕರೀಂ ಕಾ ಬೇಟಾ ಜಾಕ್ಪಾಟ್ ತಂದು ನೆಗ್ಗಿ ನುಜ್ಜಾಗಿದ್ದ ಗಿಲಾಸಿನಲ್ಲಿ ಹಾಕಿಕೊಟ್ಟ. ಶೆಟ್ಟಿ ಹೋಟಲ್ಲಿನ ಸಮಸ್ತ ಹೊಗೆಯೇ ಅದರಲ್ಲಿ ತುಂಬಿಕೊಂಡಿತ್ತು. ಕುಡಿಯಲು ನಿರಾಕರಿಸಿದರೆಲ್ಲಿ ಏನು? ಎತ್ತ? ಎಂಬ ಗುಟ್ಟುಗಳಿಗೆ ಒಂದು ದಾರಿ ತೋರಿಸಲಾರನೋ ಎಂಬ ಆತಂಕದಿಂದ ಕುಡಿದು ಮುಗಿಸಿದೆ. +“ಶೆಟ್ಟಿಕಾ ಹಾಥ್ ಕಾ ಸಫಾಯಿ ಖೂಬ್ ಸೂರತ್ ಹೈ” ಎಂದು ಹೊಗಳುತ್ತ ಗಿಲಾಸನ್ನು ಹಿಂದಿರುಗಿಸಿದ. “ಈ ಸುವ್ವರ್ ಕಾ ಬಚ್ಚಾ ಶೆಟ್ಟಿ ಏನಾದ್ರು ಇರಾನಿನಲ್ಲಿ ಹೋಟ್ಲಿಟ್ತು ಇಂಥ ಜಾಕ್ಪಾಟ್ ಸೋಸಿದ್ದೂಂದ್ರೆ ಸಿರಫ್ ಏಕ್ ಸಾಲ್ ಮೇ ಲಾಖೋಂರುಪ್ಯಾ ಕಮಾಯಿ ಬಿಡ್ತಾನೆ ನೋಡ್ರಿ ಮಾಸ್ತರ್ ಸಾಬ್” ಎಂಬೊಂದು ಸಳ್ವಿಪಿಕ್ಟು ಕೊಟ್ಟ. +ಇಷ್ಟೊಂದು ಇವನು ಮಾತಾಡಬಹುದೆಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಿರು ನಾಟಕದೊಳಗೆ ಸಮಸ್ತ ಇರಾನನ್ನು ಬೆರೆಸಿ ತಲೆ ತಿನ್ನುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಪ್ರಾಯಶಃ ಇತ್ತೀಚಿನ ದಿನಗಳಲ್ಲಿರಬೇಕು.ಜನವರಿಯಿಂದಿಚ್ಚೀಗೆ ಇರಬೇಕು. ಶಾಮ ನಿರ್ಭಿಡೆಯಿಂದ ಬಳ್ಳಾರಿ, ಬೆಂಗಳುರಿಗೆ ಹೋಗಿ ಪ್ರೈವೇಟ್ ಡೆಟೆಕ್ಟಿವ್ ಥರ ವರ್ತಿಸುವುದನ್ನು ಕಲಿಯಬೇಕಾದರೆ ಇಮಾಮನಂಥವರು ಕೊಟ್ಟೂರೊಳಗೆ ಇರಾನನ್ನು ಬೆರಸಿ ಮಾತಾಡದೆ ಇರಲು ಹೇಗೆ ಸಾಧ್ಯ? +“ಯಾಕೆ ಬಂದ್ದಿದ್ದೀನಿ ನಂಗೊತ್ತೂ ಅಂತಿದ್ದಾನಲ್ಲ ಈ ಬಡವಾ!” +ಉಗುಳು ನುಂಗಿಕೊಂಡೆ. +“ಇಮಾಮು ನಾನು ಬಂದಿದ್ದು ಯಾಕಂದ್ರೆ?… ಎಂದು ಮಾತು ಆರಂಭಿಸುವಷ್ಟರಲ್ಲಿ ಅವನೇ ಪಾನನ್ನು ಒಂದು ದವಡೆಗೆ ತುರುಕಿ “ಮುಝುಕು ಮ್ಮಲುಂ ಹೈ…” ಇರಾನಿನಲ್ಲಿ ಇಂಥಾದೆಲ್ಲ ಮಾಮೂಲೈತೆ… ಅದಿರ್ಲಿ… ನಿಮ್ದು ಖೂನ್ ಅಗೈತಂತ ಸುದ್ದಿ ಹಬ್ಬಿ ಬಿಟ್ಟಿತ್ತಲ್ಲಾ… ಎಂಥೋರ್ಗೆ ಎಂಥ ಗತಿ ಬಂತಲ್ಲಪ್ಪಾ ಅಂತ ಮಾತಾಡ್ಕೊಂಡ್ವಿ ನೋಡ್ರಿ. ನಮ್ಮ ಶಾಮಣ್ಣ ನಗುನಗುತಾ ಹೇಳ್ದಾಗ ಎಂಥ ದೋಸ್ತಪ್ಪಾ ಈತಾಂತ ಅನ್ನಿಸಿಬಿಟ್ತುನೋಡ್ರಿ. ಅಲ್ಲಾ ಅದೆಂಗ ಖೂನಾತು ಏನ್ಕಥೆ? ಇದು ಸುಳ್ಳೋ ನಿಜವೋ? ನಿಮ್ಮನ್ನ ಖುದ್ಧ ಬೆಟ್ಟಿಯಾಗಿ ಕೇಳಬೇಕೆಂದ್ಕೊಂಡಿದ್ವಿ ನೋಡ್ರಿ… ಹೆಂಗೋ ನೀವೇ ಬಂದಿದ್ದೀರಿ. ನಿಂದು ಖೂನ್ ಯಾವಾಗಾಯ್ತು? ಹೆಂಗಾಯ್ತು? ಒಂಚೂರು ಬಿಡಿಸಿ ಹೇಳ್ರಲ್ಲಾ?… ನನಗಂತೂ ಖೂನು ಗೀನೂ ಆಗೋ ಸಿನ್ಮಾಗಲೆಂದ್ರೆ ಬಲು ಖಯಾಲು ನೋಡ್ರಿ…” ಎಂದು ಮಾತಾಡುತ್ತಲೇ ಅಂಬಿಕಾಳ ಉಡುಪುಗಳನ್ನು ಮಡಚಿ ಗಿಲಾಸಿನ ಬೀರುದೊಳಗೆ ಪೇರಿಸಿಟ್ಟ. +“ಅಲ್ಲ ಇಮಾಮು… ಯಾರೋ ಮೂರ್ಖರು ಈ ಸುದ್ದಿ ಹಬ್ಬಿಸಿರ್ಬೇಕು! ಖೂನಿ ಆಗಿದ್ರೆ ನಾನೆಂಗ ಜೀವಂತ ಬರ್ತಿದ್ದೆ ಹೇಳು!” ಎಂದೆ. +“ಅರೆ ಹೌದಲ್ಲ!… ಜೀವಂತ ಬಂದಿರೋರು ಅದೆಂಗ ಖೂನಿ ಆಗ್ತಾರೆ ಹೇಳ್ರಿ. ಇದು ನಂಗೆ ಯಾಕೋ ಹೊಳಿಲೇ ಇಲ್ಲವಲ್ಲಾಂತ…” ಎಂದು ಹಣೆ ಹಣೆ ಚಚ್ಚಿಕೊಂಡ. +“ಅದಿರ್ಲಿ ಸಾಬೂ… ನಾನಿಲ್ಲಿಗೆ ಬಂದಿದ್ದು…” ಎನ್ನುವಷ್ಟರಲ್ಲಿ ಅವನೆ ಅಡ್ಡಬಾಯಿ ಹಾಕಿ “ನೀವು ಯಾಕೆ ಬಂದೀರಂತ ಮುಝ್ಕು ಮಾಲುಂ ಹೈಜೀ… ಸಿರ್ಫ್ ಮುಝ್ಕೋಭಿ ನಹೀಂ ಯೆ ಗಾಂವ್ ಕಾ ಸಬ್ ಲೋಗೋಂಕು ಮಾಲುಂ ಹೈ… ಶಾಮಣ್ಣ ಬೂದು ಬಣ್ಣದ ಸಫಾರಿ ಸೂಟ್ ಹೊಲಿಸಿದ್ದಾನೋ ಇಲ್ವೋ ಅಂತ ತಾನೆ ನೀವು ಕೇಳೋಕೆ ಬಂದಿರೋದು?” ಎಂದು ನನಗೆ ಮರು ಪ್ರಶ್ನೆ ಹಾಕಿದೊಡನೆ ನಾನು ಪಾತಾಳಕ್ಕೆ ಇಳಿದು ಹೋಗಿಬಿಟ್ಟೆ. +“ಕೈಸಾ ಮಾಲುಂ ಹುವಾ ಇಮಾಂಭಾಯ್” ಎಂದರೆ ಆತ “ಬೆಕ್ಕುಕಣ್ಮುಚ್ಚಿ ಹಾಲು ಕುಡಿದ್ರೆ ತನ್ನನ್ಯಾರು ನೊಡಲ್ಲಾಂತ ತಿಳಿದುಕೊಂಡಿರುತ್ತದೆ” ಎಂಬ ಆಯಕಟ್ಟಾದ ಗಾದೆ ಮಾತನ್ನು ಎದೆಗೆ ಒದ್ದಂತೆ ಸೇರಿಸಿದ. +ಈಗೊಂದೆರಡು ತಿಂಗಳು ಹಿಂದೆ ಕೊತ್ತಲಗಿ ವಂಕದಾರಿ ಗೋವಿಂದ ಶೆಟ್ಟರ ಜವಳಿ ಅಂಗಡಿಯಿಂದ ಸಫಾರಿ ಶೂಟ್‌ಗೆ ಬಟ್ಟೆ ಹರಿಸಿ ಕಂಕುಳಲ್ಲಿ ತಂದು ಎಂದಾದ್ರು ಸಫಾರಿ ಶೂಟ್ ಹೊಲಿದಿದ್ದೀಯಾ? ಎಂಬ ಪ್ರಶ್ನೆಯನ್ನು ಮೆತ್ತಗೆ ಹಾಕಿದನಂತೆ. ಅದೆಂಗ ಕೇಳ್ತಿದ್ದೀಯಾ ಶಾಮಣ್ಣ ಶಾ ಚಕ್ರವರ್ತಿ ನಾನು ಹೊಲಿದು ಕೊಟ್ಟ ಸಫಾರಿ ಡ್ರೆಸ್ ತೊಟ್ಟುಕೊಂಡೇ ವಿಷ್ವಸಂಸ್ಥೆಯ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರು. ಮಾರಾಯ್ರೇ” ಎಂದು ಇಮಾಮು ಹೇಳಿದನಂತೆ. ಅದಕಿದ್ದು ಶಾಮಣ್ಣಗೆ ಏನು ತಿಳಿತೋ ಏನೋ ಹಾಗೆ ಹೊರಟು ಹೋಗಿ ಬಿಟ್ಟನಂತೆ. +“ನಾನೇನಂತ ಅನ್ಯಾಯ ಮಾಡಿದ್ದೀವಿ ಹೇಳ್ರಿ ಮಾಸ್ತರ್ ಸಾಬ್… ಅವರಿಲ್ಲಿಗೆ ಬರ್ದೆ ಎಷ್ಟೊ ದಿನಗಳಾದ್ವು ಸ್ವಾಮಿ. ನೌಕ್ರಿ ಸಿಕ್ಕ ಮೇಲೆ ಒಂದು ಸಾರಿಯಾದ್ರು ಬಂದು ಬಾಯ್ನ ಮೀಠಾ ಮಾಡಬಾರ್ದೆ ಅವ್ರು. ಷಾದಿಗಾದ್ರು ಕರೀತಾರೋ ಇಲ್ವೋ, ಅದ್ರ ಮದ್ವಿ ಶೂಟ್ ಹೊಲಿಯಬೇಕಂಭಾಸೆ ತುಂಬ ಇತ್ರೀ ಸಾಹೇಬ್ರೆ” ಎಂದು ಹೇಳುತ್ತಲೆ ಇಮಾಮು ಗದ್ಗದಿತನಾಗಿ ಬಿಟ್ಟ. ಆತನ ಕಂಣಿಂದ ಎರಡು ಮೂರು ಹನಿ ಇರಾನಿನಿಂದ ತಂದಿರಬಹುದಾದ ಕತ್ತರಿ ಮೇಲೆ ಬಿತ್ತು. +ನನಗೆ ಒಂಥರಾ ಆಯಿತು. ಅರಿವಿಲ್ಲದಂತೆ ಎದ್ದು ಆತನನ್ನು ಬರಸೆಳೆದು ಸಮಾಧಾನ ಹೇಳಿದೆ.ನೋಡ್ರಿ. ಇಲ್ಲಾಂದ್ರೆ ನಂಗೆ ಬಲು ದುಕ್ಕಾಗ್ತದೆ. ನಿಮ್ಮನ್ನೆಲ್ಲ ಕಳ್ಕೊಂಡು ನಾನ್ಯಾಕೆ ಈ ಊರಲ್ಲಿರಬೇಕು ಹೇಳ್ರಿ” ಎಂದು ಮತ್ತೆ ಗದ್ಗದಿತನಾದ. +ನಾನು ಆತನಿಗೆ ಆ ಭರವಸೆ ನೀಡಿ ಅಲ್ಲಿಂದ ಹೊರಗೆ ಬಂದೆ, ಅದೇ ಹೊತ್ತಿಗೆ ಶೆಟ್ಟಿ ಹೋಟೆಲ್ಲು ಮತ್ತು ದ್ವಾರಕ ಹೋಟಲ್ಲುಗಳಿಂದ ಒಂದ್ನಾಲ್ಕು ಮಂದಿ ಹೊರಗಡೆ ಬಂದು ನನ್ನ ಕಡೆ ಮಿಕಿ ಮಿಕಿ ನೋಡುತ್ತ ತಮ್ಮಷ್ಟಕ್ಕೆ ತಾವೆನೇನೋ ಮಾತಾಡಿಕೊಳ್ಳುತ್ತ ನಗುವರು ನಕ್ಕು; ನಿಟ್ಟುಸಿರು ಬಿಡುವವರು ಬಿಟ್ಟು ನನ್ನ ಕಡೆ ಹೆಜ್ಜೆ ಹಾಕಿದರು, ಮಫ್ತಿಯಲ್ಲಿದ್ದು ಅರೆಸ್ಟ್ ಮಾಡುವ ಸಿಬಿಐ ಇಲಾಖೆಯವರಂತೆ. ಪ್ರಾಯಶಃ ಅವರು ನಡೆದಿರಬಹುದಾದ ನನ್ನ ಖೂನಿ ಕುರಿತು ಪ್ರಸ್ತಾಪಿಸಬಹುದೆಂದೂಹಿಸಿ ನಾನು ಬಿರಬಿರನೆ ಹೆಜ್ಜೆ ಹಾಕಿ ತೇರು ಬೀದಿಯಲ್ಲಿ ತೇಲಿ ನಿರುಮ್ಮಳತೆಯಿಂದ ಉಸಿರಾಡತೊಡಗಿದೆ. +…ಖಡ್ಗದ ಪತ್ರಿಕಾ ಕಛೇರಿಗೆ ಹೋಗಬೇಕನ್ನುವಷ್ಟರಲ್ಲಿ ಕ್ರಿಸ್ಟೋಫರ್ ರೀವ್ ಮೋಟಾರ್ ಬೈಕಿನ ಮೇಲೆ ಬರ್ತಾನಲ್ಲ ಹಾಗೆ ಪೋಸ್ತ್‌ಮ್ಯಾನ್ ರಾಮಣ್ಣ ಮತ್ತಷ್ಟು ಲತಗೂ ಪುಟಗೂ ಬೈಸಿಕಲ್ ತುಳಿಯುತ್ತ ವಾಯುವೇಗದಿಂದ ಬಂದು ನನ್ನೆದುರಿಗೆ ನಿಲ್ಲಿಸಿ ಠ್ರಿಣ್ ಠ್ರಿಣ್ ಬೆಲ್ ಮಾಅಡಿನನ್ನ ಗಮನ ಸೆಳೆದು ದೇಶಾವರಿ ನಗೆ ನಕ್ಕ. ತಲೆಗೆ ಮಫ್ಲರ್ ಸುತ್ತಿ ಮಹಾ ಅಸ್ವಸ್ಥನಂತಿದ್ದರೂ ಕರ್ನಾಟಕ ರಮಾರಮಣನಂತೆ ತುಂಬಾ ಗೆಲುವಾಗಿದ್ದ. ನಡೆ ನುಡಿಯೆರಡರಲ್ಲೂ ಸಾಕಷ್ಟು ಬದಲಾವಣೆಯಾಗಿರುವುದನ್ನು ಒಂದು ಕ್ಷಣದಲ್ಲಿ ಗಮನಿಸಿದೆ. ನನ್ನ ಊಹೆ ಸರು ಎಂಬಂತೆ ಅವನು “ಏನ್ಮೇಷ್ಟ್ರೇ ಎಂಥಾ ಛಾನ್ಸ್ ಹೊಡೆದುಬಿಟ್ರಿ ಏನ್ಕಥೆ” ಎಂದು ಖೇದಾರಗೌಳ ದಲ್ಲಿ ಕೇಳಿದ. ನಾನು ಕೊಲೆಯಾದ ಸುದ್ದಿ ತಾನೆ?” ಅಂದೆ. “ಅದಿರ್ಲಿ… ಎಂಥೆಂಥೋರೊ ಕೊಲೆಯಾಗ್ತಾರೆ ಬಿಡ್ರಿ…” ಎಂದ. ನಾನು “ಮತ್ತೇನಪ್ಪಾ ರಾಮಣ್ಣ ಅಂಥಾ ವಿಷ್ಯ” ಎಂದೆ. “ಹ್ಹಿ..ಹ್ಹಿ..ಹ್ಹಿ..ಏನೂ ಬ್ಯಾಡ…” ಎಂದು ಮತ್ತೊಂದು ಕ್ಷಣ ಮಿಕಿಮಿಕಿ ನೋಡಿ (ಮಾಂತ್ರಿಕನ ಥರ) “ಅಲ್ರೀ ಈ ಊರಾಗ ನೀವೊಬ್ರೆ ಸಾಚಾ ಅಂದ್ಕೊಂಡಿದ್ದೆ…” ಎಂದು ಹೇಳಿ ಒಂದೆರಡು ಹೆಜ್ಜೆ ಮುಂದೆ ಹೋಗಿ ಹಿಂತುರಿಗಿ ಬಂದು “ಹೀಗೆ ಹೇಳ್ತಿದೀನಂತ ತಪ್ಪು ತಿಳಿಯಬೇಡಿ… ನಾನಿಮಿಗಿಂತ ವಯಸ್ಸಿನಲ್ಲಿ ಹಿರಿಯ. ಅದೂ ಅಲ್ದೆ ಈ ಊರಿನ ಹಣೆ ಬರಹ ಬಲ್ಲೋನಾದ್ರಿಂದ ಹ್ಳ್ತಿದೀನಿ. ಹಿಂದೆ ಹೆಂಗಿದ್ರೋ ಹಂಗಿರೋದು ಕಲ್ತೊಳ್ಳಿ. ಹೆಣ್ಣು ಅಂದ್ರೆ ಬೆಂಕಿ ಕಣ್ರೀ ಬೆಂಕಿ. ಅದ್ರ ಸಮೀಪ ಹೋದ್ರೆ ಸುಟ್ಟು ಬೂದಿ ಆಗ್ತಾರೆ ಅಷ್ಟೆ. ಕಥೆ ಕಾದಂಬರಿ ಬರೆಯೋ ನಿಮ್ಗೆ ಹೇಳೋದೇನಿದೆ? ಬರ್ತೀನಿ” ಎಂದು ಹೇಳಿ ಹೊರಟು ಹೋದ. +ಅವನು ಬಿಕ್ಕಿ ಮರ್ಡಿ ಭರಮಜ್ಜನ ದಬ್ಬಿ ಅಂಗಡಿ ಸಂದಿಯಲ್ಲಿ ತಿರುಗಿ ಮರೆಯಾಗುವವರೆಗೆ ಕಣ್ತುಂಬ ನೋಡಿದೆ. ಹರಿವಾಣದ ಚಿದಾನಂದಾವಧೂತರೇ ರಾಮಣ್ಣ್ನ ಮೈಯೊಳಗೆ ಓಡಮೂಡಿ ಮಾತಾಡಿದರೆಂದೆನಿಸಿತು. ನನಗೇನು ರಾಮಣ್ಣನು ನಿನ್ನೆ ಮೊನ್ನೆಯ ವ್ಯಕ್ತಿಯಲ್ಲ್. ಆರನೆ ಇಯತ್ತೆಯಿಂದ ನೋಡುತ್ತಿರುವ ವ್ಯಕ್ತಿ. ಮೊದಲು ವಿಳಸಗಳನ್ನು ತಪ್ಪು ತಪ್ಪಾಗಿ ಓದಿಕೊಂಡು ಯಾರ ಯಾರ ಪತ್ರಗಳನ್ನು ಯಾರು ಯಾರಿಗೋ ಕೊಡುತ್ತ ಪಜೀತಿ ಗೀಡಾಗುತ್ತಿದ್ದನು. ಪ್ರಮೋಷನ್ ಮತ್ತು ರಿಸರ್ವಷನ್ ಆಧಾರದ ಮೇಲೆ ಸುಟ್ಟುಕೋಡಿಹಳ್ಳಿಯ ಬ್ರಾಂಚ್ ಪೋಸ್ಟಾಫೀಸ್ ನೋಡಿಕೊಳ್ಳುತ್ತಿದ್ದಾತ ಪೊಸ್ಟ್ಮ್ಯಾನ್ ಪದವಿಗೇರಿ ಅಕ್ಷರ ಕಲಿಯುವ ನಿಮಿತ್ತ ಅವರಿವರ ಪತ್ರಗಳನ್ನು ಕದ್ದು ಓದುತ್ತಾ ಓದುತ್ತಾ ಜೈಮಿನಿ ಭಾರತ ಕುಮಾರವ್ಯಸ ಭಾರತ ಓದುವಷ್ಟರ ಮಟ್ಟಿಗೆ ವಿದ್ಯಾವಂತನಾದನು. ತೆರೆಯದೇನೆ ಇಂಥ ಲಕೋಟೆಯೊಳಗೆ ಇಂಥ ವಿಷಯವೇ ಅಡಕವಾಗಿದೆ ಎಂದು ಹೇಳುವಷ್ಟರ ಮಟ್ಟಿಗೆ ತಾಂತ್ರಿಕ ಪರಿಣಿತಿಯನ್ನು ಸಾಧಿಸಿದನು! +ಕರ್ನಾಟಕದ ಎಲ್ಲಾ ಮೂಲೆಗಳಿಂದ ಬರುತ್ತಿದ್ದ ಪತ್ರಗಳನ್ನು ಎರಡುವರೆ ದಶಕಗಳ ಕಾಲ ಓದೀ ಓದೀ ಎಲ್ಲಾ ಉಪ ಭಾಷೆಗಳನ್ನು ಸಹಜ ರೀತಿಯಲ್ಲಿ ಮಾತಾಡಬಲ್ಲವನಾಗಿದ್ದನು. ಸಾಮಾನ್ಯವಾಗಿ ಎಲ್ಲರ ಗುಟ್ಟುಗಳನ್ನು ಬಲ್ಲವನಾಗಿದ್ದ ಅವನನ್ನು ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಸಂಸ್ಕೃತ ಭಾಷೆಯಲ್ಲಿ ಯಾರೊಬ್ಬರೂ ಪತ್ರ ಬರೆಯುತ್ತಿಲ್ಲವಲ್ಲ ಎಂಬ ಕಾರಣಕ್ಕೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ ಶಾಮನನ್ನು ಹಚ್ಚಿಕೊಲ್ಲುವುದಕ್ಕೆ ಪ್ರಾಯಶಃ ಇದೇ ಕಾರಣವಿರಬಹುದು. ಅವನು ಅನಸೂಯಾಳಿಂದ ಬಂದ ಲಕೋಟೆಯನ್ನು ಕರಚಳಕದಿಂದ ಬಿಚ್ಚಿ ಓದುವ ಪ್ರಯತ್ನ ಮಾಡಿರಬಹುದು. ಪ್ರೀತಿಯ ಎಂಬ ವಿಶೇಷಣವನ್ನಷ್ಟೆ ತಾನು ಓದಿ ಉಳಿದ ಉಪಸರ್ಗಗಳನ್ನು ಬೇರೆಯವರ ಕೈಯಿಂದ ಓಡಿಸಿರಲೂಬಹುದು. ಇವು ಮತ್ತು ಇಂಥವರು ಶವಗಳನ್ನು ಕುಯ್ದು ಪರೀಕ್ಷಿಸುವ ಸರಕಾರಿ ವೈದ್ಯರಿಗಿಂತ ಬೇರೆ ಅಲ್ಲ ಎಂದೆನಿಸಿತು. ಇಷ್ಟೊಂದು ಸಂದಿಗ್ಧತೆಗಳನ್ನು ಹುಟ್ಟು ಹಾಕಿರುವ ಸ್ರೀಮತಿ ಅನಸೂಯ್ಳ ಪತ್ರದ ಸುಳಿವು ಶಾಮನಿಗೊಂದೇ ಅಲ್ಲದೆ ಜಲಜಾಕ್ಷಿ, ಕಮಲಾಕರ ಮೊದಲಾದವರಿಗೆ ತಿಳಿದಿರಲಿಕ್ಕೆ ಸಾಕು. ಶಾಮ ವ್ಯಕ್ತಪಡಿಸಲಿರುವ ಭಾವನೆಗಳಿಂದ ರಾಜಕೀಯ ಮತು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳ ಅಭಿಪ್ರಾಯಗಳು ಭಿನ್ನವಾಗಿರುತ್ತವೆ ಎಂಬ ಭಾವನೆಯಿಂದ… ಖಡ್ಗ ಪತ್ರಿಕೆಯ ಕಛೇರಿ ಕಡೆ ಹೆಜ್ಜೆ ಹಾಕಿದೆ. +ಕಮಲಾಕರ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಶಸ್ತಿ ಪಡೆದ ಅಮಲಿನಲ್ಲಿ ಸಾಮಾನ್ಯವಾಗಿ ಇರಲಿಕ್ಕಿಲ್ಲ್ಲದಿರಬಹುದು. ಮಹಿಳಾ ಸಂಘಟನಾ ಸಮಾವೇಶದ ಗಡಿಬಿಡಿಯಲ್ಲಿರುವ ಜಲಜಾಕ್ಷಿ ಈ ಕ್ಷಣ ದೊರಕಿ, ಬಂದಿರುವ ಪತ್ರದ ಬಗೆಗಾಗಲೀ; ನನ್ನ ಕೊಲೆಯಾಗಿದೆ ಎನ್ನಲಾದ ವದಂತಿ ಬಗ್ಗೆ ಪ್ರಸ್ತಾಪಿಸದಿರಬಹುದು. ಸುರೇಶಗಊಡ ಈಗಾಗಲೇ ‘ರಅ’ ಬ್ರಾಂಡಿನ ದೋಸೆಮಿಕ್ಸ್ ಏಜೆನ್ಸಿ ಪಡೆಯಲು ಹೋರಾಟ ನಡೆಸಿರಬಹುದು. ನೌಕರಿಯ ಅಮಲಿನಲ್ಲಿರುವ ಶಾಮ ನನ್ನನ್ನು ಕಂಡರೂ ಕಾಣದಂತೆ ಹೊಗಬಹುದು. ಅಂಚೆಯ ಅನ್ನ, ಪತ್ರಕರ್ತ, ರಾಜಕಾರಣಿ, ವ್ಯವಹಾರಸ್ಥ ಇವರೆಲ್ಲ ಒಂದೇ ಜಾಯಮಾಅನದ ಹಲವುಮುಖಗಳು. ಮನುಷ್ಯನ ಚಿಕ್ಕ ದೌರ್ಬಲ್ಯದ ಎಳೆಯೊಡನೆ ರತ್ನಗಂಬಳಿ ನೆಯ್ದು ಅದರ ಮೇಲೆ ಪವಡಿಸಿ ಬದುಕಿನ ಚರಮಸೀಮೆ ಅನುಭವಿಸುವಂತ ನಿಷ್ಣಾತರಿವರು, ಇವರ ಪೈಕಿ ಯಾರೊಬ್ಬ್ರನ್ನು ಎದುರು ಹಾಕಿಕೊಳ್ಳುವುದು ಕಷ್ಟ, ಏಗುವುದು ಕಷ್ಟತಮ, ಇವರಿಗೆ ನಿಲುಕದಹ್ಟು ದೂರ ಉಳಿಯಲೂ ಆಗುತ್ತಿಲ್ಲ. +ಕ್ಷೇತ್ರದ ಉದಯೋನ್ಮುಖ ರಾಜಕಾರಣಿ ಎಂದೂ ಭಾವಿ ಎಮ್ಮೆಲ್ಲೆ ಎಂದೂ ಜಲಜಾಕ್ಷಿಯ ಪ್ರಮುಖ ಪ್ರತಿಸ್ಪರ್ಧಿ ಎಂದೂ ಹೆಸರು ಮಾಡಿರುವ ಗುಲಾಂ ನಬಿಯವರ ಸಂದರ್ಶನವನ್ನು ಆಂಗ್ಲರು ಕಟ್ಟಿಸಿದರೆಂದು ಹೇಳಲಾದ ಪ್ರವಾಸಿಮಂದಿರದಲ್ಲಿ ಯಶ್ಸ್ವಿಯಾಗಿ ನಡೆಸಿ ಧನಿಗೆ ಅಕ್ಷರ ರೂಪ ಕೊಡುವುದರಲ್ಲಿ ಮಗ್ನನಾಗಿದ್ದ ಡಾ.ಕಮಲಾಕರ ‘ಓಹೋಹೋ’ ಎಂದು ಉದ್ಗರಿಸಿ ಎದ್ದು ಬಂದು ಆಲಿಂಗಿಸಿ ಸ್ನೇಹ ಮೆರೆದು ನಿನ್ನೆ ಮೊನ್ನೆ ಕೊಂಡಿರಬಹುದಾದ ಕುರ್ಚಿಯಲ್ಲಿ ಕುಂಡ್ರಿಸಿ “ನೀನು ಬಂದ್ ಬರ್ತೀಯಾ ಅಂತ ನಂಗೊತ್ತಿತ್ತು. ಕಣಯ್ಯಾ, ಸೈಕೋಲಾಜಿಸ್ಟ್‌ಥರ ಊಹಿಸಿರಬೌದಂದ್ಕೋ ಬ್ಯಾಡ… ಬಂದೊಡನೆ ಮ್ಲೊಆನವದನನಾಗ್ತೀಯಾ ಅಂತಲೂ ನಂಗೊತ್ತಿತ್ತು. ಮಾರಾಯ. ಈ ವಯಸ್ಸಿನಲ್ಲಿ ಇದೆಲ್ಲಾ ಮಾಮೂಲೆ, ಜಸ್ಟ್ ರಿಲಾಕ್ಸ್, ನ್ತಗೋತೀ. ಕಾಫಿ ಟಿ ಅಥವಾ ಸ್ಮಾಲ್ ಪೆಗ್ ಹಾಕ್ತೀಯಾಂದ್ರೂ ನಂಗೆ ಸಂತೋಷಾನೇ” ಎಂದ. “ಬಹು ಸಂಖ್ಯಾತ ಕೋಮುಗಳ ನಡುವೆ ಅಲ್ಪ ಸಂಖ್ಯಾತಕೋಮುಗಳು ಬದುಕಿರ್ತಿರೋ ಸಂದರ್ಭದಲ್ಲಿ ಭಾವೀ ಶಾಸಕನಾಗಿ ನಾನು ಹೇಳ್ತಿರೋದೇನೆಂದ್ರೆ… ಗುಲಾಂ ನಬಿಯವರ ಮಾತುಗಳನ್ನು ಹೊತ್ತ ದ್ವನಿಸುರುಳಿ ತನ್ನ ಪಾಡಿಗೆ ತಾನು ಬಿಚ್ಚಿಕೊಳ್ಳ ತೊಡಗಿತ್ತು. ಮಾಜಿ ಮತ್ತು ಭಾವೀ ಮುಖ್ಯಮಂತ್ರಿ ಏಳುಕೊಳ್ಳದ ಭಗವಂತರಾವ್ ದೇಶಪಾಂಡೆಯವರ ಅದುಗೆಮನೆಗೆ ಪ್ರಮುಖವಾಗಿ ತರಕಾರಿ ಸರಬರಾಜು ಮಾಡುವುದು ಮತ್ತು ದೋಬಿ ದೇಶ್ಮುಖ್‌ರವರಿಗೆ ಇಸ್ತ್ರಿಗೆಂದು ಕೊಡುವ ವಿದೇಶಿ ಉಡುಪುಗಳನ್ನು ಎಣಿಸುವುದು ಇವೇ ಮೊದಲಾದ ಕಿಚನ್ ಸೆಕ್ರೇಟರೇಟ್ ಕಾರ್ಯ ನಿರ್ವಹಿಸುತ್ತಿರುವ ಗುಲಾಂ ನಬಿ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ‘ಮೂಮುಮಂ’ ರವರ ಕಿಚನ್ನಲ್ಲಿದ್ದುಕೊಂಡೇ ಇಷ್ಟೊಂದು ಅದ್ಭುತವಾದ ಗ್ರಾಂಥಿಕ ಭಾಷೆಯಲ್ಲಿ ಮಾತಾಡುವ ವ್ಯಕ್ತಿ ಇನ್ನು ಯಾವುದಾದರೂ ವಿಶ್ವವಿದ್ಯಾಲಯ ಪ್ರ್ವೇಶಿಸಿ ಕ್ಯಾಲಿಕೋ ಪುಸ್ತಕಗಲನ್ನು ಮುಗುಚಾಡಿದ್ದರೆ ಇನ್ನೆಷ್ಟು ಚಂದ ಮಾತಾಡುತ್ತಿದ್ದನೋ? +ಚಹ ಕುಡಿದಾದ ಮೇಲೆ ಕಮಲಾಕರ ತನಗೆ ಸಂದ ಪ್ರಶಸ್ತಿ ಬಗ್ಗೆ, ಪತ್ರಿಕೆಯನ್ನು ರಾಜಧಾನಿವರೆಗೆ ವಿಸ್ತರಿಸುವುದಾದರೆ ಆರ್ಥಿಕ ಸಹಾಯ ನೀಡುವುದಾಗಿ ಹಾಲಿ ಮುಖ್ಯಮಂತ್ರಿ ವೆಂಕಟಾಚಲಪತಿ ಗೌಡರು ಅಶ್ವಾಸನೆ ನೀಡಿರುವ ಬಗ್ಗೆ, ಆಳುವ ಮತ್ತು ವಿರೋಧ ಪಕ್ಷಗಳೆಂಬ ಎರಉ ತುಂಡು ದೋಣಿಗಳಲ್ಲಿ ತನ್ನೆರಡೂ ಕಾಲಿರಿಸಿ ಪತ್ರಿಕೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಬಗ್ಗೆ, ತನ್ನ ವಿರುದ್ಧ ಹಲ್ಲು ಮಸೆಯುತ್ತಿದ್ದ ಶಿವಪೂಜೆ ಸುರೇಶ್ಗಊಡ ಬೀಫ್ ಪ್ರಿಯೆ ಸತ್ಯಭಾಮೆಯನ್ನು ಹಂಪೆ ವಿರೂಪಾಕ್ಷ ಮಂದಿರದಲ್ಲಿ ಮದುವೆಯಾಗಿ ‘ಅರ’ ಬ್ರಾಂಇನ ದೋಸೆಮಿಕ್ಸ್‌ನ ಏಜೆನ್ಸಿ ಪಡೆದು ಅದನ್ನು ಜಿಲ್ಲೆಯ ಪ್ರತಿಯೊಂದು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಪರಿಚಯಿಸಬೇಕೆಂದು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ. +ನಂತರ ಪ್ರಮುಖ ವಿಶಯಗಳ ಪೈಕಿ ಇದೂ ಒಂದೆಂಬಂತೆ ನನ್ನ ಕೊಲೆ ವದಂತಿ ಬಗ್ಗೆ ಪ್ರಸ್ತಾಪಿಸಿ ಹ್ಹ.. ಹ್ಹ.. ಎಂದು ನಗಾಡಿದ. ನಂತರ ಇದು ನನ್ನಲ್ಲಿ ಹೇಗೋ ಬಂತೂ ಅಂತ ಮಾತ್ರ ಕೇಳಬೇಡ +ಇಂಥ ಸಂಪನ್ಮೂಲಗಳಿದ್ರೆ ನಮ್ಮಂಥೋರ್ಗೆ ಪತ್ರಿಕೆ ನಡೆಸೋದ್ಕೆ ಸಾಧ್ಯವಾಗೊದಿಲ್ಲ ಎಂದು ಹೇಳಿ ನನ್ನ ಮುಂದೆ ನನಗೆ ಬಂದಿದ್ದ ಅನಸೂಯಾಳ ಸುಧೀರ್ಘ ಪತ್ರದ ಝೆರಾಕ್ಸ್ ಪ್ರತಿಯನು ಪ್ರತಿಷ್ಟಾಪಿಸಿದ. ಅದನ್ನು ನೋಡಿ ನನಗೆ ಉಸಿರುಕಟ್ಟಿದ ಅನುಭವವಾಯಿತು. ಅದನ್ನು ಗಮನಿಸಿದ ಅವನು ಹೆದರ್ಕೋಬೇಡ. ಪೋಸ್ಟ್‌ಮ್ಯಾನ್ ಓದಿರೋದು ಈ ಪತ್ರದ ಆರಂಭ ಶಬ್ದವನ್ನು ಮಾತ್ರ. ರಾಮಣ್ಣನನ್ನು ಕೈಗೊಂಬೆ ಮಾಡ್ಕೊಂಡಿರೋ ನಿಘೂಡ ವ್ಯಕ್ತಿ ಜೆರಾಕ್ಸ್ ಮಾಡಿಸಿ ಹತ್ತಾರು ಕಡೆ ಹಂಚಿದ್ದಾನೆ. ಆ ನಿಘೂಡ ವ್ಯಕ್ತಿ ನಿನಾಗಿರಬೌದು? ನಾನಾಗಿರಬೌದು? ಸುರೇಶ್‌ಗೌಡ, ಜಲಜಾಕ್ಷಿ, ಶಾಮ ಹೀಗೆ ಯಾರಾದ್ರು ಆಗಿರಬೌದು? ಅಥವಾ ಇನ್ಯಾರೋ ಆಗಿರಬೌದು? ಈ ಗ್ರಾಮದ ಮತ್ತಿಗಿನ ನಾಗರಿಕ ಪ್ರಪಂಚದಲ್ಲಿ ಇಂಥದೆಲ್ಲ ನಡೆಯುತ್ತದೆ ಎಂಬುದೇ ಹೆಮ್ಮೆಯ ಸಂಗತಿ. ಈಗ ಅದಲ್ಲ ಮುಖ್ಯ. ಸಹೋದರಿ ಅನಸೂಯಾ ತನ್ನ ಪತ್ರದಲ್ಲಿ ಪ್ರಸ್ತಾಪಿಸಿರುವಂತೆ ಕಿರುಕುಳ ನೀಡಿದಾತ ಶಾಮ ಹೌದೋ ಅಲ್ಲವೋ? ಈ ಬಗ್ಗೆ ನೀನೂ ಯೋಚಿಸಿರಬೌದು. ನಿನ್ಗೆ ಯಾಕೆ ತೊಂದರೆ ಅಂತ ನಾನೇ ಕೆಲವು ಮೂಲಗಳಿಂದ ಶಾಮನ ಬಗ್ಗೆ ವಿಷಯ ಸಂಗ್ರಹಿಸಿದೆ. ಗುಲಾಂ ನಬಿಗೆ ತುಂಬಾ ಬೇಕಾಗಿರುವ ಅವನು, ತನ್ನ ಮದುವೆ ಬಗ್ಗೆ ಸೀರಿಯಸ್ಸಾಗೆ ಅಡ್ಡಾಡುತ್ತಿರುವ ಅವನು ಬೆಂಗಳುರಿಗೆ ಹೋಗಿರಬೌದಾದ್ರು ಹೀಗೆ ವರ್ತಿಸಿರ್ಲಿಕ್ಕಿಲ್ಲವೆಂಬುದು ನನ್ನ ಅನಿಸಿಕೆ. ಆದ್ರೆ ಒಂದು ಮಾತು ಮಾತ್ರ ಸತ್ಯ. ಅವ್ನೀಗ ಸಫಾರಿಸೂಟ್ ಇಲ್ದೆ ಹೊರಗಡೆ ಕಾಣಿಸಿಕೊಳ್ತಿಲ್ಲ. ಜುಟ್ಟು ಪೂರ್ತಿ ಮರೆಯಾಗುವಷ್ಟರ ಮಟ್ಟಿಗೆ ತಲೆ ಗೂದಲು ಬೆಳೆಸಿದ್ದಾನೆ. ಸಚ್ತ್ರ ಲೇಖನಗಳನ್ನು ಬರೆಯಬೇಕೆಂದು ನಿರ್ಧರಿಸಿ ಒಂದು ಹಳೆಯ ಕೊಡಕ್ ಕೆಮೆರಾವನ್ನು ಕೇಂದ್ರಗ್ರಂಥಾಲಯ ಪಕ್ಕದಲ್ಲಿರೋ ಪಾನ್ ಬ್ರೋಕರ್ ರಿಕಬ್‌ಚಂದ್‌ನ ಅಂಗಡಿಯಿಂದ ಖರೀದಿಸಿತುಕೊಂಡಿದ್ದಾನೆ. ನಿನ್ಗೆ ಹೇಳಿದ್ರೆ ಆಶ್ಚರ್ಯವಾಗಬೌದು. ಕೊತ್ತಲಿಗಿಯ ರಮ್ಗಕಲಾವಿದೆಯರ ಬಣ್ಣದ ಬದುಕಿನ ಬಗ್ಗೆ ಒಂದು ಸಚಿತ್ರ ಲೆಖನ ಬರೆದುಕೊ +ಟ್ಟಿದ್ದಾನೆ. ಓದ್ತೀಏನು?” ಎಂದು ಕೇಳುತ್ತ ಮಾತು ನಿಲ್ಲಿಸಿದ. ನಾನು ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದೆ. +ಲೇಖನವನ್ನು ನಾನು ನೋಡಿ ಮಾಡಲು ಉಳಿದಿರುವುದಾದರೂ ಏನು> +ಹೇಳಲಿಕ್ಕೆ ಉಳಿದಿರುವುದೇನು? +ಕೇಳಲಿಕ್ಕೆ ಉಳಿದಿರುವುದೇನು? +* +* +* +ಪತ್ರಿಕೆಯ ಕಛೇರಿಯಿಂದ ಮರಳುವಾಗ್ಗೆ ಸ್‌ಉಜನಶೀಲ ಕಥೆ, ಕವಿತೆಗಳಿಗಿಂತ ವೇಶ್ಯಾವಾಟಿಕೆ ಕುರಿತು ಸಚಿತ್ರ ಲೇಖನಗಳ್‌ಏ ಮುಖ್ಯ ಎಂದು ಭಾವಿಸಿರುವಂತಿದ್ದ ಅವನು ಮಾಮೂಲಿನಂತೆ ಯಾವುದಾದ್ರೊಂದು ಕಥೆ ಕೊಡಯ್ಯಾ ಎಂದು ಕೇಳಲೂ ಇಲ್ಲ, ಕೊಡುವೆನೆಂದು ನಾನೂ ಹೇಳಲಿಲ್ಲ. ಆದರೆ ಅವನು ಹೇಳಿದ್ದು ಇಷ್ಟು. ತಾವೈದು ಮಂದಿ ಶಾಸ್ತಿಗಳ ಆರೋಗ್ಯ ಪರಾಂಬರಿಸಲು ಹೋಗುತ್ತಿರುವುದಾಗಿಯೂ; ಅವರ ಬದುಕಿನ ಗತ ವೈಭವ ಏಳುಬೀಳುಗಳನ್ನು ಕುರಿತ ಲೇಖನಮಾಲೆಯನ್ನು ಪ್ರಕಟಿಸಲು ಯೋಚಿಸಿರುವುದಾಗಿಯೂ, ನೀನು ಬಂದರೆ ಮುಂದೊಂದು ದಿನ ಕಾದಂಬರಿಗೆ ಸಾಮಗ್ರಿಯಾಗುವುದೆಂದು ಹೇಳಿದ. ಮುಂದಿನ ಸಂಚಿಕೆಯಲ್ಲಿ ಪ್ರಾಯಶಃ ನನ್ನದೇ ಇರಬಹುದಾದ ‘ಸತ್ತವನು ಎದ್ದು ಬಂದಾಗ’ (ಲೆಖಕ-ಅನಾಮಿಕ) ಎಂಬೊಂದು ಕಥೆಯ ಜೊತೆಗೆ ಗುಲಾಂನಬಿ ಸಂದರ್ಶನ ಓದಲು ಮರೆಯಬೇಡಿ ಎಂದು ಪ್ರಕಟಣೆ ಕೊಟ್ಟಿರುವ ಅವನು ಅನಸೂಯಾಳ ಪತ್ರ ಪ್ರಕಟಿಸುವುದಾಗಿ ಆತಂಕ ಹುಟ್ಟಿಸಿದರೂ ಆಸ್ಚರ್ಯವಿಲ್ಲೆಂದೆನಿಸಿತು. ಇತ್ತೀಚಿನ ದಿನಗಳಲ್ಲಿ ಹೋಚಿಮಿನ್ ಗಡ್ಡದೊಂದಿಗೆ (ಕ್ರಾಂತಿಕಾರಿ ಕವಿತೆಯಾಕಾರದ) ಮುಖದ ಗೆಟ್‌ಅಪ್ ಬದಲಾಯಿಸಿ ಕೊಂಡಿರುವ ಅವನೊಂದಿಗೆ ಹೋಗುವುದಕ್ಕಿಂತ ನಾನೇ ಹೋಗಿ ಶಾಸ್ತ್ರಿಗಳ ಆರೋಗ್ಯ ವಿಚಾರಿಸಿಕೊಂಡು ಬರುವುದೆಂದು ನಿರ್ಧರಿಸಿದೆ. +ಪರಸ್ಪರ ದೋಷಾರೋಪಣೆಗೆ ಕಾರಣವಾದೀತೆಂಬ ಕಾರಣದಿಂದ ನಿಂಗಮ್ಮಜ್ಜಿ ಸಿದ್ದಮ್ಮಜ್ಜಿಯರೆಂಬ ಸುಂದೋಪ ಸುಂದರು ತಲಾ ಒಂದೊಂದು ಮುಖ ಮಾಇರಲು ಏಕರಿಕೆ ಧೇಖರಿಕೆಗೆ ಸಂಬಂಧಿಸಿದಂತೆ ದೊಡ್ಡವ್ವನೊಡನೆ ವ್ಯವಹರಿಸಿದೆ. ರಾತ್ರಿ ಬಿದ್ದ ಕನಸಿನಲ್ಲಿ ವಾಗಿಲಿಯ ಜಗನ್ನಾಥರೆಡ್ಡಿ ತನ್ನ ಹೇಮಿ ಸಂಗಇಗರೊಡನೆ ಕೊಟ್ಟೂರಿಗೆ ಇಳಿದಿದ್ದ. ಕೊಟ್ಟೂರಿಗರು ತೆಲುಗು ಸಿನೆಮಾದ ವಿಲನ್ ಪಾತ್ರಧಾರಿಗಳೇ ಬಂದಿರುವರೆಂಬಂತೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಪರಮೇಶ್ವರ ಶಾಸ್ತ್ರಿಗಳು ಹೆಚ್ಚು ಲವಲವಿಕೆಯಿಂದ ತ್ರಿಕಾಲ ಸಂಧ್ಯಾವಂದನೆ ಮಾಡಿ ಮುಗಿಸಿ ಹೆಚ್ಚು ಗೆಲುವಿನಿಂದಿದ್ದರು. ಪಾದಾಭಿವಂದನೆ ಸಲ್ಲಿಸಿದ ರೆಡ್ಡಿ ಮತ್ತವರ ಸಂಗಡಿಗರಿಗೆ ಕೋಸುಂಬರಿ ಪಾನಕ ಕೊಟ್ಟು ಸತ್ಕರಿಸಿದರು. ರೆಡ್ಡಿ ತನ್ನ ಪ್ರಾಣಕ್ಕೆ ಅಪಾಯ ಇರುವುದಾಗಿಯೂ, ಪ್ರಾಣ ರಕ್ಷಣೆ ಯಂತ್ರ ದಯಪಾಲಿಸಬೇಕೆಂದೂ, ಅದರ ಜೊತೆಗೆತನ್ನ ಅಜನ್ಮ ವೈರಿಯು ದುರ್ಮರಣವನ್ನು ಅಪ್ಪುವಂಥ ಯಂತ್ರವನ್ನು ಜೊತೆಗೆ ದಯಪಾಲಿಸಬ್‌ಏಕೆಮ್ದೂ ಕೈ ಮುಗಿದು ಬೇಡಿಕೊಂಡ. ಅಂಥ ಬೇಡಿಕೆಯಿಂದ ಪ್ರಸನ್ನವದನರಾದ ಶಾಸ್ತ್ರಿಗಳು ಅಂದೇ ಆದಿತ್ಯವಾರ ಅಮವಾಸ್ಯೆ ಬಂದಿದ್ದರಿಂದ ಮಧ್ಯರಾತ್ರಿಯಲ್ಲಿ ತಕ್ಕ ಪರಿಕರಗಳೊಂದಿಗೆ ಮಸಣಕ್ಕೆ ಹೋಗಿ ಬೆಳಗಾಗುವ್ವರೆಗೆ ಪೂಜೆ ಪುನಸ್ಕಾರ ಮಾಡಿದರು. ಒಂದು ಯಂತ್ರವನ್ನು ಮಂತ್ರಿಸಿ ಜಗನ್ನಾಥ ರೆಇಯ ಸೊಂಟಕ್ಕೆ ಕಟ್ಟಿದರು. ಇನ್ನೊಂದು ಗೊಂಬೆಯನ್ನು ಮಂತ್ರಿಸಿಕೊಡುತ್ತ ಅದನ್ನೊಯ್ದು ವೈರಿಯ ಊರಿನ ಕರಗಲ್ಲಿನ ಬುಡದಲ್ಲಿ ಹೂತಿಡಬೇಕೆಂದು ಹೇಳಿದರು. ಅದನ್ನು ತೆಗೆದುಕೊಂಡು ಹೋಗುವಾಗ್ಗೆ ಜಗನ್ನಾಥ ರೆಡ್ಡಿ ಮತ್ತು ಕಮಲಾಕರ ಮುಖಾಮುಖಿಯಾದರು. “ನಮ್ಮ ಮನೆಯನ್ನು ದೊಚಿದ ನಕ್ಸಲೈಟರಲ್ಲಿ ನೀನೂ ಇದ್ದಿ ಅಲ್ವೆ?” ಎಂದು ರೆಡ್ಡಿಯೂ “ಬಡವರ ಶ್ರಮ ಕೊಳ್ಳೆ ಹೊಡೆಯುತ್ತಿರುವವರಲ್ಲಿ ಅಗ್ರಗಣ್ಯನಾದ ನೀನಿನ್ನೂ ಬದುಕಿದ್ದೀಯಲ್ವೇ” ಎಂದು ಕಮಲಾಕರನೂ ಹೂಂಕರಿಸಿದನು. +ಅದೇ ಹೊತ್ತಿಗೆ ಬೆಳಕು ಹರಿದು ಎಚ್ಚರಾಗಿ ನಾನೂ ಹಾಸಿಗೆಯಿಂದೆದ್ದೆ. ಮರುದಿನವೇ ಅಮವಾಸ್ಯೆ ಬಂದಿರುವ ಆದಿತ್ಯವಾರ ಎಂಬುದನ್ನು ದೊಡ್ಡವ್ವನಿಂದ ಖಚಿತಪಡಿಸಿಕೊಂಡೆ. ಪೋಸ್ಟ್ ಬರುವ ವೇಳೆಗೆ ಸರಿಯಾಗಿ ನಾನೂ ರೆಡಿಯಾದೆ. ಒಂದೆರಡು ದಿನದ ಮಟ್ಟಿಗಾದರೂ ಯಾರ ಕಂಣಿಗೆ ಬೀಳಬೇಡವೆಂದು ಕಮಲಾಕರಗೆ ಚೀಇ ಬರೆದು ಪೋಸ್ಟಾಫೀಸಿಗೆ ಹೋಗುವ ದಾರಿಯಲ್ಲಿ ಅದನ್ನು ಹರಿದು ಹಾಕಿದೆ. ಬರಬಹುದಾದ ಪತ್ರಗಳು ರಾಮಣ್ಣನ ಮೂರನೆ ಕಂಣಿಗೆ ಬೀಳುವ ಮೊದಲೆ ಪಡೆಯಬೇಕೆಂಬ ಉದ್ದೇಶದಿಂದ ಲಗುಬಗೆಯಿಂದ ಹೆಜ್ಜೆಹಾಕಿ ಪೊಸ್ಟಾಫೀಸು ತಲುಪಿದೆ. ‘ಬೆಂಗ್ಳೂರಿಂದೇನಾದ್ರು ಲೆಟರ್ಸ್ ಬರ್ಬೇಕಿತ್ತ ಮೇಸ್ಟ್ರೇ’ ಎಂಬ ಪ್ರಸ್ನೆ ಹಾಕಿಸ್ವಾಗತ ಕೋರಿದ ಪೋಸ್ಟ್ ಮಾಸ್ಟರ್ ದೇವದಾಸನ ಎದೆಗೆ ಝಾಡಿಸಿ ಒದೆಯುವಸ್ಟು ಸಿಟ್ಟು ಬಂತು. ಹುಳ್ಳಗೆ ಮುಖ ಮಾಡಿಕೊಂಡು ಬಂದಿದ್ದ ಕೆಲವು ಪತ್ರಗಳನ್ನು ನನ್ನ ಕೈಗಿತ್ತ. ಅದನ್ನು ಕಂಕುಳಲ್ಲಿರಿಸಿಕೊಂಡು ಹೋಗಿ ಉಡುಪಿ ಹೋಟಲ್ಲಿನ ಮೂಲೆಯಲ್ಲಿ ಕೂತು ಒಂದೊಂದಾಗಿ ಪರಾಮರ್ಶಿಸಿದೆ. +ತುರ್ತು ಪರಿಸ್ಥಿತಿ ವಿರೋಧಿ ವೇದಿಕೆಯವರು ತರಬೇಕೆಂದಿರುವ ‘ಅಯ್ಂಟಿ ಫ್ಯಾಸಿಸ್ಟ್ ಸ್ಕ್ವಾಡ್’ ಎಂಬ ವಾರ ಪತ್ರಿಕೆಗೆ ಸಾವಿರ ರುಪಾಯಿ ಕಳಿಸಿ ಆಜೀವ ಸದಸ್ಯತ್ವ ಪಡೆಯಬೇಕೆಂದು ಒಂದು ಪತ್ರ. +ಕಥೆ ಪ್ರಕಟಣೆಗೆ ಸ್ವೀಕರಿಸಲಾಗದಿದ್ದುದಕ್ಕೆ ವಿಶಾದಿಸುತ್ತೇವೆ ಎಂದೋರ್ವ ಸಂಪಾದಕರುಹಿಂದಿರುಗಿಸುತ್ತ ಬರೆದಿರುವ ಲಕೋಟೆ. +ಹಸ್ತ ಪ್ರತಿ ಕಲಿಸಿ ತಿಂಗಳಾದರು ಮುನ್ನುಡಿ ಬರೆದಿಲ್ವಲ್ಲ, ನೀವೇನು ಈ ಭೂಮಿ ಮೇಲೆ ಇರುವಿರೋ ಇಲ್ಲವೋ ಎಂದೋರ್ವ ಉದಯೋನ್ಮುಖ ಕವಿ ಖಾರವಾಗಿ ಬರೆದಿರುವ ಪತ್ರ. +ಅವ್ನ್ನೆಲ್ಲ ಚೂರುಚೂರು ಮಾಡಿ ಒಲೆಗೆ ತುರ್ಕಲು ಭಟ್ಟರಿಗೆ ಕೊಡಲು ಅವರು ಎಂಥದು ಮಾರಾಯ್ರೆ ಎಂದು ಇಸಿದುಕೊಂಡು ಅಡುಗೆ ಮನೆಗೆ ಹೋದ. ನನ್ನ ಬೇಜವಾಬ್ದಾರಿತನಕ್ಕೆ ಪಕ್ಕಾಗಿ ಭಟ್ರೆ.. ಅವುಗಳ್ನ ಕೊಡಿ ಸ್ವಲ್ಪ ಎಂದು ಕೇಳಿದ್ದಕ್ಕೆ ಆತ “ಆಗ್ಲೆ ಉರಿಯೋ ಒಲೆಗೆ ಹಾಕಿದ್ದಾಯ್ತಲ್ಲ ಮಾರಾಯ್ರೆ” ಎಂದ. +ಈ ರೀತಿಯ ಅನಿಶ್ಚಿತ ನಡುವಳಿಕೆಯನ್ನು ತಿದ್ದಿಕೊಳ್ಳಬೇಕಾದ್ರೆ ಈಗಿಂದಲೇ ಹೋಗಿ ಪರಮೇಶ್ವರ ಶಾಸ್ತ್ರಿಗಳ ಆರೋಗ್ಯ ಪರಾಮರ್ಶಿಸಬೇಕೆಂದು ನಿರ್ಧರಿಸಿ ಅಲ್ಲಿಂದ ಕಾಲು ಕಿತ್ತೆ. +ಅಷ್ಟು ವೇಗದಿಂದ ನಡೆದು ಶಾಸ್ತ್ರಿಗಳ ಮನೆ ತಲುಪುವೆನೆಂದು ನಾನು ಅಂದುಕೊಂಡಿರಲಿಲ್ಲ. ಹತ್ತಾರು ಮಂದಿ ಹೆಂಗಸರು, ಗಂಡಸರು ತಲಾ ಒಂದೊಂದು ಕೆಲಸದಲ್ಲಿ ತೊಡಗಿ ಸಂಭ್ರಮ ಪ್ರಕಟಿಸಬಹುದೆಂದುಕೊಂಡಿರಲಿಲ್ಲ. “ಏನಪ್ಪಾ, ಈಗ ನೆನಪಾಯ್ತೇ ನಮ್ಮ ಮನೆ? ನೀನು ಬಂದು ಹೋಗಿ ಎಷ್ಟು ದಿನಗಳಾದ್ವು? ನಿನ್ನ ಸ್ನೇಹಿತನ ಮದುವೆ ಇರೋ ಸಂಗತಿ ಮರೆತು ಬಿಟ್ಟಿರುವೆ ಏನಪ್ಪಾ? ಅಂತ್‌ಊ ಜ್ಞಾಪಿಸಿಕೊಂಡು ಬಂದೆಯಲ್ಲ! ಬಾ… ಲಗ್ನಪತ್ರಿಗೆಗಳಿಗೆ ವಿಳಾಸ ಬರೆದು ನೀನೇ ಪೋಸ್ಟ್ ಮಾಡೊದಿದೆ. ಅಂದ ಹಾಗೆ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಮಹಾ ಪ್ರಭುಗಳಿಗೆ ದುಂಡಗೆ ಬರೆಯೋದ್ನ ಮಾತ್ರ ಮರೀಬೇಡ. ಅವರಹಿರಿಯರು ನಮ್ಮ ಹಿರಿಯರಿಗೆ ತುಂಬ ಬೇಕಾಕಿದ್ದವರು ಕಣಪ್ಪಾ.ಅವರು ಯಾರನ್ನಾದ್ರೂ ಕಳಿಸಿ ಆಶೀರ್ವಾದ ತಗೋತಾರೆ” ಎಂದು ಹೇಳುತ್ತ ಅಲುಮೇಲಮ್ಮ ನನ್ನ ಮುಂದೆ ಒಂದು ಕುಪ್ಪೆ ಲಗ್ನ ಪತ್ರಿಕೆಗಳನ್ನು ಪೇರಿಸಿಡಬಹುದೆಂದು ಅಂದುಕೊಂಡಿರಲಿಲ್ಲ. “ಯಾರದು? ಓಹ್ ಅವನಾ… ಹೇಗಿದ್ದೀಯಪ್ಪಾ? ಏನೋ ತೊಂದರೆಯಾಗಿತ್ತಂತೆ ಅಲ್ಲಿ. ಹೌದಾ?… ಈ ದೇಹ ನಶ್ವರ! ಎಂದು ಹೋಗುವುದೋ ಏನೋ? ನನ್ನ ಮೊಮ್ಮಗ ಅಂದ್ರೆ ನಿನ್ನ ಜೀವದ ಗೆಳೆಯ ಶಾಮಾಶಾಸ್ತ್ರಿಗಳ ಮದುವೇನ ನೀವೆಲ್ಲ ನಿಂತಿದ್ದು ಮಾಡಬೇಕಪ್ಪಾ” ಎಂದು ಲಕ್ವಾ ಸ್ಥಿತಿಯಲ್ಲಿ ಮಲಗಿದ್ದಲ್ಲಿಯೇ ಪರಮಪೂಜ್ಯರಾದ ಶಾಸ್ತ್ರಿಗಳು ಅಸ್ಪಷ್ಟವಾಗಿ ನುಡಿಯಬಹುದೆಂದು ನಾನು ಅಂದುಕೊಂಡಿರಲಿಲ್ಲ. ಆಧ್ವನಿಯಿಂದ ಪರವಶನಾಗಿ ನಾನು ಪರಿವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ದುಡು ದುಡನೆ ಹೋಗಿ ಅವರ ಕೃಶ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನನ್ನೇ ತಮ್ಮ ಶಾಮನೆಂದು ಪರಿಭಾವಿಸಿ ಶಾಸ್ತ್ರಿಗಳು ತದಡವಿ ಆಶೀರ್ವದಿಸಬಹುದೆಂದುಕೊಂಡಿರಲಿಲ್ಲ. ನಾನದರಿಂದ ಹ್‌ಒಸಕನಸು ಪಡೆದವನಂತೆ ಅರ್ದತಾಸೊಪ್ಪತ್ತಿಗೆ ನೂರಾರು ಲಗ್ನಪತ್ರಿಗೆಗಳ ಮೇಲೆ ನೂರಾರು ವಿಳಾಸಗಳನ್ನು ಬರೆದು ಅಂಚೆ ಚೀಟಿ ಹಚ್ಚಬಹುದೆಂದುಕೊಂಡಿರಲಿಲ್ಲ. ಅವುಗಳ್ನ್ನೆಲ್ಲ ಒಂದುಕಡೆ ಸೇರಿಸಿಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಡ್ಯೂಟಿ ಮುಗಿಸಿಕೊಂಡು ಶಾಮ ಬಂದವನೆ ನನ್ನ ಕಡೆ ದುರುಗುಟ್ಟಿ “ನೀನ್ಯಾಕೆ ಬಂದೆಯೋ ಬೋಳ್ಮಗ್ನೆ” ಎಂಬರ್ಥ ಬರುವಂತೆ ನೋಡಬಹುದಂತೆ ಅಂದುಕೊಂಡಿರಲಿಲ್ಲ. ನಾನು ಅದನ್ನೆಲ್ಲ ಅಪಾರ್ಥ ಮಾಡಿಕೊಳ್ಳದೆ “ಏನು ಶಾಮ ಚೆನ್ನಾಗಿದ್ದೀಯಾ ನಿನ್ನ ಮದ್ವೆ ವಿಷ್ಯ ನಂಗೆ ಗೊತ್ತೇ ಇಲ್ವಲ್ಲೋ… ನಿಂಗೆ ನೌಕರಿ ದೊರಕಿದ್ದು, ಮದುವೆ ಇರೋದು ಇದ್ನೆಲ್ಲ ಪತ್ರ ಬರೆದು ತಿಳಿಸೋದು ಬೇಡವೇನೋ?” ಎಂದು ಉಗುಳು ನುಂಗುತ್ತ ಅವನ ಕೈ ಕುಲುಕಬೇಕೆಂದುಕೊಂಡಿರಲಿಲ್ಲ. ಅವನು ನನ್ನ ಸ್ಪರ್ಶದಿಂದ ಕೂಲಾಗಿ ನಿಟ್ಟುಸಿರುಬಿಟ್ಟು ಬಿಡಬಹುದೆಂದುಕೊಂಡಿರಲಿಲ್ಲ. ನಂತರ ನನಗೂ ಒಂದು ಕಪ್ಪು ಮಜ್ಜಿಗೆ ಕೊಟ್ಟು ತಾನೂ ಒಂದು ಕಪ್ಪು ಕುಡಿದು ಅಪರಾಧೀ ಪ್ರಜ್ಞೆಯಿಂದ ನನ್ನ ಮಗ್ಗುಲುಕೂರಬಹುದೆಂದು ಕೊಂಡಿರಲಿಲ್ಲ. ನನಗೆಂದೇ ಬರೆದಿದ್ದ ಮೂರು ಅಪೂರ್ಣ ಪತ್ರಗಳನ್ನು ಕಿಸೆಯಿಂದ ತೆಗೆದು ತೋರಿಸಬಹುದೆಂದು ಕೊಂಡಿರಲಿಲ್ಲ. ಅಂದುಕೊಂಡಿರದಿದ್ದ ಎಷ್ಟೋ ಸಂಗತಿಗಳು ಆ ಒಂದೂವರೆ ತಾಸಿನಲ್ಲಿ ತಾನೇ ತಾನಾಗಿ ತಮ್ಮ ಪಾಡಿಗೆ ತಾವು ನಡೆದು ನನ್ನ ಚಕಿತಗೊಳಿಸಿದವು. +ಸ್ವಲ್ಪ ಹೊತ್ತು ನಮ್ಮಿಬ್ಬರ ಎದೆಯೊಳಗೆ ಎಷ್ಟೊ ಪ್ರಸ್ತಾಪಿಸಬೇಕಿದ್ದ ಸಂಗತಿಗಳು ಇದ್ದರೂ ಗಂಟಲು ದಾಟಿ ಹೊರ ಬರದೆ ಅವನ ಮುಖವನ್ನು ನಾನೂ; ನನ್ನ ಮುಖವನ್ನು ಅವನೂ ಕದ್ದು ಕದ್ದು ನೋಡುತ್ತ ಕುಳಿತುಕೊಂಡಿದ್ದೆವು, ತಪ್ಪು ಮಾಡಿರುವವರಂತೆ. +ಗ್ರಾಮದ ಅನೇಕರು ಬಂದು ಪರಮೇಶ್ವರ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಮದುವೆ ಏರ್ಪಾಡಿನ ಅನೇಕ ಸಂಗತಿಗಳನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು. ಅರಸನ ಬಟ್ಟೆ ಅಗಸನ ಮೈ ಮೇಲೆ ಎಂಬ ನಾಣ್ಣುಡಿಯಂತೆ ಚಾಕಲಿ ನಾರಾಣಿಯಂತೂ ತಾನೇ ಮಧು ಮಗನಂತೆ ಗ್ರಾಂಥಿಕವಾಗಿ ಮಾತಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿದ್ದುದು ನಯನ ಮನೋಹರವಾಗಿತ್ತು. ಮಾವಂದರ ಪಂಚೇಂದ್ರಿಯಗಳಿಗೆ ತಾನೇ ಅಧಿಕೃತ ವಕ್ತಾರಳಂತೆ ಅಲುಮೇಲಮ್ಮ ಅವರ ಅನೇಕ ಸಂಜ್ಞೆಗಳಿಗೆ ಹೊಸ ಹೊಸ ವ್ಯಾಖ್ಯಾನಗಳನ್ನು ಬರೆಯ ತೊಡಗಿದ್ದು ತುಂಬ ಅರ್ಥಗರ್ಭಿತವಾಗಿತ್ತು. +ಇಂಥ ಬದಲಾವಣೆ ತನ್ನಲ್ಲಿ ಹುಟ್ಟಿದಂದಿನಿಂದಲೇ ಇತ್ತೆಂಬಂತೆ ಶಾಮ ನಿರಮ್ಮಳವಾಗಿ ಕೂತಿರುವಾಗ ಮಾತಾಡಲು ನನ್ನಲ್ಲಿ ಉಳಿದಿರುವುದಾದರೂ ಏನು? ಹೆಚ್ಚು ಆಧುನಿಕವಾಗಿ ಮತ್ತು ಹೆಚ್ಚು ಅಥೆಂತಿಕ್ ಎನಿಸಿದರು. ಕೋಣೆಯಲ್ಲಿ ಇನ್ನೇನು ಒಬ್ಬರೇ ಉಳಿದಿರುವರು ಎಂದು ಕೈ ಹಿಡಿದು ಜಗ್ಗಿದ, “ನಾಳೆ ಮಾತಾಡಿಸ್ಬೇಕಂದ್ರೆ ಸಿಕ್ಕಾರೆಯೇ? ಇದು ನನ್ನ ಮಾನಸಿಕ ಸ್ವಾಸ್ಥ್ಯದ ಪ್ರಶ್ನೆ ಕಣಯ್ಯಾ!” ಎಂಬಂತೆ ಕೊಸರಿಕೊಂಡು ಒಳಗಡೆ ಹೋಗಿ ವಿನಮ್ರತಾ ಭಾವದಿಂದ ಮಂಚದ ಮಗ್ಗುಲು ಕೂತುಕೊಂಡೆ. +ನಿರೀಕ್ಷೆಗೆ ಮೀರಿ ಕೃಶರಾಗಿದ್ದ ಅವರು ನನ್ನನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೋ ಎಂಬಂತೆ ನೋಡಿದರು. ಹೆಬ್ಬಾರರ ಸರಳರೇಖೆಂತಿದ್ದ ಅವರು ಏನನ್ನೋ ಮಾತಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ನುಡಿಕಟ್ಟು ತುಟಿಯಿಂದೀಚೆಗೆ ಹೊರಡಲಿಲ್ಲ. ನಾನೇ ಅವರ ಬಲಗಿವಿಗೆ ಹತ್ತಿರಹೋಗಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಜಗನ್ನಾತಹ್ ರೆಡ್ಡಿ ಬರ್ಲಿಲ್ಲವಲ್ಲ ಎಂದು ಕೇಳಿರಬಹುದೆಂದುಕೊಂಡು ರೆಡ್ಡಿ ಬಗೆಗೂ ಒಂಚೂರು ವಿವರಿಸಿದೆ. ಶಾಮನ ಮದುವೆಯನ್ನು ನಿಂತಿದ್ದು ಮಾಡಿ ಮುಗಿಸಬೇಕು ಎಮ್ದು ಕೇಳಿದರೆಂದುಕೊಂಡು ಶಾಮನ ಮದುವೆ ಮುಗಿಸಿಯೇ ಹೊರಡುವುದೆಂದು ಹೇಳಿದೆ. “ನಿನ್ ಮದುವೆ ಯಾವಾಗಯ್ಯ, ನಿನ್ತಲೆ ಮೇಲೂ ಅಕ್ +ಷತೆ ಹಾಕಿ ಇಹಲೋಕ ತ್ಯಜಿಸಬೇಕೆಂದಿದ್ದೇನೆ” ಎಂದು ಕೇಳಿದರೆಂದೂಹಿಸಿ “ಮದವೆ ಆಗೋ ಯೋಚನೆ ಸದ್ಯಕ್ಕಿಲ್ಲ ಪೂಜ್ಯರೆ” ಎಂದು ಉತ್ತರಿಸಿದೆ. ಶಾಮನ ಗಣಾವಗುಣಗಳನ್ನು ಕೇಳಿದರೆಂದೂಹಿಸಿ “ಶಾಮಾಶಾಸ್ತ್ರಿಯಂಥ ಸದ್ಗುಣವಂಥರು ಸದ್ಯಕ್ಕೆ ನಮ್ಮೂರಲ್ಲಿ ಇನ್ನೊಬ್ರಿಲ್ಲ” ಎಂದೂ ಹೇಳಿದೆ. +ಅವರ ಮುಖದಲ್ಲಿ ನೆಮ್ಮದಿ ಮೂಡಿತು. ಸಾರ್ಥಕ ರೀತಿಯಲ್ಲಿ ಮಾತಾಇದೆ ಎಂದುಕೊಂಡು ನಾನೂ ನೆಮ್ಮದಿಯಿಂದ ಉಸಿರುಬಿಟ್ಟೆ. ಅಲ್ಲಿವರೆಗೆ ಬಾಗಿಲ ಮರೆಯಲ್ಲಿ ಕದ್ದು ಕೇಳಿಸಿಕೊಳ್ಳುತ್ತಿದ್ದ ಶಾಮ ದಿಢೀರನೆ ಒಳಗೆ ಬಂದವನೆ “ಕರೆದಿರಾ ತಾತ”, ಎಂದು ನನ್ನ ಕಡೆ ನೋಡಿ ‘ಎಲಾ ನನ ಮಗ್ನೇ’ ಎಂಬಂತೆ ನೋಡಿದ. ನಾನು ನಿರ್ವಿಕಾರ ಚಿತ್ತದಿಂದ ಆ ನೋಟ ಎದುರಿಸಿದೆ. ಶಾಸ್ತ್ರಿಗಳು ನಮ್ಮನ್ನು ಹತ್ತಿರ ಕರೆದರು. ಅವನ ಕೈಯೊಳಗೆ ನನ್ನ ಕೈಯನ್ನೂ; ನನ್ನ ಕೈಯೊಳಗೆ ಅವನ ಕೈಯನ್ನೂ ಇರಿಸಿ ತಮ್ಮ ಸಂಕಲ್ಪ ಶಕ್ತಿಯ ಕಿಂಚತು ಅಂಶವನ್ನು ಧಾರೆ ಎರೆದರು. ತದನಂತರ ಇಲ್ಲಿಂದ ಕದಲು ಎಂಬಂತೆ ಶಾಮ ನನ್ನತ್ತ ನೋಡಿದ. ನಾನು ಅಲ್ಲಿಂದ ಹೊರ ಬಿದ್ದೆ. +* +* +* +ಅಲ್ಲಿಂದ ಎರಡನೆ ದಿನದಂದು ಆ ಸೀರೆ ಉಟ್ಕಾ… ಈ ಸೀರೆ ಉಟ್ಕಾ ಎಂದು ಸಿದ್ದಮ್ಮಜ್ಜಿ ತನ್ನ ಒಡಹುಟ್ಟಿದ ಅಕ್ಕ ನಿಂಗಮ್ಮಜ್ಜಿಗೆ ತಾರೀಫು ಮಾಡುತ್ತಿರುವಾಗಲೇ ಮಹಿಳಾ ಸಮ್ಮೇಳನ ನಡೆಯಲಿರುವ ಸಂಗತಿ ನನ್ನ ಅರಿವೆಗೆ ಬಂದದ್ದು. “ಏನಯ್ಯಾಅ ಅವನು ಅಷ್ಟೊಮ್ದು ತಿರಸ್ಕಾರದಿಂದ ಕಾಣುತ್ತಾನೆಂದು ಗೊತ್ತಿದ್ದು ನೀನ್ಯಾಕೆ ಶಾಸ್ತ್ರಿಗಳ ಮನೆಗೆ ಹೋಗಿದ್ದಿ” ಎಂದು ಕಮಲಾಕರ ನನ್ನನ್ನು ಪತ್ರಿಕೆಯ ಕಛೇರಿಗೆ ಬರಮಾಡಿಕೊಂಡು ವಿಲಕ್ಷಣವಾದ ಪ್ರಶ್ನೆಕೇಳೆದ್ದು ನೆನ್ನೆ ಮಧ್ಯಾನ್ನ ಸುಮಾರು ಎರಡು ಗಂಟೆ ಸುಮಾರಿಗೆ. “ಅವನೇನು ನನ್ನ ತಿರಸ್ಕಾರದಿಂದ ಕಾಣಲಿಲ್ಲ…ಇರ್ಲಿ ಇದ್ನ ನಿನ್ಗೆ ಯಾರು ಹೇಳಿದ್ದು” ಎಂದು ಸಮ್ಮೇಳನದ ಪೂರ್ವಭಾವಿ ಸಿದ್ಧತೆಯ ವರದಿಯನ್ನು ಓದುತ್ತ ಕೇಳಿದೆ. ಹ್ಹ… ಹ್ಹ… ಹ್ಹ…ಎಂದು ನಕ್ಕು ಆ ಪತ್ರಕರ್ತ “ಇನ್ಯಾರು ಹೇಳ್ತಾರೆ. ಆ ಶಾಮನೆ” ಎಂದು ಹೇಳಿದ ಸ್ವಲ್ಪ ಹೊತ್ತಿಗೆ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದ ಜಲಜಾಕ್ಷಿ ಒಳಗಡೆ ಬಂದಿದ್ದಳು. ಬಂದವಳೆ ಕೈಲಿದ್ದ ಫೈಲ್ ತೇಬಲ್ ಮೇಲೆ ಕುಕ್ಕಿ “ಏನಪ್ಪಾ… ನಿನ್ನ ಎಲ್ಲಂಥ ಹುಡ್ಕೋದು? ಬಂದಿಷ್ಟು ದಿನಾದುರ್ ಫೋನಾದ್ರು ಮಾಡೊದು ಬೇದೇನು? ನಾಳೆ ಫಂಕ್ಷನ್ನಿಗೆ ಎಮಿನಿಯಂಟ್ಸ್ ಪರ್ಸನಾಲಿಟೀಸೆಲ್ಲ ಬರ್ತಿದ್ದಾರೆ. ನಿಮ್ಮ ನಿಂಗಮ್ಮಜ್ಜಿಯ ಅಧ್ಯಕ್ಷತೆಯಲ್ಲಿ ನಡೆಯೋದು ನೆನಪಿಟ್ಕೋ… ವರದಕ್ಷಿಣೆ ವಿರುದ್ಧ ಹೋರಾಡ್ತಿರೋ ಜಾಗಟೆ ತಿಮ್ಮಕ್ಕ; ಇಂಡಿಯಾದ ವೈವಾಹಿಕ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ಪ್ರೊಫೆಸರ್ ರುದ್ರಮುನೆಮ್ಮ, ಚಾತುರ್ವರ್ಣ ವ್ಯವಸ್ಥೆ ವಿರುದ್ಧ ಹೋರಾಡ್ತಿರೋ ಕುಲಕರ್ಣಿ ಖಾಸಿಮಮ್ಮ ಮೊದಲಾದವರೆಲ್ಲ ಬರ್ತಿದಾರೆ… ಅವರ್ಗೆ ಇರೋದ್ಕೆ ವ್ಯವಸ್ಥೆ ಮಾಡೊ ಹೊತ್ಗೆ ಸಾಕು ಸಾಕಾಗಿ ಹೋಯ್ತು ಕಣಪ್ಪ. ನಿಮ್ಮಂಥ ಗೆಳೆಯರು ಸಕ್ರಿಯವಾಗಿ ದುಡಿದಿದ್ರೆ ಹೇಗೆ? ಇಲ್ಲಿ ಹೇಗೋ ಸಿಕ್ಕಿದೆಯಲ್ಲಾ? ಸ್ವಾಗತ ಭಾಷಣಾನ ನಮ್ಮ ಮಸಾಲೆ ಮಾಡ್ತಾರೆ. ನೀನು ಮಾತ್ರ ಅದ್ಭುತವಾಗಿ ವಂದನಾರ್ಪಣೆ ಮಾಡ್ಬೇಕು ನೋಡು…” ಎಂದು ಒಂದೇ ಉಸುರಿಗೆ ಹೇಳಿ ಮುಗಿಸಿದಳು. ಉಪನ್ಯಾಸಕಾರರೆಲ್ಲ ನನಗೇನು ಅಪರಿಚಿತರೇನಲ್ಲ. ಅಧ್ಯಕ್ಷತೆ ವಹಿಸುವ ನಿಂಗಮ್ಮಜ್ಜಿಯಂತೂ ನನ್ನ ತಾಯಿಯ ಸದ್ಯ್ ದೊಡ್ಡ್ಡಮ್ಮ. ತಾಯ್ಲೆತ್ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡು ಗಟ್ಟಿಯಾಗಿ ತೃಪ್ತಿಯಾಗುವವರೆಗೆ ನಗಬ್‌ಏಕೆನ್ನಿಸಿತು. ಇಂಥ ಸಮ್ಮೇಳನ ನಡೆಯುವುದರ ಮ್ಲಕ ಅದು ಹೇಗೆ ಜಲಜಾಕ್ಷಿ ತನ್ನ ಓಟಿನ ಬ್ಯಾಂಕನ್ನು ದೃಢಗೊಳಿಸುವಳೇನೋ? ಈಕೆಯ ಪ್ರತಿಸ್ಪರ್ಧಿ ಗುಲಾಂನಬಿ ಸಾಮಾನ್ಯ ವ್ಯಕ್ತಿಯಲ್ಲ. ಬರುವವರನ್ನೆಲ್ಲ ಬರದಂತೆ ಮಾಡುವುದರಲ್ಲಿ ನಿಷ್ಣಾತ. ಆಕೆ ನಡೆಸುವ ಸಮ್ಮೇಳನದಲ್ಲಿ ಭಾಗವಹಿಸಿದರೆ ಗಂಡಸರು ಹೆಂಗಸರು ಗಂಡಸರಾಗುವರೆಂದೂ ಹೇಳಿ ನಾನು ಭಾಗವಹಿಸದಂತೆ ಮಾಡಿರುವನಂತೆ. +ದೇವದಾಸಿ ಪದ್ಧತಿ ವಿರುದ್ಧ ಅಹರ್ನಿಶಿ ದುಡಿಯುತ್ತಿರುವ ಬ್ಯಾಡರ ಭುವನೇಶ್ವರಿಗೂ ಅತಗೂ ಇದೇ ವಿಶಯದಲ್ಲಿ ಜಟಾಪಟಿಯಾಯಿತಂತೆ. ಆತನ ಬೆದರಿಜೆಗೆ ಮಣಿಯದೆ ಭುವನೇಶ್ವರಿ “ನೀನು ಏನೇ ಹೇಳು ನಾನು ಭಾಗವಹಿಸೇ ತೀರ್ತೇನೆ?” ಎಂದು ಘಂಟಾ ಘೋಷವಾಗಿ ಹೇಳಿಬಿಟ್ಟಳಂತೆ. ಆಗ ಸಿಟ್ಟಿಗೆದ್ದು ಗುಲಾಂ ನಬಿ “ಎಲೆ ಮುಂಡೆ… ಎಲ್ಲೋ ಮೂಲೆಲಿದ್ದು ಹಮಾಲಿಗಳ ಮಲಿಕ್ಕೊಳ್ತಿದ್ದೋಳ್ನ ಕರ್ಕೊಂಡು ಬೆಂಗ್ಳೂರು, ಮಡ್ರಾಸೂ, ಡೆಲ್ಲೀಗೆಲ್ಲ ಕರ್ಕೊಂಡೋಗಿ ದೊಡ್ ದೊಡ್ಡೋರ್ನೆಲ್ಲ ಪರಿಚಯ ಮಾಡಿಕೊಟ್ನಲ್ಲೆ ಭೋಸೂಡಿ. ತ್ರಿಸ್ತಾರ್ ಫೈವ್ವು ಸ್ಟಾರ್ ಹೋಟ್ಲಲ್ಲೆಲ್ಲ ಉಳ್ಳಾಡ್ಸಿದೆಲ್ಲೆ…” ಎಂದು ನಾಲಿಗೆಗೆ ಕೈ ಜೋಡಿಸಿದನಂತೆ. ಅದಕ್ಕೆ ಕೇರು ಮಾಡದೆ ಆಕೆ, “ಇದ್ ಏ ಮತ್ನ ನಾಕು ಮಂದಿಗೆದ್ರು ಅನ್ನು. ಆಗ ಗೊತ್ತಾಗ್ತದೆ ಈ ಮೇಲ್ ಡೋಮಿನೇಟೆಡ್ ಸೊಸೈಟೀಗೆ ನಿನ್ ಬಂಡ್ವಾಳ ಏನೂಂತ?… ನಾನೇನು ಕರೆದಿದ್ದೆನೋ… ನನ್ನ ಕರ್ಕೊಂಡೊಯ್ದು ಇಂಥಿಥೊರತ್ರ ಮಲಗ್ಸೂಂತ… ನಿನ್ನ ಪೆಂಡಿಂಗ್ ಕೆಲಸಾಗೋದಿದ್ವು ಮಲಗಿಸಿದ್ದೀ… ನೀನು ನನ್ನೊಂದೆ ಏನು ಈ ದಾರಿಗೆಲೆದಿರೋದು. ಕಂಪಿಲರಾಯನ ವಂಶದವಳಾದ ಕಮಲಿ; ಪಾಳ್ಳೆಗಾರ ವಂಶದ ಪಾರ್ವತಿ; ನಿಜಾಮನ ವಂಶದವಳಾದ ನಳಿನಿ… ಗುಡೇಕೋಟೆ ಪದ್ಮ ಜರುಮಲಿಯ ಜಾನಕಿ; ಕೊಟ್ಟುಊರಿನ ಬೆಣ್ಣೆ ಬಸವ್ವ… ಲಿಸ್ಟ್ ಕೊಡ್ಲೇನು ಲಿಸ್ಟ್… ನಾಳೆ ಸಮ್ಮೇಳನದಾಗ ನಿನ್ನ ಬಣ್ಣ ಬಟಾ ಬಯಲು ಮಾಡದಿದ್ರೆ ನಾನು ಅಮ್ಮನಕೇರಿ ಹಾಲವ್ವನ ಮಗ್ಳು ತಿಮ್ಮಾವ್ವ ಉರುಫ್ ಭುವನೇಶ್ವರೀನೆ ಅಲ್ಲ” ಎಂದು ಶಪಥ ಮಾಡಿಬಿಟ್ಟಳಂತೆ. “ಲೇ ಮುಂಡೆ ಕೈಯಲ್ಲಿ ಒಂದಿಷ್‌ಉ ಗಂಟು. ಮೈಯಲ್ಲೊಂದಿಷ್ಟು ನೆಣ ಐತಂಥ ಬಾಯಿಬಂದಂಗೆ ಹೋಗಿ ಹೇಗೆ ಭಾಗವಹಿಸುತ್ತೀಯೋ ನಾನೂ ನೋಡೇ ಬಿಡ್ತೀನಿ” ಎಂದು ಮೈಗೆಲ್ಲ ಸಿಟ್ಟು ಮೆತ್ತಿಕೊಂಡು ನಬಿ ಅಲ್ಲಿಂದ ಹೋದನಂತೆ. ಪ್ರಚಲಿತ ರಾಜಕಾರಣಿಗಳ ಹಾಸಿಗೆ ಹಂಚಿಕೊಂಡಿರುವ ಚತುರ್ವೇದಿಗಳಿಗೂ ಮಿಗಿಲಾದ ವ್ಯವಹಾರ ಜ್ಞಾನ ಹೊಂದಿರುವ ಭುವನೇಶ್ವರಿ ದೇವದಾಸಿ ಪದ್ಧತಿ ನಿರ್ಮೂಲನಾ ವೇದಿಕೆ ರಚಿಸಿದ್ದೇ ಜಲಜಾಕ್ಷಿ ಸಹಾಯದಿಂದ.ಅದಕ್ಕೆ ಮಹಿಳಾ ಸಂಕ್ಷೇಮ ನಿಧಿಯಿಂದ ಲಕ್ಷಾಂತರ ರುಪಾಯಿಗಳು ಹರಿದು ಬರುವಂತೆ ಮಾಡಿರುವುದೂ ಮಸಾಲೆಯವರ ಸಹಾಯದಿಂದಜಲಜಾಕ್ಷಿಯೆ. ದೇವದಾಸಿಯರನ್ನು ಮದುವೆಯಾಗಲು ಯುವಕರನ್ನು ಪ್ರೇರೇಪಿಸಿ ವೇದಿಕೆಯನ್ನು ಸದೃಡಗೊಳಿಸಿರುವುದೂ ಜಲಜಾಕ್ಷಿಯೇ. ನಾನೇನಾದ್ರು ಮಂದೆ ಎಮ್ಮೆಲ್ಲೆ ಆದ್ರೆ ನಿನ್ನನ್ನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ಮಾಡುವುದಾಗಿ ಭುವನೇಶ್ವರಿಗೆ ವಚನವಿತ್ತಿರುವುದೂ ಜಲಜಾಕ್ಷಿಯೇ. ಇಂಥ ಜಲಜಾಕ್ಷಿಯಾದ ತನ್ನ ಮಾತನ್ನು ಹೇಗೆ ಂಇರುವುದು ಸಾಧ್ಯ? ಎಂಬುದು ಏಕೆಯ ತರ್ಕ. ಕೊತ್ತಲಗಿಯ ಅಂಡರ್ರ್ವರ್ಲ್ಡ್ ಪರಿಚಯ ಸಾಕಷ್ಟಿರುವ ಭುವನೇಶ್ವರಿ ಸಮ್ಮೇಲನದಲ್ಲಿ ಭಾಗವಹಿಸುತ್ತಾಳೆಂಬುದು ಜಲಜಾಕ್ಷಿಯ ಸಧ್ಯದ ವಿಶ್ವಾಸ. +ಕಾರಿನಲ್ಲಿ ನನ್ನನ್ನು ಕೂರಿಸಿಕೊಂಡು ತಾನೇ ಡ್ರೈವ್ ಮಾಡುತ್ತ ಗ್ರಾಮದ ಮೂಲೆಯಲ್ಲಿ ತಿರುಗಾಡಿಸುತ್ತ ಮೇಲ್ಕಾಣಿಸಿದ ವಿಷಯಗಳನ್ನು ಪ್ರಸ್ತಾಪಿಸಿದಳು. ಹಾಗೆ ಒಂದು ರೌಂಡು ಪ್ರವಾಸಿ ಬಂಗಲೆ ಕಡೆ ಹೋಗಿ ಬಂದೆವು. ಆಗಲೆ ಬಂದು ಇಳಿದುಕೊಂಡಿದ್ದ ಕೆಲವು ಉಪನ್ಯಾಸಕಾರಿಣಿಯರಿಗೆ “ಇವ್ರೇ ನಾಳೆ ವಂದನಾರ್ಪಣೆ ಮಾಡೋದು” ಎಂದು ಪರಿಚಿಯಿಸಿದಳು. ಅವರೆಲ್ಲ ಹಾಗೋ ಎಂದು ಉದ್ಗರಿಸಿ ತಂತಮ್ಮ ಸಾಧನೆ ವಿವರ ಸರ್ಟಿಫೈಡ್ ಕಾಪಿಗಳನ್ನು ಕೊಡುತ್ತ ಸಾಧ್ಯವಾದ್ರೆ ವಂದನಾರ್ಪಣೆ ಮಾಡುವಾಗ ಪ್ರಸ್ತಾಪಿಸಿ ಮಹಿಳಾ ವಿಮೋಚನಾ ಹೋರಾಟ ಬೆಂಬಲಿಸಿ ಎಂದು ಮುಗುಳ್ನಕ್ಕೂ ಕೊಟ್ಟರು. “ವಂದನಾರ್ಪಣೆಗೆ ಇದೆಲ್ಲಾ ಬೇಕಾಗಿಲ್ಲ” ಎಂದು ವಾಪಸು ಕೊಡಲು ಹೋದಾಗ ಜಲಜಾಕ್ಷಿ “ಎಂಥಾ ಮಾತಾಡ್ತೀಯಾ? ಇವ್ರೆಲ್ಲ ಮಾತಾಡೋದು ಒಂದು ತೂಕವಾದ್ರೆ ವಂದನಾರ್ಪಣೆಯೇ ಒಂದು ತೂಕ ತಗೋ ಎಂದಳು. ನಾನು ನಗುತ್ತ ಹೋತದ ಕೊರಳಲ್ಲಿನ ಮೊಲೆ ಗಂಡಸಿನ ಜೋಲು ಎದೆಗಳಷ್ಟೆ ನಿಷ್ಪ್ರಯೋಜಕ. ವಂದನಾರ್ಪಣೆ ಎಂದು ಮಹಾನುಭಾವ ಬೀಚಿ ಹೇಳಿರುವನೇನೆಂದು ಆಕೆಗೆ ನೆನಪಿಸಿದೆ. ಅದಕ್ಕೆ ಎಲ್ಲರೂ ಬಿದ್ದು ಬಿದ್ದು ನಕ್ಕರು. ಅವರ ಒತ್ತಾಯಕ್ಕೆ ಕಟು ಬಿದ್ದು ವಿವರದ ಕಟ್ಟುಗಳನ್ನು ಕಂಕುಳಲ್ಲಿಟ್ಟುಕೊಂಡೆ. ಒಬ್ಬರ್ ಸಂಡಾಸ್ ಕಡೆಗೆ, ಒಬ್ಬರು ಬಾತ್ರೂಮಿಗೆ ಒಬ್ಬರು ಪ್ರಸಾಧನ ಕೋಣೆಗೆ ಹೋಗಲು ನಾನು “ಅಲ್ಲ ಜಲಜಾಕ್ಷಿ, ನಮ್ಮ ನಿಂಗಮ್ಮಜ್ಜಿ ಅಧ್ಯಕ್ಷತೆ ಎಂದರೇನು? ಇವ್ರೆಲ್ಲ ಭಾಷಣ ಮಾಡೊದೆಂದ್ರೇನು? ಭುವನೇಶ್ವರಿ ಕಾಷ್ಟ ಕೋಟಲೆ ಎದುರಿಸೋಣವೆಂದರೇನು…” ಎಂಬಿವೇ ಮೊದಲಾದ ಪ್ರಶ್ನೆಗಳು ಹಾಕಿದೆ. ಜವಾರಿತನ ಮತ್ತು ತಾಜಾನುಭವಗಳಿಂದ ಮಾತ್ರ ಸಮಾಜ ಕಂನು ತೆರೆಯಲು ಸಾಧ್ಯವೆಮ್ದು ಹೇಳಿದಳು. ಭುವನೇಶ್ವರಿಯನ್ನು ಗುಲಾಂ ನಬಿ ವಿರುದ್ಧ ಎತ್ತಿಕಟ್ಟುವುದಕ್ಕೇಂದೇ ಆಕೆ ಈ ಸಮ್ಮೇಳನ ರೂಪಿಸಿಕೊಂಡಿರುವಳೆಂದುಕೊಂಡೆ. ಈ ವಿಚಿತ್ರದ ಬೆರಗಿನೊಂದಿಗೆ ನಾನು ನಡೆದುಕೊಂಡೇ ಮನೆ ತಲುಪಿದ್ದು ಹಿಂದಿನ ದಿನದ ಮಾತು. +ಅದಕ್ಕಿಂತ ಮೊದಲೆ ನಮ್ಮ ಮನೆಗೆ ದಟ್ಟಂಡಿ ದಾರಂಡಿ ಅಡ್ಡಾಡಿ ನಿಂಗಮ್ಮಜ್ಜಿಯಲ್ಲಿ ಹುರುಪು ತುಂಬಿದ್ದಳೆಂದು ತಿಳಿಯಿತು. ಸಿನಿಮಾ ನೋಡುವುದೆಂದರೆ ಮೂಗು ಕುಯ್ಯಿಸಿಕೊಳ್ಳುವ ನಿಂಗಮ್ಮಜ್ಜಿ ಕೂಡ ತನ್ನ ವಾಗ್ ವೈಖರಿ ಪ್ರದರ್ಶಿವ ಸಲುವಾಗಿ ಇಂಥದೊಂದು ಛಾನ್ಸಿನ ನಿರೀಕ್ಷೆಯಲ್ಲಿದ್ದಳು. ಅಂಥದೊಮ್ದು ಅವಕಾಶ ತಾನ್‌ಏ ತಾನಾಗಿ ಒದಗಿ ಬಂದಿರುವುದನ್ನು ಆಕೆ ಹೇಗೆ ನಿರಾಕರಿಸಲು ಸಾಧ್ಯ. +ಹೊಟ್ಟೆ ಹುಣ್ಣು ಇಲಾಜಿಗೋಸ್ಕರ ಧಾರವಾಅದ ಲೂರ್ಧಾ ಆಸ್ಪತ್ರೆಯಲ್ಲಿರದಿದ್ದರೆ “ಯ್ ಮುದುಕೀ ಹೊಸ್ತಿಲು ದಾಟ್ದೀ ಅಂದ್ರೆ ಕಾಲು ಮುರೀತೀನಿ” ಅಂತಿದ್ದ. “ಅದ್‌ಏನು ತಲಿ ಬಡಕೊಂಡೈತವ್ವಾ. ಈ ವಯಸ್ನಾಗೆ ನಿಂಗೆ . ಯೇನಾದ್ರು ಯೇಳಿದ್ರೆ ಯೆಗ್ರಿ ಬೀಳ್ತೀಯಾ. ಅದೇನು ಮಾಡ್ತೀಯ ಮಾಡು” ಎಂದು ತನ್ನಕ್ಕನೆಂಬ ಬ್ರಹ್ಮಪುತ್ರ ಪ್ರವಾಹದೆದುರು ಈಜಲಾರದೆ ಸಿದ್ದಮ್ಮಜ್ಜಿ ನಿಂಗಮ್ಮಜ್ಜಿಯ ನರ್ತನಕ್ಕೆ ಒಪ್ಪಿಗೆ ಸೂಚಿಸಿತು. +ನಾನು ಕೋಣೆಯೊಳಗಿದ್ದೇ ೧೯೦೫ರ ಮಾಡೆಲ್ ತಂಗಿಯೋರ್ವಳು ೧೯೦೩ರ ಮಾಡೆಲ್ ಅಕ್ಕ ಓರ್ವಳಿಗೆ ಸಿಂಗಾರ ಮಾಡುತ್ತಿದ್ದುದನ್ನು ಗಮನಿಸುತ್ತಿದ್ದೆ. ಸಿಂಗರಿಸುವ ಪ್ರಕ್ರಿಯೆ ಮಧ್ಯಾಹ್ನ ಮೂರುಗಂತೆ ಹದಿನಾರು ನಿಮಿಷಕ್ಕೆ ಆರಂಭವಾಗಿದ್ದು ಸಾಯಂಕಾಲ ನಾಲ್ಕು ಗಂಟೆ ನಲವತ್ತೆರಡು ನಿಮಿಷಕ್ಕೆ ಮುಕ್ತಾಯವಾಯಿತು. ತನ್ನ ಸೇನಾಧಿಪತಿ ಈ ಪ್ರಕಾರವಾಗಿ ಅಲಂಕೃತಗೊಂಡು ಪುರುಷ ಪ್ರಪಂಚದ ವಿರುದ್ಧ ಸೆಡ್ಡು ಹೊಡೆಯಲುಸಜ್ಜಾಗುತ್ತಿರುವುದನ್ನು ಓಣಿಯ ಸಿದ್ದವ್ವ ರುದ್ರವ್ವ ನಂಜವ್ವ, ಕೊಟ್ರವ್ವ, ತಾಯವ್ವ, ಸಿವವ್ವ ಇವರೇ ಮೊದಲಾದ ಬಿರುಗಾಳಿ, ಸುಂಟರಗಾಳಿ ಕಣ್ತುಂಬ ವೀಕ್ಷಿಸಿದ್ದವು. ಆಕೆಯ ನಡಿಗೆಯ ನೇತೃತ್ವ ವಹಿಸಿರುವ ಕರ್ಮಕ್ಕೆ ಹೆದರಿ ನಾನು ವಮ್ದನಾರ್ಪಣೆಗಷ್ಟೆ ಸೀಮಿತವಾಗಿ ಅಲಂಕರಿಸಿಕೊಂಡು ಅಲ್ಲಿಂದ ಹೊರಟು ಜಲಜಾಕ್ಷಿಯ ಕಾರ್ಯ ಕ್ಂದ್ರವಾದ… ಖಡ್ಗ ಪತ್ರಿಕಾಲಯದ ಕಟ್ಟಡ ತಲುಪಿದೆ. ಸಂಘಟಕಿಯ ನಿರ್ದೇಶನದಂತೆ ಕಮಲಾಕರ ಕುರ್ತಾಪಾಯಿಜಾಮ ಧರಿಸಿ ನನಗಾಗಿ ಕಾಯುತ್ತಿದ್ದ. ಒಬ್ಬ ಕಾಮೆರಾಮನ್ನು; ಒಬ್ಬ ವರದಿಗಾರನನ್ನು ಸಮ್ಮೇಳನದ ಜಾಗಕ್ಕೆ ಅಟ್ಟಿದ. ಪ್ರಶಸ್ತಿಯ ಹಣದಲ್ಲಿ ಮತ್ತು ಸುರೇಶಗೌಡ ಕೊಟ್ಟಿದ್ದ ಹಫ್ತಾ ವಸೂಲಿ ಹಣದಲ್ಲಿ ಅವನು ಹದಿನೈದು ದಿನದ ಹಿಂದೆಯಷ್ತೆ ಕೊಂಡಿದ್ದ ಬುಲೆಟ್ ಮೇಲೆ ಕೂಕಂಡು ಸುತ್ತೀ ಬಲಸೀ ಸಮ್ಮೇಅಳನ ವ್ಯವಸ್ಠೆಯಾಗಿದ್ದ ಲೆನಿನ್ಗ್ರಾಡ್ ಮೈದಾನ ತಲುಪಿದೆವು. +ಕೊಟ್ಟೂರಿನ ಲೆನಿನ್ ಗ್ರಾ ಮೈದಾನ ನಾಡಿನಲ್ಲೆಲ್ಲ ಚಿರಪರಿಚಿತ. ೧೯೩೯ರಲ್ಲಿ ಗಾಂಧಿ ಮಹಾತ್ಮರು ಕೊಟ್ಟುರಿಗೆ ಬಮ್ದಾಗ ಅಲ್ಲಿ ಭಾಷಣ ಮಾಡಲು ಬಿಲ್‌ಕುಲ್ ಒಪ್ಪದೆ ಹರಿಜನ ಕೇರಿಗಂಟಿಕೊಂಡಂತಿರುವ ಅರಳಿಕಟ್ಟೆ ಮೇಲೆ ಸ್ವತಂತ್ರ್ಯ ಸಮರದ ಕಹಳೆ ಊದಿ ಸತ್ಯ ಮತ್ತು ಅಹಿಂಸೆ ಕುರಿತು ಒತ್ತಿ ಹೇಳಿ ಹೋಗಿದ್ದರು. ಸ್ವಯಂ ಗಾಂಧೀಜಿಯವರಿಂದಲೇ ಬೇಬಿಷ್ಟೆಗೆ ಒಳಗಾದ ಸದರೀ ಮೈದಾನಕ್ಕೆ ಲೆನಿನ್ ಗ್ರಾ ಎಂಬ ಹೆಸರು ಬಂದುದು ಕಾಮ್ರೇಡ್ ಮಾಯಾಪುರಂ ಅಬ್ದುಲ್ ಘನಿಯವರಿಂದ. ದಕ್ಷಿಣ ಭಾರತದಲ್ಲಿ ಅವರೋರ್ವರೆ ಸೋವಿಯತ್ ಲ್ಯಾಂಡ್‌ಗೆ ಹೋಗಿ ಲೆನಿನ್‌ರವರ ಕೈಕುಲುಕಿದರಂತೆ, ಅವರೇ ಸದರೀ ಮೈದಾನದಲ್ಲಿ ಹಿಂಸೆಯ ಮೂಲಕ ಸ್ವಾತಂತ್ರ್ಯ ಸಂಪಾದಿಸಬೇಕೆಂದು ಭಾಷಣ ಮಾಡಿ ಮುಂದೊಂದು ದಿನ ಕೊಟ್ಟೂರಿನ ಅಹಿಂಸಾವಾದಿಗಳಿಂದಲೇ ಒದೆ ತಿಂದು ಸತ್ತನಂತೆ., ಸದರೀ ಗ್ರಾಮದ ಹಿಂಸಾವಾದಿಅಹಿಂಸಾವಾದಿಗಳ ನಡುವೆ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘರ್ಷಣೆ ಸ್ಥಳ ನಾಮೆಯಲ್ಲೆಲ್ಲೂ ಉಲ್ಲೆಖವಾಗಿಲ್ಲ. ಅಹಿಂಸಾವಾದಿಗಳಿಗಿಂತ ಹಿಂಸಾವಾದಿಗಳೆ ಕ್ರಮೇಣ ಜನಪ್ರಿಯಗೊಂಡು ಸದರೀ ಮೈದಾನಕ್ಕೆ ಲೆನಿನ್ ಗ್ರಾಡ್ ಎಂಬ ಹೆಸರು ಬಂದಿರಬಹುದೆಂದು ಜನರ ಅಂಬೋಣ. +೧೯೮೪ರಲ್ಲಿ ಹುತಾತ್ಮರಾದ ಸ್ರೀಮತಿ ಇಂದಿರಾಗಾಂಧಿಯವರು ೧೯೭೫ರಲ್ಲಿ ವಿಧಿಸಿದ್ದ ತುರ್ತು ಪರಿಸ್ಥಿತಿ ವಿರೋದಿಸಿ ಅನೇಕರು ಭಾಷಣ ಮಾಡಿದ್ದು ಇಲ್ಲಿಯೇ. ದೊಡ್ಡಾಟ, ಸಣ್ಣಾಟ, ನಾಟಕಗಳಿವೇ ಮೊದಲಾದ ರಂಗ ಚಟುವಇಕೆಗಳಿಗೆ ಹೆಸರಾದ ಈ ಮೈದಾನ ಜನರ ಆಡುಮಾತಿನಲ್ಲಿ ಲೆಂಗ್ಯಾಡು ಆಗಿದೆ. ಸ್ವಾತಂತ್ರ್ಯ ಪೂರ್ವದ ಲೆಂಗು ಎಂಬ ಆಟ ಆಡುತಿದ್ದರಾದ್ದರಿಂದ ಲೆಂಗ್ಯಾಡು ಎಂಬ ಹೆಸರು ಬಂದಿರುವುದೆಂದು ಸ್ಥಳೀಯ ಹವ್ಯಾಸಿ ಸಂಶೋಧಕ ಉಳ್ಳಾಗಡ್ದೆ ಈರೇಶ ಅಭಿಪ್ರಾಯ ಪಟ್ಟಿರುತ್ತಾನೆ. ಈ ಪ್ರಕಾರವಾಗಿ ತನ್ನದೇ ಆದ ವೈಶಿಷ್ಟ್ಯಪೂರ್ಣ ಹಿನ್ನೆಲೆಯುಳ್ಳ ’ಲೆಂಗ್ಯಾಡು’ ಮೈದಾನವನ್ನು ನಮ್ಮ ಬುಲೆಟ್ಟು, ಅಟ್ಟೆಟ್ಟಟ್ಟು, ಉಟ್ಟುಟ್ಟುಟ್ಟು ಎಂದು ಭಯಂಕರ ಸದ್ದು ಮಾಡುತ್ತ ಪ್ರವೇಶಿಸಿತು. ಜನರು ಹೋಹೋ! ಹ್ಹಾ…ಹ್ಹಾ ಎಂದು ಉದ್ಗರಿಸಿ ಸ್ವಾಗಸುತ್ತಿರಲು ನಾವು ಹೋಗಿ ನಮ್ಮ ನಮ್ಮ ಉಚಿತಾಸನದಲ್ಲಿ ಕೂಕಂಡೆವು. +ಲಾರಿಗಳು, ಟ್ರಿಪ್ಪರುಗಳು ಸುತ್ತಮುತ್ತ ಹಳ್ಳಿಗಳಿಂದ ಜನರನ್ನು ಹೊಡೆದಿಳಿಸುವುದರಲ್ಲಿ ಮಗ್ನವಾಗಿದ್ದವು. ನೋಡು ನೋಡುವಷ್ಟರಲ್ಲಿ ಎಲೆ ಅಡಿಕೆ, ತಂಬಾಕು, ನೆಶ್ಶೆ ಪುಡಿಗಳಿಂದ ಮೈದಾನ ತುಂಬಿ ಹೋಯಿತು. “ನನ್ನ ಗಂಡ ಕುಡ್ಕೊಂಡು ಬಂದು ದಿನಾಲು ಹೊಡಿ ತಾನೆ ನಮ್ಮವ್ವ್ವ” ಎಂದೋ, ಹಡ್ದೂ ಹಡ್ದೂ ಸಾಕಾಗಿ ಹೋಗೈಟೆ ದೊಡ್ಡವ್ವ” ಎಂದೋ; ಪಂಚಮಿ ಹಬ್ಬಕ ನಮ್ಮಣ್ಣ ಕರಿಯಾಕೆ ಬರ್ಲಿಲ್ಲೆ” ಎಂದೋ; “ಈ ನಮ್ಮಮ್ಮ ಜಲ್ಜಾಕ್ಚಿ ನಮ್ಗೇನಾರ ಒಂದಿಕ್ಕು ತೋರಿಸ್ತಾಳೇನೋ ನೋ ಡಾಮ ಎಂದೋ” ಗೊಣಗಾಡುತ್ತಿದ್ದರು. ಅಷ್ಟರಲ್ಲಿ ಮಿನಿ ಬಸ್ಸಿನಲ್ಲಿ ಬೆವತು ಮುದ್ದೆಯಾಗಿದ್ದ ಆ ಲಿಪ್‌ಸ್ತಿಕ್ಕು; ನಶ್ಶೆಪುಡಿ ತೊಂಬಲ ಮಂತಾದ ನೂರತ್ತು ಮಂದಿ ವೀರ ಮಹಿಳೆಯರು ಇಳಿಯುತ್ತಿದ್ದಂತೆ “ಭುವನೇಶ್ವರಿ ಜಿಂದಾಬಾದ್ ಗುಲಾಮ ನಬಿ ಮುರ್ದಾಬಾದ್” ಒಂದು ಕೂಗುತ್ತ ಸಮ್ಮೇಳನದಮುಖ್ಯದ್ವಾರ ಪ್ರವೇಶಿಸಿದರು. ಪತಿವ್ರತೆಯರೂ; ಗಂಡ ಬಿಟ್ಟವರೂ, ರಂಡ ಮುಂಡೆಯರೆಲ್ಲರೂ ಒಗ್ಗಟ್ಟಾಗಿ ಕೊತ್ತಲಗಿಯಿಂದಿಳಿದ ವೃತ್ತಿಪರ ವೇಶ್ಯೆಯರ, ದೇವದಾಸಿಯರ ವಿರುದ್ಧ ವಾಗ್ಯುದ್ಧಕ್ಕಿಳಿದರು. ಸಮ್ಮೇಳನದ ಮುಖ್ಯ ಸಚೇತಕನಾದ ಗುಡ್ತಿಂದಪ್ಪ ಮತ್ತು ಮುಖ್ಯ ವಖ್ತಾರನಾದ ಯಂಕೋಬಿಯವರು ಅವರ ನಡುವೆ ಶಾಂತಿ ಸ್ಥಾಪಿಸಲು ಶ್ರಮಿಸಿ ಕೊನೆಗೂ ಯಶಸ್ವಿಯಾದರು. ಕೊತ್ತಲಗಿಯ ಮಿನಿ ಬಸ್ ತಂದ ಲೇಟೆಸ್ಟ್ ನ್ಯೂಸ್ ಪ್ರಕಾರ ಭುವನೇಶ್ವರಿಯನ್ನು ಬಿಡಿಓ ಭರಮಪ್ಪನ ಕುತಂತ್ರದಿಂದ ಊರಹೊರಗಿರುವ ಪ್ರವಾಸಿ ಬಂಗಲೆಗೆ ನಬಿ ಬರಮಾಡಿಕೊಂಡನಂತೆ. ಆಕೆಗೂ ಆತನಿಗೂ ಮುಷ್ಟಿ ಯುದ್ದ್ಧ್, ಮಲ್ಲ ಯುದ್ಧ ರಾತ್ರಿ ಇಡೀ ನಡೆಯಿತಂತೆ. ಗುಲಾಮನ ಗೂಂಡಾಗಳು ಆಕೆಯನ್ನು ಅಮೇರಿಕನ್ ಶೈಲಿಯ ಶೌಚಾಲಯದಲ್ಲಿ ಕೂಡಿ ಹಾಕಿ ಬಿಟ್ಟರಂತೆ. ಇದು ಹೇಗೋ ತಿಳಿದ ದೇವದಾಸಿ ನಿರ್ಮೂಲನಾ ಸಂಘದ ಗೌರವ ಸದಸ್ಯೆಯರಾದ ನೂರಾರು ಮಂದಿ ತಂತಮ್ಮ ಕೈಯಲ್ಲಿ ಹಳೆಪಳೆ ಕೆರಗಳನ್ನು ಹಿಡಿದುಕೊಂಡು ಪ್ರವಾಸಿ ಬಂಗಲೆಯನ್ನು ಮುತ್ತಿದರಂತೆ. ಅವರ ಹೊಡೆತಗಳನ್ನು ತಾಳಲಾರದೆ ಗುಲಾಮನೂ ಆತನ ಗೂಂಡಾಗಳು ಕಾಲಿಗೆ ಬುದ್ಧಿ ಹೇಳಿ ಸರ್ಕಿಲ್ಲನ ನೆರವು ಪಡೆದರಂತೆ, ಸರ್ಕಿಲ್ ಸರೂಪಾನಂದ ರಾತ್ರಿ ಇಡೀ ಢಾಂಢೂಂ ಅಂತ ಭುವನೇಶ್ವರಿ ಮತ್ತಾಕೆಯ ಅಭಿಮಾನಿ ಬಳಗದ ಮೇಲೆ ದೈಹಿಕಾಕ್ರಮಣ ಮಾಡಿದನಂತೆ. ಪಿಂಪ್ ಕಲ್ಲರಿನ ಪರಮೇಶಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪುರುಶೋತ್ತಮೈಂಗಾರ್ರವರಿಗೆ ಫೋನ್ ಮಾಡಿ ವಸ್ತು ಸ್ಥಿತಿ ವಿವರಿಸಿದನಂತೆ. ರಾಕಾರವರು ಜಿಲ್ಲೆಯ ಎಸ್ಪಿಯವರಿಗೂ; ಎಸ್ಪಿ ಸರ್ಕಿಲ್ಗೂ ಫೋನ್ ಮಾಡಿ ಭುವನೇಶ್ವರಿ ಬಿಡುಗಎಯಾಗುವ ಹೊತ್ತಿಗೆ ಅಕೆಯದೇ ಆದ ಹನ್ನೆರಉ ಹುಂಜಗಳು ಪಾಂಜಜನ್ಯ ಮೊಳಗಿಸಿದುವಂತೆ… ಆದರೂ ಗುಲಾಮನ ಅಟಾಟೋಪ ಕಡಿಮೆಯಾಗಲಿಲ್ಲವಂತೆ… ಒನಕೆ ಓಬವ್ವಗಿಂತಲೂ ಸುಸ್ತಾಗಿರುವ ಭುವನೇಶ್ವರಿ ಯಾವ ಮೇಕಪ್ಪಿಲ್ಲದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುತ್ತಾಳೆ ಎಂದು ಕೊತ್ತಲಗಿಯ ವೀರರಮಣಿಯರು ಸಾರಿ ಸಾರಿ ಹೇಳಿದರು. +ಓಂದೇ ಸಮನಾಗಿ ಗುಜುಗುಜು ಎದ್ದು ಸಭೆಗೆ ಸಭೆಯೇ ತಂಗನತಿಟ್ಟಾಯಿತು. ಕೈಮಗ್ಗದ ಸೀರೆ ರವಿಕೆ ಉಉ ಸಾಕ್ಷಾತ್ ಸೋನಿಯಾ ಗಾಂಧಿಯವರನ್ನು ನೆನಪಿಸುವಂತಿದ್ದ ಜಲಜಾಕ್ಶಿ ಓಹೋ… ಹ್ಹಾ… ಹ್ಹಾ… ಅಂತ ಬಂದು ನಮ್ಮ ನಮ್ಮ ಅಂಗಿಗಳಿಗೆ ಬ್ಯಾಡ್ಗ್ ಅಂಟಿಸಿ ಹೋದಳು. ಆಕೆಯ ಬಲಗೈ ಎಂದೇ ಹೆಸರಾಗಿರುವ ಜೋಗರ ಗೋಣಿ ಬಸವ್ವಗೂ; ಎಡಗೈ ಎಂದೇ ಹೆಸರಾಗಿರುವ ಕರೆಕಟ್ಟೆ ಕರೆವ್ವಗೂ ಮೈಕ್‌ಟೆಸ್ಟಿಂಗ್ ಒನ್‌ಟೂತ್ರಿ ಎಂದು ಹೇಳುವ ಸಲುವಾಗಿಜಗಳವಾಯಿತು. ಅದೇ ಹೊತ್ತಿಗೆ ಆಗಮಿಸಿದ್ ಭಾಶಣಗಾರ್ತಿಯರಾದ ಜಾಗಟೆ ತಿಮ್ಮಕ್ಕ; ಪ್ರೊ.ರುದ್ರಮುನೆಮ್ಮ, ಕುಲಕರ್ರ್ಣಿ ಖಾಸೀಮಮ್ಮ ಮೊದಲಾದವರೆಲ್ಲ ಬ್ಯೂಟಿಪರ್ಲೆರ್‍ಗಳೇ ಮಹಿಳೆಯರ ವೇಶಧರಿಸಿರುವುವೇನೋ ಎಂಬಂತೆ ಬಂದು ತಲಾ ಒಂದೊಂದು ರವಂಡು ಸಿಂಹಿಣಿಯಾವಲೋಕನ ಮಾಡಿ ತೊಂಕದ ಮೇಲೆ ಕೈ ಇಟ್ಟುಕೊಂಡು ವೇದಿಕೆ ಮೇಲೆ ಶತಪಥ ಹೆಜ್ಜೆ ಹಾಕ ತೊಡಗಿದರು. ತರುಣಿಯೋರ್ವಳು ನೋಡುತ್ತಲೆ ನಮ್ಮ ಬಳಿಗೆ ಓಡಿಬಂದು ” ನೀವೇ ಅಲ್ವೇನ್ರಿ ವಾಗ್ಲೀಲಿ ಮೇಶ್ಟ್ರು ಕೆಲ್ಸ ಮಾಡ್ತಿರೋದು” ಎಂದು ಕೇಳಿದಳು. ನಾನು ಆಶ್ಚರ್ಯದಿಂದ ಮತ್ತು ಹೆಮ್ಮೆಯಿಂದ ‘ಹೂ’ ಅಂದೆ. ಆಕೆ ಕೂಡಲೆ ದನಿ ಎತ್ತರಿಸಿ “ಏಯ್ ಯವ್ವೋ ಬಾರೆ… ಯ್‌ಏಮ್ ಮ್ಮೋ ಬಾ..” ಎಂದು ಕೂಗುತ್ತಲೆ (ಕಾಗೆಯೊಂದಗಗುಳ ಕಂಡರೆ ಕರೆಯುವ ತನ್ನ ಬಲಗವನು) ಬಂದಿಬ್ಬರು ಹೆಂಗಸರು ಸಿಕ್ಕವರಿಗೆ ಸಿವ್ಲಿಂಗ ಅಂತ ಬಂದರು. “ಈಕೆ ನಮ್ಮವ್ವ” ಎಂದು ಒಬ್ಬಾಕೆಯನ್ನೂ “ಈಕೆ ನಮ್ಮಮ್ಮ” ಎಂದು ಮುದುಕಿಯನ್ನೂ ಪರಿಚಯ ಮಾಡಿಸಿದಳು. ಅಮ್ಮ “ಯೇಯ್ ಅವುದಾ… ಅಂತಾ ” ರೆಡ್ಡೇರು ಗವುಡರಿರೋ ಊರಾಗಿದ್ದೆ… ಒಂದ್ಸಾರಿ ಆದ್ರು ಬರಬಾರ್ದಾ?” ಎಂದು ನನ್ನ ಸೋಟಿಗೆ ತಿವಿದು ವಿಶ್ ಮಾಡಿದ್ರೆ … ಅವ್ವ ಎಂಬಾಕೆಯು “ನೀನು ಸತ್ತೀ ಅಂತ ಮಾತಾಡ್ಕಂತಿದ್ರಲ್ಲ ಅವುದಾ … ನಮ್ಮೂರ್ಗೆ ಬಂದು ಕೊತ್ಲಯ್ಯಗೊಂದು ತುಪ್ಪದ್ದೀಪ ಹಚ್ಚಬಾರ್ದಾ” ಎಂದು ನನ್ನ ಮುಖಕ್ಕೆ ಎರಡೂ ಕೈಹಚ್ಚಿ ಲಟ್ಟಿಗೆ ತೆಗೆದಳು. ಅನಂತರ ಗೊತ್ತಾಯಿತು ನನಗೆ ಇವರು ಒನಕೆ ಬಸೆಟ್ಟಮ್ಮನ ವಂಶಸ್ಥರೂ; ಪಾಮಲ ಕುರ್ತಿ ಸಿದ್ದಾರೆಡ್ಡಿಯ ಬೆನ್ನು ಹುಣ್ಣು ವಾಸಿ ಮಾಡಿದವರೂ ಆದ ಪ್ನಕೆ ಬಸಮ್ಮ; ಮತ್ತಾಕೆಯ ಮಗಳು ವೆಂಕಮ್ಮ; ಮತ್ತಾಕೆಯ ಮೊಮ್ಮಗಳು ರಂಗಮ್ಮಾಂತ. ನಾನು ಒಂದು ಕ್ಷಣ ಮುಖವನ್ನು ಹುಣುಸೆ ತೊಕ್ಕು ಮಾಡಿಕೊಂಡು ಹ್ಹಿ…ಹ್ಹಿ… ಅಮ್ದೆನು. ಆಗವರು ತಂತಮ್ಮ ಮುಖದ ಸ್ಟೇಷನ್ ಛೇಂಜು ಮಾಡಿ “ಯೇಮ್ ನಮ್ಮ ಶಾಮಣ್ಣ ಕಾಣ್ತಿಲ್ಲಲ್ಲೇ…” ಎಂದು ಹುಡುಕಾಡುತ್ತ ಮುಂದಿನ ಸಾಲಿನ ಬೆಂಚ್ ಕಡೆ ಹೋದರು. ಕೇಳಿಸಿಕೊಂಡಿದ್ರೆ ಒಳ್ಳೆರ್ಯದೂಂತ ಪಕ್ಕ ನೋಡಿದೆ. ಕಮಲಾಕರ ಸ್ವಲ್ಪ ದೂರದಲ್ಲಿ ಯಾರೊಂದಿಗೋ ಮಾತಾಡುತ್ತ ನಿಂತಿದ್ದವನು ಕೂಡಲೆ ಹೊರಟು ಬಂದು ” ಯಾರೋ ಹೆಂಗಸರು ಮಾತಾಡಿಸ್ದಂಗಿತ್ತಲ್ಲ?” ಎಂದು ಕೇಳಿ ನಂತರ ಓಹ್ “ಅವ್ರಾ!” ಎಂದು ಮೀಸೆ ಗಡ್ಡದ ನಡುವೆ ನಕ್ಕ. +“ಓಯ್ ಜಲ್‌ಜಲ್ದಿ ಸುರುವು ಮಾಡ್ತೀರೋ… ಇಲ್ಲ ವಂಟೋಗೋಣ” ಎಂದೊಬ್ಬಾಕಿ ಗಟ್ಟಿಯಾಗಿ ಕೂಗಿದ್ದು ಕೇಳಿಸಿತು, ಹಿಂದಿರುಗಿ ನೋಡಿದರೆ ಸರಸಿ ಯಾರದೋ ಮಗುವನ್ನು ತೊಡೆಮೇಲಿಟ್ಟುಕೊಂಡು ಲೊಚಲೊಚ ಮುದ್ದು ಕೊಡುತ್ತಿರುವುದು ಕಂಡಿತು. ಆಕೆಗೂ ಹಿಂದಿದ್ದ ಸಾಲಿನಲ್ಲಿ ಗದ್ದಲ ಗವುಜ ಎದ್ದಿದ್ದರಿಂದ ನೋಡದೆ ಗತ್ಯಂತರವಿರಲಿಲ್ಲ. ಆಕೆಯ ವಕ್ಷಸ್ಥಳ ಮಿರಿಮಿರಿ ಮಿಂಚುತ್ತ ನನ್ನ ನೋಟದ ಸರಳರೇಖೆ ಗುಂಟ ಹಾದು ಹೋಗಲು ಅಲ್ಲಿ ಗಂಡನೊಬ್ಬ ತನ್ನ ಹೆಂಡತಿಯ ತುರುಬು ಹಿಡಿದು ಎಳೆದಾಡುತ್ತ “ಕತ್ತಿ ರಂಡೆ ಮನಿ ಹೊಸ್ತಿಲು ದಾಟಿ ಇಲ್ಲಿವರ್ಗೂ ಬಂದು ಆ ಮುಂಡೇರು ಭಾಷ್ಣ ಕೇಳೋಟರ ಮಟ್ಟಿಗೆ ಕೊಬ್ಬಿದ್ದೀಯಾ, ಮನೀಲಿ ಅಡ್ಗೇನ ನಿಮ್ಮಮ್ಮ ಮಿಂಡ ಮಾಡ್ತಾನೇನೇ ಭೋಸೂಡಿ. ನಿನ್ನ ಮನೀಗೆಳ್ಕೊಂಡೊಯ್ದು ಕಾಲ್ಮುರ್ದು ಕುಂಡ್ರಿಸ್ಲಿಲ್ಲ ನಾನು ಮೆಣಸಿನ ಕಾಯಿ ಮರೆಪ್ಪ ಮಗ ಅಪಾರೀನೇ ಅಲ್ಲ” ಎಂದು ಕೂಗಾಉತ್ತಿರುವುದು ಕಂಡಿತು. ಸರ್ವ್ ಸಾಮಾನ್ಯ ಮಹಿಳೆಯಲ್ಲದ ಆಕೆ “ಬಿಡಲೋ ಬಾಯಾ… ಕುಂತನಿಂತ ಸಬಾದಾಗ ನನ್ನ ತುರುಬಿಡ್ದು ಎಳೀತಿಯಾ… ಇನ್ನು ದುಡ್ದಿಕ್ಕೋನಾಗಿದ್ರೆ ಇನ್ನೇಟಾರಾಡ್ತಿದ್ಯೋ… ನಾನು ದುಡ್ದಿಕ್ಕದಿದ್ರೆ ನೀನೆಲ್ಲಿರ್ತಿದ್ಯೋ…” ಎಮ್ದು ಲಭೋ ಲಭೋ ಬಾಯಿ ಬಡಿದುಕೊಳ್ಳಲು ಸುತ್ತ ಹೋ ಎಂದು ವಿಮೋಚನಾ ಸಂಘದ ಸದಸ್ಯರು ಜಮಾಯಿಸಿ ಜಟಾಪಟಿಗಿಳಿದರು. ತನ್ನೆಂಡ್ರೂನ ತಾನೆಂಗಾರ ಹೊಡ್ಕೊಂತಾನ ಎಂದು ಕೆಲ ಗಂಡಸರು ಅವರ ಇಗೆ ದೋತರ ತಂಪು ಮಾಡಿಕೊಂಡು ಯಾಕಿದ್ದೀತಪ್ಪಾ ಎಂದು ಸ್ವಸ್ಥಾನಕ್ಕೆ ಹಿಂದಿರುಗಿದರು. ಅಲ್ಲಿ ಅಳಿದುಳಿದಿದ್ದ ಪೋಲೀಸರು ಲಾಠಿ ಚಾರ್ಜು ಮಾಡದಿದ್ದಲ್ಲಿ ಆ ಗಂದ ಹೆಂದರ ಜಗಳ ಉಂದು ಮಲಗಿಕೊಂದರೂ ಮುಗಿಯುತ್ತಿರಲಿಲ್ಲ. ಆ ಗಲಾಟೆ ಗಮನವನ್ನು ತನ್ನ ಕಡೆಗೆ ಸೆಳೆಯುವ ರೀತಿಯಲ್ಲಿ ಹತ್ತಿರದಲ್ಲೆಲ್ಲೋ ಬ್ಯಾಂಡು ಬಜಂತ್ರಿ ಸದ್ದು ಕೇಳಿ ಬಂತು. ಎಲ್ಲರಂತೆ ನಾನೂ ಎದ್ದು ನಿಂತು ದಾಂತೋಂತಲೆ ಉಂಗ್ಲಿ ದಬಾನ ಮಾಡಿದೆ. +ಕಾಳಾಪುರದ ಡೊಳ್ಳು, ಕೋಡಿಹಳ್ಳಿಯ ತಮಟೆ, ಹೊಸಹಳ್ಳಿಯ ರುಮ್ಮಿ, ಹ್ಯಾಳ್ಯಾದ ಕಹಳೆ, ಚಪ್ಪರದಳ್ಳಿಯ ನಮ್ದಿಕೋಲು,; ಉತ್ತಂಗಿಯ ಸಮಾಳ, ಹಡಗಲಿಯ ಬ್ಯಾಂಡು, ಬಸಾಪುರದ ಬಜಂತ್ರಿ ಇವೇ ಮೊದಲಾದ ವಾದ್ಯಗಳ ವಾದನದ ನಡುವೆಯೂ; ಸುಟ್ಟಳ್ಳಿಯ ಕೋಲಾತ, ನಾಯ್ಕನಳ್ಳಿಯ ಭಜನೆ, ಗಜಾಪುರದ ಭೂತಕುಣಿತ, ಗುಡೇ ಕೋಟೆಯ ಕೀಲುಕುದುರೆ, ಜರುಮಲಿಯ ಮರಗಾಲು ಕುಣಿತ ಇದೇ ಮೊದಲಾದ ಜಾನಪದ ಕಲಾತಂಡಗಳ ನಡುವಯೂ; ನೂರಾರು ಜನರ ಜಯ ಘೋಶದ ನಡುವೆಯೂ; ದಿನ ತುಂಬಿದ ಬ್ಸುರಿಯಂತೆ ಚಲಿಸುತ್ತಿದ್ದ ಲಾರಿ ಅಟ್ಟದ ಮೇಲೆ ನಭೂತೋ ನಭವಿಷ್ಯತಿ ಎಂಬಂತೆ ನೆಲಮುಗಿಲಿಗೇಕಾಗಿ, ಬೆಂಗಳುರು ಹಾರ, ಮಡ್ರಾಸ್ ಹಾರಗಳಿಂದ ಅಲಂಕೃತಳಾಗಿ ನಿಂತಿದ್ದ ನಿಂಗಮ್ಮಜ್ಜಿ ಕಸ್ತೂರಿಬಾ ಗಾಂಧಿಯಂತೆ ಎಲ್ಲರಿಗೂ ಕೈಎತ್ತಿ ಮುಗಿಯುತ್ತಿದ್ದುದು ಕಂಡು ಸೋಜಿಗ ಪಟ್ಟೆನು. ಆ ಕೊಟ್ಟುರಿಯನ್ ವಿಕ್ಟೋರಿಯಾ ರಾಣಿಯ ವಾಮಭಾಗದ ಪಕ್ಕ ಜಲಜಾಕ್ಷಿಯೂ; ಬಲಭಾಗದಲ್ಲಿ ಆಕೆಯ ಪತಿಪರಮೇಶ್ವರರಾದ ಶ್ರೀಮಾನ್ ಮಸಾಲೆಯವರೂ ತಂತಮ್ಮೆರಡು ಕೈಗಳನ್ನು ಮುಗಿಲಿಗೆ ಎತ್ತಿದ್ದರು. ಸಮ್ಮೇಳನಾಧ್ಯಕ್ಷೆ ನಿಂಗಮ್ಮಜ್ಜಿಗೇ ಎಂದೆಂದು ಗುಂಪೂ ಜಯವಾಗಲಿ ಎಂದು ಇನ್ನೊಂದು ಗುಂಪೂ ಕೂಗುತ್ತಿದ್ದುದನ್ನು ದೇವಾನುದ್ವತೆಗಳೆಲ್ಲ ಕೇಳಿ ತಮ್ಮ ಪದವಿಗೆಲ್ಲಿ ಸಂಚಕಾರ ಬರುತ್ತದೋ ಎಂದು ಹೆದರಿದರು. ಈ ಪ್ರಕಾರವಾಗಿ ಹತ್ತಿರವಾದ ಮೆರವಣಿಗೆ ಕಡೆಗೆ ಹಾಕ್ಕೊಂದು ಬಿದ್ದರೆಲ್ಲಿ ತಾವು ಅಪ್ಪಚ್ಚಿ ಆಗುವೆವೋ ಎಂದು ಹೆದರಿ ಸದರೀ ಗ್ರಾಮದ ಪೈಲ್ವಾನರೆಲ್ಲ ಹಿಂದೆ ಮುಂದು ನೋಡುತ್ತಿರಲು ನಿಂಗಮ್ಮಜ್ಜಿ ಲೀಲಾಜಾಲವಾಗಿ ವಾಹನದಿಂದ ಕೆಳಕ್ಕಿಳಿದು”ಹೋಗೋ ನಮ್ಮವ್ವ” ಎಂದು ಉದ್ಗರಿಸಿತು. +ಕನ್ನಡನಾಡಿನ ವೀರರಮಣಿಯರು… ಹಾಡು ಮಾರ್ಮಲೆಯುತ್ತಿರುವಾಗಲೇ ನಿಂಗಮ್ಮಜ್ಜಿಯನ್ನು ಮಸಾಲೆ ದಂಪತಿಗಳು ವೇದಿಕೆ ಕಡೆ ಕರೆದೊಯ್ದರು. ಒಂದೊಂದು ಮೆಟ್ಟಿಲನ್ನು ಒಂದೊಂದು ದೇವರ ನಾಮೋಚ್ಚಾರಣೆ ಮಾಡುತ್ತ ಮೇಲೇರಿ ಭೋಜರಾಜನ ಸಿಂಹಾಸನವನ್ನು ಹೋಲ್ವಂಥ ಕುರ್ಚಿ ಮೇಲೆ ನಿಂಗಮ್ಮಜ್ಜಿ ಸುಖಾಸೀನಳಾಗಲು ನಿಂಗಮ್ಮಜ್ಜಿ ಜಿಂದಾಬಾದ್; ಜಯಲಕ್ಷ್ಮಿ ಜಿಂದಾಬಾದುಗಳೆಂಬ ಹರ್ಷೋದ್ಗಾರ ಮೊಳಗಿತು. +ಕಾರ್ಯಕ್ರಮ ನಿರೂಪಕಿಯರಾದ ಗೋಣಿ ಬಸವ್ವಗೂ ಕರಿಯವ್ವಗೂ ಮತ್ತೊಮ್ಮೆ ಜಟಾಪಟಿಯಾಗಿ ತಲಾ ಒಂದೊಂದು ಮೈಕು ಹಿಡಿದುಕೊಂಡು ಅನ್ನ ತಮ್ಮಂದಿರೇ; ಅಕ್ಕತಂಗಿಯರೇ ಎಂದು ಆರಂಭಿಸಿ ಬಿಟ್ಟರು. ಹಂಪಾ ಪಟ್ಟಣದ ಗೊಮ್ದಲಿಗರ ರುಕ್ಕೂಮಾಯಿ ಮತ್ತು ಸಂಗಡಿಗರಿಂದ ಪ್ರಾರ್ಥನಾಗೀತೆ ಆದ ಮೇಲೆ ಸ್ವಾಗತ ಭಾಶಣದ ಸಲುವಾಗಿ ಮಸಾಲೆ ದಂಪತಿಗಳ ನಡುವೆ ತಿಕ್ಕಾಟ ಶುಯ್ರುವಾಯಿತು. ಕೊನೆಗೇ ಜಲಜಾಕ್ಷಿಯೇ ಅದರಲ್ಲಿ ಗೆದ್ದು ಮೈಕಿನೆದುರು ನಿಂತುಬಿಟ್ಟಳು. ಸಮ್ಮೇಳನದ ಗೊತ್ತು ಗುರಿ ವಿವರಿಸಿ ಇಂಥಿಂಥೋರು ಬಂದು ವೇದಿಕೆಯನ್ನಲಂಕರಿಸಬೇಕೆಂದು ಸ್ವಾಗತ ಭಾಷಣ ಮಾಡಿದಳು. ಆಕೆ ಹೆಸರು ಹಿಡಿದು ಕರೆಯಲು ಇಂಥಿಂಥೋರು ಬಂದು ವೇದಿಕೆಯ ಮೇಲೆ ಕೂತುಕೊಂಡರು. +ರಾಜಿಸೂತ್ರದಂತೆ ಗೋಣಿ ಬಸವ್ವ ಭಾಷಣಗಾರ್ತಿಯರನ್ನು ಹೆಸರಿಸುವುದು ಕರೆವ್ವ ಅವರ ಪರಿಚಯ ಮಾಡಿಕೊಡುವುದು ಮಾಡಿದರು. ಪ್ರೊಫೆಸರ್ ರುದ್ರಮುನೆವ್ವನವರು ಇಂಡಿಯಾದ ವೈವಾಹಿಕ ವ್ಯವಸ್ಥೆ ಕುರಿತು ಮಾತಾಉವ ಆರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ನಿಂಗಂಂಅಜ್ಜಿ ರುದ್ರರಮಣೀಯ ಬದುಕನ್ನೇ ಮುಖ್ಯ ಟಾಪಿಕ್ಕಾಗಿ ಎತ್ತಿಕೊಂಡಳು. ಆಕೆ ಎಂಅನೆ ವಯಸ್ಸಿಗೆ ಮದುವೆಯಾಗಿದ್ದು; ಒಂಬತ್ತನೆ ವಯಸ್ಸಿಗೆ ಗಂಡ ತೀರಿಕೊಂಡಿದ್ದು; ಹನ್ನೆರಡನೆ ವಯಸ್ಸಿಗೆ ಋತುಮತಿಯಾಗಿದ್ದು; ಜೀವನುದ್ದಕ್ಕೂ ಪರಪುರುಷರ ಕಡೆ ಕಣ್ಣೆತ್ತಿ ನೋಡದೆ ಗಂಡಸಿನಂತೆ ದುಡಿದಿದ್ದು ಹೀಗೆ… (ಆಕೆ ಅಷ್ಟೊಂದು ವಿಷಯವನ್ನು ಎಲ್ಲಿಂದ ಸಂಗ್ರಹಿಸಿದ್ದಳೊ ಏನೋ… ನಮ್ಮಜ್ಜಿ ಮಾತ್ರ ಪ್ರತಿಮಾತಿಗೂ ಮೀಸೆ ತಿರುವಿದ್ದೇ ತಿರುವಿದ್ದು.) ಕೊನೆಗೆ ಜಲಜಾಕ್ಷಿಯ ರಾಜಕೀಯ ಸಾಧನೆ ಕುರಿತು ಮಾತಾಇ ಭಾಷಣ ಮುಗಿಸಿದಳು. +ನಂತರ ಜಾಗಟೆ ತಿಮ್ಮಕ್ಕ ವರದಕ್ಷಿಣೆ ಪಿಗಿನಿಂದಾಗಿ ತಾನಿನ್ನೂ ಮದುವೇನೇ ಅಗಿಲ್ಲ ಎಂದು ಮಾರ್ಮಿಕವಾಗಿ ಮಾತಾಡಿದರೆ ಕುಲಕರ್ಣಿ ಖಾಸೀಮಮ್ಮರವರಂತೂ ಚಾತುರ್ವರ್ಣದ ರೂವಾರಿ ಮನುವಿನ ಮೇಲೆ ನಿಗಿನಿಗಿ ಕೆಂಡ ಕಾರಿದರು. ಅಷ್ಟರಲ್ಲಿ ವೇದಿಕೆಗೆ ನುಗ್ಗಿದ ಆಟವಾಳಿಗೆ ಈರಯ್ಯನವರು ಹೆಂಗಸ್ರೂ ತಂತಮ್ಮ ಗಂಡಂದರನ್ನು ಶೋಷಿಸ್ತಿದಾರೆ. ಇದ್ಕೆ ನಾನೇ ನಿದರ್ಶನ್ ಎಂದು ಮುಂತಾಗಿ ಮಾತಾಡಲು ಪ್ರಯತ್ನಿಸಿ ಸ್ವಯಂ ಸೇವಕಿಯರಿಂದ ಬಯ್ಯಿಸಿಕೊಂದು ಕೆಳಕ್ಕಿಳಿದು ಸಭಾತ್ಯಾಗ ಮಾಡಿದರು. +ಇನ್ನೇನು ಅಧ್ಯಕ್ಷೆ ಭಾಷನವನ್ನು ನಿಂಗಮ್ಮಜ್ಜಿ ಶುರು ಮಾಡಬೇಕೆಂದಿದ್ದಾಗ ಸಭೆಯ ಒಂದು ಕಡೆ ದೊಡ್ಡ ಗಲಾಟೆ ಕೇಳಿ ಬಂತು. ಹರಿದಿದ್ದ ಬಟ್ಟೆಗಳಿಂದಲೂ; ಕೆದರಿದ್ದ ತಲೆಯಿಂದಲೂ ಅಸ್ತಸ್ವ್ಯಸ್ತಳಾಗಿದ್ದ ಭುವನೇಶ್ವರಿ “ಗುಲಾಮ್ನಬಿ ಮುರ್ದಾಬಾದ್… ಆ ತಲೆಹಿಡುಕನಿಗೆ ಧಿಕ್ಕಾರ” ಎಂದು ಕೂಗುತ್ತ ವೇದಿಕೆ ಮೇಲೇರಲು ಮಿಂಚಿನ ಹೊಳೆ ತುಳುಕಾಡಿತು. ತನ್ನ ತಂತ್ರ ಫಲಿಸಿದ ಹೊಸ ಹುಮ್ಮಸ್ಸಿನಲ್ಲಿ ಜಲಜಾಕ್ಷಿ ಆಕೆಗೊಂದು ಲಿಂಬೂ ಶರಬತ್ತು ಕೊಟ್ಟಳು. ಅದನ್ನು ಕುಡಿದು ಜಲಜಾಕ್ಷಿ ನಿಂಗಮ್ಮಜ್ಜಿ ಕೈಯಿಂದ ಮೈಕನ್ನು ಕಸಿದುಕೊಂಡು ಬಿರುಗಾಳಿಯನ್ನೇ ಉಸಿರಾಡುತ್ತಿರುವಳೋ ಎಂಬಂತೆ ಸಭೆ ಎದುರು ನಿಂತುಕೊಳ್ಳಲು ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿ ಬೆಂಬಲಿಸಿದರು. +ಭುವನೇಶ್ವರಿ ಏಕ್‌ಧಂ ಗುಲಾಮನಬಿಯ ಜಾತಕ ಜಾಲಾಡಲಾರಂಭಿಸಿದಳು. ಹೀಗೆ ಒಂದ್ತಾಸು ಮಾತಾಡಿ ವೇಶ್ಯಾವಾಟಿಕೆ ಸೃಷ್ಟಿ ಮತ್ತು ಪೋಷಣೆಗೆ ಗುಲಾಮನಂಥ ಹಲ್ಕಾಕೋರ ರಾಜಕಾರಣಿಗಳೇ ಕಾರಣ ಎಂದು ಭಾಷಣ ಮುಗಿಸಿ ಮೆದಿಕಲ್ ಚೆಕಪ್ಪಿಗೆಂದು ಕೂಡಲೆ ಅಲ್ಲಿಂದ ಹೋಗಿ ಬಿಟ್ಟಳು. +ನಿಂಗಮ್ಮಜ್ಜಿ ತನ್ನ ಅಧ್ಯಕಾಹೀಯ ಭಾಷಣದಲ್ಲಿ ಕೆಮ್ಮಿ ಕ್ಯಾಕರಿಸಿ ಹೆಣಮಕ್ಳಿಲ್ದಿದ್ರೆ ಈ ಗಂಡಸ್ರೆಲ್ಲಿರ್ತಿದ್ರೂ… ನನ್ನಾಟಗಳ್ರು ಡುಡಿಯಲ್ಲ ದುಕ್‌ಪಡಿಯಲ್ಲ ಎಂದು ಮುಂತಾಗಿ ಮಾತಾಡುತ್ತಿರಲು ಜಲಜಾಕ್ಷಿ ವೇದಿಕೆಗೆ ಬರುವಂತೆ ನನ್ನತ್ರ ಸಂಜ್ಞೆ ಮಾಡಿದಳು. ನಾನು ಅಂಜುತ್ತ ಅಳುಕುತ್ತ ವಂದನಾರ್ಪಣೆ ಭಾಹಣವನ್ನು ಕಂಠಪಾಠ ಹಾಕುತ್ತ ವೇದಿಕೆಗೆ ಬಂದೆ. ಅದ್‌ಏ ಹೊತ್ತಿಗೆ ನಿಂಗಮ್ಮಜ್ಜಿ ಭಾಷಣ ಮುಗಿಸಿ “ಅದೇನು ಮಾತಾಡ್ತಿ ಮಾತಾಡೆಲೋ” ಅಂತು. +ಇನ್ನೇನು ನಾನು ಶುರು ಮಾಡಬೇಕೆನ್ನುವಷ್ಟರಲ್ಲಿ ಎಲ್ಲಿಂದಲೋ ಬಂದು ನನ್ನ ಮತ್ತು ನಿಮ್ಮ ಶಾಮಾಶಾಸ್ತ್ರಿ ಪ್ರತ್ಯಕ್ಷವಾಗಿ ಬಿಡುವುದೇನು? ಅವನು ಯಾರ ಪರವಾನಿಗಿಗೂ ಕಾಯದೆ ಇಂದಿನ ಶಭೆಯ ಅಧ್ಯಕ್ಷತೆ ವಹಿಸಿರತಕ್ಕಂಥ … ಎಂದು ಶುರು ಮಾಡೇ ಬಿಟ್ಟ. ಆಗ ನಾನು ಇಂಗು ತಿಂದ ಮಂಗನಂತಾಗಿ ಜಲಜಾಕ್ಹಿ ಪಾರಿತೋಷಕ ರೂಪದಲ್ಲಿ ಕೊಡಮಾಡಿದ ಗಜಲಿಂಬೆ ಹಣ್ಣನ್ನು ಪಡೆದು ಅದನ್ನು ಮೂಸುತ್ತ ವಾಪಸಾಗಿ ಬಿಟ್ಟೆ. +* +* +* +ಏನಲೋ ಸೂಗಾಽಽ… ಅವ್ನು ನಿನ್ನ ಕೈಯಾಗಳಂದು ಕಿತ್ಕೊಂಡ್ನಲ್ಲ ಆಗ್ನೀನೇನು ಮಾಡ್ತಿದ್ದೆಲೋ.. ತಗ್ದು ವಂದ್ಕೊಡಬೇಕಾಗಿತ್ತು. ಆ ಜಲಜಾಕ್ಷಿ ಅದಾಳವ್ಳೂ.. ಮಾಭಿನ್ನಾಣಗಿತ್ತಿ… ಒಂದೂ ಮಾಡ್ಲಿಲ್ಲಿಲ್ಲಿ… ಬಾಯಾಗ ಗೆಂಡೆ ಇಟ್ಕೊಡಿದ್ಳಾಂತೀನಿ… ಅಲಲಾ” ಎಂದು ಒಂದೇ ಸಮನೆ ಶುರುಮಾಡಿಬಿಟ್ಟಿತು. ಆ ಶಾಮನ ಮದುವೆಗೆ ಯಾರೂ ಹೋಗಕೂಡದೆಂದು ಸುಗ್ರೀವಾಜ್ಞೆ ವಿಧಿಸಿ ಇಡೀ ಕುಟುಂಬವನ್ನು ಅಲ್ಲೋಲ ಕಲ್ಲೋಲ ಮಾಡಿತು. +“ಅಲಲಾ ಭಪ್ಪರೆ ನಮ್ಮವ್ವ… ಅವ್ನೂ ಇವ್ನೂ ಪೆಂಡ್ಸವ್ವಾ… ಬುಟ್ಕೊಟ್ಟಿದ್ರೂ ಕೊಟ್ಟಿದ್ನೂ… ಇದ್ರಿಂದ ನಮ್ಮೊಮ್ಮಗ್ನ ಕಿರೀಟೇನು ಕಮ್ಮಿ ಆತ.. ಇವ್ನೀಗಿಲ್ಲದ ರೋಸ ನಿಂಗೆ ಯಾಕಂತೀನಿ?” ಎಂದು ಸಿದ್ದಮ್ಮಜ್ಜಿ ಎದುರು ಕೊಚ್ಚೆನ್ನು ಹಾಕಿತು. +ಅದರಿಂದ ಕಿಡಿಕಿಡಿ ಆದ ನಿಂಗಮ್ಮಜ್ಜಿ +ಲೇ…ಯ್ ಸಿದ್ದಿ… ಬಾಯ್‌ಮುಚ್ಕಾ… ತಗದೀ ಅಂದ್ರ ಅಲ್ಲುದುರ್ತಾವ ನೋಡು ಮತ್ತೆ… ಪ್ರೆಂಡ್ಸಂತೆ ಪ್ರೆಂಡ್ಸು… ಸುಡ್ಗಾಡಗಿಲ್ಲದ ಪ್ರೆಂಡ್ಸು… ನಾನಾಡಿದ ಮ್ಯಾಕೆ ಮುಗಿತು… ಹೋಗ್ಕೂಡ್ಡಂದ್ರೆ ಹೋಗ್ಕೂಡ್ದು ಅಷ್ಟೇಯಾ… ಹ್ಹಾಂ…” ಎಂದು ಗುಡುಗಿತು. +“ಆ ತಾಟಗಿತ್ತಿ ಜಲಜಾಕ್ಷಿ ನಿನ್ನೊಯ್ದು ಮ್ಯಾಲ ಕುಂಡ್ರಿಸಿದ್ಕೆ ಕೋಡು ಬಂದ್ವಲ್ಲೆ ಕೋಡು.. ಇದು ಓಣಿ ಮಾತವ್ವಾ ಓಣಿ ಮಾತು. ಒಬ್ರಿಗೊಬ್ರು ಹೋಗಾದೈತಿ ಬರಾದೈತಿ. ಮನಸ್ಸಾಂದ ಮ್ಯಾಕೆ ಲಗ್ಣಕ ಮರಣಕ ಹೋಗದಂಗ ಇರಕಾಗಲ್ಲೆವ್ವೋ.. ಹೋಗ್ಲಿಲ್ಲಾಂದ್ರ ನೋಡ್ದೋರಾರ ಏನಂದಾರು?” ಎಂದು ಸಿದ್ದಮ್ಮಜ್ಜಿ ನುಡಿದ ತತ್ವ ನಿಂಗಮ್ಮಜ್ಜಿಯ ಕಿವಿ ತೂರುವುದು ಸಾಧ್ಯವಿರಲಿಲ್ಲ. +“ಉಗುರಿಲೆ ಹೋಗುದಕ ಕೊಡಲಿ ತಗಂತಾವಿವು. ನಾನ್ಯಾರ ಮದ್ವಿಗಾರ ಹೋಗ್ತೀನಿ ಹೋಗದಂಗಿರ್ತೀನಿ.. ಅದ್ನೆ ಕೇಳೋಕಿವರ್ಯಾರು?” ಎಂದು ಗೊಣಗಿಕೊಂಡೆ. +ನೋಡು ನೋಡುವಷ್ಟರಲ್ಲಿ ಆ ಅಪೂರ್ವ ಸಹೋದರಿಯರೀರ್ವರು ಪೂರ್ವ ಜರ್ಮನಿ, ಪಶ್ಚಿಮ ಜರ್ಮನಿ ಆದಂತಾಗಿ ಕೂಳು ನೀರು ಮಾತಿವೇ ಮೊದಲಾದ ಸಂಬಂಧ ವಾಚಕಗಳನ್ನು ತ್ಯಜಿಸಿ ದಿಕ್ಕು ದಿಕ್ಕಿಗೊಂದು ಮುಖ ಮಾಡಲು ಮನೆಯೊಳಗೆ ಸ್ಮಶಾನ ಮೌನ ಕವಿಯಿತು. +ಗುಲಾಮನಬಿಯಂಥ ಪ್ರಬಲ ರಾಜಕಾರಿಣಿಯ ಕಟ್ಟಾಗ್ಞೆ ಉಲ್ಲಂಘಿಸಿ ಶಾಮನೆಂಬ ಮಹಾನುಭಾವನು ವಂದನಾರ್ಪಣೆ ಮಾಡುವ ಮೂಲಕ ಜಲಜಾಕ್ಷಿಗೆ ಬೆಂಬಲ ಸೂಚಿಸಿದ್ದರಿಂದ ನನಗೆ ಹೆಚ್ಚು ಸಂತೋಷ ಮತ್ತು ನೆಮ್ಮದಿ ಮೂಡಿತ್ತು. +ಶಾಮನನ್ನು ಬಿಡೆ ಎಂದು ಗುಲಾಂ ನಬಿಯೂ; ಶಾಮನನ್ನು ಕೊಡೆ ಎಂದು ಭುವನೇಶ್ವರಿಯೂ ಎಳೆದಾಡುವುದರಲ್ಲಿ ಸಂದೇಹವಿಲ್ಲ ಎಂದುಕೊಂಡೆ. ಸುರಸುಂದರಿಯರೆಂಬ ಅಸ್ತ್ರಗಳನ್ನು ಕುಪ್ಪಸವೆಂಬ ಬತ್ತಳಿಕೆಯಲ್ಲಿ ಇಟ್ಟುಕೊಡಿರುವ ಭುವನೇಶ್ವರಿ ಕಡೆ ಅವನು ವಾಲಿದ್ದು ಹೆಚ್ಚು ಅರ್ಥ ಪೂರ್ಣ ಕೂಡ. ಅಲ್ಪ ಕಾಲದಲ್ಲಿಯೇ ಅವನು ಹೆಚ್ಚು ವ್ಯಾವಹಾರಿಕನಾಗಿರುವ ಸಂತೋಷವನ್ನು ಹೀಗೆ ವ್ಯಕ್ತಪಡಿಸುವುದು? ಸಾಯುವವರೆಗೆ ಮದುವೆಯನ್ನು ಮುಂದೂಡುತ್ತಲೆ ಹೋಗುವುದಾಗಿ ಹೇಳುತ್ತಿದ್ದ ಅವನು ಪಕ್ಷ ಒಪ್ಪತ್ತಿನಲ್ಲಿಯೇ ಗೃಹಸ್ಥಾಶ್ರಮ ಪ್ರವೇಶಿಸಲು ಒಪ್ಪಿದ್ದು ಕೂಡ ಅಭಿನಂದನೀಯವಾದುದು. ಪ್ರಾಯಶಃ ಅದು ವೇಶ ಮರೆಸಿಕೊಂಡು ಬೆಂಗಳೂರಿಗೆ ಹೋಗಿ ಅನಸೂಯಾ ಗಂಡನೊಡನೆ ಸುಖವಾಗಿರುವುದನ್ನು ನೋಡಿ ಅದರಿಂದ ಪ್ರೇರಣೆ ಪಡೆದಿರಬೆಕೆಂದೆನಿಸುವುದು. ಇಂಥದೊಂದು ಅದ್ಭುತವಾದ ಬದಲಾವಣೆಗೆ ಕಾರಣೀಭೂತಳಾದ ಮಹಾತಾಯಿ ಅನಸೂಯಳಿಗೆ ಕೂಡಲೆ ಒಂದು ಪತ್ರ ಬರೆದು ಸಂಶಯ ಹೋಗಲಾಡಿಸುವುದರ ಜೊತೆಗೆ ಮದುವೆ ಫಂಕ್ಶನ್ನು, ನಿಂಗಮ್ಮಜ್ಜಿ ಇತ್ಯಾದಿ ಮಾಹಿತಿ ಒದಗಿಸಬೇಕೆಂದು ನಿರ್ಧರಿಸಿದೆ. ಪತ್ರ ಬರೆಯಲೆಂದು ಐದಾರು ಹಾಳೆಗಳನ್ನು ದಂಡ ಮಾಡಿದಾಗಲೆ ನಾನು ಒಳಗೊಳಗೆ ಮಹಾ ಗಿಲ್ಟಿ ಇರುವೆನೆಂದು ಅರ್ಥವಾದದ್ದು. ಕ್ರಮೇಣ ಗಿಲ್ಟಿನೆಸ್ಸನ್ನು ಗಾಳಿಗೆ ತೂರಿ, ಪ್ರೀತಿಯ ಸಹೋದರಿ ಅನಸೂಯಾರವರಿಗೆ… ಎಂದು ಸಂಭೋದಿಸುತ್ತ ಶುರು ಮಾಡಿದೆ. ನಿಮಗೆ ತೊಂದರೆ ಕೊಟ್ಟನೆನ್ನಲಾದ ವ್ಯಕ್ತಿ ಶಾಮನಲ್ಲವೆಂದೂ ಬೇರೆ ಯಾರೋ ಇರಬೇಕೆಂದೂ ಇಲ್ಲಿನ ಬುದ್ಧಿಜೀವಿಗಳು, ರಾಜಕೀಯ ವ್ಯಕ್ತಿಗಳು ಆ ವ್ಯಕ್ತಿಯು ನಾನೇ ಇರಬಹುದೆಂದು ಅನುಮಾನಿಸಿರುವರೆಂದು ಇತ್ಯಾದಿ ಬರೆದಾದ ಮೇಲೆ ನಿನ್ನೆ ದಿನ ನಡೆದ ಸಮ್ಮೇಳನದ ವೈಷಿಷ್ಟ್ಯ ಸರಾಗವಾಗಿ ವಿವರಿಸಿ ಬರೆದೆ. ಶಾಮನ ಪರವಾಗಿ ಅವನ ಲಗ್ನ ಪತ್ರಿಕೆಯನ್ನು ಪತ್ರದೊಂದಿಗೆ ಲಗತ್ತಿಸಿ ಲಕೋಟೆಯಲ್ಲಿರಿಸಿ ಅಂಟು ಹಚ್ಚಿದೆ. ಫ್ರಂ ಅಡ್ರಸ್ ಬರೆಯದೆ ಆಕೆಯ ವಿಳಾಸ ಮಾತ್ರ ಬರೆದು ಅಂಚೆ ದಬ್ಬಿಯೊಳಗೆ ಹಾಕಿದೆ. +ಅವನು ಹಚ್ಚಿಕೊಳ್ಳುತ್ತಿಲ್ಲವೆಂದ ಮೇಲೆ ಮದುವೆಗೆ ಹಾಜರಿರುವುದಾದರೂ ಯಾಕೆ ಎಂದು ಯೋಚಿಸಿ ವಾಗಿಲಿಗೆ ಹೊರಡಲು ನಿರ್ಧರಿಸಿದೆ. ಜಗನ್ನಾಥ ರೆಡ್ಡಿಯವರಿಂದ ಪತ್ರ ಬಾರದೆ ಇದ್ದದ್ದೂ ಹೊರಡಲು ಕುಮ್ಮಕ್ಕು ನೀಡಿತ್ತು. ಆದರೆ ನಾರಾಣಿ ಮೂಲಕ ನನ್ನನ್ನು ಕರೆಸಿಕೊಂಡ, ಬಲವಾಗಿ ಅಪ್ಪಿಕೊಂಡ, ಭುಜದ ಮೇಲೆ ಎರಡು ಹನಿ ಕಣ್ಣೀರು ಸುರಿಸಿದ, ನಿನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಕ್ಷಮಿಸು ಅಂದ. ಮದುವೆ ಮುಗಿಸಿಕೊಂಡು ಹೋಗು ಮಾರಾಯ ಅಂದ. ಸರೆ! ಆಗಲಿ ಅಂದೆ, ಟೊಂಗುಟುಸುಕು ಹಸಿಮುನಿಸು ಎಲ್ಲ ಬಿಟ್ಟು ಶಾಮ ನನ್ನೊಂದಿಗೆ ರಾಜಿ ಆದನಲ್ಲ ಅಷ್ಟೆ ಸಾಕು. ಇಲ್ಲಿ ಇವನನ್ನು ಕಳೆದು ಕೊಳ್ಳುವೆನೋ ಎಂಬ ಭಯ ಇತ್ತು. +ಶಾಮನ ಮದುವೆ ಮುಗಿಸಿಕೊಂಡೇ ನಾನು ವಾಗಿಲಿಗೆ ಹೊರಡುವುದಾಗಿ ನಿಂಗಮ್ಮಜ್ಜಿಗೆ ಹೇಳಿಯೇ ಬಿಟ್ಟೆ. ಅದು ಕೇಳಿದ್ದರಿಂದ ಓ ಹಂಗಾ… ಹಂಗಾದ್ರೆ ನೀನು ನನ್ನ ಮಮ್ಮಗ ಅಲ್ಲ… ನಾನು ನಿನ್ನ ಅಜ್ಜಿಯಲ್ಲ.. ಎಂದು ಹೇಳಿಬಿಟ್ಟಿತು. ಸಂಬಂಧ ತ್ಯಜಿಸುವ ಇಂಥ ಮಾತುಗಳನ್ನದು ಸಾವಿರ ಸಾರಿ ಆಡಿರಬಹುದು. ಅದಕ್ಕೆಲ್ಲ ತಲೆಕೆಡೆಸಿಕೊಂಡರೆ ಹುಚ್ಚಾಸ್ಪತ್ರೆ ಸೇರೋದೊಂದೇ ಬಾಕಿ, ಆದ್ದರಿಂದ ನಾವ್ಯಾರೂ ‘ಹೀಗಂತಲ್ಲಾ’ ಅಂತ ತಲೆಕೆಡೆಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಿಂಗಮ್ಮಜ್ಜಿ ಎಂಬ ವಿಶ್ವಾಮಿತ್ರ ರಾಜರ್ಷಿಯೂ ಸಿದ್ದಮ್ಮಜ್ಜಿ ಎಂಬ ವಶಿಷ್ಟ ಬ್ರಹ್ಮರ್ಷಿಯೂ ಒಟ್ಟಿಗೆ ವಾಸಿಸುತ್ತಿರುವ ಪರ್ಣಕುಟಿಯಲ್ಲಿ ಅನೇಕ ಪವಾಡ ಕಂಟಕಗಳನ್ನೆದುರಿಸುತ್ತ ಬದುಕುಳಿದಿರುವುದೇ ಬಹು ದೊಡ್ಡ ಸೋಜಿಗ. ಇಂಥ ಸೊಜಿಗದ ಮೂರ್ತಿಯಾದ ನಾನು ಯಾವ ಪ್ರಕಾರವಾಗಿ ಯಾವುದೇ ಮಾತುಗಳನ್ನು ತಲೆಯಲ್ಲಿ ಇಟ್ಟುಕೊಳ್ಳುವುದಿಲ್ಲವೋ ಹಾಗೆಯೇ ಇಂಥ ಮಾತನ್ನು ಕೂಡ, ಆರು ಮೂರಾಗಲಿ ಮೂರು ಆರಾಗಲಿ… ಶಾಮನ ಮದುವೆ ಮಾಡಿ ಮುಗಿಸಿಕೊಂಡೇ ಹೋಗುವುದಾಗಿ ನಿರ್ಧರಿಸಿಬಿಟ್ಟೆ. +ಆ ವಾರದ ಖಡ್ಗ ಸಂಚಿಕೆಯನ್ನು ಶಾಮಾಶಾಸ್ತ್ರಿಯ ಫೋಟೋದೊಂದಿಗೆ ವಿವಾಹ ಎಂಬ ವಿಶೇಷಾಂಕವಾಗಿ ಕಮಲಾಕರ ಮಾರ್ಪಡಿಸಿದ. ಯಾವ ಯಾವ ದೇಶಗಳಲ್ಲಿ ಯಾರ್ಯಾರು ಹೇಗೆ ಮದುವೆಯಾಗುತ್ತಾರೆ ಮತ್ತು ಆಗಿದ್ದಾರೆ ಎಂಬ ಕುರಿತು ಸುಧೀರ್ಘವಾಗಿ ಚರ್ಚಿಸಿದ. ಆ ಖಡ್ಗದ ಮದುವೆ ವಿಷೇಶಾಂಕ ಬಿಡುಗಡೆಗೊಂಡೆರಡುದಿನಗಳೊಪ್ಪಾತ್ತಿನಲ್ಲಿ ಮಾರಾಟವಾಗಿ ಅದರ ಸಂಪಾದಕನಿಗೆ ಹೆಚ್ಚು ಲಾಭ ತಂದುಕೊಟ್ಟಿತು. +ಪತ್ರಿಕೆಯಿಂದಾಗಿ ಹೆಚ್ಚು ಬ್ಯುಜಿ ಇದ್ದ ಕಮಲಾಕರನೂ; ರಾಜಕಾರಣದಲ್ಲಿ ಅತಿ ಹೆಚ್ಚು ಬ್ಯುಜಿ ಇದ್ದ ಜಲಜಾಕ್ಷಿಯೂ… ಅವರೊಂದಿಗೆ ನಾನು ಧಗಧಗಿಸುವ ಒಲೆಯೊಂದರ ಮೂರು ಗುಂಡುಗಳಂತೆ ಶಾಮನ ಮದುವೆಯ ಮೂರು ದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದುಡಿದೆವು. +ಮಹೂರ್ತದ ಹಿಂದಿನ ದಿನ ನಿಗದಿತ ವೇಳೆಗೆ ಒಂದು ಗಂಟೆಗೂ ಮೊದಲೆ ಹೊಸಪೇಟೆಯ ಬೀಗರುಬಿಜ್ಜರು ವೇದಾಂತಿ ರಾಜಗೋಪಾಲಾಚಾರ್ಯರ ನೇತೃತ್ವದಲ್ಲಿ ಬಂದು ಇಳಿದುಬಿಟ್ಟರು. ಇಳಿದೊಡನೆ ಸ್ವಾಗತ, ಸತ್ಕಾರ ಮತ್ತಿತರ ವಿಷಗಳಿಗೆಂದು ಬಿಡದಿ ಮನೆಗೆ ಹೋದ ನಮ್ಮನ್ನು ಆಚಾರ್ಯರು ನೀವ್ಯಾರು? ನೀವ್ಯಾರು? ಎಂದು ಕೇಳಿದರು. ಇಂತಿಂಥವರೆಂದು ನಾವು ಹೇಳಲು “ಹೌದೇ ನಮ್ಮ ಪರಮೇಶ ಈ ಇಳಿವಯಸ್ಸಿನಲ್ಲಿ ಬರೀ ಶೂದ್ರರ್‍ನೇ ತುಂಬಿಟ್ಟುಕೊಂಡಿದ್ದಾನಲ್ಲ… ಕನಿಷ್ಟ ಮಾಧ್ವರಾದ್ರು ಸಿಗಲಿಲ್ಲ್ವೆ ಇವನಿಗೆ” ಎಂದು ಗೊಣಗಿದರು. ಪಕ್ಕದಲ್ಲಿದ್ದ ಅವರ ಷಡ್ಡಕ “ಎಲ್ಲ ಅಂಗೈಯಲ್ಲಷ್ಟೆ ನಿಚ್ಚಳವಾಗಿದೆ? ಈ ಗ್ರಾಮದ ಮಾಧ್ವರೂ ಸ್ಮಾರ್ತರೆಲ್ಲ ಮದುವೆಗೆ ಹೋಗಲೇಬಾರದೆಂದು ನಿರ್ಧರಿಸಿದ್ದಾರಂತೆ! ಅದ್ಕೆ ಒಬ್ಬ ಬ್ರಾಹ್ಮಣನೂ ಕಾಣಿಸ್ತಿಲ್ಲ” ಎಂದು ಬೆನ್ನತುರಿ ತುರಿಸಿಕೊಂಡ. +ಊರಿಗಿಳಿದೊಡನೆ ಅವರ ಷಡ್ಡಕರಾದ ತ್ರಯಂಬಕಾಚಾರ್ಯ ದುಡುದುಡನೆ ಅಗ್ರಹಾರಕ್ಕೆ ಹೋಗಿದ್ದರು. ಬ್ರಾಹ್ಮಣ ಮಹಾ ಸಂಘದ ಕೊಟ್ಟೂರು ಶಾಖೆಯ ಗೌರವಾಧ್ಯಕ್ಷರಾದ ಭಾಷ್ಯಂ ಶ್ರೀಕರಾಚಾರ್ಯರು ರಾಘವೇಂದ್ರ ಮಠದ ಬಳಿಯೇ ತರುಬಿ ಓಹೋ… ನೀವು ಹೊಸಪೇಟೆ ಅಗ್ರಹಾರದ ಹೆಣ್ಣಿನ ಕಡೆಯವ್ರೋ… ಎಂದು ವ್ಯಂಗವಾಡಿ ಸ್ವಾಗತಿಸಿದರಂತೆ, ಅಲ್ಲೇ ಕೂಡ್ರಿಸಿ ವಿಶ್ವತೀರ್ಥನ ಮನೆಯಿಂದ ಒಂದು ತಂಬಿಗೆನೀರು ತರಿಸಿಕೊಟ್ಟು ಕುಡಿಸಿ ಹೇಳಿದರಂತೆ, “ಯಾವಾಗ ಅಮೇಧ್ಯ ತಿನ್ನುವವರ ಓಣಿ ಸೇರಿ ಬ್ರಾಹ್ಮಣ್ಯ ಹಾಳು ಮಾಡಿಕೊಂಡನಾ ಮುದುಕ.” ಎಂದೇ ಮೊದಲಾಗಿ ಆರಂಭಿಸಿ ‘ಆ’ ದಿನದಿಂದ ಹಿಡಿದು ಕ್ಷತ್ರಜ್ಞದವರೆಗೆ ಎಲ್ಲ ಹೇಳಿಬಿಟ್ಟು ಕೊನೆಗೆ ಆ ವಾಮಾಚಾರಿ ರುದ್ರನಾಯಕನ ಮಗ್ಳು ಅನಸೂಯಾಳ ಸೆರಗು ಹಿಡ್ಕೊಂಡು ಅಡ್ಡಾಡುತ್ತಿದ್ದ ಆ ಶಾಮನಿಗೆ ಆ ರಾಘವ ತನ್ನ ಮೊಮ್ಮಗಳ್ನ ಕೊಟ್ಟಿದ್ದಾನಲ್ಲ… ಬುದ್ಧಿ ಇದೆಯೇ ಈ ಮುಠ್ಠಾಳನಿಗೆ…” ಎಂದು ಹೇಳಿದನಂತೆ. +ಅದಕ್ಕಿದ್ದು ತ್ರಯಂಬಕರು “ಹಾಗಲ್ಲ ರಾಯ್ರೆ… ಹುಡ್ಗ ಗುಣವಂತ… ಮೇಲಾಗಿ ಸರ್ಕಾರಿ ನೌಕರಿ ಬೇರೆ ಸಿಕ್ಕಿದೆ ಈ ಮೀಸಲಾತಿ ಕಾಲದಲ್ಲಿ” ಎಂದು ಗೊಣಗಿದರಂತೆ. +“ಆಪದ್ಗತಂ ಹಸಸಿ ಕಿಂ ದ್ರವಿಣಾಂಥ ಮೂಢ… ನಾವೆಲ್ಲ ಸರ್ಕಾರಿ ನೌಕರಿ ಮಾಡೇ ಬದುಕಿದಿವೇನ್ರಿ… ಬ್ರಾಹ್ಮಣ್ಯಕ್ಕೆ ತಿಲತರ್ಪಣ ಕೊಟ್ಟವರು ಏನುಬೇಕಾದರೂ ಆಗುತ್ತಾರೆ ಎಂಬುದಕ್ಕೆ ಆ ಮದುಮಗನೇ ನಿದರ್ಶನ ನೋಡಿ” ಎಂದು ಆ ಹಿರಿಯರು ಬೇಸರ ವ್ಯಕ್ತ ಪಡಿಸಿದರು. +ಷಡ್ಡಕರಾದ ತ್ರಯಂಬಕರು ಇದೇ ಸವುಡು ಎಂದು ಕೊಂಡರು. ಅವರು ಅಂಥದೇ ಉತ್ತರದ ನಿರೀಕ್ಷೆಯಲ್ಲಿದ್ದರು. ಅವರು ತಮ್ಮ ಹೆಂಡತಿಯ ಸಂಭಂದಿಯೋರ್ವರಿಗೆ ವರಲಕ್ಷ್ಮಿಯನ್ನು ಕೊಡಿಸಲು ಪ್ರಯತ್ನ ಮಾಡಿದ್ದುಂಟು. ಅವನು ನಾಲ್ಕನೆ ಸಂಬಂಧಕ್ಕಾಗಿ ಕನ್ಯಾನ್ವೇಷಣೆಯಲ್ಲಿರುವ ನಲವತ್ತೊಂದು ವರ್ಷ ಪ್ರಾಯದವನು ಎಂಬ ಸಂಗತಿಯನ್ನು ಹೇಗೋ ತಿಳಿದುಕೊಂಡು ಆಚಾರ್ಯರು “ನನ್ನ ಮೊಮ್ಮಗಳಂದ್ರೆ ಏನು ತಿಳ್ಕೊಂಡೀಯೋ ತ್ರಂಬ್ಯಕ… ಇನ್ನೊಮ್ಮೆ ಅಂಥವರ ಪ್ರಸ್ತಾಪಿದಿ ಅಂದ್ರ… ಅನ್ನ ನೀರು ಸಿಗದಂತೆ ಮಾಡಿ ಬಿಡ್ತೀನಿ” ಎಂದು ಗದರಿಸಿರುವುದುಂಟು. ಅಷ್ಟೆಲ್ಲವನ್ನು ತನ್ನ ವಾತಾಪಿಯಲ್ಲಿಟ್ಟುಕೊಟ್ಟಿರುವ ತ್ರಯಂಬಕರು ಹೇಗಾದರು ಮಾಡಿ ಈ ಮದುವೆ ಮುರಿದು ಬಿದ್ದರೆ ವರಲಕ್ಶ್ಮಿಯನ್ನು ಮದುವೆಯಾಗುವವರಾದರೂ ಯಾರು? ಕೊನೆಗೆ ತಾವು ಸೂಚಿಸಿದ ವರಮಹಾಶಯನಿಗೆ ಕೊಟ್ಟು ಮದುವೆ ಮಾಡದೆ ಮುದುಕನಿಗೆ ಗತ್ಯಂತರವಿಲ್ಲವೆಂಬುದಾಗಿ ಯೋಚಿಸಿ ಎಲ್ಲ ವಿಷಯ ಸಂಗ್ರಹಿಸಿಕೊಂಡು ಬಿಡದಿ ಮನೆಗೆ ದಯಮಾಡಿಸಿದ್ದರು. +“ಶಾಮಾಶಾಸ್ತ್ರಿಗಳ ಮದುವೆಗೆ ಅಗ್ರಹಾರದೋರೆಲ್ಲ ಬಹಿಷ್ಕಾರ ಹಾಕಿದ ಮಾತಾಡ್ತಿದಾರಲ್ಲ… ಅಣ್ಣಾವ್ರೆ… ಈ ಮದುವೆ ನಿರ್ವಿಘ್ನವಾಗಿ ನಡೆಯೋದಾದ್ರು ಹೇಗೆ?” ಎಂದು ತ್ರಯಂಭಕರು ಆಚಾರ್ಯರ ಕಿವಿ ಚುಚ್ಚಿದರು. +ಅದನ್ನು ಕೇಳುತ್ತಲೆ ಆ ವೃದ್ಧರು ತಲೆ ಮೇಲೆ ಕಾಂಚನಗಂಗಾ ಕಳಚಿಬಿದ್ದಂತೆ ವಿಲವಿಲನೆ ಒದ್ದಾಡಿದರು. +“ಹೋ ಹೋ ಹಾಗೋ ಸಮಾಚಾರ! ಅದ್ಕೇನೆ ಒಬ್ಬ ಬ್ರಾಹ್ಮನನೂ ಕಾಣಿಸ್ತಿಲ್ಲ. ಬರೀ ಶೂದ್ರಜನರೇ ಪರಾಂಬರಿಸ್ತಿದ್ದಾರೆ. ಪ್ರಾಣತ್ಯಾಗ ಮಾಡಿದರೂ ಸರೆ, ಜಾತಿಗೆ ಅಪಚಾರ ಮಾಡಬಾರ್ದೂಂತ ಪೂರ್ವೀಕರು ಹೇಳಿದ್ದಾರೆ…” ಎಂದು ಉತ್ತರೀಯವನ್ನು ಹೆಗಲಮೇಲಿಳಿ ಬಿಡುತ್ತ “ಈ ಸಮಸ್ಯೆ ಪರಿಹಾರ ಆಗದ ಹೊರತು ಮಾಂಗಲ್ಯಧಾರಣೆ ಆಗದಂತೆ ನೊಡ್ಕೋಬೇಕು… ಹೊಂಡಲೇ ತ್ರಂಬಕ…” ಎಂದು ಎದ್ದು ನಿಂತರು. +ಅವರ ವರ್ತನೆಯಿಂದಾಗಿ ನಾವು ಅಸಹಾಯಕತೆಯಿಂದ ಒದ್ದಾಡಿದೆವು. ನಾವು ಎಷ್ಟು ಹೇಳಿ ನೋಡಿದರೂ ಅವರು ಮಾಗಲಿಲ್ಲ. +ಅಚಾರ್ಯ ಹಿಂದೆ ಶಕುನಿ ಸ್ವರೂಪಿಯಾದ ತ್ರಯಂಭಕಾಚಾರ್ಯರು, ಗಜೇಂದ್ರ, ಶ್ರೀನಿವಾಸ, ಗುರುರಾಜ, ಕಾಶೀ ವಿಶ್ವನಾಥರಾಯರು, ಪಾಲುಪರ್ತಿ ಶಿವರಾಮರಾಯರು, ಕೃಷ್ನಮೂರ್ತಿ ಶರ್ಮರು, ಸುಬ್ರಮಣ್ಯ ಶಾಸ್ತ್ರಿಗಳು ಇವರೇ ಮೊದಲಾದ ಬಂಧು ಬಳಗದವರು ಪ್ರಳಯ ಮುನ್ಸೂಚನೆ ನೀಡಲಿರುವವರಂತೆ ಹೊರಟರು. ಕೇಶವಿಹೀನೆಯಾದ ಶಾರದಮ್ಮನವರು “ಏನೋ ರಾಜಗೋಪಾಲ, ಈ ನಿನ್ನ ಅತ್ತೆಯನ್ನೆ ಬಿಟ್ಟು ಹೊರಡ್ತಿದ್ದೀ ಏನೋ? ಗಂಡಸರು ಗಂಡಸರ ಹತ್ರ ಮಾತಾಡ್ಲಿಕ್ಕಾಯ್ತು… ಆದ್ರೆ ಹೆಂಗಸರತ್ರ ಮಾತಾಡ್ಲಿಕ್ಕೆ ನಾನು ಬರೋದುಬೇಡವೇನೋ?… ಮಗು ಇಲ್ಲಿ ಅಳಲಿಕ್ಕತ್ತದೆಯಪ್ಪಾ” ಎಂದು ಕೋಲಿನಾಸರೆಯಿಂದ ಮೇಲೆ ಏಳುತ್ತ ಕೂಗಿದರು. +ತಮಗೆ ಅಕಾಲ ಮರಣಕ್ಕೀಡಾದ ಮಗಳನ್ನು ಹೆತ್ತು ಕೊಟ್ಟು ಇಚ್ಚಾಮರಣಿಯಂತೆ ಬದುಕಿರುವ ತಮ್ಮತ್ತೆ ಕೂಗಿಕೊಳ್ಳುವುದರೆಂದರೇನು! +ಆಚಾರ್ಯರು ಜಮದಗ್ನಿ ಮಹರ್ಷಿಗಳಾಗಿ ದುರುಗುಟ್ಟಿ ನೋಡಿದರು. +“ಅಲ್ಲಿ ಹೆಂಗಸರಿಗೇನಿದೆ ಕೆಲಸ? ಅದೂ ಅಲ್ಲದೆ ಕೇಶವಿಹೀನೆ ಬೇರೆ! ಇಲ್ಲೇ ಇದ್ದು ಮಂಗಳಕರವಾದ ವಸ್ತುಗಳನ್ನು ಮುಟ್ಟದೆ ಮಗುಗೆ ಧೈರ್ಯಹೇಳಿ” ಎಂದವರೆ ದಪದಪ ಹೆಜ್ಜೆ ಹೊರಗಿಟ್ಟು ಬಿಟ್ಟರು. +ಪರಮೇಶ್ವರ ಶಾಸ್ತ್ರಿಗಳಿಗಿಂತ ವಯಸ್ಸಿನಲ್ಲಿ ಹಿರಿಯರಿದ್ದರೂ ಎಷ್ಟೊಂದು ಗಟ್ಟಿಮುಟ್ಟಾಗಿದ್ದಾರಲ್ಲ ಈ ಆಚಾರ್ಯರು, ಅವರಿಗೆ ಹೆಣ್ಣುಕೊಟ್ಟ ಅತ್ತೆ ಶಾರದಮ್ಮನವರು ಮೂರುಪೋಗು ನೋಡಿರುವರೆಂದರೆ ಸಾಮಾನ್ಯರೆ! ಅವರ ‘ಪಾಲುಟ್ಲಿ’ ವಂಶದವರಾರೂ ನೂರು ವರ್ಷಗಳ ಒಳಗೆ ಇಹಲೋಕ ತ್ಯಜಿಸಿಯೇ ಇಲ್ಲವಂತೆ! ಅವರ ಮಗಳು ಅಂದರೆ ವಿಶಾಲಕ್ಷಮ್ಮನವರು ಅಂದರೆ ಆಚಾರ್ಯರ ಧರ್ಮಪತ್ನಿಯವರು; ಅಂದರೆ ಸಂಸಾರದಿಂದ ಬೇಸತ್ತು ವೈರಾಗ್ಯ ತಾಳಿ ಹರಿದ್ವಾರದ ವೀರಭದ್ರಾಶ್ರಮದಲ್ಲಿ ವರ್ಷಗಟ್ಟಲೆ ದೇವೀ ಉಪಾಸನೆ ಮಾಡಿ ಹಿಮವತ್ಕೇದಾರದಲ್ಲಿ ದೇಹತ್ಯಜಿಸಿದ ವಿದ್ಯಾವಾಚಸ್ಪತಿ ಡಮರುಗಾಚಾರ್ಯರ ತಾಯಂದಿರು; ಅಂದರೆ ಗಂಡನಿಲ್ಲದ ಚಿಂತೆಯಿಂದ ಕೊರಗುತ್ತ ಮತಿಭ್ರಮಣೆಯಾಗಿ ಋಷ್ಯಮೂಕ ಪರ್ವತ ಶ್ರೇಣಿಯಲ್ಲಿ ಕಾಣೆಯಾದ ರೇಣುಕಾಬಾಯಿಯವರ ಅತ್ತೆಯಂದಿರಾದ ಶಾರದಮ್ಮನವರು ಅಳಿಯ ನಾಡಿದ ಮಾತಿಗೆ ತಿಲಮಾತ್ರ ಬೆಲೆಕೊಡದೆ ಕೋಲು ಹಿಡಿದುಕೊಂಡು ಅರ್ಧ ಫರ್ಲಾಂಗು ಅಂತರದಲ್ಲಿ ಹಿಂದೆ ಬರತೊಡಗಿದರು. +ಓಣಿಯ ಜನ ಹನ್ನೊಂದಾದರೂ ಮಲಗಿರದೆ ಕೂಸು ಕಂದಯ್ಯಗಳೊಡನೆ ಅಂಗಳಕೈತಂದು ಅವರೇ ನೋಡು ಇವರು, ಇವರೇ ನೋಡು ಅವರು ಎಂದು ತಮ್ಮ ತಮಗೇ ಮಾರ್ಗದರ್ಶನಮಾಡುತ್ತ ಸಂತೋಷಪಡುತ್ತಿದ್ದರು. ಬಂದಿದ್ದ ಬೀಗರು ಬಿಜ್ಜರು ಪೈಕಿ ಯಾರೂ ಕುಬ್ಜರಿರಲಿಲ್ಲ. ಪ್ರತಿಯೊಬ್ರೂ ಆಜಾನುಬಾಹುಗಳು… ಇವರಹಾಗೆ ಕುಳ್ಳಗಿರಲಿಕ್ಕೆ ನಾವೇನು ಮೂಲತಃ ದಕ್ಷಿಣಾತ್ಯರೇನು? ನಮ್ಮ ಪೂರ್ವೀಕರು ಉತ್ತರ ಭಾರತದಿಂದ ವಲಸೆ ಬಂದವರು. ಕಣ್ರೀ… ಕನೌಜದ ಹರ್ಷವರ್ಧನ, ಛತ್ತರಪುರದ ಛತ್ತರಸಾಲ, ಇವರೇ ಮೊದಲಾದ ರಾಜಾಧಿರಾಜರ ಆಸ್ಥಾನದಲ್ಲಿ ಜ್ಯೋತಿಷಿಗಳಾಗಿದ್ದವರು. ಏನೋ ಅವರ ಪೈಕಿ ಒಬ್ಬರು ತಿಮ್ಮರಸರ ಮಾತು ಮೀರಲಾರದೆ ದಕ್ಷಿಣಕ್ಕೆ ಬಂದು ವಿಜಯನಗರದ ಕೃಷ್ಣರಾಯನ ಆಸ್ಥಾನದಲ್ಲಿ ವೈದಿಕಕ್ಕೆ ನಿಂತರು. ಕಮಲಾಪುರದ ಕೆರೆ ಪಕ್ಕದಲ್ಲಿರುವ ಶಿಲಾಶಾಸನದಲ್ಲಿ ನಮ್ಮ ಪೂರ್ವೀಕರಾದ ವೇದವ್ಯಾಸ ಮಹತ್ಪಾದರ ವರ್ಣನೆ ಮಾಡಲಾಗಿದೆ. ಬೇಕಾದರೆ ಹೋಗಿ ಓದಿಕೊಳ್ಳಿ ಎಂದು ಆಚಾರ್ಯರು ದಿನಂ ಪ್ರತಿ ಅವರಿವರಿಗೆ ಹೇಳುತ್ತಿರುವುದುಂಟಂತೆ. +ಅವರನ್ನು ನೋಡಿದರೆ ಅದೇನು ಉತ್ಪ್ರೇಕ್ಷೆ ಅಲ್ಲ ಎನ್ನಿಸಿತು. +ಬ್ರಾಹ್ಮಣರೆಂದರೆ ಹೀಗಿರಬೇಕು ಎಂದು ನೋಡಿದ ಎಂಥವರಿಗೂ ಅನ್ನಿಸದಿರಲಿಲ್ಲ. ಅಷ್ಟ ದಿಗ್ಗಜಗಳೇ ಮನುಷ್ಯರೂಪದಲ್ಲಿ ನಡೆಯುತ್ತಿರುವರೇನೋ ಎಂಬಂತೆ ಅವರು ನಡೆಯುತ್ತಿದ್ದರು. ಅಕ್ಕಪಕ್ಕದಲ್ಲಿ ಅಬ್ರಾಹ್ಮಣರ ಮನೆಗಳಿರುವವೆಂದು ಭಾವಿಸಿ ಮೂಗು ಬಾಯಿಗಳ ಮೇಲಿರಿಸಿದ್ದ ಅಂಗವಸ್ತ್ರವನ್ನು ಅವರು ತೆಗೆಯಲೇ ಇಲ್ಲ. +ಅಷ್ಟರಲ್ಲಿ ನಾನು ತಿಪ್ಪಜ್ಜಿಯವರೋಣಿಯಿಂದ ಹೋಗಿ ಶಾಸ್ತ್ರಿಗಳಿಗೆ ವಸ್ತುಸ್ಥಿತಿ ವಿವರಿಸಲು ಪ್ರಯತ್ನಿಸಿದೆ. ಅವರ ಪರವಾಗಿ ಬಂದಿದ್ದವರು ‘ರಾಜಗೋಪಾಲಚಾರ್ಯರು ಧರ್ಮಕರ್ಮಗಳ ಸೂಕ್ಷ್ಮಗಳು ಮರೆತಿರುವರೇನು?’ ಎಂದು ಪ್ರಶ್ನಿಸಿದರು. ಆ ಪಂಚವಿಂಶತಿ ನೆಂಟರಲ್ಲಿ ನಂಜನಗೂಡಿಂದ ಬಂದಿದ್ದ ನರಹರಿ ಶಾಸ್ತ್ರಿಗಳು; ಬೇಲೂರು ಅಗ್ರಹಾರದಿಂದ ಬಂದಿದ್ದ ಅಳಸಿಂಗಾಚಾರ್ಯರು; ತಲಕಾಡಿಂದ ಬಂದಿದ್ದ ರಾಮಾಚಾರ್ಯರು ಗೇರುಸೊಪ್ಪೆಯಿಂದ ಬಂದಿದ್ದ ವೆಂಕಣ್ಣಾಚಾರ್ಯರು ಆ ಬೀಗರಿಗೆ ಬುದ್ಧಿ ಹೇಳುವುದಾಗಿ ನಿರ್ಧರಿಸಿದರು. ಬೆಂಗಳೂರಿಂದ ಬಂದಿದ್ದ ರಿಟೈರ್ಡ್ ಅಮಲ್ದಾರರಾದ ಹಯವದನರಾಯರಂತೂ ಈ ಮದುವೆ ಮುರಿದು ಬಿದ್ದ ಪಕ್ಷದಲ್ಲಿ ತಮ್ಮ ಪಂಚಮ ಸುಪುತ್ರಿಯಾದ ರುಕ್ಮಿಣಿಯನ್ನು ಇದೇ ಹಂದರದಲ್ಲಿ ಇದೇ ಮುಹೂರ್ತನಲ್ಲಿ ಕೊಟ್ಟು ಧಾರೆ ಎರೆದು ಬಿಡಬಹುದೆಂದು ಲೆಕ್ಕ ಹಾಕಿದರು. ಕೂಡಲೆ ಅವರು ಒಳಗೆ ಜೋಗಿ ತಮ್ಮ ಧರ್ಮಪತ್ನಿ ಜಯಲಕ್ಷಮ್ಮನವರನ್ನು ಗುಟ್ಟಾಗಿ ಕಂಡು “ದೇವರದಯಯಿಂದ ಮದುವೆ ಮುರಿದು ಬಿದ್ದರೆ ರುಕ್ಮಿಣಿಯನ್ನು ಕೊಟ್ಟಿ ಧಾರೆ ಎರೆದು ಬಿಡೋಣ… ಕೋಟೆ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿಸೋಣ” ಎಂದು ಪಿಸುಗುಟ್ಟಿದರು. ಜಯಲಕ್ಷಮ್ಮನವರು ತಮ್ಮ ಕೈಯಲ್ಲಿರುವ ಚಪಾತಿ ತುಪ್ಪದಲ್ಲಿ ಬೀಳಲಿದೆ ಎಂದು ಭಾವಿಸಿ ತಮ್ಮ ಮಗಳ ಬಳಿಗೆ ಹೋಗಿ ಆಕೆಯ ಕಿವಿಯಲ್ಲಿ ವಸ್ತುಸ್ಥಿತಿ ಸೂಚ್ಯವಾಗಿ ಹೇಳಿದರು. ಕೂಡಲೆ ರುಕ್ಮಿಣಿ ಕೋಣೆಗೆ ಹೋಗಿ ಒಳಗಿದ್ದವರನ್ನೆಲ್ಲ ಹೊರಗೆ ಕಳಿಸಿ ಧರ್ಮಾವರಂ ಕಲಾಪತ್ತಿನ ಸೀರೆ ಉಟ್ಟು ನೀಟಾಗಿ ಡ್ರೆಸ್ ಮಾಡಿಕೊಂಡು ವಟುವಿನೋದಾಪಾದಿಯಲ್ಲಿ ಮಂಕಾಗಿ ಕೂತಿದ್ದ ಶಾಮಣ್ಣನ ಹಿಂದೆ ಮುಂದೆ ಸುಳಿಯ ತೊಡಗಿದಳು. ಕಾಂಪೌಂಡಿನಾಚೆ ಹೋ ಎಂದು ಹರ್ಷೋದ್ಗಾರ ಮಾಡತೊಡಗಿದ ಗ್ರಾಮದ ಸಮಸ್ತ ನಾಯಿಗಳನ್ನು ನಾರಾಣಿ ಕೈಯಲಿದ್ದ ಬೆತ್ತದಿಂದ ಓದಿಸುವ ಪ್ರಯತ್ನ ಮಾಡತೊಡಗಿದನು. ಗ್ರಾಮದ ಪ್ರಮುಖರೆಂದು ಹೆಸರು ಮಾಡಿರುವ ಹಲ್ಕುಂದಿ ರಾಮಣ್ಣ; ಮಾಜಿ ಪುರಸಭಾ ಅಧ್ಯಕ್ಷ ಚನ್ನಬಸಪ್ಪ; ಜಾಟಗೆರೆ ಸತ್ಯಪ್ಪ; ಗವುಳೇರ ಕ್ರಿಷ್ಟಪ್ಪ; ಕಟುಕರ ವಿಠೋಬ; ಕೊಲ್ಮಿ ಹಸನ್ ಸಾಹೇಬ ಮುಂತಾದವರು ಇದು ತಮ್ಮ ಊರಿನ ಮರ್ಯಾದೆ ಪ್ರಶ್ನೆ ಎಂದುಕೊಂಡು ಬಂದರು. ರುಗ್ಣಶಯ್ಯೆಯಲ್ಲಿದ್ದ ಶಾಸ್ತ್ರಿಗಳಿಗೆ ನಮಸ್ಕರಿಸಿದರು. ಕಣ್ಣಿನ ನೀರನ್ನು ಸೆರಗಿಗೆ ಬಸಿಯುತ್ತಿದ್ದ ಅಲುಮೇಲಮ್ಮನವರಿಗೆ “ನೀವೇನು ಹೆದರ್ಬೇಡಿ ತಾಯಿ… ಬೀಗರ ವಿಷಯ ನಮಗೆ ಬಿಟ್ಟು ನೀವು ನಿಶ್ಚಿಂತೆಯಿಂದಿರ್ರಿ” ಎಂದು ಸಮಾಧಾನ ಹೇಳಿದರು. ಅಷ್ಟು ಹೇಳಿ ಅವರಿನ್ನೂ ಉಸುರು ಬಿಟ್ಟು ತೆಗೆದುಕೊಂಡಿರಲಿಲ್ಲ. ಅಷ್ಟರೊಳಗೆ ವೇದಾಂತಿ ರಾಜಗೋಪಾಲಚಾರ್ಯರು ಮತ್ತವರ ದಂಡು ಬಂದೇಬಿಟ್ಟಿತು. +ಬಂದವರೆಲ್ಲ ಮೊದಮೊದಲು ಶಾಸ್ತ್ರಿಗಳ ದೈಹಿಕ ಪರಿಸ್ಥಿತಿ ಕಂಣಾರೆಕಂದು ಕರಗಿಹೋದವರಂತೆ ಕಂಡುಬಂದರಾದರೂ ಕ್ರಮೇಣ ದ್ವನಿ ಎತ್ತರಿಸಿ ಮಾತಾಡ ತೊಡಗಿದರು. ಸದರೀ ಗ್ರಾಮದ ಅಗ್ರಹಾರದವರು ಬಹಿಷ್ಕಾರ ಹಾಕಿರುವರೆಂದ ಮೇಲೆ ಮಂಗಳ ಕಾರ್ಯಗಳು ಸುಸೂತ್ರವಾಗಿ ಹೇಗೆ ನಡೆಯುತ್ತವೆ ಎಂಬುದಾಗಿ ತ್ರಯಂಬಕರು ನಾಂದಿ ಹಾಡಿದರು. ಉಳಿದವರು ಅದಕ್ಕೆ ದನಿಗೂಡಿಸಿದರು. ತಾವು ಏನಾದ್ರು ಹೇಳುವ ದೊಡ್ಡ ಮನಸ್ಸು ಮಾಡಬೇಕು ಬುದ್ಧಿ ಎಂದು ಹೇಳಿದ ಕಟುಕರ ವಿಠೋಬಗೆ ಎಲ್ಲ ಹಕ್ಕು ದಯಪಾಲಿಸಿತ್ತು. ಸಭೆ ವಿಠೋಬನ ಗಿರಿಜಾ ಮೀಸೆ ನೋಡಿ ಆಚಾರ್ಯರ ಹಳ್ಳೊಳಗಿದ್ದ (ವಯಸ್ಸು ತೊಂಭತ್ತರ ಮೇಲಾಗಿದ್ದರು ಮುವ್ವತ್ತೆರದರ ಪೈಕಿ ಎರಡು ಹಲ್ಲು ಮಾತ್ರ ಉಸುರಿದ್ದವು) ನಾಲಗೆಯನ್ನು ಸರಿಪಡಿಸಿಕೊಂಡು ಮೊದಲು ಬೆಣ್ಣೆಯಲ್ಲಿ ಹರಳು ಕರಗುವಂತೆ ಮಾತಾಡಿದ ನಂತರ “ಈ ಸಮಸ್ಯೆ ಸೂಕ್ಷ್ಮ ಅದೆ. ಅಗ್ರಹಾರದ ಕುಲ ಬಾಂಧವರು ಬಹಿಷ್ಕಾರ ಹಾಕಿದ್ದಾರಂತಲ್ಲ…” ಎಂದಷ್ಟೆ ಹೇಳಿದರು. ಆಚಾರ್ಯರ ಮಾತು ಕೇಳಿ ಚನ್ನಬಸಪ್ಪ ಗಹಗಹಿಸಿ ನಗಾಡಿದ “ಅಲ್ರೀ ಬುದ್ದಿ… ಬಹಿಷ್ಕಾರ ಹಾಕಿದ್ದೀವಂತ ಅವರೇನು ಬಂದ ತಮ್ಗೆ ಹೇಳಿದ್ರಾ?” ಎಂದ. ತ್ರಯಂಬಕರು ಬುದಕ್ಕನೆ ಎದ್ದು ನಿಂತು “ನಾವೇ ಖುದ್ಧ ಹೋಗಿದ್ವಿ” ಎಂದು ಹೇಳಿದರು. ಕೊಲ್ಮಿಹಸನ್ಸಾಬು (ಹಿಂದೆ ಕುಸ್ತಿ ಪಂದ್ಯಾವಳಿಗಳಲ್ಲಿ ಮೂರು ಸಾರಿ ಚಿನ್ನದ ಪಡೆದ ವ್ಯಕ್ತಿ) ಹೇಳಿಕೆ ಮಾತು ಕೇಳಬಾರದೆಂದೂ ಅಗ್ರಹಾರದವರನ್ನೇ ಖುದ್ದು ಕರೆಸಿಕೇಳಬೇಕೆಂದೂ ಹೇಳಿದನು. ಇದು ಸರ್ವಥಾ ಒಪ್ಪಿಗೆ ಆಯಿತು. ಅಗ್ರಹಾರದ ಭಾಷ್ಯಂ ಶ್ರೀಕರಾಚಾರ್ಯರೇ ಮೊದಲಾದ ಹಿರಿಯರನ್ನು ಕೂಡಲೆ ಕರೆಸಿ ವಿಚಾರಿಸುವುದೆಂದು ನಿರ್ಧರಿಸಿದರು. ತಾನೇ ಹೋಗಿ ಕರೆದುಕೊಂಡು ಬರುವುದಾಗಿ ಕಟುಕರ ವಿಠೋಬ, ಗೌಳೇರ ಕ್ರಿಷ್ಟಪ್ಪನೊಡನೆ ಅಗ್ರಹಾರದ ಕಡೆ ಯಜ್ದಿ ಮೇಲೆ ಹೋದನು. ಕೊಟ್ಟೂರಿನ ಕಟುಗರು, ಗೌಳೀಯೆಂದರೆ ಅಗ್ರಹಾರಕ್ಕೆ ಅಗ್ರಹಾರವೇ ಥರಥರ ನಡುಗಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು. ಅವರಿಗೆ ಒಳ್ಳೆಯವರಾದರೆ ಇವರಿಂದಲೆ, ಕೆಟ್ಟವರಾಗಿದ್ದರೂ ಇವರಿಂದಲೇ. ಅವರು ಇವರಿಗೆ ಬಹಿಷ್ಕಾರ ಹಾಕಿದರೆಂದರೆ ಇವರು ಅವರಿಗೆ ಬಹಿಷ್ಕಾರ ಹಾಕಿ ಕೂಳಿಗೆ ಕೂಳು, ನೀರಿಗೆ ನೀರು ಸಿಗದಂತೆ ಮಾಡುವುದು. ಭಾಷ್ಯಂ ಮನೆತನದವರಿಗೂ ಕಟುಗರಿಗೂ ಲಗಾಯ್ತಿನಿಂದ ಲೇವಾದೇವಿಯುಂಟು. ತಗೊಳ್ಳುವುದರಲ್ಲಿ ಕೊಡುವುದರಲ್ಲಿ ಒಂಚೂರು ಹೆಚ್ಚು ಕಡಿಯಾದುದಿಲ್ಲ. ಕುರಿ, ಮೇಕೆ, ಕೋಳಿ ಕಡಿದು ಬಣ್ಣ ಬಣ್ಣದ ಮಾಂಸಗಳನ್ನು ತೂಗಿ ಬಿಡುವ ಕಡೆ ಹೋಗಲು ಅಗ್ರಹಾರದವರು ಹಿಂದೇಟು ಹಾಕುವುದುಂಟು. ಯಾರಿಂದಲಾದರೂ ಹೇಳಿ ಕಳಿಸಿದೊಡನೆ ವಿಠೋಬ ಒಂದೇ ಮಾತಿಗೆ ಹೋಗಿ ಬಾಯಿ ಮಾತೀಲೆ ಕೊಡುವನು,. ಕೇವಲ ಬಾಯಿ ಮಾತೀಲೆ ವಾಪಾಸು ಪಡೆಯುವನು. ಶೇಕಡ ಮೂರಿದ್ದುದು ಎರಡು ಮಾಡುವನು. ಎರಡು ಇದ್ದುದು ಒಂದು ಮಾಡುವನು. ಅಪ್ಪಟ ಮಾಂಸಾಹಾರಿಯಾದ ಮತ್ತು ಗ್ರಾಮದ ಏಳೆಂಟು ನೂರು ಮನೆಗೆ ಮಾಂಸಾಹಾರ ಸರಬರಾಜು ಮಾಡುವ ಐವತ್ತೆಂಟು ಕಟುಗರ ಕುಟುಂಬಗಳಿಗೆ ಮುಖ್ಯಸ್ತನಾದ ಅವನು, ಪ್ರಾಣಿಹಿಂಸೆಯಿಂದ ಪಾಪಕಟ್ಟಿಕೊಳ್ಳುತ್ತೇವೆ ಎಂದು ಸದಾ ಹಪಹಪಿಸುವ ಅವನು; ಪೊಗದಸ್ತಾದ ಮೀಸೆಯನ್ನೂ; ದಡೂತಿ ಕಾಯವಂದಿಗನಾದ ಅವನು ಇವರು ತಮ್ಮ ಪಾಪದ ಮಟ್ಟವನ್ನು ಕಿಂಚತ್ತಾದರೂ ಕಡಿಮೆ ಮಾಡುತ್ತಾರೆ ಎಂದು ನಂಬಿಕೆ ಇಟ್ಟುಕೊಂಡೇ ಅಗ್ರಹಾರದವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಅವನ ಜೊತೇಲಿ ಹೊಂಟ ಗೌಳೇರ ಕ್ರಿಷ್ಟಪ್ಪನೇನು ಕಡಿಮೆ? ಅಗ್ರಹಾರವೆಂಭೊ ಅಗ್ರಹಾರಕ್ಕೆನೇ ಹಾಲು ಹೈನ ಸರಬರಾಜು ಮಾಡುವುದು ಒತ್ತಟ್ಟಿಗಿರಲಿ, ಸದರಿ ಗ್ರಾಮದ ಜಮಾತೆ ಇಸ್ಲಾಮಿನ ಮುಖಂಡನಾದ ದಾದಾ ಖಲಂದರನು ಅಗ್ರಹಾರದ ರಾಮದೇವರ ದೇವಸ್ಥಾನದ ಪಕ್ಕದಲ್ಲಿ ಮಸೀದಿ ಕಟ್ಟುವುದಾಗಿ ಎಗರಾಡಿದಾಗ ಈ ಕ್ರಿಷ್ಟಪ್ಪ ಅವನನ್ನು ಒಂದುಮಟ್ಟಹಾಕಿ ಅವನು ಮುಂದೆಂದೂ ಅಗ್ರಹಾರದ ಗಡಿದಾಟದಂತೆ ನೋಡಿಕೊಂಡಿದ್ದಂಥ ಪುಣ್ಯಾತ್ಮನು. ಅಗ್ರಹಾರದವರು ತಲೆ ಎತ್ತಿ ಅಡ್ಡಾಡುತ್ತಿರುವರೆಂದರೆ ಈ ಕ್ರಿಷ್ಟಪ್ಪ ಮತ್ತು ವಿಠೋಬರ ಬೆಂಬಲದಿಂದಾಗಿಯೇ. +ಅವರು ಮೊದಲಿಂದಲೂ ಒಂದಾಗಿ ಇದ್ದವರಲ್ಲ. ಕ್ರಿಷ್ಟಪ್ಪ ಒಂದು ಪಾರ್ಟಿಯಾದರೆ ವಿಠೋಬ ಇನ್ನೊಂದು ಪಾರ್ಟಿ. ರಾಜಕೀಯ ವಿಕೇಂದ್ರಿಕರಣ ಆದಂತೆಲ್ಲಾ ಆದಂತೆಲ್ಲಾ ಅವರಿಬ್ಬರ ನಡುವೆ ಟಗ್ ಆಫ್ ವಾರ್ ತಿಂಗಳಿಗೊಂಡು ಸಾರಿಯಾದರೂ ನಡೆಯುತ್ತಲೇ ಇರುವುದು, ಇವರಿಬ್ಬರನ್ನು ಒಂದು ಮಾಡಲು ಸಾಕ್ಷಾತ್ ಮುಖ್ಯಮಂತ್ರಿಗಳೇ ಗ್ರಾಮಕ್ಕೆ ಬಂದು ಒಬ್ಬರು ಎಂಜಲು ಮಾಡಿದ ಹಾಲನ್ನು ಇನ್ನೊಬ್ಬರು ಕುಡೀರಯ್ಯ ಎಂದು ಹೇಳಿ ರಾಜಿ ಮಾಡಲು ಪ್ರಯ್ತ್ನಿಸಿ ವಿಫಲರಾದದ್ದುಂಟು. ಶಾಮಣ್ಣ ಮದುವೆ ಸುಸಂದರ್ಭದಲ್ಲಿ ದಿಡೀರನೆ ಹುಟ್ಟಿಕೊಂಡ ಸಮಸ್ಯೆ ಅಂಥ ಅವರಿಬ್ಬರನ್ನು ಒಂದು ಮಾಡಿ ಬೀದುಗುಂಟ ನಡೆಸಿತು ಎಂದರೆ ಸಾಮಾನ್ಯ ಸಂಗತಿಯೇ? +ವಿಠೋಬ ಕ್ರಿಷ್ಟಯ್ಯರೆಂಬ ಎರಡು ಧ್ರುವಗಳು ಒಂದಾಗಿ ಅಗ್ರಹಾರಕ್ಕೆ ಬರುತ್ತಿದೆ ಎಂಬ ಸುದ್ದಿ ಹವ್ಯಾಸಿ ಪತ್ತೆದಾರನಾದ ಮಾಧವಾಚಾರ್ಯನಿಂದ ಎಲ್ಲರಿಗೂ ತಿಳಿದುಬಿಟ್ಟಿತು. ಆ ನಡುರಾತ್ರಿಯಲ್ಲಿ ಭಾಷ್ಯಂರವರ ಪುರಾತನ ಮನೆ ಮುಂದೆ ಅಗ್ರಹಾರದ ಹಿರಿಕಿರಿಯರೆಲ್ಲ ಸೇರಿ ಉಸಿರು ಬಿಗಿಹಿಡಿದು ಕೂತಿದ್ದರು. ಆಗಲೆ ರಾಹುಕೇತುಗಳೋಪಾದಿಯಲ್ಲಿ ದಯಮಾಡಿಸಿದ ಅವರನ್ನು “ಓಹೋಹೋ ಬರ್ಬೇಕು… ಏನು ಇಷ್ಟು ಹೊತ್ನಲ್ಲಿ ದಯಮಾಡಿಸೋಣವಾಯ್ತು!” ಎಂದು ಸ್ವಯಂ ಶ್ರೀಕರಾಚಾರ್ಯರೇ ಎದ್ದು ಹೋಗಿ ಸ್ವಾಗತಕೋರಿ ಒಂದು ಕಡೆ ಕೂಡ್ರಿಸಿ “ಪಂಚಾಂಗ ಕೇಳೊದಿತ್ತಾ?” ಎಂದು (ತಾವು ತುಂಬ ಮುಗ್ಧರು, ಅಮಾಯಕರು ಎಂಬರ್ಥದಲ್ಲಿ) ವಿಚಾರಿಸಿದರು. “ನಿಮ್ಮ ಪಂಚಾಂಗಕ್ಕಿಷ್ಟು ಬೆಂಕಿ ಹಾಕ್ಲಿ… ಊರಲ್ಲೇನು ಒಳ್ಳೇದು ನಡೀಬೇಕೋ ಬೇಡ್ವೋ ಅಷ್ಟು ಹೇಳ್ರಿ” ಎಂದು ವಿಠೋಬ ಏಕ್‌ದಂ ಗುಂಡು ಹಾರಿಸಿ ಅವರನ್ನು ಥರಥರ ನಡುಗಿಸಿದನು. “ನಿಮ್ಗೆ ಹೇಳೋರು ಕೇಳೋರು ಯಾರೂ ಇಲ್ಲೇನು… ಇವತ್ತು ಯಲ್ಡರಾಕೊಂದು ತೇಲೇಬೇಕು” ಎಂದು ಕ್ರಿಷ್ಟಪ್ಪ ಗೇಣುದ್ದದ ಚುಟ್ಟದ ಹೊಗೆಯನ್ನು ಭಾಷ್ಯಂರವರ ಮುಖಕ್ಕೆ ಬಿಟ್ಟನು. ಅದರಿಂದ ಶ್ರೀಕರಾಚಾರ್ಯರ ಜಂಘಾಬಲ ಉಡುಗಿಬಿಟ್ಟಿತು. ಅವರನ್ನು ಅವರಿಬ್ಬರು ಅಶ್ವಥ್‌ಕಟ್ಟೆಯ ಮರೆಗೆ ಕರೆದು ಐದು ಚಿಂತನ ಮಂಥನ ನಡೆಸಿದರು. ಸ್ರಿಕರಾಚಾರ್ಯರು ಬೆವರು ಒರೆಸಿಕೊಳ್ಳುತ್ತ ಹೊರ ಬಂದವರೆ ಅಗ್ರಹಾರದ ಕೆಲವರೊಂದಿಗೆ ಅವರಿಬ್ಬರ ಹಿಂದೆ ಹೆಜ್ಜೆ ಹಾಕಿದರು. ನಾನ್ ಬ್ರಾಹ್ಮಿನ್ ಪತ್ತೆದಾರನಾದ ಚೇಕರನು ಮನೋವೇಗದಿಂದ ಶಾಸ್ತ್ರಿಗಳ ಮನೆ ತಲುಪಿ ವರ್ತಮಾನ ಪಿಸುಗುಟ್ಟಿದನು. ಅದನ್ನು ಊಹಿಸಿಕೊಂಡು ಕೊರಚರ ಎಲುಗ ಕಹಳೆ ಮೊಳಗಿಸಿದನು. ದೊಬಿ ನಾರಾಣಿಯ ನಾಯಿ ಹೋ ಎಂದು ಬೊಳಗಿತು. +ಆ ಸದ್ದು ಪ್ರತಿದ್ವನಿಸುತ್ತಿರುವಾಗಲೆ ವಿಠಪ್ಪ ಕ್ರಿಷ್ಟಪ್ಪ ಅಗ್ರಹಾರದವರೊಡನೆ ಬಂದೆ ಬಿಟ್ಟರು. ಬಂದೊಡನೆ ಶ್ರೀಕರಾಚಾರ್ಯರು ರುಗ್ಣಶಯ್ಯೆ ಬಳಿಗೆ ಹೋಗಿ ಶಾಸ್ತ್ರಿಗಳನ್ನು ಮಾತಾಸ್ಡಿಸಲು ಪ್ರಯತ್ನಿಸಿವಿಫಲರಾದರು. +ಸ್ವಲ್ಪ ಹೊತ್ತು ಬಹಿಷ್ಕಾರ ಎಂಬ ಟಾಪಿಕ್ಕಿನ ಮೇಲೆ ಚರ್ಚೆ ನಡೆಯಿತು. ಪರಸ್ಪರ ಶಾಮೀಲಾಗಿದ್ದ ಹಯವದನರು, ತ್ರಿಯಂಬಕರು ಬಹಿಷ್ಕಾರ ಕುರಿತಂತೆ ಮಂಡಿಸಿದ ಗೊತ್ತುವಳಿ ಕ್ರಮೇಣ ಬಿದ್ದುಹೋಯಿತು. “ಯಾವ ಮುಠ್ಠಾಳ ಹೇಳಿದ ನಿಮ್ಗೆ ನಾವು ಬಹಿಷ್ಕಾರ ಹಾಕಿದೀವಂತ” ಶ್ರೀಕರಾಚಾರ್ಯರು ಘಂಟಾ ಘೋಷವಾಗಿ ಹೇಳಿದ್ದೇ ಗೊತ್ತುವಳಿ ಬಿದ್ದು ಹೋಗಲು ಕಾರಣ? ಈ ಮದುವೆಯಲ್ಲಿ ಭಾಗವಹಿಸಿದರೆ ತಾವೂ ಬ್ರಷ್ಟರಾಗಿ ಹೋಗುವುದಾಗಿಯೂ; ಆದ್ದರಿಂದ ತಾವು ತಂತಮ್ಮ ಹೆಂಡಿರು ಮಕ್ಕಳನ್ನು ಕರೆದುಕೊಂಡು ಸಭಾತ್ಯಾಗ ಮಾಡುವುದಾಗಿಯೂ ಸಂಸಿದ್ಧರಾದ ಹಯವದನರು, ತ್ರಯಂಬಕರು “ಕೈಸೆ ಜಾತೆ ಜಾಜಿ ದೇಖ್ತಾ” ಎಂದು ಕೊಲ್ಮಿಹಸನ್ಸಾಬ ಗತ್ತು ಹಾಕುತ್ತಲೆ ನಿಂತುಬಿಟ್ಟರು. +ಹಲ್ಕಂದಿ ರಾಮಣ್ಣ; ಭದ್ರಣ್ಣ ತಲಾ ಒಂದೊಂದು ಸುಗ್ರಾಸ ಭೋಜನದ ಖರ್ಚನ್ನು ಭರಿಸುವುದಾಗಿಯೂ ವಯೋಭೇದವಿಲ್ಲದೆ ಲಿಂಗಭೇದವಿಲ್ಲದೆ ಎಲ್ಲರೂ ಊಟ ಮಾಡಬೇಕೆಂದು ಆಯಾ ಮುಖಂಡರಿಗೆ ಮನವಿ ಸಲ್ಲಿಸಲು ಅವರೆಲ್ಲ ಯಾಕಾಗಬಾರದೆಂದರು? +ದೊಡ್ಡದೊಂದು ಕಂಟಕ ಪರಿಹಾರವಾಯಿತೆಂದು ಸಮಾಧಾನದ ಉಸಿರುಬಿಡುತ್ತ ಅಲುಮೇಲಮ್ಮನವರು ಅಣ್ಣಂದಿರಾ ಅಂತ ಎಲ್ಲರಿಗೂ ಕೃತಜ್ಞತೆ ಸೂಚಿಸಿದರು. ಸಭೆ ಬರಖಾಸ್ತಾಗಿ ಎಲ್ಲರೂ ಮದುವೆಗೆ ಸಂಭಂದಿಸಿದ ತಲಾ ಒಂದೊಂದು ಕಾರ್ಯ ವಹಿಸಿಕೊಳ್ಳಲು ಆತ ಶಾಮಣ್ಣನನ್ನು ದೇವರಕೋಣೆಗೆ ತುಪ್ಪದ ದೀಪ ಹಚಲು ಕರೆದೊಯ್ಡಳು. +ಅದು ಹೇಳಿ ಕೇಳಿ ಕಟ್ಟಾ ಸಂಪ್ರದಾಯಸ್ಥರ ನೇತೃತ್ವದಲ್ಲಿ ನಡೆಯುವ ಮದುವೆಯಾದ್ದರಿಂದ ನಾವ್ಯಾರೂ ಎಲ್ಲ ಕಡೆ ಮೂಗು ತೂರಿಸುವಂತಿರಲಿಲ್ಲ. ಕಂಪ್ಲಿಯಿಂದ ಬಂದಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೆನ್ನ ಹುಸೇನ ಸಾಹೇಬರಮತ್ತವರ ಸಂಗಡಿಗರ ನಾದಸ್ವರವಾದನಕ್ಕೆ ಎಲ್ಲರೂ ತಲೆ ಅಲ್ಲಾಡಿಸುತ್ತ ಒಂದಲ್ಲ ಒಂದು ಕೆಲಸವನ್ನು ಹುಡುಕಿ ಮಾಡುತ್ತಿದ್ದೆವು. ಆಚಾರವಿಚಾರ ಶಾಸ್ತ್ರ ಸಂಪ್ರದಾಯಗಳು ರಾತ್ರಿ ಇಡೀ ನಡೆದವು. ಸೂರ್ಯ ಇನ್ನೂ ಸ್ವಲ್ಪ ತಡಮಾಡಿ ಹುಟ್ಟಿದ್ದರೆ ಗಂಟೇನು ಕಳೆದುಕೊಳ್ಳುತ್ತಿದ್ದ ಎಂದು ಗೊಣಗುತ್ತಿರುವಷ್ಟರಲ್ಲಿ ಒಳಗಿನ ಕೋಣೆಯಲ್ಲಿ ಮಾಂಗಲ್ಯಧಾರಣೆಯಂಥ ಮಂಗಳಕಾರ್ಯ ನಡೆದೇಬಿಟ್ಟಿತು. ಕ್ರಮೇಣ ಹೊತ್ತೇರಿದಂತೆ ಶಾಸ್ತ್ರಿಗಳ ಕಡೆಯವರು, ಅಲಮೇಲಮ್ಮನವರ ಕಡೆಯವರು, ಶಾಮಣ್ಣನ ಬ್ಯಾಂಕು ಸಹೋದ್ಯೋಗಿಗಳು; ಗ್ರಾಮದ ಮೂಲೆ ಮುರುಕಟ್ಟಿನಲ್ಲಿ ಉಳಿದುಕೊಂಡಿದ್ದಂಥವರು ಎಲ್ಲರೂ ತಂತಮ್ಮ ಶಕ್ತ್ಯಾನುಸಾರ ಬರಲಾಗಿ ಮದುವೆ ಮನೆಯ ಆ ಬೀದಿಯಿಂದ ಈ ಬೀದಿಯವರೆಗೆ;ಈ ಬೀದಿಯಿಂದ ಆ ಬೀದಿಯವರೆಗೆ ಗಿಜಿಗಿಜಿ ಗುಟ್ಟತೊಡಗಿ ಪುಟ್ಟ ಜಾತ್ರೆಯ ಶೋಭೆಯನ್ನು ತಂದಿತು. ನೀವ್ಯಾರು? ನೀವ್ಯಾರು? ನೀವ್ಯಾವಕಡೆಯವ್ರು: ನೀವ್ಯಾವಕಡೆಯವ್ರು? ಎಂಬಂಥ ಪ್ರಶ್ನೆಗಳಿಗೂ; ನಾವಿಂಥವರು! ನಾವಿಂಥವರು ನಾವಿಂಥ ಕಡೆಯಿಂದ ಬಂದಿದ್ದೀವಿ! ನಾವಿಂಥ ಕಡೆಯಿಂದ ಬಂದಿದ್ದೀವಿ! ಎಂಬ ಉತ್ತರಗಳು; ಹೋಽಽ.. ಹ್ಹಾಂ! ಸಂತೋಷ.. ಎಂಬ ಉದ್ಗಾರಗಳು ಎಲ್ಲಿ ನೋಡಿದರೂ! ಎಲ್ಲಿ ಕಿವಿಚಾಚಿದರೂವೆ, ಬಸ್‌ಸ್ಟಾಂಡು, ರೈಲ್ವೆ ನಿಲ್ದಾಣಗಳಂಥ ಪುಣ್ಯಸ್ಥಳಗಳ ನಿವಾಸಿಗಳಾದ ಕೆಲವೊಂದು ಭಿಕ್ಷಕರೂ ಬಂದು ಯಪ್ಪಾ! ಯಮ್ಮಾ ಅಂಥ ಕೈ ಚಾಚದಿರಲಿಲ್ಲ. ಅವರಿಗೆ ಚಿಕ್ಕಾಸು ಕೊಡುತ್ತಿದ್ದವರೂ, ಕೊಡದೆ ಗದರಿಸುತ್ತಿದ್ದವರೂ ಭಾರತದ ರಾಜಕೀಯ ಆರ್ಥಿಕ ಸ್ಥಿತಿಗತಿಗಳಬಗೆಗೆ ಚರ್ಚಿಸುತ್ತಲೇ ತಮ್ಮ ಕೌಟಿಂಬಿಕ ಸಮಸ್ಯೆಗಳ ಬಗ್ಗೆ ಮಾತು ಎತ್ತಿಕೊಳ್ಳದೆ ಇರುತ್ತಿರಲಿಲ್ಲ. ಭಾರತದ ಆರ್ಥಿಕ ದುಸ್ಥಿತಿ ಬಗ್ಗೆ ಶ್ವೇತಪತ್ರ ಪ್ರಕಟಿಸಬೇಕೆಂದು ಪಟ್ಟು ಹಿಡಿದಿರುವ ವಿರೋಧಿ ಧುರೀಣ ಡೆಂಗರ್ಪೂರ್ ಕಡೆಗೆ ಕೆಲವರೂ; ಆಡಳಿತ ಪಕ್ಷದ ಆರ್ಥಿಕ ಮಂತ್ರಿ ಕೇವಲ್‌ನಾಥ್ ಸಿಂಗ್ ಕಡೆ ಕೆಲವರೂ ವಕಾಲತ್ತು ವಹಿಸಿ ಏರು ದನಿಯಲ್ಲಿ ಮಾತಾಡುತ್ತಿದ್ದುದು ಆ ನಾದಸ್ವರ ವಾದನಕ್ಕಿಂಥ ಒಂದು ಕೈ ಮಿಗಿಲಾಗಿತ್ತು. ಚರ್ಚೆ ಕಾವೇರಿದ್ದಾಗಲೀ ಕೈಯಲ್ಲಿ ಒಂದು ಪೆಂಡೆಹಾಳೆಯನ್ನು ಹಿಡಿದುಕೊಂಡು ಬಂದ ಯುವಕನೋರ್ವ ಕುಂಡಿ ಕಡೆ ಹರಿದಿದ್ದ ಪ್ಯಾಂಟಿನ ಕಡೆ ಷರ್ಟ್ ಎಳೆದುಕೊಳ್ಳುತ್ತಾ ಹಂಚತೊಡಗಿದ. ಅದು ‘ಆರ’ ಕಂಪನಿಯವರ ದೋಸೆಮಿಕ್ಸ್‌ಗೆ ಸಂಬಂಧಿಸಿದಾಗಿತ್ತು. +ಕೊಟ್ಟೂರು ಪ್ರಾಂತದ ಮುಖ್ಯ ಏಜೆಂಟನಾಗಿ ಸುರೇಶಗೌಡ ರೂಪಗೊಂಡಿರುವ ಸಂಗತಿ ಅದರಿಂದ ತಿಳಿದುಬಂತು. ಕರಪತ್ರ ಹಂಚುತ್ತಿದ್ದ ಹುಡುಗನ ತಾಯಿ ಗತಿಸಿದ ಶಿವಪೂಜೆ ಗೌಡರ ಗುಪ್ತ ಪ್ರೇಯಸಿಯಾಗಿದ್ದಳೆಂದು ಮಂದಿ ಗೊಣಗಿಕೊಂಡರು. ಕೊರಿಯಾ; ಚೀನಾ; ಜಪಾನ್ ದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಪ್ರತಿ ಸಾವಿರ ಚದುರ ಕಿಲೋಮೀಟರಿಗೊಂದರಂತೆ ಸಿಗುವ ಝನ್‌ಸಂಗ್ ಮೊದಲಾದ ದಿವ್ಯ ಔಷಧೀಯ ಸಸ್ಯ ಬೇರುಗಳ ಒಂದಂಶವನ್ನು ಬೆರೆಸಿರುವ ಈ ಹಿಟ್ಟಿನಿಂದ ದೋಸೆ ಮಾಡಿ ತಿಂದು ಹೊಸ ಯೌವನ ಪಡೆಯಿರಿ ಎಂಬುದನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಅದನ್ನು ಓದಿ ಕೆಲವರು ಎಸೆದರೆ ಮತ್ತೆ ಕೆಲವರು ಅದನ್ನು ಮಡಚಿ ಕರೆನ್ಸಿ ನೋಟುಗಳ ನಡುವೆ ಇಟ್ಟುಕೊಂಡರು. ಅನಂತರ ಚರ್ಚೆ ಇನ್‌ಸ್ಟಂಟ್ ಫುಡ್ ಜನಪ್ರಿಯಗೊಳ್ಳುತ್ತಿರುವುದರ ಬಗ್ಗೆ ತಿರುಗಿತು. ಅಷ್ಟರಲ್ಲಿ ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಇಳಿದು ಸ್ಲೋ ಮೋಷನ್ನಿನಲ್ಲಿ ತಮ್ಮತ್ತ ಬಂದವರು ಅನಸೂಯ ಮತ್ತು ರಘುರಾಂ ಎಂದು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ನೋಡಲಿಕ್ಕೆ ಹುದ್ದೆಯ ಸತಿಪತಿಗಳಂತಿದ್ದ ಅವರು ಮುಗುಳ್ನಗುತ್ತ ಹಲೋ ಹಲೋ ಅಂತ ಕೈಬೀಸುತ್ತ ಅವರಿಬ್ಬರನ್ನು ಮಾತಾಡಿಸುತ್ತ ಕ್ರಮೇಣ ತ್ರಿಮೂರ್ತಿಗಳಾದ ನಮ್ಮನ್ನು ಸೇರಿಕೊಂಡರು. ಆ ದಂಪತಿಗಳನ್ನು ನೋಡಿ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಪರಸ್ಪರ ಕ್ಷೇಮ ಹಂಚಿಕೊಂಡೆವು. ಬೀಗರು ಬಿಜ್ಜರನ್ನು ಕರೆತರಲು; ಬಿಟ್ಟು ಬರಲು ರಘು ತನ್ನ ಕಾರನ್ನು ಬಿಟ್ಟು ಕೊಟ್ಟ. ಅದು ಬೇಸರವಿಲ್ಲದಂತೆ ಊರತುಂಬ ತಿರುಗಾಡತೊಡಗಿತು. ‘ಅರ’ ಕಂಪನಿಯ ಪ್ರಧಾನ ನಿರ್ದೇಶಕರು ಬಂದಿರುವರೆಂಬ ಸುದ್ದಿ ತಿಳಿದು ಉಜ್ಜನಿ, ಹಡಗಲಿ, ಕೂಡ್ಲಿಗಿ, ಕೊತ್ತಲಗಿ ಕಡೆಯಿಂದ ಅದರ ಹಂಚಿಕೆದಾರರು ಬಂದಿದ್ದರು. ಪ್ರಾಡಕ್ಟನ್ನು ಜನಪ್ರಿಯಗೊಳಿಸುವ ಬಗ್ಗೆ, ಠೇವಣಿ ಬಗ್ಗೆ,; ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಅನುಲಕ್ಷಿಸಿ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ರಘು ಮತ್ತು ಠೇವಣಿದಾರರು ಚರ್ಚಿಸುವುದರಲ್ಲಿ ಮಗ್ನರಾದರು. ಅನಸೂಯ ತನ್ನ ಮನೆಗೆ ಹೋಗಿ ನೋಡಿಕೊಂಡು ಬಂದಳು. ಮಾಟಗಾರ ರುದ್ರನಾಯಕನ ಮನೆ ಎಂಬ ಕಾರಣಕ್ಕಾಗಿ ಅದು ಚಲಾವಣೆ ಕಳೆದುಕೊಂಡಿತ್ತು. ತಾವು ಓದಿಕೊಂಡ ನೆನಪಿಗೆ ಗಚ್ಚಿನಮಠ ಶಾಲೆಗೆ ಬಿಟ್ಟು ಕೊಡಬೇಕೆಂದು ದಂಪತಿಗಳು ನಿರ್ಧರಿಸಿ ಪತ್ರಬರೆದಿದ್ದರು ಎಂದು ಕಾಣುತ್ತದೆ. ಶಾಲೆಯ ಮೇನೇಜರಾದ ಹೊನ್ನೂರು ಸಾಹೇಬರು “ಏನಮ್ಮಾ ತಾಯಿ ಚೆನ್ನಾಗಿದ್ದೀಯಾ?” ಎಂದು ಬಂದು ಮಾತಾಡಿಸಿದರು. ಅವರಿಂದ ತಪ್ಪಿಸಿಕೊಂಡರೆ ಇನ್ನೊಬ್ಬರು! ಇನ್ನೊಬ್ಬರಿಂದ ತಾಪ್ಪಿಸಿಕೊಂಡರೆ ಮತ್ತೊಬ್ಬರು ಹೀಗಾಗಿ ಅನಸೂಯಾಗೆ ನಮ್ಮನ್ನು ಹೆಚ್ಚು ಮಾತಾಡಿಸಲು ಅವಕಾಶ ಸಿಗಲೇ ಇಲ್ಲ. ಸಿಕ್ಕ ಅವಕಾಶದಲ್ಲಿ ಕಥೆಗಳ ಬಗ್ಗೆ, ಒಮ್ಮೆಯಾದರೂ ಬೆಂಗಳೂರಿಗೆ ಬಂದು ಮಾತಾಡಿಸದಿರುವುದರ ಬಗ್ಗೆ ಮಾತಾಡಿದಳು. ಆ ಪಾದರಸದಂಥ ದಂಪತಿಗಳನ್ನು ಹೆಂಣಿನ ಕಡೆಯವರಾಗಲೀ ಗಂಡಿನ ಕಡೆಯವರಾಗಲೀ ಮಾತಾಡಿಸುವ ಸೌಜನ್ಯ ತೋರಿಸದಿದ್ದುದರಿಂದ ನಮಗೆಲ್ಲ ಬೇಸರವಾಯಿತು. ಮಧು ಮಕ್ಕಳನ್ನು ಕೂಡ್ರಿಸಿದ ಮೇಲೆ ದಂಪತಿಗಳೀರ್ವರೂ ಹೋಗಿ ಅಕ್ಷತೆ ಹಾಕಿದರು. ಕಾದ ಹೆಂಚಿನ ಮೇಲೆ ಚಡಪಡಿಸುವ ಚುಬ್ಬಿಯಂತೆ ತಲೆತಗ್ಗಿಸಿಕೊಂಡು ಕೂತಿದ್ದ ಶಾಮಣ್ಣ ಅವರನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಅನಸೂಯ ಅವನಿಗೊಂದು ಉಂಗುರವನ್ನು ಹಾಗೂ ವಧುವಿಗೆ ಒಂದು ರೇಶಿಮೆ ಸೀರೆಯನ್ನು ಆಯಿರು ಮಾಡಿ ಬಂದಳು. ಆದ ಬೇಸರ ಹೇಳದಿದ್ದರೂ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ತಮಗೆ ಕಾಟ ಕೊಟ್ಟ ನಿಘೂಡ ವ್ಯಕ್ತಿ ಶಾಮನೇ ಇರಬಹುದೆಂದು ಆಕೆ ಯೋಚಿಸಲಿಕ್ಕೆ ಅನುಕೂಲವಾಗುವಂತೆ ಶಾಮ ಸಫಾರಿ ತೊಟ್ಟಿದ್ದುದೂ ಆಕೆಯ ಬೇಸರಕ್ಕೆ ಒಂದು ಕಾರಣವಿರಬಹುದೆಂದುಕೊಂಡೆ. ನನ್ನ ಪತ್ರ ಓದಿ ಇದು ಹಿಪೋಕ್ರಿಟಿಕ್ನೊಬ್ಬ ಬರೆದದ್ದು ಎಂದು ಭಾವಿಸಿರುವಳೆಂದುಕೊಂಡೆ. ಆ ದಂಪತಿಗಳು ಊಟ ಮಾಡುವುದೊತ್ತಟ್ಟಿಗಿರಲಿ ಮದುವೆಮನೆಯಲ್ಲಿಒಂದು ಕಪ್ಪು ನೀರು ಸಹ ಕುಡಿಯದೇ ಕಾರು ಹತ್ತಿದರು. ಅವರು ಅದಕ್ಕೆಲ್ಲ ಕರೆದರೆ ತಾನೆ? ಇದರಿಂದ ತ್ರಿಮೂರ್ತಿಗಳಾದ ನಮಗೂ ಬೇಸರವಾಯಿತು. ಒಬ್ಬೊಬ್ಬರು ಒಂದೊಂದು ನೆಪ ಹೇಳಿ ತಪ್ಪಿಸಿಕೊಂಡು ಹೊರಟು ನಮ್ಮ ನಮ್ಮ ಮನೆ ಸೇರಿದೆವು. +ಮದುವೆ ಆಯಿತು ಎಲ್ಲಾ ಆಯಿತು. ಇನ್ನು ನನಗೇನು ಕೆಲಸ ಕೊಟ್ಟೂರಿನಲ್ಲಿ? ಅಲ್ಲದೆ ಜಗನ್ನಾಥರೆಡ್ಡಿಯವರು ಹೇಳಿದ ಪ್ರಕಾರ ಬಂದಿದ್ದರೆ ಜೀವಕ್ಕೆ ಒಂದಿಷ್ಟು ನೆಮ್ಮದಿ ಇರುತ್ತಿತ್ತು. ಮದುವೆ ಮನೆಯಲ್ಲಿ ಊಟ ಮಾಡದೆ ಬಂದಿದ್ದ ನನ್ನ ಬಗ್ಗೆ ನಿಂಗಮ್ಮಜ್ಜಿಗೆ ತುಸು ಗೌರವ ಹೆಚ್ಚಿ ನನ್ನ ಮೊಮ್ಮಗ ಅಂದ್ರೆ ಹೀಗಿರಬೇಕು ಎಂಬಂಥ ಮಾತುಗಳನ್ನು ಆಡಿಕೊಂಡಿತು. ಜೊತೆಗೆ “ನಿನ್ನ ಮದ್ವಿ ನೋಡ್ತೀನೋ ಇಲ್ಲಾ ಹಂಗೇ ಕಣ್ಮುಚ್ತೀನೋ” ಎಂದು ನಿಟ್ಟುಸಿರು ಬಿಟ್ಟಿತು. ನಾನು ಅವರನ್ನು ಅವರ ಪಾಡಿಗೆ ಬಿಟ್ಟು ಒಂದು ದಿನ ಬಳ್ಳಾರಿ ಕಡೆ ಹೋಗುವ ಬಸ್ಸು ಹತ್ತಿದೆ. +* +* +* +ನನ್ನ ಗೈರುಹಾಜರಿಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ವಾಗಿಲಿ ಎಂಬ ಗ್ರಾಮವು ನೀರಲ್ಲಿ ಅದ್ದಿದ ಸುಣ್ಣದ ಭಟ್ಟಿಯಂತಾಗಿತ್ತು. ಆ ಘಟನೆಗಳಿಂದ ಯಾರೊಬ್ಬರು ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಯಾರ ಎದೆಯಲ್ಲಿ ಏನಿಟ್ಟುಕೊಂಡಿದ್ದಾರೋ ಎಂಬ ಭಯ ನಿರ್ಭಯವಾಗಿ ತಾಂಡವವಾಡತೊಡಗಿತ್ತು. ಯಾರೂ ಒಂಟಿಯಾಗಿ ಮಲಮೂತ್ರ ವಿಸರ್ಜನೆಗೆಂದು ಹೊರಗೆ ಹೋಗುತ್ತಿರಲಿಲ್ಲ. ಸಂಜೆಯಾಯಿತೆಂದರೆ ಕೂಡಲೆ ಎಲ್ಲರೂ ತಂತಮ್ಮ ಗೂಡುಗಳನ್ನು ಸೇರಿಕೊಂಡು ಬಿಡುತ್ತಿದ್ದರು. ಜಗನ್ನಾಥರೆಡ್ಡಿಯವರ ಪ್ರೇತ ಊರಲ್ಲಿ ತಿರುಗಾಡುತ್ತಿದೆ ಎಂಬುದೇ ಅವರ ಭಯಕ್ಕೆ ಕುಮ್ಮಕ್ಕು ಕೊಟ್ಟಿತ್ತು. ಅಮವಾಸೆಯ ಹಿಂದಿನ ದಿನವೇ ರೆಡ್ಡಿಯವರು ಬಡಗೇರ ಚನ್ನಪ್ಪಾಚಾರಿ ಮತ್ತು ರಾಗಪ್ಪನವರಿಗೆ ಒಂದು ಜೀಪು ಹತ್ತುವಂತೆ ಹೇಳಿದರಂತೆ. ಅವರಿಬ್ಬರು ಅಸ್ವಸ್ಥತೆಯ ಕಾರಣ ಹೇಳಿ ತಪ್ಪಿಸಿಕೊಂಡರಂತೆ. ಅದರ ಬದಲಿಗೆ ತಾನು ಬರುವುದಾಗಿ ಹೇಳಿದ ರಾಮಕ್ರಿಷ್ಣಾರೆಡ್ಡಿಗೆ ಮನೆಯ ಉಸ್ತುವಾರಿ ವಹಿಸಿಕೊಟ್ಟು ತನ್ನ ಬಲಗೈ ಭಂಟನಾದ ಅಕ್ಬರು, ಚಂದ್ರರ, ಲಸುಮರನ್ನು ಕರೆದುಕೊಂಡು ಜೀಪು ಹತ್ತಿದರಂತೆ. ಇವತ್ತೊಂದಿನ ಮನೆ ಬಿಟ್ಟು ಹೋಗಬೇಡಿ ನನಗ್ಯಾಕೋ ಭಯಾ ಅಗ್ತಿದೆ ಎಂದು ತಡೆಯಲೆತ್ನಿಸಿದ ಹೆಂಡತಿಗೆ ತಮ್ಮ ಸೊಂಟದಲ್ಲಿ ತುಂಬಿರುವ ಪಿಸ್ತೂಲಿರುವಾಗ ಯಾಕೆ ಭಯ? ಎಂದು ಧೈರ್ಯ ಹೇಳಿದರಂತೆ. +ಸಾಮಾನ್ಯವಾಗಿ ರೆಡ್ಡಿಯವರು ಎಲ್ಲಿಗೇ ಹೊಗಲಿ ಎಲ್ಲಿಂದಲೇ ಬರಲಿ ಇಂಥ ಕಡೆ ಹೋಗುತ್ತೇವೆ, ಇಂಥ ಕಡೆಯಿಂದ ಬರುತ್ತೇವೆ ಎಂದು ಯಾರಿಗೂ ಹೇಳುವುದಿಲ್ಲ. ಅದೇ ರೀತಿ ಅವರು ಕರ್ನೂಲಿಗೆ ಹೋಗುತ್ತಿರುವುದಾಗಿ ಕಳೆದೆರಡು ದಿನಗಳಿಂದ ಸುದ್ದಿ ಮಾಡಿದ್ದವರು ಅವರು ಹೊರಟಿದ್ದು ಪುಲಿವೆಂದುಲದ ಮೂಲಕ ಬಳ್ಳಾರಿ ಕಡೆಗೆ. ಸಾಮಾನ್ಯವಾಗಿ ಅವರು ದೂರ ಹೋಗಬೇಕೆಂದಾಗ ತಮ್ಮ ಕುಲ ದೈವವಾದ ಚಿನ್ನೋಬಳಂನ ನರಸಿಂಹ ಸ್ವಾಮಿ ದೇವರಿಗೆ ಕಾಯಿ ಕರ್ಪೂರ ಮಾಡಿಸದೇ ಇರುವುದಿಲ್ಲ. ತಮ್ಮ ಹಿರಿಯರೇ ಕಟ್ಟಿಸಿದ್ದ ಗೋಪುರದ ಹಿಂಭಾಗದ ಗರ್ಭಗುಡಿಯಲ್ಲಿ ಓರಂಗಲ್ ಪ್ರತಾಪರುದ್ರ ಗಜಪತಿ ಮಹಾರಾಜರ ಕಾಲದಿಂದಲೂ ನೆಲೆಗೊಂಡಿರುವ ನರಸಿಂಹದೇವರೆಂದರೆ ಹಿರಣ್ಯಕಶ್ಯಪನನ್ನು ಕೊಂದ ವಿಷ್ಣುವಿನ ನರಸಿಂಹಾವತಾರವಲ್ಲ, ಕ್ರಿಸ್ತಶಕ ಹದಿನಾಲ್ಕುನೂರು ತೊಂಬತ್ತರಲ್ಲಿ ಕೇರಳದಿಂದ ಆದಿವಿಷ್ಣುವಿನ ದರ್ಶನಾಕಾಂಕ್ಷಿಯಾಗಿ ಶ್ರೀಕಾಕುಳಂ ಕಡೆ ಪಾದಯಾತ್ರೆ ಹೊರಟಿದ್ದ ಶ್ರೀಮಂತ ಬ್ರಾಹ್ಮಣನೋರ್ವನ ಮೇಲೆ ಮತ್ತಾತನ ಕುಟುಂಬ ವರ್ಗದ ಮೇಲೆ ದರೋಡೆಕಾರರ ತಂಡವೊಂದು ಮರಣಾಂತಿಕವಾಗಿ ಧಾಳಿ ಮಾಡಿತು. ಎಲ್ಲರೂ ಕೊಲೆಯಾದರು. ಆದರೆ ಕೊನೆ ಉಸಿರು ಬಿಡುವ ಮುನ್ನ ಬ್ರಾಹ್ಮಣ ಪುಟ್ಟ ಪೆಟ್ಟಿಗೆಯಿಂದ ಒಂದು ಸಾಲಿಗ್ರಾಮವನ್ನು ಹೊರತೆಗೆದು ದರೋಡೆಕಾರರ ಗುಂಪಿನ ನಾಯಕನ ಕೈಗೆ ಕೊಡುತ್ತ ಇದನ್ನು ಭಕ್ತಿ ಶ್ರದ್ದೆಯಿಂದ ದಿನಂಪ್ರತಿ ಪೂಜೆ ಮಾಡು ಸಕಲ ಪಾಪ ಪರಿಹಾರವಾಗುತ್ತದೆ ಎಂದುಹೇಳಿ ಕೊಟ್ಟು ಪ್ರಾಣ ಬಿಟ್ಟನಂತೆ. ಆದರೆ ಆ ನಾಯಕ ಆ ಸಾಲಿಗ್ರಾಮವನ್ನು ಬೆಟ್ಟದ ತುದಿಯಿಂದ ಪೂರ್ವ ದಿಕ್ಕಿನತ್ತ ಎಸೆಯಲು ಅದು ಗಾಳಿಗುಂಟ ಐವತ್ತು ಹರದಾರಿ ಪ್ರಾಯಾಣ ಮಾಡಿ ಚಿನ್ನೋಬಳಂ ಬಳಿ ಜುಳು ಜುಳು ಹರಿಯುತ್ತಿದ್ದ ಹಂದ್ರಿ ನದಿಯ ದಡದಲ್ಲಿ ಬಿದ್ದಿತಂತೆ. ಅದು ಒಂದೊಂದು ಸಂದರ್ಭದಲ್ಲಿ ಒಂದೊಂದು ರೂಪ ಪ್ರಕಟಗೊಳ್ಳುತ್ತಿರಲು ಚಿನ್ನೊಬಳಂನ ಶತಾವಧಾನಿ ಶಿವರಾಮ ಶರ್ಮರು ಅದನ್ನು ಪ್ರತಿಷ್ಟಾಪಿಸಿ ಚಿಕ್ಕ ಗುಡಿ ಕಟ್ಟಿಸಿ ಸೇವಾಕೈಕರ್ಯ ಮಾಡಿದರಂತೆ. ನಂತರ ಚಕ್ರವರ್ತಿಗಳು; ಸಾಮಂತರು ಗುಡಿ ಗುಂಡಾರ ಕಟ್ಟಿಸಿ ನರಸಿಂಹದೇವರೆಂದು ಕರೆದು ಅದನ್ನು ಪ್ರಸಿದ್ಧಿಗೆ ತಂದರಂತೆ. ತನ್ನ ಮೆಚ್ಚಿನ ಭಕ್ತನ ಕೊಲೆ ಮೇಲಿನ ಸೇಡು ತೀರಿಸುವುದಕ್ಕೆಂದೋ ಏನೋ ನರಸಿಂಹ ದೇವರು ಇದುವರೆಗೆ ನಡೆದುಕೊಂಡವರನ್ನೂ ಬಿಟ್ಟಿಲ್ಲ, ನಡೆದುಕೊಳ್ಳದವರನ್ನೂ ಬಿಟ್ಟಿಲ್ಲ . ಅವರಿಗೆ ಅವರನ್ನು ಇವರಿಗೆ ಇವರನ್ನು ಬಲಿ ಕೊಡುತ್ತ ರಕ್ತ ತರ್ಪಣ ಮಾಡಿಸಿಕೊಳ್ಳುತ್ತ ಆಳುವ ವರ್ಗಗಳಲ್ಲಿ; ಜಮೀನ್ದಾರಿ ವರ್ಗಗಳಲ್ಲಿ ಹೆಚ್ಚು ಜನಪ್ರಿಯಗೊಂಡಿರುವ ನರಸಿಂಹದೇವರ ದರ್ಶನಾಕಾಂಕ್ಷಿಗಳಾಗಿ ವಾಗಿಲಿಯ ಜಗನ್ನಾಥ ರೆಡ್ಡಿಯವರು ಹೋದರೆಂದರೆ ಆಶ್ಚರ್ಯ ಪಡಬೇಕಿಲ್ಲ ಹಾಗೆ ಹೋಗಿ ಪೂಜೆ ಮಾಡಿಸಿ ಮಂಗಳಾರತಿ ತಟ್ಟೆಗೆ ನೂರು ಒಂದು ದಕ್ಷಿಣೆ ಹಾಕಲು ನರಸಿಂಹ ದೇವರು ಬಲ ಭುಜದ ಮೇಲಿಂದ ಆಶೀರ್ವದಿಸಿ ಶುಭ ಹಾರೈಸಿದರಂತೆ. ಇದರಿಂದ ಸುಪ್ರೀತರಾದ ಜಗನ್ನಾಥ ರೆಡ್ಡಿಯವರು ತಂಗರದೋಣಿಯ ತಮ್ಮಾರೆಡ್ಡಿ ತಿಂಗಳೊಪ್ಪತ್ತಿನಲ್ಲಿ ಸತ್ತರೆ ರುದ್ರಾಭಿಷೇಕ ಮತ್ತು ಅನ್ನ ಸಂತರ್ಪಣೆ ಮಾಡಿಸುವುದಾಗಿ ಕೈ ಮುಗಿದು ಬೇಡಿಕೊಂಡು ಪ್ರಾಯಣ ಬೆಳೆಸಿದರಂತೆ, ಕೊಂಡವೀಡು ಪರ್ವತ ಶ್ರೇಣಿಯ ಕಲ್ಲುದುಂಡೆಗಳನಡುವೆ ಹೋಗುತ್ತಿದ್ದಾಗ ಯಾರೋ ನಾಡಬಾಂಬುಗಳನ್ನೆಸದರಂತೆ, ತಮ್ಮಾರೆಡ್ಡಿ ಮೇಸೆ ತಿರುವುತ್ತಿರುವುದನ್ನು ನೋಡುತ್ತಲೆ ಜಗನ್ನಾಥರೆಡ್ಡಿ ಪ್ರಾಣ ಬಿಟ್ಟರಂತೆ. +ಇಷ್ಟೆಲ್ಲ ಹೇಳಿ ಗುರಪ್ಪ ನಿಟ್ಟುಸಿರು ಬಿಟ್ಟ. ನನಗೆ ಒಂದೆರಡು ದಿನ ಕೂಳು ನೀರು ಸೇರಲಿಲ್ಲ. ರೆಡ್ಡಿಯವರ ಮಗಳು ಪುಷ್ಪಾವತಿ ತಮ್ಮಾರೆಡ್ಡಿಯ ಮಗ ವೆಂಕಟರೆಡ್ಡಿಯೊಂದಿಗೆ ಹೋಗಿರುವಳಂತೆ. ಮಾನಪ್ಪಾಚಾರಿ, ರಾಘಪ್ಪಾಚಾರಿ ತಂಗರದೋಣಿಗೆ ಹೋಗಿ ತಲೆಮರೆಸಿಕೊಂಡಿರುವರಂತೆ. ರೆಡ್ಡಿಯವರ ಹಿರಿಯ ಮಗ ಪುರುಷೋತ್ತಮರೆಡ್ಡಿ ತಮ್ಮ ತಂದೆಯವರ ಸಮಾಧಿ ಮೇಲೆ ಉಡುದಾರ ಬಿಚ್ಚಿಟ್ಟು ತಾನು ತಮ್ಮಾರೆಡ್ಡಿಯನ್ನು ಕಡಿಯುವವರೆಗೆ ಉಡುದಾರ ಕಟ್ಟುವುದಿಲ್ಲ ಮತ್ತು ಗಡ್ಡ ಮೀಸೆ ತೆಗೆಯುವುದಿಲ್ಲವೆಂದು ಶಪಥ ಮಾಡಿರುವನಂತೆ. ಇಂಥ ಸುದ್ದಿಗಳಿಂದಾಗಿ ಇಡೀ ಗ್ರಾಮವೇ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿರುವುದು. ಸಹಜ ಬದುಕನ್ನು ಮರೆ ಮಾಚಿರುವುದು, ಊರೊಳಗೆ ಹತ್ತೆಂಟು ಮಂದಿ ಪೋಲೀಸರು ಟೆಂಟ್ ಹಾಕಿ ಗಸ್ತು ತಿರುಗುತ್ತಿರುವುದರಿಂದ ಮಕ್ಕಳು ಮರಿ ಬಾರದೆ ಸ್ಕೂಲೆಂಭೋ ಸ್ಕೂಲು ಬಿಕೋ ಎನ್ನುತ್ತಿರುವುದು. ಇಂಥ ಬಿಕೋ ವಾತಾವರಣದಲ್ಲಿ ಉಸಿರುಗಟ್ಟಿ ಕೂತಿದ್ದ ನನ್ನನ್ನು ಪೀಸಿ ಸಲೀಮ್ ಕರೆದು ಕೊಂಡು ಹೋಗಿ ಎಸೈಯವರಿಗೆ ಪರಿಚಯ ಮಾಡಿಸಿದ. ಮಾತಾಡ್ತಾ ಮಾತಾಡ್ತಾ ಅವರು “ನೀವು ಲೇಖಕರೆಂದರೆ ಯಾವ ನಮೂನೆ ಲೇಖಕರು, ಎಡಾನೋ ಬಲಾನೋ? ಎಂದು ಮಂಕಾಗಿ ಕೇಳಿದರು. ತಾವೂ ಒಂದಾನೊಂದು ಕಾಲದಲ್ಲಿ ನಕ್ಸಲೈಟರ ಗುಂಪಿನಲ್ಲಿದ್ದು ಕೆಲಸ ಮಾಡಿದುದಾಗಿ ಹೇಳಿದರು. ನಾನೂ ಹ್ಹೂಂ ಗುಟ್ಟುತ್ತ ಕೇಳುತ್ತಿದ್ದೆ. ಕಾಮ್ರೇಡ್ ಗಣಪತಿ ಫ್ಯಾನ್ ಕಣ್ರೀ ನಾನು ಅವ್ರೆಲ್ಲಿದ್ದಾರಂತ ನಿಮ್ಗೇನಾದ್ರು ಗೊತ್ತಿದ್ರೆ…” ಎಂದು ರಾಗ ಎಳೆದರು. ಗಣಪತಿಯನ್ನು ನಾನು ಒಂದೆರಡು ಬಾರಿ ಬೆಟ್ಟಿಯಾಗಿದ್ದೆ. ಆತ ಲಕ್ಷ್ಮಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಕಥೆಗಳೆಂದರೆ ನನಗೆ ತುಂಬ ಇಷ್ಟ. ಆತ ಆಂಧ್ರದ ಪೋಲಿಸ್ ವ್ಯವಸ್ಥೆಗೆ ತಲೆನೋವಾಗಿವವನು. ಆತನ ತಲೆಗೆ ಒಂದು ಲಕ್ಷ ಬಹುಮಾನವನ್ನು ಸರಕಾರ ಘೋಷಿಸಿರುವುದು. ಎಸೈ ನನ್ನ ಮೇಲೆ ಬೀಸಲೆತ್ನಿಸಿದ ಬಲೆಗಳೆಲ್ಲ ವಿಫಲವಾದವು. ಏನೋ ಒಂದು ಹೇಳಿ ತಪ್ಪಿಸಿಕೊಂಡು ಹೊರಬಂದೆ. ನಾವಿಲ್ಲಿ ಈ ಪ್ರಕಾರವಾಗಿ ಗೋಳಾಡುತ್ತಿರುವ ಸಂಧರ್ಬದಲ್ಲಿ ಶಾಮ ನೆನಪಾಗದೆ ಇರಲಿಲ್ಲ. ಅವನು ಹೆಂಡತಿಯೊಂದಿಗೆ ಹನಿಮೂನ್‌ಗೆ ಹೋಗಿಬಂದಿರಬಹುದು ಈಗಾಗಲೆ ಎಂದುಕೊಂಡೆ. ಒಟ್ಟಿನಲ್ಲಿ ಅವನು ಒಂದು ರೀತಿ ಸಂತೃಪ್ತ ಬದುಕು ಅನುಭವಿಸುತ್ತಿದ್ದರಷ್ಟೆ ಸಾಕು ಎಂದುಕೊಂಡೆ. ಬಹಳ ದಿನ ನಾನು ಊರಕಡೆ ಸುಳಿಯಲಿಲ್ಲ. ವರ್ಗಾವಣೆಗೆ ಅವರಿವರ ಕೈ ಕಾಲು ಕಟ್ಟಿ ಅಂತೂ ಯಶಸ್ವಿಯಾದೆ. ವಾಗಿಲಿಯಿಂದ, ಈ ಕಾದಂಬರಿ ಬರೆಯುತ್ತಿರುವ ಗ್ರಾಮಕ್ಕೆ ವರ್ಗವಾಗಿ ಬಂದು ಹತ್ತು ವರ್ಷದ ಮೇಲಾಯಿತು ಎಂಬಲ್ಲಿಗೆ ಕುಂವೀ ಎಂಬ ಹುಲುನರವಿರಚಿತ ಶಾಮಣ್ಣ ಎಂಬ ಕಥಾನಕದ ತೃತೀಯಶ್ವಾಸಂ ಸಮಾಪ್ತಿಯಾದುದು. +ಜಯಮಂಗಳಂ ನಿತ್ಯ ಶುಭ ಮಂಗಳಂ +***** +ಮುಂದುವರೆಯುವುದು +ಕೀಲಿಕರಣ: ಎಂ ಎನ್ ಎಸ್ ರಾವ್ +ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […] +“ನಿನಗೆ ಒಪ್ಪಿಗೆಯೇ?” ಎಂದನು ಶಬರ. “ಓಹೋ, ಒಪ್ಪಿಗೆ” ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_527.txt b/Kannada Sahitya/article_527.txt new file mode 100644 index 0000000000000000000000000000000000000000..b5d9eeb841acc3defc4cbeb34b0d59fadb9ade16 --- /dev/null +++ b/Kannada Sahitya/article_527.txt @@ -0,0 +1,72 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!” – ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ +(ಎಚ್ಚರ ಮನಸ್ಸು ಸುಪ್ತ ನೀಚತೆಯನ್ನು ಮುಚ್ಚಲು ಹವಣಿಸುತ್ತದೆ, ನುಸುಕಿನ ಮಂದ ಕಿರಣಗಳು ಕತ್ತಲೆಯ ವೈಭವವನ್ನು ಮುಚ್ಚಲು ಪ್ರಯತ್ನಿಸಿದಂತೆ!) +ಜಾರ್ಡೈನ್ ವಸತಿಗಳು ಮ್ಯಾನ್ಹಾಟನ ನಲ್ಲಿ ಕೆ.ಎಸ್. ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಅಗ್ಗದ ನಿವಾಸಸ್ಥಳ. ನವದಂಪತಿಗಳಿಗೆ, ಪಿ‌ಎಚ್‌ಡೀ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದಂತಹಾ ಜಾಗ. ವಿಶಾಲ, ನಿರ್ಜನ, ಶಾಂತಿಯುತ ಸಮುದಾಯ. ಇದೇ ನನ್ನ ಸಧ್ಯದ ವಾಸಸ್ಥಳ. ಆದರೆ ನಾನು ವಿವಾಹಿತನೂ ಅಲ್ಲ, ಡಾಕ್ಟರೇಟ್ ಪದವಿಗಾಗಿ ಓದುತ್ತಲೂ ಇಲ್ಲ. ಕೆಲವು ದಿವಸ ತುಂಬಿದ ವಿದ್ಯಾರ್ಥಿಗೃಹಗಳಿಂದ ದೂರವಿರಲು ಇಲ್ಲಿಗೆ ಬಂದ ಬಡ ಬ್ರಾಹ್ಮಣ ಬ್ರಹ್ಮಾಚಾರಿ. ಜಾರ್ಡೈನ್ ಗೆ ಬಂದ ಕೆಲವೇ ತಿಂಗಳಲ್ಲಿ ನನಗೆ ಕಾಲವೇ ನಿಂತ ಅನುಭವವಾಯಿತು. ಬೆಳಗ್ಗಿನ ತರಗತಿಗಳಿಗೆ ಹೋಗಲಿಲ್ಲವೆಂದರೆ ದಿನಗಟ್ಟಲೇ ಜೀವಂತ ಪ್ರಾಣಿಗಳ ನೋಟವೇ ಸಿಗುತ್ತಿರಲಿಲ್ಲ. ಎರಡು ಕಾಲಿನ ಮೇಲೆ ನಿಂತ ಮನುಷ್ಯರನ್ನು ನೋಡಲೆಂದೇ ವಾಕಿಂಗಿಗೆ ತೆರಳುತ್ತಿದ್ದೆ. ಆದರೆ ಮನೆಯಿಂದ ಹೊರಬಿದ್ದನೆಂದರೆ ಕಾಣುತ್ತಿದ್ದದ್ದು ಮನಸ್ಸಿಗಿನ್ನು ಕಸಿವಿಸಿಯುಂಟು ಮಾಡುವಂತಾದ್ದು. ವಿವಾಹಿತ ಜೋಡಿಗಳು ಕೈಯಲ್ಲಿ ಕೈಹಿಡಿದು ಸದ್ದಿಲ್ಲದೇ ಡ್ಯುಯೆಟ್ ಹಾಡುತ್ತಾ ಆನಂದದಿಂದ ಜಾರ್ಡೈನ್ ನ ಈ ತುದಿಯಿಂದ ಆ ತುದಿಯ ತನಕ ವಾಕ್ ಮಾಡುತ್ತಿದ್ದುದು ಸಾಮಾನ್ಯ. ನನ್ನ ಒಂಟಿತನಕ್ಕೆ ಸವಾಲಿಟ್ಟಂತಾಗುತ್ತಿತ್ತು ಈ ನೋಟಗಳು. ಸೆಪ್ಟೆಂಬರ್‍ನ ತಣ್ಣನೆಯೆ ರಾತ್ರಿಗಳಲ್ಲಿ ಒಂಟಿಯಾಗಿ ವಾಕ್ ಮಾಡುವಾಗ ಕೆಲವೊಮ್ಮೆ ಯೋಚಿಸುತ್ತಿದ್ದೆ. ನನ್ನೊಡನೆ ಸಂಗಾತಿಯಾಗಿ ಒಂದು ಭೂತವಿದ್ದರೂ ಸಾಕಿತ್ತು, ನಾನು ಮಾಡುತ್ತಿದ್ದ ಅಡುಗೆಯನ್ನು ಕದ್ದುಮುಚ್ಚಿಯಾದರೂ ತಿನ್ನುತ್ತಿತ್ತು. ಮನೆಯಲ್ಲಿ ನಾನು ಮಾಡಿದ ಕೊಳಕ್ಕನ್ನು ಬಿಟ್ಟು ಬೇರೆಯೊಬ್ಬರು ಮಾಡಿದ ರಾದ್ಧಾಂತವಾದರೂ ನೋಡುವುದಕ್ಕೆ ಸಿಗುತ್ತಿತ್ತು. ಅದಕ್ಕೆ ಅಂತಹಾ ಕೆಟ್ಟ ಪೈಶಾಚಿಕ ಪ್ರವೃತ್ತಿಯಿರದಿದ್ದರೆ, ಸಣ್ಣದಾಗಿ ಜಗಳವಾದರೂ ಆಡಬಹುದೆಂದು ಯೋಚಿಸಿ ಮನಸ್ಸಿನಲ್ಲಿಯೇ ಒಮ್ಮೆ ಹಾಗೆ ನಟಿಸಿದ್ದೆ. +ಡಿಸೆಂಬರ್ ಬರುತ್ತಿದ್ದಂತೆಯೇ ಈ ತರಹದ ಯೋಚನೆಗಳು ಹೆಚ್ಚಾದವು. ಇನ್ನು ಒಂಟಿಯಾಗಿರುವುದು ಕ್ಷೇಮವಲ್ಲವೆಂದು ಅರಿತು ಪುನಃ ದೇಸಿ ವಿದ್ಯಾರ್ಥಿಗಳ ಮನೆಯೊಂದನ್ನು ಹುಡುಕಿ ಜಾರ್ಡೈನ್‌ನಿಂದ ಜಾಗ ಖಾಲಿಮಾಡಲು ತಯಾರಿ ನಡೆಸಿದೆ. ಆದರೆ ನನ್ನ ಕರ್ಮಕ್ಕೆ ನನ್ನ ಒಂಟಿತನ ನನ್ನ ಜೊತೆಗೇ ಈ ಹೊಸ ಮನೆಗೂ ಕಾಲಿಟ್ಟಿತು. ಡಿಸೆಂಬರ್‍ನ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಇಡೀ ಮ್ಯಾನ್ಹಾಟನ್ನೇ ಖಾಲಿಯಾಗುತ್ತದೆ. ಭಾರತೀಯ ವಿದ್ಯಾರ್ಥಿಗಳು ತಿಂಗಳ ರಜೆಗೆ ಭಾರತಕ್ಕೋ ಅಥವ ಅಮೇರಿಕ ಟೂರ್‍ಗೋ ತೆರಳುತ್ತಾರೆ. ಆರು ಜನರಿರುವ ಮನೆಯಲ್ಲಿ ಈಗ ಎರಡೇ ಜೀವಗಳು. ಒಬ್ಬನ ಮುಖ ಇನ್ನೊಬ್ಬ ನೋಡುವುದಕ್ಕೆ ೨-೩ ದಿನದ ಮುಂಚೆಯೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಸಂದರ್ಭ.. ಆದರೆ ನಾನು ದೃತಿಗೆಡಲಿಲ್ಲ. ೧ ವರ್ಷ ಏಕಾಂಗಿಯಾಗಿದ್ದವ ಇನ್ನೊಂದು ತಿಂಗಳು ಇರಬಲ್ಲೆನೇ ಎಂದು ಸುಮ್ಮನಿದ್ದೆ. ಕ್ರಿಸ್‌ಮಸ್ ತನಕ ಏನೂ ತೊಂದರೆಯಿಲ್ಲದೇ ಒಂಟಿತನ ಮುಂದುವರೆಸಿದೆ. +ಭೃಗೂಚಿ ಪುರಾತನ ಭಾಷೆ. ಇಂದಿನ ಕಾಲದವರಿಗೆ ಅರ್ಥವಾಗುವಂತೆ ಹೇಳಬೇಕೆಂದರೆ ಇಗೋ ಒಂದು ಸಣ್ಣ ಕತೆ. ಕಂಪ್ಯೂಟರ್‍ಗಳು ಬಂದಮೇಲೆ ಭಾಷೆಗಳು ವಿಕಾಸವಾದವಲ್ಲ, ಹಾಗೆಯೇ ಮನುಷ್ಯನ ಭಾಷೆಗಳು. ಮೊದಲು ಮಷೀನ್ ಲೆವಲ್ ಭಾಷೆ. ನಂತರ ಹೆಚ್ಚಿನ ನೈಪುಣ್ಯತೆ ಹಾಗು ಸುಧಾರಿತ ಹಾರ್ಡ್ ವೇರ್‍ಗಳು ಸೇರುತ್ತಾ ಹೋದಂತೆ ಹಲವು ಭಾಷೆಗಳು ಬೆಳೆದವಲ್ಲವೇ.. ಹಾಗೆಯೇ ಮನುಷ್ಯನ ಭಾಷೆಗಳೂ ಕೂಡ. ಭೃಗೂಚಿ ಜೀವಕುಲದ ಮೊತ್ತಮೊದಲ ಬುದ್ಧಿವಂತ ಭಾಷೆ. ಆಗಿನ ಕಾಲಕ್ಕೆ ಅದೊಂದು ಅವಿಷ್ಕಾರವೇ ಸರಿ. ಜಗತ್ತಿನಲ್ಲಿ ಯಾರುಬೇಕಾದರೂ ಮಾತಾಡಬಲ್ಲ ಭಾಷೆ ಅದು. ಪ್ರಾಣಿ ಪಕ್ಶಿ ಪಿಶಾಚಿಗಳಿಂದ ಹಿಡಿದು ಮನುಷ್ಯ, ದೇವ ಭೂತಗಳೆಲ್ಲರೂ ಮಾತಾಡಬಲ್ಲ ಸಾಮಾನ್ಯ ಭಾಷೆಯದು. ತದನಂತರವೇ ಬಂದಿದ್ದು ಪ್ರತ್ಯೇಕ ಪಂಗಡಗಳಿಗೆ ಪ್ರತ್ಯೇಕ ಭಾಷೆ. ಮೊದಲಿಗೆ ದೇವತೆಗಳು ತಮ್ಮದೇ ಆದ ಗುಪ್ತ ಭಾಷೆ ಬೆಳೆಸಿಕೊಂಡರು. ಅದನ್ನದುಮಿಕ್ಕಲು ಭೂತ ಪ್ರೇತಗಳು ತಮ್ಮದೇ ಆದ ಭಾಷೆ ಉಪಯೋಗಿಸಿದರು.. ಹೀಗೆ. ಒಟ್ಟಿನಲ್ಲಿ ಆಗಿನ ಕಾಲಕ್ಕೇ ಮಷೀನ್ ಇಂಡಿಪೆಂಡೆಂಟ್ ಭಾಷೆಯೊಂದಿತ್ತು; ಭೃಗೂಚಿ. ಅಲ್ಲಿಂದ ಮುಂದೆ, ಭಾಷಾವಿಕಸನ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದೂ, ಪಾಣಿನಿಯ ಸಂಸ್ಕೃತವು ಅಂದಿನ ಕಾಲದ ಸಿ ಆದದ್ದೂ ಇನ್ನೊಂದು ಕಥೆಯೇ. ಇದರ ಕಥೆ ಹೇಳಲು ಮತ್ತೊಂದು ಪುಸ್ತಕವೇ ಬೇಕೇನೊ! +ಭೃಗೂಚಿ ಭಾಷೆ ಆ ಕಾಲದ ಜೀವಿಗಳ ಮಿಡಿತವನ್ನು ಸೆರೆಹಿಡಿದಿದೆ. ಜೀವಿಗಳ ಭಾವನೆಗಳು ಇಂದಿನಂತೆ ಸುಧಾರಿತವಾಗಿರಲಿಲ್ಲ ಆ ಪುರಾತನ ಕಾಲದಲ್ಲಿ, ಕೆಟ್ಟದ್ದು ಒಳ್ಳೆಯದು ಇವುಗಳ ನಡುವೆ ವ್ಯತ್ಯಾಸವೇ ಇರದಿದ್ದ ಕಾಲ ಅದು. (ಇವತ್ತು ಅದೇ ತರಹದ ಯೋಚನಾ ಲಹರಿಗಳು ಬರುತ್ತಿರುವುದರಿಂದಲೇ ಈ ಕಥೆಗೆ ಮಹತ್ವ ಇದೆ ಅನ್ನಿ) ದೇವತೆಗಳು, ಭೂತ ಪಿಶಾಚಿ ಮನುಷ್ಯ ಹಾಗು ಇತರೆ ಜೀವಸಂಕುಲಗಳೆಲ್ಲವಕ್ಕೂ ಭೂಮಿಯೇ ಅಂದು ವಾಸಸ್ಥಾನ. ಅಂದೂ ಇವತ್ತಿನಂತೆ ದೇಶ ರಾಷ್ತ್ರಗಳೆಂಬ ಗಡಿಗಳು ಒಂದು ಜಾಗದ ಜೀವಿಗಳನ್ನು ಇನ್ನೊಂದು ಜಾಗದ ಜೀವಿಗಳಿಂದ ಬೇರ್ಪಡಿಸಿದ್ದವಂತೆ. ಅದರ ಪಳೆಯುಳಿಕೆಗಳೇ ಇಂದು ನಾವು ಕಂಡುಹಿಡಿದಿರುವ ಪುರಾತನ ನಾಗರೀಕತೆಗಳು. ಇವೆಲ್ಲವೂ ಇರುವಿಗೆ ಬಂದಿದ್ದು ಒಂದೇ ಕಾಲದಲ್ಲಿಯೇ.. ನಮ್ಮ ವಿಙ್ನಾನಿಗಳಿನ್ನೂ ಇವೆಲ್ಲವನ್ನು ಕಂಡುಹಿಡಿದಿಲ್ಲ ಬಿಡಿ. ಆ ಕಾಲಕ್ಕೆ, ನಮ್ಮ ಭಾರತೀಯ ದೈವಗಳೂ, ಅವರ ದೇವಗಣಗಳೂ, ನಮ್ಮ ರಾಕ್ಷಸರೂ ಬಹಳ ಪ್ರಬಲವಂತೆ. ನಮ್ಮ ಪುರಾಣಗಳೇನು ಸುಳ್ಳಲ್ಲ.. ಆದರೆ ಕೆಲವೊಮ್ಮೆ ಕಾಲಗತಿಯಲ್ಲಿ ಸ್ವಲ್ಪ ಎಡವಟ್ಟಾಗಿದೆಯಷ್ಟೆ. ಹಾಗೆಯೇ ಈಜಿಪ್ಟಿನಲ್ಲೂ ಕೂಡ ಅಲ್ಲಿನ ರಾಜರು ಅಲ್ಲಿನ ದೇವ ಭೂತಗಳೊಡನೆ ನೇರವಾಗಿ ವ್ಯವಹರಿಸುತ್ತಿದ್ದರಂತೆ. ದೇಶಗಳ ಮಧ್ಯೆ ಕಾಳಗವೆಸಗಿದಾಗ ಮಾನವ, ದಾನವ ಎಂಬ ವ್ಯತ್ಯಾಸವಿಲ್ಲದೇ ತಮ್ಮ ತಮ್ಮ ದೇಶಗಳಿಗಾಗಿ ಎಲ್ಲರೂ ಸೇರಿ ಹೊಡೆದಾಡುತ್ತಿದ್ದದು ಸಾಮಾನ್ಯ. ಆದರೆ ಭಾರತ ಮತ್ತು ಈಜಿಪ್ಟಿನ ನಾಗರೀಕತೆಗಳು ಸಮಬಲವಾದ್ದರಿಂದ ಒಂದುತರಹ ಶೀತಲಸಮರ ಬಿಟ್ಟರೆ ಮಿಕ್ಕಂತೆ ಇವೆರೆಡರ ಮಧ್ಯೆ ಹೆಚ್ಚುಕಮ್ಮಿ ಶಾಂತಿಯೇ ಇತ್ತು ಬಿಡಿ. ಒಟ್ಟಿನಲ್ಲಿ ಬಹಳವಾಗಿ ಇಂದಿನ ಪರಿಸ್ಥಿತಿಯೇ.. ಆದರೆ ಈಗಿನಷ್ಟು ಹೋಮೋಜೆನಿಟಿ ಇರಲಿಲ್ಲ. +ಇವನಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂದು ನೀವು ಯೋಚಿಸುತ್ತಿರಬಹುದು. ಬಂದೆ, ಅಲ್ಲಿಗೇ ಬಂದೆ. ಸುಪ್ತಮನಸ್ಸಿನಲ್ಲಿ ಯಾವ ಬಗೆಯ ಯೋಚನೆಗಳು ಬರುವವೋ ಅದು ಭಗವಂತನಿಗೂ ಗೊತ್ತಿರದ ವಿಷಯವಿರಬಹುದು (ಅವನ ಸುಪ್ತ ಮನಸ್ಸಿನ ಯೋಚನೆಗಳನ್ನು ಅರಿತವರ್ಯಾರು!). ಜಾರ್ಡೈನ್ ನಿಂದ ಮನೆ ಖಾಲಿ ಮಾಡಿದ ಮೇಲೆ ನನಗೆ ಒಂದು ಅನಿರೀಕ್ಷಿತ ಮಾಹಿತಿ ದೊರೆಯಲಾರಂಭಿಸಿತು. ಜಾರ್ಡೈನ್ ಆನ್-ಕ್ಯಾಂಪಸ್ ವಸತಿವೃಂದ. ಅಲ್ಲಿ ಇಂಟರ್ನೆಟ್ ಕನೆಕ್ಷನ್ ವಿಶ್ವವಿದ್ಯಾಲಯದ್ದು. ಅದರಿಂದಾಗಿ ನನಗೆ ಬೇಕಾದ ಸಂಗೀತವನ್ನು ಅಂತರ್ಜಾಲದಿಂದ ಇಳಿಸಲಾಗುತ್ತಿರಲಿಲ್ಲ. ನಾನು ಹೊಸದಾಗಿ ಬಂದ ಜಾಗ ಕಾಲೇಜ್ ಹೈಟ್ಸ್ ಅಂತ. ಇದು ಖಾಸಗೀ ಜಾಗವಾದ್ದರಿಂದ ಅಂತರ್ಜಾಲದಲ್ಲಿ ಏನು ಬೇಕಾದರು ಮಾಡಬಹುದು. ತಕ್ಶಣವೇ ಶುರುಮಾಡಿದೆ ನೋಡಿ, ಮೊದಲೇ ಒಂಟಿ ಜೀವ, ಸೊರಗಿದ್ದ ನನ್ನ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗ್ರಹವನ್ನು ಇನ್ನಿಲ್ಲದಂತೆ ವೃದ್ಧಿಸಿದೆ. ಗೋಥೆನ್‌ಬರ್ಗ್ ಶೈಲಿಯ ಹಾಡುಗಳಿಂದ ಹಿಡಿದು ಓWಔಂಆ‌ಒ (ಟಿeತಿ ತಿಚಿve oಜಿ ಚಿmeಡಿiಛಿಚಿಟಿ ಜeಚಿಣh meಣಚಿಟ), goಡಿe gಡಿiಟಿಜ, veಜiಛಿ meಣಚಿಟ, ಹೀಗೆ ಜಗತ್ತಿನ ನಾನಾ ಮೂಲೆಗಳಿಂದ ತಯಾರಿಸಲ್ಪಟ್ಟ ಮೆಟಲ್ ಸಂಗೀತ ತಾನಾಗಿಯೇ ನನ್ನ ಬಾಗಿಲನ್ನು ಬಡಿಯಲು ಪ್ರಾರಂಭಿಸಿತು. +ಮೆಟಲ್ ಸಂಗೀತದಲ್ಲಿ ಒಂದು ವಿಶೇಷವಿದೆ. ದೂರಕ್ಕೆ ನೋಡಿದರೆ ಇದು ಸಂಗೀತವೇ ಅಲ್ಲ. ಸ್ವಲ್ಪ ಹತ್ತಿರದಿಂದ ಬಲ್ಲವರಿಗೆ ತಿಳಿಯುತ್ತದೆ ಇದು, ಮನುಷ್ಯನ ವಿಕಾರಗಳನ್ನು ಸಂಗೀತದ ಮೂಲಕ ತೆರೆದಿಡುವ ಪ್ರಯತ್ನ ಅಂತ. ನನ್ನ ಬ್ಲಾಗನ್ನು ನೋಡಿದರೆ ಕೆಲವೊಮ್ಮೆ ಈತರಹದ ಬರಹಗಳನ್ನು ನೀವು ಗುರುತಿಸಬಹುದು. ಆದರೆ, ತೀರ ಸನಿಹದಿಂದ ನೋಡಿ. ವಿಚಿತ್ರ ಸಂಗತಿಯೊಂದು ಬಯಲಾಗುತ್ತದೆ. ಇಂದು ಅತ್ಯಂತ ಸುಪ್ರಸಿದ್ಧ ಮೆಟಲ್ ಬ್ಯಾಂಡುಗಳು ತಯಾರಿಸುವ ಸಂಗೀತ ಪುರಾತನ ನಾಗರೀಕತೆಗಳಿಗೆ ಸಂಬಂಧಿಸಿದ್ದು. ಉದಾಹರಣೆಗೆ, ರುದ್ರ: ಸಿಂಗಾಪುರದ ತಂಡ. ಇವರ ವಿಷಯ ಪುರಾತನ ವೈದಿಕ ನಾಗರೀಕತೆ, ನೈಲ್, ಬೆಹಿಮೋತ್, ಮಾರ್ಬಿಡ್ ಏಂಜಲ್: ಇವುಗಳ ವಿಷಯ ಈಜಿಪ್ಟ್/ಸುಮೇರಿಯನ್ ನಾಗರೀಕತೆ. ಯೂರೋಪಿನ ಅನಂತ ಬ್ಲಾಕ್ ಮೆಟಲ್ ತಂಡಗಳ ವಿಷಯ: ನಾರ್ಡಿಕ್, ವೈಕಿಂಗ್ ಪುರಾಣಗಳು. ಆದರೆ ಕೆಲವು ಅರೆಬೆಂದ ಮೆಟಲ್ ಬ್ಯಾಂಡ್‌ಗಳೂ ಇವೆಯನ್ನಿ. ಇವುಗಳ ಸಂಗೀತ ಭೂತ ಪಿಶಾಚಿಗಳದ್ದು, ಮನುಷ್ಯನ ಮಾನಸಿಕ ವಿಕಾರಗಳನ್ನು ತೆರೆದಿಡುವ ಸ್ಪರ್ಧೆ ಇವುಗಳ ನಡುವೆ. ಈ ತರಹದ ಬ್ಯಾಂಡ್‌ಗಳ ವಿಷಯವನ್ನೂ ಪ್ರಸ್ತಾಪಿಸಿದ್ದೇನೆ ನನ್ನ ಬ್ಲಾಗಿನಲ್ಲಿ.. ಹೋಗಲಿ ಬಿಡಿ.. ಇಂತಹ ಸಂಗೀತದ ರುಚಿಯುಳ್ಳವರೇ ತೀರ ಕಮ್ಮಿ ಈ ಜಗತ್ತಿನಲ್ಲಿ. ಅಲ್ಲ್ದೇ, ಇವೆಲ್ಲವನ್ನು ಅರ್ಥೈಸಿಕೊಂಡೂ, ಎಲ್ಲಾ ನಾಗರೀಕತೆಗಳ ಬಗ್ಗೆ ಬರೆದಿರುವಂತಹ ಸಂಗೀತವನ್ನು ಒಟ್ಟಿಗೇ ಕೇಳುತ್ತಿರುವಂತಹ ಶ್ರೋತೃಗಳು ಇನ್ನೂ ವಿರಳ. ನನ್ನಂತಹ ಬ್ರಾಹ್ಮಣ ಬ್ರಹ್ಮಾಚಾರಿಗೆ ಈ ಚಟ ತಗುಲಿದ್ದು ನನ್ನ ಪೂರ್ವಜನ್ಮಗಳ ಕರ್ಮವೆಂದೇ ನನ್ನ ಪ್ರಬಲವಾದ ನಂಬಿಕೆ. +ಒಟ್ಟಿನಲ್ಲಿ ಹೇಳುವುದಾದರೆ, ಇಂದು, ಭೃಗೂಚಿ ಭಾಷೆಯ ಕಾಲದ ನಾಗರೀಕತೆಗಳ ಬಗ್ಗೆ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗೀತದಲ್ಲಿ ಉಲ್ಲೇಖವಿದೆ. ಆದರೆ, ಭೃಗೂಚಿ ಭಾಷೆಯಾಗಲಿ ಅಥವ ಅಂದಿನ ಕಾಲದ ಅಂತರ್-ನಾಗರೀಕತೆಯ ಯುದ್ಧಗಳ ಬಗ್ಗೆಯಾಗಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ನನ್ನ ಮೆಟಲ್ ಸಂಗೀತದ ಸಂಗ್ರಹವನ್ನು ವಿಸ್ತರಿಸುವ ಗಡಿಬಿಡಿಯಲ್ಲಿ ಅಕಸ್ಮಾತ್ತಾಗಿ ಈ ಎಲ್ಲಾ ಸಂಗತಿಗಳು ತುಂಡು ತುಂಡಾಗಿ ನನ್ನ ಕಿವಿಗೆ ಬೀಳಲು ಪ್ರಾರಂಭವಾದದ್ದು ಇತ್ತೀಚೆಗಷ್ಟೆ. +ಮ್ಯಾನ್ಹಾಟನ್ ವಿಚಿತ್ರವಾದ ಜಾಗ. ಇಲ್ಲಿ ಒಂದೇ ದಿನದಲ್ಲಾಗುವ ಹವಾಮಾನದ ಏರುಪೇರುಗಳು ಹಲವು ಸ್ಥಳಗಳಲ್ಲಿ ಒಂದು ವರ್ಷದಲ್ಲಿಯೂ ಆಗುವುದು ವಿರಳವೇ. ಉತ್ತರ ಅಮೇರಿಕಾದ ಭೌಗೋಳಿಕ ಕೇಂದ್ರಬಿಂದುವಿಗೆ ಬಹಳ ಸಮೀಪ ಮ್ಯಾನ್ಹಾಟನ್. ನಾನೀಗಿರುವ ಜಾಗ, ಕಾಲೇಜ್ ಹೈಟ್ಸ್, ಕೆ. ಎಸ್. ಯೂ ವಿಶ್ವವಿದ್ಯಾನಿಲಯದ ನ್ಯೂಕ್ಲಿಯರ್ ರಿಯಾಕ್ಟರ್ ನ ತೀರ ಸಮೀಪದಲ್ಲಿದೆ. ನಮ್ಮ ಮನೆಯೋ ಮೂರು ಮಹಡಿಯ ಕಟ್ಟಡ. ನನ್ನ ರೂಮಿರುವುದು ಬೇಸ್‌ಮೆಂಟಿನಲ್ಲಿ. ಕಿಟಕಿಯಿ ನೋಟದಲ್ಲಿ ವಿಶೇಷವೇನು ಇಲ್ಲ ಬಿಡಿ (ಯಾವ ಹುಡುಗಿಯರೂ ಕಾಣುವುದಿಲ್ಲ ಇಲ್ಲಿ!) ಆದರೆ, ಭೂಮಿಯ ಒಳಗಿಂದ ಆಕಾಶದೆಡೆಗೆ ನೋಡಿದಂತಾಗುವ ಅನುಭವ ಮಾತ್ರ ರೋಮಾಂಚಕ. ನಾನಿಲ್ಲಿ ಸಧ್ಯಕ್ಕೆ ಏಕಾಂಗಿಯಾಗಿ ಇರಲು ಪ್ರಾರಂಭಿಸಿದ್ದೂ, ಮೆಟಲ್ ಸಂಗೀತವನ್ನು ೨೪/೭ ಕೇಳಲು ಶುರುಮಾಡಿದ್ದು ನಿಮಗೆ ತಿಳಿದ ವಿಚಾರವೆ. +ತೋಚಿದ ಕಾಲಕ್ಕೆ ನಿದ್ದೆ, ತೋಚಿದ ಕಾಲಕ್ಕೆ ಊಟ. ಒಂದು ದಿನ ರಾತ್ರಿ ನಾಲ್ಕು ಗಂಟೆಗೆ ನೈಲ್‌ನ “ಣhe bಟesseಜ ಜeಚಿಜ” ಹಾಡು ಕೇಳಿ ಮಲಗಿದೆ. ನಿದ್ದೆ ಬರದೇ ಬೆಳಗಿನಜಾವದ ತನಕ ಹಾಸಿಗೆಯಲ್ಲಿ ಹೊರಳಾಡುತ್ತಿದ್ದೆ. ಸುಮಾರು ೬:೩೦ಯ ಹೊತ್ತಿಗೆ ನಿದ್ದೆ ಬಂದ ಹಾಗಾಯಿತು. ನುಸುಕಿನ ಬೆಳಕು ಕಿಟಕಿಯ ವಿಂಡೋ ಪೇನ್ ಮೂಲಕ ಒಳಗೆ ಸೇರಲು ಹಣಾಹಣಿ ನಡಿಸಿತ್ತು. ಕತ್ತೆತ್ತಿ ನೋಡಿದರೆ ಕಿಟಕಿಯ ಹಿಂಭಾಗದಲ್ಲಿರುವ ಬೋಳುಮರದ ಕೊಂಬೆಯ ತುದಿಯಲ್ಲಿ ಎನೋ ವಿಚಿತ್ರವಾದ ಪ್ರಾಣಿ ಕಾಣಿಸಿತು. ಹೀಟರ್ ಬಂದ್ ಮಾಡಿದ್ದ ನನ್ನ ರೂಮ್-ಮೇಟ್ ಧಡಕ್ಕನೆ ಕದ ತೆಗೆದು ಒಳಗೆ ಬಂದ. ಬೆಚ್ಚಿ ಬಿದ್ದೆ. ಹೆದರಿದ್ದರೂ ಬೆವರಲೂ ಆಗದಿರದಂತಹ ಶೀತಲ ಗಾಳಿ ಬೀಸುತ್ತಿತ್ತು. ಮರುಕ್ಷಣದಲ್ಲಿ ಕೊಂಬೆಯ ಮೇಲೆ ಕೂತಿದ್ದ ಪ್ರಾಣಿ ಮಾಯವಾಗಿತ್ತು. ಇತ್ತ ತಿರುಗಿದರೆ ನನ್ನ ರೂಮ್-ಮೇಟ್ ಕೂಡ ಮಾಯ. ನಡುಕ ಬರಲಾರಂಭಿಸಿತು. ಇದಾದ ನಂತರ ವಿಚಿತ್ತ ಸ್ವಪ್ನಗಳು ಸಾಮಾನ್ಯವಾದವು. ನಿದ್ದೆ ಮಾಡುವುದಕ್ಕೇ ಹೆದರಿದ್ದೆ. ರಾತ್ರಿಯೆಲ್ಲಾ ಎದ್ದಿರಲು ಪ್ರಯತ್ನಿಸಿ ಬೆಳಗಿನ ಜಾವ, ಅಪರಾಹ್ನ ಹೀಗೆ ಕಂಡ ಕಂಡ ಕಾಲಕ್ಕೆ ನಿದ್ರೆಯ ಆಕ್ರಮಣ ಶುರುವಾಯುತು. ಯಾವಾಗಲೂ ಅರೆನಿದ್ದ್ರೆ. ದುಃಸ್ವಪ್ನಗಳು ಮನಸ್ಸನ್ನು ಹಿಂಡಿದವು. ಎದ್ದಾಗಲೋ ಪೈಶಾಚಿಕ ಸಂಗೀತದ ಗೀಳಿನಿಂದ ಅದೇ ಯೋಚನೆ ಮುಂದುವರೆಯುತ್ತಿತ್ತು. ಒಂದು ದಿನ ಏನಾದರೂ ಮಾಡಿ ಇವೆಲ್ಲವನ್ನು ತೊಲಗಿಸುತ್ತೇನೆಂದು ಹೇಳಿ ರಾತ್ರಿ ಒಂಭತ್ತಕ್ಕೇ ಮಲಗಿದೆ. ಅಂದು ನಾನು ಒಟ್ಟು ಮಲಗಿದ್ದು ಹದಿನೆಂಟು ಗಂಟೆಗಳು. ಕಂಡ ಸ್ವಪ್ನಗಳನ್ನು ನೆನೆದರೆ ಈಗಲು ಮೈ ನಡುಗುತ್ತದೆ. ಅಂದೇ ತಿಳಿದೆ..ಇನ್ನು ಹೋರಾಡಿ ಫಲವಿಲ್ಲ. ನನ್ನ ಜೀವನ ಇದರ ಶೋಧನೆಗೇ ಮುಡುಪಾಗಿಡಬೇಕೆಂಬುದು ಖಾತ್ರಿಯಾಯಿತು. +ಕನಸುಗಳು ಬಹಳ ವಿಚಿತ ಬಿಡ್ರಿ. ಸಾಮಾನ್ಯವಾಗಿ ನನ್ನ ಕನಸುಗಳು ನನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಒಂದು ವಿಚಿತ್ರ ಕಾಂಟೆಕ್ಶ್ತ್ ತರುತ್ತದೆ. ಉದಾಹರಣೆಗೆ ಪರೀಕ್ಷೆಯ ಸಮಯದಲ್ಲಿ ಹೀಗೊಂದು ಕನಸು ಬಿದ್ದಿತ್ತು. ದಿನಾ ಸ್ಚಿಮ್ಮಿಂಗ್ ಪೂಲಿನಲ್ಲಿ ಈಜಿದರೂ ನಮ್ಮಜ್ಜಿಯ ಜೊತೆ ತೋಟಕ್ಕೆ ಹೋದಾಗ ಕಲ್ಯಾಣಿಯಲ್ಲಿ ಈಜಲಾಗದೇ ಮುಳುಗಿದ್ದು ಹೀಗೆ.. ಆದರೆ ಈ ಬಾರಿ ನನ್ನ ಕನಸುಗಳು ವೈಚಿತ್ಯ್ರದ ಎಲ್ಲಾ ಮಟ್ಟಗಳನ್ನು ದಾಟುತ್ತದೆಯೆಂದು ನಾನು ಊಹಿಸರಲಿಲ್ಲ. ಈಗ ಕೆಲವು ದಿನಗಳಿಂದ ಮಲಗಿದಾಗಲೆಲ್ಲ, ಪುರಾತನ ನಾಗರೀಕತೆಯ ಕಥೆಗಳು ಕಂತು ಕಂತಾಗಿ ನನ್ನ ಸ್ವಪ್ನಗಳಲ್ಲಿ ಪ್ರಸಾರವಾಗತೊಡಗಿತು, ಜಾಹಿರಾತುಗಳ ಸಹಿತ!. ಆದರೆ ಬರುತ್ತಿದ್ದ ಜಾಹೀರಾತೂ ಒಂದೇ ಎನ್ನಿ (ರಾಪಿಡೆಕ್ಸ್ ಭೃಗೂಚಿ ಕೋರ್ಸ್) +ನಾನು ಮೇಲೆ ಹೇಳಿದ ಪ್ರಾಣಿ ನನಗೆ ಸುಮಾರು ಕಥೆಗಳನ್ನು ಹೇಳಿದೆ. ಒಂದೊಂದೂ ವಿಚಿತ್ರವಾದದ್ದು, ಒಂದಕ್ಕೊಂದಕ್ಕೆ ಸಂಬಂಧವಿರದದ್ದು. ಆದರೂ ಎಲ್ಲವೂ ಯಾವುದೋ ಧಾರವಾಹಿಯೋ ಅಥವ ಡಾಕ್ಯುಮೆಂಟರಿಯ ಕಂತುಗಳು ಅಂತ ನನಗೆ ಹೇಗನ್ನಿಸಿತೋ ಇಂದಿಗೂ ನನಗೆ ಅರಿವಾಗಿಲ್ಲ. ಒಟ್ಟಿನಲ್ಲಿ ಈ ಕಥೆಗಳ ಸಾರಾಂಶವನ್ನು ನಿಮಗಾಗಲೇ ಹೇಳಿದ್ದೇನೆ. ನನಗೆ ಕುತೂಹಲ ಮೂಡಿಸಿದ್ದು ಇವೆಲ್ಲ ನನಗೇ ಏಕೆ ಬರುತ್ತಿದೆ ಅಂತ.. ಕರ್ಕಶ ಸಂಗೀತ ಕೇಳಿದರೆ ಇಷ್ಟೆಲ್ಲ ತಲೆಕೆಡತ್ತ ಅಂತ ಅನುಮಾನವಾಗ ತೊಡಗಿತು. ಕನಸುಗಳಲ್ಲಿ ಆ ಪುರಾತನ ಪ್ರಾಣಿ ಬಂದದ್ದು ಹೌದು.. ಆದರೆ ಇದುವರೆಗೆ ಕನ್ಸಸುಗಳನ್ನು ಚಲನಚಿತ್ರಗಳಂತೆ ಮಾತ್ರ ನಾನು ನೋಡಿದ್ದು. ಇರಲಿ, ಕನಸಿನಲ್ಲಿ ಯಾಕೆ ಟಿವಿ ಒಂದು ಬಗೆಯ ಇಂಟರಾಕ್ಷನ್ ಡಿವೈಸ್ ಆಗಬಾರದು? ಕನಸುಗಳು ರಿಯಲ್ ಟೈಮಿನಲ್ಲಿಯೇ ತಾನೆ ಬಿತ್ತರವಾಗುವುದು.. ನಾವು ತರ್ಡ್ ಪರ್ಸನ್ ಅಂತ ಯಾಕೆ ಸುಮ್ಮನಿರಬೇಕು, ಈ ಬಾರಿ ಏನಾದರೂ ಮಾಡಿ ಚೂರು ಪಾರು ಕಲಿತ ಭೃಗೂಚಿಯಲ್ಲಿಯೇ ಆ ಪ್ರಾಣಿಯನ್ನು ಪ್ರಶ್ನಿಸಿ ಬಿಡೋಣ ಅಂತ ನಿರ್ಧರಿಸಿದೆ. +ಅಂದು ಸ್ವಪ್ನದಲ್ಲಿ ಪ್ರಾಣಿ ಬಂದಾಗ,ಭೃಗೂಚಿಯಲ್ಲಿ ಕೇಳಿಯೇ ಬಿಟ್ಟೆ, +ಪೋ ರಾಂಜೇ ಲಾ ಬ್ರೀತ್ ಕೋ +“ನನ್ನ ಕನಸಿನ್ನಲ್ಲೇಕೆ ಬರುತ್ತಿರುವೆ ನೀನು?” +ಶ್‌ಶ್‌ಶ್‌ಹಾ.. ಟೇಂತ್, ರಬಕ ಸ್ತ್ರಾಚೀ? +“ಅರೆ, ಹೀನಜೀವಿ, ಈಗ ಕಲಿತೆಯಾ ಮಾತಾಡಲು?” +ಪೋ ಲಾತಾ ಬ್ರೂಂಚ್ ಸರಟ್ ಗ್ರಮೇಕ +“ದುಷ್ಟತನದಿಂದ ಪ್ರಯತ್ನಿಸಿ ನನ್ನ ಪ್ರಶ್ನೆಗೆ ಉತ್ತರ ಕೊಡು” +ಸೋ ರಬಕೇತ್ ತಶ್ರೂತ್! ತರಬಕ್ ಅರಿಗ್ರಿಮ ಟೇಂತ್” +“ನಿನ್ನ ಭಾಷೆ ಅನರ್ಹ ಕೇಳಲು! ಮಾತಾಡಬೇಡ, ಕೊಲ್ಲುತ್ತೇನೆ ಹೀನಜೀವಿಯೆ” +ಇನ್ನು ನನ್ನ ಭಾಷಾಪಾಂಡಿತ್ಯ ಪ್ರದರ್ಶಿಸುವುದು ಒಳಿತಲ್ಲವೆಂದು ಸುಮ್ಮನಿದ್ದೆ. ಪ್ರಾಣಿ ಈಗ ಕನ್ನಡದಲ್ಲಿ ಮುಂದುವರಿಸಿತು. +“ನನ್ನ ಅಸ್ಥಿತ್ವವಿರುವುದೇ ಶಕ್ತಿಯಲ್ಲಿ. ನನ್ನ ಶಕ್ತಿಯ ಆವಾಹನೆಯಾಯಿತು ನಿನ್ನ ಮನ:ಪರಧೆಯಲ್ಲಿ . ಇಲ್ಲಿದ್ದೇನೆ ಅದಕ್ಕೆ. +“ಅಂದರೆ?” +“ಕರೆದದ್ದು ನೀನು. ನನ್ನದು ಉತ್ತರ ಮಾತ್ರ” +ನಾನು ನಿನ್ನನ್ನು ಕರೆದದ್ದು ಹೇಗೆ? +“ಶಕ್ತಿಯೆಂದರೇನು? ವಾತಾವರಣದಲ್ಲಿರುವ ಅಲೆಗಳು. ಈ ಜಾಗದಲ್ಲಿ ಅಂತಹ ಅಲೆಗಳಿಗೇನು ಕಮ್ಮಿಯೇ? ಸಣ್ಣ ಪ್ರಮಾಣದಲ್ಲಿ ರೇಡಿಯೋ ಆಕ್ಟಿವ್ ಕಿರಣಗಳಿವೆ. ನನ್ನ ಅಲೆಗಾತ್ರಗಳಿಗೆ ಇವುಗಳಿಂದ ಅಗಾಧ ಪರಿಣಾಮವಾಗುತ್ತದೆ. ಉಷ್ಣಾಂಶ ತೀರ ಕಮ್ಮಿಯಿರುವುದರಿಂದ ಸರಿಯಾದ ವಾತವರಣ ನಿರ್ಮಿತಗೊಂಡರೆ ಗಾಳಿಯೇ ಸೂಪರ್‍ಕಂಡಕ್ಟರ್ ಆಗುತ್ತದೆ. ನಿನ್ನ ಮೆದುಳಿನಲ್ಲಿ ನೀನು ಕೇಳುವ ಸಂಗೀತದಿಂದ ಯೋಚನಾ ಲಹರಿಗಳಲ್ಲಿ ಸೂಕ್ಷ್ಮ ಬದಲಾವಣೆಗಳಾಗುತ್ತವೆ. ಯಾವಾಗ ಅವುಗಳ ಅಳತೆ ನನ್ನ ಶಕ್ತಿಯ ಅಲೆಗಳಿಗೆ ಸಮನಾಗುತ್ತದೆಯೋ ಆಗ ನಿನ್ನ ಮೆದುಳಿನಲ್ಲಿ ನನ್ನ ಆವಾಹನೆಯಾಗುತ್ತದೆ. ನೀವಿನ್ನೂ ನಂಬದ ಟೆಲಿಪತಿ ಆಗುವುದೇ ಹೀಗೆ. ಆದರೆ ನನ್ನಂತಹ ಪೈಶಾಚಿಕ ಶಕ್ತಿಯನ್ನು ಆವಾಹನಿಸಲು ಈ ಜಾಗದ ವೈಶಿಷ್ಟ್ಯತೆ ಹಾಗು ನಿನ್ನ ಮೆದುಳಿನ ತರಂಗಗಳೇ ಕಾರಣ. ನನ್ನ ಭೌತಿಕ ದೇಹ, ನಿನ್ನ ಮೆದುಳಿನ ಪರಧೆಯ ಮೇಲೆ ನಿನಗೆ ನನ್ನ ದೇಹದ ಮೇಲಿರುವ ಊಹೆ.” +ನನಗೆ ಹೆದರಿಕೆ, ನಗು ಒಮ್ಮೆಲೇ ಬಂತು.. ಇದ್ಯಾವ ಲೆಕ್ಚರ್ ಕೊಡುವ ಭೂತ ಅಂತ ಅನ್ನಿಸಿತು. ಗ್ವೆನಿತ್ ಪಾಲ್ಟ್ರೋವ್‌ನ ಹಾಲಿವುಡ್ ಕಾಮಿಡಿಯೂ ನೆನಪಾಯಿತು! +ಗರ್ಜಿಸಿತು ಭೂತ. +“ನನ್ನ ತರಂಗಗಳಿಲ್ಲುರುವ ತನಕ ನಿನ್ನ ಮೆದುಳಿನಲ್ಲಿ ಮೂಡುವ ಎಲ್ಲಾ ಯೋಚನೆಗಳು ನನಗೆ ತಿಳಿಯುತ್ತದೆ ಹೀನಜೀವಿ! ” +ತಕ್ಷಣ ಏಕಚಿತ್ತನಾಗಿ ಕ್ಷಮೆ ಕೋರಿದೆ. ಇದಾದ ನಂತರ ನಾವು ಸುಮಾರು ಚರ್ಚೆ ನಡೆಸಿದೆವು. ಭೃಗೂಚಿ ಭಾಷೆಯ ಬಗ್ಗೆ, ಪುರಾತನ ನಾಗರೀಕತೆಗಳ ಬಗ್ಗೆ, ಆ ಪ್ರಾಣಿಯ ಜೊತೆ ಒಂದು ಬಗೆಯ ಸ್ನೇಹ ಬೆಳದಿತ್ತು! ತನ್ನ ಬಾಲ್ಯದ ಬಗ್ಗೆ ಮಾತಾಡಿತ್ಯ್ ಆ ಪ್ರಾಣಿ. ಅದರ ಹೆಸರು ಪ್ರೆಸ್ತಕಾಯ ಅಂತೆ. ಕ್ರಾಸ್‌ಬ್ರೀಡಿಂಗ್ ಕೇಸ್ ಇದು. ಫಿನ್ನಿಶ್ ಭೂತಕ್ಕೂ ಭಾರತೀಯ ರಾಕ್ಶಸಿಯೊಬ್ಬಳಿಗೆ ಹುಟ್ಟಿದ ಪುತ್ರನಂತೆ ಪ್ರೆಸ್ತಕಾಯ. ಭೃಗೂಚಿಯಲ್ಲಿ ಪ್ರೆಸ್ತ ಅಂದರೆ ವೈಭವ ಅಂತ ಅರ್ಥ. ಆದರೆ ನನಗೆ ಮಾತ್ರ ಪ್ರೆಸ್ತಕಾಯ ಡೈನಾಸರಸ್ ಮತ್ತು ಬಾವಲಿಯ ಕ್ರಾಸ್ ಕಂಡಂತೆ ಕಾಣುತ್ತಿದ್ದ. ನನ್ನ ಜಾರ್ಡೈನಿನ ಊಹಿತ ಮಿತ್ರ ಇದೇನೆ ಅನ್ನುವ ಯೋಚನೆಯೂ ಈಗೀಗ ಬರುತ್ತಿದೆ. +ಮರುದಿನ ರಾತ್ರಿ ಮತ್ತೆ ಬಂದ ಪ್ರೆಸ್ತಕಾಯ. ಈ ಬಾರಿ ಯಾಕೋ ಸ್ವಲ್ಪ ಬೇಜಾರಿನ ಮೂಡಿನಲ್ಲಿದ್ದ. +ನಾನಾಗಿಯೇ ಕೇಳಲಿಲ್ಲ. ಇವನ ತಲೆಯಲ್ಲೇನಿರಬಹುದೆಂದು ಯೋಚಿಸುತ್ತಾ ಆಕಾಶವನ್ನು ದಿಟ್ಟಿಸುತ್ತಿದ್ದೆ. ಇದ್ದಕ್ಕಿದ್ದಂತೆಯೇ ಬಡಬಡಿಸತೊಡಗಿದ. +“ನೀನು ಗ್ಲೂರತ್ರಾಕದ ಬಗ್ಗೆ ಕೇಳಿದ್ದೀಯಾ?” +“ಹಾ.. ನಾವುಗಳು ಹೀಗೆ ಒಬ್ಬರಮೇಲೊಬ್ಬರು ಹೊಡೆದಾಡುವುದನ್ನು ಮುಂದುವರೆಸಿದರೆ ಮುಂದೊಂದು ದಿನ ಇಡೀ ಜಗತ್ತೇ ಸಮರಕ್ಕಿಳಿದು ವಿನಾಶವಾಗಿಹೋಗುತ್ತದೆಯೆಂದು ಕೇಳಿದ್ದೇನೆ. ಹಾಗೆಯೇ ಹಲವು ಗ್ರಂಥಗಳಲ್ಲಿಯೂ, ಮತಗಳಲ್ಲಿಯೂ ಕೂಡ ಹೇಳಿದ್ದಾರಂತೆ” +“ಅವರು ಹೇಳುವುದು ಸುಳ್ಳೇನಲ್ಲ, ಕಾಲಾಂತರದಿಂದ ಕೇಳಿ ಬರುತ್ತಿರುವ ವಿಷಯಗಳನ್ನು ಊಹಿಸಲು ಅತಿಯಾದ ಬುದ್ಧಿಶಕ್ತಿಯೇನು ಬೇಕಾಗಿಲ್ಲ.. ಬುದ್ಧಿಬೇಕಾಗಿರುವುದು ಅದನ್ನು ತಡೆಯುವುದಕ್ಕೆ. ಅದಕ್ಕೆ ಮಾತ್ರ ಯಾರೂ ತಯಾರಿಲ್ಲ. ಹೆಸರಿಗೆ ದೇವರು ದಿಂಡರು.. ನಾನು ನೋಡಿಲ್ಲವೇ ದೇವತೆಗಳು ಕೂಡ ಜೀವಿಗಳೇ ತಾನೆ. ನಿಮ್ಮ ಹೀನಕುಲದವರ ರಗಳೆಗಳನ್ನು ನೋಡಿ ನೋಡಿ ಅಂತರ್ಧಾನರಾಗಿದ್ದಾರೆ” +“ನಿಧಾನಕ್ಕೆ ಬಿಡಿಸಿ ಹೇಳು ದೊರೆ, ನನಗೊಂದೂ ತಿಳೀವೊಲ್ದು. ಹಾಗೆಯೆ, ಮನುಷ್ಯರ ಬಗ್ಗೆಯ ನಿನ್ನ ಮೂದಲಿಕೆ ನನಗೆ ಹಿಡಿಸುವುದಿಲ್ಲ” +“ನೀವೀಗ ಜಾಗತೀಕರಣ ಅಂತ ಏನಂತೀರೋ ಅದರ ತಳಪಾಯ ನಮ್ಮಜ್ಜನ ಕಾಲದಲ್ಲಿಯೇ ಹಾಕಿಯಾಗಿತ್ತು ಅನ್ನೋದು ಈಗ ನಿನಗೆ ತಿಳಿದಿರಬೇಕು. ನಾವು ಭೃಗೂಚಿಯಂತಹ ಭಾಷೆಯನ್ನು ಬೆಳೆಸಿಕೊಂಡಿದ್ದೇ ಅದಕ್ಕಲ್ಲವೇ. ಆದರೆ ನಾವು ಎಡವಿದ್ದು ನಮ್ಮನ್ನು ಅರ್ಥಮಾಡಿಕೊಳ್ಳುವಲ್ಲೇ.. ಜೀವವಿಕಸನದ ಆರಂಭದದ ದಿನಗಳು ಅವು. ಅಂದರೆ, ಇನ್ನೂ ಎಲ್ಲರೂ ಅಮೀಬಾಗಳೆಂದಲ್ಲ, ನಮ್ಮ ಮೆದುಳಿನ್ನೂ ಅಷ್ಟು ಸೂಕ್ಷ್ಮವಾಗಿ ವಿಕಸಿಸಿದ್ದಿಲ್ಲ. ವ್ಯಾಪಾರ, ಕೃಷಿ, ಮನೋರಂಜನೆ ಹೀಗೆ ಇತ್ಯಾದಿಗಳ ಬೇಡಿಕೆ ಬೆಳೆದಾಗ ಒಂದೇ ರಾಷ್ಟ್ರ ಎಲ್ಲವನ್ನೂ ಪೂರೈಸಲು ಸಾಧ್ಯವಾಗದೇ ಜಾಗತೀಕರಣದಂತಹ ಅಂತರ್ರಾಷ್ಟ್ರೀಯ ವ್ಯವಹಾರಗಳು ರೂಪಗೊಂಡದ್ದು ಸಹಜವೇ. ಆಷ್ಟು ಬುದ್ಧಿ ಬೆಳೆದಿತ್ತು.” +“ಆದರೆ ಗೊತ್ತಿರದೇ ಇದ್ದ ಹಲವು ವಿಷಯಗಳಿದ್ದವು. ನಾವು ಕಾಣದ, ಕೇಳದ ಹೊಸ ವಿಷಯಗಳು ನಮಗೆ ತಿಳಿಯ ಬಂದಾಗ ನಮ್ಮ ಮಾನಸಿಕ ಚಟುವಟಿಕೆಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆ. ಹಲವು ಶತಮಾನಗಳ ಜೀವವಿಕಸನ ಒಂದೇ ಜೀವಿತದಲ್ಲಿ ಹೊಂದಾಣಿಕೆಯ (ಚಿಜಚಿಠಿಣಚಿಣioಟಿ) ಮೂಲಕ ಸಾಗಿಬರುತ್ತದೆ. ಇದಾದರೂ ಪ್ರಕೃತಿಗೆ ವಿರುದ್ಧವಾದದ್ದು. ವಿಕಸನ ಹಾಗು ಹೊಂದಾಣಿಕೆ, ಇವುಗಳ ಮಧ್ಯೆ ತಿಕ್ಕಾಟ ಶುರು: ಜೀವಿಯ ಸುಪ್ತ ಮನಸ್ಸು ಎರಡರಲ್ಲಿ ಒಂದನ್ನು ಆರಿಸಬೇಕು. ತನಗೆ ಅನುವಂಶೀಯವಾಗಿ ಬಂದ ಯೋಚನೆಗಳು, ಭಾವನೆಗಳನ್ನು ಮುಂದುವರೆಸಬೇಕೆ ಅಥವ ಈ ಹೊಸ ಬದಲಾವಣೆಗಳನ್ನು ಒಪ್ಪಿ ಅಳವಡಿಸಿಕೊಳ್ಳಬೇಕೆ? ಇದರ ಪರಿಣಾಮದಿಂದ ಬರುವುದೇ ಬುದ್ದಿಯ ವಿಕಾರತೆ. ಜೀವಿಯ ಪಾತ್ರ ಜೀವಿಸುವುದು ತಾನೆ, ಅದು ಬದಲಾಗಿ ಜೀವಿ ತೀರ್ಪುಗಾರನಾಗುತ್ತದೆ. ಸ್ವಲ್ಪ ಬಲವಿರುವ ಜೀವಿ ಇತರರ ವಿಷಯಕ್ಕೂ ನ್ಯಾಯಾಧೀಶನಾಗುತ್ತದೆ. ಬದಲಾಗದ ಜೀವಿ ಬದಲಾವಣೆಯನ್ನು ಅಲ್ಲಗಳೆಯುವುದರಲ್ಲಿ ಜೀವಿಸಬೇಕು. ಬದಲಾದದ್ದು ಬದಲಾವಣೆ ಸರಿಯೆಂದು ಸ್ಥಾಪಿಸುವುದರಲ್ಲಿ ಜೀವ ಕಳೆಯಬೇಕು. ಮಧ್ಯದಲ್ಲಿರುವ ಜೀವಿ ತ್ರಿಶಂಕುವಿನಂತೆ.” +“ಇದನ್ನೂ ಈಗಿನವರು, ಭಾರತೀಯರ ಮೂಲಕ ತಿಳಿದಿದ್ದಾರೆ ತಾನೆ, ವೈದಿಕ ಧರ್ಮಜೀವನದಲ್ಲಿ ಇದರ ಪ್ರಸ್ತಾಪವಿದೆ. ನನ್ನ ತಂದೆಯ ಕಾಲದಲ್ಲಿ ಅದರ ಚರ್ಚೆ ಬಹಳ ನಡೆದಿತ್ತು. ಭಾರತೀಯ ವಿದ್ವಾಂಸರು ಹೇಳಿದ್ದು ಇಷ್ಟು. ಮನಸ್ಸಿಗೆ ಇಷ್ಟೋಂದು ಪ್ರಚೋದನೆ ಸರಿಯಲ್ಲ. ಮನೋವಿಕಾರದ ತೊಂದರೆಗಳು ಊಹಿಸುವುದಕ್ಕೂ ಕಷ್ಟ ಅಂತ. ಆದರೆ ಅಷ್ಟರಲ್ಲೇ ಅದರ ಪರಿಣಾಮಗಳು ಕೈಮೀರಿ ಹೋಗಿದ್ದವು. ಈ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಇದನ್ನೊಪ್ಪದ ಕೆಲವರು ಅವೈಜ್ಞಾನಿಕ ಎಂಬ ಬಿರುದು ಕಟ್ಟಿ ಭಾರತೀಯ ವಿದ್ವಾಂಸನೊಬ್ಬನ ಕೊಲೆಗೈದರು. ಇದೇ ಶುರು. ಜನ ಇತರರ ವಿಷಯಗಳ ಬಗ್ಗೆ ಎಲ್ಲಾ ತಿಳಿದಂತೆ ತಮ್ಮದೇ ಆದ ತೀರ್ಪನ್ನಿಟ್ಟರು. ಇವ ಕರಿಯ, ಇವ ದಡ್ಡ, ಇವರ ಕುಲ ಕೀಳು, ಇವ ದೇವ, ಇವ ಭೂತ ಹೀಗೆ. ಅತೀ ಹತ್ತಿರದಿಂದ ಒಬ್ಬರನೊಬ್ಬರನ್ನು ಅರಿತಿದ್ದ ರಾಷ್ಟ್ರಗಳು ಏಕ್‌ಧಮ್ ವೈರಿಗಳಾದರು. ಮೃತರಾದರೂ ಆ ವಿದ್ವಾಂಸರ ಶೋಧನೆಗಳು ಚರಿತ್ರೆಯಲ್ಲಿ ಧೃಡವಾಗಿದೆ. ಮೊದಲಿಗೆ ದೇವ ದಾನವ ಮನುಷ್ಯರು ಬೇರೆಬೇರೆಯಾದರು. ಒಂದರ್ಥದಲ್ಲಿ ಮನೋವಿಕಾರದ ಮೊದಲನೆಯ ಹಂತ ಇದು. ನಂತರ ಮತ, ಕುಲ, ಸಂಸ್ಕೃತಿ, ರಾಜಕೀಯ ಹೀಗೆ ಒಂದರ ಮೇಲೊಂದು ಸೂಕ್ಶ್ಮತೆಯನ್ನಿಟ್ಟು ವಿಕಾರ ಬೆಳೆಯುತ್ತಲೇ ಹೋಗಿದೆ. ಆಗಿನಿಂದಲೇ ಪ್ರತಿದಿನವೂ ಜಗತ್ತಿಗೆ ಜಗತ್‌ಸಮರದ ಅಂಚೇ ಆಗಿದೆ” +ಇವನ ಮಾತುಗಳನ್ನು ಕೇಳಿ ನಡುಕ ಬಂದದ್ದೇನೋ ಸರಿ. ವೈಯುಕ್ತಿಕವಾಗಿ ಭೂತಪ್ರೇತಗಳ ವಿಷಯದಿಂದ ಭಯಗೊಂಡಿದ್ದ ನಾನು ಭಯದ ಮೂಲ ಹುಡುಕಲು ಹೋಗಿ ಕಂಡುಕೊಂಡದ್ದು ಅದಕ್ಕಿಂತಾ ಕಳವಳಕಾರಿ. ಜೀವಸಂಕುಲನದ ಸಂಕ್ಷಿಪ್ತವಾದ ನೋಟವನ್ನೇ ಕಂಡ ಅನುಭವ. ಕೃಷ್ಣ ಅರ್ಜುನನಿಗೆ ತೋರಿಸಿದಂತ ವಿಶ್ವನೋಟದಷ್ಟು ವೈಭವವಿರಲಿಲ್ಲ. ಆದರೂ ಛಿomಠಿಚಿಡಿಚಿbಟe ಅನ್ನಿ. ಆದರೆ ಇಂತಹ ಘೋರ (goಡಿe?) ನೋಟಕ್ಕೆ ನಾನು ತಯಾರಿರಲಿಲ್ಲ. ನನ್ನ ಪ್ರಶ್ನೆ ಮುಂದುವರೆಸಿದೆ. +“ಹಾಗಾದರೆ ನಿನ್ನ ಅಭಿಪ್ರಾಯದಲ್ಲಿ ವಿವಿಧ ನಾಗರೀಕತೆ, ಸಂಸ್ಕೃತಿಗಳು ಇವೆಲ್ಲ ಕೇವಲ ಮನೋವಿಕಾರದ ಫಲವೇ? ಅವುಗಳಿಂದ ಮನುಷ್ಯನಿಗೆ ಜೀವನದ ಆನಂದವನ್ನು ಅನುಭವಿಸುವುದಕ್ಕಾಗಿಲ್ಲವೇ?” +“ನೀನು ಹೀನಜೀವಿಯೆಂದು ಹೇಗೆ ತೋರಿಸಿಕೊಡುತ್ತೀಯ! ನಾನು ಮಾತಾಡುತ್ತಿರುವುದು ಇಡೀ ಜೀವಸಂಕುಲನದ ವಿಷಯ. ನಿನ್ನ ಯೋಚನೆಗಳು ಮನುಷ್ಯನ ಪರಿಮಿತಿಯನ್ನು ಬಿಟ್ಟು ಮುಂದೆ ಹೋಗಿಯೇ ಇಲ್ಲ ನೋಡು. ಇರಲಿ. ಸಧ್ಯಕ್ಕೆ ಮನುಷ್ಯನ ವಿಷಯಕ್ಕೇ ಸೀಮಿತಗೊಳಿಸುವೆ. ಮ್ಯಾನ್ಹಾಟನ್ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ವಿಜ್ಞಾನಿಗಳ ಶೋಧನೆ ಇಂದು ವಿಶ್ವವನ್ನೇ ಅದರ ತುದಿಗೆ ತಂದು ನಿಲ್ಲಿಸಿದ್ದು ಸುಳ್ಳೇ?” +“ವಿವಿಧತೆ ಬೇಕೋ ಬೇಡವೊ, ಪ್ರತೀ ಮನುಷ್ಯನೂ ಮತ್ತೊಂದು ಮನುಷ್ಯನಿಗೆ ವಿಚಿತ್ರನೇ. ಆದರೆ ಮನುಷ್ಯನ ಆಕಾಂಕ್ಷೆಗಳು ಹಿರಿದೇ.. ಪ್ರತೀಸಲ ನೀನು ನಿನ್ನ ವೇಳಾಪಟ್ಟಿ ಸಿದ್ಧಪಡಿಸುವಾಗ ಮಾಡುವ ತಪ್ಪು ಎಂತದು? ಸಿಕ್ಕಾಪಟ್ಟೆ ಆದರ್ಶವಾಗಿ ಯೋಚಿಸಿ ಯೋಜನೆ ತಯಾರಿಸುವುದು. ಯೋಜನೆ ವಾಸ್ತವ್ಯದಲ್ಲಿ ಅಸಂಭವವಾಗಿರುತ್ತದೆ. ಮುಂದೆ ಒಂದು ದಿನವೂ ಯೋಜನೆಗಳನ್ನು ಕಾರ್ಯಗತವಾಗಿಸದೆಯೇ ಮರೆಯುವೆ, ತಾನೆ. ಹಾಗೆಯೇ ಯೋಚಿಸುವಾಗ ಮನುಷ್ಯನ ಆದರ್ಶಗಳಿಗೆ ಮಿತಿಯೇ ಇರುವುದಿಲ್ಲ. ವೈರಾಗ್ಯ ಅದ್ವೈತ, gಟobಚಿಟ viಟಟಚಿge, ಜಿಡಿee mಚಿಡಿಞeಣs, ಛಿಟಚಿssಟess soಛಿieಣಥಿ, ಠಿeಡಿಜಿeಛಿಣ ಛಿomಠಿeಣiಣioಟಿ.. ಹೀಗೆ ಒಂದಕ್ಕಿಂತ ಒಂದು ಉನ್ನತ ಯೋಚನೆಗಳು. ಜೀವಮಾನವಿಡೀ ಅಂತಹ ನಿಖರತೆಯ ಶೋಧನೆಯಲ್ಲಿ ಮುಳುಗಿರುತ್ತಾನೆ ಮನುಷ್ಯ. ವಾಸ್ತವಕ್ಕೆ ಮಿತಿಯಿರುತ್ತದೆಯೆಂದು ಅರಿಯುವುದೇ ಇಲ್ಲ ನೀವು. ಅದರೆ ಸಂಪೂರ್ಣತೆಯ ಶೋಧನೆಯ ಆನಂದ ಬಹಳವೇ.. ಆದರೆ ಒಬ್ಬನ ಕ್ರಿಯೆ ಮತ್ತೊಬ್ಬನ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಎಣಿಕೆ ಯಾರಿಗಿದೆ? ಮನುಷ್ಯನ ಯೋಚನೆಗಳೇ ಇಷ್ಟು ಸಂಕೀರ್ಣವಾದರೆ ದೇವ ದಾನವರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಶೋಧನೆಗಳ ಪರಿಣಾಮ, ಇವುಗಳನ್ನು ತಿಳಿಯಲು ಸಾಧ್ಯವೇ?” +ಇಷ್ಟಕ್ಕೆ ಪ್ರೆಸ್ತಕಾಯ ನಿಲ್ಲಿಸಿದ. ಸ್ವಲ್ಪ ಶಾಂತನಾಗಿದ್ದ. +“ವಿವಿಧತೆ ಮತ್ತು ಐಕ್ಯತೆಯ ನಿಖರ ಪ್ರಮಾಣಗಳನ್ನು ಕಂಡುಹಿಡಿಯಲು ನಿನ್ನ ಜೀವನವನ್ನು ಮುಡುಪಾಗಿಡುವೆಯಾ? ನಾನು ಸಹಾಯಮಾಡಬಲ್ಲೆ” +ಅಚಾನಕ್ಕಾಗಿ ಬಂದ ಈ ಪ್ರಶ್ನೆಯಿಂದ ಚಕಿತನಾದೆ. ಅವನ ಕಣ್ಣುಗಳಲ್ಲಿ ಹೊಸ ಹೊಳಪಿತ್ತು. ಒಂದು ಕ್ಷಣಕ್ಕೆ “ವಿಶ್ವಶಾಂತಿಯ ಹರಿಕಾರ” ಎಂಬ ಬಿರುದು ನನಗಿದ್ದರೆ ಹೇಗಿರುತ್ತದೆ ಅಂತ ಊಹಿಸಿನೋಡಿದೆ. ನಾನು ಪ್ರಶಸ್ತಿ ಸ್ವೀಕರಿಸುವಾಗ ಪ್ರೆಸ್ತಕಾಯ ಕೂಡ ನನ್ನ ಜೊತೆಯಲ್ಲಿದ್ದ. ವಾಸ್ತವಕ್ಕೆ ಬಂದಾಗ ನುಸುನಕ್ಕೆ. +“ಬೇಡ ಗುರು, ಬಹಳ ಕೆಲಸವಿದೆ!” +ಮತ್ತೆ ಸಪ್ಪಗಾದ ಪ್ರೆಸ್ತಕಾಯ. +“ನಾಳೆ ಜಗತ್ತು ಕೊನೆಗೊಳ್ಳಲಿದೆ. ಇದಕ್ಕೆ ನಿನ್ನ ಇಂದಿನ ನಿರ್ಧಾರವೇ ಕಾರಣ!” ಎಂದು ಹೇಳಿ ಅಂತರ್ಧಾನನಾದ. ಆಷ್ಟರಲ್ಲಿ ನಿದ್ದೆಯಿಂದ ಎದ್ದೆ ಅಂತ ಹೇಳಕ್ಕಾಗಲ್ಲ. ಇದು ಕನಸೋ ನಿಜವಾಗಿ ನಡೆದದ್ದೋ ತಿಳಿಯದಾಗಿದೆ. ನನ್ನ ಕನಸುಗಳಲ್ಲಿ ಯಾವತ್ತೂ ಕೊನೆಯಿರುತ್ತಿತ್ತು. ಇದಿನ್ನೂ ಮುಂದೆ ಕಾದುನೋಡಬೇಕಾದ ಪರಿಸ್ಥಿತಿ. ಆದ್ದರಿಂದ ಈ ಪ್ರಸಂಗ ಮುಗಿಯಿತೋ ಇಲ್ಲವೋ ತಿಳಿದಿಲ್ಲ. ಕಥೆಯಂತೂ ಮುಗಿಯಿತು ಅಷ್ಟೆ. +***** +ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […] +ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_528.txt b/Kannada Sahitya/article_528.txt new file mode 100644 index 0000000000000000000000000000000000000000..b3d833a806718811ef5823c62baa0e00240f2462 --- /dev/null +++ b/Kannada Sahitya/article_528.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ ಆಗದೆ ಕೆಳಗೆ ಬೀಳಲೂ ಆಗದೆ ಹೆಪ್ಪುಗಟ್ಟಿದ ಹಿಮದ ರಾಶಿ, ಮುಂದೆ ಕಾರಿನ ಕನ್ನಡಿಯಿಂದ ನೇತಾಡುವ ಸ್ನೋವೈಟ್, ಕೆಳಗೆ ಡ್ಯಾಶ್‌ಬೋರ್ಡಿನ ಮೇಲೆ ಗಾಜಿನಲ್ಲಿ ಬಂಧಿಯಾಗಿ ಕಾರಿನ ಸುಖವಾದ ನಿಯಂತ್ರಿತ ಹವೆಯಿಂದ ವಂಚಿತನಾಗುತ್ತಿರುವ ಶ್ರೀಗಂಧದ ವೆಂಕಟರಮಣ, ಕಪ್ ಹೋಲ್ಡರಿನಲ್ಲಿ ಆಗತಾನೆ ತುಂಬಿಸಿದ ಬಿಸಿಯಾಗಿ ಹಬೆಯಾಡುವ ಕಾಫಿ-ಎಲ್ಲವನ್ನೂ ಒಟ್ಟಿಗೆ ಅನುಭವಿಸುವ ತವಕದಲ್ಲಿ ಕಾರಿನ ಸ್ಟೀರಿಯೋ ಹಾಕಿದ, ಯೋಗಣ್ಣ. ” ವ್ಯಾಸಂ ವಸಿಷ್ಟನಪ್ತಾರಂ” ರಾಗವಾಗಿ ಆರಂಭಿಸಿದ ಸುಬ್ಬಲಕ್ಷ್ಮಿಯನ್ನು ಕೇಳಿದಾಕ್ಷಣ ” ಓ, ಇದು” ಎನ್ನಿಸಿದರೂ ಕೆಸೆಟ್ಟನ್ನು ಬದಲಿಸಲು ಮನಸ್ಸಾಗಲಿಲ್ಲ, ಅಥವಾ ಧೈರ್ಯವಾಗಲಿಲ್ಲ. ಎಲ್ಲದಕ್ಕಿಂತ ಶ್ರೇಷ್ಟವಾದುದಂತೆ ವಿಷ್ಣುಸಹಸ್ರನಾಮ. ನಿತ್ಯ ಇದನ್ನು ಪಠನ ಮಾಡಿದರೆ ರೋಗರುಜಿನಾದಿಗಳು ಹತ್ತಿರ ಸೇರುವುದಿಲ್ಲವಂತೆ. ಸಾಕ್ಷಾತ್ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಮಹಾಭಾರತದ ಯುದ್ಧಾನಂತರ ಹೇಳಿದ ಭಗವಾನ್ ವಿಷ್ಣುವಿನ ಸಹಸ್ರನಾಮಾಂಕಿತಗಳೇ ಇವು. ಪ್ರತಿಪಾರ್ಶ್ವದಲ್ಲಿರುವ ಮೂವತ್ತಾರು ಸಹಸ್ರನಾಡಿಗಳನ್ನು ಶುದ್ಧಿಗೊಳಿಸುತ್ತದಂತೆ ಈ ಸಹಸ್ರನಾಮ. ಪ್ರತಿ ನಾಡಿಗೊಂದರಂತೆ ಸೃಷ್ಟಿಯಾಗಿದ್ದ ಬೃಹತಿ ಸಹಸ್ರನಾಮದ ಸಂಕುಚಿತ ರೂಪವೇ ಇದು. ಎಪ್ಪತ್ತೆರಡು ಸಹಸ್ರ ನಾಡಿಗಳಿಗೊಂದರಂತೆ ಇದ್ದ ಕೋಟ್ಯಾನುಕೋಟಿ ನಾಮಪದಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡರಲ್ಲವೇ. ಹೀಗೆ ಮಾಡಿದ್ದು ಯಾರಿರಬಹುದು. ಅದು ಮುಖ್ಯವೇ. ಇರಲಿಕ್ಕಿಲ್ಲ. ಇಷ್ಟಾಗಿಯೂ ಅದರಲ್ಲೇ ಹೇಳಿಲ್ಲವೇ “ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮತಸ್ತುಲ್ಯಂ ರಾಮನಾಮ ವರಾನನೇ.” ಶ್ರೀರಾಮರಾಮ ಎಂದುಬಿಟ್ಟರೆ ಅಥವಾ ಇದೊಂದು ಸ್ತೋತ್ರವನ್ನು ಹೇಳಿಬಿಟ್ಟರೆ ಸಾಕು, ಸಹಸ್ರನಾಮಪಠನದ ಪುಣ್ಯ ಬಂದುಬಿಡುತ್ತದಂತೆ. ಹಾಗಿದ್ದಾಗ್ಯೂ ಏಕೆ ಹೇಳಬೇಕು ಈ ವಿಷ್ಣುಸಹಸ್ರನಾಮವನ್ನು. ಅಲ್ಲ, ಕೇಳಬೇಕು ಮುಕ್ಕಾಲು ಗಂಟೆಯ ಕೆಸೆಟ್ಟನ್ನು. ತಪ್ಪು ತಪ್ಪು, ಕೇಳಬಾರದು ಹಾಗೆಲ್ಲ. ಅನುಷ್ಟುಪ್ ಛಂದಸ್ಸಿನಲ್ಲಿ, ನೂರಾ‌ಏಳು ಭಾಗಗಳಲ್ಲಿ ವರ್ಣಿತವಾಗಿರುವ ಲೋಕಪಾಲಕನ ಸಹಸ್ರ ನಾಮಗಳನ್ನು ಅಲ್ಪಪ್ರಾಣ, ಮಹಾಪ್ರಾಣಗಳ ಪಂಕ್ಚುಯೇಷನ್ನುಗಳನ್ನೊಳಗೊಂಡು ಹೇಳಿದರೆಯೇ ಚೆನ್ನು. ಕೇಳಿಯಾದ ಮೇಲೆ ಅದರ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿದಲ್ಲಿ ಆಗುವ ಉಪಯೋಗವೇನು? ಅಥವಾ ಇವೆಲ್ಲವನ್ನೂ ಬರೀ ಬೊಗಳೆಯೆಂದು ಝಾಡಿಸಬಲ್ಲ ಸಾಮರ್ಥ್ಯ ತನಗಿದೆಯೇ? ತನಗೇನು ತುಂಬಾ ವಯಸ್ಸಾಗಿದೆಯೇ. ಇದು ಯಾಕೆ ಲೋಕಾತೀತ ವಿಷಯಗಳ ಬಗ್ಗೆ ಅತೀವ ಆಸಕ್ತಿ ಈ ನಡುವೆ. ಈ ಮೂವತ್ತೈದಕ್ಕೆ ಅರವತ್ತೈದರಂತೆ ತನಗೇಕೆ ಇಷ್ಟವಾಗುತ್ತದೆ ಈ ಮನುಧರ್ಮಶಾಸ್ತ್ರ, ವಿಷ್ಣುಸಹಸ್ರನಾಮದ ಭಾಷ್ಯ, ಯೋಗಿಯ ಆತ್ಮಕಥೆ. ಬುದ್ಧನಿಗೆ ಜ್ಞಾನೋದಯವಾದದ್ದು ಆತ ಸಂಪನ್ನನಾದ ಸಿದ್ದಾರ್ಥನಾಗಿದ್ದಾಗ. ಸಿದ್ಧಾರ್ಥ ದರಿದ್ರ ಚಾರುದತ್ತನಂತಿದ್ದರೆ ಅವನೂ ಬೇರೆಯವರಂತೆಯೇ ಇರುತ್ತಿದ್ದನೇನೋ. ಅಶೋಕ ಮನುಷ್ಯನಾದದ್ದು ಕೂಡ ಕಳಿಂಗ ಯುದ್ಧವಾದ ಮೇಲೆಯೇ. ಈ ಜಗತ್ತೇ ಹಾಗೆ. ಪ್ರತಿ ಮನುಷ್ಯರ ಜೀವನದಲ್ಲೂ ಇಂಥದೊಂದು ಏನಾದರು ನಡೆದೇ ಇರುತ್ತದೆ. ಹಾಗಾಗಿಯೇ ಅವರು “ದೊಡ್ಡವರಾಗುವುದು”. ಈ ಅಮೆರಿಕಾಕ್ಕೆ ಬಂದಮೇಲೆಯೇ ಹೀಗಾದದ್ದು. ಭಾರತದಲ್ಲಿಯೇ ಇದ್ದಿದ್ದರೆ ಈ ವಿಷ್ಣುಸಹಸ್ರನಾಮ ಕೇಳಲು ಪುರುಸೊತ್ತಾಗುತ್ತಿತ್ತೋ ಇಲ್ಲವೋ. ಯೋಗಣ್ಣ ಯೋಚನೆ ಮಾಡುತ್ತಲೇ ಇದ್ದ. ಪ್ರತಿವರ್ಷ ಬೆಂಗಳೂರಿಗೆ ಹೋಗಿ ತನ್ನ ಜೊತೆಯವರನ್ನು ನೋಡಿ ಬರುತ್ತಾನೆ. ಸ್ನೇಹಿತರೂ ಸಂಬಂಧಿಕರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ಮಾನವಶಾಸ್ತ್ರದ ಬಗ್ಗೆ ಮಾತಾಡುತ್ತಾನೆ. ತಾನು ರೇಷ್ಮೆ ಪಂಚೆಯುಟ್ಟು, ಸಕಲಾಭರಣಗಳಿಂದ ಕಂಗೊಳಿಸುತ್ತಾ, ಲೋಶನ್ನಿನಿಂದ ಜಾರುತ್ತಿರುವ ಮೈ, ಮೇಬಿಲಿನ್ನಿನ ಮೇಕಪ್ಪು ಲಿಪ್‌ಸ್ಟಿಕ್ಕಿನೊಂದಿಗೆ ಟೈಮೆಕ್ಸ್ ವಾಚು ಸ್ಯಾಂಸೊನೈಟಿನ ಲೆದರ್ ಬ್ಯಾಗಿನ ಜೊತೆಗೆ ರೇಷ್ಮೆ ಸೀರೆಯಿಂದ ಮಾತ್ರ ಭಾರತೀಯತೆಗೆ ಜೋತಾಡುತ್ತಿರುವ ಹೆಂಡತಿಯೊಂದಿಗೆ ಕುಟುಂಬಸಮೇತ ಸತ್ಯನಾರಾಯಣ ಪೂಜೆ ಮಾಡಿಸುತ್ತಾನೆ. ಅದನ್ನು ವಿಡಿಯೋ ತೆಗೆಯುತ್ತಾನೆ. ಊಟ ಮಾಡಿ ದಕ್ಷಿಣೆ ಪಡೆದು ಹೋಗುವ ಬ್ರಾಹ್ಮಣ, ಬ್ರಾಹ್ಮಣಿತಿಯರೆಲ್ಲರೂ “ತ್ಚು, ತ್ಚು, ಅಮೆರಿಕಾದಲ್ಲಿದ್ದರೂ ಏನು ಭಕ್ತಿ, ಏನು ಸಂಸ್ಕೃತಿ” ಎಂದು ಹೊಗಳಿ ಹೋಗುವಾಗ ಅಪ್ಪ ಅಮ್ಮ. ಅತ್ತೆ ಮಾವಂದಿರ ಧನ್ಯತಾಭಾವವನ್ನು ನೋಡಿ ಏನು ಮಾಡಬೇಕೆಂದು ತಿಳಿಯದೇ ಕಂಗಾಲಾಗುತ್ತಾನೆ. ಆದರೆ ಒಂದು ಮಾತ್ರ ನಿಜ. ಇವನ ಬಾಲ್ಯದ ಸ್ನೇಹಿತರೆಲ್ಲರೂ ಬೆಂಗಳೂರಿನಲ್ಲಿ ಇವನಿಗಿಂತ ಬಿಜಿಯಾಗಿದ್ದಾರೆ. ಮುಕ್ಕಾಲುವಾಸಿಯೆಲ್ಲ ಫೋನು ಮೊಬೈಲುಗಳಲ್ಲೇ ಸಿಗುವುದು. ಯೋಗಕ್ಷೇಮ ವಿಚಾರಿಸುವುದಕ್ಕೆಯೇ ಪುರುಸೊತ್ತಿಲ್ಲ. ಇನ್ನು ಬೇರೆ ವಿಷಯ ಎಲ್ಲಿ. ಶುದ್ಧವಾದ ಭಾರತೀಯತೆ ಭಾರತದಲ್ಲಿ ಮಾತ್ರ ಸಿಗುತ್ತದೆ ಎಂದು ನಂಬಿ ಅದನ್ನರಸುತ್ತಾ ರಾಮಕೃಷ್ಣಾಶ್ರಮಕ್ಕೆ ಹೋಗಲು ಮನೆಯ ಪಕ್ಕದಲ್ಲಿದ್ದ ಷಡ್ಕನನ್ನುಕರೆಯುತ್ತಾನೆ. ಬಿಸಿನೆಸ್ ಮೀಟಿಂಗಿಗೆಂದು ಸಿಂಗಪೂರಕ್ಕೆ ಹೋಗಬೇಕೆಂದು ತಪ್ಪಿಸಿಕೊಳ್ಳುತ್ತಾನೆ, ಷಡ್ಕ. ತಾನು ಯಾಕೆ ಹೀಗೆ ಎಂದು ಯೋಚಿಸುತ್ತಾನೆ. ತಾನೊಬ್ಬನೇ ಹೀಗೋ ಅಥವಾ ಎಲ್ಲರೂ ಹೀಗೋ ಗೊತ್ತಾಗುವುದಿಲ್ಲ. ತಾನು ಬೇರೆಯವರಿಗಿಂತ ಸ್ವಲ್ಪ ಭಿನ್ನನೇ, ಆದರೆ ಹೇಗೆ. ಭಿನ್ನವಾಗಿರಲಿಕ್ಕಿಲ್ಲ. ಹೇಳಿಕೇಳಿ ತಾನು ಕಾರ್ಡಿಯಾಲಜಿಸ್ಟ್. ಅಮೆರಿಕಾದಲ್ಲಿದ್ದರೂ ಕೈತುಂಬಾ ಸಂಬಳ ಬರುತ್ತದೆ. ಮನೆ, ಕಾರುಗಳು, ಬ್ಯಾಂಕ್ ಅಕೌಂಟ್, ಪೋರ್ಟ್ ಫೊಲಿಯೊ ಎಲ್ಲವೂ ವೈನಾಗೇ ಇದೆ. ಜತೆಯಲ್ಲಿರುವ ಕೆಲವರಿಗೆ ಇನ್ನೂ ಮದುವೆಯೇ ಆಗಿಲ್ಲ. ಡೌ ಜೋನ್ಸು, ನಾಸ್ದಾಕುಗಳ ಬಗ್ಗೆ, ಮನೆಯ ಚದರ, ಲಾನಿನ ಸೌಂದರ್ಯ, ಬೆಳೆಯುತ್ತಿರುವ ಮಕ್ಕಳು, ಸದಾಶಿವನಗರದಲ್ಲೊಂದು ಸೈಟು ಹಾಗೆ ಹೀಗೆ ಎಂದು ತಲೆ ಕೆಡಿಸಿಕೊಳ್ಳಬೇಕಾದ ತಾನು ಹೀಗೆ ಮೋಕ್ಷ, ಮುಕ್ತಿ, ಯಜ್ಞ, ಯಾಗ ಸಹಸ್ರನಾಮಾದಿಗಳಿಗೆ ಮನಸೋತದ್ದು ಯಾಕೆ. “ಧ್ಯಾಯನ್ ಕೃತೇ ಯಜನ್ ಯಜ್ಞೈಸ್ತ್ರೇತಾಯಾಂ ದ್ವಾಪರೇರ್ಚಯನ್ ಯದಾಪ್ನೋತಿ ತದಾಪ್ನೋತಿ ಕಲೌ ಸಂಕೀರ್ತ್ಯ ಕೇಶವಂ (ವಿ.ಪು.) ಕೃತಯುಗದಲ್ಲಿ ಧ್ಯಾನದಿಂದಲೂ, ತ್ರೇತಾಯುಗದಲ್ಲಿ ಯಜ್ಞಗಳಿಂದಲೂ ದ್ವಾಪರಯುಗದಲ್ಲಿ ಪೂಜೆಯಿಂದಲೂ ಗಳಿಸಬಹುದಾದ ಫಲವನ್ನು ಕಲಿಯುಗದಲ್ಲಿ ಸಹಸ್ರನಾಮಪಠನ ಅದೂ ವಿಷ್ಣುಸಹಸ್ರನಾಮಪಠನ ಅದರ ಅನುಸಂಧಾನದಿಂದ ಪಡೆಯಬಹುದಂತೆ. ಎಲ್ಲ ಬಗೆಯ ಪಾಪವನ್ನೂ ತೊಳೆದು ಏಳೇಳು ಜನ್ಮಕ್ಕೂ ಮುಕ್ತಿ ಕೊಡುತ್ತದಂತೆ. ಪುರುಸೊತ್ತಿಲ್ಲದ ಜೆಟ್‌ಕಲಿಯುಗದ ಮನುಷ್ಯರಿಗೆಂದೇ ಬರೆದಂತಿದೆ. ಅನುಸಂಧಾನವನ್ನೂ “ಅನುಸರಿಸಬಹುದು”. ಯಾಗ ಮಾಡಲು ನಮಗೆ ಸಮಯವೆಲ್ಲಿದೆ? ಕೆಸೆಟ್ ಕೇಳಿ ಶಾರ್ಟ್‌ಕಟ್ಟಿನಿಂದ ಸ್ವರ್ಗಕ್ಕೆ ಹೋಗಬೇಕೆನ್ನುವ ಹಂಬಲ ನಮಗೆ. ಯುದ್ಧಾನಂತರ ಯುಧಿಷ್ಟಿರ ಕೇಳುತ್ತಾನಂತೆ. ” ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ ಸ್ತುವಂತಃ ಕಂ ಕಮರ್ಚನ್ತಃ ಪ್ರಾಪ್ನುಯುರ್ವಾನವಾಃ ಶುಭಂ” “ದೇವರುಗಳಲ್ಲೆಲ್ಲಾ ಶ್ರೇಷ್ಠವಾದದ್ದು ಯಾವುದು, ಧರ್ಮಗಳಲ್ಲಿ ಅತಿ ಮುಖ್ಯವಾದದ್ದು ಯಾವುದು?” ಈ ಯುಧಿಷ್ಟಿರನ ಪ್ರಶ್ನೆಗೆ ಭೀಷ್ಮನ ಉತ್ತರ ಸಹಸ್ರನಾಮೋಪಾದಿಯಲ್ಲಿ ಬಂದಿತಂತೆ. ಅಲ್ಲ! ಮನಸ್ಸು ಯೋಚನೆಯನ್ನು ಕೊಂಚ ಬದಲಿಸುವ ಪ್ರಯತ್ನ ಮಾಡಿತು. ಸಂತೃಪ್ತಿ ಅಂದರೇನು? ಮನುಷ್ಯ ಯಾವಾಗ ತಾನು ಪರಮಸುಖಿ ಅಂದುಕೊಳ್ಳುತ್ತಾನೆ? ಪಾರಮಾರ್ಥಿಕ ಅನ್ನುವುದು ಇಷ್ಟವಾಗಬೇಕಾಗುವುದು ಈ ಲೌಕಿಕ ಪ್ರಪಂಚದ ವ್ಯಾಪಾರ ಮುಗಿಯುತ್ತಾ ಬಂದಾಗಲಲ್ಲವೇ? ಬುದ್ಧನಿಗೆ ರಾಜ್ಯ ಇತ್ತು, ದುಡ್ಡಿತ್ತು, ಸುಂದರವಾದ ಹೆಂಡತಿ ಇದ್ದಳು. ಬೇಕಾದದ್ದೆಲ್ಲಾ ಕೈಗೆ ಸಿಕ್ಕ ಮೇಲೆ ಇವೆಲ್ಲಾ ಮಾಯೆ ಅನ್ನಿಸಿತ್ತು. ಅಶೋಕನಿಗೂ ಹಾಗೇ. ಕಳಿಂಗ ಯುದ್ಧ ಸೋತಿದ್ದರೆ ಆತ ಇಷ್ಟು ದೊಡ್ಡ ಮನುಷ್ಯನಾಗುತ್ತಿದ್ದನೇ? ತಾನು ಸುಖಿಯೇ? ಸಂತೃಪ್ತನೇ? ಈ ಪ್ರಪಂಚದಲ್ಲಿ ತಾನು ಸಾಧಿಸುವುದು ಇಷ್ಟೇನೇ? ಮೈಸೂರಿನಲ್ಲಿದ್ದಾಗ ಒಂದೇ ಗುರಿ, ಅಮೆರಿಕಾಕ್ಕೆ ಹೋಗಬೇಕು, ಅಲ್ಲಿ ಜೀವನ ಮಾಡಬೇಕು. ಕಾರಿನಲ್ಲಿ ಓಡಾಡಬೇಕು.ದೊಡ್ಡಮನೆ ಕಟ್ಟಬೇಕು. ಎಲ್ಲವೂ ಆಗಿಹೋಯಿತಲ್ಲ ಈ ಕಳೆದ ಹತ್ತು ವರ್ಷಗಳಲ್ಲಿ. ಜೀವನದಲ್ಲಿ ಇನ್ನೇನೂ ಮಾಡುವುದೇ ಇಲ್ಲವೆಂದೇ ಈ ವಿಷಯಗಳು ಇಷ್ಟವಾಗುತ್ತಿವೆಯೇ? ಸಿದ್ದಾರ್ಥ ಬುದ್ಧನಾಗುತ್ತಿದ್ದಾನೆಯೇ? ಇಷ್ಟೆನೇ ಈ ಜೀವನ ಎಂದು ವೇದಾಂತಿಯಂತೆ ಯೋಚಿಸುತ್ತೆ ಮನಸ್ಸು, ಒಮ್ಮೊಮ್ಮೆ. ಆಗ ಏನೋ ಆಗಬೇಕು ಎಂದನಿಸುತ್ತದೆ. ಏನಾಗಬೇಕು? ಬೇಡ. ಈ ಏನೋ ಆಗುವ ರೇಜಿಗೆಯೇ ಬೇಡ. ನಾನು ನಾನಾಗಿಯೇ ಇರಲು ಏನು ಮಾಡಬೇಕು? ಇನ್ನೊಂದು ಮನೆ ತೆಗೆದುಕೊಳ್ಳಲೇ? ಕಾರನ್ನು ಬದಲಾಯಿಸಲೇ? ಯುರೋಪಿಗೆ ಲಾಸ್ ವೆಗಾಸಿಗೆ ಪ್ರಯಾಣ ಮಾಡಲೇ? ಇದೇ ತಾನೆ ಬದಲಾವಣೆ ಅಮೆರಿಕಾದಲ್ಲಿ. ಮೊದಲೇ ಚೆನ್ನಾಗಿತ್ತು. ಹಂತಹಂತಕ್ಕೂ ಗುರಿ ಬದಲಾಗುತ್ತಿತ್ತು. ಪಿಯೂಸಿಯಲ್ಲಿ ಎಂಬಿಬಿ‌ಎಸ್ ಗೆ ಹೋಗುವುದು. ನಂತರ ಎಂಡಿ ಮಾಡುವುದು, ಆಮೇಲೆ ಅಮೆರಿಕ. ಅಲ್ಲಿಗೆ ತಟಸ್ಥವಾಗಿ ಗಟ್ಟಿಬಂಡೆಯ ರೀತಿ ಆಗಿಬಿಟ್ಟಿತು ಜೀವನದ ಗತಿ. ಇಲ್ಲಿಗೆ ಬಂದಮೇಲೆ ಏನೇನು ಮಾಡಬೇಕೆಂದು ಮುಂಚೆಯೇ ಯೋಚಿಸಬೇಕಿತ್ತು. ಇನ್ನೇನೂ ಇಲ್ಲ ಎಂದು ಓದುತ್ತೇನೆಯೇ ತಾನು ಹಿಮಾಲಯದ ಸಾಧುಗಳ ಕಥೆಯನ್ನು, ರಜನೀಶರ ಆತ್ಮಚರಿತ್ರೆಯನ್ನು. ಇರಬಹುದು. “ವನಮಾಲೀ ಗಧೀ ಶಾಜ್ಞ್ಗೀ ಶಂಖೀ ಚಕ್ರೀ ಚ ನಂದಕೀ ಶ್ರೀಮನ್ನಾರಾಯಣೋ ವಿಷ್ಣುಃ ವಾಸುದೇವೋ ಭಿರಕ್ಷತು.”. ಆರಿಸಿದ ಸ್ಟೀರಿಯೋ ಸ್ವಿಚ್ಚನ್ನು. ಕಪ್ ಹೋಲ್ಡರಿನಲ್ಲಿದ್ದ ಕೆಪೋಚಿನೋ ಗುಟುಕರಿಸಿದ. ಆಸ್ಪತ್ರೆ ಹತ್ತಿರವಾಗುತ್ತಿತ್ತು. ಫಲಶೃತಿ ಕೇಳಬಾರದಂತೆ. ಎಲ್ಲಾ ಸಾವಿರ ಹೆಸರುಗಳನ್ನು ಹೇಳಿ ಆಮೇಲೆ ಈ ರೀತಿ ಹೇಳಿದರೆ ಈ ಲೋಕದಲ್ಲೂ ಬೇರೆ ಲೋಕದಲ್ಲೂ ಯಾವರೀತಿಯ ಪುಣ್ಯ ಲಭಿಸುತ್ತದೆ ಎನ್ನುವುದನ್ನು ವರ್ಣಿಸಿದ್ದಾರೆ. ಕೇಳುವ ಉದ್ದೇಶ ಮೋಕ್ಷ, ಪುಣ್ಯವೇ ಆದರೂ ಯಾವ ಯಾವ ತರದ ಪುಣ್ಯ ಬರಬಹುದು ಅನ್ನುವುದನ್ನು ವಿವರವಾಗಿ ತಿಳಿಯುವುದು ತಪ್ಪು. ಅದೂ ಸರಿ ಅನ್ನಿ. ಇದು ಬಹಳ ಶಕ್ತಿಶಾಲಿಯಾದ ಮಂತ್ರ. ದೇಹದ ಎಪ್ಪತ್ತೆರಡು ಸಹಸ್ರ ನಾಡಿಗಳನ್ನು ಶುಚಿಗೊಳಿಸುವುದು ಅಂದರೇನು? ದೇಹದಲ್ಲಿರುವುದು ಎಪ್ಪತ್ತೆರಡು ಸಾವಿರ ನಾಡಿಗಳೇ? ನಾಡಿಗಳು ಎಂದರೇನು? ಎಲ್ಲ ರಕ್ತನಾಳಗಳೂ ನಾಡಿಗಳೇನೇ? ಬಹುಶಃ ಕೆಪಿಲರಿಗಳನ್ನೂ ಸೇರಿಸಿರಬಹುದು. ದಿನಬೆಳಗಾದರೆ ತೊಡೆಯನಾಡಿಯೊಳಗೆ ತಂತಿಹಾಕಿ ಹೃದಯದ ಕರೋನರಿಗಳಿಗೆ ತಂತಿಬಿಟ್ಟು ಮುಚ್ಚಿಕೊಳ್ಳುತ್ತಿರುವ ನಾಳಗಳನ್ನು ಬೆಲೂನು ಹಾಕಿ ಹಿಗ್ಗಿಸುವ ತನ್ನಂಥವನೂ ಈ ಸ್ತೋತ್ರ ಹೇಳಿಬಿಟ್ಟರೆ ನರನಾಡಿಗಳೆಲ್ಲವೂ ಶುದ್ಧವಾಗಿಬಿಡುತ್ತವೆ ಅನ್ನುವುದನ್ನು ನಂಬುವುದು…….? ಯಾವುದು ವಿಜ್ಞಾನ, ಯಾವುದು ಗೊಡ್ಡುನಂಬಿಕೆ. ಏನನ್ನುತ್ತೆ ನಮ್ಮ ಸೈನ್ಸು, ನಮ್ಮ ಕಾರ್ಡಿಯಾಲಜಿ. ಯಾರಿಗೆ ಹೃದಯಾಘಾತವಾಗುತ್ತದೆ? ಏನನ್ನುತ್ತಾರೆ ನಮ್ಮ ಹ್ಯಾರಿಸನ್ನು ಬ್ರೌನ್ ವಾಲ್ಡುಗಳು? ವಯಸ್ಸು, ಪುಲ್ಲಿಂಗ, ಸಕ್ಕರೆ ಖಾಯಿಲೆ, ಕೌಟುಂಬಿಕ ಹಿನ್ನೆಲೆ,ಅತಿಪಿತ್ಥ, ರಕ್ತದೊತ್ತಡ, ಸಿಗರೇಟು ಹೃದಯಕ್ಕೆ ಒಳ್ಳೆಯವಲ್ಲ. ಈ “ಹೈ ರಿಸ್ಕ್” ಇರುವ ಜನಗಳು ನಮ್ಮ ಬಳಿ ಬಂದರೆ ನಾವೇನು ಮಾಡುತ್ತೇವೆ, ಟ್ರೆಡ್ ಮಿಲ್ ಹತ್ತಿಸುತ್ತೇವೆ, ಓಡಿಸುತ್ತೇವೆ. ಉತ್ತರ ಸಿಕ್ಕಲಿ ಬಿಡಲಿ, ಅನುಮಾನ ಜಾಸ್ತಿ ಆಗಿಬಿಟ್ಟರೆ ತೊಡೆಗೆ ತಂತಿಹಾಕಿ ಆಂಜಿಯೋಗ್ರಾಂ ಮಾಡೇಬಿಡುತ್ತೇವೆ, ಬೆಲೂನು ಬಿಟ್ಟೇಬಿಡುತ್ತೇವೆ. ಇವಿಷ್ಟು ನಮಗೆ ಗೊತ್ತಿರುವುದು. ನಮಗೆ ಗೊತ್ತಿರದೇ ಇರುವುದು ಏನು? ಈ ಅಮೆರಿಕನ್ನರೇ ಹೀಗೆ. ದಿನಾ ಏನಾದರೂ ಹೊಸದು ಹೇಳುತ್ತಲೇ ಇರುತ್ತಾರೆ. ನಿನ್ನೆ ಹೋಮೋಸಿಸ್ಟೀನ್ ಅಂದರು. ಇನ್ನೊಂದು ಯಾವುದೋ ಬ್ಯಾಕ್ಟೀರಿಯಾ ತರವಂತೆ. ಅದರಿಂದಲೂ ಹೃದಯಾಘಾತ ಆಗಬಹುದಂತೆ. ಇನ್ನೂ ಏನೇನು ಹೇಳುತ್ತಾರೋ. ಕಿವಿನೋವಿಗೆ, ಕೆಮ್ಮಿಗೆ ಕೊಡುವ ಔಷಧಿಯಿಂದ ಹಾರ್ಟ್ ಅಟ್ಯಾಕ್ ಗುಣವಾಗುತ್ತೆ ಎಂದು ಯಾರಾದರೂ ಕಂಡುಹಿಡಿದುಬಿಟ್ಟರೆ ಅಲ್ಲಿಗೆ ತಮ್ಮಂಥವರು ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕಷ್ಟೆ. ಮತ್ತೊಂದು ವಿಷಯ! ಬರೀ ಮುಚ್ಚಿದ್ದ, ಮುಚ್ಚುತ್ತಿರುವ ಕರೋನರಿಯನ್ನು ಹಿಗ್ಗಿಸಿ ತಾನು ಈ ರೋಗಿಗಳ ಜೀವ ಉಳಿಸುತ್ತಿದ್ದೇನೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಪ್ರಾಮಾಣಿಕ. ಪ್ರಾಮಾಣಿಕತೆಗೆ ಬೆಂಕಿ ಬೀಳಲಿ. ಪ್ರಪಂಚದಲ್ಲಿ ತನಗಿರುವ ಇಮೇಜಿದು ಅನ್ನುವ ತರ್ಕದಲ್ಲಿ ಮನಸ್ಸು ಹಿಗ್ಗಿ ಹೀರೇಕಾಯಿಯಾಗುತ್ತದೆ. ಅದೇ ಒಂದು ವೇಳೆ ನಿಜವಾಗಿದ್ದರೆ ತಾನು ನೋಡದ, ಕೈಯಾಡಿಸದ ಹೃದಯರೋಗಿಗಳೆಲ್ಲ ಇಷ್ಟರಲ್ಲಿ ಸತ್ತಿರಬೇಕಲ್ಲ. ನಮ್ಮ ದೊಡ್ಡಪ್ಪಂದಿರುಗಳನ್ನೇ ತೆಗೆದುಕೊಳ್ಳೋಣ. ಹತ್ತು ವರ್ಷವಾಗಿದೆ, ಹಾರ್ಟ್ ಅಟ್ಯಾಕ್ ಆಗಿ. ಯಾವ ಕಾರ್ಡಿಯಾಲಜಿಸ್ಟ್ ಹತ್ತಿರವೂ ತೋರಿಸಿಲ್ಲ. ಅಲ್ಲೇ ಚಿಕ್ಕಬಳ್ಳಾಪುರದಲ್ಲಿ ಯಾವುದೋ ಡಾಕ್ಟರು ಏನೋ ಡ್ರಿಪ್ ಕೊಟ್ಟನಂತೆ. ಈಗಲೂ ಕಲ್ಲು ಗುಂಡಿನಹಾಗೆ ಇದ್ದಾರೆ. ದಿನಾ ಸೈಕಲ್ ತುಳಿಯುತ್ತಾರೆ, ಕಟ್ಟಿಗೆ ಒಡೆಯುತ್ತಾರೆ. ಏನೋ ಅಮೆರಿಕಾದ ಡಾಕ್ಟರು ಎಂದು ತೋರಿಸಲು ಬಂದಾಗ ತಾನು ಟೆಸ್ಟ್ ಮಾಡಿಸಿ ಎಂದರೆ ನಕ್ಕು ಸುಮ್ಮನೆ ವಾಪಸ್ ಹೋದವರು ಇಲ್ಲಿಯತನಕ ಬಂದಿರಲಿಲ್ಲ. ತಾನು ಟೆಕ್ನಿಕ್ಕಿನಲ್ಲಿ ಯಾವ ನಲ್ಲಿ ರಿಪೇರಿಯವನಿಗಿಂತ ಮೇಲು. ಇಬ್ಬರೂ ಅಷ್ಟೆ, ಮುಚ್ಚಿಕೊಂಡಿರುವ ನಳಿಕೆಗಳನ್ನು ರಿಪೇರಿಮಾಡುತ್ತೇವೆ. ಸ್ವಲ್ಪ ಸೂಕ್ಷ್ಮ ತಿಳಿಸಿಕೊಟ್ಟರೆ ಅವನೇ ನನಗಿಂತ ಚೆನ್ನಾಗಿ ನನ್ನ ಕೆಲಸ ಮಾಡಬಹುದೇನೋ. ನಲ್ಲಿ ರಿಪೇರಿಯವನ ಜೊತೆ ತನ್ನ ವೃತ್ತಿಯನ್ನು ಹೋಲಿಸಿದಾಗ ನಗು ಬರುತ್ತದೆ. ಎಲ್ಲವೂ ಸೋಗಲಾಡಿತನ. ದೊಡ್ಡ ಬಿಳಿಯ ಕೋಟು, ಸ್ಕ್ರಬ್ಸ್, ಸ್ಟೆತೋಸ್ಕೋಪು, ಮಿಲಿಯನ್ ಗಟ್ಟಲೆ ಖರ್ಚುಮಾಡಿ ಕಟ್ಟಿಸಿರುವ ಈ ಆಸ್ಪತ್ರೆ ಬರೀ ಶೋಕಿ. ಈ ಜೀವ ಅನ್ನುವುದು ಅಷ್ಟೊಂದು ಫ್ರಜೈಲ್ ವಸ್ತುವೇ ಯಾರು ಬೇಕಾದರೂ ಉಳಿಸುವುದಕ್ಕೆ, ತೆಗೆಯುವುದಕ್ಕೆ. ಆಂಟಿಬಯಾಟಿಕ್ ಕೊಡುವುದರಲ್ಲಿ, ಅಪೆಂಡಿಸೈಟಿಸ್ ಗೆ ಆಪರೇಷನ್ ಮಾಡುವುದರಲ್ಲಿ, ಬೈ ಪಾಸ್ ಸರ್ಜರಿ ಮಾಡುವುದರಲ್ಲಿ, ತಲೆ ಬುರುಡೆ ಒಡೆದು ಒಳಗಿರುವ ಗಡ್ಡೆ ತೆಗೆಯುವುದರಲ್ಲಿ, ಕೀಮೋತೆರಪಿಯಲ್ಲಿ ಜೀವ ಉಳಿಸುವ ಕ್ರಿಯ ಇದೆಯೇ? ನಿಜ ಹೇಳೋಣ. ಈ ಮೇಲ್ಕಂಡ ಯಾವುದೇ ದೊಡ್ಡದಾಗಿ ಕಾಣಿಸುವ ವೈದ್ಯಕೀಯ ಚಮತ್ಕಾರಗಳನ್ನು ಯಾವುದೇ ಡಾಕ್ಟರು ತನ್ನ ದಿನನಿತ್ಯದ ಕೆಲಸವೆಂದು ತಿಳಿಯುತ್ತಾನೆಯೇ ಹೊರತು ಪ್ರತಿನಿತ್ಯ ಈ ರೀತಿ ಧನ್ಯನಾಗುತ್ತಾ ಕೂತರೆ ಆ ಧನ್ಯತೆಗೆ ಒಂದು ಅರ್ಥವಿರುವುದೇ ಇಲ್ಲ. ಜೀವನವಿಡೀ ಮೆಡಿಕಲ್ ಸ್ಟುಡೆಂಟಾಗೇ ಇರಬೇಕಾಗುತ್ತದೆ. ಇದೇನು ರೊಟೀನ್ಟಿಯೇ, ಅಥವಾ ಮಾಡುವ ಕೆಲಸದ ಮೇಲೆ ತಾತ್ಸಾರವೇ. ಒಳ್ಳೆಯ ಕೆಲಸಗಳು ರೊಟೀನ್ ಆದರೆ ಕೊಲೆಮಾಡುವುದರಲ್ಲಿ ಥ್ರಿಲ್ ಹೆಚ್ಚಿರುತ್ತದೆ ಅನ್ನಿಸುತ್ತದಂತೆ. ತಾನು ಬೇರೆ ಎಲ್ಲರಂತೆ ಒಬ್ಬ ಟೆಕ್ನಿಶಿಯನ್. ನುರಿತ ತಂತ್ರಜ್ಞ, ಅಷ್ಟೆ. ಮನುಷ್ಯರ ತೊಡೆ, ಹೃದಯದ ಜೊತೆ, ಸ್ಟೆಂಟಿನ ಜೊತೆ ಆಟವಾಡುತ್ತೇನೆ. ನಮ್ಮ ಮನೆಯ ನಲ್ಲಿಯವನು ಸ್ಕ್ರೂ ಡ್ರೈವರ್, ರಿಂಚುಗಳ ಜತೆ ಹೆಣಗಾಡುತ್ತಾನೆ. ಜೀವ ಉಳಿಸುವುದೆಲ್ಲ ದೊಡ್ಡಮಾತು. ಬರೀ ಕರೋನರಿಯೊಳಗೆ ಬೆಲೂನು ಬಿಡುವಷ್ಟು ಸುಲಭವಲ್ಲ ಈ ಜೀವ ಉಳಿಸುವ ಕೆಲಸ. ಮಾಡುವ ದುರ್ವಿದ್ಯೆ, ಊಟದ ಅಶಿಕ್ಷೆ ಮತ್ತು ಕೆಟ್ಟ ಜೀನುಗಳು ಈ ಹತ್ತು ಹಲವು ಸೇರಿ ನಾಡಿಯ ಒಳಪದರವನ್ನು ನಾಶಮಾಡಿ ಹೆಪ್ಪುಗಟ್ಟಿದ ಸಣ್ಣ ಗಡ್ಡೆ ಒಡೆದ ತಕ್ಷಣ ಪಟೀರೆಂದು ಒಡೆದುಹೋಗುವ ಹೃದಯದ ಜೊತೆಗೆ, ತಲೆಗೆ ಭರ್ಜರಿ ಏಟು ಬಿದ್ದು ಬುರುಡೆಯೊಳಗೆ ಹೆಪ್ಪುಗಟ್ಟುವ ರಕ್ತದ ಗಡ್ಡೆಯ ಒತ್ತಡ ಹಿಮ್ಮೆದುಳಿನ ಮೇಲೆ ಬಿದ್ದಾಕ್ಷಣ, ಕೆಟ್ಟ ಸೂಕ್ಷ್ಮಾಣುಗಳು ರಕ್ತ ಸೇರಿ ಅಂಗಾಂಗಗಳ ಕ್ರಿಯೆಗಳನ್ನು ಕೆಡಿಸಿದಾಗ, ಮೂಳೆಗಳ ನಡುವಿನ ಕಾರ್ಟಿಲೇಜು ಸವೆದು ಸವೆದು ನಿಸ್ಸಾರವಾದಾಗ, ಕೋಶಗಳು ಹತೋಟಿಮೀರಿ ರತಿಕ್ರೀಡೆಯಾಗಿ ಕ್ಯಾನ್ಸರ್ ಎಂಬ ಮಾರಿಯನ್ನು ಹುಟ್ಟಿಸಿದಾಗ—- ಜೀವ ಹೋಗಬೇಕು. ಅಬ್ಬ! ಎಂತಹ ಮಹದನ್ವೇಷಣೆ! ಮೊದಲೂ ಸಾಯುತ್ತಿದ್ದ ಮನುಷ್ಯ, ಈಗಲೂ ಸಾಯುತ್ತಿದ್ದಾನೆ. ಊಟ ಮಾಡಿ ಮೊಮ್ಮಕ್ಕಳ ಜೊತೆ ಆಟ ಆಡಿ ರಾತ್ರಿ ಮಲಗಿದವನು ಬೆಳಿಗ್ಗೆ ಏಳದೆ ಕತ್ತಲಿನೊಂದಿಗೇ ಲೀನವಾಗಿಹೋಗುವ ಸುಖವಾದ ಸಾವು ಅದು. ಪ್ರತಿ ರೋಗ ಲಕ್ಷಣಗಳಿಗೊಂದು ರೋಗವನ್ನು ಹೆಸರಿಸಿಕೊಂಡು ಕೈಕಾಲ ನಾಡಿಗಳಲ್ಲಿ, ಗಂಟಲಲ್ಲಿ, ಮೂಗುಬಾಯಿಗಳಲ್ಲಿ ಟ್ಯೂಬುಗಳನ್ನು ಇರಿಸಿಕೊಂಡು ಕೆಲಕಾಲ ಬದುಕನ್ನು ಬಾಡಿಗೆಗೆ ಪಡೆದುಕೊಂಡು ನೋಡಿರೋ ಸಾಯುವುದೆಂದರೆ ಇದು ಎಂದು ಪ್ರಾಣಬಿಡುವುದು ಇದು. ಈ ಅಮೆರಿಕಾದಲ್ಲಂತೂ ಹೀಗೆಯೇ ಸಾಯಬೇಕು. ಸುಮ್ಮಸುಮ್ಮನೇ ಮನೆಯಲ್ಲಿ ಧಿಡೀರ್ ಎಂದು ಸತ್ತುಬಿಟ್ಟರೆ ನಿಮ್ಮ ಡಾಕ್ಟರರು ಒಳ್ಳೆ ಕೆಲಸ ಮಾಡಿಲ್ಲವೆಂದು ಬೇಕಾದರೆ ಕೋರ್ಟಿಗೆ ಹೋಗಬಹುದು. ಯೋಗಣ್ಣ ಅರ್ಥಾತ್ ಯೋಗಾನರಸಿಂಹ ಯಾ ಡಾ. ಯೋಗಿ ಯೋಚಿಸುತ್ತಲೇ ಇದ್ದ. ಈ ಯೋಚನೆಗಳು ರಕ್ತಬೀಜಾಸುರನಂತವು. ಒಂದರ ಹೊಟ್ಟೆಯನ್ನು ಸೀಳಿ ಇನ್ನೊಂದು ಬರುತ್ತಲೇ ಇರುತ್ತವೆ. ಅವಕ್ಕೇನು ತರ್ಕ ಇರಬೇಕೆಂದಿಲ್ಲ. ಅಲ್ಲ, ಇಷ್ಟು ಮಾತನಾಡುತ್ತಾರಲ್ಲ ಈ ಬಿಳಿಯಜನ, ಇವರಿಗ್ಯಾಕೆ ಇಷ್ಟೊಂದು ಆಸಕ್ತಿ ನಮ್ಮ ಸಂಸ್ಕೃತಿಯ ಮೇಲೆ. ನಮ್ಮ ಬದುಕು ಸಾವು ಎಲ್ಲವೂ ಬರೇ ಫಿಸಿಕಲ್ ಆಗಿದ್ದು, ಬೇಕಾದಲ್ಲಿ ನಿಮ್ಮದೇ ಪ್ರತಿರೂಪವನ್ನು ಕ್ಲೋನು ಮಾಡಿ ನಿಮ್ಮನ್ನು ಅಮರನನ್ನಾಗಿ ಮಾಡಬಲ್ಲ ಈ ಮಹಾಮೇಧಾವಿಗಳಿಗ್ಯಾಕೆ ಬೇಕು, ಈ ಹಠಯೋಗ, ಪ್ರಾಣಾಯಾಮ. ಒಟ್ಟಿನಲ್ಲಿ ಏನಪ್ಪಾ ಅಂದರೆ ಇವರೇ ಹೇಳುವಹಾಗೆ “ಬಾಟಂ ಲೈನ್”- ನಾವು ಮಾಡುವ ಕೆಲಸದ ಮೇಲೆ ನಮಗೆ ನಂಬಿಕೆ ಇಲ್ಲ. ದಿನಬೆಳಗಾದರೆ ಕಂಪ್ಯೂಟರಿನ ಮುಂದೆ ಕುಳಿತು ಸಿಸ್ಟಮ್ಮುಗಳನ್ನು ಅನಲೈಜ್ ಮಾಡುವವ ಕಂಪೆನಿ ಪಬ್ಲಿಕ್ಕಿಗೆ ಹೋಗುವ ಮುನ್ನ ದೇವರಿಗೆ ಹಣ್ಣುಕಾಯಿ ಮಾಡಿಸುವುದು, ನಮ್ಮ ರಾಜಾರಾಮಣ್ಣ ಆಕಾಶಕ್ಕೆ ಶಟಲ್ ಹಾರಿಸುವುದಕ್ಕೆ ರಾಹುಕಾಲ ಗುಳಿಕಕಾಲ ನೋಡಿದಂತಲ್ಲವೇ. ನಮ್ಮಲ್ಲೇ ಇದೆ ಈ ದ್ವಂದ್ವ, ಆಷಾಢಭೂತಿತನ. ಇಲ್ಲದಿದ್ದರೆ ಯಾಕೆ ಹೇಳಿ ನಮ್ಮ ಆಯುರ್ವೇದವನ್ನು, ವಾತ,ಪಿತ್ಥ, ಕಫವನ್ನು ವ್ಯಾತ, ಪೀತ್ತ, ಕ್ಯಾಫ ಎಂದು ನಾಲಿಗೆ ಹೊರಳಿಸಿ ಹೇಳಿ ದುಡ್ಡುಮಾಡಿದ ದೀಪಕ್ ಚೋಪ್ರ. ನಮ್ಮ ಹಿಂದೂಸ್ತಾನಕ್ಕಿಂತಲೂ ಚೆನ್ನಾಗಿ ಬೆಳೆಯುತ್ತಿರುವುದು ಇಲ್ಲಿನ ರಾಮಕೃಷ್ಣ, ಚಿನ್ಮಯ ಮಿಶನ್ನುಗಳು. ಯೋಗಣ್ಣ ಮರ್ಸೀಡಿಸನ್ನು ಆಸ್ಪತ್ರೆಯ ಪಾರ್ಕಿಂಗ್ ಲಾಟಿನೊಳಗೆ ತಂದ. ಕನ್‌ಫ್ಯೂಶನ್ ಕಳೆದು ಮನಸ್ಸು ತಿಳಿಯಾಗಲೆಂದು ಕೈಗೆ ಸಿಕ್ಕಿದ ಸೀಡಿಯನ್ನು ಹಾಕಿದ. ರಿಕ್ಕಿ ಮಾರ್ಟಿನ್ ಹಾಡಲು ಶುರುಮಾಡಿದ್ದ. ಹೌದು, ಹೀಗೆ ಕೆಪೋಚಿನೋ ಕುಡಿಯುತ್ತಾ ಎರಡು ರಿಕ್ಕಿಮಾರ್ಟಿನ್ನನ ಹಾಡುಗಳ ಮಧ್ಯೆ ವಿಷ್ಣುಸಹಸ್ರನಾಮ ಕೇಳಿದರೆ ಸರಿಯೇ? ಏನೂ ತಪ್ಪಿಲ್ಲ. ಶುಭಕಾರ್ಯಗಳಲ್ಲಿ ಕೇಳುವಂತೆ ಶ್ರಾದ್ಧಾದಿ ಅಪರಕರ್ಮಗಳಲ್ಲಿಯೂ ಕೇಳಬಹುದಾದ ಈ ಪವಿತ್ರವಾದ ಸ್ತೋತ್ರವನ್ನು ತಾನು ಕಾಫಿಕುಡಿಯುತ್ತಾ ಈ ಏಸಿ ಕಾರಿನಲ್ಲಿ ಕೇಳಿದರೆ ತಪ್ಪೇನಿದೆ? ಈ ವಾತ, ಪಿತ್ಥ ಕಫಗಳನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ ನಂಬುತ್ತೇವೆ ಈ ನಮ್ಮ ಸಾಕ್ಷ್ಯಾಧಾರಿತ ವೈದ್ಯವನ್ನು. ಅಥವಾ ಹೀಗೂ ಹೇಳಬಹುದು- ಈ ವಾತ ಪಿತ್ಥಾದಿಗಳನ್ನು ಎಷ್ಟು ನಂಬುವುದಿಲ್ಲವೋ ಅಷ್ಟೇ ನಂಬುವುದಿಲ್ಲ ಈ ನಮ್ಮ ಎವಿಡೆನ್ಸ್ ಬೇಸ್ಡ್ ಮೆಡಿಸನ್ನನ್ನೂ. ಕರಾಲರಿ ಥಿಯರಿ. ಕಳೆದ ಎಂಟು ವರ್ಷದಿಂದ ಒಂದು ದಿನವೂ ತಪ್ಪಿಲ್ಲ. ಮನೆಯಿಂದ ಆಸ್ಪತ್ರೆಗಿರುವ ಒಂದು ಗಂಟೆಯ ದೂರದಲ್ಲಿ ಮುಕ್ಕಾಲು ವಿಷ್ಣುಸಹಸ್ರನಾಮದ ಕೆಸೆಟ್ ಕೇಳುವುದರಲ್ಲೇ ಕಳೆದುಹೋಗುತ್ತದೆ. ಮೊದಲ ಮೂರುವರ್ಷ ಬರೇ ಸ್ತೋತ್ರ ಮಾತ್ರ ಕೇಳುವುದು. ಅರ್ಥ ಕಿಂಚಿತ್ತೂ ಆಗದಿದ್ದರೂ ಕೇಳದಿದ್ದರೆ ತಳಮಳ. ಏನೋ ತೊಂದರೆ ಆಗಬಹುದೆಂಬ ಭಯ. ಕೇಳಿ ಉಪಯೋಗವಾಗಲಿ ಬಿಡಲಿ, ಕೇಳದೇ ತೊಂದರೆಯಾಗಿಬಿಟ್ಟರೆ? ಒಂದು ದಿನದ ಮಟ್ಟಿಗೆ ತನಗೆ ತಾನೇ ಮೋಸ ಮಾಡಿಕೊಂಡರೆ ಹೇಗೆ? ಕೆಲಸದ ಮೇಲೆ ಅಥವಾ ಪ್ರವಾಸದಲ್ಲಿದ್ದಾಗ ಹೇಳಿಕೊಳ್ಳದೇ ಇದ್ದ ದಿನಗಳು ಬೇಕಾದಷ್ಟಿವೆ. ಆದರೆ ಆಗೆಲ್ಲ ಶ್ರೀ ರಾಮ ರಾಮ ರಾಮೇತಿ ಹೇಳಿ ತಪ್ಪಾಯಿತು ಎಂದು ಕೆನ್ನೆ ಬಡಿದುಕೊಂಡಿದ್ದಾನೆ. ಹೇಳಲು ಅವಕಾಶವಿದ್ದೂ ಹೇಳಿಕೊಳ್ಳದಿದ್ದಾಗ ಮಾತ್ರ ಮೋಸ ಮಾಡಿದಂತಾಗುತ್ತದೆ ಅಲ್ಲವೇ. ಇರಲಿ, ನೋಡೋಣ. ನಾಳೆ ಏನೂ ಕಡಿಯುವ ಕೆಲಸವಿಲ್ಲ. ಬೆಳಿಗ್ಗೆ ಬರೇ ರೌಂಡ್ಸ್ ಅಷ್ಟೇ. ಯಾರಿಗೂ ತಂತಿ ಹಾಕುವ ಕೆಲಸವಿಲ್ಲ. ಬರಬೇಕಾದರೆ ಬಾನ್ ಜೋವಿಯದೋ, ಬೀ ಬೀ ಕಿಂಗಿನದೋ ಹೊಸ ಸೀಡಿ ಪೂರಾ ಕೇಳಿಕೊಂಡು ಬರಬೇಕು, ಬಾಯಲ್ಲಿ ಚ್ಯೂಯಿಂಗ್ ಗಮ್ ಅಗಿಯುತ್ತಾ. ಒಂದು ದಿನ ಬಿಡುವು ಕೊಡೋಣ ಇವೆಲ್ಲವಕ್ಕೂ. ಭಕ್ತಿ ಮನಸ್ಸಿನಲ್ಲಿ ಇರಬೇಕು. ಬರೀ ಮಂತ್ರ ಸ್ತೋತ್ರ ಕೇಳಿಬಿಟ್ಟರೆ ಸಾಲದು. ” ಎಲ್ಲಿದ್ದಿ ಇಲ್ಲಿ ತನಕ ಯೋಗೀ, ಕ್ಯಾತ್ ಲ್ಯಾಬಿನಿಂದ ನಾಲ್ಕು ಸರಿ ಬೀಪ್ ಮಾಡಿದ್ದೆವು” ಆಸ್ಪತ್ರೆ ಒಳಗೆ ಬಂದೊಡನೆ ಬಂತು ಸ್ವಾಗತ. ಯಾರೋ ನಲವತ್ತೆರಡು ವರ್ಷದವನಿಗೆ ಹಾರ್ಟ್ ಅಟ್ಯಾಕಂತೆ. ತುರ್ತಾಗಿ ಆಂಜಿಯೋಗ್ರಾಮಿಗೆ ತೆಗೆದುಕೊಂಡಿದ್ದರು. ಸರಸರನೆ ಬಟ್ಟೆ ಬದಲಾಯಿಸಿ ಒಳಬರುತ್ತಾನೆ ಯೋಗಣ್ಣ. ’ಲುಕ್ಸ್ ಲೈಕ್ ಅ ಕಾಂಪ್ಲಿಕೇಟೆಡ್ ಒನ್, ಯೋಗಿ ನೀನು ಬಂದದ್ದು ಒಳ್ಳೆಯದಾಯಿತು. ಇದು ನಿನ್ನದೇ ಪೇಷೆಂಟು. ಮೊನ್ನೆ ಕ್ಲಿನ್ನಿಕ್ಕಿನಲ್ಲಿ ನೋಡಿದ್ದೆಯಂತೆ. ಇವತ್ತು ಬೆಳಿಗ್ಗೆ ಎಮರ್ಜೆನ್ಸಿ ರೂಮಿಗೆ ಎದೆ ನೋವೆಂದು ಬಂದ. ದೊಡ್ಡ ಕ್ಲಾಟು. ಉಳಿದಿದ್ದೇ ಹೆಚ್ಚು. ಎರಡು ಮೂರು ಸ್ಟೆಂಟು ಬೇಕಾಗಬಹುದು. ಇಲ್ಲಿಂದ ನೀನು ಕಂಟಿನ್ಯೂ ಮಾಡು. ನನಗೆ ಇನ್ನೊಂದು ಕೇಸಿದೆ” ಯೋಗಣ್ಣ ಬರುವುದನ್ನೇ ಕಾಯುತ್ತಿದ್ದಂತೆ ಹೇಳಿದ ಗೆಳೆಯ, ಪಾರ್ಟ್ನರ್ ಜಾನತನ್. ಕೈ ಯಾಕೋ ನಡುಗುತ್ತಿತ್ತು ಯೋಗಿಗೆ. ಛೆ! ಎಂದೂ ಹೀಗಾಗಿರಲಿಲ್ಲವಲ್ಲ. ಇಂದೇಕೆ ಮೈ ಬೆವರುತ್ತಿದೆ. ಉಸಿರು ಮೇಲೆ ಬರುತ್ತಿದೆ.ಎದೆ ಡವಡವಗುಟ್ಟುತ್ತಿದೆ. ಕೈ ತೊಳೆಯುತ್ತಿದ್ದಾಗ ಸೋಪು ಜಾರಿ ಬಿತ್ತು. ಮನಸ್ಸಿನಲ್ಲೇ ಯೋಚನೆ ಮುಂದುವರಿಯಿತು. ಪಾಪ ಇನ್ನೂ ನಲವತ್ತೆರಡು. ಸ್ವಲ್ಪ ತಾನು ಕೈ ತಪ್ಪಿದರೂ ಜೀವವನ್ನೇ ಕಳೆದುಕೊಳ್ಳಬಹುದಲ್ಲವೇ ಈತ. ಛೆ, ಹಾಗಾಗಲಿಕ್ಕಿಲ್ಲ. ಅಕಸ್ಮಾತ್ ಹಾಗಾದರೂ ಅವೆಲ್ಲ ಸಹಜವಲ್ಲವೇ. ಏನಾದರೂ ಹೆಚ್ಚುಕಮ್ಮಿಯಾದರೆ ಬೈಪಾಸ್ ಮಾಡಿಸಿದ್ರಾಯಿತು. ಎರಡಾದರೂ ಸ್ಟೆಂಟ್ ಬೇಕೆನ್ನುತ್ತಾನೆ ಜಾನತನ್. ತಾನು ಮಾಡದೆ ಇರುವುದೇನೂ ಅಲ್ಲ. ಆದರೂ ತೊಂದರೆಯಾಗಿಬಿಟ್ಟರೆ? ಮೊಟ್ಟಮೊದಲ ಬಾರಿಗೆ ಯಾವುದೋ ಒಂದು ಜೀವದ ರಕ್ಷಣೆಯ ಹೊಣೆ ತನ್ನ ಕೈಯಲ್ಲಿದೆ ಅನ್ನಿಸಿತು. ಏನೂ ಆಗುವುದಿಲ್ಲ. ” ಬೆಟ್ಟಿ, ಜಾನತನ್ ಬಿಟ್ಟು ಬೇರೆ ಯಾರಾದರೂ ಇದ್ದಾರ ಸ್ವಲ್ಪ ನೋಡು. ಐ ಥಿಂಕ್ ಐ ಕೆನ್ ಯೂಸ್ ಅನದರ್ ಪೇರ್ ಆಫ್ ಹ್ಯಾಂಡ್ಸ್.” ” ಬೇರೆ ಯಾರೂ ಇಲ್ಲ. ಕ್ರಿಸ್ ಮೆಕ್ಸಿಕೋದಲ್ಲಿದ್ದಾನೆ. ಕೂಮಾರ್ ಕ್ಲಿನಿಕ್ಕಿನಲ್ಲಿದ್ದಾನೆ. ಜಾನತನ್ ಆಗಲೇ ಕೇಸ್ ಶುರು ಮಾಡಿದ್ದಾಯಿತು. ಲುಕ್ಸ್ ಲೈಕ್ ಯು ಆರ್ ಆನ್ ಯುವರ್ ಓನ್” ಚ್ಯುಯಿಂಗ್ ಗಂ ಅಗಿಯುತ್ತಾ ಹೇಳಿದಳು. ಹೌದು ಐ ಆಂ ಆನ್ ಮೈ ಓನ್. ಯಾಕಿಂದು ಈ ಒಂಟಿತನ ಕಾಡುತ್ತಿದೆ. ಇನ್ನೂ ಕೇಸೇ ಶುರುಮಾಡಿಲ್ಲ. ಆಗಲೇ ಸೋತುಹೋಗಿರುವ ಭಾವನೆ. ತುಂಬಾ ಆಪ್ತರಾಗಿರುವವರನ್ನು ಕಳೆದುಕೊಂಡಂತೆ ಮನಸ್ಸಿನೊಳಗೆ ತಳಮಳ. ” ಒಂದು ನಿಮಿಷ ಬಂದೆ” ಸ್ಕ್ರಬ್ಸ್ ನಲ್ಲೇ ಹೊರಗೆ ಹೊರಟ. ” ಯೋಗೀ , ವಿ ಆರ್ ಆಲ್ ರೆಡಿ” ಕಿರಿಚುತ್ತಿದ್ದಳು, ಬೆಟ್ಟಿ. ಬಂದೇಬಿಟ್ಟೆ ಎಂದು ಕಾರಿನ ಬಳಿಗೆ ಬಂದ. ಕ್ಯಾತ್ ಲ್ಯಾಬಿನಲ್ಲಿ ಟೇಪ್ ರಿಕಾರ್ಡರ್ ಹುಡುಕಿ ಕ್ಯಾಸೆಟ್ ಹಾಕಿದ. ” ವಿಶ್ವಂ ವಿಷ್ಣುರ್ವಷಟ್ಕಾರೋ” ಸುಬ್ಬಲಕ್ಷ್ಮಿ ಹಾಡುತ್ತಿದ್ದಳು. “ನೌ ಯು ನೀಡ್ ಸಂ ಇನ್ಪಿರೇಷನಲ್ ಮ್ಯೂಸಿಕ್, ಈಸ್ ಇಟ್?” ಪ್ರಶ್ನಾರ್ಥಕವಾಗಿ ನೋಡಿದಳು ಬೆಟ್ಟಿ. ” ಜಸ್ಟ್ ಅನ್ ಎಟಿಮಾಲಜಿ” ಅಂದು ನಕ್ಕ ಯೋಗಣ್ಣ. ನಾಳೆ ಹೇಗೂ ಕೇಳುತ್ತಿಲ್ಲವಲ್ಲ, ಇವತ್ತು ಎರಡು ಬಾರಿ ಕೇಳಿದರೆ ತಪ್ಪೇನಿಲ್ಲ ಅಲ್ಲವೇ ಅಂದುಕೊಂಡ. +ಆಗಸ್ಟ್ ೧೮,೨೦೦೧ +ಕೀ ಇನ್ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ ೦೮-೧೨-೨೦೦೫ +ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ […] +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […] +ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_529.txt b/Kannada Sahitya/article_529.txt new file mode 100644 index 0000000000000000000000000000000000000000..1c8b3036637c1c7accb0443157b4e11c1f431484 --- /dev/null +++ b/Kannada Sahitya/article_529.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ ಮಗು ಯಾರಿಗೂ ಅರ್ಥವಾಗದ ಹಠಕ್ಕೆ ಬಿದ್ದು ಅಳುತಿತ್ತು. ಆ ಹೆಂಗಸಿನ ಪಕ್ಕದಲ್ಲಿ ಕುಳಿತಿದ್ದ ನಡುವಯಸ್ಸಿನ ದಂಪತಿಗಳು ಅಮೂಲ್ಯ ವಸ್ತುಯೊಂದನ್ನು ಜೋಪಾನ ಮಾಡುವಂತೆ ಕೆಂಪು ಚೂಡೀದಾರ ಧರಿಸಿ ಎಲ್ಲರ ಕಣ್ಣು ಕುಕ್ಕುತ್ತಿದ್ದ ತಮ್ಮ ಮಗಳನ್ನು ಮುಂದಿರುವ ಸೂಟ್ಕೇಸಿನ ಮೇಲೆ ಕೂರಿಸಿಕೊಂಡಿದ್ದರು. ಅಲ್ಲಲ್ಲಿ ಪ್ಲಾಟ್‌ಫ಼ಾರಂ ನಂಬರ್ ನಮೂದಿಸಿರುವ ಕಂಬಗಳ ಎತ್ತರದಲ್ಲಿ ಕನ್ನಡ ಚಿತ್ರಗೀತೆ ಹಾಡುತ್ತಿರುವ ಟೀವಿ ನೋಡಲು ಜನರು ಗುಂಪುಗುಂಪಾಗಿ ನಿಂತಿದ್ದರು. ಬಾಯಿಗೆ ರೂಪಾಯಿ ಹಾಕಿದರೆ ಹೊಕ್ಕುಲಿಂದ ಚಟ್ಟೆ ರಟ್ಟಿನ ತುಂಡು ಒಗೆಯುವ ಡಿಸ್ಕೋ ಡಬ್ಬಿ ತನ್ನೊಳಗೆ ಬಣ್ಣದ ಗಿರಗಟ್ಲೆ ತಿರುಗಿಸುತ್ತಿತ್ತು. ಕೆಲವರು ತೂಕ ನೋಡುವ ನೆಪ ಮಾಡಿ ಅದರ ಮೇಲೆ ಉತ್ಸಾಹದಿಂದ ನಿಂತು ಖಾಕಿ ಬಣ್ಣದ ಪುಟ್ಟ ಕಾರ್ಡಿನಲ್ಲಿ ಅಂದದ ನಟಿಯ ಚಿತ್ರ ಬರಲಿಲ್ಲವೋ ಇಲ್ಲಾ ಅದರ ಹಿಂದೆ ಬರೆದಿರುವ ಭವಿಷ್ಯವಾಣಿಯಲ್ಲಿ ’ನಷ್ಟ’ವನ್ನು ಕಂಡ ಬೇಸರದಲ್ಲೋ ಕೆಳಗಿಳಿಯುತ್ತಿದ್ದರು. ಒಬ್ಬ ಕೆದರಿದ ಮಂಡೆಯವನು ಪ್ಲಾಟ್‌ಫ಼ಾರಂನ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ಬರಿಗಾಲಲ್ಲಿ ಕಾರಣವಿಲ್ಲದೆ ನಡೆದಾಡುತ್ತಿದ್ದ. ಎದುರಿನ ಪ್ಲಾಟ್‌ಫ಼ಾರಂಗೂ ಇಲ್ಲಿಗೂ ಮಧ್ಯದಲ್ಲಿ ಹರಡಿರುವ ಬಿಸಿಲಿನ ತೋಟದಲ್ಲಿ ಸತ್ತು ಬಿದ್ದ ಇಲಿಯೊಂದನ್ನು ಕುಕ್ಕಲು ಕಾಗೆಗಳ ಪರಿವಾರ ಸೇರಿತ್ತು. ಕಾಗೆಗಳಿಗೆ ಇಲಿಯ ಕಣ್ಣೆಂದರೆ ಮಕ್ಕಳಿಗೆ ಐಸ್ ಕ್ರೀಮ್ ನಲ್ಲಿರುವ ಚೆರ್ರಿ ಕಂಡಷ್ಟೇ ಇಷ್ಟವಂತೆ. ಸಾಲು ಸಾಲು ಬಸ್ಸುಗಳು, ಎಲ್ಲೆಂದರಲ್ಲಿ ದಿಕ್ಕಿಲ್ಲದೆ ಮಲಗಿರುವ ಜನ, ಪ್ಲಾಟ್‌ಫ಼ಾರಂಗೆ ಅಂಟಿಕೊಂಡಿರುವ ಬೇಕರಿ, ಜ್ಯೂಸ್ ಅಂಗಡಿಗಳಲ್ಲಿ ಗಿಜಿಗುಟ್ಟುವ ಜನರ ನಡುವೆ ಪ್ಲಾಟ್‌ಫ಼ಾರಂ ನಂಬರ್ ನಾಲ್ಕರಲ್ಲಿ ಕೈಯಲ್ಲೊಂದು ಹಾಳೆ, ಟಿಕೆಟ್ ಪ್ರಿಂಟ್ ಮಾಡುವ ಪುಟಾಣಿ ಯಂತ್ರವೊಂದನ್ನು ಹಿಡಿದಿರುವ ಮಧ್ಯಾಹ್ನ ಎರಡು ಗಂಟೆಗೆ ಮಡಿಕೇರಿಗೆ ಹೊರಡುವ ಐರಾವತದ ಬಸ್ ಕಂಡಕ್ಟರ್‌ನ ಕೂಗನ್ನು ಆ ಪ್ಲಾಟ್‌ಫ಼ಾರಂನ ಪರಿವಾರದವರೆಲ್ಲ ಕೇಳಿಸಿಕೊಳ್ಳುತ್ತಿದ್ದರು. +’ಮಡಿಕೇರಿ-ಎರಡ್ ಗಂಟೆ ಗಾಡಿ- ಐರಾವತ……………………….ಇಲ್ರೀ ಆಗೊಲ್ಲ. ರಿಸರ್ವೇಶನ್ ಮಾಡಸ್ಬೇಕಿತ್ತು. ನಿಮಗೇನ್ ಕೈ ಎತ್‌ಬಿಡ್ತೀರ, ನಮ್ಮನ್ನ ಹಿಡ್ಕೊಂಡು ಝಾಡಸ್ತಾರೆ’ ಕಂಡಕ್ಟರ್ ಎದುರಿಗಿದ್ದ ವ್ಯಕ್ತಿಗೆ ಮುಖ ತಿರುಗಿಸಿ ಕಟುವಾಗಿ ಹೇಳಿದ. ಹಾಗೆ ಹೇಳಿಸಿಕೊಂಡ ಮನುಷ್ಯ ನೋಡಲು ಸೇಟುವಿನಂತಿದ್ದ. ವರುಷ ಮೂವತ್ತರ ಒಳಗೇ. ಇದೇ ಮೊದಲ ಬಾರಿ ಹೀಗೆ ಮಾಡುತ್ತಿರುವುದಲ್ಲ, ಮುಂಚೆಯೂ ಹೀಗೆಯೇ. ಬಸ್ಸು ಹೊರಡಲು ಅರ್ಧ ಗಂಟೆ ಇದೆ ಎನ್ನುವಾಗ ಬಂದು ಟಿಕೆಟ್ ಬೇಕೆನ್ನುವುದು. ಎಲ್ಲಾ ಸೀಟ್ಸ್ ರಿಸರ್ವ್ ಆಗಿದೆ ಅಂತ ಹೇಳಿದರೆ ಕಟ್‌ಸೀಟ್ ಕೊಡಿ ಅಂತ ಇದೇ ಕಂಡಕ್ಟರ್‌ನ ಬೆನ್ನು ಹತ್ತುತ್ತಿದ್ದ. ಆದರೆ ಅವನಿಗೆ ಅದನ್ನ ಅಭ್ಯಾಸ ಮಾಡಿಸಿದವನು ಇದೇ ಕಂಡಕ್ಟರ್ ಮಹಾಶಯ. ಪ್ರತಿ ಶುಕ್ರವಾರ ರಾತ್ರಿ ೧೧:೩೦ರ ಮಡಿಕೇರಿ ಗಾಡಿ ಹತ್ತಲು ಈ ಅಸಾಮಿ ಬರ್ತಿದ್ದ. ಒಮ್ಮೆ ಸೀಟೆಲ್ಲ ಫ಼ುಲ್ ಆಗಿದ್ದಾಗ ಬಾಗಿಲ ಪಕ್ಕದಲ್ಲೇ ಮಡಚಿಟ್ಟಿದ್ದ ಕಟ್‌ಸೀಟಿನಲ್ಲಿ ಕೂರಲು ಹೇಳಿ ಟಿಕೆಟಿನ ಪೂರ್ತಿ ಹಣ ವಸೂಲಿ ಮಾಡಿದ್ದ. ಒಂದೆರಡು ಸಲ ರಿಸರ್ವೇಶನ್ ಮಾಡಿಸಿದ್ದರೂ ಪ್ರತಿ ವಾರ ಊರಿಗೆ ಹೋಗುವವನಿಗೆ ಟಿಕೆಟ್ ಮಾಡಿಸೋದಕ್ಕೆ ಏನು ದಾಡಿನೋ ಅಂತ ಕಂಡಕ್ಟರ್ ಅಂದುಕೊಂಡಿದ್ದು ಇದೆ. ಈ ಸಲ ಯಾಕೋ ಶನಿವಾರ ಬಂದಿದ್ದಾನೆ, ನಿನ್ನೆ ರಾತ್ರಿ ಏನೋ ತೊಂದರೆ ಆಗಿರಬೇಕು. ಈಗ ಮತ್ತೆ ನಾನೇ ತಗಲುಹಾಕಿಕೊಂಡೆ ಅಂತ ತಲೆಕೆದರಿಕೊಂಡ. ಆದರೆ ಈ ಬಾರಿ ಮಾತ್ರ ಎಷ್ಟೇ ಬೇಡಿಕೊಂಡರೂ ಸರಿ ತಾನೇನೂ ಮಾಡುವ ಸ್ಥಿತಿಯಲ್ಲಿಲ್ಲ, ’ಇದು ಐರಾವತ ಬಸ್ಸು ಸ್ವಾಮಿ, ಹಾಗೆಲ್ಲ ಕಟ್‌ಸೀಟ್ ಅಂತ ಏನೂ ಇರೋದಿಲ್ಲ’ ಅಂತ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಕಂಡಕ್ಟರ್. +ಎರಡು ತಿಂಗಳ ಮೊದಲು ಮಡಿಕೇರಿ ಮಾರ್ಗದ ರಾತ್ರಿಯ ರಾಜಹಂಸ ಬಸ್ಸಿನಲ್ಲಿ ನಿರ್ವಾಹಕನಾಗಿದ್ದಾಗ ಎಕ್ಸ್‌ಟ್ರಾ ಸೀಟ್ ಕೊಟ್ಟು, ಗಾಡಿಯ ಟಾಪ್ ಹತ್ತುವ ಬಣ್ಣ ಬಣ್ಣದ ಹೂವಿನ ಬುಟ್ಟಿಗಳು, ತರಕಾರಿ ಬುಟ್ಟಿಗಳು, ಮುಂತಾದ ಲಗೇಜ್‌ಗಳ ಕಮಿಶನ್‌ನಲ್ಲಿ ಡ್ರೈವರ್‌ನೊಂದಿಗೆ ಹಂಚಿಕೊಳ್ಳುತ್ತಿದ್ದವನು ಈಗ ಏಕಾ‌ಏಕಿ ಸೀಟ್ ಇಲ್ಲಾ ಅಂತ ಹೇಳೋದಕ್ಕೆ ’ಐರಾವತದಲ್ಲಿ ಕಟ್ಸೀಟ್ ಇಲ್ಲಾ’ ಅನ್ನೋದೊಂದೇ ಕಾರಣ ಅಲ್ಲ. ಮೊದಲೆಲ್ಲ ಎಷ್ಟೋ ರಾತ್ರಿ ತನ್ನ ಸೀಟನ್ನೂ ಮಾರಿಕೊಂಡು ಡ್ರೈವರ್ ಸೀಟಿನ ಹಿಂಬದಿಯ ಜಾಗದಲ್ಲಿ ಕಾಲು ಚಾಚದೆ ಮುದುಡಿಕೊಂಡು ಕುಳಿತು ಇಡೀ ರಾತ್ರಿ ಕಳೆದಿದ್ದಾನೆ. ಒಂದೊಂದು ಟ್ರಿಪ್‌ಗೆ ಏನಿಲ್ಲ ಅಂದ್ರೂ ಒಂದು ನಾನೂರೈನೂರು ರೂಪಾಯಿ ಜೇಬ್ ಸೇರ್ತಿತ್ತು. ಆರೋಗ್ಯ ಹದಗೆಡೊ ಸ್ಥಿತಿ ಬಂದಮೇಲೆ ತನ್ನ ಸೀಟನ್ನ ಯಾರಿಗೂ ಕೊಡ್ತಾ ಇರಲಿಲ್ಲ. ಲಗೇಜ್ ಕಮಿಶನ್ನೇ ಸಾಕಾಗ್ತಿತ್ತು. ರಾತ್ರಿ ಪ್ರಯಾಣದಲ್ಲೇ ಒಂಥಾರ ಮಜಾ. ತೂಕಡಿಸ್ತಾ ತೂಕಡಿಸ್ತಾ ನಿದ್ದೆಗಣ್ಣಲ್ಲಿ ಊರಿಂದ ದೂರ ಕತ್ತಲಿನಲ್ಲಿ ಮುಳುಗಿರೋ ಬಯಲು ನೋಡೋದು, ಪಿಶಾಚಿಗಳು ಊಟ ಮಾಡೋ ಹೊತ್ತಲ್ಲಿ ಬಸ್ ಸ್ಟಾಂಡ್ ಹೋಟಲಿನಲ್ಲಿ ಮೆಣಸಿನಕಾಯಿ ಬಜ್ಜಿ ತಿನ್ನೋದು, ಯಾರಿಂದಲೂ ಕೊಡಲು ಸಾಧ್ಯವಿಲ್ಲದಿರೋ ಸುಖದ ಮಧ್ಯದಿಂದ ಎಚ್ಚೆತ್ತು ಬಂದಿರುವ ಪ್ರಯಾಣಿಕರ ಮುಖದಲ್ಲಿನ ಮಂಕು ಹೊಳಪು- ಇವನ್ನೆಲ್ಲ ಕಂಡಕ್ಟರ್ ಇಷ್ಟಪಡುತ್ತಿದ್ದ. ಈಗಿನ ಬಸ್ಸು ಪರ್ವಾಗಿಲ್ಲ. ತಣ್ಣಗಿಡುವ ಏಸಿ, ಟೀವಿ, ಆರಾಮಾದ ಸೀಟು. ಆದರೆ ಕಮಾಯಿ ಕಮ್ಮಿ, ಏನೂ ಇಲ್ಲಾ ಅಂತಾನೆ ಹೇಳಬಹುದು. +ಎದುರುಗಡೆ ಯವುದೋ ಬಸ್ಸು ಹರಿದುಹೋಯಿತು. ಕಾಗೆಗಳೆಲ್ಲ ಕಾ ಕಾ ಎಂದು- ಆ ಬಸ್ಸಿನ ಡ್ರೈವರ್‌ನನ್ನೇ ಇರಬೇಕು- ಶಪಿಸುತ್ತ ಹಾರಿಹೋದವು. ಮತ್ತೆ ಸತ್ತ ಇಲಿಯನ್ನು ಕುಕ್ಕಲು ಬಂದು ಕುಳಿತವು. +’ಸಾರ್ ನೋಡಿ ಏನೋ ಅಡ್ಜಸ್ಟ್ ಮಾಡಿ….’ ಅಂತ ಮತ್ತೆ ಆ ಮನುಷ್ಯ ಬಂದ. ಕಂಡಕ್ಟರ್ ಅವನ ಕಡೆ ತಿರುಗಿಯೂ ನೋಡಲಿಲ್ಲ. ಕಂಡಕ್ಟರ್ ಪಕ್ಕದಲ್ಲಿದ್ದ ಶುಭ್ರ ಬಿಳಿಯ ಯುನಿಫ಼ಾರಂ ಧರಿಸಿದ್ದ ಡ್ರೈವರ್ ಆ ಕಟ್‌ಸೀಟ್ ಗಿರಾಕಿಯ ಪರಿಸ್ಥಿತಿಗೆ ಕುಹಕದಿಂದ ಮುಖ ತಿರುಗಿಸಿ ನಕ್ಕ. +’ಮ್ಮೋ ಹೋಗಮ್ಮ ಅತ್ಕಡೆ…. ದಿನಾ ಇಲ್ಲೇ ಆಗ್ಬೇಕಾ?’ ಅಂತ ಬೇಕರಿಯಲ್ಲಿ ಕೆಲಸಕ್ಕಿರುವ ಹುಡುಗ ಊಟದ ಪ್ಯಾಕೆಟ್ ಬಿಚ್ಚುತ್ತಿದ್ದ ಕಸಗುಡಿಸುವ ಕೊಳೆನೀಲಿ ಸೀರೆಯ ಕಸ ಗುಡಿಸುವ ಹೆಂಗಸಿಗೆ ಜೋರು ಮಾಡಿದ. ಕಂಡಕ್ಟರ್‌ಗೆ ತಾನೂ ಕೂಡ ಒಂದು ಕಾಲದಲ್ಲಿ ಹೀಗೇ ಚೆನ್ನೈನ ಕೊಯೆಂಬೆಡ್ ಬಸ್ ಸ್ಟಾಂಡಿನ ಶೌಚಾಲಯದ ಎದುರಿರುವ ಕ್ಯಾಂಟೀನಿನಲ್ಲಿ ಚಿತ್ರನ್ನದ ಜೊತೆ ಉಪ್ಪಿನಕಾಯಿ ಕಲೆಸಿಕೊಂಡು ತಿನ್ನುತ್ತಿದದ್ದು ನೆನಪಾಗಿ ಏನೂ ವ್ಯತ್ಯಾಸವಿಲ್ಲ ಅನ್ನಿಸಿಬಿಟ್ಟಿತು. ಆ ಹೆಂಗಸು ಅವನಿಗೊಂದಿಷ್ಟು ಬಯ್ಯುತ್ತ ಬೇಕರಿಯಿಂದ ಸ್ವಲ್ಪ ಆಚೆ ಕುಳಿತಳು. +ಮದುವೆಗೆ ಮುಂಚೆ ನೆಲಮಂಗಲದ ಪ್ರೈವೆಟ್ ಗಾಡಿಯಲ್ಲಿ ಕಂಡಕ್ಟರ್ ಆಗಿದ್ದಾಗ ಚಿಕ್ಕಪ್ಪನ ಮನೆಯಲ್ಲಿರುವಾಗ ಯಾರ ಅಪ್ಪಣೆಯಿಲ್ಲದೆ ಹ್ಯಾಗೆ ಬೇಕೋ ಹಾಗೆ ಖರ್ಚು ಮಾಡಿಕೊಂಡು ವಾರಕ್ಕೊಂದು ಸಿನೆಮಾ ನೋಡುತ್ತಿದ್ದ ದಿನಗಳು, ಚಿಕ್ಕಪ್ಪನ ಮಕ್ಕಳಿಗೆ ನೆಲಮಂಗಲದ ಸಂತೆಯಲ್ಲಿ ಬೇಕುಬೇಕಾದ್ದು ಕೊಡಿಸುತ್ತಿದ್ದ; ತಿನಿಸುತ್ತಿದ್ದ; ಟೆಂಟಿಗೆ ಸಿನೆಮಾಗೆ ಕರೆದುಕೊಂಡು ಹೋಗುತ್ತಿದ್ದ ದಿನಗಳು ವಿನಾಕಾರಣ ನೆನಪಾದವು. ಮದುವೆಯಾದ ಮೇಲೂ ನೆಲಮಂಗಲದಲ್ಲಿರುವವರೆಗೆ ಹಾಗೇ ಸಾಗಿತ್ತು ಬದುಕು. ಬೆಂಗಳೂರಿಗೆ ಬಂದಮೇಲೆ; ಕೆ‌ಎಸ್‌ಆರ್‌ಟಿಸಿ ಯಲ್ಲಿ ಕೆಲಸ ಸಿಕ್ಕ ಮೇಲೆ; ಸಂಬಳ ಜಾಸ್ತಿಯಾದ ಮೇಲೆ ತನಗೆ ತನ್ನ ಅಪ್ಪಣೆಯೇ ದೊರೆಯುತ್ತಿರಲಿಲ್ಲ. ಅದು ಹೇಗೋ- ತನಗೇ ಅರಿವಿಲ್ಲದಂತೆ ಅಥವಾ ತನ್ನ ಅರಿವಿನ ಆಣತಿಯಂತೆ ಬದುಕಿಗೊಂದು ಅಂತಸ್ತು ಕಲ್ಪಿಸಿಕೊಂಡು ಅನುದಿನದ ಚಿಕ್ಕಪುಟ್ಟ ಸಂಗತಿಯನ್ನೂ ಮನಸ್ಸು ಅನುಭವಿಸುವ ರೀತಿಯೇ ಬದಲಾಗಿ ಹೋಗಿತ್ತು. ತಾನು ತನ್ನ ಬಾಯಿನೀರನ್ನು ನುಂಗಿಕೊಂಡರೂ ಮಕ್ಕಳು ಕಾಡಿದಾಗ ಮಕ್ಕಳ ಮೇಲಿನ ‘ಪಾಪ ಆಸೆ ಪಡ್ತಾವೆ’ ಅನ್ನುವ ಕರುಳಿನ ಅನುಕಂಪದ ಅನಿವಾರ್ಯದಿಂದಾಗಿ, ಬೆಂಗಳೂರಿನ ಪ್ರತಿಬೀದಿಯ ದಿನನಿತ್ಯದ ಜಾತ್ರೆಯಂತಿರುವ ತಳ್ಳೋ ಗಾಡಿಯ ಪಾನೀಪೂರಿ ತಿನ್ನುವಾಗಲೂ ‘ಸುಮ್ಮನೆ ಇಪ್ಪತ್ತು ರೂಪಾಯಿ ದಂಡ’ ಅಂತ ಮಕ್ಕಳ ಎದುರೇ ಆಡುತ್ತಿದ್ದ. ಯಾವುದೋ ಅರ್ಥವಾಗದ ಅನವಶ್ಯಕ ಜಾಗರೂಕತೆ-ಜವಾಬ್ದಾರಿ ಪ್ರತಿ ಕ್ಷಣವೂ ಮನಸ್ಸಿನ ಹಿಂದೆ ನಿಂತು ಕ್ಷಣಿಕ ಚಪಲವನ್ನೂ ಅನುಭವಿಸಲು ಬಿಡುತ್ತಿರಲಿಲ್ಲ. +ನೆಲಮಂಗಲ-ಬೆಂಗಳೂರು ಪ್ರೈವೆಟ್ ಗಾಡಿಯಲ್ಲಿ ಕಂಡಕ್ಟರ್ ಆಗಿದ್ದಾಗಲೂ, ಕೆ‌ಎಸ್‌ಆರ್‌ಟಿಸಿ ಗೆ ಬಂದು ಐರಾವತಕ್ಕೆ ಬಂದಮೇಲೂ ಬಸ್ಸಿನೊಳಗೆ ಲಕ್ಷ್ಮಿ-ಗಣಪತಿ-ಸರಸ್ವತಿ ಇರೋ ಫೋಟೋ ಇಟ್ಟು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಆಚರಣೆ ಎಂಬಂತೆ ಅದಕ್ಕೆ ಪ್ರತಿದಿನವೂ ಹೂವೇರಿಸೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ. ನೆಲಮಂಗಲದ ಗಾಡಿಯಲ್ಲಿ ಊದಿನಬತ್ತಿಯ ಸೇವೆಯೂ ನಡೆಯುತ್ತಿತ್ತು. ಬಸ್ಸಿನಲ್ಲಿ ರಾಜಕುಮಾರನ ಹಳೆಯ ಹಾಡುಗಳದ್ದು ಇಲ್ಲಾ ಜಾನಪದ ಹಾಡುಗಳ ಕ್ಯಾಸೆಟ್ಟು ಹಾಕಿಕೊಂಡರೆ ಎಂತಹ ರಶ್ಶಿನಲ್ಲೂ ಸಿಡುಕದೆ ಉಲ್ಲಾಸದಿಂದ ಹಾಡು ಗುನುಗುತ್ತ ದಿನ ಕಳೆದುಹೋಗುತ್ತಿತ್ತು. ಕೆ‌ಎಸ್‌ಆರ್‌ಟಿಸಿ ಗೆ ಸೇರಿದ ಮೇಲೆ ಏಕ್‌ದಂ ಚೆನ್ನೈನ ರಾಜಹಂಸ ಸಿಕ್ಕಿತು. ಹಾಡು ಗುನುಗುತ್ತ ಸೀಟೀ ಹೊಡೆಯುತ್ತ ಬಸ್ಸಿನ ತುಂಬ ಹರಿದಾಡುತ್ತಿದ್ದವನನ್ನು ಕಟ್ಟಿ ಹಾಕಿ ಕೂರಿಸಿದ ಹಾಗಾಯಿತು ಒಂದಿಷ್ಟು ದಿನ. ಆಮೇಲೆ ಮಡಿಕೇರಿ ರಾಜಹಂಸ, ಈಗ ಟಿವಿ ಇರೋ ಐರಾವತ. ನೆಲಮಂಗದ ದಿನಗಳ ನೆನಪಿನಲ್ಲಿದ್ದ ಕಂಡಕ್ಟರ್‌ನ ಬಳಿ ಒಂದಿಬ್ಬರು ಬಂದು ಸೀಟಿಗಾಗಿ ಪೀಡಿಸತೊಡಗಿದರು. ‘ಅಯ್ಯೋ ಶಿವನೆ ಸೀಟ್ ಇದ್ರೆ ನಾವ್ಯಾಕ್ ಇಟ್ಕೊಳೋನ ಸ್ವಾಮಿ……ಎಲ್ಲಾ ಸೀಟ್ಸು ರಿಸರ್ವ್ ಆಗಿದೆ’ ಅಂತ ಎಲ್ಲರಿಗೂ ಕೇಳಿಸುವಂತೆ ಹೇಳುವಾಗ ಟಿಕೆಟ್ ರಿಸರ್ವ್ ಮಾಡಿಸಿದ ವ್ಯಕ್ತಿಯೊಬ್ಬ ಟಿಕೆಟ್ ತೋರಿಸಿದ. ಕಂಡಕ್ಟರ್ ಶೀಟಿನಲ್ಲಿ ಎಂಟ್ರಿ ಮಾಡಿಕೊಂಡು ’ಕೂತ್ಕೊಳ್ಳಿ ಸಾರ್ , ಸಿನ್ನೇನು ಹೊರಡ್ತೀವಿ. ಇನ್ನೊಬ್ರು ಬರಬೇಕು ಅಷ್ಟೆ’ ಅಂದ. ಆ ಮಾತು ಅಲ್ಲಿ ನೆರದಿದ್ದವರಿಗೊಂದು ಖಡಕ್ ಸಂದೇಶದಂತಿತ್ತು. ಜನರೆಲ್ಲ ಎಲ್ಲೆಲ್ಲೋ ಹೋದರು. ಕಟ್‌ಸೀಟ್ ಗಿರಾಕಿ ನಿರಾಶೆಗೊಂಡು ಮತ್ತ್ಯಾವುದೋ ಬಸ್ಸಿನ ಕಡೆ ವಿಚಾರಿಸಲು ಹೊರಟ. +ಬಸ್ ಸ್ಟ್ಯಾಂಡಿನಿಂದ ಹೊರಹೋಗುವ ರಸ್ತೆ ತಿರುಗುವ ಎಡಬದಿಯ ಎತ್ತರದಲ್ಲಿ ವೇಶ್ಯೆಯೊಬ್ಬಳು ಕಾಣಿಸಿದಳು. ’ಥೂ ಮಾನಗೆಟ್ಟ ಜನ…..ಆಗೊಮ್ಮೆ ಓಡಿಸಿದ್ರು. ಈಗ ಮತ್ತೆ ಶುರು ಇವರ ಕಾರ್‌ಬಾರು’ ಎಂದು ಕ್ಷುದ್ರ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡವನಂತೆ ಪ್ಲಾಟ್‌ಫ಼ಾರಂ ಕಡೆ ತಿರುಗಿದ. ಸೇಟು ಬ್ರಾಂಡಿನ ಕಟ್ಸೀಟ್ ಗಿರಾಕಿಯ ಸುಳಿವಿರಲಿಲ್ಲ. ಸೂಟ್ಕೇಸಿನ ಮೇಲೆ ಕುಳಿತಿರುವ ಆ ಕೆಂಪು ಚೂಡಿದಾರದ ಹುಡುಗಿ ಹೆತ್ತವರಿಗೆ ಕಾಣಿಸದಂತೆ ಮುಂದೆ ನಿಂತಿರುವ ಇಬ್ಬರು ಹುಡುಗರನ್ನು ಉತ್ತೇಜಿಸುವಂತೆ ನೋಡಿ ಕದ್ದು ನಗುತ್ತಿದ್ದಳು. ತನ್ನ ಅಪ್ರತಿಮತೆಯನ್ನು ಸಾರುವಂತಿತ್ತು ಅವಳ ನೋಟ. ಅವಳ ಲಜ್ಜೆಗೆಟ್ಟ ದಿಟ್ಟತನಕ್ಕೆ ಹುಡುಗರು ಪೆಚ್ಚಾಗಿದ್ದರು. ಆಕ್ರೋಶಗೊಂಡಿದ್ದ ಕಂಡಕ್ಟರ್‌ನ ಮನಸ್ಸು ಗಾಡಿಯ ಒಳಗಿನ ಏಸಿ ಆನ್ ಮಾಡಿದಂತೆ ತಣ್ಣಗಾಯಿತು. ಇದು ತನಗೆ ಅರ್ಥವಾಗದಿರುವ ಈ ಕಾಲದ ಹುಡುಗಿಯರ ತುಂಟಾಟಿಕೆ ಇರಬೇಕು ಅಂದುಕೊಂಡ. ಇದೆಲ್ಲ ತನ್ನ ಮಗನಿಗೆ ತಿಳಿದಿರಬೇಕು; ಚೂಟಿ ಹುಡುಗ. ಈಗಷ್ಟೆ ಕಾಲೇಜ್ ಸೇರಿದ್ದಾನೆ, ಹುಡುಗಿಯರ ವಿಷಯದಲ್ಲಿ ಹೇಗೋ ಗೊತ್ತಿಲ್ಲ. ನಿನ್ನೆ ತಾನು ಆತನನ್ನು ಬಯ್ಯಬಾರದಿತ್ತು ಅಂತ ಬೇಸರಿಸಿಕೊಂಡ. ದಿನಾ ಬಸ್ ಪಾಸ್ ತೋರಿಸಿ ಬಸ್ಸಿನಲ್ಲಿ ಬರುತ್ತಿದ್ದವನು ನಿನ್ನೆ ಏಸಿ ಬಸ್ಸಿನಲ್ಲಿ ಒಂದಕ್ಕೆರಡು ದುಡ್ಡು ಕೊಟ್ಟು ಬಂದದ್ದೇ ಕಂಡಕ್ಟರ್‌ನ ಸಿಟ್ಟಿಗೆ ಕಾರಣ. ’ದಿನಾ ಅದೇ ಬಸ್ಸಲ್ಲಿ ಹೋಗ್ತೀರ. ಇವತ್ತೊಂದಿವ್ಸ ಏಸಿ ಬಸ್ಸಿನಲ್ಲಿ ಕೂತ್ಕೊಳ್ಳಿ ಸ್ವಾಮಿ’ ಅಂತ ನೀವೇ ಜನರನ್ನ ಕರೀತೀರಲ್ಲ ಅಪ್ಪ. ನಾನು ಇವತ್ತು ಒಂದು ದಿವ್ಸ ಹೋದ್ರೆ ಬಯ್ತೀರ- ಅಂತ ಅವನೂ ತಿರುಗಿ ಕೇಳಿದ್ದ. ಟ್ರಾಫ಼ಿಕ್ಕು, ಪೆಟ್ರೋಲು ಅಂತೆಲ್ಲ ಸಬೂಬು ಕೊಟ್ಟಾಗ ಆ ಮಟ್ಟಿಗೆ ಸುಮ್ಮನಾಗುತ್ತಿದ್ದವ ಮತ್ತೆ ಯಾವಾಗ ಬೈಕಿನ ವಿಚಾರ ಮಾತಾಡುತ್ತಾನೋ?. ’ಮುಂದಿನ ವರ್ಷ ಟ್ಯೂಶನ್ ಸೇರಿದ ಮೇಲೆ ಬೇಕಾಗುತ್ತೆ, ಆಗಲೇ ತೆಗೆಸಿಕೊಡುವ’ ಅಂತ ಹೇಳಿದರೆ ಅವನು ಒಪ್ಪಂದವನ್ನು ಪುರಸ್ಕರಿಸಬಹುದು ಎಂದುಕೊಂಡ. +’ಎರಡ್ ಗಂಟೆ…ಮಡಿಕೇರಿ…’ ಎನ್ನುವ ಹೆಂಗಸಿನ ಧ್ವನಿ ಕೇಳಿ ಆ ಕಡೆ ತಿರುಗಿದ. ಆ ಹೆಂಗಸು ಹಣೆಬೆವರು ಒರೆಸಿಕೊಳ್ಳುತ್ತ ಕಂಡಕ್ಟರ್ ಕೈಗೆ ಟಿಕೆಟ್ ಕೊಟ್ಟಳು. ಅದರ ಮೇಲೂ ಎರಡು ಬರೆ ಎಳೆದು, ಒಂದೊಂದು ಸಂಗತಿಯೂ ರಿಸರ್ವ್ ಮಾಡಿಕೊಂಡು ಬರುವಾಗಲೂ ಟಿಕ್ ಮಾಡಿಕೊಳ್ಳುವ ಸಲುವಾಗಿ ಇರುವ ತನ್ನ ಬದುಕಿನಂತೆಯೇ ಇದ್ದ ಬಿಳಿಶೀಟಿನಲ್ಲಿ ಎಂಟ್ರಿ ಮಾಡಿಕೊಂಡು ’ಹತ್ಕೊಳ್ಳಿ ಹತ್ಕೊಳ್ಳಿ ಹೊರಡೋ ಟೈಮ್ ಆಯ್ತು’ ಎಂದ. ಬಸ್ಸಿನಲ್ಲಿ ಎಷ್ಟು ಸೀಟು ಇದಿಯೋ ಅಷ್ಟೇ ಟಿಕೆಟ್ ನಾನು ಕೊಡವುದು, ನೀನು ಕೇಳಿದಾಗೆಲ್ಲ ಉಗುಳುವುದಿಲ್ಲ, ಸೀಟ್ಸ್ ಎಲ್ಲಾ ರಿಸರ್ವ್ ಆಗಿದ್ದಾಗ ನೀನು ನನ್ನ ತಂಟೆಗೇ ಬರುವಂತಿಲ್ಲ ಎನ್ನುವ ಅಹಂಕಾರದಲ್ಲಿ ಟಿಕೆಟ್ ಪ್ರಿಂಟ್ ಮಾಡುವ ಆ ಪುಟ್ಟ ಯಂತ್ರ ಕಂಡಕ್ಟರ್‌ನ ಕೈಯಲ್ಲಿ ಕುಳಿತಿತ್ತು. ಆ ಪುಟ್ಟ ಯಂತ್ರದ ಮೇಲೆ ಹಟಕಟ್ಟಿ ಸಾಧಿಸಿಕೊಳ್ಳಲೇ ಕಟ್‌ಸೀಟ್ ಮಾರುತ್ತಿದ್ದನೇನೋ ಅನ್ನುವಂತಿತ್ತು ಅವನ ಗತ್ತು. ಅವನ ಗತ್ತು ನೋಡಿದವರಿಗೆ ಹೋದ ವಾರವಷ್ಟೇ ಐರಾವತ ಬಸ್ಸಿನಲ್ಲೇ ಕಂಡಕ್ಟರ್ ಸೀಟನ್ನೇ ಬೈ-ಟು ಮಾಡಿ ಅರ್ಧ ಸೀಟನ್ನ ಪೂರ್ತಿ ದುಡ್ಡಿಗೆ ಮಾರಿ ಸಿಕ್ಕಿಬಿದ್ದಿರುವ ಸಂಗತಿ ಹೇಗೆ ತಾನೆ ತಿಳಿಯಬೇಕು. +ಎರಡು ಗಂಟೆಯ ಮೇಲೆ ಮೂರು ನಿಮಿಷವಾಗಿ ಬಸ್ಸು ಇನ್ನೂ ಹೊರಟಿಲ್ಲವಲ್ಲ ಎಂದು ಒಳಗಿದ್ದ ಪ್ರಯಾಣಿಕರು ತಮ್ಮ ತಮ್ಮ ಗಡಿಯಾರ ನೋಡಿಕೊಳ್ಳುತ್ತಿದ್ದರು. ಆ ಸೇಟು ಬ್ರಾಂಡಿನ ಕಟ್‌ಸೀಟ್ ಗಿರಾಕಿ ಅಲ್ಲೇ ಚಡಪಡಿಸುತ್ತ ಗಿರಕಿ ಹೊಡೆಯುತ್ತ ಕಂಡಕ್ಟರ್ ಬಳಿ ಬಂದ. ಎದುರುಗಡೆ ಎರಡು ಬಸ್ಸುಗಳು ಹಾದುಹೋದವು. ಕಾಗೆಗಳೆಲ್ಲ ಚೆಲ್ಲಾಪಿಲ್ಲಿಯಾದವು. ವೇಶ್ಯೆಗೆ ಯಾವುದೋ ಗಿರಾಕಿ ಸಿಕ್ಕಿರಬೇಕು, ಅಲ್ಲಿ ಕಾಣುತ್ತಿರಲಿಲ್ಲ. ಆ ಕೆಂಪು ಚೂಡಿದಾರದ ಹುಡುಗಿ, ಅವಳ ತಂದೆ-ತಾಯಿ ಅಲ್ಲಿರಲಿಲ್ಲ. ಅವರ ಬಸ್ಸು ಬಂದಿರಬೇಕು. ಆ ಇಬ್ಬರು ಹುಡುಗರು ಯಾವ ಬಸ್ಸಿಗೆ ಕಾಯುತ್ತಿದ್ದಾರೋ?, ಅಲ್ಲೇ ಇದ್ದರು. ಡ್ರೈವರ್ ಗಾಡಿ ಸ್ಟಾರ್ಟ್ ಮಾಡಿದ. ಆಕ್ಸಲರೇಟರ್ ಹೆಚ್ಚಿಸುತ್ತ ಬ್ರೇಕ್ ಮೇಲೆ ಕಾಲಿಟ್ಟುಕೊಂಡು ಕಂಡಕ್ಟರ್‌ನ ಸನ್ನೆಗಾಗಿ ಕಾಯುತ್ತಿದ್ದ. ಇನ್ನೆಲ್ಲೋ ಯಾವುದೋ ಬಸ್ಸು ಹೂಸು ಬಿಟ್ಟ ಸದ್ದು. ಆ ಆಸಾಮಿ ಕಂಡಕ್ಟರ್‌ನತ್ತ ದೃಷ್ಟಿ ಕದಲಿಸದೆ ನೋಡುತ್ತಿದ್ದ. ಕಂಡಕ್ಟರ್ ಬಸ್ಸು ಹತ್ತಿಕೊಂಡು ಹೊರಡಲು ಅನುವಾದ. ಅವನು ನಿರಾಶೆಗೊಂಡು ಎಡಕ್ಕೆ ತಿರುಗಿಕೊಂಡ. ’ಎಲ್ಲಿಗ್ರೀ ನೀವು ಹುಣುಸೂರಾ?…’ ಅಂತ ಕಂಡಕ್ಟರ್ ಆತನತ್ತ ಹೇಳಿದ್ದು ಕೇಳಿಸಿಕೊಂಡವನು ಕುಂಡಿಗೆ ಪಿನ್ನು ಚುಚ್ಚಿಸಿಕೊಂಡವರಂತೆ ಚುರುಕುಗೊಂಡು ಬಸ್ಸಿನ ಒಂದು ಮೆಟ್ಟಿಲ ಮೇಲೆ ಕಾಲಿಟ್ಟು ’ಸಾರ್ ಮಡಿಕೇರಿ’ ಅಂದ. ’ಹತ್ಕೊಳ್ಳಿ ಹತ್ಕೊಳ್ಳಿ’ ಅನ್ನುವುದು ಕೇಳುತ್ತಲೇ ದಿಗ್ವಿಜಯ ಸಾಧಿಸಿದ ಸಂತಸದಲ್ಲಿ ಒಳಹೋದ. ಒಳಗೆ ತಂಡಿ ತುಂಬಿಕೊಂಡಿದ್ದ ಐರಾವತ ತನ್ನನ್ನು ತಾನು ಪೂರ್ತಿಯಾಗಿ ಮುಚ್ಚಿಕೊಂಡು ಠೀವಿಯಿಂದ ಹೊರಟಿತು. ಚದುರಿಹೋಗಿದ್ದ ಕಾಗೆಗಳು ಯಾವುದೇ ಆದೇಶವಿಲ್ಲದೆ ಮತ್ತೆ ಬಂದು ಕುಳಿತವು. ಬಸ್ಸು ನಿಂತಿದ್ದ ಖಾಲಿ ಜಾಗ ಮತ್ತೊಂದು ಬಸ್ಸು ಬಂದು ಆಕ್ರಮಿಸಿಕೊಳ್ಳುವವರೆಗೂ ಯಾವ ಆಕ್ರೋಶವೂ ಇಲ್ಲದೆ ಅಸಹಾಯಕವಾಗಿ ತೆಪ್ಪಗೆ ಮಲಗಿತ್ತು. +***** +ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ […] +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […] +ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ. ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ. ನಾನು ವಾಸಕ್ಕಿದ್ದ ಮನೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_53.txt b/Kannada Sahitya/article_53.txt new file mode 100644 index 0000000000000000000000000000000000000000..88dd1939e27c35a42cf224e2d987cdd715698edf --- /dev/null +++ b/Kannada Sahitya/article_53.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇವು ನನ್ನ ಹಾಡೆಂಬ ಹಗರಣದಿ ಮೈಮರೆತು +ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; +ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ +ಅಣುರೇಣು ಜೀವಾಣು ನಿನ್ನ ಚರಣವನೋತು +ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು +ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ +ಕರಣಿಕನು ನಾನಾಗಿ ನುಡಿಯುತಿರೆ, ಚೆಲುವಿಕೆಯ +ಸತ್ಯತೆಯ ದಾಸಾನುದಾಸನೆಂಬೀ ಮಾತು +ಎನ್ನೆದೆಯ ಹೊಕ್ಕು ನಿಚ್ಚಳವಾಗಿ ಪಡಿನುಡಿದು- +ಸೊಗದ ಸಿರಿ ಹೂಗರೇರಿ, ತನ್ನ ತನ ಗುರಿದೋರಿ +ಹೊಂಬಿಸಿಲ ಹೂಮಳೆಯ ಮುತ್ತು ಹನಿ ಸೊದೆಬೀರಿ +ಮತ್ತೆ ನಿನ್ನಡಿಗಳೆಡೆ ಭಕ್ತಿಯಲಿ ಬಲವಂದು- +ಅಕ್ಷಯದ ಪಾತ್ರೆಯಿಂದೆರಡು ಹನಿ ತನಿರಸವ +ನೀಡೆಂದು ಪ್ರಾರ್ಥಿಸುವದೆನ್ನ ಕವನದ ಭಾವ. +***** +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […] +ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […] +೧ ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ ಆಶೆ ಬೀಜಗಳೆನಿತೊ ಮಡಿಲೊಳಿರಿಸಿ ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ ಹೊತ್ತು ನಿಂತಿಹಳಮಿತ ವೃಕ್ಷರಾಶಿ. ೨ ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು ಹುಣಿಸೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_530.txt b/Kannada Sahitya/article_530.txt new file mode 100644 index 0000000000000000000000000000000000000000..4faddfa13bf8a9f0754c1a304cc4f927f859bbb4 --- /dev/null +++ b/Kannada Sahitya/article_530.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವಳು ತಲೆ ಎತ್ತಿ ನೋಡಿದರೆ +ಆಕಾಶದ ತುಂಬ ಬೆಳಕು +ಅವಳ ಕಣ್ಣಲ್ಲಿ ತೇಲೋ ಮೋಡ. +ಕಣ್ಣ ಮುಚ್ಚಿದರೆ, +ಆಕಾಶಕ್ಕೇ ಕತ್ತಲು +ಮೋಡ ಒಡೆದು ದುಃಖ ಧಾರಾಕಾರ. +***** +ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. ***** +ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. ***** +ಬಸ್‌ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_531.txt b/Kannada Sahitya/article_531.txt new file mode 100644 index 0000000000000000000000000000000000000000..fad4e0e9c83556febfaf3ee8c0ee04490bc94121 --- /dev/null +++ b/Kannada Sahitya/article_531.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್ +ಸಂಜೆ ಕೆಂಪು ತೋಟದಲ್ಲಿಂದು; +ಮಳೆ ಬಂದು ಇಳೆ ಮಿಂದು +ಮಡಿಯಾಗಿ ಮೈ ಮೆರೆಸಿತ್ತು +ಸುತ್ತಮುತ್ತಲಿನಚ್ಚ ಹಸಿರು ದುಂದು. +ಲಾಗಾಯ್ತಿನಂದವರಿಗೆ ನನ್ನ ಬಗೆಗೆ ಅಮಿತ ಕಕ್ಕುಲತೆ: +“ಬೆಳಿಗ್ಗೆಯಷ್ಟೇ ಭಾಷಣದಲ್ಲಿ ಉದ್ಧರಿಸಿದೆ ನಿಮ್ಮ ಕವಿತೆ” +ಎಂದರು. ಏನೊ ಹೊಳೆದಂತೆ ಗಹಗಹಿಸಿ ಮಾತು ಮುಂದುವರಿಸಿದರು: +“ಇಲ್ಲಿನೊಂದೊಂದು ಮರ ಗಿಡ ಬಳ್ಳಿ ನನಗೆ ಪರಿಚಯವುಂಟು, +ಇವಕು ನನಗು ಮೂವತ್ತೆಂಟು ವರ್ಷಗಳ ದೀರ್ಘ ನಂಟು. +ಮುಂಜಾನೆ ಪ್ರತಿನಿತ್ಯ ಇಲ್ಲಿ ವಾಕಿಂಗ್ ಬರುತ್ತಿದ್ದ ರೂಢಿ +ಅಸ್ವಸ್ಥತೆಯ ನಿಮಿತ್ತ ಕೆಲ ಸಮಯದಿಂದ ತಪ್ಪಿತ್ತು ನೋಡಿ, +ಅದರಿಂದ: ‘ಈಚೆಗೇಕೋ ಮುದುಕ ಪಾದ ಬೆಳಸಿಲ್ಲವೀ ಎಡೆಗೆ, +ಗೊಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?’ +ಎನುವ ಈ ತರು ಲತೆಗಳನುಮಾನ ನೀಗಲಿಕೆಂದೇ, +ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ” +ಎನ್ನುತ್ತ, ನೆನಪುಗಳ ತೋಳ್ತೆಕ್ಕೆಗೆ ಸಂದರು; +ಹೌದೆಂಬಂತೆ ತೆಳ್ಳನೆಯ ಸುಯ್ಗಾಳಿ ಬೀಸಿ, +ಬದಿಯ ವೃಕ್ಷದಿಂದುದುರಿದಾಕಾಶ ಮಲ್ಲಿಗೆ ಬೆಳ್ನಗೆ ಸೂಸಿ, +ಅಡಿಯ ನೆಲ ಪೂರ್ತಿ ಕಣ್ಸೊಗದ ಬಂದರು. +– ೨ – +ಪಾಠ ಹೇಳದಿದ್ದರೂ ನನಗಿವರು ಕಾಲೇಜಿನಲ್ಲಿ +ಎಲ್ಲರ ಹಾಗೆ ನನ್ನ ಪಾಲಿಗು ಮೇಷ್ಟ್ರೆ. +(ಇವರು ಬರುವುದ ಕಂಡು ಹಿಂದೆ ಸಿಗರೇಟನಾರಿಸಿ, +ದೂರ ಸರಿಸಿದ್ದುಂಟು ಆಷ್ ಟ್ರೆ.) +ಮಾನಾಭಿಮಾನಗಳ ಪ್ರಶ್ನೆಯೆದುರಾದಾಗ +ಮಾಡಿಕೊಂಡಿದ್ದಿಲ್ಲ ಬಿಲ್‌ಕುಲ್ ರಾಜಿ, +ಹಲವು ಪೊಗದಸ್ತು ಹುದ್ದೆಗಳ ಈ ಮಾಜಿ. +ಹಗೆಯೇ, ಹಿರಿಯರೊ ಕಿರಿಯರೊ ಭೇದವೆಣಿಸದೆ, +ಅಂತಸ್ತು ಕುಲ ಆಚಾರ ಕಿಂಚಿತ್ತು ಗಣಿಸದೆ- +ಕಂಡಿತೇ ಅವರಲ್ಲಿ ಕನದಷ್ಟು ಗುಣ, +ಹೊಗಳಿಕೆಯ ಹತ್ತು ಮಣ +ಹೊರಿಸಿದಲ್ಲದೆ ತಣಿವ ಕುಳವಲ್ಲ ಈ ಪರ ಹಿತೈಷಿ; +ಅದಕಿಲ್ಲವೇ ನಾನೆ ಜ್ವಲಂತ ಸಾಕ್ಷಿ? +– ೩ – +ಇದೆಲ್ಲ ಒತ್ತಟ್ಟಿಗಿರಲಿ, +ಲಾಲ್‌ಬಾಗಿಗೆ ಬರೋಣ ಮರಳಿ. +ಗಾದಿಗೆಂದೂ ತಾನೆ ಮುಂದಗಿ ಚಿತಾವಣಿಸಿದ ಗಾಂಧಿಯನುಮೋದಿ, +ಷಾದಿಯಾಗದ ಈ ವಿಚಾರಪೂಜಕ ‘ನಿರೀಶ್ವರವಾದಿ’, +ದೈವಸೃಷ್ಟಿಯ ವಿವಿಧ ತರು ಸಂತತಿಯ ಚೆಲ್ವಿಕೆಗೆ +ಮನ ಸೋತು ಮೋಹಗೊಂಡಿರುವಮೋಘ ಪರಿ +ಬರಿಸುವುದು ಸಂಸಾರಿ ಆಸ್ತಿಕರಿಗೂ ಮಹದಚ್ಚರಿ. +ಜಂಗುಳಿಯಲ್ಲಿ ಗುರುತಿಸದಷ್ಟು ಸರಳ ಖಾದಿವ್ರತಸ್ಥ ಎಚ್ಚೆನ್ +ಮತ್ತವರ ಬದುಕು ಸದಾ ಕಾಲಕ್ಕು ದೊಡ್ಡ ಕ್ವೆಷ್ಚನ್. +***** +ಕೀಲಿಕರಣ: ಶ್ರೀನಿವಾಸ +ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ. ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ. ಚಿಕ್ಕೆ ಚಕ […] +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_532.txt b/Kannada Sahitya/article_532.txt new file mode 100644 index 0000000000000000000000000000000000000000..2cf17c4f38ed577a091dd569d9af2b3b0a79c180 --- /dev/null +++ b/Kannada Sahitya/article_532.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನರಕ, ಯಮಧರ್ಮರಾಯರ ವೈಭವೋಪೇತ ಆಸ್ಥಾನ. ಮುಖ್ಯ ಪೀಠದಲ್ಲಿ ನ್ಯಾಧೀಶನಾಗಿ ಯಮರಾಯರು ಕುಳಿತಿದ್ದಾರೆ. ಅವನ ಪಕ್ಕದಲ್ಲಿ ಚಿತ್ರಗುಪ್ತರು, ಅವನೆದುರು ದೂಡ್ಡ ಒಂದು ಪುಸ್ತಕ. ಅಡ್ಜರಲ್ಲಿ ಮಾನವ ಜೀವಿಗಳ ಇಡೀ ಚರಿತ್ರೆಯೇ ಇದೆ. ಅದನ್ನು ಪರಿಶೀಲಿಸಿ, ಅದರಲ್ಲಿ ಏನು ದಾಖಲಾಗಿದೆಯೋ ಅದನ್ನು ಆಧರಿಸಿ ಸತ್ತ ವ್ಯಕ್ತಿಯ ಮರಣೋತ್ತರ ಭವಿಷ್ಯ ನಿರ್ಧಾರವಾಗುತ್ತದೆ. +ಇವತ್ತು ಸಿದ್ದಪ್ಪನ ವಿಚಾರಣೆ. ಅವನು ಎದುರು ನಿಂತಿದ್ದಾನೆ. +ಇದೇ ಮೊದಲ ಬಾರಿ ಚಿತ್ರಗುಪ್ತನು ಇಂತಹ ಗೊಂದಲದಲ್ಲಿ ಬಿದ್ದಿದ್ದು. ಪುಸ್ತಕದ ಪುಟಗಳನ್ನು ಮೊದಲಿನಿಂದ ಕೊನೆಯ ತನಕ ತಿರುವಿದರೂ ಅಲ್ಲಿ ಸಿದ್ದಪ್ಪನ ಹೆಸರೇ ಇಲ್ಲ. ಚಿತ್ರಗುಪ್ತ ಅವನ ವಿಚಾರಣೆ ನಡೆಸಬೇಕು. ತನ್ನ ಪುಸ್ತಕದಲ್ಲಿ ಅವನ ಚರಿತ್ರೆಯನ್ನು ಹುಡುಕುತ್ತಿದ್ದಾನೆ. ಹುಡುಕುತ್ತಲೇ ಇದ್ದಾನೆ. +ತಲೆ ಕೆದರಿಕೊಂಡು, ಗಡ್ಡ ನೀವಿಕೊಂಡು, ಹಣೆ ಒತ್ತಿಕೊಂಡು ಪರದಾಡುತ್ತಿರುವ ಚಿತ್ರಗುಪ್ತರನ್ನು ಕಂಡ ಯಮಧರ್ಮ ಕೇಳಿದರು, ‘ ಏನು ಗುಪ್ತರೇ, ಈ ನರಹುಳುವಿನ ವಿಚಾರಣೆ ನಡೆಸುವಿರೋ ಅಥವಾ…” +‘ ಮಹಾ ಪ್ರಭು… ಬಹಳ ಸಂದಿಗ್ಧವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾವುದೇ ಕಾಲದಲ್ಲ್ಲೂ ಇಂತಹ ಸಮಸ್ಯೆ ನಮ್ಮನ್ನು ಕಾಡಿಲ್ಲ.’ ಚಿತ್ರಗುಪ್ತ ವಿವರಿಸಿದರು. +‘ಏನಾಯಿತೆಂದು ಸುಸ್ಪಷ್ಟವಾಗಿ ಹೇಳಬಾರದೆ? ನೀವು ನೀವೆ ಯಾವುದೋ ಕ್ಷುಲ್ಲಕ ಘಟನೆಯನ್ನು ದೊಡ್ಡದು ಮಾಡಿಕೊಂಡು ತಲೆ ಬಿಸಿ ಮಾಡಿಕೊಳ್ಳುತ್ತೀರಿ. ಟೆನ್ಷನ್ ಮಾಡಿಕೋಬೇಡಿ. ಯಾಕೋ ಈಗೀಗ ನೀವೂ ಹುಲುಮಾನವರ ಹಾಗೆ ವರ್ತಿಸುತ್ತಿದ್ದೀರಿ.. ತಾವೇ ಗೊಣಗುಟ್ಟುತ್ತೀರೆಯೇ ಹೊರತು ವಿಷಯವೇನೆಂದು ಅರುಹುವುದಿಲ್ಲ. ಹೇಳದಾಗ ಪರಿಹರಿಸುವುದಾದರೂ ಹೇಗೆ? ಅದಿರಲಿ, ಈ ಸಿದ್ದಪ್ಪನ ವಿಚಾರಣೆಯಲ್ಲಿ ಏಕೆ ವೃಥಾ ವಿಳಂಬ?’ +‘ಮನುಷ್ಯ ಸತ್ತಮೇಲೆ ಅವನ ಆತ್ಮ ಸ್ವರ್ಗಕ್ಕೆ ಹೋಗಬೇಕು ಇಲ್ಲವಾದರೆ ನರಕಕ್ಕೆ. ಅದು ನಮ್ಮ ನರಕದ ನಿಯಮದಂತೆ, ನಮ್ಮ ನಿರ್ಧಾರದಂತೆ ಅನುಷ್ಠಾನಕ್ಕೆ ಬರುತ್ತದೆ. ಜನರೆಲ್ಲ ತಿಳಿದುಕೊಂಡಂತೆ ಪಾಪಿಗೆ ನರಕದಲ್ಲಿ ಶಿಕ್ಷೆ. ಒಳ್ಳೇಯ ಕೆಲಸ ಮಾಡಿದವನಿಗೆ ಸ್ವರ್ಗದಲ್ಲಿ ಸುಖ ಪ್ರಾಪ್ತಿ. ಎರಡೂ ಮಾಡದವರು ಹೋಗುವ ಯಾವುದೇ ಜಾಗವಿಲ್ಲ ಸದ್ಯಕ್ಕೆ. ಆದರೆ ಸಿದ್ದಪ್ಪನು ಪಾಪವನ್ನೂ ಮಾಡಿಲ್ಲ. ಪುಣ್ಯ್ವನ್ನೂ ಮಾಡಿಲ್ಲವಾದ ಕಾರಣ ಅವನ ದಾಖಲೆ ಸಂಪೂರ್ಣ ಖಾಲಿ. ಅಂದ ಮೇಲೆ ವಿಚಾರಣೆ ಹೇಗೆ ನಡೆಸುವುದು. ಅವನನ್ನು ಎಲ್ಲಿಗೆ ಕಳುಹಿಸುವುದು?’ ಚಿತ್ರಗುಪ್ತರೆಂದರು. +ಹೌದು ಇಂತಹ ಕೇಸು ಇದೇ ಮೊದಲ ಬಾರಿಗೆ ನರಕಕ್ಕೆ ಬಂದಿದ್ದು. ಯಮನಿಗೂ ಮಂಡೆ ಬೆಚ್ಚಗಾಯಿತು. +ಕಚೇರಿಯ ಬಾಸ್ ತಲೆ ಬಿಸಿಯಾದರೆ ಎಲ್ಲಾ ಸಹೋದ್ಯೋಗಿಗಳೂ ಯೋಚನೆ ಮಾಡ ಬೇಕು ಇಲ್ಲಾ ಯೋಚನೆ ಮಾಡುವಂತೆ ನಟಿಸಬೇಕು; ಅದು ಬದುಕುವವರ ಜಾಣತನ. ಯಮನ ಆಸ್ಥಾನದಲ್ಲಿಯೂ ಹಾಗೆಯೇ ಆಯಿತು. ಸಮಸ್ಯೆಗಳ ಮಹಾಪರ್ವತವೇ ತಲೆಯ ಮೇಲೆ ಬಿದ್ದವರ ಹಾಗೆ ನೌಕರ-ಚಾಕರರೆಲ್ಲಾ ಮುಖ ಮಾಡಿಕೊಂಡು ನಿಂತರು. ಸಿದ್ದಪ್ಪ ಎಲ್ಲರ ಮುಖ ಮುಖ ನೋಡುತ್ತಿದ್ದಾನೆ. ಆದರೆ ಅವರ ಸಮಸ್ಯೆಯನ್ನು ಬಿಡಿಸುವುದು ಅವನ ಕೆಲಸವಲ್ಲ. +ಭೂಲೋಕದ ನ್ಯಾಯಾಲಯಗಳಲ್ಲಿ ಇಂತಹ ಸಮಸ್ಯೆ ಉದ್ಭವಿಸುವುದೇ ಇಲ್ಲ. ಉದ್ಭವಿಸಿದರೂ ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಆಪಾದಿತ ಬಿಡುಗಡೆಯಾಗುತ್ತಾನೆ. ಅಥವಾ ನ್ಯಾಯವಾದಿಗಳ ಚಾಕಚಕ್ಯತೆಯ ಮೇಲೆ ನಿರಪರಾಧಿಯೂ ಮರಣದಂಡನೆಗೆ ಗುರಿಯಾಗಬದುದು. ಈ ಎಲ್ಲಾ ನಿಯಮಗಳಿಗೆ ನರಕ ಹೊರತು. +‘ಆ ವ್ಯಕ್ತಿ ತನ್ನ ಬದುಕಿನಲ್ಲಿ ಮಾಡಿದ ಪಾಪ ನಿವೇದನೆ ಮಾಡಿಕೊಳ್ಳಲಿ ಅಥವಾ ಮಾಡಿದ ಸತ್ಕಾರ್ಯದ ಬಗ್ಗೆ ವಿವರಿಸಲಿ. ಅದರ ಆಧಾರದ ಮೇಲೆ ನಾವು ನಿರ್ಣಯ ತೆಗೆದುಕೊಳ್ಳೋಣ’ ಯಮ ಉವಾಚ. +ಈ ಸಲಹೆಯೂ ಸರಿ ಎನಿಸಿತು ಚಿತ್ರಗುಪ್ತರಿಗೆ. ಅವರ ಸಲಹೆಯ ಮೇರೆಗೆ ಸಿದ್ದಪ್ಪ ಯೋಚಿಸಿದ. ಕೊನೆಗೆ ಅವನಿಗೆ ತನ್ನ ಜೀವನದಲ್ಲಿ ನಡೆದ ಒಂದು ಮಹತ್ತರ ಘಟನೆ ನೆನಪಿಗೆ ಬಂತು. +‘ನಾನು ಒಬ್ಬ ತರುಣಿ ಮಾನಾಪಹರಣಗೊಳ್ಳುವುದನ್ನು ತಪ್ಪಿಸಿದೆ ಮಹಾಸ್ವಾಮಿ’ ಸಿದ್ದಪ್ಪನೆಂದ. +ಚಿತ್ರಗುಪ್ತರ ಮುಖದಲ್ಲಿ ಚಿಂತೆಯ ಗೆರೆಗಳು ಮಾಯವಾಗಿ ಸಂತೋಷ ಕಾಣಿಸಿಕೊಂಡಿತು. ‘ ಹೌದಾ? ಹೇಳು…ಹೇಳು…’ ಎಂದು ಅವಸರಿಸಿದರು. +‘ನನ್ನ ಕಚೇರಿಯ ಕೆಲಸ ಮುಗಿಯೋದು ಸಂಜೆ ಆರಕ್ಕೆ. ನಾನು ಕೆಲಸ ಮುಗಿಸಿ ನನ್ನ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದೆ.’ ಸಿದ್ದಪ್ಪ ಹೇಳತೊಡಗಿದ. +‘ಮಹಾಸ್ವಾಮಿ, ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವುದೆಂದರೆ ತುಂಬಾ ಅಪಾಯದ ಕೆಲಸ.’ ಚಿತ್ರಗುಪ್ತರೆಂದರು. ‘ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ಜೀವಸಹಿತ ವಾಪಾಸು ಬರಬಹುದು. ಆದರೆ ಬೆಂಗಳೂರಿನ ರಸ್ತೆಯಲ್ಲಿ ಪ್ರಯಾಣಿಸಿದವನು ಜೀವಸಹಿತ ವಾಪಾಸು ಬಂದನೆಂದರೆ ಅದೊಂದು ಅಪಘಾತವೇ ಸರಿ.’ +ಯಮಧರ್ಮರು ಅವರತ್ತ ಕೆಂಗಣ್ಣು ಬೀರಿದರು. ಚಿತ್ರಗುಪ್ತರು ಬಾಯಿ ಮುಚ್ಚಿಕೊಂಡರು. ‘ ಸಿದ್ದಪ್ಪ , ನೀನು ಏನು ನಡೆಯಿತೆಂಬುದನ್ನು ಹೇಳು.’ ಎಂದರು. +‘ಅಂದು ನಾನು ಬನ್ನೇರುಘಟ್ಟ ರಸ್ತೆಯಲ್ಲಿ ಬರುತ್ತಿದ್ದಾಗ..’ ಸಿದ್ದಪ್ಪ ಶುರುಮಾಡಿದ್ದನಷ್ಟೆ. +ಚಿತ್ರಗುಪ್ತರು ತನ್ನ ಅನುಭವವನ್ನು ವಿವರಿಸತೊಡಗಿದರು. ‘ಅದು ಭಯಂಕರ ರಸ್ತೆ ಸ್ವಾಮಿ. ರಿಪೇರಿ ಮಾಡುವುದೇ ಇಲ್ಲ. ಸದಾ ಹೊಂಡ. ಕಲ್ಲು, ನೀರುಗಳು ತುಂಬಿರುತ್ತವೆ. ಅಗೆತ ದಿನನಿತ್ಯದ ಕ್ರಿಯೆ. ಖಾಸಗಿ ಮತ್ತು ಸರ್ಕಾರಿ ವಾಹನಗಳು ಪೈಪೋಟಿಯ ಮೇಲೆ ಶರವೇಗದಲ್ಲಿ ಚಲಿಸುತ್ತವೆ. ಕಾಲ್ದಾರಿಯೇ ಇಲ್ಲ. ಇದ್ದರೂ ಬೆಳಾಗಾಗುವಷ್ಟರಲ್ಲಿ ಅಲ್ಲೊಂದು ದೇವಸ್ಥಾನ ಏಳುತ್ತದೆ.’ +‘ಹೌದು ಮಹಾಸ್ವಾಮಿ. ಈ ರಸ್ತೆಯಲ್ಲಿ ಪ್ರಯಾಣಿಸಿದವನಿಗೆ ದೇವರ ಮೇಲೆ ಭಕ್ತಿ ಜಾಸ್ತಿ ಮೂಡುತ್ತದೆ. ಇಲ್ಲಿಯ ತನಕ ಜೀವ ಸಹಿತ ತಾನು ಉಳಿಯುವಂತೆ ಮಾಡಿದ್ದೀಯಲ್ಲ ಎಂದು ಅವನು ಭಗವಂತನನ್ನು ಸದಾ ಸ್ಮರಿಸುತ್ತಾನೆ.’ ಸಿದ್ದಪ್ಪ ವಿವರಿಸಿದ. +‘ಕಳೆದ ವರ್ಷ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರಲ್ಲಿ ಶೇಕಡಾ ಇಪ್ಪತ್ಟು ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದ್ದು.’ ಚಿತ್ರಗುಪ್ತರು ಉಲ್ಲೇಖಿಸಿದರು. +‘ನೋಡಿ ಚಿತ್ರಗುಪ್ತರೆ, ನೀವು ವೃಥಾ ಮಾತನಾಡುತ್ತೀರಿ. ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಿ ಎಂಬುದು ನಮ್ಮ ಮನಸ್ಸಿನಲ್ಲಿ ಸದಾ ಇರಬೇಕು,’ ಯಮಧರ್ಮರು ಎಚ್ಚರಿಸಿದರು. ‘ಇದು ಇಂದಿರಾಗಾಂಧಿಯವರು ಹೇಳಿದ ಮಾತು ಎಂಬುದು ನಿಮ್ಮ ನೆನಪಿರಲಿ.’ +ಸಿದ್ದಪ್ಪ ಮುಂದುವರಿಸಿದ, ‘ಸುತ್ತ ಕತ್ತಲು ಕಂದಿತ್ತು ಆಗ…’ +‘ಹೌದು ಸ್ವಾಮಿ,’ ಚಿತ್ರಗುಪ್ತರು ಮತ್ತೆ ತನ್ನ ಷರಾ ಸೇರಿಸಿದರು. ‘ ಈ ರಸ್ತೆಯಲ್ಲಿ ಹಗಲೆಲ್ಲಾ ಬೀದಿ ದೀಪ ಉರಿಯುತ್ತಿರುತ್ತದೆ. ಆದರೆ ರಾತ್ರಿ ಕತ್ತಲು.’ +ಸಿದ್ದಪ್ಪ ಹೇಳತೊಡಗಿದ, ‘ಅಲ್ಲಿ ಸಾಗುತ್ತಿದ್ದ ನನಗೆ ಹೆಲ್ಪ್ ಮಿ, ಹೆಲ್ಪ್ ಮೀ, ಎಂಬ ಸಹಾಯ ಯಾಚನೆಯ ದನಿ ಕೇಳಿಸಿತು. ಅದು ಹೆಣ್ಣಿನ ದನಿ. ನಾನು ವಾಹನದ ವೇಗ ಕಡಿಮೆ ಮಾಡಿ ದನಿ ಎಲ್ಲಿಂದ ಬಂದಿರಬದುದು ಎಂದು ಆಲಿಸಿದೆ. ಪಕ್ಕದ ಕಾಂಪೌಂಡಿನ ಒಳಗಿನಿಂದ ಅದು ಕೇಳಿಸುತ್ತಿತ್ತು.’ +‘ಚಿತ್ರಗುಪ್ತರೆ, ಇವನು ನಮ್ಮ ಶಬ್ದಭಂಡಾರದಲ್ಲಿ ಇರದ ಯಾವುದೋ ಭಾಷೆಯ ಶಬ್ದಗಳನ್ನು ಬಳಸುತ್ತಿದ್ದಾನೆ. ಅವುಗಳ ಅರ್ಥವೇನೆಂದು ತಿಳಿ ಹೇಳುವಿರಾ?’ ಯಮಧರ್ಮರು ಕೇಳಿದರು. +‘ಇದು ಬೆಂಗಳುರಿನ ಕನ್ನಡ ಮಹಾಸ್ವಾಮಿ. ಕೆಲವರು ಇದನ್ನು ಕಂಗ್ಲಿಷ್ ಎಂದು ಕರೆಯುತ್ತಾರೆ. ಬೆಂಗಳೂರಿನ ಮಂದಿ ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಉರ್ದು ಮಾತನಾಡಿದರೆ ಯಾರಿಗೂ ತಿಳಿಯುವುದಿಲ್ಲ.’ ಚಿತ್ರಗುಪ್ತರು ವಿವರಣೆ ನೀಡಿದರು. +‘ಸರಿ ಕನ್ನಡ ಅವಸಾನದಲ್ಲಿದೆ ಎನ್ನಿ. ಈಗ ಇವನೆಂದ ಹೆಲ್ಪ್ ಮಿ ಎಂಬುದರ ಅರ್ಥವೇನು?’ ಯಮಧರ್ಮರು ಕೇಳಿದರು. +‘ಸಹಾಯ ಮಾಡಿ ಎಂಬ ಕೂಗು ಅದು.’ ಸಿದ್ದಪ್ಪನೇ ಅಂದ. ‘ನಾಲ್ವರು ದಾಂಡಿಗರು ಹೆಣೊಬ್ಬಳನ್ನು ಹಿಗ್ಗಮುಗ್ಗಾ ಎಳೆಯುತ್ತಿದ್ದರು. ನಾನು ಅವರಿಗೆ ಸಹಾಯ ಮಾಡಲು ಮುಂದೆ ಹೋದೆ.’ +ಚಿತ್ರಗುಪ್ತರು ಸಂತೋಷಪೂರ್ವಕವಾಗಿ ಚಪ್ಪಾಳೆ ತಟ್ಟಿದರು. ‘ಮಹಾಸ್ವಾಮಿ, ಬೆಂಗಳೂರಿನ ಜನ ಯಾವುದೇ ಸಂದರ್ಭದಲ್ಲಿಯೂ ಪರರಿಗೆ ಸಹಾಯ ಮಾಡುವವರಲ್ಲ. ಹಾಗೆ ಮಾಡಿದರೆ ವೃಥಾ ಕೋರ್ಟುಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಊರಿನಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ ಎಂದುಕೊಳ್ಳುವವರು ಅವರು. ಇಂತಹ ಸಂರ್ಭಗಳಲ್ಲಿ ಎಲ್ಲಿಂದಲಾದರೂ ‘ಸಹಾಯ ಮಾಡಿ,’ ಎಂಬ ಕೂಗುಕೇಳಿಸಿದರೆ ತಮ್ಮ ಮನೆಯ ಬಾಗಿಲೆಳೆದು, ದೀಪ ಆರಿಸಿ, ಕಿವಿಗೆ ಬಿರಡೆ ತೂರಿಮಲಗಿಬಿಡುವರು.ಆದರೆ ಕನ್ನಡ ಮತ್ತು ಹಿಂದಿ ಸಿನೆಮಾಗಳಲ್ಲಿ ಮಾತ್ರ ನಾಯಕ ಮುಂದೆ ಬರುತ್ತಾನೆ. ನಾಯಕಿಯನ್ನು ರಕ್ಷಿಸುತ್ತಾನೆ. ನಂತರ ಇಬ್ಬರೂ ಯುಗಳ ಗೀತೆ ಹಾಡುತ್ತಾ ಮರ ಸುತ್ತುತ್ತಾರೆ, ಕಾಶ್ಮೀರ, ಊಟಿಗಳಿಗೆ ಹೋಗುತ್ತಾರೆ. ದುಃಖದ ವಿಷಯವೆಂದರೆ ನಾಯಕಿಯ ವಿನಃ ಇನ್ನಾರದೆ ಕೂಗು ನಾಯಕನ ಕಿವಿಗಳಿಗೆ ಬೀಳುವುದಿಲ್ಲ.’ +ಯಮಧರ್ಮರು ರೇಗಿದರು, ‘ಚಿತ್ರಗುಪ್ತರೇ, ನೀವು ಸಿನೆಮಾ ವಿಮರ್ಶೆ ಅಮಾಡ್ತಿದ್ದೀರೋ ಇಲ್ಲಾ ಸಿದ್ದಪ್ಪನ ವಿಚಾರಣೆ ಮಾಡ್ತಿದ್ದೀರೋ? ವಿಷಯಾಂತರಿಸುವುದರಲ್ಲಿ ನೀವು ಸಿದ್ದ ಹಸ್ತರು. ಹೇಳು ಸಿದ್ದಪ್ಪಾ.. ನಂತರ ಏನಾಯಿತು?’ +‘ನಾನು ಸ್ಕೂಟರ್ ನಿಲ್ಲಿಸಿ ಅಲ್ಲಿಗೆ ಹೋದೆ. ಎದೆ ನಡುಗಿಸುವ ದೃಶ್ಯ. ಕೂಡಲೇ ನಾನು ನನ್ನಲ್ಲಿ ಇದ್ದಬದ್ದ ಎಲ್ಲ ಶಕ್ತಿಗಳನ್ನು ಸೇರಿಸಿಕೊಂಡು ಅಲ್ಲಿದ್ದವರಿಗೆ ಎರ್ರಾಬಿರ್ರಿ ಹೊಡೆಯತೊಡಗಿದೆ.’ ಸಿದ್ದಪ್ಪನೆಂದ. ಅಷ್ಟರಲ್ಲಿ ಚಿತ್ರಗುಪ್ತರು ಮತ್ತೆ ಚಪ್ಪಾಳೆ ತಟ್ಟತೊಡಗಿದರು. +ಈ ಬಾರಿ ಯಮಧರ್ಮರು ಸಂತೈಸುವ ದನಿಯಲ್ಲಿ ಎಂದರು.‘ಚಿತ್ರಗುಪ್ತರೇ, ನಿಮಗೆ ಸಭಾ ಮರ್ಯಾದೆ ಗೊತ್ತಿಲ್ವೆ? ಏಕೆ ವೃಥಾ ಕರತಾಡನ ಮಾಡುತ್ತಿರುವಿರಿ?’ +‘ನನಗೆ ತುಂಬಾ ಆನಂದವಾಗಿದೆ ಸ್ವಾಮಿ, ಅದಕ್ಕೇ ಈ ಕರತಾಡನ. ಬೆಂಗಳೂರಿನ ಕಲಬೆರಕೆ ನೀರು ಕುಡಿದು, ಅಪರಿಶುದ್ಧ ಗಾಳಿ ಸೇವಿಸಿ, ಕೊಳೆತ ತರಕಾರಿ ತಿಂದು ಕೂಡಾ ಮಧ್ಯಮ ದರ್ಜೆಯ ಒಬ್ಬ ವ್ಯಕ್ತಿ ಗೂಂಡಾಗಳೆದುರು ಡಿಶುಂಡಿಶುಂ ಮಾಡುತ್ತಾನೆ ಎಂದರೆ ಅದು ಸಾಹಸವೇ ಸರಿ. ನನ್ನ ಅಭಿನಂದನೆಗಳನ್ನು ಈ ಮೂಲಕ ಪ್ರತಿಕ್ರಿಯಿಸಿದೆ, ಅಷ್ಟೆ.’ ಚಿತ್ರಗುಪ್ತರೆಂದರು. +‘ಸರಿ ಮುಂದೇನಾಯಿತು?’ ಯಮಧರ್ಮರು ಸಿದ್ದಪ್ಪನನ್ನು ಕೇಳಿದರು. +‘ನಮ್ಮ ಈ ಹೋರಾಟದಲ್ಲಿ ಅವರಿಂದ ಆ ಮಹಿಳೆಯು ತಾತ್ಕಾಲಿಕವಾಗಿ ಬಚಾವಾದಳು. ಆದರೆ ತಮ್ಮ ಕಾಲುಗಳಿಗೆ ಗೂಂಡಾಗಳು ಬುದ್ದಿ ಹೇಳಲಿಲ್ಲ.’ ಸಿದ್ದಪ್ಪನೆಂದ. +‘ಕಾಲಿಗೆ ಬುದ್ದಿ ಹೇಳುವುದೆಂದರೆ ಓಡಿ ಹೋಗುವುದು ಎಂದು ಅರ್ಥ.’ ಚಿತ್ರಗುಪ್ತರು ವಿವರಿಸಿದರು. ‘ ಈ ಭೂಲೋಕದವರು ಏನೋ ಹೇಳುತ್ತಾರೆ, ಅದರ ಒಳಾರ್ಥ ಬೇರೆಯೇ ಇರುತ್ತದೆ. ಅಂತಹ ಅನೇಕ ಪದ ಪುಂಜಗಳ ವಿವರಣೆಯನ್ನು ನಾನಿಲ್ಲಿ ಕೊಡಬದುದು.’ +‘ಸರಿ. ಅದಕ್ಕಾಗಿ ವಿಶೇಷ ಸಂದರ್ಭವನ್ನು ಹಮ್ಮಿಕೊಳ್ಳೋಣ. ಹೇಳು ಸಿದ್ದಪ್ಪ, ಮುಂದೇನಾಯಿತು?’ +‘ ಆ ನಾಲ್ಕೂ ದಾಂಡಿಗರು ನನ್ನ ಸುತ್ತ ಸೇರಿದರು. ಒಬ್ಬನು ಸೈಕಲ್ ಚೈನ್ ತೆಗೆದ., ಇನ್ನೊಬ್ಬನ ಕೈಲಿ ಚೂರಿ, ಮತ್ತೊಬ್ಬನು ಕ್ರಿಕೆಟ್ ಬ್ಯಾಟ್ ಎತ್ತಿದ…’ +ಸಿದ್ದಪ್ಪ ಮಾತನ್ನು ಯಮಧರ್ಮರೇ ತುಂಡರಿಸಿದರು, ‘ಒಬ್ಬನ ಮೇಲೆ ನಾಲ್ವರು…ಇದು ಯುದ್ಧದ ನಿಯಮಗಳಿಗೆ ಬಾಹಿರವಾದುದು. ಇದನ್ನು ಧರ್ಮ ಯುದ್ಧ ಎಂದು ಕರೆಯುವುದಿಲ್ಲ. ಅನ್ಯಾಯ… ಅನ್ಯಾಯ…’ +‘ಹೌದು ಮಹಾಸ್ವಾಮಿ. ಈ ನಿಯಮಗಳೆಲ್ಲಾ ಮಹಾಭಾರತ, ರಾಮಾಯಣ ಕಾಲದಲ್ಲಿತ್ತು. ಈಗ ಭಾರತದೇಶದಲ್ಲಿ ಇಲ್ಲ.” ಸಿದ್ದಪ್ಪ ಸ್ಪಷ್ಟ ಪಡಿಸಿದ. +‘ಸರಿ, ಈ ಘಟನೆ ನಡೆದು ಎಷ್ಟು ಕಾಲದ ಹಿಂದೆ?’ ಯಮಧರ್ಮರ ಪ್ರಶ್ನೆ. +‘ಕೇವಲ ಕೆಲ ನಿಮಿಷಗಳ ಹಿಂದೆ ಮಹಾಸ್ವಾಮಿ,’ ಸಿದ್ದಪ್ಪನೆಂದ. ‘ಮರುಕ್ಷಣ ನಾನಿಲ್ಲಿದ್ದೆ.’ ಬಿ. ಎ. ಪದವಿಧರರಾಗಿರುವ ಸೂರಿ ಹಾರ್ದಳ್ಳಿಯವರು ಬರೆದಿರುವುದು ಒಟ್ಟು ಆರು ಕಾದಂಬರಿಗಳನ್ನು. ‘ಹೆಂಡತಿಯನ್ನು ಪ್ರೀತಿಸಿದರೆ ’ – ಇವರ ಲಲಿತ ಪ್ರಬಂಧಗಳ ಸಂಗ್ರಹಕ್ಕೆ ‘ಗೊರೂರು ಪ್ರಶಸ್ತಿ’ ದೊರಕಿದೆ. ದೂರದರ್ಶನದ ಧಾರಾವಾಹಿಗಳಿಗೂ ಸಂಭಾಷಣೆ ಬರೆಯುತ್ತಾರೆ. ಪ್ರಸಕ್ತ ಇವರು ಬೆಂಗಳೂರಿನ ಮೈಕೊ ಕಾರ್ಖಾನೆಯಲ್ಲಿ ಉದ್ಯೋಗಿ. ಇವರಿಗೆ ಈ ಮೈಲ್ ಮಾಡಲು ಇಲ್ಲಿ ಕ್ಲಿಕ್ಕಿಸಿ. +ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_533.txt b/Kannada Sahitya/article_533.txt new file mode 100644 index 0000000000000000000000000000000000000000..ef58c444e42613df976a0ec6a9bda2acfa8536a4 --- /dev/null +++ b/Kannada Sahitya/article_533.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. +ಹೀಗಾಗಿ ಅದೆಷ್ಟೇ ಗಂಭೀರವಾದ ಚಿತ್ರವಾದರೂ ಗೋಣಿಚೀಲದಲ್ಲಿ ಸಾಮಗ್ರಿ ತುರುಕುವಂತೆ ಕಥೆಯಲ್ಲಿ ಆ ಅಂಶಗಳೆಲ್ಲ ತುರುಕುತ್ತಿದ್ದರು. +ಆರಂಭ ದಿನಗಳಲ್ಲಿ ಕಾಮೆಡಿ ಟ್ರಾಕ್ ಒಂದು ಬೇರೆಯೇ ಓಡುತ್ತಿತ್ತು. +ಹೀಗಾಗಿ ನರಸಿಂಹರಾಜು, ಜಿ.ವಿ.ಅಯ್ಯರ್‍, ಬಾಲಣ್ಣ, ಎನ.ಎಸ್.ರಾವ್, ದಿನೇಶ್ ಅಂಥವರೆಲ್ಲ ಮುಖ್ಯರಾಗಿದ್ದರು ಅಂದು. +ಕ್ರಮೇಣ ಕಾಮೆಡಿ ಟ್ರಾಕ್ ಕಟ್ ಆಗಿ ನಾಯಕನೇ-ಕಾಮೆಡಿ ಸಿಚುಯೇಷನ್‌ಗಳಲ್ಲಿ ಅಭಿನಯಿಸುವ ನಟನಾದ. ಬರಬರುತ್ತಾ ಹೀರೋಯಿನ್ನೇ ನರ್ತಕಿಯರ ಜಾಗ ತುಂಬ ತೊಡಗಿದಳು. ಡಿಟೆಕ್ಟೀವ್ ಚಿತ್ರಗಳು ಮರ್ಡರ್‍ ಮಿಸ್ಟರಿಗಳು ಆರಂಭವಾದಾಗ ಹೀರೋಯಿನ್‌ಗಳೇ ಕ್ಯಾಬರೇ ನರ್ತಕಿಯರೂ ಆದರು. +ಲಾಕಪ್‌ಡೆತ್‌ನಂಥ ಸಿನಿಮಾ ಹಿಟ್ ಆದಾಗ ಆಕ್ಷನ್ ಫಿಲಂಗಳು ಚಿತ್ರಕ್ಕೆ ಕಥೆ ಬರೆದ ಶೈಲಿಯನ್ನೇ ಬದಲಿಸಿತು. ನಂತರ ಚಲನಚಿತ್ರರಂಗ ಕತ್ತಿ-ಚಾಕು-ಚೂರಿಯದೇ ರಾಜ್ಯವಾಯಿತು. +ಈ ಮಧ್ಯೆ ಕಾಮೆಡಿ ಹೆಸರಿನಲ್ಲಿ ಡಬ್ಬಲ್ ಮೀನಿಂಗ್-ಟ್ರಿಬ್ಬಲ್ ಮೀನಿಂಗ್ ದೃಶ್ಯಗಳು ಅತಿಯಾಗಿ ಅಶ್ಲೀಲ ಸಂಭಾಷಣೆಗಳು ಅಶ್ಲೀಲ ದೃಶ್ಯಗಳು ಅತಿಯಾಗಿ ವಿಜೃಂಭಿಸಿದವು. +ಅಂಥ ಗಳಿಗೆ ಬಂದಾಗ ಕಾಶೀನಾಥ್ ಹೀರೋ ಕೂಡ ಆದರು. +ಪೊಲೀಸ್ ಸ್ಟೋರಿ ಬಂದ ನಂತರ ಅಮ್ಮನ್ ಸಾಹಿತ್ಯ ಆಡುಭಾಷೆ ಹೆಸರಿನಲ್ಲಿ ರಾರಾಜಿಸಿತು. +‘ಓಂ’ ನಂತರವಂತೂ ಡಾನ್‌ಗಳನ್ನ ರೌಡಿಗಳನ್ನ ನೇರವಾಗಿ ಕರೆತಂದು ಅವರನ್ನೇ ಹೀರೋಗಳಾಗಿ ಮಾಡಿ ವಿಜೃಂಭಿಸುವ ಪರಂಪರೆ ರಾರಾಜಿಸತೊಡಗಿತು. +ಅನಂತರ ಮಾಫಿಯಾಗಳು, ಅಂಡರ್‍ ವರ್ಲ್ಡ್‌ಗಳು, ಸ್ಕೆಚ್‌ಗಳು, ಕೊಲೆಗಳ ಕಥೆ ಅತಿಯಾಯಿತು. ಒಟ್ಟಿನಲ್ಲಿ ಮನೆಮಂದಿ ಎಲ್ಲ ಒಟ್ಟಿಗೆ ಕುಳಿತು ಸಂತಸಪಡುವ ದಿನಗಳು ಇನ್ನು ಬಂದೀತೆ ಎಂದು ಶಂಕಿಸುವ ದಿನಗಳು ಬಂದವು. +ಹೀಗೆ ಟ್ರೆಂಡ್ ಚೇಂಜ್ ಆಗುತ್ತ ಹೋದಂತೆ ಕತೆ ಕಾದಂಬರಿಕಾರರು ಆ ಧಾಟಿಯಲ್ಲೇ ಸಿನಿಮಾಗೆಂದು ಕತೆ ಬರೆಯಲಾರಂಭಿಸಿದರು. +ಒಂದೆರಡು ರೀಮೇಕ್‌ಗಳು ಗೆದ್ದ ಮೇಲಂತೂ ಪುಸ್ತಕ ಸಂಸ್ಕೃತಿ ಕಣ್ಮರೆಯಾಗಿ ಕ್ಯಾಸೆಟ್ ಸಂಸ್ಕೃತಿ ಎಲ್ಲೆಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತ ಹೋಯಿತು. +ಹೀಗಾಗಿ ತಂಗಳನ್ನಕ್ಕೆ ಬಿಸಿಬಿಸಿ ಒಗ್ಗರಣೆ ಹಾಕಿ ತಿನ್ನುವುದೇ ತುಂಬ ರುಚಿಕರ ಎಂಬ ವಾದ ಎಲ್ಲೆಲ್ಲೂ ಪ್ರತಿಧ್ವನಿಸಿತು. +ಸೃಜನಶೀಲತೆ ಕಣ್ಮರೆಯಾಗಿ ಎಲ್ಲೆಲ್ಲೂ ರೀಮೇಕ್ ಭಜನೆ ಆರಂಭವಾಯಿತು. +ಸ್ವಮೇಕೇ ಆಗಬೇಕೆಂದು ಹೊರಟವರಿಗೆ ನಿರ್ಮಾಪಕರು ದಕ್ಕುವುದೇ ಕಷ್ಟವಾದ ದಿನಬಂತು. +ಆದರೂ ಹಲವರು ಪಟ್ಟು ಹಿಡಿದು ‘ಸ್ವಮೇಕ್’ ಚಿತ್ರದಲ್ಲೂ ಮಹತ್ತರವಾದುದನ್ನು ಮಾಡಬಹುದು ಎಂಬುದನ್ನು ಮಾಡಿ ತೋರಿದರು. +ಚಿತ್ರರಂಗದಲ್ಲಿ ಬಂದ ಬಹಳಷ್ಟು ಚಿತ್ರಗಳು ಅನೇಕ ವೇಳೆ ಮುಗ್ಗರಿಸಿ ಬಿದ್ದುದನ್ನು ಕಂಡು ವಿಭಿನ್ನವಾಗಿ ಚಿತ್ರ ತೆರೆಗರ್ಪಿಸಲು ಸರ್ವಸಾಹಸ ಮಾಡುತ್ತಲೇ ಇದ್ದರು. +ಒಬ್ಬ ನಾಯಕನಿದ್ದರೆ ಆತ ಚಿತ್ರಮಂದಿರಕ್ಕೆ ಜನವನ್ನು ಸೆಳೆಯಲಾರ ಎನಿಸಿದಾಗ ಹೆಸರಾದ ನಾಲ್ಕಾರು ನಟರನ್ನು ಕಲೆಹಾಕಿ ‘ಮಲ್ಟಿಸ್ಟಾರರ್‍’ ಎಂಬ ಅಧ್ಯಾಯ ಆರಂಭವಾಯಿತು. +ಪರಭಾಷಾ ನಿರ್ಮಾಪಕರು ಬಂದಾಗ ಅವರು ಡಬ್ಬಿಂಗ್‌ಗೆ ಅನುಕೂಲವಾದೀತೆಂದು ಅಲ್ಲಿ ಹೆಚ್ಚು ಮಾರುಕಟ್ಟೆಯಿಲ್ಲದ ದಂಡು ದಂಡು ಕಲಾವಿದರನ್ನು ಕರೆತಂದರು. +ಪರಭಾಷಾ ನಟಿಯರನ್ನು ಕರೆತರುವುದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯೇ ಆಗಿ ಹೋಗಿದೆ. ಈಗಂತೂ ಭಾರೀ ಭಾರೀ ನಟ-ನಟಿಯರನ್ನು ಒಂದೇ ಚಿತ್ರದಲ್ಲಿ ಬಳಸಿದಾಗ ಎಲ್ಲರಿಗೂ ಸಮವಾಗಿ ಸ್ಕೋಪ್ ಕೊಡಲು ಒಂದೊಂದು ಹಾಡು ಒಂದೊಂದು ನೃತ್ಯ – ಒಂದೊಂದು ಸೆಂಟಿಮೆಂಟ್ ದೃಶ್ಯ ಹಂಚಿದಾಗಲೂ ಕತೆ ಬರೆವ ಧಾಟಿ ಬದಲಾಯಿತು. +‘ಫಾರಿನ್ ಲೋಕೇಷನ್ಸ್’ ಇದ್ದರೆ ಚಿತ್ರ ಕ್ಲಿಕ್ ಆಗುತ್ತದೆ ಎಂಬ ನಂಬಿಕೆ ಬಂದಾಗ ಕನಸಿನ ದೃಶ್ಯಗಳು ಕಾಣಿಸಿಕೊಂಡು ಮತ್ತೆ ಯಥಾಪ್ರಕಾರ ಕಥೆಯ ಟ್ರೆಂಡ್ ಬದಲಾಯಿತು. +ವಿದೇಶಕ್ಕೆ ಹೋಗುವುದೆಂದರೆ ಹಣ ಖರ್ಚು. ಕೆಲವು ನಟರಿದ್ದರೆ ಮಾತ್ರ ಆ ಹಣ ಬಂದೀತು ಎನಿಸಿದಾಗ ಹೆಸರಾಂತ ನಟ-ನಟಿಯರ ಹಿಂದೆ ಅಲೆದು ಯಾವ ಕಲಾವಿದ ದೊರೆಯುತ್ತಾರೆ ನೋಡಿ ಅವರಿಗಾಗಿ ಕತೆ ಹೊಸೆಯ ತೊಡಗಿದರು. +ತಂತ್ರಜ್ಞಾನ ಬೆಳೆದಂತೆ ಗ್ರಾಫಿಕ್ಸ್ ಬಳಸುವ ಹುಚ್ಚು ಅತಿಯಾಯಿತು. ಆಗ ದೇವಿ ಮಹಾತ್ಮೆ, ನಾಗದೇವತೆ, ಗ್ರಾಮದೇವತೆಗಳ ಪವಾಡಗಳ ಸುರಿಮಳೆಗೆ ಮುಂದಾಗಿ ಮೂಢನಂಬಿಕೆ ಬಿತ್ತಲು ಮುಂದಾದರು. +ನಿರ್ಮಾಪಕ-ನಿರ್ದೇಶಕರಿಗೆ ಹಣವೊಂದೇ ಮುಖ್ಯವಾದಾಗ ಸಾಮಾಜಿಕ ಜವಾಬ್ದಾರಿ ಸಂಪೂರ್ಣವಾಗಿ ಮರೆತದ್ದರಿಂದ ಜನವಿರೋಧಿ ಚಿತ್ರಗಳು ಬರತೊಡಗಿದವು. +ಸಿನಿಮಾ ಗ್ರಾಮರ್‍ ತಿಪ್ಪೆಗೆ ಬಿಸುಟು ಅದ್ಭುತ ವಿಷುಯಲ್‌ಗಳಿಂದ, ಜಾಣ್ಮೆಯ ಟೇಕಿಂಗ್ಸ್‌ನಿಂದ ಚಿತ್ರ ತೆರೆಗೀಯ ಹೊರಟ ಉಪೇಂದ್ರರ ಶ್, ಓಂ, ಉಪೇಂದ್ರ ಮುಂತಾದ ಚಿತ್ರದಿಂದ ನೇರವಾಗಿ ಕಥೆ ಹೇಳುವ ಕಲೆ ಕೈಬಿಟ್ಟು, ತುಣುಕು ತುಣುಕು ದೃಶ್ಯಗಳಿಂದ ಕಥೆ ಕಟ್ಟುವ, ಜನರನ್ನು ಬೆಚ್ಚಿಸುವ ಮೋಡಿ ಮಾಡಿ ಕನ್ನಡ ಸಾಹಿತ್ಯವನ್ನು ಕಳ್ಳಭಟ್ಟಿ ಸಾರಾಯಿ ಮಾಡಿ ಹಣ ದೋಚ ತೊಡಗಿದರು. +ಗಿಮಿಕ್‌ಗಳದೇ ರಾಜ್ಯಭಾರವಾದಾಗ ಎಂಥ ಚಿತ್ರ ಮಾಡುವುದು ಎಂಬುದೇ ಸಮಸ್ಯೆಯಾಯಿತು. ಕನ್ನಡ ಚಿತ್ರದಲ್ಲಿ ಹಿಂದಿ ಮಿಕ್ಸ್, ತೆಲುಗು ಮಿಕ್ಸ್, ತಮಿಳು ಮಿಕ್ಸ್ ಆರಂಭವಾಗಿ ಮಿಕ್ಸ್‌ಮಸಾಲ ಕನ್ನಡ ಚಿತ್ರಗಳ ಕಥಾ ರಚನಾ ಶೈಲಿ ಬದಲಿಸಿತು. +ಅಂಥ ವೇಳೆ ದಿಢೀರ್‍ ಬಂದ ‘ನನ್ನ ಪ್ರೀತಿಯ ಹುಡುಗಿ’ ಹೊಸ ಮುಖಗಳನ್ನು ಒಪ್ಪುವ ಪ್ರೀತಿ ತೋರಿತು. ಅದರಿಂದಾಗಿಯೇ ‘ಚಿತ್ರಂ’ ಚಿತ್ರ ಆಗಿ ರೇಖಾಳಿಂದ ಗೆದ್ದಿತು. ‘ಸ್ಪರ್ಶ’ದಿಂದ ಸುದೀಪ್ ‘ಹುಚ್ಚ’ನಾಗಿ ಅದರಿಂದ ಇನ್ನೂ ಹೆಸರಾಗುವ ಸೂಚನೆಗಳೀಗ ಕಂಡಿದೆ. ಹಳಬರೊಂದಿಗೆ ಹೊಸ ಮುಖಗಳನ್ನು ಹಾಕಿಕೊಂಡರೆ ವಾಸಿ ಎಂದು ಗಾಂಧೀನಗರ ಮಾತಾಡುತ್ತಿದೆ. +ನಾಳಿನ ಚಿತ್ರರಂಗ ಯುವ ಪೀಳಿಗೆಯ ಕೈಲೇ ಇದೆ. ದಿನೇಶ್ ಬಾಬು ಸಹಾ ಈಗ ಹೆಚ್ಚು ಹೊಸ ಮುಖಗಳನ್ನೇ ಹಾಕಿಕೊಳ್ಳುತ್ತಿದ್ದಾರೆ. ಇಂಥ ಕಾರಣದಿಂದಾಗಿಯೇ ಮೋಹನ್ ಸಹಾ ಹೀರೋ ಆಗಿರುವ. +ಬೇರೆ ಬೇರೆ ಸ್ವಭಾವದ ಹುಡುಗರು-ಹುಡುಗಿಯರು ಬರುತ್ತಿರುವ ಕಾರಣಕ್ಕೆ ಕಥಾ ಧಾಟಿಗಳು ಟ್ರೆಂಡ್‌ಗಳು ಬದಲಾಗುತ್ತಿದೆ. +ಡಾ. ರಾಜ್, ವಿಷ್ಣು, ಅಂಬರೀಶ್, ಅನಂತ್‌ನಾಗ್, ಶಶಿಕುಮಾರ್‍, ಶಿವು, ರಾಘು ಮುಂತಾದವರು ಚಡ್ಡಿ ಹಾಕಿಕೊಂಡು ಹುಡುಗನ ಪಾತ್ರ ಈಗ ಮಾಡುವುದಾದರೂ ಹೇಗೆ ಸಾಧ್ಯ? ಅದಕ್ಕೆ ಟ್ಯಾಲೆಂಟ್ ಇರುವ ಹೊಸ ಮುಖಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ದಿನ ಬಂದಿರುವುದು. +ಇಂಥ ಬದಲಾವಣೆಯಿಂದಾಗಿಯೇ ಚಿತ್ರದ ಕಥಾ ರಚನೆಯಲ್ಲೂ ಹೊಸತನ ಮಿಂಚುವ ಒಳ್ಳೆ ಸೂಚನೆಗಳಿವೆ. +***** +(೨೨-೬-೨೦೦೧) +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […] +ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_534.txt b/Kannada Sahitya/article_534.txt new file mode 100644 index 0000000000000000000000000000000000000000..164e4ad2927cac38e84865b606907b3dddbf0e29 --- /dev/null +++ b/Kannada Sahitya/article_534.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಫೀಸು +ಎನ್ನುವುದರಲ್ಲೆ +ಫೀಸು +ಸೇರಿಕೊಂಡಿರುವುದು +`ಅರ್ಥ’ +ಪೂರ್ಣವಲ್ಲವೆ? +***** +ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. ***** +ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. ***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_535.txt b/Kannada Sahitya/article_535.txt new file mode 100644 index 0000000000000000000000000000000000000000..26c3c0687c002eec9fba355f812d1b9304efabd2 --- /dev/null +++ b/Kannada Sahitya/article_535.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- +ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ +ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ +ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು +ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು +ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ +ಜೀವಿಸುವ ಜೀವಿಗಳ ಕುಲವೊಂದೆ; ಬಾನಿನಲಿ +ಅಲೆವ ಬಾವುಟವೊಂದೆ, ಬಾರತ ಪಿತಾಮಹನು +ಏರಿದಾ ಮೇರುಗಿರಿ ತತ್ತ್ವಶಿಖರದ ಬೆಳಕು +ಎಲ್ಲೆಡೆಗು ಬೆಳಗಿರಲು, ಇಬ್ಬಣದ ದಿಬ್ಬಣದಿ +ಮೆರೆವ ಸಾಹಸವೇಕೆ? ಇಡಿಯ ಬಾಳಿನ ಜಸದಿ +ಜೀವಿಸುವದೆಮ್ಮಗುರಿ, ದ್ವೇಷದುರಿ ಸಾಕು. +ಭಾರತದ ಧವಲಮಯ ದೀಧಿತಿಗೆ ಆವ ಸಾಟಿ? +ಕೋ, ಎಲ್ಲರೊಂದೇ ನಾವು ನಾಲ್ವತ್ತು ಕೋಟಿ. +***** +ಸಮುದ್ರ ಸೀಳಿ ಲಾಗ ಹೊಡೆಯುವತಿಮಿಂಗಲಆಕಾಶವನ್ನೇ ಹರಿದು ಸುರಿಯುವಮಳೆಚಂದ್ರ ತಾರೆಗಳನ್ನೆ ನುಂಗಿಬಿಡುವಮೋಡಭೂಮಿಯೊಳಗಿಂದ ಹಟಾತ್ತನೆ ಸಿಡಿದುನಡುಗಿಸುವ ಕಂಪನ; ನುಡಿಸಿದರೆ ರಾಗ,ಹೀಗಿರಬೇಕು! ರೋಮ ರೋಮಕ್ಕೂ ಲಗ್ಗೆ ಇಟ್ಟುಕೊಲ್ಲುವ ಹಾಗೆ! ಕೀಲಿಕರಣ: ಕಿಶೋರ್‍ ಚಂದ್ರ +ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […] +-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_536.txt b/Kannada Sahitya/article_536.txt new file mode 100644 index 0000000000000000000000000000000000000000..c95fe275678dbe06a68d6e0cea6a0a1ff05734a1 --- /dev/null +++ b/Kannada Sahitya/article_536.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಗ್ಗಿಲ್ಲದ ಪ್ರಣಯಿ +ಯಾಕೆ? +ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ- +ದಿಟ್ಟರು, ಮೊಂಡರು, +ಮೋಟುಮರ ಗಾಳಿಮಿಂಡ ಅಂತಾರಲ್ಲ +ಹಾಗೆ ಜಗಭಂಡರು +ಸೊಂಪಾಗಿ ಸುಮ್ಮನೇ +ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ +ರೂಢಿಸಿಕೊಂಡು +ತನ್ನ ಅಪಾರ ತೂಕವೂ ಹಗುವೆಂಬಂತೆ ಸದ್ಯದ ಗಾಳಿಗೆ ತೂಗುತ್ತ +ಬಾಳಿ ತಾಳುವ ಅಶ್ವತ್ಥದ ಕೆಳಗೆ +ನೆರಳಿಗೆ ಸುಖಿಸಿ, ಅಪರೂಪಕ್ಕೆ +ಉದಾಸೀನದಲ್ಲಿ ಹಾಯಾಗಿ ಕಾಲುಚಾಚಿ ಕೂತವ +ಸಂಸಾರಿ. +ತೊಟ್ಟುತಾನೇ ಕಳಚಿ ಉದುರುವ ಎಲೆಯೊಂದನ್ನು ಹೀಗೆ ಗಮನಿಸಿ +ಹೀಗೇ ನಿರ್ಗಮಿಸುವ ಆಸೆಯ +ಮೊಮ್ಮಗನಿಗೆ ಬುಗುರಿ ಆಟ ಕಲಿಸುವ +ವ್ಯಾಮೋಹಿ ಕೂಡ +***** +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […] +ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ ಹರಿವರಿದು ಬರುವ ಗಂಧೋದಕದಿ ಮಿಂದ ತಂ- ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! ದಿವ್ಯಾನುಭೂತಿಯಲಿ ರಸದ […] +ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_537.txt b/Kannada Sahitya/article_537.txt new file mode 100644 index 0000000000000000000000000000000000000000..df036b1978539fb95b03182204c2b4966831d0a0 --- /dev/null +++ b/Kannada Sahitya/article_537.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ ದಿನ ಹೆಬ್ಬಾವಿನ ಹಾಗೆ ಮಿಸುಕಾಡದೆ ಮಲಗಿದ್ದ ಸಮುದ್ರ ಈಗ ಧಾರಾಳವಾಗಿ ಉಸಿರಾಡುತ್ತಿರುವಂತೆ ಮೈಯುಬ್ಬಿಸಿ ತನ್ನ ಸಣ್ಣ ಸಣ್ಣ ಅಲೆಗಳಿಂದ ತೀರವನ್ನು ಬರಸೆಳೆಯತೊಡಗಿತ್ತು. ಕಳೆದ ವರ್ಷವೆಲ್ಲ ಹಲವು ತಾಪತ್ರಯಗಳು. ಒಂದೊಂದೂ ಮನಸ್ಸನ್ನು ಹಿಂಡಿ ಹಿಂಡಿ ಅವಳನ್ನು ಹಣ್ಣುಮಾಡಿದ್ದುವು: ಕೋಡಂಬಾಕ್ಕಂನ ಹಳೆಯ ಮನೆಯಿಂದ ಬೆಸೆಂಟ್‌ನಗರದ ಇನ್ನೊಂದು ಮನೆಗೆ ಸ್ಥಳಾಂತರ; ಸುಣ್ಣಬಣ್ಣಕ್ಕಾಗಿ, ಸಾಮಾನು ಸರಂಜಾಮಿನ ಒಪ್ಪ ಓರಣಕ್ಕಾಗಿ ಪರದಾಟ; ತೀರ ಹತ್ತಿರದವರ ಅನಾದರದಿಂದ ಪ್ರಪಂಚವೇ ಬರಿದಾದ ಅನುಭವ; ದಿನಗಳೆದಂತೆ ಕ್ಷಣಕ್ಷಣವೂ ತಾನೇ ಅಗೋಚರವಾದೊಂದು ದಿಕ್ಕಿನತ್ತ ನಿರಾಯಾಸವಾಗಿ ತುಯ್ಯುತ್ತಿರುವ ಹಾಗೆ ಭ್ರಮೆ. ಅಥವಾ ಭಯವೋ? ಆದರೆ ಈಗ ಇಲ್ಲಿ, ಈ ಸಮುದ್ರ ತೀರದಲ್ಲಿ ಸಪಾಟಾಗಿ ಹರಡಿಕೊಂಡ ಮರಳಿಗೂ ಉದ್ದಕ್ಕೆ ಸಾಗಿದ ಡಾಂಬರು ರಸ್ತೆಗೂ ನಡುವೆ ನೆರಳು ಹಾಸಿರುವ ಒಂದೇ ಒಂದು ಹೊಂಗೆಯ ಮರದ ಕೆಳಗೆ ಕುಳಿತವಳಿಗೆ ಸರಸರನೆ ಮರವೇರಿ, ಉಬ್ಬಿದ ಬಾಲವನ್ನೆತ್ತಿ ರೆಂಬೆಕೊಂಬೆಯಗುಂಟ ಕೀಚ್ ಕೀಚ್ ಎನ್ನುತ್ತಾ ಕುಣಿದಾಡತೊಡಗಿದ ಅಳಿಲೊಂದನ್ನು ಕಂಡದ್ದೇ ಎಂದೋ ಕಳೆದುಕೊಂಡಿದ್ದ ಸಂತೋಷದ ಎಳೆಯೊಂದು ಮತ್ತೆ ಸಿಕ್ಕಂತಾಯಿತು. ಕುಳಿತ ನೆಲೆ ಬರೀ ಮರಳಾದರೂ ಸುಭದ್ರ ಎನ್ನಿಸಿತು. ಕಣ್ಣನ್ನು ಅರೆಮುಚ್ಚಿ ಅಷ್ಟು ದೂರಕ್ಕೆ ದೃಷ್ಟಿ ಚೆಲ್ಲಿದವಳಿಗೆ ಈ ಒಂದು ಕ್ಷಣ ಹೊರ ಜಗತ್ತಿನ ಎಲ್ಲ ಕ್ರೌರ್ಯವೂ ಕರಗಿಹೋದಂತೆ, ಗುಂಯೆನ್ನುವ ಜೀರುಂಡೆ ಸಂಜೆಯ ಬಟ್ಟೆಯೊಳಗೆ ಸುಖದ ಹೂವುಗಳನ್ನು ನೇಯುತ್ತಿರುವಂತೆ, ಪ್ರೀತಿಸಿ ಮದುವೆಯಾದವನ ಕೈ ತನ್ನನ್ನು ಆಲಿಂಗಿಸಿ ಮೈಯೆಲ್ಲ ಪುಳಕಗೊಳಿಸಿದಂತೆ… +ಬೆಕ್ಕಿನ ಹಾಗೆ ಕಣ್ಣನ್ನು ಕಿರಿದುಗೊಳಿಸಿಕೊಂಡು ಸಮುದ್ರದ ಸ್ವಲ್ಪ ಭಾಗವನ್ನು ಮರೆ ಮಾಡಿದ ಆ ಮಂದಿಯನ್ನು ನೋಡಿದಳು. ಸುಖೀ ಸಂಸಾರ? ಕುರ್ಚಿಯೊಂದು-ಅದೇನು ಗಾಲಿ ಕುರ್ಚಿಯೇ?-ಅವರನ್ನು ಬೇರೆ ಬೇರೆಯಾಗಿ ನಿಲ್ಲಿಸಿದಂತಿತ್ತು. ಇಬ್ಬರು, ಚೆನ್ನಾಗಿಯೇ ಇದ್ದಾರಲ್ಲ, ಹುಡುಗಿಯರು. ಒಬ್ಬಳದು ತಿಳಿ ನೀಲಿ ಸೀರೆ; ಇನ್ನೊಬ್ಬಳದು ಹಳದಿ-ಕೆಂಪು ಬಣ್ಣಗಳ ಸಾಲ್ವಾರ್ ಕಮೀಜ್. ಅವರ ಜೊತೆಗೊಂದು ಹಸಿರು ಅಂಗಿ ತೊಟ್ಟ ಪುಟಾಣಿ ಬೇರೆ. ಆಮೇಲೆ ಒಂದು ಬಿಳಿ ತಲೆ. ಆಕೆ ಅಜ್ಜಿ ಇರಬೇಕು. ಒಳ್ಳೆ ಕಟ್ಟುಮಸ್ತಾಗಿದ್ದ ಗಂಡಸೊಬ್ಬ ಮರಳಿನ ಮೇಲೆ ಗುಲಾಬಿ ಬಣ್ಣದ ಬೆಡ್‌ಶೀಟ್ ಹಾಸಿದವನು ನೀರಿಗಿಳಿಯಲು ಹಾತೊರೆಯುವಂತಿದ್ದ ಆ ಪುಟಾಣಿಯನ್ನು ಹಿಡಿದುಕೊಳ್ಳುತ್ತಿದ್ದ. ನೊರೆ ಸೂಸುವ ಅಲೆಗಳ ಹಿನ್ನೆಲೆಯಲ್ಲಿ ಮನಸ್ಸಿಗೆ ಮುದ ನೀಡುವಂತೆ ಕಂಡ ಆ ವಿವಿಧ ಬಣ್ಣಗಳು ಮತ್ತು ಆಕಾರಗಳು ತನ್ನ ನೆರೆಹೊರೆಯ ಅಬ್ಬರ ಅರಚಾಟಗಳಿಗೆ ತೀರ ಅಪವಾದವೆಂಬಂತಿದ್ದುವು. ಇಷ್ಟು ಜನರನ್ನು ಬಂಧಿಸಿಟ್ಟಿರುವ ಕೊಂಡಿ ಯಾವುದು? ಅದೇನು ಪ್ರೀತಿಯೇ? ಆತಂಕವೇ? ಒಂಟಿಯಾಗಬಯಸದ ಮನಃಸ್ಥಿತಿಯೆ? +ಅವಳದು ಯಾತನೆಯ ಮಡುವಿಗಿಳಿಯುವ ಪ್ರವೃತ್ತಿಯೇ ಇರಬೇಕು. ಯಾಕೆಂದರೆ ಈಗ ಅವರು ಕುರ್ಚಿಯ ಸಮೇತ ಸಮುದ್ರದಂಚಿಗೆ ಕೊಂಡೊಯ್ಯುತ್ತಿದ್ದ ಆ ಬಿಳಿಯ ತಲೆ ಮುದುರಿಕೊಂಡು ಕೂತ ಹೆಳವಿಯೊಬ್ಬಳದೆಂದೇ ಯಾಕೆ ಅನ್ನಿಸಬೇಕು? ಇಲ್ಲ, ಇದು ಬರೀ ಭ್ರಮೆಯಷ್ಟೆ; ಎಂದೋ ನೋಡಿದ ಮಾತಿಲ್ಲದ ಸಿನಿಮಾದಲ್ಲಿ ಹೆಳವಿಯೊಬ್ಬಳನ್ನು ಹೀಗೇ ಕೊಂಡೊಯ್ಯುತ್ತಿದ್ದರಲ್ಲ, ಅದರ ಹಠಾತ್ ನೆನಪಷ್ಟೆ. ಹೇಳಿ ಕೇಳಿ ನಟಿಯಾಗಿದ್ದ ತನಗೆ ಕೆಲಕಾಲ ಸಿನಿಮಾ ತಾರೆಯಾಗಿ ಬೆಳಗಿದ ಈ ಬದುಕು ಅಭಿನಯದಷ್ಟು ಸುಂದರವಾಗಿ ಕಾಣುವುದಿಲ್ಲವೇಕೆ? ಚಿತ್ರದ ರೋಗಿಯನ್ನು ನೋಡುವುದರಲ್ಲೇ ಎಂಥ ಆನಂದ! ಕಣ್ಣುಗಳನ್ನು ಪೂರ ಅಗಲಿಸಿ ನೋಡಿದಳು. ಆ ಹೆಂಗಸು ನೆಟ್ಟಗೆ ಕೂತಿದ್ದಾಳೆ. ಬಿಳಿಯ ತಲೆ ಹೌದು. ಅವಳ ದೇಹ ಸಂಪೂರ್ಣವಾಗಿ ಅವಳ ಸ್ವಾಧೀನದಲ್ಲೇ ಇದೆಯಲ್ಲ! +ಸುಮ್ಮನೆ ಕಣ್ಣು ಮುಚ್ಚಿಕೊಂಡಳು-ಯಾರೋ ನಡೆದಾಡುತ್ತಿರುವ ಸದ್ದು, ಏನನ್ನೋ ಕೆರೆಯುತ್ತಿರುವ ಸದ್ದು ತನ್ನ ಬಳಿಯಲ್ಲೇ ಕೇಳಿಸುವವರೆಗೆ. ಒಂದು ಬದಿಗೆ ಮುಖ ತಿರುಗಿಸಿ ನೋಡಿದರೆ ಮರಳನ್ನು ಬಗೆಯುತ್ತಿದ್ದ ಒಣಕಲು ಕೈಯೊಂದು ಥಳ ಥಳ ಹೊಳೆಯುವ ವಸ್ತುವೊಂದನ್ನು ಹಿಡಿದೆತ್ತಿಕೊಂಡಿತು. ಈಗ ತುಸು ನೆಟ್ಟಗೆ ಕೂತು ಎವೆಯಿಕ್ಕದೆ ನೋಡಿದಳು. ನಿನ್ನೆ ಇದೇ ಮರಳಲ್ಲಿ ಚೆಲ್ಲುಚೆಲ್ಲಾಗಿ ಕುಣಿಯುತ್ತಿದ್ದ ಹುಡುಗಿಯೊಬ್ಬಳ ಕೈಬಳೆ! ಅದು ಚಿನ್ನದ್ದಲ್ಲದಿದ್ದರೆ ಅಷ್ಟೇಕೆ ಹೊಳೆಯಬೇಕು? ಒಣ ಕಟ್ಟಿಗೆಯ ಹಾಗಿರುವ ಆ ನರಗಟ್ಟಿದ ಕಪ್ಪು ಕೈಯ ಸೀಳುಬಿಟ್ಟ ಉಗುರು ಈಗ ಬಳೆಯನ್ನು ಕೆರೆಯುತ್ತಿದೆ. ಬಹುಶಃ ಆ ಹುಡುಗಿ ನೆನ್ನೆ ಬೀಳಿಸಿದ್ದಿರಬೇಕು. ಅನಿರೀಕ್ಷಿತವಾಗಿ ಐಶ್ವರ್ಯ ಸಿಕ್ಕಿಬಿಟ್ಟಿತೆಂದು ಈ ಮುದಿ ಕೈಯವನೂ ಹಿಗ್ಗುತ್ತಿರಬೇಕು. ಆಕೆಯ ದೃಷ್ಟಿ ಆ ಮುದಿಕೈಯಗುಂಟ ಹರಿದು ಅವನ ಕಳ್ಳ ಕಣ್ಣುಗಳಿಗೆ ಗುರಿಯಿಟ್ಟಿತು. ಈ ಸಣ್ಣ ಕಳವಿಗೊಂದು ಅನಾಮಿಕ ಸಾಕ್ಷಿಯಾದ ತಾನು ಏನು ತಾನೆ ಹೇಳಬಹುದು? ಏನಾದರೂ ಹೇಳುವ ಹಕ್ಕು ತನಗುಂಟೆ? ತೋಳಗಳೇ ತುಂಬಿರುವ ಜಗತ್ತಿನಲ್ಲಿ ಈ ಮುದಿ ಕೈಯೂ ಒಂದು ತೋಳವಾಗಿರುವಾಗ ತನಗೇಕೆ ಇಲ್ಲದ ಉಸಾಬರಿ? ಆ ನರಪೇತಲ ಬಳೆಯನ್ನು ಕಿಸೆಯಲ್ಲಿಟ್ಟುಕೊಂಡು ಪರಾರಿಯಾದಾಗ ಈಕೆ ಒಮ್ಮೆ ನಿಟ್ಟುಸಿರಿಟ್ಟು ಮತ್ತೆ ಕಣ್ಣು ಮುಚ್ಚಿಕೊಂಡಳು. +ಎಲ್ಲ ಹಾಳು ಹಾಳು. ಇದ್ದಕ್ಕಿದ್ದಂತೆ ಬೀಸತೊಡಗಿದ ಗಾಳಿ ಅಲ್ಲಲ್ಲಿ ಮರಳನ್ನೂ ಕಸಕಡ್ಡಿಯನ್ನೂ ಮೇಲೆಬ್ಬಿಸಿ ತಿಪ್ಪರಲಾಗ ಹಾಕತೊಡಗಿದ್ದೇ ಅವಳ ಮನೆಯಂಗಳದ ಜಾಜಿ ಹೂಗಳ ಕಂಪು, ತೆಂಗಿನ ಮರದಡಿಯ ನೆರಳು ಬರೀ ನೆನಪಷ್ಟೇ ಆಗಿಬಿಟ್ಟುವು. ಗಾಳಿ ಈಗ ಎಷ್ಟು ಜೋರಾಗಿ ಬೀಸುತ್ತಿತ್ತೆಂದರೆ ಸಮುದ್ರ ಹುಚ್ಚೆದ್ದು ಭೋರ್ಗರೆಯುತ್ತಿತ್ತು. ಮೀನಿನ ಹಳಸುವಾಸನೆಯ ಜೊತೆ ಹೇಲಿನ ದುರ್ನಾತದ ಪೈಪೋಟಿ. ಬೀಚು ಕೂಡ ಜನರಿಲ್ಲದೆ ಖಾಲಿಯಾಗಲು ಸಕಾಲ. ಆಕೆ ಕಣ್ಣುಬಿಟ್ಟು ಸಾವರಿಸಿಕೊಂಡಾಗ ಹುಡುಗನೊಬ್ಬ ಒಂದು ಪುಟ್ಟ ನಾಯಿಮರಿಯ ಜೊತೆ ಆಡುತ್ತಿದ್ದದ್ದು ಕಾಣಿಸಿತು. +ಇಬ್ಬರೂ ಮತ್ತೆ ಮತ್ತೆ ಒಂದೇ ಆಟ ಆಡುತ್ತಿರಬಹುದೆ? ಹುಡುಗ ನಾಯಿಮರಿಯನ್ನು ನೀರಿಗಿಳಿಯುವಂತೆ ಪುಸಲಾಯಿಸುತ್ತಿದ್ದ. ಅದು ನೀರಿಗಿಳಿದದ್ದೇ ಅವನು ಹಿಂತಿರುಗಿ ನೊರೆಯನ್ನು ತುಳಿದಾಡುತ್ತ ತೀರಕ್ಕೆ ಓಡಿಬರುತ್ತಿದ್ದ. ನಾಯಿಮರಿ ತನ್ನ ಪುಟ್ಟ ಪುಟ್ಟ ಕಾಲುಗಳನ್ನೂ ಬಾಲವನ್ನೂ ನೀರಿಗೆ ಬಡಿಯುತ್ತ, ಒಮ್ಮೊಮ್ಮೆ ಸಂತೋಷದಿಂದ ಬೌ ಬೌ ಎನ್ನುತ್ತ ಈಜಿ ಬಂದು ತೀರದಲ್ಲಿದ್ದ ತನ್ನ ದಣಿಯನ್ನು ಕೂಡಿಕೊಳ್ಳುತ್ತಿತ್ತು. ಆಕೆ ಮುಗುಳುನಕ್ಕಳು. ಮತ್ತೆ ಕಣ್ಣುಮುಚ್ಚಿಕೊಂಡು ನಲವತ್ತು ವರ್ಷಗಳ ಹಿಂದಿನ ಹುಡುಗಿಯಾದಳು. ಆ ಹುಡುಗಿ ಭರತನಾಟ್ಯ ಕಲಿಯಲು ಅವಳ ಅಮ್ಮನ ಒತ್ತಾಯವೇ ಕಾರಣ. ಒಮ್ಮೆ ತಿರುವಳ್ಳಿಕೇಣಿಯ ದಂಡಾಯುಧಪಾಣಿ ಗುರುಗಳ ಅದೇ ಮನೆಯೊಳಗೆ ಥೈ ಥಕ್ ಥೈ ಕುಣಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಜೋರು ಮಳೆ ಬಂದು, ಗುಡುಗು ಮೊಳಗಿ, ಮಿಂಚುಗಳು ಹರಿಹಾಯುತ್ತಿರುವಂತೆ ಕರೆಂಟು ಹೋಗಿಬಿಟ್ಟಿತ್ತು. ಆಮೇಲೆ ನಡೆದದ್ದೇನು? ಗುರುಗಳ ಬಲಿಷ್ಠ ಕೈಯಲ್ಲಿ ಮೈಮುರಿಯುವಂತಾದದ್ದು, ಕಿಬ್ಬೊಟ್ಟೆಯ ಕೆಳಗೆ ತಿವಿದಂತಾದದ್ದು, ಕಪ್ಪು, ಕೆಂಪು ಬಣ್ಣಗಳ ಹಾವಳಿಯಿಂದ ಪಾತಾಳಕ್ಕೆ ಜಾರಿದಂತಾದದ್ದು. ಎಲ್ಲ ಥೇಟ್ ಸಿನಿಮಾದ ಹಾಗೆಯೇ. ಅಲ್ಲದಿದ್ದರೆ ಈಗಲೂ ಅತ್ಯಾಚಾರದ ದೃಶ್ಯ ಬಂದಾಗಲೆಲ್ಲ ಗುಡುಗು ಮಿಂಚು ಮಳೆಗಳೇ ಏಕೆ? ಆಮೇಲೆ ತಾರೆಯಾಗಿ ನಾಲ್ಕು ದಿನ ಹದ್ದು ಕಣ್ಣುಗಳ ಮುಂದೆ ಅಭಿನಯ. ಅದಕ್ಕಾಗಿ ಅಮ್ಮನ ವಶೀಲಿ-ನಿರ್ಮಾಪಕರ ಮರ್ಜಿಗಾಗಿ, ನಿರ್ದೇಶಕರ ವಕಾಲತ್ತಿಗಾಗಿ. ಆಯಿತು. ಖ್ಯಾತಿ, ಹಣ ಒಟ್ಟೊಟ್ಟಿಗೇ ಸಿಕ್ಕಬೇಕಾದರೆ ಅದೃಷ್ಟ ಬೇಕಂತೆ. ಅಮ್ಮನ ಆಸೆಯೇನೋ ಕೈಗೂಡಿತು. ಕೃತಾರ್ಥಳಾಗಿ ಸತ್ತಳು. ತಾನು? ಅಭಿನಯದಲ್ಲಿ ಅಂತರಂಗ ಬದಲಾಗದಂತೆ ಇಟ್ಟುಕೊಳ್ಳಲು ಪ್ರಯತ್ನಿಸಿ ಕೆಟ್ಟೆ. ಸಿನಿಮಾ ಹೇಗೆ ವೇಷವೋ ಸಿನಿಮಾದವರದೂ ಹಾಗೆಯೇ ವೇಷ. ವೇಷ ಹಾಕಲಾರದ ತನಗೆ ಪ್ರೀತಿ ವಾತ್ಸಲ್ಯ ಕೂಡ ಸಿನಿಮಾವೆಂದು ತಿಳಿಯದೆ ಹೋಯಿತು. ಮದುವೆಯಾಗಿದ್ದರೆ ತಾನೆ ವಿಚ್ಛೇದನ? ಸಾವಿರದಲ್ಲಿ ಒಬ್ಬಳಾಗಿ ಬದುಕಬಯಸದವಳು ಈಗ ವೃದ್ಧಾಶ್ರಮದ ಅನಾಥೆಯಂತೆ… +ಮರಳ ಮೇಲೆಯೆ ಕಾಲುಚಾಚಿ, ಉಗುರುಬೆಚ್ಚಗಿನ ವಾತಾವರಣಕ್ಕೆ ಮೈಯೊಡ್ಡಿಕೊಂಡು ಕುಳಿತವಳು ತಾನು ಇತರರಂತಾಗಲಿಲ್ಲವಲ್ಲ ಎಂಬ ನೋವಿನಿಂದ ನಕ್ಕಳು. ಆ ಹುಡುಗ, ಆ ನಾಯಿಮರಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಲೇ ಕಣ್ಣಗಲಿಸಿದಳು. ಹುಡುಗ ನಾಪತ್ತೆ. ನಾಯಿಮರಿ ಅಲೆಗಳ ಅಬ್ಬರದಿಂದ ಬಿಡಿಸಿಕೊಳ್ಳುವುದಕ್ಕಾಗಿ ಹೆಣಗುತ್ತಿತ್ತು. ಆ ಹೆದ್ದೆರೆಗಳಿಗೆ ಏನೇನೂ ಸಾಟಿಯಿಲ್ಲದ ತನ್ನ ಪುಟ್ಟ ಪುಟ್ಟ ಕಾಲುಗಳನ್ನು ಬಡಿಯುತ್ತ, ಕುಂಯ್ಯೆನ್ನುತ್ತ, ಆಗಾಗ ನೀರಿನಲ್ಲಿ ಮುಳುಗೇಳುತ್ತ, ಉಸಿರುಗಟ್ಟಿದಂತಾದಾಗ ಒದ್ದಾಡುತ್ತ ಕೊನೆಗೂ ಒಂದು ಬಗೆಯ ಛಲದಿಂದ ತೀರವನ್ನು ಸೇರಿತು. ತೀರ ಸೊರಗಿಹೋಗಿದ್ದ ಅದು ಸ್ವಲ್ಪ ಹೊತ್ತು ಗೊತ್ತು ಗುರಿ ಸಿಕ್ಕದೆ ತೆವಳುತ್ತ, ತೆವಳುತ್ತ ಮರಳನ್ನು ಮೂಸಿತು; ಜಾಡು ಸಿಕ್ಕದೆ ಅತ್ತಿಂದಿತ್ತ ಓಡಾಡಿ, ಅಲ್ಲಲ್ಲಿ ಮೂಸುತ್ತ ಅನಾಥವಾಯಿತು. ತಕ್ಷಣ ಅವಳಿಗೆ ಸತ್ಯದರ್ಶನವಾಗಿ ಹೌಹಾರಿದಳು. ಸ್ವಲ್ಪ ಹೊತ್ತಿಗೆ ಮೊದಲು ಯಾವುದು ಹುಡುಗ-ನಾಯಿಯ ಆಟವೆನ್ನಿಸಿತ್ತೋ ಅದು ಕೇವಲ ಆ ಹುಡುಗನ ಕುಯುಕ್ತಿಯ ತಾಲೀಮಾಗಿತ್ತಷ್ಟೆ ಎಂಬುದರಲ್ಲಿ ಸಂಶಯ ಉಳಿಯಲಿಲ್ಲ. ಸಾಕಿದ ಮುದ್ದು ಪ್ರಾಣಿಯ ಕತ್ತು ಹಿಸುಕಿ ಕೈತೊಳೆದುಕೊಳ್ಳಲು ಯಾರಿಗೆ ತಾನೆ ಮನಸ್ಸು ಬಂದೀತು? +ನಾಯಿಮರಿ ಖಾಲಿ ಖಾಲಿಯಾಗಿದ್ದ ಆ ಮುಸ್ಸಂಜೆಯಲ್ಲಿ ಸುಮ್ಮನೆ ಅಲೆದಾಡತೊಡಗಿತು. ಆಕೆ ಶ್…ಶ್… ಎಂದು ಪ್ರೀತಿಯಿಂದ ಕರೆದಳು. ಅದನ್ನು ಮನೆಗೆ ಎತ್ತಿಕೊಂಡು ಹೋಗಿ, ಸಮಾಧಾನಪಡಿಸಿ, ಮುದ್ದುಮಾಡಿ, ಹಾಲಿಟ್ಟು, ನಿನ್ನಂಥ ಅನಾಥನಿಗೂ ನನ್ನಲ್ಲಿದೆ ಆಶ್ರಯ ಎಂದು ತೋರಿಸಿಕೊಡುವ ಇರಾದೆ. ಆದರೆ ಆ ನಾಯಿಮರಿ ಅವಳನ್ನು ತಿರಸ್ಕರಿಸಿದ್ದಷ್ಟೇ ಅಲ್ಲ, ತನ್ನ ದುರುಳ ದಣಿಯೊಬ್ಬನನ್ನು ಬಿಟ್ಟು ಬೇರೆ ಯಾರಿಗೂ ತಾನು ಕುರುಡು, ಕಿವುಡು ಎಂದು ಸಾರುವ ಹಾಗೆ ಒದ್ದೆ ಮೈಯಲ್ಲಿ ಥರಥರಗುಟ್ಟುತ್ತ ಓಡಿಹೋಯಿತು. ತಾನು ಮನೆ ಬಿಟ್ಟು ಇಲ್ಲಿಗೆ ಬಂದದ್ದಾದರೂ ಯಾಕೆ ಎಂದು ಮತ್ತೊಮ್ಮೆ ವಿಷಾದದಿಂದ ನಕ್ಕಳು. ಕಡೆಗೆ ಉಸ್ಸಪ್ಪಾ ಎಂದು ಮೇಲೆದ್ದವಳೇ ಕೊನೆಯ ಬಾರಿ ಬೀಚಿನತ್ತ ಕಣ್ಣಾಡಿಸಿದಳು. ಆ ಸುಖೀಸಂಸಾರ ಗಾಳಿ ಜೋರಾಗುತ್ತಿದ್ದರೂ ಅವಸರವಿಲ್ಲದೆ ನಿಧಾನವಾಗಿ ಅಲ್ಲಿಂದ ಹೊರಡಲು ಸಜ್ಜಾಗುತ್ತಿತ್ತು. ಆಮೇಲೆ ಸಂಜೆಗತ್ತಲಿಗೆ ಧ್ವನಿಯೊಂದನ್ನು ತೊಡಿಸುವಂತೆ ಅವಳು ಆ ಮೊದಲು ಯಾವುದನ್ನು ಕೇವಲ ತನ್ನ ಭ್ರಮೆ ಎಂದು ತಿಳಿದಿದ್ದಳೋ ಅದು ಕಣ್ಣುಕುಕ್ಕುವ ವಾಸ್ತವವಾಗಿಬಿಟ್ಟಿತ್ತು. ಅವರು ಗಾಲಿ ಕುರ್ಚಿಯಲ್ಲಿ ಕೂರಿಸುತ್ತಿದ್ದದ್ದು ಒಬ್ಬ ಗುಜ್ಜಾರಿಯನ್ನಲ್ಲ, ಗುಜ್ಜಾರಿಗಿಂತ ಕಡೆಯಾದ ಇಳಿವಯಸ್ಸಿನ ಮುದುಕಿಯೊಬ್ಬಳ ಬಿಳಿ ತಲೆಯ ಕೆಳಗೆ ಸುರುಟಿಕೊಂಡಿರುವ ಮೈಯಿ. ಅದರಡಿಯಲ್ಲಿ ಪುಟ್ಟ ಕೂಸಿಗಿರುವಂಥ ಕೋಲು ಕಾಲುಗಳು… ಎಂದೋ ನೋಡಿದ ಮಾತಿಲ್ಲದ ಸಿನಿಮಾದಲ್ಲಿ ಕಂಡ ದೇಹವಲ್ಲದ ದೇಹ. +***** +ಕೃಪೆ: ಅವರ್‌ಕರ್ನಾಟಕ.ಕಾಂ +ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […] +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_538.txt b/Kannada Sahitya/article_538.txt new file mode 100644 index 0000000000000000000000000000000000000000..2dcad50308946f98fd9b75a5250962f55aad528a --- /dev/null +++ b/Kannada Sahitya/article_538.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪ್ರಿಯ ಅವರೆ, +‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ ಎಲ್ಲ ಯೋಗ್ಯತೆ ದಿನೇಶ್‌ಬಾಬುಗಿದೆ. ‘ಪಾಂಚಾಲಿ’ ಷೂಟಿಂಗ್ ಶ್ರೀರಂಗಪಟ್ಟಣದಲ್ಲಾದಾಗ ತಾವೂ ಬಂದಿದ್ದಿರಿ ಆ ಕುರಿತ ‘ದಿನೇಶ್‌ಬಾಬು’ ವರದಿ ಓದಿದೆ. +ಅದೇಕೋ ಇದ್ದಕ್ಕಿದ್ದಂತೆ ನಿಮಗೆ ಕರುಣೆ ಉಕ್ಕಿ “ದಿನೇಶ್ ಬಾಬು ಅಂದು ಮಾತಾಡುವ ಮೂಡ್‌ನಲ್ಲಿರಲಿಲ್ಲ. ಆದರೂ ಕೆದಕುವ, ಕೆಣಕುವ ಪ್ರಶ್ನೆಗಳಿಗೆ ಕೊರತೆಯಿರಲಿಲ್ಲ. ಎದುರುಗಡೆ ಕಟೆಕಟೆಯಲ್ಲಿ ನಿಂತ ಆರೋಪಿಯಂತೆ ಪ್ರಶ್ನೆ ಕೇಳಿ ನೋಯಿಸುವುದೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿರುವವರಿಗೆ ಬುದ್ಧಿ ಹೇಳಿದರೂ ಅಷ್ಟೆ-ಬಿಟ್ಟರೂ ಅಷ್ಟೇ? ಎಂದಿದ್ದೀರಿ. +ಅಂದೂ ಹೆಚ್ಚು ಪ್ರಶ್ನೆ ಕೇಳಿದವನು ನಾನೇ. ಅದರಿಂದ ನನಗನ್ನಿಸಿದ್ದನ್ನೂ ಹೇಳಿಬಿಡುತ್ತೇನೆ. ಸ್ವಾಮೀಜಿ ಅವರೆ, ನೀವು ಉದುರಿಸಿದ ಮುಕ್ತಾಫಲಗಳನ್ನು ನೀವೇ ಏಕಾಂತದಲ್ಲಿ ಕುಳಿತು ಓದಿ ಸ್ವವಿಮರ್ಶೆ ಮಾಡಿಕೊಳ್ಳಿ. ಪ್ರೆಸ್‌ಮೀಟನ್ನು ಕಟೆಕಟೆ ಮಾಡಿರುವವರು ತಾವು. ಒಬ್ಬ ಸಮರ್ಥ ನಿರ್ದೇಶಕನನ್ನು ಆರೋಪಿ ಎಂದು ಹೇಳಿರುವವರು ತಾವು. ಒಂದು ಪತ್ರಿಕೆಯಲ್ಲಿ ಪೂರ್ಣಾವಧಿ ಉದ್ಯೋಗ ಇರುವುದು ತಮಗೆ. ನನಗೆ ಪ್ರಶ್ನೆ ಕೇಳುವುದೊಂದೇ ಉದ್ಯೋಗವಲ್ಲ. ನಾಟಕ ರಚನೆ ಇದೆ, ಬೀದಿ ನಾಟಕ ಮಾಡುವುದಿದೆ. ಅಭಿನಯ ತರಂಗ ನಾಟಕಶಾಲೆ ಇದೆ. ಬಿಂಬ ಮಕ್ಕಳ ಶಾಲೆ ಇದೆ. ಕಲಾವಿದರನ್ನು ರೂಪಿಸುವ ಹೊಣೆ ಇದೆ. ಮೂಕರಂತಿರುವ ಶ್ರೀಸಾಮಾನ್ಯರ ದನಿಯಾಗಿ ಪ್ರತಿನಿಧಿಸಿ ಪ್ರಶ್ನಿಸುವುದನ್ನು ಆಕಾಶವಾಣಿ ಈರಣ್ಣನಾಗಿ ಕಲಿತಿದ್ದೇನೆ. ‘ಒಂದು ಮಾತ’ಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಎ.ಐ.ಆರ್‍.ನಲ್ಲಿ ಬಿತ್ತರಿಸಿದ್ದೇನೆ. ಇಡೀ ಕರ್ನಾಟಕ ಸುತ್ತಿ ಬೀದಿ ನಾಟಕಗಳಾಡಿ ಶೋಷಣೆಗೊಳಗಾದ ಮಂದಿ ಪ್ರಶ್ನಿಸುವುದನ್ನು ಕಲಿಯದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಇಂದೂ ಸಾರಿ ಸಾರಿ ಹೇಳುತ್ತಿದ್ದೇನೆ. +ಡಿ.ವಿ,ಜಿ., ಅ.ನ.ಕೃ, ತ.ರಾ.ಸು, ವೀರಕೇಸರಿ ಸೀತಾರಾಮಶಾಸ್ತ್ರೀ, ದೇವುಡು, ಟಿ.ಟಿ. ಶರ್ಮ, ಜಿ.ಪಿ.ರಾಜರತ್ನಂ, ಶ್ರೀರಂಗ, ಪರ್ವತವಾಣಿ, ಅಡಿಗರೆ, ಕೆ.ಎಸ್.ನ., ವಿ.ಸೀ., ಎಸ್.ಎಸ್.ಜಿ., ವೈಯನ್ಕೆ, ಲಂಕೇಶ್, ಕಾರ್ನಾಡ್, ಕಂಬಾರ, ನಿಟ್ಟೂರು ಮುಂತಾದ ಸಾಹಿತಿ ದಿಗ್ಗಜರ ಹಾಗೂ ಹೊಸ ಪೀಳಿಗೆಯ ಸಾಹಿತ್ಯ ಮಿತ್ರರ ಒಡನಾಟವೇ ಇಂದಿಗೂ ನನ್ನಲ್ಲಿ ಹುಮ್ಮಸ್ಸು ತುಂಬಿರಲು ಕಾರಣ. +ಈಗ ನಾನು ನಿಮ್ಮಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಜೀವನದಲ್ಲೊಂದು ಗುರಿ ಇರಬೇಕು. ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು ಎಂಬ ಆದರ್ಶ ನಾನು ಉದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. +ಹಾಗೆಂದ ಮಾತ್ರಕ್ಕೆ ನಾನು ಬೇರೆ ಪತ್ರಿಕೆಗಳಿಗೆ ಬರೆದಿಲ್ಲ ಎಂದು ಹೇಳುತ್ತಿಲ್ಲ. ಬೇರೆಯವರು ಕೇಳಿದಾಗ ನನ್ನ ಹೆಸರಿನಲ್ಲಿ ಬರೆದಿದ್ದೇನೆಯೇ ಹೊರತು ಹಣದ ಸಲುವಾಗಿ ಬುರ್ಖಾ ಹಾಕಿಕೊಂಡು ಬೇರೆ ಪತ್ರಿಕೆಗಳಲ್ಲಿ ಬರೆಯುವ ತಂಟೆಗೆ ಹೋಗಿಲ್ಲ. ಹಾಗೆ ಬರೆದಾಗಲೂ ಖಚಿತವಾದ ನನ್ನ ಅಭಿಪ್ರಾಯಗಳನ್ನು ಬರೆಯುತ್ತೇನೆಯೇ ಹೊರತು ಟೀಕೆಗೊಂದು ಪತ್ರಿಕೆ, ಲೈಂಗಿಕ ಅವಯವಗಳ ವರ್ಣನೆಗೆ ಒಂದು ಪತ್ರಿಕೆ, ಹೊಗಳುವಾಗ ಒಂದು ಮಾಸ ಪತ್ರಿಕೆ, ಗೇಲಿ ಮಾಡಲು ಒಂದ ವಾರ ಪತ್ರಿಕೆ, ಚುಚ್ಚಿ ಬೆಚ್ಚಿಸಲು ಮತ್ತೊಂದು ಪತ್ರಿಕೆ ಎಂದು ನಾನೆಂದೂ ಡಬ್ಬಲ್ ಸ್ಟಾಂಡರ್ಡ್ ತೋರುವ ಕೆಲಸ ಮಾಡಿಲ್ಲ. +ಅಯ್ಯಾ ಗೆಳೆಯ, +ನಾನಿರುವುದೂ ಗಾಜಿನ ಮೆನೆಯಲ್ಲಿ ಎಂಬುದನ್ನು ಮರೆತು ತಾವು ಕಲ್ಲು ತೂರಹೊರಟರೆ ಹೇಗೆ? +‘ಲೇಖನಿಯ ಅಹಮಿಕೆ-ಕುಡಿತದ ಅಮಲಿಗಿಂತ ಅಪಾಯಕರ’ ಎಂಬುದು ಹಿರಿಯರು ಹೇಳಿರುವ ಮಾತು, ನೆನೆಪಿಸಿದೆನೇ ಹೊರತು ಡಿಕ್ಟೇಟರ್‌ನಂತೆ ಆಜ್ಞಾಪಿಸಲು ‘ಫತ್ವಾ’ಹೊರಡಿಸಲು ಹೊರಟಿಲ್ಲ. ನಾನು ಸಾಕಷ್ಟು ಸಾಹಿತ್ಯ ವಿಚಾರ ಸಂಕಿರಣಗಳನ್ನು ಕಂಡವನು. ಅಲ್ಲಿನ ಮಾತಿನ ಚಕಮಕಿಯನ್ನು, ಕಟಕಿಗಳನ್ನು ಕಂಡು ಬಹಳಷ್ಟು ಕಲಿತವನು. +ಅಂಥ ಪ್ರಸಂಗಗಳು ಬಂದಾಗ ಒಬ್ಬರ ಮೇಲೊಬ್ಬರು ಕತೆ, ಕವನ, ಕಾದಂಬರಿಗಳನ್ನು ಬರೆದ ಇತಿಹಾಸವೇ ನಮ್ಮೆದುರು ಇದೆ. ಆದರೂ ಇನ್ನೂ ಸಾಹಿತ್ಯ ವಲಯದಲ್ಲಿ ಪಂಥಗಳು ಬೇರೆ ಬೇರೆಯಾದರೂ ‘ಮೈತ್ರಿ’ ಇನ್ನೂ ಉಳಿದಿದೆ. +ಇನ್ನು ಚಿತ್ರರಂಗಕ್ಕೆ ಬಂದರೆ ಲಟಾಪಟಿಯಾಗಬಹುದಾದಂತಹ ಹಾಡುಗಳು ಬಂದಿಲ್ಲವೆ? ಸಾಹಿತ್ಯದ ಸಾಲುಗಳಲ್ಲಿ ಖಾರ ಕಕ್ಕಿಲ್ಲವೆ? ಒಂದು ಚಿತ್ರಕ್ಕೆ ಉತ್ತರವಾಗಿ ಮತ್ತೊಂದು ಚಿತ್ರ ಬಂದಿಲ್ಲವೆ? ಅದೇ ಕಾರಣವಾಗಿ ಹೊಡೆದಾಟ-ಬಡಿದಾಟಗಳಾಗಿಲ್ಲವೆ? ಉಸಿರಾಡುವುದೇ ಕಷ್ಟವೆನಿಸಿದಾಗ ಜೀವಭಯವೆಂದು ಬಹುಮಂದಿ ಕನ್ನಡನಾಡನ್ನೇ ಬಿಟ್ಟು ಆಚೆ ಹೋಗಿರಲಿಲ್ಲವೆ? ಚಲನಚಿತ್ರ ಚರಿತ್ರೆ ಬಲ್ಲ ನಿಮಗೆ ಇವೆಲ್ಲ ಗೊತ್ತು. +‘ಗೊಂದಲಕ್ಕೊಳಗಾಗಿದ್ದ ದಿನೇಶ್‌ಬಾಬು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ’ ಎಂದಿದ್ದೀರಿ. ಒಮ್ಮೆ ನೀವೇ ಅವರನ್ನು ಮೆಲಯಾಳಿ ಮಾಂತ್ರಿಕನೆಂದು ಗೇಲಿಮಾಡಿ ಬರೆದದ್ದನ್ನು ಓದಿರುವವನು ನಾನು. ದಿನೇಶ್‌ಬಾಬು ಮಾಡಿದ್ದೊಂದು ಘನಂದಾರಿ ಕಾರ್ಯವೆಂಬಂತೆ ‘ತಿವಿಯುವ ಪ್ರಶ್ನೆಗಳಿಗೆ ಉತ್ತರಿಸಿದರೂ ಪದೇ ಪದೇ ತಿವಿತಕ್ಕೊಳಗಾದ ಅವರು ಕೇಳಿಯೇಬಿಟ್ಟರು’ ಸಿದ್ಧತೆ ಮಾಡಿಕೊಂಡು ಬಂದಹಾಗಿದೆಯಲ್ಲ’ +‘ಈ ಕಾಮೆಂಟ್ ಕೆಲವರಿಗೆ ಇರಿಸು ಮುರಿಸುವುಂಟು ಮಾಡಿರಬಹುದು. ಆದರೆ ಇದು ಅನಿವಾರ್ಯ’ ಎಂದು ಫುಲ್‌ಸ್ಟಾಪ್ ಇಟ್ಟಿದ್ದೀರಿ. +‘ದಿನೇಶ್‌ ಬಾಬೂನ ಪ್ರಶ್ನೆ ಕೇಳಲಿಕ್ಕೆ ಪ್ರೆಸ್‌ಮೀಟ್‌ಗೆ ಸಿದ್ಧತೆ ಮಾಡಿಕೊಂಡು ಬರಬೇಕೆ? ಅದನ್ನು ಎಂ.ಎ ಪರೀಕ್ಷೆ, ಐ.ಎ.ಎಸ್. ಎಕ್ಸಾಮ್ ಎಂದು ತಾವು ತಿಳಿದುಕೊಂಡಿದ್ದೀರೇನೋ ಎಂದು ನನಗೀಗ ಗುಮಾನಿ ಬಂದು, ಪಿ.ಕಾಳಿಂಗರಾಯರ ‘ನಗೆಯು ಬರುತಿದೆ’ ಹಾಡು ನೆನಪಾಗುತ್ತಿದೆ. +ಮಿಸ್ಟರ್‍ ಅವರೆ, ನಿಮ್ಮ ಬರವಣಿಗೆ ನೀವೇ ಮತ್ತೊಮ್ಮೆ ಓದಿ ನೋಡಿ. ಯಾವ ಹಂತಕ್ಕೆ ತಲುಪಿದೆ ಚಿತ್ರ? ಯಾರ್‍ಯಾರು ಸ್ನಾನ ಮಾಡುವುದನ್ನು ನೋಡಿದಿರಿ? ಶೆಣೈ ನಿರ್ದೇಶಿಸುತ್ತಿರುವ ‘ಚಾಂದಿನಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಎಂದು ಕೇಳಿದಂತೆ ‘ಪೋಲೀಸ್ ಡಾಗ್’ ಚಿತ್ರೀಕರಣದಲ್ಲಿ ಡೇವಿಡ್ ಅವರನ್ನು ಸುಪಾರಿ ರೆಫರನ್ಸ್ ಪ್ರಶ್ನೆ, ಬುದ್ಧನೆಂದರೆ ಗೌತಮಬುದ್ಧನೇ ಎಂದು ಪ್ರಶ್ನಿಸಿದ ನನ್ನ ಪ್ರಶ್ನೆಗಳನ್ನೇ ತಾವು ಉದ್ಧರಿಸಿದ್ದೀರಿ ಎಂಬುದು ಮನವರಿಕೆ ಆಯಿತು. +ನಾನೊಬ್ಬನೇ ನಮ್ಮ ಪತ್ರಿಕೆಗೆ ನಾಲ್ಕು ಪುಟ ವಾರ ವಾರ ಬರೆಯುವವನು ಎಂಬುದು ನಿಮಗೆ ನೆನಪಿರಲಿ. ಹೆಚ್ಚಿಗೆ ಹಣ ಕಮಾಯಿಸುವ ದೃಷ್ಟಿಯಿಂದ ಗುಟ್ಟಾಗುಟ್ಟಾಗಿ ನಾನೂ ಬೇರೆ ಯಾವ ಪತ್ರಿಕೆಗಳಿಗೂ ಮ್ಯಾನೇಜ್‌ಮೆಂಟ್‌ನ ಯಾಮಾರಿಸಿ ಬರೆಯುತ್ತಿಲ್ಲ ಎಂಬುದು ತಮಗೂ ತಿಳಿದದ್ದೆ. ‘ಸ್ವಯಂ ಶಿಸ್ತು ಅತ್ಯುತ್ತಮ ನೀತಿ ಸಂಹಿತೆ’ ಎಂದು ನಂಬಿರುವವನು ನಾನು, ಆ ಧೈರ್ಯವಿದ್ದದ್ದಕ್ಕೆ ಅಂದು ದಿನೇಶ್‌ಬಾಬು ಬಳಿ ಮಾತಾಡಿ ನನ್ನ ಫೀಲಿಂಗ್ಸ್ ಹೇಳಿ ‘ಅದರ ಕಾಮೆಂಟ್ ಅಪ್ರಸ್ತುತ’ ಎಂದಾಗ ಅವರು ನೊಂದು ‘ಸಾರಿ’ ಹೇಳಿದರು. ಮುಗಿಯಿತು ಅಂದೇ ಅಲ್ಲೇ ಆ ಪ್ರಸಂಗ, ಬಿರುಕು ಕಂದರವಾಗಬಾರದೆಂದು ಇಷ್ಟು ಬರೆದಿರುವೆ. +***** +(೧೪-೧೨-೨೦೦೧) +ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […] +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +‘ವಂಶಕೊಬ್ಬ’ ಮುಹೂರ್ತ ಸಮಾರಂಭದಂದು ಈ ಮಾತನ್ನು ಆರಂಭಕ್ಕೆ ಪ್ರಸ್ತಾಪಿಸಿದವರು ನಿರ್ಮಾಪಕ ಮಾಣಿಕ್‌ಚಂದ್! ‘ನಾನೊಂದು ಊರಿಗೆ ಹೋಗಿದ್ದೆ. ೪೦-೫೦ ಜನ ಟಿ.ವಿ. ನೋಡ್ತಿದ್ರು. ಯಾಕೆ ಸಿನಿಮಾ ನೋಡಲ್‌ವೇನ್ರಯ್ಯ ಅಂದೆ. ಅರೆ, ಈ ಟೀವಿಲಿರೋ ಇದಿದೇ ಮುಖಗಳನ್ನು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_539.txt b/Kannada Sahitya/article_539.txt new file mode 100644 index 0000000000000000000000000000000000000000..b3c73b3519040788afeacd33044b9380166311bf --- /dev/null +++ b/Kannada Sahitya/article_539.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಅಗೋ, ಆಕಾಶ, ಅಲ್ಲಿ ಮೇಲೆ! +ಅದರಡಿಗೆ ಭೂಮಿ, +ನೀನು ಭೂಮಿ ನಾನು ಆಕಾಶ” +ಆ….. ಹಾ…..! +ಎಂತ ಮಾತು!! +ದೇವರೇ, ಹೊಟ್ಟೆ ತುಂಬ ಊಟ ಕೊಡು +ನಿದ್ದೆ ತುಂಬ ಕನಸನಿಡು. +ಕೊಡುವವರು ಯಾರು, ಪಡೆವವರು ಯಾರು +ಎರಡು ಕ್ರಿಯೆಗಳ ಮೇಲೆ ದಿನನಿತ್ಯ ವಹಿವಾಟು. +‘ಅವನು’ ದೇವರು, ‘ಅವಳು’ ಅವನ ದಾಸಿ +ಕೃತಾರ್ಥವಾಗಬೇಕು ಹೀಗೆ ಜೀವ +ನಿಮ್ಮ ಚರಣಕಮಲಕ್ಕೆರಗಿ +ಬಾಷೆ ಚಪಾತಿ ಹಿಟ್ಟಿನ ಹಾಗೆ +ಲಟ್ಟಿಸಿದರೆ, ಗುಂಡಗಿರಬೇಕು +ಅಥವ ಮೂರು ಮೂಲೆ, +ಬೇರೆ ಆಕಾರವೇ ಬಾರದು ಅದಕೆ. +ಹೆಜ್ಜೆ ಪಾಡಿಗೆ ಹಜ್ಜೆ +ಆಲೋಚನೆಯ ಧಾಟಿ +ಹಾದಿ ಬಿಟ್ಟು ಹೊರಟಿತ್ತು. +ನಡೆಯುತ್ತಾ ಹೋದರೆ ಮುಂಬಾಲಿಸುತ್ತದೆ +ಹೊಸಾ ದಿಕ್ಕಿಗೊಂದು ಕಾಲುದಾರಿ. +(ಹೊಸ ಮಾತು ನಮ್ಮೊಳಗೆ! +ಇಷ್ಟು ದಿನ ಎಲ್ಲಿ ಅಡಗಿತ್ತು +ಅಡಿಗೆ ಮನೆ ಸಿಂಕಿನ ಬದಿ +ಮುಸುರೆಯುಜ್ಜುತ್ತಾ!) +ಕೂತಲ್ಲೇ ಜೀಕುಹಾಕುವ ತೂಕಡಿಕೆ. +ನಮ್ಮದು ಹೊಸಲೋಕ +ಅಲ್ಲಿ ದೇವರಿಲ್ಲ +ಕೊಡುವವರಿಲ್ಲ +ಕೊಳ್ಳುವವರೂ ಇಲ್ಲ +ಅಲ್ಲಿ ಭಾಷೆಗೆ ಮಾತಿಲ್ಲ +ಮಾತಿಗೆ ಅಹಂಕಾರವಿಲ್ಲ….. +ಕನಸನ್ನಾದರೂ ಕಾಣಬೇಕು ಇಂಥದ್ದೊಂದು +***** +(೧)ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತಜಾವ ಜಾವಕೆ ಹಾಡಿನೆಳೆಯ ಜಗ್ಗಿದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳುಇರುಳಬಾನಿಗೆ ಚಂದ್ರ ತಾರೆಯಾಗಿ ! ನೀರು ತುಂಬಿದ ಕೆರೆಯ ಹೃದಯಾಂತರಾಳದಲಿಆ ನೀಲಿ ಆ ಮೋಡವೆಲ್ಲ ಮೂಡಿಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗುಯಾವುದೋ ಮಾಯೆಯಲಿ […] +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_54.txt b/Kannada Sahitya/article_54.txt new file mode 100644 index 0000000000000000000000000000000000000000..5e6f63bdc92dd568f348ba962171d087b803a8ee --- /dev/null +++ b/Kannada Sahitya/article_54.txt @@ -0,0 +1,175 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾವಿರದ ಶರಣವ್ವ ಕರಿಮಾಯಿ ತಾಯೆ +ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ ಆ ಹೆಸರಿನ ಒಂದು ಊರಿದೆ. ಅದನ್ನೊಮ್ಮೆ ಗುಡಸೀಕರ ರೈತಾಪಿ ಜನರಿಗೆ ತೋರಿಸಿ, ಅಭಿಮಾನಪಡಿಸಿದ್ದ. ಹೀಗೆ ನಕಾಶದಲ್ಲಿ ತಮ್ಮ ಊರು ಗುರುತಿಸುವ ವಿದ್ಯೆಯನ್ನು ತಕ್ಷಣ ಗ್ರಹಿಸಿದವ ಗುಡಸೀಕರನ ಶಿಷ್ಯ ಕಳ್ಳ ಸಿದರಾಮ. +ಅದು ಅವನಿಗೆ ಬಹಳ ಸುಲಭವಾದ ವಿದ್ಯೆ. ಬೆಳಗಾವಿ ದೊಡ್ಡ ಶಹರವಾದುದರಿಂದ ಅದಂತೂ ಪ್ರತಿಯೊಂದು ನಕಾಶದಲ್ಲೂ ಇದ್ದೇ ಇರುತ್ತದೆ. ಅವನಿಗೆ ಇಂಗ್ಲೀಷಿನ “ಬಿ” ಅಕ್ಷರ ಗೊತ್ತಾಗಿತ್ತು. “ಬಿ” ಅಕ್ಷರದಿಂದ ಸುರುವಾಗೋದೇ ಬೆಳಗಾವಿ. ಸರಿ, ಸದರಿ ಬೆಳಗಾವಿಯಿಂದ ಮೂರಿಂಚು ಉತ್ತರಕ್ಕೆ ಸರಿದರೆ ಶಿವಾಪುರ ಸಿಕ್ಕಲೇಬೇಕೆಂಬುದು ಅವನ ಖಾತ್ರಿ ತರ್ಕ. ಹೀಗಾಗಿ ಅವನು ತೋರಿಸುವ ಶಿವಾಪುರ ಒಮ್ಮೊಮ್ಮೆ ದಿಲ್ಲಿಯೋ, ಕಲ್ಕತ್ತಾದ ಬಳಿಯ ಹಳ್ಳಿಯೋ, ಅಥವಾ ಹಿಂದೂಸ್ಥಾನದ ಯಾವದೇ ಹಳ್ಳಿಯಾಗಿರುತ್ತಿತ್ತು. ಇದರಲ್ಲಿ ಆತ ಎಷ್ಟು ಪರಿಣಿತನಾಗಿದ್ದನೆಂದರೆ ಒಮ್ಮೊಮ್ಮೆ ಜಗತ್ತಿನ ನಕಾಶದಲ್ಲೂ ಆತ ಶಿವಾಪುರವನ್ನು ಗುರುತಿಸುತ್ತಿದ್ದ! ಏನು ಮಾಡುವುದು? ಶಹರದ ಸಂಬಂಧದಲ್ಲಿ ಗುರುತಿಸಲ್ಪಡುವ ಸಣ್ಣ ಹಳ್ಳಿಯ ಹಾಡೇ ಇಷ್ಟು. +ಊರ ಮಂದಿ ಕಳ್ಳ ಸಿದರಾಮನ ಮಾತನ್ನು ಮೊದಲೇಟಿಗೆ ನಂಬಲಿಲ್ಲ. ನಮ್ಮ ಊರಿನ ಸುತ್ತಮುತ್ತ ಯಾವ್ಯಾವ ಊರಿವೆಯೆಂಬುದು ಅಥವಾ ಯಾವ್ಯಾವ ಊರಿನ ಮಧ್ಯೆ ತಮ್ಮ ಊರಿದೆ ಎನ್ನುವುದು ಅವರಿಗೂ ಗೊತ್ತಿದೆ. ಆದರೆ ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಹಳ್ಳಿಯೇ ಶಿವಾಪುರವೆಂದು ಹೇಳುವ ಹೇಳವರ ಮಾತು ನಕಾಶದ ವಿವರಗಳಲ್ಲಿ ಬರುವುದಿಲ್ಲವಲ್ಲ? ಅಂಡಾಂಡ ಪಿಂಡಾಂಡದಿಂದ ಸುರುವಾಗುವ ಲಗಮವ್ವನ ಹಾಡಿನಲ್ಲೂ ಶಿವಾಪುರವಿದೆ. ಆದರೆ ಅದರಲ್ಲೂ ಜಂಬೂದ್ವೀಪವಿದೆಯಲ್ಲ? ಇವೆಲ್ಲ ಆದಿ ಗುರುತು ಹೇಗೆ ಸುಳ್ಳಾದಾವು? ಎಂದೂ ತಕರಾರು ತೆಗೆದರು. ಕಳ್ಳ ಸಿದರಾಮನೆ ವಿಶೇಷವಿರುವುದೇ ಇಲ್ಲಿ, ಬೇಕಾದರೆ ಇವೆಲ್ಲ ವಿವರಗಳನ್ನು ತಳುಕು ಹಾಕಿ ನಕಾಶದಲ್ಲಿ ಶಿವಾಪುರ ತೋರಿಸಬಲ್ಲ. ಹೀಗಾಗಿ ನಂಬದವರೂ ಅವನ ಮಾತು ನಂಬುವಂತಾಯಿತು. +ಊರನ್ನು ದೂರದಿಂದ ನೋಡಿದರೆ ಕೆರೆ, ಕಾಡುಗಳ ವಿಸ್ತಾರದಲ್ಲಿ, ಅವುಗಳ ದಟ್ಟ ಬಣ್ಣಗಳಲ್ಲಿ ಬಹಳ ಸಣ್ಣದಾಗಿ ಕಂಡೀತು. ರಾತ್ರಿಯಾಗಿದ್ದರೆ ಬರೀ ಒಂದು ಕೊಳ್ಳಿಯಾಗಿ, ಹಗಲಾದರೆ ಒಂದು ಕಪ್ಪು ಕಲೆಯಾಗಿ ಕಂಡೀತು. ಪಡವಲ ದಿಕ್ಕಿಗೆ ಎತ್ತರವಾದ ದಟ್ಟ ಅಡವಿ ಬರುವುದರಿಂದ ಉಳಿದ ಊರುಗಳಿಗಿಂತ ಮುಂಚೆಯೇ ಇಲ್ಲಿ ಹೊತ್ತು ಮುಳುಗುತ್ತದೆ. ಕತ್ತಲೆ ಹೆಚ್ಚು ದಟ್ಟವಾಗಿ ಆವರಿಸುತ್ತದೆ. ಆದ್ದರಿಂದಲೇ ಬೆಳಕಿರುವಾಗಲೇ ಊರು ಸೇರುವುದು ಒಳ್ಳೆಯದು. ಬೆಳಕಿದ್ದಾಗ ತಿಳಿದೀತೆಂದಲ್ಲ, ಅಥವಾ ಕತ್ತಲಾದೊಡನೆ ಊರು ಮಲಗಿರುವುದೆಂದೂ ಅಲ್ಲ. ತೆಂಕ ಹಾಗು ಮೂಡದಿಕ್ಕಿಗೆ ಊರ ಹೊಲ ಮರಡಿಗಳಿವೆ. ಬಡಗಣಕ್ಕೊಂದು ಕೆರೆಯಿದೆ. ಅಡ್ಡ ಹಾದಿ ನೂರಾರಿದ್ದರೂ ಊರನ್ನು ಪ್ರವೇಶಿಸುವ ಮುಖ್ಯ ರಸ್ತೆ ಮೂಡಣ ದಿಕ್ಕಿಗೇ ಇದೆ. ಅದೊಂದು ಬಂಡೀ ಹಾದಿ. ಅಲ್ಲಿಂದಲೇ-ಬೆಳಗಾವಿಗೆ ಕೂಡ- ಹೋಗಬೇಕು, ಬರಬೇಕು. ಆ ರಸ್ತೆ ಮುಗಿದು ಊರು ಸುರುವಾಗುವ ಅಗಸಿ ಬಾಗಿಲ ಬಳಿಯೇ ಕರಿಮಾಯಿಯ ಗುಡಿಯಿದೆ. ಹೊರಗಿನಿಂದ ಬಂದವರು ಊರು ಹೋಗುವ ಮುನ್ನ, ಒಳಗಿದ್ದವರು ಅಗಸಿ ದಾಟುವ ಮುನ್ನ ಈ ದೇವಿಗೆ ಅಡ್ಡಬಿದ್ದೇ ಮುಂದುವರಿಯುವದರಿಂದ ನಮ್ಮ ಪುರವರ್ಣನೆ ಇಲ್ಲಿಂದಲೇ ಆರಂಭವಾಗುತ್ತದೆ. +ಊರು ಪ್ರವೇಶಿಸುವಲ್ಲಿ ರಸ್ತೆಯ ಎಡಗಡೆ ಎರಡು ಕಲ್ಲಿನ ಕಂಬಗಳಿವೆ. ಅದೇ ಅಗಸಿ. +ಮದರಾಸದಿಂದ ಕಲ್ಲ ತರಿಸಿ +ಕಟ್ಟಿಸ್ಯಾರ ಈ ಊರ ಅಗಸಿ || +ಎಂದು ಲಗಮವ್ವನ ಹಾಡಿನಲ್ಲಿ ಇದರ ವರ್ಣನೆ ಇದೆ. ಅಲ್ಲಿಂದ ನೇರವಾಗಿ ಮುಂದೆ ಕಾಣಿಸುವುದೇ ಕರಿಮಾಯಿ ಕರ್ರೆವ್ವನ ಅರ್ಥಾತ್ ಕರಿಮಾಯಿಯ ಗುಡಿ. ದೊಡ್ಡದಲ್ಲ, ಚೆಂದವೂ ಇಲ್ಲ. ಎದುರಿಗೊಂದು ಕಟ್ಟೆಯ ದೀಪಕಂಬವಿದೆ. ಅದರಾಚೆ ಗುಡಿಯ ಪೌಳಿ. ಅದರ ಮಧ್ಯಭಾಗದಲ್ಲಿ ಗುಡಿಯಿದೆ. ಗುಡಿಯಲ್ಲಿ ಹೆಜ್ಜೇನಿನ ಮೂರು ದೊಡ್ಡ ದೊಡ್ಡ ಹುಟ್ಟುಗಳಿರುವುದೇ ಇದರ ವಿಶೇಷ. ಇದಕ್ಕಂಟಿ ಗರ್ಭಗುಡಿ. ಅದಕ್ಕೊಂದು ಚಿಕ್ಕ ಬಾಗಿಲು. ಬಾಗಿಯೇ ಒಳಕ್ಕೆ ಹೋಗಬೇಕು. +ಹಾಗೆ ಒಳಕ್ಕೆ ಹೋದರೆ ಹೋದೊಡನೆ ಕಣ್ಣಿಗೆ ಕತ್ತಲೆ, ಮೈಗೆ ಅಲ್ಲಿಯ ತಂಪು ತಕ್ಷಣ ಅಂಟುತ್ತದೆ. ಒಮ್ಮೆಲೇ ಕಣ್ಣು ಕಪ್ಪಡಿಗಳ ಕಿರಿಚಾಟದಿಂದ ಒಂದೆರಡು ನಿಮಿಷ ಇಡೀ ಗುಡಿ ಕಿಟಾರನೆ ಕಿರಿಚಿದಂತಾಗಬಹುದು. ಒಳಹೊಕ್ಕವರು ಹೊಸಬರಾದರೆ ಸತ್ತೆನೋ, ಬದುಕಿದೆನೋ ಎಂದು ಹೊರಗದರೂ ಓಡಬಹುದು. ಇಲ್ಲವೇ ಅವರೂ ಕಿರುಚಬಹುದು. ಧೈರ್ಯದಿಂದ ಅಲ್ಲೇ ನಿಂತಿದ್ದರೆ ಸ್ವಲ್ಪ ಸಮಯದ ಬಳಿಕ ನಿಧನಿಧಾನವಾಗಿ, ಮೆಲ್ಲನೇ, ಸದ್ದಿಲ್ಲದೇ ಮೊಗ್ಗು ಹೂವಾದ ಹಾಗೆ ಒಳಗಿನ ವಿವರಗಳು ಬಿಚ್ಚಿಕೊಳ್ಳತೊಡಗುತ್ತದೆ. +ನಾಲಗೆ ಹಿರಿದು ತೇಲುಗಣ್ಣಾಗಿ ಬಿದ್ದ ಕೋಣ, ಅದರ ಕತ್ತಿನಲ್ಲಿ ನೆಟ್ಟ ಕತ್ತಿ. ಸೀರೆಯ ನೆರಿಗೆಯನ್ನೊದ್ದು ಅರೆ ಕಾಣುವ ಪಾದ, ಜರಿಯಂಚಿನ ಸೀರೆಯ ತೆರೆತೆರೆ ನೆರಿಗೆಗಳು, ಎರಡು ಬಲ ಹಸ್ತಗಳು, ಒಂದರಲ್ಲಿ ಖಡ್ಗವಿದೆ, ಇನ್ನೊಂದು ಆಶೀರ್ವದಿಸುತ್ತಿದೆ; ಎಡಗಡೆಗೆ ಒಂದು ಕೈಯಲ್ಲಿ ದೈತ್ಯನ ತಲೆಯಿದೆ. ಇನ್ನೊಂದು ನರ್ತಿಸುವ ಭಂಗಿಯಲ್ಲಿದೆ. ಈ ಹಸ್ತಗಳು ಥೇಟ್ ಮನುಷ್ಯರ ಹಸ್ತಗಳಂತೇ ಸಹಜವಾಗಿರುವುದರಿಂದ ಒಮ್ಮೊಮ್ಮೆ ಹೆದರಿಕೆಯಾಗುವುದೂ ಉಂಟು. ಮೇಲೆ ನೋಡಿದರೆ ಏಕದಂ ಎರಡು ಹೊಳೆಹೊಳೆಯುವ ದೊಡ್ಡದೊಡ್ಡ ಕಣ್ಣುಕಟ್ಟುಗಳು, ಬೆಳ್ಳಿಯವು, ಮುಖ ತುಂಬಿ ಕಿವಿಯ ತನಕ ವ್ಯಾಪಿಸಿವೆ. ಅವಕ್ಕೆ ತಕ್ಕಂತೆ ಎಸಳು ಮೂಗು, ಬಹುಶಃ ಮುಗುಳು ನಗುವ ತುಟಿ, ಹಣೆ, ಗದ್ದ, ಮುಕುಟ-ಎಲ್ಲ ಎಲ್ಲಾ ಕಣ್ಣಿಗೊತ್ತಿ ತುಂಬಿಕೊಳ್ಳುವಂತಿರುವ ಹಡದವ್ವ, ಜಗದಂಬಿ, ಮೂಲೋಕದ ತಾಯಿ, ಕರಿಮಾಯಿ ಕರ್ರೆವ್ವನ ಸಾಕ್ಷಾತ್ ಮೂರ್ತಿ ಈಗಲೋ ಆಗಲೋ ಎದ್ದು ಬರುವಂತಿದೆ. +ಕರಿಮಾಯಿಯ ಪ್ರಭಾವ ಈ ಊರಿನಲ್ಲಿ ಅಷ್ಟಿಷ್ಟಲ್ಲ. ಅವರಿಗೇನು ಪಾಪ ಹಲವು ಹದಿನೆಂಟು ದೇವರಿಲ್ಲ. ಇದ್ದ ಸಣ್ಣ ಪುಟ್ಟ ದೇವರುಗಳೂ ಕೂಡ ಇವಳೊಂದಿಗೆ ಒಂದಿಲ್ಲೊಂದು ಸಂಬಂಧ ಹೇಳಿಕೊಂಡೇ ಬದುಕಬೇಕು. ಜನ ಬೆಳಿಗ್ಗೆ ಏಳುವಾಗ “ತಾಯೀ” ಎಂದು ಏಳುತ್ತಾರೆ. ಮಲಗುವಾಗ “ತಾಯೀ” ಎಂದು ಮಲಗುತ್ತಾರೆ. ಎದ್ದಾಗ ತಾಯೀ, ಬಿದ್ದಾಗ ತಾಯೀ, ಕೂತಾಗ ತಾಯೀ, ಒಳ್ಳೆಯ ಕೆಲಸಕ್ಕೂ ತಾಯೀ, ಕೆಟ್ಟ ಕೆಲಸಕ್ಕೂ-ಅಂದರೆ ಹಾದರ, ಕಳ್ಳತನಗಳಿಗೂ ತಾಯೀ-ಹೀಗೆ ಯಾವುದರ ಸುರುವಿಗೂ, ಮುಗಿವಿಗೂ ಅವಳ ಸೊಲ್ಲು ಬೇಕೇ ಬೇಕು. +ಕರಿಮಾಯಿಯ ಚರಿತ್ರೆ +ಊರ ಚರಿತ್ರೆಯಂತೆಯೇ ಕರಿಮಾಯಿಯ ಚರಿತ್ರೆಯೂ ಅಸ್ಪಸ್ಟವಾಗಿಯೇ ಇದೆ. ಸಿಕ್ಕುವ ಲಗುಮವ್ವನ ಹಾಡು, ದತ್ತಪ್ಪನ ಚಿಂತಾಮಣಿ ಹಾಗೂ ಕರಿಮಾಯಿಯ ಹಾಲೀ ಇರುವ ಆರಾಧನೆ, ಆಚರಣೆಗಳ ವಿವರಗಳಿಂದ ಅವಳ ಚರಿತ್ರೆ ಹೀಗಿರಬಹುದೆಂದು ತಿಳಿಯುತ್ತದೆ: +ಅನಾದಿ ಕಾಲದಲ್ಲಿ ಧರಣಿಯ ಮೇಲೆ, ದೇವ ದಾನವರ “ವಿದ್ಧ” ದಿಂದಾಗಿ ಪಾಪ ಅಧಿಕವಾಯಿತು. ಮಳೆ ಬೀಳದ ಹಾಗೆ, ಬೆಳೆ ಏಳದ ಹಾಗಾಗಿ ಲೋಕದ ಮಂದಿಗೆ ಸಂಕಟವೂ ಜಡೆಮುನಿ ಮುಂತಾದ ಸಾಧುಸತ್ಪುರುಷಸಜ್ಜನ‌ಋಷಿಮುನಿಗಳ ಜಪತಪಕ್ಕೆ ಕಂಟಕವೂ ಉಂಟಾಯಿತು. ಆಗ ಭೂಮಿತಾಯಿ ಶಿವಪಾರ್ವತಿಯರ ಬಳಿ ಹೋಗಿ ಕಾಪಾಡಬೇಕೆಂದು ಸೆರಗೊಡ್ಡಿ ಬೇಡಿದಳು. ಕೂಡಲೇ ಶಿವನು ತನ್ನ ಹಣೆಯ ಬೆವರನ್ನು ಸೀಟಿ ಭೂಮಿಯ ಮೇಲೆ ಚೆಲ್ಲಿದನು. ಆ ಕ್ಷಣವೇ ಅದೊಂದು ಅದ್ಭುತವಾದ ಸ್ತ್ರೀರೂಪ ತಾಳಿತು. ಅವಳೇ ಕರ್ರೆವ್ವ ತಾಯಿ. +ಆಗ ಬಿರುಬೇಸಿಗೆ. ಬಿಸಿಲಿನ ಧಗೆ ತಡೆಯದೆ ಕರ್ರೆವ್ವ ನೀರಡಿಸಿದಳು ನೀರಿಗಾಗಿ ಹುಡುಕುತ್ತಿರುವಾಗ “ಅಯ್ಯೋ, ಕಾಪಾಡ್ರೋ, ಗಂಡಸಾದರ ಶಿವ ಅಂದೇನು, ಹೆಂಗಸಾದರ ಪಾರ್ವತಿ ಅಂದೇನು, ಕಾಪಾಡ್ರೋ” ಎಂಬ ಸ್ವರ ಕೇಳಿಸಿತು. ಕರ್ರೆವ್ವ ಹೋಗಿ ನೋಡಿದರೆ ಒಬ್ಬ ಮುನಿ ದೈತ್ಯರಿಗೆ ಹೆದರಿ ಓಡಿ ಹೋಗುವಾಗ ಕಲ್ಲೆಡವಿ ಆಳವಾದ ಬಾವಿಯಲ್ಲಿ ಬಿದ್ದಿದ್ದ. ಅವನನ್ನು ಹೇಗೆ ಕಾಪಡಬೇಕು? ಕೊನೆಗೆ ಸುತ್ತ ಯಾರೂ ಇಲ್ಲದ್ದನ್ನು ನೋಡಿ, ಉಟ್ಟ ದಟ್ಟಿಯನ್ನೇ ಕಳೆದು ಬಾವಿಯಲ್ಲಿಳಿಬಿಟ್ಟಳು “ಕಣ್ಣುಮುಚ್ಚಿ ದಟ್ಟಿ ಹಿಡಿ . ನಾ ತಗಿ ಅಂಬೋ ತನಕ ಕಣ್ಣು ತಗೀಬೇಡ; ತಗಿದರೆ ಸಿಗಿದೇನೆಂದು” ಹೇಳಿದಳು. ಅವನು ಬಿಟ್ಟ ದಟ್ಟಿಯ ಆ ತುದಿ ಹಿಡಿದ. ಈ ತುದಿಯಿಂದ ಎಳೆದಳು. +ಮೇಲೆ ಬಂದನೋ ಇಲ್ಲವೋ, ಮುನಿಯ ಚಪಲಕ್ಕೇನನ್ನೋಣ-ಕಣ್ಣು ತೆರೆದ. ಎದುರಿಗೆ ಬೆತ್ತಲೆ ಮಾಯೆ! ಚಿತ್ತ ಚಂಚಲವಾಗಿ ಚೆಲ್ಲಿಹೋಯಿತು. ತಕ್ಷಣ ಕರ್ರೆವ್ವ ತನ್ನ ಕಠಾರಿಯಿಂದ ನೆಲದ ಮೇಲೆ ಏಳು ಅಡ್ಡಗೆರೆ ಕೊರೆದು, “ದಾಟಿ ಬಂದರೆ ಮೀಟಿ ಒಗೆದೇನು” ಎಂದಳು. ಜಡೆಮುನಿಗಳು ಹೆದರಿದರೆಂದು ತೋರುತ್ತದೆ; ಸುಮ್ಮನೆ ನಿಂತರು. ಕರ್ರೆವ್ವ ಸೀರೆ ಉಟ್ಟಾದ ಮೇಲೆ ಜಡೆಮುನಿ ಆಕೆ ಕೊರೆದ ಏಳೂ ಗೆರೆಗಳಲ್ಲಿ ತನ್ನ ರಕ್ತ ಸುರಿಸಿದನೆಂದೂ, ಅವು ನೆತ್ತರ ನದಿಯಾಗಿ ಹರಿದವೆಂದೂ ಅಷ್ಟೂ ನದಿ ದಾಟಿ ಬಂದು ಕರ್ರೆವ್ವನನ್ನು ವರಿಸಿದನೆಂದೂ ಅವಳಿಗೆ “ಕರಿಮಾಯಿ” ಎಂದು ಹೆಸರಿಟ್ಟು ಮದುವೆಯಾದನೆಂದೂ ತಿಳಿಯುತ್ತದೆ. +ಇವರು ಬಾಳ್ವೆ ಮಾಡಿದ್ದು ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದ ಬಳಿಯ ಅಡವಿಯಲ್ಲಿ! ಈಗ ಈ ದಂಪತಿಗಳಿಗೆ ಇಬ್ಬಗೆಯ ಶತ್ರುಗಳು ಹುಟ್ಟಿಕೊಂಡರು. ಕರ್ರೆವ್ವ ದೈತ್ಯರ ಕುಲದವಳಾಗಿ ದೇವಕುಲದ ಜದೆಮುನಿಯನ್ನು ಮದುವೆಯಾದುದು ತಪ್ಪೆಂದು ದೈತ್ಯರು ಸಾಧಿಸಿದರು. “ಈ ಶೂದ್ರ ಕನ್ಯೆ” ಯನ್ನು ಮದುವೆಯಾಗಿ ಜಡೆಮುನಿ ತಮ್ಮ ‘ಉಚ್ಚಕುಲ’ ವನ್ನು ಕುಲಗೆಡಿಸಿದುದರಿಂದ ಇಬ್ಬರನ್ನೂ ಸಂಹರಿಸಿ ಬಿಡಬೇಕೆಂದು ದೇವತೆಗಳು ಛಲ ಹಿಡಿದರು. ಆಗ ಕರಿಮಾಯಿ ತುಂಬು ಗರ್ಭಿಣಿ. +ಒಂದು ದಿನ ಜಡೆಮುನಿ ತಪಸ್ಸು ಮಾಡುತ್ತಿರಬೇಕಾದರೆ ಕರಿಮಾಯಿ ನೀರಿಗೆ ಹೋಗಿರಬೇಕಾದರೆ, ದೇವತೆಗಳು ಬಂದು ಕುಲಗೆಟ್ಟ ಜಡೆಮುನಿಯನ್ನು ಕೊಂದರು. ಅಂದು ಹುಣ್ಣಿಮೆ. ಕರಿಮಾಯಿ ಆ ದಿನ ವಿಧವೆಯಾದುದರಿಂದ ಆ ದಿನಕ್ಕೆ ರಂಡಿ ಹುಣ್ಣಿಮೆಯೆಂದು ಹೆಸರಾಯಿತು. ದೇವತೆಗಳು ಅಲ್ಲಿಗೂ ತೃಪ್ತರಾಗದೆ, ಜಡೆಮುನಿಯ ಸಂತಾನವನ್ನು ನಾಶಪಡಿಸಬೇಕೆಂದು ಕರಿಮಾಯಿಯ ಗರ್ಭಕ್ಕೆ ಗುರಿಯಿಟ್ಟು ಹೊರಟರು. ಕರಿಮಾಯಿ ತುಂಬಿದ ಗರ್ಭ ಹೊತ್ತುಕೊಂಡು ದೇವತೆಗಳನ್ನು ಎದುರಿಸಲಾರದೆ ಅಡವಿ ಪಾಲಾದಳು. ತ್ರಿಕಾಲ ಜ್ಞಾನಿಗಳಾದ ದೇವತೆಗಳಿಗೆ ಕರಿಮಾಯಿಯಿರುವ ಠಿಕಾಣಿ ಗೊತ್ತಾಯಿತು. ಅವಳಿಗೆ ಅನ್ನ, ನೀರು ಸಿಕ್ಕದ ಹಾಗೆ ಮಾಡಿದರು. ತಾಯಿ ಕಲ್ಲು ಕುದಿಸಿ ತಿಂದಳು. ಮುಳ್ಳು ಬೇಯಿಸಿ ತಿಂದಳು. +ಅಟ್ಟಿಸಿಕೊಂಡು ಬಂದ ದೇವತೆಗಳನ್ನು ನಿವಾರಿಸಿ ಪಾರಾಗಿ ಮಾವಿನ ತೋಪಿನಲ್ಲಿ ಹುದುಗಿಕೊಂಡು ಕೂತಿದ್ದಳು. ಜೋತುಬಿದ್ದ ಹುಳಿಮಾವಿನ ಗೊಂಚಲು ನೋಡಿ, ಬಯಕೆ ಮೂಡಿ ಬಾಯಿ ನೀರೂರಿತು. ಅವು ಕೈಗೆಟುಕುವಂತಿರಲಿಲ್ಲ. ಹೋಗಿ ಕಷ್ಟಪಟ್ಟು ಕಲ್ಲಿನ ಮೇಲೆ ಕಲ್ಲು ಪೇರಿಸಿ, ಅದರ ಮೇಲೆ ಹತ್ತಿ ಇನ್ನೇನು ಮಾವಿನ ಗೊಂಚಲು ಸಿಕ್ಕಿತೆಂಬಾಗ “ಕಾಯಿ ಹರಿದೀಯೇ ಹಾದರಗಿತ್ತಿ” ಎಂಬ ದನಿ ಕೇಳಿಸಿತು. ನೋಡಿದರೆ ಒಂದು ಕಡೆ ದೇವತೆಗಳು ಬಿಲ್ಲು ಬಾಣ ಹಿಡಿದು ತನ್ನ ಗರ್ಭಕ್ಕೆ ಗುರಿಯಿಟ್ಟು ನಿಂತಿದ್ದಾರೆ! ಇನ್ನೊಂದೆಡೆ ಗಡೆಹಿಡಿದು ಏಳೇಳು ಶಿರದ ಈರೇಳು ಭುಜದ ರಾಕ್ಷಸರು ನಿಂತಿದ್ದಾರೆ! ಹಾ ಎನ್ನುವುದರೊಳಗೆ ಸಾವಿರದೊಂದು ಬಾಣಗಳು, ಸಾವಿರದೊಂದು ಗದೆಗಳು ಕರಿಮಾಯಿಯ ಗರ್ಭಕ್ಕೆ ತಾಗಿ, ತಾಯಿ ಕಿಟಾರನೆ ಕಿರಿಚಿಕೊಂಡಳು. +ಕಳಚಿದ ಗರ್ಭವನ್ನು ಉಡಿಯಲ್ಲಿ ಕಟ್ಟಿ ಸೊಂಟಕ್ಕೆ ಬಿಗಿದುಕೊಂಡಳು. ಅವಳ ಕಿರಿಚುವಿಕೆ ಕೇಳಿ ಕೈಲಾಸದ ಶಿವ ನಡುಗಿ ತನ್ನ ನಂದಿಯನ್ನೂ, ತನ್ನ ಹುಲಿಯನ್ನೂ ಇವಳ ಬಳಿ ಓಡಿಸಿದರು. ಕರಿಮಾಯಿ ಹುಲಿಯೇರಿ ದೇವದಾನವರನ್ನು ಅಟ್ಟಿಸಿಕೊಂಡು ಹೊಕ್ಕಲ್ಲಿ ಹೊಕ್ಕು, ಹರಿದಲ್ಲಿ ಹರಿದು ಬೇಟೆಯಾಡಲಾರಂಭಿಸಿದಳು. ಆರಾರು ಗಾವುದಕ್ಕೊಂದು ಹೆಜ್ಜೆಯನ್ನಿಟ್ಟು ದುರುಳರ ಮೇಲೆ “ವಿದ್ಧ” ಹೂಡಿದಳು. ಕಾರೆಂಬೋ ಕತ್ತಲೆನ್ನದೆ, ಬೋರೆಂಬೋ ಮಳೆಗಾಳಿಯೆನ್ನದೆ ‘ಕಟ್ಟಿರೋ ಕಳ್ಳ ಲೌಡಿಮಕ್ಕಳ’ನ್ನೆಂದು ಮೆಟ್ಟಿ ಮೆಟ್ಟಿ ಕೊಂದಳು. ದೇವತೆಗಳು ಹೆದರಿ ದೇವಲೋಕ ಸೇರಿದರು. ದೈತ್ಯರೋ ಮಾಯಾವಿಗಳು. ಅವರ ಒಂದು ಹನಿ ರಕ್ತ ಬಿದ್ದಲ್ಲಿ ಸಾವಿರಾರು ದೈತ್ಯರೆದ್ದರು. ಕರಿಮಾಯಿಗೆ ಏನು ಮಾಡಬೇಕೆಂದು ತೋಚದಾಯ್ತು. ಕೊನೆಗೆ ತನ್ನ ನಾಲಗೆಯನ್ನೇ ಭೂಮಿಯಮೇಲೆ ಚಾಚಿ ದೈತ್ಯರನ್ನು ಸಂಹರಿಸಿದಳು. ರಕ್ತ ಬೀಳಬೀಳುತ್ತಿದ್ದಂತೆ ನೆಕ್ಕಿದಳು. ತಾಯಿಯ ಮಹಿಮೆ, ಬಿದ್ದ ರಕ್ತ ಜೇನುತುಪ್ಪವಾಯಿತು! ಅಶ್ಗ್ಟೂ ದೈತ್ಯರ ಶಿರ ತರಿದು ಶಿವನ ಬಳಿಗೆ ಹೋದಳು. “ಗಂಡನ ಜೀವ, ಮಕ್ಕಳ ಜೀವ ಕೊಡುವಿಯೋ? ನಿನ್ನನ್ನೇ ಮುಕ್ಕಲೋ?” ಎಂದು ಕೇಳಿದಳು. ಶಿವ ಹೆದರಿ ಉಡಿಯಲ್ಲಿಯ ಇಪ್ಪತ್ತೊಂದು ಪಿಂಡಗಳಿಗೆ ಜೀವ ಬರಿಸಿದ, ಅವು ಇಪ್ಪತ್ತೊಂದು ಮಕ್ಕಳಾದವು. ಜಡೆಮುನಿಗೂ ಜೀವ ಬಂತು. ಆ ದಿನ ಕರಿಮಾಯಿ ಮುತ್ತೈದೆಯಾಗಿ ಕುಂಕುಮ ಹಚ್ಚಿಕೊಂಡಳು. ಅದಕ್ಕೆ ಮುತ್ತೈದೆ ಹುಣ್ಣಿಮೆಯೆಂದು ಈಗಲೂ ಹೇಳುತ್ತಾರೆ. +ಕರಿಮಾಯಿ ಮಕ್ಕಳು ಹಾಗೂ ಗಂಡನೊಂದಿಗೆ ತಿರುಗಿ ಭೂಲೋಕಕ್ಕೆ ಬಂದುದೇನೋ ಆಯಿತು. ಆದರೆ ಅವಳಿಗೆ ದುರುಳ ದೇವತೆಗಳ ಭಯ ಇದ್ದೇ ಇತ್ತು. ಆದ್ದರಿಂದ ಮಕ್ಕಳನ್ನು ಸಂಜೆಯ ತನಕ ಆಡಬಿಟ್ಟು ಸೂರ್ಯಾಸ್ತವಾದೊಡನೆ ಅವರನ್ನು ಕವಡೆಗಳಾಗಿ ಪರಿವರ್ತಿಸಿ ಸರ ಮಾಡಿ ಕತ್ತಿನಲ್ಲಿ ಧರಿಸಿಕೊಳ್ಳುತ್ತಿದ್ದಳು. ಅದರ ಗುರುತಿನ ಇಪ್ಪತ್ತೊಂದು ಕವಡೆಗಳ ಸರವೊಂದು ಮೂರ್ತಿಯ ಕತ್ತಿನಲ್ಲಿ ಈಗಲೂ ಇದೆ. ಮುಂದೆ ನುಂಗಿದ ದೈತ್ಯರನ್ನು ಕಾರಿಕೊಂಡಳೆಂದೂ, ಅವರು ಜೇನು ಹುಳುಗಳಾಗಿ ಹೊರಬಂದು ಅವಳ ಗಣಂಗಳಾದರೆಂದೂ ಕಥೆಯಿದೆ. ಗುಡಿಯಲ್ಲಿ ಹೆಜ್ಜೇನಿನ ಹುಟ್ಟುಗಳಂತೂ ಈಗಲೂ ಇವೆ. +ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ +ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು +ಎಂದು ಲಗುಮವ್ವನ ಹಾಡು ಇಲ್ಲಿಗೆ ಮುಗಿಯುತ್ತದೆ. ಮುಂದಿನ ಕಥಾಭಾಗ ಹೆಳವರು ಹೇಳುವ ಗೌಡನ ವಂಶಾವಳಿಯಲ್ಲಿದೆ. +ಇತ್ತ ಜಂಬೂ ದ್ವೀಪದ ಶ್ರೀರಾಮ ಕ್ಷೇತ್ರದ ಮೇಲನಾಡಿನ ಶಿವಾಪುರದಲ್ಲಿ ಆದಿಗೌಡ ಮಂದಿಮಾರ್ಬಲ ದಂಡುದಳವಾಯಿ ಕೋಟೆಕೊತ್ತಳ ಸಹಿತ ರಾಜ್ಯವಾಳುತ್ತಿದ್ದ. ಅವನ ಬಳಿ ಸಾವಿರದೊಂದು ಹಿಂಡುವ ಆಕಳುಗಳಿದ್ದವು. ತುಂಬಿದ ಭಂಡಾರವಿತ್ತು. ತುಳುಕುವ ತಿಜೋರಿಯಿತ್ತು. ಹೌಂದೆನ್ನುವ ಮಂತ್ರಿ, ಬಾಗುವ ಪ್ರಜೆಗಳಿದ್ದರು. ಏನಿದ್ದರೇನು? ಮಕ್ಕಳ ಫಲಪುತ್ರಸಂತಾನವಿರಲಿಲ್ಲ. ಅಂಗೈಯಲ್ಲಿ ತಲೆಯಿಟ್ಟು ರಾಜರಾಣಿ ಭಾರೀ ದೊಡ್ಡ ದುಃಖ ಮಾಡಿದರು. +ಹೀಂಗಿರಲಾಗಿ ಸಾವಿರದೊಂದು ಆಕಳು ದಿನಾ ನೂರೊಂದು ಗಂಗಾಳ ಹಾಲು ಹಿಂಡುತ್ತಿದ್ದವು. ಒಂದು ದಿನ ನೂರು ಗಂಗಾಳ ಮಾತ್ರ ಹಿಂಡಿದವು. ಯಕೆಂದು ವಿಚಾರಿಸಲಾಗಿ ಸಾವಿರದೊಂದನೆ ಕೆಂದಾಕಳು ಹಿಂಡಲಿಲ್ಲವೆಂದಾಯಿತು. ಅದರ ಮೇಲೆ ನಿಗಾ ಇಟ್ಟ ರಾಜ ಅದರ ಹಿಂದಿನಿಂದಲೇ ಕಾಡಿಗೆ ಹೋದ. ನೋಡಲಾಗಿ ಒಂದು ಹುತ್ತದ ಮೇಲೆ ಹಾಲು ಕರೆಯುತ್ತಿತ್ತು. ಅಗಿಸಿದ. ಒಳಗೆ ಕರಿಮಾಯಿ ಹಾಗೂ ಜಡೆಮುನಿಯ ಕಟ್ಟಿಗೆಯ ಮೂರ್ತಿಗಳಿದ್ದವು. ಅಂದೇ ರಾತ್ರಿ ಕನಸಿನಲ್ಲಿ ಕರಿಮಾಯಿ ಕಾಣಿಸಿ “ನಿಲ್ಲೋದಕ್ಕೊಂದು ನೆಲಿ ಮಾಡು; ನೀ ಮಣ್ಣ ಮುಟ್ಟಿದರ ಚಿನ್ನ ಮಾಡತೀನಿ” ಎಂದಳು. ಈಗಿರುವ ದೇವೀ ಗುಡಿಯನ್ನು ಆಗಲೇ ಕಟ್ಟಿಸಿದ್ದು. ಗುಡಿ ಕಟ್ಟಿಸಿದ ಮೇಲೆ ರಾಜ ಮುಟ್ಟಿದ್ದೆಲ್ಲ ಚಿನ್ನ, ರನ್ನವಾಯಿತು. ಪಾವು ಬೆಳೆಯುವಲ್ಲಿ ಪಲ್ಲ ಬೆಳೆಯಿತು. ಸೇರು ಬೆಳೆಯುವಲ್ಲಿ ಹೇರು ಬೆಳೆಯಿತು. ವರ್ಷ ತುಂಬುವುದರೊಳಗಾಗಿ ರಾಣಿ ಗಂಡು ಹಡೆದಳು. ಆಗಲೇ ರಾಜ ತಾಯಿಗೆ ಚಿನ್ನದ ಮುಖ ಮಾಡಿಸಿದ. ಅದು ಈಗಲೂ ಇದೆ. ಶೀಗೆ ಹುಣಿಮೆಯದಿನ ಈ ಮುಖ ಹಾಕಿ ಸಮೃದ್ಧಿ ಉತ್ಸವ ಆಚರಿಸುವ ಪದ್ಧತಿ ಇದೆ. ಇಂದಿನ ತನಕ ಆ ವಂಶದಲ್ಲಿ ನೂರು ಜನ ಗೌಡರಾದರು. ಅವರ ಪೈಕಿ ಇತ್ತೀಚಿನ ಕೆಲವರ ಹೆಸರುಗಳು ಮಾತ್ರ ಹೆಳವರ ಹಾಡಿನಲ್ಲಿವೆ. ಕೊನೆಯವನೇ ಪರಗೌಡ; ನೂರಾ ಒಂದನೆಯವ. +ಕರುಮಾಯಿಗೆ “ಬಂಗಾರ ಮುಖದವಳು” ಎಂದು ವಿಶೇಷಣ ಬಂದುದೇ ಆದಿಗೌಡ ಮಾಡಿಸಿದ ಈ ಬಂಗಾರದ ಮುಖದಿಂದ. ಇದನ್ನು ಮಾಡಿದವನ ಹೆಸರಾಗಲಿ, ಊರಾಗಲಿ ಗೊತ್ತಾಗಿಲ್ಲ. ದಾಖಲೆಗಳೂ ಇಲ್ಲ. ಮೂರು ಕೊಪ್ಪರಿಗೆ ಚಿನ್ನದ ಕಸ, ಕಸರು ಸೋಸಿ ತೆಗೆದಾಗ ಒಂದು ಕೊಡ ಅಸಲು ಚಿನ್ನ ಸಿಕ್ಕಿತು. ಅದರಿಂದಾದ ಮೂರ್ತಿಯಿದು. ಕೆಲವರ ಪ್ರಕಾರ ತಂತಾನೇ ಉದ್ಭವಿಸಿದ್ದು. ನಂಬಿಕೆಗೆ ತಕ್ಕ ಹಾಗೆ ಆ ಬಂಗಾರದ ಮುಖವೂ ಅಷ್ಟೇ ಸುಂದರವಾಗಿದೆ. +ಬಂಗಾರ ಮುಖದವಳೆ +ಶಿಂಗಾರ ಮೈಯವಳು ಬಂಗಾರ ಮುಖದವಳು +ಬಲಗೈ ಭಾಷೆ ಎಡಗೈ ನಂಬಿಕೆ ಕೊಟ್ಟು ಕಾಪಾಡಲಿ. +ಮೊದಲ ಸೊಲ್ಲಿಗೆ ಕರಿಮಾಯಿಗೆ ಸಾವಿರದೊಂದು ನಮಸ್ಕರಿಸಿ ಹೇಳಬೇಕಾದರೆ +ಮೂರು ಲೋಕಕೆ ಅಧಿಕ +ಕರಿಮಾಯಿ ಕಾರಣಿಕ +ತಿಳಿದೀತು ಹ್ಯಾಂಗ ಮರತೇಕ || +ಎನ್ನುವ ಲಗುಮವ್ವನ ಹಾಡು ಈ ಬಂಗಾರ ಮುಖ ನೋಡಿದರೆ ಅಕ್ಷರಶಃ ನಿಜವೆನಿಸುತ್ತದೆ. +ಭಯದಿಂದಲೋ, ಕೋಪದಿಂದಲೋ ಅಗಲವಾಗಿ ಕಿವಿಯವರೆಗೆ ತೆರೆದ ಕಣ್ಣುಗಳು, ಉಸಿರಾಡುತ್ತಿದೆ ಎನಿಸುವಂಥ ಎಸಳು ಮೂಗು, ನಕ್ಕು ನಕ್ಕು ಈಗಷ್ಟೇ ಸುಮ್ಮನಾದ, ಇಲ್ಲವೇ ಇನ್ನೇನು ನಗುತ್ತಾಳೆನಿಸುವಂಥ ತುಟಿಗಳು, ಚೂಪುಗದ್ದ, ಮೇಲೆ ಬಹುಶಃ ಎಳೆಬೆವರಿನಿಂದ ಹಣೆಗಂಟಿದ ಸುರುಳಿ ಸುರುಳಿ ಮುಂಗುರುಳು, ಅವುಗಳ ಮೇಲೆ ಹದಿನೆಂಟು ರತ್ನದ ಹರಳುಗಳಿರುವ ಕಿರೀಟ-ಒಮ್ಮೆ ನೋಡಿದರೆ ಸಾಕು ಕಣ್ಣು ತುಂಬುತ್ತದೆ, ಎದೆ ಕೂಡ! ಊರವರಿಗೆ ಇದರ ಬಗ್ಗೆ ಎಷ್ಟು ಮಾಯೆಯೆಂದರೆ-ದಿಟ್ಟಿಸಿ ನೋಡಿದರೆ ಎಲ್ಲಿ ಬಿರಿದೀತೋ ಎನ್ನುವ ಭಾವ. ಅದಕ್ಕೇ ಶೀಗೆ ಹುಣ್ಣಿಮೆ, ರಂಡಿ ಹುಣ್ಣಿಮೆ, ಮುತ್ತೈದೆ ಹುಣ್ಣಿಮೆ- ಈ ಮೂರು ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಅದನ್ನು ಗೌಡನ ಮನೆಯಲ್ಲೇ ಇಟ್ಟಿರುತ್ತಾರೆ. +ಬಸಿರಿಯರ ಕನಸಿನಲ್ಲಿ ತಾಯಿಯ ಈ ಬಂಗಾರದ ಮುಖ ಮೂಡಿಬಂದರೆ ಗಂಡು ಸಂತಾನ ಖಾತ್ರಿ. ಕೆಲವರ ಕನಸಿನಲ್ಲಿ ಈ ಮುಖ ಮಾತಾಡಿದ್ದೂ ಉಂಟು. ಬಾಗಿ ನಡೆದವರ ಭಾಗ್ಯವಂತೆಯಾಗಿ, ಬೇಡಿದ ವರ ಕೊಟ್ಟದ್ದೂ ಉಂಟು. ಹೆಚ್ಚೇನು ಇದು ಈ ಊರಿಗೆ ಸೊಕ್ಕು, ಅಭಿಮಾನ, ವಿದ್ಯೆ, ಬುದ್ಧಿ, ಭಯ, ಭಕ್ತಿ ಎಲ್ಲಾ ಕೊಟ್ಟದ್ದುಂಟು, ಸಣ್ಣವಳಲ್ಲ ಈ ಬಂಗಾರದ ಮುಖದವಳು. +ಸರಿಕ ದೇವತೆಗಳಾದ ಚಿಂಚಲಿ ಮಾಯವ್ವನಿಗೆ ಹಳಹಳಿ, ಲೋಕಾಪುರದ ದ್ಯಾಮವ್ವನಿಗೆ ಹೊಟ್ಟೆಕಿಚ್ಚು, ಸವದತ್ತಿ ಎಲ್ಲವ್ವನಿಗೆ ಮತ್ಸರಕೊಟ್ಟಳು. ಬಾಗಿ ನಡೆದ ಭಕ್ತರಿಗೆ ತೂಗುತೊಟ್ಟಿಲು ಬೆಳ್ಳಿಬಟ್ಟಲಿನ ಭಾಗ್ಯಕೊಟ್ಟಳು. ಇರುವೆ ಮೊದಲಾಗಿ, ಆನೆ ಕಡೆಯಾಗಿ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಿಗೆ ದೊಡ್ಡ ಹೊಟ್ಟೆ ಕೊಟ್ಟಳು. ಹೊಟ್ಟೆಗೆ ಹಸಿವು ಕೊಟ್ಟಳು. ಹಸಿವು ತೀರುವಷ್ಟು ಜೀವನ ಕೊಟ್ಟಳು. ಬೇಲಿಗೆ ಹಸಿರು, ಮಳಲಿಗೆ ನೀರು, ಸೂರ್ಯನಿಗೆ ಬಿಸಿಲು, ಚಂದ್ರನಿಗೆ ಬೆಳ್ದಿಂಗಳು ಕೊಟ್ಟಳು. +ದಿಟ್ಟಿಸಿ ನೋಡಿದವರಿಗೆ ಕುರುಡು, ಬರಡಿಗೆ ಹಯನು, ಬಂಜೆಯರಿಗೆ ಮಕ್ಕಳು, ಮಕ್ಕಳಿಗೆ ಛಲ, ಛಲಕ್ಕೊಂದು ಗುರಿ, ಗುರಿಗೆಂಟು ಸಾಧ್ಯತೆ ಕೊಟ್ಟಳು. ಎಳೆಯರಿಗೆ ಬಿಗಿದ ಸೊಂಟ ಕೊಟ್ಟಳು; ಸೊಂಟದ ತುಂಬ ಸೂಸುವ ಪ್ರಾಯ ಕೊಟ್ಟಳು; ಪ್ರಾಯಕ್ಕೆ ತುಳುಕಾಟ ಕೊಟ್ಟಳು, ತುಳುಕಾಟಕ್ಕೆ ಸ್ವಚ್ಛಂದ, ಹಾದರ ಕೊಟ್ಟಳು. ವಯಸ್ಸಿಗೆ ಬುದ್ಧಿ ಕೊಟ್ಟಳು, ಬುದ್ಧಿಗೆ ತೃಪ್ತಿ ಕೊಟ್ಟಳು, ತೃಪ್ತಿಗೆ ಸಾವು ಕೊಟ್ಟಳು. ಹೆಚ್ಚೇನು? ಯಾರಿಗೇನು ಕೊಡಬೇಕೆಂದು ತಿಳಿಯದೆ, ಕೊಡುವ ಉತ್ಸಾಹದಲ್ಲಿ ಸಮೃದ್ಧಿಯ ಹಡೆದ ತಾಯಿ, ಕೆಲವರಿಗೆ ಕಳ್ಳಬುದ್ಧಿಯನ್ನೂ ಕೊಟ್ಟಳು. +ಇಂಥಾ ಬಂಗಾರದ ತಾಯಿ ಆದಿಗೆ ಆದಿಯ ಹಡೆದವ್ವ, ಕಡೆಯಕಡೆ ಗೊತ್ತಿರದವ್ವ, ಇದಿಮಾಯಿ, ಘೋಡಗೇರಿಯ ಕಂಬಾರ ಬಸವಣ್ಣೆಪ್ಪನ ಮಗ, ಭೂಸನೂರುಮಠದ ಸಂಗಯ್ಯನ ಶಿಷ್ಯ, ಸಾವಳಗಿ ಶಿವಲಿಂಗೇಶವರ ಮಠದ ಸಿದ್ಧರಾಮ ಸ್ವಾಮಿಗಳ ಭಕ್ತ-ಚಂದ್ರಶೇಖರನಿಗೆ ಬರೆಯುವ ಬುದ್ಧಿಕೊಟ್ಟಳು. ಹಾಗೇಯೇ ಓದುಗರಿಗೆ ತೂಗುವ ತೊಟ್ಟಿಲು, ಬೆಳ್ಳಿಬಟ್ಟಲದ ಭಾಗ್ಯ, ಮಕ್ಕಳ, ಫಲಪುತ್ರ ಸಂತಾನದ ಸೌಭಾಗ್ಯ ಕೊಡಲಿ. +ಪುರವರ್ಣನೆ +ಅನಾದಿ ಕಾಲದ ಶಿವಾಪುರದ ವರ್ಣನೆಯಲ್ಲಿ ಅತಿಶಯೋಕ್ತಿಯೇ ಇದ್ದೀತು. ಹಾಡುಗಳಲ್ಲಿ +ಅಗಲಾರು ಗಾವುದ +ನಿಡಿದೇಳು ಗಾವುದ +ಸುತ್ತಲು ತಿರುಗಿದರೆ +ಹನ್ನೆರಡು ಗಾವುದ || +ಎಂದು ಇದರ ವಿಸ್ತಾರವನ್ನು ವರ್ಣಿಸಲಾಗಿದೆ. ಅಲ್ಲದೆ +“ಕೆತ್ತುಗಲ್ಲಿನ ಕೋಟೆ ಮುತ್ತೀನ ತೋರಣ | +ಕೊತ್ತಳದ ವಿಸ್ತಾರ ಹೆಂಗ್ಹೇಳಲಿ |” +ಎಂದೂ ಆದಿ ಗೌಡನ ಕೋಟೆಕೊತ್ತಳದ ವರ್ಣನೆ ಇದೆ. ಅಲ್ಲದೆ ಊರ ಮಧ್ಯದಲ್ಲಿ ಬಾಳೆ, ಬಾಳೆಗಳಲ್ಲಿ ರಸಬಾಳೆ ಗಿಡ ನೂರು ಸಾಲಾಗಿ ರಂಜಿಸುವ ಸಾವಿರದ ಹೂದೋಟಗಳಿದ್ದುವಂತೆ! ಊರಿನ ಈಗಿನ ಸ್ವರೂಪ, ವಿಸ್ತಾರ ಗಮನಿಸಿದರೆ ಮೇಲಿನ ವರ್ಣನೆ ಅತಿಯಾಯಿತೆಂದು ಅನಿಸುತ್ತದೆ. ಅಲ್ಲದೇ ಅದರಲ್ಲಿರುವ ಕೋಟೆಕೊತ್ತಳಗಳಾಗಲಿ, ಹೂದೋಟಗಳಾಗಲಿ ಒಂದೂ ಇಲ್ಲ. ಅವುಗಳ ಗುರುತು ಕೂಡ ಇಲ್ಲ. +ಈಗಿದ್ದಂತೆ ಊರು ಚಿಕ್ಕದೇ. ಗ್ರಾಮ ಪಂಚಾಯತಿಯಾಗಿ ಈಗೀಗ ಎರಡು ವರ್ಷಗಳಾದುವಷ್ಟೇ. ಕೆಲವು ಹಾಡುಗಳಲ್ಲಿ “ಮೂರು ಮನಿ ಹಳ್ಯಾಗ ಊರ ದೇವತೆ ಎನಿಸಿ | ಕೋಣ ಕುರಿಗಳ ಕೊಯ್ಸಿ ಒಗಸ್ಯಾಡಿ ಬಿಟ್ಟಿ |” ಎಂದು ಕರಿಮಾಯಿಯ ವರ್ಣನೆ ಇರುವುದರಿಂದ ಮೊದಲು ಮೂರು ಮನೆಯಿದ್ದ ಊರು ಬೆಳೆದು ಪರಗೌಡನ ಆಳಿಕೆಯಲ್ಲಿ ಗ್ರಾಮ ಪಂಚಾಯತಿ ಆಗುವಷ್ಟು ದೊಡ್ಡದಾಗಿ ಬೆಳೆದಿದೆ ಎಂದು ತಿಳಿದರೆ ಸಾಕು. +ಗುಡಿ ಪೂರ್ವಾಭಿಮುಖವಾಗಿದ್ದು ಕರಿಮಾಯಿಯ ಬೆನ್ನ ಹಿಂದೆ ಊರು ಹಬ್ಬಿದೆ. ಹೀಗಾಗಿ ಊರು ತಾಯಿಯ ಬೆನ್ನಿಗೆ ಬಿದ್ದಹಾಗೆ, ಅವಳ ಬೆನ್ನಿನ ಆಶ್ರಯದಲ್ಲೇ ಬೆಳೆದ ಹಾಗೆ ಕಾಣುತ್ತದೆ. ಗುಡಿಯ ಹಿಂದಿನಿಂದ ಊರಿನ ಒಂದೇ ಒಂದು ಪ್ರಮುಖ ರಸ್ತೆ ಪಶ್ಚಿಮಾಭಿಮುಖವಾಗಿ ಸಾಗಿ ಊರ ಚಾವಡಿಗೆ ಕೊನೆಗೊಳ್ಳುತ್ತದೆ. ಆ ಮುಖ್ಯ ರಸ್ತೆಗಂಟಿ ಸಣ್ಣ ಸಣ್ಣ ಸಂದಿಗೊಂದಿಗಳಿವೆ. +ಅಂಗವಂತರ ಬೀದಿ ! +ಲಿಂಗವಂತರ ಬೀದಿ ! +ಜಂಗಮರ ಬೀದಿಗಳು ನೂರು ಒಪ್ಯಾವು +ಎಂದು ಊರಿನ ವರ್ಣನೆಯೇನೋ ಇದೆ. ಆದರೆ ಹೊಲಗೇರಿಯನ್ನು ಬಿಟ್ಟರೆ ಉಳಿದಂತೆ ಎಲ್ಲಾ ಜಾತಿಯವರು ಬೇಕಬೇಕಾದಲ್ಲಿ ಮನೆಮಾಡಿಕೊಂಡಿದ್ದಾರೆ. ಚಾವಡಿಯ ಎಡಕ್ಕೆ ಸುಳಿಯುವ ಸಂದಿಯ ಅಂಚಿನಲ್ಲಿ ಗೌಡನ ಮನೆಯಿದೆ. ದೊಡ್ಡ ಮನೆಯೇ, ಹಳೆಯದು. ಅಟ್ಟವೂ ಇದೆ. ಚಾವಡಿಯ ಬಲಸಂದಿಯಲ್ಲಿ ದತ್ತಪ್ಪನ ಮನೆ, ಸ್ವಲ್ಪ ಪ್ರತ್ಯೇಕವಾಗಿದೆ. ಊರಿಗಿರುವ ಏಕಮೇವ ಬ್ರಾಹ್ಮಣರ ಮನೆ ಅದು. ಅಲ್ಲಿಂದ ಇಪ್ಪತ್ತು ಹೆಜ್ಜೆ ಮುಂದೆ ಹೋದರೆ ಗುಡಸೀಕರನ ಅಂದರೆ ನಮ್ಮ ಕಥಾನಾಯಕನ ಮನೆಯಿದೆ. ಊರಲ್ಲಿ ಸ್ವಲ್ಪ ಅಧುನಿಕವೆನಿಸಿಕೊಳ್ಳಬಹುದಾದ, ಖರ್ಚುಮಾಡಿ ಕಟ್ಟಿಸಿದ, ಶ್ರೀಮಂತರದೆನ್ನಬಹುದಾದ ಮನೆ ಇದೊಂದೇ. +ಇಲ್ಲಿಗೆ ಪುರವರ್ಣನೆ ನಿಲ್ಲಿಸಿ ಲಗುಮವ್ವನ ಹಾಡಿನ ಚರಣಗಳಿಂದ ನಮ್ಮ ಕಥೆ ಸುರು ಮಾಡೋಣ:- +ಅಲ್ಲೀಗಲ್ಲಿಗೆ ಕಥೆ ಮಲ್ಲೀಗೆ ವಾಸನೆಯು | +ಬಲ್ಲಂಥ ಜಾಣರಿಗೆ ಮಧುರವಣ್ಣಾ | +ಮುಂದೀನ ಕಥೆಯ ಅದರಂದಽವ ಹೇಳುವೆನು | +ಕರಿಮಾಯಿ ನಮಗ ನೀ ವರವ ಕೊಡಮ್ಮಾ || +ನೆನಪುಗಳು +ಶಿವಾಪುರದ ಪರಗೌಡನಿಗೀಗ ಅರವತ್ತು ಅರವತ್ತೈದು ವಯಸ್ಸು. ಅದು ಹೆಚ್ಚಲ್ಲ. ಅವನ ಆಕೃತಿ ನೋಡಿದರೆ, ಅಮಲೇರಿದಂತೆ ಸದಾ ಕೆಂಪಡರಿದ, ಆದರೆ ನಗುವ ಕಣ್ಣು, ನೇರ ಮೂಗು, ಎರಡೂ ಅಂಚಿನಲ್ಲಿ ತಗ್ಗುತೋಡಿ ಕೊನೆಗೊಳ್ಳುವ, ಗೆರೆಯಲ್ಲಿ ಬರೆದಂಥ ತುಟಿ, ಮನಸ್ವೀ ಬೆಳೆದ ಮೀಸೆ, ತುಂಬುಗೆನ್ನೆಯ ದುಂಡುಮುಖ, ದಾಡಿ ಬೋಳಿಸುತ್ತಿದ್ದುದೇ ಕಡಿಮೆ. ತಲೆಗೆ ರುಂಬಾಲಿದ್ದರೆ ಇತ್ತು. ಇಲ್ಲದಿದ್ದರೆ ಬಗಲಲ್ಲಿರುತ್ತಿತ್ತು. ಕಿವಿಯಲ್ಲಿ ಬಂಗಾರದ ವಾಲೆ, ಬಲಗೈ ಬೆರಳಿಗೆ ನಾಲ್ಕುಂಗುರ. ಆರಡಿ ಎತ್ತರದ ಆಜಾನುಬಾಹು ಆಕೃತಿಯನ್ನು ಒಮ್ಮೆ ನೋಡಿದವರು ಅವನನ್ನಾಗಲೀ, ಅವನ ಹೆಸರನ್ನಾಗಲೀ ಮರೆಯುವದೇ ಅಸಾಧ್ಯ. ಇಷ್ಟು ವಯಸ್ಸಾದರೂ ದೇಹದ ಒಂದು ಭಾಗದಲ್ಲಿಯೂ ಚರ್ಮ ಜೋತು ಬಿದ್ದಿರಲಿಲ್ಲ; ಒಂದು ನೆರಿಗೆ ಮೂಡಿರಲಿಲ್ಲ. +ನಕ್ಕಾಗಂತೂ ಗೌಡನನ್ನು ನೋಡುವದೇ ಚೆಂದ. ಗೌರವರ್ಣದ ಆ ಮುಖದಲ್ಲಿ ಅಚ್ಚ ಬಿಳಿಯ ದಾಳಿಂಬರದ ಬೀಜದಂಥ ಹಲ್ಲಿನ ಸಾಲು. ಬಹಳ ರಮಣೀಯವಾಗಿರುತ್ತಿತ್ತು. ಬೇರೆಯವರಿಗೆ ಕೊಡ್ಲಿ ಕುಡಗೋಲು ಅಸ್ತ್ರಗಳಾದರೆ ಗೌಡನಿಗೆ ಅವನ ನಗೆಯೇ ಅಸ್ತ್ರ. ಆ ನಗೆಯಿಂದ ಅವ ಬೇಕಾದ ಶತ್ರುಗಳನ್ನು ಹಾದಿಗೆ ತಂದಿದ್ದ. ಅವನ ಹತ್ತಿರ ಜಗಳವಾಡ ಬಂದ ಕೊಳವಿಯ ಮುದುಕಪ್ಪ ಗೌಡ ಅವನ ನಗೆಗೆ ಮಾರುಹೋಗಿ ಗೌಡ ಹೇಳಿದಂತೆ ಕೇಳಿಕೊಂಡು ತಿರುಗಿ ಹೋದನಂತೆ. ‘ಜಗಳ ಮಾಡದಽ ಹಾಂಗಽ ಯಾಕ ಬಂದ್ಯೋ?’ ಎಂದು ಊರವರು ಕೇಳಿದರೆ “ಏನ ಮಾಡ್ಲೋ? ನಕ್ಕಬಿಟ್ಟ” ಎಂದು ಹೇಳಿದನಂತೆ. ಅವಕಾಶ ಸಿಕ್ಕಾಗ ಯಾವ ಹೆಂಗಸೂ ಅವನನ್ನೊಮ್ಮೆ ಕದ್ದು ನೋಡದಿರುವುದು ಸಾಧ್ಯವಿಲ್ಲ. ಬಸೆಟ್ಟಿಯ ಹೆಂಡತಿ, ಒಮ್ಮೆ ರಾತ್ರಿ ಗೌಡನ ಹೆಸರಿನಲ್ಲಿ ಅದೇನೋ ಕನವರಿಸುತ್ತಿದ್ದಳಂತೆ. ಬಸೆಟ್ಟಿಗೆ ಎಚ್ಚರವಿತ್ತು. ಎದ್ದು ಕೂತು “ಆ ಗೌಡನ್ನೋಡಿದರ ನಮ್ಮಂಥ ಗಂಡಸರಿಗೇ ಹೆಂಗೆಂಗೋ ಆಗತೈತಿ; ಇನ್ನು ಇಂಥವಕ್ಕೇನು” ಎಂದುಕೊಂಡು ಮಲಗಿದನಂತೆ. +ಇದಕ್ಕೆ ತಕ್ಕ ಹಾಗೆ ಗೌಡ ರಸಿಕ ಕೂಡ. ಹಾಗಂತ ಹದ್ದು ಮೀರಿದವನಲ್ಲ; ಕುಡಿತ ಒಂದು ಬಿಟ್ಟರೆ. ಒಂದಲ್ಲ, ಎರಡಲ್ಲ ಬಾಸಿಂಗಬಲದ ಮದುವೆಗಳೇ ನಾಲ್ಕಾಗಿದ್ದವು. ಮೊದಲಿನ ಮೂವರು ಹೆರಿಗೆಯಲ್ಲೇ ಸತ್ತರು, ಊರವರ ನೆನಪಿನಲ್ಲೂ ನಮ್ಮ ಕಥೆಯಲ್ಲೂ ಹೆಸರು ಸಹ ಉಳಿಸಿಕೊಳ್ಳದೆ. ನಾಲ್ಕನೆಯವಳು ನಿಜಗುಣೆವ್ವ. ಕೊಳವಿಯ ಮುದುಕಪ್ಪಗೌಡನ ತಂಗಿ. ಆದರೆ ನಿಜಗುಣೆವ್ವನೂ ಸತ್ತಳು…. ಅದು ಹೇಗೆ: +ಮದುವೆಯಾಗಿ ಕೆಲ ದಿನಗಳಾದ ಮೇಲೆ ಆಕೆ ಗಂಡು ಹೆತ್ತಳು ನಿಜ; ಆದರೆ ಕೂಸು ಸತ್ತು ಬಾಣಂತಿ ಬದುಕಿದಳು. ಗೌಡನಿಗೆ ಆಗ ಹೊಳೆದುಬಿಟ್ಟಿತು; ಇದ್ದಷ್ಟು ದಿನ ಮೊಳಕೈವರೆಗೆ ಸೋರುವಂತೆ ಸುಖವುಂಡು ಸತ್ತರಾಯಿತು, ಎಂದು. ಹೀಗೆಂದು ದುಂದು ದುಂದಾಗಿ ಬದುಕತೊಡಗಿದ. ಆ ಅವಧಿಯ ಅವನ ರಸಿಕತನದ ಕಥೆಗಳೇ ನೂರೆಂಟಿವೆ. ಒಂದೆರಡನ್ನು ಸ್ವಥಾ ಕಗಮವ್ವ ಕವಿಮಾಡಿ ಹಾಡಿದ್ದಾಳೆ. ಗೌಡನೇನೋ ಗಂಡಸು, ಬಿಚ್ಚಿಬಿಟ್ಟ ಕುದುರೆಯ ಹಾಗೆ ಇರಬಲ್ಲ; ನಿಜಗುಣೆವ್ವ? ತನ್ನಿಂದ ಈ ಮನೆತನದ ದೀಪ ಆರುವಂತಾಯಿತಲ್ಲಾ ಎಂದು ಒಳಗೊಳಗೇ ಹಣ್ಣಾದಳು, ಒಣಗಿ ಉತ್ತತ್ತಿಯಾದಳು. ಗಂಡುಹೆಂಡಿರ ಬುದ್ಧಿ ಓಡದಿದ್ದರೇನಾಯಿತು? ಕುಲಕಣ್ಣಿ ದತ್ತಪ್ಪನ ಚಿಂತಾಮಣಿಬುದ್ಧಿ ಸುಮ್ಮನಿರುವದೇ? “ತಾಯವರಽ” ಎಂದು ನಿಜಗುಣೆವ್ವನ ಬಳಿ ಬಂದ. ಲೋಕಾಭಿರಾಮವಾಗಿ ಅದು ಇದು ಮಾತಾಡಿದ. ಪುರಾಣವಾಡಿದ, ದೃಷ್ಟಾಂತ ಹೇಳಿದ. ದತ್ತಕದ ಮಾತೆತ್ತಿದ ‘ಹ್ಯಾಂಗೂ ಬ್ಯಾಡರ ಶಿವಿಗೆ ಗೌಡನಿಂದ ಹುಟ್ಟಿದ ಮಗನಿದ್ದಾನಲ್ಲಾ ಅವನ್ನಽ ಯಾಕ ದತ್ತಕ ತೊಗೋಬಾರದು?’ ಎಂದೂ ಹೇಳಿಬಿಟ್ಟ. +ಶಿವಿಯ ಮಗ ಶಿವನಿಂಗ ಗೌಡನಿಗೇ ಹುಟ್ಟಿದವನೆಂಬ ಗುಲ್ಲು ಗುಟ್ಟೀನದಲ್ಲ. ಗೌಡನಿಗಾಗಿ ಶಿವಿ ಮಾಡಿಕೊಂಡ ಗಂಡನನ್ನೇ ಬಿಟ್ಟು ತೌರುಮನೆಯಲ್ಲೆ ಉಳಿದಿದ್ದಳು. ನಿಜಗುಣೆವ್ವನೇ ಹಟಹಿಡಿದು ಜಗಳವಾಡಿ ಶಿವಿ ಗೌಡನ ತೋಟದ ಕಡೆ ಹೋಗದ ಹಾಗೆ ಬಂದೋಬಸ್ತ ಮಾಡಿದ್ದಳು. ಮೊದಲೇಟಿಗೇ ದತ್ತಪ್ಪನ ಮಾತನ್ನು ಗೌಡತಿ ಒಪ್ಪಲಿಲ್ಲ. ದತ್ತಪ್ಪ ಬಿಡಲಿಲ್ಲ, ಒಂದೆರಡು ದಿನ ಕಳೆದು ಪೂಜಾರಿಯ ಬಾಯಿಯಿಂದಲೂ ಹೇಳಿಸಿಬಿಟ್ಟ. ಆ ಪೂಜಾರಿಗೆ ಯಾವಾಗ ದೇವಿ ಮೈ ತುಂಬುತ್ತದೆ ಯಾವಾಗಿಲ್ಲ ಎಂದು ಹೇಳುವದೇ ಕಷ್ಟ. ತಾನು ಆಡುವದೇನು, ದೇವಿ ನುಡಿಯುವದೇನೆಂದು ಅವನಿಗೂ ತಿಳಿಯದು. ಆಯಿತು, ಕರಿಮಾಯಿಯ ಅಪ್ಪಣೆಯಾಯಿತೆಂದು ಗೌಡ್ತಿ ಒಪ್ಪಿದಳು. ದತ್ತಕವೂ ಆಗಿಬಿಟ್ಟಿತು. +ಶಿವನಿಂಗ ಗೌಡನಿಗೆ ತಕ್ಕ ಮಗ. ಮನೆತನದ ಗೌರವ, ಹಕ್ಕು ಧಿಮಾಕುಗಳಿಗೆ ಯಾವಂದದಿಂದಲೂ ಕುಂದುಬರುವ ಹಾಗೆ ನಡೆದುಕೊಳ್ಳಲಿಲ್ಲ, ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚಾಗಿಯೇ ಗೌಡ್ತಿಯನ್ನು ನೋಡಿಕೊಂಡ. ಶಿವಿಗೆ ತೋಟದ ಗುಡಿಸಲಿನಲ್ಲಿಯೇ ವಾಸಕ್ಕೆ ವ್ಯವಸ್ಥೆ ಮಾಡಿದರು. ಗೌಡ್ತಿ ಶಿವನಿಂಗನ ತೊಡೆಯ ಮೇಲೆ ತಲೆಯಿಟ್ಟು, ‘ಗೌಡನನ್ನು ಬರೋಬರಿ ನೋಡಿಕೋ ಮಗಾ’ ಎಂದು ಹೇಳಿ ಪ್ರಾಣ ಬಿಟ್ಟಳು. ಇದನ್ನು ಜನ ಮೆಚ್ಚಿಕೊಂಡರು. +ಗೌಡ ಹರೆಯದಲ್ಲಿ ಮಾಡಿದ ಕಾರುಬಾರನ್ನು ಎದೆಗೊಟ್ಟು ಒಪ್ಪಿಕೊಂಡನಲ್ಲ; ಕೊನೆಗೆ ಶಿವನಿಂಗನನ್ನು ಮಗನಾಗಿ ತಕ್ಕೊಂಡನಲ್ಲ! ಶಿವನಿಂಗ ಜಾತಿಯಲ್ಲಿ ಬಹಳ ಕಮ್ಮಿ, ತಾಯಿಯ ಕಡೆಯಿಂದ. ಆದರೇನು, ಗೌಡನ ಬೀಜ ತಾನೆ? ಗೌಡ್ತಿಯೂ ಅಷ್ಟೇ. ಮನಸ್ಸು ಮಾಡಿದ್ದರೆ ಅವಳ ಬಳಗದ ಬಳ್ಳಿಯೇನು ಸಣ್ಣದಲ್ಲ; ಅಣ್ಣನ ಮಗ, ತಮ್ಮನ ಮಗ, ಚಿಕ್ಕಪ್ಪನ ಮಗ, ತಂಗಿಯ ಮಗ ಹೀಗೆ ಎಷ್ಟೆಲ್ಲ ಕರುಳಿನ ಹಂದರವಿದ್ದರೂ ಅವರನ್ನೆಲ್ಲ ಬಿಟ್ಟು ಶಿವನಿಂಗನನ್ನೇ ದತ್ತು ತೆಗೆದುಕೊಂಡಳಲ್ಲ-ಇದನ್ನು ಜನ ಮೆಚ್ಚಿದರು. +ನಿಜಗುಣೆವ್ವ ಸತ್ತ ಮೇಲೆ ಗೌಡ ನೆನಪುಗಳಿಗೆ ಹೆದರಿ ಊರಿನ ಮನೆಯಲ್ಲಿ ಮಲಗುವುದನ್ನೇ ಬಿಟ್ಟು ತೋಟದ ಗುಡಿಸಲಲ್ಲೇ ಶಿವಿಯೊಂದಿಗೆ, ಈಗ ಶಿವಸಾನಿಯೊಂದಿಗೆ ಇರತೊಡಗಿದ. ಊರ ಮನೆಯಲ್ಲಿ ಶಿವನಿಂಗ ನಿಜಗುಣೆವ್ವನ ತಾಯಿಯೊಂದಿಗೆ ಇರುತ್ತಿದ್ದ. +ದತ್ತಾತ್ರೇಯನಾಮಾ +ಇಷ್ಟೆಲ್ಲ ಹೇಳಿ ದತ್ತಪ್ಪನ ಬಗ್ಗೆ ಮಾತಾಡದಿದ್ದರೆ ಗೌಡನ ಚರಿತ್ರೆಯೇ ಅಪೂರ್ಣವೆನಿಸಬಹುದು. ಗೌಡ, ಕುಲಕರ್ಣಿ ಎಂಬುದರಿಂದಲ್ಲ. ಲೋಕದ ಯಾವದೇ ಅಣ್ಣತಮ್ಮಂದಿರ ಜೋಡಿಗಿಂತ ಇವರಿಬ್ಬರ ಸಂಬಂಧ ಹೆಚ್ಚು ಆಳವಾಗಿತ್ತು. ಲಗುಮವ್ವನ ಕಥೆಗಳ ‘ರಾಜನ ಮಗ, ಮಂತ್ರಿ ಮಗ’ನಂತೆ ಇಬ್ಬರೂ ಕೂಡಿಯೇ ಬರೆದರು, ಆಡಿದರು, ಸಾಹಸ ಮಾಡಿದರು, ವಯಸ್ಸಾದ ಮೇಲೆ ಊರುಗಾರಿಕೆಯ ಜವಾಬ್ದಾರಿ ಹೊತ್ತು ನಿಭಾಯಿಸಿದರು. +ನೂರು ಜನ ಗೌಡರ ಆಳ್ವಿಕೆಯಲ್ಲಿಯೇ ಯಾವಾಗಲೋ ದತ್ತಪ್ಪನ ಪೂರ್ವಿಕರು ಕರಿಮಾಯಿಯ ಪೂಜೆ ಮಾಡೋದಕ್ಕೆ ಬಂದು ಶಿವಾಪುರದ ಒಕ್ಕಲಾದರೆಂದೂ ದತ್ತಪ್ಪನ ಮುತ್ತಜ್ಜನ ಮಡಿ, ಮೈಲಿಗೆಯನ್ನು ಸಹಿಸದ ಕರಿಮಾಯಿ ಪೂಜಾರಿಕೆಯನ್ನು ಮತ್ತೆ ಶೂದ್ರರಿಗೆ ಕೊಟ್ಟಳೆಂದೂ ಒಂದು ಹಾಡಿದೆ. “ಬ್ರಾಮರಿಂದಲಿ ಪೂಜೆ ಸುದ್ದಾಗೋದಿಲ್ಲೆಂದು! ನಿನ್ನ ಪೂಜಾರಿಕಿ ಸೂದ್ರರಿಗಿ ಕೊಟ್ಟಿ” ಎಂದು. ಆದರೆ ದತ್ತಪ್ಪ ಇದನ್ನೊಪ್ಪುವುದಿಲ್ಲ. ಸಾಮಾನ್ಯವಾಗಿ ಶೂದ್ರ ದೇವರುಗಳೆಲ್ಲ ಬ್ರಾಹ್ಮಣ ಪೂಜಾರಿಯನ್ನು ಬೇಡಿದರೆ ಕರಿಮಾಯಿ ಶೂದ್ರರನ್ನೇ ಕೇಳುವದೆಂದರೇನು? “ಹಾಂಗಲ್ಲ ತಗಿ. ಕುಲಕಣ್ಣಿಕೆ ಮಾಡಾಕಂತಽ ನಮ್ಮ ಪೂರ್ವಿಕರು ಇಲ್ಲಿಗಿ ಬಂದರು. ಹಾಗಂತ ಚಿಂತಾಮಣಿ ಹೇಳೇತಿ” ಎಂದು ಇವನ ಹೇಳಿಕೆ. ಕುಲಕರ್ಣಿಕೆಯ ಜೊತೆಗೆ ಹೊತ್ತಿಗೆ ಹೇಳುವದು, ವೈದ್ಯ ಮಾಡುವದು ಇವು ಆ ಮನೆತನಕ್ಕೆ ಪರಂಪರೆಯಿಂದ ಬಂದಿದೆ. +ಆ ಮನೆತನದ ವಿದ್ಯೆ, ಬುದ್ಧಿ, ವೈದ್ಯ ಇವೆಲ್ಲವನ್ನೂ ಒಳಗೊಂಡ ಒಂದೇ ಒಂದು ಪುಸ್ತಕ ಆ ಮನೆತನದಲ್ಲಿದೆ. ಅದೇ “….ಚಿಂತಾಮಣಿ.” ಅದು ಯಾವುದರ ಚಿಂತಾಮಣಿಯೆಂದು ಅವನಿಗೂ ತಿಳಿಯದು. ಯಾಕೆಂದರೆ ಚಿಂತಾಮಣಿಯ ಹಿಂದಿನ ಶಬ್ಧ ಹರಿದುಹೋಗಿತ್ತು. ಹೀಗಾಗಿ ಚಿಂತಾಮಣಿಯೆಂದೇ ಊರಲ್ಲಿ ಅದರ ಖ್ಯಾತಿಯಿತ್ತು. ಗೌಡ ಆಗಾಗ ಸಮಸ್ಯೆ ಉಂಟಾದಾಗ “ಇದಕ್ಕ ನಿನ್ನ ಚಿಂತಾಮಣಿ ಏನ ಹೇಳತೈತಿ?” ಎನ್ನುತ್ತಿದ್ದ. ಇವನು ಗಂಭೀರವಾಗಿಯೇ ಅದನ್ನು ಓದುತ್ತಿದ್ದ. ದತ್ತಪ್ಪನ ಓದುವ ಶೈಲಿಯೂ ಅವನದೇ-ಅವನ ಚಿಂತಾಮಣಿಯಂತೆ. ಮೂಗಿನ ತುದಿಗೆ ಕನ್ನಡಕ ಏರಿಸಿ, ಭಯಭಕ್ತಿಗಳಿಂದ ಚಪ್ಪಾಗಳಿ ಹಾಕಿಕೊಂಡು, ನಮಸ್ಕಾರ ಮಾಡಿ, ಪುಸ್ತಕ ತೆರೆದು ಒಂದೊಂದೇ ಸಾಲು ಓದುತ್ತಿದ್ದ. ಒಂದು ಸಾಲು ಮುಗಿದೊಡನೇ ಅಲ್ಲಿಗೆ ವಾಕ್ಯ ಮುಗಿಯಲಿ, ಬಿಡಲಿ, ಶಬ್ದ ಮುಗಿದಿರಲಿ, ಮುಗಿಯದಿರಲಿ ಕಣ್ಣುಮುಚ್ಚಿ ಸುಮ್ಮನೇ ಕೂತು ಆ ಸಾಲಿನ ಅರ್ಥವನ್ನು ಮೊದಲು ತಂತಾನೇ ತಿಳಿದುಕೊಂಡು ಆಮೇಲೆ ಎರಡನೇ ಸಾಲಿಗೆ ಹೋಗುತ್ತಿದ್ದ. ಅದೂ ಎಂಥ ವಿಚಿತ್ರ ಪುಸ್ತಕ ಎಂದರೆ, ಯಾರು ಏನು ಕೇಳಿದರೂ ಅದರಲ್ಲಿ ಬರೋಬ್ಬರಿ ಉತ್ತರ ಸಿಕ್ಕುತ್ತಿತ್ತು. ಅದರಲ್ಲಿಯ ಸಾಲುಗಳಿಂದ ಯಾವಾಗ ಬೇಕೋ ಆವಾಗ ಸಂದರ್ಭಕ್ಕೆ ತಕ್ಕ ಅರ್ಥ ಹಿಂಡುತ್ತಿದ್ದ. ಹೀಗಾಗಿ ಪುಸ್ತಕ ಹಿಡಿದಾಗ ಇವನ ಕೈ ನಡುಗುತ್ತಿತ್ತಲ್ಲ. ಇವನ ಅರ್ಥಕ್ಕೆ ಆ ಚಿಂತಾಮಣಿಯೇ ನಡುಗಿದ ಹಾಗೆ ಕಾಣುತ್ತಿತ್ತು. +ಕನ್ನಡಕ ಹಾಕುತ್ತಿದ್ದನಲ್ಲ. ಅವನ ಕಣ್ಣು ಮಂದವಾಗಿದ್ದವೆಂದು ಇದರರ್ಥವಲ್ಲ. ಅವರಪ್ಪ ಕನ್ನಡಕ ಹಾಕಿಕೊಂಡು ಆ ಪುಸ್ತಕ ಓದುತ್ತಿದ್ದ. ಆದ್ದರಿಂದ ಇವನೂ ಹಾಗೇ ಓದುತ್ತಿದ್ದ ಅಷ್ಟೇ. ಆ ಕನ್ನಡಕ ಅವನಿಗೆ ಅಂಜನದಷ್ಟು ಪ್ರಭಾವಶಾಲಿಯಾಗಿ ಕಂಡಿತು. ಯಾಕೆಂದರೆ ಕನ್ನಡಕ ಹಾಕಿದಾಗ ಪುಸ್ತಕದಲ್ಲಿ ಇಲ್ಲದ ಅರ್ಥಗಳೂ ಅವನಿಗೆ ಕಾಣಿಸುತ್ತಿದ್ದವು. +ಹಾಗಂತ ಓದುಬರಹದಲ್ಲಿ ದತ್ತಪ್ಪ ದಡ್ಡನೆಂದಲ್ಲ. ತನ್ನ ಹೌದೆಂಬೋ ಹಂಗಾಮದಲ್ಲಿ ಅವನೊಂದು ಕಾವ್ಯ ಕೂಡ ಮಾಡಿದ್ದ ಸಂಗತಿ ಅನೇಕರಿಗೆ ತಿಳಿದಿಲ್ಲ. ನಾಕನೇ ಇಯತ್ತೆ ಇತಿಹಾಸದಲ್ಲಿ ದಿಲ್ಲಿಯನ್ನಾಳಿದ ಬಾಬರನೆಂಬ ದೊರೆ “ಬಾಬರ ನಾಮಾ” ಎಂಬುದಾಗಿ ಒಂದು ಆತ್ಮಚರಿತ್ರೆ ಬರೆದಿದ್ದ ಸಂಗತಿಯನ್ನು ಓದಿದ್ದ. ಹಾಗೇ ತಾನೂ ಯಾಕೆ ತನ್ನ ಆತ್ಮಕಥೆ ಬರೆಯಬಾರದು? ಎನ್ನಿಸಿತು. ಪಾಪ; ಮೂರು ತಿಂಗಳು, ಹಗಲು, ರಾತ್ರಿ ಕೂತು ಭಾಮಿನಿ ಷಟ್ಪದಿಯಲ್ಲಿ ಮುನ್ನೂರು ಪುಟದ ಆತ್ಮಕಥೆ “ದತ್ತಾತ್ರೇಯನಾಮಾ” ಬರೆದೇ ಬಿಟ್ಟ! ಅದನ್ನಿನ್ನು ಯಾರಿಗಾದರೂ ಓದಬೇಕಲ್ಲ. ಗೌಡನ ಒಡ್ಡೋಲಗಕ್ಕೆ ತಗೊಂಡು ಹೋದ. ಆಸ್ಥಾನ ಕವಯತ್ರಿ ಲಗಮವ್ವನೂ, ಮಹಾಪಂಡಿತ ಪ್ರಶ್ನೋತ್ತರ ಮಾಸ್ತರನೂ ಆಗಲೇ ಆಸೀನರಾಗಿದ್ದರು. ‘ದತ್ತಾತ್ರೇಯನಾಮಾ’ದ ಕಥೆ ಹೀಗೆ ಸುರುವಾಗುತ್ತದೆ: +ಶಿವಾಪುರದಲ್ಲಿ ಕಲಿಕಾಲ ಪ್ರವೇಶಿಸಿ, ಭಕ್ತಿ ನಾಶವಾಗಿ ಪಾಪ ಹೆಚ್ಚಾಯಿತು. ಕರಿಮಾಯಿ ಶಿವನ ಬಳಿ ಓಡಿಹೋಗಿ “ನಿನ್ನ ಅವತಾರ ತೋರಿಸಿ ಪಾಪದಿಂದ ನನ್ನ ಊರನ್ನು ಪಾರುಮಾಡು” ಎಂದು ಮೊರೆಯಿಟ್ಟಳು. ಕೂಡಲೇ ಶಿವ ದತ್ತಾತ್ರೇಯನೆಂಬ ಗಣನನ್ನು ಕರೆದು, “ಶಿವಾಪುರದಲ್ಲಿ ಜನಿಸಿ ಭಕ್ತಿಯನ್ನು ಬೆಳಗಿ ಬಾ” ಎಂದು ಕಳಿಸಿದನಂತೆ. ಅವನೇ ನಮ್ಮ ದತ್ತಪ್ಪನಂತೆ! +ಕಾವ್ಯದ ಸುರುವಿಗೇ ಗೌಡ ‘ಹೋ’ ಎಂದು ನಗಲಾರಂಭಿಸಿದ. ಲಗಮವ್ವ ಬಿದ್ದು ಬಿದ್ದು ನಕ್ಕಳು. ದತ್ತಪ್ಪನಿಗೆ ಅವಮಾನವಾಯಿತು. +“ಏ ಗೌಡಾ, ನಿನ್ನ ಮಡ್ಡ ತಲೀಗಿ ಇಂಥಾ ಕಾವ್ಯ ಹೆಂಗ ತಿಳಿದೀತಲೆ” ಅಂದ. ಲಗಮವ್ವನ ಕಡೆ ತಿರುಗಿ- +“ಇವಳ್ಹೆಂಗ ನಗತಾಳ ನೋಡೋ, ಏ ಹುಚರಂಡೇ, ನಿನ್ನ ಜನ್ಮದಾಗ ಒಂದು ಭಾಮಿನಿ ಷಟ್ಪದಿ ಬರಿಯೇ ಹೌದಂತೀನಿ. ಇಡೀ ಜಗತ್ತಿನ್ಯಾಗ ದೀಡ ಸಾವಿರ ಭಾಮಿನೀ ಷಟ್ಪದಿ ಯಾ ಮಗಾ ಬರದ್ದಾನ ತೊರಿಸಿಕೊಡೇ” ಎಂದು ಹೇಳುತ್ತ. +“ಗೌಡಾ, ನಿನಗ ಈ ಹುಚ್ಚರಂಡೀ ಹಾಡಿಗಿಂತ ತನ್ನ- “ದತ್ತಾತ್ರೇಯನಾಮಾ” ಕಡೇ ಆಯ್ತಲೋ!” ಎಂದು ಹೇಳಿಕೊಳ್ಳುತ್ತ ಅಲ್ಲಿ ನಿಲ್ಲದೇ ತನ್ನ ಕಾವ್ಯ ತಗೊಂಡು ಭರ್ರನೇ ಹೋಗಿಬಿಟ್ಟ. ಪ್ರಶ್ನೋತ್ತರಮಾಸ್ತರನಿಗೆ ಕಾವ್ಯ ಇಷ್ಟವಾಗಿತ್ತು. ಯಾಕೆಂದರೆ ಒಂದೇ ಒಂದು ಭಾಮಿನಿ ಷಟ್ಪದಿ ಹೊಸೆಯುವದು ಎಷ್ಟು ಕಷ್ಟ ಅಂತ ಅವ ಬಲ್ಲ. ಇನ್ನು ದೀಡ ಸಾವಿರ ಷಟ್ಪದಿಗಳೆಂದರೆ! ಆದರೆ ತನ್ನ ಅಭಿಪ್ರಾಯ ಹೇಳುವ ಮೊದಲೇ ದತ್ತಪ್ಪ ಎದ್ದುಹೋಗಿದ್ದ. +ಮುಂದೆ ಎಂಟು ದಿನ ದತ್ತಪ್ಪ ಗೌದನ ಮುಖ ನೋಡಲಿಲ್ಲ. ‘ದತ್ತಾತ್ರೇಯನಾಮಾ’ದ ವಿಷಯ ಅಲ್ಲಿಗೆ ಎಲ್ಲರೂ ಮರೆತರು. ಯಾವಾಗಲೋ ಒಮ್ಮೆ ಲಗಮವ್ವ ಕೇಳಿದಾಗ ದತ್ತಪ್ಪ ಕಳೆದುಹೋಯ್ತೆಂದು ಹೇಳಿದ. ಅದು ಹೇಗೆ ಕಳೆದುಹೋಯ್ತೆಂಬ ಬಗೆಗೆ ಲಗಮವ್ವ ಹೇಳುವದು ಹೀಗೆ: +ಕಾವ್ಯ ವಾಚನದ ಮಾರನೆಯ ದಿನವೂ ದತ್ತಪ್ಪ ಮತ್ತೆ ಗೌಡನಿಗೆ ದುಂಬಾಲು ಬಿದ್ದನಂತೆ! “ಇದರಾಗ ಅದೇನ ಕಸರೈತಿ ತೋರಿಸಿಕೊಡೋ” ಅಂದನಂತೆ. ಗೌಡ “ಬಿಡೋ ದತ್ತೂ ಏನ ಹುಡುಗಾಟ” ಅಂದರೆ, “ಲೇ ನೀನಲ್ಲೋ ನನ್ನ ಕಾವ್ಯಕ್ಕ ಭೇಷ್ ಅನ್ನೋವನು; ಕರಿಮಾಯಿ, ಕರಿಮಾಯಿ! ಬಾ ತೋರಸ್ತೀನಿ” +-ಎಂದವನೇ ಗೌಡನನ್ನು ದರದರ ಎಳೆದುಕೊಂಡು ಕೆರೆಗೆ ಹೋದನಂತೆ. ಮೈಯಲ್ಲಿ ಆವೇಶ ತುಂಬಿದವರಂತೆ “ಕರಿಮಾಯೀ” ಎಂದು ಜೋರಿನಿಂದ ಕೂಗುತ್ತ ಎರಡೂ ಕೈಯಿಂದ ಕಾವ್ಯ ಹಿಡಿದು ಎತ್ತಿ, +ಕರಿಮಾಯೀ ಈ ಕಾವ್ಯದಾಗ ಸತ್ವ ಇದ್ದರ ಇದನ್ನ ತೇಲಿಸು. ಇಲ್ಲಾದರ ಮುಳಗಸು” ಎಂದವನೇ ಕೆರೆಯಲ್ಲಿ ಕಾವ್ಯ ಬಿಟ್ಟುಬಿಟ್ಟ! ಆಹಾ, ಕರಿಮಾಯಿಯ ಮಹಿಮೆಯೆಂದರೆ ಇದಲ್ಲವೆ? ಕಾವ್ಯ ಮುಳುಗಿಬಿಟ್ಟಿತು! +-ಅಂತೆ. ಹೀಗೆಂದು ಲಗುಮವ್ವ ಹೇಳುತ್ತಾಳೆ. ಇದರಲ್ಲಿ ಸುಳ್ಳೆಷ್ಟೋ, ಖರೆಯೆಷ್ಟೋ! ಅಂತೂ ಅಂದಿನಿಂದ ಲಗುಮವ್ವನ ಹಾಡು ಹೌಂದು ಅಂದದ್ದಕ್ಕೆಲ್ಲ ಚಿಂತಾಮಣಿ ಅಲ್ಲವೆನ್ನುತ್ತದೆ. ಇಬ್ಬರಿಗೂ ವೈರವಿದೆಯೆಂದು ಇದರರ್ಥವಾಗಬಾರದು. ಅಷ್ಟೇ ಏನು, ಒಳಗೊಳಗೇ ಒಂದು ನಮೂನಿ ಸ್ನೇಹವೇ ಇದೆ. ದತ್ತಪ್ಪನ ಮನೆಯಲ್ಲಿ ಹೊಸ ಉಪ್ಪಿನಕಾಯಿ ಹಾಕಲಿ-ಆ ‘ಹುಚ್ಚರಂಡಿ’ಯನ್ನು ಕರೆಸಿ ಒಂದು ಗಡಿಗಿ ಉಪ್ಪಿನಕಾಯಿ ಕೊಟ್ಟನೇ; ಹಬ್ಬ ಹರಿದಿನದ ಅಡಿಗೆಯಾಗಲಿ, ಆ ಹುಚ್ಚರಂಡಿಗೆ ಕರೆ ಹೋಯಿತೇ. ಲಗಮವ್ವನೂ ಅಷ್ಟೇ, ಹೋಳಿ ಹಬ್ಬದಲ್ಲಿ “ಆಯ್ ನನ ಹಾರುವಾ” ಎನ್ನುತ್ತಾ ಅವನನ್ನು ಅಟ್ಟಿಸಿಕೊಂಡು ಹೋಗಿ ಬಣ್ಣ ಗೊಜ್ಜುವದು. ಚಂಡಿಕೆ ಮುಟ್ಟಿ ಲಟಿಕೆ ಮುರಿಯುವದು ಯಾರಿಗೆ ಗೊತ್ತಿಲ್ಲ? ಹೋಗಲು “ಆಯ್ ನನ ಹಾರುವಾ” ಎಂದು ಅವಳೆಂದಾಗ ಅದರ ಶ್ಲೇಷೆಯನ್ನು ಜನಕ್ಕೆ ಹೇಳಿಕೊಡಬೇಕೊ? +ಊರ ಹಿರಿಯರೆಂದರೆ ಇವರೇ-ಗೌಡ, ದತ್ತಪ್ಪ, ಲಗಮವ್ವ, ಪೂಜಾರಿ, ಬಾಳೂ, ಬಸೆಟ್ಟಿ; ಅದರಲ್ಲೂ ಮುಖ್ಯವಾಗಿ ಗೌಡ ದತ್ತಪ್ಪ, ಇವರ ಮೇಲಿನ ವಿಶ್ವಾಸದಿಂದ ಉಳಿದವರು ಹಿರಿತನಕ್ಕೆ ಹಾಜರಿದ್ದರೂ ಸೈ, ಇರದಿದ್ದರೂ ಸೈ-ಇವರು ಹೇಳಿದ್ದಕ್ಕೆ ಸೈಗೊಡುತ್ತಿದ್ದರು. ಗೌಡ ವ್ಯವಹಾರ ತಿಳಿದವ. ವಹಿವಾಟು ಬಲ್ಲವ. ಜನಗಳನ್ನು ನಂಬುವವ. ದತ್ತಪ್ಪ ಸಿಡಿಕಿನವ. ಸ್ವಲ್ಪ ವಾಚಾಳಿ. ಕವಿಯಾದುದರಿಂದ ವ್ಯಂಗ್ಯವನ್ನೂ ಬಲ್ಲ. ಜೊತೆಗೆ ಹಾಸ್ಯದ ಸೊಗಸುಗಾರ….ಹೊರಗೆ ನಗಲಾರದಿದ್ದರೂ ಒಳಗೆ ನಗುತ್ತಿದ್ದ. ಇನ್ನು ಜನ ಕುಳ್ಳರಲ್ಲ, ಮುಪ್ಪಿಗೂ ಬಾಗಿದವರಲ್ಲ, ಸೊಂಟ ನೆಟ್ಟಗಿರುವ, ಸಮಕರಿದು ವರ್ಣದವರು. ಕಣ್ಣಿನಲ್ಲಿ ನಂಬಿಕೆ, ಕಿಲಾಡಿತನ ಎರಡು ಇರುತ್ತವೆ. ಗೌಡ ದತ್ತಪ್ಪನ ಆಳಿಕೆಯಲ್ಲಿ ಜನ ಅನ್ಯಾಯವಾಯಿತು ಅನ್ನಲಿಲ್ಲ. ಕಾಲ ಬದಲಾಯಿತು, ಅನ್ನಲಿಲ್ಲ. ಕಲಿಕಾಲ ಕಾಲಿಟ್ಟಿತು ಅನ್ನಲಿಲ್ಲ-ಹಾಗಿದ್ದರು. ಸೇರು ಇದ್ದಲ್ಲಿ ಹೇರಾಯಿತು. ಒಂದಿದ್ದಲ್ಲಿ ನೂರಾಯಿತು, ಸಾವಿರವಾಯಿತು. ಊರು ಎಷ್ಟು ಸಮೃದ್ಧವಾಗಿ ಬೆಳೆಯಿತೆಂದರೆ-ಜನಸಂಖ್ಯೆ ಜಾಸ್ತಿಯಾಗಿ ನಿಮ್ಮ ಊರಿಗೊಂದು ಗ್ರಾಮ ಪಂಚಾಯತಿ ಮಾಡಿಕೊಳ್ಳಿರೆಂದು ಸರ್ಕಾರದಿಂದ ಕಾಗದ ಬಂತು. +ಕಲಿಕಾಲ ಕಾಲಿಟ್ಟಿತು +ಸರ್ಕಾರಿ ಕಾಗದ ಬಂದಿತಲ್ಲ, ಆಗಷ್ಟೇ ಗುಡಸೀಕರ ಬೆಳಗಾವಿಯಲ್ಲಿ ಎಲ್.ಎಲ್.ಬಿ.ಮುಗಿಸಿ ಬಂದಿದ್ದ. ವಕೀಲ ಸುರುಮಾಡಬೇಕೆಂದರೆ ಅದು ಶಿವಾಪುರದಂಥ ಊರಿನಲ್ಲಿ ಹೇಗೆ ಸಾಧ್ಯ? ಅದಕ್ಕವನು ಬೆಳಗಾವಿಗೆ ಹೋಗಿರಬೇಕು. ಆದರೆ ಆಗೆಲ್ಲ ಸ್ವಾತಂತ್ರ್ಯ ಚಳುವಳಿಯ ಕಾಲ. ಕೋರ್ಟು ಕಛೇರಿಗಳೇ ಸುಟ್ಟು ಹೋಗುತ್ತಿದ್ದಾಗ ಇವನ ವಕೀಲ ಯಾರು ಕೇಳಬೇಕು? ಅದೇ ವರ್ಷ ಅವನ ತಂದೆ ತೀರಿಹೋದುದರಿಂದ ಊರಿನಲ್ಲೇ ಹೊಲಮನೆ ನೋಡಿಕೊಂಡು ಇರಬೇಕಾಯ್ತು; ಇದ್ದ. +ಆತ ಹಾಗೆ ಇದ್ದದ್ದು ಗೌಡನಿಗೆ ಅನುಕೂಲವಾಗಿಯೇ ಕಂಡಿತು. “ಹೇಗೂ ಪಂಚಾಯ್ತಿ ಮಾಡಿಕೊಳ್ಳಿರಿ” ಎಂದು ಸರ್ಕಾರಿ ಪತ್ರ ಬಂದಿದೆ. ಅದಕ್ಕೆಲ್ಲ ಇಂಗರೇಜಿ ಓದುಬರಹ ಬಲ್ಲವರಿದ್ದರೆ ಒಳ್ಳೆಯದು. ತಮ್ಮಂಥವರಿಂದೇನಾದೀತು? ಇಂಥದಕ್ಕೆ ಗುಡಸೀಕರನೇ ಯೋಗ್ಯನೆಂದು ತೀರ್ಮಾನಿಸಿ ಹಾಗೆಂದು ಊರ ಹಿರಿಯರಿಗೂ ಪಂಚರಿಗೂ ಹೇಳಿಬಿಟ್ಟ. +“ಏನಂಬೋ ಮಾತು ಗೌಡರ, ಇನ್ನ ತಲೀಮ್ಯಾಲಿನ ಮಾಂಸ ಆರಿಲ್ಲ. ಅವಕ್ಕೆಲ್ಲಾ ಇಂಥಾ ಜವಾಬ್ದಾರಿ ಹೊರಿಸಿದರ ತಡದಾವೇನ್ರೀ?” ಎಂದು ಅನೇಕರು, ಯಾಕೆ- ದತ್ತಪ್ಪ ಕೂಡ ಕೇಳಿದ್ದರು. “ಒಂದಿಷ್ಟು ದಿನಾ ಆದಮ್ಯಾಲ ತಾವಽ ದಾರಿಗಿ ಬರ್ತಾರ. ಊರಗಾರಿಕಿ ಹೋಗಬರೋದೆಲ್ಲಾ ಇನ್ನ ಮ್ಯಾಲ ಅವರಿಗೇ ಸೇರಬೇಕಾದ್ದಲ್ಲೇನ್ರೊ?” ಎಂದು ಗೌಡ ಎಲ್ಲರನ್ನೂ ಒಪ್ಪಿಸಿದ್ದ. +ಆಯ್ತುಃ ಕೊನೆಗೂ ಗೌಡನ ಇಚ್ಛೆಯಂತೆ ಚುನಾವಣೆಯಿಲ್ಲದೇ ಗುಡಸೀಕರ ಸರಪಂಚ (ಚೇರ್‍ಮನ್) ಆಗಿಯೂ ತನ್ನ ಸರಿಕರಾದ, ಶಿವಾಪುರದ ಕನ್ನಡ ಗಂಡು ಮಕ್ಕಳ ಶಾಲಾದ ಒಂದೆರಡು ಇಯತ್ತೆ ಕಲಿತುಬಿಟ್ಟ ನಾಲ್ಕು ಹುಡುಗರನ್ನು ಮೆಂಬರರಾಗಿಯೂ ನೇಮಿಸಲಾಯಿತು. ಕರಿಮಾಯಿ ಗುಡಿಯಹಿಂಭಾಗದ ಖಾಲಿಬಿದ್ದ ನಗಾರಿಖಾನೆಯನ್ನು ಪಂಚಾಯ್ತಿ ಆಫೀಸೆಂದೂ ಕರೆಯಲಾಯಿತು. ಆದರೆ ಇದರಿಂದ ಊರಲ್ಲಿ ಕೆಲವು ಬದಲಾವಣೆಗಳಾದುದು ನಿಜ: +(ಆ) ಗುಡಸೀಕರನ ಅಡ್ಡ ಹೆಸರು “ಗುಡಸ್ಯಾಗೋಳ” ಎಂದು. ಕುಲಕರ್ಣಿ ದತ್ತಪ್ಪನ ದಪ್ತರುಗಳಲ್ಲಿದ್ದದ್ದೂ ಇದೇ ಹೆಸರು. ಜನ ಅದನ್ನು ಸಂಕ್ಷೇಪಿಸಿ “ಗುಡಸ್ಯಾ” ಅನ್ನುತ್ತಿದ್ದರು. ಅವರಪ್ಪ ಜೀವಂತವಾಗಿದ್ದಾಗ ಅನೇಕರಿಗೆ ಬಡ್ಡಿಗೆ ಹಣ ಕೊಟ್ಟು ಅವರ ಮನೆ ಮುರಿದು ಮಠ ಮಾಡಿ ಗುಡಿಸಿದವನಾದ್ದರಿಂದ ಜನ “ಗುಡಸು” ಎಂದೇ ಕರೆಯುತ್ತಿದ್ದರು. ಈಗ ಸರಪಂಚ ಆದ ಮೇಲೆ ಅದು “ಗುಡಸೀಕರ್” ಎಂದು ಬದಲಾಯಿತು. ಹಾಗೂ ಇನ್ನೂ ಪೂರ್ವೀ ಹೆಸರಿನಿಂದಲೇ ಕರೆದವರನ್ನು ಹೀನಾಯವಾಗಿ ಬೈದು ಅವಮಾನಿಸಲಾಯಿತು. ಆದ್ದರಿಂದ ನಾವೂ ಸದರಿ ಗುಡಸುನನ್ನು ಗುಡಸೀಕರನೆಂದೇ ಕಥೆಯಲ್ಲಿ ಸಂಬೋಧಿಸೋಣ. +(ಬ) ಗುಡಸೀಕರನ ಮನೇ ಮುಂದೆ “ಜೆ.ಎಚ್. ಗುಡಸೀಕರ, ಬಿ.ಎ.ಎಲ್.ಎಲ್.ಬಿ.ಗ್ರಾಮ ಪಂಚಾಯತಿ ಸರಪಂಚ ಬೆಳಗಾಂ ಡಿಸ್ಟ್ರಿಕ್ಟ್”- ಎಂಬುದಾಗಿ ಒಂದು ಇಂಗ್ಲಿಷ್ ಬೋರ್ಡು ಬಂತು. ಗುಡಸೀಕರನನ್ನು ಬಿಟ್ಟೂ ಅದನ್ನು ಯಾರೂ ಓದಲಿಲ್ಲ. ಮತ್ತು ಓದುವದು ಸಾಧ್ಯವಿರಲಿಲ್ಲ. ಊರವರೆಲ್ಲ ಅವನ ಮನೆಯ ಮುಂದೆ ತಾಸರ್ಧತಾಸು ನಿಂತು, ನಿಂತು ಆ ಬೋರ್ಡು ನೋಡಿಬಂದರು. ಹಚ್ಚಿದ ಹದಿನೈದು ದಿನಗಳಂತೂ ದಿನಬೆಳಗಾದರೆ ಮಕ್ಕಳ ಹಿಂಡೊಂದು ಆ ಬೋರ್ಡು ನೋಡುತ್ತ ನಿಂತಿರುತ್ತಿತ್ತು. ಅದನ್ನು ಓದಿದವರಿಗೆ ಐನೂರು ರೂಪಾಯಿ ಬಹುಮಾನ ಕೊಡುವುದಾಗಿ ಇಷ್ಟರಲ್ಲೇ ಗುಡಸೀಕರ ಡಂಗುರ ಸಾರಲಿದ್ದಾನೆಂದು ಹೊಲಗೇರಿಯಲ್ಲಿ ಸುದ್ದಿಯಿತ್ತು. +(ಕ)ಪಂಚಾಯ್ತಿ ಆಫೀಸಿನಲ್ಲಿ ಕೆಲಸವಂತೂ ಇರಲಿಲ್ಲವಲ್ಲ; ಅಧವಾ ಇದ್ದರೂ ಇವರಿಗೆ ಗೊತ್ತಿರಲಿಲ್ಲವಲ್ಲ; ಆದ್ದರಿಂದ ಮೆಂಬರರು ಮೀಟಿಂಗ್ ಕೂಡಿದಾಗೊಮ್ಮೆ ಇಸ್ಪೀಟಾಟ ಆಡುತ್ತಿದ್ದರು. ಹೀಗಾಗಿ ಇಸ್ಪೀಟಾಟಕ್ಕೆ ‘ಮೀಟಿಂಗ್’ ಎಂಬ ಹೊಸ ಹೆಸರು ಬಂತು. ಮತ್ತು ಸದರಿ ಮೀಟಿಂಗುಗಳು ಒಮ್ಮೊಮ್ಮೆ ರಾತ್ರಿ ಹನ್ನೆರಡು ಗಂಟೆಯವರೆಗೂ ನಡೆಯುತ್ತಿದ್ದವು. +(ಡ) ಇದರಲ್ಲಿ ಗುಡಸೀಕರ್ ಸಂತೋಷಗೊಳ್ಳುವ ಸಂಗತಿಗಳೂ ಇದ್ದವು. ಇವರೇನು ಬರೆಯುತ್ತಿದ್ದರೋ, ಬಿಡುತ್ತಿದ್ದರೋ ಸರ್ಕಾರದವರಂತೂ ಇವರಿಗೆ ಪತ್ರ ಬರೆಯುತ್ತಿದ್ದರಲ್ಲ, ಬಂದ ಪತ್ರಗಳು ಇಂಗ್ಲೀಷಿನಲ್ಲಿರುತ್ತಿದ್ದವು. ಗುಡಸೀಕರ ಆ ಪರ್ತವನ್ನು ಎಲ್ಲರೆದುರಿಗೆ ಜೋರಿನಿಂದ ಓದುತ್ತಿದ್ದ. ಓದುತ್ತಿದ್ದನಲ್ಲ ಅಂತೂ ಒಂದು ವಿಚಿತ್ರ ರೀತಿಯ ಟಿಸ್‌ಪಿಸ್ ಮಾಡುತ್ತಿದ್ದನಲ್ಲ. ಜನ ಬೆಕ್ಕಸಬೆರಗಾಗಿ ತೆರೆದ ಬಾಯಿ ತೆರೆದಂತೆ ಕೇಳುತ್ತ ಕೂರುತ್ತಿದ್ದರು. +ಇದಕ್ಕಿಂತ ವಿಚಿತ್ರವೆಂದರೆ ಪತ್ರಿಕಾವಾಚನ. ಗುಡಸೀಕರ ಮೂರೋ ಆರೋ ತಿಂಗಳಿಗೊಮ್ಮೆ ಬೆಳಗಾವಿಗೆ ಹೋಗಿಬರುತ್ತಿದ್ದ. ಹೋದಾಗೊಮ್ಮೆ ತಪ್ಪದೆ ಇಂಗ್ಲಿಷ್ ದಿನಪತ್ರಿಕೆ ತರುತ್ತಿದ್ದ. ಇನ್ನೊಮ್ಮೆ ಬೆಳಗಾವಿಗೆ ಹೋಗಿ ಹೊಸ ಪೇಪರ್ ತರುವವರೆಗೆ ಅದೇ ಗತಿ. ಮಧ್ಯಾಹ್ನ ಊಟವಾದ ಮೇಲೆ ಸಾಮಾನ್ಯವಾಗಿ ಒಬ್ಬನೇ ಮಹಡಿಯ ಮೇಲೆ ಕೂತು ಜೋರಿನಿಂದ, ಒಂದು ಕೂಗಳತೆಯವರೆಗೆ ಕೇಳಿಸುವಂತೆ ಓದುತ್ತಿದ್ದ. ಆಗಂತೂ ಆಜುಬಾಜೂ ಮನೆಯ ಅವ್ವಕ್ಕಗಳು ಮಕ್ಕಳು ಓಡಿ ಬಂದು ಕೆಳಗಡೆ ಗುಂಪು ಗುಂಪಾಗಿ ನಿಂತು ಅವನ ಟಿಸ್‌ಪಿಸ್ ಕೇಳುತ್ತಿದ್ದರು. ಇದು ಗೊತ್ತಾಗಿ ಗುಡಸೀಕರ ಇನ್ನಷ್ಟು ಗತ್ತಿನಿಂದ ಓದುತ್ತಿದ್ದ. ಇದರಿಂದಾಗಿ ಊರ ಹೆಂಗಸರಲ್ಲಿ ಕೆಲವು ಜನಪದ ಕಥೆಗಳು ಹುಟ್ಟಿ ಹಬ್ಬಿದವು: +(೧) ಗುಡಸೀಕರನ ಇಂಗ್ಲಿಷ್ ಕೇಳಿ ಬೆಳಗಾವಿಯ ಬಿಳೀ ಚರ್ಮದ ಒಬ್ಬ ಇಂಗರೇಜಿ ಮೇಡಮ್ಮನು ನಡುರಸ್ತೆಯಲ್ಲೇ ಇವನನ್ನು ಅಡ್ಡಗಟ್ಟಿ ತನ್ನನ್ನು ಮದುವೆಯಾಗಬೇಕೆಂದು ಕೇಳಿಕೊಂಡಳಂತೆ! ಆದರೆ ಇವಳನ್ನು ಕಟ್ಟಿಕೊಂಡರೆ ತಾನು ತಂದೆತಾಯಿಗಳನ್ನು ಬಿಟ್ಟು ಪರದೇಶಕ್ಕೆ, ಸಮುದ್ರದಾಟಿ ಹೋಗಬೇಕಾಗುವದಲ್ಲಾ ಎಂದು ಒಲ್ಲೆ ಎಂದನಂತ. +(೨) (ಅ) ಗೋಕಾಕ ಫಾಲ್ಸದ ಮಾಲೀಕನ, ಅವನೂ ಇಂಗ್ರೇಜಿಯವನೇ- ಮಗಳು ಒಂದು ದಿನ ಕಾರಿನಲ್ಲಿ ಕೂತು ಇವನು ಓದುವ ಕಾಲೇಜಿಗೆ ಹೋಗಿ ಮನೆಗೆ ಕರೆದೊಯ್ದಳು. ಅದೋ ಶಿವಾಪುರದಷ್ಟು ದೊಡ್ಡ ಬಂಗಲೆ! ಇಬ್ಬರೂ ಕೈ ಕೈ ಹಿಡಿದು ಕುಣಿಯುತ್ತಿದ್ದರಂತೆ. ಅಷ್ಟರಲ್ಲಿ ಅವಳ ತಂದೆಬಂದು “ಅಪಾ ಗುಡಸೀಕರಾ, ನನ್ನ ಮಗಳ್ನ ಮದಿವ್ಯಾಗೋ, ನಿನಗೆ ಈ ಫಾಲ್ಸ ಎಲ್ಲಾ ಬರಕೊಟ್ಟ, ಮ್ಯಾಲ ನಿನ್ನ್ನ ಹಸರ ನೋಟಿನ್ಯಾಗ ಮುಚ್ಚತೇನೋ”- ಎಂದು ಇಂಗ್ಲೀಷಿನಲ್ಲಿ ಹೇಳೀದನಂತೆ! ರೊಕ್ಕ ರೂಪಾಯಿ ಸಿಕ್ಕಾವು. ಒಮ್ಮೆ ಜಾತಿ ಕೆಟ್ಟರೆಹೋದ ಜಾತಿ ಸಿಕ್ಕುವದೇ? ಎಂದು ಯೋಚಿಸಿ ಗುಡಸೀಕರ “ಸಾಧ್ಯವಿಲ್ಲಾ” ಎಂದು ಇಂಗ್ಲೀಷಿನಲ್ಲಿ ಹೇಳಿದನಂತೆ! +(ಬ) ಈ ಕಥೆಯ ಇನ್ನೊಂದು ಪಾಠಾಂತರ ಕೆಳಗಿನ ಓಣೆಯಲ್ಲಿದೆ. ಅದರ ಪ್ರಕಾರ ಗುಡಸೀಕರ ಒಲ್ಲೆನೆಂದ ತಕ್ಷಣವೇ ಹುಡುಗಿ ಅತ್ತು ಕರೆದು ಕೊನೆಗೆ ಇವನಿಗೊಂದು ಕೈಗಡಿಯಾರ ಕೊಟ್ಟು ಮುದ್ದಿಸಿದಳಂತೆ. ಈಗ ಗುಡಸೀಕರನ ಗಡಿಯಾರ ಇದೆಯಲ್ಲ, ಆ ಹುಡುಗಿಯೇ ಕೊಟ್ಟದ್ದಂತೆ. +ಆಶ್ಚರ್ಯವೆಂದರೆ ಈ ಕಥೆಗಳು ಸ್ವತಃ ಗುಡಸೀಕರನ ಕಿವಿಯ ಮೇಲೆ ಬಿದ್ದಾಗಲೂ ಅಲ್ಲಗಳೆಯಲಿಲ್ಲ. ನಕ್ಕು ಸುಮ್ಮನಾದನಷ್ಟೇ. ಹೀಗಾಗಿ ಜನಪದ ಕಥೆಗಳೆಲ್ಲ ನಿಜವಾದ ಘಟನೆಗಳಾಗಿ ಬಿಟ್ಟವು. +ಹೀಗಂದರೆ ಗುಡಸೀಕರ ಸಣ್ಣ ಮನುಷ್ಯನೆಂದು ಇದರರ್ಥವಲ್ಲ. ಊರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕೆಂದು ಅಥವಾ ಅವನ ಮಾತಿನಲ್ಲಿಯೇ ಹೇಳುವುದಾದರೆ “ಊರು ಮುಂದೆ ತರಬೇಕೆಂ”ದು ಅವನಿಗೆ ನಿಜವಾಗಿಯೂ ಆಸೆಯಿತ್ತು. ತನ್ನ ಬಳಿ ಬಂದ ಮೆಂಬರರಿಗೂ ಕ| ಗಂ| ಸಾಲೆಗೂ ಹೋಗಿ ಚಿಕ್ಕ ಭಾಷಣಗಳ ರೂಪದಲ್ಲಿ ಅದನ್ನು ಸ್ಪಷ್ಟಪಡಿಸಿದ್ದ ಕೂಡ. ಅಲ್ಲದೇ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ತಾಳಲಿಕ್ಕೆ ಜನಕ್ಕೆ ಕಾರಣಗಳಿರಲಿಲ್ಲ ಏನೋ ಬೆಳಗಾವಿಯಲ್ಲಿ ಒಂದಿಬ್ಬರು ಇಂಗರೇಜಿ ಮೇಡಮ್‌ಗಳು ಇವನೆಂದರೆ ಬಿದ್ದು ಸಾಯುತ್ತಾರೆಂದೂ, ಅದಕ್ಕೇ ಇವನು ಆಗಾಗ ಬೆಳಗಾವಿಗೆ ಹೋಗುತ್ತಾನೆಂದೂ ಕಿಂವದಂತಿ. ವದಂತಿಗೇನು? ಕೈಯಿಲ್ಲ, ಕಾಲಿಲ್ಲ, ಹಬ್ಬುತ್ತವೆ, ಸಾಯುತ್ತವೆ. ಹಳ್ಳಿಯಲ್ಲಿ ಮಾತ್ರ ಒಬ್ಬರ ತೋರುಬೆರಳಿಗೆ ಗುರಿಯಾಗುವ ಕೆಲಸ ಮಾದಿದವನಲ್ಲ. ಮಾತ್ರವಲ್ಲ, ಊರು ಮುಂದೆ ತರಬೇಕೆಂದವನು. ಊರು ಮುಂದೆ ತರುವದೆಂದರೇನು? ಈಗದು ಹಿಂದೆ ಉಳಿದೆದೆಯೆಂದು ಅರ್ಥವಲ್ಲವೇ? ಹಾಗೆ ಅದು ಹಿಂದೆ ಉಳೀದಿದೆಯೆಂದು ಗೊತ್ತಾದದ್ದೇ ಅವನೊಬ್ಬನಿಗೆ ಮಾತ್ರ. ಗೌಡ, ಬಸೆಟ್ಟಿ, ದತ್ತಪ್ಪ- ಇವರೇನು ಬೆಳಗಾವಿ ಅರಿಯದವರೇ? ಆದರೆ ಇವರ್‍ಯಾರಿಗೂ ತಮ್ಮ ಊರು ಬೆಳಗಾವಿಯಂತಿಲ್ಲ- ಎಂದು ಅನಿಸಲಿಲ್ಲ. +ಅವನಲ್ಲಿರುವ ಒಂದೇ ಒಂದು ಸಣ್ಣ ದೋಷವೆಂದು ಹೇಳಿದ್ದು ದತ್ತಪ್ಪನೊಬ್ಬ ಮಾತ್ರ- ದತ್ತಪ್ಪನಿಗೇನು? ಪಿತ್ಥವಾದರೆ, ಯಾವದಕ್ಕೂ ದೋಷ ಎಂದಾನು, ಜನ ಹೇಳಬೇಕಲ್ಲ?- ಹೇಳಲಿ, ಬಿಡಲಿ, ಒಬ್ಬನಿಗಂತೂ ದೋಷವಾಗಿ ಕಂಡದ್ದು ನಿಜತಾನೆ?- ಸರಿ- ಅದನ್ನು ನೀವೂ ದೋಷವೆಂದು ಒಪ್ಪಿಕೊಳ್ಳುವಿರಾದರೆ- ಭಾಷಣವಿಲ್ಲದೇ ಯಾವದೇ ಕಾರ್‍ಯ ಸುರುವಾಗಕೂಡದು. ಸುರುವಾದರೆ ಮುಗಿಯಕೂಡದು- ಎಂಬ ನಂಬಿಕೆ. +ಒಂದನೆಯ ಸಭೆ +ಬಹುಶಃ ಇದು ನಿಜವೋ ಏನೋ; ಯಾಕೆಂದರೆ ಪಂಚಾಯ್ತಿ ಆಗಿ ಒಂದೆರಡು ತಿಂಗಳಾಗಿರಬೇಕು – ತನ್ನ ಕನಸನ್ನು ನನಸಾಗಿಸುವ, ತನ್ನ ಹಳ್ಳಿಯನ್ನು ಬೆಳಗಾವಿಯಾಗಿಸುವ ಪ್ರಥಮ ಹೆಜ್ಜೆ – ಊರನ್ನು ಸ್ವಚ್ಛವಾಗಿಡುವ ಯೋಚನೆ ಹೊಳೆಯಿತು. ಅದಕ್ಕಾಗಿ ರಾತ್ರಿ ಕರಿಮಾಯಿಯ ಗುಡಿಯಲ್ಲಿ ಒಂದು ಸಭೆ ಕರೆಯಲಾಯಿತು. +ಊರವರು ಬಂದರೆ ಕಂಡದ್ದೇನು? ಸಾಲೆಯ ಟೇಬಲ್ ಇಲ್ಲಿಗೆ ಬಂದಿದೆ. ಅದರ ಹಿಂದೆ ಮಾಸ್ತರ ಕೂರುತ್ತಿದ್ದ ಕುರ್ಚಿಯಿದೆ. ಊರಿನಲ್ಲಿದ್ದುದು ಅದೊಂದೇ ಕುರ್ಚಿ. ಅದರ ಹಿಂದೆ ಗೌಡರ ಮನೆಯ ಕಾಳಿನ ಚೀಲ ಇಡುವ ಗಡಂಚಿಯಿದೆ. ಅದರ ಪಕ್ಕದಲ್ಲಿ ಗುಡಸೀಕರನ ಮನೆಯ ಗಡಂಚಿಯಿದೆ. ಪ್ರಶ್ನೋತ್ತರ ಮಾಸ್ತರ ಟೇಬಲ್ಲಿನ ಮುಂದೆ ನಿಂತು ಬಂದವರನ್ನೆಲ್ಲ “ಬರ್ರಿ, ಬರ್ರಿ” ಎಂದು ಸ್ವಾಗತಿಸುತ್ತಿದ್ದ. ಕೆಲವರು ಹೊಯ್ಕಿಗೆ ಬಂದರೆ ಕೆಲವರು ಕಾಳಜಿಯಿಂದ ಬಂದರು. ಅವಂತೂ ದತ್ತಪ್ಪ, ಬಸೆಟ್ಟಿ, ಬಾಳೂ ಪೂಜಾರಿಯಿಂದ ಮೊದಲುಗೊಂಡು ನಿಂಗೂ, ಹಜಾಮರ ಲಗಮನವರೆಗೆ ೫೦-೬೦ ಜನ ಬಂದರು. ಅಲ್ಲಿಯವರೆಗೆ ನಗಾರಿಖಾನೆ ಯಾ ಪಂಚಾಯ್ತಿ ಆಫೀಸಿನಲ್ಲಿದ್ದ ಗುಡಸೀಕರ ಹಾಗೂ ಅವನ ಮೆಂಬರರು ಸಾಲಾಗಿ ಬಂದು, ಮುಂದಿನ ಕುರ್ಚಿಯಲ್ಲಿ ಗುಡಸೀಕರನೂ ಹಿಂದಿನ ಗಡಂಚಿಗಳ ಮೇಲೆ ಒಂದರ ಮೇಲೆ ಇಬ್ಬಿಬ್ಬರಂತೆ ಮೆಂಬರರೂ ಕೂತರು. +ಕೆಲವರಿಗಾಗಲೇ ಅಸಮಾಧಾನವಾಯ್ತು. ಅದು ಪಾಪ, ಮಾಸ್ತರ ಕೂರೋ ಕುರ್ಚಿ; ಅದರ ಮೇಲೆ ಸ್ವತಃ ಗೌಡ ಕೂತಿರಲಿಲ್ಲ. ಗುಡಸೀಕರ ಅದರ ಮೇಲೆ ಕೂತಿದ್ದು ತಪ್ಪು ಎಂದು ದತ್ತಪ್ಪ ಒಳಗೊಳಗೇ ಅಸಮಾಧಾನಗೊಂಡ. ಅಷ್ಟರಲ್ಲಿ ಗುಡಸೀಕರ ಎದ್ದು “ಈಗ ಪ್ರಾರ್ಥನೆಃ ಶಿವಾಪುರ ಕನ್ನಡ ಗಂಡುಮಕ್ಕಳ ಶಾಲೆಯ ಮಕ್ಕಳಿಂದ” ಎಂದು ಹೇಳಿ ಕೂತ. ನಾಕೈದು ಅರಿಯದ ಹಸುಳೆಗಳು ಬಂದು ಸಾಲಾಗಿ ಕೂತವರತ್ತ ಮುಖಮಾಡಿ ನಿಂತು, ಕೈಮುಗಿದು – +ಜಯವೆಂದು ಬೆಳಗೂವೆ ಗುಡಸೀಕರ ರೀಗೆ +ಗುಡಸೀಕರ ರೀಗೆ ಜನನಾಯ ಕರಿಗೆ +ಜಯವೆಂದು ಬೆಳಗುವೆ|| +ಎಂದು ಬೆದರಿದ ಅಪಸ್ವರದಲ್ಲಿ ಕಿರುಚಿದವು. ಆಮೇಲೆ ಸ್ವಾಗತ ಭಾಷಣ ಪ್ರಶ್ನೋತ್ತರ ಮಾಸ್ತರರಿಂದ. ಅದು ಮುಗಿದೊಡನೆ ಮಾಸ್ತರ ಹೋಗಿ ಒಂದು ದೊಡ್ಡ ಮಾಲೆ ತಂದು ಗುಡಸೀಕರನಿಗೆ ಹಾಕಿದ. ಅದಾದ ಮೇಲೆ ಸ್ವಲ್ಪ ಸಣ್ಣ ಸಣ್ಣ ಮಾಲೆಗಳನ್ನು ತಂದು ನಾಲ್ಕು ಜನ ಮೆಂಬರರಿಗೆ ಹಾಕಿದ. ಗುಡಸೀಕರನೇನೋ ಬೆಳಗಾವಿಯ ಸಭೆಗಳನ್ನು ನೋಡಿದವನಾದ್ದರಿಂದ ಮಾಲೆ ತೆಗೆದು ಮೇಜಿನ ಮೇಲಿಟ್ಟ. ಮೆಂಬರರು ಮಾತ್ರ ಹಾಕಿಕೊಂಡೇ ಕೂತರು, ಸಾಲಾಗಿ. +ಜನ ತಬ್ಬಿಬ್ಬಾದರು. ತಾವೇನು ನೋಡುತ್ತಿದ್ದೇವೆ, ಎಲ್ಲಿದ್ದೇವೆಂಬುದೇ ಕೆಲವರಿಗೆ ಮರೆತುಹೋಯ್ತು. ದತ್ತಪ್ಪನಿಗೆ ಹಿಡಿಸಲಾಗದ ನಗು. ಎಲ್ಲರಿಗೂ ಮಾಲೆ ಹಾಕಿ ಪ್ರಶ್ನೋತ್ತರ ಮಾಸ್ತರ ಕೆಳಗೆ ಕುಳಿತದ್ದು ನಿಂಗೂನಿಗೆ ಸರಿಬರಲಿಲ್ಲ. ಅದನ್ನು ಜೋರಿನಿಂದ ಹೇಳಿಯೂ ಬಿಟ್ಟ. +“ಮಾಸ್ತರ, ಪಾಪ ಎಲ್ಲರಿಗೂ ಮಾಲೀ ಹಾಕಿ, ನಿಮಗಽ ಇಲ್ಲಂದರ ಹೆಂಗರೀಽ? ನೀವೂ ಒಂದು ಹಾಕ್ಕೊಂಡ ಗಡಂಚೀ ಮ್ಯಾಲ ಕುಂದರ ಬಾರದ?” +ಎಂದ, ದತ್ತಪ್ಪ ನಗುತ್ತ. +“ಛೇ, ಛೇ ಅದ್ಹೆಂಗಾದೀತಪಾ? ಅವರು ಪಂಚಾಯ್ತಿ ಮೆಂಬರರು” ಅಂದ. ನಿಂಗೂನಿಗೆ ಸಮಾಧಾನವಾಗಲಿಲ್ಲ. +“ಆದರೇನಾತರೀ? ಆ ಕುರ್ಚೆ ಮಾಸ್ತರನ ಸಾಲ್ಯಾಗಿಂದಲ್ಲ” ಎಂದ. ಇದು ಹೀಗ ಮುಂದುವರಿದರೆ ಕಷ್ಟವೆಂದು ಗುಡಸೀಕರ ಭಾಷಣಕ್ಕೆ ಎದ್ದುನಿಂತು ನಿರರ್ಗಳವಾಗಿ, ಓತಪ್ರೋತವಾಗಿ ಒಂದೂವರೆ ತಾಸು ಮಾತಾಡಿದ. ಹಜಾಮರ ಲಗಮ ನಡುವೇ ತಡೆಯದಿದ್ದರೆ ಭಾಷಣ ಇನ್ನೂ ಎಷ್ಟು ಹೊತ್ತು ಸಾಗುತ್ತಿತ್ತೋ! ಈ ವರೆಗಿನ ಭಾಷಣದ ಸಾರಾಂಶ ಇಷ್ಟು: +“ಇಂಡಿಯಾ ಹಳ್ಳಿಗಳ ದೇಶ. ಈ ದೇಶದಲ್ಲಿ ಏಳು ಲಕ್ಷ ಹಲ್ಳಿಗಳಿವೆ. ಪಟ್ಟಣ, ಶಹರಗಳು ಬೆರಳೆಣಿಕೆಯಷ್ಟು ಮಾತ್ರ. ಬ್ರಿಟೀಷರು ನಮ್ಮ ದೇಶವನ್ನು ಆಳಿ ಹೊಲಗೆಡಿಸುತ್ತಿದ್ದಾರೆ. ಅವರು ನೀಚರು, ಪರಕೀಯರು. ಅವರನ್ನು ಹೊಡೆದೋಡಿಸಲೇಬೇಕು. ಪ್ರತಿಯೊಂದು ಹಳ್ಳಿಯೂ ಶಹರವಾಗಬೇಕು. ಅಂದರೇ ಈ ದೇಶದ ಉದ್ಧಾರ ಸಾಧ್ಯ. ಶಹರವಾಗಬೇಕಾದರೆ ಏನು ಮಾಡಬೇಕು? ಹಳ್ಳಿಯನ್ನು ಸ್ವಚ್ಛವಾಗಿಡಬೇಕು. ಬೆಳಗಾವಿಯನ್ನು ನೋಡಿರಿ. ಅಲ್ಲಿನ ರಸ್ತೆಯ ಮೇಲೆ ತುಪ್ಪ ಬಿದ್ದರೂ ಬಳಿದುಕೊಂಡು ತಿನ್ನಬೇಕು, ಅಷ್ಟು ಸ್ವಚ್ಛ….. +ಹಜಾಮರ ಲಗಮ ಭಾಷಣಕ್ಕೆ ಅಡಿಮಾಡಿದ್ದೇ ಈ ಭಾಗದಲ್ಲಿ. ಅವನಿಗಾಗಲೇ ಸಭಿಕರು ಸುಮ್ಮನೆ ಕೂತಿದ್ದಕ್ಕೆ ಆಶ್ಚರ್ಯವಾಗಿತ್ತು. ತಡೆಯದೇ ಎದ್ದುನಿಂತು- +“ಅಲ್ಲಪಾ ಗುಡಸೀಕರ, ಬೆಳಗಾವಿ ಮಂದಿಗೇನೋ ಸಾಕಷ್ಟು ತುಪ್ಪ ಸಿಗತೈತಿ, ರಸ್ತಾದ ಮ್ಯಾಲ ಚೆಲ್ಲಿ ನೆಕ್ಕಿ ತಿಂತಾದ್ದಾರು. ನಮಗ ತಿನ್ನಾಕಽ ತುಪ್ಪಿಲ್ಲ. ಇನ್ನು ರಸ್ತಾದ ಮ್ಯಾಲ ಯಾಕ ಚೆಲ್ಲೋಣು?” ಅಂದ. ಒಂಥ ಅಜ್ಞಾನಕ್ಕೆ ಏನು ಹೇಳಬೇಕು? +“ಅಲ್ಲಲೇ, ಬೆಳಗಾಂವ್ಯಾಗಿ ರಸ್ತಾ ಎಷ್ಟು ಹಸನು ಇರ್‍ತಾವಂತ ಹೇಳಾಕ ಹೇಳಿದೆ” ಎಂದ ಗುಡಸೀಕರ. +“ಹೌಂದಪಾ,ತುಪ್ಪಾ ಚೆಲ್ಲಿ ಚೆಲ್ಲಿ ನೆಕ್ಕತಾರ; ಅದಕ್ಕಽ ರಸ್ತಾ ಹಸನ ಇರ್‍ತಾವ, ನಾವ್ಯಾಕ ಹಾಂಗ ಮಾಡಬೇಕು?” +“ಏ ಲಗಮಾ, ಬಾಯಿ ಮುಚ್ಚಿ ಕುಂದರಲೆ?” +-ಎಂದು ಹೇಳಿ ಮತ್ತೆ ಭಾಷಣ ಸುರುಮಾಡಿದ. ಮುಂದೆ ಏನೇನು ಹೇಳಿದನೋ! ದತ್ತಪ್ಪ ಒಳಗೊಳಗೇ ನಗುತ್ತಿದ್ದ. ಆದರೆ ಉಳಿದ ಮಂದಿ ಲಗಮ ಹೇಳಿದ್ದೇ ಬರೋಬರಿ ಎಂದರು. ರಸ್ತೆಯ ಮೇಲೆ ತುಪ್ಪ ಚೆಲ್ಲಿ ನೆಕ್ಕುವದೆಂದರೇನು? ಯಾವದೋ ಒಂದು ಜಾತಿಯವರು ಹಾಗೆ ಮಾಡುತ್ತಿದ್ದಾರು. ಅದು ದೇವರ ಹರಕೆ ಇದ್ದೀತು. ಕುಲದ ಪದ್ಧತಿ ಇದ್ದೀತು. ಅದು ನಮ್ಮ ಕುಲದ ಪದ್ಧತಿಯಲ್ಲಿಲ್ಲ ಎಂದಮೇಲೆ ನಾವ್ಯಾಕೆ ನೆಕ್ಕಬೇಕು? ಇದರ ವಿಚಾರಧಾರೆ ನಿಂತದ್ದು ಗುಡಸೀಕರನ “ನಮ್ರ ಸೂಚನೆ” ಕೇಳಿ ಬಂದಾಗ: +“ಈ ಊರನ್ನ ನಾವು ಬೆಳಗಾವಿಯಂತೆ ಸ್ವಚ್ಛವಾಗಿಡಬೇಕು. ಆದ್ದರಿಂದ ನಾವೀಗ ದಿನಾಲು ಊರು ಗುಡಿಸುವವರನ್ನು ನೇಮಿಸಿಕೊಳ್ಳುತ್ತೇವೆ. ಅದಕ್ಕಾಗಿ ಮನೆಗೆ ಒಂದೊಂದು ರೂಪಾಯಿ ತೆರಿಗೆ ಕೊಡಬೇಕು.” +ತೆರಿಗೆ ಮಾತು ಬಂತೋ ಇಲ್ಲವೋ?-ಒಬ್ಬೊಬ್ಬರೇ ಎದ್ದು ಕುಂಡಿ ಜಾಡಿಸಿಕೊಳ್ಳುತ್ತ ಹೊರಟರು. ಗುಡಸೀಕರ ಒಬ್ಬಿಬ್ಬರ ಹೆಸರು ಹಿಡಿದು ಕೂಗಿ ಕೂರಿಸಲೆತ್ನಿಸಿದ. “ಇಕ್ಕಾ ಬರ್‍ತೀನಿ” ಎಂದು ಹೇಳುತ್ತ ಹೊರಟರು. ಇದ್ದವರನ್ನಾದರೂ ಕೂರಿಸಬೇಕಾದರೆ ದತ್ತಪ್ಪ ಏಳಬೇಕಾಯಿತು. +“ಅಲ್ಲಪಾ ಗುಡಸೀಕರ, ಮನೀಗೊಂದೊಂದ ರೂಪಾಯಿ ಕೊಡೋ ಬದಲು, ಎಲ್ಲಾರೂ ತಮ್ಮ ತಮ್ಮ ಮನೀ ಅಂಗಳಾ ತಪ್ಪದ ಗುಡಿಸಿಕೊಂಡರ ಹೆಂಗ?” +-ಎಂದ. ಕೂತವರೆಲ್ಲ “ಹೌದೆಂಬೋ ಮಾತಿದು” ಎಂದು ಕೂಡಲೇ ಮೆಚ್ಚುಗೆ ಸೂಚಿಸಿದರು. ಗುಡಸೀಕರನಿಗೆ ಅವಮಾನವಾಯ್ತು. +“ಅಲ್ಲರೀ ಪಂಚಾಯ್ತಿ ಆಫಿಸಂದರ ಅದಕ್ಕೊಬ್ಬ ಸಿಪಾಯಿ ಬೇಕು. ವಾರಕ್ಕೆರಡು ಬಾರಿ ಮೀಟಿಂಗ್ ಇರ್‍ತಾವ. ಅದರ ಲೆಕ್ಕಪತ್ರ ಬರ್‍ಯಾಕ ಒಬ್ಬ ಕಾರಕೂನ ಬೇಕು. ಅದೆಲ್ಲಾ ಖರ್ಚು ಎಲ್ಲಿಂದ ತರಬೇಕು?”-ಎಂದ. ಜನ ಹುಚ್ಚರೋ? “ಓಹೋ ಇವರು ದಿನಾಲೂ ಮೀಟಿಂಗ್ (ಇಸ್ಪೀಟಾಟ) ಮಾಡ್ತಾರಲ್ಲಾ; ಆ ಲೆಕ್ಕ ಬರಕೊಳ್ಳಾಕ ಒಬ್ಬ ಕಾರಕೂನ, ಚಾ ಮಾಡಿಕೊಡಾಕ ಒಬ್ಬ ಸಿಪಾಯಿ ಬೇಕಂತ. ಹೋ ಹೊ ಹೊ” ಎನ್ನುತ್ತ ಉಳಿದವರೂ ಹೋಗಿಬಿಟ್ಟರು. +ಸಭಿಕರ ಪೈಕಿ ಈಗ ಉಳಿದವರೆಂದರೆ ಪ್ರಾರ್ಥನಾ ಪದ್ಯ ಹೇಳಿದ ಹುಡುಗರು; ಪಾಪ, ಎದ್ದು ಹೋದರೆ ಮಾಸ್ತರ ಹೊಡೆಯುತ್ತಾನೆಂದು ಅವು ಎರಡು ಘಂಟೆಯಿಂದ ಕೈ ಕಟ್ತಿಕೊಂಡೇ, ಹೆದರಿ ಕಣ್ಣು ಕಿಸಿದುಕೊಂಡೇ ಕೂತಿದ್ದವು. ಇನ್ನೊಬ್ಬ ಪ್ರಶ್ನೋತ್ತರ ಮಾಸ್ತರ. ಗುಡಸೀಕರನಿಗೆ ಅವಮಾನವಾಗಿರಬಹುದು. ಆದರೆ ಹಿಂದಿನ ಸಾಲಿನಲ್ಲಿ ಮಾಲೆ ಹಾಕಿಕೊಂಡು ಕೂತ ಕಳ್ಳ ಸಿದರಾಮನಿಗೆ ಮಾತ್ರ ವಿರಾಸೆಯಾಯಿತು. ಯಾಕೆಂದರೆ ಅವನೇ ಕೊನೆಗೆ ವಂದನಾರ್ಪನೆ ಮಾಡಬೇಕಾದ್ದು. ಮಾಸ್ತರರಿಂದ ಬರಸಿಕೊಂಡು ಈಗ ೧೫ ದಿನಗಳಿಂದ ಬಾಯಿಪಾಠ ಮಾಡಿದ್ದ. ಅದು ಹತ್ತು ಪುಟದಷ್ಟಿತ್ತು. ಮೊದಲಿನ ಐದು ಪುಟಗಳಲ್ಲಿ ಗುಡಸೀಕರನ ವರ್ಣನೆಯೂ, ಆರನೇ ಪುಟದಲ್ಲಿ “ನಮ್ಮ ಜನನಾಯಕನಾದ ಗುಡಸೀಕರ ಸಾಹೇಬರಿಗೆ ಅಪಾರ ಬೆಂಬಲ ಸುಚಿಸಿದ್ದಕ್ಕೆ ಜನಗಳಿಗೆ ವಂದನಾರ್ಪಣೆಯೂ” ಇತ್ತು. +ಎರಡನೆಯ ಸಭೆ +ಪಂಚಾಯ್ತಿ ಆಗಿ ಆರು ತಿಂಗಳಾಗಿತ್ತು. ಅಥವಾ ಅಂದಾಜು ಅದರ ಎಡಬಲ ಇದ್ದೀತು. ಆಗೊಂದು ಘಟನೆ ನಡೆಯಿತು. ಗುಡಸೀಕರನಿಗೆ ಗೌಡನ ಬಗ್ಗೆಯೂ ಅಸಮಧಾನವಾಯ್ತು. +ಬೆಳಗಾವಿಯಿಂದ ಕ| ಗಂ| ಸಾಲೆಗೆ ಇನ್‌ಸ್ಪೆಕ್ಟರೊಬ್ಬರು ಬಂದಿದ್ದರು, ರಾತ್ರಿ ಸಾಲೆ ಸುರು ಮಾಡಲಿಕ್ಕೆ. ಬಂದವರು ಗುಡಸೀಕರನ ಮನೆಯಲ್ಲೇ ಉಳಿದುಕೊಂಡರು. ಹಳ್ಳಿಯ ಹುಂಬರು ಈ ಮೂಲಕ ಒಂದಿಷ್ಟು ಒಳ್ಳೆಯದಾಗುತ್ತಲ್ಲಾ, ಅದೂ ತನ್ನಿಂದ-ಎಂದು ಗುಡಸೀಕರನೂ ಹಿರಿಹಿರಿ ಹಿಗ್ಗಿಬಿಟ್ಟ. ಆ ದಿನ ರಾತ್ರಿ ಸಭೆ ಕರೆಯಲಾಯಿತು. ಈ ಸಭೆಗೆ ಗೌಡನೂ ಬಂದಿದ್ದ. +ಈ ಸಲದ ಸಭೆ ಕ| ಗಂ| ಸಾಲೆಯಲ್ಲಿತ್ತು. ಟೇಬಲ್ಲಿನ ಹಿಂದೆ ಒಂದು ಕುರ್ಚಿ, ಒಂದು ಗಡಂಚಿ ಮಾತ್ರವಿತ್ತು. ಗೌಡ ದತ್ತಪ್ಪ ಹಿರಿಯರು ಹೋಗಿ ಕೆಳಗೆ ಹಾಸಿದ ಗುಡಾರದ ಮೇಲೆ ಕೂತರು. ಊರಿಗಿದ್ದದ್ದು ಇದೊಂದೇ ಕುರ್ಚಿ ಎಂಬ ವಿಚಾರ ನಿಮಗೆ ಗೊತ್ತಿದೆ. ಜನ ಸೇರಿಯಾದ ಮೆಲೆ ಗುಡಸೀಕರ ಹಾಗೂ ಇನ್ಸ್‌ಪೆಕ್ಟರ್ ಬಂದರು. ಗುಡಸೀಕರ ಮುಂದೆ ಬಂದು ಕುರ್ಚಿಯ ಮೇಲೆ ಕೂತ. ಇನ್ಸ್‌ಪೆಕ್ಟರ್ ಗಡಂಚಿ ಬಿಟ್ಟ. ಈ ಹೊಸಬಗೆಯ ಪೀಠ ನೋಡಿ, ಅದರ ಅದ್ರವಾದ ಮೂರೇ ಕಾಲು ನೋಡಿ ಇನ್ಸ್‌ಪೆಕ್ಟರರಿಗೆ ಗಾಬರಿಯಾಯಿತೋ ಏನೋ, ಅದನ್ನು ಬಿಟ್ಟು ಅವರು ಜನಗಳೊಡನೆ ಕೆಳಗೆ ಕೂರಲು ಬಂದುಬಿಟ್ತರು. “ಏ ತಮ್ಮಾ ಅವರೆಷ್ಟಂದರೂ ನಮ್ಮೂರಿಗೆ ಬಂದವರು. ಅವರು ಕುರ್ಚಿಮ್ಯಾಲೆ ಕುಂದರಲಿ ನೀ ಬೇಕಾದರ ಗಡಂಚಿಮ್ಯಾಲ ಕುಂದರು” ಎಂದ. ಈ ಮಾತು ಕೇಳಿ ಗುಡಸೀಕರ ಸುಟ್ತು ಹುರುಪಳಿಸಿದ ಅರಳಿನಂತಾದ. ಬಂದವರ ಮುಂದೆ ಈ ರೀತಿ ಅವಮಾನವೆ? ತಾನು ಕಲಿತದ್ದೆಷ್ಟು? ಈ ಇನ್ಸ್‌ಪೆಕ್ರ‌ಎ ಕಲಿತದ್ದೆಷ್ಟು? ಈ ಹುಂಬರಿಗೆ ಇದೆಲ್ಲ ತಿಳಿಯಬಾರದೆ? ಎಲ್ಲಾ ಒಂದೇ ಊರಿನವರೆಂದ ಮೇಲೆ ತಮ್ಮವನನ್ನು ಮೇಲೆತ್ತಬೇಕೋ? ಹೀಗೆ ಅವಮಾನಿಸಿ ಮೇಲೆ ಹೋಗುವವನನ್ನು ಕೆಳಕ್ಕೆ ತಳ್ಳಬೇಕೋ? ಏನೇ ಬುದ್ಧಿ, ರೀತಿ ಹೇಳಲಿ. ಬಂದವನ ಮುಂದೆ ಹೀಗೆ ಹೇಳುವದೆ? ಹೀಗೆ ಆಲೋಚನೆ ಮಾಡಿದಷ್ಟು ಕೋಪ ಬಂತು. ಕೋಪ ಮಾಡುತ್ತ ಕೂರುವ ಸಮಯವಲ್ಲ. ಕೆಳಗೆ ಕುಳಿತ ಇನ್ಸ್‌ಪೆಕ್ಟರರಿಗೆ “ಬರ್ರಿ ಬರ್ರಿ ಮ್ಯಾಲ ಬರ್ರಿ” ಎಂದು ಕೂತಲ್ಲಿಂದಲೇ ಹೇಳುತ್ತ ಕೂತ, ತಾನು ಗೌದನ ಮಾತಿಗೆ ಸೊಪ್ಪು ಹಾಕದವನಂತೆ. +ಜನಗಳಿಗಾದರೆ ಗೌಡನ ಮಾತು ಸರಿ ಅನ್ನಿಸಿತು. ಊರಿಗೆ ಬಂದವರೆಂದ ಮೇಲೆ ಎಲ್ಲರೂ ಗೌರವ ಕೊಡಬೇಕಾದ್ದೇ. ನಾಳೆಯಿಂದ ಕೂರಬಹುದಲ್ಲ? ಕುರ್ಚಿಯೇನು ಓಡಿಹೋಗುತ್ತದೆಯೆ? ಅಥವಾ ಕೂತವನೇನು ತನ್ನೊಂದಿಗೆ ಕುರ್ಚಿ ಒಯ್ಯುತ್ತಾನೆಯೇ? ಅದೂ ಅಲ್ಲದೆ ಬಂದವರಿಗೆ ಪಾಪ, ಆಗಲೇ ಗುಡಸೀಕರನ ಅಪ್ಪನಷ್ಟು ವಯಸ್ಸಾಗಿದೆ. ವಯಸ್ಸಿಗಾದರೂ ಕಿಮ್ಮತ್ತು ಕೊಡಬೇಕಲ್ಲ? ಅಷ್ಟರಲ್ಲಿ ದತ್ತಪ್ಪ ಎದ್ದು ನೇರ ಹೋಗಿ ಇನ್ಸ್‌ಪೆಕ್ಟರ್ ಬಗಲಲ್ಲಿ ಕೈ ಹಾಕಿ “ಬರ್ರಿ ಸಾಹೇಬರ, ನೀವು ಇಲ್ಲಿ ಕೂತರ ಹೆಂಗ? ಗುಡಸೀಕರ ಎಷ್ತಂದರೂ ನಮ್ಮ ಹುಡುಗ ಬರ್ರಿ” ಎಂದು ಎಬ್ಬಿಸಿ ಟೇಬಲಿನತ್ತ ಕರೆದೊಯ್ದ. ಈಗ ಗುಡಸೀಕರ ಎದ್ದು ಗಡಂಚಿಯ ಮೇಲೆ ಕೂರಲೇ ಬೇಕಾಯಿತು. ಯಥಾಪ್ರಕಾರ ಪ್ರಶ್ನೋತ್ತರ ಮಾಸ್ತರನ- ಇವನಿಗೆ ಪ್ರಶ್ನೋತ್ತರ ಮಾಸ್ತರನೆಂದು ಹೆಸರು ಹ್ಯಾಗೆ ಬಂತೆಂಬುದನ್ನು ಆಮೇಲೆ ಸಂದರ್ಭಾನುಸಾರ ಹೇಳೋಣ-ಸ್ವಾಗತ ಭಾಷಣವಾದ ಮೇಲೆ ಅಧ್ಯಕ್ಷರ ಅಂದರೆ ಗುಡಸೀಕರನ ಅಪ್ಪಣೆ ಮೇರೆಗೆ ಇನ್ಸ್‌ಪೆಕ್ಟರರು ಅನಕ್ಷರಸ್ಥ ರೈತರಿಗೆ ರಾತ್ರಿ ಸಾಲೆ ಕಲಿಸುವ ಸರ್ಕಾರಿ ಯೋಜನೆಯ ಬಗ್ಗೆ ಮಾತಾಡಿದರು. ಇದಕ್ಕೆ ನೀವೆಲ್ಲ ಮುಂದಾಗಬೇಕೆಂದರು. ಗುಡಸೀಕರನಂಥ ಮೇಧಾವಿಗಳು ನೇತಾರರಾಗಿರುವ ಈ ಊರು ಬೇರೆ ಊರುಗಳಿಗಿಂತ ಹಿಂದೆ ಬೀಳಬಾರದು ಎಂದರು. ಇಂದಿನಿಂದಲೇ ಇಲ್ಲೇ, ನಿಮ್ಮ ಹೆಸರು ದಾಖಲು ಮಾಡಿಕೊಳ್ಳುತ್ತೇನೆ “ಲೋ ಮುದುಕಪ್ಪಾ, ನಿನ್ನ ಹೆಸರೇನು, ಹೇಳು” ಎಂದು ಗೌಡನನ್ನೇ ಕೇಳಿಬಿಟ್ಟರು. +ಕೂತಮಂದಿಯೇನು ಗುಡಸೀಕರನಿಗೂ ಕಸಿವಿಸಿಯಾಯ್ತು. ಸುಮ್ಮನೆ ಕುತರೆ ಗದ್ದಲವಾಗುತ್ತಿತ್ತೋ ಏನೊ. ಗೌಡ ಚೌಕಾಶಿ ಮಾಡದೇ “ಪರಗೌಡ” ಎಂದುಬಿಟ್ಟ. ಇದರಿಂದ ಇನ್ಸ್‌ಪೆಕ್ಟರರಿಗೆ ಭಾರೀ ಸ್ಪೂರ್ತಿ ಬಂತು. “ಏ ಅಜ್ಜಾ ನಿನ್ನ ಹೆಸರ್‍ಹೇಳು” ಎಂದು ದತ್ತಪ್ಪನನ್ನು ಕೇಳಿದ. ದತ್ತಪ್ಪ ಸುಮ್ಮನೇ ತನ್ನ ಹೆಸರು ಹೇಳಿದ. ಇಬ್ಬರೂ ಓದುಬರಹ ಬಲ್ಲವರೇ. ಆದರೂ ಹೆಸರು ಕೊಡುವದೆಂದರೆ? “ಅವರಿಗಿ ಓದಬರ್‍ಯಾಕ ಬರತೈತಿರಿ” ಎಂದು ಗುಡಸೀಕರ ಹೇಳಿದ. ಇನ್ಸ್‌ಪೆಕ್ಟರಿಗಾಗಲೇ ಅನುಮಾನ ಬಂತು. ಕೂಡಲೇ ಗುಡಸೀಕರನ ಕೈಗೇ ಪೆನ್ನುಕೊಟ್ಟು “ನೀವ ಬರದು ಬಿಡ್ರಿ” ಎಂದ. ಗುಡಸೀಕರ ಅಲ್ಲಿ ಕೂಡಿದ ಅನೇಕರ ಹೆಸರು ಬರೆದು ಅಧ್ಯಕ್ಷ ಭಾಷಣಕ್ಕೆ ಎದ್ದ. +“ಇಂಡಿಯಾ ದೇಶ, ಹಳ್ಳಿಗಳ ದೇಶ”ದಿಂದ ಸುರುವಾಗಿ ಬೆಳಗಾವಿಗೆ ಬಂತು. ಈ ಸಲ ತುಪ್ಪದ ಉದಾಹರಣೆ ಮಾತ್ರ ಬರಲಿಲ್ಲ. ಒಟ್ಟು ಸಭೆಯ ಕಾರ್‍ಯಕಲಾಪದಿಂದ ಗೌಡನಿಗೆ ಅಸಮಾಧಾನವೇನೂ ಆಗಲಿಲ್ಲ. ಆದರೆ ಗುಡಸೀಕರನ ಮನಸ್ಸಿನಲ್ಲಿ ಅದು ಗಟ್ಟಿಗೊಂಡು ಕೂತುಬಿಟ್ಟಿತು. ಕೊನೆಯ ವಂದನಾರ್ಪಣೆ ಮಾಸ್ತರನೇ ಮಾಡಿದ. ಅದರಲ್ಲಿ ಗುಡಸೀಕರನ ಬಗ್ಗೆ ಹೇಳುತ್ತ “ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ” ಇತ್ಯಾದಿ ಹೇಳಿ ಹಳ್ಳಿಯ ಉದ್ಧಾರಕ್ಕೆ ಬಂದ ಅವತಾರಿ ಪುರುಷನೇ ಗುಡಸೀಕರ ಎಂದೂ ಹೇಳಿಬಿಟ್ಟ. ಈ ಸಭೆಗಳಿಂದಾದ ಅಸಮಾಧಾನ ನಿಂಗೂನ ಕೇಸಿನಲ್ಲಿ ಸ್ಫೋಟಗೊಂಡಿತು. +ನಿಂಗೂನ ಕಥೆ +ನಿಂಗೂ ಈ ಊರಿನ ನಪುಂಸಕ. ಇತ್ತ ಪುರುಷನಲ್ಲದ, ಅತ್ತ ಹೆಂಗಸಲ್ಲದ ಎರಡರಲ್ಲಿ ಒಂದೂ ಆಗದ ನಿರ್ಭಾಗ್ಯ. ಹಾಗಂತ ಆ ಬಗ್ಗೆ ಅವನಿಗೆ ದುಃಖವಿದೆಯೆಂದಲ್ಲ. ಹಾಗೆ ನೋಡಿದರೆ ಇಡೀ ಊರಲ್ಲಿ ಜನರ ವಯಸ್ಸು, ಅಂತಸ್ತು, ಲಿಂಗಭೇದಗಳನ್ನು ಗಮನಿಸದೆ ಚೇಷ್ಟೆ ಮಾದಿ ನಗಬಲ್ಲವನು ಅವನೊಬ್ಬನೇ. ತಾಯಿ ಇರಲಿಲ್ಲ. ತಂದೆ ಗಟಿವಾಳಪ್ಪನೇ ತಂದೆ, ತಾಯಿ ಎರಡೂ ಆಗಿ ಹುಡುಗನನ್ನು ಬೆಳೆಸಿದ್ದ. ಆದರೆ ಹುಡುಗನ ಚೇರಾಪಟ್ಟೆ, ನಡವಳಿಕೆ ದೊಡ್ಡವನಾದಂತೆ ಹೆಂಗಸರದೆಂದು ಸ್ಪಷ್ಟವಾಗತೊಡಗಿತು. ಸರಿಕರು ಚೇಷ್ಟೆ ಮಾಡಿದರು, ದೊಡ್ಡವರು ಬೈದರು; ಆದೇನು ರಿಪೇರಿ ಆಗಲಿಲ್ಲ. ನಿಂಗ್ಯಾ ಇದ್ದದ್ದು ನಿಂಗಿ ಎಂದೂ ಆಗದೆ ಎರಡರ ನಡುವಿನ ನಿಂಗೂ ಆದದ್ದು ಹೀಗೆ. +ಮದುವೆ ಮಾಡಿದರೆ ಎಲ್ಲ ಸರಿ ಹೋಗುತ್ತದೆಯೆಂದು ಜನ ಗಟಿವಾಳಪ್ಪನಿಗೆ ಬುದ್ಧೀ ಹೇಳಿದರು. ಅವನಿಗೂ ಗಂಡು ರೊಟ್ಟಿ ದಿಂಡು ಬೇಳೆ ತಿಂದು ಸಾಕಾಗಿತ್ತು. ಬೇಗನೆ ಮನೆಗೆ ಸೊಸೆ ಬಂದರೆ ಒಂದಿಷ್ಟು ಬೆಂದ ಅಡಿಗೆ ತಿನ್ನಬಹುದಲ್ಲಾ ಎಂದೋ, ಮಗ ಸುಧಾರಿಸಬಹುದೆಂದೋ ಅಂತೂ ತನ್ನ ಹೆಂಡತಿಯ ಸಂಬಂಧಿಕರಲ್ಲಿಯೇ ಒಂದು ಕನ್ಯಾ ಶೋಧಿಸಿ ಮಗನಿಗೆ ಅಂದರೆ ಸದರಿ ನೀಂಗೂನಿಗೆ ಮದುವೆ ಮಾಡಿಬಿಟ್ಟ. +ಮದುವೆ ಮಾಡುವದೇನೋ ತನ್ನ ಕೈಯಲ್ಲಿತ್ತು, ಮಾಡಿದ. ಮುಂದೆ? ಸೊಸೆ, ಅವಳ ಹೆಸರು ಗೌರಿ, ನಡೆಯಲಿಕ್ಕೆ ಬಂದಳಲ್ಲ, ಒಂದೆರಡು ದಿನ ನಿಂಗೂ ಮನೆಯಲ್ಲಿ ಮಲಗಿದ. ಆ ಮಾರನೇ ದಿನದಿಂದ ಮತ್ತೆ ಹೊರಗಡೆ ಕಟ್ಟೆಯ ಮೇಲೇ ಮಲಗತೊಡಗಿದ. ಹಬ್ಬಕ್ಕೆಂದು ತೌರಿಗೆ ಹೋದ ಗೌರಿ ತನಗೆ “ರಾತ್ರಿ ಸುಖ” ಇಲ್ಲವೆಂದು ನೆಪ ಹೇಳಿ ಗಂಡನ ಮನೆಗೆ ತಿರುಗಿ ಬರಲು ನಿರಾಕರಿಸಿದಳು. ಗಟೆವಾಳಪ್ಪನೇ ಏನೇನೋ ಹತ್ತು ಸುಳ್ಳು ಹೇಳಿ ಕರೆತಂದಾಯಿತು. +ಮತ್ತೆ ಅದೇ ಸುಖ. ಆದರೆ ಆಮೇಲೆ ಸೊಸೆ ಮತ್ತೆ ತೌರು ನೆನೆಸಲಿಲ್ಲ. ನಿಂಗೂ ಒಂದು ದಿನವೂ ರಾತ್ರಿ ಮನೆ ಸೇರಲಿಲ್ಲ. ಊರಲ್ಲಿ ಗಟಿವಾಳಪ್ಪ ಸೊಸೆಯನ್ನು ಇಟ್ಟುಕೊಂಡಿದ್ದಾನೆಂದು ಸುದ್ದಿ ಕೇಳಿ ಬರತೊಡಗಿದವು. ಸರಿಕರು ನಿಂಗೂನಿಗೆ ಛೀ ಅಂದರು, ಥೂ ಅಂದರು. ಏನಂದರೂ ನಿಂಗೂನಿರಂಬಳಾಗಿ ಹೊರಗೇ ಮಲಗುತ್ತಿದ್ದ. ನಿಂಗೂ ಈ ಬಗ್ಗೆ ಯೋಚಿಸಲಿಲ್ಲವೆಂದಲ್ಲ. ಮುಖದ ಗೆರೆ ಕಾಣಿಸಿದಂತೆ ಗೆರೆ ಕೊರೆಯುವ ಚಿಂತೆ ಕಾಣಿಸುತ್ತದೆಯೇ? ‘ಇದರಲ್ಲಿ ಪಾಪ, ಗೌರಿಯ ತಪ್ಪೇನಿದೆ? ಇರೋ ತಪ್ಪೆಲ್ಲಾ ಅಪ್ಪಂದು. ಅಪ್ಪನಾಗಿ ಸೊಸೆಯನ್ನೇ ಸೇರುತ್ತಾನಲ್ಲಾ, ನಾಚಿಕೆ ಬೇಡವೇ? ಆಗಲೇ ಗೋರಿಗೆ ಹೋಗೋ ವಯಸ್ಸಾಯಿತು. ಒಟ್ಟು ತಾನು ಮದುವೆಗೆ ಒಪ್ಪಿದ್ದೇ ತಪ್ಪು. ತಾನೆಲ್ಲಿ ಒಪ್ಪಿದೆ? ಅಪ್ಪನೇ ಅಲ್ಲವೇ ಒತ್ತಾಯದಿಂದ ಒಪ್ಪಿಸಿದ್ದು? ಆತ ಹಾಗೆ ಯಾಕೆ ಒತ್ತಾಯ ಮಾಡಿದ ಅಂತ ಈಗ ತಿಳಿಯುತ್ತದೆ. ಮದುವೆ ಮಾಡಿಕೊಳ್ಳದಿದ್ದರೆ ಈ ಅಪವಾದವಾದರೂ ಇರುತ್ತಿರಲಿಲ್ಲ. ಈಗ ತನ್ನ ಹೆಸರು; ತಂದೆಯ ಬಾಯಿಗೆ ಮೊಸರು’! +ಹೀಗೆ ಯೋಚಿಸುವಾಗ ಸಿಟ್ಟು ಬರುತ್ತಿತ್ತು. ಆದರೆ ಒಳಗೊಳಗೆ ಇದಕ್ಕೆಲ್ಲ ತಾನೇ ಜವಾಬ್ದಾರಿಯೆಂಬ ಅರಿವೂ ಮುಳ್ಳಾಗಿ ಚುಚ್ಚುತ್ತಿತ್ತು; ಸಾಲದ್ದಕ್ಕೆ ಗೌರಿ ಗರ್ಭಿಣಿ ಬೇರೆ ಆಗಿಬಿಟ್ಟಳು. ಈಗ ಮಾತ್ರ ನಿಂಗೂನಿಗೆ ಹಿಂಸೆಯಾಗತೊಡಗಿತು. ಮಂದಿಯ ಮಾತು ಚುಚ್ಚತೊಡಗಿದವು. +ಒಂದು ದಿನ ಅಂದರೆ ಕರಿ ಬೇಟೆ ನಾಳೆ ಇದೆಯೆಂದರೆ ಇಂದು ಮಧ್ಯಾಹ್ನದ ಸಮಯ, ತೋಟದ ಗುಡಿಸಲಲ್ಲಿ ನಿಂಗೂ ಕಂಬಳಿ ಹೊದ್ದುಕೊಂಡು ದಣಿದು ಮಲಗಿದ್ದ. ದಣಿಯಲಿಕ್ಕೆ ಕೆಲಸ ಎಲ್ಲಿ ಮಾಡಿದ್ದ? ಯಾರೋ ಚುಚ್ಚಿ ಮಾತಾನಾಡಿದ್ದರು. “ಹುಟ್ಟುವ ಕೂಸು ತಮ್ಮನೋ? ಯಾ ಮಗನೋ?” ಎಂದು. ತನ್ನ ಹೆಂಡತಿಯ ಯಾ-ತಾಯಿಯ ಬಗೆಗೆ ಉತ್ತರ ಕೊಡಲಾರದೆ ಅವಮಾನವನ್ನು ಸಹಿಸಲಾಗದೇ ಕಂಬಳಿ ಹೊದ್ದುಕೊಂಡು ಸುಮ್ಮನೇ ಬಿದ್ದುಕೊಂಡಿದ್ದ. ಹೊಲದಲ್ಲಿ ಹೆಂಡತಿಯೆಂಬಾಕೆ ಇದ್ದಳು. ತಂದೆಯೂ ಇದ್ದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಗುಡಿಸಲಲ್ಲಿ ಬಂದಳು. ಮುದುಕ ಇವಳು ಕೆಲಸ ಮಾಡುತ್ತಿದ್ದುದಕ್ಕೆ ಸಿಟ್ಟು ಮಾದಿ “ಆರಾಮ ತಗೋ” ಎಂದು ಬಾಯಿ ಮಾಡುತ್ತ ಒಳಗೆ ಬಂದ. ಹೊದ್ದ ಕಂಬಳಿಯ ತೂತಿನೊಳಗಿಂದ ನಿಂಗೂನಿಗೆ ಇವರ ವ್ಯವಹಾರವೆಲ್ಲ ಕಾಣಿಸುತ್ತಿತ್ತು. ಬಸುರಿನ ಭಾರಕ್ಕೆ ಬಾಡಿದ್ದ ಗೌರಿ ಕಟ್ಟೆಯ ಮೇಲೆ ಹಾಗೇ ಅಡ್ಡಾದಳು. ಮುದುಕ ಸುಮ್ಮನಿರದೇ “ಯಾಕ? ದಣಿವಾತೇನ?” ಎನ್ನುತ್ತ ಸಮೀಪ ಹೋಗಿ ಅವಳ ಕಾಲು ತಿಕ್ಕತೊಡಗಿದ. ಕಾಲಮೇಲೆ ಕೈಯಾಡಿಸುತ್ತ ಬಾಲವಾಡಿಸುವ ನಾಯಾಗಿ, ಅವಳ ಕಾಲಿಗಂಟಿದ ಧೂಳಾಗಿ ಧೂಳಿಗಂಟಿದ ಹುಳುವಾಗಿ ಜೊಲ್ಲು ಸುರಿಸುತ್ತ, ಮಾಯೆ, ಮಾಡತೊಡಗಿದ. ನಿಂಗೂನಿಗೆ ಹೇಸಿಕೆ ಬಂತು. ಎದ್ದು ಅವನ ಮುದಿ ಮುಖದ ಮೇಲೆ ಉಗುಳಬೇಕೆನ್ನಿಸಿತು. +“ಇಲ್ಲೇ ಮಲಗ್ಯಾನ, ದೂರ ಸರಿ” ಎಂದಳು ಗೌರಿ. +“ಮಲಗಿದರೇನ ಮಾಡತಾನ. ತಡಿ ಬರತೇನ” ಎನ್ನುತ್ತ ಏನೋ ನೆನಪಾಗಿ ಬಾಗಿಲು ಹಾಕಿಕೊಂಡು ಹೊರಗೆ ಹೋದ. ಗೌರಿ ಆಯಾಸದಿಂದ ಹಾಗೇ ಕಣ್ಣು ಮುಚ್ಚಿದಳು. ನಿಂಗೂನ ಮನಸ್ಸಿನಲ್ಲಿ ಎಲ್ಲಿಯ ಸೇಡು ಉಕ್ಕಿತೋ, ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ, ಹಾ ಎನ್ನುವುದರೊಳಗೆ ಮೈಯಲ್ಲಿ ಮಿಂಚು ಸರಿಸಿ ಪಕ್ಕದಲ್ಲಿದ್ದ ಕುಡಗೋಲು ಮಸೆಯುವ ಕಲ್ಲನ್ನೆತ್ತಿ ಗೌರಿಯ ಹೊಟ್ಟೆಯ ಮೇಲೇ ಹೆಟ್ಟಿಬಿಟ್ಟ! ತಾಯಿ ಹಾ ಎಂದು ಬಿಟ್ಟ ಉಸಿರನ್ನು ಮತ್ತೆ ತಕ್ಕೊಳ್ಳಲೇ ಇಲ್ಲ. ಹೊಟ್ಟೆ ಹಿಡಿದುಕೊಂಡು ಒಂದೆರಡು ಬಾರಿ ಹೊರಳಾಡಿ ಒದ್ದಾಡಿ ಸತ್ತುಬಿಟ್ಟಳು. +ಗೌರಿ ಹಾ ಎಂದು ಉಸಿರೆಳೆದದ್ದು ಗಟಿವಾಳಪ್ಪನಿಗೆ ಕೇಳಿಸಿ ಒಳಗೆ ಓಡಿಬಂದ. ಏನಾಯಿತೆಂದು ಹೆಣದ ಬಳಿ ಧಾವಿಸುವಷ್ಟರಲ್ಲಿ ನಿಂಗೂ ಸೂರಿನಲ್ಲಿದ್ದ ಚೂಪುಗೊದಲಿ ಹಿಡಿದು ಮುದುಕನ ಗೋಣಿಗೇ ಇಕ್ಕಿಬಿಟ್ಟ. ರುಂಡ ಚಂಗನೆ ನೆಗೆದು ಸೊಸೆಯ ಪಾದದ ಕಡೆ ಉರುಳಿ ಮುಂಡ ಮಾತ್ರ ಸೊಸೆಯ ಹಾಸಿಗೆ ಕಡೆಗೆ ಜಿಗಿದಾಡುತ್ತ ಧಾವಿಸತೊಡಗಿತು. ಅದೆನು ಭಯವೋ, ಆವೇಶವೋ, ನಿಂಗೂ “ಹಾ ಹಾ” ಎಂದು ಕಿರುಚುತ್ತ ಎರಡೂ ಕೈ ಎತ್ತಿ ಮುಂಡದ ಜೊತೆ ಸ್ಪರ್ಧೆಗಿಳಿದಂತೆ ಕುಣಿಯತೊಡಗಿದ. ಇನ್ನೊಂದು ಕ್ಷಣ ಮುಂಡ ಹಾಗೇ ಕುಣಿದಿದ್ದರೆ ನಿಂಗೂನ ಗತಿ ಏನಾಗುತ್ತಿತ್ತೋ; ಅದರ ಕಾಲಿಗೆ ಸೊಸೆಯ ಹೆಣವಿದ್ದ ಕಟ್ಟಿ ತಾಗಿದೊಡನೆ ಧೊಪ್ಪನೆ ಬೆನ್ನು ಮೇಲಾಗಿ ಬುಡ ಕಡಿದ ಮರದಂತೆ ಬಿದ್ದುಬಿಟ್ಟಿತು. +ಅದೇ ಆವೇಶದಲ್ಲಿ ಚೂಪುಗೊಡಲಿ ಹಿಡಿದುಕೊಂಡೇ ನಿಂಗೂ ಹೊರಬಂದು ಊರಕಡೆ ಓಡತೊಡಗಿದ. ಮಧ್ಯೆ ಕಳ್ಳ ಬರದಿದ್ದರೆ ಏನಾಗುತ್ತಿತ್ತೋ, ಕಳ್ಳ ಸಿದರಾಮ “ಯಾಕಲೇ ನಿಂಗೂ ಏನಾತೋ?” ಅಂದ. ನಿಂಗೂ ಈಗ ಮನುಷ್ಯನಾಗಿ ಅಲ್ಲೇ ಕುಸಿದುಬಿದ್ದ. ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ಎಪ್ಪಾ ಎಂದು ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ. +ನಿಂಗೂನ ಹುಯ್ಲಿನ ಅರೆ ಭಾಷೆ ಕೈ ಬಾಯಿಗಳ ಸನ್ನೆಗಳ ಮೇಲಿಂದ ಏನೋ ಅನಾಹುತವಾಗಿದೆಯೆಂದು ಊಹಿಸಿ “ಓಡಿಹೋಗಿ ಗೌಡ್ರ ಕಾಲ ಹಿದಕೊಳ್ಳಲೇ” ಎಂದ. ಕೊಡ್ಲಿ ಅಲ್ಲೇ ಬಿಟ್ಟು ನಿಂಗೂ ಊರಿನತ್ತ ಓಡಿದ. ಕಳ್ಳ ಗುಡಿಸಲಿಗೆ ಹೋಗಿ ನೋಡಿದ. ಗುಡಿಸಲ ತುಂಬ ರಕ್ತ ಹರಿದಾಡಿತ್ತು. ಕಟ್ಟೆಯ ಮೇಲೆ ಬಕ್ಕಬರಲೆ ಬೆನ್ನು ಮೇಲಾಗಿ ಕಾಲು ಗೀಸಿಕೊಂಡು ಗಟಿವಾಳೆಪ್ಪನ ಹೆಣ ಬಿದ್ದಿತ್ತು. ಕಾಲ್ದೆಸೆ ಕೆಳಕ್ಕೆ ರುಂಡ ಬಿದ್ದಿತ್ತು. ಅದರಾಚೆ ಗೌರಿಯ ಹೆಣ ಕಣ್ಣು ಕಿಸಿದುಕೊಂಡೇ ಬಿದ್ದಿತ್ತು. ಕಣ್ಣಿಗೆ ಚಕ್ರ ಬಂದಂತಾಯ್ತು. ಕೂಡಲೇ ಕಳ್ಳ ಕಾಲಿಗೆ ಬುದ್ಧಿ ಹೇಳಿದ. ಇಳಿ ಹೊತ್ತಾಗಿತ್ತು. ಪಡಸಾಲೆಯಲ್ಲಿ ಗೌಡ ಕೂತುಕೊಂಡು ಮಗ ಶಿವನಿಂಗನಿಗೆ ಅದೇನೋ ವ್ಯವಹಾರ ಹೇಳುತ್ತಿದ್ದ. ನಿಂಗೂ ಓಡಿಬಂದವನೇ ಗೌಡನ ಕಾಲು ಗಟ್ಟಿಯಾಗಿ ಹಿಡಕೊಂಡು, “ಎಪ್ಪಾಽ ಎಪ್ಪಾಽಽ” ಎನ್ನುತ್ತ ಅವನ ಪಾದಕ್ಕೆ, ತಪ್ಪಿದರೆ ನೆಲಕ್ಕೆ ತಲೆಯಿಂದ ಕುಟ್ಟಲಾರಂಭಿಸಿದ. ಗೌಡ ‘ಏನೋ’ ಅಂದರೂ ಇಲ್ಲ ‘ಎಂತೋ’ ಅಂದರೂ ಇಲ್ಲ; ಬರೀ “ಎಪ್ಪಾ ಎಪ್ಪಾ…”ಗೌಡ ನೋಡುವಷ್ಟು ನೋಡಿ ಅವನ ಜುಟ್ಟು ಹಿಡಿದು ಮೇಲೆತ್ತಿ ಕೆನ್ನೆಗೆರಡು ಬಿಗಿದ. ನಿಂಗೂ ಮತ್ತೆ ಮನುಷ್ಯರೊಳಗೆ ಬಂದ. +ಎಲ್ಲ ಕೇಳಿದ ಮೇಲೆ ಗೌಡ “ನೀ ಸೀದಾ ತೋಟಕ್ಕ ನಡಿ. ನಾವೂ ಬರುತೇವ” ಎಂದು ನಿಂಗೂನನ್ನು ಕಳಿಸಿ ದತ್ತಪ್ಪನ ಮನೆಗೆ ಹೊದ. “ದತ್ತೂ ದಗದೈತಿ ಬಾ” ಎಂದು ಬಾಗಿಲಲ್ಲೇ ನಿಂತು ಕರೆದ. ಏನೋ ಅನಾಹುತವಾಗಿರಬೇಕೆಂದು ಊಹಿಸಿದ ದತ್ತಪ್ಪ ನಿಂತ ಕಾಲಮೇಲೆ ಏನು ಯಾಕೆ ಎನ್ನದೇ ಬೆನ್ನು ಹತ್ತಿದ. +ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌದನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತು ಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಳಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೇ ಮಲಗಿದ್ದ ಮಗ ಕಾಣದಶ್ಟು ಕುರುಡಾಗೋದಂದರೇನು? ಮನುಷ ಸಹನೆಗೂ ಮಿತಿ ಇಲ್ಲವೆ? ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು. ಸಿಟ್ಟು ನಿಂಗೂನ ಕಣ್ನು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು? +ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಕೂಡ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು, +ಗುಡಸೀಕರ ಉಂಡು ಮಲಗಿದ್ದವನು ಇನ್ನೂ ಎದ್ದಿರಲಿಲ್ಲ. ಕಳ್ಳ ಅವನನ್ನೆಬ್ಬಿಸಿ ನಡೆದ ಘಟನೆಯನ್ನು, ತಾನೇ ಹೆದರಿದ್ದರಿಂದ ಇರಬೇಕು, ಭಯಂಕರವಾಗಿ ವರ್ಣಿಸಿದ. ಗುಡಸೀಕರನಿಗೂ ಭಯವಾಯ್ತು. +***** +ಮುಂದುವರೆಯುವುದು +ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು […] +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_540.txt b/Kannada Sahitya/article_540.txt new file mode 100644 index 0000000000000000000000000000000000000000..bd7faed18ed42a138de94fa99b303425b6bfe9e4 --- /dev/null +++ b/Kannada Sahitya/article_540.txt @@ -0,0 +1,190 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ ಹುಡುಗರನ್ನು ಎಬ್ಬಿಸಲು ಬಂದ ಉಪಾಧ್ಯಾಯರು ಅ ಹುಡುಗನಿಲ್ಲದಿರುವುದನ್ನು ಕಂಡರಂತೆ…….ಅವನನ್ನು ಹುಡುಕಲು ಈಗಾಗಲೇ ಹಲವರು ಹೋಗಿದ್ದಾರಂತೆ….. +ಸೋಮಣ್ಣ ಒಳ ಹೋದ. ಒಲೆಯ ಮೇಲಿನ ತಪ್ಪಲೆಯಲ್ಲಿ ನೀರು ಮರಳುತ್ತಿತ್ತು. ಆರಿಸಿಟ್ಟ ಅಕ್ಕಿ ಮೊರದಲ್ಲಿತ್ತು. ನೀರಿನ ತಪ್ಪಲೆಯನ್ನು ಕೆಳಗೆ ಇಳಿಸಿದ. ಒಲೆಯೊಳಗಿನ ಕಟ್ಟಿಗೆಯನ್ನು ಹೊರಗೆ ಎಳೆದು ನೀರು ಹಾಕಿ ಚುಮುಕಿಸಿದ. ಮೇಲೆದ್ದ ಹೊಗೆಯಿಂದಾಗಿ ಉಸಿರು ಕಟ್ಟಿಕೊಂಡಾಯಿತು. ಕೆಮ್ಮೂ ಬಂತು. ಜೊತೆಗೆ ಹೇಳದೇ ಕೇಳದೇ ಮನೆ ಬಿಟ್ಟು ಹೋದ ಹೆಂಡತಿಯ ನೆನಪಾಗಿ ಸಿಟ್ಟೂ ಬಂದಿತು. ನಾನು ಯಾವುದಕ್ಕೆ ಕಡಿಮೆ ಮಾಡಿದ್ದೆ ಇಲ್ಲಿ? ಹಾಲು ತುಪ್ಪದಿಂದ ಹಿಡಿದು ಉಪ್ಪು ಮೆಣಸಿನಕಾಯಿಯವರೆಗೆ ಎಲ್ಲವನ್ನೂ ತಂದುಹಾಕುತ್ತಿದ್ದೆ. ಸೀರೆ ರವಕೆ ಎಂದು ಸಾಕಷ್ಟು ತಂದುಕೊಡುತ್ತಿದ್ದೆ. ಆದರೂ ಹಾಳಾದವಳು ಜಗಳ ತೆಗೆದು ಹೋದಳು. ಹೋಗಲಿ, ಹಾಳಾಗಿ ಹೋಗಲಿ. ನಾನಂತೂ ಕರೆಯಲು ಹೋಗುವವನಲ್ಲ. ಬಂದರೂ ಮನೆಯೊಳಗೆ ಸೇರಿಸುವುದಿಲ್ಲ. +ಕಿಟಿಕಿಯ ಬಾಗಿಲು ಮುಚ್ಚಿದ. ಪಂಚೆ ಸುತ್ತಿಕೊಂಡ. ಶರಟು ಧರಿಸಿದ. ಬೀಗ ಬೀಗದಕೈ ಎತ್ತಿಕೊಂಡು ಹೊರಬಂದು, ಬಾಗಿಲು ಜಡಿದು, ಬೀಗ ಹಾಕಿದ. ರಸ್ತೆಯ ಅಂಚಿನಲ್ಲಿ ನಿಂತಿದ್ದ ಹುಡುಗನನ್ನು ಕೂಗಿ ಕರೆದ. +“ತಮ್ಮಾ, ಶಾಲೆಗೆ ಹೋಗಿ ಮೇಷ್ಟ್ರಿಗೆ ಹೇಳು…..ಸೋಮಣ್ಣಾವ್ರು ಕಾನ್ ತೋಟದ ಹುಡುಗನ್ನ ಹುಡುಕಾಕೆ ಕಲ್‌ಮನೆಗೆ ಹೋದ್ರು ಅಂತ…..” ಎಂದು ಹೇಳಿ +“ಹೇಳ್ತೀಯಾ?…..” +ಎಂದು ಹುಡುಗನ ಬಾಯಿಂದ ಅಷ್ಟನ್ನೂ ಮತ್ತೊಮ್ಮೆ ಹೇಳಿಸಿ, ಹುಡುಗ ಶಾಲೆಯತ್ತ ಹೋಗುತ್ತಿರಲು, ಇವನು ಕಲ್‌ಮನೆಯ ದಾರಿ ಹಿಡಿದ. ಕಾನ್‌ತೋಟದ ಹುಡುಗನ ಅಕ್ಕನ ಮನೆ ಕಲ್‌ಮನೆಯಲ್ಲಿತ್ತು. ಹುಡುಗ ಅಲ್ಲಿಗೆ ಹೋಗಿರಬಹುದೆಂದು ಮೇಷ್ಟ್ರು ಹೇಳಿದ್ದರು. ಶಾಲೆಯ ಆಳು, ಅಡಿಗೆಯಾತ, ಗ್ರಾಮಸೇವಕ ಇಮಾಮ ಹುಡುಗನನ್ನು ಹುಡುಕಿಕೊಂಡು ಇತರ ಹಳ್ಳಿಗಳಿಗೆ ಹೋಗಿದ್ದರು. ಇವನು ಕಲ್‌ಮನೆಗೆ ಹೊರಟ. +* +* +* +ಆಶ್ರಮಶಾಲೆಯ ಕಾನ್‌ತೋಟದ ಹಸಲರ ಹುಡುಗ ಮತ್ತೊಮ್ಮೆ ಕಾಣೆಯಾಗಿದ್ದಾನೆ ಎಂದು ಮೇಷ್ಟ್ರು ಹೇಳಿದಾಗ ರಂಗಣ್ಣ ಹಂಡೆಗೆ ನೀರು ತುಂಬುತ್ತಿದ್ದ. ಆಶ್ರಮದ ಹುಡುಗರು ಇನ್ನೇನು ಸ್ನಾನಕ್ಕೆ ಬರುತ್ತಾರೆ. ಹಂಡೆಯಲ್ಲಿ ನೀರು ಕಾದಿದೆ. ಪಕ್ಕದ ಬಾನಿನಲ್ಲಿ ನೀರು ತುಂಬಿದರೆ ಒಂದು ಕೆಲಸವಾದ ಹಾಗೆ. ಹೀಗೆಂದು ಬಾವಿಗೆ ಹಗ್ಗ ಬಿಟ್ಟು ನೀರು ಸೇದುತ್ತಿರಬೇಕಾದರೇನೇ ಮೇಷ್ಟ್ರು ತನ್ನನ್ನು ಹುಡುಕಿಕೊಂಡು ಬಂದರು. +“ರಂಗಣ್ಣ” ಎಂದರು ಬಾವಿಕಟ್ಟೆಯ ಬಳಿ ಬಂದು. +“ಏನ್ಸಾರ್?” +“ಆ ಹುಡುಗ ಮತ್ತೆ ಓಡಿಹೋಗಿದ್ದಾನೆ ಕಣ್ಣಯ್ಯ.” +“ಯಾರು ಸಾರ್….ಕಾನ್‌ತೋಟದವನೆ?” +“ಹೌದು. ಮೊನ್ನೆ ಓಡಿಹೋದವನನ್ನು ಹ್ಯಾಗೋ ಹುಡುಕಿಕೊಂಡು ಬಂದಿದ್ವಲ್ಲ…..ಮತ್ತೆ ಓಡಿಹೋಗದಿರಲಿ ಅಂತ ಕಾಲಿಗೊಂದು ಕಬ್ಬಿಣದ ಹಾರೇನೂ ಕಟ್ಟಿದ್ವಿ…..ಸರಪಳಿ ಹಾಕಿ. ಆದ್ರೆ ಈಗ್ಲೂ ಆ ಹಾರೆ ಸಮೇತ ಓಡಿಹೋಗಿದ್ದಾನೆ……” +ಮೇಷ್ಟ್ರು ಪೇಚಾಡಿಕೊಂಡರು. ಅವರ ಮುಖ ನೋಡಲಾಗಲಿಲ್ಲ. +“ನೋಡೋಣ ಬಿಡಿ ಸಾರ್. ನಾನು ಕಾನ್‌ತೋಟಕ್ಕೇನೆ ಹೋಗಿ ಬರ್ತೀನಿ” ಎಂದ ರಂಗಣ್ಣ. +“ಹೋಗಿ ಬಾ ಹಾಗಾದ್ರೆ” ಎಂದು ಹೇಳಿ ಅವರು ಅಡಿಗೆ ಮನೆಯತ್ತ ನಡೆದರು. +ಸರಸರನೆ ಇಪ್ಪತ್ತು ಕೊಡ ನೀರು ಎಳೆದು ಹಂಡೆ ಬಾನಿ ತುಂಬಿಸಿದ್ದಾಯ್ತು. +ನಾಲ್ಕನೇ ತರಗತಿಯ ನಾಲ್ವರು ಹುಡುಗರನ್ನು ಕರೆದು, ಚಿಕ್ಕ ಹುಡುಗರಿಗೆಲ್ಲ ಸ್ನಾನ ಮಾಡಿಸುವಂತೆ ಹೇಳಿ ರಂಗಣ್ಣ ಹೊರಟ. +ಮನೆಗೆ ಹೋಗಿ ಹೆಂಡತಿಗೆ ಒಂದು ಮಾತು ಹೇಳಿ ಹೋದರಾಗುತ್ತಿತ್ತೆಂದು ಮನೆಯತ್ತ ಇಳಿದ. +ನೆಲಕ್ಕೆ ತಾಗುವಂತೆ ಇಳಿದ ಮನೆ ಮಾಡು ತಲೆಗೆ ತಾಗದಿರಲೆಂಬಂತೆ ತಲೆ ತಗ್ಗಿಸಿಕೊಂಡು ಒಳಹೋದಾಗ ಜಗಲಿಯ ಮೇಲೆ ಮಲಗಿದ್ದ ತಾಯಿ ಹಾಂ ಎಂದು ನರಳಿ ಪಕ್ಕಕ್ಕೆ ಹೊರಳಿದಳು. ಮೂರು ತಿಂಗಳ ಬಾಣಂತಿ ಹೆಂಡತಿ ಒಲೆ ಎದುರು ಕುಳಿತಿದ್ದಳು. ನಾಲ್ಕನೆಯ ಹುಡುಗ ಅಷ್ಟು ದೂರದಲ್ಲಿ ಮೈ ಕೆರೆದುಕೊಳ್ಳುತ್ತಾ ಮಲಗಿದ್ದ. ಅಲ್ಲಿ ಮತ್ತೂ ಸ್ವಲ್ಪ ಹೊತ್ತು ನಿಂತರೆ ತಲೆ ಕೆಡುತ್ತದೆಂಬುದು ಖಚಿತವಾಗಿ, ತಾನು ಕಾನ್ ತೋಟಕ್ಕೆ ಹೋಗುವುದಾಗಿಯೂ, ಬರುವುದು ಸಂಜೆಯಾಗುತ್ತದೆಂದೂ ಹೇಳಿ, ಉತ್ತರಕ್ಕಾಗಿ ಕಾಯದೆ ರಂಗಣ್ಣ ಮನೆಯಿಂದ ಹೊರಬಿದ್ದ. ಹೆಗ್ಗಡೆಯವರ ತೋಟಕ್ಕೆ ಇಳಿದು ಕಾನ್‌ತೋಟದ ದಾರಿ ಹಿಡಿದು ಸಾಗಿದ. +* +* +* +ಕಾನ್ ತೋಟದ ಹುಡುಗ ಕಾಣೆಯಾಗಿದ್ದಾನೆ ಚೌಡಪ್ಪ ಎಂದು ಮೇಷ್ಟ್ರು ಅಡಿಗೆಮನೆ ಬಾಗಿಲಲ್ಲಿ ನಿಂತು ಹೇಳಿದಾಗ ಕೇರ್ ಸಂಸ್ಥೆಯವರು ಕೊಟ್ಟ ಹಳದಿ ರವೆಯ ಉಪ್ಪಿಟ್ಟು ಮಾಡುತ್ತಿದ್ದ ಚೌಡಪ್ಪ ಬಾಗಿಲತ್ತ ತಿರುಗಿ ನಿಂತ. ಕಾನ್‌ತೋಟದ ಹುಡುಗ ಕಾನ್ ತೋಟದಲ್ಲಿ, ಬೂರಲುಕೆರೆಯ ದಂಡೆಯ ಮೇಲೆ ಓಡಿಯಾಡಿಕೊಂಡಿದ್ದ. ಶಾಲೆಯಲ್ಲಿ ಕಲಿಯಲೆಂದು ಅವನನ್ನು ಮೇಷ್ಟ್ರು ಕರೆತಂದು ಶಾಲೆಗೆ ಸೇರಿಸಿದರು. ಆಶ್ರಮಶಾಲೆಯಲ್ಲಿ ನಾಲ್ಕು ದಿನ ಅವನು ಉಳಿದ. ಐದನೇ ದಿನ ಓಡಿಹೋದ. ಆರನೇ ದಿನ ಅವನ ತಂದೆ ಕಾನ್‌ತೋಟದಿಂದ ಹುಡುಗನನ್ನು ಕರೆತಂದ. ಹುಡುಗ ನಂತರ ಮತ್ತೆ ನಾಲ್ಕು ದಿನ ಆಶ್ರಮದಲ್ಲಿದ್ದ. ಐದನೆ ದಿನ ಕಾಣೆಯಾದ. ಈ ಬಾರಿ ಚೌಡಪ್ಪ ಅವನನ್ನು ಬೆಳ್ಳಾಣೆಯ ಅವನ ಚಿಕ್ಕಪ್ಪನ ಮನೆಯಲ್ಲಿ ಹುಡುಕಿ ಕರೆತಂದ. ಈಗ ಮತ್ತೆ ಓಡಿಹೋಗಿದ್ದಾನೆ. +“ಮತ್ತೆ ಬೆಳ್ಳಾಣೆಗೆ ಹೋದ್ನೋ ಏನೋ?” +“ಏನೋಪ್ಪ, ನಿನ್ನೆ ರಾತ್ರಿ ಎಲ್ಲ ಹುಡಗ್ರ ಜೊತೇಲಿ ಅವನೂ ಮಲಕ್ಕೊಂಡ್ದ್ನಂತೆ. ಬೆಳಗಾದಾಗ ಇಲ್ಲ, ಅಂದ್ರೆ….ರಾತ್ರೀನೇ ಇಲ್ಲಿಂದ ಹೋದ್ನೋ ಏನೋ. ಕಾಡ್ನಲ್ಲಿ ಒಬ್ನೇ ಹ್ಯಾಗೇ ಹೋದ್ನೋ…..ಏನು ಅಪಾಯ ಆಯ್ತೋ…..” +ಈ ಮೇಷ್ಟ್ರುದು ಮೊದಲೇ ಮೃದು ಹೃದಯ. ಹುಡುಗ ತಪ್ಪಿಸಿಕೊಂಡು ಹೋಗಿರೋದನ್ನು ಅವರು ತೀವ್ರವಾಗಿಯೇ ತೆಗೆದುಕೊಂಡಿರೋ ಹಾಗಿದೆ. ಚೌಡಪ್ಪ ಬಾಂಡಲಿ ಕೆಳಗಿಳಿಸಿದ. +“ನಾನು ಹೋಗಿ ಬರಲಾ ಸಾರ್ ಬೆಳ್ಳಾಣೆಗೆ?” +“ಹೋಗ್ ಬಾ ಚೌಡಪ್ಪ. ಹುಡುಗ ಇಂಥ ಕಡೆ ಇದಾನೆ ಅನ್ನೋ ವಿಷಯ ನನ್ನ ಕಿವಿಗೆ ಬೀಳೋತನಕ ನನಗೆ ಸಮಾಧಾನ ಇಲ್ಲ…..” +ಮೇಷ್ಟ್ರು ಅಲ್ಲಿಂದ ಹೊರಟರು. +ಚೌಡಪ್ಪ ಹೆಣ್ಣಾಳು ಗೌರಮ್ಮನನ್ನು ಕರೆದ. ಅಡಿಗೆ ಜವಾಬ್ದಾರಿ ಈವತ್ತು ನಿಂದು ಎಂದ. ಅವಳ ಕೈಗೆ ಸೌಟು ಕೊಟ್ಟು ಬಚ್ಚಲಿಗೆ ಹೋದ. ಕೈ ಕಾಲು ಮುಖ ತೊಳೆದುಕೊಂಡ. ತನ್ನ ಕೋಣೆಗೆ ಹೋಗಿ ಬೇರೆ ಉಡುಪು ಧರಿಸಿ ಹೊರಟ. +ಶಾಲೆಯ ಎದುರಿನ ಗುಡ್ಡದ ಮೇಲೆ ಬೈತಲೆ ತೆಗೆದಂತೆ ಹರಿದ ಕಾಲು ದಾರಿಯಲ್ಲಿ ಅಷ್ಟು ದುರ ನಡೆದು ಪುನ್ನೇರಲೇ ಪೊದೆಗಳ ನಡುವೆ ಮಾಯವಾಗುವ ಮುನ್ನ ಅದೇಕೋ ಶಾಲೆಯತ್ತ ಹೋಗುವ ಕಾಲುದಾರಿಯತ್ತ ತಿರುಗಿ ನೋಡಿದವ ಗಕ್ಕನೆ ನಿಂತ. ಶಾಲೆಯತ್ತ ಹೋಗುತ್ತಿರುವ ಆ ವ್ಯಕ್ತಿ ಯಾರು? ನನ್ನ ಅಣ್ಣನಲ್ಲವೆ? ಹೌದು. ತನ್ನನ್ನೇ ಹುಡಿಕಿಕೊಂಡು ಹೋಗುತ್ತಿರಬಹುದು. ಸಟ್ಟನೆ ತಿರುಗಿ ವೇಗವಾಗಿ ಬೆಳ್ಳಾಣೆಯತ್ತ ಹೊರಟ. +* +* +* +ಆಶ್ರಮಶಾಲೆಯಲ್ಲಿದ್ದ ಕಾನ್‌ತೋಟದ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂದು ಅಂಗಳದಲ್ಲಿರಿಸಿದ್ದ ಸೈಕಲ್ಲನ್ನು ಒರೆಸುತ್ತಿದ್ದಾಗ, ಆಶ್ರಮದ ಕಡೆಯಿಂದ ಬಂದ ಹಾಲಿನ ಮುದುಕ ಹೇಳಿಹೋದ. ಈ ಹುಡುಗನಿಗೆ ಇದೇ ಅಭ್ಯಾಸವಾಗಿ ಹೋಗಿದೆಯಲ್ಲ ಎಂದು ಅಚ್ಚರಿಯಾಯಿತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಲ ಹುಡುಗರು, ತಂದೆತಾಯಿ ಮನೆಗಳನ್ನು ಬಿಟ್ಟು ಆಶ್ರಮಶಾಲೆಯಲ್ಲಿ ಆರಾಮವಾಗಿದ್ದಾರೆ. ಹೊತ್ತುಹೊತ್ತಿಗೆ ಊಟ, ತಿಂಡಿ ದೊರೆಯುತ್ತದೆ. ಸ್ನಾನ ಮಾಡಿಸುತ್ತಾರೆ. ಪಾಠ ಹೇಳಿಕೊಡುತ್ತಾರೆ. ಹಬ್ಬಕ್ಕೂ ಆಸ್ಪದವಿದೆ. ಸರಕಾರವೇ ಬಟ್ಟೆ ಪುಸ್ತಕಗಳನ್ನು ಒದಗಿಸುತ್ತದೆ. ಎಲ್ಲ ಹುಡುಗರೂ ನಿಶ್ಚಿಂತೆಯಿಂದಿದ್ದಾರೆ. ಈ ಹುಡುಗನೇ ಅದೇಕೋ ಇದೆಲ್ಲವನ್ನೂ ಧಿಕ್ಕರಿಸಿ ಓಡಿಹೋಗುತ್ತಾನೆ. +ಇಮಾಮ ಸೈಕಲ್ ತಳ್ಳಿಕೊಂಡು ಶಾಲೆಗೆ ಅಂದ. ಹೂ ತೋಟದಲ್ಲಿ ನಿಂತಿದ್ದ ಮೇಷ್ಟ್ರಿಗೆ- +“ಹೌದೆ ಮೇಷ್ಟೇ…ಹುಡುಗ ಮತ್ತೆ ಓಡಿ ಹೋದ್ನಂತಲ್ಲ”-ಎಂದು ಕೇಳಿದ. +ಅವರು “ಹೌದು ನೋಡಿ” ಎಂದಾಗ- +“ಎಲ್ಲಿ ಹೋಗಿರಬಹುದು ಅಂತೀರಾ” ಎಂದು ಕೇಳಿದ. +“ಎಲ್ಲಿಗೆ ಅಂತ ಹೇಳೋದು. ಕಲ್‌ಮನೆ, ಕಾನ್‌ತೋಟ, ಬೆಳ್ಳಾಣೆ, ಮಂಜಿನಕಾನು. ತಾಳಗುಪ್ಪದಲ್ಲಿ ಅವನ ನೆಂಟ್ರು ಸಂಬಂಧಿಕರು ಇದ್ದಾರೆ. ಅವನು ಹೋದ್ರೆ ಇಷಟರಲ್ಲಿ ಎಲ್ಲೋ ಒಂದು ಕಡೆ ಹೋಗಿರಬೇಕು. ರಂಗಣ್ಣ ಚೌಡಪ್ಪ. ಕಾನ್‌ತೋತ, ಬೆಳ್ಳಾಣೆಗೆ ಹೋದ್ರು, ಹುಡುಗ ಅಲ್ಲಿದ್ದಾನೋ ನೋಡಿಕೊಂಡು ಬರ್ತೀವಿ ಅಂತ…… ” +“ಹಾಗಾದ್ರೆ ಮೇಸ್ಟ್ರೆ, ನಾನು ಮಂಜಿನ ಕಾನಿಗೆ ಹೋಗಿ ಬರ್ತೀನಿ, ಯಕ್ಷಿಕಟ್ಟೆ ಹತ್ರ ಇದೆಯಲ್ಲ ಅದೇ ತಾನೆ ಈ ಹುಡುಗನ ಸೊದರತ್ತೆ ಮನೆ?” +`ಹೌದು, ನಿಮಗೆ ಬೇರೆ ಏನೂ ಕೆಲ್ಸ ಇಲ್ಲದಿದ್ರೆ ಹೋಗಿಬನ್ನಿ…..” +“ಕೆಲ್ಸದ ಮನೆ ಹಾಳಾಯ್ತು, ನಾನು ಹೋಗ್ತೀನಿ ಬಿಡಿ”-ಇಮಾಮ ಸೈಕಲ್ಲನೇರಿದ. +ಮನೆ ಎದುರಿನಿಂದ ಹಾದು ಹೋಗುವಾಗ ಅಂಗಳದಲ್ಲಿದ್ದ ತಾಯಿ ಕೇಳಿದಳು- +“ಅಲ್ಲೋ ಇಮಾಮ, ಬೆಳಗಾದ ಕೂಡ್ಲೆ ಮನೇಲಿ ಏನಿದೆ ಏನಿಲ್ಲ ಅಂತಾನೂ ಕೇಳ್ದೆ ಹೊರಟುಬಿಟ್ಯಲ್ಲ. ಮನೇಲಿರೋರು ಬದುಕಬೇಕೋ ಸಾಯಬೇಕೋ?…..” +ಗೇಟಿಗೆ ಕಾಲುಕೊಟ್ಟು ಸೈಕಲ್ ನಿಲ್ಲಿಸಿಕೊಂಡಿದ್ದವ ಮುಂದೆ ಚಲಿಸಿ- +“ಎಲ್ಲ ಹೋಗಿ ಹಿರೇಭಾಸ್ಕರ ಡ್ಯಾಮಿಗೆ ಮಗುಚಿಕೊಳ್ಳಿ-” +ಎಂದು ನುಡಿದವನೆ ಪೆಡಲ್ ತುಳಿಯಲಾರಂಭಿಸಿದ. +* +* +* +ಬೆಳಗಿನ ಜಾವದ ಮೊದಲ ಕೋಳಿ ಕೂಗುತ್ತಿರುವಾಗಲೇ ಎದ್ದೆ. ಶಾಲೆಯ ಜಗುಲಿಯ ಮೇಲೆ ಇಳಿಬಿಟ್ಟ ಜಾಗಟೆಯನ್ನು ಹೊಡೆದೆ. ಮುಖ ತೊಳೆದು ಬರುವಷ್ಟರಲ್ಲಿ ಹುಡುಗರಲ್ಲಿ ಕೆಲವರು ಎದ್ದು ಶಾಲೆಗೆ ಬಂದಿದ್ದರು. ಇನ್ನೂ ಕೆಲವರು ಬಂದಿರಲಿಲ್ಲ. ಹುಡುಗರ ವಸತಿಗೃಹಕ್ಕೆ ಹೋಗಿ ಮಲಗಿದ್ದವರನ್ನೆಲ್ಲ ಎಚ್ಚರಿಸಿದೆ. ಎಲ್ಲರೂ ಎದ್ದು ಅವರವರ ಹಾಸಿಗೆ ಸುತ್ತಿಟ್ಟು ಹೊರಗೆ ನಡೆದರು. ಆದರೆ ಮೂಲೆಯಲ್ಲಿ ಒಂದು ಹಾಸಿಗೆ ಹಾಸಿದಂತೆಯೇ ಇತ್ತು. +“ಮಾದಪ್ಪ ಅದು ಯಾರ್ದು ಹಾಸಿಗೆ?” +“ಕನ್ನಂದು ಸಾರ್.” +“ಎಲ್ಲಿ ಕನ್ನ? ಕರಿ ಅವನ್ನ. ಎದ್ದ ಕೂಡ್ಲೆ ಹಾಸಿಗೆ ತೆಗೀಲಿಕ್ಕೂ ಬರಲ್ಲೇನು ಅವನಿಗೆ?” +ಹುಡುಗರು ಕನ್ನನನ್ನು ಹುಡುಕಲು ಹೋದರು. +ಶಾಲೆಯ ಹೊರ ಅಂಗಳದಲ್ಲಿ ಪ್ರಾತಃಕಾಲದ ಪ್ರಾರ್ಥನೆ.. +“ಈಶಾವಾಸ್ಯಮಿದಂ +ಸಕಲಕೆಲ್ಲಕು ನೀನೇ +ಶರಣು ಶರಣುವಯ್ಯ ಗಣನಾಯ್ಕ +ವಂದೇ ಮಾತರಂ” +`ಪ್ರಾರ್ಥನೆ ಮುಗಿದಾಗ ಕನ್ನ ಇಲ್ಲ ಎಂಬ ಸುದ್ದಿ ಬಂತು. ಎದುರು ಕುಳಿತ ಹುಡುಗರ ನಡುವೆಯೂ ಕನ್ನ ಇರಲಿಲ್ಲ. ಎಲ್ಲಿಗೆ ಹೋದ? ಓಡಿ ಹೋಗದಿರಲೆಂದು ಕಾಲಿಗೊಂದು ಹಾರೆ ಕಟ್ಟಿದ್ದೆ. ಹಾಗೆ ಮಾಡಬಾರದಿತ್ತು. ನಿಜ. ಅದೊಂದು ಹಿಂಸೆಯೂ ಹೌದು. ಆದರೂ ಬೇರೆ ದಾರಿ ಇರಲಿಲ್ಲ. ಹುಡುಗ ಆಶ್ರಮದಲ್ಲಿರಲಿ, ಓದು ಕಲಿತು ವಿದ್ಯಾವಂತನಾಗಲಿ ಎಂದು ಇಷ್ಟು ಮಾಡಿದ್ದು. ಆದರೂ ಓಡಿಹೋದನೆಂದರೆ! ರಾತ್ರಿಯೇ ಖಾನ್‌ತೋಟಕ್ಕೆ ಹೋದನೋ ಏನೋ. ದಾರಿಯಲ್ಲಿ ಹಳ್ಳಕೊಳ್ಳಕ್ಕೆ ಬಿದ್ದಿದ್ದರೆ? ಯಾವುದೋ ಕಾಡುಪ್ರಾಣಿ ಅವನನ್ನು ಹಿಡಿದು ಕಿತ್ತು ತಿಂದಿದ್ದರೆ? +ಆಳು ರಂಗಣ್ಣನನ್ನು ಕಾನ್‌ತೋಟಕ್ಕೆ ಕಳುಹಿಸಿದ್ದಾಯ್ತು, ಅಡಿಗೆಯಾಳು ಚೌಡಪ್ಪ ಬೆಳ್ಳಾಣೆಗೆ ಹೋದ. +ಶಾನುಭೋಗ-ವಿಲೇಜ್ ಅಕೌಂಟೆಂಟ್ ಸೋಮಣ್ಣ ಕಲ್‌ಮನೆಗೆ ಹೋಗಿ ಬರುವುದಾಗಿ ಹೇಳಿಕಳುಹಿಸಿದ್ದಾನೆ. +ಗ್ರಾಮಸೇವಕ ಇಮಾಮ ಮಂಜಿನ ಕಾನಿಗೆ ಹೋದ. ಇಲ್ಲಿ ಎಲ್ಲಿದ್ದರೂ ಕನ್ನ ಸಾಯಂಕಾಲದೊಳಗೆ ಆಶ್ರಮಕ್ಕೆ ತಿರುಗಿ ಬರುತ್ತಾನೆ. +ತಾಳಗುಪ್ಪದಲ್ಲೂ ಕನ್ನನ ಅಕ್ಕನ ಮನೆಯೊಂದಿದೆ. ಅಲ್ಲಿಗೂ ಹೋಗಿ ನೋಡಿ ಬಂದರಾಗುತ್ತಿತ್ತು. ಹಾಗೆಯೇ ರಂಗೋಜಿಯ ಅಂಗಡಿಗೆ ಹೋಗಿ ಮನೆಯ ವಿಷಯ ತಿಳಿದು ಬರುವುದು. +ಆಶ್ರಮಶಾಲೆಯ ಮೇಷ್ಟ್ರು ಏರುತ್ತಿರುವ ಬಿಸಿಲಿನಲ್ಲಿ ತಾಳಗುಪ್ಪೆಯ ದಾರಿ ಹಿಡಿದರು. +* +* +* +ಸೋಮಣ್ಣ ಗಿಳಿಗಾರು, ಗಾಲೀಮನೆಗಳನ್ನು ದಾಟಿ ಕಲ್‌ಮನೆಗೆ ಬಂದು ತಲುಪಿದಾಗ ಹೊತ್ತು ನೆತ್ತಿಗೇರಿತ್ತು, ಬ್ರಾಹ್ಮಣ ಮನೆಗಳೆದುರು ಹಾದು ಹೋಗುವಾಗ ಜಗಲಿಯ ಮೇಲೆ ಕುಳಿತು ಹರಟೆ ಕೊಚ್ಚುತ್ತಿದ್ದ ಹಲವರು-“ಬನ್ನಿ ಶ್ಯಾನುಭೋಗ್ರೆ”ಎಂದು ಕರೆದರೂ ನಿಲ್ಲದೆ ಮುಂದೆ ನಡೆದ ಸೋಮಣ್ಣ. ಆ ಹುಡುಗನ ಅಕ್ಕನ ಮನೆ ಇದ್ದುದು ಅಲ್ಲಿಂದ ಮತ್ತೂ ಸ್ವಲ್ಪ ದೂರ. ಕಾಲಕೆಳಗಿನ ಮಣ್ಣು ಹುಡಿಯಾಗಿ ಸುಡುತ್ತಿತ್ತು. ಅಲ್ಲೊಂದು ಇಲ್ಲೊಂದು ಮರ ಕಾಲುಹಾದಿಯ ಮೇಲೆ ನೆರಳು ಚೆಲ್ಲುತ್ತ ನಿಂತಿತ್ತು. ಸೋಮಣ್ಣನ ಹೊಟ್ಟೆ ಚುರುಗುಟ್ಟುತ್ತಿತ್ತು. +ಮೊದಲನೆಯ ಕೆಲಸ ಆ ಹುಡುಗನ ಶೋಧ. ನಂತರ ಊಟದ ಪ್ರಶ್ನೆ ಎಂದುಕೊಂಡು ಮಾರುಗಾಲು ಹಾಕಿದ. +ದೀವರ ಬಂಕನ ಮನೆಯ ಹಿಂದೆಯೇ ಆ ಮನೆ; ಎದುರು ಕುಳಿತ ನಾಯಿ ಹೋ ಎಂದು ಕೂಗಲಾರಂಭಿಸಿತು. ಆ ಕೂಗಿಗೆ ಹುಡುಗನ ಅಕ್ಕ ಹೊರಗೋಡಿ ಬಂದಳು. ರವಕೆ ತೊಡದ ಮೇಲು ಭಾಗವನ್ನು ಕುಲುಕಾಡಿಸಿಕೊಂಡು ಬಂದ ಅವಳು ಅಂಗಳದಲ್ಲಿ ಸೆರಗು ಹೊದ್ದು ಏನು ಎಂಬಂತೆ ಇವನ ಮುಖ ನೋಡಿದಾಗ ಈತ- +“ಅಲ್ಲ, ನಿನ್ನ ತಮ್ಮ ಬಂದಾನೇನು ಇಲ್ಲಿಗೆ?” +“ಯಾರು? ಬರಾ ಹುಡುಗ್ನೇ?” +ನಗು ಬಂತು ಸೋಮಣ್ಣನಿಗೆ. ಓದು ಬರಹ ಕಲಿಯಲೆಂದು ಆಶ್ರಮದಲ್ಲಿ ಹುಡುಗನನ್ನು ಬಿಟ್ಟು ಇನ್ನೂ ಒಂದು ವರ್ಷವಾಗಿಲ್ಲ. ಆಗಲೇ ಅವನು ಬರಾ ಹುಡುಗ! +“ಹೌದು . ಅವನು ಆಶ್ರಮದಲ್ಲಿಲ್ಲ…..ಹಿಂದಿನ ಹಾಗೇ ಓದಿ ಹೋಗಿದ್ದಾನೆ. ಇಲ್ಲಿಗೆ ಬಂದಿರಬಹುದೇನೋ ಅಂತ ಬಂದೆ.” +ಅವಳು ಗಾಬರಿಯೂ ಆಗಲಿಲ್ಲ. ಅವಳಿಗೆ ದುಃಖವೂ ಆಗಲಿಲ್ಲ, ಅವಳು ಸಹಜವಾಗಿಯೇ ನುಡಿದಳು. +“ಕಾನ್‌ತೋಟಕ್ಕೆ ಹೋಗಿರಬೈದು ಬಿಡಿ.” +“ಸರಿ.” +ಹಿಂತಿರುಗಿದ ಸೋಮಣ್ಣ ಅಲ್ಲಿಂದ. +ಒಂದು ವಿಷಯ ಖಚಿತವಾಯಿತು. ಕನ್ನ ಇಲ್ಲಿಗಂತೂ ಬಂದಿಲ್ಲ. ತಾನು ಬಂದ ಕೆಲಸವಾಯಿತಲ್ಲ. ಸೋಮಣ್ಣ ಅಲ್ಲಿಂದ ಹಿಂತಿರುಗಿ ಮತ್ತೆ ಬ್ರಾಹ್ಮಣ ಮನೆಗಳೆದುರು ಹಾದು, ಶಾಲೆ, ಗ್ರಾಮ, ಚಾವಡಿಗಳನ್ನು ಹಿಂದೆ ಹಾಕಿ, ಮಾರೀಗುಡಿಯ ಬಳಿ ಬಂದು ಎಡಕ್ಕೆ ಹೊರಳಿದ. ಹಳ್ಳಿಯ ಸರಕಾರೀ ಸೂಲಗಿತ್ತಿ ಕ್ರಿಸ್ತೀನಾಬಾಯಿ ಕಾಲು ಉದ್ದಕ್ಕೆ ನೀಡಿಕೊಂಡು ತನ್ನ ಮನೆಯ ಜಗುಲಿಯ ಮೇಲೆ ಕುಳಿತವಳು ಸಂಭ್ರಮದಿಂದ ಎದ್ದು ನಿಂತಳು. +“ಓ ಬನ್ನಿ”-ಎಂದಳು. +* +* +* +ಕನ್ನನ ತಂದೆ ಕಾನ್‌ತೋಟದ ಬಸಪ್ಪ ರಂಗಣ್ಣನ ಮುಖ ನೋಡಿದವನೆ, +“ಏನು ಬಂದೆ ರಂಗಣ್ಣ?”-ಎಂದು ಕೇಳಿದ. +ಮಗ ಓಡಿ ಹೋಗಿದ್ದಾನೆ ಅನ್ನುವ ಸುದ್ದಿ ಕೇಳಿ- +“ಅಲ್ಲ. ಏನೋ ಓದಿ ಇದ್ಯಾ ಕಲೀಲಿ ಅಂತ ಅಲ್ಲಿ ತಂದು ಹಾಕಿದ್ರೆ ಆ ಬೇವಾರ್ಸಿ ಹಿಂಗ ಮಾಡೋದು . ಹೋಗ್ಲಿ ಬಿಡು ಎತ್ತಾಗಾದ್ರು” +-ಎಂದು ನುಡಿದು ರಂಗಣ್ಣನಿಗಾಗಿ ಜಗುಲಿಯ ಮೇಲೆ ಕಂಬಳಿ ಹಾಸಿದ. ರಂಗಣ್ಣ ಕುಳಿತು ಎಲೆ ಅಡಿಕೆ ತಾಬಾಣವನ್ನು ಹತ್ತಿರ ಎಳೆದುಕೊಂಡು ಅಡಕೆಯನ್ನು ಬಾಯಿಗೆಸೆದುಕೊಂಡು ಎಲೆಯ ಬೆನ್ನಿಗೆ ಸುಣ್ಣ ಸವರುತ್ತ “ಎಲ್ಲಿಗೆ ಹೋಗಿರಬೋದು ಬಸಪ್ಪ?” ಎಂದು ಕೇಳಿದ. +“ಅಂವ ಇಲ್ಲಂತೂ ಬಂದಿಲ್ಲ. ಬಂದ್ರೆ ನಾನು ಮತ್ತೆ ಅವನ್ನ ಶಾಲೆಗೆ ಕರಕೊಂಡು ಹೋಗ್ತೀನಿ ಅಂತ ಗೊತ್ತು ಅವನಿಗೆ. ಅವನು ಇಲ್ಯಾಕೆ ಬಂದಾನು. ಆದರೆ, ನನಗೊಂದು ಅನುಮಾನ…ಮುಂಚಿನ ಕಾನಾಗೆ ಅವನ ಅಜ್ಜಿ ಮನೆ ಐತೆ. ಅಲ್ಲಿಗೆ ಹೋಗಿದ್ರು ಹೋಗಿರಬೈದು……” +“ಸರಿ…ಹೋಗ್ತಾ ಹಂಗೇ ಹೋಗ್ತೀನಿ ಬಿಡು.” +ಎದ್ದ ರಂಗಣ್ಣ. ಬಸಪ್ಪನ ಮಗಳು ಒಳಗಿನಿಂದ ಎಲೆಯಲ್ಲಿ ಅದೇನೋ ತಂದಳು. ರಂಗಣ್ಣ ಬಾಯಲ್ಲಿದ್ದ ತಾಂಬೂಲ ಉಗಿದುಬಂದ. ಅವನಿಗೂ ಹಸಿವಾಗಿತ್ತು. ಎಲೆಯನ್ನು ಹತ್ತಿರ ಎಳೆದುಕೊಂಡ. +“ಮನೆಯಾಗೆ ಎಲ್ರೂ ಆರಾಮಾಗಿದಾರ-” +ಬಸಪ್ಪ ಕೇಳಿದ, ಹಸಿ ಅಡಕೆಯೊಂದನ್ನು ಕುಡಗೋಲಿನಿಂದ ಸುಲಿಯುತ್ತ. +“ಎಲ್ಲಿ ಆರಾಮ ತೆಗಿ ಬಸಪ್ಪ, ನನ್ನ ಮನೆಯಾಗೆ ಎಲ್ರಿಗು ಕಾಯ್ಲೆ. ಮುದುಕಿ ಅತ್ಲಾಗೆ ಸಾಯೋದೂ ಇಲ್ಲ. ಇತ್ಲಾಗೆ ಬದುಕೋದೂ ಇಲ್ಲ. ಊರಾಗಿರೋ ನಾಲ್ಕು ಎಕ್ರೆ ಇವಳ ಕಾಯ್ಲೆಗೆ ಮಾರಿ ತಿಂದಿದ್ದಾಯ್ತು. ನನ್ನ ಹೆಂಡ್ರಿಗೂ ಕಾಯ್ಲೆ. ಮಗನಿಗೂ ಕಾಯ್ಲೆ. ಸರಕಾರ ಕೊಡೋದು ನೂರಿಪ್ಪತ್ತು, ಮನೆಯಾಗಿರೋ ಜನ ಹನ್ನೆರಡು ನಾನೇನು ಮಾಡ್ಲಿ?” +ರಂಗಣ್ಣ ಎದ್ದ ಬುಸುಗುಡುತ್ತ. +“ಬರ್ತೀನಿ ಬಸಪ್ಪ” ಎಂದು ನುಡಿದು ಹೊರಟೇಬಿಟ್ಟ ಮಂಜಿನ ಕಾನಿನತ್ತ. ಅಡಿಕೆ ಸುಲಿಯುತ್ತಿದ್ದ ಬಸಪ್ಪ ರಂಗಣ್ಣ ಹೋಗುವುದನ್ನೇ ನೋಡುತ್ತಿದ್ದ. +* +* +* +ಬೆಳ್ಳಾಣೆಯ ದೇವಸ್ಥಾನದೆದುರು ನಿಂತು ದೇವರಿಗೆ ಕೈಮುಗಿದು ನಾಲ್ಕು ಹೆಜ್ಜೆ ಹೋದಾಗ ಕನ್ನನ ಚಿಕ್ಕಪ್ಪ ಮರಿಯಣ್ಣನೇ ಎದುರಾದ. +“ಅರೆ ಎಲ್ಲಿಗೆ?”-ಎಂದು ಕೇಳಿದ ಮರಿಯಣ್ಣ ಚೌಡಪ್ಪನಿಗೆ, +“ನಿಮ್ಮಲ್ಲಿಗೇ ಹೊರಟಿದ್ದು, ನಮ್ಮ ಕಾನ್‌ತೋಟದ ಬಸಪ್ಪನ ಮಗ ನಿಮ್ಮನೆಗೇನಾರ ಬಂದಿದಾನ?” +“ಇಲ್ಲ, ಯಾಕೆ?” +“ನಿನ್ನೆ ರಾತ್ರಿ ಆಶ್ರಮದಲ್ಲಿದ್ದ, ಈವತ್ತು ಬೆಳಗಾದಾಗ ಕಾಣೆಯಾಗಿದಾನೆ. ಅಲ್ಲೆಲ್ಲ ಹುಡುಕಿದ್ದಾಯ್ತು. ಇಲ್ಲಿಗೆ ಬಂದಿರಬಹುದು ಅಂತ ಬಂದೆ. ಹಾಗಾದ್ರೆ ಇಲ್ಲಿಗೆ ಬಂದಿಲ್ಲ ಅವನು?” +“ಇಲ್ಲಪ್ಪ?” +“ಎಲ್ಲಿಗೆ ಹೋಗಿರಬಹುದು ಅಂತೀಯ ಮರಿಯಣ್ಣ?” +“ಮಂಜಿನಕಾನಾಗೆ ಅವನ ಅಜ್ಜಿ ಮನೆ ಐತೆ. ಅಲ್ಲಿ ನೋಡಬೇಕಿತ್ತು….” ಚೌಡಪ್ಪ ಮರಿಯಣ್ಣನ ಜೊತೆಗೇನೇ ಹಿಂತಿರುಗಿ ಹೊರಟ. ಮರಿಯಣ್ಣ ದೇವಾಲಯದವರೆಗೂ ಚೌಡಪ್ಪನ ಹಿಂದೆ ಬಂದ. ಅಲ್ಲಿ ಬೇರೊಂದು ದಾರಿಗೆ ಹೊರಳಿ- +“ನಾನು ಹೆಗ್ಡೇರ ಮನೆಗೆ ಹೋಗ್ಬೇಕು” +-ಎಂದು ಹೇಳಿ ಹತ್ತಿರದ ತೋಟದಲ್ಲಿ ಮಾಯವಾದ. +ಬಿಸಿಲಲ್ಲೇ ನಡೆದ ಚೌಡಣ್ಣ. ಹಾಗೆ ಬಂದಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನನ್ನು ಸೇರಬೇಕಿತ್ತು. ಆಶ್ರಮಶಾಲೆಯ ಹತ್ತಿರವೇ ತನಗಾಗಿ ಕಾದು ಕುಳಿತನೋ, ಇಲ್ಲ ತಾನು ಅಲ್ಲಿ ಇಲ್ಲವೆಂದು ತಿಳಿದು ಹಿಂತಿರುಗಿದನೋ. ಅಂತೂ ಅವನು ಬಂದುದು ಒಂದೇ ಉದ್ದೇಶಕ್ಕಾಗಿ. “ಚೌಡಣ್ಣ, ನಿನ್ನ ಅತ್ತಿಗೆ ಊಟ ನಿದ್ದೆ ಬಿಟ್ಟು ಕೂತಿದಾಳೆ. ಬಾ, ಮನೆಗೆ ಹೋಗೋಣ ಬಾ”-ಇದು ಕಳೆದ ನಾಲ್ಕು ತಿಂಗಳುಗಳಿಂದ ಅಣ್ಣ ಬಂದಾಗಲೆಲ್ಲ ಹೇಳುವ ಮಾತು. ಅಣ್ಣನ ಮನೆ ಬಿಟ್ಟು ಬಂದು ಇಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದೇನೆ ತಾನು. ಮನೆಯಲ್ಲಿ ಎಲ್ಲವೂ ಇದೆ ತನಗೆ. ಆಸ್ತಿ ಇದೆ. ಮನೆ ಹೊಲಗಳಿವೆ. ಆದರೂ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ ಎಲ್ಲರಿಗೂ ಇದೊಂದು ಒಗಟು. ಅಣ್ಣ ಕೂಡ-” ಹೀಗೆ ಯಾಕೆ ಮಾಡ್ತಿದೀಯಾ ಚೌಡಣ್ಣ. ಮನೆಗೆ ಬಾ” ಎನ್ನುತ್ತಾನೆ. ಹೋಗಲೇ? ಅತ್ತಿಗೆ ಬಂದು ಎದುರು ನಿಲ್ಲುತ್ತಾಳೆ. +`ಚೌಡಣ್ಣ, ನಾನು ಹೇಳಿದ ಹಾಗೆ ಕೇಳಿಕೊಂಡು ಇರು. ನಿಮ್ಮಣ್ಣನಿಗೆ ಯಾವ ಅನುಮಾನವೂ ಆಗದೇ ಇರೋ ಹಾಗೆ ನೋಡಿಕೊಂಡರಾಯ್ತು. ನನ್ನ ಮಾತು ಕೇಳು” ಎನ್ನುತ್ತಾಳೆ ಅವಳು ನಾಚಿಕೆ ಬಿಟ್ಟು. +ಅವಳು ಮೈ ಮರೆಯುತ್ತಾಳೆ, ತನ್ನ ಬಳಿ ಬರುತ್ತಾಳೆ. ತನ್ನ ಕೈ ಹಿಡಿಯುತ್ತಾಳೆ. ಅವಳ ಮೈ ಕಪಿಸುತ್ತಿರುತ್ತದೆ. ಆದರೆ ಅಣ್ಣನಿಗೆ ತಾನು ದ್ರೋಹ ಬಗೆಯಲಾರೆ. ಅತ್ತಿಗೆಯ ಕೈಯ ಸುತ್ರದ ಗೊಂಬೆಯಾಗಲಾರೆ. ಈ ಕಾರಣದಿಂದಾಗಿಯೇ ಆಶ್ರಮಶಾಲೆಯ ಅಡಿಗೆ ಭಟ್ಟನಾಗಿ ಉಳಿದಿದ್ದೇನೆ. ಮುಂದೂ ಇಲ್ಲಿಯೇ ಉಳಿಯುತ್ತೇನೆ. ಚೌಡಣ್ಣ ನಡೆದ. ಕೊರಕಲು ಬಿದ್ದ ಗಾಡಿ ರಸ್ತೆಯನ್ನು ಹಿಡಿದು ಸಾಗಿದ. +* +* +* +ಮಂಜಿನಕಾನಿನ ಯಕ್ಷಿಕಟ್ಟೆಯ ಹತ್ತಿರದ ಕನ್ನನ ಸೋದರತ್ತೆಯ ಮನೆಯಲ್ಲಿ ವಿಚಾರಿಸಿ ಅವನು ಅಲ್ಲಿ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು-ಅವನ ಅಜ್ಜಿ ಮನೆ ಹಳ್ಳಿಯ ಆ ತುದಿಯಲ್ಲಿದೆ, ಅಲ್ಲಿ ವಿಚಾರಿಸಿ, ಎಂದು ಕನ್ನನ ಸೋದರತ್ತೆ ಹೇಳಿದ ಮೇಲೆ, ಅತ್ತ ಹೊರಟ ಇಮಾಮನಿಗೆ ನಡುದಾರಿಯಲ್ಲಿ ಮಂಜಿನಕಾನಿನ ಶಾಲಾ ಉಪಾಧ್ಯಾಯ ರಾಮರೆಡ್ಡಿಯ ಭೇಟಿಯಾಯಿತು. ರೆಡ್ಡಿ ಇಮಾಮನನ್ನು ಮನೆಗೆ ಕರೆದೊಯ್ದ. +“ಅಡಿಗೆ ನಂದೇ ಕಣಯ್ಯ, ಬಾ ಊಟ ಮಾಡೋಣ” ಎಂದ ರೆಡ್ಡಿ. +ಇಮಾಮನ ಹೊಟ್ಟೆಯೂ ಹಸಿದಿತ್ತು. ಇಬ್ಬರೂ ಊಟಕ್ಕೆ ಕುಳಿತರು. ರೆಡ್ಡಿ ಬೇಯಿಸಿದ ನಾಲ್ಕು ಮೊಟ್ಟೆಗಳನ್ನು ಮುಂದೆ ಇಡುತ್ತ- “ಇಮಾಮ, ಡ್ರಿಂಕ್ಸ್ ತೊಕ್ಕೊಳ್ಳೋ ಅಭ್ಯಾಸ ಇದೆಯೇನಯ್ಯ” ಎಂದು ಕೇಳಿದ. +“ತಂದಿದ್ದು ಇದೆಯಾ?” +“ಅದಕ್ಕೇನಂತೆ!” +ರೆಡ್ಡಿ ಎದ್ದು ಹೋಗಿ ಟ್ರಂಕಿನ ಹಿಂಬದಿಯಿಂದ ಬಾಟ್ಲಿಯೊಂದನ್ನು ತಂದ. ಇಮಾಮ ನಿಧಾನವಾಗಿ ಊಟ ಮಾಡಲಾರಂಭಿಸಿದ. ಅಷ್ಟೇ ನಿಧಾನವಾಗಿ ಮೈಮನಸ್ಸಿನ ಮೇಲಿನ ಹತೋಟಿ ತಪ್ಪಿದಂತಾಗಿ ಆತ ತೊದಲ ತೊಡಗಿದ. +“ರೆಡ್ಡಿ ದೋಸ್ತ್…ಇಷ್ಟು ದಿನಕ್ಕೆ ಒಂದು ಒಳ್ಳೆಯ ಊಟ ಅಂದ್ರೆ ಇದು ನೋಡು. ನನ್‌ಮ್ನೇಲಿ ದಿನಾ ಜಗಳ ಕಣಯ್ಯ, ನನ್ನ ಹೆಂಡ್ತಿ…ನನ್ನ ತಾಯಿ ನನ್‌ತಂಗಿ….ಮೂರು ನಾಯಿಗಳು. ನಾನು ಮನೇಲಿ ಸರಿಯಾಗಿ ಊಟ ಮಾಡೋಲ್ಲ ದೋಸ್ತ್. ಸರಿಯಾಗಿ ನಿದ್ದೆ ಮಾಡೋಲ್ಲ. ಆ ನಾಯಿಗಳ ಜಗಳದಲ್ಲಿ ನನ್ನ ಮನಸ್ಸಿನ ಶಾಂತಿ ಸಂತೋಷ ಎಲ್ಲ ಹಾಳಾಗಿ ಹೋಗಿದೆ ದೋಸ್ತ್…” +ತೊದಲುತ್ತಿದ್ದ ಇಮಾಮನ ಲೋಟಕ್ಕೆ ಬಾಟಲಿಯಲ್ಲಿರುವುದನ್ನೆಲ್ಲ ಬಗ್ಗಿಸಿ ಉಳಿದ ಮತ್ತೂ ಒಂದು ಮೊಟ್ಟೆಯನ್ನು ಇಮಾಮನಿಗೆ ಕೊಟ್ಟು ರೆಡ್ಡಿ- +“ನಿಧಾನವಾಗಿ ಊಟ ಮಾಡು” ಎಂದ. +ಇಮಾಮನ ಮೇಲೆ ರೆಡ್ಡಿಗೆ ಕನಿಕರ ಉಕ್ಕಿ ಬಂದಿತು. +* +* +* +ರಂಗಣ್ನ ಕನ್ನನ ಅಜ್ಜಿಯ ಮನೆಯಿಂದ ಅವನು ಅಲ್ಲಿ ಇಲ್ಲ ಎಂಬುದನ್ನು ತಿಳಿದುಕೊಂಡು ಹೊರಬಂದಾಗ, ಚೌಡಣ್ಣ ಅಂಗಳಕ್ಕೆ ಕಾಲಿಟ್ಟ. +“ನಡಿ ಚೌಡಣ್ಣ, ಕನ್ನ ಇಲ್ಲೂ ಇಲ್ಲ” ಎಂದ ರಂಗಣ್ಣ. +ಈರ್ವರೂ ಆಶ್ರಮಶಾಲೆಯ ಹಳ್ಳಿಯ ದಾರಿ ಹಿಡಿದರು. ಹಳ್ಳಿಯ ಹತ್ತಿರಹತ್ತಿರ ಬಂದ ಹಾಗೆ ಸಂಜೆಯಾಯಿತು. ಹಳ್ಳಿಯ ಸೆರೆ ಅಂಗಡಿಗೆ ತಾಜಾ ಕಳ್ಳನ್ನು ಇಳಿಸಿ ಹಿಂತಿರುಗುತ್ತಿದ್ದ ಲಾರಿಯ ಸದ್ದು ಕೇಳಿಸಿತು. ಮನೆಗಳತ್ತ ಹೋಗಲು ಇಬ್ಬರಿಗೂ ಮನಸ್ಸಿರಲಿಲ್ಲ. ರಂಗಣ್ನ ಚೌಡಣ್ಣನ ಮುಖ ನೋಡಿದ. +ಇಬ್ಬರೂ ಸೆರೆ ಅಂಗಡಿಯತ್ತ ತಿರುಗಿದರು. +* +* +* +ಕನ್ನ ತಾಳಗುಪ್ಪೆಗೆ ಬಂದಿರಲಿಲ್ಲ. ಕಾನ್‌ತೋತದಿಂದ ತಾಳಗುಪ್ಪೆಗೆ ಬಂದಿದ್ದ ಕನ್ನನ ತಂದೆ ಬಸಪ್ಪ- +“ಮೇಷ್ಟ್ರೇ, ಕನ್ನ ಎಲ್ಲಿಗೋ ಹೋದ ಅಂತ ನೀವೇನೂ ಬೇಜಾರು ಮಾಡೋದು ಬೇಡ. ಎಲ್ಲಿ ಅವನು ಹೋದ್ರೂ ಬರ್ತಾನೆ. ಸುಮ್ನಿರಿ….” ಎಂದಿದ್ದ ಹೀಗಾಗಿ ಮನಸ್ಸಿಗೆ ತುಸು ನೆಮ್ಮದಿ ಎನಿಸಿತು. +ರಂಗೋಜಿಯ ಅಂಗಡಿ ಮೆಟ್ಟಿಲುಗಳನ್ನೇರುವಾಗ ರಂಗೋಜಿ ಹೊಲಿಗೆ ಯಂತ್ರವನ್ನು ತುಳಿಯುತ್ತ- +“ಬನ್ನಿ ಮೇಷ್ಟ್ರೆ”ಎಂದು ಸ್ವಾಗತಿಸಿದ. +ಮೇಷ್ಟ್ರು ಒಳಗೆ ಹೋಗಿ ದಿಂಬಿಗೆ ಒರಗಿ ಕುಳಿತರು. +“ಊರ ಕಡೆ ಹೋಗಿದ್ರಾ?” ರಂಗೋಜಿಯೇ ಮಾತಿಗಾರಂಭಿಸಿದ. +“ಇಲ್ಲ, ನೀವು ಹೋಗಿದ್ರಂತಲ್ಲ.” +“ಹೌದು.” +“ನಮ್ಮ ಮನೆ ಕಡೆ ಹೋಗಿದ್ರಾ?” +ರಂಗೋಜಿ ಬಹಳ ಹೊತ್ತು ಉತ್ತರಿಸಲಿಲ್ಲ. ಡರರ್ ಎಂದು ಅವನ ಯಂತ್ರ ಸದ್ದು ಮಾಡುತ್ತಲಿತ್ತು. ಮಧ್ಯೆ ಯಾವಾಗಲೋ ಹೊಲಿಯುವುದನ್ನು ನಿಲ್ಲಿಸಿ ರಂಗೋಜಿ ಕೇಳಿದ- +“ಅಂತೂ, ನಿಮಗೆ ಮನೆ ನೆನಪಿದೆ ಅಂತ ಆಯ್ತು.” +ಈ ಮಾತಿಗೆ ಮೇಷ್ಟ್ರು ಏನನ್ನೂ ಉತ್ತರಿಸಲಿಲ್ಲ. +ರಂಗೋಜಿಯೇ ಮಾತಿಗೆ ತೊಡಗಿದ. ಆದರೆ ಅದೇಕೋ ಅವನ ದನಿ ಗಡುಸಾಗಿತ್ತು. +“ನಿಮ್ಮ ಮನೆಗೆ ಹೋಗಿದ್ದೆ. ನಿಮ್ಮ ತಾಯಿ ಒಬ್ರೆ ಪರದಾಡೋದನ್ನ ನೋಡಿ ಕಣ್ಣಲ್ಲಿ ರಕ್ತ ಬಂತು. ಒಂಟಿ ಹೆಣ್ಣು ಅದೇನು ಅಂತ ಮಾಡಬೇಕು? ಮನೆ ತುಂಬ ಇರೋ ನಿಮ್ಮ ತಮ್ಮ ತಂಗಿಯರನ್ನು ಸಾಕಬೇಕು. ಅವರ ವಿದ್ಯಾಭ್ಯಾಸ ಅನ್ನ ವಸ್ತ್ರದ ಬಗ್ಗೆ ಯೋಚನೆ ಮಾಡಬೇಕು. ಹಾಸಿಗೆ ಹಿಡಿದಿರೋ ನಿಮ್ಮ ತಂದೇನೂ ಸಾಕಬೇಕು. ನೀವು ಏನೇ ಹೇಳಿ ಮೇಷ್ಟ್ರೆ, ಇಲ್ಲಿ ಆಶ್ರಮ ಪ್ರಾರ್ಥನೆ ಅಂತ ನೀವು ಏನು ನಡೆಸ್ತಿದೀರಾ, ಇದು ದಂಡಕ್ಕೆ, ಆ ದೊಡ್ಡ ಕುಟುಂಬದ ಜವಾಬ್ದಾರೀನ ಹೊರಬೇಕಾಗಿರೋ ನೀವು ಇಲ್ಲಿ ಇನ್ನೇನೋ ಮಾಡ್ತಿರೋದು ನನಗಂತೂ ಚೆನ್ನಾಗಿ ಕಾಣೊಲ್ಲ……” +ಮೇಷ್ಟ್ರು ಎದ್ದರು, ಬರ್ತೀನಿ ನಾನು ಎಂದು ಹೇಳಿ ಅಂಗಡಿಯಿಂದ ಹೊರಬಂದಿದ್ದರು. ಮನಸ್ಸಿಗೆ ಬೇಸರವೆನಿಸಿತು. ಕನ್ನ ಕಳೆದುಹೋದ ವ್ಯಥೆ. ರಂಗೋಜಿಯ ಮಾತು ತಂದ ನೋವು. ಹಿಂದುಳಿದ ಜನಾಂಗದವರ ಮಕ್ಕಳಿಗಾಗಿ ಸರಕಾರ ಹಳ್ಳಿಯಲ್ಲಿ ತೆರೆದ ಆಶ್ರಮಶಾಲೆಯ ಉಪಾಧ್ಯಾಯನಾಗಿ ಕೆಲಸ ಮಾಡಲೆಂದು ತಾನು ಊರು ಬಿಟ್ಟು ಬಂದುದು ತಪ್ಪೆ? +ಮೇಷ್ಟ್ರು ಬಂಗಲೆ ಗುಡ್ಡವನ್ನೇರಿದರು. ಬಂಗಲೆಯ ಎದುರು, ಕೆರೆಯತ್ತ ತಿರುಗಿ ಹಸಿರು ಹುಲಿನ ಮೇಲೆ ಪದ್ಮಾಸನ ಹಾಕಿ ಕುಳಿತರು. ಮನಸ್ಸಿನ ಗಲಿಬಿಲಿ ಗೊಂದಲಗಳಿಂದ ಮುಕ್ತರಾಗಬೇಕು ಎನಿಸಿತು. ಧ್ಯಾನಾಸಕ್ತರಾಗುವ ಸನ್ನಾಹ ನಡೆಸಿದರು. ಹೃದಯದ ಒಳಗಿನಿಂದ ಪ್ರಾರ್ಥನೆ ಉಕ್ಕಿ ಬಂದಿತು- ಸಹನಾವವತು…ಸಹನೌಭುನಕ್ತು…ಸಹವೀರ್ಯಂ ಕರವಾವಹೈ…ಓಂ ಶಾಂತಿ ಶಾಂತಿ ಶಾಂತಿಃ.ಅವರು ಅಲ್ಲೇ ಧ್ಯಾನಾಸಕ್ತರಾದರು. +* +* +* +“ಕ್ರಿಸ್ತಿನಾ-” +ಎಂದು ತೊದಲಿ ಸೋಮಣ್ಣ ಅವಳನ್ನು ತಬ್ಬಿಕೊಂಡ. +“ಅದು ಮನೆಯಲ್ಲ ಕ್ರಿಸ್ತಿ, ಜೈಲು. ಅವಳು ನನ್ನ ಬಿಟ್ಟು ಹೋದ್ಲು. ಯಾಕೆ? ಅಲ್ಲಿ ಅವಳ ಊರಲ್ಲಿ ಅವಳಿಗೊಬ್ಬ ಗೆಣೆಯಾ ಇದಾನೆ. ಅದಕ್ಕೇ ಹೋದ್ಲು. ಅವಳು ನನಗೆ ಮೋಸ ಮಾಡಿದ್ಲು…” +ಕ್ರಿಸ್ತೀನಾ ಸೋಮಣ್ಣನ ಕಣ್ಣೀರನ್ನು ಒರೆಸಿದಳು. ಸೋಮಣ್ಣ ಅವಳನ್ನು ಅಪ್ಪಿ ಹಿಡಿದುಕೊಂಡ. ಕ್ರಿಸ್ತೀನಾ ಬಿಸಿಬಿಸಿಯಾಗಿ ಸೋಮಣ್ಣನ ತುಟಿಗಳನ್ನು ಚುಂಬಿಸಿದಳು. ಸೋಮಣ್ಣ ಕ್ರಿಸ್ತೀ ಎಂದು ಕೂಗಿ ಇನ್ನೂ ಬಿಗಿಯಾಗಿ ಅವಳನ್ನು ತನ್ನೆಡೆಗೆ ಎಳೆದುಕೊಂಡ.. +* +* +* +ಕನ್ನ ಮೂರು ದಿನಗಳ ನಂತರ ಅದೆಲ್ಲಿಂದಲೋ ತಿರುಗಿ ಬಂದ. ಹಾರ, ಸರಪಳಿಯ ಸಮೇತ. +***** +(೧೯೭೭) +ಆಫಿಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿನಿಂದ […] +ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […] +ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_541.txt b/Kannada Sahitya/article_541.txt new file mode 100644 index 0000000000000000000000000000000000000000..c96ce77a6276c1db17565fe6d2cd841fe5dfd091 --- /dev/null +++ b/Kannada Sahitya/article_541.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಷೆ ಜನಸಂಪರ್ಕದ ಬಹು ಪ್ರಮುಖ ಸಾಧನ. ಮನುಷ್ಯರು ತಮ್ಮ ಎಲ್ಲ ಬಗೆಯ ಅನುಭವ, ಆಲೋಚನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾರೆ, ಇಂತಹ ಒಂದು ಅಭಿವ್ಯಕ್ತಿಮಾಧ್ಯಮ ಮನುಷ್ಯನಿಗೆ ದೊರಕಿರುವುದರಿಂದಲೇ ಅವನಿಂದ ಒಂದು ಸಮಾಜವನ್ನೂ ತನ್ಮೂಲಕ ನಾಗರಿಕತೆಯನ್ನೂ ಕಟ್ಟಲು ಸಾಧ್ಯವಾಗಿರುವುದು. ಇದು ನಮಗೆ ಸ್ಪಷ್ಟವಾಗಬೇಕಾದರೆ ಮನುಷ್ಯನನ್ನು ಪ್ರಾಣಿಗಳ ಜೊತೆ ಹೋಲಿಸಬೇಕು. ಒಂದು ಪ್ರಾಣಿಗೆ ಯಾವ ಕೌಶಲ ಗೊತ್ತೋ ಅದೇ ಕೌಶಲ ಎಲ್ಲ ಪ್ರಾಣಿಗಳಲ್ಲೂ ಇರುತ್ತದೆ. ಎಲ್ಲ ಪ್ರಾಣಿಗಳೂ ಒಂದೇ ಬಗೆಯ ಕೆಲಸವನ್ನು ಒಂದೇ ರೀತಿಯಲ್ಲಿ ಮಾಡುತ್ತವೆ. ಒಂದು ಪ್ರಾಣಿ ತನ್ನ ಕೈಲಿ ಆಗದ ಕೆಲಸವನ್ನು ಇನ್ನೊಂದರಿಂದ ಮಾಡಿಸಲು ಸಾಧ್ಯವೇ ಆಗುವುದಿಲ್ಲ-ಪ್ರಾಣಿಗಳಿಗೆ ಭಾಷೆ ಗೊತ್ತಿಲ್ಲದ ಕಾರಣ. ಮನುಷ್ಯನಿಗೆ ಭಾಷೆ ಗೊತ್ತಿರುವುದರಿಂದ ಕೆಲಸದ ಹಂಚಿಕೆಯೂ ಸಾಧ್ಯವಾಗಿದೆ. ಉಳುಮೆ, ಮೀನುಗಾರಿಕೆ, ಚರ್ಮದ ಕೆಲಸ, ಮರಕೆಲಸ, ವ್ಯಾಪಾರ, ನೇಯ್ಗೆ, ಹೀಗೆ ಹತ್ತಾರು ಬಗೆಯ ಕೌಶಲಗಳನ್ನು ಬೇರೆ ಬೇರೆಯವರು ಕರಗತಗೊಳಿಸಿಕೊಳ್ಳುವುದರಿಂದ ಸಮಾಜರಚನೆ, ಆರ್ಥಿಕ ಬೆಳವಣಿಗೆ, ನಾಗರಿಕತೆಗಳು ಸಾಧ್ಯವಾಗಿವೆ. ತನ್ನ ಕೈಲಿ ಆಗದ ಒಂದು ಕೆಲಸವನ್ನು ಇನ್ನೊಬ್ಬನಿಂದ ಮಾಡಿಸಲು ಸಾಧ್ಯವಾಗುವುದು ಭಾಷೆಯಿಂದ. ಒಂದು ಸಮಾಜ ಸುಸ್ಥಿರವೂ ಸುವ್ಯವಸ್ಥಿತವೂ ಆಗಬೇಕಾದರೆ ಆ ಸಮಾಜದ ಭಾಷೆಯು ಅಲ್ಲಿನ ಎಲ್ಲರಿಗೂ ತಿಳಿಯಬೇಕು. ಮತ್ತು ವ್ಯವಹಾರವೆಲ್ಲ ಆ ಭಾಷೆಯಲ್ಲಿಯೇ ನಡೆಯಬೇಕು. ಯಾವುದೇ ಸಾಮಾಜಿಕ ಘಟನೆಯಲ್ಲಿ ಆ ಸಾಮಾಜಿಕರು ಪಾಲುಗಾರರಾಗಬೇಕು. +ಒಂದು ದೇಶದ ಆಡಳಿತದಲ್ಲೂ ಅಲ್ಲಿಯ ಭಾಷೆ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆಂಬುದು ಸ್ಪಷ್ಟವಾಗುತ್ತದೆ. ಹತ್ತು ಬಗೆಯ ಕೆಲಸಗಳು ನಡೆಯುವ ಕಾರ್ಖಾನೆಯ ಕಾರ್ಮಿಕರಿಗೆ ಪರಸ್ಪರ ಅರ್ಥವಾಗುವ ಭಾಷೆಯೊಂದಿರದಿದ್ದರೆ, ಕಾರ್ಖಾನೆ ನಡೆಯುವುದಾದರೂ ಹೇಗೆ? ಯಂತ್ರಗಳ ಮುಖ್ಯಸ್ಥನಿಗೂ ಕಾರ್ಮಿಕರಿಗೂ ಸಮಾನಭಾಷೆಯೊಂದಿರದಿದ್ದರೆ ಆ ಯಂತ್ರಗಳಾದರೂ ಹೇಗೆ ಸರಿಯಾಗಿ ನಡೆದಾವು? ಸರ್ಕಾರವೂ ಒಂದು ಯಂತ್ರವಿದ್ದಂತೆ; ಇಲ್ಲಿ ಸಾಮಾನ್ಯ ಜನ ಉಂಟು. ಅಧಿಕಾರಿಗಳು ಉಂಟು. ಇವರಿಬ್ಬರ ಮಧ್ಯೆ ಭಾಷೆಯ ಕಂದಕವೊಂದು ನಿರ್ಮಾಣವಾದರೆ ಆಡಳಿತ ಕುಂಟುತ್ತದೆ. ನಷ್ಟಕ್ಕೆ ಒಳಗಾಗುವವರು ಸಾಮಾನ್ಯರು, ಜನತೆಯ ಭಾಷೆಯೇ ಆಡಳಿತ ಭಾಷೆಯಾಗಿರಬೇಕೆಂಬ ವಾದವು ಭಾವನಾತ್ಮಕವಾದುದಲ್ಲವೆಂದೂ ಅದಕ್ಕೆ ಸೈದ್ಧಾಂತಿಕ ಬೆನ್ನೆಲುಬು ಇದೆಯೆಂದೂ ಒತ್ತಿ ಹೇಳಬೇಕಾಗಿಲ್ಲ. +ಒಂದು ನಾಡನ್ನು ಗೆದ್ದವರು ಅದನ್ನು ತಮ್ಮ ವಸಾಹತುವನ್ನಾಗಿ ಉಳಿಸಿಕೊಳ್ಳಬೇಕಾದರೆ ಆ ನಾಡಿನ ಭಾಷೆಯನ್ನು, ಕೈಬಿಟ್ಟು ಆ ನಾಡ ಜನರಿಗೆ ತಿಳಿಯದ ಭಾಷೆಯೊಂದರಲ್ಲಿ ಆಡಳಿತವನ್ನು ನಡೆಸುವ ಯತ್ನ ಮಾಡುತ್ತಾರೆ. ಇದರಿಂದ ಸಾಮಾನ್ಯ ಜನತೆಗೆ ಮೇಲೆ ಆಡಳಿತ ಕ್ಷೇತ್ರದಲ್ಲಿ ಏನು ನಡೆಯುತ್ತಿದೆಯೆಂಬುದು ತಿಳಿಯದೆ ಮೂಗುದಾಣ ಹಾಕಿದ ಎತ್ತಿನಂತೆ ತಮ್ಮ ತಮ್ಮ ಉದ್ಯೋಗದ ಗಾಣದ ಸುತ್ತ ಸುತ್ತುತ್ತಿರುತ್ತಾರೆ. ಇದರಿಂದ ದೇಶ ಅಭಿವೃದ್ಧಿಯಾಗುವುದಿಲ್ಲ; ಮತ್ತು ಅದು ವಸಾಹತುಶಾಹಿಗಳಿಗೆ ಬೇಕಾಗಿಯೂ ಇಲ್ಲ; ಅವರಿಗೆ ತಾವು ಅಭಿವೃದ್ಧಿಗೊಂಡರೆ ಸಾಕು. ಆದರೆ ನಾಡಿನ ಸಮಗ್ರ ಕ್ಷೇಮಾಭಿವೃದ್ಧಿಯನ್ನು ಬಯಸುವವರು ನಾಡಪ್ರಜೆಗಳನ್ನು ಆಡಳಿತದ ಎಲ್ಲ ಹಂತಗಳಲ್ಲಿ ಪೂರ್ಣ ತೊಡಗಿಸಿಕೊಳ್ಳಬೇಕು. ಇದು ಆಗಬೇಕಾದರೆ, ಆಡಳಿತ ಭಾಷೆ ಜನತೆಯ ಭಾಷೆ ಆಗಿರಬೇಕು. +ಆಡಳಿತ ಭಾಷೆಯಾಗಿ ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಪರಕೀಯರಾದ ಮೌರ್‍ಯರ ಶಾತವಾಹನರ ಪಲ್ಲವರ ಅಧೀನದಲ್ಲಿದ್ದ ಕರ್ನಾಟಕವನ್ನು ನಾಲ್ಕನೆಯ ಶತಮಾನದಲ್ಲಿದ್ದ ಕನ್ನಡಿಗರಾದ ಕದಂಬರು ಆಳಲು ಆರಂಭಿಸಿದುದೇ ಕನ್ನಡ ಆಡಳಿತ ಭಾಷೆಯಾಗಿ ಮೆರೆಯಲು, ಕನ್ನಡ ಸಂಸ್ಕೃತಿ ರೂಪುಗೊಳ್ಳಲು ಕಾರಣವಾಯಿತು ಎಂಬುದು ಐತಿಹಾಸಿಕ ಸತ್ಯ. ಅಂದಿನಿಂದ ಹದಿನಾರು ಹದಿನೇಳನೇ ಶತಮಾನಗಳವರೆಗೆ ಕನ್ನಡಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ವಿಜಯನಗರ ಸಾಮ್ರಾಜ್ಯ ಅಧಃಪತನವನ್ನು ಹೊಂದಿದ್ದೇ ಕನ್ನಡದ ಕನ್ನಡಿಗರ ಕರ್ನಾಟಕದ ದುರದೃಷ್ಟದ ದಿನಗಳಿಗೆ ನಾಂದಿಯಾಯ್ತು. ಮುಂದೆ ಕರ್ನಾಟಕದ ಹಲವೆಡೆ ಮುಸ್ಲಿಮ್ ದೊರೆಗಳ ಆಳಿಕೆಯಿಂದಾಗಿ ಪರ್ಷಿಯನ್ ಅರೇಬಿಕ್ ಪದಗಳ ಬಾಹುಲ್ಯವಿದ್ದ ಉರ್ದು ಆಡಳಿತಭಾಷೆಯಾಗಿ ಬಳಕೆಗೆ ಬಂದು ಕನ್ನಡವು ಅಲ್ಲಿಂದ ಸಾವಿರಾರು ಪದಗಳನ್ನು ಸ್ವೀಕರಿಸಿತು, ಉರ್ದು ಎಷ್ಟೇ ಆಗಲಿ ಕನ್ನಡಕ್ಕೆ ಪರಕೀಯವೇ. ಮುಂದೆ ಬ್ರಿಟಿಷರ ಆಳಿಕೆಯ ಕಾಲದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿ ಭಾರತಕ್ಕೆ ಸ್ವಾತಂತ್ರ್ಯವು ಘೋಷಣೆಯಾಗುವವರೆಗೆ ಅದೇ ಬಳಕೆಯಲ್ಲಿದ್ದಿತು. ಭಾರತವು ಬ್ರಿಟಿಷರ ವಸಾಹತಾಗಿದ್ದರೂ, ಅವರು ತೀರ ಸಾಮಾನ್ಯರಿಗೂ ಅವಿದ್ಯಾವಂತರಿಗೂ ಅನುಕೂಲವಾಗಲಿ ಎಂದು ಕನ್ನಡದಲ್ಲಿ ಆಗಾಗ್ಗೆ ಪರಿಪತ್ರಗಳನ್ನು ಆಜ್ಞೆಗಳನ್ನೂ ಹೊರಡಿಸಿದ್ದುಂಟು. ಹಲವು ಆಂಗ್ಲ ಅಧಿಕಾರಿಗಳು ಅಧಿಕಾರದ ದೃಷ್ಟಿಯಿಂದ ಕನ್ನಡವನ್ನು ಕಲಿತರೆ ಪಾದ್ರಿಗಳು ಮತಪ್ರಸಾರದ ದೃಷ್ಟಿಯಿಂದ ಕನ್ನಡವನ್ನು ಕಲಿತರು. ಇದರಿಂದ ಕನ್ನಡ ಭಾಷೆ ಸಾಹಿತ್ಯಗಳಿಗೆ ಚರಿತ್ರೆಗೆ ಸಹಾಯವಾಯಿತೆಂಬುದೂ ಎಲ್ಲರಿಗೂ ತಿಳಿದ ವಿಷಯ. +ಭಾರತಕ್ಕೆ ಸ್ವಾತಂತ್ರ್ಯ ಬಂದಿತು; ಬ್ರಿಟಿಷರು ಇಂಗ್ಲೆಂಡಿಗೆ ಹಿಂದಿರುಗಿದರು; ಅವರ ಭಾಷೆ ಇಂಗ್ಲಿಷ್ ಹಿಂದಕ್ಕೆ ಉಳಿಯಿತು. ಬ್ರಿಟಿಷರ ವಸಾಹತು ಧೋರಣೆ, ಅವರ ಕಾಲದ ಅಧಿಕಾರಶಾಹೀ ಮನೋಭಾವ ಮುಂದುವರಿದುವು. ಇಂಗ್ಲಿಷ್ ಉನ್ನತ ವಿದ್ಯಾಸಂಸ್ಥೆಗಳ, ಸಂಶೋಧನೆಯ, ಗ್ರಂಥಾಲಯದ ಭಾಷೆಯಾಗಿದ್ದುಕೊಂಡು ದೇಶೀಯ ಭಾಷೆಗಳನ್ನು ಪೋಷಿಸುವ ಪಾತ್ರವನ್ನು ವಹಿಸಬೇಕಿತ್ತು. ಅದು ಆಗಲಿಲ್ಲ, ಮತ್ತು ಹಾಗಾಗಲು, ಕೆಲವರ ಪ್ರಕಾರ, ಅಡ್ಡಿಗಳಿದ್ದುವು. ಆದರೆ ಇಂಗ್ಲಿಷ್ ಬೇರೆ ಬೇರೆ ಪ್ರಾಂತೀಯ ಭಾಷೆಗಳಿಗೆ ಆಡಳಿತದಲ್ಲಿನ ತನ್ನ ಸ್ಥಾನವನ್ನು ಸಂಪೂರ್ಣವಾಗಿ ಬಿಟ್ಟುಕೊಡಬೇಕಿತ್ತು. ಇದು ಅತ್ಯಂತ ಸುಲಭ ಸಾಧ್ಯವೂ ಮೂಲಭೂತ ಕಾರ್‍ಯವೂ ಆಗಿದ್ದೂ ನಡೆಯದೇ ಹೋದುದು ಸ್ವಾತಂತ್ರ್ಯೋತ್ತರ ಭಾರತದ ದುರಂತಗಳಲ್ಲಿ ಒಂದು. ನಮ್ಮ ಜನಕ್ಕೆ ಇದ್ದ ಹಾಸ್ಯ ಮನೋಭಾವ, ಆಲಸ್ಯ, ಭಾಷಾಭಿಮಾನದ ಕೊರತೆ, ಕೀಳರಿಮೆ ಇವುಗಳಿಂದಾಗಿ ಮೂರೂವರೆ ದಶಕಗಳ ಮೇಲೂ ಆಡಳಿತ ಕ್ಷೇತ್ರದಲ್ಲಿ ಕನ್ನಡವನ್ನು ಕೂರಿಸಲು ಸಾಧ್ಯವಾಗಿಲ್ಲ. ಭಾರತದ ಉಳಿದ ಪ್ರಾಂತಗಳಲ್ಲಿ ಯಾವುದು ಸಮಸ್ಯೆಯೇ ಅಲ್ಲವೋ ಅದು ಕರ್ನಾಟಕದ ಮಟ್ಟಿಗೆ ಸಮಸ್ಯೆಯಾಗಿದೆ. +ಒಂದು ಭಾಷೆಯನ್ನು ಮಾಧ್ಯಮವಾಗಿಸಲು ನಿವಾರಿಸಲು ಅಸಾಧ್ಯವಲ್ಲದಿದ್ದರೂ ಕೆಲವು ಕಷ್ಟಗಳಿವೆಯೆಂಬುದನ್ನು ಒಪ್ಪಬೇಕು. ಪಠ್ಯಪುಸ್ತಕಗಳು, ಪಾರಿಭಾಷಿಕ ಪದಗಳು, ಕೊನೆಗೆ ನ್ಯಾಯಾಲಯ ಇವು ಒಂದೊಂದು ಹಂತದಲ್ಲೂ ಅಡ್ಡಿಯಾಗಬಹುದು-ಈ ಅಡ್ಡಿಗಳು ನಿವಾರಣೆಗೆ ಅಸಾಧ್ಯವಲ್ಲವೆಂದು ಆಗಲೇ ಹೇಳಿದೆ. ಆದರೆ, ಇಲ್ಲಿ ಪ್ರಸ್ತುತವೆಂದರೆ, ಒಂದು ಭಾಷೆಯನ್ನು ಆಡಳಿತ ಮಾಧ್ಯಮವಾಗಿಸಲು ಯಾವುದೇ ಸಮಸ್ಯೆಗಳೂ ಇಲ್ಲ, ಕನ್ನಡದ ಬಗ್ಗೆ ಅಡ್ಡಿಯಾಗಿರುವ ಏಕೈಕ ಅಂಶವೆಂದರೆ, ಸಂಕಲ್ಪದ ಅಭಾವ. +ಅಧಿಕಾರಿಗಳಿಗೆ ಇಂಗ್ಲಿಷಿನಲ್ಲಿ ಪತ್ರ ಬರೆದು, ಪರಿಪತ್ರಗಳನ್ನು ಹೊರಡಿಸಿ ಅಭ್ಯಾಸವಾಗಿ ಬಿಟ್ಟಿರುವುದರಿಂದ, ಶುದ್ಧವೋ ಅಶುದ್ಧವೋ ಇಂಗ್ಲಿಷ್ ಅವರಿಗೆ ಸುಲಭವಾಗುತ್ತದೆ. ಆದರೆ, ಮನಸ್ಸು ಮಾಡಿದರೆ, ಆರಂಭದಲ್ಲಿ ಸ್ವಲ್ಪ ಕಿರಿಕಿರಿಯಾದರೂ ಸ್ವಲ್ಪ ಕಾಲದಲ್ಲೇ ಕನ್ನಡದಲ್ಲಿ ಪತ್ರಗಳನ್ನು ಬರೆಯುವ ಮಾದರಿ ನಿರ್ಮಾಣವಾಯಿತೆಂದರೆ ತೀರಿತು. ಪಾರಿಭಾಷಿಕ ಶಬ್ಧಗಳ ಸಂಖ್ಯೆ ಆಡಳಿತ ಕ್ಷೇತ್ರದಲ್ಲಿ ಕಡಮೆಯಾದರೂ ಅವು ಉಂಟು. ಅಂತಹ ಕಡೆ ಈಗಾಗಲೇ ಬಳಕೆಗೆ ಬಂದಿರುವ ಪದಗಳನ್ನು ಉಳಿಸಿಕೊಂಡು, ಉಳಿದಂತೆ ಇಂಗ್ಲಿಷ್ ಪದಗಳನ್ನು ತದ್ಭವಗೊಳಿಸಿ ಬಳಸಬಹುದು. ಇದೂ ಆರಂಭದಲ್ಲಿ ವಿಚಿತ್ರವಾಗಿ ಕಂಡರೂ ಕ್ರಮೇಣ ಅವೇ ಸಹಜ ಕನ್ನಡ ಪದಗಳಾಗಿ ಪರಿಣಮಿಸುತ್ತವೆ. ರೈತ, ಇರಂಗು, ಕೋರ್ಟು, ನೋಟೀಸು, ಹರಾಜು, ಬಿಕ್ಕಲಂ(=ಬಿ ಕಾಲಮ್, ಃ ಅoಟumಟಿ), ಲಾಯರು, ವಕೀಲ, ಅಮಲ್ದಾರ್ ಇವು ಯಾವುವೂ ಅಚ್ಚಗನ್ನಡವಲ್ಲ. ಭಾರತೀಯವೂ ಅಲ್ಲ. ಆದರೆ ಅವು ಬಳಕೆಯಿಂದಾಗಿ ಕನ್ನಡ ಪದಗಳ ಜೊತೆ ತೀರ ಸಹಜವಾಗಿ ಹೊಂದಿಕೊಂಡು ವಾಕ್ಯಗಳಲ್ಲಿ ಬಳಕೆಯಾಗುತ್ತಿವೆ, ಕನ್ನಡವು ಸ್ವೀಕರಣದ ಭಾಷೆಯಾಗಿರುವುದರಿಂದ ಅದಕ್ಕೆ ಅನ್ಯಭಾಷೆಗಳಿಂದ ತತ್ಸಮ ರೂಪದಲ್ಲೋ ತದ್ಭವ ರೂಪದಲ್ಲೋ ಪದಗಳನ್ನು ಸ್ವೀಕರಿಸಲು ಸಂಕೋಚವೆಂಬುದೇ ಇಲ್ಲ. ಆಡಳಿತಕ್ಕೆ ಸಂಬಂಧಿಸಿದಂತೆ ಪತ್ರ, ಕರಪತ್ರ, ಜಾಹಿರಾತು, ಪರಿಪತ್ರ, ನೋಟೀಸು, ಅರ್ಜಿ ಇತ್ಯಾದಿ ಯಾವುದೇ ಬರಹವನ್ನು ಕನ್ನಡದಲ್ಲಿ ತಯಾರಿಸಬಹುದು. +ಆದರೆ ಈಗ ಆಗುತ್ತಿರುವಂತೆ ಬಹುತೇಕ ಆಡಳಿತವು ಇಂಗ್ಲಿಷಿನಲ್ಲಿ ನಡೆಯುತ್ತಿದೆ. ಅಧಿಕಾರಿಗಳ ಆಲಸ್ಯ, ಸಾಮಾನ್ಯ ಜನರ ಅಸಡ್ಡೆ ಎಲ್ಲವೂ ಮೇಳವಿಸಿ, ಅನ್ಯಾಯ ಮಾತ್ರ ಅವಿದ್ಯಾವಂತರಾದ ಹಳ್ಳಿಗರಿಗೆ ಯಥೇಷ್ಟವಾಗಿ ಆಗುತ್ತಿದೆ. ಭಾಷೆಯೂ ಸೊರಗುತ್ತಿದೆ. ಶಿಕ್ಷಣ ಮಾಧ್ಯಮ, ಆಡಳಿತ ಕ್ಷೇತ್ರ ಇಲ್ಲೆಲ್ಲ ಕನ್ನಡವು ಹೆಚ್ಚು ಹೆಚ್ಚು ಬಳಕೆಯಾಗುತ್ತಿದ್ದರೆ ಮತ್ತೆ ಮತ್ತೆ ಬಳಸುತ್ತಿದ್ದರೆ ಹೊಳೆ ಹೊಳೆಯುವ ಕತ್ತಿಯಂತೆ ಝಗಝಗಿಸುತ್ತ ಹರಿತವಾಗಿರುತ್ತದೆ. ಈ ವಿಷಯದಲ್ಲಿ ಮುಖ್ಯ ಹೊಣೆಯನ್ನು ಒಂದು ಕಡೆ ಸರ್ಕಾರ, ಇನ್ನೊಂದು ಕಡೆ ಸಾಮಾನ್ಯ ಜನತೆಯ ಮುಖವಾಣಿಯಾಗಿ ವಿಧಾನಸೌಧದಲ್ಲಿ ಕುಳಿತುಕೊಳ್ಳುವ ಪ್ರತಿನಿಧಿಗಳು ಹೊರಬೇಕು. ಜನತೆಯ ಪ್ರತಿನಿಧಿಗಳು ತಮ್ಮ ತಮ್ಮ ಕ್ಷುದ್ರ ಕಚ್ಚಾಟ ಸ್ವಾರ್ಥಗಳನ್ನು ಬಿಟ್ಟು ಸರ್ಕಾರದ ಮೇಲೆ ಅಧಿಕಾರಿಗಳ ಮೇಲೆ ಕನ್ನಡಪರವಾದ ಒತ್ತಡವನ್ನು ಹಾಕಬೇಕು. ಸರ್ಕಾರ ಕಟ್ಟುನಿಟ್ಟಾಗಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವಲ್ಲಿ ದೃಢಮನಸ್ಸು ಮಾಡಬೇಕು. ಎಲ್ಲ ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ಒಂದೇ ಸಾರಿಗೆ ಹಿಂತೆಗೆದುಕೊಳ್ಳಬೇಕು. ‘ಕ್ರಮೇಣ’ ಎನ್ನುವ ಮಾತಿಗೆ ಅನಿರ್ದಿಷ್ಟ ಎಂಬರ್ಥವು ಪ್ರಾಪ್ತವಾಗುತ್ತದೆಯೆಂಬುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ಒಮ್ಮೆಗೇ ಹಿಂದಕ್ಕೆ ತೆಗೆದುಕೊಂಡು, ಬೇಕಾದರೆ ಕ್ರಮೇಣ ಅಲ್ಲಿಗೆ ಕನ್ನಡ ಬೆರಳಚ್ಚು ಯಂತ್ರಗಳನ್ನು ಸರಬರಾಜು ಮಾಡಬೇಕು. ವಿಧಾನಸೌಧದ ಎಲ್ಲ ಮಂತ್ರಿಗಳು ಕನ್ನಡದಲ್ಲಿ ಟಿಪ್ಪಣಿಯಿರದಿದ್ದರೆ ಆ ಕಡತವನ್ನು ನೋಡುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು. ಕನ್ನಡದಲ್ಲಿ ವ್ಯವಹರಿಸದ ಅಧಿಕಾರಿಗಳಿಗೆ ಎಚ್ಚರಿಕೆ, ಬಡ್ತಿ ತಡೆ, ಇತ್ಯಾದಿ ಬೆದರಿಕೆಗಳನ್ನು ಹಾಕಬೇಕು; ಸಂದರ್ಭ ಬಿದ್ದರೆ ಶಿಕ್ಷಿಸಬೇಕು. ಇಂತಹ ಕಡೆ ಜನತೆಯ ಪ್ರತಿನಿಧಿಗಳು ಮತ್ತು ಜನ ಕಾನೂನು ಮಾಡಲಾಗದ ಪರಿಣಾಮವನ್ನು ತಮ್ಮ ಒತ್ತಡದ ಮೂಲಕ ಮಾಡಬಲ್ಲರು. ಸರ್ಕಾರಿ ಮುದ್ರಣಾಲಯಕ್ಕೆ ಎಲ್ಲ ಬಗೆಯ ಸರ್ಕಾರೀ ಪತ್ರಗಳು, ಗೆಜೆಟ್, ಪ್ರಕಟಣೆ, ಅರ್ಜಿ ನಮೂನೆ ಇತ್ಯಾದಿ ಏನೇನು ಇದೆ ಎಲ್ಲವೂ ಬರಿಯ ಕನ್ನಡದಲ್ಲೇ ಇರಬೇಕೆಂದು ತಿಳಿಸಿ, ಇಂಗ್ಲಿಷ್ ಭಾಷೆಯವು ಬಂದರೆ ಅಚ್ಚುಮಾಡದೆ ಹಿಂದಕ್ಕೆ ಕಳುಹಿಸಲು ನಿರ್ದೇಶಿಸಬೇಕು. ಇಂಗ್ಲಿಷ್‌ನಲ್ಲಿ ಬಂದ ಅರ್ಜಿಗಳ ಮೇಲೆ, ಮುಂದಕ್ಕೆ ಅಂತಹ ಅರ್ಜಿ ಕನ್ನಡೇತರ ಭಾಷೆಯಲ್ಲಿ ಬಂದರೆ ಉತ್ತರ ತಡವಾಗಬಹುದೆಂಬ ಎಚ್ಚರದ ಮುದ್ರೆ ಒತ್ತಿ ಹಿಂದಕ್ಕೆ ಕಳುಹಿಸಬೇಕು. ಇಲ್ಲೆಲ್ಲ ಒಂದು ದೃಢಮನಸ್ಸಿನ ಕಾರ್‍ಯ ನಡೆಯಬೇಕೇ ಹೊರತು, ಕಾಟಾಚಾರಕ್ಕೆ ಜನತೆಯ ಕಣ್ಣೊರೆಸಲು ಏನೋ ಮಾಡಿ, ಯಾರನ್ನೋ ಬಯ್ದು, ಏನೋ ಸಬೂಬು ಹೇಳುವುದು ತಪ್ಪಬೇಕು. +ಈಗ ಹಾಲಿ ನಡೆಯುತ್ತಿರುವುದು-ಕನ್ನಡಕ್ಕೆ ಅಪ್ಪಟ ಮೋಸ. +ಸರ್ಕಾರ, ಅಧಿಕಾರಿಗಳು ಎಂದೂ ಎಚ್ಚರಗೊಳ್ಳುವುದಿಲ್ಲ. ಜನತೆ ಮಲಗಿರುವಾಗ ಅವರ ಸ್ಥಾನ, ಸಂಬಳ, ಸಾರಿಗೆ, ಮೇಲುಸಂಪಾದನೆ, ಎಲ್ಲ ಸುರಕ್ಷಿತ. ಜನತೆ ಎಚ್ಚರಗೊಂಡು ಕೈಯಲ್ಲಿ ಚಾಟಿ ಹಿಡಿದಾಗ ಎಲ್ಲರೂ ಜಾಗೃತರಾಗುತ್ತಾರೆ. ಕನ್ನಡದ ಹಲವು ಸಮಸ್ಯೆಗಳ ಪರಿಹಾರ ಕನ್ನಡ ಯಶಸ್ವಿಯಾಗಿ ಆಡಳಿತ ಭಾಷೆಯಾಗುವುದರಲ್ಲಿದೆ. ಅದರ ಬೆನ್ನಲ್ಲೇ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು. ಸದ್ಯದಲ್ಲಿ ಕರ್ನಾಟಕ ಅನ್ಯಭಾಷಿಕರ ವಸಾಹತುವಿನಂತಿದೆ. ಕನ್ನಡ ಆಡಳಿತದಲ್ಲಿ ಶಿಕ್ಷಣದಲ್ಲಿ ಸರ್ವಮಾನ್ಯವಾಗಿ ಬೆಳಗದೆ ನಿಜವಾದ ಕರ್ನಾಟಕವನ್ನು ಕಾಣಲಾರೆವು. +***** +-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ) ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ […] +ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು […] +ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_542.txt b/Kannada Sahitya/article_542.txt new file mode 100644 index 0000000000000000000000000000000000000000..76f82f56a890833bf34f46d6ae5a16aaa128690c --- /dev/null +++ b/Kannada Sahitya/article_542.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ +ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; +ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ +ಸರಕಾರದ ಸಿರಿಗನ್ನಡದುದ್ಧಾರ. +***** +ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. ***** +ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! ***** +ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_543.txt b/Kannada Sahitya/article_543.txt new file mode 100644 index 0000000000000000000000000000000000000000..17036a57b149a99fb7ea268777cfffebebda6dae --- /dev/null +++ b/Kannada Sahitya/article_543.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ +ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು +ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು +ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. +ಕರೆಯೋಲೆಯಲ್ಲಿ ಬೇಡವೆಂದಿದ್ದರೂ- +ಕಣ್ಣು ಕುಕ್ಕುವ ರಂಗುರಂಗಿನ ಪ್ಯಾಕೆಟ್ಟುಗಳ +ಸಲ್ವಾರ್ ಕಮೀಜ್ ತೊಟ್ಟು +ಸೂಚಿಸದೆ ಲವಲೇಶವೂ ಗುಟ್ಟು +ಮರೆಮಾಚಿದ ಮಿಠಾಯಿ, ಪುಷ್ಪಗುಚ್ಛ, ಕಪ್ಪು ಸಾಸರ್ ಸೆಟ್ಟು, +ಗಡಿಯಾರ, ಬಟ್ಟೆಬರೆ +-ತಂದಿತ್ತರು ಇನ್ನು ಏನೇನೋ ಪ್ರೀತಿಯುಡುಗೊರೆ. +ಮಾರನೆಯ ದಿನ ಮಿಠಾಯಿಯ ಆಯುಷ್ಯ +ಮುಗಿದಿತ್ತು ಬಾಯಿಗಳ ಬೇಟೆಗೆ; +ಅದರ ಮರುದಿನ ಬಸವಳಿದ ಹೂ ಬುಕೆ, +ಕಾಲ ಕ್ರಮೇಣ ಒಡೆದ ಕಪ್ಪು ಬಸಿಗಳ ಚಕ್ಕೆ +ಪಾವ್ತಿಯಾದವು ಬೀದಿ ತೊಟ್ಟಿಯ ಹರಿಶ್ಚಂದ್ರ ಘಾಟಿಗೆ; +ಗಡಿಯಾರ ಗತಿಗೆಟ್ಟು ಉಪೇಕ್ಷೆಗೊಳಗಾಗಿ, +ವಸ್ತ್ರ ಹರಿದು ನಿರುಪಯೋಗಿ- +ವರ್ಗವಾದವು ಹಿಂಮನೆಯ ಹೆಳವ ಕಪಾಟಿಗೆ; +ಇದೇ ತರಹ +ಇನ್ನಿತರ ಕಾಣಿಕೆಗಳ ಕಥೆ ಸಹ. +– ೨ – +ಅಷ್ಟೇನೂ ಗುರುತಿಲ್ಲದ ನನ್ನ ಕವನಾಭಿಮಾನಿಯೋರ್ವ +ಬೆಲೆ ಕೊಟ್ಟು ಕೊಳ್ಳದ, ಎಂದೇ ಬೆಲೆ ಕಟ್ಟಲಾಗದಪೂರ್ವ +ಉಡುಗೊರೆಯೊಂದ ಅಂಜುತ್ತಲೇ ಕೊಟ್ಟ, +ಕಾಗದದ ವರ್ಣರಂಜಿತತೆಯಿಂದ ಅಡಗಿಸಿಡದೆ ಒಳ ಗುಟ್ಟ. +-ಅರ್ಥಾತ್, ನಿತ್ಯ ಮಲ್ಲಿಗೆ ಹಂಬಿನೊಂದು +ಕಡ್ಡಿಯ ತಂದು ಗೇಟ ಬಳಿ ನೆಟ್ಟ. +ಇಂದಿಗೂ ಒಳ ಹೊರಗೆ ಹಿತಮಿತ ಗಮಗಮ, +ವಿದೇಶಿ ಅತ್ತರಿಗೆ ಸಮ; +ನೋಟಕ್ಕೆ ಹಬ್ಬದೂಟ ಚಿಕ್ಕೆ ಹೂ ಹೊರೆ; +ಅವನೀಗ ಆಗಿದ್ದರೂ ಕಣ್ಮರೆ. +***** +ಕೀಲಿಕರಣ: ಶ್ರೀನಿವಾಸ +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […] +ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […] +ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? ಗೆರೆಯ ಬರುವುದರೊಳಗೆ, ನೀರು ಕರಗಿ ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, ನದಿಯಾಗಿ ಹರಿದು, ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ ಮತ್ತೆ ನೀರಾಗುವುದರೊಳಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_544.txt b/Kannada Sahitya/article_544.txt new file mode 100644 index 0000000000000000000000000000000000000000..1b39ca3c3e6f02c116e1700dc593d70c36aa5f4f --- /dev/null +++ b/Kannada Sahitya/article_544.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾರ್ಯಸಾಧನೆಯಾದ ಮೇಲೆ +ಚಾಚಿದ ಅಭಯ ಹಸ್ತ, +ಗಾಢ ನಿದ್ದೆಯೊಳಗಿರುವವನನೆಬ್ಬಿಸಿ +ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. +***** +ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […] +ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? ***** +ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_545.txt b/Kannada Sahitya/article_545.txt new file mode 100644 index 0000000000000000000000000000000000000000..ff86963b36df348f49375b73e52dd1652d25020b --- /dev/null +++ b/Kannada Sahitya/article_545.txt @@ -0,0 +1,90 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇಂದು ಮಾರ್ಚ ಒಂದನೆಯ ತಾರೀಖು. +೨೯೦ ರೂಪಾಯಿ-ಕಿಸೆಯಲ್ಲಿ! +ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು. +ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ ದೊರೆತ ಹೋದ ವರುಷದ ಪ್ರಮೋಷನ್-ಇವುಗಳ ಮೂಲಕ ಇಂದು ೩೦೦ಕ್ಕೆ ಸಮೀಪಿಸಿದ್ದಾನೆ. ಖಾರಿನಲ್ಲಿ ಒಳ್ಳೆಯ ಹೋಟೆಲಿನಲ್ಲಿ ಸಿಂಗಲ್ ರೂಮು: ವಸೀಲೆ, ಕೊಂಚ ಲಂಚ-ಆದರೂ ಅಡ್ಡಿಯಿಲ್ಲ. ೧೪೦ ರೂ. ತಿಂಗಳಿಗೆ ಊಟ ಹಿಡಿದು. ೬೦ ರೂ. ಉಳಿದ ಖರ್ಚು: ಸಿನೇಮಾ, ಲಾಂಡ್ರಿ, ಚಹ, ಟ್ರೇನು ಮುಂ… ೯೦ ರೂ. ತಿಂಗಳಿಗೆ ಬ್ಯಾಂಕಿನಲ್ಲಿ ಜಮಾ… ಈಗಾಗಲೇ ಒಟ್ಟು ೧೪೦೦ ರೂ. ಇವೆ. ಇನ್ನು ತಿಂಗಳಿಗೆ ೧೦೦ ರೂಪಾಯಿಗಳನ್ನು ಉಳಿಸಬೇಕು. ಅಂದರೆ ೧೦೦ ಗುಣೆಲೆ ೧೨=೧೨೦೦.ರೂ. ವರ್ಷಕ್ಕೆ. ಇನ್ನು, ೫ ವರ್ಷಗಳಲ್ಲಿ ೧೨೦೦ ಗುಣಿಲೆ ೫=೬೦೦೦ ರೂ. ಅಧಿಕ ಭಡತಿಯಿಂದ ಬರಬಹುದಾದ ೧೨೦+೨೪೦ ಅಂದರೆ ೩೬೦ ಅಧಿಕ ೩೬೦-ಅಧಿಕ ೪೮೦ ಅಧಿಕ ೬೦೦… ಸುಮಾರು ೨೦೦೦ ರೂ. ಹೆಚ್ಚಿಗೆ ೫ ವರ್ಷಗಳಲ್ಲಿ… +-ಓಹ್, ಈ ಎಲ್ಲ ಮೀನಮೇಷೆ ಏಕೆ? ಹಣ ಕೂಡಿಟ್ಟು, ಬಂಗಲೆ, ಕಾರು ತೆಗೆದುಕೊಳ್ಳುವದು ಅಷ್ಟರಲ್ಲಿಯೇ ಇದೆ! +ಹಾರ್ನಬಿ ರೋಡು. ಶನಿವಾರ ಬೇರೆ. ಗದ್ದಲ ಕೇಳಬೇಕೆ? ರೋಡು ಕ್ರಾಸು ಮಾಡಿ, ಆ ಬದಿಯ ನೆರಳಿನಲ್ಲಿ ನಡೆಯಬೇಕೆಂದು ಗೌರೀಶ ನಿಶ್ಚಯಿಸಿದ. ಕಾರುಗಳ ಸಾಲೇ ನಡೆದಿತ್ತು-ಇರುವೆಯ ಸಾಲಿನಂತೆ. +-ಒಂದು ದಿನ, ೫ ಅಲ್ಲ ೧೦ ವರ್ಷಗಳ ನಂತರ ತಾನೂ ಆ ಸಾಲಿನಲ್ಲಿರಬಹುದು! ತನ್ನಷ್ಟಕ್ಕೆ ತಾನೇ ನಕ್ಕ ಗೌರೀಶ… ಐದು-ಹತ್ತು ವರುಷ! ಅಷ್ಟರೊಳಗೆ ಏನೇನಾಗುವದೋ ಏನೋ! ಮೂರನೆಯ ಮಹಾಯುದ್ಧ ಸುರುವಾಗಿ ಮುಗಿಯಬಹುದು… ಅಥವಾ ತಾನು ಲಗ್ನವಾಗಿ… +ಲಗ್ನದ ವಿಚಾರ ಸುಳಿಯುತ್ತಲೆ, ಗೌರೀಶನ ಮುಖದ ತೇಜ ಕೊಂಚ ಇಳಿಯಿತು, ತುಟಿಗಳ ತುದಿಗಳು ಕೊಂಚ ಕೆಳಗಿಳಿದವು. ಹುಬ್ಬು ಸ್ವಲ್ಪ ಗಂಟಿಕ್ಕಿದವು. ಇವುಗಳನ್ನೆಲ್ಲ, ಇಸ್ತ್ರೀ ಹೊಡೆದು ಚೊಕ್ಕ ಮಾಡುವವನಂತೆ, ಕರಚೀಫಿನಿಂದ ಮುಖ ಒರೆಸಿದ. +ಹಾಂ-ಸದ್ಯಕ್ಕೆ ಆ ಬದಿಗೆ ಜಾರಬಹುದು-ದಾರಿಯಲ್ಲಿ ಯಾವ ಟ್ರಾಫಿಕ್ಕು ಇಲ್ಲ-ಆ ಕಾರು ಇನ್ನೂ ದೂರವಿದೆ: ಸ್ಟೂಡಬೇಕರ್? ಅಲ್ಲ, ವ್ಹಾಕ್ಝೋಲ್! +ಗೌರೀಶ ರೋಡು ದಾಟಿ, ನೆರಳಿದ್ದ ಪುಟಪಾಥದ ಮೇಲಿಂದ, ಬೋರೀ ಬಂದರದ ಕಡೆಗೆ ನಡೆಯತೊಡಗಿದ. +ತಾರಾಪೋರವಾಲ ಬುಕ್ ಸ್ಟಾಲ್! ಓಹ್! ಹಿಂದೆ ತಾನು ಕನಸು ಕಟ್ಟಿದುದರ ನೆನಪಯಿತು; ಮನೆಯಲ್ಲಿ ಒಳ್ಳೆಯ ಲಾಯಬ್ರರಿ ಕಟ್ಟಬೇಕು-ಎಲ್ಲ ಕ್ಲಾಸಿಕ್ಸು- ಎಲ್ಲ ತರದ ಒಳ್ಳೊಳ್ಳೆಯ ಪುಸ್ತಕಗಳು-ಸುಪ್ರಸಿದ್ಧ ಮ್ಯಾಗಝೀನಗಳು-ಇವೆಲ್ಲ ಓರಣವಾಗಿ ಇಡಲ್ಪಟ್ಟ, ನಾಲ್ಕೆಂಟು ಕನ್ನಡಿಯ ಕಪಾಟುಗಳಿರಬೇಕು…. ಹಾಗೂ ತಾನು… ಒಂದು ಕಟುನಗೆ ಸುಳಿದು ಹೋಯಿತು ಗೌರೀಶನ ಮುಖದ ಮೇಲೆ!-ಒಳಗೆ ಹೋಗಿ ಕೆಲವು ಪುಸ್ತಕಗಳನ್ನು-ಬರ್ಟ್ರಾಂಡ್ ರಸೆಲನ ಎಲ್ಲ ಪುಸ್ತಕಗಳನ್ನು ಕೊಳ್ಳಬೇಕೆಂದೆನಿಸಿತು… ಹುಚ್ಚು! ತನಗೆ ಹುಚ್ಚು ಹಿಡಿದಿಲ್ಲವಷ್ಟೆ! ಅವುಗಳನ್ನು ಓದು ತತ್ವಜ್ಞಾನಿಯಾಗುವದು ಅಷ್ಟರಲ್ಲಿಯೇ ಇದೆ! ತಲೆಗೆ ಒಣ ತಾಪ…! ಒಂದು ಕಾದಂಬರಿಯನ್ನಾದರೂ ಕೊಳ್ಳೋಣ ಎಂದು ನಿಶ್ಚಯಿಸಿ, ಒಳಗೆ ಸೇರಿದ. +ಎಷ್ಟೋ ವರ್ಷಗಳ ನಂತರ ಈ ಬುಕ್ ಸ್ಟಾಲಿನಲ್ಲಿ ಗೌರೀಶ ಹೋಗುತ್ತಿದ್ದಾನೆ-ಏನು ಕೇಳಬೇಕು, ಯಾರಿಗೆ ಕೇಳಬೇಕು ಎಂದು ಯೋಚಿಸತೊಡಗಿದ. ಅಷ್ಟರಲ್ಲಿ ಒಬ್ಬ ಸ್ಮಾರ್ಟ್ ಮನುಷ್ಯ ನಗೆಯಿಂದ ಸ್ವಾಗತಿಸಿದ: +“ನಿಮಗೇನು ಬೇಕು-ಪ್ಲೀಜ?” ಎಂದು ಇಂಗ್ಲೀಷಿನಲ್ಲಿ ಕೇಳಿದ. +ಗೌರೀಶ ಸ್ವಲ್ಪ ವಿಚಾರ ಮಾಡುವವನಂತೆ ನಿಂತ. ಒಬ್ಬ ಒಳ್ಳೆಯ ಕಾದಂಬರಿಕಾರನ ಹೆಸರು ನೆನಪಾಗಬಾರದೆ? ಥೂ ಇದರ… ಒಂದೆರಡು ಪೆಂಗ್ವಿನ್ ಪುಸ್ತಕ ಒಯ್ದರಾಯಿತು. ಹಣವೂ ಹೆಚ್ಚು ಹೋಗುವುದಿಲ್ಲ. +“ನನಗೆ ಕೆಲವು ಪೆಂಗ್ವಿನ್ ಪುಸ್ತಕ ಬೇಕಾಗಿವೆ.” ಎಂದು ಧೈರ್ಯವಾಗಿ ಉಸುರಿದ. +“ಹಾಗಾದರೆ ಇತ್ತ ಬನ್ನಿ” ಎಂದು ಗೌರೀಶನನ್ನು ಕರೆದೊಯ್ದು ಒಂದು ದೊಡ್ಡ ಪುಸ್ತಕಗಳ ಶೆಲ್ಫಿನ ಮುಂದೆ ನಿಲ್ಲಿಸಿದ ಆ ನಗುಮುಖದ ಮನುಷ್ಯ. ಮೇಲಿನಿಂದ ಕೆಳಗೆ, ಎಡದಿಂದ ಬಲಕ್ಕೆ ನೋಡುತ್ತ ನಿಂತ ಗೌರೀಶ. ಅಲ್ಲಿ ‘ವೋಡಹೌಸ’ನ ಒಂದು ಪುಸ್ತಕ ಕಣ್ಣಿಗೆ ಬಿತ್ತು. ಹೆಸರು ಪರಿಚಿತವಿದ್ದಂತೆ ತೋರಿತು. ಕೂಡಲೆ ಗೌರೀಶ ಆ ಪುಸ್ತದ ಮನುಷ್ಯನಿಗೆ ಕೇಳಿದ: +“ನಿಮ್ಮ ಹತ್ತಿರ ವೋಡಹೌಸ ಉಂಟೇನು?” +“ಹೌದು ಇಲ್ಲಿ ನೋಡ್ರಿ, ಎರಡು ಇದ್ದಾವೆ. ವೋಡಹೌಸ್-ಓಹ್, ಬಹಳ ಚೆನ್ನಾಗಿ ಬರೆಯುತ್ತಾನೆ.” +ಅಬ್ಬ, ತನಗಿಂತ ಹೆಚ್ಚು ಗೊತ್ತಿದೆ ಎಂದು ತೋರಿಸುತ್ತಿದ್ದಾನಲ್ಲ ಈ ಪೋರ ಎಂದೆನಿಸಿತು ಗೌರೀಶನಿಗೆ- +“ಹೌದು, ನನಗೆ ಗೊತ್ತಿದೆ, ನಾನೂ ಓದಿದ್ದೇನೆ ಅವನನ್ನು, ಇವೆರಡನ್ನು ಕಟ್ಟಿಕೊಡಿ” ಎಂದು ಗಂಭೀರವಾಗಿ ಹೇಳಿದ. +ವೋಡಹೌಸ್ ಒಳ್ಳೆಯ ಹಾಸ್ಯ ಕತೆಗಳನ್ನು ಬರೆಯುತ್ತಾನೆ ಎಂದು ಹಿಂದೆ ಎಂದೋ ಅವನ ಮಿತ್ರರು ಅನ್ನುತ್ತಿದ್ದರು-ಕಾಲೇಜಿನಲ್ಲಿ… ಹಾಗೂ ಅವನ ಬಗ್ಗೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿಯೋ ಎಲ್ಲೋ ಓದಿದ್ದರ ನೆನಪಾಯಿತು… ‘ಇಲ್ಲಸ್ಟ್ರೇಟೆಡ್ ವೀಕ್ಲಿ’!-ಇನ್ನು ಮೇಲೆ ಕ್ರಾಸ್‌ವರ್ಡ್ ತುಂಬಿ ಕಳಿಸಲು ಏಕೆ ಸುರುಮಾಡಬಾರದು? ಸಿಕ್ಕರೂ ಸಿಗಬಹುದು ಒಂದು ೪೦-೫೦ ಸಾವಿರ ರೂಪಾಯಿ ಒಮ್ಮೆಲೆ-ಮೊನ್ನೆ ಆ ರಿಝರ್ವ ಬ್ಯಾಂಕಿನ ಕ್ಲಾರ್ಕನಿಗೆ ಸಿಕವಂತೆ ೬೦,೦೦೦ ರೂ… ‘ಗೆಲ್ಲಲೇಬೇಕು ೨ ಲಕ್ಷ ರೂಪಾಯಿ!’ ಅಹುದು ಹಣ-ಹಣ… +ಬಿಲ್ಲು ನೋಡಿ, ಮೂರು ರೂಪಾಯಿ ಕೊಟ್ಟು ಪುಸ್ತಕ ತೆಗೆದುಕೊಂಡು ಹೊತಗೆ ಬಂದ. +‘-ಹಣ-‘ಹಣವೆಂದ ಕೂಡಲೆ ಹೆಣ ಕೂಡ ಬಾಯಿ ಬಿಡುವದಂತೆ’ ಹೌದು, ನಾನೊಂದು ಹೆಣವಲ್ಲದೆ ಮತ್ತೇನು? ನಾನು ಸತ್ತರೆ ಯಾರು ಇದ್ದಾರೆ ಅಳಲಿಕ್ಕೆ?-ತಾಯಿ! ಅಲ್ಲಿ ದೂರದ ಹಳ್ಳಿಯಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದಾಳೆ… ತಾಯಿ-ನಂತರ ತಮ್ಮ!ಅವನ ವಿದ್ಯಾಭ್ಯಾಸ ದೊಡ್ಡಪ್ಪ ನೋಡಿಕೊಳ್ಳುತ್ತಾನೆಂದು ಚೆನ್ನು. ತಾಯಿ ಮೊನ್ನೆ ಒಂದು ಪತ್ರ ಹಾಕಿಸಿದ್ದಳಲ್ಲವೇ-‘ಬೈಲಹೊಂಗಲದ ಕುಲಕರ್ಣಿಯವರ ಹೆಣ್ಣು ಬಂದಿದೆ…’ +ಹೆಣ್ಣು! ಅವನ ಬಲಬದಿಗೆ ಓರ್ವ ಪಾರ್ಸಿ ಹುಡಿಗೆ ನಡೆದಿದ್ದಳು. ತುಂಬಿದ ದೇಹ, ಬಾಬ್‌ಕಟ್ಟು, ಒಳ್ಳೆಯ ‘ಫಾರ್ಮು’, ಚಂದಾಗಿ ಚಾಚಿದ ‘ಬ್ರೆಸ್ಟ್ಸು’-ಮೂಗು ಸ್ವಲ್ಪ ಉದ್ದು!… ಅವಳ ಆದಷ್ಟು ಹತ್ತಿರದಿಂದ ಹೋಗತೊಡಗಿದ ಗೌರೀಶ… ಲಗ್ನವಾದ ಮೇಲೆ ಹೆಂಡತಿಯೊಡನೆ ಹೀಗೆಯೇ ಹೋಗಬಹುದಲ್ಲವೇ ಹಾದಿಯ ಮೇಲೆ, ತನ್ನ ಕೈಯು ಅವಲ ದೇಹಕ್ಕೆ ತಾಗಿ… +-ಕೂಡಲೆ ಒಂದು ನೆನಪು ಹರಕು-ಹರಕಾಗಿ ಸುಳಿದು ಬಂತು ಅವನ ಮನಸಿನಲ್ಲಿ. ಮಧೂ-ಅವನ ಈಗೀಗಿನ ಗೆಳೆಯ, ಜೀವನದಲ್ಲಿ ಮಜಾದ ಹೊರತು ಬೇರೆ ಏನೂ ಇಲ್ಲ ಎನ್ನುವ ಮಧೂ-ಅಂದು ಅವನು ತಂದ ಹುಡುಗಿ-ಜುಹೂದಲ್ಲಿ ಬಾಡಿಗೆ ಕೋಣೆ-ಆ ಹೊಲಸು ನಾರುವ ಅವಳ ಬಾಯಿ-ಅತ್ತರಿನ ಘಮಘಮಾಟವಿದ್ದ ಅವಳ ಒಳಗಿನ ಎದೆಕಟ್ಟು-ಆ ಕರಿಯ ಮೆತ್ತಗಿನ ಲಠ್ಠ ದೇಹ-ಅವಳ ಹೊಲಸು ಕುಲುಕುಲು ನಗೆ…. +-ಗೌರೀಶನ ಮುಖ ಗಂಟಿಕ್ಕಿತು; ಅಯ್ಯೋ, ಎಂಥ ಜೀವನ! ಲಗ್ನ-ತಾನು ಎಂದೂ ಲಗ್ನ ಆಗಲಾರೆ. ಒಂದು ಹೆಣ್ಣನ್ನು ಮನೆಯಲ್ಲಿ ಸಾಕಿ ದಿನಾಲು ಉಪಭೋಗಿಸಿದರೆ, ಎಂಟೇ ದಿನಗಳಲ್ಲಿ ಜೀವನದ ಬಗ್ಗೆ ತಿರಸ್ಕಾರ ಹುಟ್ಟಬಹುದು! ಲಗ್ನ-ಹೆಣ್ಣು-ಉಪಭೋಗ-ಮಕ್ಕಳು-ಟ್ಯಾಂ-ಪ್ಯಾಂ-ಅವುಗಳ ಸಂರಕ್ಷಣೆ-ಸಾಲೆ-ಕಾಲೇಜು-ಓಹ್-ಈ ಚಕ್ರ ಬೇಡ. ಆ ಮಕ್ಕಳೂ ಮುಂದೆ ತನ್ನಂತೆ ಆಗಬಹುದು- ನಿಷ್ಪ್ರಯೋಜಕ, ದುಃಖಿ! ಜಗತ್ತಿನಲ್ಲಿ ಮತ್ತೇಕೆ ದುಃಖ-ಸಂತಾಪ-ಜಂಜಾಟ ಹೆಚ್ಚಿಸಬೇಕು? ತನ್ನಿಂದ ಇಂಥ ತಪ್ಪು-ಅಪರಾಧ ಆಗಕೂಡದು. ತಾನೊಬ್ಬನೇ ಜಗತ್ತಿನಲ್ಲಿದ್ದದ್ದು ಸಾಕು. ಏಕೆ ಆ ಮಕ್ಕಳು-ಮರಿ?… ಯಾಕೆ ಅವರ ಜೀವನ-ಜಂಜಾಟ? ಲಗ್ನವನ್ನೇ ಆಗಕೂಡದು… ತಾನೊಬ್ಬನೇ ಇರಬೇಕು. ಆರಾಮಾಗಿ, ನಿಶ್ಚಿಂತೆಯಿಂದ. ಮುದುಕನಾದರೆ ಅಥವಾ ಸಂಸಾರದ ಬೇಸರ ಬಂದರೆ ಒಂದು ರಾತ್ರಿ ವಿಷ-ಅದರಲ್ಲೇನು ವಿಶೇಷ-ಮುಂಬಯಿಯಲ್ಲಿ ದಿನಾಲು ನೂರಾರು ಮಂದಿ ಸಾಯುತ್ತಿರಬೇಕು. ಮರಣಕ್ಕೆ ಯಾಕೆ ಹೆದರಬೇಕು? ಒಂದು ದಿನ ಸಾಯುವದು ಇದ್ದೇ ಇದೆ… ನಾಲ್ಕು ಜನ ತನ್ನನ್ನು ಸುಡುಗಾಡಿಗೆ ಒಯ್ಯುವ ಚಿತ್ರ ಕಣ್ಣುಕಟ್ಟಿತು. ಸುಡುಗಾಡಿಗೆ ಒಯ್ದು, ತನ್ನನ್ನು ಚಿತೆಯ ಮೇಲೆ ಇರಿಸಿದ್ದಾರೆ-ತನ ಥಟ್ಟನೆ ಜೀವ ಬಂದಿದೆ. ‘ಹಾ-ಹಾ-ಹಾ-ಮರಣಕ್ಕೆ ಯಾಕೆ ಹೆದರುತ್ತೀರಿ, ಲೇಡೀಜ ಆ೦ಡ ಜಂಟಲ್‌ಮೆನ್-ನೋಡಿರಿ, ಬೇಕಾದರೆ ನಾನು ಜೀವಂತ ಚಿತೆಯ ಮೇಲೆ ಕೂಡ್ರುತ್ತೇನೆ.’ ಬೆಂಕಿಯ ಜ್ವಾಲೆಗಳು ಮೇಲೇರುವವು-ಆದರೆ ತಾನು ಮಾತ್ರ ಗಂಭೀರನಾಗಿ, ಶಾಂತನಾಗಿ ನಿಂತಿದ್ದಾನೆ-ಜೋನ್ ಆಥ್ ಆರ್ಕಳಂತೆ! ತಾನು ಮತ್ತು ಜೋನ್-ಏನು ಭೇದ ಇಬ್ಬರಲ್ಲಿ? ಅವಳು ಏನೋ ಮಹತ್ಕಾರ್ಯ ಮಾಡಿದಳು-ಮಹತ್ಕಾರ್ಯವಂತೆ ಮಣ್ಣು!-ಮತ್ತು ತಾನು ಏನೂ ಮಾಡಿಲ್ಲ-ಜೀವಿಸುವದೆಂದರೇನೇ ಮಹತ್ಕಾರ್ಯವಲ್ಲವೆ?… ಇನ್‌ಗ್ರಿಡ್ ಬರ್ಗಮನ್ ಚನ್ನಾಗಿ ಕೆಲಸ ಮಾಡಿದ್ದಾಳೆ ‘ಜೋನ್ ಆಫ್ ಆರ್ಕ’ ಪಿಕ್ಚರಿನಲ್ಲಿ! ಇಂದು ನ್ಯೂ ಎಂಪಾಯಿರ ಥಿಯೇಟರಿನಲ್ಲಿ ‘ಎ ಸ್ಟ್ರೀಟ್ ಕಾರ್ ನೇಂಡ್ ಡಿಸೈರ್’ ಅಂತೆ!… ಯಾಕೆ ಹೋಗಬಾರದು? ಸಿನೆಮಾ ನೋಡುವಾಗ ಹತ್ತಿರ ಒಂದು ಹುಡುಗಿ ಇದ್ದರೆ ಎಷ್ಟು ಚಂದ, ಏನು ಮಜಾ… ಲಂಡನದಲ್ಲಿಯಂತೆ ಇಲ್ಲಿ ‘ಪಿಕ್-ಅಪ್’ ಹುಡುಗಿಯರು ಏಕೆ ದೊರೆಯುವುದಿಲ್ಲವೋ?… ಇಂದು ಆಫೀಸಿನಲ್ಲಿಯ ಆ ಟೈಪಿಸ್ಟ ಕ್ರಿಶ್ಚಿಯನ್ ಕಾಳಿಗೆ ಕರೆದರೆ ಬರುತ್ತಿತ್ತೋ ಏನೋ- +-ಒಂದು ದಿನ ಆಫೀಸಿನ ಅಟ್ಟದ ಮೂಲೆಯಲ್ಲಿ ಅವಳನ್ನು ಜಗ್ಗಿ, ಅಪ್ಪಿ ಮುತ್ತು ಕೊಟ್ಟಿದ್ದರ ನೆನಪಾಯಿತು ಗೌರೀಶನಿಗೆ… ಅವಳೇ ಪ್ರೋತ್ಶಾಹಿಸಿದ್ದಳು-‘ನಿನ್ನ ಕಣ್ಣು ಬಹಳ ಚಂದವವೆ!’ ಅವನದೇನು ತಪ್ಪು? ತಾನಾಗಿಯೇ ಯಾವ ಭಾನಗಡಿಯಲ್ಲಿ ಬೀಳುವ ಮನುಷ್ಯನಲ್ಲ ಗೌರೀಶ. ಆದರೆ ಯಾರಾದರೂ ಅಮಿಷ ತೋರಿಸಿದರೆ, ಸ್ವಲ್ಪ ಹೊತ್ತು ರುಚಿ ನೋಡಿದುದರಲ್ಲಿ ತಪ್ಪೇನು? ಆ ಹುಡುಗಿ ಸಾವಕಾಶ ಅವನನ್ನು ಬುಟ್ಟಿಯಲ್ಲಿ ಹಾಕಲು ಯತ್ನಿಸಿದ್ದಳು. ವಾಹವಾ! ಅವನು ಅವಳ ಗಾಳಕ್ಕೆ ಬಲಿಬೀಳುವ ಮೀನೇ?… ಅಥವಾ ಅವಳನ್ನು ಲಗ್ನವಾದರೆ ಹೇಗೆ? ಬೆಟ್ಟಿ-ಬೆಟ್ಟಿ ಫರ್ನಾಂಡಿಸ-ಹಾಗೆ ನೋಡಿದರೆ ತೀರ ಕೆಟ್ಟೇನೂ ಇಲ್ಲ. ಅಂದ ಹಾಗೆ ಅವಳನ್ನು ಲಗ್ನವಾದರೆ ಏನಾಗಬಹುದು? ಮನೆಯಲ್ಲಿ ಎಲ್ಲರೂ ಸಿಟ್ಟಿಗೇಳಬಹುದು- ಏಳಲಿ!… ಅವನು ಕ್ರಿಶ್ಚಿಯನ್‌ನಾಗಬೇಕೆಂದು ಅವಳು ಹಟಹಿಡಿದರೆ… +ಹುಚ್ಚು! ಎಂದು ಆ ಹುಚ್ಚ ಕಲ್ಪನೆಯನ್ನು ಜಾಡಿಸಿ ಒಗೆದ, ಕೋಟಿನ ಮೇಲೆ ಕುಳಿತ ಕೆಟ್ಟ ಕೀಟಕವನ್ನು ಜಾಡಿಸಿ ಒಗೆಯುವಂತೆ! +ನ್ಯೂ ಎಂಪಾಯಿರ ಥಿಯೇಟರಿಗೆ ಹೋಗಿ ಕ್ಯೂದಲ್ಲಿ ನಿಂತ. ಕ್ಯೂ ಸಾಕಷ್ಟು ಉದ್ದವಿದ್ದುದರಿಂದ ತಿಕೀಟು ಸಿಗಬಹುದೋ ಎಂದು ಸಂಶಯ. ಅವನ ಮುಂದೆ ಪಾರ್ಸಿ ಮುದುಕೆಯೊಬ್ಬಳು ನಿಂತಿದ್ದಳು. ಅವಳನ್ನು ನೋಡಿ ಪಾಪವೆನಿಸಿತು ಗೌರೀಶನಿಗೆ: ಈ ಮುದುಕಿಗೆ ಇನ್ನೂ ಚಿತ್ರಪಟ ನೋಡುವ ಹುಚ್ಚು, ಅದೂ ಒಬ್ಬಳೇ ಬಂದಿದ್ದಾಳೆ. ಮಕ್ಕಳು-ಗಂಡ ಯಾರೂ ಇರಲಿಕ್ಕಿಲ್ಲ. ಈ ತೋಳಿಲ್ಲದ ಬ್ಲಾವುಜೇಕೆ ಹಾಕುತ್ತಾರೋ ಇವರು? ಅಸಹ್ಯವಾದ ತೋಳುಗಳು-ಜೋತುಬಿದ್ದಂಥ ತೊಗಲು… ಅವಳು ಸೀರೆಯಿಲ್ಲದೆ ಹೇಗೆ ಕಾಣಬಹುದು ಎಂದು ಗೌರೀಶ ತನ್ನ ಮನಃಚಕ್ಷುವಿನ ಮುಂದೆ ಕಲ್ಪಿಸಿದ. ಅವನು ಸ್ವಲ್ಪ ನಡುಗಿದ!-ಓ ಡಿಯರ್, ಇದು ಜೀವನವೇ! ಅವನು ಲಗ್ನವಾದ ಹೆಣ್ಣು ಮುಂದೆ ಇದೇ ಸ್ಥಿತಿಗೆ ಬಂದರೆ, ಅವಳೊಡನೆ ಸಂಸಾರ ಮಾಡುವುದು ಹೇಗೆ-ದಿನಾಲು ಅವಳೊಡನೆ ಇರುವದು ಹೇಗೆ?-ಛೆ! +‘೧-೫-೦ ಟಿಕೇಟ ಪ್ಲೀಜ. ದಿಸ್ ಶೋ’ ಎಂದ. ಟಿಕೇಟು ತೆಗೆದುಕೊಂಡು ಕ್ಯೂದಿಂದ ಸರಿದ. ಜನರನ್ನು ನೋಡೋಣ ಎಂದು ಒಳ್ಳೆಯ ಮೂಲೆಯ ಜಾಗೆಯಲ್ಲಿ ಹೋಗಿ ನಿಂತ. ನೂರೆಂಟು ಮುಖಗಳು, ಒಂದಾದರೂ ಪರಿಚಯದ ಮುಖವಿರಬಾರದೇ? ಸಿನೇಮಾದ ಚಿತ್ರಗಳನ್ನು ಅಲ್ಲಿ ಇರಿಸಿದ್ದು ಕಂಡುಬಂತು. ಆ ಚಿತ್ರಗಳನ್ನಾದರೂ ನೋಡೋಣ ಎಂದು ಅತ್ತ ಸರಿದ. ಅವನು ಇಂದು ನೋಡಲಿರುವ ಪಿಕ್ಚರಿನಲ್ಲಿ ವ್ಹಿವ್ಹಿಯನ್ ಲೇ- +ವ್ಹಿವ್ಹಿಯನ್ ಲೇನೇ? ಹಾಗಿದ್ದರೆ ಸಿನೇಮಾ ಚೆನ್ನಾಗಿರಬೇಕು! ಬಂದದ್ದು ಸಾರ್ಥಕವಾಯಿತು. ಹಿಂದೆ-‘ಸೀಜರ್ ಆ೦ಡ ಕ್ಲಿಯೋಪಾತ್ರಾ’ ಬಂದಾಗ ವ್ಹಿವ್ಹಿಯನ್ ಲೇ ಇದ್ದಳೆಂದು-ನಾಲ್ಕು ಸಲ ಸಿನೇಮಾ ನೋಡಿದ್ದ ಗೌರೀಶ. ಯಾಕೆ? ವ್ಹಿವ್ಹಿಯನ್ ಲೇ ಅವಳು ಕಲ್ಪಲತೆಯಂತೆ ಕಾಣುತ್ತಿದ್ದಳು. ಅದಕ್ಕಾಗಿ! ಕಲ್ಪಲತೆ! ಗೌರೀಶನ ಮನಸ್ಸಿನಲ್ಲಿ ವಿದ್ಯುಲ್ಲತೆ ಮಿಂಚಿದಂತಾಯಿತು. ಕುತೂಹಲದಿಂದ ಆ ಫೋಟೋಗಳನ್ನು ಕೂಲಂಕಷವಾಗಿ ನೋಡತೊಡಗಿದ. ಹೌದು, ಕಲ್ಪಲತೆಯೇ ಹೌದು! ಕೆಲವು ‘ಪೋಜು’ಗಳಲ್ಲಿ-ವ್ಹಿವ್ಹಿಯನ್ ಲೇ ಎರಡು ಹೆರಳು ಜೋಡಿಸಿದರೆ ಕಲ್ಪಲತೆಯಂತೆಯೇ ಕಾಣಿಸುವಳು… ಗೌರೀಶನ ತಲೆಯಲ್ಲಿ ಕಲಮಲವೆದ್ದಿತು. ಕಲ್ಪಲತೆಯ ವಿಚಾರ ಅವನ ಮನಸ್ಸಿನ ಮೇಲೆ ಮೂಡುವದೇ ತಡ, ಅಲಾರ್ಮ ಬೆಲ್ಲು ಒತ್ತಿದಂತೆ ಅವನ ತಲೆ ತುಂಬ ಗುಲ್ಲೋಗುಲ್ಲು:- +ಕಲ್ಪಲತೆಯನ್ನು ಸುಮ್ಮನೆ ಬಿಡಬಾರದಿತ್ತು…. ಎಷ್ಟೊಂದು ಸಹಜವಾಗಿ ಅವಳು ನನ್ನನ್ನು ನಿರಾಕರಿಸಿದಳಲ್ಲ. ಸ್ವಲ್ಪವೂ ಕರುಣೆಯಿದ್ದಿಲ್ಲವೇ ಅವಳಿಗೆ? ಅವಳ ಮನಸ್ಸೆಂದರೆ ಹಿಮದ ಮುದ್ದೆ-ಮಂಜುಗಡ್ಡೆಯಾಗಿತ್ತೇ? ಈ ಜಗತ್ತಿನಲ್ಲಿ ಯಾವುದಾದರೂ ಹೆಣ್ಣಿನ ಬಗ್ಗೆ ಪ್ರೇಮ ಎಂಬ ಭಾವನೆ ನನ್ನ ಹೃದಯದಲ್ಲಿ ಮೂಡಿದ್ದರೆ, ಅದು ಕಲ್ಪಲತೆಯ ಬಗ್ಗೆ!… ಅವಳ ಸಲುವಾಗಿ ಏನು ಬೇಕಾದರೂ ಮಾಡಲು ತಯಾರಾಗಿದ್ದೆ. ಮನೆ-ಮಠ ಎಲ್ಲ ಬಿಟ್ಟು, ಅವಳ ದಾಸನಾಗಲು ಒಂಟಿಕಾಲಮೇಲೆ ಸಿದ್ಧನಾಗಿದ್ದೆ… ಅವಳ ಬೆನ್ನುಹತ್ತಿ ಎರಡುವರ್ಷ ಬಿ.ಎ. ನಪಾಸಾದೆ… ತ್ಯಾಗ! ತ್ಯಾಗ! ಆಯ್ ಏ ಎಸ್ ಪರೀಕ್ಷೆಗೂ ಕೂಡಲಾಗಲಿಲ್ಲ-ವಯಸ್ಸಾಯಿತೆಂದು ಒಳ್ಳೆಯ ನೌಕರಿ ದೊರೆಯಲಿಲ್ಲ-ಎಲ್ಲ ಅವಳ ಸಲುವಾಗಿ! ಇಷ್ಟೆಲ್ಲ ಗೊತ್ತಿದ್ದೂ ಇವಳು ನನ್ನನ್ನು… ನಾನು ಇವಳ ದೆಸೆಯಿಂದ ಕೊರೆಗಿದ್ದೇನೆ, ದುಃಖಪಟ್ಟಿದ್ದೇನೆ-ಇವಳು ಮಾತ್ರ ನನ್ನ ದುಃಖ-ಕೊರಗು-ಕೂಗು ಎಲ್ಲವುಗಳನ್ನು ಕಡೆಗಣಿಸಿ ಮೂಗು ಮೇಲೆ ಮಾಡಿ ಹೋದಳು. ಎರಡು ವರ್ಷ ಸಾಂಗತ್ಯ-ಸಹವಾಸ! ದಿನಾಲು ಕಾಲೇಜಿಗೆ ಹೋಗಬೇಕಾದರೆ ಅವಳ ಹಾದಿ ಕಾಯುವ ಪರಿಪಾಠ-ಅವಳು ಹಾದಿಯ ಮೇಲೆ ಕಾಣುತ್ತಲೆ ಓಡಿಹೋಗಿ ಅವಳನ್ನು ಬಸ್‌ಟಾಪ್‌ದ ಮೇಲೆ-ಸಹಜವಾಗಿ ಅನ್ನುವಂತೆ-ಭೆಟ್ಟಿಯಾಗುವುದು… ಆಮೇಲೆ ಈ ರೂಟಿನಿಂದ ಅರ್ಧತಾಸು ಪ್ರಯಾಣ-ಹರಟೆ-ಚೇಷ್ಟೆ-ಮಾತು-ನಗುವದು-ಕಲೆಯುವದು… ಎರಡು ವರ್ಷ-ತಲೆಕೆಡಿಸಿದಳು. ನನ್ನ ಮನಸ್ಸು ಬಿಚ್ಚಿ ಇಟ್ಟಾಗ, ಎಷ್ಟೊಂದು ಬಿಗುವಿನಿಂದ, ಶಾಂತತೆಯಿಂದ, ‘ನನಗೆ ಅನಿಸಿರಲಿಲ್ಲ ಬಿಡು-ನೀನು ಇಷ್ಟು ತಪ್ಪು ತಿಳಿದುಕೊಳ್ಳುವಿಯೆಂದು. ದಯವಿಟ್ಟು ಇಂಥ ಹುಚ್ಚು ವಿಚಾರಗಳಿಗೆ ಎದೆಗೊಡಬೇಡ…’ ಎಂದು ಅಂದಳು-ಅವಳನ್ನು ಒಮ್ಮೆ ಎಳೆದೊಯ್ದು ಅವಳ ಮೇಲೆ ಬಲಾತ್ಕಾರ ಮಾಡಬೇಕಾಗಿತ್ತು… ಹೌದು, ಆಗ ಅವಳಿಗೆ… +ಗೌರೀಶನ ಕಣ್ಣುಗಳು ಬರುವ ಹೋಗುವ ಜನರನ್ನು ನೋಡುತ್ತಿದ್ದವು… ಕ್ಯೂ ಉದ್ದಾಗುತ್ತ ನಡೆದಿತ್ತು. ಒಮ್ಮೆಲೆ ಅವನ ಮನಸ್ಸಿನ ಮೇಲೆ ಬರೆ ಎಳೆದಂತಾಯಿತು! +ಕಲ್ಪಲತೆ! ಹೌದು ಕಲ್ಪಲತೆಯೇ ಅವಳು-ಸಂಶಯವಿಲ್ಲ! ಏನಿದು ವಿಚಿತ್ರ-ಎಷ್ಟೋ ದಿನಗಳ ಮೇಲೆ ಅವಳ ವಿಚಾರ ಬರುವದಕ್ಕೂ, ಅವಳೇ ಪ್ರತ್ಯಕ್ಷವಾಗುವದಕ್ಕೂ ಗಂಟುಬಿತ್ತಲ್ಲ!… ಅವನಾರು ಅವಳ ಮುಂದೆ…? ಅವಳ ಗಂಡನಿರಬಹುದು… ಕಾರಿನಿಂದ ಇಳಿದು ಬಂದಿದ್ದನಲ್ಲವೇ ಆ ವ್ಯಕ್ತಿ? ಇವಳೂ ಅದೇ ಕಾರಿನಿಂದ ಇಳಿದಿರಬೇಕು. ನನ್ನ ಲಕ್ಷ್ಯವಿರಲಿಲ್ಲ ಅಷ್ಟೆ… ಅವಳು ನನ್ನೆಡೆಗೆ ನೋಡಿದರೆ-ಗೌರೀಶನ ಬಾಯಿ ಒಣಗತೊಡಗಿತು. ಕಿಸೆಯಿಂದ ಕರವಸ್ತ್ರ ಹೊರತೆಗೆದು ಬೆವರನ್ನು ಒರೆಸತೊಡಗಿದ- +ನೋಡಿದರೆ-ಮುಂದೇನು? ನಗಬೇಕು-ಮಾತನಾಡಬೇಕು… ಏನೇನು ಮಾತನಾಡಬೇಕು?-‘ಹಲ್ಲೊ, ಕಲ್ಪಲತಾ, ಗುಡ್ ಈವ್ಹ್ನಿಂಗ! ಹೇಗಿದ್ದೀ? ಎಲ್ಲ ಸೌಖ್ಯ ತಾನೇ? ಇವನಾರು? ಈ ದಿಮಾಕಿನವ? ನಿನ್ನ ಗಂಡನೇ? ವಾಹ್, ಅಡ್ಡಿಯಿಲ್ಲ. ಒಳ್ಳೆಯ ರೊಕ್ಕಸ್ಥನೆಂದು ಕಾಣಿಸುತ್ತಾನೆ-ಫುಟಬಾಲ್! ನಿನ್ನ ಜೀವನ ಸುಖಮಯವಾಗಲಿ! ಎಷ್ಟು ಮಕ್ಕಳು?- ಲಗ್ನವಾಯಿತೇ? ಎಂದು?’… ಛೇ, ಛೇ… ಈ ರೀತಿ ಒಳ್ಳೆಯದಲ್ಲ… ಮೃದುವಾಗಿ, ಸಹಜವಾಗಿ ಮಾತನಾಡಬೇಕು, ಎಳ್ಳಷ್ಟೂ ಎಕ್ಸೈಟ ಆಗದೆ-‘ಹಲ್ಲೊ-ಕಲ್ಪಲತಾ-ಹೇಗಿದ್ದೀ? ಸೌಖ್ಯ ತಾನೇ? ನಿನ್ನ ತಾಯಿ-ತಂಗಿ-ತಮ್ಮ ಎಲ್ಲರೂ ಕ್ಷೇಮವಷ್ಟೇ? ‘ಸಾಕು-ಇಷ್ಟು ಕೇಳಿದರೆ ಸಾಕು. ಮುಂದೆ ಅವಳೇ ತನ್ನ ಸಂಗಾತಿಯ ಪರಿಚಯ ಮಾಡಿಕೊಡಬಹುದು. ಅವನು ಗಂಡನಿದ್ದರೆ, ‘ನಿಮ್ಮ ಭಾಗ್ಯ ಬಹಳ ದೊಡ್ಡದು. ಕಲ್ಪಲತೆಯಂಥ ಹೆಣ್ಣು ನಿಮಗೆ ದೊರೆತದ್ದು ನಿಮ್ಮ ಸೌಭಾಗ್ಯ-ನನ್ನ ದುರ್ಭಾಗ್ಯ…’-ಥೂ, ಅವಳು ನನ್ನನ್ನು ನೋಡಿಯೇಬಿಟ್ಟಳೆಂದು ಕಾಣುತ್ತದೆ. ಇನ್ನು ಹಾಗೆಯೇ ತಪ್ಪಿಸಿಕೊಂಡು ಒಳಗೆ ನುಸುಳಲು ಸಾಧ್ಯವಿಲ್ಲ… ಹೇಡಿಯಂತೆ ಏಕೆ ನುಸುಳಿ ಹೋಗಬೇಕು ನಾನು? ಬಂದ ಪರಿಸ್ಥಿತಿಗೆ ಧೈರ್ಯದಿಂದ ಎದೆಗೊಡಬೇಕು…. ನನಗೆ ಯಾತರ ಹೆದರಿಕೆ? ಯಾರಪ್ಪನದೇನು ಗಂಟು ತಿಂದಿಲ್ಲ!- ಆದದ್ದು ಆಗಿಹೋಗಿದೆ. ಬರಿಯ ಔಪಚಾರಿಕ ನಾಲ್ಕು ಮಾತು ಆಡಿದರೆ ತೀರಿತು-ಅದರಲ್ಲೇನು ಮಹಾ! ಆದರೆ-ನಡುವೆ ನಾಲಗೆ ಅಡ್ಡ-ತಿಡ್ಡ ಹೋದರೆ, ಧ್ವನಿಯಲ್ಲಿ ಕಂಪ ಉತ್ಪನ್ನವಾದರೆ-ಕಣ್ಣಿಗೆ ಕತ್ತಲೆಬಂದರೆ-ಧಪ್ಪನೆ ಕೆಳಗೆ ಬಿದ್ದರೆ… ಅಷ್ಟೆಲ್ಲಾ ಆಗಲಾರದು-ಆಗಲಾರದು….ಕಲ್ಪಲತೆ! ಆಗ ಮೊದಲಿನಕಿಂತ ದಪ್ಪವಾಗಿದ್ದಾಳೆ: ಪ್ರೌಢಕಳೆ ಬಂದಂತಿದೆ ಮುಖದ ಮೇಲೆ-ಸಮಾಧಾನ-ಸುಖಗಳ ಲೇಪವಿದೆ. ಒಬ್ಬ ಭಿಕ್ಷುಕಿ ಹೋಗಿ ‘ಯವ್ವಾ’ ಅಂದರೆ ಎರಡಾಣೆ ಕೊಡದೆ ಬಿಡಲಿಕ್ಕಿಲ್ಲ! +ಕಲ್ಪಲತೆ ತನ್ನ ಸಂಗಾತಿಯನ್ನು ೨-೧೦-೦ರ ಕ್ಯೂದಲ್ಲಿ ಬಿಟ್ಟು, ಗೌರೀಶನ ಕಡೆಗೆ ಬರತೊಡಗಿದಳು. ಗೌರೀಶನಿಗೆ ದಿಕ್ಕೇ ತೋಚದಾಯಿತು. ಆದರೂ ಸಾವರಿಸಿ ನಿಂತ. ಬಂದ ಸಂಕಟವನ್ನು ಧೈರ್ಯದಿಂದ ಎದುರಿಸಲೇ ಬೇಕು… +“ಗೌರೀಶ, ಸಿನೇಮ ನೋಡಲು ಬಂದಿರುವೆಯ?” +“ಹೌದು!-ನೀನು?…ಎಲ್ಲ ಸೌಖ್ಯತಾನೇ?” +“ಹುಂ.” +ಸ್ವಲ್ಪ ವೇಳೆ ಮೌನ. ಕಲ್ಪಲತೆಯ ದ್ವನಿಯಲ್ಲಿ ಒಂದು ಬಗೆಯ ಸ್ಥೈರ್ಯ, ಗಾಂಭೀರ್ಯ ಬಂದಿದೆ ಎಂದೆನಿಸಿತು ಗೌರೀಶನಿಗೆ. +“ಅವರು ನಿನ್ನ…?” ಮುಗುಳು ನಗೆ ನಕ್ಕ, ಪ್ರಶ್ನಾರ್ಥಕವಾಗಿ. +“ಹೌದು…” ಕಲ್ಪಲತೆ ಸೂಕ್ಷ್ಮವಾಗಿ ನೋಡಿದಳು ಗೌರೀಶನ ಕಣ್ಣಲ್ಲಿ. +“ಮಕ್ಕಳು…?” +“ಒಂದು ಗಂಡು ಮನೆಯಲ್ಲಿದೆ. ಗೌರೀಶ ಅವನ ಹೆಸರು… ತಪ್ಪು ತಿಳಿದುಕೊಳ್ಳಬೇಡ… ಎಂದಾದರೂ ಒಂದು ದಿನ ಬಾ, ನಮ್ಮ ಮನೆಗೆ ಚೋಪ್ರಾನಗರ, ಹ್ಯೂಜಿಸ ರೋಡ.” +“ಹೆಸರು?” +“ಮೋಡಕ… ಅವರು ಕಾಯುತ್ತಿದ್ದಾರೆ, ಹೋಗುತ್ತೇನೆ, ನೀನು ಆರಾಮಾಗಿದ್ದೀಯಾ?” +“ಹೌದು…” +“ಲಗ್ನವಾಗಿರಬೇಕು…” +“ಇಲ್ಲ.” +“ಯಾಕೆ?… ಅದೆ ಅವರೇ ಇತ್ತಕಡೆಗೆ ಬರುತ್ತಿದ್ದಾರೆ… ಅವರು ನನ್ನ ಕ್ಲಾಸಮೇಟ ಮಿ.ಪಾಟೀಲ… ಇವರು ನನ್ನ-” ಎಂದು ಕಲ್ಪಲತೆ ನಕ್ಕಳು. +“ಹೌ ಡು ಯು ಡು ಮಿ.ಪಾಟೀಲ್?… ಸಿನೇಮ ಸುರುವಾಗುವ ವೇಳೆಯಾಯಿತು. ಒಳಗೆ ಹೋಗೋಣವೇ?” +“ಬರಬೇಕು ಮನೆಯ ಕಡೆಗೆ” ಕಲ್ಪಲತೆ ಮತ್ತೊಮ್ಮೆ ಹೇಳಿದಳು. +“ಬರ್ರಿ, ಮಿ.ಪಾಟೀಲ… ಹ್ಯೂಜಿಸ್ ರೋಡ…” +“ಹೂಂ” ಎಂದು ಉಗುಳು ನುಂಗಿ ಉಸುರಿದ ಗೌರೀಶ. +ಕಲ್ಪಲತೆ ಮತ್ತು ಅವಳ ಗಂಡ ಒಳಗೆ ನುಸುಳಿದರು. ಗೌರೀಶನಿಗೆ ಏಕೋ ಮುಖದ ಮೇಲೆ ಹೊಡೆದಂತಾಯಿತು… ಕಲ್ಪಲತೆ ಕೊನೆಗೆ ಹಣವಿದ್ದವನನ್ನೇ ಲಗ್ನವಾದಳು. ಜಾಣೆ ಅವಳು೧ ಪ್ರೇಮ-ಪ್ರೇಮವೆಂದು ಯಾವ ಭಾನಗಡಿಯಲ್ಲಿ ಬೀಳಲಿಲ್ಲ-ಪ್ರೇಮದ ದಂಡೆಯ ಮೇಲೆ ಅಡ್ಡಾಡಿದರೂ, ಅದರ ನೀರಿನಲ್ಲಿ ಕಾಲಿರಿಸಲಿಲ್ಲ… ತನ್ನನ್ನು ಇಷ್ಟು-ಎಷ್ಟು?-ದುಃಖಿತನನ್ನಾಗಿ ಮಾಡಿ, ಏನೂ ಆಗದಿದ್ದಂತೆ ನಿಶ್ಚಿಂತೆಯಿಂದ ಇದ್ದಾಳೆ ಇವಳು. ಕರುಳೇ ಇಲ್ಲವೇನೂ ಇವಳಿಗೆ? ಅವಳು ಮಾತನಾಡುವ ರೀತಿ ನೋಡಿದರೆ, ಅಟ್ಟದ ಮೇಲಿನಿಂದ, ಕನಿಕರದಿಂದ ಭಿಕ್ಷುಕನೊಡನೆ ಮಾತನಾಡುತ್ತಿದ್ದಂತೆ… +“ನಿಮ್ಮ ಕಡೆಗೆ ಒಂದು ಹೆಚ್ಚಿನ ತಿಕೀಟು ಉಂಟೇ?” ಯಾರೋ ಕೇಳಿದರು. +“ಹೌದು” ಎಂದ ಗೌರೀಶ. ಕಿಸೆಯೊಳಗಿನ ಅದೇ ಕೊಂಡಂಥ ಟೀಕೀಟು ಕೊಟ್ಟ. “ನಾನು ನನ್ನ ಮಿತ್ರನ ಹಾದಿ ಕಾಯ್ದೆ. ಅವನು ಬರಲಿಲ್ಲ ತೆಗೆದುಕೊಳ್ಳಿರಿ…” +“ಹಿಡಿಯಿರಿ ಒಂದು ರೂಪಾಯಿ… ಐದಾಣಿ ಚಿಲ್ಲರ ಇಲ್ಲ… ನಿಮ್ಮ ಹತ್ತಿರ ಚಿಲ್ಲರೆ ಉಂಟೆ?” +“ಅವಶ್ಯವಿಲ್ಲ ಇರಲಿ ಬಿಡಿ.” +“ನಾನು ಹೋಗಿ ತೆಗೆದುಕೊಂಡು ಬರುವೆ.” +“ಸಿನೇಮ ಸುರುವಾಗಿದೆ ಹೋಗಿರಿ ಒಳಗೆ. ಬರಿಯ ಐದಾಣೆಯ ಬಗ್ಗೆ ಇಷ್ಟು ತೊಂದರೆ ತೆಗೆದುಕೊಳ್ಳಬೇಡಿರಿ.” +ಆ ಮನಸ್ಥಿತಿಯಲ್ಲಿ ಸಿನೇಮಾ ನೋಡಿ ಪ್ರಯೋಜನವಿಲ್ಲವೆಂಬ ನಿರ್ಧಾರಕ್ಕೆ ಗೌರೀಶ ಆಗಲೇ ಬಂದಿದ್ದ… ಆ ಅನಾಮಿಕನ ಮುಖದ ಮೇಲಿನ ೫ ಆಣೆ-ಲಾಭದ ಸಮಾಧಾನ ನೋಡಿ, ಸ್ವಲ್ಪ ಹಗುರೆನಿಸಿತು!… ಮೇಲಾಗಿ, ಕಲ್ಪಲತೆಯಂತೆ ಕಾಣುವ ವ್ಹಿವ್ಹಿಯನ್ ಲೇಳನ್ನು ಎರಡು ತಾಸುಗಳವರೆಗೆ ನೋಡುವ ತೊಂದರೆ ತಪ್ಪಿಸಿಕೊಂಡುದಕ್ಕೆ ತನಗೆ ತಾನೇ ಧನ್ಯವಾದಗಳನ್ನಿತ್ತ. ಇನ್ನು ಹೊರಡಬೇಕು-ಮನೆಯ ಕಡೆಗೆ- +ಮನೆ-ಏನಿದೆ ಮನೆಯಲ್ಲಿ? ಏನಿದೆ ಆ ಹೋಟಲಿನ ರೂಮಿನಲ್ಲಿ? ಯಾರಿದ್ದಾರೆ ದಾರಿ ಕಾಯಲು? ಯಾರಿದ್ದಾರೆ ಯೋಗಕ್ಷೇಮ ನೋಡುವವರು? ಮಧೂನ ಕಡೆಗೆ ಹೋದರೆ…? ಛೆ-ಅವನು ಮತ್ತೆ ಒಂದು ಸಾಹಸೀ ಯೋಜನೆ ಹೂಡದೆ ಇರಲಾರನು… ಮನೆಗೆ ಹೋಗಬೇಕು-ಎಷ್ಟು ದಿನ ಹೀಗೆಯೇ ಬರಿ ಮನೆಗೆ, ಬರಿ ಮನದಿಂದ ಹೋಗಬೇಕು?…ಕಲ್ಪಲತೆ ಸುಖವಾಗಿ ಕಾಲಕಳೆಯುತ್ತಿದ್ದಾಳೆ-ಸಂಸಾರ ಹೂಡಿದ್ದಾಳೆ. ಗಂಡ-ಮಕ್ಕಳು-ಹಣ-ಕಾರು-ಸಿನೇಮ-ಮಜಾ… ಬಹಳೇ ಆರಾಮದಿಂದ ಇದ್ದಾಳೆ. ನನಗೆ ಇಷ್ಟೆಲ್ಲ ಸೌಕರ್ಯ ಅವಳಿಗೆ ಒದಗಿಸುವದು ಸಾಧ್ಯವಿತ್ತೇ? ಪ್ರೇಮ ಒಂದು ಕೊಡಬಹುದಿತ್ತು… ಅಲ್ಲ-ಈ ಪ್ರೇಮವೆಂದರೆ ಅಷ್ಟೊಂದು ದಿವ್ಯವಾದದ್ದು? ಕಲ್ಪಲತೆಯ ಕೂಡ ಮಾತನಾಡಬೇಕು, ಅವಖ ಕೈ ಹಿಡಿಯಬೇಕು, ಅವಳನ್ನು ಅಪ್ಪಿ ಮುದ್ದಿಡಬೇಕು-ಇದರ ಹೊರತು ಮತ್ತೇನಾದರೂ ಇತ್ತೆ? ತಲೆ ಕೆದರಿ ಕೆದರಿ ಯೋಚಿಸಿದೆ… ಮಾತು-ಮೈಯು-ಮುತ್ತು ಅವಳಿಗಂತೂ ದೊರತಿವೆ… ನನಗೂ ದೊರೆತಿವೆಯಲ್ಲ ಒಂದು ರೀತಿಯಾಗಿ… ನನಗೂ ದೊರೆಯಬಹುದಲ್ಲ ‘ಪರ್ಮನಂಟಾಗಿ’- ಲಗ್ನವಾದರೆ… ಹೃದಯವನ್ನು ಅಖಂಡ ಮಂಜುಗಡ್ಡೆ ಮಾಡಿದರೇನೇ ಈ ಜಗತ್ತಿನ ಮೋಜು!…ನನ್ನ ಹೃದಯ ಮಂಜುಗಡ್ಡೆಯಾಗುತ್ತ ನಡೆದಿದೆಯೇ?… +ಗೌರೀಶ ತನ್ನಷ್ಟಕ್ಕೆ ತಾನೇ ನಕ್ಕ! +ಒಳ್ಳೆಯ ಸುಂದರವಾದ ಹೆಣ್ಣು ಹೋಗುತ್ತಿತ್ತು. ನಿಟ್ಟಿಸಿ ನೋಡಿದ-ಹೌದು ಚಂದಾಗಿದ್ದಾಳೆ. ಮೂಗು ಸ್ವಲ್ಪ ನೆಟ್ಟಗಿದ್ದರೆ ಚೆನ್ನಾಗಿತ್ತು. ಹಣೆ ಸ್ವಲ್ಪ ಹರವಾಗಿರಬೇಕಿತ್ತು… ನಾಳೆ ತಾಯಿಗೆ ಪತ್ರ ಬರೆಯಬೇಕು. ಬೈಲಹೊಂಗಲದ ಕುಲಕರ್ಣಿಯವರ ಹೆಣ್ಣು ಸುಂದರವಾಗಿದ್ದರೆ ನಾನು ಒಪ್ಪಿದೆ; ಇಲ್ಲದಿದ್ದರೆ ಇಲ್ಲ, ಹೌದು-ಲಗ್ನವಾಗುವದಾದರೆ-ಸೌಂದರ್ಯವೇ ಮುಖ್ಯಬಿಂದು… ಅದೂ ದೊರೆಯದಿದ್ದರೆ ಇಲ್ಲ… ಹಣ-ಉಪಭೋಗ! +ಹಣ! ಉಪಭೋಗ!-ಸೌಂದರ್ಯ ಮನೆಗೆ ಬರುವತನಕ ಉಪಭೋಗ-ಮೋಜು! ಮಧೂನ ಕಡೆಗೇ ಹೋಗೋಣ… ಹಣ ಸಾಕಷ್ಟಿದೆ ಇಂದು. ಯಾವ ಕಾಳಜಿಯೂ ಇಲ್ಲ-ಗೌರೀಶ ಕಿಸೆಯನ್ನು ಮುಟ್ಟಿ, ಪಾಕೀಟು ಇದೆಯೆಂದು ಖಾತ್ರಿ ಮಾಡಿಕೊಂಡ. +೨೯೦ ರೂಪಾಯಿ! +ಒಂದು ವಿಚಿತ್ರ ರೀತಿಯ ಸಮಾಧಾನ ತೂರಿ ಬಂತು ಗೌರೀಶನ ಹೃನ್ಮನಗಳಲ್ಲಿ! +***** +ಅಕ್ಟೋಬರ ೧೮೫೩ +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_546.txt b/Kannada Sahitya/article_546.txt new file mode 100644 index 0000000000000000000000000000000000000000..7758abb519328ca7a876a2e3ca8a3fd020085a3f --- /dev/null +++ b/Kannada Sahitya/article_546.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಲ್ಲಿ +ನೀನು ಪ್ರಾರ್ಥನೆಗೆ ತೊಡಗುವ ಹೊತ್ತು +ಇಲ್ಲಿ ಮಾಮರದಲ್ಲಿ +ಹಕ್ಕಿಗಳ ಚಿಲಿಪಿಲಿ ಸದ್ದು +ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? +ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? +ಗೊತ್ತಿಲ್ಲ ನನಗೆ +ನನ್ನೊಳಗೆ ಮಾತ್ರ ಎರಡೂ ದನಿ +ಶುದ್ಧ ನೀರೊಳಗಿನ ಬಿಂಬಪ್ರತಿಬಿಂಬದಂತೆ; +ದೇವರಿದ್ದನೆಯೇ.. +ಇದ್ದರೆ ಅವನದಾವ ಧರ್ಮವಂತೆ +ಅವನ ಭಾಷೆ, ವೇಷಭೂಷಣ, ದೇಶ, ಕಾಲ +ಎಲ್ಲ ಯಾವ್ಯದಂತೆ? +ಅದೂ ಗೊತ್ತಿಲ್ಲ ನನಗೆ +ಸುಜ್ಞಾನಿ ಹಕ್ಕಿ ಮತ್ತು ನಿನ್ನ ನಡುವೆ +ಪರಮ ಅಜ್ಞಾನಿ ನಾನು +ಆದರೂ ನಿನ್ನ ಪ್ರಾರ್ಥನೆ ಮುಗಿದ ಹೊತ್ತು, +ಹಕ್ಕಿ ಮಾಮರವ ಬಿಟ್ಟು ಹಾರಿದ ಹೊತ್ತು +ನನ್ನ ಆತ್ಮ ಮೆಲ್ಲನೆ ಮೊರೆಯಿಡುತ್ತೆ +ದೇವರಿರುವುದೇ ಆದರೆ +ಅನವರತ ರಕ್ಷಿಸಲಿ ಸಕಲ ಚರಾಚರಗಳನು +ಮಣ್ಣೊಳಗಿನ ಹಸಿಬೇರಿನಂತೆ +ಕಾಯ್ದು ಕಾಪಿಡಲಿ ನಿನ್ನೊಳಗಿನ ಜೀವಜಲವನು +ಮತ್ತು ಆ ಹಕ್ಕಿಗೂ ದೊರೆಯಲಿ +ಪ್ರತಿದಿನದ ಕಾಳು. +***** +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_547.txt b/Kannada Sahitya/article_547.txt new file mode 100644 index 0000000000000000000000000000000000000000..3adc92f9d2e9a00bcedd1f2d43f142cd9ae4e8f5 --- /dev/null +++ b/Kannada Sahitya/article_547.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ ಇರಲೇಬೇಕು ಅಂತ ಸ್ಠಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಅಂತ ಸಾರಿದವನನ್ನೂ ಸಹ ಮೂರ್ತೀಕರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಸಾಂಗವಾಗಿ ಪೂಜೆ ಪುನಸ್ಕಾರ ನಡೆಯಲು ಐನೋರನ್ನು ನೇಮಿಸಿ, ಅವರಿಗೆ ಪಕ್ಕದಲ್ಲಿಯೇ ಅನುಕೂಲವಾಗುವಂತೆ ಮನೆಯನ್ನು ಕಟ್ಟಿಕೊಟ್ಟು ಊರಿನ ಸಮಸ್ತರನ್ನೂ ಒಂದು ಬಂಧಕ್ಕೆ ಒಳಪಡುವಂತೆ ಮಾಡುವುದರಲ್ಲಿ ಊರಿನ ಪ್ರಮುಖರು ಯಶಸ್ವಿಯಾಗಿದ್ದರು. ಜಂಗಮನಿಗೆ ದೇವಸ್ಥಾನ ಕಟ್ಟಿಸಿದರೇನಾಯಿತು? ಅದರ ತುಂಬ ಅವನದೇ ವಚನಗಳನ್ನು ಮುದ್ದಾಗಿ ಬಿಳಿ ಬಣ್ಣದಲ್ಲಿ ಬರೆಯಿಸಿಲ್ಲವೇ? ಗೌರಿ ಗಣಪತಿಯ ಹಬ್ಬವೆಂದರೆ ಊರಿನ ಹಬ್ಬ. ಮನೆ ಮನೆಯಲ್ಲಿ ಗಣೇಶನನ್ನು ಇಡುವ ಸಂಪ್ರದಾಯವಿರಲಿಲ್ಲ. ಊರ ಗಣೇಶ ಅಂತ ದೊಡ್ಡ ಮೂರ್ತಿಯನ್ನು ಚಂದಾ ಹಣದಿಂದ ಕೊಂಡು ತಂದು ಪ್ರತಿಷ್ಠಾಪಿಸುವ, ಗಣಪತಿ ಬಿಡುವ ದಿನದ ತನಕ ಪ್ರತಿನಿತ್ಯ ಪೂಜೆ, ಹರಿಕಥೆ ಇತ್ಯಾದಿಗಳು ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ದೇವಸ್ಥಾನ ಕಮಿಟಿಯವರದ್ದು. ದೇವಸ್ಥಾನದ ಕಟ್ಟೆಯೆನ್ನುವುದು ಊರಿನ ಸಮಸ್ತ ರಾಜಕೀಯವನ್ನಷ್ಟೇ ಅಲ್ಲದೆ ರಾಜ್ಯದ, ದೇಶದ ಆಗುಹೋಗುಗಳನ್ನು ಚರ್ಚಿಸಲು ನೆರೆಯುವ ಒಂದು ಪಟ್ಟಾದ ಜಾಗ. ಅಂದ ಹಾಗೆ ನಿಮಗೇ ಗೊತ್ತಿರುವ ಹಾಗೆ ಅಂತ ಜಾಗಗಳಲ್ಲಿ ಬರೀ ಗಂಡುತಲೆಗಳೇ ಕಾಣುತ್ತವೆ. ಹೆಂಗಸರು ರಾಜಕೀಯ ಚರ್ಚಿಸುವುದೇ? ಅದೂ ಸಾರ್ವಜನಿಕ ಅಂತನ್ನಿಸಿಕೊಳ್ಳುವ ಬಿಡುಬೀಸಾದ ದೇವಸ್ಥಾನದ ಕಟ್ಟೆಯಲ್ಲಿ? ನಿಮಗೆಲ್ಲೋ ಭ್ರಾಂತು. ಹೆಂಗಸರು ಏನಿದ್ದರೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ದೇವಸ್ಥಾನದ ಎದುರಿಗೆ ಹಾದುಹೋಗುವಾಗ, ರಸ್ತೆಗೇ ಕಾಣುವ ಬಸವಣ್ಣನಿಗೆ ವಾರೆ ತಿರುಗಿ ಕೈ ಮುಗಿದು ಮೆತ್ತಗೆ ಗಲ್ಲ ಬಡಿದುಕೊಂಡು ಹೋಗಬಹುದು ಅಷ್ಟೆ. ಇಲ್ಲ, ಆ ಊರಿಗೆ ಸೇರಿರದ ಅಕ್ಕಪಕ್ಕದ ಹಳ್ಳಿಹೆಂಗಸರು ಅಸಹಜ ನಾಚಿಕೆಯಲ್ಲಿ ಮೈ ಕುಗ್ಗಿಸಿಕೊಂಡು ನಡೆಯದೇ ಸಲೀಸಾಗಿ ನಡೆಯುವುದು ಒಮ್ಮೊಮ್ಮೆ ಕಾಣಿಸಬಹುದು. ಹಾಗೆ ಕಂಡ ಹೆಂಗಸರ ಬಗ್ಗೆ, ಅವರು ಊರವರಾಗಲೀ, ಅಲ್ಲದಿರಲಿ, ಕಟ್ಟೆಯಲ್ಲಿ ನೆರೆದಿರುವ ಬಿಳಿ ತಲೆಗಳು ವ್ಯಂಗ್ಯವಾಗಿ, ಕುಹಕವಾಗಿ ಅಥವಾ ಸ್ವಲ್ಪ ’ಹಿಂಬದಿ ಮುಂಬದಿ’ ಅಂತ ಅಶ್ಲೀಲವಾಗಿ ಮಾತನಾಡಿದರೆ, ಪಾಪ ಕ್ಷಮಿಸಿಬಿಡಿ. ಎಷ್ಟಾದರೂ ಈ ತರಹದ ಪೋಲಿತನ ಗಂಡಸರು ಅಂತನ್ನಿಸಿಕೊಂಡಿರುವರಿಗೆ ಸಹಜವೇ ತಾನೆ? ಅಲ್ಲಿ ಬಿಳೀ ತಲೆಗಳೇ ಕಂಡರೆ ಕರೀತಲೆಗಳು ಏನು ಮಾಡುತ್ತಿರುತ್ತವೆ ಅಂದಿರಾ? ಛೆ! ಈ ಕೆಲಸವಲ್ಲದ ಕೆಲಸ ಮಾಡಲು ಅವಕ್ಕೇನು ಮರುಳೆ? ಸಂಜೆಯಾಯಿತೆಂದರೆ, ಕಟ್ಟೆಮೇಲೆ ನೆರೆದರೆ ಊರಿನ ಲಿಕ್ಕರ್ ಶಾಪುಗಳನ್ನು ಉದ್ಧಾರ ಮಾಡುವವರು ಯಾರು? ಹಾಗಂತ ಅವರೇನೂ ಆ ಷಾಪುಗಳಲ್ಲೇ ಕುಡಿಯುತ್ತಾ ಕೂರಲು ಅವೇನು ಸಾರಾಯಿ ಗಡಂಗು ಕೆಟ್ಟುಹೋದವೇ? ಬಿಸಿರಕ್ತದ ಯುವಕರು ಚೈನಿ ಹೊಡೆಯಲು ಸ್ವಲ್ಪ ಊರಹೊರಗೆ ಇರುವ ಯಾವುದಾದರೂ ತೋಟದ ಮನೆಗಳಿಲ್ಲವೆ? ಅಲ್ಲಿ ಗುಂಡು ಬಾಡು ಇತ್ಯಾದಿ ಇತ್ಯಾದಿಗಳ ಸಮಾರಾಧನೆ ಸಾಂಗವಾಗಿ ನಡೆಯುವಂತೆ ಏರ್ಪಾಡಾಗಿರುವಾಗ, ಕಟ್ಟೆ ಮೇಲೆ ಕೈಲಾಗದವರೊಂದಿಗೆ ಕಾಲಹರಣ ಮಾಡಲು ಅವರಿಗೇನು ಹುಚ್ಚೆ? ಬೆಪ್ಪೆ? ಇಷ್ಟಾಗುವಾಗ ಮನೆಯ ಹೆಂಗಸರು ಮತ್ತು ಮಕ್ಕಳು ಏನು ಮಾಡುತ್ತಿರುತ್ತಾರೆ ಎನ್ನುವುದೂ ಒಂದು ಒಳ್ಳೆಯ ಪ್ರಶ್ನೆಯೇ. ಸಂಜೆ ಏಳರ ಹೊತ್ತಿಗೆ ಕೈ ಕಾಲು ಮುಖ ತೊಳೆದು, ಮುಸ್ಸಂಜೆ ದೀಪ ಹಚ್ಚಿಟ್ಟು, ಟಿವಿ ಅಂತಕ್ಕಂಥಾದ್ದರ ಮುಂದೆ ಕೂತರೆ ಹೆಂಗೆಳೆಯರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿರುವಂತಹ ದಾರಾವಾಹಿಗಳಿಲ್ಲವೇ, ಹತ್ತರ ತನಕ ಕಾಲ ತಳ್ಳಲು? ಟಿವಿ ಬರುವ ಮುಂಚೆ ಹೇಗಿತ್ತು ಅನ್ನುವುದು ಗೊತ್ತಿಲ್ಲ. ಬಂದ ಮೇಲೆ ಈ ದಿನಚರಿ ಅಂತೂ ನಿತ್ಯಕಾಯಕವಾಯಿತು. ಹತ್ತರ ತನಕ ಊಟ ಮಾಡುತ್ತಲೇ, ಸ್ಕೂಲಿನ ಹೋಂವರ್ಕ್ ಮಾಡುತ್ತಲೇ ನೋಡುವ ಹೃದಯ ಕರಗಿಸುವ ದಾರಾವಾಹಿಗಳು ಮುಗಿದ ಮೇಲೆ ನಂತರದ್ದೆಲ್ಲಾ ಭೀಭತ್ಸಪ್ರಧಾನ. ಕೊಲೆ, ರಕ್ತಪಾತ, ದಾಯಾದಿಜಿದ್ದು, ಅನೈತಿಕ ಸಂಬಂಧ ಇತ್ಯಾದಿಗಳನ್ನು ರೋಮಾಂಚಕವಾದ ಕಾಮೆಂಟರಿಯೊಂದಿಗೆ ನೋಡದಿದ್ದರೆ, ಆಮೇಲೆ ನಿದ್ದೆಯೇ ಬರುವುದಿಲ್ಲ. ಬೆಳಕು ಹರಿದರೆ, ಇದ್ದೇ ಇದೆಯಲ್ಲ ನಿತ್ಯದ ರಗಳೆ. ಪಾಪ, ಮುಗ್ಧ ಹೆಂಗಸರು, ಮಕ್ಕಳು ಈ ದಿನಚರಿಯಲ್ಲಿ ತೃಪ್ತರು. +ಇರಲಿ, ನಾನು ಹೇಳಬೇಕೆಂದು ಕೊಂಡಿದ್ದು ನಿಜವಾಗಿ ಬೇರೆಯೇ. ಸರಿಯಾಗಿಯೇ ಪ್ರಾರಂಭಿಸಿದ್ದೆ ಆ ನನ್ನೂರಿನ ಬಾಂಧವ ಅಂತ. ಮಾತು ಎಲ್ಲೆಲ್ಲಿಗೋ ಹೋಯಿತು. ನನಗಿಂತ ಕೆಲವು ವರ್ಷಗಳಿಗೆ ಹಿರಿಯನಾದ ಇವನನ್ನು ಬಾಲ್ಯದಲ್ಲಿ ನೋಡುತ್ತಿದ್ದಾಗ ಯಾವಾಗಲೂ ಜಿಗಿಯುವೆ ಜಿಂಕೆಯ ತರಹ ಕಾಣಿಸುತ್ತಿದ್ದ. ಗುಂಡು ಮುಖದಲ್ಲಿ ಯಾವತ್ತಿಗೂ ಬಾಡದ ನಗೆ. ಕಣ್ಣುಗಳಲ್ಲಿ ಅದಮ್ಯ ಉತ್ಸಾಹ. ಅವನನ್ನು ನೋಡಿದಾಗಲೆಲ್ಲಾ ನನ್ನ ಬಾಲ್ಯದ ಕಣ್ಣುಗಳಿಗೆ ಅವ ಪುಟಿಯುವ ಫ಼ುಟ್ಬಾಲಿನಂತೆ ಕಾಣಿಸುತ್ತಿದ್ದ. ಎಷ್ಟರ ತನಕ ಓದಿದನೋ, ಓದು ತಲೆಗೆ ಹತ್ತಿತೋ ಇಲ್ಲವೋ ಗೊತ್ತಾಗಲಿಲ್ಲ. ನನ್ನ ಓದಿಗೆ ನಾನು ದೂರ ಹೋಗಬೇಕಾದ್ದರಿಂದ, ಪೇಟೆ ಬಿಟ್ಟು ತೋಟದ ಮನೆಗೆ ಮನೆಯವರು ಸ್ಥಳಾಂತರಿಸಲ್ಪಟ್ಟಿದ್ದರಿಂದ, ಸ್ವಲ್ಪ ವರ್ಷಗಳು ಇವನ ಬಗ್ಗೆ ಅಲ್ಲಲ್ಲಿ ಅವರಿವರು ಹೇಳುವ ಮಾತುಗಳಿಂದ ಇವನ ವ್ಯಕ್ತಿತ್ವ ನನ್ನ ತಲೆಯಲ್ಲಿ ಕಟ್ಟಿಕೊಳ್ಳುತ್ತಾ ಹೋಯಿತು. +uಟಿಜeಜಿiಟಿeಜ‌ಇಪ್ಪತ್ತೆರಡಕ್ಕೇ ಮದುವೆಯಾಗಿ ವರ್ಷವೊಂದೋ ಎರಡರಲ್ಲಿ ತಂದೆಯಾದ. ಅಪ್ಪನ ತೋಟ ನಳನಳಿಸುವಂತೆ ಮಾಡಿದ್ದಲ್ಲದೇ ತನ್ನ ಶ್ರಮದಿಂದ ತೋಟದ ಹರವನ್ನು ಹೆಚ್ಚಿಸಿದ ಮಗ ಅಂತ ನನ್ನ ಅಪ್ಪ ಮೆಚ್ಚಿಗೆಯಿಂದ ಮಾತಾಡುತ್ತಿದ್ದದ್ದು ನೆನಪಿದೆ.ಊರಿನ ಕಾರ್ಯಕ್ಕೆ ಪಂಚೆ ಕಟ್ಟಿ, ತಲೆಯ ಮೇಲೊಂದು ಮುಂಡು ಸುತ್ತಿ, ರಂಗಕ್ಕಿಳಿದನೆಂದರೆ ಥಕಥೈಯೇ ಸೈ. ಊರ ಗಣೇಶನನ್ನು ಆರಿಸಿ ತರುವುದರಿಂದ ಹಿಡಿದು, ವಿದ್ಯುಕ್ತವಾಗಿ ಪೂಜೆ ಮಾಡಿ, ಅದಕ್ಕೆ ಮಂಟಪವನ್ನು ಕೈಯಾರೆ ಕೆತ್ತಿ, ಪ್ರತಿಷ್ಟಾಪಿಸಿ, ದಿನ ನಿತ್ಯದ ಸಾಯಂಕಾಲದ ಪೂಜೆಯನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವ ಕೆಲಸಗಳನ್ನು ನಿರ್ವಹಿಸುವುದಷ್ಟೇ ಅಲ್ಲ, ತಿಂಗಳ ನಂತರ ಗಣೇಶನನ್ನು ’ಬಿಡುವ” ಕಾರ್ಯಕ್ರಮದ ಮುಕ್ಕಾಲು ಪಾಲು ಅವನದೇ. ಝಗಮಗಿಸುವ ಬೆಳಕಲ್ಲಿ ಆಳೆತ್ತರದ ಗಣೇಶನನ್ನು ಅವ ಮಂಟಪದಲ್ಲಿ ಭವ್ಯಾಗಿ ಕಟ್ಟಿಕೂರಿಸುತ್ತಿದ್ದ ರೀತಿಗೆ ಬೆರಗಾಗಿ ನಿಂತು ನೋಡುತ್ತಿದ್ದ ನನ್ನ ಬಾಲ್ಯದ ಕಣ್ಣುಗಳನ್ನು ಹೇಗೆ ಮರೆಯಲಿ? ಹರೆಯಕ್ಕೆ ಬೇಕಾದ ಶೋಕು, ಬಿಂಕದ ಆಚೆ ನಿಂತು ಸಾದಾ ಪಂಚೆ, ಬನೀನು, ಮುಂಡುಗಳೊಂದಿಗೆ ಗಣೇಶನ ಮಂಟಪವನ್ನು ಹತ್ತಿ ಇಳಿದು, ಸರಸರ ಕೆಲಸ ಮಾಡುತ್ತಿದ್ದ ಪರಿಗೆ ಚಳುಕು ಹೊಡೆದವಳಂತೆ ನೋಡುತ್ತಾ ನಿಲ್ಲುತ್ತಿದ್ದದ್ದು ಇನ್ನೂ ನೆನಪಿದೆ. ಹಾಗಂತ ಅವನೇನೂ ಸದ್ದಿಲ್ಲದೇ ಕೆಲಸ ಮಾಡುವ ಆಸಾಮಿ ಅಲ್ಲ. ದೊಡ್ಡಧ್ವನಿಯಲ್ಲಿ ಮಾತಾಡುತ್ತಾ ಕೆಲಸ ಮಾಡುತ್ತಿದ್ದರೆ ಸುತ್ತ ಹತ್ತು ಮನೆಗಳಿಗೆ ಅವನ ಇರವು ಗೊತ್ತಾಗುತ್ತಿತ್ತು. ಕೆಲಸ ಕದಿಯುವ ಹಡೆಗಳಿಗೆ ಯಾವ ಮುಲಾಜೂ ಇಲ್ಲದೆ ಸೊಂಟದ ಕೆಳಗಿನ ಮಾತುಗಳಲ್ಲಿ ಹೊಡೆದೆಬ್ಬಿಸುತ್ತಿದ್ದ. ’ಮುಕಳಿ ಮುಚ್ಚಿಕೊಂಡು ಕೆಲಸ ನೋಡೋ ಲೇಯ್, ಎದ್ದು ಬಂದು ಒಂದು ಬಿಟ್ಟಾ ಅಂದ್ರೆ, ಮಗನೆ, ತರಡು ಬೀಜ ಮುರುಟಿ ಹೋಗಬೇಕು” ಅಂತ ಬೈದರೆ ಎಂತಾ ಹಡೆಯೂ ಎಲ್ಲವನ್ನೂ ಮುಚ್ಚಿಕೊಂಡು ಕೆಲಸ ಮಾಡಬೇಕು. ಅದು ಬರೀ ದಪ್ಪ ದನಿಯ, ಒರಟು ಮಾತುಗಳ ಶಕ್ತಿಯಾಗಿರಲಿಲ್ಲ. ಮಾಡುವ ಕೆಲಸವನ್ನು ಎದೆಗೊತ್ತಿಕೊಂಡು ಮಾಡುವವನ ನೈತಿಕ ಶಕ್ತಿಯಾಗಿತ್ತು. +ಊರಿನ ಒಂದು ಮುಸ್ಲಿಮ್ ಕುಟುಂಬದ ಮೂವರು ತುಂಬಿ ಹರಿಯುತ್ತಿದ್ದ ಕೆಂಪುಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಸತ್ತಿದ್ದರು. ಸಾಬೂನು ಬಿತ್ತು ಅಂತ ಬಾಗಿದ ಸಣ್ಣ ವಯಸ್ಸಿನ ಹುಡುಗ ಜಾರಿ ಬಿದ್ದಾಗ, ಅವನನ್ನು ಎತ್ತಲು ಅವನ ಅಪ್ಪ, ಅವನ ಹಿಂದೆ ಚಿಕ್ಕಪ್ಪ ಎಲ್ಲರೂ ಸುಳಿಗೆ ಸಿಕ್ಕಿ ಸಾವನ್ನಪ್ಪಿದಾಗ, ಇಡೀ ಊರೇ ಲಕ್ವ ಹೊಡೆದಂತೆ ತತ್ತರಿಸಿತ್ತು. ಸುಳಿಗೆ ಸಿಕ್ಕ ಹೆಣಗಳನ್ನು ಎತ್ತುವವರಿಲ್ಲ. ಆ ಕುಟುಂಬದ ಆಕ್ರಂದನ ಹೃದಯ ಕತ್ತರಿಸುವಂತಿದ್ದಾಗ, ಛಳುಕು ಹೊಡೆದವರಂತೆ ಎಲ್ಲರೂ ನಿಂತವರೇ, ಇಳಿಯುವವರು ಯಾರೂ ಇಲ್ಲ. ಈಜಿನಲ್ಲಿ ಫಟಿಂಗ ಅಂತ ಹೆಸರು ತಗೊಂಡ ಇವನನ್ನು ಪರಿಸ್ಥಿತಿಯ ಭಾರಕ್ಕೆ ಬೆದರಿದ ಜನ ಇಳಿಯಗೊಡಲೊಲ್ಲರು. ಕೊನೆಗೆ ಅವನ ಅಪ್ಪನೇ ಧೈರ್ಯ ಮಾಡಿ, “ಇಳೀ ಮಗಾ, ಏನಾಗುತ್ತೋ ನೋಡೋಣ” ಅಂದಾಗ ಕಾದಿದ್ದವನಂತೆ ಧಡಮ್ಮನೆ ಧುಮುಕಿದ್ದ. ಸುಳಿಯನ್ನು ಸುತ್ತಲು ಬೇಕಾಗಿರುವುದು, ಧೈರ್ಯಕ್ಕಿಂತ ಜಾಣ್ಮೆ, ವಿರುಧ್ಧವಾಗಿ ಈಜುವ ಹಮ್ಮಿಗಿಂತ ಅದರ ಗತಿಯಲ್ಲೇ ಸುತ್ತಿ, ಆಯದ ಹೊತ್ತನ್ನು ಲೆಕ್ಕ ಹಾಕಿ, ಚಳಕ್ಕನೆ ಸುಳಿಯ ಮೋಹದಿಂದ ತಪ್ಪಿಸಿಕೊಳ್ಳುವ ಛಾತಿ ಬೇಕು ಅನ್ನುವುದು ಗೊತ್ತಿದ್ದವ. ಗಂಟೆಯೊಂದರಲ್ಲಿ ಒಂದಾದ ಮೇಲೊಂದು ಹೆಣಗಳನ್ನು ಎತ್ತಿ ಮೇಲೆ ಹಾಕಿದಾಗ ನೆರೆದಿದ್ದ ಜನ ಸ್ತಬ್ಧ. ಅದಾದ ನಂತರ ನೀರಿಗೆ ಬಿದ್ದ ಹೆಣವನ್ನೆತ್ತಲು ಈತ ಖಾಯಂ ಪಾರ್ಟಿ ಆಗಿಬಿಟ್ಟ. ಮುಂಚಿನಂತೆ ಅವಘಡಗಳಲ್ಲಿ ಜನ ದಿಕ್ಕು ತೋಚದೆ ನಿಲ್ಲುತ್ತಿರಲಿಲ್ಲ. ಅವನ ತೋಟದ ಮನೆಯ ದಿಕ್ಕು ಎಲ್ಲರಿಗೂ ಗೊತ್ತಿತ್ತು. ತಾದಾತ್ಮ್ಯದಿಂದ ತನ್ನ ತೋಟದ ಕೆಲಸದಲ್ಲಿ ಕಳೆದು ಹೋಗುತ್ತಿದ್ದವನು ಯಾವ ಅನಾಹುತದ ಸುದ್ದಿ ಕೇಳಿದರೂ ನಿಮಿಷವೆರಡಲ್ಲಿ ಹಾಜರಾಗುತ್ತಿದ್ದ. ದೂರದ ಊರಿಂದ ಮದುವೆಯಾಗಿ ಊರಿಗೆ ಬಂದ ಧಾರವಾಡದ ಚೆಲುವೆಯೊಬ್ಬಳು, ಸರಿಯಾಗಿ ಒಂದು ವಾರದಲ್ಲಿ, ರಾತ್ರಿಯ ಊಟ ಮುಗಿಸಿ, ತಟ್ಟೆ ಹಿಂದೆ ಇಟ್ಟು ಬರುತ್ತೇನೆ ಅಂತ ಹೋಗಿ, ಮನೆಯ ಹಿಂದಿನ ಬಾವಿಗೆ ಹಾರಿದಾಗ, ಊಟವಿನ್ನೂ ಮುಗಿಯದ ಜನ ಅಡಿಗೆ ಮನೆಯಲ್ಲಿ ’ಅದೇನು ಗುಡುಂ ಅಂತ ಶಬ್ದ ಕೇಳಿಸಿತಲ್ಲ” ಅಂತ ಅಂದುಕೊಂಡರೇ ಹೊರತು ಬೇರೆ ಎಣಿಸಲಿಲ್ಲ. ’ಏಲ್ಲಿ ಹೋದಳು ಇವಳು, ತಟ್ಟೆ ಇಟ್ಟು ಬರುತ್ತೇನೆ ಅಂತ ಹೋದವಳು, ಇಷ್ಟೊತ್ತಾದರೂ…’ ಅಂತ ಗೊಣಗುವಾಗ ಮಾತ್ರ ಹಟಾತ್ತಾಗಿ ಗುಡುಂ ಶಬ್ದದ ಸಾಧ್ಯತೆ ಹೊಳೆದಿದ್ದು! ಹತ್ತು ನಿಮಿಷದಲ್ಲಿ ಪ್ರತ್ಯಕ್ಷವಾದ ಇವ, ಬಂದವನೇ ಯಾರನ್ನೂ ನೋಡದೇ, ಪಂಚೆ ಸುತ್ತಿಟ್ಟು, ರವ್ವನ್ನುವ ಕತ್ತಲಲ್ಲಿ ಬಾಗಿ ಬಾವಿಯ ಬುಡ ಸೇರಿ ಹಸಿಮೈಯ ಹೆಣ್ಣಿನ ಹೆಣವನ್ನು ಹೊತ್ತು ತಂದಿದ್ದ. ಮತ್ತೊಮ್ಮೆ ವರ್ಷಗಟ್ಟಲೆಯಿಂದ ಹಾಳುಬಿಟ್ಟ ಬಾವಿಯೊಂದರಲ್ಲಿ ಊರಿನ ಮುಸ್ಲಿಮ್ ಮೇಷ್ಟರೊಬ್ಬರು ಬಿದ್ದು ಜೀವ ಕಳೆದುಕೊಂಡಾಗ, ಜೊಂಡಿನಂತೆ ಜವ್ವನೆ ಬೆಳೆದುಕೊಂಡಿದ್ದ ಪಾಚಿಯಲ್ಲಿ ನೀರಿನ ಸುಳುಹೂ ಕಾಣದೆ ಇದನ್ನು ಹೇಗಪ್ಪಾ ನಿಭಾಯಿಸುತ್ತಾನೆ ಇವನು ಅಂತ ಸುತ್ತಲಿನ ಜನ ದಂಗು ಬಡಿದಿದ್ದಾಗ, ಮನಸ್ಸೊಮ್ಮೆ ಅಳುಕಿದರೂ, ’ಹೆಣವನ್ನ ಹಾಗೇ ಬಿಡೋಕಾಗುತ್ತಾ, ಮತ್ತೆ, ನಾನು ಹೋಗಿ ಮೊದ್ಲು ಜಾಲಾಡಿ ಹುಡುಕ್ತೀನಿ, ಹತ್ತು ನಿಮಿಷದ ಮೇಲೆ ಬುಟ್ಟಿ ಸಮೇತ ಹಗ್ಗ ಬಿಡಿ’ ಅಂತ ಹೇಳಿ ಧುಮುಕಿದವನು ಹೆಣವನ್ನು ಮರದ ತೊಟ್ಟಿಲಲ್ಲಿ ಹಾಕಿ ಮೇಲೆ ಬಂದರೆ, ಮೈಯಿಂದ ನಾರುನಾರಾಗಿ ಇಳಿಯುತ್ತಿದ್ದ ಪಾಚಿ! ಅಯ್ಯಬ್ಬ! ಅಂತ ಹೇವರಿಸಿಕೊಂಡರು ಕೆಲವರು. ’ಏನ್ ನೋಡ್ತಾ ನಿಂತಿದೀರಾ, ಎರಡು ಕೊಡಪಾನ ನೀರು ತರೋದು ಬಿಟ್ಟು?’ ಅಂತ ಜಬರಿಸಿ ನೀರು ತರಿಸಿ, ತಲೆಯಿಂದ ಸುರಿದುಕೊಂಡು ಪಂಚೆ ಸುತ್ತಿಕೊಂಡು ಹೋಗಿದ್ದನಂತೆ. ಇವು ಅವನು ನೀರಿನಿಂದ ಹೆಣ ಎತ್ತಿದ ಕೆಲವು ಘಟನೆಗಳು ಮಾತ್ರ. +ಯಾವುದಾದರೂ ರಾಜ್ ಕುಮಾರ್ ಚಿತ್ರದ ಕಥೆ ಹೇಳ್ತಾ ಇದೀನಿ ಅಂತ ಅನ್ನಿಸ್ತಾ ಇದೆಯಾ? ಖಂಡಿತ ಇಲ್ಲ. ಚಿತ್ರದ ಗುಂಗು ಕೆಲವು ಗಂಟೆಗಳು, ಕೆಲವು ದಿನಗಳು, ಅಥವಾ ಕೆಲವು ವರ್ಷಗಳು ಮಾತ್ರ. ಈತ ನನ್ನನ್ನು ಎಷ್ಟೋ ಸಲ ಚಕಿತಗೊಳಿಸಿದ್ದಾನೆ. ಇವನದ್ದು ಎಂಥಾ ದೈತ್ಯಶಕ್ತಿಯಪ್ಪಾ ಅಂತ ಬೆರಗುಗೊಂಡಿದ್ದೇನೆ. ಅದು ಬರೀ ನೀರಿಗೆ ಧುಮುಕಿ ಹೆಣ ಎತ್ತಿದ್ದಾಗಿದ್ದರೆ, ಅಷ್ಟಿರುತ್ತಿರಲಿಲ್ಲ. ದಶಕಗಳೆರಡರ ಹಿಂದೆ, ಅಪ್ಪ ವೀರಭದ್ರನ ದೇವಸ್ಥಾನ ಕಟ್ಟಿಸಲು ಓಡಾಡುತ್ತಿದ್ದಾಗ, ಏಳಡಿ ಎತ್ತರದ ವಿಗ್ರಹವನ್ನು ಈತ ಕಪ್ಪು ಶಿಲೆಯಲ್ಲಿ ಕೆತ್ತುತ್ತಿದ್ದಾನೆ ಅಂದಾಗ ಶಿಲೆಯಾಗಿಬಿಟ್ಟಿದ್ದೆ ನಾನು. ಅವನಿಗೆ ಅದೂ ಬರುತ್ತದಾ ಅಂತ ಕೇಳಿದಾಗ ಅಪ್ಪ,”ಹೋ… ಏನ್ ಮಾತಾಡ್ತಿಯ ನೀನು. ಮರದಲ್ಲಿ, ಕಲ್ಲಿನಲ್ಲಿ ಎಷ್ಟು ಮೂರ್ತಿಗಳನ್ನ ಮಾಡಿದಾನೆ, ಏನ್ ಕತೆ? ಎಲ್ಲೆಲ್ಲಿಂದ ಜನ ಬಂದು ಅವನ ಕೈಲಿ ಕೆಲಸ ಮಾಡಿಸ್ತಾರೆ, ಎಷ್ಟು ದೇವಸ್ಥಾನಗಳಿಗೆ ಅವನು ಮೂಲವಿಗ್ರಹ ಮಾಡಿದಾನೆ!” ಅಂದಾಗ ಸುಸ್ತು ಹೊಡೆದಿದ್ದೆ. ಪ್ರತಿಷ್ಠಾಪನೆಗೆ ಬಾ ಅಂತ ಅಪ್ಪ ಒತ್ತಾಯವಾಗಿ ಹೇಳಿದ್ದರು. ಹೋಗಲಿಕ್ಕಾಗದವಳು, ನಂತರ ಊರಿಗೆ ಹೋದಾಗ ವಿಗ್ರಹ ನೋಡುವ ಕುತೂಹಲದಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಕಪ್ಪು ಕಲ್ಲಿನಲ್ಲಿ ವಾರೆಯಾಗಿ ನಿಂತ ವೀರಭದ್ರ ಧೀಮಂತವಾಗಿ ಕಂಡಿದ್ದ. ಕೈ ಮುಗಿದಿದ್ದೆ–ವೀರಭದ್ರನಿಗಲ್ಲ. ಶಿಲ್ಪಿಗೆ. +uಟಿಜeಜಿiಟಿeಜ ಇವನನ್ನು ರಾಜ್ ಕುಮಾರ್ ತರಹದ ಹೀರೋ ತರಹ ಚಿತ್ರಿಸುತ್ತಿದ್ದೇನೆ ಅಂತ ನೀವು ಭಾವಿಸಿದರೆ ತಪ್ಪು ಅಂತ ಧೈರ್ಯವಾಗಿ ಹೇಳಬಲ್ಲೆ. ಯಾಕೆಂದರೆ, ರಾಜ್ ಕುಮಾರ್ ಪಾತ್ರ ನೀರಿಗೆ ನೆಗೆದರೂ ಮುಳುಗುತ್ತಿರುವವರನ್ನ ಬದುಕಿಸಿ ನಮ್ಮಿಂದ ಭೇಷ್ ಗಿರಿ ದಕ್ಕಿಸಿಕೊಳ್ಳುತ್ತದೆ. ಸತ್ತು ಹೋಗಿರುವ ಹೆಣಗಳನ್ನು ಕಾಯಕದ ನಿಷ್ಠೆಯಿಂದ ಎತ್ತುವ ಕೆಲಸವನ್ನು ಮಾಡುವ ಪಾತ್ರವನ್ನು ಸೃಷ್ಟಿಸಿದ್ದಾರೊ ಇಲ್ಲವೋ ಗೊತ್ತಿಲ್ಲ. ಇನ್ನೊಂದು ಅಂಶದಲ್ಲಿ ಈತ ಬೇರೆ ಅಂತನ್ನಿಸಿಕೊಳ್ಳುತ್ತಾನೆ. ಊರಲ್ಲಿ ಯಾರು ಸತ್ತರೂ ಇವನು ಹೋಗಿ ಮಾಡುವ ಶವಸಂಸ್ಕಾರದ ಕಾರ್ಯ. ರಾಜನಾಗಿದ್ದರೂ, ವಸಿಷ್ಟ ವಿಶ್ವಾಮಿತ್ರರ ಅಟ್ಟಹಾಸದ ನಡುವೆ , ಸ್ಮಶಾನ ಕಾಯುವ ಚಾಂಡಾಲನಾಗಬೇಕಾದ ದುರ್ವಿಧಿಗೆ ಸಿಕ್ಕ ಹರಿಶ್ಚಂದ್ರ ಮಾಡುವ ಶವಸಂಸ್ಕಾರದಂತೆ ಅಲ್ಲ. ಮನೆ ಮಠ, ತೋಟ ಗದ್ದೆ, ಆಳುಕಾಳು ಇತ್ಯಾದಿಗಳಿರುವ ಆಸ್ತಿವಂತನಾಗಿಯೂ, ಊರಲ್ಲಿ ಯಾರೇ ಸಾಯಲಿ, ಹೇಗೆ ಸಾಯಲಿ, ಹೆಣಕ್ಕೆ ಸ್ನಾನ ಮಾಡಿಸುವುದರಿಂದ ಹಿಡಿದು, ಸಮಾಧಿಯ ಒಳಗೆ ಇಳಿಸಿ, ಮಗುವಿನಂತೆ ಮಲಗಿಸುವವರೆಗೂ ಇವ ಅತ್ತಿತ್ತ ನೋಡಲಾರ. ಊರಲ್ಲಿ ಯಾರೊಂದಿಗಾದರೂ ಜಗಳ ಕಾಯಬೇಕಾದಾಗ, ಆಡುವಷ್ಟು ಜಗಳವಾಡಿ ಕೊನೆಗೆ, ಅವರು ಹಿರಿಯರಿರಲಿ, ಯಾರೇ ಇರಲಿ, ವಾರೆಗಣ್ಣಿಂದ ನೋಡುತ್ತ ತುಂಟತನದಿಂದ “ನೋಡೀ, ನೋಡಿ, ನನ್ನ ಕೈಲಿ ಜಗಳ ಆಡಿದ್ರೆ ಒಳ್ಳೇದಾಗೋಲ್ಲ, ಕಡೆಗಾಲಕ್ಕೆ, ಅದೇ, ನೀವು ಗೊಟಕ್ ಅಂತೀರಲ್ಲಾ, ಆವಾಗ ಯಾರು ಬರಬೇಕು? ನಾನು ತಾನೇ, ನಿಮಗೆ ಮೋಕ್ಷ ತೋರಿಸೋದೂ?’ ಅಂತ ಹೇಳಿ ತಾನೂ ನಕ್ಕು ಅವರನ್ನೂ ನಗಿಸಿ ಜಗಳ ಮುಗಿಸುತ್ತಾನೆ. ತಾನೇ ನೀರಿನಿಂದ ಮೆಲೆತ್ತಿದ ಹೆಣಗಳನ್ನೂ ಸಂಸ್ಕರಿಸಿ ಮಣ್ಣು ಮಾಡುವತನಕ ಇವನ ಕೆಲಸ ಮುಗಿಯುವುದಿಲ್ಲ. ಕಲ್ಲಿನಲ್ಲಿ ಕಲೆಯನ್ನು ಮೂಡಿಸುವ ತಾದಾತ್ಮ್ಯತೆಯಲ್ಲಿಯೇ ಹೆಣಗಳನ್ನೂ ನಿಭಾಯಿಸುತ್ತಾನೆ. +ಈತನನ್ನು ಮುಖತಃ ಮಾತನಾಡಿಸಬೇಕೆಂದು ಅಂದುಕೊಂಡು ವರ್ಷಗಳೇ ಕಳೆದುಹೋದವು. ಈಗ ನನ್ನ ಅಪ್ಪ ಬದುಕಿನಲ್ಲಿ ಬೇಸತ್ತು, ಮಕ್ಕಳ ಸ್ವಾರ್ಥ ದೌರ್ಜನ್ಯಗಳಿಂದ ನೊಂದು ನೀರಿಗೆ ಬಿದ್ದು ಸತ್ತಾಗ, ಮತ್ತೊಮ್ಮೆ ಅವನನ್ನು ನೋಡುವ ಸಂದರ್ಭ ಬಂತು. ಕಡೆ ಗಳಿಗೆಯಲ್ಲಿ ಅಪ್ಪ ಅವನಿಗೇ ಪತ್ರವೊಂದನ್ನೂ ಬರೆದಿದ್ದ. ಅವನೇ ತನ್ನ ಶವಸಂಸ್ಕಾರ ಮಾಡಬೇಕೆಂದು ಪ್ರಾರ್ಥಿಸಿಕೊಂಡಿದ್ದ. ತಾನು ಸಾಯುವ ದಿನ ಅವನು ಊರಲ್ಲಿರುತ್ತಾನೆ ಎನ್ನುವುದನ್ನು ಖಾತರಿ ಮಾಡಿಕೊಂಡೇ ಸಾವನ್ನು ತಬ್ಬಿಕೊಂಡಿದ್ದ. ಅಪ್ಪನ ಹೆಣವನ್ನು ಮಗುವೋ ಎಂಬಂತೆ ಎತ್ತಿ, ಗುಂಡಿಯ ಒಳಗಿಳಿಸಿ ನಿಂತ ಅವನನ್ನು ನೋಡಿದಾಗ ಬದುಕಿರುವಾಗ ಯಾಕೆ, ಸತ್ತಾಗಲೂ ಯಾವ ಕೆಲಸಕ್ಕೂ ಬಾರದ ಅಪ್ಪನ ಮಕ್ಕಳ ಕಡೆಗೆ ಒಮ್ಮೆ ಕಣ್ಣು ಹಾಯಿಸಿದ್ದೆ. ತಿಂಗಳ ತಿಥಿಗೆ ಅಮ್ಮನ ಮನೆಗೆ ಹೋದಾಗ ಇವನನ್ನು ಭೇಟಿ ಮಾಡಿಯೇ ತೀರಬೇಕು ಅಂತ ನಿಶ್ಚಯಿಸಿಕೊಂಡು ಫೋನ್ ಮಾಡಿದರೆ, ’ಬನ್ನಿ, ಬನ್ನಿ, ಖಂಡಿತ ಬನ್ನಿ” ಅಂದ. +ತೋಟದ ಮಧ್ಯೆ ಇರುವ ಅವನ ಮನೆ ಸರಳವಾಗಿತ್ತು. ಮನೆ ತುಂಬ ಇದ್ದ ಎಲ್ಲಾ ಅಳತೆಯ ಕಲಾಕೃತಿಗಳು, ಪ್ರತಿಯೊಂದೂ ಅವನವೇ. ಮೊದಲ ಕೋಣೆಯಲ್ಲಿಯೇ ಎದುರಾದ ವಾರೆಯಾಗಿ ಅರ್ಧ ಮಲಗಿರುವ ಗಣಪತಿ. ಕಣ್ಣು ಹಾಯಿಸುತ್ತಿದ್ದವಳ ದೃಷ್ಟಿಯ ಜಾಡು ಹಿಡಿದು, ’ಅದಾ! ನೋಡಿ, ಎಲ್ಲಿಂದಾನೋ ಬರ್ತಿದ್ದಾಗ, ದಾರೀಲಿ ಒಂದು ಮರ ಬಿದ್ದಿತ್ತು. ಟೊಳ್ಳು ಬಿದ್ದ ಮರ. ನೋಡೋಣ ಏನ್ ಮಾಡಕಾಗುತ್ತೆ ಅಂತ ಅದರ ಕಾಂಡದ ಒಂದು ಭಾಗವನ್ನು ತಗೊಂಡು ಬಂದೆ. ಅದ್ರಿಂದ ಮೂಡಿದ್ದು ಈ ನಮ್ ಗಣಪತಿ”–ಬಿಟ್ಟ ಬಾಯಿ ನಾನು ಮುಚ್ಚಿದ್ದರೆ ಕೇಳಿ. ಪುಟ್ಟದ್ದೇನೂ ಅಲ್ಲ. ಕೋಣೆಯಲ್ಲಿ ಪ್ರಧಾನವಾಗಿ ನಿಂತ ಭವ್ಯ ಗಣಪತಿ, ಭವ್ಯವಾಗಿದ್ದಷ್ಟೇ ಮಗುವಿನಂತೆ ಮುದ್ದಾಗಿಯೂ ಇದ್ದ. “ನೋಡಿ, ಇವೆಲ್ಲಾ, ಯಾವ್ಯಾವುದೋ ದೇವಸ್ಥಾನಗಳಿಗೆ ಹೋಗಬೇಕಾದ ಮೂಲವಿಗ್ರಹಗಳು. ಇದು ವೀರಭದ್ರೇಶ್ವರ, ನಿಮ್ಮ ಅಪ್ಪಾಜಿ ಕಟ್ಟಿಸಿದ್ರಲ್ಲ್ಲ, ಆ ದೇವಸ್ಥಾನಕ್ಕೆ ಮೂಲವಿಗ್ರಹ ಮಾಡುವ ಮೊದಲು ಅದರ ಪ್ರತಿಕೃತಿಯನ್ನು ಚಿಕ್ಕದಾಗಿ ಮಾಡ್ಕೊಂಡೆ. ಹಾಗಿದ್ರೇ ತಾನೆ ಅಳತೆಯ ನಿಖರತೆ ಬರೋದು. ಆ ಮಿನಿಷ್ಟ್ರ ಹೆಂಡತಿ ನಮ್ಮನೆಗೆ ಬಂದಿದ್ದಾಗ, ಇದಕ್ಕೆ ಎಷ್ಟಾದ್ರೂ ಕೊಡ್ತೀನಿ, ಕೊಡಿ ಅಂತಂದ್ರು. ನಾನು ಅದನ್ನ ಯಾವ ಕಾಲಕ್ಕೂ ಯಾರಿಗೂ ಕೊಡಲಾರೆ. ಇದು ನೋಡಿ ವಿಶಿಷ್ಟ ಭಂಗಿಯ ಗಣಪತಿ, ಇದಕ್ಕೆ ತುಂಬಾ ಬೇಡಿಕೆ ಇದೆ. ಈ ವೀಣಾಪಾಣಿ ಸರಸ್ವತಿಯನ್ನ ಇನ್ನೊಂದು ವಾರದಲ್ಲಿ ಪೂರ್ಣ ಮಾಡಬೇಕು. ಅಲ್ಲಿ ಕಾಣಿಸ್ತಾ ಇದೆಯಲ್ಲಾ, ಕಲ್ಲುಗಳು, ಅವನ್ನೇ ನಾನು ಉಪಯೋಗಿಸೋದು. ಮೈಸೂರಿನ ಹತ್ತಿರದಿಂದ ನಾನೇ ನನ್ನ ಲಾರಿಯಲ್ಲಿ ಲೋಡು ತಗೊಂಡು ಬರ್ತೀನಿ… ಇದು ನೋಡಿ ಆನೆ…ಇದನ್ನ ಕಲಿಯೋಕೆ ನಾನೆಷ್ಟು ಕಷ್ಟಪಟ್ಟೀದೀನಿ ಗೊತ್ತಾ? ಮಲೆಯಾಳಿಗಳು ಮಾತ್ರ ಅಧ್ಬುತವಾದ ಆನೆಗಳನ್ನ ಮಾಡಬಲ್ಲರು. ಇನ್ಯಾರಿಗೂ ಸುಲಭವಾಗಿ ಬರೋಲ್ಲ…” +’ಮತ್ತೆ ನೀವು ಮಾಡಿದೀರಲ್ಲ…ಯಾರು ಹೇಳಿಕೊಟ್ರು?” +“ಯಾರೂ ಇಲ್ಲ. ನನ್ಗೆ ಗುರು ಇಲ್ಲ. ಮೂರ್ತಿಗಳನ್ನ ತದೇಕವಾಗಿ ಗ್ರಹಿಸ್ತೀನಿ, ಅದಕ್ಕೆ ಬೇಕಾದ ವಿವರಗಳನ್ನೆಲ್ಲ ಓದಿಕೊಂಡು ಮನನ ಮಾಡ್ತೀನಿ. ಮನಸ್ಸನ್ನ ಕೇಂದ್ರೀಕರಿಸಿದರೆ ಮಾತ್ರ ಮಾಡೋಕೆ ಸಾಧ್ಯ.” +’ಯಾವಾಗಿಂದ ಇದನ್ನ ಮಾಡೊಕೆ ಶುರು ಮಾಡಿದ್ರಿ?”–ಏನೊ ಮಹಾ ಸಂದರ್ಶಕಳಂತೆ ಕೇಳಿದೆ. ಆತ ಮೆಲುಧ್ವನಿಯಲ್ಲಿ ಉತ್ತರ ಕೊಟ್ಟ. +“ನಾನು ಮದುವೆಯಾಗಿ, ಮಕ್ಕಳ ತಂದೆಯೂ ಆದ ಮೇಲೆ” +“ನಿಮ್ಮನೇಲಿ ಯಾರದ್ರೂ ಇದನ್ನ ಮಾಡಿದ್ರ?” +“ಇಲ್ಲ, ಯಾರೂ ಇಲ್ಲ. ಯಾರಿಗೂ ಇದರ ಗಂಧವೂ ಗೊತ್ತಿರಲಿಲ್ಲ” +“ಮತ್ತೆ, ನಿಮಗೆ ಹೇಗೆ ಇದನ್ನ ಮಾಡಬೇಕೆನ್ನಿಸ್ತು?” +“ಗೊತ್ತಿಲ್ಲ, ಹೇಗೆ ಮಾಡಬೇಕೆನ್ನಿಸ್ತು ಅಂತ. ನನ್ನ ತೋಟ, ಗದ್ದೆ, ಊರ ಕಾರ್ಯ, ಹೆಣ ಎತ್ತೋದು, ಶವಸಂಸ್ಕಾರ ಇತ್ಯಾದಿಗಳ ಮಧ್ಯೆಯೂ ಮನಸ್ಸು ಚಿರವಾಗಿ ಇರುವುದನ್ನ ಮಾಡಬೇಕು ಅಂತ ತುಡೀತಾ ಇತ್ತು. ಬಹುಶಃ ಸಾವನ್ನ ಹತ್ತಿರದಿಂದ ನೋಡೀ ನೋಡೀ ಇರಬಹುದು. ನನ್ನ ಸಾವಿನ ನಂತರವೂ ನಾನು ಉಳಿಯುವಂತಹ ಏನನ್ನಾದರೂ ಮಾಡಬೇಕು ಅನ್ನೊ ಸಣ್ಣ ದನಿ ಅದ್ಯಾವಾಗ ಪ್ರಚಂಡ ಶಕ್ತಿ ಪಡ್ಕೋತೋ ಗೊತ್ತಿಲ್ಲ. ಸಣ್ಣದಾಗಿ ಕೆತ್ತಲಾರಂಭಿಸಿದೆ. ಸಿಕ್ಕಿದ್ದೆಲ್ಲವನ್ನೂ ಓದಿದೆ. ನನ್ನ ತುಡಿತ ಒಂದು ಆಕಾರ ಪಡೆದುಕೊಳ್ಳುತ್ತಿದ್ದ ಹಾಗೆ ಮನಸ್ಸು ವಿಚಿತ್ರ ಶಾಂತಿಯನ್ನು ಅನುಭವಿಸುತ್ತಿತ್ತು. ಈಗಲೂ ಅಷ್ಟೇ, ನಾನು ತುಂಬ ನೆಮ್ಮದಿಯಿಂದಿರುವ ಗಳಿಗೆಗಳೆಂದರೆ, ಈ ಮೂರ್ತಿಗಳನ್ನು ಕೆತ್ತುವಾಗ, ಮತ್ತು ಶವಸಂಸ್ಕಾರದಲ್ಲಿ ತೊಡಗಿಸಿಕೊಂಡಾಗ. ಒಂದು ಸೃಷ್ಟಿ, ಇನ್ನೊಂದು ಲಯ. ಆದ್ರೆ ಅವೆರಡೂ ಯಾವ್ದೋ ಹಂತದಲ್ಲಿ ಒಂದೇ ಅಂತನ್ನಿಸುತ್ತೆ.” +’ಶವಸಂಸ್ಕಾರ ಯಾವಗಿಂದ ಮಾಡ್ತಾ ಇದೀರ?’ +ನನ್ನ ಪೆದ್ದು ಪ್ರಶ್ನೆಗೆ ಅವ ನಕ್ಕರೂ ಸೌಹಾರ್ದದಿಂದ ಉತ್ತರಿಸಿದ. +’ಅದೆಲ್ಲ ಯೂನಿವರ್ಸಿಟಿಯಿಂದ ಕಲಿತು ಬಂದು ಶುರು ಮಾಡೊ ಅಂತದ್ದಲ್ಲ. ಯಾವುದೋ ಪರಿಸ್ಥಿತಿಯಲ್ಲಿ ಯಾರೂ ಇಲ್ಲದಿದ್ದಾಗ ಮಾಡಬೇಕಾದ ಅನಿವಾರ್ಯ ಅಮೇಲೆ ಅಭ್ಯಾಸವಾಗಿ ಬಿಡುತ್ತೆ. ಅದರಲ್ಲಿ ನಿಷ್ಠೆಯೂ ಬಂದುಬಿಡುತ್ತೆ. ಅದೂ ಕಾಯಕವೇ ಅಲ್ವಾ? ಮನಸ್ಸನ್ನ, ಬುದ್ಧಿಯನ್ನ, ಅತ್ಮವನ್ನ ತೊಡಗಿಸಿಕೊಂಡು ಮಾಡೋ ಕೆಲ್ಸ. ನಾನು ಪೋಸ್ಟ್ ಮಾರ್ಟಮ್ ಮಾಡಲು ಕಲಿತದ್ದೂ ಹಾಗೆಯೇ” +“ಅದೂನಾ!”–ಮತ್ತೊಮ್ಮೆ ಬಾಯಿ ಕಳೆಯುವ ಸ್ಥಿತಿ ನನ್ನದು. +uಟಿಜeಜಿiಟಿeಜ”ಹೌದು. ಕೆಲವನ್ನು ಮಾಡುವಾಗ ಗಮನಿಸಿದೆ. ಈಗ ನಾನೇ ಚಕಚಕನೆ ಮಾಡಿ ಅಗತ್ಯದ ಸಾಮಗ್ರಿಯನ್ನು ಆಸ್ಪತ್ರೆಯವರಿಗೆ ಒದಗಿಸುತ್ತೇನೆ. ಅನಿವಾರ್ಯತೆ ಅಂದರೆ ಅದೇ ಅಲ್ಲವಾ?” +“ಅಸಹಜ ಸಾವುಗಳ ಸಂಧರ್ಭದಲ್ಲಿ ಹೇಗನ್ನಿಸುತ್ತೆ?” +“ತುಂಬ ಬೇಜಾರಾಗುತ್ತೆ. ನಿಮ್ಮ ಅಪ್ಪಾಜಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಎಂಥಾ ಬದುಕಿ ಬಾಳಿದ ವ್ಯಕ್ತಿ. ಎಷ್ಟೆಲ್ಲಾ ಸಂಪಾದನೆ ಮಾಡಿದರು, ದೇವಸ್ಥಾನ ನಿಂತು ಕಟ್ಟಿಸಿದರು, ಊರಿಗೆ ಒಳ್ಳೇದಾಗಲಿ ಅಂತ. ಮಕ್ಕಳಿಗೆಲ್ಲಾ ಆಸ್ತಿ ಕೊಟ್ಟರು. ಅಂಥಾ ಮನುಷ್ಯ ಈ ತರಹ ಸಾಯುವ ಪರಿಸ್ಥಿತಿ ಬಂದಾಗ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತೆ. ಇನ್ನೂ ಕೆಲವು ಚಿಕ್ಕ ವಯಸ್ಸಿನವರು ಸಾವನ್ನು ತಾವಾಗೇ ತಂದುಕೊಂಡಾಗ, ಮನಸ್ಸು ಸ್ತಬ್ಧವಾಗಿಬಿಡುತ್ತೆ. ಎಷ್ಟು ಹದಿವಯಸ್ಸಿನ ಹೆಣ್ಣುಮಕ್ಕಳು ಈ ಊರಲ್ಲಿ ಹಾಗೆ ಸತ್ತಿಲ್ಲ. ಆ ದೇಹಗಳನ್ನ ಮುಟ್ಟಿ ಸ್ನಾನ ಮಾಡಿಸುವಾಗ ಬದುಕಿ ಬಾಳುವ ಜೀವಗಳು ಹೀಗೆ ಹೋಗಬೇಕಾಯಿತೇ ಎಂದು ಮಮ್ಮಲ ಮರುಗುವಂತೆ ಮಾಡಿಬಿಡುತ್ತದೆ. ಆದರೆ ಕಾರ್ಯ ಮುಗಿಯಬೇಕಲ್ಲ? ಮನಸ್ಸನ್ನು ತಹಬದಿಗೆ ತಂದು ನಿರ್ಲಿಪ್ತತೆಯಿಂದ ಸಧ್ಯಕ್ಕೆ ಕೆಲಸ ಮಾಡಬೇಕಾಗುತ್ತದೆ. ಮರುಗಲು ನಂತರ ಸಮಯ ಇದೆಯಲ್ಲ?” +“ತುಂಬ ಘೋರ ಅನ್ನಿಸಿದ ಸಾವು?” +“ಹ್ಹಾಂ, ನಿಮ್ಮನೆಯಿಂದ ಸ್ವಲ್ಪ ಆಚೆ ಒಬ್ಬ ಹದಿವಯಸ್ಸಿನ ಹುಡುಗ ಮನೆಯ ಅಟ್ಟದ ಮೇಲೇ ನೇಣು ಹಾಕ್ಕೊಂಡಿದ್ದ. ನಾಲ್ಕು ದಿನವಾದರೂ ಮನೆಯವರಿಗೆ ಗೊತ್ತಿಲ್ಲ. ಎಲ್ಲೋ ಹೋಗಿದ್ದಾನೆ ಅಂತ ಸುಮ್ಮನಿದ್ದರು. ಯಾವಾಗ ಕೆಟ್ಟ ವಾಸನೆ ಬರಲಾರಂಭಿಸಿತೋ, ಸ್ವಲ್ಪ ಎಚ್ಚರವಾದರು. ಹೆಣ ಕೊಳೆತು ಅದರ ನೀರು, ಅಟ್ಟದಿಂದ ಸೋರಿ ಕೆಳಗಿಳಿಯುವಾಗ ಪರಿಸ್ಥಿತಿ ಅರ್ಥವಾಗಿದ್ದು. ಯಾರೂ ಹೆಣವನ್ನು ಇಳಿಸಲು ತಯಾರಿಲ್ಲ. ಮೂರ್ಛೆ ಬರಿಸುವಷ್ಟು ನಾತ. ಏನಾದರೂ ಆಗಲಿ ಅಂತ ನುಗ್ಗಿದೆ. ನನ್ನ ತಮ್ಮ ಸ್ವಲ್ಪ ಧೈರ್ಯವಿರುವವನು. ಅವನನ್ನೂ ಕರೆದುಕೊಂಡು ಅಟ್ಟ ಹತ್ತಿ ಹೋದರೆ, ಕೆಳಗೆ ದಬ್ಬುವಷ್ಟು ಗಬ್ಬು. ನಾಲಗೆ ಹೊರಚಾಚಿ ವಿಕಾರವಾಗಿತ್ತು. ಮುಟ್ಟಿದರೆ ನಾಲಗೆಯೇ ಕೈಗೆ ಬಂತಲ್ಲ! ಅದನ್ನ ಸೀದಾ ಶರ್ಟಿನ ಜೇಬಿಗೆ ಹಾಕಿಕೊಂಡು, ಹಗ್ಗದಿಂದ ಹೆಣವನ್ನು ಇಳಿಸಿ ಕೆಳಗೆ ತರುವ ಹೊತ್ತಿಗೆ ಇನ್ನು ಜನ್ಮದಲ್ಲಿ ಅನ್ನ ತಿನ್ನಲು ಸಾಧ್ಯವಾ ಅಂತನ್ನಿಸಿತ್ತು. ಏನು ಮಾಡುತ್ತೀರಾ? ಹೆಣ ಅದು. ಅದಕ್ಕೊಂದು ಗತಿ ಕಾಣಿಸಲೇಬೇಕಲ್ಲಾ! +ಅಯ್ಯಬ ಎನ್ನುವಂತೆ ಕಣ್ನುಮುಚ್ಚಿದ್ದು ನೋಡಿ ಮೆಲುವಾಗಿ ನಕ್ಕ +“ಯಾರ ಹೆಣವನ್ನು ಬೇಕಾದರೂ ಸಂಸ್ಕಾರ ಮಾಡುತ್ತೀರ?” +ನನ್ನ ಪ್ರಶ್ನೆ ಅರ್ಥವಾದವನಂತೆ ನಕ್ಕ. +’ಯಾರದ್ದಾದರೂ. ಅದರಲ್ಲಿ ಜಾತಿಭೇದ ಇಲ್ಲ. ಹೆಣಕ್ಕೆ ಯಾವ ಜಾತಿ? ಬದುಕಿರುವಾಗ ಮಾತ್ರ ಆ ಹೀನ ಲೆಕಾಚಾರ. ಅಸ್ಪೃಶ್ಯನೊಬ್ಬನ ಹೆಣವನ್ನು ನೀರಿನಿಂದ ಎತ್ತಿ ನಾನೇ ಸಂಸ್ಕಾರ ಮಾಡಿದ್ದೆ. ಯಾವನಾದರೂ ಕೇಳಿದ್ದರೆ ಆಗ ವಿಚಾರಿಸ್ಕೋತಾ ಇದ್ದೆ. ನನ್ನನ್ನು ಯಾರೂ ಕೇಳುವುದೂ ಇಲ್ಲ. ಗೊತ್ತು, ವಾಪಾಸ್ ಏನು ಸಿಗುತ್ತೆ ಅಂತ”. ಐವತ್ತರ ಹರೆಯದಲ್ಲಿದ್ದರೂ ಮೂವತ್ತರಂತೆ ಕಾಣುವ ಅವ ದೊಡ್ಡದಾಗಿ ನಕ್ಕಾಗ ಇನ್ನೂ ಚಿಕ್ಕವನಂತೆ ಕಂಡ. +’ನಿಮ್ಮ ಮಕ್ಕಳಿಗೆ ಕೆತ್ತನೆಯಲ್ಲಿ ಆಸಕ್ತಿ ಇದೆಯಾ?” +“ನನಗೆ ಮೂರು ಜನ ಮಕ್ಕಳು. ಮಗಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ಒಬ್ಬ ಮಗ ಸೋಪಿನಲ್ಲಿ ಮೂರ್ತಿಗಳನ್ನ ಮಾಡಿದ್ದಾನೆ. ನಾನೇನೂ ಹೇಳಿಕೊಟ್ಟಿಲ್ಲ. ದಿನಾ ನೋಡುವುದರಿಂದ ಇರಬಹುದು, ಒಬ್ಬನೇ ಕೂತು ಅರ್ಧ ಗಂಟೆಯಲ್ಲೊಂದು ಸೋಪಿನ ಗಣೇಶನನ್ನ ಮೊನ್ನೆ ಮಾಡಿದ್ದ.” +“ದಿನದ ಹೊತ್ತಿನಲ್ಲಿ ಕೆತ್ತನೆ ಮಾಡುತ್ತೀರ?” +“ಹೌದು. ಸಾಮಾನ್ಯವಾಗಿ ಬೆಳಗಿನ ಸ್ನಾನ ಪೂಜೆ ಮುಗಿಸಿ ಕೂತಾಗ ಮನಸ್ಸು ತುಂಬ ನಿರ್ಮಲವಾಗಿರುತ್ತೆ. ಮನಸ್ಸು ಸ್ವಲ್ಪ ಕುಂದಿದರೂ ಏಕಾಗ್ರತೆ ತಪ್ಪಿಬಿಡುತ್ತೆ. ಸುಮಾರು ನಾಲ್ಕು ಗಂಟೆಯ ಕಾಲ ಒಂದೇ ಸಮ ಕೂತು ಮಾಡಬಹುದು, ಮನಸ್ಸು ನೆಮ್ಮದಿಯಿಂದಿದ್ದರೆ. ನಮ್ಮ ಮನೆಯಿಂದ ಕೆಳಗಡೆ ಒಂದು ದೇವಸ್ಠಾನ ಕಟ್ಟಿಸಿದ್ದೇವೆ, ಜನರಿಂದ ಹಣ ಎತ್ತಿ. ಅದೂ ಯಾರೂ ಮುಂದೆ ಬರಲೊಲ್ಲರು. ಕೊನೆಗೆ “ಒಂದು ದೇವಸ್ಥಾನ ಇರಬಾರದಾ, ಹತ್ತಿರದಲ್ಲಿ?” ಅಂತ ಗದರಿಸಿದ್ದಕ್ಕೆ, ದುಡ್ಡು ಬಿಚ್ಚಿದರು…’ +“ಹೌದಾ, ದೇವಸ್ಥಾನಗಳು ಇರಬೇಕಾ?” +ಮತ್ತೆ ಅದೇ ನಗು. +“ಹೌದು, ದೇವಸ್ಥಾನಗಳು ಎಲ್ಲರಿಗೂ ಬೇಕು. ರಾಜಕೀಯ, ರಕ್ತಪಾತ ಮಾಡಲು ಅಲ್ಲ. ನಮ್ಮೆಲ್ಲರ ತಲ್ಲಣ, ತಳಮಳಗಳನ್ನ ನಿವೇದಿಸಿಕೊಳ್ಳೋದಕ್ಕೆ ದೇವಸ್ಥಾನಗಳು ಇರಬೇಕು.” +ಹೊರಡುವ ಮುನ್ನ, ಮೆಲ್ಲಗೆ ಹೇಳಿದೆ. “ನಿಮಗೆ ನಿಮ್ಮ ಅಪ್ಪ ಅಮ್ಮ ಸರಿಯಾದ ಹೆಸರನ್ನೇ ಇಟ್ಟಿದಾರಲ್ಲ? ವರಪ್ರಸಾದ ಅಂತ?” +ನಕ್ಕು ವಿನಯದಿಂದ ಕೈಮುಗಿದು ಅವ ಅಂದ, +“ಹೋಗಿ ಬನ್ನಿ. ದೇವರು ಒಳ್ಳೆಯದು ಮಾಡಲಿ.” +***** +ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […] +ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […] +ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_548.txt b/Kannada Sahitya/article_548.txt new file mode 100644 index 0000000000000000000000000000000000000000..a1e60cf0716fe2584a42d63c9b2f8a0899955074 --- /dev/null +++ b/Kannada Sahitya/article_548.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೊಳೆಯಬೇಕಾದ ಲೆನಿನ್ ಹೆಣವನ್ನು +ಕೊಳೆಯದಂತೆ ಕಾದರು, +ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉ +ವಿದರ್ಸ್ ಅವೆ ಎಂದರು +೨ +ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳು +ಇನ್ನೇನು ಉದುರಿ +ಇನ್ನೆನು ಬಿಡಲಿರುವ ಫಲವನ್ನು +ಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ- +ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂ +ಎಂಬ ಸುದ್ದಿಯನ್ನು ಮಾಸ್ಕೋದಲ್ಲಿ ಮಳೆಯಾದರೆ ಕಲ್ಕತ್ತದಲ್ಲಿ ಕೊಡೆ ಹಿಡಿಯುವ +ಕಾಂರೇಡರು ಸುತರಾಂ ಒಪ್ಪದೆ, ಮೊದಲ ಬಾರಿಗೆ ರೇಗಿ +ಕೊಡೆಯನ್ನು ಮಡಚಿ ಕಂಕುಳಲ್ಲಿಟ್ಟು +ಸ್ಟಾಲಿನ್ ನಂತರ ಯಜ್ಞ ಶಾಸ್ತ್ರೋಕ್ತವಾಗಿ ನದೆಯಲಿಲ್ಲ +ಎಂಬುದನ್ನು ತಮ್ಮ ಪ್ರಮಾಣ ಗ್ರಂಥದಲ್ಲಿ ಕೋಟ್ ಮಾಡಿ, ತೋರಿಸಿ, +ಟೀಕಿಸುತ್ತಾರಲ್ಲ- +ಅವರ ಕೆಚ್ಚು ನೋಡಿ, ನಿಷ್ಠೆ ನೋಡಿ, ಮುಂದಾಲೋಚನೆ ನೋಡಿ ವೋಟ್ ಕೊಟ್ಟರೆ +ಮಾಸ್ಕೋದಲ್ಲಿ ನೆಟ್ಟದ್ದು ಕಲ್ಕತ್ತದಲ್ಲಿ ಯಾಕೆ +ದಳಗಳು ಉದುರಿ ಫಲವಾಗಬಾರದು-ಹೇಳಿ. +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […] +ಯಾಕೆ ಸುಮ್ಮನೆ ನಾವು ಹಾದಿ ಕಾಯುತ್ತೇವೋ ಬಂದರೂ ಬಾರದ ಹಾಗೇ ಇರುವಂಥವರ! ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ ಕಣ್ಣ ಕೊನೆಯಿಂದ ಕಿಡಿ ಕಾರಿ ಚಟ ಪಟ ಸಿಡಿದು ಹೊರಟು ಹೋದವರ ಕಾಯುತ್ತೇವೆ ಯಾಕೆ? – […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_549.txt b/Kannada Sahitya/article_549.txt new file mode 100644 index 0000000000000000000000000000000000000000..42206a5479bbe07736b48668303f680cfccbd8d3 --- /dev/null +++ b/Kannada Sahitya/article_549.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚರ್ಮದಡಿಗೆ +ಮೂಳೆ, +ಮಾಂಸ, +ಹರಿವ ಕತ್ತಲು. +ಮುಖದಲ್ಲಿ; +ಕತ್ತಲ ಚಹರೆ +ತೊಟ್ಟ ಭಾವವೆ ಬೇರೆ. +***** +ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. ***** +ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. ***** +ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_55.txt b/Kannada Sahitya/article_55.txt new file mode 100644 index 0000000000000000000000000000000000000000..9bc9356d3cd5c1819738098ef4fc0a9889937b23 --- /dev/null +++ b/Kannada Sahitya/article_55.txt @@ -0,0 +1,92 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚೌಕಟ್ಟು +ಅಡಿಗೆ ಮನೆ, ಹಾಲು, ಮಲಗುವ ಕೋಣೆ +ನೀಟು +ಚೌಕಟ್ಟು +ಮಂಚ…ಹಾಸಿಗೆ…ಹೊದಿಕೆ. +ಚಚ್ಚೌಕ +ಓದುವ ಪುಸ್ತಕ +ಮೇಜು +ಕುರ್ಚಿ +….ಆಲೋಚನೆಯಧಾಟಿ! +ಎಲ್ಲಕ್ಕೂ ಒಂದೊಂದು ಚೌಕಟ್ಟು. +ಬಾಗಿಲು, ಸೂರು, ಗೋಡೆ…. +ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು +ಕಡೆಗೆ, +ವೆಂಟಿಲೇಟರಿನ ತುಂಡು ಆಕಾಶಕ್ಕೂ +ನಾಲ್ಕೇ ಮೂಲೆ! +ಭೂಮಿ ಗುಂಡಗಿರುವುದೇ ಅನುಮಾನ. +ಶಬ್ದಗಳು +ಹಾಳೆಯಾಚೆಗೆ ಜಿಗಿದು +ಅರ್ಥಗಳ ಚೌಕಟ್ಟು ಮೀರಿದರೆ +(ನಿಃ)ಶಬ್ದ ಆಕಾರಗಳ ಪರಿಧಿ ಬೇರೆ +ಅವಕಾಶದ ಅರಿವು ಅದಲು ಬದಲು! +ವಿ ಶಾ ಲ……!! +(ಎಷ್ಟೊಂದು ಜಾಗ ಮೂರಕ್ಶರದಲ್ಲಿ!!!) +ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ +ತಿಳಿ’ ನೀರು ತಳ ಕಾಣುವಹಾಗೆ +ಝುಳು ಝುಳು’ ಅದರ ಸದ್ದು +ಚಿಮ್ಮುವ’ ಅಲೆ ’ತಣ್ಣಗೆ’ ಗಾಳಿ. +ನದಿಗೆ ನೆರಳು ದಡದ ಮರ, +ನೀರ ಜೊತೆ ನಿಂತಲ್ಲೇ ಹರಿವ +ಹೂವು, ಎಲೆ, ರೆಂಬೆ ಕೊಂಬೆಗಳು. +ಕಾಲಿಟ್ಟರೆ ಸುತ್ತ ತರಂಗಗಳು, +ನೀರಿಗಿಳಿದು +ಅಂಗಾತ +ಕೈ ಕಾಲು ಬಡಿದು +ಈಸಿದರೆ, +ಹಾಗೇ +ನೀರ ತಳಕ್ಕೆ ಮುಳುಗಿದರೆ…. +ಖಾಲಿ ಹಾಳೆಯ ಮೇಲೆ +ಹರಿವ ನದಿಯಲ್ಲಿ +ನಾನು +ಮುಳುಗಿದರೆ ನದಿ, ಹಾಳೇಯ ತಳಕ್ಕೆ; +ನುಂಗಿ ನದಿಯ ಹಾಡು +ಮತ್ತೆ ಬಿಳಿ ಹಾಳೆ +ಖಾಲಿ! +ಏನೂ ಆಗದ ಹಾಗೆ…. ಬೆಳ್ಳಗೆ! +ನದಿಯ ನೆನಪಿಗೊಂದು +ಅಮೃತಶಿಲೆಯ ಸ್ಮಾರಕದ ಹಾಗೆ. +ಹೀಗೆ, +ಹಾಳೆಯ ಮೇಲೆ +’ಹಾಡು’ +ಹಚ್ಚೆ ಹೊಯ್ದ ಚಿತ್ತಾರದ ಹಾಗೆ +ಹಾಡು +ಹಾಳೆಯಿಂದೆದ್ದು ಶಬ್ದ, +ಅದರ ಹಿಂದೊಂದು ಶಬ್ದ; +ಶಬ್ದ +ಶಬ್ದಗಳ +ಸರಣಿ +ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! +ಈಗ +ಹಾಳೆಯ ಮೇಲೆ +ಹಾಡು – ಶಬ್ದ +ಹಾಡು – ನಿಃಶಬ್ದ. +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, +ನನ್ನ ಬೊಗಸೆಯಲ್ಲೊಂದು ನದಿ. +ಮೇಲೆರಚಿದರೆ ಹನಿಹನಿಯಾಗಿ +ಚೆಲ್ಲುವುದು ಮೈ ಮೇಲೆ +ನದಿ – ಆಕಾಶ – ಮೋಡ – ಸೂರ್ಯ. +ಬೊಗಸೆ ನೀರು ಕುಡಿದರೆ, ಕುಡಿದಂತೆ +ನದಿ – ಆಕಾಶ – ಮೋಡ – ಸೂರ್ಯರನ್ನ +ಅಡಕ ಯಾರು ಯಾರೊಳಗೆ? +***** +ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […] +ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […] +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_550.txt b/Kannada Sahitya/article_550.txt new file mode 100644 index 0000000000000000000000000000000000000000..e2fb03c9243985b143a23d7f4e1cd7eed1aeb94d --- /dev/null +++ b/Kannada Sahitya/article_550.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ ಸಿಹಿ ಹಂಚಿ ಜನ ತಮ್ಮ ಖುಷಿಯನ್ನ ವ್ಯಕ್ತಪಡಿಸಿದರೆ, ಅತ್ತ ಮೇಧಾ ಪಾಟ್ಕರ್ ಮತ್ತು ಅರುಂಧತಿ ರಾಯ್ ದುಃಖದಿಂದ, ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಮೇಧಾಗಂತೂ ಇಂದು ತಮ್ಮ ಜೀವನದ ಗುರಿಯೇ ಕಳಚಿಬಿದ್ದಂತಾಗಿದೆ. ಅರುಂಧತಿ ರಾಯ್ ಬಗ್ಗೆ ಕಡಿಮೆ ಮಾತಾಡಿದಷ್ಟೂ ಒಳ್ಳೆಯದು – ಆಕೆ ಈ ಆಂದೊಳನಕ್ಕೆ ತನ್ನ ಬುಕರ್ ಬಹುಮಾನದ ಖ್ಯಾತಿಯ ನೆರಳನ್ನ ಹಿಂಬಾಲಿಸುತ್ತಾ ನಂತರ ಬಂದಾಕೆ. +ಮೇಧಾ ಹಿಡಿದ ದಾರಿ ಮೊದಲಿನಿಂದಲೂ ಕಠಿಣವಾದದ್ದು. ಇದು ಅಂತಿಮವಾಗಿ ದುಃಖ, ದುಗುಡ, ನಿರಾಶೆ ಕೊಡುವ ದಾರಿಯೇ ಆಗಿತ್ತು. ಯಾವುದೇ ಒಂದು ದೊಡ್ಡ ವಿಷಯಕ್ಕೆ ವಿರುದ್ಧವಾದ ನಿಲುವು ತೆಗದುಕೊಂಡು ಹಠಹಿಡಿದಂತೆ, ಚಂಡಿ ಹಿಡಿದಂತೆ ಮಾಡಿದರೆ – ಅದನ್ನೇ ಜೀವನದ ಧ್ಯೇಯ ಮಾಡಿಕೊಂಡರೆ, ಚಡಪಡಿಕೆ ತಪ್ಪಿದ್ದಲ್ಲ. ಜೊತೆಗೆ ಒಂದು ನಿಲುವು ತೆಗೆದುಕೊಂಡು ನಿಲುವಿನ ಪರ ಅತಿರೇಕಕ್ಕೆ ಹೋದಾಗ ಸಿಗುವ ಫಲ – ಅದೂ ಅಕಸ್ಮಾತ್ ಸಿಕ್ಕರೆ – ತಾತ್ಕಾಲಿಕವಾದದ್ದಾಗಿರುತ್ತದೆಂದು ನಮಗೆ ಚರಿತ್ರೆ ತೋರಿಸಿಕೊಟ್ಟಿದೆ. ಈಗ ಉಚ್ಚ ನ್ಯಾಯಾಲಯ ಅಣೆಕಟ್ಟು ಕಟ್ಟಲು ಪರವಾನಗಿ ನೀಡಿರುವುದರಿಂದ ಮೇಧಾರಿಗೆ ಸಕಾರಣವಾಗಿ ತಮ್ಮ ಹೋರಾಟ ಮುಂದುವರೆಸಲು ಅನುಕೂಲವಾಗಿದೆ. ಅಕಸ್ಮಾತ್ ನ್ಯಾಯಾಲಯ ನರ್ಮದಾ ಆಂದೋಳನದ ಪರವಾಗಿ ತೀರ್ಪಿತ್ತಿದ್ದರೆ ಆಗ ಏನಾಗಬಹುದಿತ್ತು ಉಹಿಸಿಕೊಳ್ಳಿ… ನರ್ಮದಾ ಬಚಾವಾಯಿತು! ಇನ್ನು ಆಂದೋಳನ ಯಾವುದರ ಬಗ್ಗೆ? ಇಂಥ ಪರಿಸ್ಥಿತಿಯಲ್ಲಿ ಅರುಂಧತಿ ರಾಯ್ ಅಂತಹ ಜನ ತಮ್ಮ ಹಳೇ ಕೆಲಸಕ್ಕೆ ವಾಪಸ್ಸಾಗಿ ಮತ್ತೊಂದು ಕಾದಂಬರಿ ಬರೆಯಬಹುದು – ಆದರೆ ನರ್ಮದಾ ಆಂದೋಳನ ಈಕ್ವಲ್ಸ್ ಮೇಧಾ, ಮೇಧಾ ಈಕ್ವಲ್ಸ್ ನರ್ಮದಾ ಎಂಬಂತಹ ಇಮೇಜಿರುವ ಈಕೆ ಏನು ಮಾಡುತ್ತಾರೆ? +ಹಾಗೆ ನೋಡಿದರೆ ಮೇಧಾರ ಹೋರಾಟದ ಜೀವನದ ದೃಷ್ಟಿಯಿಂದ ಈ ತೀರ್ಪು ಆಕೆಗೆ ಜೀವನದಾನವನ್ನ ಮಾಡಿ ಆಕೆ ಹೋರಾಡುತ್ತಿರುವ ಮೂಲಭೂತ ವಿಷಯವನ್ನ ಜೀವಂತವಾಗಿಟ್ಟಿದೆ ಎನ್ನಬಹುದು. ಈಗ ಗುಜರಾತ್ ಸರಕಾರ ಅಣೆಕಟ್ಟು ಕಟ್ಟಿ ಮುಗಿಸುವವರೆಗೂ ಆಕೆಗೆ ಒಂದು ಎಜೆಂಡಾ ಇದೆ. ಆ ನಂತರವೂ ಪುನರ್ವಸತಿಯ ಮಾತು ಮುಂದುವರೆಸಬಹುದು. ಆದರೆ ಅಣೆಕಟ್ಟಿನ ಎತ್ತರ ಜಾಸ್ತಿ ಮಾಡಲು ಪರವಾನಗಿ ಕೊಡದೇ ಇದ್ದಿದ್ದರೆ ಈ ಹೆಚ್ಚಿನ ಉದ್ದೇಶ ನಾಪತ್ತೆಯಾಗಿಬಿಡುತ್ತಿತ್ತು. +ಒಂದು ರೀತಿಯ ವಿಪರೀತ ನಿಲುವು ತೆಗೆದುಕೊಳ್ಳುವುದು ಮೇಧಾರಿಗೆ ಹೊಸದೇನೂ ಅಲ್ಲ. ಬಹುಶಃ ಆಕೆ ಹೋರಾಡುತ್ತಿರುವ ವಿಷಯಕ್ಕೆ ಇಂಥ ನಿಲುವಿನ ಅವಶ್ಯಕತೆಯಿದ್ದೀತು. ಯಾವುದೇ ವಿಷಯದ ಚರ್ಚೆ ಇಂಥ ವಿಪರೀತ ನಿಲುವಿನಿಂದಲೇ ಪ್ರಾರಂಭವಾಗಿ ಹಂತಹಂತವಾಗಿ ಒಂದೊಂದೇ ಉಪವಿಷಯಗಳಲ್ಲಿ ರಾಜಿ ಅಥವಾ ಒಪ್ಪಂದ ತಲುಪುವ ಪ್ರಾಸೆಸ್ ಆಗಿರುತ್ತದೆ. ಆದರೆ ಮೇಧಾ ಮೊದಲಿನಿಂದಲೂ ಏನನ್ನೂ ಬಿಟ್ಟುಕೊಡಲು ತಯಾರಿರಲೇ ಇಲ್ಲ ಎಂಬಂಥ ಇಮೇಜನ್ನ (ಇದು ನಿಜವೂ ಇರಬಹುದು) ಜನರ ಮುಂದಿಟ್ಟಿದ್ದಾರೆ. ಹಾಗೆ ನೋಡಿದರೆ ನರ್ಮದಾ ಆಂದೋಳನ ಪ್ರಾರಂಭವಾದಾಗ ಚರ್ಚೆಗೊಳಗಾಗುತ್ತಿದ್ದ ಮುಖ್ಯ ವಿಷಯ ಪರಿಸರದ ಸಮತೋಲನದಲ್ಲಿ ಆಗಬಹುದಾದ ಏರುಪೇರಿನ ಬಗ್ಗೆಯಿತ್ತು. ಟೆಹರಿ ಅಣಕಟ್ಟಿನ ವಿಷಯವೂ ಇದೇ ಕಾರಣಕ್ಕಾಗಿ ಸುಂದರಲಾಲ್ ಬಹುಗುಣರಂತಹ ಪರಿಸರವಾದಿಗಳನ್ನು ಆಕರ್ಷಿಸಿತ್ತು. +ಆದರೆ ಜನಸಮೂಹವನ್ನು ಆಕರ್ಷಿಸಿ ಯಾವುದೇ ಆಂದೋಳನವನ್ನ ಜನಪ್ರಿಯ ಮಾಡಬೇಕಾದರೆ ತಕ್ಷಣದ ವಿಷಯವನ್ನ ದೂರದೃಷ್ಟಿಯ ಜೊತೆಗೆ ಸೇರಿಸದಿದ್ದರೆ ಕೈಯೆಣಿಕೆಯ ಕೆಲ ಬುದ್ಧಿಜೀವಿಗಳಷ್ಟೇ ಆ ಆಂದೋಳನದಲ್ಲಿ ಉಳಿದು ಬಿಡುತ್ತಾರೆ. ಇದನ್ನು ಮೇಧಾ ಬಹುಶಃ ಬಹುಬೇಗ ಕಂಡುಕೊಂಡರು ಅನ್ನಿಸುತ್ತದೆ. ಜೊತೆಗೆ ಕೋರ್ಟು ಕಛೇರಿಗಳಲ್ಲಿ ವಾದವಿವಾದ ಮಾಡುವಾಗಲೂ – ಮೂವತ್ತು ವರ್ಷಗಳ ನಂತರ ಆಗಬಹುದಾದ ಪರಿಸರದ ಏರುಪೇರಿನ ಬಗ್ಗೆ ಮಾತ್ರ ಚರ್ಚೆ ನಡೆಸುವುದಕ್ಕಿಂತ ನಾಳೆಯೇ ಆಗಬಹುದಾದ ಅನಾಹುತದ ಬಗ್ಗೆಯೂ ಮಾತನಾಡಿದರೆ ತಕ್ಷಣದ ಸಮಾಧಾನವೂ ಸಿಗಬಹುದು. ಸಮಯಕಳೆದಂತೆ ಆದಿವಾಸಿಗಳ ಪುನರ್ವಸತಿ ಚರ್ಚೆಯ ಮುಖ್ಯವಿಷಯವಾಗುತ್ತಾ ಹೋದದ್ದನ್ನ ನಾವು ಈ ಆಂದೋಳನದಲ್ಲಿ ಕಾಣಬಹುದು. +ಮೇಧಾರಂತಹ ಜನ ಕೈಹಿಡಿದಿರುವ ವಿಷಯ ಸರಳವಾದದ್ದೇನೂ ಅಲ್ಲ. ಹೀಗಾಗಿ ಸಣ್ಣ ಮಕ್ಕಳಂತೆ, ಒಂದು ವಿಚಾರದ ಬಗ್ಗೆ ಸಂಪೂರ್ಣ ಚರ್ಚೆಯಾಗುವುದಕ್ಕೆ ಮೊದಲೇ ಮತ್ತೊಂದು ವಿಷಯ ಎತ್ತಿ ಚಂಡಿ ಹಿಡಿಯುವ ಪ್ರಾಸೆಸ್ ನಮಗೆ ಕಾಣುತ್ತದೆ. ಒಂದು ಕಡೆ ಕೋರ್ಟು, ಕೇಂದ್ರ ಸರಕಾರ, ಮಧ್ಯಪ್ರದೇಶ ಸರಕಾರ ಮತ್ತು ಗುಜರಾತ್ ಸರಕಾರ ಈ ಅಣೆಕಟ್ಟಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಈಗ ಅಣೆಕಟ್ಟಿನ ಎತ್ತರ ಬೆಳೆಸಿದರೆ – (ಅದಕ್ಕಾಗಿ ಅಕ್ಟೋಬರ್ ೩೧, ಸರದಾರ್ ಪಟೇಲರ ಹುಟ್ಟುಹಬ್ಬದಂದು ಪೂಜೆ ನಡೆದು ಕಲಸ ಪ್ರಾರಂಭಮಾಡಿದ್ದಾಗಿದೆ) ಅದರ ಹೆಚ್ಚಿನ ಪ್ರಯೊಜನ ಗುಜರಾತಿನ ಜನಕ್ಕೆ – ಮುಖ್ಯವಾಗಿ ಬರಪೀಡಿತವಾಗಿರುವ ಸೌರಾಷ್ಟ್ರ ಪ್ರದೇಶಕ್ಕೆ ಆಗುವುದೂಂತ ಹೇಳಲಾಗಿದೆ. ಆದರೆ ಪುನರ್ವಸತಿಯ ಕಾರ್ಯದಲ್ಲಿ ಮಧ್ಯಪ್ರದೇಶ (ಅಲ್ಲಿಯ ಹಳ್ಳಿಗಳೂ ಮುಳುಗುವುದರಿಂದ) ಹಾಗೂ ಗುಜರಾತ್ ಸಹಭಾಗಿಗಳಾಗಿರಬೇಕು. ಪುನರ್ವಸತಿಗೆ ತಮ್ಮಲ್ಲಿ ಜಮೀನಿಲ್ಲವೆದು ಮಧ್ಯಪ್ರದೇಶದ ಮುಖ್ಯಮಂತ್ರಿ ಕೆಲದಿನಗಳ ಹಿಂದೆ ಒಂದು ಹೇಳಿಕೆ ಕೊಟ್ಟು ದೊಡ್ಡ ಬಾಂಬನ್ನೇ ಹಾಕಿದ್ದಾರೆ. ಹೀಗಾಗಿ ಈ ಅಣೆಕಟ್ಟಿನ ಎತ್ತರ ಬೆಳೆಸುವ ಬಗ್ಗೆ ಮಧ್ಯಪ್ರದೇಶ ಸರಕಾರದ ಉತ್ಸಾಹ ಗುಜರಾತ್ ಸರಕಾರದಷ್ಟು ಇಲ್ಲ. ಆದರೆ ಮೇಧಾರ ಕರ್ಮಭೂಮಿ, ಉಪವಾಸ ಸತ್ಯಾಗ್ರಹಗಳು ಮಧ್ಯಪ್ರದೇಶದಲ್ಲಿ ನಡೆಯುತ್ತವೆಯೇ ಹೊರತು ಗುಜರಾತಿನಲ್ಲಿ ಅಲ್ಲ. ಯಾಕೆ? +ಹಲವು ವರ್ಷಗಳ ಹಿಂದೆ ಶೂಲಪಾಣೇಶ್ವರ ದೇವಾಲಯ ಮುಳುಗಡೆಯಾಗುವಾಗ ತಾವು ಅಲ್ಲಿ ಆತ್ಮಸಮರ್ಪಣೆ ಅಥವಾ, ಆಕೆಯ ಭಾಷೆಯಲ್ಲಿ ಜಲಸಮಾಧಿ – ಮಾಡಿಕೊಳ್ಳುವೆನೆಂದು ಹೇಳಿದ ಮೇಧಾ, ಅಂಥ ದುಸ್ಸಾಹಸಕ್ಕೆ ಕೈ ಹಾಕದೇ ಚರ್ಚ್‌ಗೇಟ್ ಮುಂಬಯಿಯಲ್ಲಿ ಉಪವಾಸ ಕೂತರು. ಈಗ ಭೋಪಾಲದಲ್ಲಿ ೫ ದಿನದ ಉಪವಾಸ ಮಾಡಿದರು. ಮೇಧಾ ಯಾಕೆ ಅಣೆಕಟ್ಟಿನ ಕಲಸ ಆಗತ್ತಿರುವ (ಕೇವಡಿಯಾ ಕಾಲೋನಿ) ಸ್ಥಳದ ಹತ್ತಿರ ಉಪವಾಸ ಕೂಡುವುದಿಲ್ಲ, ಕಡೆಗೂ ಆತ್ಮಾಹುತಿಯ ಸಾಹಸಕ್ಕೆ ಯಾಕೆ ಕೈ ಹಾಕಲಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟದ ಕೆಲಸವೇನೂ ಅಲ್ಲ. ಕೇವಡೀಯಾ ಕಾಲೋನಿಯಲ್ಲಿ ಉಪವಾಸ ಕೂತರೆ ಪತ್ರಕರ್ತರು ಅಷ್ಟುದೂರ ಹೋಗಿ ಈ ಬಗ್ಗೆ ವರದಿ ಮಾಡಲಾರರು, ಇವರ ಚಿತ್ರ ಛಾಪಿಸಲಾರರು. ಉಪವಾಸದ ಮುಖ್ಯ ಉದ್ದೇಶ ಜನರಿಗೆ ನಾಯಕರಿಗೆ ಈ ಸಂದೇಶ ಮುಟ್ಟಿಸುವುದೇ ಆಗಿರುವುದರಿಂದ ಇವುಗಳು ಜನರಿರುವ ಜಾಗದಲ್ಲಿ, ಸರಕಾರದ ಗಮನ ಸೆಳೆವ ಜಾಗದಲ್ಲಿ ಆಗುತ್ತದೆ. ಇಂಥ ಆಂದೊಳನಗಳಿಗೆ ಆತ್ಮಾಹುತಿ ಒಂದು ಪರಿಹಾರವೂ ಅಲ್ಲ. ಮೇಧಾರ ಆತ್ಮಾಹುತಿಯಾದರೆ ಅದು ಹೋರಾಟದ ಅಂತ್ಯವೂ ಆಗಿಬಿಡುತ್ತದೆ. ಈಗಲೂ ಆತ್ಮಾಹುತಿಯ ಮಾತುಗಳು ಕೇಳಿಬರುತ್ತಿವೆ – ಆದರೂ ಆತ್ಮಾಹುತಿ ಹೆಚ್ಚೂ ಕಡಿಮೆ ಸೋಲನ್ನೊಪ್ಪಿದಂತೆಯೆ ಎಂದು ನಾವುಗಳು ನೆನಪಿಡಬೇಕು. ಯಾವುದೇ ಮಾತುಕತೆಯ, ಲೇನ್‌ದೇನ್ ಕಾರ್ಯಕ್ರಮದಲ್ಲಿ ಮೊದಲಿಗೇ ವಿಪರೀತ ನಿಲವು ತಗೆದುಕೊಳ್ಳಬಾರದೆಂಬ ಪಾಠವನ್ನು ಮಾತ್ರ ಮೇಧಾ ಕಲಿತಿಲ್ಲವೆಂದೇ ಹೇಳಬೇಕು. +ಆದರೆ ಈಗ ಆಂದೋಳನ ಒಂದು ವಿಚಿತ್ರ ಹಂತ ತಲುಪಿಬಿಟ್ಟಿದೆ. ಈಗ ಮೇಧಾ ಮತ್ತು ಆಂದೋಳನಕಾರರು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ಪರಿಸರ, ಪುನರ್ವಸತಿ – ಎರಡರ ಬಗೆಗೂ ಒಂದೇ ಧ್ವನಿಯಲ್ಲಿ ಮಾತನಾಡದೇ ಪುನರ್ವಸತಿಯ ವಿಷಯವನ್ನ ಪಟ್ಟಾಗಿ ಹಿಡಿದು, ಸರಕಾರದಿಂದ ಕೆಲಸ ತೆಗೆಯುವ ಅಜೆಂಡಾ ಯಾರಾದರೂ ಕೈ ಹಿಡಿಯಲೇ ಬೇಕಾಗಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಕೆಲಸ ತಕ್ಷಣ ಪ್ರಾರಂಭಮಾಡಿ ಗುಜರಾತಿನ ಬಿಜೆಪಿ ಸರಕಾರ ತನ್ನ ಆಂತರಿಕ ಸಮಸ್ಯೆಗಳನ್ನ, ಈಚೆಕೆ ಪಂಚಾಯತಿ, ಮುನಿಸಿಪಲ್ ಚುನಾವಣೆಗಳಲ್ಲಿ ಮಣ್ಣು ಮುಕ್ಕಿದ ವಿಷಯವನ್ನ ಮರೆತು ಹೊಸ ಚೈತನ್ಯದಿಂದ ಮುಂದುವರೆಯುತ್ತಿದೆ. ಎನ್‌ಬಿ‌ಎ ಆಂದೋಳನಕಾರರು ಸ್ವಲ್ಪ ದಿಕ್ಕೆಟ್ಟವರಂತೆ ಕಾಣುತ್ತಿದ್ದಾರೆ…. +ಉಚ್ಚ ನ್ಯಾಯಾಲಯದ ತೀರ್ಪಿನಿಂದ ಕೋಪಗೊಂಡಿರುವ ಆಂದೋಳನದವರು ಇದು ತಮಗೆ ಒಪ್ಪಿಗೆಯಿಲ್ಲವೆಂದು ಪಟ್ಟುಹಿಡಿದು ಕೂತಿದ್ದಾರೆ. ಕೋರ್ಟಿನಿಂದ ತೀರ್ಪು ಬಂದ ಮೇಲೆ – ಇದು ಒಪ್ಪಿಗೆಯಿಲ್ಲವೆಂದು ಹೇಳುವುದು ಎಷ್ಟು ಸಮಂಜಸ? ತಮಗೆ ವ್ಯತಿರೇಕವಾಗಿ ಬಂದಿದ್ದು ಗುಜರಾತ್ ಸರಕಾರವೂ ಇದೇ ನಿಲುವನ್ನ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು? ನ್ಯಾಯಪಾಲಿಕೆಯಂಥಹ ಸಂಸ್ಥೆಯ ತೀರ್ಪನ್ನ “ಟಿoಣ ಚಿಛಿಛಿeಠಿಣಚಿbಟe ಣo ಣhe ಚಿಜಿಜಿeಛಿಣeಜ ಠಿeoಠಿಟe” ಎಂಬಂತ ನಿಲುವನ್ನ ಬುದ್ಧಿಜೀವಿಗಳಾದ ಮೇಧಾರಂತಹವರು ತೆಗೆದುಕೊಂಡಾಗ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿರುವವರೆಲ್ಲ ಎದ್ದು ಕೂತುಕೊಳ್ಳುವ ಸಮಯ ಬರುತ್ತದೆ. ಆದರೆ ತೀರ್ಪು ಬಂದಕೂಡಲೇ ಮೇಧಾ ಹಾಗೆ ಪ್ರತಿಕ್ರಯಿಸಿದರೂ, ಈಚೆಗೆ ಕೊಟ್ಟ ಸಂದರ್ಶನವೊಂದರಲ್ಲಿ ತಮ್ಮ ಮುಂದಿರುವ ಸಂವಿಧಾನಬದ್ಧ ದಾರಿಗಳನ್ನ ಚರ್ಚಿಸಿರುವುದು ಒಳ್ಳಯದೇ ಆಗಿದೆ. ಇಲ್ಲವಾದಲ್ಲಿ ಮೇಧಾ ಮತ್ತು ಆಂದೊಳನದವರು ತಮಗೆ ಭಾರತ ಸಂವಿಧಾನದ ವ್ಯವಸ್ಥೆಯ ಬಗ್ಗೆಯೇ ನಂಬಿಕೆಯಿಲ್ಲವೆಂದು ಹೇಳಿದಂತಾಗುತ್ತಿತ್ತು. +ಅಕಸ್ಮಾತ್ ಆಂದೋಳನ ಈ ದಾರಿ ಹಿಡಿದರೆ, ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸುವ ಹಂತ ತಲುಪಿದರೆ ಬಹುಶಃ ಮೇಧಾರಿಗೆ ಈಗಿರುವ ಸಪೂರ್ಟ್ ಕೂಡಾ ಕಡಿಮೆಯಾಗುವ ಅಪಾಯವಿದೆ. +ಮೇಧಾ ಕೋರ್ಟಿನ ಬಗ್ಗೆ ತಮಗೆ ನಂಬಿಕೆಯಿಲ್ಲವೆಂದಮಾತ್ರಕ್ಕೆ ಆಕೆ ಚರ್ಚಿಸುತ್ತಿರುವ ಮೂಲಭೂತ ವಿಷಯಗಳ ಮಹತ್ವ ಕಡಿಮೆಯಾಯಿತೆಂದು ಯಾರೂ ನಂಬಬಾರದು. ಆದರೆ ನಾವುಗಳು ನಮ್ಮಲ್ಲರ ಜೀವನವನ್ನ ಒಂದು ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ಬದುಕಲು ನಮ್ಮ ಸಂವಿಧಾನವನ್ನ ರೂಪಿಸಿರುವುದರಿಂದ, ಈ ಸಂಸ್ಥೆಗಳ ಉದ್ದೇಶವನ್ನ ಪ್ರಶ್ನಿಸುವುದು – ಅದರಲ್ಲೂ ಮೇಧಾ, ಅರುಂಧತಿಯಂತಹ ಬುದ್ಧಿಜೀವಿಗಳು ಇದನ್ನ ಪ್ರಶ್ನಿಸುವುದು ಬಹಳ ಭಯಾನಕವಾದ ಪರಿಸ್ಥಿತಿಯನ್ನುಂಟುಮಾಡುತ್ತದೆ. ತಮಾಷೆಯೆಂದರೆ ಇಂಥಹ ಒಂದು ತೀರ್ಪು – ಕಾನೂನಿನ ತಕ್ಕೆಗೇ ಸಿಗಲಾರರು ಎಂದು ಭಾವಿಸಿದ್ದ ಮಾಜಿ ಪ್ರಧಾನಿ ನರಸಿಂಹರಾವ್, ಜಯಲಲಿತಾರು ಜೈಲಿನ ಬಾಗಿಲು ತಟ್ಟುತ್ತಿರುವ ಸಂದರ್ಭದಲ್ಲಿ – ನ್ಯಾಯಪಾಲಿಕೆಯ ವ್ಯವಸ್ಥೆಯಲ್ಲಿ ನಂಬಿಕೆ ಮರುಕಳಿಸುತ್ತಿರುವ ಸಂದರ್ಭದಲ್ಲಿ, ಬಂದಿದೆ. ದೊಡ್ಡ ನೀರಾವರಿ ಯೋಜನೆಗಳು, ಅಣೆಕಟ್ಟುಗಳು ಎಷ್ಟು ಜಟಿಲವಾದ ವಿಷಯವೆಂದು ನಿರೂಪಿಸಲೋ ಎಂಬಂತೆ ಉಚ್ಚನ್ಯಾಯಾಲಯದ ತೀರ್ಪೂ ಸರ್ವಾನುಮತದಿಂದ ಕೂಡಿಲ್ಲ. ಮೇಧಾ ಈ ಭಿನ್ನಾಭಿಪ್ರಾಯವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ! +ಈ ಎಲ್ಲ ಜನಾಂದೋಳನಗಳೂ ಎರಡು ಧಾರೆಗಳನ್ನ ನಮ್ಮ ಮುಂದಿಡುತ್ತದೆ. ಜನಾಂದೊಳನಗಳಲ್ಲಿ ಬರಬಹುದಾದ ಸಣ್ಣಪುಟ್ಟ ಆಂದೊಳನಗಳನ್ನ ಸದ್ಯಕ್ಕೆ ಬಿಟ್ಟು ಬಿಡೋಣ. ದೊಡ್ಡ (ನರ್ಮದಾದಂತಹ) ಆಂದೋಳನಗಳಲ್ಲಿ ನಾವು ಯಾವುದಾದರೂ ಒಂದು ವಿಚಾರದ “ಪರ” ವಾಗಿ ಹೋರಾಡುವಾಗ, ಸೋಲೆಂಬುದು ಇಲ್ಲವೇ ಇಲ್ಲ. ಉತ್ತರಾಖಂಡ್, ಜಾರ್‌ಖಂಡ್, ಗೊರ್ಖಾಲ್ಯಾಂಡ್… ಇತ್ಯಾದಿ ಆಂದೋಳನಗಳನ್ನ ತೆಗೆದುಕೊಂಡರೆ ಬೇರೆ ಬೇರೆ ಹಂತದಲ್ಲಿ (ಸಂವಿಧಾನಾವನ್ನ ಒಪ್ಪಿ, ಅದರ ಚೌಕಟ್ಟಿನೊಳಗೆ ಕೆಲಸ ಮಾಡಲು ತಯಾರಾದಾಗ) ಅದರ ನಾಯಕರು – ಆ ವಿಚಾರಧಾರೆ – ಸಫಲತೆ ಪಡೆದದ್ದನ್ನ ನೋಡಬಹುದು. ಸಫಲತೆ ಪಡೆಯದ ವಿದರ್ಭ, ತೆಲಂಗಾಣಾ, ಕೊಡಗು ಇತ್ಯಾದಿಗಳು ಎಂದಿಗೂ “ಟosಣ ಛಿಚಿuse” ಆಗುವುದೇ ಇಲ್ಲ.. ಎಲ್ಲಿಯವರೆಗೆ ಅದು ಸಫಲವಾಗುವುದಿಲ್ಲವೋ ಅಲ್ಲಿಯವರೆಗೆ ಅದರ ನಾಯಕರ ಕೆಲಸ ಮುಂದುವರೆಯುತ್ತಲೇ ಇರುತ್ತದೆ. ಅದು ಸಫಲವಾದಾಗ ಅದನ್ನ ಕಟ್ಟುವ ಕಾಪಾಡುವ ಕೆಲಸ ಮಾಡಬಹುದು (ದುರಾದೃಷ್ಟದಿಂದ ಅದರ ನಾಯಕತ್ವ ಆಂದೋಳನಕಾರರಿಗೆ ಸಿಗದಿರಲೂಬಹುದು – ಜಾರ್‌ಖಂಡ್‌ನಲ್ಲಿ ಶಿಬೂ ಸೋರೆನ್‌ಗೆ ಆದ ಹಾಗೆ..) +ಅದೇ ಯಾವುದೇ ವಿಷಯಕ್ಕೆ ವಿರುಧ್ಧವಾಗಿ ಕೆಲಸ ಮಾಡಿದಾಗ – ಸಫಲತೆ ಪ್ರಾಪ್ತವಾದರೂ ಅದು ಒಂದು “ಜeಚಿಜ eಟಿಜ” ಆಗಿಬಿಡುತ್ತದೆ. ನರ್ಮದಾ ಅಣೆಕಟ್ಟು ನಿಲ್ಲಿಸಿಬಿಟ್ಟರೆ ಇಂಥದೇ ಕೆಲಸದ ಮೇಲೆ ತಮ್ಮಿಡೀ ಜೀವನವನ್ನ ಕಳೆದಿರುವ ಮೇಧಾ ಏನು ಮಾಡುತ್ತಾರೆ… ಬೇರೊಂದು ಅಣೆಕಟ್ಟನ್ನ ವಿರೋಧಿಸುತ್ತಾರೆಯೇ, ಅಥವಾ ವ್ಯವಸ್ಥೆಯ ಮುಖ್ಯಧಾರೆಯಲ್ಲಿ ಬೆರೆತು ಹೋಗುತ್ತಾರೆಯೇ… +ಸ್ವಾತಂತ್ರ ಸಂಗ್ರಾಮದಂತಹ ಹೋರಾಟಗಳು ಬೇರೆಯೇ ಸ್ಥರದವು – ಅಲ್ಲಿ ಹೋರಾಟಗಾರರು ಕೈಗತ್ತಿಕೊಂಡಿರುವ ವಿಷಯ ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸಿ, ಅದರೊಂದಿಗಿನ ಕೊಂಡಿಗಳನ್ನು ಮುರಿಯುವುದೇ ಆಗಿದೆ. ಆ ಸಂದರ್ಭದಲ್ಲಿ ಮೂಲಭೂತ ಉದ್ದೇಶವೇ ಇರುವ ವ್ಯವಸ್ಥೆಯನ್ನ ಪ್ರಶ್ನಿಸುವುದಾಗಿರುತ್ತದೆ. ಇಂಥ ಸಂಗ್ರಾಮಗಳಲ್ಲಿ – ಒಂದು ಭೂಪ್ರದೇಶ ಹಂಚಿಹೋಗಬಹುದು (ರಷ್ಯಾ, ಯುಗೋಸ್ಲಾವಿಯಾ…) ಅಥವಾ ಸಂವಿಧಾನವೇ ಬದಲಾಗಬಹುದು (ದಕ್ಷಿಣ ಆಫ್ರಿಕಾ). ಆದರೆ ಮೇಧಾ ಎತ್ತಿರುವ ವಿಷಯ ಆ ದೃಷ್ಟಿಯಿಂದ ಪರಿಸರ ಮತ್ತು ದೊಡ್ಡ ಅಣಕಟ್ಟುಗಳಿಂದ ಆಗಬಹುದಾದ ಕಷ್ಟನಷ್ಟಗಳಿಗೆ ಸೀಮಿತವಾಗಿದೆ. +ಇಲ್ಲಿ ಗುಜರಾತಿನಲ್ಲಿ ಎಲ್ಲರೂ ಕೋರ್ಟಿನ ತೀರ್ಪಿನಿಂದ ಖುಷಿಗೊಂಡಿದ್ದಾರೆ. ಇದೊಂದು ಮರೀಚಿಕೆಯಂತೆ ಎಲ್ಲರಿಗೂ ಕಾಣುತ್ತಾ ಇದೆ. ಆದರೆ ಮೇಧಾರನ್ನ ಟೀಕಿಸುವವರೆಲ್ಲ ಮುಳುಗಲಿರುವ ಆದಿವಾಸಿ ಗ್ರಾಮಗಳ ಜನರಬಗ್ಗೆ ಯೋಚನೆ ಮಾಡಬೇಕಾಗಿದೆ. ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲವೆಂಬ ಆರೋಪವನ್ನ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. +ಯಾವುದೇ ಪ್ರಗತಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ಮಂದಿಯ ಲಾಭಕ್ಕಾಗಿ ಕೆಲವರು ನಷ್ಟಹೋಗುತ್ತಾರೆ. ಮೇಧಾ ಈ ಮಂದಿಯ ನಷ್ಟವನ್ನಲ್ಲದೇ, ಆಗಬಹುದಾದ ಲಾಭದ ಲೆಕ್ಕಾಚಾರವನ್ನೂ ಪ್ರಶ್ನಿಸುತ್ತಿದ್ದಾರೆ. ಕೋರ್ಟು ಲಾಭದ ಬಗ್ಗೆ ತೀರ್ಪನ್ನ ಕೊಟ್ಟುಬಿಟ್ಟಿದಯಾದ್ದರಿಂದ – ನಮಗೆ ಇಷ್ಟವಿಲ್ಲದಿದ್ದರೂ ಅದನ್ನ ಒಪ್ಪಲೇ ಬೇಕಾಗಿದೆ. ಈಗ ಮೇಧಾರ ಕೆಲಸ ಆದಿವಾಸಿಗಳ ನಷ್ಟವನ್ನ ಕಡಿಮೆ ಮಾಡುವುದು ಹೇಗೆಂದು ಆಲೋಚಿಸುವುದಾಗಬೇಕಾಗಿದೆ. ಜೊತೆಗೆ ಆಂದೋಳನಕ್ಕಾಗಿರುವ ಧಕ್ಕೆಯಿಂದಲೂ ಚೇತರಿಸಿಕೊಂಡು ಮುಂದುವರೆಯಬೇಕಾಗಿದೆ. ಆದರೆ ಕುತೂಹಲದ ವಿಷಯವೆಂದರೆ – ತೀರ್ಪು ಮೇಧಾರ ಪರವಾಗಿದ್ದಿದ್ದರೆ ಮೇಧಾ ಮುಂದಿನ ಹತ್ತು ವರ್ಷಗಳಲ್ಲಿ ಏನು ಮಾಡುತ್ತಿದ್ದರು ಎಂಬುದು. +ಉಚ್ಚನ್ಯಾಯಾಲಯ ಈ ಕುತೂಹಲವನ್ನ ನೀಗಿಸುವಂತಹ ತೀರ್ಪನ್ನ ಕೊಟ್ಟಿಲ್ಲವಂದಷ್ಟೇ ಹೇಳಬೇಕು. ಹೀಗಾಗಿ ಮೇಧಾ ತಮ್ಮ ಕೆಲಸವನ್ನ (ಬಹುಶಃ ಸಂವಿಧಾನದ ಚೌಕಟ್ಟಿನೊಳಗೆ – ಅಥವಾ ಹಾಗೆಂದು ಆಶಿಸೋಣ) ಯಾವ ಚಿಂತೆಯೂ ಇಲ್ಲದೇ ಮುಂದುವರೆಸಬಹುದು. +***** +ಎಂ ಎಸ್ ಶ್ರೀರಾಂರವರು ಆರು ವರ್ಷಗಳ ಹಿಂದೆ ಬರೆದ ಈ ಲೇಖನವನ್ನು ಅವರು ಮತ್ತೆ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಅಲ್ಲಿ ಸಾಕಷ್ಟು ಚರ್ಚೆಯೂ ಆಗಿದೆ. ಲೇಖನ ಕನ್ನಡಸಾಹಿತ್ಯ.ಕಾಮ್ ಓದುಗರ ಗಮನಕ್ಕೆ ಬರಲಿ ಹಾಗು ಮುಂದೆ ಅರ್ಕೈವ್‌ಗೂ ಸೇರಲಿ ಎಂದನ್ನಿಸಿ ಪ್ರಕಟಿಸಲಾಗಿದೆ. ಮೇಧಾರವರ ಬಗೆಗೆ ನರ್ಮದ ಬಚಾವ್ ಆಂದೋಳನದ ಬಗೆಗೆ ಉದಯವಾಣಿಯಲ್ಲಿ ಅನಂತಮೂರ್ತಿಯವರು ಬರೆದ ಲೇಖನವನ್ನು‌ಇದೇ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.- ಜೊತೆಗೆ ಕರ್ನಾಟಕದ ತಡಡಿ ಯೋಜನೆಯ ಬಗೆಗೂ ಸಂತೋಷ ಕುಮಾರ್ ಮೆಹಂದಳೆಯವರ ಲೇಖನವನ್ನು ಪ್ರಕಟಿಸಲಾಗಿದೆ. ಸಂ +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […] +ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು […] +-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_551.txt b/Kannada Sahitya/article_551.txt new file mode 100644 index 0000000000000000000000000000000000000000..819f4fdfe6466a64672d996c3f39d09ffa6b9c3a --- /dev/null +++ b/Kannada Sahitya/article_551.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಿಂದೆಲ್ಲ ಪರದೇಶ ಸುತ್ತುವಾಗ ಬರೆದಿಡುವ ಪ್ರಯತ್ನ ಮಾಡಿರಲಿಲ್ಲ. ಶಿಸ್ತುರಹಿತವಾದ ಬದುಕು ಅಥವಾ ಬರೆಯಲಾಗದ ಸೋಮಾರಿತನ ಇದಕ್ಕೆ ಕಾರಣವಾಗಿರಬಹುದು. ಆದರೆ ಬಾಳಿನ ಮುಸಂಜೆಯಲ್ಲಿ ಬರೆದಿಟ್ಟ ಈ ಅನುಭವಗಳು ಅನ್ಯರಿಗೆ ಉಪಯೋಗವಾಗದಿದ್ದರೂ, ನನ್ನನ್ನು ನೆನಪಿನ ಆಳಕ್ಕೆ ಕೊಂಡೊಯ್ಯಬಹುದೆನ್ನುವ ದೂರದ ನಂಬಿಕೆ ಈ ಬರವಣಿಗೆಗೆ ಕಾರಣ ಪ್ರೇರಣೆ. +ಪೌರಾತ್ಯ ರಾಷ್ಟ್ರಗಳ ಬಗ್ಗೆ ನಮಗಿರುವ ಆವಜ್ಞೆ ನಂಬಲಸಾಧ್ಯ. ನಮ್ಮ ಓದು, ಬೆಳೆದ ವಾತಾವರಣ, ಪಾಶ್ಚಿಮಾತ್ಯ ರಾಷ್ಟ್ರಗಳ ಗುಲಾಮಗಿರಿ (ಭೌತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ)ಇದಕ್ಕೆ ಕಾರಣ. ನಮ್ಮ ಪಕ್ಕದ ಬರ್ಮಾದ ಬಗ್ಗೆ ನಮಗೇನೇನೂ ತಿಳಿದಿಲ್ಲ. ಎಲ್.ಟಿ.ಟಿ.ಯವರ ದಾಳಿ, ಈಲಂವಾದ, ಶ್ರೀ ರಾಜೀವ್‌ಗಾಂಧಿಯವರ ಹತ್ಯೆ ಆಗದೆ ಇದ್ದಿದ್ದರೆ, ನಾವು ಶ್ರೀಲಂಕಾದ ಬಗ್ಗೆಯೂ ಇಂತಹ ಅಜ್ಞಾನವಿಟ್ಟುಕೊಳ್ಳುತ್ತಿದ್ದೆವು. ಜಯಸೂರ್ಯನಂತಹ ಕ್ರಿಕೆಟ್ ಪಟುವನ್ನು ನೋಡಿದಾಗಲೇ ನಾವು ಗವಾಸ್ಕರ್, ಸಚಿನ್, ಭ್ರಮಾಲೋಕದಿಂದ ಹೊರಬಂದದ್ದು. ಅದೇನೇ ಇರಲಿ ಈ ಬಾರಿ ಜಾಗತಿಕ ಬ್ಯಾಂಕಿನಿಂದ ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್ ದೇಶಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಸುರಕ್ಷಿತ ಹಾಗೂ ಸಾಕಷ್ಟು ಕುಡಿಯುವ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯದ ಬಗ್ಗೆ, ಸಾಲ ಮತ್ತು ಅನುದಾನ ಬಂದಾಗ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತಿ ರಾಜ್ಯ ಮಂತ್ರಿಯಾಗಿ, ಸಹಜವಾಗಿಯೇ ಈ ಬಗ್ಗೆ ಆಸಕ್ತಿ ತಾಳಿದೆ. ಆ ಯೋಜನೆಗಳ ಅನುಷ್ಟಾನದಲ್ಲಿ ಆಗುತ್ತಿದ್ದ ವಿಳಂಬವಂತೂ ಹೇಲತೀರದಷ್ಟು. ಇಂತಹ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿರುವ ನಮ್ಮ ಪಕ್ಕದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಾದ ಥಾಯ್‌ಲ್ಯಾಂಡ್, ಫಿಲಿಪಿಯನ್ಸ್ ಹಾಗೂ ಇಂಡೋನೇಷಿಯ ದೇಶಗಳಿಗೆ ಹೋಗಿ ಅವರ ಅನುಭವ ಹಾಗೂ ಯೋಜನೆಗಳ ಪ್ರತಿಫಲ ಕಣ್ಣಾರೆ ಕಾಣಲು. ನಮ್ಮ ಇಲಾಖೆಯ ಕಾರ್ಯದರ್ಶಿ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ, ಹಾಗೂ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕೊಂಗವಾಡರ ಜೊತೆಗೆ ೨೪:೨೫ರ ಮಧ್ಯರಾತ್ರಿ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ‘ಥಾಯ್’ ವಿಮಾನದಲ್ಲಿ ಪ್ರಯಾಣ ಬೆಳೆಸಿದೆವು. ನಮ್ಮ ಭಾರತೀಯ ಸಮಯಕ್ಕಿಂತ ೧-೩೦ ತಾಸು ಮುಂದು(ಪೂರ್ವಾಭಿಮುಖವಾಗಿ ಪ್ರಯಾಣ ಬೆಳೆಸಿದ್ದರಿಂದ). ಬೆಳಿಗ್ಗೆ ಬ್ಯಾಂಕಾಕ್‌ನಲ್ಲಿ ಇಳಿದಾಗ, ನಮ್ಮ ಧೂತವಾಸದ ಹಿರಿಯ ಅಧಿಕಾರಿ ಶ್ರೀ ಅರುಣ್ ಹಾಗೂ ಅವರ ಸಹಾಯಕ ಶ್ರೀ ಪೈಜಲ್ (ಥಾಯ್ ನಾಗರೀಕ) ನಮ್ಮನ್ನು ಎದುರುಗೊಂಡರು. ರಾಜತಾಂತ್ರಿಕ ಪಾಸ್ ಪೋರ್ಟ್‌ಯಿದ್ದುದರಿಂದ, ದೇಶದೊಳಗೆ ಹೋಗುವ ಪರವಾನಗಿ (ವೀಸಾ) ಒಂದರ್ಧ ತಾಸಿನಲ್ಲೆಸಿಕ್ಕಿತು. “ಹೇಗಿದ್ದೀರಿ? ನಿಮಗೆ ಸ್ವಾಗತ” ಎಂದು ಅಚ್ಚಕನ್ನಡದಲ್ಲಿ ಸ್ವಾಗತಿಸಿದ ಶ್ರೀ ಅರುಣ್ ಅವರು ಕನ್ನಡಿಗರು, ಅದರಲ್ಲೂ ಬೆಂಗಳೂರಿನವರು. ಇದೊಂದು ಸಮಾಧಾನದ ಸಂಗತಿಯೆ. +ಥಾಯ್‌ಲ್ಯಾಂಡ್, ಪಟ್ಟಾಯ, ಬ್ಯಾಂಕಾಕ್‌ಯೆಂದರೆ, ಬೆಲೆವೆಣ್ಣುಗಳ ಮೈಮಾರುವ ಸೂಳೆಯರ ನಾಡೆಂದೆ ಅನೇಕರ ಭಾವನೆ. ಈ ಕಲ್ಪನೆಯ ರೋಮಾಂಚನದಲ್ಲಿ ಅನೇಕ ಪ್ರವಾಸಿಗರು ಅಲ್ಲಿಗೆ ಹೋದದ್ದು ಹೋಗುತ್ತಿರುವುದು ನಿಜ. ಆದರೆ ಇದು ಮೇಲ್ ನೋಟಕ್ಕೆ ಕಾಣುವ ಮಾಯಾ ಪ್ರಪಂಚ. ಆದರೆ ಆ ಸುರದ್ರೂಪಿ ಖೇಮರ ಬುಡಕಟ್ಟಿನ ಕುಳ್ಳಜನ, ವಿನಯವಂತರು, ಸಂಪ್ರದಾಯಬದ್ಧರು,ಅದಕ್ಕಿಂತ ಹೆಚ್ಚಾಗಿ ಶ್ರಮಜೀವಿಗಳು. ಅಮೇರಿಕಾದ ಪ್ರಭಾವ ಹೆಚ್ಚಾಗಿದೆ ನಿಜ. ಆದರೂ ಬೌದ್ಧ ಧರ್ಮದ ಪ್ರಭಾವ ಅವರ ನರನಾಡಿಗಳಲ್ಲಿದೆ. ಅಮೇರಿಕಾದ ಗಗನಚುಂಬಿಗಳನ್ನು ನಾಚಿಸುವಂತ ಕಛೇರಿ ಕಟ್ಟಡಗಳ ಮುಂದೆ ಚಿಕ್ಕ ಚಿಕ್ಕ ದೇವಾಲಯಗಳು. ಸುಂದರವಾದ ಚಿತ್ತಾರದ ಕಟ್ಟಿಗೆಯ ಗೂಡುಗಳು ಇವೆ. (ಖಿemಠಿಟes oಜಿ sಠಿiಡಿiಣs) ಸಂಪೂರ್ಣ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಿರುವ ವಾಲವೋ, ನಿಶಾನ್, ಮಿಟ್ಸುಬುಸಿ, ತೂಯಟೋ ಮೊದಲಾದ ಕಾರುಗಳಲ್ಲಿ ಬಂದಿಳಿಯುವ, ಅಲಂಕರಿಸಿಕೊಂಡ ಲಲನೆಯರು ಹಾಗೂ ಇತರ ಅಧಿಕಾರಿಗಳು, ಕಛೇರಿ ಒಳಗಡೆ ಹೋಗುವಾಗ ಈ ಚಿಕ್ಕ ಗೂಡುಗಳ ದೇವರಿಗೆ ನಮ್ಮಂತೆ ಕರಜೋಡಿಸಿ, ಶಿರಬಾಗಿ ನಮಸ್ಕರಿಸಿ ಒಳಹೋಗುತ್ತಾರೆ. +ಒಂದರ್ಥದಲ್ಲಿ “ಪಾಶ್ಚಿಮಾತ್ಯರ ಕಲ್ಪನೆಯ” ‘ಪ್ರಜಾಪ್ರಭುತ್ವ’ ನಮಗೆ ಹೊಸದು. ಒಮ್ಮೊಮ್ಮೆ ಅಸಂಗತ ಸಹ. ಇಡೀ ಥಾಯ್ಲ್ಯಾಂಡಿನ ಸಾಸ್ಕೃತಿಕ, ಆಧ್ಯಾತ್ಮಿಕ ಹಸಿವಿನ ಅಗತ್ಯವನ್ನು ಪೂರೈಸಿದವರು ನಾವು. ಆದರೆ ನಮ್ಮ ತಾಯಿನಾಡಿನಿಂದ ಬೌದ್ಧ ಮತ ಧರ್ಮ ಪಲಾಯನ ಮಾಡಿಸಿದ ಪರಮ ಅಸಹಿಷ್ಣುಗಳು; ದಿವಂಗತ ದ್|ಬಿ.ಆರ್.ಅಂಬೇಡ್ಕರ್ ಹಿಂದುವಾಗಿ ಸಾಯಲಾರೆನೆಂದು ಸಾರಿ, ಅವರ ಕೊನೆಯ ದಿನಗಳಲ್ಲಿ “ಬೌದ್ಧ ಮತಾವಲಂಬಿ”ಗಳಾಗಿದ್ದರಿಂದ, ಕೆಲವು ಲಕ್ಷ ದಲಿತಬೌದ್ಧರನ್ನು ಮಹಾರಾಷ್ಟ್ರ, ಕರ್ನಾಟಕದ ಉತ್ತರಭಾಗ ಮೊದಲಾದ ಕಡೆಯಲ್ಲಿ ನೋಡಬಹುದು. ಇತ್ತೀಚಿನ ನಮ್ಮ ಹುಡುಗರಿಗೆ “ಸ್ವೆಟರ್” ಮಾರುವ ಟಿಬೆಟಿಯನ್ನರನ್ನು ನೋಡಿದಾಗ ಮಾತ್ರ ಬೌದ್ಧ ಧರ್ಮ ನೆನಪಾಗುತ್ತದೆ. ದಿವಂಗತ ಸಿದ್ದಯ್ಯ ಪುರಾಣಿಕರು (ಕಾವ್ಯಾನಂದ) ತಮ್ಮ ‘ವಚನೋದ್ಯಾನ’ ದಲ್ಲಿ ನಡುರಾತ್ರಿಯಲ್ಲಿ ಎದ್ದೋದವರೆಲ್ಲ ಗೌತಮ ಬುದ್ಧರಲ್ಲ”ಯೆಂದು ಬರೆದದ್ದು ಎಷ್ಟು ಅರ್ಥಪೂರ್ಣ. +ಅದೇನೆಯಿರಲಿ, ಶ್ರೀಲಂಕಾದ ಮೂಲಕ ಸಮುದ್ರ ದಾಟಿಬಂದ ಬೌದ್ಧಧರ್ಮ ಇಲ್ಲಿ ಬಲವಾಗಿ ಬೇರೂರಿದೆ. ಆದರೆ “ರಾಮಾಯಣವನ್ನು ತನ್ನದಾಗಿಸಿಕೊಂಡಿದೆ. ಆ ನಾಡಿನಲ್ಲಿ ಅತ್ಯುನ್ನತ ಸಾಮ್ರಾಜ್ಯಕಟ್ಟಿ ಆಳಿದ ‘ಚಕ್ರಿ’ ಸಾಮ್ರಾಟರು ಶ್ರೀರಾಮನ ಹೆಸರಿನಿಂದಲೇ ಗುರುತಿಸಲ್ಪಟ್ಟಿದ್ದಾರೆ. ಚಕ್ರಿ ವಂಶದ ಮೊದಲನೆ ರಾಜ ಒಂದನೆ ರಾಮ(ಖಚಿmಚಿ ಣhe ಈiಡಿsಣ) ಈಗ ಆಳುತ್ತಿರುವ ಜನಪ್ರಿಯ ರಾಜನ ಹೆಸರು ಸಹ ಹತ್ತನೆ ರಾಮ (ಖಚಿmಚಿ ಣhe ಣeಟಿಣh) ಈತನ ನಿಜ ಹೆಸರು “ಭೂಮಿಪಾಲ ಅತುಲತೇಜ” +ಚಕ್ರಿ ಸಾಮ್ರಾಜ್ಯದ ಸ್ಥಾಪಕ ಜನಮನದಲ್ಲಿ ಅಮರನಾಗಿ ಉಳಿದಿದ್ದಾನೆ. ನಮ್ಮ ದೇಶದಂತೆಯೇ ಥಾಯ್‌ಲ್ಯಾಂಡ್ ಅನ್ಯರ ಆಕ್ರಮಣಕ್ಕೆ, ದಬ್ಬಾಳಿಕೆಗೆ ಪದೇ ಪದೇ ತುತ್ತಾಗಿದೆ. ಆದರೆ ಒಬ್ಬ ಇಂಗ್ಲಿಷ್ ಇತಿಹಾಸಕಾರ ಬರೆದಂತೆ “ಅಯೋಧ್ಯೆಯಲ್ಲಿ ಸಹ ಯಾರಾದರೂ ಒಬ್ಬ ಒಳ್ಳೆಯ ಮನುಷ್ಯ ಹುಟ್ಟುತ್ತಾನೆ.” ಥಾಯ್‌ಲ್ಯಾಂಡಿನ ಅಯೋಧ್ಯೆ ನಮ್ಮ ರಾಮನ ಅಯೋಧ್ಯೆಯೆ. ಆದರೆ ಆತ ಯಾವ ಸ್ಥಳದಲ್ಲಿ ಎಷ್ಟು ಗಜ ಉದ್ದಗಲದ ಜಾಗದಲ್ಲಿ ಹುಟ್ಟಿದನೆಂದು ಥಾಯ್ ಜನ ಪರದಾಡುವುದಿಲ್ಲ. ಹೊಡೆದಾಟವಂತೂ ಮಾಡೇಯಿಲ್ಲ. ರಾಮನ ಅಯೋಧ್ಯೆಯನ್ನು ತಮ್ಮ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿಕೊಂಡ ಈ ರಾಜರು, ಪ್ರಜೆಗಳೂ ಬೌದ್ಧ ಮತಾವಲಂಬಿಗಳು. +ಬರ್ಮಾದ ಸೈನಿಕರು ‘ಅಯೋಧ್ಯೆ’ ಯನ್ನು ಎಡಬಿಡದೆ ಸೂರೆಗೊಂಡು, ಬೆಂಕಿಯಿಟ್ಟು ನಾಶಮಾಡುದರು. ಕ್ರಿ.ಶ.೧೭೬೭ರ ಅಯೋಧ್ಯೆ ಪತನ ಥಾಯ್ ಇತಿಹಾಸದ ಕರಾಳ ಅಧ್ಯಾಯ. ೧೫೬೫ರಲ್ಲಿ ‘ವಿಜಯನಗರ’ ಪತನವಾಗಿ ಹಾಳು ಹಂಪಿಯಾಗಿರುವ ಜಿಲ್ಲೆಯಿಂದ ಬಂದ ನಾನು, ಇತಿಹಾಸದ ಪ್ರಸಂಗಗಳು ವಿವಿಧ ದೇಶಗಳಲ್ಲಿ ವಿವಿಧ ಜನರಲ್ಲಿ ಎಂತಹ ಸ್ಥೈರ್ಯ, ಆತ್ಮಗೌರವ ಹಾಗೂ ಬಲಿದಾನಕ್ಕೆ ಪ್ರೇರಣೆ ಮಾಡಬಹುದೆಂದು ಯೋಚಿಸುತ್ತೇನೆ. ಬರ್ಮಾ ಆಕ್ರಮಣದ ಒಂದು ವರ್ಷದೊಳಗಾಗಿ ದಂಡನಾಯಕನಾಗಿದ್ದ ಥಾಂಗದುವಾಗ್ (ಖಿhoಟಿg ಆuಚಿಟಿg) ತನ್ನ ತಮ್ಮ ಬನುಮ(ಃoಟಿಚಿmಚಿ) ನೊಂದಿಗೆ ಚಕ್ರಿ ಸಾಮ್ರಾಜ್ಯ ಸ್ಥಾಪಿಸಿ, ಬರ್ಮಾದೇಶದ ಆಳ್ವಿಕೆಯನ್ನು ಮುಕ್ತಗೊಳಿಸುತ್ತಾನೆ. ಆತನ ರಾಜ ‘ಟಾಕಿಸನ್’ ಜೊತೆಗೆ ಛಾವೊಫರಿಯಾ ನದಿ (ಅhಚಿoಠಿhಥಿಚಿ) ದಂಡೆಯ ಮೇಲೆ ‘ಥನ ಬುರಿ’ಯೆನ್ನುವ ಹೊಸ ರಾಜಧಾನಿಯನ್ನು ಸ್ಥಾಪಿಸುತ್ತಾನೆ. ಒಂದನೆಯ ರಾಮ ಸ್ವತಃ ಕವಿಯಾಗಿದ್ದ ಆತನೆ ನಮ್ಮ ರಾಮಾಯಣವನ್ನು ಥಾಯ್ ಭಾಷೆಗೆ ಭಾಷಾಂತರಿಸಿದ್ದಾನೆ. ಅದನ್ನು ಇಂದಿಗೂ ಥಾಯ್ ಜನ “ರಾಮ್ ಕಿಟನ್” (ರಾಮಕೀರ್ತನೆ) ಯೆಂದು ಪಠಿಸುತ್ತಾರೆ. ಆತನ ಕಾಲದಲ್ಲಿ “ತ್ರಿಪಿಟಿಕ”ವನ್ನು ಪರಿಷ್ಕರಿಸಿ ೪೫ ಸಂಪುಟಗಳಲ್ಲಿ ಪ್ರಕಟಿಸಲ್ಪಡುತ್ತದೆ. ೪೫ ಹೊಸ ಕಾನೂನುಗಳನ್ನು ತನ್ನ ಆಳ್ವಿಕೆಯಲ್ಲಿ ಜಾರಿಗೊಳಿಸಿ ಸಾಮ್ರಾಜ್ಯದ ಸುವ್ಯವಸ್ಥೆಗೆ ಕಾರಣೀಭೂತನಾಗುತ್ತಾನೆ. ಒಂದನೆಯ ರಾಮ ವಿಯಟ್‌ನಾಮಿನಿಂದ ‘ಎಮರಾಲ್ಡಾ ಬುದ್ಧ’ ನನ್ನು ತಂದು ಸ್ಥಾಪಿಸುತ್ತಾನೆ. ಸುತ್ತಲೂ ಸುಂದರ ಚಿತ್ರಗಳ ಮೂಲಕ ಜತಕಾ ಪೀಠದ ಹಾಗೂ ರಾಮಾಯಣದ ಕಥೆಗಳನ್ನು ಬರೆಸುತ್ತಾನೆ. ಅಂದು ಹಾಳು ಬಿದ್ದ ‘ಅಯೋಧ್ಯೆ’ ನಮ್ಮ ಹಂಪೆಯಂತೆ ಕೊಂಪೆಯಾಗಿ ಅನೇಕ ಸ್ತೂಪಗಳ, ದೇವಾಲಯಗಳ, ಅರಮನೆಗಳ ಕುರುಹಾಗಿ, ಥಾಯ್ ಜನರಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸಿದರೆ, ನಮ್ಮಂತಹ ಭಾರತೀಯರಿಗೆ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆ ತರಿಸುತ್ತದೆ. ಪಾಶ್ಚಿಮಾತ್ಯರಿಗೆ ಅದರಲ್ಲೂ ಅಮೇರಿಕಾದವರಿಗೆ ಅದೊಂದು ನೋಡಬಹುದಾದ ಪ್ರೇಕ್ಷಣೀಯ ಸ್ಥಳ ಮಾತ್ರವಾಗಿದೆ. +‘ವ್ಯಾಟ್’ ಯೆಂದರೆ ಥಾಯ್ ಭಾಷೆಯಲ್ಲಿ ದೇವಾಲಯ. ತುಂಬಾ ಸುಂದರವಾದ, ಆದರೆ ಹಾಳಾದ ದೇವಾಲಯ ಇಂದಿಗೂ ತನ್ನ, ಬೃಹತ್ ಆಕಾರ ಹಾಗೂ ಅಲಂಕಾರದಿಂದ, ಪ್ರೇಕ್ಷಣೀಯ. ತುಂಬಾ ಜತನದಿಂದ ‘ಸ್ಮಾರಕ’ ಕಾಪಾಡಿಕೊಂಡು ಬಂದಿದ್ದಾರೆ. ರಾಮ, ಸೀತೆ, ಲಕ್ಷ್ಮಣ, ಹನುಮಂತರ ಉಬ್ಬು ಚಿತ್ರಗಳು, ಗಾರೆಯಿಂದ ಮಾಡಲ್ಪಟ್ಟಿವೆ. ಪ್ರತಿ ಕಮಾನಿನ, ಗೂಡುಗಳಲ್ಲಿ ಪದ್ಮಾಸನದಲ್ಲಿ ಕುಳಿತ “ಗೌತಮ ಬುದ್ಧ”ನ ಬೃಹದಾಕಾರದ ಗಾರೆ, ಇಟ್ಟಿಗೆಗಳ ಮೂರ್ತಿಗಳಿವೆ. ಅವುಗಳು ದಾಳಿಯಲ್ಲಿ ಹಾಳಾಗಿವೆ. ಅಳಿದುಳಿದ ಅವಯವಗಳು ಕೆಲವು ಕಡೆ, ರುಂಡ, ಮುಂಡಗಳು ಉಳಿದಿವೆ. ಅವುಗಳು, ಆ ಮೂರ್ತಿಗಳ ಸೌಂದರ್ಯ ಹಾಗೂ ಕಲಾವಂತಿಕೆಯನ್ನು ಸಾರಿ ಹೇಳುತ್ತವೆ. ಸುಮಾರಿ ೪೦೦ ವರ್ಷಗಳ ಕಾಲ ‘ಅಯೋಧ್ಯೆ’ ಥಾಯ್‌ಲ್ಯಾಂಡ್ ಅಥವಾ ಸಯಾಮಿನ ರಾಜಧಾನಿಯಾಗಿತ್ತು. ಒಂದನೆ ರಾಮನು ೧೭೮೨ರ ಏಪ್ರಿಲ್ ೬ರಂದು ಅಧಿಕಾರಕ್ಕೆ ಬಂದನು. ಆ ದಿನವನ್ನು ಥಾಯ್ ಜನ ಸಂಭ್ರಮದಿಂದ ಆಚರಿಸುತ್ತಾರೆ. ಅದೊಂದು ಸರ್ಕಾರಿ ರಜಾದ ದಿನ ಕೂಡ. +ಈ ದೇವಾಲಯ ನೋಡುವುದಕ್ಕಿಂತ ಮುಂಚೆ, ಅಲ್ಲಿನ ವಸ್ತುಸಂಗ್ರಹಾಲಯಕ್ಕೆ (ಒuseum) ಹೋಗಿದ್ದೆವು. ರಜಾ ದಿನವಾಗಿದ್ದರೂ, ಅಧಿಕಾರಿಗಳು ಮೊದಲ ನಮ್ಮ ಬರುವುಕೆಯನ್ನು ತಿಳಿಸಿದ್ದರಿಂಡ, ನಮಗಾಗಿ ದ್ವಾರಗಳು, ತೆರೆಯಲ್ಪಟ್ಟಿದ್ದವು. ಅಲ್ಲಿಯ ಕಾವಲುಗಾರನ ತಿಂಗಳ ಸಂಬಳ ೩೦೦೦ ಬಾತ್. ಅಂದಾಜು ನಮ್ಮ ಒಂದೂವರೆ ರೂಪಾಯಿಗೆ ಒಂದು ಬಾತ್ ಸಮಾನ. ವಸ್ತುಸಂಗ್ರಹಾಲಯದಲ್ಲಿ ಅಂದಿದ್ದ ಅಯೋಧ್ಯೆ ಇಡೀ ನಗರದ ಚಿಕ್ಕ ಪ್ರತಿರೂಪ ಮಾಡಿ ಗಾಜಿನ ಆವರಣದೊಳಗೆ ಇಟ್ಟಿದ್ದಾರೆ. ಅಯೋಧ್ಯೆಯ ಕೋಟೆ, ದೇವಸ್ಥಾನಗಳ ಪುನರ್‍ನಿರ್ಮಾಣವನ್ನು ನೋಡುಗರ ಅಂದಾಜಿಗೆ ಸಿಲುಕಲು ಒಂದು ಉಪಯುಕ್ತ ಪ್ರಯತ್ನ ಮಾಡಿದ್ದಾರೆ. ಮೂಲ ನಕಾಸೆಯನ್ನು ಅಂದಿನ ಇಟ್ಟಿಗೆ ಗಾರೆಯ ಒಂದು ಗೋಡೆಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಒಂದೊಂದು ದೂರಧರ್ಶನದಂತಹ ಡಬ್ಬಿಗಳಲ್ಲಿ ಗುಂಡಿ ಒತ್ತಿದರೆ, ಚಿತ್ರಗಳು ಮೂಡುವುದರ ಜೊತೆಗೆ ಆ ಇತಿಹಾಸದ ವಿಷಯದ ಸಂಗತಿಗಳ ಧ್ವನಿಸುರುಳಿಗಳು ಮಾತನಾಡುತ್ತವೆ. ಇದರ ಜೊತೆಗೆ “ಥಾಯ್ ಜನರ” ಜನಜೀವನದ ಆಚಾರ ವಿಚಾರ, ಅವರು ಉಪಯೋಗಿಸುತ್ತಿದ್ದ ಉಪಕರಣಗಳು ಹಾಗೂ ಗೃಹಬಳಕೆ ವಸ್ತುಗಳ ಪ್ರತಿರೂಪ ನಿರ್ಮಿಸಿದ್ದಾರೆ. ಥಾಯ್ ಮಕ್ಕಳ ಗ್ರಾಮೀಣ ಆಟಗಳಂತು ನಮಗಿಂತ ವಿಭಿನ್ನವಾಗಿರಲಿಲ್ಲ. ಅವುಗಳ ಚಿತ್ರಗಳು ಗುಂಡಿ ಒತ್ತಿದರೆ ಚಿಕ್ಕ ತೆರೆಯ ಮೇಲೆ ಕಾಣುತ್ತವೆ. ಥಾಯ್ ಬಾಲಕರು ಜಗತ್ತಿನಾದ್ಯಂತ ಬಾಲಕರಂತೆ, ನಮ್ಮನ್ನು ಆಕರ್ಷಿಸುವ, ಮನಸೆಳೆಯುವ, ನಮ್ಮ ಬದುಕಿನ ಒಂದು ತುಂಡಿನಂತೆ ಕಾಣುತ್ತಾರೆ. ಶ್ರೀ ಶ್ರೀನಿವಾಸಮೂರ್ತಿಗಳು ಇಂತಹ ಒಂದು ವಸ್ತುಸಂಗ್ರಹಾಲಯವನ್ನು ನಮ್ಮ ಹಂಪೆಯಲ್ಲಿ ಮಾಡಿದರೆ ಒಳಿತೆಂದು ಸೂಚಿಸಿದರು. ನಿಜಕ್ಕೂ ಇದೊಂದು ಯೋಗ್ಯ ಹಾಗೂ ಉಪಯುಕ್ತ ಸಲಹೆ. ಸರ್ಕಾರದ, ಸಮಾಜದ ಬೆಂಬಲ ಸಿಕ್ಕರೆ ಇದೊಂದು ಅಸಾಧ್ಯದ ಮಾತೇನೂ ಅಲ್ಲ. +“ಸರಬುರಿ” ಪ್ರಾಂತದ ಗ್ರಾಮೀಣ ಪ್ರದೇಶಕ್ಕೆ ಹೋಗುವಾಗ ನಾವು ಈ ಪ್ರೇಕ್ಷಣೀಯ,ಐತಿಹಾಸಿಕ ಸ್ಥಳ ನೋಡಿದೆವು.”ಸರಬುರಿ” ಒಂದು ಪ್ರಾಂತ. ಇಂತಹ ೭೫ ಪ್ರಾಂತಗಳಲ್ಲಿ ಎ.ಆರ್.ಡಿ ಶಾಖಾ ಕೇಂದ್ರಗಳಿವೆ. ೫ ರಿಂದ ೧೦ ಹಳ್ಳಿಗಳ ಸಮುಚ್ಚಯಗಳಿವೆ. “ತಂಬೋನ್”,”ಸರಬುರಿ” ಹೈನುಗಾರಿಕೆಗೆ ಹಾಗೂ ಸಿಮೆಂಟ್ ಕಾರ್ಖಾನೆಗಳಿಗೆ ಹೆಸರುವಾಸಿ.ಆರು ಮಾರ್ಗಗಳು ಜೋಡುರಸ್ತೆ.ಸಿಮೆಂಟಿನ ರಸ್ತೆಯ ಮೇಲೆ ಟಾರಾಕಿದ ಪಾಶ್ಚಿಮಾತ್ಯ ರಾಷ್ಟ್ರಗಳ ಹೆದ್ದಾರಿಗಳಿಗಿಂತ ಗುಣಮಟ್ಟದಲ್ಲಿ ಕಡಿಮೆಯಿಲ್ಲದ ಹೆದ್ದಾರಿಗಳು.ಹಳ್ಳಿಯ ರಸ್ತೆಗಳು ಸಹ ಸ್ವಚ್ಚ ಹಾಗೂ ವಿಹಾಲವಾದವುಗಳು. ನಮ್ಮ ರಾಷ್ಟ್ರದಲ್ಲಿ ಇಂತಹ ಹೆದ್ದಾರಿಗಳನ್ನು ಒಂದು ಕಡೆಯಲ್ಲಿಯಾದರೂ ನೋಡಲು ಸಿಗುವುದಿಲ್ಲ. ಗ್ರಾಮೀಣ ಪ್ರದೇಶಗಳು ತಮ್ಮ ಹೊಸ ಆದಾಯದಿಂದಾಗಿ, ತಮ್ಮ ಗ್ರಾಮೀಣ ಲಕ್ಷಣಗಳನ್ನು ಕಳೆದುಕೊಂಡಿವೆ..ಎಲ್ಲರಲ್ಲೂ, ನಿಶಾನ್ ಹಾಗೂ ಮಿಟ್ಷುಬಿಷಿ ಪಿಕಪ್ ವ್ಯಾನ್ ಗಳಿವೆ.ರಸ್ತೆ ತುಂಬಾ ಜಪಾನಿನ ಕಾರುಗಳ ಅಟ್ಟಹಾಸ ನೋಡಬೇಕೆಂದರೂ ಒಂದು ಹಳೆಯ ಕಾರನ್ನಾಗಲೀ,ಲಾರಿಯನ್ನಾಗಲೀ, ಬ್ಯಾಂಕಾಕ್‌ನಲ್ಲಿಯಾಗಲೀ, ಗ್ರಾಮೀಣ ಪ್ರದೇಶಗಳಲ್ಲಿಯಾಗಲೀ ನಮಗೆ ನೋಟಕ್ಕೇ ಸಿಗಲಿಲ್ಲ. ಹೊಗೆ ಉಗುಳುವ ಮೋಟಾರ್ ವಾಹನಗಳು ಇಲ್ಲವೇಯಿಲ್ಲ. ಥಾಯ್ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಂತೆ ಕಂಡು ಬಂದರು. ಅನೇಕರು,ಅದರಲ್ಲೂ ಸಂಚಾರಿ ಪೋಲೀಸರು( ಮೋಟಾರ್ ಸೈಕಲ್ ಮೇಲೆ ಸವಾರಿ ಮಾಡುವವರು) ಮೂಗನ್ನೂ ಬಟ್ಟೆಯಿಂದ ಮುಚ್ಚಿಕೊಂಡೇ ಇರುತ್ತಿದ್ದರು. ಆದರೂ, ಬಹುಸಂಖ್ಯಾ ಜನರು ‘ಏಡ್ಸ್’ ರೋಗಿಗಳು. ಇದರ ಕಾರಣಗಳ ಬಗ್ಗೆ ನಂತರ ಬರೆಯುವೆ. ಶ್ರೀಮಂತಿಕೆ ಇಂತಹ ವಿಕೃತಿಯನ್ನು ಹುಟ್ಟುಹಾಕುತ್ತದಲ್ಲವೆ? +ಎತ್ತನೋಡಿದರೂ ಬತ್ತದ ಗದ್ದೆಗಳು, ಬಾಳೆ, ಮಾವು, ತೆಂಗು,ಹಲಸಿನ ಮರಗಳು. ಬೇವಿನ ಮರಗಳಿಗಂತೂ ಲೆಕ್ಕವೆಯಿಲ್ಲ.ದೇಶದ ಶೇಕಡ ೬೦ ನ್ನು ಗ್ರಾಮೀಣ ಪ್ರದೇಶದ ಅಭಿವೃದ್ದಿಯ ಮೇಲೆ ಸರ್ಕಾರ ಖರ್ಚು ಮಾಡುತ್ತದೆ. ೭೫ ಪ್ರಾಂತಗಳಲ್ಲಿ ೭೫ ಜನ ರಾಜ್ಯಪಾಲರು (ಉoveಡಿಟಿeಡಿ)ಯಿದ್ದಾರೆ. ದೇಶದಲ್ಲಿ ೬೦ ವರ್ಷಕ್ಕೆ ಸರ್ಕಾರಿ ನೌಕರರು ನಿವೃತ್ತರಾಗುತ್ತಾರೆ. ಇತಿಹಾಸ ಸಂಸ್ಕೃತಿ ಹಾಗೂ ಲಲಿತಕಲೆಗಳ ಬಗ್ಗೆ ವೀರಾವೇಶದಿಂದ ಮಾತನಾಡುವ ನಾವುಗಳು ಥಾಯ್ ಲ್ಯಾಂಡಿನಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ. ಆ ದೇಶದ ಜನಗಳ ಶ್ರೀಮಂತಿಕೆಯ ಮುಂದೆ ನಾವು ಏನೇನು ಅಲ್ಲ. ಇದೊ, ಕೆಳಗಿನ ಅಂಕೆಸಂಖ್ಯೆಗಳು ವಾಸ್ತವ ಚಿತ್ರವನ್ನೂ ನೀಡುತ್ತವೆ.ಸ್ವಲ್ಪ ಗಮನಿಸಿ. +ನಮ್ಮ ಜೊತೆಗೆ ಹೆದ್ದಾರಿಗಳು ವಿಭಾಗದ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳು ಬಂದಿದ್ದರು. ಈ ದೇಶದ ಉತ್ತರ ಭೂಭಾಗದಲ್ಲಿ ಕುಡಿಯುವ ನೀರಿನ ಉಕೊರತೆಯಿದೆ.೧೫೦ ರಿಂದ ೨೦೦ ಮೀಟರ್ ಆಳ ತೋಡಿಸಬೇಕೆಂದು ಸಹ ಹೇಳಿದರು. ಉಳಿದಂತೆ,ಅಂತರ್ಜಲ,ಮೇಲೇರಿದೆ.ಒಂದು ಕೊಳವೆಭಾವಿ ತೋಡಿಸಲು ೮೦ ಸಾವಿರ ಬಾತ್ ಗಳುಖರ್ಚಾಗುವುದಂತೆ. +ನಾವು ನೀರನ್ನು ತಡೆಹಿಡಿದು ಸಣ್ಣ ಸರೋವರ ಮಾಡಿರುವ ಸ್ಥಳಕ್ಕೆ ಹೋದೆವು.ಮಾನವ ನಿರ್ಮಿತ ಆ ಸಣ್ಣ ಸರೋವರದ ಹೆಸರು ‘ಛಪ್ರಿಯಾಕೊಳ್ಳ’ ಇದರ ಉಸ್ತುವಾರಿಯನ್ನು ವರ್ಷಕ್ಕೊಮ್ಮೆ ಅಚ್ಚುಕಟ್ಟುದಾರರಿಂದ ಆಯ್ಕೆ ಆಗುವ ಒಂದು ಸಮಿತಿ ನೋಡಿಕೊಳ್ಳುತ್ತದೆ. ಅದರ ಅದ್ಯಕ್ಷ ಯುವಕ. ಕೆಲವು ಸದಸ್ಯರು ವಯಸ್ಸಾದವರು ಇಲ್ಲವೆ ಮಧ್ಯವಯಸ್ಕರು. ತುಂಬಾ ಪ್ರೀತಿಯಿಂದ ಕಂಡು ತಮ್ಮ ಲೆಕ್ಕಪತ್ರ ತೋರಿಸಿದರು. ತಿಂಡಿ ಕೊಟ್ಟು ಸತ್ಕರಿಸಿದರು. ‘ಕೋಕಾಕೋಲ’ ದ ಹಾವಳಿ ಹೇಳತೀರದು. ದೂರದ ಹಳ್ಳಿಗಳಲ್ಲೂ ಇದರ ಅವಾಂತರ. ನಾವು “ಚಾ” ಕುಡಿದು ಮುದಗೊಂಡೆವು. ಇಲ್ಲಿ ಮೂರು ಬೆಳೆಯನ್ನು ಬೆಳೆಯುತ್ತಾರೆ. ಹೆಚ್ಚಿನ ಜನಗಳಿಗೆ ೫ ರಿಂದ ೭ ರೈ ವಿಸ್ತೀರ್ಣದ ಭೂಮಿ ಮಾತ್ರಯಿದೆ. ಒಂದು ರೈ ಭೂಮಿ ನಮ್ಮ ೪೦ ಸೆಂಟ್ಸ್ ಗೆ ಸಮ .ಹಣ್ಣು ತರಕಾರಿಯಂತಹ ಲಾಭದಾಯಕ ಬೆಳೆಗಳ ಜೊತೆಗೆ,ಮೀನಿನ ಹೊಂಡಗಳ ಮೂಲಕ ಅಧಿಕ ಉತ್ಪನ್ನವನ್ನು ಪಡೆಯುತ್ತಾರೆ. ಬಹಳ ಜನ ರೈತರಿಗೆ ಚಿಕ್ಕ ಟ್ರಾಕ್ಟರ್ ಯಿದೆ. ೩೦ ರಿಂದ ೪೫ ಸಾವಿರ ‘ಬಾತ್’ ಗಳಷ್ಟು ವಾರ್ಷಿಕ ಆದಾಯವಿದೆ. ತಿಂದುಂಡ, ಒಳ್ಳೆಯ ಉಡುಪು ಧರಿಸಿದ ರೈತರಿವರು. ಬಡತನ ದೂರಮಾಡಿಕೊಂಡ ಸ್ವಾವಲಂಬಿಗಳು. ಈ ಸರೋವರ ಕಟ್ಟಲು ಸರ್ಕಾರ ೫ ಲಕ್ಷದ ೪೫ ಸಾವಿರ “ಬಾತ್” ಗಳನ್ನು ಖರ್ಚು ಮಾದಿದೆ, ಆದರೆ ಇದರ ಉಸ್ತುವಾರಿ (ಒಚಿiಟಿಣಚಿiಟಿಚಿಟಿಛಿe) ಸ್ಥಳೀಯ ಸಮಿತಿಯದು. ಇದರ ಖರ್ಚನ್ನು ಸರೋವರದಲ್ಲಿ ಸಾಕಿದ ಮೀನುಗಳ ಮಾರಾಟದಿಂದ ಸರಿದೂಗಿಸಿಕೊಳ್ಳುತ್ತಾರೆ. ರಸಗೊಬ್ಬರಗಳ ಬಳಕೆ ಬಹಳ ಕಡಿಮೆಯಂತೆ. ಒಂದು‘ರೈ’ ಗೆ ೫೦೦ ಕಿಲೋದಷ್ಟು ಬೆಳೆಯುತ್ತಾರೆ. ಒಂದು ಎಕರೆಗೆ ಅಂದಾಜು ೧೨ ಕ್ವಿಂಟಾಲಿನಷ್ಟು, ಬಹಳ ಕಡಿಮೆಯೇನಲ್ಲ. ನಮ್ಮ ಈಶಾನ್ಯ ಪ್ರಾಂತಗಳಂತೆ ಕಡಿಮೆ ಇಳುವರಿ. ಹೆಚ್ಚು ಮಳೆ, ಇಂಗಿಹೋಗುವ ಭೂಮಿ, ಇದಕ್ಕೆ ಕಾರಣವಾಗಿರಬಹುದು. ನಮ್ಮಂತೆ , ಸರ್ಕಾರ ಮೀನಿನ ತತ್ತಿ ಹಾಗೂ ಮರಿ ಮೀನುಗಳನ್ನು ರೈತರು ಸಾಕಲು ತಮ್ಮ ಕೇಂದ್ರಗಳಿಂದ ಕೊಡುತ್ತಾರಂತೆ. ಮೀನುಗಾರಿಕೆ ಇಲಾಖೆ ಮೀನಿನ ಆಹಾರವನ್ನು ಸಹ ರೈತರ ಸಾಮೂಹಿಕ ಕೊಳಗಳಲ್ಲಿ ಸಾಕಲು ಕೊಡುತ್ತಾರೆ. +ರೈತರ ಕುಟುಂಬದ ಸರಾಸರಿ ಜನಸಂಖ್ಯೆ ೩ರಿಂದ೪ ಜನ. ೫,೬ ಜನ ಮಕ್ಕಳಿರುವ ಕುಟುಂಬವನ್ನು ನೋಡಿದೆವು. ಜನಸಂಖ್ಯಾ ಬೆಳವಣಿಗೆ ಪ್ರಮಾಣ ಪ್ರತಿಶತ ೧.೭ ಒಂದು ಸಮಾಧಾನದ, ಸಂತೋಷದ ಸಂಗತಿಯೆಂದರೆ ಇಲ್ಲಿ ಜನರು ನೂರಕ್ಕೆ ೮೫ಕ್ಕಿಂತ ಹೆಚ್ಚು ಅಕ್ಷರಸ್ಥರು ಅಥವಾ ವಿದ್ಯಾವಂತರು. ಪ್ರಾಥಮಿಕ ಶಾಲೆಯಿಂದ ಹಿಡಿದು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾಭ್ಯಾಸದವರೆಗೆ ಕಲಿಸುವ ಮಾಧಮ ‘ಥಾಯ್’ ಭಾಷೆ. ಅಲ್ಲೇನು ‘ಥಾಯ್’ ಭಾಷೆಯ ಕಾವಲು ಸಮಿತಿಯಾಗಲೀ, ಪ್ರಾಧಿಕಾರವಾಗಲೀ ಇಲ್ಲ. ಕನ್ನಡ, ಕನ್ನಡವೆ ಸಾರ್ವಭೌಮಯೆಂದು ಛೀರಾಡುವ ನಾವು ಮರ್ಯಾದೆಯಿಂದ, ಭಾಷೆರ್ಯನ್ನು ಶ್ರೀಮಂತಗೊಳಿಸುವ ಕೆಲಸದಲ್ಲಿ ತೊಡಗಬೇಕು. ಬರೇ ಭಾಷಣದಿಂದ ಕನ್ನಡ ವರ್ಷವೆಂದು ಸಾರಿರುವುದರಿಂದ “ಹಚ್ಚೇವು ಕನ್ನಡದ ದೀಪ” ಎಂದು ನವೆಂಬರ್ ಒಂದರ ರಾಜ್ಯೋತ್ಸವದ ದಿನ ಹಾಡಿ ಮರೆತರೆ ಸಾಲದು. ಕ್ರಿಯಾಶೀಲರಾಗಿ, ಭಾಷೆಯ, ಸಾಧ್ಯತೆಗಳ ಎಲ್ಲೆಗಳನ್ನು ವಿಸ್ತರಿಸುವ ಛಲವಂತರೂ, ಬುದ್ಧಿವಂತರೂ, ಅಭಿಮಾನಿಗಳೂ ಆಗಬೇಕು. +ರಾಜ್ಯೋತ್ಸವಗಳು ‘ಗಣಪತಿ’ ಹಬ್ಬದಂತೆ, ಚಂದಾ ವಸೂಲು ಮಾಡುವ ಉತ್ಸವಗಳಾಗದೆ, ಹೆಚ್ಚುಕಡಿಮೆ ನಮ್ಮ ಕರ್ನಾಟಕದಷ್ಟೇ ಜನಸಂಖ್ಯೆ ಪಡೆದಿರುವ ಈ ಪುಟ್ಟ ದೇಶದಿಂದ ಕಲಿಯಬೇಕಾದ ಪಾಠದಿಂದ ಪ್ರೇರೇಪಿತವಾಗಿ, ನಿಜ ಅರ್ಥದ ಕನ್ನಡೋತ್ಸವವಾಗಬೇಕು. +ಇಷ್ಟೆಲ್ಲಾ ನನ್ನ ಬರವಣಿಗೆ ಓದಿದವರು, ಇದೊಂದು ಸ್ವರ್ಗಸಮಾನ ದೇಶವೆಂದು ಭಾವಿಸಬೇಕಾಗಿಲ್ಲ. ಜನ ಹುಚ್ಚೆದ್ದು, ಅಮೇರಿಕಾದ ‘ಸಗಟು ಸಂಸ್ಕೃತಿಗೆ’ ಮಾರುಹೋಗಿದ್ದಾರೆ. ನಾವಿಳಿದ ಅಂಬಾಸಿಡರ್ ಹೋಟೆಲ್ ಸುತ್ತಮುತ್ತ ರಸ್ತೆಗಳಲ್ಲಿ ತಿರುಗಾಡಿದಾಗ, ತಿರುಕರು, ಸೂಳೆಯರು, ಕುಷ್ಟರೋಗಿಗಳು ಕಂದರು. ನಾನೊಬ್ಬನೇ ಕುತೂಹಲದಿಂದ ನಮ್ಮ ಹೋಟೆಲ್‌ನ ಪಕ್ಕದಲ್ಲಿಯೇ ಇದ್ದ “ಗೋಗೋಬಾರ್”ಗೆ ಹೋಟೆಲ್‌ನಲ್ಲಿ ಸಿಕ್ಕ ಥಾಯ್‌ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿರುವ ವಿಶಾಖಪಟ್ಟಣದ ವೆಂಕಟೇಶನ ಜೊತೆಗೆ ಹೋಗಿದ್ದೆ. ಪ್ರವಾಸಿಗರಿಂದ ತುಂಬಿದ ಚಿಕ್ಕಚಿಕ್ಕ ಬಾರ್‌ಗಳು, ಪ್ರವೇಶಧರವಿಲ್ಲ. ಬೀರ್ ಮಾತ್ರ ಖರೀಧಿಸಿದರೆ ಸಾಕು. ಗಾಜಿನ ನೀರಿನ ತೊಟ್ಟಿಗಳ ಹಿಂದೆ ಹಾಗೂ ಎತ್ತರದ ಪೀಠಗಳ ಮೇಲೆ ಬೆತ್ತಲೆಯಾದ ಯುವತಿಯರು ಪಾಶ್ಚಿಮಾತ್ಯ ಸಂಗೀತದ ತಾಳಕ್ಕೆ ಕುಣಿಯುತ್ತಾರೆ. ರಸಿಕರು, ಬೆತ್ತಲೆಯಾಗಿ ಕುಣಿಯುವವರ ಸರ್ತಿಗಾಗಿ ಕಾಯುತ್ತಿರುವ, ಹೆಂಗಸರನ್ನು ತೊಡೆಯ ಮೇಲೆ ಕೂಡಿಸಿಕೊಂಡು ಲಲ್ಲಗರೆಯುತ್ತಿರುತ್ತಾರೆ. ಎಲ್ಲಾ ಬಾರ್‌ಗಳೂ ಒಂದೇತರ. ಲಲನೆಯರ ಮುಖದ ಮೇಲೆ ಮಂದಹಾಸವಾಗಲೀ, ಅದೊಂದು ಸಂತೋಷಿಸುವ ವೃತ್ತಿಯೆಂದು ಭಾವಿಸಿದವರನ್ನಾಗಲೀ ನಾನು ನೋಡಲಿಲ್ಲ. ಏನೋ ದುಡಿಮೆಗಾಗಿ ಪ್ರದರ್ಶನ ಮಾಡುವ ಹೆಂಗಳೆಯರನ್ನು ಕಂಡೆ. ನಮ್ಮ “ನಮ್ಮ ಮುಂಬೈ” ಕಾಮಾಟಿಪುರದ ಕೆಂಪುದೀಪದ ಸಾಲುಗಣಿಕೆಯರಂತೆ ಇವರ ಮುಖಗಳ ಮೇಲೆ ಭಯದ ಅಥವಾ ಅಸಹಾಯಕತೆಯ ನೋವು ಹಾಗೂ ನೋಟಕಂಡೆ. ಜನರ ನೈತಿಕ ಅದಃಪತನದ ಪಾತಾಳವನ್ನು ಅಲ್ಲಿದ್ದ ಸ್ವಲ್ಪ ಸಮಯದಲ್ಲಿ ನೋಡಿದೆ. ಅವೆಲ್ಲ ಅಪಾಯದ ಸ್ಥಳಗಳೆಂದು ತಿಳಿದುಕೊಂಡಿದ್ದರಿಂದ, ಧೈರ್ಯಸಾಲದೆ ನೋಡುವ ಉತ್ಸಾಹವೂ ಇಲ್ಲದೆ, ಹೋಟೆಲ್‌ಗೆ ಮೌನವಾಗಿ ಮರಳಿದೆ. ಶ್ರಮಜೀವಿಗಳಾದ, ಸ್ಪುರದ್ರೂಪಿಗಳಾದ, ಧರ್ಮಬೀರುಗಳಾದ ಈ ಜನ ತಮ್ಮ ಹೆಂಗಸರನ್ನು ಇಂತಹ ಕೀಳುಮಟ್ಟಕ್ಕೆ ಇಳಿಸಿರುವುದರ ಕಾರಣ ಅರಿಯದೆ ಗೊಂದಲಗೊಂಡೆ. ಸರ್ಕಾರ ಇಂತಹದಕ್ಕೆ ಪ್ರೋತ್ಸಾಹ ಕೊಡಿತ್ತದೆನ್ನುವುದು (ಅದು ಪ್ರವಾಸಿಗರನ್ನು ಆಕರ್ಷಿಸಲು) ಊಹಿಸಲು ಅಸಾಧ್ಯ. ಇನ್ನೂ ತರಹಾವರಿ ಲೈಂಗಿಕ ಪ್ರಕ್ರಿಯೆ ಹಾಗು ಭಂಗಿಗಳನ್ನು ತೋರಿಸುವ ಸ್ಥಳಗಳಿವೆ ಎಂದು ತಿಳಿದು ಬಂತು. ನೋಡಲು ನನ್ನ ಸಂಸ್ಕಾರ ಅಡ್ಡಿ ಬಂತು. ಇಂತಹ ಪ್ರದರ್ಶನಗಳಿಗೆ ಹೆಸರಾದ ‘ಪಟ್ಟಾಯ’ ದ್ವೀಪಕ್ಕೆ ಹೋಗಲು ತಯಾರಿ ನಡೆಸಿದ್ದ ಭಾರತೀಯ ಸಂಜಾತರನ್ನು ಹೋಟೆಲ್‌ನಲ್ಲಿ ಕಂಡೆ. ಆ ದ್ವೀಪವಂತೂ ಒಂದು ಮೋಜಿನ ತಾಣವೆಂದು ತಿಳಿದು ಬಂತು. ನಮ್ಮ ಪ್ರವಾಸದ ಉದ್ದೇಶ ಬೇರೆಯಾಗಿದ್ದರಿಂದ, ಇದ್ದ ಮೂರು ದಿನ ಸರ್ಕಾರಿ ಹಾಗು ದೂತವಾಸದ ಅಧಿಕಾರಿಗಳೊಂದಿಗೆ ಗ್ರಾಮೀಣ ಪ್ರದೇಶ ನೋಡುವುದರಲ್ಲಿ, ಚರ್ಚೆ ಮಾಡುವುದರಲ್ಲಿ ಕಳೆದು ಹೋಯಿತು. +ಅಭಿವೃದ್ಧಿಶೀಲವಾದ ಈ ರಾಷ್ಟ್ರದಲ್ಲಿ ವಿಶಾಲವಾದ ರಸ್ತೆಗಳಿದ್ದಾಗ್ಯೂ ನಮ್ಮ ಊರಿನಲ್ಲಿ ಆದಂತೆ, ಕಾರು ನಡೆಸುತ್ತಿದ್ದ ಒಬ್ಬ ಹೆಂಗಸು ತನ್ನ ಪಕ್ಕದಲ್ಲಿ ಚಲಿಸುತ್ತಿದ್ದ ಸಣ್ಣ ಲಾರಿಗೆ ಡಿಕ್ಕಿ ಹೊಡೆದಳು. ಅದು ನಾವು ಪ್ರಯಾಣಿಸುತ್ತಿದ್ದ ವ್ಯಾನಿಗೆ ಬಡಿದು, ಒಂದುಚಿಕ್ಕ ಅಪಘಾತವೇ ಆಯಿತು. ಎಲ್ಲರೂ ಕಲೆತು ಮಾತನಾಡುತ್ತ ಹೋಗಬಹುದೆಂದು ನಾನು ಸರ್ಕಾರದ ಕಾರನ್ನು ಬಿಟ್ಟು ವ್ಯಾನಿನಲ್ಲಿ ಪಯಣಿಸುತ್ತಿದ್ದೆ. ಯಾರಿಗೂ ಸುದೈವದಿಂದ ಗಾಯಗಳಾಗಲಿಲ್ಲ. ಇದೊಂದು ಅನುಭವವೆಂದು ಕುತೂಹಲದಿಂದ ನಾವು ಮೂವರು ನೋಡುತ್ತಿದ್ದಂತೆ, ಮುಂದಿನ ಕಾರಿನಲ್ಲಿದ್ದ ಸರ್ಕಾರಿ ಅಧಿಕಾರಿಗಳು ಅದರ ಚಾಲಕ, ನಮ್ಮ ಜೊತೆಗಿದ್ದ ಅಧಿಕಾರಿಗಳು ಮತ್ತು ಚಾಲಕ ಅಪಘಾತ ಮಾಡಿದ ಕಾರಿನ ಹೆಣ್ಣುಮಗಳು ಸೆಲ್ಯುಲರ್ ಫೋನ್ ತೆಗೆದುಕೊಂಡು ಮಾತನಾಡ ಹತ್ತಿದರು. ೧೫-೨೦ ನಿಮಿಷದೊಳಗಾಗಿ ಪೊಲೀಸರು, ಕಾರಿನ ವಿಮಾ ಕಂಪನಿಯವರು ದೌಡಾಯಿಸಿ, ಮುಂದಿನ ಪ್ರಕ್ರಿಯೆ ನಡೆಸಹತ್ತಿದರು. ನಮ್ಮ ಹೆದ್ದಾರಿಗಳ ಗತಿಯನ್ನು ಅದರಲ್ಲೂ ಸದಾಕಾಲ ರಾಷ್ಟ್ರೀಯ ಹೆದ್ದಾರಿ ೪ರ ಮೇಲೆ ತಿರುಗಾಡುವ ನಾನು, ಥಾಯ್ ಜನರ ಕರ್ತವ್ಯ ಪ್ರಜ್ಞೆ ಹಾಗೂ ದಕ್ಷತೆಯನ್ನು ಕಂಡು ಬೆರಗಾದೆ. ಕೊಂಚವೂ ವಿಚಲಿತರಾಗದೆ ಮುಂದಿದ್ದ ಅಪಘಾತಕ್ಕೆ ಒಳಗಾಗದ ಕಾರಿನಲ್ಲಿ ನಮ್ಮನ್ನು ರಾಜ ‘ಭೂಮಿಪಾಲ ಅತುಲತೇಜ” ಪ್ರಾರಂಭಿಸಿದ, ಒಂದು ಹೊಸ ಪ್ರಯೊಗಕ್ಕೆ ಒಳಪಟ್ಟ, ಕೃಷಿ ತೋಟಕ್ಕೆ ಕರೆದುಕೊಂಡು ಹೋದರು. +ಭತ್ತ ಹೊಕ್ಕುತ್ತಿದ್ದರು ಕೆಲವು ಕೂಲಿಯವರು, ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭತ್ತ ಹೊಕ್ಕುವವರು, ಗೂಡು ಹಾಕುವವರು ಕೈಗಳಿಗೆ ಕೈಚೀಲಗಳು, ಕಾಲಿಗಳಿಗೆ ಗಮ್ ಬೂಟುಗಳನ್ನೂ ಧರಿಸಿದ್ದರು. ಮೂಗನ್ನು, ತಲೆಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಕೊಂಡಿದ್ದ ಆ ಕೃಷಿ ಕೂಲಿಗಳ ದಿನದ ಮಜೂರಿ ೧೫೦ ರಿಂದ ೨೦೦ ಬಾತ್‌ಗಳು. ಹೆಣ್ಣು ಮಕ್ಕಳಿಗೂ, ಗಂಡಸರಿಗೂ ಸಮಾನ ವೇತನ, ಹೊಸಕೃಷಿ ತಂತ್ರಜ್ಞಾನದಿಂದ ಸಮಾಜಿಕ ಅರಣ್ಯ, ತೋಟಗಾರಿಕೆ, ತರಕಾರಿ ಬೆಳೆಯುವಲ್ಲಿನ ನೈಪುಣ್ಯತೆ ಹೊಸಕೃಷಿ ತಂತ್ರಜ್ಞಾನ ಮತ್ತು ಮೀನು ಹೊಂಡಗಳನ್ನು ನೋಡಿದೆವು. ದುಡಿಯುವ ಕೂಲಿಗಳಲ್ಲದೆ ಯಾಂತ್ರಿಕ ಬೇಸಾಯವನ್ನು ಸಹ ಅಲ್ಲಿ ಅಳವಡಿಸಿಕೊಂಡಿದ್ದರು. ಅದನ್ನು ನೋಡಿ ಮರಳಿ ಬರುವಾಗ, ಮುದುಕರಾದ ಒಂದು ರೈತ ಕುಟುಂಬ ನಮ್ಮನ್ನು ಆದರದಿಂದ ಅವರ ಪುಟ್ಟ ದಿನಸಿ ಅಂಗಡಿಗೆ ಕರೆದು, ಗೊನೆಯಲ್ಲಿ ಮಾಗಿದ ಒಳ್ಳೆಯ ಬಾಳೆಹಣ್ಣನ್ನು ತಿನ್ನಲು ಕೊಟ್ಟದ್ದಲ್ಲದೆ, ನಾವು ಬೇಡ ಬೇಡವೆಂದರೂ ಬಾಳೆಯ ಚಿಪ್ಪುಗಳನ್ನು ಹೋಟೆಲಿಗೆ, ಮನೆಗಳಿಗೆ ಕೊಂಡೊಯ್ಯಲು ಕೊಟ್ಟರು. ಅಂಗಡಿಯ ಹಿಂದೆ ಅವರ ಮನೆಯಿತ್ತು. ಸುತ್ತಲೂ ಕೋಳಿಗಳು, ನಮ್ಮ ರೈತರಂತೆ ಕುಟುಂಬಜೀವನ. ಎಲೆ‌ಅಡಿಕೆ ಜಗಿದು, ಕೆಂಪುಕಪ್ಪಾದ ಹಲ್ಲುಗಳು ಬಿಸಿಲಿಗೆ ಒಣಗಿಕೊಂಡ ಕಂದು ಮೈ ಬಣ್ಣದ ಗಂಡ, ಹೆಂಡತಿ ಹಾಗೂ ಸೊಸೆ, ಒಂದು ಮುದ್ದಾದ, ಗಂಡುಮಗು, ಅಲ್ಲೆ ಇದ್ದ ಒಂದು ಮಂಚದ ಮೇಲೆ ಬೆಕ್ಕು, ಅಂಗಡಿ ಒಳಗಡೆ ಇದ್ದ ನಾಯಿ ರೈತ ಸಂಸಾರದ ಪೂರ್ಣ ಚಿತ್ರವನ್ನು ನಮಗೆ ಕೊಟ್ತಿತು. ಒಟ್ಟಿನಲ್ಲಿ ರೈತರೆಲ್ಲರೂ, ಒಂದುತರಹದ ಮುಗ್ಧರು, ಒಳ್ಳೆಯ ಆದರಾತಿಥ್ಯ ಮಾಡುವ ಸಜ್ಜನರು. ನಮ್ಮೂರಿನ ರೈತರಂತೆ, ಸಹಜ ಹಾಗೂ ಸರಳಜೀವಿಗಳು. ಆದರೆ ಮಿತಭಾಷಿಗಳು; ದೇಶ ಯಾವುದಾದರೂ, ಮನುಷ್ಯನ ಅಂತರಂಗದ ಒಳ್ಳೆಯತನಕ್ಕೆ ಬರಗಾಲವಿಲ್ಲ. ಅಂತಹ ಒಳ್ಳೆಯತನವನ್ನು ಗುರುತಿಸುವ, ಬೆಳೆಸುವ ಪ್ರಭುದ್ಧತೆ ಸಮಾಜಕ್ಕಿರಬೇಕು. ಪ್ರಾಯಶಃ ಇಂತಹ ಜನಪರವೇ ಥಾಯ್‌ಲ್ಯಾಂಡಿನ ಪ್ರಗತಿಯ ಬುನಾದಿಗಳೇ ಆಗಲೀ, ಬಾರ್‌ಗಳಲ್ಲಿ ಕುಣಿಯುವ ಬೆಲೆವೆಣ್ಣುಗಳಲ್ಲ ಆ ಭಾಗವನ್ನು ನಾವು ಬುದ್ಧಿಪೂರ್ವಕವಾಗಿ ಉಪೇಕ್ಷಿಸಬೇಕು. ದುಡಿಯುವ ಜನವರ್ಗ ಕಂಡಾಗ, ನನ್ನ ಸಂಶಯಗಳಿಗೆ, ಸ್ವಲ್ಪಮಟ್ಟಿನ ಉತ್ತರ ಸಿಕ್ಕಿತು. ಆ ನಾಡಿನ ಪ್ರಗತಿಯ ರಹಸ್ಯ ಸ್ವಲ್ಪಮಟ್ಟಿಗೆ ಬಯಲಾಯಿತು. +***** +ಕೀಲಿಕರಣ: ಸೀತಾಶೇಖರ್. ಸಹಾಯ: ಅನ್ನಪೂರ್ಣ ಸುಬ್ಬರಾವ್ +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […] +ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […] +ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_552.txt b/Kannada Sahitya/article_552.txt new file mode 100644 index 0000000000000000000000000000000000000000..8566c81d431e9c72f011adccac0fcce42c1bedd0 --- /dev/null +++ b/Kannada Sahitya/article_552.txt @@ -0,0 +1,218 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ ಹೋಗಬೇಕೆಂಬ ಆಸೆಯಿತ್ತು. ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಸೇರಿ ಸಿಲ್ಕಿನ ಕ್ಲೋಸ್ ಕಾಲರ್ ಕೋಟು, ಪ್ಯಾಂಟುಗಳನ್ನು ಧರಿಸಿ ಕಾರಿನಲ್ಲಿ ಓಡಾಡುತ್ತ ಪೇಪರಲ್ಲಿ ಆಗೀಗ ಸುದ್ದಿಯಾಗುವಷ್ಟು ಗಣ್ಯವ್ಯಕ್ತಿಯಾಗಿದ್ದ. +ಆತನ ಆಸೆಗಳ ಪೂರೈಕೆಗಿದ್ದ ಒಂದು ಕೊರತೆಯೆಂದರೆ ಅವನಿಗೆ ಸರಿಯಾಗಿ ಇಂಗ್ಲಿಷ್ ಬರದೇ ಇದ್ದುದು. ರೋಟರಿಯ ಪ್ರೆಸಿಡೆಂಟಾಗುವುದೂ ಈ ಐಬಿನಿಂದಾಗಿ ಸಾಧ್ಯವಾಗದೆ ಕಾಲೇಜಿನಲ್ಲಿದ್ದಾಗ ತಾನು ಪುಂಡಾಟಿಕೆಯಲ್ಲಿ ಕಾಲ ಕಳೆದದ್ದಕ್ಕಾಗಿ ವಿಷಾದ ಪಡುತ್ತಿದ್ದ. ಎಷ್ಟು ಹಣವಿದ್ದರೂ ಅವನ ವರ್ಚಸ್ಸು ಊರಿನ ಆಚೆ ನಡೆಯುತ್ತಿರಲಿಲ್ಲ. +ಪೋಲೀಸ್ ಮುಖ್ಯರನ್ನೆಲ್ಲ ಕ್ಲಬ್ಬುಗಳಲ್ಲಿ ಕಾಣುತ್ತಿದ್ದ ಈ ವ್ಯಕ್ತಿಯ ಆಪ್ತನಾಗಲು ಇಷ್ಟಪಟ್ಟು ಅಣ್ಣಾಜಿ ಜಿಲ್ಲೆಗೆ ಬಂದ ಮೊದಲ ವಾರದಲ್ಲಿ ಅವನನ್ನು ಹೋಗಿ ನೋಡಿ ಇಂಗ್ಲಿಷಲ್ಲಿ ಮಾತಾಡಿಸಿದ್ದ. ತಾನು ಸ್ಟೇಟ್ಸ್‌ಮನ್ನಿನ ಸಂಪಾದಕ ವರ್ಗದಲ್ಲಿ ಕೆಲಸ ಮಾಡಿದವನೆಂದೂ ಈಗ ಕೆಲಸ ಬಿಟ್ಟು ಒಂದು ಪುಸ್ತಕ ಬರೆಯುತ್ತಿರುವುದಾಗಿಯೂ ತನ್ನ ಹೆಸರು ಅಣ್ಣಾಜಿ ಎಸ್. ಕತ್ರೆಯೆಂದೂ ಪರಿಚಯ ಮಾಡಿಕೊಂಡು ಊರಿನ ಗಣ್ಯವ್ಯಕ್ತಿಯೂ ಕಾಂಗ್ರೆಸ್ ಧುರೀಣನೂ ಆದ ಚನ್ನವೀರಯ್ಯ ಈ ಜಿಲ್ಲೆಯ ಸ್ವಾತಂತ್ರ್ಯ ಯೋಧರ ಕಥೆಗಳನ್ನು ತಾನು ಬರೆಯುತ್ತಿರುವ ಪುಸ್ತಕಕ್ಕೆ ಒದಗಿಸಲು ಸಾಧ್ಯವೇ ಎಂದು ಕೇಳಿದ್ದ. +ಅಮೃತಶಿಲೆಯ ಕಲ್ಲು ಹಾಸಿದ ಹಜಾರದಲ್ಲಿ ಬೆತ್ತದ ಕುರ್ಚಿ ಮೇಲೆ ತುಂಬ ತಿಳಿದವನಂತೆ ಕೂತು ತಲೆಹಾಕುತ್ತ ಚನ್ನವೀರಯ್ಯಕೇಳಿಸಿಕೊಂಡ. ರೇಡಿಯೋದಲ್ಲಿ ಕೇಳಿಬರುವ ಇಂಗ್ಲಿಷಿನಂತೆ ನಿರರ್ಗಳವಾದ ಅಣ್ಣಾಜಿಯ ಇಂಗ್ಲಿಷಿನಿಂದ ಬೆವರುತ್ತ, ಏನೋ ತಿಳಿದವನಂತೆ ಮಾತಿನ ಮಧ್ಯೆ ’ಐಸೀ’ ’ಆಲ್‌ರೈಟ್’ ಎನ್ನುತ್ತ, ಈ ಭೇಟಿ ಮುಗಿಯುವುದಕ್ಕಾಗಿ ಕಾದ. ಟೀ ತರಲೆಂದು ಒಳಗೆ ಹೋಗಿ, ಮ್ಯಾಜಿಸ್ಟ್ರೇಟರ ಮಗಳಾದ್ದರಿಂದ ಕಾನ್ವೆಂಟಿನಲ್ಲಿ ಓದಿದ್ದ ಹೆಂಡತಿಯನ್ನು “ಅವನು ಏನು ಹೇಳ್ತಿದಾನೆ? ಒಳ್ಳೇ ರೈಲು ಬಿಟ್ಟಂಗೆ ಮಾತಾಡ್ತಾನೇ -ಗೊತ್ತೇ ಆಗ್ಲಿಲ್ಲ” ಎಂದು ಜಬರದಸ್ತಿನಲ್ಲಿ ಮುಗುಳ್ನಗುತ್ತ ಕೇಳಿದ. ತನ್ನ ರೋಟರಿಯ ಪ್ರಗತಿಯ ಅನೇಕ ಅಗತ್ಯಗಳಲ್ಲಿ ಇಂಗ್ಲಿಷ್ ಮಾತಾಡಬಲ್ಲ ಹೆಣ್ಣೂ ಒಂದೆಂದು ತನ್ನ ಶ್ರೀಮಂತಿಕೆಯ ಬಲದಿಂದ ಉಮೆಯನ್ನು ಗಳಿಸಿದ್ದ. ಕಸೂತಿ ಹಾಕುತ್ತ ಅಣ್ಣಾಜಿಯ ಮಾತುಗಳನ್ನು ಒಳಗಿನಿಂದ ಕೇಳಿಸಿಕೊಂಡ ಉಮಾ ಡೈನಿಂಗ್ ಟೇಬಲಿನ ಮೇಲೆ ಟೀ ಮತ್ತು ಬಿಸ್ಕತ್ತುಗಳನ್ನಿಡುತ್ತ ಗಂಡನಿಗೆ ಅವನ ಮಾತಿನ ತಾತ್ಪರ್ಯ ತಿಳಿಸಿ ಅವನನ್ನು ಒಳಗೆ ಕರೆಯುವಂತೆ ಹೇಳಿದಳು. ಚನ್ನವೀರಯ್ಯ ’ಕಮ್ ಇನ್’ ಎಂದ ಮೇಲೆ ಒಳಗೆ ಹೋದ ಅಣ್ಣಾಜಿ ಉಮೆಗೆ ಗೌರವದಿಂದ ಬಾಗಿ, ತಾನು ಕೊಲ್ಹಾಪುರದಲ್ಲಿದ್ದಾಗ ಕನ್ನಡ ಬರುತ್ತಿತ್ತೆಂದೂ ಈ ಊರಲ್ಲಿ ತನ್ನ ಬಿಡುವು ಸಮಯದಲ್ಲಿ ಕೆಲವು ಹುಡುಗರಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದೇನೆಂದೂ ತನ್ನ ಹರಕು ಮುರುಕು ಕನ್ನಡದಲ್ಲಿ ತಿಳಿಸಿದ. ಸ್ವಾತಂತ್ರ್ಯ ಬಂದರೂ ನಮ್ಮ ಜನಕ್ಕೆ ಇಂಗ್ಲಿಷ್ ವ್ಯಾಮೋಹ ಹೋಗಲಿಲ್ಲ; ನೀವು ಕನ್ನಡದಲ್ಲಿ ಆರೇಟರ್ ಅಂತ ಕೇಳಿದೀನಿ ಎಂದು ಚನ್ನವೀರಯ್ಯನನ್ನು ಹೊಗಳಿ ಟೀಯನ್ನು ಸವಿದು ಉಮೆಯನ್ನು ಅಭಿನಂದಿಸಿದ. +ಚನ್ನವೀರಯ್ಯ ಹೀಗೆ ಹಠಾತ್ತನೆ ತನಗೊಬ್ಬ ಬುದ್ಧಿಜೀವಿಯ ಸ್ನೇಹವಾದ್ದರಿಂದ ಹಿಗ್ಗಿದ. ತನ್ನ ರೋಟರಿ ಗೆಳೆಯರಿಗೆ ಇಷ್ಟು ನಿರರ್ಗಳ ಇಂಗ್ಲಿಷ್ ಮಾತಾಡುವವನನ್ನು ಗುರುತು ಮಾಡಿಕೊಟ್ಟು ಅವರ ಗರ್ವ ಇಳಿಸಬೇಕೆಂದುಕೊಂಡ. ತಾನೂ ಗುಪ್ತವಾಗಿ ಅವನಿಂದ ಇಂಗ್ಲಿಷ್ ಕಲಿಯಬೇಕೆಂದು ನಿರ್ಧರಿಸಿದ. +ಅಣ್ಣಾಜಿಯ ಪ್ಲಾನ್ ಅವನು ತಿಳಿದದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿತ್ತು. ಪ್ರತಿ ಬೆಳಿಗ್ಗೆ ಚನ್ನವೀರಯ್ಯ ಅಣ್ಣಾಜಿಯನ್ನು ಕಾರ್ ಕಳಿಸಿ ಕರೆಸಿಕೊಳ್ಳುತ್ತಿದ್ದ. ಸುಪ್ರಭಾತ ಕೇಳಿಸಿಕೊಳ್ಳುತ್ತ ಲಾನ್ ಮೇಲೆ ಅಡ್ಡಾಡುವ ಚನ್ನವೀರಯ್ಯ ಗೇಟಿನಿಂದಲೇ ಅಣ್ಣಾಜಿಯನ್ನು ತಾನು ಕಲಿಯುತ್ತಿದ್ದ ಸಂಭಾಷಣೆಯ ಇಂಗ್ಲಿಷಿಂದ ಸ್ವಾಗತಿಸಿ, ಒಳಗೆ ಕರೆದುಕೊಂಡು ಹೋಗುತ್ತಿದ್ದ. ಬ್ರೇಕ್‌ಫ಼ಾಸ್ಟ್ ನಡೆಯುವಾಗ ಈ ಇಂಗ್ಲಿಷ್ ಸಂಭಾಷಣೆ ಮುಂದುವರಿಯುತ್ತಿತ್ತು. ಇದು ಚೆನ್ನಾಗಿದೆ, ವಂದನೆ. ಸಕ್ಕರೆ ಬೇಕೋ? ಎಷ್ಟು ಚಮಚ? ಇವತ್ತಿನ ಹವೆ ಚೆನ್ನಾಗಿದೆ ಇತ್ಯಾದಿಗಳನ್ನು ಹೇಳುತ್ತ ಕೇಳುತ್ತ, ಚನ್ನವೀರಯ್ಯನು ಕಾಲೇಜಿನಲ್ಲಿ ತಪ್ಪಾಗಿ ಕಲಿತದ್ದನ್ನೆಲ್ಲ ಅಣ್ಣಾಜಿ ತಿದ್ದುತ್ತ ಬ್ರೇಕ್‌ಫ಼ಾಸ್ಟ್ ಮುಗಿಯುತ್ತಿತ್ತು. ಇಷ್ಟಕ್ಕಿಂತ ಹೆಚ್ಚು ಇಂಗ್ಲಿಷ್ ಮೊದಲೇ ಗೊತ್ತಿದ್ದ ಉಮೆ ಅಣ್ಣಾಜಿಯ ವಿದ್ಯಾವಂತ ನಡೆನುಡಿಗಳಿಂದ ಖುಷಿಪಡುತ್ತ ಬಡಿಸುತ್ತಿದ್ದಳು. ಅವನಷ್ಟು ಸುಶಿಕ್ಷಿತರು ಯಾರೂ ಅವಳ ಮನೆಗೆ ಬರುತ್ತಿರಲಿಲ್ಲ. ಬರುವವರೆಲ್ಲ ಕಾಳಸಂತೆಕೋರರು, ಜೂಜುಗಾರರು. ಒರಟಾಗಿ ಮಾತಾಡುತ್ತ, ತಾನೊಬ್ಬಳು ಒಳಗಿದ್ದೇನೆಂಬುದನ್ನು ಗಮನಿಸದೆ ಕೊಟ್ಟ ತಿಂಡಿ ಕಾಫ಼ಿಗಳನ್ನು ಹೀರಿ, ತೇಗಿ, ತಮ್ಮ ಮೆಟ್ಟಿಗೆ ಅಂಟಿದ ಮಣ್ಣು ಸಗಣಿಗಳನ್ನು ಕಾರ್ಪೆಟ್ಟಿಗೆ ಒರೆಸಿ ಹೋಗುವವರು. ತಮ್ಮ ಮನೆಯ ಈ ಶ್ರೀಮಂತಿಕೆ ಬಗ್ಗೆ ಅಣ್ಣಾಜಿಯಲ್ಲಿದ್ದ ಸೂಕ್ಷ್ಮ ತಿರಸ್ಕಾರವನ್ನವಳು ಗಮಸಿದ್ದಳು. ಈ ಇಂಗ್ಲಿಷ್ ಪಾಠ ಇತ್ಯಾದಿಗಳನ್ನು ಯಾವುದೋ ಗುಪ್ತ ಉದ್ದೇಶಕ್ಕಾಗಿ ಈತ ಮಾಡುತ್ತಿದ್ದಾನೆ, ಇವನು ರಹಸ್ಯ ವ್ಯಕ್ತಿ ಎಂದು ಅವಳಿಗೆ ಗುಮಾನಿ ಬಂದಿತ್ತು. ಎಸಳಾದ ಮೂಗು ತುಟಿಗಳ, ಸ್ವಲ್ಪ ಕಂದು ಬಣ್ಣದ ಮುಖದ, ಚುರುಕಾದ ಚಿಕ್ಕ ಕಣ್ಣುಗಳ, ಚಿರತೆಯಂಥ ಮೈ ಕಟ್ಟಿನ ಉಮೆಯನ್ನು ಅಣ್ಣಾಜಿ ಬಹಳ ಸೂಕ್ಷ್ಮವಾಗಿ ಖುಷಿಪಡಿಸುತ್ತಿದ್ದ. ಅವಳ ಇರುವಿಕೆಯನ್ನ ಏಕಾಗ್ರವಾಗಿ ತನ್ನ ಇಡೀ ವ್ಯಕ್ತಿತ್ವ ಗಮನಿಸುತ್ತದೆ ಎಂಬುದನ್ನು ಯಾವ ಮಾತೂ ಆಡದೆ ಅವಳಿಗೆ ತಿಳಿಯುವಂತೆ ಮಾಡುತ್ತಿದ್ದ. ಅವನಿಗೆ ಶ್ರೀಮಂತರ ಬಗ್ಗೆ ಇದ್ದ ತಿರಸ್ಕಾರ, ಅವನು ಮೌನವಾಗಿದ್ದಾಗಿನ ಅವನ ಮುಖದ ಅಗಮ್ಯ ಭಾವಗಳನ್ನು ಗುರುತಿಸಿದ್ದ ಉಮೆ ತನ್ನ ಬಗೆಗಿದ್ದ ಅವನ ಗೌರವದಿಂದ ಕೃತಜ್ಞಳಾಗಿದ್ದಳು. +ಅವನು ನೇರ ಹೇಳದಿದ್ದರೂ ಅವನಿಗೆ ಇಷ್ಟವೆಂದು ಗಮನಿಸಿ ಅವಳು ಥಳುಕಿನ ರೇಯಾನ್ ಸೀರೆಗಳನ್ನು ಬಿಟ್ಟು ಗಂಜಿ ಹಾಕಿ ಇಸ್ತ್ರಿ ಮಾಡಿದ ಹತ್ತಿಯ ಸೀರೆಗಳನ್ನೇ ಉಡುವಳು. ಅವನು ಹೋಗುವಾಗ ವಿಶೇಷ ತಿಂಡಿಯೇನಾದರೂ ಮಾಡಿದ್ದರೆ ಅವರಿಗೆ ಕೊಡಿರೆಂದು ಗಂಡನಿಗೆ ಹೇಳಿ ಟಿಫ಼ನ್‌ಬಾಕ್ಸಿನಲ್ಲಿಟ್ಟು ಕೊಡುವಳು. ಅವನು ಗಂಡನ ನೆಪದಲ್ಲಿ ತನಗೆಂದೇ ತಂದುಕೊಡುತ್ತಿದ್ದ ಗಾರ್ಕಿ ಚೆಕಾವ್ ಕಥೆಗಳನ್ನೆಲ್ಲ ಓದಿ ಮೆಚ್ಚಿಕೆ ಸೂಸುವಳು. “ನನಗೆ ಓದಲು ಬಿಡುವೇ ಇರುವುದಿಲ್ಲ. ಅವಳು ನಿತ್ಯ ಓದಿ ಹೇಳ್ತಾಳೆ” ಎಂದು ಚನ್ನವೀರಯ್ಯ ನಗುತ್ತ ಇಂಗ್ಲಿಷಲ್ಲಿ ಹೇಳಿದಾಗ ಅಣ್ಣಾಜಿ ನಿರ್ಭಾವದಿಂದ ಅವನನ್ನು ತಿದ್ದುವನು. +” ತಿಟಟ ಡಿಚಿಜ ಣ ಡಿಥಿಜಚಿಥಿ ಅಲ್ಲ – ಡಿಚಿಜ ಣ ಡಿಥಿಜಚಿಥಿ ಣ .” +“ಙ, ಙ. ಡಿಚಿಜ ಣ ಡಿಥಿಜಚಿಥಿ ಣ -ನನ್ನ ಫ಼್ರೆಂಡ್ಸೆಲ್ಲ ಡಬಲ್ ಗ್ರಾಜುಯೇಟ್ಸ್ ಆದರೂ ಈ ತಪ್ಪು ಮಾಡ್ತಾರೆ ನೋಡಿ. ಹಾಗಾಗಿ ನಂಗೂ ಅದೇ ಅಭ್ಯಾಸವಾಗಿ ಹೋಗಿದೆ” -ಚನ್ನವೀರಯ್ಯ ನಗುತ್ತ ಸಿಗರೇಟ್ ಹೊತ್ತಿಸಿ ಅಣ್ಣಾಜಿಗೂ ನೀಡುವನು. +“ಙ ಣ ಜಿಡಿಣ ಜಿಜಿಡಿ ಣ ಣ ” ಎಂದು ಅಣ್ಣಾಜಿ ನಗುವನು. ಚನ್ನವೀರಯ್ಯ “ಇಛಿ ” -ಎನ್ನುವನು. ತಾನು ಇದನ್ನು ಗಮನಿಸುತ್ತಿದ್ದೇನೆಂಬುದನ್ನು ಅಣ್ಣಾಜಿಯೂ ಅರಿತಿರುವುದನ್ನು ಕಂಡು ಉಮೆಗೆ ದಿಗಿಲಾಗುವುದು. +ತನ್ನ ರೂಮು ಅಪಾಯವೆಂದು ಹೆದರಿದ್ದ ಅಣ್ಣಾಜಿ ಚನ್ನವೀರಯ್ಯನಿಗೆ ಇಂಗ್ಲಿಷಲ್ಲಿ ಹೇಳಿದ್ದ -ಬ್ರೇಕ್‌ಫ಼ಾಸ್ಟ್ ಸಮಯದಲ್ಲಿ: +“ನನ್ನ ರೂಮು ಪಿಗ್‌ಸ್ಟೈ ಇದ್ದಂಗಿದೆ. ಹೊರಗೆ ಕ್ಯಾಟ್ಸ್ ಅಂಡ್ ಡಾಗ್ಸ್ ಆಗಿ ಮಳೆ ಬೀಳುವಾಗಂತೂ ಒಳಗೆ ಮಳೆ ಡ್ರಿಪ್ ಆಗಲು ಶುರುವಾಗತ್ತೆ. ಕೆಲವು ಸಾರಿ ಫ಼ರ್ರಿಯಾದ ಕಂಬಳಿ ಹುಳುಗಳು ಮೂವಿಂಗ್ ರ್‍ಯಾಗ್ಸ್‌ನಂತೆ ಗೋಡೆ ಮೇಲೆ ಹರೀತಿರ್ತಾವೆ.” +ತನಗೆ ಇಂಗ್ಲಿಷಿನ ಈಡಿಯಮ್ಮುಗಳ ಇನ್ನೊಂದು ಪಾಠವೋ ಇದು, ಅಥವಾ ಏನಾದರೂ ಅಣ್ಣಾಜಿ ಹೇಳುತ್ತಿರುವನೋ, ಅಥವಾ ಎರಡೂ ಒಟ್ಟಿಗೋ -ಥಟ್ಟನೆ ಅರಿಯಲಾರದೆ ಪುಂಖಾನುಪುಂಖವಾದ ಪದವೃಂದಗಳಿಗೆ ಸೋಜಿಗಪಡುತ್ತ ನೆನಪಿಡಲು ಪ್ರಯತ್ನಿಸುತ್ತ ಚನ್ನವೀರಯ್ಯ ಕೇಳಿಸಿಕೊಂಡ. ಗಂಡ ಪೆದ್ದಾಗಿ ಕೇಳಿಸಿಕೊಳ್ಳುವುದು ನೋಡಿ ಉಮೆಗೆ ನಗು ಬಂತು. +“ನನಗೊಂದು ರೂಮು ಬೇಕು. ಮುನಿಸಿಪಾಲಿಟಿ ಸದಸ್ಯರಲ್ಲವೇ ನೀವು ಮಿಸ್ಟರ್ ಚನ್ನವೀರಯ್ಯ. ಎಲ್ಲಾದರೂ ರೆಕಮೆಂಡ್ ಮಾಡಿ ಕೊಡಿಸುತ್ತೀರ?” +ಚನ್ನವೀರಯ್ಯ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅವನಿಗೆ ಇಂಗ್ಲಿಷಿಂದ ಆಗಿದ್ದ ಆಘಾತ ’ಮುನಿಸಿಪಾಲಿಟಿ ಸದಸ್ಯ ತಾನು’ ಎಂಬ ತನ್ನ ಘನತೆಯನ್ನು ನೆನಪು ಮಾಡಿ ಕೊಡುವಂಥ ಅರ್ಥವಾಗುವ ಮಾತಿನಿಂದ ಕಡಿಮೆಯಾದಂತಾಗಿ ಚನ್ನವೀರಯ್ಯನ ಮುಖದಲ್ಲಿ ಸಮಾಧಾನ ಮೂಡಿತು. ಅವನ ಮುಗುಳ್ನಗುವಿನ ಅಸಂಬದ್ಧತೆಯನ್ನು ಸವಿಯುತ್ತ ಅಣ್ಣಾಜಿ ಸುಮ್ಮನೇ ಕೂತ. ಉಮೆ ಕನ್ನಡದಲ್ಲಿ ಹೇಳಿದಳು: +“ಅಷ್ಟು ಕೆಟ್ಟ ರೂಮಿನಲ್ಲಿ ನೀವು ಯಾಕಿರಬೇಕು? ಗರಾಜ್ ಮೇಲೆ ನಮ್ಮ ಗೆಸ್ಟ್ ರೂಮಿದೆಯಲ್ಲ, ಬೇರೆ ರೂಮು ಸಿಗುವ ತನಕ ಇಲ್ಲೇ ಬಂದಿರಿ.” +ಚನ್ನವೀರಯ್ಯ ಸುಧಾರಿಸಿಕೊಳ್ಳುತ್ತ “ಎಸ್, ಎಸ್” ಅಂದ. ತಾನು ಗರಾಜ್ ಅನ್ನುವುದನ್ನು ಪದೇ ಪದೇ ಮರೆತು “ಗ್ಯಾರೇಜ್” ಅಂದು ಅಣ್ಣಾಜಿಯಿಂದ ತಿದ್ದಿಸಿಕೊಳ್ಳುತ್ತಿದ್ದರೂ ತನ್ನ ಹೆಂಡತಿ ಉಮಾ ಎಷ್ಟು ಬೇಗ ಸರಿಯಾದ ಉಚ್ಚಾರಣೆಯನ್ನು ಹಿಡಿದುಬಿಡುವಳೆಂದು ಅವನಿಗೆ ಸಿಟ್ಟು, ಮಾತ್ಸರ್ಯ, ಇಂಥವಳು ತನ್ನ ವಸ್ತುವೆಂಬ ಅಭಿಮಾನ ಒಟ್ಟಿಗೇ ಹುಟ್ಟಿದುವು. +ಕೃಷ್ಣಪ್ಪ ತಂದ ಟ್ರಂಕು ಬೆಡ್ಡಿಂಗನ್ನು ಉಮೆಯೇ ಜವಾನನ ಮುಖಾಂತರ ಗೆಸ್ಟ್ ರೂಮಿಗೆ ಸಾಗಿಸಿದಳು. ಅಣ್ಣಾಜಿಯ ಅದೃಷ್ಟವನ್ನು ಕೃಷ್ಣಪ್ಪ ಆಶ್ಚರ್ಯದಿಂದ ಗಮನಿಸಿದ. ಇಲ್ಲಿ ಅಣ್ಣಾಜಿಯ ಕ್ವಿಲ್ಟ್‌ನ ಅಗತ್ಯವಿರಲಿಲ್ಲ. ಬೀರುವಿನಲ್ಲಿ ಅದನ್ನು ಉಮೆ ಇರಿಸಿದಳು. ಬುಕ್‌ಕೇಸಿನಲ್ಲಿ ತಾನೇ ಪುಸ್ತಕಗಳನ್ನು ಜೋಡಿಸಿದಳು. ಬೀಟೆ ಮರದ ಕಾಟ್‌ನ ಮೇಲೆ ಡನ್‌ಲಪ್ ಹಾಸಿಗೆ ಹಾಸಿತ್ತು. ಅದರ ಮೇಲೆ ಶುಭ್ರವಾದ ಬಿಳಿ ಶೀಟನ್ನು ಟಿಕ್ ಮಾಡಿ ಮೇಲೆ ಪಕ್ಷಿಗಳ ಚಿತ್ರವಿದ್ದ ಇನ್ನೊಂದು ಬಟ್ಟೆ ಹಾಸಿತ್ತು. ಮೇಜಿನ ಮೇಲೆ ತಣ್ಣೀರಿನ ಫ಼್ಲಾಸ್ಕ್ ಇತ್ತು. ರೂಮಿಗಂಟಿಕೊಂಡಂತೆ ಬಾತ್ ಕಕ್ಕಸಗಳಿದ್ದವು. ನೆಲದ ಮೇಲೆ ರತ್ನಗಂಬಳಿ ಹಾಸಿತ್ತು -ಕಿತ್ತಲೆ ಬಣ್ಣದ ಕರ್ಟನ್‌ಗಳು ಕಿಟಕಿಗೆ ಹಾಕಲಾಗಿದ್ದವು. ಈ ರೂಮಲ್ಲಿ ಅಣ್ಣಾಜಿಯ ಬಣ್ಣಗೆಟ್ಟ ಅಂಕುಡೊಂಕಾದ ಟ್ರಂಕು ಅತ್ಯಂತ ಕ್ಷುದ್ರವಸ್ತುವಿನಂತೆ ಸೈಡ್ ಟೇಬಲ್ ಮೇಲಿರುವುದನ್ನು ಉಮೆ ನಸು ನಗುತ್ತ ಗಮನಿಸಿದಳು. ತಾನೇ ಅದನ್ನು ಎತ್ತಲು ಹೋಗಿ ಭಾರವಾಗಿರುವುದನ್ನು ಕಂಡು ಜವಾನನಿಂದ ಅದನ್ನು ಎತ್ತಿಸಿ ಬೀರುವಿನಲ್ಲಿ ಇಡಿಸಿದಳು. +“ಊಟ ಮುಗಿಸಿ ಅಣ್ಣಾಜಿ ಬರುತ್ತಾರೆ” ಎಂದ ಕೃಷ್ಣಪ್ಪ. +ಉಮೆಯ ಮುಖ, ಇದರಿಂದ ಖಿನ್ನಗೊಂಡಂತೆ ಕಂಡಿತು. ಕೃಷ್ಣಪ್ಪ ’ನಾನು ಹೋಗುತ್ತೀನಿ’ ಎಂದಾಗ ’ಇರಿ’ ಎಂದು ಉಮೆ ಜವಾನನ ಕೈಯಲ್ಲಿ ಬೋರ್ನವೀಟ ತರಿಸಿಕೊಟ್ಟು, “ಇವರು ಕ್ಲಬ್ಬಿಗೆ ಹೋಗಿದ್ದಾರೆ. ಬರೋದು ಲೇಟು. ನೋಡಬೇಕಾದರೆ ಕಾದಿರಿ” ಎಂದಳು. “ಇಲ್ಲ” ಎಂದು ಕೃಷ್ಣಪ್ಪ ಅವಳಿಗೆ ಮೌನವಾಗಿ ನಮಸ್ಕರಿಸಿ ಹೊರಟುಹೋದ. ಮೆಟ್ಟಿಲು ಇಳಿಯುವಾಗ ಅವನಿಗೆ ನೆನಪಾಯಿತು. ಅಣ್ಣಾಜಿಯನ್ನು ನೋಡಲು ಬಂದ ಕಾರಣವನ್ನೇ ಅವನು ಮರೆತುಬಿಟ್ಟಿದ್ದ. ತಾನು ಕಾಲೇಜನ್ನು ಬಿಡುತ್ತಿದ್ದೇನೆಂಬ ನಿರ್ಧಾರವನ್ನು ನಾಳೆ ಹೇಳಿದರಾಯಿತೆಂದು ಹಾಸ್ಟೆಲಿಗೆ ಹೋಗಿ ಊಟ ಬೇಡವೆಂದು ಮಲಗಿದ. ಬೆಳಗಿನ ಝಾವದ ತನಕ ನಿದ್ದೆ ಹತ್ತಲಿಲ್ಲ. ಈ ಹಿಂದೆ ಅವನಿಗೆ ಅನ್ನಿಸದಿದ್ದ ದಿಗಿಲು -ಇದ್ದಕ್ಕಿದ್ದಂತೆ ರಾತ್ರೆಯೆಲ್ಲ ಅವನನ್ನು ಕಾಡಿತು. ಬೆಳಗಿನ ಝಾವವಾಗುತ್ತಿದ್ದಂತೆ ಹಾಸ್ಟೆಲಿನ ಎದುರು ನಿಲ್ಲಿಸಿದ ಲಾರಿಗಳನ್ನು ಸ್ಟಾರ್ಟ್ ಮಾಡುವ ಗದ್ದಲದಿಂದ ಎಂದಿನಂತೆ ಇವತ್ತು ಅವನಿಗೆ ಕರೆಕರೆಯಾಗಲಿಲ್ಲ. ಬದಲಾಗಿ ಈ ಪರಿಚಿತ ಶಬ್ದದಿಂದ ಸಮಾಧಾನವಾಯಿತು. +.. +.. +.. +ಮಾರನೇ ಬೆಳಿಗ್ಗೆ ಎದ್ದಾಗ ಕೃಷ್ಣಪ್ಪನ ಕಣ್ಣುಗಳು ನಿದ್ದೆಯಿಲ್ಲದೆ ಕೆಂಪಾಗಿದ್ದುವು. ಹಾಸ್ಟೆಲಲ್ಲಿ ಅವನಿಗೆ ಉಚಿತ ವಸತಿ ಊಟಗಳ ವ್ಯವಸ್ಥೆಯಿದ್ದರೂ ಬೆಳಿಗ್ಗೆ ಅವನ ರೂಮಿಗೆ ಯಾವನಾದರೂ ಒಬ್ಬ ಹೈಸ್ಕೂಲು ಓದುತ್ತಿದ್ದ ವಿದ್ಯಾರ್ಥಿ ಕಾಫ಼ಿ ತಂದುಕೊಡುತ್ತಿದ್ದ. ಅವನೆ ಸೇವೆಗೆ ಪೈಪೋಟಿಯೇ ನಡೆಯುತ್ತಿತ್ತು ಹಾಸ್ಟೆಲಲ್ಲಿ. ತನ್ನ ಮನಸ್ಸು ಯಾಕೆ ಹೀಗೆ ಕಲಸಿಕೊಂಡಿದೆ ಎಂದು ಅರ್ಥವಾಗದೆ ಮುಖ ತೊಳೆದು ಮತ್ತದೇ ದಿಗಿಲುಪಡುತ್ತ ಕೃಷ್ಣಪ್ಪ ಕೂತಾಗ ಕಿಶೋರ ಕುಮಾರ ಎಂಬ ಶ್ರೀಮಂತರ ಮನೆಯ ಹುಡುಗ ಕಾಫ಼ಿಯನ್ನಿಟ್ಟು “ಗೌಡರೇ ಕಾಫ಼ಿ” ಎಂದು ಕಿಟಕಿ ನೋಡುತ್ತ ಕೂತ ಅವನನ್ನು ಕರೆದು ಹೇಳಿದ. ಕೃಷ್ಣಪ್ಪ ಕೃತಜ್ಞತೆಯಿಂದ ಕಾಫ಼ಿ ಇಸಕೊಂಡು “ನಿಂದಾಯಿತಾ? ಕೂತುಕೊ” ಎಂದ. +“ಗೌಡರೇ ನಿಮ್ಮ ಮೇಲೆ ಅದೇನೇನೋ ಗಲೀಜೆಲ್ಲ ಹಾಸ್ಟೆಲ್ ಗೋಡೆ ಮೇಲೆ ಅದ್ಯಾರೋ ಸುವರ್‍ಗಳು ಬರ್ದಿದಾವೆ -ಹಾಸ್ಟೆಲಲ್ಲಿ ಎಲ್ರಿಗೂ ತುಂಬ ಸಿಟ್ಟು ಬಂದಿದೆ” ಎಂದ. +“ಬರೀಲಿ ಬಿಡು” ಎಂದ ಕೃಷ್ಣಪ್ಪ. ತನಗೆ ರಾತ್ರಿ ನಿದ್ದೆ ಬಂದಂತಿರಲಿಲ್ಲ. ಯಾವ ಹೊತ್ತಲ್ಲಿ ಬಂದು ಈ ಪೋಕರಿಗಳು ಬರೆದಿರಬಹುದೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. +“ಏನೇನೋ ಗಲೀಜೆಲ್ಲ ಬರ್ದಿದಾರೆ. ಓದ್ಲಿಕ್ಕೆ ಹೇಸಿಗೆಯಾಗುತ್ತೆ. ಅಳಿಸ್ತ ಇದಾರೆ -ನೀವದನ್ನ ಓದಬಾರ್ದು ಅಂತ.” +ಕೃಷ್ಣಪ್ಪ ಮುಗುಳ್ನಕ್ಕು ಕಾಫ಼ಿ ಕುಡಿದ ಬಟ್ಟಲನ್ನು ಎತ್ತಿಕೊಂಡು ಕೆಳಗೆ ಹೊರಟ್ಯ. ಕಿಶೋರ ಬಟ್ಟಲು ಬೇಡಿದರೂ ಕೊಡಲಿಲ್ಲ. +ಬ್ರಶ್ಶನ್ನು ಸುಣ್ಣದಲ್ಲದ್ದಿ ಗೋಡೆಗೆ ಬಳಿಯುತ್ತ ನಿಂತ ಹಾಸ್ಟೆಲ್ಲಿನ ತನ್ನ ಸಹಪಾಠಿಗಳಿಗೆ ಕೃಷ್ಣಪ್ಪ, +“ಹೋಗ್ಲಿ ಬಿಡ್ರೊ -ಯಾಕೆ ತಲೆ ಕೆಡಿಸಿಕೊಳ್ತೀರಿ?” ಎಂದ. +ಇದು ವಾಲಿಬಾಲ್ ಟೀಮಿನ ಫಟಿಂಗರ ಕೆಲಸವೆಂದು ಊಹಿಸಿದ್ದ ಹಾಸ್ಟೆಲಿನ ಹುಡುಗರು ಕ್ಷುದ್ರರಾಗಿದ್ದರು. ಒಕ್ಕಲಿಗ ವಿದ್ಯಾರ್ಥಿಗಳಿಗೇ ಆದ ಅವಮಾನವೆಂದು ಈ ಹುಡುಗರು ಸಿಟ್ಟಾಗಿದ್ದಾರೆಂದು ಕೃಷ್ಣಪ್ಪನಿಗೆ ಹೊಳೆಯಿತು. +“ಸೂಳೆಮಕ್ಕಳ ಪುಳಚಾರನ್ನ ಕಕ್ಕಸ್ತೀವಿ” +ಹಳೆಯ ಮೋಟಾರ್ ಸೈಕಲೊಂದನ್ನು ಇಟ್ಟುಕೊಂಡು ರೋಫಾಗಿ ಓಡಾಡಿಕೊಂಡಿದ್ದ ಶಾಮಣ್ಣ ಹೇಳಿದ. ದೊಡ್ಡ ಜಮೀಂದಾರನ ಮಗನಾಗಿದ್ದರೂ ಶಾಮಣ್ಣನಿಗೆ ತನ್ನ ಜನಾಂಗದ ಬುದ್ಧಿಜೀವಿಯೆಂದು ಕೃಷ್ಣಪ್ಪನ ಮೇಲೆ ಗೌರವ. +“ನಾನು ಕಾಲೇಜನ್ನೆ ಬಿಡಬೇಕೂಂತಿದೀನಿ” ಎಂದು ಕೃಷ್ಣಪ್ಪ ಅವರನ್ನು ಸಮಾಧಾನಪಡಿಸಲು ಹೇಳಿದ. +“ಗೌರೀ ಸಿಸ್ಟರ್‍ನ ಕಾಲಿನ ಕೆಳಗೆ ನುಸಿಯೋ ಹಾಗೆ ಇವರನ್ನು ಬಗ್ಗಿಸ್ತೀವೊ ಇಲ್ವೋ ನೋಡಿ. ನೀವು ಯಾಕೆ ಕಾಲೇಜು ಬಿಡಬೇಕು?” ಎಂದ ಶಾಮಣ್ಣ. ಅವನು ಸಹ ಹುಡುಗಿಯರನ್ನು ರೇಗಿಸುತ್ತಿದ್ದರೂ ಕೃಷ್ಣಪ್ಪನ ಬಗ್ಗೆ ಗೌರಿ ದೇಶಪಾಂಡೆಗೆ ಗೌರವವೆಂದು ತಿಳಿದು ಅವನು ಗೌರಿಯನ್ನು ಮಾತ್ರ ಸಿಸ್ಟರ್ ಎಂದು ಸೇರಿಸಿ ಕರೆಯುತ್ತಿದ್ದುದು. ಕೃಷ್ಣಪ್ಪ ಇನ್ನು ಹೆಚ್ಚು ಮಾತಾಡದೆ ರೂಮಿಗೆ ಹೋಗಿ ಓದಲು ಕೂತ. ಆದರೆ ಅವನ ಮನಸ್ಸು ಏಕಾಗ್ರಗೊಳ್ಳದೆ ಅವನಿಗೆ ಅರಿಯಲಾರದೆ ದಿಗಿಲಿನಿಂದ ವಿಚಲಿತವಾಯಿತು. ತನಗೆ ಮೀರಿದ್ದೇನೋ ತನ್ನ ಎದುರಾಗುತ್ತಿದೆ ಎಂಬುದಕ್ಕೆ ಈ ದಿಗಿಲು ಸೂಚನೆಯೆಂದು ಕೃಷ್ಣಪ್ಪನಿಗೆ ಅನ್ನಿಸಿತು. ಬೆಳಗಿನ ತಿಂಡಿಯನ್ನು ತಿನ್ನದೆ ಅಣ್ಣಾಜಿಯನ್ನು ನೋಡಲೆಂದು ನಿಧಾನವಾಗಿ ನಡೆದುಕೊಂಡು ಹೊರಟ. +ತನ್ನ ದಿಗಿಲಿಗೆ ಕಾರಣವೇನೆಂದು ಸ್ಪಷ್ಟವಾಗಿ ಗೊತ್ತಾಗದಿದ್ದರೂ ಗೌರಿ ದೇಶಪಾಂಡೆಯ ಮೌನವಾದ ಮೂರ್ತಿ ಅವನ ಮನಸ್ಸಿಗೆ ಬಂದು ಅವಳು ತನಗೆ ತೀರಾ ಅವಶ್ಯವಾಗಿಬಿಡುತ್ತಿದ್ದಾಳೆ ಎಂದು ಹೊಳೆಯಿತು. ಪಾರ್ಕಿನಲ್ಲಿ ನಡೆಯುತ್ತಿದ್ದ ಕೃಷ್ಣಪ್ಪನಿಗೆ ಸೀದ ಅವಳ ಮನೆಗೆ ಹೋಗಿ ಅವಳನ್ನು ನೋಡಬೇಕೆನ್ನಿಸಿತು. ನೋಡಿ ಏನು ಹೇಳುವುದು? ನಿನ್ನನ್ನು ಪ್ರೀತಿಸುತ್ತೀನಿ ಎಂದು ಹೇಳುವುದೆ? ಅದು ಸಾಧ್ಯವಿಲ್ಲ. ಅದಕ್ಕೆ ಕಾರಣ ತನ್ನ ಗರ್ವವೆ? -ತಿಳಿಯಲಿಲ್ಲ. ಅಂತೂ ತನ್ನಲ್ಲೇನೋ ಕೊರತೆಯಿದೆ. ಅವಳಿಂದಲ್ಲದೆ ಅದು ತುಂಬದು ಎನ್ನಿಸತೊಡಗಿತು. ತಾನು ನಿಸ್ಸಹಾಯಕನಾಗಿ ಅವಳ ಮನೆಗೆ ಎಲ್ಲಿ ಹೋಗಿಬಿಡಬಹುದೋ ಎಂದು ದಿಗಿಲಾಯಿತು. ಗೋಡೆಯ ಮೇಲೆ ಕಾಣಿಸಿಕೊಂಡಿದ್ದ ಬರಹಗಳು ತನ್ನ ಗಾಂಭೀರ್ಯ ತನ್ನ ಅಂತರಂಗಗಳ ಮೇಲೆ ಹೊರಗಿನ ಕ್ಷುದ್ರತೆಯ ಆಘಾತದ ಪ್ರಯತ್ನವಾಗಿ ಕಂಡು ಅದು ತನ್ನನ್ನು ಬಾಧಿಸುತ್ತಿಲ್ಲವೆಂದು ಕೃಷ್ಣಪ್ಪ ತಿಳಿದಿದ್ದ; ಇಂಥದನ್ನು ಗಮನಿಸುವುದು ಕೂಡ ಕಳಪೆಯೆಂದು ಅವನು ಅಂದುಕೊಂಡಿದ್ದ. ಆದ್ದರಿಂದ ತನಗಾಗುತ್ತಿದ್ದ ದಿಗಿಲು ಅವನಿಗೆ ಇನ್ನಷ್ಟು ರಹಸ್ಯವಾಗಿ ಕಂಡಿತು. +ಅಣ್ಣಾಜಿ ಮೆತ್ತನೆಯ ಸೋಫ಼ಾದ ಮೇಲೆ ಕಾಲು ಚಾಚಿಕೊಂಡು ಚಾರ್ಮಿನಾರ್ ಸೇದುತ್ತ ಉಮೆ ಜೊತೆ ಮಾತಾಡುತ್ತಿದ್ದ. ಉಮೆ ಸ್ಟೂಲೊಂದರ ಮೇಲೆ ಅವನಿಗೆ ಎದುರಾಗಿ ಕೂತು ಕೈ ಬೊಗಸೆ ಮಾಡಿ ಅದರಲ್ಲಿ ತನ್ನ ಗುಂಡಾದ ಮುಖವನ್ನಿಟ್ಟು ತನ್ನ ದೊಡ್ಡ ಕಣ್ಣುಗಳಿಂದ ಅವನನ್ನು ಮೆಚ್ಚುಗೆಯಿಂದ ನೋಡುತ್ತ ಕೇಳಿಸಿಕೊಳ್ಳುತ್ತಿದ್ದಳು. ಅಣ್ಣಾಜಿ ಫ಼್ರೆಂಚ್ ಕ್ರಾಂತಿಯ ಕಥೆಯನ್ನು ರಮ್ಯವಾಗಿ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿಸುವಂತೆ ಹೇಳುತ್ತಿದ್ದ. ಕೃಷ್ಣಪ್ಪ ಮೌನವಾಗಿ ಒಳಗೆ ಬಂದು ಇನ್ನೊಂದು ಸೋಫ಼ಾದಲ್ಲಿ ಕೂತು, ಅಣ್ಣಾಜಿಗೆ ಹಠಾತ್ತನೆ ಪ್ರಾಪ್ತವಾದ ಅದೃಷ್ಟವನ್ನು ಸುತ್ತು ಕಣ್ಣು ಹರಿಸಿ ನೋಡಿದ. ಮೇಜಿನ ಮೇಲೆ ಹೂವಿನ ಕುಂಡ ಬೇರೆ. ಉಮೆಯ ಕಣ್ಣುಗಳು ಹೊಳೆಯುತ್ತಿದ್ದವು. ಅಣ್ಣಾಜಿ ತನ್ನ ಒಂದು ತಿಂಗಳ ಗಡ್ಡವನ್ನು ನುಣ್ಣನೆ ಕ್ಷೌರ ಮಾಡಿ, ಸ್ನಾನ ಮುಗಿಸಿ, ಶುಭ್ರವಾದ ಪಂಚೆಯುಟ್ಟು ಜುಬ್ಬ ತೊಟ್ಟು ಕೂತಿದ್ದ. +“ಮಿಸ್ಟರ್ ಚನ್ನವೀರಯ್ಯ ರೋಟರೀಲಿ ಇವತ್ತು ಸಂಜೆ ಮಾತಾಡೋಕೆ ಹೇಳಿದ್ದಾರೆ. ನೀನೂ ಬಾ” ಎಂದು ಕೃಷ್ಣಪ್ಪನ್ನ ಅಣ್ಣಾಜಿ ಕರೆದ. ಕೃಷ್ಣಪ್ಪನಿಗೆ ಕಾಫ಼ಿ ತರಲು ಉಮಾ ಕೆಳಗಿಳಿದು ಹೋದಳು. +ಕೃಷ್ಣಪ್ಪ ಉತ್ತರ ಕೊಡದಿದ್ದುದನ್ನು ಕಂಡು ಅಣ್ಣಾಜಿ, +“ಮಾರ್ಕ್ಸ್‌ವಾದದ ಚಾರಿತ್ರಿಕ ಸಿದ್ಧಾಂತದ ಬಗ್ಗೆ ಮಾತಾಡ್ತಿದೀನಿ” ಎಂದ. +“ರೋಟರೀಲಿ?” +ಕೃಷ್ಣಪ್ಪ ವ್ಯಂಗ್ಯವಾಗಿ ಕೇಳಿದ. +“ವೈ ನಾಟ್?” ಅಣ್ಣಾಜಿಯೂ ವ್ಯಂಗ್ಯವಾಗಿ ಹೇಳಿದ. “ಬಿತ್ತುವುದು ನನ್ನಂಥವರ ಕೆಲಸ. ಉದಾಹರಣೆಗೆ ಉಮಾ ನೋಡು. ಬ್ಯೂರೋಕ್ರಾಟ್ ಹಿನ್ನೆಲೆಯಿಂದ ಬಂದು ಕಾಂಪ್ರಡಾರ್ ಕ್ಯಾಪಿಟಲಿಸ್ಟ್ ವರ್ಗ ಸೇರಿದ್ದಾಳೆ. ಆದರೆ ಪೋಟೆನ್ಸಿಯಲ್ಲಿ ಅವಳು ರೆವಲ್ಯೂಶನರಿ. ಶ್ರೀಮಂತ ವರ್ಗ ಅಂಥವಳನ್ನೂ ತನ್ನ ಸ್ವತ್ತಾಗಿ ಮಾಡಲು ನೋಡುತ್ತದೆ. ಆದರೆ…..” +“ಈಗ ನೀನೂ ಅದರ ಸ್ವತ್ತಾಗಿದ್ದೀಯಲ್ಲ?” ಕೃಷ್ಣಪ್ಪ ರೂಮಿನ ವೈಭವದ ಮೇಲೆ ಕಣ್ಣು ಹಾಯಿಸಿ ಹೇಳಿದ. ಅಣ್ಣಾಜಿ ವ್ಯಂಗ್ಯವಾಗಿ ನಕ್ಕು ಕೃಷ್ಣಪ್ಪನ ಟೀಕೆಯನ್ನು ತಳ್ಳಿ ಹಾಕಿದ. +ತಾನು ಹೆಚ್ಚು ಹೊತ್ತು ಕೂತಿರುವುದು ಉಮಾಗೆ ಇಷ್ಟವಿಲ್ಲವೆನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ ಕೃಷ್ಣಪ್ಪ ಕಾಫ಼ಿ ಕುಡಿದು ಎದ್ದ. ಇನ್ನೂ ಸ್ವಲ್ಪ ಕೂತಿರಲು ಅಣ್ಣಾಜಿ ಒತ್ತಾಯ ಮಾಡಿದರೂ ಕೃಷ್ಣಪ್ಪ ಕೇಳದೆ ಸಂಜೆ ಮೀಟಿಂಗಿಗೆ ಬರುವೆನೆಂದು ಹೇಳಿ ಊರಾಚೆಗಿದ್ದ ಗುಡ್ಡದ ಕಡೆ ನಡೆದ. ಅವನಿಗೆ ಒಂಟಿಯಾಗಿರುವುದು ತುಂಬ ಅಗತ್ಯವಾಗಿತ್ತು. ಗೌರಿ ಮನೆಯಿಂದ ದೂರವಿರುವುದೂ ಅವಶ್ಯವೆನ್ನಿಸಿತ್ತು. +.. +.. +.. +ಊರಿನ ಹತ್ತಿರವಿದ್ದ ಗುಡ್ಡದ ಮೇಲೊಂದು ಗುಹೆಯಿತ್ತು. ಈ ಗುಹೆಯಲ್ಲಿ ಬರೀ ಕೌಪೀನಧಾರಿಯಾದ ಉದ್ದ ಗಡ್ಡವನ್ನು ಬಿಟ್ಟ ಮುದುಕ ಬೈರಾಗಿಯೊಬ್ಬನಿದ್ದ. ಅವನ ಹೆಸರೇನು ಯಾರಿಗೂ ತಿಳಿಯದು. ಯಾರ ಹತ್ತಿರವೂ ಅವನು ಮಾತಾಡುತ್ತಿರಲಿಲ್ಲ. ಪ್ರತಿ ಬೆಳಿಗ್ಗೆ ಅವನು ಗುಡ್ಡ ಇಳಿದು ಊರಿಗೆ ಬರುತ್ತಿದ್ದ. ದಿನಕ್ಕೊಂದು ಬೀದಿಯನ್ನು ಆರಿಸಿಕೊಂಡು ಬೀದಿಯ ತುದಿಯಲ್ಲಿ ನಿಂತು ಗಟ್ಟಿಯಾಗಿ ರಾಗವಾಗಿ ಭಗವದ್ಗೀತೆಯ ಅಧ್ಯಾಯಗಳನ್ನು ಒಂದು ಗಂಟೆ ಕಾಲ ಹಾಡುತ್ತಿದ್ದ. ಅವನು ನೆಲದ ಮೇಲಿಟ್ಟ ಬುಟ್ಟಿಯಲ್ಲಿ ದಾರಿಹೋಕರು ಅಕ್ಕಿಯನ್ನೊ ಬೇಳೆಯನ್ನೊ ಹಣ್ಣನ್ನೊ ಹಾಕುತ್ತಿದ್ದರು. ಈ ಸಣ್ಣ ಬುಟ್ಟಿ ತುಂಬಿದ ಮೇಲೆ ಬೈರಾಗಿ ಏನನ್ನೂ ಸ್ವೀಕರಿಸುತ್ತಿರಲಿಲ್ಲ. ತನ್ನ ಪಠನ ಮುಗಿಸಿ ಬೆಟ್ಟಕ್ಕೆ ಹಿಂದಿರುಗಿ ಅದನ್ನು ಬೇಯಿಸಿ ತಿಂದುಬಿಡುತ್ತಿದ್ದ ಅಷ್ಟೆ. +ಕೃಷ್ಣಪ್ಪನಿಗೆ ಈ ಬೈರಾಗಿಯೆಂದರೆ ಕುತೂಹಲ. ಬೆಟ್ಟ ಹತ್ತಿ ಅವನ ಗುಹೆಯ ಹತ್ತಿರ ಕೂತ. ಬೈರಾಗಿ ತನ್ನ ನಿತ್ಯದ ಅಕ್ಕಿಬೇಳೆಯನ್ನು ಒಂದು ಕಲ್ಲುಮರಿಗೆಗೆ ಹಾಕಿ ಗುಹೆಯ ಹೊರಗಿದ್ದ ಮೂರು ಕಲ್ಲುಗಳ ಒಲೆಯ ಮೇಲಿಟ್ಟು ಬೇಯಿಸುತ್ತಿದ್ದ. ಕೃಷ್ಣಪ್ಪ ನಮಸ್ಕಾರ ಎಂದು ಅಲ್ಲೇ ಒಂದು ಬಂಡೆಯ ಮೇಲೆ ಕೂತು ಕಾದ. ಬೈರಾಗಿ ಮಾತಾಡಲಿಲ್ಲ. ಅನ್ನ ಬೇಳೆಗಳು ಬೆಂದ ಮೇಲೆ ಗುಹೆಯ ಒಳಗಿಂದ ಬೈರಾಗಿ ಮುತ್ತುಗದ ಎಲೆಗಳನ್ನು ತಂದು ಕಡ್ಡಿಯಿಂದ ಅವುಗಳನ್ನು ಹೆಣೆದು ಮೂರು ದೊಡ್ಡ ಎಲೆಗಳನ್ನು ಮಾಡಿದ. ಪಾತ್ರೆಯಲ್ಲಿ ಇದ್ದುದನ್ನು ಸಮವಾಗಿ ಈ ಮೂರು ಎಲೆಗಳಿಗೂ ಬಡಿಸಿ ಒಂದನ್ನು ಸ್ವಲ್ಪ ದೂರ ಹೋಗಿ ಇಟ್ಟು ಬಂದ. ಬಂಡೆಗಳ ಮರೆಯಿಂದ ಒಂದು ನಾಯಿ ಈ ಆಹಾರಕ್ಕೆ ನಿಧಾನವಾಗಿ ಬರುವುದನ್ನು ಕೃಷ್ಣಪ್ಪ ಕಂಡ. ಅವರಸರವಿಲ್ಲದೇ ಬೈರಾಗಿ ಹಿಂದಕ್ಕೆ ಬಂದು ಮತ್ತೊಂದು ಎಲೆಯನ್ನು ಕೃಷ್ಣಪ್ಪನ ಎದುರಿಗಿಟ್ಟು ಉಳಿದ ಎಲೆಯ ಎದುರು ತಾನು ಕೂತು ಕಣ್ಣು ಮುಚ್ಚಿ ಧ್ಯಾನ ಮಾಡಿದ. ಏನು ಹೇಳಬೇಕು ಕೃಷ್ಣಪ್ಪನಿಗೆ ತಿಳಿಯಲಿಲ್ಲ. ಬೈರಾಗಿ ಊಟ ಮಾಡಲು ತೊಡಗಿದ ಮೇಲೆ ಕೃಷ್ಣಪ್ಪನೂ ಎಲೆಯ ಮೇಲಿದ್ದುದನ್ನು ತಿಂದ. ಅದರಲ್ಲಿ ಯಾವ ರುಚಿಯೂ ಇರಲಿಲ್ಲ. ಆದರೆ ಹಸಿವಾಗಿತ್ತು -ತಿಂದ. +ಬೈರಾಗಿ ಊಟ ಮುಗಿಸಿ ಎಲೆಯನ್ನು ದೂರ ಎಸೆದು ಬಂದ. ಕೃಷ್ಣಪ್ಪನೂ ಎಸೆದು ಮೊದಲಿದ್ದ ಜಾಗಕ್ಕೆ ಬಂದು ಕೂತ. ಈಗಲೂ ಬೈರಾಗಿ ಮಾತಾಡಲಿಲ್ಲ. ಕ್ರಮೇಣ ಕೃಷ್ಣಪ್ಪನಿಗೂ ಮಾತಿನ ಅಗತ್ಯ ಕಾಣಲಿಲ್ಲ. ಬೈರಾಗಿ ನೆರಳಿನಲ್ಲಿ ಮಲಗಿ ಕಣ್ಣುಮುಚ್ಚಿದ. ಈ ಬೈರಾಗಿ ಬರೀ ಠೊಳ್ಳೋ, ಗಟ್ಟಿಯೋ, ಮುಕ್ತನೋ, ಈಡಿಯಟ್ಟೋ -ಇಂಥ ಪ್ರಶ್ನೆಗಳೆಲ್ಲ ಅಪ್ರಸ್ತುತ ಎನ್ನಿಸಿಬಿಟ್ಟಿತು. ಇದರಿಂದ ಕೃಷ್ಣಪ್ಪನಿಗೆ ತನಗಾಗುತ್ತಿದ್ದ ದಿಗಿಲು ಇನ್ನಷ್ಟು ಹೆಚ್ಚಿತು. ಹಲವು ಸಾಧ್ಯತೆಗಳ ಎದುರಿಗೆ ನಿಂತಿರುವುದರಿಂದ ಈ ದಿಗಿಲು ತನಗೆ ಹುಟ್ಟಿರಬೇಕು. ಈ ಬಂಡೆಗಳಿಂದ ಉರುಳಿ ಸಾಯಬಹುದು. ಈ ಬೈರಾಗಿಯಂತೆ ದಿನಕ್ಕೊಮ್ಮೆ ತಿಂದು ಸುಮ್ಮನೇ ಇದ್ದುಬಿಡಬಹುದು. ಅಣ್ಣಾಜಿಯಂತೆ ಸಮಾಜದ ಜೊತೆ ಪರದಾಡಬಹುದು. ಗೌರಿಯನ್ನು ಪ್ರತಿ ರಾತ್ರೆ ತಬ್ಬಿ ಸಂಭೋಗಿಸಿ ಮಕ್ಕಳನ್ನು ಪಡೆಯಬಹುದು. ಯಾವುದೂ ಅಗತ್ಯವಲ್ಲ. ಯಾವುದನ್ನಾದರೂ ಮಾಡಬಹುದು. ಮಾಡದೆ ಈಗಿನಂತೆ ಇರಬಹುದು. ಹಾಗಿರುವುದೂ ಇನ್ನೊಂದನ್ನು ಮಾಡಿದಂತೆಯೇ. ಯಾವುದಕ್ಕೂ ಅರ್ಥವಿಲ್ಲ. ಅಥವಾ ತಾನು ಕೊಟ್ಟ ಅರ್ಥವಿದೆ. +ಬೈರಾಗಿ ಎದ್ದು ಕೂತ. ಅವನ ಮುಖ ನಿರ್ಭಾವವಾಗಿತ್ತು. ಎದ್ದು ಹೋಗಿ ಒಂದು ಬಂಡೆಗೆ ಮರೆಯಾಗಿ ಕೂತು ಉಚ್ಚೆ ಹೊಯ್ದು ಬಂದು ಮತ್ತೆ ಮಲಗಿದ. +ಈ ಬೈರಾಗಿ ಪ್ರತಿನಿತ್ಯ ತಾನು ಹೀಗಿರುವುದೆಂದು ನಿರ್ಧಾರ ಮಾಡಿ ಹೊರಡುತ್ತಾನೆಯೇ? ಅಥವಾ ಅವನ ನಿರ್ಧಾರ ಆಗಿ ಹೋಗಿದೆಯೆ? ಅವನಿಗೆ ಖುಷಿಯಾಗುತ್ತಿದೆಯೆ? ಅಥವಾ ಅದರ ಅಗತ್ಯವಿಲ್ಲವೆ? +ಇವನು ಹೀಗೆ ಸುಮ್ಮನೇ ನಾಳೆಯ ತನಕ ಇದ್ದುಬಿಡುವನಲ್ಲ? ಕರ್ಮ ಮಾಡು, ಕರ್ಮ ಮಾಡದೆ ಸುಮ್ಮನೇ ಇದ್ದುಬಿಡು. ಹಿಗ್ಗಬೇಡ, ಕುಗ್ಗಬೇಡ, ಇತ್ಯಾದಿಗಳನ್ನು ನಿತ್ಯರಾಗವಾಗಿ ಒದರುವುದರ ಮೂಲಕ ತನ್ನ ನಿತ್ಯದ ಅನ್ನ ಸಂಪಾದಿಸಿ ಬರಿದೇ ಇರುತ್ತಾನಲ್ಲ -ಯಾವುದರಿಂದ ಇವನು ಚಲಿಸುತ್ತಾನೆ? ಇತ್ಯಾದಿಗಳಿಂದ ರಗಳೆಯಾಗಿ ಕೃಷ್ಣಪ್ಪ ಅಪ್ರಯತ್ನವಾಗಿ ಥಟ್ಟನೇ ಎದ್ದು ನಿಂತು +“ಸ್ವಾಮಿಗಳೇ ಹೇಳಿ ನಂದೊಂದು ಪ್ರಶ್ನೆಯಿದೆ” ಎಂದ. ಬೈರಾಗಿ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತ ಮಲಗಿಯೇ ಇದ್ದ. +“ನೀವೇನು ಮೌನಿಗಳ? ಹಾಗಾದರೆ ಯಾಕೆ ನಿತ್ಯ ಭಗವದ್ಗೀತೆ ಹಾಡ್ತೀರಿ ಬೀದಿಗಳ ಮೇಲೆ, ನಿಮ್ಮ ಉದ್ದೇಶ ಏನು?” +ಬೈರಾಗಿ ಮುಖವನ್ನೂ ತಿರುಗಿಸಲಿಲ್ಲ. ಆತ ಕಿವುಡನಿರಬಹುದೆನ್ನಿಸಿತು. ತನ್ನ ಮಾತುಗಳು ವೃಥಾ ಕಿರುಚಾಟವಾಗುತ್ತಿರುವುದನ್ನು ಗಮನಿಸಿದರೂ ತಡೆದುಕೊಳ್ಳಲಾರದೆ ಬೈರಾಗಿಯ ಹತ್ತಿರ ಕೂತು ಕೂಗಿದ: +“ಹೇಳ್ರೀ…..” +ಕೃಷ್ಣಪ್ಪನಿಗೆ ತಾನು ತೀರಾ ಹಾಸ್ಯಾಸ್ಪದನಾಗಿಬಿಟ್ಟಂತೆ ಎನ್ನಿಸಿತು. ನಿಸ್ಸಹಾಯಕನಾಗಿ ಬೈರಾಗಿಯ ಕೈಯನ್ನು ಬಲವಾಗಿ ಹಿಡಿದ. ಪ್ರತಿಭಟಿಸದೆ ಅವನ ಕೈಯಲ್ಲಿ ತನ್ನ ಕೈಯನ್ನಿಟ್ಟು ಬೈರಾಗಿ ಪೂರ್ವದಿಕ್ಕನ್ನು ನೋಡುತ್ತಲೇ ಕೂತಿದ್ದ. ಕಿರುಚಿಕೊಳ್ಳಬೇಕೆನ್ನಿಸಿತು. ಕಣ್ಣು ಕಿವಿ ಮೂಗು ಚರ್ಮಗಳು ಹೊರಗನ್ನು ಒಳಗೆ ಬಿಡುತ್ತಲೇ ಇರುತ್ತವಲ್ಲವೆ? ಹೊರಗನ್ನೂ ಒಳಗನ್ನೂ ಇನ್ನಷ್ಟು ಆಪ್ತವಾಗಿ ಶಿಶ್ನ ಯೋನಿಗಳು ಬಿಗಿಯುತ್ತವಲ್ಲವೆ? ಈ ಸತ್ಯ ಬಿಟ್ಟು ಬೇರೇನನ್ನು ಈ ಗೋಸಾಯಿ ಕಂಡಿದ್ದಾನೆ? ತಾನವನಿಂದ ಪ್ರತಿಕ್ರಿಯೆ ಅಪೇಕ್ಷಿಸಿದ್ದರಿಂದಲ್ಲವೇ ಅವನ ಅಗಮ್ಯತೆ ಇನ್ನಷ್ಟು ರಹಸ್ಯವಾಗಿಬಿಟ್ಟಿದ್ದು? ಅವನು ಈಡಿಯಟ್ಟಿದ್ದರೂ ತನ್ನನ್ನು ಗೆದ್ದಿದ್ದಾನೆ. ಒಂದು ಕ್ಷಣ ಅವನನ್ನು ಹಿಂಸೆ ಮಾಡಿಯಾದರೂ ಪ್ರತಿಕ್ರಿಯೆ ಪಡೆಯಬೇಕೆಂಬ ಚಪಲವನ್ನು ಅದುಮಿಕೊಂಡು ನಿರಾಸೆಯಲ್ಲಿ ಕೃಷ್ಣಪ್ಪ ಎದ್ದು ನಿಂತ. ಭಾರವಾದ ಕಾಲುಗಳನ್ನು ಎಳೆಯುತ್ತ ಬೆಟ್ಟ ಇಳಿದು ಊರಿಗೆ ನಡೆದ. +ರೋಟರಿ ಕ್ಲಬ್ಬಿನ ಸಭೆಯಲ್ಲಿ ಅದರ ರಿಚುಯಲ್ಲುಗಳನ್ನು ಅಣ್ಣಾಜಿ ಸಹಿಸುತ್ತಿರುವುದಕ್ಕೆ ಆಶ್ಚರ್ಯಪಡುತ್ತ ಕೃಷ್ಣಪ್ಪ ಕೂತ. ಅಣ್ಣಾಜಿ ವ್ಯಕ್ತಿ ಮತ್ತು ಸಮಾಜದ ಅನ್ಯೋನ್ಯತೆಯ ಬಗ್ಗೆ, ಉತ್ಪಾದನಾ ವಿಧಾನಗಳ ಬದಲಾವಣೆ, ವರ್ಗಪ್ರಜ್ಞೆ, ಕ್ರಾಂತಿಗಳ ಬಗ್ಗೆ ನಿರರ್ಗಳ ಇಂಗ್ಲಿಷಲ್ಲಿ ಮಾತಾಡುವುದನ್ನೂ; ಇಂಗ್ಲಿಷಲ್ಲಿ ನಡೆಯುವ ಈ ಕ್ರಾಂತಿ ಸಿಲ್ಕ್ ಜುಬ್ಬ, ಸೂಟುಗಳನ್ನು ತೊಟ್ಟ ಮಂದಿಗೆ ಜೋಗುಳದಷ್ಟು ಆಪ್ಯಾಯಮಾನವಾಗಿ ಕಾಣುವುದನ್ನೂ ಅಸಹ್ಯಪಡುತ್ತ ಕೃಷ್ಣಪ್ಪ ಅನುಭವಿಸಿದ. ಕರ್ಮ ಪುನರ್ಜನ್ಮಗಳಂತೆಯೇ ಈ ಕ್ರಾಂತಿಯೂ ಕಾಲಾನುಕಾಲದಲ್ಲಿ ಇನೆವಿಟಬಲ್ -ಯಾಕಾಗಬಾರದು? ಪ್ರಳಯದಂತೆ? ಚನ್ನವೀರಯ್ಯ ಬೀಗುತ್ತ ಕೂತಿದ್ದ. ವಂದನಾರ್ಪಣೆಗೆ ಮುಂಚೆಯೇ ಕೃಷ್ಣಪ್ಪ ಎದ್ದು ಹಾಸ್ಟೆಲಿಗೆ ಹೋದ. +.. +.. +.. +ಕತ್ತಲಾಗಿತ್ತು. ಹಾಸ್ಟೆಲಿನ ಎದುರು ಗೌರಿ ದೇಶಪಾಂಡೆಯ ಕಾರು ನಿಂತಿತ್ತು. ಡ್ರೈವರ್ ಸಿಗರೇಟು ಸೇದುತ್ತ ಕಾರಿನ ಹೊರಗೆ ನಿಂತಿದ್ದ. ಹಾಸ್ಟೆಲಿನ ಹುಡುಗರೆಲ್ಲ ಬಲು ಸಂಭ್ರಮದಲ್ಲಿ ಗುಂಪುಗಳಾಗಿ ನಿಂತು ಉದ್ವೇಗದಿಂದ ತಮ್ಮತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದರು. ಈ ಹಾಸ್ಟೆಲ್ಲಿನ ಒಳಗೆ ಒಂದು ಹೆಣ್ಣು ಜೀವ ಬಂದದ್ದು ಇದೇ ಮೊದಲ ಬಾರಿ. ಒಂದು ಹೆಣ್ಣು ಸೊಳ್ಳೆ ಕೂಡ ತಮ್ಮ ಗಂಡು ಹಾಸ್ಟೆಲ್ಲಿಗೆ ಬರಲಾರದು ಎಂದು ತಿಳಿದ ಈ ಹುಡುಗರಿಗೆ ಗೌರಿ ದೇಶಪಾಂಡೆಯ ಆಗಮನ ಐತಿಹಾಸಿಕ ಘಟನೆಯಾಗಿಬಿಟ್ಟಿತ್ತು. ಕೃಷ್ಣಪ್ಪನನ್ನು ಕಂಡೊಡನೆ ಮಾತು ನಿಲ್ಲಿಸಿದರು. ಕೃಷ್ಣಪ್ಪ ಮಹಡಿ ಹತ್ತಿ ಹೋಗಿ ತನ್ನ ರೂಮಿನ ಬಾಗಿಲು ತೆರೆದ. ಗೌರಿ ಅದೇನೋ ಪುಸ್ತಕವನ್ನು ಮಗ್ನಳಾಗಿ ಓದುತ್ತಿದ್ದವಳು ರೂಮಿನ ಬಾಗಿಲು ತೆರೆದೊಡನೆ ಎದ್ದು ನಿಂತಳು. +“ಕ್ಷಮಿಸಿ, ನಿಮ್ಮ ರೂಮಿಗೆ ಬಂದು ತೊಂದರೆ ಕೊಡುತ್ತಿದ್ದೇನೆ” ಎಂದು ಮೃದುವಾಗಿ ನಕ್ಕಳು. ಅವಳ ಹಾಲು ಬಣ್ಣದ ಅಗಲವಾದ ಮುಖ ಶಾಂತವಾಗಿತ್ತು. ಹಣೆಯ ಮೇಲೆ ದೊಡ್ಡ ಪುಡಿಕುಂಕುಮವನ್ನು ಇಟ್ಟಿದ್ದಳು. ಸ್ವಲ್ಪ ದಪ್ಪವಾದ ಅವಳ ಕೆಳತುಟಿ, ಭಾರವಾದ ಮೊಲೆಗಳು, ದುಂಡನೆಯ ತೋಳುಗಳು, ನೀಳವಾದ ಕಾಲುಗಳು, ಅವಳು ನಿಲ್ಲುವ ತ್ರಿಭಂಗಿ, ಇಡೀ ಬೆನ್ನಿನ ಮೇಲೆ ಭಾರವಾಗಿ ಇಳಿದಿದ್ದ ಕಪ್ಪು ಜಡೆ -ಇವು ಒಟ್ಟಿನಲ್ಲಿ ಮೋಹ ಹುಟ್ಟಿಸುವಂತಿದ್ದರೆ ಅವಳ ಪ್ರಶಾಂತವಾದ ದೊಡ್ಡ ಕಣ್ಣುಗಳು, ಕೊರೆದುಬಿಟ್ಟಂತಿದ್ದ ಅವಳ ಹುಬ್ಬುಗಳು, ಅದಕ್ಕೆ ವಿರುದ್ಧವಾಗಿ ಇವಳು ಅಗಮ್ಯ ಎಂಬ ಭಾವನೆ ಹುಟ್ಟಿಸುತ್ತಿದ್ದವು. ಮೌನದ ಮಡುವಿನಲ್ಲಿ ಸದಾ ಅಡಗಿಕೊಂಡ ಕನ್ನೆಯಂತೆ ಕಾಣುತ್ತಿದ್ದಳು. ತನ್ನ ಸಂತೋಷ ಮೆಚ್ಚುಗೆ ಬಚ್ಚಿಡಲಾರದೆ ಕೃಷ್ಣಪ್ಪನೂ ಕಲ್ಲಿನಲ್ಲಿ ಕಡೆದ ಕಪ್ಪು ವಿಗ್ರಹದಂತೆ ನಿಂತ. +“ಕೂರಬಹುದಲ್ಲ?” +ತುಂಟ ನಗೆ ನಕ್ಕು ಗೌರಿ ಕೇಳಿ, ಇದ್ದುದು ಒಂದೇ ಕುರ್ಚಿಯಾದ್ದರಿಂದ ತಾನೆಲ್ಲಿ ಕೂರುವುದೆಂದು ಹುಡುಕಿದಳು. ಹಾಸಿಗೆ ಮೇಲೆ ಕೃಷ್ಣಪ್ಪ ಅವಳಿಗೆ ಕುರ್ಚಿ ತೋರಿಸಿದ. ಗೋಡೆಯ ಮೇಲೆ ಕೃಷ್ಣಪ್ಪನಿಗೆ ಪೂಜ್ಯರಾಗಿದ್ದ ವಿವೇಕಾನಂದ ಗಾಂಧೀಜಿಯವರನ್ನು ಗೌರಿ ಗಮನಿಸಿದಳು. +“ನೀವು ಕಾಲೇಜು ಬಿಡ್ತಿದ್ದೀರಂತೆ ನಿಜವ?” ಎಂದಳು. +“ಹೌದು, ಅದಕ್ಕೆ ಕಾರಣ ನನಗೇನಾದರೂ ಬೇರೆ ಮಾಡಬೇಕೂಂತ ಅನ್ನಿಸಿದ್ದು. ನೀವಲ್ಲ.” +ಗೌರಿಗೆ ಸಮಾಧಾನವಾದದ್ದು ಕೃಷ್ಣಪ್ಪನಿಗೆ ತಿಳಿಯಿತು. ಗೌರಿ ಹೇಳಿದಳು. +“ನಿಮ್ಮಕಾಗದ ಬಂತು. ನನಗೆ ನನ್ನ ತಾಯಿ ಬಿಟ್ಟರೆ ನೀವು ಮಾತ್ರ ಇರೋದು -ಹೇಗೆ ಹೇಳಲಿ ಗೌರವಾನೋ ಪ್ರೀತೀನೋ -ಅಂತೂ….ಆದರೆ ಮಾತ್ರ ಇದನ್ನ ಬಾಯಿ ಬಿಟ್ಟು ಹೇಳ್ದೆ ಅಂತ ಮನಸ್ಸಿಗೆ ಹಚ್ಚಿಕೋಬೇಡಿ. ಯಾವ ಉದ್ದೇಶಾನೂ ಇರ್ಲಿಲ್ಲ ನನಗೆ ಇಲ್ಲಿ ಬರಲಿಕ್ಕೆ.” +ಗೌರಿ ತುಂಬ ಸಹಜವಾಗಿ ಮಾತಾಡಿದ್ದಳು. ಕೃಷ್ಣಪ್ಪ ತಲೆಬಾಗಿ ಕೂತು ಹೇಳಿದ: +“ಈ ಹುಡುಗರ ಹಾಸ್ಟೆಲಿಗೆ ಒಬ್ಬರೇ ಬಂದಿದೀರಲ್ಲ. ನಿಮ್ಮ ತಾಯಿ ಏನೆಂದುಕೋತಾರೆ?” +“ನೀವೂ ಇಂಥ ಪ್ತಶ್ನೆ ಕೇಳ್ತೀರೀಂತ ಅಂತ ನನಗೆ ಅನ್ನಿಸಿರಲಿಲ್ಲ…” ಕೃಷ್ಣಪ್ಪನಿಗೆ ತನ್ನ ಉತ್ತರದಿಂದ ನಾಚಿಕೆಯಾದ್ದನ್ನು ಗಮನಿಸಿದ ಗೌರಿ ನಗುತ್ತೆ ಹೇಳಿದಳು: +“ನನ್ನ ತಾಯಿ ಜೈಲಲ್ಲಿರೋ ನನ್ನ ತಂದೇನ್ನ ಬಿಟ್ಟು ಬಂದದ್ದರಿಂದ ನನ್ನ ಯಾವ ಇಷ್ಟಕ್ಕೋ ವಿರೋಧ ಬರಲ್ಲ….” +“ಹಾಗಂತ ಅಂದು ನೀವು ರಚ್ಚು ತೀರಿಸಿಕೊಳ್ಳಬಾರದಲ್ಲ?” +ಕೃಷ್ಣಪ್ಪ ಚೇತರಿಸಿಕೊಂಡಿದ್ದ. +“ಇದು ರಚ್ಚು ಅಂತ ನಿಮಗೆ ಯಾಕೆ ಅನ್ನಿಸತ್ತೆ? ನಾನು ನಿಮ್ಮನ್ನ ಇಷ್ಟಪಡ್ತೀನಿ ಅಂತ ಹೇಳಿದೆ. ನಿಮಗೆ ಗರ್ವ ಅಲ್ಲವೆ? ಇಂಥ ಮಾತನ್ನ ನಾನು ಆಡಬಹುದೂಂತ ಕೂಡ ನಿಮ್ಮ ಸ್ವಭಾವದಿಂದ ನೀವು ನಿರೀಕ್ಷಿಸಿರಲಿಲ್ಲ.” +ಕೃಷ್ಣಪ್ಪ ತಬ್ಬಿಬ್ಬಾದ. ಗೌರಿ ಎದ್ದು ನಿಂತು +“ಬರಬೇಕೂಂತ ಅನ್ನಿಸಿದಾಗ ಬನ್ನಿ ಮನೆಗೆ” ಎಂದು ಹೊರಟುಹೋದಳು. +ಪ್ರೇಮ ಎಷ್ಟು ತೀವ್ರವಾಗುತ್ತದೋ ಅಷ್ಟೇ ಪ್ರೀತಿಯ ವಸ್ತು ಅಗಮ್ಯವೆನಿಸುತ್ತದೆ ಎಂಬುದು ಕೃಷ್ಣಪ್ಪನ ಅನುಭವಕ್ಕೆ ಬಂತು. ನಾವು ತೀವ್ರವಾಗಿ ಆಸೆಪಟ್ಟಿದ್ದನ್ನು ಭೋಗಿಸಲ್ಲ, ಅಥವಾ ಆಸೆ ತೀವ್ರವಾಗಿದ್ದಾಗ ಭೋಗಿಸಲ್ಲ -ಎಂದುಕೊಳ್ಳುತ್ತಾನೆ ಕೃಷ್ಣಪ್ಪ ಸಾವನ್ನು ಎದುರಿಸುತ್ತ. +ಹೀಗೆ ಪ್ರೇಮ ಆಸೆ ನಿರಾಸೆಗಳ ಯಾವತ್ತೂ ಬಗೆಹರಿಯದ ಬೆಂಕಿಯ ಚಕ್ರಕ್ಕೆ ಕೃಷ್ಣಪ್ಪನನ್ನು ಗೌರಿ ಸಿಕ್ಕಿಸಿದ್ದಳು. ಮತ್ತಿನ್ನೊಂದು ರಾತ್ರಿಯನ್ನು ನಿದ್ದೆಯಿಲ್ಲದೆ ಕಳೆದು, ಬೆಳಿಗ್ಗೆ ಎದ್ದು ಅಣ್ಣಾಜಿಯನ್ನು ನೋಡಲು ಹೋದ. ಅಣ್ಣಾಜಿ ಬ್ರೇಕ್‌ಫ಼ಾಸ್ಟ್ ಮುಗಿಸಿ ತೋಟದಲ್ಲಿ ಚನ್ನವೀರಯ್ಯನ ಜೊತೆ ಕೂತಿದ್ದ. ಚನ್ನವೀರಯ್ಯ ಹರಕು ಮುರುಕು ಇಂಗ್ಲಿಷಲ್ಲಿ ಹಿಂದಿನ ದಿನದ ಅಣ್ಣಾಜಿ ಭಾಷಣವನ್ನು ತನ್ನ ಗೆಳೆಯರೆಲ್ಲ ಮೆಚ್ಚಿಕೊಂಡಿದ್ದನ್ನೂ, ದೊಡ್ಡ ದೊಡ್ಡ ಅಡ್ವೊಕೇಟರೂ ಆ ಇಂಗ್ಲಿಷಿಗೆ ತಲೆದೂಗಿದ್ದನ್ನೂ ವಿವರಿಸುತ್ತಿದ್ದ. ಕೃಷ್ಣಪ್ಪನಿಗೆ ಕೂರಲು ಕುರ್ಚಿ ಕೊಡಬೇಕೋ, ಅಥವಾ ನಿಂತಿದ್ದು ಮಾತಾಡಿ ಹೋಗುವ ಮಟ್ಟದವನೋ ಎಂಬುದನ್ನು ತೀರ್ಮಾನಿಸಲಾರದೆ ಚನ್ನವೀರಯ್ಯ ಅವನನ್ನು ದಿಟ್ಟಿಸಿ ನೋಡುತ್ತಿದ್ದಾಗ ಅಣ್ಣಾಜಿ ಗೆಲುವಿನಿಂದ ಎದ್ದು ನಿಂತು ತನ್ನ ಕುರ್ಚಿಯನ್ನೆ ಅವನಿಗೆ ಕೊಡುವುದನ್ನು ಕಂಡು ಚನ್ನವೀರಯ್ಯ “ಬೇಡಿ, ಕುರ್ಚಿ ತರಿಸ್ತೇನೆ” ಎಂದು ಕರ್ಕಶವಾಗಿ “ಏ ಮಾದ-ಏ ಮಾದ, ಎಲ್ಲಿ ಹೋದೆಯೊ” ಅಂತ ಕೂಗಿದ. ಅಣ್ಣಾಜಿ ನಿಂತಿರುವುದು ನೋಡಿ, ಅವನೂ ನಿಂತ. ಅಣ್ಣಾಜಿಯ ಗೌರವಕ್ಕೆ ಪಾತ್ರನಾದ ಕೃಷ್ಣಪ್ಪನನ್ನು ಆಪಾದಮಸ್ತಕ ಪರೀಕ್ಷಿಸಿದ. “ಇವರು ಮಿಸ್ಟರ್ ಕೃಷ್ಣಪ್ಪ ಗೌಡರು -ಇನ್ನು ಹತ್ತು ವರ್ಷಗಳಲ್ಲಿ ಈ ದೇಶದ ದೊಡ್ಡ ನಾಯಕರಾಗುತ್ತಾರೆ -ರೈತನಾಯಕರಾಗುತ್ತಾರೆ. ಒರಿಜಿನಲ್ ಆಗಿ ಯೋಚನೆ ಮಾಡಬಲ್ಲವರು. ಗ್ರಾಸ್ ರೂಟ್ಸ್ ಪಾಲಿಟಿಕ್ಸ್ ಮಾಡಬಲ್ಲರು” ಎಂದು ಅಣ್ಣಾಜಿ ಕೃಷ್ಣಪ್ಪನನ್ನು ಗುರ್ತುಮಾಡಿಕೊಡುತ್ತಿದ್ದಂತೆ ಚನ್ನವೀರಯ್ಯ ಲಾನಿನ ಹುಲ್ಲು ನೋಡುವುದನ್ನು ಕಂಡು ಅಣ್ಣಾಜಿ ತನ್ನ ಪಾಠದ ಕ್ರಮಕ್ಕೆ ಹಿಂದಿರುಗಿದ. “ಗ್ರಾಸ್ ರೂಟ್ಸ್ ಅನ್ನೋದು ಈಡಿಯಮ್. ಗಾಂಧಿ ಪಾಲಿಟಿಕ್ಸ್ ಗ್ರಾಸ್ ರೂಟ್ಸ್ ಪಾಲಿಟಿಕ್ಸ್ ಉದಾಹರಣೆಗೆ. ಮೇಲುಮೇಲಿನ ಬದಲಾವಣೆಗಳಿಗೆ ಮಾತ್ರ ಪ್ರಯತ್ನಿಸದೆ ಕಾಮನ್ ಪೀಪಲ್ಸ್‌ನ ಕಾನ್‌ಶಸ್‌ನೆಸ್ಸನ್ನೂ ಬದಲು ಮಾಡಲು ಪ್ರಯತ್ನಿಸೋದು -ನಿನ್ನೆ ಅದೇ ನಾನು ಮಾತಾಡಿದ್ದು.” +ಚನ್ನವೀರಯ್ಯ ಅರ್ಥಪೂರ್ಣವಾಗಿ ಕೃಷ್ಣಪ್ಪನನ್ನೂ ಒಳಪಡಿಸಿಕೊಳ್ಳಲು ಯತ್ನಿಸುವ ಮಾತಿನಲ್ಲಿ ಹೇಳಿದ: +“ಈಗಿನ ಕಾಲದ ಇಂಗ್ಲಿಷ್ ಸ್ಟಾಂಡರ್ಡ್ ಎಷ್ಟು ಇಳಿದಿದೆ ಅಂದ್ರೆ ಡಬಲ್ ಗ್ರಾಜುಯೇಟುಗಳಿಗೂ ಅರ್ಥವಾಗಲ್ಲ. ಅಲ್ಲೇನ್ರಿ ಮಿಸ್ಟರ್ ಕೃಷ್ಣಪ್ಪ ಗೌಡ -ಡೆಮಾಕ್ರಸಿ ಅಂತ ಕಾಕಪ್ಪ ಬೋಳಪ್ಪಗಳನ್ನೂ ಮೇಷ್ಟ್ರಾಗಿ ಮಾಡಿದ್ರೆ ನಮ್ಮ ಮಕ್ಕಳು ಹೇಗೆ ಕಲಿತಾರು ಹೇಳ್ರಿ.” +ಗೌರಿ ದೇಶಪಾಂಡೆಯ ಮನೆಗೆ ಹೋಗದಿರಲೆಂದು ಕೃಷ್ಣಪ್ಪ ಅಣ್ಣಾಜಿಯನ್ನು ನೋಡಲು ಬಂದದ್ದು. ಆದರೆ ಲಾನಿನ ಮೇಲೆ ನಡೆಯುತ್ತಿದ್ದ ಈ ನಾಟಕ ಅವನಿಗೆ ಅಸಹನೀಯವಾಯಿತು. +“ಕ್ಷಮಿಸಿ -ನಾನು ಹೋಗಬೇಕು” ಎಂದ. ಉಮೆಯೇ ಸ್ವತಃ ಟ್ರೇನಲ್ಲಿ ಕಾಫ಼ಿ ತರುವುದು ಕಂಡು ಮುಳ್ಳಿನ ಮೇಲೆ ಕೂತಂತೆ ಕಾಫ಼ಿ ಕುಡಿದ. ಅವನು ಏಳಬೇಕೆಂದಿದ್ದಾಗ ಚನ್ನವೀರಯ್ಯನೇ ಕಾರು ತರಲು ಹೇಳಿ ಹೊರಟದ್ದರಿಂದ ಅಣ್ಣಾಜಿ ಜೊತೆ ಅವನ ಗರಾಜ್ ಮೇಲಿನ ರೂಮಿಗೆ ಹೋದ. ಬಾಗಿಲು ಹಾಕಿಕೊಂಡು. +“ಅಣ್ಣಾಜಿ -ನಾನು ಕಾಲೇಜನ್ನು ಬಿಟ್ಟೆ. ಹುಡುಗಾಟಿಕೆ ಸಾಕಾಯ್ತು” ಎಂದ. ಅಣ್ಣಾಜಿ ಹರ್ಷದಲ್ಲಿ ಕೃಷ್ಣಪ್ಪನನ್ನು ತಬ್ಬಿಕೊಳ್ಳಲು ಹೋಗಿ, ಅವನು ಸೆಟೆದದ್ದು ಕಂಡು, ಅವನಿಗೆ ಮೈ ಮುಟ್ಟಿಸಿಕೊಳ್ಳುವುದೆಂದರೆ ಮುಜುಗರವೆಂಬುದನ್ನು ನೆನಪು ಮಾಡಿಕೊಂಡು ಚಾಚಿದ ಕೈಗಳನ್ನು ಹಾಗೇ ಎತ್ತಿ +“ಗ್ರೇಟ್ -ಹಳ್ಳಿಗೆ ಹೋಗು” ಎಂದು ಸಿಗರೇಟ್ ಹತ್ತಿಸಿದ. ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿ ಕೂತಿದ್ದರು. +“ನಿನ್ನೆ ಮೀಟಿಂಗಿಗೆ ಡಿ.ಎಸ್.ಪೀ ನೂ ಬಂದಿದ್ದ.” ಕೃಷ್ಣಪ್ಪ ಪ್ರಶ್ನಾರ್ಥಕವಾಗಿ ಅಣ್ಣಾಜಿ ಮುಖ ನೋಡಿದ. +“ಎಸ್. ನಾನು ರೆಸ್ಪಕ್ಟಬಲ್ ಆಗೋಕೆ ಪ್ರಯತ್ನಿಸ್ತ ಇದೀನಿ. ಆದರೆ ನೋಡು -” +ಎಂದು ಅವತ್ತಿನ ಹಿಂದೂ ಪತ್ರಿಕೆಯ ಒಳಮುಖದ ಕಾಲಂ ಒಂದನ್ನು ತೋರಿಸಿದ. ಅದರಲ್ಲಿ ಸ್ವಾಮೀಜಿ ಎಂದು ಕರೆಸಿಕೊಳ್ಳುತ್ತ ತೆಲಂಗಾಣ ಪ್ರದೇಶದಲ್ಲಿ ರೈತರನ್ನು ಹಿಂಸೆಗೆ ಪ್ರಚೋದಿಸಿದವನೊಬ್ಬ ತಪ್ಪಿಸಿಕೊಂಡಿದ್ದಾನೆಂದೂ, ಅವನನ್ನು ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುವುದಾಗಿಯೂ ಪ್ರಕಟವಾಗಿತ್ತು. ಬೋಳಿಸಿದ ತಲೆ, ಕಾವಿ ಜುಬ್ಬ, ಕಾವಿ ಪಂಚೆ ಧರಿಸಿದ ಎತ್ತರವಾದ ನಿಲುವಿನ ಕೋಲುಮುಖದ ಈ ಸ್ವಾಮೀಜಿಯ ವರ್ಣನೆಯೂ ಸುದ್ದಿಯಲ್ಲಿತ್ತು. ಕೃಷ್ಣಪ್ಪ ಅನುಮಾನದಿಂದ ಬಂಗಾಳಿ ಗೃಹಸ್ಥನಂತೆ ಕಾಣುವ ಅಣ್ಣಾಜಿಯನ್ನು ನೋಡುತ್ತಿದ್ದಾಗ ಅಣ್ಣಾಜಿ ತನ್ನ ಟ್ರಂಕಿನಿಂದ ಒಂದು ಕಾವಿ ಜುಬ್ಬ ಪಂಚೆಗಳನ್ನು ಹೊರಗೆ ತೆಗೆದು ಕಾಗದದಲ್ಲಿ ಸುತ್ತಿ +“ಇನ್ನಿದರ ಉಪಯೋಗವಿಲ್ಲ. ಇದನ್ನು ಸುಟ್ಟುಬಿಡು” ಎಂದ. +“ಮುಂದೆ” ಎಂದ ಕೃಷ್ಣಪ್ಪ. +“ನೀನು ಹಳ್ಳಿಗೆ ಹೋದ ಮೇಲೆ ಅಲ್ಲಿ ಎಲ್ಲಾದರೂ ನನ್ನ ಮುಚ್ಚಿಡು. ಈಗ ಸದ್ಯ ನಾನು ರಾಯ್ ಧೋರಣೆಯಿಂದ ಮಾರ್ಕ್ಸ್‌ವಾದವನ್ನು ಟೀಕಿಸಿ ಮಾತಾಡುತ್ತ ಬರೆಯುತ್ತ ನನ್ನ ಐಡೆಂಟಿಟೀನ ಮುಚ್ಚಿಕೊಂಡಿರ್ತೇನೆ. ನೋಡು.” +ಎಂದು ರೂಮಲ್ಲಿ ತನ್ನೊಂದು ಪುಸ್ತಕದಿಂದ ಕತ್ತರಿಸಿ ಅಂಟಿಸಿದ್ದ ಲಿಂಕನ್ ಮತ್ತು ರೂಸ್‌ವೆಲ್ಟರ ಫ಼ೋಟೋಗಳನ್ನು ತೋರಿಸಿದ. +ಕೃಷ್ಣಪ್ಪನಿಗೆ ತನಗಾಗುತ್ತಿದ್ದ ನಿಷ್ಕಾರಣವಾದ ದಿಗಿಲುಗಳನ್ನು ಹೇಳಿಕೊಳ್ಳಬೇಕೆನ್ನಿಸಿದರೂ, ಮಾತಾಡಲು ಇಷ್ಟವಾಗಲಿಲ್ಲ. ಕಾವಿ ಅಂಗಿ ಪಂಚೆಗಳನ್ನು ಅವತ್ತಿನ ಹಿಂದೂನಲ್ಲಿ ಸುತ್ತಿಕೊಂಡು ಹೊರಡಲು ನಿಂತಾಗ ಬಾಗಿಲು ತಟ್ಟಿದ್ದು ಕೇಳಿಸಿತು. ಅಣ್ಣಾಜಿಯ ಕಣ್ಣುಗಳಲ್ಲಿ ಸಂತೋಷ ಚಿಮ್ಮಿತು. +“ಉಮಾ ಇರಬೇಕು. ಮಾರ್ವಲಸ್ ಉಮನ್. ರೆವಲ್ಯೂಶನರಿಗೆ ಪಕ್ಕದಲ್ಲಿ ಅಂಥ ಒಬ್ಬ ಉಮನ್ ಇದ್ದರೆ” ಎಂದು ಹೋಗಿ ಬಾಗಿಲು ತೆರೆದ. ಉಮಾ ಗಾರ್ಕಿಯ ಕಥೆಗಳ ಪುಸ್ತಕ ಹಿಡಕೊಂಡು ನಿಂತು “ಬರಲೇ” ಎಂದಳು. “ಇರು, ನಾವು ಗಾರ್ಕೀನ್ನ ಚರ್ಚಿಸ್ತ ಇದೇವೆ” ಎಂದರೂ ಕೃಷ್ಣಪ್ಪ ಒಪ್ಪಲಿಲ್ಲ. ಪ್ರೇಮದಲ್ಲಿ ಹೊಳೆಯುವ ಉಮೆಯ ಕಣ್ಣುಗಳು, ಅವಳ ಉಸಿರಿಗೆ ಏರಿಳಿಯುವ ಉಬ್ಬಿದ ಎದೆ, ಚುರುಕಾದ ಅವಗಾಹನೆಗಳಿಂದ ತನ್ನಲ್ಲಿ ಅಸೂಯೆ ಹುಟ್ಟುತ್ತಿದೆ ಎಂಬುದನ್ನು ಗಮನಿಸಿ ಅವನಿಗೆ ಕಸಿವಿಸಿಯಾಗಿತ್ತು. ಅಣ್ಣಾಜಿಗೂ ಉಮೆಯನ್ನು ನೋಡಿ ಅವಳ ಜೊತೆ ಒಂಟಿಯಾಗಿರಲು ದಿಗಿಲಾಗಿರಬಹುದು -ತನ್ನನ್ನು ಕೂತಿರಲು ಒತ್ತಾಯ ಮಾಡುತ್ತ ಮಹಡಿ ಮೆಟ್ಟಿಲು ಇಳಿದು ಬಂದು ಬೀಳ್ಕೊಟ್ಟ. +ಕೃಷ್ಣಪ್ಪನಿಗೆ ಗೌರಿಯ ಮನೆಗೆ ಸೀದ ಹೋಗಬೇಕೆನ್ನಿಸಿ ಅವಳ ಮನೆ ಕಡೆ ನಡೆದ. ಮನೆ ಹತ್ತಿರವಾಗುತ್ತಿದ್ದಂತೆ ದಿಗಿಲಾಗತೊಡಗಿತು. ಅವಳು ಮನೆಯಲ್ಲಿರಕೂಡದು ಎಂದು ಆಸೆಪಡುತ್ತ ಗೇಟ್ ಎದುರು ನಿಂತ. ಪೋರ್ಟಿಕೋನಲ್ಲಿ ಕಾರ್ ಇಲ್ಲದಿದ್ದುದು ಕಂಡು ಮನಸ್ಸು ಹಗುರವಾಯಿತು. ಈ ಹೊತ್ತಿಗೆ ಅವಳು ಕಾಲೇಜಿಗೆ ಹೋಗಿರುತ್ತಾಳೆಂಬುದನ್ನು ಅವನು ಮರೆತೇಬಿಟ್ಟಿದ್ದ. ಅಥವಾ ಕಾರಲ್ಲಿ ಅವಳ ತಾಯಿಯೆಲ್ಲಾದರೂ ಹೋಗಿರಲಿಕ್ಕೂ ಸಾಕು. ತೋಟದಲ್ಲಿ ಹೂಗಿಡಗಳ ಮಧ್ಯೆ ಕೆಲಸ ಮಾಡುವ ಜವಾನನೊಬ್ಬ ಕೃಷ್ಣಪ್ಪನನ್ನು ಗಮನಿಸಿ, “ಸಣ್ಣಮ್ಮೋರು ಇಲ್ಲ, ದೊಡ್ಡಮ್ಮೋರನ್ನ ನೋಡಬೇಕೇನು?” ಎಂದ. ಕೃಷ್ಣಪ್ಪ ಬೇಡವೆಂದು ಸರಸರನೆ ನಡೆದ. ಅವನ ಮನಸ್ಸು ಹಗುರಾಗಿತ್ತು. +ಎಲ್ಲಿಗೆ ಹೋಗಬೇಕು ತಿಳಿಯದೆ ಅಡ್ಡಾಡುತ್ತಿದ್ದಂತೆ, ಬಿಸಿಲೇರುತ್ತಿದ್ದಂತೆ ಇವತ್ತು ಆ ಗೋಸಾಯಿಯ ಮೌನದ ರಹಸ್ಯವನ್ನು ಭೇದಿಸಲೇಬೇಕೆಂದು ಮನಸ್ಸು ಮಾಡಿ ಬೆಟ್ಟ ಹತ್ತಿದ. ಬೆಳಿಗ್ಗೆ ತಿಂಡಿ ತಿನ್ನದ್ದರಿಂದ ತನಗೆ ತುಂಬ ಹಸಿವಾಗುತ್ತಿರುವುದು ಅನುಭವವಾಯಿತು. ರಾತ್ರಿ ನಿದ್ದೆ ಬೇರೆ ಇಲ್ಲದೆ ದಣಿವಾಗಲು ಶುರುವಾಯಿತು. +ದೂರದಿಂದಲೇ ಬೈರಾಗಿ ಒಲೆಗೆ ಬೆಂಕಿ ಹಾಕುತ್ತಿರುವುದು ಕಾಣಿಸಿತು. ಇದನ್ನು ಕಂಡು ಹಸಿವು ಹೆಚ್ಚಾಯಿತು. ಹಿಂದಿನ ದಿನದಂತೆಯೇ ಬಂಡೆಯೊಂದಕ್ಕೆ ಒರಗಿ ಕೂತ. ಬೈರಾಗಿ ಒಲೆಯ ಮೇಲೆ ಮಡಕೆಯನ್ನಿಟ್ಟು ಗುಹೆಯಿಂದ ಒಂದು ದಪ್ಪನೆಯ ಪುಸ್ತಕ ತಂದು ಓದುತ್ತ ಕೂತ. ಆ ಪುಸ್ತಕ ಯಾವುದೆಂದು ಕುತೂಹಲವಾಯಿತು. ಆದರೆ ಎದ್ದು ಹೋಗಿ ನೋಡುವುದರಿಂದ ಅವನ ಏಕಾಗ್ರತೆಗೆ ಭಂಗ ಬಂದೀತೆಂದು ಸುಮ್ಮನಾದ. ಸ್ವಲ್ಪ ಹೊತ್ತಿನ ಮೇಲೆ ಬೈರಾಗಿ ಗುಹೆಯಿಂದ ಮುತ್ತುಗದ ಎಲೆಗಳನ್ನು ತಂದು ಮೂರು ಊಟದೆಲೆಗಳನ್ನು ಹೆಣೆದ. ಅವನ ಊಟದಲ್ಲಿ ಇವತ್ತೂ ತನಗೆ ಪಾಲಾಗುತ್ತಿದೆ. ಅಷ್ಟರಮಟ್ಟಿಗೆ ತನ್ನ ಇರುವಿಕೆಯನ್ನು ಅವನು ಗಮನಿಸಿದ್ದಾನೆ. ಯಾವ ಸಂದಿಯಿಂದಲೋ ನಾಯಿ ಪ್ರತ್ಯಕ್ಷವಾಗಿ ಇನ್ನೊಂದು ಬಂಡೆಯ ನೆರಳಲ್ಲಿ ಮಲಗಿ ನಾಲಿಗೆ ಚಾಚಿ ಉಸಿರಾಡತೊಡಗಿತು. ಕಪ್ಪು ಚುಕ್ಕೆಗಳ ಬೂದು ಬಣ್ಣದ ನಾಯಿ, ಯಾವತ್ತೋ ಈ ಬೈರಾಗಿಯ ಹಿಂದೆ ಬಂದು ಇಲ್ಲಿ ಠಿಕಾಣಿ ಬಿಟ್ಟಿರಬೇಕು. +ಮಡಿಕೆಯಲ್ಲಿದ್ದುದು ಬೆಂದ ಮೇಲೆ ಬೈರಾಗಿ ಅದನ್ನು ಸರಿಯಾಗಿ ಮೂರು ಪಾಲು ಮಾಡುತ್ತಿರುವಾಗ ಕೃಷ್ಣಪ್ಪ ಎದ್ದು ಒಲೆಯ ಹತ್ತಿರ ಹೋಗಿ ಕೂತ. ಬೈರಾಗಿ ಒಂದು ಎಲೆಯನ್ನು ನಾಯಿಗೆ ಇಟ್ಟು ಬರಲು ಹೋದಾಗ ಅವನು ಓದುತ್ತಿದ್ದುದು ವಾಲ್ಮೀಕಿಯ ಸಂಸ್ಕೃತ ರಾಮಾಯಣವೆಂಬುದನ್ನು ಕೃಷ್ಣಪ್ಪ ಗಮನಿಸಿದ. ನಂತರ ಮೌನದಲ್ಲಿ ಅಕ್ಕಪಕ್ಕ ಕೂತು ಇಬ್ಬರ ಊಟವೂ ನಡೆಯಿತು. ಇವತ್ತು ಬೇಯಿಸಿದ್ದರಲ್ಲಿ ಅಕ್ಕಿ ಬೇಳೆಗಳ ಜೊತೆ ಕಾಯಿ ಮತ್ತು ಬೆಲ್ಲಗಳೂ ಇದ್ದವು. ಯಾರೋ ಅದನ್ನು ಇಕ್ಕಿರಬೇಕು. +ಬೈರಾಗಿಯನ್ನು ಮಾತಾಡಿಸಬೇಕೆನ್ನಿಸಿತು. ತನ್ನನ್ನು ಅತ್ಯಂತ ತೀವ್ರವಾಗಿ ಬಾಧಿಸುವ ಪ್ರಶ್ನೆಯನ್ನು ಕೇಳಿದರೆ ಹೇಗೆ? +“ಒಂದೊಂದು ಸಾರಿ ಏನು ಮಾಡಬೇಕು ಗೊತ್ತಾಗಲ್ಲ. ನೂರಾರು ಸಾಧ್ಯತೆಗಳು ಎದುರಾಗ್ತಾವೆ. ಯಾಕೆ ಬದುಕಬೇಕು ತಿಳಿಯಲ್ಲ.” +ಕೃಷ್ಣಪ್ಪನಿಗೆ ತನ್ನದು ಅಸಂಬದ್ಧ ಪ್ರಲಾಪವೆನ್ನಿಸುವಂತೆ ಬೈರಾಗಿ ಯಾವ ಭಾವನೆಯನ್ನೂ ತೋರಿಸದೆ ತಿನ್ನುತ್ತ ಕೂತಿದ್ದ. ಅವನ ಮೌನದಿಂದ ತನ್ನ ಪ್ರಶ್ನೆಯೇ ಸುಳ್ಳೋ, ಸ್ವಕಲ್ಪಿತವೋ ಎಂದು ಕೃಷ್ಣಪ್ಪನಿಗೆ ಅನುಮಾನವಾಯಿತು. ಅಥವಾ ಯಾವನೋ ಪೆದ್ದನ ಬಳಿ ಒಳಗಿನದನ್ನು ಹೇಳಿಕೊಳ್ಳುವ ಮೂರ್ಖ ಕೆಲಸ ತಾನು ಮಾಡುತ್ತಿರಬಹುದು. ಅರ್ಧ ಊಟದ ನಡುವೆಯೇ ಎಲೆಯನ್ನೆಸೆದು ಗುಹೆಗೆ ಅಷ್ಟು ದೂರದಲ್ಲಿದ್ದ ಹಳ್ಳದಲ್ಲಿ ಕೈ ತೊಳೆದ. ಹಿಂದಕ್ಕೆ ಬರುವಾಗ ಜರುಗಿದ ಒಂದು ಘಟನೆಯಿಂದ ಬೈರಾಗಿ ಅವನಿಗೆ ಇನ್ನಷ್ಟು ರಹಸ್ಯದ ವ್ಯಕ್ತಿಯಾದ. +ಒಬ್ಬ ಮುದುಕ -ತಲೆಗೆ ಟೋಪಿ ಹಾಕಿ ಅಂಗಿಯ ಮೇಲೊಂದು ಧೋತ್ರ ಹೊದ್ದವ -ಊಟ ಮಾಡುತ್ತಿದ್ದ ಬೈರಾಗಿಯ ಎದುರು ಬಂದು ನಿಂತ. ಧೋತ್ರದಿಂದ ಮುಖ ಒರೆಸಿಕೊಳ್ಳುತ್ತ ನೀರು ಕೇಳಿದ. ಬೈರಾಗಿ ಹೂಜಿಯಲ್ಲಿದ್ದ ನೀರನ್ನೂ ಎಲೆಯಿಂದ ಕಟ್ಟಿದ ದೊನ್ನೆಯನ್ನೂ ಅವನಿಗೆ ತೋರಿಸಿದ. ಮುದುಕ ನೀರು ಕುಡಿದು, ದೊನ್ನೆಯ ತಳದಲ್ಲಿದ್ದುದನ್ನು ಕಣ್ಣಿಗೆ ಒರೆಸಿಕೊಂಡು +“ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಬೇಕು. ದಾರಿ ತಪ್ಪಿಬಿಟ್ಟೆ. ಇಲ್ಲಿಂದ ದೂರವ?” ಎಂದು ಕೇಳಿದ. +ಬೈರಾಗಿಯ ಊಟ ಮುಗಿದಿತ್ತು. ಎದ್ದು ನಿಂತ. ಕೈ ತೊಳೆದು ಬಂದು +“ಈ ದಾರಿಯಲ್ಲಿ ಹೋಗಿ, ಆ ದೊಡ್ಡ ಬಂಡೆಯ ಹತ್ತಿರ ಬಲಕ್ಕೆ ತಿರುಗಿ, ಅಲ್ಲಿ ಮೆಟ್ಟಿಲುಗಳು ಇವೆ. ಸುಮಾರು ನೂರು ಮೆಟ್ಟಿಲು ಹತ್ತಿದರೆ ದೇವಸ್ಥಾನ ಸಿಗತ್ತೆ” ಎಂದ. +ಮುದುಕ ಕೈ ಮುಗಿದು ಹೋದ ಮೇಲೆ ಆಶ್ಚರ್ಯದಿಂದ ಬೈರಾಗಿಯನ್ನು ನೋಡುತ್ತ +“ಅದೇಕೆ ನೀವು ನನ್ನ ಹತ್ತಿರ ಮಾತಾಡಲ್ಲ?” ಎಂದ. +ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ವ್ಯಾಯಾಮದಿಂದ ಎಡಪಾರ್ಶ್ವಕ್ಕೆ ಜೀವ ಹರಿಸಲು ಯತ್ನಿಸುತ್ತಿರುವ ಈ ಘಟನೆ ನೆನೆಸಿಕೊಂಡು ಹೇಳುತ್ತಾನೆ: “ಪ್ರಶ್ನೆ ಫ಼್ಯಾಕ್ಚುಯಲ್ ಆಗಿದ್ದರೆ ಮಾತ್ರ ಈ ಬೈರಾಗಿ ಉತ್ತರ ಕೊಡುತ್ತಿದ್ದ. ಅಭಿಪ್ರಾಯದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರಲಿಲ್ಲ. ಅಣ್ಣಾಜಿ ಉಕ್ಕುವ ಮನುಷನಾದರೆ ಈ ಬೈರಾಗಿ ಅಗತ್ಯವಿದ್ದಷ್ಟು ಮಾತ್ರ ಜಗತ್ತಿಗೆ ತೆರೆದುಕೊಂಡಿದ್ದವ. ಆದರೆ ಇದರಿಂದಾಗಿ ಅವನ ಒಳಗೆ ಏನು ಮಾಗಿ ಫಲ ಬಿಟ್ಟಿತೋ. ಅದರಿಂದ ಅವನೇನು ಪಡೆದನೋ, ಯಾರೇನು ಪಡೆದರೊ ಹೇಳಕ್ಕಾಗಲ್ಲ. ಆದರೆ ನಾನಾಗಲಿ ಅಣ್ಣಾಜಿಯಾಗಲಿ ಕೊನೆಗೆ ಕಡಿದಿದ್ದಾದರೂ ಏನು?” ಹೀಗೆ ಕೃಷ್ಣಪ್ಪ ಮಾತಾಡುವಾಗ ಅವನು ತುಂಬ ಖಿನ್ನನಾಗಿರುತ್ತಾನಾದ್ದರಿಂದ ಇದು ಕೂಡ ಅವನ ಒಟ್ಟು ಅಭಿಪ್ರಾಯವೆಂದು ಹೇಳಲಿಕ್ಕಾಗುವುದಿಲ್ಲ. ಆ ಬೈರಾಗಿಯಂತೂ ಅವನನ್ನು ಕಾಡಿದ್ದಾನೆ ಎಂಬುದಷ್ಟು ನಿಜ: ಅವನಷ್ಟೇ ಮೌನಿಯಾಗಿ ಒಳಗಿರುವುದನ್ನು ಧಗಧಗ ಉರಿಸಿಕೊಂಡಿರಬೇಕೆಂಬ ಆಸೆ ಅವನನ್ನು ಬಿಟ್ಟಿಲ್ಲ -ಮಲಮೂತ್ರ ವಿಸರ್ಜನೆಯ ವ್ಯವಧಾನ ಕಳೆಯುತ್ತಿರುವ ಈಗಲೂ ಕೂಡ. +ಅವನು ಮಾತಾಡುತ್ತಾನೆ ಎಂದು ಗೊತ್ತಾದ ಮೇಲೆ ಅವನನ್ನು ಮಾತಾಡಿಸುವಂಥ ಪ್ರಶ್ನೆ ತನ್ನಲ್ಲೇನಿದೆ ಎಂದು ಕೃಷ್ಣಪ್ಪ ಸಂಕಟಪಡುತ್ತ ಹುಡುಕಿದ. ಕೇಳುವ ಪ್ರಶ್ನೆ ನಿಜವಾದ ಪ್ರಶ್ನೆಯಾಗಿರಬೇಕು. ಸ್ಪಷ್ಟವಾಗಿ ಕೇಳುವಂತಿರಬೇಕು -ಇಂಥಲ್ಲಿಗೆ ದಾರಿ ಎಲ್ಲಿ ಎನ್ನುವಷ್ಟು. ತನ್ನ ಕಷ್ಟಗಳೆಲ್ಲ ಮನಸ್ಸಿನ ಲಾಲಸೆಯಿಂದ ಹುಟ್ಟಿದ್ದಿರಬಹುದೆಂದು ಕೃಷ್ಣಪ್ಪನಿಗೆ ಭಯವಾಯಿತು. ಅಥವಾ ತನ್ನ ಸಮಸ್ಯೆ ಏನೆಂಬುದೇ ನಿಜವಾಗಿ ತನಗೆ ಗೊತ್ತಿಲ್ಲವೆಂದುಕೊಂಡ. ಒಮ್ಮೆ ಅಂಥ ಪ್ರಶ್ನೆ ಕೇಳುವುದು ಸಾಧ್ಯವಾದರೂ ಅದು ಈ ಬೈರಾಗಿಯ ಅರಿವಿಗೆ ದಕ್ಕಲಾರದಾಗಿ ಅವನು ಸುಮ್ಮನಿರಬಹುದು. ಅಥವಾ ಯಾವುದೂ ಇನ್ನೊಬ್ಬರನ್ನು ಕೇಳಿ ಬಗೆಹರಿಸಿಕೊಳ್ಳಬಲ್ಲ ಪ್ರಶ್ನೆಯಲ್ಲ ಎಂಬ ನಿಲುವೂ ಆತನದ್ದಿರಬಹುದು. +ಕೃಷ್ಣಪ್ಪ ಸಂಜೆಯಾಗುತ್ತಿದ್ದಂತೆ ಬೆಟ್ಟವನ್ನಿಳಿದ. ಗೌರಿ ದೇಶಪಾಂಡೆಯನ್ನು ಹೋಗಿ ನೋಡುವುದೆ? ನೋಡಿದರೆ ಏನು ಹೇಳುವುದು? ತನ್ನೆಲ್ಲ ವರ್ತನೆಗಳೂ ಅಪಕ್ವವೆನ್ನಿಸಿ ಹಾಸ್ಟೆಲಿಗೆ ಹೋದ. ಹುಡುಗರೆಲ್ಲ ತನ್ನನ್ನು ಏನೋ ಕೇಳಲು ಕಾಯುತ್ತಿದ್ದಾರೆ ಎಂದು ಗೊತ್ತಾದರೂ “ಸುಸ್ತಾಗಿದೆ ಕಣ್ರೋ. ನಾಳೆ ಮಾತಾಡಾಣ” ಎಂದು ರೂಮಿಗೆ ಹೋಗಿ ಮಲಗಿದ. ಕಿಶೋರ ತಂದುಕೊಟ್ಟ ಹಾಲನ್ನು ಕುಡಿದು, ಅವನು ಕೊಟ್ಟ ಲಕೋಟೆಯನ್ನು ಆತುರದಿಂದ ಒಡೆದು ಓದಿದ. +“ಇವತ್ತು ನನ್ನನ್ನು ಕೇಳಿಕೊಂಡು ಮನೆಗೆ ಬಂದಿದ್ದವರು ನೀವೇ ಇರಬೇಕು. ಮಹಡಿಯಲ್ಲಿದ್ದ ನನ್ನ ತಾಯಿಗೆ ಇನ್ನು ಯಾರು ಕವಿಯ ಹಾಗೆ ಕಂಡಿರಲು ಸಾಧ್ಯ? ನಾಳೆ ಬನ್ನಿ -ಬರಬೇಕೆನ್ನಿಸಿದರೆ. ಸಂಕೋಚ ಮಾಡಿಕೋಬೇಡಿ. ನಿಮ್ಮವಳೇ ಗೌರಿ ದೇಶಪಾಂಡೆ.” +ಕೃಷ್ಣಪ್ಪನಿಗೆ ಸಂತೋಷವಾಯಿತು. ಭಯವಾಯಿತು. ಸಾವಿನ ಜೊತೆ ಹೆಣಗುತ್ತಿರುವ ಈ ದಿನಗಳಲ್ಲಿ ಆಗ ನಡೆಯುತ್ತಿದುದನ್ನೆಲ್ಲ ನೆನಪು ಮಾಡಿಕೊಂಡು ಅವನು ಆಶ್ಚರ್ಯ ಪಡುತ್ತಾನೆ. ನಮ್ಮ ಕಲ್ಪನೆ ಯಾಕೆ ಪ್ರೀತಿಗೆ ದಕ್ಕಿದ ಹೆಣ್ಣಿಗಿಂತ ದಕ್ಕಲಾರದೆ ಹೋದವಳನ್ನೇ ಹೆಚ್ಚು ಹಚ್ಚಿಕೊಳ್ಳುತ್ತದೆ? ಅವಳನ್ನು ಅಷ್ಟು ಬಯಸಿಯೂ ಯಾಕೆ ತನಗೆ ಅವಳನ್ನು ಸರಳವಾಗಿ ಸ್ಪಷ್ಟವಾಗಿ ನೀನು ನನಗೆ ಬೇಕು ಎಂದು ಕೇಳುವುದು ಸಾಧ್ಯವಾಗಲಿಲ್ಲ? ಅಷ್ಟು ಸುಲಭವಾಗಿ, ಚುರುಕಾಗಿ, ಹಗುರಾಗಿ ಮಾತಾಡಿಬಿಡುತ್ತಿದ್ದ ಆಕೆಗೂ ಹೆಣ್ಣಿಗೆ ಗಂಡು ಬೇಕಾಗುವ ರೀತಿಯಲ್ಲಿ ನೀನು ನನಗೆ ಬೇಕು ಎಂದು ಸೂಚಿಸುವುದು ಸಾಧ್ಯವಾಗಲಿಲ್ಲ? ದೈವಿಕವೆನಿಸುತ್ತಿದ್ದ ಅವಳ ಮುಖವನ್ನು ನೆನೆದಾಗ ಅವಳ ಮಾಟವಾದ ದೇಹವನ್ನು ಬಯಸುವುದು ಸಾಧ್ಯವಾಗುತ್ತಿರಲಿಲ್ಲ. ಅವಳ ದೇಹವನ್ನು ಕೂಡುವ ಬಯಕೆಯಾದಾಗ ಅವಳ ಮಾತು ಮುಖ ಕಣ್ಣೋಟಗಳು ನೆನಪಾಗಿ ತನ್ನ ಆಸೆಗಳ ಬಗ್ಗೆ ಹೇಸಿಗೆಪಡುವಂತಾಗುತ್ತಿತ್ತು. ಆದ್ದರಿಂದ ಆ ದಿನಗಳಲ್ಲಿ ತನ್ನ ಭಾವನೆಯನ್ನೆಲ್ಲ ಇಡೀ ತನ್ನ ಪ್ರಾಣ ಬಯಸುವ ಒಂದು ಮಾತನ್ನಾಗಿ, ಒಂದು ಪ್ರಶ್ನೆಯನ್ನಾಗಿ, ಒಂದು ಅಚಲ ನಿರ್ಧಾರವನ್ನಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. +ಕೃಷ್ಣಪ್ಪನಿಗೆ ಅವತ್ತು ನಿದ್ದೆ ಬಂತು. ಮಧ್ಯರಾತ್ರೆ ಏನೋ ಗಲಾಟೆಯಾದಂತಾಗಿ ಎಚ್ಚರಾಯಿತು. ಎದ್ದು ದೀಪ ಹಾಕಿದ. ಮಹಡಿಯ ಮೆಟ್ಟಿಲುಗಳನ್ನು ಇಳಿಯುವಾಗ ಹಾಸ್ಟೆಲಿನ ವಿದ್ಯಾರ್ಥಿಗಳೆಲ್ಲ ಆವೇಶದಿಂದ ಯಾರನ್ನೋ ಒಳಗೆ ನೂಕುತ್ತಿದ್ದಂತೆ ಕಂಡಿತು. ಕೃಷ್ಣಪ್ಪ ಅವಸರವಾಗಿ ಇಳಿಯುತ್ತಿದ್ದಂತೆ ಶಾಮಣ್ಣ ಏದುಸಿರು ಬಿಡುತ್ತ ಕೃಷ್ಣಪ್ಪನನ್ನು ಅವನ ರೂಮಿಗೆ ತಳ್ಳಿಕೊಂಡು ಹೋಗಿ ಬಾಗಿಲು ಹಾಕಿಕೊಂಡು ಕೈಮುಗಿದು ನಿಂತ. ಶಾಮಣ್ಣ ಕುಡಿದಂತಿತ್ತು. ದಮ್ಮಿನಿಂದ ಉಸಿರಾಡುತ್ತ ಬಡಬಡಿಸಿದ: +“ನೀವು ಸ್ವಲ್ಪ ಸುಮ್ಗಿರಬೇಕು. ಆ ಹಾರುವ ಮಕ್ಕಳ ಪುಳಚಾರು ಕಕ್ಕಿಸಿದ ಮೇಲೆ ನಿಮ್ಮನ್ನ ಕರೀತೀವಿ. ನಿಮ್ಮ ಕಾಲಿಗೆ ಬೀಳಿಸ್ತೀವಿ. ಅವರಿಗೇನೂ ಅಪಾಯ ಮಾಡಲ್ಲ. ನಿಮ್ಮಾಣೆ” -ಎಂದು ಶಾಮಣ್ಣ ಲಗುವಿನಿಂದ ಹೊರಗೆ ಹೋಗಿ ಕೃಷ್ಣಪ್ಪನ ಬಾಗಿಲನ್ನು ಹಾಕಿಕೊಂಡು ಚಿಲಕ ಹಾಕಿದ. ಕೃಷ್ಣಪ್ಪ ನಿಸ್ಸಹಾಯಕನಾಗಿ ಕೂತು ಕೆಳಗೆ ಅತ್ಯಂತ ನಾಚಿಕೆ ಸ್ವಭಾವದ ಹುಡುಗರೂ ಅಬ್ಬರಿಸಿ ಬೈಯುವುದನ್ನೂ, ದಬ್ ದಬ್ ಶಬ್ದಗಳನ್ನೂ, ವಾಗ್ವಾದವನ್ನೂ, ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ಧವಾದುದನ್ನೂ ಕೇಳಿಸಿಕೊಂಡ. ಚಿಲಕ ತೆಗೆಯಿತು. ಶಾಮಣ್ಣ ಎದುರು ನಿಂತು “ನಾಳೆ ಬೇಕಾದರೆ ನಮಗೆಲ್ಲ ಬೈಯ್ರೀ, ಈಗ ಕೆಳಗೆ ಬನ್ನಿ. ಆ ಸುವರ್‍ಗಳು ನಿಮಗೆ ಅಪಾಲಜಿ ಕೇಳಕ್ಕೆ ಒಪ್ಪಿಕೊಂಡಿದಾವೆ” ಎಂದ. +ಕೃಷ್ಣಪ್ಪ ಕೆಳಗೆ ಬಂದು ನೋಡಿದ ದೃಶ್ಯ ಹಾಸ್ಯಾಸ್ಪದವಾಗಿತ್ತು. ಗ್ಯಾಂಗಿನ ಲೀಡರ್ ರಾಮುವನ್ನು ಒಂದು ಮಂಚದ ಕಾಲಿಗೆ ಕಟ್ಟಿಹಾಕಲಾಗಿತ್ತು. ಹಾಸ್ಟೆಲಿನ ಒಲೆಯ ಬೂದಿ ಕರಿಗಳನ್ನು ತಂದು ಅವನ ಮುಖಕ್ಕೆ ಬಳಿಯಲಾಗಿತ್ತು. ಅವನ ಇಬ್ಬರು ಸಂಗಡಿಗರ ಕೈಗಳನ್ನು ಹಿಂದಕ್ಕೆ ಕಟ್ಟಿ ಕಾಲುಗಳಿಗೆ ಹಗ್ಗ ಬಿಗಿದು ಆ ಹಗ್ಗವನ್ನು ಕಿಟಕಿಯ ಸರಳಿಗೆ ಬಿಗಿದಿತ್ತು. ರಾಮುವಿನ ಬೂದಿ ಕರಿ ಬಳಿದಿದ್ದ ದೊಡ್ಡ ಮೀಸೆಯ ಮುಖ ಭಯ ಕೋಪ ತಾತ್ಸಾರಗಳಿಂದ ವಿಕಾರವಾಗಿತ್ತು. ಶಾಮಣ್ಣ ಅವನ ಎದುರು ನಿಂತು, ಗೆಲುವಿನಿಂದ ಬೀಗುತ್ತ ಕೃಷ್ಣಪ್ಪನ ಸಮ್ಮುಖದಲ್ಲಿ ಜಬರದಸ್ತಿನಿಂದ ವಿಚಾರಣೆ ನಡೆಸಿದ -ಗೌರವಸೂಚಕವಾದ ಬಹುವಚನದಲ್ಲಿ. ಆದರೆ ಈ ಹದಕ್ಕೆ ಬರುವ ಮುಂಚೆ ಆಡಬೇಕಾದ ಮಾತುಗಳನ್ನೆಲ್ಲ ಆಯಾ ಕ್ರಮದಲ್ಲಿ ಆಡಿ ಮುಗಿದಿತ್ತೆಂದು ಕೃಷ್ಣಪ್ಪನಿಗೆ ತಿಳಿಯದಿರಲಿಲ್ಲ. +“ಮಧ್ಯರಾತ್ರೆ ನಮ್ಮ ಹಾಸ್ಟೆಲಿನ ಗೋಡೆ ಮೇಲೆ ನೀವು ಹೊಲಸುಹೊಲಸಾಗಿ ಬರೀತ ಇದ್ದರೋ ಇಲ್ವೊ?” +ಶಾಮಣ್ಣನ ಪ್ರಶ್ನೆಗೆ ರಾಮು ಮುನಿಸಿನ ಧ್ವನಿಯಲ್ಲಿ ಹೇಳಿದ. +“ಹೂ……..” +“ಅದು ಹೇಲು ತಿನ್ನುವಂಥ ಕೆಲಸ ಅನ್ನೋದನ್ನ ಒಪ್ಪಿಕೋತೀರ?” +ಶಾಮಣ್ಣ ತನ್ನ ಪ್ಯಾಂಟಿನ ಜೇಬಿನಿಂದ ಸೈಕಲ್ ಚೈನನ್ನು ಹೊರಗೆಳೆಯುತ್ತಿರುವುದನ್ನೆ ನೋಡುತ್ತ ರಾಮು ವಿಕಾರವಾದ ಮುಖದಲ್ಲಿ +“ಸರಿ” ಎಂದ. +“ಕೃಷ್ಣಪ್ಪ ಗೌಡರು ನಮಗೆಲ್ಲ ಲೀಡರ್. ಅವರ ಕ್ಷಮಾಪಣೆ ಕೇಳಿಕೊಳ್ಳಬೇಕು ನೀವು. ಅದಕ್ಕೆ ಮುಂಚೆ ನಿಮ್ಮನ್ನು ನಾವು ಫ಼್ರೀ ಮಾಡ್ತೇವೆ. ಯಾಕೇಂದ್ರೆ ನೀವು ನಿಜವಾದ ವಿಷಾದ ವ್ಯಕ್ತಪಡಿಸಬೇಕು.” +ಶೋಕಿಲಾಲನೆಂದು ತಾನು ತಿಳಿದಿದ್ದ ಶಾಮಣ್ಣನ ಈ ಮಗ್ಗುಲು ಕಂಡು ಕೃಷ್ಣಪ್ಪನಿಗೆ ಸೋಜಿಗವಾಯಿತು. ಶಾಮಣ್ಣನ ಕಣ್ಣನ್ನೇ ಗಮನಿಸಿ ಹುಡುಗರು ಮೂವರನ್ನೂ ಬಿಚ್ಚಿದರು. ರಾಮು ಸೆಟೆದುಕೊಂಡೇ ಕೃಷ್ಣಪ್ಪನ ಕಡೆಗೆ ತಿರುಗಿ +“ನಮ್ಮ ವಾಚುಗಳನ್ನ ಬಿಚ್ಚಿಟ್ಟುಕೊಂಡಿದ್ದಾರೆ – ಕೊಡಿಸಿ ಮತ್ತೆ” ಎಂದ. +“ಛೇ ನಾವೇನು ಕಳ್ಳರಲ್ಲ” ಎಂದು ಶಾಮಣ್ಣ ಅವರ ಮೂರು ವಾಚುಗಳನ್ನೂ ಹಿಂದಕ್ಕೆ ಕೊಟ್ಟು ಹುಡುಗರ ಜೊತೆ ಅವರಿಗೆ ಸುತ್ತುವರೆದು ನಿಂತು ಕೃಷ್ಣಪ್ಪನನ್ನು ಅವರಿಗೆ ಎದುರಾಗಿ ನಿಲ್ಲಿಸಿದ. +ಕೃಷ್ಣಪ್ಪ ತನ್ನ ಸಹಜವಾದ ಮಾತಿನ ಕ್ರಮದಲ್ಲಿ ಯಾವ ಉದ್ವೇಗವೂ ಇಲ್ಲದೆ ಹೇಳಿದ: +“ನನಗೇನೂ ನಿಮ್ಮ ಕ್ಷಮಾಪಣೆ ಬೇಡ. ನೀವು ಮತ್ತು ನಾನು, ಅಥವಾ ಗೌರಿ ದೇಶಪಾಂಡೆಯವರು ಮತ್ತು ನೀವು ಸಮಸಮಾಂತ ತಿಳಿದು ಹೀಗೆ ಮಾಡೋದು, ನೋಡಿ, ಸರಿಯಲ್ಲ. ಪಾಪ ನೀವೇನು ಮಾಡ್ತೀರಿ -ನಿಮ್ಮ ಹಾಗೆ ನಾನೂ ಆ ಕಾಲೇಜಲ್ಲಿ ಕಾಲಾನ ವ್ಯಯ ಮಾಡ್ತಿರೋದ್ರಿಂದ ಅಂಥ ಭ್ರಮೆ ನಿಮಗೆ ಉಂಟಾಗಿದೆ…” +ಹೊರಡುವುದರಲ್ಲಿದ್ದ ರಾಮುವನ್ನು ಶಾಮಣ್ಣ ಕೈತಡೆದು, ಕಣ್ಣು ಕೆಕ್ಕರಿಸಿ ನಿಲ್ಲಿಸಿ, +“ಅವರಿಗೆ ಬೇಡದೇ ಇರಬಹುದು. ಆದರೆ ನಾವು ಡಿಮ್ಯಾಂಡ್ ಮಾಡ್ತೀವಿ ಅವರ ಕ್ಷಮಾಪಣೆ ಕೇಳಿ ಅಂತ.” +ರಾಮು ತಡವರಿಸುತ್ತ – +“ತಪ್ಪಾಯ್ತು -ಕ್ಷಮಿಸಬೇಕು” ಎಂದ. +ಶಾಮಣ್ಣ “ಒಂದು ಬಕೆಟ್ಟು ನೀರು ತರ್ರೋ” ಎಂದ. +ಬಕೆಟ್ಟು ತಂದಾಗ ತನ್ನ ಟವಲನ್ನು ಅದರಲ್ಲದ್ದಿ ರಾಮುವಿನ ಮುಖ ತೊಳೆಯಲು ಹೋದ. ಅವನು ಮುಖ ತಿರುಗಿಸಿದಾಗ +“ನೀವು ಕ್ಷಮಾಪಣೆ ಕೇಳಿಕೊಂಡ ಮೇಲೆ ನಾನು ಬಳೆದ ಮಸೀನ ಒರಸೋದು ನನ್ನ ಡ್ಯೂಟಿ ನೋಡಿ” ಎಂದ. +ರಾಮು ಒಪ್ಪಲಿಲ್ಲ. ತಾನೇ ತೊಳೆದುಕೊಂಡ. ಆಮೇಲೆ ಶಾಮಣ್ಣ- +“ಈಗ ಗೋಡೆ ಮೇಲೆ ನೀವು ಬರೆದದ್ದನ್ನು ನೀವೇ ಅಳಿಸಬೇಕು. ಅದು ಕರಾರು” ಎಂದ. +ರಾಮು ಮತ್ತು ಸಂಗಡಿಗರು ಒಪ್ಪಿಕೊಂಡು ಹೊರಟರು. ಇಡೀ ಹಾಸ್ಟೆಲ್ ಹೊರಗೆ ನಿಂತು ಅವರು ಒರೆಸುವುದನ್ನು ಈಕ್ಷಿಸಿತು. +ರಾಮು ಮತ್ತು ಸಂಗಡಿಗರನ್ನು ಶಿಕ್ಷಿಸುವುದನ್ನು ಕ್ಷುಲ್ಲಕ ಎನ್ನುವಂತೆ ಗಂಭೀರವಾಗಿ ತಾನು ವರ್ತಿಸಿದ್ದರೂ, ಆ ಶಿಕ್ಷೆಯನ್ನು ತಾನು ಸೂಕ್ಷ್ಮವಾಗಿ ಬಯಸಿರಲೂಬಹುದು ಎನ್ನಿಸುತ್ತದೆ ಈಗ ಕೃಷ್ಣಪ್ಪನಿಗೆ. ಮುಂದೆ ಅವನ ರಾಜಕೀಯ ಜೀವನದಲ್ಲಿ ಇಂಥ ಪ್ರಸಂಗಗಳೆಷ್ಟೋ ಎದ್ದಾಗ ಸೇಡು ತೀರಿಸಿಕೊಳ್ಳುವುದರಲ್ಲಿ ತಾನು ತೋರಿಸುತ್ತಿದ್ದ ನಿರಾಸಕ್ತಿಯೇ ತನ್ನ ಎದುರಾಳಿಗಳನ್ನು ನಿರ್ನಾಮ ಮಾಡಬಲ್ಲ ಅಸ್ತ್ರವಾದದ್ದಿದೆ. ತಾನು ಬಾಯಾರೆ ಹೇಳದೆ ಆಗಬೇಕಾದ್ದು ಬೇರೆಯವರಿಂದ ಆದದ್ದಿದೆ. ತಾನು ಶುಚಿಯಾಗಿದ್ದು ಬೇರೆಯವರ ಕೈಯಿಂದ ಇಂಥ ಕೆಲಸ ಮಾಡಿಸಿಕೊಳ್ಳುವುದು ಸರಿಯೋ? -ಆದರೆ ಇಂಥ ನೈತಿಕ ಪ್ರಶ್ನೆಗಳು ಯಃಕಶ್ಚಿತ ಸೂಕ್ಷ್ಮಗಳು ಅನ್ನಿಸುವಂಥ ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟ ಸಂದರ್ಭಗಳು ಅವು. ದೀನದಲಿತರ ಪರವಾಗಿ ಹೋರಾಟದಲ್ಲಿ ಒಮ್ಮೆ ಗಟ್ಟಿಯಾಗಿ ಅಚಲವಾಗಿ ನಿಂತ ಬಳಿಕ ಅದರಲ್ಲಿ ಗೆಲ್ಲಲು ಮಾಡುವ ಕೆಲಸವೆಲ್ಲ ನ್ಯಾಯವಾದ್ದು ಎಂದು ಅಣ್ಣಾಜಿ ಹೇಳಿರಲಿಲ್ಲವೆ? ಈಗ ಮಾತ್ರ ಒಂದೊಂದು ಬೆರಳನ್ನೂ ಮಡಿಸಿ ಬಿಚ್ಚುವುದನ್ನು ಕಲಿಯುತ್ತಿರುವ ಕೃಷ್ಣಪ್ಪನನ್ನು ತಾನು ಒರಟಾಗಲು ಬಿಟ್ಟ ತನ್ನ ವ್ಯಕ್ತಿತ್ವದ ಅಂಶಗಳು ಕಾಡುತ್ತವೆ. ಸಂಪೂರ್ಣ ಪರಹಿತಕ್ಕೆ ಬದುಕುವುದರಲ್ಲಿ ಕೂಡ ನಾವು ಇಡಿಯಾಗಿ ಉಳಿಯುತ್ತೇವೆಂಬುದು ನಿಶ್ಚಿತವಲ್ಲವೆನಿಸುತ್ತದೆ. +ಮಾರನೇ ದಿನ ಬೆಳಿಗ್ಗೆ ಹೋಗಿ ಗೌರಿ ದೇಶಪಾಂಡೆಯನ್ನು ಕೃಷ್ಣಪ್ಪ ನೋಡಿದ್ದ. ಅವಳು ಕಾಲೇಜಿಗೆ ಹೋಗದೆ ಮನೆಯಲ್ಲಿ ಉಳಿದಳು. ತನ್ನ ಮಗಳು ಯಾವುದಾದರೂ ಒಬ್ಬ ಹುಡುಗನನ್ನು ಹಚ್ಚಿಕೊಂಡಿದ್ದಾಳಲ್ಲ ಎಂದು ಅವಳ ತಾಯಿ ಅನಸೂಯಾ ಬಾಯಿಗೆ ಖುಷಿಯಾದಂತೆ ಕಂಡಿತು. ಎತ್ತರವಾಗಿ, ತೆಳ್ಳಗೆ ಇದ್ದ ಅನಸೂಯಾ ಬಾಯಿ ಹಸಿರು ಬಣ್ಣದ ರೇಶ್ಮೆ ಸೀರೆಯುಟ್ಟು ಮಹಡಿಯಿಂದ ಇಳಿದು ಬಂದು ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಉಪಚರಿಸಿದರು. ಅವರ ತಲೆಗೂದಲಿನಲ್ಲಿ ಬಿಳಿಕೂದಲು ಕಾಣಿಸಿಕೊಂಡಿದ್ದರೂ ಆಕೆಯ ಮುಖ ಇನ್ನೂ ಯೌವನದ ಚುರುಕುಗಳನ್ನೂ ಮೋಹಕತೆಯನ್ನೂ ಉಳಿಸಿಕೊಂಡಿತ್ತು. ಕೃಷ್ಣಪ್ಪನಿಗೂ, ಮಗಳಿಗೂ ತಿಂಡಿ ಕೊಟ್ಟು ಫ಼್ಲಾಸ್ಕಿನಲ್ಲಿ ಕಾಫ಼ಿಯನ್ನಿಟ್ಟು, ಇಬ್ಬರನ್ನು ಮಾತಾಡಿಕೊಂಡಿರುವಂತೆ ಹೇಳಿ ತನ್ನ ಕೋಣೆಗೆ ಹೊರಟುಹೋದರು. +ಗೌರಿಯೇ ಕೃಷ್ಣಪ್ಪನಿಗೆ ಉಪ್ಪಿಟ್ಟು ಬಡಿಸುತ್ತ ಅವನ ಬಿಗಿ ಸಡಿಲ ಮಾಡಲು ಪ್ರಯತ್ನಿಸಿದಳು. +“ಮುಂದೇನು ಮಾಡಬೇಕೂಂತ ಇದೀರಿ?” +ಕೃಷ್ಣಪ್ಪ ಈ ಪ್ರಶ್ನೆಗೆ ಉತ್ತರ ಹೇಳಲು ಕಷ್ಟಪಡುವುದನ್ನು ಗೌರಿ ಗಮನಿಸಿದಳು: +“ಗೊತ್ತಿಲ್ಲ. ಊರಿಗೆ ಹೋಗಿ ಇರ್ತೀನಿ. ನಂಗೊಂದು ತಾಯಿ ಇದೆ, ಸ್ವಲ್ಪ ಗದ್ದೆ ಇದೆ. ಹಳ್ಳೀಲಿ ಇರ್ತ ಏನು ಮಾಡಬೇಕೂಂತ ಹೊಳೆಯುತ್ತೊ ಅದನ್ನು ಮಾಡ್ತೀನಿ. ನೀವು?” +ಕೃಷ್ಣಪ್ಪ ಸೌಜನ್ಯಕ್ಕಾಗಿ ಈ ಪ್ರಶ್ನೆ ಕೇಳಿರಲಿಲ್ಲ. ಉಪ್ಪಿಟ್ಟನ್ನು ತಿಂದು ಮುಗಿಸಿದ ಕೃಷ್ಣಪ್ಪನಿಗೆ ಸೇಬನ್ನು ಕತ್ತರಿಸಿದಳು. ನಂಜಪ್ಪನವರು ತನ್ನ ತಾಯಿಗೆಂದು ಸಿಮ್ಲಾದಿಂದ ಬುಟ್ಟಿಯಲ್ಲಿ ಸೇಬು ತರಿಸುತ್ತಾರೆ ಎಂದು ಕೃಷ್ಣಪ್ಪನಿಗೆ ಹೇಳಿ ಅವನ ಪ್ರತಿಕ್ರಿಯೆ ಗಮನಿಸಬೇಕೆಂಬ ಆಸೆ ಅದುಮಿಕೊಂಡಳು. +“ಒಬ್ಬ ಹುಡುಗಿಗೆ ತಾಯಿಯಾಗುವ ಆಸೆ ಇಲ್ಲದೆ ಇರಬಹುದು ಅನ್ನೋದನ್ನ ನೀವು ಒಪ್ಪಿಕೋತೀರ?” +ಕೃಷ್ಣಪ್ಪ ಇಂಥ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಗೌರಿ ಅವಸರಪಡದೆ ಅವನ ಉತ್ತರಕ್ಕಾಗಿ ಕಾದಳು. +“ನಾನು ಆ ಬಗ್ಗೆ ಯೋಚನೆ ಮಾಡಿರ್ಲಿಲ್ಲ. ಹೆಂಗಸು ಮಕ್ಕಳಿಗಾಗಿ ಆಸೆ ಪಡೋದು ಸಹಜ ಅಂದುಕೊಂಡಿದ್ದೆ.” +“ಅಲ್ಲ -ನಾನು ಹೇಳ್ತಿರೋದು ಅವಳಿಗೆ ಮಕ್ಕಳ ಮೇಲೆ ಆಸೆ ಇರ್ತದೆ. ಆದರೆ ತಾನೇ ಸ್ವತಃ ತಾಯಿಯಾಗಬೇಕೂಂತ ಇಲ್ಲದೇ ಇರಬಹುದು.” +“ಯಾಕೆ -ಭಯದಿಂದಲ?” +“ಇಲ್ಲ. ಭಯ ಕೂಡ ಅಲ್ಲ. ಗಂಡಸಿನ ಸಂಗದ ಆಸೆ ಇದ್ದೂ ತನ್ನ ದೇಹ ಮಕ್ಕಳನ್ನು ಪಡೆಯೋ ಸಾಧನವಾಗೋದು ಒಬ್ಬ ಹೆಣ್ಣಿಗೆ ಇಷ್ಟವಾಗದೇ ಇರಬಹುದು. ಇದು ಅನೈಸರ್ಗಿಕ ಅಂತೀರ?” +“ನಿಮಗೆ ಹಾಗೆ ಅನ್ನಿಸಿದರೆ ಆಗ ನಾನದನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸುತ್ತೀನಿ. ಆದರೆ ನೀವು ತುಂಬ ಜನರಲ್ ಆಗಿ ಕೇಳಿದರೆ ನನಗೇನು ಹೇಳ್ಬೇಕು ತಿಳಿಯಲ್ಲ.” +ಗೌರಿ ಉತ್ಸುಕಳಾಗಿ ಹೇಳಿದಳು – +“ರೂಮಲ್ಲಿ ಕೂತು ಮಾತಾಡೋಣ ಬನ್ನಿ.” +ಬೇಕಾದರೆ ಸಿಗರೇಟ್ ಹಚ್ಚಿ ಎಂದು ಒಂದು ಡಬ್ಬಿಯನ್ನು ಎದುರಿಗಿಟ್ಟಳು. ನಂಜಪ್ಪ ತನ್ನ ಉಪಯೋಗಕ್ಕೆಂದು ಇಲ್ಲಿ ಬಿಟ್ಟಿರುವ ಪ್ಲೇಯರ್ಸ್ ಡಬ್ಬಿಯಿರಬಹುದೆಂಬ ಯೋಚನೆ ಕೃಷ್ಣಪ್ಪನಿಗೆ ಬಂದು ಹೋಯಿತು. ಸಿಗರೇಟ್ ಹಚ್ಚಿ ಕೂತವನಿಗೆ ಗೌರಿ, +“ಎಸ್. ನನಗೆ ಹಾಗನ್ನಿಸುತ್ತೆ. ಇದಕ್ಕೆ ಕಾರಣ ನಾನಿರೋ ವಿಶೇಷ ಸಂದರ್ಭಾಂತ ದಯವಿಟ್ಟು ತಿಳೀಬೇಡಿ. ಅಮ್ಮ ಹಾಗೆ ಅಂದುಕೊಂಡು ತುಂಬಾ ನರಳ್ತಾರೆ. ನಂಗೆ ತುಂಬ ದೇಶಗಳಲ್ಲಿ ತಿರುಗಾಡಬೇಕು, ತುಂಬ ಪುಸ್ತಕ ಓದಬೇಕು, ಬಗೆಬಗೆಯ ಜನರ ಜೊತೆ ಬೆರೀಬೇಕು -ಹೀಗೆ ಏನೇನೊ ಅನ್ನಿಸ್ತ ಇರತ್ತೆ. ಯಾವನೋ ಒಬ್ಬ ಗಂಡನ್ನ ಕೂಡಿಕೊಂಡು ಅವನ ಸಹಧರ್ಮಿಣಿಯಾಗಿ ಇಡೀ ಆಯಸ್ಸು ಕಳೀಬೇಕು ಅನ್ನಿಸಲ್ಲ.” +ಕೃಷ್ಣಪ್ಪ ಸುಮ್ಮನೆ ಕೂತ. ಗೌರಿ ನಗುತ್ತ. +“ನಿಮಗೆ ಶಾಕ್ ಆಗಿರಬಹುದು ಅಲ್ವ? ಆದರೆ ನಿಜವಾಗಿಯೂ ಹಾಗೆ ನನಗೆ ಅನ್ನಿಸತ್ತೆ. ಜೊತೆಗೇನೇ ನಾನು ನಮ್ಮ ತಾಯಿ ಹಾಗೇನೇ -ನನಗೆ ಗಂಡಸು ಬೇಕು. ನಾನು ಚಲ್ಲು ಹುಡುಗಿ ಅಲ್ಲಾಂತಲೂ ತಿಳಿದಿದ್ದೇನೆ. ಬನ್ನಿ -” +ತನ್ನ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯವಿಲ್ಲದಂತೆ ಮಾಡಲು ಗೌರಿ ಕೃಷ್ಣಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಗುಲಾಬಿಗಳನ್ನು ತೋರಿಸಿದಳು. ತೋಟದ ಮೂಲೆಯಲ್ಲಿ ಒಂದು ಮರದ ಪೊಟರೆಯಲ್ಲಿದ್ದ ಹಕ್ಕಿಯ ಗೂಡನ್ನು ತೋರಿಸಿದಳು -ಪಕ್ಕದಲ್ಲಿ ನಿಂತು. ಮೃದುವಾದ ತುಪ್ಪಳದಲ್ಲಿ ಇನ್ನೂ ಹಸಿಹಸಿಯಾಗಿದ್ದ, ಕೆಂಪು ಬಾಯನ್ನು ತೆರೆದು ಚೀ ಚೀ ಎನ್ನುವ ಮರಿಯನ್ನು ತೋರಿಸುತ್ತ ಗೌರಿ ತನ್ನ ರಟ್ಟೆಯ ಮೇಲೆ ತುಂಬ ಸ್ವಾಭಾವಿಕವಾಗಿ ತನ್ನ ಮುಖವನ್ನು ಒತ್ತಿದ್ದಳು. ಅವಳು ಹರ್ಷದಿಂದ ಅದರುತ್ತ ಮೈಮರೆತು ನಿಂತದ್ದು ಕೃಷ್ಣಪ್ಪನಿಗೆ ತಿಳಿಯಿತು. ಅವನು ಹುಡುಗನಾಗಿದ್ದಾಗ ಇಂಥ ಎಷ್ಟೋ ಗೂಡುಗಳನ್ನು ಹುಡುಕಿಕೊಂಡು ಹೋಗಿದ್ದಾನೆ. ಕೆಲವೊಮ್ಮೆ ಅನಗತ್ಯ ಕ್ರೌರ್ಯದಿಂದ ಚಾಟರಿ ಬಿಲ್ಲಲ್ಲಿ ಹಕ್ಕಿಯ ಕಾಲಿಗೆ ಹೊಡೆದು ಅವುಗಳನ್ನು ನೋಯಿಸಿದ್ದಾನೆ. ಆದರೆ ಗೌರಿಯ ಉತ್ಸಾಹದಿಂದ ಅವನು ಇವತ್ತು ತುಂಬ ಮೃದುವಾದ, ಹೂಗಳ ಚಿತ್ರವಿದ್ದ ಗರಿಗರಿಯಾಗಿ ಇಸ್ತ್ರಿಯಾದ ಬಿಳೀಸೀರೆಯುಟ್ಟು, ಜಡೆಯನ್ನು ಎದೆಯ ಮೇಲೆ ಬಿಟ್ಟು ಸಂತೋಷದಲ್ಲಿ ಒದ್ದೆಯಾದ ಕಣ್ಣುಗಳಿಂದ ಗೌರಿ ಕೃಷ್ಣಪ್ಪನ ಮುಖವನ್ನು ನೋಡಿದಳು. ಹಗುರವಾಗಿ ಮುಟ್ಟುತ್ತ ತನ್ನ ಪಕ್ಕದಲ್ಲೆ ನಿಂತ ಗೌರಿಗೆ ಇನ್ನಷ್ಟು ಒತ್ತಿಕೊಂಡು ನಿಲ್ಲನೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ. +ಬೆಟ್ಟದ ಕಡೆ ಹೋಗೋಣವೇ ಎಂದು ಕೃಷ್ಣಪ್ಪ ಸೂಚಿಸಿದಾಗ ಗೌರಿ ಒಪ್ಪಿ ಕಾರಿನಲ್ಲಿ ಹೋಗೋಣವೇ ಎಂದಳು. ಕೃಷ್ಣಪ್ಪನಿಗೆ ಅದರಿಂದ ಮುಜುಗರವಾದರೂ ಅವಳನ್ನಷ್ಟು ದೂರ ನಡೆಸುವುದರಿಂದ ಬಳಲಿಯಾಳೆಂದು ಒಪ್ಪಿಕೊಂಡ. ದಾರಿಯಲ್ಲಿ ಅವಳಿಗೆ ಮಹೇಶ್ವರಯ್ಯ ಮತ್ತು ಅಣ್ಣಾಜಿಯ ಬಗ್ಗೆ ಹೇಳಿದ. ಇಷ್ಟು ಸುಲಭವಾಗಿ ತನ್ನ ಬಗ್ಗೆ ಗೌರಿಯ ಬಳಿ ಮಾತಾಡಿಕೊಳ್ಳುತ್ತಿದ್ದೇನೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. ಬೆಟ್ಟದ ತಪ್ಪಲಲ್ಲಿ ಕಾರು ನಿಲ್ಲಿಸಿ ಬೈರಾಗಿಯ ಬಗ್ಗೆ ಅವಳಿಗೆ ಗೊತ್ತೆ ಎಂದು ಕೇಳಿದ. ಊರಿನಿಂದ ದೂರ ಬದುಕುತ್ತಿದ್ದ ಅವಳಿಗೆ ಗೊತ್ತಿರಲಿಲ್ಲ. ಕೃಷ್ಣಪ್ಪ, +“ಬನ್ನಿ ಅವರನ್ನು ನೋಡುವ” ಎಂದು ಗೌರಿಯ ಜೊತೆ ಬೆಟ್ಟ ಹತ್ತುವಾಗ ಹೇಳಿದ: +“ನೋಡಿ ನಿಮ್ಮ ಪ್ರಶ್ನೆಗೆ ಏನು ಹೇಳಬೇಕು ಗೊತ್ತಿಲ್ಲ. ನಿಮಗೆ ಹಾಗನ್ನಿಸತ್ತೆ ಅಂದ್ರೆ ಸರಿ. ಆದರೆ..” +ಗೌರಿ ಏದುಸಿರು ಬಿಡುವುದು ಕಂಡು ನಿಂತ. ಮುಂದಿನ ದಾರಿ ಸ್ವಲ್ಪ ಕಡಿದಾಗಿತ್ತು. ಒಂದು ಬಂಡೆಯನ್ನು ಏರಬೇಕಾಗಿತ್ತು. ಗೌರಿ ಸೀರೆಯನ್ನು ಮುದುಡಿಕೊಂಡು ಸ್ವಾಭಾವಿಕವಾದ ಧ್ವನಿಯಲ್ಲಿ ಹೇಳಿದಳು: +“ರಚ್ಚಿಗೆ ಹಾಗೆ ಮಾಡ್ತಿದೀನಿ ಅಂತ ನಮ್ಮ ಅಮ್ಮನ ಹಾಗೆ ನೀವೂ ಯೋಚಿಸಬೇಡಿ.” +“ಇಲ್ಲ” ಎಂದು ಕೃಷ್ಣಪ್ಪ ಬಂಡೆಯನ್ನು ಹತ್ತಿ ಗೌರಿಯನ್ನು ಹತ್ತಿಸಿಕೊಳ್ಳಲು ಕೈ ಚಾಚಿದ. ಗೌರಿ ಅವನ ಶಕ್ತಿಯುತವಾದ ರಟ್ಟೆಗಳಿಗೆ ಹಗುರವಾಗಿ ಚಿಮ್ಮಿ ಬಂಡೆ ಹತ್ತಿದಳು. +“ಪಾಲಿಟಿಕ್ಸ್ ಅಂದ್ರೆ ನನಗೆ ಬೋರ್” ಎಂದು, ಇದು ತನ್ನ ಖಚಿತ ಅಭಿಪ್ರಾಯವೆನ್ನುವಂತೆ ಹೇಳಿದಳು: “ಇದೇ ಸಣ್ಣ ಊರೂಂತ ನನಗೆ ಅನ್ನಿಸತ್ತೆ. ದೊಡ್ಡೂರಲ್ಲಿ ಪ್ರೈವಸಿ ಇರುತ್ತೆ. ಬೊಂಬಾಯಿಗೋ ಡೆಲ್ಲಿಗೋ ಹೋಗಿ ಓದಬೇಕೂಂತಿದೀನಿ. ಅದು ಹೇಗೆ ನೀವು ಹಳ್ಳೀಲಿ ಇರ್ತೀರೊ -” ಕೃಷ್ಣಪ್ಪ ಅವಳು ಹೇಳಿದ್ದಕ್ಕಿಂತ ಹೆಚ್ಚನ್ನು ಅವಳ ಮಾತಲ್ಲಿ ಹುಡುಕಿದ. ಬೈರಾಗಿಯ ಗುಹೆಯ ಎದುರು ನಾಯಿ ಗದ್ದಲ ಮಾಡುತ್ತ ಆವೇಶದಲ್ಲಿದ್ದಂತೆ ಕಂಡಿತು. ಒಲೆಯ ಮೇಲೆ ತನ್ನ ಆಹಾರವನ್ನು ಬೇಯಿಸುತ್ತಿದ್ದ ಬೈರಾಗಿ ಎದ್ದು ನಿಂತು ನಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. ಗುಹೆಯ ಹತ್ತಿರ ಬರುತ್ತಿದ್ದಂತೆ ಗೌರಿ ಭಯದಲ್ಲಿ ಸಣ್ಣಗೆ ಕೂಗಿಕೊಂಡು ಕೃಷ್ಣಪ್ಪನಿಗೆ ಆತು ನಿಂತಳು. ಒಂದು ನಾಗರಹಾವು ಹೆಡೆ ಬಿಚ್ಚಿ ನಾಯಿಯನ್ನು ಹೆದರಿಸುತ್ತ ಗುಹೆಯ ಕಡೆ ಚಲಿಸುತ್ತಿತ್ತು. ಬೈರಾಗಿ ನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಸರ್ಪ ಅವಸರವಾಗಿ ಗುಹೆಯನ್ನು ಹೊಕ್ಕಿತು. ಬೈರಾಗಿ ನಾಯಿಯನ್ನು ತಡವುತ್ತ ಗುಹೆಯಿಂದ ಆಚೆ ಅದನ್ನು ಹೋಗುವಂತೆ ಪುಸಲಾಯಿಸಲು ಶುರುಮಾಡಿದ. ನಾಯಿ ಕ್ರಮೇಣ ಶಾಂತವಾಗಿ ತನ್ನ ಜಾಗದಲ್ಲಿ ಮಲಗಿ ಗುಹೆಯ ಕಡೆ ನೋಡುತ್ತ ಗುರುಗುಟ್ಟುತ್ತ ಮಲಗಿತು. ಮಡಕೆಯಲ್ಲಿದ್ದದ್ದು ಬೆಂದ ಮೇಲೆ ಬೈರಾಗಿ ಎಲೆಗಳನ್ನು ತರಲು ಗುಹೆಯ ಒಳಗೆ ಹೋಗುತ್ತಿರುವುದನ್ನು ನೋಡಿದ ಗೌರಿ ಭಯಗ್ರಸ್ತಳಾಗಿ ಕೃಷ್ಣಪ್ಪನನ್ನು ಗಟ್ಟಿಯಾಗಿ ಹಿಡಿದು ನಡುಗತೊಡಗಿದಳು. ಗುಹೆಯಿಂದ ಬುಸ್ ಎನ್ನುವ ಶಬ್ದ ಬಂತು. ಒಳ ಹೋಗಲಿದ್ದ ಬೈರಾಗಿ ಸ್ತಬ್ಧವಾಗಿ ನಿಂತ. ಮೈಯೆಲ್ಲ ಕಿವಿಯಾಗಿ ಮಲಗಿದ್ದ ನಾಯಿ ಮತ್ತೆ ಉದ್ವಿಗ್ನವಾಗಿ ಬೊಗಳುತ್ತ ಓಡಿ ಬಂತು. ಬೈರಾಗಿ ಅದನ್ನು ತಬ್ಬಿ ಹಿಡಿದು ಸಂತೈಸಲು ನೋಡಿದ. ಕೃಷ್ಣಪ್ಪನ ಹತ್ತಿರ ನಾಯಿಯನ್ನು ಎಳೆದು ತಂದು ಅದನ್ನು ಹಿಡಿದುಕೊಳ್ಳುವಂತೆ ಕಣ್ಣಿಂದ ಸೂಚಿಸಿದ. ಕೃಷ್ಣಪ್ಪನು ನಾಯಿಯನ್ನು ಹಿಡಿದುಕೊಂಡಿದ್ದಾಗ ಹೊರಗೆ ಮಡಕೆಯಲ್ಲಿದ್ದ ನೀರಿನಿಂದ ಸಮತಲವಾಗಿದ್ದ ಎದುರಿನ ಕಲ್ಲಿನಲ್ಲಿ ನಾಲ್ಕು ಜಾಗಗಳನ್ನು ತೊಳೆದ. ಕೃಷ್ಣಪ್ಪ, “ಸ್ವಾಮಿ, ನಮಗೆ ಊಟ ಬೇಡ”ವೆಂದಾಗ ಮಡಕೆಯಲ್ಲಿದ್ದ ಅರ್ಧ ಭಾಗವನ್ನು ದೂರದಲ್ಲಿ ನಾಯಿಗೆ ಬಡಿಸಿ, ನಾಯಿಯನ್ನು ಊಟದೆಡೆ ಎಳೆದುಕೊಂಡು ಹೋದ. ಆದರೆ ನಾಯಿ ಊಟವನ್ನು ಒಲ್ಲದೆ ಹಿಂದಕ್ಕೋಡಿ ಗುಹೆಯ ಎದುರು ನಿಂತು ಬೊಗಳತೊಡಗಿತು. ಹಾವು ಬುಸ್ ಎನ್ನುತ್ತಲೇ ಇತ್ತು. ಮತ್ತೆ ಬೈರಾಗಿ ನಾಯಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಅದರ ಊಟದೆದುರು ನಿಲ್ಲಿಸಲು ನೋಡಿದ. +ಗೌರಿ ಈ ನಾಟಕವನ್ನೆಲ್ಲ ಚಕಿತಳಾಗಿ ನೋಡುತ್ತ ಕೂತಳು. ನಾಯಿ ಬೈರಾಗಿಯ ಕೈಯಲ್ಲಿ ಒದ್ದಾಡುತ್ತಲೇ ಇತ್ತು. +“ನಾಯಿಯನ್ನು ಅದರ ಪಾಡಿಗೆ ಬಿಟ್ಟುಬಿಡುವ ಮನುಷ್ಯ ನೀವು ಅಂತ ತಿಳಿದಿದ್ದೆ” ಎಂದ ಕೃಷ್ಣಪ್ಪ. ಗೀತೆಯ “ನೈನಂ ಹಂತಿ ನ ಹನ್ಯತೇ” ಅವನಿಗೆ ನೆನಪಾಗಿತ್ತು. ಬೈರಾಗಿ ನಿತ್ಯ ಓದುವ ಪುಸ್ತಕವಲ್ಲವೇ ಅದು? +ಬೈರಾಗಿ ತೀವ್ರವಾಗಿ ಕೃಷ್ಣಪ್ಪನ ಮಾತನ್ನು ಗಮನಿಸಿದಂತೆ ಅನ್ನಿಸಿತು. ಒಂದು ಸಣ್ಣ ನಿಟ್ಟುಸಿರು ಅವನಿಂದ ಹೊರಬಂದದ್ದನ್ನು ಕೃಷ್ಣಪ್ಪ ಗಮನಿಸಿ ಕುತೂಹಲದಿಂದ ಅವನ ಪ್ರತಿಕ್ರಿಯೆಗೆ ಕಾದ. ಬೈರಾಗಿ ನಾಯಿಯನ್ನು ಬಿಟ್ಟ. ನಾಯಿ ಚಂಗನೆ ಜಿಗಿದು ಗುಹೆಯ ಎದುರು ನಿಂತು ಬೊಗಳಿತು. ಬುಸ್ ಎನ್ನುವ ಶಬ್ದ ಏರುತ್ತ ಇಳಿಯುತ್ತ ಇಡೀ ಗುಹೆ ಉಸಿರಾಡುತ್ತಿರುವ ಭಾವನೆ ಉಂಟಾಯಿತು. ಬೈರಾಗಿಯ ಮುಖ ವಿವರ್ಣವಾದ್ದನ್ನು ಕೃಷ್ಣಪ್ಪ ಗಮನಿಸಿದ. ಗೌರಿ ಕೃಷ್ಣಪ್ಪನನ್ನು ತಬ್ಬಿ ತನ್ನ ಮುಖವನ್ನು ಅವನ ಎದೆಯ ಮೇಲೆ ಮುಚ್ಚಿಕೊಂಡಳು. ಕೃಷ್ಣಪ್ಪ ಮುಂದಿನ ಅನಿವಾರ್ಯ ಘಟನೆಗೆ ಕಾದ. ನಾಯಿ ಗುಹೆಯನ್ನು ನುಗ್ಗಿತು. ಹಾವು ಬುಸುಗುಡುವ ಶಬ್ದ ಮಾತ್ರ ಮೊದಲು ಕೇಳಿಸುತ್ತಿದ್ದು, ಅದು ಕ್ರಮೇಣ ಕಡಿಮೆಯಾಗಿ ಬಟ್ಟೆ ಒಗೆಯುವಂತೆ ಬಡಿಯುವ ಶಬ್ದ ಗುಹೆಯಿಂದ ಬಂತು. ಇನ್ನೊಂದು ಕ್ಷಣದಲ್ಲಿ ರಕ್ತವನ್ನು ಮೂತಿಯ ತುಂಬ ಬಳಿದುಕೊಂಡ ನಾಯಿ ಇನ್ನೂ ಒದ್ದಾಡುತ್ತಿದ್ದ ಹಾವನ್ನು ಕಚ್ಚಿಕೊಂಡು ಪೊದೆಗಳ ಸಂದಿಗೆ ಓಡಿತು. ಗುಹೆಯ ಬಾಗಿಲಿಂದ ತೊಟ್ಟಿಕ್ಕಿದ್ದ ರಕ್ತವನ್ನು ನೋಡುತ್ತ ಬೈರಾಗಿ ಬಡಿಸಿಕೊಂಡಿದ್ದ ತನ್ನ ಆಹಾರವನ್ನು ಬಾಚಿ ಎಸೆದು ಬಂದು ಕೂತ. ಅವನು ಶಾಂತನಾಗಲು ಪ್ರಯತ್ನಿಸುತ್ತಿರುವಂತೆ ಕಂಡಿತು. +ಈಗಲೂ ಕೃಷ್ಣಪ್ಪ ಈ ಘಟನೆಯನ್ನು ನೆನಪು ಮಾಡಿಕೊಳ್ಳುತ್ತ “ಆ ಬೈರಾಗಿ ತಾನು ಕಂಡ ಹಿಂಸೇನ್ನ ದಕ್ಕಿಸಿಕೊಂಡನೋ ಇಲ್ಲವೋ ನನಗೆ ತಿಳಿಯಲ್ಲ” ಅಂತಾನೆ. +.. +.. +.. +ಬಲಗೈ ಬೆರಳುಗಳನ್ನು ಚೂರು ಚೂರೇ ಮಡಿಸುತ್ತ ಬಿಚ್ಚುತ್ತ ಹಸ್ತವನ್ನು ಅಲ್ಲಾಡಿಸಲು ಕೃಷ್ಣಪ್ಪ ಶುರು ಮಾಡಿದ. ನಂತರ ಒಂದು ಬೆಳಿಗ್ಗೆ ಮೊಣಕೈ ಮತ್ತು ಕಾಲನ್ನು ಮಡಿಸುವುದು ಕೂಡ ತನಗೆ ಸಾಧ್ಯವಾಗಬಹುದೆಂಬ ಭರವಸೆ ಮೂಡಿದಾಗ ಸಣ್ಣದಾಗಿ ಗೆಲುವು ಅವನಲ್ಲಿ ಹುಟ್ಟಿತು. ಅಮೆರಿಕಾದಿಂದ ಹಿಂದಕ್ಕೆ ಬಂದು ದೆಹಲಿಯ ಮಿರಾಂಡದಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ದೇಶಪಾಂಡೆಗೆ ನಾಲ್ಕು ದಿನಗಳ ಮಟ್ಟಿಗೆ ಬಂದು ತನ್ನನ್ನು ನೋಡಿಹೋಗುವಂತೆ ಬರೆಸಬೇಕೆನ್ನಿಸಿತು. ಅವಳನ್ನು ನೋಡಿ ಕೊನೆಪಕ್ಷ ಹದಿನೈದು ವರ್ಷಗಳ ಮೇಲಾಗಿತ್ತು. ಇನ್ನೂ ಅವಳು ಮಕ್ಕಳಾಗದೆ ಮದುವೆಯಾಗದೆ ಇದ್ದಾಳೆ. ಫ಼ಿಲಡೆಲ್ಫಿಯಾದಲ್ಲಿ ಅವಳು ಓದುತ್ತಿದ್ದಾಗ ತಾನೊಬ್ಬ ಅಮೆರಿಕನ್ ಜೊತೆ ಬದುಕುತ್ತಿರುವುದಾಗಿ ಬರೆದಿದ್ದಳು. ಮೂರು ವರ್ಷಗಳ ನಂತರ ಅವನಿಗೆ ಸ್ವಂತ ಮಕ್ಕಳು ಬೇಕೆಂಬ ಆಸೆಯಿರುವುದಾಗಿಯೂ, ಅದನ್ನು ಅವನು ಹೇಳಿಕೊಳ್ಳದಿದ್ದರೂ ತನ್ನಿಂದ ಅವನು ನಿರಾಶನಾಗಕೂಡದೆಂದು ಅವನಿಂದ ಬೇರೆಯಾಗುತ್ತಿದ್ದೇನೆಂದೂ ಬರೆದಿದ್ದಳು. ಅಂದ ಮೇಲೆ ಅವತ್ತು ಗೌರಿ ಮಾತನಾಡುವಾಗ ಮಕ್ಕಳು ಬೇಡವೆಂಬುದಕ್ಕೆ ಅವಳ ಅಪಕ್ವತೆ ಕಾರಣವಿರಬಹುದೆಂಬ ತನ್ನ ಊಹೆ ಸರಿಯಲ್ಲವೆಂದು ಕ್ರಮೇಣ ಅವನಿಗೆ ಖಾತ್ರಿಯಾಗಿತ್ತು. +ಅಂತೂ ಅವು ಕೃಷ್ಣಪ್ಪನ ಪಾಲಿಗೆ ಅತ್ಯಂತ ಆತಂಕದ ದಿನಗಳು. ಆಳವರಿಯದ ಪ್ರಪಂಚದ ಅಂಚಿನಲ್ಲಿ ತುದಿಗಾಲಿನ ಮೇಲೆ ನಿಂತವನಂತೆ ಆಗ ಅವನು ಇರುತ್ತಿದ್ದ. ಲಘುವಾಗಿ ಉಲ್ಲಾಸವಾಗಿ ಗೌರಿ ಅವನ ಜೊತೆ ಇರಲು ಪ್ರಯತ್ನಿಸಿ ಸೋತಿದ್ದಳು. ಇಬ್ಬರೂ ಒಟ್ಟಿಗಿದ್ದಾಗ ಒಬ್ಬರನ್ನೊಬ್ಬರು ದೀಪದಂತೆ ಚೂಪಾಗಿ ಉರಿಸಿಕೊಳ್ಳುತ್ತಿದ್ದುದು ಇತ್ತೇ ವಿನಾ ಆರಾಮಾಗಿ ಒಬ್ಬರ ಬಿಸಿಗೆ ಇನ್ನೊಬ್ಬರು ಕರಗಿ ಮೆತ್ತಗಾದದ್ದು ಇಲ್ಲ. ಗೌರಿ ತನ್ನನ್ನು ಕೃಷ್ಣಪ್ಪ ಸ್ವೀಕರಿಸಲು ಅಗತ್ಯವಾದ ಮಾತೆಂದು ಏನೋ ಶುರುಮಾಡುವಳು: +“ನಿಮಗೆ ನಾನು ಹೇಳಿಲ್ಲ ಅಲ್ಲವ? ನನ್ನ ತಂದೆ ಬೆಳಗಾಂನಲ್ಲಿದ್ದಾಗ ನಂಜಪ್ಪನವರು ಅವರೂ ಸ್ನೇಹಿತರು. ಒಟ್ಟಿಗೆ ಏನೋ ಬಿಸಿನೆಸ್ ಮಾಡುತ್ತಿದ್ದರು. ನಮ್ಮನೇಲೇ ನಂಜಪ್ಪ ಇಳ್ಕೊತ್ತ ಇದ್ದುದ್ದು. ನನ್ನ ತಂದೆಗೆ ಇನ್ನೊಬ್ಬ ಪ್ರೇಯಸಿಯೂ ಇದ್ದಳಂತೆ -” +ಕೃಷ್ಣಪ್ಪನಿಗೆ ಇವೆಲ್ಲ ಅನಗತ್ಯ ವಿವರಣೆಗಳೆನ್ನಿಸಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತನ್ನ ಜೊತೆ ಯಾವುದೋ ಉತ್ಕರ್ಷ ಬಯಸಿ ಬಂದ ಕೃಷ್ಣಪ್ಪನನ್ನು ತಾನು ಸಣ್ಣ ವಿಷಯಗಳಿಗೆ ಎಳೆಯುತ್ತಿದ್ದೇನೆಂದು ಅವಳಿಗೆ ಪಶ್ಚಾತಾಪವಾಗಿಬಿಡುತ್ತಿತ್ತು. ಅವನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿಸಿ ಬಡಿಸುವುದರಲ್ಲಷ್ಟೆ ಈ ನೆಲದ ಕೆಲಸಗಳನ್ನು ಅವನ ಜೊತೆ ಅವಳು ಮಾಡುತ್ತಿದ್ದುದು. +ಪ್ರತಿ ಸಂಜೆ ಬಂದುಬಿಡುತ್ತಿದ್ದ ಕೃಷ್ಣಪ್ಪ ಗೌರಿ ತನಗೆ ಅಪರಿಚಿತಳೋ ಎನ್ನುವಂತೆ – +“ಕ್ಷಮಿಸಿ. ನಿಮಗೆ ಓದಬೇಕಿತ್ತೋ ಏನೋ. ಪರೀಕ್ಷೆ ಹತ್ತಿರವಾಗುತ್ತಿದೆಯಲ್ಲವೆ?” +ಎನ್ನುವನು. ಹೀಗೆ ಸಲಿಗೆಯಲ್ಲೂ ದೂರ ಉಳಿಯುವ ಕೃಷ್ಣಪ್ಪ ಅವಳಿಗೆ ಇಷ್ಟವೂ ಆಗುವುದು. +“ಇಲ್ಲ ಬನ್ನಿ” ಎನ್ನುವಳು. ಕೃಷ್ಣಪ್ಪ ಏನೂ ಮಾತನಾಡದೆ ಅವನ ವಿಶಾಲವಾದ ಕಣ್ಣುಗಳನ್ನು ರೂಮಿನಲ್ಲಿ ವಿರಾಮವಾಗಿ ಹರಿಸುತ್ತ ಕೂತರೆ, +“ಹಾಡಲ?” ಎಂದು ಗೌರಿ ಕೇಳುವಳು. ಹಾಡಿನಿಂದ ಕೃಷ್ಣಪ್ಪ ಸಡಿಲವಾಗುವನೆಂದು ಅವಳಿಗೆ ಗೊತ್ತು. ಮಗಳು ಕೃಷ್ಣಪ್ಪನ ಎದುರಿಗೆ ಹಾಡುತ್ತ ಕೂತಿರುವುದನ್ನು ಅನಸೂಯಾಬಾಯಿ ಇಳಿದು ಬಂದು ಕೇಳಿಸಿಕೊಳ್ಳುವಳು. ಅವಳು ಮೂಲೆಯಲ್ಲಿದ್ದ ಮೋಡದ ಮೇಲೆ ಯಾರಿಗೂ ಆತಂಕವಾಗದ ರೀತಿಯಲ್ಲಿ ಶಾಂತವಾಗಿ ಕೂತಿರುವುದು ಕೃಷ್ಣಪ್ಪನಿಗೆ ಪ್ರಿಯವಾಗುವುದು. ಗುಂಗುರು ಕೂದಲಿನ ಕಪ್ಪು ವಿಗ್ರಹದಂತಿದ್ದ ದೃಢಕಾಯನಾದ ಕೃಷ್ಣಪ್ಪನನ್ನೂ, ಹಾಲಿನ ಬಣ್ಣದ ತೀವ್ರ ಭಾವನೆಗಳ ತನ್ನ ಮಗಳನ್ನೂ ಕಣ್ತುಂಬ ನೋಡುತ್ತ ಅನಸೂಯಾಬಾಯಿ ಖುಷಿಪಡುವರು. ಅವರು ಸದಾ ಓದುತ್ತಿದ ಶರತ್ ಕಾದಂಬರಿಯ ಪ್ರಸಂಗಗಳಲ್ಲಿ ಈ ಇಬ್ಬರನ್ನೂ ಇಡುವರು. ನಂಜಪ್ಪನವರು ಈ ನಡುವೆ ಬಂದರೆ ಯಾರಿಗೂ ಮುಜುಗರವಾಗುವುದಿಲ್ಲ. ಬಡವನಾದ ಕೃಷ್ಣಪ್ಪನ ಜೊತೆಗಿನ ಸ್ನೇಹ ಮೊದಲಲ್ಲಿ ಅವರಿಗೆ ಇಷ್ಟವಾಗದಿದ್ದರೂ ಗೌರಿ ಎಂದರೆ ಹೆದರುತ್ತಿದ್ದ ನಂಜಪ್ಪ ಸುಮ್ಮನಾಗಿದ್ದರು. ಈಚೀಚೆಗೆ ಮಹಾ ದೈವಭಕ್ತರಾಗಿದ್ದ ನಂಜಪ್ಪ ಸಂಜೆ ಗಣಪತಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಕುಂಕುಮ ಪ್ರಸಾದ ತಂದಿರುತ್ತಿದ್ದರು. ಈ ಪ್ರಸಾದವನ್ನು ಮೂವರಿಗೂ ಕೊಟ್ಟು ಅವರು ಮಹಡಿ ಹತ್ತಿ ಹೋಗುವರು. ಯಾವಾಗ ಅನಸೂಯಾಬಾಯಿ ಎದ್ದು ಹೋಗುತ್ತಿದ್ದರೋ ಗೌರಿಗಾಗಲೀ ಕೃಷ್ಣಪ್ಪನಿಗಾಗಲೀ ಗೊತ್ತಾಗುತ್ತಿರಲಿಲ್ಲ. +ಯಾಕೆ ಗೌರಿಯನ್ನು ತಾನು ಆಗ ಪಡೆಯಲಿಲ್ಲ? ಕೃಷ್ಣಪ್ಪನಿಗೆ ಒಂಟಿಯಾಗಿದ್ದಾಗ ಅವಳನ್ನು ಕೂಡುವ ತೀವ್ರ ಆಸೆಯಾಗುತ್ತಿತ್ತು. ಆದರೆ ತಾನು ಚತುಷ್ಪಾದಿಯಾಗಿ ಅವಳನ್ನು ಸಂಭೋಗಿಸಿವುದನ್ನು ಕಲ್ಪಿಸಿಕೊಳ್ಳುತ್ತಿದ್ದಂತೆಯೇ ತನ್ನ ಬಗ್ಗೆ ಅತ್ಯಂತ ಜಿಗುಪ್ಸೆಯಾಗಿಬಿಡುತ್ತಿತ್ತು. ಅವನನ್ನು ಇಂಥ ಪಾಪಭಾವನೆಯಿಂದ ಬಿಡುಗಡೆ ಮಾಡಿದವಳೆಂದರೆ ಲೂಸಿನಾ -ಮೈಯ ಚಳಿಯನ್ನು ಬಿಡಿಸಿ ಅದರ ಪ್ರತಿಯೊಂದು ಸಂದಿಮೂಲೆಯನ್ನೂ ಜೀವಂತವೆಂದು ತೋರಿಸಿದವಳು. ಆದರೆ ಅದು ಮೊದಲೇ ಗೌರಿಯಿಂದ ಆಗಿದ್ದರೆ…. +ಮಧ್ಯಾಹ್ನ ಒಂದು ದಿನ ಕೃಷ್ಣಪ್ಪ ಅಣ್ಣಾಜಿಯನ್ನು ನೋಡಲೆಂದು ಹೊರಟ. ಈಚೆಗೆ ಅಣ್ಣಾಜಿ ದುಡ್ಡಿಗಾಗಿ ಪರದಾಟವಾಡಬೇಕಾಗಿರಲಿಲ್ಲ. ಬೇಕಾದ್ದಕ್ಕಿಂತ ಹೆಚ್ಚು ದುಡ್ಡು ಅವನ ಹತ್ತಿರ ಓಡಾಡುತ್ತಿತ್ತು. ಕೃಷ್ಣಪ್ಪ ತಂದುಕೊಟ್ಟಿದ್ದ ಸಾಲವನ್ನೆಲ್ಲ ಹಿಂದಕ್ಕೆ ಕೊಟ್ಟಿದ್ದ. ಎಲ್ಲಿಂದ ಇಷ್ಟು ಹಣವೆಂದು ಕೃಷ್ಣಪ್ಪ ಕೇಳದಿದ್ದರೂ, ಅವನೇ ಉಮೆಯ ಔದಾರ್ಯವನ್ನು ಹೊಗಳಿದ್ದ. ಅವಳು ಗಂಡನಿಗೆ ತಿಳಿಯದಂತೆ ಅವನ ಕಪ್ಪು ಹಣವನ್ನು ತಿಜೋರಿಯಿಂದ ಕದ್ದುಕೊಡುತ್ತಿರಬಹುದು. ಅಣ್ಣಾಜಿಯನ್ನು ಇದರ ಅನೈತಿಕತೆ ಬಾಧಿಸುವುದಿಲ್ಲ. ಕೃಷ್ಣಪ್ಪನ ಜೊತೆ ಮಾರ್ಕ್ಸ್ ಲೆನಿನ್ ವಾದಗಳ ಅತ್ಯಂತ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ಈಗಲೂ ಮೈಮರೆತು ಮಾತಾಡುವನು. ಉಮೆ ಇದನ್ನು ಕೇಳಿಸಿಕೊಳ್ಳುತ್ತ ತನ್ನ ಎಣ್ಣೆಗೆಂಪು ಬಣ್ಣದ ದುಂಡುಮುಖವನ್ನು ಕೈಗಳಲ್ಲಿಟ್ಟು ಕೂತಿರುವಳು. ಅತ್ಯಂತ ಜಟಿಲವಾದ ವಾದಗಳನ್ನು ಅವಳ ಕಡೆ ತಿರುಗಿ ಅಣ್ಣಾಜಿ ಮಂಡಿಸುವನು. ಆರಾಧನೆಯಲ್ಲಿ ಹೂವೆಸೆಯುವಂತೆ ವಿಚಾರಗಳನ್ನು ಉಮೆಗೆ ಎಸೆಯುತ್ತ ಅಣ್ಣಾಜಿ ದೇವಿಯ ವಿಗ್ರಹವನ್ನು ಪೂಜಿಸುತ್ತ ಕೂತವನಂತೆ ಆಗ ಕೃಷ್ಣಪ್ಪನಿಗೆ ಕಾಣುವನು. +ಅವತ್ತು ಮಧ್ಯಾಹ್ನ ಹೋಗಿ ಬಾಗಿಲೆದುರು ನಿಂತಿದ್ದಾಗ ಉಮೆ ನರಳುತ್ತಿದ್ದಂತೆಯೂ ಮತ್ತು ಅಣ್ಣಾಜಿ ಗುಟ್ಟಾಗಿ ಏನೋ ಹೇಳುತ್ತಿದ್ದಂತೆಯೂ ಕೇಳಿಸಿತು. ಬಾಗಿಲನ್ನು ತಟ್ಟಹೋದವನು ಹಿಂದೆಗೆದ. ತನ್ನ ಹೆಜ್ಜೆ ಸಪ್ಪಳ ಕೇಳಿಸಿರಬೇಕು. ಇಬ್ಬರೂ ಎದ್ದು ಆವೇಗದಿಂದ ಉಸಿರಾಡುತ್ತ ಗಡಿಬಿಡಿಯಲ್ಲಿ ಓಡಾಡುತ್ತಿರುವುದನ್ನು ಬಾಗಿಲಿಂದ ಕೇಳಿಸಿಕೊಂಡ ಕೃಷ್ಣಪ್ಪನಿಗೆ ಮುಜುಗರವಾಯಿತು. ತಾನೀಗ ಹೊರಟುಹೋಗುವುದೂ ಸರಿಯಲ್ಲ; ನಿಂತಿರುವುದೂ ತಪ್ಪು. ಏನು ಮಾಡುವುದೆಂದು ತಿಳಿಯದೆ – “ನಾನು ಕೃಷ್ಣಪ್ಪ. ಆಮೇಲೆ ಬರ್ತೀನಿ. ಸುಮ್ಮನೆ ಬಂದಿದ್ದೆ -ಅಷ್ಟೇ” ಎಂದ. ಅಣ್ಣಾಜಿಗೆ ಇದರಿಂದ ತುಂಬ ಸಮಾಧಾನವಾದದ್ದು ಅವನ ಧ್ವನಿಯಿಂದಲೇ ಹೊಳೆಯಿತು: +“ಓ ಕೃಷ್ಣಪ್ಪನ? ಇರು. ಇರು. ಹೋಗಬೇಡ.” +ಕೃಷ್ಣಪ್ಪನಿಗೆ ಇನ್ನಷ್ಟು ಕಷ್ಟವಾಯಿತು. ಈಗ ತಾನು ಹೋಗುವಂತಿಲ್ಲ. ಏನೂ ಆಗದಿದ್ದ ರೀತಿಯಲ್ಲಿ ಅಣ್ಣಾಜಿ ಉಮೆಯರ ಮುಖ ನೋಡಬೇಕು. ಅವರಿಬ್ಬರೂ ಮುಚ್ಚಿಟ್ಟುಕೊಳ್ಳುವುದು ಕಷ್ಟವಾಗದಂತೆ, ಇದೆಲ್ಲ ತಿಳಿಯದ ಪೆದ್ದನಂತೆ ತಾನು ಕಾಣಿಸಿಕೊಳ್ಳಬೇಕು. +ಬಾಗಿಲು ತೆರೆಯಿತು. ಕೂದಲು ಕೆದರಿದ್ದ ಉಮೆ ಬಟ್ಟೆಯಿಂದ ಪುಸ್ತಕಗಳ ಧೂಳು ಹೊಡೆಯುತ್ತ ಸ್ಟೂಲಿನ ಮೇಲೆ ನಿಂತಿದ್ದಳು. ಅವಳು‌ಈ ಕೆಲಸದಲ್ಲಿದ್ದುದರಿಂದ ಕೂಡಲೇ ಬಾಗಿಲು ತೆರೆಯಲಾಗಲಿಲ್ಲೆಂದು ತಾನು ತಿಳಿಯಬೇಕು. ಆದರೆ ಅಣ್ಣಾಜಿ ಈಗ ತಾನೇ ಎದ್ದವನಂತೆ ಕಣ್ಣುಜ್ಜಿಕೊಳ್ಳುತ್ತಿರುವುದು ಮಾತ್ರ ಆಭಾಸವಾಗಿತ್ತು. ಆದರೆ ಒಂದೆರಡು ನಿಮಿಷಗಳಲ್ಲಿ ಅಣ್ಣಾಜಿ ಲೆನಿನ್ನಿನ “ಡೆಮೊಕ್ರಟಿಕ್ ಸೆಂಟ್ರಲಿಸಂ” ತತ್ವದಲ್ಲಿದ್ದ ಕಾಂಟ್ರಡಿಕ್ಷನ್ನುಗಳನ್ನು ನಿಜವಾಗಿಯೂ ಮಗ್ನನಾಗಿ ಚರ್ಚಿಸುತ್ತಿದ್ದ. ನಡುವೆ ಲೆನಿನ್ ಹೇಳಿದ ಮಾತೊಂದು ಸರಿಯಾಗಿ ನೆನಪಾಗದೆ, “ಉಮ, ಲೆನಿನ್‌ನ ಕಲೆಕ್ಟೆಡ್ ವರ್ಕ್ಸ್ ಇದೆಯಲ್ಲ -ಕೊಡು” ಎಂದ. ಉಮೆ ಪುಸ್ತಕ ತಂದು ಎದುರಿಟ್ಟಳು. “ಮಿಸ್ಟರ್ ಚನ್ನವೀರಯ್ಯನಿಗಿಂತ ಇವಳೇ ಬೇಗ ಕಲಿತಿದ್ದಾಳೆ. ಇವಳಿಗೆ ವಿಚಾರಶಕ್ತಿಯೂ ಇದೆ” ಎಂದು ಅಣ್ಣಾಜಿ ಹೊಗಳಿ, ಪುಸ್ತಕದಲ್ಲಿ ತನಗೆ ಬೇಕಾದ ಮಾತನ್ನು ಹುಡುಕಿದ. ಉಮೆ ಕಾಫ಼ಿ ಮಾಡಿ ತರಲು ಕೆಳಗೆ ಹೋದಳು. +ಕೃಷ್ಣಪ್ಪ ತನ್ನ ಜೀವನದಲ್ಲೆಲ್ಲ ತೀವ್ರವಾದ ಅಸೂಯೆಯನ್ನು ಅವತ್ತು ಅನುಭವಿಸಿದ. ಉಮೆಯ ನಡಿಗೆಯಲ್ಲಿ ಕಂಡ ಹಿತವಾದ ಆಯಾಸ ಅವನನ್ನು ವಿಚಲಿತಗೊಳಿಸಿತು. ಅಣ್ಣಾಜಿಯ ಹಾಗೆ ತಾನು ಯಾಕಿಲ್ಲವೆಂದು ತೀವ್ರ ಅತೃಪ್ತನಾದ. ಇವನಿಗೊಂದು ಹಸಿವು ಬಾಯಾರಿಕೆಗಳ ದೇಹವೇ ಇಲ್ಲವೋ ಏನೊ ಅನ್ನಿಸುವಂತಿದ್ದ ಅಣ್ಣಾಜಿ ತನಗೆ ಬೇಕಾದ್ದನ್ನು ಹೆಣ್ಣಿನಿಂದ ಇಷ್ಟು ಸುಲಭವಾಗಿ ಪಡೆಯುವಾಗ ತನಗೇಕೆ ಸಾಧ್ಯವಾಗುತ್ತಿಲ್ಲ? ಕಲ್ಪನೆಯಲ್ಲೂ ಅವನು ಗೌರಿಯನ್ನು ಬತ್ತಲಾಗಿ ನೋಡಲಾರ. ಅಣ್ಣಾಜಿ ಸತ್ತ ಮೇಲೂ ಈ ಅಸೂಯೆ ಕೃಷ್ಣಪ್ಪನಲ್ಲಿ ಉಳಿದಿತ್ತು. ಅದನ್ನು ಅವನು ಕಳಕೊಂಡಿದ್ದೆಂದರೆ ಲೂಸಿನಾ ಅವನ ಇಡೀ ದೇಹವನ್ನು ಅವಳ ತುಟಿ ಮತ್ತು ನಾಲಿಗೆಯ ತುದಿಗಳಿಂದ ಬೆಂಕಿಯ ಹಾಸಿಗೆ ಮಾಡಿ ಅದರ ಮೇಲೆ ತನ್ನ ಚಿರತೆಯಂತೆ ಮಾಟವಾದ ದೇಹವನ್ನು ನೀಡಿದಾಗ. ಕೃಷ್ಣಪ್ಪ ಇದ್ದಕ್ಕಿದ್ದಂತೆ ಎದ್ದು ನಿಂತದ್ದು ನೋಡಿ ಅಣ್ಣಾಜಿ ಯಾವ ದೈನ್ಯವೂ ಇಲ್ಲದೆ: +“ಹೋಗಬೇಡ -ಕೂತಿರು. ಉಮೆ ಅನುಮಾನದಿಂದ ಒದ್ದಾಡಿಯಾಳು. ನಿನ್ನ ಊಹೆ ಸರಿ. ಆದರೆ ಇದೆಲ್ಲ ನನ್ನ ಕೈ ಮೀರಿದ್ದು.” +ಎಂದ. ಇಷ್ಟು ಸರಳವಾಗಿ ಬಿಡಬಲ್ಲ ಅಣ್ಣಾಜಿಯನ್ನು ಕಂಡು ಕೃಷ್ಣಪ್ಪ ಚಕಿತನಾದ. +.. +.. +.. +***** +ಮುಂದುವರೆಯುವುದು +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […] +ಸಂಸ್ಕಾರ ಕಾದಂಬರಿಯನ್ನು ಪೂರ್ಣವಾಗಿ ಪ್ರಕಟಿಸುತ್ತಿರುವುದರ ಉದ್ದೇಶ ಕೇವಲ ಶೈಕ್ಷಣಿಕ ಹಾಗು ಅಕಾಡೆಮಿಕ್ ಕಾರ್ಯಗಳಿಗೆ ನೆರವಾಗಲು ಮಾತ್ರ. ಉಳಿದವರು ಈ ಕೃತಿ ಪುಸ್ತಕದ ರೂಪ್ದಲ್ಲಿ ನಿಮ್ಮ ಸನಿಹದಲ್ಲಿ ದೊರೆಯುವುದಾದರೆ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಿಗದೇ ಇದ್ದ […] +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_553.txt b/Kannada Sahitya/article_553.txt new file mode 100644 index 0000000000000000000000000000000000000000..0837706de5022a21772697143645257a3e48476d --- /dev/null +++ b/Kannada Sahitya/article_553.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು +ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? +ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ +ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. +ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ +ನೋಟ ನಿಬ್ಬೆರಗಿನಲಿ, ನೀರವದಲಿ; +ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ +ಸುರಿಯುತಿದೆ ನುಣ್ಗದಪಿನಾಸರೆಯಲಿ. +ಕಣ್ಣೆವೆಗಳೆತ್ತುತಿರೆ: ನವಿಲುಗರಿ ಛಾಯೆಯೋ +ಮೇಣದರ ಮಾಯೆಯೋ, ಲಾಸ್ಯವೇನೊ; +ತಂಗೊಳದ ತಡಿಯಿಂದ ತೂರಿಬಹ ತಂಬೆಲರೊ +ಎದೆಗಲಂಪಿನ ಪೆಂಪ ಪೂಸುತಿಹುದು. +ಲಾಲಿತ್ಯ ಲತೆಯಾಗಿ ತುಟಿಗಳಲಿ ಪಲ್ಲವಿಸಿ +ಗಲ್ಲದಲಿ ಹೂವಾದ ರೂಹಾಗಿದೆ; +ಇಲ್ಲದಿರೆ ಲಾವಣ್ಯದಗ್ಗಳಿಕೆಯೆರಕದಲಿ +ಚೆಲುವಿಕೆಯ ಚರಸುಧಾಮೂರ್ತಿಯಾದೆ. +ಬಿಡುಗಣ್ಣ ಕಡೆಯಂಚಿನಂಚಿನಾಕಡೆಯಲ್ಲಿ +ಏನಿಹುದು! ಏನಿಹುದು? ಬಲ್ಲರಾರು; +ಬಾಳ ತೊಳೆತೊಳದು ಬೆಳಬೆಳಗಿಸುವ ಕಾಂತಿಯೋ +ಧೃತಿಗೆಡದ ದೀಧಿತಿಯೊ, ಪಡೆದರಾರು? +***** +ಹರ ಹರ ಮಹಾದೇವ! ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. ಕಂಠದ ವಿಷ ನರ ನಾಡಿಗಳಲ್ಲಿ- ಕಹಿ ಮನಸ್ಸಿನ ಮೈಯೆಲ್ಲ ನೀಲಿ; ಆಕಾಶದುದ್ದಗಲಕ್ಕೂ ಹರಡಿ ನೀಲಿ ಸಮುದ್ರದಾಳದ ಹವಳ ಮುತ್ತುಗಳೆಲ್ಲ ನೀಲಿ ನೀಲಿ. ಸಾವ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_554.txt b/Kannada Sahitya/article_554.txt new file mode 100644 index 0000000000000000000000000000000000000000..e0d983354dfed629bbd19be67e304085d29a5f49 --- /dev/null +++ b/Kannada Sahitya/article_554.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು +ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ +ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ +ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು +ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. +ಅರೆ, ಎಂದು ಒಂದು ಕ್ಷಣ ಆಶ್ಚರ್ಯಪಟ್ಟೆ, +ಆಲೋಚಿಸಿದೆ; +ನೆರಳು ನನ್ನ ಮರದ್ದು, ನಿಲ್ಲಿಸಬೇಡಯ್ಯ ಕಾರು +ಅಂದರೆ ತಪ್ಪೆ? +ಅದರ ನೆರಳಲ್ಲಿ ನಿಂತಿದ್ದರಿಂದ ಆ ಕಾರು +ನನ್ನದೆಂದರೆ ತಪ್ಪೆ? +ದಬಾಯಿಸಿದರೆ ಅವ ಹೀಗೆ: ಬೆಪ್ಪೆ, +ತೆಂಗು ನಿನ್ನದಿರಬಹುದು, ಅದರ ನೆರಳು ನಿನ್ನದ? +ದಿನ ಬೆಳಗಾದರೆ ಗರಿಗಳಲ್ಲಿ ಅರಳುವ ಹಕ್ಕಿ ನಿನ್ನದ? +ಅದರ ಕಿಚಪಿಚ, ಅಲೆಯುವ ಹವೆ, ಹೊಳೆಯುವ ಕಿರಣ, +ತೂಗುವ ಚಂದ್ರ – ನಿನ್ನದ? +ಇದು ಸಾರ್ವಜನಿಕ ರಸ್ತೆ – ನಿಲ್ಲಿಸಲು, +ಅಲ್ಲಿ ಚೆಲ್ಲಿದ ನೆರಳೂ ನನ್ನದೆನ್ನಲು ಹಕ್ಕುಂಟು. +ಆಲದೆ, ನೆರಳ ನೆಪದಿಂದ ವಾಹನ ನಿಲ್ಲುತ್ತೆ, +ಹಾಗಾಗಿ ಸಂಚಾರಕ್ಕೆ ಅಡಚಣೆ, ಕತ್ತರಿಸು +ಮರವನೆಂದರೆ ಎಲ್ಲಿದೆ ನನ್ನಲಿ ಜವಾಬು? +ಕ್ಷಣ, ದಿಗಿಲಾಗಿ +ಕಾರಲ್ಲಿ ಯಾರೂ ಇಲ್ಲದ್ದು ಖುಷಿಯಾಗಿ +ನೆರಳ ನೋಡದೆ +ಬರೀ ಕಾರಿನಂದವ ಮೆಚ್ಚುತ್ತ ಸರಸರ ಒಳಗೆ ನಡೆದೆ. +***** +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ಯಾಕೆ ಸುಮ್ಮನೆ ನಾವು ಹಾದಿ ಕಾಯುತ್ತೇವೋ ಬಂದರೂ ಬಾರದ ಹಾಗೇ ಇರುವಂಥವರ! ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ ಕಣ್ಣ ಕೊನೆಯಿಂದ ಕಿಡಿ ಕಾರಿ ಚಟ ಪಟ ಸಿಡಿದು ಹೊರಟು ಹೋದವರ ಕಾಯುತ್ತೇವೆ ಯಾಕೆ? – […] +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_555.txt b/Kannada Sahitya/article_555.txt new file mode 100644 index 0000000000000000000000000000000000000000..1b3cf1f68634a4a84fd50b45a688dc7b6c563d53 --- /dev/null +++ b/Kannada Sahitya/article_555.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. +ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; +ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; +ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ +ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ +ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ +ಏಕಾಂಗಿ ಚಿಟ್ಟೆ; ಅಲುಗುತ್ತಿವ ಎಲೆ ರವುದೆ +ಗಾಳಿ ತಣ್ಣನೆ ಬೀಸೆ, ಮೌನದೇಕಾಂತದಲಿ +ನಲ್ಲ ಕಿವಿಯಲಿ ಮೆಲ್ಲನುಸುರಿ ಸೈತಿಡುವಂತೆ. +ತಳಿರಿಡಿದ ಜೊಂಪದಲಿ ಮೈಹುದುಗಿ ಕುಳಿತಿಹುದು +ತಂದ್ರಿಯಲಿ ಹೊಂಬಕ್ಕಿ; ಬಿಸಿಲ ಕೋಲನು ಹಿಡಿದು +ನಲಿದಾಡುತಿದೆ ಮನಸು ಹಸುಳೆ-ಹಂಬಲದಂತೆ- +ಈ ಇರವನೊಂದು ಚಣ ಮರೆತು ಬಹುದೂರದಲಿ +ಹಗಲುಗನಸಿನ ಸ್ವರ್ಣಮಂದಿರದ ಛಾಯೆಯಲಿ. +***** +ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […] +ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […] +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_556.txt b/Kannada Sahitya/article_556.txt new file mode 100644 index 0000000000000000000000000000000000000000..592c4199d1d8f0b82554a272c83292606a26a50f --- /dev/null +++ b/Kannada Sahitya/article_556.txt @@ -0,0 +1,192 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಯಾಕೋ ದ್ಯಾವಪ್ಪಾಣಿ…?’ +ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು… +‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ. +‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು ತೋರಿಸಿ ಕೇಳಿದ. +‘ಅದಣಿ…ಅದು ಹೈಕೋರ್ಟು…’ +ದ್ಯಾವಪ್ಪ ಒಮ್ಮಿಗೆಲೇ ನಕ್ಕು ‘ಬರಾಬ್ಬರೀ ಆತ ಬಿಡ್ರಿ…ಇಲ್ಲಿ ಕುಂತು ಇವರು ಕಾಯದೇ ಪಾಸು ಮಾಡಿ ಕಳಸತಾರು…ಅಲ್ಲಿ ಕುಂತು ಅವರು ಈ ಕಾಯ್ದೇದ ಫೂಟ ಪಟ್ಟೀ ಹಿಡದು ನ್ಯಾಯದ ಅಳತೀ ಮಾಡತಾರು…’ ಅಂತ ನುಡದ. +ದ್ಯಾವಪ್ಪ ಯಾವದೋ ತಳಮಳದಾಗ ಇದ್ದಾನ ಅಂತ ಮನಸಿಗೆ ತಟ್ಟಿ ‘ಯಾಕೋ ದ್ಯಾವಪ್ಪಾ…ವ್ಯವಸ್ಥಾದ ಮ್ಯಾಲ ಭಾಳ ಸಿಟ್ಟಾದಂಗ ಅದ…’ ಅಂದೆ.ಈ ಮಾತು ಅವನ ಅಂತಃಕರಣಕ್ಕ ಜಡದಿದ್ದ ಕೀಲಿಯನ್ನ ಒಡದು ಅದರ ಬಾಗಲಾ ತೆರೆಯಿತು … +‘ಇದ ವ್ಯವಸ್ಥಾ ಏನರೀ ಸಾಹೇಬರಣಿ…ಇದು ಹೆಂತಾ ವ್ಯವಸ್ಥಾ ?ಇಲ್ಲಿ ನೋಡರಿ…ಈ ಬೆಂಗಳೂರಿನ್ಯಾಗ ಎಲ್ಲಾ ಕಡೆ ಝಗ-ಮಗ ಅಂತ ಬೆಳಕು ಚಲ್ಯಾಡಿ ಹಾದೀಗುಂಟ ಹರೀತೈತಿ…ಇಡೀ ಊರಿಗೆ ಊರಣಿ ಚಲಸಾಕತ್ತೈತಿ ಅನ್ನೂ ಹಂಗ ರಸ್ತಾದ ತುಂಬ ಬಸ್ಸೂ -ಕಾರಗಾಡೀ ಮತ್ತ ಮೋಟರ ಸೈಕಲ್ಲಗೋಳು ಭರಂಡೀ ಹೋಗತಾವು… ಅಲ್ಲಿ ನಮ್ಮ ಊರಗೋಳೊಳಗ ನಿಮಗಣಿ ಗೊತ್ತ ಐತೆಲ್ಲರೀ…ಅಲ್ಲಿ ಕತ್ತಲಿ ತುಂಬೇತಿ… ಚಿಮಣೀ ಬುಡ್ಡಿಗೆ ತಟಕ ಎಣ್ಣಿ ಸಿಗೂದುಲ್ಲ…ಇಡೀ ಊರಿಗೆ ಊರಣಿ ಕುಂಟ ಬಿದ್ದದಾವು…’ ಅಂತಂದು ಮುಖಾ ತೆಳಗ ಮಾಡಿದ.ಅಂವಗ ತೇಕ ಹತ್ತಿದಂಗ ಆಗಿತ್ತು…ನಾನು ಅವನ ಮುಂದಿನ ಮಾತಿಗೆ ಕಾಯ್ದೆ…ಅಂವ ಒಂದು ಮಿನಿಟು ಸುಮ್ಮನೇ ಕೂತವ ಮತ್ತೆ ಮುಖಾ ಮ್ಯಾಲಕೆತ್ತಿ ಮಾತಾಡಿದ : +‘…ಟೆನೆನ್ಸೀ ಬಂತು ಖರೇ ಬಡವರಿಗೇನು ದಕ್ಕಲಿಲ್ಲ…ನಮ್ಮ ಜಮೀನು ನಮ್ಮ ಊರ ಗೌಡಗಣಿ ಹೋತು…ಅಂವಗ ಐವತ್ತ -ಅರವತ್ತ ಎಕರೇ ಭೂಮಿ ಐತಿರೀ.ಆದರ ಕಾಯ್ದೇಕ್ಕ ಹೆಂಗ ಟಾಂಗ ಕೊಡಬೇಕಂತ ಯಾವ ವಕೀಲನಕಿಂತಾ ಹೆಚ್ಚ eನ ಐತಿ ಅಂವಗ…ನನಗಿಂತಾ ಕಮ್ಮ ವಯಸ್ಸಿನ ತನ್ನ ಮಗನ್ನ ನಮ್ಮ ಹೊಲಕ್ಕ ಟೆನೆಂಟ ಅಂತ ಮಾಡಿ ಡಿಕ್ಲೆರೇಶನ್ ಕೊಡಿಸ್ಯಾನರಿ… ಹದಿನೆಂಟ ವರ್ಷದ ಹುಡಗ ಹದಿನೈದ ವರ್ಷದ ಹಿಂದಿಂದಣಿ ನಮ್ಮ ಹೊಲಾ ಹೊಡ್ಯಾಕತ್ಯಾನಂತ…!ಅಲ್ಲಿ ಗೋಕಾಂವೀ ರಾಮದುರ್ಗದಾಗ ಟ್ರಿಬ್ಯೂನಲ್ಲಗೋಳ ಅದಾವ ನೋಡ್ರಿ…ಆ ಟ್ರಿಬ್ಯುನಲ್ಲ ಗೋಳಂದರ ಈ ಎರಡೂ ಬಿಲ್ಡಿಂಗಗೋಳ ಮರಿಗೋಳು !ಆತ ಬಿಡ್ರಿ…’ ಅಂತ ಮತ್ತೆ ಮುಖಾ ತೆಳಗ ಹಾಕಿದ…ನನಗ ಒಂದ ನಮೂನಿ ಶಾಕ್ ಆದಂಗ ಆತು…ಅವನ ಮಾತುಗಳನ್ನ ಅರ್ಥಾ ಮಾಡಿಕೋಲಿಕ್ಕೆ ಪ್ರಯತ್ನಿಸುತ್ತಿದ್ದವನಂತೆ ನಿಶ್ಚೇಷ್ಟಿತನಾಗಿ ಕೂತೆ… +‘…ಮಳೀ ಇಲ್ಲದಿರಕ ಹೊಟ್ಟಿಗೆ ಕ್ಯಾರಾ ಹಾಕೋಬೇಕಾಗತೈತೀ…ಕುಲದ ಕಸಬು ಬಿಡಬ್ಯಾಡಾ…ಹತ್ತ ಊರು ಅಡ್ಯಾಡು…ಹತ್ತ ಊರ ಅಡ್ಯಾಡಿದರ ನಿನ್ನ ಹೊಟ್ಟಿ ತುಂಬತೈತಿ…ಈ ಹೊಲಾ ನೆಂಬಿಕೊಂಡರ ಹೊಟ್ಟಿಗೆ ಕ್ಯಾರಾ ಹಾಕೋಬೇಕಾಗತೈತಿ ನೋಡು ಅಂತ ನಮ್ಮ ಅಜ್ಜಗೋಳಿಗೆ ಈ ಗೌಡನ ಅಜ್ಜಗೋಳು ಹೇಳಿದರಂತ… ಅಂದಿಂದನಣಿ ಬಲೀ ನೇಯಾಕತ್ತಿದ್ದರವರು…ನಮ್ಮ ಅಜ್ಜಗೋಳು ಹುಚಪ್ಯಾಲಿಗೋಳು ಇದ್ದಿರಬೇಕು…! ಗೌಡರು ಹೇಳಿದ್ದು ಅಗದೀ ವಾಜಮಿಯ ಮಾತು ಅಂತ ಜೋಳಿಗೀ ಕಟಿಗೊಂಡು,ತೊಗಲಿನ ಗೊಂಬಿಗೋಳ ಪೆಟಿಗೀ ಹೊತಗೊಂಡು ಊರೂರು ಅಡ್ಯಾಡಿ ರಾಮಾಯಣಾ-ಮಹಾಭಾರತಗೋಳನ ಕಥೀ ಮಾಡಿ ಹೇಳಿದರು… ದುಶ್ಶಾಸನ ದ್ರೋಪದಿಯ ಜಡೀ ಹಿಡದು ಎಳಕೊಂಡು ರಾಜಸಭಾಕ್ಕ ತಂದದ್ದನ್ನ – ದುರ್‌ಯೋಧನ ಧರ್ಮರಾಜಗ ಸ್ವಂತ ಅಪ್ಪಗ ಹುಟ್ಟಿದ ಮಗಾ ಅಲ್ಲ ನೀನಾ…ನಿನಗ ಒಂದ ಇಂಚು ಸೈತ ಜಾಗಾ ಕೊಡೂದುಲ್ಲ ಹೋಗಲೇ…ನೀಯೇನ ನಮ್ಮ ಕುಲದ ಸಂತಾನ ಅಲ್ಲ ಅಂತ ಜಾಡಿಸಿ ಒಕ್ಕೊಟ್ಟದ್ದನ್ನ ಕಥೀ ಮಾಡಿ ಹೇಳೂವಷ್ಟೊತ್ತಿಗೆ ಇವರ ಹೊಲಾನಣಿ ಹೋತು ! ಅತ್ತ ತೊಗಲ ಗೊಂಬಿಗೋಳೂ ಹೋದೂ ಇತ್ತ ಹೊಲಾನೂ ಹೋತು….’. +‘ತೇರಿನ ಸೇವಾ…ತೇರಿನ ಸೇವಾಕ್ಕ ಹೋದಾಗ ಭಕ್ತಾದಿಗಳು ಕೊಡತಿದ್ದರಲಾ…?’ +‘ಹ್ಹುಂ…!’ ಅಂತ ದ್ಯಾವಪ್ಪ ಯಾಂಸೀ ದೀಡೀ ದನೀಲೆ ನಕ್ಕ…ಹಂಗ ನಕ್ಕು ‘…ನಮ್ಮ ಅಜ್ಜಗೋಳು ವಿಠ್ಠಲನ ಭಕ್ತರು ಕೊಟ್ಟದ್ದನ್ನ ಚಕಡ್ಯಾಗ ಹೇರಿಕೊಂಡು ಬರತಿದ್ದರು ಅಂತ ನಮ್ಮ ಅಪ್ಪ ಹೇಳತಿದ್ದ…ಆಗ ಕೊಡವರು ಅದನ್ನ ಭಕ್ತೀ ಅಂತ ಕೊಡತಿದ್ದರು ಮತ್ತ ಇಸಗೋಳಾವರ ಅದನ್ನ ಭಿಕ್ಷಾ ಅಂತ ಅನಕೋತಿದ್ದಿಲ್ಲ…ಮುಂದ ಕೊಡವರಿಗೆ ಅದು ಭಿಕ್ಷಾ ಅಂತ ತಿಳೀತು…ಕೊಡೂದನ ಬಂದ ಮಾಡಿದರು…ನಮ್ಮ ಅಪ್ಪನ ಕಾಲದಾಗಣಿ ಯಾವ ಭಕ್ತರೂ ಏನ ಒಂದ ನಯ್ಯಾ ಪೈಸಾ ಕೊಡತಿದ್ದಿಲ್ಲರಿ…ಜ್ವಾಳಾ ಕಾಳನೂ ಇಲ್ಲ….ಕಾಡಿಬೇಡಿ ತಿರಕೊಂಡು ಉಂಬವನಿಗೇ ಕೈಯೆತ್ತಿ ಒಂದು ತುತ್ತು ನೀಡುವುದಿಲ್ಲ…ಹಂತಾದ್ದರಾಗ ಇನ್ನ ಇಲ್ಲದ ದೇವರ ಮ್ಯಾಲಿನ ಭಕ್ತೀಗೆ ಕೊಡಾಂವ ಯಾಂವರೀ…? ಈಗ ಮಂದಿಗೆ ದೇವರ ಖರೇ ಹಕೀಕತ್ತು ತಿಳದೈತಿ.ಹಿಂಗಾಗಿ ಕೊಡೂದೂ ಗಿಡೂದೂ ಬಂದ ಮಾಡ್ಯಾರು…ಅವರದೇನ ತಪ್ಪ ಅಲ್ಲರೀ…ದೇವರೂ +ದಿಂಡರೂ ಎಲ್ಲಾ ಔಟ್ ಆಫ್ ಡೇಟ ಆಗ್ಯಾವರೀ…! ಔಷದದ ಬಾಟಲೀ ಮ್ಯಾಗ ಹಾಕಿರತಾರ ನೋಡರಿ…ಎಕ್ಸ್‌ಪೈರೀ ಡೇಟು…ಹಂಗ! ದೇವರೂ ದಿಂಡರದೂ ಎಕ್ಸ್‌ಪೈರೀ ಡೇಟು ಆಗಿ ಹೋಗೇತಿರಿ…ಹಿಂತಾ ದೇವರ ತೇರಿನ ಸೇವಾ ಮಾಡಿಕೋತ ನಿರುಪಯೋಗ ಆಗಿ ಹಾಳ ಆಗಲಿಕ್ಕೆ ಬಿಡದಣಿ ನಮ್ಮಂಥಾ ಹುಡಗೋರಿಗೆ ದುಡೀಲಿಕ್ಕೆ ಕೆಲಸಾ ಕೊಡಬೇಕರಿ…’. +‘ಹಂಗರಣಿ…ನೀನು ತೇರಿನ ಸೇವಾಕ್ಕ ಹೋಗೂದನ್ನ ನಿಂದರಸೀ ಅನ್ನು !’ ಅಂತ ನಾನು ನಡುವೆಯೇ ಬಾಯಿ ಹಾಕಿದೆ. +‘ಇನೂ ನಿಂದರಿಸಿಲ್ಲರೀ…ಆದರ ನಾವು ನಡಕೋದರೊಳಗ ನಮಗ ನಂಬಿಕೀ -ನಿಷ್ಠಾ ಇರಬೇಕಲ್ಲರಿ…ಖರೇದಿಂದ ನಡಕೋಬೇಕು…ಹೌದಲ್ಲರಿ ?…ನಮ್ಮ ಅಪ್ಪ ಧರಮನಟ್ಟಿಯ ತೇರು ಇನೂ ಹದನ ದಿನಾ ಐತಿ ಅಂತಿರಬೇಕಾದರ ಯಾತ್ರಾಕ್ಕ ಹೋಗೂದನ್ನ ತಪ್ಪಿಸಿ ಮನ್ಯಾಗ ಅಡಿಕ್ಕೊಂಡು ಬಿಡತಿದ್ದನರೀ…! ಒಳಗ ಅಡಿಗೀಮನ್ಯಾಗ ಕುಂಡ್ರಾವ ! …ಹೊತ್ತು ಮುಣಿಗಿ ಕತ್ತಲಿ ಆದಮ್ಯಾಲ -ಮತ್ತ ಹೊತ್ತು ಮೂಡೂಕಿಂತಾ ಒಂದು ತಾಸು ಮದಲಣಿ- ಇನಣಿ ಕತ್ತಲಿ ಐತಿ ಅನ್ನುವಾಗ ಚರಿಗೀ ತಗೊಂಡು ಹೋಗಿ ಬರತಿದ್ದ…ಮಂದಿ ಕೇಳಿದರ ಮನ್ಯಾನ ಮಂದಿ ಎಲ್ಲಾ -ಅಂವ ಧರಮನಟ್ಟೀ ತೇರಿನ ಸೇವಾದ ಯಾತ್ರಾಕ್ಕ ಹೋಗ್ಯಾನ ಅಂತ ಸುಳ್ಳ ಹೇಳತಿದ್ದಿವಿ… ಹಿಂಗ್ಯಾಕ ಅಡಿಕ್ಕೊಳ್ಳೂದೂ-ನಾವೇನ ಯಾರ ಗಂಟ ತಿಂದದೀವ ಏನ ಅಂತ ಕೇಳಿದರ- ಏ‌ಏಣಿ…ಹಂಗಲ್ಲ…ಹಿಂದಿಂದಣಿ ನಡಕೊಂಡು ಬಂದ ಪದ್ಧತೀ ಐತಿ-ಅಂತ ಹೇಳತಿದ್ದ… ಪದ್ಧತೀ ಬಿಡೂ ದಮ್ಮ ಇಲ್ಲದಿರಕ ಅದನ್ನ ಬರಾಬ್ಬರೀ ನಡಸ ಹಂಗರಣಿ.ಇದೆಂಥಾ ಹೇಸಿ ಕೆಲಸಾ…ಬಿಟ್ಟಂಗೂ ಅಲ್ಲಾ ನಡಿಸಿಧಂಗೂ ಅಲ್ಲ ಅಂತ ಅಂದರ ಬಾರಾ ಖೂನ ಮಾಡಿದ ಅಪರಾಧೀ ಹಂಗ ಸುಮ್ಮನಣಿ ಕುಂತ ಬಿಡತಿದ್ದಾ…! ಷಷ್ಟೀ ದಿವಸ ಬೆಳ್ಳೀ ಚಿಕ್ಕಿ ಮೂಡೂಕಿಂತಾ ಮದಲಣಿ ಊರು ಬಿಟ್ಟು ಹೊತ್ತು ಮುಣಗೂ ಹೊತ್ತಿಗೆ ಕರಕ್ಟಾಗಿ ಧರಮನಟ್ಟಿಯ ಪಡೂ ದಿಕ್ಕಿಗೆ ಮೂಡತಿದ್ದ…!’…ಕುಬೇರಪ್ಪನ ಯಾತ್ರಾದ ಕಥೀ ಕೇಳಿ ನಾನು ಒಂದು ಕ್ಷಣ ದಂಗಾಗಿ ಆಮ್ಯಾಲ -ಖೊಕ್ ಖೊಕ್ಕಂತ ನಕ್ಕೆ…ದ್ಯಾವಪ್ಪ ಒಮ್ಮಿಗೆಲೇ ನನ್ನ ದುರುಗುಟ್ಟಿ ನೋಡಿಧಂಗ ಅನಿಸಿತು…ಸ್ವಿಚ್ ಒತ್ತಿಧಂಗ ನಾನು ನನ್ನ ನಗಿಯನ್ನ ನಿಲ್ಲಿಸಿದೆ… +‘ಹೂಂ…! ಸ್ವತಾ ನಾನಣಿ…ಈಗ ಎರಡ ವರ್ಷ ನಮ್ಮ ಮೂಲ ಮುತ್ಯಾ ಏನು ಹಾದೀ ಹಾಕಿಕೊಟ್ಟಿದ್ದ ನೋಡರಿ…ಅದಣಿ ಪ್ರಕಾರನಣಿ ಅಗದೀ ನಿಷ್ಠಾದಿಂದ ಸೇವಾ ನಡಿಸಿದಿನರೀ…ಒಳಗಿಂದು ಶುದ್ದ ಮಾಡಿಕೊಳ್ಳುವ ಆಚಾರಾ – ಯಾತ್ರಾಣಿ …ಎಲ್ಲಾನೂ ಅಗದೀ ನಿಷ್ಠಾದಿಂದ ನಡಿಸಿದಿನಿ…ಆದರ ನನ್ನ ಮನಸಿಗೇ ಎಲ್ಲಾ ವ್ಯರ್ಥ ಅನಿಸಿತರಿ… ಗೂಗೀ ಕೊಳ್ಳದಾಗ ಈಗ ಯಾವ ಸಿದ್ಧರೂ ಕಾಣೂದುಲ್ಲ…ಅಲ್ಲಿ ಈಗ ಕಳ್ಳರು ಅಡಿಗಿಕೊಂಡಿರತಾರರಿ…ನವಲ ತೀರ್ಥದಾಗ ಗಂಗವ್ವ ಈಗ ಸೆಳವ ಕಳಕೊಂಡಾಳರಿ… +ಆಕೀ ಕಾಲಗೋಳನ ಮುರದ್ದಾರು!ಮುನ್ನೋಳೀ ಹಂತೇಕ ನೀವು ನೋಡಬೇಕರೀ… ನದೀ ಅಂಬುವ ಜಾಗಾದ ತುಂಬ ಆಪು ಬೆಳದು…ದರಿಗಟ್ಟಿ …ನೀರು ಕೊಳತ ನಾರತೈತಿ! ಪಂಚಲಿಂಗೇಶ್ವರನ ಗುಡಿಯ ಅಂಗಳಕ್ಕ ಹೋಗೂ ಹಾದೀಗುಂಟ ಏನ ಅದಾವು ಹೇಳ್ರಿ…ಬಾರಗೋಳು ಮತ್ತ ಶರೇದ ಅಂಗಡಿಗೋಳು…! ನಡ ನಡಕ ತೋರಣಾ ಕಟ್ಟಿರತಾರು…! ಮಾವಿನ ಎಲಿಯ ತೋರಣ ಅಲ್ಲರೀ…ತಂಬಾಕಿನ ಪಾಕೀಟಗಳ ಸರಪಳೀ ತೂಗು ಹಾಕಿದ ತೋರಣಾ ! +…ತೆಲೀಮ್ಯಾಲ ಬದಾ ಬದಾ ಅಂತ ಬಿಸಲು ಸುರೀತಿದ್ದರೆ ನೆಳ್ಳಿಗಂತ ಯಾರದರೇ ಮನೀ ಕಟ್ಟಿಗೆ ಹೋದರಣಿ ಆ ಮನಿಯವರು ಸಟಕ್ಕನಣಿ ಬಾಗಲಾ ಹಾಕ್ಕೋತಾರರಿ…ಬಾಯಾರಿಸಿ ನೀರ ಕೇಳಿದರ ಒಂದ ಚರಿಗಿ ನೀರು ಸಿಗೂದುಲ್ಲರಿ… ಚಾದ ಅಂಗಡಿಗೆ ಹೋಗೂ ಅಂತ ಹೇಳತಾರ… ಅವರರ ಏನ ಮಾಡ್ಯಾರರೀ…ಎರಡ ಮೂರು ದಿನಕ್ಕ ಒಮ್ಮೆ ನಳಾ ಬಂದಾಗಣಿ ಅವರಿಗೆ ನೀರು…ಮತ್ತ ಎಂದ ನಳಾ ಬಿಡತಾರೋ ಅಂತನ್ನೂ ಅಂಜಿಕಿ ಎಲ್ಲಾರಿಗು…ನಾ ಎರಡ ವರ್ಷ ಅಗದೀ ನಿಷ್ಠಾದಿಂದ- ಅಗದೀ ಭಕ್ತೀಲಿಂದ ಯಾತ್ರಾ ಮಾಡಿದಿನರಿ…ಆದರ ಯಾವ ಒಂದ ದೇವಸ್ಥಾನದೊಳಗನೂ -ಒಂದು ಕ್ಷೇತ್ರದಾಗಾದರೂ ದೇವರಿದ್ದಾನಂತ ಅನ್ನೂ ಭಾವನಾ ನನಗ ಬರಲಿಲ್ಲ ನೋಡ್ರಿ…ನನ್ನ ಹಂತೇಕ ಭಕ್ತೀ ಐತಿ-ರೊಕ್ಕ ಇಲ್ಲ ಅಂತ ದೇವಸ್ಥಾನಗೋಳಿಗೆ ಹೋದರ ಅಲ್ಲಿ ಪೂಜಾರಿಗೋಳು-ಹೋಗೋ ಮಕಳೀ ಹೋಗು ಅಂತ ಚಂಡಮ್ಯಾಲ ಕೈಕೊಟ್ಟು ಹೊರಗ ನುಗಸತಾರು…ಗುಡೀ ಅನ್ನುವದರೊಳಗ ದೇವರುಗಳೆಲ್ಲಾ ಕಲ್ಲ ಮೂರತಿ ಆಗಿ ನಿಂತಾವರೀ ಸಾಹೇಬರಣಿ…!’ ದೆವ್ವ ಹೊಕ್ಕವರಂಗ ಮಾತಾಡತಿದ್ದ ದ್ಯಾವಪ್ಪನಿಗೆ ನಾನು ಇನ್ನೊಮ್ಮೆ ಅಡ್ಡ ಹಾಕಿದೆ- +‘ನಂಬಿಕಿ -ಶ್ರದ್ಧಾ ಅನ್ನೂವು ಮುಖ್ಯಪಾ ದ್ಯಾವಪ್ಪಾ … ನಿನ್ನ ಮುತ್ಯಾಗೋಳಿಗೆ ಇದ್ದ ಶ್ರದ್ಧಾ ನಂಬಿಕೀ ನಿನಗ ಇಲ್ಲದಾಗ್ಯಾವ.ಹಿಂಗಾಗಿ…’ಅಂತ ನಾ ಹೇಳತಿರಬೇಕಾದರ ಅಂವ ನನ್ನ ಮಾತು ಅರ್ಧಕ್ಕಣಿ ತುಂಡು ಆಗೂ ಹಂಗ ಹಾಣಿ ಹ್ಹಾ …ಅಂತ ಗಹಗಹಿಸಿ ನಕ್ಕ…ಅವನ ನಗಿ ನನ್ನ ಮನಸಿನ ಒಳಗ ಮುಳ್ಳು ಚುಚ್ಚಿಧಂಗ ಚುಚ್ಚಿ – ನನ್ನೊಳಗ ನೋವು ಮೂಡಿಸಿತು…ಎಲಾ ಇವನಣಿ…ಅಂತ ಅನಕೊಂಡೆ…ಅಂವ ಮಾತಾಡಲಿಕ್ಕತ್ತಿದ… ಅವನ ಮಾತು ನನ್ನನ್ನ ಹೊರಗ ಎಳಿಯಿತು – +‘ಹಂಗಲ್ಲರೀ ಸಾಹೇಬರಣಿ…ನಮ್ಮ ಮೂಲ ಮುತ್ಯಾ ಏನೋ ಇಲ್ಲದ ಒಂದು ನಂಬಿಕೀ ಹುಟ್ಟಿಸಿಕೊಂಡು ಹೊಸಾದು ಒಂದು ಪದ್ಧತೀ ಹುಟ್ಟಿಸಿಕೊಂಡ…ಆದರ ಆಮ್ಯಾಲ ಬಂದ ನಮ್ಮ ಅಜ್ಜ- ಮುತ್ಯಾಗೋಳಿಗೆ ಅದಣಿ ನಂಬಿಕೀ ಅದಣಿ ನಿಷ್ಠಾ ಇತ್ತಂತ ಹೆಂಗ ಹೇಳತೀರಿ…? ನಮ್ಮ ಅಪ್ಪನ ಕಥೀನಣಿ ಹೇಳಿದಿನಲ್ಲಾ ನಿಮಗ…ಈ ನಮ್ಮ ಅಪ್ಪನ ಅಪ್ಪಾ -ಅಜ್ಜಾ ಅವರೂ ಹಿಂಗಣಿ ಮಾಡಿದ್ದಾರು… ಲಾಭ ಇರೂತನಾ ನಿಷ್ಠಾದ ನಾಟಕಾ ಆಡಿದ್ದಿರಬೇಕಲ್ಲರಿ..’. +ಯಾಕೋ ಏನೋ…ಈ ದ್ಯಾವನನ್ನ ಹಣಿಯಬೇಕು ಅನ್ನುವ ಭಾವನಾ ನನ್ನೊಳಗ ಜಾಗೃತ ಆಯಿತು…‘ದ್ಯಾವಪ್ಪಾ ನಿನ್ನ ಶಿಕ್ಷಣ ಎಲ್ಲೀತನಕಾ ಆಗೇದ…?’ ಅಂತ ಕೇಳಿದೆ. ದ್ಯಾವಪ್ಪ ಉಸ್…ಅಂತ ಉಸರು ಬಿಟ್ಟು – +‘ಪೀಯೂಸೀ ತನಕಾ ಆಗೇದರಿ…ಸಾಯನ್ಸಿಗೆ ಹಚ್ಚಿದ್ದಿನಿ…ಇಂಗ್ಲೀಷು ಮೀಡಿಯಮ್ಮು ಗಂಟಲಕ್ಕಣಿ ತಂದ ಇಟ್ಟಿತು…ವಿಷಯ ಎಲ್ಲಾ ತಿಳಧಂಗ ತಿಳಧಂಗ ಆಗೋವು…ಆದರ ಬರ್‍ಯಾಕ ಹೋದರ ಕೈಯಣಿ ಕಟ್ಟಾಗಿ ಬಿಡೂದು !ನಪಾಸ ಆಗಿ ಸಾಲೀ ಬಿಡಬೇಕಾತರಿ…’ ಅಂತ ಇನ್ನೊಂದು ಸುಸ್ಕಾರ ಹೊಂಡಿಸಿ ಮುಖಾ ತೆಳಗ ಹಾಕಿ ಸುಮ್ಮನಣಿ ಕೂತ…ನನಗ ಪಾಪ ಅನಿಸಿ- +‘ಇರಲಿ ಬಿಡು…ಆದದ್ದ ಆತಲಾ…ಇದೆಲ್ಲಾ ಹೋಗಲಿ . ನಿಮ್ಮ ಅವ್ವ ಹೆಂಗ ಇದ್ದಾಳಣಿ…? ಪತ್ರಾ ಗಿತ್ರಾ ಬರಿಸಿದ್ದಿರಬೇಕಲಾ…ಪಾಪ ಆಕಿ ನಿನ್ನದಸಿಂದ ಮನಸಿಗೆ ಹಚಿಗೊಂಡು ಚಿಂತೀ ಮಾಡತಿರಬೇಕು !’ ಅಂತ ನುಡಿದೆ. +‘ಹಾಂ…ಆಕೇನ ಆರಾಮ ಇರತಾಳ ಬಿಡ್ರಿ…!’ ಅನ್ನುವ ದ್ಯಾವಪ್ಪನ ಮಾತಿನೊಳಗ ಯಾಕೋ ಏನೋ ಒಮ್ಮಿಗೆಲೇ ರೌಸು ತುಂಬಿಕೊಂಡಂಗ ಇತ್ತು…ಅವನ ದನಿಯೊಳಗಿನ ತಿರಸ್ಕಾರದ ವಾಸನಿ ನನ್ನ ಮೂಗಿಗೆ ಹೊಡಿಯಿತು.ನಾನು ಆಶ್ಚರ್ಯಗೊಂಡು ‘ಹಾಂ…!’ ಅಂತ ಹೊಂಡಿಸಿದ ಉದ್ಗಾರವನ್ನು ಕೇಳಿಸಿಕೊಳ್ಳದೇ ರಭಸದಿಂದ ಅವನು ತನ್ನ ಮಾತು ಮುಂದುವರಿಸಿದ… +‘…ನಮ್ಮ ಊರ ಗೌಡದಾನಲ್ಲರೀ…ಅಂವ ಆ ಗೌಡಂದರಣಿ ತಾ ಬೀಜದ ಹೋರಿ ಅಂತ ತಿಳಕೊಂಡದಾನು…ಆ ಮುಂಬಯ್ಯವರ ಭಾಷಣಾ ಕೇಳತಿದ್ದಂಗಣಿ ಈ ಗೌಡನಂಥವರನ್ನ ನಾಶ ಮಾಡೂ ಹಂತಾ ಹಾದಿ ಕಂಡಂಗಾತು…ಅದಕ್ಕಣಿ ಬೆಳಗಾಂವಿಂದ ಊರಿಗೆ ಹೊಳ್ಳಿ ಹೋಗದಣಿ ನವ ನಿರ್ಮಾಣ ಚಳವಳಿಗೆ ಸೇರಿದಿನಿರಿ… ಮುಂದ ಎರಡಣಿ ದಿನದಾಗ ಬಿಹಾರದಾಗ ಅವರನ ಅರೆಸ್ಟ್ ಮಾಡಿದರಂತ ಸುದ್ದಿ ಬಂತು…ಬೆಳಗಾಂವ್ಯಾಗ ನಮ್ಮದು ಹದಿನೈದು ಮಂದಿಯ ಟೋಳೀ ಇತ್ತರೀ… ನಾವೂ ಭೂಗತ ಇದು -ಬೆಳಗಾಂವ್ಯಾಗ ಮನಿ ಮನಿಗೆ ಹೋಗಿ ಎಮರ್ಜೆನ್ಸಿ ಯ ವಿರುದ್ಧ ಪ್ರಚಾರ ಮಾಡಿ ಓಪಿನಿಯನ್ ಹುಟ್ಟಸಾಕ ಪ್ರಯತ್ನ ಸುರು ಮಾಡಿದಿವಿ…ಆದರ ಮಂದಿ ವಿಚಿತ್ರ ನೋಡರಿ…ಒಂದಿಷ್ಟ ಮಂದಿ ನಮ್ಮನ್ನ ನೋಡಿ ನಕ್ಕರು.ಒಂದಷ್ಟ ಮಂದಿ -ಇಲ್ಲದ ಉಸಾಬರೀ ಯಾಕಬೇಕು ನಿಮಗಣಿ…ನಿಮ್ಮ ಕೆಲಸಾ ನೀವು ನೋಡಿಕೋಹೋಗರಿ. ಇನೊಮ್ಮೆ ಇತ್ತಲಾಕಡೆ ಬಂದರೆ ಪೋಲೀಸರಿಗೆ ಹಿಡದ ಕೊಡತೀವ ನೋಡ್ರಿ ಅಂತ ಬೈದು ಹೆದರಸಲಿಕ್ಕೆ ನೋಡಿದರು….ನಾವು ನವ ನಿರ್ಮಾಣದವರು ಅಂತ ಹೇಳತಿದ್ದಂಗಣಿ ಭಾಳ ಮಂದಿ ರಪ್ಪಂತ ತಮ್ಮ ಮನಿಗೋಳ ಬಾಗಲಾ ಹಾಕತಿದ್ದರು… ಇದು ಕಡೀ ಪೂರೈಸೂದುಲ್ಲ…ಹೆಂಗರಣಿ ಮಾಡಿ ವ್ಯವಸ್ಥಾಕ್ಕ ಶಾಕ್ ಕೊಡಬೇಕು – ಹಂತಾದ್ದು ಏನರೇ ಮಾಡಬೇಕೂ ಅಂತ ವಿಚಾರ ಮಾಡಿ -ದಿನಾ ಆಫೀಸಿನ ವ್ಯಾಳ್ಯಾದಾಗ +ಡೀಸಿ ಆಫೀಸಿನ ಮುಂದ ನಿಂದರಸತಿದ್ದ ಅವರ ಖಾಲೀ ಕಾರನ್ನ ಸೋಙಟ ಮಾಡಬೇಕಂತ ಪ್ಲ್ಯಾನು ಹಾಕಿದಿವಿ…ಛಲೋ ಐಡಿಯಾ -ಏ ಭಾಳ ಛಲೋ ಐಡಿಯಾ…ಹಂಗಣಿ ಮಾಡೂಣೂ ಅಂತ ಅನಕೋತ ಅನಕೋತನಣಿ ಗುಂಪಿನ್ಯಾಗಿನ ಹತ್ತು ಹುಡುಗೋರು ಕಳಚಿಕೊಂಡು ಹೋದರು…ಕ್ರಾಂತಿಗೆ ಒಬ್ಬನಣಿ ಸಾಕು – ನಾವು ಇನ್ನೂ ಐದು ಮಂದಿ ಇದ್ದೀವಿ – ಬೇಕಾದಷ್ಟಾತು -ಅಂತ ನಮಗ ನಾವಣಿ ಸಮಾಧಾನಾ ಹಚಿಗೊಂಡು-ನಮ್ಮ ಪ್ಲಾನಿಗೆ ಬೇಕಾಗುವ ಸಿಡಿಮದ್ದು ಹೆಂಗ ತಯಾರಿಸೂದು ಅನ್ನೂದನ್ನ ತಿಳಕೋ ಸಲುವಾಗಿ ರಸಾಯನ ಶಾಸ್ತ್ರದ ಪುಸ್ತಕ ತರಲಿಕ್ಕೆ ಹೋದರೆ ಅವೆಲ್ಲಾ ಇಂಗ್ಲೀಷಿನ್ಯಾಗಣಿ ಇದ್ದೂ….! +ನಾವು ಐದು ಮಂದ್ಯಾಗ ಇಂಗ್ಲೀಷು ಬರೂ ಹುಡಗ ನಮ್ಮ ಲೀಡರ ಆದ…ಆ ಹುಡಗನ ಬೆನ್ನ ಹತ್ತಿ ಆ ಪುಸ್ತಕದ ಕಾಡಿನೊಳಗ ಹಾದೀ ತಪ್ಪಿಸಿಕೊಂಡು ಅಡ್ಯಾಡಿದೆವು… ಏನ ಮಾಡಿದರೂ ಸಿಡಿಮದ್ದು ತಯಾರಿಸುವ ಪ್ರಶ್ನಾ ಬಗೀಹರಿಲಿಲ್ಲ…ಇಷ್ಟರ ನಡವ ಯಾರು ಸೂಚನಾ ಕೊಟ್ಟರೋ ಏನೋ…ಪೋಲೀಸರು ನಮ್ಮ ಖೋಲೇಕ್ಕ ಬಂದು ನಮ್ಮನ್ನ ಐದೂ ಮಂದಿನ್ನ ಅರೆಸ್ಟ್ ಮಾಡಿದರು…ನಮ್ಮ ಖೋಲ್ಯಾಗ ಅವರಿಗೆ ಸಿಕ್ಕದ್ದು ಬರೇ ಒಂದೆರಡು ರಸಾಯನ ಶಾಸ್ತ್ರದ ಪುಸ್ತಕಗಳು ಮಾತ್ರ…ಆದರ ಅವರು ಆ ಪುಸ್ತಕದ ಜೋಡಿ ಸಿಡಿಮದ್ದು ತಯಾರಿಸುವ ರಸಾಯನಗಳು ಇದ್ದವೂ ಅಂತ ಪಂಚನಾಮೆ ಮಾಡಿ-ಮಗ್ಗಲ ಮನಿಗಳವರ ಸಹಿಗಳನ್ನು ಹಾಕಿಸಿಕೊಂಡು ಕೋರ್ಟಿನ ಮುಂದ ನಮ್ಮನ್ನ ಹಾಜರು ಮಾಡಿದರರೀ…’ ಅಂತ ಹೇಳಿ ಅಂವ ಎದ್ದು ನಿಂತು ವಿಧಾನಸೌಧದತ್ತ ದಿಟ್ಟಿಸಿ ನೋಡತೊಡಗಿದ…ನಾನೂ ಎದ್ದು ನಿಂತು ಅವನ್ನ ನೋಡಿ- +‘ಹಾಂ…ಈಗೇನು…?ನಮ್ಮ ವಿಧಾನಸೌಧವನ್ನ ಸೊಙಟ ಮಾಡುವ ವಿಚಾರ ಮಾಡಲಿಕ್ಕೆ ಹತ್ತಿದೀ ಏನಪಾ ಮತ್ತಣಿ…?’ ಅಂತಂದು ಜೋರಾಗಿ ನಕ್ಕು ಅವನ ಹೆಗಲ ಮೇಲೆ ಕೈಯಿಟ್ಟು – ‘ಹೂಂ…ನಡೀ…ಹೊತ್ತ.ಆತು ಹೋಗೂಣೂ…’ ಅಂತ ಸ್ಕೂಟರನ್ನು ನಿಲ್ಲಿಸಿದ ಕಡೆ ಅವನ್ನ ಕರಕೊಂಡು ನಡೆದೆ…. +* +* +* +…ಎಷ್ಟು ಒತ್ತಾಯ ಮಾಡಿದರೂ ದ್ಯಾವಪ್ಪ ಆ ರಾತ್ರಿ ನಿಲ್ಲಲಿಲ್ಲ…ತನ್ನ ಚೀಲಾ ತಗೊಂಡು ಹೊರಟೇ ಬಿಟ್ಟ .ನಾನು ನಮ್ಮ ಬಡಾವಣೆಯ ಬಿ ಟಿ ಎಸ್ ಬಸ್ ಸ್ಟಾಂಡಿಗೆ ಹೋಗಿ ಅವನನ್ನು ಬಸ್ಸಿಗೆ ಕೂಡಿಸಿಬಂದೆ… +ಭಾಗ : ನಾಲ್ಕು +…ಈ ವರ್ಷ ಧರಮನಟ್ಟಿಯ ತೇರಿಗೆ ದೀಡ ನೂರು ವರ್ಷ ಆಗತೈತಿ ಅಂತ ಬೆಂಗಳೂರಿನ ನನ್ನ ವಿಳಾಸಕ್ಕೆ ಧರಮನಟ್ಟಿಯ ಸ್ವಾಂವಜ್ಜ ಪತ್ರಾ ಬರೆದು-ನೀವು ಬರಲಿಕ್ಕೇ ಬೇಕು…ಹೆಂಡತಿ ಮಕ್ಕಳನ್ನ ಕರೆದುಕೊಂಡು ತೇರಿಗೆ ಬರಲಿಕ್ಕೇಬೇಕು…ನಿಮಗ ಇಳಕೋಲಿಕ್ಕೆ ಒಂದು ಬ್ಯಾರೇ ಮನಿಯ ವ್ಯವಸ್ಥಾ ಮಾಡತನು-ತಪ್ಪಸದೇ ಬರುವದು- ಅಂತ ಒತ್ತಾಯಿಸಿ ಪತ್ರ ಬರೆಸಿದ್ದ…ನಾನು ಹಿಂದಿನ ಸರತೇ ಧರಮನಟ್ಟಿಗೆ ಹೋಗಿ ಬಂದಮ್ಯಾಲೆ ನನ್ನ ಹೆಂಡತಿಗೆ ವಿಠ್ಠಲ ದೇವರ ತೇರಿನ ಕಥಿಯನ್ನ ಹೇಳಿದ್ದೆ…ಆಕಿಗೆ ಧರಮನಟ್ಟಿಯ ದೇಸಗತಿಯ ಕಥಿಯೂ ಗೊತ್ತಿತ್ತು… ಹಿಂಗಾಗಿ ಆಕಿಗೆ ಧರಮನಟ್ಟಿಯ ಬಗ್ಗೆ ಬಹಳ ಕುತೂಹಲ ಹುಟ್ಟಿತ್ತು….ಈಗ ಸ್ವಾಂವಜ್ಜನ ಪತ್ರ ಬಂದದ್ದು ತಿಳಿದು – +‘ನನಗ ಎಂದಿಂದಣಿ ಆ ಧರಮನಟ್ಟಿಯ ವಿಠ್ಠಲ ದೇವರ ದೇವಸ್ಥಾನ ನೋಡಬೇಕಂತ ಅನಸಲಿಕ್ಕತ್ತಿತ್ತು …ಈಗ ಛಲೋ ಆತು…ಹೆಂಗೂ ನಿಮ್ಮ ಆ ಯಾರೋ ಅಜ್ಜ ಪತ್ರಾ ಬರದು ಬರಲಿಕ್ಕೆ ಹೇಳ್ಯಾನಲಾ…ನಡೀರಿ ಹೋಗಿಬರೂಣೂ… ಹುಡುಗರನ ಕರಕೊಂಡಣಿ ಹೋಗಿಬರೂಣೂ… ಹುಡುಗೋರೂ-ನಮ್ಮನ್ನ ನೀವು ಎಲ್ಯೂ ಕರಕೊಂಡ ಹೋಗೂದುಲ್ಲ ಅಂತಿರತಾವ…ಈಗ ಎಲ್ಲಾನೂ ಆದಂಗ ಆತು….ಬರುವಾಗ ಬೇಕಾದರ ನಿಮ್ಮ ಊರಿಗೂ ಹಾಯ್ದು ಬಂದರಾತು…’ ಅಂತ ಆಕಿ ನನಗ ನಮ್ಮ ಊರಿಗೆ ಹೋಗುವ ಆಸೇ ತೋರಿಸಿಕೋತ ಧರಮನಟ್ಟಿಗೆ ಹೋಗುವದರ ಬಗ್ಗೆ ವರಾತ ಹಚ್ಚಿದಳು. +ನಾನು-ನೋಡಿದರಾತೂ…ಬರದರಾತೂ ಅಂತ ಮುಂದಕ ಮುಂದಕ ಹಾಕತಿದ್ದರೆ ಕಡೀಕ ಆಕಿ -‘ನೋಡರೀ…ನಾವು ಬರತೀವಂತ ಇಂದಣಿ ನೀವು ನಿಮ್ಮ ಆ ಅಜ್ಜಗ ಬರದ ಹಾಕಬೇಕು…ಇಲ್ಲಾತಂದರ ನಾನಣಿ ಬರದ ಹಾಕಿಬಿಡತನ ನೋಡ್ರಿ…’ ಅಂತ +ಅಲ್ಟಿಮ್ಯಾಟಮ್ಮು ಕೊಟ್ಟಳು…ಅನಿವಾರ್ಯವಾಗಿ ಸ್ವಾಂವಜ್ಜನಿಗೆ ಪತ್ರಾ ಬರೆದು ಹಾಕಿದೆ… +ಸ್ವಾಂವಜ್ಜ ಸಾವಕಾರರಿಗೆ +ನಮಸ್ಕಾರಗಳು… +ಇಲ್ಲಿ ನಾವೆಲ್ಲ ಕ್ಷೇಮ…ನಿಮ್ಮ ಕ್ಷೇಮ ಸಮಾಚಾರ ಮೇಲಿಂದ ಮೇಲೆ ತಿಳಿಸುತ್ತಿರಬೇಕು… +ಅದಾಗಿ ನೂರಾ‌ಐವತ್ತನೆಯ ತೇರಿನ ಉತ್ಸವಕ್ಕೆ ಬರಲಿಕ್ಕೆ ಒತ್ತಾಯಪೂರ್ವಕವಾಗಿ ಬರೆದಿದ್ದೀರಿ.ನಿಮ್ಮ ಒತ್ತಾಯವನ್ನು ಮನ್ನಿಸಿ ನಾನು ಕುಟುಂಬ ಸಮೇತ ನಿಮ್ಮಲ್ಲಿಗೆ ಬರುತ್ತೇನೆ. +…ರಕ್ತ ತಿಲಕದ ಸೇವಾಕರ್ತನು ಧರಮನಟ್ಟಿಗೆ ಬರುವುದನ್ನ -ಸೇವಾ ಮಾಡುವುದನ್ನ ನೋಡಲಿಕ್ಕೆ, ತೇರಿನ ಮಹಾತ್ಮೆಯನ್ನು ಹೇಳುವ ಗೊಂದಲಿಗರ ಕಥೆಯನ್ನು ಇನ್ನೊಮ್ಮೆ ಕೇಳಲಿಕ್ಕೆ ಅನುಕೂಲ ಆಗುವಂತೆ -ತೇರು ಇನ್ನೂ ನಾಲ್ಕು ದಿನಗಳಿರುವಾಗಲೇ ಧರಮನಟ್ಟಿಗೆ ಬರುತ್ತೇನೆ… ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ…ಇಳಿದುಕೊಳ್ಳಲಿಕ್ಕೆ ಬಚ್ಚಲಿರುವ ಒಂದು ಸಣ್ಣ ಮನೆ – ಕೇವಲ ಒಂದು ಕೋಣೆಯ ಮನೆಯಾದರೂ ಸಾಕು…ಹೆಚ್ಚಿನ ತೊಂದರೆಯನ್ನು ತೆಗೆದುಕೊಳ್ಳುವುದು ಬೇಡ… +ಇತ್ಯಾದಿ… +* +* +* +…ಈ ಪತ್ರವನ್ನು ಬರೆದು ಹಾಕಿದ್ದು ಜನೆವರಿ ತಿಂಗಳಿನಲ್ಲಿ…ಅಂದರೆ ಧರಮನಟ್ಟಿಯ ತೇರು ಇನ್ನೂ ನಾಲ್ಕು ತಿಂಗಳು ಇರುವಾಗ…ಸ್ವಾಂವಜ್ಜ ತೇರಿಗೆ ಇನ್ನೂ ಐದು ತಿಂಗಳಿರುವಾಗಲೇ ನನಗೆ ಪತ್ರ ಬರೆದಿದ್ದ…ನೂರಾ ಐವತ್ತನೇ ವರ್ಷದ ತೇರು ಆಗಿದ್ದರಿಂದ ಭಾಳ ಜೋರ ತಯಾರೀ ನಡದಿರಬೇಕು ಅಂತ ಅನಕೊಂಡೆ…ನಾನು ಸ್ವಾಂವಜ್ಜನಿಗೆಪತ್ರ ಬರೆದ ಒಂದು ತಿಂಗಳಿನಮೇಲೆ -ಫೆಬ್ರುವರೀ ಇಪ್ಪತ್ತಮೂರನೇ ತಾರೀಖಿನ ದಿವಸ…ಅವತ್ತು ಮಂಗಳವಾರ…ನಾನು ಮರದಿವಸ ಪ್ರಿಂಟಿಗೆ ಹೋಗಬೇಕಾಗಿದ್ದ ವಾರದ ವಿಶೇಷ ಪುಟಗಳ ತಯಾರಿಯೊಳಗ ತೊಡಗಿದ್ದೆ…ಆಗ ಚೀಫ್ ನ್ಯೂಜ್ ಎಡಿಟರ್ ರಾಮದಾಸ್ ನನ್ನ ಟೇಬಲ್ಲಿಗೆ ಬಂದು -ನನ್ನ ಮುಂದಿನ ಕುರ್ಚಿಯೊಳಗ ಕೂತರು… +‘ಏನ್ಸಾರ್…ಏನೋ ವಿಶೇಷ ಇದ್ದಂಗಿದೆ…ನೀವೇ ನನ್ನ ಟೇಬಲ್ಲಿಗೆ ಬಂದ ಬಿಟ್ಟೀರೀ…?’ ಅಂದೆ. +‘ಹೂಂ…ಆದರ ನಾನು ನಿಮಗ ಈ ಸುದ್ದೀ ಹೇಳಿ ಚಹಾ ಕೊಡಸರೀ ಅಂತ ಕೇಳಬಹುದೋ -ಕೇಳಬಾರದೋ ಅನ್ನುವದೇ ನನಗೆ ದೊಡ್ಡ ಸಮಸ್ಯಾ ಆಕ್ಕೊಂಡ ಕೂತಿದೆ…! ಬಹುಶಃ ಈ ಸುದ್ದಿಯನ್ನು ಕೇಳಿ ನಿಮಗೆ ಖುಶೀ ಆಗಲಿಕ್ಕಿಲ್ಲ …ಆದರೆ ಈ ಸುದ್ದೀ ಕೇಳಿ ನಿಮಗೂ ದುಃಖನೂ ಆಗಬೇಕಾಗಿಲ್ಲ…ಆದರ ಇಷ್ಟು ಮಾತ್ರ ನಿಜ…ಇದು ನಿಮ್ಮ ಕುತೂಹಲ ಕೆರಳಿಸುವಂಥಾ ಸುದ್ದಿ ಅನ್ನೋದರೊಳಗ ಯಾವ ಸಂಶಯನೂ ಇಲ್ಲ…ಅದಕ್ಕಣಿ ನಿಮ್ಮಿಂದ ಚಹಾ ಕೇಳೇಬಿಡಬಹುದೇನೋ ಅಂತ ವಿಚಾರ ಮಾಡ್ತಾ ಇದೀನಿ…’ ಅಂತ ರಾಮದಾಸ ಅವರು ನಕ್ಕೋತ ದೀರ್ಘ ಪ್ರಸ್ತಾವನೆ ಹಾಕಿದರು… +‘ಏನು ಸಾರ್…ಒಂದು ಚಹಾ ಕೇಳಲಿಕ್ಕೆ ಇಷ್ಟ ದೊಡ್ಡ ಪ್ರಸ್ತಾವನೆ ಬೇಕೇನು…ನೀವು ಯಾವ ಸುದ್ದೀ ಹೇಳದಿದ್ದರೂ ಚಹಾ ಕೊಡಸ್ತೀನಿ…ಸುದ್ದೀ ಹೇಳರಿ ಬೇಕಾರ ಬಿಡ್ರಿ’ ಅಂತ ನಾನೂ ನಕ್ಕೋತ ಹೇಳಿದೆ……ರಾಮದಾಸ ಅವರು ಶರ್ಟಿನ ಜೇಬಿನಲ್ಲಿಯ ಟೆಲಿ ಪ್ರಿಂಟರಿನ ಒಂದು ಸ್ಲಿಪ್ಪನ್ನ ತಗದು ನನ್ನ ಕೈಗೆ ಕೊಟ್ಟು +‘ನಿಮ್ಮ ಕುತೂಹಲ ಕೆರಳಿಸುವಂಥಾ ನ್ಯೂಜ್ ಅದ ನೋಡ್ರಿ…ಚಹಾ ಆಮ್ಯಾಲ ಕೊಡಸ್ರಿ’ ಅಂತ ಹೇಳಿ ತಮ್ಮ ಕೆಲಸಕ್ಕ ತಾವು ಹೋಗಿ ಬಿಟ್ಟರು. +ನಾನು ‘ಆಗಲಿ ಸರ್…’ ಅಂತಂದು ಆ ಸ್ಲಿಪ್ಪನ್ನ ಬಿಚ್ಚಿ ನೋಡಿ ಹೌಹಾರಿದೆ…! +ಮಗ ಮತ್ತು ಅಜ್ಜ ಇಬ್ಬರನ್ನೂ ಬಿಟ್ಟು ಕ್ಯಾಥರೀನ್ ಅನ್ನುವ ಬಿಳಿ ಹುಡಿಗಿಯನ್ನ ಕಟ್ಟಿಕೊಂಡು ಅಮೇರಿಕಾಕ್ಕೆ ಹೋಗಿ ಅಲ್ಲಿಯೇ ನೆಲೆನಿಂತಿದ್ದ ಮಾಣೀಕ್ ದೇಸಾಯಿಯ ಸುದ್ದಿ ಅದು…ಅಮೇರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟಿನಿಂದ ಭಾರತ ಸರ್ಕಾರಕ್ಕೆ ಬಂದ ಸೂಚನೆ ! ಆ ಸೂಚನಾ ಪತ್ರದಲ್ಲಿ ಇದ್ದ ಮಜಕೂರು ಏನೆಂದರೆ – …ಮೂವತ್ತು ವರ್ಷಗಳ ಹಿಂದೆ ಭಾರತದಿಂದ ಅಮೇರಿಕಾಕ್ಕೆ ವಲಸೆ ಬಂದಿರುವ ಮಾಣೀಕ್ ದೇಸಾಯಿ ಎನ್ನುವ ವ್ಯಕ್ತಿಯೊಬ್ಬ ಸುಯಿಸೈಡ್ ಮಾಡಿಕೊಂಡಿದ್ದಾನೆ…ಅವನ ಜೊತೆ ಯಾರೂ ಇಲ್ಲ…ಅಮೇರಿಕಾದಲ್ಲಿನ ಅವನ ಆಸ್ತಿ ಪಾಸ್ತಿಗಳು ಬೇವಾರಸಾ ಆಗಿವೆ.ಕ್ಯಾಥರೀನ್ ಎನ್ನುವ ಅವನ ವಿಚ್ಛೇದಿತ ಹೆಂಡತಿಯನ್ನು ವಿಚಾರಿಸಿದರೆ ಆಕೆ ತನಗೂ ತೀರಿಹೋದ ವ್ಯಕ್ತಿಗೂ ಯಾವ ಸಂಬಂಧವೂ ಇಲ್ಲವೆಂದೂ…ಅವನು ಭೂತಕಾಲದಲ್ಲಿ ತನ್ನ ಗಂಡನಾಗಿದ್ದವನು…ಈಗ ಅವನು ತನಗೆ ಏನೂ ಅಲ್ಲ…ಮತ್ತು ಅವನ ಯಾವ ಆಸ್ತಿ ಮತ್ತು ಜವಾಬ್ದಾರಿಗಳು ತನಗೆ ಸಂಬಂಧವಿಲ್ಲದವು ಎಂದು ತಿಳಿಸಿದ್ದಾಳೆ…ಅವನ ಅಲ್ಮೆರಾದಲ್ಲಿ ಸಿಕ್ಕ ಫೆಡರಲ್ ಕೋರ್ಟಿನಲ್ಲಿ ರಜಿಸ್ಟರ್ ಆದ ಮೃತ್ಯು ಪತ್ರದಲ್ಲಿ ಅವನು ತನ್ನ ಬ್ಯಾಂಕಿನ ಅಂಕೌಂಟಿನಲ್ಲಿರುವ ಎಲ್ಲ ಹಣವನ್ನು ಪ್ಯಾಲಿಸ್ತೀನಿಯನ್ ನಿರಾಶ್ರಿತರ ಶಿಬಿರಗಳಿಗೆ ಮತ್ತು ಭಾರತದಲ್ಲಿನ ತಿಬೆಟಿಯನ್ ನಿರ್ವಸಿತರ ಶಿಬಿರಗಳಿಗೆ ೫೦-೫೦ ಪ್ರಮಾಣದಲ್ಲಿ ಸಂದಾಯಮಾಡಬೇಕೆಂತಲೂ-ತನ್ನ ಅಂತ್ಯ ಸಂಸ್ಕಾರವನ್ನು ಪಾರ್ಸೀ ಪದ್ಧತಿಯಂತೆ ನಡೆಸಬೇಕೆಂತಲೂ ಮತ್ತು ಧರಮನಟ್ಟಿಯ ತಮ್ಮ ಮನೆತನಕ್ಕೆ ಸೇರಿದ ಗುಡ್ಡವನ್ನು ಆ ಊರಿನ ವಿಠ್ಠಲ ದೇವರ ದೇವಸ್ಥಾನಕ್ಕೆ ಕೊಡಬೇಕೆಂದೂ ಸೂಚಿಸಿದ್ದಾನೆ…ಅಮೇರಿಕಾದ ಸ್ಟೇಟ್ ಇಲಾಖೆ ಅಮೇರಿಕಾದಲ್ಲಿನ ಅವನ ಸಂಪತ್ತನ್ನು ಮೃತ್ಯುಪತ್ರದಲ್ಲಿನ ಸೂಚನೆಯ ಪ್ರಕಾರ ನಿರ್ವಹಿಸುತ್ತದೆ…ಭಾರತ ಸರ್ಕಾರವು ಮಾಣೀಕ್ ದೇಸಾಯಿಯ ಭಾರತದಲ್ಲಿನ ಆಸ್ತಿಯ ವಿಲೇವಾರಿಯ ಬಗ್ಗೆ ಸಹಾಯ ನೀಡಲು ಸಾಧ್ಯವೇ…? +ಹೂಂ…! ಮಾಣೀಕ್ ದೇಸಾಯಿ ಹೋಗಿಯೇಬಿಟ್ಟನೇ…ಅಂತ ನನ್ನೊಳಗೆ ವಿಷಾದ ತುಂಬಿತು…ಧರಮನಟ್ಟಿಯ ದೇಸಗತಿ ಇಂದಿಗೆ ಖಾಲಸಾ ಆದಂಗಾತು ಅಂತ ಅನಿಸಿತು…ನಾನು ಪತ್ರ ಬರೆದು ಸ್ವಾಂವಜ್ಜನಿಗೆ ಈ ವಿಷಯ ತಿಳಿಸಿ ಅವನ ಮೃತ್ಯುಪತ್ರದ ವಿಷಯವನ್ನು ಮತ್ತು ಧರಮನಟ್ಟಿಯ ಗುಡ್ಡದ ಬಗ್ಗೆ ತಿಳಿಸಿದೆ : +…ಧರಮನಟ್ಟಿಯ ಕಡೆಯ ದೇಸಾಯರು ತೀರಿಹೋದ ಸುದ್ದಿಯನ್ನು ನಿಮಗೆ ತಿಳಿಸುವ ದುಃಖದ ಕೆಲಸವನ್ನು ಮಾಡುವ ಅನಿವಾರ್ಯ ನನಗೆ ಬಂದಿದೆ…ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ…ಧರಮನಟ್ಟಿಯ ಗುಡ್ಡದ ದೇಸಾಯರ ಆಸ್ತಿಯನ್ನು ವಿಠ್ಠಲ ದೇವರ ದೇವಸ್ಥಾನಕ್ಕೆ ಮಾಣೀಕ್ ದೇಸಾಯರು ಬರೆದಿದ್ದಾರೆ…ನೀವು ದೇವಸ್ಥಾನಕ್ಕೆ ಈ ಆಸ್ತಿಯನ್ನು ವಹಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಲು ತಿಳಿಸಿದರೆ ಅದರ ಬಗ್ಗೆ ಇಲ್ಲಿನ ರೆವೆನ್ಯೂ ಸೆಕ್ರೆಟರಿಯೇಟ್‌ನಲ್ಲಿ ಪ್ರಯತ್ನ ಮಾಡುತ್ತೇನೆ…ಇದಕ್ಕೆ ಸಂಬಂಧಪಟ್ಟಂತೆ ಧರಮನಟ್ಟಿಯ ದೇವಸ್ಥಾನದ ಕಮೀಟಿಯವರು ಒಂದು ಅರ್ಜಿಯನ್ನು ಕೊಡಬೇಕಾಗಬಹುದು…ಅಲ್ಲಿಯೇ ಬೆಳಗಾಂವಿಯ ಡೀಸಿಯವರಿಗೆ ಅರ್ಜಿಯನ್ನು ಕೊಡಬೇಕಾಗುತ್ತದೆ.ಬೆಳಗಾವಿಯ ಡಿಸೀಯವರಿಗೆ ಅರ್ಜೀ ಸಲ್ಲಿಸಿ ನನಗೆ ಅದರ ಒಂದು ಪ್ರತಿಯನ್ನು ಕಳಿಸಿರಿ…ನಾನು ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ… ಮಾಣೀಕ್ ದೇಸಾಯಿಯವರ ಮೃತ್ಯುಪತ್ರದಲ್ಲಿನ ಬೇರೆ ವಿಷಯಗಳು ಹೀಗೆ ಹೀಗೆ… ಇವೆ…ಮತ್ತು ಮಾಣೀಕ್ ದೇಸಾಯಿ ತೀರಿ ಹೋದ ಪ್ರಯುಕ್ತ ಈ ವರ್ಷ ತೇರು ನಡೆಯುತ್ತದೆಯೋ ಇಲ್ಲವೋ ತಿಳಿಸಿರಿ… +ಇತ್ಯಾದಿ…. +ನನ್ನ ಪತ್ರಕ್ಕೆ ಸ್ವಾಂವಜ್ಜನಿಂದ ತಾಬಡ ತೋಬಡ ಉತ್ತರ ಬಂತು…ಉಳಿದ ಎಲ್ಲಾ ವಿಷಯಗಳಿಗಿಂತ ಮೊದಲು ತೇರು ನಡೆಯುವದರ ಬಗ್ಗೆ ಬರೆದಿದ್ದ… +…ಧರಮನಟ್ಟಿಯ ತೇರು ಸೂರ್ಯಾ-ಚಂದ್ರಾಮ ಇರುವ ತನಕಾ ನಡೆಯುತ್ತದೆಂದು ದೇಸಾಯರು ಸನದು ಬರೆಸಿದ್ದಾರೆ…ಅದು ಯಾವತ್ತಿಗೂ ನಿಲ್ಲುವುದಿಲ್ಲ !… ಯಾವದೇ ನೆವವನ್ನು ಹೇಳದೇ ತಪ್ಪಿಸದೇ ಮುಂದಿನ ತಿಂಗಳು -ಚೈತ್ರ ಶುಕ್ಲ ನವಮೀ ದಿವಸ ನಡೆಯುವ ತೇರಿಗೆ ಬಂದೇ ಬರಬೇಕು.ತಿಳಿಯಿರಿ… +…ಧರಮನಟ್ಟಿಯ ಗುಡ್ಡದ ವಿಚಾರ-ಅದನ್ನ ಈಗಾಗಲೇ ಸರ್ಕಾರ ತನ್ನ ತಾಬೇ ತಗೊಂಡು ಭೂಮಿಯಿಲ್ಲದವರಿಗೆ ಹಂಚ್ಯಾರೆ…ಅದರಾಗಿನ ಹೆಚ್ಚಿನ ಭೂಮಿ ನಮ್ಮೂರ ಗೌಡ ಮತ್ತು ಕುಲಕರ್ಣಿಯಂಥವರ ಮಕ್ಕಳಿಗೆ ಸಿಕ್ಕಿದೆ…ನೀವು ಆ ಭೂಮೀ +ಬಗ್ಗೆ ತೆಲಿ ಕೆಡಿಸಿಗೋ ಬ್ಯಾಡರಿ… +…ಮೃತ್ಯು ಪತ್ರದಾಗ ತನ್ನ ಹೆಣವನ್ನ ನಮ್ಮ ನಾಡಿಗೆ ಕಳಸರೀ ಅಂತ ಬರದಿದ್ದರ ಮತ್ತ -ನಮ್ಮ ಪದ್ಧತೀ ಪ್ರಕಾರ ಮಣ್ಣ ಮಾಡರೀ ಅಂತ ಬರದಿದ್ದರ ಅಂವ ಧರಮನಟ್ಟಿಯ ದೇಸಾಯಿ ಆಗಿರತಿದ್ದಾ !ಮತ್ತ ಅಂವ ದೇಸಾಯಿ ಆಗಿ ಉಳದಿದ್ದರ ದೇಸಗತಿಯಲ್ಲಿರುವ ನಾವು-ಪ್ರಜಾಮಂದಿಗೆ ಅಂವ ಸತ್ತದ್ದು ಆಗ ಸೂತಕ ಆಗತಿತ್ತು…ಬೇಡಿ ಬಯಸಿ ಆ ಬಿಳೀ ಚರ್ಮದ ಹೆಂಗಸನ್ನ ಮದಿವೀ ಮಾಡಿಕೊಂಡು ಅಜ್ಜಾ -ಮಗನ್ನ ಬಿಟ್ಟು ಅಮೇರಿಕಾಕ್ಕ ಹೋದಾ. ಅಲ್ಲಿಗೆ ಹೋಗಿ ಏನು ಸುಖಾ ಅನುಭೋಗಿಸಿದಾ…? ಆ ಬಿಳೀ ಚರ್ಮದ ಹೇಂತಿ ಇವನ್ನ ಒಕ್ಕೊಟ್ಟ್ಟು ಹೋದಳಲಾ ! …ಕಡೀಕ ನಮ್ಮ ಧರಮನಟ್ಟಿಯ ದೇಸಾಯಿ ಪರದೇಶಿ ಹೆಣಾ ಆದದ್ದು ನಮಗ ಬಾಳ ದುಕ್ಕ ಆಗೇತಿ. ಊರಾನ ವಯಸ್ಸಾದ ಹೆಂಣ ಮ್ಯಾಳದವರು ಅತ್ತೂ ಕರದೂ ಮಾಡಿ ತಮ್ಮ ದುಕ್ಕಾ ತೋಡಿಕೊಂಡಿತು…ನಮ್ಮಂಥಾ ಮುದಕರಿಗೆ ಹಂಗ ದನೀ ತಗದು ಅಳಾಕ ಆಗಲಿಲ್ಲಾ! ಒಳಗೊಳಗಣಿ ದುಕ್ಕಾಪಟಗೊಂಡು ಯಾರ ಜೋಡೀ ಏನೂ ಮಾತಾಡದಣಿ ಎರಡ ದಿನಾ ಮನ್ಯಾಗಣಿ ಮನಕೊಂಡಿದ್ದಿವಿ…ಆದರೂ ನಾ ಆಗಳೇ ಹೇಳಿದ ಅಮುಕ ಕಾರಣದ ಸಲುವಾಗಿ ಧರಮನಟ್ಟೀ ನಾಡಿನ ಮಂದಿಗೆ ಇದರ ಸೂತಕ ಇಲ್ಲಾ… ಜಣಿರ ಒಂದು ವ್ಯಾಳ್ಯಾ ಸೂತಕ ಇದ್ದರೂ ಧರಮನಟ್ಟೀ ತೇರು ನಡೀಲಿಕ್ಕೆ ಏನೂ ಹರಕತ್ತು ಇರೂದುಲ್ಲಾ…ನೀವು ತಪ್ಪಸದೇ ಬರ್ರಿ… +ಇತ್ಯಾದಿ… +* +* +* +…ಸ್ವಾಂವಜ್ಜನ ಒತ್ತಾಯ ಮತ್ತ ನನ್ನ ಹೆಂಡತಿಯ ಡಿಮಾಂಡಿಗೆ ಸೋತು ನನ್ನ ಮೊದಲನೇ ಪತ್ರದಲ್ಲಿ ಬರೆದ ಪ್ರಕಾರ ಎಪ್ರಿಲ್ ಹತ್ತನೇ ತಾರೀಖಿನಂದು ಕುಟುಂಬ ಸಮೇತನಾಗಿ ಧರಮನಟ್ಟಿಗೆ ಬಂದು ಇಳಿದೆ…ಸ್ವಾಂವಜ್ಜ ಬಸ್‌ಸ್ಟಾಂಡಿನಲ್ಲಿ ಕಾಯುತ್ತ ನಿಂತಿದ್ದು, ನಮ್ಮ ಲಗೇಜನ್ನು ಹೊರಿಸಿಕೊಂಡು ನಮಗಾಗಿ ಗೊತ್ತುಮಾಡಿದ ಮನೆಗೆ ಕರೆದುಕೊಂಡು ಹೋಗಿ ಇಳಿಸಿದ…ದೊಡ್ಡದಾದ ಮನೆಯದು…ದೊಡ್ಡ ಬಚ್ಚಲು ಮನೆ-ನೀರು ಕಾಸುವ ದೊಡ್ಡದಾದ ತಾಮ್ರದ ಹಂಡೇ…ತಿಕ್ಕಿ ಥಳ ಥಳ ಅಂತ ಹೊಳೆಯುತ್ತಿತ್ತು.ಇತ್ತೀಚೆಗೆ ಕಟ್ಟಿಸಿದಂತಹ ಸಂಡಾಸು…ಇನ್ನೂ ಬಳಕೆಯಾಗದೇ ಸ್ವಚ್ಛವಾಗಿತ್ತು…ಅಡಿಗೆಯ ಮನೆಯಲ್ಲಿ ಉರುವಲಿನ ಒಲೆ ಇದ್ದಿತಾದರೂ ಸ್ವಾಂವಜ್ಜ ಗ್ಯಾಸ್ ಸ್ಟೋವಿನ ವ್ಯವಸ್ಥೆ ಮಾಡಿಸಿ ಇರಿಸಿದ್ದ…ಚಹಾ-ಅಡಿಗೆ ಮಾಡಿಕೊಳ್ಳಲಿಕ್ಕೆ ಪಾತ್ರೆ – ಪರಿಕರಗಳು ಸಿದ್ಧವಾಗಿದ್ದವು…ನನ್ನ ಹೆಂಡತಿಗೆ ಸಂತೋಷವಾಯಿತು…ಸ್ವಾಂವಜ್ಜ ನಮ್ಮನ್ನ ಆ ಬಿಡದಿಯ ಮನಿಯೊಳಗೆ ಇಳಿಸಿ -‘ಸಾಹೇಬರಣಿ…ಭಾಳ ದೂರದ ಪ್ರವಾಸ +ಮಾಡಿಕೊಂಡ ಬಂದದೀರಿ…ದಣವ ಆಗಿರಬೇಕು…ಆರಾಮ ತಗೋರಿ.ನಾಳೆ ಭೆಟ್ಟಿಯಾಗೂಣೂ.ಚಂಜಿಕ ಎಮ್ಮೀ ಹಿಂಡಿಕೊಂಡ ಮ್ಯಾಲ ನಮ್ಮ ಹುಡುಗ ಹಾಲು ತಂದ ಕೊಡತಾನು…ಏನಾರ ಬೇಕಾದರ ಅವನಕೂಟೇ ಹೇಳಿಕಳಿಸರಿ…’ ಅಂತ ಹೇಳಿ ಹೋದ… ನನಗೆ ನಿಜವಾಗಿಯೂ ದಣಿವಾಗಿತ್ತು…ಬಸ್ಸು ಎತ್ತಿ ಎತ್ತಿ ಹಾಕಿತ್ತು…ಹೆಂಡತಿ ತನ್ನ ಸೀರೆ ಬದಲಿಸಿ -ಕೈಕಾಲು ಮುಖ ತೊಳೆದುಕೊಂಡು-ಆ ನಂತರ ಆPಮಾಡಲಿರುವ ಚಹದ ಹಾದಿಯನ್ನು ಕಾಯುತ್ತ ನಾನು ಪಲ್ಲಂಗದ ಮೇಲೆ ಪವಡಿಸಿದೆ… +…ಮರದಿವಸ ಸ್ವಾಂವಜ್ಜನ ಮನಿಯ ಕಡೆ ಹೋಗಿ ಅವನ ಹೆಂಡತಿ -ಪದ್ದವ್ವ ಸಾವಕಾರ್ತಿಯನ್ನು ಮತ್ತು ಅವರ ಮಕ್ಕಳನ್ನ ಮಾತಾಡಿಸಿ ಆಮ್ಯಾಲೆ ಅವನ ಜೋಡೀ ಕಟ್ಟಿಯ ಮ್ಯಾಲೆ ಹಾಸಿದ ಜಮಖಾನಿಯ ಮ್ಯಾಲೆ ಕೂತೆ… ಸ್ವಾಂವಜ್ಜ – +‘ಹೂಂ…ಬೇಶಾತ ನೋಡ್ರೆಪಾ ನೀವು ಬಂದದ್ದು…ನೀವು ಬಾಳ ದಿನಾ ಪತ್ರಾ ಬರೀಲೇ ಇಲ್ಲಾ…ನಾನು – ಅವರು ಬೆಂಗಳೂರಾಗ ಇರಾವರು…ಈ ಹಳ್ಳೀ ತೇರಿಗೆ ಎಲ್ಲಿ ಬಂದಾರು ಅಂತ ಅರಭರೋಸ ಮಾಡಿಕೊಂಡಿದ್ದಿನಿ…ನಿಮ್ಮ ಪತ್ರ ಬಂದಗಳಸೇ ಸಮಾಧಾನ ಆತು…’ ಅಂತ ಹೇಳತಿದ್ದರಣಿ ಅವನ ಮುಖದ ಮ್ಯಾಲ ಸಂತೋಷದ ಭಾವ ಒಡದ ಕಾಣತಿತ್ತು…ಅವನ ವಿನಾಕಾರಣ ಪ್ರೀತಿಗೆ ಕೌತುಕ ಅನಿಸಿತು…ಅಂವ ಒಮ್ಮಿಗೆಲೇ ನೆನಪು ಮಾಡಿಕೊಂಡವನಂಗ ‘ ಹಾಂ…ಅಂದಂಗ ಬಿಡದೀ ಯವಸ್ಥಾ ಎಲ್ಲಾ ಬರಾಬ್ಬರೀ ಆಗೇತಿಲ್ಲರಿ?…ಹಾಲೂ ಮಸರೂ ಕೊಟ್ಟ ಬರಾಕ ಹೇಳಿದ್ದಿನಿ… ತಂದ ಕೊಟ್ಟಾರೊ ಏನ ಮರತಾರೋ…?’ ಅಂತ ಕೇಳಿದ. +‘ಏ.. ಎಲ್ಲಾ ಅಗದೀ ವ್ಯವಸ್ಥಾಸೀರ ಆಗೇದ…ನಮ್ಮ ಸಲುವಾಗಿ ಭಾಳ ತ್ರಾಸ ತಗೊಂಡಂಗಾತು…’ ಅಂದದ್ದಕ್ಕೆ +‘ಏ…ಎಲ್ಲೀ ತರಾಸರೀ…ನೀವು ಬರೂದು ಹೆಚ್ಚೊ -ನಾವು ಇಷ್ಟು ಯವಸ್ಥಾ ಮಾಡೂದು ಹೆಚ್ಚೋ…’ ಅಂದು ಸಮಾಧಾನ ತಾಳಿದ…ನಾನು ಮಾಣೀಕ್ ದೇಸಾಯಿಯ ಸಾವಿನ ಸುದ್ದಿಯನ್ನು ತಗದು ‘ಪಾಪ…ಆತ್ಮಹತ್ಯಾ ಮಾಡಿಕೋಹಂತಾ ಪ್ರಸಂಗ ಏನ ಬಂತೋ ಯಾಂವಬಲ್ಲ ! ಈಗ ಅವನ ಹೇಂತಿ ಅವನ ಜೋಡೀ ಇಲ್ಲ ಅಂತ…’ ಅಂತ ಹೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ…ಸೋಡಚೀಟೀ ತಗೊಂಡಾಳಂತಲ್ಲರಿ… ಅವೇನ ಬಾಳೇ ಮಾಡ್ಯಾವರೀ…ಆಕಿನ್ನ ನೆಂಬಿ ನಮ್ಮ ದೇಸಾಯಿಪರದೇಶಿ ಹೆಣಾ ಆಗಿ ಹ್ವಾದಾ!…’ ಅಂತ ಮಾತಾಡತಿದ್ದಂಗನಣಿ ಸ್ವಾಂವಜ್ಜನ ಮನಿಗೆ ಬೆಳಗಾಂವಿಯಿಂದ ಅವನ ನೆಂಟರು ಬಂದು ಮಾಣೀಕ್ ದೇಸಾಯಿಯ ಮಾತು ತುಂಡಾತು…ಬೆಳಗಾವಿಯ ನೆಂಟರು ನನ್ನ ಗುರತು ಹಿಡದು ಮಾತಾಡಿಸಿ ಒಳಗ ಹೋದರು… +ಸ್ವಾಂವಜ್ಜ ಏನೋ ಲೆಕ್ಕಾ ಹಾಕಲಿಕ್ಕತ್ತಿದ್ದ…ಬೆಳಗಾಂವಿಯ ನೆಂಟರು ಒಳಗ ಹೋದಕೂಡಲೆ ಅಂವ – +‘ಹಾಂ…ಇವತ್ತ ಯಾವ ದಿನಾ ಹೇಳರಿ…’ ಅಂತ ಕೇಳಿದ. +ನನಗ ಗೊಂದಲ ಆತು…ತಾರೀಖು ಕೇಳತಾನೊ ಇಲ್ಲಾ ವಾರಾ ಕೇಳಲಿಕ್ಕತ್ಯಾನೋ ಅಂತ ಅನುಮಾನಿಸಿ +‘…ಇವತ್ತ… ಹನ್ನೊಂದನೇ ತಾರೀಖೂ…?’ ಅಂತ ಹೇಳಿದ್ದಕ್ಕ +ಸ್ವಾಂವಜ್ಜ ನಕ್ಕು -‘ಯಾ…ನಿಂಬದೂ ಪಾಡ ಆತ ಬಿಡ್ರಿ…ನಿಮ್ಮ ತಾರೀಖು ಕಟಿಗೊಂಡು ನಮ್ಮೂ ತೇರ ಎಳೀತಾವ ಏನರೀ…?…ಇಂದ ತಿಥಿ ಯಾವದಂತ…?’ +‘ತಿಥೀ…? ತಿಥಿ ನನಗ ಗೊತ್ತಿಲ್ಲರೆಪಾಣಿ…’ . +ಅಷ್ಟರಾಗಣಿ ಸ್ವಾಂವಜ್ಜನ ಮಮ್ಮಗಾ ಹೊರಗ ಬಂತು.ಸ್ವಾಂವಜ್ಜ ಅದನ್ನ +‘ಏ ಪಾರೀಸ…ಇವತ್ತ ಯಾವ ತಿಥೀಲೇ…’ ಅಂತ ಕೇಳಿದ್ದಕ್ಕೆ ಅದು ‘ಇವತ್ತ ಷಷ್ಟಿ…’ ಅಂತ ಹೇಳಿ ಆಡಲಿಕ್ಕೆ ಓಡಿಹೋಯಿತು… +‘ಹಾಂ…ಇಂದ ಸಂಜಿಕ ಹೊತ್ತ ಮುಣಗೂ ಹೊತ್ತಿಗೆಂದರ ದ್ಯಾವ ಬರತಾನು…’ ಅಂತ ದ್ಯಾವಪ್ಪ ತನ್ನೊಳಗ ತಾನಣಿ ಅನಕೊಳ್ಳೂ ಹಂಗ ಅಂದ…ನನಗ ಒಮ್ಮಿಗೆಲೇ ದ್ಯಾವಪ್ಪನ ನೆನಪು ಬಂತು…ಅಂವ ಬೆಂಗಳೂರಿಗೆ ಬಂದು ಹೋಗಿ ಹತ್ತು- ಹನ್ನೆರಡು ವರ್ಷ ಆಗಿದ್ದಿರಬೇಕು…ಅಂವ ಬೆಂಗಳೂರಿನಿಂದ ಹೋಗೂಮುಂದ ಭಾಳಂದರ ಭಾಳ ಡಿಪ್ರೆಸ್ ಆಗಿದ್ದ…ನನಗ ಅದು ಅಗದೀ ಕಣ್ಣಿಗೆ ಕಟ್ಟಿದಹಂಗ ಇನ್ನೂ ನೆನಪ ಅದ…ಬೆಂಗಳೂರಿಂದ ಹೋದಮ್ಯಾಲೆ ಮುಂದ ಅವನ ಸುದ್ದಿಯೇ ಗೊತ್ತಾಗಲಿಲ್ಲ…ಈಗ ಹೆಂಗ ಇದ್ದಾನೋ…! ಪಾಪ ಅವನ ನವನಿರ್ಮಾಣದ ಕನಸು ಎಲ್ಲಾ ನೀರಿನ ಗುಳ್ಳಿ ಆದಂಗ ಆಗಿ ಹೋತು…ಅಂವ ಭಾಳ ಆಶಾ ಇಟಗೊಂಡ ಜನ್ತಾ ಪಕ್ಷ ಛಿದ್ರ ಛಿದ್ರ ಆಗಿ ಹೋತು.ಅವನ ಹಿರೋ -ಜಾರ್ಜ್ ಒಬ್ಬ ದೊಡ್ಡ ಬಾರ್ಗೇನರ್ ಅಂತ ಆಗಿ ಹೋದ…ಹಿಂಗ ನನ್ನೊಳಗೇ ನಾನು ಧೇನಿಸತಿರಬೇಕಾದರೆ ಸ್ವಾಂವಜ್ಜ ಸ್ವಲ್ಪ ಹೊತ್ತಿಗೆ ಮೊದಲು ತನಗ ತಾನಣಿ ಹೇಳಿಕೊಂಡದ್ದನ್ನ ಈಗ ನನಗ ಹೇಳಿದ : +‘ಇಂದ ಸಂಜಿಕ ಹೊತ್ತು ಮುಣಗೂ ಹೊತ್ತಿಗಂದರ ಆ ದ್ಯಾವ ಬರತಾನರಿ…’. ಸ್ವಾಂವಜ್ಜನ ಮಾತಿನಿಂದ ಜಾಗೃತಕ್ಕೆ ಬಂದ ನಾನು +‘ಹಾಂ…? ಹಾಂ ..ಹೌದು…ಇಂದ ಸಪ್ತಮಿ…ಅಲ್ಲ ಷಷ್ಟೀ…’ ಅಂತ ಗಡಬಡಿಸಿ ಮಾತಾಡಿದೆ. +‘ಯಾಕರೀ ಸಾಹೇಬರಣಿ…ಏನೋ ವಿಚಾರದಾಗ ಬಿದ್ದೀರಲಾ…?’ +‘ಏಣಿ…ಹಂತಾದ್ದು ಏನಿಲ್ಲ …ದ್ಯಾವಪ್ಪನ ಹೆಸರ ಕೇಳತಿದ್ದಂಗಣಿ ಅವನ ನೆನಪ ಬಂತು… ಅಂವ ನನಗ ಬೆಂಗಳೂರಿನ್ಯಾಗ ಭೆಟ್ಟಿ ಆಗಿದ್ದ…’ ಅಂದೆ. +‘ಹಾಂ..!? ಏನಂದರೀ…ಆ ದ್ಯಾವ ಬೆಂಗಳೂರಿಗೆ ಬಂದಿದ್ದನರೇ…? ಹಂಗರಣಿ ನಿಮ್ಮ ಹಂತೇಕ ರೊಕ್ಕಾ ಕೇಳಾಕ ಬಂದಿರಬೇಕು…ಕೊಟ್ಟಿದ್ದಿರ ಬೇಕಲ್ಲರೀ ನೀವು…?ಎಷ್ಟ ಕೊಟ್ಟಿರಿ?ಅವಕ್ಕ ಇನ್ನ ಎಳ್ಳೂ ನೀರೂ ಬಿಟ್ಟಂಗಣಿ…! ಅವದರ ಆಶೇ ಬಿಟ್ಟಬಿಡರಿ…’ +‘ಛೇ ಛೇ…! ಪಾಪ ಮೂರು ತಿಂಗಳು ಜೇಲಿನ್ಯಾಗ ಇದ್ದು ಅದಣಿ ಆಗ ಬಿಡುಗಡೆ ಆಗಿ ನನ್ನ ಹತ್ತರ ಬಂದಿದ್ದ…ಅವನ ಹತ್ತರ ರೊಕ್ಕ ಇದ್ದೂವೋ ಇಲ್ಲೋ ಯಾಂವಬಲ್ಲ ! ಈಗ ನೀವು ಅಂದಮ್ಯಾಲೇ ನನಗ ನನ್ನ ತಪ್ಪು ಗೊತ್ತ ಆದಂಗ ಆತು… ನಾನು ಆಗ ಅವನ್ನ -ರೊಕ್ಕ ಗಿಕ್ಕ ಬೇಕ ಏನೂ ಅಂತ ಕೇಳ ಬೇಕಾಗಿತ್ತು… ಅಂವ ಬಾಯಿ ಬಿಟ್ಟು ಏನೂ ಕೇಳಲಿಲ್ಲ…ನಾನೂ ಅಂವನ್ನ ರೊಕ್ಕ ಬೇಕೇನಪಾ ಅಂತ ಒಂದು ಮಾತು ಕೇಳದಣಿ ಹಂಗಣಿ ಕಳಿಸಿಕೊಟ್ಟಬಿಟ್ಟೆ….ಪಾಪ !’ +‘ಹಾಂ ಹಾಂಣಿ…ನೀವು -ಹಳೇ ಮಾತು-ಇಪ್ಪತ್ತ ಪಾಯಿಂಟಿನ ಕಾಲದ ಮಾತ ಹೇಳಾಕತ್ತದೀರಿ…ಏ…ಹತ್ತ -ಹನ್ನೆರಡ ವರ್ಷದ ಹಿಂದಿನ ಮಾತ ಹೇಳಾಕತ್ತದೀರಿ ಬಿಡ್ರಿ! ಅದು ಮುಗೀತು ಬಿಡ್ರಿ…ಅಂದಂಗ ಅಂವ ತುರಂಗಿಗೆ ಹೋಗೂಕಿಂತಾ ಮದಲ ಎರಡ ವರ್ಷ ನೋಡ್ರೀ ಅಗದೀ ನಿಷ್ಠಾದಿಂದ ತೇರಿನ ಸೇವಾ ಮಾಡಿದನರೆಪಾ!… ಸುದ್ದೀಕರಣದ ಆಚಾರಾ-ಯಾತ್ರಾಣಿ…ಎಲ್ಲಾನೂ ಅಗದೀ ಪದ್ಧತೀಶೀರ ಅಂದರ ಪದ್ಧತೀಶೀರ ಮಾಡಿದ…ಆದರ ಆಮ್ಯಾಲ ಅದೆಂತಾದ್ದೊ ನಿರ್ವಾಣೋ- ನಿರಮಾಣೋ…ಏನೋ ಹೆಂತಾದ್ದೋ ಒಂದ ಸಂಘಾ ಸೇರಿದನಂತ…ಆ ಸಂಘಕ್ಕ ಸೇರಿ ಬೆಳಗಾಂವೀ ಕಲೆಕ್ಟರಗ ಗುಂಡ ಹಾಕಾಕ ಹೋಗಿದ್ದನಂತ… ಕಲೆಕ್ಟರ ಅಂದರ ಅಸನರೀ ಏನರೀ…ಇಡೀ ಬೆಳಗಾಂವ ಜಿಲ್ಲಾದ ದೇಸಾಯಿ ಇದ್ದಂಗ ಅಂವ ! ನಮ್ಮ ಧರಮನಟ್ಟೀ ದೇಸಗತಿಹಂತಾವು ಯೋಳೆಂಟ ದೇಸಗತಿಗೋಳು ಕೂಡಿ ಆಧಂತಾ ದೇಸಗತಿ ಇದ್ದಂಗ ಅದಾ!ಹಂತಾ ದೊಡ್ಡ ದೇಸಗತಿಯ ದೇಸಾಯಿಗೆ ಗುಂಡು ಹಾಕಾಕ ಹ್ವಾದರಣಿ ಬಿಡತಾರೇನರೀ…! ಪೋಲೀಸರ ಕೈಯಾಗ ಸಿಕ್ಕು ತುರಂಗಿಗೆ ಹ್ವಾದಾ…’ +‘ಏ…ಡೀಸೀಗೆ ಗುಂಡು ಹಾಕೂದಕ್ಕಲ್ಲ…ಸರ್ಕಾರಕ್ಕ ಶಾಕ್ ಕೊಡಲಿಕ್ಕೆ ಡೀಸಿಯ ಖಾಲೀ ಕಾರು ಸೊಙಟ ಮಾಡಬೇಕಂತ ವಿಚಾರ ಮಾಡಿದ್ದರಂತ…ಆಗಣಿ ಪೋಲೀಸರು ಹಿಡದರು…’ +‘ಏನೋರೆಪಾ…ಅಂತೂ ನಾನಾ ನಮೂನೀ ಸುದ್ದಿ ಅದಾವು…ಯದಕ್ಕರಣಿ ಹಿಡೀವಲ್ಲರ್‍ಯಾಕ…ಪರಂತೂ ತುರಂಗಿಗೆ ಹೋಗಿ ಬಂದಮ್ಯಾಗ ಅವನ ಕುದರಿ ಕತ್ತಿಯಾತು… ಈಗ ಆ ಮೂಲ ದ್ಯಾವಪ್ಪನ ವಂಶದ ಇಂವ ಅವನ ಹೆಸರಣಿ ಇಟಗೊಂಡು ಒಂದ ಹುಳಾ ಆಗಿ ಕುಂತಾನು…!’ ಅಂತ ಸ್ವಾಂವಜ್ಜ ಮುಖಾ ಎಲ್ಲಾ ಕಂಹೀ ಮಾಡಿಕೊಂಡು ಹೇಳಿದ. +‘ಏ…ಮನಸ ಇಷ್ಟ್ಯಾಕ ಕಂಹೀ ಮಾಡಿಕೊಂಡೀರೀ…ಅಂವಂದು ಇನೂ ಸಣ್ಣ ವಯಸ್ಸು…ನೂರಕಡೆ ಓಡುವ ಚಂಚಲ ಮನಸ್ಸು …ಹಂತಾದರಾಗೂ ಮದಲಿನ ಎರಡ ವರ್ಷ ಅಗದೀ ನಿಷ್ಠಾದಿಂದ ತೇರಿನ ಸೇವಾ ಮಾಡ್ಯಾನ ಅಂತ ಹೇಳತೀರಿ… ಅಂದರ ತಂದಿ ಹೋದರೂ ತಾಯಿಯ ಮಾತು ಕೇಳಿಕೊಂಡು ಹಿಂದಿನ ಪದ್ಧತೀ ಎಲ್ಲಾ ತಪ್ಪಸಧಂಗ ನಡಿಸ್ಯಾನ ಅಂದಂಗಾತು…ಹೆಂಗೂ ಎಲ್ಲಾ ತಿಳದ ಅವನ ಅವ್ವ ಇದ್ದಾಳ… +ಆಕಿ ಬುದ್ಧೀ ಹೇಳಿ ಎಲ್ಲಾ ಬರಾಬ್ಬರೀ ಮಾಡತಾಳ ತಗೋರಿ…’ ಅಂತ ನಾನು ಗಂಭೀರವಾಗಿ ಸಾಂತ್ವನಗೊಳಿಸುವ ಮಾತುಗಳನ್ನ ಹೇಳತಿದ್ದರೆ ಸ್ವಾಂವಜ್ಜ ಹಾಣಿ..ಹಾಣಿಣಿ ಅಂತ ಜೋರಾಗಿ ನಕ್ಕ !…ನಾನು ಅವನ ನಗಿಯಿಂದ ವಿಚಲಿತನಾದದ್ದು ಕಂಡು ಸ್ವಾಂವಜ್ಜ ತನ್ನ ನಗಿಯನ್ನ ನಿಯಂತ್ರಿಸಿಕೊಂಡು – +‘ಸಾಹೇಬರಣಿ…ನಿಮಗ ಅಂವಂದು ಗೊಂತಿಲ್ಲ…!ಅವನ ಅವ್ವ ಹೆಂತಾಕ್ಯೋ ಏನೋ ನನಗ ಗೊಂತಿಲ್ಲ…ಆದರ ಇಂವ ಸೈತ ಹಂತಾ ಸುದ್ದ ಮನಶಾ ಅಲ್ಲ ಅನ್ನೂದು ನಮಗ ಖಾತ್ರೀ ಐತಿ… ಇವನ ಜೋಡೀ ಇವನ ಅವ್ವಗ ಹೊಂದಾಣಿಕಿ ಆಗಾಣಿಲ್ಲಂದರ ಆಕಿ ಚಲೂ ಹೆಣಮಗಳು ಇದ್ದಿರಬೇಕಂತಣಿ ನಮ್ಮ ಇಚಾರ !…ಈ ದ್ಯಾವ್ಯಾ ತನ್ನ ಅವ್ವನ ಮ್ಯಾಲಣಿ ಸಂಶೇ ತಾಳಿ ಆಕಿನ್ನ ಖೂನೀ ಮಾಡಲಿಕ್ಕೆ ಹೋಗಿದ್ದನಂತ !ಆಕಿ ತೆಪ್ಪಿಸಿಗೊಂಡು ಕಳ್ಳೀಗುದ್ದೀ ಗೌಡನ ಮನಿಗೆ ಓಡಿಹೋಗಿ-ನನ್ನ ಉಳಸರೀ ಅಂತ ಗೌಡನ ಪಾದಾ ಹೊಕ್ಕಳಂತ…ಈಗ ಗೌಡ ಆಕಿನ್ನ ತಮ್ಮ ತ್ವಾಟದ ಮನ್ಯಾಗ ಇಟ್ಟದಾನು….ಆಕಿ ಗೌಡನ ರಕ್ಷಣಾದೊಳಗ ಅದಾಳು…ಇದು ಒಂದಣಿ ಗೂಗೀ ಹಂಗ ಐತಿ.ಹಿಂತಾದ್ದು ಇದು…! ಇದೇನ ತನ್ನ ತಾಯೀ ಮಾತ ಕೇಳತೈತಿರೀ…!’ ಅಂತ ವಿವರವಾಗಿ ಹೇಳಿದ. +‘ಹಾಂ…! ’ ಅನ್ನುವ ಒಂದು ಉದ್ಗಾರವನ್ನು ಹೊಂಡಿಸಿದೆನಾದರೂ ಅಂವ ಬೆಂಗಳೂರಿನಲ್ಲಿ ಭೆಟ್ಟಿಯಾದಾಗ ತನ್ನ ಅವ್ವನ ಬಗ್ಗೆ ತೋರಿಸಿದ್ದ ತಿರಸ್ಕಾರ – ನಿರುತ್ಸಾಹಗಳು ಮತ್ತು ಗೌಡನ ಬಗ್ಗೆ ತೋರಿಸಿದ್ದ ಆಕ್ರೋಶ ನೆನಪಾಗಿ ಏನು ಆಗಿರಬಹುದು ಅನ್ನುವುದು ಹೊಳೆಯಿತು… ಆದರೂ ಈ ಮಟ್ಟಕ್ಕೆ ಹೋಗುತ್ತದೆಂದು ಅನಿಸಿರಲಿಲ್ಲ…ಸ್ವಾಂವಜ್ಜನಿಗೆ-‘ಹೋಗಲಿ ಬಿಡ್ರಿ… ಅವನ ಸಂಕಟಗೋಳು ಏನ ಅವನೋ ಯಾರಿಗೆ ಗೊತ್ತು…ಇಷ್ಟೆಲ್ಲಾ ಸಂಕಟಗಳೊಳಗನೂ ತೇರಿನ ಸೇವಾ ನಿಂದರಸದಣಿ ನಡಿಸಿಕೊಂಡು ಬರಲಿಕತ್ತಾನಲಾ…’ ಅಂತ ಸಮಾಧಾನ ಹೇಳಿದೆ. +‘ಅವನ ಸಂಕಟಾ-ಗಿಂಕಟಾ ಅನ್ನೂವು ಏನದಾವೋ ನಮಗ ಗೊಂತ ಇಲ್ಲರೆಪಾ…! ಆದರಣಿ ರಗತ ತಿಲಕದ ಸೇವಾ ಒಂದನ್ನ ನಿಂದರಸದಂಗ ದಣಿರ ವರಸಾ ಬರತಾನನ್ನೂದು ಮಾತ್ರ ಗೊಂತ ಐತಿ…ಇದಕ್ಕೂ ತಪ್ಪಸದಣಿ ಯಾಕ ಬರತಿದ್ದಾನೂ ಅನ್ನೂದನ್ನ ಯಾಂವ ಬಲ್ಲ…? ದೇವಸ್ಥಾನ ಕಮೀಟಿಯವರು ರೊಕ್ಕಾ ಕೊಡತಾರಂತ ಬರತಿದ್ದಾನು.ಇಲ್ಲಾಣಿ…ಹಾಂ…ಅದಕ್ಕ ಬರತಾನೋ ಇಲ್ಲಾ….ಊರಾನ ಹುಡಗೋರು ಅದೇನೇನೋ ಮಾತಾಡತಾರ್ರೆಪಾ…ಇಲ್ಲಿ ಯಾವದೋ ಒಂದ ಉಣ್ಣೀ ಕಂಕಣದ ಹುಡಿಗಿನ್ನ ಇಟಗೊಂಡದಾನೂ…ಹಂಗಣಿ ಹಿಂಗಣಿ ಅಂತ!…ಅದಕ್ಕಣಿ ತೇರಿನ ಸೇವಾಕ್ಕ ತಪ್ಪಸದಣಿಬಂದರೂ ಬರತಿದ್ದಾನು !’ +ನನಗ ದ್ಯಾವಪ್ಪನ ಈ ವಿಷಯದ ಬಗ್ಗೆ ಏನೂ ಗೊತ್ತಿರಲಿಲ್ಲ.ಆದರೂ ಇಂಥಾ ಸುದ್ದಿಗಳು ಹೆಂಗೆ ಹುಟ್ಟತಾವೆ ಅನ್ನುವ ಕಲ್ಪನಾ ಇದ್ದದ್ದರಿಂದ ನಾನು ಸ್ವಾಂವಜ್ಜಗ ಹಿಂಗ ಕೇಳಿದೆ – +‘…ದ್ಯಾವಪ್ಪ ತೇರಿನ ಸೇವಾದ ಮುಂದ ಅಷ್ಟಣಿ ಧರಮನಟ್ಟಿಗೆ ಬರತಾನೋ ಇಲ್ಲಾ ಹಗಲೆಲ್ಲಾ ಇಲ್ಲಿಗೆ ಬರತಿರತಾನೋ…? ’ +ನನ್ನ ಮಾತು ಸ್ವಾಂವಜ್ಜನ್ನ ಒಮ್ಮಿಗೆಲೇ ಮೌನಕ್ಕ ದೂಡಿತು…ಅಂವ ಒಂದು ಕ್ಷಣ ಸುಮ್ಮನಣಿ ಕೂತು -ತನ್ನೊಳಗ ತಾನಣಿ ವಿಚಾರ ಮಾಡಿಕೊಂಡು ಹೇಳಿದ… +‘ಹಾಂ…ಹೌದು !…ನನಗ ಗೊಂತ ಇದ್ದ ಮಟ್ಟಿಗೆ ಅಂವ ವರ್ಷಕ್ಕ ಒಮ್ಮೇ ಧರಮನಟ್ಟಿಗೆ ಬರತಾನ್ರೆಪಾ…ಅಂದಂಗ ಹೌದು…ನೀವು ಕೇಳೂದೂ ವಾಜಮಿ ಐತಿ.ಆ ಹುಡಿಗಿನ್ನ ಇಟಗೊಂಡಿದ್ದರ ಹಗಲೆಲ್ಲಾ ಧರಮನಟ್ಟಿಗೆ ಬರತಿದ್ದಿರಬೇಕಲಾ?ಯಾಂವ ಬಲ್ಲ…ಯಾರಿಗೆ ಗೊಂತ ಆಗಧಂಗ ಇಲ್ಲಿಗೆ ಬಂದು ಹೋಗತಾನೋ!?ಹಾಂ…ಆತು! ಇದ ಹೋಗಲಿ ಬಿಡ್ರಿ…ಇನ್ನ ಇವರ ಅಪ್ಪಾ -ಅಜ್ಜಾ -ಮುತ್ಯಾಗೋಳು ಯಾವ ಪರಮಾಣದೊಳಗ ಸುದ್ದ ಆಗಿ -ಅಗದೀ ನಿಷ್ಠಾದಿಂದ ಯಾತ್ರಾ ಮಾಡಿಕೊಂಡು ತೇರಿನ ಸೇವಾಕ್ಕ ಬರತಿದ್ದರನ್ನೂದು ನಿಮಗ ಗೊಂತಣಿ ಐತಿ.ಆದರ ಈ ದ್ಯಾವ್ಯಾ ಹಂತಾದ್ದ ಯಾವದನ್ನೂ ನಡಸೂದುಲ್ಲ…ರೊಕ್ಕಾ ಮಾತ್ರ ತಗೋತಾನು!…ಇಂವನ ಯಾತ್ರಾ ಅಂದರ ಹೆಂಗ ಗೊಂತ ಏನರೀ? ಅದ ಹಿಂತಾದ್ದ ನೋಡರಿ…! ಹೋಳೀಹುಣ್ಣಿವೀ ಮದಲನೇ ದಿನಾನಣಿ ಊರು ಬಿಡತಾನು…ಅಂದ ಊರ ಬಿಟ್ಟಾಂವ ಮುಂದ ರಾಮದುರ್ಗದಾಗ ಎಂಟ ದಿನಾ ಕುಡದು ಲಾಜಿಂಗಿನ್ಯಾಗ ಬೀಳತಾನು…ಆಮ್ಯಾಲ ಮುಂದ ಗೋಕಾಂವಿಯ ಲಾಜಿಂಗಿನ್ಯಾಗ ಎಂಟು ದಿನಾ ಕುಡದ ಬೀಳೂದು!…’ +ನನಗ ಇದು ಅಗದೀ ವಿಚಿತ್ರ ಅನಿಸಿತು…ಅಂದ ಅಲ್ಲಿ ಪ್ರೆಸ್ ಕ್ಲಬ್ಬಿನ್ಯಾಗ ದ್ಯಾವಪ್ಪಗ ಯಾವ ಡ್ರಿಕ್ಸ್ ತಗೋತೀ ಅಂತ ಕೇಳದ್ದಕ್ಕಣಿ ಅಂವ ಗಾಬರ್‍ಯಾಗಿ, ಉದ್ವೇಗಗೊಂಡಿದ್ದ…ಹಂತಾಂವ ಈಗ ಕುಡದ ಬೀಳತಾನ ಅನ್ನೂದು ನನಗ ನಂಬಿಕಿಯನ್ನ ಹುಟ್ಟಸಲಿಲ್ಲ…ಆದರ ರಭಸದಿಂದ ಮಾತಾಡತಿದ್ದ ಸ್ವಾಂವಜ್ಜನ್ನ ತಡದು ನಿಂದರಸುವದು ನನಗ ಆಗಲಿಲ್ಲ … +‘…ಅಂವ ಗೂಗೀಕೊಳ್ಳಾ-ತವಗಾ-ಸೊಗಲಾ ಎಲ್ಲಿಗೂ ಹೋಗೂದುಲ್ಲರಿ… ಹಾಂ ಇನ್ನೇನಾ…ಉದಗಟ್ಟಿಗೆ ಒಂದ ಕಡೆ ಮಾತ್ರ ಹೋಗತಾನು…ಉದ್ದವ್ವನ ದರಶನಕ್ಕ ಹೋಕ್ಕಾನಂತ ತಿಳಕೊಂಡೀರಿ ಮತ್ತ !…ಅಲ್ಲಿ ಒಂದ ಡೊಂಬರ ಹುಡಿಗಿನ್ನ ಇಟಗೊಂಡದಾನಂತ!…ಆ ಹೆಂಗಸಿಗೆ ಮದಿವಿ ಆಗಿ ಗಂಡ ತೀರಿಕೊಂಡದಾನರೀ… ಎಡ್ಡ ಮಕ್ಕಳದಾವಂತ!…ದೇವರ ಸೇವಾ ಮಾಡೂ ಮನಶಾನ ರೀತಿಯೇನರೀ ಇದಾ…?’ +‘…ದೇವಸ್ಥಾನದವರು ರೊಕ್ಕಾ ಯಾಕ ಕೊಡತಾರ…? ಮದಲೇನು ಕೊಡತಿದ್ದಿಲ್ಲ ಅಲ್ಲಾ?’ +‘ಈ ರೊಕ್ಕಾ ಕೊಡೂ ಪದ್ಧತೀ ದೇವಸ್ಥಾನ ಕಮೀಟಿಯ ಹುಡಗೋರು +ಮಾಡಿದೂ…ಮದಲೇನ ಈ ಯವಸ್ಥಾ ಇರಲಿಲ್ಲ…ದೇಸಾಯರು ಹೊಲಾನಣಿ ಕೊಟ್ಟಿದ್ದರು…ಈಗ ಹೊಲಾ ಕಳ್ಳೀಗುದ್ದೀ ಗೌಡನ ತಾಬೇಕ್ಕ ಹೋಗೇತಿ…ಹೊಲಾ ಹೋದಗಳಸೇ ಒಂದ ದಿನಾ ಈ ದ್ಯಾವ್ಯಾ ಧರಮನಟ್ಟಿಗೆ ಬಂದು -ನಿಮ್ಮ ದೇಸಾಯರು ನಮ್ಮ ಮನಿತನಕ್ಕ ಬರಕೊಟ್ಟ ಹೊಲಾ ಇತ್ತಲಾ-ಅದನ್ನ ಸರ್ಕಾರದವರು ನಮ್ಮ ಕಡಿಂದ ಕಿತಗೊಂಡು ನಮ್ಮೂರ ಗೌಡಗ ಕೊಟ್ಟದಾರು…ನನಗೇನ ಇನ್ನ ದೇವಸ್ಥಾನದ ಹಂಗ ಇಲ್ಲ…ಮುಂದಿನ ವರ್ಷದಿಂದ ನಾ ತೇರಿನ ಸೇವಾಕ್ಕ ಬರೂದುಲ್ಲರೀ ಅಂದಾ.ಈ ದೇವಸ್ಥಾನ ಕಮೀಟಿಯ ಹುಡಗೋರು-ಏ ಹಂಗ ಮಾಡಬ್ಯಾಡಾ…ತೇರಿನ ಸೋಭಾನಣಿ ಹೋಗಿ ಅಮಂಗಳ ಆದಂಗ ಆಗತೈತೀ – ಅಂತ ದೈನಾಸಪಟ್ಟವು…ಅದಕ್ಕ ದ್ಯಾವ್ಯಾ – ನಾ ಬಂದು ಸೇವಾ ಮಾಡಬೇಕಂದರ-ಹದನ ದಿನದ ಯಾತ್ರಾದ ಪೂರಾ ಖರ್ಚೂ-ಮತ್ತ ರಗತ ತಿಲಕದ ಸೇವಾ ಮಾಡಿದ್ದಕ್ಕ ಒಂದ ಸಾವರ ರುಪಾಯಿ ಸಂಭಾವನೀ ಕೊಡಬೇಕು…ಅಷ್ಟ ಕೊಟ್ಟರ ನಾ ಬಂದು ಸೇವಾ ಮಾಡತನು…ಬ್ಯಾಡಪಾ ಅಂದರ ಬಿಡತನು-ಅಂತ ಧಾರಣೀ ಮಾತಾಡಿದ…ನಾನು-ಅಂವ ಬರದಿರಕ ಬಿಡವಲ್ಲನ್ಯಾಕ…ರೊಕ್ಕಾ ಗಿಕ್ಕಾ ಏನೂ ಕೊಡೂದು ಬ್ಯಾಡರ್‍ಯೋ -ಅಂತ ಹೇಳಿದ್ದಕ್ಕ ಈ ದೇವಸ್ಥಾನದ ಕಮೀಟಿಯ ಹುಡಗೋರು ನನಗ ಏನ ಅನಬೇಕರೀ! ಹಾಂ… ನೀಯೇನೂ !…ನೀ ಜೈನರಾಂವ ಅದೀ… ಅದಕ್ಕಣಿ ಹೆಂಗರಣಿ ಮಾಡಿ ತೇರಿನ ಸೋಭಾ ಕಳೀಬೇಕಂತ ಮಾಡೀ…ಅದಕ್ಕಣಿ ರಗತ ತಿಲಕದ ಸೇವಾ ನಿಂದರಸೂ ಹಾದೀ ಹೇಳಾಕತ್ತದೀ!ನಾಕ ದುಡ್ಡ ಹೋದರ ಹೋಗಲಿ…ರಗತ ತಿಲಕದ ಸೇವಾ ಮಾತ್ರ ನಡ್ಯಾಕಣಿ ಬೇಕು-ಅಂತ ನನ್ನ ಮ್ಯಾಗಣಿ ಹರಲೀ ಹೊರಿಸಿ ಮಾತಾಡಿದವು !ನನಗ ಬಾಳ ದುಕ್ಕ ಆತರೀ…ಹಾಳಾಗಿ ಹೋಗಲಿ ಅಂತ ಸುಮ್ಮನಾಗಿ ಬಿಟ್ಟಿನಿ…’. +‘ಯಜಮಾನರು ನೀವು…ಸಣ್ಣ ಹುಡಗೋರ ಮಾತಗೋಳನ ಮನಸಿಗೆ ಹಚಿಗೊಂಡರ ಹೆಂಗ…?’ +‘ಸುಟ್ಟಿತು ನನ್ನ ಯಜಮಾನಿಕಿ…ಸಣ್ಣ ಹುಡಗೋರೇನರೀ ಅವೂ?…ಹೆಂತಾ ರಾಜಕೀಯ ಮಾತಾಡತಾವೂ ಏನ ಕಥೀ…!ಏ…ಈಗಿನ ಹುಡಗೋರು ಎಷ್ಟ ಲಗೂಟ ರಾಜಕೀಯಮಡಾಕ ಸುರೂ ಮಾಡತಾವಂತೀರೀ…ಅವು ಅಡ್ಡಾ -ತಿಡ್ಡಾ ಇಚಾರ ಮಾಡಾಕಣಿ ತಮ್ಮ ತೆಲೀ ಉಪೇಗಿಸತಾವ ನೋಡರಿ…!ಅಲ್ಲರೀ ನನಗ ಊರನ್ನೂ ಅಭಿಮಾನ ಇಲ್ಲ ಏನರೀ?’ ಅಂತ ಹೇಳಿ ಉಸ್…ಅಂತ ಉಸರುಗರೆದ. +‘ಏ…ಅದೇನ ಬಿಡ್ರಿ…ನೀವು ಇರೂಹಂಗ ಇದ್ದ ಬಿಡ್ರಿ…ಅವಕ್ಕಣಿ ಆಮ್ಯಾಲ ಗೊತ್ತ ಆಗತದ…’ +‘ಹೂಂ…ತಪ್ಪೋ ನೆಪ್ಪೋ…ನಾ ಅಂತೂ ಇರೂಹಂಗ ಇದ್ದಬಿಡತನರಿ… ಊರಾಗಿನ ಛಂದದ ಕೆಲಸಕ್ಕ ನನ್ನ ಕೈಲೆ ಆಗೂವಷ್ಟು ನಾ ಮಾಡತನು….ಅಷ್ಟೂ ಮೀರಿ- ನಿಂದು ಆ ಜಾತೀ – ಈ ಜಾತೀ ಅಂತಣಿ…ಊರಗಾರಿಕಿಯ ದಗದಕ್ಕ ನೀ ಬರೂದು ಬ್ಯಾಡಪಾ ಅಂದರ ಅದಕ್ಕೂ ತಯಾರನಣಿ… ಹಳ್ಳೀ ಬಾಳೇ…ಕೂಡಿ ಬದಕೂದಕಿಂತಾ ನಮ ನಮ್ಮ ಜಾತೆನಣಿ ಹೆಚ್ಚಾದೂವಂದರ ಏನ ಮಾಡೂದರೀ…? ತೆಪ್ಪಗಣಿ ಬಜಾ ನಾಯೀಗತೆ ಮನ್ಯಾಗ ಕುಂಡರತನು…ನನ್ನೂ ಅರೆ ಇನ್ನ ಎಷ್ಟ ದಿನಾ ಉಳದಿದ್ದಾವರೀ…?’ ಅಂತ ನುಡದ ಸ್ವಾಂವಜ್ಜ ತನ್ನ ಮಾತಿನ ಕೊನೆಗೆ ಇನೊಂದು ಸುಸ್ಕಾರ ಹೊಂಡಿಸಿದ.. +ಸ್ವಾಂವಜ್ಜ ಇದನ್ನ ಭಾಳ ಮನಸಿಗೆ ಹಚಿಗೊಂಡಾನ ಅನಿಸಿತು…ಅವನ ಭಾವನಾನೂ ಖರೇನಣಿ ಅದ…ಸ್ವಾಂವಜ್ಜಗ ಯಾವಾಗಲೂ ಊರಿನ ಅಭಿಮಾನ ಅನ್ನುವುದು ಮುಖ್ಯ ಅಂತ ನನಗ ಸ್ಪಷ್ಟ ಗೊತ್ತಿತ್ತು…ಆದರ ನಾನು ಅದರ ಬಗ್ಗೆಯೇ ಮಾತಾಡಿ ಅದನ್ನಣಿ ಮುಂದುವರಿಸುವುದು ಬ್ಯಾಡ ಅನಿಸಿತು…ಅವನ ಮಾತಿಗೆ ಏನೂ ಉತ್ತರಾ ಹೇಳದೇ ಸುಮ್ಮನೇ ಉಳಿದೆ…ಆದರೆ ಸ್ವಾಂವಜ್ಜ ಸುಮ್ಮನುಳಿಯದೇ ಮತ್ತೆ ಅದನ್ನೇ ಮಾತಾಡಿದ – +‘ಅಲ್ಲ …ಈ ಕುಡಕಾ – ರಂಡಿಬಾಜೀ ಮಾಡೂ ದ್ಯಾವ್ಯಾನ ರಗತ ಅಂದರ ಅಗದೀ ಪಾವನ ಇದ್ದಿರಬೇಕು…ಹಿಂತಾ ಪಾವನ ಇದ್ದ ರಗತದ ತಿಲಕಾ ಇಡದಿರಕ ನಮ್ಮ ಊರಿನ ವಿಠ್ಠಲ ದೇವರ ತೇರು ಒಟ್ಟಣಿ ಮುಂದಕ ಸರಿಯೂದೇ ಇಲ್ಲ ಅಂತಿರಬೇಕು ನೋಡರಿ…!’ ಅಂತ ಅಂವ ಊರ ಹುಡುಗೋರ ಮ್ಯಾಲಿನ ಸಿಟ್ಟನ್ನ ದ್ಯಾವಪ್ಪನ ಮ್ಯಾಲೆ ತಿರಿಗಿಸಿದ…ಸ್ವಾಂವಜ್ಜನ ಈ ಮಾತಿಗೂ ನಾನು ಸುಮ್ಮಗುಳಿದೆ. +* +* +* +ಬೆಳಿಗ್ಗೆ ಅಷ್ಟೊಂದು ಬ್ಯಾಸರ-ನೋವು ತುಂಬಿಕೊಂಡಿದ್ದ ಸ್ವಾಂವಜ್ಜ ಇಳಿಹೊತ್ತಿಗಂದರೆ ಎಲ್ಲಾರಕಿಂತಾ ತಾನಣಿ ಮದಲು ತಯಾರಾಗಿ-ಒಟ್ಟಣಿ ಜವಾಬದಾರೀನಣಿ ಇಲ್ಲ ನೋಡ ನಿಮಗ…ಎಲ್ಲಾದಕ್ಕೂ ಹುಡಗಾಟಾ ಮಾಡತೀರಿ… ಅಲ್ಲೇನ ಅಂವ ಬಂದಮ್ಯಾಗ ಹೋಗವರ ಅದೀರಿ ಏನಾ…? ಲಗೂಟಣಿ ಹೊಂಡರಿ… ಅಂತ ಅವಸರಾ ಮಾಡಿ -ಎಲ್ಲಾರನೂ ಎಬ್ಬಿಸಿಗೊಂಡು,ಊದಿಸಿಗೋತ- ಬಾರಿಸಿಗೋತ ಧರಮನಟ್ಟಿಯ ತೆಂಕಣ ದಿಕ್ಕಿನ ಅಗಸಿಗೆ ನಡದ… +ಲಾಗಾಯ್ತಿನಿಂದ ನಡದು ಬಂದದ್ದು ಏನಂದರೆ-ಸೂರ್ಯಾಸ್ತದ ವ್ಯಾಳ್ಯಾಕ್ಕಂದರ ಸೇವಾಕರ್ತನು ಪಡುವಣ ದಿಕ್ಕಿನ ಅಗಸಿಗೆ …ಕಲ್ಲೊಳ್ಳಿಂದ ನಡಕೊಂಡು ಬರುವುದು…ಅಂವ ಬಂದಕೂಡಲೇ ಅವನ ಪಾದಕ್ಕ ಎರಡು ಕೊಡಾ ನೀರು ಹಣಿಸಿ ಅವನನ್ನ ಊದಿಸಿಗೋತ ಬಾರಿಸಿಗೋತ ಮೆರವಣಿಗಿಯೊಳಗ ವಿಠ್ಠಲ ದೇವರ ಗುಡಿಗೆ ಕರಕೊಂಡು ಬರುವುದು…ಅಂವ ದೇವರ ದರ್ಶನಾ ಮಾಡಿಕೊಂಡು ತನ್ನ ಬಿಡದಿಗೆ ಹೋಗಿ ಹೆಂಡತಿ ಮಕ್ಕಳನ್ನು ಸೇರುವುದು…ಆದರೆ ಈ ದ್ಯಾವಪ್ಪ ಪಟ್ಟಕ್ಕ ಬಂದಮ್ಯಾಲೆ- +ಇತ್ತೀಚಿನ ನಾಕಾರು ವರ್ಷಗಳಿಂದ,ಇವನನ್ನ ತೆಂಕಣದ ದಿಕ್ಕಿನ ಅಗಸಿಯಲ್ಲಿ ಎದುರುಗೊಳ್ಳಬೇಕಾಗೇದ…ಯಾಕಪಾ ಅಂತಂದರೆ- ಇಂವ ಉದಗಟ್ಯಾಗ ನಾಕ ದಿನಾ ಮುಕ್ಕಾಮು ಮಾಡಿ ಅಲ್ಲಿಂದ ಫಟಫಟೀ ಹತಿಗೊಂಡು-ತಿಗಡಿ-ಮುಸಗುಪ್ಪಿಗಳ ಮ್ಯಾಲೆ ಹಾಯ್ದು -ಧರಮನಟ್ಟಿಯ ದಕ್ಷಿಣ ದಿಕ್ಕಿಗೆ ಮೂಡುತಾನೆ…! ಇನ್ನೂ ಇವನ ಮದಿವಿ ಆಗಿಲ್ಲ…ಮದಲಿನ ಎರಡು ವರ್ಷ ಇವನ ತಾಯಿ ತಾರವ್ವ ತೇರಿನ ಸೇವಾದ ಕಾಲಕ್ಕ ಧರಮನಟ್ಟಿಗೆ ಬರತಿದ್ದಳು…ಆದರ ಮುಂದ ಆಕಿ ಧರಮನಟ್ಟಿಗೆ ಬರೂದನ್ನ ನಿಂದರಿಸಿದಳು…ಹಿಂಗಾಗಿ ದ್ಯಾವಪ್ಪ ಒಬ್ಬಂಟಿ… +…ಊರಿನ ಹಿರ್‍ಯಾರೂ ಮತ್ತ ದೇವಸ್ಥಾನದ ಕಮೀಟಿಯ ಹುಡಗೋರು ವಾಲಗಾ ತಗೊಂಡು ದಕ್ಷಿಣ ದಿಕ್ಕಿನ ಅಗಸಿಗೆ ಬಂದು ಕೂತಾಗ ಹೊತ್ತು ಮುಣಗಲಿಕ್ಕೆ ಇನ್ನೂ ಒಂದು ಅರ್ಧಾ ತಾಸು ಇದ್ದಿದ್ದೀತು…ಅವರೆಲ್ಲಾ ಅಲ್ಲಿನ ಅರಳೀಕಟ್ಟಿಗೆ ಕುಂತರು…ಹಿರಿಯ ಮಂದಿ ಹಿಂದಿನ ವರ್ಷ ಅಷ್ಟರ ಪೂರ್ತೇನಣಿ ಬಂದ ಮಳಿಯ ಬಗ್ಗೆ …ಕೈಕೊಟ್ಟ ಬೆಳಿಗೋಳ ಬಗ್ಗೆ …ಬೆಳೆದ ಬೆಳಿಗೋಳಿಗೆ ಸಿಗದ ಧಾರಣೆಯ ಬಗ್ಗೆ… ಹಿಂಗಣಿ ಸಂಸಾರದ ತಾಪತ್ರಯಗಳನ್ನ ಮಾತಾಡಲಿಕ್ಕೆ ಸುರುಮಾಡಿದಾಗ,ಹರೇದ ಹುಡಗೋರು ಇವರನ್ನ ಅಲ್ಲೇ ಇರುವಲ್ಲಿ ಬಿಟ್ಟು …ಅಲ್ಲೇ ಸ್ವಲ್ಪ ದೂರದಾಗ ಬ್ಯಾರೇ ಒಂದು ಗುಂಪಾಗಿ ಕೂತರು…ಹಿಂಗ ಬ್ಯಾರೇ ಗುಂಪ ಆಗಿ ಕೂತು ಅವರು ದ್ಯಾವಪ್ಪನ ಉದಗಟ್ಟಿಯ ಹೆಂಗಸಿನ ಸುದ್ದಿಯ ಬುತ್ತಿಯ ಗಂಟು ಬಿಚಿಗೊಂಡರು…ಆಮ್ಯಾಲೆ ಸೂಕ್ಷ್ಮವಾಗಿ ತಾವು ಕುಂತ ಗುಂಪಿನಲ್ಲಿ ಯಾರ್‍ಯಾರು ಇದ್ದಾರೆ ಅನ್ನುವುದನ್ನ ನೋಡಿಕೊಂಡು ತಮ್ಮ ಮಾತುಗಳನ್ನ ಉದಗಟ್ಟಿಯಿಂದ ಧರಮನಟ್ಟಿಗೇ ನಡಿಸಿಗೊಂಡು ತಂದರು… +‘ಇವತ್ತ ಲಗಮವ್ವ ಸಾಬಣಾ ಹಚಿಗೊಂಡು ಜಳಕಾ ಮಾಡಿ ರೆಡಿ ಆಗಿರತಾಳು…’ +‘ನಾರೂ ಎಣ್ಣೀ- ಗಿಣ್ಣೀ ತಂದ ಕೊಟ್ಟಿರತಾನ ತಗೋ…’ +‘ಹಾಂ…ತೆಲೀಗೆ ನಾರೂಯಣ್ಣೀ ಹಚಿಗೊಂಡು -ಮಕಕ್ಕ ಪಾವಡರ್ ಬಳಕೊಂಡು ಇವನ ಹಾದೀ ನೋಡಿಕೊಂತ ಬಾಗಲದಾಗಣಿ ನಿಂತಿರತಾಳು…’ +‘ಅಲ್ಲೋಪಾ…ಊರಾಗ ಇಷ್ಟ ಹರೇದ ಹುಡಗೋರ ಅದಾವು…ಇವನ್ನೆಲ್ಲಾ ಬಿಟ್ಟು ಆ ಬುಬ್ಬಣಿ ಈ ದ್ಯಾವಗ ಹೆಂಗ ಒಲದಿದ್ದಾಳೂ ಅಂತ…!’ +‘ಏ…ಈ ಲಗಮಿ ಎರಡ ಸರತೇ ಹೊಟ್ಟೀ ಇಳಿಸಿಕೊಂಡಾಳಂತ!ತಿಗಡಿಗೆ ಹೋಗಿ -ಅಲ್ಲೇ ನರಸಬಾಯಿಯ ಮನ್ಯಾಗಣಿ ಎಲ್ಲಾ ಮುಗಿಸಿಗೊಂಡ ಬಂದಾಳಂತ…’ +‘ಹೌದ ಹೌದು.ಏ…ಎಡ್ಡನೇ ಕೂಸಿಗಂತೀ ಕಣ್ಣಾಣಿ -ಮೂಗಾಣಿ…ಎಲ್ಲಾ ಮೂಡಿದ್ದೂ ಅಂತ…!ಏ ಕೂಸ ಬಾಳ ಚಂದ ಇತ್ತಂತ…’ +‘ಥೂ ಸೂಳೀ ಮಕ್ಕಳರ್‍ಯಾ…ಥೇಟ್ ಕಣ್ಣೀಲೆ ಕಂಡವರಂಗಣಿ +ಮಾತಾಡತೀರಿ… ಏನ ಕಂಡದೀರಿ ಅಂತ ಹಿಂತಾ ಮಾತ ಆಡತೀರಲೇ…?ಆಚೀ ವರ್ಷ ಕತ್ತಲಾದ ಮ್ಯಾಗ ಲಗಮವ್ವ ದ್ಯಾವಪ್ಪನ್ನ ಮಾತಾಡಿಸಿದಳು ಅಂತ ಆ ತೆಲೀಮಾಸದ ಒಂದ ಹುಡಗ ಹೇಳಿತಂತ!…ಆ ಹುಡಗ ಏನ ನೋಡೇತ್ಯೋ ಯಾಂವ ಬಲ್ಲ ? … ಇಷ್ಟರ ಮ್ಯಾಲಣಿ ಆಕಿಗೆ ಮಕ್ಕಳನ ಹುಟ್ಟಸೂಮಟಾ ಮಾತಾಡತೀರಿ…’ ಅಂತ ಛತ್ರೇರ ಸಾತವೀರ ಎಲ್ಲಾರನೂ ಬೈದ. +‘ಯಾ…ನಮ್ಮ ಸಾತವೀರಣ್ಣ ಲಗಮವ್ವನ ಮ್ಯಾಗ ಕಣ್ಣ ಹಾಕಿದಂಗ ಕಾಣತೈತಿ…ಯಾಕೋ ಯಣ್ಣಾ…’ ಅಂತ ಕಂಬ್ಯಾರ ಚಂದ್ರ್ಯಾ ನಗಿಚಾಟಿಕಿ ಮಾಡಿದ. +‘ಏ…ಚಂದ್ರ್ಯಾಣಿ…ಇದು ನಗಿಚಾಟಿಕೀ ಮಾಡೂ ವಿಷಯ ಅಲ್ಲ ತಮ್ಮಾಣಿ…’ ಅಂತ ಅಂವ ವಜನದಿಂದ ಹೇಳಿದಾಗ ಗುಂಪಿನ್ಯಾಗ ಇದ್ದ ಹುಡಗೋರೆಲ್ಲಾ -ಏ… ತೂಸಿಗಿ…ತೂಸಿಗಿ!ಏ…ಇನ್ನ ಆ ವಿಚಾರನಣಿ ಬ್ಯಾಡ ಬಿಡ್ರೆಪಾಣಿ…ಉದಗಟ್ಟೀ ಸುದ್ದೀನಣಿ ಮಾತಾಡರಿ…ಅಂತ ಮತ್ತ ಮಾತಿನ ದಿಕ್ಕು ಬದಲು ಮಾಡಿ ಉದಗಟ್ಟಿಗೆ ಒಯ್ದರು… +…ಹೀಂಗ ಹಿರ್‍ಯಾರ ಮ್ಯಾಳಾ ಮತ್ತ ಹುಡುಗರ ಮ್ಯಾಳಗೋಳು ತಮ ತಮಗ ಸಲ್ಲುವಂಥಾ ವಿಷಯಗಳನ್ನ ಮಾತಾಡಿಕೊಂತ ಕುಂತಿರಬೇಕಾದರ ಹೊತ್ತು ಮುಣುಗಿ ನಿಧಾನವಾಗಿ ಕತ್ತಲಿ ಕವೀಲಿಕ್ಕತ್ತಿತು…ಸ್ವಾಂವಜ್ಜ ‘ನೋಡದಣಿ…ಹಿರೇ ತಲಿಮಾರಿಗೂ ಈಗಿನ ತೆಲಿಮಾರಿಗೂ ಹೆಂತಾ ಫರಕ ಐತಿ…ಆಗ ಹೊತ್ತು ಮುಣಗೂ ಹೊತ್ತಿಗಂದರ ಅಗದೀ ಗೆರೀ ಕೊರಧಂಗ ಪಡೂ ದಿಕ್ಕಿನ್ಯಾಗ ಈ ದ್ಯಾವ್ಯಾನ ಹಿರ್‍ಯಾರು ಹಾಜರ ಆಗತಿದ್ದರು…ಈಗಿಂದು -ಇದನ್ನ ನೋಡದಣಿ…ಹೊತ್ತು ಮುಣಗಿ ಎರಡ ತಾಸು ಮೀರಾಕ ಬಂತು….! ಇನೂ ಇದರ ಮಾರಿ ಇಲ್ಲ…’ ಅಂತ ತನ್ನ ಮನಸು ಬಿಚ್ಚಿದ… ಉಳದವರೂ ಅವನ ಜೋಡೀ ದನಿಗೂಡಿಸಿದರು… +‘ಏಣಿ…ನಾ ಸಣ್ಣಾವಿರತಣಿ ನಮ್ಮ ಅಜ್ಜ ನನಗ ಕತೀ ಮಾಡಿ ಹೇಳತಿದ್ದನಪಾ! ಆ ಮೂಲ ದ್ಯಾವಪ್ಪನ ಮಮ್ಮಗಾ ಮುಕುಂದಪ್ಪ ಅನ್ನಾವ ಒಬ್ಬ ಈ ಸೇವಾಕ್ಕ ಬರತಿದ್ದನಂತಲಾಣಿ…ಆ ಮುಕುಂದಪ್ಪ ಅಂದರಣಿ ಕುಬೇರಪ್ಪನ ಮಗಾ…ಈ ದ್ಯಾವ್ಯಾನ ಅಜ್ಜನ ಅಜ್ಜಾ…ಆ ಕುಬೇರಪ್ಪನ ತಮ್ಮನ್ನಣಿ ತೇರಿಗೆ ಬಲೀ ಕೊಟ್ಟಿದ್ದರಂತ…ನಮ್ಮ ಅಜ್ಜಗ ಅವನ ಹಿರ್‍ಯಾರು ಹೇಳತಿದ್ದರಂತ…ಆ ಮುಕುಂದಪ್ಪನ್ನ ನೋಡತಿದ್ದರ ದೊಡ್ಡ ಸಾಧೂನ್ನ ನೋಡಿಧಂಗ ಆಗೂದಂತ! ಅಂವ ಕಾಂವೀ ಅಂಗೀ ಹಾಕೊಂಡು -ಕಾಂವೀ ಬಣ್ಣದ ಪಟಕಾ ಸುತಿಗೋತಿದ್ದನಂತ…ಏ…ಬಾಳ ಕಟ್ಟ ನಿಟ್ಟಿನ ಮಡೀ ಅಂತ ಅಂವಂದು…! ಇಡೀ ಹದನ ದಿನದ ಯಾತ್ರಾದೊಳಗ ಅಂವ ಒಟ್ಟಣಿ ಬಾಯಿ ಮುಸರೀ ಮಾಡತಿದ್ದಿಲ್ಲಂತ!…ಬರೇ ಬಾಳೀ ಹಣ್ಣಾ ಮತ್ತ ಹಾಲಾ…ಇವದರ ಮ್ಯಾಲಣಿ ಹದನ ದಿನಾ ಇರತಿದ್ದಂತ…!’ +‘ಅದ್ಯಾಕಣಿ…ನಮ್ಮ ಸ್ವಾಂವಪ್ಪಗ ಗೊಂತ ಇದ್ದಿರಬೇಕಲಾಣಿ…ಮಗನ +ಸ್ವಾಮಿಯ ರಥಕ್ಕ ಬಲೀ ಕೊಟ್ಟ ಆ ದ್ಯಾವಪ್ಪ ಅಗದೀ ಥೇಟ್ ವಿಠ್ಠಲ ಸ್ವಾಮಿ ಇದ್ದಂಗಣಿ ಇದ್ದನಂತ !…ನಮ್ಮ ಹಿರ್‍ಯಾರು ಹೇಳತಿದ್ದರು…ತೇರಿಗೆ ಬಲೀ ಕೊಡಾಕಂತ ಅಂವ ತನ್ನ ಮಗನ್ನ ತೆಕ್ಯಾಗ ಅವಚಿ ಹಿಡಕೊಂಡು -ತೇರಿನ ಗಾಲಿಯ ತೆಳಗ ಇಡಾಕ ಹೀಂಗ ತೆಳಗ ಬಗ್ಗತಿದ್ದಂಗಣಿ ತೇರಿನ್ಯಾಗಿನ ವಿಠ್ಠಲಸ್ವಾಮಿ ತೆಳಗ ಇಳದ ಬಂದು…ದ್ಯಾವಪ್ಪನ ತೆಕ್ಯಾಗಿನ ಚಂದ್ರಾಮ ಅನ್ನುವ ಆ ಹುಡುಗನ್ನ ತನ್ನ ತೆಕ್ಕಿಗೆ ತಗೊಂಡನಂತ…ತನ್ನ ರಥಕ್ಕ ಬಲೀ ಆಗಲಿಕ್ಕೆ ಬಂದ ಆ ಕಂದನ್ನ ತನ್ನ ತೆಕ್ಯಾಗ ಇಟಗೊಂಡು ವಿಠ್ಠಲ ಸ್ವಾಮಿ ಗರುಡ ಪಕ್ಸೀ ಮ್ಯಾಲ ಕುಂತಗೊಂಡು ಅಂತರಿಕ್ಸಾಕ್ಕ ಹಾರಿದನಂತ…ಅಂತರಿಕ್ಸಕ್ಕೆ ಹಾರಿ…ಹಂಗಣಿ ಹಿರಿಹೊಳೀ ದಾಟಿ…ಆಕಾಸದಾಗೇ ಪಂಢರಾಪುರದ ಹಾದೀ ಹಿಡದನಂತ…ನೆರದ ಮಂದಿ ಎಲ್ಲಾ ಮಕಾ ಮ್ಯಾಲಕೆತ್ತಿ ಸ್ವಾಮಿಯ ದರಶನಾ ಮಾಡಿದರಂತ !…ಅಲ್ಲಿ ನೆರದ ಮಂದಿ ಅಂಬೂದೆಲ್ಲಾ ಸ್ವಾಮಿಯ ದರಶನಾ ಮಾಡಿ …ಹಂಗಣಿ ಕೈ ಮುಕ್ಕೊಂಡು -ಕಣ್ಣ ಮುಚಿಗೊಂಡು ನಿಂತಿರಬೇಕಾದರಣಿ…ಆ ಸ್ವಾಮಿಯ ತೇರನ್ನೂದು ಯಾರು ಅಂದರ ಯಾರೂ -ಒಬ್ಬರೂ ಕೈಮುಟ್ಟಿ ಎಳೀದಣಿ…ಅದು ತನ್ನಂಗ ತಾನಣಿ ಮುಂದಕ ಹೊಂಟು ಪಾದಾಗಟ್ಟೀ ಸೇರಿತಂತ !…ಸತ್ಯೇದ ಕಾಲ ಅದಾ…ನಾನೂ ಸ್ವಾಂವಪ್ಪಾ ಒಂದಣಿ ವಾರಿಗ್ಯಾವರು.ಅವರ ಅಜ್ಜಗೂ ಈ ಇಚಾರ ಗೊಂತ ಇದ್ದಿರಬೇಕು…ಯಾಕಪಾಣಿ… ನಿನಗೂ ನಿಮ್ಮಜ್ಜ ಇದನ ಹೇಳತಿದ್ದಿರಬೇಕಲಾ…’ ಅಂತ ಕಂಬ್ಯಾರ ಮೇಲಗಿರಿಯಪ್ಪ ಹೇಳಿದ್ದಕ್ಕೆ ಸ್ವಾಂವಜ್ಜ- +‘ ಹೂಂ…ಊರಾನ ಮಂದಿ ಹಿಂಗ ಕಥೀ ಮಾಡಿ ಹೇಳೂದು…ನಮ್ಮ ಅಜ್ಜ ಏನ ಇದನ ನನಗ ಹೇಳತಿರಾಕಿಲ್ಲ …’ ಅಂತ ಹೇಳಿದ. ಆಗ ಇವರ ವಾರಿಗಿಯ ಇನೊಬ್ಬ ಮುದುಕ – ಮಾಡಲಿಗ್ಯಾರ ಗೂಳಪ್ಪಜ್ಜ – +‘ಏ…ಸ್ವಾಂವಪ್ಪನ ಅಪ್ಪಾ ಮತ್ತ ಅವರ ಅಜ್ಜಂದು ಒಂದ ನಮೂನೀ ಇಚಿತ್ರದ ರೀತಿ ಬಿಡು…ಅವರು ನಮ್ಮ ಸ್ವಾಂವಪ್ಪನಗತೇ ಅಲ್ಲ…ಅವರು -ನಮ್ಮದು ಜಯ್ಯಾರ ಕುಲಾ…ನಮ್ಮ ದೇವರಗೋಳು ಬ್ಯಾರೇ -ಪದಮಾವತೀ-ಮಾವೀರಾ…ಅಂತ ಏನೇನೋ ಹೇಳವರಪಾ…ಈ ಇಟ್ಠಲ ಸ್ವಾಮಿ -ಈಸೂರ ದೇವರು -ಲಕ್ಕವ್ವ ಇವೆಲ್ಲಾ ನಮ್ಮ ದೇವರ ಅಲ್ಲಾ…ಅಂತ ಇಚಿತ್ರ ಹಮ್ಮು ಮಾಡಾವರು.ಅದಕ್ಕಣಿ ಸ್ವಾಂವಪ್ಪಗ ಅವರ ಅಜ್ಜ ನಮ್ಮ ದೇವರ ಮಾತ್ಮೇದ ಕಥೀ ಹೇಳತಿರಾಕಿಲ್ಲ…ಆದರ ಮುಂದ ಸ್ವಾಂವಪ್ಪ ಬ್ಯಾರೇನಣಿ ಆದ…ನಮ್ಮನ್ನ ಕೂಡಿಸಿಕೊಂಡು ಕರಡೀ ಮಜಲ ಕಟ್ಟಿದ…ಸುತ್ತ ಹತ್ತು ಊರೊಳಗ ಧರಮನಟ್ಟೀ ಕರಡೀ ಮಜಲಂದರ ಕರಡೀ ಮಜಲ ನೋಡಪಾಣಿ ಅಂತ ಹೆಸರ ಬರೂಹಂತಾ ಕರಡಿ ಮಜಲ ಕಟ್ಟಿದಾ…!ಊರಾಗಿನ ಎಲ್ಲಾ ದೇವರಗೋಳ ಉತ್ಸವಾ ಮತ್ತ ಪಾಲಕೀ ಸೇವಾದಾಗ ಇಂವಂದಣಿ ಕರಡೀ ಮಜಲು.ಏ… ವಯಸ್ಸು ಇರೂಮಟಾ ಸ್ವಾಂವಜ್ಜ ನಮ್ಮ ದೇವರಗೋಳದು ಅಗದೀ ನಿಷ್ಠಾದಿಂದ ಸೇವಾ ಮಾಡಿದಾನ ಬಿಡು…’. +‘ಹಾಂ ನೋಡದಣಿ…ಈ ಗೂಳಪ್ಪ ನಮ್ಮ ಹಿರ್‍ಯಾರನ ಟೀಕಾ ಮಾಡಿಕೊಂತ ಮಾಡಿಕೊಂತನಣಿ ಏನ ಹೇಳಾಕತ್ತದಾನ ನೋಡ್ರಿ…ಊರಾನ ದೇವರಗೋಳ ಎಲ್ಲಾ ತಮ್ಮೂವ ಅನ್ನಾಕತ್ತದಾನು ! ಮತ್ತ ನಾ ವಯಸ್ಸ ಇರೂಮಟಾ ಮಾತ್ರ ಇವರ ದೇವರಗೋಳ ಸೇವಾ ಮಾಡೀದನಂತ!…ಈಗ ಹೇಳರೆಪಾಣಿ…ಈಗ್ಯಾರ ಭೇದಾ ಮಾಡಿದರು…?’ ಅಂತ ಸ್ವಾಂವಜ್ಜ ಹೇಳಿದಾಗ ಎಲ್ಲಾ ಮಂದಿ -ಹೌದ ಹೌದು… ಗೂಳಪ್ಪಂದ ಚೂಕ ಆತು ಅಂತ ಹೇಳಿ ನಕ್ಕರು.. +‘…ನೀವು ನಮ್ಮ ಜಯ್ಯಾರ ಕುಲಾ ಟಿಂಗಲ್ಲು ಮಾಡವಲ್ಲರ್‍ಯಾಕ…ಈಗ ಒಂಭತ್ತ ಹೊಡದ ಹೋತು…ನಿಮ್ಮ ಮನಿಗೋಳೊಳಗ ಬಿಸೀ ರೊಟ್ಟಿ ನಿಮ್ಮ ಹಾದೀ ನೋಡತಿರತಾವು… ನಾ ನೋಡದಣಿ…ಹೊತ್ತ ಮುಣಗೂಕಿಂತಾ ಮದಲಣಿ ನನ್ನ ಸೊಸೀ ಮಾಡಿದ ಬಿಸಿಬಿಸೀ ರೊಟ್ಟೀ ಕಟದ ಬಂದನು !…ನಿಮ್ಮದು ಈಗ ಎರಡ ಕಡೇ ಧ್ಯಾನಾ…ಇಕಾಡಿ ದೇವರ ಕೆಲಸಾ- ಅಕಾಡಿ ರೊಟ್ಟೀ ಎಳತಾ… !’ ಅಂತ ಸ್ವಾಂವಜ್ಜ ಚಾಷ್ಟೀ ಮಾಡಿದಾಗ ಮಂದಿ ಎಲ್ಲಾ ನಕ್ಕಿತಾದರೂ ಸ್ವಾಂವಜ್ಜ ಹೇಳಿಧಂಗ ಅವರ ಮನಸಗೋಳು ರೊಟ್ಟೀಕಡೆ ಎಳೀಲಿಕ್ಕತ್ತಿದ್ದವು…ಇಷ್ಟೊತ್ತು ಯಾಕ ಮಾಡಿದ್ದಾನು ಈ ಸೂಳೀ ಮಗಾ ಅಂತ ಮನಸಿನ್ಯಾಗಣಿ ದ್ಯಾವಪ್ಪನ್ನ ಬಯ್ಯಲಿಕ್ಕತ್ತಿದ್ದರು…ಅಷ್ಟೊತ್ತಿಗಂದರ ಒಂದೊಂದಣಿ ಒಂದೊಂದಣಿ ಎದ್ದುಹೋಗಿ ಹುಡುಗೋರ ಮ್ಯಾಳ ಎಲ್ಲಾ ಸಂವದು – ಉಳದಿದ್ದ ಎರಡ ಮೂರು ಹುಡಗೋರು ಸಹಿತ ಬಂದು ಹಿರ್‍ಯಾರ ಗುಂಪಿನ್ಯಾಗ ಸೇರಿಕೊಂಡಿದ್ದವು… +…ಹತ್ತು ಹೊಡದ ಹೋತು …ಆಕಾಶದಾಗ ಹಾಂವೂ-ಚೇಳೂ ಆಕಾರದಾಗ ಮತ್ತ ಹೆಂಗ ಬೇಕಾದಂಗ-ಕಲ್ಲು ಒಗದಂಗ…ಚಿಕ್ಕಿಗೋಳು ಮೂಡಿದ್ದವು.ಅಲ್ಲಿ ಕೂತಂಥಾ ಮಂದಿ ಮುಗಲು ನೋಡೂದೂ ಮತ್ತ ಆಮ್ಯಾಗ ಇತ್ತ ನೆಲದ ಮ್ಯಾಗ ಉದಗಟ್ಟಿಯ ಹಾದೀಕಡೆ ನೋಡೂದೂ ಮಾಡತಿದ್ದರಣಿ ಅವರ ಹೊಟ್ಟಿಯನ್ನುವವು ಹಸದು-ಗುರ್ ಗುರರ್…ಅಂತ ಹಾಡು ಹೇಳಲಿಕ್ಕತ್ತಿದವು…ದಿನಾ ಇಷ್ಟೊತ್ತಿಗಂದರೆ ಊಟಾಮಾಡಿ ಹಳೆಮಾತಾಗಿ ಹೋಗತಿತ್ತು…ಮಲಗಿ ಸರಿ ಹೊತ್ತಾಗಿರುತ್ತಿತ್ತು… ಇಂದು ಇನೂ ಉಣದೇ ಹಸದ ಹೊಟ್ಟೀಲೆ ಗುಂಗಾಡು ಕಡಿಸಿಗೋತ- ಇಲ್ಲಿ …ಊರಿನ ಈ ದಕ್ಷಿಣದ ಬಯಲಿನ್ಯಾಗ ಕುಂಡರೂ ಹಂತಾ ವ್ಯಾಳ್ಯಾ ಬಂದಿದೆ ! +…ಇಷ್ಟೊತ್ತಿಗಂದರೆ ಮದಲು ಎದ್ದು ಹೋಗಿದ್ದ ಒಂದ ನಾಕು ಹುಡಗೋರು- ‘ಇನಣಿ ಬರಲಿಲ್ಲಾ…?’ ಅಂತ ಕೇಳಿಕೋತ ಬ್ಯಾಟರೀ ಬಿಟಗೊಂಡು ಊರಕಡಿಂದ ಬಂದವು.ಸ್ವಾಂವಜ್ಜ ಆ ಹುಡಗೋರಿಗೆ ‘ನೀವು ಉಂಡ ಬಂದದೀರ್‍ಯೋ ಹೆಂಗ…?’ ಅಂತ ಕೇಳಿದ್ದಕ್ಕ ಆ ಹುಡುಗೋರು ತಪ್ಪು ಮಾಡಿ ಸಿಕ್ಕ ಬಿದ್ದವರಂಗ,ಸಣ್ಣ ದನೀಲೇ ‘ಹೂಂ ಯಜ್ಜಾಣಿ…’ ಅಂತ ಹೇಳಿದವು. ‘ಹಂಗರಣಿ ಪಾಡ ಆತ ಬರ್ರಿ…ನೀವು +ಅವನ ಹಾದೀ ಕಾಯಕೊಂತ ಇಲ್ಲಿ ಕುಂಡರ್ರಿ…ನಾವು ಉಣ್ಣಾಕ ಹೋಗತೀವು’ ಅಂತ ಗೂಳಪ್ಪಜ್ಜ ಹೇಳತಿದ್ದಂಗಣಿ ಎಲ್ಲಾರೂ ಎದ್ದಣಿ ಬಿಟ್ಟರು…ಅವರ ಜೋಡೀ ತಾಸೇ ಭಜಂತ್ರಿಯವರೂ ಎದ್ದರು.ಒಂದ ಹುಡುಗ – ‘ಭಜಂತ್ರಿಯವರೂ ಎದ್ದರಲಾ?ಮತ್ತಣಿ ದ್ಯಾವಪ್ಪ ಬಂದಾಗ ಬಾರಸವರು ಬ್ಯಾಡಾ?’ ಅಂದಿತು. +‘ಸರಿಹೊತ್ತಿನ್ಯಾಗ ಬಂದರಣಿ ಊದಿಸಿಕೊಂತ ಬಾರಿಸಿಕೊಂತಣಿ ಏನ ಕರಕೊಂಡ ಬರತೀ?…ಬರಬೇಕಾದ ಯಾಳೇದಾಗ ಬಂದರ ಸಿಗಬೇಕಾದ ಮರುವಾದೀ ಸಿಗತೇತಿ…ಯಾಳೇ ಮೀರಿದರ ಮರುವಾದೆನೂ ಇಲ್ಲ…’ ಅಂತ ಹೇಳಿದ ಸ್ವಾಂವಜ್ಜನೂ ಎಲ್ಲಾರ ಜೋಡೀ ಊರಕಡೆ ನಡದ. +* +* +* +ಮರದಿವಸ ಬೆಳಿಗ್ಗೆ ಎದ್ದು ಕೇಳಿದರೆ ದ್ಯಾವಪ್ಪ ಇನ್ನೂ ಬಂದೇ ಇಲ್ಲ ಅನ್ನುವುದು ತಿಳಿದು ಊರ ಮಂದಿಗೆಲ್ಲ ದಿಗಿಲು ಆದಂಗಾತು…ದೀಡನೂರು ವರ್ಷಗಳಿಂದ – ಒಂದು ವರ್ಷ ಸಹಿತ ತಪ್ಪಧಂಗ ನಡಕೊಂಡು ಬಂದ ರಿವಾಜು…ಇಡೀ ಊರು ಅಗದೀ ಹೆಮ್ಮೆಯಿಂದ ನೆನಪು ಇಟಗೊಂಡು ಚಾಚೂ ತಪ್ಪದ ನಡಿಸಿಕೊಂಡು ಬಂದ ಪದ್ಧತೀ… ಹಿಂತಾದ್ದು ಬರೊಬ್ಬರೀ ದೀಡನೂರನೇ ವರ್ಷದ ಈ ತೇರಿಗೇ ಅಡ್ಡನಾಡ ಹೊಡಿಯೂದಂದರ…! ಊರಾಗಿನ ಮಂದಿ ಎಲ್ಲಾ ‘ಏ…ಹೆಂಗೋಪಾ ಇನ್ನ…?’ ಅಂತ ಒಬ್ಬರನ್ನ ಒಬ್ಬರು ಕೇಳಿಕೋತ ತಮ ತಮ್ಮ ಗಾಬರಿಯನ್ನ ಹಂಚಿಗೋಲಿಕ್ಕತ್ತಿದ್ದರೆ ಒಂದಷ್ಟು ಮಂದಿ -‘ಏ…ಆತು ಬಿಡು.ಧರಮನಟ್ಟೀ ಪುಣ್ಣೇ ಮುಗದಂಗಾತು…! ಯಾವಾಗ ಅಂವ ಪಂಚಮೀ ದಿವಸ ಬರಲಿಲ್ಲಂತಂದರಣಿ ಇನ್ನ ಅಂವ ಬರತಾನನ್ನೂ ಖಾತ್ರಿ ಇಲ್ಲ…’ ಅಂತ ಮಂದಿಯ ಗಾಬರಿಯನ್ನ ಹೆಚ್ಚುಮಾಡಿ ತಾವೂ ಆ ಗಾಬರಿಯೊಳಗ ಮುಣಿಗಿ ಸುಂದಾಗಿ ಕೂಡತಿದ್ದರು… +…ಆ ಮೂಲದ್ಯಾವಪ್ಪಗ ಅಂದು ಗೂಗೀಕೊಳ್ಳದ ಸ್ವಾಮಿಗೋಳು ಹೇಳಿದ್ದರಂತ-ವರಷಾ ವರಷಾ ಎಂಟ -ಹತ್ತ ಹನಿ ರಗತಾ ಹನಿಸಿಕೋತ ಹೋದರ ನೂರ -ದೀಡನೂರ ವರಷಕ್ಕಂದರ ಪೂರಾ ಒಬ್ಬ ಮನಶಾನ ರಗತದಷ್ಟಣಿ ಆಗತೈತಿ ತಗೋ…ಅಂತ ! ಅಂದರ ಆ ಮಾತ್ಮರ ಮಾತಿನ್ಯಾಗಿನ ಗೂಢಂಬೂದು ಏನು ಇದ್ದಿದ್ದೀತು?…ಆ ಮಾತ್ಮ ಆಡಿದ ಮಾತಿನ್ಯಾಗಿನ ಅರ್ಥನ್ನುವದಾದರೂ ಏನು ಇದ್ದಿದ್ದೀತು…?ಈ ದ್ಯಾವ್ಯಾ ನೋಡಿದರ ನಿನ್ನೆ ಬರಬೇಕಾದಂವ ಇನ್ನೂ ಬಂದಿಲ್ಲ….ಆ ಮಹಾತ್ಮರು ಏನು ಹೇಳಿದ್ದಾರು…? ಅಂತ ಮಂದಿ ಹಿಂಗ ಏನೇನೋ ಕಲ್ಪಿಸಿಕೊಂಡು ಮಾತಾಡಲಿಕ್ಕೆ ಸುರು ಮಾಡಿತು…ಮತ್ತ ಸ್ವಾಂವಜ್ಜನಣಿ -‘ಏ…ಇಲ್ಲದ್ದಣಿ ಅಪಸಕುನದ +ಮಾತು ಮಾತಾಡಬ್ಯಾಡ್ರಿ…ಆ ಹುಡುಗಗ ಜವಾಬದಾರೀ ಅನ್ನೂದು ಇಲ್ಲ…ಚಂಗಿ ಹುಡಗ ಅದಾ…ಎಲ್ಲಿ ಹ್ವಾದಲ್ಲೇ ಕುಂತಿರಬೇಕು…ಈಗ ಯಾರನರೇ ಉದಗಟ್ಟಿಗೆ ಕಳಿಸಿ ಸಾರಾಸಾರ ಎಲ್ಲಾ ಹಕೀಕತ್ತು ತಿಳಕೊಳ್ಳೂಣೂ…ಅದನ್ನ ಬಿಟ್ಟು ಇಲ್ಲದ್ದಣಿ ಒಂದ ಅಪದ್ಧ ಮಾತಾಡಬ್ಯಾಡ್ರಿ…’ ಅಂತ ಬೈದು ಇಬ್ಬರು ಹುಡಗೋರನ ಕರದು-ಫಟಫಟೀ ತಗೊಂಡು ತಾಬಡ ತೋಬಡ ಉದಗಟ್ಟಿಗೆ ಹೋಗಿಬರ್ರಿ ಅಂತ ಹೇಳಿ ಕಳಸುವ ವ್ಯವಸ್ಥಾ ಮಾಡಿದ… +ಉದಗಟ್ಟಿಗೆ ಹೊಂಟ ಆ ಹುಡಗೋರಿಗೆ ಎಲ್ಲಾರೂ ಒಂದೊಂದ ನಮೂನಿಯ ಸೂಚನಾ ಕೊಡಾವರಣಿ…ಒಬ್ಬ-ಲಗೂಟಣಿ ಹೊಳ್ಳಿ ಬರ್ರಿ ಅಂತ ಹೇಳಿದರೆ ಮತ್ತೊಬ್ಬ – ಅಂವಸರಾ ಮಾಡಿ ಪುಸಕ್ ಅಂತ ಹೊಳ್ಳಿ ಬರಬ್ಯಾಡರಿ…ಪೂರಾ ಎಲ್ಲಾ ಹಕೀಕತ್ತ ತಿಳಕೊಂಡಣಿ ಬರ್ರಿ ಅಂತ ಹೇಳಿದ.ಚಂದರಿಗ್ಯಾರ ಮುತ್ತೆಪ್ಪ – ನೋಡ್ರೆಲೇ…ಉದ್ದವ್ವನ ಗುಡೀ ಪೂಜಾರೀ ಹಂತೇಕ ಹೋಗಿ ನನ್ನ ಹೆಸರ ಹೇಳ್ರಿ… ಅಂದರ ಅಂವ ಎಲ್ಲಾ ಹಕೀಕತ್ತು ತಿಳಸತಾನ ಅಂದಾಗ ಯಾರೋ ಒಬ್ಬ -ಹೂಂ… ಹೌದ ನೋಡಪಾ ! ಮುತ್ತೆಪ್ಪನ ಹೆಸರ ಹೇಳದಿರಕ ಅಂವ ಇವರಿಗೆ ಏನೂ ಹೇಳದಣಿ ಹಂಗಣಿ ಹೊಳ್ಳಿ ಕಳಸತಾನು…! ಅಂತ ಯಾಂಸೀ ಮಾತಾಡಿದ.ಇನೊಬ್ಬ- ನೋಡ್ರಲೇ…ಬರೇ ಆ ಪೂಜಾರೀ ಸುತ್ತ ಗುಂಡಕಣಿ ಸುತ್ತ ಹೊಡದ ಬಂದ ಬಿಡಬ್ಯಾಡರಿ…ಊರ ಮಂದಿನ್ನೂ ಕೇಳರಿ ಅಂತ ಹೇಳಿದ…ಊರಿನ ಹಿರೇ ಮಂದಿ ಹಿಂಗ ತಲಿಗೊಂದೊಂದು ಸಲ್ಲಾ ಕೊಡತಿದ್ದರ ಧರಮನಟ್ಟಿಯ ಹರೇದ ಹುಡುಗೋರ ಮ್ಯಾಳದವರು ಮಾತ್ರ ಐಕಮತ್ಯದಿಂದ ಒಂದಣಿ ಒಂದು ಸಲ್ಲಾ ಕೊಟ್ಟರು…ಅವರ ಸಲ್ಲಾ ಏನಂದರ-ನೀವು ಊರಾನ ಮಂದಿನ್ನ ಕೇಳರೀ ಬೇಕಾರ ಬಿಡರಿ-ನೀವು ಉದ್ದವ್ವನ ಪೂಜಾರಿನ್ನ ಕೇಳರಿ ಬೇಕಾರ ಬಿಡ್ರಿ- ಆದರ ಡೊಂಬರ ಓಣಿಗೆ ಹೋಗಿ ಅಲ್ಲಿ ಮಾತ್ರ ವಿಚಾರ ಮಾಡಾಕಣಿ ಬೇಕು!…ಉದಗಟ್ಟಿಗೆ ಹೊಂಟ ಹುಡುಗೋರು – ನಮಗ ಎಲ್ಲಾ ಗೊಂತ ಐತೇಳರೆಪಾಣಿ ಅಂತ ನುಡದು ಫಟಫಟೀ ಹತ್ತಿ ಉದಗಟ್ಟಿಯ ಹಾದೀ ಹಿಡದವು… +…ಸಂಜಿಯ ಐದರಷ್ಟೊತ್ತಿಗೆ ಆ ಹುಡುಗೋರು ಉದಗಟ್ಟಿಯಿಂದ ಹೊಳ್ಳಿ ಬಂದವು…ಉದಗಟ್ಟಿಗೆ ಹೋಗತಿದ್ದಂಗಣಿ ಅವರು ಮದಲು ಉದ್ದವ್ವನ ಗುಡೀಗೆ ಹೋಗಿ ಅಲ್ಲಿ ಪೂಜಾರಿನ್ನ ಕೇಳಿದರಂತ.ಅಂವ – +‘ಏ…ನಿಮ್ಮ ದ್ಯಾವ ಗುಡೀಗೆ ಬಂದಿದ್ದನರೆಪಾಣಿ…ಗುಡೀಗೆ ಬಂದು ಒಂದ ಇಚಿತ್ರ ಆಟಾನಣಿ ಆಡಿ ಹ್ವಾದಾ!…ನಾಕ ದಿನದ ಹಿಂದಣಿ ಅಂವ ಉದಗಟ್ಟಿಗೆ ಬಂದಾನಂತ ನನಗ ಸುದ್ದಿ ಹತ್ತಿತ್ತು…ಮತ್ತೇನು ಉದಗಟ್ಟಿಗೆ ಬಂದು ಆ ಡೊಂಬರ ಬಾಳವ್ವನ ಮನ್ಯಾಗ ಮನಕೊಂಡಿದ್ದಾನು ಅಂತ ಅನಕೊಂಡು ಸುಮ್ಮಕಣಿ ಇದ್ದನಿ…ಅದ ಹೋಗಲಿ ಬಿಡ್ರಿ…ಬಂದ ನಾಕ ದಿನದ ಮ್ಯಾಗ-ಅಂತೂ ಮನ್ನಿ ಹರ್‍ಯಾಗ…ನಾ +ಉದ್ದವ್ವನ ಪೂಜೀ ಮಾಡತಿರಬೇಕಾದರ ಅಂವ ಗುಡೀಗೆ ಬಂದ… ಇವನೂ ದೇವರ ಮನಶಾನಣಿ ಅದಾನು ಅಂತ ತಿಳದು-ಬಾ ದ್ಯಾವಪ್ಪಾ…ಬಾ ಇಲ್ಲೇ ಒಳಗಣಿ ಬಾ ಅಂತ ಗರ್ಭದ ಗುಡೀ ಒಳಗ ಬರಲಿ ಅಂತ ಕರದನಿ…ಅಂವ-ಏ ಇರಲೇಳಪಾ…ನಾ ಇಲ್ಲೇ ಹೊರಗಣಿ ಕುಂತಿರತನು ಅಂತ ಗರ್ಭಗುಡೀ ಬಾಗಲದ ಮುಂದ…ಇಲ್ಲಿದಣಿ ಇಲ್ಲಿ…ಈ ಕಂಬಕ್ಕ ಆನಿಕೊಂಡು ಕುಂತ…ಉದ್ದವ್ವಗ ಕೈಯ್ಯಾರಣಿ ಮುಗದನೋ ಇಲ್ಲೋ ಯಾಂವ ಬಲ್ಲ ! ನಾ ಪೂಜೀ ಮುಗಿಸಿಗೊಂಡು ಹೊರಗ ಬಂದು ಅಂವಗ ಪುಸ್ಪದ ಪರಸಾದಾ ಕೊಟ್ಟಿನಿ… ಅದನ್ನ ಕಿಂವ್ಯಾಗ ಇಟಗೊಂಡು-ಬಾ ಕುಂಡರ ಬಾ -ಅಂತ ನನ್ನ ಕರದ…ಹೆಂಗೂ ಪೂಜಿ ಮುಗದೈತಿ ಅಂತ ನಾನು ಅಂವ ಕುಂತ ಕಂಬದ ಎದುರಿಗೆ…ಈ ಕಂಬಕ್ಕ ಆನಿಕೊಂಡ ಕುಂತಿನಿ…ದ್ಯಾವಪ್ಪ ನನ್ನಣಿ ಮಿಕಿ ಮಿಕಿ ಅಂತ ನೋಡಾಕತ್ತಿದ್ದ …ನಾನು ನಗಿಚಾಟಿಕೀ ಮಾಡವನಂಗ-ಯಾಕಲೇ ಸೂಳೀಮಗನಣಿ!ಹಂಗ್ಯಾಕ ನೋಡಾಕತ್ತದೀ? ಅಂತ ಕೇಳಿದರ ಅಂವ ಅಗದೀ ಗೂಢ ದನೀಲೆ -ದೊಡಪ್ಪಾಣಿ… ಒಂದ ಮಾತ ಕೇಳತನು…ಅಂತರಂಗಾ -ಬಹಿರಂಗಾ ಮಾಡದಣಿ ಹೇಳತೀ? ಅಂತ ಕೇಳಿದ…! +ಅವನ ಮಾತು ನನ್ನ ಕಳ್ಳಿಗೆ ನಾಟಿಧಂಗ ಆತು…ನಾನು-ಅದರಾಗ ಏನೈತೋ ಮಗನಣಿ…ದೊಡಪ್ಪಾಣಿ ಅಂತ ಬಾಯಿ ತುಂಬ ಕರದ್ದೀ…ಇನ್ನ ನಿನ್ನ ಮುಂದ ಅಂತರಂಗಾ ಬಹಿರಂಗಾ ಮಾಡೂಹಂತಾದ್ದು ಏನೈತಿ?…ಅದೇನ ಕೇಳತೀ ಕೇಳು ಅಂತ ಹೇಳಿದಿನಿ…ಅಂವ ಗರ್ಭಗುಡೀ ಒಳಗಿನ -ಪೂಜಿಗಂತ ಸಿಂಗಾರ ಮಾಡಿದ್ದ ಉದ್ದವ್ವನ್ನಣಿ ದಿಟ್ಟಿಸಿ ನೋಡಿಕೋತ -ದೊಡಪ್ಪಾಣಿ…ಖರೇ ಹೇಳು…ವರ್ಷದ ಹನ್ನೆರಡೂ ತಿಂಗಳು- ಒಟ್ಟಣಿ ತಪ್ಪಸದಣಿ ಹರ್‍ಯಾಗಣಿ ಮತ್ತ ಸಂಜೀ ಮುಂದ ಇಲ್ಲಿ ಈ ಉದ್ದವ್ವನ್ನ ಪೂಜೀ ಮಾಡತೀಲಾಣಿ.ಇದೂ…ಬರೇ ಕಲ್ಲ ಹೌದಲ್ಲೊ?… ನಿನಗ ಎಂದರೇ ಈ ಕಲ್ಲು ಉದ್ದವ್ವ ಅಂತ ಅನಿಸೇತೇನು ಹೇಳು…ಅಂತ ಕೇಳಬೇಕೂ ! ನನಗ ಈ ದ್ಯಾವ್ಯಾ ಸೂಳೀಮಗಾ ಹರ್‍ಯಾಗ ಏಳತಿದ್ದಂಗಣಿ ಕುಡದ ಗಿಡದ ಬಂದಾನ ಏನು ಅಂತ ಅನಿಸಿ ಅವನ ಕಣ್ಣ ನೋಡಿದರೆ ಕುಡಧಂಗ ಅನಸಲಿಲ್ಲ…ನನಗ ಕಂಡಾಪಟ್ಟೆ ಸಿಟ್ಟು ಬಂತು… ಹೋಗೋ ಮಕಳೀ ಹೋಗು…ಉದ್ದವ್ವ ಯಾಕ ಕಲ್ಲ ಆಗತಾಳು…ನಿನ್ನ ಕಣ್ಣ ಕುಡ್ಡ ಆಗಿರಬೇಕು!…ನಡೀ ಹೋಗು ಇಲ್ಲಿಂದ ಅಂತ ಬೈದು -ಗರ್ಭ ಗುಡಿಯ ಬಾಗಲಾ ಎಳದು ಕೀಲೀ ಹಾಕಿ…ನಾನು ಮನಿಗೆ ಹೊಂಟು-ಎದ್ದ ಬರತೀಯೋ ಏನ ಇಲ್ಲೇ ಕುಂಡರಾವೋ…ಅಂತ ಕೇಳಿದರೆ ಅಂವ ಏನೂ ಮಾತಾಡದಣಿ-ಬಾಗಲ ಸಳಿಗೋಳ ನಡಕಿಂದ ಉದ್ದವ್ವನ್ನ ಹಂಗಣಿ ತದೇಕ ನೋಡಿಕೊಂತ ಕುಂತಿದ್ದ…ಕುಂಡರ ಹಂಗರಣಿ ಅಂತ ಹೇಳಿ ನಾ ಮನಿಗೆ ಹ್ವಾದಿನಿ.ಆದರ ಆಮ್ಯಾಗ…ಈ ಸೂಳೀಮಗಾ ಉದ್ದವ್ವಗ ಏನಾರ ಮಾಡಿಗೀಡ್ಯಾನು ಅಂತ ಅಂಜಿಕಿ ಬಂತು…ಮನಿಗೆ ಹೋದಮ್ಯಾಗ ಮತ್ತ ನನ್ನ ಮಮ್ಮಗನ್ನ ಗುಡಿಗೆ ಓಡಿಸಿದಿನಿ…ಆ ದ್ಯಾವ್ಯಾ ಹಂಗಣಿ ಅದಣಿ ಕಂಬಕ್ಕ ಆನಿಕೊಂಡು… +ಬೆಲ್ಲ ಬಡದ ಗುಂಡಕಲ್ಲಿನ ಹಂಗ- ಬಾಳೊತ್ತನಕಾ ಇಲ್ಲೇ ಈ ಕಂಬಕ್ಕ ಆನಿಕೊಂಡು ಕುಂತುಕುಂತು…ಆಮ್ಯಾಗ ಬಾಳೊತ್ತಿನಮ್ಯಾಗ ಎದ್ದಹ್ವಾದನಂತ!…ಅಂವ ಎದ್ದ ಹೋಗೂಮಟಾ ನನ್ನ ಮಮ್ಮಗಾ ಇಲ್ಲೇ ಗುಡ್ಯಾಗಣಿ ಕುಂತು -ನೋಡಿಕೊಂಡು ಬಂದ ಹೇಳಿತು…! ಹಿಂಗಾತ ನೋಡಪಾ ನಿಮ್ಮ ದ್ಯಾವನ ಕಥೀ…ಅಂತ ಹೇಳಿ ಉದ್ದವ್ವನ ಪೂಜಾರಿ ಬಿದ್ದ ಬಿದ್ದ ನಕ್ಕನಂತ…! +…ಆ ಹುಡುಗೋರು ಆಮ್ಯಾಲ ಊರಾಗಿನ ಮಂದಿನ್ನ ಕೇಳಿದರಂತ. ಊರಾಗಿನ ಮಂದಿ -‘ ಹಾಂ…ಬಂದಿದ್ದನಲಾ…ಬಂದು ಆ ಡೊಂಬರ ಚಿನಾಲೀ ಮನ್ಯಾಗ ಕುಡದ ಬಿದ್ದಿದ್ದನಂತ ಕಾಣಸತೈತಿ…ಗುಡೀಕಡೆ ಏನೂ ಹೋದಂಗ ಕಾಣಲಿಲ್ಲ…ನಿನ್ನೆ ಚಂಜೀ ಮುಂದಣಿ ಇಲ್ಲಿಂದ ಹ್ವಾದಂಗ ಕಾಣಸತೈತೆರೆಪಾಣಿ…ಇನೂ ನಿಮ್ಮ ಊರಿಗೆ ಬಂದಿಲ್ಲೇನು? ನಿನ್ನೆ ಚಂಜಿಕನಣಿ ನಿಮ್ಮ ಊರ ಮುಟ್ಟಬೇಕಾಗಿತ್ತಲಾ…! ಹಂಗರಣಿ ಅಂವ ಹುಣಿಶಾಳದಿಂದ ಹಂಗಣಿ ಗೋಕಾಂವೀ ಕಡೆ ಗಾಡೀ ಹೊಡದಿರಬೇಕು ಬಿಡ್ರಿ …’ ಅಂತ ಅಂದರಂತ. +ಮುಂದಣಿ…ಡೊಂಬರ ಲಸಮಣ್ಣನನ್ನ ಕೇಳಿದರ ಅಂವ ಇವರಜೋಡೀ ಮಕಾ ಕೊಟ್ಟು ಮಾತಾಡದೇ- ಊರ ಹಲಕಟ ಸೂಳೀಮಕ್ಕಳ ಸುದ್ದಿ ಎಲ್ಲಾ ನನಗೇನು ಗೊಂತು -ಅಂತ ನುಡದು ಧಡಾ ಧಡಾ ಅಂತ ಹೋಗಿಬಿಟ್ಟನಂತ…ಆಮ್ಯಾಲ ಡೊಂಬರ ಓಣಿಗೇ ಹೋಗಿ-ಮದಲಣಿ ಸಿಕ್ಕ ಸುಳವಿನ ಪ್ರಕಾರ-ಅಲ್ಲಿ ಒಂದ ಮನಿಯ ಬಾಗಲದಾಗ ಕೂತಿದ್ದ ಮುದಿಕಿನ್ನ ಹೋಗಿ ಕೇಳ್ಯಾರೆ…ಆ ಮುದುಕಿಯ ಸೊಸಿಯೇ ಈ ದ್ಯಾವನ ಕೀಪು ! ಇವರು ಹೋಗಿ – +‘ಯಮ್ಮಾ ಬೇ…ಇಲ್ಲಿ ಕಳ್ಳಿಗುದ್ದೀ ರಗತ ತಿಲಕದ ಸೇವಾದ ದ್ಯಾವ ಬಂದಿದ್ದ ಏನಬೇ?’ಅಂತ ಕೇಳಿದರಂತ.ಆ ಮುದಿಕಿ ‘ಹಾಂ…ದ್ಯಾವಪ್ಪಣ್ಣಾಣಿ ತಮ್ಮಗೋಳರ್‍ಯಾ…? ನೀವ ಯಾರಾ…?ಅವನ ಗೆಣೆಮೇತರೇನು…?’ಅಂತ ಕೇಳಿದ್ದಕ್ಕ ಇವರು ‘ಹೌದಬೇ… ನಾವು ಅವನ ಗೆಣೆಮೇತರು…’ ಅಂದಾರು. +ಆ ಮುದಿಕಿ ‘ಬರ್ರಿ ಬರ್ರಿ…ಕುಂಡರ್ರಿ ತಮ್ಮಗೋಳರ್‍ಯಾ…ಚಾ ಮಾಡಸತನ ಎಪ್ಪಗೋಳರ್‍ಯಾ…’ಅಂತ ಹೇಳಿ-ಇವರು ಹಾಂ -ಹೂಂ ಅಂತ ಅನ್ನೂಕಿಂತಾ ಮದಲಣಿ- ‘ಬಾಳವ್ವಾಣಿ… ದ್ಯಾವಪ್ಪಣ್ಣನ ಗೆಣೆಮೇತರು ಬಂದಾರು…ಒಂದ ಎಡ್ಡ ಕಪ್ಪ ಚಾ ಮಾಡಿಕೊಂಡು ತಾ ಯವ್ವಾಣಿ’ ಅಂತ ಹೇಳಿದಳಂತ…ಈ ಹುಡಗೋರು ಆ ಮುದಿಕಿಯ ಸೊಸೀ -ಬಾಳವ್ವ ಅನ್ನುವಾಕಿ ಮಾಡಿ ತಂದ ಚಾ ಕುಡದು-ಆ ಮುದಿಕಿ ಹೇಳಿದ ದ್ಯಾವಪ್ಪನ ಕಥಿಯನ್ನ ಕೇಳಿಕೊಂಡು ಬಂದಾರೆ…! +‘…ದ್ಯಾವಪ್ಪಣ್ಣ ಬಂಗಾರದಂತಾ ಹುಡಗ ನನ್ನ ಮಕ್ಕಳರ್‍ಯಾ…ಅಗದೀ ಅಂದರ ಅಗದೀ ಹೆಣಗಳ್ಳಿನವನು…ನನ್ನ ಅಂತೀ ಬಾಯಿತುಂಬ ದೊಡವ್ವಾಣಿ…ಅಂತ ಕರೀತಾನು.ಯಾವ ಜಲಮದ ಋಣಾನೋ ಯಾಂವಬಲ್ಲ ! ಹಿಂದಿನ ಜಲಮದ +ರುಣಾನುಬಂಧನಣಿ ಇದ್ದಿರಬೇಕು…ಇಲ್ಲಾತಂದರ ನಮ್ಮ ಕಷ್ಟ ಕಾಲಕ್ಕ ಹೇಳಿಕಳಿಸಿದಂಗ ಹೆಂಗ ಒದಗತಿದ್ದನೋ ತಮ್ಮಗೋಳರ್‍ಯಾ? ಯೋಳೆಂಟ ವರಸದ ಹಿಂದಿನ ಮಾತು… ಯೋಳೆಂಟ ವರಸದ ಹಿಂದ ಕಳ್ಳೀಗುದ್ದೀ ಓಕಳಿಗೆ ನೀರ ಗೊಜ್ಜಿಸಿಕೊಳ್ಳಾಕ ನನ್ನ ಸೊಸೀ ಹೋಗಿದ್ದಳು…ಆಗ ಇಕಿನ್ನ ನೋಡಿದನಂತ…ಇನೂ ಸಣ್ಣ ಬಾಲಿ ಆಕಿ…ಹಂತಾ ಸಣ್ಣ ವಯಸ್ಸಿನ್ಯಾಗಣಿ ಆಕೀ ಗಂಡ ತೀರಿಕೊಂಡದ್ದು ಗೊಂತಾಗಿ ಮರಕಾ ಪಟ್ಟನಂತ…ಗಂಡ ಇಲ್ಲದ ಹರೇದ ಹುಡಿಗಿ…ಓಕಳೀ ಸೀಜನ್ನದಾಗ ಹತ್ತ ಹಳ್ಳಿಗೆ ಹೋಗಿ ನೀರ ಗೊಜ್ಜಿಸಿಕೊಂಡರನಣಿ ನಮ್ಮ ಬಾಳೇ ನೋಡ್ರಿ ತಮ್ಮಗೋಳರ್‍ಯಾ! ಅದಣಿ ಹೊಟ್ಟಿಗೇ ಬಟ್ಟಿಗೇ ಆಗಬೇಕು…ಆದರ ಓಕಳಿಗೆ ನೀರ ಗೊಜ್ಜಿಸಿಗೊಳ್ಳಾಕ ಹೋದಲ್ಲೆಲ್ಲಾ ಊರ ಹಿರ್‍ಯಾರೂ ಹರೇದ ಹುಡುಗೋರೂ ಎಲ್ಲಾ …ಮಿಸುಗುಡೂ ಹಂತಾ ನನ್ನ ಸೊಸಿನ್ನ ಕೆಡಸಾಕ ಹವಣಸಾವರು…ಓಕಳೀ ಮುಗಿಸಿಕೊಂಡು ಹೊಳ್ಳಿ ಮನಿಗೆ ಬಂದಗಳಸೇ ನನ್ನ ಸೊಸೀ ಮುಸು ಮುಸೂ ಅಂತ ಅತಗೊಂತಣಿ ಅತಗೊಂತಣಿ ಎಲ್ಲಾ ಹೇಳೂದು…ನಾ ಅರೇ ಏನ ಮಾಡಲಿ?ವಯಸ್ಸ ಇದ್ದಾಗ ನಾ ಅನುಭೋಗಿಸಿದ್ದೂ ಇದನ್ನಣಿ…! ಸುತ್ತ ಹತ್ತ ಹಳ್ಳಿಗೋಳ ಓಕಳಿಗೆ ಹೋಗಿ ನೀರು ಗೊಜ್ಜಿಸಿಕೊಂಡು ಹಿರ್‍ಯಾರ ಚಟಕ್ಕೂ ಹೊಂದಿಕೊಂಡ ಬಿಟ್ಟಿದ್ದಿನಿ…ಹಣಮಂತ ದೇವರ ಸೂಳೇರಂತ ನಾವು ! ಇಷ್ಟರ ಮ್ಯಾಗ ನನ್ನ ಗಂಡನೂ ಲಗೂಟಣಿ ಸತ್ತ ಹೋಗಿತ್ತು…ಆದರ ಈ ಹುಡಿಗಿ -ನನ್ನ ಸೊಸೀ – ನಾ ಈ ಧಂಧೇಣಿ ಒಲ್ಲೇ ಯತ್ತೀ…ಅಂತ ಹಗಲೆಲ್ಲಾ ನನ್ನ ಹೆಗಲ ಮ್ಯಾಗ ಮಕಾ ಊರಿ ಅಳೂದು…ನನ್ನ ಕಳ್ಳಣಿ ಕತ್ತರಿಸಿಧಂಗ ಆಗೂದು ನೋಡ್ರಿ ತಮ್ಮಗೋಳರ್‍ಯಾ…! ಹಿಂಗಣಿ ಇಕಿ ಅಳೂದು ಮತ್ತ ನಾ ಅದಕ್ಕ ಸಮಾದಾನಾ ಹೇಳೂದೂ ನಡದಣಿ ಇತ್ತು…! ಹಂತಾದ್ದರಾಗ ಒಂದ ದಿನಾ ಈ ದ್ಯಾವಪ್ಪ ದೇವರಾಗಿ ಬಂದ! +‘ಯಾರದೀರಿಣಿ…’ ಅಂತ ಬಾಗಲದಾಗ ನಿಂತು ಕರದ…ನಾನು ಯಾರೋ ಓಕಳಿಗೆ ಅಡಿಕೀ ಕೊಡಾಕ ಬಂದಿರಬೇಕು ಅಂತ ತಿಳಕೊಂಡು -ಒಳಗ ಬರ್ರಿ…ಕುಂಡರ್ರಿ ಅಂತ ವಾಜಮೀ ಮಾಡಿದಿನಿ…ಅಂವ ಒಳಗ ಬಂದು-ನಾನು ಕಟ್ಟೀ ಮ್ಯಾಲ ಹಾಸಿದ ಗೊಂಗಡೀ ಮ್ಯಾಲ ಕುಂತ.ನಾನು-ಯಾವೂರರಿ…?ಓಕಳಿಯ ಕೊಂಡಪೂಜಿ ಎಂದಣಿ…? ನನ್ನ ಸೊಸಿನ್ನ ಮಾತ್ರ ಒಬ್ಬಾಕಿನ್ನ ಕಳಸೂದುಲ್ಲ ನೋಡರಿ…ಆಕಿ ಜೋಡೀ ನಾನೂ ಬರತನು…ಅಂತ ಹೇಳತಿದ್ದರೆ ದ್ಯಾವಪ್ಪ -ನಾ ಓಕಳಿಗೆ ಅಡಿಕೀ ಕೊಡಾಕ ಬಂದಿಲ್ಲವಾಣಿ ಅಂತಂದ.ನನಗ ಅಂವನ ಮ್ಯಾಗ ಅನುಮಾನ ಬಂತು…ಓಕಳಿಗೆ ಅಡಿಕೀ ಕೊಡಾಕ ಬಂದಿರದಿರಕ ಮತ್ತ ಇಲ್ಯಾಕ ಬಂದಿಪಾ -ಅಂತ ನಾ ಒಗರಲೇ ಕೇಳಿನಿ… ಅಂವ- ದೊಡವ್ವಾಣಿ ನಿನ್ನ ಸೊಸೀ ಇನೂ ಸಣ್ಣ ಹುಡಿಗಿ…ಆಕಿನ್ನ ಅಡ್ಡನಾಡ ಧಂಧೇಕ್ಕ ಹಚ್ಚಬ್ಯಾಡವಾಣಿ ಅಂತಂದ…ನನಗ ಸಿಟ್ಟ ಬಂತು…ನನಗ ಇದನ ಹೇಳಾಕ ಬಂದಾಂವ ನೀ ಯಾವ ನಾಡಿನ ದೊರೀಪಾಣಿ ? ಅಂದಿನಿ…ನಾ ಆಕಿಗೆ ಬಾಳೇ ಕೊಡಾಕ ತಯಾರ ಅದೀನು-ಅಂದ.ನಾನು -ಹಂಗಂದರಣಿ…? ಅಂತ ಕೇಳಿದಿನಿ.ಅಂವ-ನಾ ಆಕಿನ್ನ ಮದವೀ ಆಗತನು ಅಂದ…. ನನಗ ಇಚಿತ್ರ ಅನಿಸಿತು…ನನ್ನ ಸೊಸಿಗೆ ಮದಿವಿ ಆಗಿ ಎಡ್ಡ ಮಕ್ಕಳ ಅದಾವು…ಆ ಮಕ್ಕಳನ ಒಕ್ಕೊಟ್ಟು ,ಯಾರೂ-ಎಂತೂ ಅಂತ ಗೊಂತಿಲ್ಲದ ನಿನ್ನ ಗೂಡೇ ಆಕಿ ಬಂದಾಳಾದರೂ ಹೆಂಗ -ನಾ ಕಳಿಸೀನಾದರೂ ಹೆಂಗ? ಅಂತ ಕೇಳಿದಿನಿ…ಅದಕ್ಕ ದ್ಯಾವಪ್ಪ ಅಂದಾ-ಮಕ್ಕಳನ್ನ ಒಕ್ಕೊಟ್ಟು ಬಾ ಅಂತ ಯಾರು ಹೇಳಿದರು?ಮಕ್ಕಳನ್ನ ಯಾಕ ಒಕ್ಕೊಟ್ಟು ಬರತಾಳು?…ಆ ಮಕ್ಕಳೂ ನನ್ನೂವಣಿ ಆಗತಾವು…ಇನ್ನ ನಾನು ಯಾರೂ-ಎಂತೂ ಅಂತನ್ನೂದು ಗೊಂತ ಇಲ್ಲದಿರಕ ಹೇಳತನ ಕೇಳು-ಧರಮನಟ್ಟೀ ತೇರಿಗೆ ರಗತ ತಿಲಕದ ಸೇವಾ ಮಾಡುವ ಕಳ್ಳೀಗುದ್ದಿಯ ಗೊಂಬೀರಾಮರ ದ್ಯಾವಪ್ಪನ ಮನಿತನದ ಹುಡಗ ನಾನು…ಅಂತ ಹೇಳಿ- ಅದೆಂಥಾದೋ ಹೇಳಿದನಪಾ…ತಾನು ನಿರವಾಣೊ -ಪರಮಾಣೊ ಅದರ ಕೆಲಸಗಾರಾ ಅಂತ…ಹಂಗರಣಿ ಈ ಹುಡಗ ನೌಕರದಾರ ಅದಾನು…ನನ್ನ ಸೊಸಿನ್ನ ಮದಿವೀ ಆಗಿ ಚಲೂತಂಗೆ ನೋಡಿಕೋತಾನು…ಎಲ್ಲಾ ಪಾಡ ಆಗತೈತಿ ಅಂತ ಇಚಾರಮಾಡಿ ಅಂವಗ -ಯಾಕಾಗವಲ್ಲದೇಳಪಾ…ಹಂಗಣಿ ಆಗಲಿ…ಆದರ ನಾ ಉದ್ದವ್ವನ್ನ ಒಂದ ಮಾತ ಕೇಳಬೇಕು…ಆ ತಾಯಿ ಹೇಳಿಧಂಗ ನಾ ಕೇಳಾಕಿ …ಆ ತಾಯಿ ಅಪ್ಪಣೀ ಕೊಟ್ಟು … ಆತೂ…ಮದಿವೀ ಮಾಡು ಅಂದರ ಮದಿವೀ ಮಾಡತನು…ಅಂತ ಹೇಳಿದ್ದಕ್ಕ ಅಂವ ನನ್ನ ಮನಸ್ಸು ಮುರೀಲಾರದಣಿ-ಹೂಂ…ಹಂಗಣಿ ಆಗಲಿ…ಹಂಗಣಿ ಮಾಡ ದೊಡವ್ವಾ ಅಂತ ಹೇಳಿದ… +…ನಾನು ಅಂವ ಉದಗಟ್ಟಿಗೆ ಬಂದು ಹೋದ ಎಡ್ಡ ದಿನಕ್ಕಣಿ…ಅವತ್ತ ಶುಕ್ರಾರ ಇತ್ತ ತಮಗೋಳರ್‍ಯಾ…ಹಣ್ಣೂ -ಕಾಯೀ ತಗೊಂಡ ಗುಡೀಗಿ ಹೋಗಿ -ಪೂಜೀ ಮಾಡಿಸಿ -ಹೆಂಗವಾ ಮತ್ತಣಿ…ಹಿಂಗಿಂಗಣಿ ಒಂದ ಹುಡಗ ಬಂದು…ನನ್ನ ಸೊಸಿನ್ನ ಮದಿವೀ ಆಗತನ ಅಂತ ಅನ್ನಾಕತ್ತೇತಿ…ನಿನ್ನ ಒಂದ ಮಾತು ಕೇಳಿ ಹೇಳತನ ಅಂತ ಹೇಳೀನು…ಈಗ ಎಲ್ಲಾ ನಿನ್ನಣಿ ಕೂಡೇತಿ…ಹೆಂಗ ಮಾಡೂದು ಹೇಳು-ಅಂತ ಕೇಳಿದಿನಿ…ನಾ ಕೇಳಿದ ಯಾಳೇ ಹೆಂತಾ ಕರಗಾಲ ಯಾಳೇ ಇತ್ತೋ ಯಾಂವ ಬಲ್ಲ…! ತಣ್ಣೀರ ಆದರೂ ತಣಿಸಿ ಕುಡೀಬೇಕ ಮಗಳಣಿ…ಅಂವಸರಾ ಮಾಡಿ ಬಾಯಿ ಸುಟಗೋ ಬ್ಯಾಡ…ಮುಂದಕ ನೋಡೂಣೂ-ಅಂತ ಉದ್ದವ್ವನ ಅಪ್ಪಣಿ ಆತು…ಮುಂದಕ ನೋಡೂಣೂ-ಮುಂದಕ ನೋಡೂಣೂ ಅಂತ ಹಂಗಣಿ ಇಂದಿಗೆ ಐದ ವರಸ ಆತು! ತಾಯಿ ಯಾಕೋ ಹಂಗಣಿ ಎಳಿಸಾಕತ್ತದಾಳು…ಆಕೀ ಮನಸಿನ್ಯಾಗ ಏನ ಐತ್ಯೋ ಯಾಂವ ಬಲ್ಲ ! +…ಅಂದ ನಮ್ಮ ಮನಿಗೆ ಬಂದು ಮದಿವೀ ಮಾತು ಮಾತಾಡಿದಾಗಿನಿಂದ, ತಿಂಗಳಾ ತಿಂಗಳಾ ನನ್ನ ಮಗಾ…ಮಗಾ ಏನ ತಮ್ಮಗೋಳರ್‍ಯಾ -ಮಗನಕಿಂತಾ ಹೆಚ +ನೋಡ ಈ ದ್ಯಾವಪ್ಪ…ತಿಂಗಳಾ ತಿಂಗಳಾ ಬಂದು ಮನೀ ಖರ್ಚು ಕೊಟ್ಟು -ಎಲ್ಲಾ ಆರಾ ಭಾರಾ ನೋಡತಾನು…ಮಕ್ಕಳಿಗೆ ಅರಿಬೀ ಅಂಚಡೀ ತರತಾನೂ…ನನ್ನ ಸೊಸೀಗೇ ಮತ್ತ ನನಗಣಿ ಸೀರೀ ಕುಬಸಾ ತರತಾನೂ…ನನ್ನ ಹಿರೇ ಮಮ್ಮಗನ್ನ ಸಾಲೀ ಬರ್‍ಯಾಕ ಹಾಕ್ಯಾನು…!ನಮಗ ಓಕಳಿಗೆ ನೀರ ಗೊಜ್ಜಿಸಿಕೊಳ್ಳಾಕ ಹೋಗೂದು ಬ್ಯಾಡಂತ ಆಣೀ ಹಾಕ್ಯಾನೋ ತಮ್ಮಗೋಳರ್‍ಯಾಣಿ!… ಅಂತ ಹೇಳಿದ ಆ ಮುದಿಕಿ -ಮುಸು ಮುಸು ಅಂತ ಅತ್ತು ಕಣ್ಣೂ ಮೂಗೂ ಒರಿಸಿಕೊಂಡಳು…ತನ್ನ ಅಳುವಿನ ಒಂದು ಸರವನ್ನ ಮುಗಿಸಿದ ಆಕಿ ಮತ್ತ ತನ್ನ ಕಥೀ ಮುಂದುವರಿಸಿ ಹೇಳಲಿಕ್ಕತ್ತಿದಳು… +ತಮ್ಮಗೋಳರ್‍ಯಾ…ಸುಳ್ಳ ಹೇಳಿದರೂ ಕೇಳತೀರೀ ಖರೇ ಹೇಳಿದರೂ ಕೇಳತೀರಿ…ಅಂವ ಇಷ್ಟೆಲ್ಲಾ ನಮ್ಮ ದು ಆರಾ ಭಾರಾ ಹಿಡದ್ದಾನ ಖರೇ ಒಂದ ದಿನಾ ಸೈತ ನನ್ನ ಸೊಸಿಯ ಹಾಸಿಗೀ ಕಡೆ ಕಣ್ಣ ಹಾಕಿಲ್ಲ ನೋಡರಿ !…ರಾತ್ರೀ ಆದಗಳಸೇ ಹೊರಗ ತನ್ನ ಹಾಸಿಗೀ ಹಾಸಿಗೊಂಡು…ಬಾಗಲಾ ಹಾಕ್ಕೊಂಡು ಒಳಗಿನ ಚಿಲಕಾ ಹಾಕ್ಕೋರೀ ಅಂತ ಹೇಳಿ ತನ್ನ ಹಾಸಿಗ್ಯಾಗ ತಾ ಮಲಕೋತಾನು…ನಾನಣಿ ಬೇಕಂತ ನನ್ನ ಸೊಸೀಗೆ-ಚಿಲಕಾ ಹಾಕಬ್ಯಾಡ ಬಿಡ ತಂಗೀ ಅಂತ ಬಿಡಸತನು…ಆದರ ಒಂದ ದಿನಾ ಸೈತ ಬೆಳಗ ಆಗೂಮಟಾ ಒಳಗ ಮಕಾ ಹಾಕಿದರ ಕೇಳ ಗಂಡಮಗಾ…! ರಾತ್ರೀ ಎದ್ದು ಒಳಗ ಬರಬೇಕಾದೀತ ಅಂತ ಮನಗೂ ಮುಂದಣಿ ಕುಡ್ಯಾಕ ನೀರ ಒಯ್ದು ಇಟಗೊಂಡಿರತಾನು ! +ಅಲ್ಲ …ಈ ಉದ್ದವ್ವ ಯಾಕ ಹಿಂಗ ಮಾಡತಿದ್ದಾಳೂ ಅಂತ…?ಐದ ವರಸದಿಂದ ಒಂದಣಿ ಸಮಾ ಮುಂದಕ ಹಾಕ್ಕೋತನಣಿ ಬಂದದಾಳು…ಈ ಹುಡಗನ್ನ ನೋಡಿ ಮರಗಿ ಮರಗಿ…ಕಡಿಕ ನಾನಣಿ ನನ್ನ ಸೊಸಿಗೆ ಒಂದ ಮಾತ ಹೇಳಿದಿನಿ -ನೋಡ ತಂಗೀ…ಈ ಉದ್ದವ್ವ ನಿಮ್ಮ ಮದಿವಿಗೆ ಎಂದ ಅಪ್ಪಣೀ ಕೊಡತಾಳೋ ಕೊಡವಲ್ಲಳ್ಯಾಕ…ಆಕಿ ಅಪ್ಪಣೀ ಕೊಟ್ಟಮ್ಯಾಲ ಆಮ್ಯಾಗ ಬೇಕಾರ ಮದಿವೀ ಆಗೂವಂತೆ…ಆದರ ಅಲ್ಲೀ ಮಟಾ ಪಾಪ ಈ ಹುಡಗನ್ನ ಒಣಗಸಬ್ಯಾಡ…ಹಾಸಿಗ್ಗೆ ಕರಕೊಂಡಬಿಡೂ-ಅಂತ!ನನ್ನ ಸೊಸೀ ಅಗದೀ ಹೌಸೀಲೇ-ಅತ್ತಿ ಹಿಂಗ ಹೇಳಿದಳು… ನೀವು ಹೊರಗ ಹಾಸಿಗೀ ಹಾಸಿಗೋಬಾರದಂತ…ಒಂದಣಿ ಹಾಸಿಗೀ ಹಾಸಿಗೋರೆಂತ ಹೇಳ್ಯಾಳು-ಅಂತ ಹೇಳಿದ್ದಕ್ಕ ಅಂವ ಏನ ಹೇಳಬೇಕ ತಮ್ಮಗೋಳರ್‍ಯಾ!…ಮತ್ತ ಇಲ್ಲೀಮಟಾ ನಾ ಏನ ಮಾಡಧಂಗಾತು…? ಆ ಹಿರ್‍ಯಾರಕೂಟೇ ಮಲಕೊಂಡಿದ್ದರ ಅವರೂ ನಿನಗ ಹೊಟ್ಟಿಗೇ ಬಟ್ಟಿಗೇ ಕೊಡತಿದ್ದರಿಲ್ಲೋ…?ಮದಿವಿ ಆಗೂತನಕಾ ಏನೂ ಬ್ಯಾಡ-ಅಂತ ಹೇಳಿಬಿಟ್ಟನಂತ! ನನಗ ಸಂಕಟ ಆಗತೈತೆರ್‍ಯೋ ನನ್ನ ದೇವರಗುಡ್ಡಗೋಳರ್‍ಯಾ-ಅಂತ ಆ ಮುದಿಕಿ ಇನೊಂದು ಸರುವು ಅತ್ತು ಹಗುರುಗೊಂಡು ಮತ್ತ ಹೇಳಲಿಕ್ಕತ್ತಿದಳು… +…ಅಂವ ವಾರ ಹದನದಿನಕ್ಕೊಮ್ಮೆ ತಪ್ಪಸದಣಿ ಬಂದು ನಮ್ಮ ಆರಾ ಭಾರಾ +ಎಲ್ಲಾ…ವ್ಯವಸ್ಥಾ ಮಾಡಿ ಹೋಗತಾನು.ಅಂವ ಬಂದ ಹೋದಾಗೊಮ್ಮೆ -ಈ ಸರತೇನರಣಿ ಮುಟಿಗೊಂಡನೇನಣಿ ತಂಗೀ-ಅಂತ ಆಸೇದಿಂದ ನನ್ನ ಸೊಸೀನ್ನ ಕೇಳತನು !…ತಮ್ಮಗೋಳರ್‍ಯಾ…ಹುಡಿಗಿ ಕಣ್ಣಾಗ ನೀರು ತಂದು ಇಲ್ಲಾಣಿ…ಅಂತ ಗೋಣ ಹಾಕತೈತಿ !… ಹೂಂ …! ಆ ಉದ್ದವ್ವನ ಕಣ್ಣ ಏನ ಕುಡ್ಡ ಆಗ್ಯಾವೋ ಯಾಂವ ಬಲ್ಲ?…ಆಕಿ ಎದೀ ಕಲ್ಲ ಮಾಡಿಕೊಂಡು ಕುಂತಬಿಟ್ಟಾಳು…!ಬಾಳಾಗೋಳರ್‍ಯಾ ನೀವು ಆತನ ಗೆಣೆಮೇತರಲ್ಲಾಣಿ…? ನೀವರಣಿ ಅಂವಗ ಒಂದ ಮಾತ ಹೇಳರ್‍ಯೋ ತಮ್ಮಗೋಳರ್‍ಯಾ -ಅಂತ ಹೇಳಿದ್ದಕ್ಕ -ಈ ಹುಡುಗೋರು -‘ಆತೇಳ ಯಮ್ಮಾಣಿ…ನಾವು ಅಂವಗ ಹೇಳತೀವು…ಈಗ ಸದ್ದೇಕ್ಕಂತೀ ಅಂವ ಎಲ್ಲಿ ಅದಾನ ಹೇಳು…ಅಂತ ಕೇಳಿದ್ದಕ್ಕ ಆಕಿ -ಅಂವ ನಿನ್ನೆ ಚಂಜಿಕಣಿ ಧರಮನಟ್ಟಿಗೆ ಹೋದನಲ್ಲೋ ಬಾಳಾಗೋಳರ್‍ಯಾ …ನೀವು ಅಲ್ಲಿಗೆ ಹೋದರ ಅಂವ ಸಿಗತಾನು…ಇನಣಿ ನಾಕ ದಿನಾ -ತೇರು ಮುಗಿಯೂಮಟಾ- ಅಂವ ಅಲ್ಲೇ ಇರತಾನು ಅಂತ ಹೇಳಿದಳಂತ… +…ಉದಗಟ್ಟಿಗೆ ಹೋಗಿಬಂದ ಹುಡಗೋರು ಬೆರಗಿನಿಂದ ದ್ಯಾವಪ್ಪನ ಕಥಿಯನ್ನ ವಿವರಿಸಿದಾಗ ಊರವರ ಗೊಂದಲ ನಾನಾ ನಮೂನಿಯಾಗಿ ಹೆಚ್ಚಾತು… ಉದ್ದವ್ವನ ಪೂಜಾರಿ ಮತ್ತ ಆ ಮ್ಯಾಲ ಡೊಂಬರ ಮುದಿಕಿ ಹೇಳಿದ ಕಥಿಗಳಿಂದ ಅವರು ಕಂಗೆಟ್ಟವರಾಗಿ ಕುಂತರು…ಸೋಜಿಗಗೊಂಡರು…ದ್ಯಾವಪ್ಪನ ಕಥೀ ಅವರ ಕರಳಿಗೆ ಹೋಗಿ ಮುಟ್ಟಿಧಂಗಾತು…ಆದರೆ ಸದ್ಯದಲ್ಲಿ ಅವರು ಕರಳಿಗೆ ಹೆಚ್ಚಿನ ಮಹತ್ವ ಕೊಡುವ ಪರಿಸ್ಥಿತಿಯಲ್ಲಿ ಇರಲಿಲ್ಲ…ಈಗ ಅವರ ತೆಲಿ ಜಾಗೃತವಾಗಿ ಕೂತಿತ್ತು…ತೇರಿನ ಸೇವಾಕ್ಕ ಬರಬೇಕಾದ ಈ ದ್ಯಾವ ಇನ್ನೂ ಬರದೇ ಯಾಕೆ ಉಳದಿದ್ದಾನೂ ಅಂತನ್ನುವ ಪ್ರಶ್ನೆ ಊರಿನ ಪ್ರತಿಯೊಬ್ಬರ ತಲಿಯನ್ನ ಸತತವಾಗಿ ತಿನ್ನತಿರಬೇಕಾದರೆ ಅವನ ಬಗೆಗಿನ- ಬೆರಗೂ-ಕರುಳೂ ಹಿಂದಕ ಸರದವು…ನಿನ್ನೆ ಉದಗಟ್ಟಿಯಿಂದ ಸಂಜೀಮುಂದ ಬರಾಬ್ಬರೀ ವ್ಯಾಳ್ಯಾಕ್ಕ ಬಿಟ್ಟಾನಂತ…! ಹಂಗಾದರಣಿ ಇನ್ನೂ ಧರಮನಟ್ಟಿಗೆ ಯಾಕೆ ಬಂದು ಮುಟ್ಟಿಲ್ಲ ?ಫಟಫಟೀ ಏನರ ಕೆಟ್ಟಗಿಟ್ಟ ನಿಂತಿದ್ದಿರಬೇಕೋ ಏನೋ…? ಛೇ…ಹಂಗಾಗಿದ್ದರೆ ಇಂದರೇ ಅದನ್ನ ರಿಪೇರೀ ಮಾಡಿಸಿಕೊಂಡು ಬಂದು ಮುಟ್ಟತಿದ್ದನಲ್ಲಾ…ಇಂವ ಯಾಕ ಬಂದಿರಲಿಕ್ಕಿಲ್ಲಾ…? +…ಊರಿನ ಜನಾ ಎಲ್ಲಾ ಏನೇನೋ ಭಾವಿಸಿ ಅವರ ಎದಿಯೊಳಗ ಅಂಜಿಕಿಯ ಕರಿ ನೀರು ತುಂಬಿತು…ಮತ್ತ ಸ್ವಾಂವಜ್ಜನಣಿ ಎಲ್ಲಾರಿಗೂ ಸಮಾಧಾನಾ ಹೇಳಿದ -‘ಯಾಣಿ…ಎಲ್ಲಿಗೆ ಹೋಗಿರತಾನ ಬಿಡ್ರೆಲೇ…ಕತ್ತಿ ತೆಪ್ಪಿಸಿಗೊಂಡರ ಹಾಳ ಗ್ವಾಡಿ ಅಂತ…!ಗೋಕಾಂವ್ಯಾಗ ಲಾಜಿಂಗಿನ್ಯಾಗ ಕುಡದ ಬಿದ್ದಿರಬೇಕು…ಒಂದ ದಗದಾ ಮಾಡೂಣೂ…ನಾಳೆ ಹರ್‍ಯಾಗ ಇಬ್ಬರನ ಗೋಕಾಂವಿಗೆ ಓಡಸೂಣೂ….ಅಲ್ಲಿ ಹೋಗಿ ಹುಡಿಕಿದರ ಸಿಕ್ಕಣಿ ಸಿಗತಾನು…’.ಸ್ವಾಂವಜ್ಜನ ಮಾತು ಆ ಮಂದಿಗೆ ಪಟಾಯಿಸಲಿಲ್ಲ… ಉದ್ದವ್ವನ ಪೂಜಾರಿ ಹೇಳಿದ್ದೂ ಮತ್ತ ಡೊಂಬರ ಮುದಿಕಿ ಹೇಳಿದ್ದೂ ಅವರ ಮನಸಿಗೆ ಬಂದು-ಗೋಕಾಂವ್ಯಾಗ ಲಾಜಿಂಗಿನ್ಯಾಗ ಕುಡದ ಬಿದ್ದಿರತಾನು ಅಂತನ್ನುವ ಅವನ ಮಾತು ಅವರಿಗೆ ಪಟಾಯಿಸಲಿಲ್ಲ…ಆದರ ಈಗ ಅವರಿಗೆ ಬ್ಯಾರೇ ಯಾವ ಹಾದಿಯೂ ಕಾಣಸಲಿಲ್ಲ…ಸ್ವಾಂವಜ್ಜ ಹೇಳಿದ ಮಾತಿಗೆ-ಹೂಂ…ಅಂತ ಹೇಳಿ-ಅವರೆಲ್ಲಾ ಚಿಂತಿಯನ್ನ ತಲಿಗೆ ಕಟಿಗೊಂಡು ಮನಿಗೆ +ಭಾಗ : ಐದು +ಮರದಿವಸನಣಿ ಸಪ್ತಮಿ…ಅಂದು ಇಳಿಹೊತ್ತಿಗಂದರ ನಣದಿಯ ಗೊಂದಲಿಗ್ಯಾರ ಮ್ಯಾಳ ಧರಮನಟ್ಟಿಗೆ ಬರಬೇಕು…ಆದರೆ ಯಾರೊಬ್ಬರಿಗೂ ಅವರ ನೆನಪು ಬರಲಿಲ್ಲ…ಊರೊಳಗಿನ ಎಲ್ಲರ ಮನಿಸಿನ್ಯಾಗ ಈಗ ಕೇವಲ ರಗತ ತಿಲಕದ ದ್ಯಾವಪ್ಪ ಒಬ್ಬನೇ ಇದ್ದ ! +…ಬೆಳಿಗ್ಗೆ ಏಳತಿದ್ದಂಗೇ ಗೋಕಾಂವಿಗೆ ಹೋಗಿ ದ್ಯಾವನ್ನ ಹುಡುಕಲಿಕ್ಕೆ ಹೇಳಿದ್ದ ಹುಡುಗೋರು ಹೋಗ್ಯಾವೋ ಇಲ್ಲೋ ಅಂತ ನೋಡಲಿಕ್ಕೆ ಸ್ವಾಂವಜ್ಜ ಲಗೂಟ ಎದ್ದು ಮಕಾ ತೊಳಕೊಂಡವನೇ ಅವರ ಮನಿಗೋಳ ಕಡೆ ನಡದ…ಮದಲ ಕಿಲ್ಲೇದಾರ ಚಿಂತಪ್ಪನ ಮನೀ ಹಂತೇಕ ಹೋಗಿ ನೋಡಿದರೆ ಅಂವ ಅಲ್ಲಿ ಹೊರಗಿನ ಕಟ್ಟಿಯ ಮ್ಯಾಲೆ ಇನ್ನೂ ಮುಸಕು ಹಾಕಿಕೊಂಡು ಢುಸ್…ಅಂತ ಬಿದ್ದಾನೆ!…‘ಚಿಂತಪ್ಪಾಣಿ…ಏ ಚಿಂತಪ್ಪಾಣಿ…’ ಅಂತ ಒದರಿದರೆ ಅಂವನೇನು ಮಿಸಿಕ್ಯಾಡಲಿಲ್ಲ…ಸ್ವಾಂವಜ್ಜ ಅವನನ್ನ ಎಬ್ಬಸಲಿಕ್ಕೆ ಪಾಡು ಪಡತಾ ಇದ್ದದ್ದನ್ನ ಚಿಂತಪ್ಪನ ಅವ್ವ -ದುಂಡವ್ವ ಒಳಗಿನಿಂದ ಬಂದು ನೋಡಿದಳು…ಆಕಿ-ನೋಡ ಮಾವಾ…ಹೊತ್ತ ಏರೂಮಟಾ ಹಿಂಗ ಮುಸಕ ಹಾಕೊಂಡ ಬೀಳತಾನು…ಇಂವ ಏನ ಬಾಳೇ ಮಾಡತಾನೋ ಯಾಂವ ಬಲ್ಲ…! ಅಂತ ಒಟಾ ಒಟಾ ಅನಕೋತ ಅವನ್ನ ಅಳಿಗ್ಯಾಡಿಸಿ ಎಬ್ಬಿಸಿದಳು…ಅಂವ ಎದ್ದು ಕೂತು ಕಣ್ಣು ತಿಕ್ಕೋತಿದ್ದರ ಸ್ವಾಂವಜ್ಜ -‘ಅಲ್ಲೋ ತಮ್ಮಾಣಿ…ಇನಣಿ ಎಷ್ಟೊತ್ತು ಮಲಗಾಂವ?… ಹರ್‍ಯಾಗ ಲಗೂಟಣಿ ಎದ್ದು ಗೋಕಾಂವಿಗೆ ಹೋಗಬೇಕಂತ ಹೇಳಿದ್ದಿಲ್ಲಾ…ಮರತಿ ಏನ?ಏಳು…ಲಗೂಟಣಿ ಹೊಂಡರಿ…ನೀ ಎದ್ದ ತಯಾರ ಆಗು.ಅಷ್ಟರಾಗಣಿ ನಾ ಆ ಬಾಳ್ಯಾನ್ನ ಎಬಿಸಿ ಹೊಂಡಸತನು…’ ಅಂತ ಸ್ವಾಂವಜ್ಜ ಹೇಳತಿದ್ದಂಗಣಿ ‘ಹಾಂ ಯಜ್ಜಾಣಿ…ಹತ್ತ ಮಿನಿಟಿನ್ಯಾಗಂದರ ತಯಾರ ಆಗತನು.ನೀ ಬಾಳ್ಯಾನ್ನ ಹೊಂಡಿಸಿ ಇಲ್ಲಿಗೇ ಕಳಸು…’ ಅಂತಂದು ಚಿಂತಪ್ಪ ಹಾಸಿಗೀ ಸುತಿಗೊಂಡು ಒಳಗ ಹೋದ… +…ಸ್ವಾಂವಜ್ಜ ಹುರಕಡ್ಲ್ಯಾರ ಬಾಳ್ಯಾನ ಮನಿಗೆ ಹೋದರ ಅಲ್ಲಿಯೂ ಇದೇ ನಡಿಯಿತು…‘ನಿಮಗ ಒಟ್ಟಣಿ ಜವಾಬದಾರೀ ಅನ್ನೂದ ಇಲ್ಲ ನೋಡು…ಲಗೂಟಣಿ ತಂಪೊತ್ತಿನ್ಯಾಗಣಿ ಗೋಕಾಂವಿಗೆ ಹೋಗಿ ಹೊಳ್ಳಿ ಬರ್ರೆಪಾ ಅಂತ ಹೇಳಿದರ ಹೊತ್ತೇರೂ ಮಟಾ ಮಲಕೊಂಡೀರಿ…ಹೂಂ .ಏಳು…ಇನ್ನಾರ ಲಗ್ಗ ತಯಾರ ಆಗಿ ಹೊಂಡು…ಆ ಚಿಂತ್ಯಾನ್ನ ಎಬ್ಬಿಸಿ ಹೊಂಡಾಕ ತಯಾರ ಮಾಡಿ ಬಂದದಣಿನು…ನೀನೂ ಲಗೂಟಣಿ ಹೊಂಡು…ನಾ ಗುಡೀಮಟಾ ಹೋಗಿ ಬರತನು.ಅಷ್ಟರಾಗಣಿ ನೀವು ಹೊಂಟಿರಬೇಕ ನೋಡ್ರಿ…’ ಅಂತ ತಾಕೀತು ಮಾಡಿ ಹೊಂಡತಿರಬೇಕಾದರೆ, ಅಲ್ಲೇ ತಲಬಾಗಲದಾಗ ಥಳೀ- ರಂಗೋಲೀ ಹಾಕತಿದ್ದ ಬಾಳ್ಯಾನ ಅವ್ವ-ಬಸವ್ವ – ‘ನಿಂದರ ಮಾವಾಣಿ…ನಿನ್ನ ಮಮ್ಮಗಳು ಚಾ ಕಾಸಾಕತ್ತದಾಳು…ಚಾ ಕುಡದಣಿ ಹೋಗೂವಂತೇ…ಕುಂಡರ್ರು ’ ಅಂತ ಹೇಳಿದಳು.ಸ್ವಾಂವಜ್ಜ ‘ಏಣಿ ಬ್ಯಾಡಬಿಡ ತಂಗೀ…ಇನೂ ದಗದ ಬಾಳ ಅದಾವು…’ ಅಂತ ಅನತಿದ್ದರೆ ಆಕಿ ‘ ಇಲ್ಲ ನಿಂದರ ಮಾವಾಣಿ…ತಡಾ ಏನೂ ಆಗೂದುಲ್ಲ . ಕುಂಡರು…ಆಗೇ ಬಿಟ್ಟಣಿತಿ…’ ಅಂತ ಒತ್ತಾಯ ಮಾಡಿ, ಅತ್ತ ಒಳಗ ಚಹಾ ಮಾಡತಿದ್ದ ತನ್ನ ಸೊಸಿಗೆ ‘…ಏ ಸತ್ತೆವ್ವಾಣಿ…ಸ್ವಾಂವಜ್ಜ ಮಾವ ಬಂದಾನು…ಒಂದೀಟಣಿ ಅಂವಸರದಾಗ ಅದಾನು…ಲಗೂಟಣಿ ಒಂದ ಸಿಂಗಲ್ಲ ಚಾ ತಗೊಂಡ ಬಾ ಯವ್ವಾ…’ ಅಂತ ಒದರಿ ಹೇಳಿದಳು.ಸ್ವಾಂವಜ್ಜ ‘ಹೂಂ…ಕೊಡವಾ ಹಂಗರಣಿ…ಕುಡದಣಿ ಹೋಗತನು ’ ಅಂತ ಅನಕೋತ ಅಲ್ಲೇ ಹೊರಗಿನ ಕಟ್ಟಿಯ ಮ್ಯಾಲೆ ಕುಂತ. +***** +ಮುಂದುವರೆಯುವುದು +‘ಚುತುರ್ಥಾಶ್ವಾಸಂ’ ನಾನೂ ನನ್ನ ಹೆಂಡತಿ ಅನ್ನಪೂರ್ಣ ಸದರೀ ಗ್ರಾಮದಲ್ಲಿ ಗದಗಿನ ಪಂಚಾಕ್ಷರಿ ಕಂಪನಿಯವರು ಬೆಳ್ಳಂಬೆಳಗು ಆಡಿದ ಹೇಮರೆಡ್ಡಿ ಮಲ್ಲಮ್ಮ ನಾಟಕ ನೋಡಿ ಬಂದ ಮೇಲೇಯೇ ಶಾಮಣ್ಣನ ಕುರಿತ ಕಾದಂಬರಿಗೆ ಹೊಸ ಆಯಾಮ ದೊರಕಿದ್ದು ಅದನ್ನು […] +‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […] +ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_557.txt b/Kannada Sahitya/article_557.txt new file mode 100644 index 0000000000000000000000000000000000000000..e7ca4df1210fa5079ded9039cbbcdf8f23226b29 --- /dev/null +++ b/Kannada Sahitya/article_557.txt @@ -0,0 +1,69 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +ಮೂರು ತಿಂಗಳು +ಬೇಸರವ ನೀಗಿಕೊಳ್ಳಲು ಬಂದು ತಂಗಿದಳು +ಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ. +ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ, +ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈ +ಹಾಗೆಯೇ ನಾಲ್ಕು ದಿನ ಸೈ ; +ಸುರುವಾಯ್ತು ರಗಳೆ +ಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … … +ಲಟಿಕೆ ಮುರಿದು ಚಿಟುಕು ಮುಳ್ಳಾಡಿಸುವ +ಸುಮ್ಮಸುಮ್ಮನೆ ಕೆಮ್ಮಿ ಕ್ಯಾಕರಿಪ ತಾಪ +ಗಿಡಬಳ್ಳಿಯನು ಹಿಡಿದು ಅಲ್ಲಾಡಿಸಿತು ಅವಳ ನಿಟ್ಟುಸಿರು ಶಾಪ! +ಅಣಕಿಸುತ ಗಾಳಿಯಲಿ ಹಾರಿಹೋದವು ಬತ್ತಿದೆಲೆಯ ಬಳಗ +ಗದಗುಟ್ಟಿ ನಡುಗಿ ಕಟಕಟ ಹಲ್ಲು ಕಡಿದರು ಮಂದಿ +ಮಾತು ಮಾತಿಗೆ ಅವಳು ಮಾತ್ರ, “ಏನಂದೀ?” +ಸುಕ್ಕುಗಟ್ಟಿದ ಮುಖಕೆ ಸೆರಗೆಳೆದು ಕೋಲೂರಿ +ಹೊರಟುಬಿಟ್ಟಳು, ಒಮ್ಮೆಲೇ ಗಂಟು ತಲೆಗಿಟ್ಟು +ಏನವಳ ಸೆಡವು ಸಿಟ್ಟು! +-೨- +ಮಾವು ಹೂವಿನ ಕೊಡೆ ವಿಮಾನದಿಂದಿಳಿತಂದು +ಬಂದ ಪ್ರೀತಿಯ ಕಂದ; +“ಕುವೂ, ಜಗ್ ಜಗ್, ಪುವ್ವೀಟುವಿಟ್ಟವೂ “ +ಕಾಲೇಜು ಕಟ್ಟೆಯ ಹತ್ತಿ ಮೊದಲ ಸಲ ಊರಿನೆಡೆ +ಕನಸಿನಲ್ಲಿಯೆ ನಡೆದು ಬಂದಿಹನು ಹುಡುಗ +ಎತ್ತರೆತ್ತರದಲ್ಲಿ ಹಾರುತಿದೆ ಗಿಡುಗ! +ದಿನದಿನಕು ಕನಸುಗಳು ಚಿಗುರಿ ತೋರಣಕಟ್ಟಿ +ಬರೆದಿಹವು ‘ಸುಸ್ವಾಗತ’ +ಕಾವ್ಯ ಕಾದಂಬರಿಯ ನಾಯಕರ ಜೊತೆಯಲ್ಲಿ +ನಿತ್ಯ ಸ್ವಗತ. +ಕೋಗಿಲೆಯ ಧ್ವನಿಗೆದೆಯ ಬಾಗಿಲವೆ ತೆರೆದಿಹುದು +ಮನದ ಮೇಲಿನ ಮಹಡಿಯಲ್ಲಿ ನಡೆದಿದೆ ಸರಸಸಂಗೀತಗೋಷ್ಠಿ! +ನುಗ್ಗೆ ಹೂವಿಗೆ ಲಗ್ಗೆಯಿಟ್ಟು ಮೊರೆದಿವೆ ದುಂಬಿ +ಕಣ್ಣೆದುರು ಕುಣಿಯುತಿವೆ ಕರ್ಪೂರಗೊಂಬಿ +ಹೋಳಿಹುಣ್ಣಿವೆ ಬಂತು ತಾಳಿ ಎನುತಿದೆ ಗಾಳಿ +ತಾಳಲಾರದು ಬಿಸಿದು ರಕ್ತನಾಡಿ! +-೩- +ಗಾಳಿ ಗಿರಿಗಿರಿ ಬುಗುರಿಯಾಡಿ ಹಕ್ಕಲುಹೊಲದ +ಹೊಟ್ಟು ರವುದೆಯ ತೊಟ್ಟು ಆಕಾಶಕೇರಿ +ಮೋಡನೋಡಕು ಹಾಯ್ದು ಝಾಡಿಸಿದೆ, ನೆರೆದಿರುವ +ಸಂತೆಯಲಿ ಬಿಡಬಹುದೆ ಇಂಥ ಹೋರಿ! +ಹೊತ್ತೇರಿದಂತೆ ನೆತ್ತಿಗೆ ಚುರುಕು ಬಡಿದಿತ್ತು +ತಳಿರು ನಾಲಗೆ ಚಾಚಿ ತೇಕುತಿತ್ತು +ಮರದ ಕೆಳಗಡೆ ನೆಳಲು ಮೈಚಾಚಿ ಮಲಗಿತ್ತು +ಬಿಸಿಲುಗುದುರೆಯು ವ್ಯರ್‍ಥ ಓಡುತಿತ್ತು. +-೪- +ಬಂತು ಮಳೆ ಹನಿಯಾಗಿ +ಜೀವವಾಹಿನಿಯಾಗಿ +ಬಾನ ಕೊಡುಗೈದೊರೆಗೆ ಇಳೆಯು ಋಣಿಯಾಗಿ; +ಹಳ್ಳ ಹೊಳೆ ಹಾಡಿದವು ಜಲಪಾತವಾಗಿ +ಗಿಡಗಿಡದ ನೆತ್ತಿಯನು ಅಡರಿ ಕುಳಿತಿಹ ಜಗದ ಧೂಳು ತೊಡೆದು +ಧಾರೆ ಎರೆಯುತ ಬಂದ ನವನೀರದ! +ಪುಲಕಗೊಂಡಳು ಪ್ರಕೃತಿ +ಹಸಿರುಟ್ಟು ಹೂವಿನಾರತಿಯೆತ್ತಿ ನಿಂತಿಹಳು +ಬಾನುದ್ದ ಬೆಳೆದಂತೆ ಜಗದ ಪ್ರೀತಿ! +ಒಸಗೆಯಾಯಿತು; ನರನ ಒಂದೊಂದು ಕೃತಿ ವಿಕೃತಿ +ಋತು‌ಋತುವಿನೊಡನಿಂತು ಬೆಸುಗೆಯಾಗಿ. +ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! ***** +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_558.txt b/Kannada Sahitya/article_558.txt new file mode 100644 index 0000000000000000000000000000000000000000..21714eae6a7f3e6d6f6bdb70f96f6276d1541cc2 --- /dev/null +++ b/Kannada Sahitya/article_558.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪತ್ರಿಕಾ ಹೇಳಿಕೆ : ೧ +ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ ನನ್ನ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೭೪ರಲ್ಲಿ ಎಂದು ಕಾಣುತ್ತದೆ. ಬರೆದೊಂದು ಲೇಖನವಿದೆ. ಗೌಡರನ್ನು ಬಲ್ಲವರೆಲ್ಲರೂ ಈ ಲೇಖನ ಓದಿದ್ದಾರೆ. ವ್ಯಕ್ತಿಚಿತ್ರವನ್ನು ಇಷ್ಟು ತೃಪ್ತಿಯಾಗುವಂತೆ ನಾನು ಬರೆದಿದ್ದಿಲ್ಲ. ಕಾರಣ ಗೌಡರ ಬಗ್ಗೆ ನನಗಿದ್ದ ಗೌರವ ಮತ್ತು ಆತ್ಮೀಯತೆ ಲೇಖನದಲ್ಲಿ ಮೂಡಿರುವ ಕ್ರಮ. ನನ್ನ ಮೊದಲ ಕಾದಂಬರಿ ಸಂಸ್ಕಾರವೂ ಗೋಪಾಲಗೌಡರಿಗೆ ಅರ್ಪಿತವಾದ್ದು. ಆದ್ದರಿಂದ ಕಾದಂಬರಿಯ ಸೋಗಿನಲ್ಲಿ ಅವರ ಜೀವನ ಚರಿತ್ರೆಯನ್ನು ನಾನು ಬರೆಯಬೇಕಾದ ಅಗತ್ಯವಿಲ್ಲ. ಖುದ್ದಾಗಿ ಅವರ ಜೀವನ ಚರಿತ್ರೆಯನ್ನು-ಅದರ ಎಲ್ಲ ವಾಸ್ತವತೆಯಲ್ಲೂ ಬರೆದು-ಅವರೆಷ್ಟು ದೊಡ್ಡವರೆಂದು ನಾನು ಹೇಳಬಲ್ಲೆ. ದೊಡ್ಡವರ ಜೀವನ ಚರಿತ್ರೆ ಕೀರ್ತನೆಯಾಗಬೇಕಿಲ್ಲ; ವಿಮರ್ಶಕ ದೃಷ್ಟಿಯಲ್ಲೂ ತನ್ನ ಸತ್ವವನ್ನು ದೊಡ್ಡ ಜೀವನ ಸಾರಬಲ್ಲುದು. ಯಾವ ವ್ಯಕ್ತಿಯನ್ನಾಗಲೀ ಮಹಾತ್ಮಗಾಂಧಿಯನ್ನಾಗಲೀ ಸರ್ವಗುಣ ಸಂಪನ್ನನೆನ್ನುವುದು ಸತ್ಯ ದೂರವಷ್ಟೇ ಅಲ್ಲ ಮಾನವತೆಯ ಮಿತಿಯಲ್ಲೂ ದೈವಿಕವಾಗಬಲ್ಲ ಚೈತನ್ಯದ ಬಗ್ಗೆ ನಮಗಿರುವ ಅಜ್ಞಾನದ ಪ್ರದರ್ಶನ. ಭಾರತೀಯರು ಬರೆಯುವ ಜೀವನ ಚರಿತ್ರೆಯಲ್ಲಿ ಇದೊಂದು ಊನವೆಂದೇ ಹೇಳಬೇಕು. ಗಾಂಧೀಜಿಯನ್ನು ಬಿಟ್ಟರೆ ಇನ್ನಾರೂ ತಮ್ಮ ಆತ್ಮ ಚರಿತ್ರೆಯಲ್ಲೂ ನಿಷ್ಠುರ ಸತ್ಯ ಹೇಳಿಕೊಳ್ಳುವುದಿಲ್ಲ. +ಅವಸ್ಥೆ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಮಾತ್ರವಲ್ಲದ್ದರಿಂದಲೇ ಅದು ತನ್ನ ಕೊನೆಯ ಪುಟಗಳಲ್ಲಿ ಜೆಪಿಯಂಥವರ ಕೊನೆಯನ್ನೂ ಧ್ವನಿಸುತ್ತದೆಂದು ನಾನು ತಿಳಿದಿದ್ದೇನೆ. ಆದ್ದರಿಂದಲೇ ಹಿಂದಿಯಲ್ಲಿ ಅನುವಾದಿತವಾದ ಈ ಕೃತಿ ಹಲವು ತರುಣ ಸಮಾಜವಾದಿಗಳಿಗೆ ಪ್ರಿಯವಾಗಿದೆ. ಯಾವ ಕೃತಿಯಾಗಲಿ ಕನ್ನಡಿಯಂತೆ ನೋಡಿಕೊಂಡವರ ಮುಖವನ್ನು ತೋರಿಸುತ್ತದೆ-ಆಳದಲ್ಲಿ ಮುಚ್ಚಿರುವ ನಮ್ಮ ನಮ್ಮ ಮುಖಗಳನ್ನು. +ನಾನು ಸಾಮಾನ್ಯವಾಗಿ ನನ್ನ ಕೃತಿಗಳನ್ನು ಸಮರ್ಥಿಸಿಕೊಂಡು ಮಾತಾಡುವುದಿಲ್ಲ. ಆದರೆ ಈಗ ಅವಸ್ಥೆ ಸಿನಿಮಾ ಮಾತ್ರವಲ್ಲದೆ ಕಾದಂಬರಿಯನ್ನೂ ಬಹಿಷ್ಕರಿಸಬೇಕೆಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಕೇವಲ ಕಾನೂನಿನ ಚೌಕಟ್ಟಿನಲ್ಲಿ ನಿರ್ಧರವಾಗಲಾರದು. ಯಾಕೆಂದರೆ ಕಾನೂನು ಕೂಡ ಕೃತಿಯ ಸ್ವರೂಪವೇನೆಂದು ತಿಳಿದು ವ್ಯವಹರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕನ್ನಡದ ಪ್ರಜ್ಞಾವಂತ ವಿಮರ್ಶಕರು ಮತ್ತು ಓದುಗರು ನನ್ನ ಕಾದಂಬರಿ ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಂತೆ ಕಾಣುತ್ತದೋ ಕಂಡರೆ ಅದು ಅವಹೇಳನಾತ್ಮಕ ಉದ್ದೇಶದ ಜೀವನ ಚರಿತ್ರೆಯಂತೆ ಕಾಣುತ್ತದೋ ಅಥವಾ ಈ ಎರಡೂ ಅಲ್ಲದೆ ನನ್ನ ಕೃತಿ ಒಂದು ಸಾರ್ವತ್ರಿಕ ಸತ್ಯವನ್ನು ಧ್ವನಿಸಬಲ್ಲ ತಾತ್ವಿಕ ರಾಜಕೀಯ ವಸ್ತುವನ್ನೊಳಗೊಂಡ ಕೃತಿಯೋ ಎಂಬುದನ್ನು ಚರ್ಚಿಸಿ ನಿರ್ಧರಿಸಬೇಕು. ಮೊದಲನೆಯದಾದರೆ ನಾನು ಸೋತಂತೆ ಎರಡನೆಯದಾದರೆ ನಾನು ಹೀನರೀತಿಯಲ್ಲಿ ನಡೆದುಕೊಂಡಂತೆ. ಮೂರನೆಯದಾದರೆ ನಾನು ಯಶಸ್ವಿಯಾದಂತೆ. +ಅವಸ್ಥೆ ನನ್ನಿಂದ ಹುಟ್ಟಿದ್ದು ಮೂರನೆಯ ರೀತಿಯ ಕೃತಿಯಾಗಿ ಎಂದು ನಾನು ತಿಳಿದಿದ್ದೇನೆ. ಎಲ್ಲ ನೈಜ ಕೃತಿಗಳೂ ಅವತಾರಗಳು. ಆದರೆ ಅರ್ಧಾವತಾರಗಳೂ ಇರುತ್ತವೆ. ಪೂರ್ಣಾವತಾರಗಳೂ ಇರುತ್ತವೆ. ಕಾವ್ಯದ ಸೂಕ್ಷ್ಮದೇಹ ಪೂರ್ಣಾವತಾರಕ್ಕೆ ಅಗತ್ಯ. ಸಮಕಾಲೀನ ವಸ್ತುವನ್ನೊಳಗೊಂಡ ಕಾದಂಬರಿಯೊಂದು ಗದ್ಯದಲ್ಲಿ ಈ ಸೂಕ್ಷ್ಮತೆ ಪಡೆದುಕೊಳ್ಳುವುದು ಎಷ್ಟು ಕಷ್ಟವೆಂದು ತಿಳಿದವರು ನನ್ನ ‘ಅವಸ್ಥೆ’ಯ ಬಂಧವನ್ನೂ ವಿವರದ ಪ್ರಪಂಚವನ್ನೂ ಅದರ ಸದ್ಯತನವನ್ನೂ, ಅದರ ಕನಸುಗಾರಿಕೆಯನ್ನೂ ಅರ್ಥ ಪಡೆದುಕೊಂಡಾರು. +ಪತ್ರಿಕಾ ಹೇಳಿಕೆ : ೨ +ಪ್ರತಿಯೊಂದು ಯಶಸ್ವಿಯಾದ ಸಾಹಿತ್ಯ ಕೃತಿಯೂ ಒಂದು ಅವತಾರ. ಕಲಾವಿದನ ಮನಸ್ಸಲ್ಲಿ ಮೂಡಿದ ಕಲ್ಪನೆ ಒಂದು ವಿಶಿಷ್ಟ ಜಾಗದ, ಕಾಲದ ವ್ಯಕ್ತಿಯ ರೂಪ ಪಡೆಯುತ್ತದೆ. ಆದರೆ ಈ ಅನುಭವ ಕೇವಲ ಒಂದು ಪ್ರದೇಶಕ್ಕೂ, ಕಾಲಕ್ಕೂ ವ್ಯಕ್ತಿಗೂ ಸೀಮಿತವಾಗಿರುವುದಿಲ್ಲ. ಜೀವನ ಚರಿತ್ರೆಗೂ ಕಲಾಕೃತಿಗೂ ನಡುವಿರುವ ಮುಖ್ಯ ವ್ಯತ್ಯಾಸ ಇದೇ. +ಮ್ಯಾಕ್‌ಬೆತ್‌ನ ಜೀವನಚರಿತ್ರೆಯನ್ನು ಯಾರಾದರೂ ಬರೆದಿದ್ದಲ್ಲಿ ಅದು ಒಬ್ಬ ಮ್ಯಾಕ್‌ಬೆತ್ ಎಂಬ ಮಹತ್ವಾಕಾಂಕ್ಷಿಯಾದ ಕೊಲೆಗಾರನ ಚರಿತ್ರೆಯಾಗುತ್ತಿತ್ತು. ಆದರೆ ಶೇಕ್ಸ್‌ಪಿಯರನ ಮ್ಯಾಕ್‌ಬೆತ್ ಓದುವಾಗ ನಾವು ಮ್ಯಾಕ್‌ಬೆತ್‌ನ ಅನುಭವ ನಮ್ಮದೇ ಎನ್ನುವಂತೆ ಓದುತ್ತೇವೆ. ಕೊಲೆಗಾರನಲ್ಲದ ಓದುಗನೂ ಕೊಲೆಗಾರನ ಮನೋಯಾತನೆಯನ್ನು ಸಹಾನುಭೂತಿಯಲ್ಲಿ ಅನುಭವಿಸುತ್ತಾನೆ. ಇದನ್ನೇ ಭಾರತೀಯ ಮೀಮಾಂಸಕಾರರು ಸಾಧಾರಣೀಕರಣವೆನ್ನುವುದು ವಿಶಿಷ್ಟ ರೂಪ ಪಡೆದು ಅವತಾರವಾದ ಕಲಾವಿದರ ಅನುಭವ ಸಹೃದಯನ ಅನುಭವದಲ್ಲಿ ಸಾರ್ವತ್ರಿಕ ಸತ್ಯವಾಗುವ ಕಲೆಯ ಸೋಜಿಗ ಇದು. +ನನ್ನ ಒಂದು ಕೃತಿ ಪಡೆದುಕೊಂಡ ರೂಪ ಅಲ್ಲಿ ಇಲ್ಲಿ ಅವರಿವರನ್ನು ಹೋಲಿಸಿದರೆ ಅದು ಉದ್ದೇಶಪೂರ್ವಕವಾದ್ದಲ್ಲ. ಲೇಖಕ ಪಡೆದ ಅನುಭವದ ವಿವರಗಳು ಕೃತಿಯೊಳಗೆ ಹಾಗೆ ಅಪ್ರಜ್ಞಾಪೂರ್ವಕವಾಗಿ ಬಂದಿರಬಹುದು. ಆದರೆ ಈ ಕೃತಿ ನೋಡುವ ಅನುಭವ ಓದುಗನಿಗೆ ಒಂದು ಜೀವನ ಚರಿತ್ರೆಯನ್ನು ಓದುವ ಕುತೂಹಲದ್ದಲ್ಲ : ಈ ಅನುಭವ ತನ್ನದೇ ಆಗಬಹುದಿತ್ತು ಎಂಬ ತಾದಾತ್ಮ್ಯದ್ದಾಗಿರುತ್ತದೆ ಓದುಗನ ಪಾಲಿಗೆ. ಯಾಕೆಂದರೆ ಸಾಹಿತ್ಯಕೃತಿ ಮುಟ್ಟುವುದು ಓದುಗನ ಪ್ರಜ್ಞೆಯ ತಳಾತಳವನ್ನೂ ಕೂಡ; ಯಾಕೆಂದರೆ ಅದು ಹುಟ್ಟಿದ್ದೂ ಅಲ್ಲಿಂದಲೇ. +ಪತ್ರಿಕಾ ಹೇಳಿಕೆ : ೩ +ನಾನು ಗೌರವದಿಂದ ಕಾಣುತ್ತ ಬಂದಿರುವ ಶ್ರೀಮತಿ ಗೋಪಾಲಗೌಡರಿಗೆ ‘ಅವಸ್ಥೆ’ ಕಾದಂಬರಿಯಿಂದಲೂ, ಅದರಿಂದ ಆಧಾರಿತವಾದ ಚಲನಚಿತ್ರದಿಂದಲೂ ಮನಸ್ಸಿಗೆ ಆಘಾತವಾಗಿದೆ ಎಂದು ಕೇಳಿ ನನಗೆ ತುಂಬಾ ನೋವಾಗಿದೆ. ನನ್ನ ಕಾದಂಬರಿ ೧೭೮ರಲ್ಲಿ ಪ್ರಕಟವಾದಾಗ ಶ್ರೀಮತಿ ಗೋಪಾಲಗೌಡರು ನನಗೆ ಏನೂ ಹೇಳಿರಲಿಲ್ಲ. ಪ್ರಾಯಶಃ ಪತ್ರಿಕೆಗಳು ಸಿನಿಮಾ ಬಗ್ಗೆ ಬರೆಯುವಾಗ ‘ಅವಸ್ಥೆ’ಯ ನಾಯಕನಿಗೂ ಗೋಪಾಲಗೌಡರಿಗೂ ಕೆಲವು ಸಾಮ್ಯತೆಗಳಿವೆ ಎಂದು ಹೇಳಿದ್ದರಿಂದ ಅವರ ಮನಸ್ಸು ಕೆಟ್ಟಿರಬಹುದು. ಇದಕ್ಕೆ ನಾನಾಗಲೀ ಚಿತ್ರದ ತಯಾರಕರಾಗಲೀ ಜವಾಬ್ದಾರರಲ್ಲ. ನನ್ನ ಕೃತಿ ಸತ್ವಪೂರ್ಣವಾಗಿದ್ದಲ್ಲಿ ಅದು ಗೋಪಾಲಗೌಡರ ಬಗ್ಗೆ ಮಾತ್ರವಲ್ಲ ಆದರ್ಶವಾದಿಯಾದ ಯಾವ ಧೀಮಂತ ಸಮಾಜವಾದಿ ರಾಜಕಾರಿಣಿಯ ಬಗ್ಗೆಯೂ ಇರಬಹುದು ಎನ್ನಿಸಬೇಕು. ಎಲ್ಲ ಒಳ್ಳೆಯ ಕೃತಿಗಳೂ ಹೀಗೆ ಸಾರ್ವತ್ರಿಕ ವ್ಯಾಪ್ತಿ ಪಡೆಯುತ್ತದೆ. ‘ಅವಸ್ಥೆ’ಯೂ ಹಾಗೆನ್ನಿಸಬೇಕೆಂದು ನನ್ನ ಆಸೆ. ಈಗ ಶ್ರೀಮತಿ ಗೋಪಾಲಗೌಡರಿಗೆ ನೋವಾಗಿರುವುದು ಮಾತ್ರವಲ್ಲ; ನನ್ನ ಕಾದಂಬರಿಗೂ ಅನ್ಯಾಯವಾಗಿದೆ. ಯಾಕೆಂದರೆ ‘ಅವಸ್ಥೆ’ ಒಂದು ಕಲಾಕೃತಿಯೆಂದು ನಾನು ತಿಳಿದಿದ್ದೇನೆ. ಕೃಷ್ಣ ಮಾಸದಿ ನನ್ನ ಕೃತಿಯನ್ನು ಬಹಳ ಇಷ್ಟಪಟ್ಟು ತಯಾರಿಸಿದ ಸಿನಿಮಾವೂ ಒಂದು ಕಲಾಕೃತಿಯೆಂದು ನಾನು ತಿಳಿದಿದ್ದೇನೆ. ಗೌಡರನ್ನು ಬಲ್ಲ ನಾನು ಇಷ್ಟನ್ನು ಹೇಳಬಯಸುತ್ತೇನೆ.: ಅವರು ಬದುಕಿದ್ದರೆ ಅವರ ಹೆಸರಲ್ಲಿ ಎದ್ದಿರುವ ಈ ವಿವಾದದಿಂದ ಅವರಿಗೆ ನೋವಾಗುತ್ತಿತ್ತು. ಯಾಕೆಂದರೆ ಕಲಾಕೃತಿಯ ಸ್ವರೂಪ ಬಲ್ಲವರಾಗಿದ್ದರು ಅವರು. ನನ್ನ ಕಾದಂಬರಿಯ ನಾಯಕ ಉದಾತ್ತನಾದ ವ್ಯಕ್ತಿ. ಆದರೂ ಕೂಡ ನಾನು ಗೋಪಾಲಗೌಡರ ಜೀವನ ಚರಿತ್ರೆಯಾಗಿ ‘ಅವಸ್ಥೆ’ಯನ್ನು ಬರೆದದ್ದಲ್ಲವೆಂದು ಹೇಳಬಯಸುತ್ತೇನೆ. +೧೬೪ನೇ ಇಸವಿ-ಇಂಗ್ಲೆಂಡ್‌ನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಲಾರೆನ್ಸ್ ಹುಟ್ಟಿದ ಊರಿಗೆ ಹೋಗಿದ್ದೆ. ಒಬ್ಬೆ ಯಾತ್ರಿಕನಂತೆ. ಅಲ್ಲಿ ನನಗೊಂದು ಸೋಜಿಗದ ಅನುಭವವಾಯ್ತು. ಹೋಗುವ ದಾರಿಯಲ್ಲಿ ಒಬ್ಬಳು ಎದುರಾದಳು., ಮಾತಿಗೆ ತೊಡಗಿದಳು. “ನೀವು ಪರದೇಶದವರು ಲಾರೆನ್ಸಿನಲ್ಲಿ ಅದೇನು ವಿಶೇಷ ಕಂಡು ಈ ಊರಿಗೆ ಬರುತ್ತೀರೋ! ನಾನು ಕಾಣೆ. ಇಲ್ಲಿ ಯಾರಿಗೂ ಲಾರೆನ್ಸನನ್ನು ಕಂಡರೆ ಇಷ್ಟವಿಲ್ಲ. ಯಾಕೆ ಗೊತ್ತಾ? ತಮ್ಮನ್ನೆಲ್ಲ ಒಂದಲ್ಲ ಒಂದು ಕಥೆಯಲ್ಲಿ ಸೇರಿಸಿಬಿಟ್ಟಿದ್ದಾನೆ ಅಂತ.” ಎಂದಳು. ಲಾರೆನ್ಸ್ ಬೆಳೆದ ಮನೆ, ಅವನ ತಂದೆ ಕುಡಿಯಲು ಹೋಗುತ್ತಿದ್ದ ಪಬ್, ಕಲ್ಲಿದ್ದಲು ಗಣಿಗಳ ಕೊಳಕನ್ನೆಲ್ಲ ಸುರಿಯುತ್ತಿದ್ದ ಕಣಿವೆ, ಆ ಕಣಿವೆ ದಾಟಿದ ನಂತರ ಇದ್ದ ಹಳ್ಳಿ, ಅಲ್ಲಿಂದ ತನ್ನ ಪ್ರೇಯಸಿ ಮಿರಿಯಂಳನ್ನು ಕಾಣಲು ಲಾರೆನ್ಸ್ ಹೋಗುತ್ತಿದ್ದುದು-ಇವೆಲ್ಲವನ್ನೂ ಆಗಷ್ಟೇ ಕಂಡಿದ್ದ ನನಗೆ, ಇವೆಲ್ಲವೂ ಒಂದು ವಿಶಿಷ್ಟ ಬದುಕಿನ ವಿಶಿಷ್ಟ ಸಂಗತಿಗಳು ಮಾತ್ರ ಆಗಿರದೆ, ಕೈಗಾರಿಕಾ ಕ್ರಾಂತಿಯಲ್ಲಿ ಇಂಗ್ಲೆಂಡ್ ಪಟ್ಟ ಯಾತನೆ, ಹಾಗೂ ತನ್ನ ಸ್ವರೂಪದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ-ಇವನ್ನೂ ನನ್ನ ಪಾಲಿಗೆ ಸಂಕೇತಿಸಿದವು. ಆದರೆ ಈ ಮಾತುಗಾರ್ತಿ ಲಾರೆನ್ಸಿನ ಅನುಭವಗಳೆಲ್ಲವೂ ಆ ಊರಿನವರ ಪಾಲಿಗೆ ಇನ್ನೂ ಹಸಿಹಸಿಯಾಗಿ ಉಳಿದುಕೊಂಡಿವೆ ಎಂಬಂತೆ ಮಾತಾಡಿದಳು. ಹತ್ತಿರ ಬಂದು ಕಿವಿಯಲ್ಲಿ ಪಿಸುಗುಟ್ಟಿದಳು: ‘ನಾನು ಹೇಳಿದೆ ಎಂದು ಎಲ್ಲೂ ಬಾಯಿ ಬಿಚ್ಚಬೇಡ. ಅಲ್ಲಿ, ಅಗೋ ದೂರದಲ್ಲಿ ಒಂದು ಮನೆ ಕಾಣುತ್ತಿದೆಯಲ್ಲವೇ ಅಲ್ಲಿ ಒಬ್ಬ ವೃದ್ಧೆ ಇದ್ದಾಳೆ. ಅವಳ ಮತ್ತು ಲಾರೆನ್ಸನ ನಡುವೆ ಏನೋ ಇತ್ತಂತೆ. ಕೆಲ ಅಮೆರಿಕನ್ ಪ್ರವಾಸಿಗರು ಆಕೆಯನ್ನು ಹೋಗಿ ನೋಡಿದ್ದೂ ಉಂಟು, ಲಾರೆನ್ಸ್ ಬಗ್ಗೆ ಕೇಳಲು. ಬೇಕಾದರೆ ನೀನೂ ಹೋಗಬಹುದು ನಿನ್ನ ಬಳಿಯೂ ಮಾತಾಡಿಯಾಳು.’ +ಈ ಇಳಿವಯಸ್ಸಿನ ಹೆಣ್ಣಿನಲ್ಲಿ ಲವಲವಿಕೆಯಿತ್ತು; ಗುಪ್ತವಾದದ್ದನ್ನು ಬಯಲಿಗೆಳೆಯುವ ಸಂಚುಗಾರನ ಖುಷಿಯೂ ಇತ್ತು. ಈಕೆಯನ್ನು ನೋಡು ನೋಡುತ್ತಿದ್ದಂತೆಯೇ ಲಾರೆನ್ಸಿನ ಕೆಲವು ಕಥೆಗಳಲ್ಲಿನ ಕೆಲ ಹೆಂಗಸರನ್ನು ಈಕೆಯಲ್ಲಿ ನಾನು ಕಂಡೆ. ಇಂಥ ಹೆಂಗಸರ ಸಂಚು, ಕಪಟ, ಜಗಳಗಂಟತನ, ಕಾರಪಣ್ಯ, ಮಕ್ಕಳ ಮೇಲಿನ ಮೋಹ, ಗಂಡನ ಮೇಲಿನ ಸಿಟ್ಟು, ಜೊತೆಗೆ ತನ್ನ ದೇಹಕ್ಕೆ ಅಂಟಿಕೊಂಡ ಪ್ರೀತಿ-ಇವೆಲ್ಲವನ್ನೂ ನಮಗೆ ಕಾಣಿಸುತ್ತಲೇ, ಲಾರೆನ್ಸ್ ಈ ಯಾವುದೂ ಅಲ್ಲದ, ಆದರೆ ಒಳಗೆ ಅಡಗಿದ ಹೆಣ್ಣನ್ನು ಕಾಣಿಸುತ್ತಿದ್ದನು. “ಇಗೋ, ಕಾಣಲು ಇದು ವಜ್ರ” ಎಂದರೆ “ಅಲ್ಲ, ನಿಜದಲ್ಲಿ ಇದು ಇದ್ದಿಲು”-ಎನ್ನುವಂತೆ ವಜ್ರವನ್ನೂ ಇದ್ದಿಲನ್ನೂ ಒಟ್ಟಾಗಿಯೇ ಲಾರೆನ್ಸ್ ಅರಿಯುತ್ತಿದ್ದ. ‘ತನ್ನ ಅಹಂನಲ್ಲಿ ಹೆಣ್ಣು ತಾನು ಏನೆಂದು ತಿಳಿದುಕೊಳ್ಳುವಳೋ ಆ ಪಾತ್ರವನ್ನಲ್ಲ ನಾನು ಸೃಷ್ಟಿಸುತ್ತಿರುವುದು, ನಿಜದಲ್ಲಿ ಆಕೆ ಏನೋ ಅದನ್ನು ಎಂಬುದನ್ನು ಲಾರೆನ್ಸ್ ತನ್ನ ಬರಹಗಳಲ್ಲಿ ಸಾಧಿಸಿದ್ದ. +ಈ ಘಟನೆಯಿಂದ ನಾವು ಲೇಖಕರಾಗಿ ಕಲಿಯುವುದು ಇದೆ. ಲಾರೆನ್ಸಿನಂತಹ ದಾರ್ಶನಿಕನಾದ ಲೇಖಕನನ್ನೇ ಈ ಪ್ರಶ್ನೆ ಕಾಡಿದೆ ಎಂದರೆ ಹೆಚ್ಚು ವಾಸ್ತವ ಶೈಲಿಯಲ್ಲಿ ಬರೆಯುವ ಲೇಖಕರ ಪಾಡೇನು?………. +ಕೃತಿಯ ಪ್ರತಿಯೊಂದು ಪಾತ್ರವೂ ಘಟನೆಯೂ ನಿಜ ಜೀವನದಲ್ಲಿ ಯಾರನ್ನೋ ಹೋಲಿರುತ್ತದೆ. ಅಥವಾ ಹಲವರ ಸಂಯೋಜಿತ ಚಿತ್ರವಾಗಿರುತ್ತದೆ. ತಮ್ಮ ಗಣಪತಿ ಮೂರ್ತಿಯಂತೆ. ಗಣಪತಿ ಹೆಚ್ಚು ಪಾಲು ಆನೆ, ನಿಜ ಆದರೆ ಅವನ ಹೊಟ್ಟೆ ಗಮನಿಸಿ…..ಅವನ ವಾಹನ ಗಮನಿಸಿ, ಇರುವುದನ್ನೇ ಸಂಯೋಜಿಸುವ, ಅಥವಾ ಇರುವುದರಲ್ಲೇ ಹೊಸ ಸಂಬಂಧಗಳನ್ನು ಕಟ್ಟುವ/ಕಾಣುವ ಕಲ್ಪನೆಯನ್ನೇ ನಾನು ಪ್ರತಿಭೆ ಎಂದು ಗುರುತಿಸುವುದು. ಹೇಳುವುದು. ಆದರೆ ಪಂಡಿತರು ಬಿಡುವುದಿಲ್ಲ. ಮೂಲದ ಬಗ್ಗೆಯೇ‌ಅವರಿಗೆತಣಿಯದ ಕುತೂಹಲ.ಪ್ರಖ್ಯಾತ ಲೇಖಕಜೇಮ್ಸ್ ಜಾಯ್ಸನ ಮಹಾ ಕಾದಂಬರಿ ‘ಯೂಲಿಸಿಸ್’ನಲ್ಲಿನ ಪ್ರತಿಯೊಂದು ಪಾತ್ರ, ಘಟನೆಯನ್ನೂ ನಿಜಜೀವನದಲ್ಲಿ ಪಂಡಿತರು ಗುರುತಿಸಿಬಿಟ್ಟಿದ್ದಾರಂತೆ! ಬರಡು ವಿಚಾರವಾದಿ ಜಾರ್ಜ್ ಬರ್ನಾಡ್ ಶಾ. ಜಾಯ್ಸನ ಕಾದಂಬರಿ ಓದಿ “ಓ…..ಡಬ್ಲಿನ್ ಹಿಂದೆ ಇದ್ದ ಹಾಗೆ ಈಗಲೂ ಇದೆ” ಎಂದು ಉದ್ಗಾರವೆತ್ತಿದನಂತೆ! ಸಾಹಿತ್ಯದ ಧ್ವನ್ಯರ್ಥಗಳಿಗೆ ಕಿವುಡನಾದ ಶಾ ‘ಯೂಲಿಸಿಸ್’ ನಂಥ ಆಧುನಿಕ ಮಹಾ ಪುರಾಣದಲ್ಲೂ ಕಂಡದ್ದು ಅಷ್ಟೇ. ಈ ಕೃತಿಯ ಧ್ವನ್ಯರ್ಥಗಳಿಗೆ ಆತ ತೆರೆದುಕೊಳ್ಳಲಿಲ್ಲ. +ಲಾರೆನ್ಸಿನ ದಾರ್ಶನಿಕ ಕಾದಂಬರಿಗಳಾದ ‘ಖಿhe ಖಚಿiಟಿboತಿ’ ಹಾಗೂ ‘Womeಟಿ iಟಿ ಐove’ಓದಿದವರೂ ಕೂಡ ಅಲ್ಲಿ ಬರುವ ಹರ್ಮಿಯೋನ್ ಎಂಬ ಪಾತ್ರವು ಆತನ ಗೆಳತಿಯಾದ ಲೇಡಿ ಆಟೋಲಿನ್ ಮಾರೆನ್ ಎಂಬುವಳದ್ದು ಎಂದು ಹೇಳುವುದೂ ಉಂಟು; ಆಪ್ತ ಗೆಳತಿಯೊಬ್ಬಳನ್ನು ಹೀಗೆ ವ್ಯಂಗ್ಯಾರ್ಥಕ್ಕೆ ಗುರಿ ಮಾಡಿರುವುದು ಸರಿಯೇ ಎಂಬ ಪ್ರಶ್ನೆ ಕೆಲವರು ಎತ್ತಿರುವುದೂ ಉಂಟು. ಅಷ್ಟೇ ಅಲ್ಲ, ಲಾರೆನ್ಸ್ ತನ್ನ ಮತ್ತು ಮಿಡಲ್‌ಟನ್ ಮರ್ರಿ ನಡುವಿನ ಸಂಬಂಧವನ್ನೂ , ಆ ಸಂಬಂಧದೊಳಗೆ ಆಗುತ್ತಿದ್ದ ವ್ಯತ್ಯಾಸಗಳನ್ನೂ ಪ್ರತಿಬಿಂಬಿಸುವಂತೆ ಕೆಲವು ಪಾತ್ರಗಳನ್ನು ಸೃಷ್ಟಿಸಿದ್ದಾನೆ ಎಂದೂ ಹೇಳುತ್ತಾರೆ. +ಇವೆಲ್ಲವೂ ಒಟ್ಟಿನಲ್ಲಿ ಅಪ್ರಸ್ತುತ, ಅಪ್ರಯೋಜಕ. ಒಂದು ಕೃತಿಯನ್ನು ಓದುವಾಗ ನಿಜಜೀವನದ ಒಬ್ಬ ವ್ಯಕ್ತಿಯೋ, ಘಟನೆಯೋ ಪದೇ ಪದೇ ನಮಗೆ ಎದುರಾದರೆ ಓದುವುದಕ್ಕೆ ಅಗತ್ಯವಾಗಿ ಬೇಕಾದ ಏಕಾಗ್ರತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. ಕೆಲವು ಕೃತಿಗಳು ಈ ಬಗೆಯ ಹಸಿ ನೆನಪುಗಳನ್ನು-ಕಾಲದಲ್ಲೂ ದೇಶದಲ್ಲೂ ದೂರವಾಗುತ್ತಾ ಹೋದಂತೆ-ಕಾಲಾನುಕ್ರಮದಲ್ಲಿ ಕಳೆದುಕೊಳ್ಳುತ್ತವೆ. +ವಿವರಗಳಲ್ಲಿ ನೈಜವೆನ್ನಿಸುವ ವಿಶಿಷ್ಟತೆ, ಒಟ್ಟಂದದಲ್ಲಿ ಧ್ವನಿಪೂರ್ಣವಾದ ದಾರ್ಶನಿಕತೆ ಎರಡನ್ನೂ ತನ್ನ ಆಸ್ತಿತ್ವದಲ್ಲೇ ಪಡೆದುಕೊಂಡಿರುವ ಕಾದಂಬರಿ ಮಾಧ್ಯಮ ಇಂಥ ಸಮಸ್ಯೆಯಿಂದ ಎಂದೂ ತಪ್ಪಿಸಿಕೊಳ್ಳಲಾರದು. ಕಾದಂಬರಿ ಹುಟ್ಟಿರುವುದೇ ಪತ್ರಿಕೋದ್ಯಮ ಮತ್ತು ಕಾವ್ಯದ ಅಕ್ರಮ ಶಿಶುವಾಗಿ. ಅದರ ಸದ್ಯತನವೂ ಆಳವೂ ಇಂಥ ಬಗೆಯ ಹುಟ್ಟಿನಿಂದಲೇ ಅದು ಪಡೆದುಕೊಂಡಿರುವ ಗುಣಗಳು. ನಿಜಜೀವನದ ಕಥೆ ಮಾತ್ರವಾಗಿ ಒಂದು ಕೃತಿ ಪರಿಣಮಿಸಿದಲ್ಲಿ, ಅಂಥ ಕೃತಿ ಓದುಗನ ಕುತೂಹಲವನ್ನಷ್ಟೇ ತಣಿಸುತ್ತದೆ. ಅಂತೆಯೇ ಕೃತಿ ಅಮೂರ್ತ ಪಾತ್ರಗಳನ್ನು ಮಾತ್ರ ಪಡೆದುಕೊಂದರೆ ಅದೊಂದು ಅಲಿಗರಿಯಾಗಿ ಬಿಡುತ್ತದೆ. ಅಲಿಗರಿಗಳು ಎಷ್ಟೇ ಜಾಣವಾಗಿದ್ದರೂ, ಚೆನ್ನಾಗಿದ್ದರೂ ರಕ್ತಮಾಂಸಗಳಿಂದ ಕೂಡಿದ ನೈಜತೆಯನ್ನು ಪಡೆಯುವುದೇ ಇಲ್ಲ. ಅಡಿಗರು, ಚಿತ್ತಾಲರಿಗೆ ಮುನ್ನುಡಿ ಬರೆಯುತ್ತ ‘ಮುಕ್ತ ಕಥೆಗಳು ಮತ್ತು ಬದ್ಧ ಕಥೆಗಳು’ ಎಂಬ ಹೆಸರುಗಳನ್ನು ಬಳಸಿರುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. +ನನ್ನನ್ನು ನಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು ಬರೆದಿರುವ ಕೆಲವು ಕೃತಿಗಳಲ್ಲಿ ಒಂದು ಗುಣವನ್ನು ಕಂಡಿದ್ದೇನೆ. ಆ ಗುಣವಿದ್ದಲ್ಲಿ ಮಾತ್ರ ಅದು ನನ್ನ ಪಾಲಿಗೆ ನೈಜಕೃತಿಯಾಗುತ್ತದೆ. ನನಗೆ ಹೀಗೆ ನೈಜವೆನ್ನಿಸುವ ಕೃತಿಯು ಎಷ್ಟು ಒಳ್ಳೆಯ ಕೃತಿಯೆಂಬುದು ಸಹೃದಯರ ರಸಾನುಭವದ ತೀರ್ಮಾನಕ್ಕೆ ಬಿಟ್ಟದ್ದು. ಆದರೆ ನಾನು ಹೇಳುತ್ತಿರುವುದು ನಾನು ಬರೆದದ್ದು ನನಗೇ ಯಾವಾಗ ಸುಖವನ್ನು ಕೊಡುತ್ತದೆ ಎಂಬುದನ್ನು. +ವಾಲ್ಮೀಕಿಗೆ ಬ್ರಹ್ಮ, ‘ರಾಮಾಯಣ’ ಬರೆಯುವ ಮುನ್ನ ವರವನ್ನು ಕೊಡುತ್ತಾನೆ: ನಿನಗೆ ನಿನ್ನ ಕಾವ್ಯದ ಪಾತ್ರಗಳು ಆಪ್ತವಾಗಿ ಪರಸ್ಪರ ಹೇಳಿಕೊಂಡಿದ್ದೆಲ್ಲವೂ ತಿಳಿಯಲಿ. ಅಷ್ಟೇ ಅಲ್ಲ, ಯಾವ ಪಾತ್ರವೇ ಆಗಲಿ, ತನ್ನ ತನ್ನಲ್ಲೇ ತನ್ನೊಳಗೇ ಹೇಳಿಕೊಂಡಿದ್ದೂ ನಿನಗೆ ಗೊತ್ತಾಗಲಿ; ಇದಕ್ಕೂ ದೊಡ್ಡದಾದ ವರವೆಂದು ನನಗನ್ನಿಸುವುದು ಬ್ರಹ್ಮ ಹೇಳುವ ಮುಂದಿನ ಮಾತು: ‘ನೀನಿ ಬರೆದದ್ದು ಕೇಳಿಸಿಕೊಂಡವರಿಗೆ ನಿಜ ಎನ್ನಿಸಲಿ’ ಕೊನೆಯ ಈ ವರವು ಎಲ್ಲ ಲೇಖಕರಿಗೂ ಎಲ್ಲ ಕೃತಿಗಳಲ್ಲೂ ಒಂದೇ ಪ್ರಮಾಣದಲ್ಲಿ ಪ್ರಾಪ್ತಿಯಾಗುವುದಿಲ್ಲ. +ನನ್ನ ಬಾಲ್ಯವನ್ನು ನಾನು ಕಳೆದದ್ದು ಒಂದು ಅಗ್ರಹಾರದಲ್ಲಿ. ಎಷ್ಟೋ ವರ್ಷಗಳ ನಂತರ, ಪರದೇಶದಲ್ಲಿದ್ದಾಗ, ನನ್ನಲ್ಲಿ ಅಜ್ಞಾತವಾಗಿ ಹುದುಗಿದ್ದು ಎಷ್ಟೋ ಚಿತ್ರಗಳು ನನ್ನ ಕಣ್ನೆದುರು ದುತ್ತೆಂದು ನಿಂತುಕೊಂಡು ಬರೆಸಿಕೊಡವು. ಈ ಚಿತ್ರಗಳನ್ನೆಲ್ಲಾ ಏಕತ್ರ ಗ್ರಹಿಸಬಲ್ಲಂತಹ ಒಂದಿ ಥೀಮ್ ನನ್ನ ಮನಸ್ಸಿನಲ್ಲಿ ಮೊದಲೇ ಇತ್ತು. ಪರಿಣಾಮವಾಗಿ ಹುಟ್ಟಿದ ನನ್ನ ‘ಸಂಸ್ಕಾರ’ ಕಾದಂಬರಿ ಎರಡೂ ತುದಿಗಳಲ್ಲಿ ಯಾವ ಯಾವ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟಿಸಿದೆ ಎಂಬುದನ್ನು ಈ ಮೊದಲು ಹೇಳಿದ್ದಕ್ಕೆಲ್ಲಾ ಸೂಕ್ತ ಉದಾಹರಣೆಯಾಗಿ ನಾನು ಕೊಡಲು ಬಯಸುತ್ತೇನೆ. +ಕೆಲವು ವರ್ಷಗಳ ಹಿಂದೆ, ನಾನು ಹುಟ್ಟಿ ಬೆಳೆದ ಅಗ್ರಹಾರಕ್ಕೆ ಹೋಗಿದ್ದೆ. ನೀರು ಸೇದುವಾಗ ಹಪ್ಪಳ ಸಂಡಿಗೆ ಮಾಡುವಾಗ, ಹಾಡು ಹಸೆಗಳನ್ನು ಚಾವಡಿಯಲ್ಲಿ ಕುಳಿತು ಹಂಚಿಕೊಳ್ಳುವಾಗ-ಇಂಥ ಸಂದರ್ಭಗಳಲ್ಲೆಲ್ಲಾ ನನ್ನನ್ನು ಹತ್ತಿರದಿಂದ ಬಲ್ಲವರಾಗಿದ್ದ ಆ ಅಗ್ರಹಾರದಲ್ಲಿ ಹೆಂಗಸರು ನನ್ನುನ್ನು ಹಿಂದಿನ ಆಪ್ತತೆಯಿಂದ ಆದರೆ ಕೊಂಚ ಅನುಮಾನದಿಂದ, ಸ್ವಾಗತಿಸಿದರು. ಅವರ ಕಣ್ಣಿನಲ್ಲಿ ನಾನೀಗ ಬರಹಗಾರನಾಗಿ ಬಿಟ್ಟಿದ್ದರಿಂದ ಬದುಕಿನ ಒಂದು ಒಪ್ಪಂದವನ್ನು ಮುರಿದವನಂತೆ ಕಾಣಿಸಿದ್ದಿರಬೇಕು. +ಬಾಲಕನಾಗಿದ್ದಾಗ. ನನ್ನನ್ನು ಪ್ರೀತಿಯಿಂದ ಕಂಡಿದ್ದ ಈ ತಾಯಂದಿರಿಗೆ ಈಗ ಮುಚ್ಚಿಡಬೇಕಾದ್ದನ್ನೂ ಬಿಚ್ಚಿಡುವ ಲೇಖಕನಾದ ನಾನು ಸಂಕೋಚವನ್ನುಂಟು ಮಾಡಿರಬೇಕು. “ಮತ್ತೆ ಏನನ್ನು ನೋಡಿ ಬರೆಯಲೆಂದು ಬಂದಿ?”-ಎಂದು ನನ್ನ ಹಾಸ್ಯ ಮಾಡಿದರು. ಸಂಕೋಚ, ಮುಜುಗರ ಕಡಿಮೆಯಾಗುತ್ತಿದ್ದಂತೆ ನನ್ನ ಕಾದಂಬರಿಯ ಪ್ರತಿಯೊಂದು ಪಾತ್ರವನ್ನೂ ನಮ್ಮ ಊರಿನ ಅವರಿಗೋ ಇವರಿಗೋ ಹೋಲಿಸಿ ನಕ್ಕರು. ಅವರಲ್ಲಿ ಈ ವೇಳೆಗಾಗಲೇ ಗತಿಸಿದ್ದರಿಂದ ಮನಸ್ಸಿನ ಈ ಧಾರಾಳವು ಆ ಹೆಂಗಸರಿಗೆ ಸುಲಭಸಾಧ್ಯವಾಗಿರಬೇಕು. +ಪ್ರತಿ ಪಾತ್ರದಲ್ಲೂ ಹೀಗೆ ವಿಶಿಷ್ಠವಾಗಿ ಕಂಡ ನನ್ನ ‘ಸಂಸ್ಕಾರ’ ದೇಶಕ್ಕೆ ದೂರವಾಗುತ್ತಿದ್ದಂತೆಯೇ ಹೇಗೆ ಹೆಚ್ಚು ಹೆಚ್ಚು ಅಮೂರ್ತವಾಗುತ್ತಾ ಹೋಗಿದೆ ಎಂಬುದು ನನಗೆ ಈಗಲೂ ಅಚ್ಚರಿಯ ಸಂಗತಿ. ನಮ್ಮ ಜಿಲ್ಲೆಯಲ್ಲಿ ‘ಸಂಸ್ಕಾರ’ ಕೃತಿಯು ಮಾಧ್ವರ ಮೇಲಿನ ಟೀಕೆಯಾಗಿ ಕಂಡರೆ, ನಮ್ಮ ದೇಶದಲ್ಲಿ ಅದು ಒಟ್ಟಾರೆ ಬ್ರಾಹ್ಮಣರ ಮೇಲಿನ ವ್ಯಂಗ್ಯವಾಗಿ ಕಂಡಿತು. ನಮ್ಮ ದೇಶದಿಂದ ದೂರವಿರುವ ನಯಪಾಲರಿಗೆ ಒಟ್ಟು ಹಿಂದೂ ಧರ್ಮದ ವಿಶ್ಲೇಷಣೆಯಾಗಿ ನನ್ನ ಕೃತಿ ಕಂಡರೆ, ಖ್ಯಾತ ಮನೋವಿಜ್ಞಾನಿ ಎರಿಕ್ ಎರಿಕ್‌ಸನ್‌ರಿಗೆ, ಶ್ರೇಷ್ಠ ನಿರ್ದೇಶಕ ಬರ್ಗ್‌ಮನ್‌ನಂತೆಯೇ ಮಧ್ಯವಯಸ್ಸಿನ ಮನಸ್ಸಿನ ಕ್ಷೋಭೆಯನ್ನು ಕುರಿತು ನಾನೂ ಬರೆಯುತ್ತಿದ್ದೇನೆ ಎನ್ನಿಸಿತು. ಹೀಗೆ ತನ್ನ ವಿವರಗಳ ವಿಶಿಷ್ಟತೆಯಲ್ಲಿ, ನಿಜವಾಗಿಯೂ ಬದುಕಿದ್ದ ನಮ್ಮೊಡನೆ ಇದ್ದ ವ್ಯಕ್ತಿಗಳನ್ನು ಕೇವಲ ನೆನಪು ಮಾಡಿಕೊಡುವ ಕೃತಿಮಾತ್ರವಾಗಿ ‘ಸಂಸ್ಕರ’ ನನ್ನೂರಿನ ಜನರ ಪಾಲಿಹೆ ಸೀಮಿತವಾಯಿತು. ಅವರು ಓದುವಾಗ ನಿಜವಾಗಿಯೂ ನನ್ನ ಕೃತಿಯನ್ನು ಓದಿಲ್ಲ ಓದುತ್ತಿಲ್ಲ ಎಂದೇ ನಾನು ತಿಳಿದುಕೊಂಡಿದ್ದೇನೆ. ಆದರೆ ಕೃತಿಯ ಇನ್ನೊಂದು ತುದಿಯ ಧ್ವನಿಯನ್ನು ವಿಚಾರವಾಗಿ ಮಾತ್ರವಲ್ಲದೆ ವಿವರಗಳ ಮೂಲಕವೂ ಎರಿಕ್‌ಸನ್‌ರಂತೆ ಹಿಡಿದವನು, ಕೃತಿಯ ಆಶಯಕ್ಕೆ ನಿಜವಾಗಿಯೂ ಹತ್ತಿರವಾಗಿದ್ದಾನೆ. +ಯಾವಾಗಲೂ ಒಂದು ಕೃತಿ ತನ್ನ ವಿವರಗಳ ವಿಶಿಷ್ಟತೆಯಲ್ಲೂ, ಈ ವಿವರಗಳು ಒಟ್ಟಂದದಲ್ಲಿ ಬಿಟ್ಟುಕೊಡುವ ಧ್ವನ್ಯರ್ಥದಲ್ಲೂ ಒಟ್ಟೊಟ್ಟಿಗೆ ಇರುತ್ತದೆ. ಹೀಗೆ ಇರಬೇಕಾಗಿರುವುದು ಕಾದಂಬರಿ ಮಾಧ್ಯಮದ ಅನಿವಾರ್‍ಯವಾದ ಪಾಡೂ ಹೌದು. +***** +ರುಜುವಾತು ೨೮, ಏಪ್ರಿಲ್-ಜೂನ್ ೧೯೮೨ +ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […] +ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […] +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_559.txt b/Kannada Sahitya/article_559.txt new file mode 100644 index 0000000000000000000000000000000000000000..dcdb6c826a28de14b678d5df991a76fab986441b --- /dev/null +++ b/Kannada Sahitya/article_559.txt @@ -0,0 +1,80 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ ಸ್ನಾನಕ್ಕೆ, ಮರಳ ದಂಡೆಯ ಮೇಲೆ ಹೋಗಿ ಕೂರಲಿಕ್ಕೆ ಈ ದಾರಿಯಲ್ಲಿ ಗುಂಪುಕಟ್ಟಿಕೊಂಡು ಹೋಗಿ ಬರುತ್ತಿರುತ್ತಾರೆ. ಊರಿನ ಖಾರ್ವಿ ಜನ, ಮೊಗೇರರು, ಹರಿಕಾಂತರರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಓಡಿಯಾಡುವುದು ಕೂಡ ಈ ರಸ್ತೆಯಲ್ಲೇ. ದೇವಸ್ಥಾನದ ಹಿಂಬದಿಯ ಮರಳದಂಡೆಯ ಮೇಲೆ ಸಾಲಾಗಿ ಜೋಡಿಸಿರುವ ದೋಣಿಗಳನ್ನು ನೀರಿಗೆ ತಳ್ಳಿ ಹುಟ್ಟು, ಬಲೆಗಳೊಡನೆ ಅವರು ಸಮುದ್ರಕ್ಕೆ ಇಳಿದು ಆ ವಿಶಾಲವಾದ ಕಡಲಲ್ಲಿ ಕಿರಿದಾಗಿ ಎಲ್ಲೋ ಮಾಯವಾಗಿಬಿಡುತ್ತಾರೆ. ಇವರು ತಿರುಗಿ ಬರುವುದು ಸಂಜೆಯಾದಾಗ. ಆಗ ಅವರು ದೋಣಿಯಲ್ಲಿ ಮೀನಿರುತ್ತದೆ. ಅದನ್ನು ಕೊಳ್ಳಲು ಮರಳದಂಡೆಯ ಮೇಲೆ ಜನ ಸಾಲುಗಟ್ಟಿ ನಿಂತಿರುತ್ತಾರೆ. +ಇದೆಲ್ಲವನ್ನೂ ನಾನು ವಿಶೇಷವಾಗಿ ಗಮನಿಸಲು ಒಂದು ಕಾರಣವಿದೆ. ಮಹಾಬಲೇಶ್ವರನ ದೇವಸ್ಥಾನದ ಬಲಬದಿಯಲ್ಲಿ ಒಂದು ಶಾಸನಕಲ್ಲಿದೆ. ನನ್ನಷ್ಟೇ ಎತ್ತರದ ಅಗಲವಾದ ಕಲ್ಲು. ಅದರ ಮೇಲೆ ಯುದ್ಧದಲ್ಲಿ ಸತ್ತ ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುವ ಒಂದು ಸಾಲು. ಸೂರ್ಯ ಚಂದ್ರರು ಇತ್ಯಾದಿ ಕೆತ್ತಿದ್ದಾರೆ. ಮೇಲೆ ಶಿವಲಿಂಗದ ಚಿತ್ರ. ಕಲ್ಲಿಗೆ ಎಣ್ಣೆ ಕುಂಕುಮ ಬಳಿದಿರುವುದರಿಂದ ಸಾಕಷ್ಟು ಮಣ್ಣು ಅದರ ಮೇಲೆ ಕೂತಿರುವುದರಿಂದ ಇದೇನೂ ಈಗ ಕಾಣಿಸುವುದಿಲ್ಲ. ಅಪ್ಪ ಈ ಕಲ್ಲನ್ನು ಮಹಾಬಲೇಶ್ವರನ ಪೀಠದ ಕಲ್ಲು ಎಂದು ಕರೆಯುತ್ತಾರೆ. ಈ ಕಲ್ಲಿಗೆ ಒರಗಿ ಕುಳಿತ ಮಹಾಬಲೇಶ್ವರ ಇಲ್ಲಿಂದ ಕಡಲನ್ನು ನೋಡುತ್ತಿದ್ದನಂತೆ. ಸಿಂಹಾಸನದ ಹಿಂಬದಿಯ ಒರಗುಹಲಗೆಯಂತೆ ಭಾಸವಾಗುವ ಈ ಕಲ್ಲಿನ ಕೆತ್ತನೆಯಿಂದಾಗಿ ಅಪ್ಪ ಹೇಳುವುದು ನಿಜವೇನೋ ಅನಿಸುತ್ತದೆ. ಈ ಕಲ್ಲಿನ ಬಳಿ ಉದ್ಧರಣೆ ಪಂಚಪಾತ್ರೆ ಹಿಡಿದು ಬೆಳಗಿನಿಂದ ಸಂಜೆಯವರೆಗೆ ನಿಂತಿರಬೇಕು. ದೇವಸ್ಥಾನದಲ್ಲಿ ಪೂಜೆ ಮುಗಿಸಿ, ದೇವಸ್ಥಾನದ ಸುತ್ತಲೂ ಇರುವ ಶಿಲ್ಪಗಳನ್ನು ನೋಡುತ್ತಾ ಬರುವ ಭಕ್ತಾದಿಗಳು ಈ ಪೀಠದ ಕಲ್ಲಿನ ಬಳಿ ಬಂದಾಗ ಅವರನ್ನು ಸ್ವಾಗತಿಸಿ, ಈ ಪೀಠದ ಕಲ್ಲಿನ ಮಹಿಮೆಯನ್ನು ಬಣ್ಣಿಸಿ ಎಲ್ಲರಿಗೂ ತೀರ್ಥ ಕೊಡಬೇಕು. ಅವರಿಂದ ದಕ್ಷಿಣೆ ಪಡೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಈ ಕೆಲಸದಲ್ಲಿ ನಾನು ನಿರತನಾಗಿರುವಾಗ ಪಕ್ಕದ ಕಾಲುದಾರಿಯಲ್ಲಿ ಖಾರ್ವಿಗಳು, ಮೊಗೇರರು ಹೋಗುತ್ತಾರೆ. ದೋಣಿಗಳು ಸಮುದ್ರದಲ್ಲಿ ಸಾಗುತ್ತದೆ. ನನಗೆ ಪ್ರಿಯವಾದ ಚಟುವಟಿಕೆಗಳು ಮರಳ ದಂಡೆಯ ಮೇಲೆ ನಡೆಯುತ್ತಿರುತ್ತದೆ. +ಇತ್ತ ಉದ್ಧರಣೆಯಿಂದ ತೀರ್ಥವನ್ನು ಭಕ್ತರ ಕೈಬೊಗಸೆಗೆ ಹಾಕುತ್ತ, ಅವರಿಂದ ದಕ್ಷಿಣೆ ಪಡೆಯುತ್ತ, ನಾನು ಕಡಲಿನತ್ತ ನೋಡುತ್ತಿರುತ್ತೇನೆ. ಮಧ್ಯಾಹ್ನ ಹನ್ನೆರಡು ಗಂಟೆಗೇನೆ ದೇವಾಲಯ ಬಾಗಿಲು ಮುಚ್ಚಿಕೊಳ್ಳುತ್ತದೆ. ಅದು ಮತ್ತೆ ತೆರೆದುಕೊಳ್ಳುವುದು ನಾಲ್ಕು ಗಂಟೆಗೆ. ಅಲ್ಲಿಯತನಕ ನನ್ಗೆ ಬಿಡುವು, ಆಗ ನಾನು ಕಾಲುದಾರಿ ಹಿಡಿದು ಕಡಲಿನತ್ತ ಓಡುತ್ತೇನೆ. ಮರಳದಂಡೆಯ ಮೇಲೆ ಪ್ರವಾಸಿಗಳುಕಾಲು ಕೈ ಚಾಚಿಕೊಂಡು ಮಲಗಿರುತ್ತಾರೆ. ಕೆಲವರು ಸಮುದ್ರದಲ್ಲಿ ಬಿದ್ದುಕೊಂಡು ತೇಲುತ್ತಿರುತ್ತಾರೆ. ಕೆಲವರು ಮೇಲೆ ನುಗ್ಗಿ ಬರುವ ಅಲೆಗಳೊಂದಿಗೆ ಆಟವಾಡುತ್ತಿರುತ್ತಾರೆ. ಇದಾವುದರ ಕಡೆಯೂ ಗಮನ ಹರಿಸದೆ ಖಾರ್ವಿಗಳು, ಮೊಗೇರರು ದೋಣಿಗಳ ಮಗ್ಗುಲಲ್ಲಿ ಕುಳಿತು ಬಲೆ ಹೆಣೆಯುತ್ತಲೋ, ಮೀನು ಒಣಗಿಸುತ್ತಲೋ ಇರುತ್ತಾರೆ. ಮುಖ್ಯವಾಗಿ ಇಲ್ಲಿ ಇನ್ನೊಂದು ಆಟ ನಡೆದಿರುತ್ತದೆ. +ಐದಾರು ಮೀನುಗಾರ ಹುಡುಗರು ಲಂಗೋಟಿ ಕಟ್ಟಿಕೊಂಡು ಪ್ರವಾಸಿಗರ ಬಳಿ ನಿಂತಿರುತ್ತಾರೆ. ಪ್ರವಾಸಿಗರು ಎಂಟಾಣೆ ಒಂದು ರೂಪಾಯಿ ನಾಣ್ಯವನ್ನು ಕೈಯಲ್ಲಿ ಹಿಡಿದು ಬೀಸಿ ಸಮುದ್ರಕ್ಕೆ ಎಸೆಯುತ್ತಾರೆ. ಅದು ಅಲೆಗಳನ್ನೂ ದಾಟಿಕೊಂಡು ಹೋಗಿ ಅಷ್ಟು ದೂರದಲ್ಲಿ ಸಮುದ್ರಕ್ಕೆ ಬೀಳುತ್ತದೆ. ಹುಡುಗರು ಆ ನಾಣ್ಯಗಳ ಹಿಂದೆಯೇ ಬಾಣದಂತೆ ಚಿಮ್ಮಿ ನುಗ್ಗಿ ಓಡುತ್ತಾರೆ. ಅಲೆಗಳನ್ನು ಹಾರಿಕೊಂಡು ದಾಟಿ ನೀರಿಗೆ ಬಿದ್ದು ಮಾಯವಾಗುತ್ತಾರೆ. ಮರುಕ್ಷಣದಲ್ಲಿ ಆ ನಾಣ್ಯಗಳನ್ನು ಹಿಡಿದು ನೀರಿನಿಂದ ಪುಟಿದು ಹೊರಬರುತ್ತಾರೆ. ಇದು ದಿನನಿತ್ಯ ನಡೆಯುತ್ತದೆ. ನಾನು ನೋಡುತ್ತಾ ನಿಲ್ಲುತ್ತೇನೆ. ಲಂಗೋಟಿ ಕಟ್ಟಿಕೊಂಡ ಆ ಕಪ್ಪು ಬಣ್ಣದ ಹುಡುಗರ ಉತ್ಸಾಹ, ಸಾಹಸ ನನ್ನಲ್ಲಿ ರೋಮಾಂಚನ ಉಂಟುಮಾಡುತ್ತದೆ. ನನ್ನ ಮೈ ಹುರುಪಿನಿಂದ ಸೆಟೆದುಕೊಳ್ಳುತ್ತದೆ. ನಾನೂ ಸಮುದ್ರದಲ್ಲಿ ಈಜಬಲ್ಲೆ. ಅಲೆಗಳ ಮೇಲೆ ತೇಲಬಲ್ಲೆ. ಆದರೆ ಈ ಹುಡುಗರೊಡನೆ ನಾನು ಬೆರೆಯುವಂತಿಲ್ಲ. ಇಂತಹ ಸಾಹಸಗಳನ್ನು ಮಾಡುವಂತಿಲ್ಲ. ನನಗೆ ಅಲ್ಲಿ ಬೇರೆಯದೇ ಆದ ಒಂದು ಕೆಲಸ ಕಾದಿದೆಯಲ್ಲ. ಈ ನಿರಾಶೆಯಿಂದಲೋ ಏನೋ ಈ ಗುಂಪಿನಲ್ಲಿ ತುಂಬಾ ಚೂಟಿಯಾಗಿರುವ ಓರ್ವ ಹುಡುಗನನ್ನು ನಾನು ಪರಿಚಯ ಮಾಡಿಕೊಂಡಿದ್ದೇನೆ. ಅವನೇ ಹರಿಕಾಂತರರ ಸಣ್ಣಿ. ನನ್ನಷ್ಟೇ ವಯಸ್ಸು ಹುಡುಗನಿಗೆ, ನನ್ನ ಹಾಗೆಯೇ ಉದ್ದ ಜಡೆ ಬಿಟ್ಟಿದ್ದಾನೆ. ಅದು ತಿರುಪತಿ ದೇವರಿಗೆ ಮುಡಿಪಂತೆ. ನಾನು ತುಂಡುಪಂಚೆ ಸುತ್ತಿಕೊಂಡರೆ ಅವನು ಬರೀ ಲಂಗೋಟಿ ಸುತ್ತಿಕೊಂಡು ಉದ್ದಕ್ಕೆ ಅದರ ಚುಂಗನ್ನು ಮುಂದೆ ಬಿಟ್ಟುಕೊಳ್ಳುತ್ತಾನೆ. ಸೊಂಟಕ್ಕೆ ನಾನು ಬೆಳ್ಳಿಯ ಮೌಂಜಿ ಹಾಕಿಕೊಂಡಿದ್ದರೆ ಅವನು ಕಪ್ಪು ದಾರ ಕಟ್ಟಿಕೊಂಡಿದ್ದಾನೆ. ನನ್ನ ಬಣ್ಣ ಬಿಳಿ, ಅವನೋ ಕಪ್ಪುಕಲ್ಲು ಮಹಾಬಲೇಶ್ವರನ ಹಾಗೆ. ಅಷ್ಟೇ ಗಟ್ಟಿ ಅವನ ಮೈ. ಆ ಹುಡುಗರ ಗುಂಪಿನಲ್ಲೇ ಬಲಾಢ್ಯ ಸಣ್ಣಿ. ಅವನು ಮರಳಿನಲ್ಲಿ ನೆಗೆಯುತ್ತ ಕಡಲಿನತ್ತ ಓಡುವುದನ್ನು ನೋಡಬೇಕು. ಆಗ ಅವನ ಕಾಲಿನ ತೊಡೆಯ ನರಗಳು ಸೆಟೆದುಕೊಂಡು ಹಿಗ್ಗಿ ಸಡಿಲವಾಗುತ್ತವೆ. ಅವನು ಅಲೆಗಳ ಮೇಲೆ ತೇಲುತ್ತಾನೆ. ಬಿಳಿಯ ನೊರೆಯಲ್ಲಿ ಅವನ ಕಪ್ಪು ಮೈ ಮಿಂಚುತ್ತದೆ. ಮೀನಿನಂತೆ ಅವನು ಸಮುದ್ರದ ನೀಲಿನೀರಿಗೆ ಹಾರುತ್ತಾನೆ. ಮರುಕ್ಷಣದಲ್ಲಿ ಮೇಲೆದ್ದು ಬರುತ್ತಾನೆ. ಮರಳಿನಲ್ಲಿ ಮೈಯಿಂದ ನೀರು ಜಿನುಗುತ್ತಿರಲು ಪ್ರವಾಸಿಗರು ಎಸೆದ ನಾಣ್ಯವನ್ನು ಕೈಮುಷ್ಟಿಯಲ್ಲಿ ಹಿಡಿದು ಬಂದು ಅವರ ಎದಿರು ನಿಂತು ‘ಇಕಾ ಒಡೆಯ’ ಎನ್ನುತ್ತಾನೆ ಅವನು. ಅವನ ಈ ಪ್ರವೃತ್ತಿಯಿಂದಾಗಿಯೇ ಅವನು ನನಗೆ ಪ್ರಿಯವಾದ ಗೆಳೆಯನಾದ. +* +* +* +ಎಂದಿನಂತೆ ಬೆಳಕು ಹರಿಯುತ್ತದೆ. ಸ್ನಾನ ಮುಗಿಸಿ ಮಡಿಯುಟ್ಟು ಅವಲಕ್ಕಿ ತಿಂದು ಪಂಚಪಾತ್ರೆ ಉದ್ಧರಣೆ ಹಿಡಿದು ನಾನು ನನ್ನ ಮೂವರು ಅಣ್ಣಂದಿರು ಹೊರಡುತ್ತೇವೆ. ಅಪ್ಪ ಹೋಗಿ ಆಗಲೇ ಕೊಂಚ ಹೊತ್ತಾಗಿದೆ. ಅಪ್ಪನಿಗೆ ಮಹಾಬಲೇಶ್ವರನ ಪೂಜೆ. ನಮಗೆ ತೀರ್ಥಪ್ರಸಾದ ನೀಡುವ ಕೆಲಸ. ಹಿರಿಯಣ್ಣ, ಗುಡಿಯ ಬಾಗಿಲ ಬಳಿ ಒಂದು ಕಂಬವಿದೆ, ಅಲ್ಲಿ ನಿಲ್ಲುತ್ತಾನೆ. ಆ ಕಂಬದಲ್ಲಿ ಗಣಪತಿಯ ಆಕಾರ ಮೂಡುತ್ತಿದೆ ಎಂದು ಅಪ್ಪ ಹೇಳುತ್ತಾನೆ. ಹಾಗೊಂದು ಆಕಾರ ಅಲ್ಲಿ ಅಸ್ಪಷ್ಟವಾಗಿ ಕಾಣುತ್ತದೆ. ಸೊಂಡಿಲು, ಹೊಟ್ಟೆ, ಕೈ ಹೀಗೆ. +“…. ಬನ್ನಿ …. ಇದು ನೋಡಿ ಮೂರು ಗಣಪತಿ …. ಕಂಬದಲ್ಲಿ ವಿಘ್ನೇಶ್ವರ ಮೂಡುತ್ತಿದ್ದಾನೆ….” +ಹಿರಿಯಣ್ಣ ಅಲ್ಲಿ ಸುಳಿದ ಭಕ್ತರ ಗಮನ ಸೆಳೆಯುತ್ತಾನೆ. ಪ್ರಸಾದ, ತೀರ್ಥ ನೀಡುತ್ತಾನೆ. ಗಣಪತಿಯ ಬಗ್ಗೆ ಇನ್ನೇನೋ ಹೇಳಿ ದಕ್ಷಿಣೆಗಾಗಿ ಕೈ ಚಾಚುತ್ತಾನೆ. +ದೇವಾಲಯದ ಎಡಭಾಗದಲ್ಲಿ ಒಂದು ಗಣಪತಿಯ ವಿಗ್ರಹವಿದೆ. ಇದು ಸರಿಯಾಗಿ ಅರ್ಧಭಾಗವಾಗಿ ಉಳಿದರ್ಧ ಕಾಣೆಯಾಗಿದೆ. ಅಲ್ಲಿ ಎರಡನೇ ಅಣ್ಣ ನಿಂತಿರುತ್ತಾನೆ. ಅತ್ತ ಬಂದ ಭಕ್ತಾದಿಗಳನ್ನು ಕರೆಯುತ್ತಾನೆ. ಗಣಪತಿಯ ಅರ್ಧವಿಗ್ರಹ ಕಾಶಿಯಲ್ಲಿದೆ ಎಂದು ಹೇಳುತ್ತಾನೆ. ಇದಕ್ಕೆ ಕೈ ಮುಗಿದರೆ ಕಾಶಿಗೆ ಕಾಶಿಗೆ ಹೋಗಿಬಂದಷ್ಟು ಪುಣ್ಯ ದೊರೆಯುತ್ತದೆ ಎನ್ನುತ್ತಾನೆ. ಅಲ್ಲೂ ಪ್ರಸಾದ ವಿನಿಯೋಗವಾಗುತ್ತದೆ. ದಕ್ಷಿಣೆ ಜಮಾ ಆಗುತ್ತದೆ. +ಮೂರನೆಯವ ಗುಡಿಯಿಂದ ಕೊಂಚ ದೂರದಲ್ಲಿರುವ ತೀರ್ಥದ ಬಳಿ ಇದ್ದಾನೆ. ಅಲ್ಲಿ ಬಸವನ ವಿಗ್ರಹದ ಬಾಯಿಂದ ಸದಾ ಬೆರಳು ಗಾತ್ರದ ನೀರು ಹರಿಯುತ್ತಿರುತ್ತದೆ. ಅದು ಬಸವನ ತೀರ್ಥ. ಮಹಾಬಲೇಶ್ವರನ ಅಭಿಷೇಕಕ್ಕಾಗಿ ಗಂಗೆ ಇಲ್ಲಿ ಈ ರೂಪದಲ್ಲಿ ಅವತರಿಸಿದ್ದಾಳೆ ಎನ್ನುತ್ತಾನೆ ಮೂರನೆ ಅಣ್ಣ. ಅಲ್ಲೂ ಭಕ್ತಾದಿಗಳು ಕಾಸು ನೀಡಿ ತೀರ್ಥ ಪಡೆಯುತ್ತಾರೆ. +ಇನ್ನು ನಾಲ್ಕನೆಯ ನಾನು – ಪೀಠದ ಕಲ್ಲಿನ ಕಾವಲುಗಾರ. +ಇದೆಲ್ಲಾ ಸುಳ್ಳು ಎಂದು ಹೇಳುತ್ತಾರೆ ಪ್ರೌಢಶಾಲೆಯ ಸಂಸ್ಕೃತ ಪಂಡಿತರು. ಭಟ್ರು ಕಲ್ಲಿಗೊಂದು ಕತೆ ಕಟ್ಟಿ, ಮಕ್ಕಳನ್ನೆಲ್ಲ ಸಾಲಾಗಿ ನಿಲ್ಸಿ ಭಕ್ತಾದಿಗಳನ್ನು ಸುಲಿಗೆ ಮಾಡ್ತಾರೆ ಎಂದು ಅವರು ಊರಿನಲ್ಲೆಲ್ಲ ಹೇಳಿಕೊಂಡು ತಿರುಗುತ್ತಾರೆ. ಆದರೆ ಅಪ್ಪ ಇದನ್ನೆಲ್ಲಾ ಕಿವಿಗೇ ಹಾಕಿಕೊಳ್ಳುವುದಿಲ್ಲ. ಅವನಿಗೆ ಏನು ಗೊತ್ತು ಮಹಾ ಎಂದವರು ಅವರ ಬಗ್ಗೆ ಮೂಗು ಮುರಿಯುತ್ತಾರೆ. +ಯಾರು ಏನೇ ಹೇಳಲಿ ದೇವಾಲಯಕ್ಕೆ ಬರುವ ಭಕ್ತರು ನಮ್ಮನ್ನು ನಂಬುತ್ತಾರೆ. ಅಪ್ಪನಿಗೆ ಬೇಕಾದ ದಕ್ಷಿಣೆ ಸಾಕಷ್ಟು ದೊರೆಯುತ್ತದೆ. ನನ್ನ ಅಪ್ಪ ಅಣ್ಣಂದಿರು ಭಯ – ಭಕ್ತಿಯಿಂದ ಈ ಕಾರ್ಯಮಾಡಿಕೊಂಡು ಬಂದಿದ್ದಾರೆ. ಆದರೆ ನನಗೆ ಮಾತ್ರ ಬೇಸರ. ಆ ಕಲ್ಲುಪೀಠದ ಬಳಿ ನಿಂತು ಬಂದವರಿಗೆಲ್ಲ ತೀರ್ಥನೀಡಿ, ಕತೆ ಹೇಳಿ ದಕ್ಷಿಣೆ ಪಡೆಯುವುದೆಂದರೆ ಬೇಜಾರು. ಬೇಡಪ್ಪ ಈ ಕೆಲಸ ಎನಿಸಿಬಿಡುತ್ತದೆ. ಹರಿಕಾಂತರರ ಸಣ್ಣಿಯೇ ಅದೃಷ್ಟವಂತ ಎನಿಸುತ್ತದೆ. +ನಾನು ಎಳೆಬಿಸಿಲಲ್ಲಿ ಪಂಚಪಾತ್ರೆ ಉದ್ಧರಣೆ ಕಲ್ಲಿನ ಬಳಿ ನಿಂತಾಗ ಪಕ್ಕದ ದಾರಿಯಲ್ಲಿ ಸಣ್ಣಿ ಕಾಣಿಸಿಕೊಳ್ಳುತ್ತಾನೆ. ಹುಟ್ಟನ್ನೋ, ಬಲೆಯನ್ನೋ, ಬುಟ್ಟಿಯನ್ನೋ, ಮೀನು ಪೋಣಿಸಲು ಬೇಕಾಗುವ ತೆಂಗಿನ ಗರಿಗಳನ್ನೋ ಹಿಡಿದು ಅವನು ಅವನ ತಂದೆಯ ಹಿಂದೆ ಹೊರಟಿರುತ್ತಾನೆ. ಅತೀ ಸಂಭ್ರಮದಿಂದ ಅವರ ಮುಖ ಅರಳಿರುತ್ತದೆ. ಕಣ್ಣುಗಳಲ್ಲಿ ಬೆಳಕು ಕುಣಿಯುತ್ತಿರುತ್ತದೆ. ಅವನ ಕಪ್ಪು ಮೈ ಎಳೆಬಿಸಿಲಿಗೆ ಮಿಂಚುತ್ತಿರುತ್ತದೆ; ಬಿಳಿ ಉಸುಕಿನ ದಾರಿಯ ಮೇಲೆ ಕುಣಿಕುಣಿಯುತ್ತ ಹೊರಟ ಅವನು ನಿಲ್ಲುತ್ತಾನೆ. ನನ್ನತ್ತ ತಿರುಗುತ್ತಾನೆ. +“ಒಡೆಯಾ….” ಎನ್ನುತ್ತಾನೆ. +“ನಾನು ಸಮುದ್ರಕ್ಕೆ ಹೋಗ್ತೆ” +– ಎನ್ನುತ್ತಾನೆ. ನಾನು ಅವರಿಬ್ಬರೂ ಕಡಲ ದಂಡೆ ಮುಟ್ಟುವವರೆಗೂ ನಿಂತು ನೋಡುತ್ತೇನೆ. ತಮ್ಮ ದೋಣಿಯ ಬಳಿ ಹೋಗಿ ಅದನ್ನು ಅವರು ಮರಳಿನಲ್ಲಿ ತಳ್ಳಿಕೊಂಡು ಕಡಲಿನತ್ತ ಹೋಗುತ್ತಾರೆ. ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿರಲು, ಈ ಅಲೆಗಳನ್ನು ಸೀಳಿಕೊಂಡು ಅವರು ದೋಣಿಯನ್ನು ಕಡಲಿಗೆ ನೂಕುತ್ತಾರೆ. ನಂತರ ದೋಣಿಯ ಮೇಲೆ ಹಾರಿ ಕುಳಿತುಕೊಳ್ಳುತ್ತಾರೆ. ದೋಣಿ ನಿಧಾನವಾಗಿ ಕಡಲಲ್ಲಿ ತೇಲತೊಡಗುತ್ತದೆ. ಅಲೆಗಳ ನಡುವೆ ಒಮ್ಮೊಮ್ಮೆ ಕಾಣೆಯಾಗುತ್ತ ದೂರ ಹೊರಟುಹೋಗುತ್ತದೆ. ಕೆಲ ಭಕ್ತಾದಿಗಳು ನನ್ನನ್ನು ದಾಟಿ ಮುಂದೆ ಹೋದರೂ ಅತ್ತ ಗಮನಕೊಡದೆ ನಾನು ಸಣ್ಣಿಯ ದೋಣಿ ನೀರಿನ ಮೇಲೆ ಸಾಗುತ್ತಿರುವುದನ್ನು ನೋಡುತ್ತ ನಿಂತುಬಿಡುತ್ತೇನೆ. ಇದನ್ನು ಗಮನಿಸಿ ಅಪ್ಪ ಓಡಿ ಬರುತ್ತಾನೆ – +“ಇಲ್ಲಿ ಬನ್ನಿ…. ಇಲ್ಲಿ ಬನ್ನಿ…. ಇದು ನೋಡಿ, ಮಹಾಬಲೇಶ್ವರನ ಪೀಠದ ಕಲ್ಲು. ಮಹಾಬಲೇಶ್ವರ ಇಲ್ಲಿ ಕುಳಿತು ಈ ಮಹಾ ಸಮುದ್ರವನ್ನು….” +ಅಪ್ಪ ಬಡಬಡಿಸುತ್ತ ನನ್ನನ್ನು ಕೆಂಗಣ್ಣಿನಿಂದ ದಿಟ್ಟಿಸುತ್ತಾನೆ. ಭಕ್ತಾದಿಗಳು ಅತ್ತ ಹೋದ ಮೇಲೆ ನನ್ನ ಬೆನ್ನ ಮೇಲೆ ಎರಡು ಗುಮ್ಮೆಗಳು ಬಿಡುತ್ತವೆ. +“….ಅಲ್ಲಿ…. ಏನಿದೆ ನಿನಗೆ ನೋಡಾಕೆ?” ಎಂದು ಅಪ್ಪ ಕೂಗುತ್ತಾನೆ. +ಆದರೆ ಅಲ್ಲಿ ಏನಿದೆ ಎಂಬುದನ್ನು ಸಣ್ಣಿ ಸಾಯಂಕಾಲ ಅಂಗಡಿ ಸಾಲಿನಲ್ಲಿ ಸಿಕ್ಕಾಗ ಇಲ್ಲ ಕಡಲ ದಂಡೆಯ ಮೇಲೆ ಅಪ್ಪನೊಡನೆ ಕಡಲಿಗೆ ಹೋಗದೆ ಇದ್ದಾಗ ಸಿಕ್ಕವ ಹೇಳುತ್ತಾನೆ. ನೆಲ ದೂರವಾದ ಹಾಗೆ ಸುತ್ತಲೂ ನೀಲಿ ನೀರು ತುಂಬಿಕೊಳ್ಳುವುದು. ದೊಡ್ಡ ದೊಡ್ಡ ಮೀನುಗಳು ಅಲ್ಲಲ್ಲಿ ಕಡಲಿಂದ ಹೊರಗೆ ಚಿಮ್ಮುತ್ತ ಆಟವಾಡುವುದು. ದೇವರ ಮೀನು ಸಣ್ಣಿ ಮೀನಿನ ಹಿಂಡುಗಳ ಹಿಂದೆ ಹೊರಟಿದ್ದು, ಒಂದೇ ಜಾತಿಯ ಮೀನುಗಳು ಹಿಂಡು ಹಿಂಡಾಗಿ ಕಡಲ ಮೇಲೆ ಹೊರಡುವುದು, ಸಮುದ್ರದಲ್ಲಿ ದೂರದಲ್ಲಿ ಕಾಣುವ ಸುಳಿಗಳು, ಎದುರಾಗುವ ಹಡಗುಗಳು, ಮೀನಿಗಾಗಿ ಬಲೆ ಬೀಸುವುದು, ಬಲೆಗಳಲ್ಲಿ ಮೀನಿನೊಡನೆ ಸಮುದ್ರದ ಹಾವುಗಳೂ ಬರುವುದು. ಅವುಗಳನ್ನು ಹಿಡಿದು ಮತ್ತೆ ಸಮುದ್ರಕ್ಕೆ ಎಸೆಯುವುದು, ಆಗಾಗ್ಗೆ ನೀರನಾಯಿಗಳು ಎದಿರಾಗುವುದು…. ಹೀಗೆ ಇನ್ನೆಷ್ಟೋ ವಿಷಯಗಳನ್ನು ಹೇಳುತ್ತಾನೆ ಸಣ್ಣಿ. ಅವನು ಹೇಳುತ್ತಿದ್ದ ಈ ವರ್ಣನೆಗಳನ್ನು ಕೇಳುತ್ತಿದ್ದಂತೆ ನಾನು ಸಣ್ಣಿಯೊಡನೆ ಕಡಲಿಗೆ ಹೊರಟುಬಿಡಬೇಕು ಎನಿಸುತ್ತದೆ. +* +* +* +ಪಂಚಪಾತ್ರೆ ಉದ್ಧರಣೆ ಹಿಡಿದು ಹೊರಟಾಗ ಅಪ್ಪ ಕರೆದ. +“ಮಾಣಿ…. ನೀನು ಮೀನು ಹಿಡೀಲಿಕ್ಕೆ ಹೋಗ್ತಿಯೇನ-?” +ಎಂದು ವ್ಯಂಗ್ಯವಾಗಿ ಕೇಳಿದ. ಮೀನು ಹಿಡಿಯಲಿಕ್ಕೆ ಅಲ್ಲವಾದರೂ ಸಮುದ್ರದ ಮೇಲೆ ದೋಣಿಯಲ್ಲಿ ಹೋಗಬೇಕು ಎಂಬ ಆಸೆ ನನಗಿದೆ. ಆದರೆ ಹೋಗುವ ಅವಕಾಶ ಬೇಕಲ್ಲ. ಅಪ್ಪ ಮಾತು ಮುಂದುವರಿಸಿದ- +“ಅಲ್ಲ…. ನಾನು ಸಾವಿರ ಬಾರಿ ಆಯ್ತು ನೋಡಿದ್ದು. ನಿನಗೆ ಮೊಗೇರ ಮಕ್ಳ ಸ್ನೇಹ;…. ಸಮುದ್ರದ ಹುಚ್ಚು. ನಿನ್ನ ಕೆಲಸ ನೀನು ಸರಿಯಾಗಿ ಮಾಡದಿದ್ದ ಮ್ಯಾಲೆ ಪೀಠದಕಲ್ಲಿನ ಹತ್ರ ತೀರ್ಥಪ್ರಸಾದ ಕೊಡಾಕೆ ಬೇರೆ ಮಾಣೀನ ನಾನು ನೇಮಿಸ್ತೀನಿ – ಏನು….” +ಅಂದರೆ ಅಲ್ಲಿ ನಿಂತು ತೀರ್ಥ ಪ್ರಸಾದ ಕೊಡುವ ಕೆಲಸವನ್ನು ಸರಿಯಾಗು ಮಾಡು ಎಂಬ ಆಜ್ಞೆ ಈ ಮಾತಿನಲ್ಲಿ ಅಡಗಿತ್ತು. ತಲೆಯಾಡಿಸಿ ಹೊರಟೆ. ಹತ್ತು ಗಂಟೆಯವರೆಗೂ ಇದೇ ಕೆಲಸವಾಯಿತು. ಹುಬ್ಬಳ್ಳಿಯವರಂತೆ ಜನ. ಬಸ್ಸುಮಾಡಿಕೊಂಡು ಬಂದಿದ್ದರು. ಅಪ್ಪ ಪೂಜೆ ಮಾಡುವಾಗಲೇ ಇಂಥಲ್ಲಿ ಹೀಗೆ ಹೀಗೆ ಇದೆ ನೋಡಿ ಹೋಗಿ, ಪುಣ್ಯ ಸಿಗುವುದಿಲ್ಲ ನೋಡದಿದ್ದರೆ ಎಂದು ಹೇಳುವುದು ಪದ್ಧತಿ. ಅವರು ದೇವಸ್ಥಾನಕ್ಕೆ ಒಂದು ಸುತ್ತು ಬಂದವರು ಪೀಠದಕಲ್ಲಿನ ಬಳಿ ನಿಂತರು. ಕೆಲವರು ಹಣೆ ನೆಲಕ್ಕೆ ಹಚ್ಚಿ ನಮಸ್ಕಾರ ಮಾಡಿದರು. ತೀರ್ಥ ಕೊಟ್ಟೆ. ಒಂದಿಷ್ಟು ಹೆಚ್ಚಿಗೆ ಹಣವೇ ಸಿಕ್ಕಿತು. ಕಲ್ಲಿನ ಹಿಂದೆ ಒಂದು ಗೋಲಕ ಇರಿಸಿದ್ದೆ. ಅದರಲ್ಲಿ ಹಾಕಿದೆ. ಅಷ್ಟರಲ್ಲಿ ಹರಿಕಾಂತರರ ಸಣ್ಣಿ ರಸ್ತೆಯ ಮೇಲೆ ಕಾಣಿಸಿಕೊಂಡ. ಅವನ ಕೈಯಲ್ಲಿ ಹುಟ್ಟು, ಬಲೆ, ಮೀನು ಹಿಡಿಯುವವರೆಲ್ಲ ಬೆಳಕು ಹರಿದ ಕೊಂಚ ಹೊತ್ತಿಗೆಲ್ಲಾ ಹೊರಟುಹೋಗಿರುತ್ತಾರೆ. ಈತ ಈಗ ಹೊರಟಿದ್ದಾನಲ್ಲ. ಸಣ್ಣಿ ನಿಂತ. +“ಒಡೆಯಾ….” ಎಂದ. +ನಾಲ್ಕು ಹೆಜ್ಜೆ ಮುಂದೆ ಹೋದೆ. +“ನಾನೊಬ್ಬನೇ ಸಮುದ್ರಕ್ಕೆ ಹೋಗ್ತೆ ಒಡೆಯಾ….” ಎಂದ. +“ಅಪ್ಪ ಎಲ್ಲೋ” ಎಂದು ಕೇಳಿದೆ. +“ಮೂರು ದಿನ ಆತು ಒಡೆಯ…. ಕಾಲಿಗೆ ಮೀನಿನ ಮುಳ್ಳು ಹೆಟ್ಟಿ…. ಕಾಲು ಬಾತಿದೆ…. ಮನೆಯಾಗ ಗಂಜಿ ಅಂಬಲಿಗೂ ದಾರಿಯಿಲ್ಲ…. ಅದಕ್ಕೆ…. ನಾನು….” +“ಸಣ್ಣಿ…. ಒಬ್ನೇ ಹೋಗ್ತೀಯೇನೋ….” +“ಓ! ಅದಕ್ಕೇನಂತೆ ಒಡೆಯಾ…. ಅಲ್ಲ…. ಅಲ್ಲ…. ಅವ್ವ ಏನಾರ ಈ ಕಡೆ ಬಂದು ನನ್ನ ಹುಡುಕಿದ್ರೆ…. ಹೀಗೆ ಹೋದ ಅಂತ ಹೇಳಿ ಒಡೆಯ…. ಕಾಳಜಿ ಮಾಡೋದು ಬೇಡ ಅಂತ ಹೇಳಿ….” +ಮನೆಯಲ್ಲಿ ಹೇಳದೆ ಕದ್ದು ಮುಚ್ಚಿ ಹೊರಟಿದ್ದಾನೆ ಹಾಗಾದರೆ ಸಣ್ಣಿ ಅಬ್ಬ ಇವನ ಧೈರ್ಯವೆ? ನೋಡುತ್ತ ನಿಂತೆ. ಕಾಲುದಾರಿ ಬಿಟ್ಟು ಮರಳ ದಂಡೆಗೆ ಇಳಿದ. ಅವರ ದೋಣಿಯನ್ನು ಬಲು ಪ್ರಯಾಸದಿಂದ ಸಮುದ್ರದತ್ತ ಎಳೆದೊಯ್ದ. ಅಲೆಗಳು ನುಗ್ಗಿ ನುಗ್ಗಿ ಬರುತ್ತಿರಲು, ದೋಣಿಯನ್ನು ಶತಪ್ರಯತ್ನ ಮಾಡಿ ಕಡಲಿಗೆ ನೂಕಿದ. ಒಂದೆರಡು ಭಾರಿ ಭಾರೀ ಅಲೆಗಳು ಅವನನ್ನೂ, ದೋಣಿಯನ್ನು ದಡದವರೆಗೂ ನೂಕಿಕೊಂಡು ಬಂದವು. ಸಣ್ಣಿ ಸೋಲೊಪ್ಪಿಕೊಳ್ಳಲಿಲ್ಲ. ತಾಯಿಯ ಮಡಿಲಲ್ಲಿ ಆಟವಾಡುವ ಮಗುವಿನಂತೆ ಆತ ಕೈ ಕಾಲು ಬಡಿದು ದೋಣಿಯನ್ನು ಕಡಲಿಗೆ ನೂಕಿ ಹಾರಿ ಅದರ ಮೇಲೆ ಕುಳಿತು ಹುಟ್ಟನ್ನು ಕೈಗೆತ್ತಿಕೊಂಡ. ಬಿಳಿ ನೊರೆಯ ಗೆರೆದಾಟಿ ದೋಣಿ ನೀಲಿ ನೀರಿನೊಳಗೆ ಹೊರಟಿತು. ಕ್ರಮೇಣ ಆಕಾಶ – ಸಮುದ್ರ ಸೇರಿದತ್ತ ದೋಣಿ ಹೋಗಲಾರಂಭಿಸಿತು. ಸಮುದ್ರ ಬರಿದಾಗಿತ್ತು. ಕಡಲ ತಡಿಯಲ್ಲಿ ಯಾರೂ ಇರಲಿಲ್ಲ. ಸಣ್ಣಿ ದೂರವಾದಂತೆ ನನಗೆ ಹೆದರಿಕೆ ಆರಂಭವಾಯಿತು. ಯಾರೋ ಒಬ್ಬರು ಬಂದರು. ಪೀಠದಕಲ್ಲಿನ ಬಳಿ ನಿಂತು ನನ್ನ ಮುಖ ನೋಡಿದರು. +“ಬನ್ನಿ…. ಇದು ಮಹಾಬಲೇಶ್ವರ ಪೀಠ…. ಇಲ್ಲಿ ಕುಳಿತು ಆತ ಸಮುದ್ರವನ್ನು ನೋಡುತ್ತಿದ್ದ….” +ನಾನೂ ನೋಡಿದೆ. ಸಣ್ಣಿ ಬಹಳ ದೂರ ಹೋಗಿದ್ದ. ಅಯ್ಯೊ! ಎಂದು ಚೀರಿತು ಜೀವ. ಅವರು ಕೊಟ್ಟ ಹಣವನ್ನು ಕೈಚಾಚಿ ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡೆ. +ನಾಲ್ಕು ಗಂಟೆಯ ನಂತರ ಮತ್ತೆ ಪೀಠದಕಲ್ಲಿನ ಬಳಿ ಬಂದಾಗ ಸಣ್ಣಿಯ ತಾಯಿ ಆ ದಾರಿ ಹಿಡಿದು ಕಡಲಿನತ್ತ ಹೊರಟಿದ್ದಳು. +“ಸಣ್ಣಿಯಾ?” +“ಹೌದು ಒಡೆಯಾ….” +ವಿಷಯ ತಿಳಿಸಿದೆ. ದ್ಯಾವರೆ ಎಂದು ಅವಳು ಚೀರಿದಳು. ಕಾಳಜಿ ಬೇಡ ಎಂದು ನಾನೇ ಧೈರ್ಯ ಹೇಳಿದೆ. ಅವಳಿಗೆ ಏನು ಧೈರ್ಯ ಬಂತೋ ಸಮಾಧಾನದಿಂದೆಂಬಂತೆ ಮನೆಯ ಕಡೆ ತಿರುಗಿದಳು. +ಗಂಟೆ ಐದಾಯಿತು. ಆರಾಯಿತು. ಸೂರ್ಯ ಕೆಳಗಿಳಿದು ಕೆಂಪು ಉಂಡೆಯಾಗಿ ಕಡಲ ಮೇಲೆ ತೇಲತೊಡಗಿದ. ಮೀನು ದೋಣಿಗಳೆಲ್ಲ ಹಿಂತಿರುಗಿ ಬಂದವು. ಊರ ಜನ ಹಸಿ ಮೀನಿನ ಕೋವೆಗಳನ್ನು ಹಿಡಿದು ದೇವಾಲಯದ ಮಗ್ಗುಲಿನಿಂದ ಮನೆಗಳಿಗೆ ಹೋದರು. ಕ್ರಮೇಣ ಕೆಲವರು ಆತಂಕಗೊಂಡರು. ಸಣ್ಣಿಯ ತಾಯಿ ಮರಳದಂಡೆಯ ಮೇಲೆ ಹೋಗಿ ಕುಸಿದು ಕುಳಿತಳು. ಸಣ್ಣಿಯ ತಂದೆ ಕೂಡ ಕಾಲೆಳೆದುಕೊಂಡು ಬಂದ. ಖಾರ್ವಿಗಳು, ಮೊಗೇರರು, ಹರಿಕಾಂತರರು ಒಬ್ಬೊಬ್ಬರೇ ಕಡಲತಡಿಯತ್ತ ಹೋಗಲಾರಂಭಿಸಿದರು. ಪಂಚಪಾತ್ರೆ ಉದ್ಧರಣೆಯನ್ನು ಕಲ್ಲಿನ ಮೇಲೆ ಕುಟ್ಟಿ ನಾನೂ ಓಡಿದೆ. +ಸಣ್ಣಿ ಎಲ್ಲಿ ಹೋದ? ಸಣ್ಣ ಹುಡುಗನಿಗೆ ಏಕೆ ಬೇಕಿತ್ತು ಈ ಕೆಲಸ? ಸಮುದ್ರದಲ್ಲಿ ದೋಣಿ ಮುಳುಗಿದರೆ? ಬಲೆ ಬೀಸುವಾಗ, ಬೀಸಿದ ಬಲೆ ಮೇಲೆಳೆದುಕೊಳ್ಳುವಾಗ ಇವನೇ ನೀರಿಗೆ ಬಿದ್ದರೆ? ಸಮುದ್ರದಲ್ಲಿ ಅಲ್ಲಲ್ಲಿ ಸುಳಿಗಳು ಕಾಣಿಸಿಕೊಳ್ಳುತ್ತವೆ. ಕೆಲವೆಡೆ ಬಂಡೆಗಳಿರುತ್ತವೆ. ಕೆಲವು ಕೆಟ್ಟ ಜಾಗಗಳಿರುತ್ತವೆ. ಕೆಟ್ಟ ಗಾಳಿಯು ಅಲ್ಲಲ್ಲಿ ಸುಳಿಯಬಾರದೆಂದಿಲ್ಲ. ಸಣ್ಣಿಗೆ ಏನಾದರೂ ಆದರೆ? ಕತ್ತಲಾಗುವಷ್ಟರಲ್ಲಿ ಆತ ಬಂದರಾಯಿತು. ಇಲ್ಲವಾದರೆ ಏನು ಗತಿ? ದಿಕ್ಕುಗಾಣದೆ ಆತ ಬೇರೆತ್ತಲೋ ಹುಟ್ಟು ಹಾಕಿಕೊಂಡು ಹೊರಟರೆ? ದಡದ ಮೇಲಿನ ಜನ ಎಲ್ಲಾ ಸಾಧ್ಯತೆಗಳ ಬಗ್ಗೆಯೂ ಮಾತನಾಡಿಕೊಳ್ಳಲಾರಂಭಿಸಿದರು. ನೇತ್ರಾಣಿ ಜಟಕನಿಗೆ ಹರಕೆ ಹೇಳಿಕೊಂಡದ್ದಾಯ್ತು. ತಿರುಪತಿ ದೇವರಿಗೆ, ಮಹಾಬಲೇಶ್ವರನಿಗೆ ಮುಡಿಪು ತೆಗೆದಿಟ್ಟಿದ್ದಾಯ್ತು. ಯಾರೋ ಒಂದಿಬ್ಬರು ದೋಣಿ ಏರಿ ಅಷ್ಟು ದೂರ ಹೋಗಿ ಬರುವುದಾಗಿ ಹೇಳಿ ಹೊರಡಲು ಸಿದ್ಧರಾಗತೊಡಗಿದರು. ಆಗ ಇನ್ನಾರೋ ಕೂಗಿಕೊಂಡರು- +“….ಅಕಾ….ಅದು ದೋಣಿ ಅಲ್ವಾ….” +ಎಲ್ಲರೂ ಕಣ್ಣದೃಷ್ಟಿಯನ್ನು ಮಸೆದು ದಿಗಂತಕ್ಕೆ ಅಂಟಿಕೊಂಡಂತ್ತಿದ್ದ ಕಪ್ಪುಚುಕ್ಕೆಯೊಂದನ್ನು ನೋಡಿಯೇ ನೋಡಿದರು. ಕಪ್ಪು ಚುಕ್ಕೆ ಹತ್ತಿರ ಬಂದಂತೆ ಒಂದು ಆಕಾರ ಪಡೆಯಿತು. ಅಲೆಗಳ ಮೇಲೆ ಎದ್ದು ಬಿದ್ದು ಅದು ದಡದತ್ತ ಬರತೊಡಗಿತು. ಹತ್ತಿರ ಬಂತೆನ್ನುವಾಗ ಯಾರೋ ಹೋಗಿ ದೋಣಿಯನ್ನು ಎಳೆದು ತಂದರು. ಸಣ್ಣಿ ಹೊರಲಾರದಷ್ಟು ಮೀನನ್ನು ಹೊತ್ತು ದಡಕ್ಕೆ ಬಂದ. ಅವನು ತುಂಬಾ ದಣಿದಿದ್ದ. ಆದರೆ ಅಷ್ಟೇ ಸಂತೋಷದಿಂದಿದ್ದ. ಅವನ ತಾಯಿ ಹೋಗಿ ಮಗನ ಮೈದಡವಿದಳು. ಅವನ ತಂದೆ – ಕುಲಕ್ಕೆ ಹೆಸರು ತಂದೆ ನೀನು ಅಂದ. ಖಾರ್ವಿಗಳು, ಮೊಗೇರರು, ಹರಿಕಾಂತರರು ಸಣ್ಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಮ್ಮ ಕೇರಿಗೆ ಹೋದರು. ಏಳು – ಎಂಟು ವರ್ಷದ ಓರ್ವ ಹುಡುಗ ಒಂಟಿಯಾಗಿ ಸಮುದ್ರಕ್ಕೆ ಹೋಗಿ ಮೀನು ಹಿಡಿದದ್ದು ಇದೇ ಪ್ರಥಮ ಎಂದು ಅವರು ಮಾತಾಡಿಕೊಂಡರು. ಸಣ್ಣಿ ಯಾರದ್ದೋ ಹೆಗಲ ಮೇಲೆ ಕುಳಿತು ನನ್ನನ್ನು ನೋಡಿ ಕೈಬೀಸಿದ. +ಮಹಾಬಲೇಶ್ವರನ ಪೀಠದ ಕಲ್ಲಿನ ಮೇಲೆ ಪಂಚಪಾತ್ರೆ ಉದ್ಧರಣೆ ಇರಲಿಲ್ಲ. ದಿನನಿತ್ಯ ದಕ್ಷಿಣೆಯ ರೂಪದಲ್ಲಿ ಬಂದ ಹಣವನ್ನು ಆಗಾಗ ಹಾಕಿ ಸಂಜೆಯಾದಾಗ ಮನೆಗೊಯ್ಯುತ್ತಿದ್ದ ಗೋಲಕವೂ ಅದರ ಸ್ಥಾನದಲ್ಲಿರಲಿಲ್ಲ. ಎಂದೂ ಯಾರೂ ಮುಟ್ಟಿರಲಿಲ್ಲ ಅದನ್ನು. ಇಂದು ಯಾರು ತೆಗೆದರು. ಓ! ಅಪ್ಪ ವಯ್ದಿರಬೇಕು. +ಮನೆಗೆ ಬಂದಾಗ ಅಪ್ಪ ಬಾಗಿಲಲ್ಲೇ ನಿಂತಿದ್ದ. ಅವನ ಕಣ್ಣು ಕೆಂಪಗಾಗಿತ್ತು. +“….ನಾನು ಬೆಳಿಗ್ಗೆ ಏನು ಹೇಳಿದ್ದೆ…. ನಿನಗೆ ನಮ್ಮ ಕುಲಕಸಬಿನಲ್ಲಿ ಆಸಕ್ತಿ ಇಲ್ಲ…. ಬೇಡ…. ನಾಳೆಯಿಂದ ನಾನು ನಾನು ಬೇರೆ ಏರ್ಪಾಟು ಮಾಡ್ತೀನಿ…. ಆಯ್ತ….” +ತುಂಬಾ ಸಂತೋಷವಾದಂತೆನಿಸಿ ತಲೆದೂಗಿದೆ. ಅಪ್ಪ ಮುಂದೆ ನುಗ್ಗಿ ಉದ್ದ ಕೂದಲು ಹಿಡಿದು ಬೆನ್ನಿನ ಮೇಲೆ ಗುದ್ದಿದ. +“…. ಬಿಡಿ…. ಬಿಡಿ…. ಮಾಣಿ ಸಣ್ಣದು. ನಾಳೆಯಿಂದ ಅವನು ಹೀಗೆಲ್ಲ ಮಾಡಲ್ಲ ಬಿಡಿ….” +ಅಮ್ಮ ನಡುವೆ ಬಂದಳು. ನಾನು ಕೂಗಿದೆ – +“ಕೇಳಿದ್ಯ ನಮ್ಮ ಕುಲಕ್ಕೆ ಇವನಿಂದ ಹೆಸರು ಬಂದೀತೆ?” +ಮತ್ತೂ ನಾಲ್ಕು ಏಟುಗಳು ಬಿದ್ದವು. +***** +(೧೯೭೯) +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_56.txt b/Kannada Sahitya/article_56.txt new file mode 100644 index 0000000000000000000000000000000000000000..83f34a6b2b9ffcbe384b9671cdbcf0bacc853d3b --- /dev/null +++ b/Kannada Sahitya/article_56.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಇಲ್ಲವಾದರೆ ಪ್ರತಿ ಸಲ ಹೀಗೆ ತವರಿಗೆ ಬರುವಾಗಲೂ ತಾನು ಹುಟ್ಟಿ ಬೆಳೆದ ಈ ಕಾರ್ಖಾನೆ ಕಾರ್ಮಿಕರ ವಸಾಹತಿನ ಪ್ರದೇಶದಲ್ಲಿ ಆಗಿರುವ ಹೊಸ ಬದಲಾವಣೆಗಳನ್ನು ಗಮನಿಸುತ್ತ-ನಂತರ ತಾಯಿ ಯಮುನಾ ಮತ್ತು ತಂಗಿ ಪೂರ್ವಿಯ ಜತೆ “ಅರೇ ಆ ಝೆರಾಕ್ಸ್ ಅಂಗಡಿ ಇದ್ದಲ್ಲಿ ಹೋಟ್ಲು ಹೇಗೆ ಬಂತು? ಗಿರಣಿ ಪಕ್ಕ ಕಬ್ಬಿನ ರಸದ ಅಂಗಡಿ ಇಟ್ಟಿದ್ದ ಸೊಲ್ಲಾಪುರಿ ಹೆಂಗಸು ಎಲ್ಲಿ ಹೋದಳು? ದಿಲ್‌ವಾರ್ ಭಾಯಿಯ ಮನೆಗೆ ಇನ್ನೂ ಬೀಗವಿದೆಯಲ್ಲ!” ಹೀಗೆ ನಾಟಕೀಯವಾದ ನಿಜದಲ್ಲಿ ನಂಟನ್ನು ಹಸಿಗೊಳಿಸುತ್ತಿದ್ದಳು. ಆದರೆ ಇಂದು ಎಂದಿನ ಹಾಗಿರಲಿಲ್ಲ. ಹನ್ನೆರಡು ವರುಷಗಳ ಹಿಂದೆ ಮನೆ ತೊರೆದು ಹೋಗಿದ್ದ ತಮ್ಮ ಛೋಟೂ-ಅವನ ಹೆಸರು ಮಕರಂದ, ಆದರೆ ಕುಸುಮ ಮತ್ತು ಪೂರ್ವಿಯ ನಂತರ ಹುಟ್ಟಿದವನಾದ್ದರಿಂದ ಎಲ್ಲರೂ ಛೋಟೂ ಅಂತಲೇ ಕರೆಯುತ್ತಿದ್ದರು-ಇಲ್ಲೇ ಸಮೀಪದಲ್ಲೇ, ಅತಿ ಸಮೀಪದಲ್ಲೇ ಇದ್ದಾನೆ ಎಂಬ ಮಾಹಿತಿ ಇಂದು ಕುಸುಮಳಿಗೆ ಸಿಕ್ಕಿತು. ತಕ್ಷಣ ಹಾಫ್‌ಡೇ ರಜೆ ಹಾಕಿ, ತನ್ನ ತವರಾದ ಪರುಳೇಕರ್ ಕುಟುಂಬದ ನಿತ್ಯ ಸಂಸಾರವೆಂಬ ದೋಸೆಯನ್ನು ಮತ್ತೆ ಮಗುಚಲೆಂಬಂತೆ ಬಂದಿರುವ ಈ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದೇ ತಿಳಿಯದಂಥ ಸುನ್ನ ಮನಸ್ಸಿನಲ್ಲಿ ಮನೆಯನ್ನು ಸಮೀಪಿಸತೊಡಗಿದಳು. +ಅಪ್ಪ ಪರುಳೇಕರ್ ಕಾರ್ಖಾನೆಯಲ್ಲಿ ಹಿರಿಯ ಕಾರ್ಮಿಕನಾಗಿದ್ದ. ಹಾಗೆಂದೇ ಒಂಟಿ ಕೋಣೆಯ ಕ್ವಾರ್ಟರ್ಸ್ ಅವನಿಗೆ ಎಂದೋ ಲಭ್ಯವಾಗಿತ್ತು. ಪೂರ್ವಿ ಮತ್ತು ಛೋಟೂ ಹುಟ್ಟಿದ್ದು ಇಲ್ಲೇ. ಸಣ್ಣವಳಿದ್ದಾಗ ಪಾತ್ರೆ ಪಡಗದೊಂದಿಗೆ ಟೆಂಪೋದಲ್ಲಿ ಡೊಂಬಿವಿಲಿಯಿಂದ ಇಲ್ಲಿಗೆ ಬಿಡಾರ ಬಂದ ನೆನಪು ಕುಸುಮಳಿಗೆ ಇನ್ನೂ ಇದೆ. ಟೆಂಪೋ ಡ್ರೈವರು ಐದು ರೂಪಾಯಿ ಟಿಪ್ಸ್ ಜಾಸ್ತಿ ಬೇಕೆಂದು ದೊಡ್ಡದಾಗಿ ಅಪ್ಪನನ್ನು ಏಕವಚನದಲ್ಲಿ ಬೈದು ಜಗಳ ಮಾಡಿದ್ದು ನೆನಪಿದೆ. ಮೂರೂ ಮಕ್ಕಳು ಹೇಗೆ ಈ ಪುಟ್ಟ ಬಿಡಾರದಲ್ಲಿ ಬೆಳೆದೆವೋ ಯಾವಾಗ ಬೆಳೆದೆವೋ ಎನ್ನುವುದು ತಿಳಿಯುವುದರೊಳಗೇ ಕುಸುಮಳ ಮದುವೆ ಆಯಿತು. ಪೂರ್ವಿಯ ಪ್ರೇಮ ವಿವಾಹವೂ, ಇದೇ ಕಾರ್ಖಾನೆಯ ಕಾರ್ಮಿಕ ಸುಹಾಸ ಭಾಲೇಕರನ ಜತೆ ಆಗಿ, ಅವನೂ ಇಲ್ಲೇ ಉಳಿದು, ಈ ಪ್ರೇಮ ವಿವಾಹಕ್ಕೆ ಕೆಲ ದಿನಗಳಿರುವಾಗಲೇ ಛೋಟೂನ ಕಣ್ಮರೆಯೂ ಆಗಿ, ನಂತರ ಪರುಳೇಕರನ ದೇಹಾಂತವೂ ಆಗಿ, ಕ್ವಾರ್ಟರ್ಸಿನಲ್ಲಿ ಹೀಗೆ ಬಿಡಾರ ಮುಂದುವರೆದಿತ್ತು. +ಹನ್ನೆರಡು ವರ್ಷಗಳ ಹಿಂದಿನ ಪ್ರಕರಣ ಅದು. ಛೋಟೂ ಆಗಷ್ಟೇ ಪಿಯುಸಿ ಫೇಲಾಗಿದ್ದ. ಕಳ್ಳನಂತೆ ಮನೆಯಲ್ಲೇ ಉಳಿಯುತ್ತಿದ್ದ. “ಯಾಕೋ ಛೋಟೂ….ಹೊರಗೆ ಹೋಗೋ” ಎಂದು ಹೇಳಿದರೆ “ನನ್ನನ್ನು ಮಕರಂದ ಅಂತ ಕರೀರಿ. ಛೋಟೂ ಅನ್ನಬೇಡಿ. ಫೇಲಾಗಿದ್ದೇನೆ ಅಂತ ದಾದಾಗಿರಿ ಮಾಡಬೇಡಿ ಎಲ್ಲಾ” ಎಂದು ರೇಗುತ್ತಿದ್ದ. ಪೂರ್ವಿಯ ಮದುವೆ ನಿಶ್ಚಯವಾಗಿದ್ದ ದಿನಗಳವು. ಸಹಾಯಕ್ಕೆಂದು ಬಂದಿದ್ದ ಕುಸುಮಾಳೂ ಛೋಟೂನನ್ನು “ಎಲ್ಲಾದರೂ ಟೆಂಪರರಿ ಕೆಲಸ ಹುಡುಕು ಹೀಗೆ ಮನೇಲಿ ಕೂತರೆ, ಹಿಂದೆ ಬೀಳುತ್ತೀ” ಎಂದಾಗ ಅಮ್ಮ ಛೋಟೂನ ಬಾಜು ವಹಿಸಿಕೊಂಡವಳಂತೆ “ಜಾಣೆಯರು ನೀವು ಅಂತ ಧಿಮಾಕು ನಿಮಗೆ. ಅವನ ಕಷ್ಟದ ಪರಿವೆಯಿಲ್ಲ. ಅವನು ತನ್ನ ಮನೆಯಲ್ಲಿದ್ದಾನೆ ನಿಮಗೇನು ತ್ರಾಸು?” ಎಂದೆಲ್ಲ ವಿಚಿತ್ರ ರಂಪ ಮಾಡಿ ಅಕ್ಕತಂಗಿಯರ ಬಾಯಿ ಮುಚ್ಚಿಸುತ್ತಿದ್ದಳು. ಇಂಥ ಒಂದು ಮಧ್ಯಾಹ್ನ ಐದಾರು ಯುವಕರು ಬಂದು, ಮಕರಂದನನ್ನು ದರದರ ಹೊರಗೆಳೆದು ಹಾಕೀ ಸ್ಟಿಕ್‌ನಿಂದ ಹೊಡೆದು, ಸಾಲು ಮನೆಗಳ ಮಧ್ಯ ಎಲ್ಲರೆದುರು ದವಡೆಯಿಂದ ರಕ್ತ ಸೋರುವಂತೆ ಗುದ್ದಿ-“ಮೋಸ ಮಾಡ್ತೀಯೇನೋ, ನೀನು ಹಣಾ ಮರಳಿಸೋ ತನಕ, ಪ್ರತಿ ವಾರ ಬಂದು ಹೀಗೆ ಎಲ್ಲರೆದುರು ಹೊಡೆದು ಹೋಗ್ತೀವಿ, ಖಬರ್ ದಾರ್”ಎಂದು ಪೂರ್ವಿ, ಕುಸುಮ ಮತ್ತು ತಾಯಿ ಯಮುನಾರನ್ನು ವಿಚಿತ್ರವಾಗಿ ನೋಡಿ ಹೋಗಿಬಿಟ್ಟರು. +ಮಕರಂದ ಯಾರದೋ ಮಾತು ಕೇಳಿ, ಫೈನಾನ್ಸ್ ಬಿಸಿನೆಸ್ ಮಾಡುತ್ತೇನೆ ಎಂದು ಯಾರ್‍ಯಾರಿಂದಲೋ ಇಪ್ಪತ್ತು ಸಾವಿರ ಇಸಕೊಂಡು ಅದನ್ನು ಎಲ್ಲೋ ಹಾಕಿ ಮುಳುಗಿಸಿ ಬಿಟ್ಟಿದ್ದ. ಈ ಮಾರಾಮಾರಿ ನಡೆದಾಗ ಎರಡನೇ ಶಿಫ್ಟಿನಲ್ಲಿದ್ದ ಅಪ್ಪ ಸುದ್ದಿ ತಿಳಿದು ಬಂದವನೇ ವಿವರ ಗೊತ್ತಾದದ್ದೇ ಅಪಮಾನದಿಂದ ನಖಶಿಖಾಂತ ಥರಥರ ಕಂಪಿಸಿ ಮಾತು ಬಾರದೆ ಉಮ್ಮಳಿಸಿ ಅತ್ತುಬಿಟ್ಟ. ಗೋವಾ ಗಡಿಯಿಂದ ಬರಿಗೈಲಿ ಮುಂಬಯಿಗೆ ಬಂದಿದ್ದ ತಾನು, ಲೋಕಲ್ ರೈಲುಗಳಲ್ಲಿ ಬಾಚಣಿಗೆ ಮಾರಿ, ರೇಡಿಯೋ ರಿಪೇರಿ ಅಂಗಡಿಯಲ್ಲಿ ಸಹಾಯಕನಾಗಿ ಸೇರಿ ಹೇಗೆ ಈ ಬಾಳು ಕಟ್ಟಿದೆ. ಎಷ್ಟು ಕಷ್ಟದಿಂದ ನೀಯತ್ತಿನಿಂದ ಕಟ್ಟಿದೆ. ಮೂರು ಮಕ್ಕಳ ಸಂಸಾರವನ್ನು ಕಾರ್ಖಾನೆಯಲ್ಲಿ ಡಬಲ್ ಡ್ಯೂಟಿ ಮಾಡಿ ಹೇಗೆ ತೂಗಿಸುತ್ತ ಬಂದೆ-ಎಂಬುದನ್ನು ಮಕ್ಕಳೆದುರು ಮೊದಲ ಬಾರಿಗೆ, ಯಾರೋ ಅಪರಿಚಿತರ ಎದುರು ಹೇಳುವಂತೆ ಭಯಮಿಶ್ರಿತ ಆವೇಶದಲ್ಲಿ ಹೇಳಿ ಹೇಳಿ ಬಿಸುಸುಯ್ಯತೊಡಗಿದ. ಛೋಟೂನ ರಕ್ತ ಸೋರುವ ದವಡೆಗೆ ಹಚ್ಚಲು ಪಕ್ಕದ ಮನೆಯ ಫ್ರಿಜ್ಜಿನಿಂದ ಐಸ್ ತಂದ ಪೂರ್ವಿಗೆ “ಯಾರಿಗೆ ಹೇಳಿ ಹೋಗಿದ್ದೆ ನಾಚಿಕೆಯಾಗೂದಿಲ್ಲ, ಮಂದಿಯ ಹಣ ಮುಳುಗಿಸಿ ಮೋಸಮಾಡಿ, ಮನೆಯ ಮರ್ಯಾದೆ ಮೂರು ಕಾಸು ಮಾಡಿದ ತಮ್ಮನ ಪೆಟ್ಟಿಗೆ ಹಚ್ಚಲು ಐಸ್ ಕೊಡಿ ಎಂದು ಹೇಳಿಕೊಂಡು ಊರೆಲ್ಲ ತಿರುಗಲು” ಎಂದು ತಾರಕಸ್ವರದಲ್ಲಿ ಕೂಗಿದ ಪರುಳೇಕರ್ ಛೋಟೂನನ್ನು ಕಾರ್ಖಾನೆಯ ಹೆಲ್ತ್ ಸೆಂಟರಿನ ಡಾಕ್ಟರರ ಬಳಿ ಒಯ್ಯಲೂ ನಿರಾಕರಿಸಿ ಬಿಟ್ಟ. +ನಂತರ ಕತ್ತಲಾದ ಮೇಲೆ ಕುಸುಮಾ ಮತ್ತು ಅಮ್ಮ ಸೇರಿ ಛೋಟೂನನ್ನು ರಿಕ್ಷಾದಲ್ಲಿ ಹಾಕಿ ಭಾಂಡುಪ್ ಉಪನಗರಕ್ಕೆ ಹೋಗಿ ಡಾಕ್ಟರಿಗೆ ತೋರಿಸಿ ತಂದರು. ಮನೆ, ಮರ್ಯಾದೆ, ನೀಯತ್ತು, ಹಣ ಅಂತ ಬೈಯುವಾಗ ಪರುಳೇಕರ್ ಇಡೀ ಚಾಳಿನ ಸಾಲು ಮನೆಗಳಿಗೆ ಕೇಳಿಸುವಂತೆ ಬಾಗಿಲ ಕಡೆಗೆ ಮುಖ ಮಾಡುತ್ತಿದ್ದ. ಅಕ್ಕಪಕ್ಕದ ಮನೆಯವರೆಲ್ಲರೂ ಒಂದು ತಣ್ಣನೆಯ ಲಕ್ಷಣ ರೇಖೆಯ ಆಚೆಗೇ ಉಳಿದುಕೊಂಡು ಸ್ಪಂದಿಸುತ್ತಿದ್ದರು. ಇದೊಂದು ಬಿಟ್ಟರೆ ಮತ್ತೆಲ್ಲ ಸರೀಗಿದೆ ಎಂಬಂತೆ “ಭಾಭೀ ‘ಛಾಯಾಗೀತ್’ ನೋಡಲು ಬರುವುದಿಲ್ಲವೆ? ‘ಹಮ್‌ಲೋಗ್’ ನೋಡಲು ಬರುವುದಿಲ್ಲವೆ?” ಎಂದೆಲ್ಲ ಮಾತಾಡುತ್ತಿದ್ದರು. ಇರುವ ಹತ್ತು ಚದುರಡಿಯ ಮನೆಯಲ್ಲಿ ನೋಯುವ ಕಾಲು ಚಾಚಿ ಮುದುಡಿ ಕೂತಿರುವ ಛೋಟೂನನ್ನು ಗಂಭೀರವಾಗಿ ಇಣುಕಿ ನೋಡಿ ಮನೆಯೆದುರು ಹಾಯುತ್ತಿದ್ದರು. ಅತಿ ಸಮೀಪ ಬಂದು ನಿಂತಿರುವ ಪೂರ್ವಿಯ ಮದುವೆಯ ದಿನಾಂಕವೂ ಈಗ ಪರುಳೇಕರನ ಮನದಲ್ಲಿ ಥರಥರ ಕಂಪಿಸತೊಡಗಿತು. “ಪೂರ್ವಿಯ ಲಗ್ನ ನಿನ್ನೀ ಲಫಡಾದಿಂದಾಗಿ ಮುರಿಯುವುದು ಬೇಡ. ನನ್ನ ಸರ್ವೀಸಿನಲ್ಲಿ ಉಳಿಸಿದ ಎಲ್ಲಾ ಹಣವನ್ನು ಈ ಲಗ್ನಕ್ಕೆ ಹಾಕಿದ್ದೇನೆ. ಇದು ಮುರಿದರೆ ಸತ್ಯಾನಾಶವಾಗಿ ಹೋಗ್ತೇನೆ. ನಿನ್ನಿಂದ ಮನೆಯ ಉದ್ಧಾರ ಆಗೋದು ಅಷ್ಟೇ ಇದೆ. ಹೋಗು ಎಲ್ಲಾದರೂ ಹಾಳಾಗಿ ಹೋಗು”ಎಂದು ಛೋಟೂನನ್ನು ನಡುರಾತ್ರಿ ಹೊರಹಾಕಿಬಿಟ್ಟ. ಕಂಗಾಲಾದ ಛೋಟೂ ಗಾಯಗೊಂಡ ಪ್ರಾಣಿಯಂತೆ ಆಸರೆಗಾಗಿ ಅಕ್ಕಂದಿರ ಮುಖವನ್ನೇ ನೋಡುತ್ತ ಮೆಲ್ಲಗೆ ಎದ್ದು ನಿಂತು ಬಾಗಿಲಲ್ಲಿ ತಂತಿಯ ಮೇಲೆ ಒಣಗುತ್ತಿದ್ದ ಟೀಶರ್ಟನ್ನು ಅದಾಗಲೇ ತೊಟ್ಟಿದ್ದ ಮಾಸಲು ಹಳೇ ಜೀನ್ಸ್ ಪ್ಯಾಂಟಿನ ಮೇಲೆ ಹಾಕಿಕೊಂಡು ಕುಂಟುತ್ತ ಕತ್ತಲಲ್ಲಿ ಹೋಗಿಬಿಟ್ಟ. ನಡೆಯುತ್ತಿರುವ ಸಂಗತಿಯ ಮೇಲೆ ಯಾವ ಬಗೆಯ ನಿಯಂತ್ರಣವೂ ಇಲ್ಲದಂತೆ ಯಮುನಾ ಬಾಯಿ ದೊಡ್ಡಕ್ಕೆ ಚೀರಲೂ ಆಗದೆ ಬಿಕ್ಕುತ್ತ, ಹೊರಗಿನ ಸಮಾಜ, ಮಗಳ ಮದುವೆ ಎಂಬೆಲ್ಲ ಅಜ್ಞಾತ ಭಯದಲ್ಲಿ ಬಾಯಿ ಕಳೆದುಕೊಂಡು ಮೋರಿಗೆ ಆತು ಕುಸಿದು ಕೂತುಬಿಟ್ಟಳು. +ಕುಸುಮಾಳೊಬ್ಬಳೇ ಬಾಗಿಲಲ್ಲಿ ನಿಂತು, ಕೊನೆಯಲ್ಲಿ ಬೀದಿ ದೀಪದ ಅಡಿಗೆ ಅವನು ಕುಂಟುತ್ತಾ ದೂರವಾಗುತ್ತ ಮರೆಯಾಗುವವರೆಗೆ ನೋಡಿದಳು. ಆಗಷ್ಟೆ ತಂತಿಯಿಂದ ಜಗ್ಗಿ ಹಾಕಿಕೊಂಡಿದ್ದ ಅವನ ಇಸ್ತ್ರಿಯಿಲ್ಲದ ತಿಳಿಹಳದಿ ಟೀ ಶರ್ಟಿನ ಬೆನ್ನಿನ ಮೇಲಿನ ತಂತಿಯ ಕುರುಹಿನ ನೆರಿಗೆಯ ಗೆರೆ ಬೀದಿ ದೀಪದಲ್ಲೂ ಸ್ಪಷ್ಟವಾಗಿ ಕಾಣುತ್ತಿತ್ತು. +ಮೆಲ್ಲಗೆ ದೂರವಾದ ಛೋಟೂನ ತಿಳಿಹಳದಿ ಟೀಶರ್ಟಿನ ಆ ನೆರಿಗೆಯ ಗೆರೆ ಕುಸುಮಳ ಮನದಿಂದ ಎಂದೂ ಮಾಸಿಲ್ಲ. ಗಂಡನ ಮನೆಗಿಂತ ಜಾಸ್ತಿ ಅವಳು ಇಲ್ಲಿಗೇ ಬರುತ್ತಿದ್ದಳು. ಏಕೆಂದರೆ ಕಾರ್ಖಾನೆ ಗೇಟಿನ ಬಳಿ ಅಥವಾ ರೇಷನ್ ಅಂಗಡಿಯ ಬಳಿ ಅಪರಿಚಿತರು ಸಿಕ್ಕಿ ಯಮುನಾಬಾಯಿಯನ್ನೋ ಪರುಳೇಕರನನ್ನೋ-“ಏನು? ಎಲ್ಲಿ ಬಚ್ಚಿಟ್ಟಿದ್ದೀರಿ ಮಗನನ್ನು ಬಿಡುವುದಿಲ್ಲ ನಾವು ಹಾಗೆಲ್ಲ” ಎಂದೆಲ್ಲ ಬೆದರಿಸುತ್ತಿದ್ದರು. ನಿದ್ದೆಗೆಡಿಸುವ ಭಯವೊಂದು ಈ ಬಿಡಾರವನ್ನು ಆವರಿಸಿಕೊಂಡಿತು. ಆಗೆಲ್ಲ ಪರುಳೇಕರ “ಅವನು ನಮ್ಮ ಪಾಲಿಗೆ ಸತ್ತ ಹಾಗೆ” ಎಂದು ಬೇಕಾದಕ್ಕಿಂತ ದೊಡ್ಡ ದನಿಯಲ್ಲಿ ತನ್ನ ಸಹೋದ್ಯೋಗಿಗಳಿಗೆ ಕೇಳಿಸುವ ಹಾಗೆ ಕೂಗುತ್ತಿದ್ದ. ಕಾರ್ಖಾನೆಯಲ್ಲಿಯ ತನ್ನ ಪ್ರತಿಷ್ಠೆ ಮತ್ತು ಪೂರ್ವಿಯ ನಿಗದಿತ ಮದುವೆ ಇವೆರಡಕ್ಕೂ ಬೇಕಿದ್ದ ಏನೋ ಒಂದನ್ನು ಈ ಪ್ರಕರಣದ ಈ ಆವೇಶದಲ್ಲಿ ಅವನು ಪಡೆಯುತ್ತಿರುವಂತಿತ್ತು. ಛೋಟೂ ಈಗ ಬರೋಡಾದಲ್ಲಿ ಇದ್ದಾನಂತೆ, ಕೊಲ್ಹಾಪುರದಲ್ಲಿ ಯಾರಿಗೋ ಸಿಕ್ಕನಂತೆ, ಹೀಗೆಲ್ಲ ಗಾಳಿಯಲ್ಲಿ ಕಾಗದದ ಚೂರುಗಳಂತೆ ವದಂತಿಗಳು ಹಾರಿ ಬಂದಾಗ, ಪುಟ್ಟ ಬಿಡಾರದಲ್ಲಿ ನಾಲ್ವರೂ ರಾತ್ರಿ ನಿದ್ದೆ, ಮಾತು ಎರಡೂ ಇಲ್ಲದೆ ತೆಪ್ಪಗೆ ಝೀರೋ ಕ್ಯಾಂಡಲ್ ದೀಪದಲ್ಲಿ ಕೂತಿರುತ್ತಿದ್ದರು. ಪಟಾಕಿ ಹಚ್ಚಲು ಹೆದರುತ್ತಿದ್ದ ಮೊನ್ನೆಮೊನ್ನೆಯ ಪೋರ, ಹಠಾತ್ತನೆ ಈ ಪುಟ್ಟ ಬಿಡಾರದೊಳಗೆ ಹಿಡಿಯಂತಾಗಿಬಿಟ್ಟನಲ್ಲ ಎಂದು ಕುಸುಮಳಿಗೆ ಜೀವ ಎಳೆಯುತ್ತಿತ್ತು. ಅವನನ್ನು ಅತಿ ಹೆಚ್ಚು ಎತ್ತಿ ಆಡಿಸಿದವಳೇ ಅವಳು. +ಪೂರ್ವಿಯ ಭಾವಿ ಪತಿ ಸುಹಾಸ್ ಭಾಲೇಕರ ಇದೇ ಸಮಯ ಸಾಧಿಸಿ, ಈ ಹತ್ತು ಚದುರಡಿಯಲ್ಲಿ ತನ್ನ ಒಜ್ಜೆಯನ್ನು ಹೇರತೊಡಗಿದ. “ಈ ಮನೆಯಲ್ಲಿ ಛೋಟೂನ ಯಾವ ಕುರುಹೂ ಇರಬಾರದು. ಅವನ ಫೋಟೋಗಳು ಒಂದೂ ಇರಕೂಡದು.” ಎಂದು ತಾಕೀತು ಹಾಕಿದ. ಫ್ರೇಮಿನಲ್ಲಿದ್ದ ಅವನ ಫೋಟೋಗಳನ್ನು ತೆಗೆಯಲಾಯಿತು. ಮದುವೆಯನ್ನು ಸರಳವಾಗಿ ‘ಆರ್ಯಸಮಾಜ’ದಲ್ಲಿ ನಿಯೋಜಿಸಲಾಯಿತು. ಈ ಸರಳತೆಯಿಂದಾಗಿ ಉಳಿತಾಯಗೊಂಡ ಹಣವನ್ನು ಸುಹಾಸ್ ಭಾಲೇಕರ್ ಕ್ಯಾಶ್ ಉಡುಗೊರೆಯಾಗಿ ತನಗೆ ಕೊಡಬೇಕೆಂದ. ಮದುವೆಯ ದಿನ ಸಿನಿಮೀಯವಾಗಿ ಛೋಟೂ ಏನಾದರೂ ಬಂದುಬಿಟ್ಟರೆ ತಾನು ಮಂಟಪವನ್ನೂ ತ್ಯಜಿಸಿ ಹೋಗುತ್ತೇನೆ ಎಂದೂ ಬೆದರಿಕೆ ಹಾಕಿದ. ಮದುವೆಯ ವೇಳೆ ಒಂದೊಮ್ಮೆ ಛೋಟೂ ಬಂದರೆ-“ಅದರಿಂದ ಲಗ್ನ ಮುರಿಯುತ್ತದೆ. ನನ್ನ ಬಾಳು ಹಾಳಾಗುತ್ತದೆ.” ಎಂದು ಹೇಳಿ ಎಂದು ಪೂರ್ವಿ ತನ್ನೆಲ್ಲ ಗೆಳತಿಯರನ್ನು ಆರ್ಯ ಸಮಾಜದ ಹೊರಗೆ ನಿಲ್ಲಿಸಿದ್ದಳು. ಮದುವೆಯ ನಂತರ ವಧೂವರರಿಗೆ ಬಿಡಾರದಲ್ಲಿ ಪ್ರೈವೇಸಿ ಸಿಗಲಿ ಅಂತ ಪರುಳೇಕರ ಮತ್ತು ಯಮುನಾಬಾಯಿ, ಕುಸುಮಾಳ ಮನೆಯಲ್ಲಿ ಎರಡು ದಿನ ಉಳಿದು ಮರಳಿ ಬಂದಾಗ ಸುಹಾಸ ಮನೆಯ ಸಂದಿಗೊಂದಿಯಲ್ಲಿದ್ದ ಛೋಟೂನ ಹಳೇ ಕೆನ್ವಾಸ್ ಬೂಟು, ಸ್ವೆಟರ್, ಪುಸ್ತಕ ಇತ್ಯಾದಿಗಳನ್ನು ಕಿತ್ತೆಸೆಯತೊಡಗಿದ್ದ. “ದುಡಿಯುತ್ತಿರುವ ನನ್ನ ಬಳಿಯೇ ಇಲ್ಲ ಇಂಥ ಶೋಕೀ ಸಾಮಾನುಗಳು! ದೊಡ್ಡ ಹೀರೋ…ನಿನ್ನ ಫೇಲ್ ತಮ್ಮ” ಎಂದು ಪೂರ್ವಿಯನ್ನು ಹಂಗಿಸತೊಡಗಿದ. +“ಹಾಗಾದರೆ ಅವನ ಆಫ್ಟರ್‌ಶೇವ್ ಲೋಶನ್-ನೀನ್ಯಾಕೆ ಬಳಸುತ್ತೀ?” ಎಂದಾಕೆ ಕೇಳಿದಾಗ “ಏಯ್…..ನಾನೀಗ ಗಂಡ. ಬಹುವಚನ ಕೊಡು ಬಹುವಚನಾ”ಎಂದು ಚೀರಿದ. ಮತ್ತು ಪರುಳೇಕರ್ ದಂಪತಿಗಳ ಸಮ್ಮುಖದಲ್ಲೇ ಛೋಟೂನ ಸಾಮಾನುಗಳನ್ನು “ನನಗಿಂತ ಸ್ಮಾರ್ಟ್ ಇದ್ದೀಯೇನೋ ಗಾಂಡೂ….ಇಂಗ್ಲೀಷ್ ಮೀಡಿಯಂ ಕಲ್ತಿದ್ದೀ ಅಂತ ಕೊಬ್ಬು ಇತ್ತಲ್ಲಾ ನಿನಗೆ…” ಎನ್ನುತ್ತ ಹೊರಗೆ ಎಸೆಯತೊಡಗಿದ. ಯಮುನಾಬಾಯಿ ಸಟಸಟ ಅದನ್ನೆಲ್ಲ ಆರಿಸಿಕೊಂಡಳು. ಮತ್ತು ಅದೇ ದಿನ ಪರುಳೇಕರ್ ಕಲ್ಯಾಣದಲ್ಲೊಂದು ಕೋಣೆಯನ್ನು ಬಾಡಿಗೆ ಹಿಡಿದ. ಮಗಳ ಮನಸ್ಸು ಒಡೆಯುವುದು ಬೇಡ ಎಂದು ಎರಡು ದಿನ ಇದ್ದು ನಂತರ ಇಬ್ಬರೂ ಕಲ್ಯಾಣ್‌ಗೆ ಹೋಗಿಬಿಟ್ಟರು. +ಕಲ್ಯಾಣದ ಹೊಸಬಿಡಾರಕ್ಕೆ ಹೋದ ಮೇಲೆ ಪರುಳೇಕರ್‌ನಿಗೆ ಛೋಟೂನ ಪ್ರಕರಣ ಬಿಲ್‌ಕುಲ್ ಬೇರೆಯಾಗಿ ತೋರತೊಡಗಿತು. ಕಾರ್ಖಾನೆಯ ಪರಿಸರದಲ್ಲಿ, ಈ ವಸಾಹತಿನಲ್ಲಿ ಮುಖ್ಯವೆನಿಸುತ್ತಿದ್ದ ತನ್ನ ಪ್ರತಿಷ್ಠೆ, ಹೆಸರು ಈಗ ಪರಿಚಿತರಿಲ್ಲದ ಹೊಸ ಪರಿಸರದಲ್ಲಿ ಅಷ್ಟು ಮುಖ್ಯವೆನಿಸಲಿಲ್ಲ. ಛೋಟೂನ ಗೈರು ಹಾಜರಿಯಲ್ಲಿ ಅಳಿಯ ವರ್ತಿಸಿದ ರೀತಿ ಕಟುವಾಗಿ ಕಂಡಿತು. ಪಾಪ ಅಳಿಯನೂ ತನ್ನ ಸ್ಥಳಕ್ಕೆ, ಸಮಯಕ್ಕೆ, ವಾತಾವರಣಕ್ಕೆ ಸಂಬಂಧಿಸಿದ ಪ್ರತಿಷ್ಠೆಯ ಹೋರಾಟದಲ್ಲಿದ್ದಾನೆ. ಈ ಹೊಸಪರಿಸರದಲ್ಲಿ ಪರುಳೇಕರ್‌ಗೆ ಛೋಟೂನ ನೆನಪು ತೀವ್ರವಾಗಿ ಬರತೊಡಗಿತು. ಛೋಟೂನ ಆ ೨೦ ಸಾವಿರ ರೂಪಾಯಿ ಪ್ರಕರಣ ನಿಜಕ್ಕೂ ಅಂಥ ಮಹಾಪಾಪವಾಗಿತ್ತೆ? ಸಹೋದ್ಯೋಗಿ ನಾಯರ್ “ನೋಡಿ ಪರುಳೇಕರ್, ಈ ಕಾಲದಲ್ಲಿ ಹಣಕ್ಕೆ ಏನು ಬೆಲೆ ಇದೆ. ೨೦ ಸಾವಿರ ರೂಪಾಯಿಯಲ್ಲಿ ಏನು ಸಿಗುತ್ತದೆ ಹೇಳಿ. ಮನೆ ಬಿಡಿ. ಒಂದು ರಿಕ್ಷಾ ಬಿಡಿ, ಒಂದು ಮೋಟಾರ್ ಸೈಕಲ್ಲೂ ಸಿಗುವುದಿಲ್ಲ. ಏನೋ ಅವನ ಎಣಿಕೆ ತಪ್ಪಾಯಿತು. ಅವನ ಕೆಟ್ಟಕಾಲ. ಅವನನ್ನು ಮಾಫ್ ಮಾಡಿಬಿಡಿ.” ಎಂದು ಹೇಳಿದ್ದರು. ಪರುಳೇಕರ್ ಅದನ್ನು ಮತ್ತೀಗ ನೆನೆಸಿಕೊಂಡು ದೊಡ್ಡದಾಗಿ ಯಮುನಾ ಬಾಯಿಗೆ ಹೇಳಿದ. ಯಮುನಾಬಾಯಿ ಮೌನವಾಗಿ ಇದ್ದು ಬಿಟ್ಟಿದ್ದಳು. ಛೋಟು ನಾಸಿಕದಲ್ಲಿದ್ದಾನಂತೆ, ದಮನ್‌ನಲ್ಲಿ ಇದ್ದಾನಂತೆ ಎಂಬ ಬಾತ್ಮಿಗಳು ಬಂದಾಗ ‘ಇದ್ದಾನಂತೆ’ ಎಂಬ ಶಬ್ದವೇ ಅತ್ಯಂತ ಸಮಾಧಾನವನ್ನು ಕೊಟ್ಟು, ಸುಮ್ಮನೆ ಕಣ್ಮುಚ್ಚಿ ಕುಲದೇವತೆಯನ್ನು ನೆನೆಸುತ್ತಿದ್ದಳು. ಪದೇ ಪದೇ ಕುಸುಮಾಳಿಗೆ ಫೋನು ಮಾಡಿ “ಒಂದು ವೇಳೆ ಛೋಟೂ ಬಂದರೆ, ಇಲ್ಲಿಯ ನಮ್ಮ ವಿಳಾಸ ಕೊಡಲು ಪೂರ್ವಿಗೆ ಹೇಳು” ಎಂದು ಹೇಳುತ್ತಿದ್ದಳು. +ಹೀಗಿರುವಾಗ ಒಂದು ದಿನ ಛೋಟುನನ್ನು ವಸಯಿ ರೈಲ್ವೆ ನಿಲ್ದಾಣದ ಕ್ಯಾಂಟೀನಿನಲ್ಲಿ ಕಂಡಂತಾಯಿತು ಎಂದು ಯಾರೋ ಪರುಳೇಕರ್‌ಗೆ ತಿಳಿಸಿದರು. ಪರುಳೇಕರ್ ತಕ್ಷಣ ಲೋಕಲ್ ಟ್ರೇನು ಹಿಡಿದು ದಾದರಿನಲ್ಲಿ ಬದಲಿಸಿ ವಸಯಿಗೆ ಹೋದ. ಅಲ್ಲಿಳಿದಾಗ ರಾತ್ರೆ ೧೧ ಗಂಟೆ. ಇರುವ ಆರೂ ಪ್ಲಾಟಫಾರ್ಮುಗಳಲ್ಲಿ ಒಟ್ಟೂ ಏಳೆಂಟು ಕ್ಯಾಂಟೀನುಗಳು. ಹತ್ತಿ ಇಳಿದರೂ ನಿಂತು ಇಣುಕಿ ನೋಡಿದ. ಪರಿಚಿತ ಮುಖ ಇರಲಿಲ್ಲ. ಅವನು ಗಡ್ಡ ಬಿಟ್ಟಿದ್ದಾನೋ ಎನಿಸಿ ಗಡ್ಡ ಇರುವ ಹದಿಹರೆಯದ ಮುಖಕ್ಕಾಗಿ ನೋಡಿದ. ರಾತ್ರಿಯೇರತೊಡಗಿದಂತೆ ಅಂಗಡಿ ಮುಚ್ಚಿ ಜನ ಅಲ್ಲೇ ಪ್ಲಾಟಫಾರ್ಮಿನ ಮೇಲೆ ಪುಟ್ಟ ಜಮಖಾನೆ ಹಾಸಿ ಸಾಲಾಗಿ ಮಲಗತೊಡಗಿದರು. ಹನ್ನೆರಡು ಹೊಡೆದ ನಂತರ ಲೋಕಲ್‌ಗಳ ಓಡಾಟ ಕಡಿಮೆ ಆಯಿತು. ಪರುಳೇಕರ್ ಮೆಲ್ಲಗೆ ತನ್ನ ಕಿಸೆಯಲ್ಲಿಯ ಪುಟ್ಟ ಸೆಲ್‌ಟಾರ್ಚ್ ಹೊರ ತೆಗೆದು ಮಲಗಿದವರ ಮುಖಕ್ಕೆ ಬಿಡುತ್ತ ಬಾಗಿ ಇಣುಕಿ ನೋಡುತ್ತ ನಡೆಯತೊಡಗಿದ. ಮುಖದ ಮೇಲೆ ಹಸಿರು ಚಾದರು ಮುಚ್ಚಿ ಮಲಗಿದವನನ್ನು ಸಮೀಪಿಸಿದಾಗ ಕೈ ಅದುರುತ್ತಿತ್ತು. ಬೆನ್ನ ಹಿಂದೆ ಯಾರೋ “ಏಯ್”ಎಂದು ಕೂಗಿದರು. ಚೌಕಳಿ ಚಾದರು ಹೊದ್ದವನು ಎದ್ದು ಕೂತು “ಚೂತ್ಯಾಸಾಲಾ. ಹೋಮೋ ಹೈಕ್ಯಾ?” ಎಂದು ಕಾಲಿನಿಂದ ಜೋರಾಗಿ ಎದೆಗೆ ಒದ್ದು ಬಿಟ್ಟ. ಕೆಲವೇ ದಿನಗಳಲ್ಲಿ ಪರುಳೇಕರ್ ತೀರಿಕೊಂಡ. ಯಮುನಾ ಒಬ್ಬಳೇ ಉಳಿದಳು. ಪೂರ್ವಿ, ಕುಸುಮಾ ಇಬ್ಬರೂ ಎಷ್ಟೇ ಕರೆದರೂ ಅವಳು ಹೋಗಲಿಲ್ಲ. ಕೊನೆಗೊಂದು ದಿನ ಪೂರ್ವಿ “ಗಂಡ ತುಂಬಾ ಕುಡಿಯತೊಡಗಿದ್ದಾನೆ. ಕಾರ್ಖಾನೆಯಲ್ಲಿ ಈಗಾಗಲೇ ವಿ.ಆರ್.ಎಸ್. ಘೋಷಿಸಿದ್ದಾರೆ. ಮೊದಲೇ ಮೈಗಳ್ಳ, ಎಲ್ಲಾದರೂ ಇಚ್ಛಾ ನಿವೃತ್ತಿ ತಗೊಂಡು ಮನೇಲೇ ಕೂತು ಬಿಟ್ಟರೆ ಖಂಡಿತ ಕುಡಿದು ಎಲ್ಲಾ ಸತ್ಯಾನಾಶ ಮಾಡಿ ಬಿಡಬಹುದು ಆತ. ನೀನಿದ್ದರೆ ತುಸು ಅಂಕೆಯಲ್ಲಿರಬಹುದು” ಎಂದು ಗೋಗರೆದ ಮೇಲೆ ಯಮುನಾ ಕಲ್ಯಾಣದ ಕೋಣೆಗೆ ಬೀಗ ಹಾಕಿ ಇಲ್ಲಿ ಬಂದು ಬಿಟ್ಟಳು. ಅದನ್ನು ಬಿಟ್ಟು ಬಿಡು ಎಂದರೆ “ಛೋಟು ಬಂದರೆ?” ಎಂದಳು. +ಕುಡಿದು ಬಂದ ಅಳಿಯ ಅತ್ತೆಯ ಕಣ್ಣು ತಪ್ಪಿಸಿ ಎಲ್ಲೋ ನೋಡುತ್ತ “ನನಗೆ ಯಾರೂ ಬುದ್ಧಿ ಹೇಳಬೇಕಾಗಿಲ್ಲ. ಹೇಳುವವರು ಅವರವರ ಮಗನಿಗೆ ಹೇಳಲಿ” ಎಂದು ತೊದಲುತ್ತಿದ್ದ. “ಆ ಬೇ‌ಇಮಾನ್ ಬಡ್ಡೀಮಗ ಬರಲಿ ಇಲ್ಲಿ. ಆಗ ತೋರಿಸ್ತೇನೆ. ನಾನ್ಯಾರು ಅಂತ” ಎಂದು ಬಾಗಿಲಿಗೆ ಮುಖ ಮಾಡಿ ಒದರತೊಡಗಿದ. ಒಂದು ದಿನ ಯಮುನಾ ಅವನೆದುರು ನಿಂತು “ಮೊದಲು ನಿನ್ನ ಮುಖ ಸರಿಯಾಗಿ ಕನ್ನಡೀಲಿ ನೋಡ್ಕೊ. ಆಮೇಲೆ ನನ್ನ ಮಗನ ಬಗ್ಗೆ ಮಾತಾಡು. ದುಡಿದು ಸರಿಯಾಗಿ ಹೆಂಡತಿಯನ್ನು ನೋಡಿಕೊಳ್ಳಲು ಕಲಿ ನಾಲಾಯಕಾ. +ಬಸುರಿ ಹೆಂಡ್ತೀನ ಪ್ರೆಸ್‌ನಲ್ಲಿ ಬುಕ್ ಬೈಂಡಿಂಗ್ ಮಾಡಲು ಕಳಿಸುತ್ತೀಯಲ್ಲಾ. ನಿನ್ನ ಪ್ರತಿಷ್ಠೆ ಎಲ್ಲಿ ಹೋಗ್ತದೆ ಆವಾಗಾ?” ಎಂದು ಕೂಗಿದಳು. ಮತ್ತೊಂದು ದಿನ “ದೊಡ್ಡ ವ್ಯಕ್ತಿಯಾಗಿದ್ದಾನೆ ನನ್ನ ಮಗ ಗೊತ್ತುಂಟೋ. ಬಹಳ ದೊಡ್ಡವನು ಈಗ ಅವನು. ವೆಸ್ಟರ್ನ್ ಲೈನಿನಲ್ಲಿ ಫ್ಲಾಟು‌ಉಂಟು ಅವನಿಗೆ. ಅವನ ಹಿಂದೆ ಮುಂದೆ ಜನ ಇದ್ದಾರೆ. ನಿನ್ನ ಬಾಗಿಲಿಗೆ ಬರುವ ಕೆಟ್ಟ ಕಾಲ ಖಂಡಿತ ಇಲ್ಲ ಅವನಿಗೆ. ಖಬರ್‍ದಾರ್ ಛೋಟೂನ ಮಾತೆತ್ತಿದರೆ” ಎಂದು ಎಲ್ಲರಿಗೂ ಕೇಳಿಸುವಂತೆ ಕೂಗಿ ಬಿಟ್ಟಳು. ತಾನದನ್ನೂ ತನ್ನ ಕೈಮೀರಿ ಹೇಳುತ್ತಿರುವಂತೆಯೇ ಅದೊಂದು ನಿಜವಾದಂತೆ, ನಿಜವಾಗುತ್ತಿರುವಂತೆ ಅವಳಿಗೆ ಅನಿಸಿತು. ಆಮೇಲೆ “ಹಾಂ” ಎಂದು ಚಿತಾವಣೆ ನೀಡುವಂತೆ ಸದ್ದು ಮಾಡಿ ಕೂತಳು. ಕಣ್ಮರೆಯಲ್ಲೇ ಛೋಟೂ ಬೆಳೆದಿರಬಹುದಾದ ನಿಜ ಈಗ ವಿಚಿತ್ರವಾಗಿ ಅವಳ ಅನುಭವಕ್ಕೆ ಬಂತು. +ಮರುದಿನ ಬೆಳಿಗ್ಗೆ ಹಾಲಿನ ಬೂತಿನ ಬಳಿ ಹೋದಾಗ ಟೇಲರ್ ಗೋಪಿ ಚಂದ್‌ನ ಮನೆಗೆ ಬೀಗ ಹಾಕಿದ್ದು ಕಂಡು, ಅರೆ ಅವನ ಹೆಂಡತಿಯ ಬಳಿ ಕಂತಿನಲ್ಲಿ ಕೊಂಡಿದ್ದ ಧೂಪ್‌ಛಾಂವ್ ಸೀರೆಯ ಕೊನೆಯ ಕಂತಿನ ಐವತ್ತು ರೂಪಾಯಿ ತಾನು ಕೊಟ್ಟೇ ಇಲ್ಲವಲ್ಲ. ಅವಳು ಏನು ಅಂದುಕೊಂಡಿರಬಹುದು. ಅವರು ಮನೆ ಖಾಲಿ ಮಾಡಿ ಹೋಗಿದ್ದರೆ ಅದನ್ನು ತೀರಿಸುವುದು ಹೇಗೆ ಎಂದು ಯಮುನಾ ಯಾರೂ ಎದ್ದಿರದ ಆ ಕಾಲದಲ್ಲಿ ಅಧೀರಳಾದಳು. ಪೂರ್ವಿ ಎದ್ದ ಕೂಡಲೇ ಅವಳಿಗೆ ಇದನ್ನು ಹೇಳಿಕೊಂಡಳು. ಅದಕ್ಕೆ ಪೂರ್ವಿ “ಇರಲಿ ಬಿಡು ಆಯೀ, ಗೋಪಿಚಂದ್‌ನ ಮಕ್ಕಳು ಎಷ್ಟು ದಿನ ಇಲ್ಲಿ ಊಟ ಮಾಡಿಲ್ಲ. ಗಂಡ ಹೆಂಡ್ತಿ ಎಷ್ಟು ದಿನ ಮಕ್ಕಳನ್ನು ಇಲ್ಲೇ ಬಿಟ್ಟು ಹೊರಗೆ ಹೋಗಿಲ್ಲ. +ಅದೆಲ್ಲ ಬಿಡು. ಐವತ್ತು ರೂಪಾಯಿಗಾಗಿ ತಲೆ ಕೆಡಿಸ್ಕೋಬೇಡ” ಎಂದಾಗ ಯಮುನಾ “ಛೆಛೆ ಯಾರಾದ್ರೂ ಉಂಡಿದ್ದರ ಲೆಕ್ಕ ಇಡ್ತಾರೇನೇ?” ಎಂದಳು. ಆದರೂ ಒಳಗೆಲ್ಲೋ ಭಾರ ಕಡಿಮೆ ಆದಂತೆಯೂ ಅನಿಸಿತು. ನೆನ್ನೆಯಿಂದ ಅನಿಸಿದ ಹಾಗೆ, ಛೋಟೂ ನಿಜಕ್ಕೂ ದೊಡ್ಡ ಮನುಷ್ಯನಾಗಿದ್ದಾನೆ ಎಂದು ತಿಳಿಯುವುದರಲ್ಲಿ ತಪ್ಪೇನಿದೆ ಅನ್ನಿಸಿತು. ಹೌದು, ಖಂಡಿತ ಅವನೀಗ ಶ್ರೀಮಂತನಾಗಿದ್ದಾನೆ. ಸುಖದಲ್ಲಿದ್ದಾನೆ. ಧಾರಾಳಿಯಾಗಿದ್ದಾನೆ. ಹೀಗೆ ಯೋಚಿಸುತ್ತ ಹೋದಂತೆ ಯಮುನಾಬಾಯಿಗೆ ಜಗತ್ತು ಮೆಲ್ಲಗೆ ಬೇರೆಯದೇ ಆಗಿ ಕಾಣತೊಡಗಿತು. +ಕುಸುಮಳ ಗಂಡ ದುಬೈನಲ್ಲಿ ಒಂದು ಕೇಟರಿಂಗ್ ಸಂಸ್ಥೆಯಲ್ಲಿ ಕೆಲಸ ಸಿಕ್ಕು ಹೊರಟು ಹೋದ. ಅವಳಿಗೂ ಅವಳ ಆಫೀಸಿನಲ್ಲಿ ಕ್ಯಾಶ್ ವಿಭಾಗಕ್ಕೆ ವರ್ಗವಾಯಿತು. ಮನೆಯಲ್ಲಿ ಪೇಪರು ಓದುವ ಅಭ್ಯಾಸ. ಅವಳೆಂದಿಗೂ ದಿನಪತ್ರಿಕೆಗಳಲ್ಲಿ ಸಾವಿನ ಸುದ್ದಿಗಳನ್ನು ಓದುತ್ತಿರಲಿಲ್ಲ. ಕ್ಯಾಶ್ ವಿಭಾಗಕ್ಕೆ ಬಂದ ನಂತರ ನೋಟನ್ನು ಪರ್ರ ಪರ್ರ ಎಂದು ಎಣಿಸುವುದು, ದೊಡ್ಡ ಕಟ್ಟುಗಳನ್ನು ೨ ಭಾಗ ಮಾಡಿ ಹಿಂದೆ ಮುಂದೆ ಮಾಡಿ ಪಿನ್ನುಗಳನ್ನು ತೆಗೆಯುವುದು ಇತ್ಯಾದಿ ಚಳಕಗಳನ್ನು ಕರಗತ ಮಾಡಿಕೊಂಡರೂ-ಅವಳಿಗೆ ಆ ನೋಟುಗಳ ಕಟ್ಟುಗಳು ಭಯ ಮತ್ತು ಬೇಸರ ತರುತ್ತಿದ್ದವು. ಹೊಟ್ಟೆಪಾಡಿಗೆ ಸಂಬಳ ಅಂತ ಸಿಗುವ ಸಂಗತಿ, ಕಂಡಕ್ಟರನಿಗೆ ಕೊಡುವ ನಾಲ್ಕು ರೂಪಾಯಿ ಎಂಬ ಚಿಲ್ಲರೆ ಸಂಗತಿ ಮತ್ತು ಇಲ್ಲಿರುವ ಈ ದಂಡಿ ದಂಡಿ ನೋಟಿನ ಪಿಂಡಿ ಎಲ್ಲಾ ಒಂದೇ ಅಲ್ಲವೇ ಅನಿಸುತ್ತಿತ್ತು. ಕೋಟ್ಯಾಂತರ ರೂಪಾಯಿಗಳ ಲೆಕ್ಕಪತ್ರ ನೋಡುವಾಗ ಹಠಾತ್ತನೆ ಛೋಟೂನ ಪ್ರಕರಣ ಇಪ್ಪತ್ತು ಸಾವಿರ ರೂಪಾಯಿ ನೆನಪಿಗೆ ಬಂದು ಅದೆಷ್ಟು ಕ್ಷುಲ್ಲಕ, ಅಮಾಯಕ ಅನಿಸುತ್ತಿತ್ತು. ಮಕ್ಕಳೇ ಆಗದೆ ಅವಳು ಗಂಡನೊಡನೆ ಬೇರೆ ಬೇರೆ ಗೈನಾಕ್‌ರ ರಿಸೆಪ್ಶನ್‌ನಲ್ಲಿ ಹಳೆಯ ಸ್ಟಾರ್‍ಡಸ್ಟ್‌ಗಳನ್ನು ತಿರುವುತ್ತ, ತನ್ನ ಹೆಸರನ್ನು ಅಸಡ್ಡಾಳವಾಗಿ ಕರೆಯುವುದನ್ನೇ ಕಾಯುತ್ತ ಕೂತಿದ್ದಾಗ, ಅಲ್ಲಿರುವ ಮುದ್ದು ಹಸುಳೆಗಳ ಪೋಸ್ಟರುಗಳನ್ನು ಕಂಡು ಎಳೆ ಛೋಟೂನ ನೆನಪಾಗುತ್ತಿತ್ತು. ಅವನಿಗೆ ಬಟಾಟೆವಡೆ ಅಂದರೆ ಪ್ರೀತಿ. ಅದಕ್ಕೆ ‘ಬತಾದೇ’, ‘ಬತಾದೇ….’ ಅನ್ನುತ್ತಿದ್ದ. ಅವನು ಪಿಯುಸಿಯಲ್ಲಿ ಫೇಲ್ ಆಗದೆ ಇದ್ದಿದ್ದರೆ, ಈ ೨೦ ಸಾವಿರ ರೂಪಾಯಿ ಪ್ರಕರಣವೂ ಇಷ್ಟೊಂದು ವಿಪರೀತವಾಗಿ ತೋರುತ್ತಿರಲಿಲ್ಲವೇ? ಸರಿಯಾಗಿ ಓದದ ಪೋರನ ಹೊರೆಯನ್ನು ಹೊರಲು ಹಿಂಜರಿದು ಆ ಸಣ್ಣ ಮನೆ ಅವನನ್ನು ಹಾಗೆ ಹೊರಹಾಕಿತೆ. ಹೀಗೆಲ್ಲ ಅನಿಸಿದ ಕುಸುಮಾ-ತಾನಾಗಿಯೇ ಅವನ ಪತ್ತೆಗೆ ಪ್ರಯತ್ನಿಸಿದ್ದೂ ಇತ್ತು. ಅವನೆಲ್ಲಾದರೂ ಫಕ್ಕನೆ ಸಿಕ್ಕರೆ ಅವನಿಗೆ ಕೊಡಲು ಸಾಧ್ಯವಾಗಬೇಕು ಎಂದು ಯಾವಾಗಲೂ ಒಂದಿಷ್ಟು ಹೆಚ್ಚಿಗೆ ಹಣವನ್ನು ಪರ್ಸಿನಲ್ಲಿ ಇಟ್ಟುಕೊಂಡೇ ಇರುತ್ತಿದ್ದಳು. ಈಚೀಚೆ ಆಯಿ- ಛೋಟೂ ತುಂಬಾ ಸುಖದಲ್ಲಿಯೇ ಇದ್ದಾನೆ. ನನ್ನ ಅಂತರಾತ್ಮಕ್ಕೆ ಗೊತ್ತು-ಎಂದು ಹೇಳುತ್ತಿರುವಾಗ ಅದನ್ನು ಹಾಗೆಯೇ ಮನಸಾ ನಂಬಲು ತುಂಬಾ ನೆಮ್ಮದಿಯಾಗುತ್ತಿತ್ತು. ತನಗಿನ್ನೂ ಮಕ್ಕಳಾಗುವುದು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡ ಮೇಲಂತೂ ಛೋಟೂನ ಜಗತ್ತು ಎಲ್ಲಿದೆ. ಆ ಜಗತ್ತಿನಲ್ಲಿ ಪ್ರವೇಶ ಮತ್ತೆ ಸಾಧ್ಯವೇ ಎಂದು ಅಧೀರಳಾಗುತ್ತಿದ್ದಳು. ಅವನ ಇಸ್ತ್ರಿ ಇಲ್ಲದ ತಿಳಿಹಳದಿ ಟೀಶರ್ಟಿನ ಒಣಗು ತಂತಿಯ ನಿರಿಗೆಗೆರೆ ಮನದಲ್ಲಿ ಮೂಡುತ್ತಿತ್ತು. +ಅತ್ತ ಯಮುನಾ ಅಳಿಯನನ್ನು ಅತಿಯಾಗಿಯೇ ಜಬರಿಸತೊಡಗಿದಂತೆ ಹಠಾತ್ತನೆ ಪೂರ್ವಿಯ ಅಭಿಮಾನ ಒಂದು ದಿನ ಜಾಗೃತವಾಗಿ “ಆಯೀ ಅತೀ ಮಾಡ್ಬೇಡ ನೀನು. ನಿನ್ನ ಆ ಗ್ರೇಟ್ ಮಗ ಒಂದ್ಸಲನಾದ್ರೂ ನಿನ್ ನೋಡಬೇಕೂ ಅಂತ ಬಂದನೇನು?” ಎಂದಳು. ಅದಕ್ಕೆ ಯಮುನಾ…..“ಏ…ಏ…ಬಾಯ್ಮುಚ್ಚು. ಆ ಪೋರ ಹಾಗೆ ಆ ಗಾಯಗೊಂಡ ಸ್ಥಿತೀಲೂ ಪಿಟ್ಟೆನ್ನದೇ ಬಿಟ್ಟು ಹೋದದ್ದು ನಿನ್ನ ಲಗ್ನಕ್ಕಾಗಿ” ಎಂದಳು. ಪೂರ್ವಿಗೆ ತಡೆಯಲಾಗಲಿಲ್ಲ. “ನನಗಾಗಿ ಯಾರೂ ಯಾವ ಮಹಾತ್ಯಾಗವನ್ನೂ ಮಾಡಿಲ್ಲ. ಮಾಡಬೇಕಾಗೂ ಇಲ್ಲ. ಈ ಸುಹಾಸನ ಜತೆಗೆ ಮದುವೆ ಆಗಬೇಕೆಂದು ನಿಶ್ಚಯಿಸಿದವಳು ನಾನೇ. ಅವರ ಉಸಿರಲ್ಲಿ ವಿಸ್ಕಿಯ ಗಲೀಜು ವಾಸನೆ ಇತ್ತು ಎಂಬುದು ಗೊತ್ತಿದ್ದೂ ಅವನ ಜತೆ ಓಡಾಡಿದೆ. ನಿಮಗೆ ಒಂದು ಕೈ ತೋರಿಸಿಯೇ ಬಿಡಬೇಕೆಂದು ಮದುವೆ ಆದೆ. ಯಾವಾಗ ನೋಡಿದರೂ ‘ಕುಸುಮಾಳನ್ನು ನೋಡಿ ಕಲಿ. ನಿನ್ನ ವಯಸ್ಸಿನಲ್ಲಿ ಕುಸುಮಾ ಹಾಗಿದ್ದಳು, ಕುಸುಮಾ ಹೀಗಿದ್ದಳು-’ಎಂದು ಅಕ್ಕನನ್ನು ಕೊಂಡಾಡಿ ನನ್ನನ್ನು ಯೂಸ್‌ಲೆಸ್ ಎಂಬಂತೆ ಹಂಗಿಸುತ್ತಿದ್ದೀರಲ್ಲ, ಕುಸುಮಳಿಗಾಗಿ ಗಂಡು ಹುಡುಕಲು ಪರೇಲ್, ಲಾಲ್‌ಬಾಗ್, ಎಂದು ಜಾತಕ ಹಿಡಿದು ಓಡಾಡ್ತಿದ್ದಿರಲ್ಲ, ಪ್ರತಿ ತಿಂಗಳು ಸಂಬಳ ತಂದು ನಿಮ್ಮ ಕೈಲಿಡುತ್ತಿದ್ದ ಅವಳ ಮದುವೆಯಾಗಿ ಹೋದ ನಂತರ, ಬಂದಾಗೆಲ್ಲ ಸುಳ್ಳೇ ಗೋಳುಮುಖ ಮಾಡೋದು. ಹರಕು ಸೀರೆಯನ್ನೇ ಆಯ್ದು ಉಡೋದು ಮಾಡ್ತಿದ್ದೆಯಲ್ಲ. ಎಲ್ಲಾ ಗೊತ್ತು ನನಗೆ. ಅದಕ್ಕೇ-ನಿನ್ನ ಚಪ್ಪಲಿಯನ್ನು ಕಿಂಚಿತ್ತೂ ಸವೆಸದೇ, ಮನೆ ಬಾಗಿಲಲ್ಲಿ ಮದುವೆಯಾಗಿ ತೋರಿಸಿದೆ. ಈ ಕಾರ್ಖಾನೆಯವನನ್ನೇ ಮದುವೆಯಾಗಿ ಅಪ್ಪನ ನಿವೃತ್ತಿಯ ನಂತರವೂ ಈ ಕ್ವಾರ್ಟರ್ಸ್ ಕೈ ತಪ್ಪದಂತೆ ನೋಡಿಕೊಂಡೆ. ಅದಕ್ಕೇ ಅಲ್ಲವೇ ನೀವೂ ಸಹ ನನ್ನ ಪ್ರೇಮ ಪ್ರಕರಣವನ್ನು ಕಳ್ಳರಂತೆ ಪ್ರೋತ್ಸಾಹಿಸಿದ್ದು! ಸುಹಾಸನ ಜತೆ ತಿರುಗಾಡಿ ನಾನು ರಾತ್ರಿ ತಡವಾಗಿ ಮರಳುತ್ತಿದ್ದಾಗ ಚಾಳಿನ ಜನರೆಲ್ಲ ಮಿಕಿ ಮಿಕಿ ನನ್ನನ್ನೇ ನೋಡುತ್ತಿದ್ದಾಗ, ನಿಮ್ಮ ಕಾಲಕೆಳಗಿನ ಭೂಮಿಯೇ ಬಿರಿಯುತ್ತಿತ್ತು. ಆದರೂ ನೀವು ಪಿಟ್ಟೆನ್ನಲಿಲ್ಲ. ಮಳ್ಳರಂತೆ ಕಣ್ತಪ್ಪಿಸುತ್ತಿದ್ದಿರಿ ಇಬ್ಬರೂ. ನನಗೆಲ್ಲಾ ಗೊತ್ತಾಗುತ್ತಿತ್ತು. ನೀವು ಗೊತ್ತಿಲ್ಲದಂತೆ ನಟಿಸುತ್ತ ನನ್ನ ಪ್ರೇಮಕ್ಕೆ ಪ್ರೋತ್ಸಾಹ ಕೊಡುತ್ತಿದ್ದುದು ನಿಮ್ಮನ್ನೇ ಒಳಗಿನಿಂದ ತಿನ್ನುತ್ತಿತ್ತು. ಅದನ್ನೆಲ್ಲ ಮುಚ್ಚಲು ಛೋಟೂನ ಇಪ್ಪತ್ತು ಸಾವಿರ ರೂಪಾಯಿ ಪ್ರಕರಣ ನಿಮಗೆ ಸರಿಯಾಗೇ ಸಿಕ್ಕಿಬಿಟ್ಟಿತು. ಹ್ಯಾಗೆ ಮುಗಿಬಿದ್ದ ನೋಡು ಅಪ್ಪ ಆಗ. ನೀನೂ ತೆಪ್ಪಗಿದ್ದೆ. ಮತ್ತೆ ನಾನು? ನಾನ್ಯಾಕೆ ಆಗ ಒಂದು ಚಕಾರ ಆಡದೆ ಛೋಟೂನನ್ನು ಬಿಟ್ಟುಕೊಟ್ಟೆ ಗೊತ್ತೆ? ಈಗ ಹೇಳ್ತೇನೆ ಕೇಳು. ಒಂದು ದಿನ ಸುಹಾಸ ನನ್ನನ್ನು ಮಧ್ಯಾಹ್ನ ಮುಲುಂಡಿನ ಪಾಂಚರಸ್ತಾದ ಲಾಜಿಂಗ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಹೊರಬೀಳುವಾಗ ಛೋಟೂನ ದೋಸ್ತ ನಂದೂ ಜಗತಾಪ ನಮ್ಮಿಬ್ಬರನ್ನೂ ನೋಡಿಬಿಟ್ಟ. +ನಾನು ಗುರ್ತೇ ಇಲ್ಲದವಳಂತೆ ಮುಂದೆ ಮುಂದೆ ನಡೆದುಬಿಟ್ಟೆ. ಅವನದನ್ನು ಛೋಟೂಗೆ ಖಂಡಿತ ಹೇಳಿದ್ದಾನೆ. ಮತ್ತೂ ಛೋಟೂ ಅದನ್ನು ಮನೆಯಲ್ಲಿ ಹೇಳಲಾಗದೆ ನನ್ನ ಮೇಲೆ ಉರಿಯುತ್ತಿದ್ದಾನೆ ಎಂದು ನನಗೆ ಅನಿಸತೊಡಗಿತು. ಅವನ ಸಹಜ ಮಾತುಗಳಲ್ಲೂ ಕೊಂಕು ಕಾಣತೊಡಗಿತು. ಅವನಿ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೆಂಗೇ’ ಅಥವಾ ‘ಹಂ ತುಂ ಏಕ್ ಕಮರೇ ಮೇಂ ಬಂದ್ ಹೋ’ ಎಂದೆಲ್ಲ ಗುಣುಗುಣಿಸಿದಾಗ ನನ್ನನ್ನೇ ಹಂಗಿಸುತ್ತಿದ್ದಾನೆ ಅನಿಸತೊಡಗಿತು. ನನ್ನ ತಪ್ಪು ಅವನಲ್ಲಿ ಇನ್ನೂ ದೊಡ್ಡದಾಗಿ ಬೆಳೆಯುತ್ತಿದೆ ಅನ್ನಿಸಿ-ಅವನನ್ನು ಎಷ್ಟು ದ್ವೇಷಿಸಿದೆ ಅಂದ್ರೆ ಆ ದಿನ ಆ ಅಪರಿಚಿತರು ಬಂದು ಅವನ ದವಡೆ ಒಡೆದಾಗ ನನಗೆ ಬೇಜಾರೇ ಆಗಲಿಲ್ಲ. ನನ್ನ ಕಳ್ಳತನ ಮುಚ್ಚುವಂಥ ದೊಡ್ಡದೇನೋ ಸಿಕ್ಕಿತು ಎಂದು ‘ಅಯ್ಯೋ ನನ್ನ ಲಗ್ನ ಮುರಿದರೆ….”- ಎಂದು ನಿಮ್ಮೆದುರು ಗೋಳಾಡಿದೆ. ನಿಮಗೂ ಅದೇ ಬೇಕಿತ್ತು. ದಬ್ಬಿಯೇ ಬಿಟ್ಟಿರಿ ಅವನನ್ನು!” ಎಂದು ಆವೇಶದಿಂದ ತುಟಿಯೆಲ್ಲ ಬಿಳುಚಿ ಅಳತೊಡಗಿದಳು. ಯಮುನಾಬಾಯಿಗೆ, ಹುಡುಗಿಯಾಗಿದ್ದ ಪೂರ್ವಿ ನೋಡನೋಡ್ತಾ ಹೆಂಗಸಾಗಿ ಹಣ್ಣಾದಂತೆ ಕಂಡಿತು. ತನ್ನದೇ ಆದ ಜಗತ್ತಿನಲ್ಲಿ ಅವಳು ಅಳುತ್ತಿದ್ದಳು. ಪ್ರತಿಷ್ಠೆ, ಇಜ್ಜತ್, ಸಮಾಜ ಇಂಥ ಶಬ್ದಗಳು ಈ ಜಗದ ಅಂಚಿನಲ್ಲಿ ಸಮುದ್ರ ತೀರದ ಕಸದಂತೆ ಇದ್ದವು. +ಒಂದು ದಿನ ಸುಹಾಸ “ಅಕ್ಕ ತಂಗಿ ಇಬ್ಬರೂ ನನ್ನ ಕಣ್ಣು ತಪ್ಪಿಸಿ ತಮ್ಮನಿಂದ ಹಣ ತಂದು ಮಾಡುತ್ತಿದ್ದೀರಿ. ನನಗ್ಗೊತ್ತು. ಇಲ್ಲವಾದರೆ ವಿಸೀಡಿ ಸಿಸ್ಟಮ್‌ಗೆ ಹಣ ಹೇಗೆ ಬಂತೂ?” ಎಂದು ಕೂಗಿದ. “ನನ್ನಿಂದಲೇ ಆಗಿದ್ದು” ಎನ್ನುವಂತೆ ಯಮುನಾ ಬಾಯಿಯ ಕಡೆಗೆ ನೋಡಿದ. ಅವಳು ಏನೂ ತಾಕದವಳಂತೆ ಟೀವಿ ನೋಡುತ್ತಿದ್ದಳು. ಅವಳ ಮೊಗದ ಮೇಲೆ ಟೀವಿ ಬಣ್ಣಬಣ್ಣದ ಪ್ರಭೆಯನ್ನು ಉಂಟು ಮಾಡುತ್ತಿತ್ತು. “ನಿನ್ನ ಮಗ ಅಷ್ಟೇ ಅಮೀರ್‌ನಾಗಿದ್ದರೆ, ಇಲ್ಯಾಕೆ ಸಾಯ್ತಿದ್ದಿ? ಹೋಗಿ ಅವನ ಜೊತೆ ಮಲಬಾರ್‌ಹಿಲ್‌ನಲ್ಲಿ ಇರು ನೋಡುವಾ. ಅಥವಾ ನಮಗಾಗಿ ಹೌಸಿಂಗ್ ಬೋರ್ಡಿನಲ್ಲಿ ಒಂದು ಫ್ಲ್ಯಾಟು ತೆಗೆಸಿಕೊಡು ನೋಡುವಾ”- ಎಂದು ನಗತೊಡಗಿದ. ಮಂಚದಲ್ಲಿ ಚೊಚ್ಚಲು ಮಗುವನ್ನು ತಟ್ಟಿ ಮಲಗಿಸುತ್ತಿದ್ದ ಪೂರ್ವಿ “ಶ್ ಶ್ ಶ್” ಎಂದು ಕಣ್ಣಲ್ಲೇ ಚೀರಿದಳು. +ಛೋಟೂ ಉಪನಗರದಲ್ಲೇ ಇದ್ದಾನೆ. ಎರಡೇ ರಸ್ತೆಯಾಚೆ ಇದ್ದಾನೆ ಎಂಬ ಅತ್ಯಂತ ಖಚಿತ ಮಾಹಿತಿಯೊಂದಿಗೆ ಈಗ ಬಂದಿರುವ ಕುಸುಮಾ ಮನೆ ತಲುಪಿದಾಗ ಪೂರ್ವಿಯ ಮಗಳು ಸೋನಿ ಶಾಲೆಗೆ ಹೋಗಿದ್ದಳು. ಕೂತು ಕೂತು ನುಣುಪಾದ ಮೆಟ್ಟಿಲಲ್ಲಿ ಕೂತು ತೊಡೆಯ ಮೇಲೆ ಸ್ಟೀಲಿನ ತಾಟಿನಲ್ಲಿ ಪುಟ್ಟ ಅಕ್ಕಿಯ ಗೋಪುರವನ್ನಿಟ್ಟುಕೊಂಡು ಪೂರ್ವಿ ಒಂಟಿ ಕೈಯಿಂದ ಆರಿಸುತ್ತಿದ್ದಳು. ಎಡಗೈಗೆ ಆಗಷ್ಟೇ ಮೆಹಂದಿ ಹಚ್ಚಿ ಪ್ರಪಂಚಕ್ಕೇ ಆಶೀರ್ವಾದ ಕೊಡುವಂತೆ ಎತ್ತಿ ಹಿಡಕೊಂಡಿದ್ದಳು. ನನ್ನನ್ನು ನೋಡಿ ಕಣ್ಣರಳಿಸಿದ ಪೂರ್ವಿಗೆ ಸದ್ದು ಮಾಡಬೇಡ ಎಂದು ಸನ್ನೆ ಮಾಡಿ ಮೆಲ್ಲಗೆ ಪಕ್ಕದಲ್ಲೇ ಕುಸುಮಾ ಕೂತಳು. ಯಮುನಾಬಾಯಿ ಒಳಗೆ ಕಾಟಿನ ಮೇಲೆ ಮಲಗಿದ್ದಳು. ಸುಹಾಸ ಫ್ಯಾಕ್ಟರಿಗೆ ಹೋಗಿದ್ದ. “ಛೋಟೂ ಇಲ್ಲೇ ಈ ಕಾಮಾನಿ ರಸ್ತೆಯಲ್ಲೇ ಇದ್ದಾನಂತೆ” ಎಂದಾಗ ಪೂರ್ವಿ ತೆರೆದ ಕಣ್ಣು ತೆರೆದ ಬಾಯಲ್ಲಿ ಸದ್ದಿಲ್ಲದೆ ಬೆಚ್ಚಿದಳು. +ಕಣ್ಮರೆಯಾಗಿದ್ದುಕೊಂಡೇ ವಿವಿಧ ರೂಪಗಳಲ್ಲಿ ಎಲ್ಲರ ಖಾಸಗೀ ಹೋರಾಟದ ಭಾಗವಾಗಿ, ವಿಚಿತ್ರ ಅಮೂರ್ತ ಶಕ್ತಿಯಾಗಿ ಬೆಳೆಯುತ್ತ ಬಂದ ಛೋಟೂ, ಇಲ್ಲೇ, ಕೇವಲ ಇಪ್ಪತ್ತು ಮೂವತ್ತು ನಿಮಿಷದ ನಡಿಗೆಯ ಅಂತರದಲ್ಲೇ ಇದ್ದಾನೆ ಅಂದರೆ! ಮಧ್ಯಾಹ್ನದ ನೀರವದಲ್ಲಿ ಹತಾಶವಾದ ಉದ್ವೇಗವಿತ್ತು. ಕುಸುಮಾ “ಬಾ ಹೋಗಿ ನೋಡಿ ಬರೋಣ”-ಎಂದಾಗ ಪೂರ್ವಿ ಒಂದು ಬಗೆಯ ಮಂಕಿನಲ್ಲಿ ಬಗ್ಗಿ ಎದ್ದು ನಿಂತಳು. ಅವಳು ಬಾಗಿ ಏಳುವಾಗ ತೂಗಿದ ಅವಳ ಮಂಗಳ ಸೂತ್ರದ ತುಂಬ ಹೊಳಪುಗೆಟ್ಟ ಸೇಫ್ಟಿ ಪಿನ್ನುಗಳನ್ನು ಕಂಡು ಕುಸುಮಳಿಗೆ ಬೇಜಾರಾಯಿತು. +ಎರಡೂ ಕಡೆ ಲೋಹದ ತಗಡುಗಳ ಸಗಟು ಮಳಿಗೆಗಳಿರುವ ರಸ್ತೆಯಲ್ಲಿ ಇಬ್ಬರೂ ನಡೆದರು. ಒಂದಾನೊಂದು ಕಾಲದಲ್ಲಿ ಜೀವಂತವಾಗಿದ್ದ ಅಕ್ಕಪಕ್ಕದ ವಿವಿಧ ಔಷಧಿ ತಯಾರಿಕೆಯ ಕಾರ್ಖಾನೆಗಳೆಲ್ಲ ಬಂದು ಬಿದ್ದು ಹಾಳು ಸುರಿಯುತ್ತಿದ್ದವು. ಅವನ್ನೆಲ್ಲ ಬಿಲ್ಡರುಗಳು ಕೊಂಡುಕೊಂಡು ದೊಡ್ಡ ದೊಡ್ಡ ಗಗನ ಚುಂಬಿಗಳ ಜಾಹೀರಾತಿನ ಬೋರ್ಡುಗಳನ್ನು ಹಾಕಿದ್ದರು. ದೀವಾಳಿ ಹೋದ ಕಾರ್ಖಾನೆ ಕಟ್ಟಡಗಳ ಹೆಣ ಕಾಯುತ್ತ ಗೇಟುಗಳಲ್ಲಿ ಸೆಕ್ಯೂರಿಟಿ ಪೇದೆಗಳು ಕೂತಿದ್ದರು. ತಮ್ಮಂಥ ಸಹಸ್ರಾರು ಬಿಡಾರಗಳನ್ನು ಪೋಷಿಸಿದ್ದ ಕಾರ್ಖಾನೆಗಳು ಅವು. ಆ ಕುಟುಂಬಗಳೆಲ್ಲ ಈ ಶಹರದಲ್ಲಿ ಎಲ್ಲಿ ಹೋದವೋ. ಏನಾದವೋ. ಇಬ್ಬರ ಮನಸ್ಸಿಗೂ ಅದೇ ವಿಚಾರ ಬಂತು. +ಮದುವೆಯಾದ ನಂತರ ಹೀಗೆ ಅಕ್ಕತಂಗಿ ಇಬ್ಬರೇ ಹೊರಬಂದು ನಡೆದದ್ದೇ ಇರಲಿಲ್ಲ. ಮನಸ್ಸಿನಲ್ಲಿದ್ದ ನಕ್ಷೆಯ ಪ್ರಕಾರ ಕುಸುಮ ನಡೆಯುತ್ತಿದ್ದಳು. ಅವಳ ಎದೆ ಕಂಪಿಸುತ್ತಿತ್ತು. ದೂರ ಕಡಿಮೆಯಾದಷ್ಟೂ ವೇಗವೂ ಕಡಿಮೆ ಆಗುತ್ತಿತ್ತು. ಅದಕ್ಕೇ, ನಡುವೆ ಟರ್ಬೂಜನ ಶರಬತ್ತಿನ ಗಾಡಿಯ ಬಳಿ ನಿಂತು ಪೂರ್ವಿ “ಕುಡಿಯೋಣವಾ?” ಎಂಬಂತೆ ಹುಬ್ಬು ಹಾರಿಸಿದಾಗ ಕುಸುಮಾ ಬೇಡ ಎನ್ನಲಿಲ್ಲ. ಸ್ಟೀಲಿನ ಫಳಫಳ ಬಾಂಡಲೆಯಲ್ಲಿ ಸವುಟಿನಿಂದ ಶರಬತ್ತಿನಲ್ಲಿ ಐಸ್ ತಿರುಗಿಸುತ್ತಿದ್ದವ ಗ್ಲಾಸು ತುಂಬಿಸಿ ಕೊಟ್ಟ. ಹಣ ಕೊಡಲು ಮುಂದಾದ ಕುಸುಮಳ ಕೈಯನ್ನು ಗಟ್ಟಿ ಹಿಡಿದು, ತಾನು ಅರ್ಧ ಕುಡಿದ ಗ್ಲಾಸು ಗಾಡಿಯ ಮೇಲಿಟ್ಟು ಮೆಹಂದಿ ಕೈ ಬಳಸದೆ ಒಂದೇ ಕೈಯಿಂದ ತನ್ನ ಪುಟ್ಟ ಪಾಕೀಟು ತೆಗೆದು ಹಣ ಕೊಟ್ಟು “ನಾನೂ ಕೂಡ ಕಮಾಯಿ ಮಾಡುತ್ತೇನೆ. ಬುಕ್ ಬೈಂಡಿಂಗ್ ಮನೆಗೂ ತಂದು ಮಾಡುತ್ತೇನೆ. ನೀನು ಮಾತ್ರ ಗಳಿಸುವವಳು ಎಂಬ ದಾದಾಗಿರಿ ಬೇಡ” ಎಂದಳು ಪೂರ್ವಿ. ನಂತರ ನಡೆಯುತ್ತ “ಈ ಸಲ ಸಂಕ್ರಾಂತಿಗೆ ಆಯಿಗೆ ಸೀರೆಯನ್ನೇ ತರಲಿಲ್ಲವಲ್ಲ ನೀನು. ಬಹುಶಃ ಕುಸುಮ ಮರೆತಿರಬೇಕು ಎಂದಳು ಆಯಿ. ನಾನು ಹೇಳಿದೆ ಎಂದು ಹೇಳಬೇಡ ಮತ್ತೆ.” ಈ ಅಪರಾಹ್ನದ ಈ ಅವಕಾಶದಲ್ಲಿಯಷ್ಟೆ ಆಡಬಹುದಾದ್ದನ್ನು ಆಡಿ ಬಿಡಬೇಕು ಎಂಬಂತೆ “ಕುಸುಮಾ, ನೀನು ಕಾಂದಿವಿಲಿಯಲ್ಲಿ ಪ್ಲ್ಯಾಟು ಬುಕ್ ಮಾಡಿದ್ದೀಯಂತೆ. ಟೂ ರೂಂ ಕಿಚನ್. ಹೌದೆ? ಹೇಳೇ ಇಲ್ಲ ನನಗೆ. ನೀವು ಇರೋದೇ ಇಬ್ಬರು. ಮಕ್ಕಳಂತೂ ಇಲ್ಲ. ಟೂ ರೂಂ ಕಿಚನ್ ಯಾಕೆ? ಸಿಂಗಲ್ ರೂಂ ಕಿಚನ್ ಸಾಕಿತ್ತಲ್ಲ! ಇರಲಿ ಬಿಡು. ನಿನ್ನ ದುಡ್ಡು ನಿನ್ನ ಮನೆ. ನನಗೇನಾಗಬೇಕಿದೆ ಹೇಳು?” ಎಂದಳು. +“ಛೋಟೂನ ಬಳಿ ಏನೇನೂ ಮಾತಾಡಲು ಹೋಗಬೇಡ. ನಮ್ಮ ಬಗ್ಗೆ ಅವನ ಮನಸ್ಸಿನಲ್ಲಿ ಏನಿದೆಯೋ. ಹೇಗಿದೆಯೋ. ಏನೂ ಗೊತ್ತಿಲ್ಲ. ಸುಮ್ಮನೆ ಬಾಯಿ ಬಿಟ್ಟು ಎಲ್ಲಾ ಹಾಳು ಮಾಡಿ ಬಿಟ್ಟೀಯಾ?” ಎಂದಳು ಕುಸುಮಾ. “ಅವನು ಸಿಕ್ಕೇ ಬಿಡ್ತಾನೆ ಅನ್ನೋ ಥರ ಆಡ್ತೀಯಲ್ಲ ನೀನು. ಚಿಂತೆ ಬೇಡ ಮಾರಾಯ್ತಿ. ನನಗೊಂದು ಕಲರ್ ಟೀವಿ ಕೊಡಿಸು, ಅಥವಾ ನನ್ನ ಮದುವೆಗೆ ನೀನು ಬಂದಿರಲಿಲ್ಲ, ಉಂಗುರ ಕೊಡಿಸು-ಎಂದೆಲ್ಲಾ ಕೇಳುವುದೇ ಇಲ್ಲ ನಾನು. ಸುಮ್ಮನಿರ್ತೇನೆ. ಅವನು ಕೊಡಿಸಿ ಬಿಟ್ಟರೆ ನಿನ್ನದೇನು ಅಂತಸ್ತು ಉಳಿಯುತ್ತೆ ಹೇಳು ಆಮೇಲೆ? ಇಲ್ಲ ಖಂಡಿತ ಕೇಳೋದಿಲ್ಲ. ಇರೋ ಬ್ಲಾಕ್ ಆಂಡ್ ವ್ಹೈಟ್‌ನ್ನೇ ನೋಡ್ತೀನಿ .ಸರೀನಾ?” ಎಂದು ಏದುಸಿರು ಬಿಡುತ್ತ ಜೋರಾಗಿ ನಡೆದಳು. +ಕಾಮಾನಿ ಸ್ಟ್ರೀಟ್‌ನಲ್ಲಿ ಇಬ್ಬರೂ ನಿಂತರು. ರಸ್ತೆಯ ಆಚೆ ಬದಿಗೆ ತುಸು ದೂರ ಶೆಫಾಲಿ ಸ್ಕ್ರಾಪ್ಟ್ ಸೆಂಟರ್. ಅಲ್ಲಿ ನೋಡು ಆ ಪಾನ್ ಶಾಪು ತೋರುತ್ತಿದೆಯಲ್ಲ. ಅದೇ ಅವನ ಪಾನ್‌ಶಾಪು. ಒಳಗೆ ಕೂತವ ಇಲ್ಲಿಂದ ಸ್ಪಷ್ಟವಾಗಿ ಕಾಣುತ್ತಿಲ್ಲ. ನಿಲ್ಲು ಜನ ಸಿಗರೇಟು ಕೊಂಡುಕೊಳ್ತಾ ಇದ್ದಾರೆ. ಅವರು ಹೋಗಲಿ. ಇರ್ಲಿ ಬಿಡೇ ಅವರೇನು ಮಾಡ್ತಾರೆ. ಬಾ ಹೋಗುವಾ. ಕುಸುಮಾ ನೀನು ಹೋಗು, ಅಲ್ಲಿ ಆ ಗ್ಲಾಸಿನ ಅಂಗಡಿ ಪಕ್ಕದಿಂದ ಸಮೀಪ ಕಾಣುತ್ತದೆ. ಅಲ್ಲಿಂದ ನೋಡಿ ಹೇಳು. ಇಲ್ಲಿಯ ತನಕ ಬಂದು ನಾಟಕ ಬೇಡ ಪೂರ್ವಿ. ಬಾ. ಸರಿ, ನೀನಿಲ್ಲೇ ಇರು. ನಾನೇ ಹೋಗಿ ನೋಡ್ತೇನೆ. ಅವನು ಹೌದು ಅಂತಾದರೆ ಕರೀತೇನೆ. ಮುನ್ಸಿಪಾಲ್ಟಿಯ ಸೊರಗಿದ ಗಿಡವೊಂದಕ್ಕೆ ಹಾಕಿದ ತಂತಿಯ ಪಂಜರಕ್ಕೆ ಆತು ಪೂರ್ವಿ ನಿಂತಳು. ಮತ್ತು ಕುಸುಮ ಮೆಲ್ಲಗೆ ರಸ್ತೆ ದಾಟಿ ಕಾಜಿನಂಗಡಿಯ ಸಮೀಪ ನಿಂತು ಅಳುಕುತ್ತಲೇ ಪಾನ್ ಶಾಪಿನತ್ತ ನೋಡಿದಳು. +ಹಾಗೆ ಫಕ್ಕನೆ ಅವನೇ ಆಗಿ ತೋರಿ ಬರುವಂತೆ ಖಂಡಿತ ಇರಲಿಲ್ಲ. ಸಿಗರೇಟು ಪೊಟ್ಟಣಗಳು, ಗುಟ್ಕಾ ಪಾಕೀಟು, ಮುಂದೆ ಚಾಕಲೇಟು, ಚಿಕ್ಕಿ, ಪೆಪ್ಪೆರಮೆಂಟಿನ ಕಾಜಿನ ಭರಣಿಗಳು, ಸುಣ್ಣ ಮಸಾಲೆಯ ಪುಟ್ಟ ಬೋಗುಣಿಗಳು, ಪಾನ್ ಅಂಗಡಿಯ ಆ ಚೌಕಟ್ಟು ಟೀವಿಯ ತೆರೆಯಂತೆ ತೋರುತ್ತಿತ್ತು. ಆ ಚೌಕಟ್ಟಿನಲ್ಲಿ ಅಧೋವದನನಾಗಿ ಅವನು ಪಾನ್ ಕಟ್ಟುತ್ತಿದ್ದಾನೆ. ಮೇಲ್ಗಡೆ ಪುಟ್ಟ ದೇವರ ಫೋಟೋ, ಅದಕ್ಕೊಂದು ಕೆಂಪನೆ ಝೀರೋ ಕ್ಯಾಂಡಲ್ ಬಲ್ಬು. ‘ಬತಾದೇ’ ‘ಬತಾದೆ’ ಎಂದು ಬಟಾಟೆ ವಡೆಗೆ ತೊದಲು ಕೈಚಾಚುತ್ತಿದ್ದ ಈ ಮುದ್ದು ಪೋರ ಪಾನ್ ಕಟ್ಟುವುದನ್ನು ಹೇಗೆ ಕಲಿತ, ತನ್ನದೇ ದೇವರನ್ನು ಹೇಗೆ ನಿರ್ಧರಿಸಿದ. ಅವನ ಚೌಕಾಕಾರದ ಅಂಗಡಿಯ ಪೆಟ್ಟಿಗೆ ಒಂದು ಸ್ವತಂತ್ರ ಸ್ವರ್ಗದಂತೆ ತೋರಿತು. ಅವನು ಮತ್ತು ನಮ್ಮೆಲ್ಲರ ಜಗತ್ತಿನ ನಡುವೆ ವಿಚಿತ್ರವಾದ ಗೆರೆ ಇದೆ. ಅಪ್ರತ್ಯಕ್ಷನಾಗಿಯೇ ಏನೇನೋ ಆಗಿ ನಮ್ಮೆಲ್ಲರನ್ನೂ ಒಂದಾಗಿ ಹಿಡಿದಿರುವ, ಕಾಣದ ಶಕ್ತಿಯಾಗಿ ಮುನ್ನಡೆಸಿರುವ ಛೋಟೂಗೂ ಮತ್ತು ಇಲ್ಲಿ ತನ್ನದೇ ಒಂದು ಪ್ರೇಮ, ದ್ವೇಷ, ವ್ಯವಹಾರ, ಭಕ್ತಿ, ಭಯ, ಟೀಶರ್ಟು, ಉದ್ರಿ, ನಗದು, ಪಾಪ-ಪುಣ್ಯಗಳ ಉಪಗ್ರಹವೊಂದನ್ನು ಕಟ್ಟಿಕೊಂಡು ತಲ್ಲೀನರಾಗಿರುವ ಈ ಜೀವಕ್ಕೂ ಏನೇನೋ ಸಂಬಂಧವಿಲ್ಲ. ಆ ಇಪ್ಪತ್ತು ಸಾವಿರ ರೂಪಾಯಿಯನ್ನು ಅವನು ಹೇಗೆ ಹೊತ್ತುಕೊಂಡಿದ್ದಾನೋ ಗೊತ್ತಿಲ್ಲ. ಇಲ್ಲೇ ಪಕ್ಕದಲ್ಲೇ ಮನೆಯಿಂದ ಕೇವಲ ಎರಡೂವರೆ ಕಿಲೋಮೀಟರು ಅಂತರದಲ್ಲೆ ಇರುವ ಈತ ನಮಗೆ ಸಂಬಂಧಪಟ್ಟವನಲ್ಲ. ಈತನನ್ನು ನಮ್ಮೆಲ್ಲರ ಹಂಗಿನ ಲೋಕಕ್ಕೆ ತಂದು ಧ್ವಂಸ ಮಾಡುವುದೆ? ಇವನ ಪುಟ್ಟ ಅಂಗಡಿಯ, ಪುಟ್ಟ ಫ್ರೇಮಿನ, ಇವನ ಪುಟ್ಟ ದೇವರೇ, ಇವನ ಸ್ವರ್ಗ ನರಕಗಳನ್ನು ಕಾಪಾಡು. ಇವನ ಟೀಶರ್ಟುಗಳಿಗೆ ಇಸ್ತ್ರಿ ಮಾಡು. +‘ಛೋಟೂ’ ಎಂದು ವಿಚಿತ್ರವಾದ ಸಣ್ಣ ನಿಟ್ಟುಸಿರ ಸ್ವರವೊಂದು ಮೆಲ್ಲಗೆ ಕುಸುಮಳಿಂದ ಹೊಮ್ಮಿತು ಮತ್ತದು ಅವನೊಬ್ಬನನ್ನು ಬಿಟ್ಟು ಇಲ್ಲಿಯ ಸಕಲ ತಗಡು, ಕಾಜು, ಗುಜರಿ ವಸ್ತುಗಳನ್ನು ಸವರಿಕೊಂಡು ಹಾರಿ ಹೋಯಿತು. ಗಿಡದ ಪಂಜರಕ್ಕಾತು ನಿಂತ ಪೂರ್ವಿ ಜೋರಾಗಿ ಏನು? ಏನು? ಎಂದು ಸನ್ನೆ ಮಾಡಿದಳು. ಕುಸುಮ ಪೆಚ್ಚು ಮುಖದಲ್ಲಿ ‘ಇದು ಅವನಲ್ಲ’ ಎಂಬಂತೆ ತಲೆ ಅಲ್ಲಾಡಿಸಿ ಮೆಲ್ಲಗೆ ರಸ್ತೆ ದಾಟಿ ಈಚೆ ಬಂದಳು ‘ನನಗೆ ಗೊತ್ತಿತ್ತು. ಅವನು ಇಲ್ಲಿ ಇರೋದು ಅಶಕ್ಯ ಅಂತ ನನಗೆ ಖಾತ್ರಿ ಇತ್ತು’ ಎಂದು ಗ್ರಹಣ ಬಿಟ್ಟವಳಂತೆ ಹಿಗ್ಗಿನಲ್ಲಿ ಕೇಕೆ ಹಾಕಿ ಮುಂದೆ ನಡೆದ ಪೂರ್ವಿಯನ್ನು, ಹಿಂದಿನಿಂದ ‘ಮೆಲ್ಲಗೆ….ಮೆಲ್ಲಗೆ’ ಎಂದು ಕರೆಯುತ್ತ ಕುಸುಮಾ ರಸ್ತೆ ಬದಿಯಲ್ಲಿನ ಮುಚ್ಚಿದ ಅಂಗಡಿಯ ಮುಂಗಟ್ಟಿಗೆ ಒರಗಿ ನಿಂತಳು. ಪ್ರತಿಸಲ ಗರ್ಭಪಾತವಾದಾಗಲೂ ಅವಳನ್ನು ಆವರಿಸಿಕೊಳ್ಳುತ್ತಿದ್ದ, ನಿಜಲೋಕವೊಂದನ್ನು ಶಾಶ್ವತವಾಗಿ ಕಳಕೊಂಡಂಥ ದಟ್ಟನೆಯ ನೀರವವೊಂದು ಮುತ್ತಿಕೊಳಲು ಬಂದಂತೆ ಮುಖವನ್ನು ಮುಚ್ಚಿಕೊಂಡಳು. ಕುಸುಮಾ ಜತೆಗೆ ಇದ್ದಾಳೆಂದೇ ತಿಳಿದ ಪೂರ್ವಿ ಒಬ್ಬಳೇ ಮಳ್ಳಿಯಂತೆ ಮಾತಾಡುತ್ತ ಮೆಹಂದಿ ಕೈಯನ್ನು ಅಭಯ ಹಸ್ತದಂತೆ ಗಾಳಿಯಲ್ಲಿ ಹಿಡಿದು ಬಿಸಿಲಲ್ಲಿ ದೂರವಾಗುತ್ತಿದ್ದಳು. +***** +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_560.txt b/Kannada Sahitya/article_560.txt new file mode 100644 index 0000000000000000000000000000000000000000..45e2c07a437238167ab062368515fccd550b7f79 --- /dev/null +++ b/Kannada Sahitya/article_560.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ ಭೂತ +ವಾದಿಗಳಿಗಿಂತಲೂ +ಮಾಮೂಲುಭೂತ +ವಾದಿಗಳು +ಸಮಾಜಕ್ಕೆ +ನಿತ್ಯ ಗಂಡಾಂತರಕಾರಿಗಳು. +***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ಬೃಹದಾಕಾರ ಆದದ್ದನ್ನು ಅದ್ಭೂತ ಎನ್ನಬಹುದಲ್ಲವೆ? ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_561.txt b/Kannada Sahitya/article_561.txt new file mode 100644 index 0000000000000000000000000000000000000000..80596941c74605ada4bd2fcbffafc3b269a6a214 --- /dev/null +++ b/Kannada Sahitya/article_561.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು ಕನ್ನಡ ನಾಡಿನಲ್ಲಿ ತೀವ್ರವಾಗಿ ಚರ್ಚೆಗೊಳಗಾಗಿರುವ ವಿಷಯಗಳಲ್ಲಿ ಇದೂ ಒಂದು (ಇಷ್ಟು ವರ್ಷಗಳ ನಂತರವೂ ಚರ್ಚೆಯ ಹಂತದಲ್ಲಿರುವುದು ವಿಪರ್ಯಾಸವೆ ಸರಿ!!). ಎಲ್ಲಾ ಆಯಾಮಗಳಿಂದಲೂ ಸಮಾಜದ ಮೇಲೆ ಪರಿಣಾಮ ಬೀರಬಲ್ಲ ವಿಷಯ ಇದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಪ್ರಗತಿ, ಸಾಂಸ್ಕೃತಿಕ ಹರಿವಿನ ಮುಂದುವರಿಕೆ, ಭಾವನಾತ್ಮಕ ನೆಮ್ಮದಿ, ಈ ಎಲ್ಲಾ ಅಂಶಗಳ ದೃಷ್ಟಿಯಿಂದ ಮೇಲಿನ ವಿಷಯದ ಸಾರ್ವಜನಿಕ ಚರ್ಚೆ ಒಂದು ಅನಿವಾರ್ಯ ಅಗತ್ಯ. ನಾಡಿನ ಪ್ರತಿಯೊಬ್ಬ ಸೂಕ್ಷ್ಮಜ್ಞನೂ ಈ ವಿಷಯವಾಗಿ ವಸ್ತುನಿಷ್ಠ ಚಿಂತನೆ ನಡೆಸುವ ಅಗತ್ಯವಿದೆ. ’ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಿ ಕನ್ನಡ’ ಶೀರ್ಷಿಕೆಯ ಲೇಖನ, ಕೆ.ಎಸ್.ಸಿ ಯಲ್ಲಿ ಈ ಕುರಿತಾದ ಚಿಂತನೆಗೆ ನಾಂದಿಯಾಗುತ್ತದೆ ಎಂದು ನನ್ನ ಆಶಯ. +’ನಡೆದು ಬಂದ ದಾರಿ’ ಹೇಗಿದ್ದಿರಬಹುದು ಎನ್ನುವ ಊಹಾಪೂರಿತ ಅವಲೋಕನದೊಂದಿಗೆ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಸ್ವಾತಂತ್ರ್ಯಾನಂತರದ ಮೊದಲ ದಿನಗಳಲ್ಲಿ ಕರ್ನಾಟಕದಲ್ಲಿನ ಪ್ರಾಥಮಿಕ ಶಾಲೆಗಳ ರೂಪರೇಷೆಯೇನು ಎಂಬ ಪ್ರಶ್ನೆ ಅತಿ ಮುಖ್ಯ. ಆ ತಲೆಮಾರಿನ ಅನೇಕರ ಪರಿಚಯವಿರುದರಿಂದ ಹೆಚ್ಚಿನ ಪ್ರಾಥಮಿಕ ಶಾಲೆಗಳು ಕನ್ನಡ ಮಾಧ್ಯಮದ್ದವೆ ಆಗಿದ್ದವು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಇಂಗ್ಲೀಶ್ ಶಾಲೆಗಳಿದ್ದರೂ ಅವುಗಳ ಸಂಖ್ಯೆ ಅತಿ ಕಡಿಮೆಯಾಗಿದ್ದಿರಬೇಕು. ಕೇವಲ ಸಂಖ್ಯೆಯ ದೃಷ್ಟಿಯಿಂದಲ್ಲ, ಸಾಮಾಜಿಕ ಪ್ರಭಾವದ ದೃಷ್ಟಿಯಿಂದಲೂ ಹೌದು. ಕನ್ನಡ ಶಾಲೆಗಳ ಮೇಲಿನ ಜನರ ನಂಬಿಕೆ (ತನ್ಮೂಲಕ ಸಮಾಜದ ಆಂತರ್ಯದಲ್ಲಿ ಕನ್ನಡದ ಸಾಧ್ಯತೆಗಳ ಮೇಲಿನ ನಂಬಿಕೆ, ಕನ್ನಡ ಸಮಾಜದಲ್ಲಿ ಬೆಳೆದಿರಬಹುದಾಗಿದ್ದ ಆತ್ಮ ಗೌರವ), ಆಂಗ್ಲ ಶಾಲೆಗಳಿಗಳಿಗೆ ಪೈಪೊಟಿ ಕೊಡಬಲ್ಲ ತಾಕತ್ತು – ಇವೆಲ್ಲಾ‌ಈ ದೃಷ್ಟಿಯಿಂದ ಕನ್ನಡ ಶಾಲೆಗಳ ಮತ್ತೂ ಹೆಚ್ಚಿನ ಬೆಳವಣಿಗೆಗೆ ಒಳ್ಳೆಯ ವೇದಿಕೆ ತಯಾರಾಗಿತ್ತು ಎಂದು ನನ್ನ ಊಹೆ (ಅ ಕಾಲದ ನೆನಪುಳ್ಳ ಹಿರಿಯರು ಈ ಬಗ್ಗೆ ಬೆಳಕು ಚೆಲ್ಲಬೇಕು!). ಇಂದಿನ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡುವುದಾದರೆ, ಇಂದೂ ಕೂಡ ಕನ್ನಡ ಶಾಲೆಗಳೇ ಹೆಚ್ಚಿವೆಯಾದರೂ (ಈ ಬಗ್ಗೆ ಸಚಿವ ವಿಶ್ವನಾಥರು ಅಂಕಿ ಅಂಶ ನೀಡಿದ್ದನ್ನು ಪತ್ರಿಕೆಗಳು ಪ್ರಕಟಿಸಿವೆ), ಸಮಾಜದ ಮೇಲೆ ಅವುಗಳು ಬೀರಬಹುದಾದ ಪರಿಣಾಮದಲ್ಲಿ ಭಯಂಕರ ವ್ಯತ್ಯಾಸ ನಿರ್ಮಾಣವಾಗಿದೆ. ಸಂಖ್ಯೆಯ ದೃಷ್ಟಿಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಸಮಸ್ಯೆ ಎಷ್ಟು ಗಂಭೀರ ಎನ್ನುವುದು ತಿಳಿಯುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳು ನಗರ ಮತ್ತು ಪಟ್ಟಣಗಳಲ್ಲಿ ಸಾಂದ್ರವಾಗಿದ್ದರೆ, ಕನ್ನಡ ಮಾಧ್ಯಮ ಶಾಲೆಗಳು ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಾಂದ್ರವಾಗಿವೆ. ಪೂರ್ತಿ ಅಲ್ಲದಿದ್ದರೂ ಶ್ರೀಮಂತರು, ಶೈಕ್ಷಣಿಕವಾಗಿ ಮುಂದುವರೆದಿರುವ ಪೋಷಕರ ಮಕ್ಕಳು, ಮೇಲ್ವರ್ಗದವರು ಆಂಗ್ಲ ಶಾಲೆಗಳ ಪೋಷಕರಾಗಿದ್ದರೆ, ಸಾಮಾಜಿಕವಾಗಿ ಕೆಳವರ್ಗದಲ್ಲಿರುವವರು, ಬಡವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಪೋಷಕರ ಮಕ್ಕಳು ಕನ್ನಡ ಶಾಲೆಗಳನ್ನು ಅವಲಂಬಿಸಿದ್ದಾರೆ – ಎಂದು ಸ್ಥೂಲವಾಗಿ ಹೇಳಬಹುದು. ಇದಕ್ಕೆ ಅನೇಕ ಪ್ರಮುಖ ಅಪವಾದಗಳಿವೆ, ಆದರೆ ಸಂಖ್ಯೆಯ ದೃಷ್ಟಿಯಿಂದ, ಸಾಮಾಜಿಕ ಪರಿಣಮದ ದೃಷ್ಟಿಯಿಂದ ಗೌಣ. ಇದರಿಂದಾಗಿರುವ ಒಂದು ಮಾರಕ ಪರಿಣಾಮ – ಕೆಳವರ್ಗದವರು, ಬಡವರು ಆಂಗ್ಲ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ಹಾತೊರೆಯುವಂತಾಗಿದೆ. ಒಟ್ಟಿನಲ್ಲಿ ಕನ್ನಡಿಗರು ತಮ್ಮ ಭಾಷೆಯ ಸಾಧ್ಯತೆ, ಶಕ್ತಿ – ಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ, ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಪ್ರಿಯ ಸತ್ಯವನ್ನು ಇಂದು ನಾವು ಎದುರಿಸಬೇಕಾಗಿದೆ. (ಈ ಎಲ್ಲದರ ಪರಿಣಾಮವಾಗಿ ಆಂಗ್ಲ ಮಾಧ್ಯಮದಲ್ಲಿ ಓದಿದ ಈ ಲೇಖಕನೂ ಇದಕ್ಕೆ ಒಂದು ಉದಾಹರಣೆ.) ಭಾಷೆಯ ಮೇಲಿನ ನಂಬಿಕೆಗೆ ನೇರವಾಗಿ ಸಮಾಜದ ಆತ್ಮ ವಿಶ್ವಾಸದ ಜೊತೆಗೆ ಸಂಬಂಧವಿರುವ ಕಾರಣ, ಇದರ ಪರಿಣಾಮ ಏನು ಎನ್ನುವುದನ್ನು ಇನ್ನೂ ಹೆಚ್ಚು ವಿವರಿಸಬೇಕಾಗಿಲ್ಲ. +ಸುಗಮವಾದ ಹಾದಿಯಲ್ಲಿ ಸಾಗಬಹುದಾಗಿದ್ದ ಪರಿಸ್ಥಿತಿಯಿಂದ ಇಂತಹ ಹೀನಾಯ ಪರಿಸ್ಥಿತಿ ತಲುಪಿರುವ ಕಾರಣಗಳನ್ನು ಕುರಿತು ಧ್ಯಾನಿಸಬೇಕಿದೆ. ಬದಲಾವಣೆ ನಗರಗಳಿಂದ ಶುರುವಾಗಿದೆ ಎನ್ನುವುದಕ್ಕೆ ಹೆಚ್ಚಿನ ವಿವರ ನೀಡಬೇಕಾಗಿಲ್ಲ ಎಂದು ನಂಬಿ, ನಗರಗಳ ಬೆಳವಣಿಗೆಯ ದೃಷ್ಟಿಯಿಂದ ಇದನ್ನು ಅನ್ವೇಷಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದ ಬಲದಿಂದ ಆಂಗ್ಲ ಶಾಲೆಗಳು ಕನ್ನಡ ಶಾಲೆಗಳಿಗಿಂತ ಮಿಗಿಲಾಗಿವೆ. (ಇಂದು ಹಣವಂತರ ಖಾಸಗಿ ಆಂಗ್ಲ ಶಾಲೆಗಳು ಸೌಲಭ್ಯ, ಸೌಕರ್ಯ, ಶೈಕ್ಷಣಿಕ ಗುಣ ಮಟ್ಟದ ದೃಷ್ಟಿಯಿಂದ ಮುಂದಿವೆ.) ಅಂದರೆ ಕ್ರಮೇಣ ಹಣವಂತರು ಕನ್ನಡ ಶಾಲೆಗಳ ಕೈಬಿಟ್ಟರೆ? ಕೈ ಬಿಟ್ಟಿದ್ದಾದರೆ ಏಕೆ? ಹೊರರಾಜ್ಯದಿಂದ ವಲಸೆ ಬಂದವರ ಶೈಕ್ಷಣಿಕ ಅಗತ್ಯಗಳಿಂದ ನಿರ್ಮಾಣವಾದ ಆಂಗ್ಲ ಶಾಲೆಗಳು, ಕನ್ನಡಿಗರಲ್ಲಿ ಕನ್ನಡದ ಶಕ್ತಿಯ ಕುರಿತಾದ ವಿಶ್ವಾಸ ಕುಂದಿಸಿದವೆ? ಕನ್ನಡಿಗರ ಭಾಷೆಯ ಮೇಲಿನ ನಿರಭಿಮಾನ ಎಷ್ಟರ ಮಟ್ಟಿಗೆ ಕಾರಣವಿರಬಹುದು? ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗೆ ಆಂಗ್ಲ ಭಾಷೆಯ ಮೇಲಿನ ಪ್ರಭುತ್ವ ಕಷ್ಟ ಸಾಧ್ಯ ಎಂದೆನಿಸಿತೆ? ಇಂಗ್ಲೀಷ್ -ನಲ್ಲೆ ಎಲ್ಲಾ ಸಿಗುವಾಗ ಕನ್ನಡದ ಅವಶ್ಯಕತೆಯಾದರೂ ಏಕೆ ಎಂದೆನಿಸಿತೆ? ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಹಾಗೂ ಜ್ಞಾನದ ಹಸಿವನ್ನು ಇಂಗಿಸುವ ಪುಸ್ತಕ ಇನ್ನಿತರ ಸೌಲಭ್ಯಗಳಲ್ಲಿ ಕನ್ನಡ ಹಿಂದುಳಿಯಿತೆ? ಬದಲಾಗುತ್ತಿದ್ದ ಸಾಂಸ್ಕೃತಿಕ ಪರಿಸರದಲ್ಲಿ ಕನ್ನಡ ವಿದ್ಯಾರ್ಥಿಗಳ ಕಲ್ಪನಾ ಶಕ್ತಿಯನ್ನು ಹಿಡಿದಿಡುವಲ್ಲಿ ಸೋತಿತೆ? ವಿಜ್ಞಾನ ಪ್ರಪಂಚದಲ್ಲಿ ಉಂಟಾಗುತ್ತಿದ್ದ ಬೆಳವಣಿಗೆಗಳನ್ನು ಅಷ್ಟೆ ವೇಗವಾಗಿ ಕನ್ನಡಕ್ಕೆ ತರುವಲ್ಲಿ ಸೋತಿದ್ದು ಇದಕ್ಕೆ ಕಾರಣವಾಯ್ತೆ? ಪ್ರಾಥಮಿಕ ಶಿಕ್ಷಣಕ್ಕೆ ನೇರವಾಗಿ ರಾಜ್ಯ ಸರ್ಕಾರ ಹೊಣೆಯಾದ್ದರಿಂದ ಸರ್ಕಾರಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಯಿತೆ? ಅಥವಾ ಬುದ್ಧಿಜೀವಿಗಳ ಮಕ್ಕಳು ಆಂಗ್ಲ ಶಾಲೆಗಳಲ್ಲಿ ಓದುತ್ತಿರುವುದನ್ನು ನೋಡಿದ ಸಾಮಾನ್ಯ ಕನ್ನಡಿಗ ಧೃತಿಗೆಟ್ಟನೆ? ಅಥವಾ ನಿಜಕ್ಕೂ ಕನ್ನಡ ಮಾಧ್ಯಮದ ಅವಶ್ಯಕತೆಯೆ ನಮಗಿಲ್ಲವೆ, ಸುಮ್ಮನೆ ಭಾವನಾತ್ಮಕ ಕಾರಣಗಳಿಂದ ನಾವು ವ್ಯಾಕುಲಗೊಂಡಿದ್ದೇವೆಯೆ? ಈ ಎಲ್ಲಾ ಅಂಶಗಳೂ ಸದ್ಯದ ಪರಿಸ್ಥಿತಿಗೆ ಕಾರಣವಾದರೂ ಇದರ ಬಗೆಗಿನ ಆಳವಾದ ಅಧ್ಯಯನ ನಡೆಯದೆ, ಈ ವಿಷಯಕ್ಕೆ ನಾವು ಸರಿಯಾದ ಪರಿಹಾರ ಹುಡುಕಿಕೊಳ್ಳಲಾಗುವುದಿಲ್ಲ. ವಾಟಾಳರ ಘರ್ಜನೆಯೂ, ಜಿ.ನಾ. ಕುಮಾರರ ಹೋರಾಟವೂ, ಬರಗೂರರ ಕ್ರೂಸೇಡೂ ಈ ತೊಂದರೆಯನ್ನು ನಿವಾರಿಸಲು ಸಾಧ್ಯವಾಗದು. ಒಟ್ಟಿನಲ್ಲಿ, ಇವೆಲ್ಲಾ ಅಂಶಗಳು ಒಂದಕ್ಕೊಂದು ಸೇರಿಕೊಂಡು, ಸರ್ಕಾರದ ಕೃಪಾಕಟಾಕ್ಷದಲ್ಲಿ ಮಾತ್ರ ಬದುಕುವಂತಾಗಿರುವ ಕನ್ನಡ ಶಾಲೆಗಳು ಹಿಂದುಳಿಯುವಂತಾಗಿದೆ. +ಮೇಲೆ ಕೊಟ್ಟಿರುವ ಕಾರಣಗಳು ಮುಖ್ಯವಾದವುಗಳಾದರೂ ಕೆಲವು ಪ್ರಮುಖ ಕಾರಣಗಳಿವೆ. ಪಾಶ್ಚಾತ್ಯರ ವೈಜ್ಞಾನಿಕ ಪ್ರಗತಿ, ಶೈಕ್ಷಣಿಕ ಮಾಹಿತಿ ಎಲ್ಲವೂ ಆಂಗ್ಲದಲ್ಲೆ ಇದ್ದು, ಅವುಗಳ ಶ್ರೇಷ್ಠ ಮಟ್ಟದ ಕನ್ನಡ ಭಾವಾನುವಾದಗಳ ಅಲಭ್ಯ ಒಂದು ಮುಖ್ಯ ಕಾರಣ. ಪ್ರಾಥಮಿಕ ಮಟ್ಟದಲ್ಲಿ ಇದು ಹೇಗೆ ಮುಖ್ಯ ಎಂದು ಪ್ರಶ್ನಿಸುವವರು ಐ.ಸಿ.ಎಸ್.ಸಿ.-ಯ ಪ್ರಾಥಮಿಕ ಶಾಲಾ ಪಠ್ಯಗಳನ್ನು ಒದಬೇಕು. ಕನ್ನಡದ ಶಕ್ತಿಯ ಮೇಲಿನ ಅಪನಂಬಿಕೆಯಿಂದ (ಅಪನಂಬಿಕೆ ಅರ್ಥಹೀನವಾದರೂ ಪ್ರಾಮಾಣಿಕವಾಗಿತ್ತು), ಬಹುಬೇಗ ಪಾಶ್ಚಾತ್ಯರ ಪ್ರಗತಿಯನ್ನು ಭಾರತಕ್ಕೆ ತರುವ ಅವಶ್ಯಕತೆಯಿಂದ, ಯಾವುದಕ್ಕೂ ಹೆಚ್ಚು ಸಮಯವಿಲ್ಲ ಎಂಬ ಭಾವನೆಯಿಂದ, ದೇಶಾದ್ಯಂತ ಇರುವ ಪ್ರತಿಭಾವಂತರು ಒಂದೆಡೆ ಕಲೆತು ಕಲಿಯಬೇಕಾದರೆ ಬೇಕಾಗುವ ಸೌಕರ್ಯದಿಂದ, ಆಂಗ್ಲ ಮಾಧ್ಯಮಕ್ಕೆ ಕಾಲನ ಕೃಪಾಕಟಾಕ್ಷ ದೊರೆಯಿತು – ಎಂದು ನಾವು ಪರಿಗಣಿಸಬಹುದು. ಮಿಕ್ಕ ಕಾರಣಗಳು ಇವುಗಳ ಸುತ್ತ ಬೆಳೆದವು, ಈ ಕಾರಣಗಳಿಗೆ ಉತ್ತರಿಸಲಾಗದೆ ಆದ ಪರಿಣಾಮಗಳು. ಒಬ್ಬ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಜ್ಞಾನದ ಹಸಿವು ತೀರಿಸುವ ಎಲ್ಲವೂ ಕನ್ನಡದಲ್ಲಿ ಇಲ್ಲ, ಆದ್ದರಿಂದ ಪ್ರಾಥಮಿಕ ಹಂತದಲ್ಲೂ ಇಂಗ್ಲೀಷ್ ಅಗತ್ಯ ಎನ್ನುವ ಒಂದು ಕಳಕಳಿ ಹುಟ್ಟಿದ್ದರೆ ತಪ್ಪಿಲ್ಲ. ಆದರೆ ಇದರ ಜೊತೆಗೆ ಮತ್ತೊಂದು ಯೋಚನೆ ಸೇರಿದ್ದು ಕನ್ನಡ ಮಾಧ್ಯಮ ಹಿಂದೆ ಸರಿಯಲು ಕಾರಣವಾಗಿದ್ದಿರಬೇಕು. ಅದೆ – ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ, ಅದೆ ತರಗತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಿಂತಾ ಇಂಗ್ಲೀಷ್ ಭಾಷಾ ಜ್ಞಾನದ ವಿಷಯದಲ್ಲಿ ಹಿಂದುಳಿಯಬಹುದು – ಎಂಬುದು. +ಇವಿಷ್ಟು ಕೇವಲ ಶೈಕ್ಷಣಿಕ ದೃಷ್ಟಿಯಿಂದ ನಡೆಸಿದ ವಿಶ್ಲೇಷಣೆ. ಈ ಎಲ್ಲಾ ಅಂಶಗಳು ಸಾಮಾಜಿಕ ಜೀವನದಲ್ಲಿ ಉಂಟು ಮಾಡಿದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಇಂಗ್ಲೀಷ್ ಶಿಕ್ಷಣ ದುಬಾರಿಯಾಗಿ ಕ್ರಮೇಣ ’ಇರುವವರು ಇಲ್ಲದವರು’ ಎಂಬ ಎರಡು ವರ್ಗಗಳಾಗಿದ್ದು ನಂತರದ ಒಂದು ಮುಖ್ಯ ಬೆಳವಣಿಗೆ. (ಸ್ವಲ್ಪ ಮಟ್ಟಿಗೆ ಡೊನೇಶನ್ ಸಂಸ್ಕೃತಿ ಇದರಿಂದಲೆ ಬೆಳೆದಿರಬಹುದು.) ಇಂಗ್ಲೀಷ್, ಆಂಗ್ಲ ಮಾಧ್ಯಮ ಪ್ರತಿಷ್ಠೆಯ ಸಂಕೇತವಾಯಿತು. ಮಕ್ಕಳಲ್ಲಿ, ಕ್ರಮೇಣ ದೊಡ್ಡವರಲ್ಲಿಯೂ ಕನ್ನಡ ಅಷ್ಟೆನೂ ಶಕ್ತಿಯುತ ಭಾಷೆಯಲ್ಲ ಎನ್ನುವ ತಾತ್ಸಾರ ಬೆಳೆಯಿತು. ಮಿಕ್ಕ ಕಾರಣಗಳ ಜೊತೆಗೆ ಮಾತೃಭಾಷೆಯನ್ನು ಮನುಷ್ಯ ಅವಲಂಬಿಸುವುದು ತನ್ನ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಿ-ಬೆಳೆಸಲು. ಆದರೆ ಪಶ್ಚಿಮದ ತಂತ್ರಜ್ಞಾನದಿಂದ ಉಂಟಾದ ಆಲೋಚನೆಗಳಿಂದ ಪ್ರೆರಿತ ಸಾಂಸ್ಕೃತಿಕ ಬೆಳವಣಿಗೆಯಿಂದ ನಮ್ಮ ಪರಂಪರೆಯ ಜ್ಞಾನವೆ ಅಮುಖ್ಯ ಎಂಬ ಧೋರಣೆ ಬೆಳೆದದ್ದರಿಂದ ಕನ್ನಡದ ಮೇಲಿನ ಅವಲಂಬನೆ ಮತ್ತೂ ಕಡಿಮೆಯಾಯಿತು. ಕಡೆಗೆ ಭಾಷೆಯ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಿರುವ ಇಂದಿನ ಪರಿಸ್ಥಿತಿಯನ್ನು ನಾವು ತಲುಪಿದ್ದೀವಿ. ಇಂದು ಮಾತೃಭಾಷೆಯೆ ಇಂಗ್ಲೀಶ್ ಎನ್ನುವ ಒಂದು ವರ್ಗ ಬೆಂಗಳೂರಿನಂತಹ ಅನೇಕ ನಗರಗಳಲ್ಲಿ ಇದೆ. ಕಾಲನ ಕೃಪೆಯಿಂದಾದ ಈ ವರ್ಗದ ಯಶಸ್ಸು ಮಿಕ್ಕವರ ಮೆಲೆ ಅಪಾರ ಪ್ರಭಾವ ಬೀರತೊಡಗಿದೆ. ಜಾಗತೀಕರಣ, ಐ.ಟಿ., ಅಂತರ್ಜಾಲ ಇವುಗಳನ್ನು ಬಳಸಿಕೊಳ್ಳುವಲ್ಲಿ ಕನ್ನಡದ ತಯಾರಿಯ ಅಭಾವ – ಇವೆಲ್ಲಾ ಇಂಗ್ಲೀಷ್ ಸರ್ವಸ್ವವಾಗಿರುವವರ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಕನ್ನಡದ ಕೀಳರಿಮೆಯನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ಕನ್ನಡ ಮಾಧ್ಯಮದ ಈ ಸೋಲೆ ಕನ್ನಡ ಇಂದಿನ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳಿಗೆ ಬಹು ಮಟ್ಟಿಗೆ ಕಾರಣ ಎನ್ನುವುದು ನನ್ನ ದೃಢವಾದ ನಿಲುವು. +ಒಂದೆಡೆ ಈ ಎಲ್ಲಾ ಬೆಳವಣಿಗೆಗಳಾಗುತ್ತಿದ್ದರೆ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಹೇಳುತ್ತಿದ್ದುದೆ, ಹೇಳುತ್ತಿರುವುದೆ ಬೇರೆ. ವಿಶ್ವ ಸಂಸ್ಥೆಯ ಅನುಮೋದನೆಯೊಂದಿಗೆ ಇವರು ಹೇಳಿದ್ದು – ವೈಜ್ಞಾನಿಕ ದೃಷ್ಟಿಯಿಂದ ಪ್ರಾಥಮಿಕ ಶಿಕ್ಶಣ ಮಾತೃಭಾಷೆಯಲ್ಲೆ ಆಗಬೇಕು . ಈ ದಿಸೆಯಲ್ಲಿ ಮತ್ತೊಂದು ಬೆಳವಣಿಗೆಯೆಂದರೆ – ಭಾಷೆಯ ಶಕ್ತಿಯ ದೃಷ್ಟಿಯಿಂದ (ಸೌಕರ್ಯದ ದೃಷ್ಟಿಯಿಂದಲ್ಲ!) ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಶಕ್ತವಲ್ಲದೆ ಪೂರಕವಾಗಿದೆ ಎನ್ನುವುದು. ಕೆಲವರಾದರೂ, ಮಾತೃಭಾಷೆಯಲ್ಲೆ ಶಿಕ್ಷಣ ಪಡೆದು ಉನ್ನತ ಪದವಿ, ಶ್ರೇಷ್ಠ ಶೈಕ್ಷಣಿಕ, ಔದ್ಯೋಗಿಕ ಸಾಧನೆ ಮಾಡಿದರು. ಕನ್ನಡದಂತಹ ಭಾಷೆಯ ದುಡಿಮೆಗೆ ಮೊದಲಿಟ್ಟ ಮತ್ತೆ ಕೆಲವರು ಅನೇಕ ಶಾಸ್ತ್ರಗಳಲ್ಲಿ ಮಾತೃಭಾಷೆಯ ಬಳಕೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟರು. ಇಂಗ್ಲೀಷ್-ನಷ್ಟಲ್ಲದಿದ್ದರೂ, ಪ್ರತಿಯೊಂದು ವಿಷಯಗಳಲ್ಲಿ ಕೆಲವಾದರೂ ಒಳ್ಳೆಯ ಪುಸ್ತಕಗಳು ಬರತೊಡಗಿ, ಜನರ ಮನಸ್ಸು ಇತ್ತ ಹರಿಯಬಹುದೇನೋ ಎಂಬ ಭರವಸೆ ಇಟ್ಟುಕೊಳ್ಳುವಂತಾಯಿತು. ಒಟ್ಟಿನಲ್ಲಿ ಶಿಕ್ಷಣ ಮಾಧ್ಯಮದಲ್ಲಿ ಮಾತೃಭಾಷೆಯ ಬಳಕೆಗೆ ವೈಜ್ಞಾನಿಕ ತಳಹದಿ ಸಿಕ್ಕಂತಾಯ್ತು. ಅಷ್ಟಲ್ಲದೆ, ಸಾಂಸ್ಕೃತಿಕ ದೃಷ್ಟಿಯಿಂದ ಕಳವಳಗೊಂಡ ಮತ್ತೆ ಕೆಲವರು, ಭಾಷೆಯೊಂದಿಗೆ ಬೆಸೆದಿರುವ ಸಂಸ್ಕೃತಿಯನ್ನು ಉಳಿಸುವ ಕಳಕಳಿಯಿಂದ ಏನಾದರೂ ಕ್ರಮ ಕೈಗೊಳ್ಳಬೇಕೆಂಬ ಧೋರಣೆ ತಳೆದರು. ಭಾಷೆಯನ್ನು ಪ್ರೀತಿಸುವವರಲ್ಲಿ ಭಾಷೆಯ ರಾಜಕೀಯ, ಸಾಮಾಜಿಕ ಸೋಲು ಯಾವ ಮಟ್ಟಿಗಿನ ಭಾವನಾತ್ಮಕ ಹೊಡೆತ, ಎಷ್ಟರ ಮಟ್ಟಿಗೆ ಅಸ್ಥಿರತೆಯ ಭಾವನೆಯನ್ನು ತರುತ್ತದೆ ಎನ್ನುವುದನ್ನು ಭಾಷಾ-ಸಮಾಜ ಶಾಸ್ತ್ರಜ್ಞರು ಅನೇಕ ವಿಧವಾಗಿ ವಿವರಿಸಿದ್ದಾರೆ. +ಈ ಹಿನ್ನಲೆಯಲ್ಲಿ ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಇರಬೇಕೆ ಬೇಡವೆ ಎಂಬುದರ ಬಗ್ಗೆ ವಸ್ತುನಿಷ್ಠ ಚರ್ಚೆಯ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ಮಾತೃಭಾಷಾ ಬಳಕೆಗೆ ವೈಜ್ಞಾನಿಕ ತಳಹದಿ ದೊರೆತಿದೆ. ಚಿ. ವಿ. ಶ್ರೀನಾಥ ಶಾಸ್ತ್ರಿಗಳು ’ವಿಜಯ ಕರ್ನಾಟಕ’ದಲ್ಲಿ ವೃತ್ತಿಶಿಕ್ಷಣದಲ್ಲೂ ಇದು ಸಾಧ್ಯ ಎನ್ನುವುದಕ್ಕೆ ಹಲವು ನಿದರ್ಶನಗಳನ್ನು ಕೊಟ್ಟಿದ್ದಾರೆ. ಇನ್ನುಳಿದಿರುವುದು ನಿಜಪ್ರಪಂಚದಲ್ಲಿ ಇದರ ಶ್ರೇಷ್ಠ ಮಟ್ಟದ, ನಿರಂತರವಾಗಿ ಉಳಿಯಬಲ್ಲಂತಹ ಅನುಷ್ಠಾನ. ನಾವು ಸೋತಿರುವುದೆ ಇಲ್ಲಿ. +ಆಂಗ್ಲ ಮಾಧ್ಯದಲ್ಲಿ ಯಾವುದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ, ಅದೆ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಿಂತಾ ಹೆಚ್ಚಿನ ಮಟ್ಟದ ಇಂಗ್ಲೀಷ್ ಭಾಷಾಜ್ಞಾನ ಇರುತ್ತದೆ – ಎನ್ನುವ ಒಂದು (ತಪ್ಪಾದ) ಪರಿಕಲ್ಪನೆ ಕನ್ನಡ ಮಾಧ್ಯಮಕ್ಕೆ ಮುಳುವಾಯಿತು ಎನ್ನುವುದನ್ನು ಈ ಮೊದಲೇ ವಿವರಿಸಿದ್ದೇನೆ. ಇದಕ್ಕೆ ಪರ್ಯಾಯವಾದ ಎರಡು ಉಪಾಯಗಳಿವೆ. ಮೊದಲನೆಯದು, ಕನ್ನಡ ಮಾಧ್ಯಮದ ಪ್ರತಿಪಾದಕರು ಇಂಗ್ಲೀಷ್-ನಲ್ಲಿ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನೂ ಕನ್ನಡದಲ್ಲಿ ಒದಗಿಸುವುದು. ಇದು ದುಃಸಾಧ್ಯ ಎಂದು ಬೇರೆ ವಿವರವಾಗಿ ಹೇಳಬೇಕಿಲ್ಲ. ಅನೇಕ ದಶಕಗಳ ಪರಿಶ್ರಮದಿಂದ ನಾವು ಇದನ್ನು ಸಾಧಿಸಬಹುದಾದರೂ, ಅದಕ್ಕೆ ತಗಲುವ ವೆಚ್ಚ ದುರ್ಭರವಾದುದು. ಅಲ್ಲಿಯವರೆಗೆ ಕನ್ನಡ ಮಾಧ್ಯಮದ ಮೇಲೆ ಜನರ ನಂಬುಗೆ ಬೆಳೆಯುವುದೂ/ಉಳಿಯುವುದೂ ಕಷ್ಟ. ಅಂತರ ಇನ್ನಷ್ಟು ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮತ್ತೊಂದು ಮಾತು ಹೇಳಬೇಕೆನಿಸುತ್ತಿದೆ. ಮಾತೃಭಾಷಾ ಶಿಕ್ಷಣಕ್ಕೆ ಯೂರೋಪಿನ ಉದಾಹರಣೆ ಕೊಡುತ್ತಾರೆ. ಆದರೆ ಇದು ಸರಿಸಮಾನವಾದ ಉದಾಹರಣೆ ಅಲ್ಲ. ಯೂರೋಪಿನ ಎಲ್ಲಾ ಭಾಷೆಗಳೂ ತಂತ್ರಜ್ಞಾನದ ಜೊತೆಯಲ್ಲೆ ಬೆಳೆದು ಯಾವ ಕಾರಣಕ್ಕೂ, ಯಾವ ಸಮಯದಲ್ಲೂ ಇಂಗ್ಲೀಷ್-ಗಿಂತಾ ಹಿಂದೆ ಬೀಳಲಿಲ್ಲ. ಎಲ್ಲಾ ಬಗೆಯ ಪುಸ್ತಕಗಳೂ, ಸೌಕರ್ಯಗಳೂ ಯೂರೋಪಿನ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಂತಹ ಭಾಷೆಗಳು ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿ ಅದರಿಂದ ವಂಚಿತವಾಯಿತು. ಈ ವಿಷಯದಲ್ಲಿ ಯೂರೋಪಿನ ಭಾಷೆಗಳನ್ನಾಗಲಿ, ಇಂಗ್ಲೀಷನ್ನಾಗಲಿ ಸರಿಗಟ್ಟಲು ಪ್ರಯತ್ನ ಪಡುವ ಆಲೋಚನೆ ತತ್ ಕ್ಷಣದ ಅಗತ್ಯಗಳ ದೃಷ್ಟಿಯಿಂದ ಉಚಿತವಲ್ಲ. +ಎರಡನೇಯದು, ’ಕನ್ನಡ ಮಾಧ್ಯಮದಲ್ಲಿ ಯಾವುದೇ ತರಗತಿಯಲ್ಲಿ ಓದುವ ವಿದ್ಯಾರ್ಥಿ, ಇಂಗ್ಲೀಷ್ ಮಾಧ್ಯಮದಲ್ಲಿ ಅದೆ ತರಗತಿಯಲ್ಲಿ ಓದುವ ವಿದ್ಯಾರ್ಥಿಯಷ್ಟೆ ಇಂಗ್ಲೀಷ್ ಕಲಿಯಬಲ್ಲ’ ಎನ್ನುವುದನ್ನು ಸಾಬೀತುಪಡಿಸುವುದು. ಇದು ಸಾಧ್ಯವಾದ ಮಾತು ಎನ್ನುವುದು ನನ್ನ ಅನಿಸಿಕೆ. ಕ್ರಮೇಣ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಯೊಬ್ಬನಿಗೆ ಇಂಗ್ಲೀಷ್ ಕಲಿಯಲು ಮತ್ತಷ್ಟು ಸುಲಭವಾಗುತ್ತದೆ ಎನ್ನುವುದನ್ನು ಸಾಬೀತುಪಡಿಸುವುದು. ಇದನ್ನು ಅನುಷ್ಠಾನಗೊಳಿಸಲು ಒಂದು ರೂಪುರೇಷೆ ತಕ್ಷಣದ ಅಗತ್ಯ. ಇದು ಪ್ರಥಮ ಹೆಜ್ಜೆ. ಇದರ ನಂತರದ ಹೆಜ್ಜೆಗಳ ಕುರಿತಾದ ಚಿಂತನೆಗೆ ನಾಂದಿ ಹಾಡುವುದೇ ಈ ಲೇಖನದ ಆಶಯ. +ಆದರೆ ಇಂದು ಕನ್ನಡನಾಡಿನಲ್ಲಿ ಇದರ ಕುರಿತಾದ ಚಿಂತನೆ ನಿರಾಶೆಗೊಳಿಸುವ ಮಟ್ಟದಲ್ಲಿದೆ. ನಾರಾಯಣ ಮೂರ್ತಿಯವರು ಆಂಗ್ಲ ಶಾಲೆಗಳ ಅಗತ್ಯವಿದೆ ಎಂದು ಒಮ್ಮೆ ಹೆಳಿದಾಗ ಅವರ ಜೊತೆ ವೈಚಾರಿಕ ವಾದ ನಡೆಸದೆ ಅವರ ಪ್ರಾಮಾಣಿಕತೆಯನ್ನೆ ಪ್ರಶ್ನಿಸುವಂತಹ ಮಾತುಗಳು ಕೇಳಿಬಂದವು. ಈಗ, ಆಂಗ್ಲ ಶಾಲೆಗಳನ್ನು ಕಾನೂನಿನ ಮೂಲಕ ಮುಗಿಸಿಬಿಡುವ ಹುನ್ನಾರ ಬಾಲಿಶವಾದುದು, ದೂರದೃಷ್ಟಿರಹಿತವಾದುದು. ನಮಗೆ ಇಷ್ಟವಿರಲಿ-ಬಿಡಲಿ, ವೈಜ್ಞಾನಿಕವಾಗಿರಲಿ ಬಿಡಲಿ, ಆಂಗ್ಲ ಮಾಧ್ಯಮ ಶಾಲೆಗಳು ನಮ್ಮ ಜನರ ಅಭಿಮಾನವನ್ನು ಗಳಿಸಿವೆ. ಈ ದೇಶದಲ್ಲಿ ಅದೊಂದು ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿದೆ. ಇದನ್ನು ಮೀರಲು ಹಂತ ಹಂತವಾದ ಕಾರ್ಯಕ್ರಮದ ಅವಶ್ಯಕತೆಯಿದೆ. ದ್ವೇಷ, ರಾಜಕೀಯ ಪ್ರೇರಿತ ಆಕ್ರಮಣಕಾರಿ ಹಂಚಿಕೆ ನಮಗೆ ತಿರುಗುಬಾಣವಾಗಬಹುದು. ಉಚ್ಚನ್ಯಾಯಾಲಯ ಇದಕ್ಕೆ ವಿರುದ್ಧವಾದ ತೀರ್ಪು ನೀಡುವ ಸಾಧ್ಯತೆಗಳಿವೆ. ಕನ್ನಡ ಮಾಧ್ಯಮದ ಮೇಲೆ ಜನರ ವಿಶ್ವಾಸ ಗಳಿಸುವ ಮೊದಲು ಇಂತಹ ಯೋಜನೆಗಳು ಯಶಸ್ಸು ಗಳಿಸಲಾರವು. ಮೇಲಾಗಿ, ಬೆರೆ ರಾಜ್ಯಗಳಿಂದ ವರ್ಗವಾಗಿ ಬರುವವರ ಮಕ್ಕಳ ಗತಿಯೇನು? ಇದಕ್ಕೆ ಒಬ್ಬ ಮಹಾಶಯರ ಉತ್ತರ ’ಅಂತಹ ನೌಕರಿಲ್ಲಿರುವವರಿಗೆ ಮಾತ್ರ’ ಆಂಗ್ಲ ಮಾಧ್ಯಮದಲ್ಲಿ ಓದುವ ಅವಕಾಶ ಕಲ್ಪಿಸುವುದು. ಇದು ಅನುಷ್ಠಾನಗೊಳಿಸಬಲ್ಲಂತಹದೆ? ಇಂದು ’ವರ್ಗವಾಗಬಲ್ಲ ನೌಕರಿ’ ಅಥವಾ ’ವರ್ಗವಾಗಲಾರದ ನೌಕರಿ’ ಎಂದು ವಿಂಗಡಿಸುವ ಸ್ಥಿತಿಯಲ್ಲಿದ್ದೇವೆಯೆ ನಾವು? ಇಂತಹವರೇನಾದರೂ ಎಕ್ಸಿಕ್ಯುಟಿವ್-ನಲ್ಲಿದ್ದರೆ ಈ ಕೆಲವರ ಬೌದ್ಧಿಕ ದಿವಾಳಿತನ ಒಂದು ಘನ ಉದ್ದೇಶದ ಸೋಲಿಗೆ ಕಾರಣವಾಗುತ್ತದೆ. ಶಿಕ್ಷಣ ಮಾಧ್ಯಮದ ವಿಷಯದಲ್ಲಿ ಹುಡುಗಾಟ ಸಲ್ಲದು. +ಈಗ ಮುಖ್ಯವಾಗಿ ಆಗಬೇಕಿರುವ ಕೆಲಸ, ಕನ್ನಡ ಮಾಧ್ಯಮದಲ್ಲಿ ಯಾವುದೇ ವಿದ್ಯಾರ್ಥಿ ಇಂಗ್ಲೀಶ್ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ ಎನ್ನುವುದಮ್ಮು ಸಾಬೀತು ಪಡಿಸುವುದು. ಅದಕ್ಕೆ ಬೇಕಾದ ವೈಜ್ಞಾನಿಕ ಸೌಲಭ್ಯಗಳನ್ನು ಸೃಷ್ಟಿ ಮಾಡುವುದು. ಜನರ ವಿಶ್ವಾಸ ಗಳಿಸುವುದರಲ್ಲಿ ಇದು ಒಂದು ಮುಖ್ಯ ಹೆಜ್ಜೆಯಾಗಬಹುದು. ಪಟ್ಟಣದ ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ, ತಂತ್ರಜ್ಞಾನ ಪ್ರೇರಿತ, ಪಶ್ಚಿಮದಿಂದ ಹರಿದು ಬಂದಿರುವ ಸಂಸ್ಕೃತಿಯನ್ನು ಕನ್ನಡೀಕರಿಸುವುದು (ಸಂಗೀತ, ಸಾಹಿತ್ಯ, ಆಟ-ಗಳು ಮೊದಲಾದವುಗಳು). ಮಡಿವಂತರಿಗೆ, ಸಮಾಜವಾದಿಗಳಿಗೆ ಇದು ಅಸಹ್ಯ ತರಿಸಿದರೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಮಾಡಬಹುದಾದ ಕಾಲದಲ್ಲೂ ಏನನ್ನೂ ಮಾಡದೆ ’ಆರ್ಮ್ ಚೇರ್ ಕ್ರಿಟಿಕ್’ ಗಳ ತರಹ ಕುಳಿತ ಇವರು ಈಗ ಮಾತಾಡುವುದೇನೂ ಉಳಿದಿಲ್ಲ. +ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ನಮ್ಮ ಗೆಲುವು ಪೈಪೋಟಿಯಿಂದ, ಸ್ಪರ್ಧೆಯಿಂದ ನಡೆಯಬೇಕೆ ಹೊರತು, ಬಲವಂತ ಮಾಘಸ್ನಾನದಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ಕನ್ನಡದ ಸಾಧ್ಯತೆಯಲ್ಲಿ ನಂಬಿಕೆಯಿದ್ದರೆ, ನಮ್ಮಲ್ಲಿ ಒಬ್ಬರು ಮಾಡಬೇಕಾದ ಕೆಲಸ ಇಷ್ಟು – ಬೆಂಗಳೂರಿನ ಒಂದು ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡು ನಮ್ಮ ಈ ಎಲ್ಲಾ ವಿಚಾರಧಾರೆಗಳನ್ನೂ ಅದರಲ್ಲಿ ಅನುಷ್ಠಾನಗೊಳಿಸಿ ಯಾವುದೇ ಆಂಗ್ಲ ಶಾಲೆ ಹೊರತರಬಲ್ಲ (ಎಲ್ಲಾ ಆಯಾಮಗಳಲ್ಲಿ) ಫಲಿತಾಂಶವನ್ನು ಆ ಶಾಲೆ ಸಾಧಿಸುವಂತೆ ಮಾಡುವುದು. ಇದು ಸಾಧ್ಯವಾದರೆ, ನಂತರದ ದಿನಗಳಲ್ಲಿ ಜನರು ಕನ್ನಡ ಮಾಧ್ಯಮದತ್ತ ಆಸಕ್ತಿಯಿಂದ ಕಣ್ಣು ಹೊರಳಿಸುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಹಣ ಸರಕಾರದಿಂದ ಬರಬಹುದಾದರೂ ಅನುಷ್ಠಾನ ಖಾಸಗಿಯವರಿಂದಲೆ ಆಗಬೇಕು. ಇದು ಬಿಟ್ಟು, ಕಾನೂನಿಂದ ಆಂಗ್ಲ ಶಾಲೆಗಳ ವಿರುದ್ಧ ಹೋರಾಟ ನಡೆಸಿದರೆ, ಅದು ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿದೆ ಎನ್ನುವುದನ್ನು ಎತ್ತಿ ತೊರಿಸುತ್ತದೆ. ಜಯವಂತೂ ದುರ್ಲಭವಾಗೆ ಉಳಿಯುತ್ತದೆ. +ಆದರೆ ನಮ್ಮಲ್ಲಿ ಎಲ್ಲವನ್ನೂ ಸರಕಾರ ಮಾಡಬೇಕು ಎಂಬುದು ಸಮಾಜವಾದದಿಂದ ಪ್ರಭಾವಿತರಾದ ನಮಗೆ ಅಭ್ಯಾಸವಾಗಿಹೋಗಿದೆ. ವಿಚಾರ ನಮ್ಮದಾಗಿರಲಿ, ಅನುಷ್ಠಾನ ಬೇರೆಯವರದ್ದು ಎನ್ನುವುದು ಬೇಜವಾಬ್ದಾರಿಯ ಪ್ರವೃತ್ತಿ. ನಮ್ಮಲ್ಲಿ ಇಷ್ಟೆಲ್ಲ ಬುದ್ಧಿ ಜೀವಿಗಳಿದ್ದು, ಶಿಕ್ಷಣ ತಜ್ಞರಿದ್ದೂ ಒಂದು ಕನ್ನಡ ಶಾಲೆಯನ್ನು ಪ್ರಸಿದ್ಧಿಗೆ ತರಲಾರದ್ದು ನಾಚಿಕೆಗೇಡಿನ ವಿಷಯ. ಎಲ್ಲಾ ಶಾಲೆಗಳಲ್ಲಿ ಏಕಕಾಲದಲ್ಲಿ ಒಂದೇ ಮಟ್ಟದ ಶಿಕ್ಷಣದ ಕನಸು ಕಾಣುವ ಸಮಾಜವಾದಿಗಳು, ತಾವೆ ಈ ಯೋಜನೆಯ ಅನುಷ್ಠಾನದ ದಿಸೆಯಲ್ಲಿ ಏನ್ನನ್ನೂ ಮಾಡಲಿಲ್ಲ. ಇದು ರಷ್ಯದಲ್ಲೂ ಸಾಧ್ಯವಾಗಿರಲಿಲ್ಲ ಎನ್ನುವುದು ನನ್ನ ಊಹೆ. (ಯೂರೋಪಿನ ಸ್ಕ್ಯಾಂಡಿನವಿಯನ್ ದೇಶಗಳಲ್ಲಿ ಇದರ ಹತ್ತಿರದ ಅನುಷ್ಠಾನ ನಡೆದಿದೆ). ಒಟ್ಟಿನಲ್ಲಿ ಎಲ್ಲರಿಗೂ ಸಮಾನ ಮಟ್ಟದ ಶಿಕ್ಷಣ ನಮ್ಮ ದೇಶದಲ್ಲಿ ಸಧ್ಯದ ಪರಿಸ್ಥಿತಿ-ಯಲ್ಲಿ ಸಾಧ್ಯವಿಲ್ಲ. ಕನಸು ಒಳ್ಳೆಯದೆ, ಆದರೆ ಒಮ್ಮೆಗೆ ಸಾಧ್ಯವಿಲ್ಲ, ಹಂತ ಹಂತವಾಗಿ ಆ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಇಷ್ಟೆಲ್ಲ ಹೇಳಿದ್ದು, ಒಂದು ಕನ್ನಡ ಶಾಲೆಯನ್ನು ನಾವು ಆಂಗ್ಲ ಶಾಲೆಗಿಂತ ಮುಂದೆ ತರುವುದು ಸಾಧ್ಯವಾದರೆ, ಮುಂದೆ ಕನ್ನಡ ಶಾಲೆಗಳ ವಿಷಯದಲ್ಲಿ ಕ್ರಾಂತಿಯೆ ಆದೀತು, ಎನ್ನುವುದಕ್ಕೆ. +ಈಗ ನಾವು ಈ ದಿಸೆಯಲ್ಲಿ ಆಲೋಚನೆಗಳ ದೃಷ್ಟಿಯಿಂದ, ಅನುಷ್ಠಾ‌ಅನದ ದೃಷ್ಟಿಯಿಂದ ಶ್ರಮಪಡಬೇಕಾದ ಸಮಯ. ಆದರೆ ನಮ್ಮ ಬುದ್ಧಿಜೀವಿಗಳು ಈದಿಸೆಯಲ್ಲಿ ಕೆಲಸಮಾಡದೆ ಸಚಿವ ವಿಶ್ವನಾಥರನ್ನು ಕೆಳಗಿಳುಸುವುದರಲ್ಲಿ ಹೆಚ್ಚು ತೃಪ್ತಿ ಪಡುತ್ತಿರುವಂತಿದೆ. (ಸಚಿವರು ಹೇಳಿರುವ ಕೆಲವು ಮಾತುಗಳು ಪೂರ್ತಿ ಸುಳ್ಳಲ್ಲ ಎನ್ನುವುದು ಬೇರೆ ಮಾತು). ಹೀಗೆ ೫೦ ವರ್ಶ ನಾವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಕಾಲ ಕಳೆದಿದ್ದೇವೆ. ಆ ದಿನಗಳಲ್ಲಿ ಈ ಕಾರ್ಯಕ್ರಮ ಸುಲಭವಾಗಿ ಜಾರಿಗೆ ತರಬಹುದಿತ್ತು. ಅವಕಾಶ ಕೈ ತಪ್ಪಿ ಹೋಗಿದೆ. ಈಗ ಪ್ರಮುಖರಾಗಿರುವ ಅನೇಕ ಬುದ್ಧಿಜೀವಿಗಳು ಆಗಲೂ ಇದ್ದರು, ಪ್ರಮುಖರಾಗಿದ್ದರು, ಆಗ ಇವರೆಲ್ಲಾ ಸುಮ್ಮನಿದ್ದದ್ದೇಕೆ ಎನ್ನುವುದು ಅರ್ಥವಾಗದ ವಿಷಯ. ದೂರದೃಷ್ಟಿಯ ಕೊರತೆ ಎಂದೆ ಹೇಳಬೇಕು. ಅದೇನೆ ಇರಲಿ ಈಗಲೂ ಸಹ ಅನಗತ್ಯ ಹೋರಾಟಕ್ಕಿಂತ ಪ್ರಯೋಜನಕಾರಿಯಾದ ಕ್ರಿಯಾಶೀಲತೆಯಲ್ಲಿ ತೊಡಗಿಕೊಂಡರೆ ಮಾತ್ರ ನಮ್ಮಲ್ಲಿ ಅನೇಕರ ನೆಚ್ಚಿನ ಕನಸಾದ ಕನ್ನಡ ಮಾಧ್ಯಮ ಶಿಕ್ಷಣ ಬೆಳೆಯುವಂತಾಗುತ್ತದೆ. ಆಂಗ್ಲ ಶಾಲೆಗಳು ಇರುತ್ತವೆ, ಕನ್ನಡ ಶಾಲೆಗಳು ಅವುಗಳಿಗಿಂತಾ ಯಾವುದರಲ್ಲಿಯೂ ಕಡಿಮೆಯಲ್ಲದಂತೆ ಮಾಡುವಲ್ಲಿ ಸಫಲರಾದರೆ ನಮ್ಮ ಗುರಿ ಸಾಧಿಸಿದಂತೆಯೆ ಸರಿ. +***** +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ಅನುವಾದ: ಶ್ರೀಧರ ಕಲ್ಲಾಳ ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_562.txt b/Kannada Sahitya/article_562.txt new file mode 100644 index 0000000000000000000000000000000000000000..31f4f5e75911ef5174e004c2a5273b12eb2206bd --- /dev/null +++ b/Kannada Sahitya/article_562.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚೌಪಾಟಿ ಸಮುದ್ರದಿಂದ ಕೂಗಳತೆ ದೂರದಲ್ಲಿರುವ ಒಪೆರಾ ಹೌಸ್ ಚಿತ್ರಮಂದಿರದ ಹಳೇ ಕಟ್ಟಿಗೆಯ ಚಿತ್ತಾರದ ಕಮಾನಿರುವ ಅಪ್ಪರ್ ಸ್ಟಾಲ್‍ನಲ್ಲಿ ಕೊನೆಯ ಆಟದ ನಂತರ ಕಸ ಹೊಡೆಯುತ್ತಿದ್ದಾಗ ಇಂದ್ರನೀಲನಿಗೆ ಸೀಟಿನ ಅಡಿಗೆ ಸಿಕ್ಕಿದ ಆ ಚೀಲ ತುಸು ಭಾರವೇ ಇತ್ತು. ವಾಡಿಕೆಯಂತೆ ಅವನು ಕಸಬರಿಗೆ ಅಲ್ಲೇ ಬಿಟ್ಟು ಚೀಲವನ್ನು ಹಿಡಿದು ಹೊರಗೆ ಓಡಿ ಬಂದ. ಸಾಮಾನ್ಯವಾಗಿ ಹೀಗೆ ಥೇಟರಿನಲ್ಲಿ ಸಾಮಾನು ಮರೆತವರು ಬಂದು ಹೊರಗಿನ ಆಫೀಸಿನ ಬಳಿ ಅಥವಾ ಗೇಟು ಬಂದಾಗಿದ್ದರೆ ಹೊರ ಗೇಟಿನ ಬಳಿ ಚೌಕೀದಾರನ ಬಳಿ ಕೇಳುತ್ತಾ ನಿಲ್ಲುವುದುಂಟು. ಆದರೆ ಕೊನೆಯ ಆಟ ಮುಗಿದು ಸಾಕಷ್ಟು ಹೊತ್ತಾಗಿದ್ದರಿಂದ ಪ್ರಾಂಗಣವೇ ನಿರ್ಜನವಾಗಿತ್ತು. +ವಾಹನಗಳ ಸಂಚಾರ ಎಷ್ಟೊಂದು ವಿರಳವಾಗಿತ್ತೆಂದರೆ ಒಪೆರಾ ಹೌಸ್‍ನ ಸರ್ಕಲ್ಲಿನಿಂದ ಐದೂ ಕಡೆ ಹೋಗುವ ದಾರಿಗಳು ಎಷ್ಟೋ ದೂರದ ತನಕ ನಿಚ್ಚಳವಾಗಿ ಭಯ ಹುಟ್ಟಿಸುವಷ್ಟು ಖಾಲಿಯಾಗಿ ಕಾಣುತ್ತಿದ್ದವು. ಯಾವುದೋ ಮಹಾ ಭೀತಿಯಿಂದ ಜನ ಶಹರವನ್ನು ತ್ಯಜಿಸಿ ಹೋದರೋ ಎಂಬಂತೆ ಅನಿಸುತ್ತಿತ್ತು. ಆದರೂ ನಿರ್ಜನ ಬೀದಿಯ ಎಲ್ಲಾ ದೀಪಗಳು ಮಾತ್ರ ಪ್ರಕರವಾಗಿ ಬೆಳಕು ಚೆಲ್ಲುತ್ತಿದ್ದವು. ಈ ಪ್ರಕಾಶಮಯವಾದ ನೀರವವನ್ನು ಭೇದಿಸುವಂತೆ ಆಗಾಗ ಕೆನಡಿ ಬ್ರಿಜ್ಜಿನ ಅಡಿಯಿಂದ ಲೀಕಲ್ ರೈಲಿನ ಸದ್ದು ಉರುಳಿ ಬರುತ್ತಿತ್ತು. +ಇಂದ್ರನೀಲ ಕೆಲಹೊತ್ತು ಗೇಟಿನ ಹೊರಗೇ ನಿಂತವನು ಮೆಲ್ಲಗೆ ಚೀಲವನ್ನು ಅಗಲಿಸಿ ನೋಡಿದ. ಅದರಲ್ಲೊಂದು ಥರ್ಮಾಸ್ ಫ್ಲಾಸ್ಕು ತೆಪ್ಪಗೆ ಕೂತಿತ್ತು. ಬೆಚ್ಚಗಿತ್ತು. ಅತ್ಯಂತ ತುರ್ತಾಗಿ ಯಾರನ್ನೋ ತಲುಪಬೇಕಾಗಿದ್ದ ವಸ್ತುವೊಂದು ಹಾದಿ ತಪ್ಪಿ ಕೈಲಿ ಸಿಕ್ಕಿ ಬಿದ್ದಿರುವಂತೆ ಇಂದ್ರನೀಲನಿಗೆ ತುಂಬ ಕಸಿವಿಸಿ ಆಯಿತು. ಸುಮ್ಮನೆ ನಿಂತು ಪ್ರಯೋಜನವಿಲ್ಲಿ ಎನಿಸಿ ಮರಳಿ ಆಫೀಸಿಗೆ ಬಂದು ಟಿಕೆಟ್ಟಿನ ಕೌಂಟರ್ ಬಳಿಯೇ ಇದ್ದ ಬ್ರಿಟಿಷ್ ಕಾಲದ ಕುಸುರಿಯ ಪುಟ್ಟ ಹಲಗೆಯ ಮೇಲೆ ಅದನ್ನಿಟ್ಟು, ಲಗುಬಗೆಯಿಂದ ಅಪ್ಪರ್ ಸ್ಟಾಲಿನ ತನ್ನ ಕಸ ಹೊಡೆಯುವ ಕೆಲಸ ಮುಗಿಸಿದ. ಬಾಲ್ಕನಿ, ಫೆಮಿಲಿ ಬಾಕ್ಸು ಎಲ್ಲವನ್ನು ಗುಡಿಸಿ ಬಂದ. ಇತರ ಮೂರ್‍ನಾಲ್ಕು ಜನ ಈಗಾಗಲೇ ಬಾಲ್ಕನಿಯ ಜಗುಲಿಯಲ್ಲಿ ತಮ್ಮ ಪುಟ್ಟ ಪುಟ್ಟ ಹಾಸಿಗೆ ಪಿಂಡಿಗಳನ್ನು ಬಿಡಿಸಿ ಒಂದು ಸುತ್ತು ರಮಿ ಆಡಲು ಕೂತಿದ್ದರು. +“ಬೇಗ ಬಾ, ಆಟಕ್ಕೆ ನಿನಗೂ ಎಲೆ ಹಂಚಲೇ” ಎಂದು ಕಟ್ಟಿಗೆಯ ವಿಶಾಲ ಪಾವಟಿಗೆಗಳನ್ನು ಧಡಧಡ ಇಳಿಯುತ್ತ ಬಂದ ಬಾಲೇಕರ ಸಂಗತಿ ತಿಳಿದಿದ್ದೇ `ನಿನಗೇ ಸಿಗುತ್ತದೆ ನೋಡು ಇಂಥದ್ದು, ಬರ್ತಾರೆ ಬಿಡು’- ಎಂದ. `ಮುಚ್ಚಿದ ಗೇಟು, ಕತ್ತಲು ನೋಡಿ ಅವರು ಪರತ್ ಹೋಗ್ಬಾರ್ದು ನೋಡು. ಒಂದು ತುಸು ಹೊರಗೆ ಹಾದು ಬರ್ತೇನೆ’- ಎಂದ ಇಂದ್ರನೀಲನಿಗೆ `ಬಂಗಾಲೀ ಬಾಬು, ಜಾಗರಣೆ ಮಾಡೋದಿಕ್ಕೆ ನೆಪ ಹುಡುಕುತ್ತಾ ಇವೇನ ನೀನು…..ಸರಿ. ಬೇಗ ಬಂದು ಮಲಗು ಬೇಕಿದ್ರೆ ಗೇಟಿನ ತೂಗಿ ಹಾಕಿ ಬಾ’ ಎಂದು ಛೇಡಿಸುತ್ತ ಭಾಲೇಕರ ಮುಖ್ಯ ದ್ವಾರದ ಗ್ರಿಲ್ ಬಾಗಿಲನ್ನು ಕರ್ಕಶವಾಗಿ ಹಾಕತೊಡಗಿದ. ಇಂದ್ರನೀಲ ಹೊರಗೆ ಬಂದು ಪ್ರಾಂಗಣದಲ್ಲಿಯ ಕಾರಂಜಿಯ ಸಿಮೆಂಟು ನವಿಲಿನ ಕತ್ತಿನ ಮೇಲೆ ಕೂರುತ್ತ ಹೊರಗಿನ ದೀಪ ಇರಲೋ ಮಾರಾಯ ಆರಿಸಬೇಡಾ’ ಎಂದು ಕೂಗಿದ. +ನೂರಾರು ವರ್ಷ ಇತಿಹಾಸವಿದ್ದ ಶಿಲ್ಪ ಚಿತ್ತಾರದ ಈ ಹಳೇ ಕಟ್ಟಡ ಈಗಾಗಲೇ ರಾತ್ರಿಯೊಡನೆ ಮಾತಿಗಿಳಿಯತೊಡಗಿದಂತಿತ್ತು. ಒಂದಾನೊಂದು ಕಾಲದಲ್ಲಿ ನೃತ್ಯ ರೂಪಕಗಳ ಮಂದಿರವಾಗಿದ್ದ ಒಪೆರಾ ಹೌಸ್ ಮೂಕಿ ಚಿತ್ರಗಳ ಕಾಲದಿಂದಲೇ ಚಿತ್ರಮಂದಿರ ಆಯಿತಂತೆ. ಅರಮನೆಯ ಮೇಲುಪ್ಪರಿಗೆಯಂತೆ ಇರುವ ಈ ಕಟ್ಟಡಗಳ ಒಳ ವಿನ್ಯಾಸಗಳೆಲ್ಲ ಸಿನಿಮಾ ನಡೆದಾಗ ಕತ್ತಲಲ್ಲಿ ಮುಳುಗಿರುತ್ತವಲ್ಲಾ ಎಂದು ಇಂದ್ರನೀಲನಿಗೆ ಖೇದವಾಗುತ್ತಿತ್ತು ಹೊಸದಾಗಿ ಬಂದಾಗ. ಸಾಮಾನ್ಯವಾಗಿ ಎಲ್ಲ ಚಿತ್ರಮಂದಿರಗಳ ಬಾಲ್ಕನಿ, ಬೆಂಗಡೆ ಮಾತ್ರ ಇದ್ದರೆ ಇಲ್ಲಿ ಬಾಲ್ಕನಿ ಮೂರೂ ಬದಿಯಲ್ಲೂ ಅರಮನೆಯ ಮೇಲುಪ್ಪರಿಗೆಯಂತೆ ಇತ್ತು. +`ಮೌಸಂ’ `ಬಾಲಿಕಾಬಂಧು’ಗಳ ಸಿಲ್ವರ್ ಜುಬಲಿ ಇಂದ್ರನೀಲ ಬಂದ ನಂತರವೇ ಆದದ್ದು. ಆಗೆಲ್ಲ ಸಂಜೀವಕುಮಾರ, ಶರ್ಮಿಲಾ ಟಾಗೂರರನ್ನೆಲ್ಲ ಈ ಚಿತ್ತಾರದ ಉಪ್ಪರಿಗೆಯಲ್ಲೇ ನೋಡಿದ್ದ. ನಂತರ ಎಂದಿನಂತೆ ಚಿತ್ರ ಶುರುವಾದದ್ದೇ ಒಪ್ಪರಿಗೆಯ ಜತೆ ತಾರಗೆಗಳೂ ಕತ್ತಲೆಯಲ್ಲಿ ಮುಳುಗಿದವು. ಆದರೂ ಕತ್ತಲಲ್ಲಿ ಅಲ್ಲೇ ಮಿಕಿ ಮಿಕಿ ನೋಡುತ್ತಿದ್ದ. ಜುಬಲಿಗಳ ಹಂಗಾಮು ಮುಗಿದು ಚಿತ್ರಗಳು ಐವತ್ತು ದಿನ ಓಡುವುದೇ ಮಹಾ ಸಾಹಸ ಆಗತೊಡಗಿದಂತೆ ಒಂದು ಬಗೆಯ ವಿಷಣ್ಣ ಮಂಕು ಚಿತ್ತಾರಗಳಲ್ಲಿ ಕವಿಯತೊಡಗಿತು. ಎಷ್ಟು ಹೊಡೆದರೂ ಧೂಳು ಹೋಗುತ್ತಿರಲೇ ಇಲ್ಲ. ನಲ್ಲಿಗಳು ಸೋರತೊಡಗಿದವು. ಇಂಟರ್‍ವಲ್‍ನಲ್ಲಿ ಶೇರ್ ಮಾರ್ಕೆಟ್ಟಿನಂತೆ ಪಾಪ್‍ಕಾರ್ನ್ ಕೊಡಿ, ಸಮೋಸಾ ಕೊಡಿ, ಬಟಾಟೆ ವಡೆ ಕೊಡಿ ಎಂದು ನೋಟು ನಾಣ್ಯ ಹಿಡಿದು ಚೀರಾಡುವ ನೂರಾರು ಕೈಗಳ ಸಂತೆ ಆಗುತ್ತಿದ್ದ ಕೌಂಟರುಗಳು ಬಿಕೋ ಹೊಡೆಯುತ್ತಿದ್ದವು. +ಅಂಧೇರಿಯ `ಎಂಬರ್’ `ಆಸ್ಕರ್’ `ಮೈನರ್’ ತ್ರಿವಳಿ ಚಿತ್ರ ಮಂದಿರಗಳು ಒಂದು ಮುಂಜಾನೆ ಭಗ್ನಗೊಂಡು ಬೃಹತ್ ಶಾಪಿಂಗ್ ಮಳಿಗೆ ಆದ ಮೇಲಂತೂ ಇಂದ್ರನೀಲನ ಸಹವರ್ತಿಗಳೆಲ್ಲ ಬೇರೆ ಕೆಲಸಗಳನ್ನು ಹುಡುಕಿಕೊಂಡು ಒಬ್ಬೊಬ್ಬರೇ ಮರೆಯಾದರು. ಬಾಕ್ಸ್ ಆಫೀಸಿನ ತ್ರಿವಿಕ್ರಮನ್ ಇಂಗ್ಲಿಷ್ ಬರುತ್ತಿದ್ದುದರಿಂದ ಯಾವುದೋ ಮುಲಾಮಿನ ಸೇಲ್ಸ್ ಪ್ರತಿನಿಧಿ ಆದ. ಒಂದು ದಿನ ಅವನು ಇದೇ ಒಪೇರಾ ಹೌಸ್‍ನ ಎದುರಿನ ಪುಟ್‍ಪಾತಿನಲ್ಲಿ ನಿಂತು ಬರ ಹೋಗುವವರ ಹಣೆಗೆ, ಮೂಗುಗೆ `ತಗೊಳ್ಳಿ ಪುಕ್ಕಟ್ಟೆ ಸ್ಯಾಂಪಲ್ಲು, ತಲೆ ನೋವು ನೆಗಡಿ ಮಂಗಮಾಯ’ ಎಂದು ಪುಟ್ಟ ಬ್ಯಾಟರಿ ಚಾಲಿತ ಧ್ವನಿವರ್ಧಕದಲ್ಲಿ ಕೂಗುತ್ತಾ ಮುಲಾಮು ಹಚ್ಚುತ್ತ ನಿಂತುಕೊಂಡಿದ್ದ. +ಮೇಲುಪ್ಪರಿಗೆಯಲ್ಲಿ ನಿಂತಿದ್ದ ಇಂದ್ರನೀಲ ಮತ್ತು ಇತರ ಕೆಲಸಗಾರರನ್ನು ಅದೇ ಧ್ವನಿವರ್ಧಕದಲ್ಲಿ ಹೆಸರು ಹಿಡಿದು ಕೂಗಿ ಕತೆದಿದ್ದ. ಎಷ್ಟರಮಟ್ಟಿಗೆ ಅಂದರೆ `ಇಂದ್ರನೀಲಾ, ಎಷ್ಟು ಚೆಂದದ ಹೆಸರಿನ ನೀವು ಈ ಮುರುಕು ಮುದಿ ಥೇಟರಿನ ಜತೆಗೇ ಮುಳುಗಬಾರದು. ಬಾ ಹೊರಗೆ ಬಾ. ಬಂಡ್ಸಾ, ಭಾಲೇಕರ್, ಮಗನ್‍ಭಾಯ್ ನಾನೀಗ ಎಣಿಸುತ್ತೇನೆ…. ಹತ್ತು…. ಒಂಬತ್ತು…. ಎಂಟು….’ ಎಂದು ಕಟ್ಟಡದಲ್ಲಿ ಅವಿತ ಭಯೋತ್ಪಾದಕರನ್ನು ಹೊರಗೆ ಕರೆಯುವ ಇನ್‍ಸ್ಪೆಕ್ಟರನ ಹಾಗೆ ಕೂಗಿದ. ಎಲ್ಲರೂ ಇಳಿದು ಅವನ್ನ ಕಂಡರು. ಬಂಡ್ಸಾ ಅವನ ಜತೆಗೇ ನಡೆದುಬಿಟ್ಟ. ಯಾಕೋ ಧೈರ್‍ಯ ಸಾಲದೆ ಇಂದ್ರನೀಲ, ಮಗನ್‍ಭಾಯ್ ಮತ್ತು ಭಾಲೇಕರ ಇಲ್ಲೇ ಮುಂದುವರೆದರು. +ಉಳಿದವರೆಲ್ಲ ಬಾಲ್ಕನಿಯ ಜಗಲಿಯಲ್ಲಿ ಮಲಗುತ್ತಿದ್ದರೆ ಇಂದ್ರನೀಲ ವಿಶಾಲವಾದ ಕಟ್ಟಿಗೆಯ ಪಾವಟಿಗೆಗಳ ಹಿಂಭಾಗದ ವಿಶಾಲ ಪೊಳ್ಳಿನಲ್ಲಿ ಮಲಗುತ್ತಿದ್ದ. ವಾರಕ್ಕೊಮ್ಮೆ ಗಾಯ್‍ವಾಡಿ ಎದುರಿನ ಅನಂತಾಶ್ರಮ ಖಾನಾವಳಿಗೆ ಮೀನು ಊಟಕ್ಕಾಗಿ ಹೋಗುತ್ತಿದ್ದ. ಬೆಳಗಿಬ ಹೊತ್ತು ನಿಮ್‍ಕರ ಆರ್ಟ್ ಸ್ಟುಡಿಯೋದಲ್ಲಿ ಬೋರ್ಟ್ ಬರೆಯಲು ಹೋಗುತ್ತಿದ್ದ. ದೇವನಾಗರಿ ಲಿಪಿಗೆ ಬಂಗಾಲಿ ಲಿಪಿಯ ಚಿತ್ತಾರ ಕೊಟ್ಟು ಹೊಸ ರೀತಿಯಿಂದ ಆಕರ್ಷಕಗೊಳಿಸುತ್ತಿದ್ದ. ಅಲ್ಲಿ ಟ್ಯಾಕ್ಸಿಯವರೂ ಹಿಂದಿನ ಗಾಜಿನ ಮೇಲೆ ಏನಾದರೂ ಬರೆಸಿಕೊಳ್ಳಲು ಬರುತ್ತಿದ್ದರು. ರಾತ್ರಿ ಎಲ್ಲ ಶೋ ಮುಗಿದ ಮೇಲೆ ಸುಮ್ಮನೆ ಹಳದಿ ಬೆಳಕಿನ ಬೀದಿಗಳಲ್ಲಿ ನಡೆಯುತ್ತಿದ್ದ. ಆಗ ಅವನಿಗೆ ಈ ಶಹರ ಮಕ್ಕಳನ್ನು ತೊಡೆಯ ಮೆಲೆ ಮಲಗಿಸಿಕೊಂಡು ತಾನು ಮಾತ್ರ ಎಚ್ಚರದಿಂದ ಕಾಯುತ್ತ ಕೂತ ತಾಯಿಯಂತೆ ತೋರುತ್ತಿತ್ತು. +ಕೆಲವು ವರ್ಷಗಳ ಹಿಂದೆ ತನಗೆ ಇಪ್ಪತ್ತೈದು ವರ್ಷ ಆಗಿತ್ತು ಎಂದು ಅನಿಸುತ್ತದೆ ಹೊರತು ತಕ್ಷಣಕ್ಕೆ ಈಗ ಎಷ್ಟು ವಯಸ್ಸು ಅಂತ ಅವನಿಗೆ ಹೊಳೆಯುವುದಿಲ್ಲ. ಆದರೆ ಕೊನೆಯ ಆಟದ ನಂತರದ ಅಪರಾತ್ರಿಯಲ್ಲಿ ಮಾತ್ರ ಯಾವುದಕ್ಕೂ ವಯಸ್ಸೇ ಇಲ್ಲ ಅಂತನಿಸುತ್ತಿತು. ಈ ಒಣ ಕಾರಂಜಿಯಲ್ಲಿ ನೀರು ಚಿಮ್ಮಿ ಐದಾರು ವರ್ಷಗಳಾದವು. ಬಹುಶಃ `ಅಮಾನುಷಾ’ದ ನೂರನೇ ದಿನ ಕಾರಂಜಿ ಚಿಮ್ಮಿತ್ತು. ತನ್ನ ಬಂಗಾಲದ ನೆಚ್ಚಿನ ಹೀರೋ ಉತ್ತಮಕುಮಾರ ತನ್ನ ಹಿಂದಿ ಚಿತ್ರದ ಶತಮಾನೋತ್ಸವಕ್ಕೆ ಬಂದಿದ್ದ. ಆಗ ಕಾರಂಜಿಯ ಬುಡದಲ್ಲಿ ಬಣ್ಣದ ದೀಪ ಹಚ್ಚಿದ್ದರು. ಜೇಡ ಯಾವುದೇ ಆವೇಶ ಮಹತ್ವಾಕಾಂಕ್ಷೆ ಇಲ್ಲದೆ ಸುಮ್ಮನೆ ತನ್ನ ಬಲೆಯನ್ನು ಒಂದು ಕೇಂದ್ರದಿಂದ ನೇಯುವಂತೆ ಇಂದ್ರನೀಲ ಈ ಒಪೇರಾ ಹೌಸ್ ಕೇಂದ್ರದಿಂದಲೇ ತನ್ನ ಸಣ್ಣ ಸದ್ದಿಲ್ಲದ ವಿಶ್ವವನ್ನು ನೇಯ್ದುಕೊಂಡಿದ್ದ. +ರಾತ್ರಿಯ ಬೀದಿಗಳು, ಲೋಕಲ್ ರೈಲುಗಳು, ಕೆನಡಿ ಬ್ರಿಜ್ಜಿನಿಂದ ಕಾಣುವ ಗ್ರಾಂಟ್ ರೋಡಿನ ನಾಚ್‍ವಾಲಿಯರ ರಂಗುರಂಗಿನ ಪರದೆಗಳ ಖೋಲಿಗಳು, ಅನಂತಾಶ್ರಮದ ಮೀನು ರೈಸ್ ಪ್ಲೇಟು, ಸಿನಿಮಾ ಪ್ರಿಂಟಿನ ತಗಡಿನ ಊದಾ ಬಣ್ಣದ ಡಬ್ಬಗಳು….. ಹೀಗೆ ಈ ಬಲೆಯ ಎಳೆಗಳಿದ್ದವು. ಯಾವ ಕಾರಣಕ್ಕೂ ಈ ಬೆಚ್ಚಗಿನ ಬಲೆಯನ್ನು ಕದಡುವ ಆವೇಶ ಅವನಿಗೆ ಬಂದಿರಲಿಲ್ಲ. ಚಿತ್ರಮಂದಿರದಿಂದಾಗಿ ಆ ಇಡೀ ಪ್ರದೇಶಕ್ಕೇ ಒಪೇರಾ ಹೌಸ್ ಎಂಬ ಹೆಸರೇ ಬಂದಿದ್ದರಿಂದ, ಕ್ರಮೇಣ ಆ ಇಡೀ ಪ್ರದೇಶವೇ ತನ್ನ ಮನೆ ಎಂಬಂತೆ ಇಂದ್ರನೀಲ ಅದರಲ್ಲೇ ಹಣ್ಣಾಗಿದ್ದ. +ಹೀಗಾಗಿ ಈಗ ಈ ಕೊನೆಯ ಆಟದ ಅಪ್ಪರ್ ಸ್ಟಾಲ್‍ನ ಡಿ-ಐವತ್ತೇಳು ಸೀಟಿನಡಿಗೆ ಸಿಕ್ಕ ಈ ಥರ್ಮಾಸ್ ಫ್ಲಾಸ್ಕು ಅವನು ಎಣಿಸಿದ್ದಕ್ಕಿಂತ ಹೆಚ್ಚೇ ಅವನನ್ನು ಚುರುಕುಗೊಳಿಸಿತ್ತು. ಅದು ಹೊಸದಾಗಿ ಕೊಂಡುಕೊಂಡ ಪ್ಲಾಸ್ಕಾಗಿರಲಿಲ್ಲ. ಅದರ ಮುಚ್ಚಳದ ನಸು ಬಿಳಿ ಬಣ್ಣ ಹೊಳಪು ಕಳಕೊಂಡಿತ್ತು. ಹೀಗಾಗು ಅದು ಖಂಡಿತ ಅದರಲ್ಲಿ ಯಾರೋ ಯಾರೊಗಾಗೋ ತುಂಬಿಟ್ಟ ಪೇಯ ಇದ್ದಿರಬಹುದು. ಅದನ್ನೊಮ್ಮೆ ನೋಡಿಬಿಟ್ಟರೆ ಒಳ್ಳೆಯದೆ? ಅದು ನಾಳೆಯ ತನಕ ಹಾಳಾಗದೇ ಇರಬಹುದಲ್ಲವೆ? ಮುಚ್ಚಳ ತೆಗೆದರೆ ಅದು ಕೆಡಬಹುದೆ? ಇಂದ್ರನೀಲನಿಗೆ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದೇ ಒಳ್ಳೆಯದು ಎನಿಸಿತು. ನವಿಲಿನಿಂದ ಮೆಲ್ಲಗೆ ಎದ್ದು ಭಾಲೇಕರ ತನಗಾಗಿಯೇ ತುಸು ಬಿಟ್ಟಂತಿದ್ದ ಗ್ರಿಲ್‍ನ ಎಡೆಯಲ್ಲಿ ತೂರಿಕೊಂಡು ಹೋಗಿ ಬಾಕ್ಸ್ ಆಫೀಸಿನ ಬದಿಯಿಂದ ಆಚೀಲವನ್ನು ಎತ್ತಿಕೊಂಡ. ಖಂಡಿತ ಇದು ಯಾವುದೋ ಆಸ್ಪತ್ರೆಗೆ ಹೊರಟಿದ್ದ ಫ್ಲಾಸು. ಆದರೆ ಆಸ್ಪತ್ರೆಗೆ ಹೊರಟವರು ಪಿಕ್ಚರಿಗೆ ಯಾಕೆ ಬಂದರು? ಅಥವಾ ರಾತ್ರೆ ಆಸ್ಪತ್ರೆಯಲ್ಲಿ ಎಚ್ಚರಿರಬೇಕಾದ್ದರಿಂದ ತುಸು ವಿಶ್ರಮಿಸಲು ಬೇರೆಲ್ಲೂ ಜಾಗವಿರದೇ ಇಲ್ಲಿ ಬಂದು ಎರಡು ಗಂಟೆ ಕಾಲ ನಿದ್ರಿಸಿ, ಅವಸರದಲ್ಲಿ ಎದ್ದು ಹೊರಡುವಾಗ ಮರೆತು ಹೋದರೆ? ಇಂದ್ರನೀಲ ಫ್ಲಾಸ್ಕನ್ನು ಈಗ ಪೂರ್ತಿಯಾಗಿ ಚೀಲದಿಂದ ಹೊರಗೆ ಎತ್ತಿದ. ಅದರ ಪೂರ್ತಿ ಮೈತುಂಬಾ ಕಡುಗೆಂಪು ಇಸ್ಪೀಟು ಚೌಕದಂಥ ಡಿಸೈನು ಇತ್ತು. ಮೇಲಿನ ಬಿಳಿ ಟೊಪ್ಪಿಗೆ ಬಿಗಿಯಾಗಿತ್ತು. ಪುನಃ ಅದನ್ನು ಇಳಿಸುವ ಮುನ್ನ ಚೀಲದೊಳಗೆ ಇಣುಕಿದಾಗ ಅದರಲ್ಲಿ ಪುಟ್ಟ ಕಾಗದದ ಚೂರೊಂದಿತ್ತು. ಇಂದ್ರನೀಲ ಅದನ್ನು ತೆಗೆದು ಬೆಳಕಿನ ಸಮೀಪ ನಡೆದು ಓದಿದ. ಅದರಲ್ಲಿ ಮುರುಕು ದೇವನಾಗರಿಯಲ್ಲಿ ನಂದಾಬಾಯಿ, ಸೋನಾವಾಲ ಬಿಲ್ಡಿಂಗ್, ತಾಡದೇವ ಎಂದು ಬರೆದಿತ್ತು. +ತಾಡದೇವ ದೂರವಿಲ್ಲ. ಈ ಅಪರಾತ್ರಿಯಲ್ಲಿ ಸರಸರ ನಡೆದರೆ ಹದಿನೈದು ನಿಮಿಷದ ದಾರಿ. ಕೊಟ್ಟೇ ಬರುವಾ ಎಂದು ತನ್ನ ಕಿಸೆಯಲ್ಲಿ ಇದ್ದ ಟಾರ್ಚನ್ನು ತೆಗೆದು ಅದೇ ಚೀಲದೊಳಗೆ ಇನ್ನೇನು ಇಡಬೇಕು ಅಷ್ಟರಲ್ಲಿ ಮಗನ್‍ಬಾಯ್ ಧಡಧಡನೆ ಮೆಟ್ಟಿಲು ಇಳಿದು ಬಂದವನೇ `ನಡಿ ಆ ಅದೃಶ್ಯ ವಾರಸುದಾರನ ಹೆಸರಲ್ಲಿ ಒಂದೊಂದು ಕಪ್ ಕುಡಿದೇ ಬಿಡೋಣ’ ಎಂದು ಫ್ಲಾಸ್ಕನ್ನು ಕಸಿದುಕೊಂಡು ಧಡಧಡ ಮೇಲೆ ಓಡಿದ. ಕಟ್ಟಿಗೆಯ ಮೆಟ್ಟಿಲು ಶಬ್ದ ಈಗ ಇನ್ನೂ ಕರ್ಕಶವಾಗಿತ್ತು. `ಏ….ಏ….ಏ…. ನಿಲ್ರೋ’ ಎಂದು ಇಂದ್ರನೀಲನೂ ಅವನ ಬೆನ್ನ ಹಿಂದೆಯೇ ಓಡಿದ. `ಬೇಡಾ ಬಿಡ್ರೊ ಅದರಲ್ಲಿ ಮನೆ ವಿಳಾಸ ಇದೆ. ಯಾರಿಗೋ ಅರ್ಜೆಂಟ್ ಇರಬಹುದು…. ಕೊಟ್ಟು ಬಂದ್ ಬಿಡ್ತೀನಿ…. ದಯವಿಟ್ಟು ಕುಡೀಬೇಡಿ’ ಎಂದು ಗೋಗರೆಯುವಷ್ಟರಲ್ಲಿ ಭಾಲೇಕರ ಫ್ಲಾಸ್ಕನ್ನು ತೆರೆದು, ಅದರದೇ ಫ್ಲಾಸ್ಕಿನ ಲೋಟದಲ್ಲಿ ಬಗ್ಗಿಸಿ ಧತ್ ಎಂದು ತಲೆ ಬಡಿದುಕೊಂಡ. ಫ್ಲಾಸ್ಕಿನಲ್ಲಿ ಏನೂ ಇರಲಿಲ್ಲ. ಅದು ಖಾಲಿ ಆಗಿತ್ತು. ಅದರಿಂದ ತಣ್ಣನೆಯ ನಸುನಗುತ್ತಲೇ ಲೋಟದೊಳಗೆ ಸುರಿಯುತ್ತಿರುವಂತೆ ಇಂದ್ರನೀಲನಿಗೆ ಭಾಸವಾಯಿತು. +`ಹೆತ್ತೆರೀಕಿ, ಸುಮ್ಮನೆ ಈ ಅಪವೇಳೇಲಿ ಆಶಾಭಂಗ ಆಯ್ತು ನೋಡು’ ಎಂದ ಭಾಲೇಕರ-`ಪ್ಲೀಸ್ ಇಂದೂ, ಹ್ಯಾಗೂ ಫ್ಲಾಸ್ಕಿದೆ ಹೋಗಿ ಒಂದಿಷ್ಟು ಚಾ ತಗೊಂಬಾರೋ’ ಎಂದು ಗೋಗರೆದ. ವಿಧೇಯನಂತೆ ಇಂದ್ರನೀಲ ಫ್ಲಾಸ್ಕು ಹಿಡಿದು, ಕತ್ತಲು ಬೆಳಕುಗಳಲ್ಲಿ ಕೆತ್ತಿ ಮಾಡಿಟ್ಟಂತೆ ತೋರುತ್ತಿದ್ದ ಒಪೇರಾ ಹೌಸಿನಿಂದ ಗೇಟು ತಳ್ಳಿ ಹೊರಬಂದ. ಬಲಕ್ಕೆ ದೂರ ರಾಕ್ಸಿ ಸಿನೆಮಾದ ಎದುರು ಮೂರು ತಿಂಡಿ ಗಾಡಿಗಳು ಮಹಾ ಮೌನದಲ್ಲೇ ಏನೇನನ್ನೋ ಬೇಯಿಸುತ್ತಿದ್ದವು. ಅವು ಈಗ ಯಾರನ್ನೂ ಕೂಗಿ ಕರೆಯಬೇಕಾದ್ದೇ ಇರಲಿಲ್ಲ. ಬೇಕಾದವರು ತೆಪ್ಪಗೆ ಸ್ವಪ್ನದಲ್ಲಿ ಚಲಿಸುವವರಂತೆ ಅಲ್ಲಿ ತಲುಪಿ ದಣಿದ ಕಣ್ಣುಗಳಲ್ಲಿ ತಿನ್ನುತ್ತಿದ್ದರು. ಹಗಲಲ್ಲಿ ಎಲ್ಲಿ ಮಾಯವಾಗುತ್ತಾವೋ ಈ ಗಾಡಿಗಳು. ನಡುರಾತ್ರಿಯ ನಂತರ ಉದ್ಭವ ಮೂರ್ತಿಗಳಂತೆ, ಖಾಲಿ ರಸ್ತೆಗಳಲ್ಲಿ ಎದ್ದು ನಿಲ್ಲುತ್ತವೆ. ಒಪೆರಾ ಹೌಸ್‍ನ ಎದುರಿನ ಫುಟ್‍ಪಾತಿನಲ್ಲಿ ಮಲಗುವ ಜನ ಈಗಾಗಲೇ ತಮ್ಮ ತಮ್ಮ ನಿಗದಿತ ಸ್ಥಾನಗಳನ್ನು ಕೊಡವಿಕೊಂಡು ಹಾಸಿಕೊಳ್ಳುತ್ತಿದ್ದರು. ಇಲೆಕ್ಟ್ರಿಕ್ ಗ್ರಿಡ್ ಪಕ್ಕ ಮಲಗುವ ಸಪನ್ ` ಇಂದೂ, ಸಿಂಗಲ್ ಪಲ್ಟಿ ಮೊಟ್ಟೆ ತಿನ್ನೋಣವೇ?’ ಎಂದು ಕೂಗಿದ. ಇಂದ್ರನೀಲನೇನೋ ಮಹಾ ಕೆಲಸವಿದೆ ತಾಳು ಎಂಬಂತೆ ಕೈ ಬೀಸಿ ಬಿರಬಿರನೆ ಕೆನಡಿ ಬ್ರಿಜ್ಜಿನತ್ತ ನಡೆಯತೊಡಗಿದ. `ಈವತ್ತು ಯಾರು ಕರ್ದಿದಾರಪ್ಪಾ, ಪರ್ವಿನ್ ಬಾಬಿನೋ ಝೀನತ್ ಅಮಾನೋ?’ ಎಂದು ಸಪನ್ ಕೇಕೆ ಹಾಕಿ ನಗತೊಡಗಿದ. +ಫ್ಲಾಸ್ಕು ಖಾಲಿ ಇದ್ದುದರಿಂದ ಎದೆಯ ಮೇಲಿಂದ ಭಾರವೊಂದು ಇಳಿದ ಹಾಗೆ ಆಗಿದ್ದರೂ, ಇನ್ನಾವುದೋ ಬಗೆಯ ತಳಮಳ ಹಠಾತ್ತನೆ ಇಂದ್ರನೀಲನಲ್ಲಿ ಉಲ್ಬಣಗೊಂಡಂತಾಗಿತ್ತು. ಕೆನಡಿ ಬ್ರಿಜ್ಜಿನ ಏರಿನಿಂದ ಯಾಕೋ ಹಿಂತಿರುಗಿ ನೋಡಿದ. ಒಪೆರಾ ಹೌಸ್ ತುಂಬ ಹತಾಶವಾಗಿ, ಅದರಲ್ಲೀಗ ಮಗನ್‍ಭಾಯ್ ಮತ್ತು ಭಾಲೇಕರ್ ಇದ್ದಾರೆ ಎನ್ನುವುದು ಸುಳ್ಳು ಅನಿಸುವಂತೆ ಕಾಣುತ್ತಿತ್ತು. ಹಗಲಲ್ಲಾಗಿದ್ದರೆ ಬಾನಿಗೆ ತೋರುವ ಅದರ ಬುರುಜುಗಳು ಈಗ ಕತ್ತಲಲ್ಲಿ ಕರಗುತ್ತಿದ್ದವು. ಕೆನಡಿ ಬ್ರಿಜ್ಜಿನ ಬದಿಯ ಕಟ್ಟಡದ ರಂಗಬಿರಂಗಿ ಕಿಟಕಿಗಳಿಂದ ಸಾರಂಗಿ ಮತ್ತು ಗೆಜ್ಜೆಗಳ ಅಲೆಗಳು ಸುಳಿದುಬರುತ್ತಿದ್ದವು. ಕಳೆದ ವಾರ `ಹೈವಾನ್’ ಚಿತ್ರದ ಮ್ಯಾಟನಿಗೆ ಬಂದಿದ್ದ ಅಲ್ಲಿಯ ಹುಡುಗಿಯರು `ಏನು ಇಂದೂ, ಥೇಟರು ಮುಚ್ತಾರಂತೆ ಹೌದೇನೋ. ನಮ್ಮದೂ ಹಾಗೆಯೇ. ಈ ಹಾಡು ಕುಣಿತ ಎಲ್ಲಾ ಈಗ ಯಾರಿಗೆ ಬೇಕು ಹೇಳು. ಮುಂಬಯಿಯ ಗಲ್ಲಿ ಗಲ್ಲಿಗಳಲ್ಲಿ ಈಗ ಡ್ಯಾನ್ಸ್ ಬಾರ್‍ಗಳು ಆಗ್ತಾ ಇವೆ. ಎಲ್ಲ ಅಲ್ಲೇ ಹೋಗ್ತಾರೆ. `ಪಾಕೀಜಾ’ ಉಮ್ರಾನ್ ಜಾನ್’ `ಮುಗಲ್ ಏ ಅಜಮ್’ ಹಾಡುಗಳು ಯಾರಿಗೂ ಬೇಕಿಲ್ಲ. ಕೈಲಿ ಅಷ್ಟೊಂದು ಕಾಸಿಲ್ಲದ ಮುದಿ ಸೇಠ್‍ಗಳು ಮಾತ್ರ ಇಲ್ಲಿಗೆ ಬರ್‍ತಾರೆ’ ಎಂದು `ಸಡೇಲಾ ಪಿಕ್ಚರು ತೋರಿಸ್ತೀರಪ್ಪಾ ನೀವು’ ಎಂದು ಹೋಗಿದ್ದರು. +`ಟೈಮ್ ಪಾಸ್ ಮಾಡಬೇಕೂಂತ ಇದ್ರೆ ಬಾ ನಮ್ಮ ಕೋಠಿಗೆ’ ಎಂದು ಸಾವಲಿ ಹೇಳಿದ್ದಳು. ಬೆಳ್ಳಗಿನ ಹುಡುಗಿ ಅವಳು. ಸಾವಲಿ ಅಂತ ಯಾಕೆ ಕರೀತಾರೋ ಆ ಹುಡುಗಿಯರು ಹಗಲಲ್ಲಿ ಅಕ್ಕಿ ಆರಿಸುತ್ತ ಅಥವಾ ಫುಟ್‍ಪಾತಿನಲ್ಲಿ ಟೊಮೋಟೋ ಪಾಲಿಗೆ ದರ ಮಾಡುತ್ತ ಇರುತ್ತಾರೆ. ಟೈಮ್‍ಪಾಸ್ ಅಂತ ಸಾವಲಿ ಹೇಳಿದ ಶಬ್ದ ಯಾಕೋ ಇಂದ್ರನೀಲನ ಜತೆಗೇ ಉಳಿದು ಬಂದಿದೆ. ಬೆಳೆದೂ ಬಂದಿದೆ. ವಿಕ್ಟೋರಿಯಾ ಟರ್ಮಿನಸ್‍ನಲ್ಲಿ ಅಥವಾ ರಾಜಾಭಾಯಿ ಟಾವರ್‍ನಲ್ಲಿ ಇರುವ ಬೃಹತ್ ಗಡಿಯಾರದಲ್ಲಿ ಢಣ ಢಂಗುರವಾಗಿ ಕಾಣುವ ಟೈಮ್‍ಗೂ ಈ ಟೈಮ್ ಪಾಸ್‍ಗೂ ಅಂಥ ಸಂಬಂಧ ಇಲ್ಲ. ತನ್ನ ಹೊಟ್ಟೆಗೆ ಕಟ್ಟಿಕೊಂಡು ಪುಟ್ಟ ಗೋಲ ಬುಟ್ಟಿಯಲ್ಲಿ ಪಿರಮಿಡ್ಡಿನಂತೆ ಕಡಲೆ, ಶೇಂಗಾ ಬೀಜಗಳನ್ನು ಪೇರಿಸಿಕೊಂಡು ಹಗಲಿಡೀ ಇಲ್ಲಿ ಅಲೆಯುವ ಚನಾವಾಲಾ ಕೂಡ `ಟೈಂ ಪಾಸ್….ಟೈಂ ಪಾಸ್….ಎಂಟಾಣೆ ಯಲ್ಲಿ ಟೈಂ ಪಾಸ್’ ಎಂದು ಜನರನ್ನು ಕರೆಯುತ್ತಲೇ ಇರುತ್ತಾನೆ. ಅವನ ಬುಟ್ಟಿಯಲ್ಲಿಯ ಬೀಜಗಳ ಮೇಲೆ ಅವನೊಂದು ಪುಟಾಣಿ ಅಗ್ಗಿಷ್ಟಿಕೆಯ ಮಡಿಕೆಯನ್ನೂ ಇಟ್ಟುಕೊಂಡಿರುತ್ತಾನೆ. ಅದರೊಳಗೆ ನಿಗಿನಿಗಿ ಕೆಂಪಗೆ ಹೊಳೆಯುವ ಕೆಂಡಗಳಿರುತ್ತವೆ. ಆ ಪುಟಾಣಿ ಮಡಿಕೆಯ ಸುತ್ತಲೂ ತೂತುಗಳಿವೆ. ಅದನ್ನು ಆರದಂತೆ ಅವನು ನೋಡಿಕೊಳ್ಳುತ್ತಾನೆ. ಆ ಬಿಸಿ ಮಡಿಕೆಯನ್ನು ತನ್ನ ಕಡಲೆ ಶೇಂಗಾದ ಹಾಸಿನ ಮೇಲೆ ಸರದಿಯಂತೆ ಇಡುತ್ತಾ ತನ್ನ ಸರಕನ್ನು ಬಿಸಿ ಬಿಸಿಯಾಗಿ ಜನರ ಟೈಂ ಪಾಸ್‍ಗೆ ಸಜ್ಜುಗೊಳಿಸುತ್ತಾನೆ. ಮೊದಮೊದಲು ಕೊನೆಯ ಆಟದ ಇಂಟರ್‍ವಲ್‍ಗೆ ತಪ್ಪದೇ ಪ್ರಾಂಗಣಕ್ಕೆ ಬರುತ್ತಿದ್ದ. ಈಗ ಆತ ಬರುತ್ತಿಲ್ಲ. +ಆ ಅಲೆಮಾರಿಯ ಆ ಪುಟ್ಟ ಅಗ್ಗಿಷ್ಟಿಕೆ ಯಾವಾಗಲೂ ಇಂದ್ರನೀಲನ ಮನಸ್ಸಿಗೆ ಬರುತ್ತದೆ. ಬಾಲ್ಯದಲ್ಲಿ ಅಮ್ಮ ಹೊತ್ತಿಸಿದ್ದ ಒಲೆಯಂತೆ ಅದು ವಿಚಿತ್ರವಾದ ಬಿಸಿಯನ್ನು ಅವನಲ್ಲಿ ಎಬ್ಬಿಸುತ್ತದೆ. ಒಲೆ ಹೊತ್ತಿಕೊಂಡಾಗ ಅಮ್ಮನ ಮುಖವೂ ಬೆಳಗುತ್ತಿತ್ತು. ನಿದ್ದೆಯಿಂದ ಎಬ್ಬಿಸಲ್ಪಟ್ಟಂತಿದ್ದ ಆ ಮುಖ ನಿರ್ವಿಕಾರವಾಗಿ ಹೊತ್ತಿಕೊಂಡಿರುತ್ತಿತ್ತು. ಇಂದ್ರನೀಲನಿಗೆ ಇಂಥ ಅಗ್ಗಿಷ್ಟಿಕೆಗಳು ವಿಚಿತ್ರ ಮೈ ಮರೆವನ್ನು ಕೊಡುತ್ತವೆ. ಅದಕ್ಕೆ ಅವನು ಲಾಂಡ್ರಿ ಬಬನ್ ಬೆಳ್ಳಂಬೆಳಿಗ್ಗೆ ಫುಟ್‍ಪಾಥಿನ ಮೇಲೆ ಗೋಣಿಚೀಲ ಹಾಸಿ ತನ್ನ ಹಳೇ ಇಸ್ತ್ರಿ ಪೆಟ್ಟಿಗೆಗೆ ಕೆಂಡವನ್ನು ಸುರಿದು ಗಾಳಿ ಹಾಕುವುದನ್ನು ನೋಡುತ್ತಾ ಕೂರುತ್ತಾನೆ. ತಾನೂ ಗಾಳಿ ಹಾಕುತ್ತಾನೆ ಆ ಬಿಸಿ ಆ ಮೈಮರೆವು ಅದೇ ಟೈಮ್ ಪಾಸ್, ನಿಜವಾದ ಟೈಂಪಾಸ್, ಹಾಗಿದ್ದರೆ ಈ ಫ್ಲಾಸ್ಕು, ತಣ್ಣಗೆ ಖಾಲಿ ಇರುವ ಈ ಫ್ಲಾಸ್ಕು ಈ ಅಪರಾತ್ರಿಯಲ್ಲಿ ಏನು ಹೇಳುತ್ತಿದೆ. +ಫ್ಲಾಸ್ಕೇ ಅವನನ್ನು ನಡೆಸುತ್ತಿದೆಯೋ ಎಂಬಂತೆ ಇಂದ್ರನೀಲ ಕೆನಡಿ ಬ್ರಿಜ್ಜಿನ ಪಕ್ಕದ ಮೆಟ್ಟಿಲುಗಳನ್ನು ಇಳಿದು ರಸ್ತೆ ಬದಿಯ ಚಾಯ್‍ವಾಲಾನ ಬಳಿ ಹೋಗಿ ನಿಂತ. ನೀಲಿ ಜ್ವಾಲೆಯ ಹೂಗಳ ಮೇಲೆ ಕುದಿಸಿ ಅವನು ಆಕಾಶದ ಎತ್ತರದಿಂದ ಸೋಸಿ ಫ್ಲಾಸ್ಕನ್ನು ತುಂಬಿಸುವುದನ್ನೇ ನೋಡಿದ. ಇಲ್ಲಿಂದೆದ್ದ ಚಾ ಪರಿಮಳ ಹಳದಿ ಬೆಳಕಿನೊಂದಿಗೆ ಬೆರೆತು ರಾತ್ರಿಯನ್ನು ಹಸನುಗೊಳಿಸುತ್ತಿತ್ತು. ಚಾಯ್‍ವಾಲ ರಾತ್ರಿಯ ಮೈದಡವುವ ತಾಯಿಯಂತೆ ಇದ್ದ ಬಿಸಿ ಫ್ಲಾಸ್ಕು ಎತ್ತಿಕೊಂಡು ಇಂದ್ರನೀಲ ಈಗ ಕೋಠಿಯ ಹುಡುಗಿಯರ ಕಣ್ಣಿಗೆ ಬೀಳಬಾರದೆಂಬ ಎಚ್ಚರದಲ್ಲಿ ಸರ ಸರ ಕೆಳ ಗಲ್ಲಿಯಲ್ಲೇ ನಡೆಯತೊಡಗಿದ. ಮತ್ತೆ ಮತ್ತೆ ಕತ್ತು ಹೊರಳಿಸಿ ಮೇಲಿನ ಮಜಲಿನ ಬಣ್ಣದ ಕಿಟಿಕಿಗಳೆಡೆ ನೋಡುತ್ತ ನಡೆಯುತ್ತಿದ್ದವನನ್ನು `ಪಕಡ್‍ಲಿಯಾ’ ಎಂಬ ಹೆಣ್ಣು ಕೇಕೆ ಹಠಾತ್ತನೆ ನಿಲ್ಲಿಸಿತು. ಸಾವಲಿ ಮತ್ತು ಗೆಳತಿಯರು ಎದುರಿದ್ದರು. ಜತೆಗೊಬ್ಬ ಅವರ ಕಾವಲುಗಾರ ಠೊಣಪನೂ ಇದ್ದ. ಈ ಹುಡುಗಿಯರನ್ನು ಕಪ್ಪು ಕನ್ನಡಕದ ಕಾರುಗಳು ಎತ್ತೊಯ್ಯಬಾರದೆಂದು ಅವನು ಸದಾ ಅವರ ಮೇಲೆ ನಿಗರಾನಿ ನಡೆಸುತ್ತಾನೆ. ಪಿಕ್ಚರು ನೋಡಲು ಬಂದಾಗಲೂ ಅವನ ಜತೆಗೇ ಬರುತ್ತಾರೆ. ಅವರು ಸಾವಲಿ ಕೈಯಲಿ ರಿವಾಲ್ವರ್ ಇರುವಂತೆ ಅಭಿನಯಿಸುತ್ತ ಇಂದ್ರನೀಲ ಎದೆಗೇ ಗುರಿಯುಟ್ಟು `ಹ್ಯಾಂಡ್ಸ್ ಅಪ್-ಬೇಗ ಹೂಂ ನಮ್ಮ ಇಲಾಖೆಯಿಂದ ಈ ನಡುರಾತ್ರಿಯಲ್ಲಿ ಚಾಯ್ ಸ್ಮಗ್ಲಿಂಗ್ ಮಾಡ್ತಿದೀಯಾ ಕೊಡು ಇಲ್ಲಿ ಮಾಲು’ ಎಂದು ಕಿಲಿಕಿಲಿಸುತ್ತ ಫ್ಲಾಸ್ಕು ತಗೊಂಡು ಅವಳ ಕಟ್ಟಡವನ್ನು ಹೊಕ್ಕಿಬಿಟ್ಟಳು. ಉಳಿದ ಹುಡುಗಿಯರೂ ಅವಳ ಹಿಂದೆ ಓಡಿದರು. `ಥರ್ಮಾಸ್ ಬೇಕಿದ್ದರೆ ನೀನೂ ಬಾ’ ಎಂದೊಬ್ಬಳು ಕೂಗಿದಳು. ನಿರುಪಾಯನಂತೆ ಇಂದ್ರನೀಲ ನಸುನಗುತ್ತ ಅವರ ಹಿಂದೆ ನಡೆದ. +ಅದೂ ಕೂಡ ಬಹುಶಃ ಒಪೆರಾ ಹೌಸ್‍ನಷ್ಟೇ ಹಳತಾಗಿದ್ದು ವಿಕ್ಟೋರಿಯನ್ ಪಳಿಯಿಳಿಕೆಯಂಥ ಕಟ್ಟಡ. ಮೇಲಿನ ಮಜಲುಗಳಲ್ಲಿ ನಾಚ್ ಗಾನಾದ ಕೋಣೆಗಳು. ಮೇಲಿರುವ ಮೆಟ್ಟಿಲುಗಳು ಆರಂಭವಾಗುವ ಬಿಂದುವಿನಲ್ಲೆ ಬಲಕ್ಕೊಂದು ಕೋಣೆ. ಅದರಲ್ಲೇ ಹುಡುಗಿಯರ ಜಂಟಿ ಬಿಡಾರ. ಸಿಂಗಾರವಿಲ್ಲದೆ, ಮೇಲಿಂದ ಮೇಡಂರ ನಿಖರವಾದ ಬುಲಾವ್ ಬರದೆ ಇವರ್‍ಯಾರೂ ಮೇಲೆ ಹೋಗುವಂತಿಲ್ಲ. ಹುಡುಗಿಯರೆಲ್ಲ ಅಲ್ಲೇ ಚೆಲ್ಲಾಪಿಲ್ಲಿಯಾಗಿ ಕೂತರು. ಒಳಗಿಂದೊಬ್ಬಳು ಕಿವಿ ಮೂಗು ಮೊಂಡಾಗಿದ್ದ ನಾಲ್ಕಾರು ಕಪ್ಪುಗಳನ್ನು ತಂದಳು. ಸಾವಲಿ ಎಲ್ಲದರಲ್ಲೂ ಚಾ ಬಗ್ಗಿಸತೊಡಗಿದಳು. ಮೊದಲ ಗುಟುಕು ಹೀರುತ್ತಿದ್ದಂತೆ ಹುರುಪಿನ ಅಲೆಯೊಂದು ಎಲ್ಲೆಲ್ಲೂ ಉಕ್ಕತೊಡಗಿತು. +`ಇಂದೂ ಮದ್ಯಾಹ್ನ ಮೀನು ಹುರಿದಿದ್ದೆವು. ರಾವುಸ್ ಮೀನು ತಿಂತೀಯಾ’ ಎಂದೊಬ್ಬಳು ಕೇಳಿದಳು. ಬೇಡ ಎಂದ. `ಮರಾಠಿ ಜನರ ಹಾಗೆ ಮೇಲು ಮೇಲಿಂದಲೇ ಯಾಕೆ ಕೇಳ್ತೀ. ಕೊಡು ತಿಂತಾನೆ. ಮನೆಯಲ್ಲಿ ಮಾಡಿದ್ದು ಅವನಿಗೆಲ್ಲಿ ಸಿಗಬೇಕು ಹೇಳು’ ಎಂದಳು ಮತ್ತೊಬ್ಬಳು. ಅದಕ್ಕೆ ಸಾವಲಿ `ವ್ಹಾರೇ ಗರತೀ ಯಾರು ನಿನ್ನ ಗಂಡ ತಂದುಕೊಟ್ಟನಾ ಮೀನು? ಗಂಡ ಬರಲಿಲ್ಲವೇನೇ ಇನ್ನೂ ಆಫೀಸಿನಿಂದಾ?’ ಎಂದು ಛೇಡಿಸಿದಳು. ಅದಕವಳು `ಯಾಕೇ ಸಾವಲೀ, ನಿನ್ನ ಅತ್ತೆಯ ಕತೆ ಏನೇ ಮಾರಾಯ್ತೀ. ಅವಳು ಉಂಡ ಹೊರತು ನೀನು ಉಣ್ಣುವಂತಿಲ್ಲ ಹೌದೇನೇ’ ಎಂದು ಮರು ಛೇಡಿಸಿದಳು. ಉದ್ದನೆಯ ಕೋಲು ಮುಖದ ಯಾಸ್ಮಿನ್-ಪಾಪ ನನ್ನ ಗಂಡ ದುಬಾಯಿಯಿಂದ ಈಗಷ್ಟೇ ಬಂದಿದ್ದಾನೆ ನೋಡೆ’ ಎಂದು ಇಂದ್ರನೀಲನ ಗದ್ದದ ಮೇಲೆ ಕೈಬೆರಳಾಡಿಸಿದಳು. ಕಚಗುಳಿ ಆದಂತೆ ಇಂದ್ರನೀಲ ಕತ್ತು ಮಡಿಸಿ ಅಲ್ಲಾಡಿಸಿ-`ಸಾಕು ಸಾಕು ನಿಮ್ಮ ನಖರಾ. ಕೊಡಿ ನನ್ನ ಫ್ಲಾಸ್ಕು’ ಎಂದು ಎದ್ದು ನಿಂತ. `ಏ ಗಂಡಾ, ನನಗೆ ಟೂ ಇನ್ ವನ್ ತರಲಿಲ್ಲವೇನೋ…. ಚೈನಾ ಸಿಲ್ಕ್ ತರಲಿಲ್ಲವೇನೋ’ ಎಂದು ಸಾವಲಿ ಈಗ ಬೆನ್ನು ಬಿದ್ದಳು. ಚೂಟಿ ಪದ್ಮಿನಿ `ಸೀರೆ ಗೀರೆ ಬೇಡಾ, ನನಗೆ ಫಾರೆನ್ ಚಡ್ಡಿ ಬೇಕು. ಅದರಲ್ಲಿ ಕಸೂತಿ ಹೂ ಎಲ್ಲಾ ಇರ್ತದೆ. ಕುಣೀವಾಗ ನಾನು ಹೀಗೆ ಘಾಗ್ರಾ ಮೇಲೆಳೆದು. ಆ ಹೂವನ್ನು ಛಕ್ಕಂತ ತೋರಿಸ್ತೀನಿ’ ಎಂದು ತನ್ನ ಘಾಗ್ರಾವನ್ನು ಮೆಲ್ಲಗೆ ಸ್ಲೋ ಮೋಶನ್‍ನಲ್ಲಿ ಎಂಬಂತೆ ಮೇಲೇರಿಸತೊಡಗಿದಳು. ಇಂದ್ರನೀಲ `ಬಾಪ್‍ರೇ’ ಎಂದು ಕೂಗಿ ಫ್ಲಾಸ್ಕನ್ನು ಎತ್ತಿಕೊಂಡು ಹೊರಗೋಡಿದ. +ಎಲ್ಲರೂ ಖುಷಿಯಿಂದ ನಕ್ಕರು. ಸಾವಲಿ `ಚಾಯ್‍ವಾಲಾನ ಹತ್ತಿರ ಮತ್ತೆ ತುಂಬಿಸಿಕೊಂಡು ಹೋಗೋ ನಮ್ಮ ಲೆಕ್ಕಕ್ಕೆ. ದುಡ್ಡು ಕೊಡಬೇಡಾ….’ ಎಂದು ಕೂಗಿದಳು. ಇಂದ್ರನೀಲ ವಿಧೇಯನಂತೆ ಮತ್ತೆ ಚಾ ತುಂಬಿಸಿಕೊಂಡ. ಚಾಯ್‍ವಾಲಾ ನಗುತ್ತ `ಹರಾಮಿ ಹುಡುಗೀರು ಹಣ ಅವರ ಹತ್ರ ಇಸ್ಕೋತೇನೆ ನೀನು ಹೋಗು’ ಎಂದ. ಇಂದ್ರನೀಲ ತಣ್ಣನೆಯ ಗಾಳಿಯಲ್ಲಿ ಬಿಸಿ ಫ್ಲಾಸ್ಕನ್ನು ಎದೆಗೊತ್ತಿಕೊಂಡು ಒಪೆರಾ ಹೌಸ್‍ನೆಡೆಗೆ ನಡೆದ. +ಫ್ಲಾಸ್ಕಿನಿಂದ ಅವನಿಗೆ, ಸಾವಲಿ ಮತ್ತು ಸಖಿಯರ ದನಿಗಳು ಕೇಳಿಸತೊಡಗಿದವು. ಮಕ್ಕಳು ಮನೆ ಆಟ ಆಡುವಂತೆ ಅವರು ಅವರದೇ ರೀತಿಯಲ್ಲಿ ಆಡಿದ ಸುಳ್ಳು ಸಂಸಾರದ ಆಟದ ಸ್ವರಗಳು ಬಿಸಿಬಿಸಿ ಇದ್ದವು. ಅದೆಲ್ಲವೂ ಈ ಫ್ಲಾಸ್ಕಿನಲ್ಲಿದೆ. ಚನಾವಾಲಾನ ಪುಟ್ಟ ಅಗ್ಗಿಷ್ಟಿಕೆ, ಚಾಯ್‍ವಾಲಾನ ಸ್ಟೋವಿನ ಸದ್ದಿನ ಹಿನ್ನೆಲೆಯ ನರೆಗೂದಲ ನಗು, ಬಬನ್‍ನ ಇಸ್ತ್ರಿಯ ಕೆಂಡ-ಎಲ್ಲವೂ ಇದರಲ್ಲಿದೆ. ಇದನ್ನು ಬೇಗ ಬೇಗ ಒಪೆರಾ ಹೌಸ್‍ನ ನೀರವಕ್ಕೆ ರವಾನಿಸಬೇಕು ಎಂಬಂಥ ಅವಸರದಲ್ಲೇ ಓಡುತ್ತ ಗೇಟು ತಳ್ಳಿ ಒಣ ಕಾರಂಜಿಯ ಮಬು ನವಿಲುಗಳನ್ನು ದಾಟಿ, ಧಪ ಧಪ ಮುಖ್ಯ ಪಾವಟಿಗಳನ್ನು ಏರುತ್ತ ಬಾಲ್ಕನಿಯನ್ನು ಜಗುಲಿಯನ್ನು ತಲುಪಿದ. +ನೋಡಿದರೆ. ತಮ್ಮ ಆಟ ಮುಗಿಸಿ ಮಗನ್‍ಲಾಲ ಮತ್ತು ಭಾಲೇಕರ ಅದಾಗಲೇ ಉರುಳಿ ನಿದ್ದೆಯಲ್ಲಿದ್ದರು. +ಅವರು ಈಗಷ್ಟೇ ಮಲಗಿರಬಹುದು ಎಂದು `ಏ…ಏ… ಮಲಗೇ ಬಿಟ್ರೇನ್ರೋ…. ಗರಂ ಗರಂ…. ಚಾಯ್ ಬಂತು….ಏಳಿ….ಏಳಿ….’ ಎಂದು ಮೆಲ್ಲನೆ ಉಸುರಿ ನೋಡಿದ. ಇಲ್ಲ ಅವರ ಮೈಮೇಲೆ ಇಡೀ ಲೋಕಲ್ ರೈಲು ಹಾದು ಹೋದರೂ ಏಳಲಾರದಷ್ಟು ಆಳವಾದ ನಿದ್ರೆಯಲ್ಲಿದ್ದರು. +ಮಗನ್‍ಲಾಲನ ಒಂದು ಕಾಲಂತೂ ತಾನೇ ಅದುರಿಕೊಳ್ಳುತ್ತಿತ್ತು. ಪಾಪ, ಅವರೇ ತರ ಹೇಳಿದ್ದು. ಅವರಿಗಾಗೇ ತಂದದ್ದು. ಕುಡಿಯದೇ ಮಲಗಿಬಿಟ್ಟರಲ್ಲ. ಇನ್ನು ನಾಳೆ ತನಕ ಇದು ಹಾಳಾಗುತ್ತದೆ ಎಂದು ಅವರನ್ನು ಅಲುಗಿಸಲು ಮುಂದಾದ. ಕೈ ಮತ್ತೆ ಹಿಂಜರಿಯಿತು. ಪಾಪ ತುಂಬಾ ದಣಿದಿದ್ದಾರೆ. ಮಗನ್‍ಲಾಲನಂತೂ ಇಡೀ ದಿನ ಕತ್ತೆಯ ಹಾಗೆ ದುಡಿಯುತ್ತಾನೆ. ಕಳೆದ ವಾರದಿಂದಂತೂ ಎಂತೆಂಥದ್ದೋ ಉದ್ದದ ಕೋಲು ಕಸಬರಿಗೆ ತಂದು ಏಣಿ ತಂದು, ವೇಳೆ ಸಿಕ್ಕಾಗಲೆಲ್ಲಾ ಇಡೀ ಒಪೇರಾ ಹೌಸಿನ ಫ್ಯಾನುಗಳನ್ನು, ಹಳೇಕಾಲದ ವರ್ಣ ರಂಜಿತ ತೂಗು ದೀಪಗಳನ್ನು ಸಾಫು ಮಾಡುತ್ತಿದ್ದಾನೆ. +`ಸಿನಿಮಾ ನೋಡಿದವರೆಲ್ಲ ತಮ್ಮ ತಮ್ಮ ಮನೇಲಿ ಹೋಗಿ ಮಜಾ ಮಾಡ್ಕೊಂಡಿದ್ದಾರೆ. ಸಿನಿಮಾದವರೂ ಮಜಾ ಮಾಡ್ಕೊಂಡಿದಾರೆ….. ನೀನ್ಯಾಕೆ ಒದ್ದಾಡ್ತೀ? ಸಾಕು ಬಾ’ ಎಂದರೆ `ಛೆ…. ನಮ್ಮ ಮನೆಯಪ್ಪಾ ಇದು. ಇದನ್ನು ನಾವು ಚೆನ್ನಾಗಿಡದೆ ಇನ್ಯಾರು ಚೆನ್ನಾಗಿಡಬೇಕು. ಅಮಿತಾಬಚ್ಚನ್ ಬರ್‍ತಾನಾ ಈ ಬುರುಡೆ ಉಜ್ಜೋಕೆ? ಆಂ?’ ಎಂದು ಜಬರಿಸಿ, ತುಟಿಯನ್ನು ವಾರೆ ಮಾಡಿ ಕಚ್ಚಿ ಹಿಡಿದು ತನ್ಮಯನಾಗಿ ಹಳೇ ಕಾಲದ ಕುಸುರಿ ಕಾಜಿನ ದೀಪದ ಬುರುಡೆಗಳನ್ನು ಉಜ್ಜುತ್ತಲೇ ಇರುತ್ತಾನೆ. ಭಾಲೇಕರನೋ ಸ್ವತಃ ಬಡಿಗತನವೂ ಬರುತ್ತಿದ್ದರಿಂದ ಮುಂಜಾನೆಯಿಂದ ಮಧ್ಯಾಹ್ನದ ಶೋ ಶುರುವಾಗೋ ತನಕ, ಮೂಳೆ, ಸುತ್ತಿಗೆ, ಕರಗಸ, ಪ್ಲಾಸ್ಟಿಕ್ ವಸ್ತ್ರ, ದಬ್ಬಣ ಇಟ್ಟುಕೊಂಡು ಮುರುಕು ಸೀಟುಗಳನ್ನು ರಿಪೇರಿ ಮಾಡುತ್ತಲೇ ಇರುತ್ತಾನೆ. ಸ್ಪಂಜುಗಳಿಲ್ಲದ ಕುರ್ಚಿಯೊಳಗೆ ಟೇಲರ್ ಅಂಗಡಿಯ ಚಿಂದಿ ಬೂಸಾ ತುರುಕುವ ಐಡಿಯಾ ಅವನದೇ…. ಐಡಿಯಾ ಕೊಟ್ಟ ತಪ್ಪಿಗೆ ಅದನ್ನು ಅನುಷ್ಠಾನಕ್ಕೆ ತರುವ ಪ್ರಾರಬ್ಧವೂ ಅವನದಾಯಿತು. ಇಂದ್ರನೀಲ ಸೇರಿಕೊಳ್ಳುವ ಮೊದಲಿನಿಂದಲೂ ಇದ್ದವರು ಅವರು. ಇಬ್ಬರಿಗೂ ಪ್ರಾಜೆಕ್ಯನ್ ರೂಮಿನ ಉಸ್ತುವಾರಿಯೂ ಗೊತ್ತು. +ಉರುಳಿದ ಮರಗಳಂತೆ ದಣಿದು ಬಿದ್ದಿರುವ ಇಬ್ಬರನ್ನೂ ಎಬ್ಬಿಸುವುದು ನಿರ್ದಯ ಅನಿಸಿದರೂ ಅವರ ಹಂಬಲ ಈಡೇರಿಸದಿರುವುದು ಇನ್ನೂ ಕಟುವಾಗಬಹುದು ಅನಿಸಿ `ಚಾಯ್ ಚಾಯ್ ಗರ್ಮಾ ಗರಂ ಚಾಯ್’ ಎಂದು ಇಂದ್ರನೀಲ ಒಮ್ಮೆಗೇ ಕೂಗಿಕೊಂಡ. ಧಡಕ್ಕನೇ ಇಬ್ಬರೂ ಎದ್ದು ಕೂತರು. ನಿದ್ದೆ ಮತ್ತು ಎಚ್ಚರದ ನಡುವಿನ ಒಂದು ಬಗೆಯ ಪೆದ್ದು ನಗುವನ್ನು ಕೊಟ್ಟವರೇ ಬೆಳಗಾಗಿ ಹೋಯಿತು. ತಮ್ಮ ತಮ್ಮ ಕೆಲಸಕ್ಕೆ ತಡವಾಗಿ ಹೋಯಿತು-ಎಂಬಂತೆ ಭಯದಲ್ಲಿ `ಛೆ…ಛೆ….ತಡವಾಗಿ ಹೋಯ್ತು’ ಎಂದು ಎದ್ದು ನಿಂತು ಹಾಸಿಗೆ ಮಡಿಸತೊಡಗಿದರು. ಇಂದ್ರನೀಲ `ಏ…ಏ…ಈಗಿನ್ನೂ ಎರಡೂವರೆ, ಇನ್ನೂ ನಾಲ್ಕು ತಾಸು ಮಲಗೋದಿದೆ’ ಎಂದದ್ದೇ ಕುಸಿದು ಕೂತರು. ಕೌಂಟರಿನಿಂದ ಎರಡು ಗ್ಲಾಸು ತಂದು ಚಹಾ ಸುರಿಯುವತನಕ ವಿಧೇಯ ಬಾಲಕರಂತೆ ಮಂಕು ಕಣ್ಣಿನಲ್ಲಿ ಕಾಯುತ್ತಿದ್ದರು. ಬಿಸಿ ಬಿಸಿ ಚಾ ಕುಡಿದವರೇ `ಕ್ಯಾ ಬಾತ್ ಹೈ’ ಎಂದು ಉದ್ಗರಿಸಿ `ವಾಹ್ ಮಜಾ ಬಂತು’ ಎಂದು ಚಾದರವನ್ನು ಎಳೆದುಕೊಂಡು ಮಲಗಿ ಎರಡೇ ನಿಮಿಷದಲ್ಲಿ ಗೊರಕೆ ಹೊಡೆಯತೊಡಗಿದರು. ಅವರಿಬ್ಬರ ತಲೆಯ ಮೇಲ್ಗಡೆ ಇದ್ದ ಫ್ಲಾಸ್ಕು ಇಬ್ಬರನ್ನೂ ಕಾಯುತ್ತ ಕೂತಂತೆ ಕಾಣುತ್ತಿತ್ತು. +ದೀಪದ ಸಮೀಪ ಹೋಗಿ ಇಂದ್ರನೀಲ ಮತ್ತೊಮ್ಮೆ ವಿಳಾಸದ ಚೀಟಿ ನೋಡಿದ. ಈ ರಾತ್ರಿಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ ಈ ಒಪೇರಾ ಹೌಸಿಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ. ಈ ಇವರ ಗಾಢ ನಿದ್ರೆಗೂ ಆ ವಿಳಾಸಕ್ಕೂ ಸಂಬಂಧವಿಲ್ಲ. ಸಾವಲಿ ಮತ್ತು ಸಖಿಯರ ಬಿಡಾರಕ್ಕೂ ಆ ವಿಳಾಸಕ್ಕೂ ಸಂಬಂಧವಿಲ್ಲ. ಚನಾವಾಲಾನ ಅಗ್ಗಿಷ್ಟಿಕೆಗೂ ಆ ವಿಳಾಸಕ್ಕೂ ಸಂಬಂಧವೇ ಇಲ್ಲ. ಹೌದು ಆ ವಿಳಾಸಕ್ಕೆ ಅರ್ಥ ಬರಬಹುದಾದದ್ದು ಹಗಲಿನಲ್ಲಿ ಮಾತ್ರ, ಹಗಲಿನಲ್ಲಿ ಅಂಗಡಿಗಳು, ಬ್ಯಾಂಕುಗಳು ತಮ್ಮ ಷಟರ್‍ಗಳನ್ನು ಎತ್ತಿದಾಗ, ಜನ ಇಸ್ತ್ರಿ ಉಡುಪುಗಳನ್ನು ಹಾಕಿ ಸಂಚರಿಸಲು ತೊಡಗಿದಾಗ ಆ ವಿಳಾಸಕ್ಕೆ ಜೀವ ಬರುತ್ತದೆ. ಅದು ಹೊಸ ಜಾಗದಲ್ಲಿ ಇರುತ್ತದೆ. ಬೇರೆ ಮೂಲೆಯಲ್ಲಿ ಇರುತ್ತದೆ. ಬಾಗಿಲು ತೆರೆದವರು `ಏನಾಗಬೇಕಿತ್ತು?’ ಎಂಬ ಕಣ್ಣಿನಿಂದ ನೋಡುತ್ತಾರೆ. ಥ್ಯಾಂಕ್ಯೂ ಅನ್ನುತ್ತಾರೆ. ಎಲ್ಲಾ ಹಗಲಿನಲ್ಲಿ. ಹೌದು ಈಗ ಎಲ್ಲಿಯೂ ಒಯ್ಯಲಾಗದು ಇದನ್ನು. ಈಗ ಈ ಫ್ಲಾಸ್ಕೂ ಇಲ್ಲೇ ಇರಬೇಕು. ಈ ಇಡೀ ಒಪೇರಾ ಹೌಸಿನ ಜೀವದಂತೆ. ಇವರಿಬ್ಬರ ನಿದ್ರೆಯನ್ನು ಕಾಯುತ್ತ. ಈ ಚಿತ್ತಾರದ ಹಳೆ ಕಟ್ಟಿಗೆಯ ಉಪ್ಪರಿಗೆಗಳ ಜತೆ ಮಾತನಾಡುತ್ತ. ಹರಿದ ವಿಶಾಲ ಬೆಳ್ಳಿ ಪರದೆಯನ್ನು ಹೊಲಿಯುತ್ತ, ಅದರ ತೇಪೆಗಳನ್ನು ಮರೆಸುತ್ತ, ಸಾವಲಿಯ ಕರಗಿದ ಕಾಡಿಗೆಯ ಗೆರೆಗಳನ್ನು ಸರಿಪಡಿಸುತ್ತ, ಅಗ್ಗಿಷ್ಠಿಕೆಯ ಗಡಿಗೆಗೆ ಉಸಿರನ್ನೂದುತ್ತ…. +ಕೂತಲ್ಲೇ ಒರಗಿದ ಇಂದ್ರನೀಲ ಕಣ್ತೆರೆದಾಗ ಬೆಚ್ಚಿಬಿದ್ದ, ಉರಿಯುವ ಹೊಸ ಹಗಲೊಂದು ಎಲ್ಲ ಕಿಟಿಕಿಗಳನ್ನು ಸೀಳಿ ಎರಗಿ ವ್ಯಗ್ರ ಚಿರತೆಯಂತೆ ಖಾಲಿ ಥೇಟರಿನಲ್ಲಿ ಓಡಾಡುತ್ತಿತ್ತು. ಎಲ್ಲೂ ಯಾರೂ ಇರಲಿಲ್ಲ. ಪ್ಲಾಸ್ಕು ನಿಸ್ತೇಜವಾಗಿ ಬಿಸಿಲು ಕೋಲಿನಲ್ಲಿ ಮೀಯುತ್ತಿತ್ತು. ಅದನ್ನೆತ್ತಿಕೊಂಡು ಪ್ರಾಂಗಣಕ್ಕೆ ಬಂದ. ಅಲ್ಲಿ ತುಂಬ ಜನ ಸೇರಿದ್ದರು. ಮಗನ್‍ಭಾಯಿ ಏದುಸಿರಿನಲ್ಲಿ ಏನನ್ನೋ ಕೂಗಿ ಹೇಳುತ್ತಿದ್ದ. ಅವನು ವಿಚಿತ್ರವಾಗಿ ಅಳುತ್ತಿರುವಂತೆಯೂ ಭಾಸವಾಗುತ್ತಿತ್ತು. ಭಾಲೇಕರ ಇತ್ತ ಓಡಿ ಬಂದವನೇ `ಇಂದೂ, ಸರ್ವನಾಶವಾಯಿತು. ಒಪೇರಾ ಹೌಸ್ ಈವತ್ತಿನಿಂದ ಮುಚ್ಚುತ್ತಿದ್ದಾರಂತೆ. ಮುಗೀತು. ಗಂಟು ಕಟ್ಟು ಇನ್ನು. ಗೇಟಿಗೆ ಬೀಗ ಹಾಕಿದ್ದಾರೆ. ಇಲ್ಲ ಇದನ್ನು ಕೆಡವಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡ್ತಾ ಇಲ್ಲ. ಏಕೆಂದರೆ ಇದು ಐತಿಹಾಸಿಕ ವಾಸ್ತು ಶಿಲ್ಪದ ಕಟ್ಟಡವಂತೆ, ಸ್ಮಾರಕವಂತೆ, ಇದನ್ನು ಹೀಗೆ ಮಾಡ್ತಾರಂತೆ. ನಾವೆಲ್ಲಿ ಹೋಗೋದೋ….. ಈವತ್ತಿನಿಂದ’ ಎಂದು ಇಂದ್ರನೀಲ ಕೊರಳಿಗೆ ಜೋತುಬಿದ್ದು ಬಿಕ್ಕತೊಡಗಿದ. +ಹೊಸದೊಂದು ಹಗಲುಗನಸಿನಂಥ ಈ ಕ್ಷಣಗಳಿಂದ ತನಗೇನೂ ಆಘಾತವೇ ಆಗುತ್ತಿಲ್ಲವಲ್ಲ ಎಂದು ಇಂದ್ರನೀಲ ಬೆಚ್ಚಿಬಿದ್ದ. ಏರುತ್ತಿರುವ ಬಿಸಿಲಲ್ಲಿ ಎಲ್ಲರೂ ಹಣ್ಣು ಮುದುಕರಂತೆ ಕಾಣುತ್ತಿದ್ದರು. ಕಾರಂಜಿಯ ನವಿಲು ವಿಕಾರವಾಗಿತ್ತು. ಅದರ ಕಣ್ಣಿನ ಜಾಗದಲ್ಲಿದ್ದ ಗಾಜಿನ ಗೋಲಿ ಚೆಕ್ಕೆ ಎದ್ದು ಒಡೆದುಹೋಗಿತ್ತು. ನಿನ್ನೆ ತನಕ ನಡೀತಿದ್ದ ಸಿನಿಮಾದ ಪೋಸ್ಟರುಗಳಲ್ಲಿಯ ಚಿತ್ರಗಳೆಲ್ಲ ಇಂದಿನಿಂದ ಮುಕ್ತಗೊಂಡ ಖುಷಿಯಲ್ಲಿದ್ದಂತೆ ತೋರುತ್ತಿದ್ದವು. ಇಬ್ಬರು ಪೋಲೀಸರು ಬೀಗ ಹಾಕಿದ್ದ ಗೇಟಿನ ಎದುರು ಅಂಗೈಯಲ್ಲಿ ತಂಬಾಕು ಅರೆಯುತ್ತ ನಿಂತಿದ್ದರು. ಮಗನ್‍ಭಾಯಿ ಅಲ್ಲಿಂದಲೇ `ಇಂದೂ…..ಹೋಗಿ ಗರ್ಮಾಗರಂ ಚಾಯ್ ತಗೊಂಬಾ. ನಮ್ಮ ಬರ್ಬಾದಿಯ ಖುಷೀಲಿ ಎಲ್ರೂ ಒಟ್ಟಾಗಿ ಕುಡಿಯೋಣ’ ಎಂದು ಸಿಟ್ಟಿನಿಂದ ಚೀರಿದ. +ಇಂದ್ರನೀಲ ಒಪೇರಾ ಹೌಸಿನ ಎಡಭಾಗದ ಲೋಹದ ಸುರುಳಿ ಏಣಿಯ ಪಕ್ಕದ ಕಿರುಬಾಗಿಲಿನತ್ತ ನಡೆಯುತ್ತ- ಭಾಲೇಕರನಿಗೆ `ಬೇಗ ಬಂದೆ’ ಎಂದು ಬಗ್ಗಿ ಹೊರಬಂದು ಹಗಲಿನ ಎದೆಯ ಮೇಲೆ ನಡೆಯತೊಡಗಿದ. ಹಗಲಲ್ಲಿ ವಿಳಾಸ ತಪ್ಪಲಿಲ್ಲ. ಗಂಗಾ ಜಮುನಾ ಅವಳಿ ಥೇಟರುಗಳ ಎದುರಿನ ಸೋನಾವಾಲಾ ಬಿಲ್ಡಿಂಗ್‍ನ ಒಂದು ಕೋಣೆಯ ವಸಾಹತುಗಳಲ್ಲಿ ಒಂದಾದ ಡಿ ಐವತ್ತೇಳು ಬಾಗಿಲು ತೆರೆದುಕೊಂಡಿತ್ತು. ಇರುವ ಹತ್ತು ಚದುರಡಿಯಲ್ಲೇ ಒಂದು ಮಂಚ, ಟೀಪಾಯಿ, ಮೂಲೆಯಲ್ಲಿ ಹೊಲಿಗೆ ಯಂತ್ರ, ಎರಡು ಕಬ್ಬಿಣದ ಕುರ್ಚಿ. ಒಂದು ಮಡಿಸಿಟ್ಟ ಆರಾಮ ಕುರ್ಚಿ, ಕಪಾಟು, ಅಡಿಗೆ ಕಟ್ಟೆ, ಡ್ರಮ್ಮುಗಳ ನಡುವೆ ಕಣ್ಣು ಸಣ್ಣ ಮಾಡಿಕೊಂಡು ಅಕ್ಕಿ ಆರಿಸುತ್ತಿದ್ದ ಹಣ್ಣುಗೂದಲ ಮಹಿಳೆ ಎದ್ದುನಿಂತಳು. +ಫ್ಲಾಸ್ಕು ಹಿಡಿದು ನಿಂತ ಇಂದ್ರನೀಲನನ್ನು ನೋಡಿದವಳೇ…. `ಬಾ ಬಾ ಆನಂದ ಅಲ್ವೇನೋ ನೀನು… ಪುಟಾಣಿ ಆಗಿದ್ದಾಗ ನೋಡಿದ್ದೆ. ನಮ್ಮ ಪಕ್ಕದಲ್ಲೇ ಇರ್ತಿದ್ರಿ ನೀವು ಆಗ. ಬಾ ಬಾ ಕುತುಕೋ…. ಯಾಕಪ್ಪಾ ಥರ್ಮಾಸು ವಾಪಸ್ ತಗೊಂಬಂದೆ. ನಿನ್ನ ತಾಯಿಗೆ ನನ್ನ ಮೇಲೆ ಇನ್ನೂ ಬೇಜಾರಿದೆಯಾ…. ನೋಡು ನೋಡು… ಕೂತುಕೋ ನನಗೆಲ್ಲಾ ತಿಳೀತದೆ. ಅರ್ಥ ಮಾಡ್ಕೊಳ್ತೀ ನೀನು….ನನ್ನ ಪತಿ ನೀನು ಅವರನ್ನ ದಯಾ ಕಾಕಾ ಅಂತ ಕರೀತಿದ್ದೆ ದಯಾ ಕಾಕಾ ಖಾಯಿಲೆ ಬಿದ್ದಿದ್ದಾಗ ಆಸ್ಪತ್ರೇಲಿ ತುಂಬಾ ದಿನ ಇದ್ದರು. ಆಗಲೂ ಹೀಗೇ ಕಷ್ಟಾನೇ ಇತ್ತು. ಹಾಲು ಗಂಜಿ ತೆಗೆದುಕೊಂಡು ಆಸ್ಪತ್ರೇಗೆ ಹೋಗೋದಕ್ಕೆ ನನ್ನ ಹತ್ರ ಥರ್ಮಾಸು ಇರ್ಲಿಲ್ಲಾ. ನಿನ್ನ ಅಮ್ಮ, ಕುಂದಾತಾಯಿ ಅಂತ ಕರೆಯೋದು ನಾನು ಅವಳನ್ನ- ತಕ್ಷಣ ನಿನ್ನ ಮನೇಲಿದ್ದ ಥರ್ಮಾಸನ್ನು ಆಮೇಲೆ ವಾಪಾಸು ಕೊಡಿ ಅಂತ ದೊಡ್ಡ ಮನಸು ಮಾಡಿ ಕೊಟ್ರು. ದಯಾ ಕಾಕಾ ಅಸ್ಪತ್ರೆಯಿಂದ ಮನೆಗೆ ಬರಲೇ ಇಲ್ಲ. ಖೊಟ್ಟಿ ನಶೀಬು ನನ್ನದು. ಅಂಬ್ಯುಲೆನ್ಸ್‍ನಲ್ಲೇ ತಂದು ಮುಖ ತೋರಿಸಿ ತಗೊಂಡು ಹೋಗಿಬಿಟ್ರು. ಒಬ್ಬಳೇ ಏನೇನು ಮಾಡಲಿ ನಾನು. ನಿಮ್ಮ ಥರ್ಮಾಸು ಮರಳಿಸಬೇಕಿತ್ತು ಆಗಲಿಲ್ಲ. ಸೂತಕದ ಮನೆಯಿಂದ ಥರ್ಮಾಸು ತಿರುಗಿ ಕಳಿಸಿದ್ರೆ ನಿಮ್ಮ ಮನೇಲಿ ತಗೊಂಡಾರೋ ಇಲ್ವೋ ಅಂತ ಹಿಂಜರಿಕೆ ಆಯ್ತು. ಕುಂದಾತಾಯಿ ಅರ್ಥ ಮಾಡಿಕೊಳ್ತಾಳೆ ಅಂತ ಸುಮ್ಮನಿದ್ದೆ. ಆಮೇಲೆ ಎಷ್ಟೋ ಸಲ ಕುಂದಾತಾಯಿ ಇಲ್ಲಿಗೆ ಬಂದು ಹೋದಳು. ಆದರೆ ಅದರ ಪ್ರಸ್ತಾಪ ಮಾಡಲಿಕ್ಕೆ ಮನಸ್ಸೇ ಬರಲಿಲ್ಲ. ಆಮೇಲೆ ನೀವು ಮನೆ ಬದಲಾಯಿಸಿ ಹೋಗಿಬಿಟ್ರಿ. ಪತ್ತೇನೇ ಉಳಿಲಿಲ್ಲ. ಆದರೆ ಆಮೇಲೆ ಯಾರೋ ಹೇಳಿದರು. ಕುಂದಾತಾಯಿ ಇಲ್ಲೆಲ್ಲಾ `ನಂದಾಬಾಯಿಗೆ ಕಷ್ಟಕ್ಕಾಗಲಿ ಅಂತ ಕೊಟ್ಟ ಥರ್ಮಾಸನ್ನು ತಾನೇ ಇಟ್ಟುಕೊಂಡುಬಿಟ್ಟಳು- ಎಂದು ಹೇಳುತ್ತಿದ್ದಳಂತೆ. ಕೇಳಿ ಬೇಜಾರಾಯ್ತು. ನೀವು ಎಲ್ಲಿದ್ದೀರಂತಲೇ ಗೊತ್ತಾಗಿರಲಿಲ್ಲ. ನಿನ್ನೆ ಪರುಳೇಕರ್ ಅಕಸ್ಮಿಕ ಸಿಕ್ಕಿದವರು ಹೇಳಿದರು. ಕುಂದಾತಾಯಿಗೆ ಜೋರು ಹುಷಾರಿಲ್ಲ. ಭಾಟಿಯಾ ಆಸ್ಪತ್ರೇಲಿ ಇದಾರೆ ಅಂತ. ಸಂಕಟಾ ಆಗಿ ಹೋಯ್ತು. ಮತ್ತೇನು ಸಹಾಯ ಮಾಡಬಲ್ಲೆ ನಾನು. ಇದು ಆ ಥರ್ಮಾಸಲ್ಲ, ಬೇರೆ ಫ್ಲಾಸ್ಕು. ನನ್ನ ತಂಗಿ ಬಿಟ್ಟು ಹೋಗಿದ್ದು. ದಾರೀಲಿ ಹೋಗುತ್ತಿದ್ದ ಒಬ್ಬ ಸೋದರನಿಗೆ ವಿನಂತಿಸಿಕೊಂಡೆ- ಹೋಗಿ ಭಾಟಿಯಾ ಆಸ್ಪತ್ರೇಲಿ ಕುಂದಾ ಘೋಗ್ರೆ ಅನ್ನೋ ಪೇಶೆಂಟ್‍ಗೆ ಕೊಡು ಅಂತ… ಇಷ್ಟೇ….ಆನಂದಾ….ನಂದೇನು ದುಷ್ಟ ಇರಾದೆ ಇಲ್ಲೊ ಇದರಲ್ಲಿ….ಯಾಕೆ ಪರತ್ ತಗೊಂಡು ಬಂದ್ಯೋ…. ಹೇಗಿದಾಳೋ ಕುಂದಾತಾಯಿ?- ಎಂದು ಉಕ್ಕಿ ಉಕ್ಕಿ ಪೇಲವವಾಗಿ ಅಳತೊಡಗಿದಳು. +`ಇಂದಿನಿಂದ ಎಲ್ಲಾ ಆಟಗಳು ರದ್ದಾಗಿವೆ’ ಎಂದು ಬೋರ್ಡು ಬರೆದು ಒಪೆರಾ ಹೌಸಿನ ಕಟಾಂಜನ ಉದ್ದಾಕ್ಕೂ ಹತ್ತಾರು ಪೋಸ್ಟರುಗಳನ್ನು ಹಚ್ಚಿ ಅರ್ಥವಾಗದ ಮೌನದಲ್ಲಿ ಸುಸ್ತಾಗಿ ಕೂತಿದ್ದ ಮಗನ್‍ಭಾಯಿ, ಫ್ಲಾಸ್ಕನ್ನು ಹಿಡಿದುಕೊಂಡು ಕಿರು ಗೇಟಿನಲ್ಲಿ ಬಗ್ಗಿ ಒಳಗೆ ಕಾಲಿಡುತ್ತಿದ್ದ ಇಂದ್ರನೀಲನನ್ನು ನೋಡಿದ್ದೇ `ಹೇ….ಚಾಯ್ ಬಂತೂ’ ಎಂದು ಕೂಗಿದ. ತನ್ನನ್ನು ಸಮೀಪಿಸುತ್ತಿದ್ದವರನ್ನು ಕಿಂಚಿತ್ತೂ ಗಮನಿಸದೆ, ಉಕ್ಕಿ ಬರುವ ಉಮ್ಮಳವನ್ನು ಕಷ್ಟದಿಂದ ತಡೆದುಕೊಳ್ಳುತ್ತ, ಇಂದ್ರನೀಲ ಫ್ಲಾಸ್ಕನ್ನು ಭಾಲೇಕರನ ಕೈಗೆ ಕೊಟ್ಟು, ಮೆಟ್ಟಿಲೇರಿ ಪಾವಟಿಗೆಗಳ ಹಿಂದಿನ ತನ್ನ ಮೂಲೆಗೆ ಹೋಗಿ ಕೂತುಕೊಂಡ. ಆಗಷ್ಟೇ ಅಲ್ಲಿ ಬಂದಂತಿದ್ದ ಬಿಸಿಲ ಕೋಲೊಂದು ಅವನನ್ನೇ ನೋಡುತ್ತಿತ್ತು. ಇಡೀ ಒಪೆರಾ ಹೌಸನ್ನೇ ತಬ್ಬಿ ಮುದ್ದಿಸುತ್ತಿದ್ದ ಬಿಸಿಲು ತನ್ನನ್ನೂ ಸಂತೈಸಲು ಒಳತನಕ ಬಂತಲ್ಲಾ ಅನಿಸಿ ಅದನ್ನೇ ನಿಟ್ಟಿಸುತ್ತ ಬೆರಳುಗಳಿಂದ ಮೆಲ್ಲಗೆ ಸೋಕಿದ ಒಪೆರಾ ಹೌಸಿನ ಒಳಗೆ ಅವಿತುಕೊಂಡಿದ್ದ ರಾತ್ರಿಯೊಂದು ಆ ಬಿಸಿಲಕೋಲಿನಲ್ಲಿ ಮೆಲ್ಲಗೆ ಹಗಲಿನಲ್ಲಿ ಬೆರೆಯತೊಡಗಿತು. +***** +ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ […] +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_563.txt b/Kannada Sahitya/article_563.txt new file mode 100644 index 0000000000000000000000000000000000000000..991ff0b9372705b993aa3024b634b02d1d1ee31e --- /dev/null +++ b/Kannada Sahitya/article_563.txt @@ -0,0 +1,25 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪದ್ಯ ಗಿದ್ಯ ಎಂದು ಮೈ ಮರೆತು +ಸ್ಕೂಟರ್ ಕೊಳ್ಳಲಿಲ್ಲ, +ಸ್ವಂತ ಮನೆ ಮಾಡಿಕೊಳ್ಳಲಿಲ್ಲ, +ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ +ಎಂದೇನೇನೋ ಗೊಣಗುತ್ತಿದ್ದವಳು – +ಸರ್ಕಸ್ಸಿನ ಒಂಟೆಯ ಬಳಿ +ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ +ಕುರುಡು ಹಸುಳೆಯ ಕಂಡು +ಹಠಾತ್ತನೆ ತನ್ನ ಶ್ರೀಮಂತಿಕೆಯ ಅರಿವಾದಂತೆ +ಮಗನ ತಲೆ ನೇವರಿಸಿ +ತೆಪ್ಪಗಾದಳು. +***** +ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. ***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_564.txt b/Kannada Sahitya/article_564.txt new file mode 100644 index 0000000000000000000000000000000000000000..161ec065b322be65a6dfcd62aebefa260ae27d5c --- /dev/null +++ b/Kannada Sahitya/article_564.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಳಗನಾಥರು ಬೆಚ್ಚಿಬಿದ್ದರು! +ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ ಸ್ವಸ್ಥ ನಿಂತ ಗುಡ್ಡ, ಅದರ ತುತ್ತತುದಿಯಲ್ಲಿ ಯಾರ ಹಂಗಿಲ್ಲದೆ ಬೆಳೆದ ತಾಳೆಮರ, ಅದರ ಬುಡದಲ್ಲಿ ಚೌಡೇಶ್ವರಿಯ ಗುಡಿ, ಬೆಟ್ಟದ ತಡಿಯಲ್ಲಿ ನಸುಕಂದುಬಣ್ಣದ ಹೂಮುಡಿದ ರೆಂಜೆ ಮರ, ಅದರ ಬುಡದಲ್ಲಿ ಹರಿಯುತ್ತಿರುವ ಹೆಸರಿಲ್ಲದ ಹಳ್ಳ… ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. +ಮತ್ತೆ ಕನ್ನಡಿ ನೋಡಿಕೊಂಡರು. ಕನ್ನಡಿ ಕಣ್ಣಿಗೆ ಬಿತ್ತು;ಕನ್ನಡಿಯೊಳಗೆ ಗಳಗನಾಥರಿರಲಿಲ್ಲ. ಎಡವನ್ನು ಬಲಮಾಡಿ, ಬಲವನ್ನು ಎಡಮಾಡಿ ತೋರಿಸುವ ಕನ್ನಡಿ ಆವತ್ತು ತನ್ನ ಮುಂದೆ ಗಳಗನಾಥರು ನಿಂತೇ ಇಲ್ಲವೇನೋ ಎಂಬಂತೆ ನಿರ್ಲಿಪ್ತವಾಗಿದ್ದೇಕೆ ಅನ್ನುವುದು ಗಳಗನಾಥರನ್ನು ಕಾಡತೊಡಗಿತು. ಕೈಯೆತ್ತಿದ್ದರು, ಹೆಗಲಿಗೆ ಹಾಕಿಕೊಂಡಿದ್ದ ಬೈರಾಸನ್ನು ಕನ್ನಡಿ ಮುಂದೆ ಹಿಡಿದರು, ಒಂದು ಹೆಜ್ಜೆ ಹಿಂದೆ ನಿಂತು ಕನ್ನಡಿಯಲ್ಲಿ ಬೇರೇನಾದರೂ ಕಾಣುತ್ತದಾ ನೋಡಿದರು. +ಗಳಗನಾಥರೊಬ್ಬರನ್ನು ಬಿಟ್ಟು ಕನ್ನಡಿ, ಎಲ್ಲವನ್ನೂ ಪ್ರತಿಫಲಿಸುತ್ತಿತ್ತು. ಬಾಗಿದಾಗ ಹೆಂಚು ಹೊದೆಸಿದ ಮಾಡು, ವಾರೆಯಾಗಿ ನೋಡಿದಾಗ ಮೂಲೆಯಲ್ಲಿದ್ದ ಮಂಚ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಕನ್ನಡಿ ಯಾಕೋ ತನ್ನನ್ನು ಹಿಡಿದಿಡಲು ಹಿಂಜರಿಯುತ್ತಿದೆ ಅನ್ನಿಸಿ ಗಳಗನಾಥರಿಗೆ ಅವಮಾನವಾಯಿತು. +ಅಷ್ಟಕ್ಕೂ ತಾನೇನು ಮಾಡಿದ್ದೇನೆ ಅಂತ ಗಳಗನಾಥರು ಕನ್ನಡಿ ಮುಂದೆ ನಿಂತೇ ಯೋಚಿಸತೊಡಗಿದರು. ಒಳಗೆ ಹೆಂಡತಿ ಅಡುಗೆಯ ಸಿದ್ಧತೆಯಲ್ಲಿದ್ದವಳು ಮೂರನೆಯ ಮಗಳಿಗೆ ದಬದಬ ಬಡಿಯುತ್ತಿದ್ದಳು. ಮೊದಲ ಮಗಳು ಕಾಲೇಜಿಗೆ ಹೊರಡಲು ಸಿದ್ಧಳಾಗುತ್ತಾ ಗಳಗನಾಥರು ಕ್ಷೌರ ಮುಗಿಸಿ ಕನ್ನಡಿ ಬಿಟ್ಟೇಳುವುದನ್ನೇ ಕಾಯುತ್ತಿದ್ದಳು. ಗಳಗನಾಥರು ಅನುಮಾನದ ಪ್ರಾಣಿಯಂತೆ ಮತ್ತೆ ಮತ್ತೆ ಕನ್ನಡಿ ನೋಡುವುದನ್ನು ನೋಡಿ ಬೇಜಾರಾಗಿ ‘ ಸಾಕು, ಬಾರಪ್ಪಾ, ನಾನು ಕಾಲೇಜಿಗೆ ಹೊರಡಬೇಕು’ ಅನ್ನುತ್ತಾ ಅವರನ್ನು ಪಕ್ಕಕ್ಕೆ ಕರೆದಳು. +ಗಳಗನಾಥರು ಮಗಳು ಮೇಕಪ್ಪು ಮಾಡಿಕೊಳ್ಳುವುದನ್ನು ದೂರ ನಿಂತು ಗಮನಿಸಿದರು. ಅವಳಿಗೆ ಅವಳ ಪ್ರತಿಬಿಂಬ ಕಾಣುತ್ತಿದೆ ಅನ್ನುವುದು ಅವಳ ಭಾವಭಂಗಿಯಿಂದಲೇ ತಿಳಿಯುತ್ತಿತ್ತು. ತುಟಿಯನ್ನು ಅಗಲಿಸಿ ಲಿ?ಸ್ಟಿಕ್ಕು ಮೆತ್ತಿಕೊಂಡು ಆಮೇಲೆ ಎರಡೂ ತುಟಿಯನ್ನು ಒತ್ತಿಕೊಂಡು ತುಟಿಯಾಚೆಗೆ ಸರಿದ ಲಿ?ಸ್ಟಿಕ್ಕನ್ನು ಟವಲಿನ ಚುಂಗಿನಿಂದ ವರೆಸಿಕೊಂಡು ಕಣ್ಣನ್ನು ವಿಕಾರ ಮಾಡಿ ಕಣ್ಕಪ್ಪು ಹಚ್ಚಿಕೊಂಡು ಮುಂಗುರುಳು ತೀಡಿಕೊಳ್ಳುತ್ತಾ ಇದ್ದ ಮಗಳನ್ನು ಕನ್ನಡಿ ಕಣ್ತುಂಬಿಕೊಂಡಿದೆ. ಹಾಗಿದ್ದರೆ ಆಗ ತಾನು ಕನ್ನಡಿ ನೋಡಿದ್ದೇ ಸುಳ್ಳಿರಬೇಕು. ಅದು ತನ್ನನ್ನು ನಿರಾಕರಿಸಿದ್ದೇ ಸುಳ್ಳಿರಬೇಕು. ನೋಡಿಯೇ ಬಿಡೋಣ ಅಂತ ಗಳಗನಾಥರು ಛಂಗನೆ ಕನ್ನಡಿ ಮುಂದೆ ಜಿಗಿದರು. ಅವರು ಜಿಗಿದ ರಭಸಕ್ಕೆ ಕನ್ನಡಿ ಮುಂದೆ ನಿಂತಿದ್ದ ಮಗಳು ಅನಾಮತ್ತಾಗಿ ಪಕ್ಕಕ್ಕೆ ಸರಿದು ಅಪ್ಪನನ್ನು ಗದರಿಕೊಂಡಳು. +ಗಳಗನಾಥರಿಗೆ ಕನ್ನಡಿಯೊಳಗೆ ಗಳಗನಾಥರು ಕಾಣಿಸಲಿಲ್ಲ. +ಅಪ್ಪ ಇವತ್ಯಾಕೆ ಇಷ್ಟು ಹೊತ್ತು ಕನ್ನಡಿ ಮುಂದೆ ನಿಂತಿದ್ದಾರೆ ಅಂತ ಅಚ್ಚರಿಪಡುತ್ತಾ ಮಗಳು ಅಪ್ಪನ ಮುಖ ನೋಡುತ್ತಲೇ ಗಾಬರಿಯಾದಳು. ‘ಇದ್ಯಾಕಪ್ಪಾ ನಿನ್ನ ಮುಖ ಹಾಗಾಗಿದೆ. ರಾತ್ರಿ ನಿದ್ದೆ ಮಾಡಿಲ್ವಾ. ಕಣ್ಣು ನೋಡು, ಎಷ್ಟೊಂದು ಕೆಂಪಗಿದೆ’ ಅಂದಳು. ಗಳಗನಾಥರಿಗೆ ಮತ್ತಷ್ಟು ಗಾಬರಿಯಾಯಿತು. ‘ಯಾಕೇ, ಏನಾಗಿದ್ಯೇ’ ಅಂತ ಕೇಳಿದರು ಗಳಗನಾಥರು. ‘ನಂಗೆ ನೋಡೋಕ್ಕಾಗಲ್ಲ… ನೀವೇ ಒಂದ್ಸಾರಿ ಕನ್ನಡೀಲಿ ಮುಖ ನೋಡ್ಕೊಳ್ಳೀಪ್ಪಾ’ ಎನ್ನುತ್ತಾ ಮಗಳು ಪುಸ್ತಕ ಹಿಡಕೊಂಡು ಬೀದಿಗೆ ಬಿದ್ದಳು. +* +* +* +ಆವತ್ತಿಡೀ ಗಳಗನಾಥರನ್ನು ಕನ್ನಡಿ ಕಾಡಿತು. ಎದುರಿಗೆ ಸಿಕ್ಕವರೆಲ್ಲ ‘ಇದೇನು ಹೀಗಾಗಿಹೋಗಿದ್ದೀರಿ, ಆರೋಗ್ಯ ಸರಿಯಿಲ್ವೇ’ ಅಂತ ಕೇಳಿ ಕೇಳಿ ಸತಾಯಿಸಿದರು. ಹೇಗಾಗಿದ್ದೀನಿ ಅಂತ ನೋಡಿಕೊಳ್ಳಲು ಕನ್ನಡಿ ಮುಂದೆ ನಿಂತರೆ ಕನ್ನಡಿಯಲ್ಲಿ ತನ್ನ ಮುಖ ಮಾತ್ರ ಕಾಣಿಸುತ್ತಿರಲಿಲ್ಲ. ಮನೆಯ ಕನ್ನಡಿಯೊಂದೇ ತನಗೆ ಕೈಕೊಟ್ಟಿರಬೇಕು ಅಂದುಕೊಂಡು ಗಳಗನಾಥರು ತಾನು ಸಾಮಾನ್ಯವಾಗಿ ಹೋಗುವ ಗೋವಿಂದನ ಕ್ಷೌರದಂಗಡಿಗೆ ಹೋದರು. ಗೋವಿಂದ ಅಂಗಡಿ ತುಂಬ ಕನ್ನಡಿಗಳನ್ನು ಇಟ್ಟಿದ್ದ. ಒಂದು ಮುಖವನ್ನು ಹತ್ತಾಗಿ ಇಪ್ಪತ್ತಾಗಿ ತೋರಿಸುವಂತೆ ಅವುಗಳನ್ನು ಜೋಡಿಸಿದ್ದ. +ಕ್ಷೌರದಂಗಡಿಗೆ ಹೋಗುತ್ತಲೆ ಅವರನ್ನು ಕುರ್ಚಿಯಲ್ಲಿ ಕೂರಿಸಿಯೇ ಬಿಟ್ಟ ಗೋವಿಂದ. ಗಳಗನಾಥರು ಮತ್ತೊಮ್ಮೆ ಬೆಚ್ಚಿಬಿದ್ದರು. ಅವರಿಗೆ ಖಾಲಿ ಖುರ್ಚಿ ಕಾಣುತ್ತಿತ್ತೇ ವಿನಃ ಅದರಲ್ಲಿ ಕೂತ ಗಳಗನಾಥರು ಕಾಣಿಸಲಿಲ್ಲ. ತಲೆಯ ಮೇಲ್ಗಡೆ ಗೋವಿಂದನ ಕತ್ತರಿ ಆಡುವ ಸದ್ದು ಕೇಳಿಸುತ್ತಿತ್ತು. ಮೈಮೇಲೆ ಕತ್ತರಿಸಿದ ಕೂದಲು ಬೀಳುತ್ತಿತ್ತು. ಆದರೆ ಕನ್ನಡಿ ಮೌನವಾಗಿತ್ತು. ಕನ್ನಡಿ ತನ್ನ ಮೇಲೆ ಯಾಕೋ ಮುನಿಸಿಕೊಂಡಿದೆ ಅನ್ನಿಸಿ ಗಳಗನಾಥರಿಗೆ ಒಂಥರದ ಭಯ ಕಾಡತೊಡಗಿತು. ಇದ್ದಕ್ಕಿದ್ದ ಹಾಗೆ ತಾನು ನಿಜವಾಗಿಯೂ ಇದ್ದೇನೋ ಇಲ್ಲವೋ ಅನ್ನುವ ಅನುಮಾನ ಕಾಡತೊಡಗಿತು. ತಲೆಬಗ್ಗಿಸಿ ತಮ್ಮ ಕೈಕಾಲುಗಳನ್ನೂ ಹೊಟ್ಟೆಯನ್ನೂ ನೋಡಿಕೊಂಡರು. ಗೋವಿಂದ ತಲೆಯನ್ನು ಹಿಂದಕ್ಕೆ ಹಿಡಿದೆತ್ತಿ ಕತ್ತರಿಸತೊಡಗಿದ. +ಗೋವಿಂದನಿಗೆ ಕಾಸು ಕೊಟ್ಟು ಹೊರಬಂದಾಗ ಗಳಗನಾಥರಿಗೆ ಎಂಥ ಅನಾಥಪ್ರಜ್ಞೆ ಕಾಡತೊಡಗಿತು ಅಂದರೆ ಇಡೀ ಜಗತ್ತಿನಲ್ಲಿ ತಾನು ಯಾರಿಗೂ ಕಾಣಿಸುತ್ತಿಲ್ಲವೇನೋ ಅನ್ನುವ ಅನುಮಾನ ಕಾಡತೊಡಗಿತು. ಇಂಥ ಸಮಸ್ಯೆ ಯಾರಿಗಾದರೂ ಎದುರಾಗಿದೆಯಾ? ಡಾಕ್ಟರ ಹತ್ತಿರ ಹೋದರೆ ಇದಕ್ಕೆ ಔಷಧಿ ಸಿಗಬಹುದಾ? ಇದು ಕಣ್ಣಿನ ದೋಷವೋ ಕನ್ನಡಿಯ ದೋಷವೋ? +ಅದೇ ಹೊತ್ತಿಗೆ ಅವರಿಗೆ ಶಾಸ್ತ್ರಿಗಳು ನೆನಪಾದರು. ಶಾಸ್ತ್ರಿ ಮಹಾ? ಪಂಡಿತರು. ಆಯುರ್ವೇದ ಮತ್ತು ಜ್ಯೋತಿಷ್ಯಶಾಸ್ತ್ರ ಎರಡನ್ನೂ ಬಲ್ಲವರು. ಅವರ ಬಳಿಗೆ ಸ್ನಾನ ಮಾಡದೇ ಹೋಗುವಂತಿರಲಿಲ್ಲ. ಗಳಗನಾಥರು ಓಡೋಡಿ ಮನೆಗೆ ಬಂದು ಸ್ನಾನ ಮುಗಿಸಿದರು. ಸ್ನಾನ ಮಾಡುವ ಹೊತ್ತಿಗೆ ನೀರ ಹಂಡೆಯಲ್ಲಾದರೂ ತನ್ನ ಮುಖ ಕಂಡೀತು ಅಂತ ಹಾರೈಸಿದರು; ಹಂಡೆಯ ನೀರು ಕಂಪಿಸುತ್ತಿತ್ತು. ಅದರೊಳಗೆ ಯಾರ ಮುಖವೂ ಇರಲಿಲ್ಲ. +* +* +* +ಶಾಸ್ತ್ರಿಗಳ ಹತ್ತಿರ ಗಳಗನಾಥರು ತಮ್ಮ ಸಮಸ್ಯೆಯನ್ನೇನೂ ಹೇಳಿಕೊಳ್ಳಲಿಲ್ಲ. ಕನ್ನಡಿಯಲ್ಲಿ ಮುಖ ಕಾಣುವುದಿಲ್ಲ ಅನ್ನುವುದನ್ನು ಹೇಳಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆಗಿನ್ನೂ ಅವರಿಗೆ ಉತ್ತರ ಸಿಕ್ಕಿರಲಿಲ್ಲ. ಹೀಗೆ ತಮ್ಮ ಕೆಮ್ಮು, ಬೆನ್ನು ನೋವುಗಳ ಬಗ್ಗೆ ಮಾತಾಡಿದರು. ಮೊದಲನೆ ಮಗಳಿಗೆ ಯಾವ ಕಡೆಯ ಗಂಡು ಸಿಗಬಹುದು ಅಂತ ವಿಚಾರಿಸಿದರು. +ಕೊನೆಯಲ್ಲಿ ಎದ್ದು ಬರುವಾಗ ಗಳಗನಾಥರು ಕೇಳಿಯೇಬಿಟ್ಟರು.‘ಶಾಸ್ತ್ರಿಗಳೇ. ಮೊನ್ನೆ ನಮ್ಮ ಹಳೆಯ ಪರಿಚಯದ ಒಬ್ಬರು ಸಿಕ್ಕರು. ಅವರದ್ದೊಂದು ವಿಚಿತ್ರ ಸಮಸ್ಯೆ. ಕನ್ನಡಿ ಮುಂದೆ ನಿಂತರೆ ಅವರಿಗೆ ಅವರ ಮುಖ ಕಾಣಿಸೋದಿಲ್ಲವಂತೆ’ ಅಂದರು. +ಶಾಸ್ತ್ರಿಗಳು ಒಂಚೂರೂ ಯೋಚಿಸದೇ ಹೇಳಿದರು; ‘ಆ ಹೊತ್ತಿಗೆ ಅದು ಹಾಗೇ’ ಎನ್ನುತ್ತಾ ಶಾಸ್ತ್ರಿಗಳು ಎದ್ದು ಒಳಗೆ ಹೋದರು. +ಆ ಹೊತ್ತಿಗೆ ಅಂದರೆ ಯಾವ ಹೊತ್ತಿಗೆ? ಸಾಯುವ ಕಾಲಕ್ಕೆ ಎಂದಿರಬಹುದೇ? ಸತ್ತ ಮೇಲೆ ಈ ದೇಹ ಇರುವುದಿಲ್ಲವಂತೆ. ಮನಸ್ಸು ಮಾತ್ರ ಓಡಾಡುತ್ತಾ ಇರುತ್ತದಂತೆ. ಹಾಗಿದ್ದರೆ ತಾನು ಸತ್ತು ಹೋಗಿರಬಹುದೇ? ಹಾಗಿದ್ದರೆ ಬೇರೆಯವರಿಗೆ ಯಾಕೆ ಕಾಣಿಸುತ್ತಿದ್ದೇನೆ? ಅವರ ಪಾಲಿಗೆ ಬದುಕಿ, ತನ್ನ ಪಾಲಿಗೆ ಸತ್ತು ಹೋಗಿದ್ದೇನಾ? +ಹಾಗಾಗಲು ಸಾಧ್ಯವೇ? ಇನ್ನೊಬ್ಬರಿಗಷ್ಟೇ ಯಾರಾದರೂ ಬದುಕಿರುತ್ತಾರಾ? ಹಾಗಿದ್ದರೆ ನನಗಷ್ಟೇ ಬದುಕಿದ್ದು, ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೇನಾ? +ಗಳಗನಾಥರು ಯೋಚಿಸುತ್ತಲೇ ಮನೆಗೆ ಬಂದರು. ಕೊನೆಯ ಬಾರಿಗೆ ಕನ್ನಡಿ ಮುಂದೆ ನಿಂತು ಮುಖ ನೋಡಿಕೊಳ್ಳುತ್ತೇನೆ. ಬಹುಶಃ ಈಗ ಕಾಣಿಸಿದರೂ ಕಾಣಿಸಬಹುದು ಅಂತ ಆಶೆಪಟ್ಟರು. ಅಂಗಳಕ್ಕೆ ಬಂದು ಕಾಲುತೊಳೆದು ಬಾಗಿಲು ತಟ್ಟಿದರು. ಬಾಗಿಲು ತೆರೆದುಕೊಂಡಿತು. +ನೇರವಾಗಿ ಒಳಗೆ ಹೋಗಿ ಕನ್ನಡಿ ಮುಂದೆ ನಿಂತರು. ಕನ್ನಡಿಯೊಳಗೆ ಯಾರೂ ಕಾಣಿಸಲಿಲ್ಲ. ಮತ್ತೆ ಮತ್ತೆ ದಿಟ್ಟಿಸಿನೋಡಿದರೆ ಅದರೊಳಗೆ ನಿಧಾನವಾಗಿ ಹೆಂಡತಿಯ ಮುಖ ಕಾಣಿಸಿತು. +ಗಳಗನಾಥರು ತಿರುಗಿ ನೋಡಿದರು. ಆಗಷ್ಟೇ ಸ್ನಾನಮುಗಿಸಿ ಒದ್ದೆ ಕೂದಲಿಗೊಂದು ಟವ್ ಕಟ್ಟಿಕೊಂಡು ಕುಂಕುಮ ಇಡುತ್ತಾ ಹೆಂಡತಿ ನಿಂತಿದ್ದಳು. ಎದುರಿಗೇ ನಿಂತ ತನ್ನನ್ನು ನೋಡಿದರೂ ನೋಡದ ಹಾಗೆ ಸುಮ್ಮನಿದ್ದವಳನ್ನು ಕಂಡು ಗಳಗನಾಥರಿಗೆ ಗಾಬರಿಯಾಯಿತು. ಏನೋ ಹೇಳಲು ಯತ್ನಿಸಿದರು. ಏನೂ ಹೇಳಲಿಲ್ಲ ಅನ್ನಿಸಿತು. +ಹೆಂಡತಿ ಒದ್ದೆ ಕೂದಲನ್ನು ಬಿಚ್ಚಿ ಹರವಿಕೊಳ್ಳುತ್ತಾ ಮಗಳನ್ನು ಕೇಳಿದಳು; +ಅಪ್ಪ ಎಲ್ಲಿಗೆ ಹೋಗ್ತೀನಿ ಅಂದ್ರು? +ಮಗಳು ಒಬ್ಬಳೇ ಕೂತು ಚೌಕಾಭಾರ ಆಡುತ್ತಿದ್ದವಳು; +‘ನಂಗೊತ್ತಿಲ್ಲ’ ಅಂದಳು. +***** +ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […] +ಇಂದು ಮಾರ್ಚ ಒಂದನೆಯ ತಾರೀಖು.೨೯೦ ರೂಪಾಯಿ-ಕಿಸೆಯಲ್ಲಿ!ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು.ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_565.txt b/Kannada Sahitya/article_565.txt new file mode 100644 index 0000000000000000000000000000000000000000..197a8ebc8c3b0854c1d5d592da66130797ea19e4 --- /dev/null +++ b/Kannada Sahitya/article_565.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ ಬಾಗಿಲಿನಿಂದ ಹತ್ತಿ, ಸುರಿಯುತ್ತಿದ್ದ ಬೆವರನ್ನು ಒರೆಸುತ್ತಾ ಮುಂದೆ ಹೋಗಿ ಖಾಲಿಯಿದ್ದ ಸೀಟಿನಲ್ಲಿ ಕೂತ. “ಮುಂದೆ ಬನ್ರಿ, ಮುಂದೆ ಬನ್ರಿ” ಕೂಗುತ್ತಿದ್ದ ಗೋವಿಂದು. ಒಳ್ಳೇ ಕಸಬುದಾರನ ರೀತಿಯೇ ಆಡುತ್ತಾನಲ್ಲ ಈ ಗೋವಿಂದು ಅನ್ನಿಸಿತ್ತು. ಹೇಳಿ ಕೇಳಿ ಇದು ಕಾಲೇಜಿನ ಬಸ್ಸು. ಉಸಿರುಕಟ್ಟುವಷ್ಟು ಜನ ಯಾವತ್ತೂ ಆ ಬಸ್ಸಿನಲ್ಲಿರುತ್ತಿರಲಿಲ್ಲ. ಆದರೂ ಡ್ರೈವರ್ ಬಾಳಣ್ಣ ಮತ್ತು ಕ್ಲೀನರ್ ಗೋವಿಂದು ತಮ್ಮ ವೃತ್ತಿಪರತೆಯನ್ನು ಬಿಟ್ಟು ಕೊಡಲು ತಯಾರಿರಲಿಲ್ಲ. ಸೀಟುಗಳು ಖಾಲಿಯಿದ್ದರೂ ಫುಟ್ ಬೋರ್ಡಿನಿಂದ ಮೇಲೆ ಬರುತ್ತಿರಲಿಲ್ಲ ಗೋವಿಂದು. ಬಾಳಣ್ಣ ತನ್ನ ಹದಿನೈದು ವರ್ಷದ ಸರ್ವೀಸಿಗೆ ತಕ್ಕ ಮಾತುಗಳನ್ನೇ ಆಡುತ್ತಿದ್ದ ಯಾವಾಗಲೂ. ಮೆಡಿಕಲ್ ಕಾಲೇಜಿಗೆ ಈ ಬಸ್ಸಿನಲ್ಲಿ ಬರುವ ಡಾಕ್ಟರು ನರ್ಸುಗಳೆಂದರೆ ಯಾವ ಲೆಕ್ಕವೂ ಇಲ್ಲ ಬಾಳಣ್ಣನಿಗೆ. ಅವನ ಪ್ರಕಾರ ಎರಡೇ ರೀತಿಯ ಡಾಕ್ಟರುಗಳು ಈ ಬಸ್ಸಿನಲ್ಲಿ ಬರುವುದು. ಒಂದು, ಈಗತಾನೆ ಎಂಬಿಬಿ‌ಎಸ್ ಅಥವಾ ಎಂಡಿ ಮುಗಿಸಿ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಲವಲೇಶವೂ ಜ್ಞಾನವಿಲ್ಲದೆ, ಸ್ವಂತ ಕ್ಲಿನ್ನಿಕ್ಕು ತೆಗೆಯಬೇಕೋ, ದೇಶ ಬಿಡಬೇಕೋ ಎನ್ನುವ ಕನ್‌ಫ್ಯೂಶನ್ನಿನಲ್ಲಿ ಟ್ಯೂಟರ್, ಲೆಕ್ಚರರ್ ಗಳಾಗಿ ಸೇರಿರುವ ಎಳಸುಗಳು. ಇನ್ನೊಂದು, ಇರುವ ನಾಲ್ಕು ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕಷ್ಟಪಟ್ಟು ಪ್ರಾಧ್ಯಾಪಕರಾಗಿ ಜೀವನವಿಡೀ ಬಳ್ಳಾರಿಯಿಂದ ಹುಬ್ಬಳಿಗೆ, ಹುಬ್ಬಳಿಯಿಂದ ಬಳ್ಳಾರಿಗೆ ಪ್ರೊಮೋಷನ್ ನೆಪದಲ್ಲಿನ ಟ್ರಾನ್ಸ್‌ಫರ್ ಗಳನ್ನು ಅನುಭವಿಸಿ ಈಗ ರಿಟೈರಾಗಿ ಪ್ರಾಕ್ಟೀಸ್ ಮಾಡಲಾಗದೇ, ಬರುವ ಪಿಂಚಣಿಯಿಂದ ತಮ್ಮ “ಲೆವೆಲ್ಲಿ”ಗೆ ಬದುಕಲಾಗದೆ, ಈ ಪ್ರೈವೇಟ್ ಮೆಡಿಕಲ್ ಕಾಲೇಜಿನ ” ಅಸೋಸಿಯೇಟ್” ಅಥವಾ “ಎಮೆರಿಟಸ್” ಪ್ರಾಧ್ಯಾಪಕರೆಂದೆಸಿಕೊಂಡಿರುವ ಬದುಕುವ ದಾರಿ ತಿಳಿಯದಿರುವ ಬಕರಾಗಳು. ಮೇಲಿನ ಮೊದಲನೇ ಕೆಟಗರಿಯ ಎರಡನೇ ಗುಂಪಿಗೆ ಸೇರುತ್ತಾನೆ ಡಾ: ಚಕ್ರಪಾಣಿ ಅರ್ಥಾತ್ ಚಕ್ರಿ. ಈಗತಾನೆ ಎಂಡಿ ಜನರಲ್ ಮೆಡಿಸಿನ್ ಮುಗಿಸಿ ಮುಂದೆ ಏನು ಮಾಡಬೇಕೆಂದು ತಿಳಿಯದ ಬಾಳಣ್ಣನ ಎಳಸು ಈತ. ಈ ಜಗತ್ತನ್ನೇ ಗೆಲ್ಲುತ್ತೇನೆಂಬ ವಿಶ್ವಾಸದಿಂದ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಿಂದ ಹೊರಬಿದ್ದಿದ್ದ. ಮೂರು ವರ್ಷ ಕತ್ತೆ ಚಾಕರಿ ಮಾಡಿದುದರ ಫಲವಾಗಿ ಅವನ ಪ್ರೊಫೆಸರರು ವಿಶ್ವವಿದ್ಯಾನಿಲಯದ ಚಿನ್ನದ ಪದಕವನ್ನು ಇವನಿಗೇ ಕೊಡಿಸಿದಾಗ ಹೃದಯತುಂಬಿ ಬಂದಿತ್ತು ಚಕ್ರಪಾಣಿಗೆ. ತಾನೆಷ್ಟೇ ಕಷ್ಟ ಪಟ್ಟಿದ್ದರೂ ಪ್ರೊಫೆಸರರ ಕೃಪೆಯಿಲ್ಲದೇ ಚಿನ್ನದ ಪದಕವಿರಲಿ ಎಂಡಿಯಲ್ಲಿ ಪಾಸಾಗುವುದೂ ಅಸಾಧ್ಯ ವೆಂಬುದನ್ನು ಚೆನ್ನಾಗಿ ತಿಳಿದಿದ್ದ, ಚಕ್ರಪಾಣಿ. ಕ್ಲಿನಿಕಲ್ಸಿನ ಲಾಂಗ್ ಕೇಸಿನಲ್ಲಿ ಸ್ವಲ್ಪ ತಡವರಿಸಿದನೆಂದು ಹೈದರಾಬಾದಿನ ಪರೀಕ್ಷಕ ಇವನಿಗೆ ಚಿನ್ನದ ಪದಕ ಕೊಡಬಾರದೆಂದು ಸ್ವಲ್ಪ ತಕರಾರು ಮಾಡಿದ್ದ.. ಆದರೆ ಪ್ರೊಫೆಸರರು ತುಂಬಾಹಿರಿಯರಾದ್ದರಿಂದ ಅವರ ಮಾತಿಗೆ ಎದುರಾಡುವಂತಿರಲಿಲ್ಲ. ಫಲಿತಾಂಶ ತಿಳಿದ ಕೂಡಲೇ ಹೋಗಿ ಪ್ರೊಫೆಸರರ ಕಾಲಿಗೆ ಬಿದ್ದಿದ್ದ. “ಜನರಲ್ ಮೆಡಿಸಿನ್ ಈಸ್ ಲೈಕ್ ಗ್ಲೋರಿಫೈಡ್ ಜನರಲ್ ಪ್ರಾಕ್ಟೀಸ್. ಯೂ ಕಾಂಟ್ ಸರ್ವೈವ್ ಇನ್ ದಿಸ್ ರುದ್ಲೆಸ್ ವರ್ಲ್ಡ್. ಇಲ್ಲಿ ಎಲ್ಲಾ ತರದ ಜನರನ್ನೂ ನೋಡಬೇಕು. ಎಂಬಿಬಿ‌ಎಸ್ ಆದಮೇಲೆ ಮೂರು ವರ್ಷ ಮಣ್ಣು ಹೊತ್ತಿದ್ದು ಸಾರ್ಥಕವಾಗಬೇಕು ಎಂದಿದ್ದರೆ ನಿನ್ನಂಥೋರು ಯಾವುದಾದರೂ ಸೂಪರ್ ಸ್ಪೆಷಾಲಿಟಿ ಮಾಡಬೇಕು. ಅದು ಮಾಡಿದರೂ ನೀನು ಇಲ್ಲಿ ಉಳ್ಕೊತೀಯಾ ಅನ್ನೋ ನಂಬಿಕೆ ನನಗಿಲ್ಲ. ಸುಮ್ಮನೇ ಇಲ್ಲಿ ಸಮಯ ಹಾಳುಮಾಡುವುದರ ಬದಲು ಎಂ ಎಲ್ ಈ ನೋ ಪ್ಲಾಬೋ ತೊಗೊಂಡು ಎಲ್ಲಾದರೂ ಹೊರಗೆ ಹಾರುವುದನ್ನು ಕಲಿತುಕೋ” ಬುದ್ಧಿಹೇಳಿದ್ದರು. ಎಂಡಿ ಪಾಸಾಗುವ ತನಕ ಪಾಸಾಗುವುದೇ ದೊಡ್ಡ ವಿಷಯವಾಗಿದ್ದರಿಂದ, ಪಾಸಾದಮೇಲೆ ಏನು ಮಾಡುವುದೆಂದು ಯೋಚಿಸುವುದೂ ಮಹಾಪಾಪವೆನ್ನುವ ಸಿದ್ಧಾಂತಕ್ಕೆ ಹೊರತಾಗೇನೂ ಉಳಿದಿರಲಿಲ್ಲ, ಚಕ್ರಪಾಣಿ.ಊರಿನ ಬಸ್ಸು ಹತ್ತುವತನಕ ಇದ್ದ ನಶೆ ಈಗ ಮರೆಯಾಗಿತ್ತು. ಮುಂದೆ ಏನು ಮಾಡಬೇಕೆನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಸ್ವಲ್ಪ ಸಮಯ ಬೇಕೆನ್ನುವ ನೆವದಿಂದ ಈ ಮೆಡಿಕಲ್ ಕಾಲೇಜು ಸೇರಿದ್ದ, ಲೆಕ್ಚರರಾಗಿ. ಮೆಡಿಕಲ್ ಕಾಲೇಜು ಆರಂಭವಾಗಿ ಎರಡು ವರ್ಷವಾಗಿತ್ತಷ್ಟೆ. ಹೆಸರಿಗೊಂದು ಟ್ರಸ್ಟ್. ಆದರೆ ಆ ಟ್ರಸ್ಟಿನ ಚೇರ್ಮನ್ನೇ ಕಾಲೆಜಿನ ಡೀನೂ ಕೂಡ. ಏಕಮೇವಾದ್ವಿತೀಯ. ಯಾವುದೇ ರೀತಿಯ ಆಡಳಿತದ ಅನುಭವವಿಲ್ಲದಿದ್ದರೂ ಕಾಲೇಜಿನ ಡೀನಿನ ಪಟ್ಟ ತಾನಾಗೇ ಬಂದಾಗ ಬೇಡವೆಂದು ನಿರಾಕರಿಸುವಷ್ಟು ಉದಾರಿಯಾಗಿರಲಿಲ್ಲ ಚೇರ್ಮನ್ ಗವಿಸಿದ್ದಪ್ಪ. ಮೇಲಾಗಿ ಈತನೂ ವೈದ್ಯನೇ. ಆ ಟ್ರಸ್ಟಿನಲ್ಲಿ ಬೇರೆ ಯಾರೂ ಡಾಕ್ಟರು ಅಥವಾ ಅದಕ್ಕೆ ಸಂಬಂಧಪಟ್ಟವರು ಇಲ್ಲದಿರುವ ಕಾರಣ ಗವಿಸಿದ್ದಪ್ಪನೇ ಇರಲಿ ಎಂದು ಅಪ್ಪ ತಿಪ್ಪಣ್ಣ ಹೇಳಿದ್ದಕ್ಕೆ ಯಾರೂ ಎದುರಾಡಿರಲಿಲ್ಲ. ಇಪ್ಪತ್ತು ವರ್ಷದ ಹಿಂದೆ ಬಳ್ಳಾರಿಯಲ್ಲಿ ಡಿವಿಡಿ ಮಾಡಿ ಇದೇ ಊರಿನ ಸರಕಾರೀ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನಾಗಿ ಹದಿನೈದು ವರ್ಷದಿಂದ ಬೇರೆ ಎಲ್ಲೂ ಟ್ರಾನ್ಸ್‌ಫರಾಗದೇ ಉಳಿದಿದ್ದ. ಊರಿನ ಸರಕಾರೀ ಆಸ್ಪತ್ರೆ ಅಷ್ಟೇನೂ ದೊಡ್ಡದಾಗಿರದ ಕಾರಣ ಚರ್ಮರೋಗದ ಬೇರೆ ವಿಭಾಗವೇನೂ ಇರಲಿಲ್ಲ. ತನ್ನ “ಕ್ಲಿನಿಕಲ್ ಅಕ್ಯುಮೆನ್” ಹಾಳಾಗುತ್ತದೆಂದು ಬಸ್ ಸ್ಟ್ಯಾಂಡಿನ ಹಿಂದೆ ಒಂದು ಕ್ಲಿನಿಕ್ ತೆಗೆದಿದ್ದ. ತೊಡೆಯ ಸಂದಿಯಲ್ಲಿ ಗಡ್ಡೆಯೆಂದು ಬರುವ ಊರಿನ ಹಾಗೂ ಹೆಚ್ಚಾಗಿ ಪರಸ್ಥಳದ ಕಾಲೇಜು ಹುಡುಗರನ್ನು ಬಿಟ್ಟರೆ ಗವಿಸಿದ್ದಪ್ಪನಿಗೆ ಬರುತ್ತಿದುದು ಬೆವರು ಸಾಲೆ ಅಥವಾ ಅವನಿಗೆ ಪ್ರಿಯವಾದ ಸರ್ವೇಸಾಮಾನ್ಯ ಕಾಯಿಲೆ ” ಅಲರ್ಜಿ”. ಜೀವನ ನಡೆಸುವುದಕ್ಕೆ ಮನೆಯಕಡೆ ಏನೂ ತೊಂದರೆಯಿರಲಿಲ್ಲ. ಅಪ್ಪ ತಿಪ್ಪಣ್ಣ ಆ ಜಿಲ್ಲೆಯಲ್ಲೇ ಹೆಸರಾದ ಫುಡಾರಿ ಮತ್ತು ಬೇಕಾದಷ್ಟು ವಿದ್ಯಾಸಂಸ್ಥೆಗಳು “ಟ್ರಸ್ಟಿನ” ಹೆಸರಲ್ಲಿರುವುದರಿಂದ ಗವಿಸಿದ್ದಪ್ಪನಿಗೆ ಸರಕಾರೀ ಕೆಲಸವಾಗಲೀ ಕ್ಲಿನ್ನಿಕ್ಕಿನ ಕೆಲಸವಾಗಲೀ ಅನಿವಾರ್ಯವಾಗಿರಲಿಲ್ಲ. ಆದರೆ ಮಗನ ಹೆಸರಿನ ಮುಂದೆ ಡಾ: ಎಂಬ ಅಕ್ಷರ ಉಳಿಯಬೇಕಾದರೆ, ಈ ಕೆಲಸವನ್ನು ಇಷ್ಟವಿರಲಿ ಬಿಡಲಿ ಮಾಡುತ್ತಿರಬೇಕೆಂದು ತಿಪ್ಪಣ್ಣನವರ ಅಭಿಪ್ರಾಯವಾಗಿತ್ತು. ಈಗ ಸುಮಾರು ಎರಡು ವರ್ಷದ ಹಿಂದೆ ಟ್ರಸ್ಟಿಗೆ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ ಸಿಕ್ಕಾಗ ಅನಾಯಾಸವಾಗಿ ಗವಿಸಿದ್ದಪ್ಪನಿಗೆ ಡೀನಿನ ಪಟ್ಟ ಸಿಕ್ಕಿದಾಗ ಮೆಡಿಕಲ್ ಕಾಲೇಜಿಗೆ ಡೀನ್ ಎಂಬುವವರು ಒಬ್ಬರಿರುತ್ತಾರೆ ಅನ್ನುವುದೂ ಮರೆತು ಹೊದಂತಾಗಿತ್ತು ಗವಿಸಿದ್ದಪ್ಪನಿಗೆ. ಆದರೆ ಸುತ್ತಮುತ್ತಲೂ ಜನ ಇದ್ದೇ ಇರುತ್ತಾರೆ, ಮತ್ತೆ ಅಪ್ಪನ ಪ್ರಭಾವದಿಂದ ಬೇರೆ ಕಾಲೇಜುಗಳ ಮುಖ್ಯಸ್ಥರುಗಳು ಸಹಾಯ ಮಾಡೇ ಮಾಡುತ್ತಾರೆ ಎಂಬ ಭಂಡ ದೈರ್ಯದಿಂದ ಒಪ್ಪಿದ್ದ. ಡೀನ್ ಅನ್ನುವ ಕೆಲಸಕ್ಕೆ ಹೊಸದೊಂದು ಅರ್ಥವನ್ನೇ ಕೊಟ್ಟಿದ್ದ ಗವಿಸಿದ್ದಪ್ಪ. ಹೊಸ ವೈದ್ಯರುಗಳ ನೇಮಕಾತಿ, ನರ್ಸಿಂಗ್ ಸ್ಕೂಲ್, ಆಸ್ಪತ್ರೆಯ ಪೇಷೆಂಟುಗಳ ಸೆನ್ಸಸ್, ಕಾಲೇಜ್ ಹಾಸ್ಟೆಲ್ ನಿರ್ವಹಣೆ ಎಲ್ಲವನ್ನೂ ತಾನೇ ನಿರ್ವಹಿಸಬೇಕೆನ್ನುವ ಹಠ ಗವಿಸಿದ್ದಪ್ಪನಿಗೆ. ಅನಾಟಮಿ ವಿಭಾಗಕ್ಕೆ ಹೆಣ ತರಿಸುವುದಿರಲಿ, ಎನ್ ಆರ್ ಐ ಸೀಟಿನ ವಸೂಲಿಯಾಗಲೀ ಅಥವಾ ಆಪರೇಷನ್ ಥಿಯೇಟರ್‌ನ ವಾರ್ಡ್ ಬಾಯ್‌ನನ್ನು ಹುಡುಕುವುದಿರಲಿ ತನಗೆ ಗೊತ್ತಿಲ್ಲದೇ ಆಗಬಾರದೆಂದು ಅವನ ನಿಯಮ. ಅಪ್ಪ ಹೇಳಿಕೊಟ್ಟ ಆಡಳಿತದ ಮಂತ್ರವನ್ನು ಚಾಚೂತಪ್ಪದೇ ಪಾಲಿಸುತ್ತಿದ್ದ. ಯಾರನ್ನೂ ನಂಬಕೂಡದು. ಎಲ್ಲರಿಂದಲೂ ಸಲಹೆ ತೆಗೆದುಕೊಳ್ಳುವಂತೆ ಮಾಡಬೇಕು. ಆದರೆ ಅಂತಿಮ ನಿರ್ಣಯ ನಮ್ಮದಾಗಿರಬೇಕು. ಎಲ್ಲರೂ ಕಳ್ಳರು. ಡಾಕ್ಟರುಗಳನ್ನು ಆದಷ್ಟು ರಿಸೈಕಲ್ ಮಾಡುತ್ತಿರಬೇಕು. ಕರ್ನಾಟಕದಲ್ಲಿ ಡಾಕ್ಟರುಗಳಿಗೇನೂ ಬರವಿಲ್ಲ. ಪ್ರತಿಯೊಂದು ವಿಭಾಗದಲ್ಲಿ ಇಬ್ಬರೋ ಮೂರೋ ಜನ ನಂಬಿಗಸ್ತರನ್ನು ಖಾಯಂ ಆಗಿ ಇರಿಸಿಕೊಂಡು ಉಳಿದವರನ್ನು ಆರುತಿಂಗಳ ಮೇಲೆ ಇರದ ಹಾಗೆ ನೋಡಿಕೊಳ್ಳಬೇಕು. ಸ್ವಲ್ಪ ದುಡ್ಡು ಹೋದರೆ ಹೋಗಲಿ ಕೆಲಸದ ಕಾಂಟ್ರಾಕ್ಟನ್ನು ಒಳ್ಳೆ ಲಾಯರ್ರಿಂದ ಚೆನ್ನಾಗಿ ಬರೆಸಬೇಕು. ಈಗಿನ್ನೂ ಎಂಬಿಬಿ‌ಎಸ್ ಎಂಡಿ ಮಾಡಿರೋವರಿಗೆ ಲೇಬರ್ ಲಾ ಎಲ್ಲ ಗೊತ್ತಿರುವುದರಿಲ್ಲ. ಅವರನ್ನು ಹೇಗೆ ಆಟ ಆಡಿಸಿದರೂ ನಡೆಯುತ್ತದೆ. ನಿನಗೆ ಆಪ್ತರು ಅನ್ನಿಸಿದವರನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳುವುದು. ಆದರೆ ಜ್ಞಾಪಕವಿರಲಿ ಇಲ್ಲಿ ಯಾರೂ ಆಪ್ತರಲ್ಲ.- ಇತ್ಯಾದಿ ಇತ್ಯಾದಿ ಕೌಟಿಲ್ಯನ ಷಡ್ಯಂತ್ರ. “ರೀ, ಏಳ್ರೀ ಮೇಲೆ, ಬಂದು ಕುಂತ್ಬುಟ್ರು ಲೇಡೀಸ್ ಸೀಟಲ್ಲಿ, ಹಿಂದೆ ಹೋಗ್ರೀ, ಎಜುಕೇಟೆಡ್ ಆಗಿ ನೀವೇ ಹೀಗ್ಮಾಡಿದ್ರೆ ಹೇಗ್ರೀ” ಗೋವಿಂದು ಗದರಿದಾಗ ಕಣ್ಣುಬಿಟ್ಟ ಚಕ್ರಪಾಣಿ. “ಬನ್ನಿ ಮೇಡಂ ನೀವೀಕಡೆ ಬನ್ನಿ ಕುಂತ್ಕಳಿ” ಹೀಚು ಹಲ್ಲು ಬಿಟ್ಟು ಹೇಳಿದ್ದ ಬಾಳಣ್ಣ. ಚಕ್ರಪಾಣಿ ಎದ್ದು ಹಿಂದೆ ಹೋದ. ಬಸ್ಸು ಪೂರ್ತಿಯಾಗಿದ್ದರೂ ನಿಂತವನು ಇವನೊಬ್ಬನೇ. ತೀರ ಅವಮಾನವಾದಂತೆನ್ನಿಸಿತು. ಎಲ್ಲರೂ ತನ್ನನ್ನೇ ನೋಡುತ್ತಿದ್ದಾನೋ ಅನ್ನಿಸಿತು. ಒಮ್ಮೆ ದುರುಗುಟ್ಟಿ ನೋಡಿದ ಬಾಳಣ್ಣನನ್ನು. ” ಏನ್ರೀ ಹಂಗ್ನೋಡ್ತೀರಾ, ಗೋವಿಂದು, ಯಾರಪ್ಪಾ ಇವ್ನು ಒಸಬಾನ ಡಾಕುಟ್ರು. ಏನ್ ನಾವ್ನೋಡ್ದೇದ್ದಾ. ಸೊಲ್ಪ ನಂವಿಸಯ ಹೇಳಪಾ. ಇವತ್ರಾತ್ರಿ ಸಾಯೇಬ್ರ ಮನೆತಕ್ಕೆ ಹೋದಾಗ ಸರಿಮಾಡ್ಕಂಬರ್ಬೇಕಾ ಎಂಗೆ” ಕೆಕ್ಕರಿಸಿ ನೋಡಿ ಹೇಳಿ ಒಮ್ಮೆ ನಕ್ಕು ಬಸ್ಸಿನ ಕಿಟಕಿ ಸರಿಸಿ ತಲೆ ಪೂರ್ತಿ ಹೊರಗೆ ಹಾಕಿ ಬಗ್ಗಿ ಕ್ಯಾಕರಿಸಿ ಥೂ ಎಂದು ರಸ್ತೆಗೆ ಉಗಿದ ಬಾಳಣ್ಣ. ಅವುಡುಗಚ್ಚಿ ಕೆಂಪಾಗಿದ್ದ ಚಕ್ರಪಾಣಿಯನ್ನು ಕೆಳಗೆ ಎಳೆದು ಕೂಡಿಸಿದ್ದ ಸತೀಶ.” ಚಕ್ರಿ, ಹೋಗಲಿ ಬಿಡು, ಕೊಚ್ಚೆಗೆ ಕಲ್ಲು ಹಾಕೋ ಕೆಲಸ ಮಾಡಬೇಡ. ಅದರಿಂದ ಮರ್ಯಾದೆ ಹೋಗೋದು ನಿನ್ನದೇ. ಅದೂ ಅಲ್ಲದೆ ಗವಿಸಿದ್ದಪ್ಪನೂ ಬಾಳಣ್ಣನೂ ಪೂರ್ವಾಶ್ರಮದ ದೋಸ್ತುಗಳು. ಈಗ ಈ ಕೆಲಸದ ದರ್ದಿರೋದು ನಿನಗೆ. ನಿನ್ನ ಮಾತಿಗಿಂತ ಬಾಳಣ್ಣನ ಮಾತೇ ನಡೆಯೋದು ತಿಳ್ಕೋ” ” ಏ ಸತೀ,ಇವನ್ನೆಲ್ಲಾ ಸಹಿಸಿಕೊಂಡು ಎಷ್ಟು ದಿನದಿಂದ ಇದ್ಯಲ್ಲೋ, ನಿನಗೇನು ಮರ್ಯಾದೆ ಇಲ್ಲವೇನೋ. ಅಷ್ಟಕ್ಕೂ ಅವನೊಬ್ಬ ಡ್ರೈವರ್”- ಚಕ್ರಪಾಣಿ ಕೋಪದಿಂದ ಹೇಳಿದ. ” ನೋಡು, ಚಕ್ರಿ ಮರ್ಯಾದೆ ಎಲ್ಲಾ ಬಹಳ ದೊಡ್ಡ ಪದಗಳು ನಮ್ಮ ಕಾಲೇಜಲ್ಲಿ ಉಪಯೋಗಿಸಕ್ಕೆ. ಹೊರಗೆ ಹೋಗಿ ಕ್ಲಿನಿಕ್ ತೆಗೆದು ಸ್ವಲ್ಪ ದುಡ್ಡು ಮಾಡಿದ ಮೇಲೆ ಇವಕ್ಕೆಲ್ಲಾ ಅರ್ಥ ಹುಡುಕೋಣ ಅಂತಿದೀನಿ. ಈ ಕಾಲೇಜಲ್ಲಿ ಇರೋ ತನಕ ಹೊರಗೆ ಪ್ರಾಕ್ಟೀಸ್ ಮಾಡುವ ಕನಸು ಕಾಣಬೇಡ. ತಾಕತ್ತಿದ್ದರೆ ಕೆಲಸ ಬಿಟ್ಟು ಕ್ಲಿನಿಕ್ ಹಾಕು. ಪ್ರಾಕ್ಟೀಸ್ ಆಗೋಲ್ಲ ಅಂತ ನಾನೇನು ಹೇಳ್ತಾ ಇಲ್ಲ. ಆದ್ರೆ ಸ್ವಲ್ಪ ಟೈಂ ಬೇಕಪ್ಪ. ಒಂದು ಒಂದೂವರೆ ವರ್ಷ ನಿನ್ನನ್ನು ನೀನು ನೋಡ್ಕೊಳ್ಳೊ ಶಕ್ತಿ ಇದ್ರೆ ಇಲ್ಯಾಕೆ ಕೆಲಸ ಮಾಡ್ಬೇಕು. ನನಗೆ ಊರಿಗೆ ಮುಂಚೆ ಮದುವೆ ಮಾಡಿದ ನಮ್ಮಪ್ಪ. ಹೇಳದೇ ಕೇಳದೇ ಹುಟ್ಟಿಕೊಂಡಿದಾವೆ ಎರಡು. ಮುಂದಿನ ವರ್ಷ ಮೊದಲನೇದನ್ನು ಸ್ಕೂಲಿಗೆ ಕಳಿಸಬೇಕು. ” ಸತೀಶ ಹೇಳಿದ. ” ಅದು ನಿನ್ನ ಹಣೆಬರಹ. ನನಗೆ ಹಿಂದೆ ಮುಂದೆ ಯಾರೂ ಇಲ್ಲವಮ್ಮ. ಇದನ್ನೇ ಕಟ್ಟಿಕೊಂಡು ಕೂತಿಲ್ಲ ನಾನು. ನಿಮ್ಮ ಡೀನ್ ಗಾಂಚಲಿ ಮಾಡಿದ್ರೆ ಮುಖದ ಮೇಲೆ ಹೊಡೆದು ಆಚೆಗೆ ಹೋಗ್ತೀನಿ ನಾನು.” ಆವೇಶದಿಂದ ಹೇಳಿದ ಚಕ್ರಪಾಣಿ. ” ಶ್, ಚಕ್ರಿ, ಇದು ಬಸ್ಸು. ಸ್ವಲ್ಪ ನಿಧಾನ ಮಾಡು. ನಿನಗೆ ಈ ಕೆಲಸ ಮುಖ್ಯವಿಲ್ಲದಿರಬಹುದು.ನನಗೆ ತುಂಬಾ ಮುಖ್ಯ. ನಿನ್ನ ಜತೆಗೆ ನನ್ನನ್ನೂ ಓಡಿಸಿಬಿಡ್ತಾನೆ ಆ ಗವಿಸಿದ್ದಪ್ಪ. ” ಮೆಲ್ಲಗೆ ಹೇಳಿದ ಸತೀಶ. ” ಸತೀಶ, . ಏನಾಗಿದೆ ನಿನಗೆ. ಇಲ್ಲಿ ಬರೋ ಆರು ಸಾವಿರ ಸಂಬಳ ನೆಚ್ಚಿಕೊಂಡು ನಿನ್ನ ಹೆಂಡತಿ ಮಕ್ಕಳನ್ನು ಸಾಕ್ತೀನಿ ಅಂದರೆ ಸಾಧ್ಯಾನೇನೋ. ಇದು ನೀನೇ ನಿನಗೆ ಹಾಕಿಕೊಳ್ಳುತ್ತಿರೋ ಪರಿಧಿ. ನನ್ನ ಮಾತು ಕೇಳು. ಏನೂ ಆಗೊಲ್ಲವೋ. ಮೊದಲು ಈ ಕೆಲಸ ಬಿಡು. ಯಾವುದಾದರೂ ಬ್ಯಾಂಕಿನಲ್ಲಿ ಸಾಲಾನಾದ್ರೂ ತೆಗೆದುಕೊಂಡು ಒಂದು ಸಣ್ಣ ಕ್ಲಿನಿಕ್ ಹಾಕು. ನಿನಗೇನೋ ಕಡಿಮೆ. ಸರ್ಜನ್. ತಿಂಗಳಿಗೆ ಮೂರು ಕೇಸ್ ಆದರೂ ಪರವಾಗಿಲ್ಲ ಮೊದಲು. ನಮ್ಮ ರಾಜ್ಯದಲ್ಲಿ ಬೇಕಾದಷ್ಟು ಡಾಕ್ಟರಿರಬಹುದು. ಆದರೆ ಯಾರೂ ಉಪವಾಸ ಸಾಯುತ್ತಿಲ್ಲ.” ಬೆವರೊರೆಸುತ್ತಾ ಹೇಳಿದ್ದ ಚಕ್ರಪಾಣಿ. ” ಅದು ಎಲ್ಲರೂ ಹೇಳುವ ಮಾತೇ. ಹೀಗೆ ಹೇಳ್ತಾ ಹೇಳ್ತಾನೇ ನಮ್ಮ ಸರ್ಕಾರ ಇನ್ನೊಂದು ನಾಲ್ಕು ಕಾಲೇಜ್ ಸ್ಯಾಂಕ್ಷನ್ ಮಾಡಲಿ, ಆಮೇಲೆ ಆ ಪರಿಸ್ಥಿತಿಯೂ ಏನು ದೂರ ಇರೊಲ್ಲ” ” ಓ, ಕಂ ಆನ್, ಸಿಸ್ಟಂನ ಬೈಬೇಡ. ಅದರ ಇನ್ನೊಂದು ಮುಖ ನೋಡೋ. ಈಗ ಇಷ್ಟು ಕಾಲೇಜುಗಳು ಇರೋದರಿಂದಾನೇ ತಾನೇ ನೀನು, ನಾನು ಕೆಲಸ ಮಾಡ್ತಾ ಇರೋದು. ನೀನು ಪೂರಾ ಜೀವನ ಇಲ್ಲೇ ಸುಖವಾಗಿರ್ತೀನಿ ಅಂಥ ಕನಸು ಕಾಣುತ್ತಾ ಇರೋದು. ಸತೀ, ನಿಜ ಹೇಳು ಜೀವಮಾನ ಇಡೀ ಇಲ್ಲೇ ಇರ್ತೀನಿ ಅಂತ ನಿರ್ಧಾರ ಮಾಡಿದೀಯೋ ಅಥವಾ ಏನಾದರೂ ಪ್ಲಾನ್ ಬಿ ಇದೆಯೋ” ” ಸಾಯೋ ತನಕ ಗವಿಸಿದ್ದಪ್ಪನ ಪಾದ ಬಿಡಬಾರದು ಅಂತ ನಿರ್ಧಾರ ಮಾಡಿದ್ದೀನಿ ” ಕಣ್ಣು ಹೊಡೆದ ಸತೀಶ.” ಪ್ಲಾನ್ ಬಿ ಪ್ರಕಾರ ಎಲ್ಲಾ ಸರಿ ಹೋದರೆ ಮುಂದಿನ ವರ್ಷ ಇಷ್ಟು ಹೊತ್ತಿಗೆ ಮಸ್ಕಟ್ ನಲ್ಲಿರ್ತೀನಿ” ” ಅಯ್ಯೋ ಕಳ್ಳ ನನ್ನಮಗನೇ, ಎಲ್ಲಾ ರೆಡಿ ಮಾಡಿಕೊಂಡು ಇಷ್ಟು ಯಾಕೆ ಹೆದರ್ತೀಯೋ, ನನ್ನ ನೋಡು. ಬ್ಯಾಂಕಿನಲ್ಲಿ ಇರೋ ಎರಡೂವರೆ ಸಾವಿರ ರೂಪಾಯಿ ಬಿಟ್ರೆ ಏನೂ ಇಲ್ಲ. ನಾಳೆ ಕೆಲಸದಿಂದ ಹೊರಗೆ ಹಾಕಿದರೆ ಒಂದು ತಿಂಗಳು ಬದುಕಿರಬಹುದು ಅಷ್ಟೆ” “ಪ್ಲಾನ್ ಬಿ ಇನ್ನೂ ಪ್ಲಾನ್ ಎ ಆಗುವ ತನಕ ಸ್ವಲ್ಪ ಬಾಯಿ ಮುಚ್ಚಿಕೊಂಡಿರಪ್ಪ, ಮಾರಾಯ,ನಂದು ಬಿಡು.ಬರೀ ನಂದೇ ಕೇಳ್ತೀಯ, ಕಣ್ಣು ಮುಚ್ಕೊಂಡಿರೋ ಬೆಕ್ಕೇ, ನಿಂದೇನು ಸಮಾಚಾರ ಚಕ್ರೀ, ಏನೋ ಗಾಳೀಲಿದೆ ಸುದ್ದಿ, ಯಾರಪ್ಪ ಅದು ಮಿಸ್ಸ್ ವರ್ಜೀನಿಯ.” ” ಇನ್ನೂ ಏನೂ ಇಲ್ಲ ಕಣೋ, ಯಾರೋ ದೂರದ ರಿಲೇಟೀವ್, ಈಗ ಎಂಟು ವರ್ಷದ ಕೆಳಗೆ ಮನೆಯವರೆಲ್ಲರಿಗೂ ಗ್ರೀನ್ ಕಾರ್ಡ್ ಬಂತು ಎಂದು ಅಮೆರಿಕಕ್ಕೆ ಹೋದರಂತೆ. ಈಗ ಮೂರು ವಾರದ ರಜಾ ಅಂತೆ. ಅಪ್ಪ, ಮಗಳು ಇಬ್ಬರೇ ಬರುತ್ತಿದ್ದಾರೆ. ಅವರಪ್ಪನಿಗೆ ಕರ್ನಾಟಕದಿಂದ್ಲೇ ಹುಡುಗನ್ನ ತರಬೇಕು ಅಂತ. ಐ ಯಾಂ ನಾಟ್ ವೆರಿ ಪರ್ಟಿಕ್ಯುಲರ್ ಅಬೌಟ್ ಲೀವಿಂಗ್ ದ ಕಂಟ್ರಿ. ಹುಡ್ಗೀನ ನೋಡ್ಬೇಕೋ ಇಲ್ಲವೋ ಅಂತ ಯೋಚನೆ ಮಾಡ್ತಾ ಇದ್ದೀನಿ.” ” ಹುಡ್ಗೀನ ನೀನು ನೋಡ್ತಾ ಇದೀಯೋ ಅಥವಾ ಅವಳು ನಿನ್ನ ನೋಡ್ತಾ ಇದ್ದಾಳೋ. ನೋ ಅಫೆನ್ಸ್ ಚಕ್ರಿ. ಈ ನಿನ್ನ ಸ್ವಾಭಿಮಾನ ಎಲ್ಲಬರೀ ಬಾಳಣ್ಣ ಗೋವಿಂದು ಹತ್ರ ಮಾತ್ರಾನೋ ಅಥವಾ ಈ ವಿಷಯದಲ್ಲೂ ಇದೆಯೋ. ಬರೀ ನಿನ್ನನ್ನು ನೋಡೋಕೆ ಬರುತ್ತಿದ್ದಾಳೋ ಅಥವಾ ದೊಡ್ಡ ಲೈನೇ ಇದೆಯೋ” ಛೇಡಿಸಿದ ಸತೀಶ. ” ಇಲ್ವೋ ಮಗನೇ, ನಾನೊಬ್ಬನೇ ಈ ಇಂಡಿಯಾಕೆಲ್ಲಾ ಇರೋ ಗಂಡು. ನಿನಗೆ ಮದುವೆಯಾಗದಿದ್ರೆ ನಿನ್ನೂ ನೋಡೋಳೇನೋ. ಈಗ ಇಳಿ ಕೆಳಗೆ, ಅಟೆಂಡೆನ್ಸ್ ರಿಜಿಸ್ಟರ್ ಒಳಗೆ ಇಡ್ತಾ ಇದ್ದಾನೆ ಆ ಪಾಪಿ” ” ಸರಿ, ಹತ್ತೂವರೆಗೆ ಡೀನ್ ಸಾಹೇಬ್ರ ರೌಂಡ್ಸ್ ಆದ್ಮೇಲೆ ಬರ್ತೀನಿ ಡಿಪಾರ್ಟ್ಮೆಂಟಿನ ಹತ್ತಿರ. ಕಾಫಿಗೆ ಹೋಗೋಣ”- ಇಬ್ಬರೂ ತಮ್ಮ ತಮ್ಮ ಡಿಪಾರ್ಟ್ಮೆಂಟಿನ ಕಡೆಗೆ ಹೋದರು. +* +* +* +ಇದ್ದ ನಾಲ್ಕು ಜನ ಒಳರೋಗಿಗಳನ್ನು ನೋಡಿದ ಶಾಸ್ತ್ರ ಮಾಡಿ ಓಪಿಡಿಗೆ ಬಂದು ಕುಳಿತ ಚಕ್ರಪಾಣಿ. ಯಾರನ್ನೂ ಡಿಸ್ಚಾರ್ಜ್ ಮಾಡಬಾರದೆಂದು ಹೈಕಮಾಂಡಿನ ಅಪ್ಪಣೆಯಾಗಿತ್ತು. ಇರುವ ರೋಗಿಗಳ ಇಲ್ಲದಿರುವ ಕಾಯಿಲೆಯನ್ನು ಚಿಕಿತ್ಸೆ ಮಾಡುವ ನಾಟಕದ ಜೊತೆ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಬೇರೆ ಹೇಳಿಕೊಡಬೇಕಾಗಿತ್ತು. ಆಸ್ಪತ್ರೆ ಶುರುವಾಗಿ ಎರಡೇ ವರ್ಷಗಳಾಗಿದ್ದರಿಂದ ಹೊರ ಹಾಗೂ ಒಳರೋಗಿಗಳ ಸಂಖ್ಯೆ ಇನ್ನೂ ನಿಯಮಿತ ಗಡಿಯನ್ನು ಮುಟ್ಟಿರಲಿಲ್ಲ. ೬೭೫ ಬೆಡ್ಡಿನ ಆಸ್ಪತ್ರೆಯಲ್ಲಿ ಎಂಬತ್ತರಿಂದ ನೂರ ಒಳರೋಗಿಗಳಿದ್ದರೆ ಹೆಚ್ಚು. ಆದರೆ, ಶೇಕಡಾ ಎಪ್ಪತ್ತರಷ್ಟು ವಿದ್ಯಾರ್ಥಿಗಳು ಕ್ಯಾಪಿಟೇಶನ್ ಕೊಡುವವರಾದ್ದರಿಂದ ಆಸ್ಪತ್ರೆ ನಡೆಸಲು ಯಥೇಚ್ಚವಾಗಿ ದುಡ್ಡೇನೋ ಬರುತ್ತಿತ್ತು. ಆದರೆ, ಆಸ್ಪತ್ರೆ, ಕಾಲೇಜು, ಹಾಸ್ಟೆಲ್ಲುಗಳ ಕಟ್ಟಡಕ್ಕೆ ಸುಮಾರು ಸಾಲ ಮಾಡಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಗವಿಸಿದ್ದಪ್ಪನಿಗೆ ತುಂಬಾ ಮುಖ್ಯವಾಗಿತ್ತು. ಊರಲ್ಲಿರುವ ಡಾಕ್ಟರುಗಳನ್ನೆಲ್ಲಾ ಕರೆದು ತಂದು ಅಸಿಸ್ಟೆಂಟ್ ಪ್ರೊಫೆಸರಾಗಿಯೋ, ಪ್ರೊಫೆಸರಾಗಿಯೋ ಮಾಡಿದ್ದರೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿರಲಿಲ್ಲ. ಡಾಕ್ಟರುಗಳು ಆಸ್ಪತ್ರೆಗೆ ಬಂದರೂ ತಮ್ಮ ರೋಗಿಗಳನ್ನು ಸಾರಾಸಗಟಾಗಿ ಆಸ್ಪತ್ರೆಗೆ ತಮ್ಮ ಜತೆಗೇ ಕರೆತರಲು ತಯಾರಿರಲಿಲ್ಲ. ಪ್ರತಿ ತಿಂಗಳ ಮೀಟಿಂಗಿನಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಊರಿನಿಂದ ಹೇಗೆ ರೋಗಿಗಳನ್ನು ಆಸ್ಪತ್ರೆಗೆ ಬರಲು ಒಲಿಸಬೇಕೆನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆಯಾದರೂ ಉಪಯೋಗವಾಗಿರಲಿಲ್ಲ. ಅದಲ್ಲದೆ, ಈಗ ಇನ್ನು ಮೂರು ತಿಂಗಳಿಗೆ ಮೆಡಿಕಲ್ ಕೌನ್ಸಿಲ್ಲಿನವರು ಹಂಗಾಮಿಯಾಗಿ ಅಂಗೀಕರಿಸಲು ತಪಾಸಣೆಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿದ ಮೇಲಂತೂ ಗವಿಸಿದ್ದಪ್ಪನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಕೌನ್ಸಿಲ್ಲಿನವರಿಗೆ ಕೊಡುವುದು ಬಿಡುವುದು ಎಷ್ಟೇ ಇದ್ದರೂ ಕನಿಷ್ಠಮಿತಿಯನ್ನಾದರೂ ಕಾಗದದ ಮೇಲೆ ತೋರಿಸಲೇಬೇಕಿತ್ತು. ಡಾಕ್ಟರುಗಳ ಮೆಲೆ ಒತ್ತಡ ತೀರ ಜಾಸ್ತಿಯಾಗಿತ್ತು. ಹೆಚ್ಚು ರೋಗಿಗಳನ್ನು ಅಡ್ಮಿಟ್ ಮಾಡಿ, ಅಥವಾ ಅಡ್ಮಿಟ್ ಆದ ರೋಗಿಗಳನ್ನು ಡಿಸ್ಚಾರ್ಜ್ ಮಾಡದೆ ಆಸ್ಪತ್ರೆಯಲ್ಲಿರಿಸಿಕೊಂಡು “ಒಳರೋಗಿದಿನ”ಗಳನ್ನು ಹೆಚ್ಚು ಮಾಡುವುದು ಪ್ರತಿಯೊಬ್ಬ ಡಾಕ್ಟರನ ಆದ್ಯ ಕರ್ತವ್ಯವಾಗಿತ್ತು. ಓಪಿಡಿಗೆ ಹೋಗಿ ಕೂತ ಚಕ್ರಪಾಣಿ. ಕೂತು ಆಕಳಿಸಿ ಆಕಳಿಸಿ ಸಾಕಾಗಿತ್ತು. ಪಕ್ಕದ ರೂಮಿನಲ್ಲಿ ಡಾ:ನಾಯಕ್ ಕೂತಿದ್ದರು. ವಾರಕ್ಕೆ ಮೂರುದಿನ ಬಂದು ಹುಡುಗರಿಗೆ ಪಾಠ ಹೇಳಿ ಹೋಗುತ್ತಿದ್ದರು. ಮೈಸೂರು ಮೆಡಿಕಲ್ ಕಾಲೇಜಿನ ಮೆಡಿಸಿನ್ ಪ್ರೊಫೆಸರರಾಗಿ ರಿಟೈರಾಗಿ ಎರಡು ವರ್ಷವಾಗಿತ್ತು. ಮೈಸೂರಿನಲ್ಲಿ ಪ್ರಾಕ್ಟೀಸಾಗದೇ ಇದ್ದಾಗ ಮನೆಯಲ್ಲಿ ಕೂರಲು ಬೇಜಾರೆಂಬ ನೆವದಿಂದ ಈ ಕಾಲೇಜು ಸೇರಿದ್ದರು. ಒಂದು ದಿನವೂ ಯಾವ ರೋಗಿಯ ಮೇಲೆ ಕೈಯಿಟ್ಟು ನೋಡುವ ಗೋಜಿಗೇ ಹೋಗುತ್ತಿರಲಿಲ್ಲ. ಬಂದವರೇ ” ರೀ ಚಕ್ರಪಾಣಿ, ಯಾವುದಾದರೂ ಇಂಟರೆಸ್ಟಿಂಗ್ ಕೇಸಿದೆಯೇನ್ರೀ, ಹುಡುಗರಿಗೆ ತೋರಿಸಕ್ಕೆ” ಎಂದವರೇ ಮೂರುಗಂಟೆ ಕೊರೆದು ಬಸ್ಸು ಹತ್ತಿ ವಾಪಸ್ ಹೋಗುತ್ತಿದ್ದರು. ಅರ್ಥವಾಗುತ್ತದೋ ಇಲ್ಲವೋ, ಒಟ್ಟು ಮೂರು ಗಂಟೆ ಅವರೆದುರು ಕುರಿಯರೀತಿ ನಿಂತಿರುವುದು ಹುಡುಗರಿಗೆ ಅಭ್ಯಾಸವಾಗಿಹೋಗಿತ್ತು. ಇವರ ಯುನಿಟ್ಟಿನಲ್ಲಿ ಇದ್ದವರು ಇಬ್ಬರೇ. ಆ ಮೆಡಿಕಲ್ ಕಾಲೇಜು ಇನ್ನೂ ಹೌಸ್ ಸರ್ಜನುಗಳನ್ನು ತಯಾರು ಮಾಡಿಲ್ಲದೇ ಇರುವುದರಿಂದ ಚಕ್ರಪಾಣಿಯೇ ಮೇಲಿನ ಕೆಳಗಿನ ಎಲ್ಲಾ ಕೆಲಸಗಳನ್ನು ಮಾಡಬೇಕಿತ್ತು. ಎಲ್ಲದಕ್ಕೂ ತನ್ನ ಹಣೆಬರಹವನ್ನು ಶಪಿಸುವುದನ್ನು ಬಿಟ್ಟು ಚಕ್ರಪಾಣಿಗೆ ಬೇರೆ ದಾರಿಯಿರಲಿಲ್ಲ. ಇವೆಲ್ಲವೂ ಸ್ವಲ್ಪ ಸಮಯ ಮಾತ್ರ ಅಂದುಕೊಂಡು ಎಲ್ಲವನ್ನು ಸಹಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ. ಸುಷ್ಮಾಳ ಬಗ್ಗೆ ಏನು ಮಾಡಬೇಕೆಂದು ಇನ್ನೂ ತಿಳಿದಿರಲಿಲ್ಲ ಚಕ್ರಪಾಣಿಗೆ. ದೇಶ ಬಿಡಬೇಕೆಂದು ಆತ ಎಂದೂ ಯೋಚಿಸಿರಲಿಲ್ಲ. ಮೇಲಾಗಿ ಅವನಿಗೆ ಇಪ್ಪತ್ತೇಳು ವರ್ಷಗಳಾಗಿತ್ತು. ಈಗ ಅಮೆರಿಕಕ್ಕೆ ಹೋಗಿ ಎಂ ಎಲ್ ಇ ಮುಗಿಸಿ ರೆಸಿಡೆನ್ಸಿ ಮುಗಿಸುವುದರ ಹೊತ್ತಿಗೆ ಮೂವತ್ತೋ, ಮೂವತ್ತೊಂದೋ ಆಗಿರುತ್ತದೆ. ಆಮೇಲೆ ಮೂರುವರ್ಷ ಫೆಲೋಶಿಪ್ಪು. ಪ್ರಾಕ್ಟೀಸ್ ಶುರುಮಾಡುವಹೊತ್ತಿಗೆ ಮೂವತ್ತೈದಾಗಿರುತ್ತದೆ. ಅದೂ ಸುಷ್ಮಾ ಎಲ್ಲದಕ್ಕೂ ಹೊಂದಿಕೊಂಡು ಹೋದರೆ ಮಾತ್ರ. ಕಾಲೇಜು ಮುಗಿಸಿ ಯಾವುದೋ ಆಸ್ಪತ್ರೆಯಲ್ಲಿ ಸೋಷಿಯಲ್ ವರ್ಕರಾಗಿ ಕೆಲಸ ಮಾಡುತ್ತಿದ್ದಾಳಂತೆ. ಇದುವರೆಗೂ ಚಕ್ರಪಾಣಿ ಕೆಲಸ ಮಾಡಿದ ಆಸ್ಪತ್ರೆಗಳಲ್ಲಿ ಸೋಷಿಯಲ್ ವರ್ಕರ್ ಅನ್ನುವರೊಬ್ಬರೇ ಇರಲಿಲ್ಲ. ಅಮೆರಿಕಾದ ವೈದ್ಯ ಪದ್ಧತಿಯ ಬಗ್ಗೆ ಪೂರಾ ಜ್ಞಾನವಿಲ್ಲದ ಅವನಿಗೆ ಸುಷ್ಮಾಳೊಂದಿಗೆ ಫೋನಿನಲ್ಲಿ ಮಾತನಾಡಿದ ಮೇಲೆ ಈ ಸೋಷಿಯಲ್ ವರ್ಕರೆಂದರೆ ಕೆಲಸಕ್ಕೆ ಬಾರದ ಕೆಲಸವೆಂದೆನಿಸಿತ್ತು. ” ವಿ ವರ್ಕ್ ಆಸ್ ಲೈಯಾಸನ್ ಬಿಟ್ವೀನ್ ಪೇಷೆಂಟ್ಸ್ ಅಂಡ್ ದ ಸಿಸ್ಟೆಂ ಯು ನೋ. ಇಲ್ಲಿನ ಪರಿಸರ ಅಲ್ಲಿಗಿಂತಾ ತುಂಬಾ ಬೆರೆಯಾಗಿರುವುದರಿಂದ ನನ್ನ ಕೆಲಸ ನಿಮಗೆ ಅರ್ಥ ಆಗುವುದು ಸ್ವಲ್ಪ ಕಷ್ಟ. ರೋಗಿಗಳ ಮನೆಯ ಸ್ಥಿತಿಗತಿಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡುವುದು, ಡಿಸ್ಚಾರ್ಜ್ ಪ್ಲಾನಿಂಗ್, ಮ್ಯಾರೇಜ್ ಕೌನ್ಸೆಲಿಂಗ್, ಇತ್ಯಾದಿ, ಇತ್ಯಾದಿ” ಒಂದೇ ಸಮನೇ ಬಡಬಡಿಸಿದ್ದಳು. ತನಗಿಂತ, ತನ್ನ ಮನೆಯವರಿಗಿಂತ ತನ್ನ ಕೆಲಸದ ಬಗ್ಗೆಯೇ ಹೆಚ್ಚು ಹೇಳಿದ್ದಳು. ಚಕ್ರಪಾಣಿಗೆ ಅನ್ನಿಸಿತ್ತು ನಮ್ಮ ಆಸ್ಪತ್ರೆಯಲ್ಲಿ ನಾನೇ ಡಾಕ್ಟರು, ಸೋಷಿಯಲ್ ವರ್ಕರು, ಡಿಸ್ಚಾರ್ಜ್ ಪ್ಲಾನರು, ಡಯಟಿಶಿಯನ್ನು ಎಲ್ಲ ಎಂದು. ಅಮ್ಮ ಸುಷ್ಮಾಳ ಬಗ್ಗೆ ಹೇಳಿದಾಗ ಬೇಡವೆಂದು ತಳ್ಳಿ ಹಾಕಲು ಮನಸ್ಸು ಬಂದಿರಲಿಲ್ಲ.” ಸುಮ್ಮನೇ ಮಾತಾಡೋ, ಅವಳು ಒಪ್ಪಿಕೊಂಡಮೇಲೆ ತಾನೇ ಮುಂದಿನದು” ಅಂದಿದ್ದಳು ಅಮ್ಮ. ಮಾತು ಮುಖಕ್ಕೆ ಹೊಡೆದಂತೆ ಇದ್ದರೂ ತನ್ನ ಸದ್ಯದ ಪರಿಸ್ಥಿತಿಯಲ್ಲಿ ಅದು ತಪ್ಪೇನೂ ಅನ್ನಿಸಲಿಲ್ಲ. ” ಬೇಜಾರು ಮಾಡ್ಕೋಬೇಡ ಕಣೊ ಚಕ್ರಿ, ಎಷ್ಟಾದರೂ ಹೊರಗಿನವಳು ಹುಡುಗಿ. ಅವಳನ್ನು ಮದುವೆ ಮಾಡ್ಕೋಳ್ಳೊದರಿಂದ ನಿನಗೂ ಲಾಭ ಇದೆ. ಸುಮ್ಮನೆ ಒಣ ಜಂಭ ಮಾಡಬೇಡ” ಬದುಕುವ ದಾರಿ ಹೇಳಿದ್ದಳು ಅಮ್ಮ. ತನ್ನ ಆದರ್ಶ,ವಿಶ್ವಾಸಗಳೆಲ್ಲ ಕುಸಿಯುತ್ತಿದೆ ಅನ್ನಿಸಿತ್ತು. ಸ್ವಂತ ಕ್ಲಿನ್ನಿಕ್ಕು ಹಾಕಲು ಯಾಕೋ ಮನಸ್ಸು ಬರುತ್ತಿರಲಿಲ್ಲ. ಗವಿಸಿದ್ದಪ್ಪನ ಕಾಲೇಜಿನಲ್ಲಿ ಇನ್ನೊಂದೆರಡು ವರ್ಷವೇನಾದರೂ ಇದ್ದರೆ ಬೇರೆ ಏನನ್ನೂ ಮಾಡಲು ಸಾದ್ಯವಾಗುವುದು ಕನಸಿನ ಮಾತೇ ಎಂಬುದು ಅವನಿಗೆ ಈಗಾಗಲೇ ಗ್ಯಾರಂಟಿಯಾಗಿತ್ತು. ಇದಕ್ಕಿಂತಾ ಹೆಚ್ಚಿನದನ್ನೇನಾದರೂ ಮಾಡಬೇಕು, ತನ್ನಲ್ಲಿ ಅಶಕ್ತಿಯಿದೆ ಅನ್ನಿಸಿದ್ದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡುತ್ತಿದ್ದ. ಇರುವ ಎರಡೋ ಮೂರೋ ಕಾರ್ಡಿಯಾಲಜಿ ಸೀಟಿಗೆ ಎರಡು ವರ್ಷ ಕೂತು ಓದಲು ಅವನಿಗೆ ಸಾಧ್ಯವಿರಲಿಲ್ಲ.ಇಷ್ಟರ ಮೆಲೆ ಒಂದಾದಮೇಲೆ ಒಂದರಂತೆ ಬರುತ್ತಿರುವ ಸಂಬಂಧಗಳು. ಏನೋ ಕಾರಣ ಹೇಳಿಮುಂದೆ ತಳ್ಳುತ್ತಾ ಬಂದಿದ್ದ. ಆದರೆ ಯಾಕೋ ಏನೋ ಈ ನಡುವೆ ಅವನ ಬಗ್ಗೆ ಅವನಿಗೇ ಅನುಮಾನವಾಗತೊಡಗಿತ್ತು. ತನ್ನ ಇನ್ಸೆಕ್ಯುರಿಟಿ ಯಾವ ಸಂದರ್ಭದಲ್ಲಿ ದೊಡ್ಡವರ ಒತ್ತಾಯಕ್ಕೆ ತನ್ನನ್ನು ಮಣಿಸಿ ಯಾರನ್ನೋ ಕಟ್ಟಿಕೊಳ್ಳುವ ಹಾಗೆ ಮಾಡುತ್ತದೇನೋ ಎಂದು ಹೆದರಿಕೆಯಾಗುತ್ತಿತ್ತು. ಮದುವೆಯ ಬಗ್ಗೆ ತಾನು ಮದುವೆ ಆಗುವ ಹುಡುಗಿಯ ಬಗ್ಗೆ ಅವನಿಗಿದ್ದಿದ್ದ ಆಸೆಗಳೆಲ್ಲಾ ತಣ್ಣಗಾಗತೊಡಗಿದ್ದವು. ಇದಲ್ಲದೆ ಒಂದಿಬ್ಬರು ಹುಡುಗಿಯರು ಇವನನ್ನು ಇನ್ನೂ ” ಸೆಟಲ್” ಆಗಿಲ್ಲವೆಂದು ನಿರಾಕರಿಸಿದಮೇಲೆ ಇವನ ವಿಶ್ವಾಸ ಕುಗ್ಗುತ್ತಾ ಬಂದಿತ್ತು. ತನ್ನ ಭವಿಷ್ಯ ಭದ್ರವಾಗುವತನಕ ಮದುವೆಯ ಸುದ್ದಿ ಎತ್ತಬಾರದೆಂದುಕೊಂಡಿದ್ದ. ಆದರೆ ತನ್ನ ಕೆಲವು ಸಹೋದ್ಯೋಗಿಗಳನ್ನು ನೋಡಿ ಸ್ವಲ್ಪ ಹೆದರಿಕೆಯೇ ಆಗಿತ್ತು. ಇವನಿಗಿಂತ ವಯಸ್ಸಿನಲ್ಲಿ ಹದಿನೈದು ಇಪ್ಪತ್ತು ವರ್ಷ ದೊಡ್ಡವರೂ ಕೂಡ ಆ ಗವಿಸಿದ್ದಪ್ಪನ ಕಾಲೇಜಿನಲ್ಲಿ ಹೆಣಗಾಡುವುದು ಕಂಡು ತಾನೂ ಹಾಗೇ ಎಲ್ಲಿ ಆಗಿಬಿಡುತ್ತೇನೋ ಎಂದು ಒಮ್ಮೊಮ್ಮೆ ಭಯವಾಗುತ್ತಿತ್ತು. ಬಹಳ ಇಷ್ಟಪಟ್ಟು ಸೇರಿದ ಈ ಡಾಕ್ಟರುಗಿರಿ ಯಾಕೋ ಮೈಚಳಿಯನ್ನುಂಟುಮಾಡುತ್ತಿತ್ತು. ಈ ಅಲೆಯಲ್ಲೇ ಬಂದಿತ್ತು ಸುಷ್ಮಾಳ ಹೆಸರು. ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರಿನಲ್ಲಿಯೇ, ಹದಿನೇಳನೆಯ ವಯಸ್ಸಿಗೆ ಅಮೆರಿಕಕ್ಕೆ ಹೋಗಿದ್ದಾಳೆ. ಆದ್ದರಿಂದ ಪೂರ ಅಲ್ಲಿನಂತಿರಲಾರಳು. ಅಪ್ಪ ಅಮ್ಮನೂ ತುಂಬಾ ಸಂಪ್ರದಾಯಸ್ಥರೇ. ಅಪ್ಪ ಅಲ್ಲಿಯ ಕನ್ನಡಕೂಟದ ಅಧ್ಯಕ್ಷ ಬೇರೆ ಅಂತೆ. ನಮ್ಮ ದೇಶ ನಮ್ಮ ಭಾಷೆಯ ಮೇಲೆ ಅಭಿಮಾನವಿರೋ ಜನ. ಒಮ್ಮೆ ನೋಡುವುದರಲ್ಲಿ ತಪ್ಪೇನಿಲ್ಲವೆಂದು ಅಮ್ಮ ಹೇಳಿದಾಗ ಇವನೂ ಇರಲಿ ಎಂದು ಒಪ್ಪಿದ್ದ. ಒಮ್ಮೆ ಫೋನಿನಲ್ಲಿ ಮಾತೋ ಆಡಿಯಾಗಿತ್ತು. ಸ್ವಲ್ಪ ಅಮೆರಿಕೀಕರಣವಿದ್ದರೂ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾಳೆ ಅನ್ನಿಸಿತ್ತು. ಆದರೆ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ತನ್ನ ಮೇಲೆ ತನಗೇ ಹೇಸಿಗೆಯದಂತನಿಸುತ್ತಿತ್ತು. ಯಾವುದನ್ನು ತಾನು ಮಾಡಬಾರದು ಎಂದು ಜೀವನವಿಡೀ ಅಂದುಕೊಂಡಿದ್ದನೋ ಆ ಬಲೆಯಲ್ಲಿ ತನಗರಿವಿಲ್ಲದೇ ಹಂತಹಂತವಾಗಿ ಸಿಗುತ್ತಿದ್ದೇನೆ ಅನ್ನಿಸಿತು. ಮೇಲಾಗಿ ಸುಷ್ಮಾ ತನ್ನನ್ನೊಪ್ಪುವುದು ತಾನು ಅವಳನ್ನೊಪ್ಪುವುದಕ್ಕಿಂತ ತೀರ ಮುಖ್ಯವಾದ್ದರಿಂದ ಇದೊಂದು ನಾಟಕವೆನ್ನಿಸಿತ್ತು. ಗಂಟೆ ಹತ್ತಾಗತೊಡಗಿತ್ತು. ಓಪಿಡಿಯಲ್ಲಿ ನಾಲ್ಕು ಜನರನ್ನು ನೋಡಿದ್ದ. ಹೊರಗೆ ಯಾರೂ ಕಾಣಿಸಲಿಲ್ಲ. ಸರಿ, ಸತೀಶನ ಡಿಪಾರ್ಟ್ ಮೆಂಟಿನ ಕಡೆಗೆ ಹೋಗೋಣವೆಂದು ಕೋಟು ತೆಗೆದು ಖುರ್ಚಿಗೆ ಹಾಕಿ, ಖುರ್ಚಿ ಹಿಂದೆ ಸರಿಸಿ ಎದ್ದ. “ನಮಸ್ಕಾರಾ, ಸಾ” ಬಗಿಲಲ್ಲಿ ನಿಂತಿದ್ದ, ನರಸಿಂಹ. ನರಸಿಂಹ, ಪುಟ್ಟರಾಜು ಗವಿಸಿದ್ದಪ್ಪನ ಕರಟಕ, ದಮನಕರು. ಏನು ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದ ಚಕ್ರಪಾಣಿ.. “ಸಾಯೇಬ್ರು ಈ ಐದು ಕೇಸ್ ಶೀಟು ಬರಿಸ್ಕೊಂಬಾ ಅಂತ ಹೇಳಿದ್ರು ಸಾ. ಇನ್ಮೇಲೆ ಕೌನ್ಸಿಲ್ಲಿನವರು ಇನ್ಸ್ ಪೆಕ್ಸನ್ ಮಾಡೋಗಂಟ ದಿನ ಐದು ಕೇಸ್ ಶೀಟ್ ತರ್ತೀನಿ, ಸಾ. ಈ ರಿಜಿಸ್ಟರ್ ಗೆ ಒಂದ್ ಸೈನ್ ಮಾಡಿ. ಪೂರಾ ಮಾಡಿ ಆದ ಮ್ಯಾಕೆ ಸಾಯೇಬ್ರ ಆಪೀಸಿನ ತಾಗೆ ತಂದು ಮಡಗ್ಬಿಡಿ ಸಾ” ಅರ್ಥವಾಗಲಿಲ್ಲ, ಚಕ್ರಪಾಣಿಗೆ. ರಿಜಿಸ್ಟರ್ ಗೆ ಸೈನ್ ಹಾಕಿ ಕೇಸ್ ಶೀಟುಗಳನ್ನು ತೆಗೆದುಕೊಂಡ. ತಾನು ಇದುವರೆವಿಗೂ ನೋಡಿಲ್ಲದೇ ಇರುವ ರೋಗಿಗಳ ಹೆಸರಿನಲ್ಲಿರುವ ಕೇಸ್ ಶೀಟುಗಳು. ಪ್ರತಿಯೊಂದೂ ಮೂರು ತಿಂಗಳ ಹಿಂದಿನ ತಾರೀಖಿನಲ್ಲಿದೆ. ಆಸ್ಪತ್ರೆಗೆ ಅಡ್ಮಿಟ್ ಆದ ದಿನ, ಡಿಸ್ಚಾರ್ಜ್ ಆದ ದಿನ, ಕಾಯಿಲೆಯ ಹೆಸರು ಎಲ್ಲ ಮುಂಚೆಯೇ ಭರ್ತಿಯಾಗಿದೆ. ಕಾಯಿಲೆಯ ಡಯಾಗ್ನಸಿಸ್ ಗೆ ತಕ್ಕ ಹಾಗೆ ಒಳಗೆ ಖಾಲಿ ಇರುವ ಜಾಗದಲ್ಲಿ ತಾನು ಕಥೆ ಬರೆಯಬೇಕು. ಇರದೇ ಇರುವ ರೋಗಿಯನ್ನು ಸೃಷ್ಟಿಸಿ ಕಳೆದ ಮೂರು ತಿಂಗಳ ಆಸ್ಪತ್ರೆಯ ಸೆನ್ಸಸನ್ನು ಏರಿಸಬೇಕು. ಅದೂ ಒಂದು ದಿನ ಅಲ್ಲ. ಈ ತಿಂಗಳು ಪೂರ್ತಿ, ಮುಂದಿನ ತಿಂಗಳು ಮೆಡಿಕಲ್ ಕೌನ್ಸಿಲ್ಲಿನವರು ಬರುವ ತನಕ ಈ ಕೆಲಸ ಮಾಡಬೇಕು. ಇರೊ ಐವತ್ತು ಜನ ಡಾಕ್ಟರುಗಳು ದಿನಾ ಐದು ಕೇಸ್ ಶೀಟು ಬರೆದರೆ ಆಸ್ಪತ್ರೆಗೆ ಪ್ರತಿದಿನ ಇನ್ನೂರೈವತ್ತು ರೊಗಿಗಳು ಅಡ್ಮಿಟ್ ಆದಂತಾಗುತ್ತದೆ. ಚಕ್ರಪಾಣಿಗೆ ಮೈ ಉರಿದುಹೋಯಿತು. ” ಏ, ನರಸಿಂಹಾ,” ಕೂಗಿದ. ಹೊರಗೆ ಕಾರಿಡಾರಿನಿಂದ ತಿರುಗಿ ನೋಡಿದ ನರಸಿಂಹ. ” ನಿಮ್ಮ ಸಾಹೇಬ್ರಿಗೆ ಹೇಳು. ನನ್ಕೈಲಿ ಈ ಕೆಲಸ ಮಾಡೋಕ್ಕಾಗೋಲ್ಲ ಅಂತ”. ” ಯಾಕ್ರಿ ಆಗೋಲ್ಲ, ಆಸ್ಪತ್ರೆಯಲ್ಲಿರೋ ಡಾಕುಟ್ರುಗಳಲ್ಲ ಬಾಯ್ಮುಚೊಂಡು ಬರೀತಿಲ್ವಾ ಈಗ, ನೀವು ಯಾಕೆ ಬರೀಬಾರದು” ನರಸಿಂಹ ನಿಂತಲ್ಲಿಂದಲೇ ಹೇಳಿದ. ” ಹೇಳಿದಷ್ಟು ಕೇಳೋ ಅಂದರೆ, ನಾನು ಏನ್ಮಾಡಬೇಕು, ಮಾಡಬಾರದು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಸುಮ್ಮನೆ ತೊಗೊಂಡು ಹೋಗು” ಸಿಟ್ಟನ್ನು ತಡೆಯುತ್ತಾ ಹೇಳಿದ. ” ಅದೆಲ್ಲಾ ಅಗೊಲ್ಲ, ಬೇಕಾರೆ ನೀವೇ ಹೋಗಿ ಸಾಯೇಬ್ರತ್ರ ಮಾತಾಡಿ, ” ಮುಖ ತಿರುಗಿಸಿ ಹೊರಡಲು ಸಿದ್ಧನಾದ ನರಸಿಂಹ. ” ತೊಗೊಳ್ಳೋ ಅಂದ್ರೆ ಎಷ್ಟೋ ಮಾತಾಡೋದು” ಎಂದು ಕೇಸ್ ಶೀಟುಗಳನ್ನು ತೆಗೆದು ಕಾರಿಡಾರಿಗೆ ಎಸೆದ. ಕೋಪದಿಂದ ಭುಸುಗುಟ್ಟುತ್ತಿದ್ದ, ಚಕ್ರಪಾಣಿ. “ಈಸ್ ದೇರ್ ಅ ಪ್ರಾಬ್ಲಂ” ತಮ್ಮ ರೂಮಿನಿಂದ ಹೊರಗೆ ಮದರು ಡಾ: ನಾಯಕ್. ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೇಸ್ ಶೀಟುಗಳು ಹಿಂದಿನ ದಿನ ನಡೆದ ಡಿಪಾರ್ಟ್ಮೆಂಟ್ ಹೆಡ್ಡುಗಳ ಮೀಟಿಂಗಿನ ಹಿನ್ನೆಲೆಯಲ್ಲಿ ಆಗಿದ್ದು ಏನು ಎಂದು ಅರ್ಥವಾಗುವುದರಲ್ಲಿ ಕಷ್ಟವಾಗಲಿಲ್ಲ, ನಾಯಕರಿಗೆ. ” ವಾಟ್ ಈಸ್ ದಿಸ್ ಚಕ್ರಪಾಣಿ, ನರಸಿಂಹೂ, ನೀನು ಹೋಗಪ್ಪ. ನಾನೆಲ್ಲಾ ಸರಿಮಾಡ್ತೀನಿ. ಒಂದ್ನಿಮಿಷ ನರಸಿಂಹೂ, ಬಾ‌ಇಲ್ಲಿ” ಎಂದು ಹತ್ತಿರ ಕರೆದು ಕಿವಿಯಲ್ಲಿ”ಈಗ ನೀನು ಸುಮ್ಮನಿರು. ಸಾಹೇಬ್ರ ಹತ್ರ ಏನೂ ಹೇಳ್ಬೇಡ. ಸಮಯ ಸಿಕ್ಕಾಗ ನಾನೇ ಹೇಳ್ತೀನಿ. ಕೇಸ್ ಶೀಟ್ ಬರೆಸೋ ಜವಾಬ್ದಾರಿ ನನ್ನದು” ಎಂದು ಪುಸಲಾಯಿಸಿ ನೆಲದ ಮೇಲೆ ಬಿದ್ದಿದ್ದ ಕೇಸ್ ಶೀಟುಗಳನ್ನು ಹೆಕ್ಕತೊಡಗಿದರು. ನೋಡಲಾರದೇ ತಾನೂ ಆರಿಸತೊಡಗಿದ, ಚಕ್ರಪಾಣಿ. “ಹೇಳಿ ಸಾ, ಈ ಯಪ್ಪಂಗೆ, ಒಳ್ಳೆ ದೊಣ್ಣೆನಾಯ್ಕ ಆಡ್ದಂಗೆ ಆಡ್ತಾವ್ನೆ” ಕೆಟ್ಟಮುಖದಿಂದ ಚಕ್ರಪಾಣಿಯನ್ನೊಮ್ಮೆ ನಿವಾಳಿಸಿ ನೋಡಿ ಅಲ್ಲಿಂದ ಮರೆಯಾದ ನರಸಿಂಹ. ಅವರ ರೂಮಿನಲ್ಲಿದ್ದ ಕಾಲೇಜಿನ ಹುಡುಗ ಹುಡುಗಿಯರನ್ನು ಹೊರಗೆ ಹಾಕಿ ಚಕ್ರಪಾಣಿಯ ರೂಮಿಗೆ ಬಂದರು ನಾಯಕರು. “ಚಕ್ರಪಾಣಿ, ಒಂದ್ನಿಮಿಷ ಇಲ್ಲಿ ಬರ್ತೀರಾ” ಕರೆದರು. ಮಾತಾಡದೇ ಎದ್ದು ಹೋದ.” ಲುಕ್, ಚಕ್ರಪಾಣಿ, ಒಂದು ವ್ಯವಸ್ಥೇಲಿ ಕೆಲಸ ಮಾಡಬೇಕಾದರೆ, ಆ ವ್ಯವಸ್ಥೆಯನ್ನು ಬೆಳೆಸಬೇಕಾದರೆ, ನಮಗಿಷ್ಟವಿಲ್ಲದ ಅನೇಕ ಕೆಲಸವನ್ನು ನಾವು ಮಾಡಲೇಬೇಕಾಗುತ್ತದೆ. ನೀವಿನ್ನೂ ಈಗ ಕೆರೀರ್ ಶುರು ಮಾಡ್ತಾ ಇದ್ದೀರ. ನಿಮಗಿವೆಲ್ಲಾ ಅರ್ಥ ಆಗೋಲ್ಲ. ಕೋಟ್ಯಾಂತರ ರೂಪಾಯಿ ಸುರಿದು ಕಾಲೇಜು ಕಟ್ಟಿಸಿದ್ದಾರೆ. ಎರಡು ವರ್ಷಗಳಲ್ಲಿ ಇಷ್ಟು ದೊಡ್ಡ ಆಸ್ಪತ್ರೆಗೆ ಸರಿಹೋಗುವಷ್ಟು ಇನ್ ಪುಟ್ ತರಬೇಕು ಅಂತ ಕೌನ್ಸಿಲ್ ಕೇಳಿದ್ರೆ, ಪಾಪ ಗವಿಸಿದ್ದಪ್ಪನಾದ್ರೂ ಏನ್ಮಾಡ್ತಾನೆ. ಕೌನ್ಸಿಲ್ಲಿನವರಿಗೆ ದುಡ್ಡು ಕೊಟ್ಟೇ ಕೊಡುತ್ತಾನೆ. ಅಷ್ಟು ಕೊಟ್ಮೇಲೆ ಮತ್ತೇನೂ ಹೆಚ್ಚು ಕಮ್ಮಿ ಆಗಬಾರದು ಅಂತ ಎಲ್ಲಾಕಡೆಯಿಂದ ಭದ್ರ ಮಾಡ್ತಾ ಇದ್ದೀವಷ್ಟೆ. ನೀವು ಬರಿಯೋ ಕೇಸ್ ಶೀಟುಗಳಿಂದಲೇ ರೆಕಗ್ನಿಷನ್ ಸಿಗುತ್ತೆ ಅನ್ನುವ ಹಾಗಿದ್ರೆ ಆ ಕೆಲಸ ಮಾಡಿಸೋದು ಕಷ್ಟವೇನಲ್ಲ. ಮೇಲಾಗಿ ನೀವೊಬ್ಬರು ಬರೀದಿದ್ರೆ ನಷ್ಟ ಆಗೋದು ನಿಮಗೋ ಅವನಿಗೋ ಅನ್ನೋದನ್ನು ಯೋಚಿಸಿ ಚೆನ್ನಾಗಿ” ಅಬ್ಬಾ ಎಂಥ ನಯವಂಚಕತನ ಅನ್ನಿಸಿತು ಚಕ್ರಪಾಣಿಗೆ. ನಾಯಕರಂಥವರ ಸಾಧುಪ್ರಾಣಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾನೆ ಅಂದರೆ ಈ ಗವಿಸಿದ್ದಪ್ಪ ಎಂಥ ಚಾಲಾಕಿ ಮನುಷ್ಯ ಇರಬಹುದು. ಅದರೂ ತಡೆಯಲಿಲ್ಲ, ಚಕ್ರಪಾಣಿಗೆ” ಸರ್, ನೀವೂ ಎಲ್ಲ ಮಾತಾಡೋ ಹಾಗೇ ಮಾತಾಡ್ತೀರಲ್ಲ. ಅಸ್ಪತ್ರೆಗೆ ಪೇಷಂಟುಗಳು ಬರದೇ ಇದ್ದರೆ ಇನ್ನೊಂದೆರಡು ವರ್ಷ ಕಾಯಲಿ. ಅಥವಾ ಮೊದಲು ಆಸ್ಪತ್ರೆ ಕಟ್ಟಿಸಿ ಅದನ್ನು ಬೆಳೆಸಿ ಆಮೇಲೆ ಕಾಲೇಜು ಶುರುಮಾಡಬೇಕಿತ್ತು. ಈಗ ಎಲ್ಲವನ್ನೂ ದಿಢೀರ್ ಅಂತ ಮಾಡಿ ಈಗ ರೆಕಗ್ನಿಷನ್ ಇಲ್ಲ ಅಂತ ಅಳ್ತಾ ಕೂತ್ರೆ ಹೇಗೆ” ಕೇಳಿದ ಚಕ್ರಪಾಣಿ. ” ಯಾವಾಗ ಮೆಡಿಕಲ್ ಕಾಲೇಜ್ ಸ್ಯಾಂಕ್ಷನ್ ಆಗುತ್ತೋ ಆಗ ಶುರುಮಾಡದೇ ನಿಮ್ಮ ಮಾತಿನ ತರ ಇನ್ನು ಹತ್ತು ವರ್ಷ ಕಾದರೆ ಅದು ಇನ್ಯಾರಾರದೋ ಪಾಲಾಗುತ್ತೆ. ಮೇಲಾಗಿ ರೆಕಗ್ನಿಷನ್ ಸಿಗುವತನಕ ಇವೆಲ್ಲ. ಆಮೇಲೆ ನಿಮ್ಮನ್ನು ಯಾರೂ ಏನೂ ಕೇಳೊದಿಲ್ಲ” “ಇಲ್ಲ ಸಾರ್, ಇದೊಂದು ವಿಷ ಕೂಪ. ಈಗ ಕಾಲೇಜಿಗೆ, ಆಸ್ಪತ್ರೆಗೆ ಯಾಗೆ ರೆಕಗ್ನಿಷನ್ ಸಿಗಬೇಕು ಹೇಳಿ. ಕೌನ್ಸಿಲ್ಲು ರೆಕಗ್ನೈಸ್ ಮಾಡಿದ್ರೆ ಇನ್ನು ಮೂರು ವರ್ಷಕ್ಕೆ ಪೋಸ್ಟ್ ಗ್ರಾಜುಯೇಷನ್ ಶುರು ಮಾಡಬಹುದು. ಎಂಡಿ ಎಮ್ಮೆಸ್ಸ್ ಗೆ ಎನ್ನಾರೈ ಗಳು ಹದಿನೈದರಿಂದ ಇಪ್ಪತ್ತು ಲಕ್ಷ ಸಿಗುತ್ತೆ. ವರ್ಷಕ್ಕೆ ಇಪ್ಪತ್ತು ಸೀಟು ಕೊಟ್ರೆ ಇಪ್ಪತ್ತು ವರ್ಷ ನನಗೆ ನಿಮಗೆ ಸಂಬಳ ಕೊಟ್ಕೊಂಡು ಇಟ್ಕೊಂಡಿರಬಹುದು. ಆಸ್ಪತ್ರೆಗೆ ಒಬ್ಬ ಪೇಷೆಂಟು ಬರದಿದ್ರೂ ನಡೆಯುತ್ತದೆ, ಇದು ನಿಮಗೆ ಗೊತ್ತಿರದ ವಿಷಯವೇನಲ್ಲ” ” ಚಕ್ರಪಾಣಿ, ಒಂದಿಷಯ ಕೇಳ್ತೀನಿ. ಪ್ರಾಮಾಣಿಕವಾಗಿ ಉತ್ತರ ಕೊಡಿ. ಈ ಆಸ್ಪತ್ರೆಯಲ್ಲೇ ಇರೋ ಯೋಚನೆ ಇದ್ಯಾ ಅಥವಾ ಬೇರೆ ಏನಾದರೂ ಪ್ಲಾನ್ ಇದೆಯ” ” ಇಲ್ಯಾವನಿರ್ತಾನೆ ಸಾರ್, ಎಂ ಎಲ್ ಇ ತೊಗೊಳಣ ಅಂತಿದೀನಿ”- ತನಗರಿವಿಲ್ಲದೆಯೇ ಬಂದಿತ್ತು ಉತ್ತರ. ಅವನಿಗೇ ಆಶ್ಚರ್ಯವಾಗಿತ್ತು. ಈ ಉತ್ತರ ಸಾಂದರ್ಭಿಕವಾದರೂ ಈಗ ಹತ್ತು ನಿಮಿಷದ ಹಿಂದೆ ತಲೆಯಲ್ಲಿ ಕೊರೆಯುತ್ತಿದ್ದ ಸಮಸ್ಯೆಗೆ ಉತ್ತರ ಸಿಕ್ಕಿತೇನೋ ಅನ್ನಿಸಿತು. “ಗುಡ್, ಆದರೆ ನಾನು ಇಲ್ಲೇ ಇರಬೇಕು ತಿಳಿಯಿತಾ. ನಿಮ್ಮೊಬ್ಬರಿಂದ ಡಿಪಾರ್ಟ್ ಮೆಂಟಿಗೆ ಕೆಟ್ಟ ಹೆಸರು ಬರುವುದು ಬೇಡ. ನಾನು ಬರೀತೀನಿ ಕೇಸ್ ಶೀಟು ನನಗೇನು ನಾಚಿಕೆಯಿಲ್ಲ. ಮತ್ತೆ ಮೋಸ ಮಾಡ್ತಾ ಇದ್ದೀನಿ ಅನ್ನೋ ಭಾವನೆ ನನಗೆ ಕಿಂಚಿತ್ತೂ ಬರೋಲ್ಲ. ಮೈ ಡೇಸ್ ಅರ್ ಓವರ್. ಮತ್ತೆ ನಾನಿಲ್ಲೇ ಇರಬೇಕು. ಮತ್ತೆ ಇನ್ನೊಂದು ವಿಷಯ ನಾನು ಗವಿಸಿದ್ದಪ್ಪಂಗೆ ಹೇಳಲಿ ಬಿಡಲಿ, ಇವತ್ತು ಇಲ್ಲಿ ಆದ ವಿಷಯ ಅವನಿಗೆ ತಿಳಿದೇ ತಿಳಿಯುತ್ತೆ. ಐ ಹ್ಯಾವ್ ಹರ್ಡ್, ಅಮೆರಿಕಾದಲ್ಲಿ ಮುಂಚೆ ಕೆಲಸ ಮಾಡಿರುವ ಜಾಗಗಳ ರೆಕಮಂಡೇಷನ್ ತುಂಬಾ ಮುಖ್ಯ ಎಂದು. ಎ ಡೀನ್ಸ್ ಲೆಟರ್ ಕೆನ್ ಗೋ ಲಾಂಗ್ ವೇಸ್. ಹುಬ್ಬಳ್ಳಿಯ ಡೀನ್ ನಿಮಗೆ ಲೆಟರ್ ಕೊಡ್ತಾರ ಅಂತ ಯೋಚನೆ ಮಾಡಿ. ಯಾವ ಕಾಲೇಜು ಅಂಥ ಯಾರೂ ಬಾದರ್ ಮಾಡಲ್ಲ. ಒಟ್ಟು ಡೀನಿನ ಲೆಟರ್ ಹೆಡ್ಡಿನಲ್ಲಿದ್ದರೆ ಆಯಿತು. ಐ ಥಿಂಕ್ ಐ ಕೆನ್ ಪುಲ್ ಸಂ ಸ್ಟ್ರಿಂಗ್ಸ್ ಹಿಯರ್” ಹೇಳುತ್ತಿದ್ದರು. ಇದು ಬೆದರಿಕೆಯೋ ಪುಸಲಾಯಿಸುವಿಕೆಯೋ ತಿಳಿಯದೆ ಕೇಸ್ ಶೀಟುಗಳನ್ನು ಕೈಯಲ್ಲಿ ತೆಗೆದುಕೊಂಡ ಚಕ್ರಪಾಣಿ. +* +* +* +ಭಾನುವಾರ ಬೆಳಿಗ್ಗೆಯೇ ಬೆಂಗಳೂರಿಗೆ ಹೋಗಿದ್ದ ಚಕ್ರಪಾಣಿ. ಸಾಂಪ್ರದಾಯಿಕವಾಗಿ ನೋಡುವ ಶಾಸ್ತ್ರ ಬೇಡವೆಂದು ಇಬ್ಬರೂ ಮೊದಲೇ ತೀರ್ಮಾಸಿದ್ದಾಗಿತ್ತು. ಅಮ್ಮ ಇದಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಳು. ಮೊದಲು ಚಕ್ರಪಾಣಿ ಸುಷ್ಮಾ ಒಬ್ಬರನ್ನೊಬ್ಬರು ನೋಡಿ ಮಾತನಾಡಿ ಹಸಿರು ನಿಶಾನೆ ತೋರಿಸಿದರೆ ಮುಂದುವರಿಯುವುದು ಎಂದು ನಿರ್ಧಾರವಾಗಿತ್ತು. ಅಮೆರಿಕಾದ ಹುಡುಗಿಯರನ್ನು ನೋಡುವುದರಲ್ಲಿ ಈ ಅನುಕೂಲವಿದೆ ಅನ್ನಿಸಿತ್ತು, ಚಕ್ರಪಾಣಿಗೆ. ಈ ರೀತಿಯ ವ್ಯವಸ್ಥೆಗೆ ಅಮ್ಮ ಖಂಡಿತಾ ಒಪ್ಪುವುದು ಸಾಧ್ಯವೇ ಇರಲಿಲ್ಲ. ಅಮೆರಿಕಾಕ್ಕೆ ಕಳಿಸಬೇಕು ಎಂದು ಹುಡುಗಿಯರ ಅಮ್ಮ, ಅಪ್ಪಂದಿರಿಗೆ ಮಾತ್ರ ಚಪಲವಿರುತ್ತದೆ ಎಂದುಕೊಂಡಿದ್ದ. ಆದರೆ ಇಲ್ಲಿ ತನ್ನನ್ನು ಅಟ್ಟಿ ಹಾಕಬೇಕು ಎನ್ನುವುದು ತನಗಿಂತಾ ಜಾಸ್ತಿ ಅಮ್ಮನಿಗೇ ಇದೆ ಅನ್ನಿಸಿತ್ತು. ಯಾವುದೋ ಕಾಶೀನಾಥನ ಹಾಡು ನೆನಪಿಗೆ ಬಂದಿತ್ತು. ’ಅಮ್ಮಾ, ನಾ ಸೇಲಾದೆ’. ಥತ್ತೇರಿ, ಎಂದುಕೊಂಡ. ಎಲ್ಲಿಯ ಸುಷ್ಮಾ, ಎಲ್ಲಿಯ ಅಮೆರಿಕ, ಎಲ್ಲಿಯ ಕಾಶೀನಾಥ. ಸುಷ್ಮಾ ತನಗೆ ಸಿಗುವುದು ಕನಸು ಅನ್ನಿಸಿತು. ಇರಲಿ, ನೋಡೋಣ ಎಂದುಕೊಂಡು ಬಸ್ ಸ್ಟ್ಯಾಂಡಿನಿಂದ ರೆಸಿಡೆನ್ಸಿ ರೋಡಿಗೆ ಆಟೋ ಹತ್ತಿದ್ದ. ನಾಗಾರ್ಜುನದ ಮುಂದೆ ಆಟೋ ನಿಲ್ಲಿಸಿ ಫುಟ್ ಪಾತಿನ ಮೇಲೆ ಕಾಯುತ್ತಾ ನಿಂತಿದ್ದ. ಅಕಸ್ಮಾತ್ ಸುಷ್ಮಾ ಒಪ್ಪಿದರೆ ಏನು ಮಾಡುವುದು ಎಂದು ಯೋಚಿಸಹತ್ತಿದ್ದ. ಎಲ್ಲ ಬಿಟ್ಟು ಅವಳ ಹಿಂದೆ ಹೋಗುವುದೇ ನಿಜವಾಗುತ್ತದೆ. ನಾನು ಈಗ ಏನೇ ಅಂದುಕೊಂಡರೂ ಸತ್ಯ ಅದೇ. ಈಗ ಮದುವೆಗೆ ಮುಂಚೆ ಎಲ್ಲರೂ ಸಾವಿರ ಹೇಳಬಹುದು. ಸುಷ್ಮಾ ಇಂಡಿಯಾಕ್ಕೆ ಬಂದು ಇಲ್ಲಿ ಸಂಸಾರ ಮಾಡುತ್ತಾಳೆಂದು ತಾನು ತಿಳಿದರೆ ತನ್ನಷ್ಟು ಮೂರ್ಖ ಯಾರೂ ಇರುವುದಿಲ್ಲ. ಅಷ್ಟು ಯಾಕೆ ಒಂದು ಪಕ್ಷ ಅವಳಿಗೆ ಇಷ್ಟವಿದ್ದರೂ ಅಮ್ಮ ಅದಕ್ಕೆ ಸಿದ್ಧವಿದ್ದಾಳೆಯೇ? ಸುಷ್ಮಾ ಅಮ್ಮನ ಜತೆ ಏಗಿಕೊಂಡು ಹೋಗುವುದು ಸಾಧ್ಯವೇ? ಬೇರು ಇಲ್ಲಿನದಾದರು ಬೆಳೆದಿರುವುದು ಹೊರಗೆ. ಪ್ರಾಕ್ಟಿಕಲ್ ಪ್ರಪಂಚಕ್ಕೆ ಸ್ಪಂದಿಸುವುದು ಹೊರಗಡೆಯಿಂದ ಮಾತ್ರ. ಒಳಗಿರುವ ಭಾರತದ ಅನುಭವವಾಗುವುದು ತನಗೆ ಮಾತ್ರ. ಅವಳು ಬೇಡ ಬೇಡ ಅಂದರೂ ಅಮೆರಿಕದವಳು ಎಂಬ ಪಟ್ಟ ಕಟ್ಟಿರುವ ಈ ಜನ ಅವಳು ಇಲ್ಲಿಗೆ ಬಂದರೂ ಅಮೆರಿಕದವಳಾಗಿಯೇ ಇರಲಿ ಎಂದು ಇಷ್ಟ ಪಡುವುದಿಲ್ಲವೇ. ಇಷ್ಟು ಯಾಕೆ, ಅಮ್ಮನಿಗಾದರೂ ಸುಷ್ಮಾ ಇಲ್ಲಿಗೆ ಬರಲು ನಿಜವಾಗಿಯೂ ಇಷ್ಟವಿದೆಯೇ. ಅವಳು ಇಲ್ಲಿ ಬಂದರೂ ಏನು ಮಾಡುತ್ತಾಳೆ. ಸೋಶಿಯಲ್ ವರ್ಕರ್ ಅನ್ನುವ ಕಾನ್ಸೆಪ್ಟೂ ಇಲ್ಲದ ಈ ಆಸ್ಪತ್ರೆಗಳಲ್ಲಿ ಈ ಹುಡುಗಿ ಏನು ಮಾಡಬಲ್ಲಳು. ಗವಿಸಿದ್ದಪ್ಪನಿಂದ ತನಗೆ ಮುಕ್ತಿ ದೊರಕಬೇಕಾದರೆ ಆರ್ಥಿಕವಾಗಿ ಮೊದಲೊಂದೆರಡು ವರ್ಷ ಸುಷ್ಮಾಳ ಅಪ್ಪನ ಮೇಲೆ ಅವಲಂಬಿಸಲೇ ಬೇಕಾಗುತ್ತದೆ. ಅದೇನು ಅವರಿಗೆ ಹೊರೆಯಾಗಲಾರದು. ಆದರೆ ಇದಕ್ಕಿಂತಾ ಅಮೆರಿಕಾಕ್ಕೆ ಹೋಗಿ ಅವಳ ಖರ್ಚಿನಲ್ಲಿ ಪರೀಕ್ಷೆ ಮುಗಿಸಿ ರೆಸಿಡೆನ್ಸಿ ಮಾಡುವುದರಿಂದ ತನ್ನ ಸ್ವಾಭಿಮಾನಕ್ಕೆ ಜಾಸ್ತಿ ಹೊಡೆತ ಬೀಳುವುದಿಲ್ಲವೇನೋ ಅನ್ನಿಸಿತ್ತು. ಇವನ ಮುಂದೆ ಒಂದು ಆಟೋ ಬಂದು ನಿಂತಿತು. ಒಳಗಿನಿಂದ ಇಳಿದಳು ಸುಷ್ಮಾ. ಫೋಟೋದಲ್ಲಿ ನೋಡಿದ್ದಕ್ಕಿಂತಾ ಸ್ವಲ್ಪ ಕಪ್ಪು ಅನ್ನಿಸಿತ್ತು. ಕಂದು ಬಣ್ಣದ ಚೂಡಿದಾರ ಹಾಕಿ ಒಂದು ಸಣ್ಣ ಪರ್ಸ್ ಹಿಡಿದಿದ್ದಳು. ಕತ್ತರಿಸಿದ ಕೂದಲನ್ನು ಹಿಂದೆ ಬಾಚಿ ಒಂದು ಕ್ಲಿಪ್ಪು ಹಾಕಿದ್ದಳು. ಸಣ್ಣ ಬಿಂದಿ, ಸಾಧಾರಣ ಮೇಕಪ್ಪಿನಲ್ಲಿ ಚೆನ್ನಾಗಿಯೇ ಕಾಣುತ್ತಿದ್ದಾಳೆ ಅನ್ನಿಸಿತು. ತನಗಿಂತ ಕೊಂಚ ಕುಳ್ಳು ಅನ್ನಿಸಿದರೂ ಹೀಲ್ಸಿನಲ್ಲಿ ಸರಿಹೋಗಬಹುದು ಅಂದುಕೊಂಡ. ಆಟೋದಿಂದ ಇಳಿದು ” ಹಾಯ್” ಎಂದಳು.”ಹಲೋ” ಮುಗುಳ್ನಗುತ್ತಾ ಪ್ರತಿಕ್ರಿಯಿಸಿದ ಚಕ್ರಪಾಣಿ. ಇದು ಅವನಿಗೆ ಹೊಸದು. ಹಿಂದೆ ಸುಮಾರು ಹುಡುಗಿಯರನ್ನು ನೋಡಿದ್ದರೂ ಅವೆಲ್ಲಾ ತುಂಬಾ ಸಾಂಪ್ರದಾಯಿಕವಾಗಿದ್ದವು. ಏನು ಮಾತನಾಡಬೇಕೆಂದು ತಿಳಿಯಲಿಲ್ಲ.” ವೇರ್ ಡು ಯು ವಾಂ ಟು ಗೋ” ಇಂಗ್ಲೀಷಿನಲ್ಲಿಯೇ ಪ್ರಾರಂಭಿಸಿದ ಸಂಭಾಷಣೆಯನ್ನು. ” ಐ ಡೋಂಟ್ ಮೈಂಡ್. ಕನ್ನಡದಲ್ಲೇ ಮಾತನಡಬಹುದು. ನಾನು ಯೋಚನೆ ಮಾಡೋಕ್ಕೆ ಶುರುಮಾಡಿದ್ದು ಕನ್ನಡದಲ್ಲಿಯೇ. ಅವುಗಳು ಗಟ್ಟಿಯಾಗೋ ಹೊತ್ತಿಗೆ ದೇಶ ಬಿಟ್ಟಿದ್ವಿ. ಉಷ ನವರತ್ನರಾಂ ಬೆಳೆಸಿದ ಭಾವನೆಗಳಿಗೆ ಚಿಕನ್ ಸೂಪ್ ಸೀರೀಸ್ ಶೇಪ್ ಕೊಟ್ಟಿವೆ. ಆದ್ದರಿಂದ ಯು ಕೆನ್ ಸೆನ್ಸ್ ಅ ಸಾರ್ಟ್ ಆಫ್ ಕನ್ಫ್ಯೂಶನ್. ಒಟ್ಟು ಯಾವುದಾದರೂ ಗಲಾಟೆಯಿಲ್ಲದ ಜಾಗ ಆದರೆ ಸಾಕು” ಪಟ ಪಟ ಯಾವುದೇ ಆತಂಕವಿಲ್ಲದೇ ಮಾತು ಶುರುಮಾಡಿದ್ದಳು. ಇದು ಯಾಕೋ ಟೇಕ್ ಆಫ್ ಆದ ಉತ್ಕರ್ಷ ಸರಿಯಿಲ್ಲ ಅನ್ನಿಸಿತು ಚಕ್ರಪಾಣಿಗೆ. ಆದರೆ ಕನ್ನಡದಲ್ಲಿ ಮಾತಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಖುಷಿಯಾಯಿತು. ” ಇಲ್ಲೇ ಹತ್ರ ಸ್ವಲ್ಪ ಒಳಗೆ ಹೋದರೆ ಒಂದು ಒಳ್ಳೆ ರೆಸ್ಟೋರೆಂಟ್ ಇದೆ. ಜಾಸ್ತಿ ಜನ ಇರೋಲ್ಲ” ಮುಂದೆ ನಡೆಯುತ್ತಾ ಹೇಳಿದ ಚಕ್ರಪಾಣಿ. ” ಏನೋ ಒಂದು, ಒಟ್ಟು ಈ ಗಲಾಟೆಯಿಂದ ಸ್ವಲ್ಪ ದೂರ ಇದ್ದರೆ ಸಾಕು. ಅಬ್ಬಬ್ಬ, ನನಗೆ ನಾನು ಇಲ್ಲಿದ್ದೆ, ಇಲ್ಲಿನ ಒಂದು ಭಾಗವಾಗಿದ್ದೆ ಎಂದರೆ ನಂಬೋಕೇ ಸಾಧ್ಯವಿಲ್ಲ. ಎನಿವೇ, ಹೋಂ ಈಸ್ ಹೋಂ” ” ಅಮೆರಿಕದಲ್ಲೂ ಈ ನಡುವೆ ದೊಡ್ಡ ಸಿಟಿಗಳಲ್ಲಿ ಕ್ರೌಡ್ ಜಾಸ್ತಿ ಆಗ್ತಾ ಇದೆ ಅಂತ ಕೇಳಿದ್ದೀನಿ. ನೀವಿರೋ ಊರಲ್ಲಿ ಜಾಸ್ತಿ ಜನ ಇಲ್ವಾ” ಸಂಭಾಷಣೆ ಮುಂದುವರಿಸಲು ಕೇಳಿದ. ” ನೋ, ನೋ, ಅದೆನಿದ್ರೂ ಕೋಸ್ಟ್ ಗಳಲ್ಲಿ ಮಾತ್ರ. ಈಸ್ಟ್ ಕೋಸ್ಟೆಲ್ಲಾ ಗುಜ್ಜುಗಳು ಸೇರಿದ್ದಾರೆ. ವೆಸ್ಟ್ ಕೋಸ್ಟ್ ಪೂರಾ ನಮ್ಮ ಇಂಜಿನಿಯರ್ ಗಳು. ದೇಸೀ ಜನ ತುಂಬಾ ಇರುವ ಕಡೆ ಬೇಡವೇ ಬೇಡ ಅಂತಲೇ ವಿ ಲಿವ್ ಇನ್ ಅ ಕನ್ಸರ್ವೇಟಿವ್ ಪ್ಲೇಸ್. ಇಂಡಿಯನ್ಸ್ ಬೇಕು ಅಂದ್ರೆ ಸಿಗ್ತಾರೆ. ಬೇಡ ಅಂದ್ರೆ ಬೇಡ. ಅದು ಒಳ್ಳೆಯದು. ಅದು ಬಿಟ್ಟು ನೀವು ನ್ಯೂ ಜರ್ಸಿಗೆ ಹೋಗಿ ಇಂಡಿಯನ್ಸ್ ಬೇಡ ಅನ್ನೋ ಹಾಗೇ ಇಲ್ಲ. ಸಿಗ್ತಾನೇ ಇರ್ತಾರೆ.” ಪಟ್ಟೆಂದು ಬಂತು ಉತ್ತರ. ” ನಿಮ್ಮ ಮಾತಿನ ಅರ್ಥ ಇಂಡಿಯನ್ಸ್ ಇರಬೇಕೋ, ಬೇಡವೋ” ತಡವರಿಸುತ್ತಾ ಕೇಳಿದ. ” ಇರಬೇಕು, ಆದರೆ ಒಂದು ಮಿತಿಯಲ್ಲಿ. ಯದ್ವಾ ತದ್ವಾ ಆದರೆ ನ್ಯೂಯಾರ್ಕೂ ಬಾಂಬೇ ಥರಾ ಆಗಿಬಿಡುತ್ತೆ, ಅಷ್ಟೆ” ” ಹಾಗಾದ್ರೆ ಒಳ್ಳೇದೇ ಆಯ್ತು. ವೀಸ ಇಲ್ದೆ ಹೋಗ್ಬಿಡಬಹುದು” ತನ್ನ ಜೋಕಿಗೆ ತಾನೇ ನಕ್ಕ. ಒಂದು ರೀತಿ ನೋಡಿದಳು. ಯಾಕೋ ಮಾತು ತುಂಬಾ ಅಪ್ರಾಸಂಗಿಕ ಅನ್ನಿಸಿತು. ಅವಳು ಇವನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ” ಸರಿ, ಈಗ ಬೇರೆ ಯಾವುದಾದ್ರೂ ಟಾಪಿಕ್ ಚೇಂಜ್ ಮಾಡೋಣ್ವಾ” ಅಂದಳು. ” ಮಾಡೋಣ್ವಂತೆ, ಮೊದಲು ಒಳಗೆ ಹೋಗಿ ಆರ್ಡರ್ ಮಾಡಿದ ಮೇಲೆ” ಎನ್ನುತ್ತಾ ರೆಸ್ಟೋರೆಂಟಿನ ಒಳಗೆ ನಡೆದ. ಮಬ್ಬು ಬೆಳಕಿನ ರೆಸ್ಟೋರೆಂಟಿನ ಮೂಲೆಯ ಟೇಬಲ್ಲೊಂದನ್ನು ಹಿಡಿದು ಆರ್ಡರ್ ಮಾಡಿದರು. ಸುತ್ತಲೂ ನೋಡುತ್ತಾ ಹೇಳಿದಳು ಸುಷ್ಮಾ ” ನಾಟ್ ಅ ಬ್ಯಾಡ್ ಚಾಯ್ಸ್” ಸುಮ್ಮನೆ ನಕ್ಕ ಚಕ್ರಪಾಣಿ. ಮೌನವನ್ನು ಮುರಿಯಲು ” ಒಳಗೆ ಮಾತಾಡೋಣ ಅಂದಿದ್ರಿ. ಸರಿ, ನಾನೇ ಶುರು ಮಾಡ್ತೀನಿ. ಹೇಗಿದೆ, ನಿಮ್ಮ ಲೈಫ್ ಸೇವಿಂಗ್ ಬಿಸಿನೆಸ್”. ತಾನು ನಿಜವಾಗಿ ಜೀವ ಉಳಿಸಿ ತುಂಬಾ ದಿನಗಳಾಗಿದೆ ಅನ್ನಿಸಿತು ಚಕ್ರಪಾಣಿಗೆ. ಗವಿಸಿದ್ದಪ್ಪನ ಆಸ್ಪತ್ರೆ ಸೇರಿದಾಗಿನಿಂದ ಬರೀ ಶೀತ, ನೆಗಡಿ ಕೆಮ್ಮುಗಳಿಗೆ ಕೊರೈಜಾ ಇತರ ಬಣ್ಣದ ಹೆಸರುಗಳ್ಳನ್ನು ಇಟ್ಟು ಪ್ಯಾರಸಿಟಮಾಲ್ ಕೊಟ್ಟದ್ದೇ ಬಂದದ್ದು. ಆದರೆ ಹಾಗೆ ಹೇಳುವುದರಿಂದ ತನ್ನ ಮರ್ಯಾದೆಯೇ ಹೋಗುತ್ತದೆಂದು ತಿಳಿದಿದ್ದು ” ತುಂಬಾ ಚೆನ್ನಾಗಿದೆ. ಐ ಲೈಕ್ ವಾಟ್ ಐ ಆಂ ಡೂಯಿಂಗ್” ಅಂದ ಉಗುಳು ನುಂಗಿ. ” ಅದು ಒಳ್ಳೆಯದು. ನಿವು ಕೆಲಸ ಮಾಡುತ್ತಾ ಇರೋದು ಪ್ರೈವೇಟ್ ಕಾಲೇಜಂತೆ. ಈಗ ನಮ್ಮ ಸ್ಟೇಟಲ್ಲಿ ಬೇಕಾದಷ್ಟು ಕಾಲೇಜುಗಳಾಗಿವೆಯಂತೆ. ನನಗೂ ಡ್ಯಾಡಿ ಯಾವುದೋ ಕಾಲೇಜಿಗೆ ಸೇರಿಸ್ತೀನಿ ಅಂತ ಹೊರಟಿದ್ದರು. ಆದರೆ, ಆ ಟೈಮಲ್ಲಿ ಅಮೆರಿಕಾ ಬಿಡಲು ಇಷ್ಟವಾಗಲಿಲ್ಲ” ” ಹಾಗಾದರೆ ಈಗ ಇಷ್ಟ ಆಗುತ್ತಿದೆ ಅಂತ ತಿಳೀಬಹುದಾ” ಕೇಳಿದ ಚಕ್ರಪಾಣಿ. ” ಡಿಡ್ ಐ ಸೇ ದಟ್” ತುಂಟತನದಿಂದ ನಕ್ಕಳು. ” ತಮಾಷೆಗೆ ಹೇಳಿದೆ. ಐ ಲವ್ ಮೈ ಇಂಡಿಯಾ” ತನ್ನ ಪ್ರಶ್ನೆಗೆ ಇದು ಸರಿಯ ಹೌದೇ ಅಲ್ಲವೇ ಗೊತ್ತಾಗಲಿಲ್ಲ. ಆದರೆ ಸಂಭಾಷಣೆಯಲ್ಲಿ ಇಷ್ಟು ಮುಂಚೆ ತಾನು ಆ ಪ್ರಶ್ನೆ ಕೇಳಿದ್ದು ಸರಿಯೇ ಅನ್ನಿಸಿತ್ತು.” ನಿಮ್ಮ ಕೆಲಸ ಹೇಗಿದೆ. ಇಂಡಿಯಾದಲ್ಲಿ ಸೋಷಿಯಲ್ ವರ್ಕರ್ ಅನ್ನುವ ಕಾನ್ಸೆಪ್ಟು ಹೊಸದು” ” ಹಾಗೇನಿಲ್ಲ. ಈಗ ಬಾಂಬೆ, ಡೆಲ್ಲೀಲಿರೋ ದೊಡ್ಡ ಕಾರ್ಪೊರೆಟ್ ಹಾಸ್ಪಿಟಲ್ಗಳೆಲ್ಲಾ ಸೋಷಿಯಲ್ ವರ್ಕರುಗಳಿದ್ದಾರೆ. ಡಾಕ್ಟರುಗಳಿಗೆ ಪೇಶೆಂಟಿನ ಮನೆಯ ಮತ್ತು ಅವನ ಸುತ್ತಿನ ಸೊಸೈಟಿಯ ಪರಿಚಯವಾಗದೆ ಯಾವ ಕಾಯಿಲೆಯನ್ನೂ ಪೂರಾ ಗುಣಪಡಿಸಲು ಸಾಧ್ಯವಿಲ್ಲ. ಈಗ ಉದಾಹರಣೆಗೆ ಇವತ್ತು ನೀವೊಂದು ಪೇಷಂಟನ್ನು ಡಿಸ್ಚಾರ್ಜ್ ಮಾಡಿರುತ್ತೀರ. ಇನ್ನು ನಾಲ್ಕು ದಿನಕ್ಕೆ ಆತ ಮತ್ತೆ ಬಂದು ನಿಮ್ಮ ಹತ್ತಿರ ಬಂದು ಅಡ್ಮಿಟ್ ಆದರೆ ಅದು ಕಾಯಿಲೆ ಹದಗೆಟ್ಟಿದ್ದಕ್ಕೋ ಅಥವಾ ನಿಮ್ಮ ಸಲಹೆ ಪ್ರಕಾರ ಎಲ್ಲಾ ಔಷಧಿಗಳನ್ನು ತೆಗೆದುಕೊಳ್ಳದೇ ಇರುವುದರಿಂದಲೋ ಎಂದು ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ, ಸಮಯ ನಿಮಗಿರುವುದಿಲ್ಲ. ನಮ್ಮಗಳ ಕೆಲಸವೇ ಅದಾಗಿರುವುದರಿಂದ ವಿ ಕೆನ್ ಮೇಕ್ ಅ ಡಿಫೆರೆನ್ಸ್ ದೇರ್” ” ಪೇಷೆಂಟು ಬಂದು ಮತ್ತೆ ಅಡ್ಮಿಟ್ ಆದರೆ ನಮ್ಮ ಬಾಸಿಗಾಗುವಷ್ಟು ಸಂತೋಷ ಯಾರಿಗೂ ಆಗುವುದಿಲ್ಲ” ನಕ್ಕ ” ಆದರೂ ಗಂಡ ಹೆಂಡತಿಗೆ ಹೊಡೆದ ಅಂತಲೋ, ಅಪ್ಪ ಮಗನಿಗೆ ಹೊಡೆದ ಅಂತಲೋ ನಿಮ್ಮಗಳನ್ನು ಸಲಹೆ ಕೇಳೋ ಪರಿಸ್ಥಿತಿ ಇನ್ನೂ ಇಂಡಿಯಾದಲ್ಲಿ ಬಂದಿಲ್ಲ. ಮುಂದೆ ಬರೋದು ನನಗೆ ಡೌಟು” ” ಅಂದರೆ ನಿಮ್ಮ ಮಾತಿನ ಅರ್ಥ, ಅಬ್ಯೂಸ್ ಇಂಡಿಯಾದಲ್ಲಿಲ್ಲ ಎಂತಲೇ” ಕುತೂಹಲದಿಂದ ಕೇಳಿದಲೂ ಸುಷ್ಮಾ. ” ನೋ, ಅಬ್ಯೂಸ್ ಇದೆ. ಆದರೆ ಅದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದನ್ನು ತಪ್ಪು ಎಂದು ನಮ್ಮ ಹೆಂಗಸರಾಗಲೀ ಮಕ್ಕಳಾಗಲೀ ಅಂದುಕೊಳ್ಳೋದಿಲ್ಲ. ನಿಮ್ಮಲ್ಲಿ ಪಿಸ್ತೂಲು, ಡೈವೋರ್ಸ್, ಟೀನ್ ಸೆಕ್ಸ್ ಇದ್ದ ಹಾಗೆ. ಸಾರಿ, ಸರಿಯಾದ ಅನಾಲಜಿ ಕೊಡೋಕ್ಕಾಗುತ್ತಾ ಇಲ್ಲ. ನಮ್ಮ ಮನೆಯ ಸಮಸ್ಯೆಗಳಿಗೆ ಗೊತ್ತಿಲ್ಲದವರನ್ನು ಇನ್ವಾಲ್ವ್ ಮಾಡಿಕೊಳ್ಳೊದು ನಮ್ಮ ಸಂಸ್ಕೃತಿಯ ಭಾಗ ಇನ್ನೂ ಆಗಿಲ್ಲ.” ಊಟ ಬಂದಿತು. ಬಟರ್ ನಾನ್, ಪನೀರ್ ಕೊಫ್ತಾ, ವೆಜಿಟೆಬಲ್ ಬಿರಿಯಾನಿ, ಸಲಾಡ್, ” ಮ್, ರಿಚ್ ಫುಡ್” ಎಂದಳು ಸುಷ್ಮಾ ಪ್ಲೇಟುಗಳನ್ನು ನೋಡುತ್ತಾ. ” ಹೋಗ್ಲಿ ಬಿಡಿ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು. ಈಗ ನಿಮ್ಮ ಪ್ಲಾನು ಏನಿದೆ, ಮುಂದೆ. ನಂದಂತೂ ತುಂಬಾ ಸಿಂಪಲ್. ಈಗ ಮಾಡ್ತಾ ಇರೋ ಕೆಲಸಾನ ಮುಂದುವರಿಸಿಕೊಂಡು ಹೋಗುವುದು. ನಾನು ನಿಮ್ಮನ್ನು ಮದುವೆಯಾದ್ರೆ ನೀವು ನನಗೆ ನನ್ನ ಕೆಲಸದಲ್ಲಿ ಸಪೋರ್ಟ್ ಮಾಡಬೇಕು. ನನಗೆ ನನ್ನ ಸಂಸಾರದಷ್ಟೇ ನನ್ನ ಕೆಲಸವೂ ಮುಖ್ಯ. ” ನಾನ್ ಮುರಿಯುತ್ತಾ ಹೇಳಿದಳು. ” ಹಾಗಾದ್ರೇ, ಅಮ್ಮ ಹೇಳಿದ್ಳು ನೀವು ಇಂಡಿಯಾಕ್ಕೆ ಬಂದರೂ ಬರಬಹುದು ಒನ್ಸ್ ಅಂಡ್ ಫಾರ್ ಆಲ್ ಅಂತ” ಅನುಮಾನಿಸುತ್ತಾ ಕೆಳಿದ. ” ಡ್ಯಾಡಿ ಯೋಚನೆ ಮಾಡ್ತಾ ಇದ್ದಾರೆ. ಅಮ್ಮನಿಗೆ ಇಷ್ಟ ಇಲ್ಲ. ಆದ್ದರಿಂದ ನನ್ನನ್ನು ಇಲ್ಲಿಗೆ ಕೊಟ್ಟರೆ ಒಂದಾದರೂ ಟೈ ಉಳಿಯುತ್ತೇ ಅಂತ ಡ್ಯಾಡಿ ಯೋಚನೆ. ನಾನು ಯಾವಕಡೆ ಬೇಕಾದರೂ ವಾಲಬಹುದು. ಆದರೆ, ಈಗ ಸದ್ಯಕ್ಕೆ ಅಂದರೆ, ಇನ್ನೊಂದೈದು ವರ್ಷ ಈ ಕಡೆ ಬರೋ ಯೋಚನೆ ಯಾರಿಗೂ ಇಲ್ಲ” ” ನನ್ನ ಪ್ರಿಯಾರಿಟೀಸ್ ನಲ್ಲಿ ಅಮೆರಿಕಾ ಯಾವತ್ತೂ ಮೊದಲಿರಲಿಲ್ಲ. ಹಾಗಂತ ಅಮೆರಿಕಾದ ಮೆಲೆ ನನಗೆ ಯಾವ ದ್ವೇಷವೂ ಇಲ್ಲ. ಮನಸ್ಸಿಗೆ ಗೊತ್ತಿಲ್ಲದಿರುವುದು ಕಣ್ಣಿಗೆ ಕಾಣುವುದಿಲ್ಲವಂತೆ. ಚಿಕ್ಕಹುಡುಗನಿಂದ ಈಗ ಮೊನ್ನೆಮೊನ್ನೆಯವರೆಗೆ ಅಮೆರಿಕಾ ಅಂದರೆ ತುಂಬಾ ದೂರದ ಕನಸಿನ ಲೋಕವಾಗೇ ಇತ್ತು. ನಮ್ಮ ಮನೆಯಲ್ಲಿ ಇದುವರೆಗೂ ಯಾರೂ ಅಮೆರಿಕಕ್ಕೆ ಹೋಗಿಲ್ಲ. ಈಗಲೂ ನಿಜ ಹೇಳಬೇಕೆಂದರೆ ವರ್ಜೀನಿಯಾ ಸ್ಟೇಟೋ, ಊರೋ ಅಂತ ನಮ್ಮ ಮನೇಲಿ ಯಾರಿಗೂ ಗೊತ್ತಿಲ್ಲ. ಅಮೆರಿಕ ನನಗೆ ರೆಲವೆಂಟ್ ಅಲ್ಲ ಅಂದು ಮೊದಲಿನಿಂದಲೂ ನನ್ನ ಅನ್ನಿಸಿತ್ತೋ ಏನೋ, ನನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿನದೆಲ್ಲವನ್ನೂ ದ್ವೇಷಿಸುತ್ತಲೇ ಬಂದೆ. ನನ್ನ ಜತೆಯ ಹುಡುಗರೆಲ್ಲಾ ಎಂಟೀವಿ ನೋಡುತ್ತಿದ್ದಾಗ ಕನ್ನಡ ಕಾದಂಬರೀನೋ ಕನ್ನಡ ಸಿನೆಮಾನೋ ನೋಡ್ತಾ ಇದ್ದೆ. ಕನ್ನಡ ಸಿನೆಮಾ ಚೆನ್ನಗಿರುತ್ತೆ ಅಂತಲ್ಲ. ಅದೊಂದು ರೀತಿಯ ಪ್ಯಾಸಿವ್ ಅಗ್ರೆಷನ್. ಅಮೆರಿಕಾ ಬೇಡ ಅಂತ ಹೇಳೋ ನನ್ನದೇ ಆದ ರೀತಿ. ದ್ರಾಕ್ಷಿ ಹುಳಿ ಅನ್ನುವ ನರಿಯ ರೀತಿ ಅಲ್ಲ ಅಂದರೆ ಪೂರ ಪ್ರಾಮಾಣಿಕವಾಗಿರೊಲ್ಲ. ಬಟ್ ಐ ಹ್ಯಾವ್ ಗ್ರೋನ್ ಅಪ್ಟು ಬಿ ಟೂ ಮಚ್ ಇಂಡಿಯನ್. ಈಗ ಅಮೆರಿಕಾಕ್ಕೆ ಬಂದರೆ ಅಲ್ಲಿಗೆ ನಾನು ಹೊಂದುಕೊಳ್ಳುತೀನಾ ಅಂತ ನನಗೇ ನಂಬಿಕೆಯಿಲ್ಲ.” ಕೆಳಗೆ ನೋಡುತ್ತಾ ಹೇಳಿದ ಚಕ್ರಪಾಣಿ. ” ನಿಮ್ಮ ಪ್ರಾಮಾಣಿಕತೆ ನನಗೆ ತುಂಬಾ ಇಷ್ಟವಾಯಿತು. ಇನ್ ಕೇಸ್ ಇದು ಸರಿಹೋದರೆ, ನೀವು ಅವಿಷಯವಾಗಿ ತುಂಬಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಡ್ಯಾಡಿ ತುಂಬಾ ಕನ್ನಡದ ಭಕ್ತ. ಮನೆ ತುಂಬಾ ಕನ್ನಡ ಪುಸ್ತಕಗಳಿದ್ದಾವೆ. ನನಗೂ ಮೊದಲಿನಿಂದ ಓದೋ ಹುಚ್ಚು ಬಹಳ. ಹೇಳಿದ್ನಲ್ಲ ಇಲ್ಲಿದ್ದಾಗ ತುಂಬಾ ಓದ್ತಾ ಇದ್ದೆ. ಅಲ್ಲಿಗೆ ಹೋದಮೇಲೂ ಟೈಂ ಸಿಕ್ಕಿದಾಗ ಕನ್ನಡ ಪುಸ್ತಕ ಓದ್ತಾ ಇರ್ತೀನಿ. ಭೈರಪ್ಪಾ ಈಸ್ ಮೈ ಫೇವರೀಟ್. ಇನ್ ಫ್ಯಾಕ್ಟ್ ಅವ್ರು ಅಮೆರಿಕಾಕ್ಕೆ ಬಂದಿದ್ದಾಗ ಮೀಟ್ ಕೂಡ ಮಾಡಿದ್ದೆ. ಯು ವಿಲ್ ಫೀಲ್ ಮೋರ್ ಅಟ್ ಹೋಂ ದೇರ್ ದೆನ್ ಹಿಯರ್” ” ಅದು ಇಂಟರೆಸ್ಟಿಂಗ್. ವಾಟ್ ಡು ಯು ಥಿಂಕ್ ಆಫ್ ಭೈರಪ್ಪ” “ಪಾಪ್ಯುಲರ್ ರೈಟರ್. ಕಷ್ಟವಾದ ಸೋಷಿಯಲ್ ಇಶ್ಯೂಸನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸುವ ಬರಹಗಾರ. ಮಹಾಭಾರತದ ಕಾಂಟೆಂಪರರಿ ಅರ್ಥ ಗೊತ್ತಾಗಿದ್ದು ನನಗೆ ಪರ್ವ ಓದಿದ ಮೇಲೆಯೇ. ಜಾತಿಸಮಸ್ಯೆ, ಮಹಾಭಾರತ, ಸೌಂದರ್ಯ ಮೀಮಾಂಸೆ ಇಂತ ಸಬ್ಜೆಕ್ಟುಗಳನ್ನು ನನಗೆ ನಿಮಗೆ ಅರ್ಥ ಆಗೋ ಹಾಗೇ ಬರೆಯೋದರಲ್ಲಿ ನಿಸ್ಸೀಮ. ಐ ವುಡ್ ನಾಟ್ ಸೇ ಹೀ ಇಸ್ ದ ಗ್ರೇಟೆಸ್ಟ್. ಹೀ ಇಸ್ ಮೋರ್ ಮೈಕೆಲ್ ಕ್ರೀಟನ್ ದೆನ್ ದಾಸ್ತೊವ್ಸ್ಕಿ” ” ನೀವು ’ಸತ್ಯ ಮತ್ತು ಸೌಂದರ್ಯ ’ ಓದಿದ್ದೀರ” ಕೊಂಚ ಅಸಹನೆಯಿಂದ ಕೇಳಿದ. “ಅದರ ಬಗ್ಗೆ ವಿಮರ್ಶೆ ಓದಿದ್ದೀನಿ.” ನಕ್ಕಳು. ” ವಿಮರ್ಶೆ ಓದಿ ಕಾವ್ಯ ಹೇಗಿದೆ ಅಂತ ಹೇಳೋದು ತಪ್ಪು. ಮತ್ತೊಂದು ಮಾತು,ಭೈರಪ್ಪನವರ ವರ್ಕ್ಸನ್ನು ವಿಮರ್ಶಿಸುವುದಕ್ಕೆ ನಿಮ್ಮ ಕೈಯಲ್ಲಿ ಸಾಧ್ಯ ಇಲ್ಲ ಅಂತ ಅನ್ನಿಸುತ್ತೆ, ನೋ ಅಫೆನ್ಸ್” ” ಓ ಕಂ ಆನ್. ದಟ್ ವಾಸ್ ಜಸ್ಟ್ ಎನ್ ಒಪೀನಿಯನ್. ಐ ಯಾಂ ನೋ ಗಿರೆಡ್ಡಿ” ಎಡಗಣ್ಣು ಕಿರಿದು ಮಾಡಿ ತುಟಿ ಸೊಟ್ಟ ಮಾಡಿ ಕಣ್ಣುಹೊಡೆದಳು. ಬಾಯಲ್ಲಿ ಸೌತೇಕಾಯಿಯ ಚೂರಿತ್ತು. ಒಂದು ಕ್ಷಣ ದೃಷ್ಟಿಸಿ ನೋಡಿದ. ತಕ್ಷಣ ತಪ್ಪು ಮಾಡಿದವನಂತೆ ತಲೆ ತಗ್ಗಿಸಿದ. ” ಆದರೂ ಭೈರಪ್ಪನ್ನ ಕ್ರೀಟನ್ಗೆ ಹೋಲಿಸುವುದು ಅಬ್ಸರ್ಡ್ ಅಂತ ನನ್ನ ಭಾವನೆ. ಕ್ರೀಟನ್ ಒಬ್ಬ ವ್ಯಾಪಾರಿ ಬರಹಗಾರ. ಭೈರಪ್ಪನವರದ್ದು ವಾಸ್ತವ. ಅಲ್ಲಿ ಫ್ಯಾಂಟಸಿಯಿರುವುದಿಲ್ಲ. ’ನಿಲ್ಲಿಸದೇ ಹೇಳುತ್ತಿದ್ದ. ” ಓ ಓ ಫ್ , ಚಕ್ರಪಾಣಿ, ಇದನ್ನು ಪರ್ಸನಲ್ ಆಗಿ ಯಾಕೆ ತೊಗೊತಾ‌ಇದೀರ. ನನ್ನ ಅಭಿಪ್ರಾಯಕ್ಕೆ ನೀವು ಬೆಲೆ ಕೊಡಬೇಕು ಅಂಥ ನಾನು ಹೇಳ್ತಾ ಇಲ್ಲ. ಆದರೆ ಅವುಗಳನ್ನು ಹೇಳೊದು ತಪ್ಪಲ್ವಲ್ಲ. ಕನ್ನಡ ಕಾದಂಬರಿಗಳ ಬಗ್ಗೆ ವಿಮರ್ಶೆ ಮಾಡುವಷ್ಟು ನಿಮಗೆ ಗೊತ್ತಿರುವುದು ನಿಮ್ಮ ಪರಿಸರದಿಂದ. ಜ್ಯುರಾಸಿಕ್ ಪಾರ್ಕ್ ಬಗ್ಗೆ, ಏಡ್ಸ್ ಬಗ್ಗೆ, ಕ್ಲೋನಿಂಗ್ ಬಗ್ಗೆ ನಿಮಗಿಂತ ಜಾಸ್ತಿ ನನಗೆ ಗೊತ್ತಿದ್ದರೆ ಅದು ನಾನು ಬೆಳೆದು ಬಂದ ರೀತಿಯ ರಿಫ್ಲೆಕ್ಷನ್ನು ಅಷ್ಟೆ. ಎರಡೂ ನಿಜವಾದರೂ ಯಾರೂ ದೊಡ್ಡವರಾಗೋಲ್ಲ. ಅದು ಸ್ವಾಭಾವಿಕ. ನಿಮ್ಮನ್ನ ಅಥವಾ ನಿಮಗೆ ಅಭಿಮಾನ ಇರುವವರನ್ನು ಟೀಕಿಸಿದರೆ ಅದನ್ನು ಸಹಿಸಿಕೊಂಡು ಹೋಗುವುದು ಇಲ್ಲಿ ಬರಲೇ ಇಲ್ಲ. ನಮ್ಮನ್ನು ನೋಡಿ ನಾವು ನಗುವುದು ತಪ್ಪಲ್ಲ” ಎಂದಳು ದಿಟ್ಟಿಸಿ ನೋಡುತ್ತಾ. ” ಸಾರಿ” ಎಂದ ಚಕ್ರಪಾಣಿ. ಆದರೆ ಅದು ಬಾಯಿಂದ ಮಾತ್ರ ಬಂದದ್ದು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಆಗಲಿಲ್ಲ ಸುಷ್ಮಾಳಿಗೆ. ” ಎನಿವೇ, ನಮಗ್ಯಾಕೆ ಬಿಡಿ. ಹೋಗಲಿ ನೀವು ಅಲ್ಲಿಗೆ ಬಂದರೆ ರೆಸಿಡೆನ್ಸಿ ಶುರುಮಾಡಕ್ಕೆ ಎಷ್ಟು ದಿನ ಬೇಕಾಗುತ್ತೆ” ವಿಷಯ ಮತ್ತೊಮ್ಮೆ ಬದಲಿಸುತ್ತಾ ಕೇಳಿದಳು. ” ನಾನಿನ್ನೂ ಅದರ ಬಗ್ಗೆ ಯೋಚನೆ ಮಾಡಬೇಕು. ಐ ಥಿಂಕ್ ನೀವು ಇದರ ಬಗ್ಗೆ ಯಾವ ನಿರ್ಧಾರವನ್ನೂ ಅಷ್ಟು ಬೇಗ ಊಹಿಸಿಕೊಳ್ಳಬೇಡಿ. ನಾನು ಇಂಥಾ ವಿಚಾರಗಳಲ್ಲಿ ಸ್ವಲ್ಪ ನಿಧಾನ. ಮೊದಲು, ಅಮೆರಿಕಾಕ್ಕೆ ಹೋಗಬೇಕೋ ಬೇಡವೋ ಅನ್ನೋದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಮುಂದಿನ ವಿಷಯ ಯೋಚನೆ ಮಾಡಬೇಕು” ಕೈ ಒರೆಸುತ್ತಾ ಹೇಳಿದ ಚಕ್ರಪಾಣಿ. ” ಚಕ್ರಪಾಣಿ, ನೀವು ಇದುವರೆಗೂ ಅಮೆರಿಕಾ ಬಗ್ಗೆ ಯೋಚನೆ ಮಾಡಿರೋದು ಪೂರ್ವಾಗ್ರಹ ತುಂಬಿರೋ ನಿಮ್ಮ ಮನಸ್ಸಿನಿಂದ. ಅದನ್ನು ಒಪ್ಪಲು ನೀವು ತಯಾರಿಲ್ಲ. ಸರಿಯಾಗಿ ಯೋಚನೆ ಮಾಡಿ. ಇಲ್ಲಿ ಎಲ್ಲರೂ ಬೇಡ ಅಂದಿರೋರನ್ನೂ ಕೂಡ ತನ್ನ ಹತ್ತಿರ ಕರೆದುಕೊಂಡಿದೆ ಆ ದೇಶ. ಈಗ ನಿಮ್ಮ ಪ್ರೊಫೆಶನ್ನನ್ನೇ ತೆಗೆದುಕೊಳ್ಳಿ. ನೀತಿ, ನಿಯಮ ಅಂತ ನಿಮ್ಮ ಎತಿಕ್ ಪ್ರಕಾರ ಪ್ರಾಕ್ಟೀಸ್ ಮಾಡುವುದಕ್ಕೆ ಹೋದರೆ, ಬದುಕುವ ದಾರಿ ಗೊತ್ತಿಲ್ಲದವನು ಅಂತ ನಿಮ್ಮ ಜನಾನೆ ಮೂಗು ಮುರೀತಾರೆ. ನಾನು ಅಲ್ಲಿ ಬೇಕಾದಷ್ಟು ಡಾಕ್ಟರರ ಹತ್ತಿರ ಮಾತನಾಡಿದ್ದೇನೆ. ಯಾರೂ ಅಮೆರಿಕಕ್ಕೆ ಬಂದಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡಿಲ್ಲ. ಮೊದಮೊದಲು ದೇಶ ಬಿಟ್ಟು ಬಂದಿದೀನಿ ಅಂತ ಪೇಚಾಡಿಕೊಂಡವರು ಕೂಡ ಅವರಲ್ಲೊಬ್ಬರಾಗಿಹೋಗಿದ್ದಾರೆ. ಬರೀ ದುಡ್ಡು ಅಥವಾ ಮೆಟೀರಿಯಲ್ ಬೆನಿಫಿಟ್ ಬಗ್ಗೆ ನಾನು ಹೇಳ್ತಾ ಇಲ್ಲ. ನಿಮ್ಮ ಕೆಲಸದಲ್ಲಿ ನೀವು ಕಲಿತಿರುವುದನ್ನು ನಿಮ್ಮ ಮನಸ್ಸಿಗೆ ಇಷ್ಟವಾಗುವ ಹಾಗೆ ಪ್ರಾಕ್ಟೀಸ್ ಮಾಡುವುದು ಇಲ್ಲಿ ಸಾಧ್ಯವೇ? ಅಲ್ಲಿ ಬುಕ್ಕಲ್ಲಿರೋ ರೀತೀನೇ ಪ್ರಾಕ್ಟೀಸ್ ಮಾಡಬಹುದಂತೆ.” ” ಆ ಪುಸ್ತಕಗಳನ್ನು ಬರೆದಿರೋರ್ಯಾರು. ಅವರೇ ತಾನೇ. ಸುಷ್ಮಾ ಏನೇ ತೊಗೊಳ್ಳಿ. ಅಲ್ಲಿಯದನ್ನು ಕುರುಡಾಗಿ ಕಾಪಿ ಮಾಡೋದಷ್ಟೇ ತಾನೇ ನಮಗೆ ಬಂದಿರೋದು. ಮೊದಲಿಂದ ತನ್ನದೇ ಸರಿ ಅಂತಲೇ ಹೇಳುತ್ತಾ ಬಂದರು ಅವರು. ನಮ್ಮದು ಸರಿ ಅಂತ ತೋರಿಸೋ ತಾಕತ್ತಿಲ್ಲದೆ ಸುಮ್ಮನೆ ಒಪ್ಕೊಂಡ್ವಿ ನಾವು. ನೀವು ಹೇಳ್ತಾ ಇರೋ ಮೆಡಿಸಿನ್ ನನಗೂ ಗೊತ್ತು. ತಾವುಗಳೇ ಕಂಡುಹಿಡಿದು, ತಮ್ಮ ಜನದ ಮೇಲೆಯೇ ಪ್ರಯೋಗ ಮಾಡಿರೊ ಔಷಧಿಗಳನ್ನು ಇಡೀ ಜಗತ್ತು ಉಪಯೋಗಿಸಬಹುದು ಅಂತ ಅವರು ಹೇಳ್ತಾರೆ. ನಮ್ಮ ಜನಕ್ಕೆ, ನಮ್ಮ ವಾತಾವರಣಕ್ಕೆ ಆ ಔಷಧಿಗಳಾಗಲೀ, ಅಲ್ಲಿನ ಟೆಕ್ನಿಕ್ ಗಳಾಗಲಿ ಸಂಗತವೋ ಅಸಂಗತವೋ ಯೋಚನೇನು ಮಾಡಕ್ಕೆ ತಯಾರಿಲ್ಲ ನಮ್ಮ ಡಾಕ್ಟರುಗಳು. ನಮ್ಮದನ್ನು ಮುಂದೆ ತರೋಕೆ ನಾವು ಕಲೀದೆ ಇರೋದ್ರಿಂದಲೇ ಇವತ್ತು ಆಯುರ್ವೇದ ಹಂತ ಹಂತವಾಗಿ ಸಾಯುತ್ತಿರೋದು.” ” ಚಕ್ರಪಾಣೀ, ಯಾವನೇ ಒಬ್ಬ ಮನುಷ್ಯ ಲೀಡರ್ ಅಂತ ಅನ್ನಿಸಿಕೊಳ್ಳುವುದಕ್ಕೆ ಕೆಲವೊಂದು ಗುಣಗಳು ಮುಖ್ಯವಾಗಿರುತ್ತದೆ. ಆ ಎಲ್ಲ ಗುಣಗಳು ಒಳ್ಳೆಯದೇ ಆಗಿರಬೇಕೆಂದೆನಿಲ್ಲ. ಒಟ್ಟು ತನ್ನ ಹಿಂದಿರುವವರನ್ನು ಮೆಚ್ಚಿಸುವಂತಿದ್ದರೆ ಸಾಕು. ಈ ಎಲ್ಲರನ್ನೂ ಮೆಚ್ಚಿಸೋ ಕೆಲಸಾನ ಅವರು ಮಾಡ್ತಾ ಇದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ. ಯಾವುದಾದರೋ ಜನಕ್ಕೆ ಉಪಯೋಗ ಆಗೋ ಅಂಥ ಕೆಲಸವನ್ನು ಅವರು ಮಾಡಿದರು, ನಾವು ಮಾಡಲಿಲ್ಲ ಎಂದು ಅದು ಅಸಂಗತ, ನಾಟ್ ರೆಲವಂಟ್ ಅನ್ನೋ ನೆಪದಿಂದ ತಿರಸ್ಕರಿಸಿದರೆ, ಅದು ನೀವು ನಿಮ್ಮ ದೇಶದ ಮೇಲೆ ಇಟ್ಟಿರೋ ಅಭಿಮಾನ ಅಲ್ಲ, ಮೂರ್ಖತನವಾಗುತ್ತದೆ. ಗುಣಕ್ಕೆ ಮತ್ಸರವಿರಬಾರದು ಅಂತಾರೆ. ಐವತ್ತು ವರ್ಷದ ಹಿಂದೆ ಪೆನಿಸಿಲಿನ್ ಕಂಡುಹಿಡಿದಾಗ ಅದು ನಮ್ಮ ಸೊಸೈಟಿಗಲ್ಲ ಎಂದು ನಾವು ಬಿಟ್ಟಿದ್ದರೆ ಈಗ ಪರಿಸ್ಥಿತಿ ಹೇಗೆ ಇರುತ್ತಿತ್ತು ಅಂತ ಊಹಿಸ್ಕೊಳ್ಳಿ ನೋಡೋಣ. ಒಳ್ಳೆಯದನ್ನು ಒಪ್ಪಿಕೊಳ್ಳಬೇಕಪ್ಪ” ನಿಧಾನವಾಗಿ ಹೇಳಿದಳು. ” ನೀವು ಜನರಲೈಸ್ ಮಾಡ್ತಾ ಇದ್ದೀರ. ನಾನು ಒಪ್ಕೊಳಲ್ಲಾ ಅಂತ ಹೇಳ್ತಾ ಇಲ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳೋದು ತಪ್ಪು. ಅಲ್ಲಿ ದುಡ್ಡಿದೆ ಎಂದು ತೊಂಬತ್ತು ವರ್ಷದ ಮುದುಕನಿಗೂ ಬೈಪಾಸ್ ಸರ್ಜರಿ ಮಾಡ್ತಾರೆ. ಅದು ತಪ್ಪು ಎಂದು ಇಂಗ್ಲೆಂಡಲ್ಲಿ ಎಪ್ಪತ್ತೈದು ವರ್ಷದ ಮೆಲೆ ಮಾಡಬಾರದು ಅಂತ ನಿಯಮ ಹಾಕಿಕೊಂಡರು. ಇದು ಹೊರನೋಟಕ್ಕೆ ಇನ್ ಹ್ಯೂಮನ್ ಅನ್ನಿಸಬಹುದು. ಆದರೆ ಅದೇ ಸತ್ಯ. ಆದರೆ ನಾವಿಲ್ಲಿ ಏನು ಮಾಡುತ್ತಾ ಇದೀವಿ. ನಿನಗೆ ವಯಸ್ಸೆಷ್ಟು ಅಂತ ಕೇಳೋಕ್ಮುಂಚೆ ನಿನ್ಹತ್ರ ಎರಡು ಲಕ್ಷ ರೂಪಾಯಿ ಇದ್ಯಾ ಅಂತ ಕೇಳ್ತೀವಿ. ದುಡ್ಡಿದ್ದೋನು ಬದುಕುತ್ತಾನೆ. ಇಲ್ಲದೋನು ಇಲ್ಲ. ಬರೀ ಕುರುಡಾಗಿ ಇನ್ನೊಬ್ಬರನ್ನು ಫಾಲೋ ಮಾಡೋ ಬದಲು ನಮ್ಮ ವ್ಯವಸ್ಥೆಗೆ ಯಾವುದು ಸರಿಯೋ ಅದನ್ನು ಮಾತ್ರ ಮಾಡಿದರೆ, ಸಾಯೋ ಮನುಷ್ಯ ನೆಮ್ಮದಿಯಿಂದಲಾದರೂ ಸಾಯಬಹುದು” ಕೆಂಪಾಗಿದ್ದ ಚಕ್ರಪಾಣಿ. ” ನೋಡಿ ಒಂದು ವಿಷಯ ಹೇಳ್ತೀನಿ. ನಿಮಗೆ ಅಮೆರಿಕಾಕ್ಕೆ ಬರಬಾರದು ಅಂತಿದ್ದರೆ ಅದು ತಪ್ಪೇನೂ ಅಲ್ಲ. ನನಗೆ ಇಲ್ಲಿಯದರ ಬಗ್ಗೆ ಖಂಡಿತಾ ದ್ವೇಷವಿಲ್ಲ. ಹಾಗೆ ಇದ್ದಿದ್ದರೆ, ಮದುವೆಗೆ ಇಲ್ಲಿನವರು ಬೇಕು ಅಂತ ಕೇಳ್ತಾನೂ ಇರಲಿಲ್ಲ. ನನ್ನ ಅದೃಷ್ಟ, ಎರಡೂ ಸಂಸ್ಕೃತೀನ ಮುಕ್ತ ಮನಸ್ಸಿನಿಂದ ಹೋಲಿಸೋಕೆ ನನಗೆ ಅವಕಾಶ ಸಿಕ್ಕಿತು. ಎರಡರಲ್ಲೂ ಹುಳುಕಿದೆ. ಅದ್ರೆ, ಬರೀ ಹುಳುಕನ್ನು ನೋಡ್ತಾ ಕೂತರೆ, ಯೂ ವಿಲ್ ಮಿಸ್ ದ ಫನ್. ಐ ವಾಂಟ್ ಯು ಗಿವ್ ಇಟ್ ಎ ಫೇರ್ ಟ್ರೈ. ನಾವು ಮದುವೆಯಾದರೂ ನೀವು ಅಲ್ಲಿಗೆ ಬಂದು ಒಂದೆರಡು ವರ್ಷ ನೋಡಿ ನಿಮಗೆ ಸರಿ ಬರಲಿಲ್ಲ ಅಂದರೆ ಇಬ್ಬರೂ ಯೋಚನೆ ಮಾಡೋಣ. ನಿಮ್ಮ ಯೋಚನೆ ರೀಸನಬಲ್ ಆಗಿದ್ದರೆ ನಾನು ಇಲ್ಲಿಗೆ ಬರೋಕೂ ರೆಡಿ. ಆದರೆ ನಿಮಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಇಲ್ಲದೆ ಅಮೆರಿಕನ್ ಆದದ್ದೆಲ್ಲಾ ಹೇಟ್ ಮಾಡ್ತೀನಿ ಅನ್ನೋ ಮನೋಭಾವನೆ ಇದ್ದರೆ , ಸ್ವಲ್ಪ ಕಷ್ಟ ಆಗುತ್ತೆ,” ತಡವರಿಸಿದಳು. ” ಅಲ್ಲಿ ಇರಬೇಕೋ ಬೇಡವೋ ಅನ್ನುವುದನ್ನು ಅಲ್ಲಿಗೆ ಬಂದೇ ನಿರ್ಧಾರ ಮಾಡಬೇಕೇ” ” ಬರಬಾರದು ಅಂತಾನೇ ನೀವು ನಿರ್ಧಾರ ಮಾಡಿದೀರಿ ಅಂದರೆ ನಾನು ಒಪ್ಪಲ್ಲ. ಅಮೆರಿಕಾ ಬಗ್ಗೆ ಕುತೂಹಲ ಇರೋದ್ರಿಂದಾನೇ ನೀವು ಈ ಪ್ರಪೋಸಲ್ ಗೆ ಒಪ್ಪಿರೋದು. ಅಷ್ಟು ಬದ್ಧ ದ್ವೇಷಿಯಾಗಿದ್ರೆ ಇಲ್ಲೇ ಯಾರನ್ನಾದ್ರೂ ಮದುವೆ ಮಾಡ್ಕೊಂಡು ಲಾಲ್ ಬಾಗಿಗೆ ಮರ ಸುತ್ತೋಕೆ ಹೋಗುತ್ತಿದ್ದಿರಿ. ಕನ್ನಡ ಸಿನೆಮಾದಲ್ಲಿ ಈಗಲೂ ಮರ ಸುತ್ತಿಸ್ತಾರಾ” ಇಬ್ಬರೂ ನಕ್ಕು ಎದ್ದರು. ಬಿಲ್ ಕೊಟ್ಟು ಹೊರಗೆ ಬಂದರು. ಮಧ್ಯಾಹ್ನ ಮೂರೂವರೆಯಾಗಿತ್ತು. ರಸ್ತೆ ಗಿಜಿಗಿಜಿಯನ್ನುತ್ತಿತ್ತು. “ಪಾನ್ ಹಾಕುತ್ತೀರಾ” ಕೇಳಿದ ಚಕ್ರಪಾಣಿ. ” ಸಾರಿ, ಆದರೆ ಥ್ಯಾಂಕ್ಸ್. ಬಟ್ ಐ ಡೋಂಟ್ ಮೈಂಡ್ ಇಫ್ ಯೂ ವಾಂಟ್ ಇಟ್” ಎಂದಳು. ” ಇಲ್ಲ, ಪರವಾಗಿಲ್ಲ” ನಕ್ಕ ಚಕ್ರಪಾಣಿ. ಆಟೋ ನಿಲ್ಲಿಸಿ ಒಳಗೆ ಹತ್ತುತ್ತಾ ಕೇಳಿದಳು ಸುಷ್ಮಾ” ನಿಮ್ಮ ಪಾಸ್ ಪೋರ್ಟ್ ರೆಡಿ ಇದೆಯಾ” ಚಕ್ರಪಾಣಿ ತಬ್ಬಿಬ್ಬಾಗಿ ” ಇ..ಇಲ್ಲ” ಎಂದ. ” ಭಗವದ್ಗೀತೆ ಕೇಳಿದ ಮೇಲೆ ಅರ್ಜುನ ಸನ್ಯಾಸ ತೆಗೆದುಕೊಳ್ಳಲಿಲ್ಲ, ಯುದ್ದ ಮಾಡಿದ” ಕಣ್ಣು ಮಿಟುಕಿಸಿ ಹೇಳಿದಳು, ಸುಷ್ಮಾ. ಆಟೋ ಹೊರಟಿತು. +* +* +* +ಭಾನುವಾರ ಬೆಳಿಗ್ಗೆ ಇರೋ ಮೂರುಜನ ಪೇಷೆಂಟುಗಳನ್ನು ಬೇಗ ನೋಡಿ ಬರೋಣವೆಂದು ಆಸ್ಪತ್ರೆಗೆ ಬಂದಿದ್ದ ಚಕ್ರಪಾಣಿ. ಓಪಿಡಿಗೆ ಬಂದು ಕೋಟು ಹಾಕುತ್ತಾ ಇದ್ದ. ಡಿಪಾರ್ಟ್ಮೆಂಟ್ ನಲ್ಲಿ ಯಾರೂ ಇರಲಿಲ್ಲ. ಇನ್ನೇನು ಹೊರಡೋಣವೆಂದು ತಿರುಗಿದಾಗ ಏದುಸಿರು ಬಿಡುತ್ತಾ ಓಡಿಬಂದಿದ್ದ ನರಸಿಂಹ. ” ಸಾ, ಯಾರೂ ಇಲ್ವಾ ಸಾ, ನಿಮ್ಮನ್ಬಿಟ್ಟು” ಗಾಬರಿಯಲ್ಲಿದ್ದ. ” ಇಲ್ಲ ಯಾಕೆ” ಆಶ್ಚರ್ಯದಿಂದ ಕೇಳಿದ ಚಕ್ರಪಾಣಿ. ” ಸಾಯೇಬ್ರ ಅಪ್ಪಾವ್ರಿಗೆ ಏನೋ ಉಸಾರಿಲ್ಲಾ, ಸಾ, ಆಫಿಸಲ್ಲೇ ಮಲ್ಕೊಂಡವ್ರೆ. ಬೇಗ ಓಗಿ ಯಾರ್ನಾದರೂ ಕರ್ಕೊಂಬಾ ಅಂದ್ರು. ಸರಿ ಓಗ್ಲೀ ನೀವೇ ಬನ್ನಿ” . ಚಕ್ರಪಾಣಿಗೆ ಸ್ವಲ್ಪ ಸಿಟ್ಟು ಬಂದರೂ ತಡೆದು ” ನಡಿ ಹೋಗೋಣ” ಎಂದು ನರಸಿಂಹನ ಹಿಂದೆ ಹೊರಟ. ಆಸ್ಪತ್ರೆಯ ಬಿಲ್ಡಿಂಗ್ ದಾಟಿ ಗವಿಸಿದ್ದಪ್ಪನ ಆಫೀಸಿನೊಳಗೆ ಹೋದ ಚಕ್ರಪಾಣಿ. ” ಅಮ್ಮಾ ಸತ್ನಪ್ಪೋ” ತಿಪ್ಪಣ್ಣನವರ ಆಕ್ರಂದನ ಕೇಳಿಸುತ್ತಿತ್ತು, ಒಳಗಿನಿಂದ. ಅಲ್ಲೇ ನಿಂತಿದ್ದ ಗವಿಸಿದ್ದಪ್ಪನಿಗೊಂದು ನಮಸ್ಕಾರ ಮಾಡಿದ. ” ನೀವ್ಯಾರ್ರೀ” ದುರುಗುಟ್ಟಿ ನೋಡಿ ಕೇಳಿದ. ತಾನು ಯಾಕೋ ಬರಬಾರದ ಜಾಗಕ್ಕೆ ಬಂದಿದ್ದೇನೆ ಅನ್ನಿಸಿತು ಚಕ್ರಪಾಣಿಗೆ. ಸುತ್ತಲೂ ನೋಡಿದ. ಏಳೆಂಟು ಜನ ಖಾದಿದಾರಿಗಳು. ಗವಿಸಿದ್ದಪ್ಪನೂ ಪಂಚೆಯಲ್ಲೇ ಇದ್ದ. ರಾತ್ರಿಯ ಪ್ರಭಾವವಿರಬೇಕು, ಎಲ್ಲರ ಕಣ್ಣೂ ಕೆಂಪಗಿತ್ತು. ” ಡಾ: ಚಕ್ರಪಾಣಿ, ಮೆಡಿಸಿನ್ ಲೆಕ್ಚರರ್” ಎಂದಷ್ಟೇ ಹೇಳಿ ತಿಪ್ಪಣ್ಣನನ್ನು ನೋಡಲು ಮುಂದಾದ. “ಏ ನರಸಿಂಹ ಬೇರೆ ಯಾರೂ ಇರಲಿಲ್ವೇನೋ, ಎಲ್ರೀ ನಿಮ್ಮ ಯುನಿಟ್ ಹೆಡ್ಡು” ಅಸಮಾಧಾನದಿಂದ ಕೇಳಿದ ಗವಿಸಿದ್ದಪ್ಪ. ” ಇವತ್ತು ಭಾನುವಾರ, ನಾಯಕ್ ಬರೋದಿಲ್ಲ. ಬೇರೆ ಯುನಿಟ್ಟಿನಲ್ಲಿ ಯಾರಿದಾರೆ ಎಂದು ನನಗೆ ಗೊತ್ತಿಲ್ಲ.” ಎಂದು ಹೇಳಿ ತಿಪ್ಪಣ್ಣನನ್ನು ಪರೀಕ್ಷಿಸಲು ಗವಿಸಿದ್ದಪ್ಪನ ಅಪ್ಪಣೆಗೆ ಕಾಯುತ್ತಾ ನಿಂತ ಚಕ್ರಪಾಣಿ. ” ಅಯ್ಯೋ, ಯಾರಾರ ಕಾಪಾಡ್ರಪ್ಪಾ, ಯಾರೋ ಒಬ್ರು ನೋಡ್ಲೀ ಬಿಡಪ್ಪ, ಸಿದ್ದಣ್ಣಾ” ಕೂಗುತ್ತಿದ್ದರು, ತಿಪ್ಪಣ್ಣನವರು. “ಹೋಗಲಿ ನೋಡ್ರೀ” ಬೇರೆ ದಾರಿಯಿಲ್ಲದೇ ಹೇಳಿದ ಗವಿಸಿದ್ದಪ್ಪ. ಹೋಗಿ ತಿಪ್ಪಣ್ಣನವರ ಬಳಿ ನಿಂತು ಕೇಳಿದ ಚಕ್ರಪಾಣಿ” ಏನಾಗ್ತಿದೆ, ತಿಪ್ಪಣ್ಣನವರೆ” ” ನಿನ್ನೆ ರಾತ್ರಿ ಪಾರ್ಟಿ ಮೀಟಿಂಗಿತ್ತು. ಮುಗಿಸ್ಕೊಂಡು ಎಲ್ಲಾ ನಮ್ಮನೇಲೆ ಸೇರಿದ್ವು. ಅಪ್ಪಯ್ಯ ಕುಡಿಗಿಡಿಯೋದಿಲ್ಲ.ಸ್ವಲ್ಪ ಮಟನ್ ಜಾಸ್ತಿ ಆಯ್ತು ಅನ್ನಿಸುತ್ತೆ. ಇವತ್ತು ಬೆಳಿಗ್ಗೆ ಎದ್ದವರೇ ಏಕ್ದಂ ಹೊಟ್ಟೇನೋವು ಅಂತ ಒದ್ದಾಡೋಕೆ ಶುರುಮಾಡಿದ್ರು. ನಾನು ಜೆಲ್ಯುಸಿಲ್ ಕೊಟ್ಟೆ. ಏನೂ ಕಮ್ಮಿ ಆಗ್ಲಿಲ್ಲ. ಅದಕ್ಕೆ ಆಸ್ಪತ್ರೆಗೆ ಕರ್ಕೊಂಬಂದೆ” ಗವಿಸಿದ್ದಪ್ಪ ಹೇಳಿದ ಗೋಡೆ ನೋಡುತ್ತಾ. ಚಕ್ರಪಾಣಿ ತಿಪ್ಪಣ್ಣನವರನ್ನು ಪರೀಕ್ಷಿಸುತ್ತಿದ್ದ. ನೋಡುತ್ತಲೇ ಅನ್ನಿಸಿತು ಚಕ್ರಪಾಣಿಗೆ ಏನೋ ತೊಂದರೆ ಇದೆ ಎಂದು. ತಿಪ್ಪಣ್ಣನವರು ಬಿಳಿಚಿಕೊಂಡಿದ್ದರು. ಕೈಕಾಲು ತಣ್ಣಗಾಗಿತ್ತು.”ತಿಪ್ಪಣ್ಣನವರೇ, ಎಲ್ಲಿ ನೋಯುತ್ತಾ‌ಇದೆ ಎಂದು ಸ್ವಲ್ಪ ತೋರಿಸ್ತೀರಾ” ಚಕ್ರಪಾಣಿ ಕೇಳಿದ ಹೊಟ್ಟೆಯನ್ನು ಅದುಮುತ್ತಾ. “ಇಲ್ಲೇ ಸಿವಾ, ಇಲ್ಲಿಂದ ಸುರು ಆಗಿ ಬೆನ್ನೆಲ್ಲಾ ನೋಯ್ತಾ ಐತೆ. ಒಟ್ಟೆ ಒಡೆದು ಓದ ಅಂಗೆ ಅನ್ನಿಸ್ತು. ಅಮ್ಮೋ ಸಿವಾ, ಕಾಪಾಡಪ್ಪಾ” ಹೊಟ್ಟೆಯ ಮೇಲ್ಭಾಗದಲ್ಲಿ ತೋರಿಸಿದರು ತಿಪ್ಪಣ್ಣ. “ಸ್ವಲ್ಪ ಬೀಪಿ ಅಪರೇಟಸ್ ತರಿಸ್ತೀರಾ ಸರ್” ಕೇಳಲೋ ಬೇಡವೋ ಎಂದು ಕೇಳಿದ. ನರಸಿಂಹ ತರಲು ಓಡಿದ. ” ಅವರ ಬೀಪಿ ಸರಿಯಾಗೇ ಇದೇರಿ. ಅಸಿಡಿಟೀಗೆ ಏನಾದ್ರೂ ಕೊಡಬೇಕಾ ನೋಡಿ. ಪೂರಾ ಪರೀಕ್ಷೆ ಬೇಕಾದರೆ ಆಮೇಲೆ ಮಾಡೋರಂತೆ” ಗವಿಸಿದ್ದಪ್ಪ ಸಿಡುಕಿದ. ಈತ ಮೆಡಿಸಿನ್ ಪೂರಾ ಮರೆತಿದ್ದಾನೆ ಅನ್ನಿಸಿತು ಚಕ್ರಪಾಣಿಗೆ. ಏನೂ ಗೊತ್ತಿಲ್ಲದೆ ಸುತ್ತಲೂ ನಿಂತಿರುವ ತನ್ನ ಚೇಲಾಗಳ ಮುಂದೆ ತನ್ನ ದೊಡ್ಡಸ್ತಿಕೆ ತೋರಿಸುತ್ತಿದ್ದಾನೆ. ತಾನು ಮಾಡುತ್ತಿರುವುದು ಸರಿ ಎಂದು ಗೊತ್ತಿದ್ದರೂ ಏನೂ ಹೇಳದೇ ಏಕೆ ಸುಮ್ಮನೆ ನಿಂತಿದ್ದೇನೆ ಎಂಬ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ, ಚಕ್ರಪಾಣಿಗೆ. ನರಸಿಂಹ ಬೀಪಿ ಅಪರೆಟಸ್ ತಂದಿದ್ದ.. ಬೀಪಿ ನೋಡುತ್ತಿರಬೇಕಾದರೆ ಹೊಟ್ಟೆಯ ಮೇಲ್ಭಾಗವನ್ನೊಮ್ಮೆ ದಿಟ್ಟಿಸಿದ. ಪಟ್ ಪಟ್ ಎಂದು ನಾಡಿಮಿಡಿತಕ್ಕೆ ಸರಿಯಾಗಿ ಇಡೀ ಹೊಟ್ಟೆಯ ಭಾಗ ಮೇಲೆ ಕೆಳಗೆ ಹೋಗುತ್ತಿತ್ತು. ಬೀಪಿ ತೀರ ಕಮ್ಮಿಯಿತ್ತು. ತೊಡೆಯ ಸಂದಿಯಲ್ಲಿ ಕೈಯಿಟ್ಟು ನೋಡಿದ. ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಅನ್ನಿಸಿತು. ಗವಿಸಿದ್ದಪ್ಪನ ಕಡೆ ನೋಡುತ್ತಾ ಕೆಳಿದ “ಸರ್, ತಿಪ್ಪಣ್ಣನವರಿಗೆ ಯಾವಾಗಲೂ ಬೀಪಿ ಜಾಸ್ತಿ ಇರುತ್ತೆ ಅಲ್ಲವಾ’ ” ಹೌದು ಅದಕ್ಕೇನೀಗ” ಗಡುಸಾಗಿಯೇ ಕೇಳಿದ ಗವಿಸಿದ್ದಪ್ಪ. ” ಈಗ ಅದು ತೀರ ಕಮ್ಮಿಯಿದೆ. ಹೀ ಇಸ್ ಇನ್ ಶಾಕ್. ಸಿವಿಯರ್ ಅಬ್ಡಾಮಿನಲ್ ಪೇನ್. ಎಪಿಗ್ಯಾಸ್ಟ್ರಿಕ್ ಪಲ್ಸೇಶನ್ಸ್, ಮತ್ತೆ ಶಾಕ್. ನನಗೆ ಅನ್ನಿಸುತ್ತೆ ಅನ್ಯೂರಿಸಂ ಲೀಕ್ ಅಗ್ತಾ ಇದೆ ಅಂತ. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕು. ನಮ್ಮಲ್ಲಿ ಇದಕ್ಕೆ ಸರಿಯಾದ ಅನುಕೂಲಗಳು ಇಲ್ಲ.’ ” ಹ…..ಯ್ಯೋ,” ತಿರಸ್ಕಾರದಿಂದ ಒಮ್ಮೆ ನಿಟ್ಟುಸಿರು ಬಿಟ್ಟು ಕೆಟ್ಟದಾಗಿ ಮುಖ ನೋಡಿದ ಗವಿಸಿದ್ದಪ್ಪ. ” ಎಲ್ಲಿಂದ ಬರ್ತೀರಿ ನೀವೆಲ್ಲ. ಯಾವೋನ್ರೀ ನಿಮಗೆ ಡಿಗ್ರಿ ಕೊಟ್ಟಿದ್ದು. ಅನ್ಯುರಿಸಂ ಅಂತೆ. ಇದ್ರೆ ತಾನೇ ಲೀಕ್ ಅಗೋದು. ಸುಮ್ಮ ಸುಮ್ಮನೆ ಪುಸ್ತಕ ಓದಿಕೊಂಡು ಬಂದು ಮನಸ್ಸಿಗೆ ಬಂದಿದ್ದೆಲ್ಲಾ ಹೇಳಬೇಡಿ. ನಿಮ್ಮ ಹುಡುಗ್ರ ಮುಂದೆ ಹೇಳಿ ಬೇಕಾದರೆ ನಿಮ್ಮ ಇಪ್ಪತ್ತೆರಡು ಡಿಫೆರೆಂಶಿಯಲ್ ಡಯಾಗ್ನಸಿಸ್ ನ. ಅಪ್ಪಯ್ಯಂಗೆ ಈ ನಡುವೆ ಬೀಪಿ ಯಾವಾಗಲೂ ಕಮ್ಮೀನೇ ಇರ್ತಿತ್ತು. ಎಲ್ಲಾ ಬಿಟ್ಟು ನಿಮ್ಮನ್ನ ಕರ್ಕೊಂಡು ಬಂದ್ನಲ್ಲ ಆ ನರಸಿಂಹ. ನೀವು ಹೋಗ್ರೀ. ನಿಮ್ಮ ಕೆಲಸ ನೋಡ್ಕೋ ಹೋಗ್ರೀ. ಇನ್ನೊಂದು ಸ್ವಲ್ಪ ಜೆಲ್ಯುಸಿಲ್ ಕುಡಿಸ್ರಿ. ಏ, ನರಸಿಂಹ, ಏನೋ ಮಾಡ್ತಾ ಇದ್ಯಾ, ಹೋಗಿ ಯಾರಾದ್ರೂ ನರ್ಸನ್ನು ಕರ್ಕೊಂಬಾ. ಹಾಗೇ ಒಂದಿಷ್ಟು ಪೆಪ್ಸಿಡ್ಡೋ ರ್ಯಾಂಟಾಕೋ ತೊಗೊಂಬಾ. ಬುದ್ಧಿ ಒಂದಿದ್ರೆ ಸಾಲದು. ಅದನ್ನು ಉಪಯೋಗಿಸುವುದಕ್ಕೂ ಬರಬೇಕು ” ಕೂಗಾಡುತ್ತಿದ್ದ. ಅಷ್ಟರಲ್ಲಿ ನರಸಿಂಹ ಹೋಗಿ ಡಾ:ರಾಮಸ್ವಾಮಿಯವರನ್ನು ಕರೆದುಕೊಂಡು ಬಂದಿದ್ದ. ರಾಮಸ್ವಾಮಿ ಎರಡನೇ ಯುನಿಟ್ಟಿನ ಹೆಡ್. ಒಳಗೆ ಬಂದವರೇ ಗವಿಸಿದ್ದಪ್ಪನ ನೋಡಿ ” ನಮಸ್ಕಾರಾ ಸಾರ್’ ಅಂದರು. ” ಏನ್ರೀ, ಎಲ್ಹೋಗಿರ್ತೀರಿ. ಹೀಗೇ ಏನ್ರೀ ನಡೆಸೋದು ಡಿಪಾರ್ಟ್ಮೆಂಟನ್ನು. ಇಷ್ಟು ದೊಡ್ಡ ಆಸ್ಪತ್ರೆ ಕಟ್ಟಿಸಿ ನಮ್ಮನೇಯವರನ್ನ ನೋಡೋಕೆ ಯಾವೋನನ್ನೋ ಕರೆಸಬೇಕೇನ್ರಿ, ನಾವು. ಈ ಡಾಕ್ಟ್ರು ಅನ್ನಿಸ್ಕೊಂಡವನು ಮನಸ್ಸಿಗೆ ಬಂದಹಾಗೆಲ್ಲಾ ಮಾತಾಡ್ತಾ ಇದ್ದಾನೆ. ಅದನ್ನೆಲ್ಲಾ ಆಮೇಲೆ ವಿಚಾರಿಸ್ತೀನಿ. ಈಗ ಮೊದಲು ಏನಾಗಿದೆ ನೋಡಿ.” ಮುಖನೋಡದೆ ಗದರಿದ ಗವಿಸಿದ್ದಪ್ಪ. ಚಕ್ರಪಾಣಿಗೆ ಮೊದಲ ಬಾರಿಗೆ ಗವಿಸಿದ್ದಪ್ಪನ ಪ್ರತ್ಯಕ್ಷ ಪರಿಚಯವಾಗುತ್ತಿತ್ತು. ಅವನ ಬಗ್ಗೆ ಕೇಳಿದ್ದನೇ ಹೊರತು ನೋಡುವ ಅವಕಾಶ ಸಿಕ್ಕಿರಲಿಲ್ಲ. ಎಂಥ ಹೇಯ ಮನುಷ್ಯ ಈತ ಎಂದುಕೊಂಡ. ಮೆಡಿಸಿನ್ ಬಗ್ಗೆ ಕಿಂಚಿತ್ತೂ ಜ್ಞಾನ ಇಲ್ಲ. ಜೊತೆಗೆ ನಾನು ಹೇಳುವುದನ್ನು ಕೇಳುವ ಸೌಜನ್ಯ ಕೂಡ ಇಲ್ಲ. ನನ್ನ ಡಯಾಗ್ನಸಿಸ್ ತಪ್ಪಿರಬಹುದು ಆದರೆ ಸಂಶಯ ಖಂಡಿತಾ ತಪ್ಪಲ್ಲ. ತನ್ನ ಅಪ್ಪ ಸಾಯುತ್ತಿದ್ದಾನೆ ಅನ್ನುವ ಲವಲೇಶ ಪ್ರಜ್ಞೆಯೂ ಇಲ್ಲವಲ್ಲ ಈತನಿಗೆ. ಈತನ ಕೆಳಗೆ ಕೆಲಸ ಮಾಡುತ್ತಿರುವುದಕ್ಕೆ ತನ್ನ ಮೇಲೆ ತನಗೇ ಹೇಸಿಗೆ ಯೆನಿಸಿತು. ತಾನೇನೋ ಈಗ ಈ ಕೆಲಸಕ್ಕೆ ಸೇರಿದ್ದೇನೆ, ಈ ಸೀನಿಯರ್ ಪ್ರೊಫೆಸರರಿಗೇನು ಗ್ರಹಚಾರ ಅಂದುಕೊಡ, ಇವನ ಹತ್ತಿರ ಏಗುತ್ತಿದ್ದಾರೆ. ರಾಮಸ್ವಾಮಿಯವರನ್ನು ನೋಡಿ ಅಸಹ್ಯವಾಯಿತು. ಇಷ್ಟು ಜನರ ಮುಂದೆ, ತಮಗಿಂತ ಚಿಕ್ಕವನಾದ ನನ್ನ ಮುಂದೆ ಬಾಯಿಗೆ ಬಂದ ಹಾಗೆ ಅನ್ನಿಸಿಕೊಂಡು ಏನೂ ಆಗಿಲ್ಲದಂತೆ ನಿಂತಿದ್ದಾರೆ. ಇಷ್ಟೆಲ್ಲಾ ಆದರೂ ತನಗೇಕೆ ಮೈಯುರಿಯುತ್ತಿಲ್ಲ. ಇವನಿಗೆ ಒಂದು ಕಪಾಳಕ್ಕೆ ಹೊಡೆದು ಹೊರಗೆ ಹೋದರೆ ಏನಾಗಬಹುದು ಅನ್ನಿಸಿತು. ಎಲ್ಲೋ ಒಂದು ಕಡೆ ಕೆಲಸ ಸಿಕ್ಕೇ ಸಿಗುತ್ತದೆ. ಮರ್ಯಾದೆ ಬಿಟ್ಟು ಇಲ್ಲಿ ಬದುಕುವ ಬದಲು ಅದೇ ವಾಸಿ, ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಚಕ್ರಪಾಣಿ. ” ಏನ್ರೀ ಯೋಚನೆ ಮಾಡ್ತಾ ಇದೀರ. ನಿಮ್ಮ ಫೈಂಡಿಂಗ್ಸ್ ಏನು ಅಂತ ಹೇಳ್ರೀ ರಾಮಸ್ವಾಮಿಗೆ” ಗುಡುಗಿದ ಗವಿಸಿದ್ದಪ್ಪ. ಈಗ ತಾನು ತಾಳ್ಮೆ ಕಳೆದುಕೊಂಡರೆ ತಿಪ್ಪಣ್ಣನವರು ಸತ್ತುಹೋಗುತ್ತಾರೆ ಅನ್ನಿಸಿತು. ಮೊದಲಿನಿಂದ ಎಲ್ಲವನ್ನೂ ನಿಧಾನವಾಗಿ ವರದಿಯೊಪ್ಪಿಸಿದ ರಾಮಸ್ವಾಮಿಯವರಿಗೆ. ರಾಮಸ್ವಾಮಿಯವರಿಗೆ ಚಕ್ರಪಾಣಿಯ ನಿರ್ಲಿಪ್ತತೆ, ಅಸಹನೆ ಅರ್ಥವಾಯಿತು. ಎರಡು ನಿಮಿಷ ಪರೀಕ್ಷೆ ಮಾಡಿ ” ಯೂ ಆರ್ ರೈಟ್ ಚಕ್ರಾಪಾಣಿ. ಇನ್ನೊಂದು ಪಾಸಿಬಲಿಟಿ ಅಂದರೆ ಸಿವಿಯರ್ ಪ್ಯಾಂಕ್ರಿಯಾಟೈಟಿಸ್. ಬಟ್ ಐ ಡೌಟ್ ಇಟ್. ಗುಡ್ ಪಿಕಪ್. ಸರ್, ಮೊದಲು ಬೆಂಗಳೂರಿಗೆ ಕಳಿಸೋ ಅರೇಂಜ್ ಮೆಂಟ್ ಮಾಡಿಸಿ. ಏನಮ್ಮಾ ಎರಡು ಡ್ರಿಪ್ ಶುರೂಮಾಡಿ. ಸಲೈನ್ ಹೋಗಲಿ. ನರಸಿಂಹೂ ನೀನು ಹೋಗಿ ವ್ಯಾನ್ ರೆಡಿ ಮಾಡಿಸು. ಚಕ್ರಪಾಣಿ ನೀವು ವ್ಯಾನಲ್ಲೇ ಬನ್ನಿ. ನಾನೂ ಬರ್ತೀನಿ. ಮೊದಲು ಮಲ್ಯಾಕ್ಕೆ ಫೋನ್ ಮಾಡ್ಬೇಕು. ನನಗೆ ಅಲ್ಲಿನ ಸರ್ಜನ್ ಗೊತ್ತಿದ್ದಾರೆ. ಆದರೆ ಅವರು ಇಂತದ್ದನ್ನೆಲ್ಲಾ ಹ್ಯಾಂಡಲ್ ಮಾಡ್ತಾರೋ ಇಲ್ವೋ ಅಂತ ಗೊತ್ತಿಲ್ಲ. ಆದರೂ ಪರವಾಗಿಲ್ಲ, ಇನ್ಯಾರಾರೋ ಸಿಕ್ಕೇ ಸಿಗ್ತಾರೆ. ಸರ್, ನೀವು ಸಿ‌ಎಂ ಕೈಯಲ್ಲಿ ಒಂದು ಮಾತು ಹೇಳಿಸೋಕ್ಕಾಗುತ್ತಾ ನೋಡಿ. ನಮ್ಮ ಬ್ಲಡ್ ಬ್ಯಾಂಕಿನಲ್ಲಿ ತಿಪ್ಪಣ್ಣನವರ ಗ್ರೂಪಿನದು ಎಷ್ಟು ಯುನಿಟ್ ರಕ್ತ ಇದೆ ನೋಡಿ. ಕಮ್ಮಿ ಆದ್ರೆ ಹಾಸ್ಟೆಲ್ಲಿಗೆ ಹೋಗಿ ಹುಡುಗರನ್ನು ಕರೆದುಕೊಂಡು ಬರೋಣ. ಬೇಗ, ಬೇಗ. ಸರ್, ನೀವು ಬರೋದು ಒಳ್ಳೇದು ಅಂತ ಅನ್ನಿಸುತ್ತೆ. ನೀವು ಮನೇಗೆ ಹೋಗಿ ರೆಡಿ ಆಗಿ ಬರ್ತೀರೋ ಅಥವಾ ಇಲ್ಲೇ ಬಟ್ಟೆ ತರಿಸೋಣವಾ. ಚಕ್ರಪಾಣಿನ ಅಪ್ಪಾವರ ಜತೆ ಕಳಿಸ್ತೀನಿ. ನಾನು ಮುಂಚೇನೆ ಹೊರಟುಬಿಡುತ್ತೇನೆ. ನೀವು ಬರುವಹಾಗಿದ್ರೆ ಒಟ್ಟಿಗೇ ಹೋಗೋಣವಂತೆ. ಚಕ್ರಪಾಣಿ, ಹುಷಾರಪ್ಪ. ಫ್ಲುಯಿಡ್ಸ್ ಸ್ವಲ್ಪ ನೋಡ್ಕೊಂಡು ಕೊಡಿ. ನಿಮ್ಮ ಜತೆ ಯಾರಾದರೂ ಬೇಕಾ ಹೇಳಿ. ಒಟ್ಟು ಅವರನ್ನು ಸೇಫಾಗಿ ಅಲ್ಲಿಗೆ ಕರೆದುಕೊಂಡು ಬನ್ನಿ. ನೋವಿಗೆ ಏನಾದರೂ ಕೊಡುವ ಹಾಗಿದ್ದರೆ ಕೊಡಿ.” ಒಂದೇ ಉಸಿರಲ್ಲಿ ಬಡಬಡಿಸಿ ಹೇಳಿ ಚಕ್ರಪಾಣಿಯ ಕಿವಿಯಲ್ಲಿ ” ದೊಡ್ಡೋರ ಸಹವಾಸ ನಮಗ್ಯಾಕೆ. ನಿಮ್ಮ ಅನುಮಾನಾನೇ ನಿಜವಾಗಿದ್ರೆ ತನ್ನಂತಾನೇ ಸೀಲ್ ಆಗಿರಬೇಕು. ಇಲ್ಲದೇ ಹೋಗಿದ್ರೆ ಇಷ್ಟು ಹೊತ್ತಿಗೆ ಮುದುಕ ಗೋತ” ಪಿಸುಗುಟ್ಟಿದರು. ಬೆಪ್ಪಾದರೂ ತೋರಿಸಿಕೊಳ್ಳಲಿಲ್ಲ ಗವಿಸಿದ್ದಪ್ಪ.” ಅವರಿಗೆ ಅನ್ಯೂರಿಸಂ ಇರಲೇ ಇಲ್ಲ” ಎಂದು ಗೊಣಗಿದರೂ ತಾನು ಎಲ್ಲೋ ತಪ್ಪಿದ್ದೇನೆಂದು ಅನ್ನಿಸಿ ” ಸರಿ, ಏನ್ಮಾಡ್ತೀರೋ ಮಾಡಿ” ಎಂದು ಫೋನ್ ಮಾಡಲು ಒಳಗೆ ಹೋದ. ರಾಮಸ್ವಾಮಿ ಜಾಣ ಅನ್ನಿಸಿತು. ರೋಗ ಏನೆಂದು ಪತ್ತೆ ಹಚ್ಚಿದ್ದು ನಾನು. ಆದರೆ ಗವಿಸಿದ್ದಪ್ಪ ಅದನ್ನು ನಂಬಿದ್ದು ಪ್ರೊಫೆಸರರ ಬಾಯಿಂದ ಬಂದಾಗ ಮಾತ್ರ. ಮನಸ್ಸಿಗೆ ಅನ್ನಿಸುವುದನ್ನು ಇನ್ನೊಬ್ಬರಿಗೆ ಹೇಳುವುದಕ್ಕೆ ತನಗೆ ಬರುವುದಿಲ್ಲವೇ. ಇಂಥ ಸೀರಿಯಸ್ ಕಾಯಿಲೆಯನ್ನು ಮಕ್ಕಳು ಮಗ್ಗಿ ಒಪ್ಪಿಸಿದ್ದಂತೆ ನಿರ್ಲಿಪ್ತನಾಗಿ ಹೇಳಿದ್ದು ತಪ್ಪು ಅನ್ನಿಸಿತು. ತಾನೂ ರಾಮಸ್ವಾಮಿಯಂತೆ ಬಂದಾಕ್ಷಣ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಥಳುಕು ಮಾಡಿದ್ದರೆ ಗವಿಸಿದ್ದಪ್ಪ ನಂಬುತ್ತಿದ್ದನೋ ಏನೋ. ಬರೀ ಕಾಯಿಲೆ ಕಂಡುಹಿಡಿದು ಟ್ರೀಟ್ ಮಾಡುವುದಕ್ಕಿಂತಾ ಹೆಚ್ಚಿನ ಡಾಕ್ಟರಿಕೆ ಒಂದಿದೆ. ಅದರಲ್ಲಿ ತಾನು ಪಳಗಬೇಕಾದರೆ ಈ ಜನ್ಮವಿಡೀ ಹೆಣಗಾಡಬೇಕು. ಈ ರಾಮಸ್ವಾಮಿಯಾದರೂ ಏನು ಮಾಡುತ್ತಿದ್ದಾನೆ. ತಿಪ್ಪಣ್ಣನವರನ್ನು ಆದಷ್ಟು ಬೇಗ ಬೆಂಗಳೂರಿಗೆ ಸಾಗಹಾಕುವ ಯೋಚನೆ. ಆದರೂ ಆ ಪರಿಸ್ಥಿತಿಯಲ್ಲಿ ಅದೇ ಸರಿ ಅನ್ನಿಸಿತು. ಇಲ್ಲಿದ್ದರೆ ಖಂಡಿತಾ ತಿಪ್ಪಣ್ಣನವರು ಉಳಿಯುವುದಿಲ್ಲ. ಅಂತದ್ದರಲ್ಲಿ ತಮಗೆ ಯಾಕೆ ಕೆಟ್ಟ ಹೆಸರು‌ಎಂಬ ಯೋಚನೆ ರಾಮಸ್ವಾಮಿಗೆ. ಆದರೆ ತನ್ನನ್ನು ಆಂಬುಲೆನ್ಸ್ ಗೆ ಹಚ್ಚಿ ಒಳ್ಳೆ ಫಜೀತಿಗೆ ಸಿಕ್ಕಿಸಿದನೆನ್ನಿಸಿತು. ಅಕಸ್ಮಾತ್ ದಾರಿಯ ಮಧ್ಯದಲ್ಲಿ ಸತ್ತರೆ ಯಾರಿಗೆ ಕೆಟ್ಟ ಹೆಸರು. ಹೇಗಾದರೂ ಮಾಡಿ ಇದರಿಂದ ನುಣುಚಿಕೊಳ್ಳಬೇಕೆನಿಸಿತು. ಆದರೆ, ಇನ್ನೊಂದು ಕಡೆ ಅನ್ನಿಸಿತು- ತಾನೇನು ಕೊನೆಯತನಕ ಗವಿಸಿದ್ದಪ್ಪನ ಆಸ್ಪತ್ರೆಯಲ್ಲಿ ಇರುತ್ತೇನೋ ಇಲ್ಲವೋ ಆದರೆ ಇದರಿಂದ ಅವನ ಕೃಪೆ ಸ್ವಲ್ಪ ತನ್ನ ಮೇಲೆ ಬಿದ್ದರೆ ಕೆಡುಕೇನೂ ಇಲ್ಲವೆನ್ನಿಸಿತು. ಒಬ್ಬ ಡ್ರೈವರ್, ಇಬ್ಬರು ನರ್ಸ್ ಗಳು, ಚಕ್ರಪಾಣಿ ಮತ್ತು ಮೂರು ಜನ ತಿಪ್ಪಣ್ಣನವರದೇ ರಕ್ತದ ಗುಂಪಿನ ಹಾಸ್ಟೆಲ್ ಹುಡುಗರು ಅಂಬುಲೆನ್ಸಿನಲ್ಲಿ ಹೊರಟರು. ರಾಮಸ್ವಾಮಿ, ಗವಿಸಿದ್ದಪ್ಪ ಕಾರಿನಲ್ಲಿ ಮುಂದೆ ಹೊರಟರು. ಇನ್ನುಳಿದ ಫುಡಾರಿಗಳು ಬೇರೆ ಕಾರಿನಲ್ಲಿ ಹೊರಟಿದ್ದರು. ಮೊದಲ ಬಾರಿಗೆ ಬೇರೆಯೊಬ್ಬರಿಗೆ ಗವಿಸಿದ್ದಪ್ಪನ ಕಾರು ನೋಡುವ ಅವಕಾಶ ಸಿಕ್ಕಿತ್ತು. ಒಂದು ಯುನಿಟ್ ರಕ್ತ, ಎರಡು ಸಲೈನ್ ದೇಹದೊಳಗೆ ಸೇರಿದ ಮೇಲೆ ತಿಪ್ಪಣ್ಣನವರು ಸ್ವಲ್ಪ ಚೇತರಿಸಿಕೊಂಡಂತೆ ಕಾಣಿಸಿತು. ನೋವಿಗೆ ಇಂಜಕ್ಷನ್ ಕೊಟ್ಟಿದ್ದರಿಂದ ನಿದ್ದೆ ಮಾಡುತ್ತಿದ್ದರು. ಬೀಪಿ ಕೂಡ ಸ್ವಲ್ಪ ಸುಧಾರಿಸಿತ್ತು. ಮಲ್ಯ ಆಸ್ಪತ್ರೆಯ ಮುಂದೆ ಇವರ ಅಂಬ್ಯುಲೆನ್ಸ್ ನಿಲ್ಲುವ ಹೊತ್ತಿಗೆ ಗವಿಸಿದ್ದಪ್ಪ ಆಗಲೇ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಿ ಸ್ಟ್ರೆಚರ್ ಸಮೇತ ಕಾಯುತ್ತಿದ್ದ. ತಿಪ್ಪಣ್ಣನವರನ್ನು ಇಂಟೆಂಸಿವ್ ಕೇರ್ ಯುನಿಟ್ಟಿಗೆ ಸೇರಿಸಿ ಅಲ್ಲಿನ ಡ್ಯೂಟಿ ಡಾಕ್ಟರಿಗೆ ವರದಿ ಒಪ್ಪಿಸಿ ತನ್ನ ಕೆಲಸ ಮುಗಿಯಿತೆಂದು ಹೊರಗೆ ಬಂದು ಕಾರಿಡಾರಿನಲ್ಲಿ ಕುಳಿತ ಚಕ್ರಪಾಣಿ. ” ಬರಬೇಕಾದರೆ ಹೇಗಿದ್ದರು ಅಪ್ಪಯ್ಯ” ಆತಂಕದಿಂದ ಕೇಳಿದ ಗವಿಸಿದ್ದಪ್ಪ. ” ಎಲ್ಲ ಸ್ಟೇಬಲ್ ಆಗಿತ್ತು ಸರ್, ಏನೂ ತೊಂದರೆಯಾಗಲಿಲ್ಲ” ನಿಲ್ಲುತ್ತಾ ಹೇಳಿದ ಚಕ್ರಪಾಣಿ. ಗವಿಸಿದ್ದಪ್ಪ ಒಬ್ಬನೇ ಇದ್ದ. ಅವನ ಫುಡಾರಿಗಳು ಕೆಳಗೆ ಕಾಫಿ ಕುಡಿಯಲು ಹೋಗಿದ್ದರು. ರಾಮಸ್ವಾಮಿ ಒಳಗೆ ಯಾರದೋ ಜತೆ ಮಾತನಾಡುತ್ತಿದ್ದರು. ಅತ್ತಿತ್ತ ನೋಡಿದ ಗವಿಸಿದ್ದಪ್ಪ ಯಾರೂ ಇಲ್ಲವೆಂದು ಖಾತ್ರಿ ಮಾಡಿಕೊಂಡು ” ನಾನು ನಿಮ್ಮನ್ನು ಯಾರೋ ಟ್ಯೂಟರ್ ಅಂದುಕೊಂಡಿದ್ದೆ. ಐ ಡಿಡ್ ನಾಟ್ ರಿಯಲೈಜ್ ದಟ್ ಯು ಆರ್ ಎನ್ ಎಂಡೀ. ಮತ್ತೆ ಎಷ್ಟಾದರೂ ಅವರು ನಮ್ಮ ತಂದೆ ನೋಡಿ. ಸ್ವಲ್ಪ ಎಮೋಷನಲ್ ಕೂಡ ಆಗಿದ್ದೆ. ಗಂಟಲು ಸರಿಪಡಿಸುತ್ತಾ ಸಮಜಾಯಿಷಿ ನೀಡಲು ಪ್ರಯತ್ನಿಸಿದ. ಚಕ್ರಪಾಣಿಗೆ ಇದಕ್ಕಿಂತಾ ಹೆಚ್ಚಿನ ಕ್ಷಮಾಪಣೆ ತಾನು ಗವಿಸಿದ್ದಪ್ಪನಿಂದ ಅಪೇಕ್ಷಿಸುವುದು ತಪ್ಪು ಅನ್ನಿಸಿತ್ತು. ” ಇರಲಿ ಸರ್, ನನಗೆ ಅರ್ಥ ಆಗುತ್ತದೆ. ಒಟ್ಟು ತಿಪ್ಪಣ್ಣನವರು ಹುಷಾರಾದರೆ ಸಾಕು” ಅಂದ. ರಾಮಸ್ವಾಮಿ ಹೊರಗೆ ಬಂದು ” ಈಗ ಸೀಟಿ ಸ್ಕಾನ್ ಮಾಡಿದಾರೆ. ಒಳಗೆ ಹೋಗಿ ನೋಡಿಕೊಂಡು ಬಂದೆ. ಚಕ್ರಪಾಣಿ ಈಸ್ ರೈಟ್. ಅಯೊರ್ಟಿಕ್ ಅನ್ಯೂರಿಸಂ. ಈಗ ಬ್ಲೀಡಿಂಗ್ ಆಗ್ತಾ ಇದೆಯೋ ಇಲ್ಲವೋ ಅಂತ ಹೇಳೋದು ಕಷ್ಟ. ತಕ್ಷಣ ಸರ್ಜರಿಗೆ ತೆಗೆದುಕೊಳ್ಳುತ್ತಾ ಇದ್ದಾರೆ. ಒಂದು ಮೂರು ನಾಲ್ಕು ಗಂಟೆಯಾದರೂ ಆಗಬಹುದು. ” ಗವಿಸಿದ್ದಪ್ಪನನ್ನು ನೋಡುತ್ತಾ ಹೇಳಿದರು. ” ಸರಿ ಸರಿ, ಯಾರು ಸರ್ಜನ್. ಸೀ‌ಎಂ ಮನೇಲಿ ಕಾಯ್ತಾ ಇದಾರೆ. ಯಾರು ಡಾಕ್ಟರು ಅನ್ನೋದನ್ನ ತಿಳ್ಕೊಂಡು ತಕ್ಷಣ ಫೋನ್ ಮಾಡು ಅಂತ ಹೇಳಿದ್ರು. ನಾನು ಮಾಡ್ತೀನಿ. ಚಕ್ರಪಾಣಿ, ನೀವೆಲ್ಲಿಗೂ ಹೋಗ್ಬೇಡಿ. ಸಾಯಂಕಾಲದ ತನಕ ಇದ್ದು ಕಂಡೀಷನ್ ನೋಡಿಕೊಂಡು ಊರಿಗೆ ಹೋಗೋಣ. ಬೇಕಾದರೆ ನಾನೇ ಡ್ರಾಪ್ ಮಾಡ್ತೇನೆ. ಅವನ ಉತ್ತರಕ್ಕೂ ಕಾಯದೇ ಧಡಧಡ ಒಳಗೆ ಓಡಿದ ಗವಿಸಿದ್ದಪ್ಪ. ಒಳಗೇ ನಕ್ಕು ಚಕ್ರಪಾಣಿ ಕೆಳಗಿನ ಹೋಟೆಲ್ ಕಡೆ ನಡೆದ. +* +* +* +ಕಳೆದ ಒಂದುವಾರದಿಂದ ಗವಿಸಿದ್ದಪ್ಪ ತುಂಬಾ‌ಓಡಾಡುತ್ತಿದ್ದ. ಮುಂದಿನವಾರ ಭಾರತೀಯ ವೈದ್ಯಕೀಯ ಮಂಡಲಿಯವರು ಕಾಲೇಜಿಗೆ ಬರುತ್ತಿದ್ದರು. ಮೂರುದಿನದ ಭೇಟಿ. ಪ್ರತಿಯೊಂದು ಡಿಪಾರ್ಟ್ ಮೆಂಟಿನ ಅಂಕಿ‌ಅಂಶಗಳನ್ನು ತಿದ್ದಿ ಸರಿಮಾಡಲಾಗಿತ್ತು. ಪ್ರತಿ ವಿಭಾಗವೂ ಲೆಕ್ಕದ ಪ್ರಕಾರ ಕಾಗದದ ಮೇಲೆ ಕೌನ್ಸಿಲ್ ಅಂಗೀಕರಿಸಲು ಕೇಳುವ ಕನಿಷ್ಟ ಅರ್ಹತೆಗಳೆಲ್ಲವನ್ನೂ ಪಡೆದಿದ್ದವು. ಮೆಡಿಸಿನ್ ಹೊರರೋಗಿ ವಿಭಾಗದ ಮುಂದಿರುವ ಗೋಡೆಯ ಮೇಲಿನ ದೊಡ್ಡ ಬೋರ್ಡಿನ ಮೇಲೆ ಇರುವ ನಾಲ್ಕು ಜನ ಡಾಕ್ಟರುಗಳ ಹೆಸರಿನ ಜೊತೆಗೆ ಇನ್ನಾರು ಜನದ ಹೆಸರನ್ನು ಸೇರಿಸಿ ಒಟ್ಟು ಹತ್ತು ಮಾಡಲಾಗಿತ್ತು. ಈ ಉಳಿದ ಆರು ಜನ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಇಷ್ಟರ ಮಧ್ಯೆ ತಿಪ್ಪಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವುದು ಗವಿಸಿದ್ದಪ್ಪನಿಗೆ ಸ್ವಲ್ಪ ಸಮಾಧಾನವಾಗಿತ್ತು. ಕಳೆದ ಮೂರು ತಿಂಗಳಿನಿಂದ ಬರೆಸಿರುವ ಕೇಸ್ ಶೀಟುಗಳು ಆಸ್ಪತ್ರೆಯ ಒಳರೋಗಿಗಳ ಸಂಖ್ಯೆಯನ್ನು ತಾನಾಗೇ ಹೆಚ್ಚಿಸಿತ್ತು. ಹೊರರೋಗಿಗಳ ಸಂಖ್ಯೆ ಸಾಕೆನಿಸಿತ್ತು. ಆಪರೇಶನ್ ಥಿಯೇಟರ್, ರೇಡಿಯಾಲಜಿ ವಿಭಾಗಗಳ ಸಂಖ್ಯೆಯನ್ನು ತಲೆಕೆಳಗಾದರೂ ಬದಲಾಯಿಸಲಾಗುತ್ತಿರಲಿಲ್ಲ. ಬರುತ್ತಿರುವ ಕೌನ್ಸಿಲ್ ಮೆಂಬರುಗಳನ್ನು ಭೆಟಿ ಮಾಡಲು ಎರಡು ಬಾರಿ ಡೆಲ್ಲಿಗೆ ಹೋಗಿ ಬಂದಿದ್ದ ಗವಿಸಿದ್ದಪ್ಪ. ಕೇಂದ್ರ ಸರಕಾರದ ಕೆಲಸವಾದ್ದರಿಂದ ತನಗೇನೂ ಮಾಡಲಾಗುವುದಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿಬಿಟ್ಟಿದ್ದರು. ಆದರೆ ತನಗೆ ಗೊತ್ತಿರುವವರಿಂದ ಹೇಳಿಸುತ್ತೇನೆಂದು ಭರವಸೆ ಕೊಟ್ಟಿದ್ದರು. ಮೂರುಜನ ಮೆಂಬರುಗಳಲ್ಲಿ ಒಬ್ಬ ಸ್ವಲ್ಪ ಕಷ್ಟ. ಉಳಿದಿಬ್ಬರನ್ನು ಸರಿಯಾಗಿ ನೊಡಿಕೊಂಡರೆ ಕೆಲಸ ಏನೂ ಕಷ್ಟವಾಗುವುದಿಲ್ಲವೆಂದು ನುರಿತವರು ಹೇಳಿದ್ದರು. ಬೇರೆ ಎಲ್ಲ ಮೆಡಿಕಲ್ ಕಾಲೇಜುಗಳಿಗೆ ಫೋನ್ ಮಾಡಿ, ಮುಖತಃ ಭೇಟಿಯಾಗಿ ಈ ವ್ಯವಹಾರದ ಒಳಗುಹೊರಗುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದ್ದ. ಮೊದಲ ಭೇಟಿಯಲ್ಲಿಯೇ ರೆಕಗ್ನಿಷನ್ ತೆಗೆದುಕೊಳ್ಳುವುದು ಗವಿಸಿದ್ದಪ್ಪನಿಗೆ ತುಂಬಾ ಮುಖ್ಯವಾಗಿತ್ತು. ಏನೇ ಅಂಕಿ ಅಂಶಗಳನ್ನು ತಿದ್ದಿದರೂ ಆ ಮೂರು ದಿನ ಆಸ್ಪತ್ರೆಯಲ್ಲಿ ಈ ಕಾಗದದ ಮೇಲಿರುವವರನ್ನು ಜೀವಂತ ಹೇಗೆ ತರುತ್ತಾನೆ ಈ ಗವಿಸಿದ್ದಪ್ಪ ಎಂದು ಕುತೂಹಲವಾಗಿತ್ತು, ಚಕ್ರಪಾಣಿಗೆ. ಎಲ್ಲ ಡಾಕ್ಟರರ ಹೆಸರಲ್ಲಿ ಫೈಲು ರೆಡಿಯಾಗಿತ್ತು ಆಫೀಸಿನಲ್ಲಿ. ಮುಕ್ಕಾಲು ಜನ ಆ ಆಸ್ಪತ್ರೆಯಲ್ಲಿ ಕೆಲಸದಲ್ಲಿರದೇ ಇರುವವರು. ಬರೀ ಕಾಗದದ ಮೇಲೆ ಇದ್ದರೆ ಸಾಕೇ. ಒಂದಿಷ್ಟು ಜನ ರಜದಲ್ಲಿದ್ದಾರೆ ಎಂದು ಹೇಳಬಹುದು. ಆದರೆ ಬರುವವರು ಒಪ್ಪಬೇಕಲ್ಲ. ಬರೀ ಕಾಗದದ ಅಂಕಿ‌ಅಂಶಗಳನ್ನು ದಕ್ಷಿಣೆ ಸಮೇತ ಕೊಟ್ಟರೆ ಒಪ್ಪಿಕೊಂಡುಬಿಡುತ್ತಾರೆಯೇ ಈ ಕೌನ್ಸಿಲ್ಲಿನವರು. ತಲೆ ಎಣಿಸುವುದಿಲ್ಲವೇ. ಈ ಪೇಷೆಂಟುಗಳ ಸೆನ್ಸಸ್ಸೂ ಅಷ್ಟೆ. ತಿದ್ದಿದ ಲೆಕ್ಕದ ಪ್ರಕಾರ, ಇನ್ನೂರೈವತ್ತರಿಂದ ಮುನ್ನೂರರ ಸಮೀಪ ಇರುವ ಒಳರೋಗಿಗಳ ಸಂಖ್ಯೆ ಇದ್ದಕ್ಕಿದ್ದಹಾಗೆ ಆ ಮೂರುದಿನ ಐವತ್ತರಿಂದ ಎಪ್ಪತ್ತಕ್ಕೆ ಇಳಿದರೆ ಅದಕ್ಕೆ ಯಾವರೀತಿ ಸಮಜಾಯಿಷಿ ಕೊಡುತ್ತಾನೆ ಈ ಗವಿಸಿದ್ದಪ್ಪ. ತಲೆ ಕೆಡಿಸಿಕೊಳ್ಳುತ್ತಿದ್ದ, ಚಕ್ರಪಾಣಿ. ತನ್ನ ಮೇಲೆ ತನಗೇ ನಗು ಬಂತು. ಇದೇನು ನನ್ನ ಮೆಡಿಕಲ್ ಕಾಲೇಜೇ, ನಾನು ಯೋಚನೆ ಮಾಡಲು. ಇಷ್ಟು ದುಡ್ಡುಸುರಿದು ಕಟ್ಟಿಸಿಲ್ಲವೇ, ಗವಿಸಿದ್ದಪ್ಪ. ಅವನಿಗೆ ಏನಾದರೂ ಹೊಳೆದೇ ಇರುತ್ತದೆ. ಆದರೂ ಹೇಗೆ ಎಂದು ಕುತೂಹಲವಾಗಿತ್ತು. ” ಏನಮ್ಮಾ, ಇನ್ನರ್ ಸರ್ಕಲ್ಲಾ ಆಗಲೇ, ವಿಷಯ ಕೇಳಿದೆ, ಗ್ರೇಟ್ ಸೇವಂತೆ ತಿಪ್ಪಣ್ಣಾವ್ರದ್ದು. ನಿನ್ನ ಪುಣ್ಯ ನೀನು ಹೇಳಿದ್ದು ಸರಿಹೋಯಿತು. ಇಲ್ಲದೇ ಇದ್ದರೆ ನಿನ್ನ ಗ್ರಹಚಾರ ಬಿಡಿಸಿಬಿಡುತ್ತಿದ್ದ, ಆ ಗವಿಸಿದ್ದಪ್ಪ. ಕಾರಲ್ಲಿ ಬೇರೆ ಕರೆದುಕೊಂಡು ಬಂದನಂತೆ. ಅವನ ಹೆಂಡತಿಯೂ ಕೂತಿಲ್ಲ ಆ ಕಾರಲ್ಲಿ. ನಿನ್ನ ಅದೃಷ್ಟ. ಬಿಡ್ಬೇಡಮ್ಮಾ ಈ ಚಾನ್ಸು. ಸ್ವಲ್ಪಾ ಮಸ್ಕಾ ಹೊಡಿ. ಮುಂದಿನ ವರ್ಷ ಪ್ರಮೋಷನ್ ಸಿಕ್ರೂ ಸಿಗಬಹುದು” ಒಳಗೆ ಬರುತ್ತಾ ಹೇಳಿದ ಸತೀಶ. ” ಹಯ್ಯೋ, ನಿಮ್ಮ ಬಾಸನ್ನು ಕಟ್ಕೋ, ಕೊಂದ್ಬಿಡ್ತಿದ್ದ ಕಣೊ ಅವ್ರಪ್ಪನ್ನ. ಜೆಲ್ಯುಸಿಲ್ ಕೊಟ್ನಂತೆ. ಅವನ ಪುಣ್ಯ ಮನೇಲೇ ಸಾಯಲಿಲ್ಲ. ಏನೋ ನನ್ನ ಅದೃಷ್ಟ ಚೆನ್ನಾಗಿತ್ತು. ರಾಮಸ್ವಾಮಿ ಸಹಾಯದಿಂದ ಗವಿಸಿದ್ದಪ್ಪನನ್ನು ಕನ್ವಿನ್ಸ್ ಮಾಡಿದ್ದಾಯಿತು. ಮುದುಕನ ಆಯಸ್ಸು ಗಟ್ಟಿ ಇತ್ತು. ಇಲ್ಲ ಅಂದ್ರೆ ಇಷ್ಟುಹೊತ್ತಿಗೆ ದೇವರೇ ಗತಿ” ಏಳುತ್ತಾ ಹೇಳಿದ ಚಕ್ರಪಾಣಿ. ಇಬ್ಬರೂ ಕ್ಯಾಂಟೀನ್ ಕಡೆ ಹೊರಟರು. ” ಇಂತಾ ಇಂಟ್ಯೂಶನ್ಗಳನ್ನ ನಿನ್ನ ಹತ್ರಾನೇ ಇಟ್ಕೊಪ್ಪಾ. ಸುಮ್ಮಸುಮ್ಮನೆ ಏನಾರ ಹೇಳಿ ತೊಂದರೇಲಿ ಸಿಕ್ಕಿಹಾಕ್ಕೋಬೇಡ. ಗ್ಯಾರಂಟಿ ಇದ್ರೆ ಹೇಳು ಇಲ್ಲದೇ ಇದ್ದಲ್ಲಿ ನಿನ್ನ ಗೋರಿ ನೀನೆ ತೋಡಿಕೊಂಡಹಾಗೆ. ಯೋಚನೆ ಮಾಡು. ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಏನೂ ಇಲ್ಲ ಅಂತ ಏನಾದರೂ ಆಗಿದ್ದರೆ ನಿನ್ನನ್ನು ಹುರಿದು ಮುಕ್ಕಿಬಿಡುತ್ತಿದ್ದ. ಅದೃಷ್ಟ ಚೆನ್ನಾಗಿದ್ದುದ್ದು ಆ ಮುದುಕನದಲ್ಲ, ನಿನ್ನದು.” ” ಅಲ್ವೋ ನಿನಗೆ ಸರಿ ಅನ್ನಿಸಿದ್ದನ್ನು ಹೇಳಬಾರದೇನೋ. ನಿಜ ಹೇಳ್ತೀನಿ,ಆ ರಾಮಸ್ವಾಮೀನೂ ಸಸ್ಪೆಕ್ಟ್ ಮಾಡ್ತಾ‌ಇದ್ದ ಅನ್ನೋದು ನನಗೆ ಅನುಮಾನ. ನಾನು ಹೇಳಿದ್ದನ್ನೇ ಬಣ್ಣಬಣ್ಣವಾಗಿ ಹೇಳಿದ ಅಷ್ಟೆ.” ಅಸಮಾಧಾನದಿಂದ ಹೇಳಿದ ಚಕ್ರಪಾಣಿ. “ಅಲ್ಲೇ ಇರೋದು ನಿನ್ನ ಪ್ರಾಬ್ಲಂ. ನಿನಗೆ ಅನ್ನಿಸಿದ್ದನ್ನು ಹೇಳೊದಕ್ಕೆ ನಿನಗೆ ಇನ್ನೊಬ್ಬರ ಸಹಾಯ ಬೇಕಾಯಿತು. ಮನಸಲ್ಲಿರೋದನ್ನು ಬೇರೆಯವರಿಗೆ ಕನ್ವಿನ್ಸ್ ಆಗೋ ಹಾಗೇ ಹೇಳೊದು ಒಂದು ಕಲೆ ಚಕ್ರಿ. ಇಂಥಾವರ ಜತೆ ಡೀಲ್ ಮಾಡೋದಕ್ಕೆ ಕಲ್ತುಕೋ. ತಪ್ಪು ತಿಳಿಬೇಡ , ಯೂ ಲ್ಯಾಕ್ ಅಸರ್ಷನ್ ಇನ್ ಯುವರ್ ಟಾಕ್. ಅವೊತ್ತು ರಾಮಸ್ವಾಮಿ ನಿನ್ನ ಸಹಾಯಕ್ಕೆ ಬಂದಿರದೇ ಇದ್ದರೆ ನೀನು ತಿಪ್ಪಣ್ಣನವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗ್ತಾ ಇದ್ದೆಯಾ. ಇಲ್ಲ. ನೀನು ಮಾಡ್ತಾ‌ಇರೋದು ಸರಿ ಅಂತ ನಿನಗೆ ಅನ್ನಿಸಿದರೆ ಸಾಲದು. ಅದು ಬೇರೆಯವರಿಗೂ ಗೊತ್ತಾಗಬೇಕು. ನಿನ್ನ ಕೆಲಸದ ಸ್ವರೂಪವೇ ಹಾಗಿದೆ. ನೀನೇನು ಮಾಡಿದರೂ ಅದರಿಂದ ಇನ್ನೊಬ್ಬರಿಗೆ ಒಳ್ಳೆದೋ ಕೆಟ್ಟದೋ ಆಗೇ ಆಗುತ್ತದೆ. ನೀನು ಮಾಡೋದು ಒಳ್ಳೇದೇ ಅನ್ನೋದು ಪೇಷೆಂಟಿಗೆ ಮುಂಚೆ ಅರ್ಥ ಮಾಡಿಸೋದು ಕಲ್ತುಕೋ. ಇಲ್ಲದೇ ಹೋದರೆ, ನಾನೇನೋ ಮಾಡಬೇಕು ಅಂತಿದ್ದೆ, ಆದರೆ ಪೇಶೆಂಟು ಸಹಕರಿಸಲಿಲ್ಲ ಅನ್ನುವ ನೆಪಗಳನ್ನು ಕೊಡೋಕೆ ಶುರೂ ಮಾಡ್ತೀಯ ಅಷ್ಟೆ.” ” ಓ, ಓ, ಓ, …. ಉಪದೇಶ ಸಾಕು ಮಾಡು. ನನಗ್ಗೊತ್ತು, ಅದು ನನ್ನ ವೀಕ್ನೆಸ್. ನನ್ನಷ್ಟೆ ಜವಾಬ್ದಾರಿ ಅವನಿಗೂ ಇರಬೇಕಲ್ವೇ. ನಾನು ಏನೂ ಹೇಳಕ್ಕೆ ಬಿಡದೇ ಹೋ … ಎಂದರೆ.” ” ಗವಿಸಿದ್ದಪ್ಪನಿಗೆ ಅವೆಲ್ಲಾ ತಿಳಿಯೋದಿಲ್ಲ. ಐದು ನಿಮಿಷದಲ್ಲಿ, ನೀನು ಏನು ಹೇಳ್ಬೇಕು ಅಂತಿದೀಯೋ ಅದನ್ನು ಫಟ್ ಅಂತ ಹೇಳಿದ್ರೆ ನೀನು ಗೆದ್ದಿ ಅಂತ ತಿಳ್ಕೊ. ಇಲ್ಲದಿದ್ರೆ ನಿನ್ನ ಹಾಗೆ ಎಲ್ರೂ ಜೊತೆಗೆ ಒಬ್ಬೊಬ್ಬ ರಾಮಸ್ವಾಮಿಯವರನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಹೋಗಲಿ, ಮತ್ತೆ ಹೋಗಿ ಮೀಟ್ ಮಾಡಿದ್ಯಾ” ” ಇಲ್ಲ, ಯಾಕೆ” ಆಶ್ಚರ್ಯದಿಂದ ಕೇಳಿದ ಚಕ್ರಪಾಣಿ. ” ಹಯ್ಯೋ, ಮಂಕೇ, ನೀನುಳಿಸಿದ ಜೀವ ಕಣಯ್ಯ ಅದು, ಅಟ್ ಲೀಸ್ಟ್ ಟೇಕ್ ಕ್ರೆಡಿಟ್. ಹೋಗಿ ಹೇಗಿದ್ದಾರೆ ಅಂತ ಕೇಳು ಗವಿಸಿದ್ದಪ್ಪನವರನ್ನು. ಹೋಗಿ ತಿಪ್ಪಣ್ಣನವರನ್ನು ಮತಾಡಿಸ್ಕೊಂಡು ಬಾ. ಇಂಥ ಅವಕಾಶ ಬಹಳ ಜನಕ್ಕೆ ಸಿಗೋದಿಲ್ಲ. ಮನೇ ಅಡ್ರೆಸ್ ಗೊತ್ತಾ” ಕೇಳಿದ ಸತೀಶ. ” ಸತೀಶ, ನನಗೆ ಇವೆಲ್ಲ ಸರಿ ಹೋಗೊಲ್ವೋ. ಮೊನ್ನೆಯಿಂದ ಎರಡು ಬಾರಿ ಸಿಕ್ಕಿದ್ದ, ಗವಿಸಿದ್ದಪ್ಪ. ಕಾರಿಡಾರಲ್ಲಿ ನಮಸ್ಕಾರ ಹೊಡೆದರೆ, ಗುರುತಿಲ್ಲದೆ ಇದ್ದ ಹಾಗೆ ಕೈ ಎತ್ತಿದನೇ ಹೊರತು, ತಿಪ್ಪಣ್ಣನವರ ಬಗ್ಗೆ ಒಂದೂ ಮಾತಡಲಿಲ್ಲ. ಅವನೇ ಹೇಳ್ಬಹುದಿತ್ತಲ್ಲವೇ, ಆ ಗ್ರಾಟಿಟ್ಯೂಡ್ ಇದ್ದರೆ.” ” ಗ್ರಾಟಿಟ್ಯೂಡ್ ಮತ್ತೆ ಗವಿಸಿದ್ದಪ್ಪ, ನೀನೆಲ್ಲೋ ಕನಸು ಕಾಣ್ತಾ ಇದ್ದಿಯಾ. ಮೇಲಾಗಿ ಹೀ ಹ್ಯಾಸ್ ಟು ಲೀವ್ ಅಪ್ಟು ಹಿಸ್ ರೆಪ್ಯುಟೇಷನ್. ಹಿಂದೆ ಬೋ ಪರಾಕ್, ಬೋ ಪರಾಕ್, ಹೇಳುತ್ತಾ ನಡೆಯುತ್ತಿರುವ ಚೇಲಗಳ ಮುಂದೆ ನಿಂತು ನಿನಗೆ ತನ್ನ ಅಪ್ಪಾಜಿ ಚೆನ್ನಾಗಿದ್ದಾರೆ, ತುಂಬಾ ಥ್ಯಾಂಕ್ಸ್ ಅಂತ ಹೇಳ್ತಾನೆ ಅಂತ ನೀನು ಅಂದುಕೊಂಡರೆ ನಿನ್ನಂಥಾ ಮೂರ್ಖ ಇನ್ನೊಬ್ಬ ಇಲ್ಲ. ಹೋಗಲಿ, ನಿನಗೆ ಒಬ್ಬನೇ ಹೋಗೋಕೆ ಒಂಥರಾ ಆದರೆ ಇವೊತ್ತು ಸಂಜೆ ನನ್ನ ಜೊತೆ ಬಾ. ನಾನು ಹೇಗೂ ಮೀಟಿಂಗಿಗೆ ಹೋಗ್ತಾ ಇದೀನಿ.” “ಯಾವ ಮೀಟಿಂಗು” ಸ್ವಲ್ಪ ಅಚ್ಚರಿಯಿಂದ ಕೆಳಿದ. ಮೀಟಿಂಗುಗಳು ಆ ಕಾಲೇಜಿನಲ್ಲಿ ತುಂಬಾ ಮುಖ್ಯವಾಗಿದ್ದವು. ಮೀಟಿಂಗಿಗೆ ಹೋಗದೇ ಇದ್ದರೆ ಅವತ್ತಿನ ಸಂಬಳ ಹಿಡಿಯುತ್ತಿದ್ದ, ಗವಿಸಿದ್ದಪ್ಪ. ” ಇದು ಒಂಥರಾ ತುಂಬಾ ಗುಟ್ಟಿನ ಮೀಟಿಂಗು. ನಿನಗೆ ಕರೆ ಬರದೇ ಇರುವುದರಲ್ಲಿ ಆಶ್ಚರ್ಯ ವೇನಿಲ್ಲ ಬಿಡು. ನನಗೂ ಬರುತ್ತಿರಲಿಲ್ಲ. ನಂಬಾಸು ಹೋಗಿಬಾ ಅಂದಿದ್ದಕ್ಕೆ ಹೋಗ್ತಾ ಇದೀನಿ ಅಷ್ಟೆ. ಮಾಮೂಲಿ ಅಜೆಂಡಾ. ರೆಕಗ್ನಿಷನ್ ಗೆ ಬಂದಾಗ ಯಾರ್ಯಾರೇನು ಮಾಡ್ಬೇಕು ಅನ್ನೋದಿರಬೇಕು. ಈ ಹೊಸಾ ಡಾಕ್ಟರುಗಳು ಬರ್ತಾರಲ್ಲ, ಅವರೆಲ್ಲಾ ಸರಿಯಾಗಿ ಮಾತಾಡೋ ಹಾಗೆ ತಯಾರು ಮಾಡಬೇಕಲ್ಲಪ್ಪ. ಮತ್ತೆ ಏನಾದರೂ ಹೆಚ್ಚು ಕಮ್ಮಿ ಆದ್ರೆ ನಮ್ಮ ಜೀವಕ್ಕೇ ಬರುತ್ತೆ.” “ಯಾವ ಹೊಸಾ ಡಾಕ್ಟರುಗಳು. ” ಮತ್ತೊಮ್ಮೆ ಆಶ್ಚರ್ಯ ಚಕ್ರಪಾಣಿಗೆ. ” ನಿನಗೇನೂ ಗೊತ್ತಿಲ್ಲಾವೇನೋ, ಚಕ್ರಿ. ಎಲ್ಲಾ ಕಡೆಯಿಂದ ಹಿಡ್ಕೊಂಡು ಬಂದಿದೀವಪ್ಪ. ನಮ್ಮ ದೋಸ್ತುಗಳಿಲ್ಲವಾ, ಹುಬ್ಬಳ್ಳಿಯಲ್ಲಿ. ಹೇಗೂ ಕೆಲಸ ಇಲ್ಲದೆ ಕೂತಿದ್ದಾರೆ. ಮುಂದಿನ ಪರೀಕ್ಷೆ ತನಕ ಕೂರಬೇಕಲ್ಲ. ಒಂದು ಮೂರುದಿನ ಇಲ್ಲಿ ಬನ್ನಿ ಅಂತ ಹೇಳಿದೀನಿ. ಎಲ್ಲರಿಗೂ ಕೋಟ್ ಹಾಕಿ ನಿಲ್ಲಿಸಿದರೆ ಆಯಿತು. ಕೌನ್ಸಿಲ್ಲಿನವರು ತಲೇ ತಾನೇ ಎಣಿಸೋದು. ಪಾಠ ಮಾಡು ಅಂತ ಏನು ಕೇಳೊಲ್ವಲ್ಲ. ಮತ್ತೆ ಪ್ರತಿಯೊಬ್ಬ ಡಾಕ್ಟರಿಗೂ ಅವರುಗಳು ಯಾರು ಅಂತ ಹೇಳುವ ಫೈಲುಗಳ ಕಾಪಿ ಹಿಂದಿನ ದಿನ ಕೊಟ್ಟರೆ ಆಯಿತು. ಮಾರನೇದಿನ ನಾಟಕಕ್ಕೆ ರೆಡಿ ಮಾಡೋ ಜವಾಬ್ದಾರಿ ನನ್ನದು. ಪ್ರತಿಯೊಬ್ಬರಿಗೂ ದಿನಕ್ಕೆ ಒಂದು ಸಾವಿರ ರೂಪಾಯಿಗೆ ಮಾತಾಡಿದ್ದೀನಮ್ಮ. ಎಲ್ಲಾಕಡೆ ಹೀಗೇ ಅಂತೆ ಮಾಡೋದು. ನನಗೂ ಗೊತ್ತಿರಲಿಲ್ಲ. ಒಳ್ಳೆ ಐಡಿಯಾ ಅನ್ನಿಸುತ್ತೆ. ತಲೇಗಿಂತಾ ದುಡ್ಡನ್ನ ಸರಿಯಾಗಿ ಎಣಿಸೊ ಕೌನ್ಸಿಲ್ಲಿನ್ನವರು ಇರೋತನಕ ಗವಿಸಿದ್ದಪ್ಪನಂಥವರಿಗೇನೂ ತೊಂದರೆಯಿಲ್ಲಪ್ಪ. ಬೇಕಾದರೆ ಒಬ್ಬರನ್ನೇ ಎರಡು ಡಿಪಾರ್ಟ್ಮೆಂಟಿನಲ್ಲಿ ನಿಲ್ಲಿಸಿ ಡಬಲ್ ಆಕ್ಟಿಂಗೂ ಮಾಡಿಸಬಹುದು.” ಹೇಳುತ್ತಲೇ ಇದ್ದ. ಹೇಸಿಗೆಯಾಯಿತು ಚಕ್ರಪಾಣಿಗೆ. ಸತೀಶನನ್ನು ನೋಡಿ ಏನು ಹೇಳಲೂ ತಿಳಿಯಲಿಲ್ಲ. ತಾನು ಮಾಡುತ್ತಿರುವುದು ತಪ್ಪೆಂದೂ ತಿಳಿಯದಷ್ಟು ಬದಲಾಗಿದ್ದಾನೆ ಅನ್ನಿಸಿತು. ತನ್ನ ಜೊತೆ ಕೂತು ಹೀಗಿರಬೇಕು, ಹಾಗಿರಬೇಕು ಎಂದು ಕನಸುಕಟ್ಟಿದವ ಈತನೇ ಅನ್ನಿಸಿತು. ಯಾವ ಸಂಕೋಚವೂ ಇಲ್ಲದೇ ತಾನು ಮಾಡಲು ಹೋಗುತ್ತಿರುವ ಘನಕಾರ್ಯವನ್ನು ಹೇಳಿಕೊಳ್ಳುತ್ತಿದ್ದಾನೆ. ತಾನು ಮಾಡುತ್ತಿರುವ ಕೆಲಸದ ಬಗ್ಗೆ ಇಲ್ಲಿ ಯಾರಿಗೂ ತಪ್ಪೇ ಅನಿಸುವುದಿಲ್ಲವೇ. ಅಥವಾ ಇದೇ ಲೋಕಾರೂಢಿಯೇ. ತಾನೇ ಎಲ್ಲಿಯೂ ಸಲ್ಲದವನೇ. ಬದುಕುವ ದಾರಿಯೆಂದರೆ ಇದೇನೇ. ಯಾವ ಪ್ರಶ್ನೆಗೂ ಉತ್ತರ ಹೊಳೆಯಲಿಲ್ಲ. ಸುಮ್ಮನೆ ಎದ್ದು ಡಿಪಾರ್ಟ್ ಮೆಂಟಿಗೆ ಬಂದು ಕೂತ. ಕಟ ಕಟ ಎಂದು ಕಲ್ಲು ಕುಟ್ಟುತ್ತಿರುವ ಶಬ್ದ ಕೇಳಿಸಿತು. ಹಿಂದೆ ನಡೆಯುತ್ತಿರುವ ಆಸ್ಪತ್ರೆಯ ಕಟ್ಟಡದ ಕೆಲಸ. ನೂರಾರು ಜನ ಕೆಲಸಗಾರರು. ಯಾವಪರಿವೆಯೂ ಇಲ್ಲದೆ ದುಡಿಯುತ್ತಿದ್ದಾರೆ. ತಾವು ಏನು ಮಾಡುತ್ತಿದ್ದೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಕಟ್ಟುತ್ತಿರುವ ಈ ಕಟ್ಟಡದಲ್ಲಿ ಮುಂದೆ ಏನು ನಡೆಯುತ್ತದೆ, ಎಂಬುದು ಯಾರಿಗೂ ತಿಳಿದಿಲ್ಲ. ಸುಮ್ಮನೇ ಕೆಲಸ ಮಾಡುವುದು ಮಾತ್ರ ಗೊತ್ತು. ಇದೇನೇ ಕರ್ಮಣ್ಯೇವಾಧಿಕಾರಸ್ತೇ ಎಂದರೆ. ನಾನೂ ಸುಮ್ಮನೆ ಎಲ್ಲರೂ ಮಾಡುವಂತೆ ಮಾಡಿಕೊಂಡು ಹೋದರೆ ಈ ಕೆಲಸಗಾರರಂತೆ ಆರಾಮಾಗಿರುತ್ತೇನೆಯೇ. ನನಗ್ಯಾಕೆ ಈ ಇಲ್ಲದ ಉಸಾಬರಿ. ನಾನೊಬ್ಬ ಬಡಿದಾಡಿದರೆ ಏನು ಬಂತು. ಕಾಲೇಜಿಗೆ ರೆಕಗ್ನಿಶನ್ ಸಿಕ್ಕೇಸಿಗುತ್ತದೆ. ಡಾಕ್ಟರುಗಳು ಬಂದೇಬರುತ್ತಾರೆ, ಯೋಚಿಸುತ್ತಲೇ ಇದ್ದ. ಇವನ ಟೇಬಲ್ಲಿನ ಮೇಲೆ ಇವನಿಗಾಗಿ ಒಂದು ಪತ್ರ ಕಾಯುತ್ತ ಇತ್ತು. ನೋಡಿದ. ಅದೊಂದು ಸುತ್ತೋಲೆ. ಎಲ್ಲರಿಗೂ ಇವತ್ತಿನ ಸಾಯಂಕಾಲದ ಮೀಟಿಂಗಿಗೆ ಕಡ್ಡಾಯವಾಗಿ ಬರಬೇಕು ಎಂದು ಸ್ಟೆನ್ಸಿಲ್ ಮಾಡಿರುವ ಪತ್ರ. ಮೀಟಿಂಗಿನಲ್ಲಿ ಏನಿರುತ್ತದೆ ಎಂದು ಸುಮಾರಾಗಿ ಗೊತ್ತಿದ್ದರೂ ತನ್ನನ್ನು ಉಪೇಕ್ಷಿಸಿಲ್ಲವೆಂದು ಒಂದುರೀತಿಯ ಸಮಾಧಾನವಾಯಿತು. ಒಳಗೆ ಹೋಗಿ ವಾಷ್ ಬೇಸಿನ್ನಿನಲ್ಲಿ ಒಮ್ಮೆ ಮುಖ ತೊಳೆದು ಒಮ್ಮೆ ಸೀಟಿಹಾಕಿದ. ಕನ್ನಡಿಯಲ್ಲಿ ತನ್ನನ್ನು ನೋಡಿ ಒಮ್ಮೆ ಮುಗುಳ್ನಕ್ಕ. ಯಾವುದೋ ಸೈಕಿಯಾಟ್ರಿ ಪುಸ್ತಕದಲ್ಲಿ ಓದಿದ್ದ ಏನೋ ನೆನಪಾಗುತ್ತಾ ಇದೆ ಅನ್ನಿಸಿತು. ಆದರೆ ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ತಿಳಿದುಕೊಳ್ಳಲು ಪ್ರಯತ್ನವನ್ನೂ ಮಾಡಬಾರದೆನ್ನಿಸಿತು. +* +* +* +ಅವತ್ತಿನ ಮಧ್ಯಾಹ್ನವೆಲ್ಲ ಅನ್ಯಮನಸ್ಕನಾಗೇ ಕಲೆದ ಚಕ್ರಪಾಣಿ. ಸುಷ್ಮಾ ನೆನಪಿಗೆ ಬಂದಳು. ಅವಳಿಗೆ ಏನಾದರೂ ಒಂದು ಉತ್ತರ ಹೇಳಬೇಕಾಗಿತ್ತು. ಅವಳು ಒಪ್ಪಿದ್ದಾಳೋ ಇಲ್ಲವೋ ಅನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ತಿಳಿಯುವ ಪ್ರಯತ್ನವನ್ನೂ ಮಾಡಿರಲಿಲ್ಲ. ಫೋನು ಮಾಡಲು ಮನಸ್ಸು ಬಂದಿರಲಿಲ್ಲ. ಈ ಒಣ ಪ್ರಿನ್ಸಿಪಲ್ಲುಗಳನ್ನೆಲ್ಲಾ ಬಿಟ್ಟು ಹೊರಟುಬಿಡಲೇ ಎಂದು ಬಹಳ ಸಾರಿ ಅನ್ನಿಸಿತ್ತು. ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಲು ಅವನಿಗೆ ಮನಸ್ಸಾಗಿರಲಿಲ್ಲ. ಇದು ಸೋಲೇ ಎಂದು ಬಹಳ ಸಾರಿ ಅವನೇ ಚರ್ಚಿಸಿದ್ದ. ಇಲ್ಲಿದ್ದು ಆತ್ಮಸಾಕ್ಷಿಯನ್ನು ಮಾರಿಕೊಳ್ಳುವ ಬದಲು ಸುಷ್ಮಾಳ ಹಿಂದೆ ಹೋಗಿ ಸ್ವಾಭಿಮಾನವನ್ನು ಮಾರಿಕೊಳ್ಳುವುದೇ ವಾಸಿಯೇ ಎಂದು ತಿಳಿಯಲಿಲ್ಲ. ಇಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಡಾಕ್ಟರುಗಳಿಲ್ಲವೇ. ಪ್ರತ್ಯೊಂದಕ್ಕೂ ಇನ್ನೊಬ್ಬರನ್ನು ನೋಡಿ, ಹೋಲಿಸಿ ನಿರ್ಧರಿಸಬೇಕೆ. ನನ್ನದೇ ಆದ ಪಕ್ಕಾ ಸಿದ್ದಾಂತವೇನಾದರೂ ಇದೆಯೇ. ಪ್ರತಿಯೊಂದು ರಿಲೇಟಿವಿಸಂ. ಯಾವುದೂ ಪೂರ ಸರಿಯಲ್ಲ, ಅಥವಾ ಪೂರಾ ತಪ್ಪಲ್ಲ. ಅಲ್ಲಿಗೆ ಹೋದ ತಕ್ಷಣ ಎಲ್ಲ ಮುಗಿಯಿತೇ. ಪ್ರತಿಯೊಂದೂ ಪ್ರಶ್ನೆಯಾಗೇ ಉಳಿದಿತ್ತು. ಯೋಚಿಸಿದಷ್ಟೂ ಇನ್ನೂ ಗೋಜಲುಗೋಜಲಾಗೇ ಹೋಗುತ್ತಿತ್ತು. ಎದ್ದು ವಾರ್ಡಿನ ಕಡೆಗೆ ಹೊರಟ. ಆಸ್ಪತ್ರೆಯ ಮುಂದೆ ಎರಡು ಲಾರಿ ನಿಂತಿದ್ದವು. ಯಾಕೆ ನಿಂತಿದೆ ಎಂದು ತಿಳಿಯಲಿಲ್ಲ. ಏನೋ ಡೆಲಿವರಿ ಇರಬೇಕೂ ಅಂದುಕೊಂಡ. ಬಾಳಣ್ಣ ಕೂಗುತ್ತಿದ್ದ. ” ಎಲ್ರನ್ನು ಸರಿಯಾಗಿ ಅವ್ರವ್ರ ವಾರ್ಡಿಗೆ ಬಿಟ್ಟುಬಿಟ್ಯೇನೋ” , ಚಕ್ರಪಾಣಿಗೆ ಅರ್ಥವಾಗಲಿಲ್ಲ. ಸುಮ್ಮನೇ ಒಳಗೆ ಹೋದ. ವಾರ್ಡಿಗೆ ಹೋದ. ಏನೋ ಹೊಸತನವಿದೆ ಅನ್ನಿಸಿತು. ಒಂದು ಜನರಲ್ ವಾರ್ಡನ್ನು ಎರಡು ಯುನಿಟ್ಟಿನವರೂ ಉಪಯೋಗಿಸುತ್ತಿದ್ದರು. ಅದು ಯಾವತ್ತೂ ಪೂರ್ತಿಯಾಗಿರಲಿಲ್ಲ. ಇವತ್ತು ಈ ವಾರ್ಡು ತುಂಬಿ ಪಕ್ಕದ ವಾರ್ಡು ತೆಗೆದಿದ್ದರು. ಪ್ರಶ್ನಾರ್ಥಕವಾಗಿ ನರ್ಸ್ ಸರೋಜಳ ಕಡೆ ನೋಡಿದ. ” ಎಲ್ಲಾ ನಿಂದೇಯ ಸರ್, ಪೂರಾ ವಾರ್ಡು ರೌಂಡ್ಸ್ ಮಾಡೋರಂತೆ ಬನ್ನೀ, ಬನ್ನಿ.” ಅಲ್ಲಿ ಕಾಣುತ್ತಿರುವವರ್ಯಾರನ್ನೂ ಅಡ್ಮಿಟ್ ಮಾಡಿದ ನೆನಪಾಗಲಿಲ್ಲ. ನಾಯಕ್ ಮಾಡಿದರೇನೋ ಅಂದುಕೊಂಡ. ನೋಡೋಣವೆಂದು ಕೇಸ್ ಶೀಟುಗಳನ್ನು ತೆಗೆದುಕೊಂಡ. ಪ್ರತಿ ಬೆಡ್ಡಿನಲ್ಲಿಯೂ ಒಂದೊಂದು ಕೇಸ್ ಶೀಟು. ಯಾವುದೋ ಒಂದು ಬೆಡ್ಡಿನ ಮುಂದೆ ನಿಂತು ಅಲ್ಲಿ ಮಲಗಿದ್ದವನನ್ನು ಕೇಳಿದ.’ ಏನ್ರೀ, ಯಾರು ಅಡ್ಮಿಟ್ ಮಾಡಿದ್ರು, ನಿಮ್ಮನ್ನ. ಏನು ತೊಂದರೆ ಅಂತ ಕೇಳಬಹುದಾ” ಆದಷ್ಟು ವಿನಯವಾಗಿ ಕೇಳಿದ. ” ಅಡ್ಮಿಟ್ ಗಿಡ್ಮಿಟ್ ಆಗಿಲ್ಲ ಸಾ ನಾವು.” ” ಮತ್ತೆ ಆಸ್ಪತ್ರೆಯಲ್ಲಿ” ” ನಮಗೇನು ಗೊತ್ತು ಸಾ, ಇವತ್ತು ಬೆಳಿಗ್ಗೆ ಲಾರಿ ಕಳಿಸಿದ್ರು, ಫ್ಯಾಕ್ಟರೀಗೆ. ನಂ ಸಾವ್ಕಾರ್ರು ಹೇಳಿದ್ರು. ಇನ್ನು ಮೂರು ದಿನ ಕೆಲಸ ಇಲ್ಲ. ಆಸ್ಪತ್ರೆಗೆ ಕಳಿಸ್ತೀವಿ ಅಂತ. ನನಗೆ ಟೈಫಾಯ್ಡಂತೆ ಸಾ. ಮೂರು ವಾರದಿಂದ ಜ್ವರಾನಂತೆ. ನೀವು ಇಲ್ಲೀ ಡಾಕ್ಟರೋ, ಡೆಲ್ಲಿಯವರೋ, ಡೆಲ್ಲಿಯವರಂಗೆ ಕಾಣೊಲ್ಲ ಬುಡಿ, ಕನ್ನಡ ಮಾತಾಡ್ತಿದೀರ.” ” ಅಲ್ಲಾರೀ, ನಿಮಗೆ ಜ್ವರಾ ಇದೆಯೋ ಇಲ್ಲವೋ, ಇದೆಯಂತೆ ಅಂದರೆ” ಅರ್ಥವಾಗದಂತೆ ಕೇಳಿದ ಚಕ್ರಪಾಣಿ. ” ಜ್ವರಾನೂ ಇಲ್ಲ, ಏನೂ ಇಲ್ಲ, ಸಾ. ಅಂಗಂಥ ಯೇಳು ಅಂಥ ಯೇಳಿದ್ರು ಅಷ್ಟೆ. ಮೂರುದಿನಕ್ಕೆ ಮುನ್ನೂರು ರೂಪಾಯಿ ಕೊಡ್ತಾರಂತೆ ಸಾ. ಯಾಕ್ಬಿಡಬೇಕು ಯೇಳಿ. ನಮ್ಮೆಂಗಸರೂ ಬಂದವ್ರೆ ಸಾ, ಯೆಣ್ಮಕ್ಕಳ ವಾರ್ಡಲ್ಲವ್ರೆ. ಒಂದು ಮಗೀನೇನಾದ್ರೂ ಇದ್ದಿದ್ರೆ ಇನ್ನೊಂಡಿಸ್ಟು ಆಗ್ತಿತ್ತು.” ಹೇಳುತ್ತಲೇ ಇದ್ದ. ಅಲ್ಲಿ ನಿಲ್ಲಲಾಗಲಿಲ್ಲ, ಚಕ್ರಪಾಣಿಗೆ. ಸುಮ್ಮನೇ ಹೊರಗೆ ಬಂದ. ಸರೋಜ ಕೂಗುತ್ತಾ ಇದ್ದಳು” ಸಾರ್, ಇಲ್ಲಿಗೊಂದು ಸೈನ್ ಹಾಕ್ತೀರಾ” ಯಾವುದೂ ಕೇಳಿಸಲಿಲ್ಲ. ಓಪಿಡಿಗೆ ಬಂದು ಕನ್ನಡಿಯಮುಂದೆ ಮತ್ತೊಮ್ಮೆ ನಿಂತ. ಕಣ್ಣು ಕೆಂಪಾಗಿದೆ ಅನ್ನಿಸಿತು. ತಾನು ಅಳುತ್ತಿದ್ದೀನೆಯೇ ಅನ್ನಿಸಿತು. ಕಣ್ಣೊರೆಸಿ ನೋಡಿದ. ಕೈ ತೇವವಾಗಲಿಲ್ಲ. ಮತ್ತೊಮ್ಮೆ ಕನ್ನಡಿ ನೋಡಿದ. ಈ ಬಾರಿ ಕಣ್ಣುಗಳೆರಡೂ ರಕ್ತವರ್ಣಕ್ಕೆ ತಿರುಗಿದ್ದವು. ಬರೀ ಕಣ್ಣುಗಳಷ್ಟೇ ಅಲ್ಲ. ಕೆನ್ನೆ, ಕಿವಿ ತುಟಿಗಳೆಲ್ಲವೂ ಕೆಂಪಾಗುತ್ತಿದ್ದವು. ತನ್ನ ಮುಖವೇಕೋ ತನ್ನದಂತೆ ಕಾಣಲಿಲ್ಲ. ಯಾವುದೋ ಯಕ್ಷಗಾನದ ಕಲಾವಿದನ ರೀತಿ ಕಾಣಿಸಿತು. ನಂಬಲಾಗಲಿಲ್ಲ. ಕನ್ನಡಿ ಸರಿಯಿಲ್ಲವೆನ್ನಿಸಿತು. ಕನ್ನಡಿಯನ್ನೊಮ್ಮೆ ಒರೆಸಿದ. ಏನೂ ಪ್ರಯೋಜನವಾಗಲಿಲ್ಲ. ಮುಖ ಇನ್ನೂ ಬದಲಾಗುತ್ತಿತ್ತು. ತಾನು ತಾನಲ್ಲವೆನಿಸಿತು. ನಾಯಕರ ರೂಮಿನ ಕನ್ನಡಿಯಲ್ಲಿ ನೋಡಿದ. ಏನೂ ಬದಲಾವಣೆಯಿರಲಿಲ್ಲ. ” ಆರ್ ಯೂ ಆಲ್ ರೈಟ್, ಚಕ್ರಪಾಣಿ” ನಾಯಕರು ಕೇಳಿದರು. ನಕ್ಕ, ಚಕ್ರಪಾಣಿ. ” ಬರ್ತೀರಾ ಮೀಟಿಂಗಿಗೆ” ಕೇಳಿದರು. ಮತ್ತೊಮ್ಮೆ ನಕ್ಕ. ವಿಚಿತ್ರವಾಗಿ ನೋಡಿದರು ನಾಯಕರು. ಅಂದು ರಾತ್ರಿ ಮನೆಗೆ ಹೋಗಲಿಲ್ಲ, ಚಕ್ರಪಾಣಿ. ಬಹಳ ಹೊತ್ತು ಡ್ಯೂಟಿ ರೂಮಿನಲ್ಲಿಯೇ ಕೂತಿದ್ದ. ರಾತ್ರಿ ಹನ್ನೆರಡಕ್ಕೆ ಆಸ್ಪತ್ರೆಯ ಟೆಲಿಫೋನ್ ಬೂತಿನ ಹತ್ತಿರ ಹೋಗಿ ” ಅಮೆರಿಕಕ್ಕೆ ಒಂದು ಕಾಲ್ ಮಾಡಬೇಕಲ್ಲ” ಅಂದ. ” ಸಾರ್, ಈಗ ಅಲ್ಲಿ ಬೆಳಿಗ್ಗೆ. ಎಲ್ಲರೂ ಕೆಲಸಕ್ಕೆ ಹೋಗಿರುತ್ತಾರೋ ಏನೋ. ಇರಲಿ ಮಾಡೋಣ, ನಂಬರ್ ಕೊಡಿ” ಎಂದ ಟೆಲಿಫೋನ್ ಬೂತಿನವ. ಇಲ್ಲಿ ರಾತ್ರಿಯಾದಾಗ ಅಲ್ಲಿ ಬೆಳಕಾಗಿರುತ್ತದೆ ಆದರೆ ಅಲ್ಲಿ ರಾತ್ರಿಯಾದಾಗ ಇಲ್ಲಿ ಬೆಳಕಿರಬೇಕಲ್ಲವೇ, ಯೋಚಿಸಿದ ಚಕ್ರಪಾಣಿ. ಅರೆ ತನಗೇನಾಗಿದೆ, ಹಾಗೆಯೇ ಅಲ್ಲವೇ ಇರುವುದು ಅನ್ನಿಸಿತು. ಇಲ್ಲಿ ಮೊದಲು ರಾತ್ರಿಯಾಗುತ್ತದೆ ಅನ್ನಿಸಿತು. ಹಗಲೂ ಇಲ್ಲೇ ಮೊದಲಲ್ಲವೇ , ಯೋಚಿಸಿದ. ಆದರೆ ಪೂರಾ ಅರ್ಥವಾಗಲಿಲ್ಲ. ” ಯೂ ಹ್ಯಾವ್ ರೀಚ್ಡ್ ಸುಶ್ಮಾ…….” ಮಿಷೀನ್ ಉಲಿಯುತ್ತಿತ್ತು. +***** +ಸುರೇಶ ಮಹಾದೇವ ಶೃಂಗಾರಪುರೆ ಖಂಡೋಬಾನ ಪರಮ ಭಕ್ತ. ಸಂಕಟದ ಗಳಿಗೆ ಬಂದಾಗಲೆಲ್ಲಾ ಆತ ಮನೆಯಲ್ಲಿರಲಿ, ಆಫೀಸಿನಲ್ಲಿರಲಿ ಅಲ್ಲಾ ರಸ್ತೆಯಲ್ಲಿರಲಿ ನಡೆಯುತ್ತಿರಲಿ ಖಂಡೋಬಾನ ಧ್ಯಾನಕ್ಕೆ ತೊಡಗುತ್ತಾನೆ. ಮನಸ್ಸಿನಲ್ಲಿಯೆ ಆತ ಖಂಡೋಬಾನ ಮೂರ್ತಿಗೆ ವಿವಿಧ ಅಲಂಕಾರ ಮಾಡುತ್ತಾನೆ. […] +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […] +ಬಾಗಿಲು ತೆಗೆದದ್ದೇ ನನ್ನ ಜತೆ ಮತ್ತೊಬ್ಬ ಸಣ್ಣ ಅತಿಥಿಯನ್ನು ನೋಡಿ ಸಿಡಿಮಿಡಿಯನ್ನು ಅಣ್ಣಗೆ ವ್ಯಕ್ತಪಡಿಸಿ ಸುಮಿ ಸರ್ರಂತ ತಿರುಗಿ ಸೀದ ಒಳಹೋದಳು. ದಂಗಾದ ಛೋಟು ಮಿಕಿಮಿಕಿ ನನ್ನೇ ನೋಡಿದ. “ಬಾ ಛೋಟೂ ಬಾ”-ಎಂದು ಅವನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_566.txt b/Kannada Sahitya/article_566.txt new file mode 100644 index 0000000000000000000000000000000000000000..9a28a45c2ea5266cb4f469c0ab98bb8d93db38f1 --- /dev/null +++ b/Kannada Sahitya/article_566.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಾನ್ಯ ಎಂಕಣ್ಣನವರೆ, +‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ ಪುಟದಲ್ಲಿ ‘ಬಾಸು’ ಬರೆದ ಒಂದು ವರದಿ ಅವನ ಗಮನ ಸೆಳೆಯಿತು. +‘ಸೂರಪ್ಪ’ ಕ್ಯಾಸೆಟ್ ಬಿಡುಗಡೆ ಸಂದರ್ಭದಲ್ಲಿ ಹಂಸಲೇಖಾ ಅವರಾಡಿದ ಮಾತದು. +‘ಯಥಾಪ್ರಕಾರ ಆಗಮಿಸಿದ ಪತ್ರಕರ್ತರೆ’ ಎಂದು ಅವರ ಭಾಷಣ ಶುರುವಾಯಿತಂತೆ. ಎಂಕನ ತಲೆ ಆಗ ಬಿಸಿಯಾಗತೊಡಗಿತು. +ಅರೆ! ಶುಕ್ರವಾರದ ವರ್ಣರಂಜಿತ ಸಿನಿಮಾ ಪುಟಗಳಲ್ಲಿ ರಂಗು ರಂಗಾಗಿ ರಾರಾಜಿಸಿ ಮುಫತ್ತು ಪ್ರಚಾರ ಗಿಟ್ಟಿಸಲೆಂದೇ – ವೀಳ್ಯ ಕೊಟ್ಟು ಆಹ್ವಾನಿಸಿ, ಮರೆತಾರೆಂದು ಮತ್ತೆ ಮತ್ತೆ ಫೋನಿಸಿ – ಪತ್ರಕರ್ತರಿಗೆಂದೇ ವಿಶೇಷ ಆಸನಗಳನ್ನು ರಿಸರ್ವ್ ಮಾಡಿಡುವ ಮಂದಿ ಮಾತಿಗೆ ನಿಂತಾಗ ಯಥಾಪ್ರಕಾರ ಆಗಮಿಸಿದ ಪತ್ರಕರ್ತರೆ’ ಎಂದು ಸಂಬೋಧಿಸಿದರೆ ಏನರ್ಥ? +-ಚಿತ್ರರಂಗದ ಎಲ್ಲ ಕಾರ್ಯಕ್ರಮಗಳಿಗೂ ಹಾಜರಾಗುವ ಪತ್ರಕರ್ತರ ಅದದೇ ಮುಖಗಳನ್ನು ನೋಡಿ ಹಂಸಲೇಖರಿಗೆ ಬೇಸರವಾಗಿರಬಹುದೆ? +ಯಾವುದು ಯಥಾಪ್ರಕಾರವಲ್ಲ. ಬೆಳಗಾದ ಕೂಡಲೇ ಹುಟ್ಟುವುದು ಮತ್ತೆ ಅದೇ ಸೂರ್ಯ. ಕೋ ಕೋ ಎಂದು ಯಥಾಪ್ರಕಾರ ಕೂಗುವುದು ಅದೇ ಕೋಳಿ. ಎಲ್ಲೆಡೆ ಅದೇ ಗಾಳಿ ಅದೇ ಬೆಳಕು-ಅದೇ ನೀರು. +ಸಿನಿಮಾರಂಗಕ್ಕೆ ಬಂದರೆ ಗಾಂಧೀನಗರದಲ್ಲಿ ಕಾಣುವುದು ಯಥಾಪ್ರಕಾರ ಅದೇ ಉದ್ಯಮಿಗಳು. ಹೊಸ ಚಿತ್ರ ಮುಹೂರ್ತದ ಸಂಗೀತ ನಿರ್ದೇಶನವೆಂದ ಕೂಡಲೇ ‘ಯಥಾಪ್ರಕಾರ’ ಅದೇ ಹಂಸಲೇಖಾ. +ತೆಲುಗು, ತಮಿಳು, ಹಿಂದೀ ಚಿತ್ರರಂಗದಲ್ಲಿ ಹೊಸ ಹೀರೋ, ಹೀರೋಹಿನ್, ವಿಲನ್, ಕಾಮಿಡಿಯನ್‌ಗಳನ್ನು ಕಾಣಬಹುದು. ಅದೇ ಕನ್ನಡದತ್ತ ತಿರುಗಿ ನೋಡಿ. ಯಥಾಪ್ರಕಾರ ಸೇಮ್ ಮುಖಗಳು. ಚಿತ್ರ ಬೇರೆ ಇರಬಹುದು. ಪಾತ್ರ ಬೇರೆ ಇರಬಹುದು. ಪಬ್ಲಿಸಿಟಿಯಲ್ಲಿ ನಾನಾ ಗಿಮಿಕ್ ಇರಬಹುದು. ಆದರೆ ‘ಮುಸುಡಿಗಳು’ ಮಾತ್ರ ಯಥಾಪ್ರಕಾರ ಅದೇ. +ಸಂಗೀತ ನಿರ್ದೇಶಕರು ತುಂಬಾ ಡಿಫರೆಂಟ್ ಟ್ಯೂನ್ ಎಂದು ಹೇಳಿದ ಹಾಡು ಕೇಳಿದಾಗ ‘ಯಥಾಪ್ರಕಾರ’ ಎಲ್ಲಿಂದಲೋ ಅಪೇಸ್ ಮಾಡಿರುವ ಕದ್ದ ರಾಗ ಎಂಬುದು ಸ್ಪಷ್ಟವಾಗಿಬಿಡುತ್ತದೆ. +ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಎಲ್ಲೆಡೆ ಈ ‘ಯಥಾಪ್ರಕಾರ’ ಇದ್ದದ್ದೇ. ಈ ಯಥಾಪ್ರಕಾರದಿಂದ ತಪ್ಪಿಸಿಕೊಳ್ಳಲೆಂದೇ ಒರಿಜಿನಲ್ ಕಥೆ ಎಂದು ಹೇಳುವವರು ನಾಲ್ಕಾರು ಸಿನಿಮಾಗಳಿಂದ ‘ಯಥಾಪ್ರಕಾರ’ ಹಲವಾರು ದೃಶ್ಯಗಳನ್ನು ಜಾಣ್ಮೆಯಿಂದ ಲಪಟಾಯಿಸಿರುತ್ತಾರೆ. +‘ಯಥಾಪ್ರಕಾರ’ದ ಜಾಡು ತಪ್ಪಿಸಲೆಂದೇ ಅಲ್ಲವೆ ನವೋದಯ ನವ್ಯದತ್ತ ತಿರುಗಿದ್ದು – ಆಮೇಲೆ ಬಂಡಾಯವಾಗಿ ತಿರುಗಿ ಬಿದ್ದದ್ದು – ದಲಿತ ಸಾಹಿತ್ಯವೆಂದು ಸಿಡಿದದ್ದು. ಸಂಗೀತಕ್ಕೆ ಬಂದರೆ ಈ ಯಥಾಪ್ರಕಾರಕ್ಕೆ ಇತಿಶ್ರೀ ಹಾಡಲೆಂದೇ ‘ಸುಗಮ ಸಂಗೀತ’ ಬಂದದ್ದು ಆನಂತರ ಕರ್ನಾಟಕ ಸಂಗೀತವೆಂದಾಗ ಲಟಾಪಟಿ ನಡೆದದ್ದು. +ಒಂದು ಚಿತ್ರ ಹಿಟ್ ಆದರೆ ಸಾಕು – ಯಥಾಪ್ರಕಾರ ಅದೇ ಧಾಟಿಯ ಚಿತ್ರಗಳು, ಎನ್.ಎಸ್.ರಾವ್, ಉಮಾಶ್ರೀ ಕ್ಲಿಕ್ ಆದರು ಎಂದ ಮರು ಘಳಿಗೆ ಯಥಾಪ್ರಕಾರ ಅದೇ ಡಬ್ಬಲ್ ಮೀನಿಂಗ್ ಡೈಲಾಗ್ ಚಿತ್ರಗಳು. +ತಮ್ಮ ಚಿತ್ರಗಳು ‘ಯಥಾಪ್ರಕಾರ’ವೆನಿಸಿಕೊಳ್ಳಕೂಡದು ಎಂಬ ಕಾರಣಕ್ಕೇ ಬಾಲಚಂದರ್‍, ಕಣಗಾಲ್ ಪುಟ್ಟಣ್ಣ ವೈವಿಧ್ಯಮಯ ಕಥಾನಕಗಳಿಗೆ ಹುಡುಕಾಟ ನಡಸೇ ಇದ್ದರು ನಿರಂತರ. +ಹಂಸಲೇಖಾ ಅವರು ಅಂದಂತೆ ಅಂದು ‘ಯಥಾಪ್ರಕಾರ’ದ ಪತ್ರಕರ್ತರೇ ಆಗಮಿಸಿರಬಹುದು. ಆದರೆ ಅವರೆಲ್ಲರೂ ಯಥಾಪ್ರಕಾರದ ಧಾಟಿಯಲ್ಲಿಯೇ ಬರೆಯುತ್ತಾರೆ ಎಂದು ಹೇಗೆ ಹೇಳುವುದು ಸಾಧ್ಯ? +ಬಹಳಷ್ಟು ಪತ್ರಿಕೆಗಳಲ್ಲಿ ಪಿಆರ್‌ಓಗಳ ಸುದ್ದಿಯನ್ನು ಒಂದಕ್ಷರವೂ ಬದಲಿಸದೆ ಯಥಾಪ್ರಕಾರ ಅಚ್ಚಿಸುವುದೂ ಇದೆ. ಅಂಥ ವರದಿಗಳನ್ನು ಓದಿದುದರ ಸ್ಫೂರ್ತಿಯಿಂದ ಹಂಸಲೇಖಾ ಹಾಗಂದಿರಬಹುದೆ ಎಂಬ ಅನುಮಾನವೂ ಬಂತು ಎಂಕನಿಗೆ. +ನಂತರ ಹಂಸಲೇಖರ ಬಗ್ಗೆ ಚಿಂತಿಸತೊಡಗಿದ. +ಹಂಸಲೇಖಾ ಮುಂಚೆ ಬಿಳಿ ಬಟ್ಟೆಯಲ್ಲೇ ಮಿರಿಮಿರಿ ಮಿಂಚುತ್ತಿದ್ದರು. ಇದು ಯಥಾಪ್ರಕಾರವೆನಿಸಿದಾಗ ‘ಹೆಚ್ಚು ಗ್ಲಾಮರಸ್ ಆಗಿ ಕಾಣಲು ಕಲರ್‌ಫುಲ್ ಡ್ರೆಸ್ ಹಾಕುತ್ತಿರುವೆ’ ಎಂದರು. +ಕೆಲ ಕಾಲಾನಂತರ ಅದೂ ಯಥಾಪ್ರಕಾರವಾಯಿತು. ಅದರಿಂದಾಗಿಯೇ ಈಗ ಬಿಳಿಯನ್ನೂ ಧರಿಸುತ್ತಿದ್ದಾರೆ ಮತ್ತೆ. +ಹಾರ್ಮೋನಿಯಂ ಅವರಿಗೆ ಬಾರಿಸಲು ಬಾರದಿದ್ದ ದಿನಗಳಲ್ಲಿ ಗಿಟಾರ್‍ ಹಿಡಿದೇ ಸ್ವರ ಸಂಯೋಜಿಸುತ್ತಿದ್ದರು. ಅದು ಯಥಾಪ್ರಕಾರವೆನಿಸಿದಾಗ ಹಾರ್ಮೋನಿಯಂ ಕಲಿತು ಜನಪ್ರಿಯರಾದರು. +ರವಿಚಂದ್ರನ್-ಹಂಸಲೇಖಾ ಜೋಡಿ-ಜನಪ್ರಿಯವಾದಾಗ ಅದೂ ಯಥಾಪ್ರಕಾರದ ಜೋಡಿ ಎನಿಸಿತು. +ನಾನಾ ಕಾರಣಗಳಿಂದ ಬೇರೆಯಾದರು ಇಬ್ಬರೂ. +ಆದರೆ ‘ಯಥಾಪ್ರಕಾರ’ ನಮ್ಮ ಸ್ನೇಹವಿದ್ದೆ ಇದೆ ಎನ್ನುತ್ತಾರೆ ರವಿಚಂದ್ರನ್. ಅದು ಎಂಥ ಪ್ರೀತಿ, ಪ್ರೇಮ ಎಂಬುದು ಹಂಸಲೇಖರ ಜಾಣ ಮಾತಿನಿಂದ ವ್ಯಕ್ತವಾಗಿದೆ. ಈ ಜೋಡಿ ಗಂಟು ಹಾಕಿದರೆ ಚಿತ್ರ ‘ಯಥಾಪ್ರಕಾರ’ ಹಿಟ್ ಆಗುತ್ತದೆ ಎಂಬುದು ಸಾ.ರಾ.ಗೋವಿಂದು ನಂಬಿಕೆ. +ಈ ಜಗತ್ತು ‘ಯಥಾಪ್ರಕಾರ’ ಎಂದೆಂದೂ ಹೀಗೆ ಇರುತ್ತದೆ. ಅಲ್ಲಿ ಹೊಸತನ-ಜೀವಂತಿಕೆ ಕಂಡುಕೊಳ್ಳಲು ಶ್ರಮಿಸಿಬೇಕಾದವರು ನಾವು. ಆಗಲೇ ಅಂದದ ಮೊಗಕ್ಕೊಂದು ಯಥಾಪ್ರಕಾರದ ಚೆಂದದ ಚುಕ್ಕಿ ಬಂದೀತು. ಅಂಥ ಚುಕ್ಕಿ ಕಂಡಾಗಲೇ ಅಲ್ಲವೆ ಹಂಸಲೇಖಾ ‘ಯಾರಿಟ್ಟರೀ ಚುಕ್ಕಿ’ ಬರೆದದ್ದು. ಎಲ್ಲರ ಬದುಕಿನಲ್ಲಿ ಉತ್ಸಾಹ ನಂದದ ನಂದಾ ದೀಪವಾದಾಗ ‘ಯಥಾಪ್ರಕಾರ’ ದೂರವಾದೀತು. +ಲವಲವಿಕೆ – ಸಂಭ್ರಮವಿದ್ದಾಗ ಉತ್ಸಾಹ ನಂದೀತೆ? – ಖಂಡಿತಾ ಇಲ್ಲ ‘ಹಂಸಲೇಖಾ’ +***** +(೩೧-೩-೨೦೦೦) +‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ. […] +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_567.txt b/Kannada Sahitya/article_567.txt new file mode 100644 index 0000000000000000000000000000000000000000..2ab2af03f3adc94204e13d3769185f1cb64f5b5f --- /dev/null +++ b/Kannada Sahitya/article_567.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀ +ಜಾತ್ರೆಯ +ನೂಹ್ಯದನಂತದಲ್ಲಿ +ಕದ್ದು ತೊಟ್ಟಿಕ್ಕಿದರೆ +ನಾ +ಬರೇ ಕರೆ +ಗುಂಪೇ ಬೇರೆ +***** +ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […] +ಶಿಲ್ಪಿಯೋಗಿಯ ಕೈಗೆ ಸಿಕ್ಕಿದ ಒರಟು ಕಲ್ಲು ಕೇವಲ ಕಲೆಯಲ್ಲ, ಅತ್ಯದ್ಭುತ ಮಿರಾಕಲ್ಲು. ***** +ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_568.txt b/Kannada Sahitya/article_568.txt new file mode 100644 index 0000000000000000000000000000000000000000..9da9fb5ca55e10d2b01ebd5210fc1b4afd90b8b5 --- /dev/null +++ b/Kannada Sahitya/article_568.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ ಮಾಡಬಾರದು ಎಂದು ವಾದಿಸುವ, ಯಾವುದೇ ಕೃತಿ ಓದುಗನ ಅಂತರಂಗಕ್ಕೆ ಇಳಿಯುವಂತಾಗಬೇಕಾದರೆ ಅದನ್ನು ಪ್ರಸ್ತುತಗೊಳಿಸುವ ಸಂವಾದಿ ಸ್ವರೂಪದ ಶೈಲಿಯನ್ನು ಮೆಚ್ಚುವವರದ್ದೂ ಮತ್ತೊಂದು ಗುಂಪು. +– ವಾದ ವಿವಾದಗಳನ್ನು ಬದಿಗಿಟ್ಟು, ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕಾದಂಬರಿಯ ಪೂರ್ವಾರ್ಧವನ್ನು ಈ ಬಾರಿ ಪ್ರಕಟಿಸಲಾಗಿದೆ. ಇದರೊಂದಿಗೆ ಕೆ ಟಿ ವೇಣುಗೋಪಾಲ್, ಸಂತೋಷ್ ಮೆಹಂದಳೆ, ವಿಕ್ರಮ್ ಹತ್ವಾರ್, ಸಚ್ಚಿದಾನಂದ ಹೆಗಡೆ, ರವಿಶಂಕರ್ ಆರ್, ಶ್ಯಾಮ ಕಶ್ಯಪ್, ಈ ಬಾರಿ ಕನ್ನಡಸಾಹಿತ್ಯ.ಕಾಂ ಗೆ ಹೊಸಬರು. ಕೆ ಟಿ ವೇಣುಗೋಪಾಲ್ ಅನುಮತಿ ದೊರಕಿಸುವಲ್ಲಿ ಶ್ರಮವಹಿಸಿದ ರೋಹಿತ್‌ರವರಿಗೆ ಕೃತಜ್ಞತೆಗಳು ಹಾಗೆಯೇ ಅನುಮತಿ ನೀಡಿದ ಲೇಖಕರಿಗೆಲ್ಲ. ಕಿರಣ್ ಎಂ, ಕಿಶೋರ್‌ಚಂದ್ರ, ಪ್ರೂಫ್ ರೀಡಿಂಗ್‌ನಲ್ಲಿ ನೆರವಾದ ಶ್ರೀಶ ಕಾರಾಂತ್‌ರವರಿಗೂ ಕೃತಜ್ಞತೆಗಳು. +* +* +* +ಕನ್ನಡದ ಬ್ಲಾಗ್‌ಗಳ ಬಗೆಗೆ ಒಮ್ಮೆ ಬರೆದಿದ್ದೆ. ಹೆಚ್ಚು ಜನರು ಲಹರಿಯಲ್ಲಿ ತೇಲಿದಾಗ ಬರೆದದ್ದೆಲ್ಲವನ್ನು ಯಾವುದೇ ವಿಂಗಡಣೆ ಇಲ್ಲದೆ ಸುಮಾಸುಮ್ಮನೆ ಯಾವುದೇ ಸಂಕೋಚವಿಲ್ಲದಂತೆ, ಪ್ರಕಟಿಸಲು ತಕ್ಕ ವಾತಾವರಣ ನಿರ್ಮಾಣಗೊಂಡು ಮತ್ತಷ್ಟು ವಿಸ್ತರಿಸಿಕೊಳ್ಳುವ ಸೂಚನೆ ಇದೆ. ಈ ವಿಸ್ತರಣೆಯ ಬಗೆಗೆ ಇಂಗ್ಲಿಷ್‌ನಲ್ಲಿ, ಲೇಖನ ಒಂದನ್ನು ಸಂಕೇತ್ ಪಾಟೀಲರು ಇಲ್ಲಿ ಪ್ರಕಟಿಸಿದ್ದಾರೆ. ಪ್ರೋತ್ಸಾಹಿಸುವ ಒಂದೆರಡು ಮಾತುಗಳಲ್ಲಿ, ಹೆಚ್ಚೂ ಕಡಿಮೆ ಎಲ್ಲ ಬ್ಲಾಗುಗಳನ್ನು, ಅವರು ಪರಿಚಯಿಸಿದ್ದಾರೆ. ಏನಿಲ್ಲದಿದ್ದರೂ, ಇರುವುದರ ಬಗೆಗೆಯಾದರೂ ಮೆಚ್ಚುಗೆಯನ್ನು ಸೂಚಿಸಿ ಬರೆಯುವ ಔದಾರ್ಯದ ಧ್ವನಿ ಅವರ ಲೇಖನದ್ದು. ಹೀಗೆ ಪರಸ್ಪರ ಮೆಚ್ಚುಗೆ ಇಂದಿನ ಅತ್ಯಗತ್ಯವೆನ್ನುವುದು ನಿರ್ವಿವಾದ. ಜೊತೆಗೆ, ಟೀಕೆ-ಟಿಪ್ಪಣಿಗಳು ಇಂದಿನ ಪರಿಸ್ಥಿತಿಯಲ್ಲಿ ಅಷ್ಟೇ ಅಗತ್ಯ. +ಕನ್ನಡದಲ್ಲಿ ಬ್ಲಾಗ್ ನಿರತರಾಗಿರುವವರನ್ನು ಈ ರೀತಿ ವರ್ಗೀಕರಿಸಬಹುದು: +೧.ಬರೆಯುವ ಉತ್ಸಾಹದಲ್ಲಿ ಬರೆದದ್ದನ್ನೆಲ್ಲ ಯಾವ ವಿವೇಚನೆಯೂ ಇಲ್ಲದೆ ಪ್ರಕಟಿಸಿ ಸುಮ್ಮನಾಗಿಬಿಡುವವರು +(ಇವರಿಂದ ಅಂತಹ ಅಪಾಯವೇನೂ ಇಲ್ಲ) +೨. ಅನುಭವವನ್ನು ವಾಚ್ಯಗೊಳಿಸಿ ಕೈ ತೊಳೆದುಕೊಂಡು ಬಿಡುವ ಅವಸರದಲ್ಲಿರುವವರು. +೩. ಪ್ರಸ್ತುತ ವಿಷಯಗಳಿಗೆ ಪ್ರತಿಕ್ರಿಯಿಸುವವರು. +೪. ಸುಮ್ಮನೆ ಭಾವ ಕೋಶದ ಬೆಚ್ಚಗಿನ ಕ್ಷಣಗಳನ್ನು ಬಾಂಧವ್ಯದ ಮೂಲಕ ಹಿಡಿದಿಡುವವರು. +(ನಮ್ಮ ಗುನುಗು-ಗೊಣಗಾಟ ಎರಡಕ್ಕೂ ಅರ್ಥ ಕಲ್ಪಿಸಿಕೊಳ್ಳಬೇಕಾದ್ದೇ ಇಂದಿನ ದುರಂತ. ಇರುವುದೆಲ್ಲವ ಬಿಟ್ಟು, ಹರಟೆ ಕಟ್ಟೆ) +೫. ಗತ ಸ್ಮರಣೆಯಲ್ಲಿ ಬದುಕಿನ ಸಾರ್ಥಕ ಕ್ಷಣಗಳನ್ನು ಹಿಡಿದಿಡುವಂತೆ ಬರೆದು, ಪ್ರಕಟಿಸಿ ಬಿಡುವವರು. (ತ ವಿ ಶ್ರೀನಿವಾಸ್‌ರವರ ಆಶ್ರಯ.ನೆಟ್, ಶ್ರೀನಿವಾಸ್‌ರವರಿಗೆ ಇರುವ ಉತ್ಸಾಹದಲ್ಲಿ ಅರ್ಧದಷ್ಟಾದರೂ ನಮ್ಮ ಯುವ ಸ್ನೇಹಿತರಿಗೆ ಇದ್ದಿದ್ದರೆ..ಎಂದು ಒಮ್ಮೊಮ್ಮೆ ನಾನು ಅಂದುಕೊಳ್ಳುವುದೂ ಉಂಟು. ಬರೆದದ್ದೆಲ್ಲ, ಅತ್ಯುತ್ತಮವಾದ ಸಾಹಿತ್ಯ ಎಂದೆನ್ನುವ ಭ್ರಮೆಯಲ್ಲೂ ಶ್ರೀನಿವಾಸ್ ಇಲ್ಲವೆನ್ನುವುದು, ಆನ್‌ಲೈನ್‌ನಲ್ಲಿ ನನಗೆ ಅವರೊಡನೆ ಇರುವ ಅಲ್ಪ ಪರಿಚಯದಲ್ಲಿ ಹೇಳಬಲ್ಲೆ, ಕಲಿಯುತ್ತೇನೆ ಎಂದೆನ್ನುವ ವಿನಯ ಇವರದು.) +ತಳುಕಿನ ಶ್ರೀನಿವಾಸ್, ಓ ಎಲ್ ನಾಗಭೂಷಣಸ್ವಾಮಿ, ಶ್ರೀರಾಂ, ಸುದರ್ಶನ ಪಾಟೀಲ ಕುಲಕರ್ಣಿ ಮುಂತಾದವರ ಬ್ಲಾಗ್‌ಗಳು ಗಮನ ಸೆಳೆದಂತೆಯೇ, ಉಳಿದವರ ಬ್ಲಾಗ್‌ಗಳು: ಅಂತರಂಗ (ಅಂತರಂಗಿ-ಗುಪ್ತನಾಮ), ಜೀವಸಂಶಯ (ಜೀವಿಶಿವು-ಗುಪ್ತನಾಮ) , ಅಗಸೆಯ ಅಂಗಳ (ವಿನಾಯಕ ಪಂಡಿತ್), ಬೊಗಳೆ-ರಗಳೆ (ಅಸತ್ಯಾನ್ವೇಷಿ-ಗುಪ್ತನಾಮ), ಮಜಾವಾಣಿ (ಶೇಷಾದ್ರಿ), ಇರುವುದೆಲ್ಲವ ಬಿಟ್ಟು (ಶ್ರೀ-ಬರೆಯುವ ಸಾಮರ್ಥ್ಯ, ಚಮತ್ಕಾರ, ಶೈಲಿ ಮುಂತಾದ ಗಟ್ಟಿತನವಿದ್ದೂ ಶ್ರೀ ತನ್ನ ದಿನ ನಿತ್ಯದ ಚಟುವಟಿಕೆಗಳ ನಡುವೆ ಬರೆಯುವುದು, ಪ್ರಕಟಿಸುವುದು ತೀರಾ ಕಡಿಮೆ-ಆಪ್ತವಾಗಿ ಬರೆಯುವವರು ಹೆಚ್ಚು ಬರೆದರೆ ಚೆನ್ನ, ಪೊಳ್ಳುತನ, ಜಗಳ, ವಾದ, ಸಂವಾದದ ನಡುವೆ ಒಳ್ಳೆಯದೇನಾದರೂ ದಕ್ಕುತ್ತದೆಯೇನೋ ಎನ್ನುವಂತಹ ಆಶಯವನ್ನು ಹುಟ್ಟಿಸಬಲ್ಲ ಇಂತಹ ಬರವಣಿಗೆಯ ವರ್ಗೀಕರಣ ಸದ್ಯಕ್ಕಂತೂ ಅಸಾಧ್ಯ, ಏನೇ ಆದರೂ ನಗುತ್ತ, ಸಿಟ್ಟಾಗುತ್ತ ಜಗಳವಾದರೂ ಸಾಧ್ಯ) +ಮಜಾವಾಣಿ, ಬೊಗಳೆ-ರಗಳೆಯ ಬಗೆಗೆ ಹೆಚ್ಚು ಹೇಳುವುದೇ ಬೇಡ. ಏಕೋದ್ದೇಶಿತವಾಗಿ, ಒಮ್ಮೊಮ್ಮೆ ನವಿರಾಗಿ ಎಲ್ಲವನ್ನು ಲೇವಡಿ ಮಾಡಿ ಒಂದು ನಗೆಯನ್ನಾದರೂ ಈ ಬ್ಲಾಗುಗಳು ತರುತ್ತವೆ. ಬರಿಯ ಲೇವಡಿಯೇ? – ಎಂದು ಒಮ್ಮೊಮ್ಮೆ ಅನ್ನಿಸುವುದೂ ಸಹ ಸುಳ್ಳಲ್ಲ. +ಅಂತರಂಗ: ನಿತ್ಯ ಏನಾದರೂ ಒಂದನ್ನು ಬರೆಯಲೇಬೇಕು ಎನ್ನುವ ನಿತ್ಯವ್ರತಿಗಳಂತೆ ಅಂತರಂಗಿಗಳು ಬರೆಯುತ್ತಿದ್ದಾರೆ. ಅನಿವಾಸಿ ಕನ್ನಡಿಗ ಹಾಗು ’ಪಾಪಿಷ್ಠ’ ಎಂದು ಕೆವಿಯಟ್ಟನ್ನು ಹಾಕಿಬಿಟ್ಟಿರುವುದರಿಂದ ಆ ಬಗೆಗೆ ಹೆಚ್ಚು ಏನನ್ನೂ ಹೇಳದೆ ಅವರು ತಮ್ಮ ಮೇಷ್ಟ್ರು, ಗೆಳೆಯ ಸುಂದರೇಶ್, ಸೂಪ್ ಇತ್ಯಾದಿ ಬಗೆಗೆ ಬರೆದಿರುವಂತೆ ಉಳಿದಿದ್ದಕ್ಕೂ ಅವರ ಸಹಜ ಶೈಲಿಯಾದರೆ ಚೆನ್ನವೆಂದನ್ನಿಸುತ್ತದೆ. ಗಮನಾರ್ಹವಾದ ಬ್ಲಾಗ್ ಇದು. ಆದರೆ, ಎಲ್ಲವನ್ನು ಬರೆದು ಸುಮ್ಮನೆ ತೊಳೆದುಕೊಂಡು ಬಿಡುವ ದೌರ್ಬಲ್ಯಕ್ಕೆ ಅಂತರಂಗಿಗಳು ಬಲಿಯಾಗದೆ, ಮತ್ತೇನನ್ನಾದರೂ ಸಾಧಿಸಲಿ ಎಂದಷ್ಟೇ ಇಲ್ಲಿಂದ ಕೋರಬಹುದು. ಬ್ಲಾಗುಗಳಿಗೆ ಇರುವ ಕನಿಷ್ಟ ಅರ್ಹತೆಯನ್ನು ಅಂತರಂಗಿಗಳು ತಮ್ಮ ಬರವಣಿಗೆಯಿಂದ ಈಗಾಗಲೇ ಸೃಷ್ಟಿಸಿದ್ದಾರೆ. ಬೇರೆ, ಬ್ಲಾಗುಗಳನ್ನು ಇದರ ಜೊತೆಗೆ ಬೇಕಿರಲಿ, ಬೇಡದಿರಲಿ ತೂಗಿ ನೋಡಬೇಕಾದ ಅನಿವಾರ್ಯವನ್ನು ‘ಏನನ್ನಾದರೂ ಬರೆಯಲೇಬೇಕು’ ಎಂದೆನ್ನುವ ತಮ್ಮ ನಿತ್ಯವ್ರತದಿಂದಲೂ ಸೃಷ್ಟಿಸಿದ್ದಾರೆ. +* +* +* +ಮೇಲಿನ ಅಭಿಪ್ರಾಯದಲ್ಲಿ ಸೌಜನ್ಯ ಹಾಗು ಪ್ರಾಮಾಣಿಕತೆ ಎರಡೂ ಮಿಶ್ರಣಗೊಂಡಿದೆ. ವಿಂಗಡಿಸಿ ನೋಡುವುದನ್ನು ಈ ಪುಟದ ಓದುಗರಿಗೆ ಬಿಟ್ಟು: ಈಗ ಹೊಸದಾಗಿ ತೆರೆದುಕೊಳ್ಳುತ್ತಿರುವ ಈ ಮಾಧ್ಯಮದ ಬಗೆಗೆ ಹೆಚ್ಚಿನ ಹೊಣೆಗಾರಿಕೆ ಇರಬೇಕಾದ್ದು ಅದನ್ನು ಬಳಸುತ್ತಿರುವವರಿಗೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೊಣೆಗಾರಿಕೆಗಳೇನೇನು ಎನ್ನುವುದು, ಟೊಳ್ಳು ಗಟ್ಟಿ ಎಂದು ವಿಂಗಡಿಸಿಬಿಡಬಹುದಾದ ಸಂದರ್ಭವನ್ನು ನಾವಿನ್ನೂ ಮುಟ್ಟಿಯೇ ಇಲ್ಲ. ಏಕೆಂದರೆ ಕನ್ನಡದಲ್ಲಿ ಬ್ಲಾಗ್ ಮಾಡುತ್ತಿರುವವರ ಸಂಖ್ಯೆ ಬೆರೆಳೆಣಿಕೆಯಷ್ಟು. (ಉದಾಹರಣೆಗೆ ಬ್ಲಾಗ್ ಸ್ಪಾಟ್: ಎಷ್ಟು ಜನ ಕನ್ನಡದಲ್ಲಿ ಬರೆಯುತ್ತಿದ್ದಾರೆ, ಎಷ್ಟು ಜನ ಮಾಧ್ಯಮವನ್ನು ಇಂದಿನ ತುರ್ತಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಇತ್ಯಾದಿಗಳ ಬಗೆಗೆ ಆಲೋಚಿಸಿದಾಗ “ನಮ್ಮ ನಡುವೆ” ಈ ಮಾಧ್ಯಮದಲ್ಲಿ ಆಗುತ್ತಿರುವ ಚರ್ಚೆ ಅತ್ಯಂತ ಕೆಳಮಟ್ಟದ್ದು ಎನ್ನುವ ಸತ್ಯವೂ ನಿರ್ವಿವಾದ ಸಂಗತಿಯೇ. ಸಮರ್ಥ ಬಳಕೆ ಎನ್ನುವ ಮಾತನ್ನು ಪಕ್ಕಕ್ಕಿಡಿ, ಮೊದಲು ಬಳಸುವವರು, ಓದುವವರ ಸಂಖ್ಯೆ ಹೆಚ್ಚಾಗಿ ಆಗಲಿ, ನಂತರ ಸಮರ್ಥ ಬಳಕೆಯ ಬಗೆಗೆ ಮಾತನಾಡೋಣ ಎನ್ನುವ ಮಾತೂ ಸಹ ನಿಜ. ಈ ಎರಡೂ ನಿಜಗಳ ಮಧ್ಯೆ ಈ ಮಾಧ್ಯಮದಲ್ಲಿನ ಕೊರತೆಗಳ ಬಗೆಗೆ ಗಮನ ಹರಿಸಿದಾಗ: +ಶ್ರೀರಾಂ, ಇತ್ತೀಚೆಗೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ, ಬ್ಲಾಗ್‌ಗಳ ಬಗೆಗಿನ ಲೇಖನದ ಸಂದರ್ಭದಲ್ಲಿ, ನೀಡಿರುವ ಸಂದರ್ಶನದಲ್ಲಿ ಮುಖ್ಯವಾದ ಅಂಶದ ಬಗೆಗೆ ಮಾತನಾಡಿದ್ದಾರೆ. +ಪ್ರಶ್ನೆ: ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು? +ಶ್ರೀರಾಂ ಉತ್ತರ: ನನಗೆ ಬ್ಲಾಗ್ ಈ ಥರದ ಮಹತ್ತರ ಸಾಧನೆ ಮಾಡುತ್ತದೆ ಅನ್ನಿಸುವುದಿಲ್ಲ.. ಆಯಾ ಭಾಷೆಗೆ ಇರುವ ಅನೇಕ ಪರಿಕರಗಳಲ್ಲಿ ಇದೂ ಒಂದು ಅಂತ ಅನ್ನಿಸುತ್ತದೆ. ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ. ಉದಾಹರಣೆಗೆ ವಿನ್ಯಾಸಕ್ಕಿರುವ ಪರಿಕರ “ಟೆಂಪ್ಲೇಟ್” ಇಂಗ್ಲೀಶ್ ಭಾಷೆಗೆ ಅನುಗುಣವಾಗಿ ಇದೆ. ಹೆಚ್‌ಟಿ‌ಎಂಎಲ್ ಜಾವಾ ತಿಳಿಯದ ನನ್ನಂಥವರಿಗೆ ಅದನ್ನು ಕನ್ನಡಿಸುವ ಕೆಲಸ ಕಷ್ಟದ್ದು. ಆದರೂ ನಾನು ಸಾಧ್ಯವಾದಷ್ಟು ಅದರ ವಿನ್ಯಾಸವನ್ನು ಕನ್ನಡಿಸಿದ್ದೇನೆ.. ಆದರೂ ತಾರೀಖು, ತಿಂಗಳುಗಳ ಹೆಸರುಗಳು ಇನ್ನೂ ಇಂಗ್ಲೀಷಿನಲ್ಲೇ ಇವೆ.. ಈ ಮಾಧ್ಯಮದಲ್ಲಿ ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ. ಸದ್ಯಕ್ಕೆ ಕೈಬೆರೆಳೆಣಿಕೆಯಷ್ಟು ಜನ ಬ್ಲಾಗ್ ಬರೆಯುತ್ತಿದ್ದಾರೆ. +ಶ್ರೀರಾಂರ ಉತ್ತರದಲ್ಲಿ, “…ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ…ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ” ಎನ್ನುವ ಅಂಶವನ್ನು ಹಿಡಿದುಕೊಂಡು ಹೊರಟಾಗ: ಕನ್ನಡದವರ ಕೆಟ್ಟ ಜಡತ್ವ ಕಣ್ಣಿನ ಮುಂದೆ ನಿಲ್ಲುತ್ತದೆಯಲ್ಲದೆ, ಗೂಗಲ್‌ನವರ ಬ್ಲಾಗ್‌ಸ್ಪಾಟ್‌ನಂತಹ ಪ್ರಯತ್ನಗಳಿಗೂ ಕನ್ನಡದವರೇ ಆದ ಹುಡುಗರು ಸೇರಿಕೊಂಡು ಮಾಡಿರುವ ಸಂಪದ.ನೆಟ್‌ಗೂ ಬಹಳ ವ್ಯತ್ಯಾಸಗಳಿವೆ. ದೌರ್ಬಲ್ಯಗಳೇನೇ ಇದ್ದರೂ, ಬ್ಲಾಗ್ ಮಾಡಲಿಚ್ಛಿಸುವ ಕನ್ನಡಿಗರು ಸಂಪದದತ್ತ ವಾಲ ಬೇಕು ಎಂದನ್ನಿಸುತ್ತದೆ. ಏಕೆಂದರೆ, ಸಂಪದ ಸ್ಥಳೀಯರ ಪ್ರಯತ್ನ. ಗೂಗಲ್ ಕೆಟ್ಟ ಜಾಗತೀಕರಣದ/ದೊಡ್ಡ ಕಾರ್ಪೊರೇಟ್ ಲಕ್ಷಣವುಳ್ಳ ಚಿಹ್ನೆ-ಸಂಕೇತ. ನಾವುಗಳು ಅದಕ್ಕೆ ಜೋತು ಬೀಳುವುದರಿಂದ ಸ್ಥಳೀಯವಾಗಿ ಬೆಳೆಯಬೇಕಾದ ಕತೃತ್ವ ಶಕ್ತಿಯನ್ನು ಹೊಸಕಿ ಹಾಕಿ ಬಿಡುತ್ತೇವೆ. ಏನೊಂದೂ ಇಲ್ಲದ ವಾತಾವರಣವಿದ್ದರೆ, ಒಳ್ಳೆಯದು ನಮ್ಮ ಮಧ್ಯದಲ್ಲೇ ಏನಾದರೂ ಒಳ್ಳೆಯದು ಹುಟ್ಟಿಕೊಳ್ಳಬಹುದು. ಅಂತಹ ಒಳ್ಳೆಯ ಒಂದು ಪ್ರಯತ್ನ ಸಂಪದ.ನೆಟ್. ನಿಜ, ಅದರಲ್ಲೂ ಅನೇಕ ದೌರ್ಬಲ್ಯಗಳಿವೆ. ಆದರೆ, ಅದು ನಮ್ಮವರೇ ಮಾಡಿದ್ದು. ಗೂಗಲ್, ಅಥವ ಟೆಕ್ಸ್ಟ್‌ಪ್ಯಾಟರ್ನ್, ವರ್ಡ್‌ಪ್ರೆಸ್‌ನವರಲ್ಲ. ನಿರ್ವಹಣೆಗಾಗಿ ದ್ರುಪಾಲ್ ಬಳಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ, ಕನ್ನಡದ ಉತ್ಸಾಹಿತರನ್ನು ಒಂದೆಡೆ ಕಲೆ ಹಾಕಿದ್ದಾರೆ. (ವಿಕಿಪೀಡಿಯಾದ ಬಗೆಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ-ಅದರ ಬಗೆಗೆ ಮತ್ತೊಮ್ಮೆ ಬರೆಯುತ್ತೇನೆ). ಇದರಲ್ಲಿರುವ ಉತ್ಸಾಹಿ ಯುವಕರೂ ಏನನ್ನಾದರೂ ಮಾಡಬಲ್ಲರು. ಸಾಮರ್ಥ್ಯ-ಶಕ್ತಿ-ಪರಿಣತಿ ಎಲ್ಲವೂ ಇವೆಯಾದರೂ ದೌರ್ಬಲ್ಯಗಳನ್ನು ದಾಟಲಾಗಿಲ್ಲವೆನ್ನುವ ನಿಜದ ನಡುವೆ ಸಂಪದದ ಸಾಧನೆ ಕಡಿಮೆ ಏನಲ್ಲ. ಕನ್ನಡದಲ್ಲಿ ಬ್ಲಾಗ್ ನಡೆಸುತ್ತೇನೆ ಎನ್ನುವವರು, ದಯವಿಟ್ಟು ಸಂಪದವನ್ನು ಬಳಸಿ ಎನ್ನುವುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಬಲ್ಲೆ. ಸಂಪದದವರು ತಮ್ಮ ಕಾರ್ಯ ಯೋಜನೆಗಳಿಂದ ಲಾಭ ಮಾಡಿಕೊಳ್ಳುವುದಾದರೂ ನಾನು ಇವೇ ಮಾತುಗಳನ್ನು ಹೇಳುತ್ತಿದ್ದೆ. +* +* +* +ಶ್ರೀರಾಂ ಸುಧಾದಲ್ಲಿ ಹಾಗು ನಾನು ಈಗ “ಕನ್ನಡದ ವಾತಾವರಣಕ್ಕೆ ಸೂಕ್ತವಾದ ಪರಿಕರಗಳು” ಕುರಿತಂತೆ ಪ್ರಸ್ತಾಪಿಸಿರುವುದರಿಂದ ಕನ್ನಡಸಾಹಿತ್ಯ.ಕಾಂ ಕೈಗೊಂಡಿರುವ ಯೋಜನೆಗಳ ಬಗೆಗೂ ಇಲ್ಲಿ ದಾಖಲಿಸಿಬಿಡುತ್ತೇನೆ. +ಕನ್ನಡ ಪದ ಪರೀಕ್ಷಕ ಹಾಗು ಶ್ರೀಕಾಂತ ಮಿಶ್ರ್ರಿಕೋಟಿ: ಕನ್ನಡ ಪದ ಪರೀಕ್ಷಕ (ಕೆಪಿಪಿ). ಇದು ಒಂದು ಸ್ಪೆಲ್ ಚೆಕ್ಕರ್. ಅಂದರೆ ಇದೇ ಒಂದು ಸ್ವತಂತ್ರ ತಂತ್ರಾಂಶವಲ್ಲ. ಮೈಕ್ರೋಸಾಫ್ಟ್‌ನವರ ಆಫೀಸ್ ತಂತ್ರಾಶದಲ್ಲಿ ಬರಹ ಡಾಕ್ಯುಮೆಂಟನ್ನು ಸಿದ್ಧಗೊಳಿಸಿದಾಗ ಕೀ ಇನ್ ದೋಷಗಳನ್ನು ತಿದ್ದಲು ಸಹಕಾರಿಯಾಗಬಹುದಾದ ಯಾವುದೇ ಪರಿಕರವಿರಲಿಲ್ಲ. ನುಡಿ ಬಳಸುವವರಿಗೆ ಅದರಲ್ಲೇ ಒಂದು ಸ್ಪೆಲ್ ಚೆಕ್ಕರ್ ಇತ್ತು. ಆದರೆ, ಬರಹ ಹಾಗು ಆಫೀಸ್ ಬಳಕೆದಾರರಿಗೆ ಇಂತಹ ಪರಿಕರವಿರಲಿಲ್ಲ. ಇದರ ಅಗತ್ಯವೂ ಇತ್ತು. +ಕನ್ನಡಸಾಹಿತ್ಯ.ಕಾಂ ಬಗೆಗೆ ಅಭಿಮಾನವಿಟ್ಟಿರುವ ರುದ್ರಮೂರ್ತಿಯವರ ಸಂಪರ್ಕವಾದೊಡನೆ ನಾನು ಈ ಬಗೆಗೆ ಅವರಿಗೆ ತಿಳಿಸಿದಾಗ ಅವರು ನೆರವಿಗೆ ನಿಂತರು. ಬರಹ ಎಸ್‌ಡಿಕೆ ಬಳಸಿ, ಅವರು ಕಳೆದ ಬಾರಿ ಕೆಪಿಪಿಯನ್ನು ನಿರ್ಮಿಸಿಕೊಟ್ಟಿದ್ದರು. ಈಗ ಅದನ್ನು ಮತ್ತಷ್ಟು ಅನುಕೂಲಗಳೊಂದಿಗೆ ವಿಸ್ತರಿಸಿ ಕೊಟ್ಟಿದ್ದಾರೆ. ಇದರಲ್ಲಿ, ನಿಘಂಟಿನ ಕಡತದಲ್ಲಿ ಇರುವ ದೋಷಪೂರಿತ ಪದಗಳನ್ನು ತೆಗೆದು ಹಾಕಲು, ಅಲ್ಲೇ ತಿದ್ದಲು, ಡಿಕ್ಷನರಿ ಫೈಲನ್ನು ಆಮದು ಮಾಡಿಕೊಳ್ಳಲು ಹಾಗು ರಫ್ತು ಮಾಡಲು ಅನುಕೂಲ ಮಾಡಿ ಕೊಟ್ಟಿದ್ದಾರೆ. +ಶ್ರೀಕಾಂತ ಮಿಶ್ರಿಕೋಟಿಯವರು ಮುಂಬಯಿಯ ಬ್ಯಾಂಕೊಂದರಲ್ಲಿ ಉದ್ಯೋಗಿಗಳು. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ, ಕನ್ನಡಸಾಹಿತ್ಯ.ಕಾಂ ಪ್ರಕಟಿಸಿರುವ ಕೃತಿಗಳಲ್ಲಿನ ಕೀ-ಇನ್ ದೋಷಗಳನ್ನು ನಿವಾರಿಸುವತ್ತ ಹೆಚ್ಚು ಗಮನ ಹರಿಸಿದ್ದಾರೆ. ಹಾಗೆಯೇ ಪದಕೋಶಕ್ಕೆ ಸುಮಾರು ೬೦.೦೦೦ ಪದಗಳನ್ನು ಈಗಾಗಲೇ ಸೇರಿಸಿದ್ದಾರೆ. ಅವರಿಗೂ ಹಾಗು ರುದ್ರಮೂರ್ತಿಯವರಿಗೂ ಕೃತಜ್ಞತೆಗಳು. ಇವರೊಡನೆ ಸ್ಪರ್ಧಿಸಬಹುದಾದವರು: ಕನ್ನಡಸಾಹಿತ್ಯ.ಕಾಂನ “ಬರಹ” ಯಾಹೂ ತಂಡವನ್ನು ಸೇರಬಹುದು. +ಈ ಯಾಹೂ ತಂಡ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕುಮಾರವ್ಯಾಸ ಮಹಾಕವಿಯ ಕರ್ಣಾಟ ಭಾರತ ಕಥಾಮಂಜರಿಯನ್ನು “ಬರಹ”ಕ್ಕೆ ಇಳಿಸುವುದರಲ್ಲಿ ಅಶ್ವಥ್ ಎಂ ಹಾಗು ಅವರ ಮಿತ್ರರಾದ ಕಾರಂತ್ ನಿರತರಾಗಿದ್ದಾರೆ. ಈ ಬೃಹತ್ ಕಾವ್ಯವನ್ನು “ಬರಹ” ಕ್ಕೆ ಇಳಿಸಲು ಆಸಕ್ತಿ ಇರುವವರು ಇವರನ್ನು ಸೇರಿಕೊಳ್ಳಬಹುದು. +ಕೆಪಿಪಿಯನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನೆನಪಿಡಿ: ಇದು “ಬರಹ” ಕ್ಕೆ ಲಗತ್ತಿಸಬಹುದಾದ ಸ್ಪೆಲ್ ಚೆಕ್ಕರ್ ಅಲ್ಲ. ಮೈಕ್ರೋಸಾಫ್ಟ್‌ನವರ ಆಫೀಸ್ ತಂತ್ರಾಂಶ ಬಳಸುವವರಿಗೆ ಒಂದು ಆಡ್-ಇನ್ ಟೂಲ್. +ಇದನ್ನು ಮತ್ತಷ್ಟು ವಿಸ್ತರಿಸುವ, ಹೆಚ್ಚಿನ ಉಪಯುಕ್ತತೆ ನೀಡುವಲ್ಲಿ ತಮ್ಮ ಶ್ರಮದಾನ ನೀಡಲು ಆಸಕ್ತಿ ಇರುವವರು ಕನ್ನಡಸಾಹಿತ್ಯ.ಕಾಂ ತಾಂತ್ರಿಕ ಬೆಂಬಲದ ಕೂಟವನ್ನು ಸೇರಬಹುದು. +ಮತ್ತೊಂದು ದಿಟ್ಟವಾದ ಪ್ರಮುಖ ಹೆಜ್ಜೆಯೆಂದರೆ “ಸಂಪೂರ್ಣ” ಸಿ‌ಎಂಎಸ್. ಈಗ ಬ್ಲಾಗ್‌ಸ್ಪಾಟ್ ಅಥವ ಸಂಪದದಲ್ಲಿನ ಕನ್ನಡ ಪಠ್ಯ ಕೇವಲ ವಿಂಡೋಸ್ ಎಕ್ಸ್‌ಪಿ ಅಥವ ಯುನಿಕೋಡನ್ನು ಸರಿಯಾಗಿ ತೋರಿಸಬಲ್ಲ ಬೇರೆ ಇನ್ಯಾವುದೇ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುವವರು ಮಾತ್ರ ಓದಬಹುದು. ವಿಂಡೋಸ್-೯೮ ಬಳಸುತ್ತಿರುವವರು ಓದಲು ಸಾಧ್ಯವಿಲ್ಲ. ಐಬಿ‌ಎಂನವರ ಪ್ಲಗ್ ಇನ್ ಒಂದನ್ನು ಹಾಕಿಕೊಂಡರೂ ಅದಕ್ಕೂ ಅನೇಕ ಮಿತಿಗಳಿವೆ ಎನ್ನುವುದನ್ನು ಕೇಳಿಬಲ್ಲೆ. ಹೀಗಾಗಿ, ಎಲ್ಲರಿಗೂ ಪಠ್ಯ ದೊರೆಯುವಂತಾಗಬೇಕಾದ ವ್ಯವಸ್ಥೆ ಈವರೆಗೆ ಲಭ್ಯವಿರಲಿಲ್ಲ. ‘ಸಂಪೂರ್ಣ’ವನ್ನು ಅಂತಹ ಕೊರತೆ ನೀಗಿಸುವಂತೆ ಸಜ್ಜುಗೊಳಿಸಲಾಗುತ್ತಿದೆ. ಅದರ ಕುರಿತಂತೆ ನಾನು ಹಾಗು ರಾಘವ್ ಕೋಟೇಕಾರ್ ಸಾಕಷ್ಟು ಶ್ರಮ ವಹಿಸಿದ್ದೇವೆ. ಈ ಯೋಜನೆಯ ನಿರ್ಮಾಣ ಹಂತದಲ್ಲಿ ಸೇರಬಯಸಿ ಪ್ರತಿಕ್ರಿಯೆಗಳು ಬರುತ್ತಿವೆ. ಪರೀಕ್ಷಾರ್ಥದ ಆವೃತ್ತಿ ಸಂಪೂರ್ಣಗೊಳಿಸುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ. ಕುತೂಹಲಕ್ಕೆಂದು ಕೆಲವರು ಕೇಳಿದ್ದರಿಂದ ಈಗ ಆಗಿರುವ ಕೆಲಸದ “ಡೆಮೋ” ಒಂದನ್ನು ನೀಡಿದ್ದೇವೆ, ಈ ಡೆಮೋ ಕಾರ್ಯ ಮುಗಿದೊಡನೆ ಸಂಪೂರ್ಣದಲ್ಲಿ ಆಸಕ್ತಿ ತೋರಿಸಿರುವವರನ್ನು ಸಂಪರ್ಕಿಸುತ್ತೇವೆ. ಬಹುಶಃ ಮುಂದಿನ ವಾರ ಸಂಪೂರ್ಣದ ಡೆಮೋ ಕಾರ್ಯ ಮುಗಿಯಬಹುದು. ಸದ್ಯಕ್ಕೆ ಕುತೂಹಲವಿರುವವರು ಇಲ್ಲಿಗೆ ಭೇಟಿ ಕೋಡಬಹುದು. +ಇತರರೂ ಇಂತಹ ಕ್ರಮಗಳನ್ನು ಕೈಗೊಳ್ಳುವೆಡೆಗೆ ಗಮನ ಹರಿಸಿದರೆ, ತಾಂತ್ರಿಕತೆಯನ್ನು ಕನ್ನಡಕ್ಕೆ ಒಗ್ಗಿಸಬಹುದು- ಇದರಿಂದಾಗಿ ಸಾಕಷ್ಟು ಲಾಭ ಎಲ್ಲರಿಗೂ ಆಗಬಹುದು. +ಕನ್ನಡಸಾಹಿತ್ಯ.ಕಾಂ ಬಗೆಗೆ ಅಭಿಮಾನವಿಟ್ಟುಕೊಂಡು ಬಂದಿರುವ ರವಿಕೃಷ್ಣಾರೆಡ್ಡಿಯವರು ಕನ್ನಡದಲ್ಲಿ ಹೊಸ ವಾರಪತ್ರಿಕೆಯೊಂದನ್ನು ತರುವಲ್ಲಿ ನಿರತರಾಗಿದ್ದಾರೆ. ಇಷ್ಟರಲ್ಲೇ, ಹೊಸ ವಾರಪತ್ರಿಕೆ ಹಾಗು ಅಂತರ್ಜಾಲದಲ್ಲಿ ಅದರ ಪ್ರತಿ ಎಲ್ಲ ಕನ್ನಡಿಗರಿಗೂ ದೊರೆಯಬಹುದು. ರವಿಕೃಷ್ಣಾರೆಡ್ಡಿಯವರಿಗೆ ಒಳ್ಳೆಯದಾಗಲಿ. +ಮುಂದಿನ ಸಂಚಿಕೆ ಆಗಸ್ಟ್, ಮೊದಲವಾರ. +ಶೇಖರ್‌ಪೂರ್ಣ +೪.೦೬.೨೦೦೬ +***** +ಎಲ್ಲರೂ ಕ್ಷಮಿಸಬೇಕು- ತಾಂತ್ರಿಕತೆಯ ಸಂದರ್ಭದಲ್ಲಿ ಕನ್ನಡ ಭಾಷೆ ಅಂತರ್ಜಾಲದಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ಕುರಿತಂತೆ ಬರೆಯುತ್ತಿದ್ದೇನೆ. ಬಹಶಃ ಅಪ್ರಸ್ತುತವಾಗಲಾರದು ಎಂಬ ಹುಂಬ ಧೈರ್ಯವೂ ಇದೆ. ಚುಚ್ಚು ಮಾತುಗಳನ್ನಾಡದಿದ್ದರೆ- ಚರ್ಚೆ ಮುಂದುವರಿದು ’ಬೇಕು – ಬೇಡಗಳು’ ನಿರ್ಣಯವಾಗುವುದಾದರು […] +ಕನ್ನಡಸಾಹಿತ್ಯ.ಕಾಂ ನ ಚಾರಣಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಾನು ಸಿಟ್ಟಿನ ಭರದಲ್ಲಿ ಒಮ್ಮೆ ಈ ತಾಣವನ್ನು ನನ್ನ ಪ್ರತಿಭಟನೆಯ ಸಂಕೇತವಾಗಿ ಸ್ಥಗಿತಗೊಳಿಸಿದಾಗ, ಕನ್ನಡದಲ್ಲಿ ಆಸಕ್ತಿ ಇರುವ ವಿಮರ್ಶೆ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಓ ಎಲ್ […] +‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_569.txt b/Kannada Sahitya/article_569.txt new file mode 100644 index 0000000000000000000000000000000000000000..ade2ecd526c985e01ebeb4e32ac2839756ed7a35 --- /dev/null +++ b/Kannada Sahitya/article_569.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯುನಿವರ್‍ಸಿಟಿಯ ಸುತ್ತಾ +ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ +ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ +ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ +ಹಾಯುವ ಗಂಭೀರತೆಯಲ್ಲಿ ಹಿರಿಯರ +ಮುಖದರ್‍ಜೆಯಲ್ಲಿ ಸುಂಯನೆ ಸೆರಗು +ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ +ಸಿಟಿಬಸ್ಸಿಗೆ ಜೋತು ಬೀಳುವ ಕೈಗಳಲ್ಲಿ +ಕಾಮುಕ ಗಲ್ಲಗಳಿಗೆ ಮೆತ್ತಿದ ಪೌಡರಿನಲ್ಲಿ +ಲೈಬ್ರರಿಯಲ್ಲಿ-ಅದಕ್ಕೆ ಅಂಟಿಕೊಂಡ ಅಸಹನೀಯ +ಮೌನದಲ್ಲಿ ಸಾಲಾಗಿ ಬೀರುವಿನಲ್ಲಿ ಪಟಪಟ ಪುಟಿವ +ಅಳುವ ಲಕ್ಷಾಂತರ ಬಚ್ಚಿಟ್ಟ ಅಕ್ಷರಗಳಲ್ಲಿ +ದನಿಗಳಲ್ಲಿ ಇತಿಹಾಸಗಳಲ್ಲಿ ಪುಸ್ತಕಗಳ +ನಡುತಲೆಯಲ್ಲಿ ಹಕ್ಕಿಯೂ ಧಿಕ್ಕರಿಸುವ +ಸಿಮೆಂಟು ಪಾರ್‍ಕಿನಲ್ಲಿ ದಿನ ದಿನವೂ ಸತ್ತು ಚೂರಾಗುವ +ನೂರಾರು ಚಾಕುಪೀಸುಗಳಲ್ಲಿ ಬ್ಲಾಕ್ ಬೋರ್‍ಡೋಳಗೆ +ಸಮಾಧಿಗೊಂಡಿರುವ ಜ್ವಲಂತ ಸತ್ಯಗಳಲ್ಲಿ +ನರ ವಾಸನೆಯೇ ಇರದ ಲ್ಯಾಬಿನಲ್ಲಿ +ಪುಸ್ತಕದ ಹುಳುಗಳಲ್ಲಿ ಬೆಂಝಿನ್‌ ಅಸಿಟೋನ್‌ಗಳ +ಉಸಿರಿನಲ್ಲಿ ಕೆಲ ಕತೆ ಕವಿತೆಗಳ ಗರ್‍ಭಪಾತದಲ್ಲಿ +ಸೂತ್ರಗಳಲ್ಲಿ ಆಕೃತಿಗಳಲ್ಲಿ +ಕೂಗು ಕೇಳದ ಚಳಿಯಲ್ಲಿ +ಬೆಳೆಯದ ಬೆಳೆಯಲ್ಲಿ ತಿಳಿಯದ ಸುಳಿಯಲ್ಲಿ +ಅಯ್ಯೋ, ನನ್ನನ್ನೇ ಕಳೆದುಕೊಳ್ಳುತ್ತಿರುವ ನನಗೆ +ನೆನಪಾಗುತ್ತಾಳೆ- +ನನ್ನೂರಿನ ನನ್ನ ಅಮ್ಮ-ಆ ನೂರು ಮೈಲು +ಗಳಾಚೆಯೂ ಈಗ ಆಕೆ ಬೇಯಿಸುತ್ತಿರಬಹುದಾದ +ಸಾರು ಅನ್ನ +ಆ ಒಳಮನೆಯಲ್ಲಿ ಫಳಫಳ ಹೊಳೆವ ಒರೆದ ನೆಲ +ಬಾಗಿಲಿಗೆ ತೂಗುವ ಅವಳ ಕಸೂತಿಯ “ಸುಸ್ವಾಗತಂ” +ಬಂದವರಿಗೆಲ್ಲ ತೋರಿಸಲ್ಪಡುತ್ತಿರುವ +ನನ್ನ ಮುಂಜಿಯ ಅಲ್ಬಂ +ತಾಜಾ ತರಕಾರಿ ಉಪ್ಪು ಕೈ ತೋಟದ ಮಲ್ಲಿಗೆ +ಸೇವಂತಿಗೆ-ಅದೇ ಸಂಜೆ ಅದೇ ಮುಂಜಾವು +ಜಾರುವ ಸೂರ್‍ಯನ ತಂಟೆ-ಅಪ್ಪನ +ಹೃದಯವೇ ಮುಖವಾದ ಕಣ್ಣು +ಅಲ್ಲಿಯದೇ ಗಾಳಿ ಅದೇ ಮಣ್ಣು +ಹಾ, ಮೇಲೆ ಕ್ಲಾಕ್ ಟವರ್ +ಹಲ್ಲು ಕಿರಿಯುತ್ತಿದೆ +ಕಿಸೆಯಲ್ಲಿಯ ಐಡೆಂಟಿಟೀ ಕಾರ್‍ಡ್ +ನನ್ನನ್ನಿರಿಯುತ್ತಿದೆ +ಅಮ್ಮಾ, ಈ ಚಕ್ರವ್ಯೂಹದ ಅಭಿಮನ್ಯು +ನಾನಲ್ಲ, ನಾನಲ್ಲ, +ಎಂದು ಅರಚಬೇಕೆನಿಸುತ್ತದೆ. +***** +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […] +ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_57.txt b/Kannada Sahitya/article_57.txt new file mode 100644 index 0000000000000000000000000000000000000000..494c22ab90baa65118edbbe2f20bdcf49d5a0312 --- /dev/null +++ b/Kannada Sahitya/article_57.txt @@ -0,0 +1,80 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಮೊದಮೊದಲು ಹೀಗಿರಲಿಲ್ಲ ಈ ಕರಿಹೈದ. +ತುಂಬ ಸಂಕೋಚದವ. ನೋಡಿದರೆ ಬಾಡಿ +ಮೂಲೆಯಲ್ಲಿ ಮುದುಡುತ್ತಿದ್ದ. ಮಾತಿಗೊಮ್ಮೆ +ತಪ್ಪಿತಸ್ಥರ ಹಾಗೆ ಹಸ್ತ ಹೊಸೆಯುತ್ತಿದ್ದ. +ಯಾರೋ ನೆಂಟರ ಪೈಕಿ; +ಕೈತುಂಬ ಕೆಲಸದ, ತಲೆತುಂಬ ಯೋಚನೆಯ ನನಗೆ +ಇನ್ನಿವನ ಹೆಸರು ಕೇಳೋದಕ್ಕೆ ಸಮಯವೆಲ್ಲಿ? +ಮನೆಗೆಲಸ ಮಾಡಿಕೊಂಡಿರಲಿ ಎಂದೆ. ವರ +ಪಡೆದಂತೆ ಖುಷಿಗೊಂಡ ಹೈದನ ಕಣ್ಣಿನ ಬಲ್ಬು +ಫಕ್ಕನೆ ಹೊತ್ತಿ ಕರಿಬೆರಳು ಮನೆತುಂಬಾಡಿದಾಗ +ಗಾಬರಿಯಾಗಿ ನನ್ನ ಇಡಿಮೈ ನಡುಗಿದ್ದು ನಿಜ. +ಕೆಲವರ ಕಣ್ಣು ಹೀಗೂ ಇರಬಹುದಲ್ಲ! +ಆಮೇಲೂ ಅಷ್ಟೆ; ಒಂದು ತಕರಾರಿಲ್ಲ. ಅನಗತ್ಯ +ಮಾತಿಲ್ಲ. ಎಷ್ಟೆಂದರಷ್ಟೆ; ಲೆಖ್ಖ ಹಾಕಿದ ಹಾಗೆ. +ಹೊಸಬರ್‍ಯಾರಾದರೂ ಮನೆಗೆ ಬಂದರೆ ಮೈಮ್ಯಾಲೆ ಬಿದ್ದು +ಪರಿಚಯಿಸಿಕೊಳ್ಳೋದಿಲ್ಲ. ಹಲ್ಲುಗಿಂಜೋದಿಲ್ಲ. +ಬಂದವರು ಹೋದ ಮ್ಯಾಲದರೂ ಅಯ್ಯಾ +ಎವರ್‍ಯಾರೆಂದು, ಕುಲಗೋತ್ರ ಏನೆಂದು +ಕೇಳಿದವನಲ್ಲ. ಬಂದವರು ಬಂದೇ ಇರಲಿಲ್ಲ +ವೆಂಬಂತೆ ನಿರುಮ್ಮಳಾಗಿ ಮುಂಚಿನ ಕೆಲಸ +ಮುಂದುವರಿಸುತ್ತಿದ್ದ. +– ೨ – +ನಾನವನ ಸಮ ನೋಡಿರಲಿಲ್ಲ, ಇಲ್ಲೀತನಕ. +ಕಣ್ಣಿಗೆ ಚಾಳೀಸು ಬಂದಾದ ಮೇಲೆ ನೋಡುತ್ತೇನೆ; +ನೆರಳು ಇಲ್ಲವೆ ಕತ್ತಲೆ ಹೆಪ್ಪುಗಟ್ಟಿದಂಥ ಕರಿಮೈ +ಕೊಬ್ಬಿ ಕಟುಕನ ಹಾಗೆ ಬೆಳೆದಿದ್ದಾನೆ! +ಹದಿಹರೆಯದಲ್ಲಿ ಅದೊಂದು ಥರ- +ಕಾಲಡಿ ಮುದುಡಿ ಕಾಣದ ಹಾಗೆ ಅವಿತಿದ್ದ ನೆರಳು +ಈಗ ಸಂಜೆಯ ಹೊತ್ತು ಇದ್ದಕ್ಕಿದ್ದಂತೆ ಉದ್ದೋ ಉದ್ದ +ಎದುರಿಗಿದ್ದರೆ ಹ್ಯಾಗೋ ಹಾಗೆ! +ಗಾಬರಿಯಾದೆನೆ? +ಈಗೀಗಂತು ಆತನ ಸಲಿಗೆ ಇದ್ದದ್ದೂ ಜಾಸ್ತಿ. +ಭಾರಿ ಪರಿಚಿತರಂತೆ ಹೇಳಕೇಳದೆ ಎಲ್ಲೆಂದರಲ್ಲಿ +ಮನೆತುಂಬ ಅಲೆದಾಡುತ್ತಾನೆ. ಎಳೆತನದ ಕಿಲಾಡಿತನಗಳ +ಹೇಳಿ ನಗಾಡುತ್ತಾನೆ. ಬೆಡ್‌ರೂಮಿಗೂ ನುಗ್ಗಿ ಈ ನಡುವುನ ಬೆತ್ತಲೆ ಮಜಗಳನ್ನ ಭುಜ ಕುಣಿಸಿ ಹೇಳುತ್ತಾನೆ. +ಹೊರಬೀಳೋ ಎಂದರೆ ಹಲ್ಲು ಕಿರಿದು ಹೆದರಿಸುತ್ತಾನೆ! +ಮೊನ್ನೆ, ಮಲಗಿದ್ದಾಗ ದಿಂಬಿನ ಬಳಿ ಕೂತು +ಲೆಕ್ಕ ಬರೆಯುತ್ತಿದ್ದ. ಹೆದರಿ ಹೆಂಡತಿಯನ್ನೆಬ್ಬಿಸಿದರೆ +ಪೆನ್ನು ಕಾಗದ ಚೆಲ್ಲಿ ಕಣ್ಣು ರೆಪ್ಪೆಗಳನ್ನ ಕೋನವಾಗಿಸಿದ. +ಕೋಪದಲ್ಲಿ ಕುದಿದು ದಪ್ಪ ತುಟಿ ಬಿರುಕಿಂದ +ಮುಕ್ಕಳಿಸಿ ಉಗುಳಿದ ಹಾಗೆ ದ್ರೋಹಿ ಎಂದ. +ಸಾಲ ವಸೂಲಿಗಿದು ಕಾಲವಲ್ಲವೆಂಬಂತೆ +ಬಿರಬಿರನೆ ಹೊರಗಡೆ ಹೋದ! +ಬೆಳಿಗ್ಗೆ ಇದು ಸರಿಯಲ್ಲವೆಂದು ಹೇಳಬೇಕೆಂದಾಗ +ಯಾಕೆಂದು ಗೊತ್ತಿಲ್ಲ, ನನ್ನ ಬಾಯಿಂದ ಮಾತೇ +ಬರಲಿಲ್ಲ. ಸೋಲುತ್ತಿರುವೆನೆ? +– ೩ – +ಸೋತೆನೆ? +ನಿನ್ನೆ ಯಾರಿಲ್ಲದಾಗ ಅವ ಬಂದು, ಎದುರಿಗೆ ನಿಂತು, +ಪಿಳುಕಿಸಿದ ಕಣ್ಣ ಕರಿಬೆಳಕಿನ ಶಲಾಕೆಗಳನ್ನ +ಎದೆಗೆಸೆದು, ನೆತ್ತಿಯ ಮೇಲೆ ಕಾಲಿಡಬಂದ +ಜಂಗಮನಂತೆ ಚಡಪಡಿಸಿದಾಗ- +ನನ್ನೊಳಗವಿತ್ತಿದ್ದ ಅವಕಾಶ, ಬುದಿಂಗನೆ ಎದ್ದು +ಹೊರಗಿನಾಕಾಶದ ಜೊತೆ ಮಾತಾಡಲು ಬಾಯ್ದೆರೆದದ್ದೇ +ತಡ, ಗಾಬರಿಯಾಗಿ ನಡುಗಿ ಓಡೋಡಿ +ದೇವರ ಕೋಣೆಗೆ ನುಗ್ಗಿ ಬಾಗಿಲಿಕ್ಕಿಕೊಂಡೆ. +ವಿಗ್ರಹಗಳನ್ನ ಚಕಮಕಿ ತಿಕ್ಕಿದೆ. +ಚಿನ್ನದ ಕಿಡಿ ಸಿಡಿಯಲೇ ಇಲ್ಲ! +***** +ನಿಮ್ಮ ಕನಸನು ಬಿಟ್ಟು ಆಚೆ ಬಾರೆವು ನಾವು ಹೀಗೆ ತಡೆದರೆ ನೀವು ತಬ್ಬಿ ಹಿಡಿದು, ನಿಮ್ಮ ಪ್ರೀತಿಯ ನಮಗೆ ಒಂದಂಗುಲದ ಜಾಗ ಕನಸಿನಂತಃಪುರದ ತೋಟದೊಳಗೆ. ಇಲ್ಲಂತು ತನು-ಮನಕೆ ಏಳು ಮಲ್ಲಿಗೆ ತೂಕ ಹೂವ ಎಸಳೇ […] +೧ ಒಂದು…. ಎರಡು… ಮೂರು ಒಂದೊಂದು ಹೂ ಹಗುರು ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು ಸೃಷ್ಟಿ ಕರ್ತ ! ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು ಶುಭ ಮುಹೂರ್‍ತ. ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು ಏಳುವನನಾಮತ್ತು […] +ಎಲ್ಲ ತಿಳಿಸುವ, ಎಲ್ಲ ತಿಳಿದಿರುವ, ಮಡಿಲ ಮೇಲಿನ ಗಣಕವೇ, ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ ಏನೇ ಬೇಡಿಕೆ, ಏನೇ ಹಂಬಲ, ಬೇಕಾದರು, ಏನೇ ಬೆಂಬಲ ಮೊರೆಹೋಗುವೆ ನಿನ್ನ, ನಾ ದುರ್ಬಲ! ಜೀವಾತ್ಮದ ಸಂಚಯದ, ಪರಮಾತ್ಮನ ಪರಿಚಯದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_570.txt b/Kannada Sahitya/article_570.txt new file mode 100644 index 0000000000000000000000000000000000000000..28d9c80deba1732f486fe8a699a5ea89a59cab2e --- /dev/null +++ b/Kannada Sahitya/article_570.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ ಒಡ್ಡಿನಲ್ಲಿ ಕಟ್ಟಿಡುವುದು ಹೇಗೆಂಬ ಯೋಚನೆಯೇ ನದಿ ಕಿನಾರೆಯ ಈ ಸಂಜೆಯನ್ನು ಮತ್ತಷ್ಟು ಕಠಿಣವಾಗಿಸಿತ್ತು. ಏಳೂವರೆಯಾದರೂ ಅದು ಎಳೆವೆಯಲ್ಲಿದ್ದಂತಿತ್ತು. ಎಷ್ಟಾದರೂ ದಕ್ಷಿಣಾಯನದ ಹಗಲು. ಮಂಡಿ ಮಟ್ಟದ ನೀರಿನಲ್ಲಿ ಕತ್ತಲಿನ ಪ್ರಾಯವನ್ನಳೆಯುತ್ತ ತೋಳು ಮೇಲಕ್ಕೆ ಚಾಚಿ ಮೈಮುರಿದೆ. ಹಿಂದೆ ಕ್ಯಾಂಪ್‌ಫಯರಿಗೆ ಅಣಿಗೊಳ್ಳುತ್ತಿದ್ದ ಮಳಲಿನ ಹಾಸಿನಲ್ಲಿ ತುಸುವೇ ಮಬ್ಬಡರಿತ್ತು. ವಾರುಣಿ ಎತ್ತರದ ದನಿಯಲ್ಲಿ ಆಷ್, ರ್‍ಯಾಡ್ಸ್, ಮೋನ್ಸ್, ಡೀಪ್ಸ್, ಪ್ರ್ಯಾಟ್ಸ್ – ಅಂತೆಲ್ಲ ಆಗಾಗ್ಗೆ ಕೂಗಿ ಬೆಂಕಿ ಸಜ್ಜಿಕೆಯನ್ನು ನಿರ್ದೇಶಿಸುತ್ತಿದ್ದ. ಈ ಅಶ್ವಿನಿ ಕಾರಿಯಪ್ಪ, ರಾಧಿಕ ಸೋಮಣ್ಣ, ಮೋನಾ ಪಟೇಲ್, ದೀಪಾಲಿ, ಪ್ರೊತಿಮಾ ಬೋಸ್‌ಗಳು ಹನ್ನೆರಡು ವರ್ಷಗಳ ಬಳಿಕವೂ ಅವನನ್ನು ಸುತ್ತುಗರೆಯುವುದನ್ನು ಬಿಟ್ಟಿಲ್ಲವಲ್ಲ ಅಂದುಕೊಂಡೆ. ವಾರುಣಿ ಮೋನಾಳಿಗೆ ಮೋಜಿಗೆಂದು ಏನೋ ಹೇಳಿದಾಗ ಉಳಿದ ಹೆಣ್ಣುಗಳು ಗುಟುರಿಟ್ಟು ನಕ್ಕವು. ಮುಸ್ಸಂಜೆಯ ಮರದಲ್ಲಿ ಕೇಕೆ ಗಲಗಲಿಸಿತು. ವಾರುಣಿ ಮತ್ತೆ ಕೆಣಕಿ ನಕ್ಕ. ಅವಳು ಅವನನ್ನು ಅಟ್ಟಿಸಿಕೊಂಡು ಓಡಿದವಳು ಉಸುಕು ತೊಡರಿ ಧೇಯ್ಡೆಂದು ಬಿದ್ದಳು. ‘ಹೇ ಮೋನ್ಸ್! ಙou hಚಿveಟಿ’ಣ ಡಿemಚಿiಟಿeಜ ಜಿiguಡಿಥಿ – ಣhe bomb oಜಿ ಇighಣಥಿ ಓiಟಿe- ಔ‌ಏ! ಙou ಟಿeeಜ ಣo ಞಟಿoತಿ ಥಿouಡಿ ಟimiಣಚಿಣioಟಿs!!’ – ಎಂದು ಅವಳತ್ತ ಹೋಗಿ ಎತ್ತಲು ತೊಡಗಿದವನ ಕಿಬ್ಬೊಟ್ಟೆಗೆ ಮೋನ ಮುಷ್ಟಿಯಿಂದ ತಿವಿದಳು. ವಾರುಣಿ ಆಯ ತಪ್ಪಿ ಅವಳ ಮೇಲೆ ಬಿದ್ದ. ಉಳಿದ ಹೆಣ್ಣು ಮತ್ತೆ ಗುಟುರಿಟ್ಟವು. ಬಾಬಿ, ಅಮಿತ್, ಘೋಷ್ ಎಲ್ಲಿಂದಲೋ ಮಬ್ಬನ್ನು ಸೀಳಿಕೊಂಡು ಬಂದವರು ಕೇಕೆಯಲ್ಲಿ ಹುದುಗಿಕೊಂಡರು. ಇರುಳು ಸದ್ದಿರದೆ ದಟ್ಟಯಿಸತೊಡಗಿತ್ತು. ನಿಂತಲ್ಲೇ ಬಗ್ಗಿ ತಳದಿಂದ ಕಲ್ಲೊಂದನ್ನೆತ್ತಿ ತೋಳು ಜೀಕಿ ತೂರಿದೆ. ಅದು ಮನಸ್ಸಿನ ಆಳದಲ್ಲೆಲ್ಲೋ ಗುಳುಮ್ಮೆಂದಿತು. +ಇಂದಿರಾನಗರದ ಕ್ಲಬ್ಬಿನ ಸೆಕ್ರೆಟರಿ ಹೋದ ತಿಂಗಳಿನ ಸೋಮವಾರ – ಆರನೇ ತಾರೀಖಿರಬೇಕು, ಮೊಬೈಲಿಗೆ ಕರೆದು ಮರುಸಂಜೆ ಕ್ಲಬ್ಬಿಗೆ ಆಮಂತ್ರಣವಿತ್ತಿದ್ದು. ‘ಕ್ಲಬ್ಬಿಗೆ ಮುಂದಿನ ವರ್ಷಕ್ಕೆ ಇಪ್ಪತ್ತೈದು ತುಂಬುತ್ತೆ, ಸರ್. We iಟಿಣeಟಿಜ ಣo ಠಿuಣ uಠಿ ಚಿ Siಟveಡಿ ಎubiಟee ಊಚಿಟಟ. ಅದಕ್ಕೆ ನಾವು ಹದಿನೈದು ಆರ್ಕಿಟೆಕ್ಟ್‌ಸನ್ನ ಇನ್ವೈಟ್ ಮಾಡ್ತಾ ಇದ್ದೀವಿ… ಜಿoಡಿ ಚಿಟಿ oಠಿeಟಿ ಛಿomಠಿeಣiಣioಟಿ ಜಿoಡಿ ಣhe ಜesigಟಿ oಜಿ ಣhe sಚಿme.’ ಮಂಗಳವಾರದ ಮೀಟಿಂಗಿಗೆ ಒಂದು ತಾಸು ತಡವಾಗಿಯೇ ಹೋಗಿದ್ದೆ. ಆಹ್ವಾನಿತರಲ್ಲಿ ಮುಕ್ಕಾಲು ಮಂದಿ ನನ್ನ ಓರಗೆಯವರೇ ಇದ್ದರು. ಅದೂ ಬೀಯೆಮ್ಮೆಸ್‌ನವರು. ಹನ್ನೆರಡು ವರ್ಷಗಳ ಬಳಿಕ ಆಕಸ್ಮಿಕ ಪುನರ್ಮಿಲನ! ಸಭೆ ಮುಗಿದ ಮೇಲೆ ಈಜುಕೊಳದ ಮಗ್ಗುಲಿನ ಮೈತ್ರಿವನದಲ್ಲಿ ಊಟದ ಕೂಟ. ಬಿಯರು ಗುಟುಕುಗಳ ನಡುವೆ ಅನೂಪ ಈ ರೆಯೂನಿಯನ್ನಿನ ಪ್ರಸ್ತಾಪವೆತ್ತಿದ್ದ. ವಿನ್ನೂ ಅನುಮೋದಿಸಿದ್ದ. ಬಳಿಕದ ಒಂದೇ ವಾರದಲ್ಲಿ ಅದರ ಸಮಗ್ರ ಕರಡು ಸಿದ್ಧಗೊಂಡು ಈಮೇಲ್ ಬಂದಿತ್ತು. ‘ಓಚಿgಚಿmಚಿಟಿ! ಙou ರಿusಣ ಛಿಚಿಟಿ’ಣ miss ಣhis – ಥಿou ಞಟಿoತಿ. ಙou ಚಿಡಿe ಣhe ಠಿivoಣಚಿಟ eಟಿಣiಣಥಿ ಜಿoಡಿ ಣhis meeಣ!!’ – ಎಂದು ಅನೂಪ ಮತ್ತೆ ಮತ್ತೆ ಫೋನಿಸಿ ನನ್ನನ್ನು ಕಟ್ಟಿಹಾಕಿದ್ದ. ಬಿಜಾಯ್ ಮುಂಬಯಿ, ಡೆಲ್ಲಿ, ಕೊಚಿನ್, ಚೆನ್ನೈ, ಕೊಲ್ಕೋತಾಗಳಿಂದೆಲ್ಲ ಹಳೆಯ ಸಹಪಾಠಿಗಳನ್ನು ಕಲೆಹಾಕಿದ್ದ. ಅರ್ಕಾವತಿಯ ತಟದಲ್ಲಿ ಅಟಚಿss oಜಿ ಇighಣಥಿ ಓiಟಿe – ನಿನ್ನೆಯಿಂದ ಒಟ್ಟುಗಟ್ಟಿದ್ದು ಹೀಗೆ. +ನಿನ್ನೆ ಹನ್ನೊಂದರ ಸುಮಾರಿಗೆ ನನ್ನ ಬೊಲೇರೋ ಅರ್ಕಾವತಿ ಆರ್ಚರ್ಡ್ಸ್ ತಲುಪಿದಾಗ ನನ್ನನ್ನು ಕೂಡಲೇ ಯಾರೂ ಗುರುತಿಸಲಿಲ್ಲ. ಕಾಲೇಜಿನ ದಿನಗಳಿಗೂ ಈಗ್ಗೂ ನಾನು ಸಂಪೂರ್ಣ ಬದಲಾಗಿದ್ದೇನೆಂದು ವಿಲ್ಸ್ ವಾರುಣಿ ಹೇಳಿದ. ಸಂಚಾಲಿ ನನ್ನನ್ನು ನೋಡಿ ‘ಓಚಿgಚಿmಚಿಟಿ – ಡಿeಜeಜಿiಟಿeಜ!’ ಎಂದು ನಕ್ಕಿದ್ದಳು. ‘I ರಿusಣ ಛಿಚಿಟಿ’ಣ beಟieve ಣhಚಿಣ ಥಿou hಚಿve ಡಿemoಜeಟಟeಜ ಥಿouಡಿseಟಜಿ ಟiಞe ಣhis. ಟೋಟಲ್ಲಾಗಿ ಇಮೇಜ್ ಬದಲಾಯಿಸಿಬಿಟ್ಟಿದ್ದೀಯ!!’ – ಧರಣಿ ಅಂದಿದ್ದ. ನನಗೂ ಕೆಲವರ ಗುರುತು ಹತ್ತಿರಲಿಲ್ಲ. ಉದ್ದಿಮೆಯ ಒತ್ತಡ, ಮೂವತ್ತರ ನಡುವೆಲ್ಲೋ ಮಡುಗಟ್ಟಿದ ದೇಹ, ಎಷ್ಟೆಷ್ಟೋ ಹೊಸ ವಸ್ತುನಿಷ್ಠೆಯನ್ನು ರೂಢಿಸಿಕೊಂಡಿರುವ ಊರು… ಎಲ್ಲಕ್ಕಿಂತ ತನ್ನ ಹೊರಳುಗಳಲ್ಲೆಲ್ಲ ಉರುಳಿಸುವ ಕಾಲ – ಹೀಗೆ ಚರ್ಯೆಗಳನ್ನೇ ಬದಲಿಸಬಹುದೆ ಅನ್ನಿಸಿತ್ತು. ಗಡಿಬಿಡಿಯ ದಿನಚರಿಯಲ್ಲಿ ಕಟ್ಟುನಿಟ್ಟಿನ ಗರಡಿ, ಪಥ್ಯಗಳನ್ನು ಅಳವಡಿಸಿಕೊಂಡಿರುವುದರಿಂದ ನನ್ನನ್ನಿನ್ನೂ ಬೊಜ್ಜು ಸೆಣಸಿಲ್ಲ. ಪ್ರತಿ ಬೆಳಗಿನ ಕನ್ನಡಿಯಲ್ಲಿ ಎಲ್ಲರೂ ನಮ್ಮನ್ನು ನಾವು ಬಿಂಬಿಸಿಕೊಳ್ಳುವುದರಿಂದ ನಮಗೆ ನಮ್ಮ ಶಾರೀರಿಕ ಮಾರ್ಪಾಟುಗಳು ನೇರ ತಿಳಿದಾವೆಲ್ಲಿ? ನನಗೂ ಹಾಗೆಯೇ ಆಯಿತು. ಎದೆ ಸೊಂಟಗಳ ನಡುವೆ ಅರವತ್ತರ ಸುತ್ತಳತೆಯನ್ನು ಕಂಡಿರುವ ನರೇನ್, ಮೂರು ಮಕ್ಕಳನ್ನು ಹೆತ್ತು ಜೋಲಾಗಿರುವ ಮೋರೆಯ ವೈಶಾಲಿ, ವಿರಳಗೊಂಡಿರುವ ನೆತ್ತಿಯ ಅಭಿ….. ಇವರನ್ನು ನೋಡಿದಾಗ – ಅರೆ! ನನಗೂ ಕಮ್ಮಿಯೇನಿಲ್ಲ! ಆಗಲೇ ಮೂವತ್ತಾರು ತೀರಿದೆ!! – ಅಂತನ್ನಿಸಿ ಒಂದು ಖಾಸಗೀ ಕ್ಷಣದಲ್ಲಿ ಕಳೆದುಹೋಗಿದ್ದೆ. +ಮಧ್ಯಾಹ್ನದ ಊಟದ ಸಮಯದಲ್ಲಿ ಅನೂಪ ‘ಎಂಭತ್ತೊಂಭತ್ತರ ತರಗತಿ’ ಎಂಬ ಹೆಸರಿನ ಸಮಾವೇಶಕ್ಕೆ ವಿಧಿವತ್ತಾದ ಚಾಲನೆಯನ್ನು ಕೊಟ್ಟ. ಅದನ್ನೊಂದು ಸಂಘಟನೆಯೆಂಬಂತೆ ಕಟ್ಟುಬಹುದೆಂದು ಅಮಿತ್ ವೈದ್ಯ ಪ್ರಸ್ತಾಪಿಸಿದ್ದ. ಬಿಜಾಯ್ ಈ ಮುಂದೆ ಪ್ರತಿ ಆಗಸ್ಟಿನ ಕೊನೆಯ ವಾರ ಈ ಹಬ್ಬವನ್ನು ನಡೆಸಬಹುದೆಂದು ಮಂಡಿಸಿದ. ಒಂದು ನಮೂನೆ ಮಸೂದೆಯೆಂಬಂತೆ ಅದು ಅಂಗೀಕೃತವಾಯಿತು. ಪದಾಧಿಕಾರಿಗಳನ್ನು ಸದ್ಯಕ್ಕಂತೂ ನೇಮಿಸುವ, ಮುಂದಿನ ವರ್ಷದಿಂದ ಚುನಾಯಿಸುವ ಮಾತೂ ಆಯಿತು. ಚಿನ್ನಪ್ಪ ಮತ್ತು ಶರ್‍ಲೀ ಬಂದ ಮೇಲೆ ಅದನ್ನು ಚರ್ಚಿಸುವುದು ಸೂಕ್ತವೆಂದು ಪುರವಾರ್ ಹೇಳಿದ. ನಾಲಕ್ಕರ ಸುಮಾರಿಗೆ ಮೂವತ್ತೆರಡು ಸದಸ್ಯರ, ಇನ್ನಿಪ್ಪತ್ತು ಅವರಿವರಿರುವ ಕೂಟ ಚದುರುವ ಮೊದಲು – ಮತ್ತೆ ಏಳಕ್ಕೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೇರುವ ಘೋಷಣೆಯೊಂದಿಗೆ ಮುಗಿದಿತ್ತು. ಎಲ್ಲರೂ ರೆಸಾರ್ಟಿನಲ್ಲಿ ತಂತಮ್ಮ ಕೊಠಡಿಗಳಿಗೆ ಹೋದಾಗ ನಾನು ಹೊಳೆಯ ದಂಡೆಯುದ್ದ ಒಂದೆರಡು ಮೈಲು ಅಡ್ಡಾಡಿದ್ದೆ. ವಾಪಸು ಬರುವಾಗ ಜೇನ್ ಸಿಕ್ಕಿದ್ದಳು. ‘ಹಾಯ್! ಇಷ್ಟು ವರ್ಷ ಆದ ಮೇಲೆ ನಿನ್ನನ್ನು ನೋಡ್ತಿರೋದು ಒಂದು ಥರಾ ಖುಷಿ ಕೊಡುತ್ತೆ!!’ ಬೆರಗೆನಿಸಿತ್ತು. ಅವಳು ಅದೇ ಮೊದಲ ಸಲ ನನ್ನನ್ನು ಮಾತಾಡಿಸಿದ್ದು. ತರಗತಿಯಲ್ಲಿ ಯಾರೊಟ್ಟಿಗೂ ಹೆಚ್ಚಾಗಿ ಬೆರೆಯದಿದ್ದವಳು. ತಾನು, ತನ್ನ ಡ್ರಾಯಿಂಗ್ ಬೋರ್ಡ್ – ಅಷ್ಟೇ ಅವಳ ಪ್ರಪಂಚವಿದ್ದದ್ದು. ನೀರಿನ ನೇರ ಬಾಗಿ ಹಬ್ಬಿದ್ದ ಮರದ ಬೊಡ್ಡೆಯ ಮೇಲೆ ಕುಳಿತವಳನ್ನು ನಾನು ನೋಡಿ ನಕ್ಕೆ ಅಷ್ಟೆ. ‘ನೀನು ಇಲ್ಲಿಗೆ ಬರುತ್ತೀ ಅಂದುಕೊಂಡಿರಲಿಲ್ಲ.’ – ಅಂದಳು. ‘ಇಲ್ಲ. ಇವೆಲ್ಲ ನನಗೆ ಒಗ್ಗೋ ಅಂಥದ್ದಲ್ಲ. ಂs suಛಿh, I ಜoಟಿ’ಣ beಟoಟಿg ಣo ಣhis ಛಿಟಚಿss ಚಿs muಛಿh ಚಿs ಥಿou ಚಿಟಟ!. ಅನೂಪ್ ಫೋರ್ಸ್ ಮಾಡದೇ ಇದ್ದರೆ ಬರ್ತಾ ಇರ್ಲಿಲ್ಲ.’ – ಅಂದೆ. ‘ನೀನು ಏಯ್ಟೀ ಏಯ್ಟ್ ಬ್ಯಾಚ್‌ನವನು ಅಂತ ನಿಂಗಿದು ಒಗ್ಗೋಲ್ಲ. ನನ್ನದು ಇದೇ ಬ್ಯಾಚ್ ಆದರೂ ಇವರೆಲ್ಲ ನಂಗೆ ಸೇರೋದಿಲ್ಲ ನೋಡು!’ ಅವಳಿಗೆ ಈಗ ಬೀಯೆಮ್ಮೆಸ್‌ನಲ್ಲೇ ಕೆಲಸವಂತೆ. ಹಿಸ್ಟರಿ ಮತ್ತು ಕನ್‌ಸ್ಟ್ರಕ್ಷನ್ ಬೊಧಿಸುತ್ತಾಳಂತೆ. ಹಾಗಾಗಿ ಇಲ್ಲಿಗೆ ಬರುವುದು ಅನಿವಾರ್ಯವಾಯಿತಂತೆ. ಹಾಗಂತ ಈ ತರಗತಿಯ ಬಗ್ಗೆ ಯಾವ ಮುಲಾಜೂ ಇಲ್ಲವೆಂತಲೂ ಹೇಳಿದ್ದಳು. ಅವಳು ಗವಿಪುರಂ ದೇಗುಲ ಸಂಕೀರ್ಣದ ಜೀರ್ಣೋದ್ಧಾರವನ್ನು ಕುರಿತಾದ ನನ್ನ ಥೀಸಿಸನ್ನು ನೆನಪಿಸಿಕೊಂಡಳು. ಅದು ಇಂದಿನ ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಅಂತಲೂ ಹೇಳಿದ್ದಳು. ಅಷ್ಟರಲ್ಲಿ ಬಂಕು ಬಂದಿದ್ದರಿಂದ ಮಾತು ಮೊಟಕುಗೊಂಡಿತ್ತು. ‘ಹಾಯ್ ಬಂಕೇಶ್ವರಿ ದೇವಿ!’ ಎಂದು ನಾನು ನಕ್ಕಿದ್ದೆ. ‘ನಾಗಮ್ಯಾನ್! ನಿಮಗೆ ಇನ್ನೂ ಅದು ನೆನಪಿದೆಯಾ?!’ – ಎಂದವಳು ಅರ್ಚನಾ ಬಂಕು ಎಂದು ನನ್ನಿಂದ ಅಭಿದೇಯಗೊಂಡದ್ದನ್ನು ನೆನಪಿಸಿಕೊಂಡಳು. ‘Iಣ is so ಜಿಡಿusಣಡಿಚಿಣiಟಿg. ಅನೂಪ್ ಸಹ ನನ್ನ ಹಾಗೇ ಕರೀತಾನೆ. ಇveಟಿ mಥಿ ಜಿive ಥಿeಚಿಡಿ oಟಜ ಟiಣಣಟe oಟಿe!!’ ಅನೂಪನಿಗೂ ಬಂಕೂಗೂ ಕಾಲೇಜು ಮುಗಿದ ಆರು ವರ್ಷಗಳ ಬಳಿಕ ಪ್ರೀತಿ ಆಯಿತಂತೆ. ನಂತರ ಮದುವೆ. ಈಗೆರಡು ಮಕ್ಕಳು…. +ಕಿನಾರೆಯ ಕೇಕೆ ನದಿಯ ಗುಂಟ ಕೇಳುತ್ತಿತ್ತು. ಸಾಕಷ್ಟು ಮಂದಿ ಬೆಂಕಿಯ ಸುತ್ತ ನೆರೆದಿದ್ದರು. ಅಮಿತ್ ರಿಕಿ ಮಾರ್ಟಿನ್ನಿನ ಹೊಸ ನಂಬರನ್ನು ಹಾಡುತ್ತಿದ್ದ. ಎಲ್ಲರೂ ಚಪ್ಪಾಳೆ ತಟ್ಟುತ್ತ ತೂಗುತ್ತಿದ್ದರು. ಬಿಜಾಯ್ ಎಲ್ಲಿಂದಲೋ ಬಂದವನು ನೀರಿಗಿಳಿದು ನನ್ನನ್ನು ಕರೆದ. ‘ಓಚಿgಚಿmಚಿಟಿ! ಙou ಚಿಡಿe ತಿಚಿಟಿಣeಜ ಣheಡಿe.’ ನಾನು, ‘ಒe?! Whಚಿಣ ಜಿoಡಿ?!!’ – ಅಂದೆ. ನನ್ನನ್ನು ಬಲವಂತದಿಂದ ಭುಜ ಹಿಡಿದು ಗುಂಪಿನವರೆಗೆ ಕರೆದೊಯ್ದ. ಕೆಲವರು ನನಗೆ ಹಾಡಲಿಕ್ಕೆ ಹೇಳಿದರು. ಇಲ್ಲವೋ – ಬಂಕುವಿನ ಹಾಡಿಗೆ ಕುಣಿಯುವಂತೆ ಒತ್ತಾಯ. ಹಾಡು ಮತ್ತು ಕುಣಿತ ನನಗೆ ಒಗ್ಗದಂಥವು. ನಾನು ಒಪ್ಪಲಿಲ್ಲ. ಂಣ ಟeಚಿsಣ ಚಿ ಠಿoem! – ಅಂತ ಕೊನೆಗೆ ದುಂಬಾಲು. ನಾನು ನನ್ನದೇ ಖioಣ oಜಿ ಅoಟouಡಿs-ಅನ್ನು ನೆನಪಿದ್ದಷ್ಟು ಒಪ್ಪಿಸಿದೆ. ಆಚಿತಿಟಿiಟಿg ಜಿoಡಿ ಣhe eveಟಿಣuಚಿಟ sಣಡಿoಞe I ಚಿssimiಟಚಿಣe ಚಿ ಆeಛಿmbeಡಿ ಜusಞ, ಖioಣ oಜಿ ಅoಟouಡಿs, ಥಿou ಠಿಡಿoಜಿiಟe ಣhe ಛಿಚಿuse! – ನಾನು ಹೇಳಿ ಮುಗಿಸಿದಾಗ ಬಾಬ್ಬಿ, ವಾರುಣಿ, ಮೀನಾಕ್ಷಿ ಭಾವುಕರಾಗಿ ಮಾತನಾಡಿದರು. ‘ನಾವು ಹೀಗೆ . . . ನಮಗೆ – ಚಿತ್ರಣವೆಂದರೆ ಬಣ್ಣದ ದಂಗೆ. ಬಣ್ಣನೆಯೆಂದರೆ ಉತ್ಕಟ ಚಕಮಕಿ. ನಿಮ್ಮ ಕನಸುಗಳನ್ನು ನಮಗೆ ಕಾಣಲು ಹೇಳುತ್ತೀರಿ ನೀವು. ನಿಮ್ಮದೇ ಟಿighಣmಚಿಡಿe-ಗಳಲ್ಲೂ ಬೆರಗು ಹೆಕ್ಕಿ ನಿಮ್ಮ ಕನವರಿಕೆ ಗಾಢಯಿಸುತ್ತೇವೆ ನಾವು!’ ಪದ್ಯವನ್ನು ಕನ್ನಡದಲ್ಲೂ ಹೇಳಿದಾಗ ಮೀನಾಕ್ಷಿಯ ಕಣ್ಣುಗಳು ಉಕ್ಕಿದವು. ಅದೇ ಭಾವೋನ್ಮಾದದಲ್ಲಿ ನನ್ನನ್ನು ಅಪ್ಪಿಕೊಂಡಳು. ಬಿಯರಿನ ಹರಿವಿನಲ್ಲಿ ಆಗಸ್ಟಿನ ಅರ್ಕಾವತಿಗಿಂತ ಗಮ್ಮತ್ತಿತ್ತು. ಹತ್ತರವರೆಗೆ ಎಲ್ಲರೂ ತೊನೆಯುತ್ತಿದ್ದರು. ಕೆಲವರು ಮತ್ತೊಂದು ಗುಂಪಿನಲ್ಲಿ ತಮ್ಮ ಮಕ್ಕಳೊಟ್ಟಿಗೆ ಫ್ರಿಸ್ಬೀಯಲ್ಲಿ ತೊಡಗಿದ್ದರು. ಅಭಿಯ ಹೆಂಡತಿ ವರುಣ್, ‘ನಾನು ಅಭಿಗೆ ಒಂದು ಕಂಡೀಷನ್ ಹಾಕಿಯೇ ಇಲ್ಲಿ ಬಂದದ್ದು. ಮತ್ತೆ ನೀವೆಲ್ಲ ಬೀಮ್, ಲಿಂಟಲ್, ಕಾಲಮ್, ಫುಟಿಂಗ್ ಅಂತ ಮಾತಿಗಿಳಿಯೋ ಹಾಗಿದ್ದರೆ ನಾನು ಬರೋಲ್ಲ ಅಂತ. ಸದ್ಯ! Iಣ’s ಟಿoಣ ಚಿಟಿಥಿ oಜಿ ಣhose. I ಚಿm eಟಿರಿoಥಿiಟಿg.’ – ಎಂದಳು. ಈವರೆಗೆ ಮಾತು ಎಲ್ಲೂ ಗಂಭೀರ ವಿಷಯಗಳನ್ನು ಕುರಿತು ನಡೆದೇ ಇಲ್ಲ ಅಂದುಕೊಂಡೆ. ಪುರುವಾರ್ ಗಡದ್ದಾಗಿ ಬಿಯರಿಸುತ್ತಿದ್ದವನು ಇದ್ದಕ್ಕಿದ್ದಂತೆ ಮಂಜುಳ, ಮಮತಾ ಮ್ಯಾಮ್‌ಗಳನ್ನು ಕುರಿತು ಮಾತನಾಡೋಣ ಅಂತ ಸಲಹೆ ಕೊಟ್ಟ. ಕೆಲವು ಕೊರಳುಗಳು ವಾರುಣೀ. . .!! ಅಂತ ಒಮ್ಮೆಲೆ ಒರಲಿದವು. ನಮಗೆ ಮೊದಲ ಮೂರು ವರ್ಷ ಬೋಧಕಿಯರಾಗಿದ್ದ ಮಂಜುಳ, ಮಮತಾ, ಅನಿತಾ ಧರಮ್‌ಪಾಲರನ್ನು ವಾರುಣಿ ಅಣಕಿಸಿ ಅಣಕಿಸಿ ಖುಷಿ ಕೊಟ್ಟ. ಕೇಕೆಯ ಬೆರಳು ಕತ್ತಲ ಕಂಕುಳಿನಲ್ಲಿ ಕಚಗುಳಿಯಿಡುತ್ತಿತ್ತು. ಮಾತು ಅನಿಲ್ ದುಬೆಯವರನ್ನು ಕುರಿತು ಹಬ್ಬಿದಾಗ ನಗು ನಾಚಲಿಲ್ಲ. ವಾರುಣಿ ದುಬೆಯನ್ನು ಅಣಕಿಸತೊಡಗಿದ. ಒಂದು ಶನಿವಾರ ಎಂಟೂವರೆಯ ವೇಳೆಗೆ ನಮ್ಮ ಮೊದಲ ತರಗತಿಗೆಂದು ದುಬೆ ಬಂದಿದ್ದರಂತೆ. ಲಿಫ್ಟಿನಿಂದ ಕಾರಿಡಾರಿಗೆ ಸರಿದಾಗ ವಸೀಮ್ ಮತ್ತು ನಂದಾ ಎಂಬ ಇಬ್ಬರು ಉಪನ್ಯಾಸಕಿಯರು ಅವರಿಗೆ ಎದುರಾದರಂತೆ. ಇಬ್ಬರೂ ಗರ್ಭಿಣಿಯಾಗಿದ್ದರಿಂದ ಹೊಟ್ಟೆ ಸಾಕಷ್ಟು ತೋರುತ್ತಿತ್ತಂತೆ. ದುಬೆ ನಮ್ಮ ತರಗತಿಯತ್ತ ಬರುವಾಗ ಅನಿತಾ ಧರಮ್‌ಪಾಲ್ ಕಂಡಿದ್ದರಂತೆ. ಆಕೆಯೋ ಭಾರೀ ಗಾತ್ರದ ಹೆಣ್ಣು. ಹೊಕ್ಕುಳಿನ ಸಾಕಷ್ಟು ಕೆಳಗೆ ನೆರಿಗೆ ಕಟ್ಟುತ್ತಿದ್ದ ಆಕೆ ನಮ್ಮೆದುರು ನಿಂತು ಬೋಧಿಸುವಾಗಲೆಲ್ಲ ಮುಂದಿನ ಬೆಂಚಿನ ವಾರುಣಿ, ಅಮಿತ್ ಕಸಿವಿಸಿಯಿಂದ ದಿನಾಲೂ ಮುಸಿಮುಸಿ ನಡೆಸುತ್ತಿದ್ದುದುಂಟು. ದುಬೆ ಒಳಕ್ಕೆ ಬಂದವರೇ – ‘ಈoಡಿ ಚಿ ತಿhiಟe I ಣhoughಣ I eಟಿಣeಡಿeಜ ಚಿ mಚಿಣeಡಿಟಿiಣಥಿ ತಿಚಿಡಿಜ – ಥಿou ಞಟಿoತಿ! ಂಟಿiಣಚಿ ಆhಚಿಡಿಚಿmಠಿಚಿಟ eಟಿಜoಡಿseಜ iಣ!!’ – ಎಂದಾಗ ನಗು ತರಗತಿಯ ಮೇರೆ ಮೀರಿತ್ತು. ವಾರುಣಿ ಕೀರಲು ಧ್ವನಿಯ ದುಬೆಯನ್ನು ಅನುಕರಿಸಿದ್ದು ಅವರು ಹೇಳಿದ್ದಕ್ಕಿಂತ ತಮಾಷೆಯೆನಿಸಿ ಎಲ್ಲರೂ ಹೋ….! ಎಂದು ಘೀಳಿಟ್ಟರು. ಗುಂಪಿನಲ್ಲಿದ್ದರೂ ಮೌನವಾಗಿದ್ದ ನನ್ನನ್ನುದ್ದೇಶಿಸಿ ಮೋನಾ, ‘ಓಚಿgಚಿmಚಿಟಿ! ಓoತಿ iಣ’s ಥಿouಡಿ ಣuಡಿಟಿ!!’ ಎಂದು ದುಂಬಾಲು ಬಿದ್ದಳು. ನಾನು ಮಾತಿಗೆ ತೊಡಗಿದೆ. ‘ನಾನು ನನ್ನ ಹಳೆಯ ಕ್ಲಾಸಿನ ಒಂದು ಜೋಕು ಹೇಳ್ತೀನಿ. ನೀನು ಸಿಟ್ಟಾಗಬಾರದು.’ ಅಂತ ಮೋನಾಳಿಗೆ ಹೇಳಿದೆ. ಅವಳು ಸರಿಯೆಂದಳು. ‘ಆಚಿಥಿ bಥಿ ಜಚಿಥಿ ಒoಟಿಚಿ’s ಣoಠಿs ಚಿಡಿe ಛಿomiಟಿg ಜoತಿಟಿ ಚಿಟಿಜ boಣಣoms ಚಿಡಿe goiಟಿg uಠಿ ಚಿಟಿಜ ತಿe ಚಿಡಿe ತಿಚಿiಣiಟಿg ಜಿoಡಿ ಚಿ ಜಚಿಥಿ ತಿheಟಿ ಣhose ಣತಿo meeಣ! ಇದು ನಿಮ್ಮ ಸೀನಿಯರ್ ಲಕ್ಷ್ಮಿ – ಲಕ್ಷ್ಮೀನಾರಾಯಣ್ ನಿನ್ನ ಬಗ್ಗೆ ಹೇಳ್ತಾ ಇದ್ದಿದ್ದು!!’ ಎಂದಾಗ ಮೋನಾ, ‘ಊe is ಚಿ bಚಿsಣಚಿಡಿಜ!!’ ಎಂದು ಕನಲಿದಳು. ಎಲ್ಲರೂ ಅವಳ ವೆಚ್ಚದಲ್ಲಿ ಮತ್ತೆ ನಕ್ಕರು. ಹನ್ನೊಂದಾದರೂ ಹಲವರಿಗೆ ಇರುಳು ಮುಪ್ಪೆನಿಸಿರಲಿಲ್ಲ. ನನಗೆ ಈ ಸಂಜೆ ನಿನ್ನೆಯಷ್ಟು ಬೇಸರ ತರಲಿಲ್ಲ. ಅಲ್ಲೇ ಊಟದ ಶಾಸ್ತ್ರ ಮುಗಿಸಿ ಹನ್ನೆರಡರ ಸುಮಾರಿಗೆ ಕೆಲವಷ್ಟು ಮಂದಿ ಕಳಚಿಕೊಂಡರು. ನಾನೂ ಹೊರಟು ನಿಂತಾಗ ಅನೂಪ ತಡೆದ. ‘ಇರು ಮಾರಾಯ! ನಿನ್ನೊಟ್ಟಿಗೆ ಒಂದಷ್ಟು ಮಾತಾಡೋದಿದೆ.’ +ಹೊತ್ತಲ್ಲದ ಹೊತ್ತಿನಲ್ಲಿ ಅಮಿತ್, ಬಿಜಾಯ್, ಪುರುವಾರ್ ಮತ್ತು ವಿನ್ನೂರ ಜೊತೆ ದಡದ ನೇರ ಸುಮಾರು ಎರಡು ಕಿಲೋಮೀಟರುಗಳು ನಡೆದೆ. ‘ನಾಗಮ್ಯಾನ್! ನಾಳೆ ಶರ್ಲೀ ಮತ್ತೆ ಚಿನ್ನಪ್ಪ ಬರ್‍ತಾರೆ. ನಾವು ಈ ಕೂಟಕ್ಕೊಂದು ವರ್ಷಾವರಿ ರೂಪ ಕೊಡಬೇಕು. ಙou shಚಿಟಟ be ಚಿ ಞeಥಿ ಜಿiguಡಿe iಟಿ ಣhis.’ ಅನೂಪ ಹೇಳಿದಾಗ ನಾನು ಹೌಹಾರಿದೆ. ನಾನು ನಾಲ್ಕನೇ ವರ್ಷದಲ್ಲಿ ನಪಾಸಾದ ದೆಸೆಯಿಂದ ಎಂಭತ್ತೊಂಭತ್ತರ ಈ ತರಗತಿಯಲ್ಲಿ ಸೇರ್ಪಡೆಯಾದದ್ದು. ಹಾಗಂತ ನಾನು ನನ್ನ ಹಳೆಯ ತರಗತಿಯೊಟ್ಟಿಗೆ ಸಂಪರ್ಕವಿತ್ತೆಂತೇನಲ್ಲ. ಹಾಗಾಗಿ ಅಳುಕು. ‘ಙou ಚಿಡಿe ಚಿಟಿ ಚಿsseಣ ಜಿoಡಿ us. ನೀನು ಒಬ್ಬನೇ ಮಾಡಿರುವ ಕೆಲಸವನ್ನು ನೋಡಿದರೆ ಯಾರಾದರೂ ಮೆಚ್ಚಬಹುದು. ಇದು ನಿನಗಲ್ಲ, ನಿನ್ನ ಕೆಲಸಕ್ಕೆ ನಾವು ಕೊಡುತ್ತಿರೋ ಗೌರವ. ನೀನು ಈ ಯೂನಿಯನ್ನಿನ ಪ್ರೆಸಿಡೆನ್ಸೀ ವಹಿಸಿಕೊಳ್ಳಬೇಕು.’ ಅವರಲ್ಲಿ ಒಬ್ಬರೂ ನನಗೆ ಬೇರೆ ಮಾತಾಡಲು ಬಿಡಲಿಲ್ಲ. ಹಾಗಂತ ನಾನು ಸಮ್ಮತಿಸಲೂ ಇಲ್ಲ. ನಾನು ಯೋಚಿಸಿ ಹೇಳುವುದಾಗಿ ಹೇಳಿದೆ. ರೂಮು ಹೊಕ್ಕಾಗ ಮೂರೂವರೆ ಕಳೆದಿತ್ತು. ಈ ನಿರ್ಧಾರಕ್ಕೂ ಶರ್ಲೀ ಮತ್ತು ಚಿನ್ನಪ್ಪರ ಬರುವಿಕೆಗೂ ಸಂಬಂಧ ಹುಡುಕುತ್ತ ಹೋದಂತೆಲ್ಲ ಏನೋ ತೊಡರಿದಂತಾಗಿ ಪದೇ ಪದೇ ಕೈ ಚೆಲ್ಲಿದ್ದೆ. ಐದೂವರೆಯ ಸುಮಾರಿಗೆ ಚುಮುಚುಮು ಬೆಳಗಿನಲ್ಲೂ ನಿದ್ದೆಯ ಮಂಪರು ತುಂಬಿತ್ತು. +ಏಳುವ ಹೊತ್ತಿಗೆ ಹೊತ್ತೇರಿಬಿಟ್ಟಿತ್ತು. ರೂಮು ನಿಸರ್ಗದ ಹಿತ್ತಲಿನಲ್ಲಿ ತೆರೆದುಕೊಳ್ಳುವ ಕಡೆಯಿಂದ ಗಮ್ಮತ್ತಿನ ಗದ್ದಲ ಕೇಳಿ ಬರುತ್ತಿತ್ತು. ‘ಏನು ಕಂಡೀ? ಏನು ಕಂಡೀ? ಕಂಡೆ ಕಿಂಡಿ ಕುಂಡೀ!!’ ಅದು ಚಿನ್ನಪ್ಪ ಬಂದಿರುವುದರ ಘೋಷಣೆಯಂತಿತ್ತು. ಮಾತೇ ಮಾತಿನ, ಲವಲವಿಸುವ ಹುಮ್ಮಸ್ಸಿನ ಚಿನ್ನಪ್ಪ ಬೀಯೆಮ್ಮೆಸ್ಸ್‌ನಲ್ಲಿ ನಡೆದಾಡಿದಲ್ಲೆಲ್ಲ ಗುಂಪಿನಲ್ಲಿ ಈ ಮಾತು ಕೇಳಿ ಬರುತ್ತಿತ್ತು. ಒಮ್ಮೆ ಪರೀಕ್ಷಾ ಕೊಠಡಿಯಲ್ಲಿ ಇದನ್ನು ಕೂಗಿದನೆಂದು ಅವನನ್ನು ಹೊರಹಾಕಲಾಗಿತ್ತು. ಆ ಬಳಿಕ ಅವನನ್ನು ಕಾಲೇಜಿನಲ್ಲಿ ನೋಡಿದ್ದೇ ಕಡಿಮೆ. ಓದು ಮುಗಿಸಿದನೋ ಇಲ್ಲವೋ ಗೊತ್ತಿಲ್ಲ. ಮೂರು ವರ್ಷದ ಬಳಿಕವಷ್ಟೇ ನಾನು ಅವನನ್ನು ಎಮ್ಟೀವೀಯಲ್ಲಿ ನೋಡಿದ್ದು. ಇಂದು ಅವನು ಪಡ್ಡೆ ಪಡೆಗಳಲ್ಲಿ ಬಲು ದೊಡ್ಡ ಹೆಸರು. ನಿಖಿಲ್ ಚಿನ್ನಪ್ಪ! – ಣhe ಒಖಿಗಿ veeರಿಚಿಥಿ!!…..!! ಕಿಟಕಿಯ ಪರದೆ ಸರಿಸಿದೆ. ಅರಳೀಯಂತಹ ಮರದ ಕೆಳಗೆ ಕಟ್ಟೆಯ ಮೇಲೆ ಚಿನ್ನಪ್ಪ ಕುಳಿತಿದ್ದ. ಬದಿಯ ಬೆಂಚುಗಳ ಮೇಲೆ ಉಳಿದವರು. ಎಂಥದೋ ವಿಚಿತ್ರ ಹೇರ್‌ಸ್ಟೈಲ್‌ನಲ್ಲಿ ಅವನಿದ್ದ. ಎಲ್ಲಿಂದಲೋ ಬಂದ ಅವಳು ‘ವ್ಹಾವ್ಹಾವ್! ಖಿhe ಃuಜhಜhಚಿ ಚಿಟಿಜ ಣhe ಃoಜhi ಣಡಿee!!’ ಎಂದು ಉದ್ಗರಿಸಿದಳು. ಚಿನ್ನಪ್ಪ ಎದ್ದವನು ಅವಳನ್ನು ತಬ್ಬಿ, ಅನಾಮತ್ತು ಎತ್ತಿಕೊಂಡು ಗಿರಿಗಿರಿ ತಿರುವಿ ಕೆಳಕ್ಕೊಗೆದ. ಮುಂದಿದ್ದ ಮಂದಿ ಶರ್ಲೀ! ಶರ್ಲೀ!! – ಎಂದು ಕೂಗು ಹಾಕಿದರು. +ರೂಮಿಗೇ ಕಾಫಿ ತರೆಸಿ ಕುಡಿದು ಹೊಳೆಯ ದಂಡೆಗೆ ಬಂದೆ. ಬೆಳಿಗ್ಗೆ ಮಳೆಯಾದಂತಿತ್ತು. ನೀರಿಗೆ ತೂರಿಕೊಂಡಿದ್ದ ನೆಲದ ಕೊಲ್ಲಿಯ ತುಂಬ ನಿನ್ನೆಯ ಅವಶೇಷವಿತ್ತು. ಬೆಡಗಿನ ರಾತ್ರಿಯ ಹೊಲಸಿನ ಬೆನ್ನು ಅಲ್ಲಿ ತೆರೆದುಕೊಂಡಿತ್ತು. ಚೆಲ್ಲಾಪಿಲ್ಲಿ ಬಾಟಲಿಗಳು, ಸಿಗರೇಟಿನ ತುಣುಕುಗಳು, ಪ್ಲಾಸ್ಟಿಕ್ಕಿನ ತಟ್ಟೆ ಲೋಟಗಳು, ಬೂದಿ, ಬೂದಿಯಾಗದ ಇದ್ದಿಲು….. ನಾಗರಿಕತೆಯ ಭ್ರಷ್ಟ ರಿವಾಜುಗಳನ್ನು ತೋರುವಂತಿದ್ದವು. ಅಯ್ಯೋ! ಮನುಷ್ಯ ಜನ್ಮವೇ?! ನಾಲ್ಕು ಮಂದಿ ಕೂಡಿದಲ್ಲೆಲ್ಲ ಹೊಲಸೇ? – ಅಂದುಕೊಂಡೆ. ಅಸಹ್ಯವೆನಿಸಿತು. ನಾನು ಕೊಲ್ಲಿಯನ್ನು ದಾಟಿ ನೀರಿಗಿಳಿಯುವಾಗ ಹಿಂದಿನಿಂದ ಜೇನ್ ಕೂಗಿದಳು. ಅವಳ ಚರ್ಯೆಯಲ್ಲಂತೂ ಅವಳು ನನ್ನನ್ನು ಹುಡುಕಿಕೊಂಡು ಬಂದ ಕುರುಹಿರಲಿಲ್ಲ. ‘ಇದನ್ನೆಲ್ಲ ನೋಡಿದರೆ ಎಷ್ಟು ಬೇಜಾರಾಗುತ್ತೆ ಅಲ್ಲವಾ? ನಾಗರಿಕತೆಯ ಹೆಸರಿನಲ್ಲಿ ನಾವು ಪ್ರಕೃತಿಯಿಂದ ಎಷ್ಟು ದೂರ ಬಂದು ಬಿಟ್ಟಿದ್ದೇವೆ ನೋಡು!!’ ನಾನು ಕೂಡಲೆ ನನ್ನ ಅನಿಸಿಕೆಗಳನ್ನು ಮಾತಿನಲ್ಲಿ ಕಟ್ಟಲಿಲ್ಲ. ‘ಯಾಕೆ ಏನೂ ಮಾತಾಡ್ತಾ ಇಲ್ಲ?’ +‘ನೀನು ಹೇಳಿದ್ದು ಸರಿ. ಈ ಭೂಮಿಯ ಮೇಲಿನ ಜೀವಸಂಕುಲದಲ್ಲಿ ನಾವು ಈ ನೆಲಕ್ಕೆ ಮಾಡುತ್ತಿರುವಷ್ಟು ಅತಿಕ್ರಮವನ್ನು ಇನ್ಯಾರೂ ಮಾಡೋಲ್ವೇನೋ! ಇನ್ನುಳಿದ ಎಲ್ಲ ಪ್ರಾಣಿಗಳೂ ಬದುಕುತ್ತವೆ. ನಮ್ಮ ಹಾಗೇ ಮಕ್ಕಳು ಮೊಮ್ಮಕ್ಕಳುಗಳ ಸಂತತವನ್ನು ಕಟ್ಟುತ್ತವೆ. ಆದರೆ ನಮ್ಮ ಹಾಗೆ ಅವು ಈ ನೆಲದ ಭೌತ ಅಭೌತ ಸ್ವರೂಪವನ್ನು ಬದಲಾಯಿಸೋದಿಲ್ಲ. ಇಲ್ಲಿ ಬದುಕುವ ನಾವು ಒಬ್ಬೊಬ್ಬರೂ ನಮ್ಮ ಅಸ್ತಿತ್ವಕ್ಕೆ ಒಂದು ಮೂರ್ತ ರೂಪವನ್ನು ಕೊಡ್ತೀವಿ. ನಮ್ಮ ಪ್ರತಿಯೊಂದು ಚಟುವಟಿಕೆಯೂ ಮೂರ್ತಗೊಳ್ಳುತ್ತ ಹೋಗುತ್ತೆ. ಇveಡಿಥಿ ಚಿಛಿಣ oಜಿ ouಡಿs mಚಿಟಿiಜಿesಣs…. Iಣ ಜeಟibeಡಿಚಿಣes iಟಿಣo ಚಿ ಠಿhಥಿsiಛಿಚಿಟ ಜಿoಡಿm!! ಕೂರುವುದು ಅಂದರೆ ಕುರ್ಚಿ. ಮಲಗುವುದು ಅಂದರೆ ಮಂಚ, ಹಾಸಿಗೆ. ತಿನ್ನುವುದು ಅಂದರೆ ತಟ್ಟೆ. ನಡೆಯುವುದು ಅಂದರೆ ಚಪ್ಪಲಿ, ಶೂಸು. ಹೀಗೆ! ಇರುವುದು ಅನ್ನಲಿಕ್ಕೆ ಒಂದು ಮನೆ. ಇದನ್ನು ಉಳಿದ ಪ್ರಾಣಿಗಳೂ ಮಾಡುತ್ತವೆ. ಆದರೆ ಅವು ಮಾಡೋದರಲ್ಲಿ ನಮ್ಮಷ್ಟು ಸದ್ದು ಗದ್ದಲ ಇರೋದೇ ಇಲ್ಲ. ಅವುಗಳು ಇದ್ದರೂ ಇರೋದೇ ಗೊತ್ತಾಗೋಲ್ಲ. ಆದರೆ ನಾವು ಹಾಗಲ್ಲ. ಎಲ್ಲವೂ ಶಾಶ್ವತ ಅಂದುಕೊಂಡು ಬದುಕ್ತಾ ಇರ್ತೀವಿ. ತಲೆಯ ಮೇಲಿನ ಸೂರು ಚಿರಂತನ ಅಂದುಕೊಂಡು ಏನೇನೆಲ್ಲ ಮಾಡ್ತೀವಿ. We ಠಿಡಿoಜಿess eಣeಡಿಟಿiಣಥಿ! ಎಲ್ಲಕ್ಕಿಂತ ನಮ್ಮ ಪ್ರೊಫೆಷನ್ ನೋಡು! ನಾವು ಕಟ್ಟುತ್ತೇವೆ. ನಮ್ಮ ಹತ್ತಿರ ಬರೋ ಪ್ರತಿ ಕ್ಲಯಂಟೂ ಗೋಡೆ ಭದ್ರವಿದೆಯಾ? ಸೂರು ಗಟ್ಟಿಯಾ? – ಅಂದುಕೊಂಡೇ ಬರ್ತಾನೆ. ನಾವು ಕಟ್ಟುವ ಕ್ರಿಯೆಯಲ್ಲಿ ಈ ನೆಲವನ್ನೇ ಬಲಿಕೊಡ್ತೀವಿ…..!!’ ನಾನು ಅಗತ್ಯಕ್ಕಿಂತ ಹೆಚ್ಚು ಭಾವುಕನಾದೆನೆ ಅನ್ನಿಸಿತು. ಜೇನ್ ಕಣ್ಣರಳಿಸಿ ನಿಂತುಬಿಟ್ಟಿದ್ದಳು. ‘ಆದರೆ ವೃತ್ತಿ ಅನ್ನೋದು ನಮಗೆ ಅನಿವಾರ್ಯ ಅಲ್ಲವೆ? We shouಟಜಟಿ’ಣ be ಚಿಠಿoಟegeಣiಛಿ ಣo buiಟಜ. ನಾವು ಮುಲಾಜಿಗೋಸ್ಕರ ಕಟ್ಟುತ್ತಾ ಇಲ್ಲ. We ಜoಟಿ’ಣ ಟeಚಿve ಣhis ತಿoಡಿಟಜ iಟಿ ಚಿಟಿಥಿ beಣಣeಡಿ shಚಿಠಿe ಣhಚಿಟಿ ತಿe iಟಿheಡಿiಣ!! ಹಾಗಾಗಿ ಆದಷ್ಟು ಕಮ್ಮಿ ಹಾನಿ ಮಾಡೋಣ. ನಾವು ಕಟ್ಟುವ ಯಾವುದರಲ್ಲೂ ನಮ್ಮ ಜೀವಿತವನ್ನು ಮೀರಿದ ಬಾಳಿಕೆಯನ್ನು ಯೋಜಿಸುವುದು ಬೇಡ… ಅಷ್ಟೆ!! ’ ಜೇನ್ ಹೆಪ್ಪಿ ನಿಂತಿದ್ದಳು. ‘ಹೇ!! ವಾಪಸು ಹೋಗೋಣ. ನಾನು ಹೇಳಿದ್ದು ನನ್ನ ಭಾವನೆಗಳನ್ನ ಅಷ್ಟೆ. ನಾನು ಇವನ್ನ ಯಾರ ಮೇಲೂ ಹೇರೋದಿಲ್ಲ.’ +ರೂಮಿಗೆ ಬಂದಾಗ ನನಗೆಂದು ನಾಲ್ಕು ಮೆಸೇಜುಗಳಿದ್ದವು. ಮೂರು ಅನೂಪನದು. ಮೂರರ ಸುಮಾರಿಗೆ ಕ್ಲಬ್ ಹೌಸ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೆಟ್ಟಿಯಾಗುವುದು ಅಂತ. ಮತ್ತೊಂದು ಅಪರ್ಣೆಯ ಫೋನಿತ್ತು ಎಂದು. ಅವಳೊಟ್ಟಿಗೆ ಮಾತನಾಡಿ ನಾಲ್ಕು ದಿನಗಳಾಗಿವೆ. ನಾನು ಫೋನು ಮಾಡಿದಾಗಲೆಲ್ಲ ಅವಳು ಬ್ಯುಸಿ. ಅವಳಿಗೆ ಮಾಡಲು ಮೊಬೈಲ್ ಇಲ್ಲಿ ಸಿಗುತ್ತಿಲ್ಲ. ಸಂಜೆ ಐದಕ್ಕೆ ಮತ್ತೆ ಮಾಡುತ್ತೇನೆ ಅಂತ ರಿಸೆಪ್ಷನ್ನಿನಲ್ಲಿ ಹೇಳಿದ್ದಾಳೆ ಮುದ್ದಿನ ಮಡದಿ. ಏನೇ ಆದರೂ ಫ್ರಂಟ್ ಆಫೀಸಿನಲ್ಲಿ ಐದಕ್ಕೆ ಇರಲೇಬೇಕೆಂದು ಮೊಬೈಲಿನಲ್ಲಿ ನಾಲ್ಕೂ ಮುಕ್ಕಾಲಿಗೆ ಅಲಾರ್‍ಮ್ ಸೆಟ್ ಮಾಡಿಕೊಂಡೆ. +ನಾನು ಸ್ನಾನ ಮುಗಿಸಿ ಸಿದ್ಧನಾದಾಗ ಎರಡೂ ಇಪ್ಪತ್ತಾಗಿತ್ತು. ಊಟವೆಂದು ಸ್ಯಾಂಡ್‌ವಿಚ್, ಹಣ್ಣು ತರಿಸಿಕೊಂಡು ತಿಂದೆ. ಬ್ಯಾಂಕ್ವೆಟ್ ಹಾಲಿನ ಪೋರ್ಟಿಕೋದಲ್ಲಿ ಅನೂಪ್ ಮತ್ತು ಬಿಜಾಯ್ ನನಗೆ ಕಾಯುತ್ತಿದ್ದರು. ‘ಎಲ್ಲಿ ಹೋಗಿದ್ದೆ ಮಾರಾಯ? ಮೂರು ಸಲ ನಿನ್ನನ್ನು ಹುಡುಕಿಕೊಂಡು ಬಂದಿದ್ದೆ.’ ನಾನು ಉತ್ತರಿಸುವ ಮೊದಲೇ ಬಿಜಾಯ್ ಅವಸರಿಸಿದ. ‘ಬೇಗ. ಅವರೆಲ್ಲ ಕಾಯ್ತಾ ಇದ್ದಾರೆ.’ ಒಳಗೆ ಕಣ್ಣೆಣಿಕೆಗೆ ಒದಗುವ ಹಾಗೆ ಒಟ್ಟು ಹತ್ತು ಮಂದಿ ಇದ್ದರು. ಶರ್ಲೀ ಮತ್ತು ಚಿನ್ನಪ್ಪ ಬಲ ಮೂಲೆಯ ಕಿಟಕಿಯ ಬಳಿ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದರು. ಅವಳು ಏನೋ ಹೇಳಿ ನಕ್ಕಾಗ ಚಿನ್ನಪ್ಪ ಅವಳ ಕೆನ್ನೆ ತಡವಿ ತಬ್ಬಿಕೊಂಡ. ಬಿಜಾಯ್, ಅನೂಪ್, ಪುರುವಾರ್, ವಾರುಣಿ, ಅಮಿತ್ ಯಾವತ್ತಿದ್ದರೂ ಈ ಎಂಭತ್ತೊಂಭತ್ತರ ತರಗತಿಯ ವಾರಸುಗಳಂತೆ. ಆಗಲೂ ಅವರಿರದೆಯೆ ಏನೂ ನಡೆಯುತ್ತಿರಲಿಲ್ಲ. ಈಗಲೂ ಹಾಗೆಯೇ. ಅವರಲ್ಲದೆ ಅಲ್ಲಿ ವಿವೇಕ್, ಸೌರಭ್, ವಿನ್ನೂ, ಶಶಾಂಕ್, ಅಖ್ತರ್….. ಮುಖ್ಯ ಸಂಗತಿಯೆಂದರೆ ತರಗತಿಯ ಯಾವ ಹೆಣ್ಣೂ ಇಲ್ಲದಿದ್ದುದು. ಶರ್ಲೀಯನ್ನು ಇವರು ಯಾರೂ ಹೆಣ್ಣು ಅಂತ ಪರಿಗಣಿಸುವುದೇ ಇಲ್ಲ! ಆ ಮಾತು ಬೇರೆ. ಅವಳ ನಡೆವಳಿಗಳೇ ಹಾಗೆ. ಅವಳನ್ನು ಹಿಂಜರಿಸಬಲ್ಲ ಸಂಗತಿಯೇ ಇಲ್ಲ ಈ ಸೃಷ್ಟಿಯಲ್ಲಿ ಅನ್ನುವುದು ವಾಡಿಕೆ. ‘ಏನಾಗುತ್ತಯ್ಯ? ನೋಡೇ ತೀರುತ್ತೇನೆ.’ – ಅನ್ನುವ ಸೆಡ್ಡು ಅವಳದ್ದು. ಎಲ್ಲದರಲ್ಲೂ. ಆ ದಿನಗಳಲ್ಲಿ ಓದಂತೂ ಅಷ್ಟಕ್ಕಷ್ಟೆ. ಹತ್ತು ಗಂಟೆಯಾಯಿತೆಂದರೆ ಕೆಲವು ಗಂಡುಗಳ ಜತೆ ಕ್ಯಾಂಟೀನ್ ಸೇರಿದಳೆಂದರೆ ಮತ್ತೆ ಕ್ಲ್ಯಾಸಿನಲ್ಲಿ ಸಿಗುತ್ತಿರಲಿಲ್ಲ. ಒಮ್ಮೆ, ಸೆಕೆಂಡ್ ಯಿಯರ್‌ನಲ್ಲಿರಬೇಕು – ಸತತವಾಗಿ ದುಬೆಯವರ ಕನ್‌ಸ್ಟ್ರಕ್ಷನ್ ತರಗತಿಗಳಿಗೆ ಚಕ್ಕರ್ ಹೊಡೆದು ಇಂಟರ್ನಲ್ಸ್‌ನಲ್ಲಿ ಸೊನ್ನೆ ಹೊಂದಿದ್ದರೂ ಮಾರ್ಕ್ಸ್ ತನ್ನ ಹಕ್ಕು ಎಂಬಂತೆ ಜಗಳವಾಡಿದ್ದಳು. ಫೈನಲಿಯರ್‌ನಲ್ಲಿ ಶ್ರೀರಂಗಪಟ್ಟಣಕ್ಕೆ ಪ್ರವಾಸ ಹೋದಾಗ ಯಾರೊಟ್ಟಿಗೋ ಕಟ್ಟಿದ ಬಾಜಿಯ ಸಲುವಿನಿಂದ ರಾತ್ರಿ ಹನ್ನೊಂದರ ಹೊತ್ತಿನಲ್ಲಿ ಒಬ್ಬಳೇ ಕಾವೇರಿಯಲ್ಲಿ ಧುಮುಕಿ ಎದ್ದು ಬಂದಿದ್ದಳು! ಒಟ್ಟಾರೆ ಬಹದ್ದೂರ್ ಹೆಣ್ಣು!! +ಬಿಜಾಯ್ ಕುಳಿತಲ್ಲಿಂದಲೇ ಅವರಿಬ್ಬರಿಗೆ ಕೂಗು ಹಾಕಿದ. ಶರ್ಲೀ ನನ್ನನ್ನು ಕಂಡವಳೇ ‘ನಾಗಮ್ಯಾನ್!!’ ಎಂದು ಚೀರುತ್ತ ಓಡಿ ಬಂದು ಟಾಂಗ್ ಕೊಟ್ಟಳು. ‘ಊoತಿ is ಥಿou ಓಚಿgs??’- ಎಂದಳು. ಚಿನ್ನಪ್ಪ ‘ಹಾಯ್!’ ಎಂದು ಕೈ ಕುಲುಕಿದ. ಸಭೆ ಸುರುಗೊಂಡಿತು. ಮೊನ್ನೆ ಮಾಡಿದ ಪ್ರಸ್ತಾಪವನ್ನೇ ಮತ್ತೆ ಮಾಡಲಾಯಿತು. ಪ್ರತಿವರ್ಷವೂ ಇಂತಹ ಮಿಲನ ಸಮಾವೇಶವನ್ನು ಆಯೋಜಿಸುವುದು, ಅದಕ್ಕೊಂದು ಸಂಘಟನೆಯ ರೂಪು ಕೊಡುವುದು, ಅದಕ್ಕಾಗಿ ಸಮಿತಿಯನ್ನು ರಚಿಸುವುದು, ಸಂವಿಧಾನವನ್ನು ಬರೆಯುವುದು….. ಇತ್ಯಾದಿ. ನನಗೆ ಇದೇಕೋ ರಾಜಕೀಯದ ಸ್ವರೂಪ ಪಡೆಯುತ್ತಿದೆ ಅನ್ನಿಸಿತು. ಶರ್ಲೀ ಮತ್ತು ಚಿನ್ನಪ್ಪ ಗಹನವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡರು. ಸಾಕಷ್ಟು ಸಲಹೆಗಳನ್ನು ಕೊಟ್ಟರು. ಚಿನ್ನಪ್ಪ ತನ್ನ ಸಂಪರ್ಕಗಳಿಂದ ಸಮಾವೇಶಕ್ಕೊಂದು ಭರ್ಜರಿ ರೂಪ ಕೊಡಬಹುದೆಂದು ಹೇಳಿದ. ಮನರಂಜನಾ ಕ್ಷೇತ್ರದ ಭಾರೀ ಹೆಸರುಗಳನ್ನು ದಾಳಕ್ಕಿಡುವಂತೆ ಮಾತನಾಡಿದ. ಹೃತಿಕ್, ಸೊನಾಲಿ, ಫರ್ದೀನ್, ಸಯಫ್, ರಾನೀ…. ಅಂತ ಅವರೆಲ್ಲ ತನ್ನ ಕಿಸೆಯಲ್ಲಿರುವವರು ಎಂಬಂತೆ ಉದುರಿಸಿದ. ನನಗೇಕೋ ಇದು ಒಗ್ಗದ್ದೆನ್ನಿಸಿತು. ಶರ್ಲೀ ಎಂದಿಗಿಂತ ಹೆಚ್ಚು ಗಂಭೀರದಿಂದ ತೋರಿ ಬಂದಳು. ಅವಳ ನೋಟದಲ್ಲಿ, ಆಲಿಕೆಯಲ್ಲಿ ಎಂಥದೋ ಅನುಭವಸ್ಥ ತಾದಾತ್ಮ್ಯ ಕಂಡುಬಂತು. ‘I ಛಿಚಿಟಿ’ಣ beಟoಟಿg ಣo ಚಿಟಟ ಣhis mಚಿಟಿ!’ – ಎಂದು ಮಗ್ಗುಲಿಗೆ ಕುಳಿತಿದ್ದ ಅನೂಪನಿಗೆ ಹೇಳಿದೆ. ಅವನು ನಕ್ಕ. ಒಂದೇ ತರಗತಿಯ ಫಸಲಾದ ನಾವೆಲ್ಲ ಆರ್ಕಿಟೆಕ್ಟುಗಳು ನಮ್ಮ ವೈಯಕ್ತಿಕ ಉದ್ದಿಮೆ, ವಹಿವಾಟುಗಳನ್ನು ಕುರಿತಂತೆ, ವೃತ್ತಿಯ ಸೃಜನಪ್ರಜ್ಞೆಯನ್ನು ಕುರಿತಂತೆ ಮಾತನಾಡಲೇ ಇಲ್ಲವಲ್ಲ ಅಂದುಕೊಂಡೆ. ಮೊದಲಿನಿಂದಲೇ ಈ ನಿಟ್ಟಿನಲ್ಲಿನ ಸಹಜ ಕಾಳಜಿಗಳಿಂದ ಯಾವತ್ತೂ ದೂರವಿದ್ದ ಶರ್ಲೀ ಮತ್ತು ಚಿನ್ನಪ್ಪ – ಇವರಿಬ್ಬರಿಗೆ ಯಾಕೆ ಇಷ್ಟು ಎಲ್ಲಿಲ್ಲದ ಉಸಾಬರಿ ಅನ್ನಿಸಿತು. ಎಲ್ಲಕ್ಕಿಂತ ಈ ಚರ್ಚೆಗೆ ಇವರಿಗೋಸ್ಕರ ಕಾಯಬೇಕಿತ್ತೆ?…. ಉತ್ತರ ಸಿಗಲಿಲ್ಲ. ಸಿಕ್ಕರೂ ನೇರವಿರುವುದಿಲ್ಲ. ನಾನಂತೂ ಇವುಗಳಿಂದ ಹೊರತಾಗಿರಬೇಕು ಅಂದುಕೊಂಡೆ. +ಒಂದು ತಾಸಿನ ಚಕಮಕಿಯ ನಂತರ ಎಲ್ಲರೂ ಒಂದು ಸಹಮತಕ್ಕೆ ಬಂದರು. ವಿನ್ನೂ ಎಲ್ಲವನ್ನೂ ದಾಖಲಿಸಿಕೊಳ್ಳುತ್ತಿದ್ದ. ನಾನು ಬೇಕೆಂದೇ ಮಾತನಾಡಿರಲಿಲ್ಲ. ಚಿನ್ನಪ್ಪನ ಮುಖವನ್ನು ಗಹನವಾಗಿ ದಿಟ್ಟಿಸಿದೆ. ಎಡಗಿವಿಯಲ್ಲಿ ಆರು, ಬಲ ಹುಬ್ಬಿನ ಮೇಲೆ ಮೂರು ಕಡೆಗಳಲ್ಲಿ ಚುಚ್ಚಿಕೊಂಡು ಚಿಕ್ಕ ಚಿಕ್ಕ ಕಿಡಿ, ಲೋಲಾಕುಗಳನ್ನು ತೊಟ್ಟಿದ್ದ. ‘ಇವನು ಇನ್ನೂ ಎಲ್ಲೆಲ್ಲಿ ಚುಚ್ಚಿಕೊಂಡಿದ್ದಾನೋ!!’ ಅಂತ ಬದಿಗಿದ್ದ ವಿವೇಕನಗಷ್ಟೇ ಕೇಳುವ ಹಾಗೆ ಹೇಳಿದೆ. ಅವನು ಕಿಸಕ್ಕೆಂದು ನಕ್ಕ. ‘ನಿನಗೆ ಗೊತ್ತಾ? ಎರಡು ವರ್ಷದ ಹಿಂದೆ ಕಂಠೀರವಾದಲ್ಲಿ ಒಂದು ಹರಾಜು ನಡೆಯಿತು. ಆಗ ದತ್ತಾನಿಯ ನಾಟಕದ ಮ್ಯಾನಸ್ಕ್ರಿಪ್ಟೂ, ಇವನ ಬೆರಳಿನ ಉಂಗುರಗಳೂ ಎಷ್ಟು ಹಣಕ್ಕೆ ಬಿಕರಿಯಾದವು ಅಂತ!!’ ಅವನು ಪಿಸುಗುಟ್ಟಿದ. ‘ಬಿಟ್ಟರೆ ಅಂಡೀಸ್, ಕಾಂಡೊಮ್ಸ್‌ನೂ ಹರಾಜಿಗೆ ಇಟ್ಟುಬಿಡುತ್ತಾನೆ!!’ ಈಗ ನಾನು ಕಿಸಕ್ಕೆಂದೆ. ಅನೂಪ ನನಗೆ ತಿವಿದು ಸಭೆಯಲ್ಲಿ ತೊಡಗಿಸಿದ. ವಿನ್ನೂ ದಾಖಲಿಸಿಕೊಂಡಿದ್ದನ್ನು ಸಶಬ್ದವಾಗಿ ಓದಿದ. ಬಿಜಾಯ್ ಬರೆದುದರಲ್ಲಿ ಕೆಲವು ತಿದ್ದುಪಡಿ ಹೇಳಿದ. ನಾನು ಉದಾಸದಿಂದ ಮೊಬೈಲನ್ನು ನೋಡಿಕೊಂಡೆ. ನಾಲ್ಕೂ ಹತ್ತು. ಇದರಲ್ಲಿ ಪಾಲುಗೊಳ್ಳಲು ಒಪ್ಪಲೇಬಾರದಿತ್ತು ಅಂದುಕೊಂಡೆ. ಅಖ್ತರ್ ಎದ್ದು ನಿಂತು ಸಮಿತಿಯ ಅಧ್ಯಕ್ಷತೆಯನ್ನು ನಾನು ವಹಿಸಿಕೊಳ್ಳಬೇಕೆಂದು ಮಂಡಿಸಿದ. ನನಗೆ ಒಂದು ನಮೂನೆ ಘಾಸಿಯಾಯಿತು. ಅದೆಂತಹ ಕಸಿವಿಸಿ ಗೊತ್ತೆ? ‘We ಚಿs ಚಿಡಿಛಿhiಣeಛಿಣs hಚಿve beಣಣeಡಿ ಣhiಟಿgs ಣo ಜo ಣhಚಿಟಿ ಣhis!!’ ಎಂದು ಕಡ್ಡಿ ಮುರಿದಂತೆ ಹೇಳಿದೆ. ನಾವು – ಊರು ಕಟ್ಟುವವರು ಊರಿನ ನಿಟ್ಟಿನಲ್ಲಿ ಏನು ತಾನೇ ಮಾಡುತ್ತಿದ್ದೇವೆ? ಊರಿನ ಹೆಸರಿನಲ್ಲಿ ನೆಲದ ಮೇಲೆ ಎಷ್ಟೆಲ್ಲ ಅತ್ಯಾಚಾರ ನಡೆಯುತ್ತಿದೆ. ಊರು ತನ್ನ ನೆಲದೊಟ್ಟಿಗಿನ ನಿಷ್ಟೆಯನ್ನೆಲ್ಲ ಕಳಚಿಕೊಳ್ಳುತ್ತಿದೆ. ಸರ್ಕಾರದ ನೀತಿ – ಆರ್ಥಿಕ ಉದಾರೀಕರಣ ಈ ನೆಲವನ್ನೇ ಜಾಗತಿಕ ಮಟ್ಟದಲ್ಲಿ ಗಿರವಿಯಿಟ್ಟಿದೆ. ಇಲ್ಲಿನ ಕಟ್ಟಡಗಳಿಗೂ, ದುಬೈನ ಕಟ್ಟಡಗಳಿಗೂ ಏನಾದರೂ ವ್ಯತ್ಯಾಸ ಕಾಣುತ್ತದೆಯೆ? ಊರು ಅಂದರೆ ಬರೇ ಕಾಂಕ್ರೀಟು! ಹಸಿರು ಅಂದರೆ ಆಮದು ಹುಲ್ಲು!! ರಸ್ತೆ ಅಂದರೆ ಪಾರ್ಕಿಂಗ್ ಲಾಟು!!! ಇವೆಲ್ಲ ಈ ಶತಮಾನದ ನಮ್ಮದೇ ಕೊಡುಗೆಯಲ್ಲವೆ? ಕಳೆದ ಹತ್ತು ವರ್ಷದಲ್ಲಿ ಎಷ್ಟು ಹೊಸ ಕಾರುಗಳು, ಎಷ್ಟು ಹೊಸ ಕಟ್ಟಡಗಳು, ಎಷ್ಟು ಗಾಜು, ಎಷ್ಟು ಕಾಂಕ್ರೀಟು? ಇಂತಹ ನಮ್ಮ ಪೀಳಿಗೆಗೆ ಧಿಕ್ಕಾರವಿರಲಿ!! +‘ಐeಣ us ಜಚಿmಟಿ ouಡಿ geಟಿಡಿe!!!’ ಎಂದು ನಾನು ಕೂಗಿದ್ದು ಎಲ್ಲರನ್ನೂ ಕಂಗೆಡಿಸಿರಬೇಕು. ಎರ್ರಾಬಿರ್ರಿ ಮಾತಿದ್ದ ಕಡೆ ಈಗ ಒಮ್ಮೆಲೇ ಕಕ್ಕಾವಿಕ್ಕಿ. ಕೆಲಕಾಲ ಯಾರೂ ಮಾತನಾಡಲಿಲ್ಲ. ‘We ಟಿeeಜ ಠಿoಟiಣiಛಿಚಿಟ ತಿiಟಟ, ಓಚಿgಚಿmಚಿಟಿ! ಇದಕ್ಕೆಲ್ಲ ರಾಜಕೀಯ ಮನೋಬಲ ಬೇಕು!!’ ಅನೂಪ ಮೆಲ್ಲನೆ ಹಿಂಜರಿಕೆಯಿಂದಲೇ ಉಸುರಿದ. ನಾನು ಊರೆಂದರೆ ಎಲ್ಲರ ಒಟ್ಟು ಮನೋಬಲದ ಕೃತ್ಯ ಅಂತ ವಾದಿಸಿದೆ. ಚಕಮಕಿ ನಿಲ್ಲಲಿಲ್ಲ. ಚಿನ್ನಪ್ಪ ದಂಗು ಬಡಿದವನಂತೆ ಕುಳಿತಿದ್ದ. ಶರ್ಲೀ ಈಗ ಮಾತಿಗೆ ತೊಡಗಿದಳು. ‘ಬರೇ ಮಾತಿನಿಂದ ಏನೂ ಆಗೋದಿಲ್ಲ ನ್ಯಾಗ್ಸ್! ನಿನ್ನ ಹಾಗೆ ಯೋಚನೆ ಮಾಡುವವರು ನಮ್ಮಲ್ಲಿ ಎಷ್ಟು ಇದ್ದೇವೆ ಹೇಳು? ನಿಮ್ಮಂತಹವರು ಇದ್ದರೂ ನೀವಾಯಿತು, ನಿಮ್ಮ ಕೆಲಸವಾಯಿತು ಅಂತ ಇದ್ದುಬಿಡ್ತೀರಿ. ಯಾರೂ ಮುಂದೆ ಬರೋಲ್ಲ. We shouಜ beಛಿome ಚಿಛಿಣivisಣs. ನಿನ್ನಂತಹವರು ಫೋರ್‌ಫ್ರಂಟ್ ಲೀಡರ್ಸ್ ಆಗಬೇಕು. ಆದರೆ ನೀನು ಇದನ್ನು ಮಾಡೋಲ್ಲ. ನಿನ್ನನ್ನು ಬಿಟ್ಟು ಉಳಿದವರೆಲ್ಲ ಮೂರ್ಖರು ಅಂತ ಯಾವ ಉಸಾಬರಿಯೂ ಇಲ್ಲದೆ ನಿನ್ನಷ್ಟಕ್ಕೆ ನೀನು ಇದ್ದುಬಿಡ್ತೀಯ. ನೀನು ಯಾಕೆ ಮುಂದಾಳತ್ವ ವಹಿಸಬಾರದು? ನಾವು ನಿನಗೆ ಬೆಂಬಲ ಕೊಡುತ್ತೇನೆ. ನಾನೂ ಮುಂದಿನ ಕಾರ್ಪೊರೇಟರ್ ಎಲೆಕ್ಷನ್ ಕಂಟೆಸ್ಟ್ ಮಾಡಬೇಕು ಅಂತ ಇದ್ದೀನಿ. ಐeಣ us ಜo someಣhiಟಿg ಛಿoಟಟeಛಿಣiveಟಥಿ!!……..’ ನನಗೆ ಈಗ ಶರ್ಲೀ ಸಂಪೂರ್ಣ ವಿಭಿನ್ನವಾಗಿ ಕಾಣತೊಡಗಿದಳು. ಅವಳು ಕೊಚಿನ್‌ನಲ್ಲಿ ತಾನು ಹಮ್ಮಿಕೊಡಿರುವ ಕಾರ್ಯಕ್ರಮಗಳನ್ನು ಹೇಳಿದಳು. ಅವಳು ಅಲ್ಲಿನ ಪ್ರಮುಖ ಕಂಟ್ರಾಕ್ಟರುಗಳಲ್ಲಿ ಒಬ್ಬಳಂತೆ. ತಾನು ನಡೆಸುತ್ತಿರುವ ಉದ್ದಿಮೆಯ ವಿವರಗಳನ್ನು ಕೊಟ್ಟಳು. ಅಲ್ಲಿನ ಸರ್ಕಾರದೊಟ್ಟಿಗೆ ಚರ್ಚಿಸಿ ತೆಗೆದ ಊರಿನ ಬೆಳವಣಿಗೆಯನ್ನು ಕುರಿತಾದ ಯೋಜನೆಗಳ ರೂಪುರೇಷೆಗಳ ಬಗ್ಗೆ ಹೇಳಿದಳು. ‘ನ್ಯಾಗ್ಸ್! ನೀನು ನಮ್ಮಂಥವರ ಕಡೆಯೂ ನೋಡಬೇಕು!! ಸ್ವಲ್ಪ… ಒಂದು ಸ್ವಲ್ಪ ನಿನ್ನ ನೈತಿಕ ಹಮ್ಮನ್ನು ಬದಿಗಿಟ್ಟು ನೋಡಬೇಕು. ನಾವು ನಿನ್ನಷ್ಟು ವಿಚಾರ ಮಾಡದಿದ್ದರೂ ನಮಗಾಗುವಷ್ಟು ಏನನ್ನಾದರೂ ಮಾಡ್ತಾ ಇರ್ತೀವಿ….. ನಾನು ಅನೂಪ್‌ಗೆ ಹೇಳುತ್ತಾ ಇದ್ದೆ. ನಿನ್ನನ್ನು ಒಮ್ಮೆ ಕೊಚಿನ್‌ಗೆ ಕರೆಸಿ ಅಲ್ಲಿನ ಮೇಯರ್ ಜೊತೆ ಒಂದು ಭೇಟಿ ಮಾಡಿಸಬೇಕು ಅಂತ.’ ನನ್ನಿಂದ ಮಾತೇ ಹೊರಳಲಿಲ್ಲ. ಈ ಅಧ್ಯಕ್ಷತೆಯನ್ನು ಒಪ್ಪುವುದೋ, ಬೇಡವೋ ಎಂದು ಯೋಚಿಸುತ್ತಿರುವಾಗಲೇ ಮೊಬೈಲಿನ ಅಲಾರ್‍ಮ್ ಬೀಪಿಸತೊಡಗಿತು. ಎಚ್ಚರವೇ ಎಚ್ಚರವಾದ ಹವೆಯ ಮೋಡವೊಂದು ನನ್ನ ಸುತ್ತ ಈಸತೊಡಗಿತ್ತು. +***** +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_571.txt b/Kannada Sahitya/article_571.txt new file mode 100644 index 0000000000000000000000000000000000000000..051608e7b2508bf9895c3eff5065b9849e5b1a88 --- /dev/null +++ b/Kannada Sahitya/article_571.txt @@ -0,0 +1,255 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೬ – +ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು ಹೋಗಿದ್ದಾರೆ. ಕೈಲಿ ಇಟ್ಟುಕೊಳ್ಳದಿದ್ದರೆ ಈ ಸ್ಥಳಪುರೋಹಿತರು ಒಂದಲ್ಲ ಒಂದು ವಿಧದಲ್ಲಿ ತೊಂದರೆ ಮಾಡಬಹುದು. ಹುಡುಗಿಗೂ ಅವಳ ತಾಯಿಗೂ ಬಹಿಷ್ಕಾರ ಹಾಕಿದೆ ಎಂದು ಗಂಡಿಗೆ ತಿಳಿಸಬಹುದು. ಮತ್ತೆ ಏನಾದ್ರೂ ಚಾಡಿ ಛಿದ್ರ ಹುಟ್ಟಿಸಬಹುದು. ಗಂಡು ಸ್ವಭಾವದಲ್ಲಿ ಒಳ್ಳೆಯವರೇ ಆಗಿ ವ್ಯವಹಾರದಲ್ಲಿ ತಿಳಿವಳಿಕೆ ಇದ್ದರೂ, ಇಂತಹ ವಿಚಾರದಲ್ಲಿ ಯಾರ ಮನಸ್ಸು ಹೇಗೆ ತಿರುಗುತ್ತದೋ ಹೇಳುವಂತಿಲ್ಲ. +ಈ ಇಬ್ಬರು ಪುರೋಹಿತರನ್ನು ದಾರಿಗೆ ತಂದುಕೊಳ್ಳುವುದು ಈಗ ಅವಳಿಗೆ ಕಷ್ಟವಾಗಿರಲಿಲ್ಲ. ದಿನಸಿ ಲೆಕ್ಕ ಬಂದ ಮೇಲೆ ತಮ್ಮ ಜಮೀನಿನ ಫಸಲು ಅಂದಾಜು ಕಡಿಮೆ ಹಾಕಲಿ ಎಂದು ಊರಿನ ಎಷ್ಟೋ ಜನರು ಇವಳ ಮನೆಗೆ ಬಂದು ವಿನಯ ತೋರಿಸಿ ಹೋಗುತ್ತಿದ್ದರು. ಇದುವರೆಗೆ ಜೋಯಿಸರು ಸ್ವತಃ ಬರದಿದ್ದರೂ ಜಮೀನು ಗೇಯುವ ರೈತರ ಮೂಲಕ ಸುತ್ತುಬಳಸಿ ಹೇಳಿಕಳಿಸಿದ್ದರು. ಲೆಕ್ಕ ಪತ್ರಗಳನ್ನೆಲ್ಲ ಬರೆಯುವ ಊರಿನ ವಾಸ್ತವವಾದ ಶ್ಯಾನುಭೋಗಿಣಿ ನಂಜಮ್ಮನೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಈಗ ಅವರ ಮನೆಗೆ ತಾನೇ ಹೋಗಲೋ ಹೇಗೆ ಎಂದು ಮಧ್ಯಾಹ್ನವೆಲ್ಲ ಯೋಚಿಸಿದ ಅವಳು, ಸಂಜೆಯ ಹೊತ್ತಿಗೆ ಕುಳುವಾಡಿಯನ್ನು ಕರೆಸಿ ಹೇಳಿದಳು: ‘ಹೋಗಿ ಅಣ್ಣಾಜೋಯಿಸರನ್ನೂ ಅಯ್ಯಾಶಾಸ್ತ್ರಿಗಳನ್ನೂ ನಾನು ಹೇಳಿಕಳಿಸಿದೆ ಅಂತ ಕರಕೊಂಡು ಬಾ.’ +ಅವಳು ಹೀಗೆ ಮಾಡಿದುದು ತುಂಬ ದಾಷ್ಟೀಕದ ಕೆಲಸವೇ. ಶೃಂಗೇರಿ ಜಗದ್ಗುರು ಮಠದ ಪ್ರತಿನಿಧಿಗಳೆನಿಸಿದ ಅವರ ಮನೆಗೆ ಇಂತಹ ಬಡವರು ಹೋಗಿ ಬಾಗಿಲಲ್ಲಿ ನಿಲ್ಲುವುದು, ನೆಲ ಮುಟ್ಟಿ ನಮಸ್ಕಾರ ಮಾಡುವುದು ಪದ್ಧತಿ. ಅವರು ಕುಳುವಾಡಿಯ ಜೊತೆ ಬರುತ್ತಾರೋ ಇಲ್ಲವೋ ಎಂಬ ಬಗೆಗೆ ಅವಳಿಗೇ ಅನುಮಾನ. ಅಕಸ್ಮಾತ್ ಬರದೆ ಇದ್ದರೆ ಮುಂದೆ ಹೇಗೆ ಮಾಡುವುದು ಎಂಬ ಒಂದು ಯೋಚನೆಯೂ ಮನಸ್ಸಿನಲ್ಲಿತ್ತು. ಆದರೆ ಹಾಗೆ ಆಗಲಿಲ್ಲ. ಹತ್ತು ನಿಮಿಷದಲ್ಲಿ ಅಯ್ಯಾಶಾಸ್ತ್ರಿಗಳೂ, ಮತ್ತೆ ಐದು ನಿಮಿಷದಲ್ಲಿ ಅಣ್ಣಾಜೋಯಿಸರೂ ಕುಳುವಾಡಿಯ ಸಂಗಡ ಬಂದರು. +‘ಮಾಯಿಗಾ, ನೀನು ಜಗುಲಿ ಮ್ಯಾಲೆ ಕೂತಿರು’-ಎಂದು ಅಧಿಕಾರ ತೋರಿಸುವ ಸ್ವರದಲ್ಲಿ ಹೇಳಿದ ನಂಜಮ್ಮ, ಇವರಿಬ್ಬರಿಗೂ ಮಂದಲಿಗೆ ಹಾಕಿಕೊಟ್ಟಳು. ಅವರೇ ಉಭಯ ಕುಶಲೋಪರಿ ಮಾತನಾಡಿ, ‘ಮಗಳ ಮದುವೆ ಗೊತ್ತಾಯ್ತಂತೆ. ತುಂಬ ಸಂತೋಷ’ ಎಂದರು. +‘ನೋಡಿ, ಅದಕ್ಕೇ ಕರೆಸಿದೆ. ಜಾತಕ ನೋಡಬೇಕು, ಲಗ್ನ ನಿಶ್ಚಯವಾಗಬೇಕು. ಇನ್ನು ಮದುವೆ ಮಾಡಿಸೋ ಕೆಲಸ. ಈಗ ನಮ್ಮ ತಂದೆ ಕಾಶಿಯಿಂದ ಊರಿಗೆ ಬಂದಿದಾರೆ ಅಂತ ನಿಮಗೂ ಗೊತ್ತಿದೆಯಲ್ಲ. ಮದುವೆಯಾಗೂತನಕ ಬಂದು ಇಲ್ಲಿಯೇ ಇದ್ದು ಎಲ್ಲಾ ಕೆಲ್ಸಾನೂ ಮಾಡಿಕೊಡಿ ಅಂದ್ರೆ ಕುದುರೆ ಮೇಲೆ ಬಂದುಬಿಡ್ತಾರೆ. ಆದರೆ ಸ್ಥಳಪುರೋಹಿತರು ನೀವಿರುವಾಗ ಅವರನ್ನ ಕರಸೋದು ಬ್ಯಾಡ ಅಂತ ನಿಮಗೆ ಹೇಳಿ ಕಳಿಸಿದೆ. ನೀವು ಹ್ಯಾಗೆ ಹೇಳಿದ್ರೆ ನಾನು ಹಾಗೆ ಮಾಡ್ತೀನಿ.’ +‘ಛೇ ಛೇ ಛೇ, ಉಂಟೇ? ನಾವಿರುವಾಗ ಅವರ್ಯಾಕೆ ಬರಬೇಕು? ನಮ್ಮ ಗ್ರಾಮದಲ್ಲಿ ಆಗೋ ಮದುವೆ ಮಾಡಿಸೋದು ನಮ್ಮ ಕರ್ತವ್ಯ. ಹುಡುಗನ ಜಾತಕ ಕೊಡಿಲ್ಲಿ’-ಅಯ್ಯಾಶಾಸ್ತ್ರಿಗಳೆಂದರು. ಈಗ ದಿನಸಿ ಲೆಕ್ಕ ಕೈಯಲ್ಲಿರುವುದೊಂದೇ ಕಾರಣವಲ್ಲ. ಅವಳ ತಂದೆ ಕಂಠೀಜೋಯಿಸರೇ ಊರಿಗೆ ಬಂದು ಕೂರುವುದು ಇವರಿಬ್ಬರಿಗೂ ಕಷ್ಟದ ಪರಿಸ್ಥಿತಿ. ಆ ಮನುಷ್ಯ ಪೌರೋಹಿತ್ಯದಲ್ಲಿ ಗಟ್ಟಿಗ ಮಾತ್ರವಲ್ಲ, ಕೋಪ ಬಂದರೆ ಯಾರನ್ನಾದರೂ ಹಿಡಿದು ಬಡಿಯುವಂತಹ ಧಾಂಡಿಗನೆಂಬುದು ಅವರಿಬ್ಬರಿಗೂ ಗೊತ್ತಾಗಿತ್ತು. ಹನ್ನೆರಡು ವರ್ಷದಿಂದ ಇಲ್ಲವಾಗಿದ್ದ ಅವರು ಈಗ ಬಂದಿರುವುದು ಅವರಿಗೂ ತಿಳಿದಿದ್ದ ಸಂಗತಿ. ಮನೆಯಲ್ಲಿಯೇ ಇದ್ದ ಪಂಚಾಂಗ ಇಸಿದುಕೊಂಡು ಗುಣಿಸಿದ ಇಬ್ಬರೂ ಜಾತಕ ಹೊಂದುತ್ತದೆಂದರು. ಆ ಹೊತ್ತಿಗೆ ಇಪ್ಪತ್ತಾರನೆಯ ದಿನ ಲಗ್ನ ಪ್ರಶಸ್ತವಾಗಿದೆಯೆಂದು ಹೇಳಿ, ‘ಮದುವೆಗೆ ಯಾವ ಯೋಚನೆಯೂ ಬ್ಯಾಡ. ಕೊನೆಗೆ ಗಂಡಿನ ಕಡೆ ಜೋಯಿಸರು ಬರದೆ ಇದ್ರೂ ನಾವಿಬ್ಬರೂ ಕೂಡಿ ಕೆಲಸ ಮುಗಿಸಿಕೊಡ್ತೀವಿ’ ಎಂದು ಆಶ್ವಾಸನವಿತ್ತರು. +‘ನೋಡಿ, ಇದೇ ಕೈಲಿ ನಮ್ಮ ರಾಮಣ್ಣಂಗೆ ಒಂದೆಳೆ ಜನಿವಾರಾನೂ ಹಾಕಿಬಿಡಬೇಕು ಅಂತಿದೀನಿ. ಅದನ್ನ ಧಾರೆ ದಿನವೇ ಇಟ್ಟುಕೋಭೌದೆ?’ +ಮತ್ತೆ ಗುಣಿಸಿ ಅವರು ಎಂದರು: ‘ಧಾರೆಯ ಹಿಂದಿನ ದಿನ ಇಟ್ಟುಕೊ.’ +ಈ ಕೆಲಸ ಇಷ್ಟು ಸುಲಭದಲ್ಲಿ ಬಗೆಹರಿಯುತ್ತದೆಂದು ನಂಜಮ್ಮ ಎಣಿಸಿರಲಿಲ್ಲ. ಇನ್ನು ಹಣ ಹೊಂಚಿ, ಸಾಮಾನು ಸರಂಜಾಮು ಮಾಡುವ ಕೆಲಸ ಸಾಕಾದಷ್ಟಿದೆ. ಮರುದಿನ ಅವಳು ಕುರುಬರಹಳ್ಳಿಗೆ ಹೋದಳು. ಗುಂಡೇಗೌಡರು ಊರ ಎಲ್ಲ ಮನೆಗಳವರನ್ನೂ ಕರೆಸಿ ಚಂದಾ ಕೇಳಿದರು. ನಂಜಮ್ಮನೇ ಬರೆದ ಪಟ್ಟಿಯಲ್ಲಿ ಒಟ್ಟು ಇನ್ನೂರ ಎಪ್ಪತ್ತು ರೂಪಾಯಿಯ ಲೆಕ್ಕವಾಯಿತು. ಮೇಲಿನ ಮೂವತ್ತನ್ನು ತಾವು ಹಾಕುವುದಾಗಿ ಹೇಳಿದ ಗೌಡರು-‘ಅವ್ವಾ, ನಿನ್ನ ಕಂದಾಯದ ರಶೀತಿ ಬಾಬ್ತು ಇನ್ನೂರು ರೂಪಾಯಿ ಇವತ್ತೇ ಕೊಂಡೊಯ್ಯಿ. ಈ ಮುನ್ನೂರು ಇನ್ನು ಎಂಟು ದಿನದಲ್ಲಿ ಎತ್ತಿ ನಾನೇ ತಂದುಕೊಡ್ತೀನಿ. ತ್ವಾಟವಿರೋರೆಲ್ಲ ಐದು ಹತ್ತು ತೆಂಗಿನಕಾಯಿ ಕೊಡೊ ಹಂಗೆ ಏಳ್ತೀನಿ. ಒಂದು ನೂರೈವತ್ತು ಕಾಯಾದ್ರೆ ಸಾಲ್ದಾ?’ +‘ಸಾಕಾಗುತ್ತೆ ಗೌಡ್ರೆ.’ +‘ಸಾಮಾನ್ ಗೀಮಾನ್ ತರಾಕ್ ತಿಪಟೂರಿಗೆ ಹ್ವಾಗ್‌ಬೇಕು. ನಿಂಗ್ ಬೇಕಾದ ದಿನ ಏಳಿಕಳ್ಸು. ಎತ್ತಿನ ಗಾಡಿ ಕಳುಸ್ತೀನಿ. ಬೆಲ್ಲ ವಸಿ ಜಾಸ್ತಿ ತರ್ಸು.’ +ನಂಜಮ್ಮ ಊರಿಗೆ ಬಂದಳು. ಇನ್ನು ಸಾಮಾನಿನ ಪಟ್ಟಿ ಹಾಕಬೇಕು. ಗಂಡಿನ ಕಡೆ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಆತನಿಗೆ ಯಾರೂ ಹತ್ತಿರದ ನೆಂಟರೇ ಇಲ್ಲವಂತೆ. ಅಲ್ಲದೆ ಎರಡನೆಯ ಮದುವೆ. ಹತ್ತು ಹದಿನೈದಕ್ಕಿಂತ ಹೆಚ್ಚು ಜನ ಬರಲಾರರು. ಇನ್ನು ತನ್ನ ಕಡೆ ಸಹ ನಾಗಲಾಪುರದವರನ್ನು ಬಿಟ್ಟರೆ ಮತ್ತೆ ಜನವಿಲ್ಲ. ಈ ಊರಿನ ಏಳು ಮನೆ ಬ್ರಾಹ್ಮಣರು. ಧಾರೆಯ ರಾತ್ರಿ ಕುರುಬರಹಳ್ಳಿಯಿಂದ ಮನೆಗೆ ಒಂದಾಳಿನಂತೆಯಾದರೂ ಕರೆಯಬೇಕು. ಸ್ವಲ್ಪ ಹೆಚ್ಚಾಗಿಯೇ ಸಾಮಾನಿನ ಪಟ್ಟಿ ಹಾಕಿ ಅಂದಾಜು ತೆಗೆದ ಮೆಲೆ ಜವಳಿ ಚಿನ್ನ ಬೆಳ್ಳಿಯ ಲೆಕ್ಕ ಹಾಕಿದಳು. ಮೇಷ್ಟರು ವೆಂಕಟೇಶಯ್ಯನವರ ಜೊತೆ ಗಾಡಿ ಹೂಡಿಸಿ, ಜೊತೆಗೆ ರಾಮಣ್ಣನನ್ನೂ ಕರೆದುಕೊಂಡು ತಾನೇ ತಿಪಟೂರಿಗೆ ಹೋದಳು. ಗಂಡಿಗೆ ಕಲಾಪತ್ತಿನ ಪಂಚೆ, ಸಿಲ್ಕಿನ ಶರಟು, ಹತ್ತಿಯ ಕೋಟು ಮತ್ತು ಜರಿ ಪೇಟಗಳ ಜೊತೆಗೆ ಒಂದು ಬೆಳ್ಳಿಯ ಲೋಟ ಉದ್ದರಣೆಗಳನ್ನೂ ತೆಗೆದಳು. ಹುಡುಗಿಗೆ ಮೂವತ್ತು ರೂಪಾಯಿನದೊಂದು ಇಪ್ಪತ್ತೈದು ರೂಪಾಯಿನ ಮತ್ತೊಂದು ಸೀರೆ ತೆಗೆದಳು. ರಾಮಣ್ಣ ವಿಶ್ವರಿಗೆ ಒಳ್ಳೆಯ ಬಟ್ಟೆಗಳಿರಲಿಲ್ಲ. ಅವರಿಗೆ ಎರಡೆರಡು ಶರಟು, ವಿಶ್ವನಿಗೆ ಚಡ್ಡಿ, ರಾಮಣ್ಣನಿಗೆ ಎರಡು ಲುಂಗಿಗಳಾದವು. ಮುಂಜಿಯಲ್ಲಿ ಭಿಕ್ಷಾಪಾತ್ರೆಗೆ ಒಂದು ಪುಟ್ಟ ಬೆಳ್ಳಿಯ ಬಟ್ಟಲು ತೆಗೆದಳು. ಯಜಮಾನರಿಗೆ ಎಂಟು ರೂಪಾಯಿಗೆ ಒಂದು ಜೊತೆ ಬಿಳಿ ಪಂಚೆ ಶರಟು ಆದವು. ತನ್ನ ಮದುವೆಯ ಸೀರೆಯೇ ತನಗಿದೆ. ಇನ್ನು ಈಗ ಯಾವುದೂ ಬೇಡವೆಂದು ನಿರ್ಧರಿಸಿದಳು. ‘ನಂಜಮ್ನೋರೆ, ಎಲ್ಲ ಸಾಮಾನು ತಂದಿದ್ರೂ, ಮೇಲೆ ಏನಿಲ್ಲ ಅಂದ್ರೂ ನೂರೈವತ್ತು ರೂಪಾಯಿ ಇಟ್ಕಂಡಿರಿ. ದುಡ್ಡು ತುಂಬ ಬಿಗಿಯಾಗಿ ಖರ್ಚು ಮಾಡಬೇಕು’-ಮೇಷ್ಟರು ಹೇಳಿದರು. +ಚೀಟಿ ಬರೆದು ಕುಳುವಾಡಿಯ ಕೈಲಿ ನಾಗಲಾಪುರಕ್ಕೆ ಕಳಿಸಿದಳು. ಬೆಳಿಗ್ಗೆ ಕೋಳಿ ಕೂಗುವ ಹೊತ್ತಿಗೇ ಎದ್ದು ಹೋದ ಕುಳವಾಡಿ ರಾತ್ರಿಗೇ ವಾಪಸು ಬಂದು ಹೇಳಿದ: ‘ಅವ್ರು ಯಾರೂ ಬರಾಕುಲ್ವಂತೆ.’ +‘ಹಂಗಂತ ಯಾರಂದೋರು?’ +‘ನಿಮ್ಮಯ್ಯಾರೇ ಅಂದ್ರು.’ +‘ಇನ್ನೇನಂದ್ರು?’ +‘ನಾನು ಕೇಳಿದ್ದುಕ್ಕೆ ಎಣ್ಣು ಕೊಡಾಕಿಲ್ಲ ಅಂದ್ಲು. ಅವ್ಳು ಬ್ಯಾರೆ ಕಡೆ ಕೊಟ್ರೂ ಉದ್ಧಾರಾಗಾಕಿಲ್ಲ ಅಂದ್ರು.’ +ಅಪ್ಪನ ಸ್ವಭಾವ ಅವಳಿಗೆ ಗೊತ್ತು. ತನ್ನ ಕೋಪ, ಹಟವೇ ನಡೆಯಬೇಕು. ಅದರ ಮುಂದೆ ತಾಯಿ, ಮಗಳು, ಪ್ರೀತಿ, ಕರುಣೆ, ಯಾವುದೂ ಇಲ್ಲ. +‘ಅಜ್ಜಿ ಏನಂದ್ರು?’ +‘ಅವ್ರು ನನ್ ಕುಟ್ಟೆ ಮಾತಾಡ್ನೇ ಇಲ್ಲ.’ +ನಂಜಮ್ಮನಿಗೆ ತುಂಬ ದುಃಖವಾಯಿತು. ಅಪ್ಪನ ಸ್ವಭಾವ ಹೊಸತಲ್ಲ. ಆದರೆ ತನ್ನನ್ನು ಹುಟ್ಟಿದಾಗಿನಿಂದ ಸಾಕಿ, ಬೆಳೆಸಿ, ಮದುವೆ ಬಾಣಂತಿತನಗಳನ್ನು ಮಾಡಿದ ಅಜ್ಜಿ ಬರದಿದ್ದರೆ ಹೇಗೆ? ಅವಳ ಕರುಳು ತಡೆಯಲಿಲ್ಲ. ತಾನೇ ಒಂದು ದಿನದ ಮಟ್ಟಿಗೆ ಹೋಗಿ ಕರೆದು ಬರಲೇ?-ಎಂಬ ಆಲೋಚನೆ ಬಂತು. ಆದರೆ ಗಾಡಿಯಲ್ಲಿ ಹೋಗುವುದಕ್ಕೆ ಒಂದು ದಿನ, ಬರುವುದಕ್ಕೆ ಇನ್ನೊಂದು ದಿನ, ಒಟ್ಟಿನಲ್ಲಿ ಎರಡು ದಿನ ಬೇಕು. ಇನ್ನು ಮದುವೆ ಹದಿಮೂರು ದಿನ ಉಳಿಯಿತು. ಕೆಲಸ ಏನೇನೂ ಆಗಿಲ್ಲ. ಸೌದೆ ಸೊಪ್ಪಿನ ವ್ಯವಸ್ಥೆಯಾಗಿಲ್ಲ. ಚಕ್ಕುಲಿ ತೇಂಗೊಳಲು ಮೊದಲಾಗಿ ಯಾವ ಹಿಟ್ಟೂ ಆಗಿಲ್ಲ. ಅವಲಕ್ಕಿ, ಅರಳು ಹುರಿಯಬೇಕು. ಮೆಣಸಿನಪುಡಿಯಾಗಬೇಕು. ವಾಲಗದವರನ್ನು ಗೊತ್ತುಮಾಡಬೇಕು. +ಇನ್ನೊಂದು ಚೀಟಿ ಬರೆದು ನಾಳೆ ನಾಡಿದ್ದರಲ್ಲಿ ಮತ್ತೊಮ್ಮೆ ಕುಳುವಾಡಿಯನ್ನು ಕಳಿಸುವುದೇ ಸರಿ ಎಂದು ನಿರ್ಧರಿಸಿ ಅವಳು ಎಂದಳು: ‘ಇನ್ನು ಎರಡು ಮೂರು ದಿನದ ಮ್ಯಾಲೆ ಇನ್ನೊಂದು ಸಲ ನೀನು ಹೋಗಿಬರಬೇಕು. ಆದರೆ ನೋಡು, ಈಗ ನೀನು ಅಲ್ಲಿಗೆ ಹೋಗಿದ್ದು ಅವರು ಬರುಲ್ಲ ಅಂದದ್ದು ಯಾರ ಕುಟ್ಟೂ ಬಾಯಿ ಬಿಡ್‌ಕೂಡದು.’ +ಕುಳುವಾಡಿ ಎರಡನೇ ಸಲ ಹೋದರೂ ಅವರು ಬರಲಿಲ್ಲ. ಮತ್ತೆ ಬಂದುದಕ್ಕೆ ಕಂಠೀಜೋಯಿಸರು ಅವನನ್ನೇ ಬೈದು ಕಳಿಸಿದರು. ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ನಂಜಮ್ಮ ಅವನಿಗೆ ಇನ್ನೊಮ್ಮೆ ಎಚ್ಚರ ಹೇಳಿ ಕಳಿಸಿದಳು. ಅವಳ ತಂದೆಗೂ ಅವಳಿಗೂ ಹೀಗೆ ಮನಸ್ತಾಪ ಬಂದಿದೆ ಎಂಬ ಸುಳಿವು ಸಿಕ್ಕಿದರೆ ಊರ ಜೋಯಿಸರುಗಳು ಮಧ್ಯದಲ್ಲಿ ಬಾಲ ಬಿಚ್ಚಬಹುದೆಂಬ ಒಳಹೆದರಿಕೆ ಇದ್ದೇ ಇತ್ತು. +ಅವಳ ಕಡೆ ನೆಂಟರೇ ಇಲ್ಲ. ಅದುವರೆಗೂ ಅವಳೇ ಹೋಗಿ ಅತ್ತೆಯನ್ನು ಕರೆದಿರಲಿಲ್ಲ. ಅವರಾಗಿಯೇ ಬಂದಿರಲೂ ಇಲ್ಲ. ಆದರೆ ಏನೇನು ಸಾಮಾನು ತಂದಳು, ಏನೇನು ಬಿಟ್ಟಳು ಎಂಬ ಎಲ್ಲ ವಿವರಗಳನ್ನು ಮಗ ಚಿನ್ನಯ್ಯನಿಂದ ಗಂಗಮ್ಮ ತಿಳಿದುಕೊಳ್ಳುತ್ತಿದ್ದಳು. ಮದುವಣಿಗ ಶಾಸ್ತ್ರ ನಾಡದ್ದು ಎನ್ನುವಾಗ ನಂಜಮ್ಮ ತಾನೇ ಅತ್ತೆಯ ಮನೆಗೆ ಹೋಗಿ ಹೇಳಿದಳು: ‘ಅಮ್ಮ, ನೀವೂ ಅಪ್ಪಣ್ಣಯ್ಯ ಅಲ್ಲಿಗೇ ಬನ್ನಿ. ಎಲ್ಲ ಮುಂದೆ ನಿಂತು ಮಾಡಿಸಿಕೊಡಬೇಕಾದೋರು ನೀವು.’ +‘ಉಮ್ಮೆಮರಳಿ ತಾಟಗಿತ್ತಿ. ಇಷ್ಟು ದಿನದ ತಂಕ ಸಾಮಾನು ತರುಕ್ಕೆ ಗಂಡು ಗೊತ್ತು ಮಾಡುಕ್ಕೆ ನನ್ನ ಕರೆದೆ ಏನೆ? ಪ್ರಪಂಚದಲ್ಲಿ ಗಂಡೇ ಇಲ್ಲ ಅಂತ, ಆ ಹೆಂಡತಿ ಸತ್ತ ಎರಡನೇ ಗಂಡಿಗೆ ಕೊಡೂಕೆ ಒಪ್ಕಂಡೆಯಾ?’ +‘ಅಮ್ಮ, ಪ್ರಪಂಚದಲ್ಲಿ ಸಾವಿರಗಟ್ಟಲೆ ಗಂಡುಗಳಿರ್‌ಭೌದು. ಅವುಕ್ಕೆ ಕೊಟ್ಟು ಬಿಟ್ಟು ಮಾಡೂ ಸಕ್ತಿ ನನಗಿಲ್ಲ. ನೀವೂ ಅಪ್ಪಣ್ಣಯ್ಯ ಬನ್ನಿ’-ಎಂದು ಹೇಳಿ, ವಾಗ್ವಾದಕ್ಕೆ ಸಿಕ್ಕದೆ ಸುಮ್ಮನೆ ಹೊರಟುಬಂದಳು. +ಚೆನ್ನಿಗರಾಯರಿಗೂ ಹೆಂಡತಿಯ ಮೇಲೆ ಕೋಪವಿತ್ತು. ಕಲ್ಲೇಶನಿಗೆ ಹೆಣ್ಣು ಕೊಡುವುದಿಲ್ಲವೆಂದು ಹೇಳಿ ಹಟ ಮಾಡಿ, ಮಾವನವರು ಮಾಡುತ್ತಿದ್ದ ಸಹಾಯವನ್ನೆಲ್ಲ ಇವಳು ಹಾಳು ಮಾಡಿದ್ದಳು. ಈಗ ಮದುವೆ ನಿಶ್ಚಯವಾದ ಮೇಲೆ ಅವರನ್ನು ಯಾವುದಕ್ಕೂ ಕೇಳಿರಲಿಲ್ಲ. ಕೇಳಿದ್ದರೆ ಅವರಿಂದ ವಿಘ್ನಗಳೇ ಉಂಟಾಗುತ್ತದೆಂದು ಅವಳ ಅನುಭವ ಪಾಠ ಕಲಿಸಿತ್ತು. ತಮ್ಮನ್ನು ಅಲಕ್ಷಿಸುದುದಕ್ಕೆ ಸೇಡು ತೀರಿಸಿಕೊಳ್ಳಲು ಅವರು ದಾರಿ ಯೋಚಿಸುತ್ತಿದ್ದರು. +ಅಪ್ಪಣ್ಣಯ್ಯ ಅದೇ ದಿನ ಇವರ ಮನೆಗೆ ಬಂದ. ಅತ್ತಿಗೆ ಹೇಳಿದಂತೆ ಅಡಿಗೆಯ ಮನೆಯಲ್ಲಿ ಒಲೆ ತೋಡುವುದರಿಂದ ಹಿಡಿದು, ಸೌದೆ ಜೋಡಿಸಿಟ್ಟು ಕುಳುವಾಡಿಗಳಿಗೆ ಹೇಳಿ ಚಪ್ಪರ ಹಾಕಿಸಿದ. ಎರಡು ಸಲ ಕುರುಬರಹಳ್ಳಿಗೆ ಹೋಗಿ, ಅವರು ಗುಡ್ಡೆ ಹಾಕಿದ್ದ ಕಾಯಿ ಕಸಿಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು ಬಂದ. ಗಂಗಮ್ಮ ಮುಂಜಿಯ ದಿನ ಬಂದಳು. ಯಾವ ಕೆಲಸ ಕಾರ್ಯಗಳನ್ನು ಮಾಡುವುದಕ್ಕೂ ತೋಚಲಿಲ್ಲವೋ, ಅಥವಾ ಬಿಗುಮಾನದಿಂದಲೋ ಸುಮ್ಮನೆ ಅಡಿಗೆಮನೆಯಲ್ಲಿ ಕೂತಳು. +ಗಂಡಿನವರು ಹೆಚ್ಚು ಜನ ಬರಲಿಲ್ಲ. ತಿಮ್ಲಾಪುರದ ದ್ಯಾವರಸಯ್ಯನವರು ಅವರ ಹೆಂಡತಿ ಧಾರೆ ಎರೆಸಿಕೊಳ್ಳುವುದಕ್ಕೆ, ಅವರ ಮಗ, ಸೊಸೆ, ಮೂರು ಜನ ಮೊಮ್ಮಕ್ಕಳು, ಗಂಡಿನ ಇಬ್ಬರು ಸಹೋದ್ಯೋಗಿಗಳು, ಒಬ್ಬ ಪುರೋಹಿತರು, ಒಟ್ಟು ಇಷ್ಟೇ ಜನ. ಮದುವೆಗೆ ಯಾವ ವಿಘ್ನವೂ ಆಗಲಿಲ್ಲ. ಎಲ್ಲವೂ ಸುಲಲಿತವಾಗಿ ಸಾಗುತ್ತಿತ್ತು. ಧಾರೆಗೆ ಹೆಣ್ಣು ಗಂಡುಗಳನ್ನು ಕರೆತರುವ ಮೊದಲು ಧಾರೆ ಮಂಟಪದಲ್ಲಿ ಕನ್ಯೆಯ ತಂದೆ ತಾಯಿಗಳಿಂದ ಮೊದಲು ಶಾಸ್ತ್ರವಾಗಬೇಕಾಗಿತ್ತು. ‘ಚೆನ್ನಿಗರಾಯ, ನೀನು ಬೇಗ ಹಸೆ ಮೇಲುಕ್ಕೆ ಬಾ’-ಎಂದು ಜೋಯಿಸರು ಕರೆದರು. ಇವರು ಒಳಗೆ ಮುರಿತು ಕೂತುಬಿಟ್ಟಿದ್ದರು. ‘ಹೊತ್ತಾಯ್ತು, ಬೇಗ ಏಳಿ’-ಎಂದು ನಂಜಮ್ಮನೇ ಹೋಗಿ ಎಬ್ಬಿಸಿದರೆ, ‘ನಿನ್ನ ಮಗಳ ಮದುವೆ ಬೇಕಾದ್ರೆ ನೀನೇ ಮಾಡ್ಕ, ನಾನು ಮೇಲುಕ್ಕೆ ಬರುಲ್ಲ’ ಎಂದುಬಿಟ್ಟರು. ಅವಳಿಗೆ ಏನೂ ತಿಳಿಯಲಿಲ್ಲ. ಅಲ್ಲಿಯೇ ಇದ್ದ ಮೇಷ್ಟರು ಕೇಳಿದರು: ‘ಯಾಕೆ ಶ್ಯಾನುಭೋಗ್ರೆ, ಏನಾಯ್ತು ಹೇಳಿ.’ +‘ಇವ್ಳೇ ಯಜಮಾಂತಿ. ಸಾಮಾನು ಗೀಮಾನು ತರುಕ್ಕೆ ಇವ್ಳು ನನ್ನೇನಾದ್ರೂ ಕೇಳಿದ್ಲೇನ್ರೀ?’ +‘ನೀವೇ ಯಜಮಾನ್ರು. ನಿಮ್ಮ ಹೆಸರಲ್ಲೇ ಅಲ್ವೇ ಎಲ್ಲಾ ನಡೀತಿರೂದು? ಹೊತ್ತಾಯ್ತು ಏಳಿ.’ +‘ಇಲ್ಲಿ ನೋಡ್ರೀ, ನಂಗೆ ಇವ್ಳು ಯಂಥಾ ಪಂಚೆ ತಂದಿದಾಳೆ. ಒಂದು ಜೊತೆ ಕಲಾಪತ್ತಿನ ಪಂಚೇನಾದ್ರೂ ತರಬಾರದಾಗಿತ್ತೇ? ಇದುನ್ನ ಉಟ್ಕಂಡು ನಾನು ಧಾರೆಮಂಟಪಕ್ಕೆ ಬರುಲ್ಲ’-ಎಂದು ಹಟಹಿಡಿದರು. ಜೊತೆಗೆ ಇನ್ನೊಂದು ಪಾಯಿಂಟು. ಮದುವೆಗೆ ಮಾಡಿದ್ದ ಉಂಡೆ, ಚಕ್ಕುಲಿ, ತೇಂಗೊಳಲು ಮೊದಲಾದ ತಿಂಡಿಗಳನ್ನೆಲ್ಲ ಕತ್ತಲೆಯ ಕೋಣೆಯಲ್ಲಿಟ್ಟಿತ್ತು. ಅದರ ಮೇಲ್ವಿಚಾರಣೆ ಒಬ್ಬ ಜವಾಬ್ದಾರಿಯುತ ಹೆಂಗಸಿನ ಕೈಲಿ ಕೊಡುವುದು ಯಾವ ಮದುವೆ ಮನೆಯಲ್ಲಾದರೂ ಪದ್ಧತಿ. ತಿಂಡಿಯ ಕೋಣೆಯ ಬೀಗದ ಕೈಯ್ಯನ್ನು ನಂಜಮ್ಮ, ಮೇಷ್ಟ್ರ ಕೈಲಿ ಕೊಟ್ಟಿದ್ದಳು. ಮಾಡಿದ್ದುದೇ ಇದ್ದದ್ದರಲ್ಲಿ ಸ್ವಲ್ಪ. ಬೀಗರು ಹೋಗುವಾಗ ಅವರಿಗೆ ಬೇರೆ ಕೊಟ್ಟು ಕಳಿಸಬೇಕು. ಊರಿನ ಮುತ್ತೈದೆಯರಿಗೆ ಕೊಡುವುದಲ್ಲದೆ ಮದುವೆಗೆ ಓಡಾಡಿದ ಮತ್ತು ಸಹಾಯ ಮಾಡಿದವರಿಗೆಲ್ಲ ಅಲ್ಪಸ್ವಲ್ಪವಾದರೂ ಸಿಕ್ಕಬೇಕು. ಉಂಡೆ ಚಕ್ಕುಲಿಗಳನ್ನು ವಿತರಣೆಯಾಗಿ ಕೊಡುವ ಜವಾಬ್ದಾರಿಯನ್ನು ನಂಜಮ್ಮ ಆಕೆಯ ಮೇಲೆ ಹಾಕಿದ್ದಳು. ಈಗ ಚೆನ್ನಿಗರಾಯರು ಕೇಳಿದರು: ‘ತಿಂಡಿ ಮನೆಯ ಬೀಗದ ಕೈನ ಅವ್ಳು ನನ್ನ ಕೈಲಿ ಯಾಕೆ ಕೊಟ್ಟಿಲ್ಲ?’ +ಈಗ ನಂಜಮ್ಮ ಮಾತನಾಡಿದಳು: ‘ಅದೆಲ್ಲ ನೋಡಿ ಕೊಡೂದು ಹೆಂಗಸರ ಕೆಲಸ. ಬೀಗದ ಕೈ ಇಟ್ಕಂಡು ನೀವೇನು ಮಾಡ್ತೀರಾ?’ +‘ಯಜಮಾನ ನಾನು .ಅದು ನನ್ನ ಕೈಲಿರಬೇಕು.’ +ನಂಜಮ್ಮ ಬೇಡವೆಂದರೂ ಮೇಷ್ಟರು ಹೋಗಿ ತಮ್ಮ ಹೆಂಡತಿಯ ಕೊರಳಿನಲ್ಲಿದ್ದ ಬೀಗದ ಕೈ ತಂದು ಶ್ಯಾನುಭೋಗರಿಗೆ ಕೊಟ್ಟರು. ಅವರು ಹೋಗಿ ಕೋಣೆಯ ಬಾಗಿಲು ತೆಗೆದು, ಅಲ್ಲಿಯೇ ಇದ್ದ ಒಂದು ಹುಲಿಕಡ್ಡಿಯ ಹಿಂಡೂ ಕುಕ್ಕೆಯ ಭರ್ತಿ ಉಂಡೆ, ಚಕ್ಕುಲಿ, ಮೊದಲಾಗಿ ತುಂಬಿಕೊಂಡು ಅದನ್ನು ಎಲ್ಲರೆದುರಿಗೇ ಹೊತ್ತು ತಂದು ಶ್ಯಾನುಭೋಗಿಕೆಯ ದೊಡ್ಡ ಪೆಟಾರಿಯಲ್ಲಿಟ್ಟು ಅದಕ್ಕೆ ಬೀಗ ಹಾಕಿಕೊಂಡರು. ‘ಇದ್ಯಾಕೋ ಚಿನ್ನಯ್ಯಾ?’-ಅಯ್ಯಾಶಾಸ್ತ್ರಿಗಳು ಕೇಳಿದುದಕ್ಕೆ, ‘ಮದುವೆಯಾದಮ್ಯಾಲೆ ನಂಗೆ ತಿನ್ನಕ್ಕೆ ಬೇಕು ಕಣ್ರಿ’ ಎಂದು ಹೇಳಿ, ಮತ್ತೆ ಒಳಗೆ ಹೋಗಿ ತಮ್ಮ ಮೊದಲನೆಯ ಪಾಯಿಂಟನ್ನು ಹಿಡಿದು ಕುಳಿತರು: ‘ನಂಗೆ ಕಲಾಪತ್ತಿನ ಪಂಚೆ ಯಾಕೆ ತರಲಿಲ್ಲ?’ +‘ನೋಡಿ, ಒಟ್ಟಿನಲ್ಲಿ ಇಷ್ಟು ದುಡ್ಡು ಖರ್ಚಾಗಿದೆ. ನಾನೇನೂ ಹೊಸ ಸೀರೆ ತಗಂಡಿಲ್ಲ. ನಿಮಗೆ ಅಷ್ಟು ದೊಡ್ಡ ಪಂಚೆ ಎಲ್ಲಿ ತರಲಿ?’ +‘ಹಾಗಾದ್ರೆ ನಾನು ಹಸೆ ಮೇಲುಕ್ಕೆ ಬರುಲ್ಲ.’ +ಇಟ್ಟ ಲಗ್ನ ಸಾಧಿಸಬೇಕಾದುದರಿಂದ ಗಂಡು ಕರೆಯಲು ಇನ್ನೂ ಯಾಕೆ ಬಂದಿಲ್ಲವೆಂದು ಗಂಡಿನ ಕಡೆಯ ಪುರೋಹಿತರು ಹೇಳಿಕಳಿಸಿದರು. ಗಂಡಿನವರನ್ನೆಲ್ಲ ಮೇಷ್ಟರ ಮನೆಯಲ್ಲಿ ಇಳಿಸಿದ್ದರು. ಇಲ್ಲಿ ಕನ್ಯೆಯ ಯಜಮಾನರೇ ಹೀಗೆ ಮುರಿತು ಕೂತಿದ್ದಾರೆ. ಇಲ್ಲಿಯ ಶಾಸ್ತ್ರ ಮುಗಿಯದೆ ಗಂಡು ಕರೆಯಲು ಹೋಗುವುದು ಹೇಗೆ? ಮೇಷ್ಟರ ಸಮಾಧಾನ ನಡೆಯಲಿಲ್ಲ. ಮಾದೇವಯ್ಯನವರು ಬಂದರು. ಅವರ ಕೈಲೂ ಆಗಲಿಲ್ಲ. ಪುರೋಹಿತರು ಒಂದು ಬಾಯಿಮಾತು ಆಡಿದರೂ, ಈ ತಮಾಷೆ ಅವರಿಗೂ ಮೋಜಿನದಾಗಿತ್ತು. ವಿಷಯ ತಿಳಿದ ದ್ಯಾವರಸಯ್ಯನವರು ಬಂದರೂ ಪ್ರಯೋಜನವಾಗಲಿಲ್ಲ. ಬಾಗಿಲು ಹತ್ತಿರ ಕುಳಿತಿದ್ದ ಗುಂಡೇಗೌಡರು ತಮ್ಮ ಕೈದೊಣ್ಣೆ ಎತ್ತಿಕೊಳ್ಳುತ್ತಿದ್ದರು. ಆದುದರಿಂದ ಇವರು ಇನ್ನೂ ಮುರಿತುಕೊಂಡಾರೆಂಬ ಭಯದಿಂದ ನಂಜಮ್ಮ ಗೌಡರನ್ನು ಸುಮ್ಮನಾಗಿಸಿದಳು. ಅದುವರೆಗೂ ಸುಮ್ಮನಿದ್ದ ಅಪ್ಪಣ್ಣಯ್ಯ, ‘ಲೋ, ಚಿನ್ನಯ್ಯಾ, ಸುಮ್ನೆ ಎದ್ದು ಹಸೆ ಮ್ಯಾಲುಕ್ಕೆ ನಡೀತೀಯೋ ನಿಂಗೆ ಹಿಡ್ಕಂಡು ಎರಡು ಮಡಗಬೇಕೋ?’ ಎಂದು ಕೇಳಿಬಿಟ್ಟ. +ಈ ಬೋಳೀಮಗ ನನ್ನ ಹೀಗನ್‌ಭೌದೆ? ಹಿರಿಯಣ್ಣ ಅಂದ್ರೆ ತಂದೆ ಸಮಾನ. ಅವ್ನು ನನ್ನ ಕಾಲು ಹಿಡ್ಕಂಡು ತಪ್ಪಾಯ್ತು ಅನ್‌ಬೇಕು’-ಚೆನ್ನಿಗರಾಯರು ಇನ್ನೊಂದು ಕರಾರು ಸೇರಿಸಿದರು. +‘ಅಪ್ಪಣ್ಣಯ್ಯ, ನೀವು ಸುಮ್ನಿರಿ’-ನಂಜಮ್ಮ ಸಮಾಧಾನ ಹೇಳಿ ಅವನನ್ನು ಸುಮ್ಮನೆ ಮಾಡಿದಳು. ಆದರೆ ಗಂಗಮ್ಮ ಬಾಯಿ ಹಾಕಿ, ‘ಮನೆ ಯಜಮಾನ, ಅವ್ನಿಗೆ ಕಲಾಪತ್ತಿನ ಪಂಚೆ ಇಲ್ದೆ ಅದು ಹ್ಯಾಗೆ ಧಾರೆ ಎರೀತಾನೆಯೇ? ನಿಂಗೆ ಅಷ್ಟು ಗೊತ್ತಾಗ್‌ಬ್ಯಾಡ್ವೆ? ಈಗಲೂ ಒಂದು ಜೊತೆ ಬ್ಯಾಗ ತರ್ಸಿಕೊಡು’ ಎಂದಳು. +ತಮ್ಮನ್ನು ಅನುಮೋದಿಸುವ ಒಬ್ಬರು ಸಿಕ್ಕಿದುದೇ ತಡ, ಚೆನ್ನಿಗರಾಯರು ಗಟ್ಟಿಯಾದರು: ‘ಹೂಂ, ಈಗಲೂ ತಿಪಟೂರಿಗೆ ಯಾರನಾದ್ರೂ ಕಳ್ಸಿ ತರಿಸಿಕೊಡು. ಅಲ್ಲೀತಂಕ ನಾನು ಇಲ್ಲೇ ಕೂತಿರ್ತೀನಿ.’ +‘ಬಿಚ್ಚೇ ದುಡ್ಡ, ಪೆಟ್ಟಿಗೇಲಿಟ್ಕಂಡು ಬೀಗದ ಕೈನ ಸೊಂಟಕ್ಕೆ ಸಿಗಹಾಕ್ಕಂಡಿದೀಯಲ್ಲಾ’-ಅತ್ತೆ ಗಂಗಮ್ಮ ಸವಾಲು ಹಾಕಿದಳು. ಅದು ತಮ್ಮ ಪರವೇ ಆಡಿದ ಮಾತು ಎಂಬುದು ಚೆನ್ನಿಗರಾಯರಿಗೆ ತಿಳಿಯದೆ ಇರಲಿಲ್ಲ. +ರೇಗಿದರೆ ಕೆಲಸ ಕೆಡುತ್ತದೆ. ಆದರೆ ಯಾವ ಉಪಾಯವೂ ನಡೆಯುತ್ತಿಲ್ಲ. ‘ಮದುವೆಯಾದ ತಕ್ಷಣ ತಿಪಟೂರಿಗೆ ಹೋಗಿ ಖಂಡಿತ ಪಂಚೆ ತಂದುಕೊಡ್ತೀನಿ’-ಎಂದು ನಂಜಮ್ಮ ದೇವರ ಮೇಲೆ ಆಣೆ ಹಾಕಿದರೂ ಯಜಮಾನರು ಒಪ್ಪಲಿಲ್ಲ. ಪಂಚೆ ತಮಗೆ ಈಗಲೇ ಬೇಕು. ಅವರದು ಒಂದೇ ಹಟ. ನಂಜಮ್ಮನಿಗೆ ಏನೂ ತಿಳಿಯಲಿಲ್ಲ. ಸುಮ್ಮನೆ ಒಂದು ಮೂಲೆಗೆ ಹೋಗಿ ಕಣ್ಣೀರು ಒರೆಸಿಕೊಳ್ಳುತ್ತಾ ನಿಂತುಬಿಟ್ಟಳು. ಹೊರಗೆ ಧಾರೆ ಮಂಟಪದ ಅಂಗಳದಲ್ಲಿ ಕೂತಿದ್ದ ಮಾದೇವಯ್ಯನವರಿಗೆ ವಿಷಯ ತಿಳಿದಿತ್ತು. ಅವರು ಎದ್ದು ತಮ್ಮ ಗುಡಿಗೆ ಹೋಗಿ ಬಂದು ಇವರನ್ನು ಹೊರಕ್ಕೆ ಕೂಗಿ ಹೇಳಿದರು: ‘ಚಿನ್ನಯ್ಯಾ, ಇಪ್ಪತ್ತು ರೂಪಾಯಿ ಐತೆ. ಇದ ತಗಂಡು ಮಡೀಕಳಿ. ಪಂಚೆ ಆಮ್ಯಾಲೆ ತರೂರಂತೆ.’ +ಹೊರಗೆ ಬಂದ ಶ್ಯಾನುಭೋಗರು ಎಂದರು: ‘ನಂಗೆ ದುಡ್ಡು ಬ್ಯಾಡಕಣ್ರಿ, ಪಂಚೇನೇ ಬೇಕು’ +ದ್ಯಾವರಸಯ್ಯನವರು ನಂಜಮ್ಮನನ್ನು ಬೇರೆಯಾಗಿ ಕರೆದು ಹೇಳಿದರು: ‘ಅಮ್ಮಾ, ಒಂದು ಕೆಲ್ಸ ಮಾಡು. ಗಂಡಿಗೆ ಅಂತ ತಂದಿರೂ ಪಂಚೇನ ಇವ್ರಿಗೆ ಕೊಟ್ಟುಬಿಡು. ನಾವು ಗಂಡಿಗೆ ಓದಿಸುಕ್ಕೆ ಒಂದು ಜೊತೆ ರಾಜಾಮಿಲ್ ಮಲ್ಲುಪಂಚೆ ತಂದಿದೀವಿ. ಅದನ್ನ ಕೊಡ್ತೀನಿ. ಅದುನ್ನೇ ಗಂಡಿಗೆ ಕೊಡು. ನೀವು ಇಂಥದು ಯಾಕೆ ತಂದ್ರಿ ಯಾಕೆ ಕೊಟ್ರಿ ಅಂತ ಅವನು ಕೇಳೂ ಹುಡುಗನಲ್ಲ.’ +“ಆದ್ರೆ ಇವರ ಬುದ್ಧಿ ನೋಡಿ ಮಾವಯ್ಯ. ಹಾಗೆಯೇ ಮಾಡ್‌ಭೌದು. ನಮಗಾದರೂ ಮರ್ಯಾದೆ ಬ್ಯಾಡವೇ. ಮುಂದೆ ಒಂದಲ್ಲ ಒಂದು ದಿನ ಅವರು ನಮ್ಮ ಹುಡುಗೀನ, ‘ಬಿಳೀಪಂಚೇಲಿ ಧಾರೆ ಎರೆದು ಕೊಟ್ರು ನಿಮ್ಮನೇಲಿ’ ಅಂದ್ರೆ ಅವ್ಳಿಗಾದ್ರೂ ಪೆಚ್ಚಾಗಬಾರ್ದು.” +‘ಅಮ್ಮಾ, ಅವ್ನು ಹಾಗನ್ನೋ ಸ್ವಭಾವದೋನಲ್ಲ. ಅಕಸ್ಮಾತ್ ಅಂದ್ರೂ ಏನು ಮಾಡುಕ್ಕಾಗುತ್ತೆ? ಸಹಿಸ್ಕಾಬೇಕು. ನಿನ್ನ ಗಂಡನ ವಿಷಯ ಎಲ್ಲ ನಾನು ಅವ್ನಿಗೆ ಹೇಳಿದೀನಿ. ಪ್ರಪಂಚದಲ್ಲಿ ಎಂಥೆಂಥೋರೋ ಇರ್ತಾರೆ. ಈಗ ಇದೊಂದೇ ದಾರಿ. ನಾನು ಹೇಳ್ದಾಗೆ ಮಾಡು.’ +ನಂಜಮ್ಮ ಹೋಗಿ, ಗಂಡಿಗೆಂದು ಇಟ್ಟಿದ್ದ ಪಂಚೆಯನ್ನು ತಂದು ಯಜಮಾನರ ಮುಂದೆ ಇಟ್ಟು-‘ಏಳಿ ಇದ ಉಟ್ಕಳಿ’ ಎಂದಳು. +‘ಒಂಟಿ ಇದೆಯೋ ಜೊತೆ ಇದೆಯೋ?’-ಅವರು ಕೇಳಿದರು. +‘ಜೊತೆ ಇದೆ, ಹೆದರ್ಕೋಬ್ಯಾಡಿ.’ +ಚೆನ್ನಿಗರಾಯರಿಗೆ ತೃಪ್ತಿಯಾಯಿತು. ಎದ್ದು ಒಂದನ್ನು ಉಟ್ಟು ಇನ್ನೊಂದನ್ನು ಲಕ್ಷಣವಾಗಿ ಹೊದೆದುಕೊಂಡರು. ಈಗ ಈ ಮೂರು ಕೆಲಸಗಳು ಒಂದೇ ಪೆಟ್ಟಿಗೆ ಆದುವು. ಹೆಂಡತಿಯ ಮೇಲಿನ ಸೇಡು ತೀರಿತು; ಉಡಲು ಕಲಾಪತ್ತಿನ ಪಂಚೆ ಬಂತು; ಮದುವೆ ಮುಗಿಯುವ ಹೊತ್ತಿಗೆ ಇವಳು ತಮಗೆಂದು ಉಂಡೆ ಚಕ್ಕುಲಿಗಳನ್ನು ಉಳಿಸುತ್ತಿದ್ದಳೋ ಇಲ್ಲವೋ, ಒಂದು ಹಿಂಡುವ ಕುಕ್ಕೆ ತುಂಬ ಅವೂ ಸಿಕ್ಕಿದವು. ವಿಜೇತಭಾವದಿಂದ ಅವರು ಹಸೆಮಣೆಯ ಮೇಲಕ್ಕೆ ಬಂದರು. +ಹೆಣ್ಣಿನ ತಂದೆ ಹೊಸ ಕಲಾಪತ್ತಿನ ಪಂಚೆ, ಗಂಡು ಸಾದಾ ಬಿಳಿಯ ಪಂಚೆ ಉಟ್ಟ ಧಾರೆಯು ಮತ್ತೆ ಯಾವ ವಿಘ್ನವೂ ಇಲ್ಲದಂತೆ ನೆರೆವೇರಿತು. ಧಾರೆಯ ಸಮಯಕ್ಕೆ ಸರಿಯಾಗಿ ಸೈಕಲ್ ಮೇಲೆ ಬಂದ ಶೇಕ್‌ದಾರರು ವರ ಮತ್ತು ವರನ ಮಾವನ ಪಂಚೆಗಳನ್ನು ನೋಡಿ, ನಂತರ ದ್ಯಾವರಸಯ್ಯನವರನ್ನು ಕರೆದು ವಿಚಾರಿಸಿದರು ಒಳವಿಷಯ ಹೇಳದೆ ಅವರು, ‘ಅದು ಚೆನ್ನಿಗರಾಯರ ಮದುವೆಯ ಹಳೆಯ ಪಂಚೆ’ ಎಂದು ಹೇಳಿ ಮುಚ್ಚಿ ಹಾಕಿದರು. +ಧಾರೆಯ ಸಮಯಕ್ಕೆ ಸರಿಯಾಗಿ ಮನೆಯ ಮುಂದೆ ಒಂದು ಕಮಾನುಗಾಡಿ ಬಂದು ನಿಂತಿತು. ಅದರಿಂದ ಇಳಿದ ಅಕ್ಕಮ್ಮನನ್ನು ಕಂಡ ರಾಮಣ್ಣ ಓಡಿ ಹೋಗಿ ತನ್ನ ಅಮ್ಮನಿಗೆ ಹೇಳಿದ. ಅದುವರೆಗೂ ಒಂದು ವಿಧವಾದ ಮೂಕವೇದನೆ ಅನುಭವಿಸುತ್ತಿದ್ದ ನಂಜುವಿಗೆ ಎಷ್ಟೋ ಸಮಾಧಾನ. ನೇರವಾಗಿ ಒಳಗೆ ಬಂದ ಅಕ್ಕಮ್ಮ, ‘ನೀನು ಬಿಲ್‌ಕುಲ್ ಹೋಗಕೂಡದು ಅಂತ ಕಂಟಿಯೂ ಕಲ್ಲೇಶನೂ ಅಂದ್ರು. ನನ್ನ ಮರಿಮಗಳ ಮದುವೆ, ನಾನು ಹೋಗೇಹೋಗ್ತೀನಿ ಅಂತ ಹಟ ಮಾಡಿ ಬಂದುಬಿಟ್ಟೆ. ಆಗಲೇ ಧಾರೆಯಾಗ್ತಿದೆ. ಕ್ವಾ, ಇದುನ್ನ ಪಾರ್ವತಿಗೆ ಓದ್ಸು’ ತನ್ನ ಬಾಳೆಯಕಾಯಿಯಿಂದ ತೆಗೆದ ಒಂದು ಚಿನ್ನದ ಶೇವಂತಿಗೆ ಹೂವನ್ನು ಕೊಟ್ಟಳು. ಅದು ಅಕ್ಕಮ್ಮ ಮುತ್ತೈದೆಯಾಗಿದ್ದಾಗ ಇಟ್ಟುಕೊಳ್ಳುತ್ತಿದ್ದ ಒಡವೆ. ಇದುವರೆಗೂ ಕಳೆಯದೆ ಹೇಗೋ ಇಟ್ಟುಕೊಂಡಿದ್ದಳು. ಒಳಗೆ ಹೋಗಿ ನಾರಿನ ಕೆಂಪು ಸೀರೆ ಉಟ್ಟು ಕೂತುಕೊಂಡಳು. ಅವಳಂತೆಯೇ ಮಡಿಸೀರೆ ಉಟ್ಟಿದ್ದ ಬೀಗಿತ್ತಿ ಗಂಗಮ್ಮ ಅವಳನ್ನು ಮಾತನಾಡಿಸಲಿಲ್ಲ. ಅಕ್ಕಮ್ಮನೂ ಸುಮ್ಮನೆ ಇದ್ದಳು. ಬಾಗಿಲ ಹತ್ತಿರದಿಂದಲೇ ಧಾರೆಯನ್ನು ನೋಡಿದ ಅವಳು, ನಂಜು ಯಾಕೋ ಒಳಗೆ ಬಂದಾಗ ಅವಳೊಬ್ಬಳೇ ಕೇಳುವಂತೆ ಹೇಳಿದಳು: ‘ನೀನು ಒಳ್ಳೇ ಕೆಲ್ಸಾನೇ ಮಾಡಿದೆ. ಈ ಹುಡುಗ ರಾಜಕುಮಾರ ಇದ್ದಹಾಗಿದಾನೆ. ಇಂಕ್ಲೀಷ್ ಇಸ್ಕೂಲ್ ಮೇಷ್ಟ್ರು ಅಂದ್ರೇನು ಕಮ್ಮಿ ಕೆಲ್ಸವೇ? ಇನ್ನೂ ಚಿಕ್ಕ ವಯಸ್ಸು. ಒಂದು ಬಲಮಗು ಇದ್ರೇನಂತೆ?’ +ಧಾರೆಯಾಯಿತು. ಸೂರ್ಯನಾರಾಯಣನ ಮಗು ರತ್ನ ವಿಶ್ವನ ಜೊತೆ ಆಡುತ್ತಿತ್ತು. ರತ್ನ ಈಗ ಹೇಗೂ ವಿಶ್ವನಿಗೆ ಅಕ್ಕನ ಮಗಳೇ ಆಗುತ್ತಾಳೆ. ‘ಅವರಿಬ್ರಿಗೂ ಈಗಲೇ ಮದುವೆ ಮಾಡಿಬಿಡಾಣಾ’-ಎಂದು ಮೇಷ್ಟರು ವೆಂಕಟೇಶಯ್ಯನವರು ಹೇಳಿದಾಗ ವಿಶ್ವ ನಾಚಿಕೊಂಡು ಮಗುವಿನ ಜೊತೆಯನ್ನೇ ಬಿಟ್ಟುಬಿಟ್ಟ. ‘ಇವತ್ತೇ ಮಾಡಿಬಿಡಿ. ಅವಳನ್ನ ಇಲ್ಲಿಯೇ ಬಿಟ್ಟುಹೋಗ್ತೀನಿ’-ಸೂರ್ಯನಾರಾಯಣ ಎಂದ. +ನಾಗೋಲಿ ನಾಳೆಯ ದಿನವಿತ್ತು. ಧಾರೆಯ ಸಂಜೆ ಮೇಷ್ಟರು, ಅವರ ಹೆಂಡತಿ, ಇಬ್ಬರೂ ನಂಜಮ್ಮ ಒಬ್ಬಳನ್ನೇ ಪ್ರತ್ಯೇಕವಾಗಿ ಕರೆದು ಕೇಳಿದರು: ‘ನಂಜಮ್ನೋರೆ, ನೀವು ಅನ್ಯಥಾ ತಿಳ್ಕೋಬ್ಯಾಡಿ. ಹುಡುಗಿ ದೊಡ್ಡೋಳಾಗಿದಾಳೆ ಅನ್ನೋದು ಗಂಡಿನೋರಿಗೆ ಹ್ಯಾಗೋ ಗೊತ್ತಾಗಿದೆ.’ +ನಂಜಮ್ಮ ಇದನ್ನು ಕೇಳಿ ಗಾಬರಿಯಾದಳು. ಮೇಷ್ಟರು ಅಂದರು: ‘ಗಾಬರಿಯಾಗೂ ಕಾರಣವಿಲ್ಲ. ಸೂರ್ಯನಾರಾಯಣ ತಿಪಟೂರು ತುಮಕೂರುಗಳಂಥ ದೊಡ್ಡ ಊರು ಕಂಡೋರು. ಟ್ರೈನಿಂಗಿಗೆ ಅಂತ ಮೈಸೂರಿಗೆ ಕೂಡ ಒಂದು ವರ್ಷ ಹೋಗಿದ್ದರು. ದೊಡ್ಡ ಊರಿನಲ್ಲೆಲ್ಲ ಹದಿನಾರು ಹದಿನೇಳು ಆದ ಮೇಲೆಯೇ ಮದುವೆ ಮಾಡೂದು. ನಾಗೋಲಿಯಾದ ಮಾರನೆಯ ದಿನ ಪ್ರಸ್ತಾನೂ ಮಾಡಿ ಕಳುಸ್ತಾರೆ. ಬೆಂಗಳೂರಲ್ಲಂತೂ ಚಪ್ಪರ, ಧಾರೆ, ನಾಗೋಲಿ, ಪ್ರಸ್ತ, ಎಲ್ಲಾನೂ ಒಂದೇ ದಿನ ಮಾಡ್ತಾರಂತೆ. ನಂಗೆ ಸೂರ್ಯನಾರಾಯಣನೇ ಹೇಳಿದ್ರು. ನಾಳೆ ನಾಗೋಲಿಯಾಗುತ್ತೆ. ನಾಳೆ ರಾತ್ರಿಗೇ ಪ್ರಸ್ತಾನೂ ಮಾಡಿ ಜೊತೇಲಿ ಹುಡುಗೀನೂ ಕಳಿಸಿಕೊಟ್ರೆ ಕರ್‍ಕೊಂಡು ಹೋಗ್ತಾರೆ. ಮತ್ತೆ ನೀವು ಅದುಕ್ಕೆ ಅಂತ ದುಡ್ದು ಹೊಂಚಬೇಕು. ಅನ್ನದ ಖರ್ಚೂ ಆಗುತ್ತೆ. ಈಗ ಇದರ ಜೊತೇಲೇ ಅತ್ಲಗೆ ಮುಗಿಸಿದರೆ ಒಳ್ಳೇದು. ಬೇಕಾದ್ರೆ ಕಂಬನಕೆರೆಗೆ ಹೋಗಿ ನಾಳೆ ನಾನು ಒಂದು ಜೊತೆ ಹಾಸಿಗೆ ಹೊದಿಕೆ ತರ್ತೀನಿ.’ +ಎಂದರೆ ಮಗಳನ್ನು ತಕ್ಷಣವೇ ತನ್ನಿಂದ ಕಳಿಸಿಕೊಡಬೇಕೆಂದು ನಂಜಮ್ಮನಿಗೆ ಕರುಳು ಕೊರೆಯಿತು. ಅದಕ್ಕಿಂತ ಹೆಚ್ಚಾಗಿ ಮನಸ್ಸಿನಲ್ಲಿ ಬೇರೊಂದು ಕಾರಣದ ಭಯವೂ ಉಂಟಾಯಿತು. ಹುಡುಗಿ ದೊಡ್ಡವಳಾಗಿರುವಳೆಂದು ಅವಳು ಯಾರಲ್ಲಿಯೂ ಹೇಳಿರಲಿಲ್ಲ. ಈ ಜೋಯಿಸರೋ ಅಥವಾ ಮತ್ತೆ ಯಾರೋ ಗಂಡಿನ ಕಡೆಯವರಿಗೆ ತಿಳಿಸಿರಬಹುದು. ಅದೃಷ್ಟಕ್ಕೆ ಆತ ಇದನ್ನು ತಪ್ಪೆಂದು ಭಾವಿಸಿ ಜಗಳವಾಡಲಿಲ್ಲ. ಈಗ ತಾನು ಪ್ರಸ್ತ ಮಾಡಿಕೊಡಲು ಒಪ್ಪಿಕೊಂಡರೆ ಹುಡುಗಿ ನೆರೆದಿದ್ದಳೆಂದು ಒಪ್ಪಿದಂತೆ. ಅದನ್ನು ಇಷ್ಟು ದಿನ ಮುಚ್ಚಿಟ್ಟಿದ್ದಳೆಂದು ಎಲ್ಲರಿಗೂ ತಿಳಿಯುತ್ತದೆ. ಹಾಗೆ ತಿಳಿದರೆ ಏನು?-ಎಂಬುದಕ್ಕಿಂತ, ತಿಳಿಯಬಾರದು ಎಂಬ ಹಳೆಯ ಭಯಪೂರಿತ ನಿಶ್ಚಯವೇ ಅವಳ ಪ್ರಜ್ಞೆಯಲ್ಲಿ ಈಗಲೂ ನಿಂತುಬಿಟ್ಟಿತು. ಈಗ ಇದ್ದಕ್ಕಿದ್ದಹಾಗೆಯೇ ಅದನ್ನು ಬದಲಾಯಿಸುವುದು ಸಾಧ್ಯವಾಗಲಿಲ್ಲ. ಮದುವೆಯಾದ ಎರಡು ಮೂರು ತಿಂಗಳ ನಂತರ ಒಂದು ಸಲ ಪಾರ್ವತಿ ಮುಟ್ಟಾದಾಗ, ಮೈನೆರೆದಳೆಂದು ಅವಳನ್ನು ಹೊರಗೆ ಕೂರಿಸಿ ವಾಡಿಕೆಯಂತೆ ನಾಲ್ಕು ಮುತ್ತೈದೆಯರೆದುರು ಆರತಿ ಮಾಡಿ, ಹದಿನಾರನೆಯ ದಿನ ಪ್ರಸ್ತ ಮಾಡಿ ಕಳಿಸಬೇಕೆಂಬುದು ಅವಳ ವ್ಯಾವಹಾರಿಕ ವಿವೇಕವಾಗಿತ್ತು. ಈಗ ಇದ್ದಕ್ಕಿದ್ದಹಾಗೆಯೇ ಅದನ್ನು ಬದಲಾಯಿಸಲಾರದೆ ಎಂದಳು: ‘ನೋಡಿ, ಹುಡುಗಿ ದೊಡ್ಡೋಳಾಗಿರೋದು ನಿಜ. ದೊಡ್ಡದೊಡ್ಡ ಊರ್ನಲ್ಲಿ ಹಾಗೆ ಮಾಡ್ತಾರೆ ಅಂತ ನಾವೂ ಮಾಡಿದ್ರೆ ಕಷ್ಟ. ಈ ಊರಿನ ಜೋಯಿಸರುಗಳ ವಿಚಾರ ನಿಮಗೇ ಗೊತ್ತಿದೆ. ನಮ್ಮ ಮನೆಯೋರ ಬುದ್ಧಿಯೂ ನಿಮಗೆ ಗೊತ್ತು. ಅವರೂ ಹುಚ್ಚುಹುಚ್ಚಾಗಿ ಆಡ್‌ಭೌದು. ನಾನು ಅವರಿಗೂ ಹೇಳಿಲ್ಲ. ಇನ್ನು ಮೂರು ತಿಂಗಳ ಮೇಲೇ ಮಾಡಿಕೊಡಾಣ.’ +‘ಹಾಗೇ ಮಾಡಿ. ಸೂರ್ಯನಾರಾಯಣ ಬಲವಂತ ಏನೂ ಮಾಡ್ಲಿಲ್ಲ. ಸುಮ್ಮನೆ ನಿಮಗೆ ತಾನೆ ಯಾಕೆ ಡಬ್ಬಲ್ ಖರ್ಚು ಅಂತ ಹೇಳಿದ್ರು. ಅಲ್ದೆ ಅವರಿಗೂ ಮಗು ನೋಡ್ಕಂಡು ಇನ್ನೂ ಮೂರು ತಿಂಗಳು ಅನ್ನ ಬೇಯಿಸ್ಕಂಡು ಸ್ಕೂಲಿಗೂ ಹೋಗೂದು ಅಂದ್ರೆ ಕಷ್ಟ.’ +‘ಮಗೂನ ನಮ್ಮನೇಲೇ ಬಿಟ್ಟು ಹೋಗಿ ಅಂತ ಹೇಳಿ.’ +ಇಲ್ಲಿಯ ಸನ್ನಿವೇಶವನ್ನು ವಿವರಿಸಿದಾಗ ಸೂರ್ಯನಾರಾಯಣ ಒಪ್ಪಿದ. ಅವನಿಗೆ ಹಳ್ಳಿಯ ಸ್ಥಿತಿ ಚೆನ್ನಾಗಿ ಗೊತ್ತು. ಮದುವೆಯಾದ ತಕ್ಷಣ ಮಗುವನ್ನು ಇಲ್ಲಿ ಬಿಟ್ಟು ಹೋಗಲು ಮನಸ್ಸೂ ಬರಲಿಲ್ಲ. ಅದು ವ್ಯಾವಹಾರಿಕವಾಗಿ ಚನ್ನಲ್ಲವೆಂದು ನಿರ್ಧರಿಸಿದ. +ಮರುದಿನ ನಾಗೋಲಿಯಾಗಿ ಹೆಣ್ಣು ಒಪ್ಪಿಸಿಕೊಡುವಾಗ ನಂಜಮ್ಮ ಅಕ್ಕಮ್ಮರ ಸಂಗಡ ರಾಮಣ್ಣನೂ ಅಳುತ್ತಿದ್ದ. ಅವರಿಬ್ಬರೂ ಜೊತೆಯಲ್ಲಿ ಬೆಳೆದವರು. ಒಬ್ಬರಿಗೊಬ್ಬರಿಗೆ ತುಂಬ ಅಂತಃಕರಣ ಬೆಳೆದಿತ್ತು. ಎಲ್ಲ ವಿಷಯವೂ ಗೊತ್ತಿದ್ದರೂ ಅವನು ತಾಯಿಯ ಹತ್ತಿರ ಹೋಗಿ-‘ಅಮ್ಮ, ಪಾರ್ವತಿ ನಮ್ಮನೆಯಿಂದ ಹೋಗಿಬಿಡ್ತಾಳಾ? ಎಂದ. +‘ಹೆಣ್ಣುಮಕ್ಕಳಲ್ವೆ ಮಗು?’-ಅಮ್ಮ ಸಮಾಧಾನ ಹೇಳಿದಳು. +ಇದ್ದಕ್ಕಿದ್ದಹಾಗೆಯೇ ಅಪ್ಪಣ್ಣಯ್ಯನಿಗೂ ಅಳು ಬಂದುಬಿಟ್ಟಿತು. ಅವನು ಇವರ ಮನೆಗೆ ಹೆಚ್ಚಾಗಿ ಬಂದೇ ಇರಲಿಲ್ಲ. ಪಾರ್ವತಿಯೊಡನೆ ಹೆಚ್ಚಾಗಿ ಮಾತೂ ಆಡಿಲ್ಲ. ಅವಳು ಸೊಪ್ಪಿನ ಮಡಿಗೆ ನೀರು ಹುಯ್ಯುತ್ತಿದ್ದಾಗ, ‘ನಂಗೊಂದಿಷ್ಟು ದಂಟಿನ ಸೊಪ್ಪು ಕೊಡ್ತೀ ಏನೇ?’ ಎಂದು ಒಂದೊಂದು ದಿನ ಕೇಳುತ್ತಿದ್ದ. ‘ನಿಮಗೆಷ್ಟು ಬೇಕೋ ಕಿತ್ಕಳಿ ಚಿಕ್ಕಪ್ಪ’-ಅವಳು ಹೇಳುತ್ತಿದ್ದಳು. ಇದಕ್ಕಿಂತ ಹೆಚ್ಚಾಗಿ ಈ ಚಿಕ್ಕಪ್ಪ ಮಗಳ ನಡುವೆ ಮಾತುಕತೆ ಇರಲಿಲ್ಲ. ಈಗ ಅದೇನೋ, ತಾನಾಗಿಯೇ ಬಂದು ಮದುವೆಯ ಮನೆಯಲ್ಲಿ ಅವನು ಕೆಲಸ ಮಾಡುತ್ತಿದ್ದಾನೆ. ನಂಜಮ್ಮನನ್ನು ಬಿಟ್ಟರೆ ಕಳೆದ ನಾಲ್ಕು ದಿನದಿಂದ ಇಲ್ಲಿ ಹಗಲು ರಾತ್ರಿ ನಿದ್ರೆ ಇಲ್ಲದೆ ದುಡಿಯುತ್ತಿರುವವನು ಅವನೊಬ್ಬನೇ. ಏನೇನು ಮಾಡಬೇಕೆಂಬುದನ್ನು ಅತ್ತಿಗೆ, ಮೇಷ್ಟರ ಹೆಂಡತಿ, ಅಕ್ಕಮ್ಮ, ಒಂದೊಂದು ಸಲ ಜೋಯಿಸರು ಹೇಳುತ್ತಿದ್ದರು. ಅಡಿಗೆಯ ತಪ್ಪಲೆ ಎತ್ತಿ ಬಸಿಯುವುದರಿಂದ ಹಿಡಿದು ಎಲೆ ತೆಗೆದು ಗೋಮಯ ಹಾಕಿ ಗಂಡಿನ ಮನೆಯ ಹಂಡೆಗೆ ನೀರು ತುಂಬುವ ತನಕ, ದುಡ್ದು ತಿನ್ನುವ ಪರಿಚಾರಕನಿಗಿಂತ ಹೆಚ್ಚಾಗಿ ಮಾಡುತ್ತಿದ್ದ. ಹೆಣ್ಣು ಒಪ್ಪಿಸಿಕೊಟ್ಟ ಮೇಲೆ ಪಾರ್ವತಿ ಬಂದು ನಮಸ್ಕಾರ ಮಾಡಿದಾಗ ಅವನ ಕಣ್ಣಿನಿಂದ ನೀರು ತೊಟತೊಟನೆ ಅವಳ ತಲೆಯ ಮೇಲೆ ಬಿತ್ತು. +ಮರುದಿನ ಗಂಡಿನವರನ್ನು ಕಳಿಸುವಾಗ ಊರ ಹೊರಗೆ ಅಮ್ಮನ ಗುಡಿಯ ತನಕ ವಧೂವರರನ್ನು ಪರಸ್ಪರ ಕೈಹಿಡಿಸಿ ನಡೆಸಿಕೊಂಡು ಹೋದರು. ಮುಂದೆ ವಾಲಗದವರು. ಹಿಂದುಗಡೆ ಉಳಿದ ಎಲ್ಲರ ಜೊತೆಯಲ್ಲಿ ನಂಜಮ್ಮ ಮಗು ರತ್ನನನ್ನು ಎತ್ತಿಕೊಂಡು ಬರುತ್ತಿದ್ದಳು. ಗ್ರಾಮದೇವತೆಗೆ ಪೂಜೆಯಾಗಿ ನಮಸ್ಕಾರ ಮಾಡಿ ಗಾಡಿಯ ಹತ್ತಿರಕ್ಕೆ ಬಂದಮೇಲೆ ಹೆಂಡತಿಯ ಕೈಬಿಡುವ ಮುನ್ನ ಮೃದುವಾಗಿ ಹಿಸುಕಿ ಸೂರ್ಯನಾರಾಯಣ ಅವಳೊಬ್ಬಳಿಗೆ ಮಾತ್ರ ಕೇಳುವ ಹಾಗೆ-‘ಇನ್ನು ಮೂರು ತಿಂಗಳಿಗೆ ಬಂದು ಕರ್ಕಂಡು ಹೋಗ್ತೀನಿ’ ಎಂದ. ಕಂಪಿಸುವಂತೆ ಉಸಿರಾಡುತ್ತಾ ತಲೆ ತಗ್ಗಿಸಿ ನಿಂತಿದ್ದ ಪಾರ್ವತಿ ಏನೂ ಮಾತನಾಡಲಿಲ್ಲ. ಅವಳು ಏನಾದರೂ ಆಡುತ್ತಾಳೆಂದು ಅವನು ನಿರೀಕ್ಷಿಸಿಯೂ ಇರಲಿಲ್ಲ. +ಅವನು ಅತ್ತೆ, ಮಾವ, ಚಿಕ್ಕ ಮಾವ, ಪುರೋಹಿತರು, ವೆಂಕಟೇಶಯ್ಯ ಮೇಷ್ಟರು, ಮಾದೇವಯ್ಯನವರು ಮೊದಲಾಗಿ ಎಲ್ಲರಿಗೂ ನಮಸ್ಕಾರ ಮಾಡಿದ. ಅವನಿಗೂ ಮಾದೇವಯ್ಯನವರಿಗೂ ಇಷ್ಟರಲ್ಲಿಯೇ ಸ್ವಲ್ಪಮಟ್ಟಿನ ಪರಿಚಯ, ಅಲ್ಪಮಟ್ಟಿನ ಆತ್ಮೀಯತೆ ಬೆಳೆದಿತ್ತು. ಪಾರ್ವತಿ ಗಂಡಿನ ಕಡೆಯವರೂ ತಮ್ಮವರೂ ಆದ ದ್ಯಾವರಸಯ್ಯನವರಿಗೆ ಅವರ ಮನೆಯವರಿಗೆ ನಮಸ್ಕರಿಸಿದಮೇಲೆ ಅವರೆಲ್ಲ ಗಾಡಿ ಹತ್ತಿದರು. ತಿಮ್ಲಾಪುರಕ್ಕೆ ಹೋಗಿ ಅಲ್ಲಿ ಚಪ್ಪರ ಅಲುಗಿಸುವ ಶಾಸ್ತ್ರ ಮುಗಿಸಿಕೊಂಡು ಸೂರ್ಯನಾರಾಯಣ ಬಾಳೆಕೆರೆಗೆ ಹೋಗಬೇಕಾಗಿತ್ತು. +ಅಧ್ಯಾಯ ೧೩ +– ೧ – +ಮದುವೆ ಸಾಂಗವಾಗಿ ನೆರವೇರಿದುದಕ್ಕೆ ನಂಜಮ್ಮನಿಗೆ ಹೇಳತೀರದ ಸಂತೋಷ. ಅದಕ್ಕೆ ಸಹಾಯ ಮಾಡಿದವರನ್ನೆಲ್ಲ ಅವಳು ಒಂದೇಸಮನಾಗಿ ನೆನಸಿಕೊಂಡಳು. ಗಂಡಿನ ಕಡೆ ಹೆಚ್ಚು ಜನ ಬರದಿದ್ದುದರಿಂದ ಅಕ್ಕಿ ಬೇಳೆ ಮೆಣಸಿನಪುಡಿ ಮೊದಲಾಗಿ ಸಾಕಷ್ಟು ಸಾಮಾನುಗಳು ಉಳಿದವು. ಅದನ್ನು ಕಾಣುವಂತೆ ಇಟ್ಟು ಗಂಡನ ಕಣ್ಣಿಗೆ ಬಿದ್ದರೆ ದಿನಾ ಅನ್ನ ಸಾರುಗಳನ್ನೇ ಮಾಡೆಂದು ಪೀಡಿಸಿಯಾರು. ಹೇಗೂ ಮೂರು ತಿಂಗಳಿನಲ್ಲಿ ಪ್ರಸ್ತವಾಗಬೇಕು. ಅದಕ್ಕಿರಲಿ ಎಂದು ಎಲ್ಲವನ್ನೂ ಮುಚ್ಚಿಟ್ಟಳು. ಉಳಿದಿದ್ದ ಅರ್ಧ ಡಬ್ಬ ಎಣ್ಣೆಯನ್ನೂ ಮುಚ್ಚಳ ಹಾಕಿ, ಒಂದು ಕಡೆ ಕಾಣದಂತೆ ಇಟ್ಟಳು. ಪ್ರಸ್ತಕ್ಕೆ ಇನ್ನೆಲ್ಲ ಕೊಂಡರೆ ಒಟ್ಟು ಇಪ್ಪತ್ತು ರೂಪಾಯಿಯ ಸಾಮಾನು ಬೇಕು. ಹಾಸಿಗೆ ಹೊದಿಕೆ ಅಂತ ಒಂದು ಐವತ್ತು ಆದೀತು. ಮಗಳಿಗೆ ಕೊಟ್ಟು ಕಳಿಸಲು ಪಾತ್ರೆಗಳಿಗೆ ಏನು ಮಾಡುವುದು? ತನ್ನ ಅತ್ತೆ ಗಂಗಮ್ಮನ ಮನೆಯಲ್ಲಿ ತನ್ನ ಪಾಲಿನದೂ ಬೇಕಾದಷ್ಟು ಪಾತ್ರೆಗಳಿವೆ. ಆದರೆ ಅವರು ಏನೂ ಕೊಡುವವರಲ್ಲ. ಈಗ ಹೊಸದಾಗಿ ಕೊಳ್ಳಲು ದುಡ್ಡಿಲ್ಲ. ತನ್ನ ಮನೆಯಲ್ಲಿರುವುದರಲ್ಲೇ ಅಲ್ಪ ಸ್ವಲ್ಪ ಕೊಟ್ಟು ಕಳಿಸುವುದು. ಆಮೇಲೆ ಸಾಧ್ಯವಾದಾಗ ಒಂದಿಷ್ಟಿಷ್ಟು ಕೊಡುವುದು. ಪಾತ್ರೆ ಪರಟಿ ಕೊಡಲಿಲ್ಲವೆಂದು ಕುಕ್ಕು ಮಾತಾಡುವ ಗಂಡಲ್ಲ ಸೂರ್ಯನಾರಾಯಣ. +ಪಾರ್ವತಿ ಈಗ ಕೈತುಂಬ ಕರಿ ಬಳೆ ತೊಡುತ್ತಾಳೆ. ಕೊರಳಿಗೆ ಕರಿಮಣಿ. ಕಿವಿಗೆ ದೊಡ್ಡದಾದ ಬಿಳೀ ಕಲ್ಲಿನ ಓಲೆಗಳು. ನಾಗೋಲಿಯ ದಿನ ಚುಚ್ಚಿಸಿದ ಮೂಗಿಗೆ ಅವಳ ಗಂಡ ತಂದಿದ್ದ ಬಿಳೀಕಲ್ಲಿನ ಬೇಸರಿ. ಇನ್ನೂ ಹೊಸ ಮೂಗಾದುದರಿಂದ ಬೇಸರಿ ತೂಕವಾಗಿ ಕಾಣುತ್ತಿದೆ. ಅವಳ ಮುಖ ಇಷ್ಟು ಅಗಲವಾಗಿತ್ತೆಂದು ಓಲೆ ಬೇಸರಿಗಳನ್ನಿಡುವ ತನಕ ತಾಯಿ ನಂಜಮ್ಮನಿಗೇ ತಿಳಿದಿರಲಿಲ್ಲ. ಕಾಲಿಗೆ ಕಾಲುಂಗುರ ಸಹ. +‘ಪಾರ್ವತಮ್ಮ ಎಷ್ಟು ಚನ್ನಾಗಿ ಕಾಣುತ್ತೆ’- ಒಂದು ದಿನ ಇವರ ಮನೆಗೆ ಬಂದ ಸರ್ವಕ್ಕ ಹೇಳಿ, ‘ಹಸೀ ಮೈಯಿ, ಒಂದನ್ನೇ ಕೆರೆ ಗಿರೆ ತಾವಕ್ಕೆ ಕಳುಸ್‌ಬ್ಯಾಡಿ ನಂಜಮ್ಮಾರೆ’ ಎಂದು ಎಚ್ಚರ ಹೇಳಿದ್ದಳು. +‘ವಾಲೆ ಬೇಸರಿ ಇಟ್ಕಂಡ್‌ಮ್ಯಾಲೆ ಅಕ್ಕಯ್ಯ ತುಂಬ ಚನ್ನಾಗಿ ಕಾಣ್ತಾಳೆ. ಶೇಕ್‌ದಾರರ ಹೆಂಡ್ತಿ ಹಾಗೆ ಕೈಗೆ ಚಿನ್ನದ ಬಳೆ ಹಾಕ್ಕಂಡ್ರೆ ಇನ್ನೂ ಚನ್ನಾಗಿರುತ್ತೆ ಅಲ್ವೇನಮ್ಮ?’-ರಾಮಣ್ಣ ಎಂದುದಕ್ಕೆ ಅಮ್ಮ, ನೀನು ಶೇಕ್‌ದಾರ್ ಆದಾಗ ಅದನ್ನೂ ಮಾಡಿಸ್ಕೊಡಾಣ ಮಗು’ ಎಂದಳು. +ಪಾರ್ವತಿಗೂ ಅಷ್ಟೆ, ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡರೆ ಏನೋ ಹೊಸತನ ಕಾಣಿಸುವುದು. ಇನ್ನು ಎರಡು ಮೂರು ತಿಂಗಳಿಗೆ ತಾಯಿಯ ಮನೆ ಬಿಟ್ಟು ಹೋಗಬೇಕೆಂಬ ಅರಿವು ಬಂದು ತಕ್ಷಣ ಮ್ಲಾನಳಾಗುವಳು. ಒಂದು ದಿನ ಅಮ್ಮ ಹೇಳಿದಳು: ‘ಮಗು, ನಿನ್ನ ಗಂಡ ತುಂಬ ಒಳ್ಳೆಯೋರು. ಇಷ್ಟೊಂದು ಅನುಸರಿಸಿಕೊಂಡು ಯಾರು ತಾನೆ ಮದುವೆ ಮಾಡ್ಕತ್ತಿದ್ರು? ನಿಂಗೇನು ಅಡಿಗೆ ಊಟ ಮನೆಕೆಲ್ಸ ಯಲ್ಲಾ ಚನ್ನಾಗಿ ಬರುತ್ತೆ. ಆ ಮಗೂನ ಮಾತ್ರ ಭೇದಮಾಡದೆ ಚನ್ನಾಗಿ ನೋಡ್ಕ. ನಿನ್ನ ಗಂಡಂಗೂ ಸಂತೋಷವಾಗುತ್ತೆ. ತಾಯಿ ಸತ್ತ ತಬ್ಬಲಿ ಮಗು ಕಣ್ಣೀರು ಹಾಕಿದ್ರೆ ಪಾಪ ನಮಗೆಲ್ಲ ತಟ್ಟುತ್ತೆ.’ +‘ನಾನು ಹಾಗೆ ಮಾಡ್ತೀನೇನಮ್ಮ?’-ಮಗಳು ಕೇಳಿದಳು. +‘ಹೆಣ್ಣು ಮಗು ವಳ್ಳೇ ಚನ್ನಾಗಿದೆ. ಆಮ್ಯಾಲೆ ನಮ್ಮ ವಿಶ್ವಂಗೇ ಮದುವೆ ಮಾಡ್ಕಂಡ್‌ಬಿಡ್‌ಭೌದು ಅಲ್ವೇನಮ್ಮ?’-ರಾಮಣ್ಣ ಕೇಳಿದ. +ಅಮ್ಮ ಎಂದಳು: ‘ಇವ್ನು ಇಷ್ಟು ತುಂಟ. ನೆಟ್ಟಗೆ ಓದಿ ಹೈಸ್ಕೂಲಾದ್ರೂ ಮಾಡದೆ ಇದ್ರೆ ಪಾರ್ವತಿಯ ಯಜಮಾನ್ರು ಹೆಣ್ಣು ಕೊಡ್ತಾರೆಯೇ?’ +‘ಇಲ್ಲ ಕಣಮ್ಮ. ತುಂಟ ಹುಡುಗರಿಗೇ ಬುದ್ಧಿ ಜಾಸ್ತಿ ಅಂತ ನಮ್ಮ ಹೆಡ್ಮಾಸ್ಟರೇ ಹೇಳ್ತಿರ್ತಾರೆ.’ +‘ಹಾಗಾದ್ರೆ ನೀನು ಮೆದುಗಲನಾಗಿದ್ರೂ ಅದ್ ಹ್ಯಾಗೆ ನಿನ್ನ ಸ್ಕೂಲಿಗೇ ಪಸ್ಟ್ ಬತ್ತಿದೀಯಾ?-ಅಕ್ಕಯ್ಯ ಕೇಳಿದಳು. +‘ತುಂಟನಾಗಿದ್ರೆ ಇನ್ನೂ ತುಂಬ ನಂಬರ್ ಬತ್ತಿತ್ತೇನೋ!’-ತಮ್ಮ ಉತ್ತರಕೊಟ್ಟ. +ಇವರು ಈ ಮಾತನಾಡುವಾಗ ವಿಶ್ವ ಮಾದೇವಯ್ಯನವರ ಗುಡಿಯಲ್ಲಿ ಅವರ ಬೆಲ್ಲದ ಮಡಕೆ ತಡಕುತ್ತಿದ್ದ. +ಮದುವೆಯಾಗಿ ಆಗಲೇ ಒಂದು ತಿಂಗಳಾಗಿತ್ತು. ಸೂರ್ಯನಾರಾಯಣ ತನ್ನ ಕ್ಷೇಮಸಮಾಚಾರಕ್ಕೆ ತೀ|| ಮಾವನವರ ಹೆಸರಿಗೆ ಒಂದು ಕಾಗದ ಸಹ ಬರೆದಿದ್ದ. ನಂಜಮ್ಮನಿಗೆ ಒಂದು ವಿಷಯ ನೆನಪಾಯಿತು: ಪಾರ್ವತಿಯ ಮದುವೆ ಸುಸೂತ್ರವಾಗಿ ನಡೆದರೆ ಗ್ರಾಮದೇವತೆಯ ಗುಡಿಗೆ ಬೆಲ್ಲನ್ನ ಮೊಸರನ್ನ ಮಾಡಿಕೊಂಡು ಬರುವುದಾಗಿ ಹರಕೆ ಕಟ್ಟಿಕೊಂಡಿದ್ದಳು. ಗ್ರಾಮದೇವತೆ ಕಾಳಮ್ಮನ ಹರಕೆ ಹೆಚ್ಚು ದಿನ ನಿಲ್ಲಿಸಿಕೊಳ್ಳಬಾರದು ಎಂಬ ಅರಿವಾಗಿ, ಅದನ್ನು ಬೇಗ ತೀರಿಸಬೇಕೆಂದು ನಿಶ್ಚಯಿಸಿದಳು. ಇಷ್ಟಕ್ಕೂ ಅದಕ್ಕೆ ಬೇಕಾದ ಹೆಚ್ಚು ಖರ್ಚೂ ಇಲ್ಲ. ಮನೆಯಲ್ಲಿ ಅಕ್ಕಿಯಿದೆ, ಬೆಲ್ಲವಿದೆ, ತೆಂಗಿನಕಾಯಿ ಮೊಸರು, ಎಲ್ಲ ಇದೆ. ಅಮ್ಮನಿಗೆ ಒಪ್ಪಿಸಲು ಒಂದು ರವಿಕೆ ಕಣ. ಅದೂ ಮನೆಯಲ್ಲಿದೆ. ಹೇಗೂ ನಾಡಿದ್ದೇ ಶುಕ್ರವಾರ. ಸ್ಕೂಲಿಗೆ ರಜ ತೆಗೆದುಕೊಳ್ಳುವಂತೆ ರಾಮಣ್ಣನಿಗೆ ಹೇಳಿದಳು. ‘ಅಮ್ಮನ ಗುಡಿಗೆ ಹೋಗಬೇಕು, ಮನೇಲೇ ಇರಿ’-ಎಂದುದಕ್ಕೆ ಚೆನ್ನಿಗರಾಯರು ಸಿದ್ಧವಾಗಿ ಒಪ್ಪಿದರು. +ಗಂಗಮ್ಮ ಅಪ್ಪಣ್ಣಯ್ಯರು ಈಗ ಎಂಟು ದಿನದಿಂದ ಊರಿನಲ್ಲಿರಲಿಲ್ಲ; ಗಂಡಸಿ ದುದ್ದದ ಕಡೆಯ ಹಳ್ಳಿಗಳಿಗೆ ಹೋಗಿದ್ದರು. ಶುಕ್ರವಾರ ಗುಡಿಗೆ ಬರುವುದಾಗಿ ಅಮ್ಮನ ಪೂಜಾರಿ ಕಾಳನಿಗೆ ಹೇಳಿಕಳುಹಿಸಿದ್ದ ನಂಜಮ್ಮ, ಆ ದಿನ ಹೊತ್ತಿಗೆ ಮುಂಚೆ ಎದ್ದು ನೀರು ಕಾಯಿಸಿದಳು. ಸ್ನಾನ ಮಾಡಿ ಅವಳು ಅಡಿಗೆಮನೆ ಹೊಕ್ಕಮೇಲೆ ಪಾರ್ವತಿ ವಿಶ್ವನಿಗೆ ಮಡಿ ಉಡಿಸಿ ತಾನೂ ಉಟ್ಟುಕೊಂಡಳು. ರಾಮಣ್ಣನದೂ ಸ್ನಾನವಾದ ಮೇಲೆ ಚೆನ್ನಿಗರಾಯರು ಬಚ್ಚಲು ಮನೆ ಹೊಕ್ಕರು. ಮೂರು ಸೇರು ಅಕ್ಕಿ ಬಸಿದು ನಂಜಮ್ಮ ಬೆಲ್ಲದ ಪಾಕಕ್ಕೆ ಅರ್ಧ ಭಾಗ ಅನ್ನ ಹಾಕಿ, ಹದವಾಗುವತನಕ ಒಲೆಯ ಮೇಲೆ ಇಟ್ಟು, ಏಲಕ್ಕಿ ಕೊಬ್ಬರಿ ನೆಲಗಡಲೆ ಬೀಜ ಬೆರಸಿ, ಉಳಿದುದಕ್ಕೆ ಒಗ್ಗರಣೆ, ಕಾಯಿತುರಿ, ಕರಿಬೇವಿನಸೊಪ್ಪು ಹಾಕಿ ಮೊಸರನ್ನ ಕಲಸಿ, ಎರಡು ಕೊಳದಪ್ಪಲೆಗಳಲ್ಲಿ ತುಂಬಿ ಚೌಕ ಬಿಗಿದು ಇಟ್ಟಳು. ಅರಿಶಿನ ಕುಂಕುಮ ಕಣಿಗಲೆ ಹೂವುಗಳ ತಟ್ಟೆಗಳನ್ನು ಅಣಿಮಾಡಿ, ಪಾರ್ವತಿಗೆ ಮದುವೆಯಲ್ಲಿ ಅವಳ ಗಂಡ ತಂದಿದ್ದ ಎಂಬತ್ತು ರೂಪಾಯಿಯ ದೊಡ್ಡ ಸೀರೆ ಉಟ್ಟುಕೊಳ್ಳುವಂತೆ ಹೇಳಿದಳು. ಅರಿಶಿನ ತೊಡೆದ ಕೆನ್ನೆ. ಅಡ್ಡ ಕುಂಕುಮ, ಅಳ್ಳಕವಾಗಿ ಬಾಚಿದ್ದ ತಲೆಗೂದಲು, ಮುಡಿದಿದ್ದ ಹೂವು, ಓಲೆ, ಬೇಸರಿ, ಕಾಲುಂಗುರ, ಇಂತಹ ದೊಡ್ಡ ಸೀರೆಗಳನ್ನುಟ್ಟು ಪಾರ್ವತಿ ಅರಿಶಿನ ಕುಂಕುಮದ ತಟ್ಟೆಯನ್ನು ಎಡಗೈಲಿ ಇಟ್ಟು ಬೀದಿಯಲ್ಲಿ ನಡೆಯುತ್ತಿದ್ದರೆ ಎಲ್ಲರೂ ಅವಳನ್ನೇ ನೋಡುವವರೇ. ಜೊತೆಯಲ್ಲಿ ಹೋಗುತ್ತಿದ್ದ ನಂಜಮ್ಮ ಮಗಳಿಗೆ ದೃಷ್ಟಿಯಾದೀತೆಂದು ಚಿಂತಿಸುತ್ತಿದ್ದಳು. ಹಣೆಗೆ ಗೋಪೀಚಂದನವನ್ನಿಟ್ಟು, ಮಡಿಯಲ್ಲಿ ಬರುತ್ತಿದ್ದ ರಾಮಣ್ಣ ಎರಡು ಅನ್ನದ ಕೊಳದಪ್ಪಲೆಗಳನ್ನೂ ಹಿಡಿದುಕೊಂಡಿದ್ದ. ವಿಶ್ವನ ಕೈಲಿ ತೆಂಗಿನಕಾಯಿಯಿತ್ತು. ಚೆನ್ನಿಗರಾಯರು ಹಿಂದೆ ಬರುತ್ತಿದ್ದರು. +ಪೂಜಾರಿ ಕಾಳ ಇವರಿಗಾಗಿ ಕಾಯುತ್ತಿದ್ದ. ನಂಜಮ್ಮ ಮಗಳನ್ನು ಗರ್ಭಗುಡಿಯ ಒಳಗೆ ಕರೆದುಕೊಂಡು ಹೋಗಿ ಮಗಳಿಂದಲೇ ಅಮ್ಮನ ಪಾದಕ್ಕೆ ಪೂಜೆ ಮಾಡಿಸಿದಳು. ಅರಿಶಿನ ಕುಂಕುಮ, ಕಣಿಗಲೆ ಹೂವುಗಳ ಜೊತೆಗೆ ರಾಮಣ್ಣ ಗುಡಿಯ ಮುಂದಿನ ಕತ್ತಿಯ ಗಿಡ ಹತ್ತಿ ಕಿತ್ತು ತಂದ ಕೆಂಪು ಹೂಗಳನ್ನೂ ಪೂಜೆ ಮಾಡಿದಾಗ, ಒಂದು ಅಂಕಣದಗಲ ಆವರಿಸಿ ಕೂತಿದ್ದ ಅಮ್ಮ ಎಂಥವರನ್ನಾದರೂ ನುಂಗುವ ಚಂಡಿಯಂತೆ ಕಾಣುತ್ತಿದ್ದಳು. ಇವರು ಅವಳ ತೊಡೆಯ ಮೇಲೆ ಹೊಸ ರವಿಕೆಯ ಕಣವನ್ನು ಹೊದ್ದಿಸಿದ ಮೇಲೆ ಪೂಜಾರಿ ಕಾಳ ದೊಡ್ಡದಾಗಿ ಬತ್ತಿ ಹೊತ್ತಿಸಿ ಮಂಗಳಾರತಿ ಮಾಡಿದ. ಮಂಗಳಾರತಿ ತೆಗೆದುಕೊಂಡು ಎಲ್ಲರೂ ಅಡ್ಡಬಿದ್ದರು. ಕಾಳನಿಗೆ ದಕ್ಷಿಣೆ ಕೊಟ್ಟಮೇಲೆ, ತಂದ ತಳಿಗೆಯಲ್ಲಿ ಒಂದೊಂದು ಬಾಳೇಸೀಳಿನ ತುಂಬ ಭಾಗ ಕೊಟ್ಟು ಇವರು ಗುಡಿಯ ಹೊರಗೆ ಬಂದರು. ಅಷ್ಟರಲ್ಲಿ ಪ್ರಸಾದಕ್ಕೆಂದು ಸೇರಿದ್ದವರಿಗೆ ಒಂದೊಂದು ತೆರಳೆಯಂತೆ ನೀಡಿ ಇವರೆಲ್ಲರೂ ಗುಡಿಯ ಹಿಂದಿನ ಕೊಳಕ್ಕೆ ಹೋದರು. ನೀರಿನ ದಡದಲ್ಲಿ ಕೂತು ಎಲ್ಲರಿಗೂ ನಂಜಮ್ಮ ಬಾಳೆ ಎಲೆಯ ಮೇಲೆ ಪ್ರಸಾದ ನೀಡಿದಳು. ಚೆನ್ನಿಗರಾಯರಾದಿಯಾಗಿ ಎಲ್ಲರಿಗೂ ಸಾಕಾಯಿತು. ನಂಜಮ್ಮನೂ ತಿಂದು ಮನೆಗೆ ಸಹ ಸ್ವಲ್ಪ ಉಳಿಯಿತು. ಚೆನ್ನಿಗರಾಯರು ಹಾಗೆಯೇ ಕೆರೆ ಏರಿಯ ಹಿಂದಕ್ಕೆ ಹೋದರು. ತಾಯಿ ಮಕ್ಕಳು ಮತ್ತೆ ದೇವಸ್ಥಾನಕ್ಕೆ ಬಂದು ಜಗುಲಿಯ ಮೇಲೆ ಸ್ವಲ್ಪ ಹೊತ್ತು ಕೂತಿದ್ದು, ಇನ್ನೊಮ್ಮೆ ಬಾಗಿಲಿನ ಕಿಂಡಿಯಿಂದ ಅಮ್ಮನ ದರ್ಶನ ಮಾಡಿ ಹೊಸಲಿಗೆ ಹಣೆಯಿಟ್ಟು ನಮಸ್ಕರಿಸಿ ಮನೆಗೆ ಹೊರಟರು. ಹಿಂತಿರುಗುವಾಗಲೂ ದಾರಿಯಲ್ಲಿ ಸಿಕ್ಕಿದ ಹೆಂಗಸರು ಮಕ್ಕಳಾದಿಯಾಗಿ ಪಾರ್ವತಿಯನ್ನು ಕಣ್ಣು ತುಂಬ ನೋಡುತ್ತಿದ್ದರು. ಕೆಲವು ಹೆಂಗಸರಂತೂ-‘ಅವ್ವಾ, ಮದುವೆಯಾದ ಅಸೀ ಮೈಯಿ, ದ್ವಡ್ಡ ಸೀರೆ ಬ್ಯಾರೆ ಉಡಿಸ್ಕಂಡು ಯಾಕೆ ಕರ್ಕಂಡ್ ಬಂದ್ರಿ? ಕಣ್ಣೆಸರಾಗಾಕಿಲ್ವಾ?’ ಎಂದರು. ಅದೂ ನಿಜವಿರಬಹುದು ಎಂದು ನಂಜಮ್ಮನಿಗೆ ಎನಿಸದಿರಲಿಲ್ಲ. +ಆ ದಿನ ಮಧ್ಯಾಹ್ನ ಮನೆಯಲ್ಲಿ ಅಡಿಗೆ ಮಾಡಲಿಲ್ಲ. ಗುಡಿಯಿಂದ ಉಳಿದು ತಂದಿದ್ದ ತಳಿಗೆಯನ್ನೇ ಮೂರು ಗಂಟೆಯ ಹೊತ್ತಿಗೆ ಸ್ವಲ್ಪ ಸ್ವಲ್ಪ ತಿಂದರು. ಮನೆಗೆ ಬಂದ ತಕ್ಷಣ ಪಾರ್ವತಿ ತನ್ನ ಮದುವೆಯ ದೊಡ್ಡ ಸೀರೆ ಬಿಚ್ಚಿ ಸಾಮಾನ್ಯವಾದ ಅಂಚಿನ ಸೀರೆ ಉಟ್ಟುಕೊಂಡಳು. ಹಣೆಯ ಕುಂಕುಮ, ಕಿವಿಯ ಓಲೆ, ತಲೆಯ ಹೂವುಗಳೆಲ್ಲ ಹಾಗೆಯೇ ಇದ್ದುವು. ಅವಳಿಗೆ ಯಾಕೋ ತೂಕಡಿಕೆ ಬಂದು, ಚಾಪೆ ಹಾಕಿಕೊಂಡು ಮಲಗಿದಳು.ರಾಮಣ್ಣ ಮನೆಯಲ್ಲಿ ಕೂತೇ ಇಂಗ್ಲಿಷ್ ಪಾಠ ಬರೆದುಕೊಳ್ಳುತ್ತಿದ್ದ. ವಿಶ್ವ ಸ್ಕೂಲಿಗೆ ಹೋದ. ಚೆನ್ನಿಗರಾಯರು ಹೋಗಿ ಮಾದೇವಯ್ಯನವರ ಗುಡಿಯ ಜಗುಲಿಯ ಮೆಲೆ ಮಲಗಿದ್ದರು. ನಂಜಮ್ಮನೊಡನೆ ಮಾತನಾಡಲು ಸರ್ವಕ್ಕ ಬಂದಿದ್ದಳು. ಚಾಪೆಯ ಮೇಲೆ ಪಾರ್ವತಿಯನ್ನು ನೋಡಿದ ಅವಳಿಗೆ ತನ್ನ ಮಗಳು ರುದ್ರಾಣಿಯ ನೆನಪಾಯಿತು. ತನ್ನ ಗಂಡನೇ ಹಾಗೆ ಮಾಡಿಸದಿದ್ದರೆ ಅವಳಿಗೆ ಮದುವೆಯಾಗಿ ಇಷ್ಟರಲ್ಲಿ ಒಂದಾದರೂ ಮಗುವಿರುತ್ತಿತ್ತು-ಎಂದು ಅವಳು ಮನಸ್ಸಿನಲ್ಲೇ ಕೊರಗಿದಳು. +ಸ್ವಲ್ಪ ಹೊತ್ತಿನಲ್ಲಿ ಪಾರ್ವತಿಗೆ ಎಚ್ಚರವಾಯಿತು. ಅವಳ ಕಣ್ಣು ಸ್ವಲ್ಪ ಕೆಂಪಗಾಗಿತ್ತು. ‘ಅಮ್ಮ, ಮೈ ಚಳಿ ಚಳಿಯಾಗುತ್ತೆ. ಬೆಂಕಿ ಕಾಸಾಣೇ ಅನ್ಸುತ್ತೆ’-ಎಂದು ಎದ್ದು ಕೂತಳು. ಅದು ಬೇಸಿಗೆ ಹತ್ತಿರವಾಗುವ ಕಾಲ. ಈಗ ಎಂತಹ ಚಳಿ? ನಂಜಮ್ಮ ಹತ್ತಿರ ಬಂದು ಹಣೆ ಮುಟ್ಟಿ ನೋಡಿದಳು. ಜ್ವರ ಬಂದಿತ್ತು. ಚಳಿಜ್ವರ ಬಂದಿದೆ. ಸರ್ವಕ್ಕ ತಕ್ಷಣ ಹೇಳಿದಳು: ‘ನಂಜಮ್ಮಾರೇ, ಇವತ್ತು ಬೆಳಿಗ್ಗೆ ಹಸೀ ಮೈಲಿ ಅದುನ್ನ ಯಾಕೆ ಕರ್ಕಂಡು ಓದ್ರಿ? ದೊಡ್ಡ ಸೀರೆ ಬ್ಯಾರೆ ಉಟ್ಕಂಡಿತ್ತು. ಜನರ ಕಣ್ಣು ಒಂದೇ ಸಮುಕ್ಕಿರಾಕಿಲ್ಲ. ಕಡ್ಡಿ ಕಚ್ಚಿ ಹಾಕಿ.’ +ನಂಜಮ್ಮ ಅರ್ಧ ಕಸುಡಿಗೆ ಹಂಚಿಕಡ್ಡಿ ಹೊತ್ತಿಸಿ ಮಗಳಿಗೆ ನಿವಾಳಿಸಿ ಮೂಲೆಗೆ ಹಾಕಿದಾಗ ಅದು ಚಿಟಿಚಿಟಿ ಎಂದು ಗಟ್ಟಿಯಾಗಿ ಶಬ್ದ ಮಾಡುತ್ತಾ ಉರಿದು ಬೆಳಗಿ ಬೂದಿಯಾಯಿತು. ‘ಕಣ್ಣೆಸರೇ ಕಣ್ರೀ. ನೋಡಿದ್ರಾ, ಹ್ಯಂಗೆ ಚಿಟಿಚಿಟಿ ಅಂತು?’-ಸರ್ವಕ್ಕ ತನ್ನ ಕಾರಣವನ್ನು ಸಮರ್ಥಿಸಿದಳು. ಪಾರ್ವತಿ ಕೂತೇ ಇದ್ದಳು. ಸಂಜೆಯ ಹೊತ್ತಿಗೆ ಸರ್ವಕ್ಕ ಮನೆಗೆ ಹೋದಮೇಲೆ ನಂಜಮ್ಮ ಅಡಿಗೆಗೆಂದು ಒಳಗೆ ಹೋದಳು. ಕೂತಿರಲಾರದೆ ಪಾರ್ವತಿ ಕಂಬಳಿ ತೆಗೆದು ಉರುಟಿಕೊಂಡಳು. ರಾಮಣ್ಣ ತಲೆದಿಂಬಿನ ಹತ್ತಿರ ಕೂತು ಅವಳ ಬೇಸರ ಕಳೆಸುತ್ತಿದ್ದ. ರಾತ್ರಿಯ ಹೊತ್ತಿಗೆ ಅವಳ ಚಳಿಜ್ವರ ಸ್ವಲ್ಪ ಹೆಚ್ಚೇ ಆಯಿತು. ಅಡಿಗೆಯಾದ ಒಲೆಯ ಮೇಲೆಯೇ ನಂಜಮ್ಮ ಜೀರಿಗೆ, ಮೆಣಸು, ಲವಂಗ, ತುಳಸಿಯ ಕಷಾಯ ಹಾಕಿ ಮಗಳಿಗೆ ಕುಡಿಸಿ ಬೆಚ್ಚಗೆ ಮಾಡಿ ಮಲಗಿಸಿದಳು. ಜನರ ಕಣ್ಣು ಒಂದೇ ಸಮ ಇರುಲ್ಲ. ದೊಡ್ಡ ಸೀರೆ ಉಟ್ಕ ಅಂತ ಹೇಳಿದ್ದೇ ತಪ್ಪಾಯ್ತು-ಎಂದು ಅವಳ ಮನಸ್ಸು ಯೋಚಿಸುತ್ತಿತ್ತು. +ರಾತ್ರಿ ಎಲ್ಲ ಪಾರ್ವತಿಗೆ ಜ್ವರ ಕಾಯುತ್ತಿತ್ತು. ನಡುನಡುವೆ ಮೈ ಕತ್ತರಿಸುತ್ತಿದೆ ಎನ್ನುತ್ತಿದ್ದಳು. ಮುಖ ಬಿಗಿದುಕೊಂಡಂತೆ ಆಗಿ ಕಣ್ಣು ಕೆಂಪಗಾಗಿತ್ತು. ನಂಜಮ್ಮ ಇನ್ನೊಂದು ಸಲ ಕಷಾಯ ಕುಡಿಸಿದಳು. ಬೆಳಗಿನಜಾವದ ಹೊತ್ತಿಗೆ ಪಾರ್ವತಿ ಮಂಪರು ಬಂದು ಮಲಗಿದಳು. ಅಮ್ಮನಿಗೂ ಸ್ವಲ್ಪ ನಿದ್ರೆ ಹೊತ್ತಿತು. ಬೆಳಿಗ್ಗೆ ಅವಳಿಗೆ ಎಚ್ಚರವಾದಾಗ ಹೊತ್ತು ಹುಟ್ಟಿತ್ತು. ಪಾರ್ವತಿಯ ಜ್ವರ ಸ್ವಲ್ಪ ಇಳಿದಂತೆ ಆಗಿದ್ದರೂ ಪೂರ್ತಿ ಬಿಟ್ಟಿರಲಿಲ್ಲ. ‘ಮೈ ಕೈ ಕತ್ತರಿಸಿದ ಹಾಗೆ ಆಗುತ್ತೆ. ತುಂಬ ನೋವು’- ಎಂದು ಹೊರಳುತ್ತಿದ್ದಳು. ‘ಜ್ವರದ ತಾಪಕ್ಕೆ ಹಾಗಾಗಿದೆ ಮಗು. ಈಗ ಜ್ವರ ಇಳೀತಿದೆ. ಬೆಚ್ಚಗೆ ಮಲಕ್ಕೊ. ಬಿಸಿನೀರು ಕಾಯುಸ್ತೀನಿ. ಆಮೇಲೆ ಎದ್ದು ಮುಖ ತೊಳ್ಕೊಳೂವಂತೆ’-ಎಂದು ಹೇಳಿ ಅವಳು ಎಡ ಪಕ್ಕಕ್ಕೆ ತಿರುಗಿ ನೋಡಿದರೆ ರಾಮಣ್ಣ ಇನ್ನೂ ಮಲಗಿದ್ದ. ಯಾವತ್ತೂ ಕೋಳಿ ಕೂಗುವ ಹೊತ್ತಿಗೆ ಎದ್ದು ಸೀಮೆ ಎಣ್ಣೆ ಲ್ಯಾಂಪು ಹೊತ್ತಿಸಿಕೊಂಡು ಕೂತು ಓದುತ್ತಿದ್ದ ಅವನು ಇನ್ನೂ ಮಲಗಿದ್ದಾನೆ. ‘ಮರೀ, ಇನ್ನೂ ಎದ್ದಿಲ್ವೇನೋ?’-ಎಂದು ಕೇಳಿದುದಕ್ಕೆ ಮುಸುಕಿನೊಳಗಿನಿಂದಲೇ, ‘ಚಳಿ ಜ್ವರ ಬಂದಿದೆ ಕಣಮ್ಮ’ ಎಂದ. ಗಾಬರಿಯಾಗಿ ಮುಸುಕು ಎತ್ತಿ ನೋಡುತ್ತಾಳೆ: ಪಾರ್ವತಿಯ ಮುಖದಂತೆಯೇ ಅವನದೂ ಆಗಿದೆ. ಮುಖ ಗಡುಸಾಗಿ ಕಣ್ಣು ಕೆಂಡದಂತೆ ಉರಿಯುತ್ತಿದೆ. ಇಬ್ಬರಿಗೂ ಒಂದೇ ದಿನ ಚಳಿಜ್ವರ ಬಂದಿದೆ. ಯಾಕೆ ಹೀಗಾಯ್ತು?-ಎಂದು ಯೋಚಿಸುತ್ತಾ ಅವಳು ಎದ್ದು ನೀರೊಲೆ ಹೊತ್ತಿಸಿದಳು. ಬಿಸಿನೀರಿನಲ್ಲಿ ಇಬ್ಬರಿಗೂ ತಾನೇ ಮುಖ ತೊಳೆದು, ಪಕ್ಕಪಕ್ಕದಲ್ಲಿ ಹಾಸಿ ಮಲಗಿಸಿದಳು. ಮತ್ತೆ ಶುಂಠಿ ಮೆಣಸಿನ ಕಷಾಯ ಕುದಿಸಿ, ಅದಕ್ಕಿಂತ ಮೊದಲು ಅಕ್ಕಿ ತರಿಯ ಸಪ್ಪೆ ಗಂಜಿ ಮಾಡಿ, ಅವರು ಬೇಡವೆಂದರೂ ಕುಡಿಸಿದಳು. ಚಳಿ, ಜ್ವರ, ಬರುತ್ತೆ ಹೋಗುತ್ತೆ. ಆದರೆ ರಾಮಣ್ಣನಿಗೆ ಪರೀಕ್ಷೆ ಹತ್ತಿರವಾಗುತ್ತಿದ್ದ ಕಾಲ. ಪಾರ್ವತಿಗೆ ದೃಷ್ಟಿಯಾಯಿತು ಅನ್ನಬಹುದು. ರಾಮಣ್ಣನಿಗೆ ಯಾಕೆ ಬಂತು? ಅವನು ಮಡಿಯ ಲುಂಗಿ ಸುತ್ತಿ ಚೌಕ ಹೊದೆದು ಗುಡಿಗೆ ಬಂದಿದ್ದ. ಅವನೂ ಹೊಸದಾಗಿ ಮುಂಜಿಯಾಗಿದ್ದ ಹುಡುಗ. ಆದರೆ ಗಂಡು ಹುಡುಗರಿಗೆಂಥ ಹಸೀ ಮೈಯಿ? ಮದುವೆಯ ಕಾಲದಲ್ಲಿ ಅಷ್ಟೊಂದು ದುಡಿದಿದ್ದ. ಆಮೇಲೆ ಮೊದಲಿನಂತೆ ದಿನಾ ಬಿಸಿಲಿನಲ್ಲಿ ನಡೆದು ಸ್ಕೂಲಿಗೆ ಹೋಗಿ ಬರುತ್ತಾನೆ. ಇನ್ನೇನು ಒಂದು ತಿಂಗಳಿಗೆ ಪರೀಕ್ಷೆ ಮುಗಿದುಬಿಟ್ಟರೆ ಆಮೇಲೆ ಬೇಸಿಗೆ ರಜ ಬರುತ್ತೆ. ಒಂದೂವರೆ ತಿಂಗಳು ಹಾಯಾಗಿರಬಹುದು. +ಸಂಜೆಯ ಹೊತ್ತಿಗೆ ಪಾರ್ವತಿಯ ಜ್ವರ ಮತ್ತೆ ಏರಿತು. ಕಣ್ಣುಗಳಂತೂ ಗ್ರಾಮದೇವತೆ ಕಾಳಮ್ಮನ ಉರಿಗಣ್ಣಿನಂತೆ ಆಗಿದ್ದವು. ಎರಡು ಕಿವಿಗಳಲ್ಲಿಯೂ ಥಳಥಳ ಹೊಳೆಯುತ್ತಿದ್ದ ಓಲೆ, ಮೂಗಿನಲ್ಲಿ ಪ್ರಕಾಶಿಸುತ್ತಿದ್ದ ಬೇಸರಿಗಳು, ಅವಳ ಮುಖ ನೋಡಿದರೆ ಭಯ ಹುಟ್ಟುವಂತೆ ಮಾಡುತ್ತಿದ್ದುವು. ನಂಜಮ್ಮ ಓಲೆ ಬೇಸರಿಗಳನ್ನು ಬಿಚ್ಚಿ ತೆಗೆದು ಪೆಟ್ಟಿಗೆಯಲ್ಲಿಟ್ಟುಬಿಟ್ಟಳು. ರಾತ್ರಿಯ ಹೊತ್ತಿಗೆ ಪಾರ್ವತಿ ಎಂದಳು: ‘ಅಮ್ಮ, ನನ್ನ ಬಲ ತೊಡೇಲಿ ಅಡಗಳಲು ಕಟ್ಟಿದ ಹಾಗಿದೆ.’ +ಮದುವೆಯಾದ ಮೇಲೆ ಅವಳು ಹೆಚ್ಚು ಕೆಲಸ ಮಾಡಿಲ್ಲ. ಎಲ್ಲಿಯೂ ನಡೆದಿಲ್ಲ. ನೆನ್ನೆ ದೇವಸ್ಥಾನಕ್ಕೆ ನಡೆದು ಬಂದದ್ದಕ್ಕೆ ಕಾಲು ನೋವು ಬಂದು ಹೀಗಾಗಿದೆಯೋ ಎಂಬ ಯೋಚನೆ ನಂಜಮ್ಮನಿಗೆ ಬಂತು. ಆದರೆ ದೇವಸ್ಥಾನ ಊರ ಮುಂದೆಯೇ ಇದೆ. ಹತ್ತು ಮೈಲಿ ನಡೆದರೂ ಸುಸ್ತಾಗುವಂತಹ ಮಗಳಲ್ಲ ಪಾರ್ವತಿ. ಆದರೆ ಇಷ್ಟಕ್ಕೇ ಯಾಕೆ ಅಡಗಳಲು ಕಟ್ಟುತ್ತೆ? ಹ್ಯಾಗಾದರೂ ಹಾಗಾಗಲಿ ಎಂದು ಅವಳೇ ಉಪ್ಪು ಕಾಯಿಸಿ ತೊಡೆ ಸಂದಿಗೆ ಶಾಖ ಕೊಟ್ಟು, ಇನ್ನೊಮ್ಮೆ ಗಂಜಿ ಕಷಾಯಗಳನ್ನು ಕುಡಿಸಿ ಬೆಚ್ಚಗೆ ಮಲಗಿಸಿದಳು. ರಾಮಣ್ಣನ ಜ್ವರವೂ ಹಾಗೆಯೇ ಇತ್ತು. ಸ್ವಲ್ಪವೂ ನರಳದೆ ಸದ್ದು ಮಾಡದೆ ಅವನು ಮಲಗಿದ್ದ. ಮಾದೇವಯ್ಯನವರ ಗುಡಿಗೆ ಹೋಗಿ ಭಜನೆ ಕೇಳಿಕೊಂಡು ಚೆನ್ನಿಗರಾಯರು ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮನೆಗೆ ಬಂದರು. ವಿಶ್ವ ಸ್ವಲ್ಪ ಮುಂಚೆ ಬಂದಿದ್ದ. ಅವರಿಬ್ಬರಿಗೂ ಮಧ್ಯಾಹ್ನದ ಅಡಿಗೆಯನ್ನೇ ಬಡಿಸಿದ ನಂಜಮ್ಮನಿಗೆ ಊಟ ಬೇಕಾಗಲಿಲ್ಲ. ಅಲ್ಲದೆ ನೆನ್ನೆ ರಾತ್ರಿಯೂ ನಿದ್ರೆ ಇಲ್ಲದ್ದರಿಂದ ಅವಳಿಗೂ ಕಣ್ಣು ಎಳೆಯುತ್ತಿತ್ತು. ಇನ್ನೊಂದು ಸಲ ಇಬ್ಬರು ಹುಡುಗರ ಹಣೆಯನ್ನೂ ಮುಟ್ಟಿ ಪರೀಕ್ಷಿಸಿ ಸರಿಯಾಗಿ ಹೊದೆಸಿ ಅವಳು ಅವರಿಬ್ಬರ ತಲೆಯ ಹತ್ತಿರವೇ ಮಲಗಿಕೊಂಡಳು. ಸ್ವಲ್ಪ ಹೊತ್ತು ನಿದ್ದೆ ಬರಲಿಲ್ಲ. ಅನಂತರ ಆಳವಾಗಿ ಬಂತು. +ಯಾವಾಗಲೋ ಒಂದು ಹೊತ್ತಿನಲ್ಲಿ ಅವಳಿಗೊಂದು ಕನಸು ಬಿತ್ತು. ಮೊನ್ನೆಯ ದಿನ ಅವರು ಗ್ರಾಮದೇವತೆಯ ಗುಡಿಗೆ ಹೋಗಿದ್ದುದೇ ಕಾಣಿಸುತ್ತಿತ್ತು. ಅಮ್ಮನ ಮುಖ ಜ್ವರ ಬಂದ ಪಾರ್ವತಿಯ ಮುಖದಂತೆ ಗಡುಸಾಗಿ ದಪ್ಪವಾಗಿದೆ. ಅವಳ ಎರಡೂ ಕಿವಿಗಳ ಓಲೆಗಳೂ ಉರಿಯುತ್ತಿವೆ. ಕಣ್ಣೂಗಳಂತೂ ಬೆಂಕಿಯಾಗಿವೆ. ಚಕ್ಕಮಕ್ಕಲವಾಗಿ ಒಂದು ಅಂಕಣದ ಅಗಲಕ್ಕೂ ಕೂತಿದ್ದ ಅವಳ ಎರಡೂ ತೊಡೆಗಳ ಮೇಲೂ ಪಾರ್ವತಿ ರಾಮಣ್ಣ ಇಬ್ಬರೂ, ಆಗ ತಾನೇ ಹುಟ್ಟಿದ ಅವಳಿ ಮಕ್ಕಳಂತೆ ಬರೀ ಮೈಲಿ ಮಲಗಿದ್ದಾರೆ. ಹತ್ತಿರ ಹೋಗಿ ಅವರಿಬ್ಬರ ಮೈಮೇಲೂ ಒಂದು ಕಂಬಳಿ ಹೊದೆಸಲು ಇವಳು ಪ್ರಯತ್ನಿಸುತ್ತಿದ್ದಾಳೆ. ಗರ್ಭಗುಡಿಯ ಹೊಸಲಿನ ಒಳಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಬಾಗಿಲಂತೂ ಮುಚ್ಚಿಲ್ಲ. ಎದುರಿಗೆ ಯಾವ ತಡೆಯೂ ಕಾಣುತ್ತಿಲ್ಲ. ಆದರೆ ಇವಳು ಒಳಗೆ ಬರದಂತೆ ಅದೆಂಥದೋ ತಡೆಯುತ್ತಿದೆ. ಇವಳು ಪ್ರಯತ್ನ ಮಾಡುತ್ತಲೇ ಇದ್ದಾಳೆ. ‘ಅಯ್ಯೋ!’- ಎಂದು ಯಾರೋ ನರಳಿದ ಸದ್ದಾಯಿತು. ಕನಸು ಅಲ್ಲಿಗೆ ಕತ್ತರಿಸಿ ಎಚ್ಚರವಾಯಿತು. ನರಳುತ್ತಿದ್ದವನು ರಾಮಣ್ಣ. ಸಣ್ಣಗೆ ಉರಿಯುತ್ತಿದ್ದ ಲ್ಯಾಂಪನ್ನು ದೊಡ್ಡದು ಮಾಡಿ ಅವನ ಹಣೆಯ ಮೇಲೆ ಕೈಯಿಟ್ಟು ಹೇಳಿದಳು: ‘ಯಾಕೆ ಮಗು?’ +‘ಎರಡು ಕಡೆ ತೊಡೆಸಂದೀಲಿ ಅಡಗಳಲೆ ಕಟ್ಟಿದೆ ಕಣಮ್ಮ, ತುಂಬಾ ನೋಯುತ್ತೆ.’ +ಅವಳ ಎದೆ ತಕ್ಷಣ ಜಲ್ಲೆಂದಿತು. ಹಾಗಾದರೆ ಪಾರ್ವತಿಗೆ ಆಗಿರುವುದು ಸಾಮಾನ್ಯ ಅಡಗಳಲೆಯಲ್ಲ. ಇದೇನು ಪ್ಲೇಗಿನ ಗಡ್ಡೆಯೆ? ಆದರೆ ಸುತ್ತಮುತ್ತ ಎಲ್ಲೂ ಅದರ ಸುದ್ದಿ ಇಲ್ಲ. ಊರಿನಲ್ಲಿ ಇಲಿಯೂ ಬಿದ್ದಿಲ್ಲ. ಹೊದಿಕೆ ಸರಿಸಿ ರಾಮಣ್ಣನ ತೊಡೆಗೆ ಕೈ ಹಾಕಿ ನೋಡಿದಳು. ಅವನು ಸಂಕೋಚಪಟ್ಟನಾದರೂ ಜ್ವರದ ಮಂಪರಿನಲ್ಲಿ ಸುಮ್ಮನೆ ಮಲಗಿದ್ದ. ಎರಡು ತೊಡೆ ಸಂದಿಯಲ್ಲೂ ಒಂದೊಂದು ಹಲಸಿನ ಬೀಜದ ಗಾತ್ರಕ್ಕೆ ಊದಿಕೊಂಡಿತ್ತು. ಅವಳ ಕೈ ತಗಲುತ್ತಲೂ ‘ಹ್ಞಾ’ ಎಂದ. ದಿಕ್ಕು ತೋಚದಂತೆ ಆಗಿ ಅವಳು ಐದು ನಿಮಿಷ ಸುಮ್ಮನೆ ಕೂತುಬಿಟ್ಟಳು. ಅನಂತರ ಗಂಡನ ಹತ್ತಿರ ಬಂದು ಅವರ ಭುಜ ಅಲುಗಿಸಿ-‘ಇಲ್ನೋಡಿ, ಪಾರ್ವತಿ, ರಾಮಣ್ಣ, ಇಬ್ಬರಿಗೂ ಅಡಗಳಲೆ ಹಾಗಾಗಿದೆ. ಪ್ಲೇಗು ಗೀಗು ಇರ್‌ಭೌದು. ಸ್ವಲ್ಪ ಎದ್ದು ನೋಡಿ.’ ಇವಳು ಮೂರು ಸಲ ಅಲುಗಾಡಿಸಿ ಕೂಗಿದ ಮೇಲೆ-‘ನಾಳೆ ಬೆಳಿಗ್ಗೆ ನೋಡಿದ್ರಾತು. ನಂಗೆ ನಿದ್ದೆ ಬತ್ತಿದೆ’ ಎಂದು ಅವರು ಮುಸುಕು ಎಳೆದುಕೊಂಡರು. ಹೋಗಿ ಮಾದೇವಯ್ಯನವರನ್ನಾದರೂ ಕರೆದುಕೊಂಡು ಬರಬೇಕೆಂದು ಅವಳಿಗೆ ಎನಿಸಿತು. ಒಬ್ಬಳೇ ಹೋಗಲು ಏಕೋ ಭಯವಾಯಿತು. ಕತ್ತಲೆಂದರೆ ಅವಳು ಭಯಪಟ್ಟವಳಲ್ಲ. ಆದರೆ ಈಗ ಹೆದರಿಕೆಯಾಗುತ್ತಿದೆ. ಮಲಗಿದ್ದ ವಿಶ್ವನನ್ನು ಎಬ್ಬಿಸಿ, ‘ಮಗೂ, ಅಯ್ನೋರನ್ನ ಕರ್ಕಂಡ್ ಬರಬೇಕು. ಬಾ, ಹೋಗಾಣ’ ಎಂದಳು. ನಿದ್ದೆಗಣ್ಣಿನಿಂದಲೇ ಛಂಗನೆ ಎದ್ದು ನಿಂತು ಅವನು- ‘ನಾನೇ ಕರ್ಕಂಡ್ ಬತ್ತೀನಿ’ ಎಂದು ಬಾಗಿಲ ಹತ್ತಿರಕ್ಕೆ ಓಡಿ ಚಿಲಕ ತೆಗೆದು, ‘ಹೊರಗೆ ಕತ್ತಲೆ ಗೌಂ ಅನ್ನುತ್ತೆ. ತಡಿ ನಾನೂ ಬತ್ತೀನಿ’ ಎಂದು ಅವಳು ಹೇಳುವ ಮೊದಲೇ ಬಾಗಿಲು ತೆಗೆದುಕೊಂಡು ಹೊರಗೆ ಓಡಿದ. ನಡು ರಾತ್ರಿ ಕಳೆದು ಊರೆಲ್ಲ ಸದ್ದು ಮಾಡದೆ ಸತ್ತಂತೆ ಮಲಗಿತ್ತು. +ಸ್ವಲ್ಪ ಹೊತ್ತಿನಲ್ಲಿ ಅಯ್ಯನವರು ವಿಶ್ವನ ಕೈ ಹಿಡಿದುಕೊಂಡು ಬಂದರು. ಇಬ್ಬರು ಮಕ್ಕಳ ರೋಗವನ್ನೂ ವಿವರಿಸಿದ ನಂಜಮ್ಮ-‘ಇದೇನು ಪ್ಲೇಗೋ ಗೀಗೋ ನಂಗೆ ತಿಳಿಯಲಿಲ್ಲ. ಹೆದರಿಕೆಯಾಗುತ್ತೆ. ನೀವೇ ನೋಡಿ’ ಎಂದಳು. +ಅಯ್ಯನವರು ಇಬ್ಬರ ಕೈಗಳನ್ನೂ ಮುಟ್ಟಿ ನೋಡಿದರು. ರಾಮಣ್ಣನ ಗೆಡ್ಡೆಗಳ ಮೇಲೆ ಕೈ ಇಟ್ಟು ನೋಡಿದ ಮೇಲೆ-‘ಸಂಜೆನಾಗ ಶ್ಯಾನುಬಾಗ್ರು ಬಂದಿದ್ದಾಗ ಹುಡುಗರ ಕಾಯಿಲೆ ಏನೂ ಏಳ್ಳೇ ಇಲ್ಲ’ ಎಂದರು. +‘ಅದೆಲ್ಲ ಕಟ್ಕಂಡು ಅವರಿಗೇನು ಬೇಕು? ಈಗ ಇವ್ರಿಗೆ ಆಗಿರೋದೇನು?’ +‘ನೆನ್ನೆ ಸಂಜೆನಾಗಲೇ ಗುಡೀಲಿ ಹ್ವರಕೆರೆ ಗುರುವಣ್ಣ ಕುರುಬರಹಟ್ಟಿ ಪುಟ್ಟಯ್ಯ ಮಾತಾಡ್ತಿದ್ರು. ಅವರ ಕೇರೀಲಿ ಇಲಿ ಬಿದ್ದಾವಂತೆ. ಎಲ್ಡು ದಿನವಾಯ್ತಂತೆ.’ +ಜೀವ ಹಾರಿ ಹೋದಂತಾಗಿ ನಂಜಮ್ಮನ ಎದೆಯ ಬಡಿತ ಸ್ತಬ್ಧವಾಯಿತು. ಎರಡು ನಿಮಿಷ ಭ್ರಮೆ ಹಿಡಿದವಳಂತೆ ಕುಳಿತ ಅವಳು ಇದ್ದಕ್ಕಿದ್ದಹಾಗೆಯೇ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು. ‘ಅವ್ವಾ, ಸಮಾಧಾನ ತಂದ್ಕ. ನೀನೇ ಹಿಂಗ್ ಅತ್‌ಬುಟ್ರೆ ನೋಡ್ಕಳಾರ್ಯಾರು?’-ಅಯ್ಯನವರು ಸಮಾಧಾನ ಹೇಳಿದುದರಿಂದ ಅವಳ ಅಳು ನಿಲ್ಲಲಿಲ್ಲ. ‘ಅಯ್ನೋರೇ, ಹಾಳುಮುಂಡೆ ಪ್ಲೇಗು ಬಂದಮೇಲೆ ಯಾರು ಉಳೀತಾರೆ?’-ಎನ್ನುತ್ತಾ ಗಟ್ಟಿಯಾಗಿ ಅತ್ತುಬಿಟ್ಟಳು. ಅದು ರಾಮಣ್ಣನಿಗೆ ಕೇಳಿ, ಅವನೇ-‘ಅಮ್ಮಾ. ಔಸ್ತಿ ತಗಂಡ್ರೆ ಹುಷಾರಾಗುಲ್ವೆ? ಯಾಕೆ ಅಳ್ತೀಯಾ ಸುಮ್ನಿರು’ ಎಂದ ಅವಳಿಗೆ ಧೈರ್ಯ ಬಂದಂತೆ ಆಯಿತು. ಪಾರ್ವತಿಗೆ ಅಷ್ಟು ಸಹ ಮಾತನಾಡುವ ಶಕ್ತಿ ಇರಲಿಲ್ಲ. +ಅಯ್ಯನವರು ಎಂದರು: ‘ಪ್ಲೇಗು ಆಗಿದ್ರೂ ಏಟೋ ಜನ ಉಳಿದವ್ರೆ. ಒಂದ್ ಪಟಿಗ್ ಆಗಿ ಉಳುದ್ರೆ ಮತ್ತೆ ಆಗಾಕುಲ್ವಂತೆ.’ +ಅವಳಿಗೆ ಸ್ವಲ್ಪ ಸಮಾಧಾನವೆನಿಸಿತು. ಹೌದು. ಅವಳ ಅಣ್ಣ ಕಲ್ಲೇಶನಿಗೆ ಪ್ಲೇಗು ಆಗಿತ್ತು. ಅವನು ಉಳಿದುಕೊಳ್ಳಲಿಲ್ಲವೆ?’ಎಂಬ ನೆನೆಪಾಗಿ ಆತಂಕವು ಇನ್ನೂ ಕಡಿಮೆಯಾಯಿತು. ಚೆನ್ನಿಗರಾಯರ ಗೊರಕೆಯನ್ನು ಬಿಟ್ಟರೆ ಎಲ್ಲವೂ ನಿಶ್ಯಬ್ಧವಾಗಿತ್ತು. ವಿಶ್ವ ಸುಮ್ಮನೆ ತನ್ನ ಹಾಸಿಗೆಯ ಮೇಳೆ ಕುಳಿತಿದ್ದ. ‘ನೀನ್ಯಾಕೆ ಕುಂತಿದೀಯಾ, ಮನಿಕ ಮಗ’- ಅಯ್ಯನವರೇ ಹೇಳಿ ಅವನನ್ನು ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲಿ ರಾಮಣ್ಣನಿಗೂ ಮಂಪರು ಹೊತ್ತಿತು. ಈ ಸಮಯದಲ್ಲಿ ಅಯ್ಯನವರು ಎದ್ದು ತಮ್ಮ ಗುಡಿಗೆ ಹೋಗಲಾರರು. ಇಲ್ಲಿ ಕುಳಿತು ಏನು ಮಾತನಾಡುವುದಕ್ಕೂ ಯಾರಿಗೂ ತಿಳಿಯದು. ಆದರೆ ತಾವು ಸುಮ್ಮನೆ ಕೂತಿದ್ದರೂ ಸಾಕು., ಈ ಹೆಣ್ಣುಮಕ್ಕಳಿಗೆ ಒಂದು ಧೈರ್ಯ, ಸಮಾಧಾನವಿರುತ್ತದೆಂದು ಬಲ್ಲ ಅವರು ಇಲ್ಲಿಯೇ ಕುಳಿತರು. ಸ್ವಲ್ಪ ಹೊತ್ತಿನ ಮೇಲೆ ನಂಜಮ್ಮ ಹೇಳಿದಳು: ‘ಅಯ್ನೋರೇ, ರಾತ್ರೀಲಿ ಒಂದು ಕನಸು ಬಿತ್ತು. ಅದರಲ್ಲಿ ಅಮ್ಮನ ಗುಡೀಲಿ, ಅಮ್ಮನ ತೊಡೆ ಮೇಲೆ ಪಾರ್ವತಿ, ರಾಮಣ್ಣ, ಇಬ್ಬರೂ ಬರೀ ಮೈಲಿ ಮಲಗಿದ್ರು. ಅವರಿಗೆ ಒಂದು ಕಂಬಳೀನಾದ್ರೂ ಹೊದಿಸಾಣ ಅಂತ ನಾನು ಹೋದ್ರೆ ಹೊಸಲು ಒಳಗೆ ಹೋಗೂಕೇ ಆಗ್ಲಿಲ್ಲ. ಎದುರಿಗೆ ಗೋಡೆ ಇಲ್ಲ, ಕಲ್ಲಿಲ್ಲ. ಎಂಥದೋ ತಡದ ಹಾಗಾಯ್ತು. ಇದರ ಅರ್ಥವೇನು?’ +‘ಹುಡುಗರಿಬ್ರೂ ಅಮ್ಮನ ತೊಡೆಮ್ಯಾಲೆ ಮನೀಕಂಡಿದ್ರು ಅಂದ್ರೆ ಅವಳ ದಯೆ ಚಂದಾಗೈತೆ ಅಂತ ಅಲ್ವ? ಈಗ ಆಗಿರಾದು ಅಮ್ಮುಂದೇ ಖಾಯ್ಲ. ಆದ್ರೂ ಅವ್ಳು ಕಾಪಾಡ್ತಾಳೆ ಅಂತ ಅರ್ಥ.’ +ನಂಜಮ್ಮನ ಮನಸ್ಸು ಸಮಾಧಾನಗೊಂಡಿತು. ‘ಆದರೆ ನನ್ನ ಯಾಕೆ ಒಳಕ್ಕೆ ಬಿಡಲಿಲ್ಲ?’ +ಅಯ್ಯನವರಿಗೆ ಉತ್ತರ ತಿಳಿಯಲಿಲ್ಲ. ದೇವರು ಕಾಪಾಡೋ ಮಕ್ಕಳ ತಾವ ಹೋಗೂಕ್ಕೆ ಮನುಷ್ಯರಿಗೆ ಏನು ಅಧಿಕಾರ ಅಂತಲಾ?-ಎಂಬ ಉತ್ತರ ಅವರ ಮನಸ್ಸಿನಲ್ಲಿ ಬಂದರೂ ಅವರು ಅದನ್ನು ಬಾಯಿಬಿಟ್ಟು ಹೇಳಲಿಲ್ಲ. ಅದರ ಬಗೆಗೆ ನಂಜಮ್ಮನೂ ಯೋಚಿಸತೊಡಗಿದಳು. ಏನೋ ಅಶುಭದ ಸೂಚನೆ ಮನಸ್ಸಿಗೆ ಕಾಣುತ್ತಿದ್ದರೂ ಅದನ್ನು ಸ್ವೀಕರಿಸಲು ಅಂತಃಕರಣವು ಒಪ್ಪದೆ, ಅವಳು ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಳು. ‘ನನ್ನ ತೊಡೇಮೇಲಿರೂ ಮಕ್ಕಳ ಮುಟ್ಟೂಕೆ ನಿನಗೇನು ಅಧಿಕಾರ? ನನ್ನ ಹತ್ತಿರ ಇರೂತನಕ ಅವು ಕ್ಷೇಮವಾಗಿಯೇ ಇರ್ತೂವೆ ಅಂತ ಅಲ್ವೆ ಅದರ ಅರ್ಥ?’ +‘ಹೌದೌದು ಕಣವ್ವ.’ +‘ಅಯ್ನೋರೆ, ಹಾಗಾದ್ರೆ ನಾವು ಇವ್ರಿಗೆ ಏನಾದ್ರೂ ಔಷಧ ತಂದು ಕುಡಿಸ್‌ಬ್ಯಾಡವೆ?’ +‘ಕುಡಿಸ್ದೇ ಆಯ್ತದಾ?’ +‘ನನ್ನ ತೊಡೇಮೇಲಿರೋ ಮಗೂಗೆ ನೀನ್ಯಾಕೆ ಔಷಧ ಕುಡುಸ್ದೆ ಅಂತ ಅಮ್ಮ ಸಿಟ್ಕಂಡ್ರೆ?’ +ಅದೂ ಒಂದು ಸಮಸ್ಯೆಯೇ. ಔಷಧಿ ಕುಡಿಸಬೇಕೋ ಬೇಡವೋ ಎಂಬ ಪ್ರಶ್ನೆ ಸ್ವಲ್ಪ ಹೊತ್ತು ಅವರಿಬ್ಬರನ್ನೂ ಕಾಡಿತು. ಕೊನೆಗೆ ಅಯ್ಯನವರೇ ಹೇಳಿದರು: ‘ಅವ್ವ, ಕಜ್ಜಿ ಎದ್ದಾಗ ನಾಗಪ್ಪನ್ನ ಮಾಡಿದ್ರೆ ವಾಸಿ ಆಯ್ತಾ? ನೀನು ಹೋಗಿ ಸೂಜಿ ಚುಚ್ಚಿಸ್ಕಂಡು ಬರ್‍ಲಿಲ್ವಾ? ಈಗ್ಲೂ ಹಂಗೇ ಮಾಡು. ನಾಳೆ ದಿನವೇ ಡಾಕ್ಟರು ಕರೀಬೇಕು. ಇಲ್ದೆ ಇದ್ರೆ ಗಾಡಿ ಕಟ್ಕಂಡು ಕಂಬನಕೆರೆಗೆ ಹೋಗಬೇಕು.’ +ಅದೇ ಸರಿ ಎಂದು ಅವಳು ನಿರ್ಧರಿಸಿದಳು. ತಕ್ಷಣವೇ ಕುಳುವಾಡಿಯನ್ನು ಕರೆದು ಒಂದು ಗಾಡಿಗೆ ಹೇಳಿಕಳಿಸಲೇ ಎಂದು ಕೇಳಿದುದಕೆ ಅಯ್ಯನವರು-‘ಈಟೊಂದ್ ತರ ಜ್ವರ ಬಂದಿರೋರನ್ನ ಗಾಡಿಮ್ಯಾಲೆ ಹೇರ್ಕಂಡು ಓಗಾದು ಅಂದ್ರೆ ನ್ಯಟ್ಟಗಲ್ಲ. ಡಾಕ್ಟ್ರುನ್ನೇ ಇಲ್ಲಿಗೆ ಕರ್ಸಬೇಕು. ಗಾಡಿ ಕಟ್ಟಿ ಕಳ್ಸಿ. ಬೇಕಾದ್ರೆ ನಾನು ಗಾಡಿ ಕಟ್ಟಿ ಓಗ್‌ಬತ್ತೀನಿ.’ +ಕೋಳಿ ಕೂಗುವ ತನಕ ಸುಮ್ಮನೆ ಕೂತಿದ್ದು ನಂತರ ಅಯ್ಯನವರು ಹೋಗಿ ಕುಳವಾಡಿಯನ್ನು ಕರೆದು ತಂದರು. ಅವನು ಹೋಗಿ ಒಂದೂವರೆ ರೂಪಾಯಿ ಬಾಡಿಗೆಗೆ ಒಂದು ಗಾಡಿ ಗೊತ್ತುಮಾಡಿಕೊಂಡು ಬಂದ. ಹೊತ್ತು ಹುಟ್ಟುವ ಮೊದಲೇ ಅದರಲ್ಲಿ ಕೂತು ಅಯ್ಯನವರು ಕಂಬನಕೆರೆಗೆ ಹೋದರು. +ಬೆಳಗ್ಗೆ ಹೊತ್ತಿಗೆ ಇಬ್ಬರಿಗೂ ಜ್ವರ ಇನ್ನೂ ಏರಿತ್ತು. ಪಾರ್ವತಿಯ ಬಲತೊಡೆಯಲ್ಲಿ ಮಾತ್ರ ಆಗಿದ್ದ ಗೆಡ್ಡೆಯ ಜೊತೆಗೆ ಈಗ ಎರಡು ಕಂಕುಳುಗಳೂ ನೋಯಲು ಶುರುವಾಗಿದ್ದವು. ಮುಖವೆಲ್ಲ ಕೆದರಿ, ನೋಡಿದರೆ ಭಯವಾಗುವಂತಹ ಮಾರಿಯ ಮುಖದಂತೆ ಆಗಿತ್ತು. ಅರ್ಧ ಎಚ್ಚರ, ಅರ್ಧ ನಿದ್ರೆಯ ಸ್ಥಿತಿಯಲ್ಲಿದ್ದಂತೆ ಬುದ್ಧಿ ಮಂಕಾಗಿತ್ತು. ಬಿಸಿಯಾಗಿ ಗಂಜಿ ಕುಡಿಸಲೆಂದು ಹತ್ತಿರ ಬಂದು ಅಲುಗಿಸಿದಾಗ ಜ್ಞಾನ ತಂದುಕೊಂಡು ಪಾರ್ವತಿ ಹೇಳಿದಳು: ‘ಕೈ ಕಾಲಿನಲ್ಲಿ ಸುಸ್ತಾಗುತ್ತೆ.’ +‘ಜ್ವರಕ್ಕೆ ಹಾಗಾಗುತ್ತೆ ಮಗು. ಒಂದಿಷ್ಟು ಗಂಜಿ ಕುಡಿ, ಸರಿಯಾಗುತ್ತೆ.’ +‘ಬ್ಯಾಡಾ…..’ +‘ಇಲ್ದಿದ್ರೆ ಶರೀರದಲ್ಲಿ ಶಕ್ತಿ ಇರುಲ್ಲ. ಕುಡಿ, ನನ್ನಮ್ಮ.’ +ತಾಯಿಯ ಮಾತಿಗೆ ಎದುರು ಹೇಳದೆ ಅವಳು, ಬಾಯಿಗೆ ಬಿದ್ದದ್ದನ್ನು ನುಂಗಿ ಮಲಗಿ ಕಣ್ಣು ಮುಚ್ಚಿದಳು. ರಾಮಣ್ಣನನ್ನು ಎಬ್ಬಿಸಿದಾಗ ಅವನಿಗೆ ಪೂರ್ತಿ ಪ್ರಜ್ಞೆ ಇತ್ತು. ಆವನೇ ‘ಅಮ್ಮ, ಡಾಕ್ಟರು ಎಷ್ಟು ಹೊತ್ತಿಗೆ ಬತ್ತಾರೆ?’ ಎಂದು ಕೇಳಿದ. +‘ಒಂಬತ್ತು ಹತ್ತು ಗಂಟೆ ಹೊತ್ತಿಗೆ ಬರಬೌದು ಮಗು.’ +‘ಬತ್ತಾರೋ ಇಲ್ವೊ! ಪ್ಲೇಗು ಆದ ಊರಿಗೆ ಬರುಕ್ಕೆ ಡಾಕ್ಟರು ಹೆದರ್‍ಕತ್ತಾರೆ. ಈಗ ಇರೋರು ಮೊದಲಿದ್ದೋರಲ್ಲ.’ +‘ನೋಡಾಣ ತಡಿ.’ +ಅಮ್ಮ ಹೇಳಿದಂತೆ ಅವನು ಗಂಜಿ ಕುಡಿದು ಮಲಗಿಕೊಂಡ. ಅವನ ಎರಡು ಗೆಡ್ಡೆಗಳೂ ಈಗ ಇನ್ನೂ ಹೆಚ್ಚಾಗಿ ನೋಯುತ್ತಿದ್ದವು. ನಡುನಡುವೆ ಅದನ್ನು ತಡೆಯಲಾರದೆ ‘ಆ ಆ, ಅಮ್ಮ’ ಎನ್ನುತ್ತಿದ್ದ. ಬೆಳಿಗ್ಗೆ ಎದ್ದು ಏರಿಯ ಕಡೆ ಹೋದ ಚೆನ್ನಿಗರಾಯರು ಇನ್ನೂ ಮನೆಗೆ ಬಂದಿರಲಿಲ್ಲ. ವಿಶ್ವನಿಗೆ ಏನು ಮಾಡುವುದಕ್ಕೂ ತೋಚದು . ಸುಮ್ಮನೆ ಅಮ್ಮನ ಹಿಂದೆ ಹಿಂದೆ ಅಡಿಗೆಮನೆಯಿಂದ ನಡುಮನೆಗೆ ಓಡಾಡುತ್ತಿದ್ದ. ಅಷ್ಟರಲ್ಲಿ, ಸಾರುವ ಬೇಲೂರು ತಮ್ಮಟೆ ಬಡಿದುಕೊಂಡು ಅದೇನೋ ಸಾರುವ ಸದ್ದಾಯಿತು. ನಂಜಮ್ಮ ಜಗುಲಿಯ ಹತ್ತಿರ ಹೋಗಿ ನಿಂತಳು. ದೂರದಿಂದ ಡಮ್ಮ ಡಕ್ಕ ಡಮ್ಮ ಡಕ್ಕ ತಮ್ಮಟೆ ಬಡಿಯುತ್ತಾ ಬಂದ ಬೇಲೂರು ಇವರ ಮನೆಯ ಮೂಲೆಯಲ್ಲಿ ನಿಂತು ತಮ್ಮಟೆ ನಿಲ್ಲಿಸಿ ಗಟ್ಟಿಯಾಗಿ – ‘ಊರಿಗೆ ಪಿಳೇಗಿನಮ್ಮ ಬಂದೈತೆ. ಯಲ್ಲಾ ಊರು ಬಿಟ್ಟು ಶೆಡ್ಡು ಆಕ್ಯಂಡ್ ವಲ್ಡಬೇಕು ಅಂತ ಪಂಚಾಯ್ತಿ ಮಾಡ್ಯವ್ರೆ. ಬರಾ ಸುಕ್ರಾರದೊಳಗೆ ಯಲ್ಲಾ ಊರ್ ಬುಡಬೇಕಂತೋ, ಊರ ಬುಡಬೇಕಂತೋ ಸುಕ್ರಾರದೊಳಗೇ…..’ಎಂದು ಕೂಗಿ, ಡಮ್ಮ ಡಕ್ಕ ಡಮ್ಮ ಡಕ್ಕ ಬಡಿದುಕೊಂಡು ಮುಂದೆ ಹೋದ. +ಊರಿಗೆ ಪ್ಲೇಗು ಬಂದಿರುವ ವಿಷಯ ನಂಜಮ್ಮನಿಗೆ ನಡುರಾತ್ರಿಯ ತನಕ ಗೊತ್ತಿಲ್ಲ. ಬಹುಶಃ ತನ್ನ ಮನೆಗೇ ಅದು ಮೊದಲು ಬಂದಿರುವುದು. ಗ್ರಾಮದೇವತೆ ಹರಕೆ ಪೂರೈಸುಕ್ಕೆ ಅಂತ ಪಾರ್ವತೀನ ಕರ್ಕಂಡು ಹೋದೆ. ಹೊಸದಾಗಿ ಮದುವೆಯಾದ ಹೆಣ್ಣು ಹುಡುಗಿ ಅಷ್ಟು ಚೆನ್ನಾಗಿತ್ತು. ಅಮ್ಮನಿಗೆ ಅವಳ ಮೇಲೇ ಮೊದಲ ಕಣ್ಣು ಬಿತ್ತೋ ಏನೋ! ಆದರೆ ಗ್ರಾಮದೇವತೆ ಕಾಳಮ್ಮ, ಪ್ಲೇಗಿನ ಸುಂಕ್ಲಮ್ಮ ಬ್ಯಾರೆ ಬ್ಯಾರೆ ಅಲ್ವೆ? ಊರಿಗೆ ಸುಂಕ್ಲಮ್ಮ ಮಾರಿ ಬರದ ಹಾಗೆ ತಡಿಯುಕ್ಕೆ ತಾನೇ ಗ್ರಾಮದೇವತೆ ಇರೂದು? ಊರಲ್ಲಿ ಎಲ್ಲರಿಗಿಂತ ಮೊದಲು ಪಾರ್ವತಿಗೆ ಯಾಕೆ ಬಂತು? ಅವಳ ಹಿಂದೆಯೇ, ಅವಳ ಬೆನ್ನಲ್ಲಿ ಬಿದ್ದ ತಮ್ಮ ರಾಮಣ್ಣನಿಗೆ ಬಂತು. ಇದೆಲ್ಲ ಏನು ನಿಜವೋ ಸುಳ್ಳೋ? ಹಾಳು ಪ್ಲೇಗು ಎರಡು ವರ್ಷಕ್ಕೆ ಮೂರು ವರ್ಷಕ್ಕೆ ಒಂದೊಂದು ಸಲ ಯಾಕೆ ಬರ್ತಿರುತ್ತೆ? ಇದನ್ನ ವಾಸಿ ಮಾಡುಕ್ಕೆ ಔಸ್ತಿಯೇ ಇಲ್ವೆ?-ಈ ಕೊನೆಯ ಪ್ರಶ್ನೆಯ ಸಂಗಡವೇ?, ‘ಔಸ್ತಿ ಖಂಡಿತ ಇದೆ. ಡಾಕ್ಟ್ರು ಬಂದ್ರೆ ತಕ್ಷಣ ವಾಸಿ ಮಾಡ್ತಾರೆ. ನಾವು ಬೇಗ ಶೆಡ್ಡು ಹಾಕ್ಕಂಡು ಊರು ಬಿಟ್ಟು ಹೋಗಿಬಿಡಾಣ; ಎಂಬ ತೀರ್ಮಾನ ಮಾಡಿಕೊಂಡು ಧೈರ್ಯ ತಂದುಕೊಳ್ಳುತ್ತಿದ್ದಳು. +ಹನ್ನೊಂದು ಗಂಟೆಯ ಹೊತ್ತಿಗೆ ಅಯ್ಯನವರ ಗಾಡಿ ಹಿಂತಿರುಗಿತು. ಡಾಕ್ಟರು ಸಂಗಡ ಬರಲಿಲ್ಲ. ‘ಕಂಬನಕೆರೆ ಈ ಕಡೇಲೂ ಇಲಿ ಬೀಳ್ತಾವಂತೆ. ಅಲ್ಲೆಲ್ಲ ಇನಾಕ್ಲೇಶಿನ್ ಮಾಡ್ತಾ ಅವ್ರಂತೆ ಡಾಕ್ಟ್ರು. ಈಗ ಬರಕ್ ಆಗಾಕುಲ್ಲ, ಖಾಯ್ಲಾದೋರ್ನೆ ಕರ್ಕಂಡ್‌ಬಲ್ಲಿ ಅಂದ್ರು.’ +‘ಈ ಜ್ವರದಲ್ಲಿರೋರ್ನ ಹ್ಯಾಗೆ ಕರ್ಕಂಡು ಹೋಗಾದು ಅಯ್ನೋರೆ?’ +‘ಗಾಡಿಗೆ ಹ್ಯಂಗೂ ಕಮಾನೈತೆ. ಮೆತ್ತಗೆ ನೆಲ್ಲುಹುಲ್ಲು ಆಕಿ, ಮ್ಯಾಲೆ ಹಾಸಿಗೆ ಹಾಕಿ ಮನಗಿಸ್ಕಂಡು ಓಗಾನ. ಇನ್ನೇನ್ ಮಾಡಾಕಾಗ್ತೈತೆ?’ +ನಂಜಮ್ಮ ತಡ ಮಾಡಲಿಲ್ಲ. ಗಾಡಿಯವನು ಹುಲ್ಲು ತಂದು ಹರವಿದ. ಅವಳು ಅದರ ಮೇಲೆ ಹಾಸಿಗೆ ಹಾಕಿದಳು. ಇನ್ನೊಂದು ಸಲ ಗಂಜಿ ಕಾಯಿಸಿ ಇಬ್ಬರಿಗೂ ಕುಡಿಸಿದಳು. ಗಾಡಿಯವನು, ಅಯ್ಯನವರು, ಇಬ್ಬರೂ ಕೂಡಿ ಒಬ್ಬೊಬ್ಬರನ್ನಾಗಿ ಕರೆದುಕೊಂಡು ಹೋಗಿ ಗಾಡಿಯಲ್ಲಿ ಮಲಗಿಸಿ ಕಂಬಳಿ ಹೊದೆಸಿದರು. ತಾವೂ ಜೊತೆಯಲ್ಲಿ ಬರುವುದೋ ಬ್ಯಾಡವೋ ಎಂದು ಸ್ವಲ್ಪ ಹೊತ್ತು ಅನುಮಾನಿಸುತ್ತಿದ್ದ ಚೆನ್ನಿಗರಾಯರು ಕೊನೆಗೆ ಹೊರಟರು. ನಂಜಮ್ಮ ವಿಶ್ವನನ್ನು ಮೇಷ್ಟರ ಮನೆಯಲ್ಲಿ ಇರುವಂತೆ ಹೇಳಿ ಗಾಡಿಯ ಮುಂದುಗಡೆ ಇಬ್ಬರು ರೋಗಿ ಮಕ್ಕಳ ತಲೆಯ ಹತ್ತಿರ ಕುಳಿತಳು. ಅಯ್ಯನವರು, ಚೆನ್ನಿಗರಾಯರು ಗಾಡಿಯ ಹಿಂದೆ ನಡೆದು ಹೊರಟರು. +ಜೋಲಾಟವಾಡುತ್ತಾ ಕುತುಕುಲು ದಾರಿಯಲ್ಲಿ ಎದ್ದು ಇಳಿಯುತ್ತಾ ಕಬ್ಬಳ್ಳಿಬುಗವನ್ನು ಏರಿ ಇಳಿದು, ಗೌಡನ ಕೊಪ್ಪಲನ್ನು ಬಳಸಿ ಪಾಪಾಸುಕಳ್ಳಿ ಈಣಿಯಲ್ಲಿ ಸಾಗಿ ಗಾಡಿ ಕಂಬನಕೆರೆ ತಲುಪುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ ಆಗಿತ್ತು. ಡಾಕ್ಟರು ಅಷ್ಟರಲ್ಲಿ ಮನೆಗೆ ಹೋಗಿದ್ದರು. ಗಾಡಿಯನ್ನು ಆಸ್ಪತ್ರೆಯ ಮುಂದೆ ನಿಲ್ಲಿಸಿ, ಮಕ್ಕಳನ್ನು ನೋಡಿಕೊಳ್ಳುವಂತೆ ಚೆನ್ನಿಗರಾಯರಿಗೆ ಹೇಳಿ ಅಯ್ಯನವರೊಡನೆ ನಂಜಮ್ಮ ಡಾಕ್ಟರ ಮನೆಗೇ ಹೋದಳು. ಊಟ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದ ಅವರು ಮೊದಲು ಸ್ವಲ್ಪ ಅಸಮಧಾನಪಟ್ಟುಕೊಂಡರೂ, ಅನಂತರ ಬೀಗದ ಕೈ ತೆಗೆದುಕೊಂಡು ಆಸ್ಪತ್ರೆಗೆ ಬಂದರು. ರೋಗಿಗಳನ್ನು ಗಾಡಿಯ ಮೇಲೆಯೇ ಪರೀಕ್ಷಿಸಿ ಕೇಳಿದರು: ‘ರೋಗ ಇಷ್ಟೊಂದು ಬಲಿಯೂತನಕ ಯಾಕೆ ಸುಮ್ನಿದ್ರಿ?’ +‘ನಮಗೆ ಗೊತ್ತಾಗ್ಲೇ ಇಲ್ಲ ಸ್ವಾಮಿ. ಗೆಡ್ಡೆ ಕಾಣಿಸ್ಕಂಡುದ್ದೇ ನೆನ್ನೆ ರಾತ್ರಿ. ಬರೀ ಚಳಿಜ್ವರ ಅಂತಲೇ ತಿಳ್ಕಂಡಿದ್ವು.’ +‘ಈಗ ಇನಾಕ್ಯುಲೇಶನ್ ಮಾಡಬಾರದು . ಔಷಧಿ ಕೊಡ್ತೀನಿ. ತಗಂಡು ಊರಿಗೆ ಹೋಗಿ ಶೀಶಿ ತಂದಿದೀರಾ?’ +‘ಇಲ್ಲ ಸ್ವಾಮಿ. ನಮ್ಗೆ ಏನೂ ಗೊತ್ತಿರಲಿಲ್ಲ.’ +‘ಆಸ್ಪತ್ರೆ ಅಂದ ಮೇಲೆ ಶೀಶಿ ಇಲ್ದೆ ಬಂದ್ರೆ ಏನು ಮಾಡಬೇಕು?’-ಎಂದು ಕೇಳಿದ ಅವರು ಆಸ್ಪತ್ರೆಯ ಬಾಗಿಲು ತೆಗೆದು ಒಂದು ಖಾಲಿ ಶೀಶೆಯ ತುಂಬ ಔಷಧಿ ತುಂಬಿ ಕೊಟ್ಟು, ‘ಇಬ್ಬರಿಗೂ ದಿನಕ್ಕೆ ಮೂರು ಸಲದಂತೆ ಕುಡಿಸಿ. ಇವತ್ತು ನಾಳೆಗೆ ಆಗುತ್ತೆ ನಾಡಿದ್ದು ಮತ್ತೆ ಬನ್ನಿ’ ಎಂದರು. +ಅವರು ಮತ್ತೆ ಏನೂ ಹೇಳಲಿಲ್ಲ. ಇವರಿಗೆ ಏನಾದರೂ ಕೇಳಬೇಕೆಂದು ತಿಳಿಯಲೂ ಇಲ್ಲ. ಸರಿ, ಗಾಡಿಯ ಕೊರಳೆತ್ತಿ ಊರ ಕಡೆಗೆ ಹೊರಟರು. ಮತ್ತೆ ಕುತುಕಲಾಡುತ್ತಾ ಊರು ಸೇರುವ ಹೊತ್ತಿಗೆ ಸಂಜೆ ನಾಲ್ಕೂವರೆಯ ಸಮಯ. ಮನೆಗೆ ಬಂದು ನೋಡಿದರೆ ವಿಶ್ವ ಮೇಷ್ಟರ ಮನೆಗೆ ಹೋಗಿರಲಿಲ್ಲ. ಬರಿಯ ಬಾಗಿಲು ತೆಗೆದುಕೊಂಡು ಮನೆಯಲ್ಲಿ ಒಂದು ಚಾಪೆಯ ಮೇಲೆ ಮಲಗಿದ್ದ. ಬೆಳಿಗ್ಗೆ ಅಮ್ಮ ಮಾಡಿಕೊಟ್ಟಿದ್ದ ಕೆಂಡ್-ರೊಟ್ಟಿ ಬಿಟ್ಟರೆ ಅವನ ಹೊಟ್ಟೆಗೆ ಏನೂ ಇರಲಿಲ್ಲ. ಅಲ್ಲದೆ ಅವನ ಮೈ ಕೈ ಸಹ ಕತ್ತರಿಸಿದಂತೆ ಆಗುತ್ತಿತ್ತು. ಸ್ವಲ್ಪ ಮಟ್ಟಿಗೆ ಜ್ವರ ತುಂಬಿಕೊಳ್ಳುತ್ತಿತ್ತು. ಕಣ್ಣು ಮುಖಗಳನ್ನು ನೋಡಿಯೇ ನಂಜಮ್ಮ ಓಡಿ ಬಂದು ಹಣೆ ಮುಟ್ಟಿ ಪರೀಕ್ಷಿಸಿದಳು. ಅವನಿಗೂ ರೋಗ ತಗುಲಿದೆ. ಕೂತಂತೆಯೇ ಅವನ ಮುಖವನ್ನು ತನ್ನ ಎದೆಯಲ್ಲಿ ಹುದುಗಿಸಿ ತಬ್ಬಿಕೊಂಡು ಗಟ್ಟಿಯಾಗಿ ಅಳಲು ತೊಡಗಿದಳು: ‘ಅಯ್ನೋರೇ, ಈ ಹಾಳು ಮಾರಿ ನನ್ನ ಎಲ್ಲ ಮಕ್ಳುನ್ನೂ ಕಿತ್ಕಬೇಕು ಅಂತ ಬಂದಿದಾಳೆ. ಇಲ್ಲಿ ನೋಡಿ, ವಿಶ್ವನಿಗೂ ಜ್ವರ ಬಂದಿದೆ.’ +ಪಾರ್ವತಿ, ರಾಮಣ್ಣ, ಇಬ್ಬರೂ ಗಾಡಿಯ ಮೇಲೆಯೇ ಇದ್ದರು. ಹೋಗುತ್ತಾ ಬರುತ್ತಾ ಒಟ್ಟು ಹತ್ತು ಮೈಲಿ ಕಂತ್ರಿರಸ್ತೆಯ ಗಾಡಿ ಪ್ರಯಾಣಕ್ಕೆ ಸುಸ್ತಾಗಿ, ಇಬ್ಬರೂ ಅರ್ಧಕ್ಕಿಂತ ಹೆಚ್ಚಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಇಬ್ಬರೂ ಸೇರಿ ಅವರನ್ನು ತಂದು ಒಳಗೆ ಮಲಗಿಸಿದ ಮೇಲೆ ಅಯ್ಯನವರು ಎಂದರು: ‘ಅವ್ವಾ, ನೀನು ಇವ್ರಿಬ್ರುನ್ನೂ ನೋಡ್ಕ. ಈ ಎತ್ತು ಸೋತು ಹೋಗಿವೆ. ನಾನು ಬ್ಯಾರೆ ಗಾಡಿ ಹೂಡಿಸ್ಕಂಡಿ ವಿಶ್ವಣ್ಣನ್ನ ಕರ್ಕಂಡ್, ಮತ್ತೆ ಕಂಬನಕೆರೆಗೆ ಹೋಯ್ತೀನಿ. ಇವ್ನಿಗಿನ್ನೂ ಕಾಯ್ಲ ಬಲಿತಿಲ್ಲ. ಈಗಲೇ ಹೋಗ್‌ಬೇಕು.’ +ಅದಕ್ಕೆ ಬೇರೆ ಸಲಹೆ ಹೇಳಲು ಅವಳಿಗೆ ತಿಳಿಯಲಿಲ್ಲ. ಅಯ್ಯನವರು ಗುಡಿಗೆ ಹೋಗಿ, ತಮ್ಮ ಪೆಟ್ಟಿಗೆಯಲ್ಲಿದ್ದ ದುಡ್ಡೆಲ್ಲವನ್ನೂ ತೆಗೆದುಕೊಂಡರು. ಇಲ್ಲಿಗೆ ಬಂದು, ನಂಜಮ್ಮನಿಗೆ ಬೇಕಾದರೆ ಇರಲೆಂದು ಹತ್ತು ರೂಪಾಯಿ ಕೊಟ್ಟು, ಉಳಿದ ಇಪ್ಪತ್ತು ರೂಪಾಯಿಯಷ್ಟನ್ನು ತಮ್ಮ ಅಂಗಿಯ ಜೇಬಿಗೆ ಹಾಕಿಕೊಂಡರು. ಅಷ್ಟರಲ್ಲಿ ಮನೆಗೆ ಹೋಗಿ ಮುದ್ದೆ ಉಂಡು ಗಾಡಿಯವನು ಬೇರೊಬ್ಬನಿಂದ ಬೇರೆ ಜೊತೆ ಎತ್ತುಗಳನ್ನು ತಂದ. ಅದೇ ಗಾಡಿಗೆ ಬೇರೆ ಹಾಸಿಗೆ ಹಾಕಿ ಅದರ ಮೇಲೆ ವಿಶ್ವನನ್ನು ಮಲಗಿಸಿಕೊಂಡು ಜೊತೆಗೆ ತಾವೂ ಕುಳಿತು ಅಯ್ಯನವರು ಹೊರಟರು. +ಅವರು ಕಂಬನಕೆರೆ ಮುಟ್ಟುವ ಹೊತ್ತಿಗೆ ರಾತ್ರಿ ಕತ್ತಲಾಗಿತ್ತು. ಡಾಕ್ಟರ ಮನೆಯ ಹತ್ತಿರಕ್ಕೆ ಗಾಡಿ ಹೊಡೆಸಿದ ಅವರು ಒಳಗೆ ಹೋಗಿ ಕೇಳಿದುದಕ್ಕೆ ಹೊರಗೆ ಬಂದ ಡಾಕ್ಟರು ಎಂದರು: ‘ಹೀಗೆ ಪ್ಲೇಗಾದ ರೋಗಿಗಳನ್ನು ಯಾಕೆ ಊರೊಳಕ್ಕೆ ಕರ್ಕಂಡ್ ಬಂದ್ರಿ?’ +‘ಆಸ್ಪತ್ರೆ ತಾವ ನೀವಿರ್ಲಿಲ್ಲ ಬುದ್ದಿ .’ +‘ಹಗಲು ರಾತ್ರಿ ನಾನು ಅಲ್ಲೇ ಇರಬೇಕೇನು? ಲೋ, ಕರಿಯಾ, ನೋಡು, ಆಸ್ಪತ್ರೆಗೆ ಹೋಗಿ ಬಾಗಿಲು ತೆಗೆದು, ಮೇಜಿನ ಮೇಲಿರೋ ದೊಡ್ಡ ಶೀಶೇಲಿ ಬಲಗಡೆಯಿಂದ ಎರಡನೇದರಲ್ಲಿ ಇವರಿಗೆ ಮೂರು ಔನ್ಸ್ ಕೊಡು’-ಎಂದು ಜವಾನನಿಗೆ ಹೇಳಿ ಒಳಗೆ ಹೋಗಿ ಬಿಟ್ಟರು. +ಇವರ ಜೊತೆ ಆಸ್ಪತ್ರೆಯ ತನಕ ಬಂದ ಕರಿಯನಿಗೆ ಅಯ್ಯನವರ ಕಾವಿ ಬಟ್ಟೆ ಕಂಡು ಭಕ್ತಿ ಹುಟ್ಟಿರಬೇಕು: ‘ಅಯ್ಯಾರೇ, ಈ ಔಸ್ತೀಲಿ ಏನೂ ವಾಸಿಯಾಗಾಕಿಲ್ಲ. ತಿಪಟೂರಿನಾಗೆ ಹೇಮಾದಿ ಪಾನಕ ಅಂತ ಸಿಕ್ತೈತೆ. ಮೂರು ರೂಪಾಯಿಗೆ ಒಂದು ಬಾಟ್ಲಿ. ಯಂಗ್‌ಟಾಚಲಶೆಟ್ರ ಅಂಗ್ಡೀಲಿ ಸಿಕ್ತೈತೆ. ಪ್ಯಾಟೆ ಬೀದೀಲಿ ವಾಸದ ಮನೆ ಮುಂದ್ಗಡೆಯೇ ಅಂಗ್ಡಿ. ಈ ಉಡುಗುಂಗೆ ಕುಡ್ಸಿ. ಕಾಯ್ಲಾ ಇನ್ನೂ ರೇಗಿಲ್ಲ ವಾಸಿಯಾಗ್ತೈತೆ.’ +‘ಡಾಕ್ಟ್ರು ಹಂಗೆ ಏಳಿದ್ರಲ್ಲಣ್ಣ.’ +‘ಅವ್ರು ಏಳ್ತಾರೆ. ನೀವು ನಾನ್ ಏಳ್ದಾಂಗ್ ಮಾಡಿ. ಬೇಕಾದ್ರೆ ಈ ನೀರ್ನೂ ಕೊಡ್ತೀನಿ. ಇದ್ರಿಂದ ಗುಣವಿಲ್ಲ.’ +ತಕ್ಷಣ ತಿಪಟೂರಿಗೆ ಹೋಗಬೇಕೆಂದು ಅಯ್ಯನವರು ನಿರ್ಧರಿಸಿದರು. ಗಾಡಿಯವನು ಹಿಂದು ಮುಂದು ನೋಡಿದ. ‘ಲೇ, ಮನುಸ್ರ ಜೀವ ಹೋಗೂವಾಗ ಹಿಂದ್ಲೇಟು ಹ್ವಡೀಬ್ಯಾಡ್ದು. ನಿಂಗೂ ಮನ್ಲಿ ಮಕ್ಳು ಮರಿ ಅವೆ. ನೆಪ್ನಾಗ್ ಮಡಿಕ;-ಎಂದು ಅಯ್ಯನವರು ಹೇಳಿದಮೇಲೆ, ಭಯ, ದಾಕ್ಷಿಣ್ಯ, ಮತ್ತು ಒಳ್ಳೆಯತನಗಳಿಂದ ಕೂಡಿ ಅವನು ಒಪ್ಪಿದ. ಕಂಬನಕೆರೆಯಿಂದ ತಿಪಟೂರಿಗೆ ನೇರವಾದ ರಸ್ತೆ. ಮೋಟಾರು ಸಹ ಹೋಗುತ್ತೆ. ಹತ್ತು ಹನ್ನೊಂದು ಮೈಲಿಯ ದೂರ. ಹುಡುಗನಿಗೆ ಹಸಿವಾಗುತ್ತದೆಂದು ಅಯ್ಯನವರು ಒಂದು ಪೊಟ್ಟಣ ಬಿಸ್ಕತ್ತು ಕೊಂಡು ಜೊತೆಯಲ್ಲಿ ಇಟ್ಟುಕೊಂಡರು. ಗಾಡಿ ಕಟ್ಟಿಸಿ ತಕ್ಷಣ ಹೊರಟರು. +ನಡುರಾತ್ರಿ ಕಳೆಯುವ ಹೊತ್ತಿಗೆ ಗಾಡಿ ತಿಪಟೂರು ಮುಟ್ಟಿತು. ವೆಂಕಟಾಚಲಶೆಟ್ಟರ ಅಂಗಡಿ ಅಯ್ಯನವರಿಗೂ ಗೊತ್ತು. ಈ ಹೊತ್ತಿನಲ್ಲಿ ಬಾಗಿಲು ಹಾಕಿರುತ್ತೆ ನಿಜ. ಆದರೆ ಶೆಟ್ಟರ ವಾಸ, ಅಂಗಡಿ, ಎರಡೂ ಒಂದೇ ಮನೆ ಎಂಬ ನೆನಪಾಗಿ ಅವರು ಹೋಗಿ ಗಾಡಿಯ ಕೊರಳು ಇಳುಕಿ ಬಾಗಿಲು ಬಡಿದರು. ಎಚ್ಚೆತ್ತು ತಾವೇ ಹೊರಗೆ ಬಂದ ಶೆಟ್ಟರು, ಇವರು ಹೇಳಿದುದನ್ನು ಕೇಳಿ ಹೇಳಿದರು: ‘ಹೇಮಾದಿ ಪಾನಕ ಒಂದೇ ಆಯುರ್ವೇದದಲ್ಲಿರೋ ಔಷಧ. ನಮ್ಮದು ಸೀದಾ ಮದರಾಸು ವೆಂಕಟಾಚಾರ್ಲು ಕಂಪನಿಯಿಂದ ತರಿಸೂ ಔಷಧ. ಖಾಯ್ಲ ರೇಗುವ ಮೊದಲೇ ಕೊಟ್ರೆ ಗುಣ. ರೇಗಿದ ಮ್ಯಾಲೆ ಕೆಂದಬೌದು. ಕಳಚಬೌದು. ನಿಮಗೆಷ್ಟು ಬಾಟ್ಲು ಬೇಕು?’ +‘ಒಂದು ಸಲ ಕಾಯಿಲೆಯಾದೋರಿಗೆ ಎಷ್ಟು ಸಲ ಕುಡಿಸ್ಬೇಕು?’ +‘ಸಲಕ್ಕೆ ನಾಕು ಚಮ್ಚದ ಹಾಗೆ ದಿನಕ್ಕೆ ನಾಕು ಸಲ. ಒಂದು ಬಾಟ್ಲಿ ಮೂರು ದಿನಕ್ಕೆ ಆಗುತ್ತೆ. ಮೂರು ರೂಪಾಯಿಗೆ ಬಾಟ್ಲು.’ +ಅಯ್ಯನವರ ಹತ್ತಿರ ಇಪ್ಪತ್ತು ರೂಪಾಯಿ ಇತ್ತು. ಹದಿನೆಂಟು ರೂಪಾಯಿ ತೆಗೆದುಕೊಂಡು ಒಟ್ಟು ಆರು ಶೀಶೆ ಔಷಧಿ ಕೊಟ್ಟಮೇಲೆ ಶೆಟ್ಟರು ಹೇಳಿದರು: ‘ಹುಡುಗನಿಗೆ ಈಗಲೇ ನಾಕು ಚಮ್ಚ ಕುಡಿಸಿ. ಅದೇನು ಜೇನುತುಪ್ಪದ ಹಾಗೆ ಸೀಯಾಗಿರುತ್ತೆ. ಪ್ಲೇಗಿರೂ ಊರಿನೊಳಕ್ಕೆ ಮಾತ್ರ ಕರ್ಕಂಡು ಹೋಗ್‌ಬಾರ್‍ದು. ರೋಗ ಇರೂ ಮನೆಗೂ ಹೋಗ್‌ಕೂಡ್ದು. ಎಲ್ಲಾದ್ರೂ ಊರ ಹೊರಗೇ ಇಡ್‌ಬೇಕು.’ +ಇಷ್ಟು ಹೇಳಿ ಶೆಟ್ಟರು ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದರು. ತಕ್ಷಣ ಗಾಡಿ ಕಟ್ಟಲು ಎತ್ತುಗಳು ಸೋತಿದ್ದವು. ಅಲ್ಲದೆ ಅಯ್ಯನವರು ಮತ್ತು ಗಾಡಿಯಾಳಿಗೂ ಸುಸ್ತಾಗಿತ್ತು. ಈ ಹೊತ್ತಿನಲ್ಲಿ ಹೊಟ್ಟೆಗೆ ಏನಾದರೂ ಸಿಕ್ಕಬೇಕಾದರೆ ರೈಲ್ವೆಸ್ಟೇಷನ್ ಹೋಟೆಲಿನಲ್ಲಿ ಮಾತ್ರವೇ. ಗಾಡಿಯನ್ನು ಅಲ್ಲಿಗೆ ಹೊಡೆದು ಒಂದು ಬಟ್ಟಲು ಇಸಿದುಕೊಂಡು ಮೊದಲು ವಿಶ್ವನಿಗೆ ಔಷಧಿ, ಮೇಲೆ ಒಂದು ಬಟ್ಟಲು ಕಾಫಿ ಕುಡಿಸಿದರು. ಒಡೆ ಪಕೋಡಗಳನ್ನು ಬಿಟ್ಟರೆ ಇನ್ನೇನೂ ತಿಂಡಿ ಇರಲಿಲ್ಲ. ಎಂಟಾಣೆಗೆ ಕಟ್ಟಿಸಿಕೊಂಡು ಅವರು, ಗಾಡಿಯಾಳು, ಇಬ್ಬರೂ ತಿಂದಮೇಲೆ ಆಳು ಏನೋ ಜ್ಞಾಪಕ ಬಂದವನಂತೆ ಹೇಳಿದ: ‘ಅಯ್ಯಾರೇ, ನಾವೂ ಊರು ಬಿಟ್ಟು ಶೆಡ್ಡು ಆಕ್ಬೇಕು. ಎತ್ತು ತಾರಾಗ್ಯವೆ. ಆದ್ರೂ ಸಟಿಲ್ಲ, ನಿಧಾನವಾಗಿ ಹ್ವಡ್ದೇ ಬಿಡಾನ.’ +‘ಅದೇ ವೈನ.’ +ಕೊರಳೆತ್ತಿದರು. ವಿಶ್ವನಿಗೆ ಜ್ವರ ಕಾಯುತ್ತಿದ್ದರೂ ಪ್ರಜ್ಞೆ ತಪ್ಪುತ್ತಿರಲಿಲ್ಲ. ಅಯ್ಯನವರು ಅವನ ತೊಡೆ ಸಂದು, ಕಂಕುಳಗಳ ಹತ್ತಿರ ಮುಟ್ಟಿ ಮುಟ್ಟಿ, ‘ನೋಯ್ತದಾ ಮರಿ?’ ಎಂದು ಕೇಳಿದರೆ ಇಲ್ಲವೆನ್ನುತ್ತಿದ್ದ. ಅವರಿಗೆ ಅದೊಂದೇ ಧೈರ್ಯ. ಗೆಡ್ಡೆ ಕಾಣಿಸಿಕೊಳ್ಳುವ ಮೊದಲೇ ಔಷಧಿ ಬಿದ್ದಿರುವುದರಿಂದ ರೋಗ ಮೊಳಕೆಯಲ್ಲೇ ಕಡಿಯಬಹುದು ಎಂಬ ಭರವಸೆಯಿಂದ ಅವರೂ ಗಾಡಿಯ ತಡಿಕೆಗೆ ಒರಗಿ ಕಣ್ಣು ಮುಚ್ಚಿ ತೂಕಡಿಸಲು ಮೊದಲು ಮಾಡಿದರು. ಸೋತ ಎತ್ತುಗಳು ನಿಧಾನವಾಗಿ ಕಾಲು ಹಾಕುತ್ತಿದ್ದವು. ಕಂಬನಕೆರೆ ದಾಟುವ ತನಕ ಮೋಟಾರು ರಸ್ತೆಯ ದಾರಿಯಿದ್ದುದರಿಂದ ಗಾಡಿಯವನೂ ಒಳಭಾಗದ ತಡಿಕೆಗೆ ಬೆನ್ನುಕೊಟ್ಟು ಕಣ್ಣು ಮುಚ್ಚಿಕೊಂಡೇ ನಡುನಡುವೆ ಲೊಚ್ಚೆ ಹಾಕುತ್ತಿದ್ದ. +ಬೆಳಿಗ್ಗೆ ಹೊತ್ತು ಹುಟ್ಟುವ ಹೊತ್ತಿಗೆ ಅವರು ಆಗಲೇ ಅರ್ಧ ದಾರಿ ಬಂದಿದ್ದರು. ರಸ್ತೆಯ ಪಕ್ಕದಲ್ಲಿ ಇದ್ದ ಒಂದು ಕಟ್ಟೆಯ ಹತ್ತಿರ ಗಾಡಿ ನಿಲ್ಲಿಸಿ ಅಯ್ಯನವರು ವಿಶ್ವನಿಗೆ ಬಾಯಿ ಮುಕ್ಕುಳಿಸಿಸಿ ಬಾಟ್ಲಿಯನ್ನೇ ಎತ್ತಿ ಇನ್ನೊಂದು ಸಲ ಔಷಧಿ ಕುಡಿಸಿದರು. ಜ್ವರವೇನೋ ಇತ್ತು. ಆದರೆ ಎಲ್ಲಿಯೂ ಗೆಡ್ಡೆ ಕಾಣಿಸಿಕೊಂಡಿರಲಿಲ್ಲ. ಅವರ ಧೈರ್ಯ ಇನ್ನೂ ಹೆಚ್ಚಿತು. ಹುಡುಗನಿಗೆ ತಿನ್ನಲು ಇನ್ನೆರಡು ಬಿಸ್ಕತ್ತು ಕೊಟ್ಟು, ಅವರಿಬ್ಬರೂ ಕಟ್ಟೆಯ ಏರಿಯವರೆಗೆ ಹೋಗಿ ಬಂದು ಮತ್ತೆ ಗಾಡಿ ಕಟ್ಟಿದರು. ದಾರಿಯಲ್ಲಿ ಬರುತ್ತಾ ಅವರಿಗೆ ಒಂದು ಯೋಚನೆ ಹೊಳೆಯಿತು: ಹ್ಯಂಗೂ ಎಲ್ಲಾ ಊರು ಬಿಡ್ತಾರೆ. ವಿಶ್ವನ್ನ ಊರೊಳಕ್ಕೆ ಕರ್ಕಂಡ್ ಓಗ್ಲೇಬ್ಯಾಡ್ದು. ಊರು ಬಿಟ್ಟಾಗ ಏರಿಮ್ಯಾಲಿನ ಗುಡಿಯೇ ನಂದು. ಗಾಡಿ ಅಲ್ಲಿಗೆ ಹೊಡಸಿ ಇವ್ನುನ್ನ ಅಲ್ಲೇ ಮನಗಿಸ್ಬಿಡಾದು. ಊರೊಳಿಕ್ ಹ್ವಾಗಿ ನಂದೇ ಕಂಬ್ಳಿ ಚಾಪೆ, ದಿಂಬು, ತಂದ್ರೆ ಸಾಕು. +ಅವರು ಹಾಗೆಯೇ ಮಾಡಿದರು. ಹನ್ನೊಂದು ಗಂಟೆಯ ಹೊತ್ತಿಗೆ ಗಾಡಿ ಕೆರೆಯ ಏರಿ ಮೇಲಿನ ಗುಡಿಯನ್ನು ಮುಟ್ಟಿತು. ವಿಶ್ವನನ್ನು ಅಲ್ಲಿ ಇಳಿಸಿ ಮತ್ತೊಮ್ಮೆ ಔಷಧಿಯ ಶೀಶೆಯನ್ನೇ ಅವನ ಬಾಯಿಗೆ ಎತ್ತಿ ಕುಡಿಸಿ ತಾವು ಬರುವ ತನಕ ಅಲ್ಲಿಯೇ ಇರುವಂತೆ ಗಾಡಿಯವನಿಗೆ ಹೇಳಿ ಒಟ್ಟು ನಾಲ್ಕು ಶೀಶೆ ಔಷಧಿಯೊಡನೆ ಊರು ಹೊಕ್ಕರು. +– ೨ – +ಊರೊಳಗೆ ಪ್ರತಿಯೊಂದು ಮನೆಯವರೂ ಬಿದಿರು, ಅಡಿಕೆ ದಬ್ಬೆಗಳನ್ನು ಹೇರಿಕೊಂಡು ಶೆಡ್ಡು ಹಾಕಲು ಊರು ಬಿಟ್ಟು ಹೋಗುತ್ತಿದ್ದರು. ಶೆಡ್ಡು ಇನ್ನೂ ಪೂರ್ತಿಯಾಗುವ ಮೊದಲೇ ಎಷ್ಟೋ ಜನರು ಮನೆಯ ಪಾತ್ರೆ ದಿನಸಿಗಳನ್ನು ಹೊತ್ತು ಊರು ಬಿಟ್ಟು ನಡೆಯುತ್ತಿದ್ದರು. ಅಯ್ಯನವರು ಬರುವ ಹೊತ್ತಿಗೆ ಪಾರ್ವತಿ ರಾಮಣ್ಣರಿಗೆ ಮುಕ್ಕಾಲು ಭಾಗ ಜ್ಞಾನ ತಪ್ಪಿತ್ತು. ಆದರೆ ಗೆಡ್ಡೆಯ ನೋವಿನ ಪ್ರಜ್ಞೆಯಿಂದ ಪಾರ್ವತಿ ಆಗಾಗ್ಗೆ ‘ಅಯ್ಯಯ್ಯಮ್ಮ’ ಎಂದು ಕ್ಷೀಣವಾದ ದನಿಯಲ್ಲಿ ಕೂಗುತ್ತಿದ್ದಳು. ಅಯ್ಯನವರು ಒಬ್ಬರೇ ಬಂದದ್ದನ್ನು ಕಂಡ ನಂಜಮ್ಮನಿಗೆ ಗಾಬರಿಯಾಯಿತು. ಅದನ್ನು ಗಮನಿಸಿದ ಅವರೇ, ‘ಹ್ಯದರ್‌ಬ್ಯಾಡವ್ವ. ತಿಪಟೂರಿಗೆ ಗಾಡಿ ಹ್ವಡುಸ್ದೆ. ವಿಶ್ವನಿಗೆ ಜ್ವರ ಅದಾವೆ. ಗೆಡ್ಡೆ ಬಂದಿಲ್ಲ. ವಳ್ಳೇ ಔಸ್ತಿ ತಂದಿದೀನಿ. ಏರಿಮ್ಯಾಲಿನ ಗುಡೀಲಿ ಅವ್ನುನ್ನ ಮನಿಗಿಸಿವ್ನಿ. ಪ್ಲೇಗಿನ ಊರಿನೊಳಗೆ ಕರ್ಕಂಡು ಹೋಗ್‌ಬ್ಯಾಡಿ ಅಂತ ಏಳಿದ್ರು. ಈ ಔಸ್ತಿ ತಗಂಡು ಇವ್ರಿಬ್ರಿಗೂ ದಿನಕ್ಕೆ ನಾಕು ಸಲ ಕುಡ್ಸು.’ +ಶೀಶೆಯ ಬಿರಟಿ ತೆಗೆದು, ಅವರು ಹೇಳಿದಷ್ಟನ್ನು ಒಳಲೆಗೆ ಹಾಕಿ ಅವಳು ಇಬ್ಬರಿಗೂ ಹುಯ್ದಳು. ಬಟ್ಟಲಿನಲ್ಲಿ ಕುಡಿಯುವ ಶಕ್ತಿಯಾಗಲಿ ಜ್ಞಾನವಾಗಲಿ ಅವರಿಗೆ ಇರಲಿಲ್ಲ ‘ಇದೊಂದೇ ಔಸ್ತಿ. ಶಿವ ಉಳಿಸಿದ್ರೆ ಇದರಿಂದ್ಲೇ ಉಳಿಸ್ಕಬೇಕು’-ಎಂದು ಅಯ್ಯನವರು ಕೇಳಿದರು: ‘ಬ್ಯಾಗ ಊರು ಬಿಡ್‌ಬೇಕು. ನೀವೇನೂ ಮಾಡ್ಲಿಲ್ವಾ?’ +‘ನಾನು ಮನ್ಲೇ ಇದೀನಿ. ನಮ್ಮುನ್ನ ನೋಡುಕ್ಕೆ ಈ ಗಲಾಟೇಲಿ ಯಾರು ತಾನೆ ಬರ್ತಾರೆ?’ +‘ಚಿನ್ನಯ್ಯ ಎಲ್ಲಿ?’ +‘ಗೊತ್ತಿಲ್ಲ. ಬೆಳಿಗ್ಗೆ ಎಂಟು ಗಂಟೆಗೆ ಹೋದೋರು ಬಂದಿಲ್ಲ.’ +‘ನನ್ನ ಗುಡಿಗೆ ಓಗಿ ಕಂಬ್ಳಿಗಿಂಬ್ಳಿ ಒಯ್ದು ಏರಿಮ್ಯಾಲಿನ ಗುಡೀಲಿ ಮಡ್ಗ್ತೀನಿ. ನೀನು ವಿಶ್ವನ ಯೇಚ್ನೆ ಮಾಡ್‌ಬ್ಯಾಡವ್ವ. ಈ ಹುಡ್ಗುನ್ನ ನೋಡ್ಕ. ಅವ್ನು ಊರೊಳಕ್ಕೆ ಬರೂದೇ ಬ್ಯಾಡ. ಕುಳವಾಡಿ ಗಿಳವಾಡಿ ಕರದು ನಿಮ್ಗೆ ಗುಡ್ಳು ಹಾಕಕೆ ಏಳ್ತೀನಿ’-ಎಂದು ಹೇಳಿದ ಅವರು ತಮ್ಮೊಡನಿದ್ದ ಔಷಧಿಯ ಶೀಶೆಗಳನ್ನು ಅವಳಿಗೆ ಕೊಟ್ಟು, ವಿಶ್ವನಿಗೆ ಗಂಜಿ ಮಾಡಲು ಅಚ್ಚೇರಿನಷ್ಟು ಅಕ್ಕಿ ತರಿ ತೆಗೆದುಕೊಂಡು ಹೋದರು. ಪಾರ್ವತಿ ರಾಮಣ್ಣರ ಜೀವದ ಬಗೆಗೆ ನಂಜಮ್ಮನಿಗೆ ಖಾತ್ರಿ ತಪ್ಪಿಹೋಗಿತ್ತು. ಉಳಿದರೆ ದೇವರ ದಯ. ಇಬ್ಬರಿಗೂ ಎರಡೂ ತೊಡೆ, ತೋಳಿನ ಸಂದಿಯಲ್ಲಿ ಗೆಡ್ಡೆ ಉಬ್ಬಿ ಬಲಿತಿದೆ. ಜ್ವರವಂತೂ ಬಿಟ್ಟು ಬಿಟ್ಟು ಏರುತ್ತಲೇ ಇದೆ. ಪಾರ್ವತಿ ಆಗಾಗ್ಗೆ ಕಣ್ಣು ಬಿಟ್ಟು ನೋಡುತ್ತಿದ್ದಳಾದರೂ ಅವಳ ದೃಷ್ಟಿ ಈ ಲೋಕದಲ್ಲೇ ಇರಲಿಲ್ಲ. ಕೆದರಿ ಬಿರುಸುಗೊಂಡ ಮುಖ ನೋಡಿದರೆ ಹೆದರಿಕೆಯಾಗುವಂತಿತ್ತು. ರಾಮಣ್ಣ ಹೆಚ್ಚು ನರಳದೆ ಸುಮ್ಮನೆ ಮಲಗಿದ್ದಾನೆ. ಅವನ ಗೆಡ್ಡೆಗಳೂ ಒಂದೊಂದು ಗೆಣಸಿನ ಹಾಗೆ ಬೆಳೆದಿವೆ. ಇಬ್ಬರಲ್ಲಿ ಯಾರೂ ಬೆಳಗಿನಿಂದ ಒಂದು ಮಾತೂ ಆಡುತ್ತಿಲ್ಲ. ಅಯ್ಯನವರು ತಂದುಕೊಟ್ಟಿರುವ ಔಷಧಿ ತುಂಬ ಒಳ್ಳೆಯದೇ ಇರಬಹುದು. ತಿಪಟೂರಿನಿಂದ ತಂದದ್ದು. ಕಂಬನಕೆರೆಯ ಡಾಕ್ಟರು ಏನೆಂದರೋ! ವಿಶ್ವನ ವಿಷಯದಲ್ಲಿ ಯೋಚನೆ ಮಾಡಬೇಡ ಅಂತ ಅವರೇ ಹೇಳಿದಾರೆ. ನಾನು ಹೋಗಿ ಒಂದು ಸಲವಾದರೂ ನೋಡ್ಕಂಡು ಬರಬೇಕು. ನಾನು ಹೋದರೆ ಇಲ್ಲಿ ಮನೇಲಿ ಈ ಹುಡುಗರ ಹತ್ತಿರ ಯಾರು?’ +ಅದೇ ಹೊತ್ತಿಗೆ ಮೇಷ್ಟರ ಹೆಂಡತಿ ಬಂದರು. ಅವರ ಕೈಲಿ ಒಂದು ಪಾತ್ರೆ ಇತ್ತು. ಮೇಷ್ಟರು ಬೆಳಗ್ಗೆ ಬಂದು ಇವರನ್ನ ನೋಡಿಕೊಂಡು ಹೋಗಿದ್ದರು. ಆಕೆ ಎಂದರು: ‘ನೋಡ್ರೀ, ಮನೆಗೆ ಮಾಡಿದ ಅಡಿಗೆ ಬೇರೆ ಬೇರೆ ತಂದಿಡಬಾರ್‍ದು ಅಂತ ಶಾಸ್ತ್ರವಂತೆ. ಅದುಕ್ಕೆ ಬರೀ ಅನ್ನ ಹುಳಿ ಕಲಸ್ಕಂಡು ಬಂದೆ. ಇದುನ್ನ ಒಳಗೆ ಇಟ್ಟು ಹೋಗ್ತೀನಿ. ನಮ್ಮನೆಯೋರು ಸಾಮಾನು ಕಟ್ತಾ ಇದಾರೆ. ಈಗ ಹ್ಯಾಗಿದಾರೆ ಹುಡುಗರು?’ +‘ಏನೂ ವ್ಯತ್ಯಾಸವಿಲ್ಲ. ಬೆಳಗಿನಿಂದ ಮಾತಾಡಿಲ್ಲ.’ +‘ನಿಮ್ಮ ಕುಳುವಾಡಿನೋ ಯಾರಾದ್ರೂ ನಾಕು ಜನ ಕಳ್ಸಿ. ನಮ್ಮನೆಯೋರು ನಿಮಗೂ ಒಂದು ಸಣ್ಣ ಶೆಡ್ಡು ಹಾಕುಸ್ತಾರೆ. ನೀವು ಹುಡುಗರ ಜೊತೆ ಬನ್ನಿ. ಸಾಮಾನು ನಾವು ಕಟ್ಟಿ ತಂದು ಹಾಕ್ತೀವಿ. ಶ್ಯಾನುಭೋಗರೆಲ್ಲಿ?’ +‘ಎಲ್ಲಿಗೆ ಹೋದ್ರೋ ಯಾರಿಗೆ ಗೊತ್ತಮ್ಮ!’ +ಆಕೆ ಗಡಿಬಿಡಿಯಲ್ಲಿ ಹೊರಟುಹೋದರು. ಶೆಡ್ಡು ಹಾಕುವ ಬಿದಿರು ಮತ್ತು ದಬ್ಬೆಗಳು ನಂಜಮ್ಮನ ಮನೆಯ ಅಟ್ಟದಲ್ಲಿ ಇದ್ದುವು. ಸೋಗೆಯೊಂದೇ ಬೇಕಾಗಿದ್ದುದು. ಈಗ ಅದು ಊರಿನವರಿಗೆಲ್ಲ ಬೇಕಾಗಿದ್ದುದರಿಂದ ಸ್ವಲ್ಪ ತಾಪತ್ರಯ ಆಗಿತ್ತು. ಒಂದು ಗಾಡಿ ಹೊಡೆಸಿ ಕಳಿಸಿದರೆ ಕುರುಬರಹಳ್ಳಿಯಿಂದ ಬೇಕಾದಷ್ಟು ಹೇರಿಸಿ ತರಬಹುದು. ಆ ಊರನ್ನೂ ಬಿಡುತ್ತಿದ್ದಾರೋ ಹೇಗೋ ಗೊತ್ತಿಲ್ಲ. ಯಾವುದಕ್ಕೂ ಮುಂದೆ ನಿಂತು ಮಾಡುವವರು ಯಾರು? ನಂಜಮ್ಮ ಎದ್ದು ಇನ್ನೊಂದು ಸಲ ಇಬ್ಬರಿಗೂ ಒಳಲೆಯಲ್ಲಿ ಹೇಮಾದಿ ಪಾನಕ ಕುಡಿಸಿದಳು. ‘ಗಂಜಿ ಬೇಕೆ?’-ಎಂದು ಕೇಳಿದುದು ಯಾರಿಗೂ ಅರ್ಥವಾಗಲಿಲ್ಲ. ಈಗತಾನೇ ಔಷಧಿ ಹೊಟ್ಟೆಗೆ ಹೋಗಿದೆ. ಒಂದರ್ಧ ಗಂಟೆ ಕಳೀಲಿ-ಎಂದು ಅವಳು ಸುಮ್ಮನಾದಳು. ಅಷ್ಟರಲ್ಲಿ ಚೆನ್ನಿಗರಾಯರು ಮನೆಗೆ ಬಂದರು. ಅವರ ತಲೆಯ ಮೇಲೆ ಒಗೆದ ಎರಡು ಪಂಚೆ ಒಂದು ಅಂಗಿ ಇದ್ದುವು. ಉಟ್ಟಿದ್ದ ಒಂದು ಚೌಕ ಅರೆ ಒದ್ದೆಯಾಗಿತ್ತು. ಹಣೆಯ ಮೇಲಿದ್ದ ವಿಭೂತಿಯನ್ನೂ ಕಂಡ ತಕ್ಷಣ ಅವರು ತೋಟದ ಬಾವಿಯಲ್ಲೋ ಅಥವಾ ಕೆರೆಕೋಡಿಯಲ್ಲೋ ಬಟ್ಟೆ ಒಗೆದು ಸ್ನಾನ ಮಾಡಲು ಹೋಗಿದ್ದರೆಂಬುದು ತಿಳಿಯುತ್ತಿತ್ತು. ಹಣೆಯ ಮೇಲಿದ್ದ ವಿಭೂತಿಯು, ಅವರು ಸಂಧ್ಯಾವಂದನೆ ಮಾಡಿದ್ದಾರೆಂಬುದನ್ನು ಹೇಳುತ್ತಿತ್ತು. ಸಂಧ್ಯಾವಂದನೆಗೆ ಕೂತರೆ, ‘ಓಂ ತತ್ಸತತತತತ ಓಂ ತತ್ಸವಿತತತತತ’ ಎಂದು ನುಂಗಿ ನುಡಿಯುವಂತೆ ನೂರ ಎಂಟೋ ಸಾವಿರದೆಂಟೋ ಗಾಯಿತ್ರಿ ಮಾಡದೆ ಮೇಲೆ ಏಳುವುದಿಲ್ಲ. ಈವತ್ತು ಅವರು ಹೊರಗೆ ಹೋಗಿದ್ದ ಸಮಯ ನೋಡಿದರೆ ಸಾವಿರದೆಂಟು ಗಾಯಿತ್ರಿ ಮಾಡಿಯೇ ಬಂದಿದ್ದಾರೆಂದು ಖಚಿತವಾಗುತ್ತಿತ್ತು. +‘ಮನೇಲಿ ಹುಡುಗರು ಸಾಯ್ತಾ ಬಿದ್ದಿದ್ದಾರೆ. ಊರೆಲ್ಲ ಬಿಡ್ತಾ ಇದಾರೆ. ಇವತ್ತೇ ಬಟ್ಟೆ ಒಗಿಯುಕ್ಕೆ ಏನಾಗಿತ್ತು ನಿಮಗೆ?’ +‘ಕೊಳೆಪಂಚೇನ ಎಷ್ಟು ದಿನ ಅಂತ ಹಾಕ್ಕಂಡಿರ್ಲಿ? ನಾಕು ದಿನ ಆಯ್ತು ನೀನು ಒಗ್ದುಕೊಟ್ಟು. ನೀನು ಅದೇ ಸೀರೆ ಸುತ್ಕಂಡಿದಿಯಾ. ನೀನೇನು ಬ್ರಾಂಬ್ರ ಜಾತೀಲಿ ಹುಟ್ಟಿಲ್ವೆ?’ +ಅವರ ಸಂಗಡ ವಾದ ಮಾಡಿ ಪ್ರಯೋಜನವಿಲ್ಲವೆಂದು ಅವಳು ಸುಮ್ಮನಾದಳು. ಯಜಮಾನರು ಅಡಿಗೆಮನೆಯ ಒಳಹೊಕ್ಕೊಡನೆಯೇ ಮೇಷ್ಟರ ಮನೆಯ ಕೊಳದಪ್ಪಲೆ ಕಣ್ಣಿಗೆ ಬಿತ್ತು. ಮುಚ್ಚಳ ತೆಗೆದು, ಹತ್ತಿರವೇ ಇದ್ದ ಒಂದು ಅಲ್ಯೂಮಿನಿಯಂ ತಟ್ಟೆಗೆ ಬಡಿಸಿಕೊಂಡು ಪಂಚಪಾತ್ರೆಗೆ ನೀರು ಬಗ್ಗಿಸಿ ಬಲಗೈಗೆ ಉದಕ ಹಾಕಿ ಪರಿಷೇಂಚನೆ ಮಾಡಿ, ಚಿತ್ರಾಯ ನಮಃ, ಯಮಾಯ ನಮಃ, ಯಮಧರ್ಮಾಯ ನಮಃ, ಸರ್ಮಭೂತೇಬ್ಯೋ ನಮಃ ಎಂದು ಐದು ಸಲ ಚಿತ್ರಾವತಿ ಇಟ್ಟು ವಿಧಿಪೂರ್ವಕ ಪ್ರಾರಂಭಿಸಿ ಭೋಜನ ಮುಗಿಸಿದರು. ಚೆನ್ನಿಗರಾಯರ ಹಸಿವು ಮೇಷ್ಟರ ಹೆಂಡತಿಗೇನು ಗೊತ್ತು? ಆಕೆ ತಂದುಕೊಟ್ಟಿದ್ದ ಅನ್ನ ಇವರಿಗೆ ಸಾಲಲಿಲ್ಲ. ಭೋಜನವನ್ನು ಪರಿಸಮಾಪ್ತಿ ಮಾಡಿ ಆಪೋಶನ ತೆಗೆದುಕೊಂಡು ಇವರು ಹೊರಬರುವ ಹೊತ್ತಿಗೆ ಮಾದೇವಯ್ಯನವರು ಮತ್ತೆ ಬಂದರು. ಅಷ್ಟರಲ್ಲಿ ಪಾರ್ವತಿ ಸ್ವಲ್ಪ ಮೇಲೆ ಕೆಳಗೆ ಉಸಿರಾಡುತ್ತಿದ್ದಳು. ಮತ್ತೇನು ಮಾಡುವುದಕ್ಕೂ ತಿಳಿಯದೆ ನಂಜಮ್ಮ ಅವಳ ಭುಜದ ಮೇಲೆ ಕೈ ಇಟ್ಟು ಕುಳಿತಿದ್ದಳು. ಅಯ್ಯನವರೆಂದರು: ‘ಚಿನ್ನಯ್ಯ, ನೀವು ಸೀದಾ ಹೋಗಿ ಏರಿ ಮ್ಯಾಲಿನ ಗುಡೀಲಿ ಇರಿ. ಅಧ್ಯದ ಅಂಕಣದಾಗೆ ವಿಶ್ವ ಮನಗ್ಯವ್ನೆ. ಹೊರಕೇರಿ ನಂಜನ ಉಡುಗ ಆಡು ಕಾಯ್ತಿದ್ದ. ಅವ್ನುನ್ನ ಅಲ್ಲೇ ಇರು ಅಂತ ಬಿಟ್ಟು ಬಂದಿವ್ನಿ. ನೀವು ಹೋಗಿ ಸುಮ್ಕೆ ಅಲ್ಲಿ ಕುಂತಿರ್ರಿ. ಇನ್ನೇನೂ ಮಾಡ್‌ಬ್ಯಾಡಿ.’ +‘ನಾನೊಬ್ನೆ ಇರುಕ್ಕೆ ಬೇಜಾರಾಗುಲ್ವೇನ್ರೀ?’ +ಅಯ್ಯನವರಿಗೆ ರೇಗಿತು. ‘ನೀನೇನು ಮನುಷ್ಯನೋ ದನವಯ್ಯ? ಏಳ್ದೋಟು ಕೇಳಾದುಬಿಟ್ಟು’-ಎಂದುಬಿಟ್ಟರು. ಅಯ್ಯನವರು ಯಾವತ್ತೂ ಯಾರ ಮೇಲೆಯೂ ರೇಗಿದವರಲ್ಲ. ಅವರ ಮಾತು ಕೇಳಿದ ಶ್ಯಾನುಭೋಗರು ಸ್ತಬ್ಧರಾದರು: ‘ಹ್ಞೂ ಹೋಗ್ತೀನಿ. ಒಂದಿಷ್ಟು ಹೊಗೆಸೊಪ್ಪಿದ್ರೆ ಕೊಡಿ. ಊಟವಾದ ಮೇಲೆ ಹಾಕ್ಕಳ್ದೆ ಇದ್ರೆ ಹ್ಯಾಗ್ ಹ್ಯಾಗೋ ಆಗುತ್ತೆ.’ +‘ಈಗ ಊಟವೂ ಆಯ್ತಾ? ಬೋನ ಯಾರು ಬಸ್ದಿದ್ರು?’ +‘ಇವ್ಳೇ ಮಾಡಿದ್ಲೇನೋ.’ +‘ಮೇಷ್ಟ್ರ ಹೆಂಡ್ತಿ ಒಂದಿಷ್ಟು ತಂದಿಟ್ಟು ಹೋಗಿದ್ರು’-ನಂಜಮ್ಮ ಹೇಳಿದಳು. +‘ಅಲ್ಲೇ ನನ್ನ ಸಾಮಾನೆಲ್ಲ ಒಯ್ದು ಮಡಿಗಿವ್ನಿ. ನನ್ನ ಎಲಡಿಕೆ ಚೀಲವೂ ಅಲ್ಲೇ ಐತೆ. ತಗಂಡು ಏಟು ಬೇಕಾದ್ರೂ ಅಗ್ದು ಉಗುಳಿ’-ಎಂದು ಅಯ್ಯನವರು ಹೇಳಿದ ಮೇಲೆ ಒಣಗುಹಾಕಿದ್ದ ತಮ್ಮ ಪಂಚೆಯನ್ನು ತೆಗೆದು ಒಣಗುವಂತೆ ತಲೆಯ ಮೇಲೆ ಹಾಕಿಕೊಂಡು ಹೋದರು. +‘ಅವ್ವಾ, ನಿನ್ನ ಶೆಡ್ಡಿಗೆ ಏನು ಮಾಡ್ದೆ?’ +‘ಶೆಡ್ಡಿನ ಮನೆ ಕಾಯ್ವಾಗ. ಇವಳು ಹೀಗೆ ಉಸಿರಾಡ್ತಾ ಇದಾಳೆ ನೋಡಿ ಬನ್ನಿ.’ +ಅಯ್ಯನವರು ಹತ್ತಿರ ಹೋಗಿ ಪಾರ್ವತಿಯ ಮೂಗಿನ ಹತ್ತಿರ ಕೈಯಿಟ್ಟು ನೋಡಿದರು. ಉಸಿರು ಕ್ರಮವಾದ ಗತಿಯಲ್ಲಿರಲಿಲ್ಲ. ‘ಗಂಜಿ ಯಾವಾಗ ಕೊಟ್ರಿ?’ +‘ಕುಡಿಯೂದೇ ಇಲ್ಲ.’ +‘ಹ್ವಟ್ಟೆಗಿಲ್ಲದ ಸಂಕಟಕ್ಕೆ ಹಿಂಗಾಗೈತೆ. ಮದ್ಲು ಎದ್ದು ಗಂಜಿ ಮಾಡಿ ಕುಡ್ಸಿ. ಓಷ್ಟ್ರಲ್ಲಿ ನಾನು ನಿಮ್ಮ ಸ್ವಾಗೆಗೆ ಕುರುಬ್ರಳ್ಳೀಗೆ ಏಳಿಕಳುಸ್ತೀನಿ’-ಎಂದು ಹೇಳಿದ ಅವರು ಹೊರಗೆ ಹೋದರು. ಮೇಷ್ಟರಿಗೆ ಒಬ್ಬ ಹುಡುಗನಿದ್ದ. ವಿಶ್ವನಿಗಿಂತ ಎರಡು ವರ್ಷಕ್ಕೆ ದೊಡ್ಡವನಾದ ಅವನು ತುಂಬ ಚೂಟಿಗಾರ. ಅಯ್ಯನವರು ಮೇಷ್ಟರ ಮನೆಗೆ ಹೋಗಿ ಅವನಿಗೆ ಹೇಳಿದರು: ‘ಕುರುಬರ ಅಳ್ಳಿಗೆ ಒಬ್ನೇ ಓಗಿ ಬತ್ತೀಯಾ ಮಗ?’ +‘ಓ. ಓಡಿ ಹೋಗಿ ಬತ್ತೀನಿ.’ +‘ಗುಂಡೇಗೌಡ್ರ ಮನೆಗೆ ಓಗಿ ಏಳು. ಶ್ಯಾನುಭೋಗ್ರ ಮನ್ಲಿ ಮೂರು ಹುಡ್ರಿಗೂ ಪ್ಲೇಗು ಬಡಿದೈತಿ. ಗುಡ್ಳು ಹಾಕಾಕೆ ಸ್ವಾಗೆ ಇಲ್ಲ. ಗಳಪಳ ಯಲ್ಲಾ ಅವೆ. ಒಂದು ಗಾಡಿ ಸ್ವಾಗೆ ತುಂಬಿ ಈಗ್ಲೇ ಕಳ್ಸಾನಂತೆ. ಹಿಂದೆಲ್ಡು ಆಳುಗಳೂ ಬೇಕಂತೆ. ನಂಜಮ್ಮಾರು ಅಳ್ತಾ ಕುಂತವ್ರಂತೆ ಅಂತ ಏಳ್ತೀಯಾ?’ +‘ಓ ಯಲ್ಲಾ ಗ್ಯಾಪಿಸ್ಕಂಡ್ ಹೇಳ್ತೀನಿ.’ +ಬೇಗ ಹೋಗುವಂತೆ ಮೇಷ್ಟರೂ ಹೇಳಿದರು. ಮಾದೇವಯ್ಯನವರು ನಂಜಮ್ಮನ ಮನೆಗೆ ಬಂದರು. ಒಳಗೆ ಒಲೆಯ ಮೇಲೆ ಗಂಜಿ ಕುದಿಯುತ್ತಿತ್ತು. ಗುಂಡೇಗೌಡರು ತಕ್ಷಣ ಸೋಗೆ ಮತ್ತು ಆಳುಗಳನ್ನು ಕಳಿಸುವ ಬಗೆಗೆ ಅಯ್ಯನವರಿಗೆ ಪೂರ್ಣ ವಿಶ್ವಾಸವಿತ್ತು. ಅಷ್ಟರಲ್ಲಿ ಬಿದಿರನ್ನು ತೆಗೆದು ಹೊರಗೆ ಹಾಕಿರುವುದು ಒಳ್ಳೆಯದು. ಈ ರಾತ್ರಿಯೇ ಶೆಡ್ಡು ಮೇಲೆ ಎದ್ದರೆ ನಾಳೆ ಬೆಳಗಿನ ಒಳಗೆ ಈ ಮನೆ ಬಿಟ್ಟುಬಿಡಬಹುದು. ಊರು ಬಿಡದೆ ಹುಡುಗರ ಕಾಯಿಲೆ ಇಳಿಯುವುದಿಲ್ಲ-ಎಂದು ಯೋಚಿಸಿದ ಅವರು, ತಾವೇ ಅಟ್ಟಕ್ಕೆ ಹತ್ತಿದರು. ಬಿದಿರಿನಿಂದಲೇ ಮಾಡಿದ್ದ ಆ ಅಟ್ಟದ ಒಂದು ಮೂಲೆಯ ತುಂಬ ತುಂಬಿದ್ದ ಬಿದಿರು, ಉಪಯೋಗಿಸದೆ ಧೂಳಿನಿಂದ ಮುಚ್ಚಿಹೋಗಿತ್ತು. ಗಂಜಿ ತೆಗೆದುಕೊಂಡು ಬಂದ ನಂಜಮ್ಮನಿಗೆ-‘ಹುಡುಗ್ರ ತಲೆಮ್ಯಾಲೆ ಹೊದಿಸವ್ವ. ಧೂಳು ಬೀಳ್ತಾವೆ. ವಸಿ ಈ ಬಿದಿರ ಕೆಳಿಕ್ ಹಾಕ್ತೀನಿ’ ಎಂದು ಹೇಳಿ, ಹೆಚ್ಚು ಶಬ್ಧವಾಗದಂತೆ ಒಂದೊಂದಾಗಿ ಕೆಳಗೆ ಇಳಿಬಿಟ್ಟರು. ಮತ್ತೆ ಏಣಿಯಿಂದ ಇಳಿದು ಅವರು ಬೇಗ ಬೇಗ ಅವನ್ನು ತೆಗೆದು ಹೊರಗೆ ಹಾಕುವ ತನಕ ನಂಜಮ್ಮ ಧೂಳಾಗುತ್ತದೆಂದು ಗಂಜಿಯನ್ನು ಕೋಣೆಯಲ್ಲಿಯೇ ಆರಲು ಇಟ್ಟು ಬಂದಿದ್ದಳು. ಈಗ ಮತ್ತೆ ಒಳಗೆ ಹೋಗಿ, ಚರುಕಿನಲ್ಲಿದ್ದ ಗಂಜಿಯನ್ನು ಲೋಟೆಗೆ ಬಗ್ಗಿಸಿ ಒಳಲೆಯೊಡನೆ ಬಂದು ಪಾರ್ವತಿಯ ಮುಸುಕು ಸರಿಸಿ ನೋಡಿದರೆ ಉಸಿರು ಇನ್ನೂ ನಿಧಾನವಾಗಿ ಕಾಣುತ್ತಿತ್ತು. ಒಳಲೆಯ ಮೂತಿ ದವಡೆಯ ಭಾಗದ ತುಟಿಯೊಳಗೆ ಹೋದರೂ, ಕುಡಿಸಿದ ಗಂಜಿಯನ್ನು ಗುಟುಕಿಸಲಿಲ್ಲ. ‘ಅಯ್ನೋರೇ, ಬಿದಿರು ಅಲ್ಲಿರ್ಲಿ. ಬನ್ನಿ ಇಲ್ಲಿ’-ಎಂದು ಕೂಗಿದುದನ್ನು ಕೇಳಿ ಅವರೂ ಹತ್ತಿರ ಬಂದು ಕೂತು ಪಾರ್ವತಿಯ ಮುಖ ನೋಡಿದರು. ಅನುಮಾನ ಬಂತು. ‘ಗೆಡ್ಡೆಗಳು ಹ್ಯಂಗವೆ ವಸಿ ನೋಡಿ. ನಾನು ಕೈ ತೊಕ್ಕಂತೀನಿ’-ಎಂದು ಧೂಳು ತುಂಬಿದ ತಮ್ಮ ಕೈ ತೊಳೆಯಲು ಬಚ್ಚಲು ಮನೆಗೆ ಹೋದರು. +ನಂಜಮ್ಮ ಕೈಹಾಕಿ ನೋಡುತ್ತಾಳೆ: ಬಲತೊಡೆಯ ಸಂದಿನ ಗೆಡ್ಡೆ ಒಡೆದು ಅಲ್ಲೆಲ್ಲ ಕೀವು ಹರಿದಿದೆ. ‘ಅಯ್ನೋರೇ, ಬಲಗಡೆ ಗೆಡ್ಡೆ ಒಡೆದಿದೆ. ನೋಡಿ ಬನ್ನಿ.’ +ಅವರೂ ಬಂದು ಹೊದಿಕೆ ಸರಿಸಿ ನೋಡುತ್ತಾರೆ: ಬಾವು ಬಂದಂತೆ ಆಗಿದ್ದ ಅದು ಒಡೆದು ಬಿಳೀ ಕೀವು ಸೋರುತ್ತಿದೆ. ಅದರ ಸುತ್ತಲೂ ರಕ್ತವರ್ಣದ ದ್ರವ ಸ್ರವಿಸುತ್ತಿದೆ. ಕುರು ಒಡೆದರೆ ಕೀವು ರಕ್ತಗಳು ಬೆರೆತು ಸುರಿಯುವಂತೆ ಇಲ್ಲಿಯೂ ಆಗಿದೆ. ಸೀರೆಯನ್ನು ಸರುಗಿಸಿ ಅವರು ಇನ್ನೊಂದು ಕಡೆಯ ಗೆಡ್ಡೆಯನ್ನು ನೋಡಿದರು. ಅದೂ ಒಡೆಯುವ ಲಕ್ಷಣ ಕಾಣುತ್ತಿದೆ. ಅವರಿಗೆ ಅರ್ಥವಾಯಿತು. ಅವರೇ ಸೀರೆಯನ್ನು ಸರಿಮಾಡಿ ಎದೆಯ ತನಕ ಹೊದಿಸಿದರು. ‘ಏನಯ್ನೋರೆ?’-ಮಂಕು ಹಿಡಿದಂತೆ ನಂಜಮ್ಮ ಕೇಳಿದಳು. +‘ಶಿವನ ಇಚ್ಚೆ ಹೆಂಗೈತೋ ನೋಡಬೇಕು ಕಣವ್ವ.’ +ಅವಳಿಗೂ ಮಬ್ಬು ಅರ್ಥವಾಗಿಹೋಯಿತು. ಪಾರ್ವತಿಯ ಉಸಿರು ಸ್ವಲ್ಪ ಜೋರಾಗಿ ನಡೆಯಲು ಶುರುವಾಯಿತು. ನಂಜಮ್ಮ ಇದುವರೆಗೂ ಸಾವನ್ನು ಕಣ್ಣೆದುರಿಗೆ ಕಂಡವಳಲ್ಲ. ತುಂಬ ಕ್ಷೀಣವಾಗಿದ್ದ ಉಸಿರು ಈಗ ಶಕ್ತಿವಂತವಾದುದರ ಚಿಹ್ನೆಯನ್ನು ಅವಳು ಗ್ರಹಿಸಲಿಲ್ಲ. ಕಣ್ಣಿನ ಹೊಳಪು ಕಂದಿಹೋಗಿರುವುದರ ಕಡೆಗೆ ಅವಳ ಗಮನವಾಗಲಿ ಬುದ್ಧಿಯಾಗಲಿ ಹರಿಯಲಿಲ್ಲ. ಅಯ್ಯನವರಿಗೆ ಎಲ್ಲವೂ ಗೊತ್ತು. ಆದರೆ ಏನು ಹೇಳಬೇಕು, ಏನು ಬಿಡಬೇಕು ಎಂದು ತೋಚದೆ ಸುಮ್ಮನೆ ಕುಳಿತಿದ್ದರು. ಹೇಗೆ ಹೇಳಬೇಕೆಂಬುದೂ ತಿಳಿಯಲಿಲ್ಲ. ಕೊನೆಗೆ ಒಂದು ತೀರ್ಮಾನಕ್ಕೆ ಬಂದವರಂತೆ ಕೇಳಿದರು: ‘ನಿಮ್ಮಯ್ಯಾರು ಕಾಶಿಗೆ ಓಗಿ ಒಂದು ಗಂಗೆ ತಂದು ಕೊಟ್ರಂತಲ್ಲಾ, ಮನ್ಲಿ ಐತಾ?’ +‘ಯಾಕೆ?’-ಈಗ ನಂಜಮ್ಮನಿಗೆ ಅದರ ಅರ್ಥ ಹೊಳೆಯಿತು. +‘ಈಗ ಗಾಬರಿಯಾಗ್‌ಬ್ಯಾಡ್ದು. ಉಳಿಸಿದರೆ ಗಂಗಮ್ಮ ತಾಯಿ ಉಳುಸ್ಬೇಕು. ವಳಗೆ ಓಗಿ ತಗಂಡ್ ಬಾರವ್ವಾ.’ +ನಂಜಮ್ಮ ಓಡಿ ಹೋಗಿ ತಂದಳು. ಕುಡುಗೋಲಿನಿಂದ ಅದರ ಅರಗನ್ನು ಹೆರೆದು ಮುಚ್ಚಳದ ಒಂದು ಭಾಗಕ್ಕೆ ಕನ್ನ ಹಾಕಿ-‘ಮಗಳ ತಲೇನ ತೊಡೆಮೇಲೆ ಹಾಕ್ಕಳವ್ವ. ನೀನು ಸರಿಯಾಗಿ ಕೂತ್ಕ, ನಾನು ಮೆಲ್ಲಗೆ ಇಡ್ತೀನಿ’ ಎಂದು ಅವರೇ ಪಾರ್ವತಿಯ ತಲೆಯನ್ನು ಮೆಲ್ಲಗೆ ಎತ್ತಿ ಅವಳ ತೊಡೆಯ ಮೇಲೆ ಇಟ್ಟು, ಹತ್ತಿರವೇ ಇದ್ದ ಒಳಲೆಯಲ್ಲಿ ಗಂಜಿಯನ್ನು ಕೈಲಿ ಒರೆಸಿ ಹಾಕಿ, ಅದಕ್ಕೆ ಕಾಶೀಗಂಗೆ ಬಗ್ಗಿಸಿ ಅವಳ ಕೈಲಿ ಕೊಟ್ಟು, ‘ಮೆಲ್ಲಗೆ ಬಾಯಿಗೆ ಬಿಡವ್ವ. ತಡಿ, ನಾನು ತುಟಿ ಹಿಡಕಂಡು ಹಿಗ್ಗಲುಸ್ತೀನಿ’ ಎಂದರು. +ನಂಜಮ್ಮನಿಗೆ ಕೈ ನಡುಗುತ್ತಿತ್ತು. ಕೈಲಿದ್ದ ಒಳಲೆಯ ಗಂಗೆ ತುಳುಕಿ ಚೆಲ್ಲಿಹೋಗುತ್ತಿತ್ತು. ಅಯ್ಯನವರೇ ಅವಳ ಕೈ ಹಿಡಿದು ಒಳಲೆಯ ಮೂತಿಯನ್ನು ಉಪಾಯವಾಗಿ ಹಲ್ಲಿನ ಒಳಕ್ಕೆ ಸರಿಸಿ ನೀರು ಬಿಡಿಸಿದರು. ಜೋರಿನಿಂದ ಆಡುತ್ತಿದ್ದ ಪಾರ್ವತಿಯ ಉಸಿರು ಈಗ ಶಾಂತವಾಗುತ್ತಿತ್ತು. ಕಣ್ಣುಗಳು ಅರೆ ತೆರೆದಿದ್ದರೂ, ತನ್ನ ಮೇಲೆ ಬಾಗಿದ್ದ ತನ್ನ ಅಮ್ಮನ ಮುಖವು ಅದಕ್ಕೆ ಕಾಣುತ್ತಿರಲಿಲ್ಲ. ಅಮ್ಮನ ತೊಡೆಗಳ ಮೇಲೆಯೇ ತನ್ನ ತಲೆ ಇದೆ ಎಂಬ ಅರಿವು ಅವಳಿಂದ ಹಾರಿಹೋಗಿತ್ತು. ನಿಧಾನವಾಗುತ್ತಿದ್ದ ಉಸಿರು ಮತ್ತೂ ನಿಧಾನವಾಯಿತು. ತೀರ ವಿಲಂಬಗತಿಗೆ ಬಂದು ಒಂದು ಸಲ ಅಂತಿಮವಾಗಿ ಹೊರಗೆ ಬಂತು. ಮತ್ತೆ ಒಳಗೆ ಹೋಗಲಿಲ್ಲ. ಒಳಗಿದ್ದುದನ್ನೆಲ್ಲ ಒಂದೇ ಸಲಕ್ಕೆ ಹೊರಹಾಕಲೆಂದು ಅರೆತೆರೆದ ಬಾಯಿ ಮತ್ತೆ ಮುಚ್ಚಿಕೊಳ್ಳಲಿಲ್ಲ. +‘ಅ…..ಯ್ನೋ…..ರೇ’-ಎಂದು ತಡೆದ ಉಸಿರಿನಿಂದ ಬಿಕ್ಕಳಿಸುತ್ತಾ ನಂಜಮ್ಮ ಮಗಳ ಎದೆಯ ಮೇಲೆ ತಲೆ ಇಟ್ಟಳು. ಈಗ ಸಮಾಧಾನ ಹೇಳಿ ಸುಖವಿಲ್ಲವೆಂಬುದನ್ನು ಅಯ್ಯನವರು ಬಲ್ಲರು. ಮುಂದಿನ ಕೆಲಸದ ನೆನಪಾಗಿ ಸುಮ್ಮನೆ ಮೇಲೆ ಎದ್ದು ಅವರು ಮೇಷ್ಟರ ಮನೆಗೆ ಸರಸರನೆ ಓಡುವಂತೆ ನಡೆದರು. ತನ್ನ ಸಾಮಾನುಗಳ ಕೊನೆಯ ಕಂತನ್ನು ಗಾಡಿಗೆ ತುಂಬುತ್ತಿದ್ದ ಅವರಿಗೂ ಪಾರ್ವತಿ ಸತ್ತ ಸುದ್ದಿಯನ್ನು ಕೇಳಿ ಆಘಾತವಾಯಿತು. +‘ಈಗ ಸುಮ್ನೆ ನಿಂತ್ಕಣಾದಲ್ಲ. ಸಂಜೆಯಾಯ್ತು. ಸೌದೆ ಪೌದೆ ಜಮಾಯ್ಸ್‌ಬೇಕು. ನಡೀರಿ, ಜಾತಿಸ್ಥರು ನೀವು ಸೇರಿ ಮೊದ್ಲು ಹೆಣ ವಪ್ಪಾ ಮಾಡಿ.’ +ಮೇಷ್ಟರು ಓಡಿಬಂದರು. ಹಿಂದೆಯೇ ಅವರ ಹೆಂಡತಿ ಬಂದರು. ನಂಜಮ್ಮ ಇನ್ನೂ ಮಗಳ ಎದೆಯ ಮೇಲೆ ತಲೆ ಇಟ್ಟುಕೊಂಡು ಬಿಕ್ಕಳಿಸುತ್ತಿದ್ದಳು. ಅಯ್ಯನವರು ಹತ್ತಿರ ಬಂದು ಎಂದರು: ‘ಅವ್ವಾ, ಇದು ಸತ್ತ ಹೆಣ. ಇದು ಬಿಟ್ಟುಬಿಡು. ಇನ್ನು ರಾಮಣ್ಣನ್ನ ನೋಡು. ಅವನಿಗೆ ಗಂಜಿ ಕುಡಿಸದೆ ಹಂಗೇ ಕುಂತಿದೀಯಲ್ಲ. ಏಳು. ಆ ಕಡೆ ತಿರುಕ್ಕ.’ +‘ಅಯ್ನೋರೇ, ಪಾರ್ವತೀ…..’ +‘ಪಾರ್ವತಮ್ಮ ಸಿವನ ತಾವುಕ್ಕೆ ಹ್ವಾದ್ಲು. ಈಗ ರಾಮಣ್ಣನ್ನ ನೋಡು’-ಎಂದು ಅವರೇ ಪಾರ್ವತಿಯ ತಲೆಯನ್ನು ಎತ್ತಿ ಕೆಳಗೆ ಇಟ್ಟರು. ಮೇಷ್ಟರು ಇನ್ನು ತಡವಾಗಕೂಡದೆಂದು ಹೆಣದ ಕೈ ಕಾಲು ಮಡಿಸಿದರು. ಇದ್ದಕ್ಕಿದ್ದ ಹಾಗೆಯೇ ನಂಜಮ್ಮ ಅಳು ನಿಲ್ಲಿಸಿಬಿಟ್ಟಳು. ಅವಳ ಬಾಯಿಂದ ಮಾತೂ ನಿಂತು ಹೋಯಿತು. ಮೇಲೆ ಎದ್ದು ಅಡಿಗೆ ಮನೆಗೆ ಹೋಗಿ ಗಂಜಿಯನ್ನು ಮತ್ತೆ ಬಿಸಿಮಾಡಿ ತಂದು ಒಳಲೆಗೆ ಹಾಕಿ ರಾಮಣ್ಣನ ತಲೆ ಎತ್ತಿ ತನ್ನ ತೊಡೆಯ ಮೇಲೆ ಇಟ್ಟುಕೊಂಡಳು. ಅವನಿಗೆ ಎಷ್ಟು ಭಾಗ ಪ್ರಜ್ಞೆ ತಪ್ಪಿತ್ತೋ ಅವಳಿಗೆ ಸರಿಯಾಗಿ ತಿಳಿಯಲಿಲ್ಲ. ಕುಡಿಸಿದ ತಿಳಿಗಂಜಿ ಒಳಗೆ ಹೋಯಿತು. ಅವಳ ಮನಸ್ಸಿಗೆ ಧೈರ್ಯವೆನಿಸಿತು. ಅದೇ ಒಳಲೆಗೆ ಹೇಮಾದಿ ಪಾನಕ ಹಾಕಿಕೊಂಡು ಕುಡಿಸಿ ಬೆಚ್ಚಗೆ ಹೊದಿಸಿದಳು. ಕಂಕುಳು, ತೊಡೆಯ ಸಂದುಗಳಿಗೆ ಕೈ ಇಟ್ಟು ನೋಡಿದರೆ ಯಾವುದೂ ಒಡೆದಿರಲಿಲ್ಲ. ಗೆಡ್ಡೆ ಒಡೆದರೆ ಏನಾಗುತ್ತದೆ, ಒಡೆಯದಿದ್ದರೆ ಏನಾಗುತ್ತದೆ, ಒಡೆದಾಗಲೆಲ್ಲ ರೋಗಿ ಸಾಯುತ್ತಾನೆಯೇ, ಒಡೆಯದಿದ್ದಾಗಲೆಲ್ಲ ಬದುಕುತ್ತಾನೆಯೇ ಎಂಬ ಸ್ಪಷ್ಟ ಜ್ಞಾನ ಅವಳಿಗೆ ಇಲ್ಲ. ಆ ಜ್ಞಾನ ಅಲ್ಲಿ ಯಾರಿಗೂ ಇರಲಿಲ್ಲ. ಆದರೆ ಗೆಡ್ಡೆ ಒಡೆದ ನಂತರ ಪಾರ್ವತಿ ಸತ್ತಿದ್ದಳು. ರಾಮಣ್ಣನದು ಒಡೆದಿಲ್ಲ. ಅವನ ಉಸಿರೂ ಕ್ರಮತಪ್ಪಿ ನಡೆಯುತ್ತಿಲ್ಲ. ಆದುದರಿಂದ ಅವಳಿಗೆ ಒಂದು ತೆರನಾದ ಧೈರ್ಯವಾಯಿತು. ಇನ್ನು ಸಿಕ್ಕುವುದು ಸಾಧ್ಯವೇ ಇಲ್ಲದಂತೆ ಜೀವ ಹೊರಟುಹೋದ ಮಗಳ ದೇಹವನ್ನು ಬಿಟ್ಟು, ಈಗ ಅವಳು ಇನ್ನೂ ಕೈಗೆ ಸಿಕ್ಕಿದ್ದ ಮಗನ ತಲೆಯನ್ನು ಹಿಡಿದು ಮೂಕಳಂತೆ ಕೂತುಬಿಟ್ಟಳು. +ಗುಡಿಸಲು ಕಟ್ಟಲು ಅಯ್ಯನವರು ಹೇಗೋ ಅಟ್ಟ ಹತ್ತಿ ಮನೆಯ ಮುಂದೆ ಬಿದಿರು ಗಳುಗಳನ್ನು ತೆಗೆದು ಹಾಕಿದ್ದರು. ಚಟ್ಟ ಕಟ್ಟಲು ಅವೇ ಆಗುತ್ತವೆ. ಮೇಷ್ಟರು ಹೋಗಿ ಇಬ್ಬರು ಜೋಯಿಸರಿಗೂ ಹೇಳಿದರು. ಊರಿನ ಉಳಿದ ಮೂರು ಜನ ಬ್ರಾಹ್ಮಣರಿಗೂ ಸುದ್ದಿ ಮುಟ್ಟಿತು. ಎಲ್ಲರೂ ಊರು ಬಿಡುವ ಗಡಿಬಿಡಿಯಲ್ಲಿದ್ದಾರೆ. ಆದರೆ ಸತ್ತ ಹೆಣವನ್ನು ಬೇಗ ದಹನ ಮಾಡದೆ ಬಿಟ್ಟರೆ ರಾತ್ರಿಯಾಗುತ್ತದೆ. ಇನ್ನು ಬೆಳಗಿನ ತನಕ ಕಾಯಬೇಕು. ಜಾತಿಸ್ಥರು ಓಡಿ ಬಂದರು. ಈಗ ಚೆನ್ನಿಗರಾಯರು ಬರಬೇಕು. ವಿಶ್ವ ದೇವಸ್ಥಾನದಲ್ಲಿ ಒಂದೇ ಉಳಿಯುತ್ತದೆ. ಅದರ ಜೊತೆಗೆ ಯಾರು? ತಾವು ಈಗ ಇಲ್ಲಿಯೇ ಇರಬೇಕು. ಎಂದು ಅಯ್ಯನವರು ನಿಶ್ಚಯಿಸಿದರು. ಯಾರು ಸಿಕ್ಕಿದರೂ ಸರಿ, ಅವರನ್ನು ವಿಶ್ವನ ನಿಗ ನೋಡಲು ಒಪ್ಪಿಸಬೇಕು ಎಂದು ಯೋಚಿಸಿಕೊಂಡು ದೇವಸ್ಥಾನದ ಕಡೆಗೆ ಹೊರಟ ಅವರ ಕಣ್ಣಿಗೆ ಯಾರೂ ತಕ್ಕವರು ಬೀಳಲಿಲ್ಲ. ಊರ ಹೊರಗಿನ ತನ್ನ ಅಂಗಡಿಯ ಬಾಗಿಲಿನಲ್ಲಿ ನರಸಿ ಕೂತಿದ್ದಳು. ಅವಳೇ ಅಯ್ಯನವರನ್ನು ಮಾತನಾಡಿಸಿ-‘ಸ್ಯಾನುಬಾಗ್ರ ಮನೆ ಪಾರ್ವತವ್ವ ಹ್ವಾಗಿಬಿಡ್ತಂತೆ ನಿಜವಾ?’ ಎಂದು ಕೇಳಿದಳು. +ಅಯ್ಯನವರು ಅವಳ ಸಹಾಯವನ್ನೇ ಕೋರಿದರು. ವಿಷಯವನ್ನು ಹೇಳಿ-‘ನೀನು ಹ್ಯಂಗೂ ಊರು ಬಿಡಾಕಿಲ್ಲ. ಅಂಗ್ಡಿ ಬಾಕ್ಲು ಆಕ್ಕಂಡು ಬಾ. ನಾನು ಮತ್ತೆ ಬರಾಗಂಟ ಮಗಾ ನೋಡ್ಕಾಬೇಕು.’ +ನರಸಿ ಬಾಗಿಲಿಗೆ ಬೀಗ ಇಕ್ಕಿ ಹಿಂದೆಯೇ ಬಂದಳು. ಅಯ್ಯನವರ ಚೀಲದ ಸುಣ್ಣಕಾಯಿ ಡಬ್ಬಿ ತೆಗೆದು ಚೆನ್ನಿಗರಾಯರು ಆರನೆಯ ಬಾರಿ ಎಲೆಗೆ ಸುಣ್ಣ ಬಳಿಯುತ್ತಾ ಕೂತಿದ್ದರು. ಅಯ್ಯನವರು ಗರ್ಭಗುಡಿಗೆ ಹೋಗಿ ದೇವರ ಹಣತೆ ತಂದು ಹತ್ತಿರ ಇಟ್ಟು ನರಸಿಗೆ ಹೇಳಿದರು: ‘ಕತ್ಲಾದ್ರೆ ಈ ದೀಪ ಹಚ್ಕ. ಈ ಶೀಶೆ ಐತೆ ನೋಡು, ಇದ್ರಾಗೆ ಮೂರು ಮೂರು ಗಂಟೆಗೆ ಒಂದು ಸಲ ಔಸ್ತಿ ಈಟೀಟು ಕುಡ್ಸು. ಮಗ ಹ್ವಟ್ಟೆ ಹಸೀತೈತೆ ಅಂದ್ರೆ ಇದ್ರಲ್ಲಿ ಅಕ್ಕೀತರಿಯೈಯ್ತೆ, ಗಂಜಿ ಮಾಡಿ ಕುಡ್ಸು.’ +‘ನಾನೆಲ್ಲ ಮಾಡ್ತೀನಿ. ನೀವು ಹ್ವಾಗಿ.’ +ವಿಶ್ವ ಸದ್ದುಮಾಡದೆ ಮಲಗಿತ್ತು. ಅಯ್ಯನವರು ಚೆನ್ನಿಗರಾಯರಿಗೆ-‘ಪಾರ್ವತಮ್ಮ ಹ್ವಾಗಿಬಿಡ್ತು. ನೀವು ನಡೀರಿ. ಮುಂದಿನ ಕೆಲ್ಸ ಆಗ್ಬೇಕು’ ಎಂದರು. +‘ಅದ್ಯಾಕ್ ಹೋಗ್ಬಿಡ್ತ್ರೀ?’ +‘ಅದುನ್ನೇ ಕೇಳೂರಂತೆ ಬಲ್ಲಿ’-ಎಂದು ಅವರ ಕೈ ಹಿಡಿದುಕೊಂಡು ಅಯ್ಯನವರು ಹೊರಟುಬಂದರು. +ಅವರು ಬರುವ ವೇಳೆಗೆ ಮನೆಯ ಮುಂದೆ ಚಟ್ಟ ಕಟ್ಟಿ ಸಿದ್ಧವಾಗಿತ್ತು. ಅಣ್ಣಾಜೋಯಿಸರೇ ಮುಂದೆ ನಿಂತು ಎಲ್ಲವನ್ನೂ ನಿರ್ದೇಶಿಸುತ್ತಿದ್ದರು. ಅಯ್ಯಾಶಾಸ್ತ್ರಿಗಳಿಗೆ ಹೆಣವೆಂದರೆ ಮೊದಲಿನಿಂದಲೂ ಸ್ವಲ್ಪ ಭಯ. ಅವರು ಬೀದಿಯ ಹೊರಗೇ ನಿಂತು ಮಾತನಾಡುತ್ತಿದ್ದರು. ನಂಜಮ್ಮ ತನ್ನ ಮಗಳು ಸತ್ತೇ ಇಲ್ಲ, ಅಥವಾ ಈ ಮನೆಯಲ್ಲಿ ನಡೆಯುತ್ತಿರುವ ಶವಸಂಸ್ಕಾರದ ಸಿದ್ಧತೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ರಾಮಣ್ಣನ ಮುಖವನ್ನೇ ನೋಡುತ್ತಾ ಗರಬಡಿದವಳಂತೆ ಕುಳಿತಿದ್ದಳು. +‘ಇದರ ವಾರಸುದಾರರು ನಿಜವಾಗಿ ನೋಡಿದರೆ ಇವಳ ಗಂಡ. ಅವರಿಗೆ ತಿಳಿಸದೆ ಸಂಸ್ಕಾರವಾಗಬೌದೇ?’-ಅಣ್ಣಾಜೋಯಿಸರು ಕೇಳಿದರು. +‘ಈಗ ತಿಳಿಸೋದು ಹ್ಯಾಗೆ? ಅದೂ ಪ್ಲೇಗಿನಲ್ಲಿ ಸತ್ತ ಹೆಣ. ಮೈ ಕೈ ಎಲ್ಲ ಕಪ್ಪಗಾಗಿಬಿಡುತ್ತೆ. ಅದರ ಜವಾಬ್ದಾರಿ ನಂದು. ಮಧ್ಯ ನಿಂತು ನಾನೇ ಮದುವೆ ಮಾಡಿಸಿದ್ದೆ. ಅವರಿಗೆ ಆಮ್ಯಾಲೆ ಕಾಗದ ಬರೀತೀನಿ. ಈಗ ತಡ ಮಾಡ್‌ಬ್ಯಾಡಿ’-ಮೇಷ್ಟರು ಉತ್ತರ ಕೊಟ್ಟರು. +ಮೇಷ್ಟರ ಹೆಂಡತಿ ಪಾರ್ವತಿಗೆ ಅರಿಶಿನ ಕುಂಕುಮ ಇಟ್ಟರು. ಮನೆಯಲ್ಲಿದ್ದ ಒಂದು ರವಿಕೆಕಣ ಹೊದಿಸಿಯಾಯಿತು. ಅಯ್ಯನವರು ನೆನ್ನೆ ತನ್ನ ಕೈಲಿ ಕೊಟ್ಟಿದ್ದುದರಲ್ಲಿ ಉಳಿದಿದ್ದ ಐದು ರೂಪಾಯಿಯನ್ನು ನಂಜಮ್ಮ ಮೇಷ್ಟರ ಕೈಲಿ ಹಾಕಿದಳು. ಹೆಣವನ್ನು ಕಟ್ಟಿ ಹೊತ್ತುಕೊಂಡು ಹೋಗುವಾಗ ಮೇಷ್ಟರ ಹೆಂಡತಿ ಕಣ್ಣೀರು ಹಾಕುತ್ತಿದ್ದರು. ಆದರೆ ನಂಜಮ್ಮ ಅಳಲಿಲ್ಲ. ‘ಈ ಮುಂಡೇದು ಅದ್ಯಾಕ್ ಸತ್ಹೋತು?’ ಎಂದು ಚೆನ್ನಿಗರಾಯರು ಕಣ್ಣೊರೆಸಿಕೊಳ್ಳುತ್ತಿದ್ದರು. +ಇವರು ಹೋಗುವಷ್ಟರಲ್ಲಿ ಏರಿಯ ಹಿಂದಿನ ತೋಪಿನಲ್ಲಿ ಸೌದೆ ಜಮಾಯಿಸಿತ್ತು. ಪಾರ್ವತಿ ಮದುವೆಯಾದ ಹುಡುಗಿಯಾದುದರಿಂದ ಸಂಸ್ಕಾರಪೂರ್ವಕ ದಹನವಾಗಬೇಕಾಗಿತ್ತು. ಅಣ್ಣಾಜೋಯಿಸರು ಪರ ಅಪರ, ಎರಡು ಕರ್ಮಗಳನ್ನೂ ಬಲ್ಲವರು. ಅಯ್ಯಾಶಾಸ್ತ್ರಿಗಳು ಶವದ ಹಿಂದೆ ಹೋದರಾದರೂ ಏರಿ ಇಳಿಯುವ ಮೊದಲೇ ಹಿಂದೆ ನಿಂತುಬಿಟ್ಟರು. ಅಲ್ಲಿ ದಹನವಾಗಿ ಎರಡಾಳೆತ್ತರಕ್ಕೆ ಬೆಂಕಿ ಕಂಡಮೇಲೂ ಅಲ್ಲಿಯೇ ನಿಂತಿದ್ದು, ಹೆಣ ಹೊತ್ತವರು ಶ್ಮಶಾನದ ಬಾವಿಯಲ್ಲಿ ಸ್ನಾನಮಾಡಿ ಬರುವತನಕ ಕಾಯ್ದರು. ಕೊನೆಗೆ ಎಲ್ಲರೂ ಒಟ್ಟಿಗೆ ಹಿಂತಿರುಗಿದ ಮೇಲೆ ಅವರನ್ನು ನಿಲ್ಲಿಸಿ ಕೇಳಿದರು: ‘ತಲೆ ಬ್ಯಾಗ ಸಿಡೀತೋ?’ +‘ಹೂಂ.’ +‘ಚಿನ್ನಯ್ಯ, ಶವ ಹೊತ್ತೋರಿಗೆ ದಕ್ಷಿಣೆ ಎಷ್ಟು ಕೊಟ್ಟೆ?’ +‘ಎಂಟೆಂಟಾಣೆ.’ +‘ನೋಡು, ನಾನೂ ಜೊತೇಲೇ ಬರಬೇಕಾಗಿತ್ತು. ಇಷ್ಟು ದೂರ ಬಂದೆ. ಅಲ್ಲಿಗೆ ಬಂದ್ರೆ ಈ ಸಾಯಂಕಾಲದ ಹೊತ್ತು ತಣ್ಣೀರು ಮುಳುಗಬೇಕು. ಮೈಗಾಗುಲ್ಲ ಅಂತ ಬರ್‍ಲಿಲ್ಲ. ನನ್ನ ಪಾಲಿನ ದಕ್ಷಿಣೆ ತತಾ.’ +ಇದನ್ನು ಕೇಳಿದ ಮೇಷ್ಟರಿಗೆ ಮೈ ಎಲ್ಲ ಉರಿಯುವಂತೆ ಆಯಿತು. ಆದರೆ ಅಣ್ಣಾಜೋಯಿಸರು, ‘ಕೊಡು ಕೊಡು’ ಎಂದು ತಕ್ಷಣ ಹೇಳಿದರು. ಚೆನ್ನಿಗರಾಯರು ತಮ್ಮ ಸೊಂಟಕ್ಕೆ ಸಿಕ್ಕಿಸಿದ್ದ ದುಡ್ಡಿನಲ್ಲಿ ಎಂಟಾಣೆಯ ಬಿಲ್ಲೆ ತೆಗೆದು ವೃದ್ಧ ಶಾಸ್ತ್ರಿಗಳಿಗೆ ಕೊಟ್ಟಾಗ ಅವರಿಗೆ ಎಷ್ಟೋ ಸಂತೋಷವಾಯಿತು. +‘ತಿತಿ ಗಿತಿ ಈ ಊರಲ್ಲೇ ಮಾಡ್ತೀಯೋ ಹ್ಯಾಗೆ?’-ಅವರು ಕೇಳಿದರು. +‘ತಿತಿ ಹುಡುಗಿಯ ಗಂಡನ ಮನೆ ಕೆಲ್ಸವಲ್ವೇನ್ರೀ, ಇವರು ಹ್ಯಾಗೆ ಮಾಡ್ತಾರೆ?’-ಮೇಷ್ಟರು ಉತ್ತರ ಕೊಟ್ಟಾಗ, ‘ಸರಿ ಸರಿ. ಮರೆತಿದ್ದೆ’ ಎಂದು, ಈ ಐದು ಜನರೊಡನೆ ತಾವೂ ಹಿಂತಿರುಗಿ ಹೊರಟರು. +– ೩ – +ಪಾರ್ವತಿಯ ಹೆಣವನ್ನು ತೆಗೆದುಕೊಂಡು ಹೋದಮೇಲೆ ಮನೆಯಲ್ಲಿ ನಂಜಮ್ಮನೊಡನೆ ಅಯ್ಯನವರೊಬ್ಬರೇ ಉಳಿದರು. ಮೇಷ್ಟರ ಮನೆಯ ಸಾಮಾನೆಲ್ಲ ಊರ ಹೊರಗಿನ ಶೆಡ್ಡಿನಲ್ಲಿತ್ತು. ಇನ್ನಷ್ಟು ಸಾಮಾನು ಮನೆಯಲ್ಲಿತ್ತು. ಅದನ್ನು ನೋಡಿಬರುವುದಾಗಿ ಹೇಳಿ ಮೇಷ್ಟರ ಹೆಂಡತಿ ಹೋದರು. ಕುರುಬರಹಳ್ಳಿಗೆ ಹೋಗಿದ್ದ ಅವರ ಮಗ, ಅವರು ಹೋದ ಐದು ನಿಮಿಷಕ್ಕೆ ಹಿಂತಿರುಗಿ ಬಂದು-‘ನಾಳೆ ಬೆಳಿಗ್ಗೆ ಎಲ್ಡಾಳುದ್ದ ಹೊತ್ತಿಗೆ ಎರಡು ಗಾಡಿ ಸ್ವಾಗೆ ತಗಂಡು ಇಬ್ರು ಬತ್ತಾರಂತೆ. ಅಮ್ಮನ ಗುಡಿ ಹತ್ರ ಕಾಯ್ಕಂಡಿದ್ದು, ಎಲ್ಲಿ ಗುಡ್ಳು ಹಾಕ್ಬೇಕು ಅಂತ ಅವ್ರಿಗೆ ತೋರಿಸ್ಬೇಕಂತೆ’ ಎಂದು ಹೇಳಿ ಹೊರಟುಹೋದ. +ರಾಮಣ್ಣನ ಶ್ವಾಸ ಕ್ಷೀಣಗತಿಯಲ್ಲಿ ನಡೆಯುತ್ತಿತ್ತು. ‘ಇನ್ನೊಂದ್ಸಲಿ ಔಸ್ತಿ ಆಕಿದ್ಯೇನವ್ವ?’-ಅಯ್ಯನವರು ಕೇಳಿದರು. ಪಾರ್ವತಿ ಸತ್ತ ಸ್ವಲ್ಪ ಹೊತ್ತಿಗೇ ಎರಡು ಒಳಲೆ ಕುಡಿಸಿದ್ದರೂ, ನಂಜಮ್ಮ ಮತ್ತೆ ಒಳಲೆಯನ್ನು ಕೈಗೆ ತೆಗೆದುಕೊಂಡು ಔಷಧಿ ಬಗ್ಗಿಸಿ ಕುಡಿಸಲು ಹೋದಳು. ಅವನು ಬಾಯಿ ಬಿಡಲಿಲ್ಲ. ಬಲವಂತಮಾಡಿ ಅವುಡು ಬಿಡಿಸಿ ಒಳಲೆಯ ಮೂತಿಯನ್ನು ಒಳಗೆ ನೂಕಿ ಔಷಧಿ ಬಗ್ಗಿಸಿದರೆ ಅದು ಒಳಗೆ ಹೋಗಲಿಲ್ಲ. ‘ಅಯ್ನೋರೇ, ಅವ್ನು ಔಸ್ತಿ ಕುಡಿಯುಲ್ಲ ಅಂತಾನೆ’-ಅವಳೆಂದಳು: ‘ಜ್ವರ ಇಳಿತಿರೂ ಹಾಗಿದೆ, ನೋಡಿ.’ +ಅವರು ಹತ್ತಿರ ಬಂದು ಮೊದಲು ಹಣೆ ಮುಟ್ಟಿ ನೋಡಿದರು. ಜ್ವರ ಇಳಿಯುತ್ತಿತ್ತು. ಪ್ಲೇಗು ಆದವರಿಗೆ ಶಾಖ ಇಳಿಯುವುದು ಏರುವುದು ಸಾಮಾನ್ಯ ಸಂಗತಿ. ಆದರೆ ಈಗ ಅದು ಪೂರಾ ಇಳಿದಂತೆ ಕಾಣುತ್ತಿತ್ತು. ಜ್ವರ ಪೂರ್ತಿ ಬಿಟ್ಟುಹೋಗುವುದು ರೋಗ ವಾಸಿಯಾಗುವ ಚಿಹ್ನೆಯೇ ಇರಬಹುದು. ‘ಅವ್ವಾ, ಮನ್ಲಿ ಇಬ್ಬರಿಗೆ ಬಡಿದಿತ್ತು. ಒಂದು ಬಲಿಯಾಯ್ತು. ರಾಮಣ್ಣ ಉಳ್ಕಳೂ ಹಂಗೆ ಕಾಣ್ತದೆ. ಜ್ವರ ಇಳೀತೈತೆ’-ಎಂದು ಅವರು ಹೇಳಿದುದನ್ನು ಕೇಳಿದ ನಂಜಮ್ಮನಿಗೆ, ಸತ್ತ ಪಾರ್ವತಿ ಬದುಕಿ ಬಂದಷ್ಟು ಸಮಾಧಾನವಾಗಿ, ‘ಅಷ್ಟಾದ್ರೂ ಆದ್ರೆ ಕಾಳಮ್ಮನಿಗೆ ಹೊಸ ಸೀರೆ ಉಡಿಸಿ ಮೆರವಣಿಗೆ ಮಾಡುಸ್ತೀನಿ’ ಎಂದಳು. ರೋಗಿಯ ಮೈ ಶಾಖ ನಿಮಿಷ ನಿಮಿಷಕ್ಕೆ ಇಳಿಯುತ್ತಿತ್ತು. ಸುಮಾರು ಐದು ನಿಮಿಷ ಅಯ್ಯನವರಿಗೆ ಸಹ ಇದು ಒಳ್ಳೆಯ ಸೂಚನೆ ಎಂದೇ ತೋರುತ್ತಿತ್ತು. ನಂತರ ಅನುಮಾನ ಬಂದ ಅವರು ಹೊದಿಕೆಯೊಳಕ್ಕೆ ಕೈಹಾಕಿ ಅವನ ಕಾಲುಗಳನ್ನು ಮುಟ್ಟಿ ನೋಡಿದರೆ ತಣ್ಣಗಾಗುತ್ತಿದ್ದುವು. ‘ಒಂದೀಟ್ ಬೂದಿ ಬೇಕು. ಎಲ್ಲೈತೆ?’-ಅವರು ಕೇಳಿದರು. +ಅವರೇ ಎದ್ದು ಓಡಿಹೋಗಿ ಒಂದು ಹಿಡಿ ಬೂದಿ ತಂದು ರಾಮಣ್ಣನ ಎರಡು ಕಾಲಿಗೂ ಹಾಕಿ ತಿಕ್ಕಲು ಶುರುಮಾಡಿದರು. ಐದು ನಿಮಿಷ ತಿಕ್ಕಿದರೂ ಮತ್ತೆ ಶಾಖ ಏರಲಿಲ್ಲ. ಕಾರಣವನ್ನು ಅವರು ಬಾಯಿಬಿಟ್ಟು ಹೇಳಲಿಲ್ಲ. ಹೊದಿಕೆ ಸರಿಸಿ ನೋಡಿದರೆ ತೊಡೆ, ಕಂಕುಳುಗಳ ಗೆಡ್ಡೆಗಳೆಲ್ಲ ಬಾತುಕೊಂಡೇ ಇದ್ದವು. ಯಾವುದೂ ಒಡೆದಿರಲಿಲ್ಲ. ಮತ್ತೆ ಹೊದಿಕೆ ಹೊದಿಸಿ ಬಲಗೈ ನಾಡಿ ಹಿಡಿದು ನೋಡಿದರು. ತುಂಬ ಕ್ಷೀಣವಾಗಿ, ಸಿಕ್ಕಿಯೂ ಸಿಕ್ಕದಂತೆ ನಡೆಯುತ್ತಿತ್ತು. ಅವನಿಗೂ ಕಾಶಿ ಗಂಗೆ ಕುಡಿಸಬೇಕು. ಅದನ್ನು ಬಾಯಿ ಬಿಟ್ಟು ಈ ತಾಯಿಗೆ ಹೇಳುವ ಗಟ್ಟಿತನ ಅವರಿಗಿರಲಿಲ್ಲ. ಆದರೆ ತಿಳಿದೂ ತಿಳಿದೂ ಹಾಗೆಯೇ ಬಿಟ್ಟರೆ ಹುಡುಗ ಬಾಯಿಗೆ ನೀರಿಲ್ಲದೆ ಸಾಯುತ್ತಾನೆ. ಪ್ರಾಣವೇ ಹೋಗುವಾಗ ಬಾಯಿಗೆ ನೀರು ಬಿಟ್ಟರೆ ಏನು, ಬಿಡದಿದ್ದರೆ ಏನು? ಅದೆಲ್ಲ ನಮ್ಮ ಭ್ರಮೆಯಲ್ಲವೆ?- ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿದರೂ, ‘ನನ್ನ ಮಗೂನ ಬಾಯಿಗೆ ನಾನು ನೀರೂ ಬಿಡಲಿಲ್ಲ’ ಎಂದು ಅನಂತರ ತಾಯಿಯೇ ಗೋಳಿಡುವ ಪ್ರಸಂಗ ಬೇಡವೆಂದು ಯೋಚಿಸಿದ ಅವರು, ಹತ್ತಿರದಲ್ಲಿಯೇ ಇದ್ದ ಕಾಶಿಯ ಥಾಲಿ ಕೈಗೆ ತೆಗೆದುಕೊಂಡು ಒಳಲೆಯ ಔಷಧಿ ಚೆಲ್ಲಿ ಒರೆಸಿ ಗಂಗೆಯನ್ನು ತುಂಬಿದರು. ಅದನ್ನು ಅವಳ ಕೈಗೆ ಕೊಟ್ಟು ತಾವು ಹುಡುಗನ ತುಟಿ ಬಿಡಿಸಿ, ‘ಅವ್ವ, ಇದ ಒಳಗೆ ಬಿಡು’ ಎಂದಾಗ ಅವಳಿಗೆ ಅರ್ಥವಾಯಿತು. +‘ರಾಮಣ್ಣನೂ ಹೋಗ್ತಾನೆಯೇ ಅಯ್ನೋರೇ?’-ಅವಳು ಕೇಳುತ್ತಿರುವಾಗಲೇ, ‘ಈಗ ಅಳಬ್ಯಾಡ್ದು. ನಾನು ಹೇಳ್ದಂಗೆ ಕೇಳು’ ಎಂದು, ಹೆಸರಿಗೆ ಒಳಲೆಯನ್ನು ಅವಳ ಕೈಯಿಂದ ಮುಟ್ಟಿಸಿ ತಾವೇ ಗಂಗೆಯನ್ನು ಬಿಟ್ಟರು. ಅದರಲ್ಲಿ ಎಷ್ಟು ಭಾಗ ಒಳಗೆ ಹೋಯಿತೋ ಎಷ್ಟು ಹೊರಗೆ ಬಂದಿತೋ ತಿಳಿಯಲಿಲ್ಲ. ಎಡಗೈಯನ್ನು ಮೂಗಿನ ಹತ್ತಿರ ಹಿಡಿದು ಬಲಗೈಯಿಂದ ನಾಡಿ ಹಿಡಿದು ರೋಗಿಯ ಮುಖವನ್ನೇ ನೋಡುತ್ತಾ ಕುಳಿತರು. ನಂಜಮ್ಮ ದೆವ್ವ ಬಡಿದವಳಂತೆ ತನ್ನ ಎರಡನೆಯ ಕಂದನ ಮುಖದಮೇಲೆ ದೃಷ್ಟಿಯನ್ನು ನಾಟಿಸಿ ಕುಳಿತಿದ್ದಳು. ಇಬ್ಬರೂ ಎಷ್ಟೇ ಎಚ್ಚರದಿಂದ ನೋಡುತ್ತಿದ್ದರೂ ಪ್ರಾಣವಾಯು ಯಾವಾಗ ಕೊನೆಯ ಸಲ ಹೊರಬಂದಿತೆಂಬುದು ಯಾರಿಗೂ ತಿಳಿಯಲಿಲ್ಲ. ಅಯ್ಯನವರ ಬೆರಳ ಸ್ಪರ್ಶದಿಂದ ಆಳ, ಆಳ, ಆಳಕ್ಕೆ ಇಳಿದು ಮರೆಯಾಗುತ್ತಿದ್ದ ನಾಡಿಯು ಸಹ ಮತ್ತೆ ಮೇಲೆ ಬಾರದ ಪಾತಾಳಕ್ಕೆ ಇಳಿದುಹೋಯಿತು. +ಈಗ ಅಯ್ಯನವರು ಮಾತನಾಡಲೇಬೇಕು. ಇದ್ದ ಸಂಗತಿಯನ್ನು ಹೇಳಿ ಹೆಣದ ಕೈ ಕಾಲು ಮಡಿಸಬೇಕು. ಹೆಚ್ಚು ಹೊತ್ತಾದರೆ ಕೈಕಾಲು ಕೊರಡಾಗಿ ಮಡಿಸಲು ಆಗುವುದಿಲ್ಲ. ಆದರೆ ಹೇಗೆ ಮಾತನಾಡುವುದು? ಅವಳಿಗೆ ವಿಷಯ ಅರ್ಥವಾಗದೆ ಇಲ್ಲ. ಆದರೆ ಪ್ರಜ್ಞೆಗೆ ತಿಳಿದ ಅರ್ಥವು ಇನ್ನೂ ಆಳಕ್ಕೆ ಇಳಿಯುವುದು ಆಗುತ್ತಿರಲಿಲ್ಲ. ಪಾರ್ವತಿ ಸತ್ತಾಗ ಮಾಡಿದಂತೆ ಈಗ ಅವಳು ಅಳುತ್ತಿರಲಿಲ್ಲ. ರಾಮಣ್ಣನ ಎದೆಯ ಮೇಲೆ ತನ್ನ ಮುಖವಿಡಲಿಲ್ಲ. ಅವನ ಕೈಯನ್ನೂ ಹಿಡಿದುಕೊಳ್ಳಲಿಲ್ಲ. ತಲೆ ಮಾತ್ರ ಅವಳ ತೊಡೆಯ ಮೇಲೆಯೇ ಇತ್ತು. +ಇಷ್ಟು ಹೊತ್ತಿಗೆ ಪಾರ್ವತಿಯ ದಹನಸಂಸ್ಕಾರ ನಡೆದು ಅವರು ಹಿಂದಕ್ಕೆ ಹೊರಟಿರಬಹುದು. ಈಗಲೇ ಅವರಿಗೆ ಸಮಾಚಾರ ತಿಳಿಸಬೇಕು. ಮತ್ತೆ ಸೌದೆ ಹೊಂದಿಸಿ ಕಳಿಸಬೇಕು. ಆಗಲೇ ರಾತ್ರಿಯಾಗಿದೆ. ಈ ಹೊತ್ತಿನಲ್ಲಿ ಹೆಣ ಹೊತ್ತು ಒಯ್ದು ಸುಡುತ್ತಾರೆಯೋ ಅಥವಾ ಬೆಳಗಿನ ತನಕ ಕಾಯುತ್ತಾರೆಯೋ. ಹೇಗಾದರೂ ಸರಿ, ಕೈ ಕಾಲನ್ನಂತೂ ಮಡಿಸಲೇಬೇಕು. ಅವರೆಂದರು: ‘ಅವ್ವಾ, ಪ್ರಾಣ ಸಿವನ ಪಾದ ಸೇರಿದ ಮ್ಯಾಲೆ ಗೂಡಿನಲ್ಲೇನೈತೆ? ಕೈ ಕಾಲು ಮಡುಸ್ತೀನಿ.’ +‘ನಿಮ್ಮ ಕೆಲ್ಸ ನೀವು ಮಾಡಿ ಅಯ್ನೋರೇ’-ಎಂದು ಹೇಳಿದ ತಾಯಿ, ಮಗನ ತಲೆಯನ್ನು ಮೆಲ್ಲಗೆ ಕೆಳಗೆ ಸರಿಸಿ, ತಾನೇ ದೂರ ಸರಿದಳು. ಅಯ್ಯನವರು ಮುಂದಿನ ಕೆಲಸ ಮಾಡಿ ಹೊದಿಕೆ ಮುಚ್ಚಿಬಿಟ್ಟರು. ಅಷ್ಟರಲ್ಲಿ ಹೊರಗಿನಿಂದ ಮೇಷ್ಟರು, ಚೆನ್ನಿಗರಾಯರು ಬಂದರು. +‘ಮೇಷ್ಟ್ರೆ, ರಾಮಣ್ಣಂದೂ ಉಸುರು ಮುಗೀತು, ಮುಂದಿನ ಕೆಲಸ ನೋಡಿ’-ಅಯ್ಯನವರೆಂದರು. +‘ಅಯ್ಯೋ ದೇವ್ರೇ.’ +‘ದೇವ್ರು ತಾವುಕ್ಕೇ ಹ್ವಾದುದ್ದು. ಈಗ ಇನ್ನೇನು ಮಾತಾಡ್ಯೂ ಸುಕ್ವಿಲ್ಲ. ದೋಸ್ರನ್ನ ಕರೀರಿ.’ +ಮೇಷ್ಟರು ಅಣ್ಣಾಜೋಯಿಸರ ಶೆಡ್ಡಿಗೆ ಓಡಿದರು. ಅಷ್ಟರಲ್ಲಿ ಜೋಯಿಸರ ಮನೆಯವರೆಲ್ಲ ಊರ ಮನೆ ಖಾಲಿಮಾಡಿ ಶೆಡ್ಡಿಗೆ ಸಾಮಾನು ಸಾಗಿಸಿದ್ದರು. ಚೆನ್ನಿಗರಾಯರಿಗೆ ಏನೂ ತಿಳಿಯಲಿಲ್ಲ. ಅವರ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ರಾಮಣ್ಣನ ಶವದ ಮುಂದೆ ಬಂದು ಕಣ್ಣಿನಲ್ಲಿ ನೀರು ಸುರಿಸುತ್ತಾ ಕುಕ್ಕುರುಗಾಲಿನಲ್ಲಿ ಕೂತುಬಿಟ್ಟರು. +ಮೇಷ್ಟರು ಅಣ್ಣಾಜೋಯಿಸರೊಡನೆ ಹಿಂತಿರುಗಿದರು. ಅಯ್ಯನವರು ಜೋಯಿಸರನ್ನು ಕೇಳಿದರು: ‘ಸ್ವಾಮೀ, ರಾತ್ರಿಯಾಗೇ ಮುಂದಿನ ಕೆಲ್ಸ ಆಯ್ತದಾ? ಬೆಳಿಗ್ಗೆಗಂಟಾ ಹೆಣಾ ಮಡಗ್‌ಬೇಕಾ?’ +‘ರಾತ್ರಿ ಹೊತ್ನಲ್ಲಿ ಹ್ಯಾಗೆ ಆಗುತ್ತೆ?’ +ಮೇಷ್ಟರು ನಡುವೆ ಎಂದರು: ‘ದೊಡ್ಡ ರೋಗ ಬಂದಿತ್ತಲ್ಲಾ, ಬೆಂಕಿಜ್ವರ, ಆಗ ಹಗಲೂ ಇಲ್ಲ ರಾತ್ರಿಯೂ ಇಲ್ಲ. ಹೆಣ ಬಿದ್ದ ಬಿದ್ದ ಹಾಗೆಲ್ಲ ತಗಂಡು ಹೋಗಿ ಹೋಗಿ ಸುಡ್ತಿದ್ರು. ಎಲ್ರಿಗೂ ಬ್ಯಾರೆ ಬ್ಯಾರೆ ಸೌದೆ ಒದಗಿಸುಕ್ಕೆ ಆಗ್ದೆ ಎರಡು ಮೂರು ಹೆಣಗಳನ್ನ ಒಟ್ಟೊಟ್ಟಿಗೆ ಹಾಕಿ ಬೆಂಕಿ ಹತ್ತುಸ್ತಿದ್ರು. ಊರಿಗೆ ಮಾರಿ ಹೊಕ್ಕಿರೂವಾಗ ಶಾಸ್ತ್ರ ಸಂಬಂಧ ಒಂದೇ ಥರಾ ನೋಡುಕ್ಕಾಗುಲ್ಲ. ಈಗ್ಲೇ ಮಾಡಾಣ.’ +ಈ ಮಾತಿಗೆ ಜೋಯಿಸರು ಒಪ್ಪಿದರು. ಮೊದಲು ಬಂದ ವಾಹಕರನ್ನೇ ಕರೆಯಲು ಜೋಯಿಸರು ಹೋದರು. ಮನೆಯ ಮುಂದೆ ಹೇಗೂ ಬಿದಿರುಗಳು ರಾಶಿ ಬಿದ್ದಿದ್ದವು. ಮೇಷ್ಟರು ವಾಹನ ತಯಾರಿಸಲು ನಿಂತರು. ಸೌದೆ ಜಮಾಯಿಸಿ ಕಳಿಸಲು ಅಯ್ಯನವರು ಹೊರಟರು. +ರಾಮಣ್ಣ ಮುಂಜಿಯಾದ ಹುಡುಗ. ಮದುವೆಯಾದ ಅಕ್ಕನಿಗೆ ಆದಂತೆ ಅವನಿಗೂ ಈ ದಿನ ಸಂಸ್ಕಾರಪೂರ್ವಕ ದಹನವಾಗಬೇಕು. ಶವವಾಹಕರು ಬಂದರು. ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿದ ಅಯ್ಯನವರು-“ಸೂರೇಗೌಡನ ಕೊಪ್ಪಲಲ್ಲಿ ಕೊರಡು, ಚಿಪ್ಪು, ಮಟ್ಟೆ ಬೇಕಾದಷ್ಟಿವೆ.‘ತುಂಬ್ಕಂಡು ಹ್ವಾಗಿ; ನಾವು ಹ್ಯಂಗೂ ಊರು ಬಿಡ್ತೀವಿ’ ಅಂದ. ಅವ್ನುದ್ದೇ ಗಾಡೀನೂ ಕೊಟ್ಟ. ಅವ್ನ ಮಗ, ಅವ್ನೂ, ಇನ್ನೂ ಒಂದೆಲ್ಡು ಜನ ಸೇರಿ ಗಾಡಿಗೆ ತುಂಬ್ತಾ ಅವ್ರೆ. ಅವ್ರು ಸೀದಾ ಮಶಾಣುಕ್ಕೇ ಗಾಡಿ ಹ್ವಡೀತಾರೆ. ನೀವು ನಡೀರಿ.’ +ಎಲ್ಲವೂ ಆಯಿತು. ಇನ್ನು ಹೆಣ ಎತ್ತಿ ಹೊರಗೆ ತಂದು ಚಟ್ಟದಮೇಲೆ ಮಲಗಿಸಿ ಬಿಗಿದು ಬಾಯಿಗೆ ಅಕ್ಕಿ ಕಾಳು ಹಾಕಿ ಹೊತ್ತುಕೊಂಡು ಹೋಗುವುದೊಂದೇ ಬಾಕಿ. ಆದರೆ ಅಯ್ಯನವರ ಕಣ್ಣಿಗೆ ನಂಜಮ್ಮ ಬೀಳಲಿಲ್ಲ. ‘ನಂಜವ್ವ ಎಲ್ಲಿ?’-ಎಂದು ಅವರು ಕೇಳಿದರೆ ಯಾರಿಗೂ ಗೊತ್ತಿಲ್ಲ. ಗಡಿಬಿಡಿಯಲ್ಲಿ ಯಾರೂ ಅವಳನ್ನು ಗಮನಿಸಿರಲಿಲ್ಲ. +‘ಎಲ್ಲಾದ್ರೂ ಕೆರೆಯೋ ಬಾವಿಯೋ ಅದೇನು ಕತೆಯೋ ನೋಡಿ’-ಜೋಯಿಸರು ತಕ್ಷಣ ಎಚ್ಚರಿಸಿದರು. +‘ಇಲ್ಲೇ ಎಲ್ಲಾದ್ರೂ ನೀರು ಗೀರು ಕಡೆಗೆ ಹೋಗಿರ್ಬೌದು’-ಮೇಷ್ಟರು ಊಹಿಸಿದರು. +ಅಯ್ಯನವರಿಗೆ ಬೇರೆಯ ರೀತಿಯಲ್ಲಿ ಹೊಳೆಯಿತು. ‘ನೀವು ಅಲ್ಲೆಲ್ಲಿ ಬೇಕಾದ್ರೂ ನೋಡಿ. ನಾನು ಏರಿಮ್ಯಾಲಿನ ನನ್ನ ಗುಡಿಗೆ ಹೋಗಿ ನೋಡ್ತೀನಿ. ಕೊನೆ ಮಗ ಮನಗೈತಿ. ನಂಜವ್ವ ಅಲ್ಲಿಗೇ ಓಗಿರ್‌ಬೈದು’-ಎಂದವರೇ ಬೇಗ ಬೇಗ ಹೆಜ್ಜೆ ಹಾಕಿ, ನಡುನಡುವೆ ಓಡುಗಾಲು ಹಾಕುತ್ತಾ ಊರ ಮುಂದಿನಿಂದ ಸಾಗಿ ಏರಿಯ ಮೇಲೆ ನಡೆದು ನಡು ಏರಿಯ ಮೇಲಿದ್ದ ತಮ್ಮ ಗುಡಿಗೆ ಬಂದರು. ಬಾಗಿಲನ್ನು ಹೊಕ್ಕಾಗ ಅವರ ಊಹೆ ನಿಜವಾಗಿದ್ದುದು ಕಾಣಿಸಿತು. ವಿಶ್ವ ಕಂಬಳಿಯ ಮೇಲೆ ಮಲಗಿದೆ. ಅದರ ತಲೆ ನರಸಿಯ ತೊಡೆಯ ಮೇಲಿದೆ. ನಂಜಮ್ಮ ಮೂರು ಮಾರು ದೂರದಲ್ಲಿ ಕಂಬದ ಹತ್ತಿರ ಕೂತು ಮಗುವನ್ನೇ ನೋಡುತ್ತಿದ್ದಾಳೆ. ಅವಳ ಕಣ್ಣಿನಲ್ಲಿ ನೀರಿಲ್ಲ; ದೃಷ್ಟಿ ದೆವ್ವ ಬಡಿದಂತಿದೆ. +ನರಸಿ ಅಯ್ಯನವರಿಗೆ ಹೇಳಿದಳು: “ನಂಜವ್ವಾರು ಕತ್ಲಲ್ಲಿ ಓಡ್ಯಲೇ ಬಂದ್ರು. ನಾನು ಮಗೀಗೆ ಗಂಜಿ ಕುಡುಸ್ತಾ ಕುಂತಿದ್ದೆ. ಬಂದು ಮಗನ ತಲೇನ ತ್ವಡೇಮ್ಯಾಲೆ ಆಕ್ಯಂಡ್ರು. ಆಮ್ಯಾಲೆ ಅದೇನು ಗ್ಯಾನ ಬಂತೋ ಏನೋ, ನನ್ನ ಹತ್ರುಕ್ ಕರ್ದು, ‘ನರಸಮ್ಮಾ, ಈ ಮಗ ನಂದಲ್ಲ. ನಂದು ಅಂದ್ರೆ ಪಾಪಿಸೂಳೇಮಗ ದೇವ್ರು ಕುಂಡೊಯ್ತಾನೆ. ನಿಂಗೆ ಕೊಟ್ ಬಿಡ್ತೀನಿ. ನಿಂಗೆ ಹ್ಯಂಗೂ ಮಕ್ಳಿಲ್ಲ. ನೀನೇ ಸಾಕ್ಯಂಡ್‌ಬುಡು. ಇಲ್ಲಿ ಅತ್ರ ಕುಂತ್ಕ ಬಾ. ನಿನ್ನ ತ್ವಡೆಮ್ಯಾಲೆ ಆಕಿ, ನಂಗೂ ಇದ್ಕೂ ಏನೂ ಸಂಬಂಧವಿಲ್ಲ. ಇದು ನನ್ನ ಮಗ ಅಲ್ಲ, ನಾನು ಇದ್ರ ಅವ್ವ ಅಲ್ಲ ಅಂತ ಏಳ್ತೀನಿ’ ಅಂದ್ರು. ಮಗಾನ ನನ್ನ ತ್ವಡೆಮ್ಯಾಲೆ ಆಕಿ ಈಗ ದೂರ ಹ್ವಾಗಿ ಅಲ್ಲಿ ಕುಂತವ್ರೆ ನೋಡಿ.” +‘ಹಂಗೆ ಮಾಡು ನರಸವ್ವ. ರಾಮಣ್ಣನೂ ಸತ್ಹೋಯ್ತು. ನಾವು ಮುಂದ್ಲ ಕೆಲ್ಸುಕ್ಕೆ ಓಯ್ತೀವಿ. ನೀನು ಇಬ್ರುನ್ನೂ ನೋಡ್ಕಂತಿರು. ಯಾರಾದ್ರೂ ಗಂಡುಸ್ರನ್ನ ಕಳುಸ್ಲಾ?’ +‘ನಾನಿರುವಾಗ ಏನು ಹ್ಯದ್ರಿಕೆ? ಯಾವ್ನೂ ಬ್ಯಾಡ.’ +‘ಜ್ವರ ಹೆಂಗೈತಿ?’-ಮಗುವಿನ ಹಣೆಮುಟ್ಟಿ ನೋಡಿ ಅಯ್ಯನವರು ಕೇಳಿದರು: ‘ತೊಡೆ ಸಂದೀಲಿ ನೋವು ಗೀವು ಅಂತದಾ?’ +‘ಈಗೊಂದು ವಸಿ ಹೊತ್ನಲ್ಲಿ ಮಾತಾಡ್ತು. ನಾನೇ ತ್ವಡೆಸಂದಿ ಇಸುಗಿ ನೋಡಿ ಕೇಳ್ದೆ. ಏನೂ ಇಲ್ವಂತೆ. ಜ್ವರ ಮಾತ್ರ ತಕ್‌ತಕ ಅಂತ ಕುದೀತೈತೆ.’ +‘ಹ್ಯಂಗಾದ್ರೂ ಸರಿ. ಎಲ್ಡೆಲ್ಡು ಗಂಟೆ ಮೂರು ಮೂರು ಗಂಟೆಗೆ ಔಸ್ತಿ ಕುಡ್ಸು’- ಅವಳಿಗೆ ಹೇಳಿ, ‘ನಂಜವ್ವಾ, ಹೆದರ್‌ಬ್ಯಾಡ. ಇನ್ನೂ ಗ್ಯಡ್ಡೆ ಕಂಡಿಲ್ಲ. ಔಸ್ತಿ ಕಚ್ಚಿಯೈಯ್ತೆ’ ಎಂದು ಸಮಾಧಾನ ಹೇಳಿ ಅಯ್ಯನವರು ಊರೊಳಕ್ಕೆ ಓಡಿ ನಡೆದರು. +ಮೇಷ್ಟರು ಮಾತ್ರ ಊರಮುಂದೆ ಹೆಂಗಸರು ಬಹಿರ್ಭೂಮಿಗೆ ಹೋಗುವ ಗಿಡಗುಚ್ಚಿಗಳ ಕಡೆ ಹೋಗಿ-‘ನಂಜಮ್ನೋರೇ’ ಎಂದು ಕೂಗಿ ಹಿಂತಿರುಗಿದ್ದರು. ಉಳಿದವರು ಅಲ್ಲಿಯೇ ಕೂತು ಈ ಮನೆಗೆ ಬಂದ ಗ್ರಹಚಾರವನ್ನು ಮಾತನಾಡಿಕೊಳ್ಳುತ್ತಿದ್ದರು. ಅಯ್ಯನವರು ಬಂದವರೇ-‘ನಂಜವ್ವ ಗುಡೀಲೈತಿ. ನೀವು ಮುಂದಿನ ಕೆಲ್ಸ ಮಾಡ್ರಿ’ ಎಂದರು. ನಾಲ್ವರು ಚಟ್ಟ ಎತ್ತಿದರು. ಜೊತೆಯಲ್ಲಿ ಚೆನ್ನಿಗರಾಯರು ಹೊರಟರು. ಅಲ್ಲಿ ಇನ್ನೂ ಉಳಿದಿದ್ದ ಹೇಮಾದಿ ಪಾನಕದ ಶೀಶೆ, ಕೈಗೆ ಸಿಕ್ಕಿದ ಒಂದು ಹಾಸಿಗೆ, ಎರಡು ಕಂಬಳಿಗಳನ್ನು ಜೋಡಿಸಿಕೊಂಡು ಮನೆಯ ಬಾಗಿಲಿಗೆ ಬೀಗ ಹಾಕಿ ಅಯ್ಯನವರು ಊರ ಮುಂದಿನಿಂದ ಏರಿಯ ಮೇಲಿನ ಗುಡಿಯ ಕಡೆಗೆ ಹೊರಟರು. ಅಷ್ಟರಲ್ಲಿ ಹೊಸ ಹೆಣವನ್ನು ಶ್ಮಶಾಣಕ್ಕೆ ಹೊತ್ತು ಇಳಿಸಿಯೂ ಇರುತ್ತಾರೆ. ಹಳೆಯ ಹೆಣದ ಉರಿ, ತೋಟದ ತೆಂಗಿನ ಮರಗಳ ಸಂದಿನಿಂದ ಕಾಣುತ್ತಿತ್ತು. ಏರಿಯ ಕೆಳಗೆ ಇಳಿಯುವ ಜಾಗದಲ್ಲಿ ವೃದ್ಧ ಪುರೋಹಿತ ಅಯ್ಯಾಶಾಸ್ತ್ರಿಗಳು ಒಬ್ಬರೇ ಸೊಂಟ ಬಗ್ಗಿಸಿಕೊಂಡು ನಿಂತಿದ್ದುದು ಕತ್ತಲೆಯಲ್ಲೂ ಕಾಣಿಸಿತು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್ +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ದೇಹಕ್ಕೆ ಸ್ನಾನ ಮಾಡಿಸಿ, ಮಡಿಯುಡಿಸಿ, ಯಥಾವತ್ತಾಗಿ ಪೂಜೆ ನೆವೇದ್ಯಾದಿಗಳು ಮುಗಿದಮೇಲೆ, ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಅವಳಿಂದ ಕಾಲು ಮುಟ್ಟಿಸಿಕೊಂಡು, ಆಶೀರ್ವದಿಸಿ, ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ತಂದರು. […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_572.txt b/Kannada Sahitya/article_572.txt new file mode 100644 index 0000000000000000000000000000000000000000..aba654d4778d9f7618aa0f082c9101b8a5d5f198 --- /dev/null +++ b/Kannada Sahitya/article_572.txt @@ -0,0 +1,162 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು- +ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆ +ಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನ +ಅನಂತಮೂರ್ತಿಯವರಿಗೆ ‘ಅತ್ಯುತ್ತಮ ಚಿಂತಕ’ ಎಂದೆನ್ನುವ ಕೇರಳ ರಾಜ್ಯದ ಪ್ರಶಸ್ತಿ +‘ದೇಶಕಾಲ’ ಹಾಗು ‘ಅಷ್ಟದಿಕ್ಕು’ ಸಂಯುಕ್ತವಾಗಿ ಆಯೋಜಿಸಿದ್ದ ದ ರಾ ಬೇಂದ್ರೆಯವರ ಕಾವ್ಯವಾಚನ ‘ನಾದಲೀಲೆ’ ಗೆ ಸೇರಿದ್ದ ಜನಜಂಗುಳಿ, +ಚಂದ್ರಶೇಖರ ಕಂಬಾರರ ‘ಸೂರ್ಯ ಶಿಖಾರಿ’ ಕೃತಿ ಬಿಡುಗಡೆ, +ಕುಂ ವೀರಭದ್ರಪ್ಪನವರ ‘ಅರಮನೆ’ ಕಾದಂಬರಿಯ ಬಿಡುಗಡೆ +ರಘುನಾಥ್ ಚ ಹ ರವರ ‘ಹೊರಗೂ ಮಳೆ ಒಳಗೂ ಮಳೆ’ ಸಣ್ಣ ಕತೆಗಳ ಸಂಕಲನದ ಬಿಡುಗಡೆ… +ಹೀಗೆ ನೂರಾರು ಸಂಗತಿಗಳು. ಇದೆಲ್ಲದಕ್ಕೂ ಕಾರಣರಾದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿ, ಸಂಭ್ರಮಿಸುತ್ತಾ ಈ ಕೆಳಗಿನ ಸಾಲುಗಳು: +ಕನ್ನಡಸಾಹಿತ್ಯ.ಕಾಂ ಸಂದರ್ಭದಲ್ಲಿ ಮಾತನಾಡುವುದಾದರೆ ಎಲ್ಲವೂ ಸಂತೋಷದ, ಸಕಾರಾತ್ಮಕ ಘಟನೆಗಳೆ. ಮುಂಬೈ-ಪುಣೆಯಲ್ಲಿ, ತುಮಕೂರಿನಲ್ಲಿ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ವಿಧ್ಯುಕ್ತವಾಗಿ ಉದ್ಘಾಟನೆಯಾದದ್ದು, ಹಾಗೆಯೆ ಹಾಸನ ಜಿಲ್ಲಾ ಕೇಂದ್ರದಲ್ಲಿಯೂ ‘ಬೆಂಬಲಿಗರ ಬಳಗ’ ಉದ್ಘಾಟನೆಯಾದದ್ದು, ಪುಣೆಯ ಶಾಲೆಯಲ್ಲಿ ‘ಬರಹ’ ಅನುಸ್ಥಾಪನೆಗೊಂಡು ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆ ಮಕ್ಕಳ ಮನಸ್ಸಿನ ಮುಂದೆ ತೆರೆದುಕೊಂಡದ್ದು, ಶೇಷಾದ್ರಿವಾಸುರವರೊಂದಿಗೆ ಮಾತುಕತೆ, ಹಿರಿಯರಾದ ವೆಂಕಟಸುಬ್ಬಯ್ಯನವರ ನಿಘಂಟು ‘ಬರಹ.ಕಾಂ’ ನ ಭಾಗವಾಗಿರುವುದು, ಸರ್ಕಾರಕ್ಕೆ ಕನ್ನಡಸಾಹಿತ್ಯ.ಕಾಂ ಸಲ್ಲಿಸಲಿರುವ ಮನವಿ, ಅದಕ್ಕೆ ಬಂದ ಸಕಾರಾತ್ಮಕ ಪ್ರತಿಕ್ರಿಯೆ…ಹೀಗೆ ಹತ್ತು ಹಲವು ಸಂಗತಿಗಳು. +ಮತ್ತೊಂದು ಖುಷಿಯಾದ ಸಂಗತಿಯೆಂದರೆ, ಕನ್ನಡಸಾಹಿತ್ಯ.ಕಾಂ ಲೇಖಕರ ಬಳಗಕ್ಕೆ ಲೇಖಕರು ಸೇರ್ಪಡೆಯಾಗುತ್ತಲೇ ಹೋಗುತ್ತಿದ್ದಾರೆ. ಈ ಬಾರಿ, ಕೊಲ್ಹಾಪುರದಿಂದ ಕೆ ಸತ್ಯನಾರಾಯಣರವರು ಗೆಳೆಯ ರಕ್ಷಿತ್ ಮೂಲಕ ಸಂಪರ್ಕಿಸಿ ಸ್ವಯಂಪ್ರೇರಣೆಯಿಂದ ತಮ್ಮ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡಿದ್ದು: ಈ ಬಾರಿ ಅವರ “ಕಾಲ ಜಿಂಕೆ” -ಕಾದಂಬರಿಯನ್ನು ಸಂಪೂರ್ಣವಾಗಿ ಪ್ರಕಟಿಸಲಾಗಿದೆ. ಅದೇ ರೀತಿ, ಮುಂಬೈ ನಿವಾಸಿಯಾಗಿರುವ ಮಿತ್ರಾ ವೆಂಕಟರಾಜುರವರ ಸಣ್ಣ ಕಥೆ, ಎಚ್ ಎಸ್ ವೆಂಕಟೇಶಮೂರ್ತಿಯವರ ಕವನಗಳು….೭೩ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿರುವ ನಿಸಾರ್ ಅಹಮದ್‌ರ ಅಧ್ಯಕ್ಷೀಯ ಭಾಷಣ ಹಾಗು ಉದ್ಘಾಟಕರಾದ ಜಿ ಎಸ್ ಶಿವರುದ್ರಪ್ಪನವರ ಭಾಷಣದ ಸಂಪೂರ್ಣ ಪಠ್ಯ ನೀಡಲಾಗಿದೆ. ಈ ಬಾರಿಯ ‘ಅಪ್‌ಡೇಟ್’ ಮೂರು ವಾರ ಮುಂದೂಡಿದ್ದಕ್ಕೆ ಇದೂ ಒಂದು ಕಾರಣ. +ಚಂದ್ರಶೇಖರ ಪಾಟಿಲರಿಗೆ ಒಂದು ಸ್ಪಷ್ಟನೆ: ತುಮಕೂರಿನಲ್ಲಿ ಬೆಂಬಲಿಗರ ಬಳಗದ ಉದ್ಘಾಟನೆಗೆ ಮುನ್ನ ಪೂರ್ವಭಾವಿ ಸಭೆ ನಡೆದಾಗ ಅಲ್ಲಿ ಬಂದ ಪ್ರಶ್ನೋತ್ತರಗಳಿಗೆ ಉತ್ತರಿಸುತ್ತಿದ್ದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಸಾಹಿತ್ಯ.ಕಾಂ ತೆಗೆದುಕೊಳ್ಳುತ್ತಿರುವ ವಿಷಯ ಸೂಚಿ ಹಾಗು ನಡೆಸುತ್ತಿರುವ ಸಂವಾದ ಕುರಿತಂತೆ ಹೇಗೆ ಪ್ರತಿಕ್ರಿಯಿಸುತ್ತಿದೆ..? -ಎನ್ನುವ ಅರ್ಥದಲ್ಲಿ ಪ್ರಶ್ನೆಯೊಂದು ಬಂದು ’ಪರಿಷತ್ತಿನೊಂದಿಗೆ ಚರ್ಚಿಸಿದ್ದೀರ? ಎಂದು ಕೇಳಿದ್ದರು. ನಾನು ಸ್ವಲ್ಪ ನಿರಾಶೆಯಿಂದಲೇ ಮಾಹಿತಿ ತಂತ್ರಜ್ಞಾನದ ಸಂದರ್ಭವನ್ನು: ‘ಅವರೊಡನೆ ಚರ್ಚಿಸಿ ಯಾವುದೇ ಪ್ರಯೋಜನವಿಲ್ಲ…’ ಎನ್ನುವ ಅರ್ಥದಲ್ಲಿ ಉತ್ತರಿಸಿದ್ದು ನಿಜ. ಆದರೆ, ಅದು ಪತ್ರಿಕೆಯಲ್ಲಿ ‘ಚಂದ್ರಶೇಖರ ಪಾಟೀಲರೊಡನೆ ಚರ್ಚಿಸಿದರೂ ಯಾವುದೇ ಪ್ರಯೋಜನವಿಲ್ಲ’ ಎಂದೆನ್ನುವ ಅರ್ಥದಲ್ಲಿ ಪ್ರಕಟವಾಗಿತ್ತು. ಚಂದ್ರಶೇಖರ ಪಾಟೀಲರನ್ನು ನಾನು ಯಾವುದೇ ಸಂದರ್ಭದಲ್ಲೂ ಭೇಟಿಯಾಗಿರಲೇ ಇಲ್ಲ. ಚರ್ಚಿಸಿಯೂ ಇರಲಿಲ್ಲ. ನಾನು ಹೇಳಿದ್ದನ್ನು ತಪ್ಪು ಅರ್ಥದಲ್ಲಿ ಗ್ರಹಿಸಿ-ಪ್ರಕಟವಾದ್ದಂತೂ ನಿಜ. +ಮನವಿಗೆ ಸಹಿ ಹಾಕಿಸಲು ಅವರನ್ನು ಭೇಟಿಯಾದ ಸಂದರ್ಭದಲ್ಲಿ “ಮನಸ್ಸಿಗೆ ಬಹಳ ಬೇಸರಾತು’ ಎಂದು ಸ್ವಲ್ಪ ಖಿನ್ನರಾಗೆ ಪಾಟಿಲರು ಹೇಳಿದರು. ನಾನು ಅವರಿಗೆ ವಿವರಿಸಿದೆ. ಅತ್ಯಂತ ಸೌಜನ್ಯದಿಂದ ನಡೆದುಕೊಂಡ ಪಾಟಿಲರು ಮನವಿಗೆ ಬೆಂಬಲ ಸೂಚಿಸಿ, ಅಲ್ಲೇ ಇದ್ದ ಧಾರವಾಡದ ಚಂದ್ರಕಾಂತ ಬೆಲ್ಲದರಿಗೂ ಮನವಿಗೆ ಸಹಿ ಹಾಕುವಂತೆ ಕೇಳಿಕೊಂಡರು. ಅದರಂತೆಯೇ, ಬೆಲ್ಲದ್‌ರವರೂ ಸಹಿ ಹಾಕಿದರು. ನಂತರ, ತಮೆಲ್ಲ ಕೃತಿಗಳನ್ನು ಕನ್ನಡಸಾಹಿತ್ಯ.ಕಾಂ ವಿಶೇಷವಾಗಿ ಬಳಸಬಹುದು ಎಂದು ಪಾಟಿಲರು ಅನುಮತಿ ಪತ್ರವನ್ನು ಕೊಟ್ಟು ತಮ್ಮ ಸೌಜನ್ಯವನ್ನು ಮತ್ತಷ್ಟು ವಿಸ್ತರಿಸಿದಾಗ ನನಗೆ ನಿಜವಾಗಿಯೂ ಅವರ ಬಗೆಗೆ ಹೆಮ್ಮೆ ಎಂದನ್ನಿಸಿತು. ಅವರ ಕೃತಿಗಳನ್ನೆಲ್ಲ ಅವರಿಂದಲೇ ಖರೀದಿಸಿ ಪರಿಷತ್ತಿನಿಂದಾಚೆಗೆ ಬಂದಾಗ ಒಮ್ಮೊಮ್ಮೆ ಮನುಷ್ಯರು ತಮ್ಮ ಖಿನ್ನತೆಯನ್ನು ಹೇಗೆಲ್ಲ ಮೀರಬಲ್ಲರು ಎನ್ನುವುದಕ್ಕೆ ಪಾಟಿಲರು ಸಾಕ್ಷಿಯಲ್ಲವೆ ಎಂದೂ ಅನ್ನಿಸಿತು. ಪಾಟಿಲರಿಗೆ, ನೋವಾಗಿದ್ದರೆ, ಕ್ಷಮಿಸಿ ಪಾಟಿಲರೆ ಎಂದು ಕೇಳುವುದು ನನ್ನ ಸೌಜನ್ಯವನ್ನು ನಾನು ಉಳಿಸಿಕೊಳ್ಳಬೇಕಾದದ್ದು ನನ್ನ ಬಗೆಯಾಗಬೇಕು. ಆದ್ದರಿಂದಲೇ ಮೇಲಿನ ಸಾಲುಗಳು. ಪಾಟಿಲರು, ಇದನ್ನು ಓದುತ್ತಾರೆ ಅಥವ ಈ ಸಾಲುಗಳು ಅವರ ಗಮನಕ್ಕೆ ಹೋದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಬಗೆಗೆ ನನಗಿರುವ ಅಭಿಪ್ರಾಗಳೂ ಸಹ ಬದಲಾಗುತ್ತವೆ. ಅಂದರೆ, ಸಾಹಿತ್ಯ ಪರಿಷತ್ತು ಅಂತರ್ಜಾಲದಲ್ಲಿ ದಾಖಲಿಸಿರುವ ಈ ಸಾಲುಗಳನ್ನು ಓದಿ ಪ್ರತಿಕ್ರಿಯಿಸುವಂತಾದರೆ, ಸಾಲುಗಳಿಗೆ ಬೇರೆಯದೆ ಸಾರ್ಥಕ ಬರುತ್ತದೆ ಎಂದೆನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಸೂಚಿಸಿದ್ದೇನೆ. ಬೇಕೆಂದೇ, ನಾನು ಈ ಸಾಲುಗಳನ್ನು ಬೇರೆ ಇನ್ಯಾವ ರೀತಿಯಲ್ಲೂ ಗಮನಕ್ಕೆ ತರಬಾರದೆಂದೂ ನಿರ್ಧರಿಸಿದ್ದೇನೆ. ಈ ನಿರ್ಧಾರದ ಹಿನ್ನೆಲೆಯಲ್ಲಿರುವ ಸೂಕ್ಷ್ಮವನ್ನು ಪ್ರಜ್ಞಾವಂತರೂ ಗ್ರಹಿಸಬಲ್ಲರು ಎನ್ನುವ ಭರವಸೆಯೂ ಇದೆ. +* +* +* +ಗ್ರಾಮೀಣ ಹಾಗು ಅರೆನಗರಗಳಲ್ಲಿ ಮಾಹಿತಿ ತಂತ್ರಜ್ಞಾನ +“ಮಾಹಿತಿ ತಂತ್ರಜ್ಞಾನ ಹಾಗು ದೇಸಗತಿ” -ಎಂದೆನ್ನುವ ಮಂತ್ರವನ್ನು ಹಿಡಿದು, ಕನ್ನಡಸಾಹಿತ್ಯ.ಕಾಂ ಹೊಸ ದಿಕ್ಕಿನ ಪ್ರಜ್ಞೆಯನ್ನು, ಅದಕ್ಕಾಗಿ ಹುಟ್ಟಿ ಹಾಕಿದ ಅಗತ್ಯವಾದ ಸಂವಾದಕ್ಕೆ ಉತ್ತಮ ಪ್ರತಿಕ್ರಿಯೆಗಳು ಕಾಣಬರತೊಡಗಿವೆ. ಮಾಹಿತಿ ತಂತ್ರಜ್ಞಾನದ ಅನೇಕಾನೇಕ ಸವಲತ್ತುಗಳಿಗೆ ನಮ್ಮ ಸಮಾಜ ಕುರುಡಾಗಿದೆಯೋ ಅಥವ ಮಾಹಿತಿ ತಂತ್ರಜ್ಞಾನದ ಎಲ್ಲ ಸವಲತ್ತುಗಳು ಕೇವಲ “ಉಳ್ಳವರ” ಸ್ವತ್ತಾಗಿಯೇ ಇರಲಿ, ಅದನ್ನು ಬದಲಿಸ ಹೊರಟು “ಮೇಲುಗೈ” ಮೊಟಕಾದೀತು ಎಂದೆನ್ನುವ ಅಂಜಿಕೆಯೋ, ಅಂತೂ ಪ್ರಜ್ಞೆಗೆ ಬೇಕಾದ ವಿಚಾರವಾಗಿ ಉಳಿದಿಲ್ಲ. ಕನ್ನಡಸಾಹಿತ್ಯ.ಕಾಂ ತನ್ನ ಬೆಂಬಲಿಗರ ಬಳಗಗಳಿಂದ ಕ್ರಮೇಣ ಇಂತಹ ತಟಸ್ಥ ಭಾವವನ್ನು “ಯಥಾಸ್ಥಿತಿವಾದದ” ನೀಚತನಗಳನ್ನು ದೂರವಾಗಿಸಿ, ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಹೆಚ್ಚು ಹೆಚ್ಚು ಪ್ರಜಾಸತ್ತಾತ್ಮವಾಗಬೇಕಾದರೆ ಹೊಸದೇ ಆದ ವಿಚಾರಗತಿ ಪಡೆಯಬೇಕಾಗುತ್ತದೆ- ಜೊತೆಗೆ ಚಟುವಟಿಕೆಗಳು ಹೆಚ್ಚಬೇಕಾಗುತ್ತದೆ ಎಂದು ಭಾವಿಸಿ, ಕ್ರಮೇಣವಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳತೊಡಗಿದೆ. +ಈ ಬಗೆಗೆ, ಗ್ರಾಮೀಣ, ಅರೆನಗರಗಳಲ್ಲಿ ಒಂದು ರೀತಿಯ ಎಚ್ಚರಿಕೆ ಮೂಡಿಸುವತ್ತ ತನ್ನ ಗಮನವನ್ನು ಈಗ ಕೇಂದ್ರೀಕರಿಸಲಾರಂಭಿಸಿದೆ. ಹೀಗಾಗಿ, ತುಮಕೂರು ಮತ್ತು ಹಾಸನ ಜಿಲ್ಲಾ ಕೆಂದ್ರಗಳಲ್ಲಿ ಬೆಂಬಲಿಗರ ಬಳಗಗಳು ಉದ್ಘಾಟನೆಯಾಗಿವೆ. ಅದೇ ರೀತಿ ಮೈಸೂರು ನಗರದಲ್ಲೂ ಬೆಂಬಲಿಗರ ಬಳಗದ ಉದ್ಘಾಟನೆಗೆ ಉತ್ಸಾಹಿಗಳು ಸಜ್ಜಾಗುತ್ತಿದ್ದಾರೆ- ಹೀಗೆ ಪ್ರತಿ ಜಿಲ್ಲೆಗಳಲ್ಲೂ ಬೆಂಬಲಿಗರ ಬಳಗದ ಉದ್ಘಾಟನೆಯಾದೊಡನೆ ಕ್ರಾಂತಿಯೊಂದು ಆಗಿ ಹೋಯಿತು ಎಂದು ನಾವು ಬೀಗಬೇಕಾಗಿಲ್ಲ- ಬೀಜ ಬಿತ್ತಿದ ಮೇಲೆ ಅದಕ್ಕೆ ತಕ್ಕ ಪೋಷಕಾಂಶಗಳು ದೊರೆಯಬೇಕು. ಹಾಗೆ ದೊರೆತಲ್ಲಿ, ಸಮಯಾವಕಾಶಕ್ಕೆ ತಕ್ಕಂತೆ ಚಟುವಟಿಕೆಗಳು ಬಿರುಸು ಪಡೆಯಬಹುದು. ನಿಧಾನಕ್ಕೆ ಆಗಲಿ ಎಂದೆನ್ನುವ ತಾಳ್ಮೆ, ನಿಧಾನವೆನ್ನುವುದು ಜೋಭದ್ರತನವಾಗದಿರುವವರೆಗೆ ಸರಿ ಎಂದೆನ್ನುವ ಪ್ರಜ್ಞೆಯೂ ಸೇರಿಕೊಂಡೇ ಚಟುವಟಿಕೆಗಳು ಮುಂದುವರೆಯಲಿ. +* +* +* +ದೊಡ್ಡ ಕನಸು…? +ಜೂನ್ ತಿಂಗಳ ೨೩ ಹಾಗು ೨೪ ರಂದು “ರಾಷ್ಟ್ರ ಮಟ್ಟದ ವಿಚಾರಸಂಕಿರಣ”ವೊಂದನ್ನು ಆಯೋಜಿಸಲು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈ ವಿಚಾರ ಸಂಕಿರಣಕ್ಕೆ ‘ಕ್ರೈಸ್ಟ್ ಕಾಲೇಜ್ ಆಪ್ ಲಾ’, ಸಹ-ಪ್ರಾಯೋಜಕರಾಗಿರುತ್ತಾರೆ. ರ್‍ಯಾನ್ ಬ್ಯಾಕ್ಸಿಯಂತಹ ಸಂಸ್ಥೆಗಳು, ನಮ್ಮ ಪ್ರಸ್ತಾವನೆಗೆ ಆಸಕ್ತಿ ಹಾಗು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿವೆ. ಹೀಗೆ ಬರುವ ಸಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮುಂದೆ ದೊಡ್ಡ ಕನಸನ್ನು ಬಿತ್ತರಿಸುತ್ತಿದೆ. +ಮತ್ತೂ ಒಂದು ಪ್ರಮುಖವಾದ ಉದ್ದೇಶ: ಕನ್ನಡಸಾಹಿತ್ಯ.ಕಾಂ ನಿರ್ವಹಣೆಯ ವೆಚ್ಚಕ್ಕೆ ಸ್ವತಂತ್ರವಾದ ಒಂದು ಆದಾಯದ ಅಗತ್ಯವಿದೆ- ಜೊತೆಗೆ ಸರ್ವರ್‌ಗಳ ಅಧಿಕ ಒತ್ತಡಗಳಿಂದಾಗಿ ನಮಗೆ ದಕ್ಕುತ್ತಿರುವ ಹೋಸ್ಟಿಂಗ್ ಕಂಪನಿಗಳ ಸೇವೆ ಸಮರ್ಪಕವಾಗಿಲ್ಲದೆ ಅನೇಕ ಅಡಚಣೆಗಳು, ಹೀಗಾಗಿ ನಮ್ಮದೇ ಒಂದು ಸರ್ವರ್ ಖರೀದಿಸಿ, ಅದನ್ನು ‘ಕೋ ಲೊಕೇಟ್’ ಮಾಡಿ, ಕನ್ನಡಸಾಹಿತ್ಯ.ಕಾಂ ನಿರ್ವಹಣೆಯಾಗಿ ಉಳಿದ ಸ್ಥಳಾವಕಾಶವನ್ನು “ಬಾಡಿಗೆಗೆ” ಬಿಡುವುದರ ಮೂಲಕ ಬರುವ ಆದಾಯದಿಂದ ಕನ್ನಡಸಾಹಿತ್ಯ.ಕಾಂ ನಿರ್ವಹಣೆಯ ವೆಚ್ಚವನ್ನು ಭರಿಸಬಹುದು. ಇದಕ್ಕಾಗಿ ವಿಚಾರ ಸಂಕಿರಣದ ಸಂದರ್ಭದಲ್ಲಿ ತರಬಹುದಾದ ಸ್ಮರಣ ಸಂಚಿಕೆಯ ಮೂಲಕ ಎಂಟು ಲಕ್ಷ ರೂಗಳನ್ನು ಜಾಹಿರಾತು ಮೂಲಕ ಸಂಗ್ರಹಿಸಿ, ಅದರಲ್ಲಿ ಎರಡು ಲಕ್ಷ ರೂಗಳು ಜಾಹಿರಾತು ತರಬಲ್ಲವರಿಗೆ ಕೊಡಬೇಕಾದ ’ಕಮೀಷನ್’ ಹೊರತು ಪಡಿಸಿ ಉಳಿಯಬಹುದಾದ ಆರು ಲಕ್ಷದಲ್ಲಿ ಸರ್ವರ್ ಖರೀದಿ, ಇತರರಿಗೆ ಸ್ಥಳಾವಕಾಶ ಮಾಡಿಕೊಡಲು ಬೇಕಾಗುವ ತಂತ್ರಾಶ, ಸ್ಥಳಾವಕಾಶದ ಲಭ್ಯತೆ ಕುರಿತಂತೆ ಮಾರಾಟ ವ್ಯವಸ್ಥೆ ಇತ್ಯಾದಿಗಳನ್ನು ರೂಪಿಸಬಹುದು. ಸಮುದಾಯ-ಬಳಗದಿಂದ ಕ್ರೋಢಿಕರಣವಾಗುವ ಸಂಪನ್ಮೂಲವನ್ನು ಕನ್ನಡಸಾಹಿತ್ಯ.ಕಾಂನ “ಸೋಷಿಯಲ್ ಕಂಪ್ಯೂಟಿಂಗ್’ ಪರಿಸರ ನಿರ್ಮಾಣದ ಚಟುವಟಿಕೆಗಳಿಗೆ ಮೀಸಲಿಡಬಹುದಲ್ಲವೆ? +ವಿಚಾರಸಂಕಿರಣದ ಚಟುವಟಿಕೆಗಳ ಕುರಿತಂತೆ ವಿವರವುಳ್ಳ ಮತ್ತೊಂದು ತಾಣವನ್ನು ಹೆಚ್ಚಿನ ವಿವರಗಳೊಂದಿಗೆ ಪ್ರತ್ಯೇಕವಾಗಿ ನಿರ್ಮಿಸಲಾಗುವುದು. +ಈ ವಿಚಾರಸಂಕಿರಣದ ಚಟುವಟಿಕೆಗಳ ಯಶಸ್ಸಿಗೆ ಅನೇಕ ಕಾರ್ಯಕರ್ತರು, ಸ್ವಯಂಸೇವಕರು ಬೇಕಾಗಿದ್ದಾರೆ. ಆಸಕ್ತಿಯುಳ್ಳವರು ಬೆಂಬಲಿಗರ ಬಳಗವನ್ನಾಗಲಿ, ವೈಯಕ್ತಿಕವಾಗಿ ನನ್ನನ್ನಾಗಲಿ ಸಂಪರ್ಕಿಸಬಹುದು: ದೂರವಾಣಿ: ೦೮೦-೨೬೪೮೪೬೧೭ (ಮನೆ) +ಈ ವಿಚಾರಸಂಕಿರಣ, ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಗಣ್ಯರನ್ನು, ಅದೇ ರೀತಿ ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಗಣ್ಯರನ್ನು ಒಂದೆಡೆ ಸೇರಿಸಿ ಸಂವಾದಕ್ಕೆ ವೇದಿಕೆಯಾಗಲಿ ಎನ್ನುವ ಸದಾಶಯ ಹೊಂದಿದೆ. ಅದೇ ರೀತಿ, ಕನ್ನಡಸಾಹಿತ್ಯ.ಕಾಂ ಸ್ಥಾಪನೆಗೆ, ಬೆಳವಣಿಗೆಗೆ ಕಾರಣವಾಗಿರುವ ಎಲ್ಲ ಲೇಖಕರನ್ನು ಒಂದೇ ವೇದಿಕೆಗೆ ಕರೆದು ತಂದು ಕೃತಜ್ಞತೆಗಳನ್ನು ಸೂಚಿಸುವ ಉದ್ದೇಶವೂ ಇದೆ. ಈ ಉದ್ದೇಶಗಳನ್ನು ಕಾರ್ಯ ರೂಪಕ್ಕೆ ತರಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ನಿಧಾನಕ್ಕೆ ಆ ಸಮಿತಿಗಳು ಕಾರ್ಯೋನ್ಮುಖವಾಗಿವೆ. +* +* +* +ಮನವಿ ಪತ್ರ +ಕಂಪ್ಯೂಟರ್ – ಮಾಹಿತಿ ತಂತ್ರಜ್ಞಾನವಲಯದಲ್ಲಿ ಕನ್ನಡ ಪರವಾದ ಪರಿಸರ ನಿರ್ಮಾಣಕ್ಕೆ ಬೇಕಾಗಿರುವುದು ನಮ್ಮ ಸಂದರ್ಭದಲ್ಲಿ ‘ಕನ್ನಡ ಪರವಾದಂತಹ ತಂತ್ರಾಂಶಗಳು’. ಈ ತಂತ್ರಾಂಶಗಳು ಫ್ರೀ ವೇರ್ ಇರಬಹುದು, ಶೇರ್ ವೇರ್ ಇರಬಹುದು ಅಥವ ಪ್ರೊಪ್ರೈಟರಿ ಮೂಲದವಾಗಿರಬಹುದು. ಕಂಪ್ಯೂಟರ್‌ನಲ್ಲಿ ಕನ್ನಡವೆಂದರೆ ‘ಬರಿಯ ಅಕ್ಷರಗಳ’ ಡಿಸ್‌ಪ್ಲೇ ಅಥವ ಮಾನಿಟರ್ ಮೇಲೆ ಅಕ್ಷರಗಳು ಮೂಡಿಬಿಟ್ಟರಷ್ಟೆ ಸಾಕು ಎಂದೆನ್ನುವ ಸೀಮಿತ ದೃಷ್ಟಿಯಿಂದ ಆಚೆಗೆ ಹೋಗಿ ನಿಲ್ಲಬೇಕಾಗುತ್ತದೆ. +ಜನಪರವಾದ, ಗ್ರಾಮೀಣ, ಅರೆನಗರ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಜನಪರವಾಗಿ ಮೂಡುವುದಿಲ್ಲ. ಹೀಗಾಗಿ, ಜನರನ್ನು, ಸಾಮಾನ್ಯ ಜನರನ್ನು ಅಂದರೆ ಕೃಷಿಕರ, ದಲಿತರ, ಜನಸಾಮಾನ್ಯರ ನಡುವೆ ಈ ಸವಲತ್ತುಗಳ ಕುರಿತಂತೆ ಎಚ್ಚರಿಕೆಯನ್ನು, ಪ್ರಜ್ಞೆಯನ್ನು ಮೂಡಿಸಿದಾಗ ಮಾತ್ರವೆ ತಾಂತ್ರಿಕತೆ “ಜನಪರವಾಗಿರುವುದು”. ಮಾಹಿತಿ ತಂತ್ರಜ್ಞಾನ “ಯೂಸರ್ ಫ್ರೆಂಡ್ಲಿ”ಯಾಗಿದ್ದರೆ ಮಾತ್ರ ಸಾಲದು, ‘ಪೀಪಲ್ ಫ್ರೆಂಡ್ಲಿ’ಯಾಗಿಯೂ ಅಂದರೆ ‘ಜನಪರ’ವಾಗಿಯೂ ಇರಬೇಕಾಗುತ್ತದೆ ಎನ್ನುವ ಅರಿವು ಬಹಳ ಮುಖ್ಯ. +ಹೀಗೆ ಜನಪರವಾಗಬೇಕಾದರೆ ಕಂಪ್ಯೂಟರ್ ಸಾಕ್ಷರತೆ ಹೆಚ್ಚಬೇಕು. ಹೆಚ್ಚಬೇಕಲ್ಲದೆ ಅದು ಕೇವಲ ‘ಇಂಗ್ಲಿಷ್‌ಮಯ’ವಾಗಿದ್ದರಷ್ಟೆ ಸಾಲದು. ಹೀಗೆಂದು ಹೇಳಿದೊಡನೆಯೆ ಇದು ಇಂಗ್ಲಿಷ್ ವಿರೋಧಿಯಾಗಬೇಕಿಲ್ಲ. ಅಲ್ಲವೂ ಅಲ್ಲ. ‘ದೇಸಗತಿ’ ಭಾಷೆಯೊಂದಿಗೆ ಮಾಹಿತಿ ತಂತ್ರಜ್ಞಾನ ಹಾಗು ತಂತ್ರಾಂಶಗಳು ತಳಕು ಹಾಕಿಕೊಳ್ಳಬೇಕು. ಈಗಿನ ಯುವಕರಿಗೆ ಅದು ಬೇಕಿಲ್ಲವೆಂದೆನ್ನುವುದು ಸ್ಪಷ್ಟವಾಗಿಯೇ ಇದೆ. ಇಲ್ಲದಿದ್ದರೆ, ಬರಿಯ ‘ಬರಹ’ ಹಾಗು ‘ನುಡಿ’ಗೆ ಕನ್ನಡದ ಮಾಹಿತಿ ತಂತ್ರಜ್ಞಾನ ಸೀಮಿತವಾಗುಳಿಯಬೇಕಾಗಿರಲಿಲ್ಲ. ಮಾಹಿತಿ ತಂತ್ರಜ್ಞಾನ ಮನೆಬಾಗಿಲಿಗೆ ತಂದೊಡ್ಡಿ ನಿಲ್ಲಿಸಿರುವ ವೃತ್ತಿಪರವಾದ ನವ ಶ್ರೀಮಂತಿಕೆಯ ಸ್ಥಾನಕ್ಕಷ್ಟೇ, ಅದರಿಂದೊದಗುವ ಮೋಜುಗಾರಿಕೆಗಷ್ಟೇ ಅವರುಗಳ ಚಟುವಟಿಕೆ ಸೀಮಿತವಾಗುಳಿಯಬೇಕಾಗಿರಲಿಲ್ಲ. ದೇಸಗತಿ ಭಾಷೆಯ ಸ್ಥಿತಿಗತಿಗಳನ್ನು ನೋಡಿದರೆ ಇದು ಸ್ಪಷ್ಟವಾಗಿಯೇ ಇದೆ. ಈಗಿರುವ ವಾತಾವರಣದಲ್ಲಿ ಒತ್ತಾಯ ಪೂರ್ವಕವಾಗಿ ‘ಸಂವಾದ’ವೊಂದನ್ನು ಹುಟ್ಟಿ ಹಾಕುವುದರ ಮೂಲಕವಷ್ಟೇ ಅಲ್ಪ ಸ್ವಲ್ಪ ಬದಲಾವಣೆಗಳು ಬರಬಲ್ಲದು. ಈ ಬದಲಾವಣೆ ತರುವುದರಲ್ಲಿ ಸರ್ಕಾರದ, ಶಿಕ್ಷಣ ಕ್ಷೇತ್ರದ ಬಹು ದೊಡ್ಡ ಹೊಣೆಗಾರಿಕೆ ಇದೆ. +ಆದುದರಿಂದ ಸರ್ಕಾರಕ್ಕೆ ಮನವಿ ಪತ್ರವೊಂದನ್ನು ಸಲ್ಲಿಸಲು ಉದ್ದೇಶಿಸಲಾಗಿದೆ. ಆ ಬೇಡಿಕೆಗಳು ಹೀಗಿವೆ: +ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು. +ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ – ಅನುಸ್ಥಾಪಿಸಿದ ಕನ್ನಡ ತಂತ್ರಾಂಶದ ಸಾಧ್ಯತೆಗಳನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು. +ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು. +ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು. +ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ ‘ಬರಹ’ ಹಾಗು ’ನುಡಿ’ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದು ಖಡ್ಡಾಯವಾಗಬೇಕು. +ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ ‘ಬರಹ’, ‘ನುಡಿ’ ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು. +-ಈ ಮನವಿಗೆ ಕರ್ನಾಟಕದ ವಿವಿಧ ಕ್ಷೇತ್ರದ ಗಣ್ಯರೆಲ್ಲ ಬೆಂಬಲ ಸೂಚಿಸಿ ಸಹಿ ಹಾಕಿಕೊಟ್ಟಿರುವುದು ಕನ್ನಡಸಾಹಿತ್ಯ.ಕಾಂ ನಿಲುವುಗಳಿಗೆ ಹೆಚ್ಚಿನ ಶಕ್ತಿ ಒದಗಿಸಿದಂತಾಗಿ, ಕನ್ನಡಸಾಹಿತ್ಯ.ಕಾಂ ಒಂದು ಸಾಮುದಾಯಿಕವಾದ ಚಟುವಟಿಕೆಯಾಗಲಾರದೆ ಎಂದೆನ್ನುವ ಬಹಳ ಕಾಲದ ಹಂಬಲ ನಿಜವಾಗುತ್ತಿದೆ. +ಬೆಂಬಲ ಸೂಚಿಸಿರುವ ಗಣ್ಯರ ಪಟ್ಟಿ ಹೀಗಿದೆ: +(ಅಕ್ಷಾರಾನುಕ್ರಮಣಿಕೆಯಲ್ಲಿದೆ): +ಅಕ್ಷರ ಕೆ ವಿ, ನೀನಾಸಂ, ಹೆಗ್ಗೋಡು, ’ಅಕ್ಷರ’ ಪ್ರಕಾಶನ +ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು +ಅಶ್ವಿನಿ, ಕಾದಂಬರಿಗಾರ್ತಿ , +ಕುಲಶೇಖರಿ, ಬರಹಗಾ(ರ)ರ್ತಿ +ಕೃಷ್ಣ ಪ್ರಸಾದ್ – ಸಂಪಾದಕರು, ವಿಜಯ ಟೈಮ್ಸ್ +ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್ +ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು ’ಪ್ರಜಾನುಡಿ’ ದಿನಪತ್ರಿಕೆ, ಮೈಸೂರು +ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ +ಗಣೇಶ್, ರಂಗತಜ್ಞರು +ಗಿರೀಶ್ ಕಾಸರವಳ್ಳಿ – ಚಲನಚಿತ್ರ ನಿರ್ದೇಶಕರು +ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ +ಚಂದ್ರಕಾಂತ ಬೆಲ್ಲದ್, ಮಾಜಿ ಶಾಸಕರು, ಧಾರವಾಡ, +ಚಂದ್ರಶೇಖರ್ ಕೆ ಆರ್-ಲೇಖಕರು +ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು +ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್ +ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್ +ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ +ಜಗದೀಶ್ ಆರ್ ಪಿ, ಸಹ ಸಂಪಾದಕರು, ಪ್ರಜಾವಾಣಿ, +ಜಯಂತ್ ಕಾಯ್ಕಿಣಿ, ಕಥೆಗಾರರು +ದಿವಾಕರ್ ಎಸ್, ಲೇಖಕರು-ಪತ್ರಕರ್ತರು +ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು, +ನಂಬೂದಿರಿ ಎ ವಿ ಎಸ್, ಸಹ ಸಂಪಾದಕರು, ಡೆಕ್ಕನ್ ಹೆರಾಲ್ಡ್, +ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್ +ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು +ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ +ನಾಗರಾಜ ವಸ್ತಾರೆ, ಬರಹಗಾರರು +ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು +ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ, +ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ +ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ +ಪೂರ್ಣಿಮ ಆರ್ – ಸಂಪಾದಕರು , ಉದಯವಾಣಿ +ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್ +ಪ್ರಸನ್ನ ಕೆ ವಿ, ರಂಗಕರ್ಮಿಗಳು +ಪ್ರೇಮಾ ಕಾರಾಂತ್ – ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು +ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ, +ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ +ಬಾಗೇಶ್ರಿ – ಮುಖ್ಯ ವರದಿಗಾರರು, ದಿ ಹಿಂದೂ +ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ, +ಭೂಮಿಕ, ಉಪ ಸಂಪಾದಕರು, ದಿ ಹಿಂದೂ, +ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ, +ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು +ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ, +ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು +ಮಾನಸ ನಯನ, ಸಂಗೀತಗಾರರು +ಯಶವಂತ ಚಿತ್ತಾಲ, ಹಿರಿಯ ಲೇಖಕರು, +ರಂಗನಾಥ್ – ಸಂಪಾದಕರು, ಕನ್ನಡಪ್ರಭ +ರಘುನಂದನ,ರಂಗ ನಿರ್ದೇಶಕರು +ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್! +ರವಿ ಭಟ್-ಕಿರುತೆರೆ ಕಲಾವಿದರು +ರಾಘವೇಂದ್ರ ಪಾಟೀಲ್, ಲೇಖಕರು-ಕೇಂದ್ರ ಅಸಾಹಿತ್ಯ ಅಕಾದೆಮಿ ಪುರಸ್ಕೃತರು, +ರಾಜಶೇಖರ ಕೋಟಿ, ಸಂಪಾದಕರು, ’ಆಂದೋಲನ’ ದಿನಪತ್ರಿಕೆ, ಮೈಸೂರು +ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ +ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ +ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ, +ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ +ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ +ಲಿಂಗದೇವರು ಹಳೆಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು +ಲಿಂಗದೇವರು – ಚಲನಚಿತ್ರ ನಿರ್ದೇಶಕರು (ಮೌನಿ) +ವಸುಧೇಂದ್ರ, ಬರಹಗಾರರು, ’ಛಂದ’ ಪುಸ್ತಕ ಪ್ರಕಾಶನ +ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ +ವಿಜಯಾ, ಹಿರಿಯ ಪತ್ರಕರ್ತರು, +ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-’ದೇಶಕಾಲ’ಸಾಹಿತ್ಯಿಕ ಪತ್ರಿಕೆ +ವಿಶ್ವೇಶ ತೀರ್ಥ ಸ್ವಾಮೀಜಿ – ಪೇಜಾವರ ಮಠ, ಉಡುಪಿ, +ವಿಶ್ವೇಶರ ಭಟ್ – ಸಂಪಾದಕರು, ವಿಜಯ ಕರ್ನಾಟಕ +ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, +ಶಂಕರ್ ಎನ್ ಎಸ್, ಚಲನಚಿತ್ರ ನಿರ್ದೇಶಕ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪ್ರೆಸ್ ಕ್ಲಬ್, +ಶರಧಿಚಂದ್ರ ಬಾಬು-ಪಾಲುದಾರರು, ‘ಅದಮ್ಯ’ ಟೆಕ್ನಾಲಜೀಸ್ +ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ, +ಶಿವರುದ್ರಪ್ಪ ಜಿ ಎಸ್ – ರಾಷ್ಟ್ರ ಕವಿ, +ಶೆಟ್ಟರ್ ಎಸ್, ಇತಿಹಾಸಕಾರರು +ಶೇಷಾದ್ರಿ ಪಿ – ಚಲನ ಚಿತ್ರ ನಿರ್ದೇಶಕರು +ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ +ಸಚ್ಛಿದಾನಂದ ಹೆಗ್ಗಡೆ, ಬರಹಗಾರರು +ಸದಾಶಿವ ಶೆಣೈ, ಗೌರಿ ಲಂಕೇಶ್ ಪತ್ರಿಕೆ ಹಾಗು ಕಿರುತೆರೆ ಪತ್ರಕರ್ತರು, +ಸರ್ವಮಂಗಳ, ಅನುವಾದಕಿ +ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು +ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು +ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ +ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು +ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು +ಜನವರಿ ಮೊದಲ ಅಥವ ಎರಡನೆ ವಾರ ಸರ್ಕಾರಕ್ಕೆ ಮನವಿ ಪತ್ರವನ್ನು ಅಧಿಕೃತವಾಗಿ ಸಲ್ಲಿಸಲಾಗುವುದು. ಮನವಿ ಕಾರ್ಯಗತವಾಗುವ ತಾರ್ಕಿಕ ಹಂತ ತಲುಪುವವರೆಗೆ, ಸಹಿಗಳನ್ನು ಸಂಗ್ರಹಿಸುವುದು ಮುಂದುವರೆಯುತ್ತದೆ. ವಿಧಾನ ಸಭೆಯಲ್ಲಿ, ಮನವಿ ಕರಡು ಮಸೂದೆಯಾಗುವ ಸಂಭವವೂ ನಿಚ್ಚಳವಾಗಿದೆ. ಎಲ್ಲ ಕ್ಷೇತ್ರದ ವಿವಿಧ ಗಣ್ಯರು, ಭಾಷಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಎಲ್ಲರ ಬೆಂಬಲವನ್ನು ಈ ಮೂಲಕ ಕೋರುತ್ತಿದ್ದೇನೆ. +* +* +* +ಜನಪರವಾದ ಕಾಳಜಿಯುಳ್ಳ ಗೆಳೆಯ ರವಿಕೃಷ್ಣಾ ರೆಡ್ಡಿ ಪ್ರಾರಂಭಿಸಿದ ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ವಾರಪತ್ರಿಕೆಯ ಪರಿಸರದಲ್ಲಿ ನುಣುಪು ಕಾಗದ, ಅತ್ಯಾಕರ್ಷಕ ಮುದ್ರಣದ ಶ್ರೀಮಂತಿಕೆಯನ್ನು ಪರಿಚಯಿಸಿದ್ದು ಎಲ್ಲ ರೀತಿಯಲ್ಲೂ ಸ್ವಾಗತಾರ್ಹವಾಗಿತ್ತಲ್ಲದೆ ಉತ್ತಮ ಬೆಳವಣಿಗೆಯೂ ಆಗಿತ್ತು. +ಆದರೆ, +-ನೂತನ ಪತ್ರಿಕೆಗೆ ಕನ್ನಡಿಗರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎನ್ನುವ ಸಂಗತಿ ಕನ್ನಡಿಗರ ಅನಾಸಕ್ತ ಮತ್ತು ಜಡತ್ವ ಮನೋಭಾವಕ್ಕೆ ಮತ್ತೊಂದು ದೃಷ್ಟಾಂತವಾಗದಿರಲಿ. +ರವಿ ಕೃಷ್ಣಾರೆಡ್ಡಿಯವರು ತಮ್ಮ ಪ್ರಸರಣ ವಿಭಾಗದ ಚಟುವಟಿಕೆಗಳತ್ತ ಸ್ವಲ್ಪ ವಿಶೇಷ ಗಮನ ಕೊಡಬೇಕಾಗಿರುವುದನ್ನು ಈ ಸನ್ನಿವೇಶ ಬಯಸುತ್ತಿದೆ ಎನ್ನುವುದಷ್ಟನ್ನೇ ಇಲ್ಲಿ ದಾಖಲಿಸಬಹುದು. +* +* +* +ಚಿತ್ರದುರ್ಗದಲ್ಲಿ, ಮೈಸೂರಿನಲ್ಲಿ ಕನ್ನಡಸಾಹಿತ್ಯ.ಕಾಂನ ಬೆಂಬಲಿಗರ ಬಳಗ ಕ್ರಮವಾಗಿ ಇದೇ ತಿಂಗಳ ಮೂರನೆ ವಾರಾಂತ್ಯ ಹಾಗು ನಾಲ್ಕನೆ ವಾರಾಂತ್ಯ ವಿಧ್ಯುಕ್ತವಾಗಿ ಉದ್ಘಾಟನೆಯಾಗಲಿದೆ. ವಿವರಗಳು. ನಾನಾ ವೇದಿಕೆಗಳ ಮೂಲಕ ಸಹೃದಯರಿಗೆ, ಬಳಗದ ಸದಸ್ಯರಿಗೆ ಶೀಘ್ರವಾಗಿ ತಲುಪುತ್ತದೆ. +* +* +* +ಮುಂದಿನ ಸಂಚಿಕೆ-ಮನವಿ ಹಾಗು ವಿಚಾರಸಂಕಿರಣದ ಚಟುವಟಿಕೆಗಳತ್ತ ಹೆಚ್ಚಿನ ಗಮನ ಕೊಡಬೇಕಾಗಿರುವುದರಿಂದ ಜೂನ್ ಕೊನೆಯ ವಾರದವರೆಗೂ ಕನ್ನಡಸಾಹಿತ್ಯ.ಕಾಂ ಅನಿಯತಕಾಲಿಕವಾಗಿರುತ್ತದೆ. +ಶೇಖರ್‌ಪೂರ್ಣ +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ಕನ್ನಡಸಾಹಿತ್ಯ.ಕಾಂ ಪ್ರಕಟಣೆಯ ವಲಯದಲ್ಲಿ ಎಷ್ಟೋ ಸಾಹಿತಿಗಳು ಇಲ್ಲ. ಹಾಗೆಯೇ ಪುತಿನರ ಸಾಹಿತ್ಯವೂ ಇಲ್ಲಿಯವರೆಗೆ ನೆಟ್‌ನಲ್ಲಿ ಇರಲಿಲ್ಲ. “ಗೋಕುಲ ನಿರ್ಗಮನ” ವನ್ನು ಪ್ರಸಕ್ತಗೊಳಿಸುವ ಕೆ ವಿ ಸುಬ್ಬಣ್ಣನವರ ಲೇಖನವನ್ನು ಪ್ರಕಟಿಸಿದಾಗ “ಪುತಿನ”ರವರ ಮೂಲ ಕೃತಿಗಳು ಕನ್ನಡಸಾಹಿತ್ಯ.ಕಾಂ […] +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_573.txt b/Kannada Sahitya/article_573.txt new file mode 100644 index 0000000000000000000000000000000000000000..4bb2b1f290ef1d01cb7c7768c9db20202f6b4884 --- /dev/null +++ b/Kannada Sahitya/article_573.txt @@ -0,0 +1,192 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ಒಂದು +– ೧ – +‘ಮಳೆ ಬಂದರೂ ಕಾಯೂದೇ… ’ ಅಂದಳು ಯಮುನೆ. +ಬೆಳಗಿನ ಎಂಟು ಗಂಟೆಯ ಹೊತ್ತಿಗೆ, ಮನೆಯ ಹಿಂಭಾಗದ ಹಿತ್ತಿಲ ಕೊನೆಯಲ್ಲಿರುವ ಗೇರು ಮರದ ಕೆಳಗೆ ಪಂಢರಿಯೂ ಅವಳ ಸೊಸೆ ಯಮುನೆಯೂ ಕಾದು ಕೂತಿದ್ದರು. ಅವರು ಇದ್ದಲ್ಲಿಂದ ನೆರೆಯ ದೇವರಾಯನ ಮನೆಯ ಹಿಂಬಾಗಿಲು ಮತ್ತು ಅಲ್ಲಿಂದ ಹೊರಟು ಅವನ ಹಿತ್ತಿಲ ತುದಿಯಲ್ಲಿರುವ ಪಾಯಖಾನೆಯನ್ನು ತಲುಪುವ ಕಾಲುಹಾದಿ ಸ್ಪಷ್ಟವಾಗಿ ಕಾಣುತ್ತಿತ್ತು. ಮಳೆ ನಿಂತು ಹೊಳವಾಗಿದ್ದರೂ ಮೋಡಗಳು ದಟ್ಟವಾಗಿದ್ದವು. ಸೂರ್ಯನ ಸುಳಿವಿರಲಿಲ್ಲ. ಮರದಿಂದ ಆಗಾಗ ತೊಟ್ಟಿಕ್ಕುವ ಭಾರವಾದ ಹನಿಗಳು ಕೆಳಗೆ ಒದ್ದೆ ಎಲೆಗಳ ಮೇಲೆ ಬಿದ್ದು ತಪ್‌ತಪ್ ಸದ್ದಾಗುತ್ತಿತ್ತು. ಸೊಂಟ ಬಿದ್ದ ಮುದುಕನ ಹಾಗೆ, ಬುಡದಲ್ಲೇ ಬಗ್ಗಿ ಅಡ್ಡಡ್ಡ ಬೆಳೆದಿದ್ದ ಗೇರು ಮರದ ಕಾಂಡದ ಮೇಲೆ ಇಬ್ಬರೂ ಕೂತಿದ್ದು, ಕೂತು ಬೇಜಾರಾಗಿ ಒರಗಿ ನಿಂತು, ಮತ್ತೆ ಮಾಡುವುದಕ್ಕೇನೂ ತೋಚದೇ ಕೆಳಗೆ ಬಿದ್ದ ಎಲೆಗಳನ್ನು ಕಾಲಿನಿಂದ ತಳ್ಳಾಡಿಸುತ್ತ, ಕಣ್ಣಿಗೆ ಬಿದ್ದ ಜಿಗ್ಗು ಹೆಕ್ಕಿ ಒಂದೆಡೆ ಹಾಕುತ್ತ, ಕಳೆ ಹುಡುಕಿ ಕೀಳುತ್ತ ಕಾದರು. ಮತ್ತೆ ಮಳೆ ಮೊದಲಾದರೂ ಹಿಡಿದ ಕೆಲಸ ಬಿಡಬಾರದೆನ್ನುವ ಹಟವನ್ನು ಪರಸ್ಪರ ಹೇಳಿಕೊಂಡರು. +uಟಿಜeಜಿiಟಿeಜ +‘ಈವತ್ತು ಇದಕ್ಕೆಲ್ಲ ಒಂದು ಗತಿ ಕಾಣಿಸೇ ಬಿಡ್ತೇನೆ…’ ಪಂಢರಿ ಸೊಸೆಗೆ ಕೇಳಿಸುವಂತೆ ಮಾತ್ರ ಹೇಳಿದರೂ ಅವಳ ಹರಿತ ದನಿ ಇನ್ನಷ್ಟು ಹರಿತವಾಗಿ ಕೇಳಿಸಿತು. +omಜu bಚಿಜi ಞಚಿಜಚಿಟu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿ‌ಈ ಇಬ್ಬರು ವಿಧವೆಯರು ನೆರೆಮನೆಯ ದೇವರಾಯನಿಗಾಗಿ ಹಿತ್ತಿಲಲ್ಲಿ ಕಾಯುತ್ತ ಕೂತು ಸುಮಾರು ಹೊತ್ತಾಗಿತ್ತು. ನಿತ್ಯ ಇಷ್ಟು ಹೊತ್ತಿಗೆ ಪಾಯಖಾನೆಗೆ ಹೋಗುತ್ತಿದ್ದ ಅವನು ಇನ್ನೂ ಬಂದಿರಲಿಲ್ಲ. ‘ಬಂದು ಹೋಗಿಲ್ಲ ಅಲ್ಲವೇ?’ ಎಂದು ತನ್ನ ಸಂಶಯವನ್ನು ಯಮುನೆ ಆಡಿತೋರಿಸಿದೊಡನೆ ಪಂಢರಿ ‘ಇಲ್ಲವೇ ಇಲ್ಲ… ನನಗೆ ಅವರು ಬರುವ ಹೊತ್ತು ಚೆನ್ನಾಗಿ ಗೊತ್ತು…ಬರದೇ ಎಲ್ಲಿ ಹೋಗ್ತಾರೆ?… ತಿಂದದ್ದು ಎಲ್ಲಿ ಹೋಗ್ತದೆ?….’ ಎಂದು ಮುಖ ಓರೆ ಮಾಡಿ ನಕ್ಕಳು. ತುಸು ಮುಂದೆ ಬಿದ್ದ ದಪ್ಪನೆಯ ಹಸಿ ಜಿಗ್ಗನ್ನು ಎರಡು ಹೆಜ್ಜೆ ಮುಂದೆ ಹೋಗಿ ಎತ್ತಿಕೊಂಡು, ಮುರಿಯಹೋದಾಗ ನಡುವೆ ಬಗ್ಗಿದ ಅದನ್ನು ಬಲಹಾಕಿ ಒತ್ತಿ ತುಂಡರಿಸಿ ಪಕ್ಕದಲ್ಲೇ ಒಟ್ಟಿದ್ದ ರಾಶಿಯ ಮೇಲೆ ಎಸೆದಳು. ಬೆಳ್ಳಗಿನ ಅವಳ ಮೋರೆಯ ಮೇಲೆ ಈ ಮಳೆಗಾಲದಲ್ಲೂ ಹರಿಯತೊಡಗಿದ ಬೆವರ ಹನಿಗಳನ್ನು ಸೆರಗಿನಿಂದ ಒರೆಸಿಕೊಂಡಳು. +ಸಾಧಾರಣ ಹೆಂಗಸರಿಗಿಂತ ಸುಮಾರು ಅರ್ಧ ಅಡಿ ಎತ್ತರವಾಗಿದ್ದ ಪಂಢರಿ ತುಸು ತೋರವಾಗಿದ್ದರೂ ಅವಳ ಎತ್ತರ ಅದನ್ನು ಮುಚ್ಚಿಹಾಕಿತ್ತು. ಅಲ್ಲಲ್ಲಿ ಬೆಳ್ಳಗಾಗಿದ್ದ ದಟ್ಟ ಗುಂಗುರು ಕೂದಲು ಪ್ರಯಾಸದಿಂದ ತುರುಬಿನಲ್ಲಿ ಸೇರಿಕೊಂಡಂತಿತ್ತು. ದವಡೆಯನ್ನು ಒಂದರ ಮೇಲೊಂದಿಟ್ಟು ಅಮುಕುವ ಅಭ್ಯಾಸದಿಂದಾಗಿ ಅವಳು ಹಾಗೆ ಮಾಡಿದಾಗೆಲ್ಲ ಕೆನ್ನೆಯ ಎಲುಬುಗಳು ಅಲುಗಾಡುವುದು ಕಾಣುತ್ತಿತ್ತು. ಅವಳು ಅವಡುಗಚ್ಚಿದ್ದೇ ಕಪೋಲದ ನರವೊಂದು ಉಬ್ಬಿನಿಲ್ಲುವುದು. ಒಂದಿಷ್ಟು ಓಡಾಡಿದರೂ ಸಾಕು ಅವಳ ಮೈಯಿಂದ ಬೆವರು ಧಾರಾಕಾರ ಹರಿಯುವುದು. ಬೋಳು ಹಣೆಯ ಮೇಲೆ ಯಾವಾಗಲೂ ಬೆವರಿನ ಸಾಲು. ಅವಳ ರವಿಕೆಯ ಬೆನ್ನು, ತೋಳು, ಕಂಕುಳೆಲ್ಲ ಸದಾ ತೇವವಾಗಿದ್ದು ಒದ್ದೆ ರವಿಕೆ ತೊಟ್ಟವಳಂತೆ ಕಾಣಿಸುವಳು. ಎಷ್ಟೋ ವರ್ಷಗಳ ಹಿಂದೆ ಈ ರೀತಿ ಬೆವರಿಳಿಯುವ ಬಗ್ಗೆ ಒಂದಿಷ್ಟು ಔಷಧಿ ಮಾಡಿದ್ದರೂ ಅದರ ಮೂಲಕಾರಣ ಸರಿಯಾಗಿ ಗೊತ್ತಾಗದೇ ಹಳದೀಪುರದ ವೈದ್ಯರು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವಂತೆ ಹೇಳಿದ್ದರು. ಅಂದಿನಿಂದ ಪಂಢರಿ ಸದಾ ಒಂದು ತಿರಗಣೆ ತಂಬಿಗೆಯಲ್ಲಿ ನೀರು ಇಟ್ಟುಕೊಂಡೇ ಇರುವಳು. +ಪಂಢರಿಯ ಮಾತೆತ್ತಿದರೆ ಜನರ ಕಣ್ಣ ಮುಂದೆ ಬರುವುದು ಒಂದೇ ಕೈಯಿಂದ ಅವಳು ಆ ಭಾರವಾದ ತಂಬಿಗೆಯನ್ನು ಅನಾಯಾಸವಾಗಿ ಎತ್ತಿ, ಬಾಯನ್ನು ಅಗಲಿಸಿ ಗಟಗಟನೇ ಒಳಗೆ ನೀರು ಸುರಿದುಕೊಳ್ಳುವ ದೃಶ್ಯ. ಆ ಎಂದು ತೆರೆದೂ ತೆರೆದೂ ಇನ್ನಷ್ಟು ಅಗಲವಾಗಿದೆಯೇನೋ ಎಂದು ಭಾಸವಾಗುವ ಅವಳ ಬಾಯಿ. ತೋರ ತೋಳು. ಬೆಳ್ಳಗಿನ ಹೊಟ್ಟೆ. ಬೆವರಿನಿಂದ ತೊಯ್ದ ಒದ್ದೆ ಒದ್ದೆ ರವಿಕೆ. ಅವಳು ನೀರು ಕುಡಿಯುತ್ತಿದ್ದಂತೆ, ಗಟಗಟ ಸದ್ದಿಗೆ ಜೊತೆಜೊತೆಯಾಗಿ ಹಿಂದೆ ಮುಂದೆ ಅಲುಗಾಡುವ ಅವಳ ಗಂಟಲ ಗಂಟು. ಒಂದೇ ಒಂದು ಹನಿ ಆಚೆ ಬೀಳದ ಹಾಗೆ ಕುಡಿದರೂ, ಕುಡಿದು ಮುಗಿದ ಬಳಿಕ ಸೆರಗಿನಿಂದ ಬಾಯಿ ಒರೆಸಿಕೊಳ್ಳುವಳು. ‘ತಂಬಿಗೆ ಪಂಢರಿ’ ಎಂದು ಅವಳಿಗೆ ಅಡ್ಡ ಹೆಸರು ಬೀಳುವುದಕ್ಕೆ ಕಾರಣವಾದ ಈ ಹಿತ್ತಾಳೆಯ ತಂಬಿಗೆ ಸದಾ ಮಿರಮಿರ ಮಿಂಚುತ್ತಿತ್ತು. ಸತತ ಉಪಯೋಗದಿಂದ ಅದರ ತಿರಗಣೆಯ ಮುಚ್ಚಳ ಅತಿ ನಯವಾಗಿತ್ತು. ಮುಚ್ಚಳವನ್ನು ತಂಬಿಗೆಯ ಬಾಯಿಗೆ ಇಟ್ಟು ಒಂದು ಸಲ ತಿರುಗಿಸಿದರೆ ಸಾಕು ಗರಗರನೇ ಸುತ್ತಿ ಸುತ್ತಿ ತಳದವರೆಗೂ ಹೋಗಿ ಗಕ್ಕನೇ ಕೂತುಬಿಡುವುದು. ಮಕ್ಕಳಿಗೆಲ್ಲ ಅದನ್ನು ಮುಟ್ಟಿ ತಿರುಗಿಸುವ ಆಸೆಯಾದರೂ ಪಂಢರಿಯ ಹತ್ತಿರ ಹೋಗಿ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅವಳಂತೂ ಒಂದು ಕ್ಷಣವೂ ಅದನ್ನು ಬಿಟ್ಟು ಇರುತ್ತಿರಲಿಲ್ಲ. ಎಂಥ ಗಹನ ಹರಟೆಯ ನಡುವೆಯೂ ಅವಳ ಎಡದ ಕೈ ಆಗಾಗ, ಅವಳಿಗೇ ಅರಿವಿಲ್ಲದ ಹಾಗೆ ತಂಬಿಗೆಯನ್ನು ಮುಟ್ಟಿ ಮುಟ್ಟಿ ಅದರ ಇರವನ್ನು ಪರಿಶೀಲಿಸುತ್ತಿರುವುದು. +‘ಇವರನ್ನು ಕಾಯುವ ಕರ್ಮ ಬಂತಲ್ಲ ನಮಗೆ.. ಅದೇನೋ ಹೇಳ್ತಾರಲ್ಲ ಹಾಗೆ ಕಾಯಬೇಕಾಯ್ತಲ್ಲ…’ +ಜಿಗ್ಗು ಆರಿಸುತ್ತ ಪಂಢರಿ ಗೊಣಗಿದಳು. ಅದೇನೋ ಅಂದರೆ ಹೆಣ ಕಾದ ಹಾಗೆ ಅನ್ನುವುದು ಮನಸ್ಸಿಗೆ ಥಟ್ಟನೇ ಹೊಳೆದರೂ ಇಬ್ಬರೂ ಅದನ್ನು ಬಾಯಿಬಿಟ್ಟು ಹೇಳಲಿಲ್ಲ. +‘ನಾವು ಸುಮ್ಮನೇ ಇರ್‍ತೀವಿ ಅಂತ ತಿಳ್ಕೊಂಡಿದಾನಲ್ಲ ಮುದುಕ’ +ಯಮುನೆ ಹೀಗೆಂದಾಗ, ತಾವು ಸುಮ್ಮನೇ ಇರುವವರಲ್ಲ ಎಂದು ತಿಳಿದೂ ಈ ಸಾಹಸಕ್ಕೆ ಕೈ ಹಾಕಿರಬೇಕಾದರೆ ಇದರ ಹಿಂದೆ ಬೇರೇನೋ ಇರಬಹುದೇ ಎಂಬ ಸಂಶಯ ಪಂಢರಿಯ ಮನಸ್ಸಿನೊಳಗೆ ಒಂದು ಕ್ಷಣ ಮಿಂಚಿಹೋಯಿತು. ಅವಳು ಸೊಸೆಯತ್ತ ನೋಡಿದಳು. ತುಸುವೇ ಅರಳಿದಂತಿರುವ ಹೊರಳೆಗಳು, ಹೌದೋ ಅಲ್ಲವೋ ಎಂಬಂತೆ ಉಬ್ಬಾಗಿರುವ ಮುಂದಿನ ಹಲ್ಲುಸಾಲು, ಮುಡಿತುಂಬ ಕೂದಲು ಯಮುನೆ ಹೆದೆಯೇರಿಸಿದ ಬಿಲ್ಲಿನಂತೆ ಬೊಡ್ಡೆಗೆ ಆತು ನಿಂತಿದ್ದಳು. +ತಲೆ ಎತ್ತಿ ಆಕಾಶ ನೋಡಿ ಯಮುನೆ ‘ನಿಮಗೆ ಚಾ ಮಾಡಿಕೊಟ್ಟು ನಾ ಮೀನು ಪೇಟೆಗೆ ಹೋಗಿ ಬರ್‍ತೆ’ ಅಂದಳು. +ವೇಳೆಯ ಯಾವುದೇ ಕಟ್ಟುಪಾಡುಗಳಿಲ್ಲದ ಅವರ ಜೀವನಕ್ಕೆ ಅವರವರೇ ಹೀಗೆ ಪರಸ್ಪರ ಕಟ್ಟು ಹಾಕಿಕೊಳ್ಳುವರು. ‘ನಿನ್ನ ಸ್ನಾನ ಆಗಿದ್ದೇ ನಾನು ಮಾಡ್ತೆ’ ‘ನೀ ಮಸಾಲೆ ಅರೆದ ಮೇಲೆ ನಾನು ತಪ್ಪಲೆ ಇಡ್ತೆ’ ಹೀಗೆ ಇನ್ನೊಬ್ಬರ ಯಾವುದೋ ಕೆಲಸಕ್ಕೋ, ವೇಳಾಪಟ್ಟಿಗೋ ತಮ್ಮನ್ನು ತಳಕು ಹಾಕಿಕೊಳ್ಳಲು ನೋಡುತ್ತಿದ್ದರು. ಮನೆಯ ಎದುರಿನ ರಸ್ತೆಯಲ್ಲಿ ಹಾದುಹೋಗುವ ಶಾಲೆಯ ಮಕ್ಕಳನ್ನು ನೋಡಿ ‘ಶಾಲೆಯ ಮಕ್ಕಳು ಗಂಜಿ ಊಟಕ್ಕೆ ಬಂದೇ ಬಿಟ್ಟರಲ್ಲ… ಯಮುನಾ, ಇನ್ನೂ ಸ್ನಾನ ಆಗಿಲ್ಲವಲ್ಲ ನಿನ್ನದು’ ಎಂದು ಅವಸರ ಮಾಡುತ್ತಲೋ, ಅವರ ಬೀದಿಯ ಕೊನೆಯ ಮನೆಯ ಶಿನ್ನ ಊಟಕ್ಕೆ ಬಂದುದರ ಮೇಲಿನಿಂದ ‘ಶಿನ್ನ ಊಟಕ್ಕೆ ಬಂದೇ ಬಿಟ್ಟನಲ್ಲೇ… ಇನ್ನೂ ನಮ್ಮದು ತಪ್ಪಲೆ ಇಟ್ಟೇ ಆಗಿಲ್ಲವಲ್ಲ…’ ಅನ್ನುತ್ತಲೋ ತಮ್ಮ ದೈನಿಕಗಳನ್ನು ಹೊರಜಗತ್ತಿನ ಜೊತೆ ಜೋಡಿಸಲು ಪ್ರಯತ್ನಿಸುವರು. ಶಾಲೆಯ ಮಕ್ಕಳು ಗಂಜಿಯ ಊಟಕ್ಕೆ ಹೋದರೂ, ಶಿನ್ನ ಅವನ ಪಾಡಿಗೆ ಅವನ ಮನೆಗೆ ಊಟಕ್ಕೆ ಬಂದರೂ ಇವರಿಗೆ ಆಗಬೇಕಾದುದೇನೂ ಇಲ್ಲ. ಆದರೆ ಅದೆಲ್ಲ ಯಾವ ರೀತಿಯಿಂದಲೂ ತಮಗೆ ಸಂಬಂಧಪಟ್ಟದ್ದಲ್ಲವೆಂದು ಅವರು ಮಾತ್ರ ಭಾವಿಸಿಕೊಂಡಿಲ್ಲ. ತಾವು ಯಾವುದೇ ಬಂಧನಗಳಿಲ್ಲದ ಅತಂತ್ರ ಒಂಟಿಜೀವಗಳೆಂದು ಗೊತ್ತಿದ್ದರೂ, ಊರಿನ ಚಲನೆಗಳ ಜೊತೆ ಹೇಗೋ ಕೊಂಡಿ ಹಾಕಿಕೊಳ್ಳಲು ಯತ್ನಿಸುವರು. ಶಿನ್ನನ ಹೆಂಡತಿ ಒಂದೇ ವಾರದಲ್ಲಿ ಮರಳಿ ತವರಿಗೆ ಯಾಕೆ ಹೋದಳು ಎಂದು ಕೌತುಕ, ಅವಳ ಅತ್ತೆಯ ವಾತದ ಕಾಲಿಗೆ ಪಂಢರಿಯೇ ಅಮದಳ್ಳಿಯಿಂದ ತರಿಸಿಕೊಟ್ಟ ಎಣ್ಣೆ ಮುಗಿಯಿತೋ ಎಂಬ ಆತಂಕ, ಶಾಲೆಗೆ ಭೇಟಿಕೊಟ್ಟ ಇನ್ಸ್‌ಪೆಕ್ಟರು ಶಂಭು ಮಾಸ್ತರರ ಮೇಲೆ ಏನೋ ಶರಾ ಬರೆದರೆಂಬ ಬಗ್ಗೆ ಕಳವಳ – ಹೀಗೆ ಅವರಿಗೆ ಕಾಳಜಿ ಮಾಡಿಕೊಳ್ಳಲು ಹಲವು ಸಂಗತಿಗಳಿದ್ದವು. ‘ಹೌದೋ ವಾಮನಾ… ನಿನ್ನ ಅಣ್ಣ ಅವನ ಹೆಂಡತಿಗೆ ಪೌಳಿಯ ಸರ ಮಾಡಿಸಿದನಂತೆ ಹೌದೇನೋ?’ ಎಂದು ಅವನು ಎದುರಿಸಲು ಇಷ್ಟಪಡದ ಪ್ರಶ್ನೆಯನ್ನು ಕೇಳುವರು. ಅವರ ಪ್ರಶ್ನೆಗೆ ಉತ್ತರಿಸದೇ ಹೋಗುವ ಧೈರ್ಯ ತೋರಿಸುವವರು, ಈ ಇಬ್ಬರು ವಿಧವೆಯರ ಬಾಯಿಗೆ ತಾನಾಗಿ ಬಂದು ಬೀಳುವವರು ಈ ಊರಲ್ಲಿ ಯಾರೂ ಇರಲಿಲ್ಲ. +‘ಈ ಮಳೆಯಲ್ಲಿ ಮೀನು ಸಿಕ್ಕ ಹಾಗೇ… ಚಿಪ್ಪು ಮೀನು ಸಿಕ್ಕರೆ ತಾ’ ಎಂದು ಪಂಢರಿ ಹೇಳುತ್ತಿದ್ದಂತೆ ದೇವರಾಯ ಬರುವುದು ಕಣ್ಣಿಗೆ ಬಿತ್ತು. ಅವನು ಪಾಯಖಾನೆಯತ್ತ ನಡೆಯುತ್ತಿದ್ದ ಹಾಗೆ ಇಬ್ಬರೂ ಇನ್ನೊಂದು ದಿಕ್ಕಿಗೆ ತಿರುಗಿ, ಬಗ್ಗಿ, ಏನೋ ಹೆಕ್ಕುವ ನಟನೆ ಮಾಡಿದರು. ಅವನು ಹಿಂದಿರುಗಿ ಬಂದಾಗಲೇ ಅವನನ್ನೆದುರಿಸಲು ತಕ್ಕ ಸಮಯವೆಂದು ಗೊತ್ತಿದ್ದ ಇಬ್ಬರೂ ಮನಸ್ಸಿನಲ್ಲೇ ಸಿದ್ಧರಾಗತೊಡಗಿದರು. ಅವಸರವಾಗಿ ಹೋದ ದೇವರಾಯ ಒಳಸೇರಿಕೊಂಡು, ಕ್ಯಾಕರಿಸುತ್ತ ಕೆಮ್ಮುತ್ತ ಹಾಡುತ್ತ, ಇತರ ಸದ್ದುಗಳನ್ನು ಅಡಗಿಸಲು ಪ್ರಯತ್ನಿಸಿದ. ‘ತಾನನಾ… ತನಾ ಆ‌ಆ‌ಆ‌ಆ’ ಎಂದು ಅವನು ಹೊರಡಿಸಿದ ದನಿ ಮತ್ತು ಅದನ್ನೂ ಮೀರಿ ಬಂದ ಸದ್ದುಗಳು ಈ ಇಬ್ಬರು ಹೆಂಗಸರನ್ನು ತಲುಪಿದ್ದರೂ, ಅದು ಕಿವಿಗೆ ಬೀಳಲಿಲ್ಲವೆಂಬಂತೆ, ತಮ್ಮ ಪಾಡಿಗೆ ತಾವು ಇರುವಂತೆ ನಟಿಸುತ್ತ, ಜಿಗ್ಗು ಹೆಕ್ಕುವುದರಲ್ಲಿ ತೊಡಗಿಕೊಂಡರು. +uಟಿಜeಜಿiಟಿeಜ +– ೨ – +ಪಂಢರಿ ವಿಧವೆಯಾದಾಗ ಅವಳಿಗೆ ಇಪ್ಪತ್ತು ವರ್ಷ. ಯಮುನೆಯ ಗಂಡ ತೀರಿಹೋದಾಗ ಅವಳಿಗೂ ಇಪ್ಪತ್ತು ವರ್ಷ. ನೋವಾದಲ್ಲೇ ಮರಳಿ ಮರಳಿ ಪೆಟ್ಟಾಗುವಂತೆ, ಕಾಲಚಕ್ರ ತಿರುತಿರುಗಿ ಇವರ ಮನೆಗೇ ದುರಂತವನ್ನು ಹೊತ್ತು ತರುವಂತೆ ಯಮುನೆಯ ಗಂಡ ಶಂಕರ ಮದುವೆಯಾದ ಒಂದು ವರ್ಷದೊಳಗೇ ತೀರಿಕೊಂಡ. ಶಾಲೆಯಲ್ಲಿ ಮಾಸ್ತರನಾಗಿದ್ದ ಅವನು ಒಂದು ದಿನ ಗಂಜಿ ಊಟಕ್ಕೆ ಮನೆಗೆ ಬಂದವನು ಜಗುಲಿಯಲ್ಲಿ ಕುಳಿತು ‘ಅಮ್ಮಾ’ ಎಂದು ಕರೆದ. ಅವನು ಬಂದದ್ದು ತಿಳಿದು ಬೇಗ ಬೇಗ ಮಣೆ ಹಾಕಿ, ಎಲೆಯಲ್ಲಿ ಗಂಜಿ ಬಡಿಸಿ, ಮೇಲೆ ಕಲ್ಲುಪ್ಪು ಹಾಕಿ, ಬದಿಯಲ್ಲಿ ನೀರಿನ ಚೆಂಬು ಇಟ್ಟು ಯಮುನೆ ಆಚೆ ಬಂದಾಗ ಅವನು ಆರಾಮ ಖುರ್ಚಿಯಲ್ಲಿ ಕೂತಲ್ಲೇ ತಲೆ ಮುಂದಕ್ಕೆ ವಾಲಿಸಿ ಕುಸಿದಿದ್ದು ಕಾಣಿಸಿತು. ಅವನ ಛತ್ರಿ ಇನ್ನೂ ಕೈಯಲ್ಲೇ ಇತ್ತು. ‘ಇವರೇ ಇವರೇ’ ಎಂದು ಕಂಗಾಲಾಗಿ ಕರೆಯುತ್ತ, ಅತ್ತೆಯನ್ನು ಕೂಗುತ್ತ ಯಮುನೆ ಅವನತ್ತ ಧಾವಿಸಿದಳು. ಎರಡೂ ಅಂಗೈಗಳ ನಡುವೆ ಅವನ ತಲೆ ಹಿಡಿದು ಎತ್ತಲು ಪ್ರಯತ್ನಿಸಿದ ಕ್ಷಣದಲ್ಲಿಯೇ ಅವನು ಇನ್ನಿಲ್ಲ ಎಂದು ಅವಳಿಗೆ ಗೊತ್ತಾಗಿಹೋಯಿತು. ಅವನು ಕರೆದದ್ದು ಯಾಕೆ? ಅವನಿಗೆ ಗೊತ್ತಾಗಿತ್ತೇ? ಹೊಂಚು ಹಾಕಿದ ವಿಧಿ ಬರುವುದನ್ನವನು ಕಂಡಿದ್ದನೇ? ಅಯ್ಯೋ ದೇವರೇ ಅವನು ಕರೆದಾಗ ತಕ್ಷಣ ಬಾರದೇ ಮಣೆ ಹಾಕುತ್ತ ಕೂತೆನಲ್ಲ ಎಂದೆಲ್ಲ ಅವಳು ನಾನಾ ರೀತಿಯಾಗಿ ಪರಿತಪಿಸಿದಳು. +ತಕ್ಷಣ ಊರಿನ ಜನ ಕಿಕ್ಕಿರಿದು ಸೇರಿದರು. ಈ ಸುದ್ದಿಯನ್ನು ನಂಬಲು ಸಾಧ್ಯವಿಲ್ಲದ ಹಾಗೆ ‘ಶಂಕರನನ್ನು ಈಗ ತಾನೆ ಆ ಮುರ್ಕಿಯಲ್ಲಿ ನೋಡಿದೆನಲ್ಲ’, ‘ಸಂಜೆ ಬೇಲೆ ಕಡೆಗೆ ಹೋಗುವ ಅಂತ ಹೇಳಿದನಲ್ಲ’, ಮುಂತಾಗಿ ಮಾತಾಡುತ್ತ ತಮ್ಮ ಕಳವಳವನ್ನು ಮುಚ್ಚಿಡಲು ಪ್ರಯತ್ನಿಸಿದರು. ಒಳಗೆ ಅತ್ತೆ ಸೊಸೆಯರಿಗೆ ಸಮಾಧಾನ ಹೇಳಹೋದವರು, ಅವರು ಮಾತಿಲ್ಲದೇ ಕೂತದ್ದು ನೋಡಿ, ಯಾವುದಕ್ಕೂ ಪ್ರತಿಕ್ರಿಯಿಸದ್ದನ್ನು ನೋಡಿ ಏನು ಹೇಳಬೇಕೋ ತೋಚದೇ ಸುಮ್ಮನೇ ತಿರುಗಿ ಬಂದರು. ಅಳದವರಿಗೆ ಹೇಗೆ ಸಮಾಧಾನ ಮಾಡಬಹುದೆಂದು ಅವರಿಗೂ ಗೊತ್ತಾಗಲಿಲ್ಲ. ಯಾವ ಮಾತುಗಳಿಗೂ ಅವರ ದುಃಖ ನಿಲುಕುವಂತಿರಲಿಲ್ಲ. ಮನೆತುಂಬ ಸೇರಿದ ಜನ ಅಪ್ಪಿತಪ್ಪಿ ಅಡಿಗೆ ಮನೆಯತ್ತ ಹಾದಾಗ, ಮಣೆಯೆದುರು ಎಲೆಯ ಮೇಲೆ ಬಡಿಸಿಟ್ಟ ಗಂಜಿ ಕಂಡು ಕಳವಳಗೊಂಡರು. ಗಂಜಿಯ ಮೇಲೆ ಬಡಿಸಿದ ಉಪ್ಪು ಕರಗಿ ಕಂದು ರಸವಾಗಿ ಎಲೆಯ ಒಂದು ಪಕ್ಕ ಮಡುಗಟ್ಟಿತ್ತು. ಎಲ್ಲವೂ ಏರುಪೇರಾದ ಈ ಕ್ಷಣದ ಮುಂಚೆ ಇಲ್ಲೊಂದು ಸಹಜ ದೈನಿಕ ಜರುಗುತ್ತಿತ್ತು ಎಂಬುದನ್ನು ಒತ್ತಿ ಒತ್ತಿ ಹೇಳುವಂತೆ ಇದ್ದ ಆ ದೃಶ್ಯವನ್ನು ಗಮನಿಸಿದರೂ, ತಮ್ಮೊಳಗೆ ದಾಖಲಿಸಿಕೊಳ್ಳಲು ಅಂಜಿದವರಂತೆ ಅದನ್ನು ನಿರ್ಲಕ್ಷಿಸಿದರು. +ಶಂಕರನ ದೇಹವನ್ನು ಒಯ್ಯುವಾಗ ಮಾತ್ರ ಪಂಢರಿಯೂ ಯಮುನೆಯೂ ‘ಅಯ್ಯೋ ಒಯ್ಯಬೇಡಿ’ ಎಂದು ಗದ್ದಲ ಎಬ್ಬಿಸಿ ಸುತ್ತಲಿನವರನ್ನು ತಳ್ಳಿಹಾಕುತ್ತ, ತಡೆಯಲು ಪ್ರಯತ್ನಿಸಿದರು. ನಾಲ್ಕೈದು ಜನ ಸೇರಿ ಇವರಿಬ್ಬರ ರಟ್ಟೆ ಹಿಡಿದು ನಿಲ್ಲಿಸಬೇಕಾಯಿತು. +ಆ ರಾತ್ರಿ ಹೊತ್ತಿಸಿಟ್ಟ ದೀಪದ ಬದಿಯಲ್ಲಿ, ತುದಿಯನ್ನು ಹಾಲಿನ ಬಟ್ಟಲಲ್ಲಿ ಇಳಿಬಿಟ್ಟು ಮೇಲಿನ ಮೊಳೆಯೊಂದಕ್ಕೆ ನೇತು ಹಾಕಿದ ನೂಲಿನ ನೆರಳು ಅಲ್ಲಾಡುವುದನ್ನು ನೋಡುತ್ತ ಕೂತಾಗ ಅವರಿಗೆ ಮುಂದಿನ ದಿನಗಳ ಚಿತ್ರ ಮೂಡತೊಡಗಿತ್ತು. ಅತ್ತೆ ತಮ್ಮ ಅಕಾಲ ವೈಧವ್ಯದ ಬಗ್ಗೆ ಹಿಂದೆಲ್ಲ ಹೇಳುತ್ತಿದ್ದ ಮಾತುಗಳು ಯಮುನೆಯ ಚಿತ್ತಕ್ಕೆ ಬಂದು ಅಧೀರಳಾದಳು. ಹನ್ನೆರಡನೆಯ ದಿನದ ಕರ್ಮಗಳನ್ನೆಲ್ಲ ದಾಯಾದಿ ರಘುವೀರ ಬಂದು ಪೂರೈಸಿಕೊಟ್ಟ. ಇಪ್ಪತ್ತು ವರ್ಷದ ಯಮುನೆಯ ಹಣೆ ಬೋಳಾಯಿತು. ಕೈಯಲ್ಲಿದ್ದ ಬಳೆಗಳನ್ನು ಪಂಢರಿಯೇ ಹಟಹಿಡಿದು ಇರಿಸಿದಳು. ‘ಆಡುವವರಿಗೇನು? ಅವರ ಬಾಯಲ್ಲಿ ಸೆಗಣಿ ಬೀಳಲಿ?’ ಎಂದಳು ಪಂಢರಿ. ಅವಳು ಅವುಡುಗಚ್ಚಿ ಆಡಿದ ಈ ಮಾತಿನ ಅರ್ಥದ ಗಹನತೆ, ಅದರ ಹಿಂದೆ ಇದ್ದ ಧೈರ್ಯ ಮತ್ತು ಧಾಡಸಿತನ, ಯಮುನೆಗೆ ಮುಂದೆ, ಆ ದೊಡ್ಡ ಮನೆಯಲ್ಲಿ ಪಂಢರಿಯ ಜೊತೆ ಇರುತ್ತ, ಒಬ್ಬರಿಗೊಬ್ಬರು ಆಸರೆಯಾಗುತ್ತ ಕಳೆಯುವ ದಿನಗಳಲ್ಲಿ, ಹಲವು ರೀತಿಗಳಲ್ಲಿ ಗೊತ್ತಾಯಿತು. +ಸಾಯುವ ಮುಂಚೆ ಶಂಕರ ‘ಅಮ್ಮಾ’ ಎಂದು ಕರೆದಿದ್ದರಿಂದ ಪಂಢರಿ ಸೊಸೆಯ ಬಗ್ಗೆ ಮೊದಲಿನ ಅಸಹನೆ ತೋರಿಸುವುದನ್ನು ಬಿಟ್ಟಳು. ಈ ಮನೆ ಕಟ್ಟುವಾಗ ಸರಿಯಾಗಿ ಶಾಂತಿ ಮಾಡಿಸದೇ ಇದ್ದುದೇ ಈ ಕುಟುಂಬದ ದುರಂತಕ್ಕೆ ಕಾರಣವೆಂದು ಅನೇಕರು ಒಳಗೊಳಗೇ ನಂಬಿದ್ದರೂ ದೊಡ್ಡ ಬಾಯಿಯ ಈ ಇಬ್ಬರು ಹೆಂಗಸರಿಗೆ ಏನನ್ನಾದರೂ ಹೇಳುವ ಧೈರ್ಯ ಮಾತ್ರ ಯಾರಿಗೂ ಇರಲಿಲ್ಲ. ಎಲ್ಲವನ್ನೂ ಕಳಕೊಂಡ ಅವರಿಗೆ ಯಾವುದರದೂ ಎಗ್ಗಿಲ್ಲವೇನೋ ಎಂದು ಜನರಿಗೆ ಕೆಲವೊಮ್ಮೆ ಅನಿಸುತ್ತಿತ್ತು. ಮಾತಿಗೋ ಮರ್ಯಾದೆಗೋ ಅಂತೂ ಈ ಜೋಡಿಯ ಎದುರು ಬಾಯಿಕಟ್ಟಿದಂತಾಗುತ್ತಿದ್ದರು. +ಮುರ್ಡೇಶ್ವರದ ಹತ್ತಿರ ಗೇಣಿಗೆ ಕೊಟ್ಟ ತುಂಡು ಹೊಲ ಬಿಟ್ಟರೆ ಅವರಿಗೆ ಇದ್ದುದು ಮನೆಯ ಹಿತ್ತಲು ಮಾತ್ರ. ಅಲ್ಲಿ ಬಸಳೆ ತೆಂಗು ಮಾವು ಹಲಸು ಹೀಗೆ ತಮಗೆ ನಿತ್ಯದ ಊಟಕ್ಕೆ ಬೇಕಾದದ್ದು ಮಾತ್ರವಲ್ಲದೆ ಯಾವುದನ್ನು ಮಾರಲು ಸಾಧ್ಯವೋ ಅದೆಲ್ಲವನ್ನೂ ಬೆಳೆಸಿದರು. ‘ಎಂಥ ದಿನಗಳು ಬಂದವು ನೋಡು…. ನಮ್ಮಲ್ಲಿ ಈ ರೀತಿ ಮನೆಯಲ್ಲಿ ಬೆಳೆದದ್ದನ್ನು ಮಾರಾಟ ಮಾಡಿಯೇ ಗೊತ್ತಿರಲಿಲ್ಲ…. ಇನ್ನು ಇವರಿಂದ ಏನೇನು ಕಲಿಯಬೇಕೋ…’ ಮುಂತಾದ ಮಾತುಗಳಿಗೆ ಅವರು ಕಿವಿಗೊಡದೇ ಹುಚ್ಚು ಹಿಡಿದವರ ಹಾಗೆ ತೋಟವನ್ನು ಸಲಹುತ್ತ ಇದ್ದು ಬಿಟ್ಟರು. ಹುಣ್ಣಿಮೆ ಅಮವಾಸ್ಯೆಯೆನ್ನದೇ, ರಾತ್ರಿ ಹಗಲೆನ್ನದೇ, ಹೊತ್ತಲ್ಲದ ಹೊತ್ತಲ್ಲಿ ಅವರು ತೋಟದಲ್ಲಿ ಇರುತ್ತಾರೆಂಬ ಪ್ರತೀತಿಯಿಂದಾಗಿ ಹೋಳಿ ಹುಣ್ಣಿಮೆಯ ಹೊತ್ತಿಗೆ ಕೂಡ ಅವರ ಹಿತ್ತಿಲಿನಿಂದ ಒಂದು ಕಡ್ಡಿಯನ್ನೂ ಕದಿಯಲಾಗುತ್ತಿರಲಿಲ್ಲ. ಇಂಥ ದುರಂತಗಳು ವೈರಾಗ್ಯ ಹುಟ್ಟಿಸುವ ಬದಲು ಅವರೊಳಗಿನ ಜೀವನದ ಛಲವನ್ನು ಕೆಣಕಿದವೇ ಎಂದನಿಸುವಷ್ಟು ಲೌಕಿಕರಾಗಿ ಕಾಣುತ್ತಿದ್ದರು. ಊರಿನ ಜನ ತಮ್ಮ ಜೊತೆ ಒಡನಾಡುವಾಗ ತುಸು ಕನಿಕರ ತೋರಿಸುತ್ತಾರೆ ಎಂಬ ಭಾವನೆ ಬಂದರೂ ಸಾಕು ಕೆರಳಿಬಿಡುತ್ತಿದ್ದರು. ಈ ಅನುಕಂಪವನ್ನು ಮೀರಲೆಂಬಂತೆ ಎಷ್ಟೋ ಬಾರಿ ಅವರಾಗಿಯೇ ಕಾಲು ಕೆದರಿ ಜಗಳ ಕಾಯುತ್ತಿದ್ದರು. +ಅವರ ತೋಟವನ್ನು ನೋಡಿದರೆ, ಅತ್ತೆ ಸೊಸೆಯರ ಪ್ರಾಣಪಕ್ಷಿಯೇ ಅಲ್ಲಿದೆಯೆಂದು ಗೊತ್ತಾಗುತ್ತಿತ್ತು. ಅಲ್ಲಿಯ ಪ್ರತಿ ಗಿಡಬಳ್ಳಿಯ ಪರಿಚಯವೂ ಅವರಿಗಿತ್ತು. ಪ್ರತಿ ಪಾತಿಯಲ್ಲಿ ಹುಯ್ದ ನೀರೆಷ್ಟು, ಯಾವುದಕ್ಕೆ ಎಷ್ಟು ಗೊಬ್ಬರ ಬಿದ್ದಿದೆ, ಯಾವ ಮರದ ಕಾಯಿಗಳು ಹಣ್ಣುಗಳಾಗಲು ಎಷ್ಟು ದಿನ ಬೇಕು, ಹಲಸಿನ ಮರಕ್ಕೆ ಎಷ್ಟು ಹಣ್ಣು ಬಿಟ್ಟಿದೆ ಇತ್ಯಾದಿ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳು ಅವರಿಗೆ ಉಸಿರಾಟದ ಹಾಗೆ ಸರಾಗವಾಗಿದ್ದವು. ಅಲ್ಲಿ ಬಿದ್ದ ಪ್ರತಿ ಅನ್ಯ ಹೆಜ್ಜೆಯ ಗುರುತು ಅವರಿಗೆ ತಕ್ಷಣ ಗೊತ್ತಾಗುತ್ತಿತ್ತು. ಇಬ್ಬರ ಸತತ ಆರೈಕೆಯಿಂದ ತೋಟ ಸ್ವಚ್ಛವಾಗಿ ಮಡಿಸಿಟ್ಟ ಬಟ್ಟೆಯ ಹಾಗೆ ಇತ್ತು. +uಟಿಜeಜಿiಟಿeಜ +– ೩ – +ಈವತ್ತು ಇಬ್ಬರೂ ಕಾದು ಕುಳಿತಿರುವುದಕ್ಕೆ ಕಾರಣ ಹುಡುಕಲು ಹೋದರೆ ಅದು ಎರಡು ಹಿತ್ತಿಲ ನಡುವಿನ ಬಾಂದಿನ ಕಲ್ಲಿಗೂ, ಅಲ್ಲಿಂದ ಕೆಲವು ವರ್ಷ ಹಿಂದೆ ಹೋದರೆ ಮರದಿಂದ ತಾನಾಗಿ ಕಳಚಿ ಬಿದ್ದ ಒಂದು ಮಾವಿನಕಾಯಿಗೂ, ಅದಕ್ಕೂ ಹಿಂದೆ ಹೋದರೆ ದೇವರಾಯನ ಮನೆಯಲ್ಲಿದ್ದು ಓದಲು ಬಂದ ಪುರಂದರನವರೆಗೂ ಹೋಗುತ್ತದೆ. +ಶರಾವತಿ ಸಮುದ್ರ ಸೇರುವುದು ಹೊನ್ನಾವರದಲ್ಲಿ. ಲಾಂಚುಗಳು, ಮೀನುದೋಣಿಗಳು, ದೊಡ್ಡ ತೆಪ್ಪಗಳು, ಇನ್ನೂ ದೊಡ್ಡ ಮಚವೆಗಳು, ನದಿ ದಾಟುವವರು, ದಾಟಿ ಬಂದವರು, ಮೀನು ಮಾರುವವರು, ತರಕಾರಿ ಬುಟ್ಟಿ ಹೊತ್ತವರು, ಅನಗತ್ಯ ಧಾವಂತದಲ್ಲಿ ಅತ್ತಿಂದಿತ್ತ ಓಡಾಡುವವರು – ಹೀಗೆ ಯಾವುದೋ ಭರಭರಾಟೆಯಲ್ಲಿರುವ ಬಂದರಿನಿಂದ ಏರುಮುಖವಾಗುತ್ತ ಊರೊಳಗೆ ಬರುವ ರಸ್ತೆಯ ಬಲಪಕ್ಕಕ್ಕೆ ಇರುವುದು ಕೋಟೆಗುಡ್ಡ. ಅದೇ ರಸ್ತೆ ಮುಂದಕ್ಕೆ ಹೋಗಿ ಕವಲೊಡೆಯುವುದು ಮೊಹರಮ್ ಹಬ್ಬಕ್ಕೆ ಕೆಂಡ ಹಾಯುವ ಜಾಗದ ಎದುರಿಗೆ. ಗುಡ್‌ಲಕ್ ಹೊಟೇಲು ಇರುವುದು ಅಲ್ಲಿಯೇ. ಅಲ್ಲೇ ಎಡಪಕ್ಕದಲ್ಲಿ ಹೋಗುವ ಕಿರಿದಾದ ಓಣಿಯ ಬಾಯಿಯಲ್ಲಿ ಒಂದು ಕಲ್ಲಿನ ಮೇಲೆ ‘ಬಂದರ ಓಣಿ ನಂ ೨’ ಎಂದು ಬರೆದಿದೆ. ಇದನ್ನು ಹಿಡಿದು ಬಂದರೆ ಎಡಕ್ಕೆ ಮೊಟ್ಟ ಮೊದಲು ಕಾಣಿಸುವ ಹಂಚಿನ ಮನೆಯೇ ದೇವರಾಯನದು. ಅದರ ಪಕ್ಕದಲ್ಲೇ ಇರುವುದು ಪಂಢರಿಯ ಮನೆ. ಎರಡೂ ಅಷ್ಟೇನೂ ದೊಡ್ಡ ಮನೆಗಳಲ್ಲದಿದ್ದರೂ ಮಾಡಿಗೆ ಹೆಂಚು ಹೊದೆಸಿದ್ದರಿಂದ ತುಸು ಘನತೆಯಲ್ಲಿ ನಿಂತಂತೆ ಕಾಣುತ್ತಿದ್ದವು. ದಣಪೆಯ ಭಾಗವೊಂದನ್ನು ಬಿಟ್ಟರೆ ಎರಡೂ ಮನೆಗಳ ಎದುರಿನ ಪಾಗಾರವನ್ನು ದಟ್ಟವಾದ ಹಸಿರು ಮುಚ್ಚಿಹಾಕಿತ್ತು. ದೇವರಾಯನ ಮನೆಯ ದಣಪೆಯಿಂದ ಜಗುಲಿಯವರೆಗಿನ ಕಾಲುಹಾದಿಗೆ ನಡುನಡುವೆ ಕಲ್ಲು ಚಪ್ಪಡಿಗಳನ್ನು ಹಾಕಲಾಗಿತ್ತು. ಮಳೆಗಾಲದಲ್ಲಿ ಕೆಸರಿನಿಂದ ಕಾಲು ಕೊಚ್ಚೆಯಾಗದೇ ನಡೆಯಬೇಕೆಂದರೆ ಈ ಚಪ್ಪಡಿಗಳ ಮೇಲೆ ಕಾಲಿಟ್ಟು ಕುಪ್ಪಳಿಸಬೇಕಿತ್ತು. +ಎರಡೂ ಮನೆಗಳಿಗೆ ಹಿಂಭಾಗದಲ್ಲಿ ದೊಡ್ಡ ದೊಡ್ಡ ಹಿತ್ತಿಲುಗಳಿವೆ. ದೇವರಾಯನ ಮನೆಯ ಹಿತ್ತಿಲು ಎತ್ತರದ ಮರಗಳಿಂದ, ಮನಸ್ವೀ ಬೆಳೆದ ದಾಸಾಳ ಆಬೋಲಿ ಗಿಡಗಳಿಂದ, ಬೆಳೆದು ನಿಂತ ಹುಲ್ಲಿನಿಂದ, ಕೀಳದ ಕಳೆಯಿಂದ ಅಂಕೆ ಮೀರಿ ಹೋದಂತೆ ಕಾಣುವುದು. ಪಂಢರಿಯ ಮನೆಯ ಹಿತ್ತಿಲಲ್ಲೂ ಎತ್ತರದ ಮರಗಳು, ನಾನಾ ಹೂಬಳ್ಳಿಗಳು ತರಕಾರಿ ಗಿಡಗಳು ಇತ್ಯಾದಿ ದೇವರಾಯನ ಭಾಗಕ್ಕಿಂತ ಜಾಸ್ತಿಯೇ ಇದ್ದರೂ ಅವರದು ಸ್ವಚ್ಛವಾಗಿ ಬೆಳೆಸಿದ, ಅಂಕೆಯಲ್ಲಿಟ್ಟು ಸಲಹಿದ ತೋಟದ ಹಾಗೆ, ವಿಧೇಯ ಮತ್ತು ಜಾಣ ಮಗುವಿನ ಹಾಗೆ ಕಾಣುವುದು. +ವರ್ಷಗಳ ಹಿಂದೆ ಪುರಂದರನನ್ನು ಜೊತೆಯಲ್ಲಿ ಕರೆದುಕೊಂಡು ದೇವರಾಯನ ಈ ಮನೆಗೆ ವಾಸುದೇವ ಬಂದಾಗ ಸಂಜೆಯಾಗಿತ್ತು. +‘ತಾರಿ ದಾಟಲಿಕ್ಕೆ ಕಾದು ಕಾದು ಇಷ್ಟು ಹೊತ್ತಾಯಿತು. ಎಲ್ಲಾ ಮೀನು ದೋಣಿ ಹತ್ತಿ ಹೋಗಿದ್ದಾರೆ ಕಾಣ್ತದೆ. ಇಲ್ಲಿ ಜನರನ್ನು ದಾಟಿಸಲಿಕ್ಕೆ ನಾಲ್ಕು ಆಳು ಇಲ್ಲ.’ +ಜಗುಲಿ ಏರುತ್ತಿದ್ದ ಹಾಗೆ ವಾಸುದೇವ ಹೊತ್ತು ಮೀರಿ ಬಂದದ್ದರ ಕಾರಣ ವಿವರಿಸತೊಡಗಿದ. ಬಿಳಿಯ ಧೋತರ, ಬಿಳಿಯ ಟೊಪ್ಪಿಗೆ, ಬಿಳಿಯ ಪೈರಣದಲ್ಲಿ ಅವನ ಕಪ್ಪು ಬಣ್ಣ ಎದ್ದು ಕಾಣುತ್ತಿತ್ತು. ನಕ್ಕರೆ, ಓರಣವಾಗಿ ಜೋಡಿಸಿಟ್ಟಂತೆ ತೋರುವ ಹಲ್ಲುಗಳು. ದೊಡ್ಡ ಮೂಗು. ನುಣ್ಣಗೆ ಬೋಳಿಸಿದ ಮೀಸೆಯಿಲ್ಲದ ಮುಖ. +ಕೈಯಲ್ಲಿದ್ದ ಚೀಲವನ್ನು ಪಡಸಾಲೆಯ ಒಂದು ಬದಿಯಲ್ಲಿದ್ದ ಆರಾಮ ಕುರ್ಚಿಗೆ ಒರಗಿಸಿಟ್ಟ. +ವಾಸುದೇವನ ಜೊತೆ ಬಂದ ಹುಡುಗ ಹಿಂಜರಿಯುತ್ತ, ಅವನ ಹಿಂದೆಯೇ ನಡೆದು ಬಾಂಕಿನತ್ತ ಹೋಗಿ ಕೂತದ್ದನ್ನು ಗಮನಿಸುತ್ತಿದ್ದ ಕಾವೇರಿ ‘ಇವನು ಯಾರು?’ ಅಂದಳು. +‘ಗುರುತಾಗಲಿಲ್ಲವೇ? ನನ್ನ ತಂಗಿ ಸಾವಿತ್ರಿಯ ಮಗ ಪುರಂದರ.’ +‘ಅರೆ ಹೌದಲ್ಲ. ನಾನು ನೋಡಿದ್ದು ಎಷ್ಟೋ ವರ್ಷಗಳ ಹಿಂದೆ. ಅಲ್ಲಲ್ಲ, ಮೂರು ವರ್ಷಗಳ ಹಿಂದೆ ನಮ್ಮ ಗೋವಿಂದ ನಾಯಕರ ಮಗಳ ಮದುವೆಯಲ್ಲಿ. ಆದರೂ ಬೆಳೆಯುವ ಹುಡುಗರ ಗುರುತು ಹತ್ತುವುದು ಸ್ವಲ್ಪ ಕಷ್ಟವೇ ಅನ್ನು… ಅಪ್ಪನ ಹಾಗೇ ಕಾಣುತ್ತಾನೆ…’ ಪುರಂದರನಿಗೆಂದೂ ನೋಡಿ ನೆನಪಿರದ ಅಪ್ಪನನ್ನು ನೆನೆಸಿಕೊಳ್ಳುತ್ತ ಗುರುತು ಹಿಡಿದಳು. +ಒರಟು ಅನಿಸುವಷ್ಟು ಗುಂಗುರಾಗಿದ್ದ ಕೂದಲು, ತುಸು ದಪ್ಪ ಕೆಳ ತುಟಿ, ಬೆಳ್ಳಗಿನ ಮೋರೆಯ ಮೇಲೆ ಎದ್ದು ತೋರುವ ದಟ್ಟ ಹುಬ್ಬುಗಳು – ಉದ್ದ ಚಡ್ಡಿ ಮತ್ತು ಶರಟು ಹಾಕಿಕೊಂಡು ಸಂಕೋಚದಲ್ಲಿ ಬಾಂಕಿನ ತುದಿಗೆ ಕೂತ ಹುಡುಗನನ್ನು ನೋಡುತ್ತ ಕಾವೇರಿ ‘ಹಾಗೇ, ಅಪ್ಪನ ಹಾಗೇ…’ ಎಂದು ಮತ್ತೊಮ್ಮೆ ಹೇಳಿ ‘ನಿನಗೆ ಪಾನಕ ಕೊಡಲೇನೋ?’ ಎಂದು ಕೇಳಿದಳು. ಪುರಂದರ ಒಪ್ಪಿಗೆಯಲ್ಲಿ ತಲೆಯಾಡಿಸಿದ. +‘ಇವರು ಟಪ್ಪರ್ ಹಾಲ್ ಕಡೆಗೆ ಹೋದವರು ಇನ್ನೂ ಬಂದಿಲ್ಲ. ಇನ್ನೇನು ಬರುವ ಹೊತ್ತಾಯಿತು. ಕೂತುಕೋ… ಚಾ ಮಾಡ್ತೇನೆ…’ ಕಾವೇರಿ ವಾಸುದೇವನ ಜೊತೆ ಉಪಚಾರದ ಮಾತಾಡಿ ಒಳಹೋದಳು. +ವಾಸುದೇವ ತನ್ನ ಟೊಪ್ಪಿಗೆ ತೆಗೆದು ಗೋಡೆಗಿದ್ದ ಗಿಳಿಗೂಟಕ್ಕೆ ಸಿಕ್ಕಿಸಿದ. ಎಡ ಅಂಗೈಯಿಂದ ತಲೆಯನ್ನೊಮ್ಮೆ ಸವರಿಕೊಂಡ. ನಡುಮನೆಗೆ ಹೋಗುವ ಬಾಗಿಲ ಪಕ್ಕದಲ್ಲಿದ್ದ ಆರಾಮ ಖುರ್ಚಿಯ ಮೇಲೆ ಕೂತುಕೊಂಡು ‘ಸ್’ ಎಂದು ಉಸಿರುಬಿಟ್ಟ. +ಪುರಂದರ ಕೂತ ಪಡಸಾಲೆಗೆ ಕಟ್ಟಿಗೆಯ ಕಟಾಂಜನವಿತ್ತು. ಅದಕ್ಕೆ ಹಸಿರು ಬಣ್ಣ. ಒಳಗೆ ಬರುತ್ತಿದ್ದ ಹಾಗೆ ಎದುರಾಗುವುದು ನಡುಮನೆಗೆ ಹೋಗುವ ಬಾಗಿಲು. ಆ ಬಾಗಿಲಿನ ಎರಡೂ ಪಕ್ಕ ದ್ವಾರಪಾಲಕರಂತೆ ಎರಡು ಆರಾಮ ಖುರ್ಚಿಗಳು. ಇತ್ತ ಕಡೆ ಕರಿ ಮರದ ಬಾಂಕು. ಅದರ ಒಂದು ಬದಿಯಲ್ಲಿ ನಾಲ್ಕು ಬೆತ್ತದ ಕೈಬೀಸಣಿಗೆಗಳು. ಪಡಸಾಲೆಯಲ್ಲಿ ಕೂತು ಕಟಾಂಜನದ ಆಚೆ ನೋಡಿದರೆ ಬಲಭಾಗದಲ್ಲಿರುವ ಬಾವಿಯ ಕಟ್ಟೆ, ಅದರ ಪಕ್ಕದ ಕೊಟ್ಟಿಗೆ ಮತ್ತು ಅದಕ್ಕೆ ತಾಗಿಯೇ ಇದ್ದ ಬಚ್ಚಲು ಮನೆ, ಪಾಗಾರದ ಆಚೆ ರಸ್ತೆ, ರಸ್ತೆಯ ಮೇಲೆ ಓಡಾಡುವ ಜನ – ಎಲ್ಲವೂ ಕೂತಲ್ಲಿಂದಲೇ ಕಾಣುತ್ತಿತ್ತು. ಪಡಸಾಲೆಯ ಗೋಡೆಗೆ ಹಳೆಯ ದೊಡ್ಡ ಗಡಿಯಾರ. ಮತ್ತು ಕಟ್ಟು ಹಾಕಿಸಿದ ಹಲವಾರು ಫೋಟೋಗಳು. +ಗೋಡೆಯ ಮೇಲೆ ತನ್ನ ಮಾವ ವಾಸುದೇವ ಮತ್ತು ಅವನ ಹೆಂಡತಿ ಕಸ್ತೂರಿ ಜೊತೆಯಾಗಿ ಕೂತು ತೆಗೆಸಿದ ಫೊಟೋ ಇದ್ದುದನ್ನು ಪುರಂದರ ಗಮನಿಸಿದ. ಒಂದು ಕುರ್ಚಿಯ ಮೇಲೆ ಕಸ್ತೂರಿ ಕೂತಿದ್ದಳು ಮತ್ತು ಪಕ್ಕದಲ್ಲಿ ವಾಸುದೇವ ನಿಂತಿದ್ದ. ಕುರ್ಚಿಯ ಪಕ್ಕ ಒಂದು ಸ್ಟ್ಯಾಂಡಿನ ಮೇಲೆ ಹೂ ಗುಚ್ಛವೊಂದಿತ್ತು. ಹಿಂದೆ ಕಪ್ಪು ಪರದೆಯಿತ್ತು. ಈ ಫೋಟೋದ ಪಕ್ಕದಲ್ಲಿ ಅದೇ ಹಿನ್ನೆಲೆಯಲ್ಲಿ, ಅದೇ ಕುರ್ಚಿ ಹೂಗುಚ್ಛಗಳು, ಅದೇ ಭಂಗಿಯಲ್ಲಿ ಇನ್ನೂ ಮೂರು ಜೋಡಿಗಳಿದ್ದವು. ಪುರಂದರ ಪೋಟೋಗಳನ್ನು ನೋಡುತ್ತಿರುವುದನ್ನು ಗಮನಿಸಿದ ವಾಸುದೇವ ಎದ್ದು ಹತ್ತಿರ ಹೋಗಿ ನಿಂತು, ಅವುಗಳನ್ನು ಒಂದೊಂದಾಗಿ ಪುರಂದರನಿಗೆ ವಿವರಿಸಿದ: +‘ಸರಿಯಾಗಿ ನೋಡು. ಈ ಮನೆಗೆ ಬೇಕಾದವರೆಲ್ಲರೂ ಈ ಫೋಟೋಗಳಲ್ಲಿದ್ದಾರೆ. ನಾಲ್ಕೂ ತಂಗಿಯರ ಫೋಟೋಗಳಿವೆ. ನಾಲ್ಕು ಜೋಡಿ. ಎಲ್ಲಾ ಒಂದೇ ದಿನ, ಒಂದೇ ಕಡೆ, ಹುಬ್ಬಳ್ಳಿಯಲ್ಲಿ ತೆಗೆದ ಫೋಟೋಗಳು. ದೇವರಾಯ ಮಾತ್ರ ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾನೆ. ನಾವೆಲ್ಲ ಅಂದುಕೊಂಡೆವೇ ಹೊರತು ಮಾಡಲಿಲ್ಲ. ಈ ಮೊದಲನೇ ಫೋಟೋದಲ್ಲಿರುವುದು ಕಾವೇರಿ ಮತ್ತು ಅವಳ ಗಂಡ ದೇವರಾಯ. ಕಾವೇರಿ ಎಲ್ಲರಿಗೆ ಅಕ್ಕ. ಅವಳ ಎರಡನೇ ತಂಗಿ ನಿನ್ನ ಕಸ್ತೂರಿ ಅತ್ತೆ ಅಂದರೆ ನನ್ನ ಹೆಂಡತಿ. ಅದರ ಪಕ್ಕದಲ್ಲಿರುವುದು ಮೂರನೆಯ ತಂಗಿ ಮಥುರಿ ಮತ್ತು ಅವಳ ಗಂಡ ಅನಂತ. ಅವರಿಬ್ಬರೂ ಈಗ ಇಲ್ಲ. ಅವರಿಗೊಬ್ಬ ಮಗಳಿದ್ದಾಳೆ. ಅವಳನ್ನು ಈ ನಾಲ್ಕನೆಯ ತಂಗಿ ಗೋದಾವರಿ ಮತ್ತು ಗಂಡ ಸರ್ವೋತ್ತಮ ಸಾಕಿಕೊಂಡಿದ್ದಾರೆ. ಅಕ್ಕತಂಗಿಯರ ಫೋಟೋಗಳ ನಂತರ ಅಲ್ಲಿ ಕೊನೆಯಲ್ಲಿ ಸೂಟು ಹಾಕಿಕೊಂಡ ಬೇರೆ ಥರದ ಫೋಟೋ ಇದೆಯಲ್ಲ ಅದು ಇವರೆಲ್ಲರ ತಮ್ಮ ಮಂಜುನಾಥನದು. ಅವನ ಹೆಂಡತಿ ಗಿರಿಜೆ. ಅವನೀಗ ಹುಬ್ಬಳ್ಳಿಯಲ್ಲಿ ಇರುವುದು. ಬ್ಯಾಂಕಿನಲ್ಲಿ ಕೆಲಸ.’ +ಫೋಟೋಗಳನ್ನೇ ನೋಡುತ್ತ ಪುರಂದರ ಮನಸ್ಸಿನಲ್ಲೇ ಹೆಸರುಗಳನ್ನು ಮರುಕಳಿಸಿಕೊಳ್ಳತೊಡಗಿದ. ಬಾಲ್ಯದಲ್ಲಿ ಪರವಡಿ ಹೇಳುವಾಗ ಋತುಗಳನ್ನು ಹೇಳುವಂತೆ ದೇವರಾಯ-ಕಾವೇರಿ ವಸಂತ ಋತು, ವಾಸುದೇವ-ಕಸ್ತೂರಿ ಗ್ರೀಷ್ಮ ಋತು, ಅನಂತ-ಮಥುರಿ ಶರತ ಋತು, ಸರ್ವೋತ್ತಮ-ಗೋದಾವರಿ ಶಿಶಿರ ಋತು ಅಂದುಕೊಂಡ. ಎಲ್ಲವೂ ರಿ ಅಕ್ಷರದಿಂದ ಕೊನೆಯಾಗುವ ಹೆಸರುಗಳು. ಕಾವೇರಿ-ಕಸ್ತೂರಿ-ಮಥುರಿ-ಗೋದಾವರಿ. ಎಷ್ಟು ಪ್ರಯತ್ನಿಸಿದರೂ ಮಂಜುನಾಥ-ಗಿರಿಜೆಗೆ ಎಲ್ಲಿಯೂ ಪ್ರಾಸ ಹೊಂದಲಿಲ್ಲ. +ಗೋಡೆಗೆ ನೇತು ಹಾಕಿದ ದೊಡ್ಡ ಗಡಿಯಾರದ ಪೆಂಡುಲಮ್ ಟಿಕ್ ಟಿಕ್ ಅನ್ನುತ್ತ ತೂಗುತ್ತಿತ್ತು. ಅದು ಢಣಾ ಢಣಾ ಎಂದು ಗಂಟೆ ಬಾರಿಸಲು ಶುರುಮಾಡುವುದಕ್ಕೂ, ದಣಪೆಯಲ್ಲಿ ದೇವರಾಯ ಬರುವುದು ಕಾಣಿಸಲಿಕ್ಕೂ, ಕಾವೇರಿ ಒಳಗಿನಿಂದ ಚಾ ಮತ್ತು ಪಾನಕ ತಗೊಂಡು ಬರುವುದಕ್ಕೂ ಸರಿಹೋಯಿತು. +ಆಮೇಲೆ ದೇವರಾಯ ಮತ್ತು ವಾಸುದೇವ ಪಡಸಾಲೆಯಲ್ಲಿ ಮಾತಾಡುತ್ತ ಕೂತರು. ವಾಸುದೇವ ಚಾ ಕುಡಿದ. ಪುರಂದರನ ಬಗ್ಗೆ ಹೇಳಿದ. ಹೆಸರು ಕೇಳಿದ್ದೇ ದೇವರಾಯ ‘ಓಹೋ ಪುರಂದರದಾಸರು’ ಅಂದ. ಶಾಲೆಯಲ್ಲಿ ಹೀಗೆ ಕಿಚಾಯಿಸಿಕೊಂಡು ರೋಸಿಹೋಗಿದ್ದ ಪುರಂದರನಿಗೆ ಇಲ್ಲೂ ಅದನ್ನು ಕೇಳಿ ರಗಳೆಯಾಯಿತು. ‘ಮತ್ತೆ ಪಾನಕ ಬೇಕೇನೋ?’ ಎಂಬ ಕಾವೇರಿಯ ಉಪಚಾರದ ಮಾತು ಕೂಡ ರುಚಿಸಲಿಲ್ಲ. +ಆಮೇಲೆ ನಡುಮನೆಗೆ ಹೋಗಿ ವಾಸುದೇವ ಮತ್ತು ದೇವರಾಯ ಮಾತಾಡಿದರು. ಕಾವೇರಿಯೂ ಅಲ್ಲಿ ಇದ್ದಳು. ನಡುಮನೆಯಿಂದ ತುಂಡು ತುಂಡು ಮಾತುಗಳು ಕೇಳಿಬಂದವು. +‘ಹುಡುಗನ ಸಲುವಾಗಿ ಮಾಡುತ್ತಿದ್ದೇನೆ. ಅವನು ಓದಿ ಮುಂದೆ ಬಂದರೆ ಸಾಕು. ಗಂಡ ಹೋದ ಮೇಲೆ ಸಾವಿತ್ರಿ ಸಾಕಷ್ಟು ಅನುಭವಿಸಿಯಾಗಿದೆ. ಈಗ ಒಂದು ವರ್ಷದ ಮಟ್ಟಿಗೆ ಇಲ್ಲಿ ಇದ್ದರೆ ಸಾಕು. ಮೆಟ್ರಿಕ್ ಪಾಸಾದ ಮೇಲೆ ಮುಂದಿನ ವರ್ಷ ಬೇರೆ ಕಡೆ ಹೋಗುವುದು ಇದ್ದೇ ಇದೆ…’ +‘ಬೇಕಾದರೆ ಈಗಲೇ ಬಂದು ಇದ್ದು ಬಿಡಲಿ. ನಮಗೇನೂ ಹೊರೆಯಲ್ಲ’ +‘ಸ್ವಲ್ಪ ದಿನ ಬಿಟ್ಟು ಕರಕೊಂಡು ಬರುತ್ತೇನೆ. ಈ ಸಲ ಎಂಆರ್‌ಎಸ್ ಮಾಸ್ತರರ ಸ್ಪೆಶಲ್ ಕ್ಲಾಸುಗಳು ರಜೆ ಮುಗಿಯುವ ಹತ್ತು ದಿನ ಮೊದಲೇ ಶುರುವಾಗುತ್ತವಂತೆ…’ +uಟಿಜeಜಿiಟಿeಜ +– ೪ – +ಈ ಮನೆಗೆ ಬಂದ ಮೇಲೆ, ಬೆಳಕು ಹರಿಯುವ ಮುಂಚೆಯೇ ಎದ್ದು ಓದಲು ಕೂರುತ್ತಿದ್ದ ಪುರಂದರನಿಗೆ ದಿನವೊಂದು ಹುಟ್ಟುವಾಗಿನ ಎಲ್ಲ ಸದ್ದುಗಳು ಪರಿಚಿತವಾಗಿದ್ದವು. ಆ ನೀರವದಲ್ಲಿ ಎಂದಾದರೊಮ್ಮೆ ಧಪ್ ಎಂದು ಬೀಳುತ್ತಿದ್ದ ಮಾವಿನ ಕಾಯಿಗಳಂತೂ ಅವನ ಗಮನವನ್ನು ವಿಶೇಷವಾಗಿ ಸೆಳೆಯುತ್ತಿದ್ದವು. ಕಾಯಿಯೊಂದು ಎಲೆಗಳ ಎಡೆಯಿಂದ ಹಾದು ಅವುಗಳನ್ನು ಸವರಿಕೊಂಡು ಬರುವಾಗಿನ ಸೂಕ್ಷ್ಮ ಸದ್ದು ಅವನನ್ನು ತಲುಪಿ, ಅದು ಧೊಪ್ಪೆಂದು ಬೀಳುವವರೆಗೂ ಅವನು ನಿರೀಕ್ಷೆಯಲ್ಲಿ ಕಾಯುವುದು – ಒಂದು ದೀರ್ಘ ಕ್ರಿಯೆಯ ಹಾಗೆ ತೋರಿದರೂ, ಇದೆಲ್ಲವೂ ಆ ಕಾಯಿ ತೊಟ್ಟಿನಿಂದ ಕಳಚಿ ನೆಲ ತಾಗುವವರೆಗಿನ ಕ್ಷಣಮಾತ್ರದ ಅವಧಿಯಲ್ಲಿ ಜರುಗಿಹೋಗುತ್ತಿತ್ತು. ಅವನಿಗೆ ಮಾವೆಂದರೆ ಬಲು ಇಷ್ಟ. ಅದರಲ್ಲೂ ಈಗ ಬೀಳುವ ಕಾಯಿಗಳಲ್ಲಿ, ತುಸು ತಡೆದು ಬಲಿತ, ಅಪರೂಪದ ಇಷಾಡಗಳಿರುವುದು ಗೊತ್ತಿದ್ದರಿಂದ ಬೆಳಕು ಹರಿಯುತ್ತಲೇ ಎದ್ದು ಅವುಗಳನ್ನು ಆರಿಸತೊಡಗಿದ. ತಾನು ಆರಿಸಿದ ಕಾಯಿಗಳನ್ನು ನಡುಮನೆಯ ತನ್ನ ಮಂಚದ ಕೆಳಗೆ ಹುಲ್ಲು ಹಾಸಿ ಇಡತೊಡಗಿದ. +ಇನ್ನೂ ರಜೆಯ ಮನಸ್ಥಿತಿಯಲ್ಲೇ ಇದ್ದವನಿಗೆ, ಬೆಳಗಿನ ಹೊತ್ತು ಓದಿನ ನಡುವೆ, ಬಿಡುವು ಪಡೆಯಲು ಮಾವಿನಕಾಯಿ ಆರಿಸುವ ಕೆಲಸ ಒದಗಿ ಬಂತು. ಅದಕ್ಕೂ ಮೊದಲು ದೇವರಾಯನಾಗಲೀ, ಕಾವೇರಿಯಾಗಲೀ ಹಿತ್ತಿಲಿಗೆ ಹೋದಾಗ ಕಣ್ಣಿಗೆ ಕಂಡರೆ ಮಾತ್ರ ಬಿದ್ದ ಕಾಯಿಗಳನ್ನು ಹೆಕ್ಕಿ ತರುತ್ತಿದ್ದರೇ ಹೊರತು ತಾವಾಗಿ ಹೋಗಿ ಹುಡುಕುತ್ತಿರಲಿಲ್ಲ. ಹಾಗಾಗಿ ಬೀಳುವ ಬಹುತೇಕ ಕಾಯಿಗಳನ್ನು ಪಕ್ಕದ ಮನೆಯ ಯಮುನೆಯೇ ಎತ್ತಿಟ್ಟುಕೊಳ್ಳುತ್ತಿದ್ದಳು. +ಪುರಂದರ ಬೆಳಗಿನ ಹಿತ್ತಲಿನ ಭೇಟಿ ಮುಗಿಸಿ, ಕೈಯಲ್ಲಿ ಆರಿಸಿದ ಕಾಯಿಗಳನ್ನು ಹಿಡಿದು ಬರುವಾಗ ದೇವರಾಯ ಎದುರಾದರೆ ‘ಬಿದ್ದ ಕಾಯಿ ಆರಿಸ್ತೀಯಲ್ಲ, ನಿನಗೆ ಬೇರೆ ಕೆಲಸವಿಲ್ಲ… ಬಿದ್ದ ಕಾಯಿ ಕೊಳೆಯೂದೇ… ಕೆಲಸವಿಲ್ಲದ ಬಡಿಗ…’ ಅನ್ನುತ್ತಿದ್ದ. ‘ನೋಡುವಾ ನೋಡುವಾ… ಲೆಕ್ಕ ಇಡುತ್ತೇನೆ… ನೂರಕ್ಕೆ ಐದು ರೂಪಾಯಿ…’ ಎಂದು ಪುರಂದರ ಉತ್ತರಿಸುತ್ತಿದ್ದ. +ಪಂಢರಿಯ ಮನೆಗೆ ಹುಡುಗಿಯೊಬ್ಬಳು ಬಂದಿರುವುದು ಮತ್ತು ಅವಳೂ ತನ್ನಂತೆಯೇ ಬೆಳಗಿನ ಜಾವ ಮಾವಿನಕಾಯಿ ಹೆಕ್ಕುವುದು ಪುರಂದರನಿಗೆ ತಿಳಿದದ್ದು ಒಂದು ದಿನ ಅವಳನ್ನು ಹಿತ್ತಿಲಲ್ಲಿ ನೋಡಿದಾಗಲೇ. ಅವನು ನಸುಕಿನಲ್ಲೆದ್ದು ತೋಟಕ್ಕೆ ಬಂದಾಗ ಆ ಹುಡುಗಿ ಎರಡೂ ಕೈಯಲ್ಲಿ ಕಾಯಿಗಳನ್ನು ಹಿಡಿದುಕೊಂಡು ಪಂಢರಿಯ ಮನೆಯೊಳಗೆ ಹೋಗುವುದು ಕಾಣಿಸಿತು. ಮನೆಯ ಹಿಂಬಾಗಿಲ ಮೆಟ್ಟಿಲು ಹತ್ತುತ್ತಿದ್ದ ಅವಳು ತಿಳಿ ನೀಲಿ ಬಣ್ಣದ ಚೌಕಳಿಯ ಲಂಗ ಮತ್ತು ಬಿಳಿಯ ರವಿಕೆ ಹಾಕಿಕೊಂಡಿದ್ದಳು. ಎರಡೂ ಜಡೆಗಳು ಬೆನ್ನ ಮೇಲೆ ಬಿದ್ದಿದ್ದವು. ಹೀಗೆ ಕ್ಷಣಮಾತ್ರ ಕಣ್ಣಿಗೆ ಬಿದ್ದು ಪಕ್ಕದ ಮನೆಯೊಳಗೆ ಕಣ್ಮರೆಯಾದವಳು ತನ್ನ ಮೋಟು ಜಡೆಗಳಿಗೆ ಬಣ್ಣದ ರಿಬ್ಬನ್ನು ಕಟ್ಟಿಕೊಂಡಿದ್ದಳೇ ಅಥವಾ ಅದು ತನ್ನ ಭಾಸವೇ ಎಂಬ ಅನುಮಾನ ಪುರಂದರನಿಗೆ ಈ ದೃಶ್ಯವನ್ನು ನೆನೆಸಿದಾಗೆಲ್ಲ ಉಂಟಾಗುತ್ತಿತ್ತು. +ಆ ದಿನವೇ ಅವಳ ವಿವರಗಳು ತಿಳಿದವು: ಹೆಸರು ಮೋಹಿನಿ. ಪಂಢರಿಗೆ ದೂರದ ಸಂಬಂಧವಾಗಬೇಕು. ರಜೆಯ ಕೊನೆಯ ಕೆಲವು ದಿನಗಳನ್ನು ಕಳೆಯಲು ಇಲ್ಲಿ ಬಂದಿದ್ದಾಳೆ. ಪುರಂದರನ ವಯಸ್ಸಿನವಳೇ. ಅಷ್ಟೇ ಅಲ್ಲ, ಅವನ ಹಾಗೆಯೇ ಬರುವ ವರ್ಷ ಮೆಟ್ರಿಕ್ ಪರೀಕ್ಷೆಗೆ ಕೂರುತ್ತಿದ್ದಾಳೆ. +ಮರುದಿನ ಎಂದಿಗಿಂತ ಮೊದಲೇ ಪುರಂದರನಿಗೆ ಎಚ್ಚರವಾಗಿ, ಪೂರ್ತಿ ಬೆಳಕು ಹರಿಯುವ ಮುಂಚೆಯೇ ಕಾಯಿ ಆರಿಸಿಕೊಂಡು ಹಿಂದಿರುಗಿದ. ಪಕ್ಕದ ಹಿತ್ತಿಲಿನಲ್ಲಿ ಅವಳು ಕಂಡಾಳು ಎಂದು ಒಳಬರಲು ತುಸು ತಡಮಾಡಿದ. ಅವಳ ಸುಳಿವಿರಲಿಲ್ಲ. ಮುಂಜಾವಿನ ತಂಪು ಹವೆ, ದೂರದ ಕೇರಿಯಿಂದ ಕೇಳಿಸಿದ ಕೋಳಿಯ ಕೂಗು, ಆಗಷ್ಟೇ ಶುರುವಾದ ಕಾಗೆಗಳ ಕಲರವ, ಕೈಯಲ್ಲಿದ್ದ ಎರಡು ಕಾಯಿಗಳಿಂದ ಅಂಗೈಗೆ ಅಂಟಿದ ಸೊನೆಯ ತೇವ – ಇಷ್ಟರ ಜೊತೆಗೆ ಮೋಹಿನಿಯೂ ಕಣ್ಣಿಗೆ ಬಿದ್ದಿದ್ದರೆ ಅವನಿಗೆ ಮುಂಜಾವು ಇನ್ನಷ್ಟು ಗೆಲುವನ್ನುಂಟು ಮಾಡುತ್ತಿತ್ತು. ಆವತ್ತು ತಡವಾಗಿ ಬಂದ ಮೋಹಿನಿಗೆ ತನಗಿಂತ ಮೊದಲೇ ಪುರಂದರ ಬಂದು ಹೋಗಿರುವುದು ಗೊತ್ತಾಯಿತು. +ಅವಳ ಸ್ವಭಾವದಲ್ಲಿಯೇ ಇದ್ದ ಸ್ಪರ್ಧೆಯ ಹುರುಪನ್ನು ಹುರಿದುಂಬಿಸಲಿಕ್ಕೆ ಇಷ್ಟು ಸಾಕಾಯಿತು. ಅವಳು ಮರುಮುಂಜಾನೆ ಅವನಿಗಿಂತ ಮೊದಲೇ ಎದ್ದು ಕಾಯಿ ಹೆಕ್ಕಿ ಮುಗಿಸಿದಳು. ಈ ಸೂಕ್ಷ್ಮ ಗೊತ್ತಾದ ನಂತರ ಪುರಂದರನೂ ಸ್ಪರ್ಧೆಯಲ್ಲಿ ಹಿಂದೆ ಬೀಳಲಿಲ್ಲ. ದೇವರಾಯನ ಬೆಳ್ಳಿಯ ಬಣ್ಣದ ಜರ್ಮನ್ ಅಲಾರಂ ಗಡಿಯಾರವನ್ನು ಇಸಕೊಂಡು ಇನ್ನೂ ಕತ್ತಲಿದ್ದಾಗಲೇ ಏಳತೊಡಗಿದ. ಬೇಗನೇ ಏಳುವ ಈ ಆತಂಕದಿಂದಾಗಿ ಕೆಲವೊಮ್ಮೆ ರಾತ್ರಿ ಅಪವೇಳೆಯಲ್ಲಿ ಎಚ್ಚರಾಗತೊಡಗಿತು. ಗಡಿಯಾರದ ಹೊಳೆಯುವ ಮುಳ್ಳುಗಳಿಂದ ವೇಳೆ ತಿಳಿದು ಮತ್ತೆ ಮಲಗಿದರೆ ಏಳುವುದು ಅಲಾರಂ ಬಡಿದಾಗಲೇ. +ಅದೆಷ್ಟೋ ಬಾರಿ ಪುರಂದರನೂ ಮೋಹಿನಿಯೂ ಪರಸ್ಪರ ನೋಡಿದ್ದರೂ ಮಾತಾಡಿರಲಿಲ್ಲ. ಅವರವರ ಹಿತ್ತಿಲ ಭಾಗದಲ್ಲಿ ಹುಡುಕಾಡಿ ಬಿದ್ದ ಕಾಯಿ ಹೆಕ್ಕಿ ಹೋಗುತ್ತಿದ್ದರು ಅಷ್ಟೆ. ಕಾಯಿ ಹೆಕ್ಕಲು ಶುರುಮಾಡಿದ ತರುವಾಯ ಬಿದ್ದ ಕಾಯಿಯ ಮೇಲೆ ಯಾರ ಸ್ವಾಮ್ಯ ಎಂದು ತಿಳಿಯುವ ಅವಶ್ಯಕತೆಯಿಂದಾಗಿ ಎರಡೂ ಹಿತ್ತಿಲ ನಡುವಿನ ಸರಹದ್ದಿಗೆ ಪ್ರಾಮುಖ್ಯತೆ ಬಂತು. ಮುಂದುಗಡೆ ಎರಡೂ ಮನೆಗಳ ನಡುವೆ ಪಾಗಾರ ಇದ್ದರೂ ಹಿಂದಿನ ಭಾಗದಲ್ಲಿ ಮಾತ್ರ ಬೇಲಿ ಕೂಡ ಇರಲಿಲ್ಲ. ಮುಂದುಗಡೆ ಇದ್ದ ಪಾಗಾರದ ನೇರಕ್ಕೆ ಹಿಂದಿನ ಹಿತ್ತಿಲೂ ಭಾಗವಾಗಿದೆಯೆಂದು ಭಾವಿಸಲಾಗಿತ್ತು. ಅವರವರು ಹಿತ್ತಿಲು ಇಟ್ಟುಕೊಂಡ ರೀತಿಯಲ್ಲೇ ಅವರ ಪಾಲಿನ ತೋಟ ಯಾವುದೆಂಬುದು ತಿಳಿಯುತ್ತಿತ್ತೇ ಹೊರತು ಎರಡೂ ಹಿತ್ತಿಲುಗಳನ್ನು ಬೇರೆ ಮಾಡಲು ನಡುವೆ ಮತ್ತೇನೂ ಇರಲಿಲ್ಲ. ಈಗ ಬಿದ್ದ ಹಣ್ಣನ್ನು ಎತ್ತಿಕೊಳ್ಳುವ ಹುರುಪಿನಿಂದಾಗಿ ನಡುವಿನ ಗಡಿಯನ್ನು ಇಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಭಾವಿಸಿಕೊಂಡರು. +ಮೊದಮೊದಲು ಬರೀ ನಸುಕಿಗೆ ಮಾತ್ರ ಸೀಮಿತವಾಗಿದ್ದ ಸ್ಪರ್ಧೆ ನಂತರ ಹಗಲಿಗೂ ಹಬ್ಬಿತು. ಹಿತ್ತಿಲಲ್ಲಿ ಆಗುವ ಸಣ್ಣಸಣ್ಣ ಸದ್ದಿಗೂ ಕಿವಿಗೊಡತೊಡಗಿದರು. ಯಾವ ಹೊತ್ತೇ ಆಗಲಿ, ಒಂದು ಕಾಯಿ ಬಿದ್ದ ಸದ್ದಾದರೆ ಸಾಕು, ಬಿಟ್ಟ ಬಾಣದ ಹಾಗೆ ಮೋಹಿನಿ ಧಾವಿಸುವಳು. ಆ ಹೊತ್ತಿಗೆ ಮನೆಯಲ್ಲಿದ್ದರೆ ಪುರಂದರನೂ ಪ್ರತ್ಯಕ್ಷನಾಗುವನು. ಇಬ್ಬರೂ ಪೈಪೋಟಿಯಲ್ಲಿ ಹುಡುಕಾಡುವರು. ಎಷ್ಟೋ ಬಾರಿ ಸಂಜೆಗತ್ತಲಲ್ಲಿ ಸಹ ಮೋಹಿನಿ ಕಾಯಿ ಹೆಕ್ಕಲು ಧಾವಿಸಿದ್ದಿದೆ. ಎಲ್ಲಿ ಏನು ಸದ್ದಾದರೂ ಅವಳ ಕಿವಿ ಚುರುಕಾಗುವುದು. ಹಗಲು ರಾತ್ರಿ ಇಬ್ಬರಿಗೂ ಅದೇ ಧ್ಯಾಸವಾಯಿತು. ರಾತ್ರಿಯ ನೀರವದಲ್ಲಿ ಸಣ್ಣ ಸಣ್ಣ ಚಲನೆಗಳೂ ಕೂಡ ದೊಡ್ಡ ಶಬ್ದಕ್ಕೆ ಕಾರಣವಾಗುತ್ತಿದ್ದವು. ಭೊಸೊಲ್ಲನೇ ಬೀಳುವ ತೆಂಗಿನ ಮಡಲು, ಹಕ್ಕಿ ಕುಕ್ಕಿ ದುರ್ಬಲವಾದ ಯಾವುದೋ ಕಾಯಿ, ಒಣಗಿದ ಜಿಗ್ಗು, ರೆಂಬೆಯ ಮೇಲೆ ಕೂತಲ್ಲೇ ಮಿಸುಕಾಡುವ ಹಕ್ಕಿಯ ರೆಕ್ಕೆಯ ಧಡಪಡ ಹೀಗೆ ತೋಟದ ಸಾಮಾನ್ಯ ಸದ್ದುಗಳಿಂದ ಮಾವಿನಕಾಯಿ ಬಿದ್ದ ಸದ್ದನ್ನು ಪ್ರತ್ಯೇಕಿಸುವ ತರಬೇತಿ ಇಬ್ಬರ ಕಿವಿಗಳಿಗೆ ನಿಧಾನವಾಗಿ ಒದಗತೊಡಗಿತ್ತು. ಕಾಯಿ ಬಿದ್ದ ಸದ್ದಾದದ್ದೇ, ಅದು ಯಾವ ಮರದ್ದು ಎಲ್ಲಿ ಬಿದ್ದಿದೆ ಎಂದು ತಿಳಿಯುವ ತನಕ ಪುರಸತ್ತಿಲ್ಲ. ಇಬ್ಬರೂ ಏನೂ ಮಾತಾಡದೇ, ಬಿದ್ದ ಹಣ್ಣಿಗಾಗಿ ಮೊದಲು ನಡುವಿನ ಸರಹದ್ದಿನಲ್ಲಿ, ನಂತರ ತಮ್ಮ ತಮ್ಮ ಹಿತ್ತಿಲಲ್ಲಿ ಹುಡುಕುತ್ತಿದ್ದರು. ಇನ್ನೊಬ್ಬರಿಗೆ ಕಾಯಿ ಸಿಕ್ಕಿತೋ ಎಂದು ಕಡೆಗಣ್ಣಿನಲ್ಲಿ ಗಮನಿಸುತ್ತಿದ್ದರು. +ಹೀಗೆ ಈ ಸ್ಪರ್ಧೆಯನ್ನು, ಒಬ್ಬರ ಮೇಲೊಬ್ಬರು ಪೈಪೋಟಿ ನಡೆಸುವ ಆಟವನ್ನು ದಿನೇ ದಿನೇ ಮುನ್ನಡೆಸುವುದು ಕೇವಲ ಮಾವಿನಕಾಯಿಗಳಲ್ಲ ಎಂಬುದು ಪುರಂದರನಿಗೂ ಗೊತ್ತಾಗಲಿಲ್ಲ. ಓದಿನ ಏಕಾಗ್ರತೆಗೆ ಭಂಗ ಬಂದಿದ್ದೂ ಗೊತ್ತಾಗಲಿಲ್ಲ. ಸ್ವಂತ ಭಾವನೆಗಳು ಸ್ಪಷ್ಟವಾಗಿರದ ಮಧುರ ಕಾಲವೊಂದನ್ನು ಅವನು ಹಾದು ಹೋಗುತ್ತಲಿದ್ದ. +uಟಿಜeಜಿiಟಿeಜ +– ೫ – +ಹೀಗಿರುವ ದಿನಗಳಲ್ಲಿ ಒಂದು ಮಧ್ಯಾಹ್ನ ಕಾವೇರಿ ಸೊಪ್ಪಿನ ತಂಬಳಿಯನ್ನು ಪುರಂದರನ ಮೂಲಕ ಪಂಢರಿಯ ಮನೆಗೆ ಕಳಿಸಿಕೊಟ್ಟಳು. ತಂಬಳಿಯನ್ನು ಒಂದು ಗಿಂಡಿಯಲ್ಲಿ ಹಿಡಿದುಕೊಂಡು ಪುರಂದರ ಎಂದಿನಂತೆ ಹಿತ್ತಿಲು ಹಾದು ಹಿಂಬಾಗಿಲಿನಿಂದ ಹೋದ. ಪಂಢರಿಯ ಮನೆಯ ಹಿಂದಿನ ಚಿಕ್ಕ ಜಗುಲಿಗೆ ನೆರಳು ಬೀಳುವಂತೆ ಸೋಗೆಯ ಚಪ್ಪರವಿತ್ತು. ಎರಡು ಮೆಟ್ಟಿಲು ಹತ್ತಿದರೆ ಜಗುಲಿ. ಅಲ್ಲಿಯೇ ಪಕ್ಕದಲ್ಲಿ ಒರಳು ಕಲ್ಲು ಹೂತಿದ್ದರು. ಮತ್ತೆ ಎರಡು ಮೆಟ್ಟಿಲು ಹತ್ತಿ ಹೋದರೆ ಅಡಿಗೆ ಮನೆ. +ಪುರಂದರ ಮನೆಯ ಹಿಂದಿನ ಜಗುಲಿಯಲ್ಲಿ ಕಾಣಿಸಿಕೊಂಡಾಗ, ಅಡಿಗೆ ಮನೆಯಲ್ಲಿದ್ದ ಪಂಢರಿ ಗಮನಿಸಿದಳು. +‘ಬಾರೋ, ಬಾ ಒಳಗೆ’ +ಅವನು ಕ್ಷಣಕಾಲ ಅಲ್ಲೇ ನಿಂತಿದ್ದರಿಂದ ಒಳಬರಲು ಅನುಮಾನಿಸಿದನೆಂದು ಭಾವಿಸಿ ಮತ್ತೆ ಕರೆದಳು. ‘ಒಳಗೆ ಬರಲಿಕ್ಕೆ ನಾಚಬೇಡವೋ… ಇಲ್ಲಿ ನಿನಗೆ ಕೊಡಲಿಕ್ಕೆ ಹುಡುಗಿ ಇಟ್ಟುಕೊಂಡಿದ್ದೀನೇನೋ…. ಬಾ ಒಳಗೆ ಬಾ…’ ಬೇರೆ ಹೊತ್ತಿನಲ್ಲಾದರೆ ಪುರಂದರನಿಗೆ ಸಹಜವಾಗಿ ಕಾಣುತ್ತಿದ್ದ ಈ ಮಾತು ಈಗ ಒಳಗೆ ಮೋಹಿನಿ ಇರುವುದರಿಂದ ವಿಶೇಷ ಅರ್ಥಗಳನ್ನು ಕೊಟ್ಟಿತು. +ಇನ್ನೂ ತಡಮಾಡಿದರೆ ಪಂಢರಿಯ ಬಾಯಿಯಿಂದ ಬೇರೆ ಏನು ಬಂದೀತೋ ಎಂದು ಹೆದರಿ ಲಗುಬಗನೆ ಒಳಗೆ ಹೋದ. ಮಣೆಯ ಮೇಲೆ, ಕಾಲು ಮಡಚಿ, ಮೋಹಿನಿ ಕೂತಿದ್ದಳು. ಅವಳೆದುರಿನ ತಟ್ಟೆಯಲ್ಲಿ ಮೊಳಕೆ ಬಂದ ಹಸಿರು ಕಾಳು. ಪಕ್ಕದಲ್ಲಿ ಯಮುನೆ. ಇಬ್ಬರೂ ತಲೆ ಬಗ್ಗಿಸಿ ಸಿಪ್ಪೆ ಸುಲಿಯುತ್ತಿದ್ದರು. ಬಗ್ಗಿ ನಿಂತ ಪಂಢರಿ ಒಲೆಯ ಮೇಲಿಟ್ಟ ಪಾತ್ರೆಯೊಂದರಲ್ಲಿ ಸೌಟು ಹಾಕಿ ತಿರುವುತ್ತಿದ್ದಳು. ಒಲೆಯಿಂದ ತೆಳ್ಳನೆಯ ಹೊಗೆ ಏಳುತ್ತಿತ್ತು. ಸೌಟನ್ನು ಪಾತ್ರೆಯಲ್ಲಿ ಬಿಟ್ಟು, ‘ಏನೋ ಅದು?’ ಎಂದು ಕೇಳುತ್ತ ಅವನಿಂದ ತಂಬಳಿಯ ಗಿಂಡಿಯನ್ನು ಇಸಕೊಂಡಳು. ಅವನು ಉತ್ತರ ಹೇಳುವುದರೊಳಗೆ ಅದರಲ್ಲಿದ್ದುದನ್ನು ನೋಡಿದಳು. +‘ಓಹೋ ತಂಬಳಿ.. ಕಾವೇರಕ್ಕನ ಹಾಗೆ ತಂಬಳಿ ಮಾಡುವವರೇ ಇಲ್ಲ…’ +‘ಆಯಿತು, ನಾನು ಬರ್‍ತೇನೆ’ +‘ಊಟ ಆಯ್ತೇನೋ?’ +‘ಇಲ್ಲ’ +‘ಅದಕ್ಕೇ ಅವಸರ’ ಎಂದು ಪಂಢರಿ ನಕ್ಕಳು. ಬಗ್ಗಿ ಕಾಳು ಸುಲಿಯುತ್ತಿದ್ದ ಮೋಹಿನಿ ಮುಖವೆತ್ತಿ ನೋಡಿದಳು. ಅವಳ ಮೋರೆಯ ಮೇಲೆಯೂ ನಗುವಿತ್ತು. ಅದನ್ನು ಗಮನಿಸಿದವಳಂತೆ ಪಂಢರಿ, ‘ಮೋಹಿನಿ, ಇವನೂ ನಿನ್ನ ಹಾಗೇ ಈ ವರ್ಷ ಮೆಟ್ರಿಕ್ ಪರೀಕ್ಷೆ ತಗೊಳ್ತಾನೆ… ಕಾವೇರಿ ಹೇಳ್ತಾ ಇದ್ದಳು, ದಿನಾ ಬೆಳಿಗ್ಗೆ ಎದ್ದು ಓದಲಿಕ್ಕೆ ಕೂರ್‍ತಾನಂತೆ. ನೀನೂ ಚಲೋ ಅಭ್ಯಾಸ ಮಾಡಿ ಒಳ್ಳೇ ನಂಬರು ತಗೋಬೇಕು…’ ಅಂದಳು. +ಬೇಸಿಗೆಯ ಬಿರುಬಿಸಿಲಿನಿಂದ ಒಳಬಂದಿದ್ದ ಅವನ ಕಣ್ಣುಗಳಿನ್ನೂ ಅಡಿಗೆ ಮನೆಯ ನಸು ಬೆಳಕಿಗೆ ಪೂರ್ತಿ ಹೊಂದಿಕೊಂಡಿರಲಿಲ್ಲ. ಹಿತ್ತಿಲಿನಲ್ಲಿ ದೂರದಿಂದ ಕಂಡದ್ದಕ್ಕಿಂತ ಈಗ, ಇಷ್ಟು ಹತ್ತಿರದಲ್ಲಿ ಮೋಹಿನಿ ಬೇರೆಯಾಗಿ ಕಂಡಳು. ಮುಂದಕ್ಕೆ ಬಗ್ಗಿ ಕೂತಿದ್ದರಿಂದ ಎರಡೂ ಜಡೆಗಳು ಹೆಗಲಿನಿಂದ ಮುಂದೆ ಇಳಿಬಿದ್ದಿದ್ದವು. ತುದಿಯಲ್ಲಿ, ಜಡೆಯ ಬಿಗಿ ಹೆಣೆತದಿಂದ ಸ್ವತಂತ್ರವಾದ ಗುಂಗುರು ಕೂದಲು ದಪ್ಪ ಗೊಂಡೆಯಾಗಿ ಅರಳಿತ್ತು. ಅವಳು ತನ್ನ ಹಾಗೇ ಈ ಸಲ ಮೆಟ್ರಿಕ್ ಪರೀಕ್ಷೆಗೆ ಕೂರುತ್ತಾಳೆಂಬ ಸಾಮ್ಯವೇ ಅವನಲ್ಲಿ ಪುಳಕವನ್ನುಂಟು ಮಾಡಿತು. ಒಂದು ಕ್ಷಣ ಅವನು ಕಣ್ಣಿಟ್ಟು ನೋಡಿದ್ದರಿಂದ ಮೋಹಿನಿಯೂ ನಾಚಿದಳು. ಅವಳ ದೊಡ್ಡ ಕಣ್ಣುಗಳು ತನ್ನನ್ನೇ ನಿರುಕಿಸಿದವೆಂಬ ಭಾಸದಲ್ಲಿ ಪುರಂದರ ಖುಷಿ ಮತ್ತು ಕಳವಳಗಳು ಸೇರಿದ ಭಾವನೆಯಲ್ಲಿ ಸಿಲುಕಿದ. +‘ಯಾವ ಊರಲ್ಲಿ ಶಾಲೆಗೆ ಹೋಗುವುದು?’ ಶಬ್ದಗಳು ಬಾಯಿಯಲ್ಲೇ ಸಿಕ್ಕಿ ಹಾಕಿಕೊಂಡಂತೆ, ಪುರಂದರ ತಡವರಿಸುತ್ತ ಪ್ರಶ್ನೆಯನ್ನು ಪೂರ್ತಿ ಮಾಡಿದ. +‘ಕುಮಟೆ.’ +‘ಓ… ಗಿಬ್ ಹೈಸ್ಕೂಲಿನಲ್ಲಿ…’ ಅವನಿಂದ ಪ್ರಶಂಸೆಯ ಉದ್ಗಾರ ಹೊರಟಿತು. +‘ಹೌದೇ ಮೋಹಿನಿ… ನಿಂದು ಶಾಲೆಯಲ್ಲಿ ಎಷ್ಟನೇ ನಂಬರು?’ ಎಂದು ಯಮುನೆ ಕೇಳಿದಳು. +ಇಲ್ಲಿಯವರೆಗೂ ಅವರ ಉಪದೇಶದಿಂದ ಅಭಿಮಾನಭಂಗವಾಗಿದ್ದ ಮೋಹಿನಿ ತಲೆಯೆತ್ತಿ ಸ್ಪಷ್ಟ ದನಿಯಲ್ಲಿ ಹೇಳಿದಳು. +‘ಒಂದು’ +ಈ ಉತ್ತರವನ್ನು ಅಪೇಕ್ಷಿಸದಿದ್ದ ಮೂವರಿಗೂ ಆಶ್ಚರ್ಯವಾಯಿತು. ಪುರಂದರನಿಗೆ, ಯಾಕೆಂದು ಅರ್ಥವಾಗದ ಕಾರಣಕ್ಕೆ ಖುಷಿಯೂ, ಅದೇನೋ ಬಗೆಯ ಹೆಮ್ಮೆಯೂ ಆಯಿತು. ಮತ್ತೆ ಅವಳನ್ನು ದಿಟ್ಟಿಸಿ ನೋಡಿದ. ಅವಳ ಕಣ್ಣುಗಳು ಈ ಸಲ ನೆಲ ನೋಡಲಿಲ್ಲ. ಇಬ್ಬರೂ ಹೀಗೆ ಪರಸ್ಪರ ದೃಷ್ಟಿ ನೆಟ್ಟು ಹಟದಿಂದ ಸೋಲೊಪ್ಪದೇ ನಿಂತರು. ನಂತರ ಒಮ್ಮೆಲೇ ಅವಳು ದೃಷ್ಟಿ ಹೊರಳಿಸಿದಳು. ಕಣ್ಣಿನ ಆ ಚಂಚಲ ಚಲನೆಯಲ್ಲಿ ಸೋಲಿಗಿಂತ ಹೆಚ್ಚಾಗಿ ಹೆಣ್ಣಿನ ನಾಚಿಕೆ ಕಂಡಂತಾಗಿ ಪುರಂದರ ಅಧೀರನಾದ. +‘ಬರ್‍ತೇನೆ’ ಮೊದಲ ಸಲ ಹೇಳಿದಾಗ ಗಂಟಲಲ್ಲಿಯೇ ಹೂತುಹೋದ ದನಿ ಅವನಿಗೇ ಕೇಳಿಸಲಿಲ್ಲವಾದ್ದರಿಂದ ಎರಡನೇ ಸಲ ಹೇಳಿ ಹೊರಟ. ಹೆಜ್ಜೆಗೆ ಉಲ್ಲಾಸ ಬಂದಿತ್ತು. +ಮನೆ ತಲುಪುವಷ್ಟರಲ್ಲಿ ಅವಳ ಬಗ್ಗೆ ಅಕ್ಕರೆ ಉಕ್ಕಿ ಬಂತು. ಅದೇ ಗುಂಗಿನಲ್ಲಿರುವಾಗ ಊಟ ಮಾಡಿದ್ದೂ ಗೊತ್ತಾಗಲಿಲ್ಲ. ‘ಏನು?… ರಾಯರ ಚಿತ್ತ ಈವತ್ತು ಎಲ್ಲಿದೆ?’ ಎಂದು ದೇವರಾಯ ತಮಾಷೆ ಮಾಡುವಷ್ಟು ಅವನ ಅನ್ಯಮನಸ್ಕತೆ ಎದ್ದು ತೋರುವಂತಿತ್ತು. +ಅದೇ ಮಧ್ಯಾಹ್ನ, ಹಗಲುಗನಸಿನಲ್ಲಿದ್ದವನಂತೆ ಪುರಂದರ ಚಾಪೆಯ ಮೇಲೆ ಬಿದ್ದುಕೊಂಡಿದ್ದ. ಅವನ ಚಿತ್ತಭಿತ್ತಿಯಲ್ಲಿ ಹಾದು ಹೋಗುತ್ತಿದ್ದ ಊಹಾಚಿತ್ರಗಳ ನಡುವೆಯೂ ಹಿತ್ತಲಲ್ಲಿ ಕಾಯಿ ಬಿದ್ದ ಸದ್ದು ಕೇಳಿಸಿತು. ಅದು ಮಾವಿನಕಾಯಿ ಬಿದ್ದ ಸದ್ದೇ ಅನ್ನುವುದು ಖಾತ್ರಿಯಾಗಿ, ಮೋಹಿನಿಯೂ ಆ ಸದ್ದು ಕೇಳಿ ಖಂಡಿತ ಬರುತ್ತಾಳೆಂದು ಹೊಳೆದು, ಎದ್ದು ಹಿತ್ತಲಿಗೆ ಓಡಿದ. ಅಲ್ಲಿ ಅವಳು ನೆಲಕ್ಕೆ ಕಣ್ಣು ಕೀಲಿಸಿ ನಡೆದಾಡುತ್ತಿದ್ದಳು. ಆಗ ಎರಡೂ ಹಿತ್ತಿಲ ನಡುವಿನ ಜಾಗದಲ್ಲಿದ್ದ ಒಂದು ಕಾಯಿ ಇಬ್ಬರ ಕಣ್ಣಿಗೂ ಒಟ್ಟಿಗೇ ಬಿತ್ತು. ಅವಳಿಗಿಂತ ಒಂದು ಗಳಿಗೆ ಮುಂಚೆ ತಲುಪಿದ ಪುರಂದರ ಆ ಕಾಯಿಯನ್ನು ಎತ್ತಿಕೊಂಡುಬಿಟ್ಟ. +‘ಅದು ಈ ಕಡೆಯಲ್ಲವೇ ಬಿದ್ದಿದ್ದು?’ ಮೋಹಿನಿ ಹಟ ಬಿಡದೇ ಕೇಳಿದಳು. +ಸ್ವಲ್ಪ ಹೊತ್ತಿಗೆ ಮುಂಚೆ ಅವಳ ಬಗ್ಗೆ ಉಕ್ಕಿದ ನಿರ್ವ್ಯಾಜ್ಯ ಮಮತೆಯಿಂದ ಹುಟ್ಟಿದ ಆತ್ಮವಿಶ್ವಾಸದಿಂದ ಪುರಂದರನಿಗೆ ಈಗ ಸಲಿಗೆಯಿಂದ ವರ್ತಿಸಬೇಕೆಂದು ಅನಿಸಿತು. ಎರಡು ಹೆಜ್ಜೆ ಮುಂದೆ ಹೋಗಿ, ಅವಳ ಹತ್ತಿರ ಸರಿದು ‘ಇಲ್ಲ… ಇದು ನೋಡು ಈ ಹಿತ್ತಿಲು ಇರುವುದು ಇಲ್ಲಿಯವರೆಗೆ’ ಅಂದ. ಆ ಮಾತಿನಲ್ಲಿ ಸ್ವಲ್ಪ ಖುಷಾಲು, ಅವಳನ್ನು ಸ್ವಲ್ಪ ರೇಗಿಸಬೇಕೆಂಬ ಭಾವ ಇತ್ತು. ಅವಳು ಮಾತ್ರ ಹಾಗೆ ಭಾವಿಸಲಿಲ್ಲವೆಂಬುದು ಮುಂದಿನ ಮಾತುಗಳಿಂದ ಸ್ಪಷ್ಟವಾಯಿತು. +ನೆಲವನ್ನೇ ನೋಡುತ್ತಿದ್ದ ಮೋಹಿನಿ, ಅವನ ಮೋರೆಯ ಮೇಲಿನ ಮುಗುಳ್ನಗುವನ್ನು ನೋಡಲೇ ಇಲ್ಲ. ಕದನಕ್ಕೆ ಸಿದ್ಧಳಾದಂತೆ ಮಾತಾಡಿದಳು. +‘ಈ ಗಡಿಯೇ ಸರಿ ಇಲ್ಲ. ಇಲ್ಲೊಂದು ಬೇಲಿಯೂ ಇಲ್ಲ. ಈ ಜಾಗದಲ್ಲಿ ಎಲ್ಲಿ ಬಿದ್ದರೂ ಯಾರದೆಂದು ಸರಿಯಾಗಿ ಗೊತ್ತಾಗುವುದಿಲ್ಲ.’ +ತನ್ನ ಮಾತಿನ ಹಗುರತೆಯಲ್ಲಿದ್ದ ಆಹ್ವಾನವನ್ನು ಸ್ವೀಕರಿಸುವ ಬದಲು ಅದನ್ನು ರಣಕಹಳೆಯಂತೆ ಕೇಳಿಸಿಕೊಂಡಳೆಂಬುದು ಗೊತ್ತಾಗಿ ಗಲಿಬಿಲಿಗೊಂಡ. ಅವಳಿಗೆ ಅಷ್ಟು ಹತ್ತಿರ ನಿಂತಿದ್ದರಿಂದ ಅವನ ಉಸಿರೇ ಹಿಡಿದಂತಾಗಿಬಿಟ್ಟಿತ್ತು. +‘ಇದನ್ನು ನೀನೇ ತಗೋ’ ಎಂದು ಹೇಳಬೇಕೆಂದು, ಪುರಂದರ ಕೈಮುಂದೆ ಮಾಡಿ ಕಾಯಿಯನ್ನು ಕೊಡಬೇಕೆಂದು ಮನಸ್ಸನ್ನು ತಯಾರಿ ಮಾಡುವ ಮುನ್ನವೇ ‘ಇದರ ಬಗ್ಗೆ ಪಂಢರಿಮಾಯಿಯನ್ನು ಕೇಳುತ್ತೇನೆ’ ಎಂದು ಸಟ್ಟನೇ ತಿರುಗಿ ಮನೆಯತ್ತ ಹೊರಟುಬಿಟ್ಟಳು. +ಅವಳನ್ನು ಕರೆಯಬೇಕೆಂದು, ಕರೆದು ಅವಳಿಗೆ ಕಾಯಿ ಕೊಡಬೇಕೆಂದು ಅಂದುಕೊಂಡರೂ ಅವನ ಬಾಯಿಯಿಂದ ‘ಮೋಹಿನಿ’ ಎಂಬ ಶಬ್ದ, ಅವಳನ್ನು ಕರೆಯುವಷ್ಟು ಜೋರಾಗಿ, ಅವಳಿಗೆ ಕೇಳಿಸಿ ಅವಳು ತಿರುಗಿ ನೋಡುವಷ್ಟು ಗಟ್ಟಿಯಾಗಿ, ಹೊರಡಲೇ ಇಲ್ಲ. ಅವನು ಮನಸ್ಸಿನಲ್ಲೇ ಪಿಸುಗುಟ್ಟಿದ್ದು ಅವನಿಗೇ ಕೇಳಿಸಲಿಲ್ಲ. ಅವಳು ಒಮ್ಮೆಯೂ ತಿರುಗಿ ನೋಡದೇ, ದುಡದುಡನೇ ಮನೆಯ ಹಿಂದಿನ ಮೆಟ್ಟಲು ಹತ್ತಿ ಒಳಗೆ ಹೋದುದು ನಿಂತಲ್ಲಿಂದ ಕಾಣಿಸಿತು. ಯಾಕೆ ತನ್ನ ಬಾಯಿ ಕಟ್ಟಿಬಿಟ್ಟಿತು, ತಾನು ಕರೆದೇ ಬಿಟ್ಟಿದ್ದರೆ, ಅವಳಿಗೆ ಹಣ್ಣು ಕೊಟ್ಟುಬಿಟ್ಟಿದ್ದರೆ ಮುಂದೆ ನಡೆದ ಏನೇನೋ ನಡೆಯುತ್ತಲೇ ಇರಲಿಲ್ಲವಲ್ಲ ಎಂದು ಮುಂದೆ ನೂರು ಸಲ ಅನ್ನಿಸಿದ್ದಿದೆ. ಎಂತೆಂಥ ಸೂಕ್ಷ್ಮಗಳ ಮೇಲೆ ದೊಡ್ಡ ದೊಡ್ಡ ಘಟನೆಗಳೆಲ್ಲ ನಿಂತಿದ್ದಾವೆ: ತನ್ನ ಬಾಯಿಯಿಂದ ಹೊರಡದೇ ಇದ್ದ ‘ಮೋಹಿನೀ’ ಅನ್ನುವ ಒಂದು ಶಬ್ದದ ಮೇಲೆ! +uಟಿಜeಜಿiಟಿeಜಗೆದ್ದರೂ ಹತಾಶನಾದ ಅರಸನ ಹಾಗೆ ಕೈಯಲ್ಲಿ ಕಾಯಿ ಹಿಡಿದ ಪುರಂದರ ಮನೆಗೆ ಬಂದು, ತಾನು ಮಲಗುವ ಮಂಚದ ಅಡಿಗೆ ಹಾಸಿಟ್ಟ ಹುಲ್ಲುಹಾಸಿನ ಮೂಲೆಯಲ್ಲಿ ಅದನ್ನು ಜೋಪಾನವಾಗಿ ಇಟ್ಟ. ಅವಳಿಗೆ ಸೇರಿದ ವಸ್ತುವೊಂದು ತನ್ನ ಹತ್ತಿರ ಇದ್ದು, ಅದನ್ನು ಜತನದಿಂದ ಕಾಪಾಡಿ ಅವಳಿಗೆ ಹಿಂತಿರುಗಿಸಬೇಕೆಂಬ ಭಾವನೆಯೊಂದು ಅವನಲ್ಲಿ ಹುಟ್ಟಿ ಮರೆಯಾಯಿತು. ಅವಳಿಗೆ ತಾನು ಯಾವ ರೀತಿಯಲ್ಲೂ ನೋವುಂಟುಮಾಡಬಾರದೆಂಬ ನಿರ್ಧಾರದಿಂದ ಹೆಚ್ಚಿನ ಜವಾಬ್ದಾರಿ ಬಂದಂತಾಯಿತು. ಮಂಚದ ಮೇಲೆ ಎರಡು ಕ್ಷಣ ಸುಮ್ಮನೇ ಕೂತ. +ಎದ್ದು, ಮಾವಿನಕಾಯಿಯನ್ನು ಎತ್ತಿಕೊಂಡು ಕಿಟಕಿಯ ಹತ್ತಿರ ಹೋಗಿ ಬೆಳಕಿನಲ್ಲಿ ನೋಡಿದ. ಅದರ ತೊಟ್ಟು ಕಳಚಿದ ಜಾಗದಲ್ಲಿ ಸೊನೆ ಒಸರಿ ಕಂದು ಬಣ್ಣಕ್ಕೆ ತಿರುಗತೊಡಗಿತ್ತು. ಸೊನೆಯ ತೇವಕ್ಕೆ ಅಂಟಿಕೊಂಡ ಮಣ್ಣಿನ ಕಣಗಳು ಬೆಳಕಿಗೆ ಪುಟ್ಟ ಮಣಿಗಳಂತೆ ಹೊಳೆಯುತ್ತಿದ್ದವು. ಮಂಚದ ಕೆಳಗಿನಿಂದ ಗೋಣಿಯ ತುಂಡೊಂದನ್ನು ಎಳೆದು, ಅದರ ತುದಿಯಿಂದ ಕೈಲಿದ್ದ ಕಾಯಿಯನ್ನು ಒರೆಸಿದ. ಒರೆಸಿದಂತೆಲ್ಲ ಸೊನೆ ಉಳಿದ ಭಾಗಕ್ಕೂ ತಾಕುತ್ತ ಅಂಟಂಟಾಯಿತು. ಮತ್ತೆ ಮತ್ತೆ ಹಟದಿಂದೆಂಬಂತೆ ಉಜ್ಜಿ ಉಜ್ಜಿ ಒರೆಸಿ ಕಾಯಿಯನ್ನು ಸ್ವಚ್ಛಮಾಡಿದ. ಅಂಗೈಯಲ್ಲಿ ಹಿಡಿದು ಸವರಿದ. ಮೂಸಿದ. ಸೊನೆಯ ಘಾಟು ವಾಸನೆ ಎಂದೂ ಇಲ್ಲದಷ್ಟು ಹಿತವಾಗಿತ್ತು. ಇನ್ನೂ ಹಸಿರಾಗಿದ್ದ ಕಾಯಿ ಹಣ್ಣಾಗಲು ಕನಿಷ್ಟ ಐದಾರು ದಿನಗಳಾದರೂ ಬೇಕೆಂದು ತೋರಿತು. ಇದನ್ನು ಅವಳಿಗೆ ತಲುಪಿಸುವುದು ಹೇಗೆಂಬ ಬಗ್ಗೆ ಅವನ ಕಲ್ಪನೆ ನಾನಾ ದಿಕ್ಕಿನಲ್ಲಿ ಹರಿಯತೊಡಗಿತು. +ಅವಳು ಮತ್ತೆ ಹಿತ್ತಲಿಗೆ ಬಂದಾಗ ಅವಳಿಗೆ ಕೊಟ್ಟರೆ ಹೇಗೆ? ಯಾಕೆ ಕೊಡುತ್ತಿದ್ದೀಯಾ ಅಂದರೆ ಏನು ಹೇಳುವುದು? ಅಥವಾ ಅವಳ ಮನೆಗೇ ಹೋಗಿ ಕೊಟ್ಟರೆ? ಆಗ ಅಲ್ಲಿ ಪಂಢರಿಮಾಯಿಯೋ ಯಮುನೆಯೋ ಇದ್ದರೆ? ನಿಮ್ಮ ಕಾಯಿ ನಮ್ಮ ಜಾಗದಲ್ಲಿ ಬಿದ್ದಿತ್ತು ಅಂದರೆ ಹೇಗೆ? ಎಂದೂ ಕಾಯಿ ಕೊಡಲು ಬರದವನು ಈವತ್ತು ಯಾಕೆ ಬಂದ ಅಂದರೆ? ಅವಳಿಗೇ ನೇರವಾಗಿ ಕೊಡುವುದೇ ಒಳ್ಳೆಯದು. ಕೊಡುವಾಗ ‘ಇದು ನಡುವಿನ ಜಾಗದಲ್ಲಿ ಬಿದ್ದಿತ್ತು ಎಂದು ನಾನೇ ತಪ್ಪು ತಿಳಕೊಂಡಿದ್ದೆ, ನಿಜವಾಗಿ ನೋಡಿದರೆ ಇದು ನಿನಗೇ ಸೇರಬೇಕಾದ ಕಾಯಿ’ ಎಂದು ಹೇಳಿಬಿಡುವುದು. +ಆದರೆ ಮನಸ್ಸಿನಲ್ಲಿ ಅಂದುಕೊಂಡಾಗ ಸರಳವಾಗಿ ತರ್ಕಬದ್ಧವಾಗಿ ಕಾಣುತ್ತಿದ್ದ ಸಂಗತಿಗಳು ಮತ್ತು ಮಾತುಗಳು ನಿಜದಲ್ಲಿ ಆಡಬೇಕೆಂಬ ನಿರ್ಧಾರ ಕೈಗೊಂಡ ಒಡನೆಯೇ ಬಹು ಕಠಿಣವಾಗಿ, ಅಸಹಜವಾಗಿ ತೋರುತ್ತಿದ್ದವು. ಅಂದುಕೊಂಡ ರೀತಿಯಲ್ಲಿ ಈ ಎಲ್ಲ ಮಾತುಗಳನ್ನು ತಾನು ಆಡುವುದು ಶಕ್ಯವೇ ಇಲ್ಲ ಅನ್ನುವುದು ಅವನಿಗೂ ಗೊತ್ತಿತ್ತು. ಮನಸ್ಸಿನಲ್ಲಿಯೇ ಈ ಸಂದರ್ಭಗಳನ್ನೆಲ್ಲ ಪುನಃ ಪುನಃ ಕಲ್ಪಿಸಿಕೊಂಡರೂ ಅವಳ ರೂಪ ಸರಿಯಾಗಿ ಹೇಗಿತ್ತು ಅನ್ನುವುದು ಕಣ್ಣ ಮುಂದೆ ಬರುತ್ತಿರಲಿಲ್ಲ. ‘ಮೋಹಿನಿ’ ಎಂದು ಅವಳನ್ನು ಕರೆಯುವುದೇ ಅಥವಾ ಹೆಸರು ಹಿಡಿದು ಕರೆಯುವ ಅವಶ್ಯಕತೆಯೇ ಇಲ್ಲದ ಹಾಗೆ ಅವಳ ಎದುರು ಹೋಗಿ ಸೀದಾ ಮಾತು ಶುರುಮಾಡಿಬಿಡುವುದೇ ಎಂಬುದು ಬಹಳ ಕಾಲ ಬಗೆಹರಿಯದ ಪ್ರಶ್ನೆಯಾಯಿತು. ‘ಮೋಹಿನಿ’ ‘ಮೋಹಿನಿ’ ಎಂದು ಪದೇ ಪದೇ ಮನಸ್ಸಿನಲ್ಲೇ ಹೇಳಿಕೊಂಡಾಗ ಅದು ಮೋಹಕವಾಗಿ ತೋರತೊಡಗಿತು. +ಕಿಟಕಿಯ ಬಳಿ ಹೋಗಿ ಹಿಂಬದಿಯ ಹಿತ್ತಲಿನತ್ತ ನೋಡಿದ. ಬೇಸಿಗೆಯ ಬಿಸಿಲು. ಗಾಳಿಯಿಲ್ಲದ ತಟಸ್ಥ ತೋಟ. ಮರಗಳ ಎಡೆಯಿಂದ ಬಿದ್ದ ಬಿಸಿಲಿನಿಂದಾಗಿ ಉಂಟಾದ ನೆರಳಿನ ಚಿತ್ತಾರ. ಪಕ್ಕದ ಹಿತ್ತಿಲಿನಲ್ಲಿಯೂ ಯಾರೂ ಇರಲಿಲ್ಲ. ಎಲ್ಲವೂ ಸ್ತಬ್ಧವಾಗಿತ್ತು. ಏನೂ ಮಾತಾಡದೇ, ಏನೂ ಹೇಳದೇ ಈ ಹಣ್ಣನ್ನು ಅವಳ ಕಣ್ಣಿಗೆ ಬೀಳುವ ಹಾಗೆ ಇಟ್ಟರೆ ಹೇಗೆಂದು ಯೋಚಿಸಿದ. ಆದರೆ ಇದು ಬಿದ್ದ ಹಣ್ಣಲ್ಲ, ನಾನೇ ಇಟ್ಟಿದ್ದು ಎಂದು ಅವಳಿಗೆ ಗೊತ್ತಾಗುವುದು ಹೇಗೆ? ಪುರಂದರನಿಗೆ ಒಂದು ಉಪಾಯ ಹೊಳೆಯಿತು. ಮಾವಿನಕಾಯಿಯ ಮೇಲೆ ತನ್ನ ಉಗುರಿನಿಂದ ಇಂಗ್ಲಿಷಿನ ಎಂ ಅಕ್ಷರವನ್ನು ಮೂಡಿಸಿದ. ಕಾಯಿಯ ಎಳೆಯ ಮೈಮೇಲೆ ಉಗುರು ಊರಿದಲ್ಲಿ ತುಸು ತೇವವಾಯಿತು. ಸ್ವಲ್ಪ ಹೊತ್ತಿಗೆ ಅದು ಕಪ್ಪಾಗಿ ಎದ್ದು ಕಾಣುತ್ತದೆಂಬುದು ಅವನಿಗೆ ಗೊತ್ತು. +ದೇವರಾಯ ಮತ್ತು ಕಾವೇರಿ ಒಳಗಿನ ಕೋಣೆಯಲ್ಲಿದ್ದಾರೆಂಬುದನ್ನು ಖಾತರಿಪಡಿಸಿಕೊಂಡು, ಕೈಯಲ್ಲಿ ಆ ಕಾಯಿಯನ್ನು ಹಿಡಿದು ಮೆಲ್ಲನೆ ಹಿತ್ತಿಲಿಗೆ ಹೋದ. ಏನನ್ನೋ ಹುಡುಕುವವನಂತೆ ಬಗ್ಗಿ, ಮೊದಲು ಎತ್ತಿಕೊಂಡ ಜಾಗದಲ್ಲಿಯೇ ಕಾಯಿಯನ್ನು ಇಟ್ಟು, ಕೈಯಿಂದ ದೂಡಿ ಪಂಢರಿಯ ಹಿತ್ತಿಲ ಕಡೆಗೆ ಅದನ್ನು ಉರುಳಿಸಿದ. ಅದು ಉರುಳಿ ಎಂ ಅಕ್ಷರ ಮೇಲ್ಗಡೆ ಕಾಣುವ ಹಾಗೆ ತಿರುಗಿ ನಿಂತಿದ್ದು ಶುಭಚಿಹ್ನೆಯಂತೆ ತೋರಿತು. ಅದನ್ನೊಮ್ಮೆ ಸಮಾಧಾನದಿಂದ ನೋಡಿ, ಅನುಮಾನ ಬರದ ಹಾಗೆ ಸಹಜ ನಡಿಗೆಯಲ್ಲಿ ನಡೆದು, ಬರುವಾಗ ಒಂದು ಕರಮಲಕಾಯಿಯನ್ನು ಕಿತ್ತು, ಕಚ್ಚಿ, ಹುಳಿ ಸಹಿಸಲು ಮುಖ ಕಿವಿಚಿಕೊಳ್ಳುತ್ತ ಮನೆ ಸೇರಿದ. +ಮನೆಗೆ ಹಿಂತಿರುಗಿ ಈ ಬಗ್ಗೆ ಯೋಚಿಸತೊಡಗಿದಂತೆ, ಅವಳು ಮೃದುವಾಗಿ ವರ್ತಿಸಿದ ಒಂದೂ ಘಟನೆ ಮನಸ್ಸಿಗೆ ಬರಲಿಲ್ಲ. ಒಮ್ಮೆಯೂ ಅವನ ಬಗ್ಗೆ ಆಸಕ್ತಿ ಇರುವಂಥ ಯಾವ ಚಿಹ್ನೆಯನ್ನೂ ಅವಳು ತೋರಿಸಿರಲಿಲ್ಲ. ಅವಳ ಲಕ್ಷ್ಯವೆಲ್ಲ ಮಾವಿನ ಕಾಯಿಯನ್ನು ಹೆಕ್ಕುವುದರತ್ತಲೇ. ಕಾಯಿ ಕಂಡದ್ದೇ ಗಬಕ್ಕನೇ ಎತ್ತಿಕೊಂಡು ಹೋಗುವುದರತ್ತ ಗಮನವೇ ಹೊರತು, ಪುರಂದರನತ್ತ ಅಕಸ್ಮಾತ್ ನೋಡಿದರೂ ಅದು ತಾನು ಗೆದ್ದೆನೆಂಬುದನ್ನು ತೋರಿಸಲು ಮಾತ್ರವೇ ಹೊರತು ಅದರಲ್ಲಿ ಒಂದಿಷ್ಟೂ ಮೃದುತ್ವ ಇರುತ್ತಿರಲಿಲ್ಲ. ಹೀಗೆ ಯೋಚನೆ ಹರಿದಂತೆಲ್ಲ ಪುರಂದರನಿಗೆ, ಮಾವಿನಕಾಯಿಯನ್ನು ಅಲ್ಲಿ ಇಟ್ಟು ತಪ್ಪು ಕೆಲಸ ಮಾಡಿದೆನೆಂಬ ಅಳುಕು ಹುಟ್ಟತೊಡಗಿತು. ವಾರದ ಹಿಂದಿನ ಘಟನೆಯೊಂದು ವಿವರಗಳಲ್ಲಿ ನೆನಪಾಯಿತು. +ಆ ದಿವಸ ಇನ್ನೂ ಬೆಳಕು ಹರಿಯುವ ಮುನ್ನವೇ ಅವಳು ಕತ್ತಲಲ್ಲಿ ತಡಕಾಡುವುದನ್ನು ಕಂಡು ಅಕ್ಕರೆಯಾಗಿ, ಎಲ್ಲ ಅವಳೇ ಹೆಕ್ಕಲಿ ಎಂದು ಮರೆಯಲ್ಲಿ ಕಾದಿದ್ದ. ಅವಳ ನಂತರ ಹಿತ್ತಲಿಗೆ ಹೋಗುವುದೆಂದರೆ ಅವನಿಗೆ ಖುಷಿ. ಸ್ವತಃ ನೋಡದೇ ಇದ್ದಾಗಲೂ, ಅವಳು ಬಂದು ಹೋಗಿರುವುದು ಅದು ಹೇಗೋ ಜೀವಕ್ಕೆ ಗೊತ್ತಾಗುತ್ತಿತ್ತು. ಬೆಳಗಿನ ಆ ಗಾಳಿಯಲ್ಲಿ, ಅವಳ ಭೇಟಿಯ ಸುಳಿವಿರುತ್ತಿತ್ತು. ಹಿತ್ತಿಲ ತುದಿಗೆ ನಿಂತು ಕಣ್ಣು ಹಾಯಿಸಿದರೆ ಸಾಕು, ಎಲ್ಲೆಲ್ಲಿ ಅವಳ ಹೆಜ್ಜೆಯಿಂದ ಹುಲ್ಲಿನ ಮೇಲಿನ ಮುಂಜಾವು ಕಲಕಿದೆಯೆಂಬುದು ತಿಳಿಯುವುದು. ಈ ಸೂಕ್ಷ್ಮ ತನಗೆ ಮಾತ್ರ ಎಟಕುವುದೆಂಬ ಅರಿವಿನಿಂದ, ಅವಳ ಜೊತೆ ಏನೋ ಸಂಬಂಧ ಏರ್ಪಟ್ಟ ಭಾಸವಾಗುತ್ತಿತ್ತು. ಮರೆಯಿಂದ ನೋಡುತ್ತ ನಿಂತಾಗ, ಅವಳ ಕಾಲಿಗೆ ಮುಳ್ಳೊಂದು ಚುಚ್ಚಿದ್ದು, ಅವಳು ಒಂದೇ ಕಾಲಲ್ಲಿ ನಿಂತು, ಜೋಲಿ ತಪ್ಪದೇ ಇನ್ನೊಂದು ಕಾಲನ್ನು ಎತ್ತಿ, ಅಂಗಾಲನ್ನು ತೆರೆದು ಹಿಡಿದು, ಮುಳ್ಳನ್ನು ಕಿತ್ತು ಪಕ್ಕಕ್ಕೆ ಬೀಸಾಕಿದ್ದು ಕಾಣಿಸಿತು. ಅವಳ ಕೈಯಲ್ಲಿ ಎರಡು ಕಾಯಿಗಳಿದ್ದವು. ಒಳಗೆ ಹೋಗುವ ಮುನ್ನ ಮತ್ತೊಮ್ಮೆ ಹಿತ್ತಿಲ ನೆಲದತ್ತ ದೃಷ್ಟಿ ಹರಿಸಿದಳು. ಅವಳು ತನಗಾಗಿ ಕಾಯಬಹುದು ಅಥವಾ ಈ ಕಡೆ ಒಮ್ಮೆಯಾದರೂ ನೋಡಬಹುದೆಂದು ಪುರಂದರ ಭಾವಿಸಿದ್ದು ತಪ್ಪಾಯಿತು. ಕಾಯುವಿಕೆಯಲ್ಲಿರುವ ನಿರೀಕ್ಷೆ, ಹಿಂಜರಿತ, ಅನಿಶ್ಚಯದ ಚಲನೆ, ನಡಿಗೆಯನ್ನು ನಿಧಾನಿಸಿ ವಿಲಂಬಿಸುವ ಸಾವಧಾನ – ಯಾವುದೂ ಅವಳಲ್ಲಿ ಕಾಣಿಸಲಿಲ್ಲ. +ಕಾಯಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಇತ್ತ ಕಡೆ ಒಮ್ಮೆಯೂ ನೋಡದೇ, ದಡದಡ ಹೆಜ್ಜೆಗಳನ್ನಿಡುತ್ತ ಸೀದಾ ಮನೆಗೆ ಹೋಗಿಬಿಟ್ಟಳು. +uಟಿಜeಜಿiಟಿeಜ +– ೬ – +ಈ ಹಿಂದಿನ ಹಿತ್ತಿಲಿನ ಗಡಿಯೇ ಎರಡೂ ಮನೆಗಳ ನಡುವಿನ ಮನಸ್ತಾಪಕ್ಕೆ ಕಾರಣವಾಗಲು ತಡವಾಗಲಿಲ್ಲ. ಈ ವ್ಯಾಜ್ಯಕ್ಕೆ ಮೂಲವಾದ ಘಟನೆಗೆ ತಾವು ಕಾರಣರೆಂಬ ಸಂಗತಿ ಮೋಹಿನಿ ಮತ್ತು ಪುರಂದರ ಇಬ್ಬರಿಗೂ ಗೊತ್ತಿತ್ತು. ನಡುವೆ ಬಿದ್ದ ಮಾವಿನಕಾಯಿ ಯಾರಿಗೆ ಸೇರಬೇಕೆಂಬ ಕಾರಣದಿಂದ ಎದ್ದ ಗಡಿಯ ಪ್ರಶ್ನೆಯನ್ನು ಮೋಹಿನಿ ಮೊದಲು ಯಮುನೆಗೂ, ನಂತರ ಪಂಢರಿಗೂ ದಾಟಿಸಿದ್ದಳು. ಇಬ್ಬರೂ ರಮಾಕಾಂತ ಮಾಸ್ತರನ ಸಲಹೆ ಕೇಳಿದರು. ಅವನು ಶಾಲೆಯಲ್ಲಿ ಯಮುನೆಯ ಗಂಡ ಶಂಕರನ ಸಹೋದ್ಯೋಗಿಯಾಗಿದ್ದ. ಪಂಢರಿಗೆ ಅವನ ಮೇಲೇನೋ ವಿಶ್ವಾಸವಿತ್ತು. ಅವನನ್ನು ನೋಡಿದರೆ ಶಂಕರನ ನೆನಪಾಗುತ್ತಿತ್ತು. ಶಂಕರನಂತೆಯೇ ಅವನೂ ತಲೆಗೂದಲಿಗೆ ಎಣ್ಣೆ ಹಚ್ಚಿ ಹಿಂದಕ್ಕೆಳೆದು ಪುಗ್ಗೆಯಾಕಾರದಲ್ಲಿ ಬಾಚಿಕೊಳ್ಳುತ್ತಿದ್ದ. +ರಮಾಕಾಂತ ಗಡಿಯನ್ನು ನಿರ್ಧರಿಸಲು ಬಾಂದಿನ ಕಲ್ಲು ಹುಡುಕಿದ. ಅದು ಸಿಕ್ಕಿದ್ದು ದೇವರಾಯನ ಹಿತ್ತಿಲಲ್ಲಿ, ಅರ್ಧ ಮಾರು ಒಳಗೆ. ಅದರಿಂದಾಗಿ ಎದ್ದ ಗೊಂದಲ ನಿವಾರಿಸಿ, ಸರಿಯಾದ ಗಡಿ ನಿರ್ಧರಿಸಲು ಗ್ರಾಮಠಾಣೆಯಿಂದ ಬಾಂದಿನವರನ್ನು ಕರೆಸಬೇಕಾಯಿತು. ಅವರು ಬಂದು ಅಳೆದು, ಅಂತೂ ಎಲ್ಲವೂ ಮುಗಿದು ಎರಡು ಹಿತ್ತಿಲ ನಡುವೆ ಬೇಲಿ ಬಂದಿತ್ತು. ಈ ಬೇಲಿ ಈವರೆಗೂ ಅವರು ಭಾವಿಸಿದ ಗಡಿಗಿಂತ ಅರ್ಧ ಮಾರು ಒಳಗೆ ಬಂದು ದೇವರಾಯನ ಹಿತ್ತಿಲ ಅಷ್ಟು ಭಾಗವನ್ನು ಕಡಿಮೆ ಮಾಡಿತು. ಆ ಹೆಚ್ಚಿನ ಭಾಗ ಪಂಢರಿಯ ವಶಕ್ಕೆ ಬಂದರೂ, ಇದನ್ನೆಲ್ಲ ದೇವರಾಯ ತನ್ನ ಹಿತ್ತಿಲು ನುಂಗಲು ಮಾಡಲು ನಡೆಸಿದ ಸಂಚೆಂಬಂತೆ ಅವಳು ವರ್ಣಿಸತೊಡಗಿದ್ದು ಕಿವಿಗೆ ಬಿದ್ದಿದ್ದರಿಂದ ಎರಡೂ ಮನೆಗಳ ನಡುವೆ ಮೊದಲಿನ ಸಂಬಂಧ ಉಳಿಯಲಿಲ್ಲ. ಮೇಲುನೋಟಕ್ಕೆ ಏನೂ ಆಗದ ಹಾಗೆ ತೋರಿಸಿಕೊಂಡರೂ ಒಳಗೊಳಗೇ ಅಸಹನೆ ಬೆಳೆಯತೊಡಗಿತು. ಬೇಲಿಯ ನಡುವೆ ದಣಪೆ ಇಟ್ಟಿದ್ದರೂ ಆಚಿಂದೀಚೆ ಓಡಾಡುವುದು ಕಡಿಮೆಯಾಯಿತು. +ಇಷ್ಟಕ್ಕೆಲ್ಲ ಕಾರಣಳಾದ ಮೋಹಿನಿ ರಜೆ ಮುಗಿದದ್ದೇ ಹೊರಟು ಹೋಗಿದ್ದಳು. +ಇದೆಲ್ಲ ನಡೆಯುವಾಗ, ಬಾಂದಿನವರು ಅಳೆಯಲು ಬರುವ ಹಿಂದಿನ ಸಂಜೆ ಕಿವಿಗೆ ಬಿದ್ದ ಸಂಭಾಷಣೆಯಿಂದ ಪುರಂದರ ಎಷ್ಟು ಕುಗ್ಗಿಹೋದನೆಂದರೆ ಮತ್ತೊಮ್ಮೆ ಅವನು ಮಾವಿನಕಾಯಿ ಹೆಕ್ಕಲು ಹೋಗಲಿಲ್ಲ. ಅಡಿಗೆ ಮನೆಯಲ್ಲಿ ದೇವರಾಯ ಮತ್ತು ಕಾವೇರಿ ಮಾತಾಡುತ್ತಿದ್ದುದು ಹೊರಗೆ ಓದುತ್ತ ಕೂತವನಿಗೆ ಕೇಳಿಸುತ್ತಿತ್ತು. +‘ಏನಂದ ಆ ಮಾಸ್ತರು? ಇಷ್ಟು ಹೊತ್ತು ನಿಮ್ಮ ಜೊತೆ ಮಾತಾಡುತ್ತಿದ್ದನಲ್ಲ?’ ಎಂದು ಕಾವೇರಿ ಕೇಳಿದಳು. +‘ಅದೇ ಹಳೆಯ ಕತೆ. ಹಿತ್ತಿಲಲ್ಲಿರುವ ಬಾಂದಿನ ಕಲ್ಲು ಎಲ್ಲಿ ಇರಬೇಕು ಅಂತ. ನಾಳೆ ಬಾಂದಿನವರು ಅಳೆಯಲು ಬರುತ್ತಾರಂತೆ.’ +‘ಆವತ್ತು ಮುಸ್ಸಂಜೆಯಲ್ಲಿ ಅವನು ಬಂದು ಅತ್ತೆ ಸೊಸೆಯ ಜೊತೆ ಹಿತ್ತಿಲಲ್ಲಿ ತಡಕಾಡುವಾಗಲೇ ನನಗೆ ಏನೋ ಅನುಮಾನ ಬಂದಿತ್ತು. ಯಾಕೆ ಬಂದಿದ್ದಾರೆ ಸ್ವಲ್ಪ ನೋಡೋ ಎಂದು ಪುರಂದರನಿಗೆ ಹೇಳಿದೆ. ಇವನು ಪೈರಾಣ ಹಾಕಿಕೊಂಡು ತಲೆಬಾಚಿಕೊಂಡು ಶೃಂಗಾರ ಮುಗಿಸಿ ಹೋಗಿ ನೋಡುವ ವೇಳೆಗೆ ಅವರೆಲ್ಲ ಹೊರಟು ಹೋಗಿದ್ದರು…’ +‘ಇಷ್ಟು ವರ್ಷ ಕಣ್ಣಿಗೆ ಬಿದ್ದರೂ ಆ ಕಲ್ಲು ಬಾಂದಿನ ಕಲ್ಲು ಇರಬಹುದೆಂದು ನಾವು ಯೋಚಿಸಲಿಲ್ಲ. ಅದು ಅಡ್ಡ ಬಿದ್ದು ಬಿಟ್ಟಿತ್ತು ನೋಡು…’ +‘ಹಿಂದೆ ಯಾವಾಗಲೋ ಯಾರೋ ಗೊತ್ತಾಗದೇ ಅದನ್ನು ಇತ್ತ ಕಡೆ ಎತ್ತಿ ಹಾಕಿರಬಹುದು.’ +‘ನಾನೂ ರಮಾಕಾಂತನಿಗೆ ಅದನ್ನೇ ಹೇಳಿದೆ. ಈಗ ಒಂದು ಸಲ ಮನಸ್ಸಿನಲ್ಲಿ ಸಂಶಯದ ಬೀಜ ಹೊಕ್ಕ ಮೇಲೆ ಅದನ್ನು ಸರಿಮಾಡುವುದು ಸಾಧ್ಯವಿಲ್ಲ. ಬಾಂದಿನವರು ಬಂದು ಅಳೆಯಲಿ ಅಂದೆ.’ +‘ಅವರು ಆ ಕಲ್ಲು ಸರಿಯಾದ ಜಾಗದಲ್ಲಿದೆ ಅಂದರೆ?’ +‘ಹಾಗಾದರೆ ಆ ಜಾಗ ಅವರಿಗೆ ಸೇರುತ್ತದೆ. ಇಷ್ಟು ದಿವಸ ನಾವು ತಪ್ಪು ತಿಳಕೊಂಡಿದ್ದೆವು ಅಷ್ಟೆ. ನೋಡು ಕಾವೇರಿ, ಈವತ್ತು ಇನ್ನೊಂದು ಅಂಥದೇ ಕಲ್ಲು ನಮ್ಮ ಪಾಯಖಾನೆಯ ಹತ್ತಿರ ನೋಡಿದೆ. ಅದೂ ಅರ್ಧ ಮಾರು ನಮ್ಮ ಹಿತ್ತಿಲ ಒಳಗೇ ಇತ್ತು. ಅದನ್ನು ನೋಡಿದ ಮೇಲೆ ಇಷ್ಟು ದಿವಸ ಈ ಗಡಿ ಸರಿಯಾಗಿರಲಿಲ್ಲ ಅಂತ ಅನಿಸಿತು. ಇರಲಿ… ಈಗ ಬಾಂದಿನವರು ಬರಲಿ. ಮುಂದಿನದು ಆಮೇಲೆ ನೋಡುವಾ…’ +‘ಇಷ್ಟು ದಿನ ಇಲ್ಲದ ಅನುಮಾನ ಈಗ ಯಾಕೆ ಇವರಿಗೆ ಬಂತು? ಆ ಮಾಸ್ತರನೇ ಏನಾದರೂ ಹಚ್ಚಿಕೊಟ್ಟಿದ್ದಾನೋ ಅಂತ…’ +‘ಅವನದೇನೂ ತಪ್ಪಿಲ್ಲ. ಯಾಕೆ ಇದು ಈಗ ಪಂಢರಿಯ ತಲೆಗೆ ಬಂತು ಅಂತ ನಾನೇ ಅವನನ್ನು ಕೇಳಿದೆ. ಇದಕ್ಕೆ ಕಾರಣ ಯಾರು ಗೊತ್ತೇನು? ಮಾವಿನ ಹಣ್ಣು ಹೆಕ್ಕಲು ಬರುತ್ತಿತ್ತಲ್ಲ ಆ ಹುಡುಗಿ. ಪುರಂದರನ ಜೊತೆ ಜಿದ್ದಿಗೆ ಬಿದ್ದು ಎರಡು ಹಿತ್ತಿಲ ನಡುವೆ ಬಿದ್ದ ಕಾಯಿ ಯಾರಿಗೆ ಸೇರಬೇಕೆಂದು ಪಂಢರಿಯ ಹತ್ತಿರ ಕೇಳಿದ್ದಾಳೆ. ಅಲ್ಲಿಂದ ಮುಂದೆ ಎಲ್ಲ ಚೌಕಶಿ ಶುರುವಾಗಿದೆ. ಈ ದಾಸಪ್ಪನಿಗೆ ಹೇಳಿದ್ದೆ – ಬೇಡವೋ ಬಿದ್ದ ಕಾಯಿ ಹೆಕ್ಕಬೇಡ, ಅದು ಕೊಳೆಯೂದೇ ಅಂತ. ಇಷ್ಟು ಸದ್ದಾದರೆ ಸಾಕು, ಜನ್ಮದಲ್ಲಿಯೇ ಮಾವಿನಕಾಯಿ ಕಂಡಿಲ್ಲದವನ ಹಾಗೆ ದುಡುದುಡು ಓಡುತ್ತಿದ್ದ. ಈಗ ನೋಡು ಒಂದು ಕಾಯಿಯ ಆಸೆಗೆ ಎಲ್ಲಿಯವರೆಗೆ ತಂದಿಟ್ಟ… ದರವೇಶಿ…’ +‘ಹಾಗಾದರೆ ಏನು ಮಾಡುವುದು ಈಗ?’ +‘ಹೆದರಬೇಡವೇ. ನನಗೇನೂ ಆ ಹಿತ್ತಿಲು ಅರ್ಧ ಮಾರು ಹೋದರೆ ಬೇಜಾರಿಲ್ಲ. ಅವರದು ಅವರಿಗೆ ಸೇರಲಿ… ಅದರ ಆಸೆ ನಾವು ಮಾಡಬಾರದು. ವಿಧವೆಯರ ತಟ್ಟೆಗೆ ಕೈಹಾಕುವ ಪ್ರಸಂಗ ನಮಗೆ ಬಂದಿಲ್ಲ…’ +ವಾಕ್ಯದ ಕೊನೆಗೆ ದೇವರಾಯ, ತುಸು ತಡೆದು ಹೇಳಿದ ದರವೇಶಿ ಎಂಬ ಶಬ್ದ ಪುರಂದರನೊಳಗೆ ನಿಂತುಬಿಟ್ಟಿತು. +uಟಿಜeಜಿiಟಿeಜ +– ೭ – +ಈ ಬಾಂದಿನ ಕಲ್ಲೇ ಈವತ್ತು ಕೂಡ ಪಂಢರಿ ಮತ್ತು ಯಮುನೆ, ದೇವರಾಯನಿಗೆ ಕಾದು ಕೂರಲು ಕಾರಣವಾಗಿತ್ತು. +ಈ ಬೆಳಿಗ್ಗೆ ಎದ್ದು ಯಮುನೆ ಎಂದಿನಂತೆ ಹಿತ್ತಿಲಿಗೆ ಬಂದು ನೋಡಿದಾಗ ಬಾಂದಿನ ಕಲ್ಲು ಇರಲಿಲ್ಲ. ಪ್ರತಿಷ್ಠಾಪನೆ ಮಾಡಿದ ದೇವರೋ ಎಂಬಂತೆ ಹಿತ್ತಿಲಿಗೆ ಕಾಲಿಟ್ಟಾಗಲೆಲ್ಲ ಅದನ್ನು ನೋಡುವುದು ಅತ್ತೆ ಸೊಸೆಯರಿಬ್ಬರಿಗೂ ಈ ವರ್ಷಗಳಲ್ಲಿ ಅಭ್ಯಾಸವಾಗಿ ಹೋಗಿತ್ತು. ಅದೊಂದು ವಿಜಯದ ಸಂಕೇತವೆಂಬಂತೆ, ತಮ್ಮ ಆಸ್ತಿಯನ್ನು ಕಾಯುವ ಭೂತರಾಯನ ಗುತ್ತದಂತೆ ಭಾಸವಾಗುತ್ತಿತ್ತು. ವರ್ಷಗಟ್ಟಲೇ ಗುಪ್ತವಾಗಿದ್ದು ಒಮ್ಮೆಲೇ ಪ್ರಕಟವಾದ ದೇವರಂತಿದ್ದ ಕಲ್ಲು ಇಂದು ಬೆಳಿಗ್ಗೆ ಕಣ್ಣಿಗೆ ಬೀಳದೇ ಇದ್ದುದು ಅಪಶಕುನದ ಹಾಗೆ ಯಮುನೆಗೆ ಕಂಡಿತು. ದಿಗಿಲಾಗಿ ಒಳಗೋಡಿ ಅತ್ತೆಗೆ ಹೇಳಿದಳು. ಮುಂದಿನ ಸಾರಾಸಾರ ವಿಚಾರ ಮಾಡುವ ಮೊದಲೇ, ಯಾವುದೇ ಸಾಕ್ಷ್ಯಾಧಾರವಿಲ್ಲದೇ ಅತ್ತೆ ಸೊಸೆಯರಿಬ್ಬರೂ ಅದು ದೇವರಾಯನ ಕೆಲಸವೆಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಅವನು ಪಾಯಖಾನೆಗೆ ಹೋಗಿ ಹಿಂದಿರುಗುವ ಹೊತ್ತಲ್ಲಿ ಅವನನ್ನು ಕೆಣಕಬೇಕು ಮತ್ತು ಪ್ರಸಂಗ ಬಂದರೆ ಅವನನ್ನು ಎದುರಿಸಬೇಕೆಂದು ನಿರ್ಧರಿಸಿ ಅವನಿಗಾಗಿ ಕಾಯುತ್ತ ಕೂತಿದ್ದರು. +ಈವತ್ತು ಯಾಕೋ ಸಮಯವೇ ಹೋಗುತ್ತಿಲ್ಲ ಎಂದು ಇಬ್ಬರಿಗೂ ಅನಿಸಿತು. ಅಥವಾ ತಾವು ಕೂತಿರುವುದನ್ನು ನೋಡಿ ಅವನು ತಡ ಮಾಡುತ್ತಿರುವನೇ ಎಂಬ ಸಂಶಯವೂ ಸುಳಿದು ಹೋಯಿತು. ಅಷ್ಟರಲ್ಲಿ ಬಾಗಿಲು ತೆರೆದು ದೇವರಾಯ ಹೊರಬಂದ. ವಯಸ್ಸಾದರೂ ಬೆನ್ನು ಬಾಗಿರಲಿಲ್ಲ. ಆರಡಿ ಎತ್ತರದ ಅವನು ಬಾಗಿಲು ದಾಟಿ ಹೊರಬರುವಾಗ ಬಗ್ಗಬೇಕಾಗುತ್ತಿತ್ತು. ಪೂರ್ತಿ ನರೆತ ಕೂದಲು. ಬಿಳಿಯ ಕುರುಚಲು ಗಡ್ಡ. ತೋಳಿನ ಮೇಲಿನ ಚರ್ಮ ಸುಕ್ಕುಗಟ್ಟಿತ್ತು. ದೇವರಾಯ ಬರುವುದು ಕಾಣಿಸಿದೊಡನೆ ಪಂಢರಿ ಮತ್ತು ಯಮುನೆ ಎರಡೂ ಹಿತ್ತಿಲ ನಡುವಿನ ಬೇಲಿಯ ಹತ್ತಿರ ಬಂದು, ದೊಡ್ಡ ದನಿಯಲ್ಲಿ ಅವನ ಕಿವಿಗೆ ಬೀಳುವಂತೆ ಪರಸ್ಪರ ಮಾತಾಡತೊಡಗಿದರು. +‘ನಾಚಿಕೆಯಿದ್ದರಲ್ಲವೇ?… ಸೆಗಣಿ ತಿಂದರೆ ಬಾಯಿಗೆ ವಾಸನೆ ಬರ್‍ತದೆ ಅಂತ ಗೊತ್ತಿಲ್ಲವೇನೆ ಇವರಿಗೆ…’ ಪಂಢರಿಯ ಗಂಟಲು ದೊಡ್ಡದಾಗಿತ್ತು. ಸಿಟ್ಟಿಗೆ ಅವಳ ಮೋರೆಯಿಂದ ಇನ್ನಷ್ಟು ಬೆವರು ಹರಿಯುತ್ತಿರುವ ಹಾಗೆ ತೋರುತ್ತಿತ್ತು. +ದೇವರಾಯನಿಗೆ ಈ ಮಾತು ಕೇಳಿಸಿದರೂ, ಅದು ತನಗೆ ಆಹ್ವಾನ ಎಂದು ಗೊತ್ತಾದರೂ ಕೊಳಚೆಯಲ್ಲಿ ಕಲ್ಲು ಎಸೆದರೆ ಸಿಡಿಯುವುದು ತನ್ನ ಮೇಲೆಯೇ ಎಂದುಕೊಂಡು ಈ ಜೋಡಿಯ ಎದುರು ಬಾಯಿಬಿಡಬಾರದೆಂದು ನಿರ್ಧರಿಸಿ ಮೌನವಾಗಿ ನಡೆದ. +‘ಹೇಳಿದಷ್ಟೂ ಜಾಸ್ತಿನೇ ಮಾಡ್ತಾರೆ… ನಾಯಿಬಾಲ ನಳಿಕೆಯಲ್ಲಿ ಹಾಕಿದಷ್ಟೇ ಹೊತ್ತು…’ ಅಂದಳು ಯಮುನೆ. +‘ನಮ್ಮ ಜಾಗ ನುಂಗಲು ನೋಡಿದರು. ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಮೇಲೂ ನಾಚಿಕೆ ಇಲ್ಲವಲ್ಲ. ಮತ್ತೆ ಇವರ ಕಾಟ ಶುರುವಾಯಿತಲ್ಲ. ಛೀ ಅಂದರೆ ಬಾ ಅಂದ ಹಾಗೆ ಇವರಿಗೆ ಕೇಳಿಸುತ್ತದೆಯಲ್ಲ…’ +ಆ ಮಾತಿಗೆ ದೇವರಾಯ ನಿಂತ. ಅವನು ಮುಂದೆ ನಡೆದಂತೆಲ್ಲ ಅವನ ಜೊತೆ ಜೊತೆಗೇ ತಮ್ಮ ಹಿತ್ತಿಲ ಭಾಗದಲ್ಲಿ ಅತ್ತೆ ಸೊಸೆಯರೂ ಕಾಲು ಹಾಕುತ್ತಿದ್ದರು. ಪಂಢರಿ ಯಮುನೆಯನ್ನು ಉದ್ದೇಶಿಸಿ ಮತ್ತೆ ಮಾತು ಮುಂದುವರಿಸಿದಳು: +‘ಬೊಂಬಾಯಿಯಲ್ಲಿ ಇದೇ ಕೆಲಸ ಮಾಡಿಕೊಂಡಿದ್ದರೋ ನೋಡ್ತೆ… ಇವರಿಗೆ ಚಲೋದಾಗುದಿಲ್ಲವೇ… ಎಷ್ಟಿದ್ದರೂ ಮನುಷ್ಯನಿಗೆ ಆಸೆ ನೋಡು… ಊರು ದೂರ ಕಾಡು ಹತ್ತಿರ ಆದ ವಯಸ್ಸಲ್ಲೂ ಇನ್ನೊಬ್ಬರ ಹೇಲು ಪುಕ್ಕಟೆ ಸಿಕ್ಕರೂ ಒಳಗೆ ಹಾಕಿಕೊಳ್ಳುವ ಬುದ್ಧಿ ಹೋಗಿಲ್ಲ ನೋಡು…’ +ಇನ್ನು ದೇವರಾಯನಿಗೆ ತಡೆದುಕೊಳ್ಳುವದಾಗಲಿಲ್ಲ. ನಿಂತ. ಅವಳತ್ತ ತಿರುಗಿ ‘ಏನೇ ತಾಟಕಿ’ ಎಂದುಬಿಟ್ಟ. +ಅತ್ತೆಸೊಸೆಯರಿಬ್ಬರೂ ಇದಕ್ಕಾಗಿಯೇ ಕಾದಿದ್ದವರೆಂಬಂತೆ ಒಮ್ಮೆಲೇ ಗಂವ್ವೆಂದು ಮುನ್ನುಗ್ಗಿ ಬಂದರು. ಯಾವ ಮಾತು ಯಾರು ಆಡಿದರೆಂಬುದು ಕೂಡ ಗೊತ್ತಾಗದ ಹಾಗೆ ಒಂದೇ ಸಮನೆ ಕೂಗಾಡತೊಡಗಿದ ಅವರ ದನಿ ದೇವರಾಯ ಸುಮ್ಮನೇ ಇದ್ದಷ್ಟೂ ಏರುತ್ತೇರುತ್ತ ಹೋಯಿತು. ಅವನಿಗೆ ಮಾತ್ರ ಇದರ ಕಾರಣ ಗೊತ್ತಾಗಲಿಕ್ಕೆ ಬಹಳ ಹೊತ್ತು ಹಿಡಿಯಿತು. +‘ಬೇರೆಯವರ ತುತ್ತು ಕಸಿದುಕೊಳ್ಳುವ ಬುದ್ಧಿ ಯಾಕೆ? ದೇವರು ಕೊಟ್ಟಿದ್ದನ್ನು ತಿಂದು ಬಿದ್ದಿರಬಾರದೇನು?’ +‘ಗೆರಟೆ ಹಿಡಿದವರ ಹಾಗೆ ಆಡಿದರೆ ಒಂದು ದಿನ ಅಂಥ ಪರಿಸ್ಥಿತಿಯೂ ಬರುತ್ತದೆ…’ +‘ಬೇರೆಯವರಿಗೆ ಹೇಳುವುದು ತತ್ವಜ್ಞಾನ… ತಾನು ತಿನ್ನುವುದು ಮಾತ್ರ ಎಮ್ಮೆ ಸೆಗಣಿ…’ +‘ತೆಗೆದೇಬಿಟ್ಟಿರಲ್ಲ… ಕಲ್ಲು ತೆಗೆದು ಹಾಕಿದ ಮಾತ್ರಕ್ಕೆ ಎಲ್ಲ ಸುಳ್ಳಾಗಿ ಹೋಗುತ್ತದೆ ಎಂದು ಮಾಡಿದ್ದೀರೇನು? ಎಲ್ಲಿ ಹೋಯಿತು ಬಾಂದಿನ ಕಲ್ಲು?…’ +ಮರ್ಮಭೇದಕವಾದ ಅವರ ಮಾತುಗಳಿಂದ ದೇವರಾಯನ ಸಹನೆ ಮೀರಿತು. ಅವರು ಬಾಂದಿನ ಕಲ್ಲು ಇದ್ದ ಜಾಗವನ್ನು ತೋರಿಸುತ್ತ ಕಿರಿಚಾಡುತ್ತಿದ್ದಾಗ ಅವನಿಗೆ ಈ ಎಲ್ಲದರ ಮೂಲ ಕಾರಣ ಏನೆಂಬುದು ಹೊಳೆದಿತ್ತು. ಅಲ್ಲಿ ಈಗ ಬರಿ ಸಣ್ಣದೊಂದು ಹೊಂಡ ಮಾತ್ರ ಇತ್ತು. ಸುತ್ತಲಿನ ಹಸಿರು ಹುಲ್ಲಿನ ನಡುವೆ ಹೊಂಡದ ಕೆಳಗಿನ ಹಸಿ ಮಣ್ಣು ಕಾಣುತ್ತಿತ್ತು. ಯಾರೋ ಅದನ್ನು ಹೊತ್ತು ಹಾಕಿದ್ದಾರೆಂಬುದು ಸ್ಪಷ್ಟವಿತ್ತು. ದೇವರಾಯನಿಗೂ ಆಶ್ಚರ್ಯವೇ ಆಯಿತು. ಅವನು ಅದನ್ನು ನೋಡುತ್ತ ನಿಂತುದನ್ನು ನೋಡಿ ಇಬ್ಬರೂ ಹೆಂಗಸರು ಮತ್ತೆ ತಮ್ಮ ಮಾತಿನ ಪ್ರಹಾರ ಮುಂದುವರಿಸತೊಡಗಿದರು. +ದೇವರಾಯನಿಗೆ ಇದನ್ನು ಮುಂದುವರಿಸುವ ಮನಸ್ಸಿರಲಿಲ್ಲ. ತಾನು ಕಲ್ಲು ತೆಗೆದಿಲ್ಲವೆಂದು ಅವರಿಗೆ ಹೇಳಲು ನೋಡಿದ. ಅವರು ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ‘ಕಲ್ಲು ಹೋದರೆ ಹೋಯಿತು… ಇನ್ನೊಂದು ತಂದು ಹಾಕುವ…’ ಅಂದ. +‘ರಾತ್ರಿ ಯಾವಾಗಲೋ ತೆಗೆದು ಹಾಕಿ ಈಗ ಇನ್ನೊಂದು ತಂದು ಹಾಕುವ ನಾಟಕ ಮಾಡುತ್ತಿದ್ದಾರಲ್ಲ… ಅಹಹಹಾ… ಹಾಕುತ್ತೇನೆ ಅಂದರೆ ಅರ್ಥ ಅದನ್ನು ತೆಗೆದದ್ದು ನೀವೇ ಎಂದು ಒಪ್ಪಿಕೊಂಡಂತೆ ಆಯಿತಲ್ಲ… ಅದಕ್ಕೇನು ರೆಕ್ಕೆ ಬಂದು ಹಾರಿ ಹೋಯಿತೇನು?…’ +ಕಿರಿಚಾಡುತ್ತಿದ್ದ ಗಯ್ಯಾಳಿಗಳನ್ನು ಕಡೆಗಣಿಸಿ ದೇವರಾಯ ನಡೆಯತೊಡಗಿದಾಗ ಅವರಿಗೆ ಇನ್ನಷ್ಟು ರೋಷ ಬಂತು. ‘ಎಲ್ಲಿದೆ ಬಾಂದಿನ ಕಲ್ಲು? ಎಲ್ಲಿದೆ? ಎಲ್ಲಿದೆ?….’ ಎಂದು ಕೂಗುತ್ತ ಹಿಂಬಾಲಿಸತೊಡಗಿದರು. +‘ಸುಮ್ಮನೇ ನನ್ನ ತಲೆ ತಿನ್ನಬೇಡಿ… ಹಾಳಾಗಿ ಹೋಗಿ…’ ಎಂದು ಅವನು ಮನೆಯತ್ತ ತಿರುಗುತ್ತಿದ್ದಂತೆ ಬೇಲಿಯ ನಡುವಿನ ಸಂದಿಯಿಂದ ಅತ್ತೆಸೊಸೆಯರಿಬ್ಬರೂ ಇತ್ತ ಕಡೆಯ ಹಿತ್ತಿಲಿಗೆ ಕಾಲಿಟ್ಟರು. +ಬೈಯುತ್ತ, ನಡುನಡುವೆ ಬಾಂದಿನ ಕಲ್ಲು ನೆನಪಾಗಿ ‘ಎಲ್ಲಿದೆ? ಎಲ್ಲಿದೆ?’ ಎಂದು ಕೂಗುತ್ತ ಅವನಿಗೆ ಅಡ್ಡ ಹಾದು ಅವನು ಮುಂದೆ ಹೋಗದ ಹಾಗೆ ಎದುರು ನಿಂತುಬಿಟ್ಟರು. +ಅವರ ಮಾತುಮಾತಿಗೂ ದೇವರಾಯನ ಸಿಟ್ಟು ಏರುತ್ತ ಏರುತ್ತ ಏರುತ್ತ ಹೋಗಿ ಕೈಯಲ್ಲಿದ್ದ ಚೆಂಬನ್ನು ಕೆಳಗೆ ಒಗೆದ. ಮಾತಾಡಲು ಪ್ರಯತ್ನಿಸಿದಾಗ ತುಟಿಗಳು ಥರಥರನೇ ನಡುಗಿದವು. ‘ಇಲ್ಲಿದೆ ಬಾಂದಿನ ಕಲ್ಲು…’ ಎಂದು ತನ್ನ ಪಂಚೆಯನ್ನು ಪೂರ್ತಿಯಾಗಿ ಮೇಲಕ್ಕೆ ಎತ್ತಿ ತೋರಿಸಿಯೇಬಿಟ್ಟ. +ತಾರಕದಲ್ಲಿ ನಡೆಯುತ್ತಿದ್ದ ಕೂಗಾಟಗಳು ಕ್ಷಣಾರ್ಧದಲ್ಲಿ ಗಪ್ಪೆಂದು ನಿಂತುಹೋದವು. +ಥಕ್ಕಾಗಿ ನಿಂತ ಅವರಿಬ್ಬರನ್ನೂ ಕಡೆಗಣಿಸಿ ಚೆಂಬನ್ನು ಎತ್ತಿಕೊಂಡು ದೇವರಾಯ ಮನೆಯತ್ತ ನಡೆದ. +ಬಚ್ಚಲಿನತ್ತ ಹೋಗುತ್ತಿದ್ದ ಹಾಗೆ ಎದುರಿಗೆ ಬಂದು ಮಾತಾಡದೇ ಸುಮ್ಮನೇ ನಿಂತ ಕಾವೇರಿಯನ್ನು ಗಮನಿಸಿ ‘ಥತ್ ಮಾನ ಮರ್ಯಾದೆ ಇಲ್ಲದ ಹೊಲಸು ಬಾಯಿ ಭೋಸಡಿಯರು…’ ಎಂದು ತನಗೆ ತಾನೇ ಎಂಬಂತೆ ಹೇಳಿದ. ಅದು ಯಾರನ್ನು ಕುರಿತು ಹೇಳಿದ ಮಾತೆಂಬುದು ಅವಳಿಗೆ ಗೊತ್ತಾಯಿತು. +‘ಏನಂತೆ?’ ಅಂದಳು ಕಾವೇರಿ. +‘ಎರಡೂ ಹಿತ್ತಿಲ ನಡುವಿನ ಬಾಂದಿನ ಕಲ್ಲನ್ನು ಯಾರೋ ಕಿತ್ತು ಹಾಕಿದ್ದಾರೆ. ಅದಕ್ಕೇ ಈ ಮಾರಿಜೋಡಿಯ ಹಾರಾಟ ಶುರುವಾಗಿದೆ…’ +‘ಆ ಮಾಸ್ತರನದೇ ಕಿತಾಪತಿ ಇರಬೇಕು ಎಲ್ಲ. ಹಚ್ಚಿಕೊಡುವದೊಂದೇ ಕೆಲಸ ಅವನಿಗೆ…’ +‘ಈ ಮೂರ್ಖ ಹೆಂಗಸರ ಕೈಯಲ್ಲಿ… ಥತ್…’ ದೇವರಾಯ ಸ್ನಾನ ಮಾಡಲು ಬಚ್ಚಲಿನತ್ತ ನಡೆದ. +‘ನಿನ್ನೆ ಸಂಜೆ ಕೆಸುವಿನ ಗಡ್ಡೆ ನೆಡಲಿಕ್ಕೆ ಪಾತಿ ಮಾಡೋ ಎಂದು ಆಯುಗೆ ಹೇಳಿದ್ದೆ. ಅವನೇನಾದರೂ ಗೊತ್ತಾಗದೇ ಕಲ್ಲು ಕಿತ್ತು ಹಾಕಿದನೋ ಏನೋ’ ಕಾವೇರಿ ಹೇಳಿದ್ದು ದೇವರಾಯನ ಕಿವಿಯ ಮೇಲೆ ಬೀಳುವ ಮೊದಲೇ ಅವನು ಬಚ್ಚಲ ಮನೆಯೊಳಗೆ ಹೋಗಿಬಿಟ್ಟಿದ್ದ. +ಬಚ್ಚಲಿನ ಬಾಗಿಲನ್ನು ಓರೆ ಮಾಡಿದ್ದೇ ಒಳಗೆ ಕತ್ತಲು ತುಂಬಿಕೊಂಡಿತು. ಒಲೆಯ ಬೆಂಕಿ ಸಣ್ಣದಾಗಿ ಉರಿಯುತ್ತಿದ್ದರೂ ಹಂಡೆಯ ನೀರು ಚೆನ್ನಾಗಿಯೇ ಕಾದಿತ್ತು. ಬಚ್ಚಲಿನ ಗಿಡ್ಡ ಗೋಡೆಯ ಮೇಲೆ ಮಾಡು ಇಳಿದಿತ್ತು. ಗೋಡೆ ಮತ್ತು ಮಾಡಿನ ನಡುವಿನ ಸಂದಿನಿಂದ ಒಳಬರುವ ಬೆಳಕು, ಕವಿದ ಮೋಡದಿಂದಾಗಿ ಕ್ಷೀಣವಾಗಿತ್ತು. ಕತ್ತಲೆಗೆ ನಿಧಾನ ಕಣ್ಣು ಹೊಂದಿಕೊಂಡು ಬಚ್ಚಲ ಒಳಗಿನದೆಲ್ಲ ಸ್ಪಷ್ಟವಾಗತೊಡಗಿತು. ಹಂಡೆಯ ಹಿತ್ತಾಳೆಯ ಮುಚ್ಚಳ ಆ ಮಂದ ಬೆಳಕಿನಲ್ಲೂ ಹೊಳೆಯುತ್ತಿತ್ತು. ಮುಚ್ಚಳ ತೆಗೆಯುತ್ತಿದ್ದಂತೆ ಹಂಡೆಯ ಬಾಯಲ್ಲಿ ಹಬೆಯಾಡಿತು. ಅಗಲ ಬಾಯಿಯ ಒಂದು ದೊಡ್ಡ ಬೋಗುಣಿಯಲ್ಲಿ ನೀರು ತೋಡಿಕೊಳ್ಳತೊಡಗಿದ. +‘ಗಜಾನನಾ.. ಗಣಪತೇ… ಮೂಷಿಕವಾಹನಾ..’ ಎಂದು ತನ್ನ ಇಷ್ಟದೈವವಾದ ಗಣಪತಿಯನ್ನು ನೆನೆಯುತ್ತ, ಅಂಕೋಲೆಯಿಂದ ಬಿಡಾರ ಕಟ್ಟಿಕೊಂಡು ಇನ್ನು ಮುಂದೆ ಇಲ್ಲಿಯೇ ನೆಲೆಸಲು ಬರಲಿರುವ ಸರ್ವೋತ್ತಮ ಮತ್ತು ಗೋದಾವರಿಯರ ಬಗ್ಗೆ ಯೋಚಿಸುತ್ತ ನೀರು ಹುಯ್ದುಕೊಳ್ಳತೊಡಗಿದ. +uಟಿಜeಜಿiಟಿeಜ +– ೮ – +ನಡುಮನೆಯ ಅಟ್ಟದ ಮೇಲಿನ ಸಾಮಾನುಗಳನ್ನು ಸರಿಯಾಗಿ ಜೋಡಿಸಿಟ್ಟು ಗೋದಾವರಿ ಸರ್ವೋತ್ತಮರ ಬಿಡಾರದ ವಸ್ತುಗಳನ್ನು ಇಡಲು ಅಲ್ಲಿ ಜಾಗ ಮಾಡಿಕೊಡಬೇಕೆಂದು ಕಾವೇರಿ ನಾಲ್ಕು ದಿನಗಳಿಂದ ಹೇಳುತ್ತಲೇ ಬಂದಿದ್ದರೂ ಅದಕ್ಕೆ ಮುಹೂರ್ತ ಬಂದಿದ್ದು ಮಾತ್ರ ಅವರು ಬರಲಿರುವ ದಿನವೇ. ದೇವರಾಯ ಬೇಗ ಬೇಗ ಸ್ನಾನ ಮುಗಿಸಿ, ಇನ್ನೂ ಅವಸರದಲ್ಲಿ ದೇವರ ಪೂಜೆ ಮುಗಿಸಿ ಅಟ್ಟ ಹತ್ತಲು ತಯಾರಿ ನಡೆಸಿದ. ಯಾವಾಗಲೂ ಬಚ್ಚಲ ಗೋಡೆಗೆ ಒರಗಿಸಿ ಇಡುತ್ತಿದ್ದ ಏಣಿ ಅಲ್ಲಿರಲಿಲ್ಲ. +‘ಇದು ಆಯುವಿನದೇ ಕೆಲಸ… ತೆಗೆದ ಕೈಯಿಂದ ಮತ್ತೆ ಅಲ್ಲಿ ವಾಪಸು ಇಡುವುದಿಲ್ಲ’ ಆಯುವನ್ನು ಬೈಯುತ್ತ ಏಣಿ ಹುಡುಕತೊಡಗಿದ. ಹಿತ್ತಿಲ ಬಾಗಿಲಿನಾಚೆ, ಗೋಡೆಗೆ ಒರಗಿಸಿಟ್ಟ ಏಣಿಯನ್ನು ಪತ್ತೆ ಮಾಡಿ, ಮುಂಬಾಗಿಲಿನಿಂದ ತಂದರೆ ತಡವಾಗುತ್ತದೆಂದು ಅಡಿಗೆ ಮನೆಯೊಳಗಿನಿಂದಲೇ ಹಾದು ಬಂದ. ಅಲ್ಲಿ ಏಣಿಯನ್ನು ಅಡ್ಡಡ್ಡ ತಿರುಗಿಸಿ ನಡುಮನೆಯ ಬಾಗಿಲಲ್ಲಿ ತೂರಿಸುವಾಗ, ನಾಗೊಂದಿಯ ಮೇಲೆ ಸಾಲಾಗಿಟ್ಟ ಬಣ್ಣದ ಸೌತೆಯೊಂದಕ್ಕೆ ಏಣಿಯ ತುದಿ ತಗುಲಿ ಅದು ಕೆಳಗೆ ಉರುಳಿ, ತೆಂಗಿನ ಕಾಯಿ ತುರಿದಿಟ್ಟ ತಟ್ಟೆಯ ಅಂಚಿಗೆ ಬಿದ್ದು, ತಟ್ಟೆ ಫಳಾರೆಂದು ಚಿಮ್ಮಿ ಕಾಯಿತುರಿಯೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಯಿತು. +‘ಇರುವ ಕೆಲಸ ಕಡಿಮೆಯೆಂದು ಇದೊಂದು…’ ರಂಗೋಲಿಯಂತೆ ಹರಡಿಬಿದ್ದ ಬೆಳ್ಳನೆಯ ಕಾಯಿತುರಿ ಬಳಿಯುತ್ತ ಕಾವೇರಿ ಗೊಣಗತೊಡಗಿದಳು. ‘ಯಾವಾಗಿನಿಂದಲೋ ಹೇಳುತ್ತಿದ್ದೇನೆ.. ಕಿವಿಯ ಮೇಲೇ ಹಾಕಿಕೊಳ್ಳಲಿಲ್ಲ… ಈಗ ಅವರು ಬರುವ ವೇಳೆಗೆ ಇವರು ಅಟ್ಟ ಹತ್ತಿ ಕೂತುಕೊಳ್ಳುತ್ತಾರೆ… ಇಷ್ಟು ದಿವಸ ಮಾಡದೇ ಇದ್ದದ್ದು ಈಗಲೇ ಯಾಕೆ? ಮಧ್ಯಾಹ್ನದ ಮೇಲೆ ಮಾಡಬಹುದಲ್ಲ… ನನಗೆ ಗೊತ್ತು… ಅಟ್ಟ ಹತ್ತಿದ್ದೇ ಅಲ್ಲಿಂದಲೇ ಕರೆಯುತ್ತಾರೆ… ನಾನು ಅಲ್ಲಿ ಹೋಗಿ ಮೋರೆ ಮೇಲೆ ಮಾಡಿ ಉತ್ತರ ಕೊಡುತ್ತ ನಿಂತರೆ ಇಲ್ಲಿ ಅಡಿಗೆ ಆಗಬೇಕಲ್ಲ… ಅವರು ಮೊದಲ ಮೋಟರಿಗೇ ಬರುವವರು…’ +ದೇವರಾಯ ಏನೂ ಹೇಳದೇ ಏಣಿಯನ್ನು ನಡುಮನೆಗೆ ತಂದು ಗೋಡೆಗೆ ಆನಿಸಿದ. +ಈ ಮನೆ ಮೊದಲಿನಿಂದಲೂ ಹೀಗೆ ಇದ್ದಿದ್ದಲ್ಲ. ಮಳೆಯ ಝಡಿ ಹೊಡೆಯುತ್ತದೆಂದು ಜಗುಲಿಯ ಮಾಡು ಮುಂದೆ ಮಾಡಿದ್ದು, ಸಾಮಾನು ಇಡಲು ನಡುಮನೆಯ ಅಟ್ಟ ಮಾಡಿಸಿದ್ದು, ಮಳೆಗಾಲದಲ್ಲಿ ಪಾತ್ರೆ ಗಲಬರಿಸಲಿಕ್ಕಾದರೂ ಮೂಲೆಯಲ್ಲಿ ಮೋರಿ ಬೇಕೆಂದು ಅಡಿಗೆ ಮನೆಯನ್ನು ಹಿಂದಕ್ಕೆ ಬೆಳೆಸಿದ್ದು ಹೀಗೆ ಅದು ಕಾಲಾಂತರದಲ್ಲಿ ಬದಲಾಗುತ್ತ ಬಂದಿತ್ತು. ಆದರೆ ಎಲ್ಲಕ್ಕೂ ಮೊದಲು ಮಾಡಿಸಿದ್ದು ನಡುಮನೆಯ ಅಟ್ಟ. ಅದು ದೇವರಾಯ ಮುಂಬೈಯಿಂದ ಬಿಡಾರ ಸಮೇತ ಬಂದ ಮೇಲೆ ಕಟ್ಟಿಸಿದ್ದು. ಸಾಮಾನುಗಳನ್ನು ತುಂಬಿ ತಂದ ಪೆಠಾರಿಗಳನ್ನು ಇಡಲು ಮನೆಯಲ್ಲಿ ಸರಿಯಾದ ಜಾಗವಿಲ್ಲದೇ ಹೋದಾಗ ಅಟ್ಟ ಮಾಡಿಸುವ ಯೋಚನೆ ಮಾಡಿದ್ದು ದೇವರಾಯನೇ. ನಡುಮನೆಯ ಮಾಡು ಎತ್ತರವಾಗಿದ್ದರಿಂದ ಅಟ್ಟಕ್ಕೆ ಪ್ರಶಸ್ತವಾಗಿತ್ತು. +ನಡುಮನೆಗೆ ಕಿಟಕಿಗಳಿಲ್ಲದಿದ್ದರೂ ಅಟ್ಟ ಕಟ್ಟುವ ಮೊದಲು ಮೇಲಿನ ಗವಾಕ್ಷಿಗಳಿಂದ ಬೆಳಕು ಸಾಕಷ್ಟು ಬರುತ್ತಿತ್ತು. ಅಟ್ಟ ಮಾಡಿಸಿದ ನಂತರ ಬೆಳಕೆಲ್ಲ ಅಲ್ಲೇ ಕಟ್ಟಿಬಿದ್ದು ಕೆಳಗೆ ನಸುಗತ್ತಲಾಯಿತು. ಆಮೇಲೆ ಮಾಡಿನ ನಾಲ್ಕು ಹೆಂಚು ತೆಗೆದು ಗಾಜು ಹಾಕಿಸಿದರೂ ಹೆಚ್ಚು ಪ್ರಯೋಜನವಾಗಲಿಲ್ಲ. ಗೇರು ಎಣ್ಣೆ ಬಳಿದು ಕಪ್ಪಾದ ಕಟ್ಟಿಗೆಯ ತೊಲೆಗಳಿಂದ ಮಾಡಿದ ಅಟ್ಟ ನಡುಮನೆಯ ಮುಕ್ಕಾಲು ಭಾಗವನ್ನು ಮುಚ್ಚಿಹಾಕಿತ್ತು. ಅಡಿಗೆ ಮನೆಯ ಒಲೆಗೆ ಹಸಿ ಕಟ್ಟಿಗೆ ಬಿದ್ದ ದಿನವಂತೂ ನಡುಮನೆಯಲ್ಲಿ ಹೊಗೆ ತುಂಬಿ ಬೆಳಕು ಇನ್ನೂ ಕ್ಷೀಣಿಸಿ ಗವಿಯಲ್ಲಿ ಹೊಕ್ಕಂತಾಗುತ್ತಿತ್ತು. +ಆದರೆ ಅಟ್ಟದ ಮೇಲೆ ಹತ್ತಿ ಬಂದರೆ, ಅದೂ ಮಧ್ಯಾಹ್ನದ ಹೊತ್ತು, ಬೆಳಕಿಂಡಿಯಿಂದ ಬೇಕಾದಷ್ಟು ಬೆಳಕು ಬರುತ್ತಿತ್ತು. ದೇವರಾಯ ಅಟ್ಟ ಹತ್ತುವುದು ವರ್ಷಕ್ಕೆರಡು ಸಲ ಮಾತ್ರ – ಚೌತಿಯ ಮೊದಲು ಮತ್ತು ನಂತರ. ಚೌತಿಯ ಮೊದಲು ಗಣಪತಿಯ ಕಟ್ಟಿಗೆಯ ಪೀಠ ಹಾಗೂ ಅಡಿಗೆಯ ದೊಡ್ಡ ಪಾತ್ರೆಗಳನ್ನು ತೆಗೆಯಲು ಮತ್ತು ಚೌತಿಯ ನಂತರ ಅವುಗಳನ್ನು ಮರಳಿ ಇಡಲು ಅಟ್ಟ ಹತ್ತುವುದು ಬಿಟ್ಟರೆ ಮತ್ತೆ ಅಲ್ಲಿ ಕಾಲಿಡುವ ಪ್ರಸಂಗವೇ ಬರುತ್ತಿರಲಿಲ್ಲ. ಪುರಂದರ ಇಲ್ಲಿರುವಾಗ ಅವನೇ ಆ ಕೆಲಸ ಮಾಡುತ್ತಿದ್ದ. ಅಲ್ಲಿ ಹತ್ತಿ ಕೂರುವುದೆಂದರೆ ಅವನಿಗೆ ಬಹಳ ಉಮೇದು. ಅಲ್ಲಿದ್ದ ನಾನಾ ಸಾಮಾನುಗಳನ್ನು ನೋಡುತ್ತ ಮೈಮರೆತು ಕೂತವನನ್ನು ಇಳಿಸಲು ಹತ್ತು ಬಾರಿ ಕರೆಯಬೇಕು. ಅಟ್ಟ ಹತ್ತುವದೆಂಬ ಮಾತು ಬಾಯಲ್ಲಿ ಪೂರ್ತಿಯಾಗುವುದರೊಳಗೆ ಏಣಿ ತಂದು ಹತ್ತಿದನೇ. +ಅಡಿಗೆ ಮನೆಯತ್ತ ಮುಖ ಮಾಡಿ ‘ನಾ ಹತ್ತತೇನೆ’ ಎಂದು ಕಾವೇರಿಗೆ ಕೇಳಿಸುವಂತೆ ಹೇಳಿ, ಅವಳ ಉತ್ತರಕ್ಕೆ ಕಾಯದೇ ದೇವರಾಯ ಅಟ್ಟ ಹತ್ತಿದ. ತುಂಡು ಪಂಚೆ ಉಟ್ಟು, ಬರಿಮೈಯಲ್ಲಿ ಮೇಲೆ ಹತ್ತಿ ಹೋದ ನಂತರ, ಹೊಗೆಗೆ ಕಪ್ಪುಹಿಡಿದು ಜೋಲಾಡುವ ಜೇಡರ ಬಲೆಗಳನ್ನು ನೋಡಿ ಸ್ನಾನ ಮಾಡುವ ಮೊದಲೇ ಈ ಕೆಲಸ ಮಾಡಬೇಕಿತ್ತು ಅಂದುಕೊಂಡ. ಅಟ್ಟ ಹತ್ತಿ ಬರುತ್ತಿದ್ದಂತೆ, ಬೆಳಕಿಂಡಿಯಿಂದ ತೂರಿಬಂದ ಬಿಸಿಲಿನೊಳಗೆ ಹೊಗೆ ಮತ್ತು ಧೂಳಿನ ಹುಡಿ ಕಂಬದಂತೆ ನಿಧಾನ ಚಲಿಸುತ್ತಿರುವುದು ಕಾಣಿಸಿತು. ಅವನು ಕಾಲಿಟ್ಟು ಚಲಿಸಿದ ಹಾಗೆ ಧೂಳಿನ ಕಣಗಳು ಬುಸ್ಸನೆ ಎದ್ದು ಬಿಸಿಲ ಕಂಬದಲ್ಲಿ ಕೋಲಾಹಲ ಎಬ್ಬಿಸುತ್ತಿದ್ದವು. ಪ್ರತಿ ವರ್ಷ ತೆಗೆಯುವ ಚೌತಿಯ ಸಾಮಾನುಗಳೆಲ್ಲ ಮುಂದೆಯೇ ಇಡಲಾಗಿದ್ದವು. ಇನ್ನೊಂದು ತಿಂಗಳೊಳಗೆ ತೆಗೆಯಬೇಕಾದ ಇವುಗಳನ್ನೆಲ್ಲ ಬದಿಗೆ ಸರಿಸಿಟ್ಟು ಬರಲಿರುವವರ ಬಿಡಾರದ ಗಂಟು ಪೆಟ್ಟಿಗೆಗಳನ್ನು ಹಿಂದೆ ಇಡಲು ಜಾಗ ಮಾಡುವುದೇ ಒಳ್ಳೆಯದೆಂದು ತೋರಿತು. ಒಂದೊಂದಾಗಿ ಎತ್ತಿ ಬದಿಗಿಡತೊಡಗಿದ. ಚೌತಿಯ ಮಂಟಪ, ಕಟ್ಟಿಗೆಯ ಪೀಠ, ಬಂಗಾರದ ಬಣ್ಣ ಹಚ್ಚಿದ ಪ್ರಭಾವಳಿ, ಮಂಟಪದ ಹಿಂದೆ ಕಟ್ಟುವ ಪರದೆ, ಫಲಾವಳಿ ಕಟ್ಟಲು ಬೇಕಾಗುವ ಕಟ್ಟಿಗೆಯ ಚೌಕಟ್ಟು, ಪೇರಿಸಿಟ್ಟ ಮಣೆಗಳು, ಅಡಿಗೆಯ ದೊಡ್ಡ ಪಾತ್ರೆಗಳು, ಸೌಟುಗಳು ಎಲ್ಲವೂ ಅಲ್ಲಿದ್ದವು. ಅವುಗಳನ್ನೆಲ್ಲ ಅಲ್ಲಲ್ಲೇ ಬದಿಗೆ ಸರಿಸಿಟ್ಟು ಮುಂದೆ ಹೋದರೆ ಅಲ್ಲಿ ನಾಲ್ಕು ದೊಡ್ಡ ಪೆಠಾರಿಗಳಿದ್ದವು. ಅವುಗಳ ಪಕ್ಕದಲ್ಲೇ ನೀರು ಕಾಯಿಸುವ ಚಿಕ್ಕ ತಾಮ್ರದ ಬಂಬು ಇತ್ತು. +omಜu bಚಿಜi ಞಚಿಜಚಿಟu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಸಿಲಿಂಡರಿನಂಥ ಆ ತಾಮ್ರದ ಬಂಬಿನ ಹೊಟ್ಟೆಯ ಮಧ್ಯದಿಂದ ಉದ್ಭವಿಸಿ ಬಂದಂತೆ ತೋರುವ ಉದ್ದ ಕೊಳಾಯಿ ಬೆಂಕಿ ಉರಿಸಲು ಇದ್ದ ಜಾಗವಾಗಿತ್ತು. ಕೆಳಗೆ ಬೂದಿ ಹಿಡಿಯಲೊಂದು ಅಗಲ ಕರಂಡಕ. ಆ ಬಂಬನ್ನು ದೇವರಾಯನಿಗೆ ಕೊಡಿಸಿದವನು ದಿನಕರ. ಮುಂಬೈಯಲ್ಲಿ ಮೊದಲು ಇಬ್ಬರೂ ಒಂದೇ ಮನೆಯಲ್ಲಿ ಇದ್ದರು. ಹೋದ ಹೊಸದರಲ್ಲಿ ದೇವರಾಯ ತಣ್ನೀರು ಸ್ನಾನ ಮಾಡುತ್ತಿದ್ದ. ಅಲ್ಲಿಯ ಹವೆಗೆ ಬಿಸಿನೀರಿನ ಅಗತ್ಯವೇ ಇರಲಿಲ್ಲ. ಆದರೆ ಮದುವೆಯ ನಂತರ, ‘ಸಂಸಾರ ಅಂದ ಮೇಲೆ ಬಿಸಿನೀರಿಗೆ ವ್ಯವಸ್ಥೆಯಿರಬೇಕು’ ಎಂದು ಹೇಳಿ ಈ ಪುಟ್ಟ ಬಂಬನ್ನು ದಿನಕರ ಕೊಡಿಸಿದ್ದ. ನೆನಪಿನ ಸುರಂಗದೊಳಗೆ ಹಿಂದೆ ಹಿಂದೆ ಹೋಗಿ ನೋಡಿದರೆ ಎಲ್ಲವೂ ಯಾವಾಗಲೋ ಜರುಗಿಹೋದ ಹಾಗೆ, ಬೇರೆ ಯಾರಿಗೋ ಆದ ಅನುಭವದ ಹಾಗೆ ತೋರುತ್ತಿತ್ತು. ಮೊದಲ ಹೆಂಡತಿ, ಎರಡನೇ ಹೆಂಡತಿ – ಎರಡೆರಡು ಸಲ ಮದುವೆ, ಆ ಅತ್ತೆ ಮಾವಂದಿರು ಮತ್ತು ಅವರ ಮನೆಯವರು, ಒಂದು ಕಾಲದಲ್ಲಿ ತನ್ನ ಸಂಬಂಧೀಕರಾದ ಅವರೆಲ್ಲ ಎಲ್ಲಿದ್ದಾರೋ, ಬದುಕಿದ್ದಾರೋ ಇಲ್ಲವೋ, ಹೇಗೆ ಎಲ್ಲವೂ ಒಂದು ಕೊಂಡಿ ತಪ್ಪಿದ್ದೇ ಕಳಚಿ ಬಿದ್ದು ಹೋಯಿತು… ಬಾಣಂತನಕ್ಕೆಂದು ಹೋದ ಇಬ್ಬರೂ ಹೆಂಡತಿಯರು ಮರಳಿ ಬರಲೇ ಇಲ್ಲ. ಅವರ ಶವಸಂಸ್ಕಾರಕ್ಕೂ ಅವನು ಇರಲಿಲ್ಲ. ಎರಡು ಸಾರಿಯೂ ಸುದ್ದಿ ತಿಳಿದು ಮುಂಬೈಯಿಂದ ಅವನು ಬಂದು ತಲುಪುವಾಗ ನಾಲ್ಕು ದಿನಗಳಾಗಿ ಹೋಗಿದ್ದವು… +ಮೂರನೆಯ ಮದುವೆಯ ವೇಳೆಗೆ ಅವನ ಜೀವನದ ಅಪೇಕ್ಷೆಗಳೂ ಬದಲಾಗಿದ್ದವು. ಮತ್ತು ಕಾವೇರಿಯೂ ಮೊದಲ ಹೆಂಡತಿಯರಿಗಿಂತ ವಯಸ್ಸಿನಲ್ಲಿ ತುಸು ದೊಡ್ಡವಳಾದುದರಿಂದ ಬೇಗ ಹೊಂದಿಕೊಂಡಳು. ತವರಿಗಿಂತ ಬೇರೆ ಏನಿದ್ದರೂ ಒಳ್ಳೆಯದೆಂಬ ಭಾವನೆಯಲ್ಲಿ ಬಂದವಳ ಆಸೆಗಳೂ ಸಹ ಬಹಳ ಕಡಿಮೆ ಇದ್ದವು. ತನಗೆ ಮಕ್ಕಳಾಗದಿದ್ದ ಬಗ್ಗೆ ಅವಳು ಹೆಚ್ಚು ಸಂಕಟಪಟ್ಟಂತೆ ತೋರಲಿಲ್ಲ. ಮೊದಲ ಹೆಂಡತಿಯರ ಸಾವಿನ ಕಾರಣ ತಿಳಿದಿದ್ದ ಅವಳಿಗೆ ಆ ಬಗ್ಗೆ ವಿನಾಕಾರಣ ಭಯವಿತ್ತು. ಉದ್ದ ಮೂಗು, ತಲೆತುಂಬ ಕೂದಲು, ಶಾಂತವಾದ ಕಣ್ಣುಗಳು, ಎತ್ತರದಲ್ಲಿ ಒಂದು ಮುಷ್ಟಿ ಹೆಚ್ಚೇ ಅನ್ನಬಹುದಾದ ನಿಲುವು – ಒಟ್ಟಿನಲ್ಲಿ ಅವಳದು ದೇವರಾಯನಿಗೆ ಜೋಡಿಯಾಗುವ ಆಕಾರ. ಈ ಮದುವೆ ತಾಳಿದ್ದರಿಂದ, ನಿಧಾನವಾಗಿ ಸಂಬಂಧಗಳು ಊರತೊಡಗಿದವು. +‘ಅಲ್ಲಿ ಬಿಸಿ ನೀರು ತೋಡುವ ಸೌಟು ಇದೆಯಲ್ಲ. ಅದನ್ನೊಂದು ತೆಗೆದು ಬಿಡಿ. ಅದು ಹಸಿರು ಪೆಠಾರಿಯೊಳಗೆ ಇದೆ…’ ಕಾವೇರಿ ಕೆಳಗಿನಿಂದ ಹೇಳಿದ್ದು ಕೇಳಿಸಿ ದೇವರಾಯ ಪೆಠಾರಿಗಳತ್ತ ಜರುಗಿದ. +‘ಆಯಿತೇ? ಅವರು ಬರುವ ಹೊತ್ತಾಯಿತಲ್ಲ… ಆಯಾಸವಾದರೆ ನೀವು ಕೆಳಗೆ ಬನ್ನಿ. ಆಮೇಲೆ ಆಯುವಿಗೆ ಹೇಳಿ ಸರಿಮಾಡಿಸುತ್ತೇನೆ.’ +‘ಯಾಕೆ ಇಷ್ಟು ಅವಸರ? ಬರುವವರು ಹೊಸಬರಲ್ಲ’ ಎಂದು ಗೊಣಗು ದನಿಯಲ್ಲಿ ಹೇಳಿ ಹಸಿರು ಪೆಠಾರಿಯತ್ತ ಸರಿದು ಅದರ ಮುಚ್ಚಳ ತೆಗೆದ. ಅದರ ತುಂಬ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳು ತುಂಬಿದ್ದವು. +ಅವುಗಳನ್ನು ನೋಡುತ್ತಿರುವಂತೆ ಅಪ್ರಯತ್ನವಾಗಿ ಇದು ದಿನಕರನ ತಾಯಿ ಕೊಟ್ಟಿದ್ದು, ಈ ಎಣ್ಣೆಯ ಗಿಂಡಿ ಬಾಲ್ಯದಿಂದಲೂ ಮನೆಯಲ್ಲಿ ಇದ್ದಿದ್ದು, ಈ ತಪ್ಪಲೆ ಗೋದಾವರಿ ಕೊಟ್ಟಿದ್ದು ಹೀಗೆ ಸಾಲುಸಾಲಾಗಿ ಅವುಗಳಿಗೆ ಸಂಬಂಧಿಸಿದ ಜನ ನೆನಪಾಗತೊಡಗಿದರು. ಜರ್ಮನ್ ಸಿಲ್ವರಿನ ಹರಿವಾಣವನ್ನು ನೋಡಿ ಮುಂಬೈ ಬಿಡುವ ಮುಂಚಿನ ಸತತ ಅನಾರೋಗ್ಯದ ಹತ್ತು ದಿನಗಳು ನೆನಪಾದವು. ಆ ದಿನಗಳಲ್ಲಿ ಅವನು ಇದೇ ಹರಿವಾಣದಲ್ಲಿ ಗಂಜಿ ಕುಡಿಯುತ್ತಿದ್ದುದು. ಅವನೇ ನಂಬಿದಂತೆ, ಹೊನ್ನಾವರಕ್ಕೆ ಬರಲು ಅವನ ಇಷ್ಟದೈವವಾದ ಗಣಪತಿಯ ಪ್ರೇರಣೆಯಾದದ್ದು ಜ್ವರ ಹಿಡಿದು ಹತ್ತು ದಿನ ಮಲಗಿದ ಆ ಕಾಲದಲ್ಲೇ. +’ಬಂದರು ಬಂದರು… ನೀವು ಇನ್ನೂ ಅಲ್ಲೇ ಇದ್ದೀರಲ್ಲ…’ ಎಂದು ಕಾವೇರಿ ಹೇಳಿದ್ದು ಕೇಳಿ ದೇವರಾಯ ಅಟ್ಟ ಇಳಿಯಲು ಹೊರಟ. ಕೆಳಗೆ ಸುನಂದೆಯ ದನಿ ಕೇಳಿಸಿತು. +***** +ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ […] +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_574.txt b/Kannada Sahitya/article_574.txt new file mode 100644 index 0000000000000000000000000000000000000000..2cb54328fef883bbaf76597bcdc3d2ce45676e56 --- /dev/null +++ b/Kannada Sahitya/article_574.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ತೆಂಗಿನ ಮರ +ಒಳಿತಿನ ತಾಯಿ +ಮೇಲ್ನೋಟಕ್ಕೆ ಬಹಳ ಸಾದಾಸೀದಾ +– ಆದರದ ಕಲ್ಪ ವೃಕ್ಷ. +ಜಪಾನಿಗಳ ಕುಂಡದ ಬೋನ್ಸಾಯಿ +ಎರೆಯುತ್ತದೆ ನಿಜ, ಬೆರಗು ವಿನೋದ- +ಆದರದು ಅಲ್ಪ ವೃಕ್ಷ. +***** +ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. ***** +ಸಿನೀ ಮೋಹ ವಿಲಾ ಮೋಹ ದಷ್ಟೆ ದಿಗ್ಗೇಡಿ. ***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_575.txt b/Kannada Sahitya/article_575.txt new file mode 100644 index 0000000000000000000000000000000000000000..27c9bb1263d3caed8eabc211d42772a936b5c3d1 --- /dev/null +++ b/Kannada Sahitya/article_575.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೇ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲಿಗಳಿಂದ ದೊರೆಗಳು, ಸೇನಾನಿಗಳು ಬಂದು ಈಶನನ್ನು ನೋಡಿ ಗೌರವಿಸುತ್ತಿದ್ದರು. ಈಶ ಜನಕ್ಕೆ ಉಪದೇಶನೀಡುತ್ತಿದ್ದ. ಹಾಗೆ ನೋಡಿದರೆ ಈತನಿಗೆ ದಿನದ ಮೇಳೆಯೇ ಸಾಕಾಗುತ್ತಿರಲ್ಲಿಲ್ಲ. ಆದರೆ ಎಂದೋ ನೋಡಿದ ಸಾಮಾನ್ಯನೊಬ್ಬನಿಗೆ ಕಾಯಿಲೆ ಯಾದರೆ, ಯಾವುದೇ ತೊಂದರೆಯಾದರೆ ಈತ ಹತ್ತಾರು ಮೈಲಿ ನಡೆದುಹೋಗಿ ಆತನನ್ನು ಕಂಡು ಆರೈಕೆ ಮಾಡುತ್ತಿದ್ದ ಅವನ ತೊಂದರೆಗಳಿಗೆ ಪರಿಹಾರ ಹುಡುಕುತ್ತಿದ್ದ. ಒಮ್ಮೆ ಈತನ ಆಶ್ರಮದಲ್ಲಿ ಮುದಿ ರೋಗಿಯೊಬ್ಬನನ್ನು ಯಾರೂ ಸರಿಯಾಗಿ ನೋಡೀಕೊಳ್ಳಲಿಲ್ಲ. ತನ್ನ ಕೆಲಸಗಳ ನಡುವೆ ಆ ಕಡೆ ಗಮನ ಹರಿಸದಿದ್ದಕ್ಕೆ ಗುರುವಿಗೆ ತನ್ನ ಬಗ್ಗೆ ಬೇಸರವಾಯಿತು. ಆ ಮುದಿರೋಗಿಯನ್ನು ತಾನೇ ಉಪಚರಿಸಿ ನೋಡಿಕೊಂಡ. ಅದು ತನ್ನೆಲ್ಲ ಉಪದೇಶಕ್ಕಿಂತ ಮುಖ್ಯವಾದದ್ದೆಂದು ಈ ಮನುಷ್ಯ ತಿಳಿದದ್ದು. +ನೀವು ಊಹಿಸಿರಬಹುದಾದಂತೆ ಈತ ಗೌತಮ. ಈತನ ಬಗ್ಗೆ ಕತೆಗಳನ್ನು ಕೇಳುತ್ತಾ, ಈತನ ಉಪದೇಶಗಳನ್ನು ಒದುತ್ತಾ ನಾವೆಲ್ಲ ಈ ಗೌತಮ ಅಥವ ಸಿದ್ಧಾರ್ಥ ಎಂಬ ಮನುಷ್ಯನ ಬಗ್ಗೆ ದಡ್ಡುಗಟ್ಟಿದ್ದೇವೆ; ಈತ ಇನ್ನೊಬ್ಬ ಮಹಾತ್ಮ ಎಂದು ತಿಳಿದು ನಿರ್ಲಕ್ಷಿಸಲು ಬೇಕಾದ ಗೌರವವನ್ನು ಮಾತ್ರ ಇಟ್ಟುಕೊಂಡು ಸುಮ್ಮನಾಗುತ್ತೇವೇ. ಆದರೆ ಕೇವಲ ಮನುಷ್ಯನಾಗಿ ಈತನ ನಡವಳಿಕೆ ಅಚ್ಚರಿ ಹುಟ್ಟಿಸುತ್ತದೆ; ನನ್ನ ಅಚ್ಚರಿಯನ್ನು ಮಾತ್ರ ಇಲ್ಲಿ ವಿವರಿಸುತ್ತೇನೆ. +ವೈಶಾಖ ಶುದ್ಧ ಪೂರ್ಣಿಮೆಯಂದು ಚೆನ್ನನೊಂದಿಗೆ ಈತ ಅರಮನೆಯನ್ನು ಬಿಟ್ಟಿದ್ದು ಓದಿದ್ದೇವೆ. ಹೀಗೆ ಅರಮನೆ, ಅದರ ಸಂಪತ್ತು ಸುಖವನ್ನೆಲ್ಲಾ ಬಿಟ್ಟು ಹೊರಟಿದ್ದು ಈತನ ಉನ್ನತ ಗುಣ ತೋರುತ್ತದೆ ಎಂದು ಹೇಳುತ್ತಾರೆ. ಆದರೆ ನನಗೆ ಈ ಗೌತಮನ ಸಾಮಾನ್ಯತೆಯೇ ಇಲ್ಲಿ ಕಂಡುಬರುತ್ತದೆ. ಯಾಕೆಂದರೆ ಈತ ಹುಟ್ಟಿದಾಗಲೇ ಈತನ ತಂದೆ ಶುದ್ಧೊಧನ ಪುರೋಹಿತರು ಗೌತಮನೊಬ್ಬ ಮಹಾತ್ಮನಾಗುವ ಬಗ್ಗೆ, ಮಹಾನ್ ಗುರುವಾಗುವ ಬಗ್ಗೆ ಹೇಳಿದ್ದರಂತೆ; ಒಳಗೊಳಗೆ ಗೌತಮನ ಬಗ್ಗೆ ಭಕ್ತಿಯನ್ನಿಟ್ಟುಕೊಂಡಿದ್ದ ದೊರೆ ಗೌತಮ ಸನ್ಯಾಸಿಯಾದಾನೆಂದು ಹೆದರಿ ಆತನನ್ನು ರಾಜಭೋಗದಲ್ಲಿ ಇಟ್ಟಿದ್ದನಂತೆ. ಇದು ನಿಜವಾದರೆ ಗೌತಮ ಅರಮನೆ ಬಿಡುವ ಅಗತ್ಯವಿರಲಿಲ್ಲ; ಆತನು ಮಹಾನ್ ಗುರುವಾಗುವುದು ಮೊದಲೇ ನಿಶ್ಚಿತವಾಗಿದ್ದರೆ ಅದಕ್ಕಾಗಿ ಗೌತಮ ಪ್ರಯತ್ನಿಸಬೇಕಾದ ಅಗತ್ಯವಿರಲಿಲ್ಲ. ಇಲ್ಲಿ ಗೌತಮನ ಸಹಜ ಕುತೂಹಲ, ಮನುಕುಲದ ದುರಂತದ ಬಗ್ಗೆ ಕಾಳಜಿ ಕಂಡುಬರುತ್ತದೆ. ಅರಮನೆ ಏನೂ ಗೊತ್ತಿಲ್ಲದ, ಏನೂ ಗೊತ್ತಾಗದಂತೆ ಇರುವ ಜಾಗವಾಗುತ್ತದೆ. ಆತ ಅರಿವು ಹುಡುಕಿ ಹೊರಡುತ್ತಾನೆ. ಇಲ್ಲಿ ಕೂಡ ಒಂದು ಪ್ರಶ್ನೆ ಏಳುತ್ತದೆ. ಗೌತಮ ದೊರೆಯಾಗಿ ಮನುಷ್ಯರಿಗೆ ನೆರವಾಗಲು ಆಗುತ್ತಿರಲಿಲ್ಲವೆ? ಆದರೆ ದೊರೆ ಮನುಷ್ಯರ ಯಾವುದೇ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ ಎಂಬುದು ಗೌತಮನಿಗೆ ಗೊತ್ತಾಗಿದೆ. ರೋಗ, ಮುಪ್ಪು, ಸಾವುಗಳಿಗೆ ಉತ್ತರ ಹುಡುಕಿ ಹೊರಟ ಗೌತಮನ ದಾರಿ ಮತ್ತು ಮುಟ್ಟದ ಗುರಿ ವಿಚಿತ್ರವಾದ ಅರ್ಥಗಳಿಂದ ಕೂಡಿವೆ. +ಗೌತಮ ಅರಮನೆಯನ್ನು ಬಿಟ್ಟವನು ಕಾಡಿಗೆ ಹೋಗಲಿಲ್ಲ! ಮನುಷ್ಯರಲ್ಲಿಗೆ ಹೋದ. ಅನೇಕ ವಿದ್ವಾಂಸರನ್ನು, ವಿದ್ಯಾಲಯಗಳನ್ನು ಎಡತಾಕಿದ. ಅವರೊಂದಿಗೆ ಚರ್ಚಿಸಿ ಕಲಿಯಲು ಯತ್ನಿಸಿದ. ಅಲ್ಲಿಂದ ಅಧ್ಯಾತ್ಮದ ಗುರುಗಳನ್ನು ಕಂಡು ವಿನಯ ಪೂರ್ವಕವಾಗಿ ಕಲಿಯಲು ಯತ್ನಿಸಿದ. ಅವರಲ್ಲಿ ಕಲಿತಾಗ ಅವರನ್ನು “ಮುಂದೇನು?” ಎಂದು ಕೇಳಿದ. ಆ ಆಧ್ಯಾತ್ಮದ ಗುರುಗಳು ತಮ್ಮ ಸಾಧನೆ ಅಷ್ಟಕ್ಕೇ ಮುಗಿಯಿತು. ಗೌತಮ ಈಗ ಅವರ ಸಮಾನ ಎಂದು ಹೇಳಿದರು. ಗೌತಮನಿಗೆ ತೃಪ್ತಿಯಾಗಲಿಲ್ಲ, ಮತ್ತೆ ಹುಡುಕಿ ಹೊರಟ. ಯಾರೋ ಅವನಿಗೆ ಸತ್ಯವನ್ನು ಕಾಣಲು ದೇಹದಂಡನೆಯ ಅಗತ್ಯದ ಬಗ್ಗೆ ಹೇಳಿದರು. ಊಟ, ನಿದ್ರೆಗಳನ್ನು ಬಿಟ್ಟು ಹಠವಾದಿಯಂತೆ ಧ್ಯಾನಿಸತೊಡಗಿದ. ಅನೇಕ ವರ್ಷಗಳ ಬಳಿಕ ಗೌತಮ ತನ್ನ ಈ ಹಂತದ ಬಗ್ಗೆ ತಣ್ಣಗೆ, ನಸುಹಾಸ್ಯದಿಂದ, ವಿಷಾದದಿಂದ ಹೇಳುತ್ತಿದ್ದ: +“ಆ ದಿನಗಳಲ್ಲಿ ನನ್ನ ಕೈಕಾಲುಗಳೆಲ್ಲ ಒಣಗಿದ ಬಳ್ಳಿಗಳಂತೆ, ಗಂಟುಗಂಟಾದ ಪುರಲೆಗಳಂತೆ ಆಗಿದ್ದವು! ನನ್ನ ಪೃಷ್ಠ ಎಮ್ಮೆಯ ಗೊರಸಿನಂತೆ ಆಗಿತ್ತು; ನನ್ನ ಬೆನ್ನಹುರಿ ಬಾಗಿದ ಚೆಂಡಿನ ಸರದಂತಾಗಿತ್ತು; ನನ್ನ ಎದೆಯ ಮೂಳೆಗಳು ಪಾಳುಬಿದ್ದ ಗುಡಿಸಲಿನಂತಾಗಿದ್ದವು; ನನ್ನ ಕಣ್ಣುಗಳು ತಮ್ಮ ಗುಳಿಯಲ್ಲಿ ಆಳವಾದ ಬಾವಿಯ ನೀರಿನಂತೆ ಕಾಣುತ್ತಿದ್ದವು. ನನ್ನ ತಲೆ ಬಿಸಿಲುಗಾಳಿಗೆ ಒಣಗಿದ ಸೋರೆಕಾಯಿಯಂತೆ ಆಗಿತ್ತು. ನನ್ನ ಹೊಟ್ಟೆಯ ಚರ್ಮ ಬೆನ್ನಿಗೆ ಅಂಟಿಹೋಗಿತ್ತು. ಬಹಿರ್ದೆಶೆಗೆ ಹೋಗಿ ಕೂತರೆ ಮುಖದ ಮೇಲೆ ನೆಲಕ್ಕೆ ಬಿದ್ದುಬಿಡುತ್ತಿದ್ದೆ; ನನ್ನ ಕೈಕಾಲುಗಳನ್ನು ತುರಿಸಿಕೊಂಡರೆ ಕೂದಲು ತಮ್ಮ ಬೇರು ಸಮೇತ ಕಿತ್ತುಕೊಂಡು ಬರುತ್ತಿದ್ದವು….” +ಈ ಸ್ಥಿತಿಯಿಂದ ಗೌತಮನಿಗೆ ಜ್ಞಾನೋದಯವಾಗಲಿಲ್ಲ. ಈ ಬಗೆಯ ದೇಹದಂಡನೆಯನ್ನು ಬಿಟ್ಟ. ಸುಜಾತ ಎಂಬ ಹೆಣ್ಣುಮಗಳು ಆತನಿಗೆ ಊಟ ನೀಡಿದಳು. ಅವನು ಸಹಜ ಮನುಷ್ಯನಂತೆ ಬದುಕುತ್ತ ಧ್ಯಾನಿಸಲು ಆರಂಭಿಸಿದಾಗ ಅವನ ಜೊತೆಗಾರರು ಕೆಲವರು ಆಕ್ಷೇಪಿಸಿ ಅವನಿಂದ ಹೊರಟುಹೋದರು; ಗೌತಮ ಏಕಾಂಗಿಯಾಗಿ ಸತ್ಯ ಹುಡುಕತೊಡಗಿದ. ಮನುಷ್ಯ ತನ್ನ ಬಡತನ, ರೋಗ, ಸಾವು, ನೋವು, ಅನ್ಯಾಯಗಳನ್ನು ಗೆಲ್ಲುವ ಸಾಧ್ಯತೆಗಳನ್ನು ಹುಡುಕತೊಡಗಿದ. ನಿರ್ವಾಣ, ಮೋಕ್ಷ ಸಾಧ್ಯವೇ ಎಂದು ನೋಡಿದ. ದೇವರ ಅಸ್ತಿತ್ವಕ್ಕಾಗಿ ತಡಕಾಡಿದ. +ಹುಟ್ಟಿದಂತೆಯೇ ವೈಶಾಖ ಶುದ್ಧ ಪೂರ್ಣಿಮೆಯಂದು ಗೌತಮನಿಗೆ ಉತ್ತರ ದೊರಕಿತು. ಅದನ್ನು ಜ್ಞಾನೋದಯ ಎಂದು ಅನೇಕರು ಕರೆದರು; ಹಾಗೆ ಗೌತಮ ಎಂದೂ ಹೇಳಿಕೊಳ್ಳಲಿಲ್ಲ, ನಾನು ಕೂಡ ಅದನ್ನು ಜ್ಞಾನೋದಯ ಎಂದು ಕರೆಯದೆ ಮನುಷ್ಯನ ದುಃಖಕ್ಕೆ ಇರಬಹುದಾದ ಉತ್ತರ ಎಂದು ಕರೆಯಲು ಆಶಿಸುತ್ತೇನೆ. ಯಾಕೆಂದರೆ ಗೌತಮನಲ್ಲಿ ಜ್ಞಾನೋದಯವಾದ ಒಂದೇ ಒಂದು ಸೂಚನೆ ಇದ್ದದ್ದು ಆತನ ಪ್ರಶಾಂತತೆಯಲ್ಲಿ; ಮನುಷ್ಯನ ಬಗ್ಗೆ ತಿಳುವಳಿಕೆಯಲ್ಲಿ. “ದೇವರು ಇದ್ದಾನೆಯೇ?” ಎಂಬ ಪ್ರಶ್ನೆಗೆ ಗೌತಮನಲ್ಲಿ ಉತ್ತರವಿರಲಿಲ್ಲ; ‘ಆತ್ಮ ಎಂಬುದು ಇದೆಯೇ’ ಎಂಬುದಕ್ಕೆ ಉತ್ತರವಿರಲಿಲ್ಲ. ತನಗೆ ಗೊತ್ತಿಲ್ಲದ್ದನ್ನು ಹೇಳಲು ನಿರಾಕರಿಸುವ ಗೌತಮನ ಜ್ಞಾನೋದಯ ಮನುಷ್ಯನ ಬದುಕಿನ ವಿವರಗಳನ್ನು ಒಳಗೊಂಡಿತ್ತು. +ಸಂನ್ಯಾಸ, ಧ್ಯಾನ, ತಪಸ್ಸುಗಳು, ಸಾಮಾನ್ಯ ಮನುಷ್ಯನಲ್ಲಿ ಗೌರವದ ಜೊತೆಗೆ ಅಂಜಿಕೆ ಹುಟ್ಟಿಸುತ್ತವೆ, ಅವೆಲ್ಲ ತನ್ನಿಂದ ಸಾಧ್ಯವಾಗುವುದಿಲ್ಲ, ಎಂದುಕೊಳ್ಳುತ್ತಾನೆ. ಗೌತಮ ಅವನ್ನೆಲ್ಲ ಹೊಕ್ಕು ಪರೀಕ್ಷಿಸಿ ಹೊರ ಬಂದ ಮೇಲೆ ಒಂದು ಘಟನೆ ನಡೆಯುತ್ತದೆ. ಗೌತಮ ಉಪವಾಸ, ದೇಹದಂಡನೆ ಇತ್ಯಾದಿಗಳನ್ನು ಬಿಟ್ಟೊಡನೆ ಅವನನ್ನು ಬಿಟ್ಟು ಹೊರಟು ಹೋದ ಗೆಳೆಯರನ್ನು ಕಾಣುತ್ತಾನೆ, ತನಗೆ ಮನುಷ್ಯನ ದುರಂತಕ್ಕೆ ಉತ್ತರ ದೊರಕಿದೆ ಎಂದು ಹೇಳುತ್ತಾನೆ. ಗೆಳೆಯರು ನಂಬುವುದಿಲ್ಲ. ‘ಎಲ್ಲರಂತ ಬದುಕಿದ ನಿನಗೆ ಜ್ಞಾನೋದಯವಾಗಿರಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ. ಗೌತಮ ಏನು ಹೇಳಿದರೂ ನಂಬುವುದಿಲ್ಲ. ಆಗ ಗೌತಮ ಅನ್ಯೋನ್ಯತೆಯಿಂದ,“ನನ್ನ ಧ್ವನಿ ಮುಂಚಿನಂತಿದೆಯೊ, ನನ್ನ ಮಾತು ಬೇರೆ ಥರ ಎನಿಸುವುದಿಲ್ಲವೇ?” ಎಂದು ಕೇಳುತ್ತಾನೆ. ಆಗ ಅವರಿಗೆ ಗೌತಮನಲ್ಲಿ ಏನೋ ಹೊಸತು ಗೋಚರವಾಗುತ್ತದೆ. ಗೌತಮನ ಜೊತೆಗಾರಿಕೆಯಲ್ಲಿ ಆತನ ತಿಳುವಳಿಕೆಯಲ್ಲಿ ಅರಿವಾಗುತ್ತದೆ. +ದೇಶದ ಉದ್ದಗಲಕ್ಕೆ ಓಡಾಡಿದ ಸಿದ್ಧಾರ್ಥ ಜನಕ್ಕೆ ಬೊಧಿಸುತ್ತಿದ್ದುದು ಸರಳವಾಗಿತ್ತು. ‘ಆಶೆಯೇ ದುಖಃಕ್ಕೆ ಮೂಲ ’ ಎಂದು ಹೇಳುತ್ತಿದ್ದ. ನೀತಿ, ನಿಯಮ, ಪ್ರಾಮಾಣಿಕತೆಯನ್ನು ಬೋಧಿಸುತ್ತಿದ್ದ. ಒಮ್ಮೆ “ತಪ್ಪಿತಸ್ಥರನ್ನು ಶಿಕ್ಷಿಸುವುದರಿಂದ ಅಪರಾಧ ಕಮ್ಮಿಯಾಗುವುದಿಲ್ಲ” ಎಂದು ಹೇಳಿದ. ಅದರ ಬಗ್ಗೆ ವಿವರಣೆ ಕೇಳಿದಾಗ ಸಿದ್ದಾರ್ಥ ಯಾವುದೇ ಪಾವಡದ ಬಗ್ಗೆ, ದೇವರನ್ನು ಕುರಿತ ಭಯದ ಬಗ್ಗೆ ಹೇಳಲ್ಲಿಲ್ಲ. ಬಡತನದ ನಿವಾರಣೆಯಾದರೆ ಮಾತ್ರ ಅಪರಾಧ, ಕ್ರೌರ್ಯ, ಅನ್ಯಾಯಗಳು ಹೋಗುತ್ತವೆ” ಎಂದು ಹೇಳಿದ. “ಶ್ರೀಮಂತರಾದರೆ?” ಎಂದು ಕೇಳಿದರೂ ಸಿದ್ದಾರ್ಥ ಶ್ರೀಮಂತರ ದಾಹ, ಸ್ವಾರ್ಥ,ಶೋಷಣೆಯ ಬಗ್ಗೆ ಹೇಳುತ್ತಿದ್ದ. ಈತನ ಬೊಧನೆ ಎಲ್ಲರಿಗೆ ಗೊತ್ತಿರುವುದರಿಂದ ಇಲ್ಲಿ ಮತ್ತೆ ಹೇಳಬೇಕಿಲ್ಲ. +ಆದರೆ ಸರಿಯಾಗಿ ಎರಡೂವರೆ ಸಾವಿರ ವರ್ಷದ ಹಿಂದೆ ಬದುಕಿದ್ದ ಈ ಮನುಷ್ಯನ ವ್ಯಕ್ತಿತ್ವ ನೋಡಿ. ಅರಮನೆ, ದೇವಾಲಯಗಳನ್ನು ಬಿಟ್ಟು ನಿರ್ವಾಣವನ್ನು ಕಂಡುಕೊಳ್ಳಲು ಹೊರಟ ಈತ ದೇವರನ್ನು ತಲುಪಲಿಲ್ಲ. ಮನುಷ್ಯರನ್ನು ತಲುಪಿದ. ಅದು ಪ್ರೀತಿಯ ಮೂಲಕ, ನಿರ್ಮೋಹದ ನೋಟದ ಮೂಲಕ, ಸಿದ್ದಾರ್ಥನಿಗೆ ವಯಸ್ಸಾದಂತೆಲ್ಲ ಆತನ ಸಹಜತೆ ಕೂಡ ಬೆಳೆಯುತ್ತಿತ್ತು; ಗಾಢ, ನೋವು, ದುಃಖದ ಮನುಷ್ಯನ, ಸಾವು ನೋವು ವಿರಹಗಳ ಬಲೆಯಲ್ಲಿ ಬಿದ್ದ ಮನುಷ್ಯನ ಅಸಹಾಯಕ ಸ್ಥಿತಿಗೆ ಪರಿಹಾರವಾಗಿ ಈತನಲ್ಲಿ ಅಪಾರ ಪ್ರೀತಿ ಮಾತ್ರ ಇತ್ತು. ಲಕ್ಷಾಂತರ ಶಿಷ್ಯರು, ಅಭಿಮಾನಿಗಳನ್ನು ಪಡೆದಿದ್ದ ಬುದ್ಧ ಶಿಸ್ತಿಗೆ, ದಕ್ಷತೆಗೆ ಪ್ರಖ್ಯಾತನಾಗಿದ್ದ. ಈತನ ಆಶ್ರಮಗಳು ನಡೆಯುತ್ತಿದ್ದ ಬಗೆಯನ್ನು, ಈತನ ಅನುಯಾಯಿಗಳ ಜೀವನದ ಕ್ರಮವನ್ನು ಗಮನಿಸಿದ ರಾಜನೊಬ್ಬ,“ನನ್ನೆಲ್ಲ ಸೈನ್ಯ, ಶಕ್ತಿ ಬಳಸಿದರೂ ಪ್ರಜೆಗಳಲ್ಲಿ ಈ ಶಿಸ್ತು ತರಲಾಗುತ್ತಿಲ್ಲ” ಅಂದ. ಅದಕ್ಕೆ ಸಿದ್ದಾರ್ಥ, “ವಿಶ್ವಾಸ ಪ್ರೀತಿ ಇದ್ದಲ್ಲಿ ಮಾತ್ರ ಶಿಸ್ತು ಸಾಧ್ಯ”ಎಂದು ಹೇಳಿದ. +ಸಿದ್ಧಾರ್ಥ ಜ್ಞಾನಿಯಾಗಿದ್ದ. ವಿದ್ವಾಂಸನಾಗಿರಲಿಲ್ಲ. ಗೊಡ್ಡುಪಾಂಡಿತ್ಯ ಕಂಡು ವಿಸ್ಮಿತನಾಗುತ್ತಿದ್ದ. ಪ್ರಕಾಂಡ ಪಂಡಿತನೊಬ್ಬ ತನ್ನ ಪಾಂಡಿತ್ಯದಿಂದ ಎಲ್ಲರಿಗೂ ಮುಖಭಂಗ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ಆತ ಸಿದ್ಧಾರ್ಥನನ್ನು ವಾದದಲ್ಲಿ ಸೋಲಿಸಲು ಸಲುವಾಗಿ ಬಂದು, “ಬ್ರಾಹ್ಮಣನ ಮುಖ್ಯ ಲಕ್ಷಣಗಳೇನು?” ಎಂದು ಕೇಳಿದ, ಆಗ ಬುದ್ಧ ಗಂಭೀರವಾಗಿ, “ನೀಚತನದಿಂದ ಮುಕ್ತನಾದವನು, ಪರಿಶುದ್ಧವುಳ್ಳವನು, ಮತ್ತು ಇತರರ ಮುಖಭಂಗ ಮಾಡದಿರುವವನು” ಎಂದು ನಸುನಕ್ಕ. +ಗೌತಮನ ಮನುಷ್ಯತ್ವ ಹಾಸ್ಯ, ರಸಿಕತೆ, ಭೂತದಯೆ,ಜೀವನ ಪ್ರೇಮವನ್ನು ಒಳಗೊಂಡಿತ್ತು. ಆತ ತಾನು ಕಂಡ ನದಿ, ಬೆಟ್ಟ, ಕಾಡುಗಳನ್ನು, ತನ್ನ ಪ್ರೀತಿಯ ಸ್ಥಳಗಳನ್ನು ಕುರಿತು ಭಾವುಕನಾಗಿ ಮಾತಾಡುತ್ತಿದ್ದ; ಅನೇಕ ಸಲ, ನೀನು ಈ ಭೂಮಿಯಲ್ಲಿ ಸ್ವರ್ಗ ಕಾಣಬೇಕೆಂದಿದ್ದರೆ ಈ ಜಿಲ್ಲೆಯ ಗಿರಿಜನರ ಹೆಣ್ಣುಮಕ್ಕಳನ್ನು ನೋಡು-ಎಂದು ಹೇಳಬಲ್ಲವನಾಗಿದ್ದ. +ಮುಖ್ಯವಾಗಿ ಈ ಸತ್ಯಶೋಧಕ ಸಿದ್ಧಾರ್ಥನ ಎದುರು ಜನ ಆತನ ಯಕ್ಷಿಣಿಗಾಗಿ, ಪವಾಡಕ್ಕಾಗಿ ಸೇರಿತ್ತಿರಲಿಲ್ಲ. ಆತನ ಪ್ರೀತಿಯ ಸಂಗಕ್ಕಾಗಿ, ಆತನ ತಾಯ್ತನಕ್ಕಾಗಿ ಸೇರುತ್ತಿದ್ದರು. ನೊಂದ ಅನ್ಯಾಯಕ್ಕೊಳಗಾದ, ಕ್ರೌರ್ಯದಲ್ಲಿ ಬೆಂದವರೆಲ್ಲ ಅಲ್ಲಿ ಪ್ರೀತಿ ಎಂಬ ಜ್ಞಾನದಲ್ಲಿ ಸ್ವಸ್ಥರಾಗುತ್ತಿದ್ದರು. +ಈಗ ಕೇಳಿಕೊಳ್ಳಿ, ಆತ ಇದಕ್ಕಾಗಿ ತನ್ನ ರಾಜ್ಯ ಬಿಟ್ಟಿದ್ದು ಸರಿಯೆ? ಆಡಳಿತಗಾರನಾಗಿ ಏನನ್ನಾದರೂ ಸಾಧಿಸಲು ಆಗುತ್ತಿರಲಿಲ್ಲವೆ? ಇದಕ್ಕೆ ನನ್ನಲ್ಲಿ ಒಂದು ಸಣ್ಣ ಉತ್ತರವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ, ನೆಹರೂ ಪಟೇಲರೆಲ್ಲ ಸಂಭ್ರಮದಿಂದ ಕೂಗಾಡುತ್ತಿದ್ದ ದಿನ ಗಾಂಧೀಜಿ ಕಲ್ಕತ್ತಾದಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದರು. +ಎರಡೂವರೆ ಸಾವಿರ ವರ್ಷಗಳ ಬಳಿಕ ಬುದ್ಧನ ಅಂಶಗಳನ್ನು ಪಡೆದು ಬಂದ ಗಾಂಧಿ ಪ್ರಧಾನಿಯಾಗಿ ಆಗಲಿ, ರಾಷ್ಟ್ರಾಧ್ಯಕ್ಷರಾಗಿ ಆಗಲಿ, ಅಧಿಕಾರ ಸ್ವೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಈ ಬಾಪುವಿನದು ಕೂಡ ಬುದ್ಧನ ದಾರಿಯಾಗಿತ್ತು. +ಈತ ಕೂಡ ಸತ್ಯವನ್ನು, ದೇವರನ್ನು ಹುಡುಕುತ್ತ ಹೋಗಿ, ಬದುಕಿನ ವಿರೋಧಾಭಾಸಗಳನ್ನು ಜೀವಸೆಲೆಗಳನ್ನು ಹುಡುಕುತ್ತ ಹೋಗಿ ಸರಳ ಕಾಣೆಯನ್ನು ಕಂಡುಕೊಂಡಿದ್ದರು. ಈಶ್ವರನ ಹುಡುಕಾಟದಿಂದಾಗಿಯೇ ನಿರೀಶ್ವರವಾದಿಯ ನಿಷ್ಠುರತೆಯನ್ನು, ದುರಂತ ಪ್ರಜ್ಞೆಯನ್ನು ಪಡೆದುಕೊಂಡಿದ್ದರು. ಸಿದ್ಧಾರ್ಥನಂತೆಯೇ ಕನಿಷ್ಠ ಜೀವಿಯಲ್ಲಿಯೂ ಗಾಢ ಪ್ರೀತಿಯನ್ನು ಇಟ್ಟಿದ್ದ ಗಾಂಧಿ ಮನುಷ್ಯ ತನಗಾಗಿ ಸೃಷ್ಟಿಸಿಕೊಂಡಿರುವ ಜಾತಿ, ಮೂಢನಂಬಿಕೆ, ಕ್ರೌರ್ಯ, ಅಸಹಾಯಕತೆಯನ್ನು ಕಂಡು ತಮ್ಮ ಸರಳ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದರು. +ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಗಟ್ಟಿದ ಭಾರತೀಯ ಗಾಂಧಿಯನ್ನು ಇಟ್ಟುಕೊಳ್ಳಲಿಕ್ಕಿಲ್ಲ. ಅಂದರೆ ಅವರ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು. +ಯಾವ ಅಧಿಕಾರದ ಗದ್ದುಗೆಯೂ, ಸೈನ್ಯದ ಆರ್ಭಟವೂ ಮನುಕುಲಕ್ಕೆ ನೀಡಲಾರದ ಕಾಣಿಕೆ ಇದು. +***** +ಕೀಲಿಕರಣ: ಪೃಥ್ವಿ-೬ನೇ ತರಗತಿ, ಅನ್ನಪೂರ್ಣ ಸುಬ್ಬರಾವ್ +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ಭಾಷೆ ಜನಸಂಪರ್ಕದ ಬಹು ಪ್ರಮುಖ ಸಾಧನ. ಮನುಷ್ಯರು ತಮ್ಮ ಎಲ್ಲ ಬಗೆಯ ಅನುಭವ, ಆಲೋಚನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾರೆ, ಇಂತಹ ಒಂದು ಅಭಿವ್ಯಕ್ತಿಮಾಧ್ಯಮ ಮನುಷ್ಯನಿಗೆ ದೊರಕಿರುವುದರಿಂದಲೇ ಅವನಿಂದ ಒಂದು ಸಮಾಜವನ್ನೂ ತನ್ಮೂಲಕ ನಾಗರಿಕತೆಯನ್ನೂ ಕಟ್ಟಲು […] +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_576.txt b/Kannada Sahitya/article_576.txt new file mode 100644 index 0000000000000000000000000000000000000000..40db3e3bf3ca4170492dce7cebb134fdeb2324d6 --- /dev/null +++ b/Kannada Sahitya/article_576.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ +ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. +ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ +ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. +ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ ಕಿವಿಯಾಗೇನ +ಹೋಗಿ ಸ್ವಲ್ಪ ಮಾತಾಡಿಸಣ್ಣ ಬಂದಿರಂತ. +ಅದು ನಿನಗ ಹೇಳೊದಕ್ಕ ಏನೋ ಸುದ್ದಿ ತಂದೈತಣ್ಣ +ಕೇಳಿ ತಿಳಕೊ ಏನು ಸುದ್ದಿ ಹೇಳ್ರಿ ನಾಮಗಂತ” +ಕಚ್ಚುವಂಥಾ ಅಧಿಕಾರ ನಾಯಿಯಂಥಾ ನಾಯಿಗಿಲ್ಲ +ಮನುಶೇರಿಗಂತೂ ಸಾಧ್ಯವಿಲ್ಲ ತಿಳಕೊಳ್ಳಣ್ಣಾ +ಕಸಿಯೋವಂಥಾ ಅಧಿಕಾರ ದೇವರಂಥಾ ದೇವರಿಗಿಲ್ಲ +ಕಳೆದುಕೊಳ್ಳೋ ಅಧಿಕಾರ ಮಾತ್ರ ನಮಗೇ ಐತಣ್ಣಾ| +***** +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +– ೧ – ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್ ಸಂಜೆ ಕೆಂಪು ತೋಟದಲ್ಲಿಂದು; ಮಳೆ ಬಂದು ಇಳೆ ಮಿಂದು ಮಡಿಯಾಗಿ ಮೈ ಮೆರೆಸಿತ್ತು ಸುತ್ತಮುತ್ತಲಿನಚ್ಚ ಹಸಿರು ದುಂದು. ಲಾಗಾಯ್ತಿನಂದವರಿಗೆ ನನ್ನ ಬಗೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_577.txt b/Kannada Sahitya/article_577.txt new file mode 100644 index 0000000000000000000000000000000000000000..2200d1779457e462dfffd50f72670bd19e223bf7 --- /dev/null +++ b/Kannada Sahitya/article_577.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು ಖಾಲಿ ಕಾಗದದ ಮೇಲೆ ಬರೆದು ಕೆಳಗೆ ಒಂದು ಗೀಟೆಳೆದು ಅದರ ಕೆಳಗೆ ಎರಡು ಚುಕ್ಕಿ ಇಟ್ಟು ಪುಳಕಿತನಾಗಿದ್ದ. ಯಾರಿಗಾದರೂ ತನ್ನ ಹೊಸ ಹೆಸರಲ್ಲಿ ಒಂದು ಪತ್ರವನ್ನು ಬರೆಯಬೇಕೆಂದುಕೊಂಡ. ಯಾರಿಗೆಂದು ತಿಳಿಯದೆ ಅಪ್ಪನಿಗೇ ಕ್ಷೇಮವಾಗಿ ತಲುಪಿದ್ದೇನೆಂದು ಹೇಳಿ ಒಂದು ಪತ್ರ ಬರೆದು ಕೆಳಗೆ ಪೂರಾ ಹೆಸರನ್ನು ಪ್ರಿಫಿಕ್ಸ್ ಸಫಿಕ್ಸ್ ಗಳ ಜೊತೆ ಬರೆದ. ಪತ್ರ ನೋಡಿ ಹಿರಿಹಿರಿ ಹಿಗ್ಗಿದರು ಅಪ್ಪ, ಅಮ್ಮ. +ಈಗ ಸುಮಾರು ವರ್ಷಗಳ ಹಿಂದೆ ಅಂದರೆ ಕ್ರಿಸ್ತಶಕ ಹತ್ತೊಂಬತ್ತುನೂರ ಎಂಭತ್ತಾರು ಎಂಭತ್ತೇಳರ ಸುತ್ತ ನಮ್ಮ ವಿನಾಯಕನಿಗೆ ಬಳ್ಳಾರಿಯೆಂಬ ಊರೊಂದಿದೆ ಅಂತ ಮಾತ್ರ ಗೊತ್ತಿತ್ತು. ಆಗ ರಾಜಧಾನಿಯ ಸ್ಟಾರ್ ರಾಜಕಾರಣಿಗಳ ಕಣ್ಣು ಬಳ್ಳಾರಿಯ ಮೇಲೆ ಇನ್ನೂ ಬಿದ್ದಿಲ್ಲದಿದ್ದುದರಿಂದ ಅದಿನ್ನೂ ತನ್ನ ವರ್ಚಸ್ಸನ್ನು ಪಡೆದುಕೊಂಡಿರಲಿಲ್ಲ. ಪ್ರೈಮರಿ ಸ್ಕೂಲಿನಲ್ಲಿ ಭೂಗೋಳದ ಮಾಸ್ತರರು ಬಣ್ಣಬಣ್ಣದ ನಕ್ಷೆಯನ್ನು ತೋರಿಸುತ್ತಾ ಕರ್ನಾಟಕದ ಹತ್ತೊಂಬತ್ತು ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು ಎಂದು ಹೇಳಿದ್ದೇ ನೆನಪು. ಆಗ ತಾನು ಬಳ್ಳಾರಿಗೆ ಹೋಗುತ್ತೇನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಆತ. ಪೀಯೂಸಿಯಲ್ಲೂ, ಸೀ‌ಈಟಿಯಲ್ಲೂ ಸುಮಾರಾಗಿ ಒಳ್ಳೆ ಮಾರ್ಕುಗಳು ಬಂದಾಗ, ಮುಂದೇನಾಗಬೇಕೆಂದು ಗೊತ್ತುಗುರಿ ಇಲ್ಲದೆ ಓದಿದ್ದರಿಂದ ರಿಸಲ್ಟ್ ಬಂದ ದಿನ ಏಕ್ ದಂ ಕನ್ಫ್ಯೂಸ್ ಆದ ವಿನಾಯಕ. ಅವನಿದ್ದ ಊರಿನಲ್ಲಿ ಅಲ್ಲಿಯತನಕ ಪೀಯೂಸಿಯಲ್ಲಿ ಪಾಸಾದವರು ಅಲ್ಲೇ ಊರಿನ ಆಫೀಸುಗಳಲ್ಲಿ, ಬ್ಯಾಂಕುಗಳಲ್ಲಿ ಕೆಲಸ ಮಾಡಲು ಶುರುಮಾಡಿದ್ದರಿಂದ ತನಗೆ ಈ ಊರಲ್ಲೇ ಯಾರೂ ರೋಲ್ ಮಾಡೆಲ್ಲುಗಳಿಲ್ಲವೆಂದು ಪರಿತಪಿಸಿದ್ದ. ವಿನಾಯಕನಿಗೆ ಒಳ್ಳೆ ಮಾರ್ಕ್ಸ್ ಬಂದಿದ್ದು ತಮ್ಮಿಂದಲೇ ಅಂದು ಸರಕಾರೀ ಜ್ಯೂನಿಯರ್ ಕಾಲೇಜಿನ ಲೆಕ್ಚರರುಗಳು ತಂತಮ್ಮಲ್ಲೇ ಜಗಳ ಕಾದುಕೊಂಡರು. ತಾನು ಡಾಕ್ಟರಾದರೆ ಹೇಗಿರುತ್ತದೆ ಎಂದು ಪರಿಣಿತ ಸಲಹೆ ಕೇಳಲು ಊರ ಡಾಕ್ಟರುಗಳ ಹತ್ತಿರ ಹೋಗಿದ್ದ. ಕೆದರಿದ ಕಣ್ಣುಗಳ, ಕುರುಚಲು ಗಡ್ಡದ, ಲೊಳಲೆ ಪ್ಯಾಂಟಿನ ಟ್ರಾಟ್ ಚಪ್ಪಲಿಯ ಈ ಹೈದನೆಲ್ಲಿ ಡಾಕ್ಟರಾಗುತ್ತಾನೆ ಎಂದು ಮನಸ್ಸಿನೊಳಗೇ ಒಮ್ಮೆ ಜೋರಾಗಿ ನಕ್ಕು ಡಾಕ್ಟರುಗಳು ಪುಗಸಟ್ಟೆ ಸಲಹೆಯನ್ನಂತೂ ಕೊಟ್ಟಿದ್ದರು. ಊಟ, ತಿಂಡಿ ಬಟ್ಟೆ ಪುಸ್ತಕಗಳಿಗೆ ಹೊಂಚಿಕೊಂಡರೆ ಸರಕಾರಿ ಕಾಲೇಜಿನಲ್ಲಿ ಮೆಡಿಕಲ್ ಮುಗಿಸುವುದು ಏನೂ ಕಷ್ಟವಲ್ಲವೆಂದು ಎಲ್ಲಾ ಡಾಕ್ಟರುಗಳೂ ಹೇಳಿದಾಗ, ಅಪ್ಪ ಹೇಗೋ ನೋಡಿಕೊಳ್ಳುತ್ತಾನೆಂದು ಧೈರ್ಯ ಮಾಡಿದ್ದ, ವಿನಾಯಕ ಜೋಷಿ. ರಿಸಲ್ಟು ಬಂದಾಗ ಪಟ್ಟಿಯಲ್ಲಿ ತನ್ನ ಹೆಸರಿದ್ದುದರಿಂದ ಖುಷಿಯೂ ಅದೇ ಹೆಸರಿನ ಮುಂದೆ ಬಳ್ಳಾರಿಯ ಹೆಸರೂ ಇದ್ದುದರಿಂದ ದುಃಖವೂ ಒಟ್ಟಿಗೇ ಆಗಿದ್ದವು. ಇರಲಿ, ಐದು ವರ್ಷ ತಾನೇ ಎಂದು ತನ್ನಂತಾನೇ ಸಮಾಧಾನ ಪಟ್ಟುಕೊಂಡಿದ್ದ. +ಕಳೆದ ಐದು ವರ್ಷಗಳಲ್ಲಿ ತಾನು ಕಂಪ್ಲೀಟ್ ಮನುಷ್ಯನಾಗಿದ್ದೇನೆ ಎಂದು ತತ್ವಜ್ಞಾನಿಯಂತೆ ಹೇಳಿಕೊಳ್ಳುತ್ತಾನೆ ಆಗಾಗ ವಿನಾಯಕ. ಈ ಡಾಕ್ಟರಿಕೆಯ ಜೊತೆಗೆ ಬಳ್ಳಾರಿಯ ಬಿಸಿಲೂ ಪಾಳುಬಂಡೆಗಳೂ ಹತ್ತಿರವಾಗಿವೆಯಂತೆ ಅವನಿಗೆ. ಅವನ ಆಪ್ತ ಮಿತ್ರರ ಬಳಿ ಹೀಗೆ ಹೇಳಿಕೊಳ್ಳುತ್ತಾನೆ. ” ಅಯ್ಯೋ ಪೆದ್ದೇ, ಇಲ್ಲಿಗೆ ಬಂದು ಐದು ವರ್ಷಗಳಾಗಿವೆ. ಎಲ್ಲೇ ಇದ್ದರೂ ನೀನು ಕಂಪ್ಲೀಟಾಗುತ್ತಿದ್ದೆ” ಎಂದು ಗಹಗಹಿಸಿ ನಗುತ್ತಾರೆ. ಆದರೂ ತಾನು ಬೆಳೆದಿರುವುದು ಈ ಬಳ್ಳಾರಿಯಿಂದಲೇ ಎಂದು ತೀರಾ ನಂಬಿದ್ದಾನೆ ಆತ. ಸ್ನೇಹಿತರ ಮಾತಿನಿಂದ ಡಿಪ್ರೆಸ್ ಆಗಬಾರದೆಂದು ಒಂದು ಐಟಿಸಿ ಎಳೆಯುತ್ತಾನೆ ಆಗಾಗ್ಗೆ. +ಹೌಸ್ ಸರ್ಜನ್ಸಿಯ ಮೊದಲ ದಿನದಂದು ತುಂಬಾ ಉತ್ಸಾಹದಿಂದಿದ್ದ. ಬೆಳಿಗ್ಗೆ ಎದ್ದು ಎರಡೆರಡು ಬಾರಿ ಶೇವ್ ಮಾಡಿ, ಮೀಸೆಯನ್ನು ಟ್ರಿಂ ಮಾಡಿ, ಮೊನ್ನೆ ಅಪ್ಪ ಹೊಲಿಸಿಕೊಟ್ಟಿದ್ದ ಹೊಸ ಬಟ್ಟೆ ಹಾಕಿ ಕನ್ನಡಿಯಲ್ಲಿ ಇಪ್ಪತ್ತು ಸಾರಿ ನೋಡಿಕೊಳ್ಳುತ್ತಾನೆ. ಇದೇ ಕೊನೆಯ ಬಾರಿ ಅಪ್ಪನ ದುಡ್ಡಿನಲ್ಲಿ ಶೋಕಿ ಮಾಡುವುದು , ಮುಂದಿನ ತಿಂಗಳಿನಿಂದ ನನ್ನದೇ ದುಡ್ಡಿರುತ್ತದೆ ಎಂದು ಖುಷಿಯಾಯಿತು. ಶರಟನ್ನು ಟಕ್ ಮಾಡಿ, ಪ್ಯಾಂಟಿನ ಜಿಪ್ ಏರಿಸಿ, ಸ್ಟೆತೋಸ್ಕೋಪನ್ನು ಹೆಗಲಿಗೆ ಏರಿಸಿ, ಬಿಳಿಯಕೋಟಿಲ್ಲದೇ ಹಾಸ್ಟೆಲ್ಲಿನ ರೂಮಿನಿಂದ ಹೊರಗೆ ಹೊರಟಾಗ ಪಕ್ಕದ ರೂಮಿನವ ” ನಮಸ್ಕಾರಾ ಡಾಕ್ಟರಿಗೆ” ಎಂದಾಗ ” ಸುಮ್ನಿರಪ್ಪ” ಎಂದು ತೋರಿಕೆಗೆ ಅಂದರೂ ಒಳಗೊಳಗೇ ಖುಷಿಯಾಗುತ್ತದೆ. ತಿಂಡಿಗೆ ಮೆಸ್ಸಿಗೆ ಹೋಗುತ್ತಿದ್ದಾಗ ಬಲಗಡೆಯಿರುವ ಹುಡುಗಿಯರ ಹಾಸ್ಟೆಲ್ಲಿನ ಮುಂದೆ ನಿಂತಿರುವವರೆಲ್ಲಾ ತನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿದಾಗ ನಡಿಗೆಯ ಸ್ಟೈಲು ಬದಲಾಗುತ್ತದೆ. ಯಾರೋ ಕಿಸಕ್ಕನೆ ನಕ್ಕಾಗ ತನ್ನನ್ನು ನೋಡಿ ಅಲ್ಲವೆಂದು ಸಮಾಧಾನ ಪಟ್ಟುಕೊಂಡ. +ಈ ಕಾಲೇಜಿನ ಹುಡುಗಿಯರ ವಿಚಾರ ತನಗೆ ಪೂರಾ ಸರಿಯಾಗಿ ಗೊತ್ತಿಲ್ಲವೆಂದು ಬಹಳ ಸಾರಿ ಅಂದುಕೊಂಡಿದ್ದಾನೆ ವಿನಾಯಕ. ಎರಡನೇ ಎಂಬಿಬಿ‌ಎಸ್ ನ ಮೂರನೇ ಫೇಸಿನಲ್ಲಿದ್ದಾಗ ತಾನೂ ಯಾವುದಾದರೂ ಹುಡುಗಿಯನ್ನು ಪಟಾಯಿಸಬೇಕೆಂಬ ಬಯಕೆ ತೀರ ಬಲವತ್ತರವಾಗಿತ್ತು. ಎಲ್ಲ ಮಂಗವಿದ್ಯೆಗಳನ್ನೂ ಪ್ರಯತ್ನಿಸಿ ನೋಡಿದ್ದ. ಕೂಲಾಗಿ ಕಾಣುತ್ತದೆಂದು ಐಟಿಸಿ ಎಳೆದ, ಹೋತದ ಗಡ್ಡ ಬಿಟ್ಟ. ಅಪ್ಪನ ತಿಂಗಳ ಕೋಟಾದಲ್ಲಿ ಸ್ವಲ್ಪ ದುಡ್ಡು ಉಳಿಸಿ ಆ ಉರಿಬಿಸಿಲಿನಲ್ಲಿಯೂ ಜೀನ್ಸ್ ಜಾಕೆಟ್ ಹಾಕಿ ರೂಂ ಮೇಟಿನ ಬೈಕಿನಲ್ಲಿ ಲೈಸೆನ್ಸಿಲ್ಲದೆ ಹುಡುಗಿಯರ ಹಾಸ್ಟೆಲ್ಲಿನ ಹಿಂದೆ ಮುಂದೆ ತಿರುಗಾಡಿದ. ಒಂದು ಬಾಟಲ್ ಬೀರ್ ಕುಡಿದು ಗಣಪತಿ ಉತ್ಸವದಲ್ಲಿ ಹುಡುಗಿಯರ ಹಾಸ್ಟೆಲ್ಲಿನ ಮುಂದೆ ಥಕಥಕ ಕುಣಿದು ಬಿದ್ದು ಮಂಡಿ ತರಚಿಸಿಕೊಂಡ. ಕಾಲೇಜಿನಲ್ಲಿ ಸ್ಟ್ರೈಕಾದಾಗ ತಾನೂ ಆಮರಣಾಂತ ಉಪವಾಸ ಕೂತರೆ “ಸಿಂಪತಿ”ಯಿಂದಾದರೂ ಯಾರಾದರು ಒಲಿಯಬಹುದೆಂದು ಹಿಂದೆ ಮುಂದೆ ನೋಡದೇ ಉಪವಾಸ ಕೂತ. ಮೊದಲನೆಯ ದಿನ ಕಾಲೇಜಿನ ಐದು ಹುಡುಗಿಯರು ಇವನನ್ನು ಸೇರಿ ಉಳಿದ ಐದು ಜನ ಉಪವಾಸ ಕುಳಿತವರಿಗೂ ರಾಖಿ ಕಟ್ಟಿ” ಹಂ ಹೋಂಗೆ ಕಾಮ್ ಯಾಬ್” ಎಂದು ಹಾಡಿ ಹರಸಿದಾಗ, ಗೊಳೋ ಎಂದು ಅತ್ತಿದ್ದ. ಮೂರನೇ ದಿನ ಯೂರಿನ್ ಟೆಸ್ಟ್ ಮಾಡಿ ಪೋಲೀಸರು ಬಲವಂತದಿಂದ ಆಸ್ಪತ್ರೆಗೆ ಸೇರಿಸಿ ಡ್ರಿಪ್ ಹಾಕಿದಾಗಲಾದರೂ ಯಾರಾದರೂ ಬಂದು ತಲೆ ನೇವರಿಸಬಹುದೆಂದುಕೊಂಡ. ಅದೂ ಫಲಿಸಿರಲಿಲ್ಲ. +ತಾನು ಬೇಡ ಬೇಡ ಅಂದರೂ ತನ್ನ ಹಿಂದೆ ತಿರುಗುತ್ತಿದ್ದ ಸುಗುಣಳ ನೆನಪು ಆಗಾಗ್ಗೆ ಬರುತ್ತಿತ್ತು. ಅದೃಷ್ಟ ಅಂದರೆ ಹೀಗೇ ಅನ್ನಿಸುತ್ತೆ, ತಾನು ಯಾರಿಗೆ ಬೇಡವೋ ಅವರು ನನಗೆ ಬೇಕು. ಸುಗುಣಳನ್ನು ನೋಡಿದಾಗ ಒಮ್ಮೊಮ್ಮೆ ತಪ್ಪು ಮಾಡಿದೆನೆನಿಸುತ್ತಿತ್ತು. ತಾನು ತಪ್ಪು ಮಾಡಿದ್ದಕ್ಕಿಂತ ಆ ತಪ್ಪಿನಲ್ಲಿ ಅವಳ ಪಾಲು ಇಲ್ಲವೆಂದು ಅವಳು ತಿಳಿದಿದ್ದಳೋ ಅನ್ನುವ ಅನಿಸಿಕೆಯೇ ಅವನನ್ನು ಮತ್ತೂ ತಪ್ಪಿತಸ್ಥನನ್ನಾಗಿ ಮಾಡಿತ್ತು. ಇವತ್ತು ಅವಳನ್ನು ನೆನಪುಮಾಡಿಕೊಳ್ಳಬಾರದು ಎಂದುಕೊಂಡ. +ತನಗ್ಯಾಕೆ ಹೀಗೆ ಎಂದು ಎಲ್ಲ ಬಲ್ಲ ಒಬ್ಬ ಸ್ನೇಹಿತನನ್ನು ಕೇಳಿದಾಗ, ಎಲ್ಲೋ ಮಚ್ಚೆ ಇದ್ದರೆ ಸ್ತ್ರೀಸಂಗ ಸುಲಭವೆಂದು ಗಿಳಿಶಾಸ್ತ್ರ ಹೇಳಿದ ಸ್ನೇಹಿತ. ಒಬ್ಬನೇ ಇದ್ದಾಗ ನೋಡಿ ತನಗಲ್ಲಿ ಮಚ್ಚೆಯಿಲ್ಲವೆಂದು ತಿಳಿದಾಗ ಮೂರುದಿನ ಹತಾಶನಾಗಿದ್ದ. ಆಮೇಲೆ ಇವೆಲ್ಲ ಮೂಢನಂಬಿಕೆಯೆಂದು ಝಾಡಿಸಿ ಎದ್ದು ತನ್ನ ಪ್ರಯತ್ನವನ್ನು ದುಪ್ಪಟ್ಟುಮಾಡಿದ್ದ. ಕಕ್ಕಸಲ್ಲಿ ಕೂತು ಸೀನಿದಾಗಲೂ ” ಎಕ್ಸ್ ಕ್ಯೂಸ್ ಮಿ” ಅನ್ನುವ ಮಂಡ್ಯದ ಗುರುವೇಗೌಡ ಹುಡುಗಿಯನ್ನು ಹಿಡಿದಾಗಲಂತೂ ಮುಂದಿನ ಸರದಿ ತನ್ನದೇ ಅನ್ನಿಸಿತ್ತು. ಹೋದಲ್ಲಿ ಬಂದಲ್ಲಿ ಹುಡುಗಿಯರಿದ್ದಾರ ನೋಡಿ ಕೆಮ್ಮಿ, ಸೀನಿ ನೂರಾರು ಬಾರಿ ಎಕ್ಸ್ ಕ್ಯೂಸ್ ಆದ. ಕೆಮ್ಮಿ ಕೆಮ್ಮಿ ಗಂಟಲು ನೋವಾಯಿತೇ ಹೊರತು ಯಾವ ಕನ್ಯಾಮಣಿಯೂ ಇವನಿಗೆ ಒಲಿಯಲಿಲ್ಲ. +ಆದರೆ ಈಗಿನ ಕಥೆಯೇ ಬೇರೆ ಅಂದುಕೊಂಡಿದ್ದ. ಈಗ ತಾನು ಡಾಕ್ಟರು. ಒಂಥರಾ ಥ್ರಿಲ್ ಇರುತ್ತೆ ಹೀಗೆ ಡಾಕ್ಟರು ಅನ್ನಿಸಿಕೊಳ್ಳುವುದಕ್ಕೆ. ಈ ವರ್ಷವಾದರೂ ಒಂದು ಹುಡುಗಿಯನ್ನು ಒಲಿಸಿಕೊಳ್ಳಲೇಬೇಕೆಂದು ಮೆಸ್ಸಿನಲ್ಲಿ ಉಪ್ಪಿಟ್ಟು ತಿನ್ನುತ್ತಿರುವಾಗ ಪ್ರತಿಜ್ಞೆ ಮಾಡಿದ್ದ.ಉಪ್ಪಿಟ್ಟು ಮುಗಿಸಿ ಸೊರ್ರೆಂದು ಟೀ ಹೀರಿ ವಾರ್ಡಿಗೆ ಬಂದಾಗ ರೌಂಡ್ಸ್ ಶುರುವಾಗಿಹೋಗಿತ್ತು. ಮೊದಲದಿನವೇ ಲೇಟೆಂದು ಎಲ್ಲರೂ ಒಂಥರಾ ನೋಡಿದರು. ಅವನೂ ಎಲ್ಲರನ್ನೂ ನೋಡುತ್ತಾ ಬಂದಾಗ ನರ್ಸ್ ರುದ್ರಮ್ಮಳ ಹೊಟ್ಟೆ ಕಾಣಿಸಿತು. ಅವನಿಗರಿವಿಲ್ಲದೇ ದೃಷ್ಟಿ ಅಲ್ಲಿ ನೆಟ್ಟಿತು. ಮರುಕ್ಷಣವೇ ಸಾವರಿಸಿಕೊಂಡ. ಥತ್ತೇರಿ, ನಲವತ್ತರ ತರಿತರಿ ಹೊಟ್ಟೆ ಹೊಕ್ಕುಳುಗಳಿಗೆ ಜುಂ ಎನ್ನುವಷ್ಟು ಹಡಬೆ ಎದ್ದು ಹೋಗಿದೆ ತನ್ನ ಜೀವನ ಎಂದು ತನ್ನನ್ನೇ ತಾನು ಬೈದುಕೊಂಡ. ರೌಂಡ್ಸ್ ನಡೆಯುತ್ತಲೇ ಇತ್ತು. ಬೆಡ್ಡಿನಿಂದ ಬೆಡ್ಡಿಗೆ ಹೋಗುತ್ತಿದ್ದಾಗ ರುದ್ರಮ್ಮನ ಸುಪುಷ್ಟ ಅಂಗಾಂಗಗಳನ್ನು ನೋಡುತ್ತಾ ನೋಡುತ್ತಾ ಆನಂದಸಂಕಟಾದಿಗಳು ಒಟ್ಟಿಗೆ ಆಗಹತ್ತಿದವು. ತಲೆನೋವಿನ ನೆಪಹೇಳಿ ಕ್ಯಾಂಟೀನಿಗೆ ಹೋಗಿ ಒಂದು ಸಿಂಗಲ್ ಟೀಯನ್ನೂ ಐಟಿಸಿಯನ್ನೂ ಒಟ್ಟಿಗೇ ಮುಗಿಸಿದ. +ಈ ಬಳ್ಳಾರಿಯ ಬಂಡೆಗಳಂತೆಯೇ ಆಗಿಬಿಟ್ಟಿತು ನನ್ನ ಜೀವನ ಎಂದು ಮರುಗಿಕೊಂಡ. ಈ ಬಿಸಿಲಿಗೆ, ಈ ಬಂಡೆಗಳಿಗೆ ಜೀವವಿದ್ದಿದ್ದರೆ ಅವೂ ನನ್ನನ್ನು ನೋಡಿ ಅಟ್ಟಹಾಸ ಮಾಡಿ ನಗುತ್ತಿದ್ದವೇನೋ ಅನ್ನಿಸಿತು. ತಾನೇಕೆ ಎಲ್ಲ ಹುಡುಗಿಯರಿಗೂ ಅಸಂಗತನಾಗುತ್ತೇನೆ. ಯಾವುದೇ ತೀವ್ರಗತಿಯ ಸಂಬಂಧಗಳಿಲ್ಲದೆ ಕ್ಯಾಷುಯಲ್ ಸ್ನೇಹಕ್ಕೆ ಸಿಗುವ ಮೆಟೀರಿಯಲ್ ಅಲ್ಲವೇ ನನ್ನ ಜೀವನ. ಪ್ರೇಮಿಸಲೂ ಬೇಡ, ಕಾಮಿಸಲೂ ಬೇಡ, ಮಾತಾಡಿಸಿ ಜೊತೆಗೆ ಓಡಾಡುವಂತಹ ಜತೆಗಾತಿಯೂ ಸಿಗದ ಬರಡು ಬಾಳಾಯಿತಲ್ಲ ನನ್ನದು ಎಂದು ಕೊರಗುತ್ತಾನೆ. ಕೊರಗು ಜಾಸ್ತಿಯಾದಂತೆಲ್ಲ ಐಟಿಸಿ ಬೇಗ ಖರ್ಚಾಗುತ್ತದೆ. ಎಂತಹ ಶಾಸನಗಳು ಎಚ್ಚರ ವಿಧಿಸಿದರೂ ಉದ್ಧಟಿಸಬೇಕೆನ್ನುವ ಹುಂಬತನ ಜಾಸ್ತಿಯಾಗುತ್ತದೆ. +ಕ್ಯಾಂಟೀನಿನಿಂದ ಹೊರಗೆ ಬಂದಾಗ ಸುಗುಣ ಸಿಗುತ್ತಾಳೆ. ನಕ್ಕು ” ಕಂಗ್ರಾಟ್ಸ್” ಅನ್ನುತ್ತಾಳೆ. ಮುಖದಲ್ಲಿ ಏನೋ ಗೆದ್ದ ಕಳೆಯಿತ್ತು. ವರ್ಷದಲ್ಲಿ ಮೊದಲ ಬಾರಿಗೆ ಮಾತಾಡಬೇಕೆನಿಸುತ್ತದೆ. ಕಳೆದ ಎರಡು ವರ್ಷದಿಂದ ಕಾಣದೇ‌ಇದ್ದುದು ಇಂದೇನು ಕಾಣುತ್ತಿದ್ದೇನೆ ಎಂದು ತನ್ನಂತಾನೇ ಆಶ್ಚರ್ಯಪಡುತ್ತಾನೆ. ” ಏನು, ಕೂದಲು ಬಾಬ್ ಮಾಡಿಸಿದ್ಯಾ” ಪ್ರಶ್ನೆ ಕೇಳಬೇಕೆಂದು ಕೇಳುತ್ತಾನೆ. ಹೌದೆಂದು ನಗಲೋ ಬೇಡವೋ ಅನ್ನುವಂತೆ ನಗುತ್ತಾಳೆ. ” ಸ್ವಲ್ಪ ಸಣ್ಣಗಾಗಿದಿ” ಎಂದು ಹೇಳಿ ತಪ್ಪುಮಾಡಿದವನಂತೆ ನೋಡುತ್ತಾನೆ . ಮರುಮಾತಿಲ್ಲದ್ದೇ ಕ್ಯಾಂಟೀನಿನೊಳಗೆ ಹೋಗಿ ತನ್ನ ಗುಂಪು ಸೇರುತ್ತಾಳೆ.”ಸಾರೀ” ಎಂದು ಅವಳಿಗೆ ಕೇಳುವ ಹಾಗೆ ಕೂಗಿ ಹೊರಕ್ಕೆ ಬರುತ್ತಾನೆ. +ಬೇಕೆಂದು ಮನಸ್ಸು ಒಂದೂವರೆ ವರ್ಷ ಹಿಂದೆ ಓಡುತ್ತದೆ. ಘೋಶ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ರಾತ್ರಿ ಡ್ಯೂಟಿ. ಜೋಷಿ ಕೊನೆಯವರ್ಷ. ಸುಗುಣ ಮೂರನೇ ವರ್ಷ. ಮೆಡಿಕಲ್ ಕಾಲೇಜಿನಲ್ಲಿ ಇರುವ ಎರಡು ವರ್ಷದ ವ್ಯತ್ಯಾಸ ಜಗತ್ತಿನ ಬೇರೆಲ್ಲೂ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಸೀನಿಯಾರಿಟಿ ಬಂದುಬಿಟ್ಟಿತ್ತು ಜೋಷಿಗೆ. ಅವನ ಹಿಂದೆ ಯಾವುದಾದರೂ ಮಕ್ಕಳ ಡೆಲಿವೆರಿ ಮಾಡಿಸಬಹುದೆಂದು ತಿರುಗುವ ಕೆಲಸ ಸುಗುಣಳದು. ಐದೈದು ಜನ ಇರುವ ಈ ಗುಂಪಿನಲ್ಲಿ ಜೋಷಿಯ ಹಿಂದೆ ಈ ಹುಡುಗಿಯಾದರೂ ಬಿತ್ತಲ್ಲ ಅನ್ನುವ ಸಮಾಧಾನ ಜೋಷಿಯ ಗೆಳೆಯರೆಲ್ಲರಿಗೂ ಆಗಿತ್ತು. ದಪ್ಪ ತುಟಿಯ, ಪಿರಿಚು ಕಣ್ಣಿನ, ಬಾಚಿಹಲ್ಲಿನ ಪೀಚು ಹುಡುಗಿ ಸುಗುಣ. ಕಾಲೇಜಿನ “ಸಾಟ್ ಆಫ್ಟರ್” ಹುಡುಗಿಯರ ಗುಂಪಿನಲ್ಲಿ ಖಂಡಿತಾ ಸೇರಿರಲಿಲ್ಲ. ಹೆಣ್ಣು ಅನ್ನುವ ಯಾವುದೇ ವಸ್ತುವನ್ನು ನಿರಾಕರಿಸಲೊಲ್ಲದವರೂ ಅವಳಿಂದ ಮಾರುದೂರ ಇರುತ್ತಿದ್ದರು. ಅವಳು ತನ್ನ ಯುನಿಟ್ಟಿಗೆ “ಜ್ಯೂನಿಯರ್” ಆಗಿ ಬರುತ್ತಾಳೆಂದು ತಿಳಿದಾಗ ತನ್ನ ಹಣೆಬರಹವನ್ನು ಮನಸಾರೆ ಶಪಿಸಿದ್ದ ವಿನಾಯಕ. ಆಡಲಾಗದೆ ಅನುಭವಿಸಿದ್ದ. +ದಿನಾ ನೋಡುತ್ತಿದ್ದರೆ ಶೂರ್ಪನಖಿಯೂ ಶಕುಂತಲೆಯ ರೀತಿ ಕಾಣುತ್ತಾಳಂತೆ. ಕಲ್ಲೂ ಶಿಲಾಬಾಲಿಕೆಯ ರೀತಿ ಕಾಣಿಸತೊಡಗಿತ್ತು ಜೋಷಿಗೆ. ಮನಸ್ಸು ಕಣ್ಣೂ ನಿರಾಕರಿಸಿದ್ದನ್ನು ದೇಹ ಬೇಕೆಂದಿತ್ತು. ತನಗೇ ತಿಳಿಯದೆ ಸುಗುಣಳ ಹಿಂದೆ ತಿರುಗಲಾರಂಭಿಸಿದ್ದ. ಅದೊಂದು ರೀತಿಯ ವಿಚಿತ್ರ ಸಂಬಂಧ. ದೇಹದ ಎಲ್ಲಾ ಭಾಗಗಳಿಗೂ ಬೇಕಾದ ಹುಡುಗಿಯಾಗಿರಲಿಲ್ಲ ಆಕೆ. ಆದರೂ ಕದ್ದು ಕದ್ದು ತಿರುಗಿದ ಜೋಷಿ. ತಾನು ತೀರ ಗತಿಗೆಟ್ಟು ಈ ರೀತಿಯಾದನೇ ಎಂದು ಬಹಳ ಸಾರಿ ಕೇಳಿಕೊಂಡಿದ್ದ. ಇರಬಹುದು ಅನ್ನಿಸಿದ ತಕ್ಷಣ ಪರವಾಗಿಲ್ಲ ಅಂತಲೂ ಅನ್ನಿಸಿತ್ತು. ಸರಿ, ಹದಿನೈದು ದಿನಗಳಲ್ಲಿ ಬಳ್ಳಾರಿಯ ಬೀದಿಬೀದಿಗಳಲ್ಲಿ ತಿರುಗತೊಡಗಿದ್ದರು. ರಾಧಿಕಾ ಟಾಕೀಸಿನ ಮೂಲೆಮೂಲೆಯ ಸೀಟುಗಳು ಸವೆದವು. ಮಯೂರ ಹೋಟೆಲಿನ ಐಸ್ ಕ್ರೀಮು ಸಾಲುಸಾಲಾಗಿ ಖರ್ಚಾಗತೊಡಗಿದವು. ಬಳ್ಳಾರಿಯಲ್ಲಿ ತಿರುಗಲೆಲ್ಲೂ ಜಾಗ ಸಿಗದೆ ವಡ್ಡರ ಬಂಡದ ಬ್ರಿಡ್ಜ್ ಮೋರಿಯ ಮೇಲೆ ಕೂತು ಮಂಡಕ್ಕಿ ಮೆಣಸಿನಕಾಯಿ ತಿಂದರು. ಸತ್ಯನಾರಾಯಣಪೇಟೆಯ ಮಠಕ್ಕೂ ಹೋಗಿಬಂದರು. ತಿಂಗಳೊಳಗೆ ಜೋಷಿ, ಸುಗುಣ ವಿನೂ ಸುಗ್ಗುವಷ್ಟು ಹತ್ತಿರವಾಗಿದ್ದರು. +“ಪ್ರೇಮ ಕುರುಡು ಅನ್ನೋ ಮಾತನ್ನು ನಮ್ಮ ಜೋಷಿಯನ್ನು ನೋಡಿದ ಮೇಲೆಯೇ ಹೇಳಿದರೆಂದರು ಅವನ ಸ್ನೇಹಿತರುಗಳು. ” ಏನ್ಗುರು ಕವರ್ ದ ಫೇಸ” ಎಂದು ತಮಾಷೆ ಮಾಡಿದರು ” ಕೈ ತೊಳ್ಕೊಂಡು ಮುಟ್ಟೋದಲ್ಲಮ್ಮ, ಮುಟ್ಟಿ ಕೈ ತೊಳ್ಕೊಬೇಕು” ಹಾಗೆ ಹೀಗಂತ ಹಾಸ್ಯ ಮಾಡಿದ್ದರು. ” ಮುಚ್ರೋಲೋ, ಮೈಸೂರು ಪಾಕ್ ತಿಂದೋನಿಗೇ ಗೊತ್ತು ಅದರ ರುಚಿ ಎಂದು ಅವರಿವರ ಬಾಯಿ ಮುಚ್ಚಿಸಿದ್ದ. ರುಚಿ ಅಂದರೆ ಏನು ಎಂದು ಪೂರಾ ತಿಳಿದಿರಲಿಲ್ಲ ಜೋಷಿಗೆ. ತಿಳಿದಿದೆ ಎಂದು ಸಂತೈಸಿಕೊಂಡಿದ್ದ. +” ಈ ಲೈಫ್ ಅನ್ನೋದು ಎಷ್ಟು ಗೋರಿಯಾಗಿರುತ್ತೆ ಅನ್ನೋದೇ ಗೊತ್ತಾಗದೇ ಹುಟ್ತಾವೆ ನೋಡು, ಈ ಮಕ್ಳು” ಹೆರಿಗೆ ಕೋಣೆಯಿಂದ ಹೊರಗೆ ಬರುತ್ತಾ ಹೇಳಿದ್ದ, ಜೋಷಿ ಒಂದು ದಿನ. ಮಿಕಿಮಿಕಿ ನೋಡಿದಳು ಸಂದರ್ಭ ಅರ್ಥವಾಗದೆ. ” ಯಾಕೆ ಗೋರಿ ಅನ್ನೋ ಪದಕ್ಕೆ ಅರ್ಥ ಹುಡುಕುತ್ತಿದ್ದೀಯ ಅಲ್ಲವಾ” ಗೆದ್ದಂತೆ ಕೇಳಿದ. ಮತ್ತೂ ಬೆಪ್ಪಾದಳು ಸುಗುಣ. ತನ್ನನ್ನು ಹಂಗಿಸಲೆಂದೇ ಒಂದು ಸನ್ನಿವೇಶವನ್ನು ಸೃಷ್ಟಿಸುತ್ತಿದ್ದಾನೆ ಎಂದು ಅರಿವಾಗುವ ಮೊದಲು” ಹೋಗಲೀ ಬಾ, ಟೀ ಕುಡಿಯೋಣ” ಎಂದು ಕ್ಯಾಂಟೀನಿಗೆ ಕರೆದೊಯ್ದ. ” ಇವೊತ್ತು ನೀನೊಂತರಾ ಚೆನ್ನಾಗಿ ಕಾಣಿಸ್ತಾ ಇದ್ದೀಯಾ” ರಮಿಸಲು ಹೇಳಿದ. ಆ ಕಂದು ಮುಖದಲ್ಲಿ ತುಟಿಗಳಲ್ಲಿ ಸಂಜೆಯ ರಂಗು ಕಾಣುತ್ತದೇನೋ ಎಂದು ಹುಡುಕಿದ ಜೋಷಿ. +” ವಿನೂ” ಮೆಲ್ಲಗೆ ಉಸಿರಿದ್ದಳು ಮಬ್ಬುಬೆಳಕಿನಲ್ಲಿ” ನನ್ನ ಹಿಂದೆ ಯಾಕೆ ಬಿದ್ದಿದ್ದೀಯ. ನಾವ್ಯಾಕೆ ಈ ತರ ಜೊತೆಜೊತೆಯಾಗಿ ಓಡಾಡ್ತಾ ಇದೀವಿ. ಎಲ್ಲಿಯತನಕ ಜೊತೆಯಾಗಿರ್ತೀವಿ ಅನ್ನೋದನ್ನು ಯೋಚನೆ ಮಾಡಿದ್ದೀಯಾ” ಕೇಳಿದಳು. ಬನ್ನಂಜೆ ಗೋವಿಂದಾಚಾರ್ಯರ ಕ್ಯಾಸೆಟ್ ಕೇಳಿದಂತಾಗಿತ್ತು ಜೋಷಿಗೆ. ಬಹಳ ಕಷ್ಟವಾದ ಪ್ರಶ್ನೆ ಎನ್ನಿಸಿತು. ಉತ್ತರ ಕೊಡದೆ ಮಂಕಾದ. ” ನಮ್ಮ ಸಂಬಂಧ ಮೇಲ್ನೋಟಕ್ಕೆ ಎಲ್ಲರಂತೆ ಕಾಣಬಹುದು. ಆದರೆ ನಾನು ನಿರೀಕ್ಷಿಸಿದ್ದ ಯಾವುದೋ ಒಂದು ಆತ್ಮೀಯತೆ ಇಲ್ಲಿಲ್ಲ ಅನ್ನಿಸುತ್ತೆ. ಇಲ್ಲಿ ನಮ್ಮಿಬ್ಬರ ಅವಶ್ಯಕತೆಗಳೇ ಮುಖ್ಯವಾಗಿದೆಯಲ್ಲವೇ. ದೇಹದ ಸೌಂದರ್ಯವನ್ನು ಮೀರಿದ ಪ್ರೀತಿ ನಿನ್ನದು ಅನ್ನೋದು ತೋರಿಕೆ ಅಲ್ವಾ ವಿನೂ? ಮನಸ್ಸಿನದೋ, ದೇಹದ್ದೋ ಈ ಆಸೆ ಅನ್ನೋದು ಕೆಲವೊಮ್ಮೆ ಹೊರಗಿನ ಅಪಿಯರೆನ್ಸನ್ನು ಮುಚ್ಚಿಬಿಡುತ್ತೆ ಅಲ್ವಾ” ಎಂದಳು. +ಈ ರೀತಿಯ ಪ್ರಹಾರಕ್ಕೆ ಸಿದ್ಧನಿರಲಿಲ್ಲ ಜೋಷಿ. ಎಲಾ ಇವಳ, ಇವಳಿಗೆ ಮಾತಾಡಲು ಬರುತ್ತದೆ. ಬರೀ ಮಾತಲ್ಲ, ಸೊಗಸಾಗಿಯೇ ಮಾತಾಡುತ್ತಾಳೆ. ನಾನು ಇವಳನ್ನು ತಿರುಗಿಸಿದ್ದು, ದುಡ್ಡು ಖರ್ಚು ಮಾಡಿದ್ದು ಅವಳ ಖುಷಿಗೋ, ನನ್ನ ಖುಷಿಗೋ. ಜೀವನದಲ್ಲಿ ಇದೊಂದೇ ಅಲ್ಲವೇ ಕಾಂಪ್ಲಿಮೆಂಟರಿ ಸಂತೋಷ. ಒಬ್ಬರಿಗೆ ಖುಷಿಯಾಗಿದೆ ಎಂದರೆ ಇನ್ನೊಬ್ಬರಿಗೆ ಖುಷಿಯಾಗಿದೆ ಎಂದೇ ಅರ್ಥ. ಅದೂ ಅಲ್ಲದೆ, ಇವಳ ಮುಖಕ್ಕೆ ನಾನು ಸಿಕ್ಕಿರುವುದೇ ಜಾಸ್ತಿ. ಸಿಕ್ಕಿದೆ ಎಂದು ಅನುಭವಿಸುವುದನ್ನು ಬಿಟ್ಟು ಇದ್ದಕ್ಕಿದ್ದ ಹಾಗೆ ಏನೋ ಮಾತನಾಡುತ್ತಿದ್ದಾಳಲ್ಲ ಅನ್ನಿಸಿತು. +” ಈಗ್ಯಾಕೆ ಆ ವಿಷಯ, ಆರಂಟ್ ಯು ಹ್ಯಾವಿಂಗ್ ಅ ಗುಡ್ ಟೈಂ” ಇಂಥ ಸಮಯದಲ್ಲಿ ಇಂಗ್ಲೀಷೇ ಸರಿ ಎಂದು ಕೊಂಚ ಅಸಹನೆಯಿಂದ ಕೇಳಿದ್ದ ಜೋಷಿ. ಇದ್ದಕ್ಕಿದ್ದ ಹಾಗೆ ಜೋರಾಗಿ ಅಳಲು ಶುರುಮಾಡಿದಳು ” ವಿನೂ ನನಗೆ ಸಿಂಪತಿ ಬೇಡ, ಪ್ರೀತಿ ಬೇಕು. ನನ್ನನ್ನು ತಿರುಗಿಸಿ, ಐಸ್ ಕ್ರೀಂ ಕೊಡಿಸಿ ಉಪಕಾರ ಮಾಡಿದ್ದೀಯ. ಅದಕ್ಕೆ ಪ್ರತಿಯಾಗಿ ನಿನಗೆ ಏನು ಸಿಕ್ಕಿದೆ ಅನ್ನುವುದೂ ನಿನಗೆ ಗೊತ್ತು. ಬರೀ ಐಸ್ ಕ್ರೀಮಿಗೆ ಪಿಕ್ಚರಿಗೆ ಸಿಗೋ ಸಂಬಂಧವಾಗಬಾರದು ನಮ್ಮದು ” ಬಿಕ್ಕುತ್ತಿದ್ದಳು. +ಜೋಷಿಗೆ ಈಗ ತೀರ ಕಸಿವಿಸಿಯಾಯಿತು. ” ಸುಗುಣ, ನಾನು ತುಂಬಾ ಮುಂದೆ ಯೋಚನೆ ಮಾಡಿಲ್ಲ. ಮಾಡುವಷ್ಟು ದೊಡ್ಡ ವಯಸ್ಸೂ ಅಲ್ಲ ನಮ್ಮದು. ಏನೋ ಸ್ವಲ್ಪ ಖುಷಿಯಾಗಿರಬೇಕನ್ನಿಸಿತ್ತು. ನಿನಗೂ ಹಾಗೇ ಅನ್ನಿಸಿರಬೇಕೆಂದಂದುಕೊಂಡೆ. ಈಗ ನನ್ನಿಂದ ನೀನು ಏನನ್ನು ನಿರೀಕ್ಷಿಸುತ್ತಿದ್ದೀಯ ಅನ್ನೋದನ್ನು ಸ್ವಲ್ಪ ಸ್ಪಷ್ಟವಾಗಿ ಹೇಳುತ್ತೀಯ” ಸ್ವಲ್ಪ ಕಟುವಾಗೇ ಕೇಳಿದ. +” ಸ್ವಲ್ಪ ಕಮಿಟ್ ಮೆಂಟ್” ತಡವರಿಸದೆ ಬಂದಿತ್ತು ಉತ್ತರ. ಕಣ್ಣುಗಳನ್ನು ಒರೆಸಿದ ಮೇಲೆ. +” ಅಂದರೆ ಏನು ಮದುವೆಯೇ” ಹುಬ್ಬುಗಂಟಿಕ್ಕಿ ಕೇಳಿದ ಜೋಷಿ. +” ಅಲ್ಲ, ಸ್ವಲ್ಪ ಗ್ಯಾರಂಟಿ. ನಿನ್ನಿಂದ ಉಪಕಾರ ಮಾಡಲ್ಪಟ್ಟವಳು ಅನ್ನೋ ಭಾವನೆ ನನ್ನಿಂದ ಹೋಗಬೇಕು. ಬರೀ ಐಸ್ ಕ್ರೀಮಿಗೆ ಮೈ ಸೋತವಳು ಅನ್ನೋ ಕೀಳರಿಮೆ ನನಗೆ ಬರೋ ಮುಂಚೆ ಅದನ್ನು ತಡೆದು ಹಾಕೋ ಅಂತ ಸ್ವೀಟ್ ಫೀಲಿಂಗ್. ಬಾಯಿಂದ ಹೇಳೊಕ್ಕೆ ಗೊತ್ತಾಗ್ತಾ ಇಲ್ಲ. ಇದನ್ನೇ ಪ್ರೀತಿ ಅಂತಲೂ ಕರೀತಾರೆ ಅನ್ನಿಸುತ್ತೆ. ಸಂಥಿಂಗ್ ಲೈಕ್ ದಟ್. ನನ್ನ ಮೈಕೈ ಸವರಿ ಮುದ್ದು ಮಾಡುವುದರ ಜೊತೆಗೇ ಬಾಯಿಂದ “ಐ ಲವ್ ಯು” ಎನ್ನುತ್ತಾ ಇದ್ದರೆ ಆ ಮುದ್ದಿಗೂ ಒಂದು ಅರ್ಥ ಬರುತ್ತದೆ, ವಿನೂ. ಇಲ್ಲದಿದ್ದರೆ ನನ್ನ ಮೈ ಮನಸ್ಸುಗಳೆರಡನ್ನೂ ಬಾಡಿಗೆಗೆ ಕೊಟ್ಟ ಭಾವನೆ ಬರುತ್ತದೆ” ಮತ್ತೆ ಬಿಕ್ಕಿದಳು. +” ನೀನು ಹೇಳುತ್ತಿರುವ ಅರ್ಥ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದೇ” ಮತ್ತೆ ಕೇಳಿದ. +” ಅದು ನನಗೆ ಗೊತ್ತಿಲ್ಲ. ಗೊತ್ತುಮಾಡಿಕೊಳ್ಳುವುದಕ್ಕೆ ಈಗ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ತಿಳಿಯುತ್ತಿಲ್ಲ. ಯಾಕೆ ಗೊತ್ತಾ. ಈ ಸಂಬಂಧದಲ್ಲಿ ಕನ್ಫ್ಯೂಸ್ ಆಗಿರುವವಳು ನಾನೊಬ್ಬಳೆ ಅನಿಸುತ್ತದೆ. ನಿನಗೆ ಸ್ಪಷ್ಟವಾದ ಎಕ್ಸ್ ಪೆಕ್ಟೇಷನ್ ಇದೆ ಅಂತ ಅನ್ನಿಸುತ್ತೆ. ನಮ್ಮ ವೇವ್ ಲೆಂತ್ ಒಂದೇ ಅನ್ನೋದು ಗೊತ್ತಾಗೋವರೆಗೆ ನನಗೆ ಸಮಾಧಾನ ಇರೋಲ್ಲ. ಮದುವೆ ಮಾಡ್ಕೋ ಅಂತ ನಾನು ಕೇಳುತ್ತಾ ಇಲ್ಲ. ಮದುವೆ ಅನ್ನೋ ಸಂಬಂಧಕ್ಕೆ ಕನ್ಸಿಡರ್ ಮಾಡಬಹುದಾದಂತಹವಳು ಅನ್ನೋದನ್ನು ಕನಿಷ್ಟ ತೋರಿಕೆಗಾದರೂ ತೋರಿಸುವಷ್ಟು ಗಟ್ಟಿಯಾಗಬೇಕು ನಮ್ಮ ರಿಲೇಷನ್, ವಿನೂ, ನಾನು ನಿನ್ನ ಕೇಳ್ಕೋತೀನಿ. ಪ್ಲೀಸ್, ಅಟ್ ಲೀಸ್ಟ್ ಪ್ರಿಟೆಂಡ್ ದಟ್ ಯು ಆರ್ ಲವಿಂಗ್ ಮಿ” ಗೋಗರೆದಳು. +ಇದೆಲ್ಲಿಯ ಗ್ರಹಚಾರ ಅನ್ನಿಸಿತು ಜೋಷಿಗೆ. ಈ ಅತಿ ಭಾವುಕತೆ, ಏರಿಳಿತಗಳು ಬೇಡವೆಂದೇ ಅಲ್ಲವೇ ತಾನು ಇವಳ ಸಹವಾಸ ಮಾಡಿದ್ದು. ಹುಡುಗಿಯೊಬ್ಬಳ ಜತೆಗಿದ್ದಾಗ ಮಾತ್ರ ಹುಡುಗಿಯ ಜತೆಗಿದ್ದೆ ಅನ್ನಿಸುವ ಸಂಬಂಧ ಬೇಕಿತ್ತು ಅವನಿಗೆ. ನಂತರದ ಯಾವುದೇ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಕಿರಲಿಲ್ಲ. ಆದರೆ ಈಗ ಯಾಕೋ ತಾನು ದಾರಿ ತಪ್ಪುತ್ತಿದ್ದೇನೆ ಅನ್ನಿಸಿತು. ಇದನ್ನು ಇಲ್ಲಿಯೇ ಮುಗಿಸುವುದೋ ಅಥವಾ ಮುಂದೆ ನೋಡಬೇಕೋ ಗೊತ್ತಾಗಲಿಲ್ಲ. ” ಸುಗುಣ, ನೀನು ಕೇಳುತ್ತಿರುವುದಕ್ಕೆ ಈಗ ಕಮಿಟ್ ಆಗಲು ಇಬ್ಬರಿಂದಲೂ ಸಾಧ್ಯಾನಾ ಅನ್ನೋದನ್ನು ಸ್ವಲ್ಪ ಯೋಚಿಸು. ಅಷ್ಟಕ್ಕೂ ನಾವೇನು ಬೇರೆಯವರಿಗಿಂತ ಹೊರತಲ್ಲ. ಇಲ್ಲಿನ ಪ್ರತಿ ಡಿಪಾರ್ಟ್ಮೆಂಟಿನ ಗೋಡೆಗೋಡೆಗಳ ಮೇಲೆ ಬರೆದಿದೆ ಇಲ್ಲಿನ ಪ್ರೇಮಿಗಳ ಕಥೆ. ಈ ಘಟ್ಟದಲ್ಲಿ ನನ್ನಿಂದ ಯಾವ ರೀತಿಯೂ ಕಮಿಟ್ ಮಾಡಲಿಕ್ಕೆ ಆಗುವುದಿಲ್ಲ. ಹಾಗೆ ಅಂತ ಮುಂದೆ ನಾವು ಮದುವೆಯಾಗಬಾರದು ಅಂತಲೂ ಇಲ್ಲ. ಆದರೆ ಒಂದು ಮಾತ್ರ ನಿಜ. ಈ ಹೊತ್ತು, ಇವತ್ತು ನಾನು ನಿನಗೆ ಯಾವುದನ್ನೂ ಪ್ರಾಮಿಸ್ ಮಾಡಲಾರೆ” ಗೋಡೆ ನೋಡುತ್ತಾ ಹೇಳಿದ್ದ. +ಅಂದು ತಿರುಗಿಸಿದ ಮುಖ ಇನ್ನೂ ಹಾಗೇ ಇದೆ. ಈ ದರಿದ್ರ ಕ್ಯಾಂಪಸ್ಸಿನಲ್ಲಿ ಒಬ್ಬರ ಕಣ್ಣು ತಪ್ಪಿಸಿ ಓಡಾಡುವುದು ಸಾಧ್ಯವೇ. ಬೆಳಗಾಗೆದ್ದು ಹಲ್ಲುಜ್ಜುವಾಗ ನೋಡುವ ಮುಖವೇ ರಾತ್ರಿ ಸೆಕಂಡ್ ಶೋನಲ್ಲೂ ಕಾಣುತ್ತದೆ. ಮುಂದೆ ಸಿಕ್ಕಾಗ ತಲೆತಗ್ಗಿಸಿಯೋ ಹಲ್ಲುಕಿರಿದೋ ತಪ್ಪಿಸಿಕೊಂಡಂತೂ ಹೋಗುತ್ತಿದ್ದ. ಇಂದು ಸಿಕ್ಕು ಅವಳೇ “ಕಂಗ್ರಾಟ್ಸ್” ಎಂದು ಹೇಳಿದ್ದಾಗ ಸ್ವಲ್ಪ ಆಶ್ಚರ್ಯವಾಗಿತ್ತು. ಆ ಅಭಿನಂದನೆ ಅಭಿನಂದನಾಪೂರ್ವಕವಾಗೇನೂ ಬಂದಿರಲಿಲ್ಲ. ಅವಳ ಮುಖದಲ್ಲಿ ಏನನ್ನೋ ಸಾಧಿಸಿದ ಕಳೆಯಿತ್ತು. ಸೇಡು ತೀರಿಸಿಕೊಂಡ ಕೆಚ್ಚಿತ್ತು ಅನ್ನಿಸಿತು ಜೋಷಿಗೆ. ತಾನು ದಿಟ್ಟಿಸಿ ಅವಳ ಮುಖ ನೋಡಿಲ್ಲ ಬಹಳ ದಿನದಿಂದ. ಬಹಳ ದಿನಗಳಾದ ಮೇಲೆ ನೋಡುತ್ತಿರುವುದರಿಂದ ಈ ರೀತಿ ಅನ್ನಿಸುತ್ತಿದೆ ಎಂದುಕೊಂಡ. +ತಾನು ಸುಗುಣಳನ್ನು ಬಿಟ್ಟಿದ್ದು ಏಕೆ? ಹುಡುಗಿ ಬೇಕು ಬೇಕು ಎಂದು ಹಾತೊರೆಯುತ್ತಿದ್ದಾಗ ಬಯಸದೇ ಹಿಂದೆ ಬಿದ್ದ ಆ ಹುಡುಗಿ ತನಗೇನು ಕಡಿಮೆ ಮಾಡಿದ್ದಳು. ಎರಡು ವರ್ಷದ ಹಿಂದೆ ಅವಳನ್ನು ಮೊದಲು ನೋಡಿದಾಗ ತನ್ನ ಮೈಯ ಬೆದೆಯನ್ನು ಶಮನಮಾಡುವ ಸೌಂದರ್ಯವಿದೆ ಎಂದೇನೂ ಅನಿಸಿರಲಿಲ್ಲ. ಬೌದ್ಧಿಕವಾಗಿ ಇವನ ತುಡಿತಗಳಿಗೆ ಮಿಡಿಯಬಲ್ಲ” ಇಂಟೆಲೆಕ್ಚುಯಲ್ ಕಂಪ್ಯಾನಿಯನ್ ಶಿಪ್” ಅನ್ನೇನೂ ಸುಗುಣಳಲ್ಲಿ ಆತ ಬಯಸಿರಲಿಲ್ಲ. ಮೈಮನಸ್ಸುಗಳ ಅವಶ್ಯಕತೆಗಳ ಚೌಕಟ್ಟನ್ನು ದಾಟಿದ ಆಕರ್ಷಣೆ ಏನಿದ್ದಿರಬಹುದು. ಅವಳನ್ನು ಬೇಡ ಎಂದು ಝಾಡಿಸಿಬಂದಮೇಲೂ, ಅವಳನ್ನು ನೆನೆಸಿ, ಕನವರಿಸಿರಲಿಲ್ಲವೇ? ಸುಗುಣ ತನ್ನ ಕನಸಿನಲ್ಲಿ ಬಂದಳು ಅನ್ನುವ ಯೋಚನೆಯೇ ಅವನಿಗೆ ನಾಚಿಕೆ ತರುವ ವಿಷಯವಾಗಿತ್ತು. ಆದರೂ ನಿಜವಾಗಿತ್ತು. +ಜೀವನದಲ್ಲಿ ಕೆಲವೊಂದು ಸರಳ ಸತ್ಯಗಳು ಅರ್ಥವಾಗುವುದು ಅಷ್ಟೊಂದು ಸುಲಭವಲ್ಲ ಅನ್ನಿಸಿತು. ಹೌದು, ಈ ಜಗತ್ತಿನಲ್ಲಿ ಏನಾದರೂ ಇಷ್ಟವಾದರೆ ಅದು ಏಕೆ ಇಷ್ಟವಾಗುತ್ತಾ ಇದೆ ಎಂದು ಅರ್ಥೈಸಿ ವಿಶ್ಲೇಷಿಸಬೇಕೇ? ಸುಮ್ಮನೆ ಕಣ್ಣು ಮುಚ್ಚಿ ಅನುಭವಿಸುವುದಕ್ಕೂ ತೊಂದರೆಯೇ. ಎಷ್ಟು ಕ್ರೂರ ಈ ಪ್ರಪಂಚ. ಅನ್ನಿಸಿದ್ದನ್ನು ನೇರವಾಗಿ ಹೇಳುವುದಕ್ಕೆ/ ಮಾಡುವುದಕ್ಕೆ ಎಷ್ಟೊಂದು ತಿಣಕಾಡಬೇಕು. ಸತ್ಯ ಏನೆಂದರೆ, ತನಗೆ ಸುಗುಣ ಬೇಕು. ಇಡೀ ಕಾಲೇಜೇ ತಮ್ಮನ್ನು ನೋಡಿ ನಗಲಿ, ಸುಗುಣ ಮನಸ್ಸಿಗೆ ಬಂದಹಾಗೆ ಬಯ್ಯಲಿ, ಬೇಕಾದರೆ ಎರಡೇಟು ಹೊಡೆದುಬಿಡಲಿ. ತನ್ನನ್ನು ಒಪ್ಪಿಸಿಕೋ ಎಂದು ಕೇಳಬೇಕು. ತಪ್ಪಾಯಿತು ಎಂದು ಕಾಲಿಗೆ ಬೀಳಬೇಕು. ಇಡೀ ಜೀವನ ನಿನ್ನ ಜೊತೆಯಲ್ಲಿಯೇ ಇರುತ್ತೀನಿ ಎಂದು ಅವಳಿಗಿಷ್ಟವಾಗುವ ಹಾಗೆ ಹೇಳಿಬಿಡಬೇಕು. ಅವಳಿಗಿಷ್ಟವಾದ ಪದ ” ಕಮಿಟ್ ಮೆಂಟ್”. ಹೌದು ಇಡೀ ಜೀವನ ನಿನಗೊಬ್ಬಳಿಗೆ ” ಕಮಿಟ್” ಆಗಿರ್ತೀನಿ ಎಂದುಬಿಡಬೇಕು. ಬಾಹ್ಯ ಸೌಂದರ್ಯ ಎಷ್ಟು ದಿನ. ಮದುವೆಯಾಗಿ ಒಂದೆರಡು ಮಕ್ಕಳಾದರೆ ಎಂಥವರೂ ನೋಡದ ಹಾಗೆ ಆಗುವುದಿಲ್ಲವೇ? +ತಾನು ನಿಜವಾಗಿ ಡಾಕ್ಟರಾದ ಮೊದಲ ದಿನ ಮಾಡಬೇಕಾದ ನಿರ್ಧಾರ ಇದೇನೇ, ಎಂದು ತನ್ನನ್ನು ತಾನೆಯೇ ಕೇಳಿಕೊಂಡ. ಶುಭಸ್ಯ ಶೀಘ್ರಂ! ಆಗೇ ಹೋಗಲಿ, ಒಳ್ಳೆಯ ಕೆಲಸಕ್ಕೆ ಮೀನ ಮೇಷ ಎಣಿಸಬಾರದಂತೆ. +ಹೊರಗೆ ಸುಗುಣ ಕಾಣಿಸುತ್ತಾಳೇನೋ ನೋಡಿದ. ಹಾಸ್ಟೆಲ್ಲಿನ ಕಡೆ ಹೋಗುತ್ತಿದ್ದುದು ಕಾಣಿಸಿತು. ಸರಸರನೆ ಹಿಂಬಾಲಿಸಿದ. ತಾನು ಈಗ ಹೀಗೆ ಹೇಳಿದಾಗ ಅವಳ ಪ್ರತಿಕ್ರಿಯೆ ಏನಿರಬಹುದು. ಮೊದಲು ಸ್ವಲ್ಪ ಸಿಟ್ಟು ಮಾಡಬಹುದು. ನಂಬದೇ ಇರಬಹುದು. ಆಮೇಲೆ ಜೋರಾಗಿ ಅತ್ತುಬಿಡಬಹುದು. ಆದರೆ ಕೊನೆಗೇನು? ನನ್ನನ್ನು ಬೇಡ ಅನ್ನುವುದು ಅವಳಿಗೆ ಸಾಧ್ಯವಿಲ್ಲವೇ ಇಲ್ಲ ಅಲ್ಲವೇ? ಈ ಗ್ಯಾರಂಟಿಯೇ ಅವಳನ್ನು ಬಿಟ್ಟುಬರಲು ಕಾರಣವಾಯಿತು ಅಲ್ಲವೇ. ಅದು ಯಾಕೆ ಬೇಡ ಅನ್ನುತ್ತಾಳೆ. ನನಗೇನು ಕಡಿಮೆಯಾಗಿದೆ. +ತಪ್ಪು, ತಪ್ಪು. ಇಲ್ಲಿ ಈಗಾದರೂ ಸ್ವಲ್ಪ ತನ್ನ ಇಗೋವನ್ನು ಬದಿಗಿಡಬೇಕು. ಈ ಸೊಕ್ಕೇ ಎಲ್ಲ ದುರಂತಗಳಿಗೂ ಕಾರಣವಾದದ್ದು. ನನಗಿಂತ ಅವಳೇನೂ ಕಮ್ಮಿಯಿಲ್ಲ ಎಂದು ಮನಸ್ಸಿನಲ್ಲಿ ಹತ್ತಾರು ಬಾರಿ ಹೇಳಿಕೊಂಡ. ಈ ಬಾರಿ ಅತಿ ದೈನ್ಯದಿಂದ ಬೇಡಿಕೊಂಡುಬಿಡಬೇಕು. ” ಓ ಸುಗುಣ, ಪ್ಲೀಸ್, ನನ್ನ ಕೈ ಬಿಡಬೇಡ” ಕೇಳಿದಾಕ್ಷಣ ಹತ್ತಿರ ಬಂದು ಪ್ರೀತಿಯಿಂದ ಎದೆಗೊಂದು ಗುದ್ದಿ ಆಮೇಲೆ ಒರಗುತ್ತಾಳಲ್ಲ, ಅಲ್ಲಿಗೆ ಎಲ್ಲವೂ ಸುಖಾಂತ. +ಹೆಜ್ಜೆಯ ವೇಗದಷ್ಟೇ ಎದೆಯ ಬಡಿತವೂ ಜಾಸ್ತಿಯಾಗಿತ್ತು. ಮುಂದಿನ ತಿರುವಿನಲ್ಲಿ ಕೂಗಳತೆಗೆ ಸಿಗುತ್ತಾಳೆ. ” ಸುಗುಣ” ಎಂದು ಕೂಗಲೋ “ಸುಗೂ” ಎನ್ನಲೋ. ಬೇಡ, ತೋರಿಕೆಗೆ ಆತ್ಮೀಯತೆ ಬೇಡ. ಈ ಸಂಬಂಧ ಅನ್ನುವುದು ಯಾವುದಾದರೂ ಒಂದು ಕೂದಲೆಳೆಯಿಂದ ಅಪಾಯಕಾರಿಯಾಗಿಯಾದರೂ ನೇತಾಡುತ್ತಿದ್ದರೆ ಅದು ಜೀವಂತವಾಗಬಲ್ಲದ್ದು ಪ್ರಾಮಾಣಿಕತೆಯಿಂದ ಮಾತ್ರ. ಈಗಿರುವ ವಸ್ತುಸ್ಥಿತಿಯಲ್ಲಿ ಸುಗುಣ ಸುಗೂ ಗಿಂತ ಹೆಚ್ಚು ಹತ್ತಿರ ಅನ್ನಿಸಿತು. ಹತ್ತಿರವಾಗುತ್ತಿದ್ದ ಹಾಗೆ ಹಿಂದಿನಿಂದ ಒಮ್ಮೆ ದಿಟ್ಟಿಸಿ ನೋಡಿದ. ಹಿಂದಿನಿಂದ ಚೆನ್ನಾಗಿಯೇ ಕಾಣಿಸುತ್ತಾಳೆ, ಕೂದಲು ಬೇರೆ ಬಾಬ್ ಮಾಡಿದ್ದಾಳೆ. ಛೆ! ಚೆನ್ನಾಗಿ ಕಾಣಿಸುವುದಿಲ್ಲ. ಉದ್ದಕ್ಕೇ ಬಿಡು ಎಂದು ಹೇಳಬೇಕು. ಈಗಲೇ ಬೇಡ, ಇನ್ನೊಂದೆರಡು ತಿಂಗಳಾಗಲಿ. +ಇವನ ಕನಸುಗಳನ್ನು ಝಾಡಿಸಿ ಒದ್ದಂತೆ ಪಕ್ಕದಲ್ಲಿ ಧೂಳನ್ನು ರಾಚುತ್ತಾ ಇವನನ್ನು ಸವರಿಕೊಂಡೇ ಹೋಯಿತು ಒಂದು ಆಟೋ. ಪಕ್ಕಕ್ಕೆ ಬಂದು ಜೋರಾಗೇ ಶಪಿಸಿದ. ” ಥೂ ಹಲ್ಕಾಗಳು, ಈ ಬಳ್ಳಾರಿ ಆಟೋ ಡ್ರೈವರುಗಳು. ಈ ರೋಡಿಗೆ ಬರೀ ಸೈಕಲ್ ರಿಕ್ಷಾಗಳನ್ನು ಮಾತ್ರ ಓಡಿಸಿಕೊಂಡಿರಬೇಕು. ಯಾರದಾದ್ರೂ ಪ್ರಾಣ ತೆಗೆಯುವ ತನಕ ಇವರಿಗೆ ಸಮಾಧಾನವಿರುವುದಿಲ್ಲ” +ಆಟೋ ಮುಂದೆ ಹೋಗಿ ಸುಗುಣಳ ಮುಂದೆ ನಿಂತಿತು. ಆಟೋದಲ್ಲಿದ್ದಾತ ಹೊರಗೆ ಇಳಿದು ಬರುತ್ತಿದ್ದಾಗ ಜೋಷಿಯೂ ಸುಗುಣಳನ್ನು ಮಾತನಾಡಿಸಬಲ್ಲಷ್ಟು ಸಮೀಪಕ್ಕೆ ಬಂದಿದ್ದ. +” ಹಾಯ್” ಎಂದಳು. +” ಹಾಯ್: ಜೋಷಿ ಮತ್ತು ಆಟೋದಿಂದ ಇಳಿದವ ಒಟ್ಟಿಗೇ ಹೇಳಿದರು. +” ಓ, ಹಾಯ್, ಡಾ. ಜೋಷಿ” ಒತ್ತು ಡಾಕ್ಟರ್ ಮೇಲೆ ಇತ್ತೋ ಜೋಷಿಯ ಮೇಲೆ ಇತ್ತೋ ಅರ್ಥವಾಗಲಿಲ್ಲ. ಮೊದಲ ಹಾಯ್ ತನಗಲ್ಲವೆಂದು ಅರ್ಥವಾಗಿತ್ತು. ಹಾಗೆಯೇ, ಇನ್ನೂ ಏನೋ ಅರ್ಥವಾಗಲು ಪ್ರಾರಂಭವಾಗಿತ್ತು. +” ಸುದೀ, ಏನು ಲೇಟಾಯ್ತಾ, ಬೈ ದಿ ವೇ, ಇದು ಜೋಷಿ, ನಮ್ಮ ಸೀನಿಯರ್. ಈಗ ರೀಸೆಂಟಾಗಿ ಡಾಕ್ಟರಾಗಿದಾರೆ. ಜೋಷಿ, ಇದು ಸುದೇಶ್, ಯಾರು ಅಂತ ಹೇಳ್ಬೇಕಿಲ್ಲ ಅಲ್ಲವೇ. ಇರಲಿ ನನಗೆ ಹೇಳೋಕೇ ಒಂದು ಥರ ಖುಷಿ. ಇವರು ನನ್ನ ಫಿಯಾನ್ಸೆ. ಮೊನ್ನೆ ಎಂಗೇಜ್ಮೆಂಟ್ ಆಯಿತು. ಇವರೂನು ಮಾಮೂಲಿ ಎಲ್ಲ ಬೆಂಗಳೂರು ಹುಡುಗರ ತರ ಸಾಫ್ಟ್‌ವೇರ್ ಮಾಡ್ತಾರೆ. ಆದರೆ ಇವರದೇನಪ್ಪ ವಿಶೇಷ ಅಂದರೆ ಬೆಂಗಳೂರಲ್ಲೆ ಇರ್ತಾರೆ. ಆಗಾಗ ಹೊರಗೆ ಹಾರಿ ಹೋಗಿ ಬರಬಹುದಂತೆ. ನನಗೂ ಅದೇ ಇಷ್ಟ. ಮುಂದಿನ ತಿಂಗಳು ಮದುವೆ. ಕಾರ್ಡ್ ಕೊಡ್ತೀನಿ. ಖಂಡಿತಾ ಬರಬೇಕು. ನೀವೇನಪ್ಪ, ಈಗ ದೊಡ್ಡ ಡಾಕ್ಟರು. ನಾನಂತು ಎಂಡೀ ಗಿಂಡೀ ಮಾಡೋದಿಲ್ಲಪ್ಪ. ಮನೆ ಮುಂದೆ ಒಂದು ಅಂಗಡಿ ಹಾಕ್ತೀನಿ, ಈ ಎಂಬಿಬಿ‌ಎಸ್ಸ್ ಒಂದು ಪಾಸಾದ್ರೆ. ವ್ಯಾಪಾರಾ ಆದ್ರೆ ಆಗ್ಲಿ, ಇಲ್ಲದಿದ್ದರೆ ಇಲ್ಲ” ಎಂದು ಬಡಬಡನೆ ಹೇಳಿ ಈ ಹೊಸ ಸುದೇಶ ಜೀವಿಯ ಕಡೆ ನೋಡಿ ಕಿಲಕಿಲ ನಕ್ಕಳು. +ಆ ಕಂದು ಮುಖದಲ್ಲಿ ನಿಜವಾದ ಕೆಂಪು ಇಂದು ಕಂಡಿತು, ಜೋಷಿಗೆ.” ಕಂಗ್ರಾಟ್ಸ್……. ಇಲ್ಲೇ ಬಂದಿದ್ದೆ….. ಕಂಗ್ರಾಟ್ಸ್ ಸುದೇಶ್…. ಖಂಡಿತಾ ಬರ್ತೀನಿ ಮದುವೆಗೆ…. ಈಗ ಬರಲಾ…. ಯು ಹ್ಯಾವ್ ಅ ಗುಡ್ ಟೈಂ….. ಇರಲಾಗದೆ ತೊದಲಿ ತಿರುಗಿ ಬಂದಿದ್ದ. +* +* +* +ಮೊದಲನೆಯ ದಿನ ನೈಟ್ ಡ್ಯೂಟಿ ಜೋಷಿಗೆ. ಮುಬಾರಕ್ ಟಾಕೀಸಿನ ಮುಂದೆ ಯಾರಿಗೋ ಚೂರಿ ಹಾಕಿದ್ದಾರಂತೆ. ಆಸ್ಪತ್ರೆ ತುಂಬಾ ಜನ. ಮೈ ಕೈ ಕುಲುಕಿಸುತ್ತಾ ರುದ್ರಮ್ಮ ಜೋಷಿಗೆ ” ಬರ್ರೀ ಡಾಕ್ಟರ, ಇನ್ನ ಮತ್ತ ಇಂತ ಛಾನ್ಸ ಸಿಗ್ತದಾ ಇಲ್ಲ. ಬೇಕಾದಷ್ಟು ಸೂಚರ್ ಕೇಸ್ ಐತಿ. ನಿಮ್ಮ ಪೀಜಿ ಓಟಿಗೆ ಹೋಗ್ಯಾರೆ. ನಿಮಗೆ ಸೂಚರ ಸುರು ಮಾಡ್ಕೋ ಅಂತ ಹೇಳ್ಯಾರ. ಲಗೂಲಗೂನ ಮಾಡ್ರಲ. ಮತ್ತಿನ್ನೆಷ್ಟು ಬರ್ತಾವೋ ಏನೋ. ಈ ಜನಾಕ, ಉಂಬಾಕಿಲ್ಲ, ತಿಂಬಾಕಿಲ್ಲ. ಚಚ್ಕೊಂಡು ಸಾಯ್ತಾವ. ಅಸ್ಸಲು ಬುದ್ಧಿ ಇಲ್ಲ” ಆಕೆಯ ಹೊಟ್ಟೆಹೊಕ್ಕುಳುಗಳು ಈಗ ಸಹ್ಯವಾದಂತೆನಿಸುತ್ತದೆ. ” ಎಲ್ಲಾ ರೆಡಿ ಮಾಡ್ರಿ ಸಿಸ್ಟರ್, ಒಂದು ಟೀ ಕುಡಿದು ಬರ್ತೀನಿ” ಎಂದು ಕ್ಯಾಂಟೀನಿಗೆ ಬಂದು ಒಂದು ಸಿಂಗಲ್ ಟೀ ಹೇಳಿ ಜೊತೆಗೆ ಐಟಿಸಿ ಹಚ್ಚುತ್ತಾನೆ. +‘ಕನ್ನಡಪ್ರಭ’ – ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಕತೆ ಜೂನ್ ೨೯, ೨೦೦೧ +***** +೦೮-೧೨-೨೦೦೫ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ […] +ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_578.txt b/Kannada Sahitya/article_578.txt new file mode 100644 index 0000000000000000000000000000000000000000..fa3202ef6e69c0d460fd1cc671d11f5a0a679895 --- /dev/null +++ b/Kannada Sahitya/article_578.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು ಮನೆಯಲ್ಲೆಂದೂ ಸ್ಥಿರವಾಗಿ ಕುಳಿತವರಲ್ಲ. ಹಾಗೆ ಕುಳಿತುಕೊಳ್ಳುವ ವ್ಯಕ್ತಿತ್ವ ಅವರದ್ದಲ್ಲವೇ ಅಲ್ಲ. ಸರ್ವೀಸಿನಲ್ಲಿದ್ದಾಗಲೆ ಎಂದೂ ಸ್ಥಿರವಾಗಿ ಮೇಜಿನ ಮುಂದೆ ಕುಳಿತವರಲ್ಲ. ಎಲ್ಲಾದರೂ ಸುತ್ತಾಡುತ್ತಲೇ ಓಡಾಡುತ್ತಲೇ ಇರಬೇಕು. ಸರ್ವೇ ವಿಭಾಗವಾಗಿದ್ದರೆ ಚೆನ್ನಿರುತ್ತಿತ್ತು ಎನ್ನುತ್ತಿದ್ದ ಜೋಯಿಸರಿಗೆ ಸಿಕ್ಕಿದ್ದು ಬೇರೊಂದೇ ಕೆಲಸ. ಈಗ ಕೆಲ ವರ್ಷಗಳ ಹಿಂದೆ, ಆ ಕೆಲಸದಿಂದಲೂ ನಿವೃತ್ತರಾಗಿದ್ದರು. +ಮೂರು ವರ್ಷಗಳ ಹಿಂದೆ, ಹೀಗೇ, ಏನೂ ತೋರದ ಒಂದು ದಿನ ಛದ್ಮವೇಷದ ಮಹಾರಾಜರಾಗಿ ಅಲೆಯುತ್ತಾ ಅವೆನ್ಯೂ ರಸ್ತೆಯ ಒಂದು ಗಲ್ಲಿಯ ಮೂಲಕ ಹಾದು ಬಳೇಪೇಟೆಯ ಚೌಕಕ್ಕೆ ಬಂದು ನಿಂತುಬಿಟ್ಟರು, ಜೋಯಿಸರು. ತಾವು ಸಣ್ಣವರಿದ್ದಾಗ ಈ ರಸ್ತೆಗಳೆಲ್ಲಾ ಎಷ್ಟು ವಿಶಾಲವಾಗಿದ್ದವು. ಈಗೇಕೆ ಹೀಗೆ ಇಕ್ಕಟ್ಟಾಗಿಬಿಟ್ಟಿವೆ ಎನ್ನಿಸಿತು. ಅಕ್ಕಿಪೇಟೆಯ ಶಾಲೆಗೆ ಹೋಗುತ್ತಿದ್ದ ಮಾರ್ಗ ನೆನಪು ಮಾಡಿಕೊಂಡರು. ವಿಜಯಲಕ್ಷ್ಮೀ ಚಿತ್ರಮಂದಿರದ ಎಕ್ಸೆಲ್ಷಿಯರ್ ಆಗಿದ್ದಾಗ ನೋಡಿದ “ಫ್ಲಾಷ್ ಗೋರ್ಡನ್” ನೆನಪಾಯಿತು. ಜೋಯಿಸರು ಈ ನೆನಪುಗಳಲ್ಲಿ ತಮ್ಮನ್ನು ಮರೆತು ರಸ್ತೆಯಂಚಿನಲ್ಲಿ ನಿಂತೇ ಇದ್ದರು. ಇದ್ದಕ್ಕಿದ್ದಂತೆ ಒಬ್ಬ ಯುವಕ ಬಂದು ಜೋಯಿಸರಿಗೆ ಸಲಾಂ ಮಾಡಿದ. +ಜನವೆಂದರೆ ಸಾಕು ಸಹಜ ಕುತೂಹಲದಿಂದ ಮಾತನಾಡುವ ಜೋಯಿಸರು ಆ ಯುವಕನೊಂದಿಗೆ ಮಾತಿಗಿಳಿದೇಬಿಟ್ಟರು. +“ಸರ್ ಒಳ್ಳೇ ಮಾಲಿದೆ…. ಸ್ಟೂಡೆಂಟು….ಯಂಗ್ ಸರ್…..ಬೇಕಾ ?” +ಬಳೆಪೇಟೆಯ ಖ್ಯಾತಿ ಅರಿಯದವರ್‍ಯಾರು? ಆದರೂ ಜೋಯಿಸರು ಅರಿತೂ ಅರಿಯದೆ ನಿಂತರು. “ಮಾಲ್” ಎಂದರೇನು ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಗಿ, ಅವನಲ್ಲಿ ಎಷ್ಟು ಹುಡುಗಿಯರು ಇದ್ದಾರೆ. ದಿನಕ್ಕೆ ಒಬ್ಬೊಬ್ಬ ಏಜೆಂಟ ಎಷ್ಟು ಗಿರಾಕಿಗಳನ್ನು ಹಿಡಿಯುತ್ತಾನೆ-ಬೆಂಗಳೂರಿನವರೆಷ್ಟು ಹೊರಗಿನವರೆಷ್ಟು. ಅತಿ ಕಡಿಮೆ ವಯಸ್ಸಿನವರೆಂದರೆ ಎಷ್ಟು ವರ್ಷ ವಯಸ್ಸಿನ ಗಿರಾಕಿ, ಅತಿ ಮುದುಕನಿಗೆಷ್ಟು ವಯಸ್ಸು, ಒಂದು ಹುಡುಗಿ ಒಂದು ದಿನಕ್ಕೆ ಎಷ್ಟು ಜನರ ಜೊತೆ ಮಲಗುತ್ತಾಳೆ. ಒಬ್ಬನೊಂದಿಗೆ ಮಲಗಲು ರೇಟೆಷ್ಟು ರೇಟಿನ ಅವಧಿಯೆಷ್ಟು-ಅದಕ್ಕೆ ಸಿಗುವ ಕಮಿಷನೆಷ್ಟು – ಅದರಲ್ಲಿ ಜೀವನ ಸಾಗುವುದೇ, ಎಷ್ಟರವರೆಗೆ ಚೌಕಾಸಿ ಮಾಡಬಹುದು…. ಹೀಗೆ ಪ್ರಶ್ನೆಯ ನಂತರ ಪ್ರಶ್ನೆ ಕೇಳುತ್ತಾ ಹೋಗಿ ಮುದುಕರಿಗೇನಾದರೂ ಡಿಸ್ಕೌಂಟ್ ಇದೆಯೇ ಎಂದೂ ಕೇಳಿದರು.“ ಮುದುಕರಿಗೆ ಡಬಲ್ ರೇಟು” ಎಂದು ಉತ್ತರಿಸಿದ ತಲೆಹಿಡುಕ ರಸ್ತೆಯಂಚಿನಲ್ಲಿ ಇಲ್ಲವಾದ. ಮುಂದೆಂದೇ ಜೋಯಿಸರು ಬಳೆಪೇಟೆಯತ್ತ ಸುಳಿದರೂ, ಯಾವೊಬ್ಬ ತಲೆಹಿಡುಕನೂ ಅವರತ್ತ ತಲೆಯೆತ್ತಿ ನೋಡುವುದಿಲ್ಲ ಎಂದು ಖಾತ್ರಿಪಡಿಸಿಕೊಂಡ ನಂತರವೇ ಜೋಯಿಸರು ಅಲ್ಲಿಂದ ಹೊರಗಾದರು. +ಅಂದಿನ ಕೋಟಾದ “ಏನೂ ತೋಚದಿರುವಿಕೆಯ ಮದ್ದು” ಸಿಕ್ಕಿತೆಂದೇ ಬಗೆದು ಹೇಗಾದರೂ ಮಾಡಿ ದೊಡ್ಡ ಬಸ್‌ಸ್ಟ್ಯಾಂಡಿನವರೆಗೆ ನಡೆದುಬಿಟ್ಟರೆ, ಅಲ್ಲಿಂದ ಮುಂದೆ ತಾವು ಕ್ಯೂ ನಿಂತು ಪಡೆದು, ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿದ್ದ ವಯೋವೃದ್ಧರ ಪಾಸ್ ತೋರಿಸಿ ಎಂಟಾಣೆಯ ಟಿಕೆಟ್ ಪಡೆದು ಮನೆ ತಪುಪಬಹುದೆಂದು ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಸಂದಿಯೊಂದರಲ್ಲಿ ರಾಶಿಹಾಕಿದ್ದ ಪುಸ್ತಕಗಳು ಜೋಯಿಸರನ್ನು ಆಕರ್ಷಿಸಿದವು. +ಶಿವಾಜೋಯಿಸರು ನುಗ್ಗಿ ಒಂದೊಂದೇ ಪುಸ್ತಕ ಪರೀಕ್ಷಿಸಿ ನೋಡತೊಡಗಿದರು. ಹಸ್ತ ಸಾಮುದ್ರಿಕೆ, ಬಾನಸವಾಡಿಯ…. ಎಂಬ ಅಕ್ಷರಗಳಷ್ಟೇ ಕಂಡ ಹರಿದ ಮುಖಪುಟ ಹೊತ್ತ ಪುಸ್ತಕ. ರೈನರ್ ಮಾರಿಯಾ ರಿಲ್ಕೆ ಎಂಬುವನ ಕಾದಂಬರಿ-ಅದರಮೇಲೆ ಒosಣ boಡಿiಟಿg booಞ ಎಂಬ ಓದುಗನ ವಿಮರ್ಶಾ ಟಿಪ್ಪಣಿ. ದಿನಕ್ಕೆ ಕೇವಲ ಐದು ಡಾಲರ್‍ನಲ್ಲಿ ಯೂರೋಪ್ ಅಮೆರಿಕಾ ಸುತ್ತಿನೋಡುವ ರಹಸ್ಯವನ್ನೊಳಗೊಂಡ ಪ್ರವಾಸೀ ಗೈಡು. ಜೇಮ್ಸ್ ಹಿಲ್ಟನ್‌ನ “ಲಾಸ್ಟ್ ಹೊರೈಸನ್” ಬ್ರೆಕ್ಟ್‌ನ “ಗೆಲಿಲಿಯೋ ಗೆಲಿಲಿ” ಪುಸ್ತಕದ ಅನೇಕ ಪ್ರತಿಗಳು (ಬಹುಶಃ ಇವು ಪಾಠ್ಯ ಪುಸ್ತಕಗಳಾಗಿದ್ದಿರಬಹುದೆಂದು ಜೋಯಿಸರು ಊಹಿಸಿದರು)-ಒಂದು ರಾಶಿ ಡೆಬೋನೇರ್ ಎಂಬ ಪತ್ರಿಕೆಯ ಸಂಚಿಕೆಗಳು. ಶಿವಾಜೋಯಿಸರಿಗೆ ಬಗ್ಗಿ ಪುಸ್ತಕ ನೋಡುವುದು ತ್ರಾಸಾದಂತೆ, ಅವರು ಕುಕ್ಕರಗಾಲಲ್ಲಿ ಕುಳಿತೇಬಿಟ್ಟರು. ಕೂತು ಡೆಬೋನೇರ್ ತಿರುವಿದರು. ಅಂಗಡಿಯವನು ಬಂದು ಗೂಢವಾಗಿ “ಐದು ರೂಪಾಯಿ ಸರ್ ಬೇಕಿದ್ರೆ ಇನ್ನೂ ಇಂಟರೆಸ್ಟಿಂಗ್ ಪುಸ್ತಕಗಳಿವೆ” ಎಂದು ಕಿವಿಯಲ್ಲಿ ಉಸುರಿದ. ಪತ್ರಿಕೆಯ ಪುಟ ತಿರುವಿದಂತೆ, ಇಂಟರೆಸ್ಟಿಂಗ್ ಏನೆಂದು ಜೋಯಿಸರಿಗೆ ಅರ್ಥವಾಯಿತು. ಅವರ ದೃಷ್ಟಿ ಆ ರಾಶಿಯಿಂದ ಎದ್ದು ಮುಂದಿನ ರಾಶಿಯ ಮೇಲೆ ಸ್ಥಾಯಿಯಾಯಿತು. ಒಂದು ಪತ್ರಿಕೆಯಲ್ಲಿ ಆಸಕ್ತಿಗಳ, ವಿಕೃತವೆಂಬಂತೆ ಕಂಡ ವಿಳಾಸಗಳ ಸಂಕ್ಷಿಪ್ತ ಜಾಹಿರಾತುಗಳೇ ತುಂಬಿದ್ದವು. ಜನ ಹೊಟ್ಟೆ ಹೊರೆಯಲು ಏನೆಲ್ಲ ದಂಧೆ ನಡೆಸುವರು ಎಂದು ಜೋಯಿಸರು ಆಸಕ್ತಿಯಿಂದ ನೋಡಿದರು-ಈ ಪುಸ್ತಕಗಳ ಕರ್ತೃಗಳು ಬದುಕಿನ ಬಗ್ಗೆ ಯಾವ ಪರಿಕಲ್ಪನೆ ಇಟ್ಟು ಬರೆದಿರಬಹುದು-ಇಲ್ಲಿ ಫುಟ್‌ಪಾತಿನಮೇಲೆ ಅವೇ ಪುಸ್ತಕಗಳು ವಾಸವಗಳೊಂದಿಗೆ ಜಟಾಪಟಿ ನಡೆಸಿವೆ. ರಿಲ್ಕೆಯ ಕಾದಂಬರಿ ಪಕ್ಕದ ರಾಶಿಯಲ್ಲಿ ಕುವೆಂಪು ಅವರ ಜನಪ್ರಿಯ ವಾಲ್ಮೀಕಿ ರಾಮಾಯಣ, ಅದರ ಮೇಲೆ ಗೊಪಾಲಕೃಷ್ಣ ಅಡಿಗರ ಬತ್ತಲಾರದ ಗಂಗೆ, ಮಹಾಕವಿಗಳಿಗೂ ಕಡೆಗೆ ಫುಟ್‌ಪಾತ್ ತಪ್ಪಿದ್ದಲ್ಲ ಎಂದು ತಮ್ಮಲ್ಲೇ ನಕ್ಕು ಶಿವಾಜೋಯಿಸರು ಎದ್ದು ನಿಂತರು. ಮತ್ತೆ ಬೀದಿಗಿಳಿಯುವಷ್ಟರಲ್ಲಿ ಅಂಗಡಿಯ ಮೂಲೆಯಲ್ಲಿ ಐವತ್ತು ಪೈಸೆಗೊಂದರಂತೆ ಮಾರಟಕ್ಕಿದ್ದ ಪುಸ್ತಕ ರಾಶಿ ಕಣ್ಣಿಗೆ ಬಿತ್ತು. +ಇಷ್ಟು ಕಡಿಮೆ ಬೆಲೆಗೂ ಪುಸ್ತಕ ಮಾರಾಟ ಮಾಡುತ್ತಾರಾ ? ಎಂದುಕೊಳ್ಳುತ್ತಲೇ ಜೋಯಿಸರು ಮತ್ತೆ ಬಗ್ಗಿದರು. ವೃಶ್ಚಿಕ ರಾಶಿಯ ೧೯೭೭ರ ಭವಿಷ್ಯ-ಲಿಂಡಾ ಗುಡ್‌ಮನ್ ಬರೆದಿರೋದು. ಎಲ್ಲ ಮನೆಗಳೂ ತುಂಬಿದ್ದ ಕ್ರಾಸ್‌ವರ್ಡ್ ಪಜಲ್‌ನ ಪುಸ್ತಕ-ಇದಿಷ್ಟೇ ಎಂದು ಎದ್ದು ನಿಲ್ಲುವಷ್ಟರಲ್ಲಿ ಕಂಡ ನ್ಯೂಮರಾಲಜಿಗೆ ಸಂಬಂಧಿಸಿದ ಪುಸ್ತಕ. ಜೋಯಿಸರು ಎಂದಿನ ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡು ಸುತ್ತಿ-ಬಳಸಿ ನೋಡಿ, ಅಂಗಡಿಯವನನ್ನು ಕೇಳಿದರು_ +“ಇದರ ರೇಟು ಎಷ್ಟಪ್ಪಾ ?” +“ಎಂಟಾಣೆ ಸರ್” +“ಮುದುಕನಿಗೆ ಡಿಸ್ಕೌಂಟ್ ಇಲ್ಲವೆ ?” +“ಏನ್ಸರ್ ಅರ್ಧಕಪ್ ಕಾಫಿ ಕೂಡಾ ಸಿಗೋದಿಲ್ಲಾ ಎಂಟಾಣೆಗೆ. ಬೇಕಿದ್ರೆ ಆ ಭವಿಷ್ಯದ ಪುಸ್ತಕ ಫ್ರೀ ತೆಗೊಳ್ಳಿ….. ಆದರೆ ರೇಟ್ ಮಾತ್ರ ಎಂಟಾಣೆಗಿಂತ ಕಮ್ಮಿ ಇಲ್ಲ.” +ಜೋಯಿಸರು ತಮ್ಮ ಜುಬ್ಬಾದ ಎರಡು ಮೂರು ಜೇಬುಗಳನ್ನು ತಡಕಾಡಿ, ಕಡೆಗೆ ಹತ್ತು ರೂಪಾಯಿಯ ನೋಟನ್ನು ಹೊರಗೆಳೆದರು. ಅಂಗಡಿಯವ ಸಿಟ್ಟಾದ. ಆದರೆ ಪಾಪದ ಜೋಯಿಸರ ಜೇಬಿನಲ್ಲಿದ್ದ ಚಿಲ್ಲರೇ ನಾಣ್ಯಗಳೆರಡೇ ಎರಡು-ನಾಕಾಣೆ ಒಂದು-ಒಂದು ಇಪ್ಪತ್ತು ಪೈಸೆಯದು. ಕಡೆಗೂ ಸೋತವ ಅಂಗಡಿಯವನೇ. +“ಹೋಗಲಿ ಬಿಡಿ ಸರ್…. ಹತ್ತು ಪರ್ಸೆಂಟ್ ಓಲ್ಡೇಜ್ ಡಿಸ್ಕೌಂಟು” ಎಂದ, ನಲವತ್ತೈದು ಪೈಸೆ ಸ್ವೀಕರಿಸುತ್ತಾ. +“ಯಾರಿಗಪ್ಪಾ ಓಲ್ಡೇಜ್ ? ನಂಗಾ ? ಪುಸ್ತಕಕ್ಕಾ ?” ಎನ್ನುತ್ತಲೇ ಜೋಯಿಸರು ಅಲ್ಲಿಂದ ಹೆಜ್ಜೆ ಹೊರಗಿಟ್ಟರು. ಅಂದೇಕೋ ಮತ್ತೆ ಬಸ್ ಹತ್ತುವ ಮನಸ್ಸಾಗದೇ ನಡೆವ ಛದ್ಮವೇಷಿ ಮಹಾರಾಜರಾಗಿಯೇ ಮನೆ ಸೇರಿದರು ಶಿವಾಜೋಯಿಸರು-ಎಂಟಾಣೆ ಪಾಸಿನ, ಆ ಎಂಟಾಣೆಯನ್ನೂ ಉಳಿಸಿ ! +ಮನೆಗೆ ಬಂದಕೂಡಲೇ ಊಟವನ್ನೂ ಮಾಡದೆ, ಹನಿನೀರನ್ನೂ ಸೇವಸದೆ ಸಣ್ಣ ಮಕ್ಕಳ ಉತ್ಸಾಹದಲ್ಲಿ ಜೋಯಿಸರು ನ್ಯೂಮರಾಲಜಿಯ ಪಂಚಾಂಗ ತೆರೆದು ಕೂತರು. ಶಂಕರನಾರಾಯಣನ ಕ್ಯಾಲ್ಕುಲೇಟರ್ ಹುಡುಕಿ ತೆಗೆದು ಒಂದೆರಡು ಸಣ್ಣ ಲೆಕ್ಕ ಮಾಡಿದರು. ಏಕೋ ಹೊಂದಲಿಲ್ಲ_ಹಳೆಯ ಮಗ್ಗಿಯ ನೆನಪುಗಳಿಗೆ ಶರಣಾಗಿ, ಜನ್ಮದಿನ, ತಿಂಗಳು, ವರ್ಷ, ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಎಲ್ಲವನ್ನೂ ಕೂಡಿಟ್ಟು ಗುಣಾಕಾರ ಭಾಗಾಕಾರ ಮಾಡಿದರು. ಪರವಾಗಿಲ್ಲ-ಈ ವಿದ್ಯೆ ಕರಗತವಾಗುವುದು ಕಷ್ಟವೇನಲ್ಲ ಎನ್ನಿಸಿತು. ಇದೇ ಸಂಖ್ಯಾಶಾಸ್ತ್ರವನ್ನು ಶಂಕರನಾರಾಯಣನ ವಿಷಯದಲ್ಲಿ ಪ್ರಯೋಗ ಮಾಡಿದರು_ಛೇ ಅವನ ಹೆಸರನ್ನು ಓಂಖಂIಓ ಎಂದು ಬರೆದಿದ್ದರೆ ಓಂಖಂಙಂಓ ಗಿಂತ ಹೆಚ್ಚು ಒಳ್ಳೆಯದಾಗುತ್ತಿತ್ತು ಎಂದು ಹೊಳೆಯಿತು. ಅವನ ಹೆಸರಿನ ಜತೆ, ಸ್ಕೂಟರಿನ ರಿಜಿಸ್ಟೇಶನ್ ನಂಬರ್ ಹೊಂದಾಣಿಕೆ ಆಗುತ್ತಿಲ್ಲ. ಕಳೆದ ತಿಂಗಳು ಆಕ್ಸಿಡೆಂಟಾದ್ದಕ್ಕೆ ಇದೇ ಕಾರಣವಿದ್ದೀತು. ಬಂದ ಕೂಡಲೇ ಸ್ಕೂಟರ್ ಬದಲಾಯಿಸಲು ಹೇಳಬೇಕು. ಮನೆಯ ಫೋನ್ ನಂಬರ್ ಮೇಲೆ ಈ ವಿದ್ಯೆ ಪ್ರಯೋಗವಾದೀತು. ಸದ್ಯ….ಅದು ಲಕ್ಕೀ ನಂಬರ್. ಅದಕ್ಕೇ ಈವರೆಗೆ ಒಂದೇ ಒಂದು ಬಾರಿಯೂ ಹುಚ್ಚಾಪಟ್ಟೆ ಬಿಲ್ ಬಂದಿಲ್ಲ. ಮೊನ್ನೆ ಆ ಭಾಸ್ಕರರಾಯರ ಮನೆಯಲ್ಲಿ ಆರು ಸಾವಿರ ರೂಪಾಯಿ ಟೆಲಿಫೋನ್ ಬಿಲ್ ಬಂದಂತೆ. ಅವನ ಜನ್ಮದಿನದ ಜೊತೆ ಟೆಲಿಫೋನ್ ನಂಬರ್ ಮಿಲಾಯಿಸಿ ನೋಡಿದರೆ ತಿಳಿಯುತ್ತದೆ. +ಸುಲಭದಲ್ಲಿ ಬಿಡದ ಈ ನ್ಯೂಮರಾಲಜಿಯ ಜಾಡ್ಯ ಶಿವಾಜೋಯಿಸರನ್ನು ಗಟ್ಟಿಯಾಗಿಯೇ ಅಂಟಿಕೊಂಡಿತು. ಅವರು ಎಲ್ಲದರಮೇಲೂ ಪ್ರಯೋಗ ನಡೆಸಿದರು. ಎಲ್ಲವೂ ಒಂದೊಂದು ಬಾರಿಯ ಪರೀಕ್ಷೆಗೊಳಗಾದ ನಂತರ, ಆ ವಸ್ತುವಿಗೆ ನ್ಯೂಮರಾಲಜಿಗೆ ಅಂಟಿದ ನಂಟು ಬಿಡುತ್ತಿತ್ತು. ಆದರೆ ಜೋಯಿಸರು ಮಾತ್ರ ಪ್ರಯೋಗ-ಪ್ರಯೋಗ, ಪ್ರಯೋಗವೆಂದು ಮುಂದುವರಿದೇವರಿದರು. ಕಡೆಗೂ ಅವರ ನಿರಂತರ ಪ್ರಯೋಗಕ್ಕೆ ಒಂದು ವಸ್ತು ಸಿಕ್ಕಿಯೇ ಸಿಕ್ಕಿತು. ಗಾಳಿ ಸವಾರಿ ಹೋಗಿ, ಚಾಮರಾಜಪೇಟೆಯ ಮಲಬಾರ್ ಲಾಜ್ ಪಕ್ಕದಂಗಡಿಯಲ್ಲಿ ಕೊಂಡ ಲಾಟರೀ ಟಿಕೇಟು. ಅವರಂದು ಕೊಂಡುಕೊಂಡದ್ದು ಒಂದೇ ಒಂದು ಕರ್ನಾಟಕ ರಾಜ್ಯ ಲಾಟರಿ. ಅದೃಷ್ಟ ಲಕ್ಷ್ಮೀ ಮುಂದಿನ ವಾರವೇ ಅವರನ್ನು ಒಲಿದಳು. ಶಿವಾಜೋಯಿಸರಿಗೆ ಹತ್ತು ರೂಪಾಯಿ ಬಹುಮಾನ ಬಂದಿತು. +ಅಲ್ಲಿಂದ ಮುಂದೆ ಶಿವಾಜೋಯಿಸರ ವೃತ್ತಿಯೂ, ನಿವೃತ್ತಿಯೂ ನ್ಯೂಮರಾಲಜಿಯೇ ಆಯಿತು. ಈ ನ್ಯೂಮರಾಲಜಿಯ ವಿದ್ಯೆಯನ್ನು ಲಾಟರಿ ದಂಧೆಗೆ ಅಳವಡಿಸುವುದನ್ನೇ ಅವರು ಜೀವನದ ಪರಮೋದ್ದೇಶ ಮಾಡಿಕೊಂಡಹಾಗಾಯಿತು. ಒಮ್ಮೆ ಅವರು ಜನ್ಮ ದಿನ ಅಳವಡಿಸಿ ಲಾಟರಿ ಪ್ರಯೋಗ ನಡೆಸುವರು, ಒಮ್ಮೆ ಹೆಸರಿನ ಸಂಖ್ಯೆ, ಒಮ್ಮೆ ಲಾಟರಿಯ ಹೆಸರು, ಅದಲ್ಲದೇ ತಂದ ಲಾಟರೀ ಟಿಕೇಟಿನ ಮನೆಯವರೆಲ್ಲರ ಜನ್ಮಕುಂಡಲಿಯನ್ನೂ ಮಿಲಾಯಿಸಿ ನೋಡುವುದು ಗುಪ್ತವಾಗಿ, ಟಿಕೀಟಿನ ಮೂಲೆಯಲ್ಲಿ, ಅವರ ಲೆಕ್ಕಾಚಾರದ ಪ್ರಕಾರ ಬರಬೇಕಾದ ಹಣದ ಮೊತ್ತ ಬರೆದಿಡುವುದು. ಮಗನ ಹೆಸರಿಗೆ ಹೊಂದುವ ಟಿಕೆಟ್ಟಾದರೆ, ಏಕೆ ಏನೆಂದು ಹೇಳದೇ, ಅವನಿಂದ ಎರಡೋ, ಐದೋ ರೂಪಾಯಿಗಳನ್ನು ಇಸಿದುಕೊಳ್ಳುವುದು_ಹೀಗೇ ನಿರಂತರವಾಗಿ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. +ಪ್ರತೀದಿನ ಸಂಜೆಯವೇಳೆಗೆ ಜೋಯಿಸರು, ಶಿಸ್ತಾಗಿ ಡ್ರೆಸ್ ಮಾಡಿಕೊಡು ಬೀದಿಗಿಳಿವ ಉತ್ಸಾಹಿಗಳಾಗುತ್ತಿದ್ದರು. ಗಾಳಿ ಸೇವಿಸಲೂ, ಲಾಟರಿ ಕೊಳ್ಳಲೂ, ಚಾಮರಾಜಪೇಟೆ ಅವರಿಗೆ ಒಗ್ಗಿದ ಏರಿಯಾ. ಆದರ ಪಿನ್ ಕೋಡ್ ೫೬೦೦೧೮ ಅವರಿಗೆ ಲಕ್ಕೀ ನಂಬರಾದ ಎರಡಕ್ಕೆ ಕೂಡುತ್ತದೆ. ಆದರೆ ಮಲಬಾರ್ ಲಾಜಿನ ಪಕ್ಕದಂಗಡಿ ಲಕ್ಕೀ ಅಲ್ಲ_ಅದು ಮೂರನೇ ಬೀದಿಯಲ್ಲಿದೆ. ಅವರಿಗೆ ಎರಡನೇ ಬೀದಿಯ ಲಾಟರಿಯಂಗಡಿಯೇ ಬೇಕು. ಅಲ್ಲಿಯೇ ಟಿಕೆಟ್ ಹುಡುಕಿ ಹೊರಡುವರು. ಮನೆಯಲ್ಲೇ, ತಾವು ಅಂಗಡಿಯವನಿಗೆ ಕೊಡಲಿರುವ ನೋಟಿನ ಸಂಖ್ಯೆ ಲೆಕ್ಕ ಹಾಕಿಟ್ಟು, ಇಲ್ಲಿ ಅದಕ್ಕೆ ತಕ್ಕ ಟಿಕೇಟಿಗಾಗಿ ಗುಣಾಕಾರ, ಭಾಗಾಕಾರ ಮಾಡುವರು. ಆಗಾಗ ಗಡಿಯಾರ ನೋಡಿ ಸಮಯವನ್ನೂ ಲೆಕ್ಕ ಹಾಕುವರು. ಎಷ್ಟೋ ಬಾರಿ ಅಲ್ಲಿರುವ ಟಿಕೆಟ್ಟಿಗೂ ಲೆಕ್ಕಾಚಾರಕ್ಕೂ ಹೊಂದಾಣಿಕೆ ಆಗದೇ ಖಾಲಿ ಕೈಯಲ್ಲಿ ವಾಪಸ್ಸಾದುದಿದೆ. ಸುಮಾರು ಅರ್ಧ ಗಂಟೆಯ ಕಾಲ ಟಿಕೆಟ್ಟುಗಳ ಕಟ್ಟಿನ ಮೇಲೆ ಎರಗಿ ನಿಂತು ಟಿಕೆಟ್ ಕೊಂಡರೆ, ಕೊಂಡ ಟಿಕೆಟ್ಟನ್ನು ಹತ್ತು ನಿಮಿಷ ಸವರಿ ಸವರಿ ನೋಡುವರು. ಎಷ್ಟೋ ಬಾರಿ, ಆ ಹಂತದಲ್ಲೂ ಸಮಾಧಾನವಾಗದೇ ಟಿಕೆಟ್ ವಾಪಸ್ ಮಾಡಿದ್ದಿದೆ. ಅಂಗಡಿಯವನಿಗೆ ಮೊದಮೊದಲು ಕಿರಿಕಿರಿ ಎನ್ನಿಸಿದರೂ, ಕ್ರಮೇಣ ಜೋಯಿಸರ ರೀತಿ ಅಭ್ಯಾಸವಾಗಿಬಿಟ್ಟಿತು. ಬರಬರುತ್ತಾ ಜೋಯಿಸರು, ಚಾಮರಾಜಪೇಟೆಯಿಡೀ, ಲಾಟರಿ ಜೋಯಿಸರೆಂದೇ ಪ್ರಖ್ಯಾತರಾದರು. +ಶಿವಾಜೋಯಿಸರು ಲಾಟರಿ ಫಲಿತಾಂಶ ನೋಡುವುದಕ್ಕು ಒಂದು ಪದ್ಧತಿ ಏರ್ಪಾಟು ಮಾಡಿಕೊಂಡರು. ಮನೆಯ ಪೇಪರಿನಲ್ಲಿ ಅವರೆಂದೂ ಫಲಿತಾಂಶ ನೋಡುವವರಲ್ಲ. ಅದಕ್ಕೆ ಬೇರೆ ಬೀದಿಯ ಬೇರೊಂದೇ ಅಂಗಡಿಯನ್ನು ಖಾಯಂ ಮಾಡಿಕೊ +ಡಿದ್ದರು. ಜೋಯಿಸರ ಪದ್ಧತಿ, ಲೆಕ್ಕಾಚಾರ ಈ ಮೂರು ವರ್ಷಗಳ ಕಾಲಾಂತರದಲ್ಲಿ ಅನೇಕೆ ಮಾರ್ಪಾಟುಗಳನ್ನೂ ಪಡೆದು, ಕಾಂಪ್ಲಿಕೇಟ್ ಆಗುತ್ತಾ ಹೋದರೂ, ಅವರಿಗೆ ಮತ್ತೆ ಬಹುಮಾನ ಬಂದೇ ಇರಲಿಲ್ಲ. +ಮೂರು ವರ್ಷಗಳ ಸತತ ಪ್ರಯತ್ನದ ನಂತರವು ಫಲಬರದಿದ್ದುದು ನೋಡಿ, ರೋಸಿ ಹೋಗಿ ಅದನ್ನು ಬಿಟ್ಟೇ ಬಿಡುವುದೆಂದು ನಿರ್ಧರಿಸಿ, ಮತ್ತೆ ಬೇರೇನೂ ಮಾಡಲು ತೋರದೆ ಜೋಯಿಸರು ಬೀದಿಗಾದರು. ಅಂದು ಸಂಜೆ ಕೆ. ಆರ್. ರಸ್ತೆ, ಎನ್. ಆರ್. ರಸ್ತೆ, ಜೆ. ಸಿ. ರಸ್ತೆ, ಕಾರ್ಪೋರೇಷನ್, ಕಸ್ತೂರ್ಬಾ ರಸ್ತೆಯ ಮೇಲಾಗಿ ಎಂ. ಜಿ. ರಸ್ತೆ ತಲುಪಿದರು. ಎಂ. ಜಿ. ರಸ್ತೆಯ ಗುಂಟ ನಡೆದು ಬ್ರಿಗೇಡ್ ರಸ್ತೆಗೆ ತಿರುಗಿದರು. ತಿರುಗಿದಾಕ್ಷಣವೇ ಒಂದು ಲಾಟರಿಯಂಗಡಿ ಕಂಡಿತು. ಜೋಯಿಸರಿಗೆ ಹಳೆಯ ಹವ್ಯಾಸ ಬಿಟ್ಟುಕೊಡಲಾಗಲಿಲ್ಲ. ಅವರು ಅಲ್ಲೇ ನಿಂತರು. ಬೇಗನೇ ಒಂದಿಷ್ಟು ಲೆಕ್ಕ ಹಾಕಿದರು. ಇಷ್ಟು ದಿನವೂ ಏಜೆನ್ಸಿಯ ಸಂಖ್ಯೆಯನ್ನು ಪರಿಗಣಿಸಿಯೇ ಇರಲಿಲ್ಲ ಎಂದವರಿಗೆ, ಇದ್ದಕ್ಕಿದ್ದಂತೆ ಜ್ಞಾನೋದಯವಾಯಿತು. ಮತ್ತೆ ಮನಸ್ಸಿನಲ್ಲೇ ಭಾಗಾಕಾರ ಗುಣಾಕಾರ ಮಾಡಿ, ಮೇಲಿನಿಂದ ಮೂರನೆಯ ಟಿಕೆಟ್ ಎಳೆದುಕೊಂಡು ಹಣಕೊಟ್ಟರು. ಟಿಕೆಟ್ಟನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಮಡಿಸಿ ಜೇಬಿಗಿಳಿಸಿಯೂ ಬಿಟ್ಟರು. +ಈ ಬಾರಿ ಬಹುಮಾನ ಬರುವುದರಲ್ಲಿ ಜೋಯಿಸರಿಗೆ ಯಾವುದೇ ಅನುಮಾನ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಬೋಧಿವೃಕ್ಷದಡಿ ಜ್ಞಾನೋದಯವಾದಂತಹ, ಬದುಕಿನೆಲ್ಲ ರಹಸ್ಯಗಳನ್ನೂ ಭೇದಿಸಿದಂತಹ ಒಂದು ಪ್ರಬುದ್ಧ ಬುದ್ಧ ಭಾವನೆ ಜೋಯಿಸರನ್ನು ಆವರಿಸಿತು. +ಮಹಾ ಉಲ್ಲಾಸದಿಂದ ಸೀಟಿ ಬಜಾಯಿಸುತ್ತ ಇನ್ನಷ್ಟು ದೂರ ನಡೆದರು. ಬಾಸ್ಕೋದಿಂದ ಬರುತ್ತಿದ್ದ ವಿದೇಶೀ ಸಂಗೀತ ಲಯಬದ್ಧವಾಗಿ ಇವರ ಹೊಟ್ಟೆಯ ಮೇಲೆ ಬಡಿಯಿತು. ಜೋಯಿಸರು ಒಂದು ಕ್ಷಣ ಅಲ್ಲಿ ನಿಂತರು_ಹಿಂದೆ ಷೋಕೇಸಿನಲ್ಲಿ ಕುಣಿಯುವ ಹುಡುಗಿಯರ ಚಿತ್ರ ಹಾಕಿರುತ್ತಿದ್ದರು. ಈಗ ಅದು ಇಲ್ಲ ಎಂಬುದನ್ನು ಗಮನಿಸಿ, ಈ ಕ್ಯಾಬರೆ ಎಂಬುದು ಹೇಗಿರುತ್ತದೆಯೋ ಎಂದು ಒಂದು ಕ್ಷಣ ಯೋಚಿಸದಿರು. +“ಮುದುಕನಿಗೆ ಹೇಗೋ ಚಪಲ ಬಿಟ್ಟಿಲ್ಲ…..ಕೈಲಾಗಲ್ಲ, ಒಳಗೆ ಹೋಗಲು ಧೈರ್ಯಾನೂ ಇಲ್ಲ” ಹುಡುಗನೊಬ್ಬ ಹಿಂದಿನಿಂದ ಗೇಲಿ ಮಾಡಿದ. +ಶಿವಾಜೋಯಿಸರು ಮನಸ್ಸಿನಲ್ಲೇ ನಕ್ಕರು. ಹುಡುಗನನ್ನು ಕ್ಷಮಿಸಿದರು. ತಿರುಗಿ ಎಂ. ಜಿ. ರಸ್ತೆಯತ್ತ ಹೆಜ್ಜೆ ಹಾಕಿದರು. ಟ್ರಾಫಿಕ್ ಸಿಗ್ನಲ್ ಸಿಕ್ಕಾಗ ಎಂ. ಜಿ. ರಸ್ತೆಯನ್ನೂ ದಾಟಿ, ಆಚೆ ಬದಿಯ ಎತ್ತರದ ಫುಟ್‌ಪಾತಿನ ಮೇಲೆ ಮನೆಯತ್ತ ಹೆಜ್ಜೆ ಹಾಕಿದರು. ಸ್ವಲ್ಪ ಸುಸ್ತಾದಂತೆನಿಸಿತು. ಛಳಿಗೆ ನಡುಗಿದರು. ಈ ವಯಸ್ಸಿಗೆ ಈ ದಿನ ನಡೆದುದು ಸ್ವಲ್ಪ ಜಾಸ್ತಿಯೇ ಆಯಿತು. ಸುತ್ತಮುತ್ತ ನೋಡಿ ಕಲ್ಲುಬೆಂಚಿನ ಮೇಲೆ ಕುಸಿದು ಕುಳಿತರು. ಜುಬ್ಬಾದ ಜೇಬಿನಿಂದ ಲಾಟರಿ ಟಿಕೆಟ್ ತೆಗೆದು ಮತ್ತೊಮ್ಮೆ ಲೆಕ್ಕಾಚಾರ ಮಾಡಿದರು. ಹೊಸದಾಗಿ ಕಟ್ಟಿದ ಬಾರ್ಟ ಟವರನ್ನು ಎವೆಯಿಕ್ಕದೇ ಎರಡು ನಿಮಿಷ ನೋಡಿದರು. ಅಂದಿನ ಲಾಟರೀ ವ್ಯಾಪಾರದ ಬಗ್ಗೆ ಅವರಿಗೆ ಜೀವನದ ನಿಗೂಢ ರಹಸ್ಯವನ್ನು ಬಹಳ ಸರಳವಾಗಿ ಭೇದಿಸಿದಷ್ಟು ಸಂತೃಪ್ತಿಯಾಗಿ ಟಿಕೆಟ್ಟನ್ನು ಕೆಳಗಿಟ್ಟರು. +ವೇಗದಿಂದ ಸರಳ ರೇಖೆಯಂತೆ ಹೋಗುತ್ತಿದ್ದ ಸಾಲುವಾಹನಗಳನ್ನೇ ನೋಡುತ್ತಾ ಜೋಯಿಸರು ಕುಳಿತಿದ್ದರು. +ಕುಳಿತಲ್ಲೇ ನಿದ್ದೆ ಹೋದಂತಿದ್ದ ಅವರ ಕಣ್ಣಲ್ಲಿ, ಜೋರಾಗಿ ಓಡುತ್ತಿದ್ದ ವಾಹನಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು. +***** +ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು […] +ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ […] +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_579.txt b/Kannada Sahitya/article_579.txt new file mode 100644 index 0000000000000000000000000000000000000000..1d736e4edac845ee2c32f1e1e09b37860eabe547 --- /dev/null +++ b/Kannada Sahitya/article_579.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ ಅಂತ. ಸುಭಾಷಿಣಿ ಮಾತಾಡ್ತಾಳೆ, ನಾವು ಕೇಳೋಣ ಅಂತ. ಬೆಳಿಗ್ಗೆ ಡಾಕ್ಟ್ರು ಬಂದು ಹೋದ ಮೇಲೆ ವಾರ್ಡಲ್ಲಿ ಯಾರೂ ಇರೋದಿಲ್ಲ. ನೀನು ಬಾ ಎಂದು ಹೇಳಿದ್ದರು. ನಾನು ಫೋನ್ ಮಾಡಿದಾಗ ರಾತ್ರಿ ಎಂಟೂವರೆ ಆಗಿತ್ತು. ಬೆಳಗಾಗುವುದರೊಳಗೆ ಏನೆಲ್ಲಾ ಆಗಿಹೋಯಿತು! +ನಾನು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಲಲಿತಾ ಇದ್ದ ವಾರ್ಡ್ ಖಾಲಿಯಾಗಿತ್ತು. ಆತಂಕದಿಂದ ನರ್ಸ್ ಇದ್ದಲ್ಲಿಗೆ ಓಡಿದೆ. ಲಲಿತಾನಿಗೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ನೋವು ಜೋರಾಯಿತಂತೆ. ನೋವಿನಿಂದ ಚೀರುತ್ತಾ ಎರಡೂ ಕೈಗಳಿಂದ ತಲೆಕೂದಲು ಕಿತ್ತುಕೊಳ್ಳುತ್ತಿದ್ದಳಂತೆ. ಅವಳ ಅಮ್ಮ ಗಾಬರಿಯಿಂದ ನರ್ಸ್ ಅನ್ನು ಕರೆದಿದ್ದಾಳೆ. ಡ್ಯೂಟಿ ಡಾಕ್ಟರ್ ಬಂದು ಇಂಜಕ್ಷನ್ ಕೊಟ್ಟಿದ್ದಾರೆ. ತಲೆಕೂದಲು ಕಿತ್ತುಕೊಳ್ಳದಂತೆ ಎರಡೂ ಮುಂಗೈಗಳಿಗೆ ಬ್ಯಾಂಡೇಜ್ ಕಟ್ಟಿದರು. ತುಂಬಾ ನೋವು…. ಅಂತ ಒಂದು ಸಲ ಹೇಳಿದ ಲಲಿತಾ ಮತ್ತೆ ಮಾತಾಡಲಿಲ್ಲವಂತೆ. ಬೆಳಗಾಗುವಾಗ ಅವಳಿಗೆ ಮಾತೇ ನಿಂತುಹೋಗಿತ್ತು. +ನರ್ಸ್ ಕೊಟ್ಟ ವಿವರದಿಂದ ನಾನು ಕುಸಿದು ಕುಳಿತೆ. ಕ್ಯಾನ್ಸರ್ ರೋಗವೇ ಹಾಗಮ್ಮ. ಕೊನೇ ಸ್ಟೇಜ್‌ನಲ್ಲಿರುವಾಗ ನೋವು ತಡಿಯೋಕೆ ಆಗೋಲ್ಲ ನರ್ಸ್ ಹೇಳುತ್ತಿದ್ದರು. +ಲಲಿತಾನ್ನ ಇಂಟೆನ್ಸಿವ್ ಕೇರ್ ಯೂನಿಟ್‌ಗೆ ಹಾಕಿದ್ದಾರೆ. ಇನ್ನು ಮಾತಾಡೋದಿರಲಿ; ನೋಡಲೂ ನಮ್ಮನ್ನು ಬಿಡೋದಿಲ್ಲ. ನಾನು ಸ್ವಲ್ಪ ಸುಧಾರಿಸಿಕೊಂಡು ಅಲ್ಲೆ ಹಾಕಿದ್ದ ದೊಡ್ಡ ಸೋಫಾದ ತುದಿಯಲ್ಲಿ ಕುಳಿತೆ. ಮೊನ್ನೆ ನಾನು ಲಲಿತಾನ್ನ ನೋಡಲು ಬಂದಿದ್ದಾಗ, ನನಿಗೆ ನಿನ್ಹತ್ರ ಬಾಳ ಮಾತಾಡೋದಿದೆ. ನಿಂಗೇನಾದ್ರು ತೊಂದರೆಯಾಗುತ್ತಾ? ಕೇಳಿದ್ದೆ. +ಎಲ್ಲಾದ್ರು ಉಂಟಾ! ನಿನ್ನ ಮಾತು ಕೇಳೋದೇ ಒಂದು ಚೆಂದ. ನಾನಂತು ಯಾರು ಮಾತಾಡಿದ್ರು ಕೇಳೋಕೆ ಹಂಬಲಿಸ್ತೀನಿ. ಮಾತಿಲ್ಲದಾಗ ಮೌನ. ಆಳದ ಮೌನ ಅಂದ್ರೆ ನಂಗೆ ಶೂನ್ಯ. ಈ ಶೂನ್ಯ ಸಾವಿದ್ದಂತೆ. ಮಾತು ಕೇಳ್ತಾ ಇದ್ರೆ ನಾನಿನ್ನೂ ಬದುಕಿದ್ದೀನಿ ಅನಿಸುತ್ತೆ… ಬಿಕ್ಕಳಿಕೆ ಬಂದು ಮಾತು ನಿಲ್ಲಿಸಿದಳು ಲಲಿತಾ. ದೇಹದ ಶಕ್ತಿಯೆಲ್ಲಾ ಹಾಕಿ ಕಣ್ಣು ಮುಚ್ಚಿಕೊಂಡಳು. ಮುಖ ಕಿವುಚುತ್ತಾ ನೋವು ತಿನ್ನುತ್ತಿದ್ದಳು. ಮತ್ತೆ ಅರೆ ಕ್ಷಣದಲ್ಲಿ ಕಣ್ಣು ಬಿಟ್ಟುಬಿಟ್ಟು ಬಿಟ್ಟು ಬರುತ್ತೆ. ಆಗ ಸ್ವಲ್ಪ ಕಷ್ಟ ಅಷ್ಟೆ ಅಂತ ಸಣ್ಣಗೆ ನಕ್ಕಳು. +ನಾಡಿದ್ದು ಬೆಳಿಗ್ಗೇನೆ ಬಾ. ಅವತ್ತು ಮಾತಾಡೋ ದಿನ ನಿನಗೆ. ಮಾತು ಕೇಳೋ ದಿನ ನನಗೂ ಅಮ್ಮನಿಗೂ ಲಲಿತಾ ಹೇಳಿ ತಾಯಿಯ ಮುಖ ನೋಡಿದಳು. ಅವರು ಕೂಡಬಾಮ್ಮ ಸುಭಾಷಿಣಿ. ನಾಡಿದ್ದು ನಾವು ಮೂರು ಮಂದಿ ಸೇರಿಕೊಂಡು ಮಾತಾಡೋ ದಿನ ಆಚರಿಸೋಣ ಅಂತ ನನ್ನ ಬೆನ್ನು ತಟ್ಟಿದರು. ಲಲಿತಾಗೆ ನಿಶ್ಶಕ್ತಿ ಬಹಳವೇ ಇತ್ತು. ಕಿಮೋಥೆರಪಿಯಿಂದಾಗಿ ವಾಂತಿ ನಿಂತಿರಲಿಲ್ಲ. ನಾನು ಹೊರಟು ನಿಂತಾಗ ಕೈ ಮೇಲೆತ್ತಲೂ ಆಗುತ್ತಿರಲಿಲ್ಲ. ಕಣ್ಣುಗಳಲ್ಲು ಕಳೆಯಿರಲಿಲ್ಲ. ಮಂಕಾಗಿಯೇ ನಾಡಿದ್ದು ಮರೀಬೇಡ ಅಂತ ಹೇಳಿದ್ದಳು. +ನನ್ನ ಆಸೆಯೆಲ್ಲ ನುಚ್ಚುನೂರಾಗಿತ್ತು. ಲಲಿತಾ ಎದುರು ಕುಳಿತು ಮಾತಾಡಬೇಕು. ಮನಸ್ಸನ್ನೆಲ್ಲಾ ಖಾಲಿ ಮಾಡಿ ಹಕ್ಕಿಯಂತೆ ಹಾರಬೇಕು ಅಂದುಕೊಂಡಿದ್ದೆ. ಒಂದೇ ಒಂದು ಸಲ ಕ್ಷಮಿಸಮ್ಮಾ ಸಾಕು ಅಂತ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಅವಳು ಕೊಡುವ ಉತ್ತರವೂ ಗೊತ್ತಿತ್ತು- ತಲೆ ಕೆಟ್ಟಂತೆ ಮಾತಾಡ್ಬೇಡ ಸುಮ್ಮನಿರು. ನಾವೆಲ್ಲ ಮನುಷ್ಯರೇ ಅಲ್ವ. ತಪ್ಪುಗಳನ್ನ ಮಾಡ್ತಾನೇ ಇರ್‍ತೀವಿ, ತಿದ್ದಿಕೊಳ್ತಾನೂ ಇರ್‍ತೀವಿ ಅಂತ ನನ್ನ ಬಾಯಿ ಮುಚ್ಚಿಸುತ್ತಿದ್ದಳು. +ಲಲಿತಾ ಆ ದಿನ ಸಂಪಾದಕರ ಕ್ಯಾಬಿನ್‌ನಿಂದ ಹೊರಬಂದವಳು ನನ್ನ ಆಚೆ ಕರ್‍ಕೊಂಡು ಹೋಗಿ ಹೊಟ್ಟೆ ಹಿಡಿದು ನಕ್ಕಳು.ನೋಡೇ ಸುಭಾ, ಆತ್ಮಸಾಕ್ಷಿ ಇರೋದು ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳೋಕೆ. ತಪ್ಪು ತಿದ್ದಿಕೊಳ್ತಾ ಬೆಳೀತೀವಿ. ಅದೇ ಇಲ್ದಿದ್ರೆ ವ್ಯಕ್ತಿ ದೊಡ್ಡ ಸ್ಥಾನದಲ್ಲಿದ್ರೂ ಸಣ್ಣ ವ್ಯಕ್ತಿಯೇ ಆಗಿರ್‍ತಾನೆ. ಅವನ ವ್ಯಕ್ತಿತ್ವ ಬೆಳೆಯೋದಿಲ್ಲ. ಬದಲು ಮತ್ತಷ್ತು ಸಣ್ಣತನ ಬೆಳೆಸಿಕೊಳ್ತಾನೆ ನಗುತ್ತಲೇ ಹೇಳಿದಳು. ಅವರು ಅವಳನ್ನ ಎದುರು ಕೂರಿಸಿಕೊಂಡು ಅವಳ ನಡತೆ ಬಗ್ಗೆ ದ್ವಂದ್ವಾರ್ಥದ ಮಾತನಾಡಿದರಂತೆ ಸಂಪಾದಕರು. +ಹೆಂಗಸು ತನಗೆ ಅನ್ಯಾಯ ಮಾಡ್ತಾಯಿದ್ದೀರಿ ಅಂತ ಪಟ್ಟು ಹಿಡಿದು ಕೇಳಿದಾಗ ಅನ್ಯಾಯ ಮಾಡೋ ವ್ಯಕ್ತಿಗೆ ಉತ್ತರ ಕೊಡೋಕೆ ಆಗೋಲ್ಲ. ಅನ್ಯಾಯವಾದಾಕೆ ಎಪ್ಪತ್ತು ವರ್ಷದ ಅಜ್ಜಿಯೇ ಇರಬಹುದು. ಹಾಗಿದ್ರೂ ಅವಳ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತಾರೆ ನೋಡು. ಅದೇ ಅವರ ಕೊನೆ ಅಸ್ತ್ರ. ನಾವೋ ಕೆಟ್ಟದ್ದನ್ನ ಬೇರೆ ಬೇಗ ನಂಬುತ್ತೇವೆ. ಸತ್ಯವನ್ನ ಸಂಶಯದಿಂದ ನೋಡುತ್ತೇವೆ. ಈ ಸಂಪಾದಕ ಮಹಾಶಯ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತಾನೆ. ಅದೂ ಅರವತ್ತು ಸಮೀಪಿಸಿರೋ ಈ ವ್ಯಕ್ತಿ ದೊಡ್ಡ ಸ್ಥಾನದಲ್ಲಿ ಕುಳಿತು! ಲಲಿತಾ ನಗುತ್ತಲೇ ಹೇಳಿದಳು. +ಅವಳ ನಗುವಲ್ಲಿ ನೋವಿತ್ತು ಅಂತ ನನಗೆ ಗೊತ್ತಿದ್ದರೂ ನಾನು ಮಾತಾಡಲಿಲ್ಲ. ಕಾಯಿಲೆಯಿಂದ ಚೇತರಿಸಿಕೊಳ್ಳಬೇಕಿದ್ದವಳಿಗೆ ನನ್ನಿಂದ ಒಂದೆರಡು ಸಾಂತ್ವನದ ಮಾತು ಬೇಕಿತ್ತು. ಕ್ಯಾಬಿನ್‌ನಿಂದ ಹೊರಬಂದ ಸಂಪಾದಕರು ಲಲಿತಾ ನನ್ನೊಂದಿಗೆ ಮಾತಾಡುತ್ತಿರುವುದನ್ನು ನೋಡಿದರು. ನಾನು ಸಣ್ಣಗೆ ನಡುಗಿದೆ. ಅವಳಿಂದ ತಪ್ಪಿಸಿಕೊಳ್ಳೋಕೆ ನೋಡಿದೆ. ಲಲಿತಾ, ಇನ್ನೊಂದು ದಿನ ಇದನ್ನೆಲ್ಲ ಮಾತಾಡೋಣ. ಇವತ್ತು ನಂಗೆ ನಾಟಕ ರಿಹರ್ಸಲ್ ಇದೆ ಅಂದೆ. +ಯಾವ ನಾಟಕ? ಕೇಳಿದಳು. +ಅದೇ ಡೌರಿಡೆತ್ ಕುರಿತು +ಸರಿ. ನಿನ್ನ ನಿಲ್ಲಿಸಿಕೊಂಡುಬಿಟ್ಟೆ ಸಾರಿ ಸುಭಾಷಿಣಿ ಅಂತ ನನ್ನ ಕಳುಹಿಸಿಕೊಟ್ಟಳು. +ನಾಳೆ ದಿನ ಸಂಪಾದಕರು ಲಲಿತಾ ಏನು ಮಾತಾಡುತ್ತಿದ್ದಳು ಎಂದು ಕೇಳಿಬಿಟ್ಟರೆ ಏನು ಹೇಳಲಿ. ನನ್ನನ್ನೂ ಅವರು ಕಪ್ಪು ಪಟ್ಟಿಗೆ ಸೇರಿಸಿಬಿಟ್ಟರೆ… ಒಂದು ಸುಳ್ಳು ಹೇಳಿ ಸುಭಾಷಿಣಿಯಿಂದ ತಪ್ಪಿಸಿಕೊಂಡಿದ್ದೆ, ನಾನು ಅಲ್ಲಿಂದ ಹೋಗುವಾಗ ನನ್ನನ್ನು ನೋಡುತ್ತಲೇ ನಿಂತಿದ್ದಳು. +ಆಗ ಲಲಿತಾ ಕ್ಯಾನ್ಸರ್ ಗುಣವಾಗಿ ಬಂದಾಗ ನಾವೆಲ್ಲ ಸ್ವಾಗತಿಸಿದ್ದೇ ಸ್ವಾಗತಿಸಿದ್ದು. ಅವಳಿಗೂ ಕೆಲಸಕ್ಕೆ ಹಿಂದಿರುಗಿಬಂದ ಸಂತೋಷ. ಆದರೆ ಈ ಸಂತೋಷ ಬಹಳ ಹೊತ್ತು ಇರಲಿಲ್ಲ. ಸಂಪಾದಕರ ಕ್ಯಾಬಿನ್‌ಗೆ ಹೋಗಿಬಂದವಳ ಮುಖ ಮತ್ತೆ ಕ್ಯಾನ್ಸರ್ ತಗುಲಿದಂತೆ ಜರ್ಜರಿತವಾಗಿತ್ತು. +ನೋಡೆ, ನಾನು ಹಿಂದೆ ಕೆಲಸ ಮಾಡುತ್ತಿದ್ದಲ್ಲಿಂದ ಬದಲಿಸಿದ್ದಾರೆ. ಮಧ್ಯಾಹ್ನದ ಮೇಲೆ ಬಂದು ರಾತ್ರಿ ಹೋಗಬೇಕಂತೆ. ಬಿಸಿಲಲ್ಲಿ ಬಸ್ಸಲ್ಲಿ ಬರೋದು, ರಾತ್ರಿ ಎರಡು ಬಸ್ ಹಿಡಿದು ಹೋಗೋದು.. ಔಷಧಿ, ಊಟ.. ಇದೆಲ್ಲ ಹೇಗೆ ಸುಧಾರಿಸಲಿ? ನಂಗೇನೂ ಗೊತ್ತಾಗ್ತಿಲ್ಲ ಅಸಹಾಯಕಳಾಗಿ ಹೇಳಿದಳು ಲಲಿತಾ. +ಸಡನ್ ಹೀಗ್ಯಾಕೆ? ಆತಂಕದಿಂದಲೇ ಕೇಳಿದೆ. +ನಂಗೂ ತಿಳೀತಿಲ್ಲ. ಇಪ್ಪತ್ತು ವರ್ಷ ದುಡಿದಿದ್ದೀನಿ. ಈಗ ಈ ಸ್ಥಿತೀಲಿ ಹೀಗ್ಯಾಕೆ ಮಾಡ್ತಾರೋ… ಖಿನ್ನಳಾಗಿ ಹೇಳಿದಳು. +ನಾವು ನಾಲ್ಕು ಮಂದಿ ಪತ್ರಕರ್ತೆಯರು ಅವಳನ್ನ ಸುತ್ತುವರೆದಿದ್ದವು. ನನ್ನಿಂದ ಏನು ತಪ್ಪಾಗಿದೆ ಅಂತ ಕೇಳೋಣ ಅಂದುಕೊಂಡೆ. ಮಾತಾಡೋ ಅವಕಾಶನೇ ಕೊಡಲಿಲ್ಲ. ಇದು ನೀನು ಮಾಡಿದ ತಪ್ಪು ಅಂತ ಅವರು ಹೇಳಿದ್ದರೆ ನಿಜವಾಗಿಯೂ ನಾನು ತಪ್ಪೆ ಮಾಡಿದ್ದರೆ ಕ್ಷಮೆ ಕೇಳುತ್ತಿದ್ದೆ. ಅದಕ್ಕೇ ಹೇಳೋದು ಪಾರದರ್ಶಕತೆ ಇರಬೇಕೂಂತ. ವಾಸ್ತವಾನ್ನ ಪುಸ್ತಕ ತೆರೆದಿಟ್ಟ ಹಾಗೆ ತೆರೆದಿಡುತ್ತೆ. ಸತ್ಯ ಹೇಳೋಕೆ ಧೈರ್ಯಬೇಕು. ಸುಳ್ಳು ಹೇಳೋವಷ್ಟು ಸುಲಭವಲ್ಲ. ಹೋಗಲಿ ಬಿಡು. ಏನು ಮಾತಾಡಿದ್ರು ಪ್ರಯೋಜನವಿಲ್ಲ. ನಾನು ಮುಂದೇನು ಮಾಡಬಹುದು? ನಿಮಗೇನಾದ್ರು ಹೊಳೆಯುತ್ತಾ? ಲಲಿತಾ ಕೇಳಿದಳು. +ನಾವು ಒಬ್ಬರೂ ಬಾಯಿಬಿಡಲಿಲ್ಲ. ನಮ್ಮ ಅನಿಸಿಕೆ ಹೇಳಿದರೆ ಮುಂದ್ಹೇಗೊ? ನಮಗ್ಯಾಕೆ ಈ ವಿಷಯದಲ್ಲಿ ಬಾಯಿ ಹಾಕೊ ಕೆಲಸ ಅಂತ ನಾವು ಒಬ್ಬೊಬ್ಬರೆ ಜಾಗ ಖಾಲಿ ಮಾಡಿದೆವು. ಲಲಿತಾ ಶೂನ್ಯಳಾಗಿ ನಮ್ಮನ್ನೇ ನೋಡುತ್ತಿದ್ದಳು. ಖಾಯಿಲೆಗೇ ಬಹಳ ಖರ್ಚಾಯಿತು. ಕೆಲಸ ಬಿಡೋ ಸ್ಥಿತೀಲಿ ಇಲ್ಲ. ಹಾಗಂತ ಬಿಸಿಲಲ್ಲಿ ಬಂದು ರಾತ್ರಿ ಹೋಗೋ ಶಕ್ತೀನೂ ಇಲ್ಲ. ಉಳಿದಿರೋದು ಒಂದೇ ಕೆಲಸ ಎಂಡಿಯವರನ್ನ ನೋಡೋದು…ತನ್ನಷ್ಟಕ್ಕೆ ಗೊಣಗಿಕೊಂಡಳು. +ಲಲಿತಾ ಪರ ವಹಿಸಿ ಮಾತಾಡೋದು ಕಷ್ಟ. ನಾವು ಸುಮ್ಮನೆ ನಿಷ್ಟುರವಾಗಬೇಕು. ಇಲ್ಲಿ ನಮಗೆ ಅವಕಾಶಗಳ ಬಾಗಿಲು ತೆಗೆದುಕೊಳ್ಳೋದೇ ಕಷ್ಟ. ಅದು ಲಲಿತಾಗೂ ಗೊತ್ತು. ತೀರಾ ಪ್ರತಿಭಾವಂತರಾದರೆ ಸಂಪಾದಕರಿಗೂ ಅವರಿಗೆ ಬರೋ ಅವಕಾಶಗಳನ್ನ ತಡೆಯೋಕೆ ಸಾಧ್ಯವಿಲ್ಲ. ಪತ್ರಿಕೆ ಚೆನ್ನಾಗಿ ಬರಬೇಕಲ್ಲ. ಹಾಗಿಲ್ಲದಿದ್ದರೆ ಅದೃಷ್ಟ ಚೆನ್ನಾಗಿರಬೇಕು. ಅವಕಾಶಗಳು ಸಿಗುತ್ತವೆ. ಇಲ್ಲದಿದ್ದರೆ ಜಾಣ್ಮೆಯಿಂದ ಸಂಪಾದಕರ ಬೇಕು-ಬೇಡಗಳನ್ನ ತಿಳಿದುಕೊಂಡು ಅವರನ್ನ ಖುಶಿಪಡಿಸಿಕೊಂಡು ಅವಕಾಶ ಪಡೀಬೇಕು. ಒಂದು ಸಲ ಅವಕಾಶ ಒಲಿದರೆ ಯಾರುತಾನೆ ಕಾಲಿಂದ ಒದೆಯುತ್ತಾರೆ? ಲಲಿತಾನ ನೋವಿಗೆ ನಾವು ಧ್ವನಿ ಸೇರಿಸಬೇಕಾದರೆ ನಮ್ಮ ಅನಿಸಿಕೆಗಳನ್ನ ಹೇಳಲೇಬೇಕು. ಅದು ಸಂಪಾದಕರ ಇಚ್ಛೆಗೆ ವಿರುದ್ಧವಾದರೆ.. ಅವಳ ಮಾತು ಕೇಳಿಕೊಂಡು ಸುಮ್ಮನಿದ್ದುಬಿಡಬೇಕು. ಏನೊಂದೂ ಪ್ರತಿಕ್ರಿಯಿಸಬಾರದು. ಆಗ ಅಪಾಯವಿಲ್ಲ. ಹೀಗಿದ್ದರೆ ಸಂಪಾದಕರ ಕಣ್ಣಲ್ಲೂ ಒಳ್ಳೆಯ ಹಾರ್ಡ್‌ವರ್ಕ್ ಜರ್ನಲಿಸ್ಟ್ ಆಗಿರ್‍ತೇವೆ. +ಸುಭಾಷಿಣಿ, ಕೊನೆಗೂ ಗೆದ್ದೆ. ನನ್ನಿಂದ ತಪ್ಪಾಗಿದ್ದರೆ ಸಂಪಾದಕರು ಹೇಳಬಹುದಿತ್ತು. ನಾನು ಎಂಡಿಯವರನ್ನನೋಡಿದೆ. ಹಿಂದಿನಂತೆ ಬೆಳಿಗ್ಗೆ ಬಂದುಹೋಗಲು ತಿಳಿಸಿದ್ದಾರೆ. ನನ್ನ ನಿಶ್ಶಕ್ತಿ, ಥೆರಪಿಗಳ ಸೈಡ್ ಎಫೆಕ್ಟ್ ಎಲ್ಲಾ ಅವರ ಕಿವಿಗೆ ಮುಟ್ಟಿಸಿದೆ. ಈ ವರೆಗೂ ಪತ್ರಿಕೆಗೆ ಕಷ್ಟಪಟ್ಟೇ ಕೆಲಸ ಮಾಡಿದೆ. ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನಲ್ಲಿ ಸತ್ಯವಿದೆ. ಅದಕ್ಕೇ ಸಂಪಾದಕರು ಮಾನಸಿಕವಾಗಿ ಕಿರುಕುಳ ನೀಡಲು ನೋಡಿದರೂ ನಾನು ಗೆದ್ದುಬಂದೆ. ಆದರೆ ಈ ಒಂದು ಗೆಲುವಿಗೆ ಎಷ್ಟು ಅವಮಾನ, ನೋವು ತಿನ್ನಬೇಕಾಯಿತು.. ಲಲಿತಾ ನಕ್ಕಳು. +ಇದು ಲಲಿತಾನ ಮೊದಲ ಗೆಲುವು. ನಾವು ಪತ್ರಕರ್ತೆಯರು ಒಂದಿಷ್ಟು ನೈತಿಕ ಬಲ ನೀಡದಿದ್ದರೂ ಅವಳಾಗಿಯೇ ಈ ಗೆಲುವು ಸಾಧಿಸಿದಳು. ಅವಳ ಮಾತಿಗೆ ನಾವು ಯಾರೂ ಮಾತಾಡಲಿಲ್ಲ. ಯಾಕೆ ಅಂದರೆ ನಾವೆಲ್ಲ ವೈರುಧ್ಯಗಳನ್ನು ಸೃಷ್ಟಿಸಿಕೊಳ್ಳುವವರಲ್ಲ. ಸಂಪಾದಕರು ನಮ್ಮನ್ನು ಒಳ್ಳೆಯವರು ಎಂದು ಗುರುತಿಸಿದ ಮೇಲೆ ನಮ್ಮದೆಲ್ಲ ವ್ಯಕ್ತಿತ್ವ ಗಟ್ಟಿಯೇ. ಪ್ರಮೋಷನ್‌ಗೆ ಅವಕಾಶಗಳು ಹೆಚ್ಚು. ಹೀಗಿದ್ದಾಗ ಈ ಕ್ಯಾನ್ಸರ್ ರೋಗಿಗಾಗಿ ನಾವೆಲ್ಲ ಸೇರಿಕೊಂಡು ಯಾಕೆ ಹೋರಾಟ ನಡೆಸಬೇಕು? +ಲಲಿತಾ ಮೂಲೇಲಿ ಕುಳಿತು ಕೆಲಸ ಮಾಡತೊಡಗಿದಳು. ಅದೂ ಬಹಳ ದಿನ ನಡೆಯಲಿಲ್ಲ. ಅಂದು ಭಾನುವಾರ. ಲಲಿತಾಗೆ ವಾರದ ರಜೆ. ಆದರೆ ಮಧ್ಯಾಹ್ನ ಅವಳಿಗೆ ಫೋನ್ ಕಾಲ್ ಹೋಗಿತ್ತು. ಸಹ ಸಂಪಾದಕರು ರಜೆ ಹೋಗುವುದರಿಂದ ಅವರ ಕೆಲಸ ಬಂದು ಮಾಡಬೇಕು ಎಂದು ಅವರು ತಿಳಿಸಿದ್ದರು. ಆ ಕೆಲಸ ಗೊತ್ತಿಲ್ಲವೆಂದು ಲಲಿತಾ ಹಲುಬಿಕೊಳ್ಳುತ್ತಿರುವಾಗ ಸಹ ಸಂಪಾದಕರು ಫೋನ್ ಕೆಳಗಿಟ್ಟರು. ಗಾಬರಿಯಿಂದ ಕೆಲಸಕ್ಕೆ ಓಡಿಬಂದಿದ್ದಳು. ಎಂದೂ ಆ ವಿಭಾಗದಲ್ಲಿ ಕೆಲಸ ಮಾಡದ ಅವಳು ಸ್ವಲ್ಪ ದಿಗಿಲುಗೊಂಡಿದ್ದಳು. ಲೇಖನ, ಫೊಟೊ ಸ್ಕೇನಿಂಗ್ ಅಂತ ಓಡಾಡಿದಳು. ಸ್ವಲ್ಪವೇ ಹೊತ್ತಲ್ಲಿ ಕಾಲು, ಪಾದ ಊದಿಕೊಂಡವು. ಒಂದೆರಡು ಸಲ ವಾಂತಿ ಮಾಡಿಕೊಂಡಳು, ಸುಭಾ, ಕ್ಯಾನ್ಸರ್ ಆದವರು ಟೆನ್ಷನ್ ಮಾಡಿಕೊಳ್ಳಬಾರದು. ಇಷ್ಟು ದೊಡ್ಡ ಕೆಲಸ ಕೊಟ್ಟಿದ್ದಾರೆ. ರಾತ್ರಿ ಹನ್ನೆರಡಾದರು ಮುಗಿಯೋದಿಲ್ಲ. ಕಾಲು ಊದಿ ಭಾರ ಆಗ್ತಿದೆ ಎಂದು ಕಾಲು ತೋರಿಸಿದಳು. ನಾವು ಮಾತಾಡಲಿಲ್ಲ. +ಸಾರ್, ನಂಗೆ ಮಾಡೋಕೆ ಸಾಧ್ಯವಿಲ್ಲ. ನಾನು ಚೇತರಿಸಿಕೊಂಡ ಮೇಲೆ ಏನೂ ಕೆಲಸ ಹೇಳಿ ಮಾಡ್ತೀನಿ. ಈ ಸ್ಥಿತೀಲಿ ಹೀಗೆ ಮಾಡಬೇಡಿ ಸುದ್ದಿ ಸಂಪಾದಕರಲ್ಲಿ ಬಡಬಡಿಸುತ್ತಿದ್ದಳು. ಮತ್ತವಳು ಬಂದು ಇದನ್ನೆಲ್ಲ ನಮಗೆಲ್ಲಿ ವರದಿ ಒಪ್ಪಿಸುತ್ತಾಳೋ ಎಂದು ಹೆದರಿಕೆ ಆಗುತ್ತಿತ್ತು. ನಾವೆಲ್ಲ ಮೌನದ ರಕ್ಷಣೆಯ ಕವಚ ತೊಟ್ಟುಬಿಟ್ಟೆವು. ಲಲಿತಾ ನಮ್ಮೆದುರು ನೋವು ತೋಡಿಕೊಳ್ಳುತ್ತಿದ್ದಳು. ನಮ್ಮ ಪ್ರತಿಕ್ರಿಯೆಗೆ ಆಸೆಯಿಂದ ನೋಡುತ್ತಿದ್ದಳು. ನಾವು ಯಾರೂ ಮಾತಾಡಲಿಲ್ಲ. ಮತ್ತೆ ಲಲಿತಾ ಕೆಲವು ದಿನ ಕೆಲಸಕ್ಕೆ ಬರಲಿಲ್ಲ. +ಸಣ್ಣತನಗಳಿಂದ ಕಿರಿ ಕಿರಿ ಅನುಭವಿಸೋದು ಬೇಡ ಅಂತ ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಅಂತ ಆಫೀಸಿಗೆ ಬಂದಿದ್ದ ಲಲಿತಾ ಹೇಳಿದಳು. ಅಂದು ಮಹಿಳೆಯರ ಶೋಷಣೆಗೆ ಸಂಬಂಧಿಸಿದಂತೆ ನಾನು ಬರೆದ ಕವನಗಳ ಸಂಕಲನ ನಿನ್ನ ನೋವಿಗೆ ಧ್ವನಿ ನಾನು ಬಿಡುಗಡೆ ಸಮಾರಂಭದ ಬಿಜಿಯಲ್ಲಿದ್ದೆ. ಲಲಿತ ನನ್ನೊಡನೆ ಮಾತಾಡುವ ಆಸೆಯಲ್ಲಿದ್ದಳು. ನಿನ್ನಲ್ಲಿಗೆ ನಾನೇ ಬಂದು ಮಾತಾಡುತ್ತೇನೆ. ಇವತ್ತು ಸಮಾರಂಭದ ಗಡಿಬಿಡಿ ಎಂದು ಅವಳನ್ನು ಸಾಗಹಾಕಿದೆ. +ಮತ್ತೆರೆಡು ದಿನಗಳಲ್ಲಿ ಲಲಿತಾ ಮತ್ತೆ ಕೆಲಸಕ್ಕೆ ಬಂದಳು. ಸುಭಾ, ಎಂಡಿಯವರು ನನ್ನ ರಾಜೀನಾಮೆ ತಿರಸ್ಕರಿಸಿದ್ದಾರೆ. ನನ್ನ ನೋವಿಗೆ ನ್ಯಾಯ ಸಿಕ್ಕಿದೆ. ಮತ್ತೆ ಕೆಲಸಕ್ಕೆ ಬಂದಿದ್ದೇನೆ ಎಂದಳು. ಇದು ಅವಳ ಎರಡನೇ ಗೆಲವು. ಆದರೆ ಈ ಬಾರಿ ನಾವು ಅವಳಿಗೆ ಹೆದರಿದ್ದೇವೆ. ಅವಳಿಂದ ದೂರ ಇದ್ದಷ್ಟು ಅನುಕೂಲ. ನಾವು ಯಾವತ್ತಿನಂತೆ ಮೌನವಾಗಿ ಅವಳಿಂದ ದೂರ ಸರಿದೆವು. +ಮತ್ತೊಂದು ದಿನ ಕ್ಯಾಂಟೀನ್‌ನಲ್ಲಿ ಸಿಕ್ಕಿದ ಲಲಿತಾ ಹೇಳಿದಳು ಸಂಪಾದಕರೊಡನೆ ತಾನೂ ಕಟುವಾಗಿ ಮಾತನಾಡಿದೆ ಎಂದು. ನಾನು ಈ ವರೆಗೆ ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದವರನ್ನ ಖುಷಿಪಡಿಸಿಲ್ಲ. ಇನ್ನು ಖುಷಿ ಪಡಿಸೋದೂ ಇಲ್ಲ. ಕ್ಯಾನ್ಸರ್ ಆಗಿದ್ದುದರಿಂದ ರಾತ್ರಿ ವರೆಗೆ ಕೆಲಸ ಮಾಡಲು ಸಾಧ್ಯವಿಲ್ಲ. ಎಂಡಿಯವರು ಹೇಳಿದ್ದಾರೆ. ಈ ಸಲ ಅವರ ಮಾತನ್ನ ನೀವು ತೆಗೆದುಹಾಕಬೇಡಿ ಎಂದು ಹೇಳಿದೆ ಎಂದು ವಿವರಿಸಿದಳು. ನಾನು ಏನೂ ಪ್ರತಿಕ್ರ್ರಿಯೆ ವ್ಯಕ್ತಪಡಿಸಲಿಲ್ಲ. ಸಂಪಾದಕರಿಗೆ ನನ್ನಲ್ಲಿ ವಿಶ್ವಾಸ ಜಾಸ್ತಿ. ಅದೂ ಬೇರೆ ಪ್ರಮೋಷನ್‌ಗಳಲ್ಲೂ ಅನ್ಯಾಯವಾಗದೆ ದೊಡ್ಡ ಪೊಸಿಷನ್ ತಲುಪುತ್ತಿದ್ದೇನೆ. ಇವಳ ಬಡಬಡ ಮಾತುಗಳನ್ನ ಕೇಳಿ ಪ್ರತಿಕ್ರಿಯೆ ತೋರಿಸಿ ನನ್ನ ಕ್ಯರಿಯರ್ ಹಾಳುಮಾಡಿಕೊಳ್ಳೋದು ಎಷ್ಟು ಸರಿ? +ಮತ್ತೆರಡು ತಿಂಗಳು ಲಲಿತಾ ಕೆಲಸಕ್ಕೆ ಬಂದಳು. ಮತ್ತೆ ಪುನಃ ಕ್ಯಾನ್ಸರ್ ಜೋರಾಗಿ ಆಸ್ಪತ್ರೆ ಸೇರಿದಳು. ನಾನು ಹೆಣ್ಣಿಗೆ ಅನ್ಯಾಯವಾದಾಗಲೆಲ್ಲಾ ಪದ್ಯ, ಕಥೆ ಅಥವಾ ನಾಟಕಗಳನ್ನಾದರು ಬರೀತೇನೆ. ಮಹಿಳಾ ದಿನಾಚರಣೆಯಲ್ಲಿ ಭಾಷಣಗಳನ್ನು ಕೊಡುತ್ತೇನೆ. ಮಹೀಳಾವಾದಿ ಎಂದೇ ಹೊರಗಡೆ ನನ್ನ ಗುರುತಿಸುತ್ತಾರೆ. ಸಮಾಜದಲ್ಲಿ ಇಂಥವನ್ನೆಲ್ಲ ಮಾಡುವುದು ಸುಲಭ. ಸಮಾಜಕ್ಕೆ ಗೋಡೆಗಳಿಲ್ಲವಲ್ಲ. ಆದ್ರೆ ಕಚೇರಿಯೊಳಗೆ ಹಾಗಲ್ಲ. ಇಲ್ಲಿ ಗೋಡೆಗಳಿವೆ. ಹಾಗಾಗಿ ನಾವು ಇಲ್ಲಿ ಮಹಿಳೆಗೆ ಅನ್ಯಾಯವಾದರೆ ಮಾತಾಡೋದಿಲ್ಲ. ಪ್ರತಿಭಟನೆ ವ್ಯಕ್ತಪಡಿಸೋದಿಲ್ಲ. ಗೋಡೆಯೊಳಗಿನ ಈ ಬದುಕಲ್ಲಿ ಮೌನದಿಂದಲೇ ಪ್ರಗತಿ. ಮೌನವೇ ರಕ್ಷಣೆ. ಮೌನವಾಗಿರೋದರಿಂದಲೇ ನನ್ನ ಗಟ್ಟಿ ವ್ಯಕ್ತಿ ಎಂದು ಗುರುತಿಸಿರುವುದು. ಆದರೆ ಲಲಿತಾಗೆ ಮೌನ ಸಾವಾಗಿ ಕಾಣುತ್ತೆ. +ಲಲಿತಾ, ನಾವೆಲ್ಲ ಕಚೇರಿಯೊಳಗೆ ಸುರಕ್ಷಿತವಾಗಿದ್ದೇವೆ. ನಮ್ಮ ಹೆಸರಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಮಹಿಳಾವಾದವನ್ನ ಎತ್ತಿ ಹಿಡಿದು ಪ್ರಗತಿಪರ ಚಿಂತಕರಾಗಿದ್ದೇವೆ. ಆದರೆ ನಿನಾಗಿ ಸಣ್ಣ… ಧ್ವನಿಯನ್ನೂ ನಾವು ಎತ್ತಲಿಲ್ಲ. ಸಂಪಾದಕರು ನೀನು ನಮ್ಮೊಡನೆ ಏನು ಮಾತಾಡುತ್ತೀಯ ಎಂದು ಕೇಳಿದಾಗ ಅವರನ್ನ ಸಂತೋಷಪಡಿಸಲಿಕ್ಕೆ ಅಂತ ನೀನು ಅವರ ಬಗ್ಗೆ ಆಡಿದ ಮಾತುಗಳನ್ನ ಚಾಚೂ ತಪ್ಪದೆ ವರದಿ ಮಾಡಿಬಿಟ್ಟೆ! ಅವರ ಕಣ್ಣಲ್ಲಿ ನನಗೆ ಕೆಟ್ಟವಳಾಗೋದು ಬೇಡವಿತ್ತು. ಆದರೆ ಈಗ ನನಗನಿಸುತ್ತದೆ ನಾನು ತಪ್ಪು ಮಾಡಿದ್ದೇನೆ ಅಂತ. ನಾನು ಇದನ್ನೆಲ್ಲಾ ನಿನ್ನಲ್ಲಿ ಹೇಳಿಕೊಂಡು ಕ್ಷಮೆ ಕೇಳಬೇಕೆಂದುಕೊಂಡೆ. ನೀನಾಗಲೇ ಮೌನದ ಲೋಕ ಸೇರಿದ್ದೀಯ. ನನ್ನ ಮೌನದಲ್ಲಿ ಮಾತು ಹುಟ್ಟಿಕೊಳ್ಳುತ್ತಿದೆ. ಮೋಡಗಳು ಢಿಕ್ಕಿ ಹೊಡೆದಾಗ ಮಳೆಯಾಗುತ್ತೆ. ಹಾಗೆ ನಿನ್ನನ್ನು ಆವರಿಸಿದ ಮೌನಕ್ಕೆ ನನ್ನ ಮೌನ ಢಿಕ್ಕಿ ಹೊಡೆದರೆ ನನ್ನ ಮೌನದಿಂದ ಮಾತುಗಳು ನಿನ್ನ ಕಿವಿಯಲ್ಲಿ ಧ್ವನಿಯಾಗಿ ಸುರಿದರೆ ನಿನಗೆ ಕೇಳೀತೇ ನನ್ನ ಕೂಗು.. ಆಗ ನನ್ನ ಒಂದಿಷ್ಟು ಕ್ಷಮಿಸುತ್ತೀಯಾ? +***** +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […] +ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ […] +ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_58.txt b/Kannada Sahitya/article_58.txt new file mode 100644 index 0000000000000000000000000000000000000000..373b56bfa749f1cc51b2346a6e2202a97e818970 --- /dev/null +++ b/Kannada Sahitya/article_58.txt @@ -0,0 +1,193 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಗ: ಒಂದು +ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ ಕಟ್ಟಿಸಿದ್ದ ನನ್ನ ಸೋದರ ಸೊಸೆ ವನಿತಾಳ ಪತ್ರ ಬಂದಿತು: ‘ಈಗಂತೂ ನಿವೃತ್ತನಾಗಿದ್ದೀಯಾ, ನೀನು-ಮಾಮಿ ಕೆಲವು ದಿನ ನಮ್ಮಲ್ಲಿ ನಿಲ್ಲಲು ಬನ್ನಿ. ಹೊಸಾ ಮನೆ, ನಾವು ಹಲವು ವರ್ಷಗಳಿಂದ ಕನಸು ಕಂಡಿದ್ದು, ನಿಮಗಾಗಿ ಕಣಿವೆಯ ಕಡೆಯ ಕೋಣೆಯನ್ನು ಕಾದಿರಿಸಿದ್ದೇವೆ. ಅಲ್ಲಿಂದ ಕಾಣುವ ದೃಶ್ಯವನ್ನು ನೀವೆಲ್ಲೂ ನೋಡಲಾರಿರಿ’ ಎಂದು ಮುಂತಾಗಿ ಪುಸಲಾಯಿಸುವ ಮಾತುಗಳಲ್ಲಿ ಬರಲು ಒತ್ತಾಯಿಸಿದ್ದಳು. ನಾನು ಕುಮಟೆಯ ಕಡೆಗೆ ಹೋಗದೇ ನಾಲ್ಕು ದಶಕಗಳ ಮೇಲಾಗಿತ್ತು. ಒಮ್ಮೆ ಹಾಯ್‌ಸ್ಕೂಲು ಶಿಕ್ಷಣ ಮುಗಿಸಿ ಕಾಲೇಜು ಶಿಕ್ಷಣಕ್ಕಾಗಿ ನೌಕರಿಗಾಗಿ ಧಾರವಾಡಕ್ಕೆ ಆಮೇಲೆ ಮುಂಬಯಿಗೆ ಹೊರಟು ಹೋದವನು ಮತ್ತೆ ಕುಮಟೆಗೆ ಹೋಗಿರಲಿಲ್ಲ. ವನಿತಾಳ ಕರೆಯನ್ನು ಖುಶಿಯಿಂದ ಒಪ್ಪಿಕೊಂಡೆವು. +ಮಣಕೀ ಬೇಣದ ಅತಿ ಪೂರ್ವಕ್ಕೆ ಎತ್ತರವಾದ ಗುಡ್ಡವೊಂದರ ನೆತ್ತಿಯಲ್ಲಿದ್ದ ಹೊಸ ವಸತಿಯಲ್ಲಿ ಕಟ್ಟಿಸಿದ ಮನೆಯಿಂದ ಕಾಣುತ್ತಿದ್ದ ನೋಟ ನಿಜಕ್ಕೂ ನಯನಮನೋಹರವಾಗಿತ್ತು. ಸೋದರ ಸೊಸೆ ‘ಕಣಿವೆ’ಯೆಂದು ಕರೆದ, ಸುಮಾರು ನೂರಿನ್ನೂರು ಅಡಿ ಕೆಳಗೆ ಸಾಗುವ, ಇಳಿಜಾರು ಕೊನೆಗೊಳ್ಳುವ ಸಮತಟ್ಟಿನ ಮೇಲೆ ಹಬ್ಬಿದ ಹಳೇ ಕೇರಿಯಲ್ಲಿ ದೃಷ್ಟಿ ಹಾಯುವ ವರೆಗೂ ಒತ್ತಾಗಿ ಬೆಳೆದ ತೆಂಗು-ಅಡಿಕೆ ಮರಗಳ ಚೆಂಡುಗಳಷ್ಟೇ ಕಣ್ಣಿಗೆ ಬೀಳುತ್ತಾ ಗಾಳಿಯಲ್ಲಿ ತೇಲಾಡುತ್ತವೆ ಎಂಬ ಭ್ರಮೆ ಹುಟ್ಟಿಸುತ್ತಿದ್ದವು. ಮುಂಬಯಿ ಮಹಾನಗರಗಳಲ್ಲಿ ಸಿಮೆಂಟ್ ಕಟ್ಟಡಗಳ ನಿರ್ಜೀವತೆಯಿಂದ ಚಿಟ್ಟು ಹಿಡಿದ ಮನಸ್ಸು, ಇಷ್ಟೊಂದು ಲವಲವಿಕೆ ತುಂಬಿದ ಹಸಿರಿನ ಆತ್ಮೀಯ ಸಹವಾಸದಲ್ಲಿ ತಾನೂ ಹಸಿರೊಡೆಯುತ್ತಿದೆ ಎನ್ನುವ ಹಾಗೆ ಪುಲಕಗೊಳ್ಳುತ್ತಿತ್ತು. ಈ ಗುಡ್ಡದ ತುದಿಯಿಂದ ಕಂಡ ಸೂರ್ಯೋದಯ ಸೂರ್ಯಾಸ್ತಗಳು; ದಿನದಲ್ಲಿ ಹತ್ತುಹಲವು ಸಾರೆ ಬಣ್ಣ ಬದಲಾಯಿಸುವಬೆಳಕಿನಲ್ಲಿ ನಲಿದಾಡುತ್ತಿದ್ದ ಬಿನ್ನಾಣಗಿತ್ತಿ ವನಶ್ರೀ ಇವುಗಳಿಂದಾಗಿ ಈ ಭೇಟಿ ಮರೆಯಲಾಗದ ಅನುಭವವಾಗಿ ನೆನಪಿನಲ್ಲಿ ಉಳಿಯುತ್ತದೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ನಾನು ಇದೀಗ ಹೇಳಲು ಹೊರಟಿದ್ದು ಬೇರೆಯೇ ಒಂದು ಅನುಭವದ ಬಗ್ಗೆ : ಸೋದರ ಸೊಸೆಯ ಮನೆಯಿದ್ದ ವಸತಿಯ ಹಾಗೇ ಕುಮಟಾ ಹಾಗೂ ಸುತ್ತಲ ಪ್ರದೇಶಗಳಲ್ಲಿ ಹಲವು ಹೊಚ್ಚ ಸೊಸ ಜನವಸತಿಗಳನ್ನು ಅಭಿವೃದ್ಧಿಗೊಳಿಸಿದ ಪ್ರಖ್ಯಾತ ಗೃಹ ನಿರ್ಮಾಣ ಸಂಸ್ಥೆ ‘ವಿಲ್ಸನ್ ಬಿಲ್ಡರ್ಸ್’ನ ಮಾಲೀಕನ ಮುಖಾಂತರ ತೆರೆದುಕೊಂಡ, ಮೈಮೇಲೆ ಮುಳ್ಳು ನಿಲ್ಲಲು ಕಾರಣವಾದ, ಒಂದು ವಿಲಕ್ಷಣ ಲೋಕದ ಬಗ್ಗೆ, ಬಾಲ್ಯದಲ್ಲಿ ಸಾಂತಪ್ಪಾ ಎಂದೇ ನಮಗೆಲ್ಲ ಪರಿಚಿತನಾಗಿದ್ದ ಈತ ಶಾಂತಾರಾಮ್ ಎಂದು ಹೆಸರನ್ನು ಯಾವಾಗ ಬದಲಾಯಿಸಿಕೊಂಡನೋ. ಬಹುಶಃ ‘ಎಸ್ಸೆಲ್ ಬಿಲ್ಡರ್ಸ್’ನ ಮಾಲೀಕನೆಂದು ಬಹು ಪ್ರಸಿದ್ಧನಾದ ಇತ್ತೀಚಿನ ವರ್ಷಗಳಲ್ಲೇ ಇರಬೇಕು. ಸಂಸ್ಥೆಯ ಹೆಸರಿನೊಳಗಿನ ‘ಎಸ್‌ಎಲ್’ ಇದು ಶಾಂತಾರಾಮ್ ಲಕ್ಷ್ಮಣ್ ಇದರ ಸಂಕ್ಷಿಪ್ತ ರೂಪವೆಂದು ಸಾಂತಪ್ಪನಿಂದಲೇ ಗೊತ್ತಾಯಿತು. +ನಾನು ಕುಮಟೆಗೆ ಬರುವ ಸುದ್ದಿಯನ್ನು ಯಾರಿಂದಲೋ ಕೇಳಿ ತಿಳಿದ ದಿನವೇ ವನಿತಾಳ ಮನೆಗೆ ಓಡೋಡಿಬಂದಂತೆ ಬಂದಿದ್ದನಂತೆ. ಮನೆ ಕಟ್ಟುವ ಕೆಲಸ ನಡೆದಾಗ ಇವರನ್ನು ಸತಾಯಿಸಿದ್ದನೇನೋ! ವನಿತಾಳ ಗಂಡ, ತುಂಬಾ ಸೌಮ್ಯ ಸ್ವಭಾವದ ರಾಮಕೃಷ್ಣ,ಕುಮಟೆಯ ಜನರ ಬಾಯಲ್ಲಿ ಕಾಯಮ್ ನಿಂತ ಬೈಗುಳದಿಂದಲೇ ಆರಂಭ ಮಾಡಿದ್ದ: “ಬೋಳಿಮಗ ಹಿಂದೆಂದೂ ನೋಡಿ ಗೊತ್ತಿರದಷ್ಟು ಮೆತ್ತಗಾಗಿ , ನೀರಿನಲ್ಲಿ ಅದ್ದು ಮುದ್ದೆಯಾದ ಇಲಿಯ ಹಾಗೆ ಮೈ ಮುದುಡಿ ನಿಂತು, ‘ನಾರಾಯಣ ಬರುತ್ತಾನಂತೆ.ದೇವರೇ ಕಳಿಸಿದ ಹಾಗೆ ಬರುತ್ತಿದ್ದಾನೆ. ನಾನವನ್ನು ಭೇಟಿಯಾಗಬೇಕು. ಅವನನ್ನು ಕಾಣದೇ ಎಷ್ಟು ವರ್ಷಗಳಾದವು, ಒಮ್ಮೆ ಭೇಟಿಮಾಡಿಸಿ, ನಿಮ್ಮ ಉಪಕಾರ ಮರೆಯಲಾರೆ’ ಎಂಬಂಥ ಮಾತಿನಲ್ಲಿ ದಮ್ಮಯ್ಯ ಹಾಕಿದ್ದ.” +ಅದೆಂಥ ಜರೂರಿನ ಕೆಲಸವಿದ್ದಿತೋ , ಇಷ್ಟು ವರ್ಷ ಊರಿಗೆ ಬಂದಿರದ ನಾನು ಊರಿಗೆ ಬರುವ ಹೊತ್ತಿಗೇ ಯಾಕೆ ಧುತ್ ಎಂದೆದ್ದಿತೋ ಎಂದು ನಾನು ದಿಗಿಲುಗೊಂಡಿದ್ದನ್ನು ನೋಡಿ ವನಿತಾ ರಾಮಕೃಷ್ಣ- ಇಬ್ಬರೂ ಸಮಾಧಾನ ಹೇಳಿದರು: ಕಾಳಜಿ ಮಾಡುವುದು ಬೇಡ. ಭೇಟಿಯ ವಿಷಯ ಎಲ್ಲರಿಗೂ ಜಾಹೀರಾದದ್ದು: ಅಪ್ಪನ ವಿರುಧ್ಧ ಬಂಡೆದ್ದು ಮನೆಯಿಂದ ಹೊರಬಿದ್ದ ಅವರ ಕಿರಿಯ ಮಗ! ಹರಿಜನ ಹುಡುಗಿಯನ್ನು ಮದುವೆಯಾಗಿ, ನಮ್ಮ ಜಾತಿಯವರು ಮಾಡಬಾರದ ಕೆಲಸಗಳನ್ನು ಮಾಡುತ್ತ ಅಪ್ಪನ ಶ್ರೀಮಂತಿಕೆಯನ್ನು, ಊರಿನಲ್ಲಿ ಅವನಿಗಿದ್ದ ಪ್ರತಿಷ್ಠೆಯನ್ನು ಧಿಕ್ಕರಿಸುತ್ತಿದ್ದ ಮಗನ ಬಗ್ಗೆ ತಕರಾರು ಮಾಡಲು ಅವನು ಊರಿಗೆ ಹೊಸತಾಗಿ ಬಂದ ಯಾರನ್ನೂ ಬಿಟ್ಟವನಲ್ಲ ತಕರಾರಿನ ಧಾಟಿ ಮಾತ್ರ ಕಾಲಕಾಲಕ್ಕೆ ಬದಲಾಗಿದೆಯಂತೆ;ಮಗನಿಗೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂಬಂಥ ಬಯಲಾಟದ ಆರ್ಭಟದಲ್ಲಿ ಆಡಿದ ಢಮಕಿಯ ಮಾತುಗಳಿಂದ ಆರಂಭವಾದದ್ದು ಬರುಬರುತ್ತ ಅವನು ಹೀಗಾಗಲು ಕಾರಣ ಅವನು ತನಗೆ ಹುಟ್ಟಿದವನೇ ಅಲ್ಲವೆದು ಸಾರಿ ಬಹಳ ವರ್ಷಗಳ ಹಿಂದೆಯೇ ಸ್ವರ್ಗಸ್ಥಳಾದ ಹೆಂಡತಿಯ ಶೀಲಕ್ಕೆ ಧಕ್ಕೆ ತಗಲಿಸುವಂಥ ಹೇಯ ಮಾತುಗಳಿಂದ ಮಗನ ಮನಸ್ಸನ್ನು ನೋಯಿಸುವ ಕ್ಷುದ್ರತೆಗೆ ಇಳಿದವನು ಈಗ ಅವನನ್ನು ಹೇಗಾದರೂ ಮಾಡಿ ಸನ್ಮಾರ್ಗಕ್ಕೆ ಹಚ್ಚುವಂತೆ ದುಂಬಾಲು ಬೀಳುತ್ತಾನಂತೆ! ಈ ಮಾತುಗಳು ಮಾಡಿದ ರಹಸ್ಯ ಸ್ಫೋಟದಿಂದ ಭೇಟಿಯ ಬಗೆಗಿನ ನನ್ನ ಕುತೂಹಲ ಇನ್ನಷ್ಟು ಹೆಚ್ಚೇ ಆಯಿತೇ ಹೊರತು ಕಡಿಮೆಯಾಗಲಿಲ್ಲ. +ಒಂದನ್ನು ಒಪ್ಪಿಕೊಳ್ಳಬೇಕು: ವನಿತಾ-ರಾಮಕೃಷ್ಣರ ಮಾತು ಕೇಳುತ್ತಿದ್ದಂತೆ ಸಾಂತಪ್ಪ ಹೆಸರಿನ ಹುಡುಗನೊಬ್ಬ ನನ್ನ ವರ್ಗದಲ್ಲಿದ್ದದ್ದು ನೆನಪಾಯಿತೇ ಹೊರತು ಎಷ್ಟು ಪ್ರಯತ್ನಪಟ್ಟರೂ ಅವನ ರೂಪವನ್ನು ನೆನೆಯದಾದೆ. ಅವನನ್ನು ಕಂಡದ್ದು ಬಹುಶಃ ಗಿಬ್ ಹಾಯ್‌ಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಇರಬೇಕು. ಬಹುಶಃ ನಾಲ್ಕನೇ ಇಯತ್ತೆಯವರೆಗೇ ನಾವು ಜತೆಯಾಗಿರಬೇಕು. ಅದಕ್ಕೂ ಮುಂದೆ ಅವನು ಕಲಿಯಲೇ ಇಲ್ಲವೆ ? ಸಾಲೆ ಬಿಟ್ಟು ಹೋದನೆ? ಊರನ್ನೇ ತೊರೆದನೆ ? ನೆನಪಾಗಲಿಲ್ಲ. ಅವನಿಂದಲೇ ಕೇಳಿ ತಿಳಿದರಾಯಿತು ಎಂದುಕೊಂಡವನ ಎದುರು ಸಾಂತಪ್ಪ ಖುದ್ದು ಬಂದು ಹಾಜರಾದಾಗಲೂ ಅವನ ಯಾವ ಭಾಗದಲ್ಲೂ ನಾಲ್ವತ್ತು ನಾಲ್ವತ್ತೈದು ವರ್ಷಗಳ ಹಿಂದೆ ಕಂಡಿರಬಹುದಾದುದನ್ನು ಗುರುತಿಸುವುದಾಗಲಿಲ್ಲ. ಅವನ ಸ್ಥಿತಿಯೂ ಅದೇ ಆಗಿರಬೇಕು ಅನ್ನಿಸಿತು. +ಅವನು ಮಾತುಕತೆಯನ್ನು ಅಲ್ಲಿಂದಲೇ ಆರಂಭಿಸಬಹುದು ಎಂಬ ನನ್ನ ಎಣಿಕೆ ಮಾತ್ರ ತಪ್ಪಾಯಿತು. ನನ್ನನ್ನು ಆತ್ಮೀಯತೆ ತುಂಬಿದ ಕಣ್ಣುಗಳಿಂದ ನೋಡುತ್ತ ಮುಗುಳ್ನಕ್ಕ. ನಾನೂ ಅವನ ಆರು ಪೂಟು ಎತ್ತರದ ಆಜಾನುಬಾಹು ಕಾಯವನ್ನು ನಿರುಕಿಸುತ್ತ ಕುಳಿತುಕೊಂಡೆ, ಮರ್ಸರಾಝ್ಡ ಬಟ್ಟೆಯ ಅಚ್ಛ ಬಿಳಿಯ ಧೋತರ, ಮುತ್ತಿನ ಬಣ್ಣದ ಸಿಲ್ಕ್ ಜುಬ್ಬಾ. ಕಾಲಲ್ಲಿ ಮೆಟ್ಟಿದ ಕೊಲ್ಹಾಪುರೀ ಚಪ್ಪಲಿಗಳನ್ನು ಬಾಗಿಲಲ್ಲೇ ಬಿಟ್ಟು ಬಂದಿದ್ದರಿಂದ ಬರಿದಾದ ಉದ್ದ ಪಾದಗಳು, ಕೊರಳಲ್ಲಿ ಜುಬ್ಬಾದ ಒಳಗಡೆ ಹೊಳೆಯುತ್ತ ಒಂದೆರಡು ಕಡೆ ಇಣುಕಿಕ್ಕುವ ಬಂಗಾರದ ಒಂದೆಳೆಯ ನಾಜೂಕು ಚೇನು. ಕೈಬೆರಳುಗಳಲ್ಲಿ ಹಲವು ಬಗೆಯ ಉಂಗುರಗಳು: ಎಲ್ಲವೂ ಹಣವಂತಿಕೆಯ ದರ್ಪ ಸಾರುತ್ತಿದ್ದರೂ ಅದರಿಂದಾಗಿಯೇ ಇರಬೇಕಾಗಿದ್ದ ಆತ್ಮವಿಶ್ವಾಸ ಮಾತ್ರ ಇರಲಿಲ್ಲ. ಎಂತಹದೋ ಅಳಕು ಅವನ ಬಾಯಿಯನ್ನು ಕಟ್ಟಿದಂತಿತ್ತು. +ನಾನು ಸಾಂತಪ್ಪ ಮಾತನಾಡುವ ಕ್ಷಣಕ್ಕಾಗಿ ಕಾದೆ. ಕಾಯುತ್ತಿದ್ದ ಹಾಗೆ ಸಂಶಯವೊಂದು ಮನಸ್ಸನ್ನು ತಟ್ಟಿ ಹೋಯಿತು. ಅರೆ! ಇವನು ನಮ್ಮ ಅವನಲ್ಲವಷ್ಟೆ ? ವರ್ಗದ ಹುಡುಗರು, ‘ನೀನು ಅಡಿಗೆ ಮಾಮನ ಮಗನಲ್ಲವೇನೋ’ ಎಂದು ಚುಡಾಯಿಸಿದಾಗೆಲ್ಲ ಲಜ್ಜೆಯಿಂದ ಮುದುಡಿಕೊಂಡು ಕಣ್ಣಲ್ಲಿ ನೀರು ತರುತ್ತಿದ್ದ ಹುಡುಗ? ಇರಲಾರ. ಅವನು ಕುರೂಪನಿದ್ದ. ಬಡಕಲಾಗಿದ್ದ. ಮೋರೆಯ ಮೇಲೆ ಸದಾ ದೈನ್ಯದ ಕಳೆಯಿರುತ್ತಿತ್ತು. ಬಂದ ನೆನಪಿನಿಂದ ಮನಸ್ಸು ಮ್ಲಾನಗೊಂಡಿತು. ಬಹುಶಃ ಸಾಂತಪ್ಪನ ಮೋರೆಗೆ ಅಂಟಿಕೊಂಡ-ಅವನ ವೇಷಭೂಷೆಗೆ ಸರಿಹೋಗದ-ಒಂದು ತರಹ ಪೆದ್ದುತನದ ಕಳೆ ಈ ನೆನಪಿಗೆ ಕಾರಣವಾಗಿರಬೇಕು, ಅನ್ನಿಸಿತು. ಕೊನೆಗೊಮ್ಮೆ ಸಾಂತಪ್ಪ ಬಾಯಿಬಿಟ್ಟ : +“ನಾನು ಯಾಕೆ ಬಂದಿದ್ದೇನೆ ಎನ್ನುವುದರ ಬಗ್ಗೆ ನಿನ್ನ ಸೋದರ ಸೊಸೆ, ಅವಳ ಗಂಡ ಸ್ವಲ್ಪವಾದರೂ ಕಲ್ಪನೆ ಕೊಟ್ಟಿರಬೇಕು” ಎಂದ. +“ಇಲ್ಲ, ಬಹುಶಃ ನೀನೂ ಅವರಿಗೆ ಅದರ ಸುಳುಹು ಕೊಟ್ಟಿರಲಾರಿ. ನನ್ನನ್ನು ನೋಡಲೇ ಬೇಕು ಅಂದಿಯಂತೆ.” +“ಅದರಲ್ಲಿ ಹಾಗೆ ಅಡಗಿಸುವಂಥದ್ದು ಏನೂ ಇಲ್ಲ. ನನ್ನ ಕಿರಿಯ ಮಗನಿಂದಾಗಿ ಬಹಳ ದೊಡ್ದ ಸಂಕಟಕ್ಕೊಳಗಾಗಿದ್ದೇನೆ. ಕಳೆದ ಮೂವಾತು ವರ್ಷಗಳಲ್ಲಿ ಏನೆಲ್ಲ ಸಾಧಿಸಿರುವಾಗಲೂ, ಎಷ್ಟೆಲ್ಲ ಗಳಿಸಿರುವಾಗಲೂ ಎಲ್ಲವೂ ವ್ಯರ್ಥ ಅನ್ನಿಸಹಚ್ಚಿದ್ದಾನೆ.” +“ಅವನೇ ಹಾಗೆ ಅಂದಿರಲಾರ.” +“ಮಾತಿನಲ್ಲಿ ಹೇಳಿಲ್ಲ.” +“ನಾನಿದರಲ್ಲಿ ಏನು ಮಾಡಬಲ್ಲೆ? ಮಾಡಬಲ್ಲೆನೆಂದು ಯಾಕೆ ಅನ್ನಿಸಿತು?” ನನ್ನ ಪ್ರಶ್ನೆಗೆ ಕೂಡಲೆ ಉತ್ತರ ಬರಲಿಲ್ಲ. ನಾವು ಕೂತ ಜಾಗ ಉತ್ತರ ಕೊಡಲು ಸರಿಯಾದದ್ದಲ್ಲವೆಂದು ತೋರಿತೋ. ಬೆಳಗಿನ ಹೊತ್ತು ಇಂಥದ್ದಕ್ಕೆ ಯೋಗ್ಯವಾದದ್ದಲ್ಲವೆಂದು ಬಗೆದನೋ! ತುಸು ಹೊತ್ತಿನ ಮೇಲೆ: +“ವನಿತಾ-ರಾಮಕೃಷ್ಣರಿಗೆ ಆಗ ಬಂದಕೂಡಲೇ ಹೇಳಿಬಿಟ್ಟಿದ್ದೇನೆ. ಇವತ್ತು ರಾತ್ರಿಯ ಊಟಕ್ಕೆ ಎಲ್ಲರಿಗೆ ನಮ್ಮಲ್ಲೆ ಕರೆದಿದ್ದೇನೆ. ಕಾರು ಕಳುಹಿಸುತ್ತೇನೆ. ಬೇಗ ಬನ್ನಿ. ನಾವಿಬ್ಬರೇ ಮಾಳಿಗೆಯ ಮೇಲೆ ಕುಳಿತು ಮಾತನಾಡೋಣ” ಎಂದ. ನಾನು ಈ ಮೊದಲು ಕೇಳಿದ ಒಂದು ಪ್ರಶ್ನೆಗೆ ಉತ್ತರವೆಂಬಂತೆ: “ನಿನ್ನ ಬಗ್ಗೆ ಎಲ್ಲ ಕೇಳಿ ಗೊತ್ತುಂಟಪ್ಪಾ. ಎಷ್ಟೆಲ್ಲ ಕಲಿತವನು, ಓದಿಕೊಂಡವನು, ದೇಶ ವಿದೇಶ ಸುತ್ತಾಡಿದವನು. ನಾನೋ ಕಲಿಯುವುದರಲ್ಲಿ ದಡ್ಡ. ನಿನಗೆ ಗೊತ್ತೇ ಉಂಟು. ಹಳ್ಳಿಯ ಹುಂಬನಾಗೇ ಉಳಿದೆ” ಎಂದ. ಮಾತಿನಲ್ಲಿ ತುಸು ನಾಟಕೀಯತೆ ಇತ್ತು. ಆದರೆ ಆತ್ಮನಿಂದನೆಯಿರಲಿಲ್ಲ ಅನ್ನಿಸಿತು. ನನ್ನಿಂದ ಬೀಳ್ಕೊಡುವ ಕೊನೆಯ ಕ್ಷಣದಲ್ಲಿ ನಮ್ಮ ಮಾತುಕತೆಗೆ ವಿಷಯ ಏನೆಂಬುದನ್ನು ಈಗಲೇ ಸ್ಪಷ್ಟಪಡಿಸುವವನ ಹಾಗೆ, “ಐಶ್ವರ್ಯ, ಐಶಾರಾಮ ಎಲ್ಲಾ ಭರ ಪೂರಾ ಉಂಟಪ್ಪಾ. ಐನು ಸುಖವೇ ಇಲ್ಲ” ಎಂದ. ಬಾಯಿಂದ ಹೊರಟಂತೆ ಕೇಳಿಸಿದ ಸಂಸ್ಕಾರ ಪ್ರಾಮಾಣಿಕವಾದದ್ದು ಅನ್ನಿಸಿ ಕೆಡುಕೆನ್ನಿಸಿತು. ಸುಖದ ಬಗ್ಗೆ ಉಪದೇಶ ಮಾಡುವ ಇಲ್ಲ ಸಲಹೆ ಕೊಡುವ ಜಾಯಮಾನವಂತೂ ನನ್ನದಲ್ಲ. ಹಾಗೆಂದೋ ಏನೋ ಸಾಂತಪ್ಪನ ಮಾತು ನನ್ನನ್ನು ತಕ್ಷಣ ಅಷ್ಟಾಗಿ ತಟ್ಟಲಿಲ್ಲ. ಅವನನ್ನು ಘಾಸಿಗೊಳಿಸುತ್ತಿದ್ದ ಸಂಕಟ ನನ್ನ ಭಾವನೆಗಳ ಪರಿಧಿಯ ಆಚೆಯೇ ಉಳಿಯಿತು. +ಸಾಂತಪ್ಪ ಬಂದಾಗ ಮನೆಯಲ್ಲಿ ರಾಮಕೃಷ್ಣನನ್ನು ಬಿಟ್ಟು ಉಳಿದೆಲ್ಲರೂ ಇದ್ದರು. ವನಿತಾ, ಕಾಲೇಜಿಗೆ ಈಗ ರಜೆಯಿದ್ದ ಅವಳ ಇಬ್ಬರೂ ಹುಡುಗಿಯರು, ನನ್ನ ಹೆಂಡತಿ, ನಾವಿಬ್ಬರೂ ಹಾಲಿನಲ್ಲಿ ಕೂತು ಮಾತನಾಡುತ್ತಿದ್ದಾಗ ಇವರೆಲ್ಲ ಬದಿಯ ಕೋಣೆಯಲ್ಲಿ ಸೇರಿ ಕೇಳುತ್ತಿದ್ದದ್ದು ನನ್ನ ಲಕ್ಷಕ್ಕೆ ಬಂದಿತ್ತು. ಇವರಲ್ಲಿ ಯಾರಾದರೂ ಇದೀಗ ನಡೆದದ್ದರ ಬಗ್ಗೆ ಮಾತನಾಡಬಹುದೆಂದು ಎಣಿಸಿದ್ದೆ. ಯಾರೂ ಚಕಾರವೆತ್ತಲಿಲ್ಲ. ಇಷ್ಟೇ ಅಲ್ಲ, ಚಕಾರವೆತ್ತಕೂಡದೆಂದು ತಮ್ಮತಮ್ಮಲ್ಲಿಯೇ ಬೇತು ಮಾಡಿಕೊಂಡವರಂತೆ ಕಂಡರು. ನಿಜ ಸಂಗತಿಯೆಂದರೆ ಅವರು ಸಾಂತಯ್ಯನ ಬಗ್ಗೆ, ಅವನು ಊಟಕ್ಕಿತ್ತ ಆಮಂತ್ರಣದ ಬಗ್ಗೆ ಮಾತನಾಡಿದ್ದರೆ ಕೇಳುವ ಮೂಡಿನಲ್ಲಿದ್ದೆ. ಆದರೆ ಅದನ್ನು ತೋರಿಸಿಕೊಳ್ಳದೇ- +“ರಾಮಕೃಷ್ಣ ಮನೆಯಲ್ಲಿದ್ದಂತಿಲ್ಲ?” ಎಂದೆ. +“ಅವರು ಹೊರಗೆ ಹೋದಾಗ ನೀನು ಸ್ನಾನಕ್ಕೆ ಹೋಗಿದ್ದೆ. ಅಂಗಡಿಯತ್ತ ಕಣ್ಣುಹಾಯಿಸಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ಊಟಕ್ಕೆ ಬರುತ್ತಾರೆ” ಅಂದಳು ವನಿತಾ. “ಮಧ್ಯಾಹ್ನ ಮತ್ತೆ ಅಂಗಡಿಗೆ ಹೋಗಲಾರರು. ಅಮ್ಮ ಹುಬ್ಬಳ್ಳಿಯಿಂದ ಇವತ್ತೇ ಬಂದರೂ ಬರಬಹುದಂತೆ. ಮೂರು ಗಂಟೆಯ ಸುಮಾರಿಗೆ ಒಮ್ಮೆ ಬಸ್‌ಸ್ಟ್ಯಾಂಡಿಗೆ ಹೋಗಿಬರುತ್ತೇನೆ ಎಂದಿದ್ದಾರೆ.” ಈ ಬಾರಿ ಹುಬ್ಬಳ್ಳಿಗೆ ಹೋಗುವ ವಿಚಾರವಿಲ್ಲವಾದ್ದರಿಂದ ಅಕ್ಕನನ್ನೇ ಇಲ್ಲಿಗೆ ಕರೆಯಿಸಲು ಕೇಳಿಕೊಂಡಿದ್ದೆ. ಸಾಂತಪ್ಪನ ಭೇಟಿಯ ಬಗ್ಗೆ ಚಕಾರವೆತ್ತಿರದ ಸೋದರ ಸೊಸೆಯ ಮಾತಿನಿಂದ ಈ ಭೇಟಿಗೂ ಅಕ್ಕ ಬರುವ ಸುದ್ದಿಗೂ ಸಂಬಂಧವಿದ್ದ ಅನುಮಾನವಾಯಿತು. +ಅಕ್ಕ, ವೈಧವ್ಯ ಬಂದ ಈ ಕೆಲವು ವರ್ಷಗಳಿಂದ, ತನ್ನ ಮಗನ ಜೊತೆಗೆ ಹುಬ್ಬಳ್ಳಿಯಲ್ಲಿರುತ್ತಿದ್ದರೂ, ಮೂಲತಃ ಕುಮಟೆಯವಳೇ. ತನ್ನ ವೈವಾಹಿಕ ಜೀವನವನ್ನು ಇಲ್ಲಿ ಕಳೆದವಳೇ. ಸಾಂತಪ್ಪನ ಹಕೀಕತ್ತು ಇವಳಿಗೆ ಗೊತ್ತಿಲ್ಲದಿರುವುದು ಶಕ್ಯವುಂಟೆ? ಈ ವಿಚಾರ ಬಂದದ್ದೇ ಹೊಳೆಯಿತು: ಹೇಗೂ ಅಕ್ಕ ಬರುತ್ತಾಳೆ; ಸಾಂತಪ್ಪನ ಬಗ್ಗೆ ಬೇಕಾದರೆ ಅವಳೇ ಹೇಳಲಿ ಎಂದು ಕೊಂಡಿರಬಹುದು., ಇವರೆಲ್ಲ. ಅಂತೂ ಅನೇಕ ವರ್ಷಗಳ ಮೇಲೆ ನಾವೆಲ್ಲ ಕುಮಟೆಯ ನೆಲದ ಮೇಲೆ ಒಂದೆಡೆ ಸೇರುತ್ತಿದ್ದ ಅಪರೂಪದ ಘಟನೆಗೆ ಈ ಸಾಂತಪ್ಪನಿಂದಾಗಿ ವಿಶೇಷ ಆಕಾರ ಬರತೊಡಗಿದ್ದು ಕಂಡು ಮೋಜೆನ್ನಿಸಿತು. +ಸಾಂತಪ್ಪ ಬಂದಾಗ ಒಂದು ಕಪ್ಪು ಚಹ ಕೂಡ ಕೊಟ್ಟಿರದ್ದು ನೆನಪಿಗೆ ಬಂತು. ಹೀಗೇಕೆ ನಡೆದುಕೊಂಡಳೋ ಎಂದು ಆಶ್ಚರ್ಯವಾಗಿ, “ಸಾಂತಪ್ಪನ ಜೊತೆಗೆ ನನಗೂ ಒಂದು ಕಪ್ಪು ಚಹ ಸಿಗುತ್ತದೆ ಎಂದು ಕಾದಿದ್ದೆ” ಎಂದೆ. “ಮನೆ ಬಾಗಿಲಿಗೆ ಬಂದವನಿಗೆ ಚಹ ಕೂಡ ಕೊಡದಷ್ಟು ಅನ್ನಾಡಿಯಲ್ಲ ಬಿಡು ನಿನ್ನ ಸೊಸೆ. ಈಗ ನಿನಗೆ ಬೇಕಾದರೆ ಸ್ಪೆಶಲ್ಲಾಗಿ ಮಾಡಿಕೊಡುತ್ತೇನೆ. ನಿನ್ನ ಆ ಸಾಂತಪ್ಪ ಇತರರ ಮನೆಯಲ್ಲಿ ಚಹವುಳಿಯಲಿ ನೀರನ್ನು ಕೂಡ ಮುಟ್ಟುವುದಿಲ್ಲ. ಊಟದ ಮಾತಂತೂ ದೂರವೇ ಉಳಿಯಿತು” ಎಂದಳು. ಸೊಸೆ ನನ್ನನ್ನು ಮಾತನಾಡಿಸುತ್ತಿದ್ದಾಗಲೇ ಅವಳ ಹಿರಿಯ ಮಗಳು ಚಹ ತಂದಳು. +“ತಾನೇ ಬೇರೆಯವರ ಮನೆಯಲ್ಲಿ ಊಟ ಮಾಡುವುದಿಲ್ಲವಾದರೂ ತಾನು ಮನೆಗೆ ಕರೆಸಿದವರ ಆತಿಥ್ಯದಲ್ಲಿ ಮಾತ್ರ ಎತ್ತಿದ ಕೈ. ಇವತ್ತು ನೀನೇ ನೋಡುವಿಯಂತೆ. ನನಗೆ ಈ ಮೇಜವಾನಿಯನ್ನು ತಪ್ಪಿಸುವ ಮನಸ್ಸಾಗಲಿಲ್ಲ. ಹಾಗೆಂದೇ ಊಟಕ್ಕೆ ಕರೆ ಬಂದಾಗ ಹರೆಕತ್ತು ಮಾಡಲಿಲ್ಲ. ನನಗೆ ಬರುವ ಮನಸ್ಸಿರಲಿಲ್ಲ. ಆದರೆ ನೀವಿಬ್ಬರೂ ಮಾಳಿಗೆಯ ಮೇಲೆ ಮಾತಾಡಲು ಕೂತರೆ ಕೆಳಗೆ ಮಾಮಿ ಆ ವಿಚಿತ್ರ ಹೆಂಗಸರ ಮಧ್ಯೆ ಒಬ್ಬಳೇ ಆದಾಳು ಎಂದು ನಾನೂ ಬರಲು ಒಪ್ಪಿದೆ. ಇವರು, ಮಕ್ಕಳು ಮನೆಯಲ್ಲೇ ಇರುತ್ತಾರೆ. ಅಮ್ಮ ಬರಬಹುದಾದ ಸಬೂಬು ಕೊಟ್ಟಿದ್ದೇನೆ. ಅಮ್ಮನನ್ನೂ ಕರಕೊಂಡು ಬಾ ಎನ್ನುವ ಧೈರ್ಯವಿಲ್ಲ ಅವನಿಗೆ.” +ಸೋದರ ಸೊಸೆಯ ಮಾತುಗಳಲ್ಲಿ ಬಂದುಹೋದ ಹಲವು ಸಂಗತಿಗಳು ನನ್ನ ಕುತೂಹಲಕ್ಕೆ ಕಾರಣವಾದವು. ಜೊತೆಗೇ ಅವನು ಹೀಗೆ ಊಟಕ್ಕೆ ಕರೆದಿಲ್ಲ; ನನ್ನಿಂದೇನೋ ಸಹಾಯ ಬಯಸಿದ್ದಾನೆ ಎನ್ನುವುದು ನೆನಪಾಗಿ, ನನ್ನಿಂದ ಸಹಾಯವಾಗುವಂತಿದ್ದರೆ ಯಾಕೆ ಮಾಡಬಾರದು ಎಂದು ಸಮಾಧಾನ ತಂದುಕೊಂಡೆ. +ಅಕ್ಕ ಅಂದು ನಾಲ್ಕು ಗಂಟೆಯ ಸುಮಾರಿಗೆ ಬಂದು ಮುಟ್ಟಿದಳು. ರಾಮಕೃಷ್ಣ ಮೂರು ಗಂಟೆಗೇ ಬಸ್‌ಸ್ಟ್ಯಾಂಡಿಗೆ ಹೊಗಿ ಕಾದನಂತೆ. ಸಾಂತಪ್ಪ ಮನೆಗಿತ್ತ ಭೇಟಿಯ ಬಗ್ಗೆ ರಾಮಕೃಷ್ಣ ಅಕ್ಕನಿಗೆ ಬಸ್‌ಸ್ಟ್ಯಾಂಡಿನಲ್ಲೇ ತಿಳಿಸಿದ್ದ ಎನ್ನುವುದನ್ನು ಅವಳು ಮನೆ ಹೊಕ್ಕ ರಭಸವೇ ಜಾಹೀರುಗೊಳಿಸಿತ್ತು. “ಯಾವಾಗ, ನಿನ್ನೆ ಬಂದೆಯೊ? ನಿನ್ನ ಹೆಂಡತಿ ಎಲ್ಲಿ. ಒಳಗಿರುವಳೊ? ಮಕ್ಕಳಿಬ್ಬರೂ ಆರಾಮವಲ್ಲವೆ? ಒಬ್ಬ ಬೆಂಗಳೂರು ಇನ್ನೊಬ್ಬ ಕಲ್ಕತ್ತೆಯಲ್ಲಲ್ಲವೆ?” ಎಂದು ನಾಲ್ಕು ಚುಟುಕಾದ ಪ್ರಶ್ನೆಗಳನ್ನು-ಒಂದನ್ನು ಅಂಗಳದಲ್ಲಿ, ಇನ್ನೊಂದನ್ನು ಹೊರ ಜಗಲಿಯ ಮೇಲೆ, ಎರಡನ್ನು ಹಾಲಿನಲ್ಲಿ ನಿಂತು-ಕೇಳಿದವಳು ನನ್ನ ಉತ್ತರದ ಹಾದಿ ಕಾಯದೇ ನನ್ನ ಹೆಂಡತಿಯನ್ನು, ಸೊಸೆಯನ್ನು ಹುಡುಕಿ ಸೀದಾ ಒಳಗಿನ ಕೋಣೆಗೆ ನಡೆದೇಬಿಟ್ಟಳು +ರಾಮಕೃಷ್ಣ ಕೊಟ್ಟ ಸುದ್ದಿಯಿಂದ ಅವಳಿಗೆ ಸಿಟ್ಟು ಬಂದಿದೆಯೆನ್ನುವುದು ಸ್ಪಷ್ಟವಿತ್ತು. ನಾನೂ ಅವಳ ಹಿಂದೆಯೆ ಅವಳು ಹೋದ ಕೋಣೆಗೆ ನಡೆದೆ. ವನಿತಾ ನನ್ನನ್ನು ನೋಡಿ ಕಣ್ಣು ಮಿಟುಕಿಸಿ ಕೆಲ ಹೊತ್ತು ಸುಮ್ಮನಿರುವಂತೆ ಸನ್ನೆ ಮಾಡಿದಳು. ಅಕ್ಕ ಅವಳ ಬೆನ್ನ ಹಿಂದೆ ನಿಂತ ನನ್ನನ್ನು ಪೂರ್ತಿಯಾಗಿ ಕಡೆಗಣಿಸಿ ನನ್ನ ಹೆಂಡತಿಯನ್ನು ಮೊದಲು ತರಾಟೆಗೆ ತೆಗೆದುಕೊಳ್ಳುವವಳ ಹಾಗೆ “ಏನೇ ಸುಮತೀ, ಇಲ್ಲಿಗೆ ಬಂದು ಪೂರ್ತಿ ಒಂದು ದಿನವೂ ಆಗಿಲ್ಲ. ಅಷ್ಟರಲ್ಲೇ ಈ ಊರಿನ ಹಾಳು ಉಪದ್ವ್ಯಾಪದಲ್ಲಿ ಬೀಳುವ ತಲಬು ಬಂದುಬಿಟ್ಟಿತೋ?” ಎಂದು ಕೇಳಿದವಳು ವನಿತಾಳತ್ತ ತಿರುಗಿ, “ನಿನಗೂ ತಿಳಿಯಬೇಡವೇನೆ? ಅತ್ತೆ-ಮಾವಂದಿರಿಗೆ ನಿನ್ನ ಮನೆಯಲ್ಲಿ ಇನ್ನೂ ಎರಡು ಊಟಗಳನ್ನೂ ಹಾಕಲಾರಿ. ಆಗಲೇ ಬೇರೆಯವರ ಮನೆಯ ಔತಣಕ್ಕೆ ಒಪ್ಪಿದೆಯಾ? ನೀವು ಕೂತಿರಿ. ಮೊದಲು ಬಚ್ಚಲಮನೆಗೆ ಹೋಗಿ ಸ್ನಾನ ಮಾಡಿ ಬರುತ್ತೇನೆ. ಮೈಯಲ್ಲ ಧೂಳಾಗಿಬಿಟ್ಟಿದೆ. ಹಂಡೆಯಲ್ಲಿ ನೀರುಂಟಲ್ಲವೆ?” ಎಂದಳು, ವನಿತಾ ಏನೋ ಹೇಳಲು ಹೊರಡುವಷ್ಟರಲ್ಲಿ. “ನನಗೆ ತಣ್ಣೀರು ನಡೆಯುತ್ತದೆ. ಅಬ್ಬಾ~ ಮೈಯಲ್ಲಿ ಎಂಥಾ ಉರಿ!” ಎಂದು ತಾನಿದ್ದ ಮೂಡಿನ ಕಲ್ಪನೆ ಮಾಡಿಕೊಂಡಳು. +ಅವಳು ಸ್ನಾನಕ್ಕೆ ಹೊರಟು ಹೋದ ಮೇಲೆ ನಾವೆಲ್ಲ ಗಪ್‌ಚಿಪ್ ಹೊರಗೆ ಬಂದು ಹಾಲಿನಲ್ಲಿ ಕಲೆತೆವು. ಅವಳು ಸ್ನಾನ ಮುಗಿಸಿ ಬಂದಮೇಲೆ ನಮಗೆ ಏನೆಲ್ಲ ಕಾದಿದೆ ಎನ್ನುವುದರ ಬಗ್ಗೆ ಅನುಮಾನವಿರಲಿಲ್ಲ. ಅಕ್ಕನಿಗೆ ಸಾಂತಪ್ಪನ ಬಗ್ಗೆ ಹೇಳುವುದೇ ಇದ್ದಲ್ಲಿ ನಾವು ಅವನ ಮನೆಯಲ್ಲಿ ಊಟ ಮುಗಿಸಿ ಬಂದ ನಂತರವೇ ಹೇಳಿದರೆ ಒಳ್ಳೆಯದೇನೋ ಎಂದು ಅನ್ನಿಸದೇ ಇರಲಿಲ್ಲ. ಏನೇ ಆಗಲಿ, ಅಕ್ಕನಿಂದ ತಿಳಿದ ಮಾಹಿತಿಯಿಂದ ಸಾಂತಪ್ಪನ ಬಗ್ಗೆ ಮೊದಲೇ ಮನಸ್ಸನ್ನು ಕೆಡಿಸಿಕೊಳ್ಳಲಾರೆನೆಂದು ನಿರ್ಧರಿಸಿದೆ. ಮೊದಲ ಬಾರಿಗೇ ಎನ್ನುವಂತೆ ನನ್ನಿಂದಾಗಬಹುದಾದ ಸಹಾಯ ಮಾಡುವುದಕ್ಕೆ ಒಳಗೊಳಗೇ ಬದ್ಧನಾಗತೊಡಗಿದ್ದೆ. +– ೨ – +ಸ್ನಾನ ಮುಗಿಸಿ ಮಡಿ ಸೀರೆ ಉಟ್ಟು ಮುಗುಳ್ನಗುತ್ತ ಹೊರ ಬಂದ ಅಕ್ಕ ನಮ್ಮ ಎಂದಿನ ಅಕ್ಕನಾಗಿದ್ದಳು. ಅಡುಗೆಮನೆಯಲ್ಲಿ ಸುಮತಿ, ವನಿತಾ ಏನೋ ಅಂದಿರಬೇಕು. ಹೊರಗೆ ಬಂದದ್ದೇ ನೇರವಾಗಿ ಸಾಂತಪ್ಪನ ವಿಷಯಕ್ಕೇ ಬಂದಳಾದರೂ ಮಾತಿನ ಧಾಟಿ ಬದಲುಗೊಂಡಿತ್ತು. +“ಅವನಲ್ಲಿ ಊಟಕ್ಕೆ ಹೋಗುವುದರ ಬಗ್ಗೆ ನನ್ನ ತಕರಾರಿಲ್ಲ. ನಿನ್ನ ಬಾಲ್ಯದ ಸಹಪಾಠಿಯಂತಲ್ಲ. ನಿನ್ನ ಹೆಂಡತಿ ಹೇಳಿದಳು. ನನಗಂತೂ ನೆನಪಿಲ್ಲ. ಇಷ್ಟೇ, ಕರೆದ ತಕ್ಷಣ ಒಪ್ಪಿಕೊಳ್ಳುವ ಗರಜು ಇರಲಿಲ್ಲವೇನೋ. ಅವನ ಎಲ್ಲ ಕೆಲಸಗಳೇ ಹೀಗೆ, ಕುದುರೆಯ ಮೇಲೆ ಕೂತು ಬಂದ ತರ. ಕಾಯುವ ತಾಳ್ಮೆಯಿಲ್ಲ. ಜರೂರು ಹೋಗಿ ಬನ್ನಿ. ನನ್ನನ್ನು ಕರೆದರೆ ನಾನೂ ಬರುತ್ತಿದ್ದೆ. ಆದರೆ ಕರೆಯಲಾರ. ಅವನ ಮಗ-ಸೊಸೆಯಂದಿರನ್ನು ಹತ್ತಿರ ಮಾಡಿದ ಯಾರನ್ನೂ ಅವನು ಸಹಿಸಲಾರ. ನಾನು ನಿನ್ನನ್ನು ಕಾಣಲು ಬಂದೇಬರುತ್ತೇನೆಂದು ಅವನಿಗೆ ಗೊತ್ತು. ಹಾಗೆಂದೇ ಇಷ್ಟು ಉತಾವಳಿ; ನಾನು ಬಂದು ಮುಟ್ಟುವ ಮೊದಲೇ ನಿನ್ನನ್ನು ಮಾತನಾಡಿಸುವ ಆತುರ. ನನಗೂ ಅವನ ಬಗ್ಗೆ ಇಲ್ಲದ್ದನ್ನು ಹೇಳಿ ನಿನ್ನ ಮನಸ್ಸನ್ನು ಕೆಡಿಸುವ ಇಚ್ಛೆಯಿಲ್ಲ. ನನಗೆ ಸಂಬಂಧವೇ ಇಲ್ಲದವನ ಬಗ್ಗೆ ನಾನೇಕೆ ಚಾಡಿ ಹೇಳಲಿ? ಮೇಲಾಗಿ ಅವನ ಖುದ್ದು ಪರಿಚಯ ನನಗೆ ಅಷ್ಟಕ್ಕಷ್ಟೆ. ಅವರಿವರು ಹೇಳಿದ್ದರಿಂದ ಅಷ್ಟಿಷ್ಟು ಗೊತ್ತು. ಆದರೆ ಅವನ ಮಗ ಸೊಸೆಯಂದಿರನ್ನು ಮಾತ್ರ ಚೆನ್ನಾಗಿ ಬಲ್ಲೆ. ಹುಬ್ಬಳ್ಳಿಯಲ್ಲಿ ನಮ್ಮ ಮನೆಗೆ ಹತ್ತಿರದಲ್ಲೇ ಹಳೇ ಚಾಳೊಂದರಲ್ಲಿ ಅವರ ವಾಸ್ತವ್ಯ. ನಮ್ಮ ವಾಸುದೇವ ರತ್ನದಂತಹ ಹುಡುಗ. ಅವನ ಹೆಂಡತಿಯೂ ಹಾಗೇ. ಉಮಾ ಅವಳ ಹೆಸರು. ನಮ್ಮ ಜಾತಿಯವಳಲ್ಲ. ಜಾತಿ ಏನು ಮಾಡುತ್ತದೆ? ದೇವರು ಹುಟ್ಟಿಸಿದ್ದಲ್ಲವಲ್ಲ. ಅಸ್ಪೃಶ್ಯಳಂತೆ. ನನಗೆ ಗೊತ್ತಿಲ್ಲ. ನನಗೆ ಅದರ ದಾದೂ ಇಲ್ಲ. ನನ್ನ ಮಗನ ಮನೆಯಲ್ಲಿ ಯಾರಿಗೂ ಇಲ್ಲ. ಎಂಥಾ ರಾಮ-ಸೀತೆಯರಂಥ ಜೋಡಿ ಎನ್ನುತ್ತೀ! ನೋಡಿದ್ದರೆ ನೀನೂ ಸೈ ಎನ್ನುತ್ತಿದ್ದೆ. ಮಗನನ್ನು ಇವನು ದ್ವೇಷಿಸುವುದಕ್ಕೆ ಸೊಸೆಯ ಜಾತಿಯೊಂದೇ ಕಾರಣವಿರಲಾರದು. ಇವನ ಬಗ್ಗೆ ಕೆಟ್ಟದ್ದನ್ನು ನಾನು ಹೇಳಬಾರದಾದರೆ ನೀನಿನ್ನೂ ನೋಡಿರದ ಈ ಇಬ್ಬರನ್ನು ನಾನು ಹೊಗಳಲೂಬಾರದೇನೋ! ಇಷ್ಟೇ. ಅವನ ಭುಲ್ಲವಣೆಗೆ ಒಮ್ಮೆಲೇ ಮರುಳಾಗಬೇಡ. ಎಲ್ಲವನ್ನೂ ಕೇಳಿಕೋ. ಕೂಡಲೇ ಮಾಡುತ್ತೇನೆಂದು ಮಾತು ಕೊಡಬೇಡ. ನಿನಗೆ ಮೃಷ್ಟಾನ್ನ ಉಣಿಸುವ ಪುಳಕ ಹುಟ್ಟಿದ್ದು ನೀನು ಬಾಲ್ಯದ ಗೆಳೆಯನೆಂದು ಇರಲಾರದು. ತುಂಬಾ ಮುತ್ಸಬೀ ಮನುಷ್ಯ. ಅವನ ಮಾತಿನ ಜೋರು ನಿನ್ನನ್ನು ಕೊಚ್ಚಿಕೊಂಡು ಹೋಗದಿರಲಿ ಎಂದು ಅವನ ಮಗ ಸೊಸೆಯಂದಿರ ಬಗ್ಗೆ ಅವರ ಮುತ್ತಿನಂಥ ಎರಡು ಸಣ್ಣ ಮಕ್ಕಳ ಬಗ್ಗೆ ಎರಡು ಮಾತು ಹೇಳಿಬಿಡುತ್ತೇನೆ. ನನಗೆ ಈ ಪುಟಾಣಿಗಳದೇ ಚಿಂತೆ. ಒಂದು ಗಂಡು, ಒಂದು ಹೆಣ್ಣು. ಅವನು ಹೇಳಿದ್ದನ್ನೆಲ್ಲ ನಂಬುವ ಮೊದಲು ಈ ಇವರ ಬಗ್ಗೆ ಒಂದೆರಡು ಪ್ರಶ್ನೆಗಳನ್ನಾದರೂ ಕೇಳುವುದು ಸಾಧ್ಯವಾಗಲಿ ಎಂದು ಹೇಳುತ್ತೇನೆ” ಎಂದಳು. +ರಾಮಕೃಷ್ಣ ಒಬ್ಬನನ್ನು ಬಿಟ್ಟು ಅಕ್ಕನ ಶ್ರೋತೃವರ್ಗದಲ್ಲಿ ಮನೆಯೊಳಗಿನ ಎಲ್ಲರೂ ಇದ್ದರು. ಅಕ್ಕನ ಮಾತಿನ ಧಾಟಿ ನನಗೆ ಮೆಚ್ಚುಗೆಯಾಯಿತು. ಚಾಡಿ ಹೇಳುವ ಇಲ್ಲ ಅನಾವಶ್ಯಕ ಕುತೂಹಲ ಕೆರಳಿಸುವ ಚಾಪಲ್ಯದ ಲವಲೇಶವೂ ಅದರಲ್ಲಿರಲಿಲ್ಲ. ಮೇಲಾಗಿ ಅನೇಕ ವರ್ಷಗಳ ಮೇಲೆ ಊರಿಗೆ ಬಂದವನು ಸಲ್ಲದ ಲಫಡಾದಲ್ಲಿ ಸಿಕ್ಕಿಬೀಳುವುದು ಬೇಡವೆಂದು. ನನ್ನ ಬಗೆಗೆ ಹೇಗೋ ಹಾಗೇ ಸಾಂತಪ್ಪನ ಸಂಕಟಕ್ಕೆ ಕಾರಣನಾದ ಅವನ ಕಿರಿಯ ಮಗನ ಬಗೆಗೂ ಅಷ್ಟೇ ಆತಂಕಗೊಂಡವಳ ಹಾಗೆ ಕಂಡಳು. ಅವಳು ಸಾಂತಪ್ಪನ ಬಗ್ಗೆ ಈಗಲೇ ಹೆಚ್ಚು ಹೇಳಲು ಹಿಂದೆಗೆದದ್ದಕ್ಕೆ ಬಹುಶಃ ಶ್ರೋತೃವರ್ಗದಲ್ಲಿ ವನಿತಾಳ ಹುಡುಗಿಯರಿದ್ದದ್ದು ಕಾರಣವಾಗಿರಬಹುದೆಂದು ಅನುಮಾನವಾಯಿತು. ಇಲ್ಲವಾದರೆ ಇನ್ನೊಬ್ಬರ ಬಗ್ಗೆ ಮಾತನಾಡುವ ಇಂಥ ಅವಕಾಶವನ್ನು ಸಹಜಾಸಹಜೀ ಬಿಟ್ಟುಕೊಡುವ ಜಾಯಮಾನದವಳಲ್ಲ ಅವಳು-ಮತ್ತೆ ಯಾರಿಗೆ ಗೊತ್ತು. ಅಕ್ಕ ಈ ಕೆಲವು ವರ್ಷಗಳಲ್ಲಿ ಬದಲಾಗಿರಲೂಬಹುದು, ಅನ್ನಿಸಿತು. +ಅಕ್ಕನ ಮಾತಿನೊಳಗಿನ ನಿಗ್ರಹ ಅಸಹಜತೆ ಹೆಂಡತಿಯ ಲಕ್ಷ್ಯಕ್ಕೂ ಬಂದಿರಬೇಕು. +“ಕಾವೇರಕ್ಕಾ, ಸಾಂತಪ್ಪನ ಬಗ್ಗೆ ನಮಗೇನೂ ಗೊತ್ತಿಲ್ಲ. ಇವರು ಅವನನ್ನು ಈ ಮೊದಲು ಕಂಡಿದ್ದು ಅವರು ಹದಿನಾಲ್ಕು ವರ್ಷದವರಿದ್ದಾಗಂತೆ. ಇವರ ಸ್ವಭಾವ ನಿನಗೆ ಗೊತ್ತಿದ್ದದ್ದೇ. ಯಾರೂ ಕರೆಯಲಿ, ತಪ್ಪಿಸಿಕೊಳ್ಳುವ ಖುಬಿಯೇ ಅವರಿಗೆ ಗೊತ್ತಿಲ್ಲ. ಸಾಂತಪ್ಪನಿತ್ತ ಆಮಂತ್ರಣವನ್ನು ಒಪ್ಪದಿರಲು ಅಂಥ ಬಲವಾದ ಕಾರಣವೂ ಇರಲಿಲ್ಲ. ಸಾಂತಪ್ಪನ ಬಗ್ಗೆ ಹೇಳಬೇಕೆನ್ನಿಸಿದರೆ ಹೇಳು, ನಾವು ತಪ್ಪು ತಿಳಿಯಲಾರೆವು. ನಾವು ಊಟಕ್ಕೆ ಹೋಗುವ ಮನೆಯವರ ಬಗ್ಗೆ ತುಸುವಾದರೂ ಗೊತ್ತಿರುವುದು ಒಳ್ಳೆಯದೇ” ಎಂದು ಹೇಳಲು ಪುಸಲಾಯಿಸಿದಳು. ವನಿತಾ ಕೂಡ “ಹೇಳಮ್ಮ. ಮಾಮನಿಗೆ ಗೊತ್ತಾಗಲಿ” ಎಂದು ಒತ್ತಾಯಿಸಿದಳು. ‘ಏನು ಗೊತ್ತಾಗಲಿ’ ಎನ್ನುವುದನ್ನು ಮಾತ್ರ ಅಮ್ಮನಿಗೇ ಬಿಟ್ಟುಕೊಟ್ಟಳು. +ತನ್ನದೇ ಗುಂಗಿನಲ್ಲಿದ್ದ ಅಕ್ಕ ಇದಾವುದನ್ನೂ ಕಿವಿಗೆ ಹಾಕಿಕೊಂಡಿರದವಳ ಹಾಗೆ ಮುಂದುವರಿಸಿದಳು : +“ನಾನು ಬಸ್ಸಿನಿಂದಿಳಿದು ರಿಕ್ಷಾದಲ್ಲಿ ಕುಳಿತುಕೊಂಡದ್ದೇ ರಾಮಕೃಷ್ಣ ಸಾಂತಪ್ಪನ ಮಾತು ತೆಗೆದಾಗ ನನಗೆ ಆಶ್ಚರ್ಯದ ಧಕ್ಕೆಯಾಯಿತು. ಯಾಕೆಂದರೆ ಕುಮಟೆಯ ನೆಲಕ್ಕೆ ಕಾಲು ತಾಗಿಸಿದ ಮೇಲೆ ತಲೆಯಲ್ಲಿ ಹೊಕ್ಕ ಮೊದಲ ವಿಚಾರ ಈ ಸಾಂತಪ್ಪನನ್ನು ಕುರಿತದ್ದಾಗಿತ್ತು. ನಾನು ಇಲ್ಲಿಗೆ ಬರುವುದು ನಿಶ್ಚಯವಾಗುತ್ತಲೇ ಅವನ ಸೊಸೆಯನ್ನು ಕಾಣಲು ಹೋಗಿದ್ದೆ. ಅವಳನ್ನು ಕಾಣದೇ ಕುಮಟೆಗೆ ಬರುವುದು ಶಕ್ಯವೇ ಇರಲಿಲ್ಲ. ಮದುವೆಯಾದಂದಿನಿಂದಲೂ ಈ ದುರ್ದೈವಿ ಹೆಣ್ಣುಮಗಳು ಪಡುತ್ತಿದ್ದ ಪಾಡು ಯಾರಿಗೂ ಬರಕೂಡದು. ಆದರೆ ಈ ಪಾಡಿಗೆ ಮೂಲ ಕಾರಣವಾದ ಸಾಂತಪ್ಪನ ದುಷ್ಟ ಅಹಂಕಾರಕ್ಕೆ ಬಗ್ಗದೇ ಎಲ್ಲವನ್ನೂ ಎದುರಿಸುವ ಧೈರ್ಯ ತುಂಬುತ್ತಿದ್ದ ಎಂಟೆದೆಯ ಬಂಟ ಗಂಡನೇ ಮನೆಯಿಂದ ಬೇಪತ್ತೆಯಾದರೆ ದುರ್ದೈವಿಯ ತಲೆಯ ಮೇಲೆ ಆಕಾಶ ಕಳಚಿ ಬೀಳದೇ ಉಳಿದೀತೆ? ಈ ಮಾತಿಗೆ ಈಗ ಮೂರು ದಿನಗಳಾದವು. ಗಂಡ ಬೇಪತ್ತೆಯಾದ ದಿನ ಅವಳು ಸೀದ ಓಡಿ ಬಂದದ್ದು ನನ್ನ ಬಳಿಗೇ ಆಗಿತ್ತು. ಆಜುಬಾಜಿನ ಜನ ಧೈರ್ಯ ಕೊಡುವ ಬದಲು, ‘ಬೇಪತ್ತೆಯಾಗಿಲ್ಲ. ಅವನನ್ನು ಬೇಪತ್ತೆಯಾಗಿಸಿದ್ದಾರೆ’ ಎನ್ನುವ ಮಾತುಗಳಲ್ಲಿ ಸಲ್ಲದ ಭಯವನ್ನು ತಲೆಯಲ್ಲಿ ಹಾಕಿದಾಗ ದಿಕ್ಕುಗಾಣದೇ ಅರೆಹುಚ್ಚಿಯಂತಾದವಳಿಗೆ ನಾನು ಕುಮಟೆಗೆ ಹೋಗುವುದರಲ್ಲಿ ಏನೋ ದೊಡ್ಡ ಆಶಾಕಿರಣ ಹೊಳೆದಂತಾಗಿರಬೇಕು. “ಅಕ್ಕ! ನನ್ನ ಸಲುವಾಗಿಯಾದರೂ ಅವರನ್ನು ಹೋಗಿ ನೋಡಿ ಹಕೀಕತ್ತು ತಿಳಿಯಿರಿ” ಎಂದು ಕೂಡಲೇ ಮಾವನನ್ನು ಕಾಣಲು ದುಂಬಾಲು ಬಿದ್ದಳು. ನಾನು, ನೀನು ಮುಂಬಯಿಯಿಂದ ಬಂದದ್ದನ್ನು ತಿಳಿಸಿ, ನಿನ್ನನ್ನು ಕಾಣಲೆಂದೇ ಇಲ್ಲಿಗೆ ಬರುತ್ತಿರುವ ಬಗ್ಗೆ ಹೇಳಿದಾಗಂತೂ, “ಹೌದೆ! ಹಾಗಾದರೆ ದೇವರೇ ಕಳಿಸಿರಬೇಕು. ಅವರನ್ನೂ ಕರಕೊಂಡು ಹೋಗಿ ಹಕೀಕತ್ತು ಏನೆಂದು ತಿಳಿದರೆ ಸಾಕು ಬಾಕಿ ಏನನ್ನೂ ಮಾಡಲು ನಿಮ್ಮನ್ನು ಕೇಳಲಾರೆ” ಎಂದಳು. ಅವಳ ಮಾತಿನ ಕೊನೆಯಲ್ಲಿ ಕೇಳಿಸಿದ ನಿರ್ಧಾರದ ಧಾಟಿಯನ್ನು ನೆನೆದರೇ ನನಗೆ ಭಯವಾಗುತ್ತದೆ.” +ಅಕ್ಕ ನಿರೂಪಿಸಿದ ಘಟನೆಗೂ ಸಾಂತಪ್ಪನ ಮೇಲೆ ಎರಗಿದ ಆಪತ್ತಿಗೂ ಸಂಬಂಧವಿದೆಯೆಂದು ತಿಳಿಯಲು ಕಷ್ಟವಾಗಲಿಲ್ಲ. ಅಕ್ಕನ ದುಗುಡಕ್ಕೂ ಈಗ ಕಾರಣ ಹೊಳೆಯಿತು. “ನೀನು ಎಂಟೆದೆಯ ಬಂಟನೆಂದು ಹೊಗಳಿದ ಹುಡುಗ ಆತಹತ್ಯೆ-ಗಿತ್ಯೆ ಮಾಡಿಕೊಳ್ಳುವ ಪೈಕಿ ಅಲ್ಲ ತಾನೆ?” ಎಂದು ಕೇಳಬೇಕು, ಅನ್ನಿಸಿತು. ಆದರೆ ಅಕ್ಕ ಇವರನ್ನು ಹಚ್ಚಿಕೊಂಡ ರೀತಿಗೆ ದೈರ್ಯವಾಗಲಿಲ್ಲ. ಆದರೆ ಅದನ್ನೇ ಬೇರೆ ರೀತಿಯಲ್ಲಿ ಸೂಚಿಸುತ್ತ “ನಿನ್ನ ಈ ಎಂಟೆದೆಯ ಬಂಟ ಯಾವ ವಿಕೋಪಕ್ಕೂ ಹೋಗುವ ತರುಣನಲ್ಲವೆಂದು ತಿಳಿಯುತ್ತೇನೆ” ಎಂದನಷ್ಟೆ. ಅಕ್ಕ ಬಿಳಚಿಕೊಳ್ಳುವಷ್ಟು ಗಾಬರಿಯಿಂದ, “ಬಿಡ್ತು ಬಿಡ್ತು! ನಿನಗೆ ಅಂಥ ವಿಚಾರ ಏಕೆ ಬಂದಿತೋ. ಕೈ ಹಿಡಿದ ಹೆಂಡತಿಯನ್ನು, ಹೊಟ್ಟೆಯ ಮಕ್ಕಳನ್ನು ನಡುನೀರಿನಲ್ಲಿ ಕೈ ಬಿಡುವ ಸ್ವಭಾವದವನಂತೂ ಅಲ್ಲ. ಅವರ ಬಗ್ಗೆ ಏನೂ ಮಾಡಲು ಸಿದ್ಧನಿದ್ದವನು ಇಂಥ ಹೇಡಿತನಕ್ಕೆ ಮನಸ್ಸು ಮಾಡಲಾರ” ಎಂದಳು. ಅಕ್ಕನ ಆವೇಶದಲ್ಲಿ ಭರವಸೆಗಿಂತ ಹಾರೈಕೆಯ ಧ್ವನಿಯೇ ದೊಡ್ಡದಾಗಿರುವ ಭಾಸವಾಗಿ ಸನ್ನಿವೇಶ ನನ್ನ ಶಕ್ತಿಯ ಹೊರಗಿನದೇನೋ ಎಂದು ಅಳುಕು ಉಂಟಾಯಿತು. +“ಉಮಾಗೆ ನೌಕರಿಯಿದೆಯೆ?” ಎಂದು ಕೇಳಿದೆ. ಹಾಗೇಕೆ ಕೇಳಿದೆನೋ ಗೊತ್ತಿಲ್ಲ. ನನ್ನ ಪ್ರಶ್ನೆಗೆ ಕಾರಣವಾಗಿರಬಹುದಾದ ಭಯದ ಕಲ್ಪನೆ ನನಗೇ ಮಾಡಿಕೊಡುವವಳ ಹಾಗೆ, “ಹುಬ್ಬಳ್ಳಿಯ ದೊಡ್ಡ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ. ಆದರೆ ಅದರಿಂದೇನು ಪ್ರಯೋಜನ? ಗಂಡನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ….” ಅಕ್ಕ ತನ್ನ ವಾಕ್ಯವನ್ನು ಅರ್ಧಕ್ಕೇ ಬಿಟ್ಟಳು. ಸುಮಾರು ಹೊತ್ತಿನ ಮೇಲೆ, “ಆ ಅರಿಯದ ಮಕ್ಕಳ ಹಣೆಬರಹ ಎಂಥದ್ದೋ ನೋಡಬೇಕು” ಎಂದವಳು ಮೌನ ಧರಿಸಿ ಕುಳಿತುಬಿಟ್ಟಳು. +ಅವಳು ಮತ್ತೆ ಬಾಯಿ ತೆರೆದಾಗ ನೇರವಾಗಿ ಸಾಂತಪ್ಪನ ಬಗ್ಗೆ ಮಾತನಾಡುತ್ತಾಳೆ ಹಾಗೂ ಆ ಮಾತು ಅಷ್ಟೊಂದು ಹಿತಕರವಾಗಿರಲಾರದು ಎಂಬುದನ್ನು ಊಹಿಸಿದ ವನಿತಾ, “ನೀವು ಮಾತನಾಡಿಕೊಳ್ಳಿ. ನಾನು ಎಲ್ಲರಿಗೆ ಚಹ-ತಿಂಡಿ ತರುತ್ತೇನೆ” ಎನ್ನುತ್ತ ಕೂತಲ್ಲಿಂದ ಎದ್ದು ಅಡುಗೆಯ ಮನೆಯ ಕಡೆಗೆ ಸಾಗಿದಳು. ಅವಳ ಇಬ್ಬರೂ ಹುಡುಗಿಯರು ಅಮ್ಮನಿಗೆ ನೆರವಾಗುತ್ತೇವೆಂದು ಹೇಳಿ ತಾವೂ ಅವಳನ್ನು ಕೂಡಿಕೊಂಡರು. +ಅಜ್ಜಿ ಹೇಳಲು ಹೊರಟಿದ್ದನ್ನು ಅವರೂ ಊಹಿಸಿರಬೇಕು. +ಅವರೆಲ್ಲ ಒಳಗೆ ಹೋದ ಕೆಲ ಹೊತ್ತಿನ ಮೇಲೆ ಅಂಗಡಿಗೆ ಹೋಗಿದ್ದ ರಾಮಕೃಷ್ಣನೂ ಒಳಗೆ ಬಂದು ನಮ್ಮನ್ನು ಕೂಡಿಕೊಂಡ. ಅವನದು ಟಿವಿ, ರೇಡಿಯೋಗಳನ್ನು ಮಾರುವ, ಸರ್ವಿಸಿಂಗ್ ಮಾಡುವ ಅಂಗಡಿಯಂತೆ. ಭರಭರಾಟೆಯಲ್ಲವಾದರೂ ತನ್ನ ಚಿಕ್ಕ ಚೊಕ್ಕ ಸಂಸಾರಕ್ಕೆ ಸಾಕಾಗುವಷ್ಟು ಗಳಿಕೆಯಂತೆ. ಕರ್ತಬುಗಾರ. ತನ್ನ ಕಾಲ ಮೇಲೆ ತಾನು ನಿಲ್ಲುವ ಧೈರ್ಯದ, ಸ್ವಾಭಿಮಾನದ ಹುಡುಗ. ಆಗ ಅಕ್ಕ ಸಾಂತಪ್ಪನ ಮಗನ ಬಗ್ಗೆ ಹೇಳುತ್ತಿದ್ದಾಗ ಅವನನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡದ್ದು ಇದೇ ರೀತಿಯಲ್ಲಾಗಿತ್ತು ಎಂದು ಲಕ್ಷ್ಯಕ್ಕೆ ಬಂದಿತು. ಊರಿನ ಎಲ್ಲ ಸಣ್ಣ ದೊಡ್ಡ ವಿದ್ಯಮಾನಗಳ ಬಗ್ಗೆ ಕುಲಂಕುಷ ಮಾಹಿತಿಯುಳ್ಳ ರಾಮಕೃಷ್ಣನಿಗೆ ಸಾಂತಪ್ಪನ ಬಗ್ಗೆ ಗೊತ್ತಿಲ್ಲದೇ ಇದ್ದೇತೆ? ಆದರೇಕೋ ತನ್ನ ಬಗ್ಗೆ ಬಹಳ ಗೌರವ ಇಟ್ಟುಕೊಂಡವನಿಗೆ ಸಂದರ್ಭವಿಲ್ಲದೇ ಮಾತನಾಡಲು ಸಂಕೋಚವಾಗುತ್ತಿರಬೇಕು ಅಥವಾ ಸಾಂತಪ್ಪನಂಥವನ ಬಗ್ಗೆ ಮಾತನಾಡಲು ತನ್ನ ಅತ್ತೆಯೇ ಸರಿಯಾದ ವ್ಯಕ್ತಿಯೆಂದು ಬಗೆದಿರಬೇಕು. ನಾವು ಮೌನ ಧರಿಸಿ ಕುಳಿತುಬಿಟ್ಟದ್ದನ್ನು ನೋಡಿ: +“ನೀವೆಲ್ಲ ಸಾಂತಪ್ಪನ ಬಗ್ಗೆ ಮಾತನಾಡಿಕೊಳ್ಳುತ್ತಿರಬೇಕು ಎಂದುಕೊಂಡು ಅಂಗಡಿಯಲ್ಲಿ ನನ್ನ ಅಸಿಸ್ಟೆಂಟ್‌ಗೆ ಕೆಲಸ ಒಪ್ಪಿಸಿ ಓಡೋಡಿ ಬಂದೆ. ಮಾತು ಆಗಲೇ ಮುಗಿದೇಹೋಯಿತೋ? ಅಥವಾ ಇನ್ನೂ ಶುರುವಾಗಲೇ ಇಲ್ಲವೋ?” ಎಂದು ಕೇಳಿದ. +“ಸಾಂತಪ್ಪನ ಬಗ್ಗೆ ಒಮ್ಮೆ ಮಾತು ಶುರುವಾದರೆ ಅದೇನು ಮುಗಿಯುವಂಥದ್ದೇ!” ಎಂದು ಮೌನ ಮುರಿದ ಅಕ್ಕ ಮಾತು ಈಗ ಶುರುವಾಗುವುದರ ಇಷಾರೆ ಕೊಟ್ಟಳು. ರಾಮಕೃಷ್ಣನನ್ನೂ ಮಾತಿನಲ್ಲಿ ತೊಡಗಿಸುವ ಮನಸ್ಸಾಗಿ, ನಾನು “ಅಕ್ಕ ನಿನ್ನದೇ ಹಾದಿ ಕಾಯುತ್ತಿದ್ದಳು ” ಎಂದೆ. +“ಒಂದು ರೀತಿಯಿಂದ ಅದು ಸುಳ್ಳಲ್ಲ. ಸಾಂತಪ್ಪನ ಬಗ್ಗೆ ನನಗಿಂತ ಅವನೇ ಹೆಚ್ಚು ಗೊತ್ತಿದ್ದವನು. ಆದರೆ ಎಲ್ಲವೂ ಇವತ್ತೇ ಬೇಡ. ವಾಸುದೇವ ಏಕಾ‌ಏಕಿ ಮನೆಯಿಂದ ಓಡಿಹೋದದ್ದಕ್ಕೆ ಕಾರಣವೇನು. ಅವನು ಈಗೆಲ್ಲಿದ್ದಾನು ಎನ್ನುವುದನ್ನು ತಿಳಿಯುವುದಕ್ಕೆ ಬೇಕಾಗುವಷ್ಟನ್ನು ಮಾತ್ರ ಈಗ ಸ್ವಲ್ಪದರಲ್ಲಿ ಹೇಳುತ್ತೇನೆ. ವನಿತಾಳ ಮಕ್ಕಳಿಬ್ಬರೂ ಹಿಂದಿರುಗಿ ಬರುವ ಮೊದಲೇ. ಮದುವೆಗೆ ಬೆಳೆಯುತ್ತಿರುವ ಹೆಣ್ಣುಮಕ್ಕಳ ಕಿವಿಯ ಮೇಲೆ ಇಂಥದ್ದೆಲ್ಲ ಬೀಳಕೂಡದು” ಎಂದು ಶುರು ಮಾಡಿದಳು. ಸಾಂತಪ್ಪನ ಲೈಂಗಿಕ ಚಾರಿತ್ರ್ಯ ಅಷ್ಟೊಂದು ಸ್ವಚ್ಛವಾಗಿದ್ದಿರಲಾರದೆಂದೂ ಇವರೆಲ್ಲ ಆಗಿನಿಂದಲೂ ಹೇಳಲು ಧಡಪಡಿಸುತ್ತಿದ್ದದ್ದು ಆ ಚಾರಿತ್ರ್ಯಕ್ಕೆ ಸಂಬಂಧಪಟ್ಟದ್ದೆಂದೂ ನಾನು ಆಗಲೇ ಊಹಿಸಿದ್ದೆ. +“ಲಂಪಟರಲ್ಲಿ ಲಂಪಟ. ಮೊದಲಿನಿಂದಲೇ ಅಂಥವನೋ, ಕೈಯಲ್ಲಿ ಹಣ ಬಂದು ಸೇರಿದ ಮೇಲೆ ಹೀಗಾದನೋ, ಮಹಾ ಹೊಲಸು ಮನುಷ್ಯ. ಊರಿನ ಪರವೂರಿನ ಸೂಳೆಗೇರಿಗಳಂತೂ ಆದುವೇ. ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡ ಹೆಣ್ಣಾಳುಗಳನ್ನು ಕೂಡ ಬಿಟ್ಟವನಲ್ಲ. ಕುರೂಪಿ ಹೆಂಗಸರ ಬಗ್ಗೆ ಅದರಲ್ಲೂ ಅಡಿಗೆ ಹೆಂಗಸರ ಬಗ್ಗೆ ವಿಚಿತ್ರ ಮೋಹ. ಆರಾರು ತಿಂಗಳಿಗೆ ಅಡಿಗೆ ಹೆಂಗಸು ಬದಲಾಗಬೇಕು. ಒಬ್ಬಳಿಗಿಂತ ಒಬ್ಬಳು, ಕಾಣಲು ಕುರೂಪಳಿರಬೇಕು. ಜಾತಿಪಾತಿಯ ಲೆಕ್ಕವಿಲ್ಲ. ಅಂತಸ್ತು, ಸ್ವಚ್ಛತೆಗಳದೂ ಇಲ್ಲ. ಇವನ ಕೈ ಹಿಡಿದ ಹೆಣ್ಣು ಮಾತ್ರ ಏನು ಚೆಂದವೆನ್ನುತ್ತೀ-ರಂಭೆ ಊರ್ವಶಿಯರನ್ನು ನಿವಾಳಿಸಿ, ಒಗೆಯಬೇಕು ಅವಳೆದುರು. ಹಳ್ಳಿಯವಳಂತೆ. ತುಂಬಾ ಬಡ ಕುಟುಂಬದವಳಂತೆ. ಹೆಂಡತಿ ಚೆಂದವಾದ್ದರಿಂದಲೇ ಇವನಿಗೆ ಕುರೂಪ ಹೆಣ್ಣುಗಳ ಹುಚ್ಚು ಹಿಡಿಯಿತೋ? ಅವಳ ಸೌಂದರ್ಯದ ಮೇಲೆ ಇವನು ಸೇಡು ತೀರಿಸಿಕೊಳ್ಳುತ್ತಿದ್ದಾನೋ? ಸ್ವತಃ ತಾನೇ ಚೆಂದನಲ್ಲವಲ್ಲ! ನನಗೆ ತಿಳಿದದ್ದಲ್ಲ ಇದೆಲ್ಲ. ಹುಬ್ಬಳ್ಳಿಯ ನಿನ್ನ ಪ್ರೊಫೆಸರ್ ಸೋದರಳಿಯ ಹೇಳಿದ್ದು. ಬರೇ ರೂಪ ಏನು ಮಾಡುತ್ತದೆ? ಹೆಣ್ಣಿಗೆ ಗಂಡನ ಗುಣ ಮುಖ್ಯ. ಮದುವೆಯಾದ ಮೊದಲ ಕೆಲವು ವರ್ಷ ಹೆಂದತಿಯೊಡನೆ ಚೆನ್ನಾಗಿಯೇ ಸಂಸಾರ ಮಾಡಿದನಂತೆ. ಎರಡು ಗಂಡು ಮಕ್ಕಳೂ ಆದವು-ಅವಳಿಜವಳಿ. ಆದರೆ ಮೂರನೆಯವನಾದ ನಮ್ಮ ವಾಸುದೇವ ಹುಟ್ಟಿದ ಕೆಲವೇ ವರ್ಷಗಳಲ್ಲಿ ಈ ಸಂಸಾರಕ್ಕೆ ಯಾರ ಕೆಟ್ಟ ದೃಷ್ಟಿ ತಾಕಿತೋ ! ಇವನು ಈ ರೀತಿಯಾಗಿ ಬದಲಾಗಹತ್ತಿದ. ಹಿರಿಯ ಮಕ್ಕಳಿಬ್ಬರೂ ಕಲಿಯಲು ಅಷ್ಟೇನೂ ಚುರುಕರಲ್ಲ ಆದರೂ ಅಪ್ಪನ ಹಣದ ಬಲದಿಂದಲೇ ಆಗಲಿ ದೂರದೂರದ ಊರುಗಳಿಗೆ ಹೋಗಿ ಕಲಿತು ಈಗ ಇನ್ನಷ್ಟು ದೂರ ಹೋಗಿ ಅಮೇರಿಕೆಯಲ್ಲೋ ಇನ್ನೆಲ್ಲೋ ನೆಲೆಸಿದ್ದಾರಂತೆ. ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇಬ್ಬರೂ ಎಂಜಿನಿಯರ್ ಅಂತೆ. ಈಗ ಮದುವೆಗಿದುವೆ ಆಗಿ ಅಲ್ಲೇ ಗಟ್ಟಿಯಾಗಿರಬೇಕು. ಇಲ್ಲಿದ್ದಾಗ ಅಪ್ಪನ ದುಷ್ಕರ್ಮಗಳನ್ನು ನೋಡಿಯೂ ನೋಡದವರ ಹಾಗೆ ಚಕಾರವೆತ್ತದೇ ಸಹಿಸಿಕೊಂಡವರು ಈಗ ದೂರ, ಕಾಣದ ದೇಶಗಳಲ್ಲಿ ತಲೆ ಮರೆಸಿ ಜೀವಿಸುತ್ತಿರಬೇಕು. +“ಹಾಗೆ ನೋಡಿದರೆ, ಮನೆಯಿಂದ ಓಡಿಹೋಗುವುದು, ತಲೆ ಮರೆಸಿ ಜೀವಿಸುವುದು ಇವರ ಮನೆತನಕ್ಕೆ ಬಡಿದ ಶಾಪವೇ ಇರಬೇಕು. ನಿನ್ನ ಸಾಂತಪ್ಪ ಕೂಡ ತೀರಾ ಹುಡುಗ ಪ್ರಾಯದಲ್ಲಿ ಮನೆಯಿಂದ ಓಡಿಹೋದವನೇ. ಯಾಕೆ ಓಡಿಹೋದ, ಎಲ್ಲಿಗೆ ಹೋಗಿ ಏನೇನು ಮಾಡಿದ-ಸರಿಯಾಗಿ ಯಾರೂ ಅರಿಯರು. ಅವನು ನಿಜಕ್ಕೂ ಯಾರ ಮಗ ಎನ್ನುವುದು ಕೂಡ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದರೂ ಬಾಯಿಬಿಟ್ಟು ಹೇಳಿ ಸಾಂತಪ್ಪನನ್ನು ಎದುರುಹಾಕಿಕೊಳ್ಳುವ ಧೈರ್ಯವಿಲ್ಲ. ಯಾಕೆಂದರೆ ಊರು ಬಿಟ್ಟು ಹೋದ ಇಪ್ಪತ್ತು-ಇಪ್ಪತ್ತೈದು ವರ್ಷಗಳಾದಮೇಲೆ, ಮದುವೆಯಾದ ಹೆಂಡತಿ ಮೂವರು ಮಕ್ಕಳ ಜೊತೆಗೆ ದುಡ್ಡಿನ ದೊಡ್ಡ ಗಂಟೇ ಹೊತ್ತುಕೊಂಡು ಬಂದವನ ಹಾಗೆ ಬಂದು ಕುಮಟೆಯಲ್ಲಿ ಕಾಲಿರಿಸುವ ಹೊತ್ತಿಗೆ ನಿನ್ನ ಸಾಂತಪ್ಪ ಬಹಳ ದೊಡ್ಡ ಶ್ರೀಮಂತನಾಗಿಬಿಟ್ಟಿದ್ದ. ಊರಿನಲ್ಲಿ ಆಗ ಇದ್ದ ಏಕಮಾತ್ರ ಬಂಗಲೆಯನ್ನು ರೋಖ್ ಹಣ ಕೊಟ್ಟು ಖರೀದಿಸಿದ ಘಟನೆಯಂತೂ ಎಲ್ಲರ ಬಾಯಲ್ಲಿ ನಿಂತ ಪವಾಡವಾಯಿತು. ಮುಂಬಯಿಯಲ್ಲಿ ಮುತ್ತು ಹವಳಗಳ ವ್ಯಾಪಾರವುಳ್ಳ ಗುಜರಾಥಿ ಮುದುಕನೊಬ್ಬ ಕಟ್ಟಿಸಿದ ಬಂಗಲೆಯಂತೆ ಇದು. ಮೂಲತಃ ಇಲ್ಲಿಯವನೇ. ಆದರೆ ಅವನ ಮಕ್ಕಳಿಗೆ ಈ ಊರಿನಲ್ಲಿ ಆಸ್ಥೆ ಇರಲಿಲ್ಲ. ಕೆಲವು ಹಿರಿಯರ ಪ್ರಕಾರ ಈ ಬಂಗಲೆಯನ್ನು ಸಾಂತಪ್ಪ ಖರೀದಿಸಿದ ಗಳಿಗೆಯೇ ಕೆಟ್ಟದಿರಬೇಕಂತೆ. ಇವನ ಗೃಹಜೀವನಕ್ಕೆ ಶುಭವಾಗಲಿಲ್ಲ. +“ಇವತ್ತು ನೀನೇ ನೋಡುವೆಯಂತೆ ಅವನ ಬಂಗಲೆಯನ್ನು. ಅದರ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಹತ್ತು-ಹದಿನೈದು ಕೋಣೆಗಳಿವೆಯಂತೆ. ಇರಬಹುದೆ? ಜನ ಹೇಳಿದ್ದಪ್ಪಾ. ಇವತ್ತು ನನ್ನನ್ನೂ ಕರೆದಿದ್ದರೆ ಆ ಮನೆ ನೋಡಲೆಂದೇ ಬರುತ್ತಿದ್ದೆ. ಇಂಥಾ ದೊಡ್ಡ ಮನೆಯಲ್ಲಿ ತನ್ನ ಶೃಂಗಾರ ಲೀಲೆಯನ್ನು-ಲೀಲೆ ಎಂಥದ್ದು, ಮಣ್ಣು! ಯಾರ ಕಣ್ಣಿಗೂ ಬೀಳದ ಹಾಗೆ ನಡೆಸುವುದು ಕಷ್ಟವಾಗುತ್ತಿರಲಿಲ್ಲ. ಇಲ್ಲ! ಈ ನೀಚನಿಗೆ ಇಂಥದ್ದು ಕೂಡ ರಾಜಾರೋಷವಾಗಿಯೇ ಆಗಬೇಕು. ನೀನು ನಂಬಿದರೆ ನಂಬು: ಇಲ್ಲೆಲ್ಲರಿಗೆ ಗೊತ್ತಿದ್ದ ಸಂಗತಿಯೇ ಇದು. ನಾನು ಹುಟ್ಟಿಸಿ ಹೇಳಿದ್ದಲ್ಲ. ಈ ನಿರ್ಲಜ್ಜ ಒಮ್ಮೊಮ್ಮೆ ಮೈಮೇಲಿನ ಭಾವ ತಪ್ಪಿದವನ ಹಾಗೆ ತನ್ನ ಹಾದಗಿತ್ತಿಯರನ್ನು ಹೆಂಡತಿಯ ಮಲಗುವ ಕೋಣೆಗೇ ಎಳೆದು ತರುತ್ತಿದ್ದನಂತೆ! ‘ದಮ್ಮಯ್ಯ! ನಿಮ್ಮಿಬ್ಬರ ಕಾಲು ಹಿಡಿಯುತ್ತೇನೆ ಬೇರೆ ಕೋಣೆಗೆ ಹೋಗಿ ಹಾಳಾಗಿ’ ಎಂದು ಚೀರಾಡಿದರೆ ಇವನು ಇನ್ನಷ್ಟು ಉತ್ತೇಜಿತನಾಗುತ್ತಿದ್ದದ್ದು ನೋಡಿ ಆ ಸಾಧ್ವಿ ಈ ಎಲ್ಲದಕ್ಕೂ ತನ್ನ ಮನಸ್ಸನ್ನು ಮುಚ್ಚಿಕೊಳ್ಳುವುದನ್ನು ಕಲಿತುಕೊಂಡಳು. ಬೆಳೆಯುವ ಎಳೆಯ ಜೀವಗಳ ಮೇಲೆ ಮಾತ್ರ ದೇವರೇ ಯಾವ ದುಷ್ಟ ಪರಿಣಾಮವೂ ಆಗದಿರಲಿ ಎಂದು ಪ್ರಾರ್ಥಿಸಿದಳು” ಎಂದಳು. ಹಾಗೂ ಅಡುಗೆಮನೆಯಲ್ಲಿದ್ದ ವನಿತಾಗೆ ಕೇಳಿಸುವ ಹಾಗೆ, “ನಿನ್ನ ಮಾಮಿ-ಮಾಮ ಎಂದಿನಿಂದ ಚಹದ ಹಾದಿ ಕಾಯುತ್ತಿದ್ದಾರೆ. ಇನ್ನೂ ತಯಾರಾಗಲಿಲ್ಲವೇನೇ?” ಎಂದು ಕೇಳಿ ಮಕ್ಕಳು ಕೇಳಬಾರದ್ದು ಹೇಳಿ ಮುಗಿದಿದೆ ಎಂದು ಇಷಾರ ಮಾಡಿದಳು. +ತುಸು ಹೊತ್ತಿನ ಮೇಲೆ ಅಡುಗೆಮನೆಯಲ್ಲಿದ್ದ ಮೂವರೂ ಚಹ ತಿಂಡಿಗಳ ಸರಂಜಾಮು ಹೊತ್ತು ಹೊರಗೆ ಬಂದರು. ಅಕ್ಕನ ಮಾತು ತಾತ್ಪೂರ್ತಿಕವಾಗಿ ನಿಂತಿತ್ತು. +ಮನುಷ್ಯನ ಲಂಪಟತನದ ಸುತ್ತವೇ-ವಾಸ್ತವ ಹಾಗೂ ಕಲ್ಪನೆಗಳ ಅತ್ಯದ್ಭುತ ಕಲಸುಮೇಲೋಗರವಾಗಿ-ಎದ್ದ ಇಂಥ ಪುರಾಣಸೃಷ್ಟಿ ಖಾಸಾ ಕುಮಟೆಯ ನೆಲದ್ದು. ಇಲ್ಲಿಯ ಹಲವು ಮನೆತನಗಳ ಸುತ್ತ ಇಂಥ ಪುರಾಣಗಳಿದ್ದದ್ದು ನನಗೆ ನನ್ನ ವಿದ್ಯಾರ್ಥಿ ದಿನಗಳಲ್ಲೇ ಗೊತ್ತಿಗಿತ್ತು. ಇವೆಲ್ಲ ದೊಡ್ಡ ಸಾಹಸದ ಕಥೆಗಳೋ ಎನ್ನುವ ಹಾಗೆ ಈ ಪುರಾಣಗಳ ಬಗ್ಗೆ ಇವರಿಗೆ ಅಭಿಮಾನವಿದ್ದದ್ದು ತಿಳಿದಾಗ ಮಾತ್ರ ಆಶ್ಚರ್ಯವಾಗಿತ್ತು. ನಮ್ಮ ಸಾಂತಪ್ಪ ಇಂಥದ್ದಕ್ಕೆ ಅಪವಾದ ಹೇಗಾದಾನು! +ಆದರೂ ಅಕ್ಕನ ಸರಳ ಮಾತುಗಳಲ್ಲಿ ಮೂಡಿಬರುತ್ತಿದ್ದ ವ್ಯಕ್ತಿ ಸಹಜನೆಂದು ತೋರಲಿಲ್ಲ. ಕುರೂಪಕ್ಕೆ ಆಕರ್ಷಿತನಾಗುವ ಈತನ ಅನಾರೋಗ್ಯಕ್ಕೂ ಅವನ ಐಶ್ವರ್ಯಕ್ಕೂ ಸಂಬಂಧವಿರಬಹುದಾದ ಅನುಮಾನವಾಯಿತು. ಬರೇ ಒಬ್ಬ ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಆಗಿ ಇಷ್ಟೆಲ್ಲವನ್ನೂ ಗಳಿಸಿರಲಾರ. ಕೇಳಿ ನೋಡುವ ಮನಸ್ಸಾಯಿತು. ಆದರೆ ಅದಾಗಲೇ ಅಕ್ಕನ ದುಗುಡಕ್ಕೆ ಕಾರಣನಾದ ಹುಡುಗ ನನ್ನ ಅಂತಃಕರಣವನ್ನು ವ್ಯಾಪಿಸತೊಡಗಿದ ಹೊತ್ತಿನಲ್ಲಿ ಇದು ಕೇವಲ ಕುತೂಹಲ ತಣಿಸುವ ಪ್ರಶ್ನೆಯಾಗಿ ತೋರಿ ಕೇಳುವುವು ಬೇಡವೆನ್ನಿಸಿತು. ನನ್ನ ವರ್ಗದಲ್ಲಿದ್ದ ಒಬ್ಬ ಬಡ ಹುಡುಗನನ್ನು ಸಾಲೆಯ ಹುಡುಗರು ‘ಅಡಿಗೆ ಮಾಮನ ಮಗ’ನೆಂದು ಚುಡಾಯಿಸುತ್ತಿದ್ದರು. ಇವನು ಅವನೇ ಆಗಿರಬಹುದೆ? ಎಂಬ ಪ್ರಶ್ನೆಯನ್ನು ಈಗ ಅಕ್ಕನಿಗೇ ಕೇಳಿದರೆ ಹೇಗೆ ಅನ್ನಿಸಿತು. ಬರೇ ಮಾಹಿತಿ ಒಟ್ಟು ಮಾಡುವ ಈ ಹವ್ಯಾಸ ಕೂಡ ಸದ್ಯದ ಸನ್ನಿವೇಶದಲ್ಲಿ ಅನೈತಿಕವಾಗಿ ತೋರಿ ಬಿಟ್ಟುಕೊಟ್ಟೆ. +“ಮೊದಲು ತಿಂಡಿ ಚಹವಾಗಲಿ. ನಿನ್ನ ಪ್ರೀತಿಯ ಶಿರಾ ಮಾಡಿದ್ದೇನೆ. ಅಮ್ಮ ಹುಬ್ಬಳ್ಳಿಯಿಂದ ಬರುವಾಗ ತಂದ ಕೋಡುಬಳೆ ಇರಿಸಿದ್ದೇನೆ. ಎಲ್ಲವನ್ನೂ ಈಗಲೇ, ಇವತ್ತೇ ಮಾತನಾಡಬೇಕಾಗಿಲ್ಲ” ಎಂದು, ಸೋದರ ಸೊಸೆ ನನ್ನನ್ನು ಹತ್ತಿದ ತಂದ್ರಿಯಿಂದ ಎಚ್ಚರಿಸಿದಳು. “ಮೇಲಾಗಿ ಇದನ್ನೆಲ್ಲ ನೀನೂ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ನೀನು ಹುಟ್ಟಿಸಿದ ಸಮಸ್ಯೆಯಲ್ಲವಲ್ಲ ಇದು. ನೀನು ಇದೇ ಹೊತ್ತಿಗೆ ನಿವೃತ್ತನಾಗಿರದಿದ್ದರೆ ಅಥವಾ ನನ್ನ ಕರೆಯನ್ನು ಮನ್ನಿಸಿ ಕುಮಟೆಗೆ ಬಂದಿರದಿದ್ದರೆ ಅಥವಾ ನೀನು ಬಂದೂ ಬಂದದ್ದು ಸಾಂತಪ್ಪನಿಗೆ ಗೊತ್ತಾಗಿರದಿದ್ದರೆ…. +“ಅಥವಾ ಹುಬ್ಬಳ್ಳಿಯಿಂದ ಹೊರಡುವ ಮೊದಲು ಅಕ್ಕ ವಾಸುದೇವನ ಮನೆಗೇ ಹೋಗಿರದಿದ್ದರೆ…. ಈ ‘ರೆ’ಗಳಿಗೆ ಕೊನೆಯಲ್ಲಿ ಪೋರಿ? ನನಗೆ ಇದಾವುದರಲ್ಲೀ ತೊಡಗಿಸಿಕೊಳ್ಳುವ ಮನಸ್ಸಿಲ್ಲವಾದರೆ ಇದೆಲ್ಲ ಕೇವಲ ಆಕಸ್ಮಿಕಗಳಾಗಿಯೇ ಉಳಿಯುತ್ತವೆ. ತೋರುತ್ತವೆ. ಅದೇ. ಏನಾದರೂ ಮಾಡಬೇಕು ಎಂದು ನಿಶ್ಚಯಿಸಿದ್ದೇ ಆದರೆ ಇವು ಯಾವೂ ಆಕಸ್ಮಿಕಗಳೇ ಆಗಿ ಉಳಿಯಲಾರವು. ಅಲ್ಲವೆ? ನಿನ್ನ ಮಾಮಿಯನ್ನೇ ಕೇಳು! ನನ್ನನ್ನು ಈಗಲೂ ಆಗೀಗ ಚುಡಾಯಿಸುತ್ತಿರುತ್ತಾಳೆ. ಅವಳು ಆ ವರ್ಷ ಬೇಸಗೆಯ ಸೂಟಿಗೆ ಮುಂಬಯಿಗೆ ಬಂದಿರದಿದ್ದರೆ, ಅವಳ ಚಿಕ್ಕಮ್ಮನ ಮನೆ ನನ್ನ ಮನೆಯ ಮಗ್ಗುಲಲ್ಲಿರದಿದ್ದರೆ, ಎಲ್ಲಕ್ಕೂ ಮಿಗಿಲಾಗಿ ಇವಳ ತಂಗಿಗೆ ಐನ್ ಹೊತ್ತಿಗೆ ಜ್ವರ ಬಂದು ಅವಳಿಗಾಗಿ ಕೊಂಡಿಟ್ಟ ಟ್ರೇನ್ ಟಿಕೆಟ್ ಮೇಲೆ ಇವಳು ಮುಂಬಯಿಗೆ ಪ್ರಯಾಣ ಬೆಳೆಸಿರದಿದ್ದರೆ ಅವಳು ನನ್ನನ್ನು ಮದುವೆಯಾಗುತ್ತಿರಲೇ ಇಲ್ಲವಂತೆ. ನನಗನ್ನಿಸುತ್ತದೆ: ನಾವು ಪರಸ್ಪರರನ್ನು ನೋಡಿದ ಕ್ಷಣದಲ್ಲೇ ಈ ‘ರೆ’ಗಳ ಅರ್ಥ ಬದಲಾಗತೊಡಗಿತ್ತು…. ಮನುಷ್ಯ ಜಗತ್ತಿನಲ್ಲೆಲ್ಲಿ ಆಕಸ್ಮಿಕಗಳು?” +ಈ ಮಾತುಗಳನ್ನು ಬಹುಶಃ ನಾನು ವನಿತಾಗಿಂತ ಹೆಚ್ಚಾಗಿ ನನಗೇ ಹೇಳಿಕೊಳ್ಳುತ್ತಿದ್ದೇನೆ ಎಂಬ ಅರಿವಿನಿಂದ ಮುಜುಗರವಾಯಿತು. ಬಹುಶಃ ಸಾಂತಪ್ಪ ನನ್ನಿಂದ ಬಯಸುವುದಾದರೂ ಏನೆಂದು ನಿಶ್ಚಿತವಾಗಿ ತಿಳಿದಮೇಲೆ ನನ್ನ ನಿರ್ಧಾರ ಗಟ್ಟಿಯಾದೀತು ಎಂದು ಸಮಾಧಾನ ತಂದುಕೊಂಡೆ. ಅಕ್ಕನ ತೊಳಲಾಟವೂ ಇದೇ ಆಗಿರಬೇಕು. ವಾಸುದೇವನ ಬಗ್ಗೆ ನನ್ನ ಭಾವನೆಗಳನ್ನು ಕೆರಳಿಸಿ ಸಲ್ಲದ ಬಿಕ್ಕಟ್ಟಿಗೆ ನನ್ನನ್ನು ಒಡ್ಡುತ್ತಿಲ್ಲ ತಾನೆ ಎಂದು ಹೆದರಿರಬೇಕು. ನಮ್ಮ ಚಹ-ತಿಂಡಿ ಮುಗಿದ ಎಷ್ಟೋ ಸಮಯದವರೆಗೆ ಅದು ಇದು ಎಂದು ಹಲವು ಮಾತುಗಳನ್ನು ಆಡಿಕೊಂಡೆವಾದರೂ ಈ ಮೊದಲು ಅರ್ಧಕ್ಕೇ ಬಿಟ್ಟ ವಾಸುದೇವನ ಮಾತಿಗೆ ಹಿಂದಿರುಗಲಾಗಲಿಲ್ಲ. ನಾನೇ ಆ ಮಾತಿಗೆ ಮತ್ತೆ ಚಾಲನೆ ಕೊಡಲೆಂಬಂತೆ, ಹಿಂದೊಮ್ಮೆ ಕೇಳುವುದು ಬೇಡವೆಂದು ನಿಶ್ಚಯಿಸಿ ಬಿಟ್ಟುಕೊಟ್ಟ ಪ್ರಶ್ನೆಯನ್ನೇ ಈಗ ಕೇಳಿದೆ_ +“ಸಾಂತಪ್ಪ ಬಹಳ ಹಣ ಮಾಡಿದ್ದಾನೆ ಎಂದು ನೀನೂ ಹೇಳಿದೆ. ಸ್ವತಃ ಅವನೂ ತುಸು ಗರ್ವದಿಂದಲೇ ಹೇಳಿಕೊಂಡ. ಇಷ್ಟೆಲ್ಲ ಹಣ ಬರೇ ಬಿಲ್ಡಿಂಗ್ ಕಂಟ್ರ್ಯಾಕ್ಟರ್‍ನಾಗೇ ಗಳಿಸಿರಲಾರ ಅಲ್ಲವೆ?” +ನಾನು ಕೇಳಿದ್ದೇನಷ್ಟೇ. ಆಗಿನಿಂದಲೂ ಈ ಅವಕಾಶಕ್ಕಾಗಿಯೇ ಕಾದು ಕುಳಿತಿದ್ದನೆನ್ನುವಂತೆ ರಾಮಕೃಷ್ಣ ಗಬಕ್ಕನೆ ಉತ್ತರ ಕೊಡಲು ಮುಂದಾದ. ಎಲ್ಲರಿಗೂ ಆಶ್ಚರ್ಯವಾಗುವಷ್ಟು ತಗ್ಗಿದ ದನಿಯಲ್ಲಿ. +“ಒಂದು ಕಾಲಕ್ಕೆ ಬಹಳ ದೊಡ್ಡ ಸ್ಮಗ್ಲರ್ ಈತ. ಬೆಳಗಾಂವ್‌ನಲ್ಲಿದ್ದ ಆಗ, ಹೆಸರಿಗೆ ಎಸ್, ಎಲ್, ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್, ಟ್ರಕ್ಕುಗಳಿಂದ ಮಾಲು ಸಾಗಿಸುವ ಬಿಜಿನೆಸ್. ಸಾಗಿಸುತ್ತಿದ್ದುದು ಬಂಗಾರದ….” +ಅಕ್ಕನಿಗೆ ಈ ಹೊಸ ತಿರುವು ಧೋಕೆಯದಾಗಿ ಕಂಡಿತೋ ತಾನು ಯೋಚಿಸಿಕೊಂಡಿದ್ದರಿಂದ ದೂರ ಹೋಗುವುದು ಬೇಡವೆನ್ನಿಸಿತೋ, ಅಳಿಯನಿಗೆ ಕೂಡಲೇ ಮಾತು ನಿಲ್ಲಿಸುವಂತೆ ಕಣ್ಣರಳಿಸಿ ಸನ್ನೆ ಮಾಡಿದಳು. “ಈಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲವಲ್ಲ. ನಾವೇ ಯಾಕೆ ಹೇಳಬೇಕು? ನಮಗೆ ಸರಿಯಾಗಿ ಗೊತ್ತಿಲ್ಲದ್ದು ಕೂಡ. ಎಷ್ಟು ಸುಳ್ಳೋ, ಎಷ್ಟು ಖರೆಯೊ. ಇಂಥದ್ದರಲ್ಲಿ ನಮ್ಮ ಕುಮಟೆಯ ಜನರ ತಲೆ ಸುವೇಕ ಅಲ್ಲವೆ?” ಎಂದಳು. ಗೋಣು ಕೊಂಕಿಸುತ್ತ. +“ಅಮ್ಮಾ, ನಾನಿದನ್ನು ಬರೇ ತಮಾಷೆಗಾಗಿ ಹೇಳಿದ್ದಲ್ಲ. ಅವನ ಈ ಕಳ್ಳ ಸಾಗಾಣಿಕೆಗೂ ವಾಸುದೇವನ ಬೇಪತ್ತೆಗೂ ಸಂಬಂಧವಿದ್ದಿದ್ದರೆ? ಮಾಮನ ಸಂಶಯವೂ ಅದೇ ಆಗಿರಬೇಕು?” ಎನ್ನುತ್ತ ರಾಮಕೃಷ್ಣ ನನ್ನತ್ತ ಪ್ರಶ್ನಾರ್ಥಕ ದೃಷ್ಟಿ ಬೀರಿದ. ನನಗೆ ಇಂಥ ಸಂಯಮ ಬಂದಿರಲಿಲ್ಲ. ರಾಮಕೃಷ್ಣನ ಸಂಯಮಕ್ಕೆ ನಮ್ಮ ಸಿನೇಮಾ ಕಾರಣವಾಗಿರಬೇಕು ಅನ್ನಿಸಿ ಬರೇ ಮುಗುಳ್ನಕ್ಕೆ. ಅಕ್ಕನಿಗೂ ನಂಬಿಕೆಯಾದಂತಿರಲಿಲ್ಲ. +“ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ಹಿಂದಿನ ಕತೆಯಿದು. ನೀನು ಬಹಳ ಸಣ್ಣವನಿದ್ದೆ. ಆಗ ನಿನಗಾರು ಹೇಳಿದರು?” ಎಂದು ಕೇಳಿದವಳು, ಸಂಕ್ಷಿಪ್ತವಾಗಿ ಹೇಳಿ ಮುಗಿಸುವ ಧಾಟಿಯಲ್ಲಿ, “ಗೋವೆಯಿಂದ ಮಾಲು ಹೊತ್ತು ಬರುತ್ತಿದ್ದ ಇವನ ಟ್ರಕ್ಕಿನಲ್ಲಿ ಬಂಗಾರದ ಗಟ್ಟಿಗಳಿದ್ದ ಪೆಟ್ಟಿಗೆ ಅಡಗಿಸಿ ಇಟ್ಟಿದ್ದರಂತೆ. ಯಾರೂ ನೋಡದ್ದಲ್ಲ. ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರೇ ಪೊಲೀಸರಿಗೆ ತಿಳಿಸಿದ್ದು. ಪೊಲೀಸರ ಹೊಡೆತಕ್ಕೆ ಹೆದರಿ ಏನಾದರೂ ಹೇಳಿರಬಹುದು. ನಿಜಕ್ಕೂ ಬಂಗಾರ ಹೊತ್ತ ಟ್ರಕ್ಕಿನಿಂದ ಬೇರೆ ಕಡೆಗೆ ಲಕ್ಷ್ಯ ಹರಿಯಿಸಲು ಈ ಟ್ರಕ್ಕಿನ ನಂಬರ್ ಕೊಟ್ಟಿರಬಹುದು. ಈ ಟ್ರಕ್ಕಿನಲ್ಲೇ ಬಂಗಾರ ಇದ್ದಿದ್ದರೂ ಅದು ಅವನಿಗೆ ದಕ್ಕಿತೆ? ಇನ್ಯಾರ ಕೈಗೆ ಹೋಯಿತೆ? ಯಾರಿಗೂ ಗೊತ್ತಿಲ್ಲ. ಪೊಲೀಸರು ತಪಾಸಣೆಗೆಂದು ಇವನ ಮನೆಗೂ ಬಂದಿದ್ದರು. ಎನ್ನುವ ಒಂದೇ ಕಾರಣಕ್ಕೆ ಏನೆಲ್ಲ ಊಹಾಪೋಹ ನಡೆಯಿತು. ಪರ-ವಿರುದ್ಧ ಎರಡೂ ಮಾತನಾಡಿಕೊಂಡರು. ಈ ಪ್ರಕರಣವೇ ಮುಂದವನು ಈಗಿನ ದಂಧೆಗೆ ತಿರುಗಲು ಕಾರಣವಾಯಿತೆಂದು ತಿಳಿದವರಿದ್ದಾರೆ. ಈಗ ನೀನೇ ಹೇಳು. ವಾಸುದೇವ ಮನೆಯಿಂದ ನಾಪತ್ತೆಯಾದದ್ದಕ್ಕೂ ಈ ಪ್ರಕರಣಕ್ಕೂ ಸಂಬಂಧವಿದ್ದೀತೆ?” ಅಕ್ಕ ನನ್ನ ಉತ್ತರಕ್ಕಾಗಿ ಕಾದಳು. ಅದು ಏನೆಂದು ಮೊದಲೇ ಗೊತ್ತಿದ್ದವಳ ಧರ್ತಿಯಲ್ಲಿ. +“ನನಗನ್ನಿಸುವುದಿಲ್ಲ” ಎಂದೆ. ರಾಮಕೃಷ್ಣನಿಗೆ ನನ್ನ ಉತ್ತರದಿಂದ ನಿರಾಶೆಯಾಗಿರಬೇಕು. ಅವನ ಸಮಾಧಾನಕ್ಕೆ, “ಮತ್ತೆ ಯಾರಿಗೆ ಗೊತ್ತು? ಸಾಂತಪ್ಪ ಹೇಳಿದರೆ ಗೊತ್ತಾಗಬೇಕು” ಎಂದು ಜೋಡಿಸಿದೆ. +“ಸಾಂತಪ್ಪನಿಂದ ನಿನಗೆ ಇಂಥದ್ದೆಲ್ಲ ಗೊತ್ತಾಗಲಾರದು ಬಿಡು. ಎಂಥಾ ಬಿಲಂದರ್ ಮನುಷ್ಯ! ತನ್ನ ಐಶ್ವರ್ಯದ ಬಗ್ಗೆ ರಾಜವಾಡೆಯ ಬಗ್ಗೆ ಕೊಚ್ಚಿಕೊಂಡಾನು. ಆದರೆ ಇಷ್ಟೆಲ್ಲ ಹೇಗೆ ಸಾಧ್ಯವಾಯಿತು? ಗುಟ್ಟು ಬಿಟ್ಟುಕೊಡುವವನಲ್ಲ. ಗುಟ್ಟು ಬಿಡಿಸಲು ಬಂದವರನ್ನು ಸುಮ್ಮನೆ ಬಿಡುವವನೂ ಅಲ್ಲ. ಮಹಾ ಭಯಂಕರ ಮನುಷ್ಯ. ಅವನ ವ್ಯಭಿಚಾರದ ಬಗ್ಗೆ ಬೇಕಾದರೆ ಜನ ಅವನ ಎದುರೇ ಆಡಿಕೊಳ್ಳಲಿ. ತುಟಿ ಪಿಟ್ಟೆನ್ನದೆ ಸಹಿಸಿಯಾನು. ಅದೇ ಅವನು ಹಣ ಮಾಡಿದ ವಾಮಮಾರ್ಗದ ಬಗ್ಗೆ ಯಾರಾದರೂ ಗುಸುಗುಸು ಎಂದದ್ದು ಕಿವಿಯ ಮೇಲೆ ಬಿತ್ತೋ ಹೊಡೆದಾಟಕ್ಕೂ ಹಿಂಜರಿದವನಲ್ಲ. ನೀನು ಇಂಥದ್ದರ ಗೊಡವೆಗೆ ಹೋಗಲೇಬೇಡ. ರಾಮಕೃಷ್ಣಾ. ಈ ಮಾತು ನಿನಗೂ ಹೇಳಿದ್ದು ತಿಳಿಯಿತೋ? ಬಂಗಾರದ ಗಟ್ಟಿ! ಕಪ್ಪು ಹಣ! ನಮಗೇನಾಗಬೇಕು? ನಾವೇನು ಪಾಲು ಬೇಡಲು ಹೊರಟವರಲ್ಲ.” +ನಾನು ತಮಾಷೆಗೆಂದು ಆಡಿದ ಮಾತೂ ಅಕ್ಕನ ಸಿಟ್ಟಿಗೆ ಕಾರಣವಾಗಿತ್ತು. ಮುಖ್ಯವಾಗಿ, ಇದೇ ಊರಿನವನಾದ ರಾಮಕೃಷ್ಣನೂ ಸಾಂತಪ್ಪನನ್ನು ಸ್ಮಗ್ಲರ್ ಎಂದು ಕರೆದದ್ದು ಅವಳನ್ನು ಹೆದರಿಸಿರಬೇಕು. +“ಇಲ್ಲ, ಇಂಥದ್ದರ ಬಗ್ಗೆ ಅವನಿಗೆ ಏನೂ ಕೇಳಲು ಹೋಗುವುದಿಲ್ಲ. ಆಯಿತೆ?” ಎಂದು ಆಶ್ವಾಸನವಿತ್ತೆ. +“ಸಾಂತಪ್ಪ ನಿನ್ನನ್ನು ಇಂದು ಕರೆದದ್ದು ತನ್ನ ಶ್ರೀಮಂತಿಕೆಯ ಬಗ್ಗೆ ಕೊಚ್ಚಿಕೊಳ್ಳಲಲ್ಲ. ಮಗನ ಬಗ್ಗೆ ಚಾಡಿ ಹೇಳಲು ಮಗ ಮನೆಯಿಂದ ನಾಪತ್ತೆಯಾದದ್ದು ಅವನಿಗೆ ತಿಳಿದಿಲ್ಲವೆಂದೆ? ಮಗನ ಮನೆಯಲ್ಲಿ ಹೂಸಿದರೆ ಸಾಕು, ತೇಗಿದರೆ ಸಾಕು, ಅಪ್ಪನಿಗೆ ಸುದ್ದಿ ಮುಟ್ಟಿಸುವ ಬೇಹುಗಾರ ಜನ ಎಷ್ಟೆಲ್ಲ ಇದ್ದಾರೆ ಹುಬ್ಬಳ್ಳಿಯಲ್ಲಿ.” +“ವಾಸುದೇವನ ಹೆಂಡತಿ ಏನೋ ಕೆಟ್ಟದ್ದನ್ನು ಊಹಿಸಿಕೊಂಡವಳ ಹಾಗೆ ಮಾತನಾಡಿದ್ದು ಯಾಕೆ?” +“ನಾನು ಖುಲಾಸೆ ಕೇಳಲು ಹೋಗಲಿಲ್ಲ. ಅವಳಿದ್ದ ಸ್ಥಿತಿಯಲ್ಲಿ ಕೇಳುವ ಧೈರ್ಯವೂ ಆಗಲಿಲ್ಲ. ಪ್ರತಿಯೊಬ್ಬರ ಸಹನಶಕ್ತಿಗೂ ಒಂದು ಮಿತಿಯೆಂಬುದು ಇದೆಯಲ್ಲವೆ? ತನ್ನ ಸಹನಶಕ್ತಿ ಅಂಥ ಮಿತಿಯನ್ನು ಮುಟ್ಟಿದೆಯೆಂದು ಸೂಚಿಸುತ್ತಿರಬೇಕು. ವಾಸುದೇವ ತೀರಾ ಚಿಕ್ಕ ವಯಸ್ಸಿನಲ್ಲೇ ಅಪ್ಪನ ವಿರುದ್ಧ ದಂಗೆಯೆದ್ದ ಹತ್ತು ವರ್ಷದವನಾಗಿದ್ದಾಗಿನಿಂದಲೂ ತಂದೆಯೊಡನೆ ಮಾತನಾಡುವುದನ್ನು ನಿಲ್ಲಿಸಿದ್ದನಂತೆ. ತಾಯಿಯ ಯಾತನೆಗೆ ಕಾರಣವಾದ ಅಪ್ಪನ ದುಷ್ಟ ವರ್ತನೆಗೆ ತೀವ್ರ ಪ್ರತಿಕ್ರಿಯೆ ತೋರಿಸಿದವನು ಅವನೊಬ್ಬನೇ. ಇವನಿಗಿಂತ ಐದಾರು ವರ್ಷಗಳಿಂದ ದೊಡ್ಡವರಾದ ಹಿರಿಯರಿಬ್ಬರೂ ಬಲು ಪುಕ್ಕರು. ಕೋಣೆಯಲ್ಲಿ ಕದ ಮುಚ್ಚಿ ಅಡಗಿ ಕುಳಿತಿರುತ್ತಿದ್ದರು. ಕಿರಿಯ ಮಗನೊಬ್ಬನೇ ಬಡಪಾಯಿ ತಾಯಿಗೆ ಜೊತೆಯಾದ. ತನ್ನ ಮಾತಿನ ಅರ್ಥವಾಗುವ ವಯಸ್ಸಿನವನಲ್ಲವೆಂದು ಗೊತ್ತಿದ್ದೂ ತನ್ನ ಅಳಲೆಲ್ಲವನ್ನೂ ಅವನೆದುರು ತೋಡಿಕೊಳ್ಳುತ್ತಿದ್ದಳಂತೆ. ಮುಂದೆ ಇವನು ಸುಮಾರು ಹದಿನಾಲ್ಕು ವರ್ಷದವನಿದ್ದಾಗ ಇವನನ್ನು ಮನೆಯಿಂದ ಓಡಿಹೋಗುವಂತೆ ಹುರಿದುಂಬಿಸಿದಳಂತೆ. “ಎಲ್ಲೂ ಹೋಗು, ಏನೂ ಕೆಲಸ ಮಾಡು. ಬಸ್‌ಸ್ಟಾಂಡಿನಲ್ಲಿ ಕೂಲಿಮಾಡು. ಹೊಟೆಲ್ಲಿನಲ್ಲಿ ಮಾಣಿಯಾಗು. ಆದರೆ ನಿನ್ನ ಅಣ್ಣಂದಿರ ಹಾಗೆ ಇವರ ಪಾಪದ ಹಣಕ್ಕೆ ಕೈ ಹಚ್ಚಬೇಡ. ಆದಷ್ಟು ಬೇಗ ಈ ನರಕದಿಂದ ಹೊರಬೀಳು” ಎಂದು ಹೇಳಿ ಅತ್ತಳಂತೆ. ತಾನು ಸಾಲೆಗೆ ಹೋದಾಗ ಈವರೆಗೂ ನಡೆದಿರದಂಥದ್ದು ಏನೋ ಮನೆಯಲ್ಲಿ ನಡೆದಿದೆಯೆಂದು ಅರಿತ ಹುಡುಗ, “ನೀನು?” ಎಂದು ಕೇಳಿದನಂತೆ. “ನನ್ನದೇನು ಮಗೂ! ಇಷ್ಟು ವರ್ಷ ಕಳೆದಂತೆಯೇ ಇನ್ನು ಕೆಲವು ದಿನ ಹೇಗೂ ಸರಿದುಹೋದಾವು. ಹೋಗು ಮಗು. ಹೋದಲ್ಲಿ ನೀನು ಇಂಥವರ ಮಗನೆಂದು ಹೇಳಿಕೊಳ್ಳಲು ನಾಚಿಕೆಯಾದರೆ ಹೇಳಿಕೊಳ್ಳಬೇಕೆಂದಿಲ್ಲ” ಎಂದಳಂತೆ. ಹುಡುಗ ಇದಕ್ಕೆಲ್ಲ ಏನು ಅರ್ಥ ಹಚ್ಚಿದನೋ ಕೆಲವೇ ದಿನಗಳಲ್ಲಿ ಮನೆಯಿಂದ ಓಡಿಹೋದ. ಮುಂದೆ ಒಂದೇ ವಾರದಲ್ಲಿ ತಾಯಿ ಜೀವ ತೆಗೆದುಕೊಂಡಳು.” +ನನ್ನ ಹಾಗೂ ಹೆಂಡತಿಯ ಬಾಯಿಂದ “ಅರೆ! ಇದು ಗೊತ್ತಿರಲಿಲ್ಲ.” “ಬದುಕಿದ್ದಾಳೆ ಎಂದೇ ತಿಳಿದಿದ್ದೆವು” ಎಂಬ ಉದ್ಗಾರಗಳು ಹೊರಟವು. +“ವಿಷ ತೆಗೆದುಕೊಂಡಳು. ಅದು ಯಾವ ಮನೆಯಲ್ಲೂ ಸಹಜವಾಗಿ ಇರುವ ವಸ್ತುವಲ್ಲವಾಗಿತ್ತಂತೆ. ಆದ್ದರಿಂದ ಮತ್ತೆ ಸಲ್ಲದ ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿತು. ಮುಂದೆ ಎಲ್ಲವೂ ತಣ್ಣಗಾಯಿತು.” +ಸಾಂತಪ್ಪನ ಬಗ್ಗೆ ಮನಸ್ಸು ಕೆಡಿಸಲೆಂದೇ ಆಡಿದ ಮಾತಲ್ಲವಾಗಿತ್ತಾದರೂ ಅವನ ಮನೆಗೆ ಊಟಕ್ಕೆ ಹೋಗುವ ಬಗ್ಗೆ ಮೊದಲಿನ ಉತ್ಸಾಹ ಉಳಿಯಲಿಲ್ಲ. ಇಲ್ಲಿಯವರ ಚೂರುಚೂರು ಮಾತುಗಳಲ್ಲು ಸ್ಪಷ್ಟವಾಗುತ್ತ ನಡೆದ ಈ ಮನುಷ್ಯ ನನ್ನ ಸಹಜ ಗ್ರಹಿಕೆಗೆ ಸಿಗದೇ ಹೋಗಬಹುದೇನೋ ಎಂದು ಅನುಮಾನವಾಯಿತು. +“ಮುಂದಿನದು ನಂಬಿದರೆ ನಂಬು ಎನ್ನುವಂಥ ವಿದ್ಯಮಾನ. ಸುಮಾರು ಆರೇಳು ತಿಂಗಳ ಮೇಲೆ ಇವನಿಗೆ ಅದೇನಾಯಿತೋ! ಹೆಂಡತಿ ಸತ್ತದ್ದು ಈಗ ಲಕ್ಷ್ಯಕ್ಕೆ ಬಂದಿತು ಎನ್ನುವಂತೆ ಮನೆಯಿಂದ ಓಡಿಹೋದ ಮಗನ ವಿರುದ್ಧ ಎಂಥಾ ಆರ್ಭಟ ಶುರುಮಾಡಿದನೆಂದರೆ, ಜನ ಇವನಿಗೆ ಹುಚ್ಚು ಹಿಡಿದಿದೆಯೆಂದೇ ತಿಳಿದರು. ಹೋದಹೋದ ಕಡೆಗೆಲ್ಲ ಡಂಗುರಾ ಸಾರುವ ತರಾ ಅವನು ತನಗೆ ಹುಟ್ಟಿದ ಮಗನೇ ಅಲ್ಲವೆಂದೂ, ಅವನಿಂದಾಗಿಯೇ ತನ್ನ ಹೆಂಡತಿ ಜೀವ ತೆಗೆದುಕೊಂಡಳೆಂದೂ, ಅವಳು ಪ್ರಾಶಿಸಿದ ವಿಷ ಇವನೇ ತಂದುಕೊಟ್ಟಿರಬೇಕೆಂದೂ, ಒಮ್ಮೆ ಕೈಗೆ ಸಿಗಲಿ ಪೊಲೀಸರ ಹವಾಲೆ ಮಾಡಿ ಜೈಲಿಗೆ ಕಳಿಸುತ್ತೇನೆಂದೂ ಅಬದ್ಧವಾಗಿ ಆಕ್ರೋಶ ಮಾಡುತ್ತಿದ್ದನಂತೆ. ಊರಿನ ಹಿರಿಯರೊಬ್ಬರು, ಪೊಲೀಸರ ಮಾತೆತ್ತಬೇಡ ಸಾಂತಪ್ಪಾ! ಒಮ್ಮೆ ತನಿಖೆ ಶುರುವಾಯ್ತು ಅಂತೆಂದರೆ ವಿಷ ಸೇವಿಸಲಿಕ್ಕೆ ಕಾರಣವೇನಾಯ್ತು ಎಂದು ತಿಳಿಯುವತನಕ ಮುಂದುವರಿಯುತ್ತದೆ ಹುಷಾರ್! ಎಂದು ಗದರಿಸಿದಾಗ ಇವನ ಬಡಬಡಿಕೆ ನಿಂತಿತಂತೆ. ಪೊಲೀಸು ಕಾಯದೆಯೆಂದರೆ ತತ್ತ ಹೆದರುತ್ತಾನಂತೆ. ಈಗಲೂ ಇನ್ನೊಂದು ವದಂತಿಯಿದೆ. ಇಷ್ಟೆಲ್ಲವನ್ನೂ ಹೇಳಿಯಾಗಿದೆ. ಅದನ್ನೂ ಹೇಳಿಬಿಡುತ್ತೇನೆ: ಇವನು ಮನೆಗೆ ತರುತ್ತಿದ್ದ ಹೆಂಗಸರೇ, “ಆ ಸಾಧ್ವೀಮಣಿಯ ಶೀಲದ ಬಗ್ಗೆ ಹಾಗೆಲ್ಲ ಸುಳ್ಳು ಹೇಳಬೇಡಿ. ಶಾಪ ಹಾಕಿಯಾಳು, ಭೂತವಾಗಿ ನಮ್ಮನ್ನೆಲ್ಲ ಕಾಡಿಯಾಳು” ಎಂದು ಹೆದರಿಸಿದರಂತೆ. ಆಮೇಲೆ ಇವನು ಬದಲಾದನಂತೆ. ಟ್ರಕ್ ಬಿಝಿನೆಸ್ ಬಿಟ್ಟು ಕೊಟ್ಟು ಈಗಿನ ದಂಧೆ ಶುರುಮಾಡಿದನಂತೆ. ಸಿಕ್ಕಸಿಕ್ಕ ಹೆಂಗಸರನ್ನು ಮನೆಗೆ ತರುವುದೂ ನಿಂತಿತಂತೆ.” +“ಇವನ ಹೊಸ ದಂಧೆಯ ಭರಭರಾಟೆಗೆ ಚಕಿತರಾದವರು ಕ್ರಮೇಣ ಹಿಂದಿನದೆಲ್ಲ ಮರೆಯತೊಡಗಿದರು. ಊರಿನ ಪರವೂರಿನ ದೇವಸ್ಥಾನಗಳು, ಶಾಲೆ ಕಾಲೇಜುಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಕಣ್ಣು ಕುಕ್ಕಿಸುವ ಇವನ ದೇಣಿಗೆಗಳಿಂದ ಉಪಕೃತವಾದಂತೆ ಇವನ ಪ್ರತಿಷ್ಠೆ ಕೀರ್ತಿಗಳು ಜಿಲ್ಲೆಯ ತುಂಬ ಹೆಸರು ಮಾಡುತ್ತ ಹಿಂದಿನದೆಲ್ಲಕ್ಕೆ ದಂತಕತೆಯ ಕಳೆಯೇರಿದರೆ ಆಶ್ಚರ್ಯವಲ್ಲ. ಕುರೂಪಿ ಹೆಣ್ಣುಗಳನ್ನು ಮನೆಗೆ ತರುವ ಚಾಳಿ ನಿಂತ ಮೇಲೆ ಚಂದಾವರದಿಂದಲೋ ಇನ್ನೆಲ್ಲಿಂದಲೋ ಇಬ್ಬರು ಕಲಾವಂತ ಹೆಂಗಸರನ್ನು ಮನೆಯಲ್ಲಿ ತಂದಿರಿಸಿದ್ದನ್ನು ಕೂಡ ಜನ ಎಲ್ಲಿಲ್ಲದ ಔದಾರ್ಯದಿಂದ ಮಾಪು ಮಾಡಿದರಷ್ಟೇ ಅಲ್ಲ, ಈ ಹೆಣ್ಣುಗಳೂ ಇವನ ವೈಭವದ ಭಾಗವೆಂದು ತಿಳಿದರು. ತುಂಬಾ ಚಂದ ಹೆಣ್ಣುಗಳಂತೆ. ಚಂದ ಹೆಣ್ಣುಗಳತ್ತ ಇವನ ಮನವೊಲಿದದ್ದೂ ಇವನೊಳಗಿನ ಬದಲಾವಣೆಗೆ ಸಾಕ್ಷಿಯೆಂದು ತಿಳಿದವರಿದ್ದಾರೆ. ಇದು ಇಲ್ಲಿಯ ಜನರ ಖಾಸಾ ರೀತಿ. ರಂಗೇಲತನಕ್ಕೆ ಇಲ್ಲಿ ಯಾವಾಗಲೂ ಅಗ್ರಪೂಜೆ.” +ತಾನು ಹೇಳಿದ್ದ ಎಲ್ಲವೂ ದಂತಕತೆಯಲ್ಲ ಎಂಬುದನ್ನು ಸ್ಪಷ್ಟಪಡಿಸಲೆಂಬಂತೆ, ತಾಸು ತಡೆದು, “ಇವತ್ತು ನೀನು ಈ ಸುಂದರಿಯರನ್ನು ನೋಡಿದರೂ ನೋಡಬಹುದು” ಎಂದಳು. +“ನಾನೂ ಉತ್ಸುಕನಾಗಿದ್ದೇನೆ ಹೆದರಬೇಡ. ಅವರ ಸೌಂದರ್ಯಕ್ಕೆ ಮರುಳಾಗದೇ ಸುರಕ್ಷಿತವಾಗಿ ಮನೆಗೆ ಬರುತ್ತೇನೆ.” +ನಾನು ನಗಲು ಯತ್ನಿಸಿದೆ. ಆಗಲಿಲ್ಲ. +ಅಕ್ಕ ತಾನು ವಿಕ್ಷಿಪ್ತ ಸ್ವಭಾವದ ಸಾಂತಪ್ಪನೊಬ್ಬನ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದುಕೊಂಡಿರಬಹುದು. ನನಗಂತೂ ಅವಳು ಸಾಂತಪ್ಪನ ಬಗ್ಗೆ ಹೇಳುತ್ತಲೇ ಅವನನ್ನು ರೂಪಿಸಿದ ಇಡೀ ಒಂದು ಸಮುದಾಯದ ಬಗೆಗೂ ಹೇಳುತ್ತಿದ್ದಾಳೆ ಅನ್ನಿಸಿತು. ಸಾಂತಪ್ಪ ಸಂಪೂರ್ಣವಾಗಿ ಕುಮಟೆಯ ಮಣ್ಣಿನ ಫಸಲು. ಅಷ್ಟೇ ಅಲ್ಲ: ಅವನ ಬಗ್ಗೆ ಹೇಳಿದವಳು ಕುಮಟೆಯವಳೇ ಆದ ವಯೋವೃದ್ಧ ವಿಧವೆಯಾಗಿರದೇ ರಾಮಕೃಷ್ಣನಂಥ ನಿರುತ್ಸಾಹದ ತರುಣನಾಗಿದ್ದರೆ ಈ ವರದಿಯ ರೂಪ ತೀರ ಬೇರೆಯಾಗುತ್ತಿತ್ತೇನೋ ಎಂದೂ ತೋರಿತು. ಅವನ ವರದಿಗೆ ಕಳವಾದ ಬಂಗಾರದ ಗಟ್ಟಿಗಳು ಕೇಂದ್ರವಾಗುತ್ತಿದ್ದವೇನೋ! +ಹತ್ತಿದ ಸಣ್ಣ ತಂದ್ರಿಯಿಂದ ಎಚ್ಚತ್ತುಕೊಳ್ಳುವಷ್ಟರಲ್ಲಿ ಅಕ್ಕ ಆಗ ಅರ್ಧಕ್ಕೇ ಬಿಟ್ಟ ವಾಸುದೇವನ ಕಥೆಗೆ ಹಿಂದಿರುಗಿದಳು_ +“ಮನೆಯಿಂದ ಓಡಿಹೋದ ಮಗ ಆರೇಳು ವರ್ಷಗಳ ಮೇಲೆ ಒಂದು ದಿನ ಹುಬ್ಬಳ್ಳಿಯಲ್ಲಿದ್ದಾನೆಂದು ಪತ್ತೆಯಾದದ್ದು ಮುಂದಿನ ಎಂಟು ವರ್ಷಗಲಲ್ಲಿ ಹಲವು ಅವಾಂತರಗಳಿಗೆ ಮೂಲವಾಯಿತು. ಈವರೆಗೂ ಒಮ್ಮೆಯು ತಪ್ಪಿ ಕೂಡ ಪರಸ್ಪರರನ್ನು ಕಂಡವರಲ್ಲ. ಅವರಿವರು ಕೊಟ್ಟ ಸುದ್ದಿಯ ಮೂಲಕವೇ ಒಬ್ಬರಿಗೊಬ್ಬರು ಮುಟ್ಟುತ್ತಿದ್ದರು. ಇವರಿಬ್ಬರಲ್ಲಿ ಅಪ್ಪ ಎಷ್ಟು ಉಗ್ರನೋ ಮಗ ಅಷ್ಟೇ ಶಾಂತ, ನಿರ್ಲಿಪ್ತ. ತಂದೆಗೆ ಸಂಬಂಧಪಟ್ಟ ಎಲ್ಲದಕ್ಕೂ ತಾಯಿಯ ಹಾಗೇ ಮನಸ್ಸು ಮುಚ್ಚಿಕೊಂಡಿದ್ದ. ನಿಜಕ್ಕೂ ಎಳೆ ವಯಸ್ಸಿನಲ್ಲೇ ಸಾಧುಸಂತರ ನೆನಪು ತರುತ್ತಿದ್ದ ಸ್ಥಿತಪ್ರಜ್ಞ. ತನ್ನನ್ನು ಕಡೆಗಣಿಸಲೆಂದೇ ಬುದ್ಧಿಪೂರ್ವಕವಾಗಿ ಹೀಗೆ ನಡೆದುಕೊಳ್ಳುತ್ತಿದ್ದಾನೆಂದು ಅಪ್ಪ ತಿಳಿದ. ಅವನ ಪ್ರತಿಯೊಂದು ಚಟುವಟಿಕೆ-ಯಾರಿಗು ಕಾಣದ ದೂರದ ಮುಂಬಯಿಗೆ ಹೋಗಿ ಹಾಳಾಗುವುದನ್ನು ಬಿಟ್ಟು-ತನ್ನ ಪರಿಚಯದ ಜನ ಕಿಕ್ಕಿರಿದ ಹುಬ್ಬಳ್ಳಿಗೇ ಬಂದದ್ದು: ಯಾರೊಬ್ಬರ ಹಂಗೂ ಬೇಡವೆಂದು ಅವರಿವರ ಮನೆಗಳಲ್ಲಿ, ಹೊಟೆಲ್ಲುಗಳಲ್ಲಿ, ಕೆಲಸ ಮಾಡಿ ಸಾಲೆ ಕಲಿತದ್ದು; ಎಸ್ಸೆಸ್ಸೆಲ್ಸೀಯಲ್ಲಿ ಒಳ್ಳೇ ಅಂಕಗಳನ್ನು ದೊರಕಿಸಿಯೂ ತನ್ನಂಥ ಅನಾಥನಿಗೇಕೆ ಕಾಲೇಜು ಶಿಕ್ಷಣವೆಂದು ಹೇಳಿಕೊಳ್ಳುತ್ತಾ ದೊಡ್ಡ ಆಸ್ಪತ್ರೆಯೊಂದರಲ್ಲಿ ಸಾದಾ ಕಾರಕೂನನಾದದ್ದು” ಆಸ್ಪತ್ರೆಯ ನರ್ಸ್ ಒಬ್ಬಳನ್ನು, ಅವಳು ಹರಿಜನ ಹುಡುಗಿಯೆಂದು ಗೊತ್ತಿದ್ದೂ, ಮದುವೆಯಾದದ್ದು: ನೀನು ಇಂಥಿಂಥವರ ಮಗನಲ್ಲವೇನೋ ಎಂದು ಕೇಳಿದರೆ ಚಿಕ್ಕಂದಿನಲ್ಲೇ ಅಪ್ಪ-ಅಮ್ಮಂದಿರನ್ನು ಕಳಕೊಂಡ ಬಡ ಅನಾಥ ತಾನೆಂದು ಹೇಳಿದ್ದು-ಎಲ್ಲ ತನ್ನನ್ನು ತನ್ನ ಪರಿಚಯದವರಲ್ಲಿ ಅವಮಾನಗೊಳಿಸಿ ಸೇಡು ತೀರಿಸಿಕೊಳ್ಳಲೆಂದೇ ಮಾಡಿದ್ದಾಗಿ ಕಂಡಿತು. +“ದಿನ ಹೋದ ಹಾಗೆ ಬರೇ ಸುದ್ದಿಯಾಗಿ ಕಿವಿಗೆ ಬರುತ್ತಿದ್ದ ಹುಡುಗ ವಿಚಿತ್ರ ರೀತಿಯಲ್ಲಿ ಸಮಸ್ಯೆಯಾಗಿ ಕಾಡಹತ್ತಿದ. ಮಗನು ತನ್ನನ್ನು ಅಪ್ಪನೆಂದು ಗುರುತಿಸಲು ನಿರಾಕರಿಸಿದಷ್ಟೂ ಮಗನ ಬಗೆಗಿನ ಮೋಹವೂ ಹೆಚ್ಚುತ್ತಾ ಹೋಗಿ ಇತ್ತೀಚಿನ ತಿಂಗಳಲ್ಲಿ ಮನಶ್ಯಾಂತಿಯನ್ನೂ ಕಳೆದುಕೊಂಡಂತಿದೆ. ಹಲವರ ಕಾಲು ಹಿಡಿದು ಒಮ್ಮೆ ಅವನನ್ನು ಈ ಮನೆಗೆ ತಂದು ತನ್ನ ಭೇಟಿ ಮಾಡಿಸಿ ಎಂದು ದುಂಬಾಲು ಬೀಳುತ್ತಾನಂತೆ.ಕೆಲವು ತಿಂಗಳ ಹಿಂದೊಮ್ಮೆ ಇಂಥ ಪ್ರಯತ್ನ ನಡೆದು ಅದು ಸಫಲವಾಗದೇ ಹೋದಾಗ ಇಡೀ ಮನೆ ತುಂಬ ಬಯಲಾಟದ ಕುಣಿತ ಮಾಡುತ್ತ ‘ನನ್ನನ್ನು ಇಷ್ಟೊಂದು ಸತಾಯಿಸುವ ಈ ಸೈತಾನ ಒಂದು ದಿನ ತಾಯಿ ತೆಗೆದುಕೊಂಡದ್ದನ್ನೇ ತೆಗೆದುಕೊಳ್ಳದೇ ಇರಲಾರ’ ಎಂದು ಶಾಪ ಹಾಕುವ ವಿಕೋಪಕ್ಕೆ ಹೋದನಂತೆ. +“ಸುದ್ದಿ ಮಗನ ಕಿವಿಗೂ ಹೋಗಿತ್ತು. ಮಗ ಎಳ್ಳಷ್ಟೂ ವಿಚಲಿತನಾಗಲಿಲ್ಲ. ಎಂದಿನಂತೆ ಶಾಂತ, ಗಂಭೀರ, ನಿಜ ಹೇಳಬೇಕೆಂದರೆ, ಒಂದು ದಿನವೂ ತಪ್ಪಿ ಕೂಡ ತಂದೆಯ ಬಗ್ಗೆ ಕೆಟ್ಟದ್ದನ್ನು ಆಡಿದವನಲ್ಲ. ಸಂದರ್ಭ ಬಂದಾಗ, ಅಮ್ಮನ ನೆನಪಾದಾಗ ಹೆಂಡತಿಯ ಎದುರು ಶಾಂತಚಿತ್ತನಾಗಿ ಹೇಳಿದ್ದು ಹೆಂಡತಿಯನ್ನು ಕೆರಳಿಸುತ್ತಿತ್ತೇ ಹೊರತು ಇವನನ್ನಲ್ಲ. ನಾನಿದೀಗ ಹೇಳಿದ್ದು ಅವಳ ಬಾಯಿಂದಲೇ ಕೇಳಿದ್ದು. ನನ್ನೆದುರೇ ಒಮ್ಮೆ ಹೆಂಡತಿಗೆ ಸಮಾಧಾನ ಹೇಳಿದ್ದು ನೆನಪಿದೆ: ‘ಶ್ರೀಮಂತಿಕೆಯ ಅಮಲೊಂದೇ ಅಪ್ಪನ ವರ್ತನೆಗೆ ಕಾರಣವಿದ್ದಿರಲಾರದು. ಯಾರಿಗೆ ಗೊತ್ತು. ಅವನ ಅಪ್ಪ-ಅಮ್ಮ ಹೇಗಿದ್ದರೋ; ಯಾರುಯಾರಿಂದ ಅವಮಾನಿತನಾಗಿದ್ದನೋ. ಮುಖ್ಯ, ಅವನಿಗೆ ಸುಖವಿಲ್ಲ. ಅಮ್ಮ ಸತ್ತುಹೋದಳು. ನಾನು ಓಡಿಹೋದೆ. ಅಣ್ಣಂದಿರಂತೂ ದೇಶವನ್ನೇ ಬಿಟ್ಟು ನಡೆದರು. ನನ್ನನ್ನು ಮರೆತುಬಿಡಬಹುದಾಗಿತ್ತು. ಹೀಗೇಕೆ ನನ್ನ ಬೆನ್ನು ಹತ್ತಬೇಕೋ. ಈ ವಯಸ್ಸಿನಲ್ಲಿ ಒಬ್ಬಂಟಿಯಾದವನನ್ನು ಜಗತ್ತು ಹೇಗೆ ಹೆದರಿಸುತ್ತದೆಯೋ, ಊಹಿಸುವುದು ಕಷ್ಟ. ನಾನು ಅವನ ಮಗನೇ ಅಲ್ಲವೆಂದದ್ದು ಅವನು ನನ್ನ ಬಗ್ಗೆ ಆಡಿದ್ದಕ್ಕೆ ಪ್ರತೀಕಾರವಾಗಿ ಅಲ್ಲವೇ ಅಲ್ಲ. ಸುಳ್ಳು ಬಂಡಾಯದ ಭಾವನೆಯಿಂದಲೂ ಅಲ್ಲ. ಅಮ್ಮನ ಮಾತಿಗೆ ಕಟ್ಟುಬಿದ್ದು ಹಾಗೆ ಅಂದನೆ? ನನಗೆ ಗೊತ್ತಿಲ್ಲ. ಒಮ್ಮೆ ಅವನ ಮಗನು ಅಲ್ಲವೆಂದು ಹೇಳಿದ ಮೇಲೆ, ಮುಗಿಯಿತು-ಮಗನಲ್ಲ, ಎಂದಿದ್ದ. ಈಗ ನೀನೇ ಹೇಳು. ಇಂಥ ಹುಡುಗ-ಎಂಥ ಅರಿರೇಕಕ್ಕೂ ದುಡುಕದ ಹುಡುಗ-ಇದ್ದಕ್ಕಿದ್ದ ಹಾಗೆ ಮನೆಯಿಂದ ಅದೃಶ್ಯನಾದರೆ ಅವನ ಹೆಂಡತಿ ಏನು ತಿಳಿಯಬೇಕು? ನಾನೇ ಏನೆಂದು ಸಮಾಧಾನ ಹೇಳಬೇಕು? ಈಗ ಮೂರು ದಿನಗಳಾದವು. ಇನ್ನೂ ಸುದ್ದಿಯಿಲ್ಲ. ತಂದೆಯ ಕ್ರೋಧಕ್ಕೂ ಈ ಬೇಪತ್ತೆಗೂ ಸಂಬಂಧವಿಲ್ಲ ಎನ್ನುತ್ತಿಯಾ?” +‘ತಂದೆಯ ಕ್ರೋಧ’ ಎನ್ನುವಾಗ ಅಕ್ಕನ ಮನಸ್ಸಿನಲ್ಲಿ ‘ಮಗ ಒಂದಿಲ್ಲೊಂದು ದಿನ ವಿಷ ತಿಂದು ಸಾಯುತ್ತಾನೆ’ ಎಂಬರ್ಥದ, ಸಿಟ್ಟಿನಿಂದ ಸಿಡಿದ, ಭವಿಷ್ಯವಾಣಿ ಇದ್ದಿರಬೇಕು ಅನ್ನಿಸಿತು. ಸನ್ನಿವೇಶ ನಾನು ತಿಳಿದದ್ದಕ್ಕಿಂತ ಜಟಿಲವಾಗುತ್ತ ನಡೆದಿತ್ತು. ಮಗನ ಬಗ್ಗೆ ಏಕಕಾಲಕ್ಕೆ ಅನ್ನಿಸುತ್ತಿದ್ದ ಮೋಹ-ತಿರಸ್ಕಾರಗಳಲ್ಲಿ ಬೇರುಬಿಟ್ಟ ಈ ವಿಕೃತ ವರ್ತನೆ ಇವನು ಎಣಿಸಿಯೇ ಇರದ ಅನಾಹುತಕ್ಕೇನಾದರೂ ಈಗಾಗಲೇ ಎಡೆಮಾಡಿಕೊಟ್ಟಿರಬಹುದೆ? ನಾನು ಅಕ್ಕನ ಪ್ರಶ್ನೆಗೆ ಉತ್ತರ ಕೊಡದಾದೆ. ನಾನು ಇನ್ನೂ ಕಂಡಿರದ ಈ ಸಂತ ಬಂಡಾಯಗಾರ ನನ್ನ ಅಂತಃಕರಣವನ್ನು ವ್ಯಾಪಿಸತೊಡಗಿದಂತೆ ಮನಸ್ಸಿನಲ್ಲೇ ಅವನ ಸುರಕ್ಷತೆಯ ಬಗ್ಗೆ ಪ್ರಾರ್ಥಿಸಿದೆ. ನಾನು ಬಿಡಿಸಬೇಕಾದ ಪ್ರಶ್ನೆ ಸ್ಪಷ್ಟವಾಯಿತಾದರೂ ಬಿಡಿಸುತ್ತೇನೆಂಬ ಧೈರ್ಯ ಮಾತ್ರ ಮೂಡದಾಯಿತು. +ಅಕ್ಕ, ‘ಹೇಳುತ್ತೇನೆ ಹೇಳುವುದಿಲ್ಲ’ ಎನ್ನುತ್ತಲೇ ಇಬ್ಬರ ಬಗೆಗೂ ಎಷ್ಟೆಲ್ಲ ಹೇಳಿ ಮುಗಿಸಿದ್ದಳು. ಮಾತಿನಲ್ಲಿ ನಮಗೆ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಎಲ್ಲ ಕೇಳುಗರೂ ಕೂತ ಜಾಗಕ್ಕೆ ಅಂಟಿಬಿದ್ದವರಂತೆ ಕೂತೇ ಇದ್ದರು. ಹೊರಗೆ ಆಗಲೇ ಅಸ್ತಕ್ಕೆ ಸಾಗಿದ ಸೂರ್ಯನ ಬಾಡಿದ ಬಿಸಿಲು ಅಂಗಳದ ಕೆಂಪು ಮಣ್ಣಿಗೆ ಬಂಗಾರ ಹೊದಿಸಿತ್ತು. ತೆರೆದಿಟ್ಟ ಬಾಗಿಲು ಕಿಡಕಿಗಳಿಂದ ಕಾಣಿಸುತ್ತಿದ್ದ ಆದಿಬದಿಯ ಮನೆಗಳು, ಹಿತ್ತಲ ಗಿಡಮರಗಳು, ಹೋಬಿಸಿಲಲ್ಲಿ ಹೊಳೆಯುತ್ತ ನಾವು ಮಾತಾಡಿದ್ದೆಲ್ಲವನ್ನೂ ಕೇಳಿಸಿಕೊಂಡವುಗಳ ಹಾಗೆ ಗಂಭೀರಮೌನ ಧರಿಸಿ ನಿಂತಿದ್ದು ನೋಡಿ ಮನಸ್ಸು ಭಾರವಾಯಿತು. +ಹೊರಗೆ ಕಾರು ಬಂದು ನಿಂತ ಸದ್ದು ಕೇಳಿಸಿ, ‘ಅರೆ! ಕಾರು ಬಂದುಬಿಟ್ಟೆತೆ? ಇಷ್ಟು ಬೇಗ!” ಎಂದು ಆಶ್ಚರ್ಯಪಟ್ಟೆವು. ಕಾರು ಅಂಗಳದವರೆಗೆ ಬರುವುದು ಶಕ್ಯವಿರಲಿಲ್ಲ. ದೂರವೆಲ್ಲೋ ನಿಂತಿರಬೇಕು. ವನಿತಾಳ ಕಿರಿಯ ಹುಡುಗಿ ಅಂಗಳಕ್ಕೆ ಓಡಿಹೋಗಿ ಕಾರು ಬಂದದ್ದು ನಿಜವೆಂದು ಸಾರಿದಳು. ಕೆಲ ಹೊತ್ತಿನ ಮೇಲೆ ಡ್ರೈವರ್ ಬಂದ: +“ಶಕ್ಯವಾದರೆ ತುಸು ಮೊದಲೇ ಬರಲು ಕೇಳಿಕೊಂಡಿದ್ದಾರೆ. ಅಂಥ ಅರ್ಜೆಂಟ್ ಏನೂ ಇಲ್ಲವಂತೆ. ಹೊತ್ತು ಮುಳುಗುವ ಮೊದಲೇ ಬಂದರೆ ಮನೆಯೆದುರಿನ ಬಗೀಜಾದಲ್ಲಿ ಕೆಲ ಹೊತ್ತು ಕೂರಬಹುದಾಗಿತ್ತು ಅನ್ನಿಸಿತಂತೆ. ಕಾರಿಗೆ ಹೇಗೂ ಬಿಡುವೇ ಇತ್ತು. ಅಲ್ಲಿ ನಿಲ್ಲುವ ಬದಲು ಇಲ್ಲಿ ಬಂದು ನಿಲ್ಲಲು ಹೇಳಿದರು. ನಿಮ್ಮ ಸವಡಿನ ಪ್ರಕಾರ ತಯಾರಾಗಿರಿ” ಎಂದ. ಅಕ್ಕನನ್ನು ನೋಡಿದಮೇಲೆಯೇ ನೆನಪಾದವನ ಹಾಗೆ, “ಹುಬ್ಬಳ್ಳಿಯಿಂದ ಯಾರೋ ಬರುವವರಿದ್ದಾರಂತೆ. ಬಂದಿದ್ದರೆ ಅವರನ್ನೂ ಕರಕೊಂಡು ಬರಲು ಹೇಳಿದ್ದಾರೆ” ಎಂದ. ಬೇರೆ ಸಮಯದಲ್ಲಾದರೆ ಅಕ್ಕ ಈ ಆಮಂತ್ರಣದ ಬಗ್ಗೆ ಏನಾದರೂ ಆಡದೆ ಇರುತ್ತಿರಲಿಲ್ಲ. ವಾಸುದೇವನ ಬಗ್ಗೆ ಆಡಿಕೊಂಡು ಮನಸ್ಸು ಮ್ಲಾನಗೊಂಡಿರುವಾಗ ಮಾತು ಬೇಡವೆನ್ನಿಸಿರಬೇಕು. ನನಗೂ ಅಷ್ಟೇ. ರಾಮಕೃಷ್ಣ “ಅವರು ಸಿದ್ಧವಾಗುತ್ತಾರೆ. ನೀನು ಕಾರಿನಲ್ಲಿ ಹೋಗಿ ಕುಳಿತು ದಾರಿ ಕಾಯು” ಎಂದು ಆದೇಶವಿತ್ತ. ಅವನೇ ಹೊರಟುಹೋದಮೇಲೆ ನಮ್ಮತ್ತ ತಿರುಗಿದ. +“ಬೋಳೀಮಗನಿಗೆ ನೀವು ಅವನ ಮನೆಯನ್ನೂ ಮೆಚ್ಚಬೇಕು, ಎದುರಿನ ಬಗೀಚಾವನ್ನು ನೋಡಿ ವಾಹವಾ ಎನ್ನಬೇಕು. ಬಗೀಚಾ ಇದ್ದದ್ದೂ ಹಾಗೆಯೆ! ನಿಮ್ಮ ಹ್ಯಾಂಗಿಂಗ್ ಗಾರ್ಡನ್‌ನನ್ನು ಹಿಂದೆ ಹಾಕುತ್ತದೆ. ಅಲ್ಲಿಯ ಹಾಗೇ ಹೂವಿನ ಗಿಡಗಳಿವೆ. ನೀರಿನ ಕಾರಂಜಿಗಳಿವೆ. ಕೂರಲು ಬೆಂಚುಗಳಿವೆ. ಆದರೆ ನೋಡಿದವರನ್ನು ಥಕ್ಕುಗೊಳಿಸುವುದು ಅವಾಢವ್ಯವಾದ ಅದರ ಕಬ್ಬಿಣದ ಗೇಟು. ಗೇಟಿನ ಎರಡೂ ಕಂಬಗಳಿಗೆ ಬಳ್ಳಿಯಂತೆ ಸುತ್ತಿಕೊಂಡು ಮೇಲೆ ಸಾಗಿ, ಕಮಾನಿನ ಮೇಲೂ ಹಬ್ಬಿದ ಬೋಗನ್‌ವಿಲ್ಲ ಮೈತುಂಬ ಕೆಂಪು ಹೂವನ್ನು ಬಿಟ್ಟಿರುವ ಸೊಗಸನ್ನು ನೀವು ನೋಡಿ ನಂಬಬೇಕು.” +ರಾಮಕೃಷ್ಣನಿಗೆ ನನ್ನ ಸದ್ಯದ ಮೂಡಿನ ಕಲ್ಪನೆ ಇದ್ದಂತಿರಲಿಲ್ಲ. “ಈಗಿನ್ನೂ ಆರೂವರೆ ಗಂಟೆ. ಏಳೂವರೆಯ ಸುಮಾರಿಗೆ ಹೊರಟರೆ ಸಾಕು. ನಾಳೆ ಆ ಬದಿಗೆ ತಿರುಗಾಡಲು ಹೋದರೆ ರಸ್ತೆಯಿಂದಲೇ ಗೇಟನ್ನು ನೋಡಿದರಾಯಿತು. ಸಾಂತಪ್ಪ ನನ್ನೊಡನೆ ಮಾತಾಡಲು ಬಯಸಿದ್ದಾದರೂ ಏನು ಎಂದು ಗೊತ್ತಾದ ಹೊರತು ನನ್ನ ಮನಸ್ಸಿಗೆ ಚೈನು ಇಲ್ಲ. ಈಗ ಬೇಕಾದರೆ ಹೀಗೇ ಈ ಗುಡ್ಡವನ್ನು ಸುತ್ತಾಡಿ ಬರೋಣ. ಆಗಿನಿಂದ ಒಂದೇ ಜಾಗದಲ್ಲಿ ಕೂತು ಕಾಲು ಮರಗಟ್ಟಿವೆ. ಒಂದೇ ವಿಷಯದ ಬಗ್ಗೆ ಮಾತನಾಡಿ ತಲೆ ಸುನ್ನವಾಗಿದೆ. ನಾವು ಹಿಂದಿರುಗಿ ಬರುವಷ್ಟರಲ್ಲಿ ಹೆಂಗಸರು ಸಿದ್ಧವಾಗಲಿ” ಎಂದೆ. ವನಿತಾ ಸುಮತಿಯರ ಜೊತೆಗೆ ತನ್ನನ್ನೂ ಸೇರಿಸಿಕೊಂಡಿರಬಹುದೆಂದು ಬಗೆದ ಅಕ್ಕ, “ನಾ ಬರಲಾರೆ. ನೀವುನೀವೇ ಹೋಗಿಬನ್ನಿ” ಎಂದಳು. ನಾನೂ ಒತ್ತಾಯಿಸಲು ಹೋಗಲಿಲ್ಲ. ನಾವು ಹೊರಡುವ ಹೊತ್ತು ಹತ್ತಿರವಾಗುತ್ತಿದ್ದ ಹಾಗೆ ಅಕ್ಕನ ದುಗುಡ ಹೆಚ್ಚುತ್ತಿದ್ದದ್ದು ನೋಡಿ ಕೆಡುಕೆನ್ನಿಸಿತು. +– ೩ – +ಈ ಮೊದಲೇ ಯೋಜಿಸಿಕೊಂಡಂತೆ ಕಾರಿನಲ್ಲಿ ನಾನು, ಸುಮತಿ, ವನಿತಾ ಮೂವರೇ ಹೊರಟೆವು. “ಇಲ್ಲಿಂದ ಹದಿನೈದು ಮಿನಿಟುಗಳ ಹಾದಿ, ಚಿತ್ರಿಗೆಗೆ ಹೋಗುವ ಹಾದಿಯಲ್ಲಿ” ಎಂದು ಡ್ರೈವರ್ ಕಾರಿನೊಳಗಿನ ಮೌನಕ್ಕೆ ಭಂಗ ತಂದ. ಹೊರಗೆ ಆಗಲೇ ಮಬ್ಬುಗತ್ತಲೆ ಕವಿದಿತ್ತು. ಇಲ್ಲಿಗೆ ಬಂದಂದಿನಿಂದ ಮೊದಲಬಾರಿಗೇ ಹೊರಬಿದ್ದವನಿಗೆ ನಾನ್ವತ್ತು ವರ್ಷಗಳಿಗೂ ಹಿಂದೆ ನೋಡಿದ ಊರಿನ ‘ಏನು-ಎಲ್ಲಿ’ಗಳ ಗುರುತು ಹಿಡಿಯುವುದಾಗಲಿಲ್ಲ. ಸೋದರ ಸೊಸೆಯೇ, ಇದು ನೆನಪಿದೆಯೇ? ಅದು ನೆನಪಿದೆಯೇ? ಎಂದು ನನ್ನ ನೆನಪು ಕೆದಕುತ್ತಲೇ ಚಿಕ್ಕಂದಿನಲ್ಲಿ ನಾನು ನೋಡಿರಬಹುದಾದ ಜಾಗಗಳನ್ನು ಹೆಂಡತಿಗೆ ಪರಿಚಯಿಸಿದಳು: ಹುಲಿದೇವರ ಗುತ್ತ: ಹೈಸ್ಕೂಲು ಗುಡ್ಡ, ಗುಡ್ಡದ ಸಾಲು ಪಾವಟಿಗೆಗಳು: ಗುಡಿಗಾರ ಪೇಟೆ: ಮಠ ಕೇರಿ: ಶಾಂತೇರಿ ಕಾಮಾಕ್ಷಿ ಕಾವೇರಿ ಕಾಮಾಕ್ಷಿ ಮ್ಹಾಳಸಾ ದೇವಾಲಯಗಳು, ಕಿವಿಯ ಮೇಲೆ ಬಿದ್ದ ಹೆಸರುಗಳು ನೆನಪಿನ ಮುಸುಕುಗತ್ತಲೆಯಲ್ಲಿ, ರೋಮಾಂಚನಕಾರೀ ಪ್ರತಿಮೆಗಳನ್ನು ಮಿಂಚಿಸಿದವು. ಕೇಳಿದ ಹೆಸರುಗಳಿಗೇ ಮರುಳಾದಂತಿದ್ದ ಸುಮತಿ “ನಾಳೆ ಹಗಲಿಗೆ ಇವುಗಳನ್ನೆಲ್ಲ ಇನ್ನೊಮ್ಮೆ ನೋಡಬೇಕು” ಎಂದಳು. +“ಯಜಮಾನರೇ ನಾಳೆ ನಿಮಗೆ ಊರು ತೋರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಶಿರಾಲಿ ಮುರ್ಡೇಶ್ವರಗಳ ದೇವಾಲಯಗಳನ್ನು ತೋರಿಸುವಾ ಎಂದಿದ್ದರು” ಎಂದ ಡ್ರೈವರ್. +ಈ ಯೋಜನೆಯ ಬಗ್ಗೆ ನಮಗಾರಿಗೂ ಉತ್ಸಾಹವಿರಲಿಲ್ಲ. ಯಾರೂ ಮಾತಿಗೆ ಪ್ರತಿಕ್ರಿಯಿಸಲು ಹೋಗಲಿಲ್ಲ. ಡ್ರೈವರ್ ಹಿಂದೆಗೆಯದೇ “ನೀವೆಲ್ಲ ಬರುತ್ತೀರೆಂದು ತುಂಬಾ ಖುಷಿಯಲ್ಲಿದ್ದಾರೆ, ಯಜಮಾನರು” ಎಂದು ವರದಿ ಒಪ್ಪಿಸಿದ. ಕೆಲ ಹೊತ್ತಿನ ಮೇಲೆ “ಇದೋ! ಬಂದೇಬಿಟ್ಟೆವು” ಎಂದು ಸಾರಿದ. “ಇದು ಮುಖ್ಯ ಗೇಟು. ಒಳಗೆ ಕಾಲಿರಿಸಿದ್ದೇ ಬಗೀಜಾ. ವಾಚ್ ಮನ್ ನಿಮ್ಮನ್ನು ಬಂಗಲೆಗೆ ಮುಟ್ಟಿಸುತ್ತಾನೆ. ತುಸು ಒಳಗಿದೆ. ಕಾರು ಈ ಗೇಟಿನಿಂದ ಒಳಗೆ ಹೋಗುವುದಿಲ್ಲ. ಇನ್ನೊಂದು ಗೇಟಿದೆ. ಯಜಮಾನರು ನಿಮ್ಮನ್ನು ಈ ಗೇಟಿನಿಂದಲೇ ಕರೆತರಲು ಹೇಳಿದ್ದಾರೆ” ಎನ್ನುತ್ತ ನಮ್ಮನ್ನು ಕಂಪೌಂಡಿನ ಮಹಾದ್ವಾರದ ಎದುರು ಇಳಿಸಿದ. +ನಿಯಾನ್ ದೀಪದ ಬೆಳಕಿನಲ್ಲಿ ಬೆಳಗಿಕೊಂಡ ಆ ಭವ್ಯ ಮಹಾದ್ವಾರದ ಎದುರು ನಿಂತು ಕಂಪೌಂಡಿನಲ್ಲಿ ದೂರವೆಲ್ಲೋ ಇದೆಯೆಂದು ಹೇಳಿದ ಮನೆಯನ್ನು ಹುಡುಕುತ್ತಿದ್ದಂತೆ ಕೆಲ ಹೊತ್ತಿನ ಮೊದಲಷ್ಟೇ ಡ್ರೈವರ್ ಆಡಿದ ತೀರ ಸರಳವಾದ ಮಾತುಗಳು ಅರಿವಿನಲ್ಲಿ ಮರುಕಳಿಸಿ ಬಾಲ್ಯದಲ್ಲಿ ಅಮ್ಮನಿಂದ ಕೇಳಿದ ಜಾನಪದ ಕತೆಯೊಂದು ಚೂರುಚೂರಾಗಿ ನೆನಪಾಯಿತು. ದುರ್ಗಮವಾದ ಕೋಟೆ. ಅದರ ಹೆಬ್ಬಾಗಿಲ ಕಾವಲಿಗೊಬ್ಬಳು ಅಕರಾಳ ವಿಕರಾಳ ರಕ್ಕಸಿ. ಕೋಟೆಯ ಒಳಗೊಂದು ಅರಮನೆ. ತೀರ ಒಳಗಿನ ಕೋಣೆಯೊಂದರಲ್ಲಿ ಮಹಾ ಭಯಂಕರ ಸರ್ಪಗಳ ಕಾವಲಿನಲ್ಲಿ ಕಣ್ಣು ಕುಕ್ಕಿಸುವಂತೆ ಬೆಳಕು ಬಿಡುವ ಅತ್ಯಮೂಲ್ಯವಾದ ವಜ್ರದ ಹರಳು. ಮಲತಾಯಿಗಾಗಿ ಅದನ್ನು ದೊರಕಿಸ ಹೊರಟ ರಾಜಕುಮಾರ ಆ ರಕ್ಕಸಿಯನ್ನು ಮೊದಲು ಕೊಲ್ಲಬೇಕು. ಅವನು ಒಲಿಸಿಕೊಂಡ ದೇವತೆಯೊಬ್ಬಳು ರಾಕ್ಷಸಿಯನ್ನು ಕೊಲ್ಲುವ ಗುಟ್ಟನ್ನು ಹೇಳಿಕೊಡುತ್ತಾಳೆ. ರಾತ್ರಿ ಮಲಗುವಾಗ ರಾಕ್ಷಸಿ ತನ್ನ ಪ್ರಾಣವನ್ನು ಪಂಜರದೊಳಗಿನ ಗಿಳಿಯೊಂದರಲ್ಲಿ ಅಡಗಿರಿಸುತ್ತಾಳೆ. ಗಿಳಿಯ ಕತ್ತು ಹಿಚುಕಿದರೂ ಸಾಕು, ರಾಕ್ಷಸಿ ಸಾಯುತ್ತಾಳೆ. ರಾಜಕುಮಾರ ಆ ಗಿಳಿಯ ಪಂಜರವನ್ನು ಮೊದಲು ಹುಡುಕಿ ತೆಗೆಯಬೇಕು! +ನಾವು ಗೇಟಿಗೆ ಬರುವಷ್ಟರಲ್ಲಿ ಖಾಕಿ ಯೂನಿಪಾರ್ಮ್‌ನಲ್ಲಿದ್ದ ಮುದಿ ಚೌಕಿದಾರ ಎದ್ದು ನಿಂತು ಸಲಾಮು ಹೊಡೆದು “ಬನ್ನಿ” ಎಂದ. ಸರಿಯಾಗಿ ಅದೇ ಹೊತ್ತಿಗೆ ಕಂಪೌಂಡಿನಿಂದ ಹೊರಬಿದ್ದು ರಸ್ತೆ ಸೇರುವ ತರಾತುರಿಯಲ್ಲಿ ವ್ಯಕ್ತಿಯೊಬ್ಬ, ಗೇಟನ್ನು ದಾಟುತ್ತ “ಒಳಗೆ ಹೋಗಿ, ಮನೆಯ ಯಜಮಾನ ಮನೆಯೊಳಗೆ ಇದ್ದಾರೆ” ಎಂದು ನಿಮ್ಮದೇ ಹಾದಿ ಕಾಯುತ್ತಿದ್ದಾರೆ ಎನ್ನುವ ಧಾಟಿಯಲ್ಲಿ ಸುದ್ದಿ ಕೊಟ್ಟು ಅವಸರಾವಸರವಾಗಿ ರಸ್ತೆ ಸೇರಿದ. ಅವನನ್ನು ಇನ್ನೊಮ್ಮೆ ನೋಡೋಣವೆಂದರೆ ಕತ್ತು ತಿರುಗಿಸಲೂ ಪುರುಸತ್ತು ಕೊಡದೆ, ನಮ್ಮನ್ನು ಮನೆಯ ಕಡೆಗೆ ಕರೆದೊಯ್ಯುತ್ತಿದ್ದ ಚೌಕಿದಾರ, “ತುಂಬ ತಡಮಾಡಿ ಬಂದಿರಲ್ಲ. ಬೆಳಕಿದ್ದಾಗ ನೋಡಬೇಕು ಈ ಬಗೀಜಾವನ್ನು, ಇವತ್ತು ಬೆಳ್ದಿಂಗಳೂ ಕೂಡ ಇಲ್ಲ. ಇನ್ನೆರಡು ದಿನಗಳಲ್ಲಿ ಅಮಾವಾಸ್ಯೆಯಲ್ಲವೆ?” ಎಂದು ಕೇಳಿದ. +ಇಲ್ಲಿಯ ಜನರೇ ಗುಪ್ತ ಸಂಕೇತಗಳಂಥ ಭಾಷೆ ಮಾತಾಡುತ್ತಾರೋ ಅಥವಾ ನನಗೇ, ನನ್ನ ಇಂದಿನ ಮಾನಸಿಕ ಸ್ಥಿತಿಯಲ್ಲಿ ಹಾಗೆ ಕೇಳಿಸುತ್ತದೆಯೋ? ಇಂಥ ಮನೆಗೆ ಬರುವದಿದ್ದಲ್ಲಿ ಸಾಂತಪ್ಪನೇ ಸೂಚಿಸಿದ ಹಾಗೆ ಬೆಳಕಿದ್ದಾಗಲೇ ಬರಬೇಕಾಗಿತ್ತೇನೋ. ಹೆಂಡತಿ ಸೋದರ ಸೊಸೆಗೆ ನನ್ನ ಅನಿಸಿಕೆಯನ್ನು ಇಂಗ್ಲಿಷ್‌ನಲ್ಲಿ ಆಡಿ ತೋರಿಸಿದೆ. ಸುಮತಿ ನನ್ನ ಮಾತನ್ನು ತಕ್ಷಣ ಅನುಮೋದಿಸುತ್ತ “ಙou geಣ ಚಿಟಿ eeಡಿie ಜಿeeಟiಟಿg,ಅಲ್ಲವೆ? ಎಂದಳು. +ನಾನು ಆಗಲೇ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದೆದ್ದೆ: ಏನೇ ಆಗಲಿ! ನಾನು, ಸಾಂತಪ್ಪ ಇಬ್ಬರೇ ಮಾಳಿಗೆಯ ಮೇಲೆ ಕೂತು ಮಾತನಾಡುವುದನ್ನು ತಪ್ಪಿಸಬೇಕು. ಸಾಂತಪ್ಪ ಕೂಡ ನನಗಿಂತ ಮೊದಲೇ ಇಂಥದ್ದೇ ನಿರ್ಧಾರಕ್ಕೆ ಬಂದತಿತ್ತು. ಮನೆಯ ಮೊಗಸಾಲೆಯಲ್ಲಿ ನಮ್ಮನ್ನು ಎದುರುಗೊಂಡವನು “ಬನ್ನಿ ಬನ್ನಿ, ಬೆಳಕಿದ್ದಾಗಲೇ ಬರುವಿರೆಂದು ಎಣಿಸಿದ್ದೆ. ಸಾಧ್ಯವಾಗಲಿಲ್ಲವೇನೋ. ನಿಮ್ಮ ಅಕ್ಕ ಬಂದಿದ್ದಾರಂತೆ, ಡ್ರೈವರ್ ತಿಳಿಸಿದ. ಅವರೂ ಬರಬಹುದಾಗಿತ್ತು” ಎನ್ನುತ್ತ ನಮ್ಮನ್ನೆಲ್ಲ ದಿವಾಣಖಾನೆಗೆ ಕರೆದೊಯ್ದು. +“ಕೆಲ ಹೊತ್ತು ಇಲ್ಲಿ ಇಲ್ಲಿ ದಿವಾಣಖಾನೆಯಲ್ಲೇ ಕೂರೋಣ. ಊಟದ ಮೊದಲು ಏನಾದರೂ ಕುಡಿಯಲು ಮಾಡಿಸಲೇ?” ಎಂದು ಕೇಳಿ, ನಾವಲ್ಲ ಏಕಕಂಠದಲ್ಲಿ ಬೇಡವೆಂದಮೇಲೆ “ವನಿತಾ, ಇವರನ್ನು ಬೇಕಾದರೆ ಒಳಗೆ ಕರೆದುಕೊಂಡು ಹೋಗು. ಎಲ್ಲರೂ ಈ ಪರದೆಯ ಆಚೆಯ ಕೋಣೆಯಲ್ಲೇ ಇದ್ದಾರೆ ನೋಡು” ಎನ್ನುತ್ತಿರುವಾಗಲೇ ಅವನು ಬೆರಳು ಮಾಡಿದ ಕೋಣೆಯೊಳಗಿಂದ ಹೆಂಗಸೊಬ್ಬಳು ಹೊರಗೆ ಬಂದು, ನಮ್ಮತ್ತ ನೋಡಿ, ತುಂಬಾ ಚಂದವಾಗಿ ಮುಗುಳ್ನಕ್ಕು “ಬನ್ನಿ” ಎಂದಳು. ಸಪೂರವಾದ ನೀಲಿ ದಡಿಯ ಅಚ್ಚ ಬಿಳಿಯ ಸೀರೆ, ತೀರ ಜುಜುಬಿಯಾಗಿ ಬಾಚಿ ಮುಡಿ ಹಾಕಿದ ಕೂದಲು. ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು, ಗೌರವರ್ಣದ ನೀಳಕಾಯದ ಸುಮಾರು ನಾಲ್ವತ್ತರ ಲಾವಣ್ಯವತಿಯನ್ನು ನೋಡಿ ಖುಷಿಪಟ್ಟೆ. ಅಕ್ಕ ಹೇಳಿದ ಹೆಣ್ಣುಗಳಲ್ಲಿ ಒಬ್ಬಳಿರಬೇಕು, ಅನ್ನಿಸಿತು. ಹೆಂಡತಿ ಬದುಕಿರುವವರೆಗೂ ಕುರೂಪಿ ಹೆಣ್ಣುಗಳ ಬೆನ್ನು ಹತ್ತಿದ ಈತ ಈಗ ಇಷ್ಟೊಂದು ಬದಲು ಗೊಳ್ಳಲು ಕಾರಣವೇನು? ಅವಳು, ಸುಮತಿ ವನಿತಾರ ಜೊತೆಗೆ ಕೋಣೆ ಸೇರುವವರೆಗೆ ಅವಳನ್ನು ಎವೆಯಿಕ್ಕದೆ ಕಣ್ಣುಗಳಿಂದ ನೋಡುತ್ತಾ ನಿಂತೆ. ಆಮೇಲೆ ನನ್ನನ್ನು ಸಾವರಿಸಿಕೊಳ್ಳುತ್ತ ಸಾಂತಪ್ಪನತ್ತ ತಿರುಗಿ, “ನಾವು ಇಲ್ಲೇ ಕೂರೋಣ ಅಲ್ಲವೇ?” ಎಂದು ಕೇಳಿದೆ. +“ಮೇಲೆ ಕೂರಬಹುದಾಗಿತ್ತು. ಒಂದೆರಡು ದಿನಗಳ ಮಾತಿಗೆ ಹತ್ತಿರದ ಸಂಬಂಧಿಯೊಬ್ಬರು ಬಂದಿದ್ದಾರೆ. ಅವರೀಗ ಮೇಲಿದ್ದಾರೆ. ಊಟದ ಹೊತ್ತಿಗೆ ನಮ್ಮನ್ನು ಕೂಡಿಕೊಳ್ಳುತ್ತಾರೆ. ಹಾಲಿನಲ್ಲಿ ಬೇಡ. ಪಕ್ಕದಲ್ಲೇ ಇನ್ನೊಂದು ಕೋಣೆಯಿದೆ, ಅಲ್ಲಿ ಕೂರೋಣ.” +ಸಾಂತಪ್ಪ ನನ್ನನ್ನು ಆ ಕೋಣೆಗೆ ಕರೆದೊಯ್ದ, ಅಕ್ಕ ಹೇಳಿದ ಹಾಗೆ ಬಹಳ ಕೋಣೆಗಳುಳ್ಳ ಮೆನೆಯಿರಬೇಕು, ಅನ್ನಿಸಿತು. ಮನೆಯಲ್ಲಿಂದು ಯಾರು ಯಾರೆಲ್ಲ ಇದ್ದಾರೋ! ತಿಳಿಯುವ ಕುತೂಹಲವಾದರೂ ಕೂಡಲೇ ತಿಳಿಯುವ ಸಾಧ್ಯತೆ ತೋರಲಿಲ್ಲ. ಈಗ ನಾವು ಕೂತ ಕೋಣೆಯಲ್ಲಿ ಕೂರುವ ಯೋಜನೆ ಮೊದಲೇ ಸಿದ್ಧಗೊಂಡಿರಬೇಕು. ಅದು ಇನ್ನೊಂದು ಸಣ್ಣ ದಿವಾನಖಾನೆಯ ಹಾಗೆ ಸಜ್ಜುಗೊಂಡಿತ್ತು. +“ಭಿಡೆ ಮಾಡಿಕೊಳ್ಳಬೇಡ. ಒಳ್ಳೇ ಇಂಪೋರ್ಟೆಡ್ ಸ್ಕ್ಯಾಚ್ ವಿಸ್ಕಿ ಇದೆ. ನಾನು ಕುಡಿಯುತ್ತೇನೆ. ನೀನೂ ಜೊತೆಯಾದರೆ ಖುಷಿಯಾಗುತ್ತದೆ. ಮಾಳಿಗೆಯ ಮೇಲಿನವರು ಕುಡಿಯುವುದಿಲ್ಲ. ಹಾಗೆಂದೇ ಅವರನ್ನು ಕೂಡಲೇ ಕೆಳಗೆ ಕರೆಯಲಿಲ್ಲ.” +ಸಾಂತಪ್ಪನ ಸೂಚನೆ ನನ್ನ ಇಂದಿನ ಸ್ಥಿತಿಯಲ್ಲಿ ಕೆಟ್ಟದಲ್ಲ ಅನ್ನಿಸಿ “ವ್ಹಿಸ್ಕಿಯ ಜೊತೆಗೆ ಸೋಡಾ ಹಾಗೂ ಐಸ್ ಸಿಗಬಹುದೆ?” ಎಂದೆನಷ್ಟೆ. ಸಾಂತಪ್ಪ ಕುಣಿದು ಕುಪ್ಪಳಿಸುವ ಹುರುಪಿನಿಂದ ಕೋಣೆ ಹೊರಗೆ ನಡೆದ. ಇದೀಗ ನೋಡಿದ ಸಾಂತಪ್ಪ ಬೆಳಿಗ್ಗೆ ವನಿತಾಳ ಮನೆಯಲ್ಲಿ ನೋಡಿದವನಿಂದ ತೀರ ಬೇರೆಯಾಗಿದ್ದ. ಯಾರಿಗೆ ಗೊತ್ತು. ಅವನ ನಿಜವಾದ ವ್ಯಕ್ತಿತ್ವದ ಪ್ರಕಟಣೆಗೆ ಇಂಥ ವಾತಾವರಣ ಅವಶ್ಯವಾದದ್ದೇನೊ! ನಾನು ಹೀಗೆ ಯೋಚಿಸುತ್ತಿರುವಾಗಲೇ ಹೊರಗೆ ಹೋದಾಗಿನವರ ಇಮ್ಮಡಿ ಉತ್ಸಾಹದಿಂದ ಒಳಗೆ ಬಂದವನು “ಈಗ ಬರುತ್ತದೆ. ನೀನು ಜೊತೆ ಕೂಡಲು ಒಪ್ಪಿದ್ದರಿಂದ ಬಹಳ ಖುಷಿಯಾಯಿತು ಎಂದ. +ಮನೆಯಲ್ಲಿ ಬರೇ ಹೆಂಗಸರೇ ತುಂಬಿರಬಹುದು ಎಂದು ಕಲ್ಪಿಸಿಕೊಂಡ ನನಗೆ ವ್ಹಿಸ್ಕಿಯ ಸರಂಜಾಮನ್ನು ಹೊತ್ತು ಯಾರು ಬರುತ್ತಾರೂ ಎಂದು ಕುತೂಹಲವಾಯಿತು. ಮುಂದಿನ ಕೆಲವೇ ನಿಮಿಷಗಳಲ್ಲಿ ಸುಮಾರು ಹದಿನೈದು ವರುಷಗಳ ಪೋರನೊಬ್ಬ ದೊಡ್ಡ ಟ್ರೇನಲ್ಲಿ ಐಸ್ ಬಕೆಟ್, ನಾಲ್ಕು ಸೋಡಾ ಬಾಟಲಿಗಳನ್ನು, ಎರಡು ಗ್ಲಾಸುಗಳನ್ನು, ಒಂದು ಪ್ಲೇಟ್‌ನಲ್ಲಿ ಹುರಿದ ಗೇರುಬೀಜ, ಇನ್ನೊಂದರಲ್ಲಿ ಹಲಸಿನ ಬಾಳಕ ತೆಗೆದುಕೊಂಡು ಬಂದ. ಸರಂಜಾಮನ್ನು ನೋಡಿ ಕುಮಟೆ ತುಂಬ ಮುಂದುವರಿದಿದೆ ಎಂದುಕೊಂಡೆ. ಟ್ರೇನೊಳಗಿನ ಎಲ್ಲ ವಸ್ತುಗಳನ್ನು ಟೀಪಾಯಿಗೆ ರವಾನಿಸಿದ ಹುಡುಗ ಒಂದೇ ಒಂದು ನಿಮಿಷದ ಮಟ್ಟಿಗೆ ನನ್ನತ್ತ ನೋಡಿ, ಖಾಲಿ ಮಾಡಿದ ಟ್ರೇದೊಡನೆ ಅಲ್ಲಿಂದ ಕಾಲು ಕಿತ್ತ. ಅಡ್ಡಿಯಿಲ್ಲ. ಮನೆಯಲ್ಲಿರುವವರು ಹೆಂಗಸರು ಮಾತ್ರವಲ್ಲ ಹಾಗಾದರೆ, ಎಂದುಕೊಳ್ಳುವ ಹೊತ್ತಿಗೇ-ಅರೇ! ಈ ಹುಡುಗ ಈ ಮನೆಗೆ ಸೇರಿದವನಲ್ಲ. ಈ ಸಂಜೆಯ ಮಟ್ಟಿಗೆ ಹೋಟೆಲ್ಲೊಂದರಿಂದ ಬಾಡಿಗೆಗೆ ತಂದವನಿರಬೇಕು. ಅನ್ನಿಸಿಹೋಯಿತು. ಅಡುಗೆಗೂ ಗಂಡಸೇ ಇದ್ದಲ್ಲಿ ಅವನೂ ಈ ಒಂದು ದಿನದ ಮಾತಿಗೇ ಬಂದವನಿರಬಹುದೆ? ಎಂದು ಊಹಿಸುತ್ತಿರುವಾಗಲೇ ಸಾಂತಪ್ಪ ಮೂಲೆಯೊಳಗಿನ ಕಪಾಟು ಒಂದರೊಳಗಿಂದ ವ್ಹಿಸ್ಕಿಯ ಬಾಟಲಿಯೊಂದನ್ನು ಹೊರತೆಗೆದು ಟೀಪಾಯಿಯ ಮೇಲಿರಿಸಿದ. ನಾವಿಬ್ಬರೂ ನಮ್ಮ ನಮ್ಮ ರೀತಿಯಲ್ಲಿ ನಮ್ಮ ನಡುವೆ ತೆರೆದುಕೊಳ್ಳಲಿದ್ದುದಕ್ಕೆ ಸಿದ್ಧರಾಗುತ್ತಿದ್ದೇವೆ. ಎನ್ನುವ ಅರಿವು ಇಬ್ಬರಿಗೂ ಇದ್ದಹಾಗಿತ್ತು. ವ್ಹಿಸ್ಕಿಯ ಎರಡು ಗುಟುಕುಗಳ ನಂತರ ನಾನೇ ಮಾತಿಗೆ ಚಾಲನೆಯಿತ್ತೆ. +“ಹೇಳು ಸಾಂತಪ್ಪ! ನೇರವಾಗಿ ವಿಷಯಕ್ಕೆ ಬಂದುಬಿಡು. ಅಕ್ಕನಿಂದ ವಿಷಯವೇನೆಂಬುದರ ಸಾಧಾರಣ ಕಲ್ಪನೆ ಬಂದಿದೆ. ಆದರೆ ಇದರಲ್ಲಿ ನಾನು ಏನು ಮಾಡಬೇಕು, ಏನು ಮಾಡಬಹುದು ಇನ್ನೂ ಸ್ಪಷ್ಟವಾಗಿಲ್ಲ. ನಾವಿಲ್ಲಿಗೆ ಬಂದದ್ದು ನಾಲ್ಕು ದಿನಗಳ ಮಾತಿಗೆ, ಅದೂ ತೀರ ಆಕಸ್ಮಿಕವಾಗಿ, ವಿಶ್ರಾಂತಿಯ ನಂತರದ ಈ ಮೊದಲ ದಿನಗಳನ್ನು ನಾನು ಎಲ್ಲೂ ಕಳೆಯಬಹುದಿತ್ತು. ಎಲ್ಲೂ ಹೋಗದೆ ಮುಂಬಯಿಯ ನಮ್ಮ ಮನೆಯಲ್ಲೇ ಉಳಿಯಬಹುದಾಗಿತ್ತು. ನಾವು ಇನ್ನು ಮುಂದೆ ಭೇಟಿಯಾಗುತ್ತೇವೆ ಎನ್ನುವ ಖಾತ್ರಿಯೂ ಇಲ್ಲ. ಆದ್ದರಿಂದಲೇ ಹೇಳುತ್ತೇನೆ. ನಿನ್ನದು ‘ಈಗ ನೇನೇ ಹೇಳು, ಇದರಲ್ಲಿ ನನ್ನ ತಪ್ಪುಂಟೆ?’ ಎಂಬಂಥ ಪ್ರಶ್ನೆಗೆ ಒಯ್ಯುವ ಅಹವಾಲಾದರೆ ಅದರಿಂದೇನೂ ಪ್ರಯೋಜನವಿಲ್ಲ. ಅಥವಾ ‘ಇದೆಲ್ಲದರ ಒಂದು ಬಾಜಿ ನಿನಗೆ ಈಗಾಗಲೇ ಇತರರಿಂದ ಗೊತ್ತಾಗಿದೆ. ಅದಕ್ಕಿರುವ ಇನ್ನೊಂದು ಬಾಜು ಈಗ ನಾನು ತಿಳಿಸುತ್ತೇನೆ’ ಎಂಬಂಥ ಸತ್ಯಾಸತ್ಯಗಳ ಒಣ ಚರ್ಚೆಯಾದಲ್ಲಿ ಅದರಲ್ಲೂ ನನಗೀಗ ಆಸ್ಥೆಯಿಲ್ಲ. ನಿನ್ನ ಕಿರಿಯ ಮಗ ಅವನ ಹುಬ್ಬಳ್ಳಿಯ ಮನೆಯಿಂದ ಕಾಣೆಯಾಗಿದ್ದಾನೆ. ಹೆಂಡತಿ ಮಕ್ಕಳು ಪಾಪ! ಹೆದರಿ ಕಂಗಾಲಾಗಿದ್ದಾರೆ. ನಿನ್ನ ಜನ ಅವರನ್ನು ಅಪಹರಿಸಿದ್ದಾರೆ ಎನ್ನುವ ಗುಮಾನಿ ಅವರಿಗೆಲ್ಲ. ಇದು ದಿಟವೋ ಸುಳ್ಳೋ? ಮುಚ್ಚುಮರೆಯಿಲ್ಲದೇ ಉತ್ತರ ಕೊಡುವುದು ನಿನಗೆ ಶಕ್ಯವಿದ್ದರೆ ಮಾತ್ರ ಅವನ ಬಗ್ಗೆ ಮಾತನಾಡೋಣ. ಇಲ್ಲವಾದರೆ ನಿನ್ನ ಈ ಬಂಗಲೆಯ ಬಗ್ಗೆ ಅದರ ಇದಿರಿನ ಬಗೀಜಾದ ಬಗ್ಗೆ ಮಾತನಾಡುತ್ತ ವ್ಹಿಸ್ಕಿ ಕುಡಿಯೋಣ. ಆಮೇಲೆ ಊಟ ಮುಗಿಸಿದ್ದೇ ನಿನ್ನ ಆದರಾತಿಥ್ಯವನ್ನು ಹೊಗಳಿ ಧನ್ಯವಾದ ಅರ್ಪಿಸಿ ಹೊರಟುಹೋಗುತ್ತೇನೆ.” +ಆಗಲೇ ಸಾಂತಪ್ಪ ಮೊದಲು ಗ್ಲಾಸನ್ನು ಮುಗಿಸಿ ಎರಡನೆಯದಕ್ಕೆ ಕೈ ಹಾಕಿದ್ದ. ನಾನು ಮಾತನಾಡುತ್ತಿದ್ದಾಗ ಒಮ್ಮೆ ಕೂಡ ಕಣ್ಣೆತ್ತಿ ನನ್ನತ್ತ ನೋಡಲಿಲ್ಲ. ಬೇರೆ ಯಾವ ಸಮಯದಲ್ಲೂ ಉದ್ಧಟತನವೆಂದು ತೋರಬಹುದಾದ ನನ್ನ ಮಾತುಗಳು ಈಗಲೂ ಬೇಕಾದ್ದಕ್ಕಿಂತ ನಿಷ್ಠುರವಾದುವೋ ಅನ್ನಿಸಿಯೂ ನನಗೆ ಕೆಡುಕೆನ್ನಿಸಲಿಲ್ಲ. ಅಕ್ಕನಿಂದ ತಿಳಿದದ್ದರ ಹಿನ್ನೆಲೆಯಲ್ಲಿ ಇವನಂಥವನನ್ನು, ಸುಳ್ಳು ಭಾವನಾತ್ಮಕತೆಗೆ ಎಡೆ ಕೊಡದೇ, ನೇರವಾಗಿ ಮುದ್ದೆಗೆ ಎಳೆಯಲು ಬೇರೆ ಉಪಾಯ ಹೊಳೆಯಲಿಲ್ಲ. +“ನನ್ನ ಜೀವನಕ್ಕೆ ನಿಮಗಾರಿಗೂ ಗೊತ್ತಿಲ್ಲದ ಇನ್ನೊಂದು ಬಾಜು ಇದ್ದದ್ದು ಸುಳ್ಳಲ್ಲ ನಾರಾಯಣ!” ಸಾಂತಪ್ಪನ ದನಿಯಲ್ಲಿಯದೇನೋ ನನ್ನನ್ನು ಬಲವಾಗಿ ತಟ್ಟಿತು. +“ಇಷ್ಟೇ, ಅದು ನಿಮಗೆಲ್ಲ ಗೊತ್ತಿದ್ದ ಬಾಜುವಿಗಿಂತ ಒಳ್ಳೆಯದೆಂದು ನಾನು ತಿಳಿದಿಲ್ಲ. ನನ್ನ ಬಗ್ಗೆ ನಿಮಗೆಲ್ಲ ಆಗಿರಬಹುದಾದ ಕಲ್ಪನೆಯನ್ನು ತಿದ್ದಲೂ ನಾನು ನಿನ್ನನ್ನು ಕರೆದಿಲ್ಲ. ನನ್ನ ಆಯುಷ್ಯ ಈ ಹಂತಕ್ಕೆ ಕಾಲಿಟ್ಟಾಗ ಇದೆಲ್ಲ ನಿಷ್ಪ್ರಯೋಜಕ ಎನ್ನುವುದನ್ನು ಬಲ್ಲೆ. ಇದರಲ್ಲಿ ನನ್ನದೇನೂ ತಪ್ಪಿಲ್ಲವೆಂದು ತಿಳಿಯುವುದು ನನಗೆ ಶಕ್ಯವಾಗಿದ್ದರೆ ಇಷ್ಟೆಲ್ಲ ಅನಾಹುತಗಳು ಆಗುತ್ತಿರಲೇ ಇಲ್ಲವೇನೋ. ವಿಚಾರ ಮಾಡಿದಷ್ಟೂ ತಪ್ಪೆಲ್ಲ ನನ್ನೊಬ್ಬನದೇ ಎಂದು ತೋರಬೇಕು. ಅದನ್ನು ಸರಿಪಡಿಸಲು ಮಾಡಿದ ಪ್ರಯತ್ನವೇ ಇನ್ನೊಂದಕ್ಕೆ ದಾರಿ ಮಾಡಿಕೊಡಬೇಕು. ಸೋತೆ, ದಣಿದೆ. ಈಗ ಕಟ್ಟ ಕೊನೆಯ ಪ್ರಯತ್ನವೆಂಬಂತೆ ಹೊಸತೊಂದಕ್ಕೆ ಮನಸ್ಸು ಮಾಡುತ್ತಿರುವ ಹೂತ್ತಿಗೇ ನೀನು ಈ ಊರಿಗೆ ಬರುವ ಸುದ್ದಿ ತಿಳಿಯಿತು. ನಿನ್ನನ್ನು ಕೇಳಿ ಮುಂದುವರಿದರೆ ಹೇಗೆ ಎನ್ನುವ ವಿಚಾರ ಬಂದದ್ದೇ ವನಿತಾಳ ಮನೆಗೆ ಧಾವಿಸಿದ್ದೆ. ಈ ಮೊದಲು ಈ ವಿಚಾರ ಬಂದಿರಲಲ್ಲವೆಂದಲ್ಲ ಪ್ರಯತ್ನ ಮಾಡುವ ಮೊದಲು ಯಾರನ್ನಾದರೂ ಕೇಳೋಣವೆಂದರೆ ಅಂಥವರು ಈ ಊರಲ್ಲಿ ಯಾರು ಸಿಗಬೇಕು? ಎಲ್ಲ ತಲೆಯ ಮೇಲೆ ಕಲ್ಲು ಜಜ್ಜುವವರೇ! ಮೊದಲು ಬಡವನೆಂದು ದೂರವಿರಿಸಿದರು. ಈಗ ಶ್ರೀಮಂತನೆಂದು ಹತ್ತಿರ ಬಾರರು. ನಿನ್ನನ್ನು ಕೇಳಲು ಬಯಸಿದ್ದು ಇಷ್ಟು ಮಾತ್ರ: ನಾನು ಈ ಬಾರಿ ಮಾಡಲು ಹೊರಟಿದ್ದಾದರೂ ಒಳ್ಳೆಯದೊ? ಕೆಟ್ಟದ್ದು ಎಂತ ನಿನ್ನ ಅಭಿಪ್ರಾಯವಾದರೆ ಮರುಮಾತಿಲ್ಲದೇ ಒಪ್ಪಿಕೊಂಡು, ಸುಮ್ಮನಿದ್ದುಬಿಡುತ್ತೇನೆ, ಎಂದು ನಿರ್ಧಾರ ಮಾಡಿದ್ದೆ.” +ಇವನ ನಾಟಕದಲ್ಲಿ ನನ್ನ ಪ್ರವೇಶವಾಗುವ ಮೊದಲೇ ಮತ್ತೇನೋ, ಇವನು ಎಣಿಸದೇ ಇದ್ದದ್ದು ನಡೆದುಹೋಗಿದೆಯೆಂದು ಗೊತ್ತಾಯಿತಾದರೂ ಅದು ಇಂಥಾ ದೊಡ್ಡ ಅನಹುತವಲ್ಲವೆಂದು ಅವನ ದನಿಯೇ ಸಾರಿದ್ದರಿಂದ ನಿರ್ಧಾಸ್ತನಾದೆ. ನನಗಾಗಿ ಪಾನೀಯದ ಎರಡನೇ ಗ್ಲಾಸನ್ನೂ, ತನಗಾಗಿ ಮೂರನೆಯದನ್ನೂ ಸಿದ್ಧಪಡಿಸಿ ನನ್ನ ಗ್ಲಾಸನ್ನು ನನ್ನ ಕೈಗೆ ಒಪ್ಪಿಸುತ್ತ ಹೇಳಿದ: +“ನಾನು ನನ್ನ ಮಗನನ್ನು ಅಪಹರಿಸಿ ತಂದಿಲ್ಲ. ನಾನು ಕರೆ ಕಳಿಸಿದಾಗ ಅವನಾಗಿ ಇಲ್ಲಿಗೆ ಬಂದಿದ್ದಾನೆ. ಮೊನ್ನೆ ಬಂದ ನಾನು ಕರೆಕಳಿಸಿದ ರೀತಿಯೇ ಅಂಥದಾಗಿತ್ತು. ಒಪ್ಪುತ್ತೇನೆ. ‘ಒಮ್ಮೆ ಬಂದು ಅವರನ್ನು ಅವರ ಮನೆಯಲ್ಲೇ ಕಾಣು. ಏನು ಹೇಳುವುದಿದ್ದರೂ ಅವರ ಸಮ್ಮುಖದಲ್ಲಿ ಹೇಳು. ನಿನ್ನ ಬಗ್ಗೆ ಹುಟ್ಟಿಸಿಕೊಂಡ ಭ್ರಮೆಯಾದರೂ ದೂರವಾದೀತು. ಇಲ್ಲವಾದರೆ ಒಂದೇ ಅವರಿಗೆ ಹುಚ್ಚು ಹಿಡಿದೀತು. ಇಲ್ಲವೇ ಆತ್ಮಘಾತ ಮಾಡಿಕೊಂಡರೂ ಮಾಡಿಕೊಂಡಾರು’, ಎಂದು ನನ್ನ ಜನ ಬೆದರಿಸಿದರಂತೆ. ಕೊನೆಗೂ ಬಂದಾಗ ಅಷ್ಟರ ಮಟ್ಟಿಗಾದರೂ ಅಪ್ಪನ ಬಗ್ಗೆ ಕಾಳಜಿಯಾಯಿತಲ್ಲ ಎಂದು ಉಬ್ಬಿಹೋದೆ. ಹೀಗೇ ನೀವು ಇವತ್ತು ಬಂದ ಹೊತ್ತಿಗಿಂತ ತುಸು ಮೊದಲು ಬಂದು ಮುಟ್ಟಿದ. ಹೊರಗಿನ್ನೂ ಬೆಳಕಿತ್ತು ಆಗ. ಅಂದು ಬರುತ್ತಾನೆಂದು ನಿರೀಕ್ಷೆಯಿರಲಿಲ್ಲ. ಆದರೆ ಅಂಥ ನಿರೀಕ್ಷೆಯಲ್ಲಿದ್ದವನ ಹಾಗೆ ಪೋರ್ಚ್‌ನಲ್ಲಿ ಶತಪಥ ಹಾಕುತ್ತಿದ್ದೆ. ಗೇಟಿನಲ್ಲಿ ಚೌಕೀದಾರನನ್ನು ಏನೋ ಕೇಳಿ ಸೀದಾ ಮನೆಯ ಕಡೆ ಬರುತ್ತಿದ್ದುದನ್ನು ನೋಡಿದೆ. ಮನೆಯನ್ನಿನ್ನೂ ಮರೆತಿಲ್ಲ. ಸರಿಯಾಗಿಯೇ ಬರುತ್ತಿದ್ದಾನೆ: ಬಿಳಿಯ ಪೈಜಾಮ, ತಿಳಿ ನೇರಿಲ ಬಣ್ಣದ ಸಾದಾ ಬಟ್ಟೆಯ ಜುಬ್ಬ, ಹೆಗಲಿಗೆ ತೂಗುಬಿಟ್ಟ ಬಗಲುಚೀಲ, ಕಾಲಲ್ಲಿ ಚರ್ಮದ ಚಪ್ಪಲಿ, ನನ್ನ ಹಾಗೇ ಎತ್ತರದ ನಿಲುವು, ಮಗನೆಂದು ಗುರುತು ಹಿಡಿಯುವುದು ಶಕ್ಯವಿರಲಿಲ್ಲ. ನಡುವೆ ಬೈತಲ ತೆಗೆದ ಗುಂಗುರು ಕೂದಲು, ಹುಲುಸಾಗಿ ಬೆಳೆದ ದಾಡಿ ಮೀಸೆ, ಪ್ಲಾಸ್ಟಿಕ್ ಫ್ರೇಮಿನ ಚಷ್ಮಾ. ಹದಿನೈದು ವರ್ಷಗಳಲ್ಲಿ ಎಷ್ಟೊಂದು ಬೆಳೆದುಬಿಟ್ಟಿದ್ದಾನೆ. ಬದಲಾಗಿದ್ದಾನೆ! ನನ್ನಿಂದ ಅನ್ಯಾಯಕ್ಕೆ ಗುರಿಯಾದವನು, ಸಲ್ಲದ ಅಪವಾದಕ್ಕೆ ಈಡಾದವನು_ಇಂಥ ಯಾವ ಪಾಪದ ಭಾವನೆಯೂ ನನ್ನನ್ನು ಆ ಕ್ಷಣದಲ್ಲಿ ಕಾಡಲಿಲ್ಲ. ಹಿಂದೆಂದೂ ಅನುಭವಿಸದ ಕೇವಲ ವಾತ್ಸಲ್ಯ ಭಾವದಿಂದ ಬಂದೆಯಾ? ಬರುತ್ತೀಯೆಂದು ಗೊತ್ತಿತ್ತು. ಬಾ-ಎಂದು ಕೈ ಕುಲುಕಿ ಬರಮಾಡಿಕೊಂಡೆ. ಅವನೂ ತುಸುವೇ ಹಲ್ಲು ಕಾಣಿಸಿ ಸುಂದರವಾಗಿ ಮುಗುಳ್ನಕ್ಕ. ಒಳಗೆ ಬರುತ್ತಲೇ ನಾನು, ‘ಮಾಳಿಗೆಯ ಮೇಲೆ ನೀವು ಮೊದಲು ಅಭ್ಯಾಸಕ್ಕೆ ಕೂರುತ್ತಿದ್ದ ಕೋಣೆಯಲ್ಲೇ ನಿನ್ನ ಇರುವ ವ್ಯವಸ್ಥೆಯಾಗಿದೆ. ಮೇಲೆ ಹೋಗಿ ಡ್ರೆಸ್ಸು ಬದಲಿಸಿ ಬಾ. ಸ್ನಾನವಾಗಬೇಕಿದ್ದರೆ ಇಲ್ಲೇ ಈ ಮಲಗುವ ಕೋಣೆಯ ಬಚ್ಚಲಮನೆಯಲ್ಲೇ ಮಾಡಬಹುದು. ಮನೆ ಮೊದಲು ಇದ್ದ ಹಾಗೇ ಇದೆ’ ಎಂದೆನಷ್ಟೆ. ‘ನಾನು ಈ ಮೊದಲು ಈ ಮನೆಗೆ ಬಂದವನಲ್ಲ. ನೀವೇ ತೋರಿಸಿದರೆ ಒಳ್ಳೆಯದು’ ಎಂದ. ಎಳ್ಳಷ್ಟೂ ವಿಚಲಿತನಾಗದೇ, ನನ್ನ ಗೊಂದಲ ಆರಂಭವಾದದ್ದು ಇಲ್ಲಿಂದಲೇ.” +ನಾವಿಬ್ಬರೂ ಒಂದೇ ಹೊತ್ತಿಗೆ ಬಹಳ ಹೊತ್ತಿನವರೆಗೆ ಕೈ ಹಚ್ಚಿರದ ಗ್ಲಾಸುಗಳಿಗೆ ಕೈ ಹಾಕಿದೆವು. ಅಡ್ಡಿಯಿಲ್ಲ. ಹುಡುಗ ಸುರಕ್ಷಿತವಾಗಿದ್ದಾನೆ. ಅಪ್ಪನ ಮನೆಯಲ್ಲೇ ಇದ್ದಾನೆಂದು ಗೊತ್ತಾಗಿ ಮನಸ್ಸಿಗೆ ನಿರಂಬಳವಾಯಿತು. ಅಪ್ಪ-ಮಗ ಇಬ್ಬರನ್ನೂ ಜೊತೆಯಾಗಿ ಕಾಣುವ ಯೋಗಾಯೋಗದ ಬಗ್ಗೆ ಚಿಂತಿಸುತ್ತಿದ್ದಾಗ ಸಾಂತಪ್ಪ ವಿಷಯ ಬದಲಿಸುವ ಧಾಟಿಯಲ್ಲಿ ಅರ್ಧಕ್ಕೇ ಬಿಟ್ಟ ಮಾತಿಗೆ ಹೀತಿರುಗಿದ_ +“ಅವನು ಮನೆಯಲ್ಲಿ ಹೇಳಿ ಬಂದಿಲ್ಲವೆಂದು ಗೊತ್ತಿರಲಿಲ್ಲ.ಇವತ್ತು ಬೆಳಿಗ್ಗೆ ಹಿಂತಿರುಗಿ ಹೋಗಲು ಹೊರಟು ನಿಂತಾಗ, ನೀನಿಂದು ಊಟಕ್ಕೆ ಬರುವ ಸುದ್ದಿ ಕೊಟ್ಟು ನೀನು ಯಾರೆಂದು ತಿಳಿಸಿದ ಮೇಲೇ ಈ ಒಂದು ದಿನ ಹೆಚ್ಚಿಗೆ ನಿಲ್ಲಲು ಒಪ್ಪಿಕೊಂಡ.ಮನೆಯಲ್ಲಿ ಹೇಳಿ ಬಂದಿಲ್ಲವೆಂದು ಗೊತ್ತಾದದ್ದು ಆವಾಗ, ನಾನು ಕೂಡಲೇ ಹುಬ್ಬಳ್ಳಿಯ ಮನೆಗೆ ತಂತಿ ಕೊಟ್ಟು ತಿಳಿಸಿದ್ದೇನೆ. ನಂಬು ನಾರಾಯಣಾ! ಈ ಮೂರು ದಿನ ಅವನ ಸಹವಾಸದಲ್ಲಿ ಕಳೆದ ಕ್ಷಣಗಳು ನನ್ನ ಬದುಕಿನ ಅತ್ಯಂತ ಸುಖದ ಕ್ಷಣಗಳಲ್ಲಿ ಎಣಿಸುವಂಥವು.” +ಸಾಂತಪ್ಪನ ಮಾತು ಮೊದಲಿನ ಉದ್ವೇಗವನ್ನು ಕಳೆದುಕೊಂಡು ಸ್ಥಿಮಿತಕ್ಕೆ ಬಂದಿತ್ತಾದರೂ ಆಳದಲ್ಲೆಲ್ಲೋ ಪ್ರಚಂಡವಾಗಿ ನಿಗ್ರಹಿಸಿದ ಬಿಕ್ಕಳಿಕೆ ಕೇಳಿಸಿದಂತಾಯಿತು. ಸಾಂತಪ್ಪನೇ ಹೇಳಲಿ. ಹೇಳುವ ಮನಸ್ಸಾದರೆ. ನಾನೇ ನಡೆದದ್ದನ್ನು ಊಹಿಸುವ ಪ್ರಯತ್ನ ಮಾಡಲಾರೆ. ಹೇಳೆಂದು ಒತ್ತಾಯಿಸಲೂ ಆರೆ-ಎಂದು ನಿರ್ಧಾರ ಮಾಡಿ ಅವನು ಮುಂದುವರಿಯುವುದನ್ನು ಕಾದೆ. +“ತಮಾಷೆ ನೋಡು! ಯೋಜಿಸಿಕೊಂಡ ಎಲ್ಲ ಘಟನೆಗಳೂ ನಡೆದುವು: ಯೋಜಿಸಿದ ಕ್ರಮದಲ್ಲಿ ನಡೆಯಲಿಲ್ಲ. ಹಾಗಾಗಿ ಹಿಂದೆ ಆದಹಾಗೆ ಈ ಬಾರಿಯೂ ಆಗಬಾರದ್ದೆಲ್ಲ ಆಯಿತು ಹೊರತು ಆಗಬೇಕಾದದ್ದು ಆಗಲೇ ಇಲ್ಲ. ಉದಾಹರಣೆಗೆ, ನೀನು ಈ ಊರಿಗೆ ಬರುತ್ತೀಯೆಂದು ತಿಳಿದಕೂಡಲೇ ನೀನು ಇಲ್ಲಿದ್ದಾಗಲೇ ಅವನನ್ನೊಮ್ಮೆ ಕರೆಯಿಸುವ ಮನಸ್ಸಾಯಿತು. ಉದ್ದೇಶ: ನಮ್ಮಿಬ್ಬರ ನಡುವೆ ಇಷ್ಟು ದಪ್ಪ ಗೋಡೆ ಎದ್ದು ನಿಲ್ಲಲು ಕಾರಣವಾಗಿರಬಹುದಾದ ಒಂದು ಘಟನೆಯನ್ನು ನಿನ್ನಂಥ-ಬದುಕಿನ ಬಗ್ಗೆ ಅಪಾರ ತಿಳುವಳಿಕೆ ಉಳ್ಳವನ-ಅನುಭವ ಉಳ್ಳವನ ಸಮಕ್ಷಮ ಅವನಿಗೆ ನಿರೂಪಿಸುವುದು. ಹೇಳಿ ಕಳಿಸಿದರೆ ಬರದೇ ಹೋಗಬಹುದು. ಬಂದರೂ ಕೂಡಲೇ ಬರಲಾರ ಎಂದು ತಿಳಿದು ನೀನು ಬರುವ ನಾಲ್ಕು ದಿನ ಮೊದಲೇ ಕರೆಕಳಿಸಿದೆವು. ಅವನು ಕೂಡಲೇ ಬಂದನಷ್ಟೇ ಅಲ್ಲ. ನೀನು ನಮ್ಮಲ್ಲಿಗೆ ಬರುವ ಮೊದಲೇ ತಿರುಗಿ ಹೋಗಲು ಹೊರಟೂ ನಿಂತ! ಹೆಚ್ಚೆಂದರೆ ಒಂದು ದಿನದ ಮಾತಿಗೆ ಬರುತ್ತಾನೆಂದು ಲೆಕ್ಕ ಹಾಕಿದ್ದೆ. ಅವನಾಗಿಯೇ ಎರಡು ದಿನ ನಿಲ್ಲಲು ಸಿದ್ಧನಾಗಿ ಬಂದ. ಪರಿಣಾಮ: ನಮ್ಮಿಬ್ಬರ ಸಂಬಂಧ ಕೆಡಲು ಕಾರಣವಾದ ತಪ್ಪು ತಿಳುವಳಿಕೆ ದೂರವಾದಮೇಲೆ-ಹೀಗೇ ಮಾತುಮಾತಿನಲ್ಲಿ ತೀರ ಸಹಜವಾಗಿ-ಬರಬೇಕಾಗಿದ್ದ ಆಸ್ತಿಯ ಹಿಸ್ಸೆಗೆ ಸಂಬಂಧಪಟ್ಟ ಮಾತು ಎಲ್ಲಕ್ಕಿಂತ ಮೊದಲು ಬಂದು ತನ್ನನ್ನು ಕೆರಳಿಸಿದ ಉದ್ದೇಶವೇ ಇದಾಗಿತ್ತು. ಎನ್ನುವ ಕಲ್ಪನೆ ಅವನಿಗೆ ಆದದ್ದು. ಪರಿಣಾಮ: ಯಾವ ಮಾತನ್ನು ಆಡಲು ನೀವಿಬ್ಬರೂ ನನ್ನ ಸಮ್ಮುಖದಲ್ಲಿ ಇರಬೇಕೆಂದು ಬಯಸಿದ್ದೆನೋ ಅದನ್ನೀಗ ಆಡಲು ಬಾರದ, ಆಡಿದರೂ ಯಾವ ಪ್ರಯೋಜನವೂ ಆಗಲಾರದ ಪರಿಸ್ಥಿತಿಯನ್ನು ಹುಟ್ಟಿಸಿಬಿಟ್ಟದ್ದು! ಸುತ್ತು ಬಳಸು ಮಾತು ಬೇಡ. ನೇರವಾಗಿ ಮುದ್ದೆಗೇ ಬಂದುಬಿಡುತ್ತೇನೆ. ಅದೆಲ್ಲ ನಡೆದ ಕ್ರಮದಲ್ಲಲ್ಲ. ನಾನೀಗ ಸಿಲುಕಿಕೊಂಡ ಪರಿಸ್ಥಿತಿಯನ್ನು ನಿನಗೆ ಸ್ಪಷ್ಟವಾಗಿಸುವ ಕ್ರಮದಲ್ಲಿ.” +ಸಾಂತಪ್ಪ ಐನ್ ಮುದ್ದೆಗೆ ಬರುತ್ತಿದ್ದಾಗ ಅವನನ್ನು ತಡೆಯುವ ಮನಸ್ಸಾಗಲಿಲ್ಲ. ಅದೇ ಹೊತ್ತಿಗೆ ಮಾಳಿಗೆಯ ಮೇಲೆ ಕೂತವನು ಈಗಾಗಲೇ ಬೇಸರಗೊಂಡಿರಲಾರನಷ್ಟೇ ಎಂದು ಆತಂಕವಾಯಿತು. ನಾನು ನನ್ನ ಆತಂಕವನ್ನು ಆಡಿ ತೋರಿಸಿದೆ. +“ಹೆದರಬೇಡ. ಅವನೇ ಹೇಳಿದ್ದಾನೆ. ‘ನನ್ನ ಬಗ್ಗೆ ಕಾಳಜಿ ಮಾಡಬೇಡಿ. ಬೇಸರ ಬಂದರೆ ಹೀಗೇ ಸಣ್ಣ ಬಂದರಿನವರೆಗೆ ತಿರುಗಾಡಿ ಬರುತ್ತೇನೆ. ಊಟದ ಹೊತ್ತಿಗೆ ನಿಮ್ಮನ್ನು ಕೂಡಿಕೊಳ್ಳುತ್ತೇನೆ’ ಎಂದು. ಅವನೀಗ ರೂಮಿನಲ್ಲಿ ಇದ್ದಿರಲಿಕ್ಕೂ ಇಲ್ಲ. ತುಂಬಾ ಸಂಕೋಚದ ಹುಡುಗ” ಎಂದು ಸಾಂತಪ್ಪ ಸಂತವಿಸಿದಾಗ ನನಗೆ ಹಾಯೆನಿಸಿತು. ಆಗ ನಾವು ಗೇಟು ಹತ್ತಿರ ಹೋಗುವಾಗ ಹೊರಬಿದ್ದವನು ಇವನೇ ಇರಲಾರನಷ್ಟೆ! ನಾನವನನ್ನು ಸರಿಯಾಗಿ ನೋಡಿರಲೇ ಇಲ್ಲ. ಸಾಂತಪ್ಪನಿಗೆ ನನ್ನ ಅನುಮಾನ ತಿಳಿಸಲು ಹೋಗಲಿಲ್ಲ. +“ನೆನಪಿದೆಯೆ? ಅವನು ಮನೆಯ ಬಗ್ಗೆ ಮಾತನಾಡುತ್ತ ಈ ಮನೆಯ ಪರಿಚಯ ತನಗೆ ಇಲ್ಲವೆಂದ ಎಂದು ನಾನು ಹೇಳಿದ್ದು? ನಾನಾಗ ಗೊಂದಲದಲ್ಲಿ ಬಿದ್ದೆ. ಅದರ ಬಗ್ಗೆ ಹೆಚ್ಚು ಮಾತಾಡಲು ಹೋದರೆ ತಾನು ನನ್ನ ಮಗನಲ್ಲವೆಂದು ಈಗಲೇ ಸಾರಬಹುದೋ ಎಂದು ಭಯವಾಯಿತು. ಆಸ್ತಿಯ ಪಾಲಿನ ಬಗ್ಗೆ ಮಾತನಾಡುವುದಿದ್ದರೆ ಅವನು ಹಾಗೆ ಸಾರುವ ಮೊದಲೇ ಮಾತನಾಡಬೇಕು. ಆಮೇಲಾದರೆ ಅವನನ್ನು ಸಲ್ಲದ ಮುಜುಗುರಕ್ಕೆ ಒಳಪಡಿಸಿದಂತಾದೀತು. ಅಲ್ಲವೆ? ಸ್ವಲ್ಪದರಲ್ಲಿ, ನಾನು ಗಳಿಸಿದ್ದೆಲ್ಲವನ್ನೂ-ಸ್ಥಿರಚರ ಹಿಡಿದು ಕೆಲವು ಲಕ್ಷಗಳಾಗಬಹುದಾದ ಆಸ್ತಿಯನ್ನು-ಮೂವರೂ ಅಣ್ಣತಮ್ಮಂದಿರಲ್ಲಿ ಹಂಚಿಕೊಟ್ಟು ನಾನು ಈಗಿನ ದಂಧೆಯಿಂದ ನಿವೃತ್ತನಾಗಿ ಹೀಗೇ ದಿಕ್ಕು ಗುರಿಯಿಲ್ಲದ ದೇಶಾಟನೆಗೆ ಹೋಗಬೇಕು ಎಂಬಂಥ ಹುಚ್ಚು ವಿಚಾರ ಅದೆಷ್ಟು ಬಾರಿ ಮನಸ್ಸನ್ನು ತಟ್ಟಿ ಹೋದದ್ದುಂಟು. ಹಿರಿಯ ಹುಡುಗರಂತೂ ಒಮ್ಮೆ ದೇಶ ಬಿಟ್ಟು ಹೋದಮೇಲೆ ನನ್ನೊಡನೆ ಯಾವ ಸಂಪರ್ಕವನ್ನೂ ಇಟ್ಟುಕೊಂಡವರಲ್ಲ. ಅವರು ಇಲ್ಲಿದ್ದಾಗಲೂ ಅಷ್ಟೇ. ನನ್ನನ್ನು ಅಷ್ಟಾಗಿ ಹಚ್ಚಿಕೊಂಡವರೇ ಅಲ್ಲ. ಮುಚ್ಚುಮರೆಯಿಲ್ಲದೇ ಹೇಳುವುದಾದರೆ ತುಂಬಾ ಸ್ವಾರ್ಥಿಗಳು. ಇಲ್ಲಿರುವ ತನಕ ನನ್ನನ್ನು ಭರಪೂರ ಬಳಸಿಕೊಂಡರು. ಹಂಚಿಕೆಯ ವಿಚಾರವನ್ನು ಸಧ್ಯಕ್ಕಾದರೂ ಬಿಟ್ಟುಕೊಟ್ಟು ಈಗ ಕಿರಿಯ ಮಗನನ್ನೇ ನನ್ನ ದಂಧೆಯಲ್ಲಿ ಸೇರಿಸಿಕೊಂಡರೆ ಹೇಗೆ? ಮೊದಲಲ್ಲೇ ಅನುಭವ ಇರಬೇಕೆಂದಿಲ್ಲ… ನಷ್ಟ ಸಹಿಸುವ ಹಿಮ್ಮತ್ತಿರಬೇಕು. ಹಣ ತೊಡಗಿಸುವ ಖುಬಿ ಗೊತ್ತಿರಬೇಕು. ಎರಡನ್ನೂ ನಾನು ಕಲಿಸಬಲ್ಲೆ. ಉಳಿದದ್ದಕ್ಕೆಲ್ಲ ನುರಿತ ನೌಕರರಿದ್ದಾರೆ. ಮೇಲಿನ ಮಾಳಿಗೆಯೇ ನಮ್ಮ ಆಫೀಸು. ಈ ಮೂರು ದಿನ ಎಲ್ಲರಿಗೂ ಸೂಟಿ ಕೊಟ್ಟಿದ್ದೇನೆ. ಮಾತನಾಡಲು ನಾವಿಬ್ಬರೂ ಇದೇ ಕೋಣೆಯಲ್ಲಿ ಸೇರುತ್ತಿದ್ದೆವು. ಇದೇ ಸೋಫಾದಲ್ಲಿ ಕೂರುತ್ತಿದ್ದೆವು. ನಾನು ಇಲ್ಲಿ, ಈಗ ಕೂತಲ್ಲಿ. ಅವನು ಅಲ್ಲಿ ನನಗೆ ಸಮ್ಮುಖವಾಗಿ, ನಂಬುತ್ತೀಯಾ? ಬಾಯಿ ತೆರೆದಾಗ ನನ್ನ ಮಾತು ಆರಂಭವಾದದ್ದು ಆಸ್ತಿಯ ಹಿಸ್ಸೆಗೆ ಸಂಬಂಧಪಟ್ಟ ಯೋಚನೆಯಿಂದ? ಪೀಠಿಕೆಯ ಮೊದಲ ವಾಕ್ಯಗಳನ್ನು ಕೇಳಿದ್ದೇ ತುಂಬಾ ಖುಬಿಯಿಂದ ನನಗೆ ತಡೆಯುವಂತೆ ಸನ್ನೆ ಮಾಡಿದ. +“ನನಗೆ ಅರ್ಥವಾಯಿತು. ನೀವು ಈಗ ಏನು ಹೇಳಲು ಹೊರಟಿದ್ದೀರೋ ಅದರ ಅಸ್ಪಷ್ಟ ಸೂಚನೆಯನ್ನು ನನ್ನನ್ನು ಕರೆಯಲು ಬಂದ ನಿಮ್ಮ ಜನರೇ ಕೊಟ್ಟಿದ್ದರು. ಆಸ್ತಿಪಾಸ್ತಿಯ ಅಂದಾಜು ಕಲ್ಪನೆಯನ್ನು ಕೂಡ ಅವರೇ ನಿಮ್ಮ ಬಗ್ಗೆ ಹೇಳಿದ ಅಷ್ಟು-ಇಷ್ಟರಿಂದಲೇ. ಚಿಕ್ಕಂದಿನಲ್ಲೇ ಓಡಿಹೋದ ನಿಮ್ಮ ಮಗನ ಸಲುವಾಗಿ ನೀವು ಪಡುತ್ತಿದ್ದ ಯಾತನೆಯನ್ನು ಸ್ವಲ್ಪವಾದರೂ ಊಹಿಸಬಲ್ಲೆ ಸಣ್ಣಬಾಯಲ್ಲಿ ದೊಡ್ಡ ಮಾತು ಎಂದು ನೀವು ತಿಳಿಯದಿದ್ದರೆ ಮಾತ್ರ ಹೇಳುತ್ತೇನೆ. ನಿಮ್ಮ ಆ ಮಗ ಒಂದಿಲ್ಲೊಂದು ದಿನ ಬಂದೇ ಬರುತ್ತಾನೆ. ಅವನಿಗಾಗಿ ಕಾಯಿರಿ. ಆದರೆ ನಾನು ಓಡಿಹೋದ ಆ ಹುಡುಗನಲ್ಲ ಎಂಬುದನ್ನು ನಂಬಿರಿ. ನಾನೇ ಆ ಹುಡುಗನೆಂದು ಹೇಳಿ ಯಾರೋ ನಿಮ್ಮನ್ನು ಮೊದಲಿನಿಂದಲೂ ತಪ್ಪು ಹಾದಿಯಲ್ಲಿರಿಸಿದ್ದಾರೆ’ ಎಂದ. +“ಅವನ ಶಾಂತ, ಗಂಭೀರ, ಆತ್ಮವಿಶ್ವಾಸ ತುಂಬಿದ ಮಾತನ್ನು ಕೇಳುತ್ತಿದ್ದಂತೆ ನಾನು ನನ್ನ ಕಣ್ಣಿನಲ್ಲೇ ಕುಗ್ಗುತ್ತ ಹೋದೆ. ಇದೇ ಕೋಣೆಯಲ್ಲಿ ಕುಳಿತಿದ್ದೆವು ಅಂದಿದ್ದೆನಲ್ಲ. ಇದು ಮೊದಲು ನಮ್ಮ ಶಯ್ಯಾಗೃಹವಾಗಿತ್ತು. ನನ್ನ ಹೆಂಡತಿ ಬದುಕಿದ್ದಾಗ, ಆತ ಸಣ್ಣವನಿದ್ದಾಗ ಇಬ್ಬರೂ ನನ್ನ ದುಷ್ಟ ಕೈಗಳಿಂದ ಯಾತನೆ ಪಟ್ಟಿದ್ದು ಇದೇ ಕೋಣೆಯಲ್ಲಾಗಿತ್ತು. ಹಣದ ಅಮಿಷಕ್ಕೆ ಬಗ್ಗಲಿಲ್ಲ. ಈ ಕೋಣೆ ಕೆಣಕುತ್ತಿದ್ದ ನೆನಪುಗಳಿಗೆ ವಿಚಲಿತನಾಗಲಿಲ್ಲ. ಮಾತನಾಡುತ್ತಿದ್ದ ಹುಡುಗ ಕೂತಲ್ಲೇ ಬೆಳೆಯುತ್ತ ನಡೆದಿದ್ದ. ಕೇಳುತ್ತಿದ್ದ ನಾನೇ ಕುಬ್ಜನಾದೆ. +“ನಾನೊಡ್ಡಿದ ಹಣದ ಪ್ರಲೋಭನೆಗೆ ಪ್ರತಿಕ್ರಿಯೆಯೆನ್ನುವಂತೆ, ‘ನಾನು ನನ್ನ ಹೆಂಡತಿ ನಮ್ಮ ಚಿಕ್ಕ ಸಂಸಾರಕ್ಕೆ ಸಾಕಾಗುವಷ್ಟು ಗಳಿಸುತ್ತೇವೆ. ಸುಖವಾಗಿ ಬಾಳುತ್ತಿದ್ದೇವೆ. ಬಾಳಬೇಕು ಎನ್ನುವ ಹುಮ್ಮಸ್ಸಿದೆ’ ಎಂದ. ಮುಂದೆ ತನ್ನ ಬಾಲ್ಯದ ಬಗ್ಗೆ, ಅಪ್ಪ-ಅಮ್ಮರ ಬಗ್ಗೆ ಎಷ್ಟೊಂದು ಸಣ್ಣ ಸಣ್ಣ ವಿವರಗಳನ್ನು ಕೊಟ್ಟನೆಂದರೆ ಅವನನ್ನು ನಂಬದೇ ಇರುವುದು ಶಕ್ಯವೇ ಇರಲಿಲ್ಲ. ಈಗ ಅನ್ನಿಸುತ್ತಿದೆ. ಬಹುಶಃ ಅವನು ತನಗೆ ದಕ್ಕದೇ ಹೋದ ಬಾಲ್ಯವನ್ನು, ತಂದೆ-ತಾಯಿಗಳಿಂದ ಪಡೆಯದೇ ಹೋದ ಸುಖವನ್ನು ವರ್ಣಿಸುತ್ತಿದ್ದನೇನೋ! ಆಗ ಮಾತ್ರ ಅವನು ಮಾತನಾಡುತ್ತಿದ್ದ ರೀತಿಯಿಂದ ನನಗೆ ಎಷ್ಟೊಂದು ಮೆಚ್ಚುಗೆಯಾದನೆಂದರೆ ಆತ್ಮೀಯನಾದನೆಂದರೆ ಅವನು ನನ್ನ ಮಗನೇ ಆಗಿರಬೇಕೆಂಬ ಹಠ ನನ್ನಿಂದ ಹೊರಟುಹೋಗುತ್ತ ನಾನು ಒಳಗೊಳಗೇ ಮೆದುವಾಗತೊಡಗಿದೆ. +“ಅಂಥ ಹೊತ್ತಿಗೇ ಅವನಾಡಿದ ಮಾತು ನನ್ನನ್ನು ದಂಗುಬಡಿಸಿತು. ‘ಮೇಲಾಗಿ ನಾನು ನಿಮ್ಮ ಮಗನೇ ಆಗಿರಬೇಕೆಂಬ ಆಗ್ರಹ ಯಾಕೆ? ಈ ಆಗ್ರಹ ಕೆಟ್ಟ ಮೋಹದಲ್ಲಿ ಹುಟ್ಟಿರುವಂಥದ್ದು ಎಂದು ತೋರುವುದಿಲ್ಲವೆ? ನೀವು ನನಗಿಂತ ಬಹಳ ಹಿರಿಯರು. ಉಪದೇಶ ಮಾಡುವುದುಳಿಯಲಿ, ಅಂಥದ್ದರ ಛಾಯೆಯುಳ್ಳ ಮಾತನ್ನು ಕೂಡ ನಾನು ಆಡಕೂಡದು. ಆದರೆ ನನ್ನ ಮನಸ್ಸಿನ ಸ್ವಾಸ್ಥ್ಯದ ಸಲುವಾಗಿ ನಿಮ್ಮನ್ನು ಬೇಡಿಕೊಳ್ಳುವ ಹಕ್ಕಾದರೂ ನನಗಿದೆಯಲ್ಲವೆ? ಈ ಬಾರಿ ಕರೆಕಳಿಸಿದಾಗ, ನಾನು ಬರಲು ನಿರಾಕರಿಸಿದರೆ ನಿಮಗೆ ಹುಚ್ಚೇ ಹಿಡಿಯಬಹುದು ಎಂದರು ನಿಮ್ಮ ಜನ. ನಾನು ನಿಮ್ಮ ಮಗನು ಹೌದೋ ಅಲ್ಲವೋ ಎಂದು ಖಾತ್ರಿ ಮಾಡಿಕೊಳ್ಳುವ ಪ್ರಯತ್ನವನ್ನು ನೀವು ಇದೇ ಪ್ರಕಾರ ಜಾರಿ ಇಟ್ಟರೆ ನನಗೇ ಹುಚ್ಚು ಹಿಡಿಯಬಹುದೆಂಬ ಭಯವಾಯಿತು. ಹಾಗೆಂದೇ ಇದೆಲ್ಲದರ ಸೋಕ್ಷ-ಮೋಕ್ಷವಾಗಲೇ ಬೇಕು. ಇಬ್ಬರಿಗೂ ಪರಸ್ಪರರಿಂದ ಬಿಡುಗಡೆಯಾಗಬೇಕು ಎಂದು ನಿರ್ಧಾರ ಮಾಡಿ ಹೊರಟು ಬಂದೆ. ನನ್ನ ಹೆಂಡತಿ ಇದಕ್ಕೆ ಅಡ್ಡ ಬರುತ್ತಿರಲಿಲ್ಲ. ತುಂಬಾ ನರ್ವಸ್ ಸ್ವಭಾವದವಳು. ನಿಮ್ಮ ಜನವೂ ಅವಳಿಗೆ ನಿಮ್ಮ ಬಗ್ಗೆ ಒಳ್ಳೇ ಅಭಿಪ್ರಾಯವಾಗುವ ಹಾಗೆ ನಡೆದುಕೊಳ್ಳಲಿಲ್ಲ. ಹಾಗೆಂದೇ ಅವಳಿಗೆ ತಿಳಿಸದೇ ಸೀದಾ ಆಫೀಸಿನಿಂದಲೇ ಹೊರಟುಬಂದಿದ್ದೇನೆ. ಸಲ್ಲದ ಊಹಾಪೋಹ ನಡೆಯುತ್ತದೆಯೆಂದು ಗೊತ್ತಿದ್ದೂ ಆಫೀಸಿಗೆ ರಜೆ ಹಾಕಲಿಲ್ಲ. ನಿಮಗೆ ಬೇಕು ಅನ್ನಿಸಿದರೆ ಎರಡು ದಿನ ನಿಮ್ಮ ಜೊತೆಗಿರುತ್ತೇನೆ. ಬೇಕಾದಷ್ಟು ಪ್ರಶ್ನೆ ಕೇಳಿರಿ. ನನಗೆ ಬೇಸರವಿಲ್ಲ. ನಿಮ್ಮ ಸಂಶಯ ದೂರವಾಗಿ ಕಳೆದುಕೊಂಡ ಶಾಂತಿಯನ್ನು ನೀವು ದೊರಕಿಸುವುದು ನನಗೆ ಮುಖ್ಯ. ಯಾಕೆಂದರೆ ನನ್ನ ಮನಶ್ಯಾಂತಿ ನಿಮ್ಮದಕ್ಕೆ ಕಟ್ಟಿಬಿದ್ದಿದೆ.” +ಸಾಂತಪ್ಪನ ನಿರೂಪಣೆಯ ಕೊನೆಕೊನೆಯ ಮಾತುಗಳು ತೀರಾ ಕೆಳ ದನಿಯಲ್ಲಿ ಆಡಿದ ಪಿಸುಮಾತಿನಂತೆ ಕೇಳಿಸಿದವು. ಗ್ರಹಿಸಲು ಅವನತ್ತ ಬಾಗ ಬೇಕಾಯಿತು. ಬಹಳ ಹೊತ್ತಿನವರೆಗೆ ಪಾನೀಯದ ಗ್ಲಾಸಿಗೆ ಕೈ ಹಚ್ಚಿರದವನು ಅದನ್ನು ಕೈಗೆತ್ತಿಕೊಂಡು ಸೀಪುತ್ತಾ ಮೌನವಾದ. ನಾನೂ ಅವನನ್ನು ಮಾತನಾಡಿಸಲು ಹೋಗಲಿಲ್ಲ. ಬಂದವನನ್ನು ಈತ ಮೆಚ್ಚಿಕೊಂಡಿದ್ದಾನೆ. ಹಾಗೆ ಮೆಚ್ಚಿಕೊಳ್ಳಲು, ಬಂದವನು ಮಗನೇ ಆಗಿರಬೇಕೆಂದಿಲ್ಲ ಎಂಬುದನ್ನು ತಾತ್ಪೂರ್ತಿಕವಾಗಿಯಾದರೂ ಮನಗಂಡಿದ್ದಾನೆ. ಆದರೆ ಬಂದವನು ಮಗನಲ್ಲ ಎಂಬುದರ ಬಗೆಗೇ ಖಾತ್ರಿಯಿಲ್ಲ. ಅದು ಇಲ್ಲದೇ ಇವನಿಗೆ ಬಿಡುಗಡೆ ಶಕ್ಯವೆ? ಬಂದವನು ತುಂಬಾ ಸಂತ ರೀತಿಯಲ್ಲಿ ಹೇಳಿದ್ದೆಂದು ಅರುಹುವಾಗಿನ ಇವನ ಧಾಟಿ ಉದ್ವೇಗಪೂರ್ಣವಾದುದಾಗಿತ್ತು. ಅವನು ಸಿಲುಕಿಕೊಂಡ ಪರಿಸ್ಥಿತಿಯ ಬಗ್ಗೆ ನನಗೆ ಕೆಡುಕೆನ್ನಿಸಿತು. +ನೇರವಾಗಿ ಮುದ್ದೆಗೇ ಬರುತ್ತೇನೆಂದು ಹೇಳಿ ಬಹಳ ಹೊತ್ತಾದರೂ ಅದಕ್ಕೆ ಬರುವ ಯಾವ ಲಕ್ಷಣವೂ ತೋರಲಿಲ್ಲ. ನಾನೂ ನೆನಪು ಮಾಡಿ ಕೊಡಲು ಹೋಗಲಿಲ್ಲ. ನಮ್ಮಿಬ್ಬರಿಗೂ ಹೊಸತಾಗಿ ಪಾನೀಯವನ್ನು ತಯಾರಿಸುತ್ತ “ಇದು ಮುಗಿದ ಕೂಡಲೇ ಅವನನ್ನು ಕೆಳಗೆ ಕರೆಸೋಣ. ಸವಾಲು ಅವನು ನನ್ನ ಮಗನೋ ಅಲ್ಲವೋ ಎನ್ನುವುದಲ್ಲ ನಾರಾಯಣ! ಅವನು ಮಗನಲ್ಲವೆಂದು ನಂಬಲು ನನಗೇನು ಹುಚ್ಚು ಹಿಡಿದಿದೆಯೇ? ಅವನೂ ನನ್ನನ್ನು ಹಾಗೆ ನಂಬಿಸಲು ಬಂದಿಲ್ಲ. “ನೀನು ನನ್ನ ಅಪ್ಪನೆಂದು ಗೊತ್ತಿದ್ದೂ ಅಪ್ಪನೆಂದು ಗುರುತಿಸಲು ನಾನು ಸಿದ್ಧನಿಲ್ಲ’ ಎಂಬುದನ್ನೇ ಬೇರೆ ರೀತಿಯಲ್ಲಿ, ಆದರೆ ಅತ್ಯಂತ ಸೂಕ್ಷವಾಗಿ, ನನ್ನ ಮನಸ್ಸಿಗೆ ನೋವಾಗದ ಹಾಗೆ ತಿಳಿಸಲು ಬಂದಿದ್ದಾನೆ. ಇದರಲ್ಲಿ ಹುಡುಗನ ತಪ್ಪಿಲ್ಲ. ಈ ತಣ್ಣಗಿನ ನಿರಾಕರಣೆಗೆ ಕಾರಣವಾಗಿರಬಹುದಾದ ತಪ್ಪು ತಿಳುವಳಿಕೆಯನ್ನು ದೂರಮಾಡಲೆಂದೇ ಕರೆಸಿಯೂ ದೂರ ಮಾಡದೇ ಹೋದೆ. ನನ್ನ ಇಡೀ ಆಯುಷ್ಯವನ್ನು ಹಾಳುಮಾಡಿದ ಮಹಾ ಭಯಂಕರ ಗುಟ್ಟನ್ನು ಅವನೆದುರು ಬಯಲು ಮಾಡಲು ಬಯಸಿದಾಗ ಅಡ್ಡ ಬಂದದ್ದೇನು? ಈಗಲೂ ಗೊತ್ತಿಲ್ಲ. ನಾನೂ ಎಂಥ ದಡ್ಡ ನೋಡು! ಅಪ್ಪನ ಶ್ರೀಮಂತಿಕೆಯ ವಿರುದ್ಧ ಬಂಡೆದ್ದ ಹುಡುಗನ ಎದುರು ಎಲ್ಲ ಬಿಟ್ಟು ಆಸ್ತಿಯಿಂದ ಮಾತು ಶುರು ಮಾಡಿದರೆ ಮತ್ತೇನಾದೀತು!” +ವಾಸುದೇವನ ಆಗಮನಕ್ಕೆ ಸಾಂತಪ್ಪ ಹಚ್ಚಿದ ಅರ್ಥ ನನಗೆ ಈ ಮೊದಲು ಹೊಳೆದಿರಲಿಲ್ಲ. ಆ ಅರ್ಥದ ಹಾಗೇ ಅದನ್ನು ನನಗೆ ಅರುಹುವಾಗಿನ ಅವನ ಧಾಟಿ ಎಲ್ಲ ಹೊಯ್ದಾಟ ನಿಂತು ಸ್ವಚ್ಛವಾದ ತೀರ್ಮಾನಕ್ಕೆ ಬಂದವನ ನಿಶ್ಚಯದ ಧಾಟಿ ನನಗೆ ಸಮಾಧಾನ ಕೊಟ್ಟಿತು. ಅದೇ ಸಮಯಕ್ಕೆ ವಾಸುದೇವನಿಗೆ ನನ್ನ ಸಮಕ್ಷಮ ನಿರೂಪಿಸಬೇಕೆಂದುಕೊಂಡೂ ನಿರೂಪಿಸಲು ಆಗದೇ ಹೋದ ‘ಘಟನೆ’ಗೆ ಈಗ ಇದ್ದಕ್ಕಿದ್ದ ಹಾಗೆ ‘ಇಡೀ ಆಯುಷ್ಯವನ್ನು ಹಾಳು ಮಾಡಿದ ಮಹಾಭಯಂಕರ ಗುಟ್ಟು’ ಎಂದು ನಾಮಕರಣವಾದದ್ದು ನೋಡಿ ಕಾತರಗೊಂಡೆ. +“ಈಗ ಹೇಳುತ್ತೇನೆ: ಆದದ್ದೆಲ್ಲ ಒಳ್ಳೆಯದಕ್ಕೇ ಆಯಿತು. ನಿನ್ನೆ ರಾತ್ರಿ ನಾನು ಶಾಂತಾ ಬಹಳ ಹೊತ್ತಿನವರೆಗೆ ವಾಸುದೇವನ ಭೇಟಿಯ ಬಗೆಗೇ ಮಾತನಾಡಿಕೊಂಡೆವು. ಹಾಗೂ ಹಿಂದೆ ಎಷ್ಟೊಂದು ಸಾರೆ ಪ್ರಯತ್ನಿಸಿದರೂ ಬರಲು ಆಗಿರದ ಒಂದು ದೊಡ್ಡ ನಿರ್ಧಾರಕ್ಕೆ ಬಂದೆವು. ಇನ್ನೊಬ್ಬನ ಎದುರು ಆಡಿ ತೋರಿಸಿದಾಗಲೇ ಗಟ್ಟಿಯಾಗುವ ನಿರ್ಧಾರವದು. ಏಕೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಮೇಲೆ ಕೂತವನು ಸಹ ಇಂಥದ್ದೇ ನಿರ್ಧಾರಕ್ಕೆ ಬರುತ್ತಿರಬೇಕು ಅಥವಾ ಈಗಾಗಲೇ ಬಂದಿರಬೇಕು” ಎಂದ. ಸುಮಾರು ಹೊತ್ತಿನ ಮೌನದ ನಂತರ ನನ್ನ ಆಸ್ತಿ ಹಣ ಎಲ್ಲ ತ್ಯಜಿಸಲು ನಿರ್ಧರಿಸಿದ್ದೇನೆ” ಎಂದ. +ಮಾತಿನಲ್ಲಿ ನಾಟಕೀಯತೆಯ ಸೋಂಕೂ ಇರಲಿಲ್ಲ. ತ್ಯಜಿಸುವುದು ಎಂದರೆ ನಿಶ್ಚಿತವಾಗಿ ಏನು ಮಾಡುವುದು ಎಂದು ಸ್ಪಷ್ಟಗೊಳಿಸದಿದ್ದರೂ ಅವನ ನಿರ್ಧಾರದ ಗಟ್ಟಿತನದ ಬಗ್ಗೆ ಮಾತ್ರ ನನಗೆ ಸಂಶಯವಿರಲಿಲ್ಲ. ಶಾಂತಾ ಆಗ ಸುಮತಿ ಹಾಗು ವನಿತಾರನ್ನು ಒಳಗೆ ಕರೆದುಕೊಂಡು ಹೋದ ಹೆಂಗಸಿರಬೇಕು ಎಂದುಕೊಂಡೆ. +“ಶಾಂತಾ ಹುಡುಗನನ್ನು ತುಂಬಾ ಮೆಚ್ಚಿಕೊಂಡಿದ್ದಾಳೆ. ಹುಡುಗನೂ ಅಷ್ಟೇ! ಊಟ ತಿಂಡಿಗಳ ಹೊತ್ತಿಗೆ ಶಾಂತಾಳ ಜೊತೆ ಮಾತನಾಡುವಾಗ ಅವನು ಕೆಂಪಾಗುವುದನ್ನು ನೋಡಬೇಕು. ಶಾಂತಾ ನನ್ನ ಕೈ ಹಿಡಿದ ಹೆಂಡತಿಯೆಂದು ಅವನಿಗೆ ಗೊತ್ತಾಗಿದೆಯೋ ಇಲ್ಲವೋ. ನಿನಗೂ? ಮನೆ ಬಿಟ್ಟು ಹೋಗುವಾಗಿನ ಅವನ ಮೂಡಿನ ಅಂದಾಜು ಇಲ್ಲದೇ ಪರಿಚಯದಂಥ ಔಪಚಾರಿಕತೆಗೆ ಮುಂದಾಗಲು ಧೈರ್ಯವಾಗಲಿಲ್ಲ. ಹೊಸತೇ ಒಂದು ರಾದ್ಧಾಂತಕ್ಕೆ ಎಡೆಯಾದೀತೆಂದು ಹೆದರಿ ಎಲ್ಲವನ್ನು ಸದ್ಯ ಅವನ ಊಹೆಗೇ ಬಿಟ್ಟುಕೊಟ್ಟೆ. ವಾಸುದೇವನ ತಾಯಿಯ ತಂಗಿ ಇವಳು. ಅವಳಿಗಿಂತ ಹತ್ತು ವರ್ಷಗಳಿಂದ ಚಿಕ್ಕವಳು. ದೇವಸ್ಥಾನವೊಂದರಲ್ಲಿ ದೇವರನ್ನು ಸಾಕ್ಷಿಯಾಗಿಸಿ ಕೈ ಹಿಡಿದವರು ನಾವು. ವಾಸುದೇವನ ತಾಯಿಯನ್ನು ನಾನು ಮದುವೆಯಾದದ್ದು ಕೂಡ ಹೀಗೆಯೇ. ಆಗ ನಾನು ಬೆಳಗಾಂವ್‌ನಲ್ಲಿದ್ದೆ. ಊರಿಗೆ ಬಂದಾಗ ಅವಳು ಮೂರು ಮಕ್ಕಳ ತಾಯಿಯಾಗಿಯೇ ಬಂದಿದ್ದಳು. ಶಾಂತಾ ಇವಳ ತಂಗಿಯೆಂದು ಇಲ್ಲಿಯ ಯಾರಿಗೂ ಗೊತ್ತಿಲ್ಲ. ಊಟದ ಹೊತ್ತಿಗೆ ಅವಳನ್ನು ನಿಮ್ಮಿಬ್ಬರಿಗೂ ಪರಿಚಯಿಸುತ್ತೇನೆ.” +ದಿನಬಳಕೆಯ ಮಾತಿನಂಥ ಕೆಲವೇ ಚುಟುಕಾದ ವಾಕ್ಯಗಳಲ್ಲಿ ತುಂಬಿಕೊಂಡ ಸತ್ಯಸಂಗತಿಗಳು ನನ್ನ ಮಟ್ಟಿಗೆ ಒಂದಕ್ಕಿಂತ ಒಂದು ಕ್ರಾಂತಿಕಾರಿಯಾಗಿದ್ದೂ ಯಾವ ಒಂದರ ಮೇಲೂ ಒತ್ತುಕೊಡದೇ ಸಾಂತಪ್ಪ ಮಾತನಾಡಿದ ಸರಳ ರೀತಿ ಅಂತಃಕರಣವನ್ನು ತಟ್ಟಿತು. ಈ ಹೆಣ್ಣುಗಳ ಜಾತಿ ಪಾತಿಯ ಬಗ್ಗೆ ನಾನು ಇತರರಿಂದ ಕೇಳಿರಬಹುದಾದ್ದರ ವಿವೇಚನೆಯನ್ನು ನನಗೇ ಬಿಟ್ಟುಕೊಟ್ಟು ಅವರೊಡನೆಯ ತನ್ನ ಸಂಬಂಧವನ್ನಷ್ಟೇ ಸ್ಪಷ್ಟಪಡಿಸಿದಾತ ನನಗೆ ಪ್ರಿಯವಾಗತೊಡಗಿದ್ದ. ವಾಸುದೇವನಂತೆ ಶಾಂತಾಳನ್ನೂ ಭೇಟಿಯಾಗಲು ಉತ್ಸುಕನಾದೆ. ಶಾಂತಾಳ ಜೊತೆಗಿದ್ದಾಳೆ ಎನ್ನಲಾದ ಆ ಆ ಇನ್ನೊಬ್ಬ ಚೆಂದದ ಹೆಣ್ಣನ್ನು ಶಾಂತಪ್ಪ ಪರಿಚಯಿಸಬಹುದೆ? +“ಬಾ, ನಾವಿಬ್ಬರೂ ಜೊತೆಯಾಗಿಯೇ ಮೇಲೆ ಹೋಗಿ ವಾಸುದೇವನನ್ನು ಕಾಣೋಣ. ಊಟಕ್ಕೆ ಹೋಗುವ ಮೊದಲು ಕೆಲಹೊತ್ತು ಅಲ್ಲೇ ಕೂತು ಅವನೊಡನೆ ಮಾತನಾಡೋಣ. ನೀನೇ ಮಾತನಾಡಿಸು. ನಾನು ಬರೀ ಕೇಳುತ್ತೆನೆ. ಯಾವ ಸ್ವಾರ್ಥವೂ ಇಲ್ಲದೇ ಇನ್ನೊಬ್ಬನನ್ನು ಕಾಣುವುದರಲ್ಲಿ ಎಷ್ಟೊದು ಮಜವಿದೆ +ನೋಡು.” ಎನ್ನುತ್ತ ಕೈಯಲ್ಲಿದ್ದ ಗ್ಲಾಸನ್ನು ಖಾಲಿ ಮಾಡಿದ. ನಾನೂ ಹಾಗೇ ಮಾಡಿದೆ. ಪ್ರಾಯಶಃ ಇವನ ಆಯುಷ್ಯವನ್ನು ಹಾಳುಮಾಡಿದ ಗುಟ್ಟಿನ ಬಗ್ಗೆ ಇವತ್ತು ಹೇಳಲಾರನೇನೋ ಎಂದುಕೊಳ್ಳುವಷ್ಟರಲ್ಲಿ- +“ನನ್ನ ಬದುಕಿನ ರೂಪವನ್ನೇ ಕೆಡಿಸಿಬಿಟ್ಟ ಒಂದು ಗೂಢದ ಬಗ್ಗೆ ಹೇಳುವವನಿದ್ದೆ. ಈಗ ಬೇಡ. ಊಟವಾದ ಮೇಲೆ ನೋಡೋಣ. ಅದು ಹಾಗೆ ಮಾತಿನಲ್ಲಿ ವರ್ಣಿಸಬಹುದಾದ ಘಟನೆಯಲ್ಲ; ಒಂದು ಮಾಮೂಲಿ ವಸ್ತು! ನನ್ನ ಪಾಲಿಗೆ ಮಾತ್ರ ಮಹಾ ಭಯಂಕರ ವಸ್ತುವಾಗಿದೆ. ನೀನು ವಾಸುದೇವ ಇಬ್ಬರೂ ಇವತ್ತು ಜೊತೆಯಾಗಿಯೇ ಅದನ್ನು ನೋಡುವಿರಂತೆ. ಇದೇ ಮನೆಯಲ್ಲಿದೆ. ಅಗದೀ ಕೆಳಗೆ ನೆಲಮಾಳಿಗೆಯ ಮೂಲೆಯೊಳಗಿನ ಕತ್ತಲ ಕೋಣೆಯಲ್ಲಿ ಹೋಗುವ ದಾರಿಯಲ್ಲೆಲ್ಲ ಜೇಡರ ಬಲೆಗಳು ಹುಟ್ಟಿಕೊಂಡು ಧೂಳು ತುಂಬಿತ್ತು. ನಾನು ಸ್ವತಃ ಹೋಗಿ ಸಾಪು ಮಾಡಿ ಬಂದಿದ್ದೇನೆ. ಇಲೆಕ್ಟ್ರಿಕ್ ಬಲ್ಬು ತೆಗೆದುಹಾಕಿತ್ತು. ಈಗ ಮತ್ತೆ ಹಾಕಿದ್ದೇನೆ. ಎಲ್ಲವನ್ನೂ-ಮಗನ ಬಗೆಗಿನ ಮೋಹವನ್ನು ಕೂಡ-ಬಿಟ್ಟುಕೊಡಲು ಮನಸ್ಸು ಗಟ್ಟಿ ಮಾಡಿದ್ದೇ ಎಂಥ ಧೈರ್ಯ ನೋಡು! ಇಲ್ಲವಾದರೆ ಆ ವಸ್ತುವನ್ನು ಇತರರಿಗೆ ತೋರಿಸುವುದುಳಿಯಲಿ, ಅದರ ಬಗ್ಗೆ ನನಗೆ ನಾನೇ ಹೇಳುವುದಕ್ಕೂ ಹೆದರುತ್ತಿದ್ದೆ. ಅಷ್ಟೊಂದು ಪುಕ್ಕನಾಗಿಬಿಟ್ಟಿದ್ದೆ. ನಮ್ಮ ಶಾಂತಾ ಕಲಿತವಳು. ಅವಳ ಕಡುಬಡತನ ಕೊಡುವ ಅವಮಾನದ ಭಾವನೆ, ಅತಿ ಶ್ರೀಮಂತಿಕೆ ತರುವ ಕಳಕೊಳ್ಳುವ ಭಯ ಎರಡೂ ಅಷ್ಟೇ ಕೆಟ್ಟವುಗಳಂತೆ. ಎರಡೂ ಬದುಕನ್ನು ಕುರೂಪಗೊಳಿಸುತ್ತದೆಯಂತೆ. ನನ್ನ ಬಗ್ಗೆ ತಿಳಿಯುವುದಿದ್ದರೆ ಅವಳನ್ನೇ ಕೇಳು. ನನ್ನನ್ನು ನನಗಿಂತಲೂ ಚೆನ್ನಾಗಿ ಬಲ್ಲವಳು. ಅವಳ ಪ್ರಕಾರ ನಾನು, ನೀವು ಯಾರೂ ತಿಳಕೊಂಡಷ್ಟು ಕೆಟ್ಟವನು ಅಲ್ಲವೇ ಅಲ್ಲವಂತೆ. ನನಗೇ ನಂಬಿಕೆಯಾಗುವುದಿಲ್ಲ. ಅಂದಹಾಗೆ ನೀನಿದ್ದಾಗಲೇ ವಾಸುದೇವನನ್ನು ಇಲ್ಲಿಗೆ ಕರೆಸುವ ವಿಚಾರ ಅವಳದೇ. ಕಲಿತವರ ಬಗ್ಗೆ ಅವಳಿಗೆ ಕಂಡಾಪಟ್ಟೆ ಅಭಿಮಾನವಪ್ಪಾ! ಊಟದ ಹೊತ್ತಿಗೆ ನೀನೇ ನೋಡುವಿಯಂತೆ. ಹಾಗೀಕೆ ನೋಡುತ್ತಿ? ಕುಡಿತದ ಅಮಲಿನಲ್ಲಿದ್ದೇನೆಂದು ತಿಳಿದೆಯಾ? ಬಾ, ಮಾಳಿಗೆ ಮೆಟ್ಟಿಲು ಏರುವಾಗ ಗೊತ್ತಾದೀತು.” +ಅವನು ಕುಡಿತದ ಅಮಲಿನಲ್ಲಿ ಮಾತನಾಡುತ್ತಿಲ್ಲ ಎನ್ನುವುದು ಅವನಿಗಿಂತ ನನಗೇ ಚೆನ್ನಾಗಿ ಗೊತ್ತಿತ್ತು. ನನ್ನ ಇದೀಗಿನ ಖುಷಿಗೆ ಕೇವಲ ಅವನು ಕಾರಣನಾಗಿದ್ದ ಎನ್ನುವ ಸತ್ಯ ಮಾತ್ರ ಅವನಿಗೆ ತಿಳಿದಿತ್ತೋ ಇಲ್ಲವೋ! +ಇಬ್ಬರೂ ಕೋಣೆಯ ಹೊರಗೆ ನಡೆಯಲು ಅನುವಾಗಿ ಕುಳಿತಲ್ಲಿಂದ ಎದ್ದು ನಿಂತರು +– ೪ – +ಕೋಣೆಯ ಹೊರಗೆ ಬಂದು ಮಾಳಿಗೆಯ ಮೆಟ್ಟಿಲುಗಳ ಕಡೆಗೆ ಹೆಜ್ಜಿಹಾಕುತ್ತಿದ್ದಂತೆ. ಸಂಜೆ ಗೇಟಿನಲ್ಲಿ ನಮ್ಮನ್ನು ಸಂಧಿಸಿ ನಾನು ಸರಿಯಾಗಿ ನೋಡುವ ಮೊದಲೇ ಹೊರಗೆ ನಡೆದ ವ್ಯಕ್ತಿ ನೆನಪಿಗೆ ಬಂದ. ಅವನು ವಾಸುದೇವನೇ ಇರಬೇಕು. ಅವನು ತಿರುಗಾಡಲಿಕ್ಕೆ ಹೋಗುತ್ತಿರಲಿಕ್ಕಿಲ್ಲ. ಬದಲು ನಾವು ಈ ಮನೆಗೆ ಬಂದು ಮುಟ್ಟುವ ಮೊದಲೇ ಮನೆ ಬಿಟ್ಟು ಹೋಗುವ ಅವಸರದಲ್ಲಿದ್ದಿರಬೇಕು, ಅನ್ನಿಸಿತು. ಈ ಅನ್ನಿಸಿಕೆಗೆ ಯಾವ ಆಧಾರವೂ ಇರಲಿಲ್ಲ. ಸಾಂತಪ್ಪ ಈಗ ದೊರಕಿಸಿದ ಆಂತರಿಕ ಸ್ಥೈರ್ಯ ನಿಜವಾಗಿದ್ದ ಪಕ್ಷದಲ್ಲಿ ವಾಸುದೇವನ ಈ ರೀತಿಯ ನಿರ್ಗಮನ ಅವನ ಮೇಲೆ ಪರಣಾಮ ಮಾಡಕೂಡದು, ಮಾಡಲಿಲ್ಲ. +ವಾಸುದೇವ ಕೋಣೆಯಲ್ಲಿರಲಿಲ್ಲ. ಕೋಣೆಯಲ್ಲಿ ದೀಪ ಕೂಡ ಇರಲಿಲ್ಲ. ತಿರುಗಾಡಲು ಹೋದವನು ಇನ್ನೂ ಬರದಿರಬಹುದೆ? ಸಾಂತಪ್ಪ ದೀಪ ಹಾಕಿದ: ಕೋಣೆಯಲ್ಲಿ ಅವನ ಚೀಲವೂ ಇರಲಿಲ್ಲ. “ಇಲ್ಲ, ಹೊರಟುಹೋಗಿದ್ದಾನೆ” ಎಂದ. ದನಿ ಸರಿಯಾಗಿದ್ದು ನೋಡಿ ನಿರಂಬಳವೆನ್ನಿಸಿತು. ಕೋಣೆಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಮಂಚದ ಮೇಲೆ ಪತ್ರವಿದ್ದದ್ದು ಕಂಡಿತು. ನಾಲ್ಕು ಮಡಿ ಮಡಿಚಿದ ಬಿಳಿಯ ಹಾಳೆ. ಎತ್ತಿ ಅವನ ಕೈಗೆ ಕೊಡುತ್ತಿದ್ದಾಗ “ನೀನೇ ಓದಿ ನೋಡು” ಎಂದ. ಈಗಲೂ ದನಿ ಸರಿಯಾಗಿತ್ತು. ಚೀಟಿ ತೆರೆದು ಓದಿದೆ: ಒಂದೇ ವಾಕ್ಯವಿತ್ತು: “ಅಪ್ಪಾ! ನನ್ನನ್ನು ಕ್ಷಮಿಸು-ನಿನ್ನ ವಾಸು.” ಸರಕ್ಕನೆ ನನ್ನ ಕೈಯಿಂದ ಚೀಟಿಯನ್ನು ಕಸಿದುಕೊಂಡು ತಾನೇ ಓದಿದ. ತನ್ನ ಕಣ್ಣುಗಳನ್ನು ತಾನೇ ನಂಬದವನ ಹಾಗೆ ಮತ್ತೊಮ್ಮೆ ಓದಿದ. “ಕೊನೆಗೂ ಒಪ್ಪಿಕೊಂಡ ಹುಡುಗ. ಬಸ್! ಇನ್ನೇನೂ ಅಪೇಕ್ಷಿಸಿರಲಿಲ್ಲ. ದೇವರಾಣೆಗೂ” ದನಿ ಮೊದಲ ಬಾರಿಗೇ ತುಸು ಗದ್ಗದಿಸಿದಂತೆ ಕೇಳಿಸಿತು. ಆ ಕ್ಷಣದ ಮಟ್ಟಿಗೆ ನಾನು ಎದುರಲ್ಲಿದ್ದುದನ್ನು ಮರೆತಿದ್ದನೇನೋ. ಲಕ್ಷ್ಯಕ್ಕೆ ಬಂದದ್ದೇ ತನ್ನನ್ನು ಸಾವರಿಸಿಕೊಂಡ: +“ಹುಡುಗ ನೆಲಮಾಳಿಗೆಗೆ ಹೋಗಿ ನೋಡಿ ಬಂದಿರಬೇಕು. ಬಹುಶಃ ಶಾಂತಾ ತೋರಿಸಿರಬೇಕು. ಬಾ! ಕೆಳಗೆ ಹೋಗೋಣ. ಶಾಂತಾ ಒಪ್ಪಿದರೆ ಊಟದ ಮೊದಲೇ ನಾವೂ ಕೆಳಗೆ ಹೋಗಿ ಬರೋಣ. ‘ಆಗದೆ? ಹೆಂಗಸರು ಬರುವುದು ಬೇಡ. ರಾತ್ರಿಯ ಹೊತ್ತು ಹೋಗುವ ದಾರಿಯೂ ಸರಿಯಿಲ್ಲ. ” +ಶಾಂತಾಗೆ ನಾವು ಮೇಲೆ ಹೋಗಿದ್ದರ ಸುಳುಹು ಹತ್ತಿರಬೇಕು. ಜಿನೆಯ ಅಡಿಗೆ ನಿಂತು ನಮ್ಮ ದಾರಿ ಕಾಯುತ್ತಿದ್ದಳು: +“ಮೇಲೆ ಹೋಗಿ ಬಂದಿರಾ?” +“ನನಗಾಗಿ ಈ ಚೀಟಿ ಇಟ್ಟುಹೋಗಿದ್ದಾನೆ” ಎನ್ನುತ್ತ ಚೀಟಿಯನ್ನು ಶಾಂತಾಳ ಕೈಗೆ ಒಪ್ಪಿಸಿದ. ಅದರಲ್ಲೇನಿದೆ ಎನ್ನುವುದು ತನಗೆ ಗೊತ್ತೇ ಇದ್ದವಳ ಹಾಗೆ ಒಮ್ಮೆ ಕಣ್ಣಾಡಿಸಿದಳು. “ಹೊರಡುವ ಮೊದಲು ತುಂಬಾ ಮೆತ್ತಗಾಗಿದ್ದ ಹುಡುಗ. ಬೆಳಿಗ್ಗೆ ನೀವು ವನಿತಾಳ ಮನೆಗೆ ಹೋಗಿದ್ದಾಗ ಕೆಳಗಿಳಿದು ಬಂದು ನನ್ನನ್ನು ಹುಡುಕುತ್ತ ಸೀದಾ ನನ್ನ ಕೋಣೆಯವರೆಗೂ ಬಂದು ಬಹಳ ಹೊತ್ತು ನನ್ನನ್ನು ಮಾತನಾಡಿಸಿದ. ನಾನು ಯಾರೆಂದು ತಿಳಿದದ್ದೇ, ಆ ಸಂಶಯ ಬಂದೇ, ಹೀಗೆ ಇಲ್ಲಿ ಬಂದು ಮಾತನಾಡಿಸುವ ಧೈರ್ಯ ಮಾಡಿದ. ಥೇಟು ಅಮ್ಮ ಎಂದು ಬಿಕ್ಕಳಿಸಿದ. ಮಾತುಮಾತಿನಲ್ಲಿ ಎಲ್ಲವೂ ಹೊರಗೆ ಬಂತು, ಬೇಡವೆಂದರೂ ಕೆಳಗೆ ಹೋಗಿ ನೋಡುವ ಹಠ ಹಿಡಿದ. ನಾನೇ ಹೋಗಿ ತೋರಿಸಿ ಬಂದೆ. ನಂಬುವಿರಾ? ಹೋಗುವ ಮೊದಲು ನನಗೆ ಅಮ್ಮಣಿಗೆ ಕಾಲುಮುಟ್ಟಿ ನಮಸ್ಕರಿಸಿ ನಮ್ಮಿಂದ ಬೀಳ್ಕೊಂಡ? ನಿಮಗೂ ನಮಸ್ಕಾರ ತಿಳಿಸಿದ್ದಾನೆ. ಖುದ್ದು ಭೇಟಿಯಾಗುವ ಮನಸ್ಸಿತ್ತು. ನೀವು ಹೋಗಲು ಬಿಡಲಾರಿರಿ ಎಂದು ಹೆದರಿ ಚೀಟಿ ಬರೆದಿಟ್ಟು ಹೋಗಿದ್ದಾನೆ. ರಾತ್ರಿ ಯಾರದೋ ಟ್ರಕ್ಕಿನಿಂದ ಹುಬ್ಬಳ್ಳಿಗೆ ಹೋಗುತ್ತಾನಂತೆ. ಹೋಗುವ ಮೊದಲು ಇವರ ಅಕ್ಕನನ್ನು ನೋಡಿ ಹೋಗುತ್ತೇನೆ ಎಂದಿದ್ದಾನೆ” ಎಂದು ನನ್ನತ್ತ ತಿರುಗಿ, “ಸಾಧ್ಯವಾದರೆ ನಿಮ್ಮನ್ನು ಅಲ್ಲೇ ನೋಡುತ್ತೇನೆ ಎಂದಿದ್ದ. ನಿಮ್ಮಿಬ್ಬರಿಗೂ ತಪ್ಪುಗಂಟಾಗಿರಬೇಕು,” ಎಂದಳು. “ನೀವೀಗ ಕೆಳಗೆ ಹೊರಟಿರುವಿರಾದರೆ ಬೇಗ ಹೋಗಿ ಬನ್ನಿ. ಇನ್ನು ಹತ್ತು ಮಿನಿಟುಗಳಲ್ಲಿ ಊಟ ಸಿದ್ಧವಾಗಿರುತ್ತದೆ. ನೋಡಿ ಬಂದದ್ದರ ಬಗ್ಗೆ ಊಟದ ಹೊತ್ತಿಗೆ ಚರ್ಚೆ ಬೇಡ. ವನಿತಾ ಏನೆಂದರೂ ಇದೇ ಊರಿನವಳು” ಎಂದು ಎಲ್ಲವನ್ನು ಅವಸರ ಅವಸರದಲ್ಲಿ ಹೇಳಿ ಮುಗಿಸದವಳು ಒಳಗೆ ಬಿಟ್ಟು ಬಂದವರನ್ನು ಕೂಡಿಕೊಳ್ಳಲು ಹೊರಟು ನಿಂತು, “ಮೇಲೆ ಬಂದವರು ಸೀದಾ ಊಟದ ಟೇಬಲ್ಲಿಗೇ ಬನ್ನಿ. ಬರುವ ಮೊದಲೊಮ್ಮೆ ಅಮ್ಮಣ್ಣಿಯ ಬಗ್ಗೆ ಇವರಿಗೆ ಸೂಚನೆ ಕೊಟ್ಟಿರಿ. ತುಂಬಾ ಉಮೇದಿನಲ್ಲಿದ್ದಾಳೆ ಹುಡುಗಿ” ಎಂದಳು. +ಸಾಂತಪ್ಪ ಇನ್ನಾವುದೋ ಕೋಣೆಗೆ ಹೋಗಿ ಮೊದಲೇ ಸಿದ್ಧಮಾಡಿಟ್ಟಂತಿದ್ದ ದೊಡ್ಡ ಟಾರ್ಚ್ ಒಂದನ್ನು ಕೈಯಲ್ಲಿ ಹಿಡಿದು ಬಂದ: +“ಬಾ! ನನ್ನ ಹಿಂದೆಯೇ ಬಾ. ಮೆಟ್ಟಿಲ ಮೇಲೆ ಮುಗ್ಗರಿಸಿ ಬಿದ್ದೀಯಾ. ನಾವು ಸಹಸಾ ಇಲ್ಲಿ ಬರುವುದಿಲ್ಲ. ಹಾಗೆಂದು ಮೆಟ್ಟಲ ಮೇಲೆ ದೀಪ ಹಾಕಿಸಿಲ್ಲ. ನೀನು ಇಲ್ಲೇ ತಡೆ. ನಾನು ಮುಂದೆ ಹೋಗಿ ಕೋಣೆಯ ಕದ ತೆರೆದು ದೀಪ ಹಾಕುತ್ತೇನೆ. ಸ್ವಿಚ್ಚೂ ಒಳಗಡೆಯಿದೆ. ನಾವು ಕೊಳ್ಳುವ ಮೊದಲು ಈ ಮನೆಯವರು ಈ ಕೋಣೆಯನ್ನು ಯಾವ ಕೆಲಸಕ್ಕೆ ಬಳಸುತ್ತಿದ್ದರೋ, ಇದು ಇಲ್ಲಿ ಇಲ್ಲದೆ ಹೋದರೆ ನಾನು ಮಾತ್ರ ಏನು ಮಾಡುತ್ತಿದ್ದೆನೋ!” +ಪಿಸುಮಾತಿನಲ್ಲಿ ನಡೆದ ಸಾಂತಪ್ಪನ ಬಡಬಡಿಕೆ ಕೇಳಿ ಇವನಿನ್ನೂ ಒಳಗೆ ಹೆದರಿಕೊಂಡಿದ್ದಾನೆ ಅನ್ನಿಸಿತು. ನಾನೂ ಅಷ್ಟೇ. ಒಳಗಿರುವ ವಸ್ತು ಭಯಾನಕವಾದದ್ದು. ಆಕಾರದಲ್ಲೋ? ಅದರ ಕೀರ್ತಿಯಲ್ಲೋ? ಅಸ್ಥಿಪಂಜರ, ಒಣಗಿಸಿಟ್ಟ ಹಾವಿನ ಹೆಡೆ ಇಂಥ ಆಕೃತಿಗಳು ಕಲ್ಪನೆಯಲ್ಲಿ ಮೂಡುತ್ತಿದ್ದಂತೆ ಸಾಂತಪ್ಪ ಕೋಣೆಯ ಕದ ತೆರೆದಿದ್ದ. ಒಳಗೆಲ್ಲೋ ತಡಕಾಡಿ ಸ್ವಿಚ್ ಒತ್ತಿದ. “ಮುಂದಕ್ಕೆ ಸರಿ, ನೋಡು” ಎಂದು ಪಿಸುನುಡಿದ. ನಾಲ್ವತ್ತು ವಾಟ್ಸ್ ಬಲ್ಬಿನ ಬೆಳಕಿನಲ್ಲಿ ಬೆಳಗಿ ನಿಂತದ್ದು ಕಣ್ಣಿಗೆ ಸ್ಪಷ್ಟವಾಗಲು ಹೊತ್ತು ಹಿಡಿಯಿತು. ಕಣ್ಣಿಗೆ ಪ್ರತ್ಯಕ್ಷ ಕಂಡದ್ದಕ್ಕಿಂತ ಅದರ ಬಗ್ಗೆ ಮಾಡಿಕೊಂಡ ಕಲ್ಪನೆಗೇ ಹೆದರಿದ್ದೆನೇನೋ, ಇನ್ನೂ ಮುಂದಕ್ಕೆ ಸರಿದೆ. ಅಮಮಾ! ಮೂಗಿಗೆ ಬಂದು ಬಡಿದ ಗಬ್ಬು ವಾಸನೆಯ ಜೋರಿಗೆ ಸರಕ್ಕನೆ ಹಿಂದೆ ಸರಿದೆ. +“ನಂಬುವೆಯಾ? ಕಳೆದ ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ತೆರೆದಿರಲಿಲ್ಲ ಈ ಕೋಣೆಯನ್ನು? ಜಂಗು ತಿಂದ ಚಿಲಕ, ಬೀಗ, ಈ ದುರ್ಗಂಧ. ಈ ಧೂಳು. ಇದೆಲ್ಲ ಈ ಸಂಗತಿಗೆ ಸಾಕ್ಷಿ ಹೇಳುವುದಿಲ್ಲವೆ? ಸಾಕ್ಷಿ ಹೇಳಲೆಂದೇ ತೆರೆದಿರಲಿಲ್ಲ.” +“ಸಾಕ್ಷಿ” ಎನ್ನುವಾಗ ಸಾಂತಪ್ಪನ ದನಿ ತುಸು ನಡುಗಿದ ಭಾಸವಾಯಿತು. ಪೊಲೀಸು, ಕಾಯದೆ ಎಂದರೆ ಸಾಂತಪ್ಪ ಈ ವಯಸ್ಸಿನಲ್ಲೂ ಹೆದರುತ್ತಾನೆಂದು ಅಕ್ಕ ಹೇಳಿದ್ದು ನೆನಪಿಗೆ ಬಂದಿರಬೇಕು ಪೊಲೀಸರ ಕಣ್ಣು ತಪ್ಪಿಸಿದ ಮಾಲು ಅಲ್ಲ ತಾನೇ! ನಾನು ಊಹಿಸುವುದನ್ನು ನಿಲ್ಲಿಸಿದೆ. +ಕ್ರಮೇಣ ಕೋಣೆಯೊಳಗಿನ ಧೂಳು ಮುಚ್ಚಿದ, ಜೇಡರ ಬಲೆ ಹಾಕಿಕೊಂಡ ವಸ್ತುಗಳು ದೄಷ್ಟಿಗೋಚರವಾಗತೊಡಗಿದವು. ಮೋಡಕಾ ಬಜಾರಿನಿಂದ ತಂದಂತಿದ್ದ ಜುನಾಪುರಾಣಾ ವಸ್ತುಗಳು ಸಾಂತಪ್ಪ ಮಾಡಿದ ವರ್ಣನೆಯಲ್ಲಿ ಒಂದೊಂದಾಗಿ ಹೆಸರುಪಡೆಯತೊಡಗಿದವು. +“ಆ ಹಂಡೆ, ತಂಬಿಗೆ, ಇಲ್ಲಿಟ್ಟ ಅಡುಗೆ ಪಾತ್ರೆಗಳು, ಅಲ್ಲಿ ತೂಗಿದ ಕಸಬರಿಗೆ, ಗರಸಿ, ಬುಟ್ಟಿಗಳು, ಸುತ್ತಿಟ್ಟ ಚಾಪೆ, ಹಾಸಿಗೆ, ಮೇಲಿಟ್ಟ ತಲೆದಿಂಬು ಈ ಬದಿಗಿರಿಸಿದ ಮಣಿಗಳು, ಈಳಿಗೆ, ನನ್ನ ಅಪ್ಪ-ಅಜ್ಜರ ಕಾಲದ ವಸ್ತುಗಳು, ಅವರಿಗೇ ಸೇರಿದವುಗಳಲ್ಲ; ಎಲ್ಲೆಲ್ಲಿಂದಲೋ ಒಟ್ಟು ಮಾಡಿದವುಗಳು. ಅವರ, ನನ್ನ ಬಾಲ್ಯದ ಬಡತನದ ನೆನಪಿಗಾಗಿ ಶೇಖರಿಸಿದವುಗಳಲ್ಲ. ಮತ್ತೆ ಯಾರಾದರೂ ಕೇಳಿದ್ದರೆ ಹಾಗೆ ಹೇಳುವುದೆಂದು ನಿಶ್ಚಯಿಸಿದ್ದೆ. ಆ ಮಾತು ಬೇರೆ. ಇವನ್ನು ಒಟ್ಟು ಮಾಡಿದ ಮೂಲ ಉದ್ದೇಶ ಆ ಅದನ್ನು ಅಡಗಿಸಲು. ಇಪ್ಪತ್ತು ವರ್ಷಗಳ ಹಿಂದೆ ಒಮ್ಮೆ ಅಡಗಿಸಿಟ್ಟ ನಂತರ ಮತ್ತೆ ನೋಡುತ್ತಿದ್ದದ್ದು ಇದೇ ಮೊದಲ ಬಾರಿ. ಕಾಣುತ್ತದೆಯೆ? ನಟ್ಟನಡುವೆ ಹಾಸಿಗೆಯ ಸುರುಳಿಯ ಕೆಳಗೆ ಲೋಹದ ಟ್ರಂಕು ಇದೆ. ಮೂಲೆಯಷ್ಟೇ ಕಾಣಿಸುತ್ತದೆ. ಸರಿಯಾಗಿ ನೋಡು. ಅದು ನನ್ನ ವಶಕ್ಕೆ ಬಂದಾಗ ನೋಡಬೇಕಿತ್ತು. ನೀಲಿ ಹಸಿರು ಬಣ್ಣ ಬಳಿದುಕೊಂಡು ಲಕಲಕಿಸುತ್ತ ದಷ್ಟಪಷ್ಟವಾಗಿತ್ತು. ಸರಪಳಿ ಸುತ್ತಿದೆ. ಇಷ್ಟು ದೊಡ್ಡ ಬೀಗವಿದೆ. ಈಗ ಬಣ್ಣವೆಲ್ಲ ಹಾರಿಹೋಗಿ ತುಸು ಸೊರಗಿದಹಾಗಿದೆ. ಜಂಗೂ ಹಿಡಿದಂತಿದೆಯಲ್ಲವೆ?” +ಸಾಂತಪ್ಪನ ದನಿ ಇನ್ನೂ ಕೆಳಗಿಳಿಯತೊಡಗಿತು- +“ಆ ಟ್ರಂಕಿನ ಒಳಗೆ ಏನಿರಬಹುದು, ಊಹಿಸಬಲ್ಲೆಯಾ? ಅಂದರೆ ನಾನು ಪಟ್ಟ ಭಯದ ಕಲ್ಪನೆ ಬಂದೀತು.” ನನಗೆ ವಿಚಾರ ಮಾಡಲೂ ಸಮಯ ಕೊಡದೇ ತಾನೇ ಉತ್ತರವಿತ್ತ: “ಬಂಗಾರದ ಗಟ್ಟಿಗಳು! ಅಕ್ಕ ಇಲ್ಲ ವನಿತಾ ಇವುಗಳ ಬಗೆಗೂ ನಿನ್ನೊಡನೆ ಮಾತನಾಡಿರುವುದಾದರೆ ನಾನು ಯಾವ ಪ್ರಕರಣದ ಬಗ್ಗೆ ಹೇಳುತ್ತಿದ್ದೇನೆ. ಹೊಳೆದಿರಬೇಕು. ನನ್ನ ಮುಖಕ್ಕಿಷ್ಟು ಮಸಿ ಬಳಿದ ಪ್ರಕರಣವದು. ಈ ಟ್ರಂಕಿನ ಒಳಗೆ ಬಂಗಾರದ ಗಟ್ಟಿಗಳಿರಬಹುದೆ? ನನಗೆ ಗೊತ್ತಿಲ್ಲ ನಾನಿನ್ನೂ ತೆರೆದು ನೋಡಿಯೇ ಇಲ್ಲ. ನಿಜಕ್ಕೂ ಇದ್ದುಬಿಟ್ಟರೆ ಏನು ಮಾಡುತ್ತಿದ್ದೆ? ವಿಚಾರ ಮಾಡದಾದೆ. ಬಂಗಾರದ ಗಟ್ಟಿಗಳು ಹೇಗಿರುತ್ತವೆ? ಈವರೆಗೂ ನೋಡಿಲ್ಲ. ಅವುಗಳನ್ನು ಕಲ್ಪಿಸಬಲ್ಲೆ. ಆದರೆ ಅವುಗಳಿಂದ ಏನು ಮಾಡಲು ಬರುತ್ತದೆ ಎನ್ನುವುದು ಗೊತ್ತಿಲ್ಲದೇ ಏನು ಪ್ರಯೋಜನ? ಹೇಳು! ನೀನೇ ಏನು ಮಾಡುತ್ತಿದ್ದೆ? ಅದು ತಿನ್ನುವ ವಸ್ತುವಲ್ಲ. ಅಂಗಡಿಗೆ ಹೋಗಿ ಮಾರುವ ವಸ್ತುವೂ ಅಲ್ಲ. ವಿಚಾರ ಮಾಡಿ ನೋಡು. ನೀನು ಸ್ವತಃ ಸ್ಮಗ್ಲರ್ ಆಗಿರದೇ ಈ ಗಟ್ಟಿಗಳು ಯಾವ ಕೆಲಸಕ್ಕೂ ಬಾರದವೆಂದು ಹೊಳೆದೀತು.” +ಮಧ್ಯಾಹ್ನ ರಾಮಕೃಷ್ಣ-ಅಕ್ಕರಿಂದ ಚೂರುಚೂರು ತಿಳಿದಿದ್ದು, ಈಗ ಸಾಂತಪ್ಪ ಹೇಳಿದ್ದು ಒಂದಕ್ಕೊಂದು ಹೊಂದಿಕೊಳ್ಳುತ್ತಿದ್ದಂತೆ ಅವನು ಸಿಲುಕಿಕೊಂಡಿದ್ದ ಪರಿಸ್ಥಿತಿಯ ಚಿತ್ರವೂ ಸ್ಪಷ್ಟವಾಗುತ್ತ ಅವನು ಪಟ್ಟ ಯಾತನೆಯ ಬಗ್ಗೆ ತಲ್ಲಣಿಸಿದೆ. +“ಅದರೊಳಗೆ ಬಂಗಾರದ ಗಟ್ಟಿಗಳಿವೆಯೆಂದು ಗೊತ್ತಾದದ್ದು ಕೂಡ ಪೇಪರುಗಳಲ್ಲೆಲ್ಲ ಈ ಟ್ರಂಕು ಸುದ್ದಿ ಮಾಡಿದ ಮೇಲೇ. ಆಗಲೇ ಅದು, ಮೊದಲು ನಮ್ಮ ಬೆಳಗಾಂವಿಯ ಮನೆಯಲ್ಲಿ, ಮುಂದೆ ಕುಮಟೆಯ ಈ ಮನೆಯಲ್ಲಿ ನನ್ನ ವಶದಲ್ಲುಳಿದು ಮೂರು ತಿಂಗಳ ಮೇಲಾಗಿತ್ತು.” +ಸಾಂತಪ್ಪ ವರ್ಣಿಸುತ್ತಿದ್ದದ್ದು ವರ್ಷಗಳ ಹಿಂದೆ ಅನುಭವಿಸಿದ ಭಯದ ಆಕಾರವೆಂದು ಗೊತ್ತಿತ್ತು. ವಿವರಗಳು ಬೇಕಾಗಿರಲಿಲ್ಲ. ಆದರೆ ವಿವರಗಳನ್ನು ಅವನು ಕೊಡುತ್ತಿದ್ದದ್ದು ನನಗಿಂತ ಹೆಚ್ಚಾಗಿ ತನ್ನ ಸಲುವಾಗಿಯೇ ಎಂದು ಹೊಳೆದದ್ದರಿಂದ ಅವನನ್ನು ತಡೆಯಲು ಹೋಗಲಿಲ್ಲ. +“ನಮ್ಮ ಸಂಬಂಧಿಗಳು, ಗೆಳೆಯರು ತಮ್ಮ ಸಾಮಾನುಗಳ ಮಾಮೂಲು ಪಾರ್ಸಲ್ಲುಗಳನ್ನು ಬೇರೆ ಊರುಗಳಿಗೆ ಕಳಿಸುವಾಗ ನಮ್ಮ ಟ್ರಕ್ಕುಗಳ ಮೂಲಕ ಕಳಿಸಿದ್ದಿದೆ. ಟ್ರಕ್ ಮಾಲೀಕರು ನಮ್ಮ ಗೆಳೆಯರಿಗೆ ಒದಗಿಸುವ ಸರ್ವೇಸಾಮಾನ್ಯ ಸೌಕರ್ಯವಿದು. ಇಂಥ ಪಾರ್ಸೆಲ್ಲುಗಳ ಭದ್ರತೆಯ ಜವಾಬ್ದಾರಿ ಅವರದೇ. ಯಾರಿಂದ ಯಾರಿಗೆ ಎಂದು ತಿಳಿಸುವ ವಿಳಾಸಗಳನ್ನು ಹೊತ್ತ ಇವು ಮೊದಲು ನಮ್ಮ ಗುದಾಮುಗಳಿಗೆ ಹೋಗಿ, ಸಂಬಂಧಪಟ್ಟವರು ಅಲ್ಲಿಂದಲೇ ತೆಗೆದುಕೊಂಡು ಹೋಗುವುದು ವಾಡಿಕೆ. ಆದರೆ ಯಾವ ವಿಳಾಸವೂ ಇಲ್ಲದ ಈ ಟ್ರಂಕನ್ನು ಮಾತ್ರ ಡ್ರೈವರ್ ನಮ್ಮ ಮನೆಗೇ ತಂದಾಗ ನಾನು ಮನೆಯಲ್ಲಿರಲಿಲ್ಲ. ಈ ಟ್ರಂಕು ತಾನು ಗೋವಾದಿಂದ ಮಾಲು ತಂದ ಟ್ರಕ್ಕಿನಲ್ಲಿತ್ತೆಂದೂ, ವಿಳಾಸವಿಲ್ಲದ್ದರಿಂದ ಗುದಾಮಿನಲ್ಲಿರಿಸುವುದು ಸುರಕ್ಷಿತವಲ್ಲವೆಂದೂ, ಕಳಿಸಿದವರು ನಿಮಗೆ ಪತ್ರ ಬರೆದು ತಿಳಿಸದೇ ಇರಲಾರರೆಂದೂ ಹೆಂಡತಿಗೆ ವಿವರಿಸಿದ. ಅವಳ ಆದೇಶದ ಮೇರೆಗೆ ನಮ್ಮ ಸಾಮಾನಿನ ಕೋಣೆಯಲ್ಲಿಟ್ಟು ಹೋದ. ಈ ಟ್ರಂಕು ನನ್ನ ಲಕ್ಷ್ಯಕ್ಕೆ ಬಂದದ್ದು, ಅದರ ಬಗ್ಗೆ ಹೆಂಡತಿಯಿಂದ ಗೊತ್ತಾದದ್ದು ಕುಮಟೆಯ ಈ ಮನೆಯಲ್ಲಿ ಸಾಮಾನು ಹಚ್ಚಿಡುವಾಗ! ಆಗಲೂ ಈ ಟ್ರಂಕಿನ ಹಿಂದೆ ದುಷ್ಟ ಉದ್ದೇಶವಿರಬಹುದೆಂದು ಶಂಕಿಸಲು ಆಸ್ಪದವಿರಲಿಲ್ಲ. ಬೇರೊಬ್ಬ ಮಾಲೀಕನ ಟ್ರಕ್ಕಿಗೆ ಹೋಗಬೇಕಾದದ್ದು ಕೈ ತಪ್ಪಿ ನಮ್ಮದಕ್ಕೆ ಬಂದಿರಬಹುದೆಂದು ನಾನಾಗ ಬಗೆದಿರಲೂಬಹುದು. ಟನ್ನುಗಟ್ಟಲೆ ಮಾಲು ಸಾಗಿಸುವ ವ್ಯವಹಾರದಲ್ಲಿ ಇಂಥ ಠುಸ್‌ಪುಸ್ ಹೇಗೆ ಲಕ್ಷ್ಯದಲ್ಲಿರಬೇಕು! +“ಮುಂದೆ-ಗೋವಾದಲ್ಲಿ-ಎಲ್ಲಿಂದಲೋ ಬಂದು ಕಿನಾರೆಗೆ ಹತ್ತಿದ ಮಚವೆಯೊಂದರಲ್ಲಿ ಬಂಗಾರದ ಗಟ್ಟಿಗಳಿದ್ದುವೆಂದೂ, ಕಸ್ಟಮ್ಸ್ ಖಾತೆಯ ದಡ್ಡರು ಎಚ್ಚರಗೊಂಡು ಕಾರ್ಯಕ್ಕಿಳಿಯುವ ಹೊತ್ತಿಗೆ, ಕಳ್ಳರು ಗಟ್ಟಿಗಳಿದ್ದ ಟ್ರಂಕನ್ನು ಗೋವಾದಿಂದ ಹೊರಗೆ ಹೊರಟ ಟ್ರಕ್ ಒಂದರಲ್ಲಿ ಅಡಗಿಸಿ ಬೇರೆ ಕಡೆಗೆ ಸಾಗಿಸಿ ಆಗಲೇ ಮೂರು ತಿಂಗಳಾಗಿದ್ದುವೆಂದು ಪೇಪರುಗಳಲ್ಲಿ ಸುದ್ದಿಯಾದಾಗ ಅಲ್ಲಿಯವರೆಗೂ ಕೋಣೆಯೊಂದರಲ್ಲಿ ಮಂಚದಡಿಗೆ ಮೈ ಮುದುಡಿ ಬಿದ್ದ ಈ ಕ್ಷುಲ್ಲಕ ಜಂತು ಒಮ್ಮೆಲೇ ಬಾಲ ಮೆಟ್ಟಿಸಿಕೊಂಡ ನಾಗರದ ಹಾಗೆ ಪೂತ್ಕರಿಸಿದ್ದು ಕೇಳಿಸಿದಾಗ ತಲೆಯ ಮೇಲೆ ಆಕಾಶ ಕುಸಿಯಿತು. ನಮ್ಮ ಟ್ರಕ್ ಡ್ರೈವರನೇ ವಿಶ್ವಾಸಘಾತ ಮಾಡಿದನೋ, ಅವನಿಗೂ ಗೊತ್ತಿರಲಿಲ್ಲವೋ, ತಿಳಿಯುವ ಉಪಾಯವಿರಲಿಲ್ಲ. +“ನಾನಾಗಲೇ ಈ ಜೋಬದ್ರದ ಅಸ್ತಿತ್ವವನ್ನೇ ಅಲ್ಲಗಳೆಯಲು ನಿರ್ಧರಿಸಿದ್ದೆ. ನದಿಗೆ ಇಲ್ಲ ಅಮುದ್ರಕ್ಕೆ ಒಯ್ದು ನೀರಿನಲ್ಲಿ ಮುಳುಗಿಸುವ ವಿಚಾರ ಬಂದಿತ್ತು. ಧೈರ್ಯವಾಗಲಿಲ್ಲ. ಒಯ್ಯುವಾಗಲೇ ಸಿಕ್ಕುಬಿದ್ದರೆ! ಟ್ರಂಕು ನಾವು ಯಾರೂ ಉಪಯೋಗಿಸದ ಒಂದು ಕೋಣೆಯಲ್ಲಿತ್ತು. ಮಧ್ಯರಾತ್ರಿ ದಾಟಿದ ಹೊತ್ತಿನಲ್ಲಿ ನಾನೊಬ್ಬನೇ ಎದ್ದು ಅದನ್ನು ಎತ್ತಿ ಇಲ್ಲಿಗೆ ತಂದೆ. ಈ ಮೊದಲು ಟ್ರಂಕನ್ನು ಬರೇ ಕಣ್ಣಿನಿಂದ ನೋಡಿದ್ದೆ; ಎತ್ತಿ ನೋಡಿರಲಿಲ್ಲ. ಒಬ್ಬನೇ ಎತ್ತಿ ಇಲ್ಲಿ ತರುವಷ್ಟರಲ್ಲಿ ಸಾಕುಬೇಕಾಯಿತು. ಅದರ ಭಾರ ನೋಡಿದ ಮೇಲೆ ನನಗೆ ಸಂಶಯವುಳಿಯಲಿಲ್ಲ. ಪೇಪರುಗಳಲ್ಲಿ ಸುದ್ದಿ ಮಾಡಿದ ಟ್ರಂಕೇ ಇದು, ದೇವರೇ! ಎಲ್ಲ ಬಿಟ್ಟು ನನ್ನ ಟ್ರಕ್ಕು ಬೇಕಾಯಿತೇ ಇವರಿಗೆ….. +“ಇಷ್ಟು ರಾತ್ರಿಯಲ್ಲಿ ಹೆಂಡತಿ ಮಕ್ಕಳು ಗಾಢನಿದ್ರೆಯಲ್ಲಿರುವರೆಂದು ತಿಳಿದಿದ್ದೆ. ನನ್ನ ದುರ್ದೈವ-ಹೆಂಡತಿಗೆ ಎಚ್ಚರವಿತ್ತೆಂದು ತೋರುತ್ತದೆ. ಅಥವಾ, ನಾನು ಮಾಡಿದ ಸದ್ದಿನಿಂದ ಎಚ್ಚರವಾಯಿತೋ, ಬೆಳಗಾಗಲು ಪುರುಸೊತ್ತಿಲ್ಲ. ಇವಳಿಂದಲೇ ನನ್ನ ತನಿಖೆಗೆ ಶುರು. ಮುಂದೆ ಗೋವಾದಿಂದ ಬಂದ ಟ್ರಕ್ಕುಗಳ ಮಾಲೀಕರ ಗುದಾಮುಗಳ ಮೇಲೆಲ್ಲ ಛಾಪಾ ಹಾಕಿದ ಪೊಲೀಸರು ನಮ್ಮ ಬೆಳಗಾಂವಿನ ಗುದಾಮಿನ ಝಡತಿ ಮುಗಿಸಿ ಇಲ್ಲಿಗೂ ಬಂದಮೇಲಂತೂ ಮುಗಿದೇಹೋಯಿತು. ಅವಳಿಗೆ ದೇವರ ಭಯ. ನನಗೆ ಪೊಲೀಸರ ಭಯ. ಪೊಲೀಸರಿಗೆ ಏನೂ ಸಿಗಲಿಲ್ಲ. ನೆಲಮಾಳಿಗೆವರೆಗೆ ಅವರು ಹೋಗಲೇ‌ಇಲ್ಲ. ಹೋದರೂ ಪತ್ತೆಯಾಗುತ್ತಿರಲಿಲ್ಲ! ಊರಿನಲ್ಲಿ ನನ್ನ ಮಾನ ಕಾಯ್ದುಕೊಳ್ಳುವುದಕ್ಕೆ ಪೊಲೀಸರು ಮತ್ತೆ ಬಾರದ ಹಾಗೆ ಮಾಡಲು ಬಹಳ ಖರ್ಚು ಮಾಡಬೇಕಾಯಿತು. ಆದರೆ ಹೆಂಡತಿಯ ಬಾಯಿ ಮುಚ್ಚಿಸುವುದು ಮಾತ್ರ ನನ್ನಿಂದಾಗಲೇ ಇಲ್ಲ. ನಂದನವನ ಆಗಬಹುದಾದ್ದು ನರಕವಾಯ್ತು. +“ಇವಳದೊಂದೇ ಹಠ. ಆ ಪಾಪದ ವಸ್ತು ನಮಗೆ ಬೇಡ. ನಾನಾಗಿ ಅದನ್ನು ಪೊಲೀಸರ ವಶಕ್ಕೆ ಕೊಡಬೇಕು. ನಾನು ಇದು ಏಕೆ ಸಾಧ್ಯವಿಲ್ಲವೆಂದು ಪರಿಪರಿಯಾಗಿ ತಿಳಿಸಿ ಹೇಳಿದೆ. ಪೊಲೀಸರ ವಶಕ್ಕೆ ಕೊಡುವುದಿದ್ದರೆ ನಾನದಕ್ಕೆ ಕೈ ಹಚ್ಚಲೇಬಾರದಿತ್ತು. ಅಂದರೆ ಮಾತ್ರ ನಾನು ಅವರ ಕಣ್ಣಲ್ಲಿ ನಿರ್ದೋಷಿಯಾಗುತ್ತಿದ್ದೆ. ನಾನು ಇಷ್ಟು ದಿನ ಮನೆಯೊಳಗೆ ಏಕೆ ಅಡಗಿಸಿಟ್ಟೆ? ಕಳಿಸಿದ್ದು ಯಾರು? ಅದರಲ್ಲಿ ಇದ್ದದ್ದು ಏನು-ಇದಾವುದೂ ಗೊತ್ತಿಲ್ಲದೇ ನೀವು ಈ ವಸ್ತುವನ್ನು ಮನೆಯೊಳಕ್ಕೆ ತೆಗೆದುಕೊಂಡಿರಾದರೂ ಹೇಗೆ? ಈ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರವಿರಲಿಲ್ಲ. ಈಗ ಟ್ರಂಕನ್ನು ಪೊಲೀಸರ ಹವಾಲೆ ಮಾಡಿದೆವು ಎಂದೇ ತಿಳಿಯೋಣ. ಪೊಲೀಸರು ಬೀಗ ಒಡೆದು ನೋಡುತ್ತಾರೆ: ಅದರಲ್ಲಿ ಬಂಗಾರವಿಲ್ಲ; ಭಾರವಾದ ಕಲ್ಲುಗಳಿವೆ! ಅಂದರೆ ಕಳ್ಳರೇ ಬಂಗಾರದ ಗಟ್ಟಿಗಳುಳ್ಳ ನಿಜವಾದ ಟ್ರಂಕನ್ನು ನನ್ನ ಟ್ಯಾಕ್ಸಿಗೆ ಸಾಗಿಸಿ, ಅವರಿಗೆ ನಮ್ಮ ಮೇಲೆ ಸಂಶಯ ಬರುವ ಹಾಗೆ ಮಾಡಿರಬಾರದೇಕೆ? ಇದು ಸಾಧ್ಯವೋ ಅಲ್ಲವೋ? ಸಾಧ್ಯ ಹೌದಾದರೆ ಟ್ರಂಕಿನಲ್ಲಿದ್ದ ಕಲ್ಲುಗಳಿಗೆ ಪೊಲೀಸರು ಏನು ಅರ್ಥ ಹಚ್ಚುತ್ತಾರೆ, ಗೊತ್ತಿದೆಯೇ? ನಾನೇ ಟ್ರಂಕನ್ನು ತೆರೆದು ಬಂಗಾರವನ್ನು ಗುಲ್ಲಾ ಮಾಡಿ ಬರೇ ಕಲ್ಲು ತುಂಬಿದ್ದ ನಾಟಕ ಮಾಡುತ್ತಿದ್ದೇನೆ! ನಂಬು ನಾರಾಯಣಾ! ಅವಳು ಎತ್ತಿದ ಆ ಶಂಕೆಗಳಿಗೆ ಲೆಕ್ಕವಿರಲಿಲ್ಲ. ಶಮನಾರ್ಥ ನಾನಿತ್ತ ವಿವರಣೆಗಳಿಗೂ! ಅವಳು ಕೇಳಿದ ಪ್ರತಿ ಪ್ರಶ್ನೆಗೆ ಉತ್ತರ ಕೊಡುತ್ತ ಕೊಡುತ್ತ ಈ ಟ್ರಂಕಿನ ಬಗ್ಗೆ ಕಳ್ಳ ಸಾಗಣೆಯ ಒಳಮರ್ಮಗಳ ಬಗ್ಗೆ ಎಷ್ಟೊಂದು ಕೂಲಂಕುಷವಾಗಿ ವಿಚಾರ ಮಾಡಿದ್ದೆನೆಂದರೆ ನಾನು ನಿಜಕ್ಕೂ ಆ ದಂಧೆಯನ್ನು ಸೇರದ ಹಾಗೆ ದೇವರೇ ನನ್ನನ್ನು ರಕ್ಷಿಸಿರಬೇಕು ಎನ್ನಿಸಿದ್ದುಂಟು. ಇಲ್ಲವಾದರೆ ಈ ದಂಧೆಯಲ್ಲೂ ನಾನೊಬ್ಬ ನಿಸ್ಸೀಮ ನಿಷ್ಣಾತನಾಗುತ್ತಿದ್ದೆ, ಖಂಡಿತವಾಗಿ. +“ನಾವಿತ್ತ ವಿವರಣವೇ ಇವಳಿಗೆ ನನ್ನ ಅಪರಾಧಕ್ಕೆ ಪುರಾವೆಯಾಗಿ ತೋರಿದೆಯೆಂದು ತಿಳಿದಾಗ ನನ್ನ ಸೂಕ್ಷ್ಮ ಮರ್ಮಕ್ಕೆ ತಗಲಿದ ಧಕ್ಕೆ ಅಷ್ಟಿಷ್ಟಲ್ಲ: ‘ಈ ದಂಧೆಯ ಇಷ್ಟೆಲ್ಲ ಸೂಕ್ಷ್ಮಗಳನ್ನು ಬರೇ ಪತ್ರಿಕೆಗಳಿಂದ ಸಂಗ್ರಹಿಸಿರಲಾರಿರಿ, ಅಲ್ಲವೆ?’ ‘ಅಲ್ಲವೆ?’ ಎಂದಾಗ ಅವಳ ದನಿಯೊಳಗಿದ್ದ ಕಟಕಿ ನೀನು ಕೇಳಬೇಕಿತ್ತು! ನಾನು ತಗ್ಗಿದ ದನಿಯಲ್ಲಿ ಮಾತನಾಡಲು ಪ್ರಯತ್ನಿಸಿದಷ್ಟೂ ಅವಳು ದೊಡ್ಡ ದನಿಯಲ್ಲಿ ಮಾತನಾಡಲು ಶುರು ಮಾಡಿದಳು. ‘ದಮ್ಮಯ್ಯಾ ಮಾರಾಯ್ತಿ! ನಿನ್ನ ಕಾಲೂ ಹಿಡಿಯುತ್ತೇನೆ. ಸಾಕು ಮಾಡು. ನಿನಗೆ ನಂಬಿಕೆಯುಳ್ಳ ಯಾವ ದೇವರ ಇದಿರು ಬೇಕಾದರೂ ಆಣೆ ಮಾಡಲು ಸಿದ್ಧನಿದ್ದೇನೆ: ನೀನು ಕಲ್ಪಿಸಿಕೊಂಡಂಥ ಯಾವ ಪಾಪವನ್ನೂ ನಾನು ಮಾಡಿಲ್ಲ. ನನ್ನಂಥ ಪುಕ್ಕನಿಗೆ ಇದು ಸಾಧ್ಯವೂ ಇಲ್ಲ. ಮತ್ತೆಮತ್ತೆ ಪೊಲೀಸರ ಹೆಸರನ್ನು ನನ್ನೆದುರು ಎತ್ತಬೇಡ. ನನಗೆ ಹುಚ್ಚೇ ಹಿಡಿದೀತು. ಇಲ್ಲ ಜೈಲು ವಾಸವಾದೀತು. ಆಳುಕಾಳುಗಳಿದ್ದಾರೆ. ಬೆಳೆಯುವ ಮಕ್ಕಳಿದ್ದಾರೆ. ಅವರ ಕಿವಿಯ ಮೇಲೆ ಬೀಳದಿರಲಿ. ಬೇಕಾದರೆ ಈಗಿನ ದಂಧೆಯನ್ನೂ ಬಿಡುತ್ತೇನೆ. ಇಷ್ಟು ಕಷ್ಟಪಟ್ಟು, ಮೆಹನತ್ತಿನಿಂದ ಗಳಿಸಿದ ಮಾನವನ್ನು ಧೂಳೀಪಟ ಮಾಡಬೇಡ’ ಎಂದು ಅಂಗಲಾಚಿದೆ. ಏನು ಹೇಳಿದಳು ಗೊತ್ತೆ? ‘ನಿಮಗೆ ಜೈಲುವಾಸವಾದರೂ ಅಡ್ಡಿಯಿಲ್ಲ, ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವೆಂದು ತಿಳಿಯುತ್ತೇನೆ. ನನ್ನ ಮಕ್ಕಳು ಇಂಥ ಪಾಪದ ಹಣದ ಮೇಲೆ ದೊಡ್ಡವರಾಗುವುದು ಬೇಡ.’ +“ಇದನ್ನು ಕೇಳಿದಾಗಿನ ನಿಷ್ಠುರ ಫರ್ಮಾನು ಹೊರಡಿಸುವ ಧಾಟಿ ಕೇಳಿದ್ದೇ ನನ್ನೊಳಗಿನ ರಾಕ್ಷಸ ಎದ್ದುಬಂದ ನೋಡ್! ಅಲಲಲ ಕೀಹಾ ಎಂದು ಆರ್ಭಟಿಸಿದ ನೋಡ್! ಇಷ್ಟು ವರ್ಷ ನನ್ನ ಬೆಳಕಾಗಿದ್ದ ಈ ಸುಂದರ ಹೆಣ್ಣು ದಿನಬೆಳಗಾಗುವುದರಲ್ಲಿ ಅಸಹ್ಯ ಅಸಡ್ಡಾಳಳಾಗಿ ನನ್ನ ದ್ವೇಷಕ್ಕೆ ವಸ್ತುವಾದಳು ನೋಡ್! +“ಮುಂದೆ ನನ್ನ ಮನೆಯಲ್ಲಿ ನಡೆದದ್ದು ಎಲ್ಲರಿಗೂ ತಿಳಿದದ್ದೇ. ಬಹಳ ಉತ್ಪ್ರೇಕ್ಷೆಯಿದೆ ಅದರಲ್ಲಿ. ಆದರೂ ನಾನು ತಿದ್ದಲು ಹೋಗಲಾರೆ. ಜನ ನನ್ನನ್ನು ಲಂಪಟನೆಂದರು. ನಿರ್ಲಜ್ಜ ಕಾಮುಕನೆಂದರು. ನನಗೆ ಎಳ್ಳಷ್ಟೂ ಕೆಡುಕೆನಿಸಲಿಲ್ಲ. ಆದರೆ ಹೆಂಡತಿ ನನ್ನನ್ನು ಸ್ಮಗ್ಲರ್ ಎಂದು ಕರೆಯುವುದು ನಿಂತದ್ದು ನೋಡಿ ನಿರಂಬಳವೆನ್ನಿಸಿತು. ಲಂಪಟನೆನ್ನು, ಕಾಮುಕನೆನ್ನು, ಕಳ್ಳನೆನ್ನಬೇಡ-ಎಂದು ಬೇಡುವಂತಿತ್ತು ನನ್ನ ಆಗಿನ ವರ್ತನೆ. ಒಂದೆರಡು ದಿನಗಳ ಕಥೆಯಲ್ಲವಿದು. ನಾರಾಯಣಾ! ವರ್ಷಗಟ್ಟಳೆ ಸಾಗಿದ್ದು. ಹೆಂಡತಿ ನನ್ನ ಈ ಹೊಸ ಅವತಾರ ನೋಡಿ ಅರೆಹುಚ್ಚಿಯಾದಳು. ನಾನೂ ಬದಲಾಗಹತ್ತಿದೆ. ನನ್ನೊಳಗಿನ ಸಾಂತಪ್ಪ ಸಾಯಹತ್ತಿದ. ಅಡಿಗೆ ಮಾಮನ ಮಗನಲ್ಲವೇನೋ ಎಂದು ಹೀಯಾಳಿಸಿದವರಿಗೆಲ್ಲ ತೋರಿಸುತ್ತೇನೆಂದು ಹೇಳಿ ತೀರಾ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋದ ಈ ಸಾದಾಸೀದಾ ಸಾಂತಪ್ಪ ಸೇಠ್ ಶಾಂತಾರಾಮ್ ಆಗಲು ಹೊರಟು, ಈಗ ಕುರೂಪಿ ಹೆಣ್ಣುಗಳ ಬೆನ್ನುಹತ್ತಿದ ಲಂಪಟನೆಂದು ಕರೆಸಿಕೊಳ್ಳುತ್ತ, ತಲೆಮರೆಸಿ ಬದುಕತೊಡಗಿದ್ದ. ಸಾಕಾಯ್ತು! ಈ ರೀತಿ ಬದುಕುವುದಕ್ಕಿಂತ ಮಾಡಿಯೇ ಇರದ ಕಳ್ಳತನದ ಆಪಾದನೆಗೆ ಹೆದರಿ ದೇಶಾಂತರಕ್ಕೆ ಹೊರಟು ಹೋಗಿದ್ದ ಅಪ್ಪನ ಹಾಗೇ ನಾನೂ…..” +ಸಾಂತಪ್ಪ ಮತ್ತೆ ಬಹಳ ಹೊತ್ತಿನವರೆಗೆ ಮಾತನಾಡಲಾರ ಎನ್ನುವಷ್ಟು ಮೌನವಾದ. ನಾವಿಬ್ಬರೂ ಇನ್ನೂ ನೆಲಮಾಳಿಗೆಯ ಮೆಟ್ಟಲುಗಳ ಮೇಲೇ ಕುಳಿತುಳಿದಿದ್ದೆವು. ಅರ್ಧ ತೆರೆದಿಟ್ಟ ಬಾಗಿಲಿಂದ ಬರುತ್ತಿದ್ದ ಧೂಸರ ಬೆಳಕಿನಲ್ಲಿ ಸಾಂತಪ್ಪನ ಮಾತು ಕೇಳುತ್ತಿದ್ದಂತೆ ತೀರ ಅಪರಿಚಿತ ಲೋಕವೊಂದು ಕಣ್ಣೆದುರು ತೆರೆದುಕೊಂಡಾಗ ದಿಗ್ಭ್ರಮೆಗೊಂಡೆ. ಮಧ್ಯಾಹ್ನ ಅಕ್ಕನ ಮಾತು ಕೇಳುತ್ತಿದ್ದಾಗ ಜನಸಮುದಾಯವೊಂದು ಕಟ್ಟಿಕೊಡುವ ವ್ಯಕ್ತಿಯ ಚಿತ್ರದಲ್ಲಿ ವಾಸ್ತವಾಂಶಕ್ಕಿಂತ ಪುರಾಣದ ಅಂಶವೇ ದೊಡ್ಡದಾಗಿದ್ದರೆ ಆಶ್ಚರ್ಯವಲ್ಲವೇನೋ ಎಂದುಕೊಂಡಿದ್ದೆ: ಸಮುದಾಯ ವ್ಯಕ್ತಿಯನ್ನು ಇನ್ನು ಹೇಗೆ ಗ್ರಹಿಸೀತು! ಈಗ ಸಾಂತಪ್ಪನ ಮಾತು ಕೇಳುತ್ತಿದ್ದಂತೆ ವ್ಯಕ್ತಿ ತನ್ನ ಆಂತರ್ಯದ ಪಾತಾಳವನ್ನು ಗ್ರಹಿಸುವುದು ಕೂಡ ಇಂಥ ಪುರಾಣದ ಮೂಲಕವೇ ಎಂದೂ, ಹಾಗೂ ಆ ಪುರಾಣ ಎಷ್ಟೊಂದು ಭಯಾನಕವಾಗಿರಬಲ್ಲುದೆಂದೂ ದಿಗಿಲುಗೊಂಡೆ. +“ಬಗೀಜಾದ ಗಿಡಗಳಿಗೆ ಸಿಂಪಡಿಸುವ ಕೀಟನಾಶಕದ ಕ್ಯಾನ್ ಇತ್ತು ಗರಾಜಿನಲ್ಲಿ. ಯಾರಿಗೂ ಸಂಶಯ ಬರಕೂಡದೆಂದು ಖಾಲಿಯಾದ ವ್ಹಿಸ್ಕಿ ಬಾಟಲಿಯಲ್ಲಷ್ಟು ತುಂಬಿ ವ್ಹಿಸ್ಕಿಯಿಡುವ ಕಪಾಟಿನಲ್ಲಿ ತಂದಿರಿಸಿದ್ದೆ. ವ್ಹಿಸ್ಕಿಯ ಬೇಹೋಷದಲ್ಲಿ ಇದನ್ನು ಕುಡಿದು ಎಲ್ಲವನ್ನೂ ಒಮ್ಮೆಲೇ ಮುಗಿಸಿಬಿಡುವ ವಿಚಾರ ಬಂದಿತ್ತು. ಯಾವುದೋ ಆವೇಶದ ಭರದಲ್ಲಿ ಮಾಡಿದ ವಿಚಾರವನ್ನು ಕೃತಿಗಿಳಿಸಬೇಕು ಎನ್ನುವಾಗ ಮನಸ್ಸು ಹೊಯ್ದಾಡುತ್ತಿತ್ತು. ನನಗಿನ್ನೂ ತುಂಬಿದ ಪ್ರಾಯ ಅವಾಗ, ಏನೆಲ್ಲ ಮಾಡಿ ತೋರಿಸಬೇಕು ಎನ್ನುವ ಹುಮ್ಮಸ್ಸಿತ್ತು: ಮಾಡುವ ಹಿಮ್ಮತ್ತಿತ್ತು. ನನ್ನ ಕಪಾಟಿನಲ್ಲಿಟ್ಟ ಆ ಬಾಟಲಿಯನ್ನು ಯಾರೂ ನೋಡಿಲ್ಲ ಎಂದುಕೊಂಡಿದ್ದೆ. ಯಾರು ನೋಡಿದ್ದರೋ! ಅದು ಹೆಂಡತಿಯ ಕೈಗೆ ಹೇಗೆ ಹೋಯಿತೋ!….” +“ಅಕ್ಕ ಎಲ್ಲ ಹೇಳಿದ್ದಾಳೆ. ಮತ್ತೆ ಬೇಡ. ಸಾವರಿಸಿಕೋ” ಎನ್ನುತ್ತ ಅವನ ಭುಜ ತಟ್ಟಿದೆ. ಮಾತುಮಾತಿನಲ್ಲಿ ಬಂದು ಹೋದ ಅಪ್ಪನ ಬಗೆಗಿನ ವಿವರಗಳಿಂದ ಮನಸ್ಸು ತುಂಬಾ ಮಿದುವಾಯಿತು. “ಮೇಲಿನವರು ನಮ್ಮ ಹಾದಿ ಕಾಯುತ್ತಿರಬಹುದು ಹೋಗೋಣವೇ?” ಎಂದು ಕೇಳಿದೆ. ಕಿವಿಯಲ್ಲಿ ಹಾಕಿ ಕೊಂಡಿರದವನ ಹಾಗೆ- +“ಅವಳು ಕೂಡಾ ತುಂಬಾ ನೋವು ಅನುಭವಿಸಿರಬೇಕು. ಕೊನೆವರೆಗೆ ಅವಳ ಭಯ ನನಗೆ ಅರ್ಥವಾಗದೇ ಹೋಯಿತು. ಬರೇ ಈ ಟ್ರಂಕಿನಲ್ಲಿ ಇದ್ದುದಕ್ಕಷ್ಟೇ ಹೆದರಿರಲಿಲ್ಲ. ಒಟ್ಟೂ ನನ್ನ ದಂಧೆಯ ಭರಭರಾಟೆಗೇ ಹೆದರಿದ್ದಳು. ನಾನು ಗಳಿಸಿದ್ದು ನನ್ನ ಮೆಹನತ್ತಿನಿಂದ: ವಾಮಮಾರ್ಗದಿಂದಲ್ಲ ಎನ್ನುವುದರಲ್ಲಿ ಅವಳಿಗೆ ಕೊನೆವರೆಗೆ ವಿಶ್ವಾಸ ಮೂಡದಾಯಿತು. ಹಾಗೆ ನೋಡಿದರೆ ಬರೇ ಸಾಚಾ ಮಾರ್ಗದಿಂದ ಹಣ ಮಾಡಿದವರು ಯಾರಿದ್ದಾರೆ? ಪ್ರತಿಯೊಂದು ದಂಧೆಗೆ ಅದಕ್ಕೇ ಸೇರಿದ ಕೆಲವು ಖುಬಿಗಳಿರುತ್ತವೆ. ನಾನು ಅವುಗಳ ಹದ್ದು ಮೀರಿಲ್ಲವೆಂದು ತಿಳಿಹೇಳಿದೆ. ಅವಳದು ಪದೇಪದೇ ಒಂದೇ ಮಾತು: “ಶ್ರೀಮಂತಿಕೆ ಒಳ್ಳೆಯದಕ್ಕಲ್ಲ. ನಮಗೆ ಬಹಳ ಹಣ ಬೇಡ. ಬಹಳ ಮೇಲೇರಿದರೆ ಇಳಿಯುವಾಗ ಕಷ್ಟವಾದೀತು.” +“ಈ ಮನೆ ಕೊಂಡಲಾಗಾಯ್ತು ಅವಳ ಭಯ ಇನ್ನಷ್ಟು ಹೆಚ್ಚಾಯಿತೇನೋ. ಈ ಊರಿಗೇ ಬರುವ ಮನಸ್ಸಿರಲಿಲ್ಲ. ನನಗೋ, ನನ್ನ ಕರ್ತುಬುಗಾರಿಯನ್ನು ಇದೇ ಊರಿನಲ್ಲಿ ಮೆರೆಸುವ ಚಾಪಲ್ಯ” ಎಂದವನು ನನ್ನ ಭುಜಬಡೆದು, “ಹೇಳು! ನನ್ನಂಥವನೂ ನಿವೃತ್ತಿಯನ್ನು ಸಹಿಸುವುದು ಸಾಧ್ಯವೆ?” ಎಂದು ಕೇಳಿದ. ಪ್ರಶ್ನೆಯ ತಲೆ-ಬಡ ತೊತ್ತಾಗದೇ ಗೊಂದಲದಲ್ಲಿ ಬಿದ್ದಾಗ, “ಏಳು!” ಎಂದ. “ಇಗೋ, ಈ ಟಾರ್ಚು ಹಿಡಿದು ಬೆಳಕು ಬಿಡು. ನಾನು ದೀಪ ತೆಗೆದು ಕದ ಮುಚ್ಚುತ್ತೇನೆ. ಮತ್ತೆ ತೆರೆಯುವುದು ಯಾವಾಗಲೋ ಅಂದಹಾಗೆ ಶಾಂತಾಳನ್ನು ನೀನು ಸರಿಯಾಗಿ ಭೇಟಿಯಾಗಿಲ್ಲ. ಅವಳ ಅಕ್ಕನ ಪ್ರಕೃತಿಗೆ ಸರೀ ವಿರುದ್ಧ ಪ್ರಕೃತಿಯವಳು. ಮಹಾ ದಿಟ್ಟಳು. ನಿನ್ನ ಬಗ್ಗೆಯೂ ನಾವು ಮಾತನಾಡಲೇ ಇಲ್ಲ. ನೀನು ಹೆಂಡತಿ ಎರಡು ದಿನ ನಮ್ಮಲ್ಲಿ ನಿಲ್ಲಲಿಕ್ಕೆ ಬರುತ್ತೀರೋ ನೋಡಿ.” +“ಇನ್ನೊಮ್ಮೆ ಬಂದಾಗ ನೋಡೋಣ.” +“ನಿನ್ನ ಮರ್ಜಿ. ಇನ್ನೊಮ್ಮೆ ಬಂದಾಗ ಬಹುಶಃ ನಾನು ಈ ಮನೆಯಲ್ಲಿ ಇರಲಾರೆ.” +ಜಿನ್ನೆಯ ಮೆಟ್ಟಿಲು ಏರುತ್ತಿದ್ದಾಗ: “ಆಗ ಶಾಂತಾಳ ಸೌಂದರ್ಯಕ್ಕೆ ಮಾರುಹೋದವನಂತೆ ಕಂಡೆ. ಈಗ ಅಮ್ಮಣಿಯನ್ನು ನೋಡಿದಾಗ ಏನು ಮಾಡುತ್ತೀಯೋ, ನೋಡುತ್ತೇನೆ. ಅಡುಗೆಯ ಕಲೆಯಲ್ಲೂ ನಿಷ್ಣಾತಳು. ಇವತ್ತಿನ ಅಡುಗೆ ಬಹುಶಃ ಅವಳ ಕೈಯಿನದು. ಶಾಂತಾಳ ಊರಿನವಳೇ. ಅಮ್ಮ-ಅಪ್ಪರಿಲ್ಲದ ಅನಾಥೆಯನ್ನು ಶಾಂತಾಳೇ ಇಲ್ಲಿ ತಂದು ದೊಡ್ಡವಳು ಮಾಡಿದ್ದು. ಎಂಥ ದುರ್ದೈವ ನೋಡು. ಇಷ್ಟು ಸಣ್ಣ ಪ್ರಾಯದಲ್ಲೇ ಪಾರ್ಶ್ವ ವಾಯುವಿನ ಹೊಡೆತದಿಂದಾಗಿ ಮೋರೆಯಲ್ಲೊಂದು ಐಬು ಉಳಿದಿದೆ. ನಗುವಾಗ ಮೋರೆಯ ಬಲಭಾಗ ತುಸು ವಿಕೃತಗೊಳ್ಳುತ್ತದೆ. ನೋಡಿ ವಿಚಲಿತನಾಗಬೇಡ. ಆದರೂ ತೋರಿಸಿಕೊಳ್ಳಬೇಡ. ತುಂಬಾ ಸೂಕ್ಷ್ಮ ಬುದ್ಧಿಯ ಹುಡುಗಿ. ಹೆದರಬೇಡ. ಅಷ್ಟೇ ವಿನೋದಿ ಸ್ವಭಾವದವಳು.” +ನಾವು ಆಗಲೇ ಹಾಲಿಗೆ ಬಂದು ಮುಟ್ಟಿದ್ದೆವು. ಮನೆಯೊಳಗಿನ ನಾಲ್ಕೂ ಹೆಂಗಸರು ನಮ್ಮ ಹಾದಿ ಕಾಯುತ್ತಾ ಸೋಫಾದಲ್ಲಿ ಕುಳಿತಿದ್ದರು. ಈ ಮೊದಲು ಶಾಂತಾಳ ಸೌಂದರ್ಯದ ಗಾಂಭೀರ್ಯವನ್ನು ಮೆಚ್ಚಿಕೊಂಡವನು ಈಗ ಅಮ್ಮಣಿಯ ಸೌಂದರ್ಯದ ಅಲೌಕಿಕತೆ ಭುಲ್ಲವಿಸಿದೆ. +“ಕೆಳಗೆ ಹೋಗಿ ಬಂದಿದ್ದರಿಂದ ದಣಿವಾಗಿರಬೇಕು. ಕೆಲ ಹೊತ್ತು ಇಲ್ಲಿ ಕೂತು ವಿರಮಿಸಿ. ಬೇಕಾದರೆ ಕೈ ತೊಳೆದುಕೊಂಡು ಬನ್ನಿ. ಅಮ್ಮಣಿ ಟೊಮ್ಯಾಟೋ ಸೂಪು ಮಾಡಿದ್ದಾಳೆ. ಇಲ್ಲೇ ತರುತ್ತೇನೆ. ಆಮೇಲೆ ಊಟದ ಟೇಬಲ್ಲಿಗೆ ಹೋಗೋಣ. ಆಗದೆ?” ಎಂದು ಕೇಳಿದ ಶಾಂತಾ ಅಮ್ಮಣಿಯ ಜೂತೆ ಅಡುಗೆ ಮನೆಗೆ ಧಾವಿಸಿದಳು. +ಸೂಪು ಸವಿಯುತ್ತ ತೊಡಗಿಸಿಕೊಂಡ ಹರಟೆಗೆ ಕುಮಟೆಯ ಜನರ ವೈಚಿತ್ಯ್ರಗಳು ವಿಷಯವಾದವು. ಶಾಂತಾಳೇ ಚಾಲನೆಯಿತ್ತಳಾದರೂ ಕೆಲ ಹೊತ್ತಿನಲ್ಲೇ ಅಮ್ಮಣಿ ಅದರ ಮುಂದಾಳುವಾದಳು. ಯಾರುಯಾರನ್ನೆಲ್ಲ-ಸಾಂತಪ್ಪನನ್ನೂ ಹೊರತುಪಡಿಸದೇ-ತಮಾಷೆ ಮಾಡುತ್ತ ನಮ್ಮನ್ನೆಲ್ಲ ಹೊಟ್ಟೆ ನೋಯುವಂತೆ ನಗಿಸುತ್ತಿದ್ದ ಹುಡುಗಿ ಸ್ವತಃ ತಾನೇ ಎಷ್ಟು ಮಾತ್ರಕ್ಕೂ ನಗುತ್ತಿರಲಿಲ್ಲ. ನೋಡಿ ತುಸು ಖಿನ್ನನಾದೆ. ಆದರೂ ಅವಳಿಂದಾಗಿಯೇ ಹಾಲಿನಲ್ಲಿ ನೆಲೆಸತೊಡಗಿದ ಪ್ರಸನ್ನತೆಯ ವಾತಾವರಣಕ್ಕೆ ಖುಷಿಪಟ್ಟೆ. ನಾವು ಈ ಮನೆ ಕಂಪೌಂಡನ್ನು ಹೊಕ್ಕಾಗ ಅನುಭವಿಸಿದ್ದಕ್ಕೆ ತೀರ ವ್ಯತಿರಿಕ್ತವಾದ ಭಾವನೆಯಾಗಿತ್ತಿದು. ನನ್ನ ಈಗಿನ ಮೂಡಿನಲ್ಲೇನಾದರೂ ಸಾಂತಪ್ಪ, ಕೆಳಗೆ ಹೋಗಿ ನೋಡಿ ಬಂದಿದ್ದರ ಬಗ್ಗೆ ನನ್ನ ಸಲಹೆ ಕೇಳಿದ್ದರೆ, ನಿಶ್ಚಿತವಾಗಿ ನೆಲಮಾಳಿಗೆಗೆ ಹೋಗುವ ದಾರಿಯನ್ನು ಕಾಯಮ್ಮಾಗಿ ಮುಚ್ಚಲು ಹೇಳುತ್ತಿದ್ದೆ. ನನ್ನ ಸಲಹೆಯನ್ನು ಒಪ್ಪಿಕೊಳ್ಳುತ್ತಿದ್ದನೋ ಇಲ್ಲವೋ, ಆ ಮಾತು ಬೇರೆ. ಅವನಮಟ್ಟಿಗೆ ಈ ನೆಲಮಾಳಿಗೆ ಕೇವಲ ಒಂದು ಮನೆಯ ಭೌತಿಕ ವಿನ್ಯಾಸಕ್ಕೆ ಸೇರಿದ ಬಾಬು ಅಲ್ಲವಾಗಿತ್ತು ತಾನೆ! +– ೫ – +ನಾವು ಮುಂಬಯಿಗೆ ವಾಪಸ್ಸಾಗಿ ಆಗಲೇ ಮೂರು ತಿಂಗಳಾಗುತ್ತ ಬಂದಿತ್ತು. ಈ ಮೂರು ತಿಂಗಳಲ್ಲಿ ಸಾಂತಪ್ಪನ ಬಗ್ಗೆ, ಶಾಂತಾ ಅಮ್ಮಣಿಯರ ಬಗ್ಗೆ, ಕೊನೆಗೂ ಭೇಟಿಯಾಗದೇ ಹೋದ ವಾಸುದೇವನ ಬಗ್ಗೆ ಮಾತನಾಡಿಕೊಂಡ ಸಂದರ್ಭಗಳಿಗೆ ಲೆಕ್ಕವಿರಲಿಲ್ಲ. ಪ್ರತಿಸಾರಿ ನಮ್ಮ ಮಾತು, ಹೇಳಲು ಹೋದರೆ ತೀರ ಅಸಂಗತವಾಗಿ ತೋರುವ-ಕೊನೆವರೆಗೆ ತೆರೆಯದೇ ಉಳಿದ-ಆ ಟ್ರಂಕಿನ ಖಟನೆಗೇ ಬಂದು ಮುಟ್ಟುತ್ತಿತ್ತು. ನಾವೇ ಸಾಂತಪ್ಪನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದೆವೋ ಎನ್ನುವ ಪ್ರಶ್ನೆಗೆ ನಮ್ಮ ಬಳಿ ಉತ್ತರವಿರಲಿಲ್ಲ. ಸದ್ಯ ನಾವು ಆ ಜಾಗದಲ್ಲಿಲ್ಲವಲ್ಲ ಎನ್ನುವ ಹಾರಿಕೆಯ ಅರಿವು ಸಮಾಧಾನ ತರುತ್ತಿರಲಿಲ್ಲ. +ಹಿಗಿರುತ್ತ ಒಂದು ದಿನ ವನಿತಾಳ ಪತ್ರ ಬಂದಿತು. ಪತ್ರ ಸಾಕಷ್ಟು ದೀರ್ಘವಾಗಿದೆ ಎನ್ನುವುದನ್ನು ಲಕೋಟೆಯ ದಪ್ಪವೇ ಹೇಳುತ್ತಿತ್ತು. ವನಿತಾ ಎಂದೂ ಇಷ್ಟು ದಪ್ಪ ಪತ್ರ ಬರೆದವಳಲ್ಲ. ಪತ್ರ ಸಾಂತಪ್ಪನ ಬಗ್ಗೆ ಇದೆ. ಹಾಗೂ ನಾವು ಇತ್ತ ಬಂದಮೇಲೆ ಮತ್ತೇನೋ ನಡೆದಿದೆ-ಎಂಬ ಭಾವನೆಯಿಂದ ಮನಸ್ಸು ಕಳವಳಿಸಿತು. ಒಳಗೆ ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕರೆದು ವನಿತಾಳ ಪತ್ರ ಬಂದ ಸುದ್ದಿ ತಿಳಿಸಿದೆ. ಅವಳು ಹೊರಗೆ ಬಂದ ಮೇಲೇ ಪತ್ರ ತೆರೆದು ಓದಿದೆ. +ನನ್ನ ಭಯ ನಿಜವಾಗಿತ್ತು. ಸಾಂತಪ್ಪ ದೊಡ್ಡ ಸುದ್ದಿ ಮಾಡುವ ರೀತಿಯಲ್ಲಿ ಸತ್ತಿದ್ದ. ದೊಡ್ಡ ಬಂದರಿನ ಅಳವೆಯಲ್ಲಿ ಜಂಗು ಹಿಡಿದ ಟ್ರಂಕ್ ಒಂದನ್ನು ಮುಳುಗಿಸಲು ಹೋಗಿ ಟ್ರಂಕ್ ಸಮೇತ ತಾನೂ ಮುಳುಗಿದ್ದ. ಅಪಘಾತವೋ, ಆತ್ಮಘಾತವೋ, ಅವರವರ ಊಹೆಗೇ ಬಿಟ್ಟು ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ ಒಗಟಾಗಿದ್ದ. ನಸುಕಿನ ಐದು ಗಂಟೆಗೇ ಡ್ರೈವರನನ್ನು ಮನೆಗೆ ಕರೆಸಿದ್ದನಂತೆ. ತಾನಾಗಿಯೆ, ಅಪ್ಪ-ಅಮ್ಮರ ಅಸ್ಥಿಗಳಿವೆ. ಹೊತ್ತು ಮೂಡುವ ಮೊದಲೇ ನೀರಿನಲ್ಲಿ ಮುಳುಗಿಸಬೇಕು, ಎಂದಿದ್ದನಂತೆ. ಕ್ರಿಶ್ಚಿಯನ್ನನಾದ ಡ್ರೈವರನಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು! ಸಮುದ್ರದಂಡೆಗೆ ಹೋದಮೇಲೆ ಡ್ರೈವರನಿಗೆ ಕಾರಿನಲ್ಲೇ ಕುಳಿತಿರಲು ಹೇಳಿ, ತಾನೊಬ್ಬನೇ ಟ್ರಂಕನ್ನು ಮರಳಿನಮೇಲೆ ದರದರನೆ ಎಳೆದುಕೊಂಡು ಹೋಗಿ ಸೀದಾ ನೀರಿನೊಳಕ್ಕೆ ಹೋಗಿಬಿಟ್ಟನಂತೆ. ಅಪಘಾತ ಎನ್ನುವವರು ಜೋಲಿ ತಪ್ಪಿರಬೇಕು ಎನ್ನುತ್ತಾರೆ. ಆತ್ಮಘಾತ ಎನ್ನುವವರು ಈವರೆಗೂ ಹೆಣ ಮೇಲೆ ಬಂದಿರದ್ದನ್ನೇ ಪುರಾವೆ ಮಾಡಿ, ಟ್ರಂಕನ್ನು ಸೊಂಟಕ್ಕೆ ಕಟ್ಟಿಕೊಂಡಿರಬೇಕು; ಪೆದ್ದ ಡ್ರೈವರ್ ನೋಡಿರಲಾರ. ಅಷ್ಟು ನಸುಕಿನಲ್ಲಿ ಹೇಗೆ ಕಾಣಿಸಬೇಕು ಮೇಲಾಗಿ, ಎನ್ನುತ್ತಾರೆ. +ಒಂದು ತಿಂಗಳ ಹಿಂದೆ ನಡೆದ ಅನಾಹುತದ ಆಘಾತದಿಂದ ಶಾಂತಾ, ಅಮ್ಮಣಿ ಈವರೆಗೂ ಚೇತರಿಸಿಕೊಂಡಿಲ್ಲವಂತೆ, ಪಾಪ! ಟ್ರಂಕನ್ನು ನೀರಿನಲ್ಲಿ ಬಿಡುವ ಯೋಜನೆ ಇವರಿಗೆ ಗೊತ್ತಿರಬೇಕು; ಅದಕ್ಕೆ ತೆಕ್ಕೆ ಹಾಕಿಕೊಂಡಿದ್ದ ಇನ್ನೊಂದಲ್ಲ. +ಕುಮಟೆಯಲ್ಲಿ ಸಾಂತಪ್ಪನ ಸಾವಿಗಿಂತ, ಸಾಯುವ ಮೊದಲು ಅವನು ಮಾಡಿದ ಆಸ್ತಿಯ ವಿಲೇವಾರಿಯೇ ಹೆಚ್ಚಿನ ಸುದ್ದಿಯಾದಂತಿತ್ತು. ಅವನ ಮರಣದಿಂದ ಗಾಸಿಗೊಂಡಿದ್ದ ವನಿತಾ-ರಾಮಕೃಷ್ಣರಿಗೆ ಕೂಡ ಈ ವಿಲೇವಾರಿ ತುಸುವಾದರೂ ಸಮಾಧಾನ ತಂದಂತಿತ್ತು: ಪತ್ರದಲ್ಲಿ ಅದರ ವಿವರಗಳೇ ತುಂಬಿದ್ದವು. ತನ್ನ ಬದುಕಿನಲ್ಲಿ ಬಂದ ಹಲವರನ್ನು-ಸಣ್ಣವರು ದೊಡ್ಡವರು ಎನ್ನದೇ-ನೆನೆದಿದ್ದ. ಮೂವರು ಗಂಡುಮಕ್ಕಳನ್ನು ಬಿಟ್ಟು ಪ್ರತಿಯೊಬ್ಬರ ಪಾಲಿಗೆ ಏನಲ್ಲ ಏನನ್ನು ಬಿಟ್ಟಿದ್ದ. ತನ್ನ ಇಬ್ಬರೂ ಮೊಮ್ಮಕ್ಕಳ ಹೆಸರಿಗೆ ಶಿಕ್ಷಣಕ್ಕೆಂದು ಬ್ಯಾಂಕಿನಲ್ಲಿ ತಲಾ ಇಪ್ಪತ್ತೈದು ಸಾವಿರದ ಎಫ್.ಡಿ ಅದಕ್ಕಿಂತ ದೊಡ್ಡ ಮೊತ್ತಕ್ಕೆ ಅವುಗಳ ಅಪ್ಪನೇ ಅಡ್ಡ ಬಂದನಂತೆ. ಸೊಸೆಗೆ ಹೆಂಡತಿ ಬಿಟ್ಟು ಹೋದ ದಾಗಿನೆಗಳೊಳಗಿಂದ ನಾಲ್ಕು ಬಳೆಗಳು, ಒಂದು ಮಂಗಳಸೂತ್ರ. ಇಲ್ಲಿಯೂ ಇದಕ್ಕಿಂದ ಹೆಚ್ಚಿನದಕ್ಕೆ ಗಂಡನೇ ತಾಕೀತು ಮಾಡಿದನಂತೆ. ಬಗೀಜಾದ ಮಾಳಿ, ಚೌಕೀದಾರ್, ಡ್ರೈವರ್, ಹಿಂದೆ ಅಡುಗೆಯ ಕೆಲಸಕ್ಕಿದ್ದ ಹೆಂಗಸರು, ಸಂಸ್ಥೆಯ ಸಿಬ್ಬಂದಿಗಳು ಇತ್ಯಾದಿ-ಇವರಿಗೆಲ್ಲ ರೋಖು ಹಣ. ಶಾಂತಾಳ ಹೆಸರಿಗೆ ಮನೆ, ಬಗೀಜಾ, ಶಾಂತಾಳಿಗೆ, ಅಮ್ಮಣಿಗೆ-ಒಬ್ಬಳಿಗೆ ಸಾವಿರ, ಇನ್ನೊಬ್ಬಳಿಗೆ ಐದುನೂರು ಮಾಶಾಸನ ಸಿಗುವಂತೆ ಬ್ಯಾಂಕ್ ವ್ಯವಸ್ಥೆ. ಉಳಿದೆಲ್ಲ ಹಣ ಯಾವಯಾವ ಸಾಲೆಗಳಿಗೆ, ಕಾಲೇಜುಗಳಿಗೆ, ಆಸ್ಪತ್ರೆಗೆ, ಹೆಂಡತಿಗೆ ವಿಶ್ವಾಸವಿದ್ದ ದೇವಸ್ಥಾನಗಳಿಗೆ ಎಷ್ಟೆಷ್ಟು ಹೋಗಬೇಕು ಎನ್ನುವ ವಿವರಪೂರ್ಣವಾದ ಯೋಜನೆಯನ್ನು ವಕೀಲರ ಕೈಗೆ ಕೊಟ್ಟು, ಅದನ್ನು ಕಾರ್ಯಗತ ಮಾಡುವ ಸಂಪೂರ್ಣ ಅಧಿಕಾರವನ್ನು ಅವರಿಗೇ ಕೊಟ್ಟಿದ್ದನಂತೆ, ಎಂದು ಮುಂತಾಗಿ, +ವಿವರಗಳನ್ನು ಓದುತ್ತಿದ್ದಂತೆ, ‘ನನ್ನಂತಹನೂ ನಿವೃತ್ತಿಯನ್ನು ಸಹಿಸುವುದು ಸಾಧ್ಯವೆ?’ ಎಂದು ಕೇಳಿದ್ದು ನೆನಪಾಯಿತು. ಸಾಯುವುದನ್ನು ನಿಶ್ಚಯಿಸಿಯೇ ಇಷ್ಟೆಲ್ಲವನ್ನೂ ಮಾಡಿರಬೇಕೆಂದು ಅನುಮಾನವಾಯಿತು. ಮತ್ತೆ ಯಾರಿಗೆ ಗೊತ್ತು. ಇಷ್ಟೆಲ್ಲ ವ್ಯವಸ್ಥೆ ಮಾಡಿದಮೇಲೇ ಸಾಯುವ ವಿಚಾರ ಬಂದಿರಲೂಬಹುದು. ಒಂದರ ಬಾಲವನ್ನು ಇನ್ನೊಂದು ನುಂಗುತ್ತ ವೃತ್ತ ಸಣ್ಣದಾಗುತ್ತ ಹೋದಂತೆ, ಒಳಗಿನ ವಿಷದಂತೆ ಹೆಚ್ಚುತ್ತ ಹೋಯಿತು. +ಎಂಥ ಪಾತಾಳಗರಡಿಗೂ ನಿಲುಕದಷ್ಟು ಆಳವಾದ ನೀರಿನ ತಳದಲ್ಲಿ ತಂಗಿದ-ಬೀಗ ಹಾಕಿದ-ಟ್ರಂಕು, ಅದಕ್ಕೆ ತೆಕ್ಕೆ ಬಿದ್ದ ಹೆಣ, ಎರಡೂ ಮನುಷ್ಯಜೀವನದ ಇನ್ನೊಂದೇ ನೆಲೆಗೆ ಸೇರಿದ ನಿಗೂಢಗಳಿಗೆ ಸಂಕೇತಗಳಾಗಿ ಕಣ್ಣೆದುರು ನಿಂತಾಗ ಹಿಂದೆಂದೂ ಅನುಭವಿಸಿರದ ವಿಷಾದವೊಂದು ಅಂತಃಕರಣವನ್ನು ಆವರಿಸತೊಡಗಿತು. +***** +೧೯೯೯ +ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು […] +ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_580.txt b/Kannada Sahitya/article_580.txt new file mode 100644 index 0000000000000000000000000000000000000000..0cf284f9dde1728bc96f6625bd760b0f2ba4c13e --- /dev/null +++ b/Kannada Sahitya/article_580.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಳೆ ಬರುತ್ತಿದೆ. +ಮಳೆ ಮಳೆ ಮತ್ತು ಮಳೆ. +ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ. +ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ ಕಂಡಿದ್ದೀರ? ಇದು ಅಪೂರ್ವ ಮಳೆ. ನಿನ್ನೆ ಬಂದಿರಲಿಲ್ಲ. ನಾಳೆ ಬರುತ್ತದೆಯೇ ಗೊತ್ತಿಲ್ಲ. ನಾಳೆಯೆಂಬುದು ಇದೆಯೇ ನಿಜಕ್ಕೂ?… ಆ ನಾಳೆಯಲ್ಲಿ ನಾನಿರುತ್ತೇನೆಯೇ?…. ಇಲ್ಲದೆಯೂ ಇರಬಹುದು. ಈ ಕ್ಷಣದ್ದಾಗಿರುವುದು ಒಂದೇ. ಪರ್ಜನ್ಯಾನುದಾನುಸಂಧಾನ. +ಮಳೆ ನೀ ಯಾವೂರಿಂದ ಬಂದೆ? +ನಾಳೆಯೆಂಬುದು ಇದೆಯೇ ನಿಜಕ್ಕೂ?… +ಮಳೆ ಮಾತಾಡುವುದಿಲ್ಲ. ಸುರಿಯುವುದೊಂದೇ. ಮಳೆಯ್ +ಏ ನೀನೇಕೆ ಮಾತಾಡುವುದಿಲ್ಲ? ಗುಡುಗುತ್ತದೆ. ಮಿಂಚುತ್ತದೆ. ಧುಮ್ಮಿಕ್ಕುತ್ತದೆ. +ಉತ್ತರವೆಂಬುದು ಯಾವಾಗಲೂ ಮುತ್ತಿನಂತೆ. ತಾಕತ್ತಿದ್ದರೆ ಅಂತರಾಳಕ್ಕಿಳಿಯಬೇಕು. ಮುತ್ತು ಹೆಕಿದಂತೆ ಹೆಕ್ಕಿಕೊಳ್ಳಬೇಕು. ಎಲ್ಲದಕ್ಕೂ ಎಲ್ಲೆಲ್ಲೂ ಉತ್ತರ ಸಿಗುವುದೆಂದರೆ ಹಾದಿ ಬೀದಿಗಳಲ್ಲಿಯೂ ಕಲ್ಲು ಮರಳುಗಳಿವೆಯಲ್ಲ! +ಮಳೆ- +ಮಾತಾಡುವುದಿಲ್ಲ. ಹಾಡುತ್ತದೆ. ಹರಡಿಕೊಳ್ಳುತ್ತದೆ. ಒಳಗೊಂಡು ಒದ್ದಾಡುತ್ತದೆ. ಮತ್ತೆ ಎಲ್ಲಿಗೋ ಹೋಗಿಬಿಡುತ್ತದೆ. ಬಹುಶಃ ಮೋಡ ಕವಿದೆ ಧರಿತ್ರಿಗಳು ಒಂದಲ್ಲ – ಹಲವು. ಮತ್ತೊಮ್ಮೆ ಕಾಣಬೇಕೆಂದರೆ ಕಾಯಬೇಕು. ಕಾದು ಕಾದು ಕಾಯಬೇಕು. ಕರಿಮೋಡದ ಕೊಡೆಯಡಿ. ದಿನಗಟ್ಟಲೆ. +ಸ್ವಾಧಿಷ್ಠಾನ ಚಕ್ರ. ಸ್ಥಾನ ಮೂಲಾಧಾರ ಮತ್ತು ಮಣಿಪುರ ಚಕ್ರಗಳ ನಡುವೆ. ಅಲ್ಲಿನ ತತ್ವ ‘ಅಪ್’- ಎಂದರೆ ಜಲ. ಸಿಂಧೂರ ವರಣದ ಆರು ಎಸಳುಗಳು. ಬೀಜಾಕ್ಷರಗಳು. ಅಲ್ಲಿನ ದೇವತೆ ವರುಣ. ಪ್ರತಿನಿಧಿಸುವ ಲೋಕ ಭುವರ್ಲೋಕ. ಭೌತ ಶರೀರದಲ್ಲಿ ಹೇಳುವುದಾದರೆ ಅದರ ಸ್ಥಾನ ಜನನೇಂದ್ರಿಯ ಮೂಲದಲ್ಲಿ. +…ಅರ್ಥವಾಗುವುದಿಲ್ಲ. +ಅರ್ಥವಾಗುವುದು ಅರ್ಥಮೀರಿದ ಮಳೆಯೊಂದೇ. +ಮಳೆಗೆ ಎಂತಹ ಏಕಾಂತ ದುಃಖಸುಖ ಕಲ್ಪಿಸುವ ಶಕ್ತಿ ಇದೆ! ಮಳೆ ಬಂದಾಗಲೆಲ್ಲ ಕಣ್ಣೀರಿನ ಉಗುರು ಬೆಪ್ಪಿನ ಶಾಖ ಸುಖ ಆಗುತ್ತದೆಯೇ ನಿಮಗೂ? ಪುಟ್ಟ ದಿನಗಳ ಹಾಳೆಹಾಳೆಗಳನ್ನು ಮಡಚಿ ದೋಣಿ ಮಾಡಿ ತೇಲಿ ಬಿಟ್ಟ ನೆನಪು? ಅವು ಕುಣಿಕುಣಿಯುತ್ತ ಕಣ್ಮರೆಯಾಗಿ ಬಿಟ್ಟವು. +ಕುಣಿತ…ಹೊಳಪು ನಯ ಕಾಗದದ ಮೇಲೆ ಚೈತನ್ಯನ ಕೃಷ್ಣ ಸ್ಮರಣೆ ಕುಣಿತ. ಚೈತನ್ಯ ಚರಿತಾಮೃತ. ಓದುವಾಗ ಹೊರಗೇ ಹೀಗೇ ಮಳೆ ಸುರಿಯುತ್ತಿತ್ತು. ಆಗ ಸುಮ್ಮನೆ ಓದಿ ಕೊಂಡದರ ಅರ್ಥ ಈಗ! ಶಬ್ದಗಳು ನೆನಪಿಲ್ಲ. ಚೈತನ್ಯ ದೇವನ ಮುಖ ನೆನಪಿಲ್ಲ. ನೆನಪಿರುವುದು ಕುಣಿಯುವ ಪದಗಳು, ಅವನ ಚಂದ ಕಂಬನಿ ಮತ್ತು ಆ ಪುಟಗಳ ನುಣುಪು. +“ಸ್ಮೃತಿ ಪರಿಶುದ್ಧೌ ಸ್ವರೂಪ ಶೂನ್ಯೇವ ಅರ್ಥ ಮಾತ್ರ ನಿರ್ಭಾಸ ನಿರ್ವಿತರ್ಕಾ…” ಎಮಃಡ ಪತಂಜಲಿ. ಎರಡು ಸಾವಿರದ ವರ್ಷಗಳ ಹಿಂದೆಯೇ. ಹೇಳಿದ್ದು ಮಾತ್ರ ನಿರ್ವಿತರ್ಕ ಸಮಾಧಿಯ ಕುರಿತು… +ರಾತ್ರಿಯಿಡೀ ಸುರಿದು ಬಿಟ್ಟು ಹೋದ ಮಳೆಯ ಬೆಳಗು. +ಮತ್ತು ಬರಿಸುವ ಮಳೆಗತ್ತಲಲ್ಲಿ ಬೆಚ್ಚಗೆ ಎಚ್ಚರಾಗುವ ಬದಲು ಜನ ಹೊದಿಕೆಯೊಳಗಿನ ಕತ್ತಲಾಗಿದ್ದಾರೆ. +ಕಿಟಕಿಯಾಚೆಗೆ ಕಾಣಿಸುವ ಬಟ್ಟೆ ಒಣ ಹಾಕುವ ತಂತಿ ಮೇಲೆ ಹನಿ ಹನಿಗಳು. ಪಿಳಪಿಳನೆ ಎಲ್ಲಿಗೋ ಸಾಲುಗಟ್ಟಿ ಧಾವಿಸುತ್ತಿವೆ. ಅದು ವರ್ಷಾಕಾಲದ ಸಂಭ್ರಮದ ಚಿತ್ತಾರ. ಎಲ್ಲಿಗೆಂತ ಕೇಳಿದರೆ ನಕ್ಕಾವು. ಸಂಭ್ರಮಕ್ಕೆ ದಿಕ್ಕಿದೆಯಂದು ಹೇಳಿದರೆ ಯಾರಾದರೂ ಇದ್ದಾರೆಯೇ ಇವತ್ತಿನವರೆಗೆ? +ಶ್ರವಣತಂತುವನ್ನು ಸ್ಫುಟಗೊಳಿಸಿಕೊಳ್ಳಿ. ನಿಶ್ಯಬ್ದ ಆಲಿಸಿರೆ. ಕೇಳಿಸಿತೆ?… ಸಮುದ್ರ ಮೊರೆತ… ದೂರದಿಂದ? +ಗಾಳಿ ಮೊರೆತ ಮೋಡಗಳು ಮಳೆ ಬಿಸಿಕು ಸೆಖೆ- ಆದರೆ ಸೆಖೆಯಾದಾಗಲೆಲ್ಲ ಮಳೆ ಬರುವುದಿಲ್ಲ. +ಎಲ್ಲ ಮೋಡಗಳೂ ಶ್ಯಾಮಕಾಯಗಳಲ್ಲ. +ಎಲ್ಲ ಮಳೆಯಂತ್ಯಕ್ಕೂ ಸಮುದ್ರ ಮೊರೆಯುವುದಿಲ್ಲ. +ನೆರೆ, ಗುಡಿಸಲು, ಅಕ್ರಂದನ, ಮೌನ, ಸ್ಮಶಾನ… ಮಳೆಯೇ, ನಿಲ್ಲು ನಿಲ್ಲು. +ಬಿರಿದ ನೆಲ, ಹಸಿರೊಣಗಿದ ಮರಗಿಡಗಳು, ಉಸಿರಿಲ್ಲದ ಊರುಗಳು.. ಮಳೆ ಮುಂಜಾವಿನ ಬನಿಯೆದುರು ನಿಂತು ನ್ರೆ ಪ್ರಶ್ನಿಸುತ್ತದೆ. ಮಳೆಯೇ ಹೋಗು ಆ ಕಡೆ. ಉಸಿರು ಒಣಗಿದಲ್ಲಿ. +ಮತ್ಹ್ಟೆ ಬಾ,. ಕಾಯುತ್ತಿರುತ್ತೇನೆ. +ಆದರೆ ಮಳೆ ಕರೆದರೆ ಬರುವುದಿಲ್ಲ. ನಿಲ್ಲೆಂದರೆ ನಿಲ್ಲುವುದಿಲ್ಲ. ಹೋಗೆಂದರೆ ಹೋಗುವುದೂ‌ಇಲ್ಲ! +ಬರುತ್ತದೆ, ನಿಲ್ಲುತ್ತದೆ, ಹೋಗುತ್ತದೆ, ಬರುತ್ತದೆ. ಅದು ಜೀವ ತಂತ್ರ. ಸ್ವತಂತ್ರ. +ದಿನಗಳೆಷ್ಟು ಉರುಳಿದವೋ, ಮಳೆಯಂತೂ ಕೃಶವಾಗಿದೆ. ದೋಣಿ ಬುಡಮೇಲಾಗಿ ವಿಕಾಸಪಥದ ಹಿಮ್ಮುಖ ನಡಿಗೆಯಲ್ಲಿ ಪುನಃ ಪ್ರಕೃತಿ ಸೇರುವ ಹವಣಿಕೆಯಲ್ಲಿದೆ. +ಉಳಿದಿರುವುದು ಸ್ಮೃತಿ ಪರಿಶುದ್ಧವಾದ ಸ್ವರೂಪಶೂನ್ಯವಾದ ಅರ್ಥಮಾತ್ರ ಹೊಳೆವ ಒಂದು ಚಿತ್ತ ಪ್ರತ್ಯಯ ಮಾತ್ರ. +‘ಮಳೆಯೇ ಬಾ’ ಎಂದು ಜಪಿಸುತ್ತ. +ಮಳೆಯೆಂದರೆ +ಮಳೆಯೆಂದರೆ +ಕಣ್ಣೀರ ಸರಳಲ್ಲ ಮಗೂ +ಮರುಳು! +ಮಳೆಯೆಂದರೆ +ಥಂಡಿ ಚಳಿಯೇ ಮಗೂ +ತಳಿಕಂಡಿಯಲಿ ನಿಂತು +ಕಾಯುತಿರು. +ಮಳೆಯೆಂದರೆ +ಮಡಲಮರೆ ಬಿಡು +ನೆನೆ. +ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ! ದಾರಿಯಲ್ಲಿ ಕಾರಿ ನಿಧಾನ ಮಾಡಿದಾಗ ಕಂಡದ್ದು: ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_581.txt b/Kannada Sahitya/article_581.txt new file mode 100644 index 0000000000000000000000000000000000000000..2b55e6f6d61515a09c1f84a08cf3e65f4fe8e92e --- /dev/null +++ b/Kannada Sahitya/article_581.txt @@ -0,0 +1,281 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? +ಕೇಶವ ಕೆಳಗೆ ನೋಡಿದ : ವಿದ್ಯುತ್ತಿನಿಂದ ತುಂಬಿ ತಂಪಾಗಿ ಕಾಣಿಸುವ ಟ್ಯೂಬ್ ಸ್ಟೇಶನ್ನಿನ ರೈಲ್ವೆ ಹಳಿಗಳು. ಧುಮುಕಿದರೆ- +“ಧುಮುಕಿದರೆ ಒಂದು ಕ್ಷಣದಲ್ಲಿ ಸಾವು” ಎಂದು ಸ್ಟೂ‌ಅರ್ಟ್ ಗಡ್ಡವನ್ನು ಕೆರೆದು, ಆಕಳಿಸಿ, “exಛಿuse me” ಎಂದ. +ಓದಿದ್ದರ ನೆನಪು : ಎಲ್ಲ ಅನುಭವದ ಪರಾಕಾಷ್ಠಸ್ಥಿತಿ ಸಾವಿನಂತಿರುತ್ತದೆ. +“ಎರಡನೆಯ ಟ್ರೈನ್ ನಮ್ಮದು.” +ಆರಿದ ಪೈಪನ್ನು ಜೇಬಿನಲ್ಲಿಟ್ಟು ಸ್ಟೂ‌ಅರ್ಟ್ ಕಾದು ಕರೆಕರೆಯಾದ ಧ್ವನಿಯಲ್ಲಿ ಶಪಿಸಿದ. ಪಬ್ಲಿಕ್ ಸ್ಕೂಲಿನಿಂದ ಓದಿ ಬಂದ ಥೇಟು ಅರಿಸ್ಟೋಕ್ರಟಿಕ್ ಲಿಬರಲ್ ಇವ ಅಂಚು ಹೊಲೆಯದೆಹೊಲಿಯದ ಉಲ್ಲನ್ ಟೈ, ಮಾಸಿದ ಗ್ರೇ ಪ್ಯಾನಲ್ ಬ್ಯಾಗ್ಸ್, ಹ್ಯಾರಿಸ್ ಟ್ವೀಡ್ ಜಾಕೆಟ್, ಪೈಪ್, ಉದ್ದಗೆ ಬೆಳೆಸಿದ ಎಣ್ಣೆ ಹಚ್ಚದ ಕ್ರಾಪ್, ಗಡ್ಡ, ನೀಳವಾದ ಶರೀರ ಆದರೆ ತನ್ನದು ತೋರವಾದ ಮಂದವಾದ ಸ್ವರೂಪ. ಬೆತ್ತಲೆ ಸ್ನಾನ ಮಾಡುವಾಗ ಯೂನಿವರ್ಸಿಟಿ ಜಿಮ್‌ನಲ್ಲಿ ನೋಡಿದ್ದಾನೆ: ಭಾರತೀಯ ಯುವಕರಿಗೆಲ್ಲ ಸಾಮಾನ್ಯ ಸೊಂಟದ ಸುತ್ತ ಬೊಜ್ಜು. +ಕೇಶವ ಪ್ಯಾಡಿಂಗ್‌ಟನ್ ಸ್ಟೇಶನ್ನಿನ ಪ್ಲಾಟ್‌ಫಾರಂನ ಮೇಲೆ ಅಡ್ಡಾಡಿದ. ಎಲ್ಲಿ? ಪೌಂಡಿನ ಪಕ್ಕದಲ್ಲೆ?- ಆ ಎರಡು ಸಾಲಿನ ಪದ್ಯ- ಮಂಜು ಮುಸುಕಿದ ಕಂದು ಬೆಳಕಿನಲ್ಲಿ ಈ ಮುಖಗಳು ಒಣಗಿದ ಕೊಂಬೆಗೆ ಬೀಸಿದ ಹೂವಿನ ಪಕಳೆಗಳಂತೆ-ಸ್ಟೂ‌ಅರ್ಟನ್ನ ಕೇಳಿದರೆ ಗೇಲಿ ಮಾಡುತ್ತಾನೆ : ಕೇಶವ್, ನೀವು ಭಾರತೀಯರು ಕಾವ್ಯದಲ್ಲಿ ಓದಿದ್ದನ್ನು ಇಲ್ಲಿ ಖುದ್ದು ಕಾಣಲು, ಹೋಲಿಸಿ ನೋಡಲು ಬರುತ್ತೀರಿ ಇಂಗ್ಲೆಂಡಿಗೆ. ನಿಜ. ಯೂನಿವರ್ಸಿಟಿಗೆ ಹೋಗಿಬರುವಾಗಲೆಲ್ಲ ದಿನವಹಿ ನೋಡುತ್ತಿದ್ದ ಹೂವು ಡಫೊಡಿಲ್ಸ್ ಎಂದು ತಿಳಿದ ಮೇಲೆ ಮಾತ್ರ ವರ್ಡ್ಸ್‌ವರ್ಥ್ ಎಂದು ಮನಸ್ಸಿನಲ್ಲಿ ಬೆಲ್ಲು ಹೊಡೆಯಿತು. ಕೈಕಟ್ಟಿ ನಡೆಯುತ್ತ ಪ್ಲಾಟ್‌ಫಾರಂ ಸುತ್ತ ಕುತೂಹಲದಿಂದ ನೋಡಿದ : ಬೆಂಚು; ಅಡ್ವರ್ಟೈಜ್‌ಮೆಂಟ್ ಪೋರ್ಟರು; ಸಿಗರೇಟಿನ , ಚಾಕಲೇಟಿನ, ಹಾಲು, ಹಣ್ಣಿನ ರಸದ, ಬಿಸಿ ಬಿಸಿ ಕಾಫಿಯ, ಸ್ಲಾಟ್‌ಮೆಶಿನ್; ಬೆಂಚು ಕಾರ್ಪೆಟ್‌ಗಳನ್ನು ಅಡ್ವಟೈಜ್ ಮಾಡುವ ಅರೆಬೆತ್ತಲೆ ಹೆಣ್ಣಿನ ದೇಹದ ಮೇಲೆ ಪೆನ್ಸಿಲ್‌ಗೆರೆಗಳ ವ್ಯಭಿಚಾರ. ಟಟಿಣeಡಿesಣiಟಿg. ಇಂಡಿಯಾದ ಕಾಲೇಜಿನ ಕಕ್ಕಸ್ಸಿನ ಗೋಡೆಗಳು. ಭಾರತೀಯ ಕಾಲೇಜು ವಿದ್ಯಾರ್ಥಿಗಳಷ್ಟು ಅತೃಪ್ತ ತಪ್ತ ಕಾಮಿಗಳು ಜಗತ್ತಿನಲ್ಲಿ ಎಲ್ಲೂ ಇಲ್ಲ. ನನ್ನ ಹಾಗೆ. ಕಾಜೇಜಲ್ಲಿ ಯಾರಾದರೊಬ್ಬ ಹುಡುಗ ಒಂದು ಹುಡುಗಿಯ ಜೊತೆ ಮರದ ಕೆಳಗೆ ಎದುರುಬದುರಾಗಿ ನಿಲ್ಲುವಷ್ಟು ಧೈರ್ಯ ತೋರಿಸಿದನೆಂದರೆ ಸಾಕು : ಅಪ್ರಬದ್ಧಅಪ್ರಬುದ್ಧ ಹುಡುಗರಿದ್ದಿರಲಿ ಎಷ್ಟೊಂದು ಪ್ರಬುದ್ಧ ಲೆಕ್ಚರರುಗಳ ಕಣ್ಣು ಅವನ ಮೇಲೆ. ನನ್ನ ತಮ್ಮ ಪಕ್ಕದ ಮನೆಯ ಹುಡುಗಿಯ ಜೊತೆ ಕಿಟಿಕಿಯ ಮೂಲಕ ಕಣ್ಣಿನ ಸರಸ ನಡೆಸಿದ್ದಾನೆಂದು ತಿಳಿದು ನಾನು ಎಷ್ಟು ರೇಗಿದೆ, ರಂಪ ಮಾಡಿದೆ. +ತೇಗಿದರೆ ಕ್ಷಮಿಸು ಎನ್ನುವ ಈ ಜನ, ಸಾರ್ವಜನಿಕ ಸ್ಥಳಗಳಲ್ಲಿ ಬೆಂಚುಗಳ ಮೇಲೆ- ಆ ಕಡೆಯೇ ನಡೆದ… +ಬೆಂಚೊಂದರ ಮೇಲೆ ಬೀಟಲ್ಸ್ ಕ್ರಾಪಿನ ಒಬ್ಬ ಹುಡುಗ ಕೆಂಪು ಉಡುಪು ತೊಟ್ಟ ಹುಡುಗಿಯೊಬ್ಬಳನ್ನು ಅವಚಿಕೊಂಡು ಅವಳ ಕಿವಿಗಳನ್ನು ಕಡಿಯುತ್ತ ಪಿಸುಗುಟ್ಟುತ್ತಿದ್ದ. ಕೇಶವ ನಿಂತ ಅವಳು ನರಳುತ್ತ ಅವನ ಸೆಟರ್ಸ್ವೆಟರ್ ಒಳಗೆ ಕೈಹಾಕಿ ತಡವಾಡಿದಳುತಡಕಾಡಿದಳು. ಕೇಶವ ಅಲ್ಲಿಂದ ಕಣ್ಣು ಕೀಳಲಾರದೆ ನಿಂತ. ಕನ್ಯಾಮಾಸದಲ್ಲಿ ನಾಯಿಗಳು ಮಾತ್ರ ಹೀಗೆ….ಹುಡುಗಿಯ ಮುಚ್ಚಿದ ಕಣ್ಣುಗಳನ್ನು ಬೆರಳಿನಿಂದ ಅರಳಿಸಿ ನಾಲಗೆಯ ತುದಿಯಿಂದ…..ಕಿಲಕಿಲ ನಕ್ಕು ತಳ್ಳಿದಳು. ಕೇಶವ ಮುಖ ತಿರುಗಿಸಿದ. ಕದ್ದು ನೋಡಿದ. ಕತ್ತರಿಸಿದ ಹಲ್ಲಿಯ ಬಾಲದಂತೊಂದು ವಿಲವಿಲ ಒದ್ದಾಡಿ ನಿಶ್ಚೇಷ್ಟಿತವಾದ ಹಾಗೆ, ಒಳಗಿನಿಂದ ಕಲಸಿದ ಹಾಗೆ. +‘ಖಿhis is ಟಿo ಛಿouಟಿಣಡಿಥಿ ಜಿoಡಿ oಟಜ meಟಿ.’ +” ನನಗೀಗ ವಯಸ್ಸು ಮುವ್ವತ್ತೆರಡು ಸ್ಟೂ‌ಅರ್ಟ್. ತಲೆಗೂದಲು ಹಣ್ಣಾಗುತ್ತಿದೆ. ಯೌವ್ವನದಲ್ಲಿ ಬಾಲ್ಯದಲ್ಲಿ ಇದ್ದ ಬೆರಗು ಉತ್ಸಾಹ ಮಾಯವಾಗುತ್ತಿದೆ. ಒಂದು ಹುಡುಗಿಯ ಕೈಯನ್ನು ಕೂಡ ನಾನು ಮುಟ್ಟಿಲ್ಲ- ಇನ್ನೂ. ಅದಕ್ಕೆ ಏನೆನ್ನುತ್ತಿ?”-ಕೇಶವ ಸ್ಟೂ‌ಅರ್ಟ್‌ಗೆ ಪ್ಯಾಕಿನಿಂದ ಸಿಗರೇಟ್ ಹಿಡಿದ. +“ಥ್ಯಾಂಕ್ಸ್. ಬೇಡ. ನಾನು ಪೈಪನ್ನೇ ಸೇದುತ್ತೇನೆ. ನೀನು ಹೇಳೋದು ನನಗೆ ವಿಚಿತ್ರವೆನ್ನಿಸುತ್ತೆ…..” ಎಂದು ಪೈಪನ್ನು ಹಚ್ಚಿ ಕೇಶವನ ಸಿಗರೇಟು ಹತ್ತಿಸಿ, ನಂತರ ತನ್ನ ಪೈಪನ್ನು ಹೊತ್ತಿಸಿ, ಹೊಗೆಯೆಳೆದು, +“ನೀನು ತುಂಬ ಸಿಗರೇಟ್ ಸೇದುತ್ತಿ ಕೇಶವ” ಎಂದ. ಅವರಿಬ್ಬರ ಐದಾರು ತಿಂಗಳಿನ ಸ್ನೇಹದಲ್ಲಿ ಇದು ಸ್ಟೂ‌ಅರ್ಟ್‌ನ ಮೊದಲನೆ ವೈಯಕ್ತಿಕ ಪ್ರತಿಕ್ರಿಯೆಯಾಗಿತ್ತು. +“ನಾಲಗೆ ಯಾವಾಗಲೂ ಏನನ್ನಾದರೂ ರುಚಿಸುತ್ತಲೇ ಇರಬೇಕು-ಸುಮ್ಮನೆ ಅರ್ಧ ಗಂಟೆ ಕಳೆಯಲಾರೆ; ಯಾರ ಸಂಗದಲ್ಲಾದರೂ ಸದಾ ಇರಬೇಕು-ಒಂಟಿಯಾಗಿ ಏನನ್ನೂ ಮಾಡದೆ, ಸೇದಲು ಸಿಗರೇಟಿಲ್ಲದೆ, ಒಂದು ದಿನ ಕಳೆಯಬೇಕಾಗಿ ಬಂದರೆ ಬಹುಶಃ ನಾನು ಅತ್ಮಹತ್ಯೆಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.” ಕೆಂಪು ಉಡುಪಿನ ಹುಡುಗಿ ಅವಳ ಗೆಳೆಯನ ಮುಖವನ್ನು ಕೈಯಿಂದ ಎತ್ತಿ ಆರಾಧಿಸುವ ಕಣ್ಣುಗಳಿಂದ ನೋಡಿದಳು. +“ಯಾಕೆ” +“ಗೊತ್ತಿಲ್ಲ. ಭಯ-ಒಂದು ರೀತಿಯ ವಿಚಿತ್ರ ದಿಗಿಲು.” +ಧಾವಿಸಿ ಬಂದ ಟ್ರೈನನ್ನು ಹತ್ತಲು ಹೋದ ಕೇಶವನನ್ನು ತಡೆದು “ನಮ್ಮದು ಎರಡನೇ ಟ್ರೈನ್, ಇದಲ್ಲ” ಎಂದ ಸ್ಟೂ‌ಅರ್ಟ್. “ಇದು ನನ್ನ ಮೊದಲಿನ ಟ್ಯೂಬ್ ಪ್ರಯಾಣ” ಎಂದ ಕೇಶವ. +“ಜೀವನದಲ್ಲೊಂದು ಉದ್ದೇಶ ಬೇಕೂಂತ ಅದಕ್ಕೇ ಹೇಳಿದೆ. ಉದ್ದೇಶವಿಲ್ಲದಿದ್ದರೆ…” +“ನನಗೆ ಉದ್ದೇಶದಲ್ಲೂ ನಂಬಿಕೆಯಿಲ್ಲ, ಉದ್ದೇಶಪೂರ್ವಕತೆಯಲ್ಲೂ ನಂಬಿಕೆ ಇಲ್ಲ ಸ್ಟೂ‌ಅರ್ಟ್…” +ಟ್ರೈನಿನ ಬಾಗಿಲುಗಳು ಆಲಿಬಾಬಾನ ಕತೆಯಲ್ಲಿಯಂತೆ ತೆಗೆದುಕೊಂಡವು. ಜನ ಒಳಗೆ ನುಗ್ಗಿದ ಕ್ಷಣ ಮುಚ್ಚಿಕೊಂಡವು. ಸಿಗರೇಟು ಬಿಟ್ಟರೆ ತಿಂಗಳಿಗೆ ಹತ್ತು ಪೌಂಡ್ ದುಡ್ಡನ್ನು ಉಳಿಸಬಹುದು. ಹತ್ತು ಪೌಂಡ್ ದುಡ್ಡನ್ನು ಕಾಳಸಂತೆಯ ಆ ಪಂಜಾಬಿಗೆ ಕೊಟ್ಟರೆ ಇಂಡಿಯಾದಲ್ಲಿರುವ ತಾಯಿಗೆ ಅವನು ಇನ್ನೂರು ರೂಪಾಯಿ ಕೊಡಿಸುತ್ತಾನೆ. ಒಂದು ತಿಂಗಳ ಜೀವನಕ್ಕೆ ಅದು ಅವರಿಗೆ ಸಾಕಾಗುತ್ತೆ. ಬಡತನ, ರಗಳೆ, ತಂಗಿಯರ ಮದುವೆಯ ಚಿಂತೆ ತೀರಲು ಮೊದಲಿನ ಹೆಜ್ಜೆ-ನಾನು ಸಿಗರೇಟ್ ಬಿಡೋದು. ಆದರೆ ಬಿಡಲಾರೆ. ‘ನಾನು ಸತ್ತಿದ್ದೇನೋ ಬದುಕಿದ್ದೇನೋ ಎಂದು ನೀನು ಚಿಂತಿಸುವುದು ಬೇಡ, ಈ ಮನೆಯನ್ನು ನಾನು ತ್ಯಜಿಸಿದ್ದೇನೆ’ ಎಂದು ಮಾಧು ಬರೆದಿದ್ದಾನೆ. ನನ್ನ ಒಟ್ಟು ಜೀವನದ ಮೇಲೆ ಹೀಗೆ ಅವನು ತೀರ್ಪು ಕೊಟ್ಟಿದ್ದಾನೆ. ಆದರೆ ಇವತ್ತು ಆ ರಗಳೆ ಬೇಡ, ಎಲ್ಲವನ್ನೂ ಮರೆಯಲೆಂದು ಸ್ಟೂ‌ಅರ್ಟ್ ಜೊತೆ ಲಂಡನ್ನಿಗೆ ಬಂದಿದ್ದೇನೆ…. +“ಕೊನೆಯ ಪಕ್ಷ ಕ್ಯಾನ್ಸರ್ ಬರುತ್ತದೆಂಬ ಭಯದಿಂದಲಾದರೂ ಸಿಗರೇಟ್ ಬಿಟ್ಟರೆ….” ತನ್ನೊಳಗೇ ಚಿಂತಿಸುತ್ತಿರುವಂತೆ ಸ್ಟೂ‌ಅರ್ಟ್ ಮಾತಾಡಿದ. +“ಹಾಗೆ ನಾವು ಏನನ್ನೂ ಬಿಡಲ್ಲ ಸ್ಟೂ‌ಅರ್ಟ್-ನೀನು ನಿನ್ನ ಕೈಯಲ್ಲಿ ಹಿಡಿದುಕೊಂಡಿರೋದು ಒಂದು ಸರ್ಪ ಅಂತ ಗೊತ್ತಾದರೆ ಏನು ಮಾಡ್ತಿ ಹೇಳು? ರಪ್ ಅಂತ ಅದನ್ನ ಅಲ್ಲೆ ಎಸೆದುಬಿಡ್ತಿ ಅಲ್ವ? ಧರ್ಮಸಂಕಟ, ಒಳತೋಟಿ, ಸರಿ ತಪ್ಪುಗಳ ಹೋರಾಟ ಇತ್ಯಾದಿಗಳ ನಂತರ ಒಂದು ತೀರ್ಮಾನಕ್ಕೆ ಬರೋದಿಲ್ಲ ಅಲ್ವ? ಹಾಗೆ ಬರಬೇಕು ಜ್ಞಾನ, ಆತ್ಮಜ್ಞಾನ.” +“ಆತ್ಮಜ್ಞಾನ, ಆತ್ಮವಿಮರ್ಶೆಯ ಶಕ್ತಿ ತಿಳುವಳಿಕೆಯಿಂದ, ಸಂಸ್ಕೃತಿಯಿಂದ ಬರುತ್ತೇಂತ ನಾನು ತಿಳಿದಿದ್ದೇನೆ ಕೇಶವ್…” +“ತಪ್ಪು. ಇಕೊ ನನಗೆ ಆತ್ಮಜ್ಞಾನ, ಆತ್ಮವಿಮರ್ಶೆಯ ಶಕ್ತಿ ಇದೇಂತ ತಿಳಕೊಂಡಿದೀನಿ. ಆದರೆ ಈ ಆತ್ಮಜ್ಞಾನಾನೂ ನಾನು ಮೊದಲೇ ನಿಶ್ಚಿತ ಮಾಡಿಕೊಂಡ ಆತ್ಮದ ಜ್ಞಾನ. ಮನೇಲಿದ್ದಾಗ ಒಂದೊಂದು ಸಾರಿ ಮನಸ್ಸು ಮಾಡ್ತಾ ಇದ್ದೆ: ಹೀಗೆ ನಾನು ಗೋಗರೆಯೋದು, ಅಮ್ಮನ ಮೇಲೆ, ನನ್ನ ತಮ್ಮಂದಿರ ಮೇಲೆ ಸದಾ ರೇಗ್ತ ಪರಚಿಕೊಂಡಿರೋದು, ನನಗೆ ವಿಪರೀತ seಟಜಿ-ಟove ಇರೋದರಿಂದ, ಇದು ತಪ್ಪು-ನನ್ನ ಜೀವನದ ತುಂಬ ವಿಷಾನ ತುಂಬಿಕೊಳ್ತಿದೀನಿ ಅಂತ. ಅಬ್ಬಬ್ಬ ಅಂದರೆ ಒಂದು ವಾರ ಎಲ್ಲ ಸರಿಯಾಗಿ ನಡೀತಾ ಇತ್ತು. ಆದರೆ ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೆ ಸಾಕು ನನ್ನ ಸ್ವಭಾವ ಮತ್ತೆ ಹೆಡೆಯೆತ್ತಿ ಬುಸ್ ಅಂತಾ ಇತ್ತು. ಅದಕ್ಕೇ ಕೈಯಲ್ಲಿರೋದು ಸರ್ಪ ಅಂತ ತಿಳಿದವನ ಉದಾಹರಣೆ ಕೊಟ್ಟೆ. ಆತ್ಮಜ್ಞಾನ ಗಕ್ಕನೆ ಬರಬೇಕು. ಜೀವ ಮಗುಚಿಕೊಂಡು ಹೊಸದಾಗೋದು ಹಾಗೆ. ಇಲ್ಲದಿದ್ದರೆ ನಾವು ಸದಾ ಪೂರ್ವನಿಶ್ಚಿತವಾದದ್ದರ ಸುತ್ತ ಸುತ್ತುತ್ತಿರುತ್ತೇವೆ. ಆತ್ಮಜ್ಞಾನ ಅನ್ನೋ ಭ್ರಮೇಲಿ ತೊಳಲ್ತಿರ್ತೇವೆ. ಅದಕ್ಕೇ ನನಗೆ ಉದ್ದೇಶದಲ್ಲಿ, ಉದ್ದೇಶಪೂರ್ವಕತೇಲಿ ನಂಬಿಕೆಯಿಲ್ಲಾಂತ ಅಂದೆ. ಎಲ್ಲ ಉದ್ದೇಶಾನೂ ಪೂರ್ವನಿಶ್ಚಿತವಾದದ್ದು….ನನ್ನ ಭಾಷಣಾನ್ನ ಕ್ಷಮಿಸು. ಇಂಡಿಯನ್ನರು ನಿರರ್ಗಳ ಮಾತಿನಲ್ಲಿ ಜಾಣರು”-ಥಟ್ಟನೆ ತೀರಾ ವೈಯಕ್ತಿಕವಾದ ತನ್ನ ಅನುಭವದ ಕಡೆ ಚರ್ಚೆಯನ್ನು ಹರಿಸಿದ್ದಕ್ಕೆ ಸಂಕೋಚ ಸ್ವಭಾವದ ಇಂಗ್ಲಿಷ್‌ಮನ್ ಏನೆಂದುಕೊಂಡಿರಬಹುದೆಂದು ಕುತೂಹಲದಿಂದ ಕೇಶವ ಸ್ಟೂ‌ಅರ್ಟ್‌ನನ್ನು ನೋಡಿದ. +“ಖಿhಚಿಟಿಞs ಜಿoಡಿ ಣhe ಚಿಜviಛಿe” ಎಂದು ಸ್ಟೂ‌ಅರ್ಟ್ ಲಿಟರ್ ಬಾಕ್ಸ್ ಹತ್ತಿರ ಹೋಗಿ ತನ್ನ ಪೈಪನ್ನು ಎಸೆದು ಬಂದು-“ನನ್ನ ನಾಟಕೀಯತೆಯನ್ನು ಕ್ಷಮಿಸು” ಎಂದ. +“ಈಗ ನಿನಗೆ ಪೈಪ್ ಬಗ್ಗೆ ಅನ್ನಿಸಿರೋ ಹಾಗೆ ನನಗೆ ಅನ್ನಿಸಿರೋದನ್ನ ನಾನು ಮಾಡೋದಾದ್ರೆ-ಒಂದೋ ಆ ಕೆಂಪು ಡ್ರೆಸ್ ಹಾಕಿ ಕೂತಿದಾಳಲ್ಲ ಅಲ್ಲಿ ಆ ಹುಡುಗೀನ ಅವಚಿಕೊಂಡು ಮುತ್ತು ಕೊಡಬೇಕು; ಅಥವಾ ಈ ನಗ್ನ ಹಳಿಗಳ ಮೇಲೆ ಧುಮುಕಬೇಕು” +ಎಂದು ಕೇಶವ ನಕ್ಕ. ಇನ್ನೊಂದು ಸಿಗರೇಟನ್ನು ಹಚ್ಚಿ, ಬಹಳ ದಿನದಿಂದ ತಾನು ಯೋಚಿಸಿದ್ದಕ್ಕೆ ಮಾತು ಹುಡುಕುತ್ತ, +“ನನಗೊಬ್ಬ ಚಿಕ್ಕಪ್ಪನಿದ್ದ. ಒಂದು ದಿನ ಅವ ಮನೆ ಮಠ ಎಲ್ಲ ಬಿಟ್ಟು ಬದರಿಕಾಶ್ರಮಕ್ಕೆ ತಪಸ್ಸಿಗೆ ಹೋದ…. ನಿನ್ನ ರೀತಿ ಬೇರೆ; ನೀನು ಇಂಗ್ಲೆಂಡಿನ ಸಭ್ಯ ನಾಗರಿಕತೆಯ ಅತ್ಯುತ್ತಮ ಫಲ-ನನ್ನ ಚಿಕ್ಕಪ್ಪ ಭಾರತೀಯ ನಾಗರಿಕತೆಯ ಅತ್ಯುತ್ತಮ ಫಲವಿದ್ದ ಹಾಗೆ, ಒಬ್ಬ ಸಂತ, ಇನ್ನೊಬ್ಬ ಸಭ್ಯ, ಸಭ್ಯ ತನ್ನ ಜೀವನದ ಓರೆ-ಕೋರೆಗಳನ್ನು ತಿದ್ದಿಕೊಂಡು ಬಾಳನ್ನು ಒಂದು ಹದ್ದಿನಲ್ಲಿ, ಕೌಶಲ್ಯದಲ್ಲಿ ನಡೆಸಿಕೊಂಡು ಹೋಗ್ತಾನೆ….ನಾನು ಹೇಳ್ತಿರೋದು ನನಗೇ ಇನ್ನೂ ತಿಳಿಯಾಗಿಲ್ಲ….ಆದರೂ ಇಷ್ಟು ಅನ್ನಿಸುತ್ತೆ: ನೀನು ಸಭ್ಯ, ಅವನು ಸಂತ, ನಾನು…..” +“ನೀನು?” ಎಂದು ಸ್ಟೂ‌ಅರ್ಟ್ ನಗುತ್ತ “ಔh! I miss mಥಿ ಠಿiಠಿe” ಎಂದ. +“ನಾನು ಜೀವನದಲ್ಲಿ ಯಾವ ಕೌಶಲವೂ ಇರದ, ಸಂಪೂರ್ಣ ಸ್ವಭಾವಗತನಾದ. ಸಭ್ಯನೂ ಆಗಿರಲಾರದ, ಸಂತನೂ ಆಗಿರಲಾರದ, ತಪ್ತ” ಎಂದು ಕೇಶವ ಸಿಗರೇಟನ್ನೆಳೆದು ಹೊಗೆ ಬಿಡುತ್ತ, +“ಒಂದು ಸಿಗರೇಟ್ ತಗೋ” +ಎಂದು ಸ್ಟೂ‌ಅರ್ಟ್‌ಗೆ ಕೊಟ್ಟು, ಕಡ್ಡಿ ಗೀರಿ, ಹತ್ತಿಸಿದ. ಸ್ಟೂ‌ಅರ್ಟ್ ಮೌನವಾಗಿರಲು ಬಯಸುತ್ತಿರಬಹುದೆಂದು ಅವನ ಮುಖದ ಭಾವನೆಯಿಂದ ಅರಿತು ಕೇಶವ ಧುಮುಕಿ ಬರುತ್ತಿದ್ದ ಮಾತುಗಳನ್ನೆಲ್ಲ ನುಂಗಿಕೊಂಡ. +* +* +* +ಅಮ್ಮ ಹೇಳಿದ ಹಾಗೆ ಕೇಳಿ, ಸ್ವಂತ ಅಕ್ಕನ ಮಗಳು ಭಾಗೀರತಿಯನ್ನು ಮದುವೆಯಾಗಿ, ನಾಲ್ಕು ತಂಗಿಯರಿಗೂ ವರ ಹುಡುಕಿ ಮದುವೆ ಮಾಡಿಸಿ, ಆದ ಸಾಲವನ್ನು ಟ್ಯೂಶನ್ನಿನಿಂದ, ಪರೀಕ್ಷೆಯ ಹಣದಿಂದ ತೀರಿಸಿ, ಪ್ರಜಾಯೈ ಗೃಹಮೇಧಿನಾಂ ಎಂದು ಭಾಗೀರತಿಯಿಂದ ಸುಪುತ್ರರನ್ನು ಪಡೆದು- ಥತ್ ಅದು ಜೀವನ ಅಲ್ಲ- ಅಲ್ಲ. ಜೊತೆಗೆ ಅಮ್ಮನ ಮೇಲೆ ರೇಗ್ತ, ತಮ್ಮಂದಿರ ಜೊತೆ ಕಾದಾಡ್ತಾ, ಬೆಳೆದು ನಿಂತ ತಂಗಿಯರು ಬೀದಿ ಕಣ್ಣಿಗೆ ತುತ್ತಾಗ್ತ ಮನೆ ಹಾಳಾಗೋದು- ಅದೂ ಅಲ್ಲ. ಈಗ ಮಾಧು ಹೆಸರಿಸಿದಂತೆಹೆದರಿಸಿದಂತೆ ಆತ್ಮಹತ್ಯೆ ಮಾಡಿಕೊಂಡು, ಅಮ್ಮ ಆ ದುಃಖದಲ್ಲೆ ಸತ್ತು, ನಾನು ಊರಿಗೆ ಮರಳಿದಾಗ ತಂಗಿಯರು ಪೋಲಿ ಪೋಕರಿಗಳ ಸ್ವತ್ತಾಗಿ- ಅಂಗಳ ಸಾರಿಸದೆ, ಹೊಸಲಿಗೆ ರಂಗವಲ್ಲಿ ಇಲ್ಲದೆ, ದೇವರ ಕೋಣೆಯಲ್ಲಿ ದೀಪವಿಲ್ಲದೆ ಸೂತಕದ ಮನೆಯಂತೆ ಬಿಕೊ ಎಂದರೆ…. +“ಏನು ಯೋಚಿಸ್ತಿದ್ದೀ ಕೇಶವ್, ಅಷ್ಟೊಂದು ಗಾಢವಾಗಿ? ಇಗೋ ನಮ್ಮ ಟ್ರೈನ್” ಎಂದ ಸ್ಟೂ‌ಅರ್ಟ್. ಬಾಗಿಲುಗಳು ತೆರೆದುಕೊಂಡವು. ಅವರು ನಿಂತಲ್ಲಿನ ಗಾಡಿಯ ಗಾಜಿನ ಕಿಟಕಿಯ ಮೇಲೆ ಕೆಂಪಕ್ಷರದಲ್ಲಿ ‘ಟಿo smoಞiಟಿg’ ಎನ್ನುವ ಬೋರ್ಡ್ ಇದ್ದುದರಿಂದ ಓಡಿ ಇನ್ನೊಂದು ಡಬ್ಬಿಯ ಎದುರು ನಿಂತು ಜನರೆಲ್ಲರೂ ಇಳಿದ ಮೇಲೆ ಹತ್ತಿಕೊಂಡರು. ಬಾಗಿಲು ಮುಚ್ಚಿಕೊಂಡಿತು. ಎರಡು ಕ್ಷಣದಲ್ಲಿ ಕತ್ತಲೆಯ ಬಿಲ ಹೊಕ್ಕರು. ನ್ಯೂಸ್ ಪೇಪರಿಗೆ ಕಣ್ಣು ಹತ್ತಿಸಿ ಕೂತಿದ್ದ. ಆಯಾಸದಿಂದ ಕಣ್ಣು ಮುಚ್ಚಿದ್ದ, ತಮ್ಮ ಉದ್ಯೋಗದಿಂದ ಮರಳುತ್ತಿದ್ದ ಮುಖಗಳನ್ನು ಕೇಶವ ನೋಡಿದ- ಇವರು ಎಲಿಯಟ್ಟನ ಕಾವ್ಯದ ವಸ್ತುಗಳು. ಗಾಡಿಯ ಒಳಗಿದ್ದ ಅಡ್ವರ್ಟೈಜ್‌ಮೆಂಟುಗಳನ್ನೆಲ್ಲಾ ಒಂದು ಕಡೆಯಿಂದ ಓದುತ್ತ ಬಂದ ಈ ಹಣ್ಣಿನ ರಸ ಕುಡಿದು ತೆಳ್ಳಗಾಗು, ವಾಲ್ಸ್ ಸಾಸೇಜುಗಳನ್ನೇ ತಿನ್ನು, ಒಲಿಸಿಕೊಳ್ಳುವ ಗಂಡಸರೆಲ್ಲ ಬರ್ಟನ್‌ನಲ್ಲಿ ತಯಾರಾದ ಸೂಟುಗಳನ್ನು ಹಾಕಿಕೊಳ್ಳುತ್ತಾರೆ…. +“ರಷ್ಯಾದಲ್ಲಿ ಈ ರೀತಿಯ ಅಡ್ವರ್ಟೈಸ್‌ಮೆಂಟಿನ ಬದಲು ಕಮ್ಯೂನಿಸಂ ಪ್ರಚಾರದ ಬೋರ್ಡ್‌ಗಳಿರಬಹುದು ಅಲ್ಲವೇ ಸ್ಟೂ‌ಅರ್ಟ್? ಪಾರ್ಟಿ ಸೇರು, ಯುವಕರ ಮುಂದಾಳು ಆಗು, ಚಂದ್ರಲೋಕಕ್ಕೆ ಬಾ….” +“ಉದ್ದೇಶ ಮನುಷ್ಯನಿಗೆ ಮುಖ್ಯಾಂತ ಅದಕ್ಕೇ ಹೇಳಿದೆ ಕೇಶವ್. ಆದರೆ ನಾನು ಹೇಳಿದ್ದನ್ನ ನೀನು ಒಪ್ಪಲ್ಲ. ಕಮ್ಯೂನಿಸಂ ಒಂದು ಉದ್ದೇಶ. ಕ್ಯಾಥಲಿಕ್ ಧರ್ಮ ಇನ್ನೊಂದು ಉದ್ದೇಶ. ನಾನು ಈ ಎರಡನ್ನೂ ಒಪ್ಪಲ್ಲ. ಆದರೆ ಗುರಿಯಿಲ್ಲದೇ ಇರೋಕ್ಕಿಂತ ಈ ಸಾಸೇಜು ತಿಂದು, ಹಣ್ಣಿನ ರಸ ಕುಡಿದು, ಈ ಬರ್ಟನ್ ಸೂಟ್ ಧರಿಸಿ, ಅದಕ್ಕಾಗಿ ದುಡೀತ, ಹೀಗೆ ಪಾತಾಳದಿಂದ ಮೇಲಕ್ಕೆ, ಮೇಲಿನಿಂದ ಪಾತಾಳಕ್ಕೆ ಸಂಚರಿಸ್ತ ಇರೋದಕ್ಕಿಂತ ಯಾವುದಾದರೂ ಒಂದು ಉದ್ದೇಶ ಇರೋದು ಮುಖ್ಯ.” +ಇಲ್ಲಿ ಕೂತಿರೋ ಈ ಜನ ಅಸುಖಿಗಳೂಂತ ನಿಂಗೆ ಹೇಗೆ ಗೊತ್ತು ಹೇಳು? ನೀನು ನಿನ್ನ ದೃಷ್ಟಿಯಿಂದ ಅವರ ಜೀವನ ಸಫಲವೊ ವಿಫಲವೊ ಅಂತ ಹೇಳಬಹುದೇ ಹೊರತು ಅವರಿಗೆ ಅವರ ಜೀವನದಿಂದ ಸುಖ ಸಿಕ್ತೆ ಸಿಗಲಿಲ್ಲವೆ ಅಂತ ಹೇಳೋಕೆ ಆಗಲ್ಲ ಅಲ್ವೆ? ಸುಖ ಅಸುಖ ಅನ್ನೋದು ಈ ಘಳಿಗೇಲಿ ಅನ್ನಿಸೋದು; ಸಫಲ ವಿಫಲ ಅನ್ನೋದು ಭೂತಭವಿಷ್ಯದಿಂದ ಅಳೆದು ನೋಡೋದು. ಭೂತ ಭವಿಷ್ಯಾನ್ನ ಚಿಂತೆ ಮಾಡದವನಿಗೆ ಸುಖ ಅಸುಖ ಮಾತ್ರ ಇದೆ, ಫಲದ ಪ್ರಶ್ನೆ ಇಲ್ಲ. ಇಲ್ಲಿ ಇಷ್ಟು mess ಮಾಡ್ತಿರೋದು ನನ್ನ ನಿನ್ನಂಥವರು.” +“ನೆನಪು, ಕಲ್ಪನೆ ಎನ್ನೋ ಎರಡು ಪ್ರವೃತ್ತಿ ಮನಸ್ಸಿಗೆ ಇರೋವರೆಗೆ, ಕಲ್ಪನೆ ನೆನಪಿನ ಇನ್ನೊಂದು ಬೆಳವಣಿಗೆ ಆಗಿರೋವರೆಗೆ, ಮನುಷ್ಯನಿಗೆ ಭೂತ ಭವಿಷ್ಯದಿಂದ ಬಿಡುಗಡೆಯೇ ಇಲ್ಲ ಕೇಶವ್. ರಕ್ತದ ಬಿಸಿ ಕಡಿಮೆಯಾದಂತೆ ಭೂತ ಭವಿಷ್ಯದಿಂದ ಬಿಡುಗಡೆಯೇ ಇಲ್ಲ ಕೇಶವ್. ರಕ್ತದ ಬಿಸಿ ಕಡಿಮೆಯಾದಂತೆ ಭೂತ ಭವಿಷ್ಯ ಕಾಡಿಯೇ ತೀರತ್ತೆ. ಒಂದು ಸಿಗರೇಟ್ ಕೊಡ್ತೀಯ? ಇಳಿದ ಮೇಲೆ ಕೊಡುತ್ತೇನೆ.” +“ಔh! ಜoಟಿ’ಣ boಣheಡಿ” ಎಂದು ಕೇಶವ ಅವನಿಗೆ ಸಿಗರೇಟನ್ನಿತ್ತು, “ಉದ್ದೇಶಾನ್ನೊದು ಒಲ್ದ್ ಅಗೆ ಗಾಗಿ ಮಾಡುವ ಒಂದು ರೀತಿಯ sಚಿviಟಿgs ಇದ್ದ ಹಾಗೆ ಅನ್ನು. ನನ್ನ ಮಟ್ಟಿಗೆ ಹೇಳೋದಾದ್ರೆ ನನಗೆ ಅನ್ನಿಸೋದೂ ನಿನಗೆ ಅನ್ನಿಸೋ ಹಾಗೇನೆ. ಆದರೆ ನನಗೆ ಅನ್ನಿಸೋದು ಸರೀಂತ ಅನ್ನೊ ನಂಬಿಕೆ ನನಗಿಲ್ಲ.” +ಟ್ರೈನ್ ನಿಂತಿತು. “ನಾವು ಇಲ್ಲಿ ಇಳಿಯೋದಲ್ಲ” ಎಂದು ಸ್ಟೂ‌ಅರ್ಟ್ ಕೇಶವನನ್ನು ತಡೆದ. ಅವರ ಗಾಡಿಗೆ ಜನ ತುಂಬಿದ್ದರಿಂದ ಸೀಟುಗಳೆಲ್ಲ ತುಂಬಿ ಕೆಲವರು ನಿಲ್ಲಬೇಕಾಗಿ ಬಂತು. ಕೇಶವ ಸ್ಟೂ‌ಅರ್ಟ್ ಎದ್ದು ಇಬ್ಬರು ಮುದುಕಿಯರಿಗೆ ತಮ್ಮ ಸೀಟ್ ಬಿಟ್ಟರು. ಎದುರಿಗೆ ನಿಂತ ಹುಡುಗಿಯ ಕೋಳಿ-ಜುಟ್ಟಿನಂತಹ ಕೂದಲಿನ ವೈಖರಿಯನ್ನ ಗಮನಿಸುತ್ತ ಕೇಶವ ನಿಂತ. +ಈ ಹುಡುಗಿಯರು ಸರಿ : ನನ್ನ ತಂಗಿಯರ ಹಾಗಲ್ಲ, ಒಂಟಿಯಾಗಿ ಓಡಾಡ್ತಾರೆ, ಕೆಲಸ ಮಾಡ್ತಾರೆ, ತಮ್ಮ ಹುಡುಗನನ್ನು ತಾವೇ ಆರಿಸಿಕೊಂಡು ಮದುವೆಯಾಗ್ತಾರೆ. ನಮ್ಮ ಹುಡುಗಿಯರೋ?-ಅವರ ನಾಚಿಕೆಯೇನು, ಅವರ ಸೇಳೆಯೇನು, ಮೊಲೆಯಮೇಲೆ ಸೀರೆಯ ಸೆರಗನ್ನು ಎಳೆದುಕೊಳ್ಳುತ್ತ ಅವರ ಬಿಂಕ ಬಡಿವಾರ ವಯ್ಯಾರಗಳೇನು. ಈ ಹುಡುಗಿಯರು ಮೊಲೆಗಳನ್ನು ಧ್ವಜದಂತೆತ್ತಿ ತಮ್ಮ ಮೋಹಕತೆಯನ್ನು ಸಾರುತ್ತಾ ನಡೆಯುತ್ತಾರೆ. ನೇರ, ನಿರ್ಭಯ. ನಮ್ಮ ದೇಶದಲ್ಲಿ ಮಧ್ಯಮ ಶ್ರೀಮಂತ ವರ್ಗದ ಹುಡುಗಿಯರಿಗೆ ಅವರ ಅಂಗಾಂಗಗಳು ಹುದುಗಿಸಿಟ್ಟ ಬ್ರಹ್ಮಾಸ್ತ್ರ. ನನ್ನ ತಂಗಿಯರು ಯಾಕೆ ಮನೆಯವರನ್ನು ಹೀಗೆ ಪೀಡಿಸಬೇಕು, ತಮ್ಮ ಗಂಡನ್ನು ತಾವೇ ಹುಡುಕಿ ಯಾಕೆ ಮದುವೆಯಾಗಬಾರದು ಎನ್ನಿಸಿದ್ದುಂಟು. ಆದರೆ ಅದು ಬರಿ ಅನ್ನಿಸಿಕೆಯಷ್ಟೆ: ಹಾಗೇನಾದರೂ ಅವರು ನಡೆದರೆ ಮೊದಲು ರೇಗುವವನು ತಾನು. ಪ್ರತಿ ಭಾರತೀಯ ಯುವಕನೂ ಮನೆಯಲ್ಲಿ ಸನಾತನಿ, ಮನೆಯ ಹೊರಗೆ ಕ್ರಾಂತಿಜೀವಿ. ಈಗ ಸ್ಟೂ‌ಅರ್ಟ್‌ನ ಜೊತೆ ಆಡುತ್ತಿರುವ ಮಾತುಗಳು: ಒಂದು ರೌರವ ನರಕದ ಮೇಲೆ ಕಟ್ಟುವ ತತ್ವಗಳ ಮನೆ. ಭಾಗೀರಥಿಯನ್ನು ಮದುವೆಯಾಗಿ ನಿಷ್ಕಾಮದಲ್ಲಿ ಮಕ್ಕಳನ್ನು ಹುಟ್ಟಿಸಲೆ? ಅಮ್ಮ ತನ್ನ ಮೊಮ್ಮಗಳನ್ನು ತಾರೀಪು ಮಾಡುತ್ತಾಳೆ: ‘ಅವಳಿಗೆ ಏನಾಗಿದೆಯೋ, ಕಣ್ಣು ಮೂಗು ನೇರವಾಗಿದೆ, ಕೆಂಪಗಿದ್ದಾಳೆ, S.S.ಐ.ಅ ಓದಿದಾಳೆ, ಬೇಕಾದರೆ ಮುಂದಕ್ಕೆ ಓದಿಸಂತೆ. ನಾನೇನು ಬೇಡಾಂತ ಅನ್ನಲ್ಲ. ಮನೆಗೆಲಸ ವೈನಾಗಿ ನೋಡಿಕೊಂಡು ಹೋಗ್ತಾಳೆ. ನನಗೂ ವಯಸ್ಸಾಗ್ತ ಬಂತಪ್ಪ, ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲಾಂತ, ನೀನೇ ದಾರಿ ಹಾಕಿ ಕೊಡದಿದ್ದರೆ ಹೇಗೋ?” ಭಾಗೀರಥಿ ಮನೆಗೆ ಬಂದರೆ- ಆರು ಜನ ತಮ್ಮ ತಂಗಿಯರ ಕೂಡ- ನನಗೆ ಸಿಡಿಸಿಡಿ. ಇದಕ್ಕಿಂತ ದೊಡ್ಡ ಪ್ರಶ್ನೆ ನನಗೆ ಸದ್ಯಕ್ಕೆ ನನ್ನ ತಮ್ಮ ಮಾಧುವಿನದ್ದು: ಅವನ ಜೊತೆ ನಾನು ಸರಿಯಾಗಿ ನಡಕೊಂಡೆನೆ? ಅವನಂತೂ ..ಐ.ಅ ಗೆ ವಿದ್ಯೆ ಮುಗಿಸಿ ಹಾಳಾದ. ಕಿರಿಯವ ಸುಧೀಂದ್ರನಾದರೂ ಮುಂದೆ ಬಂದಾನೆಂದರೆ, ಅವನು ಬಿ.ಎಸ್‌ಸಿ.ಯಲ್ಲಿ ಗಸನಿಮಹಮ್ಮದ್ ದಂಡಯಾತ್ರೆ ನಡೆಸಿದ್ದಾನೆ. ಸಾಯಂಕಾಲ ಇಸ್ತ್ರಿ ಮಾಡಿದ ಪ್ಯಾಂಟ್ ಹಾಕಿ, ಕೆಂಪು ಟೈಕಟ್ಟಿ ವಾಕಿಂಗ್; ಹೋಟೆಲಲ್ಲಿ ಬೈಟು ಮಸಾಲೆ, ಬೈಟು ಕಾಫಿ; ಇಸ್ಪೀಟಿನಲ್ಲಿ ಕಾಸಾದರೆ ಸಿನಿಮಾ; ರಾತ್ರೆ ಹತ್ತು ಗಂಟೆಗೆ ಹಿಂದಕ್ಕೆ ಮನೆಗೆ- ಅಮ್ಮ ಸಾರಿಸದೆ, ಮುಸುರೆ ತೊಳೆಯದೆ ಕಾದಿರಬೇಕು… “ಕೆಲಸಕ್ಕೆ ಬಾರದ ಈ ಠೊಣೆಯರಿಗೆ ನೀನು ಯಾಕೆ ಕಾದಿದ್ದು ಬಡಿಸಬೇಕು ಅಮ್ಮ? ನೀನಷ್ಟು ಹೇಳಬಾರ್ದಾ ಅವರಿಗೆ? ಸಾಯಂಕಾಲ ಆಯ್ತೂ ಅಂದ್ರೆ ತಿಂಗ್ಳಿಗೊಂದು ಐವತ್ತು ರೂಪಾಯಿ ಹೆಚ್ಚಿಗೆ ದುಡಿಯೋದಕ್ಕೇಂತ ನಾಲ್ಕು ಬ್ಯಾಚಿಗೆ ನಾನು ಟ್ಯೂಶನ್ ಹೇಳಿ ಇಲ್ಲಿ ಸಾಯಬೇಕು ಯಾಕೆ? ಈ ಅನಿಷ್ಟಗಳ ಹೊಟ್ಟೆ ತುಂಬಿಸೋಕ್ಕ?” +ಅಮ್ಮ ಬಡಿಸುವ ಪಾತ್ರೆಗಳನ್ನ ಎದುರಿಗಿಟ್ಟುಕೊಂಡು ತಲೆಯ ಮೇಲೆ ಕೈಹೊತ್ತು ಮೌನವಾಗಿ ಕೂತಿರುತ್ತಾಳೆ. ಇಬ್ಬರು ತಮ್ಮಂದಿರೂ ಕಲಸಿದ ತುತ್ತನ್ನು ಎತ್ತದೆ ಕತ್ತು ಬಗ್ಗಿಸಿ ಕೂರುತ್ತಾರೆ. ಅವರಿಗೆ ತಾವು ಅಪರಾಧಿಗಳು ಎನ್ನಿಸುವವರೆಗೆ ಕೇಶವನಿಗೆ ಸಮಾಧಾನವಿಲ್ಲ. ಕಣಜದಂತೆ ಮೈಯೆಲ್ಲ ಕೋಪ ಹರಿದು ಉರಿಯಾಗಿ, ಬಿಸಿಯಾಗಿ, ತುರಿಕಜ್ಜಿಯಾಗಿ, ಇನ್ನಷ್ಟು ಮತ್ತಷ್ಟು ಕೋಪ ಕಡುಕೋಪವಶನಾಗಬೇಕೆಂದು ಒಳಗಿನಿಂದ ಹಂಬಲವಾಗಿ; ಕೋಪದ ಮತ್ತು ನೆತ್ತಿಗೇರುವಂತೆ ತಾಯಿ ಏನಾದರೂ ಹೇಳಬಾರದೆ, ಮಾಧು ಎದುರು ಬಿದ್ದು ಮಾತಾಡಬಾರದೆ ಎನ್ನಿಸಿ; ಪ್ರಚೋದಿಸಲು ತನ್ನ ಶಬ್ಧಕೋಶಶಬ್ದಕೋಶದಿಂದ ಅತಿ ಅವಾಚ್ಯವನ್ನು ಹುಡುಕುತ್ತ ಮಾತಾಡುತ್ತಾನೆ. ಅಮ್ಮ ಮಾತಾಡದೆ ನಿಟ್ಟುಸಿರಿಟ್ಟರೆ, ಮಾಧುವಿನ ಕಣ್ಣಲ್ಲಿ ನೀರು ತುಂಬಿ ಅವನು ಊಟದಿಂದ ಎದ್ದರೆ ಅತ್ಯಂತ ನಾಚಿಕೆಯಾಗಿ, ನಿರಾಸೆಯಾಗಿ-ಕೈ ತೊಳೆಯುತ್ತಿರುವ ಮಾಧವನ ಬಳಿಗೆ ಹೋಗಿ- “ನೀನು ಊಟ ಮಾಡಬಾರದ? ಊಟವನ್ನು ಬಿಟ್ಟು ನನ್ನ ಮೇಲೆ ರಚ್ಚು ತೀರಿಸಿಕೊಳ್ಳಬೇಕ?” ಎನ್ನುತ್ತಾನೆ. ಕೋಪ ಆತ್ಮಮರುಕವಾಗಿ, ಸರ್ಪ ಸಿಂಬಳದ ಹುಳುವಾಗಿ, ಕಜ್ಜಿ ಕೀವಾಗುತ್ತದೆ. ಒಮ್ಮೊಮ್ಮೆ ತಾಯಿ : “ಯಾಕೆ ಕೆಟ್ಟ ಮಾತಾಡ್ತೀಯ? ಎಲ್ಲ ಘಳಿಗೇನೂ ಒಂದೇಸಮ ಇ‌ಅರಲ್ಲಇರಲ್ಲ. ಇದು ವಿಷಘಳಿಗೇ ಇರಬಹುದು. ಕೆಟ್ಟದ್ದು ಬಯಸಿ ಮಾತಾಡ್ಬಾರ್ದು. ಒಳಿತು ಎನ್ನು” ಎನ್ನುತ್ತಾಳೆ. ದೇವರಿಗೆ ಕಾಣಿಕೆ ಹಾಕಿ ತುಪ್ಪದ ದೀಪ ಹಚ್ಚುತ್ತಾಳೆ. ಅಥವಾ ಮಾಧವ- “ಆ ಹಾಳು ಫ್ಯಾಕ್ಟರೀಲಿ ನಾನು ಶೂದ್ರ ಮಕ್ಕಳ ಹಾಗೆ ದುಡೀಲಾರೆ ಗೊತ್ತಾಯ್ತ? ನಂಗದು ಒಗ್ಗಲ್ಲ. ನಿಂಗೇನು ಹೇಳು? ಎಂ.ಎ., ಓದಿ ಕಾಲೇಜು ಲೆಕ್ಚರರ್ ಆಗಿದೀಂತ ಕೊಬ್ಬು. ಅಪ್ಪ ನಿಂಗೆ ಮಾಡಿದಷ್ಟು ನಂಗೆ ಮಾಡಲಿಲ್ಲ….ನೀನು ನನ್ನ ಅಣ್ಣಾಂತ ನಿನ್ನ ಮನೇಲಿ ಊಟ ಮಾಡ್ತೀನಿ. ಇಷವಿಲ್ಲದೇಇಷ್ಟವಿಲ್ಲದೇ ಇದ್ರೆ ಹೇಳು….ಹೊರಟು ಹೋಗ್ತೀನಿ” ಎನ್ನುತ್ತಾನೆ. +“ನಾನು ನಾನು ನಾನು…” ಮುಷ್ಟಿ ಕಟ್ಟಿ ಮುಂದೆ ನುಗ್ಗಿ ಮಾತು ಧಾರಾಕಾರವಾಗಿ ಸುರಿಯುತ್ತದೆ. “ನಿಮ್ಮ ಹಾಗೆ ಪೋಲಿ ಅಲೀಲಿಲ್ಲ….ನಾನು ನಿಮಗೆ ಮಾಡಿದಷ್ಟು ಅಪ್ಪ ನಂಗೆ ಮಾಡಲಿಲ್ಲ….ಬಿಟ್ಟಿ ಹಾಸ್ಟಲಲ್ಲಿದ್ದು, ಕಕ್ಕಸ ಬಾಚಿ, ನೆಲ ಒರೆಸಿ ಓದಿ ಮುಂದೆ ಬಂದೆ…”- ಎಲ್ಲ ಕಹಿಯೂ ಹೊರಗೆ ಬರುತ್ತದೆ. ಹೀಗಾದ ದಿನ ಕೇಶವನಿಗೆ ಕೋಪದ ದೀಪಾವಳಿ; ಯಕ್ಷಗಾನದ ರಾವಣನ ಬಣ್ಣ ವೇಷಗಳು ಇಲ್ಲದಿರುವುದೊಂದು ಕೊರತೆಯಷ್ಟೆ. ಒಳಗಿನಿಂದೊಂದು ಆಸೆ- ಕಾಮದಂತಹ ಪ್ರಬಲವಾದ ಆಸೆ-ಸಫಲವಾದಂತಾಗಿ, ಕೊನೆಗೆ ಸುಸ್ತಾಗಿ, ಒಂದು ರೀತಿಯ ಸುಖದಲ್ಲೊ, ಶೂನ್ಯದಲ್ಲೊ ಮತ್ತನಾದಂತೆ ಕೂರುತ್ತಾನೆ. ರೋಷವೊಂದೇ ತನಗೆ ಇತ್ತೀಚೆಗೆ ಪಡೆಯಲು ಸಾಧ್ಯವಾದ ತೀವ್ರ ಭಾವನೆಯೆಂದು ಥಟ್ಟನೆ ಎನ್ನಿಸಿ ದಿಗಿಲಾಗುತ್ತದೆ. +“ನಾವು ಬೇಕರ್‌ಲೂ ಲೈನಲ್ಲಿ ಕೂತಿದ್ದೇವೆ. ಇದು ಬೇಕರ್ ಸ್ಟ್ರೀಟ್ ಸ್ಟೇಶನ್” ಎಂದು ಸ್ಟೂ‌ಅರ್ಟ್ ಹೇಳಿದ. ಗಾಡಿ ಖಾಲಿಯಾದ್ದರಿಂದ ಇಬ್ಬರೂ ತಮ್ಮ ಸೀಟಿಗೆ ಮರಳಿದರು. ಸ್ಟೂ‌ಅರ್ಟ್ ನಿಂತು ಪ್ರಯಾಣ ಮಾಡುತ್ತಿದ್ದಾಗ ತನ್ನ ಯೋಚನೆಯನ್ನು ಮುಂದುವರೆಸುತ್ತಿದ್ದನೆಂದು ಕೇಶವಿಗೆಕೇಶವನಿಗೆ ಅನ್ನಿಸಿತು. ಬಿಟ್ಟ ಜಾಗದಿಂದ ಮತ್ತೆ ಹೊರಟ: +“ನಾನು ಉದ್ದೇಶದ ಮಾತು ಯಾಕೆ ಎತ್ತಿದೇಂದರೆ ಈ ದೇಶದಲ್ಲಿನ ಜನ ತಮ್ಮದೇ ಆದ ಒಂದು ಸ್ವಾರ್ಥದ ಪುಟ್ಟ ಲೋಕದಲ್ಲಿ ಇದ್ದುಬಿಡ್ತಾರೆ. ಸಮಷ್ಟಿ ಕುಟುಂಬಗಳಿರುವ ನಿನ್ನಂತಹ ದೇಶದಲ್ಲಿ ಇನ್ನೂ ವ್ಯಕ್ತಿ ಸಮಾಜಗಳ ನಡುವೆ ರಕ್ತಸಂಬಂಧ ಉಳಿದಿದೆ. ಆದರೆ ನಮ್ಮಲ್ಲಿ ನೋಡು: ಹದಿನಾರನೆ ವರ್ಷಕ್ಕೆ ಒಬ್ಬ ಹುಡುಗ ದುಡಿಯೋಕ್ಕೆ ಪ್ರಾರಂಭಿಸುತ್ತಾನೆ; ಹದಿನೆಂಟಕ್ಕೆ ಮದುವೆಯಾಗ್ತಾನೆ. ಉದ್ಯೋಗ ಸೊರೀದಿದ್ದರೆದೊರೀದಿದ್ದರೆ ಅವನಿಗೆ ನಿರುದ್ಯೋಗ- ವೇತನ ಸಿಗತ್ತೆ. ಮುದುಕರಾದ ಅಪ್ಪ ಅಮ್ಮನ್ನ ನೋಡಿಕೋಬೇಕು, ಯೌವನದಲ್ಲಿ ವೃದ್ಧಾಪ್ಯದ ಅನುಭವದ ಜೊತೆ ಸಂಬಂಧ ಬೇಕು ಅನ್ನಿಸೋ ಒತ್ತಾಯ ಇಲ್ಲ. ಅಪ್ಪ ಅಮ್ಮನನ್ನು ನೋಡಿಕೊಳ್ಳೋ oಟಜ ಠಿeoಠಿಟes home ಇದ್ದಾವೆ- ಒಟ್ಟಿನಲ್ಲಿ ಜೀವನಾನ್ನ ಪಕ್ವಮಾಡುವ ಚಿಂತೆ ಒತ್ತಡ ಇಲ್ಲ. ಹೈರ್ ಪರ್ಚೇಸಿನಲ್ಲಿ ಅವನ ಹೆಂಡತಿ ಮನೆಗೆ ಬೇಕಾದ ಟಿ. ವಿ. ಹೂವರ್ ಮ್ಯಾಟಿಕ್ ಮಾಶಿಂಗ್ ಮಿಶಿನ್, ಪ್ರಿಜಿಡೈರ್ ಕೊಳ್ಳುತ್ತಾಳೆ. ಈತ ಒಂದು ಕಾರ್ ಕೊಳ್ಳುತ್ತಾನೆ. ಸಾಯಂಕಾಲ ತಾವು ನಿತ್ಯ ಹೋಗುವ ಪಬ್ಬಿಗೆ ಹೋಗಿ ಒಂದೆರಡು ಗಂಟೆ ತನ್ನಂತೆ ಬದುಕುವ ಇನ್ನೂ ಕೆಲವರ ಜೊತೆ ಹರಟೆ ಹೊಡೆದು, ಮನೆಗೆ ಬಂದು ಟೆಲಿವಿಜನ್ ನೋಡಿ, ವರ್ಷಕ್ಕೊಮ್ಮೆ ಹಾಲೆಂಡಿಗೆ ಹೋಗಿ ಬೀಚಿನ ಮೇಲೆ ಅರ್ಧನಗ್ನರಾಗಿ ಸಹಸ್ರ ಜನರ ಜೊತೆ ಮಲಗಿ, ಮೈಯನ್ನು ಟ್ಯಾನ್ ಮಾಡಿಕೊಂಡು….ಇದನ್ನ ಜೀವನಾಂತೀಯ? ಇವರಿಗೂ ಇಟ್ಟು ಜೀವನಕ್ಕೂ ಏನು ಸಂಬಂಧ? ನನ್ನ ಜೀವನಾನೂ ಇದಕ್ಕಿಂತ ಬೇರೆಯಲ್ಲ ಕೇಶವ್. ಜೀವನದಲ್ಲಿ ತಿಕ್ಕಾಟ ಬೇಕು, ಬಿರುಸು ಬೇಕು, ಸುಖ ದುಃಖ ಬೇಕು- ಸಲೀಸಾಗಿ ಜಾರಿಬಿಡೋದಿಲ್ಲ. ಔh! I ಚಿm boಡಿeಜ, ಣeಡಿಡಿibಟಥಿ. ಇಂಗ್ಲೇಂಡಿನಲ್ಲಿ ಜೀವವಿಲ್ಲ- ಈ ಸುಖೀ ಸಮಾಜದಲ್ಲಿ ಜೀವನಕ್ಕೊಂದು ಉದ್ದೇಶ ಇಲ್ಲ. ನೀನು ಹೇಳ್ತಿ- ನಿನ್ನ ಜೀವನ ಬಡತನದ ವಿರುದ್ಧ ಹೋರಾಡೋದರಲ್ಲೆ ವ್ಯಯವಾಯಿತು, ಕಾಮದ ಅನುಭವವಿಲ್ಲದೆ ಮುರುಟಿತೂಂತ. ನನ್ನನ್ನೆ ತಗೊ ಕೇಶವ್: ನನಗೆ ಬಡತನದ ಅನುಭವ ಇಲ್ಲ; ಹಸಿವೆಂದರೆ ಏನೂಂತ ಗೊತ್ತಿಲ್ಲ; ಹದಿನಾರನೇ ವರ್ಷದಿಂದ ಈ ವರೆಗೆ ಹೆಣ್ಣು ಬೇಕೂಂತ ಅನ್ನಿಸಿದಾಗೆಲ್ಲ ಹೆಣ್ಣಿನ ಸುಖ ಅಲಭ್ಯ ಅಂತ ಅನ್ನಿಸಿದ್ದಲ್ಲಅನ್ನಿಸಿದ್ದಿಲ್ಲ- ಸಂತಾನನಿರೋಧ ಎಲ್ಲರಿಗೂ ಗೊತ್ತಿರೊ ಈ ದೇಶದಲ್ಲಿ ಹುಡುಗಿಯರ ಜೊತೆ ಮಲಗೋದು ಭಯದ ವಿಷಯವಲ್ಲ. ಎಲ್ಲ ಆಯಿತು- ತಿಂದೆ, ಉಂಡೆ, ಮಲಗಿದೆ, ಸಂಭೋಗಿಸಿದೆ, ಇನ್ನಷ್ಟು ತಿಂದೆ, ಮಲಗಿದೆ, ಸಂಭೋಗಿಸಿದೆ- ಆಮೇಲೆ? ಬದುಕಿನಲ್ಲಿ ಇನ್ನು ಯಾವ ಣhಡಿiಟಟ ಇದೆ?” +“ನಿನ್ನ ಕಂಡರೆ ನನಗೆ ಅಸೂಯೆಯಾಗ್ತಾ ಇದೆ ಸ್ಟೂ‌ಅರ್ಟ್” ಕೇಶವ ನಗುತ್ತ ಹೇಳಿದ. +“ಈ ಗಾಡೀಲಿ ಕೂತಿರೋ ಜನರನ್ನ ನೋಡು. ನಮ್ಮ ಸಮಾಜದ ಒಂದು ಚ್ರೊಸ್ಸ್ ಸೆಚ್ತಿ‌ಒನ್ಕ್ರಾಸ್ ಸೆಕ್ಷನ್ ಇಲ್ಲಿದೆ. ಬೌಲರ್ ಹ್ಯಾಟ್, ಪಿನ್‌ಸ್ಟ್ರೈಪ್ ಕಪ್ಪು ಸೂಟ್ ಹಾಕಿ ‘ಖಿimes’ ಓದ್ತಾ ಕೂತಿರೋ ಆತ ಬ್ಯಾಂಕಿನಲ್ಲೋ ಸರ್ಕಾರಿ ಉದ್ಯಮದಲ್ಲೊ ಇರಬೇಕು. ಅವನು ‘ಇsಣಚಿbishmeಟಿಣ ನ ಸೇರಿದಾತ. ಕ್ರೀಂ ಹಾಕಿ ಕೂದಲನ್ನ ನುಣ್ಣಗೆ ಮೇಲಕ್ಕೇರಿಸಿ ಕಾಲರಿಲ್ಲದ ಜಾಕೆಟ್ ಧರಿಸಿಕೊಂಡು ಕೂತಿರೋ ಆತ ತಿoಡಿಞiಟಿg ಛಿಟಚಿss ನಲ್ಲಿ ಹುಟ್ಟಿದ ಡ್ಯಾಂಡಿ- ಎಲ್ಲೊ ಸೇಲ್ಸ್‌ಮನ್ ಆಗಿದಾನೆ. ಈ ಕಿರಿನಗುವಿನ ಕೂದಲಿಗೆ ಕೆಂಪು ಬಣ್ಣ ಹಾಕಿದ ಹುಡುಗಿ ಬಹುಶಃ Woಟಟತಿoಡಿಣh ನಲ್ಲಿ ಸೇಲ್ಸ್ ಗರ್ಲ್- ಪ್ರಾಯಶಃ ಠಿiಛಿಞ-uಠಿ giಡಿಟ ಆ ಇನ್ನೊಬ್ಬಳ ಮುಖ ನೋಡಿದರೇ ಗೊತ್ತಾಗುತ್ತೆ- ಅವಳು sಣeಟಿo ಣಥಿಠಿisಣ ಅವರು ಉಪಯೋಗಿಸೋ ಸೆಂಟ್‌ನಿಂದ ಹೇಳಬಹುದು- ಯಾವ ವರ್ಗದವಳು, ಯಾವ ರುಚಿಯವಳು, ಅಂತ. ವರಮಾನ, ಸ್ಥಾನ, ನೋಡಿ ಅವಳು ಮದುವೆಯಾಗ್ತಾಳೆ. sಟim ಆಗಿರಲು ನಿತ್ಯ ವ್ಯಾಯಾಮ ಮಾಡ್ತಾಳೆ. ಸಂಜೆ ಫ್ರೆಂಚ್ ಕಲೀತಾಳೆ. ಫೋನ್‌ನಲ್ಲಿ ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡಿ hಚಿiಡಿ sಣಥಿಟisಣ ನ ಹತ್ತಿರ ಹೋಗಿ ತನ್ನ ಕೂದಲನ್ನ ಕೂರಿಸಿಕೊಂಡು ಬರುತ್ತಾಳೆ. ಈ ಬೀಟಲ್ಸ್ ಸ್ಟೈಲ್‌ನಲ್ಲಿ ಉದ್ದನೆ ಕೂದಲು ಬೆಳೆಸಿ ಟೈಟ್ ಪ್ಯಾಂಟ್ ಹಾಕಿ ಕೈಯಲ್ಲೊಂದೊಂದು ಟ್ರಾನ್ಸಿಸ್ಟರ್ ಹಿಡಿದು ಕೂತಿರೋ ಎಳೆಯರು ಇನ್ನೇನು ಎರಡು ವರ್ಷದಲ್ಲಿ ಮದುವೆಯಾಗಿ ಹೈರ್‌ಪರ್ಚೇಸಿನಲ್ಲಿ ಕೊಂಡ ಸಾಮಾನುಗಳಿಗೆ ಪ್ರತಿ ವಾರ ಹಣ ತೆರಲು ಪ್ರಾರಂಭಿಸುತ್ತಾರೆ. ನಾನು ಕೂಡ ಇನ್ನೊಂದು ವರ್ಷದಲ್ಲಿ ಯೂನಿವರ್ಸಿಟಿ ಶಿಕ್ಷಣ ಮುಗಿಸಿ ಆ ಬೌಲರ್ ಹ್ಯಾಟ್ ಹಾಕಿದ್ದಾನಲ್ಲ ಅವನ ಎಸ್ಟಾಬ್ಲಿಶ್‌ಮೆಂಟ್‌ನ ಒಂದು ಸಾಮಾನ್ಯ, ಆದರೆ ಮುಖ್ಯ, ವೀಲ್ ಆಗ್ತೇನೆ…..ಎಂತಹ ಕ್ರಾಂತಿಕಾರನಿಗೂ ಇಲ್ಲಿ Peeಡಿ ಪದವಿ ಸಿಕ್ಕು ಎಸ್ಟಾಬ್ಲಿಶ್‌ಮೆಂಟಿನ ಅಂಗವಾಗುತ್ತಾನೆ. Sಚಿಡಿಣಡಿe ಇಂಗ್ಲೀಷಿನಲ್ಲಿ ಬರೆದಿದ್ದರೆ ಅವನು ಇಲ್ಲಿ ಊouse oಜಿ ಐoಡಿಜs ನಲ್ಲಿ ಮೆಂಬರಾಗುತ್ತಿದ್ದ….ಇಲ್ಲ- ಇಂಗ್ಲೆಂಡ್ ತೋರವಾಗಿ, ತನ್ನ ಸೂಕ್ಷ್ಮ ಅಂತಃಕರಣವನ್ನು ಕಳೆದುಕೋತಿದೆ. ಂಟಟ ಂಟಟ oಜಿ us ಟಿeeಜ sಟimmiಟಿg, suಜಿಜಿeಡಿiಟಿg….. ನಮ್ಮ ಂಟಿgಡಿಥಿ ಥಿouಟಿg meಟಿ ಏನಾದರೂ ನೋಡು: ಬಿ. ಬಿ. ಸಿ. ಮತ್ತು ನಮ್ಮ ಪ್ರಮುಖ ಪತ್ರಿಕೆಗಳು ಅವರನ್ನು ಶಕ್ತರೆಂದು ಬೇಗ ಗುರುತಿಸಿ ನಮ್ಮ ಅಪಾರವಾದ ಎಸ್ಟಾಬ್ಲಿಶ್‌ಮೆಂಟಿಗೆ ಸೇರಿಸಿಕೊಂಡರು. ಇಲ್ಲ ನಮಗೆ ಭವಿಷ್ಯವಿಲ್ಲ; ಈ ದೇಶದಲ್ಲಿ ಯಾವ ಹೊಸ ಅನುಭವಾನೂ ಇಲ್ಲ ನಮ್ಮ ಒಳ್ಳೆ ಬರಹಗಾರರೆಲ್ಲ ಅದಕ್ಕೇ ಬೇರೆ ಬೇರೆ ದೇಶಗಳ ಬಗ್ಗೆ ಬರೀತಾರೆ: ಫಾರ್‌ಸ್ಟರ್, ಲಾರೆನ್ಸ್, ಗ್ರೀನ್, ಡರೆಲ್- ಇಂಗ್ಲೆಂಡಲ್ಲಿ ಬರೆಯೋಕ್ಕೆ ಏನಿದೆ? ಟಿoಣhiಟಿg buಣ ouಡಿ sಣuಠಿiಜ sಟಿobbeಡಿಥಿ…. ನನ್ನ ಉದ್ದನೆಯ ಭಾಷಣಾನ್ನ ಕ್ಷಮಿಸು. ನಿರರ್ಗಳ ಮಾತನ್ನ ನೀವು ಭಾರತೀಯರು ನಮ್ಮಿಂದಲೇ ಕಲಿತದ್ದು ತಾನೆ? ಖಿiಣ ಜಿoಡಿ ಖಿಚಿಣ” +ಎಂದು ಸ್ಟೂ‌ಅರ್ಟ್ ನಕ್ಕು ಮಾತು ಮುಗಿಸಿದ. ಕೆಂಪಾದ ಅವನ ಮುಖ ನೋಡಿ ಕೇಶವನಿಗೆ ಅವನು ಭಾವವಶನಾಗಿ ಮಾತಾಡುತ್ತಿದ್ದಾನೆಂದು ತಿಳಿಯಿತು. ಸಮಷ್ಟಿ ಕುಟುಂಬದ ಬಗ್ಗೆ ಅವನಾಡಿದ ಮಾತಿನ ಹಿಂದೆ ನಿರನುಭವವಿದೆ ಎನ್ನಿಸುತ್ತದೆ ಕೇಶವನಿಗೆ. ತನಗಂತೂ ಅದರ ಅನುಭವ ಸಾಕುಸಾಕಾಗಿದೆ. ಪ್ರಾಯಶಃ ಯಾವ ಸಮಾಜ ಸ್ಥಿತಿಯಲ್ಲೂ ಮನುಷ್ಯನಿಗೆ ಸುಖವಿಲ್ಲ; ಚಡಪಡಿಸುತ್ತಿರುವುದು ಮನುಷ್ಯನ ಅನಾದಿ ಅನಂತ ಅವಶ್ಯಕತೆಯಿರಬಹುದು. ನನ್ನ ಜೀವನ, ಕ್ರಿಯಾಶಕ್ತಿ ವ್ಯರ್ಥವಾಗ್ತಿದೆ ಅಂತ ನಾನು ಗೋಳೋ ಎಂದು ಎಂದು ಮನೆಯವರಿಗೆ ಅಭ್ಯಾಸವಾಗಿ ಈಗ ಯಾರೂ ಅದನ್ನ ಗಮನಿಸೋದೇ ಇಲ್ಲ. ನನ್ನ ನಾಲ್ಕು ತಂಗಿಯರು ಅರೆಹೊಟ್ಟೆ ಉಂಡು, ಕಾಟನ್ ಸೀರೆಯುಟ್ಟು, ಬರಿಗಾಲಿನಲ್ಲಿ ನಡೆದರೂ ವಸಂತ ಪ್ರಾಪ್ತವಾದ ಅರಣ್ಯದ ವೃಕ್ಷಗಳಂತೆ ಜೀವ ತುಂಬಿ, ಚಿಂತೆಯಲ್ಲಿ ಸೊರಗುತ್ತಿರುವ ಅಮ್ಮನ ಕಣ್ಣಿಗೆ ಬಾಂಬಿನಂತೆ ಕಾಣುತ್ತಾರೆ. ಮೊಲೆಗಳು ಎದ್ದು ಕಾಣದಂತೆ ಬಟ್ಟೆಯಲ್ಲಿ ಹೊಲೆದ ಬ್ರೇಸಿಯರ್‌ನಿಂದ ಬಿಗಿದು ಕಟ್ಟಿ, ಸೆರಗು ಹೊದ್ದು ಗೂನುಬೆನ್ನು ಮಾಡಿ, ತಲೆ ತಗ್ಗಿಸಿ, ಪುಸ್ತಕ, ಜಾಮಿಟ್ರಿ ಬಾಕ್ಸ್ ಹಿಡಿದು ಅವರು ಕಾಲೇಜು ಸ್ಕೂಲಿನಿಂದ ನಡೆದು ಬರುವುದು ಕಂಡರೆ ಕೇಶವನಿಗೆ ಸಂಕಟವಾಗುತ್ತದೆ. ಬಾಳು ಎಂತಹ ಹೊರೆ ಎನ್ನಿಸುತ್ತದೆ. ಆದರೆ ಸ್ವಕ್ಷೇಮಚಿಂತನೆಯನ್ನ ಹೆಣ್ಣಿಗೆ ಯಾರೂ ಕಲಿಸಬೇಕಾಗಿಲ್ಲ; ರಾತ್ರೆ ಹನ್ನೊಂದೂವರೆಗೆ ಓದಿ, ಬೆಳಿಗ್ಗೆ ಮತ್ತೆ ನಾಲ್ಕು ಗಂಟೆಗೆದ್ದು ಓದಿ, ಮನೆಗೆಲಸದಲ್ಲಿ ತಾಯಿಗಷ್ಟು ಸಹಾಯ ಮಾಡಿ, ಫಸ್ಟ್ ಕ್ಲಾಸಿನಲ್ಲಿ ಪಾಸಾಗಿ, ಫ್ರೀಶಿಪ್ ಪಡೆದು, ಓದುತ್ತಿದ್ದಾರೆ- ತಮ್ಮಂದಿರಿಗೆ ನಾಚಿಕೆಯಾಗುವ ಹಾಗೆ. ಮಾಧುವಿಗಂತೂ ಸ್ವಕ್ಷೇಮಚಿಂತನೆ ಎಳ್ಳಷ್ಟೂ ಇಲ್ಲ. ಬೋನಸ್‌ನಲ್ಲಿ ಅವನಿಗೊಮ್ಮೆ ಅಷ್ಟು ಹಣ ಒಟ್ಟಿಗೇ ಸಿಕ್ಕಿತು. ನಾಲ್ಕು ತಂಗಿಯರಿಗೆ, ತಾಯಿಗೆ- ಸೀರೆ; ತನಗೆ, ಕೇಶವನಿಗೆ, ಸುಧೀಂದ್ರನಿಗೆ- ಪ್ಯಾಂಟಿನ ಬಟ್ಟೆ ಕೊಂಡುತಂದು, ಒಂದು ವಾರ ನಗುತ್ತ, ತಂಗಿಯರಿಗೆ ಸಿನಿಮಾ ತೋರಿಸುತ್ತ ಬಂದ ಹಣವನ್ನು ಪೋಲು ಮಾಡಿದ. ಹಾಗೆ ನೋಡಿದರೆ ಮಾಧು ತನಗಿಂತ ಹೆಚ್ಚು ಬಾಳಿನ ಗೆಲುವಿರುವ, ಯೌವನದಿಂದ ತುಂಬಿದ, ತನ್ನ ಹಾಗೆ ಅಳೆದು ಹೊಯ್ದು ಜವಾಬ್ದಾರಿಯೆಂದು ಚಿಮ್ಮುವ ಪ್ರೇಮವನ್ನು ಕಳೆದುಕೊಳ್ಳದ, ಹುಡುಗ. ಅದಕ್ಕಾಗಿ ಹುಡುಗಿಯರು ಅವನನ್ನೊಲಿದಂತೆ ತನ್ನನ್ನು ಒಲಿಯುವುದಿಲ್ಲ. ಸಂಸಾರವೆಂದು ರಗಳೆ ಮಾಡಿಕೊಂಡು ತಾನು ಒಣಗಿದ್ದೇನೆ, ಬತ್ತಿದ್ದೇನೆ, ಕರ್ತವ್ಯದ ವ್ಯಸನದಲ್ಲಿ ಪ್ರೇಮವನ್ನು ಕಳೆದುಕೊಂಡಿದ್ದೇನೆ. ಕರ್ತವ್ಯದ, ನೀತಿ ನಿಯಮದ ಅಂಕೆಯಿಲ್ಲದ ಮಾಧುವಿನ ಹೃದಯದಲ್ಲಿ ನಿರುಪಗಯೋದವಾದನಿರುಪಗಯೋಗವಾದ, ಅಪೇಕ್ಷೆಯಿಲ್ಲದ ಹುಂಬ ಪ್ರೇಮವಿದೆ. ಈ ನಡುವೆ ತಂಗಿಯರು ಅಸಾಧಾರಣ ಜಾಣರು; ಬಹುಶಃ ಸ್ವಕ್ಷೇಮ ದೃಷ್ಟಿಯಿಂದ- ಮೋಸಗಾರರು. ಈ ಮನೆ ಕೊನೆಯವರೆಗೆ ತಮ್ಮದಲ್ಲವೆಂದು ಅವರಿಗೆ ಗೊತ್ತು. ಇರುವಷ್ಟು ದಿನ ತನಗೆ, ಮಾಧುವಿಗೆ, ತಾಯಿಗೆ ಹೊಂದಿಕೊಂಡಿರಲು ಹೆಣಗುತ್ತಾರೆ. ಮದುವೆಯಾಗಿ ಒಳ್ಳೆ ಗಂಡನ ಮನೆ ಸೇರಿದ ಕ್ಷಣ ಈ ರಗಳೆ ಅವರಿಗೆ ತಪ್ಪುತ್ತದೆ- ಆದ್ದರಿಂದ ಒಳ್ಳೆ ಗಂಡನಿಗೆಂದು ಅವರು ಕಾಯುತ್ತಿದ್ದಾರೆ. ಅವರಿಗೆ ಒಳ್ಳೆ ಗಂಡನನ್ನು ಪಡೆಯಲು ತಾನೊಂದು ಸಾಧನವಾದ್ದರಿಂದ ಅಣ್ಣನ ಜೊತೆ ಪ್ರಿಯವಾಗಿ ನಡೆದುಕೊಳ್ಳುತ್ತಾರೆ. ಲೆಕ್ಚರರ್‌ನ ತಂಗಿಯೆಂದು ಅವರಿಗಷ್ಟು ಹೆಚ್ಚು ಬೆಲೆಯಲ್ಲವೆ? ಅದೂ ಅವರಿಗೆ ಗೊತ್ತು. ಅಪ್ಪ ಸತ್ತ ಮೇಲೆ ಸಾಲ ಇತ್ಯಾದಿ ಕಳೆದು ತೋಟ ಮಾರಿ ಉಳಿದ ಹಣ ಐದುಸಾವಿರ ಇದೆ, ಬ್ಯಾಂಕಿನಲ್ಲಿ. ಇನ್ನೂ ಐದು ಸಾವಿರವಾದರೂ ಬೇಕು, ಆ ಹುಡುಗಿಯರಿಗೆ ತಕ್ಕ ಗಂಡಂದಿರನ್ನು ಕೊಳ್ಳಲು. ಅದಕ್ಕಾಗಿ ತಾನು ದುಡಿಯಬೇಕು- ಮನೆಯನದ ಮನೆತನದ ಮರ್ಯಾದೆಗೆ ತಕ್ಕಂತೆ ಅದ್ಧೂರಿಯಲ್ಲಲ್ಲದೆ ಮದುವೆ ಮಾದಲುಮಾಡಲು ಅಮ್ಮ ಕೇಳಬೇಕೆ?- ತೊಡೆಯ ಮೇಲೆ ಆಡಲು ಮನೇಲಿ ಮೊಮ್ಮಕ್ಕಳಿಲ್ಲದೆ ನೀನಾದರೂ ಮದುವೆಯಾಗೊ ಎನ್ನುತ್ತಾಳೆ ಅಮ್ಮ. ಮೊದಲು ತಂಗಿಯರದ್ದಾಗಲೀ ಎನ್ನುತ್ತೇನೆ. ನಿನ್ನ ಅಕ್ಕನ ಮಗಳೇ ಇದ್ದಾಳಲ್ಲ…..ಶುರುವಾಗುತ್ತದೆ ಹಳೆ ಕತೆ. ಅವರದು ದೊಡ್ಡ ಸಂಸಾರಾಪ್ಪ, ಸ್ವಲ್ಪ ಉಪಕಾರ ಮಾಡಪ್ಪ, ಕನ್ಯಾ- ಹೊರೆ ಇಳಿಸಪ್ಪ…..ನಾನು ರೇಗಿ, ಕೂಗಿ, ಚಪ್ಪಲಿ ಹಾಕಿಕೊಂಡು ಹೊರಗೆ ಹೋಗುತ್ತೇನೆ-‘ಇವತ್ತು ಹುಡುಗರು ಬಂದ್ರೆ ಟ್ಯೂಶನ್ ಇಲ್ಲಾಂತ ಹೇಳು. ಈ ಮನೇಗೆ ದುಡಿದು ದುಡಿದು ಸುಣ್ಣ ಆದೆ!’ +ನಂಗೂ ಗೊತ್ತು, ಅಮ್ಮನಿಗೂ ಗೊತ್ತು- ಭಾಗೀರತಿಯಿಲ್ಲದೆ ಬೇರೆ ಹುಡುಗೀನ ನಂಗೆ ಮದುವೆಯಾಗೋದು ಸಾಧ್ಯವಿಲ್ಲಾಂತ. ನಾಲ್ಕು ಜನ ಮದುವೆಯಾಗಬೇಕಾದ ತಂಗಿಯರು. ಇಬ್ಬರು ನಿರುಪಯೋಗಿ ಧಾಂಡಿಗ ತಮ್ಮಂದಿರು ಇರೋ ಮನೆಗೆ ಬೇರೆಯವರ ಮನೆ ಹುಡುಗಿ, ಕಲಿತವಳು, ಬಂದು ಸೇರಿದರೆ ಖಂಡಿತ ಜಗಳವೆಬ್ಬಿಸುತ್ತಾಳೆ. ಗಂಡನನ್ನು ಮನೇವರಿಂದ ಬೇರೆ ಮಾಡಿ ತನ್ನದೇ ಒಂದು ಪುಟ್ಟ ಸಂಸಾರ ಹೂಡಿಕೊಳ್ಳಲು ಪ್ರಯತ್ನಿಸುತ್ತಾಲೆಪ್ರಯತ್ನಿಸುತ್ತಾಳೆ. ಭಾಗೀರತಿಯನ್ನಾದರೆ ಅಮ್ಮ ಗದರಿಸಿ ಹದ್ದಿನಲ್ಲಿಟ್ಟುಕೊಳ್ಳಬಹುದು. ತನ್ನ ತಂಗಿಯರಿಗೂ ಇದು ಗೊತ್ತು. ನನಗೆ ಇಷ್ಟು ಪ್ರಿಯವಾಗಿ ನಡಕೊಳ್ಳೋ ಅವರು ತಮ್ಮ ಕ್ಷೇಮದ ದೃಷ್ಟಿಯಿಂದ, ತಾವು ಒಳ್ಳೇ ಕಡೆ ಸೇರೋ ಆಸೆಯಿಂದ, ಅತ್ಯಂತ ಸೂಕ್ಷ್ಮವಾಗಿ ನಾನು ಅಕ್ಕನ ಮಗಳನ್ನು ಒಲಿಯೋ ಹಾಗೆ ಮಾಡಲು ಒದ್ದಾಡುತ್ತಾರೆ; ಅವಳ ಕೈಲಿ ನಂಗೊಂದು ಸ್ವೆಟರ್ ಹಾಕಿಸೋದು, ಕೆಲಸದ ನೆವ ಹೇಳಿ ಅವಳನ್ನ ನನ್ನ ರೂಮಿನಲ್ಲಿ ಬಿಟ್ಟು ಹೋಗೋದು-ಇತ್ಯಾದಿ. ಇದೊಂದು ದೊಡ್ಡ ಸ್ವಾರ್ಥದ ಜಾಲವೆಂದು ನಾನು ಒಮ್ಮೊಮ್ಮೆ ಬಿಡಿಸಿಕೊಳ್ಳಲು ಹೆಣಗುತ್ತೇನೆ. ಹೇಗೆ…..ಹೇಗೆ…ಅದಕ್ಕೇಂತ ಇಂಗ್ಲೆಂಡಿಗೆ ಬಂದೆ. +ಭಾಗ : ಎರಡು +ಕತ್ತಲಿನಿಂದ ಮತ್ತೆ ಬೆಳಕಿಗೆ. ಬಾಗಿಲುಗಳು ಜಾರಿದವು. ಜನರನ್ನು ಕಕ್ಕಿ ನುಂಗಿ ಮುಚ್ಚಿಕೊಂಡವು. ಮೊಟ್ಟಮೊದಲು- ಈ ಭೂತ, ನಗರದಲ್ಲಿ, ಮನೆಯವರಿಂದ ಐದು ಸಹಸ್ರ ಮೈಲಿ ದೂರದಲ್ಲಿ ಅರಿಯಬೇಕಾದ್ದು: ನನ್ನೊಳಗೆ ಎಲ್ಲ ಸೂಕ್ಷ್ಮವನ್ನೂ ನುಂಗುವ ರಾಕ್ಷಸ ರೋಷ ಕುದಿಯುತ್ತಿದೆ ಎಂದು. ಅದು ನಿರ್ಬಲ ಹೆಣ್ಣಿಗನ ರೋಷ ಎಂದು. ಪ್ರೇಮವನ್ನು ಕೊಡಲಾರದ, ಯಾರಿಂದಲೂ ಪಡೆಯಲಾರದ ಶುಷ್ಕತೆ ಒಳಗಿದೆ. ಕೆಲವು ಹಗಲುಗನಸುಗಳನ್ನು ಆಗಾಗ ಕಾಣುತ್ತಿರುತ್ತೇನೆ: ಒಂದು- ನಾನು ದುಡಿದು ದುಡಿದು ಸತ್ತು ಸುಣ್ಣವಾಗಿ, ಮದುವೆಯಿಲ್ಲದೆ ಬತ್ತಿ ಬೆಂಡಾಗಿ, ಅಮ್ಮ ಮಾಧು ತಂಗಿಯರು ಬಲಿತು ಕೃತಘ್ನರಾಗಿ, ನನ್ನ ಮೇಲೆ ಕತ್ತಿ ಕಟ್ಟಿ, ನಾನು ಇಡೀ ಲೋಕದ ಅಪಾರ ಕರುಣೆಗೆ ಪಾತ್ರನಾಗುವುದು; ಇನ್ನೊಂದು- ಅಕಸ್ಮಾತ್ ತಾಯಿ, ತಮ್ಮಂದಿರು, ತಂಗಿಯರು ಸತ್ತು ತಾನೊಬ್ಬನೇ ಗಾಢವಾದ ದುಃಖದಲ್ಲಿ ಉಳಿಯುವುದು. ರೋಷದಿಂದ ವಿರ್ಬಲನಿರ್ಬಲ, ನಿರ್ಬಲತೆಯಿಂದ ಇನ್ನಷ್ಟು ರೋಷ, ಕಾಮ, ಕ್ರೋಧ, ಸಮ್ಮೋಹ, ಸೃತಿವಿಭ್ರಮ, ಬುದ್ಧಿನಾಶ, ಬುದ್ಧಿನಾಶಾತ್ ಪ್ರಣಶ್ಯತಿ, ಕಲ್ಲು ಕಡೆಯಬೇಕು, ಮಣ್ಣು ಹೊರಬೇಕು, ಆಹಾ ಗರಗಸ ಹಿಡಿದು ಮರದ ದಿಣ್ಣೆಗಳನ್ನು ಕೊಯ್ಯಬೇಕು. ನಿವೃತ್ತಿ. ಎಸ್ಕಲೇಟರ್ ಮೇಲೆ ನಿಂತು ಮೇಲಿನ ಲೋಕಕ್ಕೆ ಮರಳುತ್ತಿದ್ದಂತೆ ಸ್ಟೂ‌ಅರ್ಟ್ ಹೇಳಿದ: +“ನನಗೆ ಇವೆಲ್ಲ ಎಷ್ಟು ವಿಚಿತ್ರ ಅನುಭವ ಎನ್ನುತ್ತಿ? ಹದಿನಾರು ವರ್ಷಗಳಾಗುವ ತನಕ ನಾನು ಟ್ರೈನನ್ನಾಗಲಿ ಎಲೆಕ್ಟ್ರಿಕ್ ದೀಪವನ್ನಾಗಲಿ ಕಂಡಿರಲಿಲ್ಲ. ಹಳ್ಳಿ ಮನೇಂದ ಇನ್ನೊಂದು ದೊಡ್ಡ ಹಳ್ಳೀಲಿದ್ದ ಹೈಸ್ಕೂಲಿಗೆ ಬರಿಗಾಲಲ್ಲಿ ನಡೆದು ಬಂದು ಓದಿದೆ….” +“ನಿನ್ನ ಕಂಡರೆ ನನಗೆ ಅಸೂಯೆಯಾಗ್ತದೆ….” +ರೋಷ. ನನ್ನ ಜೊತೆ ಹೀಗೇ ಹದಿನೈದು ದಿನ ಸ್ಟೂ‌ಅರ್ಟ್ ಇದ್ದರೆ ಪರಸ್ಪರ ಜಿಗುಪ್ಸೆಯಲ್ಲಿ ಈ ಸ್ನೇಹ ಕೊನೆಯಾಗುತ್ತದೆ. ನಾನು ಒಳ ಹೊಕ್ಕು ಮುಟ್ಟಿದ್ದೆಲ್ಲ ಮಣ್ಣು. ನಡೆದಲ್ಲಿ ಮರಳುಗಾಡು. ಒಳಗಿನ ಆಸೆ: ಭಯಂಕರ ಹಿಂಸೆಯನ್ನು ಮಾಡಬೇಕು ಅಥವಾ ಅಂತಹ ಹಿಂಸೆಯನ್ನು ಅನುಭವಿಸಬೇಕು. ವಿಷಕನ್ಯೆಯೊಬ್ಬಳ ನಗ್ನ ಉರಿಗೆ ಬೀಳಬೇಕು. ಅವಳ ತುಟಿ, ಕಟಿ, ಮೊಲೆಗಳ ಬೆಂಕಿಗೆ ಹವಿಸ್ಸಾಗಿ, ಮತ್ತೆ ಅವಳ ಗರ್ಭವನ್ನು ಹೊಕ್ಕು, ಬೆಂದು, ಬಂಗಾರದ ವಿಗ್ರಹವಾಗಿ, ಅವಳ ಹೊಟ್ಟೆ ಸೀಳಿ ಬರಬೇಕು. ಭಾರತದಲ್ಲಿ ಯುದ್ಧವಾಗಬೇಕು; ಅದರಲ್ಲಿ ನಾವೆಲ್ಲ ಸಿಪಾಯಿಗಳಾಗಿ ಸಾಯಬೇಕು, ಸಾಯಬೇಕು; ವೈರಿಯ ನಗರ ಮುತ್ತಿ ಹೆಂಗಸರ ಮಾನಭಂಗ ಮಾಡಿ, ಕೊಳ್ಳೆ ಹೊಡೆದು, ಮೂಸೆ ಬಿಟ್ಟು….. +“ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಬಾ” ಎಂದ ಸ್ಟೂ‌ಅರ್ಟ್.’ +ಗಂಡು- ಹೆಣ್ಣು ದೇಹಗಳ ಒಂದು ದೊಡ್ಡ ಗುಂಪು ಪರಸ್ಪರ ಉಜ್ಜಿ ತಾಗಿ ತಬ್ಬಿದರೂ ಬೇರೆ ಬೇರೆ ರೋಷಗಳ ಲೋಕಗಳಾಗಿ ಉಳಿದು, ಹೆಜ್ಜೆ ಮೇಲೊಂದು ಹೆಜ್ಜೆ ಸರಿದು, ಹೊರಗೆ ಬಂದದ್ದೆ ತಡ, ಗಾಳಿಗೆ ಹಾರುವ ಪಕಳೆಗಳಂತೆ…..ಪೌಂಡಿನ ಪದ್ಯವನ್ನು ಕೇಶವ ಮತ್ತೆ ನೆನೆದ. ಇಂಗ್ಲೆಂಡಿನ ಜೂನ್ ತಿಂಗಳ ನೀಲಿ ಕಣ್ಣಿನ, ಮೃದುವಾಗಿ ನಗುವ ಹಸಿಗೂಸಿನಂತಹ ಅಪರೂಪದ ಬಿಸಿಲಿನ ಸಂಜೆ. ರಾತ್ರೆ ಒಂಬತ್ತು ಗಂಟೆಯ ತನಕ ಬಿಸಿಲಿನಲ್ಲಿದ್ದು, ಬಿಯರ್ ಕುಡಿದು, ಕಾಲು ಚಾಚಿ ಟೆಲಿವಿಜನ್ ನೋಡಿ, ಕರ್ಟನ್‌ಗಳನ್ನೆಳೆದು ಗೂದ್ ನಿಘ್ತ್ಗುಡ್ ನೈಟ್ ಹೇಳುವ, ಪಾರ್ಕುಗಳಲ್ಲಿ ಪ್ರೇಮವನ್ನು ಅರಳಿಸುವ, ಆಹಾ ಸಂಜೆ. ಸ್ಟೂ‌ಅರ್ಟ್‌ನನ್ನೇ ಹಿಂಬಾಲಿಸಿ ನಡೆದು ಕಿತ್ತಳೆ ಬಣ್ಣದ ಮಿಣುಗುವ ದೀಪಗಳಿದ್ದ ಜೀಬ್ರಾ ಕ್ರಾಸಿಂಗ್‌ನಲ್ಲಿ- ‘ಬಂದ ಹೊಸದರಲ್ಲಿ ಇದು ಗೊತ್ತಿರಲಿಲ್ಲ, ರೋಡಿನಲ್ಲಿ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಅನಾಥಪಕ್ಷಿಯಂತೆ ಹಾರುತ್ತಿದ್ದೆ’-ದಾಟಿದ. ಅವರು ದಾಟಲೆಂದು ನಿಲ್ಲಿಸಿದ ಕಾರಿನ ಡ್ರೈವರ್‌ಗೆ ಸ್ಟೂ‌ಅರ್ಟ್‌ನಂತೆ ತಾನೂ ಅವಸರದ ಕೈಯೆತ್ತಿ ನಮಸ್ಕಾರ ಮಾಡಿದ. +* +* +* +ಇಂಗ್ಲೆಂಡಿಗೆ ಬಂದವನು ಮೂರು ತಿಂಗಳ ತನಕ ಅಸಹ್ಯವಾದ ಒಂಟಿ ಜೀವನ ನಡೆಸಬೇಕಾಯಿತು. ಯೂನಿವರ್ಸಿಟಿಯಿಂದ ಡಿಗ್ಸ್‌ಗೆ, ಡಿಗ್ಸ್‌ನಿಂದ ಯೂನಿವರ್ಸಿಟಿಗೆ. ಕೆಲವೊಂದು ದಿನ ಲ್ಯಾಂಡ್ ಲೇಡಿಯ ಜೊತೆ ‘ಗುಡ್ ಮಾರ್ನಿಂಗ್,’ ‘ಗುಡ್ ಈವೆನಿಂಗ್’ಗಳ ಹೊರತು ಬೇರೆ ಒಂದೂ ಮಾತಾಡದೆ ತನ್ನೊಳಗಿನ ನರಕದಲ್ಲೆ ಬಾಳಬೇಕಾಯಿತು. ಯೂನಿವರ್ಸಿಟಿಯಲ್ಲಿದ್ದ ಕೆಲವೊಂದು ಭಾರತೀಯ ವಿದ್ಯಾರ್ಥಿಗಳ ಪರಿಚಯವಾದರೂ, ಅವರ ಜೊತೆ ಒಡನಾಟ ಅಸಹನೀಯವೆನಿಸಿತ್ತು. ಏನೊಂದು ಹೊಸ ಬಾಳನ್ನು ಹೊಸ ಮೌಲ್ಯಗಳನ್ನು ಆಶಿಸಿ ಇಂಗ್ಲೆಂಡಿಗೆ ಬಂದಿದ್ದನೊ. ಅದು ಅವರಿಂದ ದೊರೆಯಲಾರದೆಂಬುದು ಮನದಟ್ಟಾಯಿತು. ಇಷ್ಟು ದಿನದ ಸ್ನೇಹದ ನಂತರವೂ ಸ್ಟೂ‌ಅರ್ಟ್ ತನ್ನನ್ನು ಕೇಳದ ಪ್ರಶ್ನೆಯನ್ನು ಭಾರತೀಯ ವಿದ್ಯಾರ್ಥಿ ಪರಿಚಯವಾದೊಡನೆ ಕೇಳುತ್ತಿದ್ದ: “ನಿನಗೆ ಎಷ್ಟು ಸ್ಕಾಲರ್‌ಶಿಪ್ ಸಿಗುತ್ತದೆ…..?” “…ಇಷ್ಟು.” “ಅರ್ಧಕ್ಕರ್ಧ ಅದರಲ್ಲಿ ಉಳಿಸಬಹುದು….”ಉಳಿಸಿ? ಹೆಂಡತಿಯನ್ನು ಕಟ್ಟಿಕೊಂಡು ಬಂದ ಪ್ರತಿ ಭಾರತೀಯನಿಗೂ ಇರುವ ಆಸೆ: ಒಂದು ಠಿoಠಿ-uಠಿ ಣoಚಿsಣeಡಿ, ಒಂದು Wಚಿshiಟಿg mಚಿಛಿhiಟಿe, ಒಂದು ಡಿeಜಿಡಿigeಡಿಚಿಣoಡಿ, ಒಂದು ಣಡಿಚಿಟಿsisಣoಡಿ ಅನ್ನು ಏನಕೇನ exಠಿoಡಿಣ – ಜuಣಥಿ ವಂಚಿಸಿ ಊರಿಗೆ ತಗೋಂಡು ಹೋಗೋದು. ಸ್ಟೂ‌ಅರ್ಟ್ ತನ್ನ ಜನದಲ್ಲಿ ಕಾಣುವ ಮೆಟೀರಿಯಲಿಸಂಗಿಂತ ಭಯಂಕರವಾದ ಮೆಟೀರಿಯಲಿಸಮ್ಮನ್ನು ಕೇಶವ ಭಾರತೀಯರಲ್ಲಿ ಕಂಡ. ಇಲ್ಲಿ ಓದುವ ಭಾರತೀಯರು ಸ್ವದೇಶಕ್ಕೆ ಮರಳಿದ ಮೇಲೆ, ಹೇಗೆ ಎಷ್ಟು ಆಸೆಬುರುಕರಾಗಿ ಅಲ್ಲಿ ನಡೆದುಕೊಳ್ಳುತ್ತಾರೆಂದು ಕೇಶವನಿಗೆ ಅನುಭವವಿದೆ. ಆದರೆ ಈ ಭಾರತೀಯರನ್ನು ಬಿಟ್ಟರೆ ಯಾವ ಇಂಗ್ಲಿಷಿನವನ ಸ್ನೇಹವೂ ಕೇಶವನಿಗೆ ಆಗಲಿಲ್ಲ. ವಿದ್ಯಾರ್ಥಿಯರಲ್ಲಿ ಮುಕ್ಕಾಲು ಪಾಲು ಜನ ತಮ್ಮ ಹುಡುಗಿಯರ ಜೊತೆ ವಿರಾಮದ ಕಾಲದಲ್ಲಿ ರೆಫೆಕ್ಟರಿಯ ಬೆಂಚುಗಳ ಮೇಲೆ ಪ್ರಣಯದಲ್ಲಿರುತ್ತಿದ್ದುದರಿಂದ ಒಬ್ಬನ ಜೊತೆಯೂ ಸ್ನೇಹ ಬೆಳೆಸುವುದು ಅಸಾಧ್ಯವಾಯಿತು. ಸಿಟಿಯಲ್ಲಿ, ದಾರಿಗಳ ಮೇಲೆ ಸಿಕ್ಕುವ ಬಿಳಿಯರಂತೂ ತಾನೊಬ್ಬ ಸವರ್ಣೀಯನೆಂದು ಅನುಮಾನದ, ಅದಡ್ಡೆಯಅಸಡ್ಡೆಯ ದೃಷ್ಟಿಯಿಂದ ಕಾಣುವರು. +ಬಂದ ಮೂರು ತಿಂಗಳಾದ ಮೇಲೆ ಯೂನಿವರ್ಸಿಟಿಯ ಆಂಟಿ ಅಪಾರ್ಥೆಡ್ ಗುಂಪಿನ ಸಭೆಯೊಂದರಲ್ಲಿ ಕೇಶವನಿಗೆ ಸ್ಟೂ‌ಅರ್ಟ್‌ನ ಪರಿಚಯವಾಯಿತು. ಎಲ್ಲ ಇಂಗ್ಲಿಷ್ ಜನದಂತೆ, ಈ ಹವ ನಿನಗೆ ಒಪ್ಪುತ್ತದೊ- ಎಂದು ಹವದ ಮಾತಿನಿಂದ ಸಂಭಾಷಣೆ ಪ್ರಾರಂಭವಾಯಿತು. ‘ಓಹ್! ಹೋದ ವರ್ಷ ನೀನು ಇಲ್ಲಿ ಇರಬೇಕಿತ್ತು- ಅಂತಹ ವಿಂಟರನ್ನು ನಾನು ನನ್ನ ಜೀವನದಲ್ಲೆ ಕಂಡಿಲ್ಲ’ ಎಂದು ನಾಟಕೀಯವಾಗಿ ಕೈಗಳನ್ನೆತ್ತಿ ಸ್ಟೂ‌ಅರ್ಟ್ ಮುಖವನ್ನು ಅಲ್ಲಾಡಿಸಿದ್ದ. ಕೇಶವ ಅದಕ್ಕೆ ‘ನನಗೆ ಮಂಜು ಬೀಳುವುದನ್ನು ನೋಡಲು ಇಷ್ಟ. ಕಣ್ಣು ಹರಿಸಿದಲ್ಲೆಲ್ಲ ಹಿಮ ತುಂಬಿ ಬೆಳ್ಳಗಾಗಿರೋದನ್ನ ನೋಡಲು ಕಾಯ್ತಾ ಇದೀನಿ’ ಎಂದಿದ್ದ….ಹೀಗೇ ಮಾತು ಸಾಗಿ ಅವನು ತನ್ನ ಡೈರಿ ತೆಗೆದು ‘ಮುಂದಿನ ಗುರುವಾರ ಸಂಜೆ ನನ್ನ ಡಿಗ್ಸ್‌ಗೆ ಬರುತ್ತೀಯ? ಒಟ್ಟಿಗೆ ಊಟ ಮಾಡೋಣ’ ಎಂದಿದ್ದ. ಸ್ಟೂ‌ಅರ್ಟ್‌ನ ಸ್ನೇಹ ಅವನಿಗೆ ಬೆಳದಿಂಗಳಿನಂತೆ ಹಿತವಾಗಿತ್ತು. ಅತಿ ಆಪ್ತತೆಯಲ್ಲಿ ಆವರಿಸಿಕೊಳ್ಳುವ, ಕಾವು ಕೂರುವ ಸ್ನೇಹವಲ್ಲ ಅದು. ಆಪ್ತತೆಯೆಂದರೆ ಕೇಶವ ಹೆದರುತ್ತಾನೆ- ಆಳದಲ್ಲಿ ಸಂಸರ್ಗಿಸುವುದು ಇನ್ನು ಮುಂದೆ ತನ್ನಿಂದ ಸಾಧ್ಯವಿಲ್ಲ ಎಂದುಕೊಂಡಿದ್ದಾನೆ. ತನ್ನ ಒಳಗಿರುವುದನ್ನು ಅತ್ಯಂತ ಪ್ರಿಯವಾದ, ಆತ್ಮ ಮರುಕದಲ್ಲಿ ನಾರುವ, ಹೂಳದೆ ನೇತುಬಿದ್ದ ಭೂತಕಾಲದ ಶವಗಳು. +ಸೌಜನ್ಯ ಸಭ್ಯತೆ. ಮೇಲು ಮೇಲಿನ ಬದುಕೇ ವಾಸಿ. ಕೇಶವನ ಪರಿಚಯ ಚೆನ್ನಾಗಿ ಆದ ಮೇಲೂ ಅವನನ್ನು ಬಂದು ನೋಡುವ ಮುಂಚೆ, ಸ್ಟೂ‌ಅರ್ಟ್ ‘ಬರಲೆ, ಬಿಡುವಿದೆಯೆ’ ಎಂದು ಕೇಳುತ್ತಾನೆ. ಮಾತು ಸಾಮಾನ್ಯವಾಗಿ ಸ್ಟೂ‌ಅರ್ಟ್‌ಗೆ ಪ್ರಿಯವಾದ ಭಾರತೀಯ ಆಧ್ಯಾತ್ಮ, ಯೋಗ, ಹಿಂದುಳಿದ ದೇಶಗಳಿಗೆ ಆರ್ಥಿಕ ಸಹಾಯ ಇತ್ಯಾದಿಗಳ ಕಡೆ ಹರಿಯುತ್ತದೆ. ಕೇಶವನಿಗೆ ಗೊತ್ತು: ಸ್ಟೂ‌ಅರ್ಟ್ ಮೂಲತಃ ಯುರೋಪಿಯನ್- ಅವನ ಆತ್ಮದ ಬೆಳವಣಿಗೆ ಸಭ್ಯತೆಯ ಹಾದಿಯಲ್ಲೆ ನಡೆಯಬೇಕು. ನಾಜೂಕಾಗಿ, ಬುದ್ಧಿಪೂರ್ವಕವಾಗಿ, ಆರೋಗ್ಯವಾಗಿ ಜೀವನವನ್ನು ನಡೆಸಲು ಪ್ರಯತ್ನಿಸುವ ಅವನ ಅಂತಿಮ ಘಟ್ಟ ಅತ್ಯಂತ ಸಭ್ಯವಾದ, ಮಾನವ ಸಂಬಂಧದಲ್ಲಿ ಅನಿವಾರ್ಯವಾದ ನೋವು, ಕೊಳಕು ಕೊಚ್ಚೆ, ಗಂಜಲವನ್ನು ಸಂಪೂರ್ಣ ತೊಡೆದು ಹಾಕಿದ, ಆಂಟಿ-ಸೆಪ್ಟಿಕ್ ಸಮಾಜ, ಭಾರತದಲ್ಲಿ ಮಾನವ ಸಂಬಂಧ ಗಂಜಲದಲ್ಲಿ ಕೆಸರಿನಲ್ಲಿ ಬೆಳೆಯುತ್ತದೆ- ಕಾಲು ಹೂತು ಹೋಗಲೂಬಹುದು, ಹೂವೂ ಬಿಡಬಹುದು. ಆದ್ದರಿಂದ ಸ್ಟೂ‌ಅರ್ಟ್ ಎಷ್ಟೊಂದು ಅನುಭಾವಪರವಾದ ಭಾರತವನ್ನು ಪ್ರೀತಿಸಿದರೂ, ಅನುಭಾವಕ್ಕೆ ಪೂರ್ವವಾದ ಉಚ್ಚೆ ಕೆಸರಿನ ವಾಸನೆಯಲ್ಲಿ ಬೆಳೆದ ಜೀವನದ ತೀವ್ರತೆಯನ್ನು ಅನುಭವಿಸಲಾರ. ಕೇಶವನಿಗೆ ಗೊತ್ತು: ತಾನು ಕಾಲು ಹೂತವನು. ಆದರೆ ಭಾರತದ ನೆಲದಲ್ಲಿ ಜಿಗಿದವರು ಇದ್ದಾರೆ; ಉರಿಯುವ ಬಂಡೆಯ ಮೇಲೆ ದಾಹದಲ್ಲಿ ಕೂತು ಹುಳ ಹುಪ್ಪಟೆ ಸಹಿತವಾಗಿ ಸಮಸ್ತ ಲೋಕವನ್ನೂ ಪ್ರೇಮದಿಂದ ನೋಡಿ ಮೂಕರಾದವರೂ ಇದ್ದಾರೆ ಎಲ್ಲವನ್ನೂ ನಿಯಂತ್ರಿಸಿದ, ನಿರ್ಮಲವಾದ ಸ್ಟೂ‌ಅರ್ಟ್ ಬೆಳೆದ ಭೂಮಿಯಲ್ಲಿ ಸಂತರು ಹುಟ್ಟುವುದಿಲ್ಲ- ಸಭ್ಯರು, ಮಾನವಹಿತೈಷಿಗಳು ಹುಟ್ಟುತ್ತಾರೆ. +ಸ್ಟೂ‌ಅರ್ಟ್ ತಾನು ಎಷ್ಟು ಅತೃಪ್ತನೆಂದು ಅಂದರೂ ಅವನ ಜೀವನದಲ್ಲೊಂದು ನಿಯತಿಯಿದೆ. ತನ್ನ ಹಾಗೆ ಅವನು ಮಂಕುಬಡಿದು ಒಂದರಮೇಲೊಂದು ಸಿಗರೇಟ್ ಸೇದುತ್ತ ಕಿಂಕರ್ತವ್ಯ ಮೂಢನಾಗಿ ಶಾಪಗ್ರಸ್ತನಂತೆ ಕೂತಿರೊದನ್ನ ಕೇಶವ ಕಂಡಿಲ್ಲ. ತನ್ನ ಜೀವನದ ಪ್ರತಿ ಕ್ಷಣವನ್ನೂ ಡೈರಿಯಲ್ಲಿ ಮುಂಚಿತವಾಗಿ ಬರೆದಿಟ್ಟಂತೆ ವಿವೇಚಿಸಿ ಜೀವಿಸುತ್ತಾನೆ. ಪ್ರತಿವರ್ಷ ಬೇಸಿಗೆ ರಜದಲ್ಲಿ ಯೂರೋಪಿಗೆ ಬೆಟ್ಟಗಳನ್ನು ಹತ್ತಲು ಹೋಗುತ್ತಾನೆ. ಸಭ್ಯನ ಮುಖ್ಯ ಗುರಿ: ತನ್ನಿಂದ ಪರರಿಗೆ ನೋವಾಗಬಾರದು, ಅನ್ಯಾಯವಾಗಬಾರದು; ಹಂಗಿನಲ್ಲೂ ಇರುವುದು ಬೇಡ, ಇಡುವುದೂ ಬೇಡ. ಮೊದಲನೆಯ ಬಿಯರನ್ನು ಕೇಶವ ಕೊಂಡು ತಂದರೆ ಎರಡನೆಯದನ್ನು ಸ್ಟೂ‌ಅರ್ಟ್ ಕೊಳ್ಳುತ್ತಾನೆ. ಊಟಕ್ಕೆ ಕರೆದರೆ ತಿರುಗಿ ಕರೆಯುತ್ತಾನೆ. ಯಾರನ್ನಾದರೂ ದಾಟಿ ಹೋಗಬೇಕಾಗಿ ಬಂದರೆ ‘ಕ್ಷಮಿಸು’ ಎನ್ನುತ್ತಾನೆ. ತೇಗುವುದಿಲ್ಲ, ಗಟ್ಟಿಯಾಗಿ ಮಾತಾಡುವುದಿಲ್ಲ. ಮಾತಿನ ನಡುವೆ ಕೆಮ್ಮಬೇಕಾಗಿ ಬಂದರೆ, ಬಲಾತ್ಕಾರವಾಗಿ ಸೀನಲೇಬೇಕಾದರೆ, ‘ಕ್ಷಮಿಸಿ’ ಎಂದು ಹೇಳುತ್ತಾನೆ. ಸಂಭೂಗದಲ್ಲೂ ಸಂಭೋಗದಲ್ಲೂ ಈ ಜನ ಸಭ್ಯತೆಯ ಗೆರೆ ದಾಟುತ್ತಾರೊ ಇಲ್ಲವೊ. ಸ್ಟೂ‌ಅರ್ಟ್ ಅದಕ್ಕೆ ಕಾರಣ ತಮ್ಮದು ಮರ್ತಕರವರ್ತಕರ ದೇಶವಾದ್ದರಿಂದ ಎನ್ನುತ್ತಾನೆ. ಈ ನಯ, ಈ ಸಭ್ಯತೆ-ಸಲೆಸ್ಮನ್ಶಿಪ್ಸೇಲ್ಸ್‌ಮನ್‌ಶಿಪ್ ಎಂದು ತನ್ನ ದೇಶವನ್ನು ಅಲ್ಲಗಳೆದುಕೊಳ್ಳುತ್ತಾನೆ. ಇವರು ಕೊಚ್ಚಿಕೊಳ್ಳುವುದನ್ನು ಅವನು ಕಂಡಿಲ್ಲ. ಒಂದು ದಿನ ಯೂನಿವರ್ಸಿಟಿಯ ‘ಮರ್‌ಮೈಡ್’ ಬಾರಿನಲ್ಲಿ ಬಿಯರ್ ಕುಡಿಯುತ್ತ ಸ್ಟೂ‌ಅರ್ಟ್ ಹೇಳಿದ್ದ : +“ಅತ್ಮಜ್ಞಾನ ಪರಮಾರ್ಥಗುರಿಯೆಂದು ಜಗತ್ತಿಗೆ ಮೊದಲು ಹೇಳಿದ ದೇಶ ಭಾರತ.” +“ಕೇಶವ ಅದಕ್ಕೆ, “ಆತ್ಮಜ್ಞಾನ-ನಿಜ-ಸಂತರಿಗೆ, ಅನುಭಾವಿಗಳಿಗೆ ಮಾತ್ರ. ಆದರೆ ಸಭ್ಯತೆಗೆ ಅವಶ್ಯವಾದ ಆತ್ಮವಿಮರ್ಶೆ ನಮ್ಮಲ್ಲಿ ಇಲ್ಲ. ಸಮಾಜದ ಹಿತದ ದೃಷ್ಟಿಯಿಂದ ಆತ್ಮಜ್ಞಾನಕ್ಕಿಂತ ಆತ್ಮವಿಮರ್ಶೆ ಮುಖ್ಯ… ನಮ್ಮದು ಜಗತ್ತಿನಲ್ಲಿ ತೊಡಗಿದವರಿಗೆ ಒಂದು ಸತ್ಯವಾದರೆ, ತೊಡಗದವರಿಗೆ ಇನ್ನೊಂದು” ಎಂದಿದ್ದ. +ಮಾತು ಗಾಢವಾದ ವಿಚಾರದ ಸುತ್ತ ಸುತ್ತಿದ್ದರೂ ಒಂದು ಕ್ಷಣ ಡ್ರಾಫ್ಟ್ ಬಿಯರಿನ ಹಿತವಾದ, ದಾಹವನ್ನು ಸಂಪೂರ್ಣ ಹಿಂಗಿಸುವ ತಂಪಿನಲ್ಲಿ ಜೀವಕ್ಕೆ ಸುಖವಾಗಿತ್ತು. ಅಗ್ಗಿಷ್ಟಿಕೆಯಲ್ಲಿ ಕಲ್ಲಿದ್ದಲಿನ ಬೆಂಕಿ. ಕೆಂಪು ಹೂಗಳ ಚಿತ್ರವಿರುವ ಕರ್ಟನ್‌ಗಳನ್ನೆಳೆದ ಮಂದವಾದ ಬೆಳಕಿನ ಪುಟ್ಟ ಬಾರು. ಮೂಲೆಯ ಸೋಫದಲ್ಲಿ ಯುವಕನೊಬ್ಬನ ಎದೆಯ ಮೇಲೆ ತಲೆಯಿಟ್ಟು ಅರ್ಧ ಕಣ್ಣು ಮುಚ್ಚಿ ಸಿಗರೇಟನ್ನು ಸೇದುತ್ತಿರುವ ಹುಡುಗಿಯನ್ನು ಕಂಡರೆ ಆಸೆಯಾಗಲಿ ಅಸೂಯೆಯಾಗಲಿ ಇವತ್ತು ಕೆರಳುವುದಿಲ್ಲ. ಬಾರ್‌ಮನ್ ಬಟ್ಟೆಯಿಂದ ಗಾಜುಗಳನ್ನು ಒರಸುತ್ತ, ಉಜ್ಜುತ್ತ, ಮೃದುವಾಗಿ ಸಿಳ್ಳೆಹಾಕುತ್ತಾನೆ. ಸೀಸೆಗಳಲ್ಲಿ ಶೆರಿ, ವೈನ್‌ಗಳನ್ನು ತುಂಬಿಟ್ಟ, ವಿಸ್ಕಿ, ಜಿನ್, ಬ್ರಾಂಡಿಯ ಸೀಸೆಗಳನ್ನು ತಲೆಕೆಳಗಾಗಿ ನಿಲ್ಲಿಸಿದ ಬಾರಿನಲ್ಲೊಂದು ಮತ್ಸ್ಯದೇಹದ ಕನ್ನಿಕೆಯ ಬೊಂಬೆ ಸೂಕ್ಷ್ಮವಾದ ದಾರದ ತುದಿಯಲ್ಲಿ ಸುತ್ತುತ್ತಿದೆ. ಸ್ಟೂ‌ಅರ್ಟ್ ಎರಡು ಗ್ಲಾಸುಗಳನ್ನೂ ಎತ್ತಿಕೊಂಡು ಹೋಗುತ್ತಾನೆ….ಬಾರ್‌ಮನ್ ಕಣ್ಣುಹೊಡೆಯುತ್ತಾನೆ….ಸ್ಟೂ‌ಅರ್ಟ್ ‘ಎರಡು ಬಿಟ್ಟರ್’ ಎನ್ನುತ್ತಾನೆ…..ಬಾರ್‌ಮನ್ ಪಂಪ್‌ಮಾಡಿ ಬಿಯರನ್ನು ತುಂಬಿಸಿಕೊಡುತ್ತಾನೆ…. +ಬಾರಿನಿಂದ ಹೊರಗೆ ಬಂದ ಕ್ಷಣ ಜೀವ ಮತ್ತೆ ಒಣಗುತ್ತದೆ. ಚಳಿ, ಕತ್ತಲೆ, ಫಾಗ್, ಭಾರತದ ದಾರಿಯಲ್ಲಿ ಬೇಡುತ್ತ ನಿಂತ ಭಿಕ್ಷುಕರಂತೆ ಕಾಣುವ, ಕಪ್ಪು ಕಾಷ್ಠಗಳಾಗಿ ಒಣಗಿದ, ಹತಭಾಗ್ಯ ಮರಗಳು- ಬೀದಿಯ ದೀಪದಲ್ಲಿ. ಒದ್ದೆ, ಚಳಿ, ಫಾಗ್, ಕೇಶವ ಗ್ಲೌಸ್ ಧರಿಸಿ ಕೋಟಿನ ಜೇಬಿನಲ್ಲಿ ಕೈಹಾಕಿ ನಡುಗುತ್ತಾನೆ. “ಙou ಚಿಡಿe ಛಿಚಿಣಛಿhiಟಿg uಠಿ ಚಿ ಛಿhiಟಟ, ಃಥಿe-see ಥಿou” ಎಂದು ಸ್ಟೂ‌ಅರ್ಟ್ ತನ್ನ ಡಿಗ್ಸ್‌ಗೆ ವೇಗವಾಗಿ ನಡೆಯುತ್ತಾನೆ. ಕೇಶವನಿಗೆ ತನ್ನ ಮತ್ತು ಅವನ ಜೀವನದ ನಡುವಿನ ವ್ಯತ್ಯಾಸ ಮರುಕಳಿಸಿ ವ್ಯಥೆಯಾಗುತ್ತದೆ. ಕರುಬುವಂತಾಗುತ್ತದೆ. ಈತನ ಶಕ್ತಿ ಸ್ವಮಗ್ನವಾಗಿ ರಗಳೆಯಲ್ಲಿ ವಯ್ಯವಾಗುವುದಿಲ್ಲವ್ಯಯವಾಗುವುದಿಲ್ಲ. ಮನೆಯಲ್ಲಿ ತಾಯಿ ತಂದೆಯ ಜೊತೆಯೂ ಅವನ ನಡೆವಳಿಕೆ ಹೀಗೆಯೇ ಸಭ್ಯವಾಗಿರಬೇಕು. ಬೆಳಿಗ್ಗೆ ಎದ್ದು ಗುಡ್ ಮಾರ್ನಿಂಗ್, ರಾತ್ರೆ ಮಲಗುವಾಗ ಗುಡ್‌ನೈಟ್. ತನ್ನದು ಮನೆಯಲ್ಲಿ ನಿತ್ಯದ ರಗಳೆ, ಜಗಳ. ಕಾಲೇಜಿಗೆ ಹೋದರೂ ಇದು ತಪ್ಪಿದ್ದಲ್ಲ. ಲೆಕ್ಚರರು ಕೂರುವ ಹರಿದ ಸೋಫ. ಮೂರು ಕಾಲಿನ ಕುರ್ಚಿಗಳ ಆ ಸ್ಟ್ಯಾಫ್ಸ್ಟಾಫ್- ರೂಮು ಇನ್ನೊಂದು ನರಕ. ಅಲ್ಲಿ ಲಿಂಗಾಯಿತ, ಬ್ರಾಹ್ಮಣ, ಒಕ್ಕಲಿಗ, ಮತ್ತು ಇತರೆ ಎಂದು ಅಸೂಯೆಯ ಬೆಂಕಿ ಉರಿಯುವ ನಾಲ್ಕು ನರಕಗಳು. ಎಷ್ಟು ಬೇಡವೆಂದರೂ ಪ್ರತಿಯೊಬ್ಬನೂ ಈ ಯಾವಿದಾದರೊಂದುಯಾವುದಾದರೊಂದು ನರಕದಲ್ಲಿ ಬೇಯಲೇಬೇಕು. ಇಬ್ಬರು ಒಟ್ಟಾದರೆ ಮೂರನೆಯವನ ಮೇಲೆ ಏನಾದರೂ ಅಪಪ್ರಚಾರ ನಡೆಯಬೇಕು. ಒಂದು ಗುಂಪಿನಲ್ಲಿ ಮಾತಾಡುತ್ತ ಕೂತಿದ್ದು, ಬಿಟ್ಟೆದ್ದು, ಅಷ್ಟು ದೂರ ಹೋಗೋದರಲ್ಲೆ ತನಗೆ ಗೊತ್ತು-ಯಾರೋ ಬೆನ್ನ ಹಿಂದೆ ತನ್ನ ಬಗ್ಗೆ ಮಾತಾಡ್ತಿದಾರೆ ಅಂತ. ಅದಕ್ಕೇ ತನಗೆ ತಿರುಗಿ ತಿರುಗಿ ನೋಡ್ತಾ ನಡೆಯೋ ಅಭ್ಯಾಸ. ಇಂಗ್ಲೆಂಡಿಗೆ ಬಂದ ಮೇಲೂ ಅದು ಬಿಟ್ಟಿಲ್ಲ. ಗುಂಪಿನಲ್ಲಿದ್ದು ಎದ್ದು ಹೋಗುವಾಗ, ದಾರಿಯಲ್ಲಿ ನಡೆಯುವಾಗ ತನ್ನ ಹಾಗೆ ತಿರುಗಿ ತಿರುಗಿ ನೋಡ್ತಾ ನಡೆಯೋ ಒಬ್ಬನನ್ನೂ ಇಲ್ಲಿ ತಾನು ಕಂಡಿಲ್ಲ. ಮನೆಯಲ್ಲಿ ಮತ್ತು ಕಾಲೇಜಿನಲ್ಲಿ ಅವನೊಂದು ಆತ್ಮ ಮರುಕದ, ಪರಸ್ಪರ ಅಸೂಯೆಯ, ಪರಚಿಕೊಳ್ಳುವ, ಹಲ್ಲು ಮಸೆಯುವ ನರಕದಲ್ಲಿ ಬದುಕುತ್ತಿದ್ದೇನೆಂದು; ಅದರಿಂದ ತಪ್ಪಿಸಿಕೊಳ್ಳಲೆಂದು- ತಪಸ್ಸು ಮಾಡಿ, ಸತತ ಪ್ರಯತ್ನಿಸಿ, ಮನೆಯವರನ್ನು ಅಪಾರವಾದ ಕಷ್ಟಕ್ಕೊಡ್ಡಿ, ಅತ್ಯಂತ ಸ್ವಾರ್ಥದಲ್ಲಿ ಇಂಗ್ಲೆಂಡಿಗೆ ಬಂದಿದ್ದಾನೆ. ‘ಘಟ್ಟ ಹತ್ತಿದರೂ ಹುಟ್ಟಿದ ಗುಣ ಬಿಟ್ಟೀತೆ’, ಎನ್ನುವ ಅಪ್ಪನ ಮಾತು ಆಗಾಗ್ಗೆ ನೆನಪಾಗುತ್ತದೆ. +* +* +* +‘ನಾವೀಗ ಆಕ್ಸ್‌ಫರ್ಡ್ ಸ್ಟ್ರೀಟಿನಲ್ಲಿದ್ದೇವೆ. ಫೇಮಸ್ ಶಾಪಿಂಗ್ ಸೆಂಟರ್’ ಎಂದ ಸ್ಟೂ‌ಅರ್ಟ್. ರೋಡಿನ ಎರಡು ಮಗ್ಗುಲುಗಳಿಗೂ ಸಾಲಾಗಿ ಇದ್ದ ಅಂಗಡಿಗಳ ವೈಭವ ಕೇಶವನ ಮೇಲೆ ಅಷ್ಟೊಂದು ಪರಿಣಾಮ ಮಾಡಲಿಲ್ಲ. ವೆಸ್ಟ್ ಮಿನಿಸ್ಟರ್ ಅಬ್ಬೆ, ಸೆಂಟ್‌ಪಾಲ್ಸ್ ಕಥೆಡ್ರಿಲ್, ಹೈಡ್‌ಪಾರ್ಕ್, ಬ್ಲೂಮ್ಸ್‌ಬರಿ, ಚೆಲ್ಸೀ-ಇಲ್ಲಿ ಎಲ್ಲಾದರೂ ಹೋಗಿದ್ದರೆ ಇಂಗ್ಲಿಷ್ ಸಾಹಿತ್ಯದ ಬೆಲ್ ಹೊಡೆದು ಕಣ್ಣು ಗ್ರಹಿಸುತ್ತಿತ್ತು. ತನ್ನ ಮನಸ್ಸು ಪೂರ್ವನಿಶ್ಚಿತವಾದದ್ದನ್ನು ಮಾತ್ರ ಗ್ರಹಿಸುತ್ತದೆ. ಕಾಣದ ಬಾಗಿಲನ್ನು ತೆರೆದು, ಹೊಸ ಲೋಕ ಕಂಡು ಬೆರಗಾದಂತಹ ಅನುಭವವೇ ಇಲ್ಲ. ಕೊಲಂಬಸ್ ತಾನು ಕಂಡ ಹೊಸ ಲೋಕವನ್ನೂ ತಾನು ಹುಡುಕಿಕೊಂಡು ಹೊರಟ ಇಂಡಿಯಾ ಎಂದು ತಿಳಿಯಲಿಲ್ಲವೆ? ಸ್ಟೂ‌ಅರ್ಟ್‌ಗೆ ಹೇಳಬೇಕು- ಹುಡುಕಿದರೆ ಸಿಗುವುದು ನಾವು ಹುಡುಕಿದ್ದು, ನಮ್ಮ ಮನಸ್ಸಿನಲ್ಲಿ ಪೂರ್ವನಿಶ್ಚಿತವಾದದ್ದು. ನಾವು ಅರಿಯದಿದ್ದುದು, ಕಾಣದಿದ್ದುದು ನಮ್ಮ ಅಂತರಂಗದ ಲೋಕಕ್ಕೆ ಬಂದು ಜಡಿದ ಬಾಗಿಲುಗಳ ತೆರೆದು, ಇನ್ನೊಂದು ಬೆಳಗು, ಇನ್ನೊಂದು ಸಂಜೆಯನ್ನು ನೋಡಿ ಬೆರಗಿನಲ್ಲಿ ತನ್ಮಯವಾಗುವುದು ಬೇರೆ ರೀತಿ. ಅವ್ಯಕ್ತ ಎದುರಾದಾಗಲೂ ನಾವು ನಮಗೆ ಮೊದಲೇ ವ್ಯಕ್ತವಾದದ್ದಷ್ಟನ್ನು ಮಾತ್ರ ಕಾಣುತ್ತೇವೆ. ಅವ್ಯಕ್ತವನ್ನು ಕಾಣುವೆನೆಂದು ನಾನು ಇಂಗ್ಲೆಂಡಿಗೆ ಬಂದೆ-ಆಗಲಿಲ್ಲ. ಕೆಸ್ಲರ್ ಇಂಡಿಯಾಕ್ಕೆ ಬಂದು ಯೋಗಿಯೊಬ್ಬನನ್ನು ಭೆಟ್ಟಿಯಾದಾಗ ಮೂಗು ತೋಡುತ್ತಾ ಕೂತೊಬ್ಬನನ್ನು ಗಮನಿಸಿದ ಹಾಗೆ ಇಲ್ಲಿ ನನಗೆ ಮೈಥುನದ ಚಿತ್ರಗಳು ಮಾತ್ರ ಕಾಣುತ್ತವೆ. ಆಮೆ ತನ್ನ ಚಿಪ್ಪನ್ನು ಹೊತ್ತು ತಿರುಗುವಂತೆ ನನ್ನ ಭೂತದ ಜೊತೆ ನಾನು ಆಕ್ಸ್‌ಫರ್ಡ್ ಸ್ಟ್ರೀಟಿನಲ್ಲಿ ಅಲೆಯುತ್ತಿದ್ದೇನೆ. ಸ್ಟೂ‌ಅರ್ಟ್ ಇಂಡಿಯಾಕ್ಕೆ ಬಂದು ಯೋಗಿಗಳನ್ನು ಸಂಧಿಸಿದರೂ ತನ್ನ ಸಭ್ಯ ಲೋಕದ ಗೆರೆ ದಾಟಲಾರ. ಕೆಸ್ಲರನಂತೆ- ‘ಈ ಭೆಟ್ಟಿಯನ್ನು ನಾನು ಎದ್ದು ಮುಗಿಸಬೇಕೊ, ಯೋಗಿ ತಾನೇ ಎದ್ದು ಇನ್ನು ವೇಳೆಯಾಯಿತೆಂದು ಮುಗಿಸುತ್ತಾನೊ, ಇಲ್ಲಿ ಆತಿಥ್ಯದ ನಿಯಮಗಳೇನೊ’ ಎಂದು ಮಾತಿನ ನಡುವಿನ ಮೌನಗಳಲ್ಲಿ ಚಿಂತಿಸುತ್ತಾ ಕೂರುತ್ತಾನೆ. ಇದು ಟ್ರಾಜಿಡಿ. ನಾನು ಎಲ್ಲಿ ಹೋದರೂ ನನ್ನ ತಮ್ಮನ ಭವಿಷ್ಯ ಸಾವಾಗಲಿ ಉದ್ಧಾರವಾಗಲಿ- ನನ್ನ ಇಡಿಯ ಬಾಳ್ವೆಯ ಮೇಲೆ ತೀರ್ಪಿನಂತೆ ಕಾಡುತ್ತದೆ. +ನಿನ್ನೆ ತಮ್ಮನಿಂದ ಕಾಗದ ಬಂದಮೇಲೆ ನೊಣಚಿತೊಣಚಿ ಹೊಕ್ಕ ಹೋರಿಯಂತೆ ಒದ್ದಾಡುತ್ತಿದ್ದೇನೆ; ಕಣ್ಣು ತೆರೆದು ಈ ಹೊಸ ಸಮಸ್ಯೆಯನ್ನು ಆಳವಾಗಿ ನೋಡಲಾರದೆ ಹೋಗಿದ್ದೇನೆ. ಅದರಿಂದ ತಪ್ಪಿಸಿಕೊಳ್ಳಲೆಂದು ಸ್ಟೂ‌ಅರ್ಟ್ ಜೊತೆ ಲಂಡನ್ನಿಗೆ ಬಂದೆ. ಇಂತಹ ವಿಷಯಗಳನ್ನು ತೋಡಿಕೊಳ್ಳುವ ಆಪ್ತತೆ ನನಗೆ ಸ್ಟೂ‌ಅರ್ಟ್ ಜೊತೆ ಇಲ್ಲ. ಇಂಗ್ಲೆಂಡಿಗೆ ನಾನು ಹೊರಡುವಾಗ ಮಾಧು ಸ್ವಂತ ಇಚ್ಛೆಯ ಮೇಲೆ ಶೂ- ಕಂಪೆನಿ ಒಂದರಲ್ಲಿ ಹೋಗಿ ಸೇಲ್ಸ್‌ಮನ್ ಆಗಿ ಸೇರಿಕೊಂಡ. ತಿಂಗಳಿಗೆ ಸಂಬಳ ಇನ್ನೂರು ರೂಪಾಯಿ. ‘ಶೂ ಅಂಗಡಿಯಲ್ಲಿ ಕೆಲಸಕ್ಕೆ ಸೇರಬೇಕಾಯಿತೆ ನನ್ನ ಮಗ, ಸತ್ಕುಲದಲ್ಲಿ ಹುಟ್ಟಿ ಅವರಿವರ ಕಾಲಿಗೆ ಪಾದರಕ್ಷೆ ಜೋಡಿಸಬೇಕೆ’ ಎಂದು ಅಮ್ಮ ದುಃಖಿತಳಾದಳು. ನಾನು ಅವಳನ್ನು ಗದರಿಸಿದೆ. ದೊಡ್ಡ ತಂಗಿ ಮಿಡ್ಲ್‌ಸ್ಕೂಲಿನಲ್ಲಿ ಉಪಾಧ್ಯಾಯಿನಿಯಾದಳೆಂದು ನನಗಿನ್ನಷ್ಟು ಹರ್ಷವಾಯಿತು. ಇಷ್ಟು ದಿನ ಮುಖ ತೋರಿಸಿದ ಶ್ಯಾಮಕಕ್ಕ ಮನೆಗೆ ಬಂದು ರದ್ಧಾಂತರಾದ್ಧಾಂತ ಮಾಡಿದ: ವೈದಿಕರ ಮನೆತನದಲ್ಲಿ ಹುಟ್ಟಿದ ಹುಡುಗ ಶೂ ಅಂಗಡೀಲಿ ಕೆಲಸ ಮಾಡಕೂಡದು ಅಂತ. ನಾನು ಸಿಟ್ಟನ್ನು ನುಂಗಿ ಸುಮ್ಮನಾದೆ ಇದರಲ್ಲಿ ಎಲ್ಲೂ ನನ್ನ ತಪ್ಪಿಲ್ಲ. ನಾನು ಇಂಗ್ಲೆಂಡಿಗೆ ಹೋಗುತ್ತೇನೆ ಎಂದಾಗ ಅಮ್ಮ ಶ್ಯಾಮಕಕ್ಕ ನಾನು ಸ್ವರ್ಥಿಯೆಂದುಸ್ವಾರ್ಥಿಯೆಂದು ತಿಳಿದಿದ್ದರೆ ಅದು ಅವರ ತಪ್ಪು- ನನ್ನದಲ್ಲ. ಇಷ್ಟು ದಿನ ನಾನು ದುಡಿದೆ. ಈಗ ಮಾಧು ತನ್ನ ಯೋಗ್ಯತೆಗೆ ತಕ್ಕ ಕೆಲಸ ಮಾಡಿ ಮನೆಯವರನ್ನು ನೋಡಿಕೊಳ್ಳೋದರಲ್ಲಿ ಏನು ತಪ್ಪಿದೇಂತ ನನ್ನೊಳಗೇ ವಾದ ಹೂಡಿದೆ. ಅಮ್ಮ ದೇವರ ಮನೆಯ ಕತ್ತಲೆಯ ಮೂಲೆಗಳಲ್ಲಿ ಕೂತು ನಿತ್ಯ ಅತ್ತಳು……… ದೇವರಿಗೆ ನಂದಾದೀಪ ಹಚ್ಚಿ ಮಗನ ಬುದ್ಧಿಯನ್ನು ಸರಿಯಾಗಿ ಕಾಯಪ್ಪ ಎಂದು ಬೇಡಿಕೊಂಡಳು. ಹೋಗುವ ಮುಂಚೆ ಮದುವೆಯಾಗೆಂದು ದುಂಬಾಲು ಬಿದ್ದಳು. ನೀನು ಬರೋವರೆಗೆ ನಾನು ಬದುಕಿರುತ್ತೇನೋ, ಸತ್ತಿರುತ್ತೇನೋ ಎಂದು ಹಲುಬಿದಳು. +ಇಂಗ್ಲೆಂಡಿಗೆ ಬಂದ ಮೇಲೆ ತಿಂಗಳಿಗೆ ಹತ್ತು ಪೌಂಡಿನಂತೆ ಉಳಿಸಿ ಒಬ್ಬ ಕಾಳ ಸಂತೆಯ ಪಂಜಾಬಿಯೊಬ್ಬನನ್ನು ಹಿಡಿದು ಮನೆಗೆ ಇನ್ನೂರು ರೂಪಾಯಿಗಳಂತೆ ಕಳಿಸುತ್ತ ಬಂದೆ. ತಾಯಿ ತಂಗಿಯರಿಗೆ ಇದರಿಂದ ಹರ್ಷವಾಗಿರಬೇಕು. ನನಗೂ ಈ ಹಣ ಕಳಿಸುತ್ತಾ ಬಂದದ್ದರಿಂದ ನನ್ನ ಜವಾಬ್ದಾರಿ ಮುಗೀತು ಎನ್ನುವ ಸಮಾಧಾನ. ಜವಾಬ್ದಾರಿಯುಳ್ಳ ನನ್ನಂಥ ಮನುಷ್ಯ ಇರುವಂತಹ ಸ್ವಾರ್ಥದ ನರಕದಲ್ಲಿ ಪೋಲಿ ಫಟಿಂಗರು ಇರುವುದಿಲ್ಲ. +ಒಂದು ದಿನ ಇದ್ದಕ್ಕಿದ್ದಂತೆ ತಾಯಿಯಿಂದ ಕಾಗದ ಬಂತು. ಮಾಧವ ಕೆಲಸವನ್ನು ಬಿಟ್ಟ ಅಂತ. ನಂತರ ಮಾಧವನಿಂದ ಕಾಗದಬಂತು- ತನಗಿನ್ನು ಮುಂದೆ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇಷ್ಟು ದಿನ ಗುಪ್ತವಾಗಿದ್ದ ತನ್ನ ಯೋಗ್ಯತೆ ಬೆಳಕಿಗೆ ಬರುವ ಕಾಲ ಬಂದಿದೆ ಎಂತ. ‘ನೀನು ನಂಬದೇ ಇರಬಹುದು ಅಣ್ಣ ನಾನೊಂದು ಕಾದಂಬರಿ ಬರೆದಿದೀನಿ. ಒಬ್ಬ ಪಬ್ಲಿಶರ್ ಅದನ್ನು ಓದಿ ತುಂಬ ಚೆನ್ನಾಗಿದೆ ಅಂದಿದಾರೆ. ಅದು ಪ್ರಕಟವಾಗಿ ಬಂದ ಹಣವನ್ನು ಅಮ್ಮನಿಗೆ ಕೊಡುತ್ತೇನೆ. ಇನ್ನು ಮುಂದೆ ಹೀಗೆಯೇ ಬರೆದು ದುಡಿಯುತ್ತೇನೆ.’ ಕಾಗದ ಓದಿ ನನಗೆ ವಿಚಿತ್ರವಾದ ಅನುಭವ. ಕಡು ಕೋಪ ಇತ್ಯಾದಿ….. ಆದರೆ ಒಳಗೆ ಅಸೂಯೆಯೂ ಆಗದೆ ಇರಲಿಲ್ಲ. ನನ್ನಲ್ಲಿ ಇಲ್ಲದೇ ಇರುವ ಅವ್ಯಕ್ತವಾದ್ದೊಂದು ಮಾಧುವಿನಲ್ಲಿ ಇರಬಹುದು, ಅವನ ಜೀವನ ನನ್ನದನ್ನು ಅಲ್ಲಗಳೆದು ಜಗತ್ತಿಗೆ ಹೇಯವೆಂದು ಎತ್ತಿತೋರಬಹುದು ಅಂತ. ಸ್ವಲ್ಪ ದಿನಗಳ ಮೇಲೆ ತಂಗಿ ವಿಮಲೆಯಿಂದ ಕಾಗದ ಬಂತು: ‘ಅಣ್ಣಾ- ಮಾಧು ಅಮ್ಮನನ್ನ ಗೋಳಾಡಿಸ್ತ ಇದ್ದಾನೆ. ತೋಟ ಮಾರಿ ಬಂದ ಹಣ ಅಮ್ಮನ ಹೆಸರಲ್ಲಿ ಬ್ಯಾಂಕಲ್ಲಿ ಇದೆಯಲ್ಲ ಆ ಐದು ಸಾವಿರ ಬೇಕೂಂತ. ಅವನ ಇಬ್ಬರು ಸ್ನೇಹಿತರು ಐದು ಐದು ಸಾವಿರ ಕೊಡ್ತಾರಂತೆ. ಮಾಧು ಹದಿನೈದು ಸಾವಿರದಲ್ಲಿ ಒಂದು ಪ್ರೆಸ್ ಕೊಳ್ಳುತ್ತಾನಂತೆ. ಅದರಲ್ಲಿ ದುಡಿದು ಬಂದದ್ದನ್ನೆಲ್ಲ ಮನೆಗೆ ಕೊಡ್ತೇನೆ, ನಿಮ್ಮ ಹಣ ಗಟ್ಟಿಯಾಗಿರುತ್ತೆ, ಬ್ಯಾಂಕಿನಲ್ಲಿ ಹಣ ಕೊಳೆಯೋಕ್ಕಿಂತ ಪ್ರೆಸ್ ಇಟ್ಟರೆ ಲಾಭವಿದೆ ಅಂತ ಪೀಡಿಸ್ತಿದಾನೆ. ಅಮ್ಮ ಏನು ಮಾಡೋದು ತೋಚದೆ, ನಿನಗೆ ಬರೆಯೋಕೆ ಹೆದರಿ ಸುಮ್ಮನೇ ಕೂತಿದಾಳೆ. ಮಾಧುವಿನ ಪ್ಲಾನ್ ತನ್ನ ಕಾದಂಬರಿಗಳನ್ನು ತನ್ನ ಪ್ರೆಸ್ಸಿನಲ್ಲೆ ಅಚ್ಚು ಮಾಡಬಹುದೂಂತ. ಈಗ ಅವನ ಕಾದಂಬರಿ ಅಚ್ಚಾಗಿದೆ. ಈಗ ಅವನಿಗೆ ಜುಬ್ಬ ಪೈಜಾಮ ಹಾಕಿದ ಬರಹಗಾರ ಗೆಳೆಯರು. ಅವರ ಜೊತೆ ಹೋಗಿ ಕುಡೀತಾನೇಂತಲೂ ಒಂದು ಸುದ್ದಿ’….. ಇತ್ಯಾದಿ. +ನಾನು ಧಗಧಗನೆ ಉರಿದು ಅಮ್ಮನಿಗೆ ಬರೆದೆ- ಮಾಧುವಿಗೆ ಕಾಸುಕೊಡಬೇಡ ಅಂತ. ಮಾಧು ಅದಕ್ಕೆ ಬರೆದ: “ನೀನು ಮನೆಯಲ್ಲಿರುವಷ್ಟು ದಿನ ನನ್ನ ಸುಪ್ತ ಶಕ್ತಿ ನಿನ್ನ ವಿಷಪೂರಿತ, ಅನಿಷ್ಠ ವ್ಯಕ್ತಿತ್ವದ ತುಳಿತದಿಂದ ಬಾಡಿತು. ಒಣಗಿತು. ಹುಳದಂತೆ ನಾನು ಬದುಕಿದೆ. ನನಗೆ ಸಲ್ಲದ ಕೆಲಸಗಳನ್ನು ಮಾಡಿಕೊಂಡಿದ್ದೆ. ನೀನು ಹೋದ ಮೇಲೆ ನನ್ನ ಬಾಳು ಚಿಗುರಿತು. ಹೂ ಬಿಟ್ಟಿತು. ನನ್ನ ಇಬ್ಬರು ಗೆಳೆಯರು ನಾನು ಮುಂದೆ ಬಂದು ಅಮ್ಮನಿಗೂ ದುಡಿದು ಹಾಕುವಂತಹ ದಾರಿ ತೋರಿಸಿದರು. ನನ್ನ ಕ್ರಿಯಾಶಕ್ತಿಯೂ ಅರಳಿ ಒಂದು ಕಾದಂಬರಿ ಬರೆದೆ. ನಿನ್ನ ಕರಟಿರುವ ಕಾರ್ಪಣ್ಯದ ಕಠಿಣ ಹೃದಯಕ್ಕೆ ಇದರಿಂದ ಅಪಾರವಾದ ಅಸೂಯೆಯಾಗಿರಬೇಕು. ಜೀವಂತವಾದದ್ದು ಯಾವುದಿದ್ದರೂ ನೀನು ಕೊಲ್ಲುತ್ತಿ; ಪಕ್ಕದ ಮನೆ ಹುಡುಗಿ ನನ್ನಲ್ಲಿ ಅನುರಕ್ತಳಾದಳೆಂದು ನೀನು ಎಬ್ಬಿಸಿದ ಹುಯಿಲನ್ನು ನಾನು ಮರೆತಿಲ್ಲ. ಆದರೆ ನೀನು ಮಹಾ ನಿಸ್ವಾರ್ಥಿಯೆ? ನನಗೆ ತಿಳಿಯದೆಂದು ತಿಳಕೋಬೇಡ: ಮನೆಯವರಿಗೆ ಗೊತ್ತಾಗದಂತೆ ಬ್ಯಾಂಕಿನಲ್ಲಿ ಸ್ವಂತಕ್ಕೆಂದು ನೀನು ಐದುನೂರು ರೂಪಾಯಿಯನ್ನು ಕೂಡಿಸಿಕೊಳ್ಳಲಿಲ್ಲವೆ? ನನಗೆ ನಿನ್ನ ಬುದ್ಧಿಯಿಲ್ಲ. ಬಂದದ್ದೆಲ್ಲವನ್ನೂ ಎಲ್ಲ ಯುವಕರಂತೆ ಪೋಲು ಮಾಡಿದೆ ನಿಜ. ಎಲ್ಲರ ಕಣ್ಣಿಗೆ ನಾನು ಕೆಡುಕು; ನೀನು ಸಭ್ಯ. ಆದರೆ ನಿನಗೊಂದು ಆತ್ಮ ಇದ್ದರೆ ನಿನ್ನನ್ನೇ ನೀನೊಂದು ಪ್ರಶ್ನೆ ಕೇಳಿಕೊ- ನೀನು ಒಡ ಹುಟ್ಟಿದವನ ಜೊತೆ ನಡಕೊಂಡ ರೀತಿ ಸರಿಯೆ ಅಂತ? ಹಾಳಾಗಲಿ. ಇಗೊ ಈ ಕಾಗದ ಸೇರುವ ಒಳಗೆ ನಾನು ಈ ಮನೆಯನ್ನು ತ್ಯಜಿಸಿದ್ದೇನೆ. ನನ್ನ ಜೀವನದ ಬಗ್ಗೆಯಾಗಲಿ, ಸಾವಿನ ಬಗೆಗಾಗಲಿ ನೀನು ಚಿಂತಿಸೋದು ಬೇಡ. ನೀನು ಸುಖವಾಗಿರು. ನಿನ್ನಂತಹ ದೊಡ್ಡ ಮನುಷ್ಯನ ಕೀರ್ತಿಗೆ ಮಸಿ ಬಳಿಯುವಂತಹ ತಮ್ಮನಿದ್ದಾನೆನ್ನುವ ಅಪಕೀರ್ತಿ ನಿನಗೆ ತಟ್ಟದಿರಲಿ…….” +ಅಮ್ಮನಿಂದ ಜೊತೆಗೊಂದು ಕಾಗದ: ಮೊದಲಿನಿಂದ ಕೊನೆಯವರೆಗೆ ಗೊಳೋ….. ಹೆತ್ತ ಕರುಳು….. ಇತ್ಯಾದಿ…… +ಘಳಿಗೆ ಈಗ ಪ್ರಾಪ್ತವಾಗಿದೆ. ಒಪ್ಪಿಕೊ, ನನ್ನ ತಮ್ಮ ಮಾಧು ನನ್ನ ಬಗ್ಗೆ ಬರೆದದ್ದು ಸಂಪೂರ್ಣ ನಿಜ. ಆದರೂ ಆ ಐದುನೂರು ರೂಪಾಯಿಯ ಗುಪ್ತಧನದ ವಿಷಯದಲ್ಲಿ ಮಾಧು ನನ್ನ ಬಗ್ಗೆ ನಿಷ್ಕರುಣೆಯಿಂದ ಮಾತಾಡಿದ ಎನ್ನಿಸತ್ತೆ… ಸ್ವಂತ ಸುಖ ಕಾಣದೆ ಮನೆಗೆ ಇಷ್ಟೊಂದು ದುಡಿದು, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಸಂಚರಿಸಿ ಎಲ್ಲ ದೇವಸ್ಥಾನಗಳನ್ನು ನೋಡಿ ಬರಬೇಕೆಂಬ ಒಂದು ಹಂಬಲಕ್ಕಾಗಿ ಐದುನೂರು ರೂಪಾಯಿಗಳನ್ನು ಮುಚ್ಚಿಟ್ಟೆ- ಆದರೆ ಮಾಧು ಉದ್ಧಾರವಾಗಲಿ ಸಾಯಲಿ ಈ ಐದುನೂರು ರೂಪಾಯಿ ನನ್ನ ಅತ್ಯಂತ ಅಲ್ಪತೆಯ, ಕ್ಷುದ್ರತೆಯ ಕುರುಹೆಂದು ತಿಳಿಯುತ್ತಾನೆ. ನನ್ನ ವ್ಯಕ್ತಿತ್ವ ಭವಿಷ್ಯಕ್ಕೆ ಬಿಡುವ ಘೋರ ಚಿತ್ರಗಳಲ್ಲಿ ಇದೊಂದು ಅತಿ ಹೇಯವಾಗಿ ಉಳಿಯುತ್ತದೆ. ಏನು ಮಾಡಲಿ, ಏನು ಮಾಡಲಿ…. +ಕೇಶವ ಕೈ ಹಿಸುಕಿಕೊಂಡ. ತಪ್ತನಿಗೆ ಶಾಂತಿಯಿಲ್ಲ. ತಪ್ತ ಮೊದಲು ತನ್ನ ಸಭ್ಯತೆಯನ್ನು ಕಳೆದುಕೊಳ್ಳುತ್ತನೆ; ನಂತರ ಸಂತನಾಗುವ ಯೋಗ್ಯತೆಯನ್ನು ಕಳೆದುಕೊಳ್ಳುತ್ತಾನೆ. ರಂಪ, ರಗಳೆಗಳಲ್ಲಿ ತಪ್ತನ ಒಳಜೀವನ ಮೊದಲು ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡು ಒರಟಾಗುತ್ತದೆ, ಜಡ್ಡುಕಟ್ಟುತ್ತದೆ. ತಪ್ತ ಸ್ವಾರ್ಥಿಯಾಗುತ್ತಾನೆ, ಕೃಪಣನಾಗುತ್ತಾನೆ, ಮನೆಯವರಿಗೆ ಗೊತ್ತಾಗದಂತೆ ಪುಟ್ಟ ಗಂಟು ಮಾಡಿಟ್ಟುಕೊಂಡು ಸ್ವಂತ ಸುಖದ ಕನಸು ಕಾಣುತ್ತಾನೆ. ಮಾಧುವಿಗೆ ಅದು ಪತ್ತೆಯಾಗಿ ನನಗೆ ಬರೆದರೆ ಆ ಬಗ್ಗೆ ಯೋಚಿಸುವಾಗಲೂ ಘೋರವಾದ ಸತ್ಯ ಕಾಣಿಸುವುದಿಲ್ಲ ನನ್ನ ಬಗ್ಗೆ ನನಗಿರುವ ಕರುಣೆ ಕಟುವಾದದ್ದನ್ನೂ ಕಟ್ಟುಹಾಕಿ ಸುಂದರ ಮಾಡಿ ತೋರಿಸುತ್ತದೆ. ಮಾಧು ಈಗ ಮನೆ ಬಿಟ್ಟವನು ಉದ್ಧಾರವಾಗಲಿ, ಸಾಯಲಿ- ನನ್ನ ಸ್ವಭಾವದಿಂದ ನನಗೆ ಬಿಡುಗಡೆ ಪ್ರಾಯಶಃ ಆಗುವುದಿಲ್ಲ. ಅಸೂಯೆಯಾಗಬಹುದು, ದುಃಖವಾಗಬಹುದು-ಆದರೆ ಈ ಎರಡು ಭಾವನೆಯಲ್ಲೂ ಮತ್ತೆ ನಾನು ನನ್ನ ಸುತ್ತಲೇ ಸುತ್ತಿ ಇನ್ನಷ್ಟು ಗೋಜು, ಗಂಟು. ಸುಖದ ದಾರಿ ಅಲ್ಪವೆಂದು ಕಾಣುವ ಸಂತನ ಸೂಕ್ಷ್ಮ ದಿವ್ಯದೃಷ್ಟಿಯನ್ನು ಕಳೆದುಕೊಂಡು, ಸುಖ ಕಾಣದೆ ಯಾವಾಗಲೂ ಸುಖವನ್ನು ಬಯಸುವ, ಒಳತೋಟಿಗಳನ್ನು ಬೆಳೆಸಿಕೊಂಡು ಮೀರಿ ನಿಲ್ಲುವ ಶಕ್ತಿಯನ್ನು ಕಳೆದುಕೊಳ್ಳುವ, ಆತ್ಮಮರುಕದಲ್ಲಿ ತೊಳಲುವ, ಕರುಬುವ, ಕಿರಿಕಿರಿಯೆನ್ನುವ ತನ್ನವರನ್ನು ಹರಿದು ಹರಿದು ತಿನ್ನುವ, ಕೊಡುವ ಪ್ರೇಮವನ್ನು ಕಳೆದುಕೊಂಡ ಸ್ವರತಿಯ ನರಕದಲ್ಲಿ ಬಾಳುತ್ತಾನೆ. ಸಭ್ಯ ಸಂತ ಇಬ್ಬರೂ ಆತ್ಮರತರು, ಆತ್ಮತೃಪ್ತರು. ನನಗೆ ಸ್ವರತಿ ಮಾತ್ರ ಸಾಧ್ಯ: ನಾನು ನನ್ನಲ್ಲೆ ಕೊನೆಯಾಗಿ, ಮೊದಲಾಗಿ, ದಾರಗಳನ್ನು ಸುತ್ತಿಕೊಂಡು ವಿಲವಿಲ ಒದ್ದಾಡಿ, ಒಳಗಿನದನ್ನು ಕತ್ತರಿಸಿ ಹೊರಗೆ ತೆರೆದು ಪರೀಕ್ಷಿಸಿ, ಒಳಗಿಟ್ಟು, ಮತ್ತೆ ಕತ್ತರಿಸಿ ಹೊರಗೆ ತೆಗೆದು ಪರೀಕ್ಷಿಸಿ, ಮತ್ತೆ ಒಳಗಿಟ್ಟು, ಮೊದಲು ಪರೀಕ್ಷಿಸುವ ತನ್ನ ಆತ್ಮವಿಮರ್ಶೆಯ ಶಕ್ತಿಯನ್ನು ಮೆಚ್ಚುತ್ತ, ನಂತರ ಪರೀಕ್ಷಿಸಿದ ವಸ್ತುವನ್ನೇ ಪ್ರೀತಿಸುತ್ತ, ಕೊನೆಗೆ ಹೀಗೆ ಪರೀಕ್ಷಿಸುವುದು ಅಭ್ಯಾಸ ಬಿದ್ದು ಪರೀಕ್ಷಿಸುತ್ತ, ಪರೀಕ್ಷಿಸುತ್ತ, ತನ್ನ ಮಲವನ್ನು ತಾನೇ ಮೆಚ್ಚುವವನಂತಾಗಿ, ಪರೀಕ್ಷಿಸುವ ಮಲವೇ ತಾನಾಗಿ, ಅಮ್ಮ ಹೇಳಿದಂತೆ ಭಾಗೀರತಿಯನ್ನು ಮದುವೆಯಾಗಿ ಗೊಣಗುತ್ತ ಸಂಸಾರ ಮಾಡಿ, ಸದಾ ಆತ್ಮವಿಮರ್ಶೆಯಲ್ಲಿ ಪರೀಕ್ಷಿಸಿಕೊಳ್ಳುತ್ತ, ಹುಟ್ಟಿದ ಮಕ್ಕಳ ಉದ್ಧಾರಕಾಗಿಉದ್ಧಾರಕ್ಕಾಗಿ ಶ್ರಮಿಸುತ್ತ, ಅವರನ್ನು ಶಪಿಸುತ್ತ; ದುಡ್ಡು ಕೂಡಿಸಿ, ಮನೆ ಕಟ್ಟಿ, ಕೆಲಸದಿಂದ ರಿಟೈರ್ಡ್ ಆದಮೇಲೆ ಸರ್ಕಾರಾನ್ನ ಇನ್ನೆರಡು ವರ್ಷದ ಎಕ್ಸ್‌ಟೆನ್‌ಶನ್‌ಗೆ ಅಂಗಲಾಚಿ….. +ಮಾಧು ಸಾಯದಿದ್ದರೆ-ಅವನೊಬ್ಬ ದೊಡ್ಡ ಅಥವಾ ಸಾಮಾನ್ಯ ಕಾದಂಬರಿಕಾರನಾಗಿ, ಊರೂರು ಸುತ್ತಿ, ಹಾದರ ಮಾಡಿ, ಕುಡಿದು, ಜನಪ್ರಿಯ ಲೇಖಕನಾಗಿ, ಅಥವಾ, ಆಗದೆ, ದುಡ್ಡಿಗಾಗಿ ನನ್ನನ್ನ ಸದಾ ಪೀಡಿಸುತ್ತ, ಈಗ ಸತ್ತರೂ ಭೂತವಾಗಿ ಪೀಡಿಸುತ್ತ… +ಸ್ಟೂ‌ಅರ್ಟ್ ಲೇಬರ್ ಪಾರ್ಟ್ಪಾರ್ಟಿ ಸೇರಿ, ಹಿಂದುಳಿದ ದೇಶಗಳ ಉದ್ಧಾರಕ್ಕಾಗಿ ಶ್ರಮಿಸಿ, ಎಂ.ಪಿ. ಯಾಗಿ, ಇಂಡಿಯಾಕ್ಕೆ ಬಂದು ಏರ್‌ಕಂಡೀಶನ್ಡ್ ಹೋಟೆಲಲ್ಲಿ ಇಳಿದು, ಏರ್‌ಕಂಡೀಶನ್ಡ್ ಕಾರಿನಲ್ಲಿ ಸುತ್ತಿ ಸಾಧು-ಸಂತರನ್ನು ನೋಡಿ, ಭಾರತೀಯ ಆಧ್ಯಾತ್ಮ ತನ್ನ ಆತ್ಮದ ಸಂಸ್ಕಾರಕ್ಕೆ ಅವಶ್ಯವಾದ ಒಂದು ಹೊಸ ಅನುಭವವೆಂದು ತಿಳಿದು, ಬುದ್ಧಿಪೂರ್ವಕವಾಗಿ ಯಾವ ತೊಡಕಿಗೂ ಸಿಕ್ಕಿಕೊಳ್ಳದೆ ಅದನ್ನು ಗ್ರಹಿಸಿ, ಆ ಬಗ್ಗೆ ಸುಂದರವಾದ ಒಂದು ಪುಸ್ತಕ ಬರೆದು, ಬಿ. ಬಿ. ಸಿ ಯಲ್ಲಿ ಆ ವಿಷಯ ಮಾತಾಡಿ, ವೃದ್ಧನಾದಾಗಲೂ ಬೊಜ್ಜು ಬೆಳೆಯದೆ ಉದ್ದಕೆ ತೆಳ್ಳಗೆ ನೆಟ್ಟಗೆ ಉಳಿದು….. +“ಇವತ್ತು ಶನಿವಾರ ಆದ್ದರಿಂದ ಆರು ಗಂಟೆಯವರೆಗೆ ಅಂಗಡಿ ಬಾಗಿಲು ತೆರೆದಿರುತ್ತವೆ. ಎಷ್ಟು ಜನಾ ನೋಡು ಶಾಪಿಂಗ್ ಮಾಡ್ತಿರೋರು….” ಎಂದು ಸ್ಟೂ‌ಅರ್ಟ್ ತಾನು ಸ್ಲಾಟ್ ಮಶೀನಿನಲ್ಲಿ ಕೊಂಡ ಪ್ಯಾಕಿನಿಂದ ಮರೆಯದೆ ಕೇಶವನಿಗೊಂದು ಸಿಗರೇಟನ್ನು ಕೊಟ್ಟ. ತನಗಿಂತ ಕಿರಿಯನಾದ ಸ್ಟೂ‌ಅರ್ಟ್ ಬಗ್ಗೆ ಕೇಶವನಿಗೆ ಒಂದು ಕ್ಷಣ ತುಂಬ ಗೌರವ ಮಮತೆ ಅನ್ನಿಸಿತು. +ಭಾಗ : ಮೂರು +ದೊಡ್ಡ ದೊಡ್ಡ ಗಾಜಿನ ಕಿಟಿಕಿಗಳ ಮೂಲಕ ತಮ್ಮ ಬೆಲೆಯ ಚೀಟಿಗಳನ್ನು ಹೊತ್ತು ನಿಂತ ವಸ್ತುಗಳನ್ನು ಜೋಡಿಟ್ಟಜೋಡಿಸಿಟ್ಟ ವೈಖರಿಯನ್ನು ನೋಡುತ್ತ ವಿಂಡೋ ಶಾಪಿಂಗ್ ಮಾಡೋದೆಂದರೆ ಕೇಶವನಿಗೆ ಖುಷಿ. ಈಗ ಬೇಸಿಗೆಯಾದ್ದರಿಂದ ಗಾಜುಗಳ ಮೇಲೆ ಕೆಂಪಕ್ಷರದಲ್ಲಿ ‘Sಂಐ‌ಇS’ ಎಂದು ಎಲ್ಲೆಲ್ಲೂ ಚೀಟಿಗಳನ್ನು ಅಂಟಿಸಿದ್ದಾರೆ. ಉಂಐಂ Sಂಐ‌ಇS ಹದಿನೈದು ಪೌಂಡಿನ ಸೂಟಿಗೆ ಬರೀ ಒಂಬತ್ತು ಪೌಂಡ್, ಹೆಂಗಸರ ಬಟ್ಟೆಗಳನ್ನು ಮಾರುವ ಅಂಗಡಿಯಲ್ಲಿ ಬೆತ್ತಲೆ ನಿಂತ ಬೊಂಬೆಗಳು- ಅವುಗಳಿಗೆ ಮಾರನೇ ದಿನದ ಫ್ಯಾಶನ್ನಿನ ಬಟ್ಟೆಗಳನ್ನು ತೊಡಿಸುತ್ತ ಇನ್ನೊಬ್ಬಳು. ನಿಜ ಯಾವುದು, ಬೊಂಬೆ ಯಾವುದು-ಕ್ಷಣದ ಬೆರಗು, ಆಸೆ, ನಿರಾಸೆ. ‘ಅದು ಸೆಲ್ಫ್ ರಿಜಸ್, ಯೂರೋಪಿನ ದೊಡ್ಡ ಅಂಗಡಿಗಳಲ್ಲೊಂದು’- ಎಂದ ಸ್ಟೂ‌ಅರ್ಟ್. ‘ಬಸ್ಸು ಹತ್ತೋಣವೆ? ನಡೆಯೋಣವೆ?’ ಎಂದದ್ದಕ್ಕೆ ಕೇಶವ ‘ನಡೆಯೋಣ’ ಎಂದ. ಜಾಕೆಟ್ಟಿನ ಜೇಬಲ್ಲಿ ಕೈಯಿಟ್ಟೂ ಹೇಗೆ ನೀಳವಾಗಿ ನೇರವಾಗಿ ಸ್ಟೂ‌ಅರ್ಟ್ ನಡೆಯುತ್ತಾನೆ. ತನ್ನ ಕಾಲುಗಳ ಹಾಗೆ ಅವನದು ಸೊಟ್ಟಗಿಲ್ಲ. ಇವನ ಹಿಂದಕ್ಕೆ ಆಕ್ಸ್‌ಫರ್ಡ್ ಸ್ಟ್ರೀಟಿದೆ, ಸೆಲ್ಫ್ ರಿಜಸ್‌ನಂತಹ ಅಂಗಡಿಯಿದೆ, ಭಾವನೆಯ ಸೂಕ್ಷ್ಮಾತಿಸೂಕ್ಷ್ಮವನ್ನು ತಿಳಿಸಬಲ್ಲ ಇಂಗ್ಲಿಷ್ ಭಾಷೆಯಿದೆ ತಿರುಗಿ ನೋಡದೆ ನೇರವಾಗಿ ಹ್ಯಾರಿಸ್ ಟ್ವೀಡ್ ಜಾಕೆಟ್, ಸ್ಕಾಟಿಶ್ ಟೈ, ಗ್ರೇಪ್ಲಾನಲ್ ಬ್ಯಾಗಿನಲ್ಲಿ ಅಪ್ಪಟ ಇಂಗ್ಲಿಷ್ ಆಗಿ ಭವಿಷ್ಯದ ಕಡೆ ಕಣ್ಣು ಮಾಡಿ ನಡೆಯುತ್ತಾನೆ. ಅಡಿಗೆ ಖಾರವಾದರೆ ಖಾರ ಹೆಚ್ಚಾಯಿತೆಂದು, ಸಪ್ಪೆಯಾದರೆ ಖಾರ ಬೇಕಾಗಿತ್ತೆಂದು ಅಮ್ಮನ ಜೊತೆ ರಗಳೆ ಮಾಡಲು, ಮಾಧುವಿನ ಜೊತೆ ಜಗಳವಾಡಲು ನನಗೆ ಕನ್ನಡ; ಸುಂದರವಾದ ಸೂಕ್ಷ್ಮ ಭಾವನೆಗಳನ್ನು ಚರ್ಚಿಸಲು ಸ್ಟೂ‌ಅರ್ಟ್‌ನ ಕಿವಿಗೆ ಅಸಹನೀಯವಾಗಿ ಕೇಳಿಸುವ ಇಂಗ್ಲಿಷ್. ನಾನು ಎಡಬಿಡಂಗಿ-ಹೊರಗೆ ಭಟ್ಟಂಗಿ, ಆಪ್ತರ ಕಿವಿಯಲ್ಲಿ ಕರ್ಣಪಿಶಾಚಿ. ವರ್ತಮಾನದ ಕೊಚ್ಚೆಯಲ್ಲಿ ನಿಂತು ಪೂರ್ವದ ವೈಭವವನ್ನು ಸ್ಮರಿಸುವ ದ್ವಿಭಾಷಾ ಚತುರ. ನನಗೆ ನನ್ನನ್ನು ಸಂಪೂರ್ಣ ವ್ಯಕ್ತಗೊಳಿಸಬಲ್ಲ ಭಾಷೆಯಿಲ್ಲ-ನೆಲದ ಕಡೆ ಚೂಪು ತುದಿ ಮಾಡಿ ಆಕಾಶದಲ್ಲಿ ಜಟಿಲ ಕಗ್ಗಂಟಾಗಿ ತೊಳಲುವ ಆಲದ ಬಿಳಲು, ಬಿಳಿಯನೂ ಅಲ್ಲ. ಕರಿಯನೂ ಅಲ್ಲ ಕಿಲುಬುಗಟ್ಟಿದ ತಾಮ್ರ. +“ಇಕೊ ಆ ವಿಂಪಿ ಬಾರ್ ಇದೆಯಲ್ಲ- ಅದು ರಾತ್ರೆಯೆಲ್ಲ ತೆರೆದಿರುತ್ತದೆ. ಬೆಳಿಗ್ಗೆ ಎರಡು ಗಂಟೆಗೆ ಇತ್ತ ಬಂದರೆ ನಮ್ಮ ಸಭ್ಯ ಸಮಾಜದ ಅಲ್ಪಸಂಖ್ಯಾತರು ಅಲ್ಲಿ ಸಿಗುತ್ತಾರೆ- ಊome-sexuಚಿಟs ಮತ್ತು ಐesbiಚಿಟಿs” +ಸಣ್ಣಗೊಂದು ತುಂತುರು ಮಳೆ ಬೀಳಲು ಪ್ರಾರಂಭಿಸಿತು. “ಲಂಡನ್ನಿನ ಹಾಳು ಹವ” ಎಂದ ಸ್ಟೂ‌ಅರ್ಟ್. +“ನಮ್ಮ ದೇಶದ ಬಿಸಿಲು ಧೂಳಿಗಿಂತ ಈ ದೇಶದ ಚಳಿ ವಾಸಿ ಎನ್ನಿಸುತ್ತೆ ನನಗೆ” ಎಂದ ಕೇಶವ. +“ಓ ನನಗೆ ಬಿಸಿಲು, ಜೀವನ, ಸೂರ್ಯ ಬೇಕು.” +“ಅನುಭವವಿಲ್ಲದೆ ನೀನು ಮಾತಾಡ್ತಿದಿ ಸ್ಟೂ‌ಅರ್ಟ್, ಸೂರ್ಯ ನೆತ್ತಿಯ ಮೇಲೆ ಉರಿಯೋದೆಂದರೆ ಏನೂಂತ ನಿನಗೆ ಗೊತ್ತಿಲ್ಲ. ನೆತ್ತಿಯ ಮೇಲೆ ಉರಿಯೋ ಸೂರ್ಯ ನನ್ನಿಂದ ಆಡಬಾರದ ಮಾತನ್ನ ಆಡಿಸಿದಾನೆ. ಮಾಡಬಾರದ ಯೋಚನೇನ್ನ ಮಾಡಿಸಿದಾನೆ. ಬಿಸಿಲಲ್ಲಿ ಒಂದು ಥರ ಮೌಢ್ಯ ಬರುತ್ತೆ. ನಮ್ಮದು ವಿರಾಗಿಗೆ ಯೋಗ್ಯವಾದ ಹವ, ಅನುರಾಗಿಗೆ ಅಲ್ಲ. ನನ್ನ ಅಪ್ಪ ಸತ್ತ ದಿನ ಅವರನ್ನ ಸುಡೋಕೆ ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಬೇಸಗೆ, ಮೇಲೆ ಮಟಮಟ ಮಧ್ಯಾಹ್ನ. ಮೌನದಲ್ಲಿ ಅಲ್ಲೊಂದು ಇಲ್ಲೊಂದು ಕಾಗೆ ಕೂಗಿದ ಸ್ವರ- ಅಷ್ಟೆ. ಸುಡುವ ಮರಳಿನಲ್ಲಿ ಮೂರು ಸೀಳಾಗಿ ಹರಿಯುವ ಬೆಚ್ಚಗಿನ ನೀರಿನ ನದಿಯ ದಂಡೆಯ ಮೇಲೆ ಅಪ್ಪನ ದೇಹಾನ್ನ ಚಟಚಟಾಂತ ಬೆಂಕಿ ಸುಡೋವಾಗ ನನ್ನ ಹಣೇ ಮೇಲಿಂದ ಒಂದು ನರ ಕಿವೀವರೆಗೆ ಪಟಪಟನೆ ಬಡಕೊಂಡು, ಬೆವರು ಇಳಿದು ಕಣ್ಣು ತುಟಿ ಒದ್ದೆಯಾಗಿ, ಸುಖವೊ, ದುಃಖವೊ ನನಗೆ ಯಾವ ಮಾನವ ಭಾವನೇನೂ ಅನ್ನಿಸಲಿಲ್ಲ. ಬಿಸಿಲು ಮುತ್ತಿ, ಆವರಿಸಿ, ಎಲ್ಲ ಭಾವನೇನೊ ನುಂಗಿಬಿಡುತ್ತೆ. ಇಲ್ಲಿ ಶೀತ ದೇಶದಲ್ಲಿ ಬೆಚ್ಚಗೆ ಬೆಂಕೀ ಎದುರು ಕೂತು, ಮುದ್ದಾಗಿ, ಮಾನವೀಯವಾಗಿ, ಸಭ್ಯವಾಗಿ ಜಗತ್ತಿನ ಬಗ್ಗೆ ಚಿಂತಿಸಬಹುದು.” +“ದಾಹವಾಗ್ತಿದೆ ಸ್ವಲ್ಪ ಬಿಯರ್ ಕುಡಿಯೋಣವೆ? ನನಗೆ ಸಾವಿನ ಅಂತಹ ಉತ್ಕಟ ಅನುಭವಾನೇ ಇಲ್ಲ-ಆಂಟಿಸೆಪ್ಟಿಕ್, ಸ್ಪರಿಲೈಸ್‌ಡ್, ಸೆಂಟ್ರಲ್ಲಿ ಹೀಟೆಡ್ ಸಮಾಜ ನಮ್ಮದು.” +ಸಂದಿಯೊಂದರಲ್ಲಿದ್ದ ಕಪ್ಪುಬಿಳಿ ಎಳೆಗಳನ್ನೆಳೆದ ‘ಗನ್‌ಬ್ಯಾರೆಲ್ಸ್’ ಎಂದು ಬೋರ್ಡ್ ಇದ್ದ ಪಬ್ ಕಡೆ ನಡೆದರು; ಬಾಗಿಲು ತೆಗೆದು ಒಳಗೆ ಹೋಗಿ ಕೂರಲು ಒಂದು ಮೂಲೆಯನ್ನು ಕೇಶವ ಹುಡುಕಿದ. ಸಿಗರೇಟ್ ಹೊಗೆ ತುಂಬಿದ ವಿಶಾಲವಾದ ಹಾಲಿನಲ್ಲಿ ಜನ ಕಿಕ್ಕಿರಿದು ಕೂತಿದ್ದರು-ಒರಗುವ ಸದಾ ಬೆಂಚಿನ ಮೇಲೆ, ಗುಂಡನೆಯ ಮೇಜಿನ ಸುತ್ತ ಹಾಕಿದ ದುಂಡನೆಯ ಸ್ಟೂಲ್‌ಗಳ ಮೇಲೆ. ಐದಾರು ಜನ ಯುವಕರು ನಿಂತು ಚೂಪಾದ ಪುಟ್ಟ ಬಾಣಗಳನ್ನು ಬೋರ್ಡಿಗೆ ಎಸೆಯುತ್ತ ಡಾರ್ಟ್ಸ್ ಆಡುತ್ತಿದ್ದರು- ಮುದುಕನೊಬ್ಬ ಸೀಮೆಸುಣ್ಣದಿಂದ ಸ್ಕೋರನ್ನು ಬರೆದುಕೊಳ್ಳುತ್ತ ನಿಂತಿದ್ದ. ಮೂಲೆಯಲ್ಲೊಬ್ಬಳು ಮಧ್ಯವಯಸ್ಸಿನ ತೋರವಾದ ಹೆಂಗಸು ಮಿರುಗುವ ಬಿಗಿಯದಬಿಗಿಯಾದ ಬಟ್ಟೆಯನ್ನು ತೊಟ್ಟು ಪಿಯಾನೊ ಬಾರಿಸುತ್ತಿದ್ದಳು. ಅವಳ ಸುತ್ತ ಪೀಕ್ಯಾಪ್ ಧರಿಸಿ ಕೂತಿದ್ದ ಸುಕ್ಕುಗಟ್ಟಿದ ಮುಖದ, ಕೆಂಪು ಗುಜ್ಜುಮೂಗಿನ ಮುದುಕರು ಹಳೆಯ ಕಾಲದ ಟ್ಯೂನಿಗೆ ಸ್ವರವೆತ್ತಿ ಒಟ್ಟಿಗೇ ಹಾಡುತ್ತ ತಲೆ ತೂಗುತ್ತಿದ್ದರು. ಪಿಯಾನೊ ನಿಂತಿತು. ತೋರವಾದ ಹೆಂಗಸು ಎದ್ದಳು. ಎಲ್ಲರೂ ಚಪ್ಪಳೆ ತಟ್ಟಿದರು. ಅವಳು ಬಾಗಿ ಅದನ್ನು ಸ್ವೀಕರಿಸಿ ತಟ್ಟೆ ಹಿಡಿದು ಹೊರಟಳು. ಅವಳ ತಟ್ಟೆಗೆ ಮೂರು ಪೆನ್ನಿ ಆರು ಪೆನ್ನಿಗಳು ಬಿದ್ದವು. ಕೇಶವ ತನ್ನ ಜೇಬಿನಿಂದ ಒಂದು ಶಿಲಿಂಗ್ ತೆಗೆದು ಹಾಕಿದ. ಙou ಚಿಡಿe beiಟಿg oveಡಿ geಟಿeಡಿous ಎಂದು ಸ್ಟೂ‌ಅರ್ಟ್ ‘ಇಲ್ಲಿ ಗಲಾಟೆ, ಬೇರೆ ರೂಮಿಗೆ ಹೋಗೋಣ’ ಎಂದು ಕರೆದ. +ಇನ್ನೊಂದು ಪುಟ್ಟ ರೂಮು ಯೂನಿವರ್ಸಿಟಿಯ ಮರ್ಮೈಡ್ ಬಾರಿನಂತೆ ಮೆತ್ತನೆಯ ಕುರ್ಚಿಗಳಿಂದ ಹಿತವಾಗಿ ಕಾಣಿಸುತ್ತಿತ್ತು. ಅಲ್ಲಿ ಕೂತಿದ್ದವರ ಸಂಖ್ಯೆಯೂ ಕಡಿಮೆ. ಗಂಡ-ಹೆಂಡಿರು ಟೇಬಲ್ಲುಗಳಲ್ಲಿ ಎದಿರುಬದಿರಾಗಿ ಕೂತು, ಬಿಯರ್ ಕುಡಿಯುತ್ತ ಸಂಜೆಯ ಪೇಪರ್ ಓದೋದರಲ್ಲಿ ಮಗ್ನರಾಗಿದ್ದರು. +“ಪೇಪರ್ ಓದೋಕೆ ಇಲ್ಲಿಗೆ ಬರಬೇಕೆ-ಗಂಡಹೆಂಡಿರು?” ಎಂದ ಕೇಶವ್. +“ಮಧ್ಯಮ-ವರ್ಗದ ಜನ ಈ ರೂಮಿಗೆ ಬರ್ತಾರೆ. ನಾವು ಹೋದ ರೂಮಲ್ಲಿ ಇರೋರು Woಡಿಞiಟಿg ಛಿಟಚಿss ಇಲ್ಲಿ ಬಿಯರ್ ಒಂದು ಪೆನ್ನಿ ಜಾಸ್ತಿ. ಅವರಿಗೆ ಒಂದು ಪೆನ್ನಿ ಹೆಚ್ಚು ಕೊಟ್ಟು ಇಲ್ಲಿ ಬರೋದು ಸಾಧ್ಯವಿಲ್ಲಾಂತ ಅಲ್ಲ. ಬಿಯರ್‌ನಲ್ಲಿ ಉಳಿದ ಪೆನ್ನೀನ ಅವರು ಪಿಯಾನೋ ಬಾರಿಸೋವಳಿಗೆ ಕೊಟ್ಟು ಅವಳಿಗೆ ಕುಡಿಸ್ತಾರೆ. ಇಲ್ಲಿಗೆ ಅವರು ಬರದೇ ಇರೋಕೆ ಕಾರಣ-ಇಲ್ಲಿ ಅವರಿಗೆ ಗೆಲುವಿಲ್ಲ, ತನ್ನ ಜನ ಬರಲ್ಲ. ವರ್ಗಭೇದವನ್ನ ನಮ್ಮ ಜನ ಸಂತೋಷದಿಂದ ಕಹಿಯಿಲ್ಲದೆ ಕಾಯ್ತಾರೆ. ಆದ್ದರಿಂದ ಈ ದೇಶಕ್ಕೆ ಮಾರ್ಕ್ಸಿಸಂ ಕೂಡ ವಿನಾಯತಿ” ಎಂದ ಸ್ಟೂ‌ಅರ್ಟ್. +ಕೇಶವ ಕೌಂಟರಿಗೆ ಹೋಗಿ ಎರಡು ಪೈಂಟ್ ಬಿಟ್ಟರನ್ನು ಕೊಂಡ. “ಆ ಬಾರಿನಲ್ಲಿ ಬಿಯರನ್ನು ಪಂಪ್ ಮಾಡಿಕೊಡಲು ಕಟ್ತುಮಸ್ತಾದ ಒಬ್ಬಳು ಹೆಂಗಸಿದ್ದರೆ, ಇಲ್ಲೊಬ್ಬಳು ತೆಳ್ಳಗಿನ ಹುಡುಗಿಯಿದ್ದಾಳೆ ನೋಡು. ಅವಳು ಹಣ ಪಡೆಯೋವಾಗ ’ಖಿhಚಿಟಿಞ ಥಿou, ಐove’ ಎಂದರೆ, ಇವಳು ’ಖಿhಚಿಟಿಞ ಥಿou siಡಿ’ ಎನ್ನುತ್ತಾಳೆ ಅಲ್ಲವೆ?” ಎಂದು ಸ್ಟೂ‌ಅರ್ಟ್ ನಕ್ಕ. +“ನಾನು Woಡಿಞiಟಿg ಛಿಟಚಿss ನ್ನೆ ಹೆಚ್ಚು ಮೆಚ್ಚುತ್ತೇನೆ” ಎಂದು ಕೇಶವ ಹೇಳಿದ. +“ನಾನೂ ಕೂಡ. ಆದರೆ ಅವರಿಗೆ ಫ್ರೆಜುದಿಚೆಪ್ರೆಜುಡೈಸ್ ತುಂಬಾ ಇದೆ. ನಿನ್ನನ್ನ ಕಂಡರೆ ಅವರು ‘ಕರಿಯ’ ಎಂದು ದೂರವಿಡ್ತಾರೆ. ಆದರೆ ವಿದ್ಯಾವಂತರು….” +“ವಿದ್ಯಾವಂತರು ನನ್ನ ಗೊಡವೆಗೇ ಬರಲ್ಲ. ಎರಡೂ ಒಂದೆ. ಎರಡರಲ್ಲಿ ಡಿಞಟಿ ಛಿಟಚಿ ಏ ಉತ್ತಮ.” +ಇಬ್ಬರೂ ಬಿಯರ್ ಕುಡಿಯುತ್ತ ಮೌನವಾದರು. ಗ್ಲಾಸು ಬರಿದಾದ ಮೇಲೆ ಸ್ಟೂ‌ಅರ್ಟ್ ಎದ್ದು ಹೋಗಿ ಗ್ಲಾಸುಗಳನ್ನು ತುಂಬಿಸಿಕೊಂಡು ಬಂದ. ಎರಡನೇ ಪೈಂಟ್ ಮುಗಿಯುತ್ತಿದ್ದಂತೆ ಡ್ರಾಫ್ಟ್ ಬಿಟ್ಟರಿನ ಪ್ರಭಾವ ಒಳಗಿನಿಂದ ಹಿತವಾಗಿ ಹರಡಿ, ಕೇಶವನ ಮನಸ್ಸು ಸಡಿಲವಾಗತೊಡಗಿತು. ಸ್ಟೂ‌ಅರ್ಟ್ ಜೊತೆ ಆಪ್ತವಾಗಿ ಮಾತಾಡಬೇಕೆನಿಸಿತು: +“ನಿನಗೊಂದು ವಿಷಯ ಹೇಳಬೇಕು ಸ್ಟೂ‌ಅರ್ಟ್. ನನ್ನ ತಂದೆ ಥಟ್ಟನೆ ತೀರಿಕೊಂಡಾಗ ನಾನು ಇಂಟರ್‌ಮೀಡಿಯೆಟ್ ಓದ್ತಾ ಇದ್ದೆ-ಹಳ್ಳಿಯಲ್ಲಿದ್ದ ನಮ್ಮ ಮನೇಂದ ಇನ್ನೂರು ಮೈಲಿ ದೂರದಲ್ಲಿ. ಸಂಸಾರ ನಿರ್ವಹಣೆ ಕಷ್ಟವಾಗಿ ನನ್ನ ತಾಯಿ ‘ನಿನ್ನ ಓದು ಸಾಕು, ಕೆಲಸಕ್ಕೆ ಸೇರು’ ಎಂದಳು. ನಮ್ಮ ದೇಶದ ವಿದ್ಯಾರ್ಥಿಗಳಲ್ಲಿ ಎರಡು ಥರ: ಒಂದು ಪುಸ್ತಕದ ಹುಳ; ಓದಿ ಸಮಾಜದಲ್ಲಿ ಮುಂದೆ ಬರಬೇಕು, ಬಡತನದಿಂದ ಪಾರಾಗಬೇಕೆಂಬ ಹಂಬಲವೇ ಇವರ ಜೀವನದ ಸಾರಸರ್ವಸ್ವ. ಆಟಗಳನ್ನಾಡದೆ, ಒಡನಾಡದೆ, ಬಾಲ್ಯ ಯೌವನದ ಸುಖ ಕಾಣದೆ ಈ ವರ್ಗ ಶ್ರಮಿಸುತ್ತದೆ. ಇನ್ನೊಂದು ರೀತಿಯ ವಿದ್ಯಾರ್ಥಿ-ಅತ್ಯಂತ ಬೇಜವಾಬ್ದಾರಿಯವ-ಸ್ಟ್ರೈಕ್, ಆಟ, ಅಲೆತಾಂತ ಖುಶಿಯಾಗಿ ಕಾಲ ಕಳೀತಾನೆ-ನನ್ನ ತಮ್ಮಂದಿರ ಹಾಗೆ. ಓದುವಾಗ ನಾನು ಮೊದಲನೇ ವರ್ಗಕ್ಕೆ ಸೇರಿದ್ದೆ. ಈiಡಿsಣ ಅಟಚಿss ಗಳಲ್ಲಿ ಪಾಸಾಗೋದೆ ನನ್ನ ಅಂತಿಮ ಗುರಿಯಾಗಿತ್ತು. ಮನೇಂದ ದುಡ್ಡು ಬಾರದಿದ್ದರೂ ಅಂತೂ ಓದಿ ಮುಂದೆ ಬರಬೇಕೂಂತ ಬೆಂಗಳೂರಿಗೆ ಬಂದು ಒಂದು ಫ್ರೀ ಹಾಸ್ಟೆಲ್ಲಿಗೆ ಸೇರಿದೆ. ಅದನ್ನು ನಡೆಸುತ್ತಿದ್ದಾತ ಒಬ್ಬ ಸಮಾಜ ಸೇವಕ-ಅವನ ಕೀರ್ತಿ ಎಲ್ಲ ಕಡೆ ಹರಡಿತ್ತು. ಹೆಗಲಿನ ಮೇಲೆ ಜೋಳಿಗೆ ಹಾಕಿ, ನಿತ್ಯ ಮನೆಮನೆ ಅಲೆದು, ಅಕ್ಕಿ ದುಡ್ಡನ್ನು ಬೇಡಿ ತಂದು, ಹಾಸ್ಟೆಲ್ ನಡೆಸ್ತಿದ್ದ. ನನಗೆ ಅವನ ಮೇಲೆ ಅಪಾರವಾದ ಗೌರವ-ಗಾಂಧೀಜೀಯ ಆದರ್ಶವನ್ನು ಸತತವಾಗಿ ಪಾಲಿಸುತ್ತ ಬಂದವನೂಂತ. ಹಾಸ್ಟೆಲ್ ಕೂಡ ಅತ್ಯಂತ ಸಾತ್ವಿಕವಾದ ರೀತೀಲಿ ನಡೀತ ಇತ್ತು. ನಮಗೆ ಅಡಿಗೆ ಮಾಡಿ ಹಾಕೋರು ಕೂಡ ಸಂಬಳ ತಗೋತಿರಲಿಲ್ಲ. ನಿತ್ಯ ಬೆಳಿಗ್ಗೆ, ಸಂಜೆ ಪ್ರಾರ್ಥನೆ, ಪ್ರಾರ್ಥನೇಲಿ ಸರ್ವಧರ್ಮ ಸಮನ್ವಯ- ಗೀತೆ, ಖೊರಾನ್, ಬೈಬಲ್ ಪಠನ, ಪ್ರಾರ್ಥನೇಗೆ ವಿದ್ಯಾರ್ಥಿಗಳು ಹೋಗದಿದ್ದರೆ ಅವತ್ತು ಅವರಿಗೆ ಊಟವಿಲ್ಲ. ನಿತ್ಯ ವಿದ್ಯಾರ್ಥಿಗಳು ಸರದಿಯ ಮೇಲೆ ಕಕ್ಕಸನ್ನು ಎತ್ತಿ ಹಾಸ್ಟೆಲನ್ನು ತೊಳೆದು ಶುಭ್ರವಾಗಿಡಬೇಕು. ಪ್ರತಿ ಪ್ರಾತಃಕಾಲ ಅನ್ನದಾತ ತಾನೇ ಎದ್ದು ಎರಡು ಹಸುಗಳ ಹಾಲನ್ನು ಕರೆಸಿ ಅವನ್ನು ಕಾಯಿಸಲು ಇಟ್ಟು ಮೊಸರು ಕಡೀತಿದ್ದ….” +“ನೀನು ಹೇಳ್ತಿರೋದು Iಜeಚಿಟ ಆಗಿ ಕಾಣಿಸ್ತಿದೆ….” +ಕೇಶವ ಎದ್ದು ನಿಂತು- “ಇರು ಬಂದೆ. ಮುಂದಕ್ಕೆ ಇನ್ನೂ iಟಿಣeಡಿesಣiಟಿg ಆಗಿ ಇದೆ. ಮೊದಲು ಬಿಯರ್ ತರುತ್ತೇನೆ” ಎಂದು ಎದ್ದು ಹೋಗಿ ಇನ್ನೆರಡು ಪೈಂಟ್‌ಗಳನ್ನು ತುಂಬಿಸಿಕೊಂಡ. ಕೌಂಟರಿನಲ್ಲಿದ್ದ ಹುಡುಗಿ ಅವನ ಕಡೆಗೇ ನೋಡಿ ನಕ್ಕು ಹತ್ತು ಶಿಲಿಂಗಿಗೆ ಚಿಲ್ಲರೆ ಕೊಟ್ಟಳು. ಕೇಶವ ಬಿಯರನ್ನು ತಂದಿಟ್ಟು ಮುಂದಕ್ಕೆ ಹೇಳಿದ: +“ಹಾಸ್ಟೆಲಲ್ಲಿ ಸ್ಥಳ ಕಡಿಮೆಯಾದ್ದರಿಂದ ನಾವು ಮೂರು ನಾಲ್ಕು ಜನ ಒಂದೊಂದು ರೂಮಲ್ಲಿ ಮಲಗುತ್ತಿದ್ದೆವು. ನಾನು ಸೇರಿ ತಿಂಗಳಾದ ಮೇಲೆ ನಮ್ಮ ಅನ್ನದಾತ ‘ಒಂದು ದಿನ ನೀನು ನನ್ನ ರೂಮಲ್ಲಿ ಮಲಗು, ಓದಲು ಬರೆಯಲು ಅನುಕೂಲವಾಗಿದೆ’ ಎಂದ.” +“ಇನ್ನು ಮುಂದೆ ಹೇಳೋದು ಬೇಡ-ಗೊತ್ತಾಯಿತು. ಅವನು ಊomo Sexuಚಿಟ ತಾನೆ?” +ಸ್ಟೂ‌ಅರ್ಟ್‌ನ ಸಾಧಾರಣವಾದ ಧೋರಣೆಯಿಂದ ಕೇಶವನಿಗೆ ನಿರಾಸೆಯಾಯಿತು. ತನ್ನ ಭೂತದ ಬಗ್ಗೆ ತನಗಿರುವ ಜಿಗುಪ್ಸೆಯನ್ನು ಸ್ಟೂ‌ಅರ್ಟ್‌ಗೆ ಅನ್ನಿಸುವಂತೆ ಮಾಡಬೇಕೆಂದಿದ್ದ ತನ್ನ ಆಸೆ ಭಂಗವಾಗಿತ್ತು. +“ನಾನು ಪಬ್ಲಿಕ್ ಸ್ಕೂಲಲ್ಲಿ ಓದಿರೋವ್ನು ಕೇಶವ್, ನಿನಗೆ ಆಶ್ಚರ್ಯವಾಗಬಹುದು, ನಾನು ಅಲ್ಲಿ ಓದ್ತಾ ಇದ್ದಾಗ ನಾನೂ ಊomo Sexuಚಿಟ ಆಗಿದ್ದೆ. ಈಗ ನನಗೆ ಆ ಬಗ್ಗೆ ಜಿಗುಪ್ಸೆಯಿಲ್ಲ. ಅಲ್ಲಿ ನಾನು ಅನುಭವಿಸಿದ ಗೆಳೆತನದ ತೀವ್ರತೆ ನನ್ನ ಉತ್ತಮ ಅನುಭವಗಳಲ್ಲೊಂದೆಂದು ತಿಳಿದಿದ್ದೇನೆ. ಯೂನಿವರ್ಸಿಟಿ ಸೇರಿದ ಮೇಲೆ ಹುಡುಗಿಯರ ಸಂಗದಲ್ಲಿ ನನ್ನ ಹೊಮೊ-ಸೆ‌ಉ‌ಅಲಿತ್ಯ್ಹೋಮೋಸೆಕ್ಷುಯಲಿಟಿ ಕಡಿಮೆಯಾಯಿತು. ಇದು ಕಾಮಜೀವನದ ಆರೋಗ್ಯ, ಅನಾರೋಗ್ಯದ ಪ್ರಶ್ನೆ. ಇದಕ್ಕೆ ಸರಿಯಾದ ಪ್ರತಿಕ್ರಿಯೆ -ಚಿ ಛಿಟiಟಿiಛಿಚಿಟ ಚಿಣಣiಣuಜe ರೋಗಕ್ಕೆ ಸರಿಯಾದ ರೋಗನಿದಾನ ಹುಡುಕಬೇಕು. ನನಗೆ ಕ್ರಿಶ್ಚಿಯನ್ನರಂತೆ ಪಾಪದಲ್ಲಿ ನಂಬಿಕೆಯಿಲ್ಲ. ಜೀವನದಲ್ಲಿ ‘ರೋಗ’-ಆರೋಗ್ಯ’ ಎಂದು ಎರಡು ಸ್ಥಿತಿಯಿದೆ, ಮುಖ್ಯವಾದ್ದು ಜೀವನ ಸಫಲವಾಯಿತೆ, ವಿಫಲವಾಯಿತೆ ಎನ್ನುವ ಪ್ರಶ್ನೆ. ಊomo Sexuಚಿಟiಣಥಿ ಯಿಂದ ಒಬ್ಬನ ಜೀವನ ಸಫಲವಾಗುವುದಾದರೆ ಅಂತಹ ಕಾಮಜೀವನ ರೋಗ ಕೂಡ ಅಲ್ಲ. ವುಲ್ಪೆನ್‌ಡನ್ ರಿಪೋರ್ಟ್ ವಿಷಯ ನೀನು ಕೇಳಿರಬಹುದು. ನನಗೊಂದು ಆಸೆಯಿದೆ- ಯೂನಿವರ್ಸಿಟೀಲಿ ಒಂದು ಚಳುವಳಿ ಪ್ರಾರಂಭಿಸಬೇಕು: ಈಗ ದೇಶದಲ್ಲಿರೊ ಊ-ಚಿಟಣಥಿ ಬಗೆಗಿನ ಕಾನೂನು ಇನ್ನು ಬದಲಾಗಬೇಕೂಂತ. ಅದಕ್ಕೆ ನಿನ್ನ ಸಹಕಾರಾನ ಬೇಡ್ತೀನಿ” +ಎಂದು ಸ್ಟೂ‌ಅರ್ಟ್ ನಕ್ಕ. ಕೇಶವ ಕ್ಷಣ ಸುಮ್ಮನಾಗಿ, ಕುಪಿತನಾಗಿ ಹೇಳಿದ: +“ನಿನಗೆ ಇಲ್ಲಿ ಗೊತ್ತಾಗದೇ ಇರೋದು ನಾನು ಎಷ್ಟು ಅವಮಾನಾನ್ನ ಸಹಿಸಿ ಓದಿದೇಂತ. ಅವನ ಒತ್ತಾಯಕ್ಕೆ ನಾನು ಒಪ್ಪದೇ ಹೋಗಿದ್ದರೆ ಹಾಸ್ಟೆಲನ್ನ ಬಿಡಬೇಕಾಗಿತ್ತು. ಎರಡು ವರ್ಷ ಅಲ್ಲಿ ನರಕವಾಯಿತು ನನಗೆ. ಹುಡುಗರು ಕಕ್ಕಸಿನ ಗೋಡೆಗಳ ಮೇಲೆ ನನ್ನ ಮತ್ತು ಅವನ ಹೆಸರುಗಳನ್ನ ಪ್ಲಸ್ ಹಾಕಿ ಬರೆದರು. ಅಡಿಗೆ ಮಾಡ್ತಾ ಇದ್ದವನೂ ಹೊಮೊ-ಸೆ‌ಉ‌ಅಲ್ಹೋಮೋ ಸೆಕ್ಷುವಲ್ ಆದ್ದರಿಂದ, ಅವನಿಗೂ ನನ್ನ ಅನ್ನದಾತನಿಗೂ ಮೊದಲು ಸಂಬಂಧ ಇದ್ದುದರಿಂದ ಅವನು ಅಸೂಯೆಲೇ ರೇಗಾಡಿದ, ಬಿಟ್ಟು ಹೋಗ್ತೇನೇಂತ ರಂಪ ಮಾಡಿದ. ಎರಡು ದಿನ ಬಿಟ್ಟು ಹೋಗಿ ಮತ್ತೆ ಬಂದು ಅತ್ತ. ನನ್ನ ಸ್ವಮರ್ಯಾದೆ, ಗಂಡಸುತನ, ಅಲ್ಲಿ ನಾಶವಾಯ್ತು ಸ್ಟೂ‌ಅರ್ಟ್. ನೀನು ಮನಶ್ಯಾಸ್ತ್ರ ಓದಿ ಹೇಳೋ ಹಾಗೆ ಇದು ಬರಿ ರೋಗನಿದಾನದ ಪ್ರಶ್ನೆ ಅಲ್ಲ.” +” I ಚಿm soಡಿಡಿಥಿ ಕೇಶವ್. ಒತ್ತಾಯ ಎಲ್ಲಿದ್ದರೂ ನಾನು ಅದನ್ನ ದ್ವೇಷಿಸುತ್ತೇನೆ. ಪಾಪ ಎನ್ನೋದು ಏನಾದರು ಇದ್ದರೆ ಅದು ನಮ್ಮ ಸುಖಕ್ಕೆ ಇನ್ನೊಬ್ಬರನ್ನ ಅಸುಖಿಗಳಾಗಿ ಮಾಡೋದು. ಆ ದೃಷ್ಟಿಯಿಂದ ನೀನು ಅನ್ನೋದನ್ನ ಒಪ್ಪಿದೆ. ಆದರೆ ಹೊಮೊ-ಸೆ‌ಉ‌ಅಲಿತ್ಯ್ ಹೋಮೋಸೆಕ್ಷುಯಲಿಟಿ ಯಕ್ಕೆ ಭಯಂಕರವಾದ ಒಂದು ನರಕ ಇದೇಂತ ನಾನು ಒಪ್ಪಲ್ಲ.” +ಎಂದು ಸ್ಟೂ‌ಅರ್ಟ್ ಸಿಗರೇಟಿನ ಪ್ಯಾಕನ್ನು ಕೇಶವನಿಗೆ ಹಿಡಿದ. ಕೇಶವ ಒಂದು ಸಿಗರೇಟನ್ನು ಹಚ್ಚಿ ನನ್ನ ಜೀವನದ ಯಾವ ಭಯಂಕರ ವಿಷಯಾನ್ನ ಹೇಳಿದರೆ ಸ್ಟೂ‌ಅರ್ಟ್‌ನ ಮನಸ್ಸಿನ ಸ್ಥಿಮಿತಕ್ಕೆ ‘ಶಾಕ್’ ಆದೀತೆಂದು ಚಿಂತಿಸುತ್ತ ಕೂತ. +“ಕೌಂಟರಿನಲ್ಲಿರೋ ಹುಡುಗಿ ಚೆನ್ನಾಗಿದ್ದಾಳೆ” ಎಂದ ಕೇಶವ. ಬಿಯರಿನ ಪ್ರಭಾವ ತಲೆಗೆ ಏರಿ ಹಿತವೆನ್ನಿಸುತ್ತಿತ್ತು. +“ಸಾಮಾನ್ಯ ಇದಾಳೆ. ಃuಣ ಣhಚಿಣ is ಡಿighಣ ಚಿಣಣiಣuಜe ” ಎಂದು ಸ್ಟೂ‌ಅರ್ಟ್ ನಸುನಕ್ಕ. +“ಬಿಳಿಯ ಚರ್ಮ ಸೌಂದರ್ಯದ ಹೆಗ್ಗುರುತು ಅಂತ ತಿಳಿಯೋ ದೇಶದಿಂದ ನಾನು ಬಂದಿದೀನಿಂತ ಮರೆಯಬೇಡ.” +“ಥಿou ಚಿmಚಿze me ” +” ಶ್ರೀಕೃಷ್ಣನ ಎಳೆಯ ಜೀವನದಲ್ಲಿ ರಾಧೆ ಅವನ ಪ್ರಿಯೆ. ರಾಧೆ ಹಾಲಿನಂತಹ ಬಣ್ಣದವಳು. ಆದರೆ ಅವನ ಪಕ್ವ ವಯಸ್ಸಿನಲ್ಲಿ ದ್ರೌಪತಿ ಅವನ ಪ್ರಿಯೆಯಾಗುತ್ತಾಳೆ. ಕಾಮದ ಸೊಂಕಿಲ್ಲದ ಪ್ಲೇಟಾನಿಕ್ ಸಂಬಂಧ ಅದು. ದ್ರೌಪತಿ, ಕೃಷ್ಣೆ-ಕಪ್ಪಗಿದ್ದವಳು. ಬಣ್ಣಕ್ಕೂ ಅನುಭವದ ಪಕ್ವತೆಗೂ ಸಂಬಂಧವಿರಬೇಕು. ನಾನು ಸಧ್ಯ ಬಿಳಿಯ ಚರ್ಮದಿಂದ ಮೋಹಿತನಾದವನು. ನನ್ನ ಜನಾಂಗಕ್ಕೆ ಯೂರೋಪೇ ಕಾಶಿ, ರಾಮೇಶ್ವರ; ಪವಿತ್ರ ಯಾತ್ರಾಸ್ಥಳ. ವಿವೇಕಾನಂದ, ಟಾಗೋರ್‌ಗೆ ನಿಮ್ಮಿಂದ ಸರ್ಟಿಫಿಕೇಟ್ ಸಿಗೋವರೆಗೆ ನಮ್ಮ ದೇಶದಲ್ಲಿ ಬೆಲೆ ಸಿಗಲಿಲ್ಲ.” +“ನನಗೆ ಸೀರೆಯುಟ್ಟ ಭಾರತದ ತಾಮ್ರವರ್ಣದ ಹುಡುಗಿಯರೆಂದರೆ ಇಷ್ಟ…ಕಾಮದ ವಿಷಯದಲ್ಲಿ ನಾನು ನಿನಗಿಂತ ಪಕ್ವ ಹಾಗಾದರೆ…..!” +“ಖಂಡಿತವಾಗಿ….ಹೆಣ್ಣು ನಾನಿನ್ನೂ ಕಾಣದ ಜಗತ್ತು… ನನ್ನ ತಲೆಯೀಗ ನೆರೆತಿದೆ ವಯಸ್ಸು ಮುವತ್ತನ್ನು ದಾಟಿದೆ- ಮರೆಯಬೇಡ.” +“ಇನ್ನೊಂದು ಡ್ರಿಂಕ್” ಎಂದು ಸ್ಟು‌ಅರ್ಟ್ ಕೇಳಿದ. +“ರೈಟ್. ಆದರೆ ಬಿಯರ್ ಬೇಡ. ನಾನಿನ್ನೂ ವೋಡ್ಕಾ ಕುಡಿದಿಲ್ಲ. ಖಿತಿo smಚಿಟಟ voಜಞಚಿs . ಹೊಸ ಅನುಭವಕ್ಕಾಗಿ ನಾನು ಇಂಗ್ಲೆಂಡಿಗೆ ಬಂದಿದೀನಿ” ಎಂದು ಕೇಶವ ನಗುತ್ತ ಟಾಯಿಲೆಟ್‌ಗೆಂದು ಎದ್ದ. +‘ಒix ಮಾಡೋದು ಒಳ್ಳೇದಲ್ಲ. ಂಟಟ ಡಿghಣ… voಜಞಚಿ ಣheಟಿ ” ಎಂದು ಸ್ಟೂ‌ಅರ್ಟ್ ಎದ್ದು ಕೌಂಟರಿಗೆ ಹೋದ. +ಟಾಯಿಲೆಟ್‌ನಲ್ಲಿ ನಿಂತಾಗ ಕೇಶವನಿಗೆ ಎನ್ನಿಸಿತು: ನನ್ನ ಜೀವನದಲ್ಲಿ ಏನನ್ನು ಹೇಳಿದರೆ ಸ್ಟೂ‌ಅರ್ಟ್‌ಗೆ ಶಾಕ್ ಆದೀತು? ಎಲ್ಲವನ್ನೂ ನುಂಗಬಲ್ಲ ಅವನ ಸಮಚಿತ್ತದ ಗುಟ್ಟೇನು? ತಾನು ಯಾರಿಗೂ ಹೇಳದ ಆ ಒಂದು ಕನಸನ್ನು ಸ್ಟೂ‌ಅರ್ಟ್‌ಗೆ ಹೇಳಲೆ? ಆದರೆ ತಾನೇ ಮತ್ತೆ ನೆನಸಲು ಬಯಸದ ಆ ಕನಸನ್ನು ಯಾವ ಮಾತಿನಲ್ಲಿ ಹೇಳಲಿ? ಸ್ಟೂ‌ಅರ್ಟ್ ನಿನಗೆ ಮಾತ್ರ ಇದನ್ನ ಹೇಳ್ತಿದೀನಿ ಇವತ್ತು. ಐದಾರು ವರ್ಷಗಳ ಹಿಂದೆ ನನಗೊಂದು ಕನಸು ಬಿತ್ತು: +ಕನಸಿನಲ್ಲಿ ನಾನು… +…..ಆದರೆ ಹೇಳಲಾರೆ. ಹೇಳಿದರೆ ಸ್ಟೂ‌ಅರ್ಟ್ ಇನ್ನೊಂದು ಮನಸ್ಯಾಸ್ತ್ರದ ಸಿದ್ಧಾಂತದಿಂದ ವಿವರಿಸಬಹುದು. ಹೇಳಿದ ನಂತರ ನನಗೆ ಸ್ಟೂ‌ಅರ್ಟ್‌ನನ್ನು ಕಂಡರೆ ಅತ್ಯಂತ ಜಿಗುಪ್ಸೆ ಅನ್ನಿಸಬಹುದು. ಅತ್ಯಂತ ನನ್ನ ಒಳಗೆ ಯಾರೂ ಬರುವುದು ಬೇಡ; ನಾನೂ ಅಲ್ಲಿ ಹೋಗಲೂ ಬಯಸುವುದಿಲ್ಲ….ಗರ್ಭದೊಳಗಿನ ನಿದ್ದೆಯಲ್ಲಿರುವುದೇ ಕ್ಷೇಮ…. +ವೋಡ್ಕಾ ಕುಡಿದ ಮೇಲೆ ‘ಇನ್ನು ಹೋಗೋಣ’ ಎಂದ ಸ್ಟೂ‌ಅರ್ಟ್. +“ಎಲ್ಲಿಗೆ?” ಎಂದ ಕೇಶವ. +“ಎಲ್ಲಿಗಾದರೂ-ಇದು ನಿನ್ನ ಸಂಜೆ-ನೀನೆ ಹೇಳು.” +ಎಂದು ಸ್ಟೂ‌ಅರ್ಟ್ ಬಾಗಿಲನ್ನು ಎಳೆದು ಹಿಡಿದು ‘ ಂಜಿಣeಡಿ ಥಿou ’ ಎಂದ. ಕೇಶವ ‘ ಣhಚಿಟಿಞs ’ ಎಂದು ಹೊರಗಿನ ತಂಪಾದ ಹಾಳಿಗೆಗಾಳಿಗೆ ಬಂದು- +“ಒಂದು ನೈಟ್- ಕ್ಲಬ್ಬಿಗೆ ಹೋಗೋಣ ಸ್ಟೂ‌ಅರ್ಟ್. ನನಗೆ ಹುಡುಗಿಯರನ್ನ ನೋಡ ಬೇಕು- ಸಾಧ್ಯವಾದರೆ….” ಎಂದು ಸೂಚಿಸುವ ಧ್ವನಿಯಲ್ಲಿ ಹೇಳಿದ. +” ಖighಣ . ನಾನು ವರ್ಜಿಲ್, ನೀನು ಡಾಂಟೆ. ಲಂಡನ್ನಿನ ನರಕಗಳನ್ನು ತೋರಿಸುತ್ತೀನಿ ಬಾ.” +ಎಂದು ಸ್ಟೂ‌ಅರ್ಟ್ ನಾಟಕೀಯವಾಗಿ ಏರ್ ಇಂಡಿಯಾದ ಬೊಂಬೆಯಂತೆ ಕೈ ನೀಡಿ ಬಾಗಿದ. +ಭಾಗ: ನಾಲ್ಕು +“ಅನುಭವಾನ್ನ ಹುಡುಕಿಕೊಂಡು ಹೋದರೆ, ಸಿಗೋದು ಪೂರ್ವನಿಶ್ಚಿತವಾದದ್ದು ಅಂತ ನೀನೇ ಹೇಳಿದಿ…” +ಸ್ಟೂ‌ಅರ್ಟ್ ಕೇಶವನನ್ನ ಗೇಲಿ ಮಾಡಿದ. +“ಎಂಬ ಮಾತೂ ನನ್ನ ಅನುಭವಕ್ಕೆ ಬರಬೇಕು. ನಾನು ನಿರನುಭವಿ, ನನ್ನ ಯಾವ ಮಾತಿಗೂ ಬೆಲೆಯಿಲ್ಲ.” +“ಪಿಕಡಿಲಿಯ ಒಂದು ಮೂಲೇಲಿ ಎಲ್ಲೋ ‘ರೋರಿಂಗ್ ಟ್ವಿಂಟೀಸ್’ ಎನ್ನೊ ಕ್ಲಬ್ ಇದೇಂತ ಕೇಳಿದೀನಿ- ಹೋಗೋಣ ಬಾ. ಲಂಡನ್ನಿನ ಪಾತಾಳ ಲೋಕಾನ ನೋಡುವಿಯಂತೆ.” +“ಪಾತಾಳದಲ್ಲಿ ನನ್ನ Iಟಿiಣiಚಿಣioಟಿ ಆಗಬೇಕು. Iಟಿiಣiಚಿಣioಟಿ ಎಂದರೆ ನಮ್ಮಲ್ಲಿ ಉಪನಯನ- ದ್ವಿಜನಾಗೋದು ಹಾಗೆ. ಸತ್ತು ಹೊಸ ಅನುಭವಕ್ಕೆ ಹುಟ್ಟೋದು.” +ನಿಯಾನ್ ದೀಪಗಳ ಹುಚ್ಚಿನಲ್ಲಿ ಜ್ವಲಿಸುವ ಪಿಕಡಿಲಿ ಹತ್ತಿರವಾದಂತೆ ಕೇಶವನ ಮನಸ್ಸು ಕುಣಿಯತೊಡಗಿತು. ಇದು ಯಕ್ಷರ ಲೋಕ, ಇಲ್ಲಿ ಎಲ್ಲ ಸರಿ. ನಾಟ್ಯೋತ್ಸವ ಪದ್ಯ ನೆನಪಾಯಿತು; ‘ತೇಲಿ ಬರುವ ಜಾಸ್ ಗಾನ| ನಮ್ಮ ಕುಣಿತಕಲ್ಲವೇನು?” ಬಿಯರ್ ಕುಡಿದು ಮೇಲೊಂದು ವೋಡ್ಕಾ ಕುಡಿದು ಮತ್ತಾದ ಕಣ್ಣುಗಳು ಪರವಶವಾದುವು. ಇಂಗ್ಲೆಂಡಲ್ಲಿ ಯುವಕರು ತಮ್ಮ ಗೆಳೆಯರ ಕೈ ಹಿಡಿದು, ಹೆಗಲಿನ ಮೇಲೆ ಕೈಹಾಕಿ ನಡೆಯುವುದಿಲ್ಲವೆನ್ನುವುದನ್ನು ಮರೆತು ಸ್ಟೂ‌ಅರ್ಟ್‌ನ ಹೆಗಲಿನ ಮೇಲೆ ಕೈ ಹಾಕಿ ನಡೆದ. ಧರ್ಮಜ- ದ್ರೌಪದಿಯರನ್ನು ಬೆತ್ತಲೆ ನೋಡಿ ಪಾಪಶಮನಕ್ಕೆಂದು ಪರ್ಯಟನ ಹೊರಟ ಅರ್ಜುನನ ಹಾಗೆ ನಾನು- ದಾರಿಯಲ್ಲಿ ಚಿತ್ರಾಂಗದೆ….. ಇತ್ಯಾದಿಯೆಂದು- ತನ್ನ ಊಹೆಗೆ ತಾನೇ ಹಿಗ್ಗಿದ. ಪಿಕಡಿಲಿಯಲ್ಲಿ ಒಬ್ಬ ಒಂದು ಪೋಸ್ಟರನ್ನು ಹಿಡಿದು ದಾರಿಹೋಕರನ್ನುದ್ದೇಶಿಸಿ ಎತ್ತಿದ ಧ್ವನಿಯಲ್ಲಿ ಕೂಗುತ್ತಿದ್ದ: ‘ಇಗೋ ದೇವರ ಅಂತಿಮ ತೀರ್ಮಾನದ ದಿನ ಸಮೀಪಿಸುತ್ತಿದೆ, ಪಾಪಿಗಳೇ, ಎಚ್ಚರವಾಗಿ, ಜೀಸಸ್‌ನನ್ನು ನಂಬಿ ಉದ್ಧಾರವಾಗಿ.’ ‘ ಂ ಛಿಡಿಚಿಟಿಞ ’ ಎಂದು ಸ್ಟೂ‌ಅರ್ಟ್ ನಕ್ಕ. ಮುಂದೆ ನಡೆಯುತ್ತಿದ್ದಂತೆ ಇನ್ನೊಬ್ಬ ಮಿಲಿಟರಿ ಬಟ್ಟೆ ಹಾಕಿದ Sಚಿಟvಚಿಣioಟಿ ಚಿಡಿmಥಿ ಯವನೊಬ್ಬ ಕೈಯಲ್ಲಿ ತೂತಿನ ಡಬ್ಬಿಯೊಂದನ್ನು ಹಿದಿದು ಗಂಭೀರವಾಗಿ ಹಣವನ್ನು ಬೇಡುತ್ತಿದ್ದ. ‘ ಓ‌ಔ ಇ‌ಓಖಿಖಙ ’ ಬೋರ್ಡ್ ಹಾಕಿದ ಅಡ್ಡ ದಾರಿಗಳಲ್ಲಿ ಹಾಟ್ ಡಾಗ್ಸ್, ಹ್ಯಂಬರ್ಗರ್‌ನ್ನು ಗಾಡಿ ಚೈನೀಸ್, ಇಟಾಲಿಯನ್, ಫ್ರೆಂಚ್-ಬಗೆಬಗೆಯ ರೆಸ್ಟೋರೆಂಟ್‌ಗಳು. ಯಾವ ದೇಶದ ರುಚಿ ಬೇಕು, ಯಾವ ರೀತಿಯ ಬಟ್ಟೆ ಬೇಕು, ಯಾವ ಬೆಡಗು ಬಿನ್ನಾಣ ಬೇಕು-ಅಮರಾವತಿ. ಸ್ಟೂ‌ಅರ್ಟ್ ಒಂದು ಮೂಲೆ ಹೊಕ್ಕು ಹೇಳಿದ: “ಈ ಸಂದಿಯಲ್ಲೆಲ್ಲೊ ರೋರಿಂಗ್ ಟ್ವಿಂಟೀಸ್ ಇರುವ ನೆನಪು- ಹುಡುಕೋಣ ಬಾ.” +ಒಂದು ವಿಷಯ ಖಚಿತ: ಆಂಗೀರಸ ಋಷಿಯನ್ನ ಮೂಲಪುರುಷನನ್ನಾಗಿ ಪಡೆದು, ಆಂಗೀರಸ ಅಂಬರೀಷ ಯೌವನಾಶ್ವ ತ್ರಯಾರ್ಷೇಯಪ್ರವರಾನ್ವಿತನಾಗಿ, ಆಶ್ವಲಾಯನಸೂತ್ರನಾಗಿ, ಋಕ್ಷ್ವಾಖಾಧ್ಯಾಯಿಯಾಗಿ, ಒಬ್ಬ ಯೋಗಿಯನ್ನ ಚಿಕ್ಕಪ್ಪನನ್ನಾಗಿ ಪಡೆದು, ಊಟಕ್ಕೊಂದು ಚಮಚ ಒಳ್ಳೆಣ್ಣೆಯಿಲ್ಲದಿದ್ದರೂ ದೇವರಿಗೆ ತುಪ್ಪದ ದೀಪವನ್ನು ಹತ್ತಿಸಲು ಮರೆಯದವಳನ್ನು ತಾಯಿಯನ್ನಾಗಿ ಪಡೆದು ನಾನು ಈಗ ಬಿಳಿಯನೊಬ್ಬನ ಜೊತೆ ಹೊಸ ಅನುಭವಕ್ಕೆಂದು ರೋರಿಂಗ್ ಟ್ವೆಂಟೀಸನ್ನು ಹುಡುಕುತ್ತಿರೋದರ ಅಂತರಾರ್ಥ ನನಗೆ ಬೇರು ಇಲ್ಲ ಅಂತ. ಭಾರತದ ಅಸಂಖ್ಯಾತ ಯುವಕರಂತೆ ನನಗೆ ಬುಡ ಭದ್ರವಿಲ್ಲ ಅಂತ….. +ಸಂತ, ತಪ್ತ, ಸಭ್ಯರ ಬಗ್ಗೆ, ಅನುಭವ, ನಿರನುಭವ, ಪಕ್ವತೆಯ ಬಗೆಗೆ ಯೋಚಿಸಿದ್ದು, ಸ್ಟೂ‌ಅರ್ಟ್ ಜೊತೆ ಉದ್ದೇಶದ ಬಗ್ಗೆ ಚರ್ಚಿಸಿದ್ದು ಮರುಕಳಿಸುತ್ತದೆ. ನನ್ನ ಅಪ್ಪನೂ ನಿರನುಭವಿಯಾಗಿ ತಪ್ತನಾಗಿ ಸತ್ತನೆ? ಸುಬ್ಬಣ್ಣಕಕ್ಕನೂ ನಿರನುಭವಿಯಾಗಿ ತಪ್ತನಾಗಿ ಬದರಿಕಾಶ್ರಮದಲ್ಲಿ ಅಲೆಯುತ್ತಿರಬಹುದೆ? ಸ್ಟೂ‌ಅರ್ಟ್ ಇಡಿಯ ಕತೆಯನ್ನೆ ಹೇಳಿ ಅವನ ಸಭ್ಯ ಲಿಬರಲ್ ಮನಸ್ಸಿಗೆ ಇದೆಲ್ಲ ಹೇಗೆ ತಟ್ಟುತ್ತದೆ ಎಂದು ಕೇಳಬೇಕು. +ನನ್ನ ಅಪ್ಪ ಮನೆಗೆ ಹಿರಿಯನಾಗಿ ಯಾಕೆ ಮನೆತನದ ವಹಿವಾಟನ್ನು ತನ್ನ ತಮ್ಮ ಶ್ಯಾಮಕಕ್ಕನಿಗೆ ವಹಿಸಿದ? ಅಮ್ಮ ಅನ್ನುತ್ತಿರುತ್ತಾಳೆ: ‘ತೋಟದಲ್ಲಿ ಎಷ್ಟು ಅಡಿಕೆ ಬೆಳೆದಿದೆ, ಬೆಟ್ಟೆಯೆಷ್ಟು- ಹಸ ಎಷ್ಟು, ಒಟ್ಟು ಎಷ್ಟು ಸಂಪಾದನೆಯಾಯಿತು ಒಂದನ್ನೂ ಇವರು ತಲೆಗೆ ಹಚ್ಚಿಕೊಂಡಿದ್ದಿಲ್ಲ. ಹಚ್ಚಿಕೊಂಡಿದ್ದರೆ ನೀವು ಯಾಕೆ ಹೀಗೆ ಒದ್ದಾಡಬೇಕಾಗಿ ಬರ್ತಿತ್ತು? +ಸುಖವಾಗಿ ಕಾಲು ಚಾಚಿ ಸಂಸಾರ ಮಾಡಬಹುದಿತ್ತು.’ ಪೂಜೆ, ಪುನಸ್ಕಾರ, ಭಾರತ, ಭಾಗವರಭಾಗವತ ಪಠನ; ರಾಮನವಮಿಯಲ್ಲಿ ದೇವಸ್ಥಾನದ ಕಟ್ಟೆಯ ಮೇಲೆ ಕೂತು ವಾಲ್ಮೀಕಿ ರಾಮಾಯಣವನ್ನು ಓದಿ ಕನ್ನಡದಲ್ಲಿ ವ್ಯಾಖ್ಯಾನ ಮಾಡೋದು: ಊರಿನಲ್ಲಿ ಹುಟ್ಟಿದ ಮಕ್ಕಳಿಗೆಲ್ಲ ಕುಂಡಲಿ ಹಾಕಿ ಕೊಡೋದು; ಉಪಾಕರ್ಮದ ದಿನ ಊರಿನವರಿಗೆಲ್ಲ ಉಪಾಕರ್ಮ ಮಾಡಿಸೋದು; ಗೌರಿಹಬ್ಬದ ದಿನ ಹೆಂಗಸರನ್ನೆಲ್ಲ ಮನೆಗೆ ಕರೆದು ವ್ರತ ಮಾಡಿಸೋದು; ನೆರೆಹೊರೆಯವರ ಮನೆಯ ದನ ತಪ್ಪಿಸಿಕೊಂಡರೆ ಹಲಗೆ ಮಂತ್ರಿಸಿ ಕೊಡೋದು; ಬೇರು ಬಳ್ಳಿಗಳನ್ನು ತಂದು ಖಾಹಿಲೆಯಾದವರಿಗೆ ಮುಟ್ಟಸ ಮಾಡೋದು- ಏನಾದರೂ ಸಮಯ ಉಳಿದರೆ, ಜನಿವಾರ ಮಾಡ್ತ ಕೂರೋದು. ಅಮ್ಮನಿಗೇನಾದರೂ ಸೀರೆ ಬೇಕಾದರೆ ಅಪ್ಪ ತನ್ನ ತಮ್ಮನ ಹತ್ತಿರ ಹೋಗಿ ಅದೂ ಇದೂ ಮಾತಾಡಿ, ಕೆಮ್ಮಿ ‘ಮಾರಾಯ ನೋಡು- ಇವಳಿಗೊಂದು ಸೀರೆ ಬೇಕಂತೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಬ್ಯಾರಿ ಅಂಗಡೀಲಿ ಕಡಾ ಆದರೂ ಬರಿಸಿ ತಗೊಂಬಾ, ಹೆಚ್ಚು ಬೆಲೇದೇನೂ ಬೇಕೂಂತಿಲ್ಲ’ ಎಂದು ಅಳೆದು ಹೊಯ್ದು ಕೇಳುವುದು ನೋಡಿದರೆ ಅಮ್ಮನಿಗೆ ಸಿಡಿಸಿಡಿ ಎನ್ನುತ್ತಿತ್ತಂತೆ. ಅಪ್ಪನದು ಹೀಗೆ ವೈದಿಕವೃತ್ತಿಯಾದರೆ ಶ್ಯಾಮಕಕ್ಕನದು ಸಂಪೂರ್ಣ ಲೌಕಿಕ. ಊರಿನಲ್ಲಿ ಏನು ಗಲಾಟೆಯಾಗಲಿ, ಪಾಲು ಪಂಚಾಯ್ತಿ ನಡೆಯಲಿ ಅಲ್ಲಿ ಶ್ಯಾಮಕಕ್ಕ ಇರಬೇಕು. ಕೋರ್ಟು ಕಚೇರಿಯೆಂದು ಅವ ಯಾವತ್ತೂ ಸಾಗರ ಶಿವಮೊಗ್ಗ ಅಲೆಯುತ್ತಿದ್ದ. ನಮಗಿದ್ದ ಆಸ್ತಿ ಅಷ್ಟರಲ್ಲೆ ಇದ್ದರೂ ಸದಾ ನಾಲ್ಕೈದು ಕೇಸುಗಳು ಸಾಗರದ ಕೋರ್ಟಿನಲ್ಲಿ ಇರುತ್ತಿದ್ದುವು. ಹೀಗಾಗಿ ಹೊರಗೆ ಹೇಗೋ ಹಾಗೆಯೇ ಅಡಿಗೆ ಮನೆ ಒಳಗೆ ಕಾರುಬಾರು ನಡೆಸುವವಳು ಚಿಕ್ಕಮ್ಮ. ಹಿರಿಯಳಾದರೂ ಅಮ್ಮನಿಗೆ ಅಲ್ಲಿ ಮಾತಿಲ್ಲ. ‘ಒಂದಿಷ್ಟು ತುಪ್ಪಕ್ಕೆ, ನಿಮಗಿಷ್ಟು ಹಾಲಿಗೆ ಅವಳನ್ನು ನಾನು ಕೇಳಬೇಕಾಗ್ತಿತ್ತು ಕಣೋ’- ಎನ್ನುತ್ತಾಳೆ ಅಮ್ಮ. ಇದು ಹೆಚ್ಚು ದಿನ ಉಳಿಯಲಿಲ್ಲ- ಅಮ್ಮ ಚಿಕ್ಕಮ್ಮನ ನಡುವೆ ಛಿದ್ರ ದೊಡ್ಡದಾಗಿ ಮನೆ ಪಾಲಾಯಿತು. ಅಪ್ಪ ಅದಕ್ಕೆ ಹೂ ಎನ್ನಲಿಲ್ಲ, ಊಹೂ ಎನ್ನಲಿಲ್ಲ. ಅಪ್ಪನಿಗೆ ಪಾಲಿನ ಜೊತೆ ಚಿಕ್ಕಪ್ಪನ ಅದ್ಧೂರಿ ಕಾರುಬಾರಿನಿಂದಾದ ಸಾಲವೂ ತಲೆಯ ಮೇಲೆ ಬಂತು. ಪಾಲು ಆದ ಮೇಲೂ ಅಪ್ಪ ಶುದ್ಧ ವೈದಿಕನಾಗಿಯೇ ಉಳಿದ. ಅಡಿಕೆ-ವ್ಯಾಪಾರ ಇತ್ಯಾದಿ ಕೆಲಸಕ್ಕೆ ಸಾಗರಕ್ಕೊ ಶಿವಮೊಗ್ಗೆಗೊ ಹೋಗಬೇಕಾಗಿ ಬಂದರೆ- ‘ಪೇಟೇಲಿ ನನಗೆ ಸ್ನಾನ ಸಂಧ್ಯಾವಂದನೆಗೆ ಅಡಚಣೆ ಆಗ್ತದಪ್ಪ. ನಿನ್ನ ಅಡಿಕೇ ಜೊತೇಲಿ ನನ್ನದನ್ನೂ ಅಷ್ಟು ಮಾರಿ ಬಾ’ ಎಂದು ಚಿಕ್ಕಪ್ಪನಿಗೆ ವಹಿಸಿಬಿಡುತ್ತಿದ್ದ. +ಆದರೆ ವಿಚಿತ್ರವೆಂದರೆ ಅಪ್ಪ ಸಾಯುವುದಕ್ಕೆ ಮುಂಚೆ ಅವರ ಇಳಿವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಬದಲಾದದ್ದು. ಸದಾ ಸೌಮ್ಯವಾಗಿರುತ್ತಿದ್ದವನು ಬೆಂಕಿಗೆ ಬಿದ್ದ ಉಪ್ಪಿನಂತೆ ಕಿಡಿಕಿಡಿಯೆನ್ನತೊಡಗಿದ. ವೈದಿಕವೃತ್ತಿಯಲ್ಲಿ ತತ್ಪರವಾದ ಮನಸ್ಸು ಹಣದ ಕಡೆ ತಿರುಗಿತು. ದಪ್ಪ ಗಾಜಿನ ಕನ್ನಡಕ ಹಾಕಿಕೊಂಡು ಹಳೆಯ ಕಡತಗಳನ್ನೆಲ್ಲಾ ಹೊರಗೆ ತೆಗೆದು ಧೂಳು ಹೊಡೆದು ಲೆಖ್ಖವನ್ನೆಲ್ಲಾ ಕೂಡಿಸಲು ಶುರುಮಾಡಿದ. ಶ್ಯಾಮಕಕ್ಕನನ್ನು ಒಂದು ದಿನ ಕರೆದು, ನಿನ್ನಂತಹ ಠಕ್ಕ ಬೇರೊಬ್ಬನಿಲ್ಲೆಂದು ವಾಚಾಮಗೋಚರ ಬೈದ. ಯಾವತ್ತೊ ಯಾರಿಗೊ ಕೊಟ್ಟ ಒಂದಾಣೆ ಎರಡಾಣೆ ಸಾಲವನ್ನೆಲ್ಲ ತಗಾದೆ ಮಾಡಿ ವಸೂಲು ಮಾಡತೊಡಗಿದ. ದೇವರ ಪೂಜೆಯಲ್ಲಿದ್ದಾಗಲೂ ಥಟ್ಟನೆ ಏನೋ ನೆನೆದು, ಅಮ್ಮನನ್ನು ಕರೆದು- ‘ಏನೇ ಅಡಿಕೇ ಸುಲಿಯೋರು ಬಂದರೇನೇ? ಚಪ್ಪರದ ಮೇಲೆ ಒಣಗ್ತಿರೋ ಅಡಿಕೇನ್ನ ಸುಲಿಯೋ ಹೆಂಗಸರು ಮಡಿಲಲ್ಲಷ್ಟು ಕಟ್ಟಿಕೊಂಡು ಹೋದರೂ ಅಷ್ಟು ಬಂಗಾರಾನೇ ಹೋದಂಗೆ- ಸ್ವಲ್ಪ ನಿಗಾ ಇರಲೇ’- ಎಂದು ಸದಾ ರಗಳೆ ಮಾಡಲು ಶುರುಮಾಡಿದ. ಕಣ್ಣಿನದೃಷ್ಟಿ ಮಂದವಾಗುತ್ತಿದ್ದಂತೆ, ಕಿವಿ ಕಿವುಡಾಗುತ್ತಿದ್ದಂತೆ ಲೋದಕಲೋಕದ ಮೇಲಿನ ಆಸಕ್ತಿ ಇನ್ನಷ್ಟು ಬಿಗಿಯಹತ್ತಿತು. ಯಾವ ಹೆಜ್ಜೆ-ಸಪ್ಪಳ ಕೇಳಿದರೂ ‘ಯಾರದು?’ ಎಂದು ತಡವಿಕೊಂಡು ಬಂದಾಯಿತು; ಯಾರು ಏನು ಆಡುತ್ತಿದ್ದರೂ ‘ಏನದು’ ಎಂದು ಕೂಡಲೇ ತಿಳಿಯಬೇಕು; ಹೆಂಡತಿ ಮಕ್ಕಳು ತಾನು ಹಾಕಿದ ಗೆರೆ ಮೀರಕೂಡದು, ತನ್ನನ್ನು ಕೇಳದೆ ಏನೂ ಮಾಡಕೂಡದು- ಸಾಯುವಾಗ ಅಪ್ಪ ಅತ್ಯಂತ ಕರುಣಾಜನಕ ದೃಶ್ಯವಾದ. +ವೈದಿಕಧರ್ಮದಲ್ಲಿ ಬೇರು ಬಿಟ್ಟ ಅಪ್ಪ ಯಾಕೆ ಹೀಗೆ ಬದಲಾದ?- ಅವನ ಜೀವನವನ್ನು ನಡೆಸಿದ ನಂಬಿಕೆ ಎಷ್ಟು ಪೊಳ್ಳು ಎಷ್ಟು ನಿಜ- ತನ್ನ ಹಾಗೆ ಅವನು ತಪ್ತನೆ, ಅಕ್ಕತಂಗಿಯರ ಹಣ್ಣಿನ ಮರದಂತೆ ಅವನು ಒಳಗೆ ಠೊಳ್ಳೆ?ಟೊಳ್ಳೆ? +ಅಪ್ಪನ ಕತೆ ಹೀಗಾದರೆ ಶಾಮಕಕ್ಕನದು ಇನ್ನೊಂದು. ಮೋಸ, ದಗ, ವಂಚನೆ ಮಾಡಿ ದುಡಿದದ್ದನ್ನೆಲ್ಲ ಸೂಳೆಯರ ಮೇಲೆ ಸುರಿದ, ಕೋರ್ಟುಗಳಿಗೆ ಅಲೆದು ಪೋಲು ಮಾಡಿದ. ಅವನ ಕಾಮ ಸೆಗಣಿ ತೆಗೆಯುವ ಹೊಲತಿಯನ್ನೂ ಬಿಡಲಿಲ್ಲ-ಸಿಕ್ಕಿಬಿದ್ದು ಗಲಾಟೆಯಾದರೂ ಅವ ಜಗ್ಗಲಿಲ್ಲ. ಸೀರೆಯುಟ್ಟದ್ದೊಂದು ಕಣ್ಣೆದುರು ಸುಳಿದರೆ ಸಾಕು ಬೆನ್ನುಹತ್ತುವ ಸ್ವಭಾವ ಅದು. ಅವನು ಠಿಕಾಣಿ ಬಿಟ್ಟಲೆಲ್ಲ ಸೂಳೆಯರು-ಶಿವಮೊಗ್ಗೆಯಲ್ಲಿ, ಸಾಗರದಲ್ಲಿ, ಬಸರೂರಿನಲ್ಲಿ, ಹಿತ್ತಿಲಿನಲ್ಲಿ, ಗುಡ್ಡದಲ್ಲಿ, ತೋಟದಲ್ಲಿ. ಆದರೆ ಈಗ ಅವನ ದರ್ಬಾರೆಲ್ಲ ಮಾಯವಾಗಿದೆ; ಕೈಯಲ್ಲಿದ್ದ ಹಣ ಖರ್ಚಾಗಿದೆ; ಡಯಾಬಿಟಿಸ್ ರೋಗದಿಂದ ಜೀರ್ಣನಾಗಿದ್ದಾನೆ; ಮನೆತನದ ಮರ್ಯಾದೆಯೆಂದು ಸದಾ ಜಪಿಸುತ್ತಾನೆ. ದುರ್ಗಾಪೂಜೆ, ಸತ್ಯನಾರಾಯಣವ್ರತ, ತೀರ್ಥಯಾತ್ರೆ-ಹೀಗೇ ಹೇಗೋ ಕಾಲ ಹಾಕುತ್ತಾನೆ. +ಇವರಿಬ್ಬರಿಗಿಂತ ಕೇಶವನಿಗೆ ಅತಿ ವಿಚಿತ್ರವೆನ್ನಿಸುವುದು ಅಪ್ಪನ ಕಿರಿಯ ತಮ್ಮ ಸುಬ್ಬಣ್ಣಕಕ್ಕನದು. ಅವನು ಕಿರಿಯ ವಯಸ್ಸಿನಲ್ಲೆ ಮನೆ ಬಿಟ್ಟು ಊರಿನಲ್ಲಿದ್ದ ಮಠವನ್ನು ಸೇರಿದ. ಅತ್ಯಂತ ನಿಷ್ಠ ಬ್ರಾಹ್ಮಣನಾದ. ದಿನಕ್ಕೊಂದು ಹೊತ್ತು ಮಾತ್ರ ಊಟ. ವರ್ಷಕ್ಕೊಮ್ಮೆ ಬೇಡಿ ಎರಡು ಪಾಣಿಪಂಚೆಯನ್ನು ಪಡೆದು ಒಂದನ್ನು ಒಗೆದು ಹಾಕಿದಾಗ ಇನ್ನೊಂದನ್ನು ಉಡುವುದು. ಒಮ್ಮೆ ಕೇಶವನ ಕಣ್ಣೆದಿರೆ ಯಾವನೋ ಒಬ್ಬ ಹುಚ್ಚ ಬಂದು ಸುಬ್ಬಣ್ಣಕಕ್ಕನ ಹತ್ತಿರ ‘ನನಗೊಂದು ವಸ್ತ್ರವನ್ನುಡಲು ಕೊಡು’ ಎಂದು ಕೇಳಿದ. ‘ಉಟ್ಟದ್ದನ್ನು ಕೊಡಕೂಡದು’ ಎಂದು ಸುಬ್ಬಣ್ಣಕಕ್ಕ. ‘ಪರವಾಗಿಲ್ಲ ಕೊಡು’ ಎಂದು ಹುಚ್ಚ ದುಂಬಾಲು ಬಿದ್ದ. ಸುಬ್ಬಣ್ಣಕಕ್ಕ ಉಟ್ಟ ವಸ್ತ್ರವನ್ನು ಬಿಚ್ಚಿಕೊಟ್ಟು ಬರಿಯ ಕೌಪೀನದಲ್ಲಿ ಉಳಿದ. ಆ ವರ್ಷವೆಲ್ಲ ಇನ್ನೊಂದು ವಸ್ತ್ರವನ್ನು ಅವನು ಬೇಡಲಿಲ್ಲ. ಅವನ ದಿನ ಪ್ರಾತಃಕಾಲ ನಾಲ್ಕು ಗಂಟೆಗೆ ಪ್ರಾರಂಭವಾಗುತ್ತಿತ್ತು. ಹೊಳೆಯಲ್ಲಿ ಸ್ನಾನ ಮಾಡಿ, ಮೂರು ಗಂಟೆಗಳ ಕಾಲ ನಿಂತು ಜಪ ಮಾಡಿ, ನಂತರ ಮತ್ತಷ್ಟು ಓದಿ, ಮಧ್ಯಾಹ್ನ ಮತ್ತೆ ಸ್ನಾನ ಮಾಡಿ, ಸುಡುವ ಬಿಸಿಲಲ್ಲಿ ನಿಂತು ಜಪ ಮಾಡಿ, ಎಲ್ಲರೂ ಊಟಕ್ಕೆ ಕೂತಿದ್ದಾಗ ತನ್ನದೊಂದು ಪುಟ್ಟ ಬಟ್ಟಲನ್ನು ಹಿಡಿದು ‘ಭವತಿ ಭಿಕ್ಷಾಂದೇಹಿ’ ಎಂದು ಎಲ್ಲರಿಗೆ ಒಡ್ಡಿ ಹಿಡಿ ಹಿಡಿ ಅನ್ನವನ್ನು ಪಡೆದು ಅದನ್ನಷ್ಟು ಊಟ ಮಾಡಿ, ಮತ್ತೆ ಓದಲು ಕೂರುವುದು. ಸಂಜೆ ಮತ್ತೆ ಹೊಳೆಯಲ್ಲಿ ಸ್ನಾನ ಮಾಡಿ, ಜಪ. ಜಪ ಮುಗಿದ ಮೇಲೆ ಮಠದ ಗೋಡೆಯ ಕಿಂಡಿಯಲ್ಲಿ ಹತ್ತಿಸಿಟ್ಟ ಹಣತೆಯ ದೀಪದ ಎದುರು ನಿಂತು ಅದು ಆರುವವರೆಗೂ ಅಧ್ಯಯನ. ದೀಪ ಚಿಕ್ಕದಾಗಿ ಉರಿಯುತ್ತಿದ್ದರೆ ಅದನ್ನು ದೊಡ್ಡದಾಗಿ ಉರಿಸಿಕೊಳ್ಳುತ್ತಿರಲಿಲ್ಲ. ಇರುವಷ್ಟು ಬೆಳಕಿನಲ್ಲಿ, ಬೆಳಕು ಇರುವಷ್ಟು ಕಾಲ ಓದಿ, ಅಲ್ಲೆ ನೆಲದ ಮೇಲೆ ಮಲಗಿ, ನಿದ್ದೆ. ದುಡ್ಡನ್ನು ಕೈಯಿಂದ ಮುಟ್ಟುತ್ತಿರಲಿಲ್ಲ. ವರ್ಷಕ್ಕೊಂದು ತಿಂಗಳು ದಿನಕ್ಕೊಂದು ಹೊತ್ತಿನ ಊಟವನ್ನೂ ಬಿಟ್ಟು ಬರಿಯ ದಾಸವಾಳದ ಹೂವನ್ನು ತಿಂದು ಜೀವನ. ಹೊಟ್ಟೆ ಬೆನ್ನಿಗೆ ಅಂಟಿ, ಎದೆ ಎಲುಬು-ಗೂಡಾಗಿ-ಯಜ್ಞಕುಂಡದಲ್ಲಿ ಉರಿಯುವ ಅಶ್ವಥಕಾಷ್ಟದಂತೆ ತಪಸ್ಸಿನಲ್ಲಿ ಉರಿಯುತ್ತಿದ್ದ ಅವನ ಶರೀರದಲ್ಲಿ ಎರಡು ಕಣ್ಣುಗಳು ಪ್ರಶಾಂತ ಜ್ವಾಲೆಗಳಂತಿದ್ದವು. +ತನ್ನ ಅಪ್ಪ ಅಮ್ಮನ ಶ್ರಾದ್ಧಕ್ಕೆಂದು ಮಾತ್ರ ಮನೆಗೆ ಬರುತ್ತಿದ್ದ ಸುಬ್ಬಣ್ಣಕಕ್ಕ ಒಂದು ದಿನ ಅಕಸ್ಮಾತ್ ಮನೆಗೆ ಬಂದ. ಅಪ್ಪನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ಅಪ್ಪ ‘ದೀರ್ಘಾಯುವಾಗು’ ಎಂದು ಅವನನ್ನು ಹರಸಿದರು. ಸುಬ್ಬಣ್ಣಕಕ್ಕ ಎದ್ದು ನಿಂತು ಕತ್ತನ್ನು ಬಾಗಿಸಿ ಕೈಮುಗಿದು ಹೇಳಿದ: +“ಇವತ್ತು ಬೆಳಿಗ್ಗೆ ಜಪಕ್ಕೆಂದು ಏಳುವ ಮುಂಚೆ ದೈವಾಜ್ಞೆಯಾದ ಹಾಗೆ ಅನಿಸಿತು ನೀನಿನ್ನು ಸ್ವತಂತ್ರನಾಗುವ ಕಾಲ ಬಂದಿದೆ, ಆ ಅಧಿಕಾರವನ್ನ ನೀನು ಪಡೆದಿ ಅಂತ. ಜಪ ಮುಗಿದ ಮೇಲೆ ಚಿಂತೆಯಾಯಿತು: ದೈವಾಜ್ಞೆಯೆಂದು ನಾನು ಬಗೆದಿದ್ದು ನಿದ್ದೆಗಣ್ಣಲ್ಲಿದ್ದ ನನ್ನ ಭ್ರಮೆಯೋ, ನನ್ನ ಶರೀರದಲ್ಲಿ ಭಗ್ನವಾಗದೆ ಉಳಿದಿರುವ ನನ್ನ ಅಹಂಕಾರದ ಮೋಸವೋ ಬಗೆಹರಿಯಲಿಲ್ಲ. ಹೊರಗೆ ಬಂದು ಒಂದು ಅಶ್ವಥದ ಎಲೆಯನ್ನು ಗಾಳಿಗೆ ಹಿಡಿದು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿ ಹೇಳಿದೆ: ದೈವಾಜ್ಞೆ ಎಂದು ನಾನು ಬಗೆದದ್ದು ನಿಜವಾದರೆ ಇದು ಅಂಗಾತನೆ ಬೀಳಲಿ-ಇಲ್ಲವೇ ಮಗುಚಿ ಬೀಳಲಿ. ಗಾಳಿಯಲ್ಲಿ ಎಲೆ ಸುತ್ತಿ ಸುತ್ತಿ ಅಂಗಾತ ಬಿತ್ತು. ದೈವಾಜ್ಞೆಯ ನಂತರ ಹಿರಿಯನ ಆಜ್ಞೆಗೆಂದು ನಿಮ್ಮ ಹತ್ತಿರ ಬಂದಿದ್ದೇನೆ. ನಾನು ಸನ್ಯಾಸವನ್ನು ಸ್ವೀಕರಿಸಿದರೆ ಆತ್ಮಶ್ರಾದ್ಧವನ್ನು ಮಾಡಿಕೊಂಡು ಎಲ್ಲ ಸಂಬಂಧವನ್ನೂ ತೊರೆಯಬೇಕಾಗುತ್ತದೆ-ಪಿತೃ‌ಋಣ, ಗುರು‌ಋಣ, ದೇವ‌ಋಣ, ಇತ್ಯಾದಿ ಎಲ್ಲ ಋಣದ ಭಾರವನ್ನು ನಿಮ್ಮೊಬ್ಬರ ತಲೆಯ ಮೇಲೆ ಹೊರಿಸಬೇಕಾಗುತ್ತದೆ. ನನಗೆ ಆ ಅಧಿಕಾರ ಇದೆಯೆ ಎಂದು ನಿಮ್ಮ ಅನುಜ್ಞೆಗೆ ಕಾದಿದ್ದೇನೆ.” +ಮಾತನ್ನು ಮುಗಿಸಿ ಸುಬ್ಬಣ್ಣಕಕ್ಕ ಹಾಗೆಯೇ ಕೈಮುಗಿದು ವಿಗ್ರಹದ ಹಾಗೆ ನಿಂತ. ಅಪ್ಪನ ಕಣ್ಣಲ್ಲಿ ನೀರು ಸುರಿಯಿತು. ಯಾರೂ ಮಾತಾಡಲಿಲ್ಲ. ಕೊನೆಗೆ ಆರ್ದ್ರವಾದ ಕಂಠದಿಂದ ಅಪ್ಪ ಅಂದರು: +“ನೀನು ಮಹಾತ್ಮ. ದೈವಾಜ್ಞೆಯನ್ನು ತಡೆಯುವ ಅಧಿಕಾರ ನನಗೆ ಎಲ್ಲಿದೆ? ನಿನ್ನ ತಪಸ್ಸಿನಿಂದ ಪಶು-ಪಕ್ಷಿಯಾದಿಯಾಗಿ ಸಮಸ್ತಕ್ಕೂ ಕಲ್ಯಾಣವಾಗಲಿ.” +ಅಪ್ಪ ನಮ್ಮನ್ನೆಲ್ಲ ಕರೆದು ಸುಬ್ಬಣ್ಣಕಕ್ಕನ ಕಾಲಿಗೆ ಎರಗಲು ಹೇಳಿದರು. +“ನೀನು ಸನ್ಯಾಸಿಯಾಗಿ ಬಾ ಮಗು. ಆಗ ನಿನ್ನ ಕಾಲಿಗೆ ನಾನೂ ಎರಗಿ ಕರ್ಮದಿಂದ ಬಿಡುಗಡೆ ಹೊಂದುತ್ತೇನೆ. ಈಗ ನಿನಗೆ ನಾನು ನಮಸ್ಕಾರ ಮಾಡಿದರೆ ನಿನ್ನ ಆಯಸ್ಸಿಗೆ ಒಳ್ಳೆಯದಲ್ಲ.” +ಎಂದು ಅಪ್ಪ ಕಣ್ಣೊರೆಸಿಕೊಂಡು ಅಮ್ಮನನ್ನು ಹತ್ತಿರ ಕರೆದು ‘ದೇವರಿಗೆ ಇನ್ನೊಂದು ದೀಪ ಹಚ್ಚಿ ಬಾ’ ಎಂದರು. +ಸುಬ್ಬಣ್ಣಕಕ್ಕ ಮತ್ತೆ ಅಣ್ಣನಿಗೆ ಅತ್ತಿಗೆಗೆ ನಮಸ್ಕರಿಸಿ, ಮೆಟ್ಟಿಲಿಳಿದು, ತಿರುಗಿ ನೋಡದೆ ನಡೆಯುತ್ತಿದ್ದಂತೆ ಅಪ್ಪ, +“ನಿನ್ನ ಪ್ರಾಣವಾಯುವನ್ನ ಕಾಯುವ ಭೌತಶರೀರಾನ್ನ ತೀರಾ ಅಸಡ್ಡೇಂದ ನೋಡಬೇಡಪ್ಪ” ಎಂದರು. +ಸುಬ್ಬಣ್ಣಕಕ್ಕ ಕಾವಿಯನ್ನು ಧರಿಸಿ ಕೈಯಲ್ಲೊಂದು ದಂಡವನ್ನೂ ಕಮಂಡಲವನ್ನೂ ಹಿಡಿದು ಬದರಿಕಾಶ್ರಮಕ್ಕೆ ನಡೆದ. +* +* +* +ಸ್ಟೂ‌ಅರ್ಟ್ ಮತ್ತು ಕೇಶವ ಒಂದು ಕ್ಷುದ್ರವಾಗಿ ಕಾಣುವ ಐದು ಅಂತಸ್ತಿನ ಮನೆಯ ಎದುರು ಬಂದು ನಿಂತರು. ಕೆಳಗೆ ‘ರೋರಿಂಗ್ ಟ್ವೆಂಟೀಸ್’ ಎಂದು ಬೋರ್ಡ್ ಇತ್ತು. ಆದರೂ ಇನ್ನೂ ಬಾಗಿಲು ತೆಗೆದಿರಲಿಲ್ಲ. ತೆರೆಯುವ ಕಾಲ ಕಾಲ ರಾತ್ರಿ ೧೦-೩೦ ಎಂದು ಬರೆದಿತ್ತು. ‘ಈಗಿನ್ನೂ ಗಂಟೆ ೮-೩೦’ ಎಂದ ಸ್ಟೂ‌ಅರ್ಟ್. ‘ಏನು ಮಾಡೋಣ?’ ಎಂದು ಕೇಶನನ್ನುಕೇಶವನನ್ನು ಕೇಳಿದ. “ನೀನು ಹೇಳಿದ ಹಾಗೆ. ಬೇರೆ ಎಲ್ಲಾದರೂ ಹೋಗೋಣ” ಎಂದು ಕೇಶವ ಹೇಳಿದ. ದಾರಿಯಲ್ಲಿ ಇಂಗ್ಲಿಷಿನಲ್ಲಿ ಅತ್ಯಂತ ಕಷ್ಟದಿಂದ ಮಾತು ಹುಡುಕುತ್ತ ಅಪ್ಪ ಚಿಕ್ಕಪ್ಪನ ಕತೆಯನ್ನು ಹೇಳಿದ. ಹೇಳಿ ಮುಗಿಸಿದ ಮೇಲೆ ಒಂದು ಪ್ರಶ್ನೆ ಅವನನ್ನು ಕಾಡಿತು. ಅಮ್ಮ, ತಂಗಿಯರು, ಮಾಧು, ಅಪ್ಪ, ಶ್ಯಾಮಕಕ್ಕ, ಸುಬ್ಬಣ್ಣಕಕ್ಕ, ಸ್ಟೂ‌ಅರ್ಟ್, ತಾನು- ತಪ್ತರು, ಸಂತರು, ಸಭ್ಯರು, ಅನುರಾಗಿಗಳು, ವಿರಾಗಿಗಳು, ಅಮ್ಮನ ಹಾಗೆ ಯಾವ ಸ್ವಾರ್ಥವೂ ಇಲ್ಲದೆ ಮದುವೆ ಮುಂಜಿಯೆಂದು ಬಾಳನ್ನು ನಡೆಸುವವರು…. ಗುರಿಯೇನು, ಗಮ್ಯವೇನು….ಹೊಳೆಯುವುದಿಲ್ಲ. ಅಪ್ಪ, ಶ್ಯಾಮಕಕ್ಕ, ತಾನು, ಪ್ರಾಯಶಃ ಮಾಧು-ಅದೃಶ್ಯದಲ್ಲಿ, ಅವ್ಯಕ್ತದಲ್ಲಿ, ಅಚಿಂತ್ಯದಲ್ಲಿ ಬೇರುಬಿಟ್ಟದ್ದೊಂದು ನಮ್ಮ ನಾಲ್ವರ ಸ್ವಭಾವದಲ್ಲೂ ಇಲ್ಲದೇ ಇರಬಹುದು; ತಿರುಳಿನಲ್ಲಿ ಶೂನ್ಯವಿರಬಹುದು; ನಮ್ಮ ಸ್ವಭಾವದ ಮತ್ತು ನಮ್ಮನ್ನು ಆವರಿಸಿದ ಪದಾರ್ಥ ಲೋಕದ ಮೇಲಿನ ನಮ್ಮ ಹಿಡಿತ ಸಡಿಲವಾದ ಕ್ಷಣ, ಕಪ್ಪು-ಶೂನ್ಯ ನಮ್ಮನ್ನು ಆವರಿಸಿಬಿಡಬಹುದು. ಯಾವುದಕ್ಕಾದರೂ ಜೋತು ಬಿದ್ದಿರಲೇಬೇಕು ನಾವು-ಭಯಂಕರವಾದ ಠೊಳ್ಳು ಶೂನ್ಯ ಒಳಗೆ. ಸ್ವಭಾವದ ಪ್ರಳಯದಲ್ಲಿ ಬದುಕ ಹೊರಟ ನಮ್ಮ ಜೀವನದಲ್ಲಿ ಧೃಡತೆಯಿಲ್ಲ, ಕೌಶಲವಿಲ್ಲ-ಕೋಲಾಹಲ, ಕುದಿ, ಉರಿ, ಸ್ಟೂ‌ಅರ್ಟ್‌ನಂತಾಗಲಿ, ಸುಬ್ಬಣ್ಣಕಕ್ಕನಂತಾಗಲೀ ಕುಲುಮೆಯಲ್ಲಿಟ್ಟು, ಎರಕದಲ್ಲಿ ಹೊಯ್ದು, ತಿದ್ದಿ, ತೀಡಿ, ಒಳಗಿನಿಂದೊಂದು ಶಿಲ್ಪವನ್ನು ರೂಪಿಸಿಕೊಳ್ಳುವ ಕೌಶಲವಿಲ್ಲ. ನನಗೆ ನನ್ನ ಬಾಳು ಹಾಗೊಂದು ಪೂರ್ವನಿಶ್ಚಿತ ಶಿಲ್ಪವಾಗುವುದರಲ್ಲಿ ನಂಬಿಕೆಯೂ ಇಲ್ಲ. ಹತ್ತಿಕೊಂಡದ್ದು ಸಂಪೂರ್ಣ ಉರಿದು ಬೂದಿಯಾಗಬೇಕು. ಅದು ಶುಭ್ರ, ಇಲ್ಲವೇ ಕರಟಿ ಮಸಿಯಾಗುತ್ತದೆ. +ಭಾಗ : ಐದು +ಕಿರಿದಾದ ಸುತ್ತಿಕೊಂಡು ಹೋಗುವ ತುಕ್ಕು ಹಿಡಿದ ಕಬ್ಬಿಣದ ಮಹಡಿ ಮೆಟ್ಟಿಲಗಳ ಬುಡದಲ್ಲೊಂದು ಗೂಡಿನಂತಹ ಜಾಗ. ಅಲ್ಲೊಬ್ಬ ಪ್ಲಕಾರ್ಡ್ ಹಿಡಿದ ನೀಗ್ರೊ: +SಖಿಖIP ಖಿ‌ಇಂSಇ +ಔ‌ಓ ಖಿ‌ಊ‌ಇ ಈ‌ಐ‌ಔ‌ಔಖ Sಊ‌ಔW +ಹತ್ತು, ಹತ್ತು ಶಿಲಿಂಗ್ ಕೊಟ್ಟು ಕೇಶವ ಎರಡು ಟಿಕೆಟ್‌ಗಳನ್ನು ಪಡೆದ. ತನ್ನ ಪಾಲಿನ ಹತ್ತು ಶಿಲಿಂಗ್‌ನ್ನು ಸ್ಟೂ‌ಅರ್ಟ್ ಕೊಡಹೋದರೆ ‘ಬೇಡ, ಇವತ್ತು ನೀನು ನನ್ನ ಗೆಸ್ಟ್’ ಎಂದ. ಕಿರಿದಾದ ಮೆಟ್ಟಿಲುಗಳನ್ನು ಕೇಶವ ಮುಂದಾಗಿ, ಸ್ಟೂ‌ಅರ್ಟ್ ಹಿಂದಾಗಿ ಹತ್ತಿಹೋಗಿ ಕಪ್ಪು ಕರ್ಟನ್ ಹಾಕಿದ್ದ ಒಂದು ರೂಮನ್ನು ಹೋಗುತ್ತಿದ್ದಂತೆ, ಎಲ್ಲ ದೀಪಗಳು ಥಟ್ಟನೆ ಆರಿ, ಮಿಣಿ ಮಿಣಿ ಒಂದು ದೀಪ ಮಾತ್ರ ಕೆಂಪಗೆ ಎಲ್ಲಿಂದಲೋ ಉರಿದು, ಕೇಶವನಿಗೆ ದಿಗ್ಭ್ರಮೆಯಾಯಿತು. +‘ಸ್ಟೂ‌ಅರ್ಟ್’ ಎಂದು ಕರೆದು ಗೆಳೆಯನಿಗಾಗಿ ಕೈನೀಡುತ್ತಿದ್ದಂತೆ ಒಬ್ಬ ಹುಡುಗಿ ಎಲ್ಲಿಂದಲೋ ಪ್ರತ್ಯಕ್ಷಳಾಗಿ ಅವನ ಕೈ ಹಿಡಿದು ಮೃದುವಾಗಿ ಎಳೆದಳು. ಇನ್ನೊಂದು ಕ್ಷಣದಲ್ಲಿ ಕೇಶವ ಮೆತ್ತನೆಯ ಸೋಫ ಒಂದರ ಮೇಲೆ ಕೂತಿದ್ದ. ಪಕ್ಕದಲ್ಲಿ ಹುಡುಗಿ ಕೂತಿದ್ದಳು. ಕೆಂಪು ದೀಪದ ಮಬ್ಬಿನಲ್ಲಿ ‘ಸ್ಟೂ‌ಅರ್ಟ್’ ‘ಸ್ಟೂ‌ಅರ್ಟ್’ ಎಂದು ಒಣಗಿದ ಗಂಟಲಿನಲ್ಲಿ ಕರೆಯುತ್ತ ಹುಡುಕಿದ. +“ನಿನ್ನ ಗೆಳೆಯನೆಲ್ಲಿ ಎಂದು ಹುಡುಕುತ್ತಿದ್ದಿ ಅಲ್ಲವೆ? ಇಲ್ಲಿಗೆ ಬರುವವರೆಲ್ಲ ಮೊದಲು ಹಾಗೇ ಮಾಡುತ್ತಾರೆ. ನಂತರ ಸರಿಹೋಗುತ್ತಾರೆ….” +“ಅಹಾ?” ಎಂದು ಕೇಶವ ಚೇತರಿಸಿಕೊಂಡ. +“ಇದು ಎಲ್ಲ ಸ್ಟ್ರಿಪ್ ಟೀಸ್ ಕ್ಲಬ್ಬುಗಳಂತಲ್ಲ. ಇಲ್ಲಿ ನಿನಗೆ ವಿಶೇಷವಾದ ಅನುಭವವಾಗುತ್ತದೆ….ಎಲ್ಲ ದೇಶದ ಎಲ್ಲ ಜನಾಂಗದ ಹುಡುಗಿಯರನ್ನೂ ನೀನು ಇಲ್ಲಿ ಬೆತ್ತಲೆ ನೋಡಬಹುದು-ಓಹೋ-ಮಾತಿನ ಭರದಲ್ಲಿ ಪರಿಚಯ ಮಾಡಿಕೊಳ್ಳುವುದಕ್ಕೆ ಮರೆತೆ. ನಾನು ಜೆನೆಟ್-ನೀನು?” +“ನಾನು ಕೇಶವ್…” +“ಕೇಶವ್-ಮುದ್ದಾಗಿದೆ ಹೆಸರು….ಇಲ್ಲಿ ಹವ ನಿನಗೆ ಒಗ್ಗುತ್ತದೆ?” +“ಈ ಸಾರಿ ವಿಂಟರ್ ಹೋದ ಸಾರಿಯಷ್ಟು ಭಯಂಕರವಾಗಿಲ್ಲವೆನ್ನುತ್ತಾರೆ ನಿಜವೆ?” +“ಜೀಸಸ್-ಹೋದ ವಿಂಟರನ್ನು ಮತ್ತೆ ನೆನಪು ಮಾಡಬೇಡ.” +ಸ್ವಲ್ಪ ಹೊತ್ತು ಮೌನ. ಕೇಶವ ಮಾತಿಗಾಗಿ ಹುಡುಕುತ್ತ ಕೂತ. ಆದರೆ ಜೆನೆಟ್ ತಾನೇ ಮಾತಿಗೆ ಪ್ರಾರಂಭಿಸಿದಳು; +“ನಮ್ಮ ಜೊತೆ ಒಬ್ಬ ಸಿಲೋನ್ ಹುಡುಗಿಯಿದ್ದಾಳೆ. ನಮಗೆ ನಾಚಿಕೆಯಾಗುವಂತೆ ಇಂಗ್ಲಿಷ್ ಮಾತಾಡ್ತಾಳೆ- ನಿನ್ನ ಇಂಗ್ಲಿಷ್ ಕೂಡ ಎಷ್ಟು ಚೆನ್ನಾಗಿದೆ!” +“ನಿನ್ನ ಮುಖ ನನಗೆ ಕಾಣಿಸುತ್ತಿಲ್ಲ. ಹೀಗೆ ಕತ್ತಲಲ್ಲಿ ಮುಖ ನೋಡದೆ ಮಾತಾಡೋದು ಕಷ್ಟ ಅಲ್ಲವೆ?-ದೀಪವನ್ನು ಹಾಕಲೆ?” +ಕೇಶವ ಧೈರ್ಯ ತಂದು ಕೇಳಿದ. ಅವನಲ್ಲಿ ಸ್ಟೂ‌ಅರ್ಟ್ ಎಲ್ಲಿ ಕೂತಿರಬಹುದೆಂದು ತವಕ-ಗಾಬರಿ. ಇನ್ನೆರಡು ಜನ ಒಳಗೆ ಬಂದ ಸದ್ದು, ಸೋಫದ ಮೇಲೆ ಕೂತ ಸದ್ದು, ಪಿಸ ಪಿಸ ಮಾತು. +“ಇಲ್ಲಿ ಬರುವವರೆಲ್ಲ ಕತ್ತಲೆಯನ್ನು ಬಯಸುತ್ತಾರೆ. ನಿನ್ನ ಆಸೆ ವಿಚಿತ್ರ. ಸ್ವಲ್ಪ ತಾಳು-ಬೆಳಕಾಗುತ್ತದೆ.” +ಜೆನೆಟ್ ಬೆತ್ತಲೆಯಾಗಿರಬಹುದೆ ಎಂದು ಕೇಶವನಿಗೆ ಆಸೆಯಾಯಿತು; ಆಗಿರಬಹುದೆಂದು ಭಯವಾಯಿತು. ಮೆಲ್ಲಗೆ ಅವಳನ್ನು ತಡವಿದೆ:-ಇಲ್ಲ-ಬಟ್ಟೆ ಹಾಕಿದ್ದಳು. ಸಮಾಧಾನವಾಗಿ ನಿರಾಸೆಯಾಯಿತು. +“ಇಲ್ಲಿ ಕುಡಿಯಬಹುದು ಕೇ…ಇನ್ನೊಮ್ಮೆ ನಿನ್ನ ಹೆಸರು ಹೇಳು…ಸೊರ್ರ್ಯ್….” +“ಕೇಶವ್.” +ತಾನೇ ಮೊದಲು ಸೂಚಿಸಬಾರದಿತ್ತೆ- ತಪ್ಪಾಯಿತು- ಎಂದು ಕೇಶವ ‘ಎರಡು ಶೆರಿ’ ಎಂದ. +ಎರಡು ಶೆರಿಯನ್ನು ತಂದಿಟ್ಟವಳ ಮುಖವೂ ಕಾಣಿಸಲಿಲ್ಲ. ಇನ್ನಿಬ್ಬರು ಒಳಬಂದ ಸದ್ದು…ಪಿಸ, ಪಿಸ, ಮಾತು. ಯಾರೋ ಇಬ್ಬರು ದೊಡ್ಡದೊಂದು ಪೆಟ್ಟಿಗೆಯನ್ನು ಹೊತ್ತು ಒಳಗೆ ತೆಗೆದುಕೊಂಡು ಹೋದ ಸದ್ದು- ಆಯಾಸದ ಉಸಿರು… ರೂಮಿನ ತುಂಬ ಅಸ್ಪಷ್ಟ ರೂಪಗಳು…. +ಕೂತ ಎಲ್ಲರೂ ಶೆರಿಯನ್ನು ಆರ್ಡರ್ ಮಾಡಿರಬೇಕು; ತಟ್ಟೆ ಹಿಡಿದು ಒಬ್ಬಳು ಖಿhಚಿಟಿಞs ಎನ್ನುತ್ತಾ ಶೆರಿಯನ್ನು ಕೊಟ್ಟ ಸದ್ದು. ಎಲ್ಲರೂ ತನ್ನಂತೆ ಶೆರಿಯನ್ನು ಆರ್ಡರ್ ಮಾಡಿದಾರೆ, ಸ್ಟೂ‌ಅರ್ಟ್ ಕೂಡ- ಎಂದು ಸಮಾಧಾನ. ಕಡ್ಡಿ ಗೀರಿದ ಬೆಳಕು, ಅಲ್ಲೊಂದು ಇಲ್ಲೊಂದು ಮುಖ ಮತ್ತೆ ಕತ್ತಲು…ಸುತ್ತಲೂ ಕೆಂಪು ತುದಿಯ ಸಿಗರೇಟುಗಳು. ಕೇಶವ ತಾನೊಂದು ಸಿಗರೇಟ್ ಹಚ್ಚಿದ. ಜೆನೆಟ್‌ಗೊಂದನ್ನು ಕೊಟ್ಟು ಮತ್ತೆ ಕಡ್ಡಿ ಗೀರಲು ಹೋದ. ‘ಬೇಡ ನಿನ್ನ ಸಿಗರೇಟಿನ ಟiಟಿಞ ಕೊಡು’ ಎಂದಳು. ಖಿhಚಿಟಿಞs ಎಂದಳು. +ಮಿಣಮಿಣನೆ ಮಿನುಗುತ್ತಿದ್ದ ಕೆಂಪು ದೀಪವೂ ಆರಿ ಕತ್ತಲು ಕವಿಯಿತು. ಎದುರಿನಿಂದೊಂದು ಫರದೆ ಸರಿದ ಸಪ್ಪಳ. ಅದರೊಳಗಿಂದ ಫಕ್ಕನೆ ಉಜ್ವಲವಾದೊಂದು ದೀಪ, ಮೆತ್ತಗೊಂದು ಪಿಯಾನ್ಪಿಯಾನೊ ವಾದನದ ರಿಕಾರ್ಡ್ ಪ್ರಾರಂಭವಾಯಿತು. ಬೆಳಕಿನ, ಸಂಗೀತದ ಆವೃತ್ತದಲ್ಲೊಬ್ಬಳು ಹುಡುಗಿ ಕುಣಿಯುತ್ತ ಬಂದಳು- ಸಂಪೂರ್ಣ ವಸ್ತ್ರಾಲಂಕೃತೆಯಾಗಿ, +“ಹುಡುಗಿ ಚೆನ್ನಾಗಿದ್ದಾಳೆ ಅಲ್ಲವೆ?” +ಜೆನೆಟ್ ಪ್ರಶ್ನೆಗೆ ಕೇಶವ ‘ಹೌದು’ ಎಂದ. ದೀಪ ಹತ್ತಿದಾಗ ಕೇಶವನಿಗೆ ಮತ್ತೆ ಎನ್ನಿಸಿದ ಭಯ, ಆಸೆ, ವಸ್ತ್ರ ಉಟ್ಟವಳನ್ನು ಕಂಡು ಮಾಯವಾಗಿ ನಿರಾಸೆಯಾಗಿತ್ತು. +ಬೆಳಕಿನ ವೃತ್ತದಿಂದ ಕತ್ತಲೆಗೆ, ಮತ್ತೆ ಬೆಳಕಿಗೆ ಅವಳು ಸಂಗೀತ ನಾದಕ್ಕೆ ಕೈ ಬಾಚಿ ಓಲಾಡುತ್ತ, ಮೈ ಬಳುಕಿಸುತ್ತ, ಬೆಲ್ಟ್ ಬಿಚ್ಚಿ ತೆರೆಯಾಚೆಯಿಂದ ಒಡ್ಡಿದ ಕೈಗೆ ಕೊಟ್ಟಳು. ಪಿಯಾನೊ- ವಾದನದ ಜೊತೆಗೆ ಈಗ ಒಂದು ವಯೋಲಾದ ಧ್ವನಿ ಬೆರೆಯಿತು. ಬಾಯಲ್ಲೊಂದು ಚೂಯಿಂಗ್ ಗಮ್ಮನ್ನು ಸವಿಯುತ್ತ, ತುಟಿಯಲ್ಲಿ ನಸುನಗುತ್ತ, ತನ್ನ ಡ್ರೆಸ್ಸಿನ ಜಿಪ್ಪನ್ನು ಎಳೆದಳು. ಕಚ್ಚುವ, ಚೀಪುವ, ನುಂಗುವ, ಸವಿಯುವ ಮೂಕ ಅಭಿನಯದಲ್ಲಿ ಗಲ್ಲವನ್ನು ಅಲ್ಲಾಡಿಸುತ್ತ ಹೆಗಲಿನಿಂದ ಡ್ರೆಸ್ಸನ್ನು ಸರಿಸಿ ಕೆಳಗೆ ಜಾರುವಂತೆ ತಳ್ಳಿ, ಥಟ್ಟನೆ ಎಳೆದು ಅದನ್ನು ಮತ್ತೆ ಧರಿಸಿ, ನಾಚಿಕೆಯಿಂದ ಮುಖ ಮುಚ್ಚಿಕೊಂಡಳು. ಮತ್ತೆ ಬೆನ್ನು ತಿರುಗಿಸಿ, ಡ್ರೆಸ್ಸನ್ನು ಸೊಂಟದವರೆಗೆ ಜರುಗಿಸಿ, ಎತ್ತಿಕೊಂಡಳು. +“ಅವಳ ಹೆಸರು ರೋಸಿ- ಪ್ಯಾರಿಸ್‌ನಿಂದ ‘ಸ್ಟ್ರಿಪ್ ಟೀಸ್’ ಕಲಿತು ಬಂದಿದ್ದಾಳೆ. ಇಲ್ಲಿರುವ ಎಲ್ಲ ಹುಡುಗಿಯರನ್ನೂ ಮೀರಿಸುತ್ತಾಳೆ” ಎಂದು ಜೆನೆಟ್ ಪಿಸುಗುಟ್ಟಿದಳು. +ಸಂಗೀತದ ವೇಗ ಹೆಚ್ಚುತ್ತ ಹೋಯಿತು. ಕೇಶವನಿಗೆ ತಿಳಿಯದ ಇನ್ನೆರಡು ವಾದ್ಯಗಳು ಬೆರೆತುಕೊಂಡವು. ಭಯದಿಂದ ಕೇಶವನ ಎದೆ ಹೊಡೆದುಕೊಳ್ಳಹತ್ತಿತು. ತೋಳು ಕಂಕುಳು ಬರಿದಾಯಿತು. ಬೆಳಕಿನ ವೃತ್ತದಲ್ಲಿದ್ದವಳು ಗಾಬರಿಯಾದವಳಂತೆ ಕತ್ತಲೆಗೆ ಸರಿದಳು. ಸಂಗೀತದ ಪರಾಕಾಷ್ಠೆಯಲ್ಲಿ ಬೆಳಕಿಗೆ ಮತ್ತೆ ಬಂದಳು- ಬ್ರೇಸಿಯರ್ಸ್ ಮತ್ತು ಕಾಚವನ್ನು ಮಾತ್ರ ಧರಿಸಿ. ಒಂದು ಕ್ಷಣ….ಎರಡು ಕ್ಷಣ…..ಕಪ್ಪು ಪರದೆ ಬಿತ್ತು. +ರೂಮಿನಲ್ಲಿ ಕಣ್ಣು ಕುಕ್ಕುವಂತಹ ದೀಪಗಳು ಹತ್ತಿಕೊಂಡವು. ಬೆಳಕನ್ನು ನೋಡಲಾರದೆ ನಿದ್ದೆಯಿಂದೆದ್ದವನಂತೆ ಕೇಶವ ಕಣ್ಣುಗಳನ್ನುಜ್ಜಿಕೊಂಡ. ಕೈಯಿಂದ ಕಣ್ಣುಗಳನ್ನು ಮರೆಮಾಡಿ ಸ್ಟೂ‌ಅರ್ಟ್‌ನನ್ನು ಹುಡುಕಿದ. ಇನ್ನೊಂದು ಮೂಲೆಯಲ್ಲಿ ಸೀರೆಯುಟ್ಟ ಸಿಲೋನ್ ಹುಡುಗಿಯೊಬ್ಬಳ ಜೊತೆ ಕೂತು ಸ್ಟೂ‌ಅರ್ಟ್ ಶೆರಿ ಕುಡಿಯುತ್ತಿದ್ದ. ಮಧ್ಯವಯಸ್ಸಿನ ತ್ರೀಪೀಸ್ ಸೂಟು ಧರಿಸಿದವನೊಬ್ಬ ತೊಡೆಯ ಮೇಲೆ ಹ್ಯಾಟನ್ನು ಇಟ್ಟು ನೀಗ್ರೋ ಹುಡುಗಿಯ ಜೊತೆ ಮಾತಾಡುತ್ತಿದ್ದ. ಉಳಿದವರು ತನ್ನಂತೆಯೆ ಬೇರೆ ಬೇರೆ ಬಣ್ಣದ ಕೂದಲಿನ ಬಿಳಿ ಹುಡುಗಿಯರ ಜೊತೆ ಕೂತಿದ್ದರು. ಅವರಲ್ಲಿ ಇಬ್ಬರು ನೀಗ್ರೋ ಹುಡುಗರು ಇದ್ದರು. +ತಾವು ಕೂತಿದ್ದ ಜಾಗವನ್ನು ಕಂಡು ಕೇಶವನಿಗೆ ಬೆರಗಾಯಿತು. ಎರಡು ಕಪ್ಪು ಫರದೆಗಳನ್ನು ಬಿಟ್ಟರೆ ರೂಮು ಕೆಂಪು ಬಣ್ಣದ ಓರೆ ಕೋರೆಯಾಗಿ ಜೋಡಿಸಿದ ಇಟ್ಟಿಗೆಗಳಿಂದ ಒಂದು ಗುಹೆಯ ರೂಪದಲ್ಲಿತ್ತು. ಪೊಟರೆಗಳಂತಹ ಸಂದಿಗಳಲ್ಲಿ ಸೋಫಗಳು. ಒಂದು ಮೂಲೆಯಲ್ಲಿ ಚಾಚಿದ ಕೆಂಪು ಇಟ್ಟಿಗೆಗಳ ಗೂಡಿನಲ್ಲಿ ಸೀಸೆಗಳು. ಅಲ್ಲೆ ಒಂದು ಮೇಜು, ಕುರ್ಚಿ; ಕುರ್ಚಿಯ ಮೇಲೆ ಆ ಕ್ಲಬ್ಬಿನ ಒಡತಿಯಂತೆ ಕಾಣುವ, ಬೆಳ್ಳಿಯ ಫ್ರೇಮಿನ ಕನ್ನಡಕ ಹಾಕಿಕೊಂಡ, ನೋಡಲು ಉಪಾಧ್ಯಾಯಿನಿಯಂತೆ ಇದ್ದ ಒಬ್ಬ ಹೆಂಗಸು. ಕೇಶವ ಇನ್ನೊಮ್ಮೆ ತಾವು ಕೂತಿದ್ದ ಜಾಗವನ್ನು ನೋಡಿದ: ಈಗ ಅದರ ಒಟ್ಟು ಸ್ವರೂಪ ಗುಹೆಯಂತೆ ಕಾಣಲಿಲ್ಲ. ಗಕ್ಕನೆ ಎನಿಸಿತು: ಮಾಂಸಖಂಡಗಳಂತೆ ಕೆಂಪಾಗಿ ವಿವಿಧ ಪದರಗಳಲ್ಲಿ ಜೋಡಿಸಿದ್ದ ಇಟ್ಟಿಗೆಯ ಈ ಪ್ರದೇಶ ಗರ್ಭಕೋಶದಂತೆ ತನಗೆ ಕಾಣುತ್ತಿಲ್ಲವೆ? +“ಈ ರೂಮ್ ನಿನಗೆ ಹಿಡಿಸಿತೆ? ಎಂದಳು ಜೆನೆಟ್, ಕೇಶವ ಪರೀಕ್ಷಿಸುತ್ತಿರುವುದನ್ನು ನೋಡಿ. +“ಹೌದು” ಎಂದು ಕೇಶವ ಜೆನೆಟ್‌ನ್ನು ನೋಡಿ ನಕ್ಕ. +“ಇದರ ಆಕಾರದ ಬಗ್ಗೆ ನಿನಗೆ ಏನನ್ನಿಸಿತು?” +“ಮೊದಲು ಗುಹೆಯಂತೆ ಎನ್ನಿಸಿತು. ಈಗ ಗರ್ಭಕೋಶದಂತೆ ಇದೆ ಎಂದು ಅನ್ನಿಸುತ್ತದೆ.” +ಒಬ್ಬೊಬ್ಬರಿಗೆ ಒಂದೊಂದು ಥರ ಎನ್ನಿಸುತ್ತೆ. ನಾನು ಇಲ್ಲಿ ಸಂಧಿಸಿದ ಪ್ರತಿಯೊಬ್ಬ ಗೆಳೆಯನೂ ಬೇರೆ ಬೇರೆ ರೀತಿಯಲ್ಲಿ ಇದನ್ನು ವರ್ಣಿಸಿದ್ದಾನೆ.” +ಮೂಲೆಯಲ್ಲಿ ಬರೆಯುತ್ತಿದ್ದ ಒಡತಿ ಪುಟ್ಟಪುಟ್ಟ ತಟ್ಟೆಗಳಲ್ಲಿ ಬಿಲ್‌ಗಳನ್ನು ತಂದಳು. ಕೇಶವ ತನ್ನ ಬಿಲ್ಲನ್ನೆತ್ತಿ ಅದರಲ್ಲಿ ಮೂವತ್ತು ಶಿಲಿಂಗ್ ಎಂದು ಬರೆದದ್ದನ್ನು ನೋಡಿ ಕಂಗಾಲಾದ. ಅಬ್ಬಬ್ಬ ಎಂದರೆ ತಾವು ಕುಡಿದ ಶೆರಿಯ ಬೆಲೆ ಆರು ಅಥವಾ ಎಂಟು ಶಿಲಿಂಗ್. ‘ಸ್ಟೂ‌ಅರ್ಟ್’ ಎಂದ. ಬಿಲ್ ತಂದ ಒಡತಿ “ನಿನ್ನ ಗೆಳೆಯನ ಹೆಸರು ಸ್ಟೂ‌ಅರ್ಟ್ ಎಂದೆ? ಎಷ್ಟು ಸೊಗಸಾದ ಹೆಸರು, ಅಲ್ಲವೇ ಜೆನೆಟ್?” ಎಂದಳು. +ಸ್ಟೂ‌ಅರ್ಟ್‌ಗೆ ಕೇಶವ ಕರೆದದ್ದು ಕೇಳಿಸಲಿಲ್ಲ. ಜೆನೆಟ್ ಹೇಳಿದಳು: +“ಇವನ ಹೆಸರು ಕೇಶವ್- ಇವನದೂ ಸೊಗಸಾದ ಹೆಸರು. ಅಲ್ಲವೇ ಬಾಬರಾ?” ಒಡತಿ ಬಾಬರಾ ಹೇಳಿದಳು: +“ಚಿಲ್ಲರೆ ಇಲ್ಲದಿದ್ದರೆ ಚಿಂತೆಯಿಲ್ಲ. ಎರಡು ಪೌಂಡುಗಳನ್ನು ಕೊಡು- ನಾನು ಚಿಲ್ಲರೆ ಕೊಡುತ್ತೇನೆ.” +ಕೇಶವ ‘ಪರವಾಗಿಲ್ಲ’ ಎಂದು ಜೇಬಿನಿಂದ ಮೂವತ್ತು ಶಿಲಿಂಗ್‌ಗಳನ್ನು ತಟ್ಟೆಯ ಮೇಲಿಟ್ಟ. ‘ಸರ್ವಿಂಗ್ ಚಾರ್ಜ್ ಎರಡೂವರೆ ಶಿಲಿಂಗ್’ ಎಂದಳು. ಬಾಬರಾ. ಇನ್ನೊಂದು ಎರಡೂವರೆ ಶಿಲಿಂಗ್‌ನ್ನು ಕೇಶವ ತಟ್ಟೆಗೆ ಹಾಕಿದ. ಬಾಬರಾ ಖಿhಚಿಟಿಞs ಎಂದು ಮುಂದೆ ಹೋದಳು. ಜೆನೆಟ್ ಕೇಶವನ ಕೈಹಿಡಿದು, +“ಇಲ್ಲಿ ಬರುವವರೆಲ್ಲ ನಿನ್ನಂತೆ ಬಿಲ್ ನೋಡಿ ಗಾಬರಿಯಾಗುತ್ತಾರೆ, ನಾನು ಇಲ್ಲಿ ಹೋಸ್ಟೆಸ್. ನನಗೆ ಶೆರಿಯನ್ನು ಕುಡಿಸಲೆಂದು ನಿನಗೆ ವಿಶೇಷವಾದ ಚಾರ್ಜ್ ಮಾಡಲಾಗಿದೆ, ಅಷ್ಟೆ. ಅheeಡಿ uಠಿ ಜಚಿಡಿಟiಟಿg” ಎಂದಳು. +“ಂಟಟ ಡಿighಣ. ಇನ್ನೊಂದು ಸಿಗರೇಟ್?” ಎಂದು ಕೇಶವ ತನ್ನ ಬೆವರೊರೆಸಿಕೊಂಡು ಜೆನೆಟ್‌ಗೆ ಸಿಗರೇಟನ್ನು ಹಿಡಿದ. ಜೆನೆಟ್ ಎರಡು ಸಿಗರೇಟನ್ನು ತೆಗೆದು, +“ನನ್ನ ಗೆಳತಿಗೊಂದು- ಪರವಾಗಿಲ್ಲ ತಾನೆ?” ಎಂದಳು. +“ಓಹೋ” ಎಂದ ಕೇಶವ. +….ದೀಪವಾರಿ ಕತ್ತಲೆಯಾಯಿತು. ಫರದೆ ಸರಿಯಿತು. ಒಳಗಿನ ದೋಪದೀಪ ಹತ್ತಿಕೊಂಡಿತು. ಸ್ಟೂ‌ಅರ್ಟ್ ಕತ್ತಲೆಯಲ್ಲಿ ಕೇಶವನ ಬಳಿ ಬಂದು, ಕೈಹಿಡಿದು, ಅವನ ಕಿವಿಯಲ್ಲಿ ಅನ್ನುತ್ತಿದ್ದಂತೆ ಬೆಳಕಿಗೆ ಅರೆ- ನಗ್ನ ರೋಸಿ ಬಂದಿದ್ದಳು. ‘ಏನು’ ಎಂದು ಅವಸರದಲಿಅವಸರದಲ್ಲಿ ಕೇಶವ ಕೇಳಿದ. ಪಿಯಾನೊ- ಸಂಗೀತ ಪ್ರಾರಂಭವಾಯಿತು. +“ಇದು ಕ್ಲಿಪ್ ಜಾಯಿಂಟ್ ಕೇಶವ್, ಇಲ್ಲಿರುವ ಹೆಂಗಸರು ಷರ್ಕ್ಸ್, ಜೇಬನ್ನು ಕತ್ತರಿಸಿ ಕಳಿಸುತ್ತಾರೆ. ಅನುಭವ ಇಲ್ಲದೆ ಇಲ್ಲಿಗೆ ನಿನ್ನನ್ನು ಕರಕೊಂಡು ಬಂದೆ-ಕ್ಷಮಿಸು. ಇಲ್ಲಿ ಇನ್ನೊಂದು ಕ್ಷಣಾ ಇರೋದು ಬೇಡ, ಬಾ” ಎಂದು ಸ್ಟೂ‌ಅರ್ಟ್ ಕೇಶವನನ್ನು ಎಳೆದ. +ಕೇಶವ ತಬ್ಬಿಬ್ಬಾದ. ರೋಸಿಯಿಂದ ಅವನಿಗೆ ಕಣ್ಣನ್ನು ಕೀಳಲಾಗಲಿಲ್ಲ- +“ಸ್ಟೂ‌ಅರ್ಟ್ ಡಾರ್ಲಿಂಗ್- ಇನ್ನು ನಿಮ್ಮಿಂದ ಏನೂ ಹಣವನ್ನು ತೆಗೆದುಕೊಳ್ಳುವುದಿಲ್ಲ. ಡ್ರಿಂಕ್ ಆರ್ಡರ್ ಮಾಡಿರದಿದ್ದರೆ ಈ ಹಣಾನ್ನ ಕೊಡಬೇಕಾಗಿ ಬರ್ತಿರಲಿಲ್ಲ. ನಿನ್ನ ಗೆಳೆಯ ಇದ್ದು ಹೋಗಲಿ” ಎಂದು ಜೆನೆಟ್ ಮೃದುವಾಗಿ ಹೇಳಿದಳು. +ಕೇಶವ ಯಾಚಿಸುವ ಧ್ವನಿಯಲ್ಲಿ- +“ಸ್ವಲ್ಪ ಹೊತ್ತು ಇದ್ದು ಹೋಗೋಣ- ಸ್ಟೂ‌ಅರ್ಟ್. ಯಾಕೆ ಅವಸರ?” ಎಂದ. +‘ಔh! I ಚಿm soಡಿಡಿಥಿ’ ಎಂದು ಸ್ಟೂ‌ಅರ್ಟ್ ತಿರುಗಿ ತಾನು ಕೂತಿದ್ದ ಜಾಗಕ್ಕೆ ಹೋದ. ಅರ ನಗ್ನಳಾಗಿದ್ದ ರೋಸಿ ಒಂದೊಂದಾಗಿ ಬ್ರೇಸಿಯರ್‌ಗೆ ಸಿಕ್ಕಿದ ತೆಳುವಾದ ಮಸ್ಲಿನ್ ಬಟ್ಟೆಗಳನ್ನು ಸರಿಸುತ್ತ ಓಲಾಡಿದಳು. ಅನಂತರ ಒಂದೊಂದಾಗಿ ಬಿಚ್ಚಿದ್ದನ್ನು ಚಾಚಿದ ಕೈಗೆ ನೀಡುತ್ತ ಬೆಳಕಿನಿಂದ ಕತ್ತಲೆಗೆ, ಕತ್ತಲೆಯಿಂದ ಬೆಳಕಿಗೆ ಪ್ರತ್ಯಕ್ಷವಾಗಿ, ಮಾಯವಾಗಿ, ಕೊನೆಗೆ ಬಿಚ್ಚಿದ ಬ್ರೇಸಿಯರನ್ನು ಮೊಲೆಗಳಿಗವಚಿಕೊಂಡು ನಾಚಿ ನಿಂತಳು. ಸ್ನಾನ ಮಾಡಿ ಮಡಿ ಉಟ್ಟು ಬಂದ ಬ್ರಾಹ್ಮಣ ಹೆಂಗಸರ, ಕೊಟ್ಟಿಗೆಯಲ್ಲಿ ಸಗಣಿ ಎತ್ತುವ ಹೆಣ್ಣುಗಳ ನಗ್ನ ಎದೆಗಳನ್ನು ನೋಡಿದಾಗ ಏನೊಂದು ಭಾವನೆ ಅನ್ನಿಸದಿದ್ದರೂ ಈಗ ಮಾತ್ರ ಕೇಶವನಿಗೆ ಬೆಚ್ಚಗಾಗಿ ಭಯವಾಯಿತು. ನಾಚಿದವಳು ಮುಖವೆತ್ತಿ ಧೈರ್ಯ ತಂದುಕೊಂಡು ಬ್ರೇಸಿಯರನ್ನು ಚಾಚಿದ ಕೈಗಿತ್ತು ನಿಂತಳು. ಮತ್ತೆ ಗಲ್ಲವನ್ನು ಸವಿಯುವಂತೆ ಅಲ್ಲಾಡಿಸುತ್ತ ಕಾಚಕ್ಕೆ ಸಿಕ್ಕಿಸಿದ ಮಸ್ಲಿನ್ ಬಟ್ಟೆಗಳನ್ನು ಒಂದೊಂದಾಗಿ ಸರಿಸಿ ಚಾಚಿದ ಕೈಗೆ ಎಸೆದಳು. ಕೊನೆಗೆ ಬರಿ ಕಾಚದಲ್ಲಿ ನಿಂತು ಅಲ್ಲೆ ಹಾಸಿದ್ದ ಸುಪ್ಪತ್ತಿಗೆಯ ಮೇಲೆ ಮಲಗಿ, ಕೂತವರಿಗೆ ಬೆನ್ನು ಮಾಡಿ, ಕಾಚವನ್ನು ಸರಿಸಿ ಬಿಚ್ಚಿದಳು. ನಂತರ ಮೆಲ್ಲಮೆಲ್ಲನೆ ಮಗ್ಗುಲಾಗುವಂತೆ ನಟಿಸುತ್ತ, ಮುಖವನ್ನು ಮಾತ್ರ ತಿರುಗಿಸಿ, ನಾಚಿಕೆಯಿಂದ ಕಣ್ಣು ಮುಚ್ಚಿದಳು. +ಕೇಶವನ ಕಣ್ಣು ನೋಡುವ ಕಾಮದಿಂದ ಜ್ವಲಿಸಿತು; ಮೈಮುಟ್ಟುವ ಕಾಮದಿಂದ ಜ್ವಲಿಸಿತು; ಕಿವಿ ಅವಳು ನರಳುವುದನ್ನು ಕೇಳುವ ಕಾಮದಿಂದ ಜ್ವಲಿಸಿತು; ನಾಲಗೆ ಅವಳ ಮುತ್ತಿನ ರುಚಿಯನ್ನು ಅನುಭವಿಸುವ ಕಾಮದಿಂದ ಜ್ವಲಿಸಿತು. ಇನ್ನೇನು ಸಂಪೂರ್ಣ ತಿರುಗಿ ಬಿಡುವಳು ಎನ್ನುವಷ್ಟು ತಿರುಗುತ್ತಿದ್ದಾಳೆಯೆ?-ಭಯವಾಯಿತು. ಬೆಂಕಿಯ ಜ್ವಾಲೆಗಳ ನಡುವೆ ನಿಂತು ನೋಡಿದ- ವಿದ್ಯುಚ್ಛಕ್ತಿಯನ್ನು ತುಂಬಿಕೊಂಡ ಪಾತಾಳದ ಹಳಿಗಳಂತೆ, ಕೈಯಲ್ಲೆತ್ತಿದ ಸೆಟೆದ ಸರ್ಪದಂತೆ, ಎಲ್ಲ ಬಾಗಿಲುಗಳೂ ಧಡೀರನೆ ತೆರೆದುಕೊಂಡಂತೆ ಇಲ್ಲ, ಥಟ್ಟನೆ ನಾಚಿದಂತೆ ಇಲ್ಲದವಳಂತೆ ಬೆನ್ನು ತಿರುಗಿಸಿದಳು. +ಫರದೆ ಬಿದ್ದಿತು- +ಮತ್ತು ಎಲ್ಲ ದೀಪಗಳೂ ಹತ್ತಿ ಅಸಹ್ಯವಾದ ಬೆಳಕಾಯಿತು. +ಕಣ್ಣುಗಳನ್ನು ಮುಚ್ಚಿ ಕೇಶವ “ನಾನು ಒಳಗೆ ಹೋಗಬಹುದೆ?” ಎಂದ. ಜೆನೆಟ್ “ಬಾಬರಾ” ಎಂದು ಒಡತಿಯನ್ನು ಕರೆದು “ಕೇಶವ್ ಒಳಗೆ ಹೋಗಬೇಕಂತೆ” ಎಂದಳು. ಸ್ಟೂ‌ಅರ್ಟ್ ಎದ್ದು ಬಂದು “ಬಾ ಕೇಶವ್” ಎಂದ. ಕೇಶವ “ಇಲ್ಲ- ನಾನು ಒಳಗೆ ಹೋಗಲೇಬೇಕು” ಎಂದ. “ಬೇಡ ಕೇಶವ್. ಅವಳ ಮೊಲೆಗಳು ಜೋತು ಬಿದ್ದಿದ್ದಾವೆ. ಇದಕ್ಕಿಂತ ಸುಂದರವಾದದ್ದನ್ನು ನೋಡುವೆಯಂತೆ- ಬೇರೆ ಎಲ್ಲಾದರೂ ಹೋಗೋಣ” ಎಂದು ಸ್ಟೂ‌ಅರ್ಟ್ ಯಾಚಿಸುವ ಧ್ವನಿಯಲ್ಲಿ ಕೇಶವನಿಗೆ ಒತ್ತಾಯ ಮಾಡಿದ. +“ಸಾಧ್ಯವಿಲ್ಲ-ನಾನು ಹೋಗಲೇ ಬೇಕು” ಎಂದು ಕೇಶವ ಸ್ಟೂ‌ಅರ್ಟ್‌ನಿಂದ ಕೈ ಎಳೆದುಕೊಂಡ. ಬಾಬರಾ ಮೆಲ್ಲನೆ ಕೇಶವನನ್ನು ಎಳೆದು ಒಳಗೆ ಕರೆದುಕೊಂಡು ಹೋದಳು. +* +* +* +ಒಳಗೆ ಮೂರು ಕೋಣೆಗಳಿದ್ದವು. ಒಂದರ ಮೇಲೆ ಒಙSಖಿ‌ಇಖಙ ಃಙ ಙ‌ಔUಖ SIಆ‌ಇ ಎಂದು ಬರೆದಿತ್ತು. ಇನ್ನೊಂದರ ಮೇಲೆ ಒಙSಖಿ‌ಇಖಙ ಖ‌ಇಗಿ‌ಇಂಐ‌ಇ‌ಆ Iಓ ಆಂಖ‌ಏ‌ಓ‌ಇSS ಎಂದು ಬರೆದಿತ್ತು. ಮೂರನೇ ಕೋಣೆಯ ಮೇಲೆ ಮಾಸಿದ ಅಕ್ಷರದಲ್ಲಿ ಒಙSಖಿ‌ಇಖಙ ಈUಐ‌ಐಙ ಖ‌ಇಗಿ‌ಇಂಐ‌ಇ‌ಆ ಎಂದು ಬರೆದಿತ್ತು. ಬಾಬರಾ ಕನ್ನಡಕವನ್ನು ತೆಗೆದು ಕರ್ಚೀಫಿನಿಂದ ಒರೆಸುತ್ತ ವಿವರಿಸಿದಳು: +“ಮೊದಲನೇ ಕೋಣೆಗೆ ಎರಡು ಪೌಂಡ್, ಎರಡನೆಯದಕ್ಕೆ ಮೂರು ಪೌಂಡ್ ಹತ್ತು ಶಿಲಿಂಗ್, ಮೂರನೆಯದಕ್ಕೆ ಐದು ಪೌಂಡ್. ಮೊದಲನೆ ರೂಮಿನಲ್ಲಿ ರೋಸಿ ಅರೆನಗ್ನಳಾಗಿ ಪಕ್ಕದಲ್ಲಿ ಕೂತು ಶೆರಿ ಕುಡಿದು ಬ್ರೇಸಿಯರ್‌ನ್ನು ಮಾತ್ರ ಬಿಚ್ಚುತ್ತಾಳೆ; ಎರಡನೆಯ ರೂಮಿನಲ್ಲಿ ಕತ್ತಲೆಯಲ್ಲಿ ಪೂರ್ಣ ನಗ್ನಳಾಗಿ ನಿನ್ನ ಪಕ್ಕದಲ್ಲಿ ನಿಲ್ಲುತ್ತಾಳೆ; ಮೂರನೆ ರೂಮಿನಲ್ಲಿ ಬೆಳಕಿನಲ್ಲಿ ಪೂರ್ಣ ನಗ್ನಳಾಗಿ ನಿಲ್ಲುತ್ತಾಳೆ.” +“ನಾಲ್ಕನೆಯ ರೂಮೊಂದು ಇಲ್ಲವೆ?” +ಒಣಗಿದ ಗಂಟಲಿನಲ್ಲಿ ಕೇಶವ ಕೇಳಿದ ಪ್ರಶ್ನೆಗೆ ಬಾಬರಾ ತಪ್ಪು ಉತ್ತರ ಹೇಳಿದ ವಿದ್ಯಾರ್ಥಿಯನ್ನು ನೋಡುವ ಉಪಾಧ್ಯಾಯಿನಿಯಂತೆ ಕೇಶವನನ್ನು ನೋಡಿ ಒಙSಖಿ‌ಇಖಙ ಈUಐ‌ಐಙ PಔSSಇSSಇ‌ಆ? ಎಂದು ಪ್ರಶ್ನಾರ್ಥಕವಾಗಿ ಕೇಳಿ, +“ಇಲ್ಲಿ ಬರುವ ಜನ ಇಷ್ಟಕ್ಕೇ ತೃಪ್ತರಾಗಿ, ಕೃತಾರ್ಥರಾಗಿ, ಕೃತಜ್ಞರಾಗಿ, ಹೋಗುತ್ತಾರೆ. ಅಲ್ಲದೆ ಅದಕ್ಕಿಂತ ಮುಂದಿನ ಅನುಭವವನ್ನು ಕೊಡಲು ನಮಗೆ ಲೈಸೆನ್ಸ್ ಇಲ್ಲ.” +“ನಾನು ಐದು ಪೌಂಡಿನ ರೂಮಿಗೆ ಹೋಗುತ್ತೇನೆ” ಎಂದು ಐದು ಪೌಂಡನ್ನು ಬಾಬರಾಗೆ ಕೊಟ್ಟ. +“ಕರೆದುಕೊಂಡು ಬಂದ ಚಾರ್ಜ್ ಹತ್ತು ಶಿಲಿಂಗ್-ಪ್ಲೀಸ್” ಎಂದು ಬಾಬರಾ ಕೈಯೊಡ್ಡಿದಳು. +ಇನ್ನೊಂದು ಹತ್ತು ಶಿಲಿಂಗನ್ನೆತ್ತಿ ಕೇಶವ ಅವಳ ಕೈಯಲಿಟ್ಟ. ಬಾಬರಾ ಖಿhಚಿಟಿಞs ಎಂದು ರೂಮಿನೊಳಕ್ಕೆ ಕೇಶವನನ್ನು ಬಿಟ್ಟು ಬಾಗಿಲನ್ನು ಮುಚ್ಚಿ ಹೋದಳು. +* +* +* +ರೂಮಿನ ವಾಲ್-ಪೇಪರು ಹರಿದು ಕ್ಷುದ್ರವಾಗಿ ಕಾಣಿಸುತ್ತಿತ್ತು. ಅಗ್ಗಿಷ್ಟಿಕೆಯಲ್ಲಿ ವಿಂಟರಿನಲ್ಲಿ ಉರಿಸಿದ ಇದ್ದಿಲಿನ ಬೂದಿ ಇನ್ನೂ ತೆಗೆದಿರಲಿಲ್ಲ. ರೂಮಿನ ಮಧ್ಯದಲ್ಲೊಂದು ಛಾವಣಿಯಿಂದ ಶೇಡ್ ಇಲ್ಲದ ಬಲ್ಬು ಉರಿಯುತ್ತಿತ್ತು. ಒಂದು ಮೂಲೆಯಲ್ಲಿ ಗೋಡೆಗೆ ಒರಗಿಸಿದ ಮೂರು ಕಾಲಿನ ಕುರ್ಚಿ. ಇನ್ನೊಂದು ಮೂಲೆಯಲ್ಲಿ ಖಾಲಿಯಾದ ಬಿಯರ್ ಸೀಸೆಗಳು. ಮಣ್ಣಿನ ನೆಲದ ಮೇಲೆ ಕಾರ್ಪೆಟ್ ಇರಲಿ- ಲಿನೋಲಿಯಂ ಸಹಿತ ಇರಲಿಲ್ಲ. ಆದರೆ ರೂಮಿನ ಕ್ಷುದ್ರತೆಗಿಂತ ಕೇಶವನಿಗೆ ಕಾಯುವುದು ಅಸಹ್ಯವಾಯಿತು. ಕೊನೆಗೆ ಞಟಿoಛಿಞ ಮಾಡಿ ಬಾಗಿಲು ತೆರೆದು ರೋಸಿ ಬ್ರೇಸಿಯರ್ಸ್ ಮತ್ತು ಕಾಚಾದಲ್ಲಿ ನಿಂತಳು. ಬಾಗಿಲನ್ನು ಮುಚ್ಚಿದಳು. +ಕೇಶವನಿಗೆ ದಿಗಿಲಾಗಿ ಕಣ್ಣು ಮುಚ್ಚಿದ. ತಾನು ನೋಡಿದ್ದನ್ನೆಲ್ಲ ನೆನೆಸಿ ಧೈರ್ಯ ಪಡೆದು ಕಣ್ಣು ತೆರೆದು ತನ್ನ ಜಾಕೆಟ್ ಬಿಚ್ಚಲು ಹೋದ. +ರೋಸಿ, “ನೀನು ಸ್ಟ್ರಿಪ್ ಮಾಡಿಕೊಳ್ಳಬೇಕಾಗಿಲ್ಲ” ಎಂದಳು. +ಕೇಶವ ಮಾತು ಬಾರದೆ ನಿಂತ. ರೋಸಿ ಬ್ರೇಸಿಯರನ್ನು ಬಿಚ್ಚಿ ಆಕಳಿಸಿದಳು. ಕೇಶವ ಅವಳ ಹತ್ತಿರ ಹೋಗಿ ಮುತ್ತಿಡಲು ಬಾಯಿಯನ್ನು ಒಡ್ಡಿದ. +“Soಡಿಡಿಥಿ . ನಾನು ಮುತ್ತುಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ರೋಸಿ ಮುಖವನ್ನು ತಿರುಗಿಸಿದಳು. +ಕೇಶವ ಅವಳ ಮುಖವನ್ನು ಸವರಿ ಮೆಲ್ಲನೆ ಅವಳ ಮೊಲೆಗಳನ್ನು ಮುಟ್ಟಿದ. +“ನಾನು ಮೊಲೆಯನ್ನೂ ಮುಟ್ಟಿಸಿಕೊಳ್ಳುವುದಿಲ್ಲ. ಕ್ಷಮಿಸು” ಎಂದು ರೋಸಿ ಗಂಭೀರವಾಗಿ ಹೇಳಿದಳು. ಕೇಶವನಿಗೆ ಕಾಲು ಬತ್ತಿದಂತಾಗಿ ನೆಲದ ಮೇಲೆ ಕೂತ. ಮ್ಯೂಸಿಯಂನಲ್ಲಿ ಮುಟ್ಟಬಾರದ ನಗ್ನ ವಿಗ್ರಹವನ್ನು ಕದ್ದು ಮುಟ್ಟುವವನಂತೆ ಮೆಲ್ಲಗೆ ಅವಳ ಕಾಲನ್ನು ತೊಡೆಗಳನ್ನು ಸವರುತ್ತ ಧೈರ್ಯ ಮಾಡಿ ಮೇಲಕ್ಕೆ ಹೋದ. ಅವಳು ಅವನಿಗೆ ಬೆನ್ನು ಮಾಡಿ ಕಾಚವನ್ನು ಬಿಚ್ಚಿ ತಿರುಗಿಕೊಂಡಳು. +ಕೇಶವನ ಕಣ್ಣುಗಳು ನಿಧಾನವಾಗಿ ಮುಚ್ಚಿಕೊಂಡವು. ಮೈ ನಡುಗಿತು. ತುಂಬ ಬಳಲಿಕೆಯಾಗಿ ನೆಲದ ಮೇಲೆ ಮುದ್ದೆಯಾಗಿ ಕೂತ. ಕಣ್ಣು ತೆರೆದಾಗ ಮತ್ತೆ ಅವಳು ಕಾಚಾವನ್ನು ಧರಿಸಿ ಆಕಳಿಸುತ್ತ Soಡಿಡಿಥಿ ಎಂದಳು. ಸೆಟೆದು ಹೆಡೆಯೆತ್ತಿದ ಸರ್ಪ ಸೊರಗಿ ಸಿಂಬಳದ ಹುಳುವಾಯಿತು. +ದೊಡ್ಡದೊಂದು ಗುಡಾಣದಲ್ಲಿ ಸಣ್ಣ ಇಲಿಯ ಹಾಗೆ,-ಎಣ್ಣೆ-ನುಣುಪಿನ ಪಾತ್ರೆಯೊಳಗೆ ತೆವಳುತ್ತ ಪರಚುತ್ತ ವಿಲವಿಲನೆ ಒದ್ದಾಡಿದ ಹಾಗೆ,- ಇದನ್ನು ಕನಸಿನಲ್ಲಿ ನೋಡುತ್ತಿದ್ದ ಹಾಗೆ- ಕಾಣುವ ಕಣ್ಣಾಗಿ, ಜಾರುವ ಇಲಿಯಾಗಿ, ಚಾಚಲಾರದ ಕೈಯಾಗಿ, ಗರಬಡಿದ ಹಾಗೆ- +ಕನಸು ಮುಗಿದು ನಿರಾಕಾರವಾದ ಚಡಪಡ ಮಾತ್ರ ಉಳಿದು, ಕಸಿವಿಸಿಯ ಕಾರಣ ಹುಡುಕುತ್ತ ಕಂಡ ಕನಸನ್ನು ಮತ್ತೆ ನೆನೆಸಿಕೊಳ್ಳಲು ಅಗೆದು ಅಗೆದು ಒಳಕ್ಕೆ ಹೋದ ಹಾಗೆ,- +ಅಗೆಯುವಾಗ್ಗೆ ಮೊದಲು- ಮಣ್ಣು, ಮರಳು, ಮಣ್ಣು, ಎರೆಹುಳು, ಕಿಲುಬುಗಟ್ಟಿದ ನಾಣ್ಯದೊಂದು ಚೂರು, ಮಡಕೆಯ ಚೂರು, ತುಕ್ಕು ಹಿಡಿದ ಕಬ್ಬಿಣದ ಹಾರೆ, +ಇನ್ನೂ ಕೆಳಗೆ ತನ್ನ ಚಡಪಡದ ಕನಸಿಗೆಂದು ಅಗೆದ ಹಾಗೆ, ಅಲ್ಲಿ ಬರಿ ಶೂನ್ಯವಿದ್ದ ಹಾಗೆ- +ಶೂನ್ಯದಲ್ಲೊಂದು ರೂಮು, ರೂಮಿನಲ್ಲೊಬ್ಬಳು ಬೆತ್ತಲೆ ನಿಂತ ಹುಡುಗಿ….ಕತ್ತಲೆ….ಶೂನ್ಯ….ಸಿಂಬಳದ ಹುಳ…. +ಸುಬ್ಬಣ್ಣಕಕ್ಕನಿಗೂ ಬಹುಶಃ ಕೊನೆಯಲ್ಲಿ ಈ ಶೂನ್ಯದ ಅನುಭವವಾಗಿರಬಹುದೆ? ಉಪವಾಸದಲ್ಲಿ ಕೃಶನಾಗಿ, ದೇವರನ್ನು ಹುಡುಕಿ ಗುಹೆ ಗಹ್ವರ ಅಲೆದು, ಕೊನೆಗೊಂದು ತನ್ನಂತೆಯೇ ಕೃಶವಾದ ಕ್ಷುದ್ರ ಪರಮಾರ್ಥವನ್ನವನು ಕಂಡಿರಬಹುದೆ? ಈ ಕ್ಲಿಪ್ ಜಾಯಿಂಟಿನಿಂದ ಮೊದಲು ಎದ್ದು ಸ್ಟೂ‌ಅರ್ಟ್ ಇದ್ದಲ್ಲಿಗೆ ಹೋಗಬೇಕು….ಪೆಚ್ಚಾದೆ. +“ನನ್ನ ಪ್ಲ್ಯಾಟಿನಲ್ಲಿ ನೀನು ರಾತ್ರೆಯನ್ನು ಕಳೆಯ ಬಯಸಿದರೆ ಹತ್ತು ಪೌಂಡ್. ಬಾಬರಾಗೆ ಮಾತ್ರ ತಿಳಿಸಬೇಡ. ಹ್ಯಾಂಪ್ ಸ್ಟೇಡ್‌ನಲ್ಲಿ ಇಸ್ಲಿಂಗ್‌ಟನ್ ಬೀದಿಯಲ್ಲಿ ನಂಬರ್ ೧೦ನೇ ಮನೆ. ಈಗ ಐದು ಪೌಂಡ್ ಕೊಡು. ಅಲ್ಲಿ ಬಂದ ಮೇಲೆ ಉಳಿದದ್ದು….” ಎಂದು ರೋಸಿ ಹೇಳಿದಳು. +“ಬೇಡ” ಎಂದು ಕೇಶವ ತಲೆಯಾಡಿಸಿದ. +ಪ್ರಾಯಶಃ ಕೊನೆಯಲ್ಲಿ, ಅತ್ಯುನ್ನತ ಉದ್ದೇಶಗಳ ಕಮಿಟಿಗಳ ಮೇಲೊಂದು ಕಮಿಟಿಯ ಅನಂತ ಅಪಾರ ಶುಭ್ರ ಸ್ವಚ್ಛ ರೂಮುಗಳ ಮೇಲಿನ ರೂಮುಗಳ ಕೊನೆಯಲ್ಲಿ ಸೆಂಟ್ರಲ್ಲಿಹೀಟೆಡ್ ಜಗತ್ತಾಗಿ ಸ್ಟೂ‌ಅರ್ಟ್‌ಗೆ ಈ ಶೂನ್ಯದ ಅನುಭವವಾಗಬಹುದು. +ಮೊದಲು ಈ ಕ್ಲಿಪ್ ಜಾಯಿಂಟಿನಿಂದ ಎದ್ದು ಹೊರಗೆ ಹೋಗಬೇಕು. +“ಇಲ್ಲಿಯಂತೆ ನಾನು ಅಲ್ಲಿ ನಿನ್ನ ಹತ್ತಿರ ನಡೆದುಕೊಳ್ಳೋದಿಲ್ಲ. ಈಗ ದುಡ್ಡಿಲ್ಲದಿದ್ದರೆ ಬೇಡ. ಬರುವಾಗ ತರುವಿಯಂತೆ. ನನಗೆ ಇಲ್ಲಿ ಹೆಚ್ಚು ಸ್ವಾತಂತ್ರ್ಯ ಇಲ್ಲ. ಬಾಬರಾಗೆ ತಿಳಿಸಬೇಡ, ಒಂದು ಮುತ್ತನ್ನು ಕೊಡುತ್ತೇನೆ ಏಳು”. +ಅವಸರದಲ್ಲಿ ಮಾತಾಡುತ್ತ ರೋಸಿ ಬಗ್ಗಿದಳು. ಬೇಡ. ಏನೂ ಬೇಡ. ಪೂಜೆ, ಜಪ, ವ್ರತಗಳಲ್ಲಿ ತೊಡಗಿದ್ದ ಅಪ್ಪನನ್ನು ಗಿಡಗ-ಕಣ್ಣಿನಿಂದ ಈ ಶೂನ್ಯ ಮೊದಲಿನಿಂದಲೂ ಕಾಡಿರಬಹುದೆ? ಬೇಡವೆನ್ನಿಸಿದ ಮೇಲೆ ಮುತ್ತಿಡುವ, ಆ ಮುತ್ತನ್ನೂ ಇನ್ನಷ್ಟು ಸುಲಿಯಲೆಂದು ಕೊಡುವ, ಈ ಕ್ಲಿಪ್ ಜಾಯಿಂಟಿನಿಂದ ಬೇಗ ಪಾರಾಗಬೇಕು…. +ಬಾಬರಾ ಬಂದು ಬಾಗಿಲು ತಟ್ಟಿ “ರೋಸಿ” ಎಂದು ಕರೆದಳು. “ಬಂದೆ” ಎಂದು ರೋಸಿ ಕೇಶವನನ್ನು ಚುಂಬಿಸಿ, “ಮತ್ತೆ ನೋಡುತ್ತೇನೆ. ಬೈ’ ಎಂದು ಕಣ್ಣು ಹೊಡೆದು ಹೊರಟು ಹೋದಳು. +ಕೇಶವ ಮಣ್ಣಾದ ಕೈಯನ್ನು ಕೊಡವಿಕೊಂಡ. ತೋಳಿನಿಂದ ಬಾಯಿಯನ್ನು ಒರೆಸಿಕೊಂಡ. ಪ್ಯಾಂಟಿನಿಂದ ಧೂಳನ್ನು ಕೊಡವಿ, ತುಂಬ ಬಳಲಿಕೆಯಾಗಿ ಮೂರು ಕಾಲಿನ ಕುರ್ಚಿಯ ಮೇಲೆ ಹೋಗಿ ಕೂತ. ಸಿಗರೇಟು ಹಚ್ಚಿದ…. +ಈ ಐದು ಪೌಂಡ್ ಹತ್ತು ಶಿಲಿಂಗ್ ಮತ್ತು ಎರಡು ಹತ್ತು ಶಿಲಿಂಗ್ ಮತ್ತು ಮುವ್ವತ್ತು ಪ್ಲಸ್ ಎರಡೂವರೆ ಶಿಲಿಂಗ್ ಬಿಯರ್ ಇತ್ಯಾದಿ ಹತ್ತು ಶಿಲಿಂಗ್ ಲಂಡನ್ನಿಗೆ ಬಂದು ಹೋದ ಪ್ರಯಾಣದ ಖರ್ಚು ನಾಲ್ಕು ಪೌಂಡ್ ಇಳಿದುಕೊಂಡ ಸ್ಥಳದ ಎರಡು ಪೌಂಡ್ ಇತರೆ ಖರ್ಚು ಎರಡು ಪೌಂಡ್- ಒಟ್ಟು ಹದಿನಾರು ಪೌಂಡ್‌ಗಳ ಮೇಲೆ-ಪೆಚ್ಚಾದೆ-ಅಮ್ಮನಿಗೆ ಕಳಿಸಿದ್ದರೆ ಎರಡು ತಿಂಗಳ ಸಂಸಾರ ನಿರ್ವಹಣೆಯಾಗುತ್ತಿತ್ತು- ಮತ್ತದೇ ಹಿಂದಿನ ಚಿಂತೆಗಳು, ಈ ಕ್ಲಿಪ್ ಜಾಯಿಂಟಿನಿಂದ ಮೊದಲು ತೊಲಗಬೇಕು…. +ಮಾಧು ಆತ್ಮಹತ್ಯೆ ಮಾಡಿಕೊಂಡರೆ…. +ಸ್ಟೂ‌ಅರ್ಟ್ ಕರೆದದ್ದು ಕೇಳಿ ಕೇಶವ ಮೂರು ಕಾಲಿನ ಕುರ್ಚಿಯಿಂದ ಎದ್ದು ನಿಂತ. +***** +ಆಗಸ್ಟ್, ೧೯೬೪, ಬರ್ಮಿಂಗಂ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_582.txt b/Kannada Sahitya/article_582.txt new file mode 100644 index 0000000000000000000000000000000000000000..fc3836e14a795ad63a7192c1efaeed87441a5a5f --- /dev/null +++ b/Kannada Sahitya/article_582.txt @@ -0,0 +1,271 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ ಇರುತ್ತಿದ್ದರು. ದಿಲ್ಲಿಗೆ ಬಂದ ಎರಡು ವರ್ಷಗಳಲ್ಲಿಯೇ ಅವರ ಅದ್ಭುತ ಗಾಯನಕಲೆ ಅರಸನ ಕಿವಿಯವರೆಗೆ ಮುಟ್ಟಿ ಅವರು ದರಬಾರೀ ಗಾಯಕರಾಗಿದ್ದರು. ದಿಲ್ಲಿಯಲ್ಲಿ ಅವರಿಗೆ ಈಗ ಮೂವರು ಹೆಂಡಂದಿರು, ಮೂರು ಬೇರೆ ಬೇರೆ ಮನೆಗಳಲ್ಲಿ ಅವರ ವಾಸ. ಮೂರು ಮನೆಗಳಲ್ಲಿ ಅವರಿಗೆ ದಿವಾನಖಾನೆ, ಜಾಜಮು, ತಕ್ಕೆ, ತಂಬೂರಿ, ಸಾರಂಗಿ, ತಬಲಗಳ ವ್ಯವಸ್ಥೆ ದರಬಾರದಿಂದಲೇ ಆಗಿತ್ತು. ಒಬ್ಬ ಹೆಂಡತಿ ತಾವೇ ಮಾಡಿಕೊಂಡಿದ್ದು. ಒಬ್ಬಳನ್ನು ಬಾದಶಹನ ಊಳಿಗದಿಂದ ಕೇಳಿತಂದಿದ್ದರು. ಮೂರನೆಯವಳು ಬಾದಶಹರೇ ಕೊಟ್ಟ ಕಾಣಿಕೆ. ರಾಜಪುತ್ರ ಸಲೀಮನ ಲಗ್ನದಲ್ಲಿ ಆದ ಬೈಠಕಿನಲ್ಲಿ ತಾನಸೇನ ಹಾಡಿದ ದರಬಾರಿ ಕಾನ್ಹರಾ(ಕಾನಡಾ) ರಾಗಕ್ಕೆ ಮೆಚ್ಚಿಕೊಂಡು ಅರಸ ಕೊಟ್ಟ ಅನೇಕ ಕಾಣಿಕೆಗಳಲ್ಲಿ ಈ ಮಹಿಳೆಯೂ ಒಬ್ಬಳು. ಮೊದಲ ಹಳ್ಳಿಯ ಹೆಂಡತಿ ಹಮೀದಾಳಿಂದ ಒಬ್ಬನೇ ಮಗ ಬಿಲಾಸಖಾನ. ದಿಲ್ಲಿಯಲ್ಲಿ ಎರಡನೆಯ ಹೆಂಡತಿಯ ಹೊಟ್ಟೆಯಿಂದ ಮೂರು ಮಕ್ಕಳು, ಮೂರನೆಯವಳ ಹೊಟ್ಟೆಯಿಂದ ಮೂರು, ನಾಲ್ಕನೆಯವಳಿಂದ ಇಬ್ಬರು. ಮಿಯಾಸಾಹೇಬರ ಗಂಡು ಕಲೆಯ ಲಕ್ಷಣವಾಗಿ ಅವರಿಗೆ ಹುಟ್ಟಿದ ಮಕ್ಕಳಲ್ಲಿ ಗಂಡುಗಳೇ ಹೆಚ್ಚು. ಆದರೆ ನಾಲ್ಕನೆಯವಳ ಹೊಟ್ಟೆಯಲ್ಲಿ ಹುಟ್ಟಿದ ಮೊದಲನೆಯ ಮಗು ಹೆಣ್ಣು. ಅದಕ್ಕಾಗಿ ಮಗಳ ಮೇಲೆಯೂ, ಆ ಕಾರಣ ಆಕೆಯ ತಾಯಿಯ ಮೇಲೂ ಮಿಯಾಸಾಹೇಬರಿಗೆ ಎಲ್ಲಿಲ್ಲದ ಅಚ್ಚುಮೆಚ್ಚು. ನಾಲ್ಕನೆಯ ಹೆಂಡತಿಯ ಮನೆಗೆ ಬರುವದೂ ಹೆಚ್ಚು. ಅದು ಮುಖ್ಯವಾಗಿ ಮಗಳ ಮುಖ ನೋಡುವದಕ್ಕೆ. ಇದರ ಪೂರ್ಣ ಲಾಭವನ್ನು ನಾಲ್ಕನೆಯ ಹೆಂಡತಿ ಸಕೀನಾಬೇಗಂ ಪಡೆಯುತ್ತಿದ್ದಳು. ಏನೊಂದು ನೆಪಮಾಡಿ, ಮಗಳಿಂದ ಹೇಳಿಸಿ, ರಾತ್ರಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದಳು. ‘ಮಾಲಕಂಸ’ ಹಾಡಿದರೆ ಮಗಳು ನಿದ್ರೆ ಹೋಗುತ್ತಾಳೆಂದು ಹೇಳಿ, ಮಿಯಾಸಹೇಬರಿಂದ ಮಾಲಕಂಸ ಹಾಡಿಸುತ್ತಿದ್ದಳು. ಮಾಲಕಂಸ ಹಾಡಿದರೆ ಮಕ್ಕಳು ನಿದ್ರೆ ಹೋಗುವದೂ ನಿಜವೇ. ಮಗಳನ್ನು ಕೂಡಿಸಿಕೊಂಡು, ತಂಬೂರಿ ಶ್ರುತಿ ಮಾಡಿ ತಾನಸೇನರು ರಾಗಾಲಾಪನೆ ಮಾಡತೊಡಗಿದ ಮೇಲೆ, ಸಕೀನಾಬೇಗಂ ಕಿಟಕಿಯ ತೆರೆಗಳನ್ನು ಓಸರಿಸಿ ಹೊರಗೆ ಹಣಿಕಿ ನೋಡುತ್ತಿದ್ದಳು-ಬೀದಿಯಲ್ಲಿ ಹಿರಿಯ ಹೆಂಡತಿ ಗಂಗಾರಾಣಿಯ ಗುಪ್ತಚರ ಕಾಶೀನಾಥನೂ ಮತ್ತೊಬ್ಬ ಹೆಂಡತಿಯ ಶರಣದಾಸಿಯ ಗುಪ್ತಚರ ರಃಈಮನೂ ನಿಂತಿದ್ದಾರೋ ಇಲ್ಲೋ ನೋಡಲಿಕ್ಕೆ. ಮಗಳು ನಿದ್ರೆಹೋದಮೇಲೆ, ದೀಪ ಆರಿಸಿ, ತನ್ನ ಕೋಣೆಯೊಂದರಲ್ಲೇ ದೀಪವಿಟ್ಟು, ತಾನಸೇನರನ್ನು ಬರನಾಡಿಕೊಂಡು, ಇನ್ನೊಮ್ಮೆ ಹಣಿಕಿ ನೋಡಿ, ದೀಪವಾರಿಸುತ್ತಿದ್ದಳು. ತಾನಸೇನರು ಹೊರಗೆ ಬರಲಿಲ್ಲ, ರಾತ್ರಿ ಅಲ್ಲಿಯೇ ಕಳೆದರು ಎಂಬ ವಾರ್ತೆ ಕೋಡಲೇ ಆ ಈರ್ವ ಹೆಂಡಂದಿರಿಗೂ ಮುಟ್ಟುತ್ತಿತ್ತು. ‘ರಸಮಿಲನ’ವಾದ ಮೇಲೆ, ತಾನಸೇನರು ನಿದ್ರೆ ಹೋಗಿದ್ದು ನೋಡಿ, ಇನ್ನೊಮ್ಮೆ ಸಕೀನಾ ಕಿಟಿಕಿಯ ಹೊರಗೆ ಇಣಕಿ, ಇಬ್ಬರೂ ಗುಪ್ತಚರರು ಮಾಯವಾದ ಖಾತ್ರಿ ಮಾಡಿಕೊಂಡು, ಸಮಾಧಾನದ ನಿಟ್ಟುಸಿರೆಳೆದು, ಆ ಹೆಂಡಂದಿರು ಹೇಗೆ ಕೈಕೈ ಹಿಸುಕಿ ಕೊಂಡಿದ್ದಾರೆಂಬುದನ್ನು ಕಲ್ಪಿಸುತ್ತ ತಾನೂ ನಿದ್ರೆಹೋಗುತ್ತಿದ್ದಳು. +ಇಷ್ಟಾದರೂ ಮಿಯಾಸಾಹೇಬರ ನ್ಯಾಯಬುದ್ದಿಗೇನೂ ಕಲಂಕಬಾರದು. ವಾರಕ್ಕೊಮ್ಮೆ, ಕನಿಷ್ಠ ಹದಿನೈದು ದಿವಸಕ್ಕೆ ಎರಡು ಬಾರಿ ಇತರರಿಗೆ ಸರದಿ ಬರುವಂತೆ ತಮ್ಮ ದಿನಚರಿ ಇಟ್ಟುಕೊಂಡಿದ್ದರು. ಆ ಹೆಂಡಂದಿರೂ ಕೂಡ ಮಿಯಾಸಾಹೇಬರ ಮಗಳ ಪ್ರೇಮವನ್ನು ಅನುಲಕ್ಷಿಸಿ, ಈ ಬಾರಿ ನಮಗೂ ಮಗಳನ್ನು ದಯಪಾಲಿಸಬೇಕೆಂದು ಪತಿಯನ್ನು ಪ್ರಾರ್ಥಿಸುತ್ತಿದ್ದರು. ‘ಭಗವಾನ್ ಕರೇ’ ಎಂದಿಷ್ಟೇ ಮಿಯಾಸಾಹೇಬರು ಹೇಳುತ್ತಿದ್ದರಾದರೂ, ಅವರಿಗೆ ದೊರಕಿದ್ದು ಗಂಡು ಸಂತಾನವಷ್ಟೆ ! +ಈ ಆಂತರಿಕ ತುಮುಲದಿಂದ ಹೊರಗೆ ಉಳಿದವರೆಂದರೆ ಅತ್ರೌಳಿಯ ಹಮೀದಾಬಾನು ಒಬ್ಬಳೆ. +ದಿಲ್ಲಿಯ ಸುದ್ದಿಗಳೆಲ್ಲಾ ಒಂದೆರಡು ತಿಂಗಳಲ್ಲಿ ಆಕೆಗೆ ಬಂದು ತಲುಪುತ್ತಿದ್ದವು. ಮೊದಮೊದಲು ನೋವಾಯಿತು. ಮೊದಲೆರಡು ವರ್ಷ ಮಿಯಾಸಾಹೇಬರು ಹೆಂಡತಿ-ಮಗ-ತಾಯಿಯರನ್ನು ಕಾಣಲಿಕ್ಕೆ ವರ್ಷಕ್ಕೆರಡು ಬಾರಿ ಬಂದು ಹೋಗುತ್ತಿದ್ದರು. ದರಬಾರದ ಸೇವೆ ಶುರುವಾದ ಮೊದಲಲ್ಲಿ ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರು. ಹೀಗೆರಡು ವರ್ಷ ಕಳೆದವು. ನಂತರ ಬರುವುದೂ ನಿಂತು ಹೋಯಿತು. ಆದರೂ ಮಿಯಾಸಾಹೇಬರು ಪತ್ರಗಳನ್ನು ಬರೆಯುತ್ತಿದ್ದರು-ತಾಯಿಗೆ, ಹೆಂಡತಿ-ಮಗಳ ಕ್ಷೇಮವನ್ನು ಕೇಳಲಿಕ್ಕೆ. ಕಳೆದ ಆರು ವರ್ಷಗಳಲ್ಲಿ ಪತ್ರಲೇಖನವೂ ವರ್ಷಕ್ಕೊಮ್ಮೆ. ಅದೂ ದಸ್ತೂರರ ಮುಖಾಂತರ. ಕೆಳಗೆ ಸಹಿ ಮಾತ್ರ ಮಿಯಾಸಾಹೇಬರದು. ಅತ್ರೌಳಿಯಿಂದಲೇ ಕರೆದೊಯ್ದ ಮಿಯಾ ರಹಮತಖಾನ್ ಪಖಾವಜಿ(ಪಖ್ವಾಜ-ಮೃದಂಗ ಬರಿಸುವವ) ತಿಂಗಳು-ಎರಡು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ. ಅವನೇ ಮಿಯಾಸಾಹೇಬರ ಪತ್ರಗಳನ್ನು ಬರೆಯುವವ. ದಿಲ್ಲಿಯಲ್ಲಿ ಅವನಿಗೆ ಒಬ್ಬ ಹೆಂಡತಿ, ಅತ್ರೌಳಿಯಲ್ಲಿ ಒಬ್ಬ ಹೆಂಡತಿ ಇದ್ದರು. ಇದಲ್ಲದೆ, ನೃತ್ಯಕ್ಕೆ ಕೂಡ ಆತ ಪಖ್ಹವಜ ಬಾರಿಸುವ ಮೂಲಕ ಸಾಕಷ್ಟು ಗಣಿಕೆಯರ ಸಂಗವೂ ಇತ್ತು. ಕಟ್ಟುಮಸ್ತಾದ ಆಳು. ಗಣಿಕೆಯರು ತಾವಾಗಿಯೇ ಇವನ ಬಳಿ ಸಾರುತ್ತಿದ್ದರು. ಆದರೂ ಹಳ್ಳಿಯ ಹೆಂಡತಿಯೆಂದರೆ ಅವನಿಗೆ ಪ್ರೇಮ. ಇಬ್ಬರು ಮಕ್ಕಳು ಅತ್ರೌಳಿಯಲ್ಲೇ ಇದ್ದರು. ಅವರೊಡನೆ ಬಿಲಾಸಖಾನ ಆಟವಾಡುತ್ತ ಬೆಳೆದಿದ್ದ. +ಈ ಬಾರಿ ರಹಮತ್ ಖಾನ್ ದಿಲ್ಲಿಯಲ್ಲೇ ಒಂದು ಪುಟ್ಟಮನೆ ಕೊಂಡುಕೊಂಡು ತನ್ನ ಬೇಗಂ ಮತ್ತು ಪುತ್ರರನ್ನು ಕರೆದೊಯ್ಯಲಿಕ್ಕೆ ಬಂದ. +ಆವಾಗ ಬಿಲಾಸಖಾನ್ ಅವರ ಜೊತೆಗೆ ತಾನೂ ದಿಲ್ಲಿಗೆ ಹೋಗುವೆನೆಂದು ಹಟಹಿಡಿದು ಕುಳಿತ. ರೊಯ್ಯನೆ ಅಳುತ್ತ ಕುಳಿತ ಬಾಲಕನನ್ನು ತಾಯಿ-ಅಜ್ಜಿ ಕಳಿಸಲೇಬೇಕಾಯಿತು. +* +* +* +ತಾನಸೇನ್ ಸಾಹೇಬರು ಹೆಣ್ಣುಗರುಳಿನ ಮನುಷ್ಯರು ಎಂದು ನೋಡಿದ್ದೇವೆ. ರಹಮತ್ ಖಾನ್ ಅತ್ರೌಳಿಗೆ ಹೊರಡುವ ಒಂದು ವಾರ ಮುಂಚೆ ತಾನಸೇನರಿಂದ ಒಂದು ಅಚಾತುರ್ಯ ಘಟಿಸಿಹೋಗಿತ್ತು. +ರಾಜಪುತ್ರ ಶಹಾಝಾದೆ ಸಲೀಮನಿಗೂ, ಮಿಯಾ ತಾನಸೇನರಿಗೂ ಒಂದು ಅಸ್ಪಷ್ಟ, ನಿಷ್ಕಾರಣ, ಅಸ್ಪುಟ ದ್ವೇಷವು ಬೆಳೆದುಬಂದಿತ್ತು. ಸಲೀಮನು ಚೆಲುವ, ಅಷ್ಟೇ ದುರಾಗ್ರಹಿ. ದಿಲ್ಲಿಯಲ್ಲಿಯ ಹೆಣ್ಣು ಮಕ್ಕಳೆಲ್ಲ ತನ್ನ ಮೈಮೇಲೆ ಮುಕುರುತ್ತಿದಂತೆ ಅವನು ಕಲ್ಪಿಸಿಕೊಂಡಿದ್ದ. ತನ್ನ ತಂದೆಯ ಧರ್ಮಸಹಿಷ್ಣುತೆ ಅವನಲ್ಲಿ ಎಳ್ಳಷ್ಟೂ ಇರಲಿಲ್ಲ. ಮುಸ್ಲಿಂ ಹೆಂಗಸರು ಘೋಷಾದಲ್ಲಿ ಇರುವ ಮೂಲಕ, ಓಣಿಯಲ್ಲಿಯ ಎಲ್ಲ ಹಿಂದೂ ಸ್ತ್ರೀಯರು ಅವನಿಗೆ ಒಲಿದಿರುವ ಕಲ್ಪನೆ ಅವನಲ್ಲಿತ್ತು. ಹಲವಾರು ಔತ್ತರೇಯ ಹಿಂದು ಸುಂದರಿಯರು ಅವನನ್ನು ಆಃವಾನಿಸಿದ್ದೂ ನಿಜ. ಕೆಲವರನ್ನು ಅವನೇ ತಿರಸ್ಕರಿಸಿದ್ದ. ಆದರೆ ಎಲ್ಲ ಹಿಂದೂ ಗಂಡಸರು ನಪುಂಸಕರೆಂದೂ, ಅಂತೆಯೇ ಅವರ ಹೆಂಡಂದಿರು ತನಗಾಗಿ ಕಚ್ಚಾಡುತ್ತಿರುವರೆಂದೂ, ಅವನ ಕಲ್ಪನೆಯಾಗಿ ಹಿಂದೂ ಜನರ ತಿರಸ್ಕಾರ ಅವನಲ್ಲಿ ಹುಟ್ಟಿತು. ವಯೋಧರ್ಮದ ಮೇರೆಗೆ ಅಷ್ಟು ಆಳವಾಗಿ ವಿಚಾರ ಮಾಡುವವನೂ ಅಲ್ಲ. +ಮಿಯಾ ತಾನಸೇನರು ಮೂಲ ಅವಧು (ನಾಥ-ಅವಧೂತ) ಸಂಪ್ರದಾಯದವರು. ತಂದೆ ಮುಸ್ಲಿಂ ಧರ್ಮ ಸ್ವೀಕರಿಸಿದ್ದರು. ಆದರೆ ಮೂಲ ಸಂಪ್ರದಾಯವನ್ನು ಬಿಟ್ಟುಕೊಟ್ಟಿರಲಿಲ್ಲ. ಅವಧೂತ ಸಂಪ್ರದಾಯದವರು ಮುಕ್ತ ಜೀವಿಗಳು. ಅವರೇ ಹೇಳುವಂತೆ ‘ಪಂಚಮಾಶ್ರಮಿ’ಗಳು. ಅವರಿಗೆ ಎಲ್ಲ ಮನೆಗಳಲ್ಲೂ ಪ್ರವೇಶ, ಆದರ ಸತ್ಕಾರ. ಎಲ್ಲ ಧರ್ಮಗಳನ್ನು ಮನ್ನಿಸುವವರು. ಧರ್ಮ-ಧರ್ಮಗಳಲ್ಲಿ ವ್ಯತ್ಯಾಸ-ವಿವೇಕವನ್ನು ಅರಿಯರು. ತಾನಸೇನರು ಉದ್ದುಕೂದಲು ಬಿಟ್ಟುಕೊಂಡು, ಧೋತರ ಉಟ್ಟುಕೊಂಡು, ಕೊರಳಲ್ಲಿ ತುಳಸೀಮಾಲೆ, ಕಿವಿಯಲ್ಲಿ ಮಲ್ಲಿಗೆ ಮೊಗ್ಗು ಧರಿಸುತ್ತಿದ್ದರು. ಹಿಂದೂ ಹಬ್ಬ-ಹರಿದಿನಗಳಲ್ಲಿ ಹಣೆಯಮೇಲೆ ಗಂಧ, ಶಿವರಾತ್ರಿಯಾದರೆ ವಿಭೂತಿ ಧರಿಸುವದನ್ನು ಬಿಟ್ಟಿರಲಿಲ್ಲ. ಇತ್ತ ಸ್ವಾಮಿ ಹರಿದಾಸರ ಶಿಷ್ಯರಾಗಿ ಭಜನೆ ನಡೆಸುತ್ತಿದ್ದರು. ಶುಕ್ರವಾರಕ್ಕೊಮ್ಮೆ ನಮಾಜು ಮಾಡಿ ಕಲ್ಮಾ ಓದುತ್ತಿದ್ದರು. ಮಾಂಸಾಹಾರ ಮಾಡಿದರೂ, ಏಕಾದಶಿ ವ್ರತದ ಮೇರೆಗೆ ಅಂದು ನಿರಾಹಾರವಿರುತ್ತಿದ್ದರು. ಎಲ್ಲಜಾತಿಯವರಿಗೂ ಪ್ರೀಯರಾಗಿದ್ದರು. ಆದರೆ ಅವರ ಈ ದ್ವಿಧಾವರ್ತನೆ ಸಲೀಮನಿಗೆ ಎಳ್ಳಷ್ಟೂ ಮಾನ್ಯವಿರಲಿಲ್ಲ. ಇದಕ್ಕಾಗಿ ಅವರನ್ನು ಹಾಸ್ಯ-ಗೇಲಿಗಳಿಗೆ ಒಳಪಡಿಸಿ ನಾಲ್ಕು ಜನ ಪ್ರತಿಷ್ಠಿತರೆದುರು ಅವರಿಗೆ ಅವಮಾನ ಮಾಡಿದ್ದ. ‘ಎಲ್ಲ ಶಹಝಾದೆಗಳ ಹಣೆಯಬರಹವೇ ಇಷ್ಟು’ ಎಂದು ತಾನಸೇನರು ಅದನ್ನು ಸಹನೆಯಿಂದಲೇ ಸ್ವೀಕರಿಸಿದ್ದರು. +ಮುಂದೆ ಒಂದು ದಿನ ಬಾದಶಹನು ಹಾರ್ಯಾಣಾದ ಗೋರಖ ಮಠಕ್ಕೂ ಗೋರಖಪುರದ ನಾಥ-ಅವಧೂತ-ಕಾನಫಟಾ ಮಠಕ್ಕೂ ಹೊಸ ಉಂಬಳಿ ಹಾಕಿಕೊಟ್ಟ ಸುದ್ದಿ ಹರಡಿತು. ಇದರ ಹಿಂದಿನ ಅಗ್ರೇಸರ ವ್ಯಕ್ತಿ ಮಿಯಾ ತಾನಸೇನರೇ ಎಂದು ಸಲೀಂ ನಂಬಿಬಿಟ್ಟ. +ತಾನಸೇನರಿಗೆ ಈ ಮಠಗಳ ಬಗ್ಗೆ ಭಕ್ತಿ ಇದ್ದದ್ದು ನಿಜ. ಆದರೆ ಉಂಬಳಿ ಕೊಡುವ ಉಪದೇಶ ಮಾಡಿದವನು ಬಾದಶಹರ ಹತ್ತಿರದ ವಿಶ್ವಾಸಿಗ ಮಂತ್ರಿ ಅಬುಲ್ ಫಜಲ್. ಅಬುಲ್ ಫಜಲ್ ಉರ್ದು, ಹಿಂದಿ, ಸಂಸ್ಕೃತಗಳಲ್ಲಿ ಪಾರಂಗತ. ಬಾದಶಹ ಸ್ಥಾಪಿಸಿದ ಅಕಬರೀ ಧರ್ಮವನ್ನು ನಿಜವಾಗಿ ಆಚರಣೆಯಲ್ಲಿ ತರುವವರು ನಾಥ-ಅವಧೂತ-ಕಾನಫಟಾ ಯೋಗಿಗಳೇ ಎಂದು ಗುರುತಿಸಿ, ಅವರ ಮಠಗಳಿಗೆ ಉಂಬಳಿ ಹಾಕಿಕೊಡಬೇಕೆಂದು ಬಾದಶಹನಿಗೆ ಸೂಚನೆ ಕೊಟ್ಟ. ಭಾರತಕ್ಕೆ ಇಸ್ಲಾಂ ಬಂದ ಹೊಸತರಲ್ಲಿ ಈ ಜಾತಿಯ ಅನೇಕ ಯೋಗಿಗಳು ಇಸ್ಲಾಂ ಸ್ವೀಕರಿಸಿದುದು; ಖುದ್ದ ಬಾಬಾ ಹಾಜೀ ರತನನೇ ಇಂಥ ಯೋಗಿಯೆಂಬುದನ್ನು ಅಭ್ಯಸಿಸಿದ ಅಬ್ದುಲ್ ಫಜಲ್ ಪಂಡಿತನಿಗೆ ಇಂಥ ಉಪದೇಶ ಕೊಡುವವರಲ್ಲಿ ಏನೂ ಸಂಕೋಚವಿರಲಿಲ್ಲ. ಅಕಬರ ಬಾದಶಹನ ಪಟ್ಟಾಭಿಷೇಕ ಸಮಯದಲ್ಲಿ ಈ ಯೋಗಿಗಳೇ ವೈದಿಕ ಛಂದಸ್ಸಿನಲ್ಲಿ ‘ಅಲ್ಲೋಪನಿಷತ್’ ರಚಿಸಿ, ಸಭೆಯಲ್ಲಿ ಹೇಳಿ ಬಾದಶಹನಿಗೆ ಆಶೀರ್ವಾದ ಮಾಡಿದ್ದರು. ಬಾದಶಹನ ನಲುಮೆಯ ಮಹಿಷಿ ದೇವಿ ಚೌಧುರಾಣಿ ಈ ಮಂತ್ರದಿಂದಲೇ ತುಲಸೀಪೂಜೆ ಮಾಡಿ ಬಾದಶಹನ ಆಯುರಾರೋಗ್ಯಗಳಿಗೆ ಪರಮಾತ್ಮನನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಳು. ಈ ಯೋಗಿಗಳೇ ರಚಿಸಿದ ‘ಹಠಯೋಗ ಪ್ರದೀಪಿಕಾ’ ಗ್ರಂಥವನ್ನು ಓದಿದ ಅಬುಲ್ ಫಜಲ್ ಇದೇ ಸಂಪ್ರದಾಯದ ದಕ್ಷಿಣ ದೇಶದ ಒಬ್ಬ ಯೋಗಿಯ ಹೆಸರು ಅಲ್ಲಮಾ(ಅಲ್ಲಮ ಪ್ರಭು:‘ಅಲ್ಲಾಂಓ ಪ್ರಭುದೇವಶ್ಚ’,ಹ. ಯೋ. ಪು) ಎಂದು ಇದ್ದುದನ್ನು ಬಾದಶಹನಿಗೆ ಅರುಹಿದ್ದನು. ಬಾದಶಹನು ತನ್ನ ರಾಜ್ಯದಲ್ಲಿಯ ಎಲ್ಲ ನಾಥಾಶ್ರಮಗಳಿಗೂ, ಉಂಬಳಿ ಹೆಚ್ಚುಗೊಳಿಸಿದ್ದ. ದಿಲ್ಲಿಯ ಸಮೀಪವರ್ತಿ ಮಠಗಳೆಂದರೆ ಇವರಡು-ಅವುಗಳಿಗೆ ಉಂಬಳಿ ಹೆಚ್ಚಾದದಕ್ಕಾಗಿ ಸಲೀಮ ಸಿಡಿಮಿಡಿಗೊಂಡ. ತಾನಸೇನನ ಬಗ್ಗೆ ಬಾದಶಹನ ಎದುರು ಚಾಡಿ ಒಯ್ಯುವದನ್ನು ನಿಶ್ಚಯಿಸಿಕೊಂಡ. +ಚಾಡಿಗೆ ಬೇಕಾದ ವಸ್ತು ಸಾಕಷ್ಟು ಇತ್ತು. ಆದರೆ ಅದರಲ್ಲಿ ದರ್ಬಾರದ ಮಾನಕ್ಕೆ ಧಕ್ಕೆ ಬರುವ ವಸ್ತುವನ್ನೇ ಮೇಲಿಟ್ಟುಕೊಂಡ. +“ಮಿಯಾ ತಾನಸೇನ ದರ್ಬಾರದ ಗಾಯಕನಾಗಿ ಉಂಬಳಿ ಉಣ್ಣುತ್ತಾನೆ. ಜೊತೆಗೆ, ವೈಶ್ಯೆಯರ ಮನೆಯಲ್ಲಿ ಬೈಠಕ್ ಮಾಡುತ್ತಾನೆ. ಇದರಿಂದ ದರ್ಬಾರದ ಮರ್ಯಾದೆ ಕಾಸಿಗೆ ಪಂಛೇರಾಗಿಬಿಟ್ಟಿದೆ” ಎಂದು ಸಲೀಂ ಊಟವಾದ ಮೇಲೆ ಅಪ್ಪನ ಕಾಲಬಳಿ ಕೂತುಕೊಂಡು ತಕರಾರು ಹೇಳಿದ. +ಅಕಬರ ಬಾದಶಹ ಚತುರ. ಇನ್ನನೇಕ ಬಾರಿ ಸಲೀಮನು ತಾನಸೇನನ ಗೇಲಿ ಮಾಡುವದನ್ನು ಕೇಳಿದ. ವಿಷಯಕ್ಕೆ ಸಂಬಂಧಿಸಿದ ಮಾತನ್ನಷ್ಟೇ ಕೇಳುವವರಂತೆ ನಟಿಸಿದ. +“ಇವನೊಬ್ಬ ಗಾಯಕನೇ ವೈಶ್ಯೆಯರ ಬೈಠಕ್ಕು ಮಾಡುತ್ತಾನೋ, ಇಂಥವರು ಇತರರು ಇದ್ದಾರೋ?” +“ಇತರರ ಬಗ್ಗೆ ಗೊತ್ತಿಲ್ಲ, ಎಲ್ಲಕ್ಕೂ ಮೇಲ್ತರಗತಿಯೆಂದು ಖ್ಯಾತಿವೆತ್ತ ಇವನು ಹಾಗೆ ಬೀದಿಗಾಯಕನಾಗುವದು ನನಗೆಷ್ಟೂ ಸೇರುವದಿಲ್ಲ. ” +“ಯಾ ಬೀದಿ?” +ವೈಶ್ಯಯರಿದ್ದ ಕೆಲವು ಬೀದಿಗಳನ್ನು ಸಲೀಮ ಹೆಸರಿಸಿದ. +“ಯಾ ವೈಶ್ಯೆಯರು. . . . ” +ಸಲೀಮ ಉಚ್ಚಪ್ರತಿಯ ಮೂರು ವೈಶ್ಯೆಯರ ಹೆಸರು ಹೇಳಿದ. ಮೂವರೂ ಹಿಂದೂ ವೈಶ್ಯೆಯರು. ಪರಮಧಾರ್ಮಿಕರೆಂದು ಹೆಸರು ಪಡೆದವರು. ಅವರಲ್ಲಿ ವಾರಕ್ಕೊಮ್ಮೆ ಭಜನೆ ನಡೆಯುತ್ತಿತ್ತು-ಸೋಮವಾರದ ದಿವಸ. ಧಾರ್ಮಿಕರಾದ ತಾನಸೇನ ಮಹರಾಜರೂ ಕೋಠಿಯ ಅಧಿಕಾರಿಗೆ ತಿಳಿಸಿಯೇ ಕೆಲವೊಮ್ಮೆ ಭಜನೆಯಲ್ಲಿ ಭಾಗವಹಿಸಿದ್ದರು. ಈ ವೈಶ್ಯೆಯರು ಪರಮ ಸುಂದರಿಯರು. ; ನೃತ್ಯ ಕಲಾ ಪವೀಣರು; ಇವರ ಮೆಹೆಫಿಲಿನ ಬೆಲೆಯೂ ದುಬಾರಿ. ಒಮ್ಮೆ ಒಬ್ಬನನ್ನೇ ಸ್ವೀಕರಿಸುವವರು. ಬಾದಶಹನಿಗೆ ಈ ವಿಷಯ ಗೊತ್ತಿತ್ತು. ಅಲ್ಲದೆ, ರಾಜಪುತ್ರರಾರೂ ವೈಶ್ಯಾಗೃಹಕ್ಕೆ ಹೋಗಬಾರದೆಂದು ಕಟ್ಟಪ್ಪಣೆ ವಿಧಿಸಿದ್ದ. ಬೇಕಾದ ರಾಜಪುತ್ರರು ಇಂಥವರನ್ನು ಮನೆಗೇ ಕರೆಸಬಹುದು. +ಬಾದಶಹ ಒಮ್ಮೆಲೆ ಸಲೀಮನ ಮುಖದಲ್ಲಿ ಕಣ್ಣಿಟ್ಟು, ‘ಇದು ನಿನಗೆ ಹೇಗೆ ಗೊತ್ತಾಯಿತು !’ ಎಂದು ನಿಖರವಾಗಿ ಕೇಳಿಬಿಟ್ಟ. +ಸಲೀಮ ಅವಕ್ಕಾದ, ಝರ್ರನೆ ಬೆವೆತ, ತತ್ತರಿಸುತ್ತ, ‘ನನ್ನ ಸ್ನೇಹಿತರು ಹೇಳಿದರು’ ಎಂದ. +“ಅವರಿರುವ ಓಣಿಯ ಹೆಸರನ್ನು ಅವರು ಹೇಳಲಾರರು. ನೀನೇ ಅಲ್ಲಿಗೆ ಹೋಗಿರಬೇಕು. ಈಗ ವಿಶ್ರಮಿಸು, ಹೋಗು. ಇನ್ನು ಮೇಲೆ ಬೀದಿಬೀದಿ ಅಡ್ಡಾಡುವದು ಬೇಡ. ” +ಸಲೀಮನ ಚಾಡಿ ಅವನಿಗೇ ಮುಳುವಾಯಿತು. ಮುಂದೆ ಮೂರುದಿನಗಳಲ್ಲಿ ರಾಜಪುತ್ರ ಸಲೀಮನು ಉಪವರನಾಗಿರುವನೆಂದೂ, ಅವನಿಗೆ ತಕ್ಕ ವಧುವನ್ನು ಆಯ್ದು ತರಬೇಕೆಂದೂ ಮಾನಸಿಂಹ, ಜಯಸಿಂಹ, ದಿಲೇರಖಾನ್, ಅಫಝಲ್ ಖಾನರಂಥ ಸೇನಾನಿಗಳಿಗೆ ಬಾದಶಹ ಕರೆದು ಹೇಳಿಬಿಟ್ಟ. ಮಾನಸಿಂಹ ಆರಿಸಿದ ಒಬ್ಬ ರಜಪೂತ್ ಸುಂದರಿಯೊಡನೆ ವೈಭವದಿಂದ ಲಗ್ನವೂ ಆಯಿತು-ಒಂದು ತಿಂಗಳಿನಲ್ಲಿ. ಸಲೀಮ ಆ ಚೆಲುವೆಯನ್ನು ಕಣ್ಣೆತ್ತಿಸಹ ನೋಡಲಿಲ್ಲ. ತನ್ನ ಸಂಚಿನ ವಿಫಲತೆಯ ಫಲವಾಗಿ ಆಕೆ ಅರಮನೆಯನ್ನು ಸೇರಿದಳು. +* +* +* +ತಾನಸೇನ ಮಹಾರಾಜರೋ ಶ್ರೇಷ್ಠ ಗಾಯಕರು, ನಿಜ. ಆದರೆ ನಾಯಕ(ವಾಗ್ಗೆಯಕಾರ)ರೆಂದು ಹೇಳಲಿಕ್ಕೆ ಬಾರದು. ಅಂದಿನ ಮಿತಿಗೆ ತಾವೇ ರಚಿಸಿಕೊಂಡು ಹಾಡುವದು ಅವರಿಗೆ ಗೊತ್ತಿರಲಿಲ್ಲ. ತಾವು ಕಲಿತ ಅನೇಕ ಧ್ರುಪದ-ಧಮಾರಗಳನ್ನು ರಾಜಾ ಮಾನಸಿಂಹನಿಗೆ ಹೇಳಿ ಬರೆಸಿಬಿಟ್ಟರು. ಯಾವ ಗಾಯಕನಲ್ಲಿ ಯಾವ ಚೀಜುಗಳು, ಯಾವ ‘ಆನವಟ’(ಅಜ್ಞಾತ) ರಾಗಗಳು ಇರಬಹುದೆಂದು ಯಾದಿಯನ್ನೂ ಕೊಟ್ಟರು. ಆದರೆ ಸ್ವಂತ ಮಾಡಿದ್ದೊಂದೂ ಚೀಜ ಅವರ ಬಳಿಯಲ್ಲಿ ಇರಲಿಲ್ಲ. +ಸಲೀಮನ ಲಗ್ನದ ಮುನ್ನಾದಿನ ಬಾದಶಹ ಕರೆದು “ಶಾದಿ ಮುಬಾರಕ್ ಆಗುವಂಥ ನಿನ್ನದೇ ಆದ ಚೀಜು ಹಾಡು. ಹಳೆಯ ಸಂಸ್ಕೃತ ಅವಧಿ ಹಾಡುಗಳನ್ನು ಕೇಳಿ ಕೇಳಿ ಬೇಜಾರಾಗಿದೆ. ನಿನ್ನ ಹೆಸರಿಗೆ ಭೂಷಣವಾಗುವಂತೆ ಕರಾಮತ್ ತೋರಿಸು. ” ಎಂದು ಹೇಳಿದ. ನಾನು ಹಾಡುತ್ತೇನೆ, ಸವಿ ಮಾಡಿಕೊಳ್ಳುವದು ಹುಜೂರರಿಗೆ ಸೇರಿದ್ದು ಇಷ್ಟೇ ಹೇಳಿ ಅಲ್ಲಿಂದ ಕಾಲ್ತೆರೆದರು ಮಿಯಾ ತಾನಸೇನ್. +“ಇದೀಗ ಬಿಗಿ ಬಂದಿತು. ಇಷ್ಟು ದಿವಸ ದರ್ಬಾರದ ಪ್ರಥಮ ಗಾಯಕನೆಂದು ದಶದಿಕ್ಕುಗಳಲ್ಲಿ ಹೆಸರಾದರೂ, ಇನ್ನೂ ಸ್ವಂತದ ಕೃತಿಮಾಡಿ ಮಹಾರಾಜರಿಗೆ ಗೊತ್ತಿರಲಿಲ್ಲ. ಸುದೈವದಿಂದ ಬಾದಶಹರು ಹೊಸ ರಾಗ ಮಾಡಲಿಕ್ಕೆ ಹೇಳಲಿಲ್ಲ. ನಮ್ಮ ಪುಣ್ಯ. ಬರಿ ಹೊಸ ಚೀಜು (ಹಾಡು) ಮಾಡಲಿಕ್ಕೆ ಹೇಳಿದ್ದರೆ. ” ಎಂದುಕೊಳ್ಳುತ್ತ ಚಿಂತಾತುರರಾಗಿ ರಹಮತ್ ಖಾನನ ಬಳಿಗೆ ಹೋದರು. ಇಬ್ಬರೂ ತಿಣುಕಾಡಿ, ಬಾದಶಹನ ಮತನ್ನೇ ಚೀಜ ಆಗಿ ರಚಿಸಿಕೊಂಡರು. ತಾವು ಹಾಡಬೇಕೆಂದು ಒಂದು ವಾರದವರೆಗೆ ರಿಯಾಝ (ಪ್ರಾಕ್ಟೀಸ್) ಮಾಡುತ್ತಿದ್ದ ದರಬಾರೀ ರಾಗದ ಸ್ವರಗಳ ಪ್ರಾರಂಭ, ಬೆಳವಣಿಗೆ, ಮುಕ್ತಾಯಕ್ಕೆ ಅನುಗುಣವಾಗುವಂತೆ ಹರಕು ಮುರುಕು ಅರ್ಥಹೀನ ಶಬ್ದಗಳನ್ನು ಕೂಡಿಸಿ, ತಾಳಕ್ಕೆ ಹೇಗೆ ಕೋಡಿಸಿಕೊಳ್ಳಬೇಕೆಂಬುದನ್ನು ಮಾತಾಡಿ ನಿರ್ಣಯಿಸಿದರು. ಈಗ ಸುಪ್ರಸಿದ್ಧವಾದ ಚೀಜ ಅದು. +ಸೊ ಸೊ ಮುಬಾರಕ ಬಾದಿಯಾ| ಶಾದಿಯಾ| +ಐಸೆ ಶಾದಿ ಹೋ|ಲಾಖೋ ಹಝಾರ| ಸೊ +ಸೊ ಮುಬಾರಕ| +‘ಲಗ್ನದ ನೂರು ನೂರು ಶುಭಾಶಯಗಳು. ಇಂಥವೇ ಲಕ್ಷಸಾವಿರ ಲಗ್ನಗಳಾಗಲಿ. ’ +ವಿವಾಹ ಮಹೋತ್ಸವಕ್ಕೆ ತಕ್ಕದಾದ ರಚನೆ, ಅರ್ಥ ಮಾತ್ರ ಶುಂಠಿ. (ಟಿಪ್ಪಣಿ ೧) +* +* +* +ಲಗ್ನದ ದಿವಸ ಮೌಲ್ವಿಗಳು ಬಂದು ಕುರಾನ್ ಪಠಿಸಿದರು. ಪಂಡಿತರು ಬಂದು ವೇದ ಪಠಿಸಿದರು. ಸಲೀಮನಿಗೆ ಇತ್ತ ಲಕ್ಷ್ಯವೇ ಇದ್ದಿಲ್ಲ. ಹೆಂಡತಿಯ ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಎಲ್ಲ ಲಕ್ಷ್ಯಮೇಜವಾನಿಯ ಕಡೆಗೆ. ಅಂದು ಬೆಳಿಗ್ಗೆ ‘ಖಾನಸಮಾ’ (ಅಡಿಗೆಯವ) ನನ್ನು ಕರೆದು ಅವನ ಕಡೆಗೆ ಸಲೀಮ ಒಂದು ಸಿಂಧೂರದ ಚೀಟನ್ನು ಕೊಟ್ಟು, ಯಾವ ಅಡಿಗೆಯ ಪದಾರ್ಥದಲ್ಲಿ ಸಿಂಧೂರ ಹಾಕಿದರೆ ಬಣ್ಣ ಕಾಣುವದಿಲ್ಲ ಎಂದು ಕೇಳಿ, ಅದರಲ್ಲಿ ಮಿಯಾ ತಾನಸೇನನಿಗಷ್ಟೇ ಸಿಂಧೂರ ಮಿಶ್ರಿತ ಆಹಾರವನ್ನು ಹಾಕಬೇಕೆಂದು ಹೇಳಿದ್ದ. ಜಿಲೇಬಿಗಳಲ್ಲಿ, ಕಾಯಿರಸದಲ್ಲಿ, ಬಿರ್ಯಾಣಿಯಲ್ಲಿ, ಅವನಿಗಷ್ಟೇ ಬೇರೆ ಮಿಶ್ರಿತ ಅಡಿಗೆ ಮಾಡಲಾಗಿತ್ತು. ‘ಇಂದು ರಾತ್ರಿ ಮಿಯಾ ಸಾಹೇಬರು ಹಾಡುವವರಿದ್ದಾರೆ. ಅದಕ್ಕಾಗಿ ಅವರಿಗೆ ಬೇರೆ ಅಡಿಗೆ’ ಎಂದು ನೆಪ ಹೂಡಿ ಬೇರೆ ಎಲೆ ಹಾಕಿದ್ದ. ಆದರೆ ಎಲೆ ಹಾಕುವಾಗ, ‘ಜರಾಸಂಭಾಲಕ’ (ಎಚ್ಚರು) ಎಂದು ಮೆಲುದನಿಯಲ್ಲಿ ಹೇಳಿಹೋಗಿದ್ದ. +ಸಲೀಮ ಅತಿಥಿಗಳಿಗೆ ಆಗ್ರಹ ಮಾಡುತ್ತ ಬಂದು, ತಾನಸೇನರ ಎಲೆ ನೋಡಿ, ‘ಕ್ಯೊ, ಪಂಡಿತ ಮಹಾರಾಜ, ಜಲೇಬಿಕೊ ಕ್ಯೊ ಹಾತ್ ನಹೀ ಲಗಾಯೆ?’ ಎಂದು ಕೇಳಿದ. +‘ದೇಖಿಯೆ, ಶಹಝಾದೆ, ಮೂಹ ಮೀಠಾ ಕಿಯಾ!’ ಎಂದು ಕಡಿಮೆ ಕೆಂಪಗಾದ ಒಂದು ತುಂಡನ್ನು ಬಾಯಲ್ಲಿ ಹಾಕಿಕೊಂಡರು. +ಸಲೀಮ ಎರಡನೇ ಸುತ್ತು ತಿರುಗುವಷ್ಟರಲ್ಲಿ ತಾನಸೇನ ಸಾಹೇಬರ ಜಿಲೇಬಿ ಜಹಾಂಗೀರುಗಳೆಲ್ಲ ಎಲೆಯ ಬುಡದಲ್ಲಿ ಮಾಯವಾಗಿದ್ದವು. ಇಷ್ಟು ಬೇಗ ಹೇಗೆ ತಿಂದಿರಬಹುದೆಂದು ಸಂಶಯದಿಂದ ಸಲೀಮ ಬೇರೊಂದು ಉಪಾಯ ತೆಗೆದ. +ಊಟವಾದ ಮೇಲೆ, ಇವರ ಬೀಡಾದಲ್ಲಿ ಒಂದು ಚಿಮಟಿಗೆ ಸಿಂಧೂರ ಸೇರಿಸಿಕೊಡಲಾಯಿತು. ಅದನ್ನು ತಾನಸೇನರು ಚೆನ್ನಾಗಿ ನುರಿಸಿ ತಿಂದುಬಿಟ್ಟರು! +ಸಿಂಧೂರ ತನ್ನ ಕೆಲಸ ಮಾಡಿತು. ಸಂಜೆ ರಹಮತ್ ಖಾನರ ಮನೆಯಲ್ಲಿ ಮುಕ್ತಕಂಠ ಶ್ರುತಿ ಹುಟ್ಟದಾಯಿತು. ಗಾಯಕನ ಧ್ವನಿಯ ಮೇಲೆ ಸಿಂಧೂರ ಮಾಡುವ ಪರಿಣಾಮವಿದು. +ಇನ್ನೇನು ಮಾಡುವದು? -ಅಲ್ಲಾನನ್ನು, ಶ್ರೀಹರಿಯನ್ನು, ಗುರುಗಳನ್ನು ಸ್ಮರಿಸುತ್ತ ನಾಲ್ಕುಗಂಟೆ ಹೇಗೋ ನೂಗಿಸಿದರು. “ಬಂದದ್ದು ಬರಲಿ, ಶ್ರೀಹರಿಯ ದಯವೊಂದಿರಲಿ” ಎಂಬುವದೇ ಕೊನೆಯ ಉಪಾಯ. +* +* +* +ಶ್ರೀಹರಿಯ ಕೃಪೆಯೋ, ಅಲ್ಲಾನ ಅಭಯವೋ ಅಂದು ರಾತ್ರಿ ಕಂದು ಶ್ರುತಿಯಲ್ಲೇ ಶುರುವಾದ ‘ದರ್ಬಾರಿ ಕಾನಡಾ’ ರಾಗವು ವಿಶೇಷ ಕಳೆಗಟ್ಟಿತು. +ಕಂದು ಶ್ರುತಿಯ ಷಡ್ಜವೇ ದರಬಾರಿ ಕಾನಡ ರಾಗಕ್ಕೆ ಯುಕ್ತ. ಎಲ್ಲ ರಾಗಗಳಿಗೂ ಒಂದೇ ಬಗೆಯ ಷಡ್ಜ ಇರುತ್ತದೆಯೆಂದು ಸಾಮಾನ್ಯವಾಗಿ ಎಲ್ಲ ಸಂಗೀತಗಾರರೂ ತಿಳಿಯುತ್ತಾರೆ. ಇದು ತಪ್ಪು. ಪ್ರತಿಯೊಂದು ರಾಗಕ್ಕೂ ವಿಭಿನ್ನ ರೀತಿಯ ಷಡ್ಜ ಹತ್ತುತ್ತದೆಯೆಂದು ಭರತಮುನಿ ಹೇಳಿದ್ದಾನೆ. ಆದರೆ ನಂತರ ಬೆಳೆದ ಪರಂಪರೆಯಲ್ಲಿ ಷಡ್ಜ ಅಚಲವೆಂಬ ಭಾವನೆ ಬೆಳೆದುಬಂತು. (ಟಿಪ್ಪಣಿ ೨) ಆದರೆ ಅವು ವಿಭಿನ್ನವಾಗುತ್ತವೆ. +ಇದು ತಾನಸೇನರಿಗೂ ಗೊತ್ತಿರಲಿಲ್ಲ. ಕಂದು ಶ್ರುತಿಯೆಂದು ತಲೆ ಜಾಡಿಸಿಕೊಳ್ಳುತ್ತಲೇ ಹಾಡಿದರು. ಕಂದು ಶ್ರುತಿಯ ಮೂಲಕವೇ ದರಬಾರಿ ರಾಗ ಅಂದು ಅದ್ಭುತವಾಗಿ ರೂಪುಗೊಂಡಿತು. ಅಸಮಾಧಾನದಿಂದ ಶುರುವಾದದ್ದು ತಮಗೂ ದರ್ಬಾರಕ್ಕೂ ಹರ್ಷವನ್ನೊದಗಿಸಿತು. ಕ್ಷಣಕ್ಷಣಕ್ಕೆ ಮನಂಬುಗುವ ಸ್ವರಪುಂಜಗಳಿಂದ, ಅನಪೇಕ್ಷಿತ ತಿರುವು-ಮುರುವಿನಿಂದ, ಬೆಂದು, ಸುಳಿವು, ಹೊಳವುಗಳಿಂದ, ಅಲೌಕಿಕ ಗಾಂಭೀರ್ಯದಿಂದ, ‘ವಾಹವ್ವಾ!’, ‘ಶಹಬ್ಬಾಸ’, ‘ಕ್ಯಾ ಬಾತ ಹೈ!’, ‘ಕಮಾಲ ಕಿಯಾ’ ಎಂಬ ಉದ್ಗಾರಗಳು ಶ್ರೋತೃಗಳಿಂದ ಬರುತ್ತ, ರಾಗ ‘ತಿಹಾಯಿ’ಯಿಂದ ಕೊನೆಗೊಂಡಾಗ ಪ್ರಚಂಡ ಕರತಾಡನವಾಯಿತು. ಬಾದಶಹರು ಸಿಂಹಾಸನದಿಂದ ಇಳಿದು ಬಂದು ಮಿಯಾ ತಾನಸೇನರನ್ನು ಅಪ್ಪಿಕೊಂಡರು. ತಮ್ಮ ಕೈಯಿಂದ ಅವರ ಬಾಯಲ್ಲಿ ಬೀಡಾ ಹಾಕಿದರು. +ದರ್ಬಾರದಲ್ಲಿ ಕುಳಿತ ಇಬ್ಬರು ತಾನಸೇನ ಮಹಾರಾಜರಿಗೆ ವಿಶೇಷ ಸ್ಪೂರ್ತಿಯೊದಗಿಸಿದ್ದರು. +ತಾನಸೇನರ ಗಾಯಕಿಯಿಂದ ಹರ್ಷಚಿತ್ತಳಾಗಿ ಕುಳಿತ ರಾಮಪ್ಯಾರಿಬಾಯಿ ಸೆರಗಿನಿಂದ ತನ್ನ ಹರ್ಷಾಶ್ರುಗಳನ್ನು ಒರೆಸುತ್ತಲೆ ಕುಳಿತಿದ್ದಳು. ತಾನಸೇನರು ಸಾವಿರಾರು ಹೆಣ್ಣುಮಕ್ಕಳಲ್ಲಿ ಈಕೆಯ ಕಡೆಗೇ ನೋಡುತ್ತ ಹಾಡಿದ್ದು ಸಲೀಮನ ಹೊಟ್ಟೆಕಿಚ್ಚನ್ನು ಇನ್ನಷ್ಟು ಭುಗಿಲ್ಲನೆ ಹೊತ್ತುವಂತೆ ಮಾಡಿತು. ರಾಮಪ್ಯಾರಿ ಸಲೀಮನಿಗೆ ‘ಪ್ಯಾರಿ’ ಮಾತ್ರ. ಈಕೆ ರೂಪಸಿ. ಬೇಕಂತಲೇ ತುಸು ಎದುರಿಗೆ ಸಮ್ಮುಖವಾಗಿ ಬೆಳಕಿನಲ್ಲಿ ಕುಳಿತಿದ್ದಳು. ಆಕೆಗೆ ತಾನಸೇನರನ್ನು ನೋಡುವಷ್ಟು ಕೂಡ ಧೈರ್ಯವಿರಲಿಲ್ಲ. ಅವರ ಮುಖ ಆಕೆಯತ್ತ ತಿರುಗಿದಾಗ ಮುಖ ಕೆಳಗೆ ಹಾಕುತ್ತಿದ್ದಳು. ಆದರೆ ಆಕೆಯ ಕಂಬನಿಗಳು ಧಾರಾಕಾರವಾಗಿ ಹನಿಯುತ್ತಿದ್ದವು. ಹೀಗಾಗಿ, ತಮಗೆ ಒಲಿದ ಸಹೃದಯ ಶ್ರೋತೃವಿನ ಕಡೆಗೆ ಗಾಯಕ ಧೈರ್ಯಕ್ಕಾಗಿ ನೋಡುವಂತೆ ಆಕೆಯ ಕಡೆಗೇ ನೋಡುತ್ತ ಹಾಡಿದರು. ಆಕೆಯ ಪರಿಚಯ ಮಿಯಾಸಾಹೇಬರಿಗೆ ನಿನ್ನೆ ಮೊನ್ನೆಯದಲ್ಲ. ಆಕೆಯ ಸೋಮವಾರದ ಭಜನೆಗೆ ಅನೇಕ ಬಾರಿ ಹೋಗಿಬಂದಿದ್ದರು. ತಾವು ಹಾಡಿದ್ದರು. ನೀಲಕಂಠ ಭಟ್ಟನೆಂಬ ಕಾಶಿ ಬ್ರಾಃಮಣ ಆಕೆಯ ಮನೆಯ ಪೂಜಾರಿ, ಆಶ್ರಿತ. ಇಷ್ಟೇ ಇಲ್ಲ, ಆಕೆಯ ನಂರ ವಿಟಪುರುಷನೂ ಹೌದು. ಸೋಮವಾರ ಶಿವನವಾರ. ಆ ದಿನ ನಾಲ್ಕು ಗಂಟೆಗೆ ಊಟ, ಸಂಜೆ ಭಜನೆ, ರಾತ್ರಿ ಬ್ರಃಮಚರ್ಯೆ, ವ್ರತ, ಆಕೆ ಜನ್ಮದಾದ್ಯಂತವೂ ಪಾಲಿಸುತ್ತಿದ್ದಳು. ಕಳೆದ ಒಂದು ವರ್ಷ ಆಕೆ ಸಲೀಮನ ಆಶ್ರಯದಲ್ಲಿ ಇದ್ದಳು. ಆದರೆ ಸೋಮವಾರ ಸಲೀಮನಿಗೂ ರಜಾ ವಿಧಿಸಲ್ಪಟ್ಟಿತ್ತು. ಎರಡು ಬಾರಿ ಮಾತ್ರ ರಾಮಪ್ಯಾರಿ ಸೋಮವಾರ ವ್ರತದ ಭಂಗವನ್ನು ಅನುಮೋದಿಸಿದ್ದಳು. ಕಾಶಿಯಿಂದ ಬಂದ ಮತ್ತು ಆಕೆಗೆ ಗಂಗಾಜಲವನ್ನು ಕೊಟ್ಟ ಬ್ರಾಃಮಣ ಮರುದಿವಸವೇ ಊರು ಬಿಡುವ ಪ್ರಸಂಗ ಬಿದ್ದಾಗ ತನಗೆ ಭೋಗದಾನವನ್ನು ನೀಡಬೇಕೆಂದು ಬೇಡಿಕೊಂಡ ಒಂದು ಪ್ರಸಂಗ; ನಾಸಿಕದಿಂದ ಬಂದ ನಾಥಪಚಮಾಶ್ರಮಿಯು ಒಂದಕ್ಕಿಂತ ಹೆಚ್ಚು ದಿನ ಒಂದೇ ಸ್ಥಳದಲ್ಲಿ ನಿಲ್ಲಬಾರದೆಂಬ ತನ್ನ ವ್ರತದಂತೆ ಮರುದಿವಸವೇ ಆಕೆಯ ಮನೆ ಬಿಡಬೇಕೆಂದಾಗ ಒಂದು ಪ್ರಸಂಗ. ‘ಯಾರು ಬಲ್ಲರು, ಪರಶಿವನೇ ನನ್ನಲ್ಲಿಗೆ ಬಂದಿರಬಾರದೇಕೆ? ಎಂಬ ಧರ್ಮಬುದ್ಧಿಯಿಂದಲೇ ವ್ರತಭಂಗವನ್ನು ಸ್ವೀಕರಿಸಿದ್ದಳು. ಇದೀಗ ಸಲೀಮನ ಲಗ್ನದಿಂದ ಅವನ ಆಶ್ರಯ ತಪ್ಪಿದ ದಿವಸ! ಒಂದು ರೀತಿಯಿಂದ ಆಕೆಗೆ ಸ್ವಾತಂತ್ರ್ಯ ಸಿಕ್ಕ ದಿವಸವೂ ಹೌದು. ಇದೇ ಅರ್ಥದಿಂದ, ದುಹ್ಖಾಶ್ರುವೂ-ಹರ್ಷಾಶ್ರುವೂ ಜೊತೆಜೊತೆಯಾಗಿಯೇ ಹೊರಹೊಮ್ಮಿದ್ದವು. ನೀಲಕಂಠ ಭಟ್ಟನ ಜೊತೆಗೆ ಎರಡು ಬಾರಿ ಸ್ಪಷ್ಟೋಕ್ತಿಗಳಲ್ಲಿ ಮಿಯಾಸಾಹೇಬರಿಗೆ ಹೇಳಿಕಳಿಸಿದ್ದಳು. ಮೂರನೇ ಬಾರಿ ನೀಲಕಂಠ ಭಟ್ಟ ಒಂದು ಹೆಜ್ಜೆ ಮುಂದೆ ಹೋಗಿದ್ದ. ‘ನೀವೆಂಥ ಅವಧೂತರು ರೀ! ಒಂದು ಹೆಣ್ಣು ಕಾಲಿಗೆ ಬಿದ್ದಾಗ ಉದ್ಧಾರ ಮಾಡಲಾರದವರಿಗೆ ಅವಧೂತರೇಕೆನ್ನಬೇಕು? ನಿಮ್ಮ ಗೋರಖನಾಥನು ಇಂಥ ಪ್ರಸಂಗದಲ್ಲಿ‌ಏನು ಮಾಡಿದ? ಒಬ್ಬ ನೇಕಾರ ಹೆಣ್ಣು ಅವನನ್ನು ಅಂಗಲಾಚಿದಳು. ಬುದ್ಧಿ ಹೇಳುವಷ್ಟು ಹೇಳಿದ. ಬಗೆಹರಿಯಲಿಲ್ಲ. ಕೊನೆಗೆ ಆಕೆಗೆ ಭೋಗ ನೀಡಿ, ನಂತರ ಭೋಗದ ಮುಖಾಂತರವೇ ಅವಳನ್ನು ವಿಮಲ ಮಹಾಶಕ್ತಿಯನ್ನಾಗಿ ಮಾಡಲಿಲ್ಲವೇ? ನೀವು ಅವಧೂತರೇ ಅಲ್ಲ’ ಎಂದು ಜರೆದು ನುಡಿದ. ಆಗ ನಿರಂಜನರಾದ ತಾನಸೇನರು ತಮ್ಮ ಗುಟ್ಟು ಹೇಳಿದರು: ‘ರಾಮಪ್ಯಾರಿ ಸಲೀಮನ ಪ್ರೇಯಸಿ. ಏನು ಕಾರಣವೋ ಸಲೀಮ ನನ್ನನ್ನು ದ್ವೇಷಿಸುತ್ತಾನೆ. ಈಗ ನಾನು ರಾಮಪ್ಯಾರಿ ಬಳಿಗೆ ಹೋದರೆ ನನ್ನ ಜೀವಕ್ಕೆ ಅಪಾಯ. ನೀನೇ ಅವಳಿಗಷ್ಟು ವಿವರಿಸಿ ಹೇಳು!’ ಎಂದು. +ಅದಕ್ಕಾಗಿಯೇ ರಾಮಪ್ಯಾರಿ ಅಧೀರಳಾಗಿದ್ದಳು. ‘ಮುಬಾರಕ್ ಬಾದಿಯಾ! ಯೇ ಶಾದಿಯಾ’ ಸಲೀಮನಿಗೂ ಮುಬಾರಕ್ಕು: ತನಗೂ ಮುಬಾರಕ್ಕು; ಮಿಯಾ ತಾನಸೇನರಿಗೂ ಮುಬಾರಕ್ಕು. ತಾನಸೇನರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಿಲ್ಲ. ಅವರು ಆಚೆ ಈಚೆ ತಿರುಗಿದಾಗಷ್ಟೇ ಮುಖವೆತ್ತಿ ಅವರ ಮುಖವನ್ನು ನೋಡುವಳು, ತಲಮಲಗೊಳ್ಳುವಳು. ‘ಅತಿ ಸ್ನೇಹೋ ಪಾಪಶಾಂತಿ’ ಎಂದು ಕಾಳಿದಾಸ ಹೇಳಿಲ್ಲವೆ? +* +* +* +ಸಭೆಯಲ್ಲಿ ಬದಿಗೇ ಪಖಾವಜಿ ರಹಮತ್ ಖಾನರ ಬಳಿಗೇ ಕುಳಿತ ಹದಿನೈದು ವರ್ಷದ ಬಾಲಕನೊಬ್ಬ ತಮ್ಮ ಸಂಗೀತದಲ್ಲಿ ತಲ್ಲೀನನಾಗಿ ಹರ್ಷೋದ್ಗಾರ ಮಾಡುತ್ತಿದ್ದ, ತನ್ನ ತೆಳುದನಿಯಲ್ಲಿ. ರಹಮತ್ ಖಾನರ ಇಬ್ಬರು ಮಕ್ಕಳು ಗದ್ದಲದಲ್ಲಿ ಎಲ್ಲಿಯೋ ಕುಳಿತಿದ್ದರು. ಈ ಬಾಲಕ ಮಾತ್ರ ಧೈರ್ಯದಿಂದ ಪಖಾವಜಿಯ ಪಕ್ಕದಲ್ಲೇ ಕುಳಿತಿದ್ದ, ಅರ್ಧ ಸಮ್ಮುಖನಾಗಿಯೇ. ಅವನ ಕಣ್ಣಲ್ಲಿಯ ಹರ್ಷದ ಮಿನುಗೋ ಏನೋ, ಮಿಯಾಸಾಹೇಬರಿಗೆ ಅವನ ಬಗ್ಗೆ ಅಂತಹ್ಕರಣ ಉಕ್ಕಿ ಬಂದಿತು. ಮುಖ ನೋಡಲಿಕ್ಕೆ ಹದಿನೈದು ವರ್ಷವೆಂದು ಸ್ಪಷ್ಟ. ಆದರೆ ಅವನ ಆಕೃತಿ ಮಾತ್ರ ೧೨ ವರ್ಷದವನ ಹಾಗೆ ಚಿಕ್ಕದು, ಕೃಶವಾದುದು. ಸರಿಯಾಗಿ ಹಾಲು ಆಹಾರ ತಿನ್ನದ ಹಸುಳೆ. ಸ್ವಲ್ಪ ಹೊತ್ತಿನಲ್ಲಿ ಅವನಲ್ಲಿದ್ದ ಆತ್ಮೀಯ ಸದಭಿಮಾನದ ವಿದ್ಯುತ್ತು ತಾನಸೇನರನ್ನು ಅವ್ಯಕ್ತವಾಗಿ ಆವರಿಸಿ, ಯಾವುದೋ ಒಳಗಿನ ತಂತಿ ಮೀಟತೊಡಗಿತು. ಬೈಠಕ್ಕು ಮುಗಿದೊಡನೆ, ‘ನೀನಾರು’ ಎಂದು ಕೇಳಿಯೇ ಬಿಡಬೇಕೆಂಬ ಲವಲವಿಕೆ ತಾನಸೇನರಲ್ಲಿ ಹುಟ್ತತೊಡಗಿತು. ಈ ವಿಶಾಲ ಸಭೆಯಲ್ಲಿ-ಈ ವಿಶಾಲ ವಿಶ್ವದಲ್ಲಿ ಯಾರಿಗೆ ಯಾರು?-ಆದರೂ ಮುಂಚೆಲ್ಲಿಯೋ ನೋಡಿದಂತೆ ಅಸ್ಪಷ್ಟ ನೆನಪು. ಆದರೆ, ಎಲ್ಲಿ ತಿಳಿಯಲೊಲ್ಲದು. +ಪಾಪ ತಾನಸೇನರೇನು ಬಲ್ಲರು? ಬಿಲಾಸ್ ಖಾನ ಅತ್ರೌಳಿ ಬಿಡುವ ಮುನ್ನ ತಾಯಿ ಹಾಗು ಅಜ್ಜಿ ಅವನಿಗೆ ಆಣೆ ಮಾಡಿ ಹೇಳಿದ್ದರು: ನಿನ್ನ ಗುರುತು ಮಿಯಾಸಾಹೇಬರಿಗೆ ಹೇಳಿಗೀಳೀಯೆ! ಅವರು ಈಗ ನಮ್ಮನ್ನು ತೊರೆದಿದ್ದಾರೆ. ಮರೆತಿದ್ದಾರೆ. ನಿನಗೆ ಅವರು ಮರ್ಯಾದೆ ಕೊಡಲಾರರು. ಕೇಳಿದರೆ, ರಹಮತ್ ಖಾನರ ಬಳಗ ಎಂದು ಹೇಳು. ಬೇಕಾದರೆ ಸಂಗೀತ ಕೇಳು, ಕಲಿ; ಆದರೆ ನಿನ್ನ ಗುರುತು ಹೇಳಬೇಡ. +ದಿಲ್ಲಿಗೆ ಬಂದಮೇಲೆ ಬಿಲಾಸಖಾನನ ಸಂಗೀತಾಭ್ಯಾಸ ಶುರುವಾಗಿತ್ತು-ಶ್ರವಣೇಂದ್ರಿಯದಿಂದಲೇ. ಅವನನ್ನು ಯಾರೂ ಮುಂದೆ ಕರೆಯಲಿಲ್ಲ. ಸಾರಿಗಮ ಹೇಳಿಕೊಡಲಿಲ್ಲ. ವಿವಾಹದ ಬೈಠಕಿಗಾಗಿ ಮಿಯಾಸಾಹೇಬರು ರಿಯಾಝಿಗೆ ಕೂಡುತ್ತಿದ್ದರು ರಹಮತ್ ಖಾನನ ಎದುರು. ರಹಮತ್ ಖಾನ ಪಖಾವಜದ ಸಾಥಿ ರಿಯಾಝಕ್ಕೆ ಕೂಡುತ್ತಿದ್ದ. ದಿನದಿನವೂ ದರಬಾರೀ ರಾಗ, ಏಕತಾಳ. ಕೊನೆಯ ದಿನ ಮಾತ್ರ ಚೀಜ ಬದಲಿಸಿ ಅದೇ ರಾಗದಲ್ಲಿ ಮುಬಾರಕ್ ಬಾದಿಯಾ ಹಾಡು. ಇದಕ್ಕೆ ಶಿಕ್ಷಣ-ಶಿಕ್ಷೆ-ವಿನಯ ಏನಾದರೂ ಕರೆಯಬಹುದು. ರಹಮತ್ ಖಾನರ ಮಕ್ಕಳು ಆಟಕ್ಕೆ ಹೋಗುತ್ತಿದ್ದರು. ಬಿಲಾಸಖಾನ ಬಾಗಿಲಮರೆಗೆ ಕುಳಿತುಕೊಂಡು ತಂದೆಯ ಗಾಯನವನ್ನು ಕೇಳುತ್ತಿದ್ದ. ಅವರು ಹೊರಗೆ ಬರುವಾಗ ಸರಿದು ಮರೆಯಾಗುತ್ತಿದ್ದ. ಬೈಠಕಿನ ದಿನ ಮಾತ್ರ, ಎಲ್ಲಿಲ್ಲದ ಧೈರ್ಯ ತೆಗೆದುಕೊಂಡು, ಏನೋ ನೆವ ಮಾಡಿ, ರಹಮತ್ ಖಾನರ ಬದಿಯಲ್ಲೇ ಜಾಗ ಹಿಡಿದು ಕುಳಿತುಕೊಂಡ. ತಂದೆಯನ್ನು ಮುಖಾಮುಖಿ ನೋಡಿದ, ಕೇಳಿದ. ತನ್ನ ಅಂತರಂಗದ ಆತ್ಮೀಯ ವಿದ್ಯುತ್ಪ್ರವಾಹದಿಂದ ಅವರನ್ನು ಸೆರೆಹಿಡಿದ. ಆದರೆ ತನ್ನ ಗುಟ್ಟು ಬಿಟ್ಟುಕೊಡಲಿಲ್ಲ. ‘ಅಪ್ಪಾ’ ಎಂದು ಕರೆಯಲಿಲ್ಲ. ಕರೆಯುವ ಪ್ರಸಂಗವೂ ತಪ್ಪಿತು. +ಬಾದಶಹರು ಸಿಂಹಾಸನ ಬಿಟ್ಟು ತಾನಸೇನರನ್ನು ಅಪ್ಪಿಕೊಳ್ಳಲು ಎದ್ದಾಗ, ಸೇನಾನಿ-ಮಂತ್ರಿ-ದಣ್ಣಾಯಕರ ಸಾಲಿಗೆ ಸಾಲೇ ಈ ದೃಶ್ಯವನ್ನು ನೋಡಲಿಕ್ಕೆ ತಾನಸೇನರನ್ನೂ, ಬಾದಶಹರನ್ನೂ ಸುತ್ತುಗಟ್ಟಿದರು. ರಹಮತ್ ಖಾನ ಅಪ್ರತಿಭನಾದ. ಇಷ್ಟು ಮಂದಿ ಪ್ರತಿಷ್ಠಿತರು ಒಂದುಗೂಡಿದಾಗ ಅವನೆಲ್ಲಿ ಹೋಗಬೇಕು? ಅಷ್ಟರಲ್ಲಿ ಅವನ ಇಬ್ಬರು ಮಕ್ಕಳು ಓಡಿಬಂದು ಅವನ ಕಾಲನ್ನು ಅಪ್ಪಿಕೊಂಡರು. ಆ ಆಶ್ರಯವೂ ಬಿಲಾಸಖಾನನಿಗೆ ಇರಲಿಲ್ಲ. ತನ್ನ ತಂದೆಯಾದರೋ ಅವರಿಂದ ಸುತ್ತುವರಿಯಲ್ಪಟ್ಟಿದ್ದ. ಬಿಲಾಸಖಾನ ಅತ್ತಿತ್ತ ನೋಡಿ, ಮತ್ತೆ ರಹಮತ್ ಖಾನರ ಸಮೀಪದಲ್ಲಿ ಹೋಗಿ ನಿಂತ. ರಹಮತ್ ಖಾನ್ ತನ್ನನ್ನು ಯಾರಾದರೂ ಮಾತಾಡಿಸಬಹುದೆಂದು ತುಸು ಹೊತ್ತು ಕಾಯ್ದು ನಿಂತ. ಆದರೆ ಎಲ್ಲರೂ ಅವನ ಕಡೆಗೆ ಬೆನ್ನು ಮಾಡಿ ನಿಂತಿದ್ದರು. ಅವನತ್ತ ಒಬ್ಬರೂ ಹೊರಳಿ ನೋಡಲಿಲ್ಲ. ರಹಮತಖಾನ ತುಸು ಬೇಸರದಿಂದ ‘ಆವೊ ಬೇಟೆ’ ಎಂದು ತನ್ನ ಮಕ್ಕಳ ಕೈಹಿಡಿದು ಕರೆದುಕೊಂಡು ನಡೆದ. ಬಿಲಾಸಖಾನನಿಗೆ ತನ್ನ ತಂದೆ ತನ್ನನ್ನು ಮಾತನಾಡಿಸುವರೆಂದೇ ನಿಶ್ಚಯವಾಗಿ ಅವನ ಅಂತರಂಗ ನುಡಿಯುತ್ತಿತ್ತು. ಅಲ್ಲೇ ಒಂದು ಕ್ಷಣ ಕಾಲು ಕೀಳದವನಂತೆ ನಿಂತುಕೊಂಡ. ಅವನು ಅಲ್ಲೇ ನಿಂತದ್ದು ರಹಮತ್ ಖಾನನಿಗೆ ನೆನಪೇ ಇರಲಿಲ್ಲವೆಂದು ತೋರುತ್ತದೆ. ಸೀದಾ ಜನಜಂಗುಳಿಯಲ್ಲಿ ಕಣ್ಮರೆಯಾದ. ಬಿಲಾಸಖಾನ್ ಕೈಯಲ್ಲಿ ಸಿಕ್ಕ ರವದೆಯನ್ನು ಸಮುದ್ರದಲ್ಲಿ ಬಿಡಕೂಡದೆಂದು ಅವರ ಹಿಂದೆ ಧಾವಿಸಿನೋಡಿದ. ಸುತ್ತಲೂ ಜನರ ಗುಂಪೇ, ಎಲ್ಲರೂ ರಹಮತ್ ಖಾನರಂಥವರೇ, ಹತಾಶನಾಗಿ ನಿಂತಲ್ಲೇ ನಿಂತ ಅಷ್ಟೊತ್ತಿಗೆ ರಹಮತಖಾನನ ಹಿರಿಯ ಮಗ, ‘ಬಿಲಾಸ ಎಲ್ಲಿ?’ ಎಂದು ತಂದೆಯ ಅವಧಾನವನ್ನು ಎಳೆದನೆಂದು ತೋರುತ್ತದೆ. ರಹಮತ್ ಖಾನ ತಿರುಗಿ ಬಂದು, ‘ಓ ಹೈ ಬಡಾ, ದರವಾಜೆ ಕೆ ಪಾಸ್’ ಎಂದು ಹೇಳಿ, ಅವನನ್ನೂ ಮನೆಗೆ ಕರೆದೊಯ್ದ. +ಈ ಎಲ್ಲ ಮಂಗಲ ಸಮಾರಂಭದಲ್ಲಿ ಕಿಡಿ ಕಿಡಿ ಹಾಯುತ್ತ ಕುಳಿತವನೆಂದರೆ ಸಲೀಮ ಶಹಝಾದೆ ಒಬ್ಬನೇ. +ಅವನ ಎಲ್ಲ ಯೋಜನೆಗಳಿಗೂ ವಿಫಲಗೊಂಡಿದ್ದವು. +ಜೊತೆಗೆ ತನಗೆ ಬೇಡವಾದ ಹೆಂಡತಿ ಕೊರಳಲ್ಲಿ ತೂಗುಮಣೆಯಂತೆ ತೂಗುತ್ತಿದ್ದಳು. +ಇಷ್ಟೇ ಅಲ್ಲ- +ಶಬ್ದಾರ್ಥಕ್ಕೆ ಉರ್ದುವಿನಲ್ಲಿ ಒಂದು ಅರ್ಥಪೂರ್ಣ ಶಬ್ದವಿದೆ-‘ಮತಲಬ’. ಇದನ್ನು ಸಾಮಾನ್ಯಾರ್ಥವೆಂದಾಗಲಿಯೂ ತಿಳಿದುಕೊಳ್ಳಬಹುದು; ವ್ಯಂಗ್ಯಾರ್ಥವೆಂದೂ ತಿಳಿಯಬಹುದು; ಗೂಢಾರ್ಥವೆಂದೂ ತಿಳಿಯಬಹುದು. +ತಾನಸೇನನು ರಚಿಸಿದ ಕಾಟಕಳೆಯುವ ಸಪ್ಪನೆ ಕೃತಿಯಲ್ಲಿ ಸಲೀಂ ಕಂಡದ್ದು ವ್ಯಂಗ್ಯಾರ್ಥವೊಂದನ್ನೆ. +ಸೋ ಸೋ ಮುಬಾರಕ ಬಾದಿಯಾ| ಎ ಶಾದಿಯಾ| +ಐಸಿ ಶಾದಿ ಹೋ| ಲಾಖೋ ಹಜಾರ| +ತನಗೆ ಬೇಡಾದ ಹೆಂಡತಿಯನ್ನು ಕಟ್ಟಿಕೊಂಡವನಿಗೆ ಇದರ ಬಗ್ಗೆ ಯಾವ ಕುಕಲ್ಪನೆಗಳು ಹೊಳೆಯುವವೆಂಬುದನ್ನು ಆತನಿಗೇ ಕೇಳಿ ನೋಡಿರಿ. +ತಾನಸೇನ ತನ್ನನ್ನು ಹಾಸ್ಯ ಮಾಡುತ್ತಿದ್ದಾನೆಯೆಂದೇ ಸಲೀಮನಿಗೆ ಭಾವನೆ. ‘ಐಸಿ ಶಾದಿ ಹೊ! ಹೀಗೇ ಆಗಬೇಕು ನಿನಗೆ! ಇಂಥ ಲಕ್ಷ ಮದುವೆಗಳನ್ನು ನೋಡಿದ್ದೇನೆ ನಾನು. ಲಗ್ನಮಾಡಿಕೊಂಡು ಮುಗುದಯ್ಯನಾಗು. ’ +* +* +* +ಬಾದಶಹನ ಗೃಃಯ ಹೊಣೆಗಳನ್ನೆಲ್ಲಾ ಹೊತ್ತ ಚೌಧುರಾಣಿ, ಸಲೀಮನ ಫಲಶೋಭನ ಮುಹೂರ್ತವನ್ನು ಜೋಯಿಸರ ಸಹಾಯದಿಂದ ಗೊತ್ತುಮಾಡಿದಳು. ಪುಷ್ಯ ಮಾಸ-ರಾಹುಕಾಲ ಇತ್ಯಾದಿಗಳನ್ನು ತಪ್ಪಿಸುತ್ತ, ಮೂರು ತಿಂಗಳುಗಳ ಮೇಲೆ. ಎರಡೇ ದಿನಗಳಲ್ಲಿ ಪತಿಯ ಪರಾನ್ಮುಖತೆಯನ್ನು ಅರಿತ ಸೊಸೆ ತನ್ನವರ ಜೊತೆಗೆ ತವರೂರಿಗೆ ಹೋಗುವೆನೆಂದು ಹೇಳಿದಳು. ಚೌಧುರಾಣಿ ಬೇಡೆನ್ನಲಿಲ್ಲ. ಸಲೀಮನು ಅಷ್ಟೇ ಸಾಕೆಂದು ತನ್ನ ‘ಪ್ಯಾರಿ’ಯ ಮನೆಯಲ್ಲಿ ರಾತ್ರಿ ಕಳೆಯತೊಡಗಿದ. ರಾಮಪ್ಯಾರಿ ಹತಾಶಳಾದಳು. +ಇತ್ತ ರಹಮತ್ ಖಾನರ ಮನೆಯಲ್ಲಿದ್ದ ಬಿಲಾಸಖಾನನ ಪರದೇಸಿತನ ಮುಂದುವರಿಯಿತು. ಒಂದು ವಾರ ಬೈಠಕ್ಕಿನ ರಿಯಾಝಿಗಾಗಿ ಬರುತ್ತಿದ್ದ ಅಪ್ಪ ಬೈಠಕ್ಕಿನ ಮರುದಿನದಿಂದಲೇ ಬರುವುದನ್ನು ನಿಲ್ಲಿಸಿಬಿಟ್ಟರು. ರಹಮತ್ ಖಾನರೇ ಒಮ್ಮೆ ಹೋದಾಗ, ‘ನಿನ್ನ ಜೊತೆಗಿದ್ದ ಹುಡುಗನಾರು?’ ಎಂದು ಕೇಳಿದರಷ್ಟೆ. ‘ತನ್ನ ಬಳಗದವ’ ಎಂದಿಷ್ಟೇ ಹೇಳಿ ರಹಮತ್ ಖಾನ ಪಾರಾದರು. ಕೇಳಿದ ಸುದ್ದಿಯನ್ನು ಮನೆಯಲ್ಲಿ ಬಿಲಾಸಖಾನನಿಗೆ ಹೇಳಲಿಲ್ಲ ಕೂಡ. ‘ತನ್ನ ತಂದೆ ಈಗೇಕೆ ಬರುವದನ್ನು ನಿಲ್ಲಿಸಿದ್ದಾರೆ? ಎಂದು ಬಿಲಾಸಖಾನ ಕೇಳಿಯೇ ಬಿಟ್ಟ. ‘ಬರುತ್ತಾರೆ ನಿಲ್ಲು. ಮುಂದಿನ ಬೈಠಕ್ ಒಂದು ವಾರವಿರುವ ಮುಂಚೆ ಬರುತ್ತಾರೆ, ರಿಯಾಝಿಗಾಗಿ. ಅಲ್ಲಿಯವರೆಗೆ ಕಾಲ ಕಳೆಯಲಿಕ್ಕೆ ಅವರಿಗೆ ಇನ್ನೆಂಟು ಮಕ್ಕಳು’-ತಬಲಜಿಯವರ ಬಿರುಸಿನಿಂದಲೇ ರಹಮತ್ ಖಾನ್ ಉತ್ತರಕೊಟ್ಟ. +ಅವರ ಹೆಂಡತಿ: ‘ಹೀಗೇಕೆ ಆ ಪರದೇಸಿ ಮಗುವಿಗೆ ಬಿರುಸು ಆಡುತ್ತೀರಿ? ಎಂದು ಕೇಳಿದಳು. +“ಅದು ಆಗುವದೇ ಹೀಗೆ, ಪಖಾವಜಿಯನ್ನು ಯಾರು ಕೇಳುತ್ತಾರೆ. ಎರಡು ಬಾರಿ ಅವರ ಲಯ ಸಂಭಾಳಿಸಿದೆ. ನನಗೇನು ಸಿಕ್ಕಿತು? ಎಲ್ಲರೂ ಮಿಯಾ ಸಾಹೇಬರನ್ನು ಹೊಗಳಿದರು. ನನ್ನನ್ನು ಮಾತಾಡಿಸಲಿಲ್ಲ. ಉಳಿದವರು ಹಾಳಾಗಲಿ, ‘ನೀನು ನನ್ನನ್ನು ಸಂಭಾಳಿಸಿದೆಯಪ್ಪಾ!’ ಎಂಬ ಎರಡು ಮುತ್ತು ತಾನಸೇನ ನಿರಂಜನ ಅವಧೂತನಿಂದ ಉದುರಬಾರದೆ? ಇನ್ನು ಮುಂದಿನ ದರಬಾರಿ ಬೈಠಕ್ಕು ಬರುವವರೆಗೆ ಅವರಾಯಿತು, ಅವರ ಹೆಂಡಂದಿರಾಯಿತು, ಅವರ ಮುದ್ದು ಮಗಳಾಯಿತು. ಇತ್ತ ಏಕೆ ಬರಬೇಕು ಅವರು?” +“ನಿಮ್ಮ ಮಗ ನಮ್ಮ ಮನೆಯಲ್ಲಿದ್ದಾನೆ ಎಂದು ಒಂದು ಮಾತು ನೀವು ಅವರೆದುರಿಗೆ ಹೇಳಬಾರದೇಕೆ?” +” ಅವರ ಅವ್ವ-ಹೆಂಡತಿ ನನಗೆ ಆಣೆ-ಚೂರಿ ಇಟ್ಟುಕೊಂಡಿದ್ದರೆ. ನಾನು ಹೇಳಿದರೆ ಇಲ್ಲ ಅವರು ಸಾಯಬೇಕು, ಇಲ್ಲ ನಾ ಸಾಯಬೇಕು. ” +ರಹಮತ್ ಖಾನರ ಪತ್ನಿ ಕಿವಿಮೇಲೆ ಕೈಯಿಟ್ಟು ಕೊಂಡಳು. +ಮುಂದೆ ಮೂರುತಿಂಗಳು ಅಂಥ ದರ್ಬಾರಿ ಬೈಠಕ್ ಆಗಲಿಲ್ಲ. ತಾನಸೇನ್ ಇತ್ತ ಬರಲಿಲ್ಲ. +ಮೊದಮೊದಲು ಬಿಲಾಸಖಾನ ಒಬ್ಬನೇ ಕುಳಿತು ತಂದೆ ತನ್ನನ್ನು ಮಾತಾಡಿಸಿದಂತೆ, ತಾನು ಉತ್ತರ ಕೊಟ್ಟಂತೆ ಕಲ್ಪಿಸಿಕೊಳ್ಳುತ್ತ ಸ್ವಗತ ಸಂಭಾಷಣೆ ಮಾಡತೊಡಗಿದ. ಆಟ-ಪಾಟಗಳಲ್ಲಿ ಅವನ ಉತ್ಸಾಹವೇ ಅಳಿಯಿತು. +ನಂತರ ಊಟವೂ ರುಚಿಸದಾಯಿತು, ಎಲೆಯ ಮುಂದೆ ವಿಷಣ್ಣನಾಗಿ ಕುಳಿತುಕೊಳ್ಳತೊಡಗಿದ. +ತಂದೆಯ ಭೇಟಿಯಾಗದ ಕಳವಳದಲ್ಲಿ ರಾತ್ರಿ ಸ್ವಲ್ಪ ಜ್ವರ ಏರತೊಡಗಿತು. ಮನೆಗೆ ಬಂದ ವೈದ್ಯರು ‘ವಿಷಮಶೀತ ಜ್ವರ’ವೆಂದು ಹೇಳಿ ಔಷಧಿ ಕೊಟ್ಟರು. ಆದರೂ ರಹಮತ್ ಖಾನರಿಗೆ ಚಿಂತೆಯಾಯಿತು. ಅಲ್ಲಿಂದ ಅವನು ಅತ್ರೌಳಿಗೆ ಪ್ರಯಾಣಮಾಡಿ ಒಂದೆರಡು ದಿವಸ ಇದ್ದು ಹಮೀದಾಬಾನುವನ್ನು ಕರೆತಂದ. +ಅಷ್ಟೊತ್ತಿಗೆ ಜ್ವರವೇರಿ, ಜ್ವರದ ಸಂಕಟದಲ್ಲಿ ಬಿಲಾಸಖಾನ ಬಡಬಡಿಸತೊಡಗಿದ. ತಾಯಿಯ ಆಗಮನದಿಂದ ತುಸು ಆರೈಕೆ, ಮಾನಸಿಕ ಸ್ವಾಸ್ಥ್ಯ ಬಂದೊದಗಿತು. +ಇನ್ನು ತನ್ನ ಹೊಣೆ ತೀರಿತೆಂದು ರಹಮತ್ ಖಾನ್ ಸಮಾಧಾನದ ನಿಟ್ಟುಸಿರೆಳೆದ. +* +* +* +ರಾಮಪ್ಯಾರಿಗೆ ಸಲೀಮನ ಕಾಟ ಅಸಃಯವಾಗತೊಡಗಿತು. ಜೊತೆಗೆ ತಾನಸೇನರ ಬಗ್ಗೆ ಹುಟ್ಟಿದ ಹಸಿವು ಆ ಬೈಠಕ್ ನಂತರ ಹೆಚ್ಚು ಉಲ್ಬಣವಾಗಿತ್ತು. +ಸಲೀಮ ಪೀಡಿಸುತ್ತಲೇ ಇದ್ದ. +“ಅಂದು ನಿನ್ನ ಪ್ರೀತಿಯ ಅವಧೂತನ ಕಡೆಗೆ ನೋಡಿದಂತೆ ನನ್ನ ಕಡೆಗೆ ಏಕೆ ನೋಡುವದಿಲ್ಲ? ಬೇಕಾದರೆ ನಾನೂ ತುಳಸಿ ಮಾಲೆ ಹಾಕಿಕೊಳ್ಳುತ್ತೇನೆ?” +“ನಾನು ಹೇಗೆ ನೋಡಿದೆ?” +ಇಷ್ಟೆಂದದ್ದಕ್ಕೆ ಅವಳು ಒರೆಸಿಕೊಂಡ ಕಣ್ಣೀರು, ಬಿಕ್ಕಳಿಕೆ, ‘ವಾಹವ್ವಾ’ಗಳ ಅಣಕು ಮಾಡಿ ತೋರಿಸಿದ. +“ಸಾಧು ಮಹಾರಾಜ ನಿನ್ನತ್ತ ನೋಡುತ್ತಲೇ ಹಾಡಿದ” ಎಂದು ವಿಕಾರವಾಗಿ ತಾನಸೇನರ ಹಾವಭಾವ ಅಣಕಿಸಿದ. +“ನೀವು ಎತ್ತರದವರು, ನಿಮ್ಮ ಕಡೆಗೆ ಸಾಧು ಮಹಾರಾಜ ಹೇಗೆ ನೋಡಿಯಾನು? ನಾನು ನೆಲದ ಮೇಲೆ ಕುಳಿತಿದ್ದೆ. ನನ್ನ ಕಡೆಗೆ ನೋಡಿರಬಹುದು. ” +“ನೀನು ನೆಲದ ಮೇಲೆ ಮಲಗಿದ್ದರೆ ಇನ್ನಷ್ಟು ನೋಡುತ್ತಿದ್ದ. ” ಎಂದು ಕೆನ್ನೆಗೆ ಹೊಡೆಯುವ. ಅವಳ ಕೆನ್ನೆ ಕೆಂಪಾದಾಗ, ‘ಅಂದೂ ನಿನ್ನ ಕೆನ್ನೆ ಇಷ್ಟೇ ಕೆಂಪಾಗಿತ್ತು’ ಎಂದು ಗಲ್ಲ ಹಿಂಡುವ. +ಹೀಗೆ ಮೂರು ತಿಂಗಳು ಕಳೆಯಿತು. ತನಗಾದ ವ್ಯಥೆಯನ್ನು ಮಿಯಾ ಸಾಹೇಬರಿಗೆ ಹೇಳಿಕಳಿಸಿದಳು. ತಾನು ಸೋಮವಾರ ವ್ರತ ಬಿಟ್ಟಿರುವೆನೆಂದೂ ಹೇಳಿಕಳಿಸಿದಳು. ಇಷ್ಟು ಜನ ವೇಶ್ಯೆಯರನ್ನು ಪಾದಸ್ಪರ್ಶದಿಂದ ಉದ್ಧಾರ ಮಾಡಿದ ನೀವು ನನ್ನನ್ನು ಏಕೆ ಉದ್ಧಾರ ಮಾಡುವದಿಲ್ಲ? ಎಂದು ಪ್ರಶ್ನೆ ಹಾಕಿದಳು. ನೀಲಕಂಠಭಟ್ಟ ತನ್ನ ಚಾತುರ್ಯವನ್ನೂ ಸಮೀಕರಿಸಿ ಅವಳ ಅಭಿಲಾಷೆಯನ್ನು ಮಿಯಾಜೀಯವರಿಗೆ ತಿಳಿಸಿದ. ಮಿಯಾಜಿ ಝಪ್ಪೆನ್ನಲಿಲ್ಲ. ‘ನನ್ನ ಹೆಂಡಂದಿರನ್ನು ಆಳುವದೇ ನನಗೆ ಭಾರವಾಗಿದೆ. ಸಲೀಮನ ಹೆಣ್ಣನ್ನು ಮತ್ತೆಲ್ಲಿ ಹೊರಲಿ?’ ಎಂದು ಹೇಳಿಕಳಿಸಿದರು. +* +* +* +ಕೊನೆಗೂ ಬಂತು ಸಲೀಮನ ಶೋಭನಪ್ರಸ್ತದ ದಿನ. ಆವರೆಗೆ ಉದಾಸೀನನಾದ ಸಲೀಮ ಅವನ ಕೆಲವು ರಸಿಕ ಮಿತ್ರರ ಹೇಳಿಕೆಯ ಮೇರೆಗೆ ಹೊಸ ಬಗೆಯ ಸವಿಯನ್ನು ನೋಡಿಯೇ ಬಿಡಬೇಕೆಂದು ಬಗೆದ. ಆವರೆಗೆ ಅವನಿಗಿದ್ದ ಅನುಭವವು ಈಗಾಗಲೇ ಮೂಸಿದ ನಿರ್ಮಾಲ್ಯಗಳ ಮಟ್ಟಿಗೆ ಸೀಮಿತವಾದವು. ಅಲ್ಲಿರುವ ಪ್ರಭುತ್ವ ಇಲ್ಲಿಯೂ ಇತ್ತು. ಆದರೆ ಇದು ಅನಾಘ್ರಾತ ಪುಷ್ಫದ ಸೊಬಗು. ತಾನಸೇನನನ್ನು ಸಿಕ್ಕಿಸುವ ತನ್ನ ವಿಫಲ ಸಂಚಿನ ಫಲ ಗಡಿಬಿಡಿಯ ಮದುವೆಯೆಂದು ತಾತ್ಸಾರ ತಳೆದ ಸಲೀಮ ತನ್ನ ಹೆಂಡತಿಯನ್ನು ಸರಿಯಾಗಿ ನೋಡಿರಲಿಲ್ಲ. ಶೋಭನಪ್ರಸ್ಥದ ಎರಡು ದಿನದ ನಂತರ ಅವಳು ಆಗಮಿಸಿದಳು. ಕೋಣೆಯಲ್ಲಿ ಕುಳಿತಾಗ ಕದ್ದು ನೋಡಿದ ಸಲೀಮನಿಗೆ ಅವಳ ನೀಳವಾದ, ಕೇಶರಾಶಿ, ತೆಳ್ಳನೆಯ ನಡ, ತುಂಬಿದ ಯೌವ್ವನ ಬಲು ಸೊಗಸಾಗಿ ತೋರಿದವು. ಜೊತೆಗೆ ಕೌಮಾರ್ಯಹರಣದ ಹೊಸ ಪರೀಕ್ಷೆ ಬೇರೆ. ಈ ಅನುಭವವನ್ನು ಪಡೆದೇತೀರಬೇಕೆಂದು ನಿರ್ಧರಿಸಿ ಮುನ್ನಾದಿನ ರಾಮಪ್ಯಾರಿಯ ಬಳಿಗೆ ಹೋಗಲಿಲ್ಲ. ಅನಾವಿದ್ದ ರತ್ನಕ್ಕೇ ಧಾರ್ಯ ಮಾಡಬೇಕಾದರೆ ಮಂತ್ರ ಸಾಮಗ್ರಿ ಗಟ್ಟಿ ಬೇಕಲ್ಲವೇ? +ಫಲಶೋಭನದಲ್ಲಿ ಮನೆಯ ಹೆಣ್ಣುಮಕ್ಕಳ ಕೆಲಸವೇ ಹೆಚ್ಚು. ವ್ಯವಹಾರಕ್ಕೆ ಚೌಧುರಾಣಿ ಮನೆಯ ಮಂದಿಗಾಗಿ ಸಣ್ಣಪ್ರಮಾಣದ ಸಂಗೀತವಿಟ್ಟುಕೊಂಡಳು. ಅದಾರಂಗ-ಸದಾರಂಗರಿಗೆ ಜುಗಲಬಂದಿ ಆಮಂತ್ರಣ ಹೋಯಿತು. ಅವರ ತಬಲಜಿಯೇ ಬೇರೆ. ರಹಮತ್ ಖಾನನಿಗೂ ಆಮಂತ್ರಣ ಬರಲಿಲ್ಲ. ಎಲ್ಲವೂ ಖಾಸಗಿ ಕಾರ್ಯಕ್ರಮ. ಇಂಥದಕ್ಕೆ ಮಿಯಾ ತಾನಸೇನ ಬರುವದೆಂದರೆ ಉಚ್ಚ ಕಲಾವಿದನಿಗೆ ಅವಮರ್ಯಾದೆಯೇ ಸರಿ. +ಇದೆಲ್ಲವನ್ನು ತಿಳಿದ ರಾಮಪ್ಯಾರಿಬಾಯಿ ಮತ್ತೆ ನೀಲಕಂಠಭಟ್ಟನನ್ನು ಓಡಿಸಿದಳು. ‘ಈ ಫಲಶೋಭನ ಸಮಯದಲ್ಲಿ ಎಲ್ಲ ರೀತಿಯಿಂದಲೂ ಮುಕ್ತರಾದ ಮಿಯಾ ತಾನಸೇನ ಬಂದು ತನ್ನ ಅಭೀಷ್ಟವನ್ನು ಪೂರೈಸಬೇಕು. ಇನ್ನು ಸಲೀಮನ ಭಯ ತೊಲಗಿತು. ಆತ ನನ್ನನ್ನು ನಿಮಗಾಗಿ ಸಾಕಷ್ಟು ನೋಯಿಸಿದ್ದಾನೆ. ನೀವು ಅವಧೂತರೇ ಆಗಿದ್ದ ಪಕ್ಷದಲ್ಲಿ ಈ ಬಡಪಾಯಿಯ ಅಭೀಷ್ಟ ಪೂರೈಸಬೇಕು. ಇಲ್ಲವಾದರೆ, ತುಳಸಿ ಮಾಲೆಯನ್ನು ಬಿಸುಡಬೇಕು. ’ ಎಂದು ಆಃವಾನ ಹೋಯಿತು. ಬೇರೆ ಉಪಾಯಗಾಣದೆ ತಮ್ಮ ಧರ್ಮ ಪೂರೈಸುವದಾಗಿ ತಾನಸೇನರು ಒಪ್ಪಿಕೊಂಡರು. ಆದರೂ ಬೊಬ್ಬಾಟವಾಗದಂತೆ ಛದ್ಮವೀಷದಲ್ಲಿ ಬರುವದಾಗಿ ತಿಳಿಸಿದರು. ನಾಡಿದ್ದು ಆಗುವದು ನಾಳೆಯೇ ಏಕಾಗಬಾರದು, ಎಂದು ಗೊಣಗಿದಳು ರಾಮಪ್ಯಾರಿ. . . . ‘ಹೂ ಎಂದಿದ್ದಾರೆ. ನಾಳೇ ಆಗಲಿ, ನಾಡಿದ್ದೇ ಆಗಲಿ, ಕಲ್ಪಾಂತರದಲ್ಲೇ ಆಗಲಿ! ಹಾಗೆ ಉತಾವೀಳ ಆಗಬೇಡ!’ ಎಂದು ನೀಲಕಂಠಭಟ್ಟ ಸಮಾಧಾನ ಹೇಳಿದ. +* +* +* +ಅದಾರಂಗ-ಸದಾರಂಗರ ಸಂಗೀತ ಶುರುವಾದೊಡನೆ, ಸಲೀಮ ಎದ್ದು ಒಳಗೆಹೋಗಿ, ತನ್ನ ಸೇವಕರ ಮುಖಾಂತರ, “ನನ್ನ ಹೆಂಡತಿ ಈಗಲೇ ಈ ಕ್ಷಣವೇ ಬರಬೇಕು” ಎಂದು ಹೇಳಿಕಳಿಸಿದ. ಚೌಧುರಾಣಿ ತನ್ನ ಧರ್ಮದಂತೆ, ‘ಸಾಗಲಿ ನಿಮ್ಮ ಹಾಡು’ ಎಂದು ಹೇಳಿ ತನ್ನ ಊಳಿಗದವರನ್ನೂ, ಬ್ರಾಃಮಣರನ್ನೂ, ಸೊಸೆಯನ್ನೂ ಕರಕೊಂಡು, ಆರತಿ ಬೆಳಗುವದಕ್ಕಾಗಿ ಒಳಗೆ ನಡೆದಳು. ಮಹಾರಾಣಿಯ ನಿರ್ಗಮನದಿಂದ ಕಲಾವಿದರ ಮುಖ ತುಸು ಮ್ಲಾನವಾಯಿತು. ಆದರೂ ಅವರು ಆಲಾಪದ ಕೆಲಸ ಬೇಗ ಬೇಗ ಮುಗಿಸಿ ಚೀಜ ಎತ್ತಿಕೊಂಡರು. ತಬಲಾ ಠೇಕಾ ಶುರುವಾಯಿತು. ಇದನ್ನೇ ಸಲೀಮ ಎದುರು ನೋಡುತ್ತಿದ್ದ. ತಬಲಾ ಠೇಕಾದೊಡನೆ ಹೆಂಡತಿಯೊಂದಿಗೆ ರಾಸಕ್ರೀಡೆ ನಡೆಸಬೇಕೆಂದು ಅವನ ಕಲ್ಪನೆ. ಚೌಧುರಾಣಿಗೆ ಆರತಿ ಬೇಗ ಮುಗಿಸಬೇಕೆಂದು ಕೇಳಿಕೊಂಡ. ಆಕೆ ನಸು ನಗುತ್ತ ಒಂದೇ ಆರತಿ ಹಾಡಿಗೆ, ಒಂದೇ ಶೋಭಾನದ ಹಾಡಿಗೆ ಅನುಮತಿ ನೀಡಿದಳು. ಅದಾದೊಡನೆ, ವಧೂ-ವರರನ್ನು ಕೊಣೆಯೊಳಗೆ ಹಾಕಲಾಯಿತು. +ಒಳಗೆ ಆದದ್ದೇ ಬೇರೆ. ತನ್ನ ಚಾರರ ಮುಖಾಂತರ ರಾಮಪ್ಯಾರಿ-ಸಲೀಮರ ಸಂಬಂಧವನ್ನು ಅರಿತ ಪ್ರಭಾವತಿ ತಾನೇ ಮಾತಿಗೆ ಮೊದಲು ಮಾಡಿದಳು: +“ರಾಮಪ್ಯಾರಿ ನನಗಿಂತ ಚೆಲುವೆಯಲ್ಲವೇ?” +ಮರುಮಾತಾಡದೆ ಸಲೀಮ್ ಅವಳನ್ನು ಹಿಡಿಯಲು ಹೋದ. ಹುಲ್ಲೆಯಂತೆ ಚೆಂಗನೆ ನೆಗೆದು ಪ್ರಭಾವತಿ ಪಲ್ಲಂಗದ ಆ ಬದಿಗೆ ನಿಂತಳು. +“ನನ್ನ ಸವಾಲಿಗೆ ಜವಾಬು ಕೊಡಿರಿ ಮೊದಲು. ” +“ನಿನ್ನ ಮುಖವನ್ನೇ ನೋಡಿಲ್ಲ. ಹೇಗೆ ಹೇಳಬೇಕು. ” +“ಈಗ ನೋಡಿದಿರಲ್ಲಾ! ಈಗ ಹೇಳಿರಿ. ” +“ನೀ ಹತ್ತಿರ ಬಾ. ಹೇಳುತ್ತೇನೆ. ” +“ನಾಚಿಕೆಯಾಗುವದಿಲ್ಲವೆ! ಅಗ್ನಿಸಾಕ್ಷಿಯಾಗಿ ನನ್ನ ಕೈ ಹಿಡಿದು. . . . ” +“ಅಗ್ನಿ-ಗಿಗ್ನಿ ಎಲ್ಲ ಚೌಧುರಾಣಿಯ ಕಾರಭಾರು. ನಮಗೇನು ಸಂಬಂಧವಿಲ್ಲ. ನಾವು ಮುಸಲ್ಮಾನರು. ಹೆಂಡತಿಯನ್ನು ಹೆಂಡತಿಯೆಂದೇ ನೋಡುವವರು. ” +“ಹಾಗಾದರೆ, ರಾಮಪ್ಯಾರಿ ನಿಮ್ಮ ಹೆಂಡತಿಯೇನು? ಮೂರು ತಿಂಗಳು ಆಕೆಯನ್ನು ನೋಡಿದಿರಲ್ಲಾ?” +ಇಂಥ ಮಾತಿನ ಚಕಮಕಿಯಲ್ಲಿ ಒಂದು ಗಂಟೆ ಹೊರಟುಹೋಯಿತು. ಕೊನೆಗೊಮ್ಮೆ ಪ್ರಭಾವತಿ, ಸಲೀಮನ ಕೈಗೆಟುಕಿದಳು. ಆದರೆ ಅಷ್ಟೊತ್ತಿಗೆ ಅದಾರಂಗ-ಸದಾರಂಗ ತಮ್ಮ ಚಿಕ್ಕ ಕಾರ್ಯಕ್ರಮವನ್ನು ಮುಗಿಸಿ ಮಂಗಳ ಹಾಡಿದ್ದರು. ತನ್ನ ರಾಸಕ್ರೀಡೆಗಾಗಿ ತಬಲಾಸಾಥಿ ಇಲ್ಲವಲ್ಲಾ ಎಂದು ಸಲೀಮ್ ಮಿಡುಕಿದ. +ಮುಂದೆ ಒಂದು ಗಂಟೆ ಸಲೀಮ್ ಸಾಕಷ್ಟು ಕಷ್ಟಪಟ್ಟು ದಣಿವುಗೊಂಡ. ಗ್ಲಾನಿ ಬರತೊಡಗಿತೆಂದು ಅರ್ಧಗಂಟೆ ನಿದ್ರೆಮಾಡಿ ಎದ್ದ. ಬಾಗಿಲು ತೆರೆಸಿ, ಸೀದ ಕುದುರೆಯನ್ನು ತರೆಸಿ ಹೊರನಡೆದ. +ಪ್ರಭಾವತಿ ಹ್ಯಾಗಿದ್ದಳೋ ಹಾಗೆಯೇ ಉಳಿದಳು. +ಮಿಯಾ ತಾನಸೇನರು ಕೋಣೆಯೊಳಕ್ಕೆ ಬಂದೊಡನೆ ರಾಮಪ್ಯಾರಿ ಅವರನ್ನು ಅಪ್ಪಿಕೊಂಡು ಕಂಬನಿ ಸುರಿಸತೊಡಗಿದಳು. ‘ಎಷ್ಟು ದಿನ ಕಾಯಿಸಿದಿರಿ? ನಾನು ಏನು ತಪ್ಪು ಮಾಡಿದ್ದೆ? ದಿಲ್ಲಿಯಲ್ಲಿ ನಿಮ್ಮ ಪಾದಸೇವೆ ಮಾಡಿದ ಆರು ಗಣಿಕೆಯರಿದ್ದಾರೆ. ನನ್ನ ಮೇಲೆ ಏಕೆ ಈ ಕೋಪ? ನಾನು ಅವರಿಗಿಂತ ಕೆಟ್ಟವಳೇ. . . . ’ಎಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಅವಳನ್ನು ಸಾಂತ್ವನ ಮಾಡುವದರಲ್ಲಿ ಮಿಯಾಸಾಹೇಬರಿಗೆ ಸಾಕುಬೇಕಾಯಿತು. ಮಿಯಾ ಸಾಹೇಬರು ಚತುರ ಶೃಂಗಾರಿತರಲ್ಲಾ; ಅವಳ ದುಹ್ಖವನ್ನು ಹಾಸ್ಯವಾಗಿ ಪರಿವರ್ತಿಸುವ ಕಲೆ ಅವರಲ್ಲಿಲ್ಲ. ಅವರು ಸರಳ ಜೀವಿಗಳು. ಕವಿ ಹೃದಯ, ರಸಿಕ ಚಾತುರ್ಯ, ಬಲ್ಲವರಲ್ಲ. ದೇವದತ್ತ ಕಂಠ, ಗಾಯನ, ವಿದ್ಯೆ, ವಿರಾಗ ಜೀವನ, ಇವಿಷ್ಟನ್ನೇ ಬಲ್ಲವರು. ‘ಭಗವಂತ ಕೊಡುತ್ತಾನೆ, ನಾವು ಸ್ವೀಕರಿಸುತ್ತೇವೆ’ ಇಷ್ಟೇ ಅವರ ಜೀವನದ ಗುಟ್ಟು. +ಇಂಥ ಪವಿತ್ರ ಜೀವಿಯನ್ನು ನಾನು ಚುಂಬಿಸಲಿ ಹೇಗೆ? ಆಲಿಂಗಿಸಲಿ ಹೇಗೆ?. . . . ಇಂಥ ಸಮಸ್ಯೆಗಳು ಮೊದಲು ಅವರನ್ನು ಕಾಡಿದವು. +ಅಷ್ಟೊತ್ತಿಗೆ ರಾಮಪ್ಯಾರಿಯ ಬಿಕ್ಕಳಿಕೆ ರೋದನ ನಿಂತವು. ಆಕೆ ಸ್ಪಷ್ಟ ಉಚ್ಚಾರಣೆಯ ಮಾತು ಆಡತೊಡಗಿದಳು. ಆದರೆ ಆ ಮಾತುಗಳು ಮತ್ತಷ್ಟು ಗೊಂದಲಕ್ಕೆ ಕಾರಣವಾದವು. +ರಾಮಪ್ಯಾರಿ ಅವರನ್ನು ಬಣ್ಣಿಸಿದ ಪರಿ ಹೀಗೆ: “ನೀವು ಪವಿತ್ರ ಜೀವಿಗಳು; ದೇವಭಕ್ತರು; ಅವಧೂತರು. ನಿಮ್ಮ ಭಜನೆ ಕೇಳಿ ನಾನು ಪುಳಕಿತನಾಗುತ್ತಿದ್ದೆ. ಒಮ್ಮೆ ನೆನಪಿದೆಯೇ? ಸೋಮವಾರದ ಭಜನೆ ಮುಗಿಸುವಾಗ ನಾನು ಮೀರಾ ಭಜನೆ ಹೇಳಿದೆ: ‘ಮತ ಜಾ,ಮತ ಜಾ, ಮತ ಜಾ ಜೋಗಿ!’ ಅದು ನಿಮ್ಮನ್ನು ಉದ್ದೇಶಿಸಿದ ಹಾಡು. ನಿಮಗೆ ಗುರುತಾಯಿತೇ? ನೀವು ಯೋಗಿಗಳು. ನಾದಬ್ರಃಮರು. ಪರಮಾತ್ಮನನ್ನು ಕಂಡವರು. ನನ್ನಂಥ ಅಜ್ಞ ಪಾಮರರನ್ನು ನೀವೇ ಉದ್ಧಾರ ಮಾಡಿರಿ. ನಿಮ್ಮ ಕಾಲಿಗೆ ಬೀಳುತ್ತೇನೆ. ನೀವು ನಾರದ ಮಹರ್ಷಿಗಳ ಅವತಾರವೆಂದೇ ನಾನು ತಿಳಿದುಕೊಂಡಿದ್ದೇನೆ…” +ತಾನಸೇನ ಮಿಯಾರಿಗೆ ನಗಬೇಕೋ ಅಳಬೇಕೋ ತಿಳಿಯದಾಯಿತು. ಮಹರ್ಷಿಗಳ ಶ್ರೇಣಿಗೆ ರಾಮಪ್ಯಾರಿ ತಮ್ಮನ್ನು ಏರಿಸಿದ ಮೇಲೆ, ಕೆಳಗೆ ಇಳಿದು ಅವಳೊಡನೆ ಸರಸಮಾಡುವುದೆಂತು!-ಆಗಲಿ; ಅವಳೇ ಇನ್ನಿಷ್ಟು ಕರಗಿ, ನಾನೂ ಸಾಮಾನ್ಯ ಮನುಷ್ಯನೇ ಎಂದು ಅರಿಯಲಿ, ಎಂದು ಸಮಯ ಕಾಯುತ್ತ ಕುಳಿತರು. +“ಅಂತೂ ಕೊನೆಗೆ ಬಂದಿರಿ. ನಿಮ್ಮ ಪಾದಧೂಳಿಯಿಂದ ನನ್ನ ಕೋಣೆ ಪವಿತ್ರವಾಯಿತು. ನನ್ನನ್ನು ಸಲೀಮರಂಥವರಿಗೆ ಬಿಸುಟಲು ನಿಮಗೆ ಹೇಗೆ ಮನಸ್ಸಾಯಿತು? ನಾನು ನಿಮ್ಮವಳು, ಕಾಯ, ವಾಚಾ, ಮನಸಾ ನಿಮ್ಮವಳು. ಇದು ತಿಳಿಯಲಿಕ್ಕೆ ಇಷ್ಟು ದಿನ ಹಿಡಿಯಿತೇ?. . . ” +ಮಹಾರಾಯ್ತಿ, ವಾಚಾ-ಮನಸಾ ಬಿಟ್ಟುಬಿಡು. ನಾನು ಕಾಯಕರ್ಮಕ್ಕಾಗಿ ಇಲ್ಲಿ ಬಂದವನು. ನನ್ನನ್ನು ದೇವತ್ವಕ್ಕೆ ಏರಿಸಿ ಹದಗೆಡಿಸಬೇಡ, ಎಂದು ಹೇಳಿಬಿಡಬೇಕೆಂದು ಮನಸ್ಸಾಯಿತು. +ಈಗಾಗಲೇ ಎರಡು ಗಂಟೆ ಆಗಿ ಹೋಗಿತ್ತು. ಸುದೈವದಿಂದ ರಾಮಪ್ಯಾರಿ ವಿಷಯಕ್ಕೆ ಬಂದಳು. ದೀರ್ಘ ಆಲಿಂಗನ-ದೀರ್ಘ ಚುಂಬನಕ್ಕೆ ಮೊದಲು ಮಾಡಿದಳು. +ಅಷ್ಟರಲ್ಲಿ ಹೊರಗೆ ಏನೋ ಸದ್ದಾಯಿತು. +ಆಕೆಯ ಮನೆಯ ಮುಸಲ್ಮಾನ ಕಾವಲುಗಾರ ಓಡುತ್ತಾ ಬಂದು, ಬಾಗಿಲ ಹೊರಗಿನಿಂದಲೇ ಹೇಳಿದ: ‘ಸಲೀಮ ಶಹಜಾದೆ ಕುದುರೆಗೆ ಹೇಳಿರುವರಂತೆ, ಇತ್ತ ಕಡೆಗೆ ಬರಬಹುದು. ’ +ರಾಮಪ್ಯಾರಿ ಧಿಡೀರನೆ ಬಾಗಿಲು ತೆರೆದಳು. +“ನಿಮಗೆ ಬೇಕಾದರೆ ನನ್ನ ಹೆಂಡತಿಯ ಬುರಖಾ ಇದೆ. ಪಂಡಿತಜಿ ಅದನ್ನು ಹಾಕಿಕೊಂಡು ನಿರಾತಂಕ ಹೋಗಬಹುದು. ” +“ಎಲ್ಲಿ? ತಾ” ಎಂದಳು ರಾಮಪ್ಯಾರಿ. +ಕಾವಲುಗಾರ ಓಡುತ್ತ ತನ್ನ ಕೋಣೆಗೆ ಹೋದ. ಒಳಗೆ ಅವನ ಹೆಂಡತಿ ನಿದ್ರೆ ಮಾಡುತ್ತಿದ್ದಳು. ಅವಳನ್ನು ಎಬ್ಬಿಸುವದು ತುಸು ತಡವಾಯಿತು. ಆಗಲೇ ನಿಶ್ಯಬ್ದ ನೀರವ ರಾತ್ರಿಯಲ್ಲಿ ದೂರಿಂದ ಕುದುರೆಯ ಖುರಪುಟ ಕೇಳಿಸಿತು. +ಅವರಿಗೆ ಬುರುಖಿ ತೊಡಿಸಿ, ಧಾನ್ಯದ ಬಿದಿರಿನ ಕಣಜದಲ್ಲಿ ಕೂಡಿಸಲಾಯಿತು. ತಾನಸೇನರ ಎದೆ ಡವಡವ ಬಡಿದುಕೊಳ್ಳುತ್ತಿತ್ತು. +ರಾಮಪ್ಯಾರಿ ಕೋಣೆಯ ಅಸ್ತವ್ಯಸ್ತ ಸಾಮಾನುಗಳನ್ನು ಸರಿಪಡಿಸಿ, ಹಣೆಗೆ ಅಂಜನವನ್ನು ಹಚ್ಚಿಕೊಂಡು, ತಲೆನೋವು ಇದ್ದವರಂತೆ ಮಲಗಿಕೊಂಡಳು. +ಹೊರಬಾಗಿಲು ತೆರೆಯುತ್ತಲೇ, ಸಲೀಮ ಹಸಿದ ಹುಲಿಯ ಹಾಗೆ ಒಳಗೆ ಧುಮುಕಿದ. ಮೆಟ್ಟಿಲ ಮೇಲೆ ನೆಗೆಯುತ್ತ ರಾಮಪ್ಯಾರಿಯ ಕೋಣೆಯಲ್ಲಿ ನುಗ್ಗಿದ. +“ಪ್ಯಾರಿ, ತಲೆನೋವೆ? ನಿದ್ದೆ ಹತ್ತಿಲ್ಲವೇ?” ಎಂದು ಸಲೀಮನ ಧ್ವನಿ. +“ಈಗೆಕೆ ಬಂದಿರಿ? ಹೊಸ ಹೆಂಡತಿ ಮನೆಯಲ್ಲಿಲ್ಲವೆ? ಈಗ ಹಸೆ ಏರುತ್ತಿರುವ ಪತ್ನಿಯಿಂದ ಗಂಡನನ್ನು ಅಗಲಿಸಿದ ಪಾಪ ನನ್ನ ಕೊರಳಿಗೆ ಕಟ್ಟಲಿಕ್ಕೆ ತಾನೆ?” +“ಅವಳ ಮಾತನ್ನು ಬಿಡು. ನಿನಗೆ ತಲೆಶೂಲಿಯೆ? ನಿನಗೆ ಮೈಲಿ ಸರಿಯಿಲ್ಲವೆಂದು ಯಾರೋ ಹೇಳಿದರು. ಹೇಗಿದ್ದೀ? ನೋಡಲಿಕ್ಕೆ ಬಂದೆ. ” +ಈ ಧೂರ್ತನ ಮಾತನ್ನು ಕಣಜದಿಂದಲೇ ಕೇಳಿದ ಮಿಯಾ ತಾನಸೇನರಿಗೆ ಹೆಂಗಸರ ವಿಷಯದಲ್ಲಿ ತಾವು ಎಷ್ಟು ಅನಭಿಜ್ಞರು ಎನಿಸಿತು. +“ಬಿಡಿರಿ ಈ ಬಣ್ಣದ ಮಾತು. ನಿನ್ನೆ ನೀವು ಬಂದು ಎರಡು ಮುದ್ದಿನ ಮಾತು ಹೇಳಿಹೋಗಬೇಕಾಗಿತ್ತು! ನನ್ನ ಹೆಂಡತಿ ಬಂದಳು, ನನ್ನ-ನಿನ್ನ ಸಂಬಂಧ ಹರಿಯಿತು. ಇಷ್ಟು ದಿನ ನಾನು ನಿನಗೆ ಸುಖಕೊಟ್ಟೆ. ನೀನು ನನಗೆ ಸುಖಕೊಟ್ಟೆ. ಆ ಕತೆ ಮುಗಿಯಿತು. ಇಷ್ಟು ಹೇಳಿದ್ದರೆ ನಿಮ್ಮ ಕಲ್ಪನೆಯ ಬಾಯಿ ಒಡೆಯುತ್ತಿತ್ತೇ? ನಿಮ್ಮ ಪ್ರಸ್ತದ ವಿಷಯವನ್ನು ನಾನು, ನಾನು ರಾಮಪ್ಯಾರಿ, ಮೂರನೆಯವರಿಂದ ಕೇಳಬೇಕಾಯಿತಲ್ಲಾ, ಇದು ನಾಚಿಕೆಗೇಡಲ್ಲವೇ? ನನ್ನ ಮಾತಿಗೆ ಮೊದಲು ಉತ್ತರಕೊಡಿರಿ. ಆಮೇಲೆ ಈ ಪಲ್ಲಂಗದ ಮೇಲೆ ನೀವು ನ್ಯಾಯವಾಗಿ ಕೂಡಬಹುದು”. +“ಪ್ಯಾರಿ, ನನ್ನದು ಸರ್ವಸ್ವ ತಪ್ಪಾಯಿತು. ನಿನ್ನ ಕಾಲಿಗೆ ಬೀಳುತ್ತೇನೆ. ಸಿಟ್ಟಾಗಬೇಡ” +“ಸಿಟ್ಟಿನದೇನು ಬಂತು! ನಿಮ್ಮ ಲಗ್ನವಾದದ್ದನ್ನು ಬಲ್ಲೆ. ಇಂಥ ದಿನ ಫಲಶೋಭನವಿದೆಯೆಂದು ಹೇಳಲಿಕ್ಕೆ ನಾಚಿಕೆ ಏನು? ಜಗತ್ತಿನಲ್ಲಿ ಇಲ್ಲದ ಕೆಲಸವೇ?” +“ಹೌದು, ಆ ಹೆಣ್ಣನ್ನು ಇನ್ನು ಮುಟ್ಟಲಾರೆ. ಒಂದು ತಾಸಾಯಿತು. ನನ್ನ ಮೈಯ ಬೆವರು ಇಳಿಯಿತು. ಆದರೆ ಆಕೆ ಹೆಣ್ಣಾಗಲಿಲ್ಲ. ” +“ಅದಕ್ಕೆ ಇಲ್ಲಿ ಬಂದಿರಾ?-ಸುಮ್ಮನೆ ಹೋಗಿರಿ. ನಾಳೆ ಬಾದಶಹರಿಗೆ ತಿಳಿದರೆ ನನ್ನನ್ನು ಶೂಲಕ್ಕೇರಿಸುವರು. ” +“ಪ್ಯಾರಿ, ಇದೊಂದು ರಾತ್ರಿ-ಕೊನೆಯ ರಾತ್ರಿ!” +“ಒಂದೇ ರಾತ್ರಿ ತಾನೆ? ವಚನಕೊಡಿರಿ. ನನ್ನ ಜೀವಕ್ಕೆ ಅಪಾಯವಾದರೆ ತಿಂಗಳಿಗೊಮ್ಮೆ ಕೂಡ ನನ್ನ ನೋಡುವದು ಸಿಕ್ಕಲಿಕ್ಕಿಲ್ಲ, ಜೋಕೆ!” +ಬಾಗಿಲು ದೊಪ್ಪನೆ ಬಡಿದುಕೊಂಡಿತು. ಒಳಗೆ ಚಿಲಕದ ಸದ್ದು ಕೇಳಿಸಿತು. +* +* +* +ಮಿಯಾಸಾಹೇಬರು ಕಣಜದಿಂದ ಜೋಪಾನವಾಗಿ ಕೆಳಗಿಳಿದರು. ಕಾವಲುಗಾರ ತಲಬಾಗಿಲು ತೆಗೆಯುವದಕ್ಕೆ ಹೊರಟ. ಮಿಯಾ ಹಿತ್ತಲುಬಾಗಿಲ ಕಡೆಗೆ ಬೊಟ್ಟು ತೋರಿಸಿದರು. ಆದಷ್ಟು ಸದ್ದಿಲ್ಲದೆ ಹಿತ್ತಲ ಬಾಗಿಲು ತೆಗೆದ ಕತ್ತಲಲ್ಲಿ ಮಿಯಾಸಾಹೇಬರು ಕಪ್ಪು ಬುರ್ಖಾದಲ್ಲಿ ಪರಿವ್ರತರಾಗಿ ಮಾಯವಾದರು. +ಹಿತ್ತಲಲ್ಲಿ ನಾಯಿ ನಿಂತಿತ್ತು. ವೇಶ್ಯೆಯರ ಮನೆಯ ನಾಯಿಗಳೂ ಚತುರವಿರುತ್ತವೆ. ಕಾವಲುಗಾರನನ್ನು ನೋಡಿ ಮನೆಯ ಒಳಕ್ಕೆ ಸೇರಿಕೊಂಡಿತು. ಕಾವಲುಗಾರ ಬಾಗಿಲು ಮುಚ್ಚಿಕೊಂಡ. +ಗಾಢಾಂಧಕಾರದಲ್ಲಿ ತಾನಸೇನ ಮೆಲ್ಲನೆ ಹೆಜ್ಜೆ ಇಡತೊಡಗಿದರು. ಆ ಮನ:ಸ್ಥಿತಿಯಲ್ಲಿ ಅವರಿಗೆ ತಮ್ಮ ಎಡಗೈ ಯಾವುದು? ಬಲಗಾಲು ಯಾವುದು ತಿಳಿಯುವದು ಶಕ್ಯವಿದ್ದಿಲ್ಲ. ನಡೆಯುತ್ತ ಒಂದು ನೀರಿನ ಹರಿಯನ್ನು ದಾಟಿ, ಇಷ್ಟುದ್ದ ಹೆಜ್ಜೆ ಇಟ್ಟು, ಕೊನೆಗೆ ಸೆಗಣಿ ಕಿಟ್ಟದ ಮೇಲೆಯೇ ಕಾಲು ಊರಿದರು. ಕಾಲು ಸಿಕ್ಕಿಕೊಂಡಿತು. ಸುದೈವದಿಂದ ಅದರ ದಂಡೆಯ ಮೇಲಿನ ಬಳ್ಳಿ ಹಿಡಿದು ಕಾಲು ಮುಕ್ತಗೊಳಿಸಲು ನೋಡಿದರು. ಕಾಲು ಬಿಡಿಸಿತು, ಚಪ್ಪಲಿ ಮಾತ್ರ ಕಿಟ್ಟದ ಪಾತಾಳಕ್ಕೆ ಇಳಿಯಿತು. ಇನ್ನೊಂದು ಚಪ್ಪಲಿಯನ್ನೂ ಅಲ್ಲಿಯೇ ಒಗೆದರು. “ನನಗೆ ಈ ರಂಡಿಯ ಬುರುಖಾನಾದರೂ ಏಕೆ ಬೇಕು?” ಎಂದು ಬುರುಖಾ ಆ ಕಿಟ್ಟದ ಮೇಲೆ ಹಾಸಿ, ಅದರ ಮೇಲೆ ದಾಟಿದರು. ಬಳ್ಳಿ ಬಡಕಲುಗಳನ್ನು ಒಸರಿಸಿ, ಬೀದಿಗೆ ಸೇರಿಕೊಂಡರು. ಅತ್ತ ಇತ್ತ ನೋಡಿ, ಎಲ್ಲಿದ್ದೇನೆ ಎಂಬುದನ್ನು ವಿಚಾರ ಮಾಡತೊಡಗಿದರು. +ಇದೇ ಓಣಿಯ ಆ ತುದಿಗೆ ಹೀಗೇ ಹೋದರೆ ಅಗೋ ಅಲ್ಲಿ ಕಾಣಿಸುವದು ರಹಮತ್ಖಾನನ ಮನೆ ಎಂದು ಗುರುತಿಸಿದರು. +* +* +* +ಮಿಯಾ ತಾನಸೇನರು ರಹಮತಖಾನನ ಮನೆ ಮುಟ್ಟಿದಾಗ ರಾತ್ರಿ ಸುಮಾರು ಒಂದು ಹೊಡೆದಿರಬಹುದೇನೋ. ದಿಲ್ಲಿಯ ಕೊರೆಯುವ ಚಳಿ, ಸೂ ಎನ್ನುವ ಗಾಳಿ, ಮನೆಯಲ್ಲಿ ಎಲ್ಲರೂ ಮಲಗಿದ್ದರು. ಒಂದೇ ದೀಪ ಉರಿಯುತ್ತಿತ್ತು. ತಾನಸೇನರು ಬಾಗಿಲು ತಟ್ಟಿದರು. ಮನೆಯಲ್ಲಿ ಒಬ್ಬಳೇ ಮಗಳು ಎಚ್ಚರವಿದ್ದಳೇನೋ, ಬಾಗಿಲು ಬಡಿದ ಸದ್ದಿಗೆ ಓಡಿ ಬಂದು ಪಿಸುದನಿಯಲ್ಲಿ ‘ಯಾರು? ಬಾಗಿಲು ಬಡಿಯಬೇಡಿರಿ. ಮಗು ಈಗ ತಾನೇ ಮಲಗಿದೆ. ಖಾನಸಾಹೇಬರನ್ನು ಎಬ್ಬಿಸುತ್ತೇನೆ’ ಎಂದಳು. +“ಹಾಂ” ಎಂದಿಷ್ಟೇ ನುಡಿದರು ಮಿಯಾಸಾಹೇಬರು. +ಮಿಯಾಸಾಹೇಬರ ಮೊಳಕಾಲುಮಟ ಸುಖರ‌ಆಲು ಸೆಗಣಿಯಲ್ಲಿ ಮಿಂದಿತ್ತಾದರೂ ಅವರ ತುಟಿಗಳ ಮೇಲೆ, ಎದೆಯ ಮೇಲೆ, ರಾಮಪ್ಯಾರಿಯ ದೀರ್ಘ ಚುಂಬನ ಆಲಿಂಗನದ ಅನುಭವ ಅಚ್ಚೊತ್ತಿದಂತಿತ್ತು. ಗುಂಗು ಅಳಿದಿರಲಿಲ್ಲ. +ರಹಮತ್ ಖಾನ್ ಸಾಹೇಬ್ ಆಕಳಿಸುತ್ತ, ಒಡ್ಡು ಮುರಿಯುತ್ತ, ಬಂದು ‘ಯಾರು’ ಎಂದ. +“ನಾನು ಬಾಗಿಲ ತೆರೆ, ರಹಮತ್” ಎಂದರು ಮಿಯಾ. +ರಹಮತ್ ಖಾನ್ ಒಮ್ಮೆಲೇ ಗಡಬಡಿಸಿ, ಎಚ್ಚೆತ್ತು, ‘ಹಾಂ, ಮಿಯಾ, ಖೋಲತಾ ಹೂಂ’ ಎಂದು ಬಾಗಿಲು ತೆರೆದರು. +“ರಸ್ತೆಯ ಮೇಲೆ ಕಾಲು ಜರೆಯಿತು, ಸುರುವಾಲಿಗೆ ಸೆಗಣಿ ಮೆತ್ತಿಕೊಂಡಿದೆ. ಕಾಲು ತೊಳೆಯಲಿಕ್ಕೆ ನೀರು ಕೊಡು. ನಿನ್ನ ಸುರುವಾಲು ಇದ್ದರೆ ಕೊಡು” ಎಂದು ಪಿಸುಗುಟ್ಟಿದರು. ಆಗ ಕಾಲಲ್ಲಿ ಚಪ್ಪಲಿಯಿಲ್ಲದ್ದು ನೆನಪಾಗಿ, ’ನಿನ್ನ ಚಪ್ಪಲಿ ಕೂಡ ಕೊಡು. ಅಲ್ಲಿಯೇ ಬಿಟ್ಟುಬಂದೆ’ ಎಂದರು. +“ಹಾಂ, ಹಾಂ. ಒಳಗೆ ಬಚ್ಚಲಕ್ಕೆ ಬರ್ರಿ” ಎಂದ ರಹಮತ್ ಖಾನ್. ಮಿಯಾ ಸಾಹೇಬ ಒಳಗೆ ನಾಡೆದರು. +ಎಚ್ಚರವಿದ್ದ ಹೆಣ್ಣುಮಗಳು ಮಿಯಾಸಾಹೆಬನನ್ನು ನೋಡಿ ಎದ್ದು ನಿಂತಳು. +ಮಿಣಿಮಿಣಿ ದೀವಿಗೆಯ ಬೆಳಕು ಆಕೆಯ ಮುಖದ ಮೇಲೆ ಬಿತ್ತು. +“ಎಲ್ಲಿಯೋ ನೋಡಿದ ಹಾಗೆ ಇದೆಯಲ್ಲ!” ಎಂದುಕೊಳ್ಳುತ್ತ ಮಿಯಾ ಸಾಹೇಬರು “ಊರಿಂದ ನಿಮ್ಮ ಜನ ಬಂದಿದ್ದಾರೆಯೇ?” ಎಂದು ರಹಮತ್ ಖಾನನನ್ನು ಕೇಳಿದರು. +“ಹೌದು” ಎಂದ ರಹಮತ್, ತುಸು ಗಡಸಾಗಿ. +ಆ ಕೋಣೆಯ ದೀವಿಗೆಯನ್ನು ಎತ್ತಿಕೊಂಡು ರಹಮತ್ ಮುಂದೆ ನಡೆದ, ಬಚ್ಚಲು ತೋರಿಸಲು. +“ಹೌದು” ಎಂದ ಧ್ವನಿಯ ಗಡುಸೇ ತಾನಸೇನ ಸಾಹೇಬರ ವಿಚಾರವನ್ನು ಬದಲಿಸಿತು. +“ಬಾದಶಹರ ಕೋಠಿಯಿಂದ ನಿನಗೆ ಸಲ್ಲತಕ್ಕ ಹಣ ಸಂದಾಯವಾಯಿತೇ?” ಎಂದರು. ರಹಮತನ ಕಡೆಗೆ ತಾವು ಲಕ್ಷ್ಯ ಕೊಟ್ಟಿಲ್ಲವೆಂಬ ಅಳುಕು ಹುಟ್ಟಿತು. ಅದಕ್ಕೆಂದೇ ಈ ಗಡಸು ಧ್ವನಿ. +“ಕೋಠಿ ನವಾಬರು ಮುಂದಿನ ವಾರ ಕಳಿಸುತ್ತೇನೆ ಎಂದರು. ” +ಮಿಯಾ ಕಾಶಿಯ ಕೆಂಪು ಪಂಚೆಯನ್ನು ಅಡ್ಡ ಸುತ್ತಿಕೊಂಡರು. ಸುರವಾಲು ಅಲ್ಲಿಯೇ ಬಿಟ್ಟರು. ಬಚ್ಚಲಿನಲ್ಲಿ ಒಣ ಹಾಕಿದ ಇನ್ನೊಂದು ಸುರವಾಲನ್ನು ರಹಮತ ಒದಗಿಸಿದ. ಪಂಚೆಯಿಂದ ಕಾಲು ಒರಸಿಕೊಳ್ಳುತ್ತ ಆಳವಾದ ವಿಚಾರದಿಂದ ಎಚ್ಚತ್ತವರಂತೆ ಹೇಳಿದರು. +“ಮುಂದಿನ ವಾರವೂ ಸಂದಾಯವಾಗದಿದ್ದರೆ ನನ್ನ ಕಡೆಗೆ ಬಾ, ನನ್ನ ಕೈಲಾದ ಮಟ್ಟಿಗೆ ಸದ್ಯಕ್ಕೆ ಮುಂಗಡ ಕೊಡುತ್ತೇನೆ. ” +“ಹೂಂ. ” +“ನಿನ್ನ ಹಣ ಸಂದಾಯವಾದ ಮೇಲೆ ಮುಟ್ಟಿಸುವಿಯಂತೆ. ” +“ಹೂಂ, ಸರಿ. ” +“ಮನೆಯಲ್ಲಿ ಮಗೂಗೆ ಜಡ್ಡು ಎಂದು ಆ ಹೆಂಗಸು ಹೇಳಿತಲ್ಲಾ, ಹಕೀಮರಿಗೆ ಕೊಡಲಿಕ್ಕೆ ಈಗ ಸಾಕಷ್ಟು ಹಣವಿದೆಯೇ?” +“ಹೂಂ. ಅಷ್ಟು ಇದೆ!” +“ಹಕೀಮರು ಏನೆಂದರು?” +“ಔಷಧ ಕೊಟ್ಟಿದ್ದಾರೆ. ಮುಂದೆ ದೇವರ ಇಚ್ಛೆ, ಎನ್ನುತ್ತಾರೆ. ” +“ನಾಳೆ ಬಾ. ನಾನು ಒಂದು ಚೀಟಿ ಕೊಡುತ್ತೇನೆ. ರಾಜವೈದ್ಯರಿಗೆ ಕೊಡು. ಬಂದು ನೋಡುತ್ತಾರೆ. ” +ಹೊರಗೆ ಬರುವಾಗ ನಿಂತ ಹೆಣ್ಣುಮಗಳು ನಿಂತಲ್ಲಿಯೇ ನಿಂತಿದ್ದಳು ಗರ ಬಡಿದವರಂತೆ. ರಹಮತ್ ದೀವಿಗೆಯೊಡನೆ ಮುಂದೆ ಸಾಗಿದ. +“ಅಯ್ಯೋ ಪಾಪ! ಜಾಗರಣೆ ಮಾಡಿ ಕಣ್ಣು ಇಷ್ಟಗಲವಾಗಿದೆ. ಆ ಹುಡುಗನ ತಾಯಿಯೋ ಏನೋ!” ಎಂದು ವಿಚಾರ ಮಾಡುತ್ತ ಪಡಸಾಲೆಗೆ ಸಾಗಿದರು. ದೀವಿಗೆ ಹಿಡಿದುಕೊಂಡೇ ರಹಮತ್ ಹಿಂಬಾಲಿಸಿದ. +ಇಷ್ಟಾದರೂ ತಾವು ಒಂದು ಒಳ್ಳೆ ಮಾತು ರಹಮತನಿಗೆ ಆಡಿಲ್ಲವಲ್ಲಾ ಎಂಬ ಅಳುಕು ಉಳಿದಿತ್ತು. +“ನಾನು ಅರ್ಧ ಮಾತ್ರೆ ಬೇಗನೇ ಸಮ್ಮಿಗೆ ಬಂದಿದ್ದೆನೆಂದು ತೋರುತ್ತದೆ. ಅದನ್ನು ನೀನು ಬೇಗ ಸಂ ತೋರಿಸಿ ಸರಿಪಡಿಸಿಕೊಂಡೆಯೆಂದು ನನ್ನ ಭಾವನೆ. ಧ್ರುಪದದ ಲಯಕಾರಿ ಅರ್ಥ ಮಾಡಿಕೊಳ್ಳುವವರು ದಿಲ್ಲಿಯಲ್ಲಿ ಕಮ್ಮಿ. ಆದರೆ ಆ ಲುಚ್ಚ ಮಾನಸಿಂಗ ತೋಮರ ಗುರುತಿಸಿದನೆಂದು ತೋರುತ್ತದೆ. ಗಲ್ಲದಲ್ಲೆ ನಕ್ಕಂತೆ ಮಾಡಿದ. ನಂತರ ಆ ಲುಚ್ಚ ಬಂದು ‘ಕ್ಯಾ ಲಯಕಾರಿ ದಿಖಾಯಾ’ ಅಂದ. ” +“ಆಪಕಿ, ದುವಾ ಎಂದು ಹೇಳಿದೆ. ” +“ಹೌದೇ? – ನಾನು ಕೇಳಲಿಲ್ಲ. ” +“ಅದಕ್ಕೆ ನಿನ್ನನ್ನು ಹೊಗಳಬೇಕು. ನೀನು ಮುಂಧೋರಣೆಯಿಂದ ಬಾರಿಸಿದೆ. ವಜನು ಸಂಭಾಳಿಸಿಕೊಂಡೆ. ” +ಈ ಮಾತನ್ನು ಹೇಳಬೇಕಾದರೆ ತಾನಸೇನರ ಧ್ವನಿ ತುಸು ಏರಿತೆಂದು ತೋರುತ್ತದೆ. +ಹಾಸಿಗೆಯ ಮೇಲೆ ಮಲಗಿದ ಬಿಲಾಸ ಖಾನ ದಿಗ್ಗನೇ ಎದ್ದು ಕುಳಿತು “ಬಾಬಾ, ಬಾಬಾ” ಎಂದು ಅರಚಿಕೊಂಡ. +ತಾಯಿ ಅವನನ್ನು ಎದೆಗೆ ಅವಚಿಕೊಂಡು, “ಸೋ ಜಾ ಬೇಟೆ, ಸೋ ಜಾ” ಎಂದು ಮಲಗಿಸಿ ಚುಕ್ಕು ಬಡಿಯತೊಡಗಿದಳು. +“ಪಾಪ, ಸಣ್ಣಮಗು. ಜ್ವರದ ತಾಪದಲ್ಲಿ ತಂದೆಯನ್ನು ನೆನೆಯುತ್ತಿದೆ! ಈಗ ಅವನ ವಯಸ್ಸು ಏನಿರಬೇಕು?” +“ಹದಿನೈದು. ” +“ಪಾಪ, ಚಿಕ್ಕದು. ನಾಳೆ ಚೀಟಿಗಾಗಿ ಬಾ. ನನಗೆ ನಿನ್ನ ಚಪ್ಪಲು ಕೊಡು. ಸರಿಯಾಗಿ ಔಷಧ ಕೊಡಿಸು. ದುಡ್ಡಿಗಾಗಿ ಯವುದೂ ನಿಲ್ಲುವದು ಬೇಡ. ತಿಳಿಯಿತೇ?” +ಇಷ್ಟು ಹೇಳಿ ಮಿಯಾ ಸಾಹೇಬರು ಮನೆಗೆ ನಡೆದರು. +* +* +* +ಮರುದಿನ ಮುಂಜನೆ ಚುಮುಚುಮು ನಸುಕಿನಲ್ಲಿ ರಹಮತ್ ಸ್ಕೀನಾಬಾನುವಿನ ಮನೆಗೆ ಬಂದು, ಬಾದಶಹರು ನಿಮ್ಮನ್ನು ಕರೆಸಿದ್ದಾರೆ ಎಂದು ಎಬ್ಬಿಸಿದ. ಸಕೀನಾ ಹಾಗೆ ಏಳಗೊಡುವವಳಲ್ಲ. ಬಾದಶಹರ ಹೆಸರು ಕೇಲಿ ಎಬ್ಬಿಸಿದಳು. ಬೇಗ ಮೋರೆ ತೊಳೆದುಕೊಂಡು, ಬೇರೆ ಸುರುವಾಲು ಧರಿಸಿ ಮಿಯಾ ಹೊರಟರು. ದಾರಿಯಲ್ಲಿ ಬಂಡಿ ತೆಗೆದುಕೊಂಡರು. ದಿಶೆ ಬದಲಾದೊಡನೆ, ಮಿಯಾ ಕೇಳಿದರು. +“ಇತ್ತ ಎಲ್ಲಿ ಹೊರಟೆ?” +“ನಂ ಮನೆಗೆ. ” +“ಬಾದಶಹರು ಕರೆದರೆ‌ಒದು ಹೇಳಿದೆಯಲ್ಲ. ” +“ಅಲ್ಲಾ ಬಡ ಬಾದಶಾಹ್ ಹೈ. ಕೌನ್ ಜಾನತ ಉಸಕಾ ಖೇಲ್. ” +ಆಗ ಚಕ್ಕನೆ ಮಿಯಾರಿಗೆ ಹೊಳೆದಂತಾಯಿತು. +“ನಿನ್ನೆ ನೋಡಿದ ನಿನ್ನ ಮಗುಗೆ ಈಗ ಹೇಗಿದೆ?” +“ಅದು ನನ್ನ ಮಗು ಅಲ್ಲ. ನಿಮ್ಮ ಮಗು. ಬಿಲಾಸಖಾನ!” +“ನಿನ್ನೆ ಯಾಕೆ ಹೇಳಲಿಲ್ಲ?” +“ನಿಮ್ಮ ತಾಯಿ, ನಿಮ್ಮ ಹೆಂಡತಿ, ನನಗೆ ಆಣೆ ಹಾಕಿ ನನ್ನ ಬಾಯಿ ಕಟ್ಟಿದರು. ” +“ನಿನ್ನೆ ನಿಮ್ಮ ಮನೆಯಲ್ಲಿ ರಾತ್ರಿಯೆಲ್ಲಾ ಎದ್ದು ಕುಳಿತಿದ್ದಳಲ್ಲಾ. ” +“ಅವರು ಹಮೀದಾಬಾನು. ದಿಲ್ಲಿಗೆ ಒಂದು ವಾರದ ಕೆಳಗೆ ಕರೆದುಕೊಂಡು ಬಂದೆ. ” +ಮಿಯಾ ಗಂಭೀರರಾದರು. +“ಈಗ ಹೇಗಿದ್ದಾನೆ, ಬಿಲಾಸಖಾನ?” +“ಬೆಳಗಿನ ಜಾವಕ್ಕೆ ಬೆವರು ಬಂದಿತ್ತು. ಆದರೆ ನಾಡಿ ಮಂದವಾಗಿದ್ದವು. ” +ಮಿಯಾರಿಗೆ ನೆಲವೇ ಕುಸಿದಂತಾಯಿತು. ಕ್ಂಗೆಟ್ಟರು. ಒಮ್ಮೆಲೆ ಮುದುಕರಾದಂತೆ ಆದರು. ಸೀದರು. ಕಣ್ಣಿನಲ್ಲಿ ಧಾರಾಕಾರವಾಗಿ ಹರಿಯತೊಡಗಿತು. +“ಮನುಷ್ಯನು ಮನುಷ್ಯನಿಗೆ ಇಷ್ಟು ನಿರ್ದಯತೆ ತೋರಿಸಬಾರದು. . . ” +“ಯಾರು ಯಾರಿಗೆ ನಿರ್ಧಯತೆ ತೋರಿದರು?” +ಮಿಯಾ ಮೂಕರಾದರು. +“ಕೌನ ಜಾನತಾ ಉಸಕಾ ಖೇಲ್?” ಎಂದ ರಹಮತ್. +ಟಂಗಾ ಮನೆಗೆ ಮುಟ್ಟುವಷ್ಟರಲ್ಲಿ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ರೋದನ ಕೇಳಿಸಿಕೊಂಡಿತು. +ಬಿಲಾಸಖಾನ ಅಸುದೊರೆದು ಕಾಲು ಗಂಟೆಯಾಗಿತ್ತು. +ಒಂದು ಮೂಲೆಯಲ್ಲಿ ಅಳುತ್ತ ಹಮೀದಾಬಾನು, “ಇವನಿಗಾಗಿ ನಾನು ಬದುಕಿದ್ದೆ. ಅಲ್ಲಾ ಇವನನ್ನು ಸೆಳೆದೊಯ್ದ. ನಾನು ಏತಕ್ಕಾಗಿ ಬದುಕುವುದು? ಕೆರೆ ಬಾವಿ ಪಾಲಾಗುತ್ತೇನೆ. ಗಂಗಾಮಾತೆಯಂತೂ ಇದ್ದೇ ಇದ್ದಾಳೆ. ಬಿಡಿರಿ ನನ್ನನ್ನು’ ಎಂದು ರಹಮತ್ ಖಾನನ ಪತ್ನಿ ಮಾಮೂಲಾನ್ ಕೈಯಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಳು. ಮಿಯಾ ಬಂದಕೂಡಳೇ ತನ್ನ ರೋದನ ಬಿಟ್ಟು ಮೂಲೆಯಲ್ಲಿ ಹೋಗಿ ನಿಂತಳು. +ಒಳಗೆ ಬಂದು ತಾನು ಹತ್ತು ವರ್ಷ ಕಾಣದ ಮಗು ಬಿಲಾಸಖಾನನನ್ನು ನೋಡಿದರು. +ತಮ್ಮೇದುರೇ ಕುಳಿತು, ತಮ್ಮ ಕರುಳಿಗೆ ತನ್ನ ಅಸ್ಫುಟ ಅಂತರಂಗದ ಕರೆಯನ್ನು ಮೂಕವಾಗಿ ಮಿಡಿಯುವಂತೆ ಮಾಡಿದ ಬಾಲಕ. +ಅವನನ್ನು ಎತ್ತಿ ತೊಡೆಯಮೇಲೆ ಕರಕ್ಂಳ್ಳಲು ಪ್ರಯತ್ನಿಸಿದರು. ಹೆಣ ಭಾರವಾಗಿತ್ತು. ಅಲುಗಾಡಲೊಲ್ಲದು. +ಹದಿನಾರು ವಯಸ್ಸು. ಹನ್ನೆರಡು ವರ್ಷದ ಕೃಶ ಆಕ್ರುತಿ. . . ತಮ್ಮ ಎದುರೇ ಸಭೆಯಲ್ಲಿ ಕುಳಿತು, ಹೊರಗಿನ ಮೌನಾಗಿ ತಮ್ಮ ಅಂತರಂಗವನ್ನು ಕಲಕಿದ ಬಾಲಕ. ಇನ್ನೂ ಸಭೆಯಲ್ಲಿ ಕುಳಿತು ಅಭಿಮಾನದಿಂದ ತಂದೆಯನ್ನೇ ನಿರುಕಿಸುತ್ತ ಕೂತಂತೆ ಭಾಸವಾಗಿ, ಮಿಯಾ ಅವನ ಮೇಲೆ ಕುಪ್ಪಳಿಸಿದರು. ಆದರೆ ದೇಹ ಕಾಟಿಗೆ ಮೊಳೆ ಬಡಿದಂತೆ ಎಳ್ಳಷ್ಟೂ ಅಲುಗಲಿಲ್ಲ. +ಆಗ ಮಾಮೂಲಾ ಬೇಗಂ ಹೇಳಿದಳು: ಪ್ರಾಣ ಹೋಗುವ ಮೊದಲು ಬಿಲಾಸಖಾನ ಕಣ್ಣು ತೆರೆದು ಕೇಳಿದ:’ಬಾಬಾ ಎಲ್ಲಿ? ಅವರ ಹಾಡು ಕೇಳಬೇಕಾಗಿದೆ’ ಎಂದು. ಈಗ ಹಾಡಿರಿ. ನಿಮ್ಮ ಹಾಡಿನಲ್ಲಿ ಪ್ರಾಣಶಕ್ತಿ ಇದ್ದರೆ ಅವನು ಪುನ: ಜೀವಂತನಾಗಲೂಬಹುದು. +ವ್ಯರ್ಥ ಆಸೆ. ಆದರೆ ಆಸೆಗೆ ಕೊನೆಯೆಲ್ಲಿ? +ಕಣ್ಣು ತಿಕ್ಕಿಕೊಳ್ಳುತ್ತ ಮಿಯಾ ತಾನಸೇನ ಎದ್ದು ಅವನ ಹಾಸಿಗೆಯ ಮೇಲೆಯೇ ಕುಳಿತರು. +ರಹಮತಖಾನನ ಮನೆಯ ಸಣ್ಣ ತಾನಪುರಾ ಎತ್ತಿಕೊಂಡರು. +ಬೆಳಗಿನ ಜಾವವಾಗತೊಡಗಿತ್ತು. +ಶ್ರುತಿಮಾಡಿ, ತೋಡಿ ರಾಗದ ಆಲಾಪನೆ ಮಾಡತೊಡಗಿದರು. +ಮೊದಲಿನ ಎರಡು ಸ್ವರ ಮಾತ್ರ ತೋಡಿಯಂತೆ ಹುಟ್ಟಿದವು. +ಉಳಿದ ಎಲ್ಲ ಸ್ವರಗಳು ಬೇರೆಬೇರೆಯಾಗಿದ್ದವು. ಅಳಲನ್ನೇ ತೋಡಿಕೊಂಡು ಹೇಳುತ್ತಿದ್ದವು. ಅದಕ್ಕೆ ತಕ್ಕಂತೆ ಶಬ್ದಗಳೂ ಹುಟ್ಟಿಕೊಂಡವು. +ರಾಗ ಬಿಲಾಸಖಾನಿ ತೋಡಿ ಜನ್ಮ ತಾಳಿತು. +ಮಿಯಾ ತಾನಸೇನರ ಮೊದಲ ಸ್ವತಂತ್ರ ರಾಗ; ಮೊದಲ ಸ್ವತಂತ್ರ ಕೃತಿ. +ಬಿಲಾಸಖಾನ ಜೀವಂತವಾಗಿ ಮತ್ತೆ ಏಳಲಿಲ್ಲ. +ಅವನ ಶವವು ಹೂವಿನಂತೆ ಹಗುರವಾಗಿ ಮಿಯಾ ತಾನಸೇನರ ಕೈಯಲ್ಲಿ ಆಡತೊಡಗಿತು. +ಮಿ‌ಆರ ಮನೆಯ ಹೆಣ್ಣುಮಕ್ಕಳೆಲ್ಲ ಹಟದವರು. ಒಂದೇ ಪಟ್ಟಿನವರು. ಬಿಲಾಸಖಾನ್ ಕೂಡ ಹಾಗೇ ಆದ. ಹಮೀದಾಬಾನು ಮರುದಿನವೇ ಅತ್ರೌಳಿಗೆ ಹೊರಟುಹೋದಳು. , ಮಿಯಾ ತಾನಸೇನರ ಜೊತೆಗೆ ಒಂದೂ ಮಾತಿಲ್ಲದೆ. +ಟಿಪ್ಪಣಿ +(೧) ತಾನಸೇನರ ಜೊತೆಗೇ ಶ್ರೇಷ್ಠ ವಾಗ್ಗೇಯಕಾರರಾದ ಅದಾರಂಗ-ಸದಾರಂಗರು ಅಣ್ಣತಮ್ಮಂದಿರು. ದಕ್ಷಿಣದಿಂದ ವಲಸೆ ಹೋದ ಗೋಪಾಲ ನಾಯಕ ಅಕ್ಬರ ಬಾದಶಹನ ದರಬಾರದಲ್ಲಿಯೇ ಇದ್ದರು. ಗೋಪಾಲ ನಾಯಕರಂತೂ ’ನಾಯಕೀ ಕಾನಡಾ’ ಎಂಬ ಹೊಸ ಶ್ರೇಷ್ಠ ರಾಗದ ನಿರ್ಮಾಪಕರು. ಅದಾರಂಗ-ಸದಾರಂಗರ ಕೃತಿಗಳು ಈಗ್ಯೂ ಹಾಡಲ್ಪಡುತ್ತವೆ. ಹಿದೂಸ್ತಾನೀ ಗಾಯಕಿಯಲ್ಲಿ ದೊಡ್ಡ ಮೊತ್ತದ ಕೃತಿಗಳು ಇವರವೇ. ಆದರೆ ಇವರನ್ನು ಬೇಡಲು ತಾನಸೇನರಿಗೆ ಮರ್ಯಾದೆ ಸಾಲಲಿಲ್ಲ. ಸದ್ಯಕ್ಕೆ ಪ್ರಚಲಿತ ಕೆಲವು ರಾಗಗಳು ಮಿಯಾ ತಾನಸೇನರ ಹೆಸರಿಗೆ ಸ್ಂಲಗ್ನವಾಗಿವೆ. ಮಿಯಾಕಿ ತೋಡಿ, ಮಿಯಾ ಮಲ್ಹಾರ, ಮಿಯಾ ಸಾರಂಗ ಇವು ತಾನಸೇನ ರಚಿಸಿದ ರಾಗಗಳಲ್ಲ. ಮೂಲ ರಾಗಗಳೇ. ದರ್ಬಾರಿನಲ್ಲಿ ಹಾಡಿ ಅವುಗಳ ಸೌಂದರ್ಯವನ್ನು ತೋರಿಸಿಕೊಡುವದರಲ್ಲಿ ಮಿಯಾ ತಾನಸೇನನ ಕೆಲಸ ಹಿರಿದು. ಎರದು ತಂಬೂರಿಗಳಿಗೂ ಸಾಲದ ಕಂಠ. ಗಂಭೀರವಾಗಿ ದಶದಿಕ್ಕುಗಳನ್ನೂ ನಿನದಿಸುವ ಧ್ವನಿಯ ಜವಾರಿ, ಬೀನ(ರುದ್ರವೀಣೆ)ಗೆ ಸರಿಸಮಾನವಾದ ನೊಂತೊಂ ಆಲಾಪ, ಒಂದೊಂದೂ ಸ್ವರದ ಬಿಲಂಪತ ಕೆಲಸ, ಇಂಥ ವೈಶಿಷ್ಟ್ಯಗಳಿಂದ ಮಿಯಾ ತಾನಸೇನ ಮಹಾರಾಜರು ಬೀನನ್ನು ಕೂಡ ಹಿಂದಕ್ಕೆ ಒಗೆದುಬಿಟ್ಟರು. ಈ ವಿಷಯವನ್ನು ನನ್ನ ಅಪ್ರಕಟಿತ “ದಿ ಕಾಂಟ್ರಿಬೂಷನ್ಸ್ ಆಫ್ ಬೀನ್ ಅಂಡ್ ಸಿತಾರ್ ಟು ದಿ ಮೇಕಿಂಗ್ ಆಫ್ ಹಿಂದೂಸ್ತಾನೀ ಘರಾಣಾಸ್” ಲೇಖನದಲ್ಲಿ ಚರ್ಚಿಸಿದ್ದೇನೆ. ಈಗಿರುವ ಗಾಯಕಿ ಘರಾಣಾಗಳು ಮಿಯಾ ತಾನಸೇನರ ಪರಿಪೂರ್ಣ ಗಾಯಕಿಯ ಒಂದೊಂದು ಅಂಗವೆಂದೂ, ಬೀನಿನಲ್ಲಿ ಹೊರಡುವ ಎಲ್ಲ ಕೆಲಸಗಳನ್ನು ಕಂಠದಿಂದ ಅದರ ಪ್ರಚಾರವನ್ನು ಹಿಮ್ಮೋರು ಮಾಡಿದರೆಂದು ಪ್ರತಿಪಾದಿಸಿದ್ದೇನೆ. ಮಿಯಾ ತಾನಸೇನರು ಹಾಡಿದರೆಂದು ಹೆಸರಾದ ಹಿಂದೂಸ್ತಾನಿ ರಾಗಗಳನ್ನು – ಮಲ್ಹಾರ, ಸಾರಂಗ, ತೋಡಿ – ಪರೀಕ್ಷಿಸಿ ನೋಡಿದರೆ, ಮಿಯಾ ತಾನಸೇನರ ಧ್ವನಿ ಹೇಗಿರಬಹುದೆಂಬುದನ್ನು ನಿರ್ಣಯಿಸಲಿಕ್ಕೆ ಸಾಧ್ಯ. ಮೂರೂ ಗಂಭೀರ ರಾಗಿಣಿಗಳು. ಅವುಗಳ ಗಂಭೀರ ನಿಸ್ವನಗಳನ್ನು ಹುಟ್ಟಿಸಲಿಕ್ಕೆ ಯಾವ ಕಂಠ ಬೇಕು ಎಂಬುದನ್ನು ಕಲ್ಪಿಸಿದರೆ, ಅವರ ಗಾಯಕಿಯ ಗುಟ್ಟು ತಿಳಿಯುವದು. ಇನ್ನು ಕೆಲವು ಧ್ರುಪದ-ಧಮಾರಗಳನ್ನು ಅವರು ಹಾಡಿದರೆಂದು ತಿಳಿಯಲಾಗುತ್ತಿದೆ. ಅವುಗಳ ಶಬ್ದಸೌಷ್ಠವ-ಅರ್ಥಗೌರವಗಳೂ ಅಷ್ಟಕ್ಕಷ್ಟೇ. ’ಶಾಃಅ ಅಕಬರ ಛತ್ರಪತಿ ಮಹಾಭಾಗ, ಮಹಾಜ್ಞಾನಿ, ಮಹಾಯೋಗಿ’ – ಇನ್ನೂ ಇಪ್ಪತ್ತರಷ್ಟು ಮಹಾಗಳು ಬರುತ್ತವೆ, ‘ಸೋ ಸೋ ಮುಬಾರಕ್’ದಂತೆಯೇ. ಈ ಚೀಜುಗಳನ್ನು ಅದಾರಂಗ-ಸದಾರಂಗ ಚೀಜುಗಳಿಗೆ ಹೋಲಿಸಿದರೆ ಅರ್ಥದಮಟ್ಟಿಗೆ ತಾನಸೇನರು ಕವಿಗಳಲ್ಲವೆಂದೇ ಹೇಳಬೇಕು. ಅವರ ಮಹತ್ವ ಹಿಂದೂಸ್ತಾನಿ ಗಾಯಕೀ ಶೈಲಿಯ ಪ್ರಾಣಪ್ರತಿಷ್ಠಾಪನೆಯಲ್ಲಿ ಮಾತ್ರ. +(೨) ಈ ವಿಶೇಷ ಸಂಗತಿಯನ್ನು ನನಗೆ ಸೋದಾಹರಣಪೂರ್ವಕವಾಗಿ ಉಸ್ತಾದ ಫರೀದುದ್ದೀನಖಾನ್ ಡಾಗರ್ ಅವರು ತಿಳಿಸಿದರು. ಭರತ ಮುನಿಯ ಮೂಲ ಶ್ಲೋಕಗಳನ್ನೂ ಹೇಳಿದ್ದರು. ಇದರ ಬಗ್ಗೆ ವಿಶೇಷ ಸಂದರ್ಶನದ ವರದಿಯನ್ನು ೧೯೭೯ನೇ ಇಸ್ವಿಯಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ. ಕುತೂಹಲವಿದ್ದವರು ನೋಡಬಹುದು. ಖಾನ್ ಸಾಹೇಬರು ಆಗ ನನ್ನೆದುರು ಪ್ರದರ್ಶಿಸಿದ ರಾಗಗಳು ಎರಡು – ’ಬಿಹಾಗ’ ಮತ್ತು ’ದರಬಾರೀ ಕಾನಡಾ’. ಅವುಗಳ ಷಡ್ಜಗಳಲ್ಲಿದ್ದ ಅಂತರವನ್ನು ಎತ್ತಿ ತೋರಿಸಲಿಕ್ಕೆ ಅವರು ಒಂದು ಬಿಹಾಗದ ವರ್ಣ, ಒಂದು ದರಬಾರಿಯ ವರ್ಣ ಹಾಡಿ ತೋರಿಸಿದರು. ಎರಡೂ ಸ್ಪಷ್ಟವಾಗಿ ವಿಭಿನ್ನವಾಗಿದ್ದವು. ’ಗುರು ಮುಖೇನ’ ಎನ್ನುವದು ಇದಕ್ಕಾಗಿಯೇ ಎಂದು ವಿವರಿಸಿದರು. +***** +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ಮಧ್ಯಾಹ್ನ ಒಂದೂವರೆ ಗಂಟೆಯ ಬೆಂಗಳೂರಿನ ಬಿಸಿಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೇರಿದ್ದ ಬದುಕಿನ ನಾನಾ ಸ್ತರದ ಜನರ ಅಂತರ್ಜಲವನ್ನ ಅವರವರ ಮೇಲೆ ಪ್ರೋಕ್ಷಣೆ ಮಾಡಿತ್ತು. ಕಪ್ಪುಕಲ್ಲುಬೆಂಚಿನ ಮೇಲೆ ಕುಳಿತಿದ್ದ ಹಸಿರು ಸೀರೆಯ ಹೆಂಗಸಿನ ಕಂಕುಳಲ್ಲಿರುವ […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_583.txt b/Kannada Sahitya/article_583.txt new file mode 100644 index 0000000000000000000000000000000000000000..1da6e07b30c7114e03d09c962e34ae8dad78c065 --- /dev/null +++ b/Kannada Sahitya/article_583.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ ದಿನ ಬೇಚೈನುಗೊಳಿಸಿತು. +ಗಿರಿಯಣ್ಣ ನಮ್ಮ ಊರಿನ ಯಃಕಶ್ಚಿತ್ ವ್ಯಕ್ತಿ. ಅವನು ಕಳುವು ಮಾಡುತ್ತಾನೆ ಎನ್ನುವ ಮಾತು ಸಣ್ಣ ಮಗುವಿಗೂ ಗೊತ್ತು. ಅವನನ್ನು ಉಳಿದ ಅನೇಕ ಗಿರಿಯಣ್ಣರಿಂದ ಬೇರ್ಪಡಿಸಲು ‘ಕಳ್ಳ ಗಿರಿಯಣ್ಣ’ ನೆನ್ನುವುದೇ ಪರಿಪಾಠ. ಅವನು ಸತ್ತಾಗ ಸ್ವತಃ ಅವನ ಹೆಂಡತಿ ಮಕ್ಕಳು ಅತ್ತರೋ ಇಲ್ಲವೋ ಎಂದು ಸಂಶಯ ಪಟ್ಟರೆ ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೂ ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತಿನ ಅತೀವ ಸಹಜತೆ, ನಿರ್ವಿಕಾರತೆಗಳು ನನ್ನನ್ನು ಇಡೀ ದಿನ ಕಾಡಿದವು. ಉದಾಸೀನಗೊಳಿಸಿದವು. ಇದಕ್ಕೆ ಕಾರಣ ನಾನು ಗಿರಿಯಣ್ಣನನ್ನು ನೋಡದೇ ಅನೇಕ ವರುಷಗಳಾದುದೇ ಇರಬೇಕು. ದೂರ ಭೂತಕಾಲದಲ್ಲಿ ಮರೆಯಾಗುತ್ತಲಿರುವ ಅನೇಕ ಸಂಗತಿಗಳ ಬಗ್ಗೆ ನಮಗೆ ಇದೇ ಬಗೆಯ ಅನುಭವವೊಂದು ಬರದೆ ಇರದು. ಅಂದಿನ ಅತಿ ಕ್ಷುಲ್ಲಕ ಘಟನೆಗಳೂ ಒಂದು ರಮ್ಯತೆಯ ಬಣ್ಣ ತಾಳುತ್ತವೆ. ನಮ್ಮ ಕಡು ವೈರಿಗಳ ವಿಷಯದಲ್ಲಿಯೂ ಸಹಾನುಭೂತಿ ಮೊಳೆಯುತ್ತದೆ. +ಗಿರಿಯಣ್ಣನ ಕಳುವಿನ ರೀತಿ ನೋಡಿದರೆ ‘ಕಳ್ಳ’ ನೆಂಬ ಬಿರುದು ಧರಿಸಲೂ ಅವನು ಯೋಗ್ಯನಲ್ಲ ಎನಿಸುವುದು. ನೋಡಲಿಕ್ಕೇನೋ ಆರು ಫೂಟಿನ ಆಜಾನುಬಾಹು. ಕಪ್ಪು ಬಣ್ಣ, ಮೀಸೆ ನೋಡಿದರೇ ಹೆದರಿಕೆ ಬರಬೇಕು. ತಲೆಯ ಮೇಲೆ ಗೋಪಾದದಷ್ಟು ಚಂಡಿಕೆ. ಸೊಂಟಕ್ಕೆ ಬೆಳ್ಳಿಯ (ಬಿಳಿಯವೆಲ್ಲವೂ ಬೆಳ್ಳಿಯಲ್ಲವೇನೋ!)ನೇವಾಳ. ಅದುವೆ ಆಧಾರ- ಮೈಮೇಲಿನ ಒಂದೇ ಒಂದು ಅರಿವೆಯಾದ ಕಚ್ಚೆಗೆ. ಆದರೆ ನಮ್ಮ ಊರಿನಲ್ಲಾಗಲೀ ಸುತ್ತಲಿನ ಹಳ್ಳಿಗಳಲ್ಲಾಗಲೀ ಆದ ದೊಡ್ಡ ದೊಡ್ಡ ಕಳವುಗಳಲ್ಲಿ ಗಿರಿಯಣ್ಣನ ಭಾಗವಿಲ್ಲವೆನ್ನುವುದು ಸರ್ವವಿದಿತವಾದುದು. ಕನ್ನಹೊಡೆದಾಗಲೀ ಯಾರ ಜೀವಕ್ಕೆ ಹಾನಿಮಾಡಿಯಾಗಲೀ ಗಿರಿಯಣ್ಣನಿಗೆ ಗೊತ್ತೇ ಇರಲಿಲ್ಲ. ಎಂತಲೇ ಕಳ್ಳನೆಂದು ಖ್ಯಾತನಿದ್ದೂ ಪೋಲೀಸ್ ಚೌಕಿಯನ್ನು ಒಮ್ಮೆಯೂ ಕಾಣಲಿಲ್ಲ. +ಗಿರಿಯಣ್ಣನ ಕಳವಿಗೆ ಎರವಾದ ವಸ್ತುಗಳೆಂದರೆ ಹಳ್ಳಿಯ ತೆಂಗು, ಅಡಿಕೆ, ಬಾಳೆ ಗೊನೆಗಳು ಹಲಸು, ಬೇಣದ ಮೇಲಿನ ಮೊಗೆಯೋಳಿಯೊಳಗಿನ ಮೊಗೆಕಾಯಿಗಳು, ಮಳೆಗಾಲದಲ್ಲಿ ಅಂಗಳದಲ್ಲಿ ಹಾಕಿದ ಸವತೆಕಾಯಿ, ಕುಂಬಳಕಾಯಿ ಮೊದಲಾದವುಗಳು. +ಈ ಕಳವಿನಲ್ಲಿಯ ಅವನ ಪ್ರಾವೀಣ್ಯ ಮಾತ್ರ ಅಚ್ಚರಿಗೊಳಿಸುವಂತಹುದು. ಏಳೆಂಟು ಆಳೆತ್ತರದ ತೆಂಗಿನ ಮರಗಳನ್ನು ಕತ್ತಲಲ್ಲೇ ಏರಿ ಐದಾರು ಕಾಯಿಗಳ ಹಿಂಡಿಗೆಯನ್ನು ಕೈಯಲ್ಲೇ ಹಿಡಿದು ಇಳಿಯುತ್ತಿದ್ದ. ಪ್ರತ್ಯಕ್ಷ ಯಾರೂ ನೋಡಿರದಿದ್ದರೂ ತೆಂಗಿನಕಾಯಿಗಳನ್ನು ಕಳುವಾಗ ಒಮ್ಮೆಯೂ ಸಿಕ್ಕಿಬೀಳದಿರಲಿಕ್ಕೆ ಇದೇ ಕಾರಣವೆಂದು ಅನೇಕರ ಊಹೆ. ಇಲ್ಲದಿದ್ದರೆ ಅಷ್ಟು ಎತ್ತರದ ಮೇಲಿನಿಂದ ಕಾಯಿ ಬಿದ್ದ ಆವಾಜಿಗೆ ಜಗಲಿಯ ಮೇಲೆ ಮಲಗಿದವರೂ ಎಚ್ಚರವಾಗಬೇಡವೆಂದರೆ! ಅಡಿಕೆಯ ವಿಷಯವೂ ಅದೇ. ಬಾಳೆಯ ಗೊನೆಗಳು ಮಾತ್ರ ನೀವು ನಾಳೆ ಕೊಯ್ಯಬೇಕೆಂದಿದ್ದರೆ ಸರಿಯಾಗಿ ಅವು ಇಂದೇ ಕಣ್ಮರೆಯಾಗುತ್ತಿದ್ದವು. ಯಾವ ಹಿತ್ತಲಲ್ಲಿ ಯಾವ ದಿನ ದಾಳಿ ಮಾಡಬೇಕು ಎನ್ನುವುದರ ಯೋಜನೆ ತಿಂಗಳ ಆರಂಭದಲ್ಲಿಯೇ ನಿಶ್ಚಯಿಸಿದಂತೆ ಇರುತ್ತಿತ್ತು. ತನ್ನ ಭಕ್ಷ್ಯಗಳ ಖಾನೇಸುಮಾರಿಯನ್ನು ಅವನು ಹೇಗೆ ಯಾವಾಗ ಮಾಡುತ್ತಿದ್ದನೆಂದು ದೇವರೇ ಬಲ್ಲ. ಏಕೆಂದರೆ ದಿನವಿಡೀ ಅವನು ತನ್ನ ಮನೆಗೆಲಸದಲ್ಲೇ ನಿರತನಾದುದನ್ನು ಕಾಣಬಹುದಿತ್ತು. +ಒಂದೇ ಮನೆಯವರು ಅವನ ಕಳವಿನಿಂದ ಒಮ್ಮೆಲೇ ಎರಡು ಸಲ ಹಾನಿಗೊಳಗಾದುದು ಅಪರೂಪ. ಮೊದಲ ಹಾನಿಯ ದುಃಖ, ಸಿಟ್ಟು ಪೂರ್ಣ ಮರೆತಾಗಲೇ ಎರಡನೇ ಹಾನಿಯ ಆಗಮನ. ಅದರಂತೆಯೇ ಅವನ ಕಳವಿಗೆ ಎರವಾಗದ ಮನೆಯೇ ಆ ಊರಿನಲ್ಲಿಲ್ಲ ಎನ್ನುವುದೂ ಸತ್ಯ. ಅವನ ಕಳವಿನ ಬಾಧೆಯ ಭಾರವನ್ನು ಇಡೀ ಹಳ್ಳಿಯೇ ಹಂಚಿಕೊಂಡಿತ್ತು-ಎನ್ನಿರಲ್ಲ ಬೇಕಾದರೆ. ಎಂತಲೇ ಅವನನ್ನು ಶಿಕ್ಷಿಸಬೇಕು ಎನ್ನುವ ವಿಚಾರವನ್ನು ಯಾರೂ ಅಷ್ಟು ಕಳಕಳಿಯಿಂದ ಮಾಡಿದಂತಿರಲಿಲ್ಲ. +ಕಳವಿನ ಹಾನಿಯಂತೆ ಅದರ ಲಾಭದಲ್ಲಿಯೂ ಆ ಹಳ್ಳಿಯವರಿಗೆ ಸಮಪಾಲು ಇದ್ದತಿಂತ್ತು. ಕಳವಿನ ವಸ್ತುಗಳು ಗಿರಿಯಣ್ಣನ ಸ್ವಂತ ಉಪಯೋಗಕ್ಕಿರದೇ ಮಾರಾಟದ ಸಲುವಾಗಿ ಇದ್ದುದರಿಂದ ಅವು ಒಬ್ಬರ ಕೈಬಿಟ್ಟು ಇನ್ನೊಬ್ಬರ ಕೈ ಸೇರುತ್ತಿದ್ದವು ಅಷ್ಟೇ. ತಿಂಗಳುಗಟ್ಟಲೆ ನೀರು, ಗೊಬ್ಬರ ಹಾಕಿ ಬೆಳೆಸಿದ ರಸಬಾಳೆ ಗಿಡದ ಮೊದಲ ಗೊನೆಯನ್ನೇ ಕಳಕೊಂಡು ಹಳಹಳಿಸುವ ಸುಬ್ರಾಯ ಶಾನುಭಾಗರ ಪಾಲಿಗೆ ಸಣ್ಣಪ್ಪನಾಯ್ಕರ ಹಿತ್ತಲದ ಅತ್ಯಂತ ರುಚಿಕರವೆಂದು ಪ್ರಸಿದ್ಧವಿದ್ದ ಅವರ ‘ದಣಪೇ ಮರ’ದ ಹಲಸಿನ ಹಣ್ಣು ಸಿಗುತ್ತಿತ್ತು. ಎರಡು ರೂಪಾಯಿ ಕೊಟ್ಟರೂ ಸಿಗದ ಹಣ್ಣು ಎಂಟು ಆಣೆಗೆ! ಪುರುಷ ಗುನಗನ ಅಂಗಳದಲ್ಲಿಯ ಕೆಂದಾಳೇ ಮರದ ತೆಂಗಿನಕಾಯಿಯ ಹಿಂಡು ರಾಮ ಪೈಗಳ ಪಾಲಿಗೆ. ರಾಮ ಪೈಗಳ ಬೇಣದ ಮೊಗೇಕಾಯಿಗಳು ಸಾಂತಯ್ಯ ಕಾಮತರ ಜಗಲಿಯ ಮೇಲೆ ತೂಗುತ್ತಿದ್ದವು. ಒಮ್ಮೊಮ್ಮೆ ದೊಡ್ಡ ಕಳವಾದರೆ ಕಳವಿನ ಒಡವೆ ಸೀಮೋಲ್ಲಂಘನ ಮಾಡುತ್ತಿತ್ತು. +ಈ ಕಳವಿಗೆ ಕಾರಣ? ಗಿರಿಯಣ್ಣನ ಮನೆಯ ಸ್ಥಿತಿಯಂತೂ ಅಷ್ಟು ಕೆಟ್ಟದ್ದಿರಲಿಲ್ಲ. ನಮ್ಮ ಕೇರಿಯ ಕೊನೆಯಲ್ಲೇ ಅವನ ಮನೆ. ಸಣ್ಣದಾದ ಹೊಲ ಹಾಗೂ ಹಿತ್ತಲು ಮೂಲಗೇಣಿಗಿವೆ. ಹಿಂಡುವ ಎರಡು ಎಮ್ಮೆಗಳಿವೆ. ಊರಿನಲ್ಲಿ ಹಾಲಿನ ಉಚಾಪತಿಯಿದೆ. +ಹಳ್ಳಿಯ ಐದಾರು ಮನೆಗಳಿಗೆ ಪ್ರತಿದಿನವೂ ಬೆಳಿಗ್ಗೆ ಸಂಜೆಗೆ ಹಾಲು ಕೊಟ್ಟು ಬರುವ ಕೆಲಸ ಗಿರಿಯಣ್ಣನಿಗೇ ಸಂದುದಾದರೂ ತಿಂಗಳ ಕೊನೆಗೆ ಹಣದ ವಸೂಲಿಗೆ ಬರುವುದು ಗಿರಿಯಣ್ಣನ ಹೆಂಡತಿಯೇ. “ಈ ಕೋಣನ ಕೈಯಲ್ಲಿ ರೊಕ್ಕ ಉಳಿದರಲ್ಲವೇ? ಆ ಹೆಂಗಸೆಂದು ಅವನ ಸಂಸಾರ. ಇಲ್ಲವಾದರೆ ಆ ಬಡ ಮಕ್ಕಳಿಗೆ ದೇವರೇ ಗತಿ.” ಗಿರಿಯಣ್ಣನಿಗೆ ದೇವರು ಕೊಟ್ಟ ಐದಾರು ಸಣ್ಣ ಸಣ್ಣ ಮಕ್ಕಳಿವೆ. ಇಷ್ಟೆಲ್ಲ ಮಕ್ಕಳ ಸಂಸಾರ “ಸುರಳೀತ” ಸಾಗಿಸಿಕೊಂಡು ಹೋಗುವ ಭಾರವೆಲ್ಲ ಗಿರಿಯಣ್ಣನ ಹೆಂಡತಿಯ ಮೇಲೆಯೇ. ಸಂಸಾರ ಸಾಗಿಸಿಕೊಂಡು ಹೋಗುವ ಲಕ್ಷಣವೇ ಗಿರಿಯಣ್ಣನಿಗಿರಲಿಲ್ಲ. ಕೈಯಲ್ಲಿ ಬಂದ ನಾಲ್ಕು ಕಾಸನ್ನು ಎಲ್ಲಿಯಾದರೂ ಒಬ್ಬ ಚಾ ಅಂಗಡಿಯವನ ಎದೆಯ ಮೇಲೆ ಹಾಕಿಯಾನೇ ಹೊರತು ಸಂಸಾರದ ಭಾರಕ್ಕೆ ಹೆಗಲೊಡ್ಡುವ ತಲೆಯೇ ಅವನಿಗಿರಲಿಲ್ಲ. ಹೊಲವೆಂದೋ ಮನೆಮಾರೆಂದೋ ಎಲ್ಲವನ್ನೂ ಹೆಂಡತಿಯೇ ನೋಡಿಕೊಳ್ಳಬೇಕು. ಎಂತಲೇ ಗಿರಿಯಣ್ಣನ ಹೆಂಡತಿಯ ವಿಷಯವಾಗಿ ಅನೇಕರಿಗೆ ಸಹಾನುಭೂತಿಯೂ ಅವಳ ಚಾತುರ್ಯದ ಬಗ್ಗೆ ಕೌತುಕವೂ ಎನಿಸುತ್ತಿದ್ದವು. ಹಲವು ಬಾರಿ ಕಳವು ಮಾಡುವಾಗ ಸಿಕ್ಕುಬಿದ್ದರೂ ಪಟೇಲರು ಬರಿಗೈಯಿಂದ ಎರಡು ಹೊಡೆತ ಕೊಟ್ಟು, ಇಲ್ಲವೇ ಪೋಲೀಸ್ ಠಾಣೆಗೆ ಕಳಿಸುವೆನೆಂದು ಬೆದರಿಸಿ ಬಿಟ್ಟುಕೊಟ್ಟಿದ್ದರು, ಅವನ ಹೆಂಡತಿಯನ್ನೋ ಮಕ್ಕಳ ಮೋರೆಯನ್ನೋ ನೋಡಿ. “ಆ ಕತ್ತೆ ಸೂ….ಮಗನಿಗೆ ಬುದ್ಧಿಯಿದ್ದರಲ್ಲವೇ? ನಾಯಿಯ ಬಾಲ ನಳಿಗೆಯಲ್ಲಿ ಹಾಕಿದಷ್ಟೇ ಹೊತ್ತು” ಎಂದು ತಿಳಿದು. ಒಟ್ಟಿನಲ್ಲಿ ಇದೆಲ್ಲದರ ಪರಿಣಾಮವಾಗಿ ಚಹಾ ಕುಡಿಯಲೂ ಗಿರಿಯಣ್ಣನ ಕೈಯಲ್ಲಿ ರೊಕ್ಕ ಉಳಿಯುತ್ತಿರಲಿಲ್ಲ. ‘ರಂಗವಿಲಾಸ’ದೊಳಗಿನ ಬಿಸ್ಕೂಟು ಅಂಬೋಡೆಯ ಜೊತೆ ಒಂದು ಕಪ್ಪು ಚಹಾ ಹಾಗೂ ದಿನಕ್ಕೊಂದು ಕಟ್ಟು ಬೀಡಿ ಇದ್ದ ಹೊರತು ಗಿರಿಯಣ್ಣನಿಂದ ಬದುಕಿ ಉಳಿಯುವುದು ಶಕ್ಯವೇ ಇರಲಿಲ್ಲ. ಅಂತೂ ಅವನ ಬಾಯ ರುಚಿಯೇ ಈ ಕಳವಿನ ಹಿಂದಿನ ಸ್ಪೂರ್ತಿಯೆಂದು ನಮ್ಮ ಊರಿನ ಅನೇಕರ ಮತ. +ತನಗೆ ಬುದ್ಧಿಯಿಲ್ಲ, ಈ ಸಂಸಾರ ಸಾಗಿಸಿಕೊಂಡು ಹೋಗಲು ತಾನು ಅಯೋಗ್ಯ ಎಂಬುದನ್ನು ಗಿರಿಯಣ್ಣನೂ ಒಪ್ಪಿಕೊಂಡಂತಿತ್ತು. ಎನ್ನುವುದಕ್ಕೆ ಅವನ ಮತ್ತು ಅವನ ಹೆಂಡತಿಯ ನಡುವೆ ಜಗಳ ನಡೆದಾಗಿನ ಅವನ ನಡತೆಯೇ ಸಾಕ್ಷಿ. +ಗಿರಿಯಣ್ಣನ ಹೆಂಡತಿ ಅಂತಿಂತಹ ಹೆಂಗಸಲ್ಲ. ಮಹಾಕಾಳಿಯ ಅವತಾರವೇ! ಮಾತಿನಲ್ಲಿ ಜಗಂಜಾಲಿ! ಅವಳ ‘ಬಾಯಲ್ಲಿ ಬೀಳುವ’ ಧೈರ್ಯ ಸಾಮಾನ್ಯರಿಗೆ ಇಲ್ಲವೇ ಇಲ್ಲ. ಅಂತಹ ಸಾಹಸಕ್ಕೆ ಬೀಳುವವರು ತಮ್ಮ ನಾಚಿಕೆ ಎಂಬುದನ್ನು ಮನೆಯ ಜಗುಲಿಯ ಮೇಲೆ ಇಟ್ಟೇ ಹೋಗಬೇಕು. +ಆ ಕೇರಿಯ ಮಕ್ಕಳಿಗೆ ತಾಯಿ, ಅಜ್ಜಿಯರು ಹೇಳುವ ಕತೆಗಳಲ್ಲಿ “ಕಾಕಣ್ಣ-ಗುಬ್ಬಕ್ಕ”ರ ಕತೆಗಿಂತ ಗಿರಿಯಣ್ಣ-ಹೆಂಡತಿಯರ ಜಗಳವೇ ಹೆಚ್ಚು ಬಾಲಪ್ರಿಯವಾಗಿತ್ತೆಂದರೆ ಅತಿಶಯೋಕ್ತಿ ಆಗಲಾರದು. ಅಳುವ ಮಕ್ಕಳನ್ನು ಸುಮ್ಮಗೊಳಿಸಲೋ ಕಾಡುವ ಮಕ್ಕಳನ್ನು ಜಗುಲಿಯಿಂದ ಓಡಿಸಲೋ ಆ ಕೇರಿಯ ತಾಯಂದಿರಿಗೆ ಈ ಜಗಳ ಅತ್ಯಂತ ಸುಲಭ ಸಾಧನವಾಗಿತ್ತು. ಪಾಗಾರವನ್ನೋ ದಣಪೆಯನ್ನೋ ಏರಿ ಕೂತು ಈ ಜಗಳವನ್ನು ನೋಡುವುದೆಂದರೆ ಮಕ್ಕಳಾದ ನಮಗೆ ತುಂಬ ಹುರುಪು. ಗಂಡನನ್ನು “ಕೋತಿ” ಎಂದೋ, “ನಿನ್ನ ಮುಸುಡಿಗೆ ಬೆಂಕಿ ಹಚ್ಚುತ್ತೇನೆ” ಎಂದೋ ಬೈಯುವ ಆ ಚಂಡಿಯ ಮುಂದೆ ಗಿರಿಯಣ್ಣ ಸುಮ್ಮನೇ ಕುರಿಯಂತೆ ನಿಲ್ಲುತ್ತಿದ್ದ-ಶುದ್ಧ ಧಡ್ಡ, ತಲೆಯೇ ಇಲ್ಲ. +ಗಂಡಹೆಂಡಿರಿಬ್ಬರಿಗೂ ನನ್ನ ತಾಯಿಯವರಲ್ಲಿ ತುಂಬ ಶ್ರದ್ಧೆ, ಆದರ. ಅವನ ಹೆಂಡತಿ ನಮ್ಮಲ್ಲಿ ಆಗಾಗ ಬಂದು ಹೋಗುವುದು ಹೆಚ್ಚು. ಮನೆಯಲ್ಲಿ ಯಾರಿಗಾದರೂ ಬೇನೆ ಬೇಸರಿಕೆಗಳಾದರೆ, ಇಲ್ಲವೇ ಉಳಿದ ಸಣ್ಣ ಪುಟ್ಟ ಅಡಚಣೆಗಳಿಗೆ ತಾಯಿಯವರೇ ನೆರವಾಗುತ್ತಿದ್ದರು. ನಮ್ಮ ಊರಲ್ಲಿ ಆಗ ದವಾಖಾನೆಗಳಿರಲಿಲ್ಲ. ಪ್ರಸಂಗ ಬಂದಾಗ ಗೋಕರ್ಣಕ್ಕೇ ಓಡಬೇಕು ಡಾಕ್ಟರನ್ನು ಕರೆಯಲು. ಸಣ್ಣಪುಟ್ಟ ಬೇನೆ ಬೇಸರಿಕೆಗಳಿಗೆ ಅಲ್ಲಿಯ ಹೆಂಗಸರು ತಮ್ಮ ಅತ್ತೆಯವರಿಂದಲೋ ತವರಿನಿಂದಲೋ ಕಲಿತುಕೊಂಡ ಗಾಂವಠೀ ಔಷಧಗಳಿಗೇ ಮೊರೆಹೋಗಬೇಕು. ಇಂತಹ ಕಷಾಯವನ್ನೋ ಕಾಧೆಯನ್ನೋ ತಯಾರಿಸುವುದರಲ್ಲಿ ನಮ್ಮ ತಾಯಿಯವರ ಕೈಗುಣ ಚೆನ್ನಾಗಿದೆಯೆಂದು ಆ ಕೇರಿಯಲ್ಲಿ ಪ್ರತೀತಿ. ಅದಕ್ಕೆಂತಲೋ ಏನೋ ಗಿರಿಯಣ್ಣ ನಮ್ಮ ಮನೆಯಲ್ಲಿನ್ನೂ ಕಳವು ಮಾಡಿರಲಿಲ್ಲ. +ಪ್ರತಿ ವರುಷದಂತೆ ಆ ವರುಷವೂ ನಮ್ಮ ಮನೆಯ ಅಂಗಳದಲ್ಲಿ ಐದಾರು ಸವತೆಯ ಓಳಿಗಳನ್ನೂ, ಎರಡು ಹಾಲುಗುಂಬಳದ ಓಳಿಗಳನ್ನೂ, ಬೆಂಡೆಕಾಯಿ ಮೊದಲಾದುವುಗಳ ಹಲವು ಓಳಿಗಳನ್ನೂ, ಸಾಗುಮಾಡಿದ್ದೆವು. ಎಲ್ಲರಿಗೆ ಅಚ್ಚರಿಗೊಳಿಸಿದ್ದೆಂದರೆ ಆ ವರುಷದ ನಮ್ಮ ಬಳ್ಳಿಯೊಳಗಿನ ಹಾಲುಗುಂಬಳಗಳು. ಕಂಡವರೆಲ್ಲರೂ ಅಷ್ಟು ದೊಡ್ಡ ಕುಂಬಳಕಾಯಿಗಳನ್ನು ತಾವು ಎಂದೂ ನೋಡಿರಲಿಲ್ಲವೆನ್ನುತ್ತಿದ್ದರು. ನಮ್ಮ ಬಳಗದವರ, ಗುರುತಿನವರ ಮನೆಗಳಲ್ಲಿ ಅದರ ಪಾಯಸವನ್ನೋ, ಹಲವಾನೋ ಮಾಡಿ ತಿಂದವರೆಲ್ಲ ಅದರ ಬೀಜದ ಬಗ್ಗೆ ಮೊದಲೇ ಹೇಳಿಟ್ಟಿದ್ದರು. ಬಳ್ಳಿಯ ಬುಡಕ್ಕೆ ಗೊಬ್ಬರ ಹಾಕಲೋ ಚಪ್ಪರ ಕಟ್ಟಲೋ ನಾನೇ ಸಾಕಷ್ಟು ಮೆಹನತ್ತು ಮಾಡಿದ್ದರಿಂದ ಇಂತಹ ಕಾಯಿಗಳನ್ನು ತಿನ್ನುವಾಗ ಹೆಮ್ಮೆ ಅನಿಸುವುದು ಸಹಜವಿತ್ತು. +ಮಳೆಗಾಲ ತೀರುತ್ತ ಬಂದಿತ್ತು. ಅರ್ಥಾತ್ ಕುಂಬಳ ಹಂಗಾಮೂ ತೀರಿತ್ತು. ಕೊನೆಗೆ ಇದ್ದವುಗಳಲ್ಲಿ ಅತಿ ದೊಡ್ಡದಾದ ಕಾಯಿಗಳೆರಡನ್ನು ಒಂದು ಬೀಜಕ್ಕೆಂದು, ಇನ್ನೊಂದು ದೇವರಿಗೆಂದು ಬಿಟ್ಟಿದ್ದೆವು. ದಿನವೂ ಒಮ್ಮೆ ಕಾಯಿಗಳ ಸುರಕ್ಷಿತತೆಯ ಖಾತ್ರಿಯ ಸಲುವಾಗಿ ಚಪ್ಪರದ ಹತ್ತಿರ ಹೋಗಿಬರುವುದು ನಮ್ಮೆಲ್ಲರ ವಾಡಿಕೆ. ಅವುಗಳ ಆಕಾರ ನೋಡಿಯೇ ಹಿಗ್ಗುತ್ತಿದ್ದೆವು. +ದೇವರಿಗೆ ಬಿಟ್ಟ ಕಾಯಿ, ಇನ್ನೇನು ಎರಡು ದಿನಗಳಲ್ಲಿ ಕೊಯ್ಯಬೇಕು ಎನ್ನುವಷ್ಟರಲ್ಲಿ ಒಂದು ದಿನ ಬೆಳಿಗ್ಗೆ ನೋಡಿದಾಗ ಬಳ್ಳಿಯಿಂದ ಮಾಯವಾಗಿತ್ತು. ನಮಗಾದ ದುಃಖ ಹೇಳಲಾಸಲ್ಲ. ಕಳವಾದ ವಸ್ತುವೇನು ಬಹಳ ಮಹತ್ವದ್ದಲ್ಲ. ಎಷ್ಟು ದೊಡ್ಡದಾದರೇನು, ಕುಂಬಳ ಕುಂಬಳವೇ. ಆದರೂ ತಿಂಗಳುಗಟ್ಟಲೆ ದಾರಿನೋಡಿ ಕೊಯ್ಯಬೇಕೆನ್ನುವ ಎರಡೇ ದಿನಗಳ ಪೂರ್ವ ಮಾಯವಾದ ನೆಚ್ಚಿನ ವಸ್ತುವಾದ್ದರಿಂದ ಅತ್ಯಂತ ಕುಪಿತರಾಗಿದ್ದರು. ಕಳ್ಳ ಯಾರೆನ್ನುವುದು ಗೊತ್ತೇ ಇತ್ತು. ಗಿರಿಯಣ್ಣನ ಹೊರತು ಇಂತಹ ಕ್ಷುಲ್ಲಕ ಕಳವಿಗೆ ಕೈಹಾಕುವವರು ಬೇರೆ ಯಾರಿರಬೇಕು! ಸೋದರತ್ತೆ ಹಾಗು ತಂದೆಯವರು ಬಾಯಿಗೆ ಬಂದಂತೆ ಗಿರಿಯಣ್ಣನನ್ನು ಬೈದುಕೊಂಡರು. ನಾನೂ ಅತ್ತಿತ್ತ ಹಾರಾಡಿದೆ, ಬೈದೆ. ಅದಕ್ಕಿಂತಲೂ ಹೆಚ್ಚು ಏನು ಮಾಡಬಹುದಿತ್ತು? +ಎಲ್ಲ ಬೈಗಳ ತಿರುಳು ಒಂದೇ ಇತ್ತು: ಅದು ದೇವರಿಗೆ ಬಿಟ್ಟ ಕಾಯಿಯಾದ್ದರಿಂದ ಕದ್ದವನ ಒಳಿತಾಗಲಿಕ್ಕಿಲ್ಲ ಎಂದು. ಅತ್ತೆಯವರಂತೂ “ಅವನ ಕೈಗೆ ಹುಳ ಬಿದ್ದು ಸಾಯುವ” ಎಂದರು. ಬೈಯುವ ಕಲೆ ಅವರಿಗೆ ಚೆನ್ನಾಗಿ ಸಾಧಿಸಿದಂತಿತ್ತು. ಬೈಯುವುದರಲ್ಲಿ ತಮ್ಮನ್ನೇ ಮರೆತ ಅವರು ಕೊನೆಗೆ “ಅವನ ಮಕ್ಕಳು ಮರಿಗಳಿಗೂ ಬರ್ಕತ್ತಾಗಲಿಕ್ಕಿಲ್ಲ” ಎನ್ನುವಷ್ಟರಮಟ್ಟಿಗೆ ಮುಟ್ಟಿದರು. (ಅವರಿಗೆ ಮಕ್ಕಳೇ ಇರಲಿಲ್ಲ!) ಅದುವರೆಗೂ ಸುಮ್ಮನಿದ್ದ ತಾಯಿಯವರಿಂದ ಈಗ ಮಾತ್ರ ತಡೆಯಲಾಗಲಿಲ್ಲ. “ಅತ್ತಿಗೇ, ಅತ್ತಿಗೇ, ಸುಮ್ಮನೇ ಹಾಗೆ ಬಯ್ಯಬೇಡಿ; ನನ್ನ ಕೊರಳಾಣೆ ಇದೆ” ಎಂದರು. ಮುಂದೆ ಅವರಿಗೆ ಮಾತೇ ಹೊರಡಲಿಲ್ಲ. ಅವರು ಒಳಗೆ ಅಡುಗೆ ಮನೆಗೆ ನಡೆದುಬಿಟ್ಟರು. +ನನಗೂ ಆ ಕ್ಷಣಕ್ಕೆ ತಾಯಿಯವರ ಗಿರಿಯಣ್ಣನ ವಿಷಯದ ಸಹಾನುಭೂತಿ ಸರಿದೋರಲಿಲ್ಲ. ಅವರು ಯಾವಾಗಲೂ ಹೀಗೆಯೇ! ತೀರ ಮೃದು ಮನಸ್ಸಿನ, ಭಾವುಕ ಸ್ವಭಾವದ ಹೆಂಗಸು. ಅವರಿಗೆ ವಸ್ತುವಿನ ಕಳುವಿನ ದುಃಖಕ್ಕಿಂತ ಕಳವಾದ ವಸ್ತು ದೇವರಿಗೆ ಬಿಟ್ಟಿದ್ದಾಗಿತ್ತಲ್ಲ ಎಂಬ ಅಳುಕು ಹೆಚ್ಚು. ಅದನ್ನು ಯಾರಾದರೂ ತಿಂದು ಕೆಡಕು ಆದರೆ ಎಂದು ಅವರ ಕಳವಳ. ಮೇಲೆ ಅತ್ತೆಯವರ ಸಿಕ್ಕಾಪಟ್ಟೆ ಬೈಗಳ. ಅವರು ಇಡೀ ದಿನ ಅಸ್ವಸ್ಥಗೊಂಡರು. ಕೊನೆಗೆ ನನ್ನನ್ನು ಹತ್ತಿರ ಕರೆದು “ಸ್ವಲ್ಪ ಗಿರಿಯಣ್ಣನಿಗೆ ನಾನು ಕರೆದಿದ್ದೇನೆ ಎಂದು ಹೇಳಿಬರುವೆಯಾ?” ಎಂದರು. ಇದು ಹೇಗೋ ತಂದೆಯವರ ಕಿವಿಗೆ ಬಿತ್ತು. ಅವರು ಕಿಡಿಕಿಡಿಯಾದರು. “ಏ ಏ! ನಿನ್ನ ಈ ಬುದ್ಧಿವಾದ, ಉಪದೇಶ ಬದಿಗಿಡು ಅಂದೆ. ಅಲ್ಲ ಆ ಮಗುವಿಗೆ ಇದ್ದ ಬುದ್ಧಿ ಸಹ ನಿನಗಿಲ್ಲವಲ್ಲ. ಕಳ್ಳನಿಗೆ ಉಪದೇಶಮಾಡಿ ಬದಲಿಸುವುದು ಸಾಧ್ಯವಿದೆಯೇ? ನಿನ್ನ ಮಾತಿನ ಕಿಮ್ಮತ್ತು ಅವನಿಗಿದ್ದುದಾದರೆ ಅವನು ಇಲ್ಲಿ ಕಳುವು ಮಾಡುತ್ತಿದ್ದನೆ? ಅವನ ಬಂದೋಬಸ್ತಿಯ ವ್ಯವಸ್ಥೆ ನಾನು ಮಾಡುತ್ತೇನೆ. ಆ ಸಣ್ಣತಮ್ಮ ನಾಯ್ಕನಿಗೆ (ಊರ ಪಟೇಲರು) ಹೇಳಿಕಳಿಸಿದ್ದೇನೆ” ಎಂದರು. +ಬಂದೋಬಸ್ತಿಯ ವಿಷಯವಾಗಿ ತಂದೆಯವರು ತೆಗೆದ ಉದ್ಗಾರಳೇನು ಹೊಸವಲ್ಲ. ಕಳವಿನ ಹಾನಿಗೊಳಗಾದ ಪ್ರತಿಯೊಬ್ಬರೂ ಮಾತನಾಡುವಂತೆಯೇ ಆಡಿದ್ದರು ಅಷ್ಟೆ! ಆದರೆ ತಾಯಿಯವರು ಮಾತ್ರ ತಮ್ಮ ಹಟ ಬಿಟ್ಟಂತೆ ತೋರಲಿಲ್ಲ. ಬೆಳೆಗ್ಗೆ ಗಣಪಯ್ಯ ಸೆಟ್ಟರ ಮನೆಯಲ್ಲಿ ಹಾಲು ಕೊಡುವಾಗ ಗಿರಿಯಣ್ಣ ನಮ್ಮ ಮನೆಯ ಮುಂದಿನ ಓಣಿಯಿಂದಲೇ ಹೋಗಬೇಕು. ಓಣಿಯ ಬಳಿಯಲ್ಲಿಯೇ ನಮ್ಮ ದನಗಳ ಕೊಟ್ಟಿಗೆ. ಹಾಲು ಕರೆಯಲು ಹೋದಾಗ ತಾಯಿಯವರು ನನ್ನನ್ನು ಕರೆದು “ಮಗೂ ಹಾಗೆ ಸುಮ್ಮನೆ ಬಯ್ಯಬಾರದು. ಆ ಕಪಿಗೇನು ಬುದ್ಧಿಯಿದೆಯೇ? ಅದು ಅವನ ಹುಟ್ಟು ಗುಣ… ಅದು ದೇವರಿಗೆ ಹೇಳಿಕೊಂಡ ಕಾಯಿ ಎಂದು ನನ್ನ ಭೀತಿ. ಸಣ್ಣ ಸಣ್ಣ ಮಕ್ಕಳ ತಂದೆಯವ. ನೀನು ಸ್ವಲ್ಪ ದಣಪೆಯ ಹತ್ತಿರ ನಿಲ್ಲು. ಅವನು ಕಂಡರೆ ನನ್ನ ಕರೆ” ಎಂದರು. ನನಗೆ ತಾಯಿಯವರ ಈ ರೀತಿ ಅಷ್ಟು ಸಮಂಜಸ ತೋರಲಿಲ್ಲ. ಆದರೂ ಅವರ ಮಾತನ್ನು ಅಲ್ಲಗಳೆದು ಅವರ ಮನಸ್ಸು ನೋಯಿಸುವ ಧೈರ್ಯವಾಗಲಿಲ್ಲ. +ಕೊನೆಗೊಮ್ಮೆ ಗಿರಿಯಣ್ಣ ಭೆಟ್ಟಿಯಾದ. ತಾಯಿಯವರು ಎಂದಿನಂತೆಯೇ ತಮ್ಮ ಮೃದು ಮಾತಿನಲ್ಲಿ ಉಪದೇಶ ಮಾಡಿಯೇ ಮಾಡಿದರು. ಅದನ್ನು ಕೇಳುವಾಗ ನನ್ನ ಕಣ್ಣು ಒದ್ದೆಯಾದುವು. ನಾವು ಗಿರಿಯಣ್ಣನಿಗೆ ಬೈದುದರ ಬಗ್ಗೆ ಆ ಕ್ಷಣದ ಮಟ್ಟಿಗಾದರೂ ನಾಚಿಕೆಯೆನಿಸಿತು. ಆದರೆ ಆ ಕಳ್ಳನಿಗೆ ಎಳ್ಳಷ್ಟೂ ಕೆಡುಕೆನಿಸಿದಂತೆ ತೋರಲಿಲ್ಲ. ಎಲ್ಲವೂ ಭೋರ್ಗಲ್ಲ ಮೇಲೆ ನೀರು ಸುರಿದಂತೆ. ಮಾನವತೆಯ ತೇವು ಕೂಡ ಇಲ್ಲದ ಶುದ್ದ ಬಂಡೆಗಲ್ಲಿಗೆ ಮಾನವ ಅಂತಃಕರಣದ ಅರ್ಥ ಹೇಗಾಗಬೇಕು? ಸುಮ್ಮನೆ ಬಸವಣ್ಣನಂತೆ ತಲೆ ಕೆಳಗೆ ಹಾಕಿ ಕೇಳಿದ. ಕಳವು ತಾನೇ ಮಾಡಿದ್ದೇನೆಂದೂ ಒಪ್ಪಲಿಲ್ಲ. ಕೊನೆಗೆ ತಾಯಿಯವರು ಇನ್ನೊಮ್ಮೆ, “ಆ ಕಾಯಿಯ ಸಲುವಾಗಿ ನಮಗೆ ಕೆಡುಕೆನಿಸಲಿಲ್ಲ. ಅದು ದೇವರಿಗೆ ಬಿಟ್ಟ ಕಾಯಿ. ಯಾರಿಗೂ ಮಾರಬೇಡ. ನೀನೇ ಮುರ್ಕಂಡಿ ದೇವರಿಗೆ ಕೊಟ್ಟು ಕ್ಷಮೆ ಬೇಡಿ ಬಾ” ಎಂದು ಬೀಳ್ಕೊಟ್ಟರು. ಅವನಿಗೆ ಅಷ್ಟೆಲ್ಲ ಬುದ್ಧಿಯಿದ್ದರೆ ಅವನು ಕಳವು ಮಾಡುತ್ತಿದ್ದನೆ? ನನ್ನ ತಾಯಿಯವರ ಭೋಳೇ ಸ್ವಭಾವದ ಬಗ್ಗೆ ಕೆಡುಕೆನಿಸಿತು. +ಅಂದು ಸಂಜೆ ಕಮಟೆಯಿಂದ ನಮ್ಮ ಚಿಗಪ್ಪ ಬಂದರು. ಆಗ ನಮಗಾದ ಆನಂದ ಹೇಳತೀರದು. ಗಿರಿಯಣ್ಣನಿಗೆ ತಕ್ಕ ಶಿಕ್ಷೆಯಾಗಬೇಕಾದರೆ ಅವರೇ ಯೋಗ್ಯ. ಮೈಯಿಂದ ಒಳ್ಳೇ ಧಾಂಡಿಗ ಆಳು. ನಾವೆಲ್ಲರೂ ಎಷ್ಟೋ ಸಲ ಅವರನ್ನು ‘ಸೆಂಡೊ ಕಾಕಾ’ ಎನ್ನುತ್ತಿದ್ದೆವು. ಅತ್ತೆಯವರು ಕಳುವಿನ ವರ್ತಮಾನವನ್ನು ಉಪ್ಪು ಖಾರ ಹಚ್ಚಿ ವಿವರಿಸಿದರು. ಒಟ್ಟಿನಲ್ಲಿ ಈ ಕಳವಿಗೆ ತಕ್ಕ ಪ್ರಾಯಶ್ಚಿತ್ತವಾಗಲೇಬೇಕೆಂದು ಎಲ್ಲರೂ ತೀರ್ಮಾನಿಸಿದರು. ತಾಯಿಯವರು ಮಾತ್ರ ಈ ಯಾವ ಮಾತುಕತೆಯಲ್ಲೂ ಭಾಗವಹಿಸಲಿಲ್ಲ. ಉಳಿದವರಿಗೆ ಸೇರಲಿಕ್ಕಿಲ್ಲವೆಂದು ಬೆಳಿಗ್ಗೆ ತಾಯಿಯವರು ಗಿರಿಯಣ್ಣನಿಗೆ ಉಪದೇಶಿಸಿದ ಸುದ್ದಿಯನ್ನು ನಾನು ಯಾರಿಗೂ ತಿಳಿಸಲಿಲ್ಲ. +ಚಿಗಪ್ಪ ಕಳವು ಆದ ಬಳ್ಳಿಯ ಚಪ್ಪರಕ್ಕೆ ದರ್ಶನ ಕೊಟ್ಟರು. ಬೀಜಕ್ಕೆಂದು ಬಿಟ್ಟ ಕಾಯಿಯನ್ನು ನೋಡಿದ ಕೂಡಲೇ ಅವರ ಕೈ ಒಮ್ಮೆಲೇ ಬಾಯಿಗೆ ಹೋಯಿತು. ಎಷ್ಟೋ ಹೊತ್ತಿನ ತನಕ ಬಳ್ಳಿಯನ್ನು ಬಳ್ಳಿಯೊಳಗೆ ತೂಗುತ್ತಿದ್ದ ಅದ್ಭುತ ಕಾಯಿಯನ್ನೂ ಬಳ್ಳಿಯ ಸುತ್ತಲಿನ ಜಾಗವನ್ನೂ ಕೂಲಂಕುಷವಾಗಿ ಪರೀಕ್ಷಿಸಿ, ಕೆಲಹೊತ್ತು ತಮ್ಮಲ್ಲೇ ಚರ್ಚಿಸಿ ಕೊನೆಗೆ ಒಂದು ನಿಶ್ಚಯಕ್ಕೆ ಬಂದರು: ಪಟೇಲರಿಗೆ ಈ ಕಳವಿನ ಸುದ್ದಿ ಏನೂ ಕೊಡಬಾರದು. ಅದರಿಂದ ಗಿರಿಯಣ್ಣನಿಗೆ ನಾಲ್ಕು ಬೈಗಳ ಸಿಕ್ಕವೇ ಹೊರತು ತಕ್ಕ ಶಿಕ್ಷೆಯಾಗಲಿಕ್ಕಿಲ್ಲ. ಮೊದಲನೆಯ ಕಾಯಿಯ ರುಚಿ ಹತ್ತಿದ ಕಳ್ಳ ಈ ಎರಡನೆಯದನ್ನೂ ಬಿಡಲಿಕ್ಕಿಲ್ಲ. ಆದುದರಿಂದ ಈ ಎರಡು ದಿನ ನಾವು ದಿನವೂ ರಾತ್ರಿ ಕಾವಲಿನ ಮೇಲಿರಬೇಕು. +ಅದರಂತೆ ಕಾವಲಿನ ವ್ಯವಸ್ಥೆಯೂ ಆಯಿತು. ಜಗುಲಿಯ ಮೇಲಿದ್ದ ನಮ್ಮ ಅಜ್ಜನ ಮಂಚವನ್ನು ಅಂಗಳದಲ್ಲಿ ಹಾಕಿಸಿ, ಕಾಕಾ ಒಬ್ಬರೇ ಹೊರಗೆ ಮಲಗಿದರು. “ಸುಳ್ಳೇ ಆ ಮೂರ್ಖನ ಗೊಡವೆಗೆ ಹೋಗಬೇಡ. ಒಂದು ಯಕಶ್ಚಿತ್ ಕಾಯಿಯ ಸಲುವಾಗಿ ಜೀವಕ್ಕೆ ಅಪಾಯ ತಂದುಕೊಂಡೀಯಾ” ಎಂದು ತಂದೆಯವರು ಎಷ್ಟು ತಾಕೀತು ಮಾಡಿದರೂ ಕೇಳಲಿಲ್ಲ. ಒಬ್ಬರೇ ಅಂಗಳದಲ್ಲಿ ಮಲಗಿಕೊಂಡರು, ಕಳ್ಳನ ಮೇಲೆ ಕಾವಲಿಡಲು. ಆದರೆ ಅವರಿಗೆ ಹೆಚ್ಚು ದಿನ ಹೀಗೆ ಕಾವಲಿಡುವ ಪ್ರಸಂಗ ಬರಲಿಲ್ಲ. ಕಳ್ಳ ಅವರು ಅಪೇಕ್ಷಿಸಿದಂತೆ ಆ ದಿನ ರಾತ್ರಿಯೇ ತಿರುಗಿ ಬಂದ. +ಅಂದು ಬೆಳಿಗ್ಗೆ ನನಗೆ ಎಚ್ಚರವಾದಾಗ ನಮ್ಮ ಅಂಗಳದಲ್ಲಿ ಗೊಂದಲವೇ ಗೊಂದಲ. ಇನ್ನೂ ಕತ್ತಲೆ ಪೂರ್ಣ ಸರಿದಿರಲಿಲ್ಲ. ನಮ್ಮ ಮನೆಯವರೆಲ್ಲರೂ ಅಂಗಳದಲ್ಲಿ ನೆರೆದಿದ್ದಾರೆ. ನಮ್ಮ ಕಾಕಾ ಅವರು ಒಳ್ಳೆಯ ಆವೇಶದಿಂದ ಏನೇನೋ ಹೇಳುತ್ತಿದ್ದಾರೆ. ಅವರ ಮಾತಿನ ರೀತಿ, ಹಾವಭಾವ ನೋಡಿ ಕಳ್ಳ ಸಿಕ್ಕುಬಿದ್ದನೆಂಬ ಖಾತ್ರಿಯಿಂದ ಹೊರಗೆ ಬಂದೆ. ಆದರೆ ಕಳ್ಳ ಸಿಕ್ಕುಬಿದ್ದಿರಲಿಲ್ಲ, ಜಾರಿಕೊಂಡಿದ್ದ. +ಅದು ಹೀಗಾಯಿತು: ಅಂದು ರಾತ್ರಿ ಕಾಕಾ ಅವರು ಶತ ಪ್ರಯತ್ನದಿಂದ ಬೆಳಗ್ಗಿನ ೫ ಘಂಟೆಯವರೆಗೆ ಎಚ್ಚರ ಉಳಿದರು. (ಎಷ್ಟೋ ಸಲ ತಾನು ಒಂದು ಯಕಶ್ಚಿತ್ ಕುಂಬಳಕಾಯಿಯ ಕಳವಿನ ಸಲುವಾಗಿ ಎಚ್ಚರ ಕುಳಿತಿದ್ದೇನೆ ಎಂಬ ಅರಿವು ಬಂದು ನಕ್ಕಿದ್ದೂ ಉಂಟಂತೆ!) ಐದಾಯಿತು; ಐದೂವರೆಯಾಯಿತು. ಇನ್ನೇನು ಬರುವ ಎಂದು ಅದೇ ತಲೆದಿಂಬಿಗೆ ಒರಗಿದ್ದರಷ್ಟೆ. ಬಳ್ಳಿಯ ಹತ್ತಿರ ಸರಸರ ಅವಾಜು ಕೇಳಿಬಂತು. ಇವರು ಹೊದಿಕೆಯನ್ನು ತೆಗೆದು ನೋಡುವಷ್ಟರಲ್ಲಿ ಗಿರಿಯಣ್ಣ (ಮುಸುಕು ಬೆಳಕಿನಲ್ಲಿ ಸ್ಪಷ್ಟ ಕಾಣದಿದ್ದರೂ ಆಕಾರದಿಂದ ಊಹೆ!) ಬಳ್ಳಿ ಬಿಟ್ಟು ದಣಪೆಯತ್ತ ಸಾಗಿದ್ದ. ಇವರು ಒಮ್ಮೆಲೇ ಸಿದ್ಧ ಮಾಡಿಟ್ಟ ದೊಣ್ಣೆಯನ್ನೆತ್ತಿ ಅತ್ತ ಧಾವಿಸಿದರು. ಇವರ ಸುಳಿವು ಹತ್ತಿದ ಕೂಡಲೇ ಗಿರಿಯಣ್ಣ ಓಡಹತ್ತಿದ. ಆದರೆ ದಣಪೆ ದಾಟುವಷ್ಟರಲ್ಲಿ ‘ಇನ್ನೇನು ತಪ್ಪಿಸಿಕೊಂಡ’ ಎಂಬ ಹಳಹಳಿಯಲ್ಲಿ ಕೈಯಲ್ಲಿಯ ದೊಣ್ಣೆಯನ್ನು ಗುರಿಯಿಟ್ಟು ರಭಸದಿಂದ ಬೀಸಿಬಿಟ್ಟರು. ಗುರಿ ವ್ಯರ್ಥವಾಗಲಿಲ್ಲ. ಬಡಿಗೆ ಸರಿಯಾಗಿ ಗಿರಿಯಣ್ಣನ ಸೊಂಟಕ್ಕೆ ಬಡಿದು ಎರಡು ತುಂಡಾಯಿತು. ಗಿರಿಯಣ್ಣನ ಸೊಂಟದ ಕೀಲೇ ತಪ್ಪಿರಬೇಕು. +ರಾತ್ರಿಯೆಲ್ಲ ಇಷ್ಟೆಲ್ಲ ಜಾಗರೂಕತೆಯಿಂದ ಪಹರೆ ಇಟ್ಟರೂ ಕೈಗೆ ಬಂದ ಕಳ್ಳ ಸುಮ್ಮನೆ ಜಾರಿಕೊಂಡನಲ್ಲ ಎಂಬ ನಿರಾಶೆಯ ಸಂತಾಪವನ್ನು ‘ಮೊದಲನೆಯ ಕಾಯ’ ರುಚಿ ಹತ್ತಿದ ಕಳ್ಳ ಎರಡನೆಯ ಕಾಯಿಯನ್ನೂ ಕಳಲು ಬರುವ ಎಂಬ ತರ್ಕಪೂರ್ಣ ಸಿದ್ಧಾಂತ ಸುಳ್ಳಾಗಲಿಲ್ಲ ಎಂಬ ಜಂಭದಿಂದ ‘ಕಳ್ಳ ಜಾರಿಕೊಂಡರೂ ತಕ್ಕ ಶಿಕ್ಷೆ ಅನುಭವಿಸಿದ’ ಎಂಬ ಬೆನ್ನು ಚಪ್ಪರಿಕೆಯಿಂದ ನೀಗಿಕೊಳ್ಳುವ ಭರದಲ್ಲಿ ಕಾಕಾ ಅವರು ಗಿರಿಯಣ್ಣನಿಗಾದ ನೋವನ್ನು ಅನೇಕ ಪಟ್ಟು ಬೆಳಸಿ ಹೇಳಿದ್ದರೆಂದು ಹಿಂದಿನಿಂದ ತಿಳಿದು ಬಂದರೂ ಆ ಕ್ಷಣಕ್ಕೆ ಮಾತ್ರ ನಾವೆಲ್ಲ ಅದನ್ನು ನಂಬಿ ಅವರ ಶೌರ್ಯದ ಬಗ್ಗೆ ಮೆಚ್ಚಿಕೆಯನ್ನೂ ಗಿರಿಯಣ್ಣನ ದೇಹಕ್ಕೆ ಆದ ಹಾನಿಯ ಬಗ್ಗೆ ಚಿಂತೆಯನ್ನೂ ಒಂದೇ ಸಮಯಕ್ಕೆ ವ್ಯಕ್ತಗೊಳಿಸಿದೆವು. ಕಳ್ಳನನ್ನು ಹಿಡಿಯುವ ಹಟದಲ್ಲಿ ಬೀಜಕ್ಕೆ ಬಿಟ್ಟ ಕಾಯಿಯನ್ನೂ ಕಳಕೊಂಡೆವಲ್ಲ ಎಂದು ಹಳಹಳಿಸದೆಯೂ ಇರಲಿಲ್ಲ-ಹಾಗೂ ಆ ಹಳಹಳಿಯಲ್ಲಿ ಗಿರಿಯಣ್ಣನನ್ನು ಬಾಯಿಗೆ ಬಂದತೆ ಬೈಯದೆಯೂ ಇರಲಿಲ್ಲ. ಆದರೆ ಈಗಲೂ ಅತ್ತೆಯವರೇ ಎಲ್ಲರನ್ನೂ ಮೀರಿಸಿದರು. “ಬರಿಯೇ ಸೊಂಟದ ಕೀಲು ತಪ್ಪುವುದಲ್ಲ, ಬಿದ್ದಲ್ಲಿಂದ ಏಳಲೇಬಾರದಾಗಿತ್ತು” ಎಂದರು, ರುಚಿಯಿಂದ. ತಾಯಿಯವರ ಮನಸ್ಸು ಮಾತ್ರ ಬಹಳೇ ನೊಂದಿತ್ತು. “ಅವನ ನಶೀಬವೇ ಹಾಗಿದ್ದರೆ ಯಾರೇನು ಮಾಡುತ್ತಾರೆ. ಇಲ್ಲವಾದರೆ ಸಣ್ಣ ಮಗುವಿಗೆ ಹೇಳಿದ ಹಾಗೆ ಹೇಳಿದರೂ ಅವನಿಗೆ ಬುದ್ಧಿಯಿದ್ದರಲ್ಲವೆ?” ಎಂದೇನೋ ಗುಣಗುಣಿಸುತ್ತ ತಮ್ಮ ಕೆಲಸಕ್ಕೆ ನಡೆದರು. +ಆದರೆ ಈ ಎಲ್ಲ ಗೊಂದಲದಲ್ಲಿ ಬಳ್ಳಿಯ ಹತ್ತಿರ ಹೋಗಿ ಕಾಯಿ ನಿಜವಾಗಿ ಕಳವಾಗಿದೆಯೇ ಎಂದು ನೋಡುವ ಕುತೂಹಲವಾಗಲೀ ಗರಜಾಗಲೀ ಯಾರಿಗೂ ತೋರದಂತಿರಲಿಲ್ಲ. ನನಗೆ ಆ ವಿಚಾರ ಹೊಳೆದ ಕೂಡಲೇ ಬಳ್ಳಿಯ ಹತ್ತಿರ ಧಾವಿಸಿದೆ. ಅದಾಗ ಸ್ವಲ್ಪ ಬೆಳಕು ಮೂಡಿತ್ತು. ಕಾಕಾ ಅವರು ನಾನು ಓಡುವುದನ್ನು ಕಂಡು, “ಏ ಹಾಗೇಕೆ ಓಡುತ್ತೀಯೋ” ಎಂದರು-ಓಡುವ ಅವಶ್ಯಕತೆಯೇ ಇಲ್ಲವೆಂಬಂತೆ. “ಹುಡುಗನಿಗೆ ಪಾಪ ಇನ್ನೂ ಆಸೆ.” ಆದರೆ ಬಳ್ಳಿಯಲ್ಲಿ ತೂಗುತ್ತಿದ್ದ ಕಾಯಿಯನ್ನು ನೋಡಿ ನನಗಾದ ಆನಂದ, ಆನಂದಕ್ಕಿಂತಲೂ ಆಶ್ಚರ್ಯ ಹೇಳಲಾಸಲ್ಲ. “ಕಾಕಾ, ಕಾಯಿ ಇಲ್ಲೇ ಇದೆ” ಎಂದೆ, ಒದರಿ. “ಆಂ! ಕಾಯಿ ಅಲ್ಲೇ ಇದೆಯೇ?” ಎಂದರು, ‘ಕಳ್ಳ ಬರಲೇ ಇಲ್ಲವೇ?’ ಎಂಬ ಧಾಟಿಯಲ್ಲಿ ಆ ಧಾಟಿಯಲ್ಲಿ ಇದರಿಂದ ನಾವೆಲ್ಲರೂ ಅವರು ಆಗಿನಿಂದ ಹೇಳಿದ ಅದ್ಭುತ ಕತೆಯನ್ನು ಎಲ್ಲಿ ಸುಳ್ಳೇ ಎಂದು ಬಗೆಯುವೆವೋ ಎಂಬ ಅಳುಕು ಇತ್ತೇನೋ! ಎಲ್ಲರೂ ಬಳ್ಳಿಯ ಹತ್ತಿರ ಬಂದರು. ಕಾಯಿಯನ್ನು ಎಲ್ಲರೂ ಕಂಡರು. “ನಾನು ಸ್ವತಃ ನೋಡಿದ್ದೇನೆ. ನಾನು ಎದ್ದಾಗ ಅವನು ಇಲ್ಲಿಂದಲೇ ಹೊರಟಿದ್ದ….ಆದರೆ ನನಗೂ ಹೊಳೆಯಲಿಲ್ಲವಲ್ಲ, ಅವನು ಆ ಅದ್ಭುತ ಕಾಯಿಯನ್ನು ಹೊತ್ತು ಅಷ್ಟು ಸುಲಭವಾಗಿ ಹೇಗೆ ಓಡುತ್ತಿದ್ದ…” ಕಾಕಾ ಅವರು ಮಾತು ಪೂರ್ಣಗೊಳಿಸುವುದರೊಳಗೆ ನನ್ನ ಇನ್ನೊಂದು ಶೋಧ ಅವರನ್ನು ದಂಗುಬಡಿಸಿತ್ತು. ಮೊದಲನೆಯ ದಿನ ಕಳವಾದ ಕುಂಬಳಕಾಯಿ ಅಲ್ಲೇ ಕೆಳಗೆ ಬಿದ್ದಿದ್ದು ನಮ್ಮನ್ನೇ ಅಣಕಿಸುತ್ತಿತ್ತು. ‘ಹೇಗೆ ಕೊಟ್ಟೆ ಗಸ್ತು’ ಎಂದು! “ಆಂ! ಎಂದರೆ ಈ ಕಾಯಿಯನ್ನು ಇಡಲು ಬಂದಿದ್ದನೇ?!!” ಎಲ್ಲರೂ ಆಶ್ಚರ್ಯಪಟ್ಟರು. ಆದರೆ ಗಿರಿಯಣ್ಣನಂತಹ ಅತಿ ಸಾಮಾನ್ಯ ವ್ಯಕ್ತಿಯೊಬ್ಬನ ಈ ಆಶ್ಚರ್ಯ ಜನಕ ಕೃತಿಯ ಬಗ್ಗೆ ಇಡಿಯ ದಿನ ವಿಚಾರಿಸಿದರೂ ಅದರ ಗೂಢ ಮಾತ್ರ ಕೊನೆಗೂ ಯಾರಿಗೂ ತಿಳಿಯಲಿಲ್ಲ, ನಮ್ಮಿಬ್ಬರನ್ನುಳಿದು ನಾನು, ನನ್ನ ತಾಯಿ. +ಒಂದು ಸಣ್ಣ ಘಟನೆ. ಆದರೆ ಅದರ ನಿಜವಾದ ಅರ್ಥ ಮಾತ್ರ ನನಗೆ ಅಂದು ತಿಳಿದಿತ್ತು ಎಂದು ಹೇಳಲಾರೆ. +***** +೧೯೫೦/೫೧ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ […] +ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_584.txt b/Kannada Sahitya/article_584.txt new file mode 100644 index 0000000000000000000000000000000000000000..7224e4ca42fbd126bb9fb6796f016338048b46ee --- /dev/null +++ b/Kannada Sahitya/article_584.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಾರಿ ವಿಜಯದಶಮಿಯಂದು ೧೫-೧೬ ಸಿನಿಮಾಗಳ ಮುಹೂರ್ತ ನಡೆಯಲಿದೆ. ಎಂದರೆ ನೂರಾರು ಕಲಾವಿದರ ಬದುಕಿಗದು ಹೆದ್ದಾರಿ ಎಂಬುದು ಸಂತೋಷ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಅನೇಕ ಹೊಸ ಕತೆಗಳು, ಕಲಾವಿದರು ತೆರೆಗೆ ಬರುತ್ತಿದ್ದಾರೆ ಎಂಬುದು. ಅದರಲ್ಲಿ ಬಹಳಷ್ಟು ಕಾಮಿಡಿ ಕಥಾನಕಗಳೂ ಇವೆ ಎಂದು ಕೇಳಿದ್ದೇನೆ. ಅದೂ ಹಿಗ್ಗಿನ ಸುದ್ದಿಯೇ. +ಆದರೆ, ‘ಕುರಿಗಳು ಸಾರ್‍ ಕುರಿಗಳು’ ಚಿತ್ರವನ್ನು ರಾಜೇಂದ್ರಸಿಂಗ್ ಬಾಬು ‘ಸಿಲ್ಲಿ ಕಾಮೆಡಿ’ ಎಂದು ಕರೆದುಕೊಂಡ ನಂತರ ‘ಸಿಲ್ಲಿಯಸ್ಟ್’ ಕಾಮೆಡಿಗಳು ಕನ್ನಡದಲ್ಲಿ ಬರತೊಡಗಿವೆ. ಹೀಗಾಗಿ ಇಟ್ಟಿದ್ದೇ ಹೆಸರು, ಆಡಿದ್ದೇ ನಾಟಕ ಎಂಬಂತಹ ಪ್ರಸಂಗಗಳನ್ನು ಈಗ ಕಣ್ಣಾರೆ ಕಂಡು ಅನುಭವಿಸುತ್ತಿದ್ದೇವೆ. ತಿಳಿಹಾಸ್ಯ, ನವಿರುಹಾಸ್ಯ, ವ್ಯಂಗ್ಯ, ವಿಡಂಬನೆ, ಮೊನಚುಹಾಸ್ಯ, ಸಿಚುಯೇಷನ್ ಕಾಮೆಡಿ ಎಂಬ ನಾನಾ ಪ್ರಕಾರಗಳಿವೆ ಕನ್ನಡದಲ್ಲಿ ಎಂಬುದನ್ನೂ ಮರೆತು ನಗಿಸಲು ನಾನಾ ಸರ್ಕಸ್ ಮಾಡಹೋಗಿ ಹಾಸ್ಯ ಪ್ರಸಂಗಗಳು ಅಪಹಾಸ್ಯದ ಅಪರಾವತಾರವಾಗುತ್ತಿವೆ. +ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಬಿ.ಸಿ.ಪಾಟೀಲ್ ಅವರ ಶಿವಪ್ಪನಾಯಕ. ಆ ಪಾತ್ರಕ್ಕೆ ಅಭಿನಯಿಸಲು ಹೆಚ್ಚು ಅವಕಾಶವಿದೆ. ಆ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡು ಹಲವು ದೃಶ್ಯಗಳಲ್ಲಿ ತುಂಬ ಮಾರ್ಮಿಕವಾಗಿ ಅಭಿನಯಿಸಿ ಸೂಕ್ಷ್ಮಗಳನ್ನು ಬಿಂಬಿಸಬಲ್ಲ ಒಳ್ಳೆ ನಟನೂ ಆಗಬಲ್ಲೆ ಎಂಬುದನ್ನು ತೋರಿದ್ದಾರೆ. +ಆದರೆ ಕತೆಗೆ ಸಂಬಂಧವಿಲ್ಲದ ಒಂದು ಅಸಂಬದ್ಧ ಸನ್ನಿವೇಶ ಸೃಷ್ಟಿಸಿ ಹಾಸ್ಯದ ಸಲುವಾಗಿ ಬ್ಯಾಂಕ್ ಜನಾರ್ಧನ್ ಅವರಿಗೆ ಡಬ್ಬಲ್‌ರೋಲ್ ಕೊಟ್ಟು, ರೇಖಾದಾಸ್ ಹಾಗು ಮತ್ತೊಬ್ಬಳನ್ನು ಜೋಡಿ ಮಾಡಿ ಅದನ್ನೊಂದು ಅಭಾಸದ ಕಂತೆ ಮಾಡಿಬಿಟ್ಟಿದ್ದಾರೆ. ಹೇಗಾದರೂ ಮಾಡಿ ಒಂದೇ ರೀತಿ ಇರುವವರು ಎಂಬ ಭ್ರಮೆ ಮೂಡಿಸಿ ಕಂಡವರ ಹೆಂಡತಿಯೊಂದಿಗೆ ಮಲಗುವ ದೃಶ್ಯಗಳನ್ನು ಚಿತ್ರಿಸಿ ನಗಿಸುವ ಹುಚ್ಚು ಪ್ರಯತ್ನ ಏಕೆ ಎಂಬುದು ಅರ್ಥವಾಗುವುದಿಲ್ಲ. ಅಂಥ ಸಂದರ್ಭದಲ್ಲಿನ ಸಂಭಾಷಣೆಗಳು ಎಷ್ಟು ಕೀಳಾಗಿರಬಹುದು ಎಂದು ಹೇಳಬೇಕಿಲ್ಲ. +ಎನ್.ಎಸ್. ರಾವ್ ಹಾಗೂ ಉಮಾಶ್ರೀ ಜೋಡಿಯಾಗಿದ್ದ ಅನೇಕ ಚಿತ್ರಗಳಲ್ಲಿ ಡಬ್ಬಲ್ ಮೀನಿಂಗ್ ಟ್ರಿಬ್ಬಲ್ ಮೀನಿಂಗ್‌ಗಳು ಅತಿಯಾಗಿ ಸೋರೆಕಾಯಿ ಬದನೆಕಾಯಿಗಳನ್ನು ತಿನ್ನುವುದೂ ಅಸಹ್ಯವೆನ್ನುಂಥ ಪ್ರಸಂಗಗಳು ಬಂದಿದ್ದನ್ನು ಕನ್ನಡಿಗರಿನ್ನೂ ಮರೆತಿಲ್ಲ. +ಈಗ ಮತ್ತೆ ಅಂಥ ರೋಗ ಉಲ್ಬಣಿಸೀತೋ ಏನೋ ಎಂಬಂಥ ದಿನ ಬರತೊಡಗಿದೆ. ಚಿತ್ರವೊಂದು ಎಬಿಸಿ ಸೆಂಟರ್‌ನಲ್ಲಿ ಭರ್ಜರಿಯಾಗಿ ಓಡಬೇಕೆಂದರೆ ಇಂಥ ದೃಶ್ಯಗಳು ಅನಿವಾರ್ಯ ಎನ್ನುತ್ತಾರೆ ಗಾಂಧೀನಗರದ ಪಂಡಿತರು. +ಎಂದರೆ ಗ್ರಾಮೀಣ ಪ್ರದೇಶದ ಮಂದಿ ಅಷ್ಟು ಕೀಳು ಅಭಿರುಚಿಯವರು ಎಂದು ಹೇಳಿದಂತಾಗುತ್ತದೆ. ನೂರು ದಿನ ಓಡಬಹುದು ಎಂದು ನಿರ್ಮಾಪಕ ಕನಸಿದ ಚಿತ್ರ ಮೂರು ದಿನ ಓಡಿಸುವವರು ಅವರೇ, ನೂರು ದಿನ ಓಡಿಸುವವರೂ ಅವರೇ. ಕನ್ನಡ ಚಿತ್ರಗಳ ಅಂತಿಮ ತೀರ್ಪುಗಾರರು ನೋಡುಗರೇ. +ಅಂಥ ಮಂದಿಯನ್ನು ಅಂಡರ್‌ಎಸ್ಟಿಮೇಟ್ ಮಾಡುತ್ತಾ ಕೀಳು ಅಭಿರುಚಿ ಪ್ರಮೋಟ್ ಮಾಡುತ್ತಾ ಹೋಗುವುದು ಯಾರ ತಪ್ಪು ಎಂಬುದನ್ನು ತಾವೇ ಹೇಳಬೇಕು. +ಬೀಚಿ, ಕೊರವಂಜಿ ಶಿವರಾಂ, ಟಿ.ಪಿ.ಕೈಲಾಸಂ, ನಾ ಕಸ್ತೂರಿ, ಪರ್ವತವಾಣಿ, ಅ.ರಾ ಮಿತ್ರ, ಛೂಬಾಣದ ಟಿಎಸ್ಸಾರ್‍ ಹಾಗೂ ಕನ್ನಡದ ಅನೇಕ ಕನ್ನಡ ನಾಟಕಗಳನ್ನು ಒಮ್ಮೆ ತಿರುವಿ ಹಾಕಿದರೂ ಸಾಕು ಹಾಸ್ಯದ ಕಾರಂಜಿ ಬತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. +ರೀಮೇಕ್ ವೀರರಿಗೆ ಅಂಥ ಕೃತಿಗಳನ್ನು ಓದಲು ಬಿಡುವೆಲ್ಲಿದೆ ಪಾಪ. ಓದಲು ಬಿಡುವಿದಲ್ಲದಿದ್ದರೆ, ಹಾಳಾಗಿ ಹೋಗಲಿ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಕಣ್ತೆರೆದು ನೋಡಿದರೂ ಸಾಕು, ತಮಾಷೆ ಪ್ರಸಂಗಗಳನ್ನು ಹೇರಳವಾಗಿ ಕಣ್ಣಿಗೆ ಬೀಳುತ್ತದೆ. ಅಂಥ ಪ್ರಸಂಗಗಳನ್ನು ಅಳವಡಿಸಿದಾಗ ಪ್ರಸ್ತುತವೆನಿಸೀತು. ಇಲ್ಲವಾದಲ್ಲಿ ಕಾಮೆಡಿ ಎಂಬುದು ಕಪಿಚೇಷ್ಟೆಯಾದೀತು. +ಈ ಮಾತು ಹೇಳುವಾಗ ಮೊನ್ನೆ ತಾನೇ ನಡೆದ ಘಟನೆಯೊಂದು ನೆನಪಾಗುತ್ತಿದೆ. ನಾನೂ ಆರ್‍.ಜಿ.ಹಳ್ಳಿ ದಾವಣಗೆರೆಗೆಂದು ಹೊರಟಾಗ ‘ಬನ್ನಿ ಸಾರ್‍, ಎಕ್ಸ್‌ಪ್ರೆಸ್ ಗಾಡಿ’ ಎಂದು ಬಸ್ ಹತ್ತಿಸಿದ ೧ ಗಂಟೆಯಾದರೂ ಬಸ್ ಹೊರಡಲಿಲ್ಲ. ಹೊರಟ ನಂತರ ಜನ ತುಂಬಿಕೊಳ್ಳಲು ಕೈ ತೋರಿಸಿದವರಿಗೆಲ್ಲ ಬಸ್ ನಿಲ್ಲಿಸತೊಡಗಿದ. ಆಗ, ಆರ್‍.ಜಿ.ಹಳ್ಳಿಗೆ ಕೋಪ ನೆತ್ತಿಗೇರಿ ಸಂವಾದ ಬಿರುಸಾಗಿ ವಾಗ್ಯುದ್ಧವೇ ಆರಂಭವಾಯಿತು. ಉರಿಯುವ ಬೆಂಕಿಗೆ ತುಪ್ಪ ಹಾಕದೆ ಪೂರ್ತಿ ಬಿಸಿ ತಣ್ಣಗಾಗುವಂತೆ ಮಾಡಿ ತೂಕಡಿಸಲುನುವಾದೆ. ಕಿಟಕಿಯ ಬಳಿ ಕುಳಿತಿದ್ದರಿಂದ ನನ್ನ ಕ್ರಿಕೆಟ್ ಕ್ಯಾಪ್ ಗಾಳಿಗೆ ಹಾರಿತ್ತು. ಆದರೆ, ಬಸ್ ನಿಲ್ಲಿಸು ಮಹಾರಾಯ ಎಂದು ನಾನು ಹೇಳಲಿಲ್ಲ. ಹೇಳಿದ್ರೂ ಅವನು ನಿಲ್ಲಿಸುತ್ತಿರಲಿಲ್ಲ. ಹೋದರೆ ಹೋಯಿತು ಟೋಪಿ ಎಂದು ನಾನು ಸುಮ್ಮನಾದೆ. ಪುಣ್ಯಕ್ಕೆ ಆರ್‍.ಜಿ. ಆಗ ನಿದ್ರಿಸುತ್ತಿದ್ದ. ಇಲ್ಲವಾದಲ್ಲಿ ಇನ್ನೊಂದು ಕುರುಕ್ಷೇತ್ರ ಅಲ್ಲಿ ಆರಂಭವಾಗುತ್ತಿತ್ತು. +ಆಗಲೇ ನನಗೆ ಹಲವಾರು ಟೋಪಿ ಪ್ರಸಂಗಗಳು ನೆನಪಾದದ್ದು. ಅಪ್ಪ ಮಗನಿಗೊಂದು ‘ಜೋಕರ್‍ ಕ್ಯಾಪ್’ ತಂದುಕೊಟ್ಟಿದ್ದರು. ಮಗುವಿಗೆ ಆ ಟೋಪಿ ಮಹಾಪ್ರಾಣ ‘ಟ್ರಿಪ್’ ಹೋಗಿದ್ದಾಗ ಟೋಪಿ ಮಿಸ್ ಆಯಿತು. ಎಲ್ಲೆಲ್ಲೋ ಹುಡುಕಿತು ಟೋಪಿಯನ್ನು ಮಗು. ಸಿಗಲಿಲ್ಲ ಟೋಪಿ. ಪಾರ್ಕಿನ ಬೆಂಚಿನ ಮೇಲೆ ಹದಿಹರೆಯದ ಹುಡುಗ-ಹುಡುಗಿ ಕುಳಿತಿದ್ದರು. ಅತ್ತ ನೆಡಯಿತು ಮಗು. ಆಗ ಯುವಕ ಹೇಳುತ್ತಿದ್ದ ‘ಆಹಾ! ನನ್ನ ಬಿಂಕದ ಸಿಂಗಾರಿ, ಅದೆಷ್ಟು ಮೋಹಕವಾಗಿ ಕಾಣುತ್ತಿದ್ದೀ ಗೊತ್ತ? ನಿನ್ನ ಎರಡು ಕಣ್ಣುಗಳು ನಕ್ಷತ್ರದಂತೆ ಹೊಳೆಯುತ್ತಿದೆ. ಅಲ್ಲಿ ನನಗೀಗ ಇಡೀ ಜಗತ್ತು ಕಾಣುತ್ತಿದೆ. ಅಲ್ಲಿ ಏನುಂಟು-ಏನಿಲ್ಲ?” ಎಂದ ಕೂಡಲೇ ಮಗು ಕಾತರದಿಂದ ಕೇಳಿತು ‘ರೀ ನನ್ನ ಟೋಪಿ ಕಾಣ್ತಿದೆಯಾ ಅಲ್ಲಿ’ ಎಂದು. +ಎಲ್ಲಾ ಅಷ್ಟೆ. ಅವರವರ ಚಿಂತೆ ಅವರವರಿಗೆ, ಮಗುವಿಗೆ ಟೋಪಿ ಚಿಂತೆ. ಪ್ರೇಮಿಗೆ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳುವ ಚಿಂತೆ, ರಾಜಕಾರಣಿಗೆ ಕುರ್ಚಿಯ ಚಿಂತೆ, ಚಿತ್ರ ನಿರ್ಮಾಪಕ-ನಿರ್ದೇಶಕರಿಗೆ ರಾಶಿರಾಶಿ ಹಣ ಬಾಚಿಕೊಳ್ಳುವ ಚಿಂತೆ, ಸಹನಟನಟಿಯರಿಗೆ ಹೀರೋ -ಹೀರೋಯಿನ್‌ಗಳಾಗುವ ಚಿಂತೆ, ಪತ್ರಕರ್ತರಿಗೆ ಸ್ಕೂಪ್ ದಕ್ಕಿಸಿಕೊಳ್ಳುವ ಚಿಂತೆ, ಟೋಪಿಯನ್ನು ಮಾರುವವರಿಗೆ ಟೋಪಿ ಮಾರುವ ಚಿಂತೆ. +ಟೋಪಿ ಮಾರುವವ ಒಮ್ಮೆ ನಿದ್ರೆ ಮಾಡುತ್ತಿದ್ದಾಗ ಕೋತಿ ಟೋಪಿಯೊಂದನ್ನು ಕದ್ದು ಮರ ಹತ್ತುತ್ತದೆ. ಇವ ಎದ್ದು ಪರಿಪರಿಯಾಗಿ ಬೇಡಿದ ಕೋತಿಯನ್ನು ‘ಟೋಪಿ ಎಸಿ’ ಎಂದು ಅದು ಎಸೆಯುವುದಿಲ್ಲ. ಆಗ ಕಂಪನಿ ಶೈಲಿಯ ರಾಗರಾಗವಾಗಿ ಹಾಡುವ, ವಿನಂತಿಸುವ ‘ಟೋಪಿಯಾಟವಯ್ಯಾ’ ಎಂಬ ನನ್ನ ನಾಟಕದಲ್ಲಿ ಕಡೆಗೆ ತಾನೊಂದು ಕಲ್ಲು ಎಸೆದು ಕ್ಯಾಚ್ ಹಿಡಿವ. ಅದೂ ಟೋಪಿ ಎಸೆದು ಕ್ಯಾಚ್ ಹಿಡಿಯುವುದು ನಂತರ ಕೊಂಬೆಯೊಂದನ್ನು ಗಿರಿಗಿರಿ ತಿರುಗಿಸುವ ಅದೂ ತಿರುಗಿಸುವುದು ನಂತರ ಕೊಂಬೆ ಎಸೆದ ಅದು ಟೋಪಿ ಎಸೆಯುವುದು. ಆಗ ಅವನಿಗೆ ಟೋಪಿ ದಕ್ಕಿದ ಸಂಭ್ರಮ. +ಹೀಗೆ ಎಲ್ಲ ಸಂಭ್ರಮದ ಘಳಿಗೆಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಹಣ ಮಾಡುವುದೇ ಈಗ ಎಲ್ಲರ ಗುರಿ. ಅದರಿಂದ ಟೋಪಿ ಹಾಕುವುದೇ ಹಲವರ ಕಸುಬೂ ಆಗಿದೆ. ಗಿಮಿಕ್‌ಗಳಿಂದ ಟೋಪಿ, ಗ್ರಾಫಿಕ್‌ನಿಂದ ಟೋಪಿ, ಪ್ರಚಾರ ತಂತ್ರದಿಂದ ಟೋಪಿ, ಸುಳ್ಳು ಸುದ್ದಿಯಿಂದ ಟೋಪಿ, ನಾಲ್ಕಾರು ಚಿತ್ರಗಳಿಂದ ಹತ್ತಾರು ದೃಶ್ಯ ಕದ್ದು, ಒರಿಜಿನಲ್ ಕಥೆ ಯಂದು ಬಂಡಲ್ ಬಿಟ್ಟು ಟೋಪಿ, ಹೀಗಾಗಿ ಇಡೀ ಜಗತ್ತು ಒಂದು ರೀತಿ ‘ಟೋಪಿಮಯ’ವಾಗಿದೆ. +ಯಾರು? ಯಾರಿಗೆ? ಯಾವಾಗ? ಹೇಗೆ? ಟೋಪಿ ಹಾಕುತ್ತಾರೆ ಎನ್ನುವುದೂ ಒಂದು ಇಂಟರೆಸ್ಟಿಂಗ್ ‘ಟೋಪಿ ಕಥೆ’ ಆಗಬಹುದಲ್ಲವೆ? +***** +(೧೯-೧೦-೨೦೦೧) +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […] +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […] +ಮಿಸ್ಟರ್‍ ಎಂಕಣ್ಣ ಇದ್ದಕ್ಕಿದ್ದಂತೆ ಮೊನ್ನೆ ನಮ್ಮ ಮನೆಗೆ ಓಡೋಡಿ ಬಂದ. ಚಲನಚಿತ್ರ ನಿರ್ದೇಶಕರ ಸಂಘದ ೧೬ನೇ ವಾರ್ಷಿಕೋತ್ಸವದ ಆಹ್ವಾನ ಅವನ ಕೈಲಿತ್ತು. ಆ ಆಹ್ವಾನ ಪತ್ರಿಕೆ ನನಗೂ ಬಂದಿದೆ. ೨೪ ಮಂದಿಗೆ ಪ್ರಶಸ್ತಿ ನೀಡುತ್ತಿದ್ದಾರೆ. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_585.txt b/Kannada Sahitya/article_585.txt new file mode 100644 index 0000000000000000000000000000000000000000..36e7775c673617d499e0940ebeccf04525616cb1 --- /dev/null +++ b/Kannada Sahitya/article_585.txt @@ -0,0 +1,318 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +…..ಕುಮಾರಿ ವಸಂತ, +“ಕಳೆದ ವರ್ಷದ ಕಾಲೇಜ್ ಮ್ಯಾಗ್‌ಝಿನ್‌ನಲ್ಲಿ ನಿಮ್ಮ ಕಥೆ ‘ಅರ್ಥವಾಗದವರು’ ಓದಿದೆ. ನಿಜಕ್ಕೂ ಆ ಕಥೆ ಬಹಳ ಸೊಗಸಾಗಿದೆ, ಅರ್ಥಪೂರ್ಣವಾಗಿದೆ. ಸಾಮಾನ್ಯವಾಗಿ ಕಾಲೇಜಿನ ಮೆಟ್ಟಿಲನ್ನು ತುಳಿದಾಕ್ಷಣದಿಂದ ನಿಮ್ಮಗಳ ಲೋಕ ವಿಸ್ತಾರವಾಗಿ ಬಣ್ಣದ ಪ್ರಪಂಚಕ್ಕೆ ಬಹುಬೇಗ ಮಾರುಹೋಗಿ, ಆ ಲೋಕದಲ್ಲಿಯೇ ತೇಲುತ್ತಿರುತ್ತೀರ. ಅಂತಹುದರಲ್ಲಿ ನೀವು ಕಲ್ಪನೆಗೆ ಶರಣಾಗದೆ ತೀರಾ ವಾಸ್ತವವಾದ ಕಥೆಯೊಂದನ್ನು ಬರೆದಿರುವುದು ನೋಡಿ ನನಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು. +ನಿಮ್ಮ ಕಥಾನಾಯಕನಂತೆಯೇ ನಾನೂ ಪ್ರೀತಿ, ಪ್ರೇಮಗಳಲ್ಲಿ ನಂಬಿಕೆ ಇಟ್ಟಿಲ್ಲ.I hಚಿಣe iಣ. ಈ ರೀತಿಯ ಪ್ರೀತಿ, ಪ್ರೇಮಗಳು ನಮ್ಮ ಸ್ವಾತಂತ್ರ್ಯವನ್ನು ಕಸಿಯುವುದಕ್ಕಾಗಿಯೇ ಇವೆ ಎಂದು ನನ್ನ ಭಾವನೆ. ನನ್ನ-ನಿಮ್ಮ ಭಾವನೆಗಳು ಒಂದೇ ರೀತಿಯಿರುವುದರಿಂದ ನೀವು ನನಗೆ ಉತ್ತಮ ಗೆಳತಿಯಾಗುವುದರಲ್ಲಿ ಸಂದೇಹವಿಲ್ಲ. +ಬಾಂಬೆಯಲ್ಲಿನ ಯಾಂತ್ರಿಕ ಜೀವನದಿಂದ ಬೇಸತ್ತು ಹತ್ತುದಿನಗಳ ರಜೆ ಹಾಕಿ ಹಳ್ಳಿಗೆ ಹೋದಾಗ ನಿಮ್ಮ ಕಥೆ ನನಗೆ ತಂಗಿಯ ಮೂಲಕ ದೊರೆಯಿತು. ಈಗ ನೀವು ಕಾಲೇಜಿನಲ್ಲಿನ ಶಿಕ್ಷಣವನ್ನು ಮುಗಿಸಿ ಸರ್ಕಾರಿ ನೌಕರಿಯಲ್ಲಿದ್ದೀರ ಎಂದು ತಿಳಿಯಿತು. +ನನಗಂತೂ ನಿಮ್ಮ ಸ್ನೇಹದ ಅವಶ್ಯಕತೆ ಇದೆ. ನಿಮಗೆ ನನ್ನ ಮನೋಭಾವ ಹಿಡಿಸುವುದಾದರೆ ನೀವು ನನಗೆ ಪತ್ರ ಬರೆದು, ನಿಮ್ಮ ಅಭಿರುಚಿ, ಅಭ್ಯಾಸ-ಹವ್ಯಾಸಗಳನ್ನು ತಿಳಿಸಿ….” +ಪತ್ರವನ್ನೊಮ್ಮೆ ಆಶ್ಚರ್ಯದಿಂದಲೇ ಓದಿ, ಪತ್ರದ ಕೆಳಭಾಗದಲ್ಲಿ ನೋಡಿದೆ. ಮನೋಹರ ಎಂದು ಸಹಿ ಮಾಡಲಾಗಿತ್ತು. ಜೊತೆಯಲ್ಲಿಯೇ ಬಾಂಬೆಯಲ್ಲಿನ ತನ್ನ ಆಫೀಸಿನ ವಿಳಾಸವನ್ನು ಬರೆದಿದ್ದ. +ಓದಿದ ಪತ್ರವನ್ನೇ ಮೂರುಬಾರಿ ಓದಿದ ನಂತರ ಸಂದರ್ಭ ತಿಳಿದು ನನಗೆ ಸ್ವಲ್ಪ ಸ್ವಲ್ಪವಾಗಿ ಸಂತೋಷವಾಗತೊಡಗಿತು. ಇದುವರೆಗೂ ನನ್ನ ಕಥೆಗಳನ್ನು ಓದಿದ್ದವರೆಲ್ಲರೂ ಕೇವಲ ಪ್ರೋತ್ಸಾಹಿಸುವುದಕ್ಕಾಗಿ ‘ಪರವಾಗಿಲ್ಲ, ಕಥೆ ಸುಮಾರಾಗಿದೆ, ಬರೆಯುತ್ತಲೇ ಇರು, ಬೆಳೆಯುತ್ತೀಯ’ ಎನ್ನುತ್ತಿದ್ದರು. ಆದರೆ ನಾನು ಕಥೆ ಬರೆಯುತ್ತಿದ್ದೆ ಎಂಬ ಅಂಶವೇ ಮರೆತುಹೋಗಿರುವಾಗ ಪ್ರಥಮ ಬಾರಿಗೆ ಅಪರಿಚಿತರೊಬ್ಬರು ಮೂರು ವರ್ಷಗಳ ಹಿಮ್ದೆ ಬರೆದ ಕಥೆಯೊಂದನ್ನು ಓದು ಮೆಚ್ಚಿ ಪತ್ರ ಬರೆದು ಸ್ನೇಹ ಬಯಸಿದಾಗ ನನ್ನ ಬಗ್ಗೆಯೇ ಹೆಮ್ಮೆ ಎನಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಸಂತೋಷಪಡಿಸಿದ ವಿಷಯ ಮನೋಹರ ಐ.I.ಅ.ಯಲ್ಲಿ ಂಜmiಟಿisಣಡಿಚಿಣive ಔಜಿಜಿಛಿeಡಿ ಆಗಿ ನನಗಿಂತಾ ಸಾವಿರ ರೂ.ಗಳನ್ನು ಹೆಚ್ಚಾಗಿ ಪಡೆಯುತ್ತಿರುವುದು. +ಮನೋಹರನಿಗೆ ಪತ್ರ ಬರೆಯಬೇಕೇ ಬೇಡವೇ ಎಂಬ ತೊಳಲಾಟ ಶುರುವಾಯಿತು. ಬಾಂಬೆಯ ತುಂಬಾ ಮೋಸಗಾರರೇ ಇರುತ್ತಾರೆಂದು ನನ್ನ ನಂಬಿಕೆ. ಏನೂ ತೀರ್ಮಾನಿಸಲಾಗದೆ ಸುಚಿತ್ರಳ ಬಳಿ ಹೋದೆ. ಸುಚಿತ್ರಾ ಪತ್ರವನ್ನು ಓದಿದವಳೇ ಅಪರಾಧಿಯಂತೆ ತಲೆ ತಗ್ಗಿಸಿ ನಿಂತಿದ್ದ ನನಗೆ- +ನಿನಗೆ ಮನೋಹರ ಗೊತ್ತಾ? ಅವನಿಗೆ ನೀನು ಗೊತ್ತಾ? ಮನೋಹರನಿಗೆ ನಿನ್ನ ಆಫೀಸಿನ ವಿಳಾಸವನ್ನು ಕೊಟ್ಟವರು ಯಾರು? ‘ಅರ್ಥವಾಗದವರು’ ಕಥೆ ನೀನೇ ಬರೆದೆ ಅಂತ ಅವನಿಗೆ ಹೇಗೆ ಗೊತ್ತಾಯ್ತು? ಎಂದು ಒಂದೇ ಬಾರಿಗೆ ಹಲವಾರು ಪ್ರಶ್ನೆಗಳನ್ನು ಹಾಕಿದಳು. ಅವಳ ಎಲ್ಲಾ ಪ್ರಶ್ನೆಗಳಿಗೂ ‘ಗೊತ್ತಿಲ್ಲಾ’ ಎಂಬುದೇ ನನ್ನ ಉತ್ತರವಾಗಿತ್ತು. +ಸುಚಿತ್ರ “ಸರಿ, ಯಾವನೋ ಗೊತ್ತು ಗುರಿ ಇಲ್ಲದವನು ಪತ್ರ ಬರೆದ ಅಂತ ನೀನ್ಯಾಕೆ ಇದಕ್ಕಿಷ್ಟೊಂದು ತಲೆ ಕೆಡಿಸಿಕೊಂಡಿದ್ದೀಯಾ? ಪತ್ರವನ್ನು ಕಸದಬುಟ್ಟಿಗೆ ಎಸೆದು ಬಾಽಽ” ಎಂದು ಗದರಿದಾಗ ಪೆಚ್ಚಾಗಿ ಅವಳ ಹಿಂದೆ ಹೊರಟೆ. +ಮಧ್ಯಾಹ್ನ ಊಟ ಮಾಡುವಾಗಲೂ ಮನೋಹರನ ವಿಷಯವೇ ತಲೆಯಲ್ಲಿ ಇತ್ತು. ನಾನು ಪೆಚ್ಚಾಗಿರುವುದನ್ನು ಕಂಡಾಗ ಸುಚಿತ್ರಳಿಗೆ ಅಯ್ಯೋ ಅನ್ನಿಸಿರಬೇಕು. ಆದರೆ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ಪತ್ರ ಬರೆಯಬೇಕೆಂದು ಅವಳಿಗೆ ಅನ್ನಿಸಲಿಲ್ಲ. ಜೊತೆಗೆ ಮನೋಹರ ಸ್ನೇಹ ಬೆಳೆಸಲು ಕೊಟ್ಟ ಕಾರಣವೂ ಸಮರ್ಪಕವೆನಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಉದ್ಯೋಗದ ಬಗ್ಗೆಯೇ ಅವಳಿಗೆ ಅಪನಂಬಿಕೆಯಾಗಿತ್ತು. ಆದರೆ ನಾನು ಈ ವಿಷಯವನ್ನು ತಲೆಗೆ ಅಂಟಿಸಿಕೊಂಡು ಪೆಚ್ಚಾಗಿ ಕುಳಿತದ್ದನ್ನು ಕಂಡು, ‘ವಸಂತ ನಿನಗೆ ಇಷ್ಟವಿದ್ದರೆ ಪತ್ರ ಬರೆದುಬಿಡು’ ಎಂದಳು. ನನಗೂ ಸುಚಿತ್ರ ಅಷ್ಟು ಹೇಳಿದ್ದೇ ಸಾಕಾಗಿತ್ತು. ಕೂಡಲೇ “ಸುಚಿ, ನನಗಂತೂ ಪತ್ರ ಬರೆದರೂ ಏನೆಂದು ಬರೆಯಬೇಕೆಂದು ತಿಳಿಯುವುದಿಲ್ಲ. ಆದ್ದರಿಂದ ದಯವಿಟ್ಟು ನೀನೇ ಪತ್ರ ಬರೆದುಕೊಡು” ಎಂದು ಅಂಗಲಾಚಿದೆ. +ಸುಚಿತ್ರ “ಅದನ್ನೂ ನಾನೇ ಹೇಳಿಕೊಡಬೇಕಾ? ಮನೋಹರ ಪತ್ರ ಬರೆದಿರುವುದು ನಿನಗೊ? ನನಗೊ?” ಎಂದು ಹಾಸ್ಯಮಾಡಿ “ತಮಾಷೆಯಾಗಿ” ಪತ್ರ ಬರೆಯುತ್ತೇನೆ, ನೋಡು: +“ಪ್ರಿಯ ಮನೋಹರ್ +ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ. +೧) ನಿಮ್ಮ ನಿಜವಾದ ನಾಮಧೇಯವೇನು? +೨) ನಿಮ್ಮ ಉದ್ಯೋಗದ ಮೂಲಕ ನೀವು ನಾಲ್ಕಂಕಿ ಪಗಾರವನ್ನು ನಿಜಕ್ಕೂ ತರುವವರೆ? +೩) ನಿಮ್ಮ ವಯಸ್ಸೇಷ್ಟು? +೪) ನಿಮಗೆ ಮದುವೆಯಾಗಿದೆಯೇ? +೫) ನಿಮಗೆ ನನ್ನ ವಿಷಯ, ಆಫೀಸಿನ ವಿಳಾಸ ತಿಳಿದ ಬಗೆ ಹೇಗೆ? ನಿಮ್ಮ ತಂಗಿ ಯಾರು? ಹೆಸರೇನು? +ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕು. ಉತ್ತರ ಸಮರ್ಪಕವಾಗಿಯಷ್ಟೇ ಅಲ್ಲ, ಸತ್ಯವೂ ಆಗಿರಬೇಕು. ಬುದ್ಧಿವಂತಿಕೆಯ ಹಾಗೂ ಬಳಸು ಉತ್ತರಗಳಿಗೆ ಅಂಕಗಳನ್ನು ನೀಡಲಾಗುವುದಿಲ್ಲ. ನೀವು ಮೇಲಿನ ಐದೂ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಇಪ್ಪತ್ತು ಅಂಕದಂತೆ ಐದು ಪ್ರಶ್ನೆಗಳಿಗೆ ನೂರು ಅಂಕಗಳನ್ನು ಇಡಲಾಗಿದೆ. ತಪ್ಪು, ಜಾರಿಕೆಯ ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದು” ಎಂದು ಬರೆದಳು. +ಈ ರೀತಿಯ ಪತ್ರ ಬರೆಯುವುದಾಗಲೀ, ಓದಿಯಾಗಲೀ ನನಗೆ ಗೊತ್ತಿಲ್ಲ. ಈ ಪತ್ರ ಹೊಸ ರೀತಿಯಲ್ಲಿ ಚೆನ್ನಾಗಿದೆ ಎನ್ನಿಸಿತು. ಸುಚಿತ್ರಾ ಹೇಳಿದ್ದೆಲ್ಲಾ ಸರಿಯಾಗಿಯೇ ಇರುತ್ತದೆ ಎಂದೇ ನನ್ನ ನಂಬಿಕೆ. ಆದ್ದರಿಂದ ಅದೇ ರೀತಿ ಬರೆಯಲು ಕುಳಿತಾಗ ಸುಚಿತ್ರ ಜೋರಾಗಿ ನಕ್ಕುಬಿಟ್ಟಳು. ಆತ್ಮೀಯವಾಗಿ ತನ್ನ ಕೈಯನ್ನು ನನ್ನ ಬೆನ್ನ ಮೇಲಿಟ್ಟು, +“ವಸಂತಾ, ನೀನು ತುಂಬಾ ಪೆದ್ದಿ, ನಿನಗೇ ಪತ್ರ ಬರೆಯಲು ಬಿಟ್ಟರೆ ಅಸಂಬದ್ಧವಾಗಿ ಬರೆಯುತ್ತೀಯ ಎಂಬಹೆದರಿಕೆ ನನಗಿದೆ. ಆದ್ದರಿಂದ ನಾನೇ ಪತ್ರ ಬರೆದು ಕೊಡುತ್ತೇನೆ” ಎಂದು ಹೇಳಿ ಅವಳ ಟೇಬಲ್ಲಿನ ಹತ್ತಿರ ಕುಳಿತು ಏನನ್ನೋ ಬರೆದು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಬಳಿಗೆ ಬಂದಳು. ನಾನು ಆ ಪತ್ರವನ್ನೆತ್ತಿಕೊಂಡು ಕೃತಜ್ಞತಾಭಾವದಿಂದ ಓದತೊಡಗಿದೆ. +“ಶ್ರೀ ಮನೋಹರ್, +ಬಹುಶಃ ನೀವು ನನ್ನ ಕಥೆಯನ್ನು ಓದು ಮೋಸಹೋಗಿರುವಂತಿದೆ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಸಾಮಾನ್ಯವಾಗಿ ಎಲ್ಲಾ ಕಾಲೇಜಿನ ತರುಣಿಯರು ಬರೆಯುವಂತೆ ಪ್ರೇಮಕಥೆಗಳನ್ನು ಬರೆಯಬಾರದು; ಎಲ್ಲರಿಗಿಂತಾ ಆ ಕಥೆ ವಿಭಿನ್ನವಾಗಿರಬೇಕೆಂದು, ಪ್ರೀತಿ-ಪ್ರೇಮವೆಂದರೆ ಯಾವ ಕಾರಣವೂ ಇಲ್ಲದೆ ದ್ವೇಷಿಸುವ, ತಿರಸ್ಕರಿಸುವ ಯುವಕನೊಬ್ಬನ ಕಥೆ ಬರೆದಿದ್ದೆ. ಆ ಕತೆಯನ್ನು ನೀವೀಗ ಇಷ್ಟಪಟ್ಟಿದ್ದೀರಿ. ನಿಜ ಹೇಳಬೇಕೆಂದರೆ ನಾನು ಬರೆದುದು ಬರೇ ಕಥೆ. ಈ ಕಥೆಯಲ್ಲಿನ ಯುವಕನ ಅಥವಾ ನಿಮ್ಮಂತಹ ವ್ಯಕ್ತಿಗಳ ಪ್ರೇಮದ ಬಗೆಗಿನ ಪೊಳ್ಳು ತಿರಸ್ಕಾರವನ್ನೇ ನಾನು ತಿರಸ್ಕರಿಸುತ್ತೇನೆ. ಎಲ್ಲ ವ್ಯಕ್ತಿಗಳೂ ಒಂದಲ್ಲಾ ಒಂದು ರೀತಿಯಯಲ್ಲಿ ಪ್ರೀತಿಯ ಬಂಧನದಲ್ಲಿ ಒಳಗಾಗಿರುತ್ತಾರೆಂದೇ ನನ್ನ ಭಾವನೆ. +ನೀವು ನನ್ನ ಸ್ನೇಹವನ್ನು ಬಯಸಿದ್ದೀರ. ಆದರೆ ನಾನು ಸಾಮಾನ್ಯರಲ್ಲಿ ಸಾಮಾನ್ಯ ಹೆಣ್ಣು. ಎಲ್ಲರಂತೆ ಜೀವನದಲ್ಲಿ ನನಗೂ ಆಸೆ, ಆಕಾಂಕ್ಷೆಗಳಿವೆ. ಸುಖವಾದ ಜೀವನವನ್ನು ನಡೆಸಬೇಕೆಂಬ ಹಂಬಲವಿದೆ. ನನ್ನ ಅಭಿರುಚಿ, ಅಭ್ಯಾಸ, ಹವ್ಯಾಸಗಳನ್ನು ಕೇಳಿದ್ದೀರಿ. ನನ್ನ ಅಭಿರುಚಿ ಇರುವುದು ಡಿಶೂಂ ಡಿಶೂಂ ಸಿನಿಮಾಗಳ ಬಗ್ಗೆ, ಅಭ್ಯಾಸ ಅತಿಯಾಗಿ ತಿನ್ನುವುದು: ಹವ್ಯಾಸ ಪೆದ್ದುಪೆದ್ದಾಗಿ ಮಾತನಾಡುವುದು. +ನೀವು ನನ್ನಕಥೆ ಓದಿ ನಾನು ಬುದ್ಧಿವಂತಳಿರಬಹುದು; ಕಥೆ ಬರೆಯುವುದರಿಂದ ಪ್ರತಿಭಾವಂತಳಾಗಿರಬಹುದು ಎಂದೆಲ್ಲಾ ಕಲ್ಪಿಸಿರುತ್ತೀರಿ. ಆದರೆ ನಾನು ಪಿ.ಯು.ಸಿ. ಮತ್ತು ಬಿ.ಎ. ಎರಡರಲ್ಲಿಯೂ ಒಂದೊಂದು ವರ್ಷ ಫೇಲಾಗಿದ್ದೇನೆ. ಇನ್ನು ಕಥೆಯನ್ನು ಓದಿ ಪ್ರತಿಭಾವಂತಳೆಂದುಕೊಂಡಿರುವುದು ನಿಮ್ಮ ತಪ್ಪು. ನಾನೆಷ್ಟು ಕಷ್ಟಪಟ್ಟು ಆ ಕಥೆ ಬರೆದೆ ಗೊತ್ತಾ? ಆ ಕಥೆಯೊಂದಕ್ಕೇ ನನ್ನಲ್ಲಿದ್ದ ವಿಷಯಗಳು, ಪದಗಳೆಲ್ಲಾ ಮುಗಿದುಹೋದವು. ಹೊಸದಾಗಿ ಏನನ್ನಾದರೂ ಬರೆಯಬೇಕೆಂದುಕೊಂಡರೆ ತಲೆಯೆಲ್ಲಾ ಖಾಲಿ! ನನ್ನ ಕಥೆ ಮೊದಲು ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೆ ನಮ್ಮ ಕಾಲೇಜಿನ ವಿದ್ಯಾರ್ಥಿ-ಸಂಪಾದಕಿ ಕಥೆಯನ್ನು ತಿದ್ದಿ ಓದಿದವರು ‘ಕಥೆ ಚೆನ್ನಾಗಿದೆ’ ಎಂದು ಹೇಳುವಷ್ಟರ ಮಟ್ಟಿಗೆ ರೂಪಿಸಿದಳು. +ಇನ್ನು ನನ್ನ ಬಗ್ಗೆ ಹೇಳಬೇಕೆಂದುಕೊಂದರೆ ನನ್ನ ತಾಯಿ ಮತ್ತು ತಮ್ಮ ಮೈಸೂರಿನಲ್ಲಿದ್ದಾರೆ. ನಾನು ಓದಿದ್ದೇಲ್ಲಾ ಮೈಸೂರಿನಲ್ಲೇ. ನಾನು ಆದಾಯ ತೆರಿಗೆ ಇಲಾಖೆಯಲ್ಲಿ ಟೈಪಿಸ್ಟ್ ಕೆಲಸದಲ್ಲಿರುವುದು ನಿಮಗೆ ಗೊತ್ತೇ ಇದೆ. ಇದಿಷ್ಟೇ ನನ್ನ ವಿಷಯ. ನಾನು ಇದುವರೆಗೂ ಯಾರಿಗೂ ಪತ್ರಗಳನ್ನು ಬರೆದಿಲ್ಲ. ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದೆಂಬುದರ ಅರಿವಿಲ್ಲದೆಯೇ ಬರೆದಿದ್ದೇನೆ. ಆದರೆ ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿದ್ದೇನೆಂಬ ಸಮಾಧಾನ ನನಗಿದೆ. +ಅಂತೂ ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿದ್ದೇನೆ. ಆದ್ದರಿಂದ ನಿಮ್ಮ ಮುಂದಿನ ಪತ್ರವನ್ನು ನಿರೀಕ್ಷಿಸುವುದು ಸರಿಯಲ್ಲವೇನೋ ಅಲ್ಲವೆ? ಪತ್ರ ಮುಗಿಸಲೆ….?” +ಪತ್ರ ಓದಿ ಮುಗಿಸಿದ ನನಗೆ ಸುಚಿತ್ರಳ ಮೆಲೆ ಕೆಟ್ಟಕೋಪ ಬಂದು, “ಪಾಪಿ, ಈ ರೀತಿ ಪತ್ರ ಬರೆದರೆ ಮನೋಹರ ಮತ್ತೊಮ್ಮೆ ಉತ್ತರಿಸುವನೆ? ಈ ರೀತಿ ಕೆಟ್ಟ ಪತ್ರ ಬರೆಯುವುದಾದರೆ ಅವನಿಗೆ ಉತ್ತರ ಬರೆಯುವುದೇ ಬೇಡ” ಎಂದೆ. +ಸುಚಿತ್ರ “ಅಂತೂ ಸಾಹಸಪಟ್ಟು ನೋಡಿದ ಸಿನಿಮಾ, ಓದಿದ ಕಥೆಗಳನ್ನೆಲ್ಲಾ ಜ್ಞಾಪಿಸಿಕೊಂಡು ಬರೆದ ಪತ್ರವನ್ನು ನೀನು ಚೆನ್ನಾಗಿಲ್ಲ ಅನ್ನುತ್ತಿದ್ದೀ. ಸರಿ ವಸಂತಾ, ನಾನು ಬರೆದದ್ದೆನೂ ಚೆನ್ನಾಗಿಲ್ಲ. ನಿನಗೆ ನಿಜವಾಗಿಯೂ ಯೋಗ್ಯತೆ ಇದ್ದರೆ ಇದಕ್ಕಿಂತ ಉತ್ತಮವಾದ ಪತ್ರವನ್ನು ಬರೀ ನೋಡೋಣ” ಎಂದು ಸವಾಲು ಹಾಕಿದಳು. ಈ ಪತ್ರಕ್ಕಿಂತ ಉತ್ತಮವಾದುದಿರಲಿ, ಕಳಪೆಯಾಗಿ ಬರಿ ಎಂದರೂ ನನಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಬರವಣಿಗೆ ಎಂದೋ ಎಲ್ಲೋ ಮಾಯವಾಗಿತ್ತು. ಆದ್ದರಿಂದ ಸುಚಿತ್ರ ಬರೆದುಕೊಟ್ಟ ಪತ್ರವನ್ನು ನನ್ನ ಕೈ ಬರಹದಲ್ಲಿ ಬರೆದು ಕೊನೆಯದಾಗಿ ‘ನಿಮ್ಮ ಬಗ್ಗೆ ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ವಿಷಯವಾಗಿ ಏನನ್ನಾದರೂ ಬರೆಯಿರಿ’ ಎಂದು ಸುಚಿತ್ರಳಿಗೆ ತಿಳಿಯದಂತೆ ಸೇರಿಸಿ ಆ ಪತ್ರವನ್ನೇ ವಿಧಿಯಿಲ್ಲದೆ ಪೋಸ್ಟ್ ಮಾಡಿದೆ. +ಪೋಸ್ಟ್ ಮಾಡಿದ ಒಂದು ವಾರ ಆತಂಕದಿಂದ, ಮನೋಹರ ಏನು ಉತ್ತರ ಕೊಡುವನೋ ಎಂಬ ನಿರೀಕ್ಷೆಯಿಂದ ಕಾದಿದ್ದೆ. ಆದರೆ ಒಂದು ವಾರವಿರಲಿ, ಒಂದು ತಿಂಗಳಾದರೂ ಮನೋಹರನಿಂದ ಉತ್ತರ ಬಾರದಿದ್ದಾಗ ನನಗೆ ಬಹಳ ನಿರಾಶೆಯಾಯಿತು. ಸುಚಿತ್ರ ಹೇಳಿದ ರೀತಿ ಬರೆದಿದ್ದರಿಂದಲೇ ಅವನು ಪತ್ರ ಬರೆಯಲಿಲ್ಲ. ಇನ್ನೆಂದೂ ಜೀವನದಲ್ಲಿ ಸುಚಿತ್ರಳ ಮಾತಿನ ರೀತಿ ನಡೆಯುವುದಿಲ್ಲ ಎಂದು ಶಪಥ ಮಾಡಿದೆ. ನನ್ನ ಸಿಟ್ಟು ಕಂಡು ಸುಚಿತ್ರಾ, “ ಗುರುತು ಪರಿಚಯವಿಲ್ಲದ ಒಬ್ಬ ವ್ಯಕ್ತಿ ಪತ್ರ ಬರೆದ ಕಾರಣಕ್ಕಾಗಿ ಸ್ವಲ್ಪ ಆತ್ಮೀಯತೆಯಿಂದ ಸ್ನೇಹ ಬಯಸಿದ್ದಕ್ಕೇ ನೀನು ಅಷ್ಟೇ ಸಾಕೆಂದು ಮನೋಹರ ಜನ್ಮಜನ್ಮಗಳ ಗೆಳೆಯನೇನೋ ಎಂಬಂತೆ ವರ್ತಿಸುತ್ತಿರುವುದನ್ನು ಕಂಡು ನನಗೆ ಕನಿಕರವಾಗುತ್ತಿದೆ. ಇಷ್ಟಕ್ಕೂ ನೀನು ಕಳೆದುಕೊಂಡಿರುವುದಾದರೂ ಏನು?” ಎಂದು ನಕ್ಕಳು. +* +* +* +ವಸಂತಳ ಈ ಪತ್ರವನ್ನು ನಾನು ಓದಿ ಮುಗಿಸಿದ್ದು ಬಹುಶಃ ಇದು ನೂರನೇ‌ಎಯ ಬಾರಿ ಇರಬಹುದು. ನನ್ನ ಇಷ್ಟು ವರ್ಷದ ಬದುಕಿನಲ್ಲಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಹೋಗಲಿಲ್ಲ. ಸ್ನೇಹ ಬಯಸಿ ಬಂದವರನ್ನೆಲ್ಲಾ ನನ್ನ ಒಂಟಿತನವನ್ನೂ, ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುವುದನ್ನೂ ಕಂಡು ರೋಸಿ ಹೊರಟು ಹೋಗಿದ್ದರು. ಹಾಗೆ ನನ್ನ ಜೊತೆಗೆ ಉದ್ದಕ್ಕೂ ಬಂದವರು ತಂಗಿ ರತ್ನ ಮತ್ತು ತಮ್ಮ ರಂಗನಾಥ ಇಬ್ಬರೇ. +ಸುಮಾರು ದಿನಗಳಿಂದಲೂ ನನಗೆ ಒಬ್ಬ ಗೆಳೆಯ ಅಥವಾ ಗೆಳತಿಯ ಅವಶ್ಯಕತೆಯಿದೆ ಎಂದುಕೊಳ್ಳುತ್ತಿರುವಾಗಲೇ ಯಾರದೋ ಮನೆಯಿಂದ ರತ್ನ ಓದಲು ನನಗೆಂದು ತಂದಿದ್ದ ಪುಸ್ತಕಗಳ ಜೊತೆಗೆ ವಸಂತಳ ಕಾಲೇಜ್‌ಮ್ಯಾಗಝಿನ್ ಸೇರಿತ್ತು. ನಾನೂ ಓದಿದ್ದು ಮೈಸೂರಿನಲ್ಲಿಯೇ ಅಲ್ಲವೆ ಎಂದುಕೊಂಡು ಆ ಪುಸ್ತಕ ತೆರೆದಾಗ ವಸಂತಳ ಕಥೆ ಕಣ್ಣಿಗೆ ಬಿತ್ತು. ಓದಿದ ನಂತರ ಹುಡುಗಿ ಸ್ವಲ್ಪ ವೈಚಾರಿಕತೆಯಿಂದ ಬರೆದಿದ್ದಾಳೆನಿಸಿ ಅವಳೇ ಏಕೆ ನನ್ನ ಗೆಳತಿಯಾಗಬಾರದು? ಪ್ರಯತ್ನಿಸಿ ನೋಡೋಣ. ಹೇಗಿದ್ದರೂ ಅವಳು ನನ್ನ ರೀತಿಯ ಮನೋಭಾವದವಳೇ ತಾನೇ ಎಂದುಕೊಂಡು ಮೈಸೂರಿಗೆ ಬಂದಾಗ ನನ್ನ ಪರಿಚಯದ ಲೆಕ್ಚರರ್ ಮೂಲಕ ವಸಂತಳ ವಿಳಾಸ ಗಿಟ್ಟಿಸಿಕೊಂಡು ಪತ್ರ ಬರೆದಿದ್ದೆ. ವಸಂತಳೂ ಸಾಕಷ್ಟು ಉದ್ದದ ಪತ್ರ ಬರೆದಿದ್ದಳು. ಪತ್ರ ಬರೆದಿರುವ ರೀತಿ ನೋಡಿದರೆ ಹುಡುಗಿ ಬಹಳ ಮುಗ್ಧೆ ಇರಬಹುದು ಗಂಭೀರೆಯೂ ಆಗಿರಬಹುದು ಎನಿಸಿತು. ಸ್ನೇಹಕ್ಕಾಗಿ ನಾನು ಬಯಸಿ ಬರೆದರೆ, ವಸಂತ ಸ್ನೇಹದ ವಿಷಯವನ್ನು ಬಿಟ್ಟು ಮಿಕ್ಕೆಲ್ಲಾ ಪುರಾಣ ಬರೆದಿದ್ದಾಳೆ. ಬಹುಶಃ ಅವಳಿಗೆ ನಾನು ಇಷ್ಟವಾಗದೇ ಹೋಗಿರಬಹುದು ಎಂದುಕೊಂಡು ಪತ್ರದ ಜೊತೆಗೆ ಮೊದಲನೆಯ ಪತ್ರ ಪುಸ್ತಕಗಳ ಮಧ್ಯೆ ಸಿಕ್ಕಿದಾಗ ವಸಂತಳಿಗೆ ಏನಾದರೂ ಬರೆಯಲೇಬೇಕೆನಿಸಿತು. ಆದರೆ ಈಗಾಗಲೇ ಅವಳಿಗಾಗಿ ಬರೆದಿಟ್ಟಿದ್ದ ಐದೂ ಪತ್ರಗಳನ್ನು ಪೋಸ್ಟ್ ಮಾಡದೇ ನನ್ನಲ್ಲಿಯೇ ಇಟ್ಟುಕೊಂಡಿದ್ದೆ. ಆದದ್ದಾಗಲಿ ಎಂದುಕೊಂಡು ಪತ್ರ ಬರೆಯಲು ಪ್ರಾರಂಭಿಸಿದೆ. +“ವಸಂತ, +ನಿಮ್ಮ ಕಾಗದಕ್ಕೆ ಧನ್ಯವಾದಗಳು. +ಆದರೆ ಅದರಿಂದ ನನಗೆ ಭಯಂಕರ ನಿರಾಶೆ‌ಉಂಟಾಯಿತು. ನನ್ನ ಇಪ್ಪತ್ತೆಂಟು ವರ್ಷದ ಬದುಕಿನಲ್ಲಿ ಯಾರ ಮುಂದೆಯೂ ಸ್ನೇಹಕ್ಕಾಗಿ ಅಂಗಲಾಚಿ ಛಿommiಣ ಆಗಿರಲಿಲ್ಲ. ಪ್ರಪ್ರಥಮ ಬಾರಿಗೆ ನಿಮ್ಮ ಮುಂದೆ ಛಿommiಣ ಆಗಿ ಸೋತೆ! ನನ್ನ ಜೊತೆ ಸ್ನೇಹ ಬಯಸುತ್ತೇನೆ ಎಂದವರಿಗೆಲ್ಲಾ ನನ್ನ ನಕಾರಾತ್ಮಕ ಉತ್ತರ ನಿರಾಶೆ ತಂದಿತು. ಈಗ ಅದರ ತಿರುಗುಬಾಣ! +ಮತ್ತೆ ನೀವು ಮೈಸೂರಿನವರೆಂದು ತಿಳಿದು ಮತ್ತಷ್ಟು ಖುಷಿಯಾಯಿತು. ಕಾರಣ, ನಾನು ಓದಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇದ್ದದ್ದು ಮಹಾರಾಜ ಕಾಲೇಜ್ ಹಾಸ್ಟೆಲ್‌ನಲ್ಲಿ. ಮೈಸೂರಿನ ಸಾಲುಮರಗಳ ರಸ್ತೆಗಳು ನನಗೆ ಬಹಳ ಪರಿಚಯ. ನನ್ನ ವ್ಯಕ್ತಿತ್ವ ರೂಪುಗೊಂಡಿದ್ದೇ ಮೈಸೂರಿನಲ್ಲಿ. ನಾನು ಬಿ.ಎ. ಮಾಡಿದಾಗ ಆ ವರುಷ ನಮ್ಮ ಕಾಲೇಜಿಗೆ ಐದು ರ್‍ಯಾಂಕುಗಳು ಬಂದವು. ಅದರಲ್ಲಿ ಪ್ರಥಮ ರ್‍ಯಾಂಕು ನನ್ನದು. ನನಗೆ ಮೂರು ಚಿನ್ನದ ಪದಕಗಳು. ಸಾಕು. ನನಗೆ ಬೇಸರವಾಗುತ್ತಿದೆ. ಬಹುಶಃ ಹೇಳಿಕೊಳ್ಳುತ್ತಿರುವುದು ನಿಮ್ಮ ಮುಂದೆಯೇ. ಅದೂ ನಿಮ್ಮ ಗೆಳತಿ ಸುಚಿತ್ರಾ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾಳೆಂದು ನೀವೀಗ ಬರೆದಿದ್ದುದರಿಂದ ಹೇಳಿದ್ದಷ್ಟೆ! +ಬಿ.ಎ. ಮುಗಿದ ಮೇಲೆ ರಾಜ್ಯಶಾಸ್ತ್ರ ಮುಗಿಸಿಕೊಂಡು ಎಂ.ಎ. ಗೆ ಸೇರಿದೆ. ಮೊದಲನೆಯ ವರ್ಷ ಮುಗಿಸಿದೆ. ನಾನು ಆರ್ಥಿಕವಾಗಿ ಮುಕ್ತನಾಗಬೇಕೆಂಬ ಅನಿಸಿಕೆ ಬಹಳವಾದ್ದರಿಂದ ಮತ್ತು ನನ್ನ ಕುಟುಂಬ ಅಷ್ಟೇನೂ ಒಳ್ಳೆಯ ಆರ್ಥಿಕ ಮಟ್ಟದಲ್ಲಿ ಇಲ್ಲದ್ದರಿಂದ ನಾನು ಅನಿವಾರ್ಯವಾಗಿ ಅಂಚೆ ಕಛೇರಿಯಲ್ಲಿ ಗುಮಾಸ್ತನಾದೆ. ಒಂದು ವರ್ಷದ ನಂತರ ಮೈಸೂರು ಬ್ಯಾಂಕಿನಲ್ಲಿ ಕ್ಯಾಷಿಯರ್ ಆದೆ. ಆರು ತಿಂಗಳ ನಂತರ ಡಿವಿ‌ಓ ಆದೆ. ಸ್ಟೇಟ್ ಗೌರ್‍ನಮೆಂಟ್‌ನಲ್ಲಿನ buಡಿeಚಿuಛಿಡಿಚಿಛಿಥಿ ಮತ್ತು ಣಚಿಠಿism ನನಗೆ ಅಸಹ್ಯವಾದ್ದರಿಂದ ಈಗ ಇನ್‌ಶೂರೆನ್ಸ್‌ನಲ್ಲಿ ಇದ್ದೆನೆ. ಇಲ್ಲೂ ಅದೇ ಖಾಯಿಲೆ. ಬದುಕಲಿಕ್ಕೆ ಎಲ್ಲವನ್ನೂ ಅರಗಿಸಿಕೊಳ್ಳಬೇಕಲ್ಲ. +ಸಾಹಿತ್ಯದ ಬಗ್ಗೆ ನನಗೆ ಬಹಳ ಹುಚ್ಚು. ಆದರೆ ನೈಜ ಬದುಕಿಗೆ ಕಾಲಿರಿಸಿದ ಮೇಲೆ ನನಗೆ ಸಾಹಿತ್ಯಕ್ಕೂ, ಸಾಹಿತಿಗಳಿಗೂ ಬದುಕಿಗೂ ಬಹಳ ಅಂತರವಿದೆ ಎನಿಸಿತು. ನಾನೂ ಬರೆಯುತ್ತಿದ್ದೆ. ನನ್ನ ಬರಹ ನನಗೇ ತೃಪ್ತಿ ಕೊಡಲಿಲ್ಲವಾದ್ದರಿಂದ I sಣoಠಿಠಿeಜ. ನನ್ನ ಮೇಲೆ ಪ್ರಭಾವ ಬೀರಿದ ಸಾಹಿತಿಗಳು ಕುವೆಂಪು, ಕಾರಂತ್, ಲಂಕೇಶ, ಭೈರಪ್ಪ, ಅನಂತಮೂರ್ತಿ, ಕಾಮು, ಎಲಿಯಟ್. ಓಹ್! ಕ್ಷಮಿಸಿ ಏನೇನೋ ಬರೆದುಬಿಟ್ಟೆ. ಬಹುಶಃ ಇವರುಗಳ ಹೆಸರುಗಳನ್ನೆಲ್ಲಾ ನೀವಿನ್ನೂ ಕೇಳಿಲ್ಲ ಎಂದೇ ನನ್ನ ಭಾವನೆ! +ಮರೆತೆ. ನನ್ನ ಜಾತಿಯ ಬಗ್ಗೆ ನಿಮಗೆ ಕುತೂಹಲವಿರಬೇಕಲ್ಲಾ? ನಿಮಗಲ್ಲದಿದ್ದರೂ ನಿಮ್ಮ ಗೆಳತಿಗಾಗಿ ಹೇಳುತ್ತಿದ್ದೇನೆ. ನನ್ನದು ಹೆಸರೇ ಇಲ್ಲದ ಜಾತಿ! ನೂರೆಂಟು ಕಡೆ ನೂರೆಂಟು ಹೆಸರು ಈ ಜಾತಿಗೆ. ಜೋಷಿ, ಸಿದ್ಧರು, ಬಲಜಿಗರು, ಭೈರಾಗಿ ಹೀಗೆ ಮುಂತಾದುವು. ಸಾಮಾಜಿಕ ಸ್ತರದಲ್ಲಿ ಇದಕ್ಕಿರುವ ಸ್ಥಾನ miಜಜಟ oಡಿಜeಡಿ…. ಆ ಬಗ್ಗೆ ಬರೆಯಲು ನನಗೆ ಮುಜಗರ, ಅಸಹ್ಯ, ನಿಮ್ಮ ಹಾಗೆ, ಅಂದರೆ ಕಥೆಯಲ್ಲಿನ ಯುವಕನ ಹಾಗೆ ನಾನು ಹುಚ್ಚು ಆದರ್ಶನಗಳ ಹೊಳೆಯಲ್ಲಿ ತೇಲಿ, ಮುಳುಗಲು ಯತ್ನಿಸಿದವನು. ಆಮೇಲೆ ಆದರ್ಶಗಳು ಜೀವನದರ್ಶನವನ್ನು ನೈಜಗೊಳಿಸಲಾರವು ಎಂದು ತಿಳಿದೆ. ‘ಬದುಕು’-ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡು ಉತ್ತರ ಹುಡುಕಿದೆ. ಉತ್ತರ ಬಲ್ಲ ವ್ಯಕ್ತಿಗಳನ್ನು ಹುಡುಕಿದೆ. ಸಿಗಲೇ ಇಲ್ಲ. ಹಾಗಾಗಿ ಖಿhe ಒಥಿಣh oಜಿ Sಥಿsiಠಿhus ಹಾಗೆಯೇ ಉಳಿದುಬಿಟ್ಟಿದೆ… ಸ್ಪೆಷಲ್ಲಾಗಿ ಮನಃಶಾಸ್ತ್ರ ಓದಿದೆ. ಅಲ್ಲೂ ಸಿಕ್ಕಿದ್ದು ಇxisಣiಟಿg ಊumಚಿಟಿ ಃehಚಿviouಡಿ ಅಷ್ಟೆ! ಆ ಮಿತಿಗೆ ನಾನು ಒಳಗಾದೆ. ಕೊನೆಗೆ ಅನ್ನಿಸಿದ್ದು ಜeಚಿಣh is ಣhe oಟಿಟಥಿ ಡಿeಚಿಟiಣಥಿ ಎಂದು. ಆ ಬಗ್ಗೆ ಹೆಚ್ಚಿಗೆ ಹೇಳಲಾರೆ…. +ನನ್ನ ಮದುವೆಯ ಬಗ್ಗೆ ನಿಮ್ಮ ಗೆಳತಿಗೇಕಂತೆ ಕೆಟ್ಟ ಕುತೂಹಲ? ನನ್ನ ಮದುವೆಯ ಬಗೆಗಿನ ಈ ಪ್ರಶ್ನೆ ನಿಮ್ಮದೊ? ಸುಚಿತ್ರಾ ಅವರದ್ದೊ? ಮದುವೆಯ ವಯಸ್ಸು ನನಗೆ ಮೀರುತ್ತಿದೆಯಾದರೂ ನಾನು ಆ ಬಗ್ಗೆ ಸೀರಿಯಸ್ ಆಗಿಲ್ಲ. ನನ್ನ ಹುಚ್ಚು ಮನಸ್ಸಿಗೂ ಆ ಮದುವೆ-ಹೆಂಡತಿ ಮಕ್ಕಳ ಮಿತಿಗೂ ಬಹಳ ಅಂತರ ಎನಿಸುತ್ತದೆ. ಮದುವೆ ನನ್ನ ಸ್ವಾತಂತ್ರ್ಯವನ್ನು ನುಂಗಿಹಾಕುತ್ತದೆ ಎನ್ನುವ ಭಯ ನನಗೆ. ಸಾಯಬೇಕು ಎನ್ನುವ ಸ್ವತಂತ್ರ ಮನಸ್ಸು ನನ್ನಲ್ಲಿರಬೇಕು. ಮದುವೆ ಆದವ ಈ ರೀತಿ ಯೋಚಿಸಲೂ ಅನರ್ಹ ಊe is ಛಿhಚಿiಟಿeಜ ಅಲ್ವಾ? +ಇನ್ನು ಕಥೆಯ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಆದರ್ಶಕ್ಕೆ ರೆಕ್ಕೆ ಪುಕ್ಕ ಹಚ್ಚಿ ಕಥೆ ಮಾಡಿ ನನಗೆ ಬಡಿಸಿದ್ದು ಬಹಳ ತಪ್ಪು. ನಿಮ್ಮ ಆದರ್ಶಗಳು ಈಗಷ್ಟೇ ಹುಟ್ಟಿಕೊಂಡು ‘shಚಿಠಿe’ಗಾಗಿ ಹುಡುಕುತ್ತಿದೆ. ನೀವು ಬದುಕಿನಲ್ಲಿ ‘ಪಕ್ವ’ಗೊಂಡ ಹಾಗೆ ನೀವೂ ಒಬ್ಬ ಸಾಮಾನ್ಯ ಸಂಪ್ರದಾಯಬದ್ಧ, ಚಿನ್ನ-ವಸ್ತ್ರಗಳ ಗೊಡ್ಡು ಗೃಹಿಣಿಯಾಗಿಯೇ, ಮಕ್ಕಳ ಲಾಲನೆ-ಪಾಲನೆಯೇ ದೊಡ್ಡದಾಗಿ ನೀವು ಬದುಕಿನ ಬಯಲಲ್ಲಿ ಕಳೆದುಹೋಗುವ ಭಯವೇ ಜಾಸ್ತಿ ನನಗೆ. ಏಕೆಂದರೆ ಹೀಗಾಗುವುದೇ ಹೆಚ್ಚು. ನಾನು ಎಲ್ಲೆಡೆ ಇದನ್ನೇ ನೋಡಿದ್ದೇನೆ. ಈ ನೇರ ಮಾತುಗಳಿಂದ ನಿಮಗೆ ಬೇಸರವಾಯಿತೆ? ನಾವು ಅಂದುಕೊಂಡಂತೆ ಬದುಕಿನ ಕೌಟುಂಬಿಕ, ಸಾಮಾಜಿಕ, ಮಾನಸಿಕ ಅಡೆತಡೆಗಳನ್ನು ಮೀರಿ ಹಾರುವ ಎದೆಗಾರಿಕೆ ಇರಬೇಕು. +ನೀವು ನನಗೆ ಒಳ್ಳೆಯ ಸ್ನೇಹಿತೆಯಾಗಬಹುದೆಂಬ ಭಾವನೆ ನನಗಿದೆ. ಒಂದು ಗಂಡು-ಹೆಣ್ಣು ಸ್ನೇಹಿತರಾಗುವುದಕ್ಕೆ ಸಾಧ್ಯವಿದೆ. ಅವರ ಸ್ನೇಹ, ಪ್ರೇಮ-ಕಾಮಗಳಲ್ಲಿ ತೊಡಗಿ ಪರ್ಯಾವಸಾನವಾಗಬೇಕೆಂಬುದೇನಿಲ್ಲ. I hಚಿಣe ಣhಚಿಣ. ಸ್ನೇಹ ಪ್ರೇಮವಾಗಿ, ಕಾಮವಾಗಿ ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನನ್ನದು ನೇರ ಬದುಕು ನೇರವಾಗಿ ಹೇಳಬಲ್ಲೆ, ಕೇಳಬಲ್ಲೆ, ನಟಿಸಲಾರೆ…. +ಇದು, ನನ್ನ ಜೀವನದ ಒಂದು ಕಣದ ಪರಿಚಯ. ನಿಮ್ಮ ಪರಿಚಯ?” +ಬರೆದ ಪತ್ರ ಬಹಳ ಉದ್ದವಾಯಿತೆನಿಸಿತು. ಆದರೂ ವಸಂತಳ ರೀತಿ ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿದ ನಂತರ ಬಹಳ ದಿನಗಳಿಂದ ಕಳೆದು ಹೋಗಿದ್ದ ನೆಮ್ಮದಿ ದೊರಕಿತ್ತು. +ವಸಂತ ಪತ್ರ ಬರೆದಿರುವ ರೀತಿ ನೋಡಿದರೆ ಅವಳದು ಏನನ್ನೂ ಬಚ್ಚಿಡುವ ಸ್ವಭಾವವಲ್ಲ. ತನಗೇನು ಹೇಳಬೇಕು ಅನ್ನಿಸಿದೆಯೋ ಅದನ್ನೆಲ್ಲಾ ಹೇಳಿಬಿಟ್ಟಿದ್ದಾಳೆ. ನನಗೆ ಬೇಕಾದ್ದು ಈ ರೀತಿಯ ಬಿಚ್ಚು ಮನಸ್ಸಿನ ಸ್ನೇಹ ಮಾತ್ರ. +ಇತ್ತೀಚೆಗೆ ನನಗೆ ನನ್ನ ಮೇಲೆಯೇ ಬಹಳ ಆಶ್ಚರ್ಯವುಂಟಾಗುತ್ತಿದೆ. ಇಷ್ಟು ದಿನಗಳಿಂದಲೂ ನಾನು ಒಂಟಿಯಾಗಿಯೇ ಇದ್ದೆ. ಇನ್ನು ಮುಂದೆಯೂ ಹಾಗೇ ಇರುತ್ತೇನೆಂದುಕೊಂಡಿದ್ದೆ. ಆದರೆ, ವಸಂತಳನ್ನು ನೆನೆಸಿಕೊಂಡಾಕ್ಷಣ ಅವಳು ಶುದ್ಧ ಸ್ನೇಹ ನೀಡಬಹುದು ಎಂದು ಆಸೆಯಾಗುತ್ತದೆ. ವಸಂತಳ ಬಗ್ಗೆ ಸಾಕಷ್ಟು ಯೋಚಿಸಿ, ತಲೆ ಕೆಡಿಸಿಕೊಂಡಾಗ ಅನಾವಶ್ಯಕವಾಗಿ ನಾನಾಗಿಯೇ ಏನನ್ನೋ ಎದುರುಹಾಕಿಕೊಂಡಿರಬಹುದೆ? ಎನಿಸಿದರೂ, ನನ್ನ ಹತ್ತಿರ ಇದುವರೆಗೂ ಯಾವೊಬ್ಬ ಸ್ನೇಹಿತನೂ ಒಂದು ವರ್ಷಕ್ಕಿಂತ ಹೆಚ್ಚು ದಿನ ಉಳಿದಿಲ್ಲ. ಈ ವಸಂತ ಎಷ್ಟಿದ್ದರೂ ಸಾಮಾನ್ಯ ಕನಸಿನ ಹುಡುಗಿಯಾಗಿಯೇ ಇದ್ದು, ನನ್ನಿಂದ ಏನೆಲ್ಲಾ ಅಪೇಕ್ಷಿಸಿ ಕೊನೆಗೆ ನನ್ನ ಖಾಲಿತನವನ್ನು ಕಂಡು ಅವಳಾಗಿಯೇ ನಿರ್ಗಮಿಸಬಹುದು….ಪೋಸ್ಟ್ ಮಾಡುವುದೋ ಬೇಡವೋ ಎಂದು ಯೋಚಿಸಿ, ಕೊನೆಗೂ ಆದದ್ದಾಗಲಿ ಎಂದು ಪತ್ರವನ್ನು ಪೋಸ್ಟ್ ಮಾಡಿದೆ. +ಪತ್ರವನ್ನು ಪೋಸ್ಟ್ ಮಾಡಿದ ಮೇಲೆ ಯಾಕೋ ಬೇಸರವೆನಿಸಿತು. ನಾನ್ಯಾಕೆ ವಸಂತಳ ಸ್ನೇಹವನ್ನು ಇಷ್ಟೊಂದು ಅಪೇಕ್ಷೆ ಪಡುತ್ತಿದ್ದೇನೋ ಅರ್ಥವಾಗಲಿಲ್ಲ. ಆದರೆ ಪತ್ರ ಬರೆಯದೇ ಇದ್ದು, ಅವಳನ್ನು ಕಳೆದುಕೊಂಡುಬಿಟ್ಟರೆ? ಎಂಬ ಯೋಚನೆ ಬಂದಾಗ ಏನೋ ದೊಡ್ಡದನ್ನ ಸಾಧಿಸಿದಂತೆ ಹೆಮ್ಮೆಯಾಯಿತು. ಮರುಕ್ಷಣವೇ ಏನನ್ನೋ ಕಳೆದುಕೊಂಡು ಖಾಲಿಯಾದ ಹಾಗೆನಿಸಿ ಪೆಚ್ಚಾಯಿತು. ಅಮ್ಮನನ್ನು ಕಳೆದುಕೊಂಡಂತೆ ಅನುಭವವಾಯಿತು. +ಅಮ್ಮ ಎಂದೊಡನೆ ಹಳ್ಳಿ, ಅಮ್ಮ,ರತ್ನ, ರಂಗನಾಥ ಎಲ್ಲಾ ಜ್ಞಾಪಕಕ್ಕೆ ಬಂದರು ಈ ಕ್ಷಣವೇ ಓಡಿಹೋಗಿ ಅಮ್ಮನ ಭಾರವಾದ ಹಸ್ತದ ಹಿತವಾದ ಸ್ಪರ್ಶ ಹಣೆಯ ಮೇಲೆ ಪಡೆಯಬೇಕು ಎನಿಸಿತು. ಆದರೆ ಹಳ್ಳಿಗೆ ಹೋಗಲು ರಜೆ ಇಲ್ಲ ಎಂಬುದು ಜ್ಞಾಪಕಕ್ಕೆ ಬಂದೊಡನೆ ಹಠದಿಂದೆಂಬಂತೆ ಅವರೆಲ್ಲ ನನ್ನ ಮನಸ್ಸಿನ ಮೇಲೆ ಹೆಚ್ಚು ಬಲವಾಗಿ ಮೂಡತೊಡಗಿದರು. ಏನೂ ಮಾಡಲಾರದೆ ಮೈಯೆಲ್ಲಾ ಪರಚಿಕೊಳ್ಳಬೇಕೆನಿಸಿತು. +ನನಗೆ ಯಾವಾಗಲೂ ಹಾಗೆ! ಆ ಕ್ಷಣಕ್ಕೆ ಯಾವ ಕೆಲಸ ಆಗುವುದಿಲ್ಲವೋ ಅದು ಬಲವಾಗಿ ದಾಳಿಮಾಡಿ ನನ್ನನ್ನು ಹಿಂಸಿಸುತ್ತದೆ. ಆ ಹಿಂಸೆ ತಡೆಯಲಾರದೆ ನಾನು ರೂಮಿನಲ್ಲಿದ್ದಾಗ ನನ್ನಷ್ಟಕ್ಕೆ ನಾನೇ ಎದುರಿಗೆ ನನಗೆ ಬೇಕೆನಿಸಿದವರೊಡನೆ, ಅವರು ಎದುರಿಗೆ ಇದ್ದಾರೇನೋ ಎಂಬಂತೆ ಜೋರಾಗಿ ಮಾತನಾಡುತ್ತಿದ್ದೆ. ಅಮ್ಮನ ಜೊತೆ, ರತ್ನಳ ಜೊತೆ ಅಥವಾ ರಂಗನಾಥನ ಜೊತೆ ಈ ರೀತಿ ನಾನೊಬ್ಬನೇ ನನ್ನ ಕಷ್ಟ-ಸುಖ ಹೇಳಿಕೊಂಡಾಗ ನನಗೆ ಸಿಗುವ ನೆಮ್ಮದಿ ಆಪಾರ. +ನನ್ನ ಬದುಕಿನ ರೀತಿ ಬೆಳೆದು ಬಂದಿದ್ದು ಎಲ್ಲವನ್ನೂ ಈಗಲೇ ಸ್ಪಷ್ಟವಾಗಿ ಮನಸ್ಸಿನ ಮೆಲೆ ಮೂಡಿಸಿಕೊಳ್ಳುತ್ತಿದ್ದೆ. ಏಕೆಂದರೆ ಮುಂದಿನ ಪತ್ರದಲ್ಲಿ ವಸಂತಾ ಖಂಡಿತಾವಾಗಿಯೂ ನನ್ನಿಂದ ಹೆಚ್ಚಿನ ವಿವರಗಳನ್ನು ಬಯಸುತ್ತಾಳೆ. ಅವಳಿಗೆ ನನ್ನೆಲ್ಲಾ ವಿಷಯ ಹೇಳಬೇಕಾದ್ದು ಹೇಳಬಾರದ್ದು ಎಲ್ಲಾ ಹೇಳಿಕೊಂಡುಬಿಡಬೇಕು ಎಂದುಕೊಳ್ಳುವಾಗ ಮನಸ್ಸಿಗೆ ಒಂಥರಾ ಖುಷಿಯಾಗಿ, ಇದುವರೆಗೂ ಕಾಣದಿದ್ದ ವಸಂತಳ ಜೊತೆ ಮಾನಸಿಕವಾಗಿ ಸಂಭಾಷಿಸತೊಡಗಿದೆ….. +ವಸಂತಾ, ನನ್ನೂರು ಮೈಸೂರು ಅಲ್ಲ, ಹುಟ್ಟಿದ್ದು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ಹನುಮಂತರಾಯನ ದೇವಸ್ಥಾನದ ಹಿಂದೆ ಇರುವ ಒಂದೇ ಬೀದಿಯ ಸಣ್ಣ ಹಳ್ಳಿಯಲ್ಲಿ. ನಾನು ನಾಲ್ಕು ವರ್ಷದವನಿದ್ದಾಗ ನಾವೆಲ್ಲರೂ ಹಾಸನ ಜಿಲ್ಲೆಯ ಹತ್ತಿರವಿರುವ ಹಳ್ಳಿಗೆ ಬಂದು ನೆಲೆಸಿದೆವು. ನಾನು ಮಣ್ಣಿನೊಂದಿಗೆ, ಮಳೆಯೊಂದಿಗೆ, ಕಲ್ಲುಗಳೊಂದಿಗೆ, ಗಿಡಗಳೊಂದಿಗೆ, ಪ್ರಾಣಿಗಳೊಂದಿಗೆ, ಜನರೊಂದಿಗೆ ಚಿರಪರಿಚಿತನಾಗಿ ಬೆಳೆದಿದ್ದು ಈ ನಮ್ಮ ಹಳ್ಳಿಯಲ್ಲಿಯೇ. ಪಿ.ಯು.ಸಿ.ವರೆಗೆ ಹಾಸನದಲ್ಲಿ ಓದಿ ಡಿಗ್ರಿ ಮೈಸೂರಿನಲ್ಲಿ ಮುಗಿಸಿದೆ. ಈ ಮೈ ನಮ್ಮ ಹಳ್ಳಿಯದು, ಈ ಮನಸ್ಸು ಮೈಸೂರಿನದು. ಈಗ ಈ ಮೈ ಮನಸ್ಸುಗಳು ಬಾಂಬೆಯಲ್ಲಿ ಮುರುಟಿಗೋಗುತ್ತಿವೆ. ಇಲ್ಲಿನ ಯಾಂತ್ರಿಕತೆಯಲ್ಲಿ ನಾನು ನಾಶವಾಗುವ ಮುನ್ನ ಇಲ್ಲಿಂದ ಓಡಿಬಿಡಬೇಕು….ಓಡುತ್ತಲೇ ಇರಬೇಕು. ಆದರೆ ಅನಿವಾರ್ಯವಾಗಿ ಬದುಕಲೇಬೇಕಾದ್ದರಿಂದ ಹಾಗೂ ಹೀಗೂ ದಿನ ತಳ್ಳುತ್ತಿದ್ದೇನೆ. +ವಸಂತಾ…. ನಿನ್ನ ಸ್ನೆಹ ನನಗೆ ಸಿಕ್ಕಿರುವುದು ನನಗೆ ಹೆಮ್ಮೆ. ಇದು ಸತ್ಯ! ಲೈಂಗಿಕವಾಗಿ ದೇಹವನ್ನಷ್ಟೇ ದುಡಿಸುವ ಸ್ನೇಹಕ್ಕಿಂತ ಮನಸ್ಸನ್ನೇ ಉತ್ತುಬಿತ್ತು, ಒಮ್ಮೊಮ್ಮೆ ಹಸಿರು ಬೆಳೆದು, ಬೇಸಿಗೆಯಲ್ಲಿ ಬರಡಾಗಿಸುವ ಸ್ನೇಹವೇ ಹೆಚ್ಚು ಇಷ್ಟ ನನಗೆ. ಗೊತ್ತು ಬರಡಾದರೂ ಸಹಾ ಬೇಸಿಗೆ ಹೋಗಿ ಮಳೆಗಾಲ ಬಂದೇ ಬರುತ್ತದೆಂಬ ಅನಿವಾರ್ಯ ಸತ್ಯ. ಅದಕ್ಕೆ ನನಗೆ ಮಳೆಯೂ ಬೇಕು, ಬೇಸಿಗೆಯೂ ಬೇಕು. ಹಸಿರೂ ಬೇಕು, ಬರಡೂ ಬೇಕು! ಇವೆರಡರ ಫಲವೇ ನಾನು….ಮನೋಹರ! +ನನ್ನ ಮನೆಯವರನ್ನು ನಿನಗೆ ಪರಿಚಯಿಸೋಣ ಎನ್ನಿಸಿದೆ. ಶುರುಮಾಡಲೇ? ಅಮ್ಮ ಸುಮಾರು ೬೫ ವರ್ಷದ ಸಣಕಲಿ. ಅಮ್ಮನಿಗೆ ಏನೂ ಗೊತ್ತಿಲ್ಲ. ಸರಿಯಾಗಿ ಸುಸಂಬದ್ಧವಾಗಿ ಮಾತನಾಡಲಿಕ್ಕೂ ಬಾರದು. ಆದರೆ ತನ್ನ ಮಟ್ಟದವರಿಗಿಂತಾ ಕಿಲಾಡಿ. ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಒಂದು ತಿಂಗಳು ಮನೆಗೆ ಹೋಗದಿದ್ದರೆ ಅಳಲಿಕ್ಕೆ ಶುರು ಮಾಡ್ತಾರೆ. ತುಂಬಾ ಗಡಿಬಿಡಿಯ ಅವಸರದ ಹೆಂಗಸು ನಮ್ಮಮ್ಮ. ನನಗೂ ಅದೇ ಬುದ್ಧಿ. ಎಲೆ, ಅಡಿಕೆ ಚಟ. ಸಿನಿಮಾ ಚಟ, ನೋಡಿದ ಸಿನಿಮಾವನ್ನೇ ಗೊತ್ತಿಲ್ಲದೇ ಮತ್ತೆ ಮತ್ತೆ ನೋಡ್ತಾರೆ. ಅದೇ ರೀತಿ ಅನಾಗರಿಕ ಹಳ್ಳಿ ಹೆಂಗಸು. ನಾನು ಹೇಳಿದ ಹಾಗೆ ಕೇಳುತ್ತಾರೆ. +ಅಮ್ಮನಿಗೆ ತಿಂಡಿ ಮಾಡಲಿಕ್ಕೆ ಬರೊಲ್ಲ. ಭಯಂಕರ ದೋಸೆ ಮಾಡ್ತಾರೆ. ನಮ್ಮಮ್ಮ ರಂಗೋಲೆ ಕಲಿಯುವುದಕ್ಕೆ ಶುರುಮಾಡಿದ್ದು ಮೊನ್ನೆಮೊನ್ನೆ. ಅದೂ ನಾಲ್ಕು ಸೊಟ್ಟ ಗೆರೆಗಳು. ಕೆಲವೊಮ್ಮೆ ಆ ರಂಗೋಲಿ ನೋಡಿ ನಾನು ನಗೊಲ್ಲ. ಒಂಥರಾ ಬೇಜಾರಾಗಿ ಕಣ್ಣುತುಂಬಿಕೊಳ್ಳುತ್ತದೆ. ಏಕೆಂದರೆ, ಅಮ್ಮ ಹುಟ್ಟಿದ್ದು ಯಾವುದೋ ಒಂದು ಮರದ ಕೆಳಗೆ. ನಾನು ಹುಟ್ಟಿದ್ದ ೪ ವರ್ಷದವರೆಗೂ ನಾವು ಅಲೆಮಾರಿಗಳಾಗಿದ್ದೆವು. ನಮ್ಮ ಜನಾಂಗವೇ ಅಷ್ಟು. ಈಗಲೂ ಮನೆ, ಮಠ ಇಲ್ಲದೆ ಊರಿಂದ ಊರಿಗೆ ಅಲೆಯುತ್ತಾ ಹೋಗುತ್ತಾರೆ. +ಅಮ್ಮ ಬಹಳ ಕಷ್ಟಪಟ್ಟ ಹೆಂಗಸು. ಮದುವೆಯಾದಾಗ ಏಳು ವರ್ಷವಂತೆ. ಅಪ್ಪನಿಂದ, ಅಜ್ಜಿಯಿಂದ ನಮ್ಮಮ್ಮ ಬಹಳ ಕಷ್ಟಪಟ್ಟಿದ್ದಾರೆ. ನಾವು ಒಟ್ಟು ಹನ್ನೊಂದು ಜನ ಮಕ್ಕಳು. ಎಲ್ಲಾ ಹೋಗಿ ಆರು ಜನ ಇದ್ದೇವೆ. ಅನಾಗರಿಕ ಸಂಸ್ಕೃತಿಯಿಂದ ಬಂದವರು ಇದ್ದಕ್ಕಿದ್ದಂತೆ ಹೊಸ ಪ್ರತಿಷ್ಠಿತ ವಾತಾವರಣಕ್ಕೆ ಹೊಂದಿಕೊಳ್ಳಲಾರರು. ಈ ಕಾರಣಕ್ಕಾಗಿಯೇ ಕೆಲವೊಮ್ಮೆ ಸಿಟ್ಟಿನಿಂದ ಜಗಳವಾಡುತ್ತೇನೆ, ಬಯ್ಯುತ್ತೇನೆ. ಮತ್ತೊಮ್ಮೆ ಮಗುವಿನಂತೆ ಡ್ಯಾನ್ಸ್ ಮಾಡುತ್ತ ನಗಿಸುತ್ತೇನೆ. ನಮ್ಮಮ್ಮ ಬಹಳ ಜಿಪುಣಿ. ಎಲ್ಲಾ ಹಣ ಉಳಿಸಿ ನನಗೆ ಕೊಡುತ್ತಾರೆ. ಲೆಕ್ಕ ಹಾಕಲಿಕ್ಕೂ ಬಾರದ ಮುಗ್ಧೆ. +ಅಪ್ಪ ಅತ್ಯಂತ ಅನಾಗರಿಕ, ಕೊಳಕರು. ಎಂಬತ್ತೆರಡು ವರ್ಷದ ಅರಳು-ಮರಳಿನ ವಿಚಿತ್ರ ಮನುಷ್ಯ. ನಾನು ಹುಟ್ಟುವ ವೇಳೆಗೆ ಅವರು ಅರಳು-ಮರಳಿನ ಮುದಿತನಕ್ಕೆ ಕಾಲಿಟ್ಟಿದ್ದರು. ಬದುಕಿನಿಡೀ ಅವರನ್ನು ದ್ವೇಷಿಸುತ್ತಾ ಬೆಳೆದೆ ನಾನು. ಅಪ್ಪನಿಗೆ ಹೆಂಡ-ಹೆಣ್ಣು-ಹೊನ್ನು ಎಂದರೆ ಅಸಹ್ಯ ಚಟ. ಸದ್ಯ ಈಗ ಇಲ್ಲ! ಅವರೊಡನೆ ಈಗಲೂ ಯುದ್ಧ ಮಾಡುತ್ತೇನೆ. ಅವರಿಗೆ ಎಂಬತ್ತೆರಡು ವರ್ಷವಾಗಿದೆ ಎಂಬುದನ್ನು ಮರೆತು ನಾನು ಸಿಲ್ಲಿಯಾಗಿ ವರ್ತಿಸಿಬಿಡುತ್ತೇನೆ. ಏಕೆಂದರೆ ಅವರು ಸ್ವಚ್ಛಬಟ್ಟೆ ಹಾಕೊಲ್ಲ. ನಮ್ಮಮ್ಮ ಬಹಳ ಶುದ್ಧ. ಅಪ್ಪ ತದ್ವಿರುದ್ಧ. ಆದರೆ ಅವರು ನನ್ನ ಬಗ್ಗೆ ಪ್ರೀತಿ-ಅಭಿಮಾನ ಇಟ್ಟಿದ್ದಾರೆ. ಅಪ್ಪ ಅಮ್ಮ ಓದಿಲ್ಲ. ಆದರೆ ಜ್ಯೋತಿಷ್ಯ-ಯಂತ್ರ ಎಲ್ಲಾ ಮಾಡ್ತಾರೆ! ಹಣವನ್ನೂ ಮಾಡ್ತಾರೆ! ಎಲ್ಲಾ ಕಟ್ಟುಕತೆ ಬೂಟಾಟಿಕೆಯದು. ಬೇಡ ಎಂದರೆ ಬಿಡೋಲ್ಲ. ಈ ವಯಸ್ಸಿನಲ್ಲಿಯೂ ಅವರಿಗೆ ಮನೆ, ಜಮೀನು, ಗೊಬ್ಬರ, ತಿಪ್ಪೆ, ಸೌದೆ ಎಂದರೆ ಹುಚ್ಚು, ಭಯಂಕರ ಉತ್ಸಾಹ. +ಮೂವರು ಅಣ್ಣಂದಿರಿದ್ದಾರೆ, ಕುಡುಕರು, ಖದೀಮರು, ಕೆಟ್ಟಜನ. ನಾನು ಮನೆಯಲ್ಲಿರುವಾಗ ಯಾರೂ ಹತ್ತಿರ ಬರೊಲ್ಲ. ಅವರ ಕೆಟ್ಟ ಚಾಳಿಗಳನ್ನು ನೋಡಿ ದೂರವಿಟ್ಟಿದ್ದೇನೆ. ಪ್ರತಿವರ್ಷ ನಾಲ್ಕು ಎಕರೆ ಜಮೀನಿಗಾಗಿ ಅಪ್ಪನ ಜೊತೆ ಜಗಳ, ಹೊಡೆದಾಟ ಎಲ್ಲಾ ಮಾಡ್ತಾರೆ. ನಾನಂತೂ ಇದಕ್ಕೆಲ್ಲ ನಕ್ಕು ಸುಮ್ಮನಾಗಿಬಿಡುತ್ತೇನೆ. +ಮುಂದಿನ ವಿಷಯ, ಹೇಳಲು ಖುಷಿಯಾಗುವಂತಹದು. ಅದು ನನ್ನ ಒಬ್ಬನೇ ತಮ್ಮ ರಂಗನಾಥ್, ಒಬ್ಬಳೇ ತಂಗಿ ರತ್ನಳ ವಿಷಯ. ನನ್ನ ಬದುಕಿನ ಉತ್ಸಾಹದ ಚಿಲುಮೆಗಳೆಂದರೆ ಇವರಿಬ್ಬರೇ. ರಂಗನಾಥ ನನ್ನನ್ನು ಸಾಧ್ಯವಾದಷ್ಟು ಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ. ಈಗ ಓದು ಮುಗಿಸಿರುವ ತರುಣ. ನನ್ನ ತಂಗಿ ರತ್ನ ಸಾಮಾನ್ಯ ಹಳ್ಳಿ ಹುಡುಗಿ. ಓದು ಬರಹ ಗೊತ್ತಿಲ್ಲದ ಸುಂದರ ಮುಗ್ಧ ಇಪ್ಪತ್ತು ವರ್ಷದ ತರುಣಿ. ಅಲ್ಲ ಮಗು! +ವಸಂತಾ ಈ ಎಲ್ಲಾ ಕಥೆ ಕೇಳಿ ಭಯವಾಯಿತೆ? ನಿನಗೆ ಭಯವಾಗಲಿ ಎಂದೇ ಹೇಳುತ್ತಿದ್ದೇನೆ. ನನ್ನಲ್ಲಿ ಇದಕ್ಕಿಂತ ಹೆಚ್ಚಿನ ಕ್ರೂರ ನೆನಪುಗಳಿವೆ, ಘಟನೆಗಳಿವೆ, ಅಪ್ಪ-ಅಣ್ಣಂದಿರು, ಈ ಪರಿಸರ, ನೆನಪುಗಳನ್ನು ನನ್ನಿಂದ ಉಚ್ಛಾಟಿಸಿ, ಕರಗಿಸಿ ಪ್ರೀತಿಸುವಂತಹ ಸಂಗಾತಿ ನನಗೆ ಬೇಕು. ಜೊತೆಗೆ ಈ ಎಲ್ಲಾ ಕೆಟ್ಟ ನೆನಪುಗಳು, ಸತ್ತ ಬದುಕಿನಲ್ಲಿ ಕಳೆದುಹೋದ ಆರು ಜನ ಅಕ್ಕಂದಿರ ಬವಣೆ, ನೋವು ಕಣ್ಣಾರೆ ಕಂಡ ಇವುಗಳು ನನ್ನಿಂದ ‘ಮದುವೆ’ ಎಂಬ ಶಬ್ದವನ್ನು ಕಿತ್ತುಕೊಂಡಿದೆ. +ಓಹ್! ನೀನು ಕಥೆಗಾರ್ತಿಯಲ್ಲವೆ? ವಸಂತಾ, ನಿನ್ನನ್ನು ನನಗೆ ಗೊತ್ತಿರುವ ನನ್ನ ಅನುಭವ ಲೋಕದಲ್ಲಿ ಕೈಹಿಡಿದು ಸುತ್ತಾಡಿಸಿಕೊಂಡು ಬರಬೇಕೆನ್ನಿಸಿದೆ. ಇದರಿಂದ ನೀನು ಇನ್ನೂ ಬೆಳೆಯುತ್ತೀಯ. ಜೀವನದ ವಿಚಿತ್ರ ಆಶ್ಚರ್ಯಗಳೆಲ್ಲಕ್ಕೂ ಅಕ್ಷರಗಳ ಮೂಲಕ ಮುಖಕೊಟ್ಟು ನನಗಿಲ್ಲದ ಆ ‘ಮಿತಿ’ಯನ್ನು ಮೀರಿ ಎತ್ತರವಾಗುತ್ತಿ. ಅದಕ್ಕೆಲ್ಲಾ ನಾನು ಹಾರೈಸುತ್ತಾ ನಿಂತುಬಿಡಬೇಕೆನ್ನಿಸುತ್ತಿದೆ. ನೀನಂದುಕೊಂಡಿರುವುದಕ್ಕಿಂತ ಅಸಹ್ಯವಾಗಿರುವ, ನೀಚವಾಗಿರುವ, ವಿಕಾರವಾಗಿರುವ ಜೀವಿಗಳ ಜೀವನದ ಎಲ್ಲಾ ಸ್ತರಗಳಲ್ಲಿಯೂ ಓಡಾಡು. ಆದರೆ ಒಂದು ಎಚ್ಚರಿಕೆ: ವಿಚಾರದ ಹೊಸ್ತಿಲನ್ನು ದಾಟುತ್ತಿರುವ ನೀನುಬದುಕಿನ ನಿಗೂಢತೆಯ ಬಗ್ಗೆ ಅರ್ಥ ಕಳೆದುಕೊಂಡ, ವಿಸ್ತಾರವಾದ ಸಹರಾ ಮರಳುಗಾಡಿನಲ್ಲಿ ನಿಂತುಬಿಟ್ಟ ತಹತಹಿಸುವ ದಿನಗಳು ಬಹಳ ದೂರವಿಲ್ಲವೆನಿಸುತ್ತದೆ…..ಈ ಬರಿದಾದ ಪ್ರಜ್ಞೆಯಲ್ಲಿ ಈ ವಿಶ್ವದ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡು ಶೂನ್ಯವನ್ನೆದುರಿಸುವ ಶಕ್ತಿ ನಿನಗಿದೆಯೆ? ಬೇಡ….ಹಾಗಾಗಬೇಡ, ನನ್ನ ಹಾಗೆ ಎಡಬಿಡಂಗಿಯಾಗಿ, ಜೀವನದಲ್ಲಿ ತೊಡಗಲಾರದೆ, ಸಾವಿನಲ್ಲಿ ಅದೃಶ್ಯವಾಗಲಾರದೆ, ಕತ್ತಲು-ಬೆಳಕುಗಳನ್ನು ನೋಡಲಾರದೆ, ಘರ್ಷಣೆಗಳಿಗೆ ಗೋರಿ ಕಟ್ಟಲಾಗದೆ ಅತಂತ್ರಜೀವಿಯಾಗಿಬಿಡುತ್ತಿ, ಬೇಡ ಮರಿ, ನೀನು ಹೀಗೆಲ್ಲಾ ಆಗಬೇಡ, ಮಗುವಿನ ರೀತಿಯೇ ಇರು. +ಇರಲಿ, ನೀನು ನಮ್ಮೂರಿಗೆ ಬಾ. ನಮ್ಮೆಲ್ಲರ ಸಮಾಜವನ್ನು ನೋಡು. ಆಗ ನಿನ್ನ ಲೇಖನಿಗೆ ಮತ್ತಷ್ಟು ಶಕ್ತಿ, ಬಂಡವಾಳ, ಗಟ್ಟಿತನ ಸಿಗುತ್ತದೆ. ವಸಂತಾ, ಬರೆಯಬೇಕು ನಿನ್ನನ್ನು ಬರೆ ನನ್ನನ್ನು ಬರೆ, ಎಲ್ಲವನ್ನೂ ಬರೆ, ಬರೆಯುತ್ತಲೇ ಇರು…. +* +* +* +“ಅರೆ ಸುಚಿ, ನಾನು ನೆನೆಸಿದಂತೆಯೇ ಆಗಿದೆ. ನೋಡು. ಮನೋಹರನಿಗೆ ಮದುವೆಯೇ ಆಗಿಲ್ಲ. ಔh, ಒಥಿ ಉoಜ! ಎಂಥಾ ಸಿಹಿಯಾದ ಸುದ್ದಿ! ಅಯ್ಯೋ ಕಾಗೆ-ಪುಕ್ಕ ಅಂತೆಲ್ಲಾ ಬರೆದುಬಿಟ್ಟಿದ್ದಾನೆ. ಅರ್ಥಾನೇ ಆಗ್ತಾ ಇಲ್ಲ. ಸುಚಿ ಇರು ನಾನೊಂದು ಸರಿ ಸರಿಯಾಗಿ ಓದಿ, ನಿನಗೆ ಕೊಡ್ತೀನಿ. ದಯವಿಟ್ಟು ಓದಿ ಅರ್ಥ ಮಾಡಿಸಮ್ಮ” ಎಂದೆ. ಮನೋಹರ್ ಬರೆದ ಪತ್ರ ಅರ್ಥವಾಯಿತಾದರೂ ಒಟ್ಟಾರೆ ನನ್ನ ಬಗ್ಗೆ ಯಾವ ನಿಲುವು ತಳೆದಿದ್ದಾನೆ ಎಂಬುದೇ ತಿಳಿಯಲಿಲ್ಲ. +ಸುಚಿತ್ರ ಪತ್ರ ತೆಗೆದುಕೊಂಡು ಓದುತ್ತಾ ಹೋದಂತೆ ತೀರಾ ಗಂಭೀರಳಾದಳು. ಅಂತಹ ಸೀರಿಯಸ್ ಆದ ವಿಷಯವಾದರೂ ಇಲ್ಲೇನಿದೆ ಅಂತಲೇ ನನಗೆ ತಿಳಿಯಲಿಲ್ಲ. ಸುಚಿ ‘ಊಹುಂ’ ಎಂಬಂತೆ ತಲೆಯಲ್ಲಾಡಿಸಿ ಪತ್ರವನ್ನು ನನ್ನ ಕೈಗೆ ಕೊಟ್ಟು ಹೊರಟುಹೋದಳು. ಮದ್ಯಾಹ್ನ ಊಟ ಮಾಡುವ ಹೊತ್ತಿಗೆ ಮನೋಹರ ಬರೆದ ಪತ್ರದಲ್ಲಿನ ಪ್ರತಿಯೊಂದು ಸಾಲನ್ನೂ ತಪ್ಪದೆ ಹೇಳುವಂತಾಗಿದ್ದೆ. +ಸುಚಿತ್ರ “ವಸಂತಾ, ನನಗ್ಯಾಕೋ ಅನುಮಾನ, ಈ ಮನೋಹರನಿಗೆ ಕೇವಲ ಇಪ್ಪತ್ತೆಂಟು ವರ್ಷಗಳಷ್ಟೇನಾ ಅಂತ. ಯಾಕಂದ್ರೆ ನನಗೂ ಅಷ್ಟೇ ವಯಸ್ಸು. ಆದ್ರೆ ಅವನು ಸಾಕ್ರೆಟಿಸ್ ರೀತಿ ಬರೆದಿರುವುದನ್ನು ನೋಡಿದರೆ ಏನಿಲ್ಲಾಂದ್ರೂ ನಲ್ವತ್ತು-ಐವತ್ತು ವರ್ಷಗಳಿಗಿಂತಾ ಕಡಿಮೆ ಇರಲಾರದು. ನೋಡು, ಈ ಪತ್ರದಲ್ಲಿ ತನಗೆ ಮದುವೆಯಾಗಿಲ್ಲ, ಇಪ್ಪತ್ತೆಂಟು ವರ್ಷಗಳು ಮಾತ್ರ ತನಗೆ, ಜಾತಿಯಲ್ಲಿ ಕೆಳಮಟ್ಟದವನಾಗಿದ್ದರೂ ರ್‍ಯಾಂಕ್ ಬಂದಿದ್ದೇನೆ, ಅಂದರೆ ಬುದ್ಧಿವಂತ, ಜೊತೆಗೆ ತತ್ವಜ್ಞಾನಿ ಅಂತೆಲ್ಲಾ ತೋರಿಸೋಕೆ ಹೊರಟಿದ್ದಾನೆ. ತಾನು ದೊಡ್ಡವನು ಅಂತ ಬೇರೆ ತೋರಿಸಿದ್ದಾನೆ. ನಂಗ್ಯಾಕೋ ಈ ಪತ್ರ, ಮನೋಹರ್ ಇವೆಲ್ಲಾ ಇಷ್ಟಾನೇ ಆಗ್ತಿಲ್ಲ” ಎಂದಳು. +ಅವಳ ಮಾತಿಗೆ ನನಗೆ ಏನು ಉತ್ತರ ಕೊಡಬೇಕೆಂದೇ ತಿಳಿಯಲಿಲ್ಲ. ಆದರೆ ಸುಚಿತ್ರ ಹೇಳಿದಂತೆ ಆತ ಕೆಳಜಾತಿಯವನಲ್ಲ ಅನ್ನಿಸಿತು. ಅದಕ್ಕೆ ನಾನು “ಸುಚಿ, ಆತ ಜೋಶಿ ಅಂತ ಬರೆದಿದ್ದಾನಲ್ಲ. ಹಾಗಾದರೆ ಬ್ರಾಹ್ಮಣರು ಇರಬೇಕಲ್ವಾ?” ಅಂದೆ. ತಕ್ಷಣವೇ ಸುಚಿತ್ರ “ಇಲ್ಲ, ಸದ್ಯ ಹಾಗೆಂದುಕೊಂಡು ಬಲೆಗೆ ಬಿದ್ದುಬಿಡಬೇಡ. ಅವನು ಅಲೆಮಾರಿ ಜನಾಂಗದ ಹುಡುಗ. ಅಂದರೆ ಈ ‘ರಾಮಶಾಸ್ತ್ರವ ಹೇಳುವೆ ಕೇಳು’ ಅಂತ ಬೀದಿ ಬೀದಿ ಅಲೀತಾರಲ್ಲ ಅಂತಹವರ ಗುಂಪಿಗೆ ಸೇರಿದವನು. ಅಂತಹವನು ಮೊದಲನೆಯ ರ್‍ಯಾಂಕು ಬರುವುದಕ್ಕೆ ಸಾಧ್ಯವೆ? ಎಲ್ಲಾ ಸುಳ್ಳು” ಎಂದಳು. +ಸುಚಿತ್ರ ಅಷ್ಟು ಬಲವಾಗಿ ಹೇಳಿದರೂ, ಅವಳು ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಲು ನನಗೆ ಮನಸ್ಸಾಗಲಿಲ್ಲ. ಮತ್ತೆ ಈ ಪತ್ರಕ್ಕೆ ಉತ್ತರ ಬರೆದುಕೊಡು ಎಂದು ಕೇಳಲು ನನಗೆ ಸಂಕೋಚವಾಯಿತು. ಪ್ರಯತ್ನಪಟ್ಟರೆ ನಾನೇ ಮನೋಹರನಿಗೆ ಪತ್ರ ಬರೆಯಬಹುದು. ಅಷ್ಟಲ್ಲದೆ ನನಗೆ ಕಥೆ ಬರೆಯೋಕೆ ಬರ್‍ತಿತ್ತಾ? ಮನೋಹರ ಅದೆಷ್ಟು ಸೊಗಸಾಗಿದೆ ಎಂದು ಹೇಳಿಲ್ಲವೆ? ಮೂರು ವರ್ಷಗಳಿಂದ ಕಥೆಯಿರಲಿ, ಯಾರಿಗೂ ಪತ್ರ ಸಹ ಬರೆದಿಲ್ಲ. ಮನೋಹರನಿಗಾದರೂ ಈ ರೀತಿ ಪತ್ರಗಳನ್ನು ಬರೆಯುವುದರಿಂದ ಬರವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು. ನಾನೇನು ಪೆದ್ದಿ ಅಲ್ಲ, ಆದರೆ ಬುದ್ಧಿವಂತಳಾಗುವುದಕ್ಕೆ ಪ್ರಯತ್ನ ಪಟ್ಟಿಲ್ಲ. ಹೌದು, ಮನೋಹರನಿಗೆ ಬರೆಯುವ ಪತ್ರವನ್ನು ಹೇಗೆ ಶುರುಮಾಡಬೇಕು? ಅವನು ಓದು, ಸಾಹಿತ್ಯ, ಮದುವೆ, ಜಾತಿ, ಬಡತನ ಎಲ್ಲದರ ಬಗೆಗೂ ಬರೆದಿದ್ದಾನೆ. ‘ನಿಮ್ಮ ಪರಿಚಯ ಮಾಡಿಕೊಡಿ’ ಎಂದು ಕೇಳಿದ್ದಾನೆ. ‘ನಿಮ್ಮ ಬಿಚ್ಚು ಮನಸ್ಸಿನ ಸ್ನೇಹ ನನಗೆ ಬೇಕು’ ಎಂದೆಲ್ಲಾ ಬರೆದಿದ್ದಾನೆ. ಹಾಗಂತ ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಊಟಕ್ಕೆ ಗತಿಯಿರಲಿಲ್ಲ ಎಂದು ಬರೆಯಬೇಕೆ? ಆಗ ಅವನಿಗೆ ನಾವು ತುಂಬಾ ಬಡವರು ಅಂತೆಲ್ಲಾ ಅನ್ನಿಸಿದರೆ! ಅಪ್ಪ ಸತ್ತ ಮೇಲೆ, ಬಂದ ಇನ್‌ಶೂರೆನ್ಸ್ ಹಣದಿಂದ ಒಂದು ಪುಟ್ಟಮನೆ ಕೊಂಡಿದ್ದೇವೆ. ನನ್ನ ಒಬ್ಬನೇ ತಮ್ಮ ಈಗ ಇಂಗ್ಲಿಷ್ ಎಂ.ಎ. ಓದುತ್ತಿದ್ದಾನೆ….ಇಂತಹ ವಿಷಯಗಳನ್ನೇ ಹೇಳಿಬಿಟ್ತರೆ ಯಾಕೋ ಅಪೂರ್ಣ ಎನಿಸುತ್ತದೆ. ಹೇಗಿದ್ದರೂ ಅವನಿಗೆ ಬಿಚ್ಚುಮನಸ್ಸಿನ ವ್ಯಕ್ತಿಗಳನ್ನು ಕಂಡರೆ ಇಷ್ಟ. ನನ್ನನ್ನು ಬಹಳ ಬಿಚ್ಚುಮನಸ್ಸಿನ ಹುಡುಗಿ ಎಂದೇ ತಿಳಿದಿದ್ದಾನೆ. ನಾನು ಯಾಕೆ ಹಾಗಿರಬಾರದು? ಹೌದು, ನಾವು ಬಡವರು, ನಮ್ಮ ಜೀವನ ನಡೆಯುವುದಕ್ಕೆ ಎಷ್ಟು ಹಣ ಅಗತ್ಯವೋ ಅಷ್ಟು ಮಾತ್ರ ನಮ್ಮಲ್ಲಿದೆ ಎಂದು ನಾನು ಯಾರಲ್ಲಿಯೂ ಹೇಳಿಲ್ಲ. ಹೇಳಿಕೊಳ್ಳಬೇಕೆಂದರೆ ಯಾಕೋ ನಾಚಿಕೆ, ಅವಮಾನ ಆಗುತ್ತಿತ್ತು. ಆದರೆ ಈಗ ಮನೋಹರನಿಗೆ ಈ ವಿಷಯ ಹೇಳಿದರೆ ಸತ್ಯ ಹೇಳಿದಂತಾಗುತ್ತದೆ. ಮತ್ತೆ ಅವನು ಸಿಕ್ಕಿದಾಗಲೆಲ್ಲ ನಾವು ಶ್ರೀಮಂತರೆಂದು ತೋರಿಸಿಕೊಳ್ಳುವ ನಾಟಕ ಆಡಬೇಕಾದ ಕಷ್ತ ತಪ್ಪುತ್ತದೆ. ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವುದಕ್ಕೆ ಅದೆಷ್ಟು ಚೆನ್ನ! ಮನಸ್ಸಿಗೂ ಆರಾಮ. +ಆದರೆ ಹೇಳುವುದಕ್ಕೆ ನನ್ನಲ್ಲಿರುವ ವಿಷಯಗಳಾದರೂ ಏನು! ಹತ್ತನೇ ತರಗತಿಯಲ್ಲಿ ನಾನಿದ್ದಾಗ ಅಪ್ಪ ಸತ್ತುಹೋದರು. ಅಪ್ಪನ ಹಣದಿಂದ ಒಂದು ಪುಟ್ಟ ಮನೆ ಕಟ್ಟಿಸಿಕೊಂಡು, ಬಹಳ ಕಷ್ಟದಿಂದ ನಾನು, ಸುರೇಶ ಪ್ರತಿಯೊಂದು ಪುಸ್ತಕಕ್ಕೂ ಗತಿಯಿಲ್ಲದೆ ಓದಿದ್ದು, ನಾನು ಪಿಯುಸಿಯಲ್ಲಿ ಒಂದು ವರ್ಷ ಫೇಲಾಗಿದ್ದು, ಆದರೆ ಟೈಪ್‌ರೈಟಿಂಗ್ ಷಾರ್ಟ್‌ಹ್ಯಾಂಡ್ ಬರುತ್ತಿದ್ದುದರಿಂದ ಕೆಲಸ ಸಿಕ್ಕಿದ್ದು, ಸಾಯಂಕಾಲದ ಕಾಲೇಜಿನಲ್ಲಿ ಬಿ.ಎ. ಓದಿ, ಅಲ್ಲೂ ಒಂದು ವರ್ಷ ಫೇಲಾಗಿ ನಂತರ ಪಾಸಾಗಿ ಈಗಿರುವ ಕೆಲಸಕ್ಕೆ ಬಂದಿದ್ದು, ಸುರೇಶ್ ಮಾತ್ರ ಬುದ್ಧಿವಂತನಾಗಿ ಈಗ ಇಂಗ್ಲಿಷ್ ಎಂ.ಎ. ಓದುತ್ತಿರುವುದು ಇಷ್ಟೇ ನನ್ನ ವಿಷಯ. ಇದನ್ನೆಲ್ಲ ಹೇಗೆ ಬರೆಯಬೇಕು? ಮನೋಹರ ಈಗಲೂ ಕಥೆ ಬರೆಯುತ್ತಿರಬಹುದು. ಅದಕ್ಕೇ ಅಷ್ಟೊಂದು ಸ್ವಾರಸ್ಯಪೂರ್ಣವಾಗಿ ಪತ್ರಗಳನ್ನು ಬರೆಯುತ್ತಾನೆ. ಅರೆ, ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಹೇಳಿಬಿಡಬೇಕು. ಆದರೆ ಅವನಾಗಿ ಕೇಳದೆ ಹೇಗೆ ಹೇಳುವುದು? +ಮನೋಹರನೂ ತುಂಬಾ ಬಡವನಾಗಿದ್ದ ಎನ್ನಿಸುತ್ತದೆ. ಆದರೆ ಈಗಂತೂ ಅವನಿಗೆ ಒಳ್ಳೆಯ ಕೆಲಸ ಇದೆ. ನನಗಿಂತ ಸಾವಿರ ರೂಪಾಯಿ ಹೆಚ್ಚಾಗಿ ಸಂಪಾದಿಸುತ್ತಿದ್ದಾನೆ. +ಮನೋಹರ! ಹೆಸರೇ ಸೊಗಸಾಗಿದೆ. ಇನ್ನು ಅವನೆಷ್ಟು ಸುಂದರನಾಗಿರಬಹುದು? ಬೆಳ್ಳಗೆ, ಎತ್ತರಕ್ಕೆ ದಪ್ಪಗಿದ್ದು ಕನ್ನಡಕ ಹಾಕಿಕೊಂಡಿರಬಹುದು. ಮುಖ ಗಂಭೀರವಾಗಿದ್ದು ನೋಡಲು ಹೆದರಿಕೆ ಹುಟ್ಟಿಸುವಂತಿರಬಹುದು. ಅವನು ನಿಜಕ್ಕೂ ಬುದ್ಧಿವಂತ. ಅವನ ಮುಂದೆ ನಾನೆಷ್ಟು ಪೆದ್ದಿ! ಪತ್ರ ಓದಿದರೆ, ಅವನಿಗೆ ತುಂಬಾ ಆತ್ಮೀಯತೆಯಿದೆ. ಸ್ನೇಹದಿಂದ ಬುದ್ಧಿವಂತಿಕೆಯಿಂದ ಉತ್ತರ ಕೊಡುವ ಗೆಳತಿಯ ಅವಶ್ಯಕತೆಯಿದೆ ಎನಿಸುತ್ತದೆ. ಆದರೆ ನಾನು ಆತ್ಮೀಯತೆ, ಸ್ನೇಹವನ್ನು ನೀಡಬಹುದು. ಆದರೆ ಬುದ್ಧಿಯನ್ನು ಹೇಗೆ ಹೆಚ್ಚಿಸಿಕೊಳ್ಳಲಿ! ಬಿಚ್ಚು ಮನಸ್ಸಿನ ಉತ್ತರ ಅವನಿಗೆ ಹೇಗಿದ್ದರೂ ಇಷ್ಟ. ಆದ್ದರಿಂದ ನನ್ನೆಲ್ಲಾ ದೌರ್ಬಲ್ಯಗಳನ್ನು ಹೇಳಿಬಿಟ್ತರೆ ಅವನು ನನ್ನಿಂದ ಹೆಚ್ಚಿನ ಮಟ್ಟ ನಿರೀಕ್ಷಿಸುವಂತಿಲ್ಲ. +ಇಡೀರಾತ್ರಿ ನಿದ್ದೆಗೆಟ್ಟು ಮನೋಹರನಿಗೆ ಯಾವ ರೀತಿ ಪತ್ರ ಬರೆಯಬೇಕೆಂದು ಯೋಚಿಸಿದೆ. ಯಾವ ರೀತಿಯ ಪತ್ರವೂ ಸರಿ ಎನಿಸಲಿಲ್ಲ. ಬೆಳಿಗ್ಗೆ ಆಫೀಸಿನಲ್ಲಿ ಸುಚಿತ್ರ- +“ಯಾಕೆ ಹೀಗೆ ಮಂಕಾಗಿದ್ದೀಯ. ನಿನ್ನ ತೊಂದರೆಗಳು ಏನಿದ್ದರೂ ನನ್ನಲ್ಲಿ ಹೇಳಿಕೋ” ಎಂದಾಗ ‘ಪತ್ರ ಬರೆಯಲು ಬರುತ್ತಿಲ್ಲ’ ಎಂದು ಹೇಳಿಬಿಡಲೇ ಅನ್ನಿಸಿದರೂ, ಆಮೇಲೆ ಅವಳು ಬರೆದುಕೊಡುವ ಕೆಟ್ಟ ಪತ್ರವನ್ನೇ ಪೋಸ್ಟ್ ಮಾಡಬೇಕಾಗುವಾಗ ಆಗುವ ಸಂಕಟವನ್ನು ನೆನೆಸಿಕೊಂಡು “ಎನೂ ಇಲ್ಲ, ತಲೆನೋವು ಅಷ್ಟೆ” ಎಂದಾಗ ಸುಚಿತ್ರ ತೆಳುವಾಗಿ ನಕ್ಕಳು. +ಮದ್ಯಾಹ್ನ ಊಟ ಮಾಡುವಾಗ ನಮ್ಮ ಆಫೀಸಿನ ವಾಸು, “ರೀ, ವಸಂತಾ, ಯಾರ್ರೀ ಅವನು ತರಲೆ? ಎನೇನೋ ಪತ್ರ ಬರೆದು ನಿಮಗೆ ತಲೆನೋವು ತಂದಿದ್ದಾನಂತೆ? ಸುಚಿತ್ರ ಹೇಳಿದರು. ಸುಮ್ಮನೆ ಮಾಡೋಕೆ ಕೆಲಸವಿಲ್ಲದವರು ಯಾರ್‍ಯಾರಿಗೋ ಪತ್ರ ಬರೆಯುತ್ತಾರೆ. ಹಾಗೆ ನಿಮಗೂ ಯಾವನೋ ಒಬ್ಬ ಬರೆದಿದ್ದಾನೆ. ಅದಕ್ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡು ಇರಬೇಕು? ಪತ್ರವನ್ನೂ, ಅವನ ವಿಷಯವನ್ನೂ ತಿಪ್ಪೆಗೆ ಎಸೆದು ಆರಾಮವಾಗಿ ಊಟಮಾಡಿ” ಎಂದ. +ನಾನು ಊಟಮಾಡುವುದನ್ನು ನಿಲ್ಲಿಸಿ ಕೋಪದಿಂದ ಸುಚಿತ್ರಳ ಕಡೆ ನೋಡಿದೆ. ಅವಳು “ಕೋಪ ಮಾಡ್ಕೋಬೇಡ. ನಿನಗೆ ಸರಿಯಾಗಿ ಬುದ್ಧಿ ಹೇಳುವವರು ವಾಸು ಒಬ್ಬರೇ. ಅದಕ್ಕೇ ಅವರ ಹತ್ತಿರ ಹೇಳಿಬಿಟ್ಟೆ” ಎಂದಳು. ನಿಜ ನಾನು ಪ್ರತಿಯೊಂದು ವಿಷಯಕ್ಕೂ ವಾಸುವನ್ನು ಆಶ್ರಯಿಸುತ್ತಿದ್ದೆ. ನಂತರ ಸುಚಿತ್ರಳನ್ನ. ವಾಸು ನನಗೆ ಬಹಳ ಆತ್ಮೀಯನಾದ ವ್ಯಕ್ತಿ. ಅವನ ವೈಯಕ್ತಿಕ ವಿಷಯಗಳನ್ನೆಲ್ಲಾ ನನ್ನ ಹತ್ತಿರ ಹೇಳುತ್ತಿದ್ದ. ಅವನು ಯಾವುದೋ ಹುಡುಗಿಯನ್ನು ಪ್ರೀತಿಸಿ, ಮದುವೆಯಾಗಲು ಪ್ರಯತ್ನಿಸಿದಾಗ, ಮನೆಯವರೆಲ್ಲಾ ಅಡ್ಡಿ ಬಂದಾಗ, ಬೇಸರದಿಂದ ನನ್ನ ಹತ್ತಿರ ಬಂದು ಮುಂದೇನು ಮಾಡಲಿ ಎಂದು ಕೇಳಿದ್ದ. ನಾನು ‘ಆ ಹುಡುಗಿಯನ್ನು ಮದುವೆಯಾಗಿ ಧೈರ್ಯದಿಂದ ಎಲ್ಲವನ್ನೂ ಎದುರಿಸು’ ಎಂದಾಗ, ಸಂತೋಷದಿಂದ ಕೈಹಿಡಿದು ಕಣ್ಣೀರಿಡುತ್ತಾ ‘ನೀವೊಬ್ಬರೇ ನನಗೆ ಬೆಂಬಲ ಕೊಡುವವರು’ ಎಂದು ಹೇಳಿದ್ದ. ನಾನು ಹೇಳಿದ ಎಲ್ಲಾ ಮಾತುಗಳನ್ನೂ ಅವನು ಕೇಳುತ್ತಿದ್ದ. ಅವನು ಹೇಳಿದ ಮಾತುಗಳಿಗೆ ನಾನೂ ಬೆಲೆ ಕೊಡುತ್ತಿದ್ದೆ. ಇದನ್ನು ತಿಳಿದೆ ಸುಚಿತ್ರಾ ವಾಸುವಿಗೆ, ಮನೋಹರನ ವಿಷಯ ಹೇಳಿದ್ದಳು. ಮನೋಹರನ ವಿಷಯದ ಬಗ್ಗೆ ಮಾತ್ರ ನನಗೆ ವಾಸುವಿನ ಮಾತು ಕೇಳಲು ಇಷ್ಟವಾಗಲಿಲ್ಲ. ಯಾಕೋ ಮನೋಹರ ಬಹಳ ಒಳ್ಳೆಯವನು, ತುಂಬಾ ನೊಂದಿರುವ ವ್ಯಕ್ತಿ ಎಂದೆನಿಸುತ್ತಿತ್ತು. ಹಾಂ, ಮನೋಹರನಿಗೆ ಪತ್ರ ಬರೆಯಬೇಕು . ಅದನ್ನು ಬಿಟ್ಟು ಏನೇನೋ ಯೋಚಿಸುತ್ತಿರುವೆ. ರಾತ್ರಿ ಕುಳಿತು ಮನಸ್ಸಿಗೆ ಏನು ತೋಚುತ್ತದೋ ಅದನ್ನಷ್ಟು ಬರೆದರೆ ಆಯ್ತಲ್ಲಾ ಎಂದುಕೊಂಡಾಗ ಮನಸ್ಸಿನ ಭಾರ ಸ್ವಲ್ಪ ಕಡಿಮೆಯಾಯಿತು. +* +* +* +ವಸಂತಳ ಪತ್ರನೋಡಿ ಅವಳ ಬಗ್ಗೆ ಕನಿಕರವಾಯಿತು. ಎಷ್ಟೊಂದುಪುಟ್ಟದಾಗಿ ತನ್ನ ವಿವರ ತಿಳಿಸಿದ್ದಾಳೆ. ‘ನಾವು ಬಹಳ ಬಡವರು’ ಎಂದು ನಿಮ್ಮಲ್ಲಿ ಹೇಳುತ್ತಿರುವುದಕ್ಕೆ ನನಗೆ ಅವಮಾನವಾಗುತ್ತಿಲ್ಲ. ಬೇರೆಯವರ ಮುಂದೆ ಹೀಗೆ ಹೇಳಿದ್ದರೆ ನನಗೆ ಖಂಡಿತಾ ನಾಚಿಕೆಯಾಗುತ್ತಿತ್ತು ಎಂದು ಬರೆದಿದ್ದಾಳೆ. ವಸಂತಾ, ನಿನಗೆ ಗೊತ್ತಿಲ್ಲ, ಬಡತನ ಎಲ್ಲರ ನಿಜರೂಪು ತೋರಿಸುತ್ತದೆ. ಬದುಕುವುದಕ್ಕೆ ಸರಿಯಾದ ಪಾಠ, ಅನುಭವಗಳನ್ನು ಹೇಳಿಕೊಡುತ್ತದೆ. ಎಂತಹ ಸಮಯದಲ್ಲಿಯೂ ಗಟ್ಟಿಯಾಗಿ ನಿಲ್ಲುವಂತೆ ಪ್ರೇರೇಪಿಸುತ್ತದೆ. ಮನುಷ್ಯನಿಗೆ ಮನುಷ್ಯನ ಪರಿಚಯ ಮಾಡಿಸುತ್ತದೆ. ಇಂತಹ ಎಲ್ಲಾ ಪಾಠಗಳನ್ನೂ ಕಲಿಸುವ ‘ಬಡತನ’ ವನ್ನು ಹೇಳಿಕೊಂಡರೆ ನಿನಗೆ ನಾಚಿಕೆಯಾಗುತ್ತದೆಯೇ? +‘ನಿಮ್ಮ ಅಪ್ಪ-ಅಮ್ಮನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ’ ಎಂದು ಹೇಳಿದ್ದೀಯಾ. ‘ನಿಮ್ಮಷ್ಟು ಚೆನ್ನಾಗಿ ಪತ್ರ ಬರೆಯಲು ನನಗೆ ಬರುವುದಿಲ್ಲ. ನೀವು ತುಂಬಾ ಬುದ್ದಿವಂತರು. ನಿಮಗೆ ಸರಿಸಮಾನವಾಗಿ ಪತ್ರ ಬರೆಯಲಾಗದುದಕ್ಕೆ ನನಗೆ ತುಂಬಾ ಸಂಕೋಚವಾಗುತ್ತಿದೆ’ ಎಂದೆಲ್ಲಾ ಹೇಳಿ ‘ನಿಮ್ಮ ಹೆಸರು ಬಹಳ ಸೊಗಸಾಗಿದೆ’ ಎಂದೂ ಸೇರಿಸಿದ್ದೀಯಾ. +ವಸಂತ, ಈ ಹೆಸರನ್ನು ನಮ್ಮ ಅಪ್ಪ-ಅಮ್ಮ ಇಟ್ಟಿದ್ದಲ್ಲ. ಶಾಲೆಗೆ ಸೇರಿಕೊಳ್ಳುವಾಗ ಮಾಸ್ತರು ಬರೆದುಕೊಂಡದ್ದೇ ನನ್ನ ಹೆಸರಾಯಿತು. ನನ್ನ ಹೆಸರಾಗಲೀ, ಹುಟ್ಟಿದ ದಿನವಾಗಲೀ ಇಂತಹುದು ಎಂದು ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದ ಹೆಸರಲ್ಲಿ ನನ್ನಕೂಗುತ್ತಿದ್ದರು. ಶಾಲೆಗೆ ಸೇರಿಕೊಂಡ ಮೇಲೆ ‘ಮನೋಹರ’ ಎಂದಾಯಿತು. ನನಗೆ ಇಷ್ಟೊಂದು ಒಳ್ಳೆಯ ಹೆಸರು (ನಿಮ್ಮ ಪ್ರಕಾರ) ಇಡಬೇಕೆಂದಿರಲಿ, ಇದು ಒಳ್ಳೆಯ ಹೆಸರು ಎನ್ನುವುದೂ ನನ್ನ ಮನೆಯವರಿಗೆ ಗೊತ್ತಿಲ್ಲ. ಅಂದರೆ ನನ್ನ ತಂದೆ-ತಾಯಿ ಸಂಪೂರ್ಣ ಅವಿದ್ಯಾವಂತರು. ಅಕ್ಕಂದಿರು ಮತ್ತು‌ಅಣ್ಣಂದಿರೂ ಅಷ್ಟೇ.ನಾನು ಓದಿದ್ದೇ ಆಕಸ್ಮಿಕ. ಈಗ ಹೀಗೆ ಬಾಂಬೆಯಲ್ಲಿರುವುದು ಇನ್ನೂ ಆಕಸ್ಮಿಕ. ನನ್ನದು ಮುಗಿಯದ ಕಥೆ ವಸಂತ. ನನ್ನ ಕೌಟುಂಬಿಕ, ಸಾಮಾಜಿಕ ಸಂಸ್ಕಾರಗಳ ಬಗ್ಗೆ ತಿಳಿದಾಗ ನಿನಗೆ ಅಚ್ಚರಿ ಆಗಬಹುದು, ಅಸಹ್ಯವಾಗಬಹುದು, ನಿರೀಕ್ಷೆಗಳೆಲ್ಲಾ ಸುಳ್ಳಾಗಬಹುದು. ಮುಚ್ಚಿಟ್ಟುಕೊಳ್ಳಲು, ನಾನೆಂದೂ ಯಾರಮುಂದೆಯೂ ಪ್ರಯತ್ನಿಸೊಲ್ಲ. ಆ ಬಗ್ಗೆ ನನಗೆ ನಾಚಿಕೆ ಇಲ್ಲ, ಹೆಮ್ಮೆ ಇದೆ. ಅನುಕಂಪ ಇದೆ. ಹೆಸರೇ ಇಲ್ಲದ ಜಾತಿ ನನ್ನದು. ಒಂದೊಂದು ಕಡೆ ಒಂದೊಂದು ರೀತಿ ಇರುವುದರಿಂದ ಹಾವನೂರು ಆಯೋಗದ ಶಿಫಾರಸ್ಸಿನ ಮೇಲೆ ಸುಲಭವಾಗಿ ಲಾಭಗಳನ್ನು ಗಿಟ್ಟಿಸಿಕೊಳ್ಳಬಹುದು. ಇಂತಹ ಒಂದು ಜಾತಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ನಾನು ಸುಲಭವಾಗಿ ಎಲ್ಲ ಜಾತಿಗಳನ್ನೂ ತಿಳಿದುಕೊಳ್ಳಲು, ಎಲ್ಲರಲ್ಲೂ ಬೆರೆತುಕೊಳ್ಳಲು ಅನುಕೂಲವಾಯಿತು. +ನಿನಗೆ ಸ್ವಾರಸ್ಯಪೂರ್ಣವಾಗಿ ಪತ್ರ ಬರೆಯಲು ನನ್ನಲ್ಲಿ ಈ ಜನ್ಮಕ್ಕೆ ಸಾಕಾಗುವಷ್ಟು ವಿಷಯಗಳಿವೆ. ನೊಂದ ಘಟನೆಗಳಿವೆ. ಆದರೆ ಇದರಿಂದಷ್ಟೇ ನೀನು ಹೇಳಿದಂತೆ ನಾನು ಕಥೆಗಾರನಾಗಲಾರೆ. ಇದಕ್ಕಾಗಿ ಈ ವಿಸ್ತಾರವಾದ ಬದುಕಿಗೆ ನಮ್ಮನ್ನೇ ತೆರೆದ ಪುಸ್ತಕವನ್ನಾಗಿಸಿಕೊಳ್ಳಬೇಕು. ವಸಂತ, ಬದುಕಿನ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ, ರಾಜಮಾರ್ಗಗಳಲ್ಲಿ ನಡೆದಷ್ಟೂ ಆಶ್ಚರ್ಯವಾಗುತ್ತದೆ. ಯಾರದೋ ಒಂದು ಪುಸ್ತಕವನ್ನು ಓದಿ ಅದರಲ್ಲಿನ ಪಾತ್ರಗಳು, ಬದುಕುಗಳ ಬಗ್ಗೆ ನಮ್ಮಲ್ಲಿ ತಲೆಕೆಡಿಸಿಕೊಳ್ಳುವವರು ಬಹಳ ಮಂದಿ, ಅದರ ಬದಲುನಿಜವಾದ ಪಾತ್ರಗಳಲ್ಲಿ ಬೆರೆತು ನೋಡಿ ಬದುಕಿನತ್ತ ಬಿಚ್ಚಿಕೊಂಡರೆ ನೂರಾರು ಕಾದಂಬರಿಗಳು ನಮ್ಮ ಬದುಕಿನಲ್ಲಿ ಹುಟ್ಟಿಕೊಳ್ಳುತ್ತವೆ. ಅದನ್ನಷ್ಟೆ ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕು. ಆ ಕಾರಣಕ್ಕಾಗಿಯೇ ನಾನು ಬರೆಯೊಲ್ಲ, ಅನುಭವಿಸುತ್ತೇನೆ. +ವಸಂತಾ, ನಿನ್ನ ಅತ್ಯಂತ ಒಳಗನ್ನು ತೆರೆದಿಟ್ಟ ಕಾಗದ ಓದಿ, ನೀನು ಹಿಂದಿನ ವಸಂತಳಿಗಿಂತ ಈಗ ತೀರಾ ಭಿನ್ನವಾಗಿ ಕಾಣುತ್ತಿದ್ದೀಯಾ ಎನಿಸುತ್ತಿದೆ. ನಿನ್ನಮೊದಲನೆಯ ಪತ್ರದಲ್ಲಿ ಕಾಣುವ ಪೆದ್ದುತನಕ್ಕಿಂತ, ಈಗಿನ ಪತ್ರದಲ್ಲಿನ ಸರಳತೆಗೆ ನಾನು ಮಾರುಹೋಗಿದ್ದೇನೆ. ನನಗೆ ಇದೇ ಇಷ್ಟ, ನಿನಗೆ ಕಾಗದ ಬರೆಯಬೇಕೆಂದು ಕುಳಿತುಕೊಳ್ಳುತ್ತೇನೆ. ಆದರೆ, ಇಲ್ಲಿಯ ವೇಗವಾಗಿ ಚಲಿಸುವ ವಿಧ್ಯ್ತ್ ರೈಲುಗಳು ಕೇವಲ ೧೫-೨೦ ಸೆಕೆಂಡುಗಳು ನಿಲ್ದಾಣದಲ್ಲಿ ನಿಂತಾಗ, ಹೊರನುಗ್ಗುವ ಜನ ಪ್ರವಾಹದಂತೆ, ನಾನು ಬರೆಯಬೇಕೆಂಬ ವಿಷಯವೆಲ್ಲ ಪ್ರವಾಹದಲ್ಲಿ ಗಜಿಬಿಜಿಯಾಗಿ, ಓರಣಗೆಟ್ಟು ಹೊಗುತ್ತದೆ. ನನ್ನದೆಲ್ಲವನ್ನೂ ಹೇಳಬೇಕು. ಸರಿ, ಆದರೆ ಎಲ್ಲಿಂದ ಶುರುಮಾಡಲಿ? ನನಗನ್ನಿಸುತ್ತದೆ, ನಿನಗೆ ಆಗಾಗ ಪತ್ರ ಬರೆಯುವುದಕ್ಕಿ‌ಇಂತ ಮನಸ್ಸಿದ್ದಾಗ ಏನನ್ನಿಸುತ್ತದೋ ಎಲ್ಲವನ್ನೂ ಹಾಳೆಗಳ್:ಅ ಮೇಲೆ ಗೀಚಿ ಒಮ್ಮೆಲೇ ನಿನಗೆ ಪೋಸ್ಟ್ ಮಾಡಬೇಕೆಂದು. ಆದರೆ ಹಾಗೆ ಬರೆದಾಗ ನಿನ್ನ ಮೇಲೆ ನನ್ನ ಬರಹ ಯಾವ ರೀತಿಯ ಪರಿಣಾಮ ಬೀರಬಹುದೆಂದು ಯೋಚಿಸಿ ಸುಮ್ಮನಾಗುತ್ತೇನೆ. +ನಾನು ವಿಚಾರವಾದಿ, ಬುದ್ದಿವಂತ ಹೀಗೆಲ್ಲಾ ಹೇಳಿಕೊಂಡು ನೀನು ನನ್ನನ್ನು ಬಹಳ ಹೊಗಳಿ ಪೂಜಿಸುತ್ತಿರುವಂತೆ ಕಾಣುತ್ತಿದೆ. ಆದರೆ ವಸಂತ, ನಾನೊಬ್ಬ ಸಾಮಾನ್ಯ. ಎಲ್ಲರಂತೆ ನನ್ನಲ್ಲೂ ವಿಚಿತ್ರವಾದ, ಕೊಳಕಾದ ವಿಕಾರವಾದ ಭಾವನೆಗಳಿವೆ. ಈ ವೈಪರೀತ್ಯಗಳನ್ನು ಖುಷಿಯಿಂದ, ಫ್ರೀಯಾಗಿ ಹೇಳಿಕೊಳ್ಳುವ ಬರೆದುಕೊಳ್ಳುವ ಸಾಮರ್ಥ್ಯ ಕಂಡು ನನ್ನ ಬಗ್ಗೆ ಏನೆಲ್ಲಾ ಕಲ್ಪಿಸಿಕೊಳ್ಳಬೇಡ. ನಾನೂ ಹೀಗೆ ಹಿಂದೊಮ್ಮೆ ಪುಸ್ತಕದಲ್ಲಿ ಓದಿ ಬಾಹುಬಲಿ ೫೭ ಅಡಿ ಅಂದರೆ ನಾಲ್ಕಾರು ತೆಂಗಿನ ಮರಗಳೆತ್ತರದ ಅಗಾಧ ಮೂರ್ತಿ ಎಂದೆಲ್ಲಾ ಅಂದುಕೊಂಡಿದ್ದೆ. ಅಲ್ಲಿಗೆ ಹೋದ ಮೇಲೆ ಖಂಡಿತಾ ನನಗೆ ನಿರಾಶೆಯಾಯ್ತು. ನನ್ನ ಕಲ್ಪನೆಯ ಅಗಾಧ ಮೂರ್ತಿಗಿಂತ ಕುಳ್ಳನಾಗಿ ಕಂಡ ಗೊಮ್ಮಟ. ಹಾಗೇ ನನ್ನ ಬಗ್ಗೆ ಆಗಬಾರದಲ್ಲ! ಮತ್ತೆ, ಮತ್ತೊಂದು ಅಪಾಯವೆಂದರೆ ‘ವಿಚಾರವಂತ’ ಎಂಬ ಭ್ರಮೆ ಬಂದ ಕೂಡಲೇ ನಮ್ಮ ಪ್ರತಿಯೊಂದು ವರ್ತನೆಗಳಲ್ಲೂ ‘ಶ್ರೇಷ್ಠತೆ’ ಯನ್ನೇ ನಿರೀಕ್ಷಿಸುವುದರಿಂದ, ನಾವೆಷ್ಟೇ ಸಹಜವಾಗಿ ವರ್ತಿಸಿದರೂ ಕೆಲವೊಮ್ಮೆ ಅದು ಬೂಟಾಟಿಕೆಯಾಗಿ ಕಾಣುತ್ತದೆ. ಇದನ್ನು ನಾನು ಕಂಡಿದ್ದೇನೆ. ಒಮ್ಮೊಮ್ಮೆ ನಾನು ಸಿಲ್ಲಿಸಿಲ್ಲಿಯಾಗಿ ಮನಸ್ಸಿಗೆ ಬಂದಂತೆ ಕುಣಿಯುತ್ತಾ ಪಕ್ಕದವರನ್ನು ಛೇಡಿಸಿ, ಹೊಡೆದುಬಿಡುತ್ತೇನೆ. ನನಗೆ ಮೂಡಿಲ್ಲ ಎಂದು ಎಲ್ಲರ ಮೂಡನ್ನು ಹಾಳುಮಾಡಿಬಿಡುತ್ತೇನೆ. ನನ್ನ ಈ ವಿಕಾರ ವರ್ತನಗೆಳನ್ನು ಮನಃಶಾಸ್ತ್ರದ ಮೂಲಕ ನೋಡಿ, ನಾನು ಚಿbಟಿoಡಿmಚಿಟ ಠಿsಥಿಛಿhoಠಿಚಿಣh ಇರಬಹುದೆಂದು ಸಂಶಯಪಟ್ಟಿದ್ದೇನೆ. ನನ್ನ ಎಷ್ಟೋ ಸ್ನೇಹಿತರೆನಿಸಿಕೊಂಡವರಿಗೆ ನಾನೊಬ್ಬ oಜಜ mಚಿಟಿ. +“ಇಷ್ಟೊಂದು ಹಿಂದುಳಿದ ವರ್ಗದ ಹುಡುಗ ರ್‍ಯಾಂಕ್ ಬರಲು ಸಾಧ್ಯವೇ?” ಎಂದು ನಿನ್ನ ಗೆಳತಿ ಸುಚಿತ್ರಾ ಹೇಳಿದ್ದಾಳೆಂದು ಬರೆದಿದ್ದೀಯಾ. ನಮ್ಮ ಹೆತ್ತವರು ಆಕಸ್ಮಿಕವಾಗಿ ಜಾತಿಯನ್ನು ಯಾವಯಾವುದೋ ಕಾರಣದಿಂದ ಕಳೆದುಕೊಳ್ಳುವುದರಿಂದ ಅಥವಾ miಞ-uಠಿ ಆಗುವುದರಿಂದ, ನಮ್ಮ ಮನಿಸ್ಸಿಗೆ ಅತೀವ ಸ್ವಾತಂತ್ರ್ಯದ ಲಾಭದೊಂದಿಗೆ ಮುಕ್ತ ನಿರ್ಭೀತ ವೈಚಾರಿಕ ಶಕ್ತಿಯೂ ಲಭಿಸಿಬಿಡುತ್ತದೆ. ದುರಂತವೆಂದರೆ ನಿರ್ದಿಷ್ಟ ಜಾತಿಯ ವೃತ್ತವಿಲ್ಲದೆ ಪರಿತಪಿಸುತ್ತಾ ತಹತಹಿಸುತ್ತಾ ನಾವೊಂದು ಜಾತಿಯೊಳಗೆ ನುಸುಳುವ ಉ‌ಅತ್ನ ಮಾಡುವುದು. ಈ ಜಾತಿಯನ್ನು ತೊಲಗಿಸಿ ನಾವು ಜಾತಿಯಿಲ್ಲದವರಾಗಲು ಸಾಧ್ಯವಿಲ್ಲವೆ? ನನ್ನ ಅನುಭವಗಳು ಹೇಳುತ್ತವೆ. ನಮ್ಮ ಸುತ್ತಲಿನ ಮನುಷ್ಯ ಎಷ್ಟೇ ಹಣವಿದ್ದರೂ ಸುರಕ್ಷಿತ ಎಂದುಕೊಳ್ಳಲಾರ. ಅವನೊಬ್ಬ ಕಡುಬಡವನಾಗಿದ್ದರೂ ಒಂದು ನಿರ್ದಿಷ್ಟ ಜಾತಿ ಇದ್ದುಬಿಟ್ಟರೆ ತನ್ನ ಸುತ್ತ ರಕ್ಷಿಸುವ ಬಲವಾದ ಕೋಟೆ ಇದೆ ಎಂಬ ವಿಶ್ವಾಸವಿರುವುದನ್ನು ಕಂಡು ನಾನು ಚಕಿತನಾಗಿಬಿಡುತ್ತೇನೆ. ಈ ಜಾತಿಗೆ ಕಾರಣ ಹಿರಿಯರು. ನಮ್ಮನ್ನು ಬೆಳೆಸುವಾಗಲೇ ಒಂದು ನಿರ್ದಿಷ್ಟ ಸಂಪ್ರದಾಯಗಳ, ಶಿಸ್ತಿನ ನಿಯಮಗಳು, ಆಹಾರ ಪಾನೀಯಗಳ ನಡುವೆ ಭಯದಿಂದ ಬೆಳೆಸುತ್ತಾರೆ. ಮುಂದೆ ನಾವು ದೊಡ್ಡವರಾದಾಗಲೂ ಅವೆಲ್ಲವನ್ನೂ ಮುರಿಯುವ ಕೆಚ್ಚನ್ನು ಕಲಿಯುವುದಿಲ್ಲ. ಸರಿ, ಮನುಷ್ಯ ತಾನು ಕಲಿತದ್ದನ್ನೇ ಪಾಲಿಸುವ ಇತರರೊಡನೆ ಸೇರಲು ಯತ್ನಿಸುವುದರಿಂದ ಸ್ವಾಭಾವಿಕವಾಗಿ ತನ್ನ ಜಾತಿಯವರೇ ಹತ್ತಿರವಾಗುತ್ತಾರೆ. ಹೀಗೆ ಜಾತಿ ಬೆಳೆಯುತ್ತಲೇ ಹೋಗುತ್ತಿದೆ. ಹೋಗುತ್ತಿರುತ್ತದೆ. +ವಸಂತಾ, ನಿನ್ನ ಜೊತೆ ಮಾನಸಿಕವಾಗಿ ಅದೆಷ್ಟು ಹೊತ್ತಿನಿಂದ ಸಂಭಾಷಣೆ ನಡೆಸುತ್ತಿದ್ದೇನೆ! ನನಗೆ ನಾವಿಬ್ಬರೂ ಬಹಳ ಹಳೆಯ ಸ್ನೇಹಿತರು ಎಂದೆನಿಸುತ್ತಿದೆ. ನನ್ನ ತಮ್ಮ-ತಂಗಿ ಬಿಟ್ಟರೆ ನನ್ನ ಮನಸ್ಸಿನ ಭಾವನೆಗಳನ್ನು ನಾನು ಯಾರಲ್ಲಿಯೂ ಹೇಳಿಕೊಳ್ಳುವಹಾಗಿಲ್ಲ. ಏಕೆಂದರೆ ಯಾರೂ ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಿನ್ನಲ್ಲಿ‌ಎಲ್ಲಾ ಹೇಳಬೇಕೆನಿಸುತ್ತದೆ. ಜೊತೆಗೆ ಇವೆಲ್ಲಾ ನಿನ್ನ ಮೇಲೆ ಯಾವ ರೀತಿಯ ಪರಿಣಾಮ ಬೀರುವುದೋ ಎಂಬ ಕುತೂಹಲವೂ ನನ್ನಲ್ಲಿದೆ! +ಹಾಂ, ಮತ್ತೊಂದು ವಿಷಯ, ಒಮ್ಮೆ ನನಗೆ ಯಾವುದಾದರೂ ಅನಾಥಾಶ್ರಮದ ಅಥವಾ ಅಂಗವಿಕಲ ಹುಡುಗಿಯನ್ನು ಮದುವೆಯಾಗುವ ಬಯಕೆ ಬಂದಿತ್ತು, ಗೊತ್ತಾ? ಇದರಿಂದ ನಮ್ಮ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ! ಬರೀ ಬೆಂಗಾಡಿನ ಮರುಭೂಮಿಯಲ್ಲಿ ಆಗಾಗ್ಗೆ ಅಲೆದು ನಿರ್ವಿಣ್ಣನಾಗುವ ನನಗೆ, ನನ್ನ ಇಡೀ ಹದೃಯದೊಂದಿಗೆ ಮನಸ್ಸು-ದೇಹಗಳನ್ನು ಶಾಂತವಾಗಿ, ತಂಪಾಗಿ ತೋಯಿಸುವ ‘ವಿಶಾಲ ಹೃದಯ’ದ ಅವಶ್ಯಕತೆಯಿತ್ತು. ನೋಡು, ನನಗೂ ನನ್ನನ್ನೇ ಅತಿಯಾಗಿ ಪ್ರೀತಿಸುವ ಹೃದಯವಿರಬೇಕೆಂಬ ಸ್ವಾರ್ಥ. ಸಾಮಾನ್ಯವಾಗಿ ಇಂಥಹವರಲ್ಲಿ ಅಗಾಧವಾದ ಪ್ರೀತಿ ತೋರುವ ವಿಶಾಲ ಹೃದಯವಿರುತ್ತದೆಂಬ ತಪ್ಪು ಕಲ್ಪನೆ ನನ್ನಲ್ಲಿಯೂ ಇತ್ತು. ಈ ಪ್ರೀತಿ-ಪ್ರೇಮಗಳನ್ನು ನಾನು ಕಾಯಿಸಿ ಭಟ್ಟಿಯಿಳಿಸಿ ಉಳಿದದ್ದನ್ನು ಕಂಡಾಗ ಮತ್ತೆ ಭಗ್ನನಾಗುತ್ತೇನೆ. ನಾನು ಮನಃಶಾಸ್ತ್ರ ಓದಿದ್ದೇ ತಪ್ಪೆನಿಸುತ್ತಿದೆ. ಸುಂದರವಾದ ಹೂವಿನ ದಳಗಳು ದುಂಬಿಯನ್ನು ಆಕರ್ಷಿಸಿ ಸ್ಪರ್ಶಕ್ಕೋಸ್ಕರ ಅರಳಿ ಮಧು ಹೊತ್ತುನಿಂತ ಸ್ವಾರ್ಥಿ ದಳಗಳಾಗಿ, ಮಗುವಿನ ಮುಗ್ಧ ಮನಸ್ಸಿನಲ್ಲೂ ಫ್ರಾಯ್ಡ್‌ನ ಬೇರುಗಳನ್ನು ಹುಡುಕಿ ಅಶಾಂತಿಗೊಳ್ಳುತ್ತೇನೆ. ಈ ವಿಚಿತ್ರ ಮನಸ್ಸಿನವನಿಗೆ ಮದುವೆ-ಹೆಂಡತಿಯೆಂಬ ಬೊಂಬೆಗಳೆಲ್ಲಾ ಏಕೆ ಎಂದು ನಗುವೂ ಬರುತ್ತದೆ. ಅಶಾಂತತೆಯಲ್ಲಿಯೇ ಬದುಕನ್ನು ಅರಸಿ ನೋಡುವ ಸಾಹಸವೂ ಒಮ್ಮೊಮ್ಮೆ ನಿನ್ನಂತಹ ಸ್ನೇಹಿತರನ್ನು ಕಂಡಾಗ ಮೂಡುತ್ತದೆ. +ವಸಂತ, ನಮಗೆ ತಿಳಿದಿರುವ ಭಾಷೆಗೆ ಮಿತಿ ಇದೆ. ಬರಬಣಿಗೆಗೆ ಮತ್ತೂ ಮಿತಿ ಇದೆ. ಹಾಗಾಗಿ ಇದ್ದ ಹಾಗೆ ಇರುವಂತೆ ಮನದಟ್ಟು ಮಾಡಲು ಸಾಧ್ಯವೇ ಆಗೋಲ್ಲ. ನಿನ್ನಲ್ಲಿ ಏನೇನು ಹೇಳಬೇಕೆಂದುಕೊಂಡು ಈಗ ಲೆಕ್ಕ ಹಾಕಿರುವೆನೋ ಅದೆಲ್ಲಾ ಹೇಳಲಿಕ್ಕಾಗುತ್ತದೆಯೋ ಇಲ್ಲವೋ ನೋಡಬೇಕು. +* +* +* +ಐದು ಪುಟಗಳ ಸುದೀರ್ಘ ಪತ್ರವನ್ನೇ ಬರೆದಿದ್ದಾನೆ ಮನೋಹರ. ಅದನ್ನು ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಕನಿಷ್ಟ ಒಂದು ವಾರವಾದರೂ ಹಿಡಿದಿದೆಯಲ್ಲವೇ? +ಆಫೀಸಿನಲ್ಲಿ ವಾಸು, ಸುಚಿತ್ರ ಇಬ್ಬರೂ ಪತ್ರ ಓದಿ ಜೋರಾಗಿ ನಕ್ಕುಬಿಟ್ಟಿದ್ದರು. “ನಿನ್ನನ್ನು ಇಂಪ್ರೆಸ್ ಮಾಡುವುದಕ್ಕಾಗಿಯೇ ಈ ರೀತಿ ಬರೆದಿದ್ದಾನೆ. ನೀನೂ ಅದಕ್ಕೆ ಸರಿಯಾಗಿದ್ದಿ, ಇವನು ಬರೆದಿದ್ದೆಲ್ಲಾ ನಿಜ ಎಂದು ಹ್ಯಾಗೆ ಹೇಳುವುದು? ಹೇಗಿದ್ದರೂ ಅವನಿಗೆ ಅಂಗವಿಕಲೆಯನ್ನು ಮದುವೆಯಾಗಲು ಇಷ್ಟವಂತೆ. ಬಾ ಈಗ ನಿನ್ನ ಕಾಲನ್ನು ಮುರಿದುಹಾಕಿ ಕುಂಟಿ ಮಾಡ್ತೀನಿ” ಎಂದಳು ಸುಚಿತ್ರ. +ವಾಸು “ಅವನೂ ಏನೋ ವೈಯುಕ್ತಿಕವಾಗಿ ಎಲ್ಲಾ ಹೇಳಿಕೊಡ್ತಾನೆ ಅಂತ ನೀವು ಹೇಳಿಕೊಳ್ಳಲು ಮುಂದಾಗಬೇಡಿ. ಯಾವ ಜನ ಹೇಗೆ ಇರ್‍ತಾರೆ ಅಂತ ಹೇಳುವುದಕ್ಕೆ ಆಗೋಲ್ಲ. ಆಮೇಲೆ ಸುಮ್ಮನೆ ಬ್ಲಾಕ್ ಮೇಲ್ ಮಾಡ್ತಾರೆ ಅಷ್ಟೆ! ಅಷ್ಟಕ್ಕೂ ಅವನೇನು ನಿಮ್ಮ ಪರಿಚಯದವನಾ? ಹಳೆಯ ಸಂಬಂಧವಾ? ಏನೂ ಇಲ್ಲ. ನೀನೇ ಪತ್ರ ಬರೆಯುವುದನ್ನು ನಿಲ್ಲಿಸಿಬಿಡಿ. ಸುಮ್ಮನೆ ಇಲ್ಲಸಲ್ಲದ್ದೆಲ್ಲಾ ನಿಮ್ಮ ತಲೆಯಲ್ಲಿ ತುಂಬ್ತಾನೆ. ಇವರಿಗೆಲ್ಲಾ ಮಾಡೋಕ್ಕೆ ಕೆಲಸವೇ ಇರೋಲ್ಲ ಅನ್ನಿಸುತ್ತೆ” ಎಂದ. +ಛೇ! ನಾನ್ಯಾಕೆ ಇವರಿಗೆಲ್ಲಾ ಪತ್ರ ತೋರಿಸುವ ಅಧಿಕಪ್ರಸಂಗತನ ಮಾಡಿದೆ? ಮನೋಹರ ನನಗೆ ಇಷ್ಟವಾಗಿರುವಷ್ಟು, ಅರ್ಥವಾಗಿರುವಷ್ಟು ಅವರಿಗೆ ಆಗಿಲ್ಲ. ಇದು ಅವರ ತಪ್ಪಲ್ಲ. ನಾನೇ ಇನ್ನು ಮುಂದೆ ಇವರಿಬ್ಬರ ಜೊತೆ ಮನೋಹರನ ಬಗ್ಗೆ ಮಾತನಾಡಬಾರದು. ನಿಜಕ್ಕೂ ಮನೋಹರ ಎಷ್ಟೊಂದು ಬುದ್ಧಿವಂತ, ವಿಚಾರವಂತ, ಅವರೂ ನನ್ನ ಸ್ನೇಹಕ್ಕಾಗಿ ಎಷ್ಟೊಂದು ಒದ್ದಾಡುತ್ತಾನೆ. +ಅಬ್ಬಾ! ಮನೋಹರನಲ್ಲಿ ಎಂಥೆಂಥ ಯೋಚನೆಗಳಿವೆ. ಬದುಕಿನಲ್ಲಿ ಎಷ್ಟೊಂದು ಕಷ್ಟಪಟ್ಟಿದ್ದಾನೆ. ಅದಕ್ಕೆ ತುಂಬಾ ಬುದ್ಧಿವಂತನಾಗಿ ರ್‍ಯಾಂಕ್ ಬಂದಿರಬಹುದು. ಬಡತನದಲ್ಲಿದ್ದರೂ ನನ್ನ ಜೀವನ ಹೇಗೋ ಹೆಚ್ಚು ತೊಂದರೆಯಿಲ್ಲದೆ ನಡೆದುಕೊಂಡು ಬಂದಿದೆಯಲ್ಲಾ, ಕೈಗೆ ಕೆಲಸ ಸಿಕ್ಕಿದ ಮೇಲಂತೂ ನಾವು ಚಿಕ್ಕವರಾಗಿದ್ದಾಗ ಎಷ್ಟು ಕಷ್ಟಪಟ್ಟಿದ್ದೆವು ಎಂಬುದೆಲ್ಲಾ ಮರೆತೇ ಹೋಗುತ್ತಿದೆ. +ಪಾಪ ಮನೋಹರ ತನ್ನನ್ನು ಯಾರಾದರೂ ಅರ್ಥಮಾಡಿಕೊಳ್ಳಲಿ ಎಂದು ಅವನಿಗೆಷ್ಟು ಆಸೆ! ಅವನ ಪತ್ರಗಳಲ್ಲಿ ಯಾವುದೇ ಕಪಟತನ ಇರುವುದಿಲ್ಲ ಅದೆಷ್ಟು ಸಲೀಸಾಗಿ ತನಗನಿಸಿದ್ದನ್ನೆಲ್ಲಾ ಹೇಳಿಬಿಡುತ್ತಾನೆ. ನನಗಾದರೂ ಆ ರೀತಿ ಅನಿಸಿದ್ದೆಲ್ಲಾ ಹೇಳುವ ಸ್ನೇಹಿತರ್‍ಯಾರೂ ಇಲ್ಲವಲ್ಲ. ನನಗೆ ಇಷ್ಟು ಒಳ್ಳೆಯ ಸ್ನೇಹಿತ ಸಿಕ್ಕಿರುವುದಕ್ಕೆ ಇವರಿಬ್ಬರಿಗೂ ಹೊಟ್ಟೆಕಿಚ್ಚಿರಬೇಕು. ಅದಕ್ಕೆ ಹಾಗೆಲ್ಲಾ ಅನ್ನುತ್ತಾರೆ. +ಇನ್ನು ಮೇಲೆ ಹೆಚ್ಚಾಗಿ ಕಾದಂಬರಿಗಳನ್ನು ಓದಬೇಕು. ಮನಃಶಾಸ್ತ್ರ ಓದಿ, ವ್ಯಕ್ತಿಗಳನ್ನು ನೋಡಿದಕೂಡಲೇ ‘ ಈ ವ್ಯಕ್ತಿ ಹೀಗೆ ’ ಎಂದು ಹೇಳಿಬಿಡಬೇಕು! ಮನೋಹರನ ರೀತಿಯಲ್ಲಿಯೇ ನಾನೂ ಬದುಕಿನ ಬಗ್ಗೆ ಯೋಚಿಸಬೇಕು. ಮನೋಹರನಷ್ಟಲ್ಲದಿದ್ದರೂ, ಅವನೆದುರಿಗೆ ಕುಳಿತು ಅವನು ಹೇಳುವ ವಿಷಯಗಳ ಬಗ್ಗೆ ನಾನೂ ಯೋಚಿಸುವಂತಿದ್ದರೆ ಎಷ್ಟು ಚೆನ್ನ. +ನಿನ್ನೆಯ ಕನಸು ಎಷ್ಟು ಸುಂದರವಾಗಿತ್ತು. ಕುಂಟೆಬಿಲ್ಲೆ ಆಟವನ್ನು ನಾನು, ವಾಸು, ಸುಚಿತ್ರ ಆಡುತ್ತಿರುವಾಗ ನಾನೇ ಗೆದ್ದುಬಿಡುತ್ತೇನೆಂಬ ಹೊಟ್ಟೆ‌ಉರಿಯಿಂದ ಅವರಿಬ್ಬರೂ ನನ್ನ ಒಂದೊಂದು ಕಾಲಿಗೆ ಬಲವಾದ ಪೆಟ್ಟುಕೊಟ್ಟು ಬೀಳಿಸಿಬಿಡುತ್ತಾರೆ. ಎಲ್ಲಿಂದಲೋ ತಟಕ್ಕನೆ ಬಂದ ಮನೋಹರ ನನ್ನನ್ನು ಹಿಡಿದು ಎಬ್ಬಿಸಿ ನಡೆಸಲು ಪ್ರಯತ್ನಿಸುತ್ತಾನೆ. ಆದರೆ ನನ್ನ ಕಾಲು ಕುಂಟಾಗಿಬಿಟ್ಟಿರುವುದರಿಂದ ಮಗುವನ್ನು ಎತ್ತಿಕೊಂಡಷ್ಟು ಹಗುರವಾಗಿ ಎತ್ತಿ ಹೆಗಲಮೇಲೆ ಹಾಕಿಕೊಳ್ಳುತ್ತಾನೆ. +ಯಾಕೋ ಆ ಕನಸನ್ನು ಜ್ಞಾಪಿಸಿಕೊಂಡರೆ ಮೈಯಲ್ಲೆಲ್ಲಾ ಏನೋ ಒಂದು ರೀತಿಯ ಹೊಸದಾದ ಅನುಭವ ಆಗುತ್ತದೆ. ನಿಜಕ್ಕೂ ಮನೋಹರನನ್ನು ನಾನು ಸರಿಯಾಗಿ ಅರ್ಥಮಾಡಿಕೊಂಡು ಅವನಿಗೊಂದು ಹೊಸಬಾಳನ್ನು ಕೊಡುವಂತಾದರೆ? ಮನೋಹರ ತುಂಬಾ ಒಳ್ಳೆಯವನು, ವಿಚಾರವಾದಿ. ವರದಕ್ಷಿಣೆ ಇಲ್ಲದೆ ನನ್ನನ್ನು ಮದುವೆಯಾಗುತ್ತಾನೇನೋ ಅವನನ್ನೇ ನಾನು ಮದುವೆಯಾಗುವಂತಿದ್ದರೆ ಅದೆಷ್ಟು ಚೆನ್ನ. ಯಾಕೋ ಈ ರೀತಿಯ ಯೋಚನೆಗಳು ಮನಸ್ಸಿಗೆ ಎಂದೂ ಆಗದಷ್ಟು ಸಂತೋಷ ಕೊಡುತ್ತಿವೆಯಲ್ಲಾ! +ಇನ್ನು ಮುಂದೆ ಮನೋಹರ ಪತ್ರ ಬರೆದರೆ ಅದನ್ನೆಲ್ಲಾ ವಾಸು, ಸುಚಿತ್ರರಿಗೆ ತೋರಿಸುವುದೇ ಬೇಡ. ಸುರೇಶನಲ್ಲಿ ಹೇಳಿಕೊಳ್ಳಬೇಕು; ಇವರೆಲ್ಲರಿಗಿಂತ ಚೆನ್ನಾಗಿ ಅವನೇ ಅರ್ಥಮಾಡಿಕೊಳ್ಳಬಹುದು. ನನ್ನ, ಮನೋಹರನ ವಿಷಯ ತಿಳಿದರೆ ಅವನೇ ಮುಂದಾಗಿ ನಿಂತು ಮದುವೆ ಮಾಡಬಹುದೇನೋ. ಮನೋಹರನ ನನ್ನ ಸಂಬಳ ಎರಡೂ ಸೇರಿದರೆ ಎರಡು ಸಾವಿರದಷ್ಟಾಗುತ್ತದೆ. ಅಮ್ಮನನ್ನು ಸುರೇಶ ನೋಡಿಕೊಳ್ಳತ್ತಾನೆ. ಐನೂರು ರೂಗಳನ್ನು ಮನೋಹರನ ಅಪ್ಪ- ಅಮ್ಮನಿಗೆ ಕಳುಹಿಸಿ ಇನ್ನು ಮಿಕ್ಕ ಹಣದಲ್ಲಿ ನಾವಿಬ್ಬರೂ ಅದೆಷ್ಟು ಸುಖವಾಗಿ ಸಂಸಾರ ನಡೆಸಬಹುದು! ಇದರ ಬಗ್ಗೆಯೆಲ್ಲಾ ಸುಚಿತ್ರ, ವಾಸು ಹೇಗೆ ಯೋಚಿಸುತ್ತಾರೆ? ಅವರ ಮನಸ್ಸಿಗೆ ಏನು ಅನ್ನಿಸುತ್ತದೋ ಅದನ್ನೇ ಸರಿ ಅಂತ ಸಾಧಿಸುತ್ತಾರೆ. ಇನ್ನು ಮುಂದೆ ಮನೋಹರನ ಪತ್ರ ಬಂದಾಗ ಇವರೇನಾದರೂ ಕೆಟ್ಟದಾಗಿ ಮಾತನಾಡಿಕೊಂಡರೆ, ಸುಚಿತ್ರ ಹಿಂದೆ ಕೊಟ್ಟಿದ್ದ ಇನ್ನೂರು ರೂಪಾಯಿ ಸಾಲ ಹಿಂತಿರುಗಿಸಿ ಅವಳ ಜೊತೆ ಮಾತನ್ನಾಡುವುದನ್ನೇ ನಿಲ್ಲಿಸಿಬಿಡಬೇಕು. ಸುರೇಶ ಏನಾದರೂ ಅಡ್ಡಗಾಲು ಹಾಕಿದರೆ ಮೈಸೂರಿಗೆ ಹೋಗಿ ಅವನನ್ನು- ಅಮ್ಮನನ್ನು ನೋಡುವುದೇ ಬೇಡ “ಖಿhಚಿಟಿಞs ಜಿoಡಿ ಥಿouಡಿ ಟeಣಣeಡಿ ಏಕೆಂದರೆ ಇಲ್ಲಿ ಹೊತ್ತು ಹೋಗದ ಕ್ಷಣಗಳಲ್ಲಿ ನಿಮ್ಮ ಕಾಗದ ಸಾಕಷ್ಟು ರಿಲೀಫ್ ಕೊಡುತ್ತದೆ. ನಿಮ್ಮ ಕಾಗದಗಳ ಬಗ್ಗೆ ನನಗೆ ಅತ್ಯಂತ ಕುತೂಹಲವಿರುತ್ತದೆ. ನಿಮ್ಮ ವ್ಯಕ್ತಿತ್ವ ಮತ್ತು ಸುತ್ತಲಿನವರ ಪರಿಚಯವಾಗುತ್ತದೆ. ಬರೆಯುತ್ತಲೇ ಇರಿ…..”ಎಂದು ಮನೋಹರ ಬರೆದಿದ್ದಾನೆ. ಮನೋಹರನಿಗೆ ದಿನವೂ ಒಂದೊಂದು ಪತ್ರ ಬರೆದು ಅವನ ಬೇಸರವನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ನಾನೇ ಹೋಗಲಾಡಿಸಬೇಕು. ಅವನಿಗೆ ಪ್ರಪಂಚದಲ್ಲಿ ಆತ್ಮೀಯರೂ, ಸ್ನೇಹಿತರೂ ಯಾರೂ ಇಲ್ಲ. ನಾನು ಅವನಿಗೆ ತುಂಬಾ ಇಷ್ಟವಾದರೆ ನನ್ನನ್ನು ಆಗ ತುಂಬಾ ಪ್ರೀತಿಸುತ್ತಾನೆ. ಬಹುಶಃ ಒಬ್ಬ ಗಂಡ ತನ್ನ ಹೆಂಡತಿಗೆ ಕೊಡುವುದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನೇ ಕೊಡಬಹುದು. ನಿಜಕ್ಕೂ ಹಾಗೆ ಆಗುವುದಾದರೆ ನಾನೆಷ್ಟು ಸುಖಿ…. +ವಾಸು, ಸುಚಿತ್ರ ಮಾತನಾಡಿಕೊಂಡು ಎದುರಿಗೆ ಬರುವಾಗ ನಾನು ಮನೋಹರನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಏನೋ ಕೆಲಸ ಮಾಡುವವಳಂತೆ ನಟಿಸಿದ್ದೆ. ವಾಸು ” ಏನು ನಿಮ್ಮ ಪ್ರೇಮಕಥೆಯ ಬಗ್ಗೆ ಯೋಚಿಸುತ್ತಿದ್ದೀರಾ? ಕಳ್ಳನ ದಾರಿ ಕಳ್ಳನಿಗೇ ಬೇಗ ಗೊತ್ತಾಗುವುದು. ನನ್ನದೂ ಪ್ರೇಮವಿವಾಹ ನೋಡಿ …..” ಎಂದು ಕಣ್ಣು ಮಿಟುಕಿಸಿದ. ಸುಚಿತ್ರ, ” ಪ್ರೇಮವೂ ಇಲ್ಲ, ಕಥೆಯೂ ಇಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಅವನು ಬರೀತಾನೆ. ಅದಕ್ಕೆಲ್ಲಾ ಗಂಟೆಗಟ್ಟಲೆ ತಲೆಕೆಡಿಸಿಕೊಂಡು, ಯೋಚಿಸಿ ಇವಳು ಉತ್ತರ ಬರೆಯುತ್ತಾಳೆ. ಅವನು ನಾಲ್ಕು ಸಾಲು ಬರೆದರೆ ಇವಳದಕ್ಕೆ ಇಪ್ಪತ್ತು ಪುಸ್ತಕ ಓದಿ ಎಂಟು ಸಾಲು ಉತ್ತರ ಕೊಡುತ್ತಾಳೆ. ಇದು ಎಲ್ಲಿಯವರೆಗೆ ಹೋಗುತ್ತೋ, ಏನಾಗುತ್ತೋ ಕಾದುನೋಡಬೇಕು. ಅವನೇನಾದರೂ ಇಲ್ಲಿಗೆ ಬಂದರೆ ಸರಿಯಾಗಿ ಮಾತಾಡಿ ಅವನ ಬಂಡವಾಳವನ್ನೆಲ್ಲಾ ಆಚೆಗೆ ತೆಗೆದು ಹಾಕಿಬಿಡ್ತೀನಿ.” ಅವಳ ಭಾಷಣ ಇನ್ನೂ ಮುಂದುವರಿಯುತ್ತಿರಬೇಕಾದರೆ ನಾನಲ್ಲಿಂದ ಜಾಗ ಖಾಲಿ ಮಾಡಿದೆ. +* +* +* +ಮನೋಹರನ ಪರಿಚಯವಾಗಿ ಆರು ತಿಂಗಳಾದ ನಂತರದಲ್ಲಿ ವಾಸು, ಸುಚಿತ್ರ ಅವನ ಬಗ್ಗೆ ಮಾತನಾಡುವುದಾಗಲೀ, ಯೋಚಿಸುವುದಾಗಲೀ ನಿಲ್ಲಿಸಿರುವುದು ನನಗೆ ಬಹಳ ನೆಮ್ಮದಿ ತಂದ ವಿಷಯ. ಮನೋಹರನ ಪತ್ರ ಬಂದಾಗಲೆಲ್ಲ ಅವನನ್ನು ನೋಡಲೇಬೇಕೆಂಬ ಬಯಕೆ ಆಗುತ್ತಿತ್ತು. ಇದುವರೆಗೂ ಅವನ ಪತ್ರಗಳು, ಅದರಲ್ಲಿನ ಮಾತುಗಳು-ಇದಿಷ್ಟೇ ಅವನ ಬಗ್ಗೆ ಯೋಚಿಸಲು ನನಗಿರುವ ಸಾಮಾಗ್ರಿಗಳು. ಇವಿಷ್ಟು ಸಾಲದು, ಇನ್ನೂ ಹೆಚ್ಚು ವಿಷಯಗಳು ನನಗೆ ಬೇಕೆನಿಸುತ್ತಿತ್ತು. +ಸುಂದರ ಯುವಕನೊಬ್ಬ ನಮ್ಮತ್ತ ನಿಂತು ನೋಡುವಾಗಲೇ ಸುಚಿತ್ರ “ನೋಡು, ನಿನ್ನ ಮನೋಹರ್ ಬಂದಿದ್ದಾನೆ. ಬೇಗ ಹೋಗು” ಎಂದಳು. ಸಾಮಾನ್ಯವಾಗಿ ತೀರಾ ವಿಕಾರವಾಗಿರುವವನನ್ನು ಅಥವಾ ಸುಂದರವಾಗಿರುವವರನ್ನು ಕಂಡಾಗ ಹೀಗೆಲ್ಲಾ ರೇಗಿಸುತ್ತಿರುತ್ತಾಳೆ. ಆದ್ದರಿಂದ ಅವಳ ಮಾತು ಕೇಳದವಳ ಹಾಗೆ ಕ್ಯಾಂಟೀನಿನಲ್ಲಿ ಕುಳಿತು ಡಬ್ಬಿಯ ಮುಚ್ಚಳ ತೆರೆದೆ. +“ನಾನು ಮಿಸ್ ವಸಂತ ಅವರನ್ನು ಕಾಣಬೇಕಿತ್ತು.” ಸುಚಿತ್ರಳ ಹತ್ತಿರ ಆ ವ್ಯಕ್ತಿ ಹೇಳುವುದನ್ನು ಕೇಳಿ ತಟ್ಟಕ್ಕನೆ ತಲೆ ಎತ್ತಿದೆ. ಅವನು ನನ್ನ ಮುಖ ನೋಡಿ “I ಚಿm ಒಚಿಟಿohಚಿಡಿ, ನೀವು ವಸಂತಾನೇ ಆಗಿರಬೇಕು” ಎಂದಾಗ ಆಶ್ಚರ್ಯ, ದಿಗ್ಭ್ರಮೆಗಳಿಂದ ಏನೊಂದೂ ತೋರದೆ ಪೆಚ್ಚಾಗಿ ನಿಂತುಬಿಟ್ಟೆ. +ಅವನು ಮನೋಹರ ಎಂದು ಸುಮಾರು ಹೊತ್ತು ನನಗೆ ನಂಬಲಾಗಲೇ ಇಲ್ಲ. ಕಣ್ಣುಬಾಯಿ ಅರಳಿಸಿ ಆಶ್ಚರ್ಯದಿಂದ ನೋಡುತ್ತಿರುವುದನ್ನು ಕಂಡು ಮನೋಹರ್ ಮಂದಹಾಸ ಬೀರುತ್ತಾ ಹತ್ತಿರ ಬಂದು “ನನ್ನ ಹತ್ತಿರ Iಜeಟಿಣiಜಿiಛಿಚಿಣioಟಿ ಅಚಿಡಿಜ ಇಲ್ಲ. ಅದಿದ್ದರೆ ನಾನೇ ಮನೋಹರ್ ಅಂತ ಪ್ರೂವ್ ಮಾಡಬಹುದಿತ್ತು” ಎಂದ. ಅವನ ಮಾತು ಕೇಳಿ ನನಗೆ ಒಂಥರಾ ನಾಚಿಕೆಯಾಯಿತು. ನನ್ನನ್ನು ನೋಡಲೆಂದೇ ಮನೋಹರ ಬಾಂಬೆಯಿಂದ ಬಂದಾಗ ಹೀಗೆ ಪೆದ್ದುಪೆದ್ದಾಗಿ ಆಡುತ್ತಿರುವುದನ್ನು ಕಂಡು ಅವನಿಗೆ ನನ್ನ ಬಗ್ಗೆ ಕನಿಕರ ಮೂಡಿರಬಹುದು. ನಿಜಕ್ಕೂ ನನಗೆ ಮನೋಹರ ಇಷ್ಟೊಂದು ಸುಂದರನಾಗಿರುವ ವ್ಯಕ್ತಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗಲಿಲ್ಲ. ಇಷ್ಟೊಂದು ಸ್ಫುರದ್ರೂಪಿ ತರುಣ ಸಾಮಾನ್ಯ ರೂಪಿನ ನನ್ನನ್ನು ಮೆಚ್ಚಿಕೊಳ್ಳುವನೆ? +“ಏನು ಹೀಗೆ ಕುಳಿತುಬಿಟ್ಟಿರಲ್ಲಾ? ನನ್ನನ್ನು ಮಾತನಾಡಿಸುವುದಿಲ್ಲವೆ? ಇನ್ನೂ ನಾನು ಹಳ್ಳಿಗೆ ಹೋಗಬೇಕು. ನನ್ನ ತಂದೆ-ತಾಯಿ ಇವರ್‍ಯಾರನ್ನೂ ನೋಡಿಲ್ಲ. ಬಾಂಬೆಯಿಂದ ನೇರವಾಗಿ ನಿಮ್ಮನ್ನು ನೋಡಲು ಬರ್‍ತಾ ಇದ್ದೀನಿ” ಅಂದ. ಕಷ್ಟಪಟ್ಟು ನನ್ನ ನಾಲಿಗೆಗೆ ಶಕ್ತಿ ತಂದುಕೊಂಡೆ. ಆದರೆ ಏನೆಂದು ಮಾತನಾಡಲಿ? ಏನೂ ತೋಚುತ್ತಿಲ್ಲವಲ್ಲ….ಸುಚಿತ್ರ ಏನಾದರೂ ಮಾತನಾಡು ಎಂಬಂತೆ ಕೈಯಿಂದ ತಿವಿದಳು. ಕೂಡಲೇ ನಾನು “ಇವಳು ಸುಚಿತ್ರ ನನ್ನ ಗೆಳತಿ, ಊಟ ಮಾಡ್ತೀರಾ?” ಎಂದು ಕೇಳಿದೆ. ಮನೋಹರ ನಿಸ್ಸಂಕೋಚವಾಗಿ ನನ್ನ ಡಬ್ಬಿಯಿಂದ ಒಂದು ಚಪಾತಿ ತೆಗೆದುಕೊಂಡು “ಹೊಟ್ಟೆ ತುಂಬಾ ಹಸಿಯುತ್ತಿದೆ” ಎಂದು ತಿನ್ನಲು ಶುರು ಮಾಡಿದ. +ಕ್ಯಾಂಟೀನಿನಲ್ಲಿ ಏನೋ ಉಸಿರುಗಟ್ಟಿಸುವ ವಾತಾವರಣ ಎನ್ನಿಸಿತು. ಜೊತೆಗೆ ಸುಚಿತ್ರಳ ಎದುರಿಗೆ ಕುಳಿತು ಮಾತನಾಡುವುದು ನನಗೆ ಬೇಕಿರಲಿಲ್ಲ. ಆದ್ದರಿಂದ “ಬನ್ನಿ ಹೊರಗೆ ಹೋಗೋಣ” ಎಂದು ಕರೆದೊಯ್ದೆ. +“ಅಂತೂ ನಿಮ್ಮನ್ನು ನೋಡಿದೆ. ನಿಮ್ಮ ಬಗ್ಗೆ ನನಗೆ ಅದೆಷ್ಟು ಕುತೂಹಲವಿತ್ತು ಗೊತ್ತಾ?” ಎಂದು ಮನೋಹರ ಹೇಳಿದಾಗ, “ನೋಡಿ ನಿರಾಸೇನೂ ಆಗಿರಬೇಕಲ್ವಾ?” ಎಂದೆ. +“ಏನನ್ನಾದರೂ ನಿರೀಕ್ಷಿಸಿದರೆ ತಾನೇ ನಿರಾಸೆಯಾಗೋಕ್ಕೆ. ನೀವು ಹೇಗಿರಬಹುದು ಎಂದು ನಾನು ಕಲ್ಪಿಸಿಕೊಂಡಿರಲಿಲ್ಲ. ನೀವು ಅಷ್ಟೊಂದು ಪೆದ್ದುಪೆದ್ದಾಗಿ, ಆದರೆ ಸರಳವಾಗಿ ಪತ್ರ ಬರೆಯುವುದರಿಂದ ನಿಮ್ಮ ಮುಖದಲ್ಲಿ ತುಂಬಾ ಪೆದ್ದುಕಳೆ ಇರಬಹುದೇನೋ ಅಂತ ಒಂದೆರಡು ಬಾರಿ ಅಂದುಕೊಂಡಿದ್ದೆ ಅಷ್ಟೆ. ಆದರೆ ನಿಮ್ಮನ್ನು ನೋಡಿದರೆ ಯಾರೂ ಪೆದ್ದು ಅಂತ ಹೇಳೊಲ್ಲ. ತುಂಬಾ ಬುದ್ಧಿವಂತರ ಹಾಗೆ ಕಾಣಿಸುತ್ತೀರ” ಮನೋಹರ ಹೇಳಿದಾಗ ನಾಚಿಕೆಯಿಂದ ತಲೆತಗ್ಗಿಸಿದೆ. +“ಇವತ್ತು ಲೀವ್ ಹಾಕಲೆ?” ಮೆಲ್ಲಗೆ ಕೇಳಿದೆ. +“ಸುಮ್ಮನೆ ರಜೆ ಯಾಕೆ ಹಾಳುಮಾಡುತ್ತೀರ. ಅಷ್ಟಕ್ಕೂ ನನ್ನ ಹತ್ತಿರ ಮಾತನಾಡುವುದಕ್ಕಾದರೂ ಏನಿದೆ? ಎಲ್ಲಾ ಪತ್ರಗಳಲ್ಲಿಯೇ ಮುಗಿಯುತ್ತಲ್ಲ” ಎಂದುಬಿಟ್ಟ ಮನೋಹರ. +ನನಗೆ ನಿರಾ‌ಎಯಾಯಿತು. ಮನೋಹರ ಬಂದಕೂಡಲೇ ಅವನ ಕೈಹಿಡಿದು ಮಕ್ಕಳಂತೆ ಕುಣಿದು ಕುಪ್ಪಳಿಸುತ್ತಾ ಇಡೀ ಪಾರ್ಕಿನ ತುಂಬಾ ಓಡಾಡುವ ದೃಶ್ಯವನ್ನು, ಅಂಗಡಿಗೆ ಕರೆದುಕೊಂಡು ಹೋಗಿ, ಮನೋಹರನೇ ಬಲವಂತದಿಂದ ತುಂಬಾ ಸೀರೆಗಳನ್ನು ಸೆಲೆಕ್ಟ್ ಮಾಡಿ, ಅವುಗಳನ್ನೆಲ್ಲಾ ಇಬ್ಬರೂ ಕೈ ತುಂಬಾ ಹೊತ್ತು ಹೊರಲಾರದೇ ಏದುಸಿರು ಬಿಟ್ಟು ಬರುವಾಗ, ಸುತ್ತಲಿರುವ ಜನ ಆಶ್ಚರ್ಯದಿಂದ ನಮ್ಮತ್ತ ಒಮ್ಮೆ ತಿರುಗಿ ನೋಡುವಾಗ ನನಗದರ ಅರಿವೇ ಇಲ್ಲದೆ ಉದಾಸೀನಳಾಗಿ ‘ಆಗಾಗ್ಗೆ ನಾನು ಹೀಗೆ ರಾಶಿ ರಾಶಿ ಸೀರೆಗಳನ್ನು ನೋಡಿಕೊಳ್ಳುತ್ತಲೇ ಇರುತ್ತೇನೆ’ ಎಂಬಂತೆ ಮುಖ ಮಾಡುವುದನ್ನು ನೆನೆಸಿಕೊಂಡು ಖುಷಿಪಡುತ್ತಿದ್ದೆ. ಅಷ್ಟು ದೊಡ್ಡ ಕನಸು ಈಗಲೇ ನನಸಾಗುವುದು ಬೇಡ, ಕಡೆಯಪಕ್ಷ ಇಬ್ಬರೂ ಒಟ್ಟಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಅವಕಾಶವಾದರೂ ಬರಬಾರದಿತ್ತೆ? ಛೇ! ಮನೋಹರ ತುಂಬಾ ಒರಟು ಮನುಷ್ಯ್ಯ. +“ಆಯ್ತಲ್ಲಾ ನಿಮ್ಮನ್ನು ನೋಡಿ, ಇನ್ನು ಊರಿಗೆ ಹೋಗ್ಲಾ? ನನ್ನ ಅಮ್ಮ ಅಪ್ಪ ಕಾಯ್ತಾ ಇರ್‍ತಾರೆ. ಯಾವ ತಿಂಗಳಲ್ಲಿ ಬರ್‍ತೀನೋ ಅಂತ” ಎಂದು ಹೇಳಿ ಹೊರಟು ಬಿಟ್ಟ. ನನಗೆ ಅವನು ಹೋಗುತ್ತಿರುವುದರಿಂದ ಏನೂ ಬೇಸರವಿಲ್ಲ ಎಂಬಂತೆ ಮುಖಮಾಡಿ, ‘ಮತ್ತೆ ಯಾವಾಗ ಭೇಟಿಯಾಗೋಣ’ ಎಂಬ ಪ್ರಶ್ನೆಯನ್ನು ಬಲವಂತದಿಂದ ನುಂಗಿಕೊಂಡೆ. ನನಗೆ ಮನೋಹರನ ಮೇಲೆ ಕೆಟ್ಟ ಕೋಪ ಬಂದಿತ್ತು! +ಹತ್ತು ದಿನಗಳ ನಂತರ ಮತ್ತೆ ಮನೋಹರ ಬಂದು “ನೀವು ನಾಳೆಯಿಂದ ಮೂರು ದಿನ ರಜೆ ಹಾಕಲೇಬೇಕು” ಎಂದ. ಅವನ ಮೇಲಿದ್ದ ಕೋಪ ಯಾವತ್ತೋ ಹೇಲಹೆಸರಿಲ್ಲದಂತಾಗಿತ್ತು. ಯಾಕೆ? ಏನು? ಎಂದು ಕೇಳುವಷ್ಟರಲ್ಲಿ-“ನನ್ನ ತಂಗಿಯ ಮದುವೆ. ನೀವೀಗ ರಜೆ ಹಾಕ್ತಾ ಇದ್ದೀರಾ, ಬರ್‍ತಾ ಇದ್ದೀರಾ” ಎಂದು ಅಧಿಕಾರಯುತವಾಗಿ ಹೇಳಿದಾಗ ನನಗೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ. ಅವನ ಮನೆ, ಹಳ್ಳಿಯ ಪರಿಸರ, ಜನ ಎಲ್ಲವನ್ನೂ ಹೇಗಪ್ಪಾ ಎದುರಿಸುವುದು? ಎಂಬ ದೊಡ್ಡ ಸಮಸ್ಯೆ ದಿಢೀರನೆ ನನ್ನ ಮುಂದೆ ನಿಂತಿತು. ಅದನ್ನರಿತವನಂತೆ ಮನೋಹರ್ ಹೇಳಿದ. +“ನನ್ನ ಅಪ್ಪ-ಅಮ್ಮ, ತಮ್ಮ-ತಂಗಿ ಎಲ್ಲರಿಗೂ ನಿಮ್ಮ ವಿಷಯ ಹೇಳಿದ್ದೇನೆ. ನಿಮಗೆ ಯಾವ ರೀತಿಯಲ್ಲೂ ತೊಂದರೆಯಾಗದ ಹಾಗೆ ನೋಡಿಕೊಳ್ತಾರೆ. ನಮ್ಮ ಹಳ್ಳಿಯ ಜನ, ಬೇರೆ ಸಾಮಾನ್ಯ ಜನಗಳಿಗಿಂತ ಯಾವುದೇ ರೀತಿಯಲ್ಲಿಯೂ ಭಿನ್ನರಲ್ಲ. ಆದರೆ ಯಾವುದೇ ವಿಷಯಕ್ಕೂ ನೀವು ಅವರನ್ನು ಛಿಚಿಡಿe ಮಾಡಬೇಡಿ. ನಾನಂತೂ ಛಿಚಿಡಿe ಮಾಡದೇ ಇರುವುದರಿಂದ ಇಷ್ಟರಮಟ್ಟಿಗೆ ಇದ್ದೇನೆ.” +ಬೆಂಗಳೂರಿನಿಂದ ಅವನ ಹಳ್ಳಿಗೆ ಸುಮಾರು ನಾಲ್ಕೂವರೆ-ಐದು ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು. ಅದೂ ಮನೋಹರನ ಪಕ್ಕದಲ್ಲಿ ಕುಳಿತು ಎಂಬುದನ್ನು ನೆನೆದೇ ನನ್ನ ಮೈಮನ ಪುಳಕಿತಗೊಂಡಿತು. ನೋಡಬೇಕು, ಮನೋಹರ ನನ್ನ ಪಕ್ಕ ಒತ್ತರಿಸಿಕೊಂಡು ಮೈಗೆ ಮೈ ತಾಗಿಸಿಕೊಂಡು ಕುಳಿತುಕೊಳ್ಳುವನೋ ಅಥವಾ ಬೇರೆ ಅಪರಿಚಿತ ಗಂಡಸಿನಂತೆ ದೂರಸರಿದು ಕುಳಿತುಕೊಳ್ಳುತ್ತಾನೋ….. +“ತುಂಬಾ ಆಡಂಬರದ ಒಡವೆ, ಸೀರೆಗಳನ್ನು ತರುವುದಾದರೆ ಖಂಡಿತಾ ನನ್ನ ಜೊತೆ ಬರಲೇಬೇಡಿ. ಬಹುಶಃ ನೀವೀಗ ಅದೇ ವಿಷಯವನ್ನು ತುಂಬಾ ಸೀರಿಯಸ್ಸಾಗಿ ಯೋಚಿಸ್ತಾ ಇದ್ದೀರ ಅನ್ನಿಸುತ್ತೆ. ಹಾಗೇ ಪ್ರೆಸೆಂಟೇಶನ್ ಸಹಾ ತರಬಾರದು” ಎಂದ. +ಹೌದಲ್ಲಾ. ನಾನವುಗಳ ಬಗ್ಗೆ ಯೋಚಿಸಿಯೇ ಇರಲಿಲ್ಲ. ಭರ್ಜರಿ ಒಡವೆ, ಸೀರೆಹಳು ಹ್ಯಾಗೂ ನನ್ನ ಹತ್ತಿರ ಇರಲಿಲ್ಲ. ಅದನ್ನು ಮನೋಹರನಿಗೆ, ಅವನ ತಂಗಿಗೆ ಹೇಗೆ ಹೇಳುವುದು? ‘ಎಲ್ಲಾ ಮೈಸೂರಿನಲ್ಲಿಟ್ಟಿದ್ದೇನೆ ತರಲಿಲ್ಲ’ ಎಂದರಾಯಿತು ಅಷ್ಟೆ! +ಮನೋಹರನ ಜೊತೆ ಅವನ ತಂಗಿಯ ಮದುವೆಗೆಂದು ಹಳ್ಳಿಗೆ ಹೋಗುತ್ತೇನೆ ಎಂಬ ವಿಷಯ ಸುಚಿತ್ರ, ವಾಸುವುಗೆ ತಿಳಿಸಿದಾಗ, ಅದು ತಮಗೆ ಇಷ್ಟವಾಗಲಿಲ್ಲವೆಂಬಂತೆ ಮುಖ ಸಿಂಡರಿಸಿಕೊಂಡರು. ನನಗೆ ಅದು ತಿಳಿಯಲಿಲ್ಲವೆಂಬಂತೆ ನಟಿಸಿ, ನಗುತ್ತಾ ಕೈ ಬೀಸಿ ಹೊರಬಂದೆ. +ಬಸ್ಸಿನಲ್ಲಿ ಕುಳಿತಾಗ ಮನೋಹರನ ಜೊತೆ ಏನೇನು ವಿಷಯ ಮಾತಾಡಬೇಕು? ಅವನ ತಮ್ಮ , ತಂಗಿ, ಅಪ್ಪ, ಅಮ್ಮ ಇವರೆಲ್ಲರ ಜೊತೆ ಹೇಗೆ ನಡೆದುಕೊಳ್ಳಬೇಕು? ಮನೋಹರನ ಮನೆ ಚಿಕ್ಕದು, ನನ್ನನ್ನು ಎಲ್ಲಿ ಮಲಗಿಸಬಹುದು? ಹಳ್ಳಿಯಾದ್ದರಿಂದ ಶೌಚಗೃಹದ ವ್ಯವಸ್ಥೆ ಇದೆಯೋ ಇಲ್ಲವೋ ಎಂಬೆಲ್ಲಾ ಯೋಚನೆಗಳಿಂದ ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ. +* +* +* +ಬಸ್ಸಿನಲ್ಲಿ ಹೋಗುವಾಗ ಮನೋಹರ ಬಹಳ ಸಲಿಗೆಯಿಂದ, ಆತ್ಮೀಯತೆಯಿಂದ ನಡೆದುಕೊಂಡ. ನಾನು ಪತ್ರದಲ್ಲಿ ಕಂಡ ಮನೋಹರ್‌ಗಿಂತಲೂ ಒಳ್ಳೆಯವನಾಗಿ ಕಂಡ. ಬಸ್ಸಿನಲ್ಲಿ ನನಗೆ ಬೇಸರವಾಗದಿರಲಿ ಎಂದು ಅನೇಕ ತಮಾಷೆಯ ಪ್ರಸಂಗಗಳನ್ನು ಹೇಳಿ ತನ್ನನ್ನು ತಾನೇ ಗೇಲಿಮಾಡಿಕೊಂಡು ನಗಿಸುತ್ತಿದ್ದ. ಹಳ್ಳಿ ತಲಪುವವರೆಗೆ ಮನೋಹರನ ಮಾತುಗಳು ಮುಗಿಯಲಿಲ್ಲ. ಮನೆಯಲ್ಲಿ ತಾನು ಮಾಡಿದ ಚೇಷ್ಟೆಗಳು, ಆಫೀಸಿನಲ್ಲಿ ಮಾಡ್ತಿದ್ದ ಕೀಟಲೆಗಳು, ತಾನು ಅಧಿಕಾರಿ ಎಂಬುದನ್ನು ಮರೆತು ಒಂದು ದಿನ ರಾಕ್ ಅಂಡ್ ರೋಲ್ ಮಾಡಿದ್ದು ಎಲ್ಲಾ ಹೇಳಿ ಸಾಕಷ್ಟು ನಗಿಸಿದ. ಬಸ್ಸು ತುಂಬಾ ಬೇಗನೆ ಹಳ್ಳಿ ತಲುಪಿದೆ ಎನ್ನಿಸಿತು. +ಹಳ್ಳಿ ತಲುಪಿದ ನಂತರ ಸ್ಟಾಪಿನಿಂದ ಮನೆಗೆ ಒಂದು ಕಿಲೋಮೀಟರ್ ದೂರ ನಡೆಯಬೇಕು. ನಾನು ಮನೋಹರನ ಜೊತೆ ಹರಟುತ್ತಾ ನಡೆಯುತ್ತಾ ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಮನೆಗಳಲ್ಲಿ ಒಂದು ತಲೆ ಅಕಸ್ಮಾತ್ ಹೊರಗೆ ಬಂದು ನಮ್ಮನ್ನು ನೋಡಿದರೆ, ಕೇವಲ ಎರಡು ಮೂರು ಕ್ಷಣಗಳಲ್ಲಿ ಆ ಮನೆಯ ಬಾಗಿಲು, ಕಿಟಕಿಗಳ ತುಂಬಾ ತಲೆಗಳು ಕಾಣಿಸುತ್ತಿದ್ದವು. ಮನೆ ತಲುಪುವ ತನಕ ಎಲ್ಲ ಮನೆಗಳಲ್ಲಿಯೂ ಹೀಗೇ ಆಗಿ ನನ್ನ ಮೈ ಬೆವರಿತು: ಒಟ್ಟಿನಲ್ಲಿ ನನ್ನ ಆಗಮನ ಆ ಹಳ್ಳಿಯವರಿಗೆ ಒಂದು ಕುತೂಹಲದ ವಿಷಯವಾಗಿತ್ತು. ಮದುವೆಯಾಗದ ಹುಡುಗನ ಜೊತೆ ಅದೇ ವಯಸ್ಸಿನ ಹುಡುಗಿಯೊಬ್ಬಳು ಹೋದರೆ ಹಳ್ಳಿಯವರು ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೋ ಅದೆಲ್ಲವೂ ಅಲ್ಲಿ ಕಾಣುತ್ತಿತ್ತು. ಬೆಂಗಳೂರಿನಲ್ಲಿ ಯಾವುದಾದರೂ ಜೋಡಿ ಒಟ್ಟಿಗೆ ಹೊರಟರೆ ನಾನೂ ಹೀಗೆ ದೃಷ್ಟಿಸಿ ನೋಡುತ್ತೇನಲ್ಲವೆ ಎಂದುಕೊಂಡೆ. +ಮನೋಹರನ ಮನೆಯಲ್ಲಿ ನನಗೆ ಆಶ್ಚರ್ಯಕರವಾದ ರೀತಿಯಲ್ಲಿ ಸಡಗರದ ಸ್ವಾಗತ ಸಿಕ್ಕಿತು. ದಡ್ಡ ಹಳ್ಳಿಯ ಹುಡುಗಿ ಎಂದು ಹೇಳುವುದಕ್ಕೆ ಸಾಧ್ಯವಾಗದಷ್ಟು ನಜುಕಿನ ಹುಡುಗಿಯಾಗಿದ್ದಳು. ಮನೆ ಪುಟ್ಟದಾದರೂ ಬಹಳ ಸ್ವಚ್ಛವಾಗಿತ್ತು. ಅಡುಗೆ ಮನೆಯಲ್ಲಿ ನಾಲ್ಕು ದೇವರ ಫೋಟೋಗಳನ್ನು ಬಿಟ್ಟರೆ ಇನ್ನೆಲ್ಲೂ ಪಟಗಳ ಸುಳಿವಿಲ್ಲದಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಮನೋಹರನಿಗೆ ಕೇಳಿದ್ದಕ್ಕೆ- “ದೇವರನ್ನು ನಂಬದಿರುವುದು ವಿಚಾರವಾದಿಗಳು, ಬುದ್ಧಿಜೀವಿಗಳ ಮೊದಲ ಹಂತ” ಎಂದು ನಕ್ಕ. ” ಇಡೀ ಮನೆಯ ತುಂಬಾ ಫೋಟೋಗಳಿದ್ದವು. ಅದರ ಹಿಂದೆ ರಾಶಿ ಹಲ್ಲಿ, ಜಿರಲೆಗಳು ಇದ್ದುದರಿಂದ ಎಲ್ಲವನ್ನು ತೆಗೆಸಿ ಹಾಕಿದ್ದೇನೆ ಅಷ್ಟೆ!” ಎಂದ. ನಾನು ನಿರೀಕ್ಷಿಸಿದ್ದಂತೆ ಮನೋಹರನ ಕೆಟ್ಟ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನಲಿಲ್ಲ. ನಾನು ಆ ಮನೆಗೆ ಬಹಳ ವರ್ಷಗಳಿಂದ ಪರಿಚಿತಳೇನೋ ಎಂಬಂತೆ ನಡೆದುಕೊಂಡರು. +ನನ್ನನ್ನು ನೋಡಿದ ಕ್ಷಣದಿಂದಲೇ ರತ್ನ ಬಹಳ ಆತ್ಮೀಯತೆಯಿಂದ ನಡೆದುಕೊಂಡಳು. ತನ್ನದೇ ವಯಸ್ಸಿನ ಹುಡುಗಿಯೊಬ್ಬಳು ಮನೆಗೆ ಬಂದಿದ್ದು ಅವಳಿಗೆ ಸಂತೋಷ ತಂದಿತ್ತು. ಅಲ್ಲದೇ ಮನೋಹರ ನನ್ನ ವಿಷಯ, ನನ್ನ ಪತ್ರಗಳು ಎಲ್ಲದರ ಬಗೆಗೆ ಅವಳಿಗೆ ವಿಸ್ತಾರವಾಗಿ ತಿಳಿಸಿದ್ದ. ರತ್ನ ಉಡುಗೆ, ತೊಡುಗೆಯಲ್ಲಿ ನಾಜೂಕಾಗಿದ್ದರೂ ಬೆಡಗು ಕಪಟ ಏನೊಂದೂ ಅರಿಯದ ಶುದ್ಧ ಹಳ್ಳಿಯ ಹುಡುಗಿಯಾಗಿ ನನಗೆ ಕಂಡಳು. +ಮನೋಹರನ ಸ್ನೇಹಿತನನ್ನೇ ರತ್ನ ಮದುವೆಯಾಗುವವಳಿದ್ದಳು. ಮದುವೆ ಗೊತ್ತಾದ ನಂತರ, ಮನೋಹರನ ಗೆಳೆಯ ರತ್ನಳನ್ನು ನೋಡುವುದಕ್ಕೆಂದು ಆಗಾಗ್ಗೆ ಬರುವುದು ಹಳ್ಳಿಯವರಿಗೆ ದೊಡ್ಡ ವಿಷಯವಾಗಿತ್ತು. ಕಾಲ ಕೆಟ್ಟು ಹೋಗಿದೆ ಎಂದು ಬೈಯುತ್ತಿದ್ದರು. ನನ್ನ ಹಳ್ಳಿಯ ಕಥೆ, ಮನೆಯ ಕಥೆ, ಗಂಡನಾಗುವವನ ಕಥೆ ಇವೆಲ್ಲವನ್ನೂ ಎಷ್ಟು ಚೆನ್ನಾಗಿ ಹೇಳುತ್ತಾರೆಂದರೆ ಪರೀಕ್ಷೆಗಳಲ್ಲಿ ಬರಿ ಜೀವನಾಂಶ ತೆಗೆದುಕೊಂಡು ದಾಟಿದ್ದ ನನಗೆ ಅವಳ ಜ್ಞಾಪಕಶಕ್ತಿಯ ಬಗ್ಗೆ ಅಚ್ಚರಿ…. ಒಮ್ಮೆ ಯಾರದ್ದಾದರೂ ಕಥೆ ಶುರುಮಾಡಿದಳೆಂದರೆ ಸಂಬಂಧಪಟ್ಟ, ಸಂಬಂಧಪಡದವರನ್ನೆಲ್ಲಾ ಆಶ್ಚರ್ಯಕರವಾದ ರೀತಿಯಲ್ಲಿ ಕೊಂಡಿ ಹಾಕುತ್ತಾ ಹೇಳುತ್ತಾ ಹೋಗುತ್ತಿದ್ದಳು. +ರಾತ್ರಿ ಪುಟ್ಟ ಕೊಠಡಿಯಲ್ಲಿ ನಾನು, ರತ್ನ ಮಲಗುತ್ತಿದ್ದೆವು. ಅಟ್ಟದ ಮೇಲೆ ಅಪ್ಪ ಅಮ್ಮ ಮಲಗುತ್ತಿದ್ದರು. ಮನೋಹರ, ರಂಗನಾಥ ಇಬ್ಬರೂ ಮಲಗುವುದಕ್ಕೆಂದು ಗೆಳೆಯನ ರೂಮಿಗೆ ಹೊರಟುಬಿಡುತ್ತಿದ್ದುದರಿಂದ ನನಗೆ ನಿರಾಸೆಯಾಗುತ್ತಿತ್ತು. ರಾತ್ರಿಯೆಲ್ಲಾ ಕುಳಿತು ಅವನ ಜೊತೆ ಏನೆಲ್ಲಾ ಮಾತನಾಡಬೇಕೆಂಬ ನನ್ನ ಆಸೆಗೆ ತಣ್ಣೀರೆರಚಿದಂತಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಕಂಡುಕೊಂಡ ರತ್ನ “ಅಣ್ಣನಿಗೆ ಇದುವರೆವಿಗೂ ಯಾವೊಬ್ಬ ಗೆಳೆಯನಾಗಲೀ, ಗೆಳತಿಯಾಗಲೀ ಇಲ್ಲ. ಅದೇನೋ ಆಶ್ಚರ್ಯ, ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಮನೆಯಲ್ಲಿ ಯಾವಾಗ ನೋಡಿದರೂ ನಿಮ್ಮದೇ ವಿಷಯ ಹೇಳ್ತಾ ಇರ್‍ತಾನೆ. ನಿಮ್ಮನ್ನು ಬಿಟ್ಟರೆ ಬೇರೆ ಯಾರ ಗೆಳೆಯರ ಬಗ್ಗೆಯೂ ಅವನು ಯೋಚಿಸುವುದೇ ಇಲ್ಲ” ಎಂದಳು. +ಇವೆಲ್ಲಾ ಕೇಳುವುದಕ್ಕೆ ಬಹಳ ಚೆನ್ನಾಗಿರುತ್ತದೆ ಅನ್ನಿಸಿತು. ನನ್ನ ವಿಷಯವಾಗಿ ಇನ್ನೇನು ಹೇಳಿರಬಹುದು ಎಂಬ ಕುತೂಹಲದಿಂದ ರತ್ನಳನ್ನು ಕೇಳುತ್ತಿದ್ದಂತೆ ಮುಖಕ್ಕೆ ರಕ್ತವೆಲ್ಲಾ ನುಗ್ಗಿ ಮೈ ಜುಂ ಎಂದ ಅನುಭವ. ರತ್ನ ” ವಸಂತಾ ತುಂಬಾ ಒಳ್ಳೆಯ ಗೆಳತಿ. ತುಂಬಾ ಮಗು ಮನಸ್ಸು, ಸರಳವಾಗಿದ್ದಾರೆ. ಅಂತಹವರೇ ನನಗೆ ಬೇಕಾದ್ದು. ಅದೇನೇ ಆದರೂ ನಾನು ಮಾತ್ರ ಅವರನ್ನು ಕಳೆದುಕೊಳ್ಳುವುದಿಲ್ಲ” ಅಂತ ಅಣ್ಣ ಹೇಳ್ತಾ ಇದ್ದ. ನಿಮಗೊಂದು ಮಾತು ಕೇಳ್ಲಾ? ಏನೂ ಅಂದ್ಕೋಬಾರದು, ಅಣ್ಣಂಗೆ ಹೇಳಬಾರದು ಆಂ?” ರತ್ನ ಮೆಲ್ಲಗೆ ಪಿಸುಗುಟ್ಟುತ್ತಾ ” ನೀವು ಅಣ್ಣ ಮದುವೆಯಾಗ್ತೀರಾ?” ಎಂದು ಕೇಳಿದಳು. ನಾನು ಕುತೂಹಲದಿಂದ, “ಯಾಕೆ ನಿಮ್ಮಣ್ಣ ಯಾರ ಹತ್ತಿರವಾದ್ರೂ ಏನಾದ್ರೂ ಹೇಳಿದ್ರಾ?” ಎಂದೆ. +“ಇಲ್ಲ. ಅಮ್ಮ ‘ಏನೋ ಮನೇಗೆಲ್ಲಾ ಕರೆದುಕೊಂಡು ಬಂದಿದ್ದೀಯ. ನೀನೇನು ಅವಳನ್ನು ಮದ್ವೆ ಆಗ್ತೀಯಾ?’ ಅಂತ ಕೇಳಿದ್ದಕ್ಕೆ ಚೆನ್ನಾಗಿ ಬಯ್ದು ಬಾಯಿ ಮುಚ್ಚಿಸಿ ‘ಒಂದು ಹುಡುಗಿಯ ಜೊತೆ ಮಾತನಾಡಿದರೆ ಮದುವೆ ಆಗ್ತಾರೆ ಅಂತ ಕಲ್ಪಿಸ್ತೀರಾ. ದರಿದ್ರ ಜನಗಳು’ ಅಂತೆಲ್ಲಾ ಕಿರುಚಾಡಿದ. ಅಮ್ಮ ಅಪ್ಪ ಇಬ್ಬರೂ ಅಣ್ಣ ನಿಮ್ಮನ್ನೇ ಮದುವೆಯಾಗೋದು ಅಂದ್ಕೊಂಡಿದ್ದಾರೆ. ಹಳ್ಳಿಯವರೆಲ್ಲಾ ಎನಾದ್ರೂ ನೆಪ ತೆಗೆದುಕೊಂಡು ಬಂದು ಮಾತನಾಡಿಸಿ, ‘ನಿಮ್ಮ ಮಗ ಆ ಹುಡುಗೀನ ಮದ್ವೆ ಆಗ್ತಾನಾ?’ ಅಂತೆಲ್ಲಾ ಕೇಳ್ತಾರೆ’ ಎಂದು ಹೇಳಿದಳು. +ಮನೋಹರ ಯಾಕೆ ಹೀಗೆ ಹೇಳಿದ? ಅವನಿಗೆ ನನ್ನ ಬಗ್ಗೆ ನಿಜಕ್ಕೂ ಪ್ರೀತಿಯಿದೆ. ಸಮಯ ಬಂದಾಗ ಅವನೇ ಹೇಳುತ್ತಾನೆ. ನಾನಾಗಿ ಕೇಳಿದರೆ ಹುಡುಗಿಗೆ ಎಷ್ಟೊಂದು ಆತುರ ಎಂದುಕೊಳ್ತಾನೆ. ಅದೆಲ್ಲಾ ಚೆನ್ನಾಗಿರೋಲ್ಲ…. +ರತ್ನ ನನ್ನ ಕೈ ಹಿಡಿದುಕೊಂಡು “ಅಣ್ಣ ಮದ್ವೇನೇ ಆಗೋಲ್ಲ ಅಂತಾನೆ. ಆವನು ಒಂಟಿಯಾಗಿ ಇರುವುದನ್ನು ನೋಡಿ, ಯಾರ ಜೊತೆಯೂ ಮಾತನಾಡದೆ ಇರುವುದನ್ನು ನೋಡಿ ಎಲ್ಲರೂ ಹುಚ್ಚ ಇರಬಹುದು ಅಂದ್ಕೊಂಡಿದ್ದಾರೆ. ನನಗೆ ತುಂಬಾ ಆಶ್ಚರ್ಯ, ಅವನು ನಿಮ್ಮನ್ನು ಇಷ್ಟೊಂದು ಹಹ್ಚಿಕೊಂಡಿರುವುದಕ್ಕೆ, ಅವನಿಗಿಂತಾ ಮೊದಲೇ ನೀವೇ ಹೇಳಿಬಿಡಿ. ನೀವು ಮದುವೆ ಆಗ್ತೀನಿ ಅಂದ್ರೆ ಅವನು ಖಂಡಿತಾ ಬೇಡ ಅನ್ನೋಲ್ಲ. ‘ನಿಮ್ಮನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀನಿ’ ಅಂತ ಹೇಳಿ. ಅವನನ್ನು ಮಗು ತರಹ ನೋಡಿಕೊಂಡರೆ ತುಂಬಾ ಖುಷಿಯಾಗಿರ್‍ತಾನೆ. ನಿಜವಾಗ್ಲೂ ಅಣ್ಣ ನಿಮ್ಮ ಹತ್ತಿರ ಮದುವೆ ಆಗ್ತೀನಿ ಅಂತ ಹೇಳಿಲ್ವಾ? ನನ್ನೊಬ್ಬಳಿಗೆ ಹೇಳಿ ಪರ್ವಾಗಿಲ್ಲ” ಎಂದು ಕೇಳಿದಳು. +“ರತ್ನ ಅವರು ಮದುವೆಯ ಬಗ್ಗೆ ನನ್ನನ್ನು ಏನೂ ಕೇಳಿಲ್ಲ. ಕೇಳಿದ ಕೂಡಲೇ ನಿನಗೆ ಹೇಳುತ್ತೇನೆ” ಎಂದೆ. +ಮನೋಹರ ನನ್ನನ್ನು ಮದುವೆಯಾಗುವಂತೆ ಕೇಳುವ, ಮದುವೆಯಾಗಿ ನಾವು ಈ ಹಳ್ಳಿಗೆ ಜೊತೆಯಾಗಿ ಬರುವ ದೃಶ್ಯ ಕಲ್ಪಿಸಿಕೊಂಡು, ಕನಸು ಕಾಣುತ್ತಾ ಮಲಗಿದೆ. +ಬೆಳಿಗ್ಗೆ ನಾನು ಎದ್ದಕೂಡಲೇ ರತ್ನ ಮನೋಹರನ ಹಲವಾರು ಪದ್ಯಗಳನ್ನು ಲೇಖನಗಳನ್ನು ಕೊಟ್ಟಳು. ಓದಿದೆ. ಕಾಗದಗಳ ಮೇಲೆಲ್ಲಾ ಬರೀ ‘ಒಂಟಿತನ’ ‘ಬರಡು’ ‘ಮರಳುಗಾಡು’ ವೈಚಾರಿಕತೆ’ ‘ಜೀವನ’ ಇಂತಹ ಪದಗಳಿಂದಲೇ ತುಂಬಿಸಿದ್ದ. ಅವುಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ ಸ್ವಲ್ಪಮಟ್ಟಿಗೆ ಅರ್ಥವಾಗಿತ್ತು. ಎಲ್ಲದಕ್ಕಿಂತ ಮನೋಹರ ಏನನ್ನೋ ಅಪೇಕ್ಷಿಸುತ್ತಿದ್ದಾನೆಂದು ತಿಳಿಯಿತು. +ಸಾಯಂಕಾಲ ನಾನು, ಮನೋಹರ ಹೊರಗೆ ಹೊರಟೆವು. ಅವನ ಲೇಖನಗಳನ್ನು ಓದಿದ್ದೇ ಇನ್ನು ತಲೆಯಲ್ಲಿ ತುಂಬಿತ್ತು. ಅವನಿಗೆ ಏನೇನು ಹೇಳಬೇಕೆಂದು ಮಾತುಗಳನ್ನು ಮನಸ್ಸಿಗೆ ತಂದುಕೊಂಡು, “ಮನೋಹರ್, ನೀವು ನಿಮ್ಮೆಲ್ಲಾ ಪತ್ರಗಳಲ್ಲಿ, ಹಾಳೆಗಳಲ್ಲಿ ನಿಮ್ಮ ಒಂಟಿತನದ ಅನುಭವಗಳ ಬಗ್ಗೆಯೇ ಬರೆಯುತ್ತೀರಿ. ನಾನಿದುವರೆಗೂ ಕಂಡಂತೆ ನೀವು ಭಯಂಕರ ವಿಚಾರವಾದಿಯಪ್ಪ. ಇಂಥ ವ್ಯಕ್ತಿಯನ್ನು ನಾನು ನೋಡುತ್ತಿರುವುದು ಇದೇ ಮೊದಲು. ಒಟ್ಟಿನಲ್ಲಿ ನೀವು ತುಂಬಾ ಒಂಟಿಯಾಗಿರಲು ತುಂಬಾ ಇಷ್ಟಪಡುತ್ತೀರ. ಮತ್ತೆ ಅದೇ ಒಂಟಿತನ ಭರಿಸಲಾರದೆ ಅಸಹಾಯಕರಾಗಿ ಮರಳುಗಾಡಿನಲ್ಲಿದ್ದಂತೆ ಚಡಪಡಿಸುತ್ತೀರ. ಅಂದರೆ ನೀವು ಜೀವನದಿಂದ ಮತ್ತೇನನ್ನೋ ಹೊಸದಾಗಿ, ಏನೋ ಬೇಕೆಂದು, ಹೊಸ ರೀತಿಯ…” ಮುಮ್ದೆ ಹೇಳಬೇಕಾಗಿರುವ ಪದಗಳಿಗಾಗಿ ತಡಕಾಡಿದೆ. ಇಷ್ಟುಹೊತ್ತು ಆಶ್ಚರ್ಯದಿಂದ ಕೇಳುತ್ತಿದ್ದ ಮನೋಹರ್ ತಟಕ್ಕನೆ “ಯಾವುದೋ ಮತ್ತೊಂದು ಆಯಾಮವನ್ನು ಅರಸುತ್ತಿದ್ದೇನೆ. ಸರಿ ತಾನೆ?” ಎಂದ. ನಾನು ಪೆದ್ದುಪೆದಾಗಿ ನಕ್ಕೆ. +ನಂತರ ಮನೋಹರ ನಕ್ಕು “ವಸಂತ, ನನಗೆ ಬದುಕಿನಲ್ಲಿ ಎಲ್ಲಾ ಇದೆ ಅಂತಲೇ ನಾನು ಒಂಟಿಯಾಗಿದ್ದೀನಿ. ಯಾಕೆ ಹೀಗೆ ಏನನ್ನೋ ಅರಸುತ್ತಾ ಹೋಗುತ್ತಿದ್ದೇನೋ ನನಗಂತೂ ಗೊತ್ತಿಲ್ಲ. ಒಮ್ಮೆ ಇವೆಲ್ಲ ಅರ್ಥಹೀನವಾಗಿ ಕಂಡರೂ ಇದರಲ್ಲಿಯೇ ನನಗೆ ಏನೋ ಸಮಾಧಾನ ಇದೆ. ಅದೆಲ್ಲಾ ಹೇಗೆ ಏನು ಎಂದು ಹೇಳಲಾರೆ” ಎಂದ. +ನಾನು ಮನೋಹರನಷ್ಟು ಬುದ್ಧಿವಂತಳಲ್ಲ. ಒಂಟಿತನ, ಶೂನ್ಯ, ನೆಮ್ಮದಿ ಇವುಗಳನ್ನು ಅರಸಿಕೊಂಡು ಹೊರಟವಳೂ ಅಲ್ಲ. ಮನೋಹರನ ರೀತಿ-ನೀತಿ, ಮಾತು ಕತೆ ಪ್ರತಿಯೊಂದೂ ನನಗೆ ಆಶ್ಚರ್ಯ ತರುತ್ತಿತ್ತು. ನನ್ನೆದುರಿಗಿರುವಷ್ಟು ಹೊತ್ತು ನಗುನಗುತ್ತಾ ಏನೇನೋ ಮಾತನಾಡುತ್ತಾ, ನನ್ನನ್ನು ರೇಗಿಸುತ್ತಾ, ರೇಗಿಸಿಕೊಳ್ಳುತ್ತಾ, ಚಿಕ್ಕ ಹುಡುಗನಂತೆ ಆಡುತ್ತಿದ್ದ ಮನೋಹರ ಇವನಲ್ಲವೇ ಅಲ್ಲ ಎಂಬಷ್ಟು ಅನುಮಾನ ಹುಟ್ಟಿಬಿಡುತ್ತಿತ್ತು. ಮದುವೆಯಾದ ಮೇಲೆ ಸಂಗಾತಿ ಸಿಕ್ಕಮೇಲೆ ಇವನು ಸರಿಹೋಗಬಹುದು ಎನಿಸಿತು…. +“ನೀವು ಮದುವೆಯಾದರೆ ನಿಮ್ಮ ಒಂಟಿತನ ಕಳೆದುಹೋಗುತ್ತೆ…ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸಂಗಾತಿಯನ್ನೇ ಹುಡುಕಿಕೊಂಡು ಬೇಗ ಮದುವೆಯಾಗಿಬಿಡಿ” ಎಂದು ಉತ್ತರಕ್ಕಾಗಿ ಕಾತುರದಿಂದ ಕಾದೆ. +“ನಾನು ಎಷ್ಟೋ ಜನರ ಮಧ್ಯೆ ಇದ್ದರೂ ಅದೇನೋ ನಾನು ತುಂಬಾ ಒಂಟಿ ಅಂತ ಅನ್ನಿಸಿಬಿಟ್ಟಿದೆ. ಅದನ್ನು ತಡೆಯುವುದಕ್ಕಾಗಿಯೇ ನಾನು ನಿಮ್ಮ ಸ್ನೇಹ ಬಯಸಿದ್ದು” ಎಂದ. ಈ ಮನೋಹರ ಬರೀ ಇಂತಹ ವಿಷಯಗಳನ್ನ ಹೇಳುತ್ತಿದ್ದಾನೆಯೇ ಹೊರತು ಮದುವೆಯ ಬಗ್ಗೆ ಯಾಕೆ ಮಾತಾಡುತ್ತಿಲ್ಲ? +ರತ್ನಳ ಮದುವೆ ಸರಳವಾಗಿ ಸುಂದರವಾಗಿ, ಮನೋಹರನ ಇಷ್ಟದಂತೆ ನಡೆಯಿತು. ನಾನು ಅವರ ಮನೆಯ ಹುಡುಗಿಯೆಂಬಂತೆ ಚಟುವಟಿಕೆಯ್ಯಿಂದ ಓಡಾಡುತ್ತಿದ್ದುದ್ದನ್ನು ಮನೋಹರ ಮೆಚ್ಚಿಗೆಯಿಂದ ನೋಡುತ್ತಿದ್ದ. ಅವನ ಕಣ್ಣಮುಂದೆ ಓಡಾಡುವುದೇ ನನಗೆ ಅತ್ಯಂತ ಸಂಭ್ರಮವೆನಿಸಿತು. ಮದುವೆಗೆ ಬಂದ ಹಳ್ಳಿಗರು‘ಪಟ್ನದ ಹುಡ್ಗಿ ಅತ್ರ ಸೀರೇನೇ ಇಲ್ಲ’ ಅಂದಾಗ ಪೆಚ್ಚಾಗಿದ್ದು ಬಿಟ್ಟರೆ ಮಿಕ್ಕೆಲ್ಲಾ ಸಂದರ್ಭಗಳಲ್ಲಿಯೂ ನಾನು ಅತ್ಯಂತ ಖುಷಿಯಿಂದಿದ್ದೆ. +ಮದುವೆಯಾದ ಸಾಯಂಕಾಲವೇ ರತ್ನಳನ್ನು ಗಂಡನ ಮನೆಗೆ ಯಾವುದೋ ಶಾಸ್ತ್ರಕ್ಕಾಗಿ ಕಳುಹಿಸಿಕೊಟ್ಟರು. ಮಾರನೆಯ ದಿನ ಬೆಳಿಗ್ಗೆ ಅವಳು ಮನೆಗೆ ಬರುತ್ತಾಳೆಂದು ಗೊತ್ತಿದ್ದರೂ, ಮನೋಹರ ಅದೇಕೋ ನನ್ನ ಕೈಹಿಡಿದು ಜೋರಾಗಿ ಅತ್ತುಬಿಟ್ಟ. +ಬಹಳ ಪೆಚ್ಚಾಗಿ ಕೂತಿದ್ದ ಮನೋಹರನನ್ನು ಸಾಯಂಕಾಲ ನಾನು ವಾಕಿಂಗ್ ಕರೆದುಕೊಂಡು ಹೋದೆ. ಹೇಮಾವತಿ ನದಿಗೆ ನಾಲೆಗಳನ್ನು ಕಟ್ಟುವ ಕೆಲಸ ನಡೆಯುತ್ತಿತ್ತು. ಪಕ್ಕದಲ್ಲಿ ಹಾಕಿದ ಮರಳುಗುಡ್ಡೆಯ ಮೇಲೆ ನಾನು, ಮನೋಹರ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿಯೇ ಮನೋಹರ ಗೆಲುವಾದ. ತನ್ನ ಮದುವೆಯ ವಿಷಯ ವೊಂದನ್ನು ಬಿಟ್ಟು ಮಿಕ್ಕೆಲ್ಲಾ ಹರಟಿದ. ಮನೋಹರನ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆಯಾಗಲಿ, ಕಪಟತನವಾಗಲಿ ಇರುತ್ತಿರಲಿಲ್ಲ. ತಾನು ಕಂಡಿದ್ದು, ಅನುಭವಿಸಿದ್ದು ಇವುಗಳನ್ನೇ ಹೇಳುತ್ತಿದ್ದುದರಿಂದ ಕೇಳಲು ಮಜವಾಗಿರುತ್ತಿತ್ತು. ಜೊತೆಗೆ ಮನಃಶ್ಯಾಸ್ತ್ರ, ಫ್ರಾಯ್ಡ್‌ನ ವಿಚಾರಗಳು, ಅವನ ಅಭಿಪ್ರಾಯಗಳು, ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿರುವ ಒಳ್ಳೆಯ ಪುಸ್ತಕಗಳು, ವಿಮರ್ಶೆ ಇವುಗಳನ್ನೆಲ್ಲಾ ನನ್ನ ತಲೆಗೆ ತುಂಬಿಸಿದ ನಂತರ, “ಪುಸ್ತಕಗಳ ಪಟ್ಟಿ ಕೊಡುತ್ತೇನೆ. ಓದಿ ಅರ್ಥಮಾಡಿಕೊಳ್ಳಿ. ನೀವೂ ಅದೇ ರೀತಿ ಬರೆಯಲು ಪ್ರಯತ್ನಿಸಿ. ಈ ವಿಷಯದಲ್ಲಿ ನಿಮಗೆ ಯಾವಾಗಲೂ ನಾನು ಸಹಾಯ ಮಾಡಲು ಸಿದ್ಧ” ಎಂದ. +“ಹಾಗಾದರೆ ಬೇರೆ ಎಲ್ಲಾ ವಿಷಯಗಳಿಗೂ ಸಹಾಯ ಮಾಡೊಲ್ಲ ಅಂತಾಯ್ತು! ” ಎಂದೆ. “ಬೇರೆ ವಿಷಯ? ಉಹೂಂ. ನನ್ನದೇ ಆದ ಹಲವಾರು ಸಮಸ್ಯೆಗಳ ಜೊತೆಗೆ ನಿಮ್ಮೆಲ್ಲ ಸಮಸ್ಯೆಗಳನ್ನು ಖಂಡಿತಾ ಹೊತ್ತುಕೊಳ್ಳಲಾರೆ. ನಿಮಗೆ ಯಾವ ವಿಷಯಕ್ಕೆ ಸಹಾಯ ಮಾಡಬೇಕಾಗಬಹುದು? ಹಣ? ನನ್ನಿಂದ ನಿಮಗೆ ಆ ಸಹಾಯ ಸಿಗೊಲ್ಲ. ಏಕೆಂದರೆ ನಮ್ಮ ಮನೆಯನ್ನು ಈಗೀಗ ಬೆಳೆಸೋಕ್ಕೆ ಶುರುಮಾಡಿದ್ದೇನೆ. ಪಕ್ಕಾ ಹಳ್ಳಿಯವರಾದ ನಮ್ಮ ತಾಯಿತಂದೆಯ ಕೊನೆಯ ಆಸೆ ಒಂದು ಪುಟ್ಟ ಮನೆ ಕಟ್ಟಿಸಿ, ಎರಡು ಎಮ್ಮೆ ಅಥವಾ ಹಸು ಕೊಳ್ಳುವುದು ನನ್ನಿಂದ ಅದೊಂದು ಆಸೆಯಾದರೂ ನೆರವೇರಲಿ. ಇನ್ನೇನಿದೆ? ನೀವು ಓದಿದ್ದೀರಿ. ಕೆಲಸದಲ್ಲಿದ್ದೀರಿ. ಮಿಕ್ಕಿದ್ದು ನಿಮ್ಮ ಮದುವೆ. ಇದು ನಿಮ್ಮ ವಯಕ್ತಿಕ ವಿಷಯ. ಆ ಬಗ್ಗೆ ನಾನು ಏನನ್ನೂ ಹೇಳಲಾರೆ”. +“ನೀವು ನನ್ನ ಮದುವೆಯ ಬಗ್ಗೆ ಯೋಚಿಸದಿದ್ದರೂ ನಾನಂತೂ ನಿಮ್ಮ ಬಗ್ಗೆ, ನಿಮ್ಮ ಮದುವೆಯ ಬಗ್ಗೆ ಸದಾ ಚಿಂತಿಸುತ್ತಿರುತ್ತೇನೆ. ನಿಮ್ಮ ತಂಗಿಯ ಮದುವೆಯಾಯ್ತಲ್ಲ, ಇನ್ನು ನೀವು ಬೇಗ ಮದುವೆಯಾಗಿ ಬಿಡಿ” ಎಂದೆ. ಅವನೇನು ಉತ್ತರ ಕೊಡುವನೋ ಎಂಬ ಕಾತುರ…. +ಮನೋಹರ ದೀರ್ಘ ನಿಟ್ಟುಸಿರನ್ನು ಬಿಟ್ಟು ನಿಧಾನವಾಗಿ “ ವಸಂತಾ, ನಾನೊಂಥರಾ ಹುಚ್ಚ. ಮದುವೆಯ ಬಗ್ಗೆ ನನ್ನ ಅಭಿಪ್ರಾಯ ಯಾವ ಸಮಯದಲ್ಲಿ ಹೇಗಿರುತ್ತೆ ಅಂತ ಹೇಳೋಕ್ಕೆ ಆಗೋಲ್ಲ. ಆಫೀಸಿನಲ್ಲಿ ಎಲ್ಲರೂ ಕೇಳ್ತಾರೆ ‘ನೀವು ಯಾರನ್ನೂ ಲವ್ ಮಾಡಲಿಲ್ಲವ?’ ಎಂದು. ‘ಇಲ್ಲ’ ಎಂದರೆ ಯಾರೂ ನಂಬೊಲ್ಲ. ನನಗೆ ಈ ಲವ್‌ಗಿವ್ ಎಂದರೆ ನಗು ಬರುತ್ತದೆ. ಕೆಲವು ಸಲ ಮೂರ್ಖತನ ಎನಿಸುತ್ತದೆ. ಆ ಲವರ್‍ಸ್‌ಗೆ ಇರಬಹುದಾದ ವಿಚಿತ್ರ ಗುಣಗಳು ನನ್ನಲ್ಲಿಲ್ಲವೇನೋ, ಏಕೆಂದರೆ, ಮಾತನಾಡಿಸಬೇಕೆನಿಸಿದರೆ ಹೋಗಿ ಧೈರ್ಯವಾಗಿ ಮಾತನಾಡಿಸಿಬಿಡುತ್ತೇನೆ, ಸ್ನೇಹಿತನಾಗುತ್ತೇನೆ. ಆದರೆ ಎಂದೂ ‘ಪ್ರೇಮಿ’ ಆಗುವುದೇ ಇಲ್ಲ! ಹೀಗೆ ಹಲವಾರು ಬಾರಿ ಆಗಿದೆ… +“ವಸಂತಾ, ಮದುವೆ, ಮನೆ, ಗಂಡ, ಮಕ್ಕಳು ಇದಿಷ್ಟೇ ಬದುಕಿನ ಧ್ಯೇಯವೆಂದುಕೊಂಡಿದ್ದೇರ? ಆದರೂ, ನಮ್ಮ ಬದುಕು ಮತ್ತು ಅದರ ಸ್ವಾತಂತ್ರ್ಯವನ್ನು ಸಂಸಾರದ ಗೂಟಕ್ಕೆ ಕಟ್ಟಿಹಾಕಿ ಅದರ ಸುತ್ತಲೂ ಸುತ್ತುವ ಹಾಗೆ ಆಗಬಾರದೆಂದೇ ನನ್ನ ಅನಿಸಿಕೆ. ಅಂದರೆ ಮದುವೆ ನಮ್ಮ ಬದುಕನ್ನು ಸಂಕುಚಿತಗೊಳಿಸದಿದ್ದರೂ ಸ್ವಾತಂತ್ರ್ಯವನ್ನಂತೂ ಖಂಡಿತಾ ಕಸಿಯುತ್ತದೆ” ಎಂದ. ಈ ವಿಚಿತ್ರ ವ್ಯಕ್ತಿಯನ್ನು ಯಾರು ತಾನೇ ಮದುವೆಯಾಗುತ್ತಾರೆ ಎಂಬ ಬೇಸರದ ಜೊತೆಗೆ ಆತಂಕವೂ ಆಯಿತು. +ನಾನು ಹಣ, ಒಡವೆ ಇವುಗಳನ್ನು ಹೆಚ್ಚಾಗಿ ಇಷ್ಟಪಡದಿದ್ದರೂ ನನ್ನದೇ ಆದ ಮನೆ ಗಂಡ ಮಕ್ಕಳು ಇವೆಲ್ಲ ಬೇಕೆಂದು ಹಂಬಲಿಸುತ್ತೆದ್ದೆ. ಸುಭದ್ರವಾದ ಕೋಟೆಯ ರಕ್ಷಣೆ ಬೇಕು. ಮನೆಗಿಂತಾ ದೊಡ್ಡ ಸಂತೋಷ ತರಬಲ್ಲ ಯಾವುದೂ ನನ್ನ ಮಂದಿರಲಿಲ್ಲ. ಹಾಗೆ ಇದೆ ಎನ್ನುವುದೂ ನನಗೆ ಗೊತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಮನೋಹರನಿಗೆ ಬೇಕಾಗಿರುವುದಾದರೂ ಏನು ಎಂದೇ ನನಗೆ ಅರ್ಥವಾಗುತ್ತಿರಲಿಲ್ಲ. +“ಯಾಕೆ ಸುಮ್ಮನೆ ಕುಳಿತುಬಿಟ್ಟಿರಿ ವಸಂತಾ? ಬೇಸರವಾಯ್ತಾ?” ಎಂದ. +“ಇಲ್ಲ” ಎಂದೆ. +“ನನ್ನ ಮದುವೆಯ ಬಗ್ಗೆ ಯೋಚಿಸ್ತಿದ್ದೀರಾ?” ಎಂದ. +“ಹೂಂ” ಎಂದು ತಲೆ ಅಲ್ಲಾಡಿಸಿದೆ. +ಮನೋಹರ ದೊಡ್ಡದಾಗಿ ನಕ್ಕು ” ಎಲ್ಲರೂ ಇದುವರೆಗೂ ನನ್ನ ಮದುವೆಯ ಬಗ್ಗೆ ಯೋಚಿಸಿ ಈಗ ನಿಲ್ಲಿಸಿದ್ದಾರೆ. ನೀವು ಮತ್ತೆ ಈಗ ಶುರುಮಾಡುತ್ತಿದ್ದೀರ. ವಸಂತಾ, ನಿಮಗೆ ಹೇಗೆ ಹೇಳಲಿ? ನೋಡಿ ವೈಚಾರಿಕರು ಬದುಕಿನಲ್ಲಿ ಚಿuಣheಟಿಣiಛಿ ಆಗಿ iಟಿvoಟve ಆಗುವುದಕ್ಕಿಂತ ಹೊರಗಿನ ಪ್ರೇಕ್ಷಕರಾಗಿಬಿಟ್ಟು ಘರ್ಷಣೆಗಳ ಅಲಗುಗಳಲ್ಲಿ ಆಗಾಗ್ಗೆ ಕತ್ತರಿಸಿಕೊಳ್ಳುತ್ತಾ ಹೋಗುತ್ತಾರೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಬದಲಾಗಿ ಬಣ್ಣಬಣ್ಣಗಳ ಅಥವಾ ರಾಗರಹಿತ ದೃಷ್ಟಿಗಳಲ್ಲಿ ನೋಡಿ ಕೊಂದುಬಿಡುತ್ತಾರೆ. ನಾನು ಹಾಗೇನೆ” ಎಂದ. ಅವನೇನು ಹೇಳಿದನೆಂದು ನನಗೆ ಅರ್ಥವಾಗಲಿಲ್ಲ. ಆದರೂ “ಕಾವಿ ಬಟ್ಟೆ ಹಾಕ್ಕೊಂಡು ಇರೋಕ್ಕೆ ಲಾಯಕ್ಕು ನೀವು” ಎಂದೆ. +“ನಾಳಿ ಬೆಳಿಗ್ಗೆ ಊರಿಗೆ ಹೊರಡ್ತ ಇದ್ದೀರಾ ಅಲ್ವಾ”? ಎಂದ. +“ಹೂಂ ತುಂಬಾ ಬೇಸರವಾಗುತ್ತೆ. ನಿಮ್ಮ ಊರು, ನಿಮ್ಮ ಮನೆ, ನಿಮ್ಮ ಅಪ್ಪ-ಅಮ್ಮ ತಮ್ಮ-ತಂಗಿ ಎಲ್ಲರೂ ನನಗೆ ತುಂಬಾ ಇಷ್ಟವಾದರೂ. ಬಹುಶಃ ಇನ್ನು ಮುಂದೆ ಇಂತಹಾ ಒಳ್ಳೆಯ ಜನ ಸಿಕ್ಕುತ್ತಾರೋ ಇಲ್ಲವೋ” ಎಂದೆ. +“ಹಾಗಿದ್ದರೆ ನಾನಿಲ್ಲದಿದ್ದಾಗಲೂ ನೀವು ಈ ಮನೆಗೆ ಬಂದು ಹೋಗಿ ವಸಂತಾ” ಎಂದ. ನಂತರ, “ವಸಂತಾ, ನೀವು ದೊಡ್ಡ ಕಥೆಗಾರ್ತಿ ಆಗಬೇಕು. ನಾನ್ಯಾಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರೆದುಕೊಂಡು ಬಂದೆ ಗೊತ್ತಾ? ನಮ್ಮ ಡರ್ಟಿ ಊರು, ನಮ್ಮ ಕೊಳಕು ಮನೆ, ಇವನ್ನೆಲ್ಲ ನೋಡಿ ನಿಮಗೆ ಕಥೆ ಬರೆಯಲ್ಲು ಎನಾದರೂ ಸಿಗಬಹುದೆಂದು. ನಾಲ್ಕು ಗೋಡೆಗಳ ನಡುವೆ ಇದ್ದು, ನಾಲ್ಕು ಜನರ ಪರಿಚಯವಾಗಿದ್ದರಲ್ಲೇ ನೀವು ಕಥೆ ಬರೆಯಲು ಬಂಡವಾಳ ಪಡೆದುಕೊಂಡದ್ದು ಅಶ್ಚರ್ಯ. ಬನ್ನಿ, ನಮ್ಮೂರಿನ ವಿಚಿತ್ರ ಜನರನ್ನು ತೋರಿಸುತ್ತೇನೆ… ನೂರಾರು ಕಥೆಗಳು… ಕೊನೆಗೆ ಬಂಡವಾಳ ವಿಪರೀತವಾಗಿ ಬರೆಯುವುದೇ ನಿಲ್ಲುತ್ತದೆ ಏನಂತಿರಾ?” ಎಂದ. ಹೀಗೆಲ್ಲಾ ಮಾತನಾಡುವಾಗ ಮನೋಹರ ಬಹಳ ಸೀರಿಯಸ್ಸಾಗಿರುತ್ತಾನೆ. ಅವನ ಅನುಭವಗಳು ಒಂದಕ್ಕಿಂತ ಒಂದು ಸ್ವಾರಸ್ಯಪೂರ್ಣವಾಗಿರುವುದರಿಂದ ಅವನು ಹೇಳುತ್ತಲೇ ಇರಲಿ, ನಾನು ಕೇಳುತ್ತಲೇ ಇರಬೇಕೆಂಬ ಆಸೆ… +“ವಸಂತಾ, ನೀವು ಕಥೆ ಬರಿತೀರಿ ಅಂದಾಕ್ಷಣ ಒಂದು ಘಟಣೆ ಜ್ಞಾಪಕಕ್ಕೆ ಬಂತು ನೋಡಿ. ಬಾಂಬೆಯಲ್ಲಿ ನನ್ನ ರೂಂಮೇಟು ಸೀರಿಯಸ್ ಮನುಷ್ಯ. ಬಾಂಬೆ ಎಂದರೆ ವಿಪರೀತ ಹುಚ್ಚು. ದಿನ ಬೆಳಗೂ ನನಗೆ ಅವನು ತನ್ನ ಲವ್ ಬಗ್ಗೆ ಕೊರೀತಾನೆ. ನನಗಂತೂ ಕೇಳಿ ಕೇಳಿ ಸಾಕಾಗಿದೆ. ಆ ಹುಡುಗಿ ಇವನನ್ನು ನೋಡೇ ಇಲ್ಲ. ಇವನು ಮಾತ್ರ ದಿನಾ ಬಾಂಬೆಯಲ್ಲಿ ರೈಲು ಹತ್ತುವಾಗ ನೋಡಿ ನೋಡಿ ಲವ್ ಶುರು ಮಾಡಿಕೊಂಡ. ಆ ಹುಡುಗಿಗೆ ಇದನ್ನು ತಿಳಿಸುವ ಧೈರ್ಯ ಅವನಿಗಿಲ್ಲ. ತಾನು ಆ ಹುಡುಗಿಯಷ್ಟು soಠಿhesಣiಛಿಚಿಣeಜ ಅಲ್ಲ ಎಂಬ iಟಿಜಿeಡಿioಡಿiಣಥಿ. ಇಲ್ಲಿಂದ ಪ್ರತಿ ವಾರ ಗ್ರೀಟಿಂಗ್ ಕಳಿಸ್ತಾನೆ. ಅದರಲ್ಲಿ ಇವನ ವಿಳಾಸ ಹೆಸರು ಇಲ್ಲ – ನಾಲ್ಕಾರು ಪ್ರೇಮ ಪುಸ್ತಕಗಳನ್ನು ಓದಿ ಎಂಟು ಸಾಲುಗಳನ್ನು ನನ್ನಿಂದ ಬರೆಸಿ ಕಳುಹಿಸುತ್ತಾನೆ. ಮೊನ್ನೆ ಇದ್ದಕ್ಕಿದ್ದಂತೆ ಅವನಿಗೆ ನನ್ನ ಮೇಲೆ ಸಂಶಯ! ‘ನೋಡು ಆ ಹುಡುಗಿಯ ಅಡ್ರೆಸ್ ನಿನಗೆ ಗೊತ್ತಿದೆ. ನೀನೇನಾದರೂ ಬರೆದು ಬಿಟ್ಟಿದ್ದೀಯಾ ಎಂಬ ಅನುಮಾನ ನಂಗೆ’ ಎಂದ. ನಾನು ಅವನಿಗೆ ಇನ್ನಷ್ಟು ಸಂಶಯ ಬರುವಂತೆ ಕೇಳಿದೆ: ಹೌದು, ನಾನು ಆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಕಾಶ್ಮೀರದಲ್ಲಿ ಹನಿಮೂನಲ್ಲಿರುವಾಗ ನೀನು ಟೂರ್ ಬರ್‍ತಿ. ಆಗ ಅಲ್ಲಿ ನಮ್ಮನ್ನು ನೋಡಿ, ಸನ್ಯಾಸಿಯಾಗಿ ಹಿಮಾಲಯಕ್ಕೆ ಹೊರಟು ಹೋಗುತ್ತಿ.’ ಹೀಗೆಲ್ಲ ರೇಗಿಸಿ ‘ನಮ್ಮ ವಸಂತಾ ಇದನೆಲ್ಲಾ ಕಥೆಯಾಗಿ ಬರೆಯುತ್ತಾಳೆ. ನನ್ನ, ಆ ಹುಡುಗಿಯ ಪ್ರೇಮ ಪ್ರಸಂಗ ಪೇಪರಿನಲ್ಲಿ ಫೋಟೋ ಸಮೇತ ಬರುತ್ತದೆ. ನಿನಗೆ ತಂದು ತೋರಿಸುತ್ತೇನೆ’ ಎಂದು ಅವನಿಗೆ ಭೀತಿ ಹುಟ್ಟಿಸುತ್ತೇನೆ” ಎಂದ ಸ್ವಲ್ಪ ಹೊತ್ತು ಬಿಟ್ಟು. +“ಹೇಗಿದೆ ವಸಂತಾ ನನ್ನ ಗೆಳೆಯನ ಕಥೆ? ಅವನಿಗೆ ಪ್ರೀತಿ ಎಂದರೆ ಏನೂ ಅಂತ ಗೊತ್ತಿಲ್ಲ. ಪ್ರೀತ್ಸ್ತಾನಂತೆ, ಅದಕ್ಕೇ ನಾನು ಇವನ್ನೆಲ್ಲಾ ದ್ವೇಷಿಸ್ತೀನಿ ಅಂತ ಹೇಳಿದ್ದು. ನಾನು ನನ್ನ ಅಭಿಪ್ರಾಯಗಳನ್ನು ಯಾರಲ್ಲಿಯಾದರೂ ಹೇಳಿಕೊಂಡರೆ ಖಂಡಿತಾ ನನ್ನನ್ನು ‘ಹುಚ್ಚ’ ಎನ್ನುತ್ತಾರೆ. ನನಗೆ ಇದುವರೆಗೂ ಪ್ರೀತಿಸಬೇಕು, ಮದುವೆಯಾಗಬೇಕು ಅಂತೆಲ್ಲಾ ಅನ್ನಿಸಿಯೇ ಇಲ್ಲ. ಅನ್ನಿಸಿದರೂ, ಕ್ರಮೇಣ ಬೇಡಾನ್ನಿಸುತ್ತೆ. ಆದರೆ ಅಕಸ್ಮಾತ್ ನಾನೇ ಒಂದು ದಿನ ನಿಮ್ಮೆದುರಿಗೆ ಪ್ರತ್ಯಕ್ಷವಾಗಿ ‘ವಸಂತಾ, ಈ ದಿನ ನಿಮ್ಮನ್ನು ನಾನು ಮದುವೆಯಾಗುತ್ತಿದ್ದೇನೆ’ ಎಂದರೆ ಆಶ್ಚರ್ಯಪಡಬೇಡಿ” ಎಂದ. ಏನೋ ಹೇಳುತ್ತಿದ್ದಾನೆಂದು ಕೇಳುತ್ತಿದ್ದ ನಾನು ಇದನ್ನು ಕೇಳಿ ಕಕ್ಕಾಬಿಕ್ಕಿಯಾಗಿ ತಲೆಯೆತ್ತಿ ನೋಡುವಷ್ಟರಲ್ಲಿ ಮನೋಹರ ನನ್ನ ತಲೆ ಸವರಿ ಹೇಳಿದ: +“ಬೇಡಮ್ಮ, ನನ್ನಂಥ ಹುಚ್ಚನನ್ನು ಮದುವೆಯಾಗಿ ನಿಮ್ಮ ಜೀವನ ಗೋಳಾಗುವುದು ಬೇಡ. ನಿಮಗೆ ಸರಳ ಸುಂದರನಾದ ಗಂಡ, ಮಾತುಗಾರ ಗಂಡ ಇರಬೇಕು. ಊರಲ್ಲೆಲ್ಲಾ ನಿಮ್ಮ ಕೈ ಹಿಡಿದು ತಿರುಗಿಸುವ, ಸಾಯಂಕಾಲ ಸಿನಿಮಾ, ಪಾರ್ಕು, ಷಾಪಿಂಗ್‌ಗೆ ಕರೆದುಕೊಂಡು ಹೋಗುವ ಗಂಡ ಬೇಕು. ಆ ಯೋಗ್ಯತೆ ಖಂಡಿತಾ ನನ್ನಲ್ಲಿಲ್ಲ. ಅವೆಲ್ಲ ನನ್ನಲ್ಲಿ ಎಂದು ಬರುತ್ತದೋ ಅದೂ ಗೊತ್ತಿಲ್ಲ. ಅಕಸ್ಮಾತ್, ನಾನು ಮದುವೆಯಾದರೆ ನನಗೆ ಯಾವ ರೀತಿ ಹೆಂಡತಿ ಬೇಕು ಗೊತ್ತಾ? ಆಕೆಗೆ ನನ್ನ ಬಗ್ಗೆ ಏನೂ ತಿಳಿದಿರಬಾರದು. ಬಹಳ ಮುಗ್ಧೆಯಾಗಿರಬೇಕು, ಓದಿರಬಾರದು, ವ್ಯವಹಾರ ಜ್ಞಾನವಿರಬಾರದು. ಅಂತಹ ಪೆದ್ದಿಯನ್ನು ಮದುವೆಯಾಗಲು ಇಷ್ಟಪಡುತ್ತೇನೆ. ಎಲ್ಲಿಯಾದರೂ ಇದ್ದರೆ ನೋಡಿಕೊಡಿ” ಎಂದವನೇ “ಬನ್ನಿ ಕತ್ತಲಾಯಿತು ಮನೆಗೆ ಹೋಗೋಣ. ಇನ್ನೂ ಸ್ವಲ್ಪ ಹೊತ್ತು ನಾವಿಲ್ಲಿ ಕುಳಿತಿದ್ದರೆ ಊರವರು ಆಡಬಾರದ ಮಾತನ್ನೆಲ್ಲಾ ಆಡಿ ಮುಗಿಸುತ್ತಾರೆ. ನಿಮ್ಮ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡುವುದನ್ನು ನಾನು ಸಹಿಸಲಾರೆ” ಎಂದು ಕೈಹಿಡಿದು ಎಬ್ಬಿಸಿ, ಸೀರೆಯ ನೆರಿಗೆ ಕೊಡವಿ ಮರಳನ್ನೆಲ್ಲ ತೆಗೆದ. +ಮನೆಯ ಹತ್ತಿರ ಬರುವಾಗ ಸುಮಾರು ಮೂವತ್ತೆಂಟು-ನಲವತ್ತರಷ್ಟು ವಯಸ್ಸಾಗಿರುವ ಹೆಂಗಸೊಬ್ಬಳು ಇದ್ದಕ್ಕಿದ್ದಂತೆ ನಮ್ಮೆದುರಿಗೆ ಪ್ರತ್ಯಕ್ಷವಾಗಿ ನನ್ನ ಮುಖವನ್ನು ಸಲೀಸಾಗಿ ತನ್ನ ಕೈಯಲ್ಲಿ ತೆಗೆದುಕೊಂಡು ನಟಿಕೆ ಮುರಿದು “ನನ್ನವ್ವ, ಲಕ್ಷಣವಾಗಿದ್ದೀಯಾ. ನಿಮ್ಮಿಬ್ಬರದೂ ಜೋಡಿ ಭಲೇ ವೈನಾಗೈತೆ. ಯಾವಾಗಪ್ಪ ಲಾಡು ಊಟ?” ಎಂದವಳೇ ಮನೋಹರನ ಕಡೆ ತಿರುಗಿ “ಊರಲ್ಲೆಲ್ಲಾ ನಿಮ್ಮದೇ ಮಾತಾಯ್ತಲ್ಲಪ್ಪ-ಈಯಮ್ಮನ್ನ ನೀನು ಮದ್ವೆ ಆಗ್ತೀಯಂತೆ ಹೌದ? ನಮ್ಮ ಹುಡುಗ ಒಳ್ಳೆ ಮನುಷ್ಯ ಕಣವ್ವ. ನನ್ನ ಕಂಡ್ರೆ ಭಾಳ ಪ್ರೀತಿ ಅವ್ನಿಗೆ, ಅವ್ನಿಗಂಥ ಒಳ್ಳೆ ಮನಸ್ಸು ಇದ್ದಿದ್ರಿಂದ್ಲೇ ನೀನೂ ಸಿಕ್ಕಿಬಿಟ್ಟೆ ಕಣವ್ವ. ಯಾರೂ ಪಾಪ ಈಯಪ್ಪನ್ನ ಅರ್ಥಾನೇ ಮಾಡ್ಕಳ್ತಿಲ್ಲ. ಎಲ್ರೂ ಹುಚ್ಚ ಅಂದ್ಬಿಡ್ತಾರೆ. ಏನೋ ಆಸೆಪಟ್ಟಿದ್ದೀರಾ. ಬೇಗ ಮದುವ್ಯಾಗಿಬಿಡಿ. ಸಂದಾಗಿರಬೇಕು” ಎನ್ನುತ್ತಾ ಹೊರಟುಹೋದಳು. +ಅವಳು ಬಂದಿದ್ದು, ದಡಬಡ ಮಾತನಾಡಿ ಹೊರಟುಹೋಗಿದ್ದು ಎಲ್ಲವೂ ಕ್ಷಣಮಾತ್ರದಲ್ಲಿ. ನನಗಂತೂ ಕಕ್ಕಬಿಕ್ಕಿಯಾಯಿತು. ಈಕೆ ಯಾರು ಅಂತಲೇ ತಿಳಿಯಲಿಲ್ಲ. ಆದರೆ ನನ್ನ ಮನೋಹರನ ಇತಿಹಾಸವನ್ನೆಲ್ಲ ಹೇಳುತ್ತಿದ್ದಾಳೆ! ನನ್ನ ಯೋಚನೆಗಳನ್ನು ಅರ್ಥಮಾಡಿಕೊಂಡವನಂತೆ ಮನೋಹರ, “ವಸಂತಾ, ಇಲ್ಲಿರುವ ಪ್ರತಿಯೊಬ್ಬರಿಗೂ ನಿಮ್ಮ ಬಗ್ಗೆ ಕುತೂಹಲವಿದೆ. ಆದ್ದರಿಂದ ಎಲ್ಲರೂ ನಮ್ಮ ಮಧ್ಯೆ ತಲೆಹಾಕಿ, ವಿಷಯ ಸಂಗ್ರಹಿಸಿ ಏನಾದರೊಂದು ಮಾತನಾಡಿಕೊಳ್ಳುತ್ತಾರೆ. ಇದೆಲ್ಲಾ ನನಗೂ ಇಷ್ಟವಾಗೊಲ್ಲ. ನಾನಂತೂ ಯಾರ ವಿಷಯಕ್ಕೂ ಅನಾವಶ್ಯಕವಾಗಿ ತಲೆಹಾಕುವುದಿಲ್ಲ; ಇವರ್‍ಯಾಕೆ ನಮ್ಮ ವಿಷಯಕ್ಕೆ ತಲೆಹಾಕಬೇಕು? ಅಂತೆಲ್ಲ ಅನ್ನುಸುತ್ತೆ ಅಲ್ವಾ? ಆದರೆ ಇದು ಹಳ್ಳಿ ನೋಡು. ಅವರೆಲ್ಲಾ ತಮ್ಮದೇ ಆದ ರೀತಿಯಲ್ಲಿ ನಮ್ಮನ್ನು ರೂಪಿಸಿಕೊಳ್ತಾರೆ. ಪಟ್ಟಣದವರೇನೂ ಇದಕ್ಕೆ ಹೊರತಲ್ಲ. ಈ ಬಗ್ಗೆ ನಾವು ಯೋಚಿಸಿ ಏನೂ ಪ್ರಯೋಜನವಿಲ್ಲ. ನಮ್ಮ ತಲೆ ಬಿಸಿ ಹೆಚ್ಚಾಗುತ್ತೆ ಅಷ್ಟೆ! ಇಂಥ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಬೇಜಾರು ಮಾಡಿಕೊಳ್ಳಬೇಡಿ” ಅಂದ. +ಬೆಳಿಗ್ಗೆ ಸ್ನಾನಮಾಡಿ, ತಿಂಡಿ ತಿನ್ನುವಾಗ ಗಂಗಮ್ಮ ಬಾಗಿಲಿನಲ್ಲಿ ಪ್ರತ್ಯಕ್ಷಳಾದ. ಕೈಯಲ್ಲಿ ಗಮಗಮಿಸುವ ಹೂವು. ನನಗೆ ಮಲ್ಲಿಗೆ ಹೂವೆಂದರೆ ಬಹಳ ಇಷ್ಟ. ಒಂದೇ ನೆಗೆತಕ್ಕೆ ಹಾರಿ ಹೂವು ತೆಗೆದುಕೊಂಡು, ರೂಮಿಗೆ ಹೋಗಿ ಹಣ ತರುವಷ್ಟರಲ್ಲಿ ಗಂಗಮ್ಮ ಮಾಯವಾಗಿಬಿಟ್ಟಿದ್ದ +“ಮತ್ತೆ ಆ ಹೆಂಗಸು ಸಿಕ್ಕಿದ್ದರ ಬಗ್ಗೆ ಮನೇಲಿ ಹೇಳಬೇಡಿ. ಕೆಟ್ಟದಾಗಿ ಮಾತನಾಡ್ತಾರೆ. ಅವಳು ಗಂಗಮ್ಮ ಅಂತ. ಅವನಿಗೆ ಮೂವರು ಗಂಡಂದಿರಿದ್ದಾರ್, ಹಾಗೆ, ಹೀಗೆ ಅಂತೆಲ್ಲಾ ಹೇಳ್ತಾರೆ. ಅದೇನೇ ಇದ್ದರೂ ಅದೆಲ್ಲ ನಮಗ್ಯಾಕೆ? ಆದರೆ ಮನೆಯಲ್ಲಿ ಅವಳ ಬಗ್ಗೆ ‘ಸೂಳೆ’ ಅಂತೆಲ್ಲಾ ಮಾತನಾಡುವುದನ್ನು ನಾನು ಕೇಳಲಾರೆ. ಆದ್ದರಿಂದಲೇ ನಿಮಗೂ ಹೇಳಿದೆ” ಎಂದ. +ಬೆಳೆಗ್ಗೆ ಸ್ನಾನಮಾಡಿ, ತಿಂಡಿ ತಿನ್ನುವಾಗ ಗಂಗಮ್ಮ ಬಾಗಿಲಿನಲ್ಲಿ ಪ್ರತ್ಯಕ್ಷಳಾದಳು. ಕೈಯಲ್ಲಿ ಗಮಗಮಿಸುವ ಹೂವು. ನನಗೆ ಮಲ್ಲಿಗೆ ಹೂವೆಂದರೆ ಬಹಳ ಇಷ್ಟ. ಒಂದೇ ನೆಗೆತಕ್ಕೆ ಹಾರಿ ಹೂವು ತೆಗೆದುಕೊಂಡು, ರೂಮಿಗೆ ಹೋಗಿ ಹಣ ತರುವಷ್ಟರಲ್ಲಿ ಗಂಗಮ್ಮ ಮಾಯವಾಗಿದ್ದಳು. +ಗಂಗಮ್ಮ ಬಂದು ಹೋದಕೂಡಲೇ ಅಮ್ಮ “ಬೆಳಗಾಗೆದ್ದು ಅವಳ ಮುಖದರ್ಶನವಯ್ತಲ್ಲ. ಯಾರಿಗೆ ಬೇಕಾಗಿತ್ತು ಹೂವು? ಕಂಡಹಾಗೆ ಮೂವರು, ಕಾಣದ ಹಾಗೆ ಇನ್ನೆಷ್ಟು ಜನವೊ?” ಎಂದು ಗೊಣಗುಟ್ಟುತ್ತಿದ್ದರು. +ಮದುವೆಯಲ್ಲಿ ಮಾಡಿದ್ದ ತಿಂಡಿಗಳನ್ನೆಲ್ಲಾ ಮನೋಹರ ಗಂಟುಕಟ್ಟಿಕೊಟ್ಟ. “ಇಷ್ಟೊಂದು ಯಾಕೆ ನನಗೊಬ್ಬಳಿಗೇ” ಎಂದರೂ ಕೇಳಲಿಲ್ಲ. ಹತ್ತುಗಂಟೆಯ ಹೊತ್ತಿಗೆ ಹೊರಡಲು ತಯಾರಾದೆ. ನನಗೆ ಅಷ್ಟುಬೇಗ ಮನೋಹರನ ಮನೆ ಬಿಡುವುದು ಬೇಡವಾಗಿತ್ತು. ಅವರೆಲ್ಲರ ನಿಷ್ಕಲ್ಮಶ ಪ್ರೀತಿಗೆ ಪ್ರತಿಯಾಗಿ ಏನೂ ಹೇಳಲು ತೋಚಲಿಲ್ಲ. ಹೊರಡುವಾಗ ಎಲ್ಲರ ಕಣ್ಣಲ್ಲೂ ನೀರು. ಅಮ್ಮ“ನಾನು ಹೇಳಿದ್ದು ಮರೀಬೇಡ ಎಂದರು. “ಹೂಂ” ಅಂದೆ. +ಬಸ್ಸು ಹತ್ತಿ ಕುಳಿತೆ. ಗಂಗಮ್ಮನಿಗೆ ಹೂವಿನ ಹಣ ಕೊಡಬೇಕಾಗಿತ್ತು. ಅದನ್ನು ಮನೋಹರನಿಗೆ ಜ್ಞಾಪಿಸಿದ್ದಕ್ಕೆ-“ಅವಳು ಹಾಗೆಲ್ಲಾ ಹಣ ತೆಗೆದುಕೊಳ್ಳೊಲ್ಲ. ಅದೇನೋ ನಿಮ್ಮನ್ನು ಕಂಡರೆ ಇಷ್ಟವಾಗಿದೆ. ಅದಕ್ಕೆ ಹೂ ತಂದು ಕೊಟ್ಟಿದ್ದಾಳೆ. ಅವಳು ಹೂ ತಂದುಕೊಟ್ಟಿದ್ದಕ್ಕೆ ಅಮ್ಮ ಬೈಯ್ತಾ ಇದ್ದರು ಅಲ್ವಾ? ನೋಡಿ, ಈ ಸೆಕ್ಸ್, ನೈತಿವಾಗಿ, ಧೈರ್ಯವಾಗಿ ಹೇಳುವುದಕ್ಕಾಗುವುದಿಲ್ಲ. ಅವರಿಗೆ ನಾವೇ ತಲೆಬಾಗಿಬಿಡಬೇಕಾಗುತ್ತದೆ. ನಿಜಕ್ಕೂ ಈ ವಿಷಯದಲ್ಲಿ ಗಂಗಮ್ಮನ ಧೈರ್ಯ ಮೆಚ್ಚುವಂತಹುದೆ. ಮೊದಲನೆಯ ಗಂಡ ಬಿಟ್ಟು ಹೋದ. ಎರಡನೆಯವ ಹಣ, ಒಡವೆ ತೆಗೆದುಕೊಂಡು ಪರಾರಿ. ಮೂರನೆಯವನಿದ್ದಾ, ಅವನೇನು ಮಾಡ್ತಾನೋ ನೋಡಬೇಕು. ಅಕಸ್ಮಾತ್ ಅವನು ಹೊರಟುಹೋದ್ರೂ ಗಂಗಮ್ಮ ಧೈರ್ಯವಾಗಿರ್‍ತಾಳೆ. ಅವತ್ತೊಂದು ದಿನ ‘ನನಗೆ ಐಶ್ವರ್ಯ ಬೇಡ. ಜಾತಿ ಬೇಡ, ಕೊನೆಗೆ ಶೀಲಾನೂ ಬೇಡ ಕಣಪ್ಪಾ, ಬದುಕೋಕ್ಕೆ ಧೈರ್ಯ ಬಂದಿದ್ರೆ ಸಾಕು’ ಅಂತ ಹೇಳಿದಳು.” +“ಮಕ್ಕಳಿದ್ದಾರಾ? ಗಂಗಮ್ಮನಿಗೆ?” +“ಹೂಂ. ೧೩ ವರ್ಷದ ಮಗಳಿದ್ದಾಳೆ. ನೋಡ್ತೀನಿ, ಸಾಧ್ಯ ಆದ್ರೆ ನಾನೇ ಅವಳನ್ನು ಮದುವೆಯಾಗ್ತೀನಿ, ಏನಂತೀರಾ?” ಎಂದ. +“ಧಾರಾಳವಾಗಿ, ಅದಕ್ಕೆ ನನ್ನ ಒಪ್ಪಿಗೆ ಯಾಕೆ ಬೇಕು’?” ಎಂದೆ ನಗುತ್ತಾ. ಅಷ್ಟರಲ್ಲಿ ಬಸ್ಸು ಹೊರಡುವ ಸಮಯವಾಯಿತು. ಮನೋಹರ ನನ್ನ ಕೈ ಹಿಡಿದು “ವಸಂತಾ, ಇಲ್ಲಿ ನಿಮಗೆ ಯಾವುದಾದರೂ ವಿಷಯಕ್ಕೆ ಬೇಸರವಾಗಿದ್ದರೆ, ನಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಕೇಳುತ್ತಿದ್ದೇನೆ. ನೀವು ಬಂದಿದ್ದು ನನಗೆಷ್ಟೋ ಸಂತೋಷ ಆಗ್ತಿದೆ ಅಂದ್ರೆ ಹೇಳೊಕ್ಕಾಗ್ತಿಲ್ಲ. ಪತ್ರ ಬರೀತಾ ಇರಿ. ನಿಮ್ಮ ಪತ್ರ, ನಿಮ್ಮ ನೆನಪು ಇದ್ದಷ್ಟೇ ಬದುಕಿನಲ್ಲಿ ನನಗೆ ಖುಶಿ ಕೊಡುವ ವಿಷಯಗಳು” ಎಂದ. ಅವನ ಕಣ್ಣಲ್ಲಿ ನೀರುತುಂಬಿದ್ದು, ನನಗೆ ತಿಳಿಯದಂತೆ ಅದನ್ನು ಒರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ನನಗೆ ಯಾವ ರೀತಿಯ ಸಮಾಧಾನ ಹೇಳಬೇಕೆಂದು ತಿಳಿಯಲಿಲ್ಲ. +“ನನ್ನ ಬಗ್ಗೆ ಅನ್ನಿಸಿದ್ದನ್ನು ಪತ್ರದಲ್ಲಿ ಬರೀರಿ. ಹೇಳಬೇಕಾದ್ದು, ಹೇಳಬಾರದ್ದು ಎಲ್ಲಾ ಬರೀಬೇಕು, ಆಂ?” ಮನೋಹರ ಹೇಳಿದಾಗ “ಹೂಂ” ಎಂದು ತಲೆಯಾಡಿಸಿ ಕೈಬೀಸಿದೆ. +ಊರು ತಲುಪುವವರೆಗೂ ಮನೋಹರ, ಅವನ ಪರಿಸರ, ಹಳ್ಳಿಯೆಲ್ಲಾ ಕಣ್ಣು ಮುಂದೆ ಸುಳಿಯಿತು. ಆ ಜನಗಳ ಮಧ್ಯೆ ಇದ್ದೂ ಅಂಟದಂತಿದ್ದ ಮನೋಹರ, ಗಂಗಮ್ಮ, ಅಂತೂ ಒಂದು ಪುಟ್ಟ ವಿಚಿತ್ರ ವಿಶ್ವವನ್ನೇ ಕಂಡಂತಾಗಿತ್ತು. +ಮನೋಹರ ಬರೆದಿದ್ದ ಲೇಖನಗಳನ್ನೆಲ್ಲಾ ತಿರುವಿ ಹಾಕಿದೆ. ಒಂದು ಕಡೆ ದೊಡ್ಡದಾಗಿ ‘ಕಾಮಕ್ರಿಯೆ’ ಎಂದು ಬರೆದಿದ್ದ. ಅದೂ ಗೊತ್ತಾ ಈ ಮನುಷ್ಯನಿಗೆ? ಎಂದುಕೊಂಡು ಕುತೂಹಲದಿಂದ ಓದಿದೆ. ಇಬ್ಬರ ಒಪ್ಪಿಗೆಯಿಂದಾದರೆ ಮತ್ತು ಅನಂತರ guiಟಣ ಪ್ರಜ್ಞೆಯಿಂದ ವಿಮುಕ್ತರಾಗುವ ಗತ್ತಿದ್ದರೆ ಮಾತ್ರ ತೊಡಗಬೇಕು. ಇದರಲ್ಲಿ ಮೋಸಯಿಲ್ಲ. ಆದರೆ, ಮುಗ್ಧರನ್ನು ಸೆಳೆದು, ಆಸೆತೋರಿಸಿ, ಅನುಭವಿಸಿ ಅವರನ್ನು ಮಾನಸಿಕ ರೋಗಿಗಳನ್ನಾಗಿಸುವುದನ್ನು ನಾನು ವಿರೋಧಿಸುತ್ತೇನೆ. ತನ್ನ ಗಂಡ ನಪುಂಸಕನಾಗಿದ್ದು, ಬೇರೆಯವರಲ್ಲಿ ತೃಪ್ತಿ ಕಂಡುಕೊಳ್ಳುವ ಹೆಣ್ಣನ್ನು ನಾನು ದ್ವೇಷಿಸುವುದಿಲ್ಲ. ಆದರೆ ತನ್ನನ್ನು ತಾನು ನಿಯಂತ್ರಿಸಿಕೊಂಡು ನಪುಂಸಕ ಗಂಡನನ್ನು ಪ್ರೀತಿಸುವವರನ್ನು ತ್ಯಾಗಿ ಎಂದು ಹೇಳುವುದೂ ಇಲ್ಲ. ಆಶ್ಚರ್ಯದಿಂದ, ಭೇಷ್! ಎನ್ನಬಲ್ಲೆ ಅಷ್ಟೆ! +ಇದು ಕಾಮದ ಬಗೆಗಿನ ನನ್ನ ಅಭಿಪ್ರಾಯ… +ಇದನ್ನು ಓದುತ್ತಿದ್ದಂತೆ ಮನೋಹರನ ವಿಚಾರಗಳು ಅದೆಷ್ಟು ತರ್ಕಬದ್ಧವಾಗಿ ಕೂಡಿರುತ್ತವೆ ಅನ್ನಿಸಿತು. ಈ ಕಾರಣದಿಂದಲೇ ಅವನಿಗೆ ಗಂಗಮ್ಮನ ಬಗ್ಗೆ ಯಾವ ಕೆಟ್ಟ ಭಾವನೆಗಳೂ ಇಲ್ಲ. ನನಗೂ ಮನೋಹರನ ಯೋಚನೆಗಳು ಅರ್ಥವಾಗುತ್ತಿದ್ದಂತೆ ಗಂಗಮ್ಮನದು ತಪ್ಪಿಲ್ಲ ಎನ್ನಿಸಿತು. ಅಂತೂ ಪ್ರಥಮಬಾರಿಗೆ ಗಂಗಮ್ಮನಂತಹವರ ಬಗ್ಗೆ ಒಳ್ಳೆಯದಾಗಿ ಯೋಚಿಸಿದೆ. ಎಲ್ಲಾ ಮನೋಹರನ ಪ್ರಭಾವ. +* +* +* +ರತ್ನಳ ಮದುವೆ ಮುಗಿದನಂತರ, ಆ ಗಲಾಟೆ ಕಡಿಮೆಯಾಗುತ್ತಿದ್ದಂತೆ ಮನಸ್ಸಿನಲ್ಲಿ ಮತ್ತೆ ವಸಂತ ಆವರಿಸುತ್ತಿದ್ದಾಳೆ. ವಸಂತಾ, ನಿನ್ನನ್ನು ಕಂಡಾಗ ನಂಬಲಾರದಷ್ಟು ಚಟುವಟಿಕೆಯಿಂದ ಕುಣಿವ ಪುಟ್ಟಹುಡುಗಿ ಎನಿಸಿತು. ನನ್ನಂತೆಯೇ ನೀನು ಹೊರಗೆ ಚೆಲ್ಲುಚೆಲ್ಲು, ಕಾಗದಗಳಲ್ಲಿ ಭಯಂಕರ ಸೀರಿಯಸ್, ಯಾಕೆ? +ನನ್ನ ದಿಟ್ಟತನ, ನೇರಮಾತುಗಳು ನಿನಗೆ ಇಷ್ಟವಾಯಿತೆ? ನನಗೆ ನಿನ್ನ ಸಾಮಾನ್ಯರೂಪು, ಸರಳಮಾತು, ನಿನ್ನ ಸಾದಾ ಕಪ್ಪುಬಣ್ಣ, ಇವೇ ತುಂಬಾ ಪ್ರಿಯವಾಯಿತು. ಪತ್ರಗಳಲ್ಲಿ ಸ್ವಲ್ಪವಾದರೂ ಬುದ್ಧಿವಂತಿಕೆಯಿಂದ ಬರೆಯುವ ನೀನು ಭೇಟಿಯಾದಾಗ ಬಹಳ ಪೆದ್ದಾಗಿ ಕಂಡು, ನಾನು ತಿಳಿದುಕೊಂಡಷ್ಟು ವಿಚಾರವಂತಳಲ್ಲ ಎನ್ನಿಸಿತು. +ವಸಂತಾ, ನಿನ್ನನ್ನು ನೋಡಿದಾಗಿನಿಂದ ನನ್ನ ಮನಸ್ಸಿಗೆ ಬಂದ ಭಾವನೆಗಳನ್ನು ಬರೆಯಲೆಂದೇ ಕುಳಿತೆ. ಆದರೆ ಏನು ಮಾಡಲಿ? ಬರೆದರೆ ನಿಜಕ್ಕೂ ಅರ್ಥವಾಗುತ್ತದೆಯೆ? +ರತ್ನಳ ಮದುವೆ ಆಯ್ತು. ನನ್ನಿಂದ ಅವಳು ತುಂಬಾ ದೂರ ಹೊರಟುಹೋದಳು. ಅವಳ ಗಂಡ, ಮನೆ, ಮಕ್ಕಳಿಂದ ಹೊರಬಂದು ನನ್ನನ್ನು ಮೊದಲಿನಂತೆ ವಿಚಾರಿಸಿಕೊಳ್ಳಲು ಸಾಧ್ಯವೇ? ರಂಗನಾಥ ಓದಿದ್ದು ಮುಗಿಯಿತು. ಕೆಲಸ ಸಿಕ್ಕಿದ ನಂತರ ಅವನ ದಾರಿ ಅವನೇ ನೋಡಿಕೊಳ್ಳುತ್ತಾನೆ. ‘ನಾವ್ಯಾರೂ ನಿನಗೆ ಹೆಣ್ಣು ಹುಡುಕಿಕೊಡುವುದಿಲ್ಲ. ನೀನೇ ನಿನಗಿಷ್ಟವಾದವಳನ್ನು ಮದುವೆಯಾಗು, ಎಂದು ಹೇಳಿದ್ದಾನೆ. +ನಾನು ಯಾರಿಗಾಗಿ ಯಾತಕ್ಕಾಗಿ ಬದುಕುತ್ತಿದ್ದೇನೋ ಗೊತ್ತಿಲ್ಲ. ಯಾವುದರಲ್ಲಿಯೂ ಅರ್ಥವಿಲ್ಲ. ಮದುವೆ, ಮನೆ, ಮಕ್ಕಳು? ಮನೆತುಂಬಾ ರಂಗೋಲಿ ಬಿಟ್ತುಕೊಂಡು ಹಸಿರು ತೋರಣಗಳ ಬಾಗಿಲಲ್ಲಿ ಅರಿಸಿನ, ಕುಂಕುಮಗಳ, ಒಡವೆ, ವಸ್ತ್ರಗಳ ಹೆಂಡತಿಯನ್ನು ನೆನೆದರೆ ಅಸಹ್ಯ ಆಗುತ್ತೆ. ಅದನ್ನೆಲ್ಲಾ ಮರೆಸುವ ನಿನ್ನಂಥ ಸರಳ ಮನಸ್ಸಿನ, ಬಿಚ್ಚು ಹೃದಯದ ಸ್ನೇಹ ನನಗೆ ಬೇಕು. ಇದರಲ್ಲೇ ನಾನೆಷ್ಟು ಸುಖಿ ಗೊತ್ತಾ? +ವಸಂತಾ, ನಾನು ಒಳ್ಳೆಯ ಹುಡುಗಿಯನ್ನು ಮದುವೆಯಾಗಬೇಕು? ನನ್ನ ಸ್ವಭಾವ, ವಿಚಿತ್ರ-ವಿಕಾರ-ವರ್ತನೆ….ಈ ವರ್ತನೆಯ ವಿಕಾರಸ್ವಭಾವಗಳಿಂದ ನಾನು ಎಲ್ಲರನ್ನೂ ಗಾಯಗೊಳಿಸುತ್ತೇನೆ. ನಿನ್ನನ್ನು ನೋಯಿಸುವ ಅವಕಾಶ ನನಗಿನ್ನೂ ಬಂದಿಲ್ಲ ನಿನಗೆ ಗೊತ್ತಿಲ್ಲನಾನೊಬ್ಬ ‘ಟಿeuಡಿoಣiಛಿ’ ಎಂದು. ಹೊರಗಿನವರೆಲ್ಲಾ ಇದನ್ನು ಒಪ್ಪಿಕೊಳ್ತಾರೆ. ಆದರೆ ಇದನ್ನು ನೀವ್ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದ್ದರಿಂದ ನಿಮಗೆ ಅಪಾಯ ಅನಿವಾರ್ಯ. +ನನ್ನ ಅತ್ಯಂತ ಒಳಗಿನ ಅಹಂ ಯಾರಮೇಲೋ ಯುದ್ಧಕ್ಕೆ ಹೊರಟಿದೆ. ಯಾರಿಗಾಗಿಯೂ ಅನುಕಂಪ ಕೊಡಲಾರದ ನನ್ನ ಈ ಒಳಗಿನದನ್ನು ಯಾರೂ ಬದಲಾಯಿಸಲಾರರು. +ನಾನು ಸಂಪೂರ್ಣ ಸ್ವತಂತ್ರನಾಗಿರಬೇಕು. ನನ್ನ ಈ ಸ್ವಾತಂತ್ರ್ಯದ ತೀವ್ರತೆ ಎಂತಹದೆಂದರೆ ಸಾವಿನ ಬಗ್ಗೆ ಯೋಚಿಸುವಷ್ಟು ಸ್ವಾತಂತ್ರ್ಯ ಇರಬೇಕು. ಈ ಸ್ವಾತಂತ್ರ್ಯವನ್ನು ಕಸಿಯುವ ಹೆಂಡತಿ, ಮಕ್ಕಳು ನನಗೆ ಬೇಡ. +ನಿನಗೆ ಕೇವಲ ಒಂದು ಬಾರಿ ಭೇಟಿಯಾದ ಮನೋಹರ ಇಷ್ಟವಾಗಿದ್ದಾನೆ ಅಲ್ಲವೆ? ಈ ಮನೋಹರ ಇಡೀ ಜಗತ್ತನ್ನೇ, ಇಡೀ ಬದುಕನ್ನೇ ಜಿಗುಪ್ಸೆಯಿಂದ ಅರ್ಥಹೀನವಾಗಿ ದಿಟ್ಟಿಸುತ್ತಾ ದೂರದ ದಿಗಂತದಂಚನ್ನು ಸುಮ್ಮನೆ ದಿಟ್ಟಿಸುತ್ತ ಗಂಟೆಗಟ್ಟಲೆ ಕುಳಿತಿರುತ್ತಾನೆ. ಎಲ್ಲದರಲ್ಲೂ ನಿರುತ್ಸಾಹ, ಸರಿಯಾಗಿ ಬಟ್ಟೆಯೂ ತೊಡದೆ, ಜೋಲುಮೋರೆಯಲ್ಲಿ ಎಲ್ಲೆಂದರಲ್ಲಿ ಹೊರಟುಬಿಡುತ್ತಾನೆ. ಊಟ ಸಹಾ ಮಾಡೋಲ್ಲ. ನಿದ್ರೆಯಿಲ್ಲದೆ ಹೊರಳಾಡುತ್ತಾನೆ. ನೂರಕ್ಕೆ ಒಂದು ಬಾರಿ ಮಾತನಾಡಿದರೆ ಹೆಚ್ಚು. +ಕೆಲವೊಮ್ಮೆ ಸಿನಿಮಾ ನಟನಂತೆ ಉಡುಪು ಧರಿಸಿಕೊಂಡು ಕುಣಿಯುತ್ತಾ ನಗುತ್ತಾ ಎಲ್ಲರನ್ನೂ ನಗಿಸುತ್ತಾ, ಎಲ್ಲರಿಗೂ ಐಸ್‌ಕ್ರೀಂ ಕೊಡಿಸುತ್ತಾನೆ. ಆ ಸ್ಥಿತಿಯಲ್ಲಿ ನೋಡಿದಾಗ ಇವನು ಎಂಥ ಮುಗ್ಧ, ಮಗುವಿನ ಮನಸ್ಸಿನವನು ಅನ್ನಿಸುತ್ತದೆ. ಈ ಅವಸ್ಥೆಯಲ್ಲಿ ಅವನನ್ನು ನೋಡಿ ನೀನು ಸೋತು ‘ಮನೋಹರ ಒಳ್ಳೆಯವನು’ ಎಂದುಕೊಂಡಿರುವಿರಿ. +ನನ್ನ ಕುಟುಂಬ ಈಗೇನೋ ಒಳ್ಳೆಯ ಸ್ಥಿತಿಯಲ್ಲಿದೆ. ಅದನ್ನು ಈ ಸ್ಥಿತಿಗೆ ತರಲು ನಾನು ಪಟ್ಟ ಪಾಡೆಷ್ಟು ಗೊತ್ತಾ? ಆದರೆ ಹಿಂದಿನ ಘಟನೆಗಳು-ನಿನಗೆ ಹೇಳಲಾರದವು. ಅತ್ಯಂತ ಕ್ರೂರ ನೆನಪುಗಳು ಮಡುಗಟ್ಟಿಕೊಂಡು ಹಿಂಸಿಸುತ್ತವೆ. ಭಯಂಕರ ಬೆಂಕಿಯಂಥ ನೆನಪುಗಳು ಪ್ರತಿಕ್ಷಣವೂ ಕುಟುಕುತ್ತವೆ. ಬಹುಶಃ ಈ ನೆನಪುಗಳ ಕ್ರೂರ ಇರಿತದಿಂದ ನನಗೆ ಅಂತ್ಯದವರೆಗೆ ಬಿಡುಗಡೆ ಇಲ್ಲವೇನೋ. ನನ್ನ ಈಗಿನ ಬದುಕು ಮತ್ತು ಆಗಿನ ನೆನಪುಗಳು ತದ್ವಿರುದ್ಧ. ಆ ನೆನಪುಗಳು ಹೆಂಗಸಿನ ಬಗೆಗಿರುವ ಮೋಹವನ್ನು ಕಿತ್ತುಕೊಂಡಿವೆ. ಇವುಗಳನ್ನೆಲ್ಲಾ ಮರೆತು ನಾನು ಹೆಂಡತಿ, ಮಕ್ಕಳೊಡನೆ ಒಡನಾಡಲಾರೆ. +ನೀನು ನನ್ನ ಊರಿನಲ್ಲಿ ಖುಷಿಪಟ್ತದ್ದು ನನಗೆ ಸದ್ಯಕ್ಕೆ ಸಂತೋಷ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಸ್ವಭಾವದ ಸಂಪೂರ್ಣ ಪರಿಚಯವಾಯಿತು. ನಿನ್ನ ಮನಸ್ಸು ಭಯಂಕರ ಸೂಕ್ಷ್ಮ…. ಅಷ್ಟೊಂದು ಸೂಕ್ಷ್ಮವಾದರೆ ಬಹಳ ಕಷ್ಟ ಅಲ್ಲವೆ? ನಿನ್ನ ಮನಸ್ಸು ಲೋಳಿ. ಅದು ಗಟ್ಟಿಯಾಗಬೇಕು, ಒರಟಾಗಬಾರದು. ಆಗ ಮಾತ್ರ ಬದುಕಿನ ಏರಿಳಿತಗಳ ಒರಟು ಅನುಭವ ನಿನ್ನದಾಗುತ್ತದೆ. +ಹಾಂ, ನಾನೆಷ್ಟು ಒರಟು ಎನ್ನುವುದಕ್ಕೆ ಒಂದು ಘಟನೆ ಹೇಳುತ್ತೇನೆ. ಮದುವೆ ಮುಗಿಸಿಕೊಂಡು ಕೆಲಸಕ್ಕೆ ಹಾಜರಾದೆ ಅಲ್ವ? ಇಲ್ಲಿ ನಾನು ಬಂದ ನಂತರ ನಮ್ಮ ಸಹೋದ್ಯೋಗಿಯೊಬ್ಬರ ತಂದೆ ಸತ್ತರು. ಎಲ್ಲ ದುಃಖತಪ್ತರಂತೆ ಕಂಡರು. ಅಥವಾ ನಟಿಸಿದರು. ಎಲ್ಲರೂ ಓಡಿದರು ಹೆಣಕ್ಕಾಗಿ! ನನಗೆ ಆಶ್ಚರ್ಯ, ನೀವು ಹೋಗೋಲ್ಲವೆ? ಎಂದರು. ‘ನಾನ್ಯಾಕೆ ಹೋಗಬೇಕು? ನನ್ನದೇನು ಅವಶ್ಯಕತೆಯಿದೆ ಅಲ್ಲಿ?’ ಎಂದಾಗ ಅವರೆಲ್ಲಾ ಯಾವುದೋ ಒಣಮರವನ್ನು ನೋಡುವಂತೆ ನನ್ನನ್ನು ನೋಡಿದರು. ‘ಭಾವನೆಗಲೇ ಇಲ್ಲದ ಬರಡು ಕೊರಡು ’ಎಂದರು. ನನಗೆ ಬೇಸರ ಆಗಲಿಲ್ಲ. ಆದರೆ ಆ ವ್ಯಕ್ತಿ ನನ್ನ ಸಂಬಂಧಿಕನಾಗದುದಕ್ಕೆ ನಾನು ಬರಡಾಗಿರಬಹುದೆಂದುಕೊಂಡೆ. ನನ್ನ ತಂದೆಯ ಸಾವನ್ನು ಬೇಕೆಂದೇ ಕಲ್ಪಿಸಿಕೊಂಡೆ. ಭಾವನೆಗಳು ಸೊನ್ನೆ! ಬಹುಶಃ ಆ ಸಾವು ನನ್ನದಲ್ಲವಲ್ಲ, ಅದಕ್ಕಾಗಿ! +ವಸಂತಾ, ನಾನುಭಾಷೆಯನ್ನು-ಮಾತನಾಡುವ, ಬರೆಯುವ ಭಾಷೆಯನ್ನು ಧ್ವೇಷಿಸುತ್ತೇನೆ. ನನ್ನ ಭಾಷೆ ಗೊತ್ತಿಲ್ಲದ, ನನಗವರ ಭಾಷೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಿಬಿಡಬೇಕಿನ್ನಿಸುತ್ತಿದೆ. ಈ ಭಾಷೆ ಮನುಷ್ಯ-ಮನುಷ್ಯರಲ್ಲಿ ಸ್ವಾರ್ಥ-ದ್ವೇಷ ತುಂಬುವ ಸಾಧನ. ನಾನು ಮೂಗನಾಗಬೇಕಿತ್ತು. ಆಗ ಮಾತನಾಡಲಾಗದ ನನ್ನನ್ನು ‘ಮೂಗ ಎಂದಷ್ಟೆ ಕರೆದು ಸುಮ್ಮನಾಗುತ್ತಿದ್ದರು. ಈಗ ಮಾತನಾಡುವ ನನ್ನನ್ನು, ನನ್ನ ಬಗೆಬಗೆಯ ಮಾತುಗಳಿಂದಾಗಿ ಪ್ರೀತಿಸುತ್ತರೆ, ದ್ವೇಷಿಸುತ್ತಾರೆ, ಕೋಪಿಸಿಕೊಳ್ಳುತ್ತಾರೆ, ಜಿಗುಪ್ಸೆಗೊಳ್ಳುತ್ತಾರೆ. ಮನುಷ್ಯ ಒಂದು ಪ್ರಾಣಿಯಂತಿದ್ದರೆ, ಗಿಡಮರಗಳಂತಿದ್ದರೆ ಅದೆಷ್ಟು ಚನ್ನ! +ನಿಮ್ಮ ಸ್ನೇಹ ನನಗೆ ಅದೆಷ್ಟು ಪ್ರಿಯವಾಯಿತೆಂದರೆ, ಟ್ರಾನ್ಸ್‌ಫರ್ ಮಾಡಿಸಿಕೊಂಡು ಬೆಂಗಳೂರಿಗೆ ಬಂದುಬಿಡಲೆ? ಎನ್ನಿಸುತ್ತದೆ. ನಿಮ್ಮ ಇರುವಿಕೆಯಿಂದ ಉ‌ಆವುದೋ ಕಳೆದುಹೋದ ವಸ್ತುವೊಂದನ್ನು ಪಡೆದಂತಾಗುತ್ತಿದೆ. ವಸಂತಾ, ನನ್ನ ಬದುಕಿನ ಇಷ್ಟು ವರ್ಷಗಳಲ್ಲಿ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ ಎಂದರೆ ನಂಬುತ್ತೀಯಾ? ನೀವೇ ಮೊದಲು, ಬಹುಶಃ ನೀವೇ ಕೊನೆ. +ನೀವು ಒಬ್ಬ ಸಮಾನ್ಯ ಕನಸುಗಣ್ಣಿನ ಹೆಣ್ಣಲ್ಲ. ನಾನು ಆಫೀಸಿನಲ್ಲಿ, ಊರಿನಲ್ಲಿ ರತ್ನಳ ಗೆಳತಿಯರ ಬಳಿ ಮಾತನಾಡಿದಾಗ, ಅವರು ನನ್ನ ಬಗ್ಗೆ ಕನಸುಕಟ್ಟಿ ಮದುವೆಯಾಗುವ ದೃಶ್ಯವನ್ನು ಕಾಣುತ್ತಿರುತ್ತಾರೆ ಇದು ನಿಜ! ನೀವು ಆ ಸಾಲಿಗೆ ಸೇರಲಿಲ್ಲವಲ್ಲ ಎಂದು ನನಗೆಷ್ಟು ಹೆಮ್ಮೆಯಾಗಿದೆ, ಗೊತ್ತಾ? ನೀವು ನನಗೆ ಬಾಳಿನುದ್ದಕ್ಕೂ ಇದೇ ರೀತಿ ಸ್ನೇಹ ಕೊಡಬೇಕು. ಇದಕ್ಕಾಗಿ ನನ್ನ ಬಗ್ಗೆಯೇ ನಾನೆಷ್ಟು ಹಾರೈಸಿಕೊಳ್ಳುತ್ತೇನೆ ಗೊತ್ತಾ? ನಿಮ್ಮ ಮದುವೆ ಇದಕ್ಕೆಲ್ಲಾ ಅಡ್ಡಿ ಆಗದಂತಿದ್ದರೆ ಆಗ ನಾನು ನಿಜಕ್ಕೂ ಅದೃಷ್ಟವಂತ ಎಂದು ಹೇಳಬಹುದು. ವಸಂತಾ, ನಿಮಗೆ ಈಗ ನಾನು ಯೋಚಿಸುತ್ತಿರುವುದನ್ನೆಲ್ಲಾ ಪತ್ರದಲ್ಲಿ ಇಳಿಸಿ, ಆ ಪತ್ರ ನಿಮಗೆ ಯಾವಾಗ ತಲುಪುತ್ತದೋ ಎಂಬ ಕಾತುರ ಉಂಟಾಗುತ್ತಿದೆ. ನೀವು ಹೇಳಿದ ಹಾಗೇ ಈ ದಿನಾಂಕದಂದು ನಾವಿಬ್ಬರೂ ಪತ್ರ ಬರೆಯಬೇಕೆಂದುಕೊಂಡೆವಲ್ಲವೇ ? ಇದೋ ನಾನಂತೂ ಈಗ ಶುರು ಮಾಡಿದ್ದೇನೆ. ನೀವೂ ಈಗಾಗಲೇ ಪತ್ರ ಬರೆದು ಪೋಸ್ಟ್ ಮಾಡಿರಬೇಕಲ್ಲವೇ? ಇನ್ನು ಪತ್ರ ಶುರುಮಾಡಲೇ? +ಪ್ರಿಯ ವಸಂತ, +ನನ್ನ ದಿಟ್ಟತನ, ನೇರ ಮಾತುಗಳು ನಿಮಗೆ ಇಷ್ಟವಾದವೆ? ನನಗೆ ನಿಮ್ಮ ಸಾಮಾನ್ಯ ರೂಪು, ಸರಳ ಮಾತು… +* +* +* +ಮನೋಹರನ ಹಳ್ಳಿಯಲ್ಲಿ ನಡೆದ ವಿಷಯಗಳನ್ನೆಲ್ಲಾ ಕೇಳಲು ವಾಸು, ಸುಚಿತ್ರಾ ಅತ್ಯಂತ ಕಾತುರರಾಗಿದ್ದರು. ಅವರಿಗೆ ಏನೇನು ನಡೆಯಿತೋ ಅದನ್ನೆಲ್ಲಾ ಹೇಳಿ, ನನಗೆ ಬೇಕಾದ ಕಡೆಗಳಲ್ಲಿ ಉತ್ಪ್ರೇಕ್ಷೆ ಮಾಡಿ ಹೇಳಿದೆ. ಒಟ್ಟಿನಲ್ಲಿ ಹಳ್ಳಿಗೆ ಹೋಗಿ ಬಂದು ನಾನು ಸಂತೋಷವಾಗಿರುವುದಕ್ಕೆ ಅವರಿಗೂ ಸಂತೋಷವಾಗಿತ್ತು. +ವಾಸು “ಅವರ ಅಪ್ಪ-ಅಮ್ಮ ನಿಮಗೆ ಇನ್ನೇನು ಹೇಲಿದರು? ನೀವಂತೂ ಅವರಿಗೆ ಇಷ್ಟವಾಗಿದ್ದೀರ. ಅವರೂ ನಿಮಗೆ ಇಷ್ಟವಾಗಿದ್ದಾರೆ ಅಲ್ವಾ?” ಎಂದ. +“ನಾನು ಹಳ್ಳಿ ಬಿಟ್ಟು ಬರುವ ದಿನ ಬೆಳಿಗ್ಗೆ ಮನೋಹರನ ಅಮ್ಮ ನನ್ನನ್ನು ಪ್ರತ್ಯೇಕವಾಗಿ ಕರೆದು ಮದುವೆಯ ಬಗ್ಗೆ ಕೇಳಿದರು. ಈ ಬಗ್ಗೆ ಮನೋಹರ ಏನೂ ಹೇಳಿಲ್ಲ ಅಂದೆ. ಅದಕ್ಕೆ ಅವರು “ಅವನನ್ನು ನೆಚ್ಚಿ ಕುಳಿತರೆ ಅವನಾಗಿ ಕೇಳುವುದೇ ಇಲ್ಲ. ನೀನೇ ಕೇಳಿಬಿಟ್ಟು ಅವನೇನು ಉತ್ತರ ಕೊಡುತ್ತಾನೋ ಅದಕ್ಕೆ ಉತ್ತರ ಬರಿ ಎಂದರು” ಅಂದೆ. +ವಾಸು ಸಂತೋಷದಿಂದ “ವಾರೆವ್ಹಾ! ಹಳ್ಳಿಯವರಾದ ಅವರೇ ಇಂಥ ಒಳ್ಳೇ ಪ್ಲಾನ್ ಹೇಳಿಕೊಟ್ರಾ? ಸರಿ. ಇಷ್ಟೆಲ್ಲಾ ಆದಮೇಲೆ ಇನ್ನೇನು? ನೀವೇ ಅವರನ್ನು ಮದುವೆಯಾಗಲು ಇಷ್ಟಪಟ್ಟು ಒಪ್ಪಿರುವುದಾಗಿ ಬರೆಯಿರಿ. ಈ ಆಫೀಸಿನಲ್ಲಿ ನನ್ನದೊಂದು ಪ್ರೇಮ ವಿವಾಹವಾಯಿತು. ಎರಡನೆಯದಾಗಿ ನೀವು ಆಗ್ತಾ ಇದ್ದೀರ. ಬೇಗ ಇಬ್ಬರೂ ಸೇರಿ ತೀರ್ಮಾನಿಸಿಬಿಡಿ. ನಾನೂ ಚೆನ್ನಾಗಿ ಓಡಾಡಿ ಕೆಲಸ ಮಾಡಿಕೊಡ್ತೀನಿ”ಎಂದ. ಸುಚಿತ್ರಳೂ ಇದಕ್ಕೆ ಧ್ವನಿಗೂಡಿಸಿದಳು. ಇದು ನನಗೂ ಸರಿಯೆನ್ನಿಸಿದರೂ, ಮನೋಹರನ ಅಪ್ಪ-ಅಮ್ಮ ಒಪ್ಪಿದ್ದಕ್ಕೆ ಇವರೆಲ್ಲ ಸಹಾಯ ಮಾಡುತ್ತಿದ್ದಾರೆ; ಇಲ್ಲದಿದ್ದರೆ ಮಾಡುತ್ತಿರಲಿಲ್ಲವೇನೋ ಎನ್ನಿಸಿತು. +ನನ್ನಜೊತೆ ಮನೋಹರ ಸಲಿಗೆಯಿಂದಿದ್ದ ರೀತಿ, ಹಳ್ಳಿಯವರ ಮಾತುಕತೆ ನನ್ನನ್ನು ಮನೋಹರನ ಮನೆಯವರು ‘ಸೊಸೆ’ ಎಂಬಂತೆ ನಡೆಸಿಕೊಂಡ ರೀತಿ ಆಫೀಸಿನಲ್ಲಿ ವಾಸು, ಸುಚಿತ್ರಳ ಸಹಕಾರ ಇವೆಲ್ಲಾ ನನಗೆ ಪೂರಕವಾಗಿದ್ದು, ಮನೋಹರ ‘ನಿಮಗನಿಸಿದ್ದನ್ನೆಲ್ಲಾ ಬರೆಯಬೇಕಾದ್ದು, ಬೇಡದ್ದು ಎಲ್ಲ ಬರೆಯಿರಿ’ ಎಂದು ಹೇಳಿರುವಾಗ, ನನಗಂತೂ ಮನೋಹರನ ಬಗ್ಗೆ ಮೊದಲೇ ಇಷ್ಟವಿರುವಾಗ ಯಾಕೆ ನಾನೇ ಮದುವೆಯ ಬಗ್ಗೆ ಬರೆಯಬಾರದು? ಎನ್ನಿಸಿತು. ಆದರೆ ಈಗ ಆಫೀಸಿನಲ್ಲಿ ಬೇಡ ಎಂದು ಸುಮ್ಮನಾದೆ. +ರಾತ್ರಿ ಕುಳಿತು ಪತ್ರದ ಪ್ರಾರಂಭ ಯಾವ ರೀತಿ ಮಾಡಬೇಕೆಂದು ತಿಳಿಯದೆ ಒದ್ದಾಡಿದೆ. ಈ ಬಗ್ಗೆ ಸುಚಿತ್ರ, ವಾಸು ಇವರಿಬ್ಬರನ್ನು ಕೇಳಲು ಏನೋ ಸಂಕೋಚ! ಈ ಪತ್ರವನ್ನು ಮಾಮೂಲಿ ಪತ್ರಗಳಿಗಿಂತಾ ಬೇರೆಯಾಗಿ ಬರೆಯಬೇಕೆನ್ನಿಸಿತು. ಅದಕ್ಕಾಗಿ ಬಿಳಿ ಕಾಗದದ ಮೇಲೆ ನನ್ನದೊಂದು ಭಾವಚಿತ್ರವನ್ನು ಅಂಟಿಸಿ, ನನಗೆ ಗೊತ್ತಿದ್ದ ಹಿಂದಿ, ಇಂಗ್ಲಿಷ್, ಕನ್ನಡ ಮೂರೂ ಭಾಷಗಳಲ್ಲಿ “ನಾನು ನಿಮ್ಮನ್ನು ಮದುವೆಯಾಗಲು ಇಷ್ಟಪಟ್ಟಿದ್ದೇನೆ ಒಪ್ಪುತ್ತೀರಾ?” ಎಂದು ದೊಡ್ಡದಾಗಿ ಬರೆದೆ ಮತ್ತು “ಕೊನೆಯ ಕ್ಷಣದವರೆಗೂ ನನ್ನ ಬಾಳಿಗೆ ಸಂಗಾತಿಯಾಗಿ ಬರುವುದರ ಅಮ್ತಿಮ ತೀರ್ಮಾನದ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದೇ” ಎಂದೂ ಸೇರಿಸಿದೆ. +ನಂತರ ಒಳಗಿನ ಎಂಟು ಪುಟಗಳಲ್ಲಿ ಮನೋಹರನ ಚಿತ್ರ ಬಂದಾಗಿನಿಂದ, ಅವನನ್ನು ನೋಡಿದ ನಂತರದ ಭಾವನೆಗಳನ್ನೆಲ್ಲವನ್ನೂ ಬರೆದೆ. “ಮದುವೆಯ ಬಗ್ಗೆ ತೀರ್ಮಾನಿಸಿ ಬರೆದಿರುವ ನಾನು ನಿಜಕ್ಕೂ ಎಂಥದೋ ಆವೇಶದಿಂದ, ಸಂತೋಷದಿಂದ, ನೋವಿನಿಂದ ಏನನ್ನೋ ಗಳಿಸಿಕೊಂಡ ಖುಷಿಯಿಂದ, ಮತ್ತೇನನ್ನೋ ಕಳೆದುಕೊಂಡ ದುಃಖದಿಂದ ನಡುಗುತ್ತ ಬರೆಯುತ್ತಿದ್ದೇನೆ. ‘ಮದುವೆ’ ಎಂಬುದರ ನಿಜವಾದ ರೋಮಾಂಚನದ ಅನುಭವ ಆಗ್ತಿದೆ.” +ಇದೆಲ್ಲಾ ಬರೆಯುವಾಗ ನಾನೇ ಸ್ವತಃ ಮನೋಹರನ ಎದುರಿಗೆ ನಿಂತು ಹೇಳುತ್ತಿರುವಂತೆ ಭಾಸವಾಯಿತು ನಾನು ಮನೋಹರನ ಪ್ರಭಾವಕ್ಕೆ ಬಹಳವಾಗಿ ಒಳಗಾಗುತ್ತಿದ್ದುದು ನನ್ನ ಅರಿವಿಗೆ ಬಂತು. ಸ್ನೇಹಿತಳೆಂದುಕೊಂಡೇ ಅವನ ಪ್ರೇಮಿಯಾಗಿದ್ದೆ. ನನ್ನ ಈ ಅಪೂರ್ವ ಆನಂದದ ಕ್ಷಣಗಳನ್ನು ಹೇಗೆ ಎದುರಿಸಬೇಕೆಂದೇ ತಿಳಿಯಲಿಲ್ಲ. +ನನ್ನ ನಿರ್ಧಾರವನ್ನು ಮನೆಗೆ ಹೋಗಿ ಹೇಳಬೇಕೆಂದುಕೊಂಡೆ. ಮನೆಯಲ್ಲಿ ಅಂತರ್‌ಜಾತೀಯ ವಿವಾಹ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಅಕಸ್ಮಾತ್ ಒಪ್ಪದಿದ್ದರೆ? ಈಗಿನಿಂದಲೇ ಕಲಹ ಏಕೆಂದು ಸುಮ್ಮನಾದೆ. +“ಮನೋಹರ್, ನಿಮ್ಮೆಲ್ಲ ಅರ್ಥವಿಲ್ಲದ ಬರಡು ಭಾವನೆಗಳನ್ನು ಕಿತ್ತುಹಾಕಿ ಎಲ್ಲರಂತೆ ಬದುಕಲು ಪ್ರಯತ್ನಿಸಿ, ನಿಮ್ಮನ್ನು ನಾನು ಸಾಧ್ಯವಾದಷ್ಟು ಮಟ್ಟಿಗೆ ಅರ್ಥಮಾಡಿಕೊಳ್ಲಲು ಪ್ರಯತ್ನಿಸುತ್ತೇನೆ. ನಿಮ್ಮದೇ ರೀತುಯಾದ ಪುಟ್ಟ ಮಕ್ಕಳು ಮುದ್ದುಮುದ್ದಾಗಿ ಮನೆಯಲಿ‌ಇ ಆಡುತ್ತಿದ್ದರೆ ನೀವೇ ನಿಮ್ಮ ಆಗಿನ ಆಲೋಚನೆಗಳಿಗೆ ಅರ್ಥವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತೀರ. ಹಳೆಯ ಬದುಕನ್ನು ಮರೆತು ಹೊಸದನ್ನು ಸ್ವೀಕರಿಸಿ ನಿಮಗಾಗಿ ಎಂದು ಕಡೆಯವರೆವಿಗೂ ನಾನಿರುತ್ತೇನೆ. ಇದು ಖಂಡಿತ.” +ಯಾರೆಷ್ಟೇ ವಿರುದ್ಧವಾಗಿದ್ದರೂ ನಾನು ಮನೋಹರನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸಿದೆ. ಮನೋಹರ ಬಹಳ ಬಿದ್ಧಿವಂತ. ಅವನನ್ನು ಮದುವೆಯಾಗುವ ನಾನು ಅದೃಷ್ಟವಂತೆ. ಅವನು ಹೇಗೇ ಇದ್ದರೂ ಅವನಿಗೆ ಹೋದಿಕೊಂಡು ಹೋದರಾಯಿತು. ಮನೋಹರನಂತೆಯೇ ನಮ್ಮ ಮಕ್ಕಳೂ ಮುದ್ದಾಗಿದ್ದರೆ…. +“ಮನೋಹರ್, ಪದೇಪದೇ ನಿಂತಲ್ಲಿ, ಕುಳಿತಲ್ಲಿ ನೀವೇ ಕಾಣುತ್ತಿದ್ದೀರ. ದಾಳಿ ಮಾಡುತ್ತಿದ್ದೀರ. ಮನೋಹರ್ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಇರುತ್ತೇನೆ. ನಿಮ್ಮ ಸ್ನೇಹಕ್ಕಿಂತ ನನಗೆ ಪ್ರೀತಿ ಹೆಚ್ಚಿನದು ಎಂದೆಲ್ಲಾ ಅನ್ನಿಸುತ್ತಿದೆ.” +ನನಗಿದೆಲ್ಲಾ ಹೊಸದು. ಕೇವಲ ಪ್ರೇಮಪತ್ರ ಬರೆಯುವುದರಿಂದಲೇ ನನಗೆ ಇಷ್ಟೊಂದು ಸಂತೋಷ ಸಿಗುತ್ತಿರುವಾಗ, ಮನೋಹರ ಓದುತ್ತಿರುವಾಗ ಇನ್ನೆಷ್ಟು ಸಂತೋಷಪಡುತ್ತಾನೋ! +“ಮನೋಹರ್ ನಿಮ್ಮನ್ನು ಬಿಟ್ಟಿರಲಾರೆ.” +ರಾತ್ರಿ ಪತ್ರ ಪೂರ್ಣಗೊಳಿಸಲಾರದ್ದಕ್ಕೆ ಬೆಳಿಗ್ಗೆ ಆಫೀಸಿನಲ್ಲಿ ಕುಳಿತು ಮನೋಹರನ ಬಗೆಗಿನ ನನ್ನ ಪ್ರೀತಿಯನ್ನೆಲ್ಲಾ ಬಣ್ಣಕಟ್ಟಿ ವರ್ಣಿಸಿದೆ. ಮುಂದೆ ನಮ್ಮಿಬ್ಬರ ಮನೆ, ಮಕ್ಕಳು ಹೇಗಿರಬೇಕೆಂದು ಕನಸು ಕಾಣುತ್ತ ಆ ಬಗ್ಗೆ ಇನ್ನೆರಡು ಪುಟ ಬರೆದೆ. +“ಮನೋಹರ್, ನನಗೆ ನಿಮ್ಮಲ್ಲಿ ನಂಬಿಕೆಯಿದೆ. ನೀವು ನನ್ನನ್ನು ಖಂಡಿತಾ ಬೇಡ ಎಂದು ಹೇಳುವುದಿಲ್ಲ ನಿಮ್ಮ ಮನೆಯವರೆಲ್ಲರ ಆಸೆಯೂ ಇದೇ ಆಗಿದೆ. ನನ್ನದೂ ಸಹಾ! +ನನ್ನ ದೊಡ್ಡ ಆಸೆಯೆಂದರೆ ನಿಮ್ಮ ಒಂಟಿತನವನ್ನು ಹೋಗಲಾಡಿಸುವುದು. ಇದಕ್ಕಾಗಿ ಸದಾ ನಿಮ್ಮಲ್ಲಿಯೇ ಇರುತ್ತೇನೆ. ನನ್ನ ಎದುರಿಗೆ ನೀವು ಇದ್ದಷ್ಟೂ ಹೊತ್ತು ಒಂಟಿತನದ ಯಾವ ಭಾವನೆಗಳೂ ನಿಮ್ಮನ್ನು ಕಾಡಲಾರವು. +ಮನುಷ್ಯ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. +ಬೇಗ ಉತ್ತರ ಬರೆಯುತ್ತೀರಲ್ಲವೆ?” +* +* +* +ಮನೋಹರನಿಗೆ ಮತ್ತೊಂದು ಪತ್ರ ಬರೆಯಬೇಕೆಂದುಕೊಂಡೆ-ಆದರೆ ನನ್ನಲ್ಲಿದ್ದ ವಿಷಯಗಳೆಲ್ಲವೂ ಮುಗಿದುಹೋಗಿದ್ದವು. ಏನೇ ಆದರೂ ನನ್ನ ಭಾವನೆಗಳನ್ನೆಲ್ಲಾ ವ್ಯಕ್ತಪಡಿಸಿದುದಕ್ಕಾಗ್ಗಿ ನನಗೆ ಒಂದು ರೀತಿಯ ನಿರಾಳವೆನಿಸಿತ್ತು. +ಈ ಅಲ್ಪ ಕಾಲದಲ್ಲಿಯೇ ನಾನು ಮನೋಹರನನ್ನು ತುಂಬಾ ಪ್ರೀತಿಸತೊಡಗಿ, ಮನೋಹರನ ಜೊತೆ ಕಲ್ಪನಾ ಲೋಕದಲ್ಲಿ ದೂರ-ಬಹುದೂರಕ್ಕೆ ಮತ್ತೆ ತಿರುಗಿ ಬರಲಾರದಷ್ಟು ದೂರಕ್ಕೆ ಹೊರಟುಹೋಗಿದ್ದೆ. +ಸುಚಿತ್ರ, ವಾಸುವಿಗೆ ನಾನು ಮದುವೆಯ ವಿಷಯವಾಗಿ ಮನೋಹರನಿಗೆ ಪತ್ರ ಬರೆದ ವಿಷಯ ತಿಳಿದಿತ್ತು. ಆದ್ದರಿಂದ ನನ್ನಂತೆ ಅವರೂ ಮನೋಹರನ ಪತ್ರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದರು.ಸುಚಿತ್ರಳಂತೂ ಈಗಾಗಲೇ ಆಫೀಸಿನವರಿಗೆಲ್ಲಾ ಅಲ್ಪಸ್ವಲ್ಪ ತಿಳಿಸಿಬಿಟ್ಟಿದ್ದಳು. ಎಲ್ಲರೂ ನಿರೀಕ್ಷೆಯಿಂದ, ಕಾತುರದಿಂದ ಕಾಯುತ್ತಿದ್ದ ಮನೋಹರನ ಪತ್ರ ಬೇಗನೆ ಬಂದುಬಿಟ್ತಿತು. ಆತುರಾತುರವಾಗಿ ಬಿಡಿಸಿದೆ. ಸುಚಿತ್ರ ಎದುರಿಗೆ ಬಂದು ನಿಂತಳು. ಪತ್ರದಲ್ಲಿನ ಒಂದಕ್ಷರವೂ ಅವಳಿಗೆ ಕಾಣದಂತೆ ಪತ್ರವನ್ನು ಮಡಿಲಿನಲ್ಲಿಟ್ಟುಕೊಂಡು ಓದತೊಡಗಿದೆ. +“ಕುಮಾರಿ ವಸಂತಾ, +ಎಲ್ಲಕ್ಕಿಂತ, ಎಲ್ಲರಿಗಿಂತಾ, ಜೀವನವನ್ನೇ ತಲ್ಲಣಗೊಳಿಸುವ ಕಾಮಕ್ಕಿಂತ ನಾನು ನನ್ನ ಸ್ವಾತಂತ್ರ್ಯವನ್ನು ಅತಿಯಾಗಿ ಪ್ರೀತಿಸುತ್ತೇನೆ. ನನ್ನ ಈ ಸ್ವಾತಂತ್ರ್ಯವನ್ನು ಮದುವೆ, ಮಕ್ಕಳು ಮನೆಗಳಿಂದ ಕಟ್ಟಿಹಾಕಿ ಸಾಯಿಸಲಾರೆ. ನಿಮ್ಮ ಈ ದಿನದ ಪತ್ರದಿಂದ ನಾನು ಭಯಗೊಂಡಿದ್ದೇನೆ, ನಿರಾಶೆಗೊಂಡಿದ್ದೇನೆ. ನಿಮಗೆ ನಿಮ್ಮೊಬ್ಬಳನ್ನೇ ಪ್ರೀತಿಸುವ ಗಂಡ ಬೇಕು. ಮುದ್ದಾದ ಮಕ್ಕಳುಬೇಕು. ಆ ಗಂಡನಾಗುವ ಅರ್ಹತೆ ನನ್ನಲ್ಲಿ ಖಂಡಿತಾ ಇಲ್ಲ. +ನಿಮಗೆ ನೋವಾಗಬಹುದು, ಆದರೆ ಹೇಳುವುದನ್ನು ಹೇಳಲೇಬೇಕಲ್ಲ. ದಯಮಾಡಿ ಇಂತಹ ಪ್ರೇಮಪತ್ರಗಳನ್ನು ಬರೆಯಬೇಡಿ. ಕನಸುಗಳನ್ನು ಕಟ್ಟಬೇಡಿ. ನೀವು ತುಂಬಾ ಪಕ್ವಮನಸ್ಸಿನ, ಗಟ್ಟಿ ಹೃದಯದ ಹುಡುಗಿ ಎಂದುಕೊಂಡಿದ್ದೆ. ನೀವೂ ಸಾಮಾನ್ಯ ಕನಸುಗಣ್ಣಿನ ಪ್ರೇಮಿಯಾಗುತ್ತಿರುವುದು ಎಷ್ಟೊಂದು ಅಸಹ್ಯ! ಸುಖ, ಗಂಡ, ಮಗು, ಏನಿದೆಲ್ಲಾ? +ನಿಜ ಹೇಳಲಾ? ಹಿಂದೆ ಸ್ನೇಹಿತೆಯಾಗಿದ್ದಾಗ ನಿಮ್ಮ ಬಗ್ಗೆ ತುಂಬಾ ಪ್ರೀತಿ-ಮಮತೆ ಉಕ್ಕುತ್ತಿತ್ತು. ನಿಮ್ಮನ್ನು ಮದುವೆಯಾಗ್ತೇನೆ ಎಂದಾಕ್ಷಣ ನನಗೆ ಪ್ರೀತೀನೇ ಬರ್‍ತಾ ಇಲ್ಲ. ಈಗ ಹೆಂಡತಿಯಾಗುವಿರಿ ಎಂದಕೂಡಲೇ ಬರೀ ಕಾಫಿ ತಂದುಕೊಡುವ, ಅಡಿಗೆ ಮಾಡುವ, ಹಾಸಿಗೆ ಹಾಸುವ ಹೆಂಗಸಿನಂತೆ ಕಾಣುತ್ತಿರುವಿರಿ. ನೀವು ಪ್ರೀತಿಸುವ ಭರದಲ್ಲಿ ಏನೇನೋ ಬರೆಯಬೇಡಿ. ಅದೆಲ್ಲ ನನ್ನ ಮಟ್ಟಿಗೆ ಅರ್ಥಹೀನ ಅನ್ನಿಸುತ್ತೆ. +ನಾನು ಬರಡಾಗಿ ಗಟ್ಟಿಯಾಗಿರಬೇಕು. ನಾನೊಬ್ಬನೇ ಆಕಾಶ, ಕತ್ತಲಿನ ಆಕಾಶದಲ್ಲಿ ಯಾರ ಹಂಗೂ ಇಲ್ಲದೆ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಇರಬೇಕು. ಧಗಧಗಿಸುವ ಬಿಸಿಲಿನಲ್ಲಿ ಒಬ್ಬನೇ ನಡೆಯಬೇಕು. ಗಾಳಿಗೆ ಏಳುವ ಧೂಳಿನ ಕಣಗಳಲ್ಲಿ ನಾನೂ ಕಾಣದಾಗಬೇಕು. ನನ್ನ ಏಕಾಂತಕ್ಕೆ ಯಾರೂ ತೊಂದರೆ ಮಾಡಬಾರದು. ನಾನು ಹೀಗೇ ಒಂಟಿಯಾಗಿಯೇ ಇರುತ್ತೇನೆ, ಕೊನೆಯವರೆಗೂ…. +ನನಗೆ ನಿಮ್ಮ ಮುಗ್ಧ ಮನಸ್ಸಿನ ನಿಷ್ಕಲ್ಮಶ ಸ್ನೇಹವೇ ಸಾಕಾಗಿತ್ತು. ಪ್ರೇಮದ ದಡ್ಡತನ ನಮಗೆ ಬೇಡ. ನಾವು ರಿಯಲಿಸ್ಟಿಕ್ ಆಗಿರೋಣ. ನನ್ನನ್ನು ಉದ್ಧರ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. +ದಯವಿಟ್ಟು ಕ್ಷ…ಮಿ…ಸಿ… +ವಸಂತಾ, ನೀವು ನನ್ನನ್ನು ಕೊನೆಗೂ ಅರ್ಥಮಾಡಿಕೊಳ್ಳಲಿಲ್ಲ.” +ಪತ್ರ ಓದಿ ನನಗೆ ತಲೆ ತಿರುಗಲಾರಂಬಿಸಿತು. ಟೇಬಲ್ಲಿಗೆ ಹಾಗೆಯೇ ತಲೆಕೊಟ್ಟೆ. ಎಚ್ಚರವಾದಾಗ ತಲೆಗೆ, ಮುಖಕ್ಕೆ ನೀರು ಸುರಿದಿದ್ದರು. ಸುಚಿತ್ರ, “ನಡೀ, ನಿನ್ನನ್ನು ಬಿಟ್ಟುಬರ್‍ತೀನಿ”ಎಂದಳು. ಕಾಲುಗಳಲ್ಲು ಶಕ್ತಿಯೇ ಇಲ್ಲದಂತಾಗಿತ್ತು. ಸುಸ್ತಾಗಿ ಆಟೋದಲ್ಲಿ ಕುಳಿತು ಕಣ್ನು ಮುಚ್ಚಿದೆ. +ಹೇಳಿಕೇಳಿ ಮನೋಹರನದು ಬರಡುಜೀವನ. ಅವನ ಜೀವನವನ್ನು ನಾನು ನಂದನವನ್ನಾಗಿ ಮಾಡಬೇಕು. ಎಂದು ಆಸೆಪಟ್ಟಿದ್ದೆ. ಇದಕ್ಕಾಗಿ ನಾನು ತೀರ ಸಾಮಾನ್ಯ ಎಂದು ಗೊತ್ತಿದ್ದರೂ ಅವನನ್ನು ಪ್ರೀತಿಸಿದೆ. ಮನೋಹರ ನಿನ್ನಿಂದ ನನಗಾಗುತ್ತಿರುವ ನೋವು-ಸಂಕಟ ಅಪಾರ. ಎಲ್ಲವನ್ನು ಹೇಗೆ ಎದುರಿಸಲಿ? +ಮನೋಹರ, ನೀನು ಹೀಗೆ ಮಾಡಬಾರದಾಗಿತ್ತು +* +* +* +ನಾನು ವಸಂತಳ ಬಗ್ಗೆ ಕಟ್ಟಿದ್ದ ಆಶಾಗೋಪುರ ಕುಸಿದುಬಿತ್ತು, ವಸಂತಾ, ಯಾಕೆ ಹೀಗೆ ಮಾಡಿದೆ? ನಾನು ನಿನಗೆ ತುಂಬಾ ಕಟುವಾಗಿ ಪತ್ರ ಬರೆದೆ ಅಲ್ವಾ? ಆದರೆ ಅದು ಖಂಡಿತಾ ತಪ್ಪಲ್ಲ. ನಿನ್ನ ಪತ್ರ ಬಂದಾಗಿನಿಂದ ನನಗೆ ಆಫೀಸಿಗೆ ಹೋಗಲಾಗಲಿಲ್ಲ. ನೀನು ನನ್ನನ್ನು ಅದೆಷ್ಟು ಆವರಿಸಿಕೊಂಡಿರುವೆ ಗೊತ್ತಾ? ಪ್ರೀತಿಯಿಂದಲ್ಲ, ಶುದ್ಧ ಸ್ನೇಹದಿಂದ! +ವಸಂತಾ, ನೀನು ಮಾಡಿರುವ ಕೆಲಸ ನಿನ್ನ ನಿರಿಕ್ಷೆಗೂ ಮೀರಿದ್ದು. ಅವರಿವರು ಹೇಳಿದರು ಅಂತ ನೀನು ಆತುರ ಮಾಡಿ ಪತ್ರ ಬರೆದುಬಿಟ್ಟೆ. +ಆಫೀಸಿಗೆ ಹೋಗಬಾರದೆಂದುಕೊಂಡೆ. ಆದರೆ, ಆದರೆ ವಸಂತಳ ಪತ್ರ ಬಂದರೆ? ಎಂಬ ಆಸೆಯಿಂದ ಆಫೀಸಿಗೆ ಹೋದೆ. ವಸಂತಾ, ನೋವಿನಲ್ಲೂ ನಲಿವಿನಲ್ಲೂ ನಾನು ನೆನೆಸುವ ನೀನು ನನಗೆ ತುಂಬಾ ದೊಡ್ಡ ಗಾಯ ಮಾಡಿಬಿಟ್ಟೆ. ನಿನಗೆಷ್ಟು ಬಾರಿ ಹೇಳಿದ್ದೆ-ಈ ಪ್ರೀತಿ-ಪ್ರೇಮಗಳಲ್ಲಿ ನಾನು ಅರ್ಥ ಕಳೆದುಕೊಂಡಿದ್ದೇನೆ ಎಂದು. +ನಾನು ಪತ್ರ ಬರೆದು ಒಂದು ವಾರವಾಯಿತಲ್ಲವೆ? ವಸಂತ ಇದಕ್ಕೆ ಏನು ಬರೆಯುತ್ತಾಳೋ ನೋಡಬೇಕು. ಅಸಾಧ್ಯ ತಲೆಸಿಡಿತ. ವಸಂತಳ ಪತ್ರವೇ ಇದಕ್ಕೆ ಔಷಧ. ವಸಂತ, ನಿನ್ನ ಹಾಗೆ ನಾನೂ ಕುಳಿತಲ್ಲಿ, ನಿಂತಲ್ಲಿ, ನಿನ್ನನ್ನು ಯೋಚಿಸುತ್ತೇನೆ. ನನ್ನ ಟೇಬಲ್, ಕುರ್ಚಿಗಳ ಮೇಲೆಲ್ಲಾ ನಿನ್ನದೇ ಹೆಸರಿದೆ. ‘ನೀನು ನನ್ನ ಸ್ನೇಹಿತೆ’ ಎಂಬ ಕಾರಣಕ್ಕಾಗಿಯೇ ಇದೆಲ್ಲಾ ಮಾಡಿದ್ದೆ. ಖಂಡಿತಾ ಪ್ರೀತಿಯಿಂದಲ್ಲ. +‘ಪೋಸ್ಟ್’-ಧ್ವನಿ ಕೇಳಿ ತಲೆಯೆತ್ತಿದೆ. ಖಂಡಿತಾ ವಸಂತಳ ಪತ್ರವೇ ಇರಬೇಕು. ಅವನು ಕೊಡುವ ಮೊದಲೇ ಹಾರಿ ಪತ್ರ ಕಿತ್ತುಕೊಂಡು ಕವರನ್ನು ಸಿಕ್ಕಂತೆ ಹರಿದು ಒಳಗಿನ ಪತ್ರ ತೆಗೆದೆ. +ಮಿ|| ಮನೋಹರ, +ನಿಮಗೊಂದು ಕಹಿಸುದ್ದಿ. ನಿಮ್ಮ ಪತ್ರ ಓದಿದ ವಸಂತ ಬಹಳ ಅಪ್‌ಸೆಟ್ ಆಗಿಬಿಟ್ಟಿದ್ದಳು. ಆಫೀಸಿನಿಂದ ಪರ್ಮಿಷನ್ ತೆಗೆದುಕೊಂಡು ನಾನೇ ಅವಳನ್ನು ಮನೆಗೆ ಬಿಟ್ಟುಬಂದೆ. ಸಾಯಂಕಾಲ ಹೋದಾಗ ಮನೆಯಲ್ಲಿ ಅವಳಿರಲಿಲ್ಲ. ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ. ಒಟ್ಟಿನಲ್ಲಿ ರಾತ್ರಿ ನಿದ್ರೆ ಮಾತ್ರೆಗಳನ್ನು ನುಂಗಿ, ಪತ್ರ ಬರೆದಿಟ್ಟಿದ್ದಳು. ವಾಸು, ವಾಸುವಿನ ಹೆಂಡತಿ ಅಕಸ್ಮಾತ್ ವಿಚಾರಿಸಲು ಅಲ್ಲಿಗೆ ಹೋದಾಗ ವಿಷಯ ತಿಳಿದು, ಅವಳನ್ನು ಉಳಿಸಬೇಕಾದರೆ ಸಾಕುಸಾಕಾಯ್ತು. +ಆದರೆ, ಈಗ ಹುಷಾರಾಗಿದ್ದಾಳೆ. ನಿಮ್ಮ ಪತ್ರದ ಕಾರಣದಿಂದಲೇ ಅವಳು ಹೋಗೆ ಮಾಡಿಕೊಂಡಿರಬಹುದೆಂದು ನನ್ನ ಬಲವಾದ ಅನಿಸಿಕೆ. ಈ ಬಗ್ಗೆ ಅವಳು ಏನೂ ಹೇಳಲು ತಯಾರಿಲ್ಲ. ನನ್ನ ಗುರುತಿನವರ ನರ್ಸಿಂಗ್ ಹೋಂನಲ್ಲಿದ್ದಾಳೆ. ಹಣ ಅದು, ಇದೂ ನೋಡಿಕೊಂಡಿದ್ದರಿಂದ ಸದ್ಯಕ್ಕೆ ಪೋಲೀಸ್ ಕೇಸ್ ಆಗಲಿಲ್ಲ. +ನಿಮ್ಮನ್ನು ಸದಾ ನೆನೆಸುತ್ತಿರುತ್ತಾಳೆ. ನೋಡಲೇಬೇಕಂತೆ. ಸಾಧ್ಯವಾದರೆ ಬನ್ನಿ. +ಇತಿ, +ಸುಚಿತ್ರ. +ಅಯ್ಯೋ ವಸಂತಾ, ಇದೇನು ಮಾಡಿದೆ? ಛೇ, ನೀನು ಸೂಕ್ಷ್ಮ ಎಂದೇನೋ ಗೊತ್ತಿತ್ತು. ಆದರೆ ಇಷ್ಟೊಂದು ಎಂದು ಗೊತ್ತಿರಲಿಲ್ಲ. ಏನೂ ಮಾಡಲೂ ತೋರದೆ ಸ್ವಲ್ಪ ಹೊತ್ತು ತಲೆಯ ಮೇಲೆ ಕೈ ಹೊತ್ತು ಕುಳಿತೆ. +ರಜೆ ಬರೆದು ಹಾಕಿದೆ. ವಿಮಾನದಲ್ಲಿ ಕೂಡಲೇ ಹೊರಡುವುದೆಂದು ನಿರ್ಧರಿಸಿದೆ. ಮೇಲಿನ ಆಫೀಸರ್‌ನ ದಯೆಯಿಂದ ವಿಮಾನ ಹತ್ತುವತನಕ ಎಲ್ಲಾ ಸುಗಮವಾಗಿ ಆಯಿತು. ಆದರೆ ನನ್ನ ಮನಸ್ಸು? +ತೀರಾ ಆತಂಕವಾದಾಗ ತೆಗೆದುಕೊಳ್ಳುವಂತೆ ಡಾಕ್ಟರ್ ಈ ಹಿಂದೆ ಹೇಳಿದ್ದ ಮಾತ್ರೆ ತೆಗೆದುಕೊಂಡು ಅರ್ಧಗಂಟೆ ನಿದ್ರಿಸಿದೆ. ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂದು ಯೋಚಿಸುವಷ್ಟರಮಟ್ಟಿಗಾದೆ. +ಸದ್ಯ, ಇವತ್ತೆ ಬೆಂಗಳೂರು ತಲುಪಿಬಿಡುತ್ತೇನೆ. ಈ ವಿಷಯ ಸುಚಿತ್ರ ನನಗೆ ಎಷ್ಟೊಂದು ನಿಧಾನವಾಗಿ ತಿಳಿಸಿದ್ದಾಳೆ. ಕೂಡಲೇ ಟೆಲಿಗ್ರಾಂ ಕಳುಹಿಸಬಹುದಿತ್ತಲ್ಲ. ವಸಂತಾ, ನಿನ್ನ ಬಗ್ಗೆ ಯೋಚಿಸಲೂ ಸಹಾ ನನಗೆ ಆಗುತ್ತಿಲ್ಲ. ನಿನ್ನ ಕೈಗಳಲ್ಲಿ ಮುಖ ಮುಚ್ಚಿಕೊಂಡು ಜೋರಾಗಿ ಅತ್ತುಬಿಟ್ಟು ಹಗುರ ಮಾಡಿಕೊಳ್ಳಲೂ ನೀನೆಷ್ಟು ದೂರ? +ನನಗೆ ಪರಿಚಯದವರು ಬಹಳಷ್ಟು. ಆದರೆ ಸ್ನೇಹಿತರು ಕಡಿಮೆ. ಅದರಲ್ಲೂ ಆತ್ಮೀಯರು ಇನ್ನೂ ಕಡಿಮೆ. ನನ್ನ ಆತ್ಮೀಯತೆಯರಲ್ಲಿ ರತ್ನ ಒಬ್ಬಳು. ಈಗ ಮದುವೆಯಾಗಿ ಅವಳು ದೂರವಾಗಿದ್ದಾಳೆ. ನೀನು ಹೆಂಡತಿಯಾಗುವ ಆಸೆಯಿಟ್ಟುಕೊಂಡಿದ್ದೀ ಎಂದ ಕೂಡಲೇ ನನಗೆ ನಿನ್ನಲ್ಲಿ ಆತ್ಮೀಯತೆ ಕ್ಷಣದಲ್ಲಿ ಮಾಯವಾಗಿಬಿಡುತ್ತದೆ. +ವಸಂತಾ, ನೀನು ಇದುವರೆಗೆ ನನ್ನೊಡನೆ ಸ್ನೇಹ ಬೆಳೆಸಿದ್ದು ಕೇವಲ ಮದುವೆಯಾಗುವುದಕ್ಕೆ ಮಾತ್ರವೇನು? ನೀನೊಬ್ಬ ವಿಶಾಲ ಮನಸ್ಸಿನವಳೆಂದು ನಾನು ಆಕರ್ಷಿತನಾದೆ ಗೊತ್ತಾ? +ನೀನು ನನ್ನನ್ನು ಅರ್ಥಮಾಡಿಕೊಳ್ಳಲೂ ಯತ್ನಿಸದೆ, ನಿನ್ನವುಗಳನ್ನೇ ಹಿಂಜಿಕೊಳ್ಳುತ್ತಿರುವೆ. ನಿನ್ನ ಸ್ನೇಹ ಇಷ್ಟೇನಾ? +ನಿನ್ನ ಭೀಕರ ಮರಳುರಾಶಿಯ ಮರುಭೂಮಿಯಲ್ಲಿ ಹರಿಯುತ್ತಾ ಹರಡಿಕೊಳ್ಳುವ ಮೊದಲೇ ನಿನ್ನ ಇರುವಿಕೆಯ ಆ ತಿಳಿನೀರಿನ ನದಿ ಬತ್ತಿಹೋಯಿತಷ್ಟೆ! +ದುಃಖವಿಲ್ಲ, ಸಂತೋಷವಿಲ್ಲ. +ಆದರೆ ಈ ‘ಬರಿದಾದ’ ಸ್ಥಿತಿಯ ಅನುಭವವನ್ನು ನಾನು ಸಹಿಸಬಲ್ಲೆನೆ? +ಸರಿ ವಸಂತಾ, ನೀನೇನೋ ಆರಾಮವಾಗಿ ದೂರಸರಿದು ಹೋಗುತ್ತಿದ್ದೆ. ಉಳಿದವರ ಪಾಡು ಏನಾಗುತ್ತಿತ್ತು ಎಂಬುದನ್ನು ಸ್ವಲ್ಪವಾದರೂ ಯೋಚಿಸಿದೆಯಾ? ನಿನಗೆ ಎಲ್ಲರಿಗಿಂತ ಆತ್ಮೀಯನಾದ ಈ ಮನೋಹರ ಒಬ್ಬ ಮುಗ್ಧ ಹುಡುಗಿಯನ್ನು ಕೊಂಡ ಅಪರಾಧದ ದಾಳಿಗೆ ತುತ್ತಾಗಿ ತಡೆಯಲಾರದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಎಲ್ಲರಿಗೂ ನಮ್ಮ ನಡುವೆ ಎಂತಹ ಸಂಬಂಧವಿತ್ತೋ ಎಂಬ ಸಂಶಯ ಶುರುವಾಗುತ್ತಿತ್ತು. ನಮ್ಮ ಮನೆ ಸಂಪಾದಿಸುವ ವ್ಯಕ್ತಿ ಇಲ್ಲದೆ ಅನಾಥವಾಗಿತ್ತಿತ್ತು. ಇದಕ್ಕೆಲ್ಲಾ ಅವಕಾಶ ಮಾಡಿಕೊಡಲು ನಿನಗೆ ಹೇಗಾದರೂ ಮನಸ್ಸು ಬಂತೋ….ಪ್ರೀತಿ, ಪ್ರೇಮ ಎಲ್ಲಾ ಕ್ಷಣಿಕ ಅನುಭವಗಳು, ವಸಂತಾ. ನಮ್ಮ ಮುಂದೆ ಅನಾಥವಾಗಿ ಹಬ್ಬಿರುವ ಕಾಲ ಅವುಗಳನ್ನು ನಾಶ ಮಾಡಬಲ್ಲದು. ಪ್ರೀತಿ-ಪ್ರೇಮಗಳಿಂದ ಉಂಟಾದ ನೋವು-ನಲಿವುಗಳನ್ನು ಕಾಲವು ಕ್ರಮೇಣ ಮರೆಸುತ್ತದೆ. +ವಸಂತಾ, ನಿನ್ನ ಪಾಲಿಗೆ ಬದುಕು ಬಹಳವಾಗಿ ಹರಡಿಕೊಂಡಿದೆ. ಉತ್ಸಾಹವಿದೆ. ಬದುಕಿಗೆ ಒಲವಿದೆ. ನನ್ನ ಕೋರಿಕೆ ಏನೆಂದರೆ, ಬೇಗ ಯಾರನ್ನಾದರೂ, ನಿನ್ನ ಮನಸ್ಸಿಗೆ ಅತ್ಯಂತ ಆತ್ಮೀಯರೆನಿಸಿಕೊಂಡವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೋ. ನನ್ನ ಬಗ್ಗೆ ನೀನುತೋರಿದ ಆತ್ಮೀಯತೆಗೆ ತುಂಬಾ ಧನ್ಯವಾದಗಳು. ನಾನು ನಿನ್ನ ಬಾಳ ಸಂಗಾತಿಯಾಗುವ ಆಸೆ ಬೇಡ. ನಿನಗೆ ನಾನು ಅರ್ಹನಲ್ಲ. ಬದುಕನ್ನು ಅಶಾವಾದದ ದೃಷ್ಟಿಯಿಂದ ಕಾಣುವ ವ್ಯಕ್ತಿಯನ್ನು ಮದುವೆಯಾಗು. ನನ್ನಂಥ ಇರಾಶಾವಾದಿ ಖಂಡಿತಾ ಬೇಡ. ಇದೆಲ್ಲಾ ನಿನ್ನ ಒಳ್ಳೆಯದಕ್ಕೆ! +ವಸಂತಾ, ನನ್ನನ್ನು ಮದುವೆಯಾಗ್ತೀಯಾ? ನಿನಗಿನ್ನೂ ಗೊತ್ತಿಲ್ಲ, ನನ್ನ ಪರಿಸರ ಎಷ್ಟೊಂದು ಸಂಕುಚಿತವಾಗಿದೆ, ಅನಾಗರಿಕವಾಗಿದೆ ಎಂದು. ಬರೀ ಮೇಲೆ ಮೂರು ದಿನ ನೋಡಿದ್ದೀಯ ಅಷ್ಟೆ! ಆ ಪರಿಸರವನ್ನೆಲ್ಲಾ ತೋರಿಸಿದರೆ ಓಡಿಹೋಗ್ತೀಯಾ. ನೀನು ನನ್ನ ಬಗ್ಗೆ ಹೆಚ್ಚು ಆತ್ಮೀಯತೆಯ ಕಡ್ಡಿಗಳಿಂದ ಗೂಡುಕಟ್ಟಿಕೊಳ್ಳಬೇಡ. ಆ ಗೂಡು ಕೊನೆಗೆ ಖಾಲಿಯಾಗಿಯೇ ಉಳಿದುಹೋದರೆ ಆ ಖಾಲಿತನವನ್ನು ನೀನು ಸಹಿಸಲಾರೆ, ಇದು ನಿಜ. +ಬಂದ ವಸಂತಳನ್ನು ಬಳಸುವ ರೀತಿ ಗೊತ್ತಿಲ್ಲದ, ಎಲ್ಲವನ್ನೂ ಖರ್ಚುಮಾಡುವ ನಿರ್ಥಕ ಪ್ರಾಣಿ ನಾನು. ಮೊನ್ನೆ ಊರಿಂದ ಬರುವಾಗ ಅಮ್ಮನಿಂತ ಹಣ ತೆಗೆದುಕೊಂಡು ಬಂದೆ. ಮತ್ತೆ ಹುಚ್ಚು ನೆತ್ತಿಗೇರಿದಾಗ ರಾಜೀನಾಮೆ ಕೊಟ್ತು ಸೊನ್ನೆ ಸಂಬಳದ ನಿರುದ್ಯೋಗಿ ಆಗಿಬಿಡುವ ಭಯದಲ್ಲಿ ಸದಾ ಇದ್ದೇನೆ. ನನ್ನನ್ನು ಮದುವೆಯಾಗುವ ಹುಡುಗಿ ನನ್ನ ಅನಿಶ್ಚಿತತೆಯಲ್ಲಿಯೇ ಇರುತ್ತಾಳೆ. +ನಿನಗೆ ನನ್ನಿಂದ ನೋವಾಗಿದ್ದರೆ ಖಂಡಿತಾ ಕ್ಷಮಿಸಬೇಕು. ವಸಂತಾ, ನಿನ್ನ ಬದುಕಿಗೆ ಸರಿಪಡಿಸಲಾರದ ಹಾನಿಯೇನೂ ನಾನು ಮಾಡಿಲ್ಲವೆಂದುಕೊಂಡಿದ್ದೇನೆ. ಹಾಗೇನಾದರೂ ಹಾನಿಯಾಗಿದ್ದರೆ ನನ್ನ ಬದುಕನ್ನು ಬಲಿ ಕೊಟ್ತು ನಿನ್ನನ್ನು ಉಳಿಸಿಕೊಳ್ತೇನೆ. +ನಿನ್ನ ಆಸೆಗಳ ಚಿಗುರನ್ನು ಗಿಡ ಮರವಾಗಿಸಬಲ್ಲೆನೇ ಎಂಬ ಅಧೈರ್ಯ, ಆತಂಕ ನನಗಿದೆ. ನನಗೆ ಮದುವೆ ಆಗುವ ಆಸೆ ಇಲ್ಲ ಎಂದು ಹೇಳಿದೆ ಅಷ್ಟೆ! ನಿನ್ನ ತಣ್ಣಗಿನ ಸ್ನೇಹವನ್ನು ಬೇಡ ಎಂದು ನಿರಾಕರಿಸಲಿಲ್ಲ. +ಈ ಹುಚ್ಚನ ಸಹವಾಸ ಇಷ್ಟಕ್ಕೇ ಸಾಕಾಗಿ ಹೋಯ್ತೆ? ನನ್ನ ನೆನಪಿನಿಂದ ನಿನ್ನನ್ನು ದೂರ ಮಾಡಿದರೆ, ಅಲ್ಲಿ ಉಳಿಯುವುದು ಏನನ್ನೂ ಬೇಳೆಯಗೊಡಲಾರದ ಮರಳುಗಾಡು ಮಾತ್ರ…. +ಇನ್ನೊಮ್ಮೆ ಯಾವುದೇ ವಿಷಯಕ್ಕೂ ನೀನು ಆತ್ಮಹತ್ಯೆಯ ಬಗ್ಗೆ ಯೋಚಿಸಿದರೆ ನನ್ನ ಸಾವು ಖಂಡಿತ. ನಾನು ಭಯಂಕರ ಬರಡುತನದ ಹುಚ್ಚು ಮನುಷ್ಯನಾದರೂ ನಾನು ಯಾರ ಸಾವನ್ನೂ ಬಯಸುವುದಿಲ್ಲ. ಮುಖ್ಯವಾಗಿ ಯಾರ ಸಾವಿಗೂ ಕಾರಣವಾಗಲಾರೆ. ಈ ಈಟಿಯ ಇರಿತದಿಂದ ನಾನು ಬದುಕಲು ಸಾಧ್ಯವಿಲ್ಲ. +ನನಗೆ ತುಂಬಾ ನೋವೆನಿಸಿದೆ ವಸಂತಾ,ನೀನು ಯಾಕೆ ಹೀಗೆ ಮಾಡಿದೆ? ನಿನ್ನ ಮನಸ್ಸು‌ಅಷ್ಟೊಂದು ಸೂಕ್ಷ್ಮ, ದುರ್ಬಲ ಎಂದು ಗೊತ್ತಿದ್ದರೆ ನಿನ್ನ ಸ್ನೇಹವನ್ನು ಮಾಡುತ್ತಿರಲಿಲ್ಲ. ನಿನ್ನ ಹತ್ತಿರವೂ ಸುಳಿಯುತ್ತಿರಲಿಲ್ಲ. ನಿನ್ನ ಪತ್ರಗಳಿಂದ ನೀನೊಬ್ಬ ಗಟ್ಟಿಮನಸ್ಸಿನ, ವಿಚಾರವಂತಳೆಂದು ತಿಳಿದು ನಿನ್ನ ಬಳಿ ಮೈಚಳಿ ಬಿಟ್ಟು ನಿಸ್ಸಂಕೋಚದಿಂದ ಸ್ನೇಹ ಮಾಡಿದೆ. ಆ ಸ್ನೇಹ ಹೀಗೆಲ್ಲಾ ಒಬ್ಬರಿಗೆ ಹಿಂಸೆಕೊಟ್ಟು ಸಾವಿನ ಅಂಚಿಗೆ ದೂಡುತ್ತದೆ ಎಂದು ನಾನು ಕಲ್ಪಿಸಿಯೂ ಇರಲಿಲ್ಲ. +ಸಾಕು, ಇನ್ನು ನನ್ನ ಬದುಕಿನಲ್ಲಿ ಯಾವ ಹುಡುಗಿಯನ್ನೂ ಹೆಚ್ಚಿಗೆ ಮಾತನಾಡಿಸೊಲ್ಲ. ಸ್ನೇಹ ಮಾಡಿಲ್ಲ. ಸದ್ಯಕ್ಕೆ ನೀನೊಬ್ಬಳು ನನ್ನ ಪಾಲಿಗಿದ್ದು ಅರ್ಥಮಾಡಿಕೊಂಡರೆ ಸಾಕು. +ನನ್ನಲ್ಲಿ ನೀನು ಕಂಡ ವಿಶೇಷವೇನು ವಸಂತಾ? ಹೃದಯವಿಲ್ಲದ ಕ್ರೂರಿ ಎಂದೇ? +ನನ್ನ ಬಣ್ಣ, ರೂಪು, ಸಂಬಳ ಇದಕ್ಕಾಗಿ ಇಷ್ಟಪಟ್ಟೆಯಾ? ಇವೆಲ್ಲಾ ಅಶಾಶ್ವತ ಎಂದು ಗಿತ್ತಿಲ್ಲವೇ? ಇಲ್ಲ, ಈ ಕ್ಷುಲ್ಲಕ ಕಾರಣಗಳಿಗಾಗಿ ನೀನು ನನ್ನನ್ನು ಪ್ರೀತಿಸೋಲ್ಲ ಅಲ್ವಾ?… +ಆಸ್ಪತ್ರೆ ತಲುಪಿದಾಗ ಸುಚಿತ್ರ, ವಾಸು ಇಬ್ಬರೂ ಅಲ್ಲಿಯೇ ಇದ್ದರೂ ನಾನು ಬಂದಿದ್ದು ಗೊತ್ತಾದರೂ ಗೊತ್ತಾಗದ ಹಾಗೆ ವರ್ತಿಸಿದರು. ನನಗೇನೂ ಬೇಸರವಾಗಲಿಲ್ಲ. +ವಸಂತ, ಮಾನಸಿಕವಾಗಿ ದೈಹಿಕವಾಗಿ ದುರ್ಬಲಳಾಗಿರುವುದರಿಂದ ಇಷ್ಟು ದಿನಗಳೂ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಿದ್ದರು. +ನಾನು ವಾರ್ಡಿನ ಒಳಗೆ ಹೋದಾಗ ಸೋತಮುಖದ ವಸಂತ ಮಗುವಿನಂತೆ ನಿದ್ದೆ ಮಾಡುತ್ತಿರುವುದು ಕಂಡಿತು.ಅದೆಷ್ಟು ಪ್ರಯತ್ನಪಟ್ಟರೂ ನನ್ನಿಂದ ಅಳುವನ್ನು ತಡೆಯಲಾಗಲಿಲ್ಲ. ನನ್ನ ಬಿಕ್ಕುವಿಕೆ ಕೇಳಿ ವಸಂತ ಕಣ್ಣುಬಿಟ್ಟು, ತಟಕ್ಕನೆ ಎದ್ದು ಕುಳಿತಳು. ಆ ಕ್ಷಣಕ್ಕೆ ಅವಳನ್ನು ಬಲವಾಗಿ ಅಪ್ಪಿ ಹಣೆಗೆ ಮುತ್ತುಕೊಟ್ಟೆ. ವಸಂತಳ ಕಣ್ಣಲ್ಲೂ ನೀರು! +“ಅಳಬೇಡ ಮರಿ. ಮಲಕ್ಕೊಂಡೇ ಮಾತಾಡು” ಎಂದು ತಲೆಸವರಿದೆ. ಕೆನ್ನೆಯ ಮೇಲಿದ್ದ ಕೈಯನ್ನು ವಸಂತ ಅಲ್ಲೇ ಬಿಗಿಯಾಗಿ ಹಿಡಿದುಕೊಂಡಳು. ಸ್ವಲ್ಪ ಹೊತ್ತು ನಮಗೆ ಏನು ಮಾತನಾಡಲೂ ತೋರಲಿಲ್ಲ. ಹಾಗೇ ಸುಮ್ಮನೆ ಕುಳಿತಿರುವುದೇ ಅತ್ಯಂತ ಪ್ರಿಯವಾಯಿತು. +“ವಸಂತಾ, ನೀನು ಹೀಗೆ ಮಾಡಬಾರದಿತ್ತು” ಎಂದೆ. +ವಸಂತ ಎರಡು ಕ್ಷಣ ಕಣ್ಣು ಮುಚ್ಚಿದಳು. ನಂತರ “ಅದು ತಪ್ಪು ಅಂತ ನನಗೆ ಗೊತ್ತಾಗಿದೆ. ನನ್ನ ಆಫೀಸಿನ ಜನ, ನಿಮ್ಮ ಹಳ್ಳಿಯ ಜನ ಇವರಿಗೆಲ್ಲಾ ಏನು ಉತ್ತರ ಕೊಡಬೇಕೆಂಬುದೇ ನನ್ನ ಸಮಸ್ಯೆಯಾಗಿತ್ತು. ಜೊತೆಗೆ ನೀವು ನನ್ನನ್ನು ನಿರಾಕರಿಸಿದಿರಿ ಎಂಬುದೂ ದೊಡ್ಡ ಅಪಮಾನ ಎನಿಸಿ ತಡೆದುಕೊಳ್ಳಲಾಗಲಿಲ್ಲ. ಆದರೆ ಈಗ, ಒಮ್ಮೆ ಸಾಯಲು ಪ್ರಯತ್ನಪಟ್ಟು ಬದುಕಿದ ಮೇಲೆ ಏನನ್ನಿಸ್ತಾ ಇದೆ ಗೊತ್ತಾ? ಈ ಪ್ರೀತಿ ಪ್ರೇಮಗಳಿಗೆ ಒದ್ದಾಡಿ ಸಾಯುವುದಕ್ಕಿಂದ ಕೊನೆತನಕ ಬರುವ ಸ್ನೇಹವೇ ಇಷ್ಟವಾಗುತ್ತದೆ” ವಸಮ್ತ ಹೇಳಿದಾಗ ನಾನು ನಿಜಕ್ಕೂ ಆಶ್ಚರ್ಯದಿಂದ ಮೂಕನಾದೆ. ವಸಂತ ಇದೇನು ಹೇಳುತ್ತಿದ್ದಾಳೆ? ಈ ಮಾರ್ಪಾಟು ಹೇಗೆ ಆಯಿತು? ಈ ವಿಸ್ಮಯದಿಂದ ಚೇತರಿಸಿಕೊಳ್ಳಲು ನನಗೆ ಬಹಳ ಹೊತ್ತು ಹಿಡಿಯಿತು. +ವಸಮ್ತ, “ಯಾಕೋ ನಿಮ್ಮ ಪತ್ರಗಳನ್ನು ಮತ್ತೆ ಮತ್ತೆ ಓದಿದೆ. ನಾನಾಗ ನಿಮ್ಮ ಪತ್ರಗಳನ್ನು ಓದಿದಾಗ ಏನೇನು ಅಂದುಕೊಳ್ಳುತ್ತಿದ್ದೆನೋ ಅದೆಲ್ಲಕ್ಕಿಂತ ಬೇರೆಯದಾಗಿ, ಹೊಸದಾಗಿ ಕಂಡಿತು. ನಾನು ನಿಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲ, ಅಂತ ಅನಿಸಿದಾಗ ನನ್ನ ಮೇಲೇ ನನಗೆ ಎಷ್ಟು ಕೆಟ್ಟ ಕೋಪ ಬಂದಿತ್ತು ಗೊತ್ತಾ? ಜೋರಾಗಿ ತಲೆ ಚೆಚ್ಚಿಕೊಂಡೆ. ನಾನೇ ಮುರ್ಖತನದಿಂದ, ಅವಸರದಿಂದ ಹಾಗೆಲ್ಲಾ ಬರೆದುಬಿಟ್ಟೆ. ದಯವಿಟ್ಟು ಕ್ಷಮಿಸಿ. ಕ್ಷಮಿಸುತ್ತೀರಾ ಅಲ್ವಾ” ಮಗುವಿನಂತೆ ಕೇಳಿದಾಗ ಆಸ್ಪತ್ರೆಯೆಂಬುದನ್ನು ಮರೆತು ಸಂತೋಷದಿಂದ ಎರಡುಬಾರಿ ಜಂಪ್ ಮಾಡಿ ವಸಂತಳ ಕೈಗಳನ್ನು ತೆಗೆದುಕೊಂಡು ಸಂತೋಷ ತಾಳಲಾರದೆ ಅವಳ ಕೈಗಳಲ್ಲಿ ಮುಖವನ್ನು ಹುದುಗಿಸಿದಾಗ ಅಮ್ಮನಲ್ಲಿ ಸೇರಿಕೊಂಡ ಮಗುವಿನಂತೆ ಹಾಯೆನಿಸಿತು. +ಬಾಂಬೆಯಿಂದ ಬರುವಾಗ ನನಗೆ ಬಂದ ಯೋಚನೆಗಳನ್ನು, ಭಾವನೆಗಳನ್ನೆಲ್ಲ ತಿಳಿಸಿದಾಗ ವಸಂತ ನಕ್ಕು, “ಇನ್ನು ಮೇಲೆ ಅವೆಲ್ಲಾ ಹೇಳದೆಯೇ ಅರ್ಥ ಆಗುತ್ತದೆ” ಎಂದಳು. ನಾನು ನಿರೀಕ್ಷಿಸಿದ್ದ ವಸಂತಳ ಈ ಮಾರ್ಪಾಡು ನನಗಿನ್ನೂ ಅಚ್ಚರಿ ತರುತ್ತಲೇ ಇದೆ. ಮನುಷ್ಯನ ಮನಸ್ಸು ಬಹಳ ವಿಚಿತ್ರ. ಯಾವ ಕ್ಷಣದಲ್ಲಿ ಏನೇನು ಅನ್ನಿಸುತ್ತೋ ಅದರ ಗತಿಯನ್ನು ಅನುಸರಿಸುವುದು ತುಂಬಾ ಕಷ್ಟ! +“ನನ್ನ ಸ್ನೇಹ ಬಿಟ್ಟುಬಿಡಿ ವಸಂತಾ, ನಾನು‌ಎಷ್ಟೊಂದುತೊಂದರೆ ಕೊಟ್ಟೆ ಅಲ್ವಾ?” ನಾನು ತುಂಟತನದಿಂದ ಕೇಳಿದಾಗ, ವಸಂತಾ ದೊಡ್ಡದಾಗಿ ನಕ್ಕುಬಿಟ್ಟು “ಹಾಗೆಲ್ಲಾ ಹೇಳಿದರೆ ನಾನು ನಿಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತೇನೆ ಅಷ್ಟೆ. ಈಗ ನಾನು ಹೊಸ ವಸಂತ ಗೊತ್ತಾ? ಇದು ನನ್ನ ಮರುಹುಟ್ಟು. ಸಾಮಾನ್ಯ ವಸಂತ ನಿಮ್ಮ ಪಾಲಿಗೆ ಇನ್ನಿಲ್ಲ” ಎಂದವಳೇ ಹತ್ತಿರ ಸರಿದು, “ಇನ್ನು ಮೇಲೆ ಅವಳು ಬದುಕಿನಬಗ್ಗೆ ನಿಮ್ಮ ಹಾಗೆಯೇ ತಲೆ ಕಿಡಿಸಿಕೊಂಡು ಮರಳುಗಾಡಿನಲ್ಲಿ‌ಅಲೆಯುತ್ತಾ ಜೀವನ ನಡೆಸಬಹುದು” ಎಂದಾಗ ಅವಳ ಬಾಯಿಗೆ ಕೈ ಅಡ್ಡ ಇಟ್ಟೆ. ನನಗೆ ತುಂಬಾ ಬೇಸರವಾಗಿತ್ತು. +“ವಸಂತ, ನಾನು ಹೀಗಾಗುವುದಕ್ಕೆ ನನ್ನ ಪರಿಸರ, ಕುಟುಂಬ ಇದೆಲ್ಲಾ ಕಾರಣ. ಕೇವಲ ಒಂದೆರಡು ದಿನಗಳಲ್ಲಿ ನನಗೆ ಬದುಕಿನ ಬಗ್ಗೆ ಬೇಸರ ಬಂದಿದ್ದಲ್ಲ. ಈ ರೀತಿಯ ಬೇಸರ ಬರುವುದಕ್ಕೆ ಸುಮಾರು ಇಪ್ಪತ್ತು ವರ್ಷಗಳೇ ಹಿಡಿದಿದೆ. ನನ್ನ ಮುದ್ದು ವಸಂತ ಹಾಗೆ ಆಗುವುದಕ್ಕೆ ನಾನು ಬಿಡೋಲ್ಲ. ಬೇಗ ನಿಮಗಿಷ್ಟವಾದವರನ್ನು ಮದುವೆಯಾಗಿಬಿಡಿ, ಸರಿಹೋಗುತ್ತೆ. ಹಾಗಂತ, “ನೀವೇ ಇಷ್ಟ, ಮದುವೆಯಾಗಿ’ ಅಂತ ಹೇಳಿಬಿಡಿ” ಎಂದುಚೇಷ್ಟೆ ಮಾಡಿದೆ. +“ಹಾಗೆಲ್ಲಾ ಜ್ಞಾಪಿಸಿ ಚುಚ್ಚು ಮಾತನಾಡಬಾರದಪ್ಪ. ನಾನು ನಿಮ್ಮನ್ನು ಮದುವೆಯಾಗಲು ಕೇಳಿದ್ದನ್ನು ಮರೆತುಬಿಡಬೇಕು” ಎಂದು ವಸಂತ ಚಿಕ್ಕ ಹುಡುಗಿಯಂತೆ ಮುಖ ಊದಿಸಿದಾಗ ಅವಳ ಮೇಲೆ ಮುದ್ದು ಉಕ್ಕಿ ಬಂದು, ಅವಳ ತಲೆಯನ್ನು ಎದೆಗೆ ಒತ್ತಿಕೊಂಡು, “ವಸಂತಾ, ನಿನ್ನಲ್ಲಿ ಬದುಕಿದೆ. ಭಾವನೆಗಳಿವೆ. ನಾನೇ ನಿಂತು ನಿನಗೆ ಮದುವೆ ಮಾಡುತ್ತೇನೆ, ಸರಿನಾ?” ಅಂದೆ. +“ಹೂಂ. ಆದರೆ ಬರೀ ಮದುವೆಯ ಬಗ್ಗೇನೇ ಹೇಳ್ತಾ ಇದ್ದೀರಲ್ಲಾ, ಬೇರೆ ಏನಾದ್ರೂ ಮಾತಾಡಿ” ಎಂದಳು. +“ಹಾಗಿದ್ದರೆ ನೀವು ನನ್ನ ಪಾಲಿಗೆ ನಾನು ಯೋಚಿಸಿದ್ದಂತಹ ಮೊದಲಿನ ವಸಂತಾನೇ ಆಗ್ತೀರಾ ಅಲ್ವಾ? ನಾನು ನಿಮ್ಮಿಂದ ಏನನ್ನೂ ನಿರೀಕ್ಷಿಸೊಲ್ಲ. ಒಂದು ನಿಷ್ಕಲ್ಮಶ ಸ್ನೇಹಕ್ಕಾಗಿ ಸದಾ ಒದ್ದಾಡುವ ನನಗೆ ನೀವು ನಿಮ್ಮ ಸರಳವಾದ ತುಂಬು ಸ್ನೇಹ ನೀಡಿದರೆ ಸಾಕು. ಅಷ್ಟಕ್ಕೇ ನಾನು ತೃಪ್ತ. ಜೀವನದಲ್ಲಿ ಇದಕ್ಕಿಂತ ಹೆಚ್ಚಿನದೇನೂ ನನಗೆ ಬೇಡ. ನನಗೆ ನನ್ನ ನೋವು-ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸ್ನೇಹಿತ ಅಥವಾ ಸ್ನೇಹಿತೆ ಬೇಕೇ ಹೊರತು, ಹೆಂಡತಿ ಅಲ್ಲ. ನೀವು ನನ್ನ ಸ್ನೇಹಿತೆ, ನನ್ನ ಮನಸ್ಸಿನಲ್ಲಿ ನಾನು ರೂಪಿಸಿಕೊಂಡಂತಹ ವಸಂತಳೇ ಆಗಿ, ಸ್ನೇಹಿತಳ ಸ್ಥಾನವನ್ನು ತುಂಬಿ ಕೊನೆಯವರೆಗೂ ನನ್ನನ್ನು ಉಳಿಸಿಕೊಳ್ಳುತ್ತೀರಿ ತಾನೇ?” +ವಸಂತ ಪುಟ್ಟ ನಗೆ ನಕ್ಕು, ನಿಧಾನವಾಗಿ ತಲೆಯಾಡಿಸಿ“ಹೂಂ” ಎಂದಳು. ನಾನು ನಿರೀಕ್ಷಿಸಿದ್ದ ಉತ್ತರವೇ ಆಗಿದ್ದರೂ, ತಲೆಯಲ್ಲಿ ಬಂಡೆಯಂತೆ ಇದ್ದ ಯೋಚನೆಗಳೆಲ್ಲಾ ಕ್ಷಣಮಾತ್ರದಲ್ಲಿ ಕರಗಿಹೋಯಿತು. ಸಂತೋಷವನ್ನು ಭರಿಸಲಾರದೆ, ವಸಂತಳ ಕೈಹಿಡಿದು ಸುತ್ತಲೂ ಯಾರಿದ್ದಾರೆ ಎನ್ನುವ ಪರಿವೆಯೂ ಇಲ್ಲದೆ ಅತ್ತುಬಿಟ್ಟೆ. +ವಸಂತ ನನ್ನನ್ನು ಸಮಾಧಾನ ಪಡಿಸುವವಳಂತೆ ತಲೆ ಸವರುತ್ತಿದ್ದಳು. ಕಳೆದುಹೋಗಿದ್ದ ನನ್ನ ಅಪೂರ್ವ ವಸ್ತು ಮತ್ತೆ ನನಗೆ ದೊರಕಿತ್ತು! +***** +ಕೀಲಿಕರಣ: ಸೀತಾಶೇಖರ್ ಮತ್ತು ಅನ್ನಪೂರ್ಣ ಸುಬ್ಬರಾವ್ +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ […] +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_586.txt b/Kannada Sahitya/article_586.txt new file mode 100644 index 0000000000000000000000000000000000000000..b3afba3d8a9d3e215f5335efcd2b10d8cb863ee6 --- /dev/null +++ b/Kannada Sahitya/article_586.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು +ಮೈತುಂಬ ಬಾಯಾಗಿ +ತುಂಬಿ +ತುದಿಯಾಗಿರುವ +ಬದ್ಧ- +ಬುಗುರಿ. +ಗುರುತ್ವ +– ಬಿಂಬದ ಸುತ್ತೂ ಸುತ್ತಾಗಿಸಿ +ಹತ್ತಿ ಹತ್ತಾಗಿಸಿ ಗರಾ ಗರಾ +ತಿರುಗಿಸಿಕೊಂಡು ತಿರುಗಿ ನೇರ +ನಿಗುರಿ ನಿಂತರೆ ಮಾತ್ರ +ನನಗೆ ಏನಾದರೂ +ಅಸ್ತಿತ್ವ-ಒಂದು +ಗುರಿ +ಇಲ್ಲವಾದರೆ- +ತೆಪ್ಪಗೆ ಕೈಕಾಲೆಳೆದು +ಹವೆಯಾಗಿ ಹರಿದೀ +ವರ್ತಮಾನದಲ್ಲಿ +ತೇಲುವ +ನಿರ್ಜನ ಸೌಧಗಳ +ಅಂಗಾತನಗರಿ +***** +– ೧ – ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ ಗದೇ ಮಾಮೂಲು ಭಂಗಿ; ಯಾರೂ […] +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು […] +ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ. ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ. ಚಿಕ್ಕೆ ಚಕ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_587.txt b/Kannada Sahitya/article_587.txt new file mode 100644 index 0000000000000000000000000000000000000000..d0c17f0bd18695c171c2abe309242deffb7d1cff --- /dev/null +++ b/Kannada Sahitya/article_587.txt @@ -0,0 +1,25 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಕಮ್ಯುನಿಸ್ಟರ ದೇಶದಲ್ಲಿ +ಗುಟ್ಟಾದ ದೇವರ ಗುಡಿ ಚೆಂದ +ಬಲರೆಪ್ಪೆ ಅದುರೀತೆಂದು ಭಯ ಬೀಳುವ +ಸುಶಿಕ್ಷಿತಳ ಬೆಡಗು ಚೆಂದ +ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ +ನೀತಿವಂತ ಸಭ್ಯರ ಘನತೆಗಿಂತ +ತಂಗಿಯ ಹೇನು ಹೆಕ್ಕುತ್ತ ಏಕಾಗ್ರವಾಗಿ ಕೂತವಳ +ಕಣ್ಣು ಮೂತಿ ಚೆಂದ +ಮೂಲಕ ಮಹಾಶಯರಾದ ಪತ್ರಕರ್ತರ ಹದ್ದುಗಣ್ಣಿಗೆ ಬಿದ್ದು +ಸುದ್ದಿಯಾಗದಂತೆ ಗುಟ್ಟಲ್ಲಿ ಅರಳುವ +ಖ್ಯಾತಿವಂತರ ಗುಪ್ತ ಪ್ರಣಯ ಚೆಂದ. +***** +ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […] +ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_588.txt b/Kannada Sahitya/article_588.txt new file mode 100644 index 0000000000000000000000000000000000000000..e01c9abcbd677a52f5b2fdb85484384e6334b8cf --- /dev/null +++ b/Kannada Sahitya/article_588.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: +“ಕರ್ನಾಟಕ ಇಂದು ಬರದ ದವಡೆಗೆ ಸಿಲುಕಿದೆ. ಮಳೆಯಿಲ್ಲ. ಬಡ ರೈತನ ಹಾಹಾಕಾರದ ಸದ್ದು ಅಮೆರಿಕೆಯವರೆಗೆ ಕೇಳಿಸದೇನೋ. ಬಡತನದಲ್ಲೇ ಅರಳುತ್ತಾ ಹೋಗುವ ಸಂಸ್ಕೃತಿಯ ಪ್ರಸ್ತುತಿ ಬೇಕಾಗಿಲ್ಲವೇನೋ ಎಂಬಂತಹ ಸಂಶಯಗಳು ಬಂದರೂ ಸಹ- ‘ಚೆನ್ನಾಗಿರುವವರು ಚೆನ್ನಾಗಿರಲಿ’ ಎಂದು ಹರಸುವ ವೈಶಾಲ್ಯ ಇಲ್ಲದೆ ಹೋದರೆ ಸಿಕ್ಕುವ ಅಲ್ಪಸ್ವಲ್ಪ ಸಂಭ್ರಮವೂ ದಕ್ಕದೆ ಹೋದಾತು ಎನ್ನುವ ಅರಿವೂ ಮುಖ್ಯ. ಕನ್ನಡಸಾಹಿತ್ಯ.ಕಾಂ ಹರಸುತ್ತಲೇ ವಿಶ್ವಕನ್ನಡ ಸಮ್ಮೇಳನದಲ್ಲಿ ಏನಾದರೂ ಅರ್ಥವತ್ತಾದ ಚರ್ಚೆಯಾಗಲಿ, ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸುತ್ತದೆ..ಸಂಭ್ರಮಿಸುವವರನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಉಳಿದವರು ಕಾರ್ಯೋನ್ಮುಖಿಗಳಾಗುತ್ತಾರೆಯೋ ಎಂಬುದು ಕಾದು ನೋಡಬೇಕಾದ ತಾಳ್ಮೆ ಹಾಗು ವಿವೇಕ ನಮ್ಮಲ್ಲಿ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ. ಇರಬಹುದಾದ ಶಕ್ತಿಯನ್ನೆಲ್ಲ ಕಿರಿಕಿರಿಗಳನ್ನು ದೊಡ್ಡದು ಮಾಡುವಲ್ಲಿ ವ್ಯಯಿಸುತ್ತಾ ಹೋಗುವ ಅವಿವೇಕವೂ ಸಹ ನಿಲ್ಲಬೇಕು ಎನ್ನುವುದು ಸಹ ನಮ್ಮ ಅರಿವಿನಲ್ಲಿರಬೇಕು. ಅದು ಎಲ್ಲರಲ್ಲಿ ಇರುತ್ತದೆ ಎಂದು ನಿರೀಕ್ಷಿಸುವುದು ಅತ್ಯಾಶಯವಾಗಿಬಿಡುತ್ತದೆ..ಹೀಗಾಗಿ ಕಿರಿಕಿರಿಗಳನ್ನು ಬದಿಗೊತ್ತಿ, ಸಣ್ಣಪುಟ್ಟ ಸಂಭ್ರಮಗಳಿಗಷ್ಟೆ ಮೂರು ದಿನಗಳ ಸಮ್ಮೇಳನವನ್ನು ಸೀಮಿತಗೊಳಿಸದೆ ಹಮ್ಮಿಕೊಳ್ಳಬಹುದಾದ ಎಲ್ಲ ಒಳ್ಳೆಯ ಕೆಲಸಗಳನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಸುತ್ತದೆ ಎಂದಷ್ಟೆ ಈಗ ಹೇಳುವುದು ಉಚಿತವಾದೀತೇನೊ. ಸಮ್ಮೇಳನ ಈ ದಿಸೆಯಲ್ಲಿ ಯಶಸ್ವಿಯಾಗಲಿ ಎಂದು ಕನ್ನಡಸಾಹಿತ್ಯ.ಕಾಂ ಹಾರೈಸುತ್ತದೆ.” +ಕನ್ನಡಸಾಹಿತ್ಯ.ಕಾಂ ಈ ಬಾರಿ ಇಬ್ಬರು ಪ್ರಮುಖ ಕನ್ನಡ ಲೇಖಕರನ್ನು ಒಳಗೊಳ್ಳುತ್ತಿದೆ. ಕೆ ಎಸ್ ನಿಸಾರ್ ಅಹಮದ್ ಹಾಗು ಯಶವಂತ ಚಿತ್ತಾಲರು. ಕೇಳಿದೊಡನೆಯೇ ಅನುಮತಿ ನೀಡಿದ ಈ ಹಿರಿಯ ಲೇಖಕರಿಗೆ ಕನ್ನಡಸಾಹಿತ್ಯ.ಕಾಂ ಆಭಾರಿಯಾಗಿರುತ್ತದೆ. ನಿಸಾರರ ಹದಿನೈದು ಕವನಗಳನ್ನು ಒಂದು ಲೇಖನದ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಲಾಗಿದೆ. ಉಳಿದ ಅನುವಾದಗಳನ್ನು ಮೂಲ ಅನುವಾದಕರ ಅನುಮತಿ ದೊರೆತೊಡನೆ ಪ್ರಕಟಿಸಾಗುವುದು. ಈ ಬಾರಿ ಯಶವಂತ ಚಿತ್ತಾಲರ ಮೊದಲ ಸಣ್ಣ ಕತೆಯೊಂದಿಗೆ ಆರಂಭಿಸಲಾಗಿದೆ. ಚಿತ್ತಾಲರ ಸಣ್ಣಕತೆಗಳ ಅಧ್ಯಯನ ಮಾಡುತ್ತಿರುವವರ ಅನುಕೂಲಕ್ಕಾಗಿ ಅವರು ಬರೆದ ಅನುಕ್ರಮಣದಲ್ಲಿಯೇ ಪ್ರಕಟಿಸಲು ಯತ್ನಿಸಲಾಗುವುದು. ಇದೇ ರೀತಿ ಪ್ರತಿ ಲೇಖಕರ ಕೃತಿಗಳನ್ನು ಕಾಲಾನುಕ್ರಮಣಿಕೆಯಲ್ಲಿಯೇ ಪ್ರಕಟಿಸುವುದು ಸೂಕ್ತವೆಂದನ್ನಿಸುತ್ತದೆ. ಆಗ ಒಂದು ರೀತಿಯ ತೌಲನಿಕ ಅಧ್ಯಯನಕ್ಕೂ ಅನುವು ಮಾಡಿಕೊಟ್ಟಂತಿರುತ್ತದೆ. +ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ- ಕನ್ನಡಸಾಹಿತ್ಯ.ಕಾಂ ಆರಂಭಿಸಿದ್ದು ಸರಿಯಾದುದೆ- ಯಾರಿಗಾಗಿ ಮಾಡುತ್ತಿದ್ದೇನೆ ಎಂದೆಲ್ಲ. ಮತ್ತೊಮ್ಮೆ ಯಾರಿಗಾಗೂ ಅಲ್ಲ, ನನಗಾಗಿ ಹಾಗು ನನ್ನಂತಹವರಿಗಾಗಿ ಎಂದನ್ನಿಸುತ್ತದೆ. ಬೃಹತ್ ಆಗಿರುವ ಅಂತರ್ಜಾಲದಲ್ಲಿ, ಇಂಗ್ಲಿಷ್ ನಡುವೆ ಕನ್ನಡಕ್ಕೂ ಸ್ಥಾನವಿದೆ ಎಂಬುದು ನನ್ನ ವಾದ, ಆ ಸ್ಥಾನ ದಕ್ಕಿಸಿಕೊಳ್ಳಲು ಏನನ್ನಾದರೂ ಮಾಡಬೇಕು: ಹೀಗಾಗಿ ಕನ್ನಡಸಾಹಿತ್ಯ.ಕಾಂ ಅನಿವಾರ್ಯ. ಎಲ್ಲೋ ನನ್ನಂಥವರೂ ಇರುತ್ತಾರೆ ಎಂದು ಹುಡುಕಿಕೊಂಡು ಅಲೆಯುತ್ತೇನೆ..ಹೀಗೆ ಸಿನಿಮಾ ಕ್ಷೇತ್ರದಲ್ಲಿ ಬಹುಶಃ ಇವೇ ಪ್ರಶ್ನೆಗಳು ಗಿರೀಶ್ ಕಾಸರವಳ್ಳಿಯವರನ್ನೂ ಕಾಡುತ್ತಿರುತ್ತವೆಯೆ ಎಂದು ಸಹ ಆಲೋಚಿಸುತ್ತೇನೆ. ಬಹುಶಃ ನಾವಿಬ್ಬರೂ ತಪ್ಪುಗಳನ್ನು ಮಾಡುತ್ತಿರಬೇಕು. ಅಥವಾ ಅನಿವಾರ್ಯವಾದದ್ದನ್ನ ಮಾಡುತ್ತಿದ್ದಿರಬೇಕು. ಕನ್ನಡಸಾಹಿತ್ಯ.ಕಾಂ ಗೆ ಇರಲಿ, ಕಾಸರವಳ್ಳಿಯವರ ಸಿನಿಮಾಗಳಿಗಾಗಲಿ ಓದುಗರು- ವೀಕ್ಷಕರು ಒಂದೇ ವರ್ಗದ ಜನ. ಈ ವರ್ಗದ ಜನರ ಬಗೆಗೆ ನನ್ನದೇ ಆದ ಹೋರಾಟವಿದೆ/ಆಕ್ಷೇಪಗಳಿವೆ, ಜೊತೆಗೆ ನಮ್ಮ ಸುತ್ತಮುತ್ತಲಿನ ಎಲ್ಲ ರೀತಿಯ ಕ್ಷೋಬೆಗಳನ್ನು ನಿವಾರಿಸುವ ಎಲ್ಲ ರೀತಿಯ ಶಕ್ತಿಗಳನ್ನು ಕೊಡುವವವರೂ ಸಹ ಇವರೆ ಎಂಬ ವಿಪರ್ಯಾಸದ ಅರಿವೂ ಇದೆ. ಬಹುಶಃ ಕಾಸರವಳ್ಳಿಯವರ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದ್ದೇ ಇದೆ- ಮುಂದೆಯೂ ಇರುತ್ತೆ. ಹೀಗೆಯೇ ಕನ್ನಡಸಾಹಿತ್ಯ.ಕಾಂ ನಂತಹ ಪ್ರಯತ್ನ ಸಹ ಕೇವಲ ಕೆಲವರಿಗೆ ಬೇಕಾಗಿರುವುದು ಎಂಬುದು ಸಹ ನಿಜ. ಆದರೆ ಕಾಸರವಳ್ಳಿಯವರೂ ಎಂದೂ ಸಿನಿಮಾ ಕ್ಷೇತ್ರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ತಾವು ಆತಿeeಠಿಚಿ- ಜಿiಟm sಣiಟಟನಂಬಿದ್ದನ್ನಷ್ಟೆ ಮಾಡಿದರೂ- ಹಾಗು ಮಾಡುತ್ತಾರೆ. ಅವರ ಪ್ರಯತ್ನವಾದ ದ್ವೀಪ ಚಿತ್ರಕ್ಕೆ ಮತ್ತೊಂದು ಸ್ವರ್ಣ ಕಮಲದ ಪ್ರಶಸ್ತಿ ದೊರಕಿರುವ ಸಂದರ್ಭದಲ್ಲಿ ಅವರನ್ನು ಕನ್ನಡಸಹಿತ್ಯ.ಕಾಂ ಅಭಿನಂದಿಸುತ್ತ ಪರಸ್ಪರ ಗುರಿಗಳನ್ನು ಮತ್ತಷ್ಟು ನಿಚ್ಚಳಗೊಳಿಸಿಕೊಳ್ಳುತ್ತಾ ಹೋಗೋಣ ಎಂದು ನಾವು ಹಾಗು ನಮ್ಮಂತಹವರು ಆಶಿಸುವುದು ಸರಿ ಎಂದೇ ತೋಚುತ್ತದೆ. ಆದುದರಿಂದ ಒಂದು ಸಾಲಿನ ಅಬಿನಂದನೆಗಳು ಗಿರೀಶ್. ನಿಮ್ಮ ಪ್ರಯತ್ನ ಹೀಗೆಯೇ ಮುಂದುವರೆಯಲಿ ಎಂದು ಹೇಳಿ ‘ಯಾರಿಗಾಗಿ ಮತ್ತು ಯಾವುದಕ್ಕಾಗಿ ಸಿನಿಮಾ ಮಾಡುತ್ತಿದ್ದೀರ..’ ಸಿನಿಮಾ ಇಲ್ಲದಿದ್ದರೂ ನಿಮ್ಮ ವೈಯಕ್ತಿಕ ಬದುಕು ಯಾವುದೇ ರೀತಿಯಲ್ಲಿ ಪಲ್ಲಟಕ್ಕೊಳಗಾಗುವುದಿಲ್ಲ, ನಿಮ್ಮಂತೆ ಪ್ರಯತ್ನ ಪಡುತ್ತಿರುವ ಎಲ್ಲರ ಬದುಕೂ ಹೀಗೆ ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ಅತಿಯಾಗಿ ‘ಎಲೈಟ್’ ಆಗಿ ಉಳಿದುಕೊಳ್ಳುವ ನಮ್ಮಂತಹವರ ಮಿತಿಗಳನ್ನು ನಾವು ಕಂಡುಕೊಳ್ಳದೆ ಹೋಗುವ ದುರಂತದ ಅರಿವು ನಿಮಗಿದೆಯೇ? ನಾವೆಲ್ಲ ಎಂತಹ ‘ಪ್ಯಾರಾಮೀಟರ್’ ಸೃಷ್ಟಿಸಿಬಿಡುತ್ತಿದ್ದೇವೆ?’ ಎಂಬ ನನ್ನ ಪ್ರಶ್ನೆಯೊಂದನ್ನು ಇಟ್ಟುಕೊಂಡು ಅವರು ಸಿಕ್ಕಾಗ ಈ ಬಗೆಗೆ ಮಾತನಾಡುವ ಎಂದಂದುಕೊಂಡಿದ್ದೇನೆ. ಗಿರೀಶ್‌ರವರ ಸಂದರ್ಶನ ಈ ಸಂಚಿಕೆಯಲ್ಲಿ ಪ್ರಕಟವಾಗಬೇಕಿತ್ತು. ಅನಿವಾರ್ಯ ಕಾರಣಗಳಿಗೆ ಆಗುತ್ತಿಲ್ಲ. ಮುಂದಿನ ಸಂಚಿಕೆಯಲ್ಲಿ ಖಂಡಿತ ಪ್ರಕಟಿಸುವ ಭರವಸೆ ನನಗಿದೆ. ಆಷ್ಟರೊಳಗೆ ಅವರ ದ್ವೀಪ ಬಿಡುಗಡೆಯಾಗಿರುತ್ತದೆ ಎಂದು ಆಶಿಸುತ್ತೇನೆ. +ಅಮೆರಿಕ ಪ್ರವಾಸ ಹೋಗಿದ್ದಿರಲ್ಲ ಏನಾಯ್ತು?- ಅನೇಕಾನೇಕ ಆಪ್ತರಿಂದ ಕನ್ನಡಸಾಹಿತ್ಯ.ಕಾಂ ಹಿತೈಶಿಗಳಿಂದ ಈ ಪ್ರಶ್ನೆ. ಸಹಜವಾದುದೆ. ಬಂದೊಡನೆಯೇ ಈ ಇಪ್ಪತ್ತು ದಿನಗಳು ಸಾಕಷ್ಟು ಕೆಲಸಗಳ ನಡುವೆ ಯಾರಿಗೂ ನಾನು ಸರಿಯಾಗಿ ಸಿಕ್ಕಿಲ್ಲ, ಭೇಟಿಯಾಗಿಲ್ಲ. ಬರೆಯಬೇಕೆಂದು ಕೊಂಡೆ. ಸಮಯಾಭಾವದಿಂದ ಆಗಲಿಲ್ಲ. ಮುಂದಿನ ಸಂಚಿಕೆಯಿಂದ ಇದರ ಬಗೆಗೆ ನಿಗದಿತವಾಗಿ ಈ ಪ್ರವಾಸ ಕುರಿತಂತೆ, ಅಮೆರಿಕ ನನ್ನ ಮೇಲೆ ಉಂಟು ಮಾಡಿದ ಘಾಸಿ, ಸೃಷ್ಟಿಸಿದ ಬೆರಗು ಎಲ್ಲದರ ಕುರಿತಂತೆ ಒಂದು ಅಂಕಣವನ್ನು ಪ್ರಾರಂಭಿಸೋಣವೆಂದುಕೊಂಡಿದ್ದೇನೆ. ಈ ಅಂಕಣದಲ್ಲಿ ಅನೇಕರು ಬರಬಹುದು- ಅನೇಕ ಸಂಗತಿಗಳು, ವಿವರಗಳು ಚೆಲ್ಲಿಕೊಂಡು ಹೊರಬರಲಿದೆ ಎಂದಷ್ಟೆ ಹೇಳಬಲ್ಲೆ. ಸದ್ಯಕ್ಕೆ ಗೊರೂರರ ಅಮೆರಿಕ ಪ್ರವಾಸ ಕಥನದ ಮುನ್ನುಡಿಯ ಕೊನೆ ಪ್ಯಾರವನ್ನು ಓದಿರುವವರು ನೆನಪಿಸಿಕೊಂದರೆ ಸಾಕು” ಅದರಲ್ಲಿ ವರು ಗಂಗೆಯಲ್ಲಿ ಮುಳುಗಿ ಈ ಬರ್ಬರ ಸಂಸ್ಕೃತಿಯಲ್ಲಿ ಮುಳುಗಿದೆ ಎಂದು ಅಂತ್ಯ ಮಾಡುತ್ತಾರೆ. ನನಗಂತೂ ಇದು ಬರ್ಬರ ಎಂದನ್ನಿಸಲಿಲ್ಲ. ಬಹುಶಃ ಇಲ್ಲಿರುವ ಕೋಮು ಗಲಭೆಗಳು, ಬಡತನ, ಭ್ರಷ್ತಾಚಾರ ಇತ್ಯಾದಿಗಳು ಅವರ ಮನಸ್ಸಿನಲ್ಲಿದ್ದುವೆಂದು ಕಾಣುತ್ತದೆ. ಅದನ್ನು ಹೊರತು ಪಡಿಸಿದರೆ ‘ನಿಜವಾಗಿಯೂ ಇದು ಸ್ವರ್ಗ’ ಎಂದೂ ಹೇಳಬಹುದೇನೊ..ಹೇಳಬಹುದೇನೊ. ಇರಲಿ ಬರೆಯುತ್ತಾ ಹೋದಾಗ ಗೋಚರವಾಗುತ್ತಾ ಹೋಗುತ್ತದೆ. ಒಂದಂತೂ ನಿಜ: ಮುಂದಿನ ಸಂಚಿಕೆ ವೇಳೆ ಕನ್ನಡಸಾಹಿತ್ಯ.ಕಾಂ ಗಾಗಿ ಒಂದು ಸಂಪಾದಕೀಯ ವರ್ಗ, ಆಡಳಿತ ವರ್ಗ, ಬೆಂಬಲ ಕೂಟ ಎಂದು ಅಧಿಕೃತವಾಗಿ ಘೋಷಿಸಬಹುದು ಎಂಬಷ್ಟು ಬೆಳವಣಿಗೆಯಂತೂ ಆಗಿದೆ. ಇಷ್ಟರಲ್ಲೇ ಈ ಕುರಿತಂತೆ ಕನ್ನಡಸಾಹಿತ್ಯ.ಕಾಂ ನ ಯಾಹೂ ಗ್ರೂಪ್‌ನಲ್ಲಿ ವಿವರಗಳನ್ನು ಕಾಣಿಸಲು ಯತ್ನಿಸುತ್ತೇನೆ. ಆರ್ಥಿಕವಾಗಿ ಸಿಕ್ಕಿರುವ ಬೆಂಬಲವನ್ನು ಯಥಾಪ್ರಕಾರ ‘ಮನವಿ’ ಪುಟದಲ್ಲಿ ಪ್ರಕಟಿಸಲಾಗಿದೆ. ಸಾಂಪಾದಕೀಯ ವರ್ಗದಲ್ಲಿರುವವರು ಪರಸ್ಪರ ಅಪರಿಚತರು. ಅವರ ನಡುವೆ ಒಂದು ರಿತಿಯ ಔಪಚಾರಿಕವಾದ ಪರಿಚಯವಾಗಿ-ಅವರು ಕನ್ನಡಸಾಹಿತ್ಯ.ಕಾಂ ನ ಮುಂದಿನ ರೂಪುರೇಷೆಯನ್ನು ತಿದ್ದಲು ಬೇಕಾಗಿರುವ ನಕ್ಷೆ ತಯಾರಾಗುತ್ತದೆ ಎಂದು ನಂಬಿಕೊಂಡಿದ್ದೇನೆ. ಈ ಕುರಿತಂತೆ ಎಲ್ಲರಿಗೂ ಇನ್ನೊಂದೆರಡುದಿನಗಳಲ್ಲೇ ಪತ್ರ ಬರೆಯಲಿದ್ದೇನೆ. ಇದೆಲ್ಲ ಆದಾಗ ಈಗಿರುವ ಸ್ವರೂಪವನ್ನು ತಿದ್ದ ಬೇಕಾಗಬಹುದು. ಆಗ ಈಗಾಗಲೇ ಇರುವ ೨೫ ಎಂ ಬಿ ಪಠ್ಯವನ್ನು ಪುನರ್‌ರೂಪಿಸಿ ಹೊಂದಿಸಬೇಕಾಗುತ್ತದೆ. ಹೀಗಾಗಿ ಮುಂದಿನ ಸಂಚಿಕೆ ತಡವಾದರೆ ನಮ್ಮವರೆಲ್ಲ ತಾಳ್ಮೆ ವಹಿಸುತ್ತಾರೆ ಎಂಬಭರವಸೆ ನನ್ನದು. +ಃ ಗಿ ಏಂಡಿಚಿಟಿಣhಮೊನ್ನೆ ನಮ್ಮ ಶಿವು ಫೋನ್ ಮಾಡಿದಾಗ ಮಾತು ಜಿ ವಿ ಅಯ್ಯರ್‌ರವರ ಬಗೆಗೆ ಹೊರಳಿತು. ಆಗ ಆಗಿನ ಒಂದು ತಲೆಮಾರಿನ ಜೀವನಕ್ರಮ, ವೃತ್ತಿ ನಾಟಕ ಮುಂತಾದ ವಿಷಯವೂ ಬಂದು ಹೋಯಿತು. ಶಿವುಗೆ ಜಿ ವಿ ಅಯ್ಯರ್‌ರ ಭೇಟಿ ಮಾಡಿ ಸಂದರ್ಶನ ಮಾಡಲು ಸಾಧ್ಯವಾ ನೋಡಿ ಎಂದು ತಿಳಿಸಿದ್ದೆ. ಮಾತಿನ ಮಧ್ಯೆ ಜಿ ವಿ ಅಯ್ಯರ್‌ರವರ ಜೊತೆಯಲೇ ವೃತ್ತಿಯಲ್ಲಿ ಬೆಳೆದ ಬಿ ವಿ ಕಾರಂತರ ಬಗೆಗೂ ಮಾತಿನ ತುಣುಕು ಸೇರಿಕೊಂಡಿತು. +ರವೀಂದ್ರ ಕಲಾಕ್ಷೇತ್ರ-ನಾಟಕಗಳ ಎಲೈಟ್ ಪ್ರೇಕ್ಷಕ- ಒಂದು ರೀತಿಯ ಹಿಪಾಕ್ರಸಿ, ವಿರಾಮಾಸನದಲ್ಲಿ ವ್ಯಕ್ತವಾಗುತ್ತಾ ಹೋಗಿ ಬಿಡುವ ಕಾಳಜಿಗಳೆಲ್ಲ ಬರೀ ಹರಟೆ, ನಾಲಿಗೆಯ ತೆವಲಾಗಿಬಿಡುವ ಮತ್ತು ಆ ಮೂಲಕವೇ ರೋಮಾಂಚಿತರಾಗಿಬಿಡುವ ಒಂದು ದೊಡ್ಡ ಗುಂಪಿನ ಮಧ್ಯೆ ಬಿ ವಿ ಕಾರಂತರು ಒಂದು ರೀತಿಯಲ್ಲಿ ಭಿನ್ನ ವ್ಯಕ್ತಿ. ನಾನು ಅವರನ್ನು ಎರಡು ಬಾರಿ ಮಾತ್ರ ನೋಡಿದ್ದು. ಎರಡು ಬಾರಿಯೂ ಸಂದರ್ಶನಕ್ಕೆಂದು. ಅಂತಾರಾಷ್ಟ್ರೀಯ ಸಿನಿಮಾಕ್ಕೆ ನಾನು ತೆರೆದುಕೊಂಡು ಅದರ ಪ್ರಭಾವಕ್ಕೊಳಗಾಗಿದ್ದ ದಿನಗಳು. ಎಲ್ಲದರಲ್ಲೂ ಲೋಪ ಕಂಡುಹಿಡಿದು ಬಿಡುವ ಆತುರಗಾರಿಕೆ-ಅಹಂಕಾರ. ಜೊತೆಗೆ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಕಲಿಸಿಬಿಡುವ ಎಲ್ಲ ರೀತಿಯ ತಲೆತಿರುಕತನಗಳೂ ಗಟ್ಟಿಯಾಗಿದ್ದ ಕಾಲವದು. ವಂಶ ವೃಕ್ಷ ಹಾಗು ಕಾಡು ತಬ್ಬಲಿಯು ನೀನಾದೆ ಮಗನೆ ಬಿಡುಗಡೆಯಾದನಂತರದ ಅಂಚಿನ ದಿನಗಳು. ಮಿನರ್ವ ಸರ್ಕಲ್ಲಿನ ಕೊಠಡಿಯಲ್ಲಿ ಬಿ ವಿ ಕಾರಂತ ಹಾಗು ಗಿರೀಶ್ ಕಾರ್ನಾಡರಿಬ್ಬರೂ ಇದ್ದರು. ಅದೇ ಹೋಟೆಲ್ಲಿನಲ್ಲಿ ನಾನು ಎಂಜಲು ತಟ್ಟೆ ತೊಳದದ್ದು ನನ್ನ ನೆನಪಿನಲ್ಲಿದ್ದರೂ ‘ಬ್ರಿಗೇಡ್ ರಸ್ತೆಯ ತಲೆತಿರುಕತನದಿಂದಾಗಿ’ ಕಾರ್ನಾಡರ ನಿರರ್ಗಳ ಇಂಗ್ಲಿಷ್ ಧಾಟಿ ಕನ್ನಡವನ್ನು ಮಂಕಾಗಿಸಿತ್ತು. ಕಾರಂತರಿಗೆ ಆಗ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ. ಕಾರಂತರ ಬಗೆಗೆ ಏನೋ ಅಸಮಾಧಾನ. ಹಾಗೆಯೇ ಕಾರ್ನಾಡರ ಬಗೆಗೂ. ಸಂದರ್ಶನ ಬರೆಯಲಿಲ್ಲ. ಬಹಳ ಕಾಲ ಕಾರಂತರು ಯಾಕೆ ಹೀಗೆ ಎಂದು ಬ್ರಿಗೇಡ್ ರಸ್ತೆಯ ಬೆಳಕಿನಲ್ಲಿ ಯೋಚಿಸಲಾರಂಭಿಸಿದಾಗ ‘ಏನೋ ಇದೆ ಈ ವ್ಯಕ್ತಿಯಲ್ಲಿ’ ಎಂದನ್ನಿಸತೊಡಗಿ ಮತ್ತೊಮ್ಮೆ ಕಾರಂತರಿಗೆ ಫೋನ್ ಮಾಡಿದ್ದೆ. ಅವರ ಮನೆಗೆ. ‘ಅಶಿಕ್ಷಿತನೊಬ್ಬನಂತೆ ಉಡುಪು ಧರಿಸಿದ್ದ’ ನನ್ನನ್ನು ಆ ಮನೆಯೊಡತಿ ಒಳಗೂ ಕರೆಯಲಿಲ್ಲ. ಮುದುಡಿದ ಮನಸ್ಸಿನಿಂದ ನಾನು ಹಿಂತಿರುಗಿದ್ದೆ. ಈ ಬಾರಿ ನೇರವಾಗಿ ಬಿ ವಿ ಕಾರಂತರೊಂದಿಗೆ ನೇರ ಸಂಪರ್ಕ: ‘ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ, ಮಾತನಾಡುವ’ ಎಂದು ಹೇಳಿದ್ದರು ಹೋದೆ. ಕಾರಂತರೂ ಹಾರ್ಮೋನಿಯಂ ಬಾರಿಸುತ್ತಾ ರಂಗದ ಮೇಲೆ ತನ್ಮಯರಾಗಿದ್ದರು. ನಾನು ಹೋದ ಐದು ನಿಮಿಷದವರೆಗೂ ತಲೆ ಎತ್ತಿ ನೋಡಲಿಲ್ಲ. ನಂತರ ತಲೆ ಎತ್ತಿ ನೋಡಿ ‘ಬನ್ನಿ’ ಎಂದು ಆಹ್ವಾನಿಸಿದರು. ನಾನು ಅವರು ಕುಳಿತಿದ್ದ ರಂಗದ/ವೇದಿಕೆಯ ಭಾಗಕ್ಕೆ ಹೋದಾಗ ಏನನ್ನೂ ಮಾತನಾಡದೆ ‘ನಾನು ನಿಮ್ಮ ಹತ್ರ ಏನೂ ಮಾತಾಡೋಲ್ಲ..ನೀವಿನ್ನು ಹೋಗಬಹುದು ಎಂದಂದರು. ನನಗೆ ದಿಗ್ಬ್ರಮೆಯಾಗಿ ಏಕೆ ಎಂದು ಪ್ರಶ್ನಿಸಿದಾಗ ಅರ್ಥವಿಲ್ಲದೆ ಕೂಗಾಡತೊಡಗಿದರು. ನಾನು ಖಿನ್ನಮನಸ್ಕನಾಗಿ ಹಿಂದಿರುಗಿದ್ದೆ. +ಅವರ ವರ್ತನೆ ನನಗೆ ಬಹಳ ಕಾಲದನಂತರವೆ ಅರ್ಥವಾದದ್ದು: ನಾನು ಬ್ರಿಗೇಡ್ ರಸ್ತೆಯ ತಲೆತಿರುಕುಕತನದಿಂದ ಚಪ್ಪಲಿ ಮೆಟ್ಟಿ ರಂಗದ ಮೇಲೆ ಹೋಗಿದ್ದೆ..ಇದು ಹೊಳೆದದ್ದು ಹಳ್ಳಿಯೊಂದರ ಶಾಲೆಯಲ್ಲಿ ‘ಡ್ರಾಮಾ ಪ್ರಾಕ್ಟೀಸ್ ಮಾಡುತ್ತಿದ್ದವರು’ ಬೀಡಿ, ಸಿಗರೇಟು ಹೊಗೆಯ ಮಧ್ಯ ನಾಟಕದ ಮೇಷ್ಟ್ರು ತಮ್ಮ ಪಾತ್ರವನ್ನು ಕೂಗಿ ಕರೆದಾಗ ಅಭ್ಯಾಸಕ್ಕಾಗಿ ಅವರ ಮುಂದೆ ಹೋಗುವ ಮುನ್ನ ವರ್ತುಲದಾಚೆ ಚಪ್ಪಲಿ ಬಿಟ್ಟು ಹೋಗುತ್ತಿದ್ದುದನ್ನು ನೋಡಿದಾಗ… +ಇಂದು ೭೨ ವಯಸ್ಸಿನ ಬಿ ವಿ ಕಾರಂತರು ನಮ್ಮ ಮಧ್ಯೆ ಇಲ್ಲ. ನಿನ್ನೆ ಸಂಜೆ ೭.೨೦ ಕ್ಕೆ ಕ್ಯಾನ್ಸರ್‌ನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕನ್ನಡಸಾಹಿತ್ಯ.ಕಾಂ ಗೊಂದು ಪ್ರೇರಣೆ, ಅದರ ಗುಣ ನಿರ್ಧರಿಸುವಲ್ಲಿ ಅವರೊಂದಿಗಾದ ಆ ಘಟನೆ ಪ್ರೇರಣೆ ಎಂದು ಹೇಳುತ್ತಾ ಅವರಿಗೆ ಶ್ರದ್ಧಾಂಜಲಿಯನ್ನರ್ಪಿಸುತ್ತದೆ. +ಮುಂದಿನ ಸಂಚಿಕೆಗೆ ಯಾರಾದರೂ ಒಂದು ಒಳ್ಳೆಯ ಲೇಖನ ಬರೆದರೆ. ..ಎಂಬ ನಿರೀಕ್ಷೆ ನನ್ನದು… +ಶೇಖರ್‌ಪೂರ್ಣ +***** +ಈ ಕೊನೆಯ ತುಣುಕನ್ನು ಬರೆದದ್ದು ಇಲ್ಲಿ ಸೇರಿಸಿರುವುದು: ೦೨-೦೯-೨೦೦೨ +ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […] +ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […] +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_589.txt b/Kannada Sahitya/article_589.txt new file mode 100644 index 0000000000000000000000000000000000000000..113325fe48152ee8cb86c0899ccce3aa0f341c63 --- /dev/null +++ b/Kannada Sahitya/article_589.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟೀಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಮ್ಮ ರಾಜಕೀಯ ವ್ಯವಸ್ಥೆ ಸೂತ್ರ ತಪ್ಪುತ್ತಿರುವ ಬಗೆಗಿನ ಕಳವಳವನ್ನು, ಸಮುದಾಯ ಪ್ರಜ್ಞೆ ಒಡೆದುಹೋಗುತ್ತಿರುವ ಬಗೆಗಿನ ತಬ್ಬಿಬ್ಬನ್ನೂ, ನಮ್ಮ ಸಂಸ್ಕೃತಿಯ ದ್ವಂದ್ವಗಳನ್ನು ಅರಗಿಸಿಕೊಳ್ಳಲಾಗದ ತಪ್ಪಿತಸ್ಥ ಮನೋಭಾವವನ್ನೂ ತೋರಿಸುತ್ತದೆ. ಇಂದಿನ ಈ ಎಲ್ಲ ಒತ್ತಡಗಳ ಪ್ರಭಾವದಲ್ಲಿ ಹಿಂದಿನ ಬದುಕನ್ನು ಮತ್ತು ಆ ಬದುಕು ಸೃಷ್ಟಿಸಿದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನ ಎಷ್ಟರಮಟ್ಟಿಗೆ ವಸ್ತುನಿಷ್ಠವಾಗಬಲ್ಲದು ಎನ್ನುವುದನ್ನು ಪ್ರಾಮಾಣಿಕವಾಗಿ ಶೋಧಿಸಬೇಕಾಗಿದೆ. ಅದರಲ್ಲೂ ಸ್ವಾತಂತ್ರ್ಯದ ನಂತರ ಹುಟ್ಟಿದ ನನ್ನ ತಲೆಮಾರಿನವರು ಸ್ವಾತಂತ್ರ್ಯಪೂರ್ವ ಸಾಹಿತ್ಯವನ್ನು ಅನಿವಾರ್ಯವಾಗಿಯೆ ನಮ್ಮ ಇಂದಿನ ತುರ್ತುಗಳಿಗೆ ತಕ್ಕಂತೆ ಹೊರಗಿನವರಾಗಿ ನೋಡುತ್ತೇವೆ. ನಮಗೆ ಈ ದೇಶ ಸ್ವಾತಂತ್ರ್ಯ ಪಡೆದುಕೊಂಡ ಘಟನೆ ಸಾಂಸ್ಕೃತಿಕವಾಗಿ ಒಂದು ದೊಡ್ಡ ಸೀಳಿನಂತೆ ತೋರುತ್ತದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿದರೆ ನಾವು ಸ್ವಾತಂತ್ರ್ಯಪೂರ್ವ ಯುಗದ ಜತೆಗಿನ ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಎರಡು ಜಗತ್ತುಗಳ ಮಧ್ಯೆ ಬದುಕಿದ ವಿಶಿಷ್ಟವಾದ ಸವಲತ್ತು ಇತ್ತು. ಅವರ ಮೌಲ್ಯ ಕಲ್ಪನೆಗಳು ಸ್ವಾತಂತ್ರ್ಯಪೂರ್ವ ಯುಗದಲ್ಲಿ ರೂಪುಗೊಂಡಿದ್ದರಿಂದ ಒಂದು ನಿಶ್ಚಿತವಾದ ಚೌಕಟ್ಟಿನಿಂದ ಅವರು ಸ್ವಾತಂತ್ರ್ಯ ನಂತರದ ಬದುಕನ್ನು ಬೆಲೆಗಟ್ಟಿ ನೋಡುತ್ತಾರೆ. ಅವರಿಗೆ ಸಂಸ್ಕೃತಿಯ ಅವನತಿ ಅಥವಾ ಮೌಲ್ಯಗಳ ಅಂಧಃಪತನ, ಆದರ್ಶಗಳ ಸೋಲು-ಇಂಥ ಒಂದು ಪ್ರಕ್ರಿಯೆ ಕಾಣುತ್ತದೆ. ಅಂದರೆ ಎಷ್ಟೇ ನೆಗೆಟಿವ್ ಆಗಿದ್ದರೂ ಒಂದುಬಗೆಯ ಸಾತತ್ಯತೆ(ಚೊನ್ತಿನು‌ಇತ್ಯ್) ಅವರಿಗೆ ಅನುಭವವಾಗಿದೆ. ಇಂಥ ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಂಡ ನಮಗೆ ಸ್ವಾತಂತ್ರ್ಯಪೂರ್ವ ಯುಗದ ಬದುಕು ಮತ್ತು ಸಾಹಿತ್ಯ ಕೇವಲ ಸಮೀಕ್ಷೆಯ ವಸ್ತುಗಳಾಗಿಬಿಡಬಹುದು. ಆದ್ದರಿಂದ ಅಂದಿನ ಸಾಹಿತ್ಯದ ಅನುಭವವನ್ನು ನಿಚ್ಚಳವಾಗಿ ಎದುರಿಗಿಟ್ಟುಕೊಂಡು ಅದರ ಹೊಳಹುಗಳನ್ನು ಪುನಃಸೃಷ್ಟಿಸುವ ಪ್ರಯತ್ನ ಮಾಡಬೇಕು. +ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಕೃತಿಗಳನ್ನು ನೋಡಿದಾಗ ಒಂದು ಮಾತು ಸ್ಪಷ್ಟವಾಗುತ್ತದೆ. ಆ ಯುಗದ ಗಟ್ಟಿಯಾದ ಕೃತಿಗಳು ರಾಷ್ಟ್ರೀಯತೆಯ ಆದರ್ಶವನ್ನು ತಮ್ಮ ವಸ್ತುವನ್ನಾಗಿ ಬಳಸಿಕೊಂಡಿಲ್ಲ. ಅಂಥ ವಸ್ತುವನ್ನು ನೇರವಾಗಿ ಬಳಸಿಕೊಂಡ ಕೃತಿಗಳು ಸಾಹಿತ್ಯ ಚರಿತ್ರೆಯ ಸಮೀಕ್ಷೆಯಲ್ಲಿ ಅನಿವಾರ್ಯವಾಗಿ ಹೆಸರಿಸಬೇಕಾದ ಸಾಮಾನ್ಯ ಕೃತಿಗಳೇ ಹೊರತು ಕನ್ನಡ ಪರಂಪರೆಯ ಮುಖ್ಯ ಪ್ರವಾಹಕ್ಕೆ ಸೇರಿದ ಕೃತಿಗಳಲ್ಲ. ಬದುಕಿನ ಬಗೆಗೆ ತಿಳುವಳಿಕೆಯನ್ನು ತಿದ್ದಬಲ್ಲ ಸತ್ವವಾಗಲಿ, ಕೃತಿಯ ರೂಪ-ಬಂಧದಲ್ಲಿಯ ಪ್ರಯೋಗಶೀಲತೆಯಿಂದ ಹೊಸದಾದ ನೈತಿಕ ಎಚ್ಚರವನ್ನು ಹುಟ್ಟಿಸಬಲ್ಲ ಗಟ್ಟಿತನವಾಗಲಿ ಈ ಕೃತಿಗಳಿಗಿಲ್ಲ. ತೀವ್ರವಾದ ಬದಲಾವಣೆಗಳ ಸಂಧಿಕಾಲವೊಂದರಲ್ಲಿ ಅಂದಿನ ಬದುಕಿನ ಮಹತ್ವಪೂರ್ಣ ರಾಜಕೀಯ ವಾಸ್ತವವೊಂದನ್ನು ಹೀಗೆ ಕನ್ನಡದ ಮುಖ್ಯ ಕೃತಿಗಳು ಗಮನಿಸದೇ ಇದ್ದುದರ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ. ಈ ಕೆಲಸದಲ್ಲಿ ಸಹಾಯವಾಗಬಲ್ಲ ಒಂದು ವಿರೋಧಾಭಾಸವನ್ನು ಇಲ್ಲಿ ಗುರುತಿಸಕೊಳ್ಳಬಹುದು. ರಾಷ್ಟ್ರೀಯಮಟ್ಟದ ರಾಜಕೀಯ ವಾಸ್ತವಗಳು ಕನ್ನಡದಲ್ಲಿ ಮುಖ್ಯ ಕೃತಿಗಳಲ್ಲಿ ಮೂರ್ತವಾಗಿ ಅಂದರೆ ಕೃತಿಗಳ ಶರೀರದ ಅಂಗಗಳಾಗಿ ಅಥವಾ ಬರಹಗಾರರ ಸಂವೇದನೆಯನ್ನು ಆವರಿಸಿಕೊಳ್ಳುವ ಫಲವತ್ತಾದ ಮಿಥ್‌ಗಳಾಗಿ ಪ್ರವೇಶಿಸಲಿಲ್ಲ. ಇಂಥ ಸಂಗತಿಗಳು ಕೃತಿಗಳಲ್ಲಿ ಪ್ರವೇಶಿಸಿದಾಗ ಅವು ಅಮೂರ್ತವಾಗಿವೆ. ಬದುಕಿನ ಸ್ಪರ್ಷಕ್ಕೆ ಎರವಾಗಿವೆ. ಕೇವಲ ಬರಹಗಾರರ ಸಂಕಲ್ಪಿತ ಉದ್ದೇಶಗಳ ದ್ಯೋತಕವಾಗಿವೆ. ಬರಹಗಾರರಿಗೆ ತೀರ ಹತ್ತಿರವಾದ ‘ಪ್ರಾದೇಶಿಕ’ವಾದ ವಾಸ್ತವ ದಟ್ಟವಾಗಿ, ಸಾಂದ್ರವಾಗಿ ಕೃತಿಗಳ ವಿನ್ಯಾಸ ಮತ್ತು ಸಂವೇದನೆಯ ಶರೀರವಾಗಿ ಕನ್ನಡದ ಮುಖ್ಯ ಕೃತಿಗಳಲ್ಲಿ ಚಿತ್ರಣವಾಗಿದೆ. ಆದರೆ ಈ ‘ಪ್ರಾದೇಶಿಕ’ ವಾಸ್ತವ ಸಮಕಾಲೀನ ಚರಿತ್ರೆ ಮತ್ತು ರಾಜಕೀಯದ ಹೊಳಹುಗಳನ್ನು ಸೂಚಿಸುವ ಸಾಮರ್ಥ್ಯ ಪಡೆದಿಲ್ಲ. ತೀರ ಪರೋಕ್ಷವಾಗಿ ಚರಿತ್ರೆ ಮತ್ತು ರಾಜಕೀಯ ಚೌಕಟ್ಟುಗಳ ಆಚೆಗೆ ಈ ಕೃತಿಗಳು ಸಮುದಾಯದ ಒಟ್ಟು ಬದುಕಿನಲ್ಲಾದ ಪಲ್ಲಟಗಳನ್ನು ಸೂಚಿಸುತ್ತವೆ. ಮೂರ್ತವಾದ ಪ್ರಾದೇಶಿಕ ವಾಸ್ತವ ಚರಿತ್ರೆ ಮತ್ತು ರಾಜಕೀಯದ ವಾಸ್ತವವನ್ನು ಧ್ವನಿಸುವ ಸಾಮರ್ಥ್ಯ ಪಡೆಯದೇ ಇದ್ದುದಕ್ಕೆ ಕಾರಣಗಳನ್ನು ಶೋಧಿಸಬೇಕಾಗಿದೆ. +ರಾಷ್ಟ್ರೀಯತೆಯ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಮನಸ್ಸಿಗೆ ಯಾವಾಗಲೂ ಪರಕೀಯವಾಗಿಯೆ ಉಳಿದಿದೆ. ಮನುಷ್ಯನ ಬದುಕನ್ನು ಮನೆ, ಕುಟುಂಬ, ಜಾತಿ, ಒಳಜಾತಿ, ಹೀಗೆ ಅನೇಕ ಸ್ವಯಂಪೂರ್ಣವಾದ ಗೂಡುಗಳಲ್ಲಿ ತುರುಕುವಂಥ ಸಮಾಜ ವ್ಯವಸ್ಥೆ ನಮ್ಮದಾಗಿದ್ದರಿಂದ ಇವುಗಳನ್ನು ಮೀರಿದ ಯಾವುದೇ ಏಕಸೂತ್ರತೆಗೆ ವ್ಯಕ್ತಿ ನಿಷ್ಠವಾಗಿರುವುದು ಅಸಾಧ್ಯವಾಗಿದೆ. ಸಮಾಜದ ಒಟ್ಟು ರಚನೆ ವಿಘಟನೆಯನ್ನು ಬೆಂಬಲಿಸುವಂಥದ್ದಾಗಿದೆ. ದೇಶವನ್ನು ಆಳಿದ ಎಲ್ಲ ಪ್ರಭುತ್ವಗಳೂ ವಿಕೇಂದ್ರಿತವಾದ ಶೋಷಕ ವ್ಯವಸ್ಥೆಯನ್ನು ಬಳಸಿಕೊಂಡವು. ಆದ್ದರಿಂದ ಜನಸಾಮಾನ್ಯನಿಗೆ ಆಳ್ವಿಕೆಯ ಕೇಂದ್ರ ಎಲ್ಲೋ ದೂರದಲ್ಲಿ ಅಗೋಚರವಾಗಿದ್ದು ಶೋಷಣೆಯು ಸ್ಥಾನೀಯ ಪ್ರತಿನಿಧಿಗಳು ಮಾತ್ರ ಅವನಿಗೆ ಕಾಣುತ್ತಿದ್ದರು. ಆರ್ಥಿಕವಾಗಿಯೂ ಕೂಡ ಇಲ್ಲಿಯ ವ್ಯವಸ್ಥೆಯಲ್ಲಿ ಹೆಚ್ಚುವರಿ ಉತ್ಪಾದನೆ ಕಡಿಮೆಯಾದ್ದರಿಂದ ಅಥವಾ ಅದು ಕೆಲವರ ಸ್ವತ್ತಾಗಿದ್ದರಿಂದ ತೀವ್ರವಾದ ಬದಲಾವಣೆಗಳಿಲ್ಲದ ಸ್ವಯಂಪೂರ್ಣವಾದ ಸಮುದಾಯಗಳು ಹುಟ್ಟಿಕೊಂಡವು. ಹೊರಗಿನ ಜಗತ್ತಿಗೆ ಮುಚ್ಚಿಕೊಂಡ ಜಾತಿಯ ಘಟಕಗಳಿಂದಾಗಿ ಸಮಾಜದ ಒಟ್ಟು ಅನುಭವ ವ್ಯಕ್ತಿಗೆ ದೊರೆಯದಂತಾಗಿತ್ತು. ಹೀಗೆ ಸಮಾಜದ ವ್ಯವಸ್ಥೆ ವಿಘಟನೆಗೆ ಈಡುಮಾಡುವಂಥದ್ದಾಗಿದ್ದರಿಂದ ತೀರ ಹತ್ತಿರದ ಬದುಕನ್ನು ಬಿಟ್ಟರೆ ಉಳಿದ ಎಲ್ಲ ಸಾಮಾಜಿಕ ವಾಸ್ತವಗಳು ವ್ಯಕ್ತಿಯ ಅನುಭವದ ಆಚೆಗೆ ಉಳಿದುಕೊಳ್ಳುತ್ತವೆ. ಇದರ ಒಟ್ಟು ಪರಿಣಾಮವೆಂದರೆ ನಮ್ಮ ಚಿಂತನೆಗೆ ಸಮಾಜದ ಸಮಗ್ರವಾದ ಒಂದು ತಿಳುವಳಿಕೆ ಸಾಧ್ಯವಾಗುವುದಿಲ್ಲ. ನಮ್ಮ ಸಾಹಿತ್ಯ ಸುತ್ತಲಿನ ವಾಸ್ತವಕ್ಕೆ ತೀರ ಸೀಮಿತವಾದ ನಿಷ್ಠೆಯನ್ನು ಬೆಳೆಸಿಕೊಳ್ಳುತ್ತದೆ. +ನಮ್ಮ ಚರಿತ್ರೆಯ ಇನ್ನೊಂದು ವಾಸ್ತವವೆಂದರೆ ನಮ್ಮ ಪ್ರಾದೇಶಿಕ ಸಂವೇದನೆ ತನ್ನ ವಿಶಿಷ್ಟತೆಯನ್ನು ಉಳಿಸಿಕೊಳ್ಳಲು ಹಲವು ಉಪಾಯಗಳನ್ನು ಬಳಸುತ್ತ ಬಂದಿದೆ. ರಾಷ್ಟ್ರೀಯ ಅಥವಾ ಭಾರತೀಯ ಎನ್ನಬಹುದಾದ ಎಲ್ಲ ಚೌಕಟ್ಟುಗಳ ವಿರುದ್ಧ ತನ್ನ ಪ್ರಾದೇಶಿಕತೆಯನ್ನು ಒಡ್ಡುತ್ತ ಬಂದಿದೆ. ಸಂಸ್ಕೃತದ ಲಾಕ್ಷಣಿಕವಿಮರ್ಶೆಯ ಸೂತ್ರಗಳು, ಸಂಸ್ಕೃತಿಯ ಮೂಲದಲ್ಲಿರುವ ಪುರಾಣಕತೆಗಳು ಇವು ಭಾರತೀಯವೆನ್ನಬಹುದಾದ ಅಮೂರ್ತಗಳಾಗಿದ್ದವು. ಇವುಗಳನ್ನು ಪ್ರಾದೇಶಿಕ ಸಂವೇದನೆಗೆ ಅಳವಡಿಸಿಕೊಳ್ಳಬೇಕಾದಾಗ ದೇಸಿ ನುಡಿಗಟ್ಟುಗಳನ್ನು, ರಚನೆಗಳನ್ನು ಮತ್ತು ಪುರಾಣಕತೆಗಳಲ್ಲಿ ಮಾರ್ಪಾಟುಗಳನ್ನು ನಮ್ಮ ಬರಹಗಾರರು ಬಳಸಿಕೊಂಡರು. ಹೀಗೆ ಮಾಡುವಾಗ ಪ್ರಾದೇಶಿಕ ಅನುಭವದ ದಟ್ಟತೆಯನ್ನು, ಸಾಂದ್ರತೆಯನ್ನು ನಮ್ಮ ಬರಹಗಾರರು ಬಳಸಿಕೊಳ್ಳಬೇಕಾಯಿತು. ಅಂದರೆ ಉದ್ದೇಶಪೂರ್ವಕವಾಗಿ ತಮ್ಮ ದೃಷ್ಟಿಯನ್ನು ತೀರ ಹತ್ತಿರದ ವಾಸ್ತವದ ಮೇಲೆ ಕುದುರಿಸಿಕೊಂಡರು. ನಮ್ಮ ಗತ್ಟಿಯಾದ ಕೃತಿಗಳ ಯಶಸ್ಸು ಪ್ರಾದೇಶಿಕ ಬದುಕಿನ ವಿನ್ಯಾಸವನ್ನು, ಆ ವಿನ್ಯಾದಲ್ಲಿ ಹುಟ್ಟುವ ಮೌಲ್ಯಕಲ್ಪನೆಯನ್ನು ಬಳಸಿಕೊಳ್ಳುವುದರಲ್ಲಿದೆ. ಆದರೆ ಇದರ ಇನ್ನೊಂದು ಮಗ್ಗುಲೆಂದರೆ ಪ್ರಾದೇಶಿಕ ಅನುಭವವನ್ನು ಮೀರಿದ ಎಲ್ಲ ರಾಜಕೀಯ ಸಾಮಾಜಿಕ ವಾಸ್ತವಗಳು ನಮ್ಮ ಬರಹಗಾರರಿಗೆ ಅಮೂರ್ತಗಳಾಗಿ ಉಳಿದುಬಿಟ್ಟವು. ಇಂಥ ಸಂದರ್ಭದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಅವರಿಗೆ ಅನುಭವದ ಅಂಶವಾಗಿ ಕಾಣದೇ ಇದ್ದುದು ಸಹಜವಾಗಿದೆ. +ಇಲ್ಲಿ ಗುರುತಿಸಿಕೊಳ್ಳಬೇಕಾದ ಇನ್ನೊಂದು ವಿಶಿಷ್ಟತೆಯೆಂದರೆ ನಮ್ಮಲ್ಲಿ ಚಾರಿತ್ರಿಕ ಸಂವೇದನೆಯ ಬದಲು ಸ್ಥೂಲವಾಗಿ ‘ಧಾರ್ಮಿಕ’ವೆನ್ನಬಹುದಾದ ಸಂವೇದನೆ ಬೆಳೆಯುತ್ತಾ ಬಂದದ್ದು. ಚಾರಿತ್ರಿಕ ಸಂವೇದನೆ ಮನುಷ್ಯನ ಬದುಕು ಮತ್ತು ವ್ಯವಸ್ಥೆಯ ಮಧ್ಯದ ಸಂಬಂಧಗಳ ಬಗ್ಗೆ ಎಚ್ಚರವನ್ನು ಹುಟ್ಟಿಸುತ್ತದೆ. ಒಂದು ನಿಟ್ಟಿನಿಂದ ಇನ್ನೊಂದು ನಿಟ್ಟಿಗೆ ಸಮಾಜದ ಬದುಕು ಬದಲಾಗುತ್ತಾ ಹೋಗುವುದರ ಬಗ್ಗೆ ತಿಳುವಳಿಕೆಯನ್ನು ಬೆಳೆಸುತ್ತದೆ. ಮನುಷ್ಯನ ವೈಯಕ್ತಿಕ ಬದುಕನ್ನು ನಿಯಂತ್ರಿಸುವ ಸಾಮಾಜಿಕ ಶಕ್ತಿಗಳ ಬಗ್ಗೆ ಅರಿವನ್ನು ಸೂಕ್ಷ್ಮಗೊಳಿಸುತ್ತದೆ. ಧಾರ್ಮಿಕ ಸಂವೇದನೆ ಎಲ್ಲ ಮನುಷ್ಯರಲ್ಲಿ ಸಾಮಾನ್ಯವಾಗಿರುವ ಮನುಷ್ಯ ಸ್ವಭಾವದ ಅಂಶಗಳಿಗೆ ಹೆಚ್ಚಿನ ಮಹತ್ವ ಕೊಡುತ್ತದೆ.ಈ ಅಂಶಗಳು ಧಾರ್ಮಿಕ ಸಂವೇದನೆಯ ದೃಷ್ಟಿಯಲ್ಲಿ ನಿರಂತರವಾದ ಸತ್ಯಗಳು. ಈ ಅಂಶಗಳ ಮತ್ತು ನಿರಂತರವಾದ ಅಲೌಕಿಕ ಶಕ್ತಿಗಳ ಸಂಬಂಧಗಳನ್ನು ಧಾರ್ಮಿಕ ಸಂವೇದನೆ ವಿವೇಚಿಸುತ್ತದೆ. ಚಾರಿತ್ರಿಕ ಸಂವೇದನೆ ಬದಲಾವಣೆಯ ಮಹತ್ವವನ್ನು ಗ್ರಹಿಸಿದರೆ ಧಾರ್ಮಿಕ ಸಂವೇದನೆ ನಿರಂತರವಾದ ಅಂಶಗಳ ಮಹತ್ವವನ್ನು ಗ್ರಹಿಸುತ್ತದೆ. ಧಾರ್ಮಿಕ ಸಂವೇದನೆ ಪ್ರಭಲವಾಗಿದ್ದರಿಂದ ನಮ್ಮ ಕೃತಿಗಳು ಮನುಷ್ಯ ಸ್ವಾಭಾವದ ವೈವಿಧ್ಯಗಳನ್ನು, ಸೂಕ್ಷ್ಮಗಳನ್ನು ಪ್ರಬುದ್ಧವಾಗಿ ಚಿತ್ರಿಸುತ್ತವೆ. ಆದರೆ ಮನುಷ್ಯ ಸ್ವಾಭಾವದ ಹಿನ್ನೆಲೆಯಾಗಿರುವ ಚರಿತ್ರೆಯ ತುಡಿತಗಳನ್ನು ಅಲಕ್ಷ್ಯ ಮಾಡುತ್ತವೆ. ನಮ್ಮ ಕಥಾ ಸಾಹಿತ್ಯದ ಶ್ರೇಷ್ಠ ಪಾತ್ರಗಳು ಮನುಷ್ಯ ಸ್ವಭಾವದ ಮೂರ್ತ ಅಭಿವ್ಯಕ್ತಿಗಳಾಗಿವೆ. ಚರಿತ್ರೆಯ ಒಂದು ಯುಗದ ಸಂವೇದನೆಯ ಸಂಕೇತಗಳಾಗಿಲ್ಲ. +ರಾಷ್ಟ್ರೀಯತೆಯ ಪರಿಕಲ್ಪನೆ ಸ್ವಾತಂತ್ರ್ಯಪೂರ್ವ ಸಾಹಿತ್ಯದ ಒಳ್ಳೆಯ ಕೃತಿಗಳಲ್ಲಿ ಗೋಚರಿಸದೆ ಇದ್ದುದನ್ನು ಅರ್ಥಮಾಡಿಕೊಳ್ಳಲು ಈ ಕೆಲವು ಅಂಶಗಳು ಸಹಾಯವಾಗುತ್ತವೆಯೆಂದು ನಂಬಿದ್ದೇನೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವಸಾಹಿತ್ಯ ವಾಸ್ತವವಾದಿ ಸಾಹಿತ್ಯವಾಗಿದ್ದರಿಂದ ವಾಸ್ತವದ ಸಮಗ್ರವಾದ ಅರಿವು ನಮ್ಮ ಚಿಂತನೆಯಲ್ಲಿ ಇಲ್ಲದಿರುವುದನ್ನು ಗಮನಿಸಲೇಬೇಕಾಗುತ್ತದೆ. ನಮ್ಮ ಬರಹಗಾರರಿಗೆ ಸಮಕಾಲೀನ ವಾಸ್ತವವೆಂದರೆ ಅವರಿಗೆ ತೀರ ಹತ್ತಿರದಲ್ಲಿದ್ದ ಪ್ರಾದೇಶಿಕ ವಾಸ್ತವವಾಗಿತ್ತು ಎನ್ನುವುದನ್ನು ನೆನಪಿನಲ್ಲಿಡಬೇಕಾಗುತ್ತದೆ. +ಸಂವೇದನೆಯಲ್ಲಾದ ಬದಲಾವಣೆಗಳ ದೃಷ್ಟಿಯಿಂದ ನಮ್ಮ ವಾಸ್ತವವಾದಿ ಕಥಾ ಸಾಹಿತ್ಯದಲ್ಲಿ ಎರಡು ಘಟ್ಟಗಳನ್ನು ಗುರುತಿಸಬಹುದು. ಕಥಾ ಸಾಹಿತ್ಯದ ಆರಂಭಕಾಲದ ವಾಸ್ತವವಾದ ಮತ್ತು ಅನಂತರದ ವಾಸ್ತವವಾದ. ಮೊದಲ ಹಂತದ ಕೃತಿಗಳ ಮುಖ್ಯ ಲಕ್ಷಣವೆಂದರೆ ಆ ಹಂತದ ಬರಹಗಾರರು ಸಮುದಾಯದ ಮೌಲ್ಯಕಲ್ಪನೆಗಳನ್ನು ಇಡಿಯಾಗಿ ಸ್ವೀಕರಿಸಿದ್ದರು. ಅವರ ವೈಯಕ್ತಿಕ ನಂಬುಗೆ ಮತ್ತು ಸಮುದಾಯದ ನಂಬುಗೆ ನಡವಳಿಕೆಗಳ ಮಧ್ಯೆ ಇನ್ನೂ ಬಿರುಕು ಉಂಟಾಗಿರಲಿಲ್ಲ. ಒಂದು ನಿಶ್ಚಿತವಾದ ಮೌಲ್ಯಕಲ್ಪನೆ ಬರಹಗಾರರಿಗಿದ್ದದ್ದರಿಂದ ಮತ್ತು ಅದು ಸಮಾಜಕ್ಕೆ ಸ್ವೀಕೃತವಾಗಿದೆ ಎನ್ನುವ ಶ್ರದ್ಧೆ ಇದ್ದದ್ದರಿಂದ ತಮ್ಮ ಕೃತಿಗಳಲ್ಲಿ ಆ ಮೌಲ್ಯಗಳನ್ನು ಪರೀಕ್ಷಿಸುವ ಅವಶ್ಯಕತೆ ಅವರಿಗೆ ತೋರಲಿಲ್ಲ. ಬದಲಾಗಿ ಆ ಮೌಲ್ಯಗಳ ಅಭಿವ್ಯಕ್ತಿಯಾಗಿರುವ ಪಾತ್ರಗಳನ್ನು ಸೃಷ್ಟಿಸುವುದಕ್ಕೆ ಮತ್ತು ಕತೆಯನ್ನು ಹೇಳುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ಮೊದಲ ಹಂತದ ಕಾದಂಬರಿಗಳಲ್ಲಿ ನೀತಿಪರವಾದ ದೃಷ್ಟಿಕೋನ ಸ್ಪಷ್ಟವಾಗಿದೆ. ಆದರೂ ನೀತಿಯ ಬೋಧನೆಗಿಂತ ಸುತ್ತಲಿನ ವಾಸ್ತವವನ್ನು ಅದು ಇದ್ದಹಾಗೆ ಹಿಡಿದುಕೊಡುವ ಕೆಲಸವೇ ಅವರಿಗೆ ಮುಖ್ಯವಾಗಿದ್ದಂತೆ ತೋರುತ್ತದೆ. ಎಂ.ಎಸ್. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹಾರಾಯ’, ಬೊಳುವಾರು ಬಾಬುರಾಯರ ‘ವಾಗ್ದೇವಿ’ ಮತ್ತು ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ ಈ ಹಂತದ ಮುಖ್ಯ ಕೃತಿಗಳಾಗಿವೆ. ಈ ಕೃತಿಗಳು ನುಡಿಗಟ್ಟಿನಲ್ಲಿ, ಸನ್ನಿವೇಶ ನಿರ್ಮಾಣದಲ್ಲಿ ಪ್ರಾದೇಶಿಕ ಕೃತಿಗಳಾಗಿವೆ. ನಿಶ್ಚಿತವಾದ ಮೌಲ್ಯಕಲ್ಪನೆಯ ಬೆಂಬಲವಿರುವುದರಿಂದ ಈ ಬರಹಗಾರರು ನಿರ್ಭಿಡೆಯಾಗಿ ಕೆಡುಕಿನ ಬಗ್ಗೆ ಧಾರ್ಮಿಕ ಸಂಸ್ಥೆಗಳಲ್ಲಿ ಕಾಣುವ ಹೊಲಸಿನ ಬಗ್ಗೆ ಬರೆಯುತ್ತಾರೆ. ಅನನ್ಯವಾದ ಕುತೂಹಲದಿಂದ ಪಾತ್ರಗಳ ಶೀಲ ಮತ್ತು ನಡವಳಿಕೆಗಳನ್ನು ಗಮನಿಸುತ್ತಾರೆ. ವ್ಯಕ್ತಿನಿರಪೇಕ್ಷವಾದ ಸಂಪ್ರದಾಯವೊಂದರಲ್ಲಿ ಮನುಷ್ಯಸ್ವಭಾವದ ಮೂರ್ತವಾದ ಚಿತ್ರಣವನ್ನು ಕೊಡುವುದು ಅಂದಿನಮಟ್ಟಿಗೆ ಮಹತ್ವಪೂರ್ಣವಾದ ಬೆಳವಣಿಗೆಯಾಗಿತ್ತು ನಿಜ. ಆದರೆ ಮೂರ್ತವಾದ ವಾಸ್ತವಿಕತೆ ಹೆಚ್ಚಿನದನ್ನು ಧ್ವನಿಸುವಂತೆ ಮಾಡುವ ಸಾಮರ್ಥ್ಯ ಈ ಬರಹಗಾಗರಿಗಿಲ್ಲ. ‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿ ಒಳಿತು-ಕೆಡಕು ಸಂಘರ್ಷವನ್ನು, ಸಮುದಾಯದ ಏಕಸೂತ್ರತೆಗೆ ನೈತಿಕತೆಯ ಅವಶ್ಯಕತೆಯನ್ನು ಶಕ್ತಿಪೂರ್ಣವಾಗಿ ಚಿತ್ರಿಸುತ್ತದೆ. ಅಧಿಕಾರಶಾಹಿಯ ಭ್ರಷ್ಟತೆಯನ್ನು ವಿಶ್ಲೇಷಿಸುತ್ತದೆ. ಆದರೆ ಇದಾವುದೂ ಕಾದಂಬರಿಗೆ ತಾತ್ವಿಕ ಆಯಾಮವನ್ನು ಕೊಡುವಷ್ಟು ಸಮರ್ಥವಾಗಿಲ್ಲ. ವಾಸ್ತವ ಮತ್ತು ಭ್ರಮೆಗಳ ಮಧ್ಯೆ ಪಾತ್ರಗಳ ಬೆಳವಣಿಗೆಯನ್ನು ಶೋಧಿಸುವುದು ಯೂರೋಪಿನ ಸಂದರ್ಭದಲ್ಲಿ ಕಾದಂಬರಿಯ ಮುಖ್ಯ ಕೊಡುಗೆಯಾಗಿದೆ. ಆದರೆ ನಮ್ಮ ಕಾದಂಬರಿ ಈ ಹಂತದಲ್ಲಿ ವಾಸ್ತವದ ಸ್ಥಿರಚಿತ್ರಗಳನ್ನು ಕೊಡುವುದರಲ್ಲೇ ಕೃತಾರ್ಥವಾಗುತ್ತವೆ. ಮೊದಲ ಹಂತದ ಕಾದಂಬರಿಗಳು ‘ಸಾಮಾಜಿಕ’ವೆನ್ನುವ ಹಣೆಚೀಟಿಯನ್ನು ಪಡೆಯುತ್ತವೆಯಾದರೂ ಈ ಬರಹಗಾರರು ತಮ್ಮ ಸಂವೇದನೆಯನ್ನು ಸಡಿಲವಾದ ಧಾರ್ಮಿಕ ಚೌಕಟ್ಟಿನಲ್ಲಿ ದುಡಿಸಿಕೊಳ್ಳುತ್ತಾರೆ. ಅವರು ಮನುಷ್ಯನ ಸ್ವಭಾವದ ಒಳಿತು-ಕೆಡಕುಗಳ ನೈತಿಕ ಹಿನ್ನೆಲೆಯಲ್ಲಿ ನೋಡುತ್ತಾರೆಯೆ ಹೊರತು ಸಾಮಾಜಿಕ ವಾಸ್ತವದ ಹಿನ್ನೆಲೆಯಲ್ಲಿ ನೋಡುವುದಿಲ್ಲ. +ಕೆರೂರು ವಾಸುದೇವಾಚಾರ್ಯರ ಐತಿಹಾಸಿಕ ಕತೆಗಳು ವಸಾಹತುಶಾಹಿ ಅನುಭವದಿಂದ ಶುರುವಾದ ಇನ್ನೊಂದು ಪ್ರಕ್ರಿಯೆಯನ್ನು ತೋರಿಸುತ್ತವೆ. ಈ ಕತೆಗಳ ವಸ್ತು ಇತಿಹಾಸದ ವಾಸ್ತವವಾದರೂ ಶೈಲಿ ಮತ್ತು ಧಾಟಿಯಲ್ಲಿ ಪುರಾಣಕತೆಗಳನ್ನು ಹೋಲುತ್ತವೆ. ಆಡುಮಾತಿನ ನುಡಿಗಟ್ಟನ್ನು ಕೆಚ್ಚಿನಿಂದ ಬಳಸಬಲ್ಲ ಕೆರೂರರು ಈ ಕತೆಗಳಲ್ಲಿ ಕೃತ್ರಿಮವಾದ ಶೈಲಿಯನ್ನು ಬಳಸುತ್ತಾರೆ. ಶೈಲಿ ಮತ್ತು ಧೋರಣೆಗಳನ್ನು ಪರಿಶೀಲಿಸಿದರೆ ಕನ್ನಡದ ಐತಿಹಾಸಿಕ ಕತೆಗಳು ಇತಿಹಾಸವನ್ನು ಪುರಾಣವನ್ನಾಗಿಸುವ, ವೈಭವೀಕರಿಸುವ ಗೀಳಿನ ಅಪಾಯಗಳನ್ನು ತೋರಿಸುತ್ತವೆ. ಉದ್ದೇಶಪೂರ್ವಕವಾಗಿ ರೆಟರಿಕ್ಕನ್ನು ಬಳಸುವ ಮೂಲಕ ಗತಜೀವನದ ಬಗ್ಗೆ ತಮ್ಮ ಆರಾಧಕ ದೃಷ್ಟಿಕೋನವನ್ನು ಬರಹಗಾರರು ಓದುಗರ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ವಸಾಹತುಸಾಹಿಯ ಅನುಭವದಿಂದ ಉಂಟಾದ ಮಾನಸಿಕ ಹಿಂಜರಿತದಿಂದ ಈ ಅಭಾಸ ಹುಟ್ಟಿಕೊಂಡಿತು. ಮಾಸ್ತಿಯವರು ತಮ್ಮ ಐತಿಹಾಸಿಕ ಕತೆಗಳಲ್ಲಿ ಇತಿಹಾಸ ರಮ್ಯವಾಗದಂತೆ ಪಾತ್ರಗಲ ನಡುವಳಿಕೆ ಮತ್ತು ದೃಶ್ಯಗಳ ವಾಸ್ತವಿಕತೆಯನ್ನು ದುಡಿಸಿಕೊಳ್ಳುತ್ತಾರೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ವಾಸ್ತವಿಕತೆಯ ಪದರಿನ ಕೆಳಗೆ ಹಿಂದಿನ ಬದುಕಿನಲ್ಲಿ ಅವರು ಕಾಣುವ ಮೌಲ್ಯಗಳ ಬಗ್ಗೆ ಆರಾಧಕ ದೃಷ್ಟಿಯಿರುವುದು ಕಂಡುಬರುತ್ತದೆ. ‘ವಸುಮತ್ತಿ’ಯಂಥ ಕತೆಗಳಲ್ಲಿ ಗತಜೀವನದ ಬಗ್ಗೆ ಮರುಹಂಬಲವಿಲ್ಲದಿದ್ದರೂ ಆ ಬದುಕಿನ ಘನತೆಯ ಬಗ್ಗೆ ಗಾಢವಾದ ಶ್ರದ್ಧೆಯಿದೆ. ಇತರ ಬರಹಗಾರರು ಗತಕಾಲವನ್ನು ರಮ್ಯಗೊಳಿಸಿ ನೋಡಿದ್ದರಿಂದ ಆ ಬದುಕಿನ ಜತೆಗೆ ಅರ್ಥಪೂರ್ಣ ಸಂಬಂಧಗಳನ್ನು ಕಂಡುಕೊಳ್ಳಲಿಲ್ಲ. +ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಸಬಂಧಗಳನ್ನು ಕುರಿತ ಮಾಸ್ತಿಯವರ ಕತೆಗಳು ಪರೋಕ್ಷವಾಗಿ ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಮುಖ್ಯವಾದ ವಿಷಯವನ್ನು ಗಮನಕ್ಕೆ ತರುತ್ತವೆ. ಎರಡು ಸಂಸ್ಕೃತಿಗಳ ವೈಷಮ್ಯಗಳನ್ನು ವಿಶ್ಲೇಷಿಸುವ ಈ ಕತೆಗಳಲ್ಲಿ ದೇಶೀಯ ಸಂಸ್ಕೃತಿ ನಿರಂತರವಾದ ಕೆಲವು ಮಾನವೀಯ ಮೌಲ್ಯಗಳ ಆಕರವಾಗಿ ಚಿತ್ರಿತವಾಗುತ್ತವೆ. ಎಲ್ಲಿಯೂ ಒಂದು ರಾಜಕೀಯ ವ್ಯವಸ್ಥೆಯ ಆಂತರಿಕ ರಚನೆಯಾಗಿ ಕಂಡುಬರುವುದಿಲ್ಲ. ಸ್ವಾತಂತ್ರ್ಯಪೂರ್ವ ಬರಹಗಾರರಿಗೆ ರಾಷ್ಟ್ರವೆಂದರೆ ಒಂದು ಸಾಂಸ್ಕೃತಿಕ ಸಮುದಾಯವಾಗಿತ್ತು. ಆದ್ದರಿಂದಲೇ ರಾಜಕೀಯ ಬದಲಾವಣೆಗಳಿಗಿಂತ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳ ಪ್ರಶ್ನೆ ಕೆರೂರರಿಂದ ಹಿಡಿದು ಎಲ್ಲ ಬರಹಗಾರರಿಗೂ ಮುಖ್ಯವಾದಂತೆ ತೋರುತ್ತದೆ. ನಮ್ಮ ಅಂದಿನ ಬರಹಗಾರರ ಕಲ್ಪನೆಯ ರಾಷ್ಟ್ರ ಮಾನವೀಯ ಮೌಲ್ಯಗಳ ಒಂದು ಆದರ್ಶ ವ್ಯವಸ್ಥೆ ಮಾತ್ರವಾಗಿತ್ತು. ರಾಜಕೀಯದ ಆಯಾಮ ಅವರಿಗೆ ಗೌಣವಾಗಿಯೇ ಉಳಿಯಿತು. +ರಾಷ್ಟ್ರದ ಪರಿಕಲ್ಪನೆ ನಮ್ಮ ಬರಹಗಾರರಿಗೆ ಮೌಲ್ಯಗಳ ಒಂದು ಆದರ್ಶ ವ್ಯವಸ್ಥೆಯಾಗಿ ಕಂಡದ್ದು ಅವರು ಸಮಕಾಲೀನ ವಾಸ್ತವವನ್ನು ಗ್ರಹಿಸುವುದರ ಮೇಲೆ ತೀರ ವಿಶಿಷ್ಟವಾದ ಪರಿಣಾಮ ಉಂಟುಮಾಡಿತು. ಅವರ ದೃಷ್ಟಿ ಮೌಲ್ಯಗಳ ಜಗತ್ತಿನ ಮೇಲೆ ಕುದುರಿದ್ದರಿಂದ ಮೌಲ್ಯ ವ್ಯವಸ್ಥೆಯಲ್ಲಾದ ಸೂಕ್ಷ್ಮವಾದ ಪಲ್ಲಟಗಳನ್ನು ಅವರು ಗುರುತಿಸುತ್ತಾರೆ. ವ್ಯವಸ್ಥೆಯ ರಚನೆಯಲ್ಲಾದ ಪಲ್ಲಟಗಳ ಬದಲು ಆ ಬದಲಾವಣೆಗಳ ಪರೋಕ್ಷವಾದ ಪ್ರತಿಫಲನಗಳಾದ ಮೌಲ್ಯಗಳ ಬದಲಾವಣೆಯನ್ನು ಗ್ರಹಿಸುವ ನಮ್ಮ ಬರಹಗಾರರ ಕೆಲಸ ಕುತೂಹಲಕಾರಿಯಾಗಿದೆ. ಇದನ್ನು ಕನ್ನಡದ ವಾಸ್ತವವಾದಿ ಸಂಪ್ರದಾಯದ ಎರಡನೇ ಹಂತದ ಬರಹಗಾರರಲ್ಲಿ ಕಾಣಬಹುದು. ಸಮುದಾಯದಲ್ಲಿ ಹುಟ್ಟಿಕೊಂಡಿದ್ದ ಬಿರುಕುಗಳಿಂದಾಗಿ ಈ ಬರಹಗಾರರಿಗೆ ಸಮಾಜದ ಮೌಲ್ಯಕಲ್ಪನೆಗಳ ಜತೆಗೆ ಪೂರ್ತಿ ತಾದ್ಯಾತ್ಮ್ಯ ಹೊಂದುವುದು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಸಮಾಜದ ನಂಬಿಕೆ ನಡವಳಿಕೆಗಳನ್ನು ಇವರು ಹೆಚ್ಚು ವಿಮರ್ಶಾತ್ಮಕವಾಗಿ ನೋಡಬಲ್ಲರು. ಪರಂಪರಾನುಗತವಾದ ಸಮುದಾಯವೊಂದು ಒಡೆದುಹೋಗುತ್ತಿರುವ ಮತ್ತು ಮೌಲ್ಯಗಳು ಶಿಥಿಲಗೊಳ್ಳುತ್ತಿರುವುದರ ಬಗ್ಗೆ ಇವರು ಎಚ್ಚರವನ್ನು ತೋರಿಸುತ್ತಾರೆ. ಇವರ ಕೃತಿಗಳು ಯುಗದ ಸಂವೇದನೆಯ ಅಭಿವ್ಯಕ್ತಿಗಳಾಗಿರದೇ ಇರಬಹುದು. ಆದರೆ ದೇಶದಲ್ಲಿ ನಡೆದಿದ್ದ ಸಮಗ್ರ ಮಂಥನದ ಪರೋಕ್ಷವಾದ ಅಭಿವ್ಯಕ್ತಿಗಳಾಗಿ ಮುಖ್ಯವಾಗಿವೆ. +ಅನುಭವದ ಒರೆಗಲ್ಲಿನಿಂದ ಜೀವನದ ಟೊಳ್ಳುಗಟ್ಟಿಗಳನ್ನು ಪರೀಕ್ಷಿಸಬೇಕೆನ್ನುವ ವೈಚಾರಿಕ ನಿಲುವಿನಿಂದ ಬರೆಯುವ ಶಿವರಾಮ ಕಾರಂತರು ಕನ್ನಡ ಸಂಪ್ರದಾಯದ ಸಂದರ್ಭದಲ್ಲಿ ವಿಶಿಷ್ಟವಾಗಿ ಕಾಣುತ್ತಾರೆ. ಮರುಹಂಬಲದ ಭಾವುಕತೆಯಾಗಲಿ, ಸ್ವಾತಂತ್ರ್ಯಪೂರ್ವಯುಗದ ಆದರ್ಶಪ್ರಿಯತೆಯಾಗಲಿ ಅವರಲ್ಲಿ ಕಾಣುವುದಿಲ್ಲ. ಇಂಥ ಸುಲಭವಾದ ಅಪಾಯಕಾರಿ ನಿಲುವುಗಳಿಂದ ಪಾರಾಗಲು ಅವರು ಅನುಭವವನ್ನು ಪ್ರಮಾಣವೆಂದು ನೋಡುವ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರು. ಪಶ್ಚಿಮದ ಚಿಂತನೆ ಮತ್ತು ಗಾಂಧೀಯುಗದ ಆದರ್ಶವಾದದ ಅತ್ಯುತ್ತಮ ಅಂಶಗಳು ಅವರಲ್ಲಿ ಹರಳುಗಟ್ಟಿ ನೈತಿಕ ಮಾನವತಾವಾದೀ ಜೀವನದೃಷ್ಟಿಯನ್ನು ಕೂಡಿಸಿದವು. ಮನುಷ್ಯಸ್ವಭಾವದ ಒಳಿತು-ಕೆಡಕುಗಳ ಸಾಧ್ಯತೆಯನ್ನು ಅನುಭವದ ಸತ್ಯದ ಹಿನ್ನೆಲೆಯಲ್ಲಿ ಅವರು ಪರಿಶೀಲಿಸುತ್ತಾರೆ. +ಗಾಂಧೀಯುಗದ ಆದರ್ಶವಾದ ಅವರ ಬರಹಗಳಲ್ಲಿ ಮನುಷ್ಯನ ಉತ್ತಮಿಕೆಯ ಸಾಧ್ಯತೆಯಾಗಿ ಕಂಡುಬರುತ್ತದೆ. ವಿಚಾರವಾದದ ಬೆಂಬಲದಿಂದ ಅವರು ಸುಲಭವಾದ ಆದರ್ಶೀಕರಣ, ಭಾವುಕತೆಯಿಂದ ಪಾರಾಗುತ್ತಾರೆ. ಆದರೆ ಮನುಷ್ಯನ ಸ್ವಭಾವದಲ್ಲಿ ಹುದುಗಿರುವ ಒಳ್ಳೆಯತನದಲ್ಲಿ ಅವರು ತೋರುವ ನಂಬಿಕೆ ಗಾಂಧೀವಾದಿ ಮಾನವತಾವಾದದಿಂದ ಬೇರೆಯಾಗಿಲ್ಲ. ಹೀಗೆ ಎರದು ತಲೆಮಾರುಗಳಲ್ಲಿ ಬದುಕಿದ ಬರಹಗಾರರಿಗೆ ಒಂದು ಜಗತ್ತಿನ ಮೌಲ್ಯಕಲ್ಪನೆಯ ಚೌಕತ್ಟಿನಲ್ಲಿ ಇನ್ನೊಂದು ಜಗತ್ತಿನ ವಾಸ್ತವವನ್ನು ಬೆಲೆಗಟ್ಟಿ ನೋಡುವುದು ಸಾಧ್ಯವಾಯಿತು. ಆದರೆ ನನ್ನ ತಲೆಮಾರಿನವರಿಗೆ ಇಂಥ ಸವಲತ್ತು ಇಲ್ಲದ್ದರಿಂದ ಮತ್ತು ಹಿಂದಿನ ಬದುಕಿನ ಜತೆಗೆ ಅರ್ಥಪೂರ್ಣ ಸಂಬಂಧಗಳಿಲ್ಲದ್ದರಿಂದ ನಾವು ಆ ಬದುಕನ್ನು ಹೊರಗಿನವರಂತೆ, ನಮ್ಮ ತುರ್ತುಗಳಿಗೆ ತಕ್ಕಂತೆ ಪುನಃಸೃಷ್ಟಿಸಿ ನೋಡುತ್ತೇವೆ. ಸ್ವಾತಂತ್ರ್ಯಪೂರ್ವ ಸಾಹುತ್ಯದಲ್ಲಿನ ಆದರ್ಶ ಮತ್ತು ಸಮಕಾಲೀನ ವಾಸ್ತವಗಳೆರಡೂ ನಮ್ಮ ಮಟ್ಟಿಗೆ ಹೀಗೆ ಸಾಹಿತ್ಯದ ಓದಿನ ಮೂಲಕ ಪುನಃಸೃಷ್ಟಿಯಾಗಲೇಬೇಕಾದಂಥವು. ಅಂದಿನ ಬರಹಗಾರರು ತಮ್ಮ ಆದರ್ಶದ ನೆಲೆಗಳನ್ನು ಎಲ್ಲಿ ಗುರುತಿಸಿಕೊಂಡರು ಮತ್ತು ಎಂಥ ವಾಸ್ತವವನ್ನು ತಮ್ಮ ಬರಹದ ವಿನ್ಯಾಸವಾಗಿ ಬಳಸಿಕೊಂಡರು ಎನ್ನುವುದು ಅವರ ಬರಹಗಳಿಂದಲೇ ನಿರ್ಧರಿತವಾಗಬೇಕೇ ಹೊರತು ಚರಿತ್ರೆ ಅಥವಾ ಸಮಾಜಶಾಸ್ತ್ರದ ಪುಸ್ತಕಗಳು ಕೊಡುವ ಮಾಹಿತಿಯಿಂದಲ್ಲ. ಅಂದಿನ ಬರಹಗಾರರ ಸೃಷ್ಟಿಶೀಲ ಬರಹದ ರುಜುತ್ವ(ಔಥೆನ್ತಿಚಿತ್ಯ್) ಆ ಬರಹದ ಯಶಸ್ಸಿನಿಂದ ನಿರ್ಧರಿತವಾಗಬೇಕು, ಇತರ ಮಾನದಂಡಗಳಿಂದಲ್ಲ. ಈ ಅಂಶವನ್ನು ಇಷ್ಟು ವಿಶದವಾಗಿ ಹೇಳಲು ಕಾರಣವಿದೆ. ಸ್ವಾತಂತ್ರ್ಯಪೂರ್ವ ಸಾಹಿತ್ಯದ ಬಗ್ಗೆ ಮಾತನಾಡುವಾಗ ನಾವು ಅಂದಿನ ಬದುಕಿನ ಬಗ್ಗೆ ಇಟ್ಟುಕೊಂಡ ಪೂರ್ವಗ್ರಹಗಳಿಂದ ಹೊರಡುತ್ತೇವೆ. ಅಂದಿನ ಕೃತಿಗಳ ಅನುಭವದಿಂದಲ್ಲ ಎನ್ನುವ ಗುಮಾನಿ ತಪ್ಪಲ್ಲವೆಂದು ಅಂದುಕೊಳ್ಳುತ್ತೇನೆ. +ನಮ್ಮ ಸಂಸ್ಕೃತಿಯ ಮನಸ್ಸನ್ನು ಚಾರಿತ್ರಿಕ ಪ್ರಜ್ಞೆಯ ಬದಲು ಧಾರ್ಮಿಕ ಪ್ರಜ್ಞೆ ಆವರಿಸಿದ್ದರಿಂದ ರಾಷ್ಟ್ರೀಯತೆಯ ಆದರ್ಶ ಇದರಿಂದಾಗಿ ಅಮೂರ್ತವಾಗಿಯೇ ಉಳಿಯಿತು. ಈ ಆದರ್ಶ ನಮ್ಮ ಬರಹಗಾರರ ಪ್ರಜ್ಞೆಯನ್ನು ಪ್ರವೇಶಿಸಿದಾಗಲೂ ಅವರು ಆ ಆದರ್ಶವನ್ನು ಅನಿವಾರ್ಯವಾಗಿಯೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಪರಿಕರಗಳೊಂದಿಗೆ ಬೆರೆಸಬೇಕಾಯಿತು. ಹಾಗೆ ಬೆರೆಸುವುದು ಸಾಧ್ಯವಿಲ್ಲದಿದ್ದಾಗ ಆ ಆದರ್ಶ ರಕ್ತಮಾಂಸವಿಲ್ಲದ ಆಶಯಮಾತ್ರವಾಗಿ ಉಳಿಯಿತು. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದಲ್ಲಿ ಇದನ್ನು ನಿಚ್ಚಳವಾಗಿ ನೋಡುತ್ತೇವೆ. ರಾಶ್ಟ್ರೀಯತೆಯ ರಾಜಕೀಯ ಮಗ್ಗುಲುಗಳನ್ನು ನೇರವಾಗಿ ವಿಷ್ಲೇಶಿಸುವ ಅಥವಾ ಸ್ವಾತಂತ್ರ್ಯ ಹೋರಾಟದ ಬಗೆಗಿರುವ ಸಾಹಿತ್ಯ ಸಾಮಾನ್ಯವಾಗಿ ಸತ್ವಹೀನವಾಗಿದೆ. ಬದುಕಿನ ವಾಸನೆಯಿಲ್ಲದಂತಿದೆ. ಇಂಥ ಕೃತಿಗಳಲ್ಲಿ ಪಾತ್ರಗಳು, ಸನ್ನಿವೇಶಗಳು ದಟ್ಟವಾದ ಜೀವಂತಿಕೆಯನ್ನಾಗಲಿ, ಒಂದು ಸ್ಥಳ-ಕಾಲಕ್ಕೆ ಸೇರಿದ್ದನ್ನು ಸಾಬೀತು ಮಾಡುವ ವಿವರಗಳ ಸಾಂದ್ರತೆಯನ್ನು ಪಡೆದಿಲ್ಲ. ಅಷ್ಟೇ ಏಕೆ ಬರಹಗಾರರು ಅಲ್ಲಿ ಬಳಸುವ ವರ್ಣನೆ ಸಂಭಾಷಣೆಗಳ ಭಾಷೆ ಜೀವಂತ ಭಾಷೆಯ ನುಡಿಗಟ್ಟನ್ನು ಮರೆತುಬಿಡುತ್ತದೆ. ರಾಷ್ಟ್ರೀಯತೆ ಒಂದು ವೈಚಾರಿಕ ಆಶಯ ಮಾತ್ರವಾಗಿ ಉಳಿದುಕೊಳ್ಳುತ್ತದೆ. ಬರಹಗಾರರ ಸೃಷ್ಟಿಶೀಲ ಪ್ರಜ್ಞೆಯ ಆಳಕ್ಕೆ ಹೋಗುವುದಿಲ್ಲ. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಮುಖ್ಯ ಕೃತಿಗಳು ಸಮಕಾಲೀನ ರಾಷ್ಟ್ರಮಟ್ಟದ ರಾಜಕೀಯವನ್ನು ಪೂರ್ತಿಯಾಗಿ ತೊರೆದು ಸುತ್ತಲಿನ ಪ್ರಾದೇಶಿಕ ಅನುಭವಕ್ಕೆ ಬದ್ಧವಾಗಿರುವ ಕೃತಿಗಳಾಗಿವೆ. ಈ ಪ್ರಾದೇಶಿಕ ಅನುಭವಕ್ಕೆ ನಮ್ಮ ಬರಹಗಾರರು ನಿಷ್ಠರಾಗಿರುವುದರ ಮಹತ್ವವನ್ನು ಇಲ್ಲಿ ಗುರುತಿಸಲು ಪ್ರಯತ್ನಿಸುತ್ತೇನೆ. +ನಮ್ಮ ಸಂಸ್ಕೃತಿಯ ಜೀವಾಳವಿರುವುದು ಅದರ ಬಹುಮುಖತ್ವದಲ್ಲಿ. ಸಮುದಾಯದ ಒಂದೊಂದು ಗುಂಪೂ ತನ್ನದೇ ಆದ ವಿಶಿಷ್ಟವಾದ ಜೀವನಕ್ರಮವನ್ನು, ಯೋಚನೆ ಮಾಡುವ-ಚಿಂತಿಸುವ ಬಗೆಯನ್ನು ಮತ್ತು ತನ್ನದೇ ಆದ ನುಡಿಗಟ್ಟನ್ನು ಹೊಂದಿದೆ. ವಿವಿಧ ಪ್ರದೇಶಗಳನ್ನು ಒಂದೇ ಅಧಿಕಾರಸೂತ್ರದ ಕೆಳಗೆ ತರಲು ಪ್ರಯತ್ನಿಸುವುದು ಸಾಮ್ಯಾಜ್ಯಶಾಹಿಯ ಕೆಲಸ. ತನ್ನ ಎಲ್ಲ ವಸಾಹತುಗಳಲ್ಲಿ ಏಕರೂಪತೆಯನ್ನು ಅಂದರೆ ತನ್ನದೇ ಸ್ವರೂಪವನ್ನು ಹೇರುವುದು ವಸಾಹತುಶಾಹಿಯ ಕೆಲಸ. ಇವೆರಡೂ ಸಂಸ್ಕೃತಿಯ ಬಹುಮುಖತ್ವವನ್ನು ನಾಶಮಾದಬಯಸುತ್ತದೆ. ಆದರೆ ಇಂಥ ಪ್ರಯತ್ನಗಳನ್ನು ವಿರೋಧಿಸಿ ತನ್ನ ಬಹುಮುಖತ್ವವನ್ನು ಉಳಿಸಿಕೊಳ್ಳಲು ಸಂಸ್ಕೃತಿ ತನ್ನದೇ ಉಪಾಯಗಳನ್ನು ಹುಡುಕುತ್ತಿರುತ್ತದೆ. ಕನ್ನಡದ ಸೃಷ್ಟಿಶೀಲ ಮನಸ್ಸು ಕೂಡ ಮೊದಲಿನಿಂದಲೂ ತನ್ನ ಸ್ವಾಯತ್ತತೆಯ ರಕ್ಷಣೆಗೆ ಒಂದು ಉಪಾಯವನ್ನು ಬಳಸುತ್ತ ಬಂದಿದೆ. ಇದೇ ಪ್ರಾದೇಶಿಕತೆ ಅಥವಾ ಮೊಕಾಶಿಯವರ ಮಾತಿನಲ್ಲಿ ಹೇಳುವುದಾದರೆ ಏತದ್ದೇಶಿಯತೆ. ಸ್ಥೂಲವಾಗಿ ಹೇಳುವುದಾದರೆ, ಇದರ ಲಕ್ಷಣವೆಂದರೆ ರಾಷ್ಟ್ರಮಟ್ಟದ ಅಮೂರ್ತಗಳ ವಿರುದ್ಧ ಪ್ರಾದೇಶಿಕ ಅನುಭವದ ಸಾಂದ್ರತೆಯನ್ನು, ವಿಶಿಷ್ಟತೆಯನ್ನು ಒಡ್ಡುವುದು. ಸಂಸ್ಕೃತದ ಲಾಕ್ಷಣಿಕ ಮೀಮಾಂಸೆಯ ಸೂತ್ರಗಳ ವಿರುದ್ಧ ಪ್ರಾದೇಶಿಕ ರಚನೆಗಳನ್ನು ಕನ್ನಡ ಕಾವ್ಯದಲ್ಲಿ ಒಳಗಿದ್ದು, ಸಾಹಿತ್ಯದ ವಸ್ತು ರಾಷ್ಟ್ರಮಟ್ಟದ ಪುರಾಣಕತೆಗಳದ್ದಾಗಿದ್ದರೂ ಭಾಷೆ ಮತ್ತು ನುಡಿಗಟ್ಟಿನ ಮೂಲಕ ವಿಶಿಷ್ಟವಾದ ಪ್ರಾದೇಶಿಕ ಸೊಗಡನ್ನು ಕೊಟ್ಟಿದ್ದು ಇವು ಇಂಥ ಉಪಾಯಗಳೇ. ರಾಜಕೀಯವಾಗಿ ಪ್ರಾದೇಶಿಕತೆ ವಿಘಟನೆಗೆ ದಾರಿ ಮಾಡಿಕೊಡುವಂಥದ್ದಾಗಿದ್ದರೂ ಸಾಂಸ್ಕೃತಿಕವಾಗಿ ಅದು ಅನಿವಾರ್ಯವಾಗಿದೆ. ಈ ದ್ವಂದ್ವಕ್ಕೆ ಸಮಾಧಾನಕರವಾದ ಪರಿಹಾರ ಇನ್ನೂ ದೊರೆತಿಲ್ಲ. ಸದ್ಯದ ವಿಷಯಕ್ಕೆ ಸಂಬಂಧಿಸಿದಂತೆ ಈ ಪ್ರಕ್ರಿಯೆಯ ಎರಡು ಮಗ್ಗುಲುಗಳನ್ನು ಗುರುತಿಸಬಹುದು. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಶಕ್ತಿಪೂರ್ಣತೆ ನೇರವಾಗಿ ಪ್ರಾದೇಶಿಕತೆಯಿಂದ ಹುಟ್ಟಿರುವಂಥದ್ದು. ಈ ಸಾಹಿತ್ಯದ ಮುಖ್ಯ ಕೃತಿಗಳು ವಾಸ್ತವವಾದಿ ಸಂಪ್ರದಾಯಕ್ಕೆ ಸೇರಿವೆ. ಈ ಕೃತಿಗಳ ಯಶಸ್ಸಿರುವುದು ಸುತ್ತಲಿನ ಬದುಕಿನ ವಿನ್ಯಾಸವನ್ನು ಮತ್ತು ಆ ವಿನ್ಯಾಸದಲ್ಲಿಯೆ ಹುಟ್ಟುವ ಮೌಲ್ಯಕಲ್ಪನೆಗಳನ್ನು ಬಳಸಿಕೊಳ್ಳುವುದರಲ್ಲಿ. ಈ ಬದುಕಿನ ವಿನ್ಯಾಸದಲ್ಲಿ ಚರಿತ್ರೆಯ ಮುಖ್ಯ ಘಟನೆಗಳು ನೇರವಾಗಿ ಪ್ರವೇಶಿಸುವುದಿಲ್ಲ. ಸ್ವಾತಂತ್ರ್ಯಪೂರ್ವ ಯುಗದ ಕೃತಿಗಳು ಆ ಯುಗದ ದಾಖಲೆಗಳಂತು ಅಲ್ಲವೆ ಅಲ್ಲ. ಆದರೆ ತೀರ ಪರೋಕ್ಷವಾಗಿ ಆ ಯುಗದಲ್ಲಿ ನಡೆದ ಮೌಲ್ಯಪಲ್ಲಟಗಳನ್ನು ಈ ಕೃತಿಗಳು ಧ್ವನಿಸುತ್ತವೆ. ಸಂಪ್ರದಾಯದ ತಾಳಿಕೆಯ ಶಕ್ತಿಯನ್ನು ಪರೀಕ್ಷಿಸುವುದರ ಮೂಲಕ ಅಥವಾ ಸಂಕ್ರಮಣ ಸ್ಥಿತಿಯೊಂದರ ತಬ್ಬಿಬ್ಬುಗಳನ್ನು, ಗೊಂದಲಗಳನ್ನು ಸೂಚಿಸುವುದರ ಮೂಲಕ-ಹೀಗೆ ಪರೋಕ್ಷವಾಗಿ, ನಿಧಾನವಾಗಿ ಯುಗದ ಸಂವೇದನೆಯ ಹೊಳಹುಗಳನ್ನು ಧ್ವನಿಸುತ್ತವೆ. (ತಮ್ಮ ಕಾದಂಬರಿಯಲ್ಲಿ ಮಲೆನಾಡಿನ ಜೀವನವನ್ನು ವರ್ಣಿಸುತ್ತಾ ಕುವೆಂಪು ಅವರು ‘ಅಲ್ಲೊಂದು ಇಲ್ಲೊಂದು ಗಾಂಧೀ ಟೋಪಿಗಳು ಓಡಾಡಿದ್ದವು’ ಎಂದು ಆ ಪ್ರಸ್ತಾಪ ಮುಗಿಸುತ್ತಾರೆ. ಕನ್ನಡದ ಗಟ್ಟಿಯಾದ ಕಥಾಸಾಹಿತ್ಯದಲ್ಲಿ ರಾಜಕೀಯದ ನೇರವಾದ ಪ್ರಸ್ತಾಪ ಈ ಮಟ್ಟಕ್ಕೆ ಉಳಿಯುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ಆದರೆ ಅದೇ ಹೊತ್ತಿಗೆ ಕುವೆಂಪು ಅವರ ಹೂವಯ್ಯ ತನ್ನ ಪರಿಸರದಿಂದ ಬೇರ್ಪಡೆಯಾದ ಮೊದಲ ಅಲಿ‌ಎನತೆದ್ ಹೆರೊ ಎನ್ನುವುದನ್ನು ಮರೆಯಲಾಗದು) ಹೀಗೆ ನೇರವಾಗಿ ರಾಜಕೀಯ ವಾಸ್ತವಗಳಿಗೆ ಅಸಡ್ಡೆ ತೋರಿಸುತ್ತಲೆ ಬದುಕಿನ ಆಳದಲ್ಲಿ ನಡೆಯುವ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವುದು ಸ್ವಾತಂತ್ರ್ಯಪೂರ್ವ ಕೃತಿಗಳ ಲಕ್ಷಣವಾಗಿದೆ. ಇದೇ ಪ್ರಕ್ರಿಯೆಯ ಇನ್ನೊಂದು ಮಗ್ಗುಲು ಅದರ ದೋಷವನ್ನು ತೋರಿಸುತ್ತದೆ. ಚರಿತ್ರೆ ಮತ್ತು ರಾಜಕೀಯಕ್ಕೆ ವಿಮುಖವಾಗುವ ಪ್ರಾದೇಶಿಕತೆಯಿಂದಾಗಿ ಈ ಸಾಹಿತ್ಯ ಒಂದು ಮುಖ್ಯ ಆಯಾಮವನ್ನೇ ಕಳೆದುಕೊಳ್ಳುತ್ತದೆ. ಸೃಷ್ಟಿಶೀಲ ಪ್ರಜ್ಞೆಯ ಆಳಕ್ಕೆ ಇಳಿಯುವ ಅಮೂರ್ತ ರಾಷ್ಟ್ರೀಯತೆಯನ್ನು ತೆಳುವಾಗಿ ಚಿತ್ರಿಸುವುದು ಒಂದು ಬಗೆಯಾದರೆ, ಪ್ರಾದೇಶಿಕ ಅನುಭವದ ರುಜುತ್ವವನ್ನು ಸಾಧಿಸುವುದು ಇನ್ನೊಂದು ಬಗೆ. ಆದರೆ ಪ್ರಾದೇಶಿಕ ಅನುಭವಕ್ಕೆ ನಿಷ್ಠವಾಗಿರುವುದು ಒಂದು ರೀತಿಯ ನ್ಯೂನ್ಯತೆಯನ್ನು, ಸೀಮಿತತೆಯನ್ನು ತರುತ್ತದೆ. ಪ್ರಾದೇಶಿಕ ಮೂರ್ತ ಅನುಭವಕ್ಕೆ ಬದ್ಧವಾಗಿದ್ದುಕೊಂಡೇ ಆ ಅನುಭವಕ್ಕೆ ಚಾರಿತ್ರಿಕ ಪ್ರಸ್ತುತತೆಯನ್ನು ಕೊಡುವ ಉನ್ನತ ಮಟ್ಟದ ಕತೆಗಾರಿಕೆಯನ್ನು ನಮ್ಮ ಬರಹಗಾರರು ಸಾಧಿಸಲಿಲ್ಲ. ವೈಯಕ್ತಿಕ ಸಂಬಂಧಗಳ ಕಥೆಯಾದ ‘ಅನ್ನಾ ಕರೇನೀನಾ’ ರಶಿಯಾದ ಜೀವಂತ ಚರಿತ್ರೆಯಾಗುವಂತೆ ಅಥವಾ ಸ್ತೆನ್ಧಲ್ ನ ‘ಸ್ಚರ್ಲೆತ್ ಅನ್ದ್ ಬ್ಲಚ್ಕ್’ ಫ್ರಾನ್ಸ್ ದೇಶದ ಯುಗವೊಂದರ ದಾಖಲೆಯಾದಂತೆ ನಮ್ಮ ವಾಸ್ತವವಾದಿ ಕೃತಿಗಳು ಪ್ರಾದೇಶಿಕತೆಯನ್ನು ಮೀರಿದ ಆಯಾಮಗಳನ್ನು ಪಡೆದುಕೊಳ್ಳುವುದಿಲ್ಲ. ಕೊನೇ ಪಕ್ಷ ಡಿಕನ್ಸನ್ ಕೃತಿಗಳು ಅವನ ಪರಿಸರವನ್ನು ಲವಲವಿಕೆಯಿಂದ ಚಿತ್ರಿಸುವಂತೆ ಚಿತ್ರಿಸುವುದಿಲ್ಲ. ಈ ಕೊರತೆಯನ್ನು ಬರಹಗಾರರ ಪ್ರತಿಭೆಯ ಕೊರತೆಗೆ ಆರೋಪಿಸುವುದಕ್ಕಿಂತ ಸಮಗ್ರವಾದ ಚಿಂತನೆಯನ್ನು ಬೆಳೆಸಲಾರದ ನಮ್ಮ ಸಂಸ್ಕೃತಿಯ ಹಿಂಜರಿತಗಳಿಗೆ ಆರೋಪಿಸುವುದು ಸೂಕ್ತವೆನಿಸುತ್ತದೆ. ಸ್ವಾತಂತ್ರ್ಯಪೂರ್ವ ಕಥಾಸಾಹಿತ್ಯದ ಮುಖ್ಯ ಕೃತಿಗಳನ್ನು ಒಟ್ಟಿಗೆ ಓದಿದಾಗ ಅವು ಚರಿತ್ರೆಯ ಒಂದು ತಿರುವುನಲ್ಲಿ ಹುಟ್ಟಿದ ಕೃತಿಗಳು ಎಂದು ಅನಿಸದ್ದರಿಂದ ಈ ಮಾತನ್ನು ಹೇಳಬೇಕಾಗಿದೆ. +ಹೀಗೆಂದ ಮಾತ್ರಕ್ಕೆ ಮನುಷ್ಯ ಬದುಕಿನ ಮೂರ್ತವಾದ ಚಿತ್ರಣ, ಮನುಷ್ಯ ಸ್ವಭಾವದ ಹಲವಾರು ಮೂಲೆಗಳ ಚಿತ್ರಣ ಇವುಗಳು ವ್ಯಕ್ತಿನಿರಪೇಕ್ಷವಾದ ಸಂಪ್ರದಾಯವೊಂದರಲ್ಲಿ ನಡೆದ ಮಹತ್ವಪೂರ್ಣವಾದ ಒಳಬಂಡಾಯದ ಫಲಗಳು ಎನ್ನುವುದನ್ನು ಅಲ್ಲಗಳೆದಂತಾಗುವುದಿಲ್ಲ. ಇಂಗ್ಲಿಷ್ ಶಿಕ್ಷಣ ಹಾಗೂ ಸಾಹಿತ್ಯದ ಮೂಲಕ ನಮ್ಮ ಚಿಂತನೆಯನ್ನು ಸೇರಿಕೊಂಡ ಮಾನವತಾವಾದಿ ಜೀವನದೃಷ್ಟಿಯ ಪರಿಣಾಮವೆಂದರೆ ನಮ್ಮ ಬರಹಗಾರರ ದೃಷ್ಟಿ ಮನುಷ್ಯನ ಈ ನೆಲದ ಬದುಕಿನ ಮೇಲೆ ಕುದುರಿದ್ದು. ಅದೇ ಹೊತ್ತಿಗೆ ‘ಲೌಕಿಕ ಮಹಾಕಾವ್ಯ’ವೆಂದು ಕರೆಸಿಕೊಳ್ಳುವ ಕಾದಂಬರಿ ಪ್ರಕಾರ ನಮ್ಮ ಸಾಹಿತ್ಯಕ್ಕೆ ಆಮದಾಗಿದ್ದು ಸಹಜವಾಗಿದೆ. ಕಾದಂಬರಿ ಪ್ರಕಾರ ಬಹುಬೇಗನೆ ತನ್ನ ಸಾಹಸಕತೆ (ರೊಮನ್ಚೆ)ಪುರಾಣಕತೆಯ ಪೊರೆಯನ್ನು ಕಳಚಿ ಸಾಮಾಜಿಕತೆಯ ರೂಪದಲ್ಲಿ ಗೋಚರವಾದದ್ದು ಮಹತ್ವಪೂರ್ಣವಾಗಿದೆ. ಸಮಕಾಲೀನ ವಾಸ್ತವವನ್ನು ಕಲೆಯು ವಸ್ತುವನ್ನಾಗಿಸುವ ಪ್ರತಿಭೆ ಕನ್ನಡದ ಮೊದಲ ಕಾದಂಬರಿಗಳಲ್ಲಿಯೇ ಕಂಡುಬರುತ್ತದೆ. ಬೊಳುವಾರ ಬಾಬುರಾವ್ ಅವರ ಕಾದಂಬರಿ ‘ವಾಗ್ದೇವಿ’ ಯಾವುದೇ ನೀತಿಪರವಾದ ರೆಟರಿಕ್ಕನ್ನು ಬಳಸದೆ ಪಾತ್ರಗಳ ಸ್ವಭಾವದಿಂದ ಹುಟ್ಟುವ ಕ್ರಿಯೆಯ ತಿರುವುಗಳನ್ನು ಹಿಂಬಾಲಿಸುವುದರಲ್ಲಿ ಮಗ್ನವಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಬರಹಗಾರರು ನೀತಿಯ ಪ್ರಶ್ನೆಗಳ ಬಗ್ಗೆ ತೀರ ಸಾಪೇಕ್ಷವಾದ ಧೋರಣೆ ತಾಳುತ್ತಾರೆಯೋ ಎನ್ನುವ ಗುಮಾನಿ ಬರುತ್ತದೆ. ಕಾದಂಬರಿಯ ಕೊನೆಯ ಭಾಗದಲ್ಲಿ ಕೂಡ ದುಷ್ಟಪಾತ್ರಗಳಿಗೆ ಶಿಕ್ಷೆಯಾಗುವುದು ಬಾಹ್ಯ ಕ್ರಿಯೆಗಳ ನೀತಿಯಿಂದಲೇ ಹೊರತು ಅವರಲ್ಲಾಗುವ ಯಾವುದೇ ಮಾರ್ಪಾಟುಗಳಿಂದಲ್ಲ. ಧಾರ್ಮಿಕ ಸಂಸ್ಥೆಯೊಂದರಲ್ಲಿ ನಡೆಯುವ ಹೀನಕೆಲಸಗಳ ವರ್ಣನೆ ಮತ್ತು ಹೆಚ್ಚಿನ ಪಾತ್ರಗಳು ಸಹಜವಾಗಿ ಕೆಡುಕಿಗೆ ಈಡಾಗುವುದರ ಚಿತ್ರಣ ಯಾವುದೇ ಮಾನದಂಡದಿಂದಲೂ ಆಘಾತವನ್ನುಂಟುಮಾಡಬಲ್ಲವು. ಆದರೆ ಕತೆಯ ತಿರುವುಗಳಿಗೆ ಅಂಟಿಕೊಂಡು ಬರುವ ಬರಹಗಾರರು ಕಾದಂಬರಿಯ ಮೂಲಕ ಹೆಚ್ಚಿನದನ್ನು ಧ್ವನಿಸುವುದಿಲ್ಲ. ಎಂ.ಎಸ್. ಪುಟ್ಟಣ್ಣನವರ ‘ಮಾಡಿದ್ದುಣ್ಣೋ ಮಹಾರಾಯ’ ಪಾತ್ರಗಳ ನಡವಳಿಕೆಗೆ ಕತೆಯ ತುರ್ತುಗಳಿಗಿಂತ ಹೆಚ್ಚಿನ ಅರ್ಥವಂತಿಕೆ ಕೊಡುವುದರಿಂದ ಹೆಚ್ಚು ಪ್ರಬುದ್ಧವಾದ ಕೃತಿಯಾಗಿದೆ. ಹಳ್ಳಿಯ ಬ್ರಾಹ್ಮಣ ಕುಟುಂಬದ ಮುಖ್ಯ ಪಾತ್ರಗಳು ಎದುರಿಸುವ ಸಂಗ್ಧಗಳು ಎನ್ನುವುದು ಸ್ಪಷ್ಟವಾಗಿದೆ. ಈ ದೃಷ್ಟಿಯಲ್ಲಿ ಬ್ರಾಹ್ಮಣಕುಟುಂಬ ನೈತಿಕ ಕೇಂದ್ರವೆನ್ನುವ ಎಂಜಿಕೆಯವರ ಮಾತನ್ನು ಒಪ್ಪಬಹುದು. ಆದರೆ ಅವರು ಹೇಳುವಂತೆ ಮೈಸೂರಿನ ಅರಮನೆ ಈ ನೈತಿಕ ಕೇಂದ್ರದ ಹಿಂದಿರುವ ವ್ಯವಸ್ಥೆಯ ಕೇಂದ್ರವೆಂದು ಪರಿಗಣಿಸುವುದು ಕತೆಯ ವಿನ್ಯಾಸವನ್ನು ಗುರುತಿಸಲು ಅನುಕೂಲಕರವಾದರೂ ಅದಕ್ಕೆ ಹೆಚ್ಚಿನ ಆಧಾರಗಳಿಲ್ಲ. (ನೋಡಿ:ಎಂಜಿಕೆ ‘ಅಧುನಿಕ ಭಾರತೀಯ ಸಾಹಿತ್ಯ ಮತ್ತು ಇತರ ಲೇಖನಗಳು’ ಪುಟ: ೨೬೮-೨೭೦.) ಮೊದಲಿಂದ ಕೊನೆಯವರೆಗೆ ಬರಹಗಾರರಿಗೆ ನಿಶ್ಚಿತವಾದ ಮೌಲ್ಯಕಲ್ಪನೆಗಳಲ್ಲಿ ನಂಬಿಕೆ ಇರುವುದರಿಂದ ಪಾತ್ರಗಳ ಸಂಗ್ಧಗಳ ಹಿಂದೆ ಯಾವುದೇ ಆಂತರಿಕ ಘರ್ಷಣೆಗೆ ಅನುವಿಲ್ಲದಂತಾಗಿದೆ. ಕಾದಂಬರಿಯ ಮಹತ್ವವಿರುವುದು ಸಶಕ್ತವಾದ ನುಡಿಗತ್ಟಿನಲ್ಲಿ ಒಂದು ಪ್ರದೇಶದ ವಾಸ್ತವವನ್ನು ಅದು ಹಿಡಿದುಕೊಳ್ಳುವುದರಲ್ಲಿ ಸ್ವೀಕೃತವಾದ ಮೌಲ್ಯಕಲ್ಪನೆಗಳನ್ನು ನಿರಾಯಾಸವಾಗಿ ಬಳಸಿಕೊಳ್ಳುವ ಈ ಕೃತಿ ಅಭಿಜಾತ ಮಾರ್ಗದ್ದಾಗಿದೆ. +ಈ ಕೃತಿಗಳಿಗೆ ಹೋಲಿಸಿದರೆ ಕೆರೂರು ವಾಸುದೇವಾಚಾರ್ಯರ ‘ಇಂದಿರೆ’ ಕೃತಿಯ ಆವರಣವಾಗಿರುವ ವಾಸ್ತವದ ಚಿತ್ರಣದಲ್ಲಿ ಹೆಚ್ಚಿನ ಸಮಕಾಲೀನತೆಯನ್ನು ತೋರುತ್ತದೆ. ಮುನ್ನುಡಿಯಲ್ಲಿ ಬರಹಗಾರರು ಸೂಚಿಸಿರುವಂತೆ ಸುಧಾರಣವಾದ ಒಂದು ಹಂತವನ್ನು ತಲುಪಿದ ನಂತರವೆ ಸಮಾಜದ ಬಗ್ಗೆ ಅವರು ಬರೆದಿದ್ದಾರೆ. ಈ ಹಿಂದೆ ಸೂಚಿಸಿದ ಮ್ತೆ ರಾಷ್ಟ್ರೀಯತೆಯ ಪ್ರಜ್ಞೆ ಸಾಂಸ್ಕೃತಿಕ ಪರಿಸರದ ಅಂಶವಾಗಿ ಬಂದಾಗ ನಮ್ಮ ಬರಹಗಾರರು ಅದಕ್ಕೆ ಪ್ರತಿಕ್ರಿಯಿಸುವುದನ್ನು ಈ ಕೃತಿ ತೋರಿಸುತ್ತದೆ. ರಾಜಕೀಯವಾಗಿ ರಾಷ್ಟ್ರೀಯತೆಯ ಪರಿಕಲ್ಪನೆ ಅವರಿಗೆ ಮುಖ್ಯವೆನಿಸದಿದ್ದರೂ ಹೊಸ ಸಮಾಜ ಮತ್ತು ಧರ್ಮದ ಪರಿಕಲ್ಪನೆಯಾಗಿ ಅದು ಪ್ರಭಾವಶಾಲಿಯಾಗಿತ್ತು. ಆಳದಲ್ಲಿ ನಮ್ಮ ಬರಹಗಾರರಿಗೆ ಹೊಸ ರಾಷ್ಟ್ರದ ಕಲ್ಪನೆ ಸುಧಾರಣೆಗಳ ಮೂಲಕ ಸೃಷ್ಟಿಯಾಗುವ ಹೊಸ ಸಮಾಜ – ಧರ್ಮದ ಕಲ್ಪನೆಯೂ ಆಗಿತ್ತು. ಆದ್ದರಿಂದಲೇ ಈ ಬದಲಾವಣೆಗಳನ್ನು ಚರ್ಚಿಸುವುದು ಕೆರೂರರಂಥ ಬರಹಗಾರರಿಗೆ ಮುಖ್ಯವಾಗಿತ್ತು. ನನಗೆ ಮುಖ್ಯವೆನಿಸುವ ವಿಷಯವೆಂದರೆ ಕನ್ನಡದ ಎಲ್ಲ ಮುಖ್ಯ ಬರಹಗಾರರಂತೆ ಕೆರೂರರು ಕೂಡ ಸಮಾಜದ ಬದಲಾವಣೆಗಳ ಬಗ್ಗೆ ಸಂಕೀರ್ಣವಾದ ಧೋರಣೆಯನ್ನು ತಾಳುತ್ತಾರೆ ಎನ್ನುವುದು. ಅಧುನಿಕ ಸುಧಾರಣಾವಾದಿ ಧೋರಣೆಗಳನ್ನು ಜೀವನವೃತ್ತಿಯಾಗಿ ಮಾಡಿಕೊಂಡ ಕಮಲೆ, ಪಂಡಿತ, ನಟೇಶರಂಥವರು ಈ ಕಾದಂಬರಿಯಲ್ಲಿ ವ್ಯಂಗ್ಯಚಿತ್ರಗಳಾಗಿ ಬಂದಿದ್ದಾರೆ. ಜಯರಾಂ ಮುಂತಾದವರು ಮತ್ತು ಈ ಧೋರಣೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಸ್ವಾರ್ಥಿಗಳಾಗಿದ್ದಾರೆ. ಆದರೆ ಬರಹಗಾರರ ವ್ಯಂಗ್ಯ ಸುಧಾರಣವಾದದ ಹೆಸರಿನಲ್ಲಿ ಜೊಳ್ಳಾಗಿರುವವರ ಮೇಲಾಗಿದೆಯೇ ಹೊರತು ಆ ಧೋರಣೆಗಳ ಮೇಲಲ್ಲ. ಸುಧಾರಣವಾದದ ಬಗ್ಗೆ ಸಂಶಯದ ಧೋರಣೆಯನ್ನು ತೋರುವ ಇಂದಿರೆ ಮತ್ತು ರಮಾಕಾಂತರು ಅಂಥ ಸುಧಾರಣೆಗಳು ಹುಟ್ಟಿಸಬಹುದಾದ ಪ್ರಬುದ್ಧವ್ಯಕ್ತಿಗಳಾಗಿದ್ದಾರೆ. ಅಂದರೆ ಬದುಕಿನಲ್ಲಿ ಅನುಭವದಿಂದ ಮಾಗಿ ಸಂಪ್ರದಾಯವನ್ನು ಮುರಿಯುವ ಪ್ರಬುದ್ಧತೆ ಕೆರೂರರಿಗೆ ಒಪ್ಪಿಗೆಯಾಗಿದೆ. ಕೇವಲ ಧೋರಣೆಯಾಗಿ ಉಳಿಯುವ ಪ್ರಗತಿಪರತೆ ಒಪ್ಪಿಗೆಯಾಗಿಲ್ಲ. ಬಹುಶಃ ನಮ್ಮ ಹೆಚ್ಚಿನ ಬರಹಗಾರರಂತೆ ಕೆರೂರರಿಗೂ ಸುಧಾರಣೆಗಳನ್ನು ಅರಗಿಸಿಕೊಂಡು ಬೆಳೆಯಬಲ್ಲ ಸಂಸ್ಕೃತಿಯಲ್ಲಿ ನಂಬಿಕೆ ಇದ್ದದ್ದರಿಂದ ಹೀಗೆ ಆಗುತ್ತದೆ. ಕೆರೂರರ ಐತಿಹಾಸಿಕ ಕತೆಗಳನ್ನು ಓದಿದಾಗ ಈ ಮಾತು ಮನದಟ್ಟಾಗುತ್ತದೆ. ಅವರೂ ಕೂಡ ಹಿಂದೂ ಸಂಸ್ಕೃತಿಯನ್ನು ಆರಾಧಕ ದೃಷ್ಟಿಯಲ್ಲಿ ನೋಡುತ್ತಾರೆ. ಅನ್ಯದೇಶೀಯ ಆಳ್ವಿಕೆಯ ವಿರುದ್ಧ ಹುಟ್ಟಿಕೊಂಡ ರಾಷ್ಟ್ರೀಯತೆಯ ಪರಿಕಲ್ಪನೆ ದೇಶೀಯ ಸಂಸ್ಕೃತಿಯ ವೈಭವೀಕರಣಕ್ಕೆ ಈಡುಮಾಡಿತು ಎನ್ನುವುದನ್ನು ಮರೆಯಲಾಗದು. ವಸಾಹತುಶಾಹಿ ಅನುಭವದ ಒಟ್ಟು ಪರಿಣಾಮವೆಂದರೆ ಹಿಂದೂ ಸಂಸ್ಕೃತಿಯ ಪುನರುಜ್ಜೀವನದ ಬಗ್ಗೆ ತೀರ ಭಾವುಕವಾದ ನಿಲುವು. ಸಾಮಾನ್ಯ ಕೃತಿಗಳಲ್ಲಿ ಇದು ತೀರಾ ಢಾಳಾಗಿ ಕಂಡಾಗ ಅದನ್ನು ಸುಲಭವಾಗಿ ಗುರುತಿಸುತ್ತೇವೆ. ಆದರೆ ಹೆಚ್ಚು ಪ್ರಬುದ್ಧವೆಂದು ತೋರುವ ಕೃತಿಗಳಲ್ಲಿ ಕೂಡ ನಮ್ಮ ಬರಹಗಾರರ ಮೌಲ್ಯಕಲ್ಪನೆ ಸಾಂಸ್ಕೃತಿಕ ಪುನರುಜ್ಜೀವನದ ಆಶಯಗಳನ್ನು ಆಧರಿಸಿದೆ ಎನ್ನುವುದನ್ನು ಗಮನಿಸಬೇಕು. ನಮ್ಮ ಬರಹಗಾರರಿಗೆ ಒಂದು ರಾಷ್ಟ್ರದ ಕಲ್ಪನೆ ಮೂಲತಃ ಒಂದು ಸಂಸ್ಕೃತಿ-ಧರ್ಮವಾಗಿ ಕಂಡದ್ದರಿಂದ ಸಾಂಸ್ಕೃತಿಕ ಪುನರುಜ್ಜೀವನದ ಕಲ್ಪನೆಗಳು ಅವರ ಸಾಹಿತ್ಯವನ್ನು ಬೆಲೆಗಟ್ಟುವುದರಲ್ಲಿ ಮುಖ್ಯವಾಗುತ್ತವೆ. ವಾಸ್ತವವಾದಿ ಸಂಪ್ರದಾಯದ ಕೃತಿಗಳಲ್ಲಿ ನುಡಿಗಟ್ಟು ಮತ್ತು ಸನ್ನಿವೇಶ ಚಿತ್ರಣಗಳ ರುಜುತ್ವದಿಂದಾಗಿ ಈ ಕೃತಿಗಳು ಸಮಕಾಲೀನ ವಾಸ್ತವದ ಸಮಗ್ರ ಚಿತ್ರಣವನ್ನು ಕೊಡುತ್ತವೆ ಎನ್ನುವ ಭಾವನೆ ಬರುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಲ್ಲಿ ಸಾಂಸ್ಕೃತಿಕ ಪುನರುಜ್ಜೀವನ ಆದರ್ಶದಿಂದಾಗಿ ಸಮಾಜದ ಬದುಕಿನ ಹಲವಾರು ಅಂಶಗಳಿಗೆ ಬರಹಗಾರರು ಎರವಾದದ್ದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಸಾಮಾಜಿಕ ಅಸಮಾನತೆಗೂ ಸಂಸ್ಕೃತಿಗೂ ಇರುವ ಸಂಬಂಧಗಳನ್ನು ನಮ್ಮ ಬರಹಗಾರರು ಅರ್ಥಮಾಡಿಕೊಳ್ಳದೇ ಇದ್ದದ್ದರಿಂದ ಸಮಾಜದ ಎಲ್ಲ ಕೆಡಕುಗಳನ್ನು ಎದುರಿಸಿ ಉಳಿಯಬಲ್ಲ ಆರೋಗ್ಯವಂತಿಕೆ ನಮ್ಮ ಸಂಸ್ಕೃತಿಗೆ ಇದೆ ಎಂದು ಭ್ರಮಿಸಿದರು. +ಮಾಸ್ತಿಯವರ ಕಥಾಸಾಹಿತ್ಯ ಹಲವಾರು ವಿಮರ್ಶಕರಲ್ಲಿ ಇಂಥ ಪ್ರಶ್ನೆಗಳನ್ನು ಕೆದಕಿದೆ. ಇಲ್ಲಿ ಅವರು ಬರೆದ ಎರದು ಬಗೆಯ ಕತೆಗಳ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಎತ್ತುತ್ತೇನೆ. ಒಂದು -ಐತಿಹಾಸಿಕವೆನ್ನಬಹುದಾದ ಕತೆಗಳು. ಇನ್ನೊಂದು – ದೇಶೀಯ ಸಂಸ್ಕೃತಿ ಮತ್ತು ವಿದೇಶೀಯ ಸಂಸ್ಕೃತಿಗಳ ಮಧ್ಯದ ಸಂಕೀರ್ಣ ಸಂಬಂಧಗಳನ್ನು ಪರಿಶೀಲಿಸುವ ಕತೆಗಳು. ಈ ಎರಡು ಬಗೆಯ ಕತೆಗಳು ಸ್ವಾತಂತ್ರ್ಯಪೂರ್ವಯುಗದ ಎರಡು ಸಾಂಸ್ಕೃತಿಕ ಪ್ರಕ್ರಿಯೆಗಳನ್ನು ಪ್ರತಿನಿಧಿಸುತ್ತವೆ. ವಸಾಹತುಶಾಹಿ ಅನುಭವದ ಹಿನ್ನೆಲೆಯಲ್ಲಿ ಶುರುವಾದ ಸಾಂಸ್ಕೃತಿಕ ಪುನರುಜ್ಜೀವನದ ಹಂಬಲ ನಮ್ಮ ಬರಹಗಾರರನ್ನು ಐತಿಹಾಸಿಕ ಆದರ್ಶೀಕರಣದತ್ತ ತಳ್ಳಿತು. ಇಂಥ ಭಾವುಕ ಅಪ್ರಬುದ್ಧತೆಯನ್ನು ಕೆರೂರ ವಾಸುದೇವಾಚಾರ್ಯರ ಐತಿಹಾಸಿಕ ಕತೆಗಳಲ್ಲಿ ಕಾಣಬಹುದು. ಮುಖ್ಯವಾಗಿ ಇದು ನಿರೂಪಣಾಶೈಲಿಯ ರೂಕ್ಷತೆಯಲ್ಲಿ ಮತ್ತು ಸಂಭಾಷಣೆಗಳ ಕೃತ್ರಿಮತೆಯಲ್ಲಿ ಒಡೆದು ಕಾಣುತ್ತದೆ. ಕೆರೂರರ ಕತೆಗಳನ್ನು ಮಾಸ್ತಿಯವರ ಐತಿಹಾಸಿಕ ಕತೆಗಳಿಗೆ ಹೋಲಿಸಿದರೆ ಒಂದು ಕುತೂಹಲಕರವಾದ ಅಂಶ ಹೊರಬರುತ್ತದೆ. ಕೆರೂರರ ಐತಿಹಾಸಿಕತೆಯನ್ನು ರಂಯಗೊಳಿಸುವಂಥ ಕೃತ್ರಿಮಗೊಳಿಸುವಂಥ ಭಾಷೆ ಬಳಸಿದರೆ ಮಾಸ್ತಿಯವರು ತಮ್ಮ ವಾಸ್ತವವಾದಿ ನುಡಿಗಟ್ಟಿನಿಂದ ಐತಿಹಾಸಿಕವಾದದ್ದನ್ನು ಬೇಕಂತಲೆ ಸಾಮಾನ್ಯಗೊಳಿಸುತ್ತಾರೆ. ಆದರೆ ಮಾಸ್ತಿಯವರೂ ಐತಿಹಾಸಿಕ ಪಾತ್ರಗಳನ್ನು ಆದರ್ಶೀಕೃತಗೊಳಿಸುವ ರೆಟರಿಕ್ಕನ್ನು ಸೂಕ್ಷ್ಮವಾಗಿ ಬಳಸುತ್ತಾರೆ. ಅಲ್ಲದೆ ಕತೆಯ ವಿನ್ಯಾಸಗಳು ಕೂಡ ದೇಶೀಯ ಸಂಸ್ಕೃತಿಯ ಹಿರಿಮೆಯನ್ನು, ಶ್ರೇಷ್ಠತೆಯ ಎತ್ತಿ ಹಿಡಿಯುವ ರೀತಿಯದ್ದಾಗಿರುತ್ತವೆ. ಮನುಷ್ಯನ ಒಳ್ಳೆಯತನದಲ್ಲಿ ಒಂದು ಬಗೆಯ ಧಾರ್ಮಿಕ ನಂಬುಗೆ ಮಾಸ್ತಿಯವರ ಸಾಹಿತ್ಯ ಮುಖ್ಯ ಪ್ರೇರಣೆಯಾಗಿದೆ. ಅವರ ಸಾಮಾಜಿಕತೆಗಳು ಈ ನಂಬುಗೆಯನ್ನು ಜೀವನಾನುಭವದ, ಪ್ರತ್ಯಕ್ಷದ ನಿಕಶಕ್ಕೆ ಒಡ್ಡುತ್ತವೆ. ಮಾಸ್ತಿಯವರ ಪಾತ್ರಗಳು ಜೀವನದ ನಿರ್ಧಾರಕ ಕ್ಷಣಗಳಲ್ಲಿ ತಮ್ಮ ಶೀಲ ಮತ್ತು ಭಾವನೆಗಳ ಒತ್ತಡಗಳಲ್ಲಿ ಸ್ವತಂತ್ರವಾಗಿ ವರ್ತಿಸುತ್ತವೆ. ಆದರೆ ಇಂಥ ನಿರ್ಧಾರಕ ಕ್ಶಣಗಳಲ್ಲಿ ತಮಗೆ ಗೊತ್ತಿಲ್ಲದ ಈ ಪಾತ್ರಗಳು ಸಂಪ್ರದಾಯದಿಂದ ಬಂದ ತಿಳುವಳಿಕೆಯನ್ನು ಪರೀಕ್ಷೆಗೊಡ್ಡುತ್ತವೆ. ಮಾಸ್ತಿಯವರ ಸಾಹಿತ್ಯದಲ್ಲಿ ಮುಖ್ಯವೆನ್ನಿಸುವ ಈ ಸಂಗತಿ ಅವರ ಐತಿಹಾಸಿಕ ಕತೆಗಳಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಈ ಕತೆಗಳು ಕೇವಲ ಎಪಿಸೊದೆಸ್ ಎನ್ನುವ ಭಾವನೆ ಬರುತ್ತದೆ. ಮಾಸ್ತಿಯವರ ‘ಪೆನಗೊಂಡೆಯ ಕೃಷ್ಣಮೂರ್ತಿ’ ‘ಪಂಡಿತರ ಮರಣಶಾಸನ’ ಮುಂತಾದ ಯಾವುದೇ ಕತೆಗಳನ್ನು ಪರಿಶೀಲಿಸಬಹುದು. ಐತಿಹಾಸಿಕ ಪಾತ್ರಗಳು ಪ್ರತಿನಿಧಿಸುವ ಮೌಲ್ಯಗಳು ನಮ್ಮ ಸಂಸ್ಕೃತಿಯಲ್ಲಿ ಅನುಸೂತ್ಯವಾಗಿ ಉಳಿದುಕೊಂಡಿವೆ ಎನ್ನುವ ನಂಬುಗೆಯನ್ನು ಮಾಸ್ತಿ ಸೂಕ್ಷ್ಮವಾಗಿ ಓದುಗರ ಮೇಲೆ ಒತ್ತಾಯಿಸುತ್ತಾರೆ ಎನಿಸುತ್ತದೆ. +ಎರಡು ಸಂಸ್ಕೃತಿಗಳ ಸಂಬಂಧಗಳ ಬಗೆಗಿನ ಮಾಸ್ತಿಯವರ ಕತೆಗಳು ಪ್ರಬುದ್ಧವಾಗಿವೆ. ಸಮಕಾಲೀನ ರಾಜಕೀಯ ವಾಸ್ತವಗಳ ಬಗ್ಗೆ ನಿರ್ಲಕ್ಷ್ಯ ತೋರಿಸಿದ ಮಾಸ್ತಿ ಈ ಸಂಬಂಧಗಳ ಸೂಕ್ಷ್ಮ ಹೊಳಹುಗಳನ್ನು ಪರಿಶೀಲಿಸುತ್ತಾರೆ. ‘ಮಸುಮತ್ತಿ’ ‘ಇಲ್ಲಿಯ ತೀರ್ಪು’ ‘ದೂಬಾಯಿ ಪಾದ್ರಿಯ ಒಂದು ಪತ್ರ’ ಮುಂತಾದ ಕತೆಗಳಲ್ಲಿ ಮತ್ತು ‘ಸೋರಲಿ ಪ್ರಸಂಗ’ದಂಥ ವಿಶಿಷ್ಟ ಕತೆಗಳಲ್ಲಿ ಮಾಸ್ತಿ ಎರದು ಸಂಸ್ಕೃತಿಗಳಿಗೆ ಸೇರಿದ ಪಾತ್ರಗಳ ದೃಷ್ಟಿಕೋನದಿಂದ ಈ ಸಂಬಂಧಗಳನ್ನು ಶೋಧಿಸುತ್ತಾರೆ. ಈ ಕತೆಗಳಿಗೆ ಸಾಮಾನ್ಯವಾಗಿರುವ ವಿಷಯವೆಂದರೆ ಈ ದೃಷ್ಟಿಕೋನವು ಪಾತ್ರಗಳು ಮಾಡುವಂತಹವೂ ಆಗಿರುತ್ತದೆ. ಇಂಥ ಪಾತ್ರಗಳನ್ನು ಬಳಸುವ ಮೂಲಕ ಮಾಸ್ತಿಯವರು ಎರಡು ಸಂಸ್ಕೃತಿಗಳ ಉತ್ತಮ ಅಂಶಗಳನ್ನು ಎತ್ತಿಹಿಡಿಯುತ್ತಾರೆ. ಅದೇ ಹೊತ್ತಿಗೆ ಇಂಥ ಯಾವುದೇ ಕತೆಗಳಲ್ಲೂ ದೇಶೀಯ ಸಂಸ್ಕೃತಿಯ ದೌರ್ಬಲ್ಯಗಳ ಬಗ್ಗೆ ಮೂಲಭೂತವಾದ ವಿವೇಚನೆಯಿಲ್ಲ. ‘ಮಸುಮತ್ತಿ’ ಕತೆಯಲ್ಲಿ ಅವರು ಸೂಚಿಸುವಂತೆ ಇಲ್ಲಿಯ ಸಂಸ್ಕೃತಿ ಜಡಗಟ್ಟಿದಂತೆ ಕಂಡರೂ ಮತ್ತೊಮ್ಮೆ ಜೀವಸಂಚಾರವಾಗುವುದಕ್ಕೆ ಕಾಯ್ದು ನಿಂತಿದೆಯೆಂದು ಅವರು ನಂಬುತ್ತಾರೆ. ವಿದೇಶೀ ಸಂಸ್ಕೃತಿ ದೇಶೀಯ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡುವ ಸಂದರ್ಭಗಳ ವಿಷಾದವನ್ನು ಅವರ ಕತೆಗಳು ಸೂಚಿಸುತ್ತವೆ. ಇಷ್ಟೆಲ್ಲ ಹೇಳಿದರೂ ಸಂಸ್ಕೃತಿಯೊಂದಿಗೆ ಮಾಸ್ತಿಯವರ ಸಂಬಂಧ ಏಕಮುಖವಾದುದು, ತಿಕ್ಕಾಟವಿಲ್ಲದ ಸ್ವೀಕರಣ ಮನೋಭಾವದ್ದು ಎನ್ನುವುದನ್ನು ಅಲ್ಲಗಳೆಯಲಾಗದು. ಸಂಸ್ಕೃತಿಯಲ್ಲಿ ಗಟ್ಟಿಯಾದ ಶ್ರದ್ಧೆಯುಳ್ಳ ಬರಹಗಾರ ಒಂದು ಮಿತಿಯಲ್ಲಿ ಪರಿಪೂರ್ಣವಾದ ಕೃತಿಗಳನ್ನು ಕೊಡಬಹುದು. ಆದರೆ ಸಂಸ್ಕೃತಿಯೊಂದಿಗೆ ತಿಕ್ಕಾಟದ, ಘರ್ಷಣೆಯ ಸಂಬಂಧವಿಟ್ಟುಕೊಂಡ ಬರಹಗಾರ ಹೆಚ್ಚು ಪ್ರಸ್ತುತವೆನಿಸುತ್ತಾನೆ. +ಅನುಭವದ ಒರೆಗಲ್ಲಿನಿಂದ ಜೀವನದ ಟೊಳ್ಳು-ಗಟ್ಟಿಗಳನ್ನು ಪರೀಕ್ಷಿಸಬೇಕೆನ್ನುವ ವೈಚಾರಿಕ ನಿಲುವಿನಿಂದ ಬರೆಯುವ ಶಿವರಾಮ ಕಾರಂತರು ಕನ್ನಡ ಸಂಪ್ರದಾಯದ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟರಾಗಿ ಕಾಣುತ್ತಾರೆ. ಅವರ ಸಮಕಾಲೀನ ಬರಹಗಾರರಲ್ಲಿ ಕಾಣುವ ಯಾವುದೇ ಸಾಂಸ್ಕೃತಿಕ ಹಿಂಜರಿತಗಳನ್ನು ಅವರಲ್ಲಿ ನಾವು ಕಾಣುವುದಿಲ್ಲ. ಇತಿಹಾಸದ ಬಗ್ಗೆ ಮರುಹಂಬಲದ ಭಾವುಕತೆಯಾಗಲಿ, ಸ್ವಾತಂತ್ರ್ಯಪೂರ್ವಯುಗದ ಆದರ್ಶಪ್ರಿಯತೆಯಾಗಲಿ ಅವರಲ್ಲಿ ಕಂಡುಬರುವುದಿಲ್ಲ. ಇಂಥ ಪರಿಣಾಮಕಾರಿ ನಿಲುವುಗಳು ಸುಲಭಸಾಧ್ಯವಾದ್ದರಿಂದಲೇ ಬಹುಶಃ ಅವರು ಅನುಭವವನ್ನು ಪ್ರಮಾಣವೆಂದು ನೋಡುವ ವೈಜ್ಞಾನಿಕಮನೋಭಾವವನ್ನು ಬೆಳೆಸಿಕೊಂದರು. ಪಶ್ಚಿಮದ ಚಿಂತನೆ ಮತ್ತು ಗಾಂಧೀಯುಗದ ಆದರ್ಶವಾದಗಳ ಅತ್ಯುತ್ತಮ ಅಂಶಗಳು ಅವರಲ್ಲಿ ಹರಳುಗಟ್ಟಿ ನೈತಿಕ ಮಾನವತಾವಾದೀ ಜೀವನದೃಷ್ಟಿಯನ್ನು ರೂಪಿಸಿದವು. ಮನುಷ್ಯ ಸ್ವಭಾವದ ಒಳಿತು ಕೆಡುಕಿನ ಸಾಧ್ಯತೆಗಳನ್ನು ಅನುಭವದ, ಸತ್ಯದ ಹಿನ್ನೆಲೆಯಲ್ಲಿ ಅವರು ಪರಿಶೀಲಿಸುತ್ತಾರೆ. ವ್ಯಕ್ತಿ ತಾನು ನಂಬಿಕೊಂಡ ಮೌಲ್ಯಗಳಿಗೆ ಎಷ್ಟು ಪ್ರಾಮಾಣಿಕವಾಗಿ ಬದುಕುತ್ತಾನೆ ಎನ್ನುವುದು ಮಾತ್ರ ಅವರ ನಿಷ್ಕರ್ಷೆಗೆ ಒಳಗಾಗುತ್ತದೆ. ಈ ಮೌಲ್ಯಗಳ ಸಮರ್ಪಕತೆಯನ್ನು ಅವರು ಆಳವಾಗಿ ಕೆದಕುವಂತೆ ತೋರುವುದಿಲ್ಲ. ಕಾರಂತರು ಸಮಕಾಲೀನ ವಾಸ್ತವದ ಬಗ್ಗೆ ಬರೆದ ಕೃತಿಗಳು ಗಾಂಧೀಯುಗದ ಚಳುವಳಿಗಿಂತಲೂ ಹೆಚ್ಚಾಗಿ ಮಹಾಯುದ್ಧದ ಸನ್ನಿವೇಶದಲ್ಲಿ ಶುರುವಾದ ಭ್ರಷ್ಟತೆ, ಅಧಃಪತನದ ಬಗೆಗಿರುವುದು ಕುತೂಹಲಕಾರಿಯಾಗಿದೆ. ಅವರ ‘ಮುಗಿದ ಯುದ್ಧ’ ‘ಜಾರುವ ದಾರಿಯಲ್ಲಿ’ ‘ಔದಾರ್ಯದ ಉರುಳಲ್ಲಿ’ ಮುಂತಾದ ಕಾದಂಬರಿಗಳನ್ನು ಒಟ್ಟಿಗೆ ಓದಿದಾಗ ಅವು ಸಮಕಾಲೀನ ಇತಿಹಾಸದ ಶಕ್ತಿಪೂರ್ಣವಾದ ದಾಖಲೆಗಳಾಗಿರುವುದು ಸ್ಪಷ್ಟವಾಗುತ್ತದೆ. ಒಂದು ಮೌಲ್ಯವ್ಯವಸ್ಥೆ ಕ್ರಮೇಣವಾಗಿ ಶಿಥಿಲಗೊಂಡು ಚಿತ್ರಣ ಈ ಕೃತಿಗಳಲ್ಲಿ ಸಿಕ್ಕುತ್ತದೆ. ನೈತಿಕ ಮತ್ತು ರಾಜಕೀಯ ಭ್ರಷ್ಟತೆಯ ಶುರುವಾತನ್ನು ಕಾರಂತರು ಸ್ವಾತಂತ್ರ್ಯದ ಮೊದಲೇ ಗುರುತಿಸಿದ್ದು ಗಮನಿಸಬೇಕಾದ ವಿಷಯ. (ಈ ಹಿಂದೆ ಹೇಳಿದಂತೆ) ಕಾರಂತರು ಎರಡು ಜಗತ್ತುಗಳ ಮಧ್ಯೆ ತಮ್ಮ ಜೀವನ ದೃಷ್ಟಿಯನ್ನು ರೂಪಿಸಿಕೊಂಡವರು. ಗಾಂಧೀ ಯುಗದ ಆದರ್ಶಗಳ ಒರೆಗಲ್ಲಿನಿಂದ ಅವರು ಸಮಕಾಲೀನ ಸಮಾಜದ ಅದಃಪತನವನ್ನು ವಿವೇಚಿಸುತ್ತಾರೆ. ಕನ್ನಡದ ಪ್ರಮುಖ ವಾಸ್ತವವಾದಿ ಕಾದಂಬರಿಕಾರರಾದ ಕಾರಂತರು ತಮ್ಮ ಈ ಕೃತಿಗಳಲ್ಲಿ ಪ್ರಾದೇಶಿಕ ಜೀವನದ ವಾಸ್ತವಕ್ಕೆ ಬದ್ಧರಾಗಿ ಸಮಕಾಲೀನ ರಾಜಕೀಯ ಘಟನೆಗಳನ್ನು ಬಳಸದಿರುವುದು ಕುತೂಹಲಕಾರಿಯಾಗಿದೆ. ಇಂಥ ಘಟನೆಗಳು ವ್ಯಕ್ತಿಯ ಜೀವನದ ಬವಣೆಗಳ ಮಧ್ಯೆ ಸುಳಿದು ಹೋಗುವ ದೃಶ್ಯಗಳಾಗಿ ಬರುತ್ತವೆ. ಬರಹಗಾರರ ಗಮನ ಒಂದು ಪ್ರದೇಶದ ಸೀಮಿತ ಬದುಕಿನಲ್ಲಿ ಒಬ್ಬ ವ್ಯಕ್ತಿಗೆ ದಕ್ಕುವ ಅನುಭವದ ಮೇಲಿದೆ. (ಹೀಗೆ ದೃಷ್ಟಿಯ ಹರಹನ್ನು ಚಿಕ್ಕದಾಗಿಸಿಕೊಂಡು ಸುತ್ತಲಿನ ಸಮೀಪದ (ಇಮ್ಮೆದಿ‌ಅತೆ)ವಾಸ್ತವವನ್ನು ಬಗೆಯುವ ಈ ಪ್ರಕ್ರಿಯೆ ನಮ್ಮ ಬರಹಗಾರರಿಗೆ ಸಹಜವಾಗಿದೆಯೆನ್ನುವುದು ಈ ಮೊದಲೇ ಸೂಚಿಸಿದ್ದೇನೆ). ಆದರೆ ಕಾರಂತರ ಸಮಕಾಲೀನರಿಗೆ ಹೋಲಿಸಿದರೆ ಕಾರಂತರ ಸಾಹಿತ್ಯ ಪ್ರಾದೇಶಿಕ ಸತ್ಯದ ಮೂಲಕ ದೇಶದ ಒಟ್ಟು ಬದುಕಿನ ಸೂಕ್ಷ್ಮಗಳನ್ನು ಸೂಚಿಸುವಷ್ಟು ಶಕ್ತಿಶಾಲಿಯಾಗಿದೆ. ಸಮಷ್ಟಿಯ ಬದುಕಿನಲ್ಲಿ ಉಂಟಾಗುತ್ತಿದ್ದ ಅಧಃಪತನವನ್ನು ಒಂದು ಕಡೆ ಅಭ್ಯಸಿಸಿದರೆ ಇನ್ನೊಂದು ಕಡೆ ಗಾಂಧೀಯುಗದ ಆದರ್ಶಗಳನ್ನು ವ್ಯಕ್ತಿಯ ಅನುಭವದ ಪ್ರಾಮಾಣ್ಯದಿಂದ ಪರೀಕ್ಷಿಸಿ ಒಂದು ಯುಗದ ಮೌಲ್ಯಗಳ ನಿಷ್ಕರ್ಷೆಯನ್ನು ಮಾಡುತ್ತಾರೆ. ನೇರವಾಗಿ ಸ್ವಾತಂತ್ರ್ಯಪೂರ್ವ ಕಾಲದ ರಾಜಕೀಯ ಘಟನೆಗಳ ಪ್ರಸ್ತಾಪ ಮಾಡುವ ಅನೇಕ ಸಾಮಾನ್ಯ ಕೃತಿಗಳು ಸಿಕ್ಕುತ್ತವೆ. ಕಾರಂತರ ಪ್ರಬುದ್ಧ ಕೃತಿಗಳಿಗೆ ಹೋಲಿಸಿದರೆ ಅವು ಪತ್ರಿಕಾ ವರದಿಗಳಂತೆ ಕಾಣುತ್ತದೆ. +ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ (೧೯೩೦) ಒಂದು ಪ್ರಾದೆಶಿಕ ಕಾದಂಬರಿ ಎಂದು ಪ್ರಸಿದ್ಧವಾಗಿದ್ದರೂ ಸಮಾಜದಲ್ಲಿ ನಡೆದ ಆಂತರಿಕ ಪಲ್ಲಟಗಳ ಅಪ್ರಜ್ಞಾಪೂರ್ವಕವಾದ ದಾಖಲೆಯೂ ಆಗಿದೆ. ತನ್ನ ಸಮಾಜದ ನಂಬುಗೆ, ನಡವಳಿಕೆಗಳಿಗೆ ತನ್ನ ವಿದ್ಯಾಭ್ಯಾಸದಿಂದ ಪರಕೀಯನಾದ ಹೂವಯ್ಯನಂಥ ಒಬ್ಬ ಅಲಿ‌ಎನತೆದ್ ನಾಯಕನನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಹೂವಯ್ಯನ ಆದರ್ಶ, ಧ್ಯೇಯಗಳು ಅವಾಸ್ತವವಾಗಿರಬಹುದು. ಕಾದಂಬರಿಕಾರರ ನಿರೂಪಣಾ ಶೈಲಿಯ ಆರ್ಭಟದ ಮಧ್ಯೆ ಕೃತ್ರಿಮವಾಗಿ ಕಾಣಬಹುದು. ಸಮಾಜದ ಆಂತರಿಕ ಪಲ್ಲಟಗಳಿಂದ ವಿದ್ಯಾವಂತ ವರ್ಗವೊಂದು ಸಮಾಜದಿಂದ ಪರಕೀಯವಾಗುತ್ತಿರುವುದನ್ನು ಹೂವಯ್ಯ ಸಂಕೇತಿಸುತ್ತಾನೆ. ಅಲ್ಲದೆ ಕಾದಂಬರಿಯ ಒಟ್ಟು ವಿನ್ಯಾಸ ಕೂಡ ವಿವಿಧ ಮಟ್ಟದ ಪ್ರಜ್ಞೆಯುಳ್ಳ ವಿವಿಧ ಸಮಾಜಿಕ ಸ್ತರಗಳಿಗೆ ಸೇರಿದ ಪಾತ್ರಗಳು ಎಲ್ಲವೂ ನೈತಿಕ ವಿಕಾಸದ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ಸ್ವಾತಂತ್ರ್ಯಪೂರ್ವಯುಗದ ಚಿಂತನೆಯಲ್ಲಿ ಸೇರಿಕೊಂಡ ಮಾನವತಾವಾದಿ ದೃಷ್ಟಿಕೋನ ಕಾದಂಬರಿಯ ಕಥಾವಿನ್ಯಾಸದಲ್ಲಿ ಮೂರ್ತಗೊಂಡಿದೆಯೆನ್ನಬಹುದು. ಸಮಾಜಿಕ ಅಸಮಾನತೆಯ ಬಗ್ಗೆ ಬರಹಗಾರರ ರೋಷ ಹಬೆಯಾಡುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತದೆ. ಕುವೆಂಪು ಅವರ ಕಾದಂಬರಿಯಲ್ಲಿ ಶೂದ್ರ ಮತ್ತು ದಲಿತ ಅನುಭವ ಕನ್ನಡ ಸಂವೇದನೆಯನ್ನು ಪ್ರವೇಶಿಸುವುದಕ್ಕೂ ಅವರ ಸಮಕಾಲೀನ ಚಿಂತನೆಗೂ ಇರುವ ಸಂಬಂಧಗಳನ್ನು ಗುರುತಿಸಬೇಕು. ಜಾತಿವ್ಯವಸ್ಥೆಯ ವಿರೋಧ ಮತ್ತು ಅಸ್ಪೃಶ್ಯತೆಯ ವಿರೊಧಗಳು ಅಂದು ಚಲಾವಣೆಯಲ್ಲಿದ್ದ ತತ್ವಗಳಾಗಿದ್ದರಿಂದ ಅನೇಕ ಬರಹಗಾರರು ಆ ಬಗ್ಗೆ ಭಾವುಕವಾಗಿ ಬರೆದಿದ್ದಾರೆ. ಪ್ರಗತಿಶೀಲರು ಇಂಥ ಸಮಾಜಿಕ ಅನ್ಯಾಯಗಳ ಬಗ್ಗೆ ರೋಷದಿಂದ ಬರೆದಿದ್ದಾರೆ. ಆದರೆ ಕುವೆಂಪು ಅವರಂಥ ಬರಹಗಾರರ ಮೂಲಕ ಸಮಾಜದ ಕೆಳಸ್ತರಗಳ ಅನುಭವ ನೈಜವಾಗಿ ಮೂಡಿಬಂದಾಗ ಅಮೂರ್ತವಾದ ಆಶಯಗಳು ಸೃಷ್ಟಿಶೀಲ ಚಿಂತನೆಯನ್ನು ಪ್ರವೇಶಿಸಿದಂತಾಗುತ್ತದೆ. ಪ್ರಗತಿಪರ ಧೋರಣೆಗಳುಳ್ಳ ಬರಹಗಾರರಲ್ಲಿ ಕಂಡುಬರುವ ರಟ್ಟಿನ ಆಕೃತಿಯಂಥ ಕೆಳವರ್ಗದ ಪಾತ್ರಗಳಿಗೂ ಕುವೆಂಪು ಅವರ ಜೀವಂತ ಪಾತ್ರಗಳಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಎಷ್ಟರಮಟ್ಟಿಗೆ ಸಮಾಜಿಕ ಆಶಯಗಳು ಕನ್ನಡದ ಸೃಷ್ಟಿಶೀಲತೆಯನ್ನು ಪ್ರವೇಶಿಸಿದವು ಎನ್ನುವುದರ ದ್ಯೋತಕವಾಗಿದೆ ಈ ವ್ಯತ್ಯಾಸ. +ಸ್ವಾತಂತ್ರ್ಯಪೂರ್ವಯುಗದ ಕಥಾ ಸಾಹಿತ್ಯದ ವರದಿ ಮಾಡುವುದು ನನ್ನ ಉದ್ದೇಶವಾಗಿಲ್ಲ. ಅಥವಾ ರಾಷ್ಟ್ರೀಯತೆ ಬಗ್ಗೆ ಮಾತನಾಡಲು ಅನುಕೂಲವಾಗುವಂಥ ಸಾಮಾನ್ಯ ಕೃತಿಗಳು ಪ್ರಸ್ತಾಪಮಾದುವ ಅವಶ್ಯಕತೆಯೂ ನನಗೆ ಅನಿಸಲಿಲ್ಲ. ಆ ಯುಗದ ಮುಖ್ಯಕೃತಿಗಳನ್ನು ಎದುರಿಗಿಟ್ಟುಕೊಂಡು ಕೆಲವು ಸ್ಥೂಲವಾದ ಅಂಶಗಳನ್ನು ಸೂಚಿಸಿದ್ದೇನೆ. ಒಂದು ಯುಗದ ಚಾರಿತ್ರಿಕ ಅನುಭವದ ಅಭಿವ್ಯಕ್ತಿಯಾಗಿ ಈಜ್ ಸಾಹಿತ್ಯವನ್ನು ವಿವೇಚಿಸಿದರೆ ನಿರಾಸೆಯಾಗುತ್ತದೆ. ರಾಜಕೀಯವಾಗಿ ಸಂಕ್ರಮಣ ಸ್ಥಿತಿಯಲ್ಲಿದ್ದ ದೇಶವೊಂದರಲ್ಲಿ ಕಾಣಬೇಕಾಗಿದ್ದ ಚಿಂತನೆಯ ಲವಲವಿಕೆಯಾಗಲಿ ಸಮಕಾಲೀನತೆಯ ಸೊಗಸಾಗಲಿ ಅಲ್ಲಿ ಕಾಣುವುದಿಲ್ಲ. ಒಟ್ಟು ಸಂದರ್ಭದ ಪರಿಣಾಮದಿಂದ ಪ್ರಾದೇಶಿಕ ಸಂಸ್ಕೃತಿಯೊಂದರಲ್ಲಿ ಆದ ಪರೋಕ್ಷವಾದ ಬದಲಾವಣೆಗಳನ್ನು ಸೂಚ್ಯವಾಗಿ ಅದು ಹಿಡುದುಕೊಡುತ್ತದೆ. ಆದರೆ ಪ್ರದೇಶಿಕ ಅನುಭವದ- ಸತ್ಯದ ಮೂಲಕವೇ ಚಾರಿತ್ರಿಕ ಸಂವೇದನೆಯನ್ನು ಅಭಿವ್ಯಕ್ತಿಸುವುದರಲ್ಲಿ ನಮ್ಮ ಬರಹಗಾರರು ಸೋತರೆ ಎನ್ನುವ ಆತಂಕ ಮಾತ್ರ ಮನಸ್ಸಿನಲ್ಲುಳಿಯುತ್ತದೆ. ನಾಶವಾಗುತ್ತಿರುವ ಮತ್ತು ಬದುಕಿನ ಗುಣಮಟ್ಟ ಹಾಳಾಗುತ್ತಿರುವ ಬಗ್ಗೆ ವಿಷಾದವನ್ನು ದಾಖಲಿಸುತ್ತದೆ. ‘ಮುಗಿದ ಯುದ್ಧ’ ‘ಔದಾರ್ಯದ ಉರುಳಲ್ಲಿ’ ‘ಜಾರುವ ದಾರಿಯಲ್ಲಿ’ ಈ ಕಾದಂಬರಿಗಳು ಕಳೆದು ಹೋಗುತ್ತಿರುವ ಜಗತ್ತಿನ ಬಗ್ಗೆ ಹಳವಂಡವನ್ನಲ್ಲದಿದ್ದರೂ ತೀವ್ರವಾದ ವಿಷಾದವನ್ನು ತೋರಿಸುತ್ತವೆ. ಮುಖ್ಯವಾದ ವಿಷಯವೆಂದರೆ ಕಾರಂತರು ಬದುಕಿನ ಅವನತಿಯನ್ನು ಮಹಾಯುದ್ಧದ ಹೊತ್ತಿಗೆ ಶುರುವಾದ ಭ್ರಷ್ಟತೆಯಲ್ಲಿ ಗುರುತಿಸುತ್ತಾರೆಯೇ ಹೊರತು ಸ್ವಾತಂತ್ರ್ಯ ನಂತರದ ಭ್ರಮನಿರಸನದಲ್ಲಿ ಅಲ್ಲ. ಅವರ ಈ ಕಾದಂಬರಿಗಳು ಸಮಕಾಲೀನ ಬದುಕಿನ ನಿಷ್ಠುರವಾದ ಸತ್ಯಗಳನ್ನು ಹಿಡುದುಕೊಡುತ್ತವೆ. ಆದರೆ ಸ್ವಾತಂತ್ರ್ಯ ಚಳುವಳಿಯ ಸನ್ನಿವೇಶವನ್ನು ಅವರು ತಮ್ಮ ಕಾದಂಬರಿಗಳ ಭಿತ್ತಿಯನ್ನಾಗಿ ಬಳಸದಿದ್ದುದು ಕುತೂಹಲಕರವಾಗಿದೆ. ಅವರ ಪಾತ್ರಗಳ ಬದುಕಿನಲ್ಲಿ ಆ ಚಳುವಳಿಯೂ ಕೂಡ ವೈಯಕ್ತಿಕ ಬದುಕಿನ ಬವಣೆಯನ್ನು ದೂರದಿಂದ ತಟ್ಟುವ ಒಂದು ಅನುಭವ ಮಾತ್ರವಾಗಿ ಬಿಡುತ್ತದೆ. ವೈಯಕ್ತಿಕ ಅನುಭವವನ್ನು ಪ್ರಮಾಣವೆಂದು ನಂಬುವ ಕಾರಂತರು ತಮ್ಮ ಪ್ರಾದೇಶಿಕ ಪಾತ್ರಗಳ ಜೀವನದಲ್ಲಿ ರಾಜಕೀಯ ಸನ್ನಿವೇಶಗಳು ಅನುಭವದ ಹರಹಿಗೆ ಬರಲಿಲ್ಲವೆಂದು ಹೀಗೆ ಮಾಡಿರಬಹುದು. ಆದರೆ ಕನ್ನಡದ ಶ್ರೇಷ್ಠ ಬರಹಗಾರರ ಸಮಗ್ರ ಸಾಹಿತ್ಯ ಸಮಕಾಲೀನ ರಾಜಕೀಯದ ವಾಸ್ತವಗಳಿಗೆ ವಿಮುಖವಾದದ್ದು ಗಂಭೀರವಾಗಿ ಆಲೋಚಿಸಬೇಕಾದ ವಿಷಯವಾಗಿದೆ. ಜೊತೆಗೆ ಸ್ವಾತಂತ್ರ್ಯದ ನಂತರದ ಅವರ ಕೃತಿಗಳಲ್ಲಿ ರಾಜಕೀಯದ ಬಗ್ಗೆ ವಿಡಂಬನೆ ಮತ್ತು ಆಕ್ರೋಶಗಳ ಹೊರತು ಇನ್ನಾವ ಪ್ರತಿಕ್ರಿಯೆಯನ್ನು ತೋರದಿದ್ದುದನ್ನು ಗಮನಿಸಿದರೆ ಅವರ ಸೃಷ್ಟಿಶೀಲ ಚಿಂತನೆಯ ಮಿತಿಗಳ ಸ್ಪಷ್ಟವಾಗಿ ಗೋಚರಿಸುತ್ತವೆ. +ಕುವೆಂಪು ಅವರ ಕಾದಂಬರಿಗಳ ಕಲಾತ್ಮಕ ಕೊರತೆಗಳೇನೆ ಇರಲಿ ಸಾಂಸ್ಕೃತಿಕವಾಗಿ ಅವರು ಅತ್ಯಂತ ಮಹತ್ವಪೂರ್ಣ ಬರಹಗಾರರಾಗಿದ್ದಾರೆ. ಕನ್ನಡದ ಇನ್ನೆಲ್ಲ ಗದ್ಯ ಬರಹಗಾರರು ತಮ್ಮ ಸೃಷ್ಟಿಶೀಲತೆಯನ್ನು ಬೌದ್ಧಿಕ ಹಿಡಿತದಿಂದ ನಿಶ್ಚಿತವಾದ ಉದ್ದೇಶಗಾರಿಕೆಯಿಂದ ಮುಕ್ತಗೊಳಿಸಿಕೊಂಡು ಬರೆದಿಲ್ಲ. ಆದ್ದರಿಂದ ಜನಾಂಗದ ಸುಪ್ತಪ್ರಜ್ಞೆಗೆ ಮಾತ್ರ ಅನುಭವವಾಗಬಲ್ಲ ಆಳದ ಅನುಭವಗಳು ಅವರ ಕೃತಿಗಳಲ್ಲಿ ಕಾಣುವುದಿಲ್ಲ. ಕುವೆಂಪುರವರ ಕಾದಂಬರಿಗಳಲ್ಲಿ ಬರಹಗಾರರ ಉದ್ದೇಶಗಳನ್ನು ಮೀರಿದ ಸಂಗತಿಗಳು, ಜನಾಂಗದ ಸುಪ್ತ ಅನುಭವಗಳು ಸುಳಿಯುವುದರಿಂದ ಅವು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ದಾಖಲೆಗಳಾಗಿವೆ. ಶಿಕ್ಷಣದಿಂದಾಗಿ ಪರಿಸರದಿಂದ ದೂರಸರಿದ ಕುವೆಂಪು ಅವರ ಶಿಕ್ಷಿತಪಾತ್ರಗಳು ಸಮುದಾಯವು ಒಡೆದುಹೋದ ಸತ್ಯವನ್ನು ಸಂಕೇತಿಸುತ್ತವೆ. ಈ ದೃಷ್ಟಿಯಲ್ಲಿ ಹೂವಯ್ಯ ಒಂದು ಆದಿಪ್ರತಿಮೆ (ಅರ್ಚೆತ್ಯ್ಪೆ)ಯಾಗಿ ಕಾಣುತ್ತಾನೆ. ಸಂಸ್ಕೃತಿಯ ಬಗೆಗಿನ ಕುವೆಂಪು ಅವರ ಹುಸಿಧೋರಣೆಗಳು ಅವರ ಕಾದಂಬರಿಗಳಲ್ಲಿ ಎಷ್ಟು ನಿಚ್ಚಳವಾಗಿವೆಯೋ ಶೂದ್ರ ಮತ್ತು ದಲಿತ ಬದುಕಿನ ಚಿತ್ರಣ ಅಷ್ಟೇ ದಟ್ಟವಾಗಿದೆ. ಮೊದಲ ಬಾರಿಗೆ ಕುವೆಂಪು ಅವರ ಕೃತಿಗಳಲ್ಲಿ ಒಂದು ಹೊಸ ಅನುಭವವಲಯ ಸಶರೀರವಾಗಿ ಪ್ರವೇಶಿಸುವುದರಿಂದ ಸಂಸ್ಕೃತಿಯಲ್ಲಾದ ಬಹುಮುಖ್ಯ ಪಲ್ಲಟವೊಂದು ಸಾಹಿತ್ಯದಲ್ಲಿ ಮೈದಾಳಿದಂತಾಗುತ್ತದೆ. ಇಂಗ್ಲಿಷ್ ಶಿಕ್ಷಣದಿಂದ ನಮ್ಮ ಚಿಂತನೆಯನ್ನು ಪ್ರವೇಶಿಸಿದ ಮಾನವತಾವಾದ ಕುವೆಂಪು ಕಾದಂಬರಿಗಳಲ್ಲಿ ಮೂರ್ತವಾದ ಕೆಳವರ್ಗದ ಪಾತ್ರಗಳ ಸೃಷ್ಟಿಯೊಂದಿಗೆ ಪರಿಪೂರ್ಣತೆಯನ್ನು ಪಡೆಯುತ್ತದೆ. ಗಾಂಧಿವಾದದ ಬಗ್ಗೆ ಕೇವಲ ಹೇಳಿಕೆಗಳನ್ನು ಕೊಡುವ ಕೃತಿಗಳ ಬದಲು ಕುವೆಂಪು ಕೃತಿಗಳಲ್ಲಿ ನಮ್ಮ ಸಂಸ್ಕೃತಿ ಮೂರ್ತಮಾನವತಾವಾದವನ್ನು ಅರಗಿಸಿಕೊಳ್ಳುವ ಪ್ರಕ್ರೀಯೆ ನಮ್ಮ ಗಮನ ಸೆಳೆಯುತ್ತದೆ. ಅವರ ಕಾದಂಬರಿಗಳು ‘ಸಮಕಾಲೀನ’ವಲ್ಲದಿರಬಹುದು, ಆದರೆ ಸಂಸ್ಕೃತಿಯ ಮನಸ್ಸಿನ ಸೂಕ್ಷ್ಮವಾದ ತಿರುವುಗಳ ದಾಖಲೆಗಳಾಗಿವೆ. ಸ್ವಾತಂತ್ರ್ಯಪೂರ್ವಯುಗದ ಸಾಹಿತ್ಯ ಸಮಕಾಲೀನ ರಾಜಕೀಯ ವಾಸ್ತವಗಳಿಗೆ ವಿಮುಖವಾಗಿರುವುದರಿಂದ ಆ ಸಾಹಿತ್ಯ ಬದುಕಿನ ಆಂತರ್ಯದಲ್ಲಾದ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದನ್ನು ಇನ್ನೊಂದು ಚೌಕಟ್ಟಿನಲ್ಲಿ ನೋಡಬೇಕಾದ ಅವಶ್ಯಕತೆಯಿದೆ. ವ್ಯಕ್ತಿ ನಿರಪೇಕ್ಷವಾದ ಸಂಸ್ಕೃತಿಯೊಂದರಲ್ಲಿ ಮಾನವತಾವಾದ ಪ್ರವೇಶಿಸಿ ಹರಳುಗಟ್ಟುವ ಪ್ರಕ್ರಿಯೆಯನ್ನು ಇಂಥ ಚೌಕಟ್ಟಾಗಿ ಬಳಸಿದರೆ ನಮ್ಮ ಪರಂಪರೆಯ ಸರಿಯಾದ ಅಧ್ಯಯನ ಸಾಧ್ಯವಾಗಬಹುದು. +ಸಮಕಾಲೀನ ರಾಜಕೀಯ ಮತ್ತು ವಾಸ್ತವದ ಬಗ್ಗೆ ಆರ್ಭಟ ಘೋಷಣೆಗಲನ್ನು ಮಾಡಿದ ಪ್ರಗತಿಶೀಲರ ಸಮಕಾಲೀನತೆ ಪತ್ರಿಕೆಗಳ ಸಂಪಾದಕೀಯದ ಮಟ್ಟದ್ದಾಗಿತ್ತು. ಕನ್ನಡದ ವಾಸ್ತವವಾದಿ ಸಂಪ್ರದಾಯದ ಕೊರತೆಗಳೇನೇ ಇರಲಿ ನುಡಿಗಟ್ಟು ಮತ್ತು ಪರಿಸರ ಸೃಷ್ಟಿಯಲ್ಲಿ ಅವು ಇಲ್ಲಿನ ಬದುಕಿಗೆ ತೆರೆದುಕೊಂಡಿದ್ದವು. ಪ್ರಗತಿಶೀಲರಲ್ಲಿ ಮಾತ್ರ ಪಾತ್ರಗಳು ಸನ್ನಿವೇಶಗಳು ಅನಿರ್ಧಿಷ್ಟವಾದ ಒಂದು ನಿರ್ವಾತದಲ್ಲಿ ಹುಟ್ಟಿದಂತೆ ಕಾಣುತ್ತದೆ. ಮೂರ್ತವಾದ ಸೃಷ್ಟಿಯ ಜಾಗವನ್ನು ಅಶಯಗಳು ಆಕ್ರಮಿಸಿಕೊಳ್ಳುತ್ತವೆ. ಪ್ರಗತಿಶೀಲರ ಅನೇಕ ಕಥೆಗಳು ನೇರವಾಗಿ ಸ್ವಾತಂತ್ರ್ಯದ ಚಳುವಳಿಯ ಬಗೆಗಿವೆ. ಈ ಕಥೆಗಳಲ್ಲಿ ಓದುಗನ ಭಾವನೆಗಳನ್ನು ಉದ್ರೇಕಿಸಲು ಬರಹಗಾರರು ಬಳಸುವ ರೆಟರಿಕ್ ವಸ್ತುವಿನ ಸತ್ವವನ್ನು ಕಬಳಿಸಿಬಿಡುತ್ತವೆ. ರಾಷ್ಟ್ರದ ಬಗ್ಗೆ; ಸ್ವಾತಂತ್ರ್ಯದ ಬಗ್ಗೆ ಸುಲಭವಾದ ಭಾವುಕವಾದ ಪ್ರತಿಕ್ರಿಯೆಗಳನ್ನು ಈ ಕೃತಿಗಳು ನಮ್ಮ ಮೇಲೆ ಹೇರುತ್ತವೆ. ಇದರಿಂದಾಗಿ ಸಮಕಾಲೀನ ವಾಸ್ತವದ ಬಗ್ಗೆ ಅಪ್ರಬುದ್ಧವಾದ ತಿಳುವಳಿಕೆಯನ್ನು ಕೊಡುತ್ತವೆ. ಸಮಕಾಲೀನ ವಾಸ್ತವವನ್ನು ಪುರಾಣ, ದಂತಕತೆಯ ಮಟ್ಟಕ್ಕೆ ತರುವ ಈ ಕೃತಿಗಳು ಓದುಗ ಮತ್ತು ಅವನ ಸದ್ಯದ ಬದುಕಿನ ಮಧ್ಯೆ ಇರಬೇಕಾದ ಜೀವಂತ ಸಂಬಂಧಗಳನ್ನು ನಾಶಮಾಡುತ್ತವೆ. +ಸಾಮಾಜಿಕ ಶೋಷಣೆಯ ಹಲವಾರು ಮುಖಗಳ ಬಗ್ಗೆ ಪ್ರಗತಿಶೀಲರು ಬರೆದಿದ್ದಾರೆ. ಅವರ ಸಾಮಾಜಿಕ ಕಳಕಳಿಯಲ್ಲಿ ಮಧ್ಯಮವರ್ಗದ ಶುಷ್ಕವಾದ ನೀತಿಕಲ್ಪನೆಯ ಬಗ್ಗೆ ಆಕ್ರೋಶವಿದೆ. ಕೆಳವರ್ಗಗಳ ಬಗ್ಗೆ ಭಾವುಕವಾದ ಅನುಕಂಪವಿದೆ. ಆದರೆ ಧಾರಾಳವಾದ ಅನುಕಂಪಕ್ಕೂ ವ್ಯವಸ್ಥೆಯ ಸಮಗ್ರ ರೂಪದ ತಿಳುವಳಿಕೆಗೂ ಇರುವ ವ್ಯತ್ಯಾಸ ಪ್ರಗತಿಶೀಲರಿಗೆ ಅರಿವಾದಂತೆ ತೋರುವುದಿಲ್ಲ. ನಿರಂಜನ ಮತ್ತು ಚದುರಂಗರ ಕೆಲವು ಕತೆಗಳು ಸಾಧಿಸುವ ಯಶಸ್ಸು ಅವರ ಪ್ರಗತಿಪರ ಧೋರಣೆಗಳಿಗಿಂತ ವಸ್ತುವಿನ ಗಟ್ಟಿತನದಿಂದ ದೊರೆಯುತ್ತದೆ. +ಒಂದು ರಾಷ್ಟ್ರದ ಕಲ್ಪನೆ ಸಮಕಾಲೀನ ವ್ಯವಸ್ಥೆಯನ್ನು ಬದಲಾಯಿಸುವ ರಾಜಕೀಯವನ್ನು ಹುಟ್ಟುಹಾಕುವಂತೆ ದೇಶದ ಗತಕಾಲದ ಬಗೆಗಿನ ಒಂದು ಪರಿಕಲ್ಪನೆಯನ್ನೂ ಹುಟ್ಟುಹಾಕುತ್ತದೆ. ರಾಷ್ಟ್ರದ ಪರಿಕಲ್ಪನೆ ಒಂದು ಕಡೆಗೆ ಭವಿಷ್ಯದಲ್ಲಿ ನಿಜವಾಗಬೇಕಾದ ಅದರ್ಶವಾಗಿದ್ದರೆ ಇನ್ನೊಂದು ಕಡೆಗೆ ದೇಶದ ಗತಕಾಲದ ಬಗ್ಗೆ ಒಂದು ಮಿಥ್-(ಮ್ಯ್ಥ್)ಬದುಕಿನ ಜತೆಗೆ ಅರ್ಥಪೂರ್ಣವಾದ ಸಂಬಂಧಗಳನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ರಾಷ್ಟ್ರೀಯತೆಯ ಆದರ್ಶವನ್ನು ಇತಿಹಾಸದ ಮೂಲಕ ನೋಡುವ ಪ್ರಕ್ರಿಯೆ ಸ್ವಾತಂತ್ರ್ಯಪೂರ್ವಯುಗದಲ್ಲಿ ಸಹಜವಾಗಿತ್ತು. ಐತಿಹಾಸಿಕ ಕತೆ ಕಾದಂಬರಿಗಳು ರಾಷ್ಟ್ರೀಯತೆಯ ಭಾವನೆಯ ಪರಿಣಾಮವಾಗಿದ್ದವು. ಆದರೆ ವಸಾಹತುಶಾಹಿಯ ಅನುಭವದಿಂದಾಗಿ ದೇಶದ ಗತಕಾಲವನ್ನು ಆದರ್ಶೀಕರಿಸಿ ನೋಡುವ ಒಲವು ನಮ್ಮಲ್ಲಿ ಬೆಳೆದುಬಂದಿತು. ಸಂಸ್ಕೃತಿಯ ಹಿಂದಿನ ಬದುಕಿನ ಬಗ್ಗೆ ಮರುಹಂಬಲದ ಧೋರಣೆ ಬೆವ್ಳೆದುಬಂದಿತು. ಇದರಿಂದಾಗಿ ಇತಿಹಾಸವನ್ನು ಪುರಾಣವನ್ನಾಗಿ ಪರಿವರ್ತಿಸುವ ಕೆಲಸದಲ್ಲಿ ನಮ್ಮ ಬರಹಗಾರರು ತೊಡಗಿಕೊಂಡರು. ಈ ದೇಶದ ಹಿಂದಿನ ಬದುಕು ಉದಾತ್ತವಾಗಿತ್ತು, ಶ್ರೇಷ್ಠವಾಗಿತ್ತು ಎನ್ನುವ ಆಶಯವನ್ನು ಓದುಗರ ಮೇಲೆ ಒತ್ತಾಯಿಸಲು ನಮ್ಮ ಬರಹಗಾರರು ಕೃತ್ರಿಮವಾದ ರೆಟರಿಕ್ಕನ್ನು ಬಳಸುತ್ತಾರೆ. ಸಂಭಾಷಣೆಯ ಸೈಲಿಯಂತೂ ಅವಾಸ್ತವಿಕವಾಗಿತ್ತು. ಹೀಗೆ ಆದರ್ಶೀಕರಿಸಿದ್ದರಿಂದಾಗಿ ಆ ಬದುಕಿನ ಜತೆಗೆ ಉದಾತ್ತ ಮೌಲ್ಯಗಳು ಕೊಡುವಂತಾಯಿತು. ಈ ಬಗೆಯ ಐತಿಹಾಸಿಕ ಸಾಹಿತ್ಯ ಇತಿಹಾಸದ ತಿರಸ್ಕರಣವಾಗುತ್ತದೆ. ಮಾಸ್ತಿಯವರ ಐತಿಹಾಸಿಕ ಕತೆಗಳು ನಮ್ಮ ನುಡಿಗಟ್ಟಿನ ವಾಸ್ತವಿಕತೆಯಿಂದ ಸನ್ನಿವೇಶಗಳ ನೈಜತೆಯಿಂದ ಭಿನ್ನವೆನಿಸುತ್ತದೆ. ಆದರೆ ಅವರೂ ಕೂಡ ಹಿಂದಿನ ಬದುಕನ್ನು ಆರಾಧಕ ದೃಷ್ಟಿಯಿಂದ ನೋಡುತ್ತಾರೆ. ಅದರಲ್ಲಿ ಉದಾತ್ತತೆಯನ್ನು ಹುಡುಕಬಯಸುತ್ತಾರೆ. ‘ನಿಜಗಲ್ಲಿನ ರಾಣಿ’ ‘ಪೆನಗೊಂಡೆಯ ಕೃಷ್ಣಮೂರ್ತಿ’ ಇತ್ಯಾದಿ ಕತೆಗಳು ಈ ಬಗೆಯವು. ಮಾಸ್ತಿಯವರ ವಿಶಿಷ್ಟತೆಯೆಂದರೆ ಅವರು ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಸಂಬಂಧಗಳನ್ನು ಕುರಿತು ಪ್ರಬುದ್ಧವಾದ ಕೆಲವು ಕತೆಗಳನ್ನು ಬರೆದಿದ್ದಾರೆ ಎನ್ನುವುದು. ಈ ಕತೆಗಳಿಗೆ ಮೂಲ ಮಾದರಿಯಂತಿರುವುದು ಅವರ ‘ಮಸುಮತ್ತಿ’ ಎನ್ನುವ ಕತೆ. ಉದಾರ ಮನೋಭಾವದ ವಿದೇಶಿಯರ ದೃಷ್ಟಿಕೋನದಿಂದ ಬರೆಯಲಾದ ಈ ಕತೆಯಲ್ಲಿ ದೇಶೀಯ ಸಂಸ್ಕೃತಿಯ ಸತ್ವಶೀಲತೆಯ ಬಗ್ಗೆ ಹಂಬಲದ ಭಾವನೆಯನ್ನು ಕಾಣುತ್ತೇವೆ. ದೇಶೀಯ ಸಂಸ್ಕೃತಿಯನ್ನು ಪುನರುಜ್ಜೀವನಕ್ಕಾಗಿ ಕಾಯುತ್ತಿರುವ ಸಂಸ್ಕೃತಿಯನ್ನಾಗಿ ಅವರು ಕಾಣುತ್ತಾರೆ. ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಮಧ್ಯದ ತಪ್ಪು ಬರೆದಿದ್ದಾರೆ. ಈ ಕತೆಗಳನ್ನು ದೇಶೀಯ ಸಂಸ್ಕೃತಿಯ ಮಿತಿಗಳ ಬಗ್ಗೆ ಅಮೂಲಾಗ್ರವಾದ ಪರಿಶೀಲನೆ ನಡೆದಂತೆ ತೋರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಆ ಕತೆಗಳಲ್ಲಿ ಎರಡು ಸಂಸ್ಕೃತಿಗಳು ಬೇರೆಯಾಗಿ ನಿಲ್ಲುತ್ತವೆಯೆ ಹೊರತು ವಿದೇಶಿಸಂಸ್ಕೃತಿಯ ಪ್ರಭಾವದಲ್ಲಿ ದೇಶೀಸಂಸ್ಕೃತಿ ತನ್ನ ಚರ್ಚೆಯನ್ನು ಬದಲಾಯಿಸಿಕೊಂಡ ಪ್ರಕ್ರಿಯೆಯ ಚಿತ್ರ ದೊರೆಯುವುದಿಲ್ಲ. ಮಾಸ್ತಿಯವರಲ್ಲಿ ಸಂಸ್ಕೃತಿಯ ಪರಿಕಲ್ಪನೆ ಶಾಶ್ವತವಾದ ಮೌಲ್ಯಗಳುಳ್ಳ ಸಮುದಾಯದ ಪರಿಕಲ್ಪನೆಯಾಗಿದ್ದರಿಂದ ಇಂಥ ಬದಲಾವಣೆಗಳನ್ನು ಅವರು ಗ್ರಹಿಸುವುದಿಲ್ಲ. ಅವರ ‘ಚಿಕವೀರರಾಜೇಂದ್ರ’ ಕಾದಂಬರಿ ಕೂಡ ಇಲ್ಲಿಯ ಸಮಾಜದ ಅವನತಿ ಮತ್ತು ವಸಾಹತಿಶಾಹಿಯ ಅನುಷ್ಠಾನದ ಬಗ್ಗೆ ತೀರ ಸಾಂಪ್ರದಾಯಿಕವಾದ ಚಿತ್ರವನ್ನು ಕೊಡುತ್ತದೆ. +ಕನ್ನಡದ ಐತಿಹಾಸಿಕ ಕಥಾಸಾಹಿತ್ಯದ ಮುಖ್ಯ ದೋಷವೆಂದರೆ ಅದು ನೆನ್ನೆಯ ಬದುಕಿನ ಜತೆಗೆ ಇಂದಿನ ಬದುಕನ್ನು ಜೋಡಿಸಲು ಸಹಾಯವಾಗುವ ‘ಉಸಬ್ಲೆ ಪಸ್ತ್’ ಅನ್ನು ಶೋಧಿಸಲಿಲ್ಲ. ಹಿಂದಿನ ಬದುಕು ರಮ್ಯವೂ ಆದರ್ಶೀಕೃತವೂ ಆದಂತೆ ಇಂದಿಗೆ ನಿಷ್ಪ್ರಯೋಜಕವೂ ಆಗುತ್ತದೆ. ಐತಿಹಾಸಿಕ ಕಥಾ ಸಾಹಿತ್ಯ ಇಂದಿನವರೆಗೂ ಸಹಜ ಮತ್ತು ಶಕ್ತಿಪೂರ್ಣವಾದ ನುಡುಗಟ್ಟನ್ನು ರೂಪಿಸಿಕೊಂಡಿಲ್ಲ. ಗಳಗನಾಥರಲ್ಲಿ, ಕೆರೂರು ವಾಸುದೇವಾಚಾರ್ಯರಲ್ಲಿದ್ದ ರೆಟರಿಕ್ಕಿನ ಗೊಂದಲಗಳಿಗೆ ಕೊನೆಗೂ ಪರಿಹಾರ ದೊರೆಯಲಿಲ್ಲ. +ಸಾಕಷ್ಟು ವಿಫಲವಾದ ಸ್ವಾತಂತ್ರ್ಯಪೂರ್ವ ಸಾಹಿತ್ಯದ ಬಗ್ಗೆ ಆಖೈರಾದ ತೀರ್ಮಾನಗಳನ್ನು ಮಾಡುವುದು ಕಷ್ಟಸಾಧ್ಯವೆನಿಸುತ್ತದೆ. ರಾಷ್ಟ್ರೀಯತೆಯ ಬಗೆಗಿರುವ ಸಾಮಾನ್ಯ ಕೃತಿಗಳ ಪಟ್ಟಿಯನ್ನು ಒದಗಿಸುವ ಬದಲು ಸ್ವಾತಂತ್ರ್ಯಪೂರ್ವ ಸಾಹಿತ್ಯದ ಮುಖ್ಯ ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಅಂಶಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ನಮ್ಮ ಚರಿತ್ರೆಯ ಸಂಕ್ರಮಣ ಕಾಲವೊಂದರಲ್ಲಿ ಸೃಷ್ಟಿಯಾದ ಸಾಹಿತ್ಯ ಅಂದಿನ ಸಮಕಾಲೀನ ರಾಜಕೀಯ ಸಾಮಾಜಿಕ ವಾಸ್ತವಗಳಿಗೆ ಸ್ಪಂದಿಸಲಿಲ್ಲವೆನ್ನುವ ಭಾವನೆ ಬಂದಿದ್ದರಿಂದ ಅದಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನ ಮಾಡಿದ್ದೇನೆ. ಸ್ವಾತಂತ್ರ್ಯಪೂರ್ವ ಸಾಹಿತ್ಯದ ಕೊರತೆಗಳು ಇಂದಿನ ಸಾಹಿತ್ಯದಲ್ಲೂ ಕಾಣುತ್ತವೆ. ಈ ಕೊರತೆಗಳಿಗೂ ನಮ್ಮ ಸಾಂಸ್ಕೃತಿಕ ಪರಿಸರಕ್ಕೂ ಇರುವ ಸಂಬಂಧಗಳನ್ನು ವಿವೇಚಿಸುವುದು ಅವಶ್ಯಕವಾಗಿದೆ. +***** +(ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣ.೧೯೮೮) +ಕೀಲಿಕರಣ: ಸೀತಾಶೇಖರ, ನಂದಿನಿ ಮತ್ತು ಪೃಥ್ವಿ +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […] +ಸ್ನೇಹಿತರೆ, ‘ಕನ್ನಡ ಸಾಹಿತ್ಯದ ಕೆಲವು ಮುಖ್ಯ ವಾಗ್ವಾದಗಳು’ ಎಂಬುದು ಈ ಬಾರಿಯ ಸಂಸ್ಕೃತಿ ಶಿಬಿರದ ಪ್ರಧಾನ ಆಶಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾನೀಗ ಒಂದು ಗೋಷ್ಠಿಯನ್ನು ನಡೆಸಿಕೊಡುತ್ತಿದ್ದೇನೆ. ಈ ಚರ್ಚೆಯು ಕನ್ನಡದ ಛಂದೋರೂಪಗಳನ್ನು ಕುರಿತಾದುದು ಹಾಗೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_59.txt b/Kannada Sahitya/article_59.txt new file mode 100644 index 0000000000000000000000000000000000000000..63baf20b2bcbd1f0f3febe37707cd4bf6081a759 --- /dev/null +++ b/Kannada Sahitya/article_59.txt @@ -0,0 +1,88 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. +ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ ಈ ಚಳಿ ವಿಪರೀತ ಇವರಿಗೋ “ಏನೂ ಅಲ್ಲ” ನಾನು ಚಳಿಗೆ ಮುದುರುವುದನ್ನು ಕಂಡು “ಇದಕ್ಕೇ ಚಳಿಯೆಂದರೆ ಇನ್ನು ಚಳಿಗಾಲದಲ್ಲಿ ಬಂದರೆ ಏನೆನ್ನುತ್ತಿಯಾ?” ಎಂದು ನಗು. ನಗುವಿಗುತ್ತರ ಕೊಡಲು ತುಟಿಯನ್ನು ಅರಳಿಸಲಾರದಷ್ಟು ಚಳಿ ನನಗೆ. +ಕೋಣೆಗೆ ಬಂದು ಅಯ್ಯಮ್ಮ ಎಂತ ಕುಳಿತೆವು. ಆಗಲೇ ರಾತ್ರಿ ಎಂಟಕ್ಕೆ ಬಂದಿತ್ತು. ಪ್ರಯಾಣದ ಆಯಾಸದಿಂದಲೋ ಚಳಿಯ ಮೊರೆತದಿಂದಲೋ ಹಾಸಿಗೆ ಸೇರಿ ಬೆಚ್ಚಗೆ ಕಿವಿಯವರೆಗೆ ಹೊದೆದು ಬಿಸಿಯಾಗಿ ಮಲಗಬೇಕೆಂಬ ಒಂದೇ ಆಸೆ ಆ ನಿಮಿಷದಲ್ಲಿ. ಹಿತಕರವಾದ ಊಟ ಮುಗಿಸಿ ಮಲಗಿದವಳಿಗೆ ಬೆಳಿಗ್ಗೆ ಆರಕ್ಕೇ ಎಚ್ಚರ. +ಎದ್ದು ನೋಡಿದೆ. ಇವರು ಮಗುವಿನಂತೆ ನಿದ್ರಿಸುತ್ತಿದ್ದರು. ಚಳಿ ತನಗಿಲ್ಲ ಎಂದವರು ಕಣ್ಣು ಮಾತ್ರ ಬಿಟ್ಟು ಪಟ್ಟಾಗಿ ಹೊದೆದು ಬಿಟ್ಟಿದ್ದರು. ಹೊದೆದ ರಗ್ಗನ್ನು ಮತ್ತಷ್ಟು ಸರಿಯಾಗಿ ಹೊದಿಸಿ ಹೊರಗಿಣಿಕಿದೆ. +ಸುಯ್ಯೆಂದು ಗಾಳಿ ಬೀಸುತ್ತಿತ್ತು. ಚಳಿಯ ಗರ್ಭದಿಂದಲೇ ಒಡೆದು ಬಂದಿದೆಯೇನೋ ಎಂಬಷ್ಟು ಶೀತಲವಾಗಿ, ಕೈಕಾಲು ಗಡಗಡವೆನ್ನುತ್ತಿದ್ದರೂ ಕಣ್ಣಿಗೆ ಹಸಿರು ನೋಡುವ ಆಸೆ. ಮಂಜಿನ ಮುಸುಕಿನಲ್ಲಿ, ಅಬ್ಬಿಯ ಮೊರೆತದ ತಂಪು ಹಿನ್ನೆಲೆಯಲ್ಲಿ, ಹಕ್ಕಿ ಉಲಿತದ ಗಂಧರ್ವ ತಾಣದಲ್ಲಿ ತಿರುಗುವಾಸೆ. ಇವರು ಏಳಲು ಇನ್ನು ಎಷ್ಟು ಹೊತ್ತಿದೆಯೋ! ಒಂದು ಸುತ್ತು ಹೊಡೆದು ಬರೋಣ ಎಂದೆನಿಸಿ ಹೊರಗೆ ಬಂದೆ. ಉದ್ದಕ್ಕೂ ನೋಡಿದೆ. ಹಿಮ ಹನಿಗಳ ತೆಳು ಪರದೆಯೊಳಗಿನಿಂದ ಸ್ವಲ್ಪವೇ ದೂರದಲ್ಲಿ ಸ್ತ್ರೀ ಆಕೃತಿಯೊಂದು ಜಗಲಿಯ ಕಂಬಕ್ಕೊರಗಿ ತದೇಕ ದೃಷ್ಟಿಯಿಂದ ಎತ್ತಲೋ ನೋಡುತ್ತಿರುವಂತೆ ಕಾಣಿಸಿತು. ಕುತೂಹಲದಿಂದ ಮುನ್ನಡೆದೆ. ನಾನು ಹತ್ತಿರ ಹೋದಾಗಲೂ ಆ ಆಕೃತಿ ಹಾಗೆಯೇ ನಿಂತಿತ್ತು. ಗಂಭೀರತೆಯೇ ಆ ಮೂರ್ತಿಯಲ್ಲಿರುವುದೇನೋ ಎಂಬಂತಿತ್ತು. ಮೊಗ ಮಾತ್ರ ಮಾತೆತ್ತಿದರೆ ಅಳು ಉಕ್ಕಿಸುವಂತೆ ಇತ್ತು. ಅತೀ ತೆಳ್ಳಗೂ ಅಲ್ಲದ, ದಪ್ಪವೂ ಅಲ್ಲದ ಆಕೆ ನೋಡಲು ಲಕ್ಷಣವಾಗಿದ್ದಳು. ಆದರೆ ಖಾಲಿ ಹಣೆ ಮ್ಲಾನತೆಯ ಕಥೆ ಹೇಳುವಂತಿತ್ತು. +ನಾನು ಅವಳತ್ತ ಸುಳಿದುಹೋದರೂ ಅವಳ ದೃಷ್ಟಿ ಮಿಚಲಿತವಾಗಿರಲಿಲ್ಲ. ಅವಳನ್ನು ದಾಟಿ ಸ್ವಲ್ಪ ದೂರ ಹೋಗುತ್ತಲೇ ಇವರು ನನ್ನನ್ನು ಕೂಗಿ ಕರೆದರು. ಹಿಂದಿರುಗಿ ಬಿಸಿ ಕಾಫಿ, ಇಡ್ಲಿ ತೆಗೆದುಕೊಂಡು ದೃಶ್ಯ ದರ್ಶನಕ್ಕೆಂದು ಹೊರಟಾಗ ನಾನು ಮತ್ತೆ ಆ ಕಂಬದತ್ತ ನೋಡಿದೆ. ಆಕೆ ಮಾಯವಾಗಿದ್ದಳು. +ಮಹಾಚಿತ್ರಚತುರ ಸುಂದರವಾಗಿ ಮೂಡಿಸಿರುವ ಬಯಲು ಗಿರಿ ಕಾನನಗಳ ಸಮ್ಮಿಳನದ ದಿವ್ಯದರ್ಶನವನ್ನು ನೀಡುವ “ಕೋಕರ್ಸ್‌ವಾಕ್”, ಕಿನ್ನರ ಮಂದಿರದಲ್ಲಿ ತಾವಾಗಿಯೇ ಮೈ ತಳೆದು ಸೆಟೆದು ನಿಂತಿರುವ “ಪಿಲ್ಲರ್‍ಸ್ ರಾಕ್”ಗಳನ್ನು ನೋಡಿ ಬೆರಗುಪಟ್ಟು, ಕಂಡು ತಣಿಯದಂತಹ ಸೌಂದರ್ಯವಿದು ಎಂದು ಉದ್ಗರಿಸುತ್ತ ಮುಂದಿನ ಸುಯಿಸೈಡ್ ಪಾಯಿಂಟ್ಗೆ ಬಂದೆವು. ಮಾರ್ಗದರ್ಶಿ ಅದರ ವಿವರಣೆ ನೀಡುತ್ತಲೇ ಇದ್ದ. ಅದರ ಚರಿತೆಯನ್ನು, ಅಲ್ಲಿ ಕಳೆದುಕೊಂಡಿರುವ ಪ್ರಾಣಗಳನ್ನು ಕುರಿತು ಅಭ್ಯಾಸಬಲದಿಂದಲೋ ಎಂಬಂತೆ ರಸವತ್ತಾಗಿ ಹೇಳುತ್ತಿದ್ದ. ಕೇಳುತ್ತ, ಕೇಳುತ್ತ ಅಡ್ಡಬೇಲಿಗೆ ಬಂದು ಬಗ್ಗಿ ನೋಡಿದ, ಕೆಳಗೆ ತಲೆ ಗಿರ್‍ರೆನ್ನಿಸುವಂತ ಪ್ರಪಾತ “ಅಬ್ಬ! ಬಿದ್ದರೆ ಎಲುಬು ಚೂರು ಸಿಗಲಿಕ್ಕಿಲ್ಲ” – ಎಂದು ತಿರುಗಿ ನೋಡಿದೆ. ಇವರು ಪಕ್ಕದಲ್ಲಿ ಒಬ್ಬ ವೃದ್ಧರೊಡನೆ ಮಾತಾಡುತ್ತಿದ್ದರು. ಬಳಿಯೇ ಆ ವ್ಯಕ್ತಿ ಕೂಡ ಇದ್ದಳು ಒಬ್ಬ ವೃದ್ಧೆ ಅವರಿಬ್ಬರ ಹಿಂದೆ ನಿಂತಿದ್ದಳು. +ಇವರು ನನ್ನನ್ನು ಕರೆದರು. +“ಇವರು ಗುಜರಾತಿನಿಂದ ಬಂದವರು. ವಸಂತಶರ್ಮ” ಎನ್ನುತ್ತ ಪರಿಚಯ ಮಾಡಿಕೊಟ್ಟರು. +“ಹೋಗಮ್ಮ-ನಮ್ಮ ಹೆಂಗಸರ ಪರಿಚಯ ಮಾಡಿಕೊ” ಎಂದು ವೃದ್ಧೆಯ ಮುಖ ನೋಡಿ ನಗು ಬೀರಿ “ಇವಳು ನನ್ನಾಕೆ-ಇವಳು ಮಗಳು. ನಾವು ಸ್ವಲ್ಪ ಸಂಗ ಪ್ರಿಯರು. ಸರಿಯಾದ ಮಾತುಗಾರರು ಸಿಕ್ಕಿದರೆಂದರೆ ನಮ್ಮ ಮಾತಿಗೆ ಲಗಾಮಿಲ್ಲ” ಎನ್ನುತ್ತ ಗುಜ್ಜು ಮೈಯನ್ನು ಕುಲುಕಿಸಿ ನಕ್ಕರು ಶರ್ಮ. ಇವರು ಮತ್ತು ಶರ್ಮ ಮಾತನಾಡುತ್ತಾ ಅತ್ತ ಹೋದಾಗ ನಾನು ಅವರ ಹೆಂಡತಿ ಮತ್ತು ಮಗಳೊಂದಿಗೆ ಕೂಡಿಕೊಂಡೆ. +ಚೆನ್ನಾಗಿ ಅಡ್ಡ ಬೆಳೆದಿದ್ದಳು ವೃದ್ಧೆ. ನಡೆದರೆ ನಲುಗುವಂತಿದ್ದಳು. +ನನ್ನನ್ನು ನೋಡಿ ಸೌಹಾರ್ದದಿಂದ ನನ್ನ ಕೈ ಹಿಡಿದು ಕುಳ್ಳಿರಿಸಿ ತಾನು ಹತ್ತಿರದಲ್ಲೇ ಕುಳಿತು ಹರಕು ಹಿಂದಿಯಲ್ಲಿ ಮಾತಿಗಾರಂಭಿಸಿದಳು. +“ನಾವು ಗುಜರಾತಿಗಳು. ಹಿಂದಿ ಸ್ವಲ್ಪ ಸ್ವಲ್ಪ ಬರುತ್ತದೆ. ನಿನಗೆ ಬರುತ್ತದೆಯೇ?” “ಹರಕು ಮುರುಕು ಮಾತನಾಡಬಲ್ಲೆ ಅಷ್ಟೇ.” +“ನೀವು ಎಲ್ಲಿಂದ ಬಂದವರು? ಎಷ್ಟು ದಿನಕ್ಕೆಂದು ಬಂದವರು…? ಏಕೆ ಬಂದವರೆಂದು ಕೇಳುವುದಿಲ್ಲ-ಹನಿಮೂನಿಗೆ ಅಲ್ಲವೆ?” ಎಂದು ಮುದುಕಿಯಾದರೂ ಕಣ್ಣು ಮಿಟುಕಿಸಿ ನಕ್ಕಳು. ನಾನೂ ಅವಳನ್ನು ನೋಡಿ ನಕ್ಕುಬಿಟ್ಟೆ. +“ನಾವು ಕರ್ನಾಟಕದವರು. ಹದಿನೈದು ದಿನಗಳಿಗೆಂದು ಬಂದಿದ್ದೇವೆ” ಎಂದೆ. “ನಾವು ನಡಿಯಾದಿನಿಂದ ಬಂದು ಈಗಾಗಲೇ ಎರಡು ದಿನಗಳಾದವು. ಒಂದು ತಿಂಗಳು ಇಲ್ಲಿರಬೇಕು ಅಂತ ಇದೆ. ಶಾಂತಿ ಅರಸಿ ಬಂದಿದ್ದೇವೆ- ಅದು ಸಿಗುವುದೋ ಇಲ್ಲವೋ ತಿಳಿಯದು” ಎನ್ನುತ್ತ ಪಕ್ಕದಲ್ಲೇ ಕುಳಿತಿರುವ ಮಗಳನ್ನು ನೋಡಿ ನಿಟ್ಟುಸಿರುಬಿಟ್ಟಳು ಮುದುಕಿ. ನಾನು ಅವಳತ್ತ ತಿರುಗಿದೆ. ಆಕೆ ನಿರ್ವಿಕಾರವಾಗಿ ಕುಳಿತಿದ್ದಳು. ಕಣ್ಣು ನಿರ್ಲಿಪ್ತವಾಗಿ ಕಂಡುಬಂದರೂ ಯಾವುದೋ ಕರಾಳ ದೃಶ್ಯವೊಂದನ್ನು ಒಳಗೆ ಕಳುಹಿಸಿ ಬಾಗಿಲು ಮುಚ್ಚಿಟ್ಟಂತೆ ಇತ್ತು. +“ಇವಳು ನನ್ನ ಮಗಳು. ಬಿ.ಎ. ಓದಿದ್ದಾಳೆ. ಬಲು ಜಾಣೆ. ಆದರೇನು? ನಮಗೆ ಈ ಕಾಲಕ್ಕೆ, ಅವಳಿಗೆ ಅಕಾಲಕ್ಕೆ…” ಎನ್ನುವಾಗ ಅವಳನ್ನು ತಿವಿದು “ಅಮ್ಮ, ಸುಮ್ಮನಿರು. ಯಾಕೆ ಮತ್ತೆ ಅವೇ ಕಥೆ ಬಿಚ್ಚುತ್ತಿಯಾ?” ಎಂದು ದೈನ್ಯದ ದನಿಯಲ್ಲಂದು ಯುವತಿ ಮುಖವಡಗಿಸಿ ಬಿಕ್ಕಿದಳು. ಕ್ಷಣದ ಹಿಂದೆ ಅತ್ಯಂತ ಗಂಭೀರದ ಮೂರ್ತಿಯೇ ಆಗಿ ಕಂಡ ಆಕೆ ಸಂಯಮ ತಪ್ಪಿ ಬಿಕ್ಕುತ್ತಿದ್ದಳು. +“ನೋಡು ಹೇಗೆ ಮಾಡುತ್ತಿದ್ದಾಳೆ! ಇದೆಲ್ಲ ನಮ್ಮ ಹಣೆಯಲ್ಲಿ ಬರೆದಿದೆ. ಯಾರೇನು ಮಾಡಲು ಸಾಧ್ಯವಿದೆ? ಹೇ ಭಗವಂತ! ಇಷ್ಟು ಸಣ್ಣ ಹುಡುಗಿಗೆ ಎಂತಹ ಕಷ್ಟ ಕೊಟ್ಟೆ ತಂದೆ” ಭಾರವಾದ ನಿಟ್ಟುಸಿರಿನೊಂದಿಗೆ ನುಡಿದ ಶ್ರೀಮತಿ ಶರ್ಮ, ಮದುವೆಯಾಗಿ ಇನ್ನೂ ಆರು ತಿಂಗಳಾಯಿತಷ್ಟೇ, ದೇವರು ಅವಳ ತಿಲಕ ಅಳಿಸಿಬಿಟ್ಟ. ಮದು ಮಗಳ ಚೆಂದ ನೋಡಲು ಮದುವೆ ಮಾಡಿದಂತಾಯಿತು. ಆಗಿನಿಂದ ಇದೇ ರೀತಿ, ಸಮಾಧಾನ ತಂದುಕೊಲ್ಳುವುದು ಹೇಗೆ. ಇವಳಿಗೆ ಸಮಾಧಾನ ಹೇಗೆ ತರುವುದೆಂದೇ ತಿಳಿಯುವುದಿಲ್ಲ. ನಮಗೆ ಈ ಕಾಲದಲ್ಲಿ ದೇವರು ಇಂತಹ ದುಃಖ ಕೊಡಬಾರದಿತ್ತು” ಎನ್ನುವಾಗ ಅವಳ ಸುಕ್ಕುಗೆನ್ನೆಯ ಮೇಲೆ ಕಂಬನಿ ಹರಿಯುತ್ತಿತ್ತು. ವ್ಯಥೆಯಿಂದ ನನ್ನ ಹೃದಯವೂ ಭಾರವಾಯಿತು, ಅಬ್ಬ! ಖಂಡಿತ ನಾನಾದರೆ ಬದುಕಿರಲಾರೆ ಎಂದೆನ್ನಿಸಿ ಮೈನಡುಗಿತು. ದೂರದಲ್ಲಿ ಶರ್ಮರೊಡನೆ ಆರಾಮವಾಗಿ ಕುಳಿತು ಗಹಗಹಿಸಿ ನಗುತ್ತಿದ್ದ ಇವರನ್ನು ಕಂಡು “ಓದೇವರೇ, ಅವರ ಈ ನಗುವನ್ನು ಎಂದುಗೂ ಅಳಿಸಬೇಡ ನನ್ನಿಂದ ಅವರನ್ನೆಂದಿಗೂ ಕಸಿಯಬೇಡ” ಎಂದು ಮನದಲ್ಲೆ ಗೋಗರೆದೆ. ವೃದ್ಧೆಯನ್ನು ಕುರಿತು___ +“ಅಳಬೇಡಿ, ನೀವೇ ಅತ್ತರೆ ಇನ್ನು ಇವರಿಗೆ ಸಮಾಧಾನ ಮಾಡುವವರು ಯಾರು? ನೀವು ತಿಳುವಳಿಕೆಯುಳ್ಳವರು. ಅವರೆದುರಿಗೆ ಹೀಗೆ ಅಳಲೂಬಾರದು. ಕಾಲವೇ ದುಃಖ ತಂದಿತು, ಕಾಲವೇ ದುಃಖ ಮರೆಸುತ್ತದೆ. ಇಲ್ಲವಾದರೆ ಜಗತ್ತು ನಡೆಯುತ್ತದೆಯೇ?” ಎಂಬ ನಾನೇ ಪ್ರಯೋಗಕ್ಕೆ ತರಲಾರದ, ಹಿರಿಯರು ಹೇಳಿದ್ದನ್ನು ಕೇಳಿ ತಿಳಿದ ಒಣ ವೇದಾಂತವನ್ನು ಉಸುರಿದೆ. ಹೊಸ ಜೀವನದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ನಾನು, ವಯೋವೃದ್ಧರೆದುರು ಊಹೆಯ ಬಲದಿಂದಲ್ಲದೆ, ಅನುಭವದ ಆಳದಿಂದ ಹೇಗೆ ಸಮಾಧಾನ ಹೇಳಬಲ್ಲೆ? +ಮಗಳು ಹುಲ್ಲು ಚಿವುಟುತ್ತ ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು. +ದೂರದಲ್ಲಿ ಶರ್ಮ ಮತ್ತು ಇವರು ಸಂತಸದಿಂದ ಸಂಭಾಷಿಸುತ್ತ ಬರುವುದು ಕಾಣಿಸಿತು. ಹೃದಯದಲ್ಲಿರುವ ದುಃಖದ ಒಂದೆಳೆಯೂ ಶರ್ಮರ ಮುಖದ ಮೇಲಿರಲಿಲ್ಲ. +ವೃದ್ಧೆ ಮಗಳ ಮುಖ ಕಣ್ಣು ಎಲ್ಲ ಒರೆಸಿ “ನೋಡು ಅಪ್ಪ ಬರುತ್ತಿದ್ದಾರೆ, ಇನ್ನು ನನ್ನನ್ನು ಗದರುತ್ತಾರೆ. ಅಳಬೇಡ, ಅಳಬೇಡ” ಎಂದಾಗ ಮಗಳು ಕಲ್ಲಿನಂತೆ ಕುಳಿತುಬಿಟ್ಟಳು. +ಅಷ್ಟರಲ್ಲೇ ಬಮದ ಶರ್ಮ “ನೋಡು ಒಳ್ಳೆಯ ಗೆಳೆಯರು ಸಿಕ್ಕಿಬಿಟ್ಟರು ನಮಗೆ ಇನ್ನು ತಿಂಗಳಲ್ಲ-ಎರಡು ತಿಂಗಳಾದರೂ ಇರಬಹುದು ಇಲ್ಲಿ…ಅರೆ! ಪುನಃ ಅಂಜುವನ್ನು ಅಳಿಸಿದೆಯಾ? ಶುದ್ಧ ಬುದ್ದೂ. ನಿನ್ನನ್ನು ಬಿಟ್ಟು ಬರಬೇಕಾಗಿತ್ತು ನಾನು ತಲೆ ಇಲ್ಲ. ಬಾ ಮಗಳೆ, ಹೋಗೋಣ ಇನ್ನು” ಎಂದು ಮಗಳ ಕೈ ಹಿಡಿದೆಬ್ಬಿಸಿ ಹೊರಟು ಬಿಟ್ಟರು. +ದಿನಗಳು ಕಳೆಯುತ್ತಿದ್ದವು-ನಮಗೆ ಅರಿವಿಲ್ಲದಂತೆ. ನಮ್ಮ ಹೊರಗೊಂದು ಜಗತ್ತಿದೆ. ಆ ಜಗತ್ತಿನಲ್ಲಿ ನಮಗೊಂದು ಮನೆಯಿದೆ. ನಮಗೆ ಬಂಧುಗಳಿದ್ದಾರೆ, ಬಳಗದವರಿದ್ದಾರೆ ಎಂಬ ಪರಿವೆಯೇ ಇಲ್ಲದೆ. +ಈ ಅವಧಿಯಲ್ಲಿ ಅಂಜು ಮತ್ತು ನಾನು ಸಮೀಪದ ಗೆಳೆಯರಾದೆವು. ಮೊದಮೊದಲು ತಮ್ಮ ಕಣ್ಣ ಮುಂದೆಯೇ ಇರಬೇಕೆಂದು ನಿರ್ಬಂಧ ಪಡಿಸುತ್ತಿದ್ದ ಶ್ರೀಮತಿ ಶರ್ಮ ಈಗ ಸರಾಗವಾಗಿ ನಮ್ಮೊಡನೆ ಓಡಿಯಾಡಲು ಮಗಳಿಗೆ ಅನುಮತಿ ನೀಡಿದ್ದರು. ಮಗಳೆಲ್ಲಾದರೂ ತಮಗೆ ಎಟುಕದೆ ಹೋದಾಳೋ ಎಂಬ ಚಿಂತೆ ಅವರಿಗೆ ತನ್ನನ್ನು ಕಾಯುತ್ತಿದ್ದ ಅವರನ್ನು ನೋಡಿ ಅಂಜುವಿಗೆ ಕನಿಕರವೆನಿಸುತ್ತಿತ್ತು. +“ಈ ಅಮ್ಮ ಅಪ್ಪನಿಗೆ ಭ್ರಮೆ. ಇಲ್ಲಿ ನನ್ನ ಮನಸ್ಸಿಗೆ ಶಾಂತಿ ತರುವರಂತೆ. ಅದು ಅವರಿಗೆ ಈ ಜನ್ಮದಲ್ಲಿ ಆಗುವ ಮಾತಲ್ಲ ಎಂದು ಏಕೆ ತಿಳಿಯುತ್ತಿಲ್ಲವೋ?” ಎಂದು ಒಮ್ಮೊಮ್ಮೆ ವಿಷಾದದಿಂದ ನಗುತ್ತಿದ್ದಳು. +ಕೆಲವು ಸಲ ನಾವಿಬ್ಬರೇ ಬಹಳ ದೂರ ನಡೆದು ಹೋಗುತ್ತಿದ್ದೆವು ಕೂಡ. ಆಗೆಲ್ಲ ಆಕೆ ತನ್ನ ಒಡಲನ್ನೆಲ್ಲ ನನ್ನಲ್ಲಿ ತೋಡಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ತೋಲನ ತಪ್ಪಿ ಅತ್ತರೆ ಕೆಲವೊಮ್ಮೆ ಅಷ್ಟೇ ನಿರ್ಲಿಪ್ತಳಾಗುತ್ತಿದ್ದಳು. +ಒಂದು ಮಧ್ಯಾಹ್ನ. +ನಾವಿಬ್ಬರೇ ಹೊರಗೆ ಹೊರಟಿದ್ದೆವು. ಮರದ ತಂಪು ನೆರಳಲ್ಲಿ ಬಿಸಿಲೂ ತಂಪೆನಿಸುತ್ತಿತ್ತು. ಮಂಜಿನ ಹೊದಿಕೆಯನ್ನು ಕಿತ್ತೆಸೆದು ಸೂರ್ಯರಶ್ಮಿ ಬೆಳಿಗ್ಗೆ ಕಂಡ ಸೌಂದರ್ಯ ಗಿರಿಯ ಇನ್ನೊಂದು ರೂಪದ ದರ್ಶನ ಮಾಡಿಸುತ್ತಿತ್ತು. +ಮಾತಾಡಿ ಆಡಿ ಹೇಗೋ ಎಂತೋ ತಿರುಗಿ ಅವಳು ಅದೇ ವಿಷಯಕ್ಕೆ ಬಂದಳು. +“ಅವರನ್ನು ಮರೆಯುವುದು ಸಾಧ್ಯವೇ ಹೇಳು ವಿಜಯಾ, ಮರೆಯುವಂತಹ ವ್ಯಕ್ತಿಯಲ್ಲ ಅವರು. ಅಂತಹ ಮೇಧಾವಿಯೊಡನೆ ಜೀವಿಸುವ ಯೋಗ್ಯತೆ ನನಗಿಲ್ಲ” ಎಂದು ಬಿಸುಸುಯ್ದಳು. +ಅವನ ಚಿತ್ರ ತೋರಿಸಿ “ನೋಡು ವಿಜಯಾ, ಅವರ ಕಣ್ಣುಗಳಲ್ಲಿ ಎಷ್ಟು ಸ್ನೇಹಭಾವವಿದೆ! ಈಗಲೂ ನನ್ನನ್ನು ನೋಡುವಂತಿಲ್ಲವೆ? ಬಾ ಎಂದು ಕರೆಯುವಂತಿಲ್ಲವೆ?….ನಾನು ಪಾಪಿ, ಇನ್ನೂ ಇದ್ದೇನೆ, ಜೀವಂತವಾಗಿ” ಎನ್ನುತ್ತಿದ್ದಂತೆ ಅವಳ ಕಣ್ಣುಗಳಲ್ಲಿ ತನ್ನಿಂತಾನೇ ನೀರು ತುಂಬಿ ಕೊಂಡಿತು. +“ಆರು ತಿಂಗಳುಗಳನ್ನು ಹೇಗೆ ಕಳೆದೆನೆನ್ನುತ್ತಿ! ಅಷ್ಟು ಸುಂದರವಾಗಿ, ಅಷ್ಟು ಕಳಾಪೂರ್ಣವಾಗಿ. ಬಹುಶಃ ಈ ಜನ್ಮದಲ್ಲಿ ನನಗಂತಹ ದಿನಗಳು ಬರಲಾರವು. ಆ ಆರು ತಿಂಗಳ ದಿನದಲ್ಲಿ ನಾನು ಪಟ್ಟ ಸ್ವರ್ಗಸುಖವನ್ನೇ ಮೆಲ್ಲುತ್ತ ಅದರ ನೆನಪಿನಲ್ಲಿಯೇ ಉಳಿದ ಜೀವಮಾನವನ್ನೆಲ್ಲ ಕಳೆಯಬೇಕಿನ್ನು. +“ಅಂತವರ ಪತ್ನಿಯಾಗಿ ನೀನೇಕೆ ಹೀಗೆ ಅಳುತ್ತ ಅಳುಕುತ್ತ ಕುಳಿತು ಕೊಳ್ಳುತ್ತೀಯಾ? ಧೈರ್ಯದಿಂದ ವಿಪತ್ತನ್ನು ಎದುರಿಸಬೇಕಪ್ಪ.” +“ನನ್ನ ದುಃಖದ ಆಳ ನಿನಗೆ ಹೇಗೆ ತಿಳಿದೀತು ವಿಜಿ!” +“ಒಪ್ಪಿದೆ. ಆದರೆ ಯೋಚಿಸು. ಈ ದುಃಖ ಜಗತ್ತಿನಲ್ಲಿ ಎಷ್ಟು ಮಂದಿಗೆ ಬಂದಿಲ್ಲ! ಎಲ್ಲ ಸತ್ವಪರೀಕ್ಷೆಯ ಕಾಲ ಎಂದು ತಿಳಿದುಕೋ. ನಾನು ಹೆಚ್ಚು ಹೇಳಲಾರೆ.” +ಹೆಚ್ಚು ಹೇಳಲೂ ಕಷ್ಟವಾಗಿತ್ತು ನನಗೆ. ನಾನು ಹೇಳುತ್ತಿರುವ ಮಾತುಗಳು ನನಗೇ ಅರ್ಥವಾಗದಿರುವಾಗ ನನ್ನವರ ಅಗಲಿಕೆಯನ್ನು ಕೇವಲ ಊಹಿಸಲು ಅಸಮರ್ಥಳಾಗಿರುವಾಗ ಅವಳಿಗೆ ನಾನೆಂತಹ ಸಾಂತ್ವನ ನೀಡಬಲ್ಲೆ? ಉಂಡವನು ಹಸಿದವರ ಸಂಕಟವನ್ನೇನು ಬಲ್ಲ? ಆದರೂ ಏನಾದರೂ ಆಡಲೇಬೇಕಲ್ಲ? ಅವಳ ದುಃಖ ಮಹತ್ತರವಾದುದು ಎಂದು ತಿಳಿದಿದ್ದರೂ, ಅದು ಅಂತಹದ್ದೇನೂ ಅಲ್ಲ ಮಾತಿನಲ್ಲಾದರೂ ಸಾಧಿಸಬೇಕಲ್ಲ! +“ವಿಜೀ, ನನ್ನನ್ನು ಸುಡುತ್ತಿರುವುದು ಅವರ ಅಗಲಿಕೆಯೊಂದೇ ಅಲ್ಲ. ಅದೊಂದೇ ಆಗಿದ್ದರೆ ನೀನು ಹೇಳಿದಂತೆ ಕ್ರಮೆಣ ನನ್ನ ದುಃಖ ತಗ್ಗೀತು. ಆದರೆ ನಾನು ವಂಚಕಿ ವಿಜೀ. ಅವರ ಪ್ರೇಮಕ್ಕೆ ಸರಿಯಾದ ಬೆಲೆ ನಾನು ಕೊಡಲಿಲ್ಲ. ನಾನೆಂದ ಮಾತಿನಂತೆ ನಾನೇ ನಡೆಯಲಿಲ್ಲ. ಅವರು ನನ್ನನ್ನೆಷ್ಟು ನಂಬಿದ್ದರು! ಕೊನೆಗೂ ನಾನವರಿಗೆ ದ್ರೋಹ ಮಾಡಿಬಿಟ್ಟೆ.” +ಕ್ಷಣದಲ್ಲಿ ಆ “ವಂಚಕಿ” ಮತ್ತು “ದ್ರೋಹ” ಎಂಬ ಶಬ್ದಗಳು ಅನರ್ಥ ಅರ್ಥಗಳ ಮಹಾ ಮಹಾ ಕತೆಗಳನ್ನೇ ಕಲ್ಪಿಸತೊಡಗಿದ್ದವು. ನನ್ನ ದೃಷ್ಟಿಗೆ ಅವಳು ಪತಿತೆಯಾಗಿ ಇನ್ನೂ ಏನೇನೋ ಆಗಿ ಕಾಣಿಸಿಕೊಳ್ಳುವುದರಲ್ಲಿದ್ದಳು. ಆದರೆ ಎಲ್ಲಕ್ಕೂ ಪೂರ್ಣವಿರಾಮ ಕೊಡುವಂತೆ ಆಕೆ ಮುಂದುವರೆಸಿದಳು. +“ನಾವು ಹೆಂಗಸರಷ್ಟು ವಂಚಕರು ಬೇರೆ ಯಾರಿಲ್ಲ ಅನ್ನಿಸುತ್ತದೆ ನನಗೆ. ಆಶ್ಚರ್ಯವಾಯಿತೆ? ನಾನೇ ನೋಡೀಗ-ಅವರಿದ್ದಾಗ ಅವರ ಎದೆಯಲ್ಲಿ ಮುಖವಡಗಿಸಿ ಪ್ರೇಮದ ಹೊಳೆಯನ್ನೇ ಹರಿಸುತ್ತಾ ಭಾವಸಮಾಧಿಯಲ್ಲಿ ಎಷ್ಟು ಬಾರಿ “ನೀವಿಲ್ಲದೆ ನಾನಿಲ್ಲ…ನೀವಿರದೆ ಒಂದು ಕ್ಷಣವೂ ನಾನು ಈ ಜಗತ್ತಿನಲ್ಲಿರಲಾರೆ” ಅಂದಿದ್ದೆ ಗೊತ್ತೆ? ಆಗೆಲ್ಲ ಅವರು ನನ್ನ ಮುಂಗುರುಳನ್ನು ಮೃದುವಾಗಿ ತೀಡುತ್ತ “ಅಂಜು, ನಿನ್ನಂತಹವಳು ದೊರಕಿದ್ದು ನನ್ನ ಅದೃಷ್ಟ” ಎಂದಾಗ “ನಿಮ್ಮಂತಹವರು ದೊರೆತ ನಾನು ಪುಣ್ಯವಂತೆ” ಎಂದು ಅವರನ್ನು ಮರುಳುಗೊಳಿಸಿದ್ದೆ. ನಿಜಕ್ಕೂ ನಾನಾಗ ಹಾಗೆಯೇ ಅಂದುಕೊಂಡಿದ್ದೆ ಕೂಡಾ. ಹಲವು ಬಾರಿ ಅಂದಿದ್ದೆ. ಬರೆದಿದ್ದೆ “ನೀವಿಲ್ಲದ ಜಗತ್ತು ನನಗೆ ಬೇಕಿಲ್ಲ. ನೀವಿಲ್ಲದ ಒಂದು ಕ್ಷಣ ಅದು ನನಗೆ ಯುಗಕ್ಕಿಂತಲೂ ದೊಡ್ಡದು. ಡಿಯರ್‍, ನಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ”-ಎಂದು. ನನ್ನ ಪತ್ರ ಓದಿದಾಗಲೆಲ್ಲ ಅವರು ತನ್ನಷ್ಟು ಭಾಗ್ಯಶಾಲಿ ಬೇರೊಬ್ಬನಿಲ್ಲ ಎಂದುಕೊಳ್ಳುತ್ತಿದ್ದರಂತೆ. ಅವರ ಪ್ರಾಣಕ್ಕೆ ಹೊಂದಿಸಿ ನಿಂತ ನನ್ನ ಮೇಲೆ ಅವರು ಅಷ್ಟೇ ಒಲವಿನಿಂದಿದ್ದರು. ಆದರೆ ವಿಜೀ! ನಾನೇಕೆ ಸಾಯಲಿಲ್ಲ? ಒಂದು ಕ್ಷಣ ಬಿಟ್ಟಿರಲಾರೆ ಎಂದವಳು-ಕಳೆಯುತ್ತಿರುವೆನಲ್ಲ! ಒಂದಲ್ಲ, ಎಷ್ಟೋ ಕ್ಷಣಗಳನ್ನು – ನಾನು ವಂಚಕಿಯಲ್ಲವೇನು? +ಯೋಚಿಸುತ್ತಿದ್ದಂತೆಯೇ ಅವಳೊಡ್ಡಿದ ಸಮಸ್ಯೆ ಜಟಿಲವಾಗುತ್ತ ಹೋಗಿತ್ತು ನನಗೆ. ಇದು ಮುಗ್ಧತೆಯೇ? ಇದು ಪ್ರೇಮ ವಂಚನೆಯೇ?… ಅಸಹಾಯಕತೆಯೇ? ಪಾಪ-ಪುಣ್ಯದಲ್ಲಿ ಇರುವ ನಂಬಿಕೆಯೆ? ಅಥವಾ ಧರ್ಮ ಕರ್ಮದ ಪರಿಜ್ಞಾನವೆ? ಏನೇ ಇದ್ದರೂ ಅದು ಇಬ್ಬರಿಗೂ ಅನ್ವಯಿಸಬೇಕಲ್ಲವೆ? +ಅವಳು ಅಳುತ್ತಿದ್ದಳು. ಮುಖ ಕೆಂಪಾಗಿ, ಕಣ್ಣೆಲ್ಲ ದಪ್ಪವಾಗಿ ಊದಿಕೊಳ್ಳುವವರೆಗೂ ಅತ್ತಳು. ನಾನವಳನ್ನು ತಡೆಯಲಿಲ್ಲ. +“ನನಗೀಗ ಮರಣ ಒಂದರ ಹೊರತು ಬೇರಾವ ಆಸೆಯೂ ಇಲ್ಲ. ಯಾವ ನಂಬಿಕೆಯೂ ಇಲ್ಲ, ಸಾಯಲು ಯೋಚಿಸಿ ಪ್ರಯತ್ನಿಸಿ ವಿಫಲವಾಗಿಯಾಯಿತು. ನನ್ನ ಅಮ್ಮ-ಅಪ್ಪನ ಕಣ್ಣಿನಿಂದ ತಪ್ಪಿಸಿ ಓಡುವುದು ಬಲು ಕಷ್ಟ. ಪಾಪ ಅವರಿಗೆಲ್ಲ ನನ್ನಾಸೆ. ನನಗೆ ನನ್ನವರನ್ನು ಬಲು ಬೇಗ ಕೂಡುವಾಸೆ. ನನ್ನ ಜೀವನವಿಡೀ ಈ ಆಸೆಗಳ ವ್ಯರ್ಥ ಘರ್ಷಣೆ ಎಂದಾದರೆ ಯಾವುದರಲ್ಲಿ ನನಗೆ ಆಸಕ್ತಿ ಉಳಿದೀತು ಹೇಳು.” +“ಅಳಬೇಡ ಅಂಜು-ನಮಗೆ ಬೇಕಾದ ರೀತಿಯಲ್ಲಿ ಯಾವುದು ಸಿಗುತ್ತದೆ ಜಗತ್ತಿನಲ್ಲಿ? ಮದುವೆಯೆಂದರೆ ಒಂದು ಜೂಜಾಟದಂತೆ.” +“ಜೂಜಾಟವೂ ಅಲ್ಲ ಏನಲ್ಲ ಮರುಳು ನಿನಗೆ. ಅದೊಂದು ಮಾಯೆಯ ಪಂಜರ. ಹಾಯಾಗಿ ಹಾರಾಡಿಕೊಂಡಿರುವ ಹಕ್ಕಿಯನ್ನು ಅವುಚಿ ಹಿಡಿದು ಪಂಜರದೊಳಕ್ಕೆ ಹಾಕುತ್ತಾರಲ್ಲ?-ಹಾಗೆಯೇ ಇದು.” +ಅವಳೆನ್ನುವುದನ್ನು ಒಪ್ಪಲು ಸಿದ್ಧಳಿರಲಿಲ್ಲ ನಾನು. ಅವಳ ಕೈಹಿಡಿದು ಮೃದುವಾಗಿ ಅಮುಕುತ್ತ ಅಂದೆ. +“ಅಂಜು, ಹೆಚ್ಚು ಕೊರಗಬೇಡ, ಬದುಕಿನ ಅರ್ಥವೇನೆಂದು ತಿಳಿಯುವವರೆಗೂ ಈ ಚಡಪಡಿಕೆ ಇದ್ದದ್ದೇ. ಅದನ್ನು ತಿಳಿಯುವ ಪ್ರಯತ್ನ ಮಾಡು.” +ಅವಳೆಂದಳು. +“ಸೂರ್ಯ ದಿನಾ ಮುಳುಗುತ್ತಾನೆ. ಆತ ನಾಳೆ ಮರಳಿ ಬರುವನೆಂಬ ಭರವಸೆಯಿಂದ ಜಗತ್ತು ಜೀವ ಹಿಡಿದಿದೆ. ಆದರೆ ನನ್ನ ಬದುಕಿನ ಸೂರ್ಯ ಎಂದೋ ಮುಳುಗಿಬಿಟ್ಟ. ನನಗಿನ್ನು ಎಂದೆಂದಿಗೂ ಕತ್ತಲೆಯೇ. ಇಲ್ಲಿರುವವಳು ಬರೀ ಎಲುಬು ಮಾಂಸದಿಂದ ಕೂಡಿದ ಅಂಜು ಮಾತ್ರ.” +ಕಾಲು ನಮ್ಮನ್ನು ಅದೇ ಸೂಯಿಸೈಡ್ ಪಾಯಿಂಟ್ಗೆ ಎಳೆದುತಂದಿತ್ತು. ಅಲ್ಲಿಗೆ ಬಂದುದರ ಪರಿವೆ ನನಗಿರಲಿಲ್ಲ. ನಮ್ಮ ವೃತ್ತದಲ್ಲೇ ಸುತ್ತುತ್ತ ಗಾಢ ಆಲೋಚನೆಯಲ್ಲಿ ಮುಳುಗಿದ್ದೆವು ನಾವು. +“ಏನು ಮಾಡುತ್ತಿರುವಿರಿ ಇಲ್ಲಿ? ಈ ಸ್ಥಳವನ್ನು ಬಹಳ ಪ್ರೀತಿಸುವಂತಿದೆ ನೀವು” ಎಂದಿನ ಹರ್ಷದ ನಗೆಯೊಂದಿಗೆ ಕೇಳುತ್ತ ಬಂದ ಇವರಿಗೆ ಅಂಜುವೇ ಉತ್ತರವಿತ್ತಳು. +“ಹೂಂ, ನನಗಂತೂ ಬಹಳ ಇಷ್ಟ. ಈ ಪ್ರಪಾತ ನೋಡಿ. ಪತಿತರಿಗೆ, ನಿರಾಶ್ರಿತರಿಗೆ, ಬೆಂದ ಹೃದಯಿಗಳಿಗೆಲ್ಲ ಅಭಯ ನೀಡುವಂತಿಲ್ಲವೆ? ಎಲ್ಲಾದರೂ ಬಿದ್ದೆವೆಂದರೆ ಜೀವ ಉಳಿಯುವುದು ಕಷ್ಟ.” +“ಕಷ್ಟವೇನು?…ಉಳಿಯುವುದೇ ಅಸಾಧ್ಯ. ದೇಹವೇ ಸಿಗಲಿಕ್ಕಿಲ್ಲ” ಎಂದು ತಾನೂ ಬಗ್ಗಿ ನೋಡಿ ಕಣ್ಣಿಂದ ಅಳೆಯುತ್ತ ಇವರು ನನ್ನೆಡೆಗೆ ನಗು ಬೀರಿ ಅಂದರು. +“ಹಾರಲೇನೆ? ಕೇಳಗಡೆ ಇನ್ನೂ ಚೆನ್ನಾಗಿದೆ. ಎಂತೆಂತಹ ಮರಗಳು ಎಷ್ಟು ಪುಟ್ಟ ಪೊದೆಗಳಂತೆ ಕಾಣುತ್ತಿವೆ ನೋಡು! ಅಲ್ಲಿಯೇ ಹೋಗಿ ಅವುಗಳ ಎತ್ತರ ನೋಡಿ ಬರಲಾ?” +ಇನ್ನೇನು-ಈಗ ಹಾರುವ ರೀತಿಯಲ್ಲಿ ಬಗ್ಗಿ ನಿಂತ ಅವರನ್ನು ಕಂಡು ಚೀರಿ ಓಡಿಬಂದು ಅವರ ಕೈ ಹಿಡಿದು ಹಿಂದೆಳೆದೆ. ಕ್ಷಣದ ಹಿಂದೆ ಕೇಳಿದ ದಾರುಣ ಕತೆಯ ಹಸಿಯಾದ ನೋವು ಒಂದೆಡೆ, ಮುಂದಿನ ಚಿತ್ರದ ಭಯಾನಕ ಊಹೆ ಮತ್ತೊಂದೆಡೆ ಹೃದಯ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಅಂಜು ಹೇಳಿದ ನೋವು, ನಿರಾಶೆಗಳ ಅರ್ಥವೆಲ್ಲ ಮಿಂಚಿನಂತೆ ಹೊಳೆದು ತಲ್ಲಣಗೊಳಿಸಿತ್ತು. ನಡುಗುವ ಕೈಗಳಿಂದ ಅವರನ್ನು ಗಟ್ಟಿಯಾಗಿ ಹಿಡಿದು “ನನ್ನನ್ನು ಬಿಟ್ಟು ಹೋಗಬೇಡಿ, ನಾನು ಬದುಕಿರಲಾರೆ ಎಂದೆ ಅಳುತ್ತಾ. +“ಸಿಲ್ಲಿ ಗರ್ಲ್, ನಾನಿಲ್ಲದಿದ್ದರೆ ಇರುವುದಿಲ್ಲವಂತೆ. ಇರದೆ ಮತ್ತೇನು ಮಾಡುತ್ತೀಯ…ಎಲ್ಲ ಸುಳ್ಳು”-ಎಂದು ನಕ್ಕು ಮತ್ತೆ ಬಳಿ ಬಂದು ಸಾಂತ್ವನದ ದನಿಯಲ್ಲಿ “ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆಯೇ? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ? ಯಾಕಿಷ್ಟು ನಾನು ಹೋಗಿಯೇ ಬಿಟ್ಟಂತೆ ಅಳುತ್ತೀಯಾ? ಅದು ಹೇಗೆ ಎಣಿಸಿದೊಡನೆ ಅಳು ಬರುತ್ತದೆ ಹೇಳು?” ಎಂದು ನಕ್ಕರು. +ನಮ್ಮ ಮಾತನ್ನು ಕೇಳುತ್ತ ಬದುಕು ಸಾವಿನ ಮಧ್ಯೆ ಜೋಕಾಲಿಯಾಡುತ್ತಿದ್ದ ವ್ಯಕ್ತಿಯೊಂದು ನಿಂತಿದೆ ಎಂಬ ಗಮನವಿರಲಿಲ್ಲ ನಮಗೆ. ಆಲಿಸುತ್ತ ದೃಢಳಾಗಿ ಪ್ರಪಾತದಿಂದ ದೃಷ್ಟಿ ಅಗಲಿಸದೆ ಕೇಳಿದಳು ಅಂಜು. +“ಅವಳಿಲ್ಲದೆ ನಿಮಗೆ ಇರುವುದಕ್ಕಾಗುವುದಿಲ್ಲವೆ?…ಆಗದೇನು ಮಾಡುತ್ತೀರ? ಎಲ್ಲ ಸುಳ್ಳು. ನೀವು ಇರುವುದಿಲ್ಲವೆಂದರೂ ಉಸಿರು ನಿಮ್ಮನ್ನು ಇರಗೊಡಿಸುತ್ತುದೆ.” +ಇವರೆಂದರು “ಅದು ಹೇಗೆ ಸುಳ್ಳಾದೀತು ಅಂಜು? ನಾನಂದದ್ದು ಸುಳ್ಳಾದರೆ ನಾವೆನ್ನುವ ಜನ್ಮಜನ್ಮದ ಬಾಂಧವ್ಯವೇ ಸುಳ್ಳು…” ಎನ್ನುತ್ತು ನನ್ನೆಡೆಗೆ ತಿರುಗಿ “ವಿಜೂ, ತುಂಬ ಹೆದರೆಬಿಟ್ಟೆಯಾ?…” ಎಂದರು. +ಮತ್ತೆ ಅವರೇನೆಂದರೋ-ಕಾಲ ಅವರ ಬಾಯಿಂದ ಏನು ನುಡಿಸಿತೋ ಕಾಣೆ. +ಸುತ್ತಲಿನ ಗಿರಿ ಕಾನನಗಳೆಲ್ಲ ಪ್ರತಿಧ್ವನಿಸುವಂತೆ, ನನ್ನೆದೆಯೇ ಒಡೆದು ಹೋಗುವಂತೆ ಚೀತ್ಕರಿಸಿ ನಾನೊರಗಿದೆ. ಎಷ್ಟು ಸಮಯ ಹಾಗಿದ್ದೆನೋ ತಿಳಿಯದು. +ಎಚ್ಚರವಾದಾಗ, ಉದ್ವಿಗ್ನತೆಯಿಂದ ನನ್ನನ್ನೇ ನೋಡುತ್ತಾ ಹಾಸಿಗೆಯಂಚಿನಲ್ಲಿ ಕುಳಿತಿದ್ದ ಇವರನ್ನು ಕಂಡು ಕ್ಷೀಣದನಿಯಲ್ಲಿ ಕೇಳಿದೆ. +“ಶರ್ಮ ದಂಪತಿಗಳೆಲ್ಲಿ?” +“ರೂಮಿನಲ್ಲಿದ್ದಾರೆ-ಮಾತನಾಡಿಸುವಂತಹ ಸ್ಥಿತಿಯಲ್ಲಿಲ್ಲ ಅವರು.” +ಕಣ್ಣು ಮುಚ್ಚಿದೆ. +ಮುಚ್ಚಿದರೆ ಎದುರು ಅಂಜು ತೇಲಿ ಬರುತ್ತಿದ್ದಳು. ಅದೇ ಅಳುಮೊಗ ಚಡಪಡಿಕೆ. ಮನಸ್ಸು ಪದೇ ಪದೇ ಅವಳ ಸುತ್ತಲೇ ತಿರುಗುತ್ತಿತ್ತು. ವಿಲಿ ವಿಲಿ ಗುಟ್ಟುತ್ತಿತ್ತು. +“ಛೇ! ಯಾಕಿಷ್ಟು ಚಿಂತಿಸುತ್ತೀಯಾ” ಎಂಬ ಇವರ ಪ್ರಶ್ನೆಗೆ ನಾನೇನನ್ನಲಿ? “ಹೆಂಗಸರೆಲ್ಲ ವಂಚಕರು” ಎಂದ ಅಂಜುವಿನ ಮಾತಿಗುತ್ತರವಾಗಿ ಹೃದಯದಲ್ಲೆದ್ದ ಗಂಡಸರು? ಎಂಬ ಪ್ರಶ್ನೆಯನ್ನೇ? ಅವಳಂತೆಯೇ ಪ್ರಪಾತಕ್ಕೆ ಧುಮುಕಿ ಪ್ರೇಮಿಯ ಆತ್ಮ ಅರಸ ಹೊರಟರೆ ಅದು ಸಿಕ್ಕೀತೆ ಎಂಬ ಪ್ರಶ್ನೆಗೆ ಉತ್ತರವನ್ನೆ? +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ […] +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_590.txt b/Kannada Sahitya/article_590.txt new file mode 100644 index 0000000000000000000000000000000000000000..ba1440f97b2d93fe1e43c035a25778bd051cbff3 --- /dev/null +++ b/Kannada Sahitya/article_590.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ ಪ್ರಗತಿಯ ತಪಾಸಣೆ ನಡೆಸುವುದು ನಮ್ಮ ಸಹಪ್ರಯಾಣದ ಮುಖ್ಯ ಕಾರಣ. ಮೋಟರು, ವಾಲ್ವು, ಹಾರ್ಸಪವರ್ ಅಂತ ಮಾತಾಡಿ ಮಾತಾಡಿ, ಪಿಸುಣಾರಿ ಡೀಲರುಗಳ ಜೊತೆ ಹೆಣಗಿ, ಸಂಜೆ ಲಾಡ್ಜಿಗೆ ಹೋಗುವಷ್ಟರಲ್ಲಿ ಸುಸ್ತಾಗಿ ಹೋಗುತ್ತಿತ್ತು. ಪೀಕೆ ಜೊತೆಗಿದ್ದರೆ, ಒಟ್ಟಿಗೇ ಊಟಕ್ಕೆ ಹೋಗುತ್ತಿದ್ದೆವು. ಅನೇಕ ವರ್ಷಗಳಿಂದ ಒಟ್ಟಿಗೇ ಕೆಲಸ ಮಾಡುತ್ತಿರುವ, ಸರಿಸುಮಾರು ಒಂದೇ ವಯಸ್ಸಿನ ನಮ್ಮ ನಡುವೆ ಸ್ನೇಹ ಬೆಳೆದಿತ್ತು. ವರ್ಷವರ್ಷವೂ ಮಾರಾಟ ಏರಿಸುವ ನನ್ನ ಬಗ್ಗೆ ಪೀಕೆಗೆ ಅಭಿಮಾನ. ರೈಲು ನಿಲ್ದಾಣದ ಪಕ್ಕದ ಕ್ವಾರ್ಟರ್ಸಿನಲ್ಲಿ ಕಳೆದ ಪೀಕೆಯ ಬಾಲ್ಯಕಾಲದ ಕತೆಗಳನ್ನು ಕೇಳುವದೆಂದರೆ ನನಗೆ ಖುಷಿ. ಸಿಗ್ನಲ್ಲುಗಳ ಬಗ್ಗೆ ಮತ್ತು ಈಗ ಕಾಣೆಯಾಗಿರುವ ಉಗಿಯಂತ್ರಗಳ ಬಗ್ಗೆ ಅವರಿಗೆ ಎಷ್ಟೊಂದು ತಿಳಿದಿದೆಯೆಂದು ನನಗೆ ಕೌತುಕ. ಹೀಗಾಗಿ ನಮ್ಮ ನಡುವೆ ಯಾವಾಗಲೂ ಧಾರಾಳ ಮಾತು. +‘ಪೀಕೆ, ರೈಲಿನ ಬಗ್ಗೆ ನೀವೊಂದು ಪುಸ್ತಕ ಬರೆಯಬಹುದು. ಪಳಗಿದ ಕತೆಗಾರನ ಹಾಗೆ ನೀವು ಎಷ್ಟೊಂದು ವಿವರಗಳಲ್ಲಿ ಕತೆ ಹೇಳುತ್ತೀರಿ…’ ಎಂದು ನಾನು ಹುರಿದುಂಬಿಸುತ್ತಿದ್ದೆ. +‘ಅಯ್ಯೋ ಬಿಡಿ… ವಿವರ ಇದ್ದ ಮಾತ್ರಕ್ಕೆ ಕತೆಯಾಗುತ್ತದೆಯೇ? ವೈಯಕ್ತಿಕವನ್ನು ಸಾರ್ವತ್ರಿಕಗೊಳಿಸುವ ಕಲೆಯ ಸ್ಪರ್ಶ ಅದಕ್ಕೆ ಬೇಕಲ್ಲ…’ ಅನ್ನುತ್ತಿದ್ದರು. ರೈಲು ಹಳಿಯ ಅಂಚಿನಲ್ಲಿದ್ದ ಅವರ ಮನೆಯ ವಸ್ತುಗಳ ಮೇಲೆ ನಿತ್ಯ ಕೂರುವ ತೆಳ್ಳಗಿನ ಇದ್ದಿಲ ಹುಡಿ, ಜಂತಿಯಿಂದ ತೂಗಿದ ವೈರಿನ ತುದಿಯಲ್ಲಿ ಮಿಣುಕುವ ಮಂದ ಬಲ್ಬು, ಧಡಧಡನೆ ನುಗ್ಗಿ ಬರುವ ಎಕ್ಸಪ್ರೆಸ್ ಗಾಡಿಯ ಗರ್ವದ ಸಿಳ್ಳು, ರಾತ್ರಿಯ ಕಾರ್ಗತ್ತಲಲ್ಲಿ ಕಣ್ಣು ಕುಕ್ಕುವ ಅದರ ಅಲೌಕಿಕ ಹೆಡ್‌ಲೈಟು, ಎಷ್ಟೋ ಸಮಯ ಮುಂಚೆಯೇ, ಹೇಗೋ ಜೀವಕ್ಕೆ ಗೋಚರವಾಗುವ ರೈಲಿನ ಆಗಮನದ ಕಂಪನ – ಇದನ್ನೆಲ್ಲ ಪೀಕೆ ಬಾಲ್ಯಕಾಲದಿಂದ ಹೆಕ್ಕಿ ಹೇಳುವಾಗ ನನಗೆ ಖಾಸನೀಸರ ‘ತಬ್ಬಲಿಗಳು’ ಕತೆ ನೆನಪಾಗುತ್ತಿತ್ತು. ಅಲ್ಲಿ ಮೌನವಾಗಿ ಈರುಳ್ಳಿ ಹೆಚ್ಚುತ್ತ ಕೂತ ಸೊಸೆ ಇಂಥದ್ದೇ ಒಂದು ಮನೆಯಿಂದ ಧಾವಿಸಿ ರೈಲಿನತ್ತ ನುಗ್ಗಿದ್ದಳು. ಆ ಕತೆಯಲ್ಲಿಲ್ಲದ ವಿವರಗಳನ್ನು ಪೀಕೆಯ ಮಾತಿನಲ್ಲಿ ಹುಡುಕುತ್ತಿದ್ದೆ. +ಒಂದು ಸಂಜೆ ಪೀಕೆಗೆ ಖಾಸನೀಸರ ಕತೆಯ ವಿವರಗಳನ್ನು ಹೇಳಿದೆ. ನನ್ನ ಮನಸ್ಸಿನಿಂದ ಮಾಸಿರದ ಸೊಸೆಯ ಪಾತ್ರವನ್ನು ಮಾತಿಗೆ ತಂದೆ: ‘ಮಾತಾಡದೇ ಮಾಡಿ ತೋರಿಸಿಬಿಟ್ಟಳು. ಹಾಗೆ ಮಾಡಿ, ಮಾತಿಗಿರುವ ಶಕ್ತಿಯನ್ನೂ ತೋರಿಸಿದಳು. ತನ್ನ ಕುಹಕದ ಮಾತಿಗೆ ಅಷ್ಟು ಬಲವಿತ್ತೆಂದು ಅತ್ತೆಗೂ ಗೊತ್ತಿರಲಿಲ್ಲ ನೋಡಿ. ಇದೊಂದು ವಿಘಟನೆಯ ಕತೆ. ಎಲ್ಲದರ ವಿಘಟನೆ – ಸಂಸಾರ, ವ್ಯಕ್ತಿಗಳು, ಸಮಾಜ ಇತ್ಯಾದಿ. ಒಂದೇ ಮನೆಯಲ್ಲಿದ್ದವರು, ಒಂದೇ ಕುಟುಂಬದವರು, ಅವರಿಗೇ ಗೊತ್ತಾಗದ ಹಾಗೆ ಪರಸ್ಪರ ಅಪರಿಚಿತರಾಗಿಬಿಡುತ್ತಾರೆ…’ +‘ಕಾಲ ಕೂಡಿ ಬರುವದೆಂದರೆ ಇದೇ. ಎಲ್ಲವೂ ಒಂದೇ ಗಳಿಗೆಯಲ್ಲಿ ಒಂದೇ ಕಡೆ ಸೇರಿ ಬರುವುದು. ಎಷ್ಟೋ ವರ್ಷಗಳಿಂದ ಹಲವಾರು ಸಂಗತಿಗಳು ಬೇರೆ ಬೇರೆಡೆ ಸಿದ್ಧವಾಗುತ್ತ, ಒಂದು ಸಂಜ್ಞೆಯಾದದ್ದೇ ಹಠಾತ್ತನೆ ಜರುಗುವುದು…’ ಎಂದು ಪ್ರತಿಕ್ರಿಯಿಸಿದ ಪೀಕೆ ಗಂಭೀರ ಮೂಡಿನಲ್ಲಿದ್ದರು. ಮಾತಿನದು ಮಾತ್ರವಲ್ಲ, ಮೌನದ ಶಕ್ತಿಯ ಬಗ್ಗೆಯೂ ಹೇಳುತ್ತ, ವಿಘಟನೆ ಎಂಬ ಶಬ್ದವನ್ನು ಮತ್ತೆ ಮತ್ತೆ ಮುಂಚೂಣಿಗೆ ತರುತ್ತ, ಅವರ ಕಾನಪುರದ ಮನೆಯ ಪಕ್ಕದಲ್ಲೇ ಇದ್ದ ಜಾನಕಿರಾಮ ಎಂಬವರ ಬಗ್ಗೆ ಮಾತಾಡಿದರು. +ಪೀಕೆಯ ಅಪ್ಪ ಕಾನಪುರದ ರೇಲ್ವೆ ಆಫೀಸಿಗೆ ವರ್ಗ ಮಾಡಿಸಿಕೊಂಡು ಬಂದಿದ್ದು ಮಕ್ಕಳ ಶಿಕ್ಷಣದ ಸಲುವಾಗಿ. ಸಣ್ಣ ಸಣ್ಣ ಊರುಗಳಲ್ಲಿ ಸ್ಟೇಶನ್ ಮಾಸ್ತರ್ ಆಗಿ ಇಷ್ಟು ಕಾಲ ಕಳೆದಿದ್ದಕ್ಕೆ ಫಲವಾಗಿಯಾದರೂ ಈ ಪೋಸ್ಟಿಂಗ್ ಬೇಕೆಂದು ಯಾರು ಯಾರನ್ನೋ ಕಾಡಿ ಬೇಡಿ ವರ್ಗ ಮಾಡಿಸಿಕೊಂಡಿದ್ದರು. ಕಾನಪುರದ ಹಳೆಯ ಬಡಾವಣೆಯ ಒತ್ತೊತ್ತು ಮನೆಗಳ ಸಾಲಿನಲ್ಲಿ, ಪೀಕೆಯ ಪಕ್ಕದ ಮನೆಯೇ ಜಾನಕಿರಾಮ ಶ್ರೀವಾಸ್ತವ ಅವರದು. ಜಾನಕಿರಾಮ ಎಂಬ ಹೆಸರು ಶ್ರೀವಾಸ್ತವರಲ್ಲಿ ಅತಿವಿರಳ. ಮದ್ರಾಸಿನಲ್ಲಿ ಸರ್ವೀಸಿನಲ್ಲಿದ್ದ ಅವರ ಅಪ್ಪನ ಇಚ್ಛೆಯಂತೆ ಇಟ್ಟ ಹೆಸರು. +ಎರಡೂ ಮನೆಗಳು, ಆ ಕಡೆಯ ಪಿಸುಮಾತು ಸಹ ಇತ್ತ ಕೇಳುವಷ್ಟು ಹತ್ತಿರ. ಸೇಲ್ಸ್‌ಮನ್ ಆಗಿದ್ದ ಜಾನಕಿರಾಮ ನಿಯಮಿತವಾಗಿ ಪ್ರವಾಸ ಹೋಗುತ್ತಿದ್ದರು. ಪೀಕೆಗೆ ಅದೊಂದು ಕುತೂಹಲಕಾರಿಯೂ, ರೋಚಕವೂ ಆದ ಕೆಲಸವಾಗಿ ತೋರುತ್ತಿತ್ತು. ಪ್ರತಿ ಬುಧವಾರ ಕಪ್ಪು ಬ್ಯಾಗಿನಲ್ಲಿ ಬಟ್ಟೆ ತುಂಬಿಕೊಂಡು ಹೊರಟರೆ ಶನಿವಾರ ಸಂಜೆ ಹಿಂತಿರುಗುತ್ತಿದ್ದರು. ತಿಂಗಳ ನಾಲ್ಕು ವಾರದಲ್ಲಿ ನಾಲ್ಕು ದಿಕ್ಕುಗಳಿಗೆ ಪ್ರಯಾಣ ಮಾಡುತ್ತಾರೆ ಎಂದು ಜನ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. +ಚಳಿಯಿರಲಿ, ಮಳೆ ಬರಲಿ, ಮಂಜು ಮುಸುಕಿರಲಿ, ಅವರು ಬುಧವಾರ ಬೆಳಿಗ್ಗೆ ಎಡಗೈಯಲ್ಲಿ ಬ್ಯಾಗು ಹಿಡಿದು ಹೊರಟರೇ. ಆ ದಿನ ಬೆಳಗಿನ ಐದೂವರೆಗೆ ಅವರ ಮನೆಯಿಂದ ಸದ್ದುಗಳು ಶುರುವಾಗುವವು. ಉಳಿದ ದಿನಗಳಲ್ಲಿ ಎಂಟೂವರೆಯ ಹೊತ್ತಿನ ಸದ್ದುಗದ್ದಲದಲ್ಲಿ ಅಡಗಿ ಹೋಗುವ ಜಾನಕಿರಾಮರ ಪೂಜೆಯ ಮಂತ್ರಗಳು, ಬುಧವಾರ ಮಾತ್ರ, ಬೆಳಗಿನ ನಿಶ್ಯಬ್ದದಲ್ಲಿ ದೇವರಿಗೆ ಫಿರ್ಯಾದು ಕೊಡುವವನ ಗೊಣಗಾಟದ ಹಾಗೆ ಮನೆಯಾಚೆ ಕೇಳುತ್ತಿದ್ದವು. ಹಿನ್ನೆಲೆಯಲ್ಲಿ ಅಡಿಗೆ ಮನೆಯ ಪಾತ್ರೆಗಳ ತಾಕಲಾಟದ ರಿಂಗಣವಿರುತ್ತಿತ್ತು. ಏಳು ಗಂಟೆಗೆ ಸರಿಯಾಗಿ ಅವರು ಮನೆಯಿಂದ ಹೊರಡುವರು. ಬ್ಯಾಗಿನ ಭಾರದಿಂದಲೋ ಏನೋ, ಅವರ ಎಡಭುಜ ತುಸು ಕೆಳಗೆ ವಾಲಿದಂತೆ ಕಾಣಿಸುವುದು. ನಡುವೆ ಬೈತಲೆ ತೆಗೆದು ಬಾಚಿದ ಎಣ್ಣೆಗೂದಲು, ಬಿಳಿಯ ಶರ್ಟು, ಕಪ್ಪು ಪ್ಯಾಂಟು, ಕಪ್ಪು ಶೂ ಧರಿಸಿ, ಚಳಿಗಾಲವಾಗಿದ್ದರೆ ಮೇಲೊಂದು ಕೋಟು ಹಾಕಿಕೊಂಡು, ಬೆಳಗಿನ ಮಂಜಿನಲ್ಲಿ ಅವರು ಕರಗಿ ಹೋಗುವ ನೋಟ, ಸಿನೇಮಾದ ಕೊನೆಯ ದೃಶ್ಯದಲ್ಲಿ ತೋರಿಸುವ ತ್ಯಾಗಮಯಿ ನಾಯಕನ ನಡಿಗೆಯಂತೆ ತೋರುವುದು. ಶನಿವಾರ ಸಂಜೆ ಅವರು ಪ್ರವಾಸದಿಂದ ಮರಳಿ ಬರುವರು. ಬೀದಿಯ ಯಾರ ಜೊತೆಯೂ ಅಗತ್ಯವಿಲ್ಲದೇ ಒಂದೇ ಒಂದು ಮಾತನ್ನೂ ಆಡದ ಜಾನಕಿರಾಮ, ಇಡೀ ಭಾನುವಾರ, ಒಂದಾದ ಮೇಲೊಂದು ಪೇಪರು ಓದುತ್ತ ಮನೆಯೊಳಗೇ ಕಳೆಯುವರು. ವಾರದ ಮೊದಲ ಎರಡು ದಿನ ಅವರಿಗೆ ಕಾನಪುರ ಶಹರದಲ್ಲಿ ಕೆಲಸ. ಬುಧವಾರದಿಂದ ಮತ್ತೆ ಅವರ ಪ್ರವಾಸ ಶುರು. ಈ ಮೌನಮುನಿ, ಅದು ಹೇಗೆ ಸೇಲ್ಸಮನ್ ಆದನೋ ಎಂದು ಪೀಕೆಯ ಅಪ್ಪ ಆಗಾಗ ಅಂದದ್ದುಂಟು. +ಜಾನಕಿರಾಮರ ಹೆಂಡತಿಗೆ ಯಾವಾಗಲೂ ಹೊರೆಗಟ್ಟಲೇ ಮನೆ ಕೆಲಸ. ಯಾವುದರಿಂದಲೋ ತಪ್ಪಿಸಿಕೊಳ್ಳುತ್ತಿರುವ ಹಾಗೆ ಸದಾ ಕಾರ್ಯನಿರತಳಾಗಿರುತ್ತಿದ್ದಳು. ವಿರಾಮದ ಸಾವಧಾನದಲ್ಲಿ ಹುಟ್ಟುವ ಅವಕಾಶಕ್ಕೆ ಅಂಜಿದಂತಿದ್ದ ಅವಳು ಒಂದು ಕ್ಷಣ ಕೂಡ ಏನೂ ಮಾಡದೇ ಕೂತಿದ್ದನ್ನು ಕಂಡವರಿಲ್ಲ. ಬೀದಿಯ ಯಾವುದೇ ಮನೆಯವರಿಗೆ ಸಹಾಯ ಬೇಕಾದರೂ ತಾನೇ ಮುಂದಾಗಿ ಒದಗಿ ಬರುವಳು. +ಜಾನಕಿರಾಮರಿಗೆ ಇಬ್ಬರು ಮಕ್ಕಳು. ಮಗ ಅಶೋಕ ಪೀಕೆಯ ವಯಸ್ಸಿನವನೇ. ಮಗಳು ಎರಡು ವರ್ಷ ಚಿಕ್ಕವಳು. ಹೆಸರು ನವನೀತಾ. ಅಪ್ಪ ಮನೆಯಲ್ಲಿರುವಷ್ಟು ಹೊತ್ತು ಬಾಲ ಮುದುರಿಕೊಂಡು ಇರುತ್ತಿದ್ದ ಅಶೋಕ, ಅಪ್ಪನ ಬೆನ್ನು ನೋಡಿದ್ದೇ ತನ್ನ ಪ್ರತಾಪ ಶುರು ಮಾಡುತ್ತಿದ್ದ. ಅವನ ಕೂಗಾಟ ರಂಪ ಜೋರು ಎಲ್ಲ ಅಮ್ಮ ಮತ್ತು ತಂಗಿಯ ಮೇಲೆ. ಅಪ್ಪ ಇಲ್ಲದ ದಿನಗಳಲ್ಲಿ ಹಾಸಿಗೆಯಿಂದಲೇ ಅವನ ಆಜ್ಞೆಗಳು ಶುರುವಾಗುತ್ತಿದ್ದವು. ಉಳಿದ ದಿನಗಳಲ್ಲಿ ಮಾತ್ರ ಸದ್ದಿಲ್ಲದೇ ಎದ್ದು ಓದಲು ಕೂತು, ತಾನೇ ತಯಾರಾಗಿ ಶಾಲೆಗೆ ಹೊರಡುವನು. ಅಪ್ಪನಿದ್ದಾಗ ಸಂಭಾವಿತನಂತಿರುವವನು, ಇಲ್ಲದಾಗ ಮಾತ್ರ ಎಲ್ಲರ ತಾಳ್ಮೆಯ ಪರೀಕ್ಷೆಯನ್ನು ಸತತ ಮಾಡುತ್ತಿದ್ದನು. ಪೀಕೆಯನ್ನು ಗೋಳು ಹುಯ್ದುಕೊಳ್ಳುವದಕ್ಕಂತೂ ಲೆಕ್ಕವಿಲ್ಲ. ಒಂದು ಸಲ, ಪೀಕೆಯ ನೋಟ್‌ಬುಕ್ಕಿನಲ್ಲಿ ಶಾಲೆಯ ಹುಡುಗಿಯ ಹೆಸರಿನಲ್ಲಿ ತಾನೇ ಬರೆದ ಪತ್ರ ಇಟ್ಟು ಪೀಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದ. ಪೆನ್ನು ಕದಿಯುವುದು, ನೋಟ್‌ಬುಕ್ ಅಡಗಿಸಿಡುವದು, ಶರ್ಟಿಗೆ ಹಿಂದಿನಿಂದ ಶಾಯಿ ಮೆತ್ತುವುದು, ಹುಡುಗಿಯರಿಗೆ ಕೇಳಿಸುವಂತೆ ಪೀಕೆಯ ಹೆಸರು ಹಿಡಿದು ಅಶ್ಲೀಲ ಮಾತುಗಳನ್ನು ಕೂಗುವುದು – ಹೀಗೆ ಜಾಡು ಬಿಡದೇ ನಡೆಸುತ್ತಿದ್ದ ಅವನ ಹಿಂಸಾಚಾರವನ್ನು ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ಬಿಡುವಿಲ್ಲದೇ ದುಡಿಯುತ್ತ ಊರೂರು ಸುತ್ತುವ ಜಾನಕಿರಾಮರನ್ನು, ಮಕ್ಕಳ ಪುಂಡಾಟಿಕೆಯ ಬಗ್ಗೆ ದೂರು ಹೇಳಲು ಭೇಟಿಮಾಡುವುದು ಕ್ಷುಲ್ಲಕವೆನ್ನಿಸುತ್ತಿತ್ತು. ಎಷ್ಟೋ ಸಲ ಶನಿವಾರದವರೆಗೆ ಕಾಯುವಲ್ಲಿ ಸಿಟ್ಟು ಇಳಿದಿರುತ್ತಿತ್ತು. ಒಂದೆರಡು ಬಾರಿ ಅವರ ತನಕ ದೂರು ಒಯ್ದವರು, ಜಾನಕಿರಾಮರ ದೀರ್ಘ ಮೌನವನ್ನು ಭರಿಸಲಾಗದೇ, ಇನ್ನು ಅವರ ಬಳಿ ಈ ಸಂಗತಿ ಎತ್ತದಿರುವ ನಿರ್ಧಾರ ಕೈಗೊಂಡಿದ್ದರು. +ಅಶೋಕನ ತಂಗಿ ನವನೀತಾಳ ಸಮಯವೆಲ್ಲ ತನ್ನ ಪಾಡಿಗೆ ತಲೆ ಬಾಚಿಕೊಳ್ಳುತ್ತಲೋ, ಮೆಹಂದಿ ಹಚ್ಚಿಕೊಳ್ಳುತ್ತಲೋ, ಉಗುರಿಗೆ ಬಣ್ಣ ಹಚ್ಚುತ್ತಲೋ ಕಳೆದು ಹೋಗುತ್ತಿತ್ತು. ಅಣ್ಣನಿಂದಲೇ ಕಲಿತವಳ ಹಾಗೆ, ಅಪ್ಪ ಇದ್ದಾಗ ಮಾತ್ರ ಅಮ್ಮನ ಕೆಲಸದಲ್ಲಿ ಕೈಕೂಡಿಸುವ ಶಾಸ್ತ್ರ ಮಾಡುವಳು. ಇಲ್ಲದಿದ್ದರೆ ಅಮ್ಮ ದುಡಿದು ಬಸವಳಿದರೂ ಗಮನಿಸದೇ, ಭೂಲೋಕ ವಿಹಾರಕ್ಕೆ ಬಂದ ಗಂಧರ್ವ ಕನ್ನಿಕೆಯಂತೆ ವರ್ತಿಸುತ್ತಿದ್ದಳು. ಕೆಲವೊಮ್ಮೆ ಅಶೋಕ ಅವಳನ್ನು ನಿಗ್ರಹಿಸಲು ನೋಡುತ್ತಿದ್ದ. ಅವಳ ಅಲಂಕಾರಗಳನ್ನು, ಖುಷಿಯ ಲಹರಿಗಳನ್ನು ಕಂಡರೆ ಸಂಶಯದಿಂದ ಉರಿಯುತ್ತಿದ್ದ. ಅವಳು ಮಾತ್ರ ತಾನು ಬೇರೆಲ್ಲೋ ಸಂದವಳಂತೆ, ಎಲ್ಲದರಿಂದ ಅಭಾದಿತಳಾಗಿ ಉಳಿಯುತ್ತಿದ್ದಳು. +ಅಶೋಕ ಕಾಲೇಜಿಗೆ ಸೇರಿಕೊಳ್ಳುವ ದಿನ ಬಂತು. ಅವನ ಹತ್ತನೇ ಕ್ಲಾಸಿನ ಅಂಕಗಳನ್ನು ನೋಡಿ, ಇವನು ಹೇಗೋ ಬಿ‌ಎ ಮುಗಿಸಿದರೆ ಸಾಕು ಎಂದು ಜಾನಕಿರಾಮ ಬಾಯಿಬಿಟ್ಟೇ ಹೇಳಿದರು. ಶಾಲೆಯಂತೆ ಮಾಸ್ತರರ ಕಣ್ಣಳತೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲದ್ದರಿಂದ ಕಾಲೇಜಿಗೆ ಬಂದೊಡನೆ ಅಶೋಕನ ಸ್ವಾತಂತ್ರ್ಯದ ಕಲ್ಪನೆ ಬದಲಾಯಿತು. ಒಂದೇ ವಾರದಲ್ಲೇ ಅವನಿಗೆ ಕಾಲೇಜಿನ ರುಚಿ ಹತ್ತಿತು. ಅತ್ಯಂತ ಕಡಿಮೆ ಶ್ರಮ ಬೇಡುವ ವಿಷಯಗಳನ್ನು ಓದುವ ಉದ್ದೇಶದಿಂದ ಅವನು ಹಿಂದಿಯನ್ನು ಆರಿಸಿಕೊಂಡಿದ್ದ. ಪಠ್ಯ ಒಂದೇ ಆದುದರಿಂದ ಹಿಂದಿ ಭಾಷೆಯ ಕ್ಲಾಸನ್ನು ಮಾತ್ರ ಸಾಯನ್ಸ್ ವರ್ಗದ ಜೊತೆ ಸೇರಿಸಿದ್ದರು. ಹಾಗಾಗಿ ಆ ದೊಡ್ಡ ಕ್ಲಾಸಿಗೆ ಹಾಜರಿ ತಗೊಳ್ಳುವದೆಂದರೆ ಕಷ್ಟದ ಕೆಲಸ. +ಕ್ಲಾಸು ತಪ್ಪಿಸಿಕೊಳ್ಳುವುದನ್ನು ಶೌರ್ಯದ ಪ್ರತೀಕವೆಂದು ಭಾವಿಸಿದ್ದರಿಂದ ಕಾಲೇಜು ಶುರುವಾಗಿ ಹತ್ತು ದಿನಗಳಾದರೂ ಅಶೋಕ ಹಿಂದಿ ಕ್ಲಾಸಿಗೆ ಹೋಗಿರಲಿಲ್ಲ. ಕೊನೆಗೂ ಹೋಗಲು ಮನಸ್ಸು ಮಾಡಿದ್ದು ಸಾಯನ್ಸ್ ಹುಡುಗಿಯರೂ ಸಹ ಅಲ್ಲಿ ಬರುತ್ತಾರೆಂಬ ಆಕರ್ಷಣೆಯಿಂದ. ಆ ಮೊದಲ ದಿನ ‘ಅಶೋಕ ಶ್ರೀವಾಸ್ತವಾ’ ಎಂದು ಹಾಜರಿ ಕರೆದಾಗ ಇಬ್ಬರು ‘ಯಸ್ ಸರ್’ ಅಂದರು. ಇನ್ನೊಬ್ಬರ ಹೆಸರಿನಲ್ಲಿ ಹಾಜರಿ ಹಾಕುವವರು ಸಿಕ್ಕಿಬೀಳುವ ಕ್ರಮವೇ ಇದಾಗಿದ್ದರಿಂದ ಮೇಷ್ಟ್ರು ಇನ್ನೊಮ್ಮೆ ಹೆಸರು ಕರೆದು, ಹಾಜರಿ ಪುಸ್ತಕದಿಂದ ತಲೆ ಎತ್ತಿ ಎದುರಿಗಿದ್ದ ವಿದ್ಯಾರ್ಥಿ ಸಮೂಹವನ್ನು ನೋಡಿದರು. ಕ್ಲಾಸಿನ ಎರಡು ಕಡೆಯಿಂದ ಯಸ್ ಸರ್ ಎಂಬ ದನಿ ಬಂತು. ‘ಎದ್ದು ನಿಲ್ಲಿ’ ಎಂದಿದ್ದೇ ಇಬ್ಬರು ಹುಡುಗರು ಎದ್ದರು. ಅಶೋಕ ತನ್ನ ಹೆಸರಿನ ಇನ್ನೊಬ್ಬನನ್ನು ತುಸು ಅಸಮಾಧಾನದಿಂದ ನೋಡಿದ. ಆ ಹುಡುಗ ಇವನನ್ನು ಕೌತುಕದಿಂದ ನೋಡತೊಡಗಿದ. +‘ಏನಪ್ಪಾ ನಿನ್ನ ನಡುವಿನ ಇನಿಶಿಯಲ್’ ಎಂದು ಮೇಷ್ಟ್ರು ಅಶೋಕನನ್ನು ಕೇಳಿದರು. +‘ಜೆ ಸರ್’ +‘ನಿನ್ನದೇನು?’ ಎಂದು ಮೇಷ್ಟ್ರು ಇನ್ನೊಬ್ಬನನ್ನು ಕೇಳಿದರು. +‘ಜೆ ಸರ್’ ಅಂತ ಅವನು ಅಂದದ್ದೇ ಇಡೀ ಕ್ಲಾಸು ಗುಸುಗುಸು ನಕ್ಕಿತು. +ಮೇಷ್ಟ್ರಿಗೆ ಅಪಾಯದ ಸುಳಿವು ಹತ್ತಿತು. +‘ಜೆ ಅಂದರೆ?’ +‘ಜಾನಕಿರಾಮ್ ಸರ್’ +‘ನಿನ್ನದು?’ +‘ಅದೇ ಸರ್. ಜಾನಕಿರಾಮ್’ +ಈ ಸಲ ಇಡೀ ಕ್ಲಾಸು ಭೋರ್ಗರೆಯಿತು. ಇವರು ಬೇಕೆಂದೇ ಹರಾಮಖೋರತನ ಮಾಡುತ್ತಿದ್ದಾರೇನೋ ಎಂದು ಮೇಷ್ಟ್ರಿಗೆ ಅನುಮಾನವಾಯಿತು. ಹಾಜರಿ ಪುಸ್ತಕದಲ್ಲಿ ಮತ್ತೆ ನೋಡಿದರು. ಅಲ್ಲಿ ಇಬ್ಬರು ಅಶೋಕ ಶ್ರೀವಾಸ್ತವರಿದ್ದರು. +‘ಯಾವ ಸೆಕ್ಷನ್ನು?’ ಎಂದು ಅಳುಕಿನಿಂದಲೇ ಕೇಳಿದರು. +‘ನನ್ನದು ಸಾಯನ್ಸ್ ಸರ್’ ಎಂದ ಮುಂದೆ ನಿಂತ ಹುಡುಗ. +‘ನನ್ನದು ಆರ್‍ಟ್ಸ್’ +ಸದ್ಯ ಇಷ್ಟಾದರೂ ವ್ಯತ್ಯಾಸವಿದೆಯೆಂದು ಅವರಿಗೆ ಸಂತೋಷವಾಯಿತು. ಈ ಜಾಲದಿಂದ ಹೊರಹೋದರೆ ಸಾಕಾಗಿತ್ತು. ‘ಸರಿ ನಿನಗೆ ಸಾಯನ್ಸ್ ಅಶೋಕ ಮತ್ತು ಅವನಿಗೆ ಆರ್‍ಟ್ಸ್ ಅಶೋಕ ಎಂದು ಕರೆಯುತ್ತೇನೆ’ ಎಂದು ಅಷ್ಟಕ್ಕೇ ಪ್ರಸಂಗ ಮುಗಿಸಿದರು. ಹಾಜರಿ ಪುಸ್ತಕದಲ್ಲಿ ಹುಡುಗರ ಹೆಸರಿನ ಮುಂದೆ ಸಣ್ಣ ಗುರುತು ಹಾಕಿಕೊಂಡರು. +ಆ ದಿನ ಮಧ್ಯಾಹ್ನ ಆ ಇನ್ನೊಬ್ಬ ಹುಡುಗ ಕ್ಯಾಂಟೀನಿನಲ್ಲಿ ಕಾಣಿಸಿದಾಗ ಜೊತೆಯಲ್ಲಿದ್ದ ಹುಡುಗರು ‘ನೋಡೋ ನಿನ್ನ ಡಬಲ್ ರೋಲ್’ ಎಂದು ಅಶೋಕನನ್ನು ರೇಗಿಸಿದರು. ಆತ ಒಬ್ಬನೇ ಕೂತು ಪೂರಿ ತಿನ್ನುತ್ತಿದ್ದ. ಬೆಳಗಿನ ಘಟನೆಯಿಂದ ಅಶೋಕನಿಗೆ ರೋಸಿಹೋಗಿತ್ತು. ಹುಂಬತನದ ಮತ್ತಿನಲ್ಲಿ ಅಶೋಕ ಅವನ ಬಳಿ ಹೋಗಿ ‘ಹಲೋ, ನನ್ನ ಡಬಲ್ ರೋಲ್…’ ಎಂದು ವಿನಾಕಾರಣ ಜಗಳಕ್ಕೆ ಕಾಲು ಕೆದರಿದ. +ಅವನು ಹಲೋ ಅಂದು, ತಲೆಯಾಡಿಸಿ ಕ್ಷಣಕಾಲ ತಡೆದು, ಪೂರಿಯ ಮತ್ತೊಂದು ತುಂಡು ಬಾಯಿಗಿಟ್ಟು ಅಗಿಯುತ್ತ ಇವನ ಮೋರೆ ನೋಡಿದ. ಹೇಗೆ ಜಗಳ ಮುಂದುವರಿಸಬೇಕೋ ತಿಳಿಯದೇ ಅಶೋಕ ತಡವರಿಸುತ್ತ, ‘ನಿನ್ನ ಅಪ್ಪನ ಹೆಸರೇನು?’ ಅಂದ. +ಆತ ಹೆದರಿದವನಂತೆ ತೋರಿದರೂ, ಶಾಂತವಾಗಿ ಉತ್ತರಿಸಿದ. ‘ಜಾನಕಿರಾಮ ಶ್ರೀವಾಸ್ತವ’. +‘ಅವರೇನು ಮಾಡುತ್ತಾರೆ?’ ಅಶೋಕ ಪ್ರಯಾಸದಿಂದ ಕೇಳಿದ. +‘ಸೇಲ್ಸ್‌ಮನ್’ ಎಂದು ಅವನು ಹೇಳಿದ್ದೇ ಅಶೋಕನ ಬಾಯಿ ಬಂದಾಗಿಬಿಟ್ಟಿತು. ಇನ್ನೂ ಹೆಚ್ಚಿಗೆ ವಿವರ ಕೇಳುವ ಧೈರ್ಯವಾಗಲಿಲ್ಲ. ತನ್ನನ್ನು ರೇಗಿಸಲು ಇವನು ಹೀಗೆ ಹೇಳುತ್ತಿಲ್ಲ ತಾನೆ ಅನಿಸಿತು. ಮೋರೆ ನೋಡಿದರೆ ಸಂಭಾವಿತನಂತೆ ಕಾಣುತ್ತಿದ್ದ. ತಲೆತಗ್ಗಿಸಿ ಅವನು ಸಾವಧಾನವಾಗಿ ಪೂರಿಯ ಇನ್ನೊಂದು ತುಂಡು ಬಾಯಿಗಿಟ್ಟುಕೊಂಡ. +* * * +ಮನೆಗೆ ಬಂದ ನಂತರ ಅಶೋಕ ಅಮ್ಮನ ಮೇಲೆ ವಿನಾಕಾರಣ ರೇಗಾಡಿದ. ಆ ದಿನ ಬುಧವಾರ. ಜಾನಕಿರಾಮ ಶ್ರೀವಾಸ್ತವ ವಾರದ ಪ್ರವಾಸದಲ್ಲಿದ್ದರು. ಅವರು ಬರುವುದು ಶನಿವಾರ ಸಂಜೆಯೇ. ಬಂದು, ಮಾಡಬೇಕಾದ್ದೇನೂ ಇಲ್ಲ. ಆದರೂ. +ಅಮ್ಮನ ಬಳಿ ಹೇಳಲೇ ಅಂದುಕೊಂಡ. ಏನು ಹೇಳುವುದೋ ಗೊತ್ತಾಗಲಿಲ್ಲ. ತಂಗಿಯನ್ನು ನೋಡಿ ಸಿಡಿಮಿಡಿ ಮಾಡಿದ. ಸಂಜೆ ಹೊರಗೆ ಹೋದವನು ಬಹಳ ಹೊತ್ತು ಒಬ್ಬನೇ ಸುತ್ತಾಡಿ ಮರಳಿದ. +ಆದರೆ, ಮಾರನೆಯ ದಿನವೇ, ಸುದ್ದಿ ಬಿರುಗಾಳಿಯಂತೆ ಹರಡಿ ಮನೆಯವರೆಗೂ ಬಂದು ತಲುಪಿತು. ಸಾರಾಂಶ ಇಷ್ಟೇ: ಜಾನಕೀರಾಮನಿಗೆ ಎರಡು ಸಂಸಾರಗಳಿವೆ. ಕಳೆದ ಇಪ್ಪತ್ತು ವರ್ಷಗಳಿಂದ ಇದು ನಡೆದಿದೆ. ಇದೇ ಊರಿನ ಇನ್ನೊಂದು ಕೊನೆಯಲ್ಲಿ ಆ ಮನೆ ಇದೆ. ಎರಡೂ ಸಂಸಾರಗಳಲ್ಲಿ ಮಕ್ಕಳ ಹೆಸರುಗಳು ಸಹ ಒಂದೇ ಆಗಿವೆ. ಇಬ್ಬರೂ ಮಕ್ಕಳು ಒಂದೇ ಕಾಲೇಜಿಗೆ ಹೋದಾಗ ಹಾಜರಿ ತಗೊಳ್ಳುವ ಹೊತ್ತಿಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇದು ಎಂಟನೆಯ ಆಶ್ಚರ್ಯವಲ್ಲದೇ ಮತ್ತೇನು? ವಾರವಾರವೂ ಟುಣುಟುಣು ಕುಣಕೊಂಡು ಹೋಗುತ್ತಿದ್ದುದು ಇದಕ್ಕೇ ಏನು? ಪಾಪ, ಹೆಂಡತಿ ಮಕ್ಕಳು ಈಗ ಈ ಊರಲ್ಲಿ ಹೇಗೆ ಮೋರೆ ಎತ್ತಿ ನಡೆದಾಡುತ್ತಾರೆ? +ಸುದ್ದಿ ಕಿವಿಗೆ ಬಿದ್ದಾಗ ಮೊದಮೊದಲು ಯಾರೂ ನಂಬಲಿಲ್ಲ. ಸರಿಯಾಗಿ ಮುಖ ಎತ್ತಿ ತನ್ನ ಹೆಂಡತಿಯ ಮೋರೆಯನ್ನೇ ನೋಡದವನು, ಬೇರೊಂದು ಸಂಸಾರ, ಅದೂ ಗುಟ್ಟಾಗಿ ನಡೆಸುತ್ತಿದ್ದಾನೆಂದರೆ! ಇಷ್ಟು ವರ್ಷ ಜಾಗರೂಕತೆಯಿಂದ ಇದ್ದವನು ಈಗ ಯಾಕೆ ಉದಾಸೀನ ಮಾಡಿ ಒಂದೇ ಕಾಲೇಜಿಗೆ ಇಬ್ಬರನ್ನೂ ಸೇರಿಸಿದ. ಗುಟ್ಟಾಗಿಡುವ ಇರಾದೆಯಿದ್ದರೆ ಒಬ್ಬ ಮಗನನ್ನು ಇನ್ನೊಂದು ಕಾಲೇಜಿಗೆ ಕಳಿಸಬಹುದಿತ್ತಲ್ಲ. ಅವನಿಗೆ ಇನ್ನೊಂದು ಸಂಸಾರ ಇರುವ ಸಾಧ್ಯತೆಯ ಎದುರಿಗೆ ಈ ತುಬ್ಬುಗಾರಿಕೆ ಮಾಡಿದವರು ಯಾರು, ಕಾಲೇಜಿನಲ್ಲೇ ಇದು ಮೊಟ್ಟ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದೋ, ಅದನ್ನು ಮನೆಯವರೆಗೂ ಬಂದು ಅವನ ಹೆಂಡತಿಗೆ ಹೇಳಿದವರು ಯಾರು ಇದೆಲ್ಲ ಅಸ್ಪಷ್ಟವಾಗಿಯೇ ಉಳಿಯಿತು. +ಶನಿವಾರ ಸಂಜೆ ಜಾನಕೀರಾಮ ಪ್ರವಾಸದಿಂದ ಹಿಂತಿರುಗುವ ಹೊತ್ತಿಗೆ ಅವರ ಹೆಂಡತಿ ಮತ್ತು ಮಕ್ಕಳು ಸ್ಫೋಟಕ್ಕೆ ಕಾದ ಜ್ವಾಲಾಮುಖಿಯಂತೆ ಕಾಯುತ್ತಿದ್ದರು. ಅವರು ಬಂದು ಬಟ್ಟೆಗಳನ್ನು ಬ್ಯಾಗಿನಿಂದ ತೆಗೆದು ಒಗೆಯಲು ಹಾಕಿದರು. ಸ್ನಾನ ಮಾಡಿ ಬಂದರು. ಗಂಡನನ್ನು ಕಣ್ಣಾರೆ ಕಾಣುವ ಮೊದಲು ನಾನಾ ಬಗೆಯಲ್ಲಿ ತಯಾರಿ ಮಾಡಿಕೊಂಡ ಮಾತುಗಳೆಲ್ಲ ಅವರ ಹೆಂಡತಿಯ ಗಂಟಲಲ್ಲೇ ಉಳಿದುಬಿಟ್ಟವು. ಎರಡು ಬಾರಿ ಹೇಳಲು ಹೋದರೂ ಆಗದೇ ಚಹಾ ಕೊಡಲು ಹೋದಾಗ ಹೇಳಲೇ ಬೇಕು ಅಂದುಕೊಂಡು, ಹಾಗೆ ನಿಶ್ಚಯಿಸಿದೊಡನೆ ಕೈ ನಡುಗಿ, ಬಶಿಯೊಳಗಿದ್ದ ಕಪ್ಪು ಗಡಗಡ ಸದ್ದು ಮಾಡಿತು. ಬಾಯಿ ತೆರೆಯಲು ವಿಫಲಳಾದ ಅವಳು ಸೀದಾ ದೇವರ ಕೋಣೆಗೆ ಹೋಗಿ, ದೇವರ ಮುಂದೆ ಕೂತು ಅಳತೊಡಗಿದಳು. ಸ್ವಲ್ಪ ಹೊತ್ತಿನ ಬಳಿಕ ಒಳಗೆ ಬಂದ ಜಾನಕೀರಾಮ ‘ಏನಾಯಿತು?’ ಅಂದರು. ಬಿಕ್ಕಳಿಸುತ್ತ ಅವಳು ತುಂಡು ತುಂಡು ಮಾತುಗಳಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಅವರಿಗೆ ಸ್ವಲ್ಪ ಹೊತ್ತಾಯಿತು. +‘ನಿನಗೆ ತಲೆ ಕೆಟ್ಟಿದೆಯೇನು?’ ಎಂಬ ಕೂಗಿಗೆ ಅವಳು ಬಡಬಡಿಸುವುದನ್ನು ನಿಲ್ಲಿಸಿದಳು. ಅವರು ಹಾಗೆ ಕೂಗಿದ್ದನ್ನು ಮೊದಲ ಬಾರಿಗೆ ಅವರೆಲ್ಲ ಕೇಳಿದ್ದರು. ಅವಳ ಯಾವ ಮಾತಿಗೆ ಅವರು ಹೀಗೆ ಪ್ರತಿಕ್ರಿಯಿಸಿದರೆನ್ನುವುದು ಅಮಲು ತಲೆಗೇರಿದಂತಿದ್ದ ಹೆಂಡತಿಗೂ, ಪಕ್ಕದ ಕೋಣೆಯಿಂದ ಕದ್ದು ಕೇಳಿಸಿಕೊಳ್ಳುತ್ತಿದ್ದ ಮಕ್ಕಳಿಗೂ ಗೊತ್ತಾಗಲಿಲ್ಲ. ಮತ್ತೇನೂ ಮಾತಾಡದೇ ಹೊರಗೆ ಹೋಗಿ ಪೇಪರಿನಲ್ಲಿ ತೊಡಗಿಕೊಂಡರು. ಅವರು ಅದನ್ನೆಲ್ಲ ಒಪ್ಪಿಕೊಂಡರೋ, ನಿರಾಕರಿಸಿದರೋ ಗೊತ್ತೇ ಆಗಲಿಲ್ಲ. +ಬೀದಿಯವರಿಗೆಲ್ಲ ಮಾತಾಡಲು ಇದೊಂದು ಬಿಸಿ ಸಂಗತಿಯಾಯಿತು. ಆ ಇನ್ನೊಂದು ಸಂಸಾರದ ವಿವರಗಳು ಚರ್ಚಿಸಲ್ಪಟ್ಟವು. ಎಷ್ಟೋ ಸಂಗತಿಗಳು ನಂಬಲು ಅಸಾಧ್ಯವೆಂಬಷ್ಟು ಬೇರೆ ಯಾರದೋ ಅನಿಸುವಂತಿದ್ದವು. ಹೆಂಡತಿಯ ಜೊತೆಯ ಅನ್ಯೋನ್ಯತೆ, ಮನೆಯ ತಾರಸಿಯ ಮೇಲೆ ಕೂತು ಇಬ್ಬರೂ ಚಾ ಕುಡಿಯುವುದು, ಮಕ್ಕಳಿಗೆ ಪಾಠ ಹೇಳಿಕೊಟ್ಟು ಚೆನ್ನಾಗಿ ಓದಿಸುವುದು ಇತ್ಯಾದಿ. ಮಕ್ಕಳು ಬಹಳ ಒಳ್ಳೆಯ ಸ್ವಭಾವದವರಂತೆ. ಮಗಳು ಚಿತ್ರ ಬಿಡಿಸುತ್ತಾಳಂತೆ. ಯಾವಾಗಲೂ ಗಂಟು ಮೋರೆಯ, ಮಾತೇ ಆಡದ ಇವರು ಹೆಂಡತಿಯ ಜೊತೆ ತಾರಸಿಯ ಮೇಲೆ ಕೂತು ನಗುವುದು ಕೂಡ ಕಲ್ಪನೆಗೆ ಹೊರತಾಗಿರಲಿಲ್ಲ. ಇತ್ತೀಚೆಗೆ ಮನೆಗೆ ಅತ್ಯುತ್ತಮ ಫರದೆಗಳನ್ನು ಸ್ವತಃ ನಿಂತು ಹಾಕಿಸಿದರಂತೆ. ಹೂತೋಟ ಅವರೇ ಮಾಡಿಸಿದ್ದಂತೆ. ಅವತಾರ ಪುರುಷನ ಹಾಗೆ ಅಲ್ಲಿ ಹೋಗಿ ರೂಪಾಂತರ ಹೊಂದಬಹುದಾದ ಅವರ ಸಾಧ್ಯತೆಗಳೆಲ್ಲದರ ಬಗ್ಗೆ ಮಾತುಗಳು ಸ್ವಚ್ಛಂದ ಹರಿದವು. +ಎರಡು ದಿನಗಳ ಬಳಿಕ ಜಾನಕಿರಾಮರ ಹೆಂಡತಿ ಪೀಕೆಯ ಅಮ್ಮನ ಬಳಿ ತನ್ನ ದುಃಖ ತೋಡಿಕೊಂಡಳು. ‘ನೋಡಿ ಇವರು ಹೀಗೆ ಮಾಡಿಬಿಟ್ಟರು. ಅವರಿವರ ಮಾತು ಕಿವಿಗೆ ಬಿದ್ದಾಗ ಎಷ್ಟು ನಿಜವೋ ಸುಳ್ಳೋ ಗೊತ್ತಾಗುವುದಿಲ್ಲ. ನನ್ನ ತಮ್ಮನಿಗೆ ಈ ವಿಷಯ ಗೊತ್ತಾಗಿ ನಿನ್ನೆ ಬಂದಿದ್ದ. ಪೋಲೀಸ್ ಕೇಸು ಹಾಕು, ಎರಡು ಮದುವೆಯಾದದ್ದು ಸಾಬೀತಾದರೆ ಜೈಲು ಕಾಣಿಸುತ್ತಾರೆ ಅಂದ. ನಮಗೇನೂ ಕಡಿಮೆ ಮಾಡದ ಹಾಗೆ ನಡೆಸಿಕೊಂಡು ಹೋಗುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದೆ. ಈಗ ನಮ್ಮ ಸಂಸಾರದ ವಿಷಯ ಎತ್ತಿದರೆ ನಾಚಿಕೆಯಾಗುತ್ತದೆ. ನೋಡಿ, ಆ ಮಕ್ಕಳು ಓದಿನಲ್ಲಿ ಮುಂದು, ನಮ್ಮವನು ನಿಗಾ ಇಲ್ಲದೇ ಪೋಲಿ ಬಿದ್ದಿದ್ದಾನೆ. ಒಂದು ದಿವಸ ಮನೆಯಲ್ಲಿ ಏನಿದೆ ಇಲ್ಲ ಎಂದು ನೋಡಿದವರಲ್ಲ. ಅಲ್ಲಿ ತರಕಾರಿ ಕೊಳ್ಳಲು ಚೀಲ ಹಿಡಿದು ಅವಳ ಹಿಂದೆ ಹೋಗುತ್ತಾರಂತೆ…’. ಈ ಸಾಧ್ಯತೆಗಳು ಊಹೆಗೆ ನಿಲುಕುವವರೆಗೂ ಯಾವ ದೊಡ್ಡ ಊನಗಳೂ ಕಾಣದಿದ್ದ ಸಂಸಾರದಲ್ಲಿ ಒಮ್ಮೆಲೇ ವೈಫಲ್ಯದ ಬಿರುಕುಗಳು ಕಂಡಿದ್ದವು. +ಪೀಕೆಯ ಅಮ್ಮ ಸಮಾಧಾನ ಹೇಳಿ ‘ಪೋಲೀಸು ಕೇಸು ಅಂತ ದುಡುಕಬೇಡಿ. ನಿಮ್ಮದೇ ಎರಡನೇ ಮದುವೆಯಾಗಿದ್ದರೆ ನಿಮಗೇ ತೊಂದರೆ. ಆಮೇಲೆ ಖಾಯಂ ಆಗಿ ಅಲ್ಲಿಯೇ ಹೋದಾರು’ ಅಂದರು. ಈ ಒಂದು ಸಹಜ ಮಾತಿನಿಂದ ಇಡೀ ಸನ್ನಿವೇಶವೇ ಬದಲಾಗಿ ಹೋಯಿತು. ಇಂಥ ಹೊಸ ಸಾಧ್ಯತೆಯ ಉದಯವಾಗಿದ್ದೇ, ಇಲ್ಲಿಯ ತನಕ ತಾವು ಕದನಕ್ಕೆ ನಿಂತ ನೈತಿಕ ನೆಲೆಯ ಅಸಂಗತತೆ ಥಟ್ಟನೆ ಎದುರು ನಿಂತಿತು. ಇದೇ ಮೊದಲ ಮದುವೆಯೆಂದು ಸಾಧಿಸಲು ಅಗತ್ಯವಾದ ಪುರಾವೆಗಳನ್ನು, ಅವರ ಯಾವ ವರ್ತನೆ ಒದಗಿಸಬಹುದೆಂದು ಹುಡುಕಿದಷ್ಟೂ ಅದು ಸಿಗದೇ ಹೋಯಿತು. ಏನನ್ನು ಯೋಚಿಸಿದರೂ ಅದು ಎಲ್ಲಿಯೂ ಆಗಬಹುದಾಗಿತ್ತು ಅನಿಸತೊಡಗಿತು. +ಇಷ್ಟೆಲ್ಲ ನಡೆದಾಗ ಜಾನಕಿರಾಮರ ಪ್ರತಿಕ್ರಿಯೆ ಏನು ಅನ್ನುವುದು ಯಾರಿಗೂ ಸರಿಯಾಗಿ ಗೊತ್ತಾಗಲಿಲ್ಲ. ಕಾಲೇಜಿನ ಘಟನೆಯ ಪ್ರಸ್ತಾಪ ಬಂದಾಗ ‘ಅವರು ಮತ್ತೊಬ್ಬನ ಮಕ್ಕಳು’ ಅಂದನಂತೆ ಎಂಬ ವದಂತಿಯಿತ್ತು. ಆದರೂ ಜಾನಕಿರಾಮರನ್ನು ನೇರವಾಗಿ ಕೇಳುವ ಧೈರ್ಯ ಯಾರೂ ಮಾಡಲಿಲ್ಲ. +ಬುಧವಾರ ಬಂತು. ಪ್ರತಿ ವಾರದಂತೆ ಆ ಬೆಳಗಿನ ಹೊತ್ತು ಕೂಡ ಜಾನಕಿರಾಮರ ಮನೆಯಲ್ಲಿ ಹೊತ್ತು ಮೂಡುವ ಮುಂಚೆಯೇ ಚಟುವಟಿಕೆಗಳು ಆರಂಭವಾದವು. ಹೊರಗಡೆ ದಟ್ಟ ಮಂಜು ಕವಿದಿತ್ತು. ಏಳು ಗಂಟೆಗೆ ಸರಿಯಾಗಿ ಜಾನಕಿರಾಮ ತನ್ನ ಕಪ್ಪು ಬ್ಯಾಗು ಹಿಡಿದುಕೊಂಡು, ತಿರುವಿನ ಮಂಜಿನಲ್ಲಿ ಕರಗಿ ಹೋಗಿದ್ದನ್ನು, ಬೀದಿಯ ಜನ ಅವರವರ ಮನೆಯಿಂದ, ಕಿಟಕಿಗಳ ಹಿಂದೆ ಅವಿತು ನಿಂತು ನೋಡಿದರು. +***** +೨೬ ಡಿಸೆಂಬರ್ ೨೦೦೩, ಬೆಂಗಳೂರು +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […] +ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […] +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_591.txt b/Kannada Sahitya/article_591.txt new file mode 100644 index 0000000000000000000000000000000000000000..ab2f189ead801e54d8633560c1f448a359ab4c69 --- /dev/null +++ b/Kannada Sahitya/article_591.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು. +ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು. +“ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ. +“ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, ಆಚಾರ್ಯರೆ.” +“ನನಗೇನೂ ನಿಮ್ಮಲ್ಲಿ ಆಹಾರ ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಮ್ಮ ಅಗ್ರಹಾರದ ಕಿಡಿಗೇಡಿಗಳಿಗೇನಾದರೂ ತಿಳಿದರೆ ನನ್ನ ಬ್ರಾಹ್ಮಣಾರ್ಥಕ್ಕೆ ಮುಟ್ಟುಗೋಲು ಹಾಕಿಬಿಡುತ್ತಾರಲ್ಲ, ಮಂಜಯ್ಯ?” +ಆರ್ತನಾಗಿ ದಾಸಾಚಾರ್ಯ ಹೇಳಿದ ಮಾತಿಗೆ ಮಂಜಯ್ಯನವರು ಗುಟ್ಟಾಗಿ ಹತ್ತಿರ ಬಂದು, ಇನ್ನೊಬ್ಬ ಅಗ್ರಹಾರದ ಬ್ರಾಹ್ಮಣ ತಮ್ಮಲ್ಲಿ ತಿನ್ನಲು ಬಂದನಲ್ಲ ಎಂದು ಅತಿಹರ್ಷರಾಗಿ: +“ನೀವು ಇಲ್ಲಿ ಉಂಡಿರೆಂದು ನಾವು ಯಾಕೆ ಹೇಳಬೇಕು ಆಚಾರ್ಯರೆ? ಏಳಿ, ಏಳಿ. ಕಾಲು ತೊಳೆದುಕೊಳ್ಳಿ. ಏ ಇವಳೇ, ಇಲ್ಲೊಂದಷ್ಟು ಉಪ್ಪಿಟ್ಟು…” +ಉಪ್ಪಿಟ್ಟಿನ ಶಬ್ದವೆತ್ತಿದೊಡನೆಯೇ ದಾಸಾಚಾರ್ಯನ ಹೊಟ್ಟೆಯೊಳಗೆ ಗೊ ಗೊ ಗೊಟg ಎಂದು ಕರುಳು ಹೊರಳಿತು. ಆದರೆ ಬೇಯಿಸಿದ ಪದಾರ್ಥವನ್ನು ಮುಟ್ಟಲು ದಾಸಾಚಾರ್ಯ ಹೆದರಿ: +“ಬೇಡಿ, ಬೇಡಿ, ನನ್ನ ಆರೋಗ್ಯಕ್ಕೆ ಉಪ್ಪಿಟ್ಟು ಸರಿಬರೋದಿಲ್ಲ. ಒಂದಿಷ್ಟು ಖಾಲಿ ಅವಲಕ್ಕಿ, ಬೆಲ್ಲ, ಹಾಲಾದರೆ ಸಾಕು” ಎಂದರು. +ಮಂಜಯ್ಯನವರಿಗೆ ಅರ್ಥವಾಗಿ ನಗೆ ಬಂದು ಆಚಾರ್ಯರಿಗೆ ಕಾಲು ತೊಳೆಯಲು ನೀರುಕೊಟ್ಟು, ಗುಟ್ಟಾಗಿ ಅಡಿಗೆಮನೆಯಲ್ಲಿ ಕೂರಿಸಿ ಖುದ್ದಾಗಿ ತಾವೇ ಕೂತು ಉಪಚರಿಸುತ್ತ ಹಾಲು, ಬೆಲ್ಲ, ಅವಲಕ್ಕಿ, ಬಾಳೆಹಣ್ಣು, ಜೇನುತುಪ್ಪ ತಿನ್ನಿಸಿದರು. ತಿಂದಹಾಗೆ ಹಿಗ್ಗುತ್ತ ಬಂದಿದ್ದ ದಾಸಾಚಾರ್ಯನಿಗೆ ಕೊನೆಯಲ್ಲಿ ಒತ್ತಾಯ ಮಾಡಿ ’ಒಂದು ಚಮಚಕ್ಕೇನೆಂದು’ ಒಂದು ಚಮಚ ಉಪ್ಪಿಟ್ಟು ತಿನ್ನಿಸಿದರು. ಮತ್ತೆ ನಾಲ್ಕು ಚಮಚ ಉಪ್ಪಿಟ್ಟನ್ನು ಖುಷಿಯಿಂದ ಮಂಜಯ್ಯನವರ ಹೆಂಡತಿ ಬಡಿಸಿದರೆ ’ಪರಮಾತ್ಮ’ ಎಂದು ಹೊಟ್ಟೆ ಉಜ್ಜಿಕೊಳ್ಳುತ್ತ ದಾಸಾಚಾರ್ಯ ’ಬೇಡ’ ಎನ್ನಲಿಲ್ಲ. ದಾಕ್ಷಿಣ್ಯಕ್ಕೆ ಅನ್ನಲೇಬೇಕಾದಂತೆ ’ಸಾಕು ಸಾಕು, ನಿಮಗಿರಲಿ’ ಎಂದು ಕೆಯನ್ನು ಎಲೆಗೆ ಅಡ್ಡ ಮಾಡುವಂತೆ ನಟಿಸಿದ ಅಷ್ಟೆ. +ಅಧ್ಯಾಯ : ಒಂಬತ್ತು +ಬೆಳ್ಳಿಯ ಬದಲು ಅವತ್ತು ಚಿನ್ನಿ ಸಗಣಿ ಎತ್ತಲು ಬಂದಳು. ಕಾರಣ, ’ಬೆಳ್ಳಿಯ ಅಪ್ಪ ಅವ್ವ ಎಲ್ಡೂ ಜಡ ತಗುಲಿ ಮಲಗಿಬಿಟ್ಟಿವೆ’ ಎಂದಳು-ಅಗ್ರಹಾರದ ಹೆಂಗಸರಿಗೆ. ತಮ್ಮ ಪಾಡೇ ತಮಗಾದ ಬ್ರಾಹ್ಮಣ ಹೆಂಗಸರು ಚಿನ್ನಿಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆದರೆ ಚಿನ್ನಿ ಗೊಬ್ಬರವೆತ್ತುತ್ತ ಯಾರು ಕೇಳಿಸಿಕೊಳ್ಳಲಿ ಬಿಡಲಿ, ತಮ್ಮ ಕೇರಿಯ ಕಥೇನ ಆಡಿಕೊಂಡಳು. ’ಚೌಡ ಸತ್ತ, ಅವನ ಹೊಲತಿಯೂ ಸತ್ತಿತು, ಗುಡೀಗೆ ಬೆಂಕಿಯಿಟ್ಟು ಅವರ್‍ನ ಸುಟ್ಟದಾಯ್ತವ್ವ. ದಯ್ಯಕ್ಕೆ ಕ್ವಾಪ ಬಂದಯ್ತೋ ಏನು ಕತೆಯೋ.’ ಗರುಡಾಚಾರ್ಯರ ಹೆಂಡತಿ ಸೀತಾದೇವಿ ಸೊಂಟದ ಮೇಲೆ ಕೆಯಿಟ್ಟು ತನ್ನ ಮಗನ ಬಗ್ಗೆಯೇ ಚಿಂತಿಸುತ್ತಿದ್ದಳು : ಮಿಲಿಟರಿ ಸೇರಿದ ಪರದೇಶಿಗೆ ಏನಾದರೂ ಆದರೆ ಏನು ಗತಿ? ಚಿನ್ನಿ ದೂರದಲ್ಲಿ ನಿಂತು: “ಅವ್ವಾ ಅವ್ವಾ, ಬಾಯಿಗಷ್ಟು ಕವಳಾ ಎಸೀರವ್ವಾ” ಎಂದು ಬೇಡಿದಳು. ಸೀತಾದೇವಿ ಒಳಗೆ ಹೋಗಿ ಎಲೆ, ಅಡಿಕೆ, ಹೊಗೆಸೊಪ್ಪನ್ನ ಎಸೆದು ಅಲ್ಲೇ ನಿಂತಳು-ಹಿಂದಿನದೇ ಯೋಚನೆಯಲ್ಲಿ. ಚಿನ್ನಿ ಹೊಗೆಸೊಪ್ಪು ಎಲೆಯಡಿಕೆಯನ್ನು ತನ್ನ ಮಡಿಲಿಗೆ ಸಿಕ್ಕಿಸಿಕೊಳ್ಳುತ್ತ: +“ಅವ್ವಾ, ಯಾಪಟ್ಟು ಇಲಿಗಳು ಹೆಂಗೆ ಹೊಂಟವೆ ಹ್ವರಗೆ! ಒಳ್ಳೇ ದಿಬ್ಬಣಕ್ಕೆ ಹ್ವಂಟಂಗೆ. ಏನು ಕಾರುಭಾರೋ ಅವಕ್ಕೆ” ಎಂದು ಬುಟ್ಟಿಯಲ್ಲಿ ಸಗಣಿ ಹೊತ್ತು ನಡೆದಳು. +ಗುಡಿಗೆ ಹಿಂದಕ್ಕೆ ಬಂದವಳು ಬೆಳ್ಳಿಗಷ್ಟು ಹೊಗೆಸೊಪ್ಪನ್ನು ಮುರಿದು ಕೊಡುವ ಎಂದು ಅವಳ ಗುಡಿ ಕಡೆ ನಡೆದಳು. ದೂರದಿಂದಲೇ ಬೆಳ್ಳಿಯ ಗುಡಿಯಲ್ಲಿ ಅವಳ ಅಪ್ಪ ಅವ್ವ ಕಿರುಚುವುದು ಕೇಳಿತು. ’ಅಯ್ಯಾ! ಜಡ ಬಂದರೆ ಯಾಪಟ್ಟು ಕಿರುಚುತಾನೆ ಅವ. ಇವನನ್ನೂ ದಯ್ಯ ಮೆಟ್ಟಿತೊ ಕಾಣೆ’ ಎಂದು ’ಬೆಳ್ಳೀ’ ಎಂದು ಕರೆಯುತ್ತ ಬಂದು ನೋಡಿದರೆ ಬೆಳ್ಳಿ ಅಪ್ಪ ಅವ್ವನ ಬಳಿ ತಲೆ ಮೇಲೆ ಕೆ ಹೊತ್ತು ಕೂತಿದ್ದಳು. “ಅಗ್ರಹಾರದಾಗೂ ಹೆಂಗೆ ಇಲಿ ದಿಬ್ಬಣ ಹೊಂಟವೆ” ಎಂದು ಹೇಳಬಂದಳು. ಅವಾಕ್ಕಾಗಿ ನಿಂತಳು. ಹೊಗೆಸೊಪ್ಪನ್ನು ಮುರಿದು “ತಗ ಬಾಯಿಗೆ. ಅವ್ವ ಕೊಟ್ಟರು” ಎಂದು ಕೂತಳು. ಬೆಳ್ಳಿ ಹೊಗೆಸೊಪ್ಪನ್ನು ತಿಕ್ಕಿ ಬಾಯಿಗೆ ಹಾಕಿಕೊಂಡು: +“ಪಿಳ್ಳಗಿವತ್ತು ಮೆ ಮೇಲೆ ಗಣಾ ಬಂದರೆ ಕ್ಯಾಳಬೇಕು. ನಂಗ್ಯಾಕೊ ಭಯವಾತೆತೆ ಕಣೇ. ಇಲಿ ಹಿಂಗೆ ಹೊಲೇರ ಗುಡೀಗೆ ದಂಡು ಬರೋದೆಂದ್ರೇನು, ಚೌಡ ಅವನ ಹೊಲತಿ ಲP ಎಂದು ಪರಾಣ ಬಿಡೋದೆಂದ್ರೇನು, ನನ್ನಪ್ಪ ಅವ್ವನನ್ನ ಹೀಗೆ ದಯ್ಯ ಮೆಟ್ಟೋದೆಂದ್ರೇನು-ಕ್ಯಾಳಬಾಕು” ಎಂದಳು. +“ಅಂii, ನಿಂದೊಂದು. ಸುಮ್ಕಿರು” ಎಂದು ಚಿನ್ನಿ ಬೆಳ್ಳಿಗೆ ಸಮಾಧಾನ ಹೇಳಿದಳು. +ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸೂರ್ಯ, ಧಗಧಗನೆ ನೆತ್ತಿಯ ಮೇಲೆ ಪಶುಪತಿ ಕೋಪದಲ್ಲಿ ತೆರೆದ ಹಣೆಗಣ್ಣಿನಂತೆ ಉರಿದು, ಹಸಿವಿನಿಂದ ಅರ್ಧಜೀವರಾದ ಬ್ರಾಹ್ಮಣರನ್ನು ದಿಙ್ಮೂಢರನ್ನಾಗಿ ಮಾಡಿ ಕುಕ್ಕರಿಸಿದ. ಪ್ರಾಣೇಶಾಚಾರ್ಯರ ಆಗಮನವನ್ನು ನಿರೀಕ್ಷಿಸುತ್ತ, ಪೆದ್ದು ಪೆದ್ದಾಗಿ ಬೀದಿಯ ಝಳ ಝಳ ಬಿಸಿಲನ್ನು ನೋಡುತ್ತ ಕೂತ ಕಣ್ಣುಗಳ ಎದುರು ಬಿಸಿಲು ಕುದುರೆಗಳು ನರ್ತಿಸಿದವು. ಉತ್ಕಟವಾಗಿದ್ದ ಭೀತಿ ಮತ್ತು ಹಸಿವು ಹೊಟ್ಟೆಯಲ್ಲಿ ಗುಮ್ಮನಂತೆ ಅಡಗಿ, ನಿರಾಕಾರವಾದ ಕಳವಳ ಮಾತ್ರವಾಗಿ-ಮಾರುತಿಯ ಅಪ್ಪಣೆಯನ್ನು ಪಡೆಯಹೋದ ಪ್ರಾಣೇಶಾಚಾರ್ಯರ ವ್ಯಕ್ತಿತ್ವದ ಸುತ್ತ ಬ್ರಾಹ್ಮಣರ ಜೀವಗಳು ಬಾವಲಿಗಳಂತೆ ನೇತು ಬಿದ್ದವು. ಏನೋ ಭರವಸೆ : ಇನ್ನೊಂದು ರಾತ್ರೆ ನಾರಣಪ್ಪನ ಹೆಣವನ್ನಿಟ್ಟುಕೊಂಡಿರಬೇಕಾದ ಪ್ರಮೇಯ ಬರಲಿಕ್ಕಿಲ್ಲವೆಂಬ ನಂಬಿಕೆ. ಉಗ್ರಾಣದ ಅಕ್ಕಿಯ ಗೋಣಿಯಲ್ಲಿ ಸತ್ತುಬಿದ್ದಿದ್ದ ಇಲಿಯನ್ನು ಬಾಲದಿಂದೆತ್ತಿ, ಸೆರಗಿನಿಂದ ಮೂಗು ಮುಚ್ಚಿಕೊಂಡು ಹೊರಗೆಸೆಯಲೆಂದು ಹೋದ ಸೀತಾದೇವಿ, ಗವ್ವೆಂದು ಒಂದು ಹದ್ದು ಈಸಿ ಬಂದು ತಮ್ಮ ಮನೆಯ ಸೂರಿನ ಮೇಲೆ ಬಂದು ಕೂತಿದ್ದು ಕಂಡು, “ಅಯ್ಯಯ್ಯೋ, ಇವರೇ ಇವರೇ” ಎಂದು ಕಿರುಚಿದಳು. ಹದ್ದು ಹೀಗೆ ಮನೆಯ ಮೇಲೆ ಬಂದು ಕೂರೋದು ಸಾವಿನ ಶಕುನ. ಹಿಂದೆ ಎಂದೂ ಹೀಗಾದ್ದಿಲ್ಲ. ಗರುಡಾಚಾರ್ಯ ಓಡಿಬಂದು ಹದ್ದನ್ನು ನೋಡಿ ಕುಸಿದುಬಿಟ್ಟ. ಸೀತಾದೇವಿ “ಅಯ್ಯೋ, ನನ್ನ ಮಗನಿಗೆ ಏನಾಗಿಬಿಟ್ಟಿತೋ….” ಎಂದು ಅಳಲು ಪ್ರಾರಂಭಿಸಿದಳು. ಗರುಡಾಚಾರ್ಯ ತಾನು ಹಿಂದಿನ ದಿನ ಮಾರುತಿಗೆ ಬಂಗಾರ ಸೇರಲೆಂದು ದಾಸಾಚಾರ್ಯ ಹೇಳಿದ ಮಾತನ್ನು ಮನಸ್ಸಿನೊಳಗೆ ನಿರಾಕರಿಸಿದ್ದರಿಂದ ಹೀಗಾಗಿರಬೇಕೆಂದು ಅತ್ಯಂತ ಭಯದಲ್ಲಿ ಹೆಂಡತಿಯ ಕೆ ಹಿಡಿದು ಎದ್ದು ಒಳಗೆ ಬಂದು, ಕಾಣಿಕೆಯನ್ನು ದೇವರ ಎದುರಿಟ್ಟು, ನಮಸ್ಕಾರ ಮಾಡಿ “ತಪ್ಪಾಯಿತಪ್ಪ. ನಿನ್ನ ಬಂಗಾರ ನಿನಗೇ ಇರಲಿ, ಮನ್ನಿಸಿಬಿಡು” ಎಂದು ಪ್ರಾರ್ಥಿಸಿದ. ಮತ್ತೆ ಹೊರಗೆ ಬಂದು ಹದ್ದನ್ನು ಹಾರಿಸಲೆಂದು ’ಉ ಉ’ ಎಂದ. ಸೀತಾದೇವಿ ಎಸೆದಿದ್ದ ಇಲಿಯನ್ನು ಸೂರಿಗೆತ್ತಿಕೊಂಡು ಹೋಗಿ ಉಣ್ಣುತ್ತಿದ್ದ ಹದ್ದು ನಿರ್ಭಯವಾಗಿ, ನಾಚಿಕೆಗೆಟ್ಟ ನೆಂಟನ ಹಾಗೆ, ಕೂತೇ ಬಿಟ್ಟಿತು. ಗರುಡಾಚಾರ್ಯ ಕಣ್ಣುಕುಕ್ಕುವ ಬಿಸಿಲಿನಲ್ಲಿ ಕತ್ತೆತ್ತಿ ನೋಡುತ್ತಾನೆ-ಏನು ನೋಡೋದು-ಹದ್ದು, ಹದ್ದು, ಹದ್ದು, ಆಕಾಶದ ನೀಲಿಯ ತುಂಬ ತೇಲಾಡುವ, ಓಲಾಡುವ, ವೃತ್ತವೃತ್ತ ಸುತ್ತಿ ಕೆಳಗೆ ಬರುತ್ತಿರುವ ಹದ್ದುಗಳು. “ಇವಳೇ, ನೋಡೇ ಇಲ್ಲಿ” ಎಂದು ಕೂಗಿದ. ಸೀತಾದೇವಿ ಓಡಿಬಂದು ಹಣೆಗೆ ಕೆ ಮಾಡಿ ಕಣ್ಣುಗಳನ್ನೆತ್ತಿ ’ಉ’ ಎಂದು ನಿಟ್ಟುಸಿರೆಳೆದಳು. ಅವರು ನೋಡುತ್ತಿದ್ದಂತೆ ತಮ್ಮ ಮನೆಯ ಮೇಲೆ ಕೂತ ಹದ್ದು ನರ್ತಕಿಯಂತೆ ಕತ್ತು ಕೊಂಕಿಸಿ, ಸುತ್ತ ನೋಡಿ, ’ಭg’ ಎಂದು ಅವರ ಕಾಲಬುಡಕ್ಕೆ ಎಗರಿ, ಉಗ್ರಾಣದಿಂದ ಹಿತ್ತಲಿಗೆ ಓಡಿಬರುತ್ತಿದ್ದ ಇಲಿಯೊಂದನ್ನು ಕುಕ್ಕಿ, ಮತ್ತೆ ಹಾರಿ ಮನೆಯ ಮೇಲೇ ಕೂತಿತು. ದಂಪತಿಗಳ ಪ್ರಾಣ ಒಂದು ಕ್ಷಣ ಜೊತೆಯಾಗಿ ಎಂದೂ ಕಂಪಿಸದ ಹಾಗೆ ಕಂಪಿಸಿ-ಇಬ್ಬರೂ ಕೂತುಬಿಟ್ಟರು. ಆಕಾಶದಲ್ಲಿ ಹಾರಾಡುತ್ತಿದ್ದ ಹದ್ದುಗಳಲ್ಲಿ ಒಂದು ಇಳಿದು ನಾರಣಪ್ಪನ ಮನೆಯ ಮೇಲೆ ಕೂತಿತು. ಕತ್ತನ್ನು ಎತ್ತಿ ಅದರ ದೆತ್ಯ ರೆಕ್ಕೆಗಳನ್ನು ಪಟಪಟನೆ ಬಡಿದು, ಸಮತೂಕಕ್ಕೆ ಬಂದು, ಅಗ್ರಹಾರವನ್ನೆಲ್ಲ ಹದ್ದುಗಣ್ಣಿನಲ್ಲಿ ಈಕ್ಷಿಸಿತು. ತದನಂತರ ಹಾರುತ್ತಿದ್ದ ಹದ್ದುಗಳೆಲ್ಲ ಇಳಿದು ಮನೆಗೆ ಎರಡೆರಡರಂತೆ ಮೊದಲೇ ನಿಶ್ಚಯಮಾಡಿಕೊಂಡವಂತೆ ಬಂದು ಕೂತವು. ’ರವ್ವನೆ’ನೇ ಕೆಳಗೆ ಹಾರುವುವು; ಇಲಿಯೊಂದನ್ನು ಕೊಕ್ಕಿನಿಂದೆತ್ತಿ ಸೂರಿನ ಮೇಲೆ ಕೂತು ಕುಕ್ಕುತ್ತ ತಿನ್ನುವುವು-ಸ್ಮಶಾನದಲ್ಲಿರಬೇಕಾದ ರಣಹದ್ದುಗಳು ಹೀಗೆ, ಪ್ರಳಯಕಾಲದಲ್ಲೆಂಬಂತೆ ಅಗ್ರಹಾರಕ್ಕೆ ಎರಗಿದ್ದನ್ನು ಕಂಡು ಅಗ್ರಹಾರದ ಸಮಸ್ತರೂ ಬಾಯಿಬಡಿದವರಂತೆ ಬಂದು ಬೀದಿಯಲ್ಲಿ ನೆರದರು. ಎಲ್ಲರ ಮನೆಯ ಮೇಲೂ ಹದ್ದುಗಳು ತಂಗಿದ್ದು ಕಂಡು ಸೀತಾದೇವಿ, ’ಇದು ಬರೀ ನನ್ನ ಮಗನ ಕ್ಷೇಮದ ಬಗ್ಗೆ ಶಕುನವಲ್ಲ’ ಎಂದು ಸಮಾಧಾನಿತಳಾದಳು. ವಾಚ್ಯಾತೀತವಾದ ಭಯದಿಂದ ಅಗ್ರಹಾರದ ಬ್ರಾಹ್ಮಣರು, ಹೆಂಗಸರು, ಮಕ್ಕಳು ನಿಂತಿದ್ದು ಎರಡು ಕ್ಷಣ ಮಾತ್ರ : ಮೊದಲು ದುರ್ಗಾಭಟ್ಟ ಹದ್ದುಗಳನ್ನು ಹೆದರಿಸಲೆಂದು ’ಹೋ ಹೋ ಹೋ’ ಎಂದು ಕೂಗಿದ. ನಡೆಯಲಿಲ್ಲ. ಎಲ್ಲ ಬ್ರಾಹ್ಮಣರು ಒಕ್ಕೊರಲಿನಿಂದ ಕೂಗಿದರು. ಅದೂ ನಡೆಯಲಿಲ್ಲ. ಉಪ್ಪಿಟ್ಟು ತಿಂದು ಆಗತಾನೆ ಪ್ರಸನ್ನನಾಗಿ ಹಿಂದೆ ಬಂದ ದಾಸಾಚಾರ್ಯನಿಗೊಂದು ಉಪಾಯ ಹೊಳೆಯಿತು. ’ಜಾಗಟೆ ತಂದು ಬಾರಿಸಿ’ ಎಂದ. ಹುಡುಗರಿಗೆ ಗೆಲುವಾಗಿ, ದೇವರ ಮನೆಯೊಳಕ್ಕೆ ಓಡಿ, ಕಂಚಿನ ಜಾಗಟೆಗಳ ಜೊತೆ ಶಂಖವನ್ನೂ ತಂದರು. ಮಹಾಮಂಗಳಾರತಿಯ ವೇಳೆಯಲ್ಲಿ ಮಾಡುವ ಭಯಂಕರ ಮಂಗಳಶಬ್ದ ಮಧ್ಯಾಹ್ನದ ರುದ್ರಮೌನವನ್ನು ರಣಭೇರಿಯಂತೆ ನುರಿದು ನುಚ್ಚುನೂರು ಮಾಡಿತು. ಐದಾರು ಮೆಲಿ ವಿಸ್ತೀರ್ಣದಲ್ಲಿದ್ದ ಅಗ್ರಹಾರದ ಜನರಿಗೆ ದೂರ್ವಾಸವನದಲ್ಲಿ ನಗಾರಿ, ಪೂಜೆ, ಮಂಗಳಾರತಿ ನಡೆಯುತ್ತಿರಬೇಕೆಂಬ ಭ್ರಾಂತಿಯನ್ನು ಕವಿಸಿತು. ರಣಹದ್ದುಗಳು ಆಶ್ಚರ್ಯಪಟ್ಟವರಂತೆ ಅತ್ತ ಇತ್ತ ನೋಡಿ, ರೆಕ್ಕೆಗಳನ್ನು ಬಿಚ್ಚಿ, ಇಲಿಗಳನ್ನು ಕಚ್ಚಿಕೊಂಡು ಹಾರಿದವು. ಆಕಾಶದಲ್ಲಿ ತೇಲುತ್ತ ಹೊಳೆಯುವ ಚುಕ್ಕೆಗಳಾದುವು. ’ನಾರಾಯಣ’ ಎಂದು ಸುಸ್ತಾದ ಬ್ರಾಹ್ಮಣರು ಚಾವಡಿ ಏರಿ, ಹೊದ್ದ ವಸ್ತದಿಂದ ಮೂಗು ಮುಚ್ಚಿಕೊಂಡು, ಬೆವರೊರಸಿಕೊಂಡರು. ಸೀತಾದೇವಿ ಮತ್ತು ಅನಸೂಯ ಅವರ ಗಂಡಂದಿರ ಬಳಿ ಹೋಗಿ, “ಬಂಗಾರದ ವಿಷಯ ಹಾಳಾಗಲಿ. ಕಂಡವರ ಆಸ್ತಿ ನಮಗೇಕೆ. ಮೊದಲು ಶವವನ್ನು ತೆಗೆದು ಸಂಸ್ಕಾರ ಮಾಡಿ. ನಾರಣಪ್ಪನ ಪ್ರೇತವೇ ಈ ಹದ್ದುಗಳನ್ನು ಕರೆಯುತ್ತಿದೆ” ಎಂದು ಕಣ್ಣೀರಿಟ್ಟು ಬೇಡಿದರು. ಗಾಳಿ ಬೀಸುತ್ತಿರಲಿಲ್ಲವಾದ್ದರಿಂದ ಮನೆಮನೆಯಲ್ಲೂ ಮಡುವುಗಟ್ಟಿ ನಿಂತ ಧಗೆ, ಭೀತಿ, ಹಸಿವಿನಲ್ಲಿದ್ದವರನ್ನು ನಿರಾಕಾರ ಪ್ರೇತದಂತೆ ಕಾಡಿತು. ಜನ್ಮಜನ್ಮಾಪಿ ಕಳೆದುಕೊಳ್ಳಲಾರದ ಅಶುಚಿಯಲ್ಲಿದ್ದಂತೆನಿಸಿ, ನೇಮ ನಿಷ್ಠೆಯ ಬ್ರಾಹ್ಮಣರು ಕಂಗಾಲಾದರು.ಮಧ್ಯಾಹ್ನದ ಉರಿ ಏರಿ ಮರದ ನೆರಳಿನಲ್ಲಿ ಕೂತಿದ್ದ ಚಂದ್ರಿಗೆ ತುಂಬ ದಣಿವಾಯಿತು. ಮಡಿಲಿನಲ್ಲಿದ್ದ ರಸಬಾಳೆಹಣ್ಣಿಗೆ ಕೆಹಾಕಿದವಳು ಗುಡಿಯಲ್ಲಿ ಪ್ರಾಣೇಶಾಚಾರ್ಯರು ಹಸಿದು ಪೂಜೆಯಲ್ಲಿ ಕೂತಿದ್ದಾಗ ತಾನೇನು ತಿನ್ನುವುದೆಂದು ಸುಮ್ಮನಾದಳು. ದೂರದಿಂದ ಶಂಖ ಜಾಗಟೆಯ ಧ್ವನಿ ಕೇಳಿ ಆಶ್ಚರ್ಯವಾಯಿತು : ಸುತ್ತ ಕಣ್ಣು ಹಾಯಿಸಿದಳು. ಗಾಳಿ ನಿಶ್ಚಲವಾಗಿ ಮರದೆಲೆಗಳೂ ಅಲುಗುತ್ತಿರಲಿಲ್ಲ. ಅಲ್ಲಾಡುವುದೆಂದರೆ ದೂರದ ಶುಭ್ರ ತಿಳಿನೀಲಿಯಲ್ಲಿ ಓಲಾಡುವ ಹದ್ದುಗಳು ಮಾತ್ರ. ಪ್ರಾಣೇಶಾಚಾರ್ಯರು ಮತ್ತೊಂದು ಕೊಡ ನೀರನ್ನು ಬಳಬಳನೆ ಮೆಗೆ ಸುರಿದುಕೊಂಡದ್ದು ಕಂಡು ’ನನ್ನಿಂದೆಷ್ಟು ತೊಂದರೆ’ ಎಂದು ಯಾತನೆಯಾಯಿತು. ಅವಳು ಅರಿಯುವುದರೊಳಗೆ ಕೆ ಬಾಳೆಹಣ್ಣೊಂದನ್ನು ಸುಲಿದು ನಾಜೂಕಾಗಿ, ತೆರೆದ ಅವಳ ಬಾಯಲ್ಲಿಟ್ಟಿತು ’ನನಗೆ ದೋಷವಿಲ್ಲ” ಎಂದು ಸಮಾಧಾನ ಹೇಳಿಕೊಂಡಳು. ತಿರುಗಿ ತಿರುಗಿ ಹದ್ದುಗಳು ಹಟಹಿಡಿದು ಬಂದು ಕೂತವು! ಬ್ರಾಹ್ಮಣರು ಮತ್ತೆ ಹೊರಬಂದು ಜಾಗಟೆ ಬಾರಿಸಿ ಶಂಖ ಊದಿದರು. ಸಂಜೆಯವರೆಗೂ ಈ ಕಾಳಗ ನಡೆಯಿತು. ದಣಿದವರೆಂದರೆ ಬ್ರಾಹ್ಮಣರು ಮಾತ್ರ; ಆರ್ತರಾಗಿ ಕಾದರೂ ಪ್ರಾಣೇಶಾಚಾರ್ಯರ ಸುಳಿವೇ ಇಲ್ಲವಲ್ಲ! ಇನ್ನೊಂದು ರಾತ್ರೆಯನ್ನು ಹೇಗೆ ಕಳೆಯುವುದಪ್ಪ ಎಂಬ ಉತ್ಕಟ ಸಂಕಟ ಮರಳಿ-ಅಗ್ರಹಾರದಲ್ಲಿ ಕತ್ತಲಾಗಿ-ಹದ್ದುಗಳು ಮರೆಯಾದವು. +ಅಧ್ಯಾಯ : ಹತ್ತು +ಪ್ರಸಾದಕ್ಕೆಂದು ಕಾಯುತ್ತ ಕೂತ ಪ್ರಾಣೇಶಾಚಾರ್ಯರು ಕಂಗೆಟ್ಟರು. ’ಸಂಸ್ಕಾರವಿಲ್ಲದೆ ಶವ ಕೊಳೆಯುತ್ತಿದೆ; ಮಾರುತಿ, ಎಷ್ಟು ಹೊತ್ತು ನಿನ್ನ ಪರೀಕ್ಷೆ’ ಎಂದು ಯಾಚಿಸಿದರು. ’ಕೂಡದು ಎಂದು ನಿನ್ನ ಮತವಾದರೆ ಎಡ ಪ್ರಸಾದವನ್ನಾದರೂ ದಯಮಾಡು’ ಎಂದು ಬೇಡಿದರು. ಕಾಡಿದರು. ದೇವರನ್ನು ಒಲಿಸುವ ಪ್ರೇಮಭಾವದ ಕೀರ್ತನೆಗಳನ್ನು ಹಾಡಿದರು. ಮಗುವಾದರು. ಹೆಂಡತಿಯಾದರು. ತಾಯಿಯಾದರು. ಮತ್ತೆ ದೇವರನ್ನು ದೂರುವ ಅವನ ನೂರೊಂದು ತಪ್ಪುಗಳನ್ನು ಹೇಳಿ ಕೊಂಡಾಡುವ ಕೀರ್ತನೆಗಳನ್ನೆಲ್ಲ ನೆನೆದರು. ಆಳೆತ್ತರದ ಮಾರುತಿ ಅಂಗೆ ಮೇಲೆ ಲಕ್ಷ್ಮಣನ ಪ್ರಾಣವನ್ನುಳಿಸುವ ಸಂಜೀವಿನಿ ಮೂಲಿಕೆಯುಳ್ಳ ಪರ್ವತವನ್ನೆತ್ತಿ ನಿಶ್ಚಲ ನಿಂತ. ಉದ್ದಂಡ ಎರಗಿ ಪ್ರಾಣೇಶಾಚಾರ್ಯರು ಹಲುಬಿದರು. ಸಂಜೆಯಾಯಿತು. ಕತ್ತಲಾಯಿತು. ನೀಲಾಂಜನದ ಬೆಳಕಿನಲ್ಲಿ ಪುಷ್ಪಾಲಂಕೃತ ಮಾರುತಿ ಜಗ್ಗಲಿಲ್ಲ; ಎಡ ಪ್ರಸಾದವನ್ನೂ ಕೊಡಲಿಲ್ಲ, ಬಲ ಪ್ರಸಾದವನ್ನೂ ಕೊಡಲಿಲ್ಲ. ’ಧರ್ಮಶಸ್ತದಲ್ಲೂ ನನಗೆ ಉತ್ತರ ಸಿಗಲಿಲ್ಲ, ನಿನ್ನಿಂದಲೂ ಸಿಗಲಿಲ್ಲ-ನಾನು ಅಪಾತ್ರನೇನು ಹಾಗಾದರೆ’ ಎಂದು ಸಂಶಯಪಟ್ಟರು. ’ಯಾವ ಮುಖದಿಂದ ನನ್ನ ಮೇಲೆ ನಂಬಿಕೆಯಿಟ್ಟವರನ್ನು ಹೋಗಿ ನೋಡಲಿ’ ಎಂದು ಅವಮಾನಿತರಾದರು. ’ನನ್ನನ್ನೇ ಪರೀಕ್ಷಿಸುತ್ತಿದ್ದೀಯಲ್ಲ’ ಎಂದು ಮಾರುತಿಯನ್ನು ಬಯ್ದರು. ಕತ್ತಲು ಗಾಢವಾದಂತೆ, ಇದು ಕೃಷ್ಣಪಕ್ಷ ಎಂದು ಅರಿತು-ಇದನ್ನು ನನ್ನ ಪರೀಕ್ಷೆಯೆಂದು ಅರಿಯಬೇಡಪ್ಪ, ಕೊಳೆಯುತ್ತಿರುವ ಶವವನ್ನು ನೆನಪಿಟ್ಟುಕೊ-ಎಂದು ಬುದ್ಧಿ ಹೇಳಿದರು. ಮಾರುತಿ ಯಾವುದಕ್ಕೂ ಜಗ್ಗದೆ ಪರ್ವತದ ಕಡೆ ಮುಖ ತಿರುಗಿಸಿ ನಿಂತ. ಆಚಾರ್ಯರಿಗೆ ಥಟ್ಟನೆ ತನ್ನ ಹೆಂಡತಿಗೆ ಔಷಧ ಕೊಡಬೇಕೆಂದು ನೆನಪಾಯಿತು. ಕಣ್ಣುಗಳಲ್ಲಿ ನೀರು ಬರುವುದೊಂದು ಬಾಕಿ-ನಿರಾಶೆಯಿಂದ ಎದ್ದು ನಿಂತರು. ಕಾಲು ಕೂತು ಮರಗಟ್ಟಿತ್ತು. ಕ್ಷೀಣರಾಗಿ ಮೆಲ್ಲಮೆಲ್ಲನೆ ನಡೆದರು. +ಸ್ವಲ್ಪ ದೂರ ನಡೆದಮೇಲೆ ದಟ್ಟವಾದ ಕತ್ತಲಿನ ಕಾಡಿನಲ್ಲಿ ಹಿಂದಿನಿಂದ ಹೆಜ್ಜೆ ಸಪ್ಪಳವಾದಂತಾಗಿ ನಿಂತರು. ಕೆಬಳೆಯ ಶಬ್ದ. ಆಲಿಸಿದರು. ’ಯಾರು?’ ಎಂದರು. ಕಾದರು. +’ನಾನು’ ಎಂದಳು. ಸಂಕೋಚದಲ್ಲಿ ಸಣ್ಣಗಾಗಿ ಚಂದ್ರಿ. +ಪ್ರಾಣೇಶಾಚಾರ್ಯರಿಗೆ ಒಮ್ಮೆಲೆ ಕಾಡು ಕತ್ತಲಿನಲ್ಲಿ ಹೀಗೆ ಹೆಣ್ಣೊಬ್ಬಳು ಬಳಿ ನಿಂತಿರುವುದರಿಂದ ಒಂದು ತರಹವಾಯಿತು. ಏನಾದರೂ ಅನ್ನಬೇಕೆಂದು ಮಾತು ಹುಡುಕಿ, ತನ್ನ ಪಾಡು ನೆನೆದು ದುಃಖವಾಗಿ, ’ಮಾರುತಿ, ಮಾರುತಿ…’ ಎನ್ನುತ್ತ ನಿಂತರು. +ಚಂದ್ರಿಗೆ ಅವರ ಮೃದುವಾದ, ಗದ್ಗದಿತವಾದ ಧ್ವನಿ ಕೇಳಿ ತುಂಬ ಮರುಕ ಉಕ್ಕಿತು. ಪಾಪ. ಹಸಿದು, ಕಂಗೆಟ್ಟು, ತನಗಾಗಿ ಒದ್ದಾಡಿ ಬಡವಾಗಿದ್ದಾನೆ ಬ್ರಾಹ್ಮಣ. ಅವರ ಕಾಲನ್ನು ಭದ್ರವಾಗಿ ಹಿಡಿದು ನಮಸ್ಕಾರ ಮಾಡಬೇಕೆನ್ನಿಸಿತು. ಮರುಕ್ಷಣವೇ ಮುಂದೆ ಬಂದು ಬಿದ್ದಳು. ಕತ್ತಲೆಯಲ್ಲಿ ಕಣ್ಣು ಕಾಣಿಸದಿದ್ದರಿಂದ ಉಮ್ಮಳದಲ್ಲೆಂಬಂತೆ ಅವಳು ಬಾಗಿದ್ದರಿಂದ, ಪಾದದ ಬದಲು ಅವರ ಮೊಣಕಾಲು ಅವಳ ಎದೆಗೆ ತಾಕಿತು. ಮುಗ್ಗರಿಸಿದ ವೇಗಕ್ಕೆ ಕುಪ್ಪಸದ ಗುಂಡಿಗಳು ಹರಿದವು. ಅವಾಕ್ಕಾಗಿ ಅವರ ತೊಡಿಯ ಮೇಲೆ ತಲೆಯಿಟ್ಟು ಕಾಲುಗಳನ್ನು ತಬ್ಬಿಕೊಂಡಳು. ಉಕ್ಕಿಬಂದ ಭಕ್ತಿ, ಹೆಣ್ಣಿನ ಸುಖವನ್ನೇ ಕಾಣದ ಬ್ರಾಹ್ಮಣ ಎನ್ನುವ ಮರುಕ, ಈ ಅಗ್ರಹಾರದಲ್ಲಿ ನೀವಲ್ಲದೆ ನನ್ನ ಹಿತಚಿಂತಕರು ಯಾರೂ ಇಲ್ಲ ಎನ್ನುವ ನಿಸ್ಸಹಾಯಕತೆ-ಒಟ್ಟಿಗೇ ಕೂಡಿ ಅತ್ತಳು. ಪ್ರಾಣೇಶಾಚಾರ್ಯರಿಗೆ ಪಶ್ಚಾತ್ತಾಪ, ಥಟ್ಟನೇ ಪರಕೀಯಳಾದ ಯೌವನದ ಹೆಣ್ಣೊಬ್ಬಳ ಬಿಗಿಯಾದ ಸ್ಪರ್ಶದಿಂದ ತಬ್ಬಿಬ್ಬೆನಿಸಿ ಆಶೀರ್ವದಿಸಲೆಂದು ಬಾಗಿ ಕೆ ನೀಡಿದರು. ಚಾಚಿದ ಕೆಗೆ ಅವಳ ಬಿಸಿ ಉಸಿರು, ಕಣ್ಣೀರು ತಾಗಿ, ರೋಮಾಂಚದ ಮಾರ್ದವ ಉಕ್ಕಿ, ಅವಳ ಚೆಲ್ಲಿದ ಕೂದಲನ್ನು ಸವರಿದರು. ಆಶೀರ್ವಾದದ ಸಂಸ್ಕೃತ ಮಾತು ಬಾಯಿಂದ ಹೊರಡಲಿಲ್ಲ. ತನ್ನ ತಲೆಗೂದಲಿನ ಮೇಲೆ ಅವರ ಕೆ ಆಡಿದ್ದರಿಂದ ಚಂದ್ರಿಗೆ ಇನ್ನಷ್ಟು ಆವೇಗವಾಗಿ, ಅವರ ಕೆಗಳನ್ನು ಭದ್ರವಾಗಿ ಹಿಡಿದು, ಎದ್ದುನಿಂತು, ಪಾರಿವಾಳದ ಹಾಗೆ ಡವಗುಟ್ಟುತ್ತಿದ್ದ ತನ್ನ ಎದೆಗಳಿಗೆ ಒತ್ತಿಕೊಂಡಳು. +ತನ್ನ ಕೆಗಳೆಂದೂ ಸ್ಪರ್ಶಿಸದ ಪುಷ್ಟವಾದ ಮೊಲೆಗಳನ್ನು ಮುಟ್ಟಿದ ಕ್ಷಣ ಪ್ರಾಣೇಶಾಚಾರ್ಯರಿಗೆ ಬವಳಿ ಬಂದಂತಾಯಿತು. ಕನಸಿನಲ್ಲೆಂಬಂತೆ ಮೊಲೆಗಳನ್ನು ಒತ್ತಿದರು. ಕೂಡಲೇ ಚಂದ್ರಿ, ಕಾಲು ಬತ್ತಿಬಂದ ಆಚಾರ್ಯರನ್ನು ಅವಚಿಕೊಂಡು ಮೆತ್ತಗೆ ಕೂರಿಸಿದಳು. ಆಚಾರ್ಯರಿಗೆ ಇಷ್ಟು ಹೊತ್ತೂ ಮನಸ್ಸಿಗೆ ಬಾರದಿದ್ದ ಹೊಟ್ಟೆಯ ಹಸಿವು ಜಗ್ಗನೆ ಎದ್ದು, ಸಂಕಟವಾಗಿ ’ಅಮ್ಮ’ ಎಂದರು. ಚಂದ್ರಿ ಅವರನ್ನು ಎದೆಗಾನಿಸಿಕೊಂಡು, ಮಡಿಲಿನಿಂz ರಸಬಾಳೆಹಣ್ಣುಗಳನ್ನು ತೆಗೆದು, ಸುಲಿದು ತಿನ್ನಿಸಿದಳು. ನಂತರ ತನ್ನ ಸೀರೆಯನ್ನು ಬಿಚ್ಚಿ ಹಾಸಿ ಪ್ರಾಣೇಶಾಚಾರ್ಯರನ್ನು ತಬ್ಬಿಕೊಂಡು ಮಲಗಿ ಗಳಗಳನೆ ಅತ್ತುಬಿಟ್ಟಳು. +ಭಾಗ ಎರಡು ಅಧ್ಯಾಯ : ಒಂದು +ಆಚಾರ್ಯರಿಗೆ ಎಚ್ಚರವಾದಾಗ ನಡುರಾತ್ರೆ. ಅವರ ತಲೆ ಚಂದ್ರಿಯ ತೊಡೆಗಳ ಮೇಲಿತ್ತು. ಕೆನ್ನೆ ಅವಳ ನಗ್ನ ಕಿಪ್ಪೊಟ್ಟೆಗೆ ಒತ್ತಿಕೊಂಡಿತ್ತು. ಚಂದ್ರಿ ತನ್ನ ಬೆರಳುಗಳಿಂದ ಅವರ ತಲೆ ಕಿವಿ ಕೆನ್ನೆಗಳನ್ನು ಸವರುತ್ತಿದ್ದಳು. +ತಾನೇ ತನಗೆ ಥಟ್ಟನೆ ಅಪರಿಚಿತನಾಗಿಬಿಟ್ಟಂತಾಗಿ ಕಣ್ಣುಬಿಟ್ಟು ಆಚಾರ್ಯರು ಯೋಚಿಸಿದರು. ಎಲ್ಲಿದ್ದೇನೆ? ಇಲ್ಲಿಗೆ ಹೇಗೆ ಬಂದೆ? ಇದು ಯಾವ ಕತ್ತಲು? ಇದು ಯಾವ ಕಾಡು? ಇವಳು ಯಾರು? +ತನ್ನ ಬಾಲ್ಯಕ್ಕೊಮ್ಮೆಗೆ ಮಗುಚಿಕೊಂಡುಬಿಟ್ಟಂತೆನಿಸಿ ಅಮ್ಮನ ತೊಡಿಯ ಮೇಲೆ ಮಲಗಿ ದಣಿವು ಕಳೆದುಕೊಳ್ಳುತ್ತಿದ್ದುದು ಮರುಕಳಿಸಿತು. ಬೆರಗಿನಿಂದ ನೋಡಿದರು: ಗರಿ ಬಿಚ್ಚಿದ ನವಿಲಿನಂತಹ ಅಕ್ಷಯ ನಕ್ಷತ್ರದ ರಾತ್ರಿ; ಸಪ್ತ‌ಋಷಿಗಳ ಮಂಡಲ; ವಸಿಷ್ಠರ ಪಕ್ಕದಲ್ಲಿ ನಾಚಿ ಮಿನುಗುವ ಅರುಂಧತಿ. ಕೆಳಗೆ ಹುಲ್ಲಿನ, ಹಸಿಮಣ್ಣಿನ, ವಿಷ್ಣುಕಾಂತಿಯ, ಸುಗಂಧಿಯ, ಹೆಣ್ಣನ ಬೆವರಿದ ಮೆಯ ವಾಸನೆ. ಕತ್ತಲು ಆಕಾಶ, ನೆಮ್ಮದಿಯಿಂದ ನಿಂತ ವೃಕ್ಷಗಳು. ಕನಸೋ ಎಂದು ಕಣ್ಣುಜ್ಜಿಕೊಂಡರು. ಎಲ್ಲಿಂದ ಇಲ್ಲಿಗೆ ಬಂದೆ, ಎಲ್ಲಿಗೆ ಹೋಗಬೇಕೆಂದು ಬಂದು ಮರೆತುಬಿಟ್ಟೆ ಎಂದು ಕಳವಳಿಸಿದರು. ’ಚಂದ್ರಿ’ ಎಂದು ಕರೆದು ಪೂರ್ಣ ಎಚ್ಚರವಾದರು. ಆಲಿಸಿದರು. ಕಾಡಿನಲ್ಲಿ, ಮೌನದಲ್ಲಿ, ಗುಟ್ಟುಗಳನ್ನು ಹೇಳುತ್ತಿರುವಂತಹ ಚಿಲಿಪಿಲಿ ಎನ್ನುವ ಕತ್ತಲು. ಚಿಲಿಪಿಲಿ ಎನ್ನುವ ಶಬ್ದ. ’ಮಿಣP’ ’ಮಿಣP’ ಎನ್ನುವ ಬೆಳಕಾಗಿ, ರಾಶಿರಾಶಿಯಾದ ಮಿಣುಕುಹುಳುಗಳು ತೇರಿನಂತೆ ಏರಿಬಂದು ಪೊದೆಯಿಂದ ಹೊರಗೆ ಪ್ರತ್ಯಕ್ಷವಾದವು. ಕಣ್ಣು ತುಂಬುವಂತೆ, ಕಿವಿ ತುಂಬುವಂತೆ ಆಲಿಸುತ್ತ ನೋಡಿದರು : ಸುತ್ತಲೂ ಮಿಣುಕು ಹುಳುಗಳ ರಾಶಿರಾಶಿ ತೇರು. ’ಚಂದ್ರೀ’ ಎಂದು ಅವಳ ಹೊಟ್ಟೆಯನ್ನು ಮುಟ್ಟಿ ಎದ್ದು ಕೂತರು. +ಪ್ರಾಣೇಶಾಚಾರ್ಯರು ತನ್ನನ್ನೆಲ್ಲಿ ಬೆದುಬಿಡುವರೋ, ಹಳಿದು ಬಿಡುವರೋ ಎಂದು ಚಂದ್ರಿಗೆ ಭಯ. ಅಲ್ಲದೆ ತಾನು ಫಲವತಿಯಾಗಿರಬಹುದೇನೋ ಎನ್ನುವ ಆಸೆ. ತಾನು ಪುಣ್ಯಾತಗಿತ್ತಿಯಾದೆ ಎನ್ನುವ ಕೃತಜ್ಞತೆ. ಆದರೆ ಅವಳು ಮಾತಾಡಲಿಲ್ಲ. +ಪ್ರಾಣೇಶಾಚಾರ್ಯರೂ ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ಎದ್ದು ನಿಂತು ಅಂದರು: +“ಚಂದ್ರಿ, ಏಳು ಹೋಗುವ. ನಾಳೆ ಬೆಳಿಗ್ಗೆ ಬ್ರಾಹ್ಮಣರು ಸೇರಿದಾಗ ಹೀಗಾಯಿತೆಂದು ಹೇಳಿಬಿಡುವ. ನೀನೇ ಹೇಳಿಬಿಡು. ಅಗ್ರಹಾರಕ್ಕೆ ಒಂದು ನಿಶ್ಚಯ ಮಾಡಿ ಹೇಳುವ ಅಧಿಕಾರಾನ್ನ ನಾನು…” +ಏನು ಹೇಳುವುದು ಸರಿಯೆಂದು ತಿಳಿಯದೆ ಪ್ರಾಣೇಶಾಚಾರ್ಯರು ತತ್ತರಿಸಿ ನಿಂತರು : +“ಕಳೆದುಕೊಂಡೆ. ನಾಳೆ ನನಗೆ ಧೆರ್ಯ ಬಾರದಿದ್ದರೆ ನೀನೇ ಹೇಳಿಬಿಡಬೇಕು. ನನ್ನ ಮಟ್ಟಿಗೆ ಸಂಸ್ಕಾರ ಮಾಡಲು ನಾನು ಸಿದ್ಧ. ಉಳಿದ ಬ್ರಾಹ್ಮಣರಿಗೆ ಹೇಳುವ ಅಧಿಕಾರ ನನಗೆ ಇಲ್ಲ. ಅಷ್ಟೆ.” +ಮಾತನ್ನಾಡಿಬಿಟ್ಟಮೇಲೆ ಪ್ರಾಣೇಶಾಚಾರ್ಯರಿಗೆ ತಮ್ಮ ದಣಿವೆಲ್ಲ ಕಳೆದುಬಿಟ್ಟಂತಾಯಿತು.ಒಟ್ಟಿಗೆ ಹೊಳೆ ದಾಟಿ, ನಾಚಿಕೆಯಾದ್ದರಿಂದ ಪ್ರಾಣೇಶಾಚಾರ್ಯರನ್ನು ಮುಂದೆ ಬಿಟ್ಟು ತಾನು ಹಿಂದಾಗಿ, ಅಗ್ರಹಾರವನ್ನು ಸೇರಿದಮೇಲೆ ಚಂದ್ರಿಗೆ ಕಳವಳವಾಯಿತು : ತಾನು ಮಾಡಿದ್ದೆಲ್ಲ ಹೀಗಾಗುತ್ತದಲ್ಲ! ಒಳ್ಳೆ ಬುದ್ಧಿಯಿಂದ ಬಂಗಾರ ಕೊಟ್ಟೆ; ಹಾಗಾಯ್ತು. ಈಗ ಅವರ ಸಂಸ್ಕಾರ ಮಾಡಲಿಕ್ಕೆಂದು ಪ್ರಯತ್ನಿಸುತ್ತಿದ್ದ ಆಚಾರ್ಯರನ್ನ… ಆದರೆ ಸ್ವಭಾವತಃ ಸುಖಿಯಾದ ಚಂದ್ರಿಗೆ ಆತ್ಮಾವಹೇಳನದ ಪದ್ಧತಿಯ ಮಾತುಗಳ ಪರಿಚಯವಿರಲಿಲ್ಲ. ಕತ್ತಲೆಯಲ್ಲಿ ಅಗ್ರಹಾರದ ಬೀದಿ ನಡೆಯುತ್ತಿದ್ದಂತೆ ಆ ಕತ್ತಲಿನ ಕಾಡಿನಲ್ಲಿ – ನಿಂತದ್ದು , ಬಾಗಿದ್ದು , ಕೊಟ್ಟಿದ್ದು , ಕೊಂಡದ್ದು , ಬಚ್ಚಿಟ್ಟುಕೊಂಡ ಪರಿಮಳದ ಹೂವಿನಂತೆ ಧನ್ಯಭಾವವನ್ನು ಮಾತ್ರ ತರುತ್ತದೆ. ಪಾಪ ಆಚಾರ್ಯರಿಗೆ ಹೀಗೆನ್ನಿಸುತ್ತದೋ, ಇಲ್ಲವೋ. ಇನ್ನು ಅವರ ಜಗುಲಿಗೆ ಮತ್ತೆ ಹೋಗಿ ಅವರ ಮನಸ್ಸಿಗೆ ನೋವುಂಟುಮಾಡಬಾರದು. ಅಲ್ಲದೆ ತನ್ನ ಬಾಳಿಗೆ ಅಕಸ್ಮಾತ್ತಾಗಿ ನುಗ್ಗಿ ಬಂದ ಈ ಅದೃಷ್ಟವನ್ನ ಆಚಾರ್ಯರು ಹೇಳಿದ ಹಾಗೆ ಅಗ್ರಹಾರದ ಗೊಡ್ಡು ಬ್ರಾಹ್ಮಣರ ಎದುರಿನಲ್ಲಿ ಹೇಳಿ, ಬೀದಿಗೆಳೆದು, ಆಚಾರ್ಯರ ಮಾನ ಕಳೆಯುವಂಥವಳೇ ತಾನು? ಸರಿ- ಆದರೆ ಈಗ ನನ್ನ ಗತಿ? ಆಚಾರ್ಯರಲ್ಲಿಗೆ ಹೋಗೋದು ಸರಿಯಲ್ಲ; ಈಗ ಶವವಾದ ತನ್ನ ಯಜಮಾನನ ಮನೆಗೆ ಹೋಗಲು ಭಯ. ಏನು ಮಾಡಲಿ?ಎಷ್ಟೆಂದರೂ ತನ್ನ ಕೂಡ ಸಹವಾಸ ಮಾಡಿದವರಲ್ಲವೆ ಎಂದು ಧೆರ್ಯ ತಂದುಕೊಂಡಳು. ಅಲ್ಲಿಗೆ ಹೋಗಿ ನೋಡೋದು, ಧೆರ್ಯವಾದರೆ ಚಾವಡಿಯಲ್ಲಿ ಮಲಗಿರೋದು, ಇಲ್ಲವೆ ಆಚಾರ್ಯರ ಜಗುಲಿಗೇ ಮತ್ತೆ ಬರೋದು, ಏನು ಮಾಡಲಿಕ್ಕಾಗುತ್ತೆ ಆಪತ್ತಿನಲ್ಲಿ-ಎಂದು ವಾದಿಸಿಕೊಂಡು ಸೀದ ತನ್ನ ಮನೆಗೆ ಹೋದಳು. ಚಪ್ಪರದ ಕೆಳಗೆ ನಿಂತು ಆಲಿಸಿದಳು. ನಾಯಿ ಬೊಗಳಿದ ಶಬ್ದ ಕೇಳಿ ಎಲ್ಲ ರಾತ್ರೆಯ ಹಾಗೆ ಇದೂ ಒಂದು ರಾತ್ರೆ ಎನ್ನಿಸಿ ಚಾವಡಿಯ ಮೆಟ್ಟಿಲನ್ನು ಹತ್ತಿದಳು. ಚಾಚಿದ ಕೆಗೆ ಬಾಗಿಲು ತೆರೆದದ್ದು ತಿಳಿದು : ’ಅಯ್ಯೋ ಪರಮಾತ್ಮ, ನರಿ ನಾಯಿಯೇನಾದರೂ ನುಗ್ಗಿ ಅವನ ಶವವನ್ನು…’ ಎಂದು ತಾಪವಾಗಿ ಭಯವನ್ನೆಲ್ಲ ಮರೆತು, ಕ್ಷಣದಲ್ಲಿ ಒಳನುಗ್ಗಿ, ಅಭ್ಯಾಸಬಲದಿಂದ ಗೂಡಿನಲ್ಲಿದ್ದ ಬೆಂಕಿಪೊಟ್ಟಣ ತೆರೆದು ಲಾಟೀನು ಹತ್ತಿಸಿದಳು. ದುರ್ವಾಸನೆ. ಸತ್ತು ಕೊಳೆಯುತ್ತಿದ್ದ ಇಲಿ. ತನಗಾಗಿ ಅಗ್ರಹಾರದಲ್ಲೆಲ್ಲ ನಿಷ್ಠುರ ಕಟ್ಟಿಕೊಂಡ ನಾರಣಪ್ಪನ ಶವವನ್ನ ಅನಾಥವಾಗಿಬಿಟ್ಟೆನಲ್ಲ ಎಂದು ದುಃಖವಾಗಿ ಮಹಡಿ ಹತ್ತಿ ಹೋದಳು. ಲೋಭಾನದ ಹೊಗೆ ಹಾಕಬೇಕೆಂದುಕೊಂಡಳು. ಹೆಣನಾರುತ್ತಿತ್ತು. ಬಾತುಕೊಂಡು ವಿಕಾರವಾಗಿ ವಿರೂಪವಾದ ಶವದ ಮುಖ ಕಂಡು ಹೊಟ್ಟೆಯೆಲ್ಲ ಕಲಿಸಿ, ಕಿಟಾರನೆ ಕಿರುಚಿ ಹೊರಕ್ಕೋಡಿದಳು. ಅಲ್ಲಿ ಮೇಲಿರುವುದಕ್ಕೂ, ತನ್ನನ್ನು ಒಲಿದಿದ್ದವನಿಗೂ ಯಾವ ಸಂಬಂಧವೂ ಇಲ್ಲ, ಇಲ್ಲ ಎಂದು ಅವಳ ಜೀವ ಕೂಗಿತು. ಲಾಟೀನು ಹಿಡಿದು ಆವೇಶದಲ್ಲೆಂಬಂತೆ ಚಂದ್ರಿ ಒಂದೇ ವೇಗದಲ್ಲಿ ಮೆಲಿ ನಡೆದು ಗೌಡರ ಕೇರಿಗೆ ಹೋದಳು. ತಮ್ಮ ಮನೆಗೆ ಕೋಳಿ ಮೊಟ್ಟೆಯನ್ನು ತಂಡುಕೊಡುತ್ತಿದ್ದ ಗಾಡಿ ಶೇಷಪ್ಪನ ಮನೆಯನ್ನು ಅಂಗಳದಲ್ಲಿ ಕಟ್ಟಿದ ಬಿಳಿಯ ಎತ್ತುಗಳಿಂದ ಗುರುತಿಸಿ ಒಳಕ್ಕೆ ಹೋದಳು. ಎತ್ತುಗಳು ಅಪರಿಚಿತ ರೂಪವೊಂದನ್ನು ಕಂಡು ಎದ್ದು ನಿಂತು ಬು ಎಂದು ಉಸಿರಾಡಿ ಹಗ್ಗವನ್ನು ಜಗ್ಗಿದುವು. ನಾಯಿ ಬೊಗಳಿತು. ಶೇಷಪ್ಪ ಎದ್ದು ಬಂದ. ಚಂದ್ರಿ ಆತುರವಾಗಿ ನಡೆದದ್ದನ್ನು ವಿವರಿಸಿ, “ನೀನು ಗಾಡಿಕಟ್ಟಿಕೊಂಡು ಬಂದು ಹೆಣವನ್ನು ಶ್ಮಶಾನಕ್ಕೆ ಸಾಗಿಸಬೇಕು, ಮನೆಯಲ್ಲಿಯೇ ಕಟ್ಟಿಗೆಯಿದೆ-ಸುಟ್ಟುಬಿಡಬಹುದು” ಎಂದು ಕೇಳಿದಳು. +ಹೆಂಡವನ್ನು ಹೀರಿ ಮಜದಲ್ಲಿ ನಿದ್ದೆ ಮಾಡಿದ್ದ ಶೇಷಪ್ಪ ಗಾಬರಿಯಾಗಿ, +“ಚಂದ್ರಮ್ಮ ಸಾಧ್ಯವಿಲ್ಲವ್ವ. ಬ್ರಾಂಬ್ರ ಶವಾನ ನಾನು ಮುಟ್ಟಿ ನರಕಕ್ಕೆ ಹೋಗಲ? ಅಷ್ಟೆಶ್ವರ್ಯ ಕ್ವಟ್ಟರೂ ಬ್ಯಾಡಮ್ಮ…ಭಯವಾದರೆ ಈ ಬಡವನ ಗುಡಿಸಲಲ್ಲಿ ಮಲಗಿದ್ದು ನಸುಕಿನಲ್ಲಿ ಎದ್ದು ಹೋಗಿರವ್ವ” ಎಂದು ಉಪಚರಿಸಿದ. +ಚಂದ್ರಿ ಮಾತನ್ನಾಡದೆ ಬೀದಿಗೆ ಬಂದು ನಿಂತಳು. ಏನು ಮಾಡಲಿ? ಒಂದೇ ಒಂದು ಯೋಚನೆ ಅವಳಿಗೆ ಸ್ಪಷ್ಟವಾಯಿತು: ಅಲ್ಲಿ ಅದು ಕೊಳೆಯುತ್ತಿದೆ. ನಾರುತ್ತಿದೆ. ಬಾತುಕೊಂಡಿದೆ. ಅದು ತಾನು ಒಲಿದ ನಾರಣಪ್ಪನಲ್ಲ. ಬ್ರಾಹ್ಮಣನೂ ಅಲ್ಲ. ಶೂದ್ರನೂ ಅಲ್ಲ. ಹೆಣ. ಕೊಳೆಯುವ ನಾರುವ ಹೆಣ. +ಸೀದ ನಡೆದು ಮುಸಲ್ಮಾನರಿದ್ದ ಕೇರಿಗೆ ಹೋದಳು. ಹಣ ಕೊಡುವೆನೆಂದಳು. ಬಂಗಡೇ ಮೀನಿನ ವ್ಯಾಪಾರ ಮಾಡುತ್ತಿದ್ದ ಅಹ್ಮz ಬ್ಯಾರಿ-ಕೆಯಲ್ಲಿ ಒಮ್ಮೆ ಕಾಸಿಲ್ಲದಾಗ ಎತ್ತುಗಳನ್ನು ಕೊಳ್ಳಲು ಸಾಲ ಕೊಟ್ಟ‌ಒಡೇರು ಅವರು ಎಂದು ನೆನೆದು- ಎಗ್ಗಿಲ್ಲದೆ ಗುಟ್ಟಾಗಿ ಗಾಡಿ ಕಟ್ಟಿಕೊಂಡು ಬಂದು ಶವವನ್ನೂ ಕಟ್ಟಿಗೆಯನ್ನೂ ಒಟ್ಟಿಗೇ ತುಂಬಿ, ಯಾರಿಗೂ ಪತ್ತೆಯಾಗದಂತೆ ಮಸಣಕ್ಕೊಯ್ದು, ಕತ್ತಲೆಯಲ್ಲಿ ಧಗಧಗ ಬೆಂಕಿಯೆಬ್ಬಿಸಿ ಬೂದಿಮಾಡಿ ನಡೆದುಬಿಟ್ಟ- ಹೆ ಹೆ ಎಂದು ಎತ್ತಿನ ಬಾಲ ತಿರುಪಿ. ಚಂದ್ರಿ ಎರಡು ತೊಟ್ಟು ಕಣ್ಣೀರು ಹಾಕಿ, ಮನೆಗೆ ಹಿಂದಕ್ಕೆ ಬಂದು, ಚೀಲದಲ್ಲಿ ತನ್ನದೊಂದಿಷ್ಟು ರೇಷ್ಮೆಯ ಸೀರೆಗಳನ್ನು, ಪೆಟ್ಟಿಗೆಯಲ್ಲಿದ್ದ ನಗದು ಹಣವನ್ನು ಮತ್ತು ಆಚಾರ್ಯರು ಹಿಂದಕ್ಕೆ ಕೊಟ್ಟ ಬಂಗಾರವನ್ನು ಗಂಟುಕಟ್ಟಿಕೊಂಡು ಹೊರಬಂದಳು. ಪ್ರಾಣೆಶಾಚಾರ್ಯರನ್ನು ಎಬ್ಬಿಸಿ ಅವರ ಕಾಲಿಗೆರಗಿ ಹೋಗಬೇಕೆಂಬ ತನ್ನ ಆಸೆಯನ್ನು ಅದುಮಿಕೊಂಡು, ಬೆಳಿಗ್ಗೆ ಕುಂದಾಪುರಕ್ಕೆ ಮೋಟಾರು ಹಿಡಿಯುವುದೆಂದು ಮೋಟಾರಿನ ದಾರಿಯ ಕಡೆ ಕಾಡುದಾರಿಯಲ್ಲಿ ಗಂಟು ಹಿಡಿದು ನಡೆದುಬಿಟ್ಟಳು. +ಅಧ್ಯಾಯ : ಎರಡು +ಇತ್ತ ಪಾರಿಜಾತಪುರದಲ್ಲಿ ಸಾಹುಕಾರ ಮಂಜಯ್ಯನ ವಿಶಾಲವಾದ ಮಹಡಿಯಲ್ಲಿ ಶ್ರೀಪತಿ, ಗಣೇಶ, ಗಂಗಣ್ಣ, ಮಂಜುನಾಥ ಮತ್ತು ನಾಲ್ಕೆದು ಅಗ್ರಹಾರದ ಯುವಕರು ಗುಲೇಬಕಾವಲಿ ನಾಟಕದ ತಯಾರಿಕೆಯಲ್ಲಿ ತೊಡಗಿದ್ದರು. ಅವರ ನಡುವೆ ಇದ್ದ ಹಾರ್ಮೋನಿಯಂ ನಾರಣಪ್ಪ ತಮ್ಮ ನಾಟಕ ಕಂಪೆನಿಯ ಉಪಯೋಗಕ್ಕೆಂದು ಕೊಟ್ಟಿದ್ದು. ಪ್ರತಿ ನಾಟಕಕ್ಕೂ ಅವನು ಹಾಜರಿರಲೇ ಬೇಕು. ಅವನ ಪ್ರೋತ್ಸಾಹವಿಲ್ಲದಿದ್ದರೆ ಪಾರಿಜಾತ ಮಂಡಳಿ ಹುಟ್ಟುತ್ತಿರಲೇ ಇರಲಿಲ್ಲ. ಹುರಿದುಂಬಿಸಿದವ ಅವ; ಅಲ್ಲದೆ ಯುವಕರು ಒಟ್ಟು ಮಾಡಿದ ದುಡ್ಡಿಗೆ ತನ್ನದಷ್ಟು ಸೇರಿಸಿ ಶಿವಮೊಗ್ಗೆಯಿಂದ ಸೀನರಿಗಳನ್ನು ತಂದುಕೊಟ್ಟವ ಅವ. ನಾಟಕದ ಗತ್ತು ಇತ್ಯಾದಿಗಳ ಬಗ್ಗೆಯೂ ಸೂಚನೆ ಕೊಡುತ್ತಿದ್ದವನೂ ಅವನೆ… ಆಸುಪಾಸಿನಲ್ಲೆಲ್ಲ ಗ್ರಾಮೊಫೋ ಇದ್ದುದೆಂದರೆ ಅವನ ಹತ್ತಿರ. ಹಿರಣ್ಣಯ್ಯನ ಕಂಪನಿಯ ನಾಟಕ ಹಾಡುಗಳ ಪ್ಲೇಟುಗಳೆಲ್ಲ ಅವನ ಹತ್ತಿರವಿದ್ದವು. ಅದನ್ನೆಲ್ಲ ಈ ಯುವಕರಿಗೆ ಕೀಕೊಟ್ಟು ತಿರುಗಿಸಿ ಕೇಳಿಸಿದ್ದ. ಅಷ್ಟಿಷ್ಟು ಕಾಂಗ್ರೆ ವಿಷಯಗಳನ್ನು ಅಲ್ಲಿಂದ ಇಲ್ಲಿಂದ ಕಿವಿಯ ಮೇಲೆ ಹಾಕಿಕೊಂಡು ಬಂದು ಯುವಕರಿಗೆ ಖಾದಿ ಜುಬ್ಬ ಪಾಯಜಾಮ, ಬಿಳಿ ಟೋಪಿಯ ಫ್ಯಾಶ ಕಲಿಸಿದ್ದ. ಈಗ ಯುವಕರಿಗೆಲ್ಲ ಅವನ ಸಾವಿನಿಂದಾಗಿ ತುಂಬ ವ್ಯಥೆಯಾಗಿದೆ. ಆದರೆ ಹಿರಿಯರ ಭಯದಿಂದ ಎಲ್ಲ ಸುಮ್ಮನಿದ್ದಾರೆ. ಎಲ್ಲ ಬಾಗಿಲುಗಳನ್ನೂ ಜಡಿದು ಪಾಸಿಂU ಷೋ ಸಿಗರೇಟು ಹತ್ತಿಸಿ ಸೇದುತ್ತ ಅರೆಮನಸ್ಸಿನಲ್ಲಿ ಪ್ರಾಕ್ಟೀಸು ನಡೆದಿತ್ತು. ಯಕ್ಷಗಾನದ ಮೇಲೆ ಮರ್ಜಿಯಿದ್ದ ಶ್ರೀಪತಿಗೆ ಈ ನಾಟಕದಲ್ಲಿ ಪಾತ್ರವಿರದಿದ್ದರೂ ಬಣ್ಣ ಹಾಕಿ ನಡೆಯುವ ಸಮಸ್ತ ಕ್ರಿಯೆಯೂ ಅವನಿಗೆ ಖಯಾಲಿ. ’ಪ್ರಾಕ್ಟೀಸು’ ನಡೆಯುತ್ತಿದ್ದಂತೆ ಒಂದು ಮರಿಗೆಯ ತುಂಬ ತುಂಬಿಟ್ಟ ಒಗ್ಗರಣೆ ಅವಲಕ್ಕಿ, ಕಡಾಯಿ ತುಂಬ ಬಿಸಿಬಿಸಿ ಕಾಫಿಯ ಸೇವನೆಯೂ ನಡೆದಿತ್ತು. ರಾತ್ರಿ ಹನ್ನೆರಡು ಗಂಟೆಯವರೆಗೂ ನಡುನಡುವೆ ನಾರಣಪ್ಪನನ್ನು ನೆನೆಯುತ್ತ ಅವಲಕ್ಕಿ ಕಾಫಿಯ ಸೇವನೆ ಮಾಡುತ್ತ, ’ಪ್ರಾಕ್ಟೀಸು’ ಸಾಗಿತು. ಮುಗಿದ ಮೇಲೆ ನಾಗರಾಜ ಗಣೇಶನಿಗೆ ಕಣ್ಣುಮಿಟುಕಿಸಿದ. ಗಣೇಶ ಪಕ್ಕದಲ್ಲಿ ಕೂತಿದ್ದ ಸ್ತೀಪಾತ್ರದ ಮಂಜುನಾಥನನ್ನು ಚೂಟಿದ. ಮಂಜುನಾಥ ಅದನ್ನು ಮಾಲೇರರ ಗಂಗಣ್ಣನಿಗೆ ದಾಟಿಸಿದ. ಗಂಗಣ್ಣ ಶ್ರೀಪತಿಯ ಪಂಚೆಯನ್ನು ಹಿಡಿದು ಜಗ್ಗಿದ. ಈ ಒಳ ಸಂಜ್ಞೆಯಾದ ಮೇಲೆ ಉಳಿದ ತರುಣರನ್ನು ಇವತ್ತಿನ ’ಪ್ರಾಕ್ಟೀಸು’ ಸಾಕೆಂದು ಸಾಗಿಸಿದ್ದಾಯಿತು. ಎಲ್ಲ ಹೋಗಿಯಾದ ಮೇಲೆ ನಾಗರಾಜ ಬಾಗಿಲನ್ನು ಮುಚ್ಚಿ ಲಗುಬಗೆಯಿಂದ ಟ್ರಂಕಿನ ಮುಚ್ಚಳ ತೆರೆದು ಎರಡು ಸೀಸೆ ಸಾರಾಯಿಯನ್ನು ಎತ್ತಿ ಹಿಡಿದ. ನಮ್ಮ ಮಾಸ್ತರರಾದ ನಾರಣಪ್ಪನ ನೆನಪಿಗೆ ಎಂದು ತಮ್ಮ ನೆಚ್ಚಿನ ನಟ ಹಿರಣ್ಣಯ್ಯನ ಹಾಡನ್ನು ಮೆಲುಕುಹಾಕಿದ. ಆಮೇಲಿಂದ ಗುಟ್ಟಾಗಿ ಸೀಸೆಗಳನ್ನು ಒಂದು ಚೀಲದಲ್ಲಿ ಇಟ್ಟಿದ್ದಾಯಿತು. ಬಾಳೆಲೆಯಲ್ಲಿ ಅವಲಕ್ಕಿಯನ್ನು ಕಟ್ಟಿಕೊಂಡದ್ದಾಯಿತು. ಮೆತ್ತಗೆ ಸದ್ದಾಗದಂತೆ ಗ್ಲಾಸುಗಳನ್ನು ತುಂಬಿಕೊಂಡದ್ದಾಯಿತು. ’ರೆಡಿ’ ಎಂದ ನಾಗರಾಜ. ’ರೆಡಿ’ ಎಂದರು ಉಳಿದವರು. ಒಬ್ಬೊಬ್ಬರಾಗಿ ಮೆಟ್ಟಿಲನ್ನು ಇಳಿಯುತ್ತಿದ್ದಂತೆ ಮಂಜುನಾಥ ’ಹೋಲ್ಡಾ’ ಎಂದು ಕತ್ತರಿಸಿದ ಒಂದು ಲಿಂಬೆಹಣ್ಣನ್ನು ಜೇಬಿಗೆ ಹಾಕಿಕೊಂಡ. +ತರುಣರು ಮೆತ್ತಗೆ ಬಾಗಿಲೆಳೆದುಕೊಂಡು ಅಗ್ರಹಾರ ದಾಟಿ, ತಮ್ಮ ಕಳ್ಳತನದ ವ್ಯಾಪಾರಕ್ಕೆ ಹಿಗ್ಗುತ್ತ ಕದ್ದಿಂಗಳಿನಲ್ಲಿ ಶ್ರೀಪತಿಯ ಬ್ಯಾಟರಿ ಬೆಳಕಿನಲ್ಲಿ ಹೊಳೆಯ ಕಡೆ ನಡೆದರು. “ಏನು ಮಾರಾಯ, ನಿಮ್ಮ ಗುರುಗಳು ಒಂದು ಬಾಟ್ಲಿ ಕುಡಿದೂ ಲಯ ತಪ್ಪದ ಹಾಗೆ ತಬಲ ನುಡಿಸುತ್ತಿದ್ದರಲ್ಲ” ಎಂದು ನಾರಣಪ್ಪನನ್ನ ನಾಗರಾಜ ದಾರಿಯಲ್ಲಿ ಸ್ಮರಿಸಿದ. ವಿಶಾಲವಾದ ಮರಳಿನ ರಾಶಿಯ ಮೇಲೆ ಬಂದು ಸುಸ್ತಾಗಿ ಕೂತು, ನಡುವೆ ಬಾಟ್ಲಿ ಗ್ಲಾಸು ಅವಲಕ್ಕಿಗಳನ್ನಿಟ್ಟುಕೊಂಡರು. ತಾವು ಐವರೇ ಈ ಲೋಕಕ್ಕೆಲ್ಲ ಇದ್ದಂತೆ ಅನ್ನಿಸಿ, ನಕ್ಷತ್ರಸಾಕ್ಷಿಯಲ್ಲಿ, ಅಗ್ರಹಾರದ ತಮ್ಮ ವಾಮನತ್ವವನ್ನು ಸಾರಾಯಿಯಿಂದ ಕಳೆದುಕೊಂಡು ತ್ರಿವಿಕ್ರಮರಾಗಲು ಸನ್ನದ್ಧತೆ ನಡೆಸಿದರು. ಹೊಳೆ ಜುಳುಜುಳು ಎಂದು ಅವರ ಮಾತಿನ ನಡುವಿನ ಮೌನದಲ್ಲಿ ಹರಿದು ಯುವಕರಿಗೆ ತಮ್ಮ ಏಕಾಂತದ ಬಗ್ಗೆ ಧೆರ್ಯವನ್ನು ಹೇಳಿತು. +ಸರಾಯಿ ಹಿತವಾಗಿ ನೆತ್ತಿಗೇರುತ್ತಿದಂತೆ ಶ್ರೀಪತಿ ಗದ್ಗದಿತನಾಗಿ ಎಂದ : +“ನಮ್ಮ ಅಪ್ಪನೊಬ್ಬ ಸತ್ತನಲ್ಲಯ್ಯ” +“ಹೌದಲ್ಲಯ್ಯ”, ನಾಗರಾಜ ಅವಲಕ್ಕಿಗೆ ಕೆಹಾಕಿ ಹೇಳಿದ : “ನಮ್ಮ ಕಂಪನಿಯ ಒಂದು ಕಂಬವೇ ಮುರಿದಂತೆ ನಮಗೆ, ಅವನ ಹಾಗೆ ತಬಲದ ಮೇಲೆ ತಾಳ ಹಿಡಿಯುವವರು ಯಾರು ಈ ಆಸುಪಾಸಿನಲ್ಲಿ?” +ಎಷ್ಟು ನಿಂಬೆಹಣ್ಣನ್ನು ಹಿಂಡಿಕೊಂಡಿದ್ದರೂ ತಲೆಗೇರಿಬಿಟ್ಟಿದ್ದ ಮಂಜುನಾಥ ಏನನ್ನೋ ಹೇಳಲು ಯತ್ನಿಸುತ್ತ, “ಚಂದ್ರಿ, ಚಂದ್ರಿ” ಎಂದ. +ಶ್ರೀಪತಿಗೆ ಹುರುಪಾಯಿತು. “ಯಾರು ಏನೇ ಅನ್ನಲಿ, ಯಾವ ಬ್ರಾಹ್ಮಣ ಏನೇ ಬೊಗಳಲಿ-ಗೊತ್ತಾಯ್ತ-ಆಣೆ ಹಾಕಿ ಹೇಳ್ತೀನಿ-ಏನೂಂತೀರ?-ಚಂದ್ರಿಯಂಥ ಚಲುವೆ, ಗಟ್ಟಿಗೆ, ಒಳ್ಳೆಯ ಹೆಂಗಸು ಈ ನೂರು ಮೆಲಿಯಲ್ಲಿ ಇದ್ದಳಾ ಎಣಿಸಿಬಿಡಿ. ಇದ್ದರೆ ಜಾತಿ ಬಿಟ್ಟುಬಿಡುವೆ. ಸೂಳೆಯಾದರೆ ಏನಯ್ಯ? ನಾರಣಪ್ಪನಿಗೆ ಅವಳ ಹೆಂಡತಿಗಿಂತ ಹೆಚ್ಚಾಗಿ ನಡಕೊಂಡಳೊ ಇಲ್ಲವೊ ಹೇಳಿ ನೋಡುವ. ಅವನು ಕುಡಿದು ವಾಂತಿ ಮಾಡಿಕೊಂಡರೆ ಬಾಚಿದಳು. ಅಲ್ಲದೆ ನಮ್ಮ ವಾಂತೀನೂ ಬಾಚಿದಳಲ್ಲಯ್ಯ! ಅರ್ಧರಾತ್ರೆ ಅವನು ಬಂದು ಎಬ್ಬಿಸಲಿ-ತುಟಿಪಿಟಕ್ಕೆನ್ನದೆ-ನಗ್ತನಗ್ತ ಅಡಿಗೆ ಮಾಡಿ ಬಡಿಸ್ತಿದ್ದಳು. ಯಾವ ಬ್ರಾಹ್ಮಣ ಹೆಂಗಸು ಅಷ್ಟು ಮಾಡ್ತಾಳಯ್ಯ? ಎಲ್ಲ ಪಿರಿಪಿರಿ ಮುಂಡೇರು. ಥv” ಎಂದ. +ಮಂಜುನಾಥ ತನಗೆ ಗೊತ್ತಿದ್ದ ಮೂರು ಇಂಗ್ಲಿ ಶಬ್ದಗಳಲ್ಲಿ ಒಂದಾದ ’ಯ’, ’ಯ’ ಎಂದ. +“ಕುಡಿದದ್ದೆ ಮಂಜುನಾಥನಿಗೆ ಇಂಗ್ಲಿ ಬಂದುಬಿಡ್ತದೆ-” ಎಂದು ನಾಗರಾಜ ನಕ್ಕ. +ಮಾತು ಮತ್ತೆ ಹುಡುಗೀರ ಕಡೆ ಹೊರಳಿತು. ಶೂದ್ರ ಹೆಣ್ಣುಗಳಲ್ಲಿ ಯಾವು ಯಾವುವು ಚೆನ್ನಾಗಿವೆಯೆಂದು ಲೆಖ್ಖ ಹಾಕಿದರು. ಬೆಳ್ಳಿ ಮತ್ತು ತನ್ನ ವಿಷಯ ನಾರಣಪ್ಪನೊಬ್ಬನಿಗೆ ಮಾತ್ರ ತಿಳಿದಿತ್ತಾದ್ದರಿಂದ ಶ್ರೀಪತಿ ಸಮಾಧಾನದಿಂದ ಅವರ ಮಾತು ಕೇಳಿದ. ಬೆಳ್ಳಿ ಇವರ ಕಣ್ಣಿಗೆ ಬೀಳದಿದ್ದುದು ಹೆಚ್ಚು. ಬಿದ್ದರೂ ಹೊಲತಿಯೆಂದು ಹೆದರುತ್ತಾರೆ, ಲಾಯಕ್ಕೇ ಆಯಿತು. +ಇನ್ನೊಂದು ಸೀಸೆಯ ಗಿದ್ನ ತೆರೆಯುತ್ತಿದ್ದಂತೆ ಶ್ರೀಪತಿ : +“ನಮ್ಮ ದೋಸ್ತು ಸತ್ತು ಸಂಸ್ಕಾರಾ ಇಲ್ಲದೆ ಕೊಳೀತಾ ಬಿದ್ದಿರೋವಾಗ ನಮ್ಮದೆಂತಹ ಮಜವಯ್ಯ” ಎಂದು ಅಳಲು ಪ್ರಾರಂಭಿಸಿದ. ಎಲ್ಲ ಯುವಕರಿಗೂ ಅಳು ಸಾಂಕ್ರಾಮಿಕವಾಗಿ ಅವನಿಂದ ಹರಡಿತು. ಒಬ್ಬರನ್ನೊಬ್ಬರು ತಬ್ಬಿಕೊಂಡರು. +ಶ್ರೀಪತಿ ಹೇಳಿದ : +“ಯಾರು ಯಾರು ಗಂಡಸರು ಇಲ್ಲಿ ಹೇಳಿ.” +’ನಾನು ನಾನು ನಾನು ನಾನು’ ಎಂದು ನಾಲ್ವರೂ ಉದ್ಗರಿಸಿದರು. ಹೆಣ್ಣಿನ ಪಾತ್ರದ ಹೆಣ್ಣಿನ ಮುಖದ ಮಂಜುನಾಥನಿಗೆ ನಾಗರಾಜ “ಛೆ ಛೇ, ನೀನು ಸದಾರಮೆ, ನೀನು ಶಕುಂತಳೆ” ಎಂದು ಮುತ್ತುಕೊಟ್ಟ. +“ನೀವು ಗಂಡಸರಾದರೆ ನನ್ನದೊಂದು ಮಾತು. ಒಪ್ಪಿದರೆ ’ಭೇ’ ಎನ್ನುವೆ. ಗೊತ್ತಾಯ್ತ. ನಮ್ಮ ಗೆಳೆಯ ಅವ. ಅವನು ಕೊಟ್ಟಿದ್ದಕ್ಕೆ ನಾವೇನು ಅವನಿಗೆ ಕೊಟ್ಟಿದ್ದೇವೆ? ಆ ಶವಾನ್ನ ಪತ್ತೆಯಾಗದಂತೆ ಸಾಗಿಸಿ ಸುಟ್ಟುಬಿಡುವ ಏನೆನ್ನುತ್ತೀರಿ? ಏಳಿ” ಎಂದು ಶ್ರೀಪತಿ ಹುರಿದುಂಬಿಸಿ ಮಾತನ್ನಾಡಿ ಎಲ್ಲರ ಗ್ಲಾಸಿಗೂ ಸರಾಯಿ ತುಂಬಿಸಿದ. ಎಲ್ಲರೂ ಅದನ್ನು ಗಟಗಟನೆ ಕುಡಿದು, ಯೋಚಿಸದೆ ಬ್ಯಾಟರಿಯ ಬೆಳಕನ್ನು ಚೆಲ್ಲುತ್ತ ನಡೆದ ಶ್ರೀಪತಿಯ ನೇತೃತ್ವದಲ್ಲಿ ಓಲಾಡುತ್ತ ಓಲಾಡುತ್ತ ಹೊಳೆ ದಾಟಿದರು. ಕದ್ದಿಂಗಳಿನಲ್ಲಿ ಒಂದು ಪಿಳ್ಳೆಯೂ ಕಾಣಲಿಲ್ಲ. ಕುಡಿದ ಸರಾಯಿ ನೆತ್ತಿಗೇರಿ, ಉನ್ಮಾದದಿಂದ ಅಗ್ರಹಾರವನ್ನು ಹೊಕ್ಕು, ನಾರಣಪ್ಪನ ಮನೆಗೆ ಹೋಗಿ ಬಾಗಿಲು ದೂಡಿದರು. ನೇರ ನಿರ್ಭಯ ಒಳಕ್ಕೆ ಹೋದರು. ಸರಾಯಿಯ ಪ್ರಭಾವದಲ್ಲಿ ದುರ್ನಾತ ಲೆಖ್ಖಕ್ಕೆ ಬರದೆ ಸೀದ ಮಹಡಿ ಹತ್ತಿದರು. ಶ್ರೀಪತಿ ಬ್ಯಾಟರಿ ಬಿಟ್ಟ. ಎಲ್ಲಿ? ಎಲ್ಲಿ? ನಾರಣಪ್ಪನ ಶವವೇ ಪತ್ತೆಯಿಲ್ಲ. ಐವರಿಗೂ ಇದ್ದಕ್ಕಿದ್ದಂತೆ ಪ್ರಾಣಭಯವಾಯಿತು. “ಹಾ! ನಾರಣಪ್ಪ ಪ್ರೇತವಾಗಿ ನಡೆದುಬಿಟ್ಟ” ಎಂದ ನಾಗರಾಜ. ಅವನು ಅಂದದ್ದೆ ತಡ ಸರಾಯಿ ಸೀಸೆಯ ಚೀಲವನ್ನಲ್ಲೇ ಎಸೆದು, ಬಿದ್ದೆವೋ ಕೆಟ್ಟೆವೋ ಎನ್ನುತ್ತ ಐವರೂ ಹೊರಗೆ ಓಡಿಬಿಟ್ಟರು. +ನಿದ್ದೆ ಬಾರದೆ ’ಢರ್ರೆ’ನ್ನುವ ಬಾಗಿಲು ತೆರೆದು ಶಪಿಸಲೆಂದು ಅಗ್ರಹಾರದ ಬೀದಿಗೆ ಬಂದಿದ್ದ ಅರೆಮರಳು ಲಕ್ಷ್ಮೀದೇವಮ್ಮ “ಪ್ರೇತಗಳನ್ನು ನೋಡಿರೋ ನೋಡಿರೋ” ಎಂದು ಕಿರುಚಿ “ಹೇಂii” ಎಂದು ತೇಗಿದಳು. +ಅಧ್ಯಾಯ : ಮೂರು +ರಾತ್ರೆ ಬಹಳ ಹೊತ್ತಾದಮೇಲೂ ಪ್ರಾಣೇಶಾಚಾರ್ಯರು ಬರದಿದ್ದುದನ್ನು ಕಂಡು ಕಂಗಾಲಾದ ಬ್ರಾಹ್ಮಣರು ಬಾಗಿಲು ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ, ಕರುಳನ್ನು ಕಿತ್ತು ಬಾಯಿಗೆ ತರುವ ನಾತದಲ್ಲಿ ಮೂಗು ಮುಚ್ಚಿಕೊಂಡು ಮಲಗಿದರು, ನಿದ್ದೆ ಬರಲಿಲ್ಲ. ಹಸಿವಿನಲ್ಲಿ, ಭೀತಿಯಲ್ಲಿ ತಣ್ಣನೆಯ ನೆಲದ ಮೇಲೆ ಹೊರಳಿದರು. ಇನ್ನೊಂದು ಲೋಕದಿಂದೆಂಬಂತೆ ರಾತ್ರೋ ರಾತ್ರಿ ಹೆಜ್ಜೆಗಳ ಸಪ್ಪಳ, ಗಾಡಿಯ ಗಾಲಿಯ ಶಬ್ದ, ಲಕ್ಷ್ಮೀದೇವಮ್ಮನ ಈಳಿಡುವ ನಾಯಿಯ ಹಾಗಿನ ದಾರುಣವಾದ ಕೂಗು, ತೇಗು-ಪ್ರಾಣ ಕಂಪಿಸಿದಂತೆ, ಅಗ್ರಹಾರ ನಿರ್ಜನ ಅರಣ್ಯವಾದಂತೆ, ಕಾಯುವ ದೆವ ಕೆಬಿಟ್ಟ ಹಾಗೆ ಎಂದೆಲ್ಲ ಅನ್ನಿಸಿ ಮನೆಮನೆಯಲ್ಲೂ ಮಕ್ಕಳು, ತಾಯಿ, ತಂದೆಯವರು ಒಂದೊಂದು ಮುದ್ದೆಯಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಕತ್ತಲಲ್ಲಿ ನಡುಗಿದರು. ಕತ್ತಲು ಕಳೆದು ಸೂರ್ಯರಶ್ಮಿ ಸೂರಿನ ತೂತುಗಳಿಂದ ಇಳಿದು, ಕತ್ತಲಿನ ಮನೆಗಳಲ್ಲಿ ಬೆಳಕಿನ ಪುಟ್ಟಪುಟ್ಟ ವೃತ್ತಗಳಾಗಿ ಧೆರ್ಯವನ್ನು ತಂದಮೇಲೆ ಎಲ್ಲರೂ ಮೆತ್ತಗೆ ಎದ್ದು, ಅಗಳಿ ಸರಿಸಿ ಬಾಗಿಲುಗಳಿಂದ ಇಣುಕಿದರು. ಹದ್ದು, ರಣಹದ್ದು. ಮತ್ತೆ ಮನೆಮನೆಯ ಮೇಲೂ ಕಾಗೆಗಳನ್ನು ಅಟ್ಟುತ್ತ ಪಟ್ಟುಹಿಡಿದು ಕೂತ ಹದ್ದು. ಉಸ್ಸೆಂದರು. ಚಪ್ಪಾಳೆ ತಟ್ಟಿದರು. ಏನು ಮಾಡಿದರೂ ಜಗ್ಗದಿದ್ದುದನ್ನು ಕಂಡು ಹತಾಶರಾಗಿ ಶಂಖಗಳನ್ನೂದಿ ಕಂಚಿನ ಗಂಟೆ ಬಾರಿಸಿದರು. ದ್ವಾದಶಿಯ ಹಾಗೆ ಬೆಳಗಿನ ಜಾವ ಮಂಗಳ ಸ್ವರ ಕೇಳಿ ಪ್ರಾಣೇಶಾಚಾರ್ಯ ಹೊರಗೆ ಬಂದು ನೋಡಿ ವಿಹ್ವಲಿತರಾದರು : ತನಗೆ ಪತ್ತೆಯಾಗದ ಗಡಿಬಿಡಿಯಲ್ಲಿ, ಏನು ಮಾಡಲಿ ಏನು ಮಾಡಲಿ ಎಂದು ಬೆರಳುಗಳನ್ನು ಮುರಿಯುತ್ತ ಒಳಗಿನಿಂದ ಹೊರಕ್ಕೆ, ಹೊರಗಿನಿಂದ ಒಳಕ್ಕೆ ಸಂಚರಿಸಿದರು. ಊಟದ ಮನೆಯಲ್ಲಿ ನರಳುತ್ತಿದ್ದ ಹೆಂಡತಿಗೆ ಯಥಾರೀತಿ ಔಷಧಿಯನ್ನು ಕೊಡುವಾಗ ಕೆ ನಡುಗಿ ಔಷಧಿ ಚೆಲ್ಲಿತ್ತು. ಸ್ವಪ್ನದಲ್ಲಿ ರುಯ್ಯನೆ ತಳವಿಲ್ಲದ ಪಾತಾಳಕ್ಕೆ ಕಂತುತ್ತಿದ್ದೇನೆ ಎನ್ನುವ ಅನುಭವವಾದಾಗ ಸರಕ್ಕನೆ ನಿದ್ದೆಯಲ್ಲಿ ಕಾಲುಗಳನ್ನು ಮೇಲಕ್ಕೆಳೆದುಕೊಂಡು ಮಡಚಿಕೊಳ್ಳುವಂತಹ ಅನುಭವವಾಯಿತು. ತನ್ನ ಕರ್ತವ್ಯದ, ಗೃಹಸ್ಥಧರ್ಮದ, ಆತ್ಮತ್ಯಾಗದ ಸಂಕೇತವಾಗಿದ್ದ ಜರ್ಜರಳಾದ ಹೆಂಡತಿಯ ಗುಳಿಬಿದ್ದ ಕಣ್ಣುಗಳ ದೃಷ್ಟಿ, ದಿಕ್ಕಿಲ್ಲದ ನೋಟವನ್ನು, ಅವಳ ತುಟಿಗೆ ಮದ್ದನ್ನು ಹಿಡಿದಾಗ ಕಂಡು ಕಾಲು ಶತಮಾನದ ರೋಗಿ-ವೆದ್ಯಬಾಂಧವ್ಯದ ಪಶ್ಚಾತ್ತಾಪದ ಸವೆದ ಹಾದಿಯ ಕೊನೆಯಲ್ಲೊಂದು ಪಾತಾಳ ಕಂಡಂತಾಯಿತು. ಹೇಸಿಗೆಯಲ್ಲಿ ಕಂಪಿಸಿದರು. ಮೂಗಿಗಡರಿದ್ದ ದುರ್ನಾತವೆಲ್ಲ ಈ ಮೂಲದಿಂದಲೇ ಬರುತ್ತಿದೆಯೇನೋ ಎಂದು ಭ್ರಮಿಸಿದರು. ಅವಚಿಕೊಂಡಿದ್ದ ತಾಯಿಯ ಹೊಟ್ಟೆಯಿಂದ ಟೊಂಗೆಯಿಂದ ಟೊಂಗೆಗೆ ಹಾರುವಾಗ ಕೆ ತಪ್ಪಿದ ಮಂಗನ ಮರಿಯಂತೆ- ತಾನು ಇಷ್ಟರವರೆಗೆ ಅವಚಿಕೊಂಡಿದ್ದ ಸಂಸ್ಕಾರ ಕರ್ಮಗಳಿಂದ ಕಳಚಿಬಿದ್ದೆ ಎನ್ನಿಸಿತು. ನಿರ್ಜೀವಿಯಾಗಿ, ದೆನ್ಯದ ಭಿಕ್ಷುಕಿಯಾಗಿ ಅಲ್ಲಿ ಹಾಸಿಗೆ ಹಿಡಿದು ಮಲಗಿದ್ದ ಹೆಂಡತಿಯನ್ನು ರಕ್ಷಿಸುವುದಕ್ಕೆಂದು ಧರ್ಮವನ್ನು ನಾನಾಗಿ ಅವಚಿಕೊಂಡೆನೋ ಅಥವಾ ಸಂಸ್ಕಾರದಿಂದ ಕರ್ಮದಿಂದ ಬಂದ ಧರ್ಮ ಕೆಹಿಡಿದು ನನ್ನನ್ನು ಈ ದಾರಿಯಲ್ಲಿ ನಡೆಸಿತೋ ಎಂದು ಅನುಮಾನವಾಯಿತು.ಇವಳನ್ನು ಮದುವೆಯಾದಾಗ ನನಗೆ ಹದಿನಾರು ವರ್ಷ. ಅವಳಿಗೆ ಹನ್ನೆರಡು ವರ್ಷ. ಸನ್ಯಾಸಿಯಾಗಬೇಕು. ಇಲ್ಲವೆ ತ್ಯಾಗದ ಬಾಳನ್ನು ನಡೆಸಬೇಕೆಂಬ ಹುಳಿ ಛಲದ ಬಾಲಕ ಬೇಕೆಂದೇ ಹುಟ್ಟಿನಿಂದ ರೋಗಿಯಾಗಿದ್ದ ಅವಳನ್ನು ಮದುವೆಯಾದೆ. ಕೃತಜ್ಞರಾದ ಮಾವನ ಮನೆಯಲ್ಲೆ ಅವಳನ್ನು ಬಿಟ್ಟು, ಕಾಶಿಗೆ ಹೋಗಿ ವೇದಾಂತಶಿರೋಮಣಿಯಾಗಿ ಹಿಂದಕ್ಕೆ ಬಂದೆ. ನಿಷ್ಕಾಮಕರ್ಮದ ಜೀವನಾನ್ನ ನಡೆಸಲಿಕ್ಕೆ ತನಗೆ ತಾಕತ್ತುಂಟೋ ಇಲ್ಲವೋ ಎಂದು ಪರೀಕ್ಷಿಸಲಿಕ್ಕೆಂದು ಭಗವಂತ ಇಲ್ಲಿ ಇವಳನ್ನು ರೋಗಿಯಾಗಿ ಮಾಡಿ ನನ್ನ ಕೆಯಲ್ಲಿಟ್ಟಿದ್ದಾನೆಂದು ತಿಳಿದು ಹರ್ಷದಿಂದ ಅವಳ ಸೇವೆಯಲ್ಲಿ ತೊಡಗಿದೆ. ತಾನೇ ಅಡಿಗೆ ಮಾಡಿ, ಅವಳಿಗೆ ರವೆ ಗಂಜಿ ಮಾಡಿ ಕುಡಿಸಿ, ದೇವರ ಪೂಜೆ ಇತ್ಯಾದಿಗಳನ್ನು ಸಾಂಗವಾಗಿ ನಡೆಸಿ, ನಿತ್ಯ ಸಾಯಂಕಾಲ ರಾಮಾಯಣ, ಭಾರತ-ಭಾಗವತಾದಿಗಳನ್ನು ಬ್ರಾಹ್ಮಣರಿಗೆ ಓದಿ ವಿವರಿಸಿ ತನ್ನ ತಪಸ್ಸನ್ನು ಜಿಪುಣನಂತೆ ಕೂಡಿಸುತ್ತ ಬಂದೆ. ಈ ತಿಂಗಳು ಲಕ್ಷ ಗಾಯತ್ರಿ, ಮುಂದಿನ ತಿಂಗಳು ಇನ್ನೊಂದು ಲಕ್ಷ ಗಾಯತ್ರಿ, ಏಕಾದಶಿ ಇನ್ನೆರಡು ಲಕ್ಷ-ಕೋಟಿಕೋಟಿ ಹೀಗೆ ತುಳಸಿಮಣಿಸರದಲ್ಲಿ ಮಣಿಮಣಿಗೆ ತಪಸ್ಸಿನ ಲೆಖ್ಖ ಮಾಡಿದೆ. ಒಬ್ಬ ಸ್ಮಾರ್ತ ಪಂಡಿತ ಒಮ್ಮೆ ಬಂದು ವಾದಿಸಿದ್ದ : ಸಾತ್ವಿಕರಿಗೆ ಮಾತ್ರ ಮೋಕ್ಷಪ್ರಾಪ್ತಿ ಎನ್ನುವ ಭೇದಭಾವದ ನಿಮ್ಮ ಮತ ನಿರಾಶಾವಾದವಲ್ಲವೆ? ಅದಕ್ಕೆ ಆಚಾರ್ಯರು ತರ್ಕಮಾಡಿದ್ದರು : ನಿರಾಶಾ ಎಂದರೆ ಏನು? ಯಾವುದಕ್ಕಾದರೂ ಆಸೆ ಪಟ್ಟು ಅದು ಸಿಗದೇ ಹೋಗೋದು ತಾನೆ? ತಾಮಸ ಪ್ರವೃತ್ತಿಗೆ ಮೋಕ್ಷದ ಆಸೆಯೇ ಇಲ್ಲದ್ದರಿಂದ ಅವನಿಗೆ ಮೋಕ್ಷಪ್ರಾಪ್ತಿಯಾಗದೇ ಹೋಗೋದು ನಿರಾಶಾ ಅಲ್ಲ. ನಾನು ಸಾತ್ವಿಕ ಆಗುತ್ತೇನೆ ಎಂಬೋದು ಸುಳ್ಳು; ನಾನು ಸಾತ್ವಿಕ ಆಗಿದ್ದೇನೆ ಎಂಬೋದು ಮಾತ್ರ ನಿಜ. ಪರಮಾತ್ಮನ ದಯಾಕ್ಕೆ ಹಲುಬೋರು ಈ ಸಾತ್ವಿಕ ಸ್ವಭಾವದವರು ಮಾತ್ರ. +ಹಾಗೇ ತಾನು ಸಾತ್ವಿಕನಾಗಿ ಹುಟ್ಟಿದ್ದೇನೆ, ಈ ರೋಗಗ್ರಸ್ತ ಹೆಂಡತಿ ತನ್ನ ಸಾತ್ವಿಕತೆಯ ಯಜ್ಞಭೂಮಿ ಎಂದು ತಿಳಿದು ಅವರು ಮೋಕ್ಷದ ಕೃಷಿಯಲ್ಲಿ ತೊಡಗಿದ್ದರು. ಹಾಗೇ ನಾರಣಪ್ಪ ತಮ್ಮ ಸಾತ್ವಿಕತೆಗೊಂದು ಪರೀಕ್ಷೆ ಎಂದು ತಿಳಿದಿದ್ದರು. ಈಗ ಅವರಿಗೆ ತನ್ನ ಸರ್ವಸ್ವ ನಂಬಿಕೆಗಳು ಬುಡಮೇಲಾಗಿ ಹದಿನಾರನೇ ವಯಸ್ಸಿನಲ್ಲಿ ತಾನು ಹೊರಟಲ್ಲಿಗೇ ಹಿಂದಕ್ಕೆ ಬಂದಂತೆ ಅನ್ನಿಸುತ್ತಿದೆ. ಎಲ್ಲಿ ದಾರಿ? +ಪಾತಾಳದ ಅಂಚಿಗೆ ಒಯ್ಯದಂತಹ ದಾರಿ ಎಲ್ಲಿ? ಕಸಿವಿಸಿಯಾಗಿ ಹೆಂಡತಿಯ ಪಕ್ಕದಲ್ಲಿ ಕೂತು ಸ್ನಾನ ಮಾಡಿಸಲೆ ಎಂದು ನಿತ್ಯದಂತೆ ಎತ್ತಿ, ಶಂಖ ಜಾಗಟೆಗಳ ಅಪದ್ಧ ಕ್ರಿಯೆಯಿಂದ ಬಾಧಿತರಾಗಿ, ಬಚ್ಚಲಿಗೆ ತೆಗೆದುಕೊಂಡು ಹೋಗಿ ನೀರನ್ನು ಹೊಯ್ಯುವಾಗ ಅವಳ ಬತ್ತಿದ ಎದೆ, ಗುಜ್ಜು-ಮೂಗು, ಮೋಟು-ಜಡೆ ಕಂಡು ಅಸಹ್ಯವಾಯಿತು. ಹದ್ದುಗಳನ್ನು ಅಟ್ಟಲೆಂದು ಶಂಖಜಾಗಟೆಗಳ ಮಂಗಳ ಶಬ್ದ ಮಾಡುತ್ತಿದ್ದ ಬ್ರಾಹ್ಮಣರಿಗೆ ’ನಿಲ್ಲಿಸಿ ನಿಲ್ಲಿಸಿ’ ಎಂದು ಕಿರುಚಿಬಿಡಬೇಕೆನ್ನಿಸಿತು. ಪ್ರಥಮ ಬಾರಿಗೆ ತನ್ನ ಕಣ್ಣಿಗೆ ಸುಂದರ-ಅಸುಂದರದ ಕಲ್ಪನೆ ಬರಹತ್ತಿದೆ. ಈ ತನಕ ಕಾವ್ಯದಲ್ಲಿ ಓದಿದ್ದ ಸೌಂದರ್ಯವನ್ನ ಅವರು ಜೀವನದಲ್ಲಿ ಅಪೇಕ್ಷಿಸಿದ್ದಿಲ್ಲ. ಸುಗಂಧವೆಲ್ಲ ದೇವರ ಮುಡಿಯನ್ನು ಸೇರುವ ಹೂವಿನದ್ದು, ಸ್ತೀಸೌಂದರ್ಯವೆಲ್ಲ ನಾರಾಯಣನ ಪಾದಸೇವೆಯನ್ನು ಮಾಡುವ ಲಕ್ಷ್ಮಿಯದ್ದು, ರತಿಯೆಲ್ಲ ವಸ್ತಾಪಹರಣದ ಕೃಷ್ಣನದ್ದು ಎಂದುಕೊಂಡಿದ್ದರು. ಅವೆಲ್ಲದರಲ್ಲಿ ಒಂದು ಪಾಲು ಈಗ ತನಗೂ ಬೇಕೆನ್ನಿಸುತ್ತಿದೆ. ಹೆಂಡತಿಯ ಮೆಯನ್ನು ಒರೆಸಿ, ಹಾಸಿಗೆ ಮಾಡಿ ಮಲಗಿಸಿ ಮತ್ತೆ ಚಿಟ್ಟೆಗೆ ಬಂದರು. ಶಂಖ ಜಾಗಟೆಗಳ ಶಬ್ದ ಗಕ್ಕನೆ ನಿಂತು ಕಿವಿ ಗೊಯ್ಯೆಂದು ಮೌನದ ಮಡುವಿಗೆ ಇಳಿದಂತಾಯಿತು. ಇಲ್ಲಿಗೆ ಯಾಕೆ ಬಂದೆ? ಚಂದ್ರಿ ಇಲ್ಲಿದ್ದಾಳೋ ಎಂದು ಬಯಸಿ ಬಂದೆನೆ? ಆದರೆ ಚಂದ್ರಿ ಅಲ್ಲಿ ಇರಲಿಲ್ಲ. ಹಾಸಿಗೆ ಹಿಡಿದವಳು, ಕಾಡಿನಲ್ಲಿ ಗಕ್ಕನೆ ನನ್ನ ಕೆಯನ್ನು ಮೊಲೆಗೊತ್ತಿಕೊಂಡವಳು-ಇಬ್ಬರೂ ನನ್ನನ್ನು ಬಿಟ್ಟುಹೋದರೆ? ಪ್ರಥಮ ಬಾರಿಗೆ, ಅತಂತ್ರ ಅನಾಥ ಭಾವ ಅವರ ಅಂತರಂಗವನ್ನು ಹೊಕ್ಕಿತು. +***** +ಮುಂದುವರೆಯುವುದು +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +‘ಪ್ರಥಮಾಶ್ವಾಸಂ’ ಸಹಸ್ರಪರಮಾಂ ದೇವೀ ಶತ ವಂಧ್ಯಾ ದಶವರಾಂ ಗಾಯತ್ರೀಂ ಸಂಜಪೇನ್ನಿತ್ಯಂ ಯತವಾಕ್ಕಾಯ ಮಾನಸಃ | ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ […] +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +“ನಾಗೇಶಾ – ನಾಗೇಶಾ” ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_592.txt b/Kannada Sahitya/article_592.txt new file mode 100644 index 0000000000000000000000000000000000000000..8036ae89bd8a998b2386027c3800eef83012e120 --- /dev/null +++ b/Kannada Sahitya/article_592.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ +ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ +ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ +ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ +ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ +ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ +ವಿಜಯ ವಿದ್ಯಾರಣ್ಯರಂ ನನದು, ಅತಿ ವಿಕೃತ- +ಗೊಂಡು ಹಾಳು ಸುರಿಯುವ ಹಂಪೆಕೊಂಪೆಯಲಿ ಬಗೆ- +ಗಟ್ಟಲೆದು, ಸ್ವಪ್ನ ಸಾಮ್ರಾಜ್ಯದಿಂದೀ ನಗರ- +ಕವತರಿಸಿ ಮಂಕಾಗಿ, ಭವ್ಯ ರಮಣೀಯತೆಯ +ರುದ್ರ ಶಾಂತಿಯೊಳಿಳಿದು, ಒಂದಿನಿತು ನೆಮ್ಮದಿಯ +ಬಯಸಿ ಮಾತಂಗ ಬೆಟ್ಟವನೇರಿ, ಕನ್ನಡರ +ಕರ್ಮಕತಯನು ನೆನೆದು ಕುಳಿತೆ ನಾಂ ಮೌನದಲಿ +ಕವಿಗೆ ಕವಿ ಮಣಿವಂತೆ ಮೂಕ ಶಿಲೆಸಂಗದಲಿ. +೨ +ದಟ್ಟೈಸಿ ನಿಂದಿರುವ ಬಂಡೆಗಲ್ಲಿನ ದಂಡು +ಸಹಜ ನಿರ್ಮಿತ ಕೋಟೆ ಕೊತ್ತಳೆನೆ ನಸುಬಾಗಿ +ತಮಗೆ ತಾವೇ ಅಡಕಲೇರಿ ಮಂಟಪವಾಗಿ +ಮೂಡಿಹವು. ಪರಿಕಾಲ್ಗಳಿಂ ತಿಳಿಯ ನೀರುಂಡು +ನಳನಳಿಸಿ ಬೆಳೆದು ಹೊಂದಲೆದೂಗಿ ಕಂಗೊಳಿಸಿ +ನಲಿವ ಬತ್ತದ ಗದ್ದೆ, ಕಬ್ಬು ಬಾಳೆಯ ತೋಟ +ಕೊಬ್ಬಿ ಗರಿ ಹೊಡೆಯುತ್ತಿವೆ; ಏನಿದೆಂತಹ ನೋಟ- +ವೆಂದು ಮನ ಜೋಂಪಿಸಿರೆ ಹಿಂಗತೆಯು ಮರುಕಳಿಸಿ +ದುಸ್ವಪ್ನದಲಿ ತೋರಿ ಮೀರಿ ಅಸ್ತವ್ಯಸ್ತ- +ವಾಗಿಹುದು ಅಂದಿನಂದಿನ ಇಂದ್ರನಾಸ್ಥಾನ! +ಕನ್ನಡ ರಮಾರಮಣರಾಳಿ ಬಾಳಿದ ತಾಣ! +‘ಏಳು ಸಾಯಣ ಕಟ್ಟು’ ಎಂಬ ಯತಿ ಧ್ಯಾನಸ್ಥ- +ನಾಗಿ ಕುಳಿತಿಹನಿಂದು ಹುಕ್ಕಬುಕ್ಕರ ನೆನೆದು +ಇಂದಿನವರಭಿಮಾನಶೂನ್ಯ ಮೌನಕೆ ಮುನಿದು. +೩ +ಗೋಪುರಕೆ ಗೋಪುರವನ್ನು ಕಲೆ ಬಿತ್ತರಿಪ +ಮುರುಕು ಮಂಟಪ, ಪಾಳು ಪೌಳಿ, ವಿಗ್ರಹವಿರದ +ವಿಠಲನ ಗುಡಿ, ಭಗ್ನ ನರಸಿಂಹ, ನೆಲಸಮದ +ಆಸ್ಥಾನ ಮಂಟಪಂ, ಸೊಂಡಿಲೊಡೆದಿಹ ಗಣಪ +ಒಂದೆರಡೆ? ಶಿಥಿಲ ಸೌಂದರ್ಯದಲಿ ಮುಕ್ಕಾದ +ನೂರಾರು ಮೂಕಶಿಲೆ! ಕಾಲತಾಂಡವ ಪದಕೆ +ಹತಿಗೊಂಡು ಬೇನೆ ಬಿದ್ದಿಹ ಕಲೆಯ ನರಳುವಿಕೆ! +ತುಂಗಭದ್ರೆಯು ಸಾಕ್ಷಿ ನುಡಿದಂತೆ, ಎಚ್ಚರದ +ಗಂಟೆಬಾರಿಸಿದಂತೆ ಮೊರೆಯಿಡುತ ಹರಿದಿಹಳು. +ಉದಯಾಸ್ತಮಾನದಲಿ ಮತ್ತೊಮ್ಮೆ ಜೀವಕಳೆ +ಬಂದಂತ ಮಿನುಗಿ ಹಂಪೆಯ ಪೆಂಪು ಕಣ್ಣ ತೊಳೆ- +ವುದು ವಿಭವ ರಾಗದಲಿ, ಮರುಗಳಿಗೆಯಲಿ ಹಾಳು! +ತೊಟ್ಟುಳಿದು ಕಳಚುತಿರೆ ಮುಗಿಲ ಬೆಳಕಿನ ಹಣ್ಣು +ಕುಂಕುಮವನಳಿಸಿರುವ ವಿಧವೆಯೊಲು ಇಳೆವೆಣ್ಣು. +***** +೧ ನೀಲ ನೀಲ ನಿರ್ವಿಕಾರ ನಿರುತ ಬಾನಲಿ ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. ಒಳಿತು ಕೆಡಕು ಮನದ ಮಿಡುಕು ಮೇರೆ ಮೀರಿ […] +ಎಲ್ಲ ತಿಳಿಸುವ, ಎಲ್ಲ ತಿಳಿದಿರುವ, ಮಡಿಲ ಮೇಲಿನ ಗಣಕವೇ, ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ ಏನೇ ಬೇಡಿಕೆ, ಏನೇ ಹಂಬಲ, ಬೇಕಾದರು, ಏನೇ ಬೆಂಬಲ ಮೊರೆಹೋಗುವೆ ನಿನ್ನ, ನಾ ದುರ್ಬಲ! ಜೀವಾತ್ಮದ ಸಂಚಯದ, ಪರಮಾತ್ಮನ ಪರಿಚಯದ […] +ಡೆನಿಸ್ ಲೆವೆರಟಾವ್ ಚಂದ್ರ ಹಂದಿ,ಅವಳು ಗುಟುರುವುದು ನನ್ನ ಗಂಟಲಿನಿಂದನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆಅಂತರಾಳದ ನನ್ನ ಕೆಸರು ಸಂಭ್ರಮಿಸಿಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿಮತ್ತು ಕವಿಅವಳು ತನ್ನ ಧವಳ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_593.txt b/Kannada Sahitya/article_593.txt new file mode 100644 index 0000000000000000000000000000000000000000..27ec3aa84d80a031952956bc66b1f85e7fa57367 --- /dev/null +++ b/Kannada Sahitya/article_593.txt @@ -0,0 +1,417 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೧೫ +– ೧ – +ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು ದೊಡ್ಡ ಆಟದ ಬಯಲು, ಸುತ್ತ ಮೂರು ಕಡೆಯೂ ಹೊಲಗಳು. +ಒಂದು ದಿನ ನಂಜಮ್ಮ ಮುಂದಿನ ವರ್ಶದ ಖಿರ್ದಿ ಪುಸ್ತಕ ಹೊಲಿಯುತ್ತಾ ಕೂತಿದ್ದಳು. ಮೇಷ್ಟರು ಮನೆಗೆ ಬಂದು ಹೇಳಿದರು: ‘ನಂಜಮ್ನೋರೇ, ನಿಮ್ಮ ವಿಶ್ವ ಎಂಥಾ ಕೆಲ್ಸ ಮಾಡಿದಾನೆ ಅಂತೀರಾ?’ +ಮೇಷ್ಟರೇ ಬಂದು ಹೇಳಬೇಕಾದರೆ ಅವನು ತುಂಬ ದೊಡ್ಡ ತುಂಟತನ ಮಾಡಿರಬೇಕು. ಅವಳು ಆತಂಕದಿಂದ ಕೇಳಿದಳು: ‘ಸ್ಕೂಲಿನ ಹಿಂದುಗಡೆ ಆಟದ ಬಯಲಿದೆಯಲ, ಅದರ ಆಚೆ ಕಡೆಯೇ ಒಂದು ಹುತ್ತ ಇದೆ ನೋದಿದೀರಾ? ಅದರ ಪಕ್ಕದ ಬೇಲೀಲಿ ಒಂದು ಹಾವು ಇತ್ತು ಅಂತ ಕಾಣುತ್ತೆ. ಪೊರೆ ಬಿಡೂಕೆ ಮೊದ್ಲು ಹಾವು ಚಟುವಳಿಕೆಯಾಗಿರುಲ್ಲ ನೋಡಿ. ಅದೇನು ಬಿಸಿಲು ಕಾಯಿಸ್ಕತ್ತಾ ಇತ್ತೋ ಏನೋ. ಇವ್ನು ಒಂದು ಸೋಗೆದಿಂಡಿ ತಗಂಡು ಹಿಂದುಗಡಿಂದ ಹೋಗಿ ಅದಕ್ಕೆ ಹೊಡೆದುಬಿಟ್ಟಿದ್ದಾನೆ.’ +‘ಆಮೇಲೆ?’-ನಂಜಮ್ಮ ಹೆದರಿಕೆಯಿಂದ ಕೇಳಿದಳು. +‘ಅದೃಷ್ಟಕ್ಕೆ ಅದು ಮೇಲೆ ಬೀಳಲಿಲ್ಲ. ಸರ್ ಅಂತ ಹರಿದು ಹುತ್ತದೊಳಗೆ ನುಗ್ಗಿ ಬಿಡ್ತು. ಅದು ನುಗ್ಗಿ ಹೋದದ್ದು ನಾನೂ ನೋಡಿದೆ. ಇವ್ನು ಹಿಂದಿನಿಂದ ಓಡಿಸ್ಕಂಡು ಹೋಗ್ತಿದ್ದ. ನಾನು ಹಿಡ್‌ಕಂಡು ಎರ್ಡು ಕೊಟ್ಟೆ.’ +‘ಕೈ ಮುರಿಯೂ ಹಾಗೆ ಹಾಕಬೇಕಾಗಿತ್ತು.’ +‘ಈಗ ಅವ್ನುನ್ನ ಹೊಡೆದು ಪ್ರಯೋಜನವಿಲ್ಲ. ಹಾವು ಹನ್ನೆರಡು ವರ್ಷ ಸೇಡು ಹಾಯುತ್ತೆ. ಇವ್ನು ಅದೇ ಸ್ಕೂಲಿಗೆ ಬರ್ತಾನೆ. ಯಾವತ್ತಾದ್ರೂ ಕಾದು ಮುಗಿಸಿಬಿಟ್ರೆ ಏನು ಗತಿ?’ +ಅವಳ ಎದೆ ಹೊಡೆದುಕೊಳ್ಳಲು ಶುರುವಾಯಿತು. ಈ ಹುಡುಗನ ಸ್ವಭಾವವೇ ಹಾಗೆ. ಧೈರ್ಯ ಅಂದರೆ ಪ್ರಚಂಡ ಧೈರ್ಯ. ಅದು ನನ್ನ ಜೀವಕ್ಕೆ ಬರುತ್ತೆ. ‘ಈಗ ಏನು ಮಾಡೂದು ಮೇಷ್ಟ್ರೆ?’ +‘ಹಾವು ಹುತ್ತದಲ್ಲೇ ಇರ್‌ಭೌದು. ನಾಕು ಜನ ಆಳುಗಳನ್ನ ಬಿಡಿಸಿ ಹುತ್ತ ಅಗೆದು ಹಾಕ್ಸಿ ಅದುನ್ನ ಸಾಯಿಸಿಬಿಡಬೇಕು. ನಿಧಾನ ಮಾಡ್‌ಬ್ಯಾಡಿ.’ +ನಂಜಮ್ಮ ತಕ್ಷಣ ಎದ್ದು ಮನೆಗೆ ಬೀಗ ಹಾಕಿಕೊಂಡು ಹೋಗಿ ಕುಳುವಾಡಿಗೆ ಹೇಳಿಕಳಿಸಿದಳು. ಜೊತೆಗೆ ನೀರುಗಂಟಿ ಬಂದ. ಹಾವು ಹೊಡೆಯುವುದರಲ್ಲಿ ಊರಿಗೇ ಗಟ್ಟಿಗನೆನಿಸಿದ ವಾಲ್ಮೀಕಿ ಸಂಜೀವನಾಯಕನಿಗೆ ಒಂದು ರೂಪಾಯಿ ಕೊಡುವುದಾಗಿ ಹೇಳಿ ಅವನನ್ನು ಅವರ ಜೊತೆಗೆ ಬಿಟ್ತಳು. ಅವರೊಡನೆ ತಾನೂ ಹೋದಾಗ ವಿಶ್ವ ಹತ್ತಿರ ಇದ್ದ ಆಟದ ಬಯಲಿನಲ್ಲಿ ಒಬ್ಬನೇ ಪಲ್ಟಿ ಹೊಡೆಯುತ್ತಿದ್ದ. +‘ಹಾವಿಗೆ ಯಾಕೋ ಹೊಡೆಯುಕ್ಕೆ ಹೋಗಿದ್ದೆ?’-ಎಂದು ಅಮ್ಮ ಕೇಳಿದುದಕ್ಕೆ, ‘ಸಂಜೀವನಾಯ್ಕ ಅವತ್ತು ತಿರುಮಲಯ್ಯನ ಮನೆ ಹಿತ್ಲಲ್ಲಿ ಹೊಡೆದಿದ್ನಲ್ಲ, ಹಾಗೆ ನಾನೂ ಹ್ವಡೆದೆ’ ಎಂದ. +ಸಂಜೀವನಾಯಕನ ಕೈಲಿ ಬಿದಿರುಕೋಲು ಭರ್ಜಿ ಹಿಡಿದು ಎದುರಿಗೆ ನಿಂತುಕೊಂಡ. ಕುಳುವಾಡಿ ನೀರುಗಂಟಿಗಳು ಹುತ್ತ ಅಗೆಯಲು ಶುರುಮಾಡಿದರು. ಅದರ ಬಿಲ ಎತ್ತೆತ್ತಲೋ ಇಳಿದು ಹರಡಿತ್ತು. ಇವರು ಎಲ್ಲವನ್ನೂ ಬಿಡದೆ ಸಂಜೆಯ ತನಕ ಶೋಧಿಸಿ ಮುಗಿಸಿದರೂ ಹಾವು ಸಿಕ್ಕಲಿಲ್ಲ. +‘ಈಗ ಉತ್ತ ಸೋದ್ಸಾಕೆ ಬರ್ತಾರೆ ಅಂತ ತಿಳ್ಕಂಡು ಅಣ್ಣಯ್ಯ ಜಾಗ ಬುಟ್ಟಿ ಹ್ವಂಟವ್ನೆ’-ಎಂದು ಸಂಜೀವನಾಯಕ ಹೇಳಿದ. ಇನ್ನು ಅದನ್ನು ಹುಡುಕುವುದು ಸಾಧ್ಯವಿಲ್ಲ. ‘ಅವ್ನು ಯಾವತ್ತಾದರೂ ಕಾಯ್ಕಂಡಿದ್ದು ಉಡುಗುಂಗೆ ಹಲ್ ಆಕ್ತಾನೆ’- ನಾಯಕನೂ ಹೇಳಿದ. +ನಂಜಮ್ಮನಿಗೆ ತಡೆಯಲಾರದಷ್ಟು ಸಿಟ್ಟು ಬಂತು. ನಾಯಕನ ಕೈಲಿದ್ದ ಬಿದಿರುಕೋಲು ತೆಗೆದುಕೊಂಡು ವಿಶ್ವನ ಬೆನ್ನಿನ ಮೇಲೆ ನಾಲ್ಕು ಬಾರಿಸಿದಳು. ಅವನು ಅಳುತ್ತಾ ನಿಂತ. ‘ಇನ್ನು ಆಗೂದಾಗಿದೆ. ಹೊಡದ್ರೆ ಏನಾಗುತ್ತೆ?’-ಮೇಷ್ಟರು ಸಮಾಧಾನ ಹೇಳಿದರು. ನಂಜಮ್ಮ ಹುಡುಗನ ಕೈ ಹಿಡಿದು ಮನೆಗೆ ಬಂದಳು. ಇಬ್ಬರು ಮಕ್ಕಳೂ ಹೋದಮೇಲೆ ಅವಳಿಗೆ ಇರುವವನು ಇವನೊಬ್ಬ. ಈಜುತ್ತಾ ನಡುಗೆರೆಗೆ ಹೋಗುವುದು, ನದಿಯಲ್ಲೇ ಈಜುಬೀಳುವುದು, ಮಾದೇವಯ್ಯನವರ ಗುಡಿಯ ಮಾಳಿಗೆಯ ಮೇಲೆ ಹತ್ತಿ ಕೆಳಕ್ಕೆ ಧುಮುಕುವುದು, ಕದ್ದು ಬೇರೆಯವರ ಮರಿಕುದುರೆ ಹತ್ತಿ ಸವಾರಿ ಮಾಡುವುದು, ಹೆಜ್ಜೇನಿನ ಗೂಡನ್ನು ಒಬ್ಬನೇ ಬಿಚ್ಚಲು ಹೋಗುವುದು, ಒಬ್ಬನೇ ಹಾವು ಹೊಡೆಯುವುದು, ಇಂತಹ ಸಾಹಸ ಕೆಲಸವೇ ಅವನದು. ಅವಳಿಗೆ ತನ್ನ ತಂದೆಯ ನೆನಪಾಯಿತು. ಅಜ್ಜನ ಹಾಗೆಯೇ ಹುಟ್ಟಿದಾನೆ ಇವನು. ಮುಂದೆ ಅದೇ ಬುದ್ಧಿ ಬರದಿದ್ದರೆ ಸಾಕು. ಈಗ ಇವನು ಮಾಡಿ ಬಂದಿರುವ ಗಂಡಾಂತರಕ್ಕೆ ಏನು ಮಾಡುವುದು? ಹಾವು ಹನ್ನೆರಡು ವರ್ಷ ಹಗೆ ತೀರಿಸುತ್ತೆ. ಇವನು ಬೆಳಗ್ಗೆದ್ದರೆ ಅಲ್ಲಿಗೇ ಸ್ಕೂಲಿಗೆ ಹೋಗಬೇಕು. ಆ ದಿನ ಬೆಳಿಗ್ಗೆ ಅವಳು ‘ಸ್ಕೂಲಿಗೆ ಕಳುಸ್ದೆ ಇರೂದೇನೋ ಸರಿ. ಆದರೆ ಎಷ್ಟು ದಿನ ಅಂತ ಹುಡುಗನನ್ನ ಹಿಂಗೇ ಮನೇಲಿ ಕೂರಿಸ್ಕಂಡಿರ್ತೀರಿ?’ +ಅದು ಒಂದು ಪ್ರಶ್ನೆಯೇ. ಪ್ರೈಮರಿ ಮುಗಿದು ಅವನು ಕಂಬನಕೆರೆಯ ಮಿಡ್ಳ್ ಸ್ಕೂಲಿಗೆ ಹೋಗಬೇಕು. ತಿಪಟೂರಿಗೂ ಹೋಗಿ ಹೈಸ್ಕೂಲು ಓದಬೇಕು. ಅಷ್ಟಾದರೆ ಮುಂದೆ ಶೇಕ್‌ದಾರಿ ಆದೀತು. ಇಲ್ಲದಿದ್ದರೆ ಮಿಡ್ಳ್‌ಸ್ಕೂಲು ಮೇಷ್ಟರಾಗಬಹುದು. ವಿದ್ಯೆ ಇಲ್ಲದಿದ್ದರೆ ಅವನ ಅಪ್ಪ ಅಥವಾ ಚಿಕ್ಕಪ್ಪ ಆದಾನು. ಏನು ಮಾಡಬೇಕೆಂದು ಅವಳಿಗೆ ತಿಳಿಯಲಿಲ್ಲ. ಹೋಗಿ ಮಾದೇವಯ್ಯನವರನ್ನು ಕೇಳಿದಳು. ಒಂದು ದಿನವೆಲ್ಲ ಯೋಚನೆ ಮಾಡಿ ಅವರೇ ಮನೆಗೆ ಬಂದು ಹೇಳಿದರು: ‘ ಈಗ ಇವ್ನು ಹ್ಯಂಗೂ ಮೂರನೇ ಕಲಾಸು. ಕರ್ಕಂಡ್ ಹೋಗಿ ನಿಮ್ಮ ಅಣ್ಣಯಾರ ಮನ್ಲಿ ಬಿಟ್‌ಬಿಡಿ. ನಾಕನೇ ಕಲಾಸು ಅಲ್ಲಿ ಮುಗುಸ್ಲಿ, ಆಮ್ಯಾಲೆ ಅವ್ನು ಈ ಸ್ಕೂಲಿಗೆ ಬರಾಕಿಲ್ಲ. ಕಂಬನಕೆರೇಲಿ ಏನಾದ್ರೂ ಅನ್ನದ ದಾರಿ ಮಾಡಿ ಇಂಗ್ಲೀಷ್ ಇಸ್ಕೂಲಿಗೆ ಸೇರಿಸ್‌ಬುಡಿ. ರಜದಾಗೆ ಊರಿಗೆ ಬಂದ್ರೂ ಈ ಊರ ಇಸ್ಕೂಲ್ ಕಡೆ ಹೋಗದೇ ಇದ್ರೆ ಆಯ್ತು. ಅಷ್ ಹೊತ್ಗೆ ಹುಡ್ಗ ಬೆಳ್ದಿರ್ತಾನೆ. ಮನುಷ್ರುಗೇ ಗುರ್ತು ಸಿಕ್ಕಾಕುಲ್ಲ. ಇನ್ನು ಹಾವಿಗೆ ಹ್ಯಂಗೆ ತಿಳೀತೈತಿ?’ +‘ಅಲ್ಲಿ ನಮ್ಮ ಅತ್ತಿಗೆ ಎಂಥೋಳು ಅಂತ ನಿಮಗೇ ಗೊತ್ತಿದೆಯಲ ಅಯ್ನೋರೇ?’ +‘ಅವ್ಳು ಹ್ಯಂಗಿದ್ರೇನು? ಮನ್ಲಿ ಅಜ್ಜಿ ಐತಿ. ಯಾವ್ದೂ ಮಕ್ಳಿಲ್ಲ. ನಿಮ್ಮಣ್ಣಯ್ಯನೂ ವೈನಾಗಿ ನೋಡ್ಕಂತೈತಿ.’ +ಇದೇ ಉತ್ತಮ ಉಪಾಯವೆಂದು ಅವಳಿಗೂ ಎನ್ನಿಸಿತು. ಆದರೆ ಇರುವ ಒಬ್ಬ ಮಗನನ್ನು ಅಲ್ಲಿ ಬಿಟ್ಟು ಬಿಟ್ಟು ತಾನೊಬ್ಬಳೇ ಇಲ್ಲಿ ಹೇಗೆ ಇರಬೇಕು?-ಎಂಬ ಕೊರಗು ಬಾಧಿಸುತ್ತಿತ್ತು. ಊರಿನಲ್ಲಿಟ್ಟುಕೊಂಡರೆ ಅವನಿಗೂ ಸಾವು ತಪ್ಪಿದ್ದಲ್ಲ ಎಂಬ ಭಯದ ಮುಂದೆ ಆ ಕೊರಗು ದೊಡ್ಡದಲ್ಲ. ರಜ ಬಂದಾಗ ಊರಿಗೆ ಕರ್‌ಕೊಂಡು ಬರಬಹುದು. ನಾನೇ ಮಧ್ಯೆ ಮಧ್ಯೆ ಹೋಗಿ ನೋಡಿಕೊಂಡು ಬರೂದು. ಅಂತೂ ಇನ್ನು ಒಂದೂವರೆ ವರ್ಷ ಅವನು ಅಲ್ಲಿರುವುದೇ ಸರಿ ಎಂದು ತೀರ್ಮಾನಿಸಿದಳು. +ಮರುದಿನ ಅವನಿಗೆ ನೀರು ಹಾಕಿದಳು. ದರ್ಜಿಗೆ ಹೇಳಿ ಹೊಸ ಶರಟು ಚಡ್ಡಿಗಳನ್ನು ಹೊಲಿಸಿದಳು. ಕೋಡುಬಳೆ ಚಕ್ಕುಲಿ ಬೇಯಿಸಿದಳು. ‘ಅಮ್ಮ, ನಾನು ಇನ್ನೇನೂ ಮಾಡುಲ್ಲ. ನನ್ನ ಎಲ್ಲೂ ಕಳಿಸ್‌ಬ್ಯಾಡ’-ಎಂದು ವಿಶ್ವ ಅಂಗಲಾಚಲು ಶುರುಮಾಡಿದ. ‘ಇನ್ನು ಒಂದು ವರ್ಷ ಮರಿ. ಆಮ್ಯಾಲೆ ಕಂಬನಕೆರೆಗೆ ಬರೂವಂತೆ. ನಾನೇ ಬೇಕಾದ್ರೆ ಅಲ್ಲಿಗೆ ಬಂದು ನಿಂಗೆ ಅಡಿಗೆ ಮಾಡ್ಕಂಡು ಇರ್ತೀನಿ. ನೀನು ಸುಮ್ನಿರ್ಲಾರ್ದೆ ಆ ಹಾವು ಯಾಕೆ ಹ್ವಡಿಯುಕ್ಕೆ ಹೋಗಿದ್ದೆ?’-ಎಂದು ಕಣ್ಣಿರು ಹಾಕುತ್ತಾ ಅವನ ಕಣ್ಣೀರನ್ನು ಒರಸಿ ಸಮಾಧಾನ ಮಾಡಿದಳು. ಎರಡು ಮೂಟೆ ರಾಗಿ ಇಪ್ಪತ್ತು ಸೇರು ಅವರೇಕಾಳು ಒಂದು ಮೊಗೆ ಹರಳೆಣ್ಣೆ, ಒಂದು ಧಡಿಯ ಸೀಗೆಪುಡಿಗಳನ್ನು ಗಾಡಿಗೆ ಹಾಕಿಸಿದಳು. ಸರ್ಟಿಫಿಕೇಟನ್ನು ಜೋಪಾನವಾಗಿ ಇಟ್ಟುಕೊಂಡು ವಿಶ್ವನೊಡನೆ ಹೊರಟಳು. ಚೆನ್ನಿಗರಾಯರು ಸಂಗಡ ಬರಲಿಲ್ಲ. +ತಂಗಿಯ ಮಗನನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಲ್ಲೇಶನಿಗೂ ಸಂತೋಷವೇ. ಅಕ್ಕಮ್ಮನಿಗಂತೂ ಎಷ್ಟೋ ಉತ್ಸಾಹ. ನೀರು ಗೀರು ಸೇದಲು ಅವಳ ಕೈಲಿ ಆಗುವುದಿಲ್ಲ. ಆದರೂ ಸರಿ, ತಾನು ಮರಿಮಗನಿಗೆ ವಾರಕ್ಕೊಂದು ಸಲ ಎಣ್ಣೆ ನೀರು ಹಾಕುವುದಾಗಿ ಹೇಳಿದಳು. ಹೆಡಸು ತೋರಿಸಿದವಳು ಕಲ್ಲೇಶನ ಹೆಂಡತಿ‌ಒಬ್ಬಳೇ. ಆದರೆ ಅವಳ ವರ್ತನೆ ಯಾರಿಗೂ ಅನಿರೀಕ್ಷಿತವಾದದ್ದಲ್ಲ. +ಸಂಗಡ ತಂದಿದ್ದ ದಿನಸಿ ಧಾನ್ಯಗಳನ್ನು ಕಂಡ ಕಲ್ಲೇಶ-‘ಇವನ್ನೆಲ್ಲ ಯಾಕೆ ತಂದೆ? ನನ್ನಮನೇಲಿ ಇಷ್ಟು ಅನ್ನವಿಲ್ಲವೆ? ವಾಪಸ್ ಹೇರ್ಕಂಡು ಹೋಗು’ ಎಂದ. +‘ಮಗನ ಊಟದ ಖರ್ಚು ಅಂತ ನಾನು ತರಲಿಲ್ಲ. ಅವನಿಗೆ ಅನ್ನ ಹಾಕೂಕೆ ನೀನು ಬಾಧ್ಯಸ್ಥನೇ. ಏನೋ ಮನೇಲಿತ್ತು ಅಂತ ತಂದೆ. ನಿನ್ನ ಮನೇಲೂ ತುಂಬ ಕರಾವಾಗುತ್ತೆ. ಅವನಿಗೆ ಹಾಲು ತುಪ್ಪಕ್ಕೇನೂ ಯೋಚನೆ ಇಲ್ಲ. ನೀನು ಇನ್ನೇನೂ ಮಾಡಬ್ಯಾಡ. ಅವನ ತುಂಟತನ ವಿಪರೀತ. ನಮ್ಮೂರಿನಲ್ಲಿ ಅವನಿಗೆ ಗಂಡಸರ ಭಯವಿರಲಿಲ್ಲ. ಎಷ್ಟೇ ಹೊಡೆದರೂ ಗಂಡುಮಕ್ಕಳು ಹೆಂಗಸರಿಗೆ ಗೆದರೂದಿಲ್ಲ. ನಾನೇನಂತಾಳೋ ಅಂತ ಪಟ್ಟುಕೋಬ್ಯಾಡ. ನಾಲ್ಕು ಕೊಟ್ಟು ಭಯದಲ್ಲಿಟ್ಟು ಬುದ್ಧಿ ಕಲಿಸು. ಓದಿ ಬರಿಯೋದ್ರಲ್ಲಿ ಅವನು ಜಾಣ. ಊರಿನಲ್ಲಿರೂತನಕ ನಾನು ಮನೇಲಿ ಪಾಠ ಹೇಳಿಕೊಡ್ತಿದ್ದೆ. ಇಲ್ಲಿ ನಿಂಗೆ ಆದ್ರೆ ಹೇಳಿಕೊಡು. ಇಲ್ದೆ ಇದ್ರೆ ಮೇಷ್ಟ್ರುನ್ನ ಗೊತ್ತುಮಾಡು. ನಾನು ತಿಂಗ್ಳಿಗೆ ಒಂದು ರೂಪಾಯಿ ಕೊಟ್ಟುಕಳುಸ್ತೀನಿ.’ +ಇನ್ನು ಕಲ್ಲೆಶ ಮತ್ತೆ ಮಾತನಾಡುವಂತಿರಲಿಲ್ಲ. ‘ನಾಲ್ಕು ದಿನ ಇದ್ದು ಹೋಗು’-ಎಂದು ಅವನೂ ಅಕ್ಕಮ್ಮನೂ ಹೇಳಿದರೂ, ಅವಳಿಗೆ ಊರಿನಲ್ಲಿ ಲೆಕ್ಕದ ಕೆಲಸವಿತ್ತು. ಮರುದಿನ ಅದೇ ಗಾಡಿಯಲ್ಲಿ ಹೊರಟಳು. +‘ಅಮ್ಮ, ನಾನೂ ಊರಿಗ್ ಬತ್ತೀನಿ’-ಎಂದು ವಿಶ್ವ ಅಳುತ್ತಿದ್ದ. ಅಮ್ಮನಿಗೂ ಅಳು ಬರುತ್ತಿತ್ತು. ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಗಾಡಿಯ ಮೇಲೆ ಕೂತಳು. +ಅಪ್ಪ ಕಂಠೀಜೋಯಿಸರನ್ನು ಕಾಣಲಾಗಲಿಲ್ಲ. ಅವರು ಊರಿಗೆ ಬಂದು ಮೂರು ತಿಂಗಳಾಯಿತಂತೆ. +– ೨ – +ವಿಶ್ವನನ್ನು ಬಿಟ್ಟು ಬಂದಮೇಲೆ ನಂಜಮ್ಮನಿಗೆ ಹೊತ್ತು ಹೋಗುವುದೇ ಕಷ್ಟವಾಯಿತು. ಮಾಡುವುದಕ್ಕೆ ಕೆಲಸವೇನೋ ಇರುತ್ತಿತ್ತು. ಆದರೆ ಸದಾ ಬಿಕೋ ಎನ್ನುತ್ತಿತ್ತು. ಪಾರ್ವತಿ ರಾಮಣ್ಣರ ನೆನಪು ಮತ್ತೆ ಕಾಡಲು ಶುರುವಾಯಿತು. ಅವಳು ಕೂತು ಶ್ಯಾನುಭೋಗಿಕೆ ಲೆಕ್ಕ ಬರೆಯುವ, ರಾಗಿ ಮಾಡುವ, ಬೀಸುವ, ಬಂದವರೊಡನೆ ಮಾತನಾಡುವ ನಡುಮನೆಯಲ್ಲೇ ಇಬ್ಬರು ಮಕ್ಕಳೂ ಕಾಯಿಲೆ ಮಲಗಿ ಒಬ್ಬರ ಹಿಂದೆ ಒಬ್ಬರಂತೆ ಸತ್ತುಹೋದುದು. ಈ ಮನೆಯಲ್ಲಿರುವುದೇ ಬೇಡವೆನಿಸುತ್ತಿತ್ತು. ಆದರೆ ಬೇರೆ ಎಲ್ಲಿಗೆ ಹೋಗುವುದು? ಇದೇ ಸಮಯದಲ್ಲಿ ಅವಳಿಗೆ ನೆನಪಾಯಿತು: ಈ ಮನೆಗೆ ಬಂದು ಹೆಚ್ಚು ಕಡಿಮೆ ಹದಿಮೂರು ವರ್ಷವಾಯಿತು. ಗುಂಡೇಗೌಡರ ಮನೆ ತನ್ನ ಸ್ವಂತ ಮನೆಯೇ ಎನ್ನುವಂತೆ ಆಗಿಹೋಗಿದೆ. ಅವರಿಗೇನೂ ಇದರ ಅಗತ್ಯವಿಲ್ಲ. ಆದರೆ ತಾನು ಊರಿನಲ್ಲಿ ಒಂದು ಸ್ವಂತ ಮನೆಯನ್ನಾದರೂ ಮಾಡಬೇಕು- ಎಂಬ ಆಶೆಯೊಂದು ಹುಟ್ಟಿತು. +ಹೊಸ ಮನೆಯಾದರೂ ಯಾಕೆ ಬೇಕು? ಮುಂದೆ ವಿಶ್ವ ಈ ಊರಿನಲ್ಲಿರುವುದು ಅವಳಿಗೆ ಬೇಡ. ಅವನು ಶೇಕ್‌ದಾರನಾಗಬೇಕು. ಇಲ್ಲದಿದ್ದರೆ ಮಿಡ್ಳ್ ಸ್ಕೂಲು ಮೇಷ್ಟರಾದರೂ ಆಗಬೇಕು. ಅವನೇನೂ ಇಲ್ಲಿ ಇರುವವನಲ್ಲ. ಮಗ ಇದ್ದಲ್ಲಿ ಹೋಗುವವಳು ತಾನು ಆದರೆ ತನ್ನ ಊರು ಅಂತ ಒಂದು ಗೂಡು ಇರಬೇಕು. ರಜ ಬಂದಾಗ ಬಂದು ನಾಲ್ಕು ದಿನ ಇರುವುದಕ್ಕೆ ಒಂದು ಜಾಗ ಬೇಕು. ಇದೇ ಸಂದರ್ಭದಲ್ಲಿ ಒಂದು ನಿವೇಶನ ಖರೀದಿಗೆ ಬಂತು. ಗಾಣಿಗರ ಚೆಲುವಶೆಟ್ಟಿ ಎಂಬುವವನಿಗೆ ಹೆಂಡತಿಯ ಊರಿನಲ್ಲಿ ಒಳ್ಳೆಯ ಆಸ್ತಿ ಸಿಕ್ಕಿತು. ಇಲ್ಲಿಯದನ್ನೆಲ್ಲ ಮಾರಿಹಾಕಿ ಅಲ್ಲಿಗೆ ಹೋಗಬೇಕೆಂದು ಅವನು ನಿರ್ಧರಿಸಿದ. ಅವನ ಮಾರಾಟದ ಕಾಗದ ಪತ್ರಗಳನ್ನೆಲ್ಲ ತಾನೇ ಬರೆಸಿಕೊಡುವುದಾಗಿ ಒಪ್ಪಿಕೊಂಡಳು. ಎಂದರೆ ಲೇಖನ ಅವಳದು. ಅಕ್ಷರ ಚೆನ್ನಿಗರಾಯರದು. ಜಮೀನು ಕೊಳ್ಳುವವರು ಬರವಣಿಗೆಗೆ ಇವರಿಗೆ ಏನೂ ಕೊಡುವಂತಿಲ್ಲ. ಒಟ್ತಿನಲ್ಲಿ ಅದ ಖರೀದಿಯ ಒಳಗೆ ಈ ನಿವೇಶನವೂ ಸೇರಬೇಕು. ಇದೊಂದನ್ನು ಚೆಲುವಶೆಟ್ತಿ ಇವರಿಗೆ ಬರೆದುಕೊಡಬೇಕು. ಇವರು ಐವತ್ತು ರೂಪಾಯಿ ಖರೀದಿ ಕೊಟ್ಟರೆ ಸಾಕು. ಹಾಗೆಯೇ ಎಲ್ಲವೂ ಆಯಿತು. ಸರ್ಕಾರಿ ಕಾನೂನನ್ನು ಬಲ್ಲ ನಂಜಮ್ಮ ನಿವೇಶನವನ್ನು ತನ್ನ ಹೆಸರಿಗೇ ಬರೆಸಿಕೊಂಡಳು. ಕಂದಾಯದ ರಶೀತಿಯ ಮೆಲೆ ಇತರ ಜಮೀನು ಕೊಂಡವರಿಂದ ಐವತ್ತು ರೂಪಾಯಿಯನ್ನು ಕೊಡಿಸಿದಳು. ಎರಡು ಅಂಕಣ ಜಗುಲಿ, ಒಳಗೆ ಮೂರು ಅಂಕಣದ ತೊಟ್ಟಿ, ಒಂದು ಅಂಕಣದ ಅಡಿಗೆ ಮನೆ, ಇನ್ನೊಂದು ರಾಗಿ ಪಾಗಿ ತುಂಬಲು ಅಥವಾ ಮುಂದೆ ಮಗನಿಗೆ ಮದುವೆಯಾದಮೇಲೆ ಅವರು ಮಲಗಲು; ಇಷ್ಟು ಅಂದಾಜು ಹಾಕಿ ಹಿಂಭಾಗದಲ್ಲಿ ಎರಡು ಹಸುಗಳನ್ನು ಕಟ್ಟುವಂತೆ ಗುಡಿಸಲು, ಉಳಿದ ಜಾಗದಲ್ಲಿ ಒಂದಿಷ್ಟು ತರಕಾರಿ ಬೆಳೆದುಕೊಳ್ಳುವುದು. ಒಟ್ಟು ಈ ಅಂದಾಜಿಗೆ ನಾಡಹೆಂಚು ಹೊದಿಸಿದರೆ ಏನಿಲ್ಲವೆಂದರೂ ಒಂದೂವರೆ ಸಾವಿರ ರೂಪಾಯಿ ಬೇಕು. +ಈಗಲೂ ದಿನಸಿ ಲೆಕ್ಕವಿದೆ. ಮೊದಲಿನಷ್ಟೇ ಆದಾಯವೂ ಇದೆ. ಕುರುಬರಹಳ್ಳಿಯವರೇ ಅಲ್ಲದೆ ರಾಮಸಂದ್ರ ಲಿಂಗಾಪುರದವರೂ ದಿನಸಿ ಲೆಕ್ಕ ಬಂದಮೇಲೆ ಮನೆಗೆ ಇಷ್ಟು ರಾಗಿ ಎಂದು ಕೊಡಲು ಪ್ರಾರಂಭಿಸಿದ್ದಾರೆ. ಮನೆಯಲ್ಲಿ ಮೊದಲಿನಷ್ಟು ಖರ್ಚಿಲ್ಲ. ಒಪ್ಪತ್ತು ಅಡಿಗೆ ಮಾಡಿದರೆ ಎರಡು ಹೊತ್ತಿಗೂ ಸಾಕು. ಒಟ್ಟು ಜಮಾವಣೆಯಾದ ರಾಗಿಯನ್ನು ಮಾರಬಹುದು. ಈಗ ರಾಗಿ ಖಂಡುಗಕ್ಕೆ ತೊಂಬತ್ತು ರೂಪಾಯಿಯಾಗಿದೆ. ಜೊತೆಗೆ ಎರಡು ವರ್ಷದ ಪೋಟಿಕೆ ಹಣವೆಂದರೆ ಐನೂರು ರೂಪಾಯಿಯಾಗುತ್ತೆ. ಮುಂದಿನ ವರ್ಷದ ಕಂದಾಯವನ್ನೂ ಈಗಲೇ ಕೊಟ್ಟಿರಿ ಅಂದರೆ ಕುರುಬರಹಳ್ಳಿಯವರು ಕೊಡುತ್ತಾರೆ. +ಇದೇ ಸಂದರ್ಭದಲ್ಲಿ ಒಂದು ದಿನ ಮೇಷ್ಟರು ಬಂದು ಹೇಳಿದರು: ‘ನೋಡಿ, ಈಗ ಸರ್ಕಾರದೋರು ವಯಸ್ಕರ ಶಿಕ್ಷಣ ಸಮಿತಿ ಅಂತ ಮಾಡಿದಾರೆ. ಗಂಡಸರು ಹೆಂಗಸರೆಲ್ಲ ಓದಿ ಬರೆಯೂದು ಕಲಿಯಬೇಕು ಅಂತ ಸರ್ಕಾರದ ಹುಕುಂ ಆಗಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಿಗೆ ರಾತ್ರಿ ಏಳು ಗಂಟೆಯಿಂದ ಒಂಬತ್ತು ಗಂಟೆ ತನಕ ಓದಿ ಬರೆಯೂದು ಹೇಳಿಕೊಡೂದು. ಅದಕ್ಕೆ ನೈಟ್ ಸ್ಕೂಲ್ ಅಂತಾರೆ. ಈ ಊರಲ್ಲಿ ಗಂಡಸರ ನೈಟ್ ಸ್ಕೂಲಿಗೆ ನನ್ನನ್ನ ನೇಮಕಮಾಡಿದಾರೆ. ಸಂಬಳವಲ್ಲದೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಕೊಡ್ತಾರೆ. ಈ ಊರಲ್ಲಿ ವಿದ್ಯಾವಂತೆಯಾದ ಹೆಂಗಸರು ಯಾರಿದಾರೆ ಅಂತ ನಮ್ಮ ಇನ್‌ಸ್ಪೆಕ್ಟರು ಕೇಳಿದರು. ನಾನು ನಿಮ್ಮ ಹೆಸರು ಹೇಳಿದೆ.’ +‘ನನ್ನ ಕೈಲಿ ಆ ಕೆಲಸ ಆಗುತ್ತದೆಯೇ ಮೇಷ್ಟರೆ?’ +ಇದೇನು ಹೀಗಂತೀರಾ? ಒಟ್ಟು ಎಂಟು ತಿಂಗಳ ಕೆಲಸ ಅದು. ಒಂದು ಗುಂಪು ಆದಮೇಲೆ ಇನ್ನೊಂದು ಗುಂಪಿಗೆ ಶುರು ಮಾಡೂದು. ಅ ಆ ಇ ಈ ಕಲಿಸಿ ಎರಡನೇ ಪುಸ್ತಕ ಓದುವಷ್ಟಾದರೆ ಸಾಕು. ಆಮೇಲೆ ಅವರೇ ಮನೇಲಿ ಪೇಪರು ಗೀಪರು ಓದ್ಕಂಡು ಚಾಲ್ತಿ ಮಾಡ್ಕಬೇಕು. ತಿಂಗಳಿಗೆ ಇಪ್ಪತ್ತೈದು ರೂಪಾಯಿ ಬರುತ್ತೆ. ಬರೀ ಹೆಂಗಸರೇ ಸೇರಬೇಕು.’ +‘ಅಕ್ಷರ ಕಲಿಯುಕ್ಕೆ ಯಾರಿಗೆ ಆಶೆ ಇದೆ , ಅದೂ ಈ ಊರ ಹೆಂಗಸರಿಗೆ?’ +‘ಸರ್ಕಾರ್‌ದೋರೇ ಸ್ಲೇಟು ಪುಸ್ತಕ, ಬಳಪ, ಸೀಸದ ಕಡ್ಡಿ, ಎಲ್ಲಾ ಕೊಡ್ತಾರೆ. ನಿಮ್ಮ ಉರಿಸೋ ದೀಪದ ದುಡ್ಡೂ ಕೊಡ್ತಾರೆ. ಬೋರ್ಡು, ಸೀಮೇಸುಣ್ಣ, ಎಲ್ಲಾ ಕೊಡ್ತಾರೆ. ನಿಮ್ಮ ಮನೇಲಿ ಸ್ಕೂಲು ಮಾಡಿ. ಮೊದಲು ಒಂದೇಳೆಂಟು ಜನ ಹೆಂಗಸರನ್ನ ಗುಡ್ಡೆ ಹಾಕಿದ್ರೆ ಆಮ್ಯಾಲೆ ಬಾಕಿಯೋರು ಬರ್‌ಭೌದು. ಬೇಕಾದ್ರೆ ನಮ್ಮನೆಯೋಳುನ್ನೂ ಕಳುಸ್ತೀನಿ.’ +ನಂಜಮ್ಮ ಇದಕ್ಕೆ ಒಪ್ಪಲಿಲ್ಲ. ಒಂದು ದಿನ ಇವರ ಮನೆಗೆ ಬಂದ ಶೇಕ್‌ದಾರರೂ ಇದೇ ಮಾತು ಹೇಳಿದಮೇಲೆ ಒಪ್ಪಿಕೊಂಡಳು. ಕಂಬನಕೆರೆಯ ಮಿಡ್ಳ್‌ಸ್ಕೂಲ್ ಹೆಡ್ಮಾಸ್ಟರು ಇದರ ಮೇಲ್ವಿಚಾರಕರಾಗಿದ್ದರು. ಅವರೇ ಒಂದು ದಿನ ಗಾಡಿ ಹೊಡೆಸಿಕೊಂಡು ಬಂದು ಸ್ಲೇಟು ಪುಸ್ತಕ ಬೋರ್ಡು, ಲಾಟೀನು ಮೊದಲಾದ ಎಲ್ಲವನ್ನೂ ಕೊಟ್ಟು ಹೋದರು. ಮೇಸ್ಟರ ಹೆಂಡತಿಗೆ ಅ ಆ ಇ ಈ ಬರುತ್ತಿತ್ತು. ಆದರೂ ಮೇಸ್ಟರು ಅವರನ್ನು ಸೇರಿಸಿಕೊಂಡರು. ನಂಜಮ್ಮನಿಗೆ ಆಶ್ಚರ್ಯವಾದುದೆಂದರೆ ಸರ್ವಕ್ಕ ತಾನಾಗಿಯೇ ಬಂದು ಸೇರಿಕೊಂಡಳು. ಗಂಡ ಮನೆಯಲ್ಲಿ ಅಡ್ಡಿ ಮಾಡಿದರೂ ಅವಳು ಕೇಳಲಿಲ್ಲ. ಲಿಂಗಾಯಿತರ ಪೈಕಿ ನಾಲ್ಕು ಜನ, ಮಗ್ಗದ ಇಬ್ಬರು, ಕುರುಬರಕೇರಿಯ ಎರಡು ಹೆಣ್ಣು ಹುಡುಗಿಯರು ಮೊದಲಾಗಿ ಒಟ್ಟು ಹದಿನಾಲ್ಕು ಜನರಾಯಿತು. ಅ ಆ ಇ ಈ ಎಂದು ಬೋರ್ಡಿನ ಮೇಲೆ ಬರೆದು ಎಲ್ಲರಿಗೂ ಕ್ಲಾಸು ಮಾಡುವುದು ನಂಜಮ್ಮನಿಗೆ ಹೊಸ ಅನುಭವ. +ಕಲಿತವರು ಕಲಿತರು; ಇಲ್ಲದವರು ಇಲ್ಲ. ಆದರೆ ಸರ್ವಕ್ಕನಿಗೆ ಇಷ್ಟು ಬುದ್ಧಿ ಇದೆ ಎಂಬುದು ನಂಜಮ್ಮನಿಗೆ ಗೊತ್ತಿರಲಿಲ್ಲ. ಒಂದೇ ದಿನಕ್ಕೆ ಅವಳು ಎಂಟು ಅಕ್ಷರ ಕಲಿತಳು. ಎಂಟು ದಿನದಲ್ಲಿ ಐವತ್ತೆರಡನ್ನೂ ಕಲಿತು ಸರಳ ಅಕ್ಷರಗಳನ್ನು ಸೇರಿಸಿ ಓದತೊಡಗಿದಳು. +‘ನಂಜಮ್ಮಾರೇ, ಮೊದ್ಲು ನೀವು ನಂಗೆ ಇದಾರ ಏಳ್ಕೊಟ್ಟಿದ್ರೆ ಕಲ್ತ್ಕತ್ತಿದ್ದೆ ಕಣ್ರಿ. ನಾನು ನಿಮ್ಹಾಗೆ ಲೆಕ್ಕ ಗಿಕ್ಕ ಬರೀಭೌದಾಗಿತ್ತು’- ಎಂದಳು. +‘ಲೆಕ್ಕ ಬರಿಯುಕ್ಕೆ ಎಲ್ಲರಿಗೂ ಶ್ಯಾನುಭೋಗಿಕೆ ಎಲ್ಲಿರುತ್ತೆ ಸರ್ವಕ್ಕ?’ +‘ಅದೂ ನಿಜ ಅನ್ನಿ.’ +ದಿನವೂ ಬೆಳಗಿನಿಂದ ಸಂಜೆಯತನಕ ಮನೆಗೆಲಸ ಶ್ಯಾನುಭೋಗಿಕೆಯ ಲೆಕ್ಕಗಳಾಗುತ್ತಿದ್ದವು. ಒಂದೊಂದು ದಿನ ಇಳಿಮಧ್ಯಾಹ್ನದ ಹೊತ್ತು ಮಾದೇವಯ್ಯನವರು ಬಂದು ಕೂತು ಏನಾದರೂ ಮಾತನಾಡುತ್ತಿದ್ದರು. ರಾತ್ರಿಯ ಎಂಟೂವರೆ ಒಂಬತ್ತರ ತನಕ ಕ್ಲಾಸು ನಡೆಯುತ್ತಿತ್ತು. ಆಮೇಲೆ ಊಟಮಾಡಿ ಮಲಗಿದರೆ ಬೇಗ ನಿದ್ದೆ ಬರುತ್ತಿತ್ತು. ಅದೊಂದು ಉಪಯೋಗ. ಪಾಠ ಹೇಳುವಾಗ ಅವಳಿಗೆ ವಿಶ್ವನ ನೆನಪು ಬರುವುದು. ಈಗ ಅವನು ಹೇಗಿದ್ದಾನೋ! ಅಮ್ಮನನ್ನು ನೆನೆಸಿಕೊಂಡು ಅಳಬಹುದು. ಅಕ್ಕಮ್ಮ ಇರುವ ತನಕ ಯೋಚನೆ ಇಲ್ಲ. ಅವಳು ಮನಸ್ಸು ನೋಯಿಸುವುದಿಲ್ಲ. +ಕ್ಲಾಸು ಎರಡು ಮೂರು ತಿಂಗಳು ನಡೆಯಿತು. ಸೇರಿದವರಲ್ಲಿ ಆರು ಜನ ಬಿಟ್ಟು ಈಗ ಎಂಟು ಜನ ಮಾತ್ರ ಬರುತ್ತಿದ್ದಾರೆ. ‘ಅವರು ಬಿಟ್ಟರೂ ನೀವು ಅಟೆಂಡನ್ಸ್ ರಿಜಿಸ್ಟರಿನಲ್ಲಿ ಮಾತ್ರ ಎಲ್ಲರಿಗೂ ಪ್ರಸಂಟ್ ಹಾಕ್ಕೊಂಡು ಬನ್ನಿ’-ಎಂದು ಮೇಷ್ಟರು ಹೇಳಿದ್ದರು. ಮೇಷ್ಟರ ಗಂಡಸರ ರಾತ್ರಿ ಸ್ಕೂಲೇ ಉತ್ತಮವಾಗಿತ್ತು. ಒಟ್ಟು ಸೇರಿದ್ದ ಇಪ್ಪತ್ತೆರಡು ಜನ ದಲ್ಲಿ ಇಪ್ಪತ್ತು ಜನ ತಪ್ಪದೆ ಹೋಗುತ್ತಿದ್ದರು. +ಒಂದು ದಿನ ಮನೆಯಲ್ಲಿ ಚೆನ್ನಿಗರಾಯರು ಇರಲಿಲ್ಲ. ಮೇಷ್ಟರು ಬಂದರು. ಅವರ ರಾತ್ರಿ ಸ್ಕೂಲಿನ ವಿಷಯ ಹೇಳುತ್ತಿದ್ದರು: ‘ಇಷ್ಟು ವಯಸ್ಸಾದ್ರೂ ನಾಲ್ಕು ದಿನ ಹೇಳಿಕೊಟ್ರೂ ಅಕ್ಷರಾನೇ ಜ್ಞಾಪಕದಲ್ಲಿ ಇಟ್ಕಳುಲ್ಲ. ಅವರ ಜ್ಞಾನ ಎತ್ತಲೋ ಇರುತ್ತೆ. ಸ್ಕೂಲಿನೊಳಗೆ ಬೀಡಿ ಸೇದ್‌ಕೂಡ್ದು ಅಂದ್ರೂ ಬಿಡುಲ್ಲ. ಈ ಜನ ಹ್ಯಾಗೆ ಅಕ್ಷರಸ್ಥರಾಗ್ತಾರೆಯೋ ದೇವರಿಗೇ ಗೊತ್ತು.’ +‘ಮೇಷ್ಟರೇ, ನಮ್ಮ ಅಪ್ಪಣ್ಣಯ್ಯ ನಾಳೆ ಸಾರು ತಗಂಡುಹೋಗೂಕೆ ಬಂದಾಗ ಹೇಳ್ತೀನಿ. ಅವ್ನುನ್ನೂ ನಿಮ್ಮ ರಾತ್ರಿ ಸ್ಕೂಲಿಗೆ ಸೇರಿಸ್ಕಳಿ. ಹಗಲು ಹೊತ್ತೂ ಅವರು ಊರಲ್ಲಿದ್ದ ದಿನ ನೀವು ಒಂದಿಷ್ಟು ಹೇಳಿಕೊಡಿ. ಸ್ವಲ್ಪನಾದ್ರೂ ವಿದ್ಯವಿದ್ರೆ ಅವರ ಪಾಡು ಹೀಗಾಗ್ತಾ ಇರ್‌ಲಿಲ್ಲ.’ +‘ಓ, ಅಪ್ಪಣ್ಣಯ್ಯನೋರು ಬೇರೆ ರಾತ್ರಿ ಸ್ಕೂಲಿಗೆ ಹೋಗ್ತಿದಾರೆ’- ಎಂದು ಅವರು ನಕ್ಕರು. +‘ಏನು ಸಮಾಚಾರ?’ +‘ಈಗ ಅವರಿಗೂ ನರಸಿಗೂ ಸ್ನೇಹವಂತೆ.’ +ನಂಜಮ್ಮ ಇದನ್ನು ನಂಬದಾದಳು. ಅಪ್ಪಣ್ಣಯ್ಯನ ಹತ್ತಿರ ದುಡ್ಡು ದುಗ್ಗಾಣಿ ಇದೆ? ಶೋಕೀದಾರನೆ? ದೇಶಾವರಿಯಲ್ಲಿ ರಾಗಿ ಕಾಳು ತಂದು ಮುದ್ದೆ ತೊಳಸಿ ತಿನ್ನುವ ಬ್ರಾಹ್ಮಣ. ಬೇರೆ ಹೆಂಗಸರನ್ನು ಹಾಗೆಲ್ಲ ಕತ್ತೆತ್ತಿ ನೋಡುವ ಸ್ವಭಾವವೂ ಅಲ್ಲ. +‘ಇದೆಲ್ಲೋ ಸುಳ್ಳು ಸಮಾಚಾರ ಇರ್‌ಭೌದು ಮೇಷ್ಟ್ರೆ’-ನಂಜಮ್ಮ ತನಗೆ ಎನ್ನಿಸಿದುದನ್ನು ಹೇಳಿದಳು. +‘ಇಲ್ಲ ನಿಜವಂತೆ. ಈಗ ಅವಳನ್ನೂ ಮೂಸೋರು ಯಾರೂ ಇಲ್ಲ. ಅವಳಿಗೇನು ದುಡ್ಡಿಗೆ ತಾಪತ್ರಯವಿಲ್ಲ. ಅಪ್ಪಣ್ಣಯ್ನೋರಿಗೂ ಯಾರು ಜೊತೆ? ಹೆಂಡತಿಯೇ, ಮಕ್ಕಳೇ, ತಾಯಿಯೇ? ಅಲ್ಲಿ ತಿರುಪೆ ಮಾಡಿ ಇಲ್ಲಿ ತಂದು ಬೇಯಿಸ್ಕಂಡ್ ತಿಂತಾರೆ. ಹ್ಯಾಗೆ ಬೆಳೀತೋ ಸಂಬಂಧ, ದೇವರಿಗೇ ಗೊತ್ತು.’ +ನಂಜಮ್ಮನಿಗೆ ಯಾಕೋ ನಾಚಿಕೆಯಾದಂತೆ ಆಯಿತು. ಎಷ್ಟಾದರೂ ಅವರು ತನ್ನ ಮನೆಯವರೇ. ತನಗೆ ಮೈದುನನಾಗಬೇಕು. ತಿರುಪೆ ಮಾಡಿ ಜೀವಿಸುವುದು ಅವರ ಹಣೇಲಿ ಬರೆದಿರಬಹುದು. ಆದರೆ ಇಷ್ಟು ದಿನವಾದಮೇಲೆ ಈ ಪ್ರಾರಬ್ಧ ಯಾಕೆ ಅಂಟಬೇಕು? ಅವರೊಬ್ಬರು ದೇಶಾವರಿಗೆ ಹೋಗದೆ ತನ್ನ ಮನೆಯಲ್ಲೇ ಊಟ ಮಾಡಿಕೊಂಡಿರಲಿ. ಇರುವ ಎರಡು ಹಸುಗಳ ನಿಗ ನೋಡಿಕೊಂಡಿದ್ದರೆ ಸಾಕು-ಎಂಬ ಯೋಚನೆ ಅವಳಿಗೆ ಕೆಲವು ದಿನದಿಂದ ಬಂದಿತ್ತು. ಆದರೆ ಹಾಗೆ ಹೇಳಿದರೆ ಅತ್ತೆ ಗಂಗಮ್ಮ ಜಗಳ ತೆಗೆಯುತ್ತಾರೆ. ಸಲ್ಲದ ಅಪಪ್ರಚಾರವನ್ನೂ ಮಾಡಬಹುದು. ಅಲ್ಲದೆ ಅಪ್ಪಣ್ಣಯ್ಯವ ಸ್ವಭಾವವೂ ಒಂದು ತೆರನಾಗಿರುವುದಿಲ್ಲ. ದೇಶಾವರಿ ಸಂಚಾರ ಮಾಡದಿದ್ದರೆ ಅವರ ಕಾಲು ಕಡಿಯುತ್ತಿರುತ್ತೆ. ಅವರವರ ಹಣೆಯಲ್ಲಿ ಬರೆದದ್ದು ಅವರವರಿಗೆ-ಎಂದು ಸುಮ್ಮನಾಗಿದ್ದಳು. ಆದರೆ ಮೇಷ್ಟರು ಈಗ ಹೇಳುವುದನ್ನು ಕೇಳಿದ ಮೇಲೆ ಮನಸ್ಸು ತಡೆಯಲಿಲ್ಲ. +ಅಪ್ಪಣ್ಣಯ್ಯನಿಗೆ ಈ ವಿಷಯದಲ್ಲಿ ಬುದ್ಧಿ ಮಾತು ಹೇಳಲೇ ಎಂದು ಅವಳು ನಾಲ್ಕು ದಿನ ಅಳೆದು ಸುರಿದು ನೋಡಿದಳು. ಕೊನೆಗೆ ಮನಸ್ಸು ತಡೆಯಲಿಲ್ಲ. ಒಂದು ಮಧ್ಯಾಹ್ನ ಅವನು ಸಾರಿನ ಪಾತ್ರೆ ಹಿಡಿದು ಬಂದಾಗ ಚೆನ್ನಿಗರಾಯರು ಮನೆಯಲ್ಲಿರಲಿಲ್ಲ. ಅವಳೇ-‘ಅಪ್ಪಣ್ಣಯ್ಯ, ಒಂದು ಮಾತು ಕೇಳ್ತೀನಿ. ನೀವು ಏನೂ ತಿಳ್ಕಕೂಡ್ದು’ ಎಂದಳು. +‘ಏನ್ಹೇಳಿ.’ +‘ಜನದ ನಾಲಿಗೆಗೆ ಯಾವತ್ತೂ ಹಿಡಿತವಿಲ್ಲ. ನೀವು ನರಸಮ್ಮನ ಅಂಗ್‌ಡೀಲಿ ಹೊಗೆಸೊಪ್ಪು ಕೊಂಡ್ಕಳುಕ್ಕೆ ಹೋಗೋದುನ್ನೇ ನೆವ ಮಾಡ್ಕಂಡು ಏನೇನೋ ಅಂತಾರೆ. ನೀವು ಬೇರೆ ಅಂಗಡೀಲಿ ಹೊಗೆಸೊಪ್ಪು ಕೊಂಡ್ಕೊಂಡ್ರೆ ಆಗುಲ್ವೆ? ಸುಮ್‌ಸುಮ್ನೆ ಯಾಕೆ ಜನದ ನಾಲಿಗೆಗೆ ಸಿಕ್ಕಾಬೇಕು? +‘ಅವುರವ್ವನಾ, ಅದ್ಯಾವ್‌ನು ಹಾಗಂದೋನು?’ +‘ಯಾರಾದ್‌ರೂ ಆಕ್ಕಳ್ಲಿ. ನಮ್ಮ ಎಚ್ಚರ ನಮಗಿದ್ರೆ ಒಳ್ಳೇದಲ್ವೆ?’ +ಅಪ್ಪಣ್ಣಯ್ಯ ಮತ್ತೆ ಮಾತನಾಡಲಿಲ್ಲ. ಹುಳಿ ಇಸಿದುಕೊಂಡು ಹೋದ. ಆದರೆ ಮರುದಿನ ಸಾರಿಗೆ ಬರಲಿಲ್ಲ. ದಿನವೂ ಹೆಚ್ಚಾಗಿ ಮಾಡಿಟ್ಟು ಒಟ್ಟು ಎಂಟು ದಿನ ದಂಡವಾದಮೇಲೆ ನಂಜಮ್ಮ ಕಡಿಮೆ ಮಾಡಲು ಶುರುಮಾಡಿದಳು. ತಾನು ಯಾಕಾದರೂ ಹಾಗೆ ಕೇಳಿದೆನೋ, ತನ್ನ ಮೇಲಿನ ಸಿಟ್ಟಿಗೋ ಅಥವಾ ನಾಚಿಕೆಗೋ ಅವನು ಬಂದಿಲ್ಲ. ಗಂಡಸು ಒಬ್ಬನೇ ಹಿಟ್ಟು ತೊಳೆಸಿಕೊಳ್ಳುವುದರ ಜೊತೆಗೆ ಬೇಳೆಯನ್ನೂ ಬೇಯಿಸುವುದೆಂದರೆ ಎಷ್ಟು ತಾಪತ್ರಯ! ಅವರವರ ಕರ್ಮ. ಏನಾದರೂ ಮಾಡಿಕೊಂಡಿರಲಿ ಎಂದು ಯೋಚಿಸುತ್ತಿದ್ದಾಗ ತಿಳಿಯಿತು: ಅಪ್ಪಣ್ಣಯ್ಯ ಊರಿನಲ್ಲೇ ಇರಲಿಲ್ಲ. ಆ ಸಲ ಅವನು ಊರು ಬಿಟ್ಟು ಹೋದವನು ಮತ್ತೆ ಮೂರು ತಿಂಗಳು ಹಿಂತಿರುಗಲಿಲ್ಲ. +ಅವನು ನಾಲೆಬಯಲು ಸೀಮೆಗೆ ಒಬ್ಬನೇ ಹೋಗಿದ್ದನಂತೆ. ಹಿಂತಿರುಗಿ ಬಂದವನು ಅತ್ತಿಗೆಗೆ ಒಂದು ಪಲ್ಲ ಬತ್ತ ತಂದುಕೊಟ್ಟ. ಆಮೇಲೆ ದಿನವೂ ಸಾರು ತೆಗೆದುಕೊಂಡು ಹೋಗುತ್ತಿದ್ದ. +ಇನ್ನೊಂದು ದಿನ ಮೇಷ್ಟರೇ ಹೇಳಿದರು: ‘ಈಗ ಅಪ್ಪಣ್ಣಯ್ಯನೋರು ಆ ಕಡೆ ಹೋಗೂದಿಲ್ವಂತೆ. ನಾಲೆಬಯಲಿಗೆ ಹೋಗಿ ಬಂದಮೇಲೆ ಅವಳ ಅಂಗಡಿ ಮುಂದೆ ತಿರುಗಾಡೂದೂ ಇಲ್ವಂತೆ.’ +– ೩ – +ಸೋದರ ಮಾವನೆಂದರೆ ವಿಶ್ವನಿಗೆ ಒಳಗೇ ಭಯ. ಕಲ್ಲೇಶನೇನೋ ಅವನ ಬಗೆಗೆ ಅಸಡ್ಡೆ ಮಾಡುತ್ತಿರಲಿಲ್ಲ. ಸಂತೆಯ ದಿನ ಕಡಲೆಪುರಿ, ಖಾರಶೇವು, ಬತ್ತಾಸು, ತಂದುಕೊಡುತ್ತಿದ್ದ. ತನ್ನ ಜೊತೆ ಹೊಲಗದ್ದೆಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ತುಂಟಾಟ ಮಾಡಿದಾಗ ಅವನು ಗದ್ದರಿಸಿಕೊಂಡು ಕಣ್ಣು ತಿರುಗಿಸುತ್ತಿದ್ದ ರೀತಿಗೇ ಹುಡುಗ ಬೆವರುತ್ತಿದ್ದ. ಒಂದು ದಿನ, ಸ್ಕೂಲಿನಲ್ಲಿ ಇನ್ನೊಬ್ಬ ಹುಡುಗನ ಕೂಡ ಜಗಳಕಾಯ್ದನೆಂದು ಕಲ್ಲೇಶ ಅವನ ಕಪಾಳಕ್ಕೆ ಹೊಡೆದುಬಿಟ್ಟ. ಏಟಿನ ಜೋರಿಗೆ ಅವನು ಕಳಲಿ ಬಿದ್ದುದೇ ಅಲ್ಲ, ಚಡ್ಡಿಯ ಒಳಗೇ ಉಚ್ಚೆ ಹುಯ್ದುಕೊಂಡ. ಅಕ್ಕಮ್ಮ ಕಲ್ಲೇಶನನ್ನು ಬೈದು ಮಗುವನ್ನು ಎತ್ತಿ ಹತ್ತಿರ ಕೂರಿಸಿಕೊಂಡು ಸಮಾಧಾನ ಮಾಡಿದಳು. +ಕಮಲುವಿಗೆ ವಿಶ್ವನ ಬಗೆಗೆ ಸ್ವಲ್ಪವೂ ಸಹಾನುಭೂತಿ ಇಲ್ಲ. ಅವನು ಕೂತರೆ, ನಿಂತರೆ, ಮಾತನಾಡಿದರೆ ಅವಳಿಗೆ ತಪ್ಪು ಕಾಣುತ್ತಿತ್ತು. ಆದರೆ ಅಕ್ಕಮ್ಮ ಮತ್ತು ಗಂಡನ ಭಯಕ್ಕೆ ಅವಳು ಅವನನ್ನು ಬೈದು ಹೊಡೆದು ಮಾಡದೆ ಸುಮ್ಮನಿರುತ್ತಿದ್ದಳು. ‘ಈ ಮುಂಡೇದು ಬ್ಯಾರೆ ಒಂದು ಬಂತು ನಮ್ಮನೆ ಕೂಳು ತಿನ್ನೂಕೆ’-ಎಂದು ಪಿಟ ಪಿಟ ಬೈದುಕೊಳ್ಳುತ್ತಿದ್ದಳು. +ಈಗ ಹುಡುಗ ಮೊದಲಿನಷ್ಟು ಸುಟಿಯಾಗಿಲ್ಲ. ಸ್ಕೂಲಿನಲ್ಲಿ ಓದುವುದರಲ್ಲೂ ತನ್ನ ಊರಿನಲ್ಲಿದ್ದಾಗಿನಷ್ಟು ಜಾಣನೆನಿಸಲಿಲ್ಲ. ‘ಸರಿಯಾದ ಭಯವಿಲ್ಲದೆ ಇವನು ದಡ್ಡನಾಗಿದಾನೆ’ -ಎಂದು ಕಲ್ಲೇಶ ಶಿಸ್ತನ್ನು ಮಾಡಿದ. ಆದರೂ ಅವನು ದಿನೇ ದಿನೇ ದಡ್ಡನೇ ಎನಿಸಿಕೊಳ್ಳುತ್ತಿದ್ದ. ಕಲ್ಲೇಶ ಪಾಠ ಹೇಳಿಕೊಡಲು ಕೂತರೆ, ಸಾಯುವ ಆಡಿನಂತೆ ಕಣ್ಣು ಬಿಟ್ಟುಕೊಂಡು, ಅವನ ಕೈ ಯಾವಾಗ ತನ್ನ ಮೇಲೆ ಬೀಳುವುದೋ ಎಂದು ಕಿರುಗಣ್ಣಿನಿಂದ ನೋಡಿಕೊಳ್ಳುವುದರಲ್ಲೇ ಅವನ ಗಮನವೆಲ್ಲ ಹೋಗುತ್ತಿತ್ತು. ಅಕ್ಕಮ್ಮ ಅಕ್ಷರವನ್ನರಿಯಳು. ತಂಗಿಯ ಮಗನನ್ನು ಹಿಡಿತದಲ್ಲಿಟ್ಟಿದ್ದೇನೆಂಬ ತೃಪ್ತಿ ಮಾತ್ರ ಕಲ್ಲೇಶನಿಗಿತ್ತು. +ನಾಗಲಾಪುರದ ಕೆರೆ ರಾಮಸಂದ್ರದ್ದಕ್ಕಿಂತ ದೊಡ್ಡದು. ಊರ ಕಡೆಯ ಭಾಗದಲ್ಲಿ ನೀರಿನ ಮಧ್ಯ ಮಧ್ಯ ಬೇಕಾದಷ್ಟು ಬಂಡೆಗಲ್ಲುಗಳು. ಈಜಿ ಹೋಗಿ ಆ ಬಂಡೆಗಳ ಮೇಲೆಲ್ಲ ಕೂತು ಮೈನೀರು ಒಣಗುವ ತನಕ ಬಿಸಿಲು ಕಾಯಿಸಿ ಮತ್ತೆ ನೀರಿಗೆ ಬೀಳಬೇಕೆಂದು ವಿಶ್ವನಿಗೆ ಇನ್ನಿಲದ ಆಶೆ. ಆದರೆ ನೀರಿಗೆ ಇಳಿಯಕೂಡದೆಂದು ಮಾವನ ಕಟ್ಟಾಜ್ಞೆಯಾಗಿದೆ. ಅದನ್ನು ನೆನೆಸಿಕೊಂಡಾಗಲೆಲ್ಲ ಅವನು ಅತ್ತು ಕಣ್ಣೀರು ಹಾಕುತ್ತಿದ್ದ. ಈ ಊರಿನಲ್ಲಿ ಜೇನು ಬಿಚ್ಚುವಂತಿಲ್ಲ. ಮರ ಹತ್ತುವಂತಿಲ್ಲ. ತನ್ನ ಊರಿಗೆ ಓಡಿಹೋಗಿಬಿಡಲೇ ಎಂಬ ಯೋಚನೆ ಬರುತ್ತಿತ್ತು. ಆದರೆ ಅಮ್ಮ ತನ್ನನ್ನು ಹಿಡಿದು ತಂದು ಮತ್ತೆ ಇಲ್ಲಿಗೇ ಒಪ್ಪಿಸುತ್ತಾಳೆಂಬ ಭಯವೂ ಆಗುತ್ತಿತ್ತು. ಅಮ್ಮನನ್ನು ಮನಸ್ಸಿನಲ್ಲೇ ಬೈದುಕೊಳ್ಳುತ್ತಿದ್ದ. +ಒಂದು ದಿನ ಬೆಳಿಗ್ಗೆ ಅವನು ಎದ್ದು ಸ್ಲೇಟು ಪುಸ್ತಕ ಹಿಡಿದು ಸ್ಕೂಲಿಗೆ ಹೋಗುತ್ತಿದ್ದ. ಎಷ್ಟೋ ಜನ ಹುಡುಗರು ದೊಡ್ಡವರೆಲ್ಲ ಗುಂಪು ಕಟ್ಟಿಕೊಂಡು ಇವನ ಸ್ಕೂಲಿನ ಕಡೇಗೆ ಹೋಗುತ್ತಿದ್ದಾರೆ. ಗುಂಪಿನ ಮುಂಭಾಗದಲ್ಲಿರುವವರು ಬಿಳಿಯ ಅಂಗಿ, ಬಿಳಿಯ ಟೋಪಿ ಹಾಕಿದ್ದಾರೆ. ಅವರ ಕೈಲಿ ಒಂದು ಬಾವುಟ. ಮುಂಭಾಗದಲ್ಲಿ ಬಾವುಟ ಹಿಡಿದು ಹೋಗುತ್ತಿದ್ದವರು ಬಾಯಿಗೆ ಅದೆಂಥದೋ ಇಟ್ಟುಕೊಂಡು- ‘ಬೋಲೋ ಭಾರತ ಮಾತಾಕೀ’ ಎಂದು ಕೂಗುತ್ತಾರೆ. ಅದು ಗಟ್ಟಿಯಾಗಿ ಕೇಳುತ್ತದೆ. ಹಿಂದಿದ್ದ ಜನವೆಲ್ಲ-‘ಜೈ’ ಎನ್ನುತ್ತಾರೆ. ‘ಮಹಾತ್ಮಾ ಗಾಂಧೀಕೀ’-ಎಂದು ಅವರು ಕೂಗುತ್ತಾರೆ. ಇವರು-‘ಜೈ’ ಎನ್ನುತ್ತಾರೆ. ಅವರು ಇನ್ನೂ ಏನೇನೋ ‘ಕೀ’ ಎಂದರೆ ಇವರೆಲ್ಲ ಎಂದು ಒಟ್ಟಿಗೆ, ಜಾತ್ರೆಯ ದಿನ ತೇರು ಎಳೆಯುವಾಗ ಹರಹರ ಮಹಾದೇವ ಎನ್ನುವಂತೆ ಕೂಗುತ್ತಾರೆ. ವಿಶ್ವನಿಗೆ ಒಳ್ಳೆಯ ಮಜವೆನಿಸಿತು. ನಾಲ್ಕು ಸಲ ಕೇಳಿದ್ದಕ್ಕೆ ಮುಂದಿನವರು ಕೂಗುವುದೆಲ್ಲ ಅವನಿಗೂ ಬಂದಿತು. ಅವರು ನಿಲ್ಲಿಸಿದ ತಕ್ಷಣ ಇವನೇ-‘ಬೋಲೋ ಭಾರತ ಮಾತಾಕೀ’ ಎಂದ. ಎಲ್ಲರೂ ‘ಜೈ’ ಎಂದರು. ಇವನು ಮುಂದಿನ ಏಳೆಂಟು ‘ಕೀ’ಗಳನ್ನೂ ಕೂಗಿದ. ಎಲ್ಲದಕ್ಕೂ ಜೈ ಎಂದರು. ಮುಂದಿದ್ದವರು ಇವನ ಬೆನ್ನು ತಟ್ಟಿ, ‘ಜಾಣ ಮರಿ, ನೀನೇ ಕೂಗು ಬಾ. ಈ ಬಾವುಟ ಹಿಡ್‌ಕೊ’ ಎಂದು ಇವನ ಕೈಲೇ ಕೊಟ್ಟರು. ಇವನ ಬಾಯಿಯ ಮುಂದೆ ಅವರೇ ಅದನ್ನು ಹಿಡಿದರು. ಎಲ್ಲರ ಮುಂದಾಳೂ ಇವನೇ. ಬಲು ಮಜವೆನಿಸಿತು. +ಗುಂಪು ಇವನ ಸ್ಕೂಲಿನ ಹತ್ತಿರಕ್ಕೆ ಹೋಯಿತು. ಎದುರಿನ ಮೈದಾನದಲ್ಲಿ ಎಲ್ಲರೂ ಕೂತರು. ಇವನಿಗೆ ಬಾವುಟ ಕೊಟ್ಟವರು ನಿಂತುಕೊಂಡರು. ಇನ್ನೊಬ್ಬರು ಅವರ ಬಾಯಿಯ ಮುಂದೆ ಅದನ್ನು ಹಿಡಿದು ನಿಂತರು. ಅದರಿಂದ ಒಂದು ತಂತಿ ಹಾಕಿ ಹತ್ತಿರದಲ್ಲೇ ಒಂದು ಮೇಜಿನ ಮೇಲೆ ಅಗಲವಾದ ಕಹಳೆಯಂತಹ ಒಂದು ಏನನ್ನೋ ಇಟ್ಟರು. ಅವರು ಮಾತನಾಡಲು ಶುರುಮಾಡಿದರು: ‘ಸೋದರರೇ ಸೋದರಿಯರೇ, ಈಗ ನಮ್ಮ ದೇಶ ಕೆಂಪು ಕೋತಿಗಳ ಕೈಗೆ ಸಿಕ್ಕಿದೆ. ಅವರು ನಮ್ಮ ಚಿನ್ನ ಬೆಳ್ಳಿಯನ್ನೆಲ್ಲ ಲೂಟಿಹೊಡೆಯುತ್ತಿದ್ದಾರೆ. ನಮ್ಮ ತಾಯಿಯನ್ನು ಸ್ವತಂತ್ರಮಾಡಲು ನಾವೆಲ್ಲ ಸಿದ್ಧರಾಗಬೇಕು. ಈಗ ನಾವೆಲ್ಲ ಯುದ್ಧಕ್ಕೆ ನಿಂತ ಸಿಪಾಯಿಗಳು…..’ +ಅವರು ಮಾತನಾಡುವುದು ತುಂಬ ಗಟ್ಟಿಯಾಗಿ ಕೇಳುತ್ತಿದೆ. ಅದಕ್ಕೆ ಲೌಡ್ ಸ್ಪೀಕರ್ ಎನ್ನುತ್ತಾರಂತೆ. ಇನ್ನೂ ಎರಡು ಮೂರು ಜನ ಮಾತನಾಡಿದರು. ಕೊನೆಗೆ ಹೇಳಿದವರು- ‘ಇವತ್ತು ಶನಿವಾರ. ಮಧ್ಯಾಹ್ನ ಚನ್ನರಾಯಪಟ್ಟಣದಲ್ಲಿ ಸಂತೆ ಸೇರುತ್ತೆ. ಅಲ್ಲಿ ಭಾರೀ ಸಭೆಯಾಗುತ್ತೆ. ನೀವೆಲ್ಲ ಅಲ್ಲಿಗೆ ಬರಬೇಕು. ದೇಶಭಕ್ತಿ ತೋರಿಸಬೇಕು’ ಎಂದರು. ಎಷ್ಟೋ ಜನ ಅವರೊಡನೆ ಹೊರಟರು. ವಿಶ್ವನಿಗೂ ಹೋಗಬೇಕೆಂಬ ಆಶೆಯಾಯಿತು. ತನಗೆ ಬಾವುಟ ಕೊಟ್ಟವರ ಹತ್ತಿರ ಹೋಗಿ, ‘ನಾನೂ ಬತ್ತೀನಿ ಕಣ್ರೀ’ ಅಂದ. +‘ಎಂಟು ಮೈಲಿ ನಡೀತೀಯಾ ಮರಿ?’ ಅವರು ಕೇಳಿದರು. +‘ಓ, ನಾನು ಶೃಂಗೇರಿಗೆ ನಡೆದಿದೀನಿ.’ +ಸರಿ. ಗುಂಪು ಹೊರಟಿತು. ಇವನೂ ಹೊರಟ. ದಾರಿಯಲ್ಲಿ ಮರಳಹಳ್ಳ, ಈಚಲವನ, ಆಲದತೋಪು, ಕಾರೆಗುಚ್ಚಿ, ಇನ್ನೂ ಏನೇನೋ. ಶೃಂಗೇರಿಯ ದಾರಿಯ ಹಾಗೆ ಇಲ್ಲಿ ಕಾಡಿಲ್ಲ. ಆದರೂ ಮಜವಾಗಿದೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಎಲ್ಲರೂ ಚೆನ್ನರಾಯಪಟ್ಟಣ ಸೇರಿದರು. ಅಷ್ಟು ಹೊತ್ತಿಗೆ ಅವನಿಗೆಹೊಟ್ಟೆ ಹಸಿದು ಸುಸ್ತಾಗಿತ್ತು. ‘ನಂಗೆ ಹ್ವಟ್ಟೆ ಹಸಿಯುತ್ತೆ ಕಣ್ರೀ’-ಎಂದು ಅವರನ್ನು ಕೇಳಿದ. ‘ಎಲ್ರಿಗೂ ಊಟಕ್ಕೆ ಇಕ್ತಾರೆ ಬಾ’-ಎಂದು ಅವರು ಕೈಹಿಡಿದು ಕರೆದೊಯ್ದರು. ಒಂದು ಕಡೆ ದೊಡ್ಡ ದೊಡ್ಡ ತಪ್ಪಲೆ ಕೊಳದಪ್ಪಲೆ ಇಟ್ಟು ಅಡಿಗೆ ಮಾಡಿದ್ದರು. ಶೃಂಗೇರಿಯಲ್ಲಿ ಬಡಿಸಿದ ಹಾಗೆಯೇ ಸಮಾರಾಧನೆಯಾಯಿತು. ಆಮೇಲೆ ಎಲ್ಲರೂ ಸಂತೆಯ ಮೈದಾನಕ್ಕೆ ಹೋದರೆ ಜನವೋ ಜನ. ಅವನು ಅಷ್ಟು ಜನವನ್ನು ಶೃಂಗೇರಿಯಲ್ಲೂ ನೋಡಿರಲಿಲ್ಲ. ರಾಮಸಂದ್ರದ ಅಮ್ಮನ ಜಾತ್ರೆಯಲ್ಲೂ ನೋಡಿರಲಿಲ್ಲ. ನಾಗಲಾಪುರದ ಸಂತೆಯಲ್ಲೂ ಇಲ್ಲ. ಮೈದಾನದ ಮಧ್ಯೆ ಎರಡಾಳೆತ್ತರದ ಅಟ್ಟಣೆ ಕಟ್ಟಿ ಅದರ ಮೇಲೆ ಲೌಡ್‌ಸ್ಪೀಕರ್ ಇಟ್ಟಿದ್ದಾರೆ. +ವಿಶ್ವನಿಗೆ ಬಾವುಟ ಕೊಟ್ತು ಕರೆದುಕೊಂಡು ಬಂದವರು ಹೊಳೇನರಸಿಪುರದವರಂತೆ. ಅವರು ಇವನನ್ನು ಕೇಳಿದರು: ‘ಮರಿ, ನೀನೂ ಭಾಷಣ ಮಾಡ್ತೀಯಾ?’ +‘ಹಾಗಂದ್ರೇನ್ರೀ?’ +‘ನಾಗಲಾಪುರದಲ್ಲಿ ನಾನು ನಿಂತ್ಕಂಡು ಮಾತಾಡಿದ್ನಲಾ, ಹಾಗೆ.’ +‘ಓ, ಮಾಡ್ತೀನಿ.’ +‘ಏನೇನ್ ಮಾತಾಡಬೇಕು ಅಂತ ನಾನು ಹೇಳ್‌ಕೊಡ್ತೀನಿ.’ +‘ನೀವು ಮಾತಾಡಿದ್ದೆಲ್ಲ ನಂಗೆ ಗ್ಯಾಪಕವಿದೆ. ಅದುನ್ನೇ ಹೇಳ್ತೀನಿ: ಕೆಂಪು ಕೋತಿಗಳು ನಮ್ಮ ತಾಯೀನ ಜೈಲಿನಲ್ಲಿಟ್ಟಿದ್ದಾರೆ ಅಂತ.’ +‘ರೈಟ್. ನಾನು ಇನ್ನೂ ಹೇಳ್ಕೊಡ್ತೀನಿ ತಡಿ’- ಎಂದು ಅವರು ಏನೇನೋ ಹೇಳಿಕೊಟ್ಟರು. +ಸಭೆ ಶುರುವಾಗುವ ಮೊದಲು ಒಬ್ಬರು ಅಟ್ತಣೆಗೆ ಹತ್ತಿ ಲೌಡ್‌ಸ್ಪೀಕರ್ ಮುಂದೆ ನಿಂತು ‘ವಂದೇ ಮಾತರಂ’ ಅಂತ ಚನ್ನಾಗಿ ಹಾಡು ಹೇಳಿದರು. ಆಮೆಲೆ- ‘ಈಗ ಮೊದಲು ಭಾರತ ಮಾತೆಯ ಒಬ್ಬ ಕಿಶೋರ ಭಾಷಣಮಾಡ್ತಾನೆ. ಅವನ ಮಾತಿನಿಂದ ನಾವೆಲ್ಲ ಸ್ಪೂರ್ತಿ ಪಡೆಯಬೇಕು’ ಎಂದು ಹೇಳಿ ಪಕ್ಕಕ್ಕೆ ನಿಂತುಕೊಂಡರು. ಹೊಳೆನರಸೀಪುರದವರು ವಿಶ್ವನನ್ನು ಮೇಲೆ ಹತ್ತಿಸಿದರು. ತಾವೂ ಹತ್ತಿ ಅವನನ್ನು ಮೈಕಿನ ಮುಂದೆ ನಿಲ್ಲಿಸಿದರು. ಅವನು ಎದುರಿಗಿದ್ದ ಜನಗಳನ್ನು ನೋಡುತ್ತಾನೆ: ಕೋಡಿ ಹರಿಯುವಂತೆ ಕೆರೆಯಲ್ಲಿ ನೀರು ತುಂಬಿರುವ ಹಾಗೆ ಸೇರಿಬಿಟ್ಟಿದ್ದಾರೆ. ಅವನಿಗೆ ಹೆದರಿಕೆಯಾಯಿತು. ಮುಖ ಕೆಂಪಗಾಯಿತು. ಅವನ ಜೊತೆ ಬಂದವರು-‘ಬೋಲೋ ಭಾರತ ಮಾತಾಕೀ ಅನ್ನು’ ಎಂದು ಮೆಲ್ಲನೆ ಹೇಳಿಕೊಟ್ಟರು. ವಿಶ್ವ ಅದನ್ನು ಕೂಗಿದ. ಎಲ, ಅವನು ಕೂಗಿದರೂ ಎಷ್ಟು ಗಟ್ಟಿಯಾಗಿ ಕೇಳುತ್ತೆ! ಲೌಡಿಸ್ಪೀಕರ್ ಅಂದ್ರೆ ಹ್ಯಾಗೆ ಮಾಡಿರ್ತಾರೆ? ಅದರೊಳ್ಗೆ ಎಂಥದಿಟ್ಟಿರ್ತಾರೆ? ಅಂಥದು ತಾನೂ ಒಂದು ಇಟ್ಕಾಬೇಕು. ಅಷ್ಟರಲ್ಲಿ ಜನರೆಲ್ಲ ‘ಜೈ’ ಎಂದದ್ದು , ಲೌಡ್‌ಸ್ಪೀಕರ್‌ನಲ್ಲಿ ಇವನ ಕೂಗಿಗಿಂತ ಗಟ್ಟಿಯಾಗಿ ಮೊಳಗಿತು. ಇವನು ತನಗೆ ಗೊತ್ತಿದ್ದ ಎಂಟು ಹತ್ತು ‘ಕೀ’ ಗಳನ್ನೂ ಕೂಗಿದ. ಎಲ್ಲಕ್ಕೂ ಜನರು ಜೈ ಎನ್ನುತ್ತಾರೆ. ‘ಈಗ ಮಾತು ಶುರು ಮಾಡು’-ಎಂದು ಅವರು ಹೇಳಿದರು. ತುಂಬಿದ ಕೆರೆಯಲ್ಲಿ ಈಜು ಬೀಳುವಂತೆ ಅವನು ಮಾತನಾಡಲು ಶುರುಮಾಡಿಯೇ ಬಿಟ್ಟ: ‘ಸೋದರರೇ, ಸೋದರಿಯರೇ, ನಿಮಗೆ ಗೊತ್ತಿದೆಯಲ, ನಮ್ಮ ಭಾರತ ಮಾತೆಯ ಕೈ ಕಾಲಿಗೆಲ್ಲ ಸರಪಣಿ ಹಾಕಿದಾರೆ. ನಾವೆಲ್ಲ ಗುಲಾಮರಾಗಿದೀವಿ. ಈ ಕೆಂಪು ಕೋತಿ ಸೂಳೇಮಕ್ಳು ನಮ್ಮ ಕಂದಾಯಾನೆಲ್ಲ ಬಾಚ್ಕಂಡು ಹೋಗ್ತಿದಾರೆ. ನೀವ್ಯಾರೂ ಕಂದಾಯ ಕೊಡಬ್ಯಾಡಿ. ನಮಗೆಲ್ಲ ಅವರು ಹೆಂಡ ಕುಡುಸ್ತಾರೆ.’ ಒಂದೇಸಮನೆ ಮಾತಾಡಿದ ಅವನು, ಅವರು ಹೇಳಿಕೊಟ್ಟದ್ದನ್ನೆಲ್ಲ ಆಡಿದುದೇ ಅಲ್ಲದೆ ಕೆಂಪುಕೋತಿಗಳ ಬಗೆಗೆ ಬೋಳೀಮಕ್ಕಳು, ಸೂಳೇಮಕ್ಕಳು ಎಂದು ಆ ಕ್ಷಣದಲ್ಲಿ ಬಾಯಿಗೆ ಬಂದದ್ದನ್ನೆಲ್ಲ ಸೇರಿಸಿದ. ಅವ್ವ, ಅಪ್ಪ ಎಂಬ ಬೈಗುಳಗಳನ್ನು ಆಡಬಾರದೆಂದು ಅವನು ಅದು ಹೇಗೋ ಅರ್ಥ ಮಾಡಿಕೊಂಡಿದ್ದ. ಭಾಷಣ ಮುಗಿದ ತಕ್ಷಣ, ಪಕ್ಕದಲ್ಲಿ ನಿಂತಿದ್ದವರು ಇವನ ಕೊರಳಿಗೆ ಸೇವಂತಿಗೆ ಹೂವಿನ ಒಂದು ಹಾರ ಹಾಕಿ- ‘ಭಾರತ ಮಾತಾಕೀ’ ಎಂದರು. ‘ಜೈ’ ಎಂದದ್ದೇ ಅಲ್ಲದೆ ಕೆರೆಯ ಕೋಡಿ ಮೊರೆಯುವಂತೆ ಒಂದೇ ಸಮನೆ ಚಪ್ಪಾಳೆ ತಟ್ಟಿದರು. ಇವನನ್ನು ಕೆಳಗೆ ಇಳಿಸಿದ ಮೇಲೆ ಇನ್ನೊಬ್ಬ ಹೊಸಬರು ಅಟ್ಟಣೆ ಹತ್ತಿ ಮಾತನಾಡಲು ಶುರುಮಾಡಿದರು. ಅವರ ಭಾಷಣವೆಂದರೇನು, ವಿಶ್ವನನ್ನು ಹೊಗಳಿದ್ದೂ ಹೊಗಳಿದ್ದೇ. ‘ಇಂಥಾ ಧೈರ್ಯಶಾಲಿಯಾದ ಹುಡುಗನಿಂದ ನಮಗೆಲ್ಲ ಸ್ಪೂರ್ತಿ ಬರಬೇಕು. ಈ ಹುಡುಗ ಹೇಗೆ ಸಿಂಹದ ಮರಿಯಂತೆ ನಿಂತು ಪರಕೀಯರನ್ನು ವಿರೋಧಿಸಿದಾನೆಯೋ ಹಾಗೆ ನೀವೆಲ್ಲ ವಿರೋಧಿಸಬೇಕು. ಈ ವರ್ಷ ನಿಮ್ಮಲ್ಲಿ ಯಾರೂ ಕಂದಾಯ ಕೊಡಕೂಡದು. ಪೋಲೀಸಿನವರು ಬಂದರೆ ಈ ಹುಡುಗನನ್ನು ಜ್ಞಾಪಿಸಿಕೊಳ್ಳಿ. ನಿಮಗೆ ಧೈರ್ಯ ಬರುತ್ತೆ’- ಎಂದು ಮುಂತಾಗಿ ಅವನಿಗೆ ಅರ್ಥವೇ ಆಗದಷ್ಟು ಏನೇನೋ ಮಾತನಾಡಿದರು. +ಅಷ್ಟರಲ್ಲಿ ಜನರು ಇದ್ದಕ್ಕಿದ್ದಹಾಗೆಯೇ ಎದ್ದು ಚದುರಲು ಮೊದಲಾಯಿತು. ಖಾಕಿ ಬಟ್ಟೆ ಹಾಕಿದ್ದ ಎಷ್ಟೋ ಜನ ಪೋಲೀಸಿನವರು, ಕೈಲಿ ಉದ್ದುದ್ದನೆಯ ಬಿದಿರುದಡಿಯಂತಹ ಕೋಲು ಹಿಡಿದು ಬಂದರು. ಬೆಳ್ಳನೆಯ ಟೋಪಿ ಹಾಕಿದ್ದವರನ್ನೆಲ್ಲ ಸುತ್ತುಗಟ್ಟಿ ಲೌಡ್‌ಸ್ಪೀಕರನ್ನು ತೆಗೆದಿಟ್ಟುಕೊಂಡರು. ಅವರಿಗೂ ಇವರಿಗೂ ಏನೇನೋ ಮಾತುಕತೆಯಾಯಿತು. ಕೊನೆಗೆ ಎಲ್ಲರನ್ನೂ ಕೂಡಿಸಿ ಪೋಲೀಸ್ ಸ್ಟೇಷನ್ನಿಗೆ ಎಳೆದೊಯ್ದರು. ಅವರಲ್ಲಿ ವಿಶ್ವನೂ ಇದ್ದ. ಎಲ್ಲರನ್ನೂ ಒಂದು ದೊಡ್ಡ ಕೋಣೆಯಲ್ಲಿ ತುಂಬಿ ಕಬ್ಬಿಣದ ಸಲಾಕಿಯ ಬಾಗಿಲು ಬೀಗ ಹಾಕಿ ಜಡಿದರು. ಒಳಗಿದ್ದವರು- ‘ಭಾರತ ಮಾತಾಕೀ ಜೈ’ ಎಂದು ಕೂಗುತ್ತಿದ್ದರು. ಕೆಲವರು ಏನೇನೋ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಇಂಗ್ಲಿಷ್‌ನಲ್ಲಿ ಆಡಿಕೊಳ್ಳುತ್ತಿದ್ದರು. ವಿಶ್ವನಿಗೆ ಯಾರ ಗುರುತೂ ಇಲ್ಲ. ಅವನನ್ನು ಕರೆದುಕೊಂಡುಬಂದು ಭಾಷಣ ಹೇಳಿಕೊಟ್ಟವರು ಅಲ್ಲಿಲ್ಲ. ಅವನಿಗೆ ಅಳು ಬಂದುಬಿಟ್ಟಿತು. ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ‘ಹೆದರಿಕೋಬ್ಯಾಡ ಕಣೋ ಮರಿ. ನಾವೆಲ್ಲ ಇಲ್ಲವೆ? ನೀನು ಜಾಣ’-ಎಂದು ಅವನ ಹತ್ತಿರ ಇದ್ದವರು ಸಮಾಧಾನ ಹೇಳಿ +ಬೆನ್ನಿನ ಮೆಲೆ ಕೈ ಆಡಿಸಿದರು. ಅವನು ಅಳುವನ್ನು ನಿಲ್ಲಿಸಿದ. ಆದರೂ ಭಯ. ಬೆಳಿಗ್ಗೆಯಿಂದ ನಡೆದುದೆಲ್ಲಾವನಿಗೆ ತುಂಬ ಮಜವೆನಿಸುತ್ತಿತ್ತು. ಆದರೆ ಈಗ ಊಟವು ಇಲ್ಲದೆ ಇಲ್ಲಿ ಯಾಕೆ ಕೂಡಿಹಾಕಿದಾರೆ” ಜೈಲು ಅಂದರೆ ಇದೆಯಾ? +‘ಜೈಲು ಅಂದ್ರೆ ಇದೆ ಏನ್ರೀ?’-ಅವನು ಕೇಳಿದ. +‘ಅಲ್ಲ ಮಗು. ಇದು ಅರಮನೆ’- ಒಬ್ಬರು ಹೇಳಿದರು. +‘ಹಾಗಾದರೆ ಸಿಂಹಾಸನ ಎಲ್ಲಿದೆ?’ +‘ಪ್ರಚಂಡ ಹುಡುಗ!’-ಎಲ್ಲರೂ ಮಾತನಾಡಿಕೊಂಡರು. ಯಾರೂ ಅವನ ಪ್ರಶ್ನೆಗೆ ಉತ್ತರ ಹೇಳಲಿಲ್ಲ. +ಅಷ್ಟರಲ್ಲಿ ಬಾಗಿಲು ತೆಗೆದುಕೊಂಡು ಒಳಗೆ ಬಂದ ಪೋಲೀಸಿನವರು ಅವನ ಕೈ ಹಿಡಿದು ‘ಹೊರಗೆ ಬಾ’ ಎಂದರು. +‘ನಾವು ಈ ಹುಡುಗನ್ನ ಬಿಡೂದಿಲ್ಲ. ನೀವು ಅವನನ್ನ ಹೊಡೀತೀರಿ’-ಎಂದು ಉಳಿದವರು ಎದ್ದು ನಿಂತರು. +‘ಇಂಥಾ ಚಿಕ್ಕೋನನ್ನ ನಾವ್ಯಾಕೆ ಹೊಡೀತೀವಿ? ಅವರ ಪೋಷಕರು ಬಂದಿದಾರೆ’- ಎಂದು ಹೇಳಿ ಅವರು ಅವನ ಕೈಹಿಡಿದು ಕರೆದುಕೊಂಡು ಹೋಗಿ, ಉಳಿದವರನ್ನು ಒಳಗೇ ಕೂಡಿ, ಬಾಗಿಲು ಹಾಕಿ ಬೀಗ ಮೆಟ್ಟಿದರು. ಆಫೀಸಿಗೆ ಕರೆದೊಯ್ದು ನಿಲ್ಲಿಸಿದ ಮೇಲೆ ಕುರ್ಚಿಯ ಮೇಲೆ ಕೂತಿದ್ದ ಒಬ್ಬ ದಪ್ಪನೆಯ ಪೋಲೀಸಿನವರು ಅವನನ್ನು ಕೇಳಿದರು: ‘ನಿಂದು ಯಾವೂರೋ ಹುಡುಗ>’ +‘ರಾಮಸಂದ್ರ.’ +‘ರಾಮಸಂದ್ರ?’ ಎಲ್ಲಿದ್ರೀ ಅದು?’-ಎಂದು ಅವರು, ನಿಂತಿದ್ದ ಪೋಲೀಸರನ್ನು ಕೇಳಿದರು. +ವಿಶ್ವನೇ ಹೇಳಿದ: ‘ತುಮಕೂರು ಡಿಸ್ಟ್ರಿಕಟ್ಟು ತಿಪಟೂರು ತಾಲ್ಲೋಕ್ ಕಂಬನಕೆರೆ ಹೋಬಳಿ ರಾಮಸಂದ್ರ.’ +‘ಪರವಾಗಿಲ್ಲ. ನಿಂಗೆ ಎಲ್ಲ ಗೊತ್ತಿದೆ. ಏನ್ ಓದ್‌ತಾ ಇದೀಯಾ?’ +‘ಮೂರನೇ ಕ್ಲಾಸು.’ +‘ನೀನು ಯಾರ ಮಗ?’ +‘ಶ್ಯಾನುಭೋಗ ಚೆನ್ನಿಗರಾಯರ ಮಗ.’ +‘ಶ್ಯಾನುಭೋಗರ ಮಗನಾಗಿ ಇಂಥದುದ್ದೆಲ್ಲ ಬತ್ತಾರೇನೋ? ಯಾರೋ ನಿನ್ನ ಕರ್ಕಂಡ್ ಬಂದದ್ದು?’-ಎಂದು ಅವರು ಕೇಳುತ್ತಿರುವಾಗ, ನಿಂತಿದ್ದ ಪೋಲೀಸಿನವರು, ‘ರಾಮಸಂದ್ರ ಬೇರೆ ಡಿಸ್ಟ್ರಿಕ್ಕಿಂದು ಸಾರ್. ಇವನು ಅಲ್ಲಿಂದ ಬಂದಿಲ್ಲ’ ಎಂದು ಹೇಳಿ ಇವನನ್ನು ಕೇಳಿದರು: ‘ನೀನ್ಯಾವೂರಿಂದ ಬಂದೆ?’ +‘ನಾಗಲಾಪುರದಿಂದ.’ +‘ಅಲ್ಲಿಗೆ ಯಾಕೆ ಬಂದಿದ್ದೆ?’ +‘ಸ್ಕುಲಿಗೆ ಹೋಗ್ತಾ ಇದೀನಿ.’ +‘ಯಾರ ಮನೇಲಿದೀಯಾ?’ +‘ಕಲ್ಲೇಶ ಜೋಯಿಸ್ರ ಮನ್ಲಿ.’ +‘ಅವ್ರು ನಿಂಗೇನಾಗ್ಬೇಕು?’ +‘ನಮ್ಮಮ್ಮನ ಅಣ್ಣ.’ +ನಿಂತಿದ್ದ ಪೋಲೀಸಿನವರು ಕೂತಿದ್ದ ದೊಡ್ಡವರಿಗೆ ಹೇಳಿದರು: ‘ಓ, ಈಗ ಗೊತ್ತಾಯ್ತಾ ಸಾರ್. ಆ ಕಲ್ಲೇಶ ನನ್ನ ಜೊತೆ ಪಿ.ಸಿ. ಆಗಿದ್ದ. ಈ ಊರ ಮಸೀದಿ ಹಿಂದುಗಡೆ ದೆವ್ವದ ಮನೆ ಅಂತ ಇದೆಯಲಾ. ಅಲ್ಲಿ ಒಬ್ಬರೇ ಇಲ್ವೇ ಕಂಠೀಜೋಯಿಸರು ಅಂತ, ಮಾಟ ಮಂತ್ರ ಮಾಡ್ತಾರೆ ನೋಡಿ, ಅವರ ಮಗ ಕಲ್ಲೇಶ. ಲೋ, ಮಗು, ನೀನಿಲ್ಲಿಗೆ ಹ್ಯಾಗೆ ಬಂದೆಯೋ?’ +ವಿಶ್ವ ತಾನು ಬೆಳಿಗ್ಗೆ ಮನೆಯಿಂದ ಹೊರಟಿದ್ದರಿಂದ ಚೆನ್ನರಾಯಪಟ್ಟಣ ಮುಟ್ಟುವವರೆಗೆ ನಡೆದ ಎಲ್ಲವನ್ನೂ ಹೇಳಿದ. ‘ಆ ಕಂಠೀಜೊಯಿಸ್ರ ಹತ್ರುಕ್ ಕಳಿಸ್ಬಿಡು. ವೈ ಬಾದರೇಶನ್?’-ಎಂದ ದೊಡ್ಡವರು ಅವನ ಕಡೆ ತಿರುಗಿ ಹೆದರಿಕೆಯಾಗುವಂತೆ ಕಣ್ಣುಬಿಟ್ಟು, ‘ಲೋ, ಇನ್ನೊಂದ್‌ಸಲ ಇವ್ರ ಜೊತೆ ಸೇರ್ಕಂಡ್ ಜೈಗೀಯ್ ಅಂತ ಕೂಗಿದ್ರೆ ನಿಂಗೆ ಬೆಲ್ಟು ತಗಂಡ್ ಬಾರಿಸ್‌ಬಿಡ್ತೀವಿ. ಹೂಂ’ ಎಂದು ಹಲ್ಲು ಕಡಿದು ಬೂಟಿನ ಕಾಲನ್ನು ನೆಲಕ್ಕೆ ಗಟ್ಟಿಸಿದರು. ‘ಇಲ್ಲ, ಇಲ್ಲ’ -ಎಂದು ಅವನು ಹೆದರಿಕೊಂಡು ಹೇಳಿದ. ನಿಂತಿದ್ದ ಪೋಲೀಸಿನವರು ಅವನ ಕೈಹಿಡಿದು ಆ ರಾತ್ರಿಯಲ್ಲೇ ಕರೆದುಕೊಂಡು ಹೊರಟರು. ಪೇಟೆ ಬೀದಿ ದಾಟಿ ಸಾಬರ ಮಸೀದಿಯ ಹಿಂಭಾಗದ ಒಂದು ದೊಡ್ಡ ಮನೆಯ ಮುಂದೆ ನಿಂತು ಬಾಗಿಲು ಬಡಿದರು. ‘ಯಾರು?’-ಎಂದು ಒಳಗಿನಿಂದ ಕೂಗಿದುದಕ್ಕೆ, ‘ಬಾಗಿಲು ತೆಗೀರಿ. ನಿಮ್ಮ ಮೊಮ್ಮಗ’ ಎಂದರು. ಒಳಗೆ ದೀಪ ಹಚ್ಚಿ ಬಾಗಿಲು ತೆರೆದವರು ಅಗಲವಾದ ಮುಖದ ಎತ್ತರವಾದ ಆಳು. ‘ನಿಮ್ಮ ಮಗಳ ಮಗ ಕಾಂಗ್ರೆಸ್ಸಿನೋರ ಜೊತೆ ಸೇರ್ಕಂಡ್ ತಿಳಿವಳಿಕೆ ಇಲ್ದೆ ಬಂದುಬಿಟ್ಟಿದ್ದಾನೆ, ಕರ್ಕಳಿ. ಇನ್ನು ಮ್ಯಾಲೆ ಹ್ವರಗೆ ಬಿಡ್‌ಬ್ಯಾಡಿ’-ಎಂದು ಹೇಳಿ ಅವರು ಹೊರಟುಹೋದರು. +ಈ ಅಜ್ಜಯ್ಯನನ್ನು ನೋಡಿದ್ದ ನೆನಪು ವಿಶ್ವನಿಗೆ. ಅಕ್ಕಯ್ಯನ ಮದುವೆಗೆ ತುಂಬ ಮುಂಚೆ ಇವರು ಅಕ್ಕಮ್ಮನ ಜೊತೆ ಊರಿಗೆ ಬಂದಿದ್ದರಲ್ಲವೆ? ಆದರೆ ಸರಿಯಾದ ಜ್ಞಾಪಕವಿಲ್ಲ. ಅವರ ಜೊತೆ ಒಳಗೆ ಹೋಗಿ ನೋಡುತ್ತಾನೆ: ಅವನಿಗೆ ಹೆದರಿಕೆಯಾಯಿತು. ಒಳಗೆ ಹುಲಿ ಚರ್ಮ ಹಾಸಿದೆ. ಮನುಷ್ಯರ ತಲೆಬುರುಡೆ, ಮೂಳೆಗಳನ್ನೆಲ್ಲ ಇಟ್ಟಿದೆ. ಕವಡೆಮಣಿ, ತಾಮ್ರದ ತಗಡು, ಹಸಿನೂಲು, ಎಷ್ಟೋ ಜೊತೆ ಎಕ್ಕಡಗಳು.. +‘ನಂಗಿಲ್ಲಿ ಹೆದರಿಕೆಯಾಗುತ್ತೆ’-ಅವನೆಂದ. +‘ಇವತ್ತು ಅಷ್ಟು ಧೈರ್ಯವಾಗಿ ಭಾಷಣ ಮಾಡಿದೆ. ಹೆದರಿಕೆ ಯಾಕೋ? ನೀನೇ ನನ್ನ ಮಗಳ ಮಗ ಅಂತ ನಂಗೆ ಗೊತ್ತಾಗಲಿಲ್ಲ. ವಾರೆವಾ, ರುಸ್ತುಂ ಗಂಡು. ನನ್ನ ಮಗಳ ಹ್ವಟ್ಟೇಲಿ ಹುಟ್ಟಿದ್ದುಕ್ಕೂ ಸಾರ್ಥಕ’- ಎಂದು ಕೈಹಿಡಿದು ಕೂರಿಸಿಕೊಂಡರು. +ಕಂಠೀಜೋಯಿಸರಿಗೆ ಮಗಳಮೇಲೆ ಬಂದಿದ್ದ ಸಿಟ್ಟು ಅವಳ ಮಕ್ಕಳು ಸತ್ತ ವರ್ತಮಾನ ತಿಳಿದಾಗಲೂ ಇಳಿದಿರಲಿಲ್ಲ. ತಮ್ಮ ಮಾತು ಮೀರಿ ಅವಳು, ಮಗನಿಗೆ ಹೆಣ್ಣು ಕೊಡುವುದಿಲ್ಲವೆಂದ ಅವಿಧೇಯತೆಯನ್ನು ಅವರು ಮರೆಯಲಾರರು. ಅವರಿಗೂ ಮೊಮ್ಮಕ್ಕಳಿಗೂ ಯಾವ ಸಂಪರ್ಕವೂ ಇರಲಿಲ್ಲ. ಅವರ ಮರಣದಿಂದ ಮಗಳಿಗೆ ದುಃಖವಾಗಿರುವುದು ಸಹಜವೆಂದು ಒಂದೊಂದು ಸಲ ಎನ್ನಿಸುತ್ತಿದ್ದರೂ, ಆ ಮೊಮ್ಮಕ್ಕಳಮೇಲೆ ಅವರಿಗೆ ಹುಟ್ಟುತ್ತಿದ್ದ ಅಸ್ಪಸ್ಟ ವಾಂಛಲ್ಯವೇನಿದ್ದರೂ ಮಗಳ ಮೂಲಕ ಒಸರುತ್ತಿದ್ದ ಮೂಕಭಾವ ಮಾತ್ರ. ಜೊತೆಗೆ ಕೋಪವೂ ಸೇರಿಕೊಂಡಿತ್ತು. ಆದರೆ ಈಗ ಈ ಮೊಮ್ಮಗ ರುಸ್ತುಂ ಕೆಲಸ ಮಾಡಿದ್ದಾನೆ. ಹದಿನೈದು ಇಪ್ಪತ್ತು ಸಾವಿರ ಜನದ ಎದುರಿಗೆ ನಿಂತು ಪೋಲೀಸಿನವರಿಗೂ ಹೆದರದೆ ಭಾಷಣ ಮಾಡಿ ಹಾರ ಹಾಕಿಸಿಕೊಂಡಿದ್ದಾನೆ. ಜನಗಳು ‘ಸಿಂಹದ ಮರಿ’ ಎಂದು ಮೆಚ್ಚಿ ಮಾತನಾಡಿಕೊಂಡದ್ದನ್ನು ತಾವೇ ನೋಡಿದ್ದಾರೆ. ಅವನು ಭಾಷಣ ಮಾಡುವಾಗ ಅವರೂ ಕೇಳುತ್ತಿದ್ದರು. ಅವರಿಗೆ ಈಗ ಅವನ ಮೇಲೆ ಅಭಿಮಾನ ಉಕ್ಕಿತು. ‘ಯಾವೂರಿಂದ ಬಂದೆ?’-ಎಂದು ಕೇಳಿದರು. +ತಾನು ಈಗ ನಾಗಲಾಪುರದಲ್ಲಿರುವ ವಿಷಯ ಹೇಳಿದ. ಇತ್ತೀಚೆಗೆ ಅವರು ಊರಿಗೆ ಹೋಗಿಯೇ ಇಲ್ಲ. ಚೆನ್ನರಾಯಪಟ್ಟಣದಲ್ಲೂ ಸರಿಯಾಗಿ ಇಲ್ಲ. ಹಾಸನ, ಕೌಶಿಕ, ಮಗ್ಗೆ, ರಾಮನಾಥಪುರಗಳ ಕಡೆ ಇದ್ದುಬಿಟ್ಟಿದ್ದರು. +‘ಹೊಟ್ಟೆ ಹಸೀತಿದೆಯೆ?’-ಅವರು ಕೇಳಿದರು. +‘ಹೂಂ.’ +‘ನೋಡು ಈಗ ಬಾಳೆಹಣ್ಣು ಸಕ್‌ರೆ ಇದೆ. ತಿಂದು ಮಲಕ್ಕೊ. ಬೆಳಕು ಹರಿದಮೇಲೆ ಹೋಟ್‌ಲಲ್ಲಿ ತಿಂಡಿ ತಿನ್ನೂವಂತೆ.’ +‘ದೊಸೆಯಾ?’ +‘ಹೂಂ, ನೀನು ಕೇಳಿದ್ದು.’ +ಅವರೇ ಸುಲಿದು ಸಕ್ಕರೆಯಲ್ಲಿ ಅದ್ದಿ ಅದ್ದಿ ಕೊಟ್ಟ ಬಾಳೆಯ ಹಣ್ಣನ್ನು ಅವನು ಹೊಟ್ಟೆ ತುಂಬ ತಿಂದ. ತಮ್ಮ ಹಾಸಿಗೆಯಮೇಲೆ ಮಲಗಿಸಿಕೊಂಡು ಅವರು ತಮ್ಮ ಶಾಲನ್ನೇ ಅರ್ಧ ಹೊದೆಸಿ ದೀಪ ಆರಿಸಿದರು. ಅವನಿಗೆ ನಿದ್ದೆ ಬಂತು; ಅವರಿಗೆ ಬರಲಿಲ್ಲ. ಹೋಗಿ ಮಗಳನ್ನು ನೋಡಿಕೊಂಡು ಬರಬೇಕೆಂದು ಮನಸ್ಸಾಯಿತು. ಅವಳ ಮಕ್ಕಳು ಸತ್ತು ಹೆಚ್ಚು ಕಡಿಮೆ ವರ್ಷವಾಗ್ತಾ ಬಂತು. ಎಷ್ಟು ಕೊರಗಿದಾಳೋ! ನಾನು ಆ ಹುಡುಗೀ ಮದುವೆಗೂ ಹೋಗಲಿಲ್ಲ. ಒಳ್ಳೇ ಹುಡುಗನಿಗೆ ಕೊಟ್ಟು ಮಾಡಿದಳು ಅಂತ ಅಕ್ಕಮ್ಮ ಹೇಳಿದ್ದಳು. ನಂಜನ ಗಂಡ ನಫರತ್ ಬಾನ್‌ಚೋತ್. ನನ್ನಂಥೋನ ಮಗಳ ಕೈಹಿಡಿಯೋ ಯೋಗ್ಯತೆ ಆ ನಾಯಿಮರಿಗೆ ಎಲ್ಲಿದೆ? ಆದ್ರೂ ಪರವಾಗಿಲ್ಲ. ಇದೊಂದು ಗಂಡುಮರಿ ಅವಳ ಹೊಟ್ಟೇಲಿ ಹುಟ್ಟಿದೆಯಲ, ಅಷ್ಟೇ ಸಾಕು-ಎಂಬ ಯೋಚನೆಯಲ್ಲಿ ಅವರು ಹೊರಳಾಡುತ್ತಾ ಇದ್ದರು. +ಅಷ್ಟರಲ್ಲಿ ಯಾರೋ ಹದ ಬಡಿದು-‘ಬಾಗಿಲು’ ಎಂದ ಹಾಗಾಯಿತು. ಇನ್ನೊಂದು ಸಲ ಕೂಗಿದಾಗ ಕಲ್ಲೇಶನ ಧ್ವನಿ ಎಂದು ಗೊತ್ತಾಯಿತು. ಎದ್ದು ದೀಪ ಹೊತ್ತಿಸಿ ಬಾಗಿಲು ತೆಗೆದರು. ವಿಶ್ವ ಇಲ್ಲಿ ಮಲಗಿದ್ದುದನ್ನು ನೋಡಿದ ಕಲ್ಲೇಶನಿಗೆ ಆತಂಕ ನಿವೃತ್ತಿಯಾಯಿತು. ಮಧ್ಯಾಹ್ನದ ತನಕ ಹುಡುಗನ ಹಾದಿ ಕಾಯ್ದು ಅವನು ಊರಿನ ಕೆರೆ ಬಾವಿಗಳನ್ನೆಲ್ಲ ಹುಡುಕಿದ್ದ. ಚೆನ್ನರಾಯಪಟ್ಟಣಕ್ಕೆ ಹೋದ ಗುಂಪಿನಲ್ಲಿ ಅವನೂ ಇದ್ದ ಹಾಗಿತ್ತು ಎಂದು ಯಾರೋ ರಾತ್ರಿಯ ಹೊತ್ತಿಗೆ ಹೇಳಿದರು. ಆಗಲೇ ಇಲ್ಲಿಗೆ ಹೊರಟುಬಂದೆ. ಅರ್ಧರಾತ್ರಿಯಾಗಿ ಎಲ್ಲರೂ ಮಲಗಿದ್ದರು. ಅನುಮಾನ ಬಂದು ಪೋಲೀಸು ಸ್ಟೇಷನ್ನಿಗೆ ಹೋಗಿ ವಿಚಾರಿಸಿದ. ಇವನ ಹಳೇ ಸಹೋದ್ಯೋಗಿಯಾಗಿದ್ದು ಈಗ ದಫೇದಾರನಾಗಿದ್ದ ಯಲ್ಲಪ್ಪನೇ ಇವನ ವಿಷಯ ಹೇಳಿ-‘ನಿಮ್ಮ ಅಯ್ಯ ಅವರು ದೆವ್ವದ ಮನ್ಲಿ ಅವ್ರೆ. ನಾನೇ ಹೋಗಿ ಬಿಟ್ಟುಬಂದೆ’ ಎಂದು ಹುಡುಗನ ಧೈರ್ಯವನ್ನು ವರ್ಣಿಸಿದ. +ಮೊಮ್ಮಗನ ಪ್ರತಾಪವನ್ನು ಕಂಠೀಜೋಯಿಸರೂ ಹೇಳಿದರು. ಮಕ್ಕಳು ಸತ್ತಮೇಲೆ ನಂಜ ಶೃಂಗೇರಿಗೆ ಹೋದದ್ದು, ಅಲ್ಲಿ ಇವನು ಹೊಳೆಯಲ್ಲಿ ಈಜಿದ ಸಾಹಸ, ಊರಿನಲ್ಲಿ ಹಾವು ಹೊಡೆದು ಅದು ತಪ್ಪಿಸಿಕೊಂಡಿರುವುದು, ಈಗ ಓದಲು ನಾಗಲಾಪುರಕ್ಕೆ ಕಳಿಸಿರುವುದು, ಎಲ್ಲವನ್ನೂ ಕಲ್ಲೇಶ ವಿವರಿಸಿದ. +ಬೆಳಿಗ್ಗೆ ಎಲ್ಲರೂ ಹೊತ್ತಾಗಿ ಎದ್ದರು. ಎಚ್ಚರವಾಗಿ ವಿಶ್ವ ಹೊರಳಿ ನೋಡಿದರೆ ಮಾವ ಕೂತಿದ್ದಾನೆ. ಅವನು ಹೆದರಿಕೆಯಿಂದ ಮಂಕಾಗಿಹೋದ. ಎದ್ದು ಮುಖ ತೊಳೆದು ಕೆರೆಯ ಕಡೆಗೆ ಹೋಗಿ ಬಂದಮೇಲೆ ಮೂವರೂ ಹೋಟೆಲಿಗೆ ಹೋದರು. ‘ಮಸಾಲೆದೋಸೆ ತಿಂತೀಯಾ ಪಾಪ?’-ಎಂದು ಅಜ್ಜ ಕೇಳಿದರೆ ಅವನ ಉತ್ತರವೇ ಇಲ್ಲ. ಇನ್ನೊಂದು ಸಲ ಕೇಳಿದುದಕ್ಕೆ, ‘ನಂಗೆ ಎಂಥದೂ ಬ್ಯಾಡ’ ಎಂದ. ಕಲ್ಲೇಶನನ್ನು ಕಂಡರೆ ಹುಡುಗನಿಗೆ ಇಷ್ಟು ಹೆದರಿಕೆ ಇದೆ ಅನ್ನುವುದು ಅವರಿಗೆ ತಿಳಿಯಲಿಲ್ಲ. ಅವರೇ ಹೇಳಿ ಅವನಿಗೆ ಎರಡು ಮಸಾಲೆದೋಸೆ, ಮೈಸೂರುಪಾಕು ಮೊದಲಾಗಿ, ರುಚಿರುಚಿಯಾದ ತಿಂಡಿಗಳನ್ನೆಲ್ಲ ಕೊಡಿಸಿದರು. ಕಲ್ಲೇಶ ಹೊರಡುವಾಗ ಹೇಳಿದರು: ‘ಹುಡುಗನ್ನ ನಡಸ್ಕಂಡು ಹೋಗ್‌ಬ್ಯಾಡ. ನಾನು ಹೊಸ ಕುದುರೆ ತಗಂಡಿದೀನಿ. ಹಿಂದ್‌ಗಡೆ ಕಟ್ಟಿಹಾಕಿದೀನಿ. ಜೀನುಹಾಕ್ಕಂಡು ಕೂರುಸ್ಕಂಡು ಹೋಗು.’ +ಅವರೇ ಕುದುರೆಯನ್ನು ಬಿಚ್ಚಿ ತಂದು ಜೀನು ಹಾಕಿ ಅದರ ಮೇಲೆ ವಿಶ್ವನನ್ನು ಹತ್ತಿಸಿ ಕೂರಿಸಿದಾಗ ಅವನು ಹಿಗ್ಗಿದ. ಊರಿನಲ್ಲಿದ್ದಾಗ ಪಟೇಲನ ಮನೆಯ ಕುದುರೆಮರಿಯನ್ನು ಆಗಾಗ್ಗೆ ಕದ್ದು ಏರಿ ಓಡಿಸುವ ಅಭ್ಯಾಸವೇನೋ ಇತ್ತು. ಆದರೆ ಇಂತಹ ಹೊಳೆಯುವ ಜೀನಿನ ಇಷ್ಟು ದೊಡ್ಡ ಕೆಂಪು ಕುದುರೆಯ ಮೆಲೆ ಅವನು ಕೂತಿರಲಿಲ್ಲ. ಒಂದು ನಿಮಿಷ ಹೆದರಿಕೆಯಾದರೂ ಕೆಳಗೆ ಇಳಿಯುತ್ತೇನೆಂದು ಮಾತ್ರ ಹೇಳಲಿಲ್ಲ. ಕಲ್ಲೇಶನೂ ಹತ್ತಿ ಅವನ ಹಿಂದೆ ಕೂತಮೇಲೆ ಅಜ್ಜಯ್ಯ ಹೇಳಿದರು: ‘ಇಲ್ನೋಡು, ಕುದುರೆ ಬೇಕಾದ್ರೆ ಒಂದು ಹದಿನೈದು ದಿನ ಅಲ್ಲೇ ಇರ್ಲಿ. ಅಷ್ಟರಲ್ಲಿ ಇವನಿಗೆ ಸವಾರಿ ಅಭ್ಯಾಸ ಮಾಡ್ಸು. ಗಂಡು ಹುಡುಗ ಅಂದಮೇಲೆ ಕುದುರೆ ಸವಾರಿ ಬರ್‌ಬೇಕು.’ +ಸವಾರಿ ಬಲು ಮಜವಾಗಿತ್ತು. ದಾರಿಯಲ್ಲಿ ಮಾವ ಬೈಯಲಿಲ್ಲ; ಒಂದು ಮಾತೂ ಆಡಲಿಲ್ಲ. ಕುದುರೆಯನ್ನು ಇನ್ನೂ ಜೋರಾಗಿ ಓಡಿಸಬೇಕೆಂದು ಅವನ ಆಶೆ. ಆದರೆ ಬಾಯಿ ಬಿಟ್ಟು ಮಾವನ ಕೈಲಿ ಹೇಳಲು ಭಯ. ಸುಮ್ಮನೆ ಕೂತು ಸವಾರಿಯ ಸುಖ ಅನುಭವಿಸುತ್ತಿದ್ದ. ನೆನ್ನೆ ತಾನೆ ಮಾಡಿದ ಭಾಷಣದ ಮಾತುಗಳು ನೆನಪಿಗೆ ಬರುತ್ತಿದ್ದವು. “ಈ ಕುದುರೆ ನಂದೇ ಆದ್ರೆ ಎಷ್ಟು ಚೆನ್ನ! ನಂಗೇ ಕೊಡು ಅಂತ ಅಜ್ಜಯ್ಯನ್ನ ಕೇಳಬೇಕು. ಇದರ ಮೇಲೆ ಹತ್ಕಂಡು ರಾತ್ರಿ ಹೊತ್ನಲ್ಲಿ ಒಬ್ಬನೇ ನಮ್ಮೂರಿಗೆ ಹೋಗಿ ಅಮ್ಮುನ್ನ ಎಬ್ಬಿಸಬೇಕು. ಇನ್ನುಮ್ಯಾಲೆ ನಮ್ಮೂರಲ್ಲೇ ಇದ್ದುಬಿಡಬೇಕು. ಅಮ್ಮ ಇಲ್ದೆ ಒಬ್ಬನೇ ಇರ್‌ಕೂಡದು. ಯಾವಾಗ್ಲೂ ಕುದುರೆ ಮೇಲೆ ಕೂತ್ಕಂಡು ತಿರುಗ್ತಾ ಇದ್ರೆ ಹಾವು ಅದ್‌ಹ್ಯಾಗೆ ಕಡಿಯುತ್ತೆ? ಮತ್ತೆ ನಮ್ಮೂರ ಸ್ಕೂಲ್ಗೇ ಸೇರ್ಕಬೇಕು. ಸ್ಕೂಲಿನಲ್ಲೂ, ‘ನಾನು ಕುದುರೆ ಮ್ಯಾಲೆ ಕೂತ್ಕಂಡಿರ್ತೀನಿ, ನೀವು ಹಾಗೇ ಪಾಠ ಹೇಳ್ಕೊಡಿ’ ಅಂತ ಮೇಷ್ಟರಿಗೆ ಹೇಳಬೇಕು. ಪ್ರೈಮರಿ ಸ್ಕೂಲು ಆದಮ್ಯಾಲೆ ಈ ಕುದುರೆಮ್ಯಾಲೆ ಕೂತು ನಮ್ಮೂರಿನಿಂದ ದಿನಾ ಕಂಬನಕೆರೆ ಮಿಡ್ಳ್‌ಸ್ಕೂಲಿಗೆ ಹೋಗೂದು. ಈ ಮಾವ ಈಗ ಜೊತೇಲಿ ಇಲ್ದೆ ಇದ್ದಿದ್ರೆ ಇದ ಓಡಿಸ್ಕಂಡು ಹೀಗಿಂದ ಹೀಗೇ ನಮ್ಮೂರಿಗೆ ಹೋಗ್‌ಭೌದಾಗಿತ್ತು. ನನ್ನ ಹೊಡೀತಾನಲ, ಈ ಮಾವನ ಕೈ ಸೇದಿಹೋಗ”- ಎಂದು ಅವನು ತನ್ನಲ್ಲಿಯೇ ಯೋಚಿಸುತ್ತಿದ್ದ. +ಊರು ಸೇರಿದ ಮೇಲೆ ಮನೆಯ ಮುಂದೆ ಕುದುರೆ ನಿಲ್ಲಿಸಿ ಇವನನ್ನು ಇಳಿಸಿದಾಗ ಬಾಗಿಲಲ್ಲೆ ಅಕ್ಕಮ್ಮ ಬಂದು-‘ಎಲ್ಲಿಗೆ ಹೋಗಿದ್ಯೋ ನನ್ ಕಂದಾ?’ ಎನ್ನುತ್ತಾ ಬಂದು ತಬ್ಬಿಕೊಂಡಳು. ಕಲ್ಲೇಶ ಎಕ್ಕಡವನ್ನು ಹೊರಗೆ ಬಿಟ್ಟು ನೇರವಾಗಿ ಅಡಿಗೆ ಮನೆಗೆ ಹೋದ. ಅಷ್ಟರಲ್ಲಿ ಅಕ್ಕಮ್ಮ ವಿಶ್ವರು ಒಳಗೆ ಬಂದಿದ್ದರು. ಕೈಗೆ ಸಿಕ್ಕಿದ ಒಂದು ಹೊಳಕೆ ಸೌದೆ ತಂದ ಮಾವ ಅವನ ಎಡ ರೆಟ್ಟೆ ಹಿಡಿದು ಬೆನ್ನಿನಮೇಲೆ ಎತ್ತಿ ಎತ್ತಿ ಬಾರಿಸಲು ಶುರುಮಾಡಿದ. ‘ಅಯ್ಯೋ, ಮಗು ಸತ್ಹೋಗುತ್ತೆ ಕಣೋ ದೈತ್ಯಸೂಳೇಮಗನೆ. ಹಾಗೆ ಹೊಡೀಬಾರ್ದು ಕಣೋ’-ಎಂದು ಬಿಡಿಸಿಕೊಳ್ಳಲು ಹೋದ ಅಕ್ಕಮ್ಮನ ಕೈಮೇಲೆ ಏಟು ಬಿದ್ದು ಅವಳು ಅಯ್ಯಯ್ಯೋ ಎಂದು ಗೋಳಿಡುತ್ತಾ, ‘ಯಮಮುಂಡೇಗಂದ, ಮಗೂನ ಹಾಗೆ ಹೊಡೀತಾರೇನೋ’ ಎನ್ನುತ್ತಿರುವಂತೆಯೇ ಅವನು ಮತ್ತೆ ಎಂಟು ಹತ್ತು ಏಟು ಬಾರಿಸಿಬಿಟ್ಟಿದ್ದ. +‘ಕಟ್ಟಿಲ್ಲದ ಪಂಜಿನ ಹಾಗೆ ಬೆಳೆದಿದಾನೆ ಭಡವ. ಸಿಕ್ಕಿದೋರ್ ಜೊತೆ ಹೋಗಿದ್ನಲಾ, ಏನಾದ್ರೂ ಆಗಿದ್ರೆ ಕೆಟ್ಟ ಹೆಸರು ಯಾರಿಗೆ ಬತ್ತಿತ್ತು?’-ಎನ್ನುವಾಗ ಅವನ ಕಣ್ಣು ಹುಡುಗನ ಮೇಲೆ ಹೋಯಿತು. ಬೆನ್ನಿನಿಂದ ರಕ್ತ ಸೋರುತ್ತಿತ್ತು. ಅವನು ಕೆಳಗೆ ಬಿದ್ದು ಜ್ಞಾನ ತಪ್ಪಿತ್ತು. ತೊಟ್ಟ ಚಡ್ಡಿಯ ಒಳಗೇ ಉಚ್ಚೆ ಹುಯ್ದುಕೊಂಡು ನೆಲದ ಮೇಲೆಲ್ಲ ಹರಿದಿತ್ತು. ‘ಅಲ್ಲಿ ಹಾವು ಕಡಿಯುತ್ತೆ ಅಂತ ಹೆದರ್ಕಂಡು ಅವಳು ಇದ್ದ ಒಂದು ಕಂದನ್ನ ಇಲ್ಲಿಗೆ ಕಳ್ಸಿದ್ರೆ ನೀನು ಹೊಡೆದು ಸಾಯಿಸ್ದೆ ಏನೋ!’-ಎಂದು ಅಕ್ಕಮ್ಮ ಬಾಯಿಬಡಿದುಕೊಂಡಳು. ಅಕ್ಕಪಕ್ಕದವರು ಓಡಿಬಂದರು. ಕಲ್ಲೇಶ ವಿಶ್ವನನ್ನು ಮುಟ್ಟಿ ಪರೀಕ್ಷಿಸಿದ. ಪ್ರಾಣ ಹೋಗಿರಲಿಲ್ಲ. ಓಡಿಹೋಗಿ ಒಂದು ಚೊಂಬು ತಣ್ಣೀರು ತಂದು ಚೆನ್ನಾಗಿ ತಲೆಗೆ ತಟ್ಟಿದಮೇಲೆ ಜ್ಞಾನ ಬಂತು. ಅಂಗಿ ಬಿಚ್ಚಿ ನೋಡಿದರೆ ಬೆನ್ನಮೇಲೆಲ್ಲ ಛಿದ್ರ ವಿಚ್ಛಿದ್ರ ಗಾಯಗಳಾಗಿ ಒಸರುತ್ತಿದ್ದ ರಕ್ತ ಹಾಗೆಯೇ ಹೆಪ್ಪುಗಟ್ಟಿ ಕಪ್ಪು ತಿರುಗುತ್ತಿತ್ತು. ಕಲ್ಲೇಶ ಗಾಯಗಳನ್ನು ತೊಳೆದು, ಮನೆಯಲ್ಲಿ ಇಟ್ಟಿದ್ದ ನಾಟಿಗಂಧದ ಎಣ್ಣೆ ಹಚ್ಚುವಾಗ ಹುಡುಗ, ‘ಅಯ್ಯಯ್ಯೋ ಉರಿಯುತ್ತೆ’ ಎಂದು ಗೋಳಿಡುತ್ತಿದ್ದ. +– ೪ – +ಈ ನಡುವೆ ಮೇಷ್ಟರಿಗೆ ರಾಮಸಂದ್ರದಿಂದ ವರ್ಗವಾಯಿತು. ಈ ಊರಿಗೆ ಅವರು ಬಂದು ಐದು ವರ್ಷವಾಗಿತ್ತು. ಸ್ವಂತ ಊರಾದ ಹುಳಿಯಾರಿಗೆ ವರ್ಗ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅದೃಷ್ಟಕ್ಕೆ ಅದೇ ಊರಿಗೆ ಸಿಕ್ಕಿತು. ಅವರು ಹೊರಟುಹೋದುದು ನಂಜಮ್ಮನಿಗೆ ಬಹಳ ಬೇಸರವೆನಿಸಿತು. ಸ್ವಂತ ಅಣ್ಣನಂತೆ ಅವಳ ಕಷ್ಟ ಸುಖಗಳನ್ನೆಲ್ಲ ಅರಿತು ಆಗುತ್ತಿದ್ದರು. ಅವರ ಹೆಂಡತಿಗೂ ಅವಳಿಗೂ ತುಂಬ ಹೊದಿತ್ತು. ಆರು ತಿಂಗಳು ನಡೆದ ಅವಳ ನೈಟ್ ಸ್ಕೂಲು ಸಹ ಮುಗಿದಿತ್ತು. ಕಂಬನಕೆರೆಯ ಹೆಡ್ಮಾಸ್ಟರು ಬಂದು ಮೊದಲ ನೈಟ್ ಸ್ಕೂಲು ಸರಿಯಾಗಿ ನಡೆಯಿತೆಂದು ರಿಪೋರ್ಟ್ ಬರೆದು, ಎರಡನೇ ಸಲ ಪ್ರಾರಂಭಿಸಲು ಶಿಫಾರಸು ಮಾಡಿದ್ದರು. ಸದ್ಯದಲ್ಲೆ ಮೊದಲ ಸಲದ ಸಂಭಾವನೆ ನೂರ ಇಪ್ಪತ್ತು ರೂಪಾಯಿಯನ್ನು ಸರ್ಕಾರ ಕಳಿಸುವುದಾಗಿ ಹೇಳಿ ಅವಳಿಂದ ರಶೀತಿ ತೆಗೆದುಕೊಂಡು ಹೋಗಿದ್ದರು. ಆ ಮೇಷ್ಟರ ಜಾಗಕ್ಕೆ ಬೇರೆಯವರು ಬಂದರು. ಆದರೆ ಅವರಿಗೂ ನಂಜಮ್ಮನಿಗೂ ಪರಿಚಯವಿಲ್ಲ. ವೆಂಕಟೇಶಯ್ಯ ಮೇಷ್ಟರು ಹೋದದ್ದರಿಂದ ಮಾದೇವಯ್ಯನವರಿಗೂ ಬೇಸರ. +ಇದೇ ಸಮಯದಲ್ಲಿ ನಂಜಮ್ಮ ಹೊಸ ಮನೆ ಶುರು ಮಾಡಿದಳು. ತಕ್ಷಣದಲ್ಲಿ ಹೇಗೂ ಬೇರೆ ಕೆಲಸವಿರಲಿಲ್ಲ. ಈ ಬಾರಿಯ ಮಳೆಗಾಲಕ್ಕೆ ಮೊದಲು, ಹೆಂಚು ಹೊದಿಸಿಯೇಬಿಡಬೇಕೆಂದು ಒಂದೇಸಮನೆ ಕೆಲಸ ಮಾಡಿಸುತ್ತಿದ್ದಳು. ಮನೆ ಕಟ್ಟಿಸಿ ಅವಳಿಗೆ ಅಭ್ಯಾಸವಿಲ್ಲ. ಎಲ್ಲ ಕೆಲಸವನ್ನೂ ಸ್ವಂತ ಜವಾಬ್ದಾರಿ, ಸ್ವಂತ ನಿರ್ದೇಶದಿಂದ ಮಾಡಬೇಕು. ಇಲ್ಲದಿದ್ದರೆ ದುಬಾರಿ ಖರ್ಚು ಬರುತ್ತದೆ. ಅವಳು ಈಗ ಹೊಂದಿಸಿಕೊಂಡಿರುವ ದುಡ್ಡು ಗೋಡೆ, ಮರಮುಟ್ಟು, ಬಿದಿರುಗಳಿಗೆ ಸಾಕು. ಅಟ್ಟದ ಹಲಗೆಯನ್ನು ಯಾವಾಗ ಬೇಕಾದರೂ ಹಾಕಿಕೊಳ್ಳಬಹುದು. ಹೆಂಚಿಗೆ ದುಡ್ಡು ಹೊಂದಿಸಬೇಕು. ಉಳಿದ ಗೋಡೆಯ ಸಾರಣೆ ಕಾರಣೆಗಳು ನಿಧಾನವಾಗಿ ಆದರೂ ತೊಂದರೆಯಿಲ್ಲ. ಪ್ರತಿಯೊಂದು ಸಾಮಾನು ಕೊಳ್ಳುವಾಗಲೂ, ಗೋಡೆ ಮರಗೆಲಸಗಳಲ್ಲಿಯೂ, ಮಾದೇವಯ್ಯನವರು ತಮಗೆ ತಿಳಿದಂತೆ ಕೆಲಸದವರಿಗೆ ತಿಳಿವಳಿಕೆ ಕೊಡುತ್ತಿದ್ದರು. ತನಗೆ ಮನೆಯಲ್ಲಿ ಬೇರೆ ಕೆಲಸವಿರಲಿಲ್ಲ. ಸುಮ್ಮನೆ ಕುಳಿತಿರದೆ ತಾನೂ ಕೆಲಸಕ್ಕೆ ಕೈಹಾಕಿದಳು. ಗಂಡಾಳುಗಳು ಕಲಸಿದ ಮಣ್ಣಿನ ಮುದ್ದೆಯನ್ನು ತಾನೇ ಕೈಲಿ ತೆಗೆದು ಮಾಡಿನ ಗೋಡೆಯ ಮೇಲಕ್ಕೆ ಎಸೆಯುವಳು. ಮಣ್ಣು ಕಲಸಲು ಗಡಿಗೆಯಲ್ಲಿ ನೀರು ಸೇದಿ ತರುವಳು. ಶ್ಯಾನುಬಾಕಿ ಲೆಕ್ಕ ಬರೆಯುವ ಈ ಅಮ್ಮ ಕೆಲಸ ಮಾಡುವುದು ಆಳುಗಳಿಗೇ ಸಂಕೋಚ. ಆದರೆ ತನ್ನ ಮನೆ, ತಾನು ದುಡಿದು ಕಟ್ಟಬೇಕು; ಸುಮ್ಮನೆ ಕೂತು ಮಾಡುವುದೇನು ಎಂಬುದು ಅವಳ ದೃಷ್ಟಿ. +ಆಗಲೆ ಒಂದೂವರೆ ಆಳುದ್ದದ ಗೋಡೆ ಏರಿತ್ತು. ಹೆಂಚಿಗೆ ದುಡ್ಡು ಹೊಂದಿಸುವುದೊಂದೇ ಬಾಕಿ. ಒಂದು ದಿನ ಸಂಜೆ, ಕಲಸಿದ ಜಾಗದಲ್ಲಿ ನೆಲಕ್ಕೆ ಅಂಟಿದ್ದ ಮಣ್ಣನ್ನು ಗುದ್ದಲಿಯಿಂದ ಕೆರೆದು ಉಂಡೆ ಮಾಡಿ, ಮೇಲೆ ಕೂತು ಗೋಡೆ ಹಾಕುವವನಿಗೆ ಕೊಡುತ್ತಿದ್ದಳು. ಅವಳ ತಂದೆ ಅಲ್ಲಿಗೆ ಬಂದರು. ಹೆಗಲಿಗೆ ಒಂದು ಹಸಿಬೇಚೀಲ ಹಾಕಿ ಪಂಚೆ ಉಟ್ಟು ಶಾಲು ಹೊದೆದಿದ್ದ ಅವರು, ಹಿಂದಿನ ಬೂಟು, ಹ್ಯಾಟು, ಬಿಳೀಕುದುರೆಯ ಕಂಠೀಜೋಯಿಸರಾಗಿರಲಿಲ್ಲ. ಕುದುರೆಯೂ ಇಲ್ಲದೆ ನಡೆದು ಬಂದಿದ್ದಾರೆ. ‘ನಂಜಾ, ಮನೆ ಕಟ್ಟುಸ್ತಿದೀಯಾ? ವಳ್ಳೇದಾಯ್ತು’-ಎಂದರು. +ಗುದ್ದಲಿಯನ್ನು ಅಲ್ಲಿ ಬಿಟ್ಟು, ನಾಳೆ ಮಾಡಬೇಕಾದ ಕೆಲಸದ ಬಗೆಗೆ ಗೋಡೆಯ ಆಳಿಗೆ ಹೇಳಿ ಅವಳು ತಂದೆಯೊಡನೆ ಮನೆಗೆ ಬಂದಳು. ಕೈ ಕಾಲು ಮುಖ ತೊಳೆದು ಅಡಿಗೆಯ ಮನೆ ಹೊಕ್ಕು, ಒಲೆ ಹಚ್ಚಿದಳು. ‘ನಂಜಾ, ನಂಗೆ ಅಂತ ವಿಶೇಷ ಏನೂ ಮಾಡ್ಬ್ಯಾಡ. ಅನ್ನ ಹುಣಿಸೆನೀರು ಮಾಡಿಬಿಡು ಸಾಕು’-ಎನ್ನುತ್ತಾ ತಾವೂ ಅಡಿಗೆಮನೆಗೆ ಬಂದು, ಒಲೆಯ ಹತ್ತಿರ ಗೋಡೆಗೆ ಒರಗಿಸಿದ್ದ ಮಣೆ ಹಾಕಿಕೊಂಡು ಕುಳಿತು, ‘ನಿನ್ನ ಮಗ ರುಸ್ತುಂ ಗಂಡು ನೋಡು. ಹುಟ್ಟಿದ್ರೆ ಹಾಗೆ ಹುಟ್ಟಬೇಕು. ಇಪ್ಪತ್ತು ಸಾವಿರ ಜನ ಸಿಂಹದ ಮರಿ ಅಂದ್ರು’ ಎಂದು ತಾವು ಕಂಡದ್ದನ್ನೆಲ್ಲ ವಿವರಿಸಿದರು. ಮಗನ ಹೊಗಳಿಕೆಯನ್ನು ಕೇಳಿದ ಅವಳಿಗೂ ಹಿಗ್ಗು. ಆದರೆ ಈ ಹುಡುಗ ಹೀಗೆ ಮುಂದೆ ನುಗ್ಗಿ ಪೋಲೀಸಿನವರಿಂದ ಬುರುಡೆ ಹೊಡೆಸಿಕೊಂಡರೆ ಏನು ಗತಿ ಎಂಬ ಯೋಚನೆ. ‘ನಾನು ಈ ಕಡೆ ಬಂದೇ ಇರ್ಲಿಲ್ಲ. ನೆನ್ನೆ ನಿನ್ನ ಮಗನ್ನ ನೋಡ್ದೆ. ಹೇಳಿದ್ನಲ್ಲ, ರಾತ್ರಿ ಪೋಲೀಸ್ನೋರು ಬಂದು ನನ್ನ ಹತ್ರುಕ್ಕೆ ಬಿಟ್ಟುಹೋದ್ರು. ಇವತ್ತು ಬೆಳಿಗ್ಗೆ ಕುದುರೇ ಮೇಲೆ ಕೂರಿಸಿ ಅವ್ನುನ್ನೂ ಕಲ್ಲೇಶನ್ನೂ ಊರಿಗೆ ಕಳುಸ್ದೆ. ಯಾಕೋ ನಿನ್ನ ನೋಡಬೇಕು ಅನ್ನುಸ್ತು. ಯಾಕೆ ನಿಧಾನ ಮಾಡಬೇಕು ಅಂತ ಹಸಿಬೇಚೀಲ ಹೆಗಲಿಗೆ ಹಾಕ್ಕಂಡು ಹೊರಟೇಬಿಟ್ಟೆ ನೋಡು’-ಕಂಠೀಜೋಯಿಸರು ಎಂದರು. +ಮಕ್ಕಳು ಸತ್ತ ವಿಷಯವಾಗಿ ಅವರೂ ಮಾತಾಡಲಿಲ್ಲ; ಅವಳೂ ಹೇಳಲಿಲ್ಲ. ಅವರು ಕೇಳಿದರು: ‘ಮನೆ ಕಟ್ಟುಸ್ತಿದೀಯಾ ವಳ್ಳೇದಾಯ್ತು. ಮೊದ್ಲೇ ಗೊತ್ತಿದ್ರೆ ನಾನು ಒಂದಿಷ್ಟು ದುಡ್ಡು ಕೊಡ್ತಿದ್ದೆ. ಮಂಗಳೂರು ಹಂಚೇ ಹಾಕುಸ್‌ಭೌದಾಗಿತ್ತು. ಈಗ ಒಂದು ತಿಂಗ್ಳಲ್ಲಿ ಎಂಟು ನೂರು ರೂಪಾಯಿ ಕೊಟ್ಟು ಒಂದು ಕುದುರೆ ತಗಂಡುಬಿಟ್ಟೆ. ಕ್ವಾ ಇಲ್ಲಿ, ಇನ್ನೂರು ರೂಪಾಯಿ ಇದೆ’-ಅವರು ತಮ್ಮ ಒಳ ಅಂಗಿಯ ಜೇಬಿಗೆ ಕೈಹಾಕಿ ಒಂದು ಬಟ್ಟೇಯಲ್ಲಿ ಸುತ್ತಿದ್ದ ನೋಟಿನ ಕಂತೆಯನ್ನು ತೆಗೆದು, ‘ತಗೋ, ಮನೆ ಕಟ್ಟಿಸುಕ್ಕೆ ಖರ್ಚು ಮಾಡ್ಕ’ ಎಂದು ಅವಳ ಹತ್ತಿರ ಇಟ್ಟರು. +‘ನಿಂಗೆ ಯಾತಕ್ಕಾದರೂ ಬೇಕಾಗುತ್ತೆ. ಇಟ್ಕ. ಮನೆಗೆ ನಾನು ಏರ್ಪಾಡು ಮಾಡ್ಕಂಡಿದೀನಿ.’ +‘ನಂಗೇನು ದುಡ್ಡಿಗೆ ತಾಪತ್ರಯ ಇಲ್ಲ. ನೀನ್ ಇಟ್ಕ.’ +ಆ ದಿನ ರಾತ್ರಿ ಮಲಗಿದಮೇಲೂ ತಂದೆ ಮಗಳು ತುಂಬಹೊತ್ತು ಮಾತನಾಡುತ್ತಿದ್ದರು. ನಂಜು ಕೇಳಿದಳು: ‘ಅಪ್ಪ, ನಿಂಗೆ ಇಷ್ಟು ವಯಸ್ಸಾಯ್ತು. ದೇವರು ಕೈಕಾಲೇನೋ ಇನ್ನೂ ಗಟ್ಟಿಯಾಗಿಟ್ಟಿದ್ದಾನೆ. ನೀನ್ಯಾಕೆ ಊರೂರು ತಿರುಗ್ತಿರ್ತಿ? ಮೂರು ತಿಂಗಳು ಆರು ತಿಂಗಳು ಊರಲ್ಲೇ ಇರುಲ್ಲ, ನೀನೆಲ್ಲಿರ್ತೀಯೋ ಗಿತ್ತಿಲ್ಲ ಅಂತ ಅಕ್ಕಮ್ಮ ಹೇಳಿದ್ಲು. ಇನ್ನು ಮೇಲಾದ್ರೂ ಹಾಯಾಗಿ ಮನೇಲಿರ್‌ಬಾರ್‌ದೇ?’ +‘ಊರಲ್ಲಿದ್ದು ಏನು ಮಾಡ್‌ಲಿ?’ +‘ಸುಮ್ನಿರು.’ +‘ಸುಮ್ನೆ ಹ್ಯಾಗಿರೂದು? ಏನಾದ್‌ರೂ ಕೆಲ್ಸ ಮಾಡಬೇಕಲ?’-ಈ ಪ್ರಶ್ನೆಗೆ ನಂಜಮ್ಮನಿಗೆ ಉತ್ತರ ತಿಳಿಯಲಿಲ್ಲ. ಸ್ವಲ್ಪ ಹೊತ್ತಾದಮೇಲೆ ಅವರೇ ಅಂದರು: ‘ಕಲ್ಲೇಶನ ಹೆಂಡ್ತಿ ಯೋಗ್ತಿ ನಿಂಗೇ ಗೊತ್ತಿದೆ. ಆ ಮುಂಡೇನ ಒದ್ದು ಓಡ್ಸೂತಂಕ ಯಾರಿಗೂ ಸುಖವಿಲ್ಲ. ಅವ್ನೂ ಅವ್ಳುನ್ನ ಹೊಡೀತಾನೆ, ಬಡೀತಾನೆ, ಓಡ್ಸುಲ್ಲ. ಅವ್ಳುನ್ನ ಖೂನಿಮಾಡಿ ಯಾವ್ದಾದ್ರೂ ಹೊಲದಲ್ಲಿ ಹೂತುಬಿಡೂದೇನೂ ಕಷ್ಟವಲ್ಲ. ಅವಳ ಜೊತೆ ಹೆಣಗಬೇಕು ಅಂತ ಅವನ ಹಣೇಲಿ ಬರೆದಿದ್ರೆ ನಾನ್ಯಾಕೆ ಮಧ್ಯೆ ಏನಾರಮಾಡ್ಳಿ ಅಂತ ಸುಮ್ಮನಾಗಿಬಿಟ್ಟೆ. ನಂದೇನು ಯಾವೂರಲ್ಲಿದ್ರೂ ಆಗುತ್ತೆ ಬಿಡು.’ +ನಂಜಮ್ಮ ಮಾತಾಡಲಿಲ್ಲ. ‘ಇಲ್ಲಿಯೇ ಬಂದು ಇರು’-ಎಂದು ಅವಳು ಹೇಳುವ ಮನಸ್ಸು ಅವಳದು. ಆದರೆ ಅವರು ಮಗಳ ಮನೆಯಲ್ಲಿ ಎಂದಿಗೂ ಬಂದು ಇರುವವರಲ್ಲ. ಅಲ್ಲದೆ ಅವರು ಇಲ್ಲಿದ್ದರೆ ತನ್ನ ಗಂಡ ಮನೆ ಬಿಟ್ಟು ಹೋಗುತ್ತಾರೆ. ಗಂಡನ ನಡವಳಿಕೆ ಕಂಡರೆ ಸಿಟ್ಟು ಬಂದು ಅವರು ಹಿಡಿದು ಎರಡು ಹೊಡೆದರೂ ಸರಿಯೇ. ಅವಳು ಯಾವ ಮಾತೂ ಆಡಲಿಲ್ಲ. ಇಪ್ಪತ್ತು ಮೈಲಿ ನಡೆದು ಬಂದಿದ್ದ ಅವರಿಗೆ ಬೇಗ ನಿದ್ರೆ ಬಂದುಬಿಟ್ಟಿತು. +ನಂಜಮ್ಮ ಸ್ವಲ್ಪ ಹೊತ್ತು ಹೊರಳಾಡುತ್ತಲೇ ಇದ್ದಳು. ವಿಶ್ವನನ್ನು ಪೋಲೀಸ್ ಸ್ಟೇಷನ್ನಿಗೆ ಹಿಡಿದುಕೊಂಡು ಹೋಗಿದ್ದುದೇ ಯೋಚನೆ. ನಿದ್ರೆ ಬಂದಮೇಲೆ ಅದೇ ಕನಸು. ಅವನನ್ನು ಪೋಲೀಸಿನವರು ಬಿಟ್ಟುಬಿಟ್ಟಿದ್ದಾರೆ. ಆದರೆ ತನ್ನನ್ನು ಹಿಡಿದುಕೊಳ್ಳಲು ಬಂದಿದ್ದಾರೆ. ಓಡಿ ಓಡಿ ಹೋಗುತ್ತಿರುವ ಅವಳನ್ನು ಇಬ್ಬರು ಕರಿಯ ಬಣ್ಣದ ಕಾನಿಸ್ಟೇಬಲುಗಳು ಹಿಂಬಾಲಿಸುತ್ತಿದ್ದಾರೆ. ಎದುರಿಗೆ ಒಂದು ಹಳ್ಳ ಸಿಕ್ಕುತ್ತದೆ. ಅದನ್ನು ದಾಟಿ ದೂರ ಓಡಿ ಬಂದಮೇಲೆ ಅವರು- ‘ನಮ್ಮ ಕೈಯಿಂದ ತಪ್ಪಿಸಿಕೊಂಡು ಎಲ್ಲಿ ಹೋಗ್ತಿಯಾ ಬಿಡು’ ಎಂದು ಗಹಗಹಿಸಿ ನಗುತ್ತಾ ಅಲ್ಲಿಯೇ ನಿಂತುಕೊಳ್ಳುತ್ತಾರೆ. ಅವಳಿಗೆ ತಕ್ಷಣ ಎಚ್ಚರವಾಯಿತು. ಏನೋ ಕೆಟ್ಟ ಕನಸು. ತಾನೇನು ಅಂಥ ತಪ್ಪು ಕೆಲಸ ಮಾಡಿದೆ, ಪೋಲೀಸಿನವರು ಹೀಗೆ ಓಡಿಸಿಕೊಂಡು ಬರುಕ್ಕೆ?-ಎಂದು ಯೋಚಿಸುತ್ತಾ ಮಲಗಿದಳು. ಎಷ್ಟೋ ಹೊತ್ತು ನಿದ್ದೆ ಬರಲಿಲ್ಲ. +ಕಂಠೀಜೋಯಿಸರು ಮಗಳ ಮನೆಯಲ್ಲಿ ಮೂರು ದಿನ ಇದ್ದರು. ಮನೆಯ ಕಟ್ಟಡ ನೋಡಿ ತಮಗೆ ತಿಳಿದ ಸಲಹೆಗಳನ್ನು ಕೊಟ್ಟರು. ಹಾಸನದ ತಾಲ್ಲೂಕು ಕಟ್ಟಾಯದಲ್ಲಿ ಒಂದು ಮನೆಗೆ ಕಟ್ಟು ಮಾಡಬೆಕಾಗಿದ್ದುದರಿಂದ ಹೆಚ್ಚು ದಿನ ಇರದೆ ಹೊರಟುಬಿಟ್ಟರು. +ಹೆಂಚಿನ ದುಡ್ಡಿಗೆ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಅವಳ ತಂದೆ ಇನ್ನೂರು ರೂಪಾಯಿ ಕೊಟ್ಟು ಹೋಗಿದ್ದರು. ಅವರು ಹೊರಟ ದಿನವೇ ಅವಳು ಸಣ್ಣೇನ ಹಳ್ಳಿಗೆ ಹೋಗಿ, ದುಡ್ಡು ದುಡ್ಡು ಹೊಂದಿಸಿರುವುದಾಗಿಯೂ ಇನ್ನು ಎರಡು ದಿನಕ್ಕೆ ಹೆಂಚು ತಂದು ಹಾಕಿ ಹಣ ಎಣಿಸಿಕೊಂಡು ಹೋಗಬೇಕಾಗಿಯೂ ಹೇಳಿ ಬಂದಳು. ಮೇಲೆ ಎದ್ದ ಗೋಡೆ ಸ್ವಲ್ಪ ಒಣಗುವುದೇ ತಡ. ಕಂಬ ಇಟ್ಟು ತೊಲೆ, ಕವೆಗಂಬ, ತೀರು ಏರಿಸಿ ದಬ್ಬೆ ಕಟ್ಟಬೇಕು. ಎಲ್ಲವೂ ಸಿದ್ಧವಾಗಿವೆ. ಹೆಂಚಿಗೆ ಕೊಟ್ಟಮೇಲೂ ಐವತ್ತು ರೂಪಾಯಿ ಕೈಲಿ ಉಳಿಯುತ್ತೆ. ಹಿಡಿದ ಕೈಲೇ ಕೆಮ್ಮಣ್ಣುಗಾಜು, ಸುಣ್ಣ ಮಾಡಿಬಿಡಬೇಕು. ಮನೆಯೊಂದಾದರೆ ಸರಿ. ಗೃಹಪ್ರವೇಶದ ಖರ್ಚಿಗೆ ಹೇಗಾದರೂ ಹೊಂದಿಸಬಹುದು. ಅಷ್ಟರಲ್ಲಿ ನೈಟ್ ಸ್ಕೂಲಿನ ದುಡ್ಡು ಬಂದರೆ ಅದರಲ್ಲಿ ಐವತ್ತು ರೂಪಾಯಿ ಖರ್ಚಿನಲ್ಲಿ ಹೇಗೋ ಹೊಸಮನೆ ಶಾಸ್ತ್ರ ಮಾಡಬೇಕು. ತನ್ನ ಅಪ್ಪನಿಗೇ ಹೇಳಿಕಳಿಸಬೇಕು. ಈ ಊರ ಜೋಯಿಸರನ್ನು ಕರೆಯುವುದು ಬೇಡ. ಗೃಹಪ್ರವೇಶಕ್ಕೆ ವಿಶ್ವನನ್ನು ಕರೆಸಿಕೊಳ್ಳುವುದಂತೂ ಸರಿ. ಅಕ್ಕಮ್ಮ ಬತ್ತಾಳೆ. ಕಲ್ಲೇಶನೂ ಬಂದೇಬತ್ತಾನೆ. ಅವನ ಹೆಂಡ್‌ತೀದು ನೆಚ್ಚಿಗೆ ಇಲ್ಲ. +ಈ ಸಲ ಇನ್ನೂ ಬೇಸಿಗೆ ಶುರುವಾಗುವ ಮೊದಲೇ ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡವು. ಹೆಂಚು ಹೊದೆಸುವ ಮೊದಲು ಮಳೆ ಬಂದರೆ ಗೋಡೆ ಕಲಸಿಕೊಳ್ಳುತ್ತದೆ. ಆದುದರಿಂದ ಮೇಲಿನ ಕೆಲಸ ಬೇಗ ಮುಗಿಯಬೇಕು. ಮರಗೆಲಸದವರಿಗೆ ವರಾತ ಮಾಡಿ ಅವಳು ಮತ್ತೆ ಒಂದು ದಿನ ಸಣ್ಣೇನಹಳ್ಳಿಗೆ ಹೋದಳು. ಕುಂಬಾರಶೆಟ್ಟಿ ಮನೆಯಲ್ಲಿರಲಿಲ್ಲ. ಅವನು ಬರುವತನಕ ಅವನ ಮನೆಯಲ್ಲೆ ಕೂತಿದ್ದು, ನಿಧಾನ ಮಾಡುತ್ತಿರುವುದಕ್ಕೆ ಅವನಿಗೆ ಎಚ್ಚರ ಹೇಳಿ ಊರಿಗೆ ಬಂದಳು. ಮರುದಿನವೇ ಹೆಂಚು ಬಂತು. ಬಿಸಿಲು ಒಂದೇಸಮನೆ ಸುಡುತ್ತಿತ್ತು. ಆಕಾಶದಲ್ಲಿ ಮೋಡಗಳು ಹೆದರಿಕೆ ಹುಟ್ಟಿಸುತ್ತಿದ್ದವು. ಬೇಗ ಬೇಗ ಹೆಂಚು ಮೇಲೆ ಏರಬೇಕು. ಹೆಂಚು ಹೊದಿಸುವ ಕೆಲಸವೂ ಪ್ರಾರಂಭವಾಯಿತು. ಮನೆಯ ಎರಡು ಕಡೆಯೂ, ಕೆಲಸ ಬಲ್ಲವರು ಸೂರಿನ ಮೇಲಿನಿಂದ ಹತ್ತಿ ಕೂತರು. ಹೆಣ್ಣಾಳುಗಳು ಏಣಿಯಮೇಲೆ ಹತ್ತಿ ಹೆಂಚಿನ ಉಂಡೆಗಳನ್ನು ಮೇಲೆ ಏರಿಸುತ್ತಿದ್ದರು. ಆ ಸಂಜೆಗೆ ಮಳೆ ಬರಬಹುದು. ನಂಜಮ್ಮ ಬೆಳಗಿನಿಂದ ಒಂದೇಸಮನೆ ತಾನೂ ಹೆಂಚು ಎತ್ತಿ ಮೇಲೆ ಕೊಡುವ ಕೆಲಸ ಮಾಡುತ್ತಿದ್ದಳು. ಆಳುಗಳಲ್ಲಿ ಯಾರೂ ಸುಧಾರಿಸಿಕೊಳ್ಳಲಿಲ್ಲ. ಸಂಜೆ ನಾಲ್ಕು ಗಂಟೆಯ ವೇಳೆಗೆ ಎಲ್ಲವೂ ಮುಗಿದು, ನಡುವಿನ ದಬ್ಬಹೆಂಚನ್ನು ಹೊದೆಸಿ ಆಯಿತು. ‘ಅವ್ವಾ, ನಿಮ್ಮ ಕೆಲ್ಸ ಆಯ್ತು. ನೀವು ಗೆದ್ರಿ’-ಎಂದು ಹೇಳಿ ಕೆಲಸದವರು ಕೆಳಗೆ ಇಳಿದರು. +ಅಲ್ಲಿಯೇ ಇದ್ದ ಮಾದೇವಯ್ಯನವರು ಎಂದರು: ‘ನಂಜಮ್ಮ, ಅಪ್ಪಣ್ಣಯ್ಯ ಕಬ್ಬಿನ ಗದ್ದೆಗೆ ಬೆಂಕಿ ತಗುಲ್‌ಸಿದ್‌ನಲಾ, ಅದಕ್ಕೆ ತಾನೇ ನಿಮ್ಮ ಜಮೀನೆಲ್ಲ ಹ್ವಾದದ್ದು? ಅವತ್ತು ಅವನೂ ಚಿನ್ನಯ್ಯ, ಇಬ್ಬರೂ ಸೇರಿ ಮನೆಮ್ಯಾಲೆ ಹತ್ತಿ, ಒನಕೆ ತಗಂಡಿ ಹೆಂಚು ಒಡೆದು ಹಾಕಿದ್ರು. ನಾನು ಹೇಳ್ತಿದ್ನಲ-ಮನೆ ವಡೆಯಾದು ಸುಲಭ, ಕಟ್ಟಾದು ಕಷ್ಟ ಅಂತ. ಅಂತೂ ನೀನು ಸ್ವಂತ ಕಟ್ಟಿ ಮುಗಿಸ್ದೆ.’ +ಅವರು ಹಾಗೆ ಹೇಳುವಾಗ ಅಲ್ಲಿಯೆ ಇದ್ದ ಚೆನ್ನಿಗರಾಯರು ಸಿಟ್ಟು ಬಂದು ಅಲ್ಲಿಂದ ಹೊರಟುಹೋದರು. +ಮೋಡ ಅಬ್ಬರ ಮಾಡಿದುದೆಷ್ಟೋ ಅಷ್ಟೇ. ಸಂಜೆ ಮಳೆ ಬರಲಿಲ್ಲ. ರಾತ್ರಿಯ ವೇಳೆಗೆ ಆಕಾಶದಲ್ಲಿ ಏನೂ ಇರಲಿಲ್ಲ. ಬೆಳಗಿನಿಂದ ಹೆಂಚು ಎತ್ತಿ ಎತ್ತಿ ನಂಜಮ್ಮನಿಗೆ ಸಾಕಾಗಿ ಹೋಗಿತ್ತು. ಆದರೂ ಹೊಟ್ಟೆಗೆ ಏನಾದರೂ ಮಾಡಬೇಕು. ರಾತ್ರಿ ಒಲೆ ಹಚ್ಚಿ ಒಂದಿಷ್ಟು ಅನ್ನ ಬೇಯಿಸಿದಳು. ಮಜ್ಜಿಗೆಯಲ್ಲಿ ಗಂಡನಿಗೂ ಹಾಕಿ ತಾನೂ ತಿಂದು ಮಲಗಿದರೆ, ಸತ್ತ ಮಕ್ಕಳ ಯೋಚನೆ ಮನಸ್ಸನ್ನು ಮುತ್ತಿತ್ತು. ನಮ್ಮ ಸ್ವಂತ ಮನೆಯಲ್ಲಿ ಅವು ಒಂದು ದಿನವೂ ಇರಲಿಲ್ಲ-ಎಂಬ ಕೊರಗು ಬಾಧಿಸಿತು. ಹಾಗೆಯೇ ವಿಶ್ವನ ಯೋಚನೆ ಬಂತು. ಅವನು ನಾಗಲಾಪುರಕ್ಕೆ ಹೋಗಿ ಆರು ತಿಂಗಳ ಮೇಲೆ ಆಯಿತು. ಇನ್ನು ಹದಿನೈದು ದಿನದಲ್ಲಿ ಬೇಸಿಗೆ ರಜ ಬರುತ್ತೆ. ಊರಿಗೆ ಕರಕೊಂಡು ಬರಬೇಕು. ಈ ಊರ ಸ್ಕೂಲಿನ ಹತ್ತಿರ ಹೋಗದ ಹಾಗೆ ನೋಡಿಕೊಂಡರೆ ಸಾಕು. ನಾನೇ ಗಾಡಿ ಹೂಡಿಸ್ಕಂಡು ಹೋಗಬೇಕು. ಅಮ್ಮ ಅಮ್ಮ ಅಂತ ಎಷ್ಟು ಹಲುಬುತ್ತಿರುತ್ತೋ ಅದು! ಅವನ ಜೊತೇಲೇ ಅಕ್ಕಮ್ಮನನ್ನೂ ಕರಕೊಂಡು ಬರಬೇಕು. ಇನ್ನೊಂದು ವರ್ಷ ಅವನು ಅಲ್ಲಿರೂದು. ಆಮೇಲೆ ಕಂಬನಕೆರೆ. ರಾಮಣ್ಣ ಕಷ್ಟಪಟ್ಟ ಹಾಗೆ ಅವನು ದಿನಾ ಹೋಗ್ತಾ ಐದು ಮೈಲಿ ಬರ್ತಾ ಐದು ಮೈಲಿ ತಿರುಗೂದು ಬ್ಯಾಡ. ಒಂದು ಸಣ್ಣ ಮನೆ ಬಾಡಿಗೆಗೆ ಮಾಡಿಕೊಂಡು ನಾವೂ ಅಲ್ಲೇ ಇರಬೇಕು. ಅಲ್ಲಿಂದಲೇ ಇಲ್ಲಿಗೆ ಬಂದು ಶ್ಯಾನುಭೋಗಿಕೆ ಲೆಕ್ಕ ಬರೆದರೂ ಆಗುತ್ತೆ-ಹೀಗೆಯೇ ಯೋಚಿಸುತ್ತಿದ್ದ ಅವಳಿಗೆ ಎಷ್ಟೋ ಹೊತ್ತಿನ ಮೇಲೆ ನಿದ್ರೆ ಬಂತು. +ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಮೈ ಕೈ ಭಾರವಾಗಿ ಜ್ವರ ತುಂಬಕೊಂಡಿತ್ತು. ಎರಡು ಕಂಕುಳಲ್ಲೂ ನೋವು. ನೆನ್ನೆಯ ದಿನವೆಲ್ಲ ಬಿಸಿಲಿನಲ್ಲಿ ನಿಂತು ಅಷ್ಟೊಂದು ಹೆಂಚುಗಳನ್ನು ಎತ್ತಿಕೊಟ್ಟಿದ್ದಳು. ಬಿಸಿಲು ಅವಳಿಗೆ ಹೊಸತೇನಲ್ಲ. ಆದರೆ ನೆನ್ನೆ ಕಾದುದು ಮಳೆ ಬರುವಂತಹ ತೀಕ್ಷ್ಣವಾದ ಬಿಸಿಲು. ಮನುಷ್ಯರ ಶರೀರ ಒಂದೇಸಮ ಇರುಲ್ಲ. ಅಷ್ಟೊಂದು ಹೆಂಚುಗಳನ್ನು ಎತ್ತಿದ್ದಕ್ಕೆ ಎರಡು ಕಂಕುಳುಗಳಲ್ಲೂ ಅದಗಳಲೆ ಕಟ್ಟಿದ ಹಾಗೆ ಆಗಿದೆ-ಎಂದುಕೊಂಡು ಎದ್ದು ಮುಖ ತೊಳೆದು ಕರು ಬಿಟ್ಟು ಹಾಲು ಕರೆದಳು. ವಿಶ್ವನನ್ನು ಕಳಿಸಿದಮೇಲೆ ಹಾಲು ಮೊಸರು ಖರ್ಚೇ ಆಗುತ್ತಿಲ್ಲ. ಈಗ ಒಂದು ತಿಂಗಳಿನಿಂದ ಅಪ್ಪಣ್ಣಯ್ಯನೂ ಊರಿನಲ್ಲಿಲ್ಲ. ಹೀಗಾಗಿ ತುಂಬಾ ಮಜ್ಜಿಗೆ ಉಳಿದುಬಿಡುತ್ತಿದೆ. ಜ್ವರ ಬಂದಿದ್ದರೂ ಅವಳೇ ಆರು ರೊಟ್ಟಿ ಹಾಕಿದಳು. ತಾನು ಒಂದರ್ಧ ತಿಂದು, ಉಳಿದ ಐದೂವರೆಯನ್ನು ಗಂಡನಿಗೆ ಇಟ್ಟು ಹಾಸಿಗೆ ಹಾಕಿಕೊಂಡು ಮಲಗಿಬಿಟ್ಟಳು. ಅರ್ಧ ನಿದ್ದೆ ಅರ್ಧ ಎಚ್ಚರ. ಸಂಜೆಯ ತನಕ ಹೀಗೆಯೇ ಕಳೆಯಿತು. ಮನೆಗೆ ಯಾರೂ ಬರಲಿಲ್ಲ. ಗಂಡನಂತೂ ಸರಿಯೇ ಸರಿ. ಸಂಜೆ ತಾನೇ ಎದ್ದು ಶುಂಠಿ ಮೆಣಸಿನ ಕಷಾಯ ಮಾಡಿಕೊಂಡು ಕುಡಿದು ಮತ್ತೆ ಮಲಗಿದಳು. ಅರೆನಿದ್ದೆಯ ಸ್ಥಿತಿ. ಯಾವಾಗ ರಾತ್ರಿಯಾಯಿತೋ, ಗಂಡ ಯಾವಾಗ ಬಂದು ಮಲಗಿದರೋ ಗೊತ್ತಿಲ್ಲ. +ಅರ್ಧ ರಾತ್ರಿ ಹೊತ್ತಿನಲ್ಲಿ ಅವರ ಗೊರಕೆಯ ಸದ್ದಿಗೆ ಎಚ್ಚರವಾಯಿತು. ಜಲಬಾಧೆ ತೀರಿಸಲು ಹೋಗುವಂತಾಗಿ ಮೇಲೆ ಏಳುತ್ತಾಳೆ: ಎರಡು ತೊಡೆಯ ಸಂದುಗಳಲ್ಲೂ ನೋಯುತ್ತಿದೆ. ಮತ್ತೆ ಬಂದು ಮಲಗಿದಾಗ ಅವಳಿಗೆ ಅನುಮಾನ ಬಂತು. ಹೆಂಚು ಎತ್ತಿದ್ದಕ್ಕೆ ಕಂಕುಳುನೋವು ಬಂದಿರಬಹುದು. ಏಣಿ ಹತ್ತಿ ಇಳಿದು ಮಾಡಿದ್ದಕ್ಕೆ ತೊಡೆಯ ಸಂದಿನಲ್ಲಿ ನೋವು ಆಗುವುದಿದ್ದರೆ ಇವತ್ತು ಬೆಳಿಗ್ಗೆಯೇ ಯಾಕೆ ಕಾಣಿಸಿಕೊಳ್ಳಲಿಲ್ಲ? ಇದೇನು ಪ್ಲೇಗೇ? ಹಾಗಾದರೆ ಊರಿನಲ್ಲಿ ಎಲ್ಲಿಯೂ ಇಲಿ ಗಿಲಿ ಬಿದ್ದ ಸುದ್ದಿಯೇ ಕೇಳಿಲ್ಲ. ಹೋದ ಸಲ ಪಾರ್ವತಿ ರಾಮಣ್ಣರಿಗೆ ಬಂದಾಗಲೂ ಸದ್ದಿಲ್ಲದೆ, ಯಾವ ಸೂಚನೆಯೂ ಕೊಡದೆ ಬಂತು. ಈಗಲೂ ಹಾಗೆಯೇ ಕಳ್ಳತನದಿಂದ ಬಂದಿದೆಯೆ? ಅವಳಿಗೆ ಹೆದರಿಕೆಯಾಯಿತು. ಹೇಗಾದರಾಗಲಿ, ಮಾದೇವಯ್ಯನವರನ್ನಾದರೂ ಕೇಳಬೇಕು. +‘ನೋಡಿ, ಎಚ್ಚರವಾಯ್ತೆ?’-ಎಂದು ಗಂಡನನ್ನು ಕೂಗಿದಳು. ಅವರ ಗೊರಕೆ ಮುರಿಯಲಿಲ್ಲ. ಮತ್ತೆ ಒಂದು ಸಲ ಕೂಗಿ ಕೈ ನೀಡಿ ಅವರ ಭುಜ ಅಲುಗಿಸಿದಳು. +‘ಸುಮ್ಮುನ್ ಬಿದ್ಗಳೇ, ರಾತ್ರಿ ಅಡಿಗೇನೂ ಮಾಡ್ಳಿಲ್ಲ. ಈಗ ನಿದ್ದೆ ಬ್ಯಾರೆ ಕೆಡುಸ್ತಾಳೆ’-ಅವರು ನಿದ್ದೆಗಣ್ಣಿನಲ್ಲೇ ಗದ್ದರಿಸಿಕೊಂಡರು. +ಅವಳಿಗೆ ಸಿಟ್ಟು ಬಂತು. ‘ನೀವೇನು ಮನುಷ್ಯರೋ ದನವೋ?’-ಎಂದು ಕೇಳಿಬಿಡಬೇಕೆನ್ನಿಸಿತು. ಆದರೆ ಅದರಿಂದ ಅವರು ಇನ್ನೂ ಬಾಯಿಗೆ ಬಂದಂತೆ ಬಯ್ದು ತನ್ನ ಮನಸ್ಸಿಗೆ ಕರಕರೆಯಾಗುತ್ತದೆ ಎಂದು, ನಾಲಿಗೆಗೆ ಬಂದಿದ್ದ ಮಾತನ್ನು ಒಳಗೇ ನುಂಗಿಕೊಂಡು ಹೇಳಿದಳು: ‘ನಂಗೆ ಪ್ಲೇಗು ಆಗಿದೆ ಅಂತ ಕಾಣುತ್ತೆ. ಹೋಗಿ ಮಾದೇವಯ್‌ನೋರುನ್ನ ಕರ್ಕಂಡ್ ಬನ್ನಿ.’ +ಅವರು ಮಾತನಾಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಗೊರಕೆ ಹೊಡೆಯುತ್ತಿದ್ದರು. ಬೆಳಗಿನ ತನಕ ಕಾದರೂ ಆದೀತು. ಆದರೆ ಸಾಧ್ಯವಾದಷ್ಟು ಬೇಗ ಔಷಧ ತೆಗೆದುಕೊಳ್ಳಬೇಕು. ಅವಳೇ ಮೇಲೆ ಎದ್ದು ಕಂಬಳಿ ಹೊದೆದು ಬಾಗಿಲು ತೆಗೆದುಕೊಂಡು ಹೊರಗೆ ಹೊರಟಳು. ಮೈ ತೂರಾಡುವಂತೆ ಆಗುತ್ತಿತ್ತು. ನಡೆಯುವಾಗ ತೊಡೆಯ ಸಂದಿನಲ್ಲಿ ನೋವು ಕಾಣುತ್ತಿದ್ದರೂ ಕಂಕುಳಿನಷ್ಟು ಆಗುತ್ತಿರಲಿಲ್ಲ. ಹೇಗೋ ದೇವಸ್ಥಾನದ ಬಾಗಿಲಿಗೆ ಹೋಗಿ-‘ಅಯ್ನೋರೇ ಎಂದಳು. ಬೇಸಿಗೆಯಾಗಿದ್ದುದರಿಂದ ಜಗುಲಿಯ ಮೇಲೆ ಮಲಗಿದ್ದ ಅವರು ‘ಆ’ ಎಂದ ತಕ್ಷಣ, ‘ನಂಗೆ ಪ್ಲೇಗ್ ಆಗಿದೆ ಅಂತ ಕಾಣುತ್ತೆ. ನಮ್ಮನೆಗೆ ಬನ್ನಿ’ ಎಂದು ಹೇಳಿ ಹಿಂತಿರುಗಿ ಹೊರಟಳು. ತೂರಾಡಿಕೊಂಡು ಮತ್ತೆ ಮನೆಯ ಬಾಗಿಲಿಗೆ ಬರುವ ಹೊತ್ತಿಗೆ, ಹಿಂದಿನಿಂದ ಬಂದ ಅಯ್ಯನವರೇ ಬಾಗಿಲು ತೆಗೆದರು. ಒಳಗೆ ಹೋಗಿ ತಲೆಯ ದಿಂಬಿನ ಹತ್ತಿರ ಇಟ್ಟುಕೊಂಡಿದ್ದ ಬೆಂಕಿಯಪೊಟ್ಟಣ ತೆಗೆದು ಕಡ್ಡಿ ಗೀರಿ ಲ್ಯಾಂಪು ಹಚ್ಚಿಸಿ ಹಾಸಿಗೆಯ ಮೇಲೆ ಮಲಗಿಬಿಟ್ಟಳು. ಬೆಳಕಿನಲ್ಲಿ ಅಯ್ಯನವರು ನೋಡುತ್ತಾರೆ: ಅವಳ ಮುಖವೆಲ್ಲ ಕೆದರಿಹೋಗಿ ಕಣ್ಣು ಕೆಂಡದ ಉಂಡೆಯಂತೆ ಕಾಣುತ್ತಿವೆ. ಮೈಯಲ್ಲಿ ಜ್ವರವಿರುವುದು ಮುಖ ನೋಡಿದರೇ ತಿಳಿಯುತ್ತಿತ್ತು. +‘ಜ್ವರ ಯಾವಾಗ ಬಂತವ್ವ?’ +‘ನೆನ್ನೆ ರಾತ್ರಿಯೇ ಬಂತು. ನೆನ್ನೆ ಎಲ್ಲ ಕಂಕುಳು ನೋಯುತ್ತಿತ್ತು. ಹೆಂಚು ಎತ್ತಿ ಎತ್ತಿ ಅಡಗಳಲೆ ಅಂತಿದ್ದೆ. ಈಗ ಎಚ್ಚರವಾದ ತಕ್ಷಣ ತೊಡೆ ಸಂದಿನಲ್ಲಿ ನೋಯ್ತಿದೆ.’ +ಒಂದು ನಿಮಿಷ ಯೋಚಿಸಿದಮೇಲೆ ಅಯ್ಯನವರು ಕೇಳಿದರು: ‘ಸಣ್ಣೇನಹಳ್ಳಿಗೆ ಹಂಚಿಗೆ ಹೇಳಾಕೆ ಅಂತ ಹ್ವಾಗಿದ್ಯಲಾ, ಊರ ವಳಗೆ ಹ್ವಾಗಿದ್ಯಾ, ಹ್ವರಗೇ ಇದ್ಯೋ?’ +‘ಲಕ್ಕಯ್ಯಶೆಟ್ಟಿ ಮನೆ ಊರ ಮಧ್ಯದಲ್ಲಲ್ವೆ ಇರೂದು? ಯಾಕೆ?’ +‘ಅವನ ಮನ್ಲಿ ಕುಂತ್ಕಂಡಿದ್ಯಾ?’ +‘ಹೂಂ, ನಾನು ಹೋದಾಗ ಅವ್ನು ಮನ್ಲಿರ್ಲಿಲ್ಲ. ಬರೂತಂಕ ಎರಡು ಗಂಟೆ ಕಾಯ್ಕಂಡು ಕೂತಿದ್ದೆ ಯಾಕೆ?’ +‘ಆ ಊರಲ್ಲಿ ಹತ್ತು ಹನ್ನೆಲ್ಡು ದಿನದಿಂದ ಇಲಿ ಬೀಳ್ತಾವಂತೆ. ಹಳ್ಳೀಮುಂಡೇವು ತಿಳಿಯಾಕುಲ್ಲ. ಊರು ಗೀರು ಬಿಡದೆ ಅಲ್ಲೇ ಅವೆ. ಇವತ್ತು ಬೆಳಿಗ್ಗೆ ನಾನು ಕೋರುಣ್ಯದ ಭಿಕ್ಷಕ್ಕೆ ಆ ಕಡೆ ಹ್ವಾಗಿದ್ದೆ. ಹಿಂಗೆ ಅಂತ ತಿಳೀತು. ನಾನು ಊರೊಳಿಕ್ಕೆ ಹ್ವಾಗ್‌ಲೇ ಇಲ್ಲ.’ +‘ಹಾಗಾದ್ರೆ ನಂಗೆ ಆಗಿರೂದು ಪ್ಲೇಗೇ ಅಂತೀರಾ?’ +‘ಹೇಳಾಕಾಗಾಕುಲ್ಲ. ಹ್ಯಂಗಾದ್ರೆ ಹಂಗಾಗ್ಲಿ. ಬ್ಯಾಗ ಔಸ್ತಿ ಮಾಡುಸ್ಬೇಕು.’ +ಇಷ್ಟು ಮಾತಾಡುವ ಹೊತ್ತಿಗೆ ಅವಳಿಗೆ ಆಯಾಸವಾಗಿತ್ತು. ಸ್ವಲ್ಪ ಹೊತ್ತು ಹಾಗೆಯೇ ಕಣ್ಣು ಮುಚ್ಚಿಕೊಂಡಿದ್ದಮೇಲೆ-‘ಮನ್ಲಿ ಐವತ್ತು ರೂಪಾಯಿ ಇದೆ. ಏನು ಔಸ್ತಿಯಾದ್ರೂ ತರ್ಸಿ. ನೀವೇ ದಿಕ್ಕು’ ಎಂದು ಹೇಳಿ ಕಣ್ಣು ಮುಚ್ಚಿದಳು. ಈಗ ಅವಳಿಗೆ ಯಾವ ಔಷಧಿ ಮಾಡಿಸಬೇಕು-ಎಂದು ಅಯ್ಯನವರು ಯೋಚಿಸಿದರು. ಹೋದ ಸಲ ವಿಶ್ವನನ್ನು ಗಾಡಿಯ ಮೇಲೆ ಹೇರಿಕೊಂಡು ಕಂಬನಕೆರೆ ಆಸ್ಪತ್ರೆಗೆ ಹೋಗಿದ್ದ ನೆನಪಾಯಿತು. ‘ಈ ಡಾಕ್ಟ್ರು ಏನೂ ಮಾಡಾಕಿಲ್ಲ. ಹೇಮಾದಿ ಪಾನಕವೇ ಸರಿ’-ಎಂದು ನಿರ್ಧರಿಸಿದರು. ದುಡ್ಡು ಇದ್ದ ಜಾಗವನ್ನು ನಂಜಮ್ಮ ಹೇಳಿದಳು. ಈಗ ಇನ್ನೂ ಅರ್ಧ ರಾತ್ರಿಯಾಗಿರಬಹುದು. ಅವರು ಹೊರಗೆ ಬಂದು ಆಕಾಶ ನೋಡಿದರು. ಮಂಚದ ಕಾಲು ಕಾಣಿಸುತ್ತಿತ್ತು. ಈಗ ಅರ್ಜೆಂಟ್ ತಿಪಟೂರಿಗೆ ನಡೆದು ಹೋಗಿ ಹೇಮಾದಿ ಪಾನಕ ತಗಂಡು ತಕ್ಷಣ ಸಿಕ್ಕುವ ಮೋಟಾರಿನಲ್ಲಿ ತಿಂತಿರುಗಿ ಬರಬಲ್ಲವರು ಯಾರು? ಚೆನ್ನಿಗರಾಯರಿಗೆ ರಾತ್ರಿಯ ಕತ್ತಲಲ್ಲಿ ನಡೆಯುವ ಧೈರ್ಯವಿಲ್ಲ. ಅವರ ಮೈಗಳ್ಳತನ ಎಲ್ಲರಿಗೂ ಗೊತ್ತಿರುವುದೇ. ಕೈಗೆ ಸಿಕ್ಕಿದ ಔಷಧಿಯ ದುಡ್ಡಿನಲ್ಲಿ ಮಸಾಲೆ ದೋಸೆ ಮೈಸೂರುಪಾಕು ತಿನ್ನುತ್ತಾ ಅಲ್ಲಿಯೇ ಉಳಿದುಬಿಟ್ಟರೂ ಕಷ್ಟ. ಅಪ್ಪಣ್ಣಯ್ಯ ಊರಿನಲ್ಲಿಲ್ಲ. ತಾವೇ ಹೋಗಬಹುದು. ಆದರೆ ಒಂದೇ ಉಸಿರಿಗೆ ತಿಪಟೂರು ತನಕ ನಡೆಯುವ ಶಕ್ತಿ ತಮಗಿಲ್ಲ. ತಾವು ಅಲ್ಲಿಗೆ ಹೋದರೆ ಇಲ್ಲಿ ಈ ರೋಗಿಯ ಹತ್ತಿರ ಯಾರೂ ದಿಕ್ಕಿಲ್ಲ. ಕಷ್ಟಕಾಲದಲ್ಲಿ ನರಸಿ ಯಾರಿಗಾದರೂ ಆಗುತ್ತಾಳೆ. ತಿಪಟೂರಿನಿಂದ ತನ್ನ ಅಂಗಡಿಗೆ ಸಾಮಾನು ತಂದು ಸಹ ಅವಳಿಗೆ ಅಭ್ಯಾಸವಿದೆ. ಆದರೆ ಹೆಣ್ಣು ಹೆಂಗಸು ರಾತ್ರಿಯ ಹೊತ್ತು ನಡೆಯಲಾರಳು. ಹೇಗಾದರೂ ಸರಿ, ಅವಳನ್ನು ಕೇಳುವುದು. ಅವಳು ಇನ್ಯಾರನ್ನಾದರೂ ಕಳಿಸಬಹುದು-ಎಂದು ಯೋಚಿಸಿದ ಅವರು, ಊರ ಹೊರಗೆ ಹೋಗಿ ಅವಳ ಅಂಗಡಿ ಬಾಗಿಲು ತಟ್ಟಿದರು. ತಕ್ಷಣ ಎದ್ದು ದೀಪ ಹಚ್ಚಿ ಹೊರಗೆ ಬಂದ ಅವಳು ಇವರು ಹೇಳಿದುದನ್ನು ಕೇಳಿ, ‘ಅಯ್ಯಾರೇ ನೀವೇನ್ ಹ್ಯದರ್ಕಾಬ್ಯಾಡಿ. ಲಿಂಗಾಪುರದ ಸಂಬಣ್ಣಾರು ಅವ್ರೆ. ನಾನು ಏಳಿದ್ರೆ ಖಂಡ್‌ತ ಅವ್ರು ಕೆಲ್ಸ ಮಾಡ್ಕಂಡ್ ಬತ್ತಾರೆ’ ಎಂದಳು. ಅವಳೇ ಒಳಗೆ ಹೋಗಿ ಅವನನ್ನು ಎಬ್ಬಿಸಿದಳು. ಲಿಂಗಾಪುರದ ಸಂಬೇಗೌಡ ಅಯ್ಯನವರಿಗೇ ಗೊತ್ತಿರುವ ಮನುಷ್ಯನೇ. ನೊಣಬಗೌಡನಾದ ಅವನ ಮನೆಯಲ್ಲಿ ಅಯ್ಯನವರು ಬಿನ್ನ ಸಹ ತೀರಿಸಿದ್ದಾರೆ. ತಾನು ಇಲ್ಲಿರುವುದು ಅಯ್ಯನವರಿಗೆ ಗೊತ್ತಾಗಿ ಎದುರಿಗೆ ನಿಲ್ಲುವ ಪ್ರಸಂಗ ಬಂದುದಕ್ಕೆ ನಾಚಿ ಅವನು ತಲೆ ತಗ್ಗಿಸಿ ನಿಂತುಕೊಂಡ, ಒಂದು ಕಾಗದದ ಮೇಲೆ ಅಯ್ಯನವರು-‘ತಿಪಟೂರು ಪೇಟೇಬೀದಿ ವೆಂಕಟಾಚಲಶೆಟ್ಟರ ಅಂಗಡಿ. ಹೇಮಾದಿ ಪಾನಕ. ಪಿಳೇಗಿನ ಔಸ್ತಿ’ ಎಂದು ಬರೆದು ಇಪ್ಪತ್ತು ರೂಪಾಯಿ ಕೊಟ್ಟರು. ‘ಈಗ್ಲೇ ವಾಟ ಹ್ವಡ್‌ಕಂಡ್‌ಹ್ವಾಗಿ ಮೋಟಾರ್ನಾಗೆ ಬಂದ್‌ಬಿಡಬೇಕು’-ಎಂದು ನರಸಿ ಹುಕುಂ ಮಾಡಿದಳು. ಕಾಲಿಗೆ ಎಕ್ಕಡ ಮೆಟ್ಟಿಕೊಂಡ ಅವನು ತಲೆಗೆ ಲಪ್ಪಟಿ ಸುತ್ತಿ ದಾಪುಹೆಜ್ಜೆ ಹಾಕುತ್ತಾ ಕತ್ತಲೆಯಲ್ಲಿ ಹೊರಟುಹೋದ. +ನರಸಿ ಅಯ್ಯನವರನ್ನು ಕೇಳಿದಳು: ‘ಅಯ್ಯಾರೇ, ಈ ಊರಾಗೆ ನಂಜವ್ವನಂತಾ ಒಳ್ಳೇ ಗರತಿಯಿಲ್ಲ. ಆ ಯಮ್ಮನಿಗೆ ಬಂದಂತಾ ಕಷ್ಟ ಯಾರಿಗೂ ಬರ್ನಿಲ್ಲ. ಈಗ ಮತ್ತೆ ಅವ್ರಿಗೆ ಪಿಳೇಗ್ ಆಗೈತೆ. ದರ್ಮವಾಗಿ ಯಾಕಿರಬೇಕು ನೀವೇ ಏಳಿ.’ +ಅಯ್ಯನವರಿಗೆ ಉತ್ತರ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಅದರ ಬಗೆಗೆ ಯೋಚಿಸಲು ಬುದ್ಧಿ ಮಂಕಾಗಿತ್ತು. ‘ಇನ್ನೊಂದ್ ದಿನ ಏಳ್ತೀನಿ. ಈಗ ಆ ಯಮ್ಮನ ನೋಡೂರು ಯಾರೂ ಇಲ್ಲ’-ಎಂದು ಅವರು ಹೊರಟರು. +‘ನಾನೂ ಬರ್ಲಾ?’ +‘ಏನೂ ಬ್ಯಾಡ’-ಎಂದು ಮುಂದೆ ಹೊರಟರು. +‘ವಸಿ ನಿಂತ್ಕಳಿ’-ಎಂದು ಕೂಗಿದ ನರಸಿ ಹತ್ತಿರ ಬಂದು ಹೇಳಿದಳು: ‘ನಾನು ಬರಾಕಿಲ್ಲ. ನೋಡಿ, ನಂಜವ್ವ ರಾತ್ರಿ ಹೊತ್ತು ಎಂಗ್‌ಸ್ರಿಗೆ ಇಸ್ಕೂಲು ಮಾಡ್ತಿತ್ತಲಾ, ಅದ್ಕೆ ನಾನು ಶೇರ್ಕಂತೀನಿ ಅಂತ ಏಳಿಕಳ್ಸಿದ್ದೆ. ಬ್ಯಾಡ ಅಂತ ಅಂದ್‌ಬಿಡ್ತಂತೆ. ಈಗ ನಾನು ಬಂದ್ರೂ ಆ ಯಮ್ಮನಿಗೆ ವಲ್ಲೆ ಅನ್ನುಸ್‌ಭೈದು.’ +‘ನಿನ್ನ ಸೇರಿಸ್ಕಳ್ಲಿಲ್ಲ ಅಂತ ಕ್ವಾಪವೇನು?’ +‘ಇಲ್ಲ ಬುಡಿ. ಶೇರಿಸ್ಕಂಡಿದ್ರೆ ಬಾಕಿ ಎಂಗುಸ್ರು ಬತ್ತಿರ್ಲಿಲ್ಲ’-ಎಂದು ಅವಳೇ ಹೇಳಿದಳು. +ಔಷಧಿ ಬಂದ ತಕ್ಷಣ ಕಳಿಸಿಕೊಡಬೇಕೆಂದು ಹೇಳಿ ಅಯ್ಯನವರು ಮನೆಗೆ ಬರುವ ಹೊತ್ತಿಗೆ ನಂಜಮ್ಮ ನಿದ್ರೆ ಮಾಡುತ್ತಿದ್ದಳು. ಸೀಮೆ ಎಣ್ಣೆಯ ಲ್ಯಾಂಪು ಉರಿಯುತ್ತಿತ್ತು. ಈಗ ರೋಗಿಯನ್ನು ಎಬ್ಬಿಸುವುದು ಬೇಡವೆಂದು ಅವರು ಸುಮ್ಮನೆ ಅವಳ ಮುಖವನ್ನೇ ನೋಡುತ್ತಾ ಕಂಬವನ್ನೊರಗಿ ಕುಳಿತರು. ಚೆನ್ನಿಗರಾಯರನ್ನು ಎಬ್ಬಿಸಲೇ ಎಂಬ ಯೋಚನೆ ಬಂತು. ಅವರು ಎದ್ದಿದ್ದರೆ ಈ ಯಮ್ಮನೇ ಯಾಕೆ ಗುಡಿಗೆ ಬರ್ತಿತ್ತು?- ಎಂದು ಯೋಚಿಸಿ ಸುಮ್ಮನಾದರು. ಅವಳ ಮುಖವನ್ನು ನೋಡುತ್ತಾ ನೋಡುತ್ತಾ, ಮದುವೆಯಾಗಿ ಊರಿಗೆ ಬಂದಾಗಿನಿಂದ ಇಲ್ಲಿಯ ತನಕ ಅವಳ ಜೀವನ ನಡೆದ ರೀತಿ ಎಲ್ಲವೂ ಅವರ ನೆನಪಿಗೆ ಬರುತ್ತಿತ್ತು. ಸೊಸೆಯಾಗಿ ಈ ಊರಿಗೆ ಬಂದ ಹೊಸತರಲ್ಲಿ ಅವಳು ಹೊರಗಿನ ಯಾರ ಕೈಲೂ ಮಾತನಾಡಿದವಳಲ್ಲ. ಅತ್ತೆಮನೆಯ ಸೊಸೆಯಂತೆಯೇ ಇದ್ದಳು. ಸೊಸೆಯನ್ನು ಬಾಳಿಸದ ಅತ್ತೆ. ಯಾರ ಬಗೆಗೂ ಪ್ರೀತಿ ವಿಶ್ವಾಸಗಳಿಲ್ಲದ ಗಂಡ. ಜಮೀನು ಹೋದದ್ದು. ಅದನ್ನು ಉಳಿಸಿಕೊಳ್ಳಲು ಈ ಸೊಸೆ ಮಾಡಿದ ವಿವೇಕಪೂರ್ಣ ಪ್ರಯತ್ನ. ಏಕಾಕಿಯಾಗಿ ಮಕ್ಕಳೊಡನೆ ಬೇರೆ ಬಂದು ಸಂಸಾರವನ್ನು ಕಟ್ಟಿ ನಿಲ್ಲಿಸಿದುದು. ಮಗನ ವಿದ್ಯಾಭ್ಯಾಸ. ಮಗಳ ಮದುವೆ. ಮಕ್ಕಳಿಬ್ಬರ ಸಾವು. ಈಗ ಸಾವು ಈ ಯಮ್ಮನನ್ನೂ ನುಂಗಲು ಬಂದಂತಿದೆ. ನರಸಿ ತಮ್ಮನ್ನು ಕೇಳಿದ ಪ್ರಶ್ನೆ ಅವರಿಗೆ ನೆನಪಾಯಿತು. ನಂಜವ್ವನಂತಾ ವಳ್ಳೇ ಗರತಿ ಇಲ್ಲ. ಈ ಯಮ್ಮನಿಗೆ ಬಂದಂತಾ ಕಷ್ಟ ಯಾರಿಗೂ ಬರಲಿಲ್ಲ. ಈಗ ಮತ್ತೆ ಇವರಿಗೇ ಪಿಳೇಹು ಆಗೈತೆ. ದರ್ಮವಾಗಿ ಯಾಕಿರಬೇಕು? ಶಿವ ಸಜ್ಜನರ ಕಾಯ್ತಾನೆ; ದುರ್ಜನರ ದಂಡಿಸ್ತಾನೆ. ಆದರೆ ನಂಜವ್ವ ಏನು ಕೆಟ್ಟದ್ದು ಮಾಡಿದ್ದಳು? ಅತ್ತೆಯ ಅವಿವೇಕ, ಗಂಡನ ಹೀನತನಕ್ಕೆ ಇವಳು ಕಷ್ಟಪಟ್ಟಳು. ಆದರೆ ಪ್ಲೇಗುಮಾರಿ ಇವಳ ಮನೆಗೇ, ಇವಳ ಮಕ್ಕಳಿಗೇ, ಕೊನೆಗೆ ಇವಳಿಗೇ ಹೊಡೆಯಬೇಕೆ? ಪ್ರಪಂಚದಲ್ಲಿ ಧರ್ಮ ಕರ್ಮಕ್ಕೆ ಶಿಕ್ಷೆ ಕೊಡುವುದಕ್ಕೆ ದೇವರು ರೋಗ ರುಜಿನಗಳನ್ನು ಮಾಡಿದ್ದಾನೆಂದು ಅವರು ತತ್ವ ಮತ್ತು ಲಾವಣಿಯ ಪದಗಳಲ್ಲಿ ಓದಿದ್ದರು. ಆದರೆ ಇದುವರೆಗೂ ಅರ್ಥಮಾಡಿಕೊಂಡಿದ್ದುದೇ ಈಗ ಅವರಿಗೆ ಅರ್ಥವಾಗದಂತೆ ಆಗುತ್ತಿತ್ತು. +ಅದೇ ಸಮಯಕ್ಕೆ ಸರಿಯಾಗಿ ನಂಜಮ್ಮ ಬೆಚ್ಚಿಬಿದ್ದು, ‘ಅಯ್ಯಯ್ಯೋ’ ಎನ್ನುತ್ತಾ ಎಚ್ಚರವಾದಳು. ‘ಯಾಕವ್ವ?’-ಅವರು ಕೇಳಿದರು. ಐದು ನಿಮಿಷ ಏನೂ ತಿಳಿಯದಂತೆ ಕಣ್ಣು ಬಿಟ್ಟು ನೋಡಿ ಅವಳು ಕೇಳಿದಳು: ‘ನೀವಾ?’ +‘ಹೂಂ, ಏನಾಯ್ತು?’ +‘ಕನಸು. ಹಿಂದೆ ಒಂದು ಸಲ ಬಿದ್ದಿತ್ತು. ಇಬ್ಬರು ಕರೀ ಪೀಲೀಸಿನೋರು ಓಡಿಸ್ಕಂಡು ಬಂದಿದ್ರು. ನಾನು ಹಳ್ಳ ದಾಟಿಬಿಟ್ಟೆ. ನಮ್ಮ ಕೈಯಿಂದ ತಪ್ಪಿಸ್ಕಂಡು ಎಲ್ಲಿಗೆ ಹೋಗ್ತೀಯಾ ಬಿಡು ಅಂದಿದ್ರು. ಈಗ ಮತ್ತೆ ಅದೇ ಕನಸು. ನಾನು ಹಳ್ಳ ದಾಟೂ ಮೊದಲೇ ಇಬ್ಬರೂ ಬಂದು ನನ್ನ ಹಿಡ್‌ಕಂಡು ಕರೀ ಹಗ್ಗದಲ್ಲಿ ಕಟ್ತಾ ಇದ್ರು. ಅಷ್ಟರಲ್ಲಿ ಎಚ್ಚರವಾಯ್ತು.’ +‘ಜ್ವರದ ತಾಪಕ್ಕೆ ಹ್ಯಂಗೆ ಹ್ಯಂಗೋ ಕನಸು ಬೀಳ್ತೈತಿ. ಸುಮ್‌ನೆ ಮನಿಕ್ಕಳವ್ವಾ.’ +‘ಜ್ವರಕ್ಕಲ್ಲ ಅಯ್ನೋರೇ, ನಾನು ಈಗ ಸಾಯೂದು ಖಂಡಿತ. ನಂಗೆ ಒಂದು ಬಟ್ಲು ಗಂಜಿ ಮಾಡಿಕೊಡ್ತೀರಾ? ಬ್ರಾಹ್ಮಣರ ಕೋಣೆ ಅಂತ ಏನೂ ಸಂಕೋಚಮಾಡ್ಕಾಬ್ಯಾಡಿ. ನಮ್ಮಯ್ಯ ಬಂದಾಗ ಉಪ್ಪಿಟ್ಟಿಗೆ ಅಂತ ಅಕ್ಕಿತರಿ ಒಡೆದಿದ್ದೆ. ಬಡೂನಮ್ಯಾಲೆ ಕರೀ ಡಬ್ಬದಲ್ಲಿದೆ. ಕಡುಬಿನ ಕೊಳದಪ್‌ಲೇಲಿ ಬೆಲ್ಲ ಇದೆ. ಬೆಲ್ಲ ಸಿಕ್ದೇ ಇದ್ರೆ ಸಪ್ಪೆಗಂಜಿಯಾದ್ರೂ ಸರಿ, ಮಾಡಿ ತನ್ನಿ.’ +ಅವರು ಎದ್ದು ಲ್ಯಾಂಪು ಹಿಡಿದು ಒಳಗೆ ಹೋದರು. ನೆನ್ನೆ ರಾತ್ರಿ ಚೆನ್ನಿಗರಾಯರು ತಿಂದು ಕೆಳಗೆ ಉದುರಿದ್ದ ರೊಟ್ಟಿಯ ಚೂರುಗಳ ಮೇಲೆ, ಕತ್ತಲೆಯಲ್ಲೂ ನೊಣ ಹಾರುತ್ತಿದ್ದುವು. ಅಕ್ಕಿಯ ತರಿ, ಬೆಲ್ಲ ಅವರಿಗೆ ತಕ್ಷಣ ಅವರಿಗೆ ಸಿಕ್ಕಿತು. ಸೋಗೆಗರಿ ಹಚ್ಚಿ ಒಂದು ಚರುಕಿನಲ್ಲಿ ಗಂಜಿಮಾಡಿ ಒಂದು ಲೋಟದೊಡನೆ ತಂದುಕೊಟ್ಟರು. ಅವರೇ ಭುಜ ಹಿಡಿದು ಎಬ್ಬಿಸಿ ಕೂರಿಸಿದಮೇಲೆ ಅಷ್ಟನ್ನೂ ಕುಡಿದು ಅವಳು ಮತ್ತೆ ಮಲಗಿಕೊಂಡಳು. +ಐದು ನಿಮಿಷವಾದಮೇಲೆ ಮಾತನಾಡಿದಳು: ‘ಈಗ ಗಂಜಿ ಕುಡಿದು ಶಕ್ತಿ ಬಂದಿದೆ. ಆಮ್ಯಾಲೆ ಜ್ಞಾನ ತಪ್‌ಭೌದು. ಈಗಲೇ ನಿಮ್ಮ ಕೈಲಿ ಮಾತಾಡಿಬಿಡ್ತೀನಿ.’ +‘ಜ್ವರದ ಪಿರುಚಿನಾಗೆ ಜಾಸ್ತಿ ಮಾತಾಡಬಾರ್‌ದವ್ವ ಸುಮ್ಕೆ ಮನಿಕ್ಕ.’ +“ಈಗ್ಲೆ ಆಡ್ತೀನಿ ಕೇಳಿ. ನಾನು ಹುಟ್ಟಿದಾಗಲೇ ನನ್ನ ಅಮ್ಮ ಸತ್ಹೋದಳಂತೆ. ನಾನು ಒಂದು ವರ್ಷದ ಮಗುವಂತೆ. ಒಂದು ದಿನ ತೊಟ್ಟಿಲಲ್ಲಿ ಮಲಿಕ್ಕಂಡು ಒಂದೇಸಮನೆ ಕಿರುಚ್ಕಂಡು ಅಳ್ತಾ ಇದ್ನಂತೆ. ಹೊರಗೆ ಮರ್ರೋ ಅಂತ ಮಳೆ ಬೀಳ್ತಿತ್ತು. ದನದ ಕೊಟ್ಟಿಗೇಲಿದ್ದ ಅಕ್ಕಮ್ಮನಿಗೆ ನಾನು ಅಳ್ತಿರೂದು ಕೇಳುಸ್ಲಿಲ್ಲ. ನಮ್ಮಪ್ಪ ಯಾವುದೋ ಸಂಸ್ಕೃತದ ಮಂತ್ರ ಬಾಯಿಪಾಠ ಮಾಡ್ಕತ್ತಿದ್ರಂತೆ. ನಾನು ಅತ್ತುದ್ರಿಂದ ಅವರ ಬಾಯಿಪಾಠಕ್ಕೆ ಅಡ್ದವಾಯ್ತು. ಇದೊಂದು ಋಣಮುಂಡೇದು ಬಡ್ಕಳುತ್ತೆ ಅಂತ ಸಿಟ್ಟಿನಲ್ಲಿ ತೊಟ್ಲನ್ನೇ ತಗಂಡು ಹೋಗಿ, ದಢ ದಢ ಅಂತ ಮಳೆನೀರು ಸುರಿಯೋ ಸೂರುಕಟ್ಟಿನ ಕೆಳಗೆ ಇಟ್ಟು ಒಳಗೆ ಹೋಗಿ ಮಂತ್ರ ಹೇಳ್ಕಳುಕ್ಕೆ ಶುರು ಮಾಡಿದ್ರಂತೆ. ಸ್ವಲ್ಪ ಹೊತ್ತಾದಮೇಲೆ ಅಕ್ಕಮ್ಮ ಒಳಗೆ ಬಂದು ನೋಡ್ತಾಳೆ: ತೊಟ್ಲೇ ಇಲ್ಲ. ‘ಎಲ್ಲೋ ಮಗು?’-ಅಂತ ಕೇಳಿದ್ದುಕ್ಕೆ, ‘ಸೂರುಕಟ್ಟಿನ ಕೆಳಗೆ’ ಅಂದ್ರಂತೆ. ನನ್ನ ಮುಖ, ಬೀಳೂ ನೀರಿನ ಕೆಳಗೆ ಇರದೆ ಕಾಲು ಮಾತ್ರ ಇತ್ತಂತೆ. ಮುಖ ಬೀದೀ ಕಡೆಗೆ ಇತ್ತಂತೆ. ಇಲ್ದೆ ಇದ್ರೆ ನಾನು ಆಗ್ಲೇ ಸಾಯ್ತಿದ್ದೆ. ಅಕ್ಕಮ್ಮ ಕರ್ಕಂಡು ಬಂದು ಬ್ರಾಂದಿ ಗೀಂದಿ ಕುಡಿಸಿ ಶೀತ ಹೊಡೆಸಿಹಾಕಿ ನನ್ನ ಬದುಕಿಸ್ಕಂಡ್ಳಂತೆ.” +ಕಂಠೀಜೋಯಿಸರು ಹಾಗೆ ಮಾಡಿರುವುದು ಅಸಹಜವೇನಲ್ಲ ಎಂದು, ಅವರನ್ನು ಬಲ್ಲ ಅಯ್ಯನವರು ಯೋಚಿಸುತ್ತಿದ್ದರು. ನಂಜಮ್ಮ ಎಂದಳು: ‘ನಾನು ಆಗಲೇ ಸಾಯಬೇಕಾಗಿತ್ತು. ಆದರೆ ಯಾಕೆ ಸಾಯಲಿಲ್ಲ? ಇಷ್ಟು ವರ್ಷ ಬೆಳೆದು ಇಂಥಾ ಗಂಡನ ಕೈಹಿಡಿದು, ಇಷ್ಟು ಒಳ್ಳೇ ಮಕ್‌ಳನ್ನು ಹೆತ್ತು, ಅವನ್ನ ಕಳ್ಕಂಡು, ಈಗ ಸಾಯಬೇಕೆ? ಇದ್ಯಾಕೆ ಹೀಗೆಲ್ಲ ಆಗುತ್ತೆ ಅಯ್ನೋರೇ?’ +ಅಯ್ಯನವರು ಇದೇ ಪ್ರಶ್ನೆಯನ್ನು ಕಳೆದ ಒಂದು ಗಂಟೆಯಿಂದಲೂ ಯೋಚಿಸುತ್ತಿದ್ದರು. ನರಸಿ ಕೇಳಿದ್ದುದೂ, ಈಗ ನಂಜವ್ವ ಕೇಳುತ್ತಿರುವುದೂ ಒಂದೇ ಪ್ರಶ್ನೆ. ಯಾಕೆ ಹೀಗಾಗುತ್ತೆ? ಶಿವನ ಇಚ್ಛೆ ಏನಿರ್‌ಭೌದು? ಅವರು ವೇದಾಂತ ಓದಿದ ಅಯ್ಯನವರಲ್ಲ. ತತ್ವ, ಲಾವಣಿ, ಪದಗಳಷ್ಟೇ ಅವರು ಅರ್ಜಿಸಿದ ಜ್ಞಾನ. ಕಾಶಿಗೆ ಹೋಗಿದ್ದಾಗ ಇಂಥದೇ ಪ್ರಶ್ನೆಗಳ ಮೇಲೆ ಮಠದಲ್ಲಿ ಹೊರಗಡೆ, ತರ್ಕಮಾಡುವುದನ್ನು ಕುತೂಹಲದಿಂದ ಕೇಳುತ್ತಿದ್ದರು. ಆದರೆ ಈಗ ನಂಜವ್ವ, ಒಂದು ಗಂಟೆಯ ಹಿಂದೆ ನರಸಿ, ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಅವರಲ್ಲಿರಲಿಲ್ಲ. ನಂಜವ್ವ ತಮಗಿಂತ ಹೆಚ್ಚು ಬುದ್ಧಿಶಾಲಿ, ಅಕ್ಷರಸ್ಥೆ. ತಮಗೆ ಸರಿಯಾಗಿ ಅರ್ಥವಾಗದಿದ್ದ ಭಾರತದ ಪದ್ಯಗಳನ್ನು ಸರಾಗವಾಗಿ ಹೇಳಿ ಅರ್ಥ ಬಿಡಿಸುತ್ತಿದ್ದಳು. ಆದರೆ ಅವಳು ಈಗ ಕೇಳುತ್ತಿರುವುದಕ್ಕೆ ಉತ್ತರವೇನು? ಅವಳು ಮಗುವಾಗಿದ್ದಾಗಲೇ ಸಾಯಬಾರದಾಗಿತ್ತು? ತಮಗಿಂತ ಹೆಚ್ಚು ಬುದ್ಧಿವಂತೆಯಾದ ಅವಳಿಗೇ ತಿಳಿಯದೆ ತಮ್ಮನ್ನು ಕೇಳಿದ್ದಾಳೆ. +ಅಷ್ಟರಲ್ಲಿ ಅವಳಿಗೆ ಮಂಪರು ಬಂದಿತ್ತು. ಅಯ್ಯನವರು ಅವಳ ಮುಖವನ್ನೇ ನೋಡುತ್ತಾ ಕುಳಿತಿದ್ದರು. ಜ್ವರಕ್ಕೆ ಕಾದು ಕೆದರಿದ್ದ ಮುಖದಮೇಲೆ ಏನೇನೋ ಗೆರೆಗಳು ಹುಟ್ಟಿ ತಿರುಗಿ ಮಾಯವಾಗುವಂತೆ ಕಾಣುತ್ತಿದ್ದುವು. ಸ್ವಲ್ಪ ಹೊತ್ತಿಗೆ ಕಣ್ಣು ಬಿಟ್ಟು ಅವಳು ಮಾತನಾಡಲು ಪ್ರಯತ್ನಪಟ್ಟಳು. ಆದರೆ ಆಯಾಸದಿಂದ ಸರಿಯಾಗಿ ಮಾತು ಹೊರಡುತ್ತಿರಲಿಲ್ಲ. ಪ್ರಯತ್ನಪಟ್ಟು ತನ್ನ ಶಕ್ತಿಯನ್ನೆಲ್ಲ ಕೂಡಿಸಿಕೊಂಡು ಆಡಿದಳು: ‘ಪಾರ್ವತಿ ರಾಮಣ್ಣ ಸತ್ತಾಗ ಗೀಪಿಯ ಕಥೆ ನೀವು ಹೇಳಿದಿರಿ. ಮಗು ಸತ್ತಾಗ ಜೀವ ಕೊಡುಕ್ಕೆ ಹೆದರಿ ಗೋಪಿ ದಡದಲ್ಲೇ ನಿಂತಳು. ಅದೇ ದಿನ ರಾತ್ರಿ ನಾನು ಸ್ಮಶಾನದ ಬಾವಿ ಬೀಳೂಕೆ ಹೋಗಿದ್ದೆ. ಧೈರ್ಯವಾಗಿ ನೀರಿಗೆ ಧುಮುಕ್ತಿದ್ದೆ. ವಿಶ್ವನ ಗತಿ ಏನು ಅಂತ ಯೋಚನೆಮಾಡಿ ವಾಪಸು ಬಂದೆ. ಈಗ ನಾನೇ ಸಾಯ್ತೀನಿ. ವಿಶ್ವನಿಗೆ ಯಾರು ಗತಿ? ಅಕ್ಕಮ್ಮ ಒಂದಿಷ್ಟು ಬೇಯ್ಸಿ ಹಾಕ್ತಾಳೆ. ನಮ್ಮಣ್ಣಯ್ಯನಮೇಲೆ ನನಗೆ ನಂಬಿಕೆ ಇಲ್ಲ. ಹುಡುಗನ ಹಿಟ್ಟು ಮುಖ್ಯವಲ್ಲ. ಅವ್ನು ಬುದ್ಧಿವಂತನಾಗಬ್ಯಾಡ್ವೆ?’ ಇಷ್ಟು ಮಾತನಾಡುವ ಹೊತ್ತಿಗೆ ಸಂಕಟವಾಗಿ ಹಾಗೆಯೇ ಕಣ್ಣು ಮುಚ್ಚಿ ಮಲಗಿದಳು. ಮತ್ತೆ ಅಡಲಿಲ್ಲ. ಮಂಪರು ಹೊತ್ತಿದ ಸ್ವಲ್ಪ ಹೊತ್ತಿನಲ್ಲೇ ನಿದ್ದೆ ಬಂದಂತೆ ಆಯಿತು. ಅಯ್ಯನವರು ಸುಮ್ಮನೆ ಕುಳಿತಿದ್ದರು. ಬೆಸ್ತರ ಕೇರಿಯಲ್ಲಿ ಕೋಳಿ ಕೂಗಿದ ಶಬ್ದವಾಯಿತು. ಅದು ಅವರು ದಿನವೂ ಏಳುವ ಹೊತ್ತು. ಕೆರೆ ಏರಿಯ ಕಡೆಗೆ ಹೋಗಿ ಬರಬೇಕೆನಿಸಿತು. ಚೆನ್ನಿಗರಾಯರನ್ನು ಎಬ್ಬಿಸಿ ಹೇಳಿ ಹೋಗಬೇಕೆಂಬ ಯೋಚನೆ ಬಂದರೂ, ಅವರು ಎದ್ದು ರೋಗಿಗೆ ಆಗುವ ಪ್ರಯೋಜನವಾದರೂ ಏನು ಎಂಬ ವಿಚಾರ ಬಂದು, ಉರಿಯುವ ಲ್ಯಾಂಪನ್ನು ಹಾಗೆಯೇ ಬಿಟ್ಟು ಬಾಗಿಲು ಮುಂದಕ್ಕೆ ಮಾಡಿಕೊಂಡು ಹೊರಗೆ ಹೋದರು. ಏರಿಯ ಕಡೆಯಿಂದ ವಾಪಸು ಬರುವ ಹೊತ್ತಿಗೆ ಕಾಗೆ ಕೂಗುತ್ತಿತ್ತು. ಅಷ್ಟರಲ್ಲಿ ಎದ್ದು ಏರಿಯ ಕಡೆಗೆ ಬರುತ್ತಿದ್ದ ಜನರು ಮಾತನಾಡಿಕೊಳ್ಳುತ್ತಿದ್ದರು: ಸುತ್ತಣ ಊರುಗಳಲ್ಲಿ ಇಲಿ ಬೀಳುತ್ತಿವೆ. ಈ ಊರಿನಲ್ಲಿ ಬೀಳುವ ಮೊದಲೆ ನೆನ್ನೆ ರಾತ್ರಿ ಊರ ಮುಖ್ಯರು ಸೇರಿ, ಎಲ್ಲರೂ ತಕ್ಷಣ ಊರು ಬಿಡಬೇಕೆಂದು ತೀರ್ಮಾನಮಾಡಿದ್ದಾರೆ. ಈ ದಿನ ಬೆಳಿಗ್ಗೆ ಬೇಲೂರು ಊರಲ್ಲೆಲ್ಲ ತಮ್ಮಟೆ ಬಡಿದು ಸಾರುತ್ತಾನೆ. ನೆನ್ನೆ ಸಂಜೆ ಕಂಬನಕೆರೆಯ ಸರ್ಕಾರೀ ಇಲಾಖೆಯವರು ಹೇಳಿಕಳಿಸಿದ್ದಾರಂತೆ. ಇವತ್ತು ಬೆಳಿಗ್ಗೆ ಈ ಊರಿಗೆ ಅವರು ಬರುತ್ತಾರೆ. ಅಮ್ಮನ ಗುಡಿಯ ಹತ್ತಿರ ಊರ ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಬಂದು ಇನಾಕ್ಯುಲೇಶನ್ ಸೂಜಿ ಚುಚ್ಚಿಸಿಕೊಳ್ಳಬೇಕಂತೆ. ರೋಗ ಹಬ್ಬುವ ಮೊದಲೇ ಹಳ್ಳಿಹಳ್ಳಿಯಲ್ಲೂ ಸೂಜಿ ಚುಚ್ಚಬೇಕು ಅಂತ ಸರ್ಕಾರದ ಹುಕುಂ ಆಗಿದೆಯಂತೆ. +– ೫ – +ಎಲ್ಲರೂ ಎರಡೇ ದಿನದಲ್ಲಿ ಊರು ಬಿಟ್ಟರು. ನಂಜಮ್ಮನ ಮನೆ ಕಟ್ಟಿಸಿ ಉಳಿದಿದ್ದ ಗಳು, ದಬ್ಬೆಗಳನ್ನು ಅಯ್ಯನವರೇ ಸಾಗಿಸಿಸಿ ಒಂದು ಶೆಡ್ಡು ಹಾಕಿಸಿದರು. ಅವರ ಸ್ವಂತಕ್ಕಂತೂ ಏರಿಯ ಮೇಲಿನ ಗುಡಿ ಇದ್ದೇ ಇದೆ. ಎಲ್ಲರಿಗೂ ಆಶ್ಚರ್ಯವಾದ ಸಂಗತಿ ಎಂದರೆ ಗಂಗಮ್ಮ ಅದೇ ಶೆಡ್ಡಿಗೆ ಬಂದು ಸೊಸೆಯ ಸೇವೆಗೆ ನಿಂತದ್ದು. ‘ಹಾಳು ಮನೆ ಕಟ್ಟುಸ್ದೆ ಇದ್ರೆ ಏನಾಗ್ತಿತ್ತು? ಆ ಸಣ್ಣೇನಹಳ್ಳಿಗೆ ಹೋಗಿ ಮಾರಿ ಬಡುಸ್ಕಂಡ್ ಬಂದ್ಲು. ಹಿರಿಯೋರ ಮಾತು ಕೇಳಿದ್ರೆ ಈ ಮುಂಡೇದುಕ್ಕೆ ಏನೂ ಆಗ್ತಿರ್ಲಿಲ್ಲ’-ಎಂದು ಸದಾ ಗೊಣಗಿಕೊಳ್ಳುತ್ತಿದ್ದರೂ, ಅಯ್ಯನವರು ಹೇಳಿದಂತೆ ಹೇಮಾದಿ ಪಾನಕ ಗಂಜಿಗಳನ್ನು ಅವಳಿಗೆ ಬೇಡವೆಂದರೂ ಕ್ರಮವಾಗಿ ಬಾಯಿ ಮೆಟ್ಟಿ ಕುಡಿಸುತ್ತಿದ್ದಳು. +ಚೆನ್ನಿಗರಾಯರು ಇನಾಕ್ಯುಲೇಶನ್ ಮಾಡಿಸಿಕೊಂಡು ಎಡ ರಟ್ಟೆ ನೋವು ಬಂದದ್ದರಿಂದ ಅಯ್ಯನವರ ಏರಿಯ ಮೇಲಿನ ಗುಡಿಯಲ್ಲೋ, ಅಥವಾ ಹೊರಗಿನ ಗುಡಿಯ ಜಗುಲಿಯ ಮೇಲೋ ಮಲಗಿರುತ್ತಿದ್ದರು. ‘ಸನ್ಯಾಸಿ, ನಂಗ್ಯಾಕೆ ಈ ಸೂಜಿ, ನಾನು ಸತ್‌ರೆ ಅಳೋರ್ಯಾರು?’-ಎಂದರೂ ‘ನೀವು ಸಾಯೂದು ಮುಖ್ಯವಲ್ಲ. ನಿಮ್ಮಿಂದ ಖಾಯ್‌ಲೆ ಉಳಿದೋರಿಗೆ ಹರಡುತ್ತೆ’ ಎಂದು ವೈದ್ಯಖಾತೆಯವರು ಅಯ್ಯನವರಿಗೂ ಚುಚ್ಚಿದರು. ಒಂದು ದಿನ ತೋಳು ಸ್ವಲ್ಪ ನೋಯುತ್ತಿತ್ತು. ಆದರೆ ಊರಿನವರೆಲ್ಲ ಅದರಲ್ಲಿಯೇ ಶೆಡ್ಡು ಹಾಕಿ, ಸಾಮಾನು ಸಾಗಿಸುತ್ತಿದ್ದರು. ಗಂಗಮ್ಮ ಮಾತ್ರ ಬಿಲ್‌ಕುಲ್ ಸೂಜಿ ಚುಚ್ಚಿಸಿಕೊಳ್ಳಲಿಲ್ಲ. +ನಂಜಮ್ಮ ಮಲಗಿದ್ದ ಹಾಸಿಗೆಯನ್ನೆ ನಾಲ್ಕು ಜನರು ನಾಲ್ಕು ಕಡೆಗಳಲ್ಲೂ ಹಿಡಿದು ತಂದು ಶೆಡ್ಡಿನಲ್ಲಿ ಮಲಗಿಸಿದರು. ಅಷ್ಟರಲ್ಲಿ ಅವಳಿಗೆ ತಪ್ಪಿದ ಪ್ರಜ್ಞೆ ಮತ್ತೆ ಒಂದು ದಿನ ಬರಲಿಲ್ಲ. ಆದರೆ ಬಲವಂತವಾಗಿ ಅತ್ತೆ ಗಂಗಮ್ಮ ಹುಯ್ಯುತ್ತಿದ್ದ ಔಷಧಿ ಮತ್ತು ತಿಳಿಗಂಜಿಯನ್ನು ಮಾತ್ರ ಗುಟುಕಿಸುತ್ತಿದ್ದಳು. ಶೆಡ್ಡಿಗೆ ಸಾಗಿಸಿದ ಎರಡನೆಯ ಬೆಳಿಗ್ಗೆ ಅವಳಿಗೆ ಸ್ವಲ್ಪ ಜ್ಞಾನ ಬಂದಂತಾಗಿ ಮಾತನಾಡಲು ಪ್ರಯತ್ನಿಸಿದಳು. ಹತ್ತಿರವೇ ಕೂತಿದ್ದ ಅಯ್ಯನವರು ಅವಳ ಮುಖದ ಹತ್ತಿರ ತಮ್ಮ ಕಿವಿಯನ್ನು ತಂದು -‘ಏನು?’ ಎಂದರು. +‘ವಿ…..ಶ್ವಾ…..’ +‘ನೋಡಬೇಕೆ?’ +ಹೂಂ, ಎಂಬಂತಹ ಅವಳ ಮುಖಭಾವವನ್ನು ಗುರುತಿಸಿದ ಅವರೇ-‘ಆಳು ಕಳುಸ್ತೀನಿ ಕರ್ಕಂಡ್ ಬರಾಕೆ’ ಎಂದು ಹೇಳಿ ಹೊರಗೆ ಹೋದರು. ಊರೆಲ್ಲ ತಮ್ಮ ತಮ್ಮ ಶೆಡ್ಡುಗಳನ್ನು ಸರಿಮಾಡಿಕೊಳ್ಳುವುದರಲ್ಲಿ ವ್ಯಸ್ತವಾಗಿದೆ. ಈಗ ಆಳು ಎಲ್ಲಿ ಸಿಕ್ಕಬಹುದು?-ಎಂದು ಯೋಚಿಸುತ್ತಾ ಕುಳುವಾಡಿಯ ಶೆಡ್ಡಿಗೆ ಹೋಗಿ ಹೇಳಿದರು: ‘ನಂಜವ್ವ ಇನ್ನೇನು ಸಾಯುತ್ತೆ. ಮಗಾ ನೋಡ್ಬೇಕು ಅನ್ನುತ್ತೆ. ಯಾರಾರ ನಾಗಲಾಪುರಕ್ಕೆ ಹ್ವಾಗಿ, ಉಡುಗನ್ನ ಕರ್ಕಂಡ್ ಬರಬೇಕಲಪ್ಪಾ?’ +‘ಅಯ್ಯಾವ್‌ರೇ, ನೀವೇ ನೋಡಿ, ನನ್ನ ಶೆಡ್ಡಿಗೆ ಒಂದೇ ಜೋಡಿ ಸ್ವಾಗೆ ಬುಟ್ಟುದೀನಿ. ಇವತ್ತು ಗೌಡ್ರ ತ್ವಾಟಕ್ಕೆ ಹ್ವಾಗಿ ಸ್ವಾಗೆ ತರಬೇಕು’ ಎಂದ ಕುಳುವಾಡಿ. +‘ಅದು ನಾಳೆ ಮಾಡ್ಕಂಡ್ರೆ ಆಯ್ತದೆ. ಸಾಯೂ ಅವ್ವನ ಬಾಯಿಗೆ ಮಗ ನೀರು ಬಿಡಬ್ಯಾಡ್‌ದಾ? ಹೋಗಪ್ಪ.’ +‘ಆಗ್ಲಿ’-ಎಂದು ಅವನು ಒಪ್ಪಿಕೊಂಡ. ತಕ್ಷಣ ಹೊರಡುವಂತೆ ಹೇಳಿ ಅವರು ಶೆಡ್ಡಿಗೆ ಬಂದರು. ಅಷ್ಟರಲ್ಲಿ ಗಂಗಮ್ಮ ಎಂದಳು: ‘ಅದೇನೋ ಅಂದ್ಲು. ನಂಗೆ ತಿಳೀಲಿಲ್ಲ. ನೀವೇ ಕೇಳಿ ಅಯ್ನೋರೇ.’ +ಮತ್ತೆ ಅವಳ ಮುಖದ ಹತ್ತಿರಕ್ಕೆ ತಮ್ಮ ಕಿವಿಯನ್ನು ತಂದು-‘ಏನವ್ವಾ’ ಎಂದು ಅವರು ಕೇಳಿದರು. ಐದು ನಿಮಿಷದ ಮೇಲೆ, ಅದು ಕೇಳಿಸಿದಂತೆ ಅವಳು ಏನೋ ಪಿಸುಗಿಟ್ಟಿದಳು. ‘ಕೇಳಲಿಲ್ಲ, ವಸಿ ಗಟ್ಟಿಯಾಗಿ ಅನ್ನು’-ಎಂದಮೇಲೆ ಮತ್ತೆ ಪಿಸುಗುಟ್ಟಿದಳು. ಸ್ಪಷ್ಟವಾಗಿ ಕೇಳದಿದ್ದರೂ- ಊರಿನಲ್ಲಿ ಪ್ಲೇಗು ರೋಗ ಇದೆ. ಹುಡುಗನನ್ನ ಕರೆಸಬೇಡಿ’ ಎಂಬ ಒಟ್ಟು ಅರ್ಥ ಆಯಿತು. ‘ನೀನು ಹ್ವಾಗ್‌ಬ್ಯಾಡ ಅಂತ ಕುಳುವಾಡಿಗೆ ಏಳಿಬತ್ತೀನಿ’-ಎಂದು ಅವರು ಶೆಡ್ಡಿನ ಹೊರಗೆ ಬಂದರು. ರೋಗ ಬಡಿದ ಊರಿಗೆ ವಿಶ್ವ ಬರುವುದು ಬೇಡವೆಂದು ಅವರೂ ನಿರ್ಧರಿಸಿದರು. ನಂಜವ್ವ ಸಾಯುವುದು ಖಂಡಿತ. ಮಗು ಬಂದು ಬಾಯಿಗೆ ನೀರು ಬಿಡದಿದ್ದರೂ ಬೇಡ, ಅವನು ಆಯಸ್ಸು ಗಟ್ಟಿಯಾಗಿ ಉಳಿದಿದ್ದರೆ ಸಾಕು ಎನ್ನುವುದು ಅವಳ ಇಚ್ಛೆ. ಆದರೆ ಅವಳನ್ನು ಸಾಕಿದ ಅಜ್ಜಿ ಮತ್ತು ಅಣ್ಣನಿಗಾದರೂ ಸಮಾಚಾರ ತಿಳಿಸಬೇಕು ಎಂದು ಯೋಚಿಸಿದ ಅವರು ಕುಳುವಾಡಿಯ ಶೆಡ್ಡಿಗೆ ಓಡಿದರು. ಅವನು ಆಗತಾನೇ ಮುದ್ದೆ ಮುರಿದು ಮುಗಿಸಿ ಹೊರಡಲು ಸಿದ್ಧನಾಗುತ್ತಿದ್ದ. ಮಗುವನ್ನು ಖಂಡಿತ ಕರತರಕೂಡದೆಂದೂ, ಅಜ್ಜಿ ಅಣ್ಣಯ್ಯರನ್ನು ಕರೆದುಕೊಂಡು ಬರಬೇಕೆಂದು ಅಯ್ಯನವರು ಹೇಳಿದರು. +ಕುಳುವಾಡಿ ನಾಗಾಲೋಟ ಹೊಡೆದ. ಅವನು ಎಷ್ಟೇ ಉಸಿರು ಹಿಡಿದು ಓಡಿದರೂ ಚೋಳನಗುಡ್ದ, ಮರಳಹಳ್ಳ, ಕೆಮ್ಮಣ್ಣುಹಳ್ಳ, ಕತ್ತಾಳೆ ಓಣಿಗಳನ್ನು ಹಾಯ್ದು ಅಷ್ಟು ದೂರದ ನಾಗಲಾಪುರವನ್ನು ಮುಟ್ಟುವ ಹೊತ್ತಿಗೆ ಮದ್ಯಾಹ್ನ ಎರಡು ಗಂಟೆಯಾಯಿತು. ಅಲ್ಲಿ ನೋಡಿದರೆ ಆ ಊರಿನವರೂ ಊರು ಬಿಟ್ಟಿದ್ದಾರೆ. ಕಲ್ಲೇಶಜೋಯಿಸರ ಶೆಡ್ಡನ್ನು ವಿಚಾರಿಸಿಕೊಂಡು ಇವನು ಹೋದಾಗ ವಿಶ್ವ ಸ್ಕೂಲಿಗೆ ಹೋಗಿದ್ದ. ಕಲ್ಲೇಶಜೋಯಿಸರು ಊರಿನಲ್ಲಿರಲಿಲ್ಲ; ಹಾಸನಕ್ಕೆ ಹೋಗಿದ್ದರು. ಮಾರನೆಯ ದಿನ ಬರುತ್ತಾರಂತೆ. ಇವನು ಹೇಳಿದ ವಿಷಯ ಕೇಳಿ ಅಕ್ಕಮ್ಮ ಹೌಹಾರಿದಳು. ಕಲ್ಲೇಶನಿಗೆ ಕಾಯುವಂತಿಲ್ಲ. ಅವನು ನಾಳೆ ಬಂದ ತಕ್ಷಣ ಕಳಿಸುವಂತೆ ಕಮಲುವಿಗೆ ಹೇಳಿ, ಅವಳನ್ನು ನಂಬದೆ ಪಕ್ಕದ ಎರಡು ಶೆಡ್ಡಿನವರಿಗೂ ಹೇಳಿ, ಅವರ ಜಮೀನು ಹೊಡೆಯುವ ಹೊನ್ನನ ಗಾಡಿ ಹೂಡಿಸಿಕೊಂಡು ಅಕ್ಕಮ್ಮ ತಕ್ಷಣ ಹೊರಟುಬಿಟ್ಟಳು. +ಹಾಳು ಪ್ಲೇಗು ಅವಳ ಇಬ್ಬರು ಮರಿಮಕ್ಕಳನ್ನು ಹೋದ ವರ್ಷ ತಾನೆ ಬಲಿ ತೆಗೆದುಕೊಂಡಿದೆ. ಈ ವರ್ಷ ಮೊಮ್ಮಗಳಿಗೇ ಬಂದಿದೆ. ವಿಶ್ವನಿಗೆ ಬಂದಿದ್ದಾಗ ಶೃಂಗೇರಿಯ ಶಾರದಮ್ಮನವರಿಗೆ ಹರಕೆ ಕಟ್ಟಿದ್ದುದರಿಂದ ವಾಸಿಯಾಯಿತಂತೆ. ಈಗ ಅವರು ಯಾರಾದರೂ ಅದೇ ದೇವರಿಗೆ ಹರಕೆ ಕಟ್ಟಿದ್ದಾರೆಯೋ ಇಲ್ಲವೋ. ದಾರಿಯಲ್ಲಿ ಒಂದು ಸಣ್ಣ ಕಟ್ಟೆ ಸಿಕ್ಕಿತು. ಎರಡು ನಿಮಿಷ ಗಾಡಿ ನಿಲ್ಲಿಸಿ ಕೆಳಗೆ ಇಳಿದು ಕಟ್ಟೆಯಲ್ಲಿ ಕೈ ಕಾಲು ತೊಳೆದು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ತಂದಿದ್ದ ದುಡ್ಡಿನಲ್ಲಿ ಒಂದು ಬೆಳ್ಳಿ ರೂಪಾಯಿ ಕೈಲಿ ಹಿಡಿದು, ಮೊಮ್ಮಗಳಿಗೆ ಹುಶಾರಾದರೆ ಅವಳನ್ನು ಮತ್ತೆ ಶೃಂಗೇರಿಗೆ ಕಳಿಸಿ ಕುಂಕುಮಾರ್ಚನೆ ಮಾಡಿಸುವುದಾಗಿ ಹರಕೆ ಹೇಳಿ, ಬಂದು ಗಾಡಿಯ ಮೇಲೆ ಕೂತಳು. +ಈ ಸಲ ಎಲ್ಲೆಲ್ಲಿಯೂ ಊರು ಬಿಟ್ಟಿದ್ದಾರೆ. ಆದರೆ ಎಲ್ಲ ಊರಿನಲ್ಲೂ ಸರ್ಕಾರದವರು ಸೂಜಿ ಚುಚ್ಚಿದ್ದಾರೆ. ನಾಗಲಾಪುರದಲ್ಲಿ ವಿಶ್ವ, ಕಲ್ಲೇಶ, ಕಮಲು, ಎಲ್ಲರೂ ಚುಚ್ಚಿಸಿಕೊಂಡಿದ್ದಾರೆ. ಆದರೆ ಮುದುಕಿಯಾದ ತಾನು ಮಾತ್ರ ಬೇಡವೆಂದುಬಿಟ್ಟಳು. ಇಷ್ಟು ದಿನದಲ್ಲಿ ಒಂದು ದಿನವೂ ಆಸ್ಪತ್ರೆಯ ನೀರು ಕುಡಿಯದಿರುವ ತಾನು ಆ ಸೂಜಿಯ ನೀರನ್ನು ಮೈಯೊಳಗೆ ಚುಚ್ಚಿಸಿಕೊಳ್ಳುವುದು ಯಾಕೆ? +ಮೊಮ್ಮಗಳ ಸ್ಥಿತಿಯ ಬಗೆಗೆ ಅವಳು ಕುಳುವಾಡಿಯನ್ನು ಬಾರಿ ಬಾರಿಗೂ ಕೇಳುತ್ತಿದ್ದಳು. ಪ್ರತ್ಯಕ್ಷವಾಗಿ ಹೆಚ್ಚು ತಿಳಿಯದಿದ್ದ ಅವನು, ತಾನು ಕೇಳಿದುದನ್ನೆಲ್ಲ ಹೇಳುತ್ತಿದ್ದ. ಜೀವಕ್ಕೆ ಯಾವ ಅಪಾಯವೂ ಇಲ್ಲವೆಂದು ತನಗೆ ತಾನೆ ಮನಸ್ಸಿನಲ್ಲಿ ಮಾಡಿಕೊಳ್ಳುತ್ತಾ ಅಕ್ಕಮ್ಮ, ಎತ್ತುಗಳನ್ನು ಚಬುಕು ಮಾಡುವಂತೆ ಹೊನ್ನನಿಗೆ ಹೇಳುತ್ತಿದ್ದಳು. ಎಷ್ಟೇ ಜೋರು ಮಾಡಿದರೂ ಅವರ ಗಾಡಿ ರಾಮಸಂದ್ರ ಮುಟ್ಟುವ ಹೊತ್ತಿಗೆ ರಾತ್ರಿ ಕತ್ತಲಾಗಿಹೋಗಿತ್ತು. +– ೬ – +ಶೆಡ್ಡಿಗೆ ಬಂದು ನೋಡಿದರೆ ಮೊಮ್ಮಗಳು ಇರಲಿಲ್ಲ. ಬೀಗಿತ್ತಿ ಗಂಗಮ್ಮ ಬಾಯಿ ಬಡಿದುಕೊಂಡು ಅಳುತ್ತಿದ್ದಳು. ಮಾದೇವಯ್ಯನವರು ಹೇಳಿದರು: ಮದ್ಯಾಹ್ನದ ಹೊತ್ತಿಗೇ ನಂಜಮ್ಮನ ಜೀವ ಹೋಯಿತು. ಪ್ಲೇಗಾದ ಊರಿಗೆ ಮಗನನ್ನು ಕರೆಸಬೇಡಿ ಅಂದದ್ದೇ ಕೊನೆಯ ಮಾತು. ಮತ್ತೆ ಮಾತನಾಡಲಿಲ್ಲ. ಸಾಯುವ ಮೊದಲು ಯಾವ ಗೆಡ್ಡೆಯೂ ಒಡೆಯಲಿಲ್ಲ. ಐದೇ ನಿಮಿಷ ಉಸಿರು ಹತ್ತಿಬಂದು ಪ್ರಾಣವಾಯು ಹೊರಟುಹೋಯಿತು. ಹತ್ತಿರವೇ ಇದ್ದ ಅತ್ತೆ ಗಂಗಮ್ಮ ಬಾಯಿಗೆ ನೀರು ಬಿಟ್ಟಳು. ಇವರು ಬರುತ್ತಾರೆಂದು ಸಂಜೆಯತನಕ ಹೆಣ ಇಟ್ಟುಕೊಂಡು ಕಾಯುತ್ತಿದ್ದ ಅವರು, ಇನ್ನು ರಾತ್ರಿಯಾದರೆ ನಾಳೆಯ ತನಕ ಕಾಯಬೇಕು, ಪ್ಲೇಗಿನ ಹೆಣ ನಾರಲು ಶುರುವಾಗಬಹುದು ಎಂದು ದಹನಕ್ಕೆ ಕಳಿಸಿಕೊಟ್ಟು ಇನ್ನೂ ಅರ್ಧ ಗಂಟೆಯಾಯಿತು. +ಅಕ್ಕಮ್ಮ ಒಂದು ಸಲ ಎದೆ ಬಡಿದುಕೊಂದು ಅತ್ತಳು. ‘ನನಗೆ ಮುಖಾನೂ ಸಿಕ್ಕಿಲ್ಲ. ಅಲ್ಲೇ ಹೋಗಿ ನೋಡ್ತೀನಿ’-ಎಂದು ಕತ್ತಲೆಯಲ್ಲೇ ಶ್ಮಶಾನದ ಕಡೆಗೆ ಹೊರಟಳು. ಹೆಂಗಸರು ಅಲ್ಲಿಗೆ ಹೋಗಬಾರದೆಂದು ಅಯ್ಯನವರು ಹೇಳಿದರೂ ಕೇಳಲಿಲ್ಲ. ಹಣ್ಣು ಮುದುಕಿ ಕತ್ತಲೆಯಲ್ಲಿ ಎಲ್ಲಾದರೂ ಬಿದ್ದಾಳೆಂದು ಅವಳ ಕೈ ಹಿಡಿದುಕೊಂಡು ಅವರೂ ಜೊತೆಗೆ ಹೊರಟರು. ಇವರು ಏರಿ ಇಳಿಯುವ ಜಾಗದಲ್ಲಿ ಅಯ್ಯಾಶಾಸ್ತ್ರಿಗಳು ಒಬ್ಬರೇ ಸೊಂಟ ಬಗ್ಗಿಸಿಕೊಂಡು ನಿಂತಿದ್ದರು. ಇವರಿಬ್ಬರನ್ನು ಕಂಡ ಅವರೇ-‘ಯಾರು? ಎಂದರು. ‘ನಂಜವ್ವನ ಅಜ್ಜಮ್ಮ’-ಎಂದು ಹೇಳಿದ ಅಯ್ಯನವರು ಅಕ್ಕಮ್ಮನ ಸಂಗಡ ತೋಟದ ಕಡೆಗೆ ಇಳಿದರು. ಏರಿ ಇಳಿದು ತೋಟದ ಸಂದಿಯಲ್ಲಿ ನಡೆದು ಇವರು ಹೋಗುವ ಹೊತ್ತಿಗೆ ಶಾಸ್ತ್ರದ ಭಾಗವೆಲ್ಲ ಮುಗಿದು ಹೆಣವನ್ನು ಚಿತೆಯ ಮೇಲೆ ಇಟ್ಟು, ಅದೀಗ ತಾನೇ ಅದರ ಬಟ್ಟೆ ಬರೆಗಳನ್ನೆಲ್ಲ ತೆಗೆದುಹಾಕಿದ್ದರು. ತನ್ನ ಮೊಮ್ಮಗಳು ಹುಟ್ಟಿದಾಗ ಇದ್ದ ಸ್ಥಿತಿಯಲ್ಲೇ ಈಗಲೂ ಅಕ್ಕಮ್ಮ ಅವಳನ್ನು ಕಂಡಳು. ಆಗ ಎಷ್ಟು ಬೆಳ್ಳಗಿದ್ದ ಮಗು, ಈಗ ಮೈ ಎಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ಅವಳು ಓಡಿ ಬಂದು, ಚಿತೆಯ ಮೇಲೆ ಇದ್ದ ಹೆಣವನ್ನೇ ತಬ್ಬಿಕೊಂಡಳು. ಅಕ್ಕಮ್ಮನನ್ನು ಸಮಾಧಾನಪಡಿಸಿ ಮೇಲೆ ಎತ್ತುವುದಕ್ಕೆ ಉಳಿದವರಿಗೆ ಸಾಕುಸಾಕಾಯಿತು. ಅವಳ ಎದುರಿಗೇ ಹೆಣದ ಮೇಲೆ ಸೌದೆ ಒಟ್ಟಿ ಬೆಂಕಿ ತೋರಿಸಿದರು. ಬೆಂಕಿ ನಿಧಾನವಾಗಿ ಹರಡಿ ಹೊತ್ತಿಕೊಂಡು ದಗ ದಗ ಉರಿಯುವತನಕ ಒಂದೇಸಮನೆ ಅದನ್ನು ನೋದುತ್ತಿದ್ದ ಅಕ್ಕಮ್ಮ ಇದ್ದಕ್ಕಿದ್ದಹಾಗೆಯೇ ಕೂಗಿಕೊಂಡಳು: ‘ಕಳ್ಳಮುಂಡೇ, ಕೊನೆಗೂ ಹೀಗ್ ಮಾಡಿದೆಯಾ? ನಿಂಗೆ ಮಾಡ್ತೀನಿ ತಾಳು.’ +ಅವಳು ಏನು ಹೇಳುತ್ತಿದ್ದಾಳೆಂದು ಯಾರಿಗೂ ಅರ್ಥವಾಗಲಿಲ್ಲ. ಅಕ್ಕಮ್ಮ ಅಲ್ಲಿಂದ ಹಿಂತಿರುಗಿ ಹೆಜ್ಜೆ ಹಾಕಿ ದುಡುದುಡುನೆ ಹೊರಟಳು. ಕತ್ತಲೆಯಲ್ಲಿ ಬಿದ್ದಾಳೆಂದು ಅಯ್ಯನವರು ಹಿಂದೆಯೇ ಬಂದು ಕೈ ಹಿಡಿದುಕೊಂಡರೆ, ಬೇಡವೆಂದು ಕೊಸರಿಕೊಂಡು ಮುಂದೆ ನಡೆದಳು. ಏರಿ ಹತ್ತುವ ಜಾಗದಲ್ಲಿ ನಿಂತಿದ್ದ ಅಯ್ಯಾಶಾಸ್ತ್ರಿಗಳು-‘ಇದ್ಯಾಕಮ್ಮ ಹೀಗೆ ಓಡಿ ಹೋಗ್ತಿದೀರಾ?’ ಎಂದುದು ಅವಳಿಗೆ ಕೇಳಲಿಲ್ಲ. ನೇರವಾಗಿ ಶೆಡ್ಡಿಗೆ ಬಂದಳು. ಒಳಗೆ ಹೋದ ತಕ್ಷಣ ಬಾಗಿಲ ಹತ್ತಿರ ಇದ್ದ ಈಚಲುಪೊರಕೆಯನ್ನು ಕೈಗೆ ತೆಗೆದುಕೊಂಡು ಗಾಡಿಯ ಹತ್ತಿರಬಂದು, ಹೊನ್ನ ಕೆಳಗೆ ಬಿಟ್ಟಿದ್ದ ಒಂದು ಎಕ್ಕಡವನ್ನು ಇನ್ನೊಂದು ಕೈಲಿ ಹಿಡಿದು ಊರ ಕಡೆಗೆ ನುಗ್ಗಿದಳು. ಸ್ವಲ್ಪ ಹೊತ್ತು ಗಂಗಮ್ಮನಿಗೂ ದಿಗ್ಭ್ರಮೆ. ಹೊನ್ನನಿಗೂ ಏನೂ ತಿಳಿಯಲಿಲ್ಲ. ಅಮಾವಾಸ್ಯೆಯ ಮುಂದಿನ ದಿನಗಳಾದ್ದರಿಂದ ಕತ್ತಲು ಹೆಪ್ಪುಗಟ್ಟಿದಂತೆ ನಿಂತಿತ್ತು. ಕತ್ತಲಲ್ಲೆ ಬೀದಿಯ ಗುರುತು ಹಿಡಿದುಕೊಂಡು ಅಕ್ಕಮ್ಮ ಊರ ಒಳಕ್ಕೆ ನುಗ್ಗಿದಳು. ನೇರವಾಗಿ ತನ್ನ ಮೊಮ್ಮಗಳು ವಾಸಮಾಡುತ್ತಿದ್ದ ಮನೆಯ ಮುಂದೆ ಬಂದು ನಿಂತು ಬಾಗಿಲನ್ನು ಪೊರಕೆ ಮತ್ತು ಎಕ್ಕಡಗಳಿಂದ ಹೊಡೆಯುತ್ತಾ ಗಟ್ಟಿಯಾಗಿ ಕಿರುಚಿಕೊಂಡಳು. ‘ಎಲೇ ಮಾರಿಮುಂಡೇ, ಯಲ್ಲಾರನ್ನೂ ಬಿಟ್ಟು ಈ ಮನೆಗೇ ಯಾಕೆ ಮತ್ತೆ ಮತ್ತೆ ಬತ್ತಿಯೇ? ನಿನ್ನ ಕಣ್ಣು ಅವಳ ಇಬ್ಬರು ಮಕ್ಕಳಮ್ಯಾಲೆ ಬಿತ್ತು. ಈಗ ಶಾರದಾಮ್‌ನೋರಿಗೆ ಹರಕೆ ಮಾಡ್ಕಳೋ ಮೊದ್ಲೇ ಅವ್ಳುನ್ನ ನುಂಗ್‌ಕಂಡೆ ಏನೇ? ನಿಂಗೆ ಹೆದರಿಕಂಡ್ರೆ ಮ್ಯಾಲೆ ಅಮರಿಕತ್ತೀಯಾ? ಪಾಪಿಲೌಡಿ, ಲೇ ನಿಂಗೆ ಯಕ್ಕಡದ ಏಟೇ ಸರಿ. ಕದ್ದು ಒಳಗಡೆ ಕೂತಿದೀ ಏನೇ? ಬಾ ಹೊರಗಡೆಗೆ, ನಿನ್ನ ನೆತ್ತಿ ಕೂದ್ಲು ಉದುರೂತಂಕ ಕೆರ ತಗಂಡು ಹೊಡೀತೀನಿ.’ +ಅಕ್ಕಮ್ಮ ಎಕ್ಕಡದಿಂದ ಬಾಗಿಲಿಗೆ ಮತ್ತೆ ಮತ್ತೆ ಹೊಡೆದಳು; ಮತ್ತೆ ಮನಸ್ಸಿಗೆ ಬಂದಂತೆ ಪ್ಲೇಗುಮಾರಿಯನ್ನು ಬೈದಳು. ಅಷ್ಟು ಹೊತ್ತಿಗೆ ಅವಳಿಗೆ ಆಯಾಸವಾಗಿತ್ತು. ಹಾಗೆಯೇ ಜಗುಲಿಯ ಮೇಲೆ ಕೂತುಕೊಂಡಳು. ಕಸಪೊರಕೆ ಎಕ್ಕಡಗಳು ಕೈಲೇ ಇದ್ದವು. ಅರ್ಧ ಗಂಟೆಯಲ್ಲಿ ಅವಳ ಸಿಟ್ಟು ಇಳಿಯಿತು. ಹೋದ ವರ್ಷ ಇಬ್ಬರು ಮರಿಮಕ್ಕಳು ಸತ್ತಾಗಲೂ ಅವಳು ಇದೇ ಮನೆಗೆ ಬಂದು ಮೊಮ್ಮಗಳಿಗೆ ಸಮಾಧಾನ ಹೇಳಿದ್ದಳು. ಇದೇ ಮನೆಯಲ್ಲಿ ಪಾರ್ವತಿಯ ಮದುವೆಯಾಗಿತ್ತು. ಈ ಮನೆಯನ್ನೇ ಯಾಕೆ ಹುಡುಕಿಕೊಂಡು ಬರಬೇಕು ಹಾಳು ಪ್ಲೇಗುಮಾರಿ? ಅಕ್ಕಮ್ಮನಿಗೆ ಈಗ ಅಳು ಬಂದಿತು. ಬಿಕ್ಕಿ ಬಿಕ್ಕಿ ಪ್ರಾರಂಭವಾದ ಅಳು, ಕೊನೆಗೆ ಪ್ರವಾಹದಂತೆ ಹರಿಯಿತು. ಸ್ವಲ್ಪ ಹೊತ್ತಿನಮೇಲೆ ಅವಳು ಮೇಲೆ ಎದ್ದಳು. ಕಸಪೊರಕೆಯಲ್ಲಿ ಬಾಗಿಲು ಹೊಡೆಯುವುದಕ್ಕಾಗಲಿ, ಪ್ಲೇಗುಮಾರಿಯನ್ನು ಬೈಯುವುದಕ್ಕಾಗಲಿ ಮನಸ್ಸು ಬರಲಿಲ್ಲ. ಕತ್ತಲೆಯಲ್ಲಿ ನಡೆದು ಊರ ಹೊರಗೆ ಬಂದಳು. +ಅಷ್ಟರಲ್ಲಿ ಎದುರಿಗೆ ಬರುತ್ತಿದ್ದ ಅಯ್ಯನವರು ಇವಳನ್ನು ಗುರುತಿಸಿ ಎಂದರು: ‘ನಿಮ್ನೇ ಹುಡಿಕ್ಕಂಡ್ ನಾವು ಎಲ್ಲೆಲ್ಲೋ ನೋಡಿದ್ವು. ಬಿಟ್ಟ ಊರವಳಿಕ್ಕೆ ಯಾಕೆ ಹ್ವಾಗಿದ್ರಿ?’ +‘ಪ್ಲೇಗುಮುಂಡೆಗೆ ಯಕ್ಕಡದಲ್ಲಿ ಹ್ವಡಿಯುಕ್ಕೆ ಹೋಗಿದ್ದೆ.’ +ಶವ ಸುಟ್ಟವರು ಹಿಂತಿರುಗಿದ್ದರು. ಚೆನ್ನಿಗರಾಯರು ಕಣ್ಣೀರು ಒರೆಸಿಕೊಂಡು ಅಳುತ್ತಾ ಕೂತಿದ್ದರು: ‘ಹಾಳು ಮನೆ ಕಟ್ದೇ ಇದ್ದಿದ್ರೆ ಇವಳಿಗೆ ಏನಾಗ್ತಿತ್ತು? ಹೊಸ ಮನೆ ಕಟ್ಟಿಯೇ ಅಮ್ಮ ಹಿಡಕಂಡ್ಳು.’ +ಅಕ್ಕಮ್ಮ ರಾತ್ರಿ ಎಲ್ಲ ಅಳುತ್ತಿದ್ದಳು. ಇನ್ನು ಬೆಳಿಗ್ಗೆ ಎದ್ದು ಗಾಡಿಯ ಮೇಲೆ ಹಿಂತಿರುಗುವುದೋ, ಅಥವಾ ಕಲ್ಲೇಶ ಬರುವತನಕ ಇಲ್ಲೇ ಉಳಿಯುವುದೋ ಎಂಬ ಬಗೆಗೆ ಮಾತು ನಡೆಯಿತು. ‘ಅವರು ಬರಾತಂಕ ಇರಿ’- ಅಯ್ಯನವರೆಂದರು. ಎತ್ತು ಗಾಡಿಯೊಡನೆ ಹೊನ್ನನೂ ಉಳಿದ. +ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಗುಡಿಸಿಲ ಒಳಗೆ ಅಕ್ಕಮ್ಮ ಮಲಗಿದ್ದಳು. ಗಂಗಮ್ಮ ತಲೆಯ ಮೇಲೆ ಕೈಹೊತ್ತು ಕೂತಿದ್ದಳು. ಚೆನ್ನಿಗರಾಯರು ಗ್ರಾಮದೇವತೆಯ ಗುಡಿಯ ಜಗುಲಿಯ ಮೇಲೆ ಮಲಗಿ, ತಮ್ಮ ದುಃಖ ಮರೆಯಲು ನಿದ್ದೆ ಮಾಡುತ್ತಿದ್ದರು. ವಿಶ್ವ ಬೇಗ ಬೇಗ ಹೆಜ್ಜೆ ಇಡುತ್ತ ಊರ ಕಡೆಗೆ ಹೋಗುತ್ತಿದ್ದ. ಊರ ಹೊರಗೆ ತನ್ನ ಅಂಗಡಿಯಲ್ಲಿ ಕೂತಿದ್ದ ನರಸಿ ಇದನ್ನು ಕಂಡು ಓಡಿಬಂದು-‘ಎಲ್ಲಿಗ್ ಹೋಗ್ತೀಯಾ ಮಗಾ?’ ಎಂದರೆ ‘ನಮ್ಮಮ್ಮ ಸತ್ಹೋದ್ಲಂತೆ ನಿಜವಾ?’ ಎಂದು ಕೇಳಿದ. +ನರಸಿ ಅವನನ್ನು ತಬ್ಬಿ ಹಿಡಿದುಕೊಂಡಳು. ‘ನನ್ನ ಯಾಕೆ ಹಿಡ್‌ಕತ್ತೀಯಾ? ನಮ್ಮನೆಗೆ ಹೋಗ್ತೀನಿ ಬಿಡು ನರಸಮ್ಮ’-ಅವನು ಕೊಸರಿಕೊಂಡ. +‘ಹೋಗಿ ಏನು ಮಾಡ್ತೀಯಾ ಮಗಾ?’ +‘ನಮ್ಮಮ್ಮ ಇದಾಳೆ. ಅವ್ಳು ಸತ್ಹೋಗಿಲ್ಲ.’ +‘ಇಲ್ಲಿ ಬಾ, ನಾನ್ ಏಳ್ತೀನಿ’-ಎಂದು ಅವನ ಎರಡು ಕೈಯನ್ನೂ ಹಿಡಿದು ತನ್ನ ಅಂಗಡಿಗೆ ಎಳೆದೊಯ್ದು ಕೂರಿಸಿಕೊಂಡು ಕೇಳಿದಳು: ‘ಒಬ್ನೇ ಬಂದ್ಯಾ?’ +‘ಹೂಂ.’ +‘ಅಮ್ಮ ಸತ್ತೈತೆ ಅಂತ ಯಾರು ಏಳಿದ್ರು?’ +‘ನಮ್ಮ ಪಕ್ಕದ ಶೆಡ್ಡಿನ ನಾಗಮ್ಮತ್ತೆ.’ +‘ಅವರು ಅಂದ ಸಟೀಗೇ ಓಡಿಬಂದ್ಯಾ?’ +‘ಹೂಂ.’ +‘ನಿಂಗೆ ದಾರಿ ಗೊತ್ತಿತ್ತಾ?’ +‘ಗಾಡಿಮ್ಯಾಲೆ ಕೂತ್ಕಂಡು ಹೋಗೂವಾಗ ನೋಡ್ಕಂಡಿದ್ನಲಾ, ಕೆರೆ ಏರಿ ಮೇಲ್ಹಾಸಿ, ಕತ್ತಾಳೆ ಓಣಿ ಕಣಗಲಹಳ್ಳ ದಾಟಿ ಹೂವಿನಹಳ್ಳ ಹಾದು, ಚೋಳನಗುಡ್ಡದ ಮುತ್ತುಗದಹಳ್ಳ ದಾಟಿ ಬಂದೆ.’ +ನರಸಿಗೆ ಅಳು ಬಂತು. ಅವಳು ಇನ್ನೊಂದು ಸಲ ಅವನನ್ನು ತಬ್ಬಿಕೊಂಡಳು. +‘ಅದ್ಯಾಕ್ ನರಸಮ್ಮ ಅಳೀಯಾ? ನಮ್ಮನಿಗೆ ಹೋಗ್ತೀನಿ ಬಿಡು’-ಎಂದು ಅವನು ಬಿಡಿಸಿಕೊಳ್ಳಲು ಎದ್ದ. ‘ನಾ ಕರ್ಕಂಡ್ ಹೋಯ್ತೀನಿ ಬಾ’- ಎಂದು ಕೈಹಿಡಿದು ಅವರ ಶೆಡ್ಡಿಗೆ ಕರೆದೊಯ್ದಳು. ಮರಿಮಗನನ್ನು ಕಂಡ ಅಕ್ಕಮ್ಮ ಎದ್ದು ಅವನನ್ನು ಬಾಚಿ ಹಿಡಿದುಕೊಂಡು-‘ತಬ್ಬಲಿಯಾದ್ಯಲೋ ನನ್ನ ಕಂದಾ’ ಎಂದು ಗಟ್ಟಿಯಾಗಿ ಅತ್ತಳು. ವಿಃವನಿಗೂ ಅಳು ಬಂತು. ‘ಅಮ್ಮ ಸತ್ಹೋಗಿದಾಳಾ?’-ಎಂದು ಕೇಳಿದವನೇ ಗೋಳೋ ಎನ್ನುತ್ತಾ ಕಳಲಿ ಬಿದ್ದುಬಿಟ್ಟ. +– ೭ – +ಸಾಯಂಕಾಲದ ಹೊತ್ತಿಗೆ ಅಕ್ಕಮ್ಮನಿಗೆ ಜ್ವರ ಬಂತು. ಮೈ ಕೈ ಕತ್ತರಿಸಿದಂತೆ ಆಗುವುದು, ಕಣ್ಣು ವಿಕಾರವಾಗಿ ಕೆಂಪಗಾಗಿದ್ದುದು, ಮತ್ತು ಮುಖ ಕೆದರಿದ ಲಕ್ಷಣಗಳಿಂದ ಅದು ಪ್ಲೇಗು ಎಂದು ಅಯ್ಯನವರು ತಕ್ಷಣ ಹೇಳಿದರು. ಈ ಅಜ್ಜಿ ಉಳಿಯುವುದಿಲ್ಲವೆಂದು ಅವರ ಮನಸ್ಸಿಗೆ ಎನ್ನಿಸಿತು. ವಿಶ್ವನನ್ನು ರೋಗಿಯ ಹತ್ತಿರ ಬಿಡಕೂಡದು ಎಂದು ಯೋಚಿಸಿದ ಅವರು, ಅವನನ್ನು ಕರೆತಂದು ನರಸಿಯ ಹತ್ತಿರ ಬಿಟ್ಟು ಹೇಳಿದರು: ‘ನೋಡವ್ವ, ಇವನನ್ನ ನಿನ್ನ ಮನೆಯಿಂದ ಹೊರಗೆ ಬಿಡ್‌ಬ್ಯಾಡ. ಊಟ ತಿಂಡಿ ಏನಿದ್ರೂ ನೀನೇ ತಿನ್ಸು. ಜಾತಿ ಏನೂ ಹೋಗಾಕಿಲ್ಲ. ಶೆಡ್ಡಿನಲ್ಲಿ ಅಜ್ಜಿಗೆ ಪ್ಲೇಗು ಬಡಿದೈತಿ. ಇವನಿಗೆ ಮುಟ್ಟು ಬ್ಯಾಡ್‌ದು.’ +ವಿಶ್ವ ಏನೂ ತಿನ್ನಲಿಲ್ಲ. ತನ್ನ ಅಮ್ಮನನ್ನು ನೆನೆಸಿಕೊಂಡು ಅಳುತ್ತಲೇ ಇದ್ದ. ಅವನನ್ನು ಎಲ್ಲಿಯೂ ಬಿಡದೆ ನರಸಿ ಹತ್ತಿರವೇ ಕೂರಿಸಿಕೊಂಡಳು. +ನಂಜಮ್ಮನಿಗೆಂದು ತರಿಸಿದ್ದ ಹೇಮಾದಿ ಪಾನಕ ಇನ್ನು ಉಳಿದಿತ್ತು. ಶೆಡ್ಡಿಗೆ ಬಂದ ಅಯ್ಯನವರು ಕುಡಿಸಲು ಹೋದರೆ ಅಕ್ಕಮ್ಮ ಬ್ಯಾಡವೆಂದಳು. ಏನು ಮಾಡಿದರೂ ಬಾಯಿ ತೆಗೆಯಲಿಲ್ಲ. ತಾನು ಸಾಯಬೇಕೆಂದೇ ಅವಳು ನಿಶ್ಚಯಿಸಿದಂತಿತ್ತು. +ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಕಲ್ಲೇಶ ಬಂದ. ನಡೆದುದೆಲ್ಲವನ್ನೂ ಅಯ್ಯನವರು ಹೇಳಿದರು. ಎರಡು ನಿಮಿಷ ಅವನೂ ಕಣ್ಣೀರು ಹಾಕಿದ. ಇನ್ನು ಮುಂದಿನ ಕೆಲಸ ಯೋಚಿಸಬೇಕು. ಅವನೇ ಹೇಳಿದ: ‘ವಿಶ್ವನಿಗೆ ಇನಾಕ್ಯುಲೇಶನ್ ಆಗಿದೆ. ನಾಗಲಾಪುರಾನೂ ಬಿಟ್ತಿದೆ. ಈ ಊರು ಬಿಟ್ಟಿದೆ. ಅವನು ಇಲ್ಲಿದ್ದರೂ ಭಯವಿಲ್ಲ. ಅವನು ಅಮ್ಮನ ತಿಥಿ ಆಗೂತಂಕ ಇಲ್ಲಿಯೇ ಇರ್ಲಿ. ಆಮೇಲೆ ನಾನು ಬಂದು ಕರ್ಕಂಡು ಹೋಗ್ತೀನಿ. ಬಿಟ್ಟ ಊರೊಳಕ್ಕೆ ಹೋಗಿ ಅಷ್ಟು ಹೊತ್ತು ಕೂತಿದ್ದರಿಂದ ಅಕ್ಕಮ್ಮನಿಗೆ ರೋಗ ಬಡಿದಿದೆ. ಇನಾಕ್ಯುಲೇಶನ್ ಬ್ಯಾಡ ಅಂತ ಹಟಮಾಡಿದ್ಳು. ಈಗ ಗಾಡಿಮ್ಯಾಲೆ ಅವಳನ್ನ ಕರ್ಕಂಡ್ ಹೋಗ್ತೀನಿ.’ +ಅದಕ್ಕೆ ಬದಲು ಹೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ‘ಹಂಗೇ ಮಾಡಿ’-ಎಂದು ಅಯ್ಯನವರೆಂದರು. ‘ನಾನಲ್ಲಿಗೆ ಬರುಲ್ಲ. ನನ್ನ ಮಮ್ಮಗಳುನ್ನ ಸುಟ್ತ ಜಾಗದಲ್ಲೆ ನನ್ನೂ ಸುಡ್‌ಬೇಕು’-ಅಕ್ಕಮ್ಮ ಹೋರಿದಳು. ಕಲ್ಲೇಶ ಕೇಳಲಿಲ್ಲ. ಮೆತ್ತಗಾಗುವಂತೆ ಗಾಡಿಗೆ ಹುಲ್ಲು ಹಾಕಿಸಿ, ಮೇಲೆ ಒಂದು ಗೋಣೀಚೀಲ ಒಂದು ಸೀರೆ ಹಾಸಿ, ಅಕ್ಕಮ್ಮನನ್ನು ಎತ್ತಿ ಮಲಗಿಸಿ, ಮೇಲೆ ಬೆಚ್ಚಗೆ ನಂಜಮ್ಮನ ಒಂದು ಕಂಬಳಿ ಹೊದೆಸಿ ಆ ರಾತ್ರಿಯೇ ಗಾಡಿ ಕಟ್ಟಿಸಿಕೊಂಡು ಹೊರಟುಹೋದ. +ಮರುದಿನ ಅಪ್ಪಣ್ಣಯ್ಯ ಊರಿಗೆ ಬಂದ. ಪ್ಲೇಗು ಬಂದು ಊರು ಬಿಟ್ಟಿರುವುದಾಗಲಿ ಅತ್ತಿಗೆ ಸತ್ತುಹೋದುದಾಗಲಿ ಅವನಿಗೆ ಗೊತ್ತಿಲ್ಲ. ಶೆಡ್ಡಿಗೆ ಬಂದು ಕುತ ಅವನು ಕಣ್ಣುತುಂಬ ನೀರು ಸುರಿಸಿದ. ಪಾರ್ವತಿಯ ಮದುವೆಯಾದಮೇಲೆ ಅವನಿಗೆ ಅತ್ತಿಗೆಯ ಬಗೆಗೆ ಸ್ವಲ್ಪ ಅಂತಃಕರಣ ಬೆಳೆದಿತ್ತು. ಇಬ್ಬರು ಮಕ್ಕಳು ಸತ್ತು, ಅವಳೊಡನೆ ಶೃಂಗೇರಿಗೆ ಹೋಗಿ ಬಂದಮೇಲಂತೂ ತುಂಬ ಗೌರವವೇ ಹುಟ್ಟಿಬಿಟ್ಟಿತ್ತು. ತನ್ನ ಅಮ್ಮನಿಂದ ಬೇರೆಯಾದಮೇಲೆ, ದಿನವೂ ಅವಳು ಮಾಡಿದ ಸಾರು ಹುಳಿಗಳನ್ನೆ ತಿನ್ನುತ್ತಿದ್ದ. ಈಗ ಈ ಊರಿನಲ್ಲಿ ಅವನಿಗೆ ತನ್ನವರೆಂಬ ಯಾರೂ ಇಲ್ಲವೆನ್ನಿಸುತ್ತಿತ್ತು. ನರಸಿಯ ಮನೆಗೆ ಹೋಗಿ ಅವನೇ ವಿಶ್ವನನ್ನು ಕರೆದುಕೊಂಡು ಬಂದ. ಈಗ ಅಯ್ಯನವರನ್ನು ಬಿಟ್ಟರೆ ಈ ಊರಿನಲ್ಲಿ ವಿಶ್ವನಿಗೆ ನಿಕಟವಾಗಿ ಉಳಿದಿರುವವರು ಚಿಕ್ಕಪ್ಪ ಒಬ್ಬರೇ. ರೇವಣ್ಣಶೆಟ್ಟರ ಹೆಂಡತಿ ಸರ್ವಕ್ಕ ಮೊದಲಾಗಿ ಎಷ್ಟೋ ಜನ ಹೆಂಗಸರು ಶೆಡ್ಡಿಗೆ ಬಂದು ಅವನ ಕೆನ್ನೆಯನ್ನು ಮುಟ್ಟಿ ಮುತ್ತಿಟ್ಟು ಕಣ್ಣೀರು ಹಾಕಿ ಹೋದರು. ಆದರೆ ಯಾರೂ ಅವನ ಅಮ್ಮನನ್ನು ಕರೆದುಕೊಂಡು ಬರುವುದಿಲ್ಲ. ಅವಳನ್ನು ಶ್ಮಶಾನದಲ್ಲಿ ಸುಟ್ಟುಹಾಕಿದರಂತೆ. ಸತ್ತು ಬೂದಿಯಾದವರು ಇನ್ನು ಬರುವುದಿಲ್ಲವಂತೆ. ಇವರು ಯಾಕೆ ಸುಡಬೇಕಾಗಿತ್ತು? ಹಾಗೆಯೇ ಇಟ್ಟಿದ್ದರೆ ಅವಳಿಗೆ ಪ್ರಾಣ ಬರುತ್ತಿರಲಿಲ್ಲವೆ?-ಎಂದು ಅವನು ಯೋಚಿಸುತ್ತಿದ್ದ. +ಇನ್ನು ಅತ್ತಿಗೆಯ ತಿಥಿಯಾಗಬೇಕು. ಅಪ್ಪಣ್ಣಯ್ಯ ಅಣ್ಣನಿಗೆ ಹೇಳಿದ: ‘ನನ್ನ ಹತ್ರ ಅರವತ್ತು ರೂಪಾಯಿ ಇದೆ. ನಿನ್ನ ಹತ್ರ ಏನಿದೆ ಕೊಡು. ಕ್ರಮವಾಗಿ ಮಾಡಾಣ. ಅವರು ಪುಣ್ಯಾತ್ಗಿತ್ತಿ. ಶ್ರದ್ಧೆ ಭಕ್ತಿಯಿಂದ ಕೆಲಸವಾಗಬೇಕು.’ +‘ಕತ್ತೆಮುಂಡೆ ಇದ್ದ ಬದ್ದ ದುಡ್ಡಲೆಲ್ಲ ಮನೆ ಕಟ್ಟಿಸಿದಳು. ನಂಗೆ ಯಾವ ಯಜಮಾನಿಕೆ ಬಿಟ್ಟಿದ್ದಳು ದುಡ್ಡು ಇರೂಕ್ಕೆ?’ +ಅಯ್ಯನವರೆಂದರು: ‘ಔಸ್ತಿ ತರಿಸಿದಮೇಲೆ ಮೂವತ್ತೆಲ್ಡು ರೂಪಾಯಿ ಉಳಿದೈತಿ. +ರೂಪಾಯಿ ನನ್ನ ತಾವ ಅವೆ. ಅದ್ನೂ ತಗಾಳಿ. ಹ್ಯಂಗೋ ಬಡತನದಾಗೇ ಮಾಡಿ. ಈ ಜೋಯಿಸರಿಗೆ ನೀವು ಏನು ದಾನ ಕೊಟ್ರೂ ಸತ್ತ ಅಮ್ಮನಿಗೆ ಏನೂ ಸಿಕ್ಕಾಕುಲ್ಲ.’ +ಆದರೆ ಅದೇ ದಿನವೇ ಕಂಬನಕೆರೆಯ ಹೆಡ್ಮಾಸ್ಟರು ಬಂದರು. ರಾತ್ರಿ ಸ್ಕೂಲಿನ ನೂರಾ ಇಪ್ಪತ್ತು ರೂಪಾಯಿಯನ್ನು ಚೆನ್ನಿಗರಾಯರಿಗೆ ಕೊಟ್ತು, ಹಣ ಪಡೆಯಬೇಕಾದವರು ಸತ್ತುಹೋಗಿರುವುದರಿಂದ ಅವರ ಗಂಡನಾದ ತಾವು ಸ್ವೀಕರಿಸಿರುವುದಾಗಿ ಬರಸಿ ರುಜುಮಾಡಿಸಿಕೊಂಡು ಹೋದರು. ಆ ಹಣವನ್ನು ತಿಥಿಗೆ ಕೊಡುವಂತೆ ಅಪ್ಪಣ್ಣಯ್ಯ ಕೇಳಿದ. +‘ಅದ ಖರ್ಚು ಮಾಡ್‌ಬ್ಯಾಡಿ. ಓದಾ ಹುಡುಗನಿಗೆ ಅಂಗಿ ಪಂಗಿ ಹೊಲಿಸಾಕೆ, ಪುಸ್ತಕ ಗಿಸ್ತಕ ತಗಾಳಾಕೆ ಆಯ್ತದೆ’-ಎಂದು ಮಾದೇವಯ್ಯನವರು ಹೇಳಿದರು. ‘ಹಾಗಾದ್ರೆ ಅಯ್ನೋರ ಕೈಲಿ ಕೊಡು’- ಅಪ್ಪಣ್ಣಯ್ಯನೇ ಹೇಳಿದ. ಚೆನ್ನಿಗರಾಯರು ಯಾರಿಗೂ ಕೊಡಲಿಲ್ಲ. ಒಂದು ಅರಿವೆ ಬಳಲಿನಲ್ಲಿ ಸುತ್ತಿ ಸೊಂಟಕ್ಕೆ ಬಿಗಿದುಕೊಂಡೇ ತಿರುಗಾಡಲು ಪ್ರಾರಂಭಿಸಿದರು. +ವಿಶ್ವ ಮುಂಜಿಯಾಗದ ಹುಡುಗ. ಅವನ ಪರವಾಗಿ ಪುತ್ರಸ್ಥಾನದಲ್ಲಿ ನಿಂತು ಎದಬಲಕ್ಕೆ ಹಾಕಿಕೊಂಡು ಅಪ್ಪಣ್ಣಯ್ಯ ಎಲ್ಲ ಕೆಲಸವನ್ನೂ ಮಾಡುತ್ತಿದ್ದ. ತೋಟದ ಬಾವಿಯ ಹತ್ತಿರಕ್ಕೆ ಕರೆದುಕೊಂಡು ಹೋಗಿ ವಿಶ್ವನಿಗೆ ತಲೆ ಬೋಳಿಸಿಸಿ, ಕರ್ಮಗಳು ನಡೆಯುವಾಗ ಸುಮ್ಮನೆ ಒಂದು ಕಡೆ ಕೂರಿಸುತ್ತಿದ್ದರು. ಅಣ್ಣಾಜೋಯಿಸರ ಮಂತ್ರ ತಂತ್ರಗಳು. ನಂಜಮ್ಮನ ಸಂಸಾರದ್ದೇ ಪಾತ್ರೆ ಪರಟೆಗಳಿದ್ದವು. ಅವನ್ನು ವೈಕುಂಠಸಮಾರಾಧನೆಯ ದಿನ ಧಾರಾಳವಾಗಿ ಬ್ರಾಹ್ಮಣರಿಗೆ ದಾನಮಾಡಿದರು. +– ೮ – +ವೈಕುಂಠಸಮಾರಾಧನೆಯಾದ ಹತ್ತು ದಿನಕ್ಕೆ ಕಲ್ಲೇಶ ಬಂದ. ಅಕ್ಕಮ್ಮ, ಊರು ಸೇರಿದ ಎರಡನೆಯ ದಿನವೇ ಸತ್ತುಹೋದಳಂತೆ. ಅವನು ಹಾಸನ, ಕೌಶಿಕ, ಮಾವಿನಕೆರೆ, ಗೊರೂರು, ಹೆಬ್ಬಾಲೆ ಮೊದಲಾಗಿ ಎಲ್ಲೆಲ್ಲಿಯೋ ತಿರುಗಿ ಅವನ ತಂದೆ ಕಂಠೀಜೋಯಿಸರನ್ನು ಪತ್ತೆಮಾಡಿ ಅವಳ ಶ್ರಾದ್ಧವನ್ನು ಮುಗಿಸಿದ. ಈಗ ವಿಶ್ವನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ. +ಅಮ್ಮನ ತಿಥಿಯಾದ ಮೇಲೆ ವಿಶ್ವ ಅಳುವುದನ್ನು ಬಿಟ್ಟಿದ್ದ. ಏರಿಯ ಮೇಲಿನ ಗುಡಿಗೆ ಹೋಗಿ ಅಯ್ಯನವರ ಮುಂದೆ ಸುಮ್ಮನೆ ಕೂರುತ್ತಿದ್ದ. ಅವನಿಗೆ ಊಟವೇ ಸೇರದು. ಅವರು ಬಲವಂತಮಾಡಿ, ಕಂತೆಭಿಕ್ಷದ ಮುದ್ದೆ ಎಸರುಗಳನ್ನು ಸ್ವಲ್ಪ ತಿನ್ನಿಸುತ್ತಿದ್ದರು. ಗುಡಿಗೆ ಹೋದದಿದ್ದರೆ ಅವನು ನರಸಮ್ಮನ ಅಂಗಡಿಗೆ ಹೋಗುತ್ತಿದ್ದ. ‘ನರಸಮ್ಮ, ಊರೊಳಕ್ಕೆ ಹೋಗಿ ನೋಡಿದರೆ ನಮ್ಮಮ್ಮ ಇರುಲ್ಲವೆ? ಅವಳು ಸತ್ತಿದ್ದಾಳೆ ಅಂತ ಇವರೆಲ್ಲ ಸುಳ್ಳು ಸುಳ್ಳು ಹೇಳ್ತಿಲ್ಲವೆ?’-ಎಂದು ಕೇಳುತ್ತಿದ್ದ. ಉತ್ತರ ಹೇಳಲು ತಿಳಿಯದೆ ಅವಳು-‘ನಂಗೊತ್ತಿಲ್ಲ ಮಗ, ಕ್ವಾ. ಬಿಸ್ಕತ್ತು ತಿನ್ನು’ಎಂದು ತನ್ನ ಅಂಗಡಿಯ ಬಿಸ್ಕತ್ತು ಕೊಡಲು ಬರುವಳು. +‘ನಂಗೆ ಬಿಸ್ಕತ್ತು ಬ್ಯಾಡ. ನಮ್ಮಮ್ಮ ಮನೇಲಿಲ್ವೆ ಹೇಳು’-ಅವನು ಕೇಳುತ್ತಿದ್ದ. ಒಂದು ದಿನ ಯಾರಿಗೂ ಕಾಣದಂತೆ ಒಬ್ಬನೇ ಊರೊಳಕ್ಕೆ ಹೋಗಿ, ಬೀಗ ಹಾಕಿದ್ದ ತನ್ನ ಮನೆ ಯನ್ನು ನೋಡಿಕೊಂಡು ಸುಮ್ಮನೆ ಹಿಂತಿರುಗಿ ಬಂದಿದ್ದ. +ಈಗ ಮಾವ ತನ್ನನ್ನು ಕರೆಯಲು ಬಂದಾಗ ಧೈರ್ಯವಾಗಿ ಹೇಳಿಬಿಟ್ಟ: ‘ನಾನು ಬರುಲ್ಲ.’ +‘ಯಾಕೋ?’ +‘ನೀನು ಹೊಡೀತಿಯಾ, ನಾನು ಈ ಊರಲ್ಲೇ ಇಸ್ಕೂಲಿಗೆ ಹೋಗ್ತೀನಿ.’ +ಈ ಊರಿನಲ್ಲಿ ಅವನನ್ನು ಸಾಕುವವರ್ಯಾರು? ಗಂಗಮ್ಮ ತಾನು ಇಟ್ಟುಕೊಳ್ಳುವುದಾಗಿ ಹೇಳಿದಳು. ಆದರೆ ಅವಳದು ಯಾವ ನೆಚ್ಚಿಕೆ? ‘ಇಲ್ಲ ಮರಿ. ಮಾವನ ಊರಿಗೇ ಹ್ವಾಗು’-ಅಯ್ಯನವರೆಂದರು. +‘ಇಲ್ಲ ಕಣ್ರೀ, ಅವನು ದನ ಸದೆಯೂ ಹಾಗೆ ಸದೀತಾನೆ?’ ಅವನು ಮಾವನ ಎದುರಿಗೇ ಹೇಳಿದ. +‘ಖಂಡಿತ ಹ್ವಡೆಯುಲ್ಲ’-ಎಂದು ಕಲ್ಲೇಶನೂ ಭರವಸೆ ಕೊಟ್ಟ. ಉಳಿದವರೂ ಬಲವಂತ ಮಾಡಿದರು. ನಿರುಪಾಯನಾಗಿ ಅವನು ಹೊರಟ. ಕಳಿಸಲು ಅಯ್ಯನವರು ಚಿಕ್ಕಪ್ಪ, ಇಬ್ಬರೂ ಒಂದು ಮೈಲಿಯ ತನಕ ಹೋದರು. ಇವರಿಬ್ಬರೂ ಹಿಂತಿರುಗುವಾಗ ವಿಶ್ವ ಅಯ್ಯನವರನ್ನು ಕೂಗಿ ನಿಲ್ಲಿಸಿದ. ಅವರ ಹತ್ತಿರ ಓಡಿಬಂದು, ‘ನಮ್ಮಮ್ಮ ಸತ್ತಿದಾಳೆ ಅಂತ ನೀವೆಲ್ಲ ಅಂತೀರಲ. ಅದು ಸುಳ್ಳಿದ್ರೂ ಇರ್‌ಭೌದು. ಊರೋರೆಲ್ಲ ಶೆಡ್ಡು ಬಿಟ್ಟು ಊರಿಗೆ ಹೋದಮೇಲೆ ಅವ್ಳು ಬತ್ತಾಳೆ. ನಾಗಲಾಪುರಕ್ಕೆ ಬಂದು ನನ್ನ ಕರ್ಕಂಡು ಬಾ ಅಂತ ಹೇಳಿ’ ಎಂದ. ‘ಆಗಲಿ ಮರಿ’-ಎಂದು ಅವರು ಅಲ್ಲಿಯೇ ನಿಂತರು. ಕಲ್ಲೇಶ ಅವನ ಕೈಹಿಡಿದುಕೊಂಡು ಮುಂದೆ ನಡೆದ. ಹಿಂತಿರುಗಿ ನೋಡುತ್ತಾ ನೋಡುತ್ತಾ ವಿಶ್ವ ಅವನ ಹಿಂದೆ ಹಿಂದೆ ಕಾಲು ಎಳೆದು ಹಾಕುತ್ತಿದ್ದ. ಅವರು ಎದುರಿನ ಬೋರೆ ಏರಿ ಮರೆಯಾಗುವ ತನಕ ಈ ಇಬ್ಬರೂ ಹಾಗೆಯೇ ನಿಂತಿದ್ದರು. ‘ನಾಗಲಾಪುರಕ್ಕೆ ಕಳಿಸುವ ಮೊದಲು ವಿಶ್ವ ಎಷ್ಟು ಕಳಕಳಿಯಾಗಿದ್ದ. ಈಗ ಮುಖದಮೇಲೆ ಮಂಕು ಬಡಿದಿದೆ. ಕೈ ಕಾಲುಗಳು ಶೆಣೆತುಕೊಂಡಿವೆ. ಅವನು ಹೇಳುವ ಹಾಗೆ ಈ ಮಾವ ದನ ಸದೆಯುವಂತೆ ಸದೆಯಬಹುದು. ಇಲ್ಲಿಯ ತನಕ ಅಜ್ಜಿ ಇತ್ತು. ಇನ್ನು ಆ ಅತ್ತೆ ಇವನನ್ನು ಹೇಗೆ ನೋಡಿಕೊಳ್ಳುತ್ತಾಳೆಯೋ? ತಂಗಿ ಸತ್ತಮೇಲೆ ಕಲ್ಲೇಶಜೋಯಿಸರು ಹೊಡೆಯುವುದನ್ನು ಬಿಟ್ಟು ಹುಡುಗನನ್ನು ಚೆನ್ನಾಗಿ ನೋಡಿಕೊಳ್ಳಬಹುದು. ತಾಯಿ ಸತ್ತ ಇಂಥಾ ಹುಡುಗರಿಗೆ ಶಿವನೇ ಗತಿ’-ಎಂದು ಯೋಚಿಸುತ್ತಾ ಅಯ್ಯನವರು ಊರ ಕಡೆ ಹೆಜ್ಜೆ ಹಾಕಿದರು. +ಅಪ್ಪಣ್ಣಯ್ಯ ಶೆಡ್ಡಿಗೆ ಬಂದ. ಅದುವರೆಗೂ ಅವನು ಒಂದು ವಿಷಯವನ್ನೂ ಯೋಚಿಸಿರಲಿಲ್ಲ. ಈಗ ನೆನಪಿಗೆ ಬಂತು: ಅಡಿಗೆಯ ಪಾತ್ರೆ ಸಾಮಾನೆಲ್ಲ ಊರೊಳಗೆ ಬೀರೇಗೌಡನ ದನದ ಮನೆಯ ಜಗುಲಿಯ ಕೋಣೆಯಲ್ಲಿತ್ತು. ಈಗ ಊರು ಬಿಟ್ಟಿದೆ. ತನ್ನೊಬ್ಬನಿಗಾಗಿ ಬೇರೆ ಗುಡಿಸಲು ಹಾಕಿಕೊಳ್ಳಬೇಕು ಅದು ಅವನಿಗೆ ಬೇಸರವೆನಿಸಿತು. ಮಳೆ ಬರುವ ತನಕ ಎಲ್ಲ ಶೆಡ್ಡಿನಲ್ಲಿರುತ್ತಾರೆ. ಆಮೇಲೆ ಊರೊಳಕ್ಕೆ ಹೋಗುತ್ತಾರೆ. ಅಲ್ಲಿಯ ತನಕ ತಾನು ಯಾವುದಾದರೂ ಪ್ರಾಂತ್ಯದಲ್ಲಿ ಸುತ್ತಾಡಿಕೊಂಡು ಬಂದರೆ ಸರಿ. ನಾಳೆ ಬೆಳಿಗ್ಗೆ ಹೊರಡಬೇಕು- ಎಂದು ನಿಶ್ಚಯಿಸಿದ. +ಆ ದಿನ ರಾತ್ರಿ ಊಟಕ್ಕಿದ ಮೆಲೆ ಗಂಗಮ್ಮ ಎಂದಳು: ‘ಅವ್ಳಿದ್ದಾಗ ನಿಂಗೆ ಹೇಳ್ಕೊಟ್ಟು ನನ್ನ ಕೈಲಿ ಜಗಳ ಆಡಿಸಿದ್ಲು. ಈಗ ನೀನ್ಯಾಕೆ ಬ್ಯಾರೆ ಇರ್‌ಬೇಕು, ಜೊತೇಲೇ ಇರೋ.’ +ಅಪ್ಪಣ್ಣಯ್ಯನಿಗೆ ಇದ್ದಕ್ಕಿದ್ದಹಾಗೆಯೇ ಸಿಟ್ಟು ಬಂತು. ‘ಅವರೇನು ನಂಗೆ ಹೇಳ್ಕೊಟ್ಟಿರ್‌ಲಿಲ್ಲ. ನೀನೇ ಬೋಸುಡಿಮುಂಡೆ.’ +‘ಹೆತ್ತ ತಾಯೀನ ಮತ್ತೆ ಹೀಗಂತೀ ಏನೋ ಚಾಂಡಾಲ ಸೂಳೇಮಗನೇ?’ +‘ಹೂಂ ಕಣೆ ಮುಂಡೆ, ನಿನ್ನ ಜೊತೆ ನಾನಿರುಲ್ಲ. ನೀನು ಸತ್ರೆ ತಿಥೀನೂ ಮಾಡುಲ್ಲ-ಎಂದು ಹೇಳಿದ ಅವನು ತನ್ನ ಪಂಚೆ, ಅಂಗಿ, ದುಪಟಿ, ಗೋಣೀಚೀಲಗಳನ್ನು ತೆಗೆದುಕೊಂಡು ಶೆಡ್ಡು ಬಿಟ್ಟು ಹೊರಟುಹೋದ. ಹೊರಗೆ ಬೆಳದಿಂಗಳಿತ್ತು. ಯಾವ ಕಡೆಗೆ ಹೋಗುವುದೆಂದು ಇನ್ನೂ ನಿಶ್ಚಯಿಸಿರಲಿಲ್ಲ. ಐದು ನಿಮಿಷ ನಿಂತು ಯೋಚಿಸಿದ. ಈ ರಾಗೀಸೀಮೇಲೆಲ್ಲ ಹೆಚ್ಚು ಕಮ್ಮಿ ಊರು ಬಿಟ್ಟಿದ್ದಾರೆ. ನಾಲೆಬೈಲಿಗೆ ಹೋಗೂದೇ ಸರಿ. ಈಗ ಹ್ಯಾಗೂ ಬೆಳದಿಂಗಳಿದೆ. ಬೆಂಡೇಕೆರೆ ಎಂಟು ಮೈಲಿಯಾಗುತ್ತೆ. ನಡಕಂಡು ಹೋಗಿ ಊರ ಹೊರಗಿನ ದೇವಸ್ಥಾನದ ಜಗುಲಿ ಮೇಲೆ ಮಲಗಿರೂದು. ಬೆಳಿಗ್ಗೆ ಎದ್ದು ಮುಂದಕ್ಕೆ ಹೋಗೂದು-ಎಂದು ತೀರ್ಮಾನಿಸಿ ಹೆಜ್ಜೆ ಹಾಕಿದ. +ಸಂಸಾರವಿಲ್ಲದ ಅಪ್ಪಣ್ಣಯ್ಯ ಹೀಗೆ ಮತ್ತೆ ದೇಶಾವರಿಗೆ ಹೊರಟಾಗ ಚೆನ್ನಿಗರಾಯರು ಅಣ್ಣಾಜೋಯಿಸರ ಶೆಡ್ಡಿನಲ್ಲಿ ಕೂತು ತಮ್ಮ ಮುಂದಿನ ಸಂಸಾರದ ಬಗೆಗೆ ಮಾತನಾಡುತ್ತಿದ್ದರು. ನಂಜಮ್ಮನ ವೈಕುಂಠಸಮಾರಾಧನೆಯಾದ ದಿನವೇ ಜೋಯಿಸರು ಇವರ ಮದುವೆಗೆ ಪ್ರಸ್ತಾಪ ಹಾಕಿದ್ದರು. ತಿಪಟುರಿಗೆ ಮೂರು ಮೈಲಿ ದೂರದ ಬೇವಿನಹಳ್ಳಿಯಲ್ಲಿ ಒಂದು ಕನ್ಯೆ ಇದೆಯಂತೆ. ಹುಡುಗಿಗೆ ತಂದೆಯಿಲ್ಲ. ತಾಯಿ ತುಂಬ ಕಷ್ಟದ ಸ್ಥಿತಿಯಲ್ಲಿದ್ದಾಳೆ. ಒಬ್ಬ ಬ್ರಾಹ್ಮಣನ ಕೈಲಿ ಇಟ್ಟು ಕೃತಾರ್ಥಳಾಗಬೇಕೆಂದು ತಾಯಿಯ ಆಶೆ. ‘ನಿನಗೇನು, ಇನ್ನೂ ಯಾವ ವಯಸ್ಸು? ಮದುವೆ ಮಾಡ್ಕ. ಹೊಸದಾಗಿ ಕಟ್ಟಿರೂ ಮನೆ, ವಂಶಾನುಗತವಾಗಿ ಬಂದ ಶ್ಯಾನುಭೋಗಿಕೆ. ಇದಕ್ಕಿಂತ ಏನು ಬೇಕು? ಹುಡುಗಿ ಲಕ್ಷಣವಾಗಿದೆ. ಒಬ್ಬನೇ ಹೀಗೆ ಎಷ್ಟು ದಿನ ಇರ್ತೀಯಾ?’-ಜೋಯಿಸರು ಕೇಳಿದರು. +ಚೆನ್ನಿಗರಾಯರಿಗೆ ಹುಮ್ಮಸ್ಸು ಬಂತು: ‘ಹೆಣ್ನು ಕೊಡುಸ್ರೀ. ಮಾಡ್ಕಂಡೇಬಿಡ್ತೀನಿ.’ +ತಾವು ಹೋಗಿ ಹುಡುಗಿಯ ತಾಯಿಯ ಕೈಲಿ ಮಾತಾಡಿಕೊಂಡು ಬರಬೇಕು, ಮಾತಿಗೆ ಹೋಗುವಾಗ ಹುಡುಗಿಗೆ ಹೊಸಸೀರೆ ತೆಗೆದುಕೊಂಡು ಹೋಗಬೇಕು, ದೊಡ್ದ ಶ್ಯಾನುಭೋಗರು ಅಂತ ಅವರಿಗೆ ತೋರಿಸಬೇಕಾದರೆ ತಾವು ಸಹ ಚನ್ನಾದ ಒಂದು ಶಾಲು ಹೊದೆದುಕೊಂಡು ಹೋಗಬೇಕು. ‘ಒಟ್ಟಿನಲ್ಲಿ ಎಪ್ಪತ್ತೈದು ರೂಪಾಯಿಯಾದರೂ ಬೇಕು. ಕೊಡು’-ಎಂದರು. ಹೆಣ್ಣು ಬೇಕಾದರೆ ದುಡ್ಡು ಬಿಚ್ಚಬೇಕು. ನಂಜಮ್ಮ ರಾತ್ರಿ ಸ್ಕೂಲು ನಡೆಸಿದ ನೂರ ಇಪ್ಪತ್ತು ಇವರ ಸೊಂಟದಲ್ಲೇ ಇತ್ತು. ಅದು ಗೊತ್ತಿಲ್ಲದಿದ್ದರೆ ಜೋಯಿಸರು ಈ ಪ್ರಸ್ತಾಪ ಮಾಡುತ್ತಿರಲಿಲ್ಲ. ಚೆನ್ನಿಗರಾಯರು ಅವರ ಎದುರಿಗೇ ಸೊಂಟದ ಅರಿವೆ ಬಿಚ್ಚಿ ಎಪ್ಪತ್ತೈದು ರೂಪಾಯಿ ಎಣಿಸಿ ಕೊಟ್ಟರು. ಇನ್ನು ಉಳಿದದ್ದೆಷ್ಟು ಎಂಬ ಲೆಕ್ಕ ಜೋಯಿಸರಿಗೂ ತಿಳಿಯಿತು. +ಮರುದಿನವೆ ಜೋಯಿಸರು ಮೋಟಾರಿನಲ್ಲಿ ತಿಪಟೂರಿಗೆ ಹೋದರು. ಅವರು ಇಪ್ಪತ್ತು ರೂಪಾಯಿಯ ಒಂದು ಹಸುರು ಶಾಲನ್ನು ಕೊಂಡು ಹೊದೆದು ಹಿಂತಿರುಗಿದ್ದನ್ನು ಚೆನ್ನಿಗರಾಯರೇ ನೋಡಿದರು. ಹುಡುಗಿಗೆ ಅರವತ್ತು ರೂಪಾಯಿಯ ಸೀರೆ ಕೊಟ್ತು ಬಂದಿದ್ದರೆನ್ನುವುದಕ್ಕೆ ಇದೇ ಸಾಕ್ಷಿಯಲ್ಲವೆ? ಎರಡು ದಿನದ ನಂತರ ಒಂದು ಶುಭ ಲಗ್ನ ನೋಡಿ ಇವರಿಬ್ಬರೂ ಮೋಟಾರಿನಲ್ಲಿ ತಿಪಟುರಿಗೆ ಹೋದರು. ರಾತ್ರಿ ಹೋಟೆಲಿನಲ್ಲಿ ಭೋಜನವಾದಮೆಲೆ ಇಬ್ಬರೂ ಛತ್ರದ ಜಗುಲಿಮೇಲೆ ಮಲಗಿದರು. ಜೋಯಿಸರು ಹೇಳಿದ್ದಂತೆ ಚೆನ್ನಿಗರಾಯರು ತಮ್ಮ ಪಂಚೆ, ಜಮಾಬಂದಿಯ ಕೋಟು ಪೇಟಗಳನ್ನು ಚೌಳು ಹಾಕಿ ಒಗೆಸಿ ತಂದಿದ್ದರು. ಬೆಳಿಗ್ಗೆ ಎದ್ದು ಅವೆಲ್ಲಕ್ಕೂ ಇಸ್ತ್ರಿ ತಿಕ್ಕಿಸಿದ ಮೇಲೆ ಜೋಯಿಸರು ಕೆರೆಯ ದಡಕ್ಕೆ ಒಬ್ಬ ಹಜಾಮನನ್ನು ಕರೆದುಕೊಂಡು ಬಂದರು. ವೈದಿಕ ಜೋಯಿಸರಾದ ಅವರು ಹಜಾಮನ ಸೆಲೂನಿಗೆ ಹೋಗುವಂತಿರಲಿಲ್ಲ. ಕೆರೆಯ ದಡದಲ್ಲಿ ಕೂರಿಸಿ ಚೆನ್ನಿಗರಾಯರ ಬಿಳಿ ಗಡ್ಡ ಮತ್ತು ತಲೆಯ ಬಿಳಿಯ ಕೂದಲಿನ ಸಣ್ಣ ಕೂಳೆಯೂ ಕಣ್ಣಿಗೆ ಬೀಳದಂತೆ ಉಲ್ಟಾ ಹೊಡೆಸಿಸಿ, ಅವರಿಗೆ ಸ್ನಾನ ಮಾಡಲು ಹೇಳಿದರು. ಸ್ನಾನ ಮಾಡಿ ಇಸ್ತ್ರಿ ಮಾಡಿದ ಪಂಚೆಯುಟ್ಟು, ಅಂಗಿ ಕೋಟು ತೊಟ್ಟು, ಜಮಾಬಂದಿಗೆ ಹೋಗುವಾಗ ಕಟ್ಟುವಂತೆ ಪೇಟ ಕಟ್ಟಿ ನಿಂತಮೇಲೆ ಜೋಯಿಸರೇ ಅಂದರು: ‘ಈಗ ಹೋಟೆಲಿಗೆ ಹೋಗಾಣ ಬಾ. ಅಲ್ಲಿ ದೊಡ್ಡ ಕನ್ನಡಿ ಇದೆಯಲ. ಅದರಲ್ಲಿ ನೋಡ್ಕ-ಹ್ಯಾಗೆ ಕಾಣ್ತೀಯಾ.’ +ಹೋಟೆಲಿನಲ್ಲಿ ಕೂತು ಇವರು ಹೇಳಿದ ಮಸಾಲೆದೋಸೆ ಬೆಂದು ಬರುವ ತನಕ ಚೆನ್ನಿಗರಾಯರು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ: ಅವರಿಗೇ ಆಶ್ಚರ್ಯವಾಗುತ್ತಿದೆ. ತಾವು ಇಷ್ಟು ಚೆನ್ನಾಗಿ ಈ ಹಿಂದೆ ಯಾವತ್ತೂ ಕೋಟು ಪೇಟ ಹಾಕಿಕೊಂಡೇ ಇರಲಿಲ್ಲ. ಅವರ ಹೆಂಡತಿಯಾಗಿದ್ದ ಆ ‘ಮುಂಡೆ’ ಒಂದು ದಿನವೂ ಇವರಿಗೆ ಇಸ್ತ್ರಿಯಾದ ಪಂಚೆ, ಅಂಗಿ, ಕೋಟು, ಪೇಟಗಳನ್ನು ಹಾಕಿಸಿ ಜಮಾಬಂದಿಗೆ ಕಳಿಸಿರಲಿಲ್ಲ. ಮಸಾಲೆದೊಸೆ, ಇಡ್ಳಿಸಾಂಬಾರ್, ಮೈಸೂರ್ ಪಾಕು, ಮೇಲೆ ಕಾಫಿ ಕುಡಿದು, ಸಂಜೆಯ ತನಕ ಜೊತೆಯಲ್ಲೇ ಇದ್ದು ವಾಪಸು ಕರಕೊಂಡು ಬರಬೇಕೆಂದು ಹೇಳಿ ಜೋಯಿಸರು ಎಂಟು ರೂಪಾಯಿಗೆ ಒಂದು ಕುದುರೆಗಾಡಿ ಗೊತ್ತುಮಾಡಿದರು. +ಬೇವಿನಹಳ್ಳಿ ಹದಿನೈದು ಮನೆಗಳ ಕಗ್ಗಾಡುಹಳ್ಳಿ. ಈ ಹೆಣ್ಣಿನದೊಂದೇ ಬ್ರಾಹ್ಮಣರ ಮನೆ. ಅಲ್ಪ ಸ್ವಲ್ಪ ಜಮೀನಿದ್ದರೂ ವಿಧವೆಯಾದ ಆಕೆ ಅದನ್ನು ಮಾಡಿಸಲಾರದೆ, ವಾರ ಪಾಲಿನವನು ಕೊಟ್ಟಷ್ಟನ್ನು ತಿಂದು, ಸಾಲದುದಕ್ಕೆ ತಿರುಪೆ ಮಾಡಿ ಜೀವನ ಸಾಗಿಸುತ್ತಿದ್ದರು. ಮನೆಯ ಮುಂದೆ ಕುದುರೆಯ ಗಾಡಿ ಬಂದು ನಿಂತಾಗ ಆಕೆಗೆ ಕೈ ಕಾಲೇ ಆಡದಷ್ಟು ಸಂಭ್ರಮವಾಯಿತು. ಹುಡುಗಿಗೆ ಹದಿನಾಲ್ಕು ವರ್ಷ. ಇನ್ನೂ ಮೈನೆರೆದಿಲ್ಲವೆಂದು ತಾಯಿ ಹೇಳುತ್ತಾರೆ. ಹುಡುಗಿಯನ್ನು ನೋಡದೆ ಇದ್ದರೂ ಚೆನ್ನಿಗರಾಯರು ಸಮ್ಮತಿ ಕೊಡುತ್ತಿದ್ದರು. ಈಗ ನೋಡಿದ ಮೇಲೆ ಪ್ರಶ್ನೆಯೇ ಇಲ್ಲ. +‘ಸದಾ ಶ್ಯಾನುಭೋಗಿಕೆ ಲೆಕ್ಕ ಬರೆದು ನಮ್ಮ ಚೆನ್ನಿಗರಾಯರು ಹೀಗೆ ಕಾಣ್ತಾರೆ. ಮೂವತ್ತೆರಡು ವರ್ಷದ ಮೇಲೆ ಆಗಿಲ್ಲ. ಸ್ವಂತ ಮನೆ, ಶ್ಯಾನುಭೋಗಿಕೆ, ನಾಲ್ಕೆಕರೆ ಹೊಲ ಇದೆ. ಈ ಕಾಲದಲ್ಲಿ ಒಂದು ಶ್ಯಾನುಭೋಗಿಕೆ ಇದ್ರೆ ಸಾಕು ಸಂಸಾರ ಸಾಕ್‌ಭೌದು. ನಿಮ್ಮ ಹುಡುಗಿ ದಿನಾ ಊಟವಾದ ಮೇಲೆ ಹಾಲಿನಲ್ಲಿ ಕೈ ತೊಳೆಯುತ್ತೆ, ನೀರಿನಲ್ಲಲ್ಲ’-ಜೋಯಿಸರು ಇವರ ಪರವಾಗಿ ಹೇಳಿದರು. +ಮದುವೆ ನಿಶ್ಚಯವಾಯಿತು. ತಡ ಯಾಕೆ ಮಾದಬೇಕು. ಎಂದು ಜೋಯಿಸರು, ತಮ್ಮ ಸಂಗಡವೇ ತಂದಿದ್ದ ಬಿಳಿಯ ಕಾಗದದ ಮೇಲೆ ಲಗ್ನಪತ್ರಿಕೆಯನ್ನೂ ಬರೆದುಬಿಟ್ಟರು. ‘ಜಾತಕಗಳು ಕೂಡುತ್ತವೆ. ವೈಶಾಖದಲ್ಲಿ ಹ್ಯಾಗೂ ಒಳ್ಳೆಯ ಲಗ್ನವಿದೆ. ಹುಣಿಸೆನೀರು ಅನ್ನ ಮಾಡಿ ಬೇಕಾದರೂ ಮದುವೆ ಮುಗಿಸಿಬಿಡಿ’- ಎಂದಾಗ ಹುಡುಗಿಯ ತಾಯಿಗೆ ಮೈಮೇಲಿನ ಹೊರೆ ಇಳಿಸಿದಷ್ಟು ಸಂತೋಷವಾಯಿತು. ಆಕೆ ಇದ್ದದ್ದರಲ್ಲಿ ಹೊಂದಿಸಿ ತುಪ್ಪನ್ನ ಪಾಯಸ ಮಾಡಿ ಬಡಿಸಿದರು. ತಾಂಬೂಲ ತೆಗೆದುಕೊಂಡ ಇವರು ಕ್ಯುದುರೆ ಗಾಡಿ ಹತ್ತಿ ತಿಪಟೂರಿಗೆ ಬರುವ ಹೊತ್ತಿಗೆ ಊರಿನ ಕಡೆಯ ಮೋಟಾರು ಸಿಕ್ಕಿದರೂ ಇಬ್ಬರಲ್ಲಿ ಯಾರೂ ಊರಿಗೆ ಹೊರಡಲು ಆತುರರಾಗಿರಲಿಲ್ಲ. ಹೋಟೆಲಿನವರು ಆಲುಗಡ್ಡೆ ನೀರುಳ್ಳಿ ಹಾಕಿ ಚೆನ್ನಾಗಿ ಹುಳಿಮಾಡುತ್ತಾರೆ. ನಾಳೆ ಬೆಳಿಗ್ಗೆ ಹೋದರಾಯಿತು. ಜೋಯಿಸರು ಜವಳಿ ಅಂಗಡಿಗೆ ಹೋಗಿ ಒಂದು ಜೊತೆ ಪಂಚೆ ಒಂದು ಸೀರೆ ತೆಗೆದುಕೊಂಡರು. ಅವರು ದುಡ್ಡು ತಂದಿರಲಿಲ್ಲ. ಚೆನ್ನಿಗರಾಯರೇ ಇಪ್ಪತ್ತೆರಡು ರೂಪಾಯಿಯನ್ನು ಅಂಗಡಿಯವನಿಗೆ ಕೊಟ್ಟರು. +ಚೆನ್ನಿಗರಾಯರ ಮದುವೆ ಸುದ್ಧಿ ಊರಲ್ಲಿ ಎಲ್ಲರಿಗೂ ತಿಳಿಯಿತು.‘ಆ ವಯ್ಯಂಗೆ ಹತ್ತಿರಾ ಚಟಾ ನೋಡು-ಅದು ನಿಜವಾಗ್ಲೂ ಎಂಡ್ತಿ ಆಳ್ತೈತಾ?’ ಎಂದು ನರಸಿ ಆಡಿಕೊಂಡರೆ ಸರ್ವಕ್ಕ, ‘ಆ ಯಮ್ಮ ಒಂದು ನೀಯುಸ್ತು ಅಂದ್ರೆ ಇನ್ನು ಈ ವಯ್ಯನ್ನ ಕಟ್ಕಂಡ ಹುಡುಗಿ ನೀಯುಸ್ತೈತಾ!’ ಎಂದು ಉದ್ಗಾರ ತೆಗೆದಳು. ರೇವಣಶೆಟ್ಟಿ ಒಂದು ದಿನ ಇವರಿಗೆ ಸಿಕ್ಕಿ, ‘ಶ್ಯಾನುಭೋಗ್ರೇ, ನೀವು ರಾಜಾ ಕೆಲ್ಸ ಮಾಡಿದ್ರಿ. ಮದುವೆ ಮಾಡ್ಕಳಿ. ಇಲ್ದೆ ಇದ್ರೆ ಬೇಸಿ ಹಾಕಾರು ಯಾರು?-ಎಂದು ಹುರಿದುಂಬಿಸಿದ. ತಾಯಿ ಗಂಗಮ್ಮ ಮಾತ್ರ ಈ ವಿಷಯದಲ್ಲಿ ನಿರಾಸಕ್ತಿ ತೋರಿಸಿದಳು. ‘ಯಾವ ಮುಂಡೆ ಬಂದ್ರೆ ನಂಗೆ ಮಾಡೂದೇನು? ಯಾವಳೂ ನನ್ನ ಸೇವೆ ಮಾಡುಲ್ಲ’-ಎಂದುಬಿಟ್ಟಳು. +ಒಂದು ವಾರದಲ್ಲಿ ಚೈತ್ರ ಕಳೆದು ವೈಶಾಖ ಬಂತು. ಈ ತಿಂಗಳೇ ಮದುವೆಯಾಗಬೇಕು. ಮೊದಲ ಹೆಂಡತಿಯದೇ ಓಲೆ ಮೂಗುಬೊಟ್ಟುಗಳಿವೆ. ಬೂದಿಯಲ್ಲಿ ಹುಡುಕಿ ತೆಗೆದ ಮಾಂಗಲ್ಯದ ಚಿನ್ನ ಸಹ ಇದೆ. ಮೇಲೆ ನೂರು ರೂಪಾಯಿ ಹೊಂದಿಸಿಕೊಂಡರೆ ಸಾಕು. ಒಂದು ಹಸುವನ್ನು ನೂರು ರೂಪಾಯಿಗೆ ಮಾರಿ ಅದನ್ನೂ ಹೊಂದಿಸಿಕೊಂಡರು. ಆದರೆ ಮುಂದಿನ ಮಾತಾಡಲು ಹೆಣ್ಣಿನ ಕಡೆಯ ಯಾರೂ ಬರಲಿಲ್ಲ. ಇನ್ನು ಹತ್ತು ಹನ್ನೆರಡು ದಿನದಲ್ಲಿ ತಮ್ಮ ತೌರಿನ ಕಡೆಯ ಸಂಬಂಧಿ ಸಿದ್ಧವಳ್ಳಿ ವೆಂಕಟರಾಮಯ್ಯ ಅನ್ನುವವರನ್ನು ಕಲಿಸುವುದಾಗಿ ಹುಡುಗಿಯ ತಾಯಿ ಹೇಳಿದ್ದರು. ಆದರೆ ಯಾರೂ ಬರಲಿಲ್ಲ. ಮದುವೆ ಇನ್ನು ಆರೇ ದಿನ ಉಳಿಯಿತು. ಚೆನ್ನಿಗರಾಯರಿಗೆ ಆತಂಕ ತಡೆಯಲಾಗಲಿಲ್ಲ. ಜೋಯಿಸರನ್ನು ಕೇಳಿದರೆ-‘ಏನು ಸಮಾಚಾರವೋ ಏನೋ? ನಂಗೆ ಪುರುಸೊತ್ತಿಲ್ಲ. ನೀನೇ ಹೋಗಿ ಬಾ’ ಎಂದರು. ಇವರೇ ಒಂದು ದಿನ ತಿಪಟೂರಿಗೆ ಹೋಗಿ, ಹಿಂದಿನ ದಿನದಂತೆಯೇ ಕ್ಷೌರ ಮಾಡಿಸಿಕೊಂಡು ಇಸ್ತ್ರಿ ಬಟ್ಟೆ ಧರಿಸಿ ಬೇವಿನಹಳ್ಳಿಗೆ ಹೋದರೆ ಮನೆಯಲ್ಲಿ ವೃದ್ಧ ವಯಸ್ಸಿನ ಒಬ್ಬ ಗಂಡಸರಿದ್ದರು. ತಮ್ಮ ಪರಿಚಯವನ್ನು ತಾವೇ ಹೇಳಿಕೊಂಡ ಚೆನ್ನಿಗರಾಯರು ಅವರೊಡನೆ ಮಾತು ಪ್ರಾರಂಭಿಸುವಷ್ಟರಲ್ಲಿ ಒಳಗಿನಿಂದ ಬಂದ ಹುಡುಗಿಯ ತಾಯಿ ಪಟಪಟನೆ ಅಂದುಬಿಟ್ಟಳು: ‘ಯಾವ ಗಂಡೂ ಸಿಕ್ಕದೇ ಇದ್ರೆ ನಮ್ಮ ಹುಡುಗೀನ ಬಾವಿಗೆ ನೀಕ್ತೀನಿ. ನಿಮ್ಮಂಥೋರಿಗೆ ಕೊಡುಲ್ಲ.’ +ಶ್ಯಾನುಭೊಗ್ ಚೆನ್ನಿಗರಾಯರು ಏನೂ ಅರ್ಥವಾಗದೆ ಆಕೆಯನ್ನು ಪಿಳಪಿಳನೆ ನೋಡುತ್ತಾ ಕೂತುಬಿಟ್ತರು. ಆಕೆಯೇ ಮಾತನಾಡಿದರು: ‘ಆ ಜೋಯಿಸ ಮುಂಡೇಗಂಡ ದೂರದ ಗುರುತಿನೋನು ಅಂತ ನಂಬಿದ್ರೆ ಗಂಡು ಗೊತ್ತು ಮಾಡಿ ಕೊಡ್ತೀನಿ ಅಂತ ನನ್ನ ಹತ್ರ ಇಪ್ಪತ್ತು ರೂಪಾಯಿ ಕಿತ್ತು ನಿಮ್ಮಂತ ನಾಮರ್ದ್ ಮುದುಕನ್ನ ತೋರಿಸಿ ಮೋಸ ಮಾಡಿಬಿಟ್ಟ. ನಂಗೆ ಸದ್ಯಕ್ಕೆ ಒಬ್ಬ ಪುಣ್ಯಾತ್ಮರು ಎಲ್ಲಾ ಮೊದ್ಲೇ ಹೇಳಿದ್ರು.’ +‘ನನನನನ್ನ ತತಪ್ಪೇನು ಹ್ಯೇ ಹ್ಯೇ ಹ್ಯೇಳಿ ಅಮ್ಮ’- ಇವರಿ ಧೈರ್ಯ ತಂದುಕೊಂಡು ಕೇಳಿದರು. +‘ಏನು ತಪ್ಪೆ? ಮೊದಲ ಹೆಂಡ್ತೀನ ಹ್ಯಾಗೆ ಬಾಳಿಸಿದ್ರಿ ನೀವು? ಎಲೆ ಹಚ್ಚಿ ಜೀವನ ಮಾಡ್ಳಿಲ್ವೆ ಅವಳು? ಶ್ಯಾನುಭೋಗಿಕೆ ಲೆಕ್ಕ ಅವ್ಳು ಬರಿಯೂಹೊತ್ತಿಗೆ ನಡೀತಂತೆ. ನಮ್ಮ ಹುಡುಗಿಗೆ ಅದೆಲ್ಲ ಬರುಲ್ಲ. ನಿಮಗೆ ಊರಲ್ಲಿ ಹೊಲ ಎಲ್ಲಿದೆ? ಮನೆಯೂ ಮೊದಲನೆ ಹೆಂಡ್ತಿ ಕಟ್ಸಿರೂದಂತೆ. ಅವಳ ಹೆಸರಲ್ಲಿರೂ ಮನೆ ಅವಳ ಮಗುಂಗೆ ಹೋಗುತ್ತೆ. ನಿಮಗಿರೋನು ಒಬ್ಬನೇ ಮಗ ಅಂತ ಹೇಳಿದ್ರಲಾ, ಹೋದ ವರ್ಷ ಮುಂಜಿಯಾದ ಮಗ ಮದುವೆಯಾದ ಮಗಳು ಸತ್ತಿದ್ದು ಸುಳ್ಳೆ?’ +‘ಯ್ಯಾ ಯ್ಯಾ ಯ್ಯಾರೇಳಿದ್ರಮ್ಮ ನಿಮಗೆ ಇ ಇದೆಲ್ಲಾ?’ +‘ಯಾರು ಹೇಳಿದ್ರು? ನಿಮ್ಮೂರೋರೇ ಒಬ್ರು ಜಂಗಮಯ್ಯ್ನೋರು ಮುದುಕ್ರು ಹೇಳಿದ್ರು. ನಮ್ಮನೆಗೇ ಬಂದಿದ್ರು. ಅದೆಲ್ಲ ಸುಳ್ಳೋ ನಿಜವೋ ಹೇಳಿ. ನಿಮ್ಮ ವಯಸ್ಸು ಮೂವತ್ತೆರಡೇ? ನಿಜ ಹೇಳಿ. +‘ಎಲಾ, ಅವನವ್ವನ’-ಎನ್ನುವಾಗ ಶ್ಯಾನುಭೋಗರಿಗೆ ತಕ್ಷಣ ಮಾದೇವಯ್ಯನವರ ನೆನಪಾಗಿ ಪ್ರಚಂಡ ಕೋಪ ಬಂತು. +‘ನಿಮ್ಮ ಬಾಯ್ಲಿ ಹೊರಡೂ ಮಾತು ನೋಡಿ. ಮೊದಲ ಹೆಂಡ್ತಿ ಹತ್ರ ನೀವು ಹೀಗೇ ಮಾತಾಡ್ತಾ ಇದ್ರಂತೆ. ನಿಮ್ಮಂಥೋರಿಗೆ ಒಂದು ಲೋಟ ಗಂಗೋದಕನೂ ಕೊಡಬಾರ್‌ದು. ಎದ್ಹೋಗಿ ಇಲ್ಲಿಂದ.’ +ಚೆನ್ನಿಗರಾಯರು ಎದ್ದು ಹೊರಗೆ ಬಂದರು. ಆ ಊರಿನಲ್ಲಿ ಇನ್ನೆಲ್ಲಿಯೂ ಕುಳಿತುಕೊಳ್ಳಲು ಭಯವಾಗಿ ಸೀದಾ ತಿಪಟೂರಿಗೆ ಬಂದರು. ‘ಈ ಮಾದೇವಯ್ಯ, ಅವನವ್ವನ ಅವನಿಗೇನು ಬಂದಿತ್ತು ಹೀಗೆ ಈ ಊರಿಗೆ ಬಂದು ಚಾಡಿ ಹೇಳುಕ್ಕೆ? ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಮಾಡ್ಸ್ಬೇಕು. ಈ ಮುದುಕ, ಆಗೂ ಮದ್ವಿಗೆ ವಿಗ್ನ ಮಾಡಿದ್ನಲ, ಇವನ ವಂಶ ಹಾಳಾಗ’ ಎಂದು ಬೈದುಕೊಳ್ಳುತ್ತಾ ಹೋಟೆಲಿಗೆ ಹೋಗಿ ಊಟಕ್ಕೆ ಕೂತರು. ತಕ್ಷಣ ಊರಿಗೆ ಹೋಗಬೇಕೆನಿಸಲಿಲ್ಲ. ಹಸು ಮಾರಿ ಮದುವೆಗೆಂದು ಇಟ್ಟುಕೊಂಡಿದ್ದ ದುಡ್ಡಿನಲ್ಲಿ ತೊಂಬತ್ತು ರೂಪಾಯಿ ಉಳಿದಿತ್ತು. ಸುಖವಾಗಿ ಇಪ್ಪತ್ತು ದಿನಗಳು ತಿಪಟೂರಿನಲ್ಲಿಯೇ ಇದ್ದರು. ದಿವಾನ್ ಛತ್ರದ ಜಗುಲಿಯಿತ್ತು. ಊರು ತುಂಬ ಹೋಟೆಲುಗಳಿದ್ದವು. +ಕೈಲಿ ಕಾಸು ಮುಗಿದಮೇಲೆ ಊರಿಗೆ ಹೋಗುತ್ತಾರೆ: ಅಷ್ಟರಲ್ಲಿ ಮುಂಗಾರು ಮಳೆ ಬಿದ್ದಿದೆ. ಜನಗಳೆಲ್ಲ ಶೆಡ್ಡು ಬಿಟ್ಟು ಊರಿಗೆ ಹೋಗಿದ್ದಾರೆ. ತಾವು ಯಾವ ಮನೆಗೆ ಹೋಗಬೇಕೆಂಬುದು ಗೊತ್ತಿಲ್ಲ ನೇರವಾಗಿ ಅಮ್ಮನ ಮನೆಯಾದ ಹನುಮಂತರಾಯನ ಗುಡಿಗೆ ಹೋದರು. ಗಂಗಮ್ಮ ಎಂದಳು: ‘ನಿನ್ನ ಶ್ಯಾನುಬಾಕಿ ಹೋಯ್ತಲ್ಲೋ ಮುಠಾಳ ಸೂಳೇಮಗನೆ?’ +‘ಎಲ್ಲಿಗೆ ಹೋಯ್ತಮ್ಮ?’ +‘ನಿನ್ನ ಹೆಂಡ್ತಿ ಸತ್ತಾಗ್ನಿಂದ ಲೆಕ್ಕ ಬರ್ದಿರ್ಲಿಲ್ಲ. ಈಗ ಎರಡು ಕಂತಾದ್ರೂ ಪಟೇಲನಿಗೆ ವಸೂಲಿಪಟ್ಟಿ ಕೊಟ್ಟಿಲ್ಲ. ಹಾಗಂತ ಶೇಕ್‌ದಾರ್ರು ಬಂದ್ರೆ ನೀನು ಊರಲ್ಲೇ ಇಲ್ಲ. ಪಟೇಲ ಶಿವೇಗೌಡ, ಶಿವಲಿಂಗ, ಇಬ್ರೂ ಹೋಗಿ ಅಮಲ್‌ದಾರ್ ಧಣಿಗಳನ್ನ ಕಂಡ್ರಂತೆ. ಶೇಕ್‌ದಾರ್ರು ಪೀಲೀಸ್ನೋರುನ್ನ ಕರ್ಕಂಡ್ ಬಂದು ಗುಂಡೆಗೌಡನ ಮನೆ ಬಾಗಿಲು ಬೀಗ ಒಡೆಸಿ ಪುಸ್ತಕ ಎಲ್ಲ ಶಿವಲಿಂಗುಂಗೆ ಕೊಡಿಸಿದ್ರು. ಈಗ ಅವ್ನೇ ಶ್ಯಾನ್‌ಬಾಗ.’ +ಚೆನ್ನಿಗರಾಯರು ಸತ್ತ ಹೆಣದಂತೆ ಕಣ್ಣು ಅಗಲಿಸಿ ಕೂತುಬಿಟ್ಟರು. +‘ನಾನೀಗ ಬಂದಿದೀನಿ. ನನ್ನ ಶ್ಯಾನುಬಾಕಿ ನಂಗೆ ಕೊಡ್ಸಿ ಮಾಸ್ವಾಮಿ ಅಂತ ಕೇಳ್ಕ ಹೋಗೋ.’ +ಯಾರನ್ನ ಕೇಳುವುದು? ಎಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಂದ್ರೇನು ಹೇಳೂದು? ಅಲ್ಲದೆ ಲೆಕ್ಕ ಬರೆಯೂರು ಯಾರು? ಈ ದಿನಸಿ ಲೆಕ್ಕ, ಇದರವ್ವನಾ, ಬಲು ತರಲೆ. ಅವರಿಗೆ ಒಂದು ಉಪಾಯ ಹೊಳೆಯಿತು. ಅವರೇ ಎದ್ದು ಶಿವಲಿಂಗನ ಮನೆಗೆ ಹೋದರು. ಶ್ಯಾನುಭೋಗ ಶಿವಲಿಂಗ ಹಳೇ ಲೆಕ್ಕ ಬಲ್ಲ. ಹೊಸ ದಿನಸಿ ಲೆಕ್ಕ ಅವನಿಗೂ ಕಷ್ಟವೇ. ಕಂಬನಕೆರೆಯ ಶ್ಯಾನುಭೋಗರಿಂದ ಹೇಳಿಸಿಕೊಂಡು ಬಂದು ಅದರಂತೆ ಬರೆಯುತ್ತಾ ಕುಳಿತಿದ್ದ. +‘ಏನಯ್ಯಾ ಬಂದೆ?’-ಶ್ಯಾನುಭೋಗಿಕೆಯ ಗತ್ತಿನಲ್ಲಿ ಅವನು ಕೇಳಿದ. +‘ಸಿವಲಿಂಗೇಗೌಡ್ರೇ, ನನ್ನ ಶ್ಯಾನುಭೋಗಿಕೆ ಮೊದ್ಲು ನೀವು ನೋಡ್ತಿದ್ರಿ. ಈಗಲೂ ನೋಡ್ಕಳಿ. ವರ್ಷಕ್ಕೊಂದು ಸಲ ಪೋಟಿಗೇಲಿ ಏನು ಕೊಡ್ತೀರಿ ಅಂತ ಒಂದು ಮಾತು ಗಟ್ಟಿಮಾಡಿ.’ +‘ಶ್ಯಾನುಬಾಕಿ ನೀನೇನು ನಂಗೆ ಕೊಟ್ಟಿಲ್ಲ ಹ್ವಾಗಯ್ಯಾ. ಸರ್ಕಾರಿ ತರಫ್ ಬಂದೈತೆ.’ +‘ಹಾಗಾದ್ರೆ ಏನೂ ಕೊಡುಲ್ವೆ?’ +‘ಒಂದು ಕೂದ್ಲೂ ಕೊಡಾಕುಲ್ಲ. ಎದ್ಹೋಯ್ತೀಯೋ ಕುಳವಾಡಿ ಕರಸಿ ನಿನ್ನ ಕುತ್ತಿಗೆ ಹಿಡಿದು ಆಚಿಗ್ ನೂಕುಸ್ಲೋ?’ +ಅವರಿಗೆ ಅಪಮಾನವೆನಿಸಿತು. ‘ನಿನ್ನವ್ವನ’-ಎನ್ನಬೇಕೆಂದು ಬಾಯಿಗೆ ಬಂತು. ಆದರೆ ಸಿವಲಿಂಗ ಕುಳುವಾಡಿ ಕರೆಸಿ ಏನಾದರೂ ಮಾಡಿಸಿಯಾನೆಂಬ ಹೆದರಿಕೆಯಾಗಿ ಸುಮ್ಮನೆ ಬಂದುಬಿಟ್ಟರು. ಸಿಟ್ಟಿನಿಂದ ಮೈ ಎಲ್ಲ ಉರಿಯುತ್ತಿತ್ತು. +ದಾರಿಯಲ್ಲೇ ಮಾದೇವಯ್ಯನವರ ಗುಡಿ. ಅಯ್ಯನವರು ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ತಿಕ್ಕುತ್ತಿದ್ದರು. ಅವರನ್ನು ಕಂಡ ತಕ್ಷಣ ಚೆನ್ನಿಗರಾಯರ ಸಿಟ್ಟೆಲ್ಲ ಎದ್ದು ನಿಂತಿತು. ತಾವೂ ಜಗುಲಿಯ ಮೇಲೆ ಬಂದು ಕೂರು ಕೇಳಿದರು: ‘ಅಯ್ನೋರೇ. ನೀವು ನ್ಯಾಯಸ್ಥರು ಅಂತ ಮಾಡಿದ್ದೆ. ಹಿಂದುಗಡೇಲೇ ಚಾಡಿ ಹೇಳೂದು ಎಷ್ಟು ದಿನದಿಂದ ಕಲ್ತ್‌ಕಂಡ್ರಿ?’ +‘ನಿಮ್ಮ ಮದುವೆಗೆ ಏಟು ಬಿತ್ತು ಅಂತ ಹೀಗಂತೀರಾ?’ +ಅವರು ಸ್ವಲ್ಪವೂ ತಾಳ್ಮೆಗೆಡದೆ ಶಾಂತವಾಗಿ ಕೇಳಿದ ರೀತಿಗೆ ಇನ್ನಷ್ಟು ಸಿಟ್ಟು ಬಂತು. ‘ಹೂಂ’- ಎಂದರು. +ಸ್ವಂತ ಲೆಕ್ಕ ಬರ್ದು ಶ್ಯಾನುಬಾಕಿ ಮಾಡ್ತೀರಾ? ಜಮೀನಿನಲ್ಲಿ ಬತ್ತೈತಿ ಅನ್ನಾಕೆ ಹ್ವಲ ಪಲ ಐತಾ? ಮನೆ ನಂಜವ್ವನ ಹೆಸರಲ್ಲೈತಿ. ಅದು ಏನಿದ್ರೂ ವಿಶ್ವಣ್ಣಂಗೆ ಸೇರ್ತೈತೆ. ನಿಮಗಾಗಿರೋ ವಯಸ್ಸೇಟು? ಆ ಚಿಕ್ಕ ಹುಡುಗೀನ ಹ್ಯಂಗೆ ಬಾಳುಸ್ತಿದ್ರಿ?’ +‘ನಾಕು ಮನ್ಲಿ ತಿರಕಂಡು ತಂದು ಸಾಕ್ತಿದ್ದೆ ಕಣ್ರೀ.’ +‘ನಂಜವ್ವ ಇದ್ದಾಗ ಸಾಕಿದ್ದು ನಾವೆಲ್ಲ ನೋಡ್ಳಿಲ್ವಾ? ಯಲಾರು ನಂಜವ್ವನ ಹಂಗೇ ಇರಾಕಿಲ್ಲ. ನಿಮ್ಮ ಹೊಸ ಹೆಂಡ್ತಿ ಊರಾಚೆ ಅಂಗ್ಡಿ ನರಸವ್ವನ ಹಂಗೆ ಆದ್ರೆ ಏನು ಮಾಡ್ತೀರಾ?’ +ಚೆನ್ನಿಗರಾಯರಿಗೆ ಉತ್ತರ ತಿಳಿಯಲಿಲ್ಲ. ಆದರೆ ಸಿಟ್ಟು ಮಾತ್ರ ಸ್ವಲ್ಪವೂ ಇಳಿದಿರಲಿಲ್ಲ. ಅಯ್ಯನವರೇ ಎಂದರು: ‘ನಿಮ್ಮ ಸ್ವಭಾವ ನೀವು ತಿಳ್ಕಳಿ. ನಿಮ್ಮ ಕೈಲಾಗುದ್ದು ಯಾಕೆ ಬೇಕು? ಸುಮ್ಕೆ ಸನ್ಯಾಸಿ ಹಂಗೆ ಇದ್ಬುಡಿ. ಇನ್ನೇನಾರಾ ಮಾಡಬೇಕಾಗಿದ್ರೆ ವಿಶ್ವಣ್ಣಂಗೆ ಮಾಡಿ. ಈಗ ಎಲ್ಲಿ, ಸಿವೇಗೌಡ್ರ ಮನೆಗೆ ಹ್ವಾಗಿದ್ರಾ? ಏನಂದ್ರು ಅವ್ರು?’ +‘ಅವನವ್ವನಾ, ಪೋಟಿಕೆ ದುಡ್ಡು ಏನೂ ಕೊಡುಲ್ಲ ಅಂದ.’ +ಅಯ್ಯನವರು ಮತ್ತೆ ಏನೂ ಕೇಳಲಿಲ್ಲ. ಪಟೇಲ ಶಿವೇಗೌಡನಿಗೆ ಈಗ ಹೆಚ್ಚು ಕಮ್ಮಿ ತಮ್ಮಷ್ಟೇ ವಯಸ್ಸು. ಸಿವಲಿಂಗೇಗೌಡ ಅವನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು. ಅವರಿಬ್ಬರಿಗೂ ಆಯಸ್ಸು ಕಡಿಮೆಯಾಗುವುದೇ ಇಲ್ಲ. ಪ್ರಪಂಚ ಹೀಗೆಯೇ ಇರ್ತೈತೇನೋ-ಎಂದು ಅವರು ಯೋಚಿಸತೊಡಗಿದರು. ಚೆನ್ನಿಗರಾಯರು ಅಯ್ಯನವರ ಚೀಲದಿಂದ ತೆಗೆದುಕೊಂಡು ಎಲೆ ಅಡಿಕೆ ಹೊಗೆಸೊಪ್ಪು ಅಗಿದು ತಾಯಿಯ ಮನೆಗೆ ಹೋದರು. +ಚೆನ್ನಿಗರಾಯರು ಮತ್ತೆ ಎಂಟು ದಿನ ಊರಿನಲ್ಲಿದ್ದರು. ಅಷ್ಟರಲ್ಲಿ ಉಳಿದಿದ್ದ ಒನ್ನೊಂದು ಹಸು, ಮನೆಯಲ್ಲಿದ್ದ ಪಾತ್ರೆ ಪಡಗಗಳನ್ನೆಲ್ಲ ಮಾರಿಹಾಕಿದರು. ನಂಜಮ್ಮನ ಓಲೆ ಮೂಗುಬಟ್ಟುಗಳನ್ನು ಕಾಶಿಂಬಡ್ಡಿಗೆ ಸೀಯ್ದರು. ಆಮೇಲೆ ಎರಡು ತಿಂಗಳು ಊರಿನಲ್ಲೇ ಇರಲಿಲ್ಲ. +ಜೀವನದಲ್ಲಿ ಏನುಂಟು? ಮಾದೇವಯ್ಯನವರಂತೆ ತಾವೂ ಸನ್ಯಾಸಿಯಾಗಿ ಇರಬೇಕೆಂದು ನಿಶ್ಚಯಿಸಿದ ಅವರು ಊರೂರು ಸುತ್ತಿಕೊಂಡು ಮಾಲೆಕಲ್ಲು ತಿರುಪತಿಗೆ ಹೋದರು. ಅರಸೀಕೆರೆಯಿಂದ ಕೊಂಡು ತಂದಿದ್ದ ಕಾವಿಬಣ್ಣದ ಪಂಚೆ ಶರಟುಗಳನ್ನು ಹಾಕಿಕೊಂಡು ತಿಮ್ಮಪ್ಪನ ಮುಂದೆ ಅಡ್ದಬಿದ್ದು, ಮನಸ್ಸಿನಲ್ಲೆ ಸನ್ಯಾಸ ಸ್ವೀಕಾರ ಮಾಡಿದರು. ಸಂಜೆಯ ವೇಳೆಗೆ ಹಸಿವಾಯಿತು. ಬೆಟ್ಟದಮೇಲೆ ಸನ್ಯಾಸಿಗೆ ಭಿಕ್ಷೆ ನೀಡುವ ಸಂಸಾರಿಗಳಿಲ್ಲ. ಬೆಟ್ಟವನ್ನಿಳಿದು ಹತ್ತಿರದ ಒಂದು ಹಲ್ಳಿಗೆ ಹೋಗಿ ಭಿಕ್ಷೆಮಾಡಿ ಅನ್ನ ಎಸರು ಮುದ್ದೆಗಳನ್ನು ಉಂಡರು. ಮಲಗಲು ಇವರು ಜಗುಲಿಯ ಮೇಲೆ ಜಾಗ ಕೇಳಿದ ಮನೆಯ ಗೌಡ ವೀಳ್ಯದೆಲೆ, ಅಡೆಕೆ, ಹೊಗೆಸೊಪ್ಪು ಕೊಟ್ಟ. ಸನ್ಯಾಸ ಕೆಟ್ಟದ್ದೇನೂ ಅಲ್ಲವೆನಿಸಿತು. +ಆದರೆ ಎರಡು ತಿಂಗಳಿನಲ್ಲಿ ಆ ಜೀವನ ಬೇಸರ ಬಂದುಬಿಟ್ಟಿತು. ಮೇಟಿಕುರಿಕೆ, ಕಣಕಟ್ಟೆ, ಹುಳಿಯಾರು, ಬೂದಾಳು ಸುತ್ತುಗಳಲ್ಲಿ ಎರಡು ತಿಂಗಳು ಸಂಚರಿಸಿ ಊರೂರಿನಲ್ಲಿ ಮಾಡಿದ ಅಡಿಗೆಯ ಭಿಕ್ಷೆ ಎತ್ತಿ ಉಣ್ಣುವುದರಲ್ಲಿ ಅವರಿಗೆ ಸಾಕಾಗಿಹೋಯಿತು. ದಿನಾ ಒಂದೊಂದು ಊರು ಸುತ್ತಬೇಕು. ಸನ್ಯಾಸಸ್ವೀಕಾರ ಮಾಡಿದಮೇಲೆ ಅವರು, ತಾವು ಬ್ರಾಹ್ಮಣರೆಂಬ ಮಡಿಯನ್ನು ಬಿಟ್ಟು ಎಲ್ಲ ಜಾತಿಯ ಮನೆಗಳಲ್ಲೂ ಉಣ್ಣುತ್ತಿದ್ದರು. ಕೆಲವು ಮನೆಗಳವರು-‘ಗೇಯ್ಕಂಡ್ ತಿನ್ನಕ್ ಆಗಾಕುಲ್ವೇನಯ್ಯ?’ ಎಂದು ಮುಖಕ್ಕೆ ಹೊಡೆದಂತೆ ಎಂದುಬಿಡುತ್ತಿದ್ದರು. +ಬೇಸತ್ತ ಅವರು ಒಂದು ದಿನ ಊರಿಗೆ ಹೋಗಬೇಕೆಂದು ನಿಶ್ಚಯಿಸಿದರು. ಆದರೆ ಊರಿನಲ್ಲಾದರೂ ಯಾರುಂಟು? ಏನುಂಟು? ಹೆಂದತಿ ಎನ್ನಿಸಿಕೊಂಡಿದ್ದ ‘ಆ ಮುಂಡೆ’ ಬದುಕಿದ್ದರೆ ಚನ್ನಾಗಿತ್ತು. ಯಾರಿಲ್ಲದಿದ್ರೂ ಬ್ಯಾಡ, ನಮ್ಮಮ್ಮ ನನ್ನ ಕೈಬಿಡುಲ್ಲ ಎಂದು ಯೋಚಿಸಿದ ಅವರು, ದಾರಿ ಕೇಖಿಕೊಂಡು ಹಾಲುಕುರಿಕೆಯ ಮಾರ್ಗವಾಗಿ ತಿಪಟೂರಿಗೆ ಬಂದು ಅಲ್ಲಿಂದ ಊರು ಮುಟ್ಟಿದರು. +ಗಂಗಮ್ಮ ಹನುಮಂತರಾಯನ ಗುಡಿಯಲ್ಲೆ ಇದ್ದಳು. ಈಗ ಅವಳೂ ಒಬ್ಬಳೇ ಹಳ್ಳಿಗಳಿಗೆ ಹೋಗಬೇಕು. ಅವಳು ತಿರಿಯಬಲ್ಲಳೇ ಹೊರತು ತಿರಿದುದನ್ನು ಹೊರಲಾರಳು. ತಾನು ಮೆಚ್ಚಿದ ಕಂದ ಅಪ್ಪಣ್ಣಯ್ಯ ಇನ್ನು ಹತ್ತಿರ ಬರುವಂತೆ ಕಾಣಿಸುವುದಿಲ್ಲ. ನನ್ನ ಅದೃಷ್ಟ ಕೆಟ್ಟದ್ದು, ಶನಿಮಾರಾಯ ಹೆಗಲೇರಿದಾನೆ-ಎಂದು ಕೊರಗುತ್ತಿದ್ದ ಅವಳ ಗುಡಿಯ ಮುಂದೆ ಒಂದು ದಿನ ಹಿರಿಯ ಮಗ ಶ್ಯಾಭೊಗ ಚೆನ್ನಿಗರಾಯ ಸನ್ಯಾಸಿ ವೇಷದಲ್ಲಿ ಬಂದುನಿಂತ. ಕೊಳೆಯಾದ ಕಾವಿ ಪಂಚೆ, ಇನ್ನೂ ಕೊಳೆಟ್ಟಿದ ಅಂಗಿ, ಮಾದೇವಯ್ಯನವರಂಥದೇ ವೇಷ. ಮಾದೇವಯ್ಯನವರು ತಲೆ ಗಡ್ಡಗಳನ್ನು ಶುಭ್ರವಾಗಿ ಬೋಳಿಸಿಕೊಳ್ಳುತ್ತಿದ್ದರು. ಆದರೆ ಅವಳ ಈ ಮಗನ ತಲೆ ಬೆಳೆದು ಇಳಿದಿದೆ. ಗಡ್ದ ಬಿಳಿಕಪ್ಪುಗಳ ನೊದೆಯಾಗಿದೆ. ಒಂದು ನಿಮಿಷ ಅವಳಿಗೆ ಗುರುತು ಸಿಕ್ಕಲಿಲ್ಲ. ಆಮೇಲೆ ಅವಳೇ-‘ಇದೇನೋ ಸೂಳೇಮಗನೆ ಹೀಗಾಗಿದೀಯಾ?’ ಎಂದು ಅಂತಃಕರಣ ತುಂಬಿಬಂದು ಕಣ್ಣೀರುಹಾಕಿದಳು. +ಇನ್ನೇನಿದೆಯಮ್ಮ ಜೀವನದಾಗೆ? ಯಾರಿದಾರೆ ನಂಗೆ? ಅದ್ಕೇ ಯಾವ್ದೂ ಬ್ಯಾಡ ಅಂತ ಸನ್ಯಾಸಿಯಾಗ್ಬಿಟ್ಟೆ.’ +‘ಥೂಮುಂಡೇಮಗನೆ, ಬಿಡ್ತು ಅನ್ನೋ. ನಾನೇನ್ ಸತ್ಹೋಗಿದೀನೇನೋ? ಯಾರಾದ್ರೂ ನೋಡಿಯಾರು. ಒಳಕ್ಕೆ ಬಾ. ಆ ಕಾವಿಶಾಟಿ ಕಿತ್‌ಹಾಕಿ ಬ್ಯಾರೆಪಂಚೆ ಸುತ್ಕ. ನಾಳೆ ದಿನ ರುದ್ರಣ್ಣನ ಕರೆಸಿ ಚೌರ ಮಾಡಿಸ್ಕಳೂವಂತೆ.’ +ಚೆನ್ನಿಗರಾಯರು ಸನ್ಯಾಸವನ್ನು ತ್ಯಜಿಸಿದರು. +ತಾಯಿ ಮಗ ಒಂದಾದರು. ಇವರಿಗೆ ಅಪ್ಪಣ್ಣಯ್ಯನಂತೆ ದೊಡ್ದ ಹೊರೆ ಹೊರುವ ಅಭ್ಯಾಸವಿಲ್ಲ. ಆದರೂ ತಾಯಿಗೆ ಒಂದು ಆಸರೆ ಸಿಕ್ಕಿತು. ಅವಳು ಹಳ್ಳಿಗಳಿಗೆ ಮನೆಮನೆಗೆ ಹೋಗಿ ದೇಶಾವರಿ ಮಾಡುವಾಗ ಇವರು ಯಾರ ಮನೆಯ ಜಗುಲಿಯ ಮೇಲಾದರೂ ವೀಳ್ಯದೆಲೆ ಹೊಗೆಸೊಪ್ಪು ಹಾಕಿ ಬಾಯಿತುಂಬ ತಂಬುಲದ ರಸವನ್ನು ಆನಂದಿಸುತ್ತಿದ್ದರು. +ಹೇಗೂ ನಂಜಮ್ಮ ಕಟ್ಟಿದ್ದ ಮನೆಯಿತ್ತು. ಗುಡಿಯಲ್ಲಿದ್ದರೆ ದಿನಾ ಪೂಜೆ ಮಾಡಬೆಕು. ಪೌಳಿಯನ್ನೂ ಸೇರಿಸಿ ಗುಡಿಸಿ ತೊಳೆದು ಶುಭ್ರವಾಗಿಡಬೇಕು. ಆದುದರಿಂದ ತಾಯಿ ಮಗ ಇಬ್ಬರೂ ಸೇರಿ ಹೊಸ ಮನೆಗೆ ಕೆಮ್ಮಣ್ಣು ಗಾಜು ಮಾಡಿಸಿ ಬಾಗಿಲಿಗೆ ಕದ, ಚಿಲಕ, ಹಾಕಿಸಿದರು. ಒಂದು ದಿನ ಗಂಗಮ್ಮನೇ ಹೊಸಮನೆಯ ಒಳಗಡೆ ಹಾಲು ಉಕ್ಕಿಸಿದಳು. ಜೋಯಿಸದ್ವಯರನ್ನು ಕರೆಸಿ. ‘ಸ್ವಸೆ ಸತ್ತು ವರ್ಷ ತುಂಬಿಲ್ಲ. ಹ್ವಸಮನೆಗೆ ಹೋಗೂ ಸಾಸ್ತ್ರ ಮಾಡೂಹಾಗಿಲ್ಲ. ಇದ ಒಪ್ಕಾಬೇಕು. ನಾನು ಬಡಮುಂಡೆ’-ಎಂದು ಪಾಯಸದ ಅಡಿಗೆ ಮಾಡಿ ಹಾಕಿ, ತಲಾ ಎರಡೆರಡು ರೂಪಾಯಿ ದಕ್ಷಿಣೆ ಕೊಟ್ಟು ಅಡ್ಡಬಿದ್ದಳು. +ಇದುವರೆಗೂ ನಂಜಮ್ಮ ವಾಸವಾಗಿದ್ದ ಗುಂಡೇಗೌಡರ ಮನೆಯಲ್ಲಿ ಯಾರೂ ಇಲ್ಲ. ರಾಮಸಂದ್ರದ ಕುರುಬರಹಟ್ಟಿ ಮುದ್ದಯ್ಯ ಗುಂಡೇಗೌಡರ ನೆಂಟ. ತಾನು ಉಪಯೋಗಿಸುವುದಾಗಿ ಗುಂಡೇಗೌಡರ ಮಗನಿಗೆ ಹೇಳಿ ಮನೆಯ ಬೀಗದ ಕೈ ತಂದ. ಆದರೆ ಸಾಲಾಗಿ ಮೂರು ಜನರನ್ನು ಮಾರಿ ಆಹುತಿ ತೆಗೆದುಕೊಂಡ ಆ ಮನೆಗೆ ಬರಲು ಶಂಕೆಯಾಗಿ, ಸರಿಯಾದ ಜೋಯಿಸರಿಂದ ಕಾವು ಕಟ್ಟಳೆ ಮಾಡಿಸುವ ತನಕ ತನ್ನ ಹಳೇ ಮುರುಕಲು ಮನೆಯಲ್ಲೇ ಇರಲು ನಿಶ್ಚಯಿಸಿ, ಆ ಮನೆಗೆ ಬೀಗ ಹಾಕಿಕೊಂಡ. +ಅಧ್ಯಾಯ ೧೬ +– ೧ – +ಮಾದೇವಯ್ಯನವರು ಈ ಊರಿಗೆ ಬಂದು ನಲವತ್ತೈದು ವರ್ಷದಮೇಲೆ ಆಗಿದೆ. ಯಾರ ಪರಿಚಯವೂ ಬೇಡ., ಯಾರ ಸ್ನೇಹವೂ ಬೇಡ ಎಂಬ ರೀತಿಯಲ್ಲಿ ಅವರು ಇಲ್ಲಿ ತಮ್ಮ ಜೀವನವನ್ನು ಪ್ರಾರಂಭಿಸಿದ್ದರು. ಆದರೆ ದಿನ ಕಳೆದಂತೆ ಹತ್ತು ಜನರ ಪರಿಚಯವಾಯಿತು; ಸುತ್ತ ಎಷ್ಟೋ ಹಲ್ಳಿಗಳ ಹುರುತಾಯಿತು. ಯಾರ ತಂಟೆಗೂ ಹೋಗದೆ, ಯಾರೊಡನೆಯೂ ಅಂಟದೆ ಇರುತ್ತಿದ್ದ ಅವರಿಗೆ ಇಲ್ಲಿ ಬೇಸರವಾಗುವ ಕಾರಣವಿರಲಿಲ್ಲ. ಯಾವ ಊರಿನಲ್ಲಿದ್ದರೂ ಕಹಿ ಅನುಭವವಾಗುವ ಪ್ರಸಂಗ ಹುಟ್ಟಬೇಲಿರಲಿಲ್ಲ. ಅಂದರೂ ಒಂದು ಸಲ ಬೇಸರವಾಗಿ ಈ ಊರು ಬಿಟ್ಟು ಕಾಶಿಗೆ ಹೊರಟುಹೋಗಿದ್ದರು. ಎಷ್ಟೇ ಪುಣ್ಯನಗರಿಯಾದರೂ ಅದು ಹೊಂದದೆ ಮತ್ತೆ ಈ ಊರಿಗೆ ಬಂದರು. ಮತ್ತೆ ಯಾಕೆ ಹಿಂತಿರುಗಿದೆ, ಅಲ್ಲಿ ಇಲ್ಲದ್ದು ಈ ಊರಿನಲ್ಲಿ ಏನಿತ್ತು ಎಂದು ಅವರು ಎಷ್ಟೋ ಸಲ ತಮ್ಮಲ್ಲಿಯೇ ಯೋಚಿಸಿದ್ದುಂಟು. ಹವ ಹಿಡಿಯಲಿಲ್ಲವೆಂಬುದು ನಿಜವಾದರೂ ಅದೊಂದೇ ಕಾರಣದಿಂದ ಅವರು ಕಾಶಿಯನ್ನು ಬಿಡಲಿಲ್ಲ. ಅಲ್ಲಿಯ ಭಾಷೆ ಹಿಂದಿ ಅವರಿಗೆ ಗೊತ್ತಿದ್ದುದೇ. ಜಂಗಮವಾಡಿ ಮಠದಲ್ಲಿ ಊಟ ವಸತಿ ಎಲ್ಲದಕ್ಕೂ ಅನುಕೂಲವಾಗಿತ್ತು. ಇಪ್ಪತ್ತನಾಲ್ಕು ಗಂಟೆ ಬೇಕಾದರೂ ಭಜನೆ ಮಾಡಲು, ಭಜನೆ ಕೇಳಲು ಕಾಶಿಗಿಂತ ಅನುಕೂಲವಾದ ಬೇರೆ ಯಾವ ಊರೂ ಇಲ್ಲ. ಆದರೂ ಮತ್ತೆ ರಾಮಸಂದ್ರಕ್ಕೆ ಹೋಗಬೇಕೆಂಬ ಆಶೆ ಹುಟ್ಟಿತು. ಹಲವು ವರ್ಷಗಳಿಂದ ಕಳೆದ ಆ ಊರಿನ ಗುಡಿ, ಬೀದಿ, ಕೆರೆ, ಏರಿ, ಸುತ್ತಣ ಹಳ್ಳಿಗಳು ಅವರ ಚಿತ್ತವನ್ನು ಎಳೆದುವೋ, ಅಥವಾ ಆ ಊರಿನ ಜನರು ಅವರ ನೆನಪನ್ನು ಆಕ್ರಮಿಸಿದರೋ ಅವರಿಗೇ ತಿಳಿಯಲಿಲ್ಲ. ಅಂತೂ ಹಿಂತಿರುಗಿ ಬಂದರು. +ಬಂದಮೆಲೆ ಇಲ್ಲಿಗೇ ಒಗ್ಗಿಹೋಗಿದ್ದರು. ಸುತ್ತ ಊರಿನಲ್ಲಿ ಭಿಕ್ಷೆ ಮಾಡುವುದು, ಹಲ ಕೆಲವರಿಗೆ ತಮ್ಮ ಕೈಲಾದ ಸಹಾಯ ಮಾಡುವುದು, ಭಜನೆ ಇಷ್ಟರಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಇತ್ತೀಚೆಗೆ ಹೊತ್ತು ಹೋಗುವುದೇ ಕಷ್ಟವಾಗಿದೆ. ಇಲ್ಲಿ ತನಗೆ ಯಾರೂ ಇಲ್ಲವೆಂಬ ಭಾವನೆ ಆಕ್ರಮಿಸಿಬಿಟ್ಟಿದೆ. ಹೇಳಿ ಕೇಳಿ ನಾನೊಬ್ಬ ಸನ್ಯಾಸಿ. ಮೊದಲುತಾನೆ ಯಾರಿದ್ದರು? ಈಗ ಯಾರು ಇರಬೇಕು?-ಎಂದು ತಮ್ಮನ್ನು ತಾವೇ ಕೇಳಿಕೊಂಡರೂ ಮನಸ್ಸಿನ ಒಂಟಿತನ ಮಾತ್ರ ಹೋಗಲಿಲ್ಲ. ಯಾವ ಅಂಟೂ ಇಲ್ಲದ ಮೆಲೆ ಈ ಊರಿನಾಗೇ ಇರಬೇಕು ಅಂತ ಏನು?-ಎಂಬ ಯೋಚನೆ ಬಂತು. ಕೆಲವು ದಿನದಿಂದ ಅದೇ ಬಲವಾಗಿಬಿಟ್ಟಿದೆ. ಈ ಊರು ಬ್ಯಾಡ, ತಿಪಟೂರಿಗೋ, ತುಮಕೂರಿಗೋ ಮತ್ತೆ ಎಲ್ಲಿಗೋ ಹ್ವಾಗಿಬಿಡಾದು-ಎಂಬ ತೀರ್ಮಾನ ಹೆಚ್ಚು ಕಡಿಮೆ ಮನಸ್ಸಿನಲ್ಲಿ ನಿಂತಿದೆ. +ಹೀಗೆ ಯೋಚಿಸುತ್ತಿರುವಾಗ ಒಂದು ದಿನ ಅಪ್ಪಣ್ಣಯ್ಯ ಬಂದ. ಅವನಿಗೂ ಈ ಊರಿನಲ್ಲಿ ಯಾರೂ ಇರಲಿಲ್ಲ. ಅತ್ತಿಗೆ ಸತ್ತಮೇಲೆ ಈ +ಊರೇ ಬಿಕೋ ಎನಿಸುತ್ತಿತ್ತು. ಆದುದರಿಂದ ಇಷ್ಟು ದಿನ ಒಬ್ಬನೇ ನಾಲೆಬಯಲಿನಲ್ಲಿ ಯಾಚನೆ ಮಾಡುತ್ತಿದ್ದ. ಈಗ ಬರುವಾಗ ಒಂದೂವರೆ ಪಲ್ಲ ಅಕ್ಕಿ, ಇಪ್ಪತ್ತು ಸೇರು ತೊಗರೀಬೇಳೆ, ಒಂದುಧಡಿಯದಷ್ಟು ಮೆಣಸಿನಕಾಯಿ, ಮಸಾಲೆಪುಡಿಗಳನ್ನು ತಂದಿದ್ದಾನೆ. ಎಲ್ಲವನ್ನೂ ಬೀರೇಗೌಡನ ದೊಡ್ಡಿಯ ಜಗುಲಿಯ ಕೋಣೆಯಲ್ಲಿ ಇಟ್ಟುಕೊಂಡು ದಿನಾ ತಾನೊಬ್ಬನೇ ಅಡಿಗೆ ಮಾಡಿಕೊಳ್ಳುತ್ತಾನೆ. ಊರಿನಲ್ಲಿ ಅವನಿಗೆ ಅಯ್ಯನವರನ್ನು ಬಿಟ್ತರೆ ಮತ್ತೆ ಯಾರೂ ಆಪ್ತರಿಲ್ಲ. ಅಟ್ಟು ಉಂಡಮೇಲೆ ಹೊತ್ತುಕಳೆಯಲು ಅವರ ಗುಡುಗೆ ಬಂದು ಕೂರುತ್ತಾನೆ. ಯಾವುದಾದರೂ ಮಾತು ಶುರುಮಾಡಿದರೆ ಅದು ಅತ್ತಿಗೆಯ ವಿಷಯಕ್ಕೆ ತಿರುಗುತ್ತದೆ. ‘ಈ ನನ್‌ಮಗ ಅವ್ರುನ್ನ ಗೋಳುಹುಯ್ಕಂಡು ತಿಂದ್‌ಬಿಟ್ಟ ಕಣ್ರಿ’-ಎಂಬ ಮಾತನ್ನೇ ಅವನು ಮತ್ತೆ ಮತ್ತೆ ಆಡುತ್ತಾನೆ. +ಒಂದು ದಿನ ಅಯ್ಯನವರು ಎಂದರು: ‘ಹಿಂದೆ ಆದದ್ದು ಆಯ್ತು. ಈಗ್ಲೂ ನೀವು ಅಣ್ನ ತಮ್ಮ ತಾಯಿ ಒಟ್ಟಿಗಿರ್ರಪ್ಪ.’ +‘ಥೂ ಅವ್ಳ ಮನೆತನ ಹಾಳಾಗ. ಆ ಮುಂಡೆ ಜೊತೆ ಇರ್ತೀನೇನ್ರೀ ನಾನು? ನಾನು ಗಂಡಸು ಕಣ್ರೀ. ನಾಲೇಬಯಲಾಗೆ ಒಂದೂವರೆ ಪಲ್ಲ ಬಿಳಿ ಅಕ್ಕಿ ಸಂಪಾದನೆ ಮಾಡ್ಕಂಡ್ ಬಂದಿದೀನಿ. ನೋಡ್ ಬನ್ರಿ ಬೇಕಾದ್ರೆ.’ +ಅಯ್ಯನವರು ಸುಮ್ಮನಾದರು. ಅಪ್ಪಣ್ಣಯ್ಯ ಒಟ್ಟು ಇಪ್ಪತ್ತು ದಿನ ಊರಿನಲ್ಲಿದ್ದ. ಒಂದು ದಿನವೂ ಅವ್ವ ಅಣ್ಣನ ಹತ್ತಿರ ಹೋಗಲಿಲ್ಲ. ಅವರ ಮಾತೆತ್ತಿದರೆ ಕಿಡಿಕಿಡಿಯಾಗುತ್ತಿದ್ದ. ಅವನಿಗೆ ಈ ಊರೇ ಬೇಸರವಾಗುತ್ತಿತ್ತು. ಸುಮ್ಮನೆ ಕೂತು ಏನು ಮಾಡುವುದು? ಸುತ್ತಣ ಹಳ್ಳಿಗಳಲ್ಲೆಲ್ಲ ಅವ್ವ ಅಣ್ಣ ಯಾಚನೆ ಮಾಡಿರುತ್ತಾರೆ. ಮತ್ತೆ ತಾನೂ ಹೋದರೆ ಜನರು ಎರಡೆರಡು ಸಲ ಕೊಡುವುದಿಲ್ಲ. ಒಂದು ದಿನ ಬೀರೇಗೌಡನ ಜಚುಲಿಯ ತನ್ನ ಕೋಣೆಗೆ ಬೀಗ ಹಾಕಿ ನಾಲೆಬತಲಿನ ಕಡೆಗೆ ಮತ್ತೆ ಹೋದ. +ಅಪ್ಪಣ್ಣಯ್ಯ ಹೋದ ರಾತ್ರಿ ಅಯ್ಯನವರಿಗೆ ನಂಜಮ್ಮನ ಸಂಸಾರದ ನೆನಪೇ ಆಗುತ್ತಿತ್ತು. ಚಿಕ್ಕ ವಯಸ್ಸಿನ ಅವಳು ಸೊಸೆಯಾಗಿ ಇ ಊರಿಗೆ ಬಂದದ್ದು, ಅತ್ತೆ ಮನೆಯ ಗೋಳು, ಅವಳ ಮಕ್ಕಳು, ಬೇರೆ ಸಂಸಾರ ಹೂಡಿದ್ದು, ಮಕ್ಕಳನ್ನು ಸಾಕಿ ಬೆಳೆಸಿ, ಮಗನಿಗೆ ಮುಂಜಿ ಮಗಳಿಗೆ ಮದುವೆ ಮಾಡಿದ್ದು, ಮಕ್ಕಳಿಬ್ಬರ ಸಾವು, ಕೊನೆಗೆ ನಂಜಮ್ಮನ ಸಾವು, ಇವೆಲ್ಲ ಒಂದೇ ಬಾರಿಗೆ ನಾಟಕದಲ್ಲಿ ನಡೆದಂತೆ ನೆನಪಿನಲ್ಲಿ ಬಂದುಹೋದುವು. ತಾವು ಆ ಸಂಸಾರದೊಡನೆ ಎಷ್ಟು ಮಟ್ಟಿಗೆ ಅಂಟಿಕೊಂಡಿದ್ದರೆಂಬ ಅರಿವು ಈಗ ಅವರಿಗೆ ಉಂಟಾಯಿತು. ಆ ಯಮ್ಮನ ಸಂಸಾರ ಹೀಗಾಯ್ತು!- ಎಂದು ನಿಟ್ಟುಸಿರಿಡುತ್ತಿರುವಾಗ ಮನಸ್ಸು, ಆ ಸಂಸಾರದ ಒಂದು ಬಳ್ಳಿಯಾಗಿ ಉಳಿದಿರುವ ವಿಶ್ವನನ್ನು ನೆನಸಿಕೊಂಡಿತು. ಅವನು ಅವರ ತೊಡೆಯಮೇಲೆ ಕೂತು ಅವರ ಕಂತೆಭಿಕ್ಷೆಯ ಮುದ್ದೆ ತಿಂದು ಅವರಿಗೆ ಅಂಟಿಕೊಂಡಿದ್ದ. ಬಲೇ ಚುರುಕು ಹುಡುಗ. ಹುಲಿಯಂಥಾ ಗುಂಡಿಗೆ, ಮುಂದೆ ಓದಿದರೆ ಜಾಣನಾಗುತ್ತಾನೆ. ಅವನನ್ನು ಓದಿಸಬೇಕು ಅಂತ ನಂಜವ್ವ ಹಲುಬುತ್ತಿತ್ತು. ಮಾವನ ಮನೆಯಾಗೆ ಹೆಂಗೆ ಓದ್‌ತೈತೋ ಏನೋ! ತುಂಟತನ ಕಮ್ಮಿಯಾಗಿರ್‌ಬೈದು. ಅತ್ತೆ ಮಾವುಂಗೆ ಮಕ್ಳಿಲ್ಲ. ಆದ್ರೂ ಅವ್ರು ಹ್ಯಂಗೆ ನೋಡ್ಕತ್ತವ್ರೋ? +ತಾವು ಈ ಊರು ಬಿಡುವ ಮೊದಲು ಒಂದು ಸಲ ನಾಗಲಾಪುರಕ್ಕೆ ಹೋಗಿ ಹುಡುಗನನ್ನು ನೋಡಿಕೊಂಡು ಬರಬೇಕೆಂದು ಅವರು ನಿಶ್ಚಯಿಸಿದರು. +– ೨- +ಅದಾದ ಎರಡನೆಯ ದಿನ ಮಧ್ಯಾಹ್ನ ಉಂಡಮೇಲೆ ಅವರು ಗುಡಿಯ ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ತೀಡುತ್ತಿದ್ದರು. ನರಸಿ ಅವರನ್ನೇ ಹುಡುಕಿಕೊಂಡಂತೆ ಬಂದು ಜಗಿಲಿಯಮೇಲೆ ಕೂತಳು. ಅವಳ ಮುಖದಲ್ಲಿ ವ್ಯಸನ ಕಾಣುತ್ತಿತ್ತು. +‘ಏನವ್ವಾ, ಏಳೆಂಟು ದಿನದಿಂದ ಊರಾಗಿರ್ನಿಲ್ಲ. ಎಲ್ಲಿಗ್ಹೋಗಿದ್ದೆ?’ +‘ನಮ್ಮ ನಂಟ್ರ ಮನ್ಗೆ ಸಾಂತಿಗ್ರಾಮಕ್ಕೆ ಹ್ವಾಗಿದ್ದೆ ಕಣ್ರಯ್ಯಾ.’ +‘ಇದ್ಯಾಕ್ ಮಂಕಾಗಿದೀಯಾ?’ +‘ಏನ್ ಏಳಾನ್ರೀ. ನ್ಯೆನ್ನೆ ಗಾಡೀಲಿ ನಾಗಲಾಪುರದ ಕೆರೆ ಏರಿ ಮ್ಯಾಲೆ ಬತ್ತಿದ್ದೆ. ವಿಸ್ವಪ್ಪ ಸಿಕ್ತು. ಅದ ಕಂಡು ಅಳಾ ಬಂದ್‌ಬುಡ್ತು.’ +ಅಯ್ಯನವರಿಗೂ ತಕ್ಷಣ ಆ ಸ್ಥೆ ಹುಟ್ಟಿತು: ‘ಹೆಂಗೈತಿ ಮಗಾ?’ +‘ಹೆಂಗೈತಾ? ಬಾಲೆಕಂಬದ ಹಂಗಿದ್ದ ಉಡ್ಗ ಈಗ ಒಣಕಲ ಹರಳಕಡ್ಡಿಯಾಗೈತೆ ಕಣ್ರೀ. ಕ್ರೇಲಿ ನೀರು ಕುಂಡೊಯ್ಯಕ್ಕೆ ಅಂತ ಒಂದು ಬಿಂದ್ಗೆ ತಗಂಡು ಬಂದಿತ್ತು. ಗಾಡೀಮ್ಯಾಲೆ ನನ್ನ ನೋಡಿ ಅದೇ ಗುರುತು ಇಡೀತು. ನಂಗೆ ಅದರ ಗುರ್ತೇ ಸಿಕ್‌ನಿಲ್ಲ, ಹಂಗಾಗೈತೆ. ನಾನು ಗಾಡಿ ನಿಲ್ಸಿ ಕ್ಯಳಿಕ್ಕೆ ಇಳ್ದೆ. ಹ್ಯಂಗಿದೀಯಾ ಮಗಾ ಅಂದೆ. ಸುಮ್ನೆ ಅಳಾಕೆ ಶುರುಮಾಡಿಬಿಡ್ತು. ಏನ್ಮಾಡಿದ್ರೂ ಸುಮ್ಕಾಗ್ನಿಲ್ಲ. ನನ್ನೂ ಊರಿಗೆ ಕರ್ಕಂಡ್ ಹೋಯ್ತೀಯಾ?- ಅಂತ ಕೇಳ್ತು. ನಾನು ಹ್ಯಂಗೆ ಕರ್ಕಂಡ್ ಬರ್ಲಿ ನೀವೇ ಏಳ್ರಿ. ಇನ್ನೂ ತುಂಬ ಏಳ್ತು. ತಡವಾಗಿ ಓದ್ರೆ ಮನ್ಲಿ ಅತ್ತೆ ಹ್ವಡೀತಾಳೆ ಅಂತ ನೀರು ತುಂಬ್ಕಂಡಿ ಹ್ವಂಟೋಯ್ತು. ಓಟು ಚಿಕ್ಕ ಉಡುಗನ ಕುಟ್ಟಿ ಬಿಂದಿಗೇ ಕೊಟ್ಟು ಕಳಿದ್ಲಲಾ ಆ ಕಟುಕಮುಂಡೆ, ಏನಂತೀರ್ರೀ?’ +‘ನೀನು ಊರೊಳಿಕ್ ಹ್ವಾಗಿ ಕಲ್ಲೇಶದೋಸ್ರುನ್ನ ಕೇಳ್ನಿಲ್ವಾ? ನಿಂಗ್ ಅವ್ರ ಗುರುತಿಲ್ವಾ?’ +“ಉಡುಗ ಹ್ವಂಟೋಯ್ತು. ನಾನು ಗಾಡಿ ಅಲ್ಲೇ ಕೊಳ್ಳು ಇಳಿಕ್ಸು ಅಂತ ಏಳಿದೆ. ಅಲ್ಲೇ ಒಬ್ಬ ಎಂಗ್ಸು ಶಾಲೆ ವಗೀತಿದ್ರು. ಅವ್ರ್ ತಾವುಕ್ ಹ್ವಾಗಿ-‘ಅವ್ವಾ, ನಂದು ರಾಮಸಂದ್ರ. ಈ ಉಡ್ಗ ನಮ್ಮೂರಿಂದು. ಇದುನ್ನ ಕಲ್ಲೇಸಪ್ಪಾರು ಹ್ಯಂಗೆ ಮಡೀಕಂಡವ್ರೇ?’ ಅಂತ ಕೇಳ್ದೆ. ಆ ಯಮ್ಮ ಯಲ್ಲಾನೂ ಏಳ್ತು. ಕಲ್ಲೇಸಪ್ಪಾರು ಮನೇ ತಾವ್ಳೇಯಂತೆ ಆ ಯಮ್ಮನ ಮನೆಯೂ. ಮನೆ ಚಾಕರಿ ಎಲ್ಲ ಆ ಉಡುಗುಂದೇಯಂತೆ. ಅವ್ಳು ಅಕ್ಕಿರೊಟ್ಟಿ ತಿಂತಾಳಂತೆ. ಉಡುಗುಂಗೆ ರಾಗಿರೊಟ್ಟಿಯಂತೆ. ಅದ್ನೂ ಕ್ವಟ್ರೆ ಕ್ವಟ್ಳು, ಇಲ್ದೆ ಇದ್ರೆ ಬಿಟ್ಳು. ಅವಳ ಶಾಲೇನೂ ಅದೇ ವಗೀಬೇಕಂತೆ. ಸೌಟು ತಗಂಡಿ ನೆತ್ತಿಮ್ಯಾಲೆ ಹ್ವಡೀತಾಳಂತೆ.” +‘ಕಲ್ಲೆಶದೋಸ್ರು ಸುಮ್ನೆ ಇರ್ತಾರಂತಾ?’ +‘ಆ ವಯ್ಯ ತಿಕ್‌ಲಪ್ಪ ಕಣ್ರೀ. ಕುಶಿ ಅತ್ತಿದ್ರೆ ಉಡುಗನ್ನ ಸಂತಿಗೆ ಕರ್ಕಂಡ್ ಹ್ವಾಗಿ ಮಿಟಾಯಿ ಗಿಟಾಯಿ ಕೊಡುಸ್ತಾರಂತೆ. ಸಿಟ್ಟು ಬಂದ್ರೆ ಹ್ವಳಕೆ ತಗಂಡ್ ಬಡೀತಾರಂತೆ. ವಳಗಡೆ ಅವ್ಳು ಎಂಗ್ಸು ಏನೇನು ಮಾಡ್ತಾಳೆ ಅಂತ ಗಂಡ್ಸಿಗೆ ಯಲ್ಲಾ ಹ್ಯಂಗೆ ಗೊತ್ತಾಗ್ಬೇಕು?’ +ಅಯ್ಯನವರು ಮತ್ತೆ ಏನೂ ಕೇಳಲಿಲ್ಲ. ತಾಯಿ ಸತ್ತ ತಬ್ಬಲಿ ಹುಡುಗ ವಿಶ್ವ ಪೂರ್ತಿ ಸುಖವಾಗಿದೆ ಎಂದು ಅವರೇನೂ ಭ್ರಮಿಸಿರಲಿಲ್ಲ. ಆದರೆ ಅದು ಈ ಮಟ್ಟಿಗೆ ಗೋಳುಗುಟ್ತುತಿದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ಕಲ್ಲೇಶಜೋಯಿಸರ ಹೆಂಡತಿ ಕೆಟ್ಟ ಹೆಂಗಸೆಂಬುದನ್ನು ಅವರು ಸಾಕಷ್ಟು ಕೇಳಿದ್ದರು. ಆದರೆ ತಂಗಿಯ ಮಗನ ವಿಷಯದಲ್ಲಿ ಸೋದರಮಾವನಾದವನು ಹೆಚ್ಚು ನಿಗಾ ತೆಗೆದುಕೊಳ್ಳಬೇಕಾಗಿತ್ತು. ಬುದ್ಧಿ ಸಮವಾಗಿದ್ದರೆ ತಾನೇ ನಿಗಾ ಸಮವಾಗಿರ್ತೈತಿ?-ಎಂದು ಯೋಚಿಸುತ್ತಿದ್ದರು. ನರಸಿಯೂ ಏನೋ ತನ್ನಲ್ಲಿಯೇ ಯೋಚಿಸುತ್ತಿದ್ದು ಕೇಳಿದಳು: ‘ಅಯ್ನೋರೇ, ನಾನೊಂದ್ ಮಾತು ಏಳ್ತೀನಿ ಕೇಳ್ತೀರಾ?’ +‘ಏನ್ ಏಳು.’ +“ದೇವ್ರು ನನ್ನ ಹ್ವಟ್ಟೇಲಿ ಮಕ್ಳು ಕೊಡ್ನಿಲ್ಲ. ಆ ಉಡುಗುನ್ನ ಕರ್ಕಂಡ್ ಬಂದು ನಂಗ್ ಕೊಟ್‌ಬುಡಿ. ಮಗ ಅಂತ ತಿಳ್ಕಂಡ್ ಸಾಕ್ಯತ್ತೀನಿ. ನನ್ನ ಅಂಗ್ಡಿ, ನನ್ನ ದುಡ್ದು, ಯಲ್ಲ ಅದುಕ್ಕೇ ಆಯ್ತದೆ. ಜೀವ ಹ್ವಾಗ್ತಾ ಇದ್ದ ಉಡ್‌ಗ. ನನ್ನ ತ್ವಡೆ ಮ್ಯಾಲೆ ನನಿಕ್ಕಂಡು ಬದುಕಂಡ್ತು. ಅದರ ಅವ್ವನೇ, ‘ನರಸಮ್ಮ, ಇದು ನನ್ನ ಮಗುವಲ್ಲ, ನಿಂದು. ನೀನೇ ಸಾಕ್ಕ’ ಅಂತ ಏಳಿದ್ರು. ನೀವು ನಾಗಲಾಪುರಕ್ಕೆ ಓಗಿ ಕರ್ಕಂಡ್ ಬಲ್ಲಿ. ಅದ್ರ ಒಂದು ಕೂದ್ಲು ನಲುಗದ್ಹಂಗೆ ಸಾಕ್ತೀನಿ.” +ಇದೇ ಮಾತನ್ನು ಮತ್ತೆ ಹೇಳಿ-‘ಯೇಚ್ನೆ ಮಾಡಿ’ ಎಂದು ಪುನಃ ಜ್ಞಾಪಿಸಿ ನರಸಿ ಎದ್ದುಹೋದಳು. +ಅಯ್ಯನವರ ಮನಸ್ಸು ಯೋಚಿಸಲು ಪ್ರಾರಂಭಿಸಿತು. ಆ ರಾತ್ರಿ ಎಲ್ಲ ಅವರಿಗೆ ನಿದ್ರೆ ಬರಲಿಲ್ಲ. ನಂಜಮ್ಮನದೇ ನೆನಪು. ಅವಳಿಗೆ ಗೆಡ್ಡೆ ಕಾಣಿಸಿಕೊಂಡ ನಡುರಾತ್ರಿ, ಇವರು ಬೇಡವೆಂದರೂ, ಮನಸ್ಸಿನಲ್ಲಿ ಇದ್ದುದನ್ನೆಲ್ಲ ಮಾತನಾಡಿದ್ದಳು: ‘ಪಾರ್ವತಿ ರಾಮಣ್ಣ ಸತ್ತಾಗ ಗೋಪಿಯ ಕಥೆ ನೀವು ಹೇಳಿದಿರಿ. ಮಗು ಸತ್ತಾಗ ಜೀವಕೊಡುಕ್ಕೆ ಹೆದರಿ ಗೋಪಿ ದಡದಲ್ಲೇ ನಿಂತಳು. ಅದೇ ರಾತ್ರಿ ನಾನು ಸ್ಮಶಾನದ ಭಾವಿ ಬೀಳೂಕೆ ಹೋಗಿದ್ದೆ. ಧೈರ್ಯವಾಗಿ ನೀರಿಗೆ ಧುಮುಕ್ತಿದ್ದೆ. ವಿಶ್ವನ ಗತಿ ಏನು ಅಂತ ಯೋಚನೆ ಮಾಡಿ ವಾಪಸ್ ಬಂದೆ. ಈಗ ನಾನೇ ಸಾಯ್ತೀನಿ. ವಿಶ್ವನಿಗೆ ಯಾರು ಗತಿ? ಅಕ್ಕಮ್ಮ ಒಂದಿಷ್ಟು ಹಿಟ್ಟು ಬೇಯ್ಸಿ ಹಾಕ್ತಾಳೆ. ನಮ್ಮಣ್ಣಯ್ಯನ ಮೇಲೆ ನನಗೆ ನಂಬಿಕೆ ಇಲ್ಲ. ಹುಡುಗನ ಹಿಟ್ಟು ಮುಖ್ಯವಲ್ಲ. ಅವ್ನು ಬುದ್ಧಿವಂತನಾಗಬ್ಯಾಡ್‌ವೆ?’ +ಅವಳ ಎಲ್ಲ ಮಾತುಗಳೂ ಅವರ ನೆನಪಿಗೆ ಬಂದುವು. ಅಕ್ಕಮ್ಮ ಬದುಕಿದ್ದರೆ ಹುಡುಗನ ಹಿಟ್ಟಿಗೆ ಕಷ್ಟವಾಗುತ್ತಿರಲಿಲ್ಲ. ಮನೆಯಲ್ಲಿ ಅತ್ತೆ, ಹಾಗೆ ಗೋಳುಹುಯ್ದುಕೊಳ್ಳುತ್ತಲೂ ಇರಲಿಲ್ಲ. ಆದರೆ ಮೊಮ್ಮಗಳ ಜೊತೆಗೆ ಅದೇ ತೀರಿಕೊಂಡಿತು. ‘ಹುಡುಗನ್ನ ಮಾವನ ಕೂಡ ಕಳ್ಸೂವಾಗ ನಂಗೆ ಇದರ ಯೇಚ್ನೆಯೇ ಬರ್ಲಿಲ್ವಲ? ನನ್ನ ತಲೇಲಿ ಬಿದ್ಧಿಯೇ ಇಲ್ಲ’-ಎಂದು ಅವರು ತಮ್ಮನ್ನು ತಾವೇ ಹಳಿದುಕೊಂಡರು. ಈಗ ಮಾಡುವುದೇನು? ನರಸಿ ಕೇಳಿದ ಹಾಗೆ ಅವನನ್ನು ಇಲ್ಲಿಗೆ ಕರೆದುಕೊಂಡು ಬಂದು ಅವಳಿಗೆ ಕೊಟ್ಟು ಬಿಡೂದೆ? ನರಸಿಯ ಹತ್ತಿರ ಹತ್ತು ಹದಿನೈದು ಸಾವಿರ ರೂಪಾಯಿ ಅವೆಯಂತೆ. ಅಂಗ್ಡಿ ನಡೀತೈತಿ. ಪ್ರೀತಿಯಾಗಿ ಸಾಕ್ಕಂಡೂ ಸಾಕ್ಯತ್ತಾಳೆ. ಆ ಸೋದರಮಾವನ ಮನೆಗಿಂತ ಇದೇ ಚಂದ-ಎಂದು ಅವರ ಮನಸ್ಸು ಹೇಳಿತು. +ಆದರೆ ನಂಜವ್ವ ಬದಿಕಿದ್ರೆ ಹುಡುಗನ್ನ ನರಸೀತಾವ ಬಿಡ್ತಿದ್ಲೆ? ಅವ್ಳು ರಾತ್ರಿಗೊಬ್ಬುನ್ನ ಕರ್ಕತ್ತಾಳೆ. ‘ಹುಡುಗನ ಹಿಟ್ಟು ಮುಖ್ಯವಲ್ಲ, ಅವ್ನು ಬುದ್ಧಿವಂತನಾಗಬೇಡವೆ?’-ಎಂಬ ನಂಜವ್ವನ ಮಾತು ಅವರಿಗೆ ನೆನಪಾಯಿತು. ಅವನನ್ನು ಬುದ್ಧಿವಂತನನ್ನಾಗಿ ಮಾಡೂರು ಯಾರು? ಹೆತ್ತ ಅಪ್ಪನ ಯೋಗ್ತಿ ಗೊತ್ತೈತೆ? ಚಿಕ್ಕಪ್ಪನಿಗೆ ಬುದ್ಧಿ ಎಲ್ಲೈತೆ? ಅಜ್ಜಿ ಗಂಗವ್ವ. ಅವ್ಳು ವಿವೇಕಸ್ತೆಯಾಗಿದ್ರೆ ಮನೆ ಹಿಂಗ್ಯಾಕೆ ಆಗೂದು? ಇನ್ನು ಆ ಉಡುಗನ ಗತಿ ಏನು? +ಏಳೆಂಟು ದಿನ ಅವರನ್ನು ಇದೇ ಯೋಚನೆ ಕಾಡುತ್ತಿತ್ತು. ಒಂದು ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಹಾಗೆಯೇ ಒಂದು ಉಪಾಯ ಹೊಳೆದುಬಿಟ್ಟಿತು. ನಾನು ಹ್ಯಂಗೋ ಊರು ಬಿಡ್ತೀನಿ. ವಿಶ್ವಣ್ಣನ್ನ ನನ್ನ ಜೋಡಿ ಕರ್ಕಂಡ್ ಓಗಾದು. ನಾನು ತಂದ ಕಂತೆಭಿಕ್ಷದಾಗೆ ಎಲ್ಡು ಒತ್ತು ಮುದ್ದೆ ತಿನ್ಲಿ. ನಾನೇ ಇಸ್ಕೂಲಿಗೆ ಕಳುಸ್ತೀನಿ. ಉಡುಗ ಜಾಣಮರಿ. ಇಂಗ್ಲೀಷ್ ಇಸ್ಕೂಲೇ ಓದ್ಲಿ. ಯೋಗ ಇದ್ರೆ ಇನ್ನೂ ಮೇಲಕ್ಕೆ ಓದ್ಕಳಿ. ಅದೇ ವೈನ-ಎಂದು ತೀರ್ಮಾನಿಸಿದಾಗ ಅವರಿಗೇ ತಿಳಿಯದಷ್ಟು ಸಂತೋಷದಿಂದ ಮೈ ಜುಂ ಎಂದಿತು. +ಆದರೆ ಇನ್ನೂ ಒಂದು ಯೋಚನೆ ಮನಸ್ಸಿಗೆ ಬಂತು. ನಂಗಾಗಲೇ ಇಷ್ಟು ಮುಪ್ಪಾಗೈತಿ. ಕರ್ಕಂಡ್‌ಹ್ವಾಗಿ, ಮಧ್ಯೆ ನಾನೇ ಸತ್ ಗಿತ್ ಹ್ವಾದ್ರೆ ಅವ್ನ ಗತಿ ಏನು? ಒಂದೆರಡು ಗಂಟೆ ಈ ಯೋಚನೆ ಮನಸ್ಸನ್ನು ಕಾಡಿತು. ಆದರೆ ಅದಕ್ಕೆ ಸಮಾಧಾನ ಸಿಕ್ಕುವುದು ಕಷ್ಟವಾಗಲಿಲ್ಲ. ಗಂಡು ಉಡ್ಗ ಸುಟಿಯಾಗೈತೆ. ನಾನು ಒಂದ್ ಸಮಯ ಸತ್ತೆ. ಎಲ್ಲಾರಾ ಕೂಲಿ ಮಾಡ್ಕಂಡ್ ತಿನ್ಲಿ.ಆ ಅತ್ತೆ ಮಾವನ ಮನ್ಲಿ ಹ್ಯದರಿ ನಡುಕ್ಕಂಡ್ ಇರಾದು ಬ್ಯಾಡ. ನಾನೀಗ್ಲೇ ಸಾಯ್ತೀನಿ ಅಂತ ಏನು ಗೊತ್ತು? ನಂಜವ್ವನಂಥಾ ಮೊಮ್ಮಗಳ ವಯಸ್ನೋರೆಲ್ಲ ಸತ್ರೂ ನಾನು ಲಿಂಗದ ಗುಂಡು ಇದ್ಹಂಗೆ ಇದೀನಿ. ವಿಶ್ವಣ್ಣ ದೊಡ್ಡೋನಾಗಾತಂಕ ನಾನು ಸಾಯಾದಿಲ್ಲ. +ಕಲ್ಲೇಶದೋಸರು ಉಡುಗುನ್ನ ಕಳಿಸಾದಿಲ್ಲ ಅಂದ್ರೆ ಏನು ಮಾಡಾದು?-ಎಂಬ ಯೋಚನೆಯೂ ಬಂತು. ಹ್ಯಂಗೂ ನನ್ನ ಮುಖ ಕಂಡ್‌ರೆ ಉಡುಗ ಅಂಟಿಕತ್ತಾನೆ. ಕದ್ದು ಕರ್ಕಂಡ್ ಬತ್ತೀನಿ. ನನ್ ತಾವ ಏನು ಕಿತ್ಕತ್ತಾರೆ?-ಎಂಬ ನಿಶ್ಚಯದಿಂದ ಅವರು ಒಂದು ದಿನ ನಾಗಲಾಪುರಕ್ಕೆ ಹೊರಟರು. +– ೩ – +ದಾರಿಯ ಕಟಿಗೆಹಳ್ಳಿಯಲ್ಲಿ ರಾತ್ರಿ ತಂಗಿ ಮರುದಿನ ಅವರು ನಾಗಲಾಪುರ ಸೇರುವ ಹೊತ್ತಿಗೆ ಬೆಳಗಿನ ಹತ್ತುಗಂಟೆಯಾಗಿತ್ತು. ದಾರಿಯ ಕೆರೆಯಲ್ಲಿ ಸ್ನಾನಮಾಡಿ, ಅದೆ ಕಾವಿಯ ಪಂಚೆ ಉಟ್ಟು ಅಂಗಿ ಧರಿಸಿ ತಲೆಗೆ ಕೆಂಪು ಲಪ್ಪಟಿ ಸುತ್ತಿ ಹಣೆಗೆ ವಿಭೂತಿ ಇಕ್ಕಿಕೊಂಡು ಶಿವಧ್ಯಾನ ಮಾಡುತ್ತಾ ನೇರವಾಗಿ ಸ್ಕೂಲಿಗೆ ಹೋದರು. ಆಗ ಸ್ಕೂಲು ಬಿಡುವ ಸಮಯ. ಗಂಟೆ ಹೊಡೆದ ತಕ್ಷಣ ವಿಶ್ವ ಹೊರಗೆ ಬಂದ. ಗುರುತು ಹಿಡಿದ ಅವನೇ-‘ಅಯ್ನೋರೇ’ ಎಂದು ಹತ್ತಿರ ಬಂದು, ನಿಂತಿದ್ದ ಇವರ ತೊಡೆಗಳನ್ನು ತಬ್ಬಿಕೊಂಡ. +‘ಇಲ್ಲಿ ಬಾ ಮರಿ’-ಎಂದು ಕೈ ಹಿಡಿದು ಸ್ಕೂಲಿನ ಹಿಂದಿನ ಆಲದಮರದ ಹತ್ತಿರಕ್ಕೆ ಕರೆದುಕೊಂಡುಹೋಗಿ ಕೂರಿಸಿಕೊಂಡರು. ನರಸಿ ಹೇಳಿದಂತೆ ಅವನು ಒಣಗಿದ ಹರಳ ಕಡ್ಡಿಯೇ ಆಗಿದ್ದ. ಅವರು ಕೇಳಿದರು: ‘ನನ್ನ ಜೊತೆ ಬತ್ತೀಯಾ?’ +‘ನಮ್ಮೂರುಗಾ?’ +‘ನಮ್ಮೂರ್ಗೋ, ಯಾವೂರ್ಗಾದ್ರೂ ಸರಿ. ನನ್ನ ಜೊತೆ ಬಾ. ಅಲ್ಲೆ ಯಾವ್ದಾದ್ರೂ ದೊಡ್ದ ಊರಿಗೆ ಹ್ವಾಗಾನ. ನಾನು ಕಂತೆಭಿಕ್ಷೆ ತಂದು ಇಕ್ತೀನಿ. ನೀನು ಸ್ಕೂಲಿಗೆ ಹ್ವಾಗಿ ಚಂದಾಗಿ ಓದೂವಂತೆ. ಬತ್ತೀಯಾ?’ +‘ಹೋಗ್ರೀ ಅಯ್ನೋರೇ, ನೀವು ಸುಳ್‌ಸುಳ್ಳೇ ಅಂತೀರಾ?’ +‘ಇಲ್ಲ ಮರಿ, ನಿಜವಾಗಿಯೂ.’ +‘ಹಾಗಾದ್ರೆ ಆಣೆ ಇಟ್ಟು ಹೇಳಿ ನೋಡಾಣ.’ +‘ನಿನ್ನಾಣೆಗೂ ಮರಿ’-ಎಂದು ಅವನ ತಲೆಯ ಮೇಲೆ ಕೈ ಇಟ್ಟು ಎಂದರು. +‘ಹಾಗಾದ್ರೆ ಹೀಗೇ ವಾಟಹ್ವಡಿಯಾಣಾ ನಡೀರಿ.’ +‘ಬ್ಯಾಡ. ಮನೆಗೆ ಹೋಗಿ ನಿಮ್ಮ ಮಾವನ್ನ ಕೇಳಾನ.’ +‘ಅವನಿಗೆ ಈ ಮಾತು ಕೇಳಿದ ತಕ್ಷಣ ಅಳು ಬಂದುಬಿಟ್ಟಿತು: ‘ಅವ್ನು ಕಳ್ಸುಲ್ಲ ಕಣ್ರೀ.’ +‘ಮದ್ಲು ಕೇಳಾಣ. ಅವ್ರು ಕಳ್ಸುಲ್ಲ ಅಂದ್ರೆ ನಾಳೆ ನಾನು ಇಲ್ಲಿಗೆ ಬತ್ತೀನಿ. ಹಿಂಗಿಂದ ಹಿಂಗೇ ನಿನ್ನ ಕರ್ಕಂಡುಹೋಯ್ತೀನಿ’-ಎಂದು ಹೇಳಿ ಅವನನ್ನು ಒಪ್ಪಿಸಬೇಕಾದರೆ ಅವರು ಮೂರು ಸಲ ತಮ್ಮ ಕರಡಿಗೆಯನ್ನು ಕೈಲಿ ಹಿಡಿದು ಆಣೆ ಮಾಡಬೇಕಾಯಿತು. +ಅವನನ್ನು ಮೊದಲು ಕಳಿಸಿ, ಹತ್ತು ನಿಮಿಷದಮೇಲೆ ಮನೆ ಕೇಳಿಕೊಂಡು ಇವರು ಹೋಗುವ ಹೊತ್ತಿಗೆ-‘ತಡವಾಗಿ ಯಾಕೆ ಬಂದೆಯೋ ಭಡವಾ?’ ಎಂದು ಕಲ್ಲೇಶಜೋಯಿಸರು ಅಳಿಯನನ್ನು ಬೈಯುತ್ತಿದ್ದರು. ಇವರನ್ನು ಕಂಡ ತಕ್ಷಣ ಸುಮ್ಮನಾದರು. +ಅವರು ಲೋಕಾರೂಢಿಯ ಮಾತುಗಳನ್ನಾಡುತ್ತಿರುವಷ್ಟರಲ್ಲಿ ಮನೆಯ ಮುಂದೆ ಒಂದು ದೊಡ್ದ ಕೆಂಪು ಕುದುರೆ ಬಂದು ನಿಂತಿತು. ಅದರಿಂದ ಇಳಿದವರು ಕಂಠೀಜೋಯಿಸರು. ತಾಯಿಯ ತಿಥಿ ಮಾಡಿಕೊಂಡು ಹೋದ ಅವರು ಇಲ್ಲಿಗೆ ಬರುತ್ತಿರುವುದು ಇದೇ ಮೊದಲು. ವಿಶ್ವನನ್ನು ಕರೆತಂದು ಕಲ್ಲೇಶ ಇಟ್ಟುಕೊಳ್ಳುತ್ತಾನೆಂಬುದು ಅವರು ಹೋಗುವ ಮೊದಲೇ ಗೊತ್ತಿತ್ತು. ಕಲ್ಲೇಶನೇ ಹಾಗೆ ಹೇಳಿದ್ದ. ಈಗ ಏನೋ ಮನಸ್ಸಿನ ಲಹರಿ ತಿರುಗಿದಂತೆ ಊರಿಗೆ ಬಂದಿದ್ದಾರೆ. ಮೊಮ್ಮಗನನ್ನು ನೋಡುವ ಒಂದು ಆಶೆಯೂ ಆ ಲಹರಿಯಲ್ಲಿತ್ತು. ಒಳಗೆ ಬಂದ ಅವರು ಅವನನ್ನು ಕರೆದು ಮೈಸೂರು ಪಾಕು ಒಡೆಗಳನ್ನು ಪೊಟ್ಟಣ ಕೊಟ್ಟರು. ರಾಮಸಂದ್ರದ ವಿಷಯ ಮತ್ತು ಮಗಳು ಕಟ್ಟಿದ ಮನೆಯ ಬಗೆಗೆ ಅಯ್ಯನವರನ್ನು ಕೇಳಿದರು. +ಸ್ವಲ್ಪ ಹೊತ್ತಾದಮೇಲೆ ಕಲ್ಲೇಶ ಅಯ್ಯನವರನ್ನು ಕೇಳಿದ: ‘ಊಟ ಮಾಡ್ತೀರೋ,ಅಡಿಗೆ ಮಾಡ್ಕತ್ತಿರೋ? ಇಲ್ಲ, ನಿಮ್ಮ ಜನದ ಯಾರ ಮನೇಲಾದ್ರೂ ಹೇಳಾಣೋ?’ +‘ನಮ್ಮ ಜನದೋರ ಮನ್ಲೇ ಹೇಳಿ.’ +ಕಲ್ಲೇಶ ವಿಶ್ವನ ಕೈಲಿ ಆ ಊರಿನ ಮಲ್ಲಶೆಟ್ಟಿಯ ಮನೆಗೆ ಹೇಳಿಕಳಿಸಿದ. ಮಲ್ಲಶೆಟ್ಟಿ ಮನೆಗೆ ಬಂದು ಈ ಜಂಗಮರನ್ನು ಬಿನ್ನಕ್ಕೆ ಕರೆದುಕೊಂಡು ಹೋದ. ಅವನ ಹೆಂಡತಿ ಅಡುಗೆ ಮಾಡುತ್ತಿರುವಾಗ, ಅಯ್ಯನವರು ಮಲ್ಲಶೆಟ್ಟಿಯಿಂದ ಕಲ್ಲೇಶಜೋಯಿಸರ ಮನೆಯಲ್ಲಿ ವಿಶ್ವ ಇರುವ ಸ್ಥಿತಿಯನ್ನು ವಿಚಾರಿಸಿದರು. ‘ಇಂಥಾ ಮಕ್ಳು ಇರ್‌ಬ್ಯಾಡ್‌ದು, ಸತ್‌ರೆ ವೈನ ಶಿವನೇ’-ಮಲ್ಲಶೆಟ್ಟಿ ಹೇಳಿದ. ಅವನ ಹೆಂಡತಿಯೂ ಅದೇ ಮಾತನ್ನಾಡಿದಳು. +‘ಶೆಟ್ರೇ, ಹ್ವಾಗಿ ವಸೀ ಕಂಟೀದೋಸ್ರುನ ಕರ್ಕಂಡ್‌ಬತ್ತೀರಾ?’ +ಮಲ್ಲಶೆಟ್ಟಿ ಹೋದ ಹತ್ತುನಿಮಿಷದಲ್ಲಿ ಅವನೊಡನೆ ಕಂಠೀಜೋಯಿಸರೊಬ್ಬರೇ ಬಂದರು. ಅಯ್ಯನವರು ಕೂತಿದ್ದ ಎದುರು ಗೋಡೆ ಒರಗಿ, ಮಲ್ಲಶೆಟ್ಟಿ ಹಾಕಿಕೊಟ್ಟ ಮಣೆಯಮೇಲೆ ಕುಳಿತರು. ತಾವು ಇಲ್ಲಿಗೆ ಬಂದ ಕಾರಣವನ್ನು ವಿವರಿಸಿದ ಅಯ್ಯನವರು ಎಂದರು: ‘ಬೇಕಾದ್ರೆ ಈ ಶೆಟ್ರುನ್ನೂ ಒಳಗಿರೂ ಅಕ್ಕನನ್ನೂ ಕೇಳಿ. ಈ ಊರಲ್ಲಿ ಯಾರುನ್ನಾದ್ರೂ ಇಚಾರಿಸಿ. ಆ ಉಡುಗ ಹ್ಯಂಗೆ ಆಗೈತಿ ಕಣ್ಣಿಂದ ನೋಡಿ. ನಿಮ್ಮ ಸ್ವಸೆ ಗುಣ ಚಂದವಲ್ಲ. ಉಡುಗನ್ನ ನನ್ನ ಕುಟ್ಟೆ ಕಳಿಸ್ಬಿಡಿ. ನಾನು ಸಾಕಿ ನ್ಯಟ್ಟಗೆ ಮಾಡ್ತೀನಿ.’ +ಜೋಯಿಸರಿಗೆ ಸೊಂಟದ ಮೂಳೆ ಮುರಿಯಬೇಕೆನಿಸುವಷ್ಟು ಸಿಟ್ಟು ಬಂತು. ಆದರೆ ಅಯ್ಯನವರೇ ಎಂದರು: ‘ಹೀನಸುಳಿ ಬೋಳಿಸಿದ್ರೆ ಓಗಾಕಿಲ್ಲ. ಆ ಯಮ್ಮನ ಸರಿ ಮಾಡಾಕೆ ಗಂಡಂಗೂ ಆಗ್ನಿಲ್ಲ. ಕಲ್ಲೇಶದೋಸರಿಗೂ ಮಕ್ಳುನ್ನ ಹ್ಯಂಗೆ ಸಾಕಬೇಕು ಅಂತ ಗೊತ್ತಿಲ್ಲ. ಸುಮ್ನೆ ನನ್ನ ಜೋಡಿ ಕಳುಸ್ಬುಡಿ.’ +ಜೋಯಿಸರು ಸ್ವಲ್ಪ ಹೊತ್ತು ತಮ್ಮಲ್ಲಿಯೇ ಯೋಚಿಸಿದರು. ನಂತರ, ‘ನೀವು ಕರ್ಕಂದ್ ಹೋಗಿ ಏನು ಮಾಡ್ತೀರಾ?’ ಎಂದು ಕೇಳಿದರು. +‘ಏನು ಮಾಡ್ತೀನೋ ಎಲ್ಲಿರ್ತೀನೋ ಕಾಣೆ. ನನ್ನಮ್ಯಾಲೆ ನಂಬಿಕೆ ಇದ್ರೆ ಸುಮ್ನೆ ಕಲಿಸ್ಕೊಡಿ.’ +ಅವರು ತಕ್ಷಣ ಉತ್ತರ ಹೇಳಲಿಲ್ಲ. ಮನಸ್ಸಿನಲ್ಲಿ ಸಿಟ್ಟು ಕವರುತ್ತಿತ್ತು. ಹುಡುಗನ ಅಜ್ಜ ನಾನು ಬದುಕಿದೀನಿ. ಸೋದರಮಾವ ಕಲ್ಲೆಶ ಇದಾನೆ. ನಾವು ಸರಿಯಾಗಿ ಸಾಕೂದಿಲ್ಲ ಅಂತ ಇವನನ್ನ ಕಳ್ಸಿ ಅಂತ ಕೇಳುಕ್ಕೆ ಈ ಜಂಗಮಯ್ಯ ಬಂದಿದಾನಲ್ಲ. ಇವನಿಗೆಷ್ಟು ಹಿಮ್ಮತ್ತು? ಅಯ್ಯನವರನ್ನು ಬೈಯ್ಯಲು ಬಾಯಿ ತೆರೆದಿದ್ದ ಅವರು ಬೇರೊಂದು ಯೋಚನೆ ಬಂದು, ತಕ್ಷಣ ನಾಲಿಗೆಯನ್ನು ಹಾಗೆಯೇ ತಡೆದುಕೊಂಡರು. ಹತ್ತು ನಿಮಿಷ ಮೂಕರಂತೆ ಕುಳಿತಿದ್ದ ಅವರ ಮನಸ್ಸು ಕಲ್ಲೇಶನ ಸಂಸಾರವನ್ನು ಕುರಿತು ಯೋಚಿಸುತ್ತಿತ್ತು. ಆ ಮುಂಡೆ ಒಳ್ಳೆಯೋಳಲ್ಲ. ಹೊಟ್ತೆಗೆ ಹಾಕದೆ ಹುಡುಗನನ್ನ ಸಾಯಲು ಮಾಡಿದಾಳೆ. ಕಲ್ಲೆಶನೂ ಹೊಡೀತಾನಂತೆ. ನಾನೇ ಕರ್ಕಂಡ್ ಇಟ್‌ಕೊಂಡ್ರೆ ಹ್ಯಾಗೆ?-ಎಂಬ ಯೋಚನೆ ಬಂತು. ತಾವು ಹರೆದೊಯ್ದು ಏನು ಮಾಡುವುದು? ಹೋಟೆಲಿನಲ್ಲಿ ಬೇಷಕ್ ಊಟ, ಕುದುರೆ ಸವಾರಿ, ಮಾಟ ಮದ್ದು…..ಛೆ ಇದೆಲ್ಲ ಬ್ಯಾಡ-ಎಂದು ಅವರ ಮನಸ್ಸೇ ಹೇಳಿತು. ಈ ಪರಿಸ್ಥಿತಿಯಲ್ಲಿ ಅವನನ್ನು ಸಾಕುವಂಥೋರು ಯಾರೂ ಇಲ್ಲ. ಈ ಅಯ್‌ನೋರೇ ನಂಬಿಕಸ್ಥರು. ಈತ ದೆವರಸಮ ಮನುಷ್ಯ ಅಂತ ನಂಜುವೇ ಹೇಳ್ತಿದ್ದಳಲ್ಲ-ಎಂದು ಯೋಚಿಸಿದ ಅವರು ಬಾಯಿಬಿಟ್ಟು ಕೇಳಿದರು: ‘ನೋಡಿ, ನಾನು ಇವತ್ತು ಇಲ್ಲಿಗೆ ಬಂದದ್ದು ಯೋಗಾಯೋಗ. ನಾನಿಲ್ಲದೆ ಇದ್ದಿದ್ರೆ ನೀವು ಕಲ್ಲೇಶುನ್ನೇ ಕೇಳಬೇಕಾಗಿತ್ತು. ಅವನು ಕಳುಸ್ತಿರ್‌ಲಿಲ್ಲ. ಆಗ ಏನು ಮಾಡ್ತಿದ್ರಿ?’ +‘ಈಗ ನೀವೇ ಬಂದಿದೀರಲಾ. ಆ ಮಾತ್ಯಾಕೆ?’ +‘ಮಸಲಾ ಮಾತು. ಬರದೇ ಇದ್ದಿದ್ರೆ ಏನು ಮಾಡ್ತಿದ್ರಿ, ನಿಜ ಹೇಳಿ.’ +‘ನಿಜ ಹೇಳಲೇನು? ನಾಳೆ ದಿನ ನಮ್ಮ ಉಡುಗ ಇಸ್ಕೂಲಿಗೆ ಓಗಿದ್ದಾಗ ಅಲ್ಲಿಂದ್ಲೇ ಅವನ ಕೈ ಇಡಕಂಡು ಕರ್ಕಂಡ್‌ಹೋಯ್ತಿದ್ದೆ. ನನ್ನ ಯಾವಾನಾದ್ರೂ ತಡಿಯುಕ್ ಬಂದಿದ್ರೆ ಜವಾಬ್ ಏಳಿತಿದ್ದೆ.’ +ಜೋಯಿಸರು ಅರ್ಧ ನಿಮಿಷ ಅವರನ್ನೇ ಎವೆ ಇಕ್ಕದೆ ನೋಡುತ್ತಿದ್ದು, ನಂತರ ತಾವು ಕುಳಿತಲ್ಲಿಂದ ಎದ್ದು ಹೋಗಿ ಅವರ ಭುಜ ತಟ್ಟಿ-‘ವಾರೆ ವಾ. ಅಯ್ನೋರೇ, ನೀವು ಗಂಡು. ಶಾಬಾಸ್, ಕರ್ಕಂಡು ಹೋಗಿ. ಕಲ್ಲೇಶುಂಗೆ ನಾನ್ ಹೇಳ್ತೀನಿ’-ಎಂದವರೇ ಎದ್ದು ಮನೆಗೆ ಹೋದರು. +ಅಯ್ಯನವರು ಬಿನ್ನ ತೀರಿಸಿ ಸಣ್ಣದಾಗಿ ಒಂದು ನಿದ್ದೆ ಮುಗಿಸಿ ಬೇಕೆಂದೇ ಸ್ವಲ್ಪ ತಡಮಾಡಿ ಮನೆಗೆ ಬರುವುದರೊಳಗೆ ಕಂಠೀಜೋಯಿಸರು ಮಗನನ್ನು ಒಪ್ಪಿಸಿದ್ದರು. ಅದೆ ದಿನ ತಾವೇ ಸ್ಕೂಲಿಗೆ ಹೋಗಿ ಹುಡುಗನ ಸರ್ಟಿಫಿಕೇಟ್ ತೆಗೆಸಿಕೊಟ್ತರು. ಮರುದಿನ ಬೆಳಿಗ್ಗೆ ಅವನ ಬಟ್ಟೆಬರೆಗಳನ್ನೆಲ್ಲ ಕಟ್ಟಿ ಅಯ್ಯನವರು ಹೆಗಲಿಗೆ ಹಾಕಿಕೊಂಡರು. ‘ಮಗಾ, ಅಜ್ಜಯ್ಯ, ಮಾವ, ಅತ್ತೆಮ್ಮ, ಎಲ್ರಿಗೂ ಕಾಲು ಮುಟ್ಟಿ ಶರಣು ಮಾಡ್ಕಳಪ್ಪಾ’- ಎಂದು ಹೇಳಿದರು. ನಮಸ್ಕಾರ ಮಾಡಿಸಿಕೊಳ್ಳುವಾಗ ಕಮಲು ಕಲ್ಲಿನಂತೆ ನಿಂತಿದ್ದಳು. ಕಲ್ಲೇಶ ಮಾವನ ಕಣ್ಣು ಹನಿಗೂಡುತ್ತಿತ್ತು. +ನೆನ್ನೆ ಸಂಜೆಯಿಂದ ಕಂಠೀಜೋಯಿಸರು ತುಂಬ ಮಂಕಾಗಿದ್ದರು. ರಾತ್ರಿ ಊಟವನ್ನೂ ಮಾಡಲಿಲ್ಲ. ರಾತ್ರಿ ಇಬ್ಬರೂ ಜೊತೆಯಲ್ಲಿ ಜಗುಲಿಯಮೇಲೆ ಮಲಗಿದ್ದರೂ ಅವರು ಅಯ್ಯನವರ ಕೈಲಿ ಸಹ ಮಾತನಾಡಿರಲಿಲ್ಲ. ಕಲ್ಲೇಶನೊಡನೆ ಅವರೂ, ಇವರಿಬ್ಬರನ್ನು ಕಲಿಸಲು ಜೀನು ಹಾಕಿದ ಕುದುರೆಯ ಕಡಿವಾಣವನ್ನು ಹಿಡಿದು, ಅದನ್ನೂ ನಡೆಸಿಕೊಂಡು ಕೆರೆಯ ಈಚೆ ಕೋದಿಯತನಕ ಬಂದರು. ಕೋಡಿ ದಾಟಿದಮೇಲೆ ಅವರೇ ಮಗನಿಗೆ ಹೇಳಿದರು: ‘ಕಲ್ಲೇಶ ನೀನು ವಾಪಸ್ ನಡಿ. ನಾನು ಒಂದರ್ಧ ಮೈಲೀತಂಕ ಇವರ ಜೊತೆ ಹೋಗಿಬತ್ತೀನಿ.’ +ಹಿಂದಕ್ಕೆ ಹೊರಡುವ ಮುನ್ನ ಕಲ್ಲೇಶ ಅಯ್ಯನವರಿಗೆ ಹೇಳಿದ: ‘ನಾನೇನೋ ಸ್ವಲ್ಪ ಶಿಕ್ಷೇಲೇ ಇಟ್ಟಿದ್ದೆ. ಇವನ ತುಂಟತನ ಜಾಸ್ತಿ. ಹತೋಟೀಲಿ ಇಡು ಅಂತ ನಂಜುವೇ ಹೇಳಿದ್ಲು. ಇಲ್ದೆ ಇದ್ರೆ ಇವನು ಕೆಟ್ಟುಹೋಗ್ತಾನೆ. ಅಲ್ಲಿ ನೀವು ಭಯ ಇಟ್ಟಿರಿ.’ +‘ನ್ಯಾಯ, ನ್ಯಾಯ. ಸಾವಿರ ಉಳಿ ಪೆಟ್ಟು ಬಿದ್ರೆತಾನೆ ಕಲ್ಲು ಸಿವಲಿಂಗವಾಗೂದು? ಆದ್ರೆ ಜಾಗ ನೋದಿ ಹದ ಇಡಿದು ಹ್ವಡೀಬೇಕು. ನೀವು ಮಾಡಿದ್ದು ವಳ್ಳೇದುಕ್ಕೆ ಆಯ್ತು ಬುಡಿ’-ಅಯ್ಯನವರು ಉತ್ತರ ಹೇಳಿದಾಗ ಕಲ್ಲೇಶನ ಮುಖ ಕೆಳಗೆ ಬಾಗಿತು. ಮತ್ತೆ ಮಾತನಾಡದೆ ಅವನು ಹೊರಟುಹೋದ. +ಕುದುರೆ ಮತ್ತು ಮೂವರೂ ನೂರು ಹೆಜ್ಜೆಗೂ ಮೀರಿ ನಡೆದಮೇಲೆ ಅಯ್ಯನವರೇ ಕಂಠೀಜೋಯಿಸರಿಗೆ -‘ನೀವು ನಡೀರಿ. ನಾವು ಬ್ಯಾಗ ಬ್ಯಾಗ ಕಾಲು ಹಾಕ್ತೀವಿ’ ಎಂದರು. +ಜೋಯಿಸರು ಅದೇನೋ ಮಾತನಾಡಲು ಪ್ರಯತ್ನಿಸುತ್ತಿದ್ದರಾದರೂ ಮಾತು ಬಾಯಿಂದ ಹೊರಡುತ್ತಿರಲಿಲ್ಲ. ಅವರು ಕುದುರೆಯೊಡನೆ ನಿಂತುಕೊಂದರು. ಹತ್ತಿರವೇ ಅಯ್ಯನವರೂ ನಿಂತರು. ನಡುವೆ, ಅವರಿಬ್ಬರ ಸೊಂಟದ ತನಕ ಬೆಳೆದ ವಿಶ್ವ. ಐದು ನಿಮಿಷ ಯಾರೂ ಮಾತನಾಡಲಿಲ್ಲ. ಅಯ್ಯನವರೇ-‘ನಾವು ಹೊರಡಾಣವೇ?’ ಎಂದಾಗ ಅವರೆಂದರು: ‘ಇಲ್ಲಿ ಕೇಳಿ. ಅಯ್ನೋರೇ ನೀವು ಗಂಡು.’ +ಅಯ್ಯನವರಿಗೆ ಏನೂ ತಿಳಿಯಲಿಲ್ಲ: ‘ಇದೇನು ನೀವನ್ನೂದು?’ +‘ಏನೂ ಇಲ್ಲ. ಇದ ತಗಾಳಿ’-ಎಂದು ತಮ್ಮ ಒಳ ಅಂಗಿಯ ಜೇಬಿಗೆ ಕೈಹಾಕಿ ಒಂದು ನೋಟಿನ ಪುಡುಕೆಯನ್ನು ತೆಗೆದು ಅವರ ಕಾವಿ ಅಂಗಿಯ ಜೇಬಿಗೆ ಹಾಕಿ. “ನೂರೈವತ್ತು ರೂಪಾಯಿ ಇದೆ. ನೀವು ಯಾವ ಊರಿಗಾದ್ರೂ ಇವನನ್ನ ಕರ್ಕಂಡ್‌ಹೋಗಿ. ಆಮ್ಯಾಲೆ ನಂಗೆ ಒಂದು ಕಾಗದ ಹಾಕಿ. ‘ಚೆನ್ನರಾಯಪಟ್ಣ, ಮಸೀತಿ ಹಿಂದಿನ ದೆವ್ವದ ಮನೆ ವಾಸ, ನಾಗಲಾಪುರದ ಕಂಠೀಜೋಯಿಸರು’ ಅಂತ ಬರುದ್ರೆ ಸಾಕು” ಎಂದು ಹೇಳಿ, ತಮ್ಮ ದೊಡ್ದ ಶರೀರವನ್ನು ಬಾಗಿಸಿ ಮೊಮ್ಮಗನ ಎರಡು ಕೆನ್ನೆಗಳಿಗೂ ಮುತ್ತಿಟ್ಟು, ಅವನ ಮೈ, ಮುಖ, ಬೆನ್ನುಗಳನ್ನು ತಮ್ಮ ದಪ್ಪನಾದ ಅಂಗೈಯಿಂದ ತಡವಿ ಹಿಂತಿರುಗಿ ಕುದುರೆಯನ್ನೇರಿದರು. ಅವರ ಕಣ್ಣಂಚಿನಲ್ಲಿ ನೀರು ಕೂಡಿದ್ದುದು ಅಯ್ಯನವರಿಗೆ ಕಾಣಿಸಿತು. ಕುದುರೆಯ ಕೆಲಹೊಟ್ಟೆಗೆ ಕಾಲಿನಿಂದ ಸನ್ನೆಮಾಡಿ, ಮತ್ತೆ ಇವರ ಕಡೆ ನೋದದೆ ಬೇಗ ಬೇಗ ಊರಿನ ಕಡೆಗೆ ಓಡಿಸಿಕೊಂಡುಹೋದರು. ವಿಶ್ವ ಹಿಂತಿರುಗಿ ಅವರ ವೇಗವನ್ನೇ ನೋಡುತ್ತಾ ನಿಂತುಬಿಟ್ಟ. ಸ್ವಲ್ಪ ಹೊತ್ತಾದಮೆಲೆ ಅವನ ಕೈ ಹಿಡಿದು ಅಯ್ಯನವರು ಮುಂದೆ ಮುಂದೆ ನಡೆದರು. +ಅವರು ಅರ್ಧ ಮೈಲಿ ನಡೆದಿದ್ದರು. ವಿಶ್ವ ಏನೋ ಯೋಚಿಸುತ್ತಿದ್ದ. ಅವನಿಗೇ ಅರಿವಿಲ್ಲದಂತೆ ಅವನ ತುಟಿಗಳು ಅದೇನೋ ಮಾತನಾಡುತ್ತಿದ್ದವು. ‘ಅದೇನು ಯೇಚ್ನೆ ಮಾಡ್ತಿದೀ ಮರಿ?’-ಅಯ್ಯನವರು ಕೇಳಿದರು. +‘ಅಜ್ಜಯ್ಯನ ಹತ್ರ ಇದೆಯಲ, ಅಂಥದು ನಂಗೂ ಒಂದು ಕುದುರೆ ತಂದ್ ಕೊಡ್ತೀರಾ?’ +‘ಅದ್ಯಾಕಪ್ಪ ನಮಗೆ?’ +‘ನಂಗೆ ಅಂಥ ಕುದ್ರೆ ನೋಡಿದ್ರೆ, ಹತ್ತಿ ಈಗ ಅಜ್ಜಯ್ಯ ಹೋದ್ನಲಾ, ಅದುಕ್ಕಿಂತ ಜೋರಾಗಿ ಗಡಗಡಗಡ ಅನ್ನೂ ಹಾಗೆ ಓಡುಸ್ಬೇಕು ಅಂತ ಆಸೆಯಾಗುತ್ತೆ.’ +‘ಇನ್ನೇನ್ ಆಶೆಯಾಗ್‌ತೈತಿ?’ +‘ತುಂಬ ದೂರ ಈಜಬೇಕು ಅನ್ಸುತ್ತೆ.’ +‘ಓದಬೇಕು ಅನ್ಸಾಕಿಲ್ವಾ?’ +‘ಅನ್ಸುತ್ತೆ ಕಣ್ರೀ. ನಮ್ಮ ಕ್ಲಾಸಿನಲ್ಲಿ ಲೆಕ್ಕದಲ್ಲಿ ನಾನೆ ಫಸ್ಟು.’ +‘ಇನ್ಯಾತ್‌ರಲ್ಲಿ ಪಸ್ಟು?’ +‘ಮಾವನ ಮನ್ಲಿ ಓದಿಕಳುಕ್ಕೇ ಆಗ್ತಿರ್ಲಿಲ್ವಲ. ಇಲ್ದೆ ಇದ್ರೆ ಯಲ್ಲಾತ್ರಲ್ಲೂ ಪಸ್ಟು ಬತ್ತಿದ್ದೆ ಅಂತ ನಮ್ಮ ಮೇಷ್ಟ್ರೇ ಹೇಳಿದ್ರು.’ +‘ಇನ್ನುಮ್ಯಾಲೆ ನೀನು ಬೇಕಾದೋಟು ಓದಿಕಣೂವಂತೆ. ಚೀಲದ ಬರ್ತಿ ಸಿಲೇಟು ಬುಕ್ಕು ತಂದುಕೊಡ್ತೀನಿ. ನಡೀ ಮಗಾ.’ +‘ನಾವು ನಮ್ಮೂರಿಂದ ಯಾವೂರಿಗೆ ಹೋಗಾಣಾ?’ +‘ನಾನಿನ್ನೂ ಯೇಚ್ನೆ ಮಾಡಿಲ್ಲ. ಗುಬ್ಬಿಗೋ ತುಮಕೂರಿಗೋ ಓಗಾನ.’ +‘ಅಯ್ನೋರೇ, ಯಾವೂರಿಗೆ ಹೋದ್ರೂ ನಂಗೆ ಈಜಾಡುಕ್ಕೆ ಒಂದು ಕೆರೆ ಇರ್‌ಬೇಕು. ಒಂದೊಂದು ದಿನ ಯಾರುದ್ದಾದ್ರೂ ಕುದ್ರೆ ಕೊಡುಸ್ರಿ. ಕೂತ್ಕಬೇಕು ಅನ್ಸುತ್ತೆ.’ +‘ಆಗ್ಲಿ ನೋಡಾಣ, ಬಾ ಮರಿ’-ಎಂದು ಅವರು ಕತ್ತು ತಿರುಗಿಸಿ ಅವನ ಮುಖ ನೋಡಿದರು. ತಕ್ಷಣ ಕಂಠೀಜೋಯಿಸರ ನೆನಪಾಯಿತು. +– ೪ – +ಅವರು ಅದೇ ದಿನ ರಾಮಸಂದ್ರ ಮುಟ್ತಿದರು. ಗಂಗಮ್ಮ ಊರಿನಲ್ಲಿರಲಿಲ್ಲ. ಸಂಜೆಗೇ ನಮ್ಮ ಹತ್ತಿರ ಇದ್ದ ರಾಗಿ, ಕಾಳು, ಮೆಣಸಿನಕಾಯಿಗಳನ್ನು ಅಯ್ಯನವರು ಮಾರಿಬಿಟ್ಟರು. ನೂರ ಇಪ್ಪತ್ತು ರೂಪಾಯಿ ಬಂತು. ಅದಲ್ಲದೆ ಅವರ ಹತ್ತಿರ ಒಟ್ಟು ನಲವತ್ತು ಬೆಳ್ಳಿಯ ರೂಪಾಯಿ ಇತ್ತು. ಕಂಠೀಜೋಯಿಸರು ಕೊಟ್ಟಿದ್ದ ನೂರ ಐವತ್ತು ಒಳ ಅಂಗಿಯಲ್ಲಿತ್ತು. ಹಣವನ್ನು ಅವರು ಸೊಂಟಕ್ಕೆ ಕಟ್ಟಿಕೊಂಡರು. ಅಲ್ಯೂಮಿನಿಯಂ ಪಾತ್ರೆಗಳು ಮತ್ತು ಕಂಬಳಿ ಬಟ್ಟೆಗಳನ್ನು ಹೊರಲು ಒಬ್ಬ ಆಳನ್ನು ಗೊತ್ತುಮಾಡಿಕೊಂಡರು. ಬೆಳಿಗ್ಗೆ ಹೊರಡುವ ಮುನ್ನ ವಿಶ್ವ ಕೇಳಿದ: ‘ಅಯ್ನೋರೇ, ನಮ್ಮಮ್ಮ ಖಂಡಿತ ಸತ್ಹೋಗಿದಾಳಾ? +‘ಹೌದು ಮರಿ.’ +‘ನಾನು ನಮ್ಮನೆ ಒಳಗೆ ನೋಡಬೇಕು.’ +‘ಅಲ್ಲೇನೈತಿ ಅಂತ ನೋಡ್ತೀಯಾ?’ +‘ಊಂ, ನಾನು ನೋಡ್‌ಬೇಕು’-ಎಂದು ಅವನು ಹಟ ಮಾಡಿದ. +ಆ ಮನೆ ಖಾಲಿಯಾದಮೇಲೆ ಅದರ ಬೀಗದ ಕೈ ಗುಂಡೇಗೌಡರ ಸಂಬಂಧಿಯಾದ ಕುರುಬರಹಟ್ಟಿಯ ಮುದ್ದಯ್ಯನ ಹತ್ತಿರ ಇರುವುದು ಅಯ್ಯನವರಿಗೆ ಗೊತ್ತಿತ್ತು. ಮುದ್ದಯ್ಯನನ್ನು ಕರೆಸಿ ಬಾಗಿಲು ತೆಗೆಸಿದರು. ಜನವಸತಿ ಇಲ್ಲದೆ ಒಳಗೆಲ್ಲ ಧೂಳು ಮತ್ತು ಮಲೆತ ಗಾಳಿಯ ವಾಸನೆ ಬರುತ್ತಿತ್ತು. ಒಳಗೆ ಬಂದ ವಿಶ್ವ ಅಡಿಗೆಮನೆಗೆ ಹೋದ. ಅಲ್ಲಿಂದ ವಾಡೆಯ ಕೋಣೆಗೆ ಹೋಗಿ ಕತ್ತಲೆಯಲ್ಲೇ ತಡಕಾಡಿದ. ಕಂಬದ ಮೆಲಿಂದ ಅಟ್ತ ಹತ್ತಿ ನೋದಿದ. ಕೊನೆಗೆ ಗಟ್ಟಿಯಾಗಿ- ‘ಅಮ್ಮ ಲೇ, ನೀನ್ ಇಲ್ವೇನೇ/’ ಎಂದು ಕೂಗಿದ. ಉತ್ತರ ಬರಲಿಲ್ಲ. ಕೆಳಗೆ ಇಳಿದು ಬಂದು-ಅಯ್ನೋರೇ, ಹಾಗಾದ್ರೆ ಅಮ್ಮ ನಿಜವಾಗ್ಲೂ ಸತ್ಹೋದ್ಲಾ?’ ಎಂದು ಕೇಳಿದ. +ಬಾಗಿಲು ತೆಗೆಯಲು ಬಂದಿದ್ದ ಮುದ್ದಯ್ಯ ಕಲ್ಲಿನಂತೆ ನಿಂತಿದ್ದ. ‘ಹೌದು ಮರಿ, ಅಮ್ಮ ಖಂಡಿತ ಸತ್ಹೋಗೈತೆ’-ಅಯ್ಯನವರೆಂದರು. +ವಿಶ್ವ ಗಟ್ಟಿಯಾಗಿ ಅಳಲು ಶುರುಮಾಡಿದ. ಅವನನ್ನು ತಬ್ಬಿ ಸಮಾಧಾನ ಮಾದಿದ ಮೇಲೆ ಹೇಳಿದರು: ‘ನಡಿ ಹ್ವಾಗಾನ.’ +ಅವನು ಸುಮ್ಮನೆ ಅವರ ಹಿಂದೆ ಬಂದ. ಆಳು ಅವರ ಪಾತ್ರೆಗಳ, ಕಂಬಳಿ ಬಟ್ಟೆಗಳ ಚೀಲವನ್ನು ತಲೆಯಮೇಲೆ ಹೊತ್ತು ಮುಂದೆ ನಡೆದ. ತಮ್ಮ ಏಕತಾರಿ ಚಿಟಿಕೆಗಳನ್ನು ಹಿಡಿದು ಅಯ್ಯನವರು ನಡೆದರು. ತುಂಬ ಬಡವಾಗಿದ್ದುದರಿಂದ ಅವರ ಹಿಂದೆ ಹೋಗುತ್ತಿದ್ದ ವಿಶ್ವನ ಗುರುತು ಊರಿನಲ್ಲಿ ಯಾರಿಗೂ ಸಿಕ್ಕಲಿಲ್ಲ. ತಾವು ಈ ಊರು ಬಿಟ್ಟು ಹೋಗುತ್ತಿರುವುದನ್ನು ಅಯ್ಯನವರು ಯಾರಿಗೂ ಹೇಳಲಿಲ್ಲ. ಯಾಕೆ, ಏನು, ಎಂದು ಎಲ್ಲರೂ ಕೇಳುತ್ತಾರೆ. ಅವರಿಗೆ ಎಲ್ಲವನ್ನೂ ಹೇಗೆ ಬಿಡಿಸಿ ಹೇಳುವುದು? +ಕಂಬನಕೆರೆಯ ಕಡೆ ದಾರಿಯಲ್ಲಿ ನಡೆದು ಮೋಟಾರು ರಸ್ತೆ ತಲುಪಬೇಕು. ಆಳು ಸಾಮಾನು ಹೊತ್ತು ತುಂಬ ಮುಂದೆ ಹೋಗುತ್ತಿದ್ದ. ಅವನ ವೇಗದಲ್ಲಿ ನಡೆಯಲಾರದೆ ಅಯ್ಯನವರು ಹಿಂದೆ ಉಳಿದರು. ಅವರು ಕೈ ಹಿಡಿದುಕೊಂಡಿದ್ದರೂ ವಿಶ್ವ ಅಯ್ಯನವರಿಗಿಂತ ಹೆಚ್ಚು ಅಂತರ್ಮುಖಿಯಾಗಿ ಕತ್ತು ತಗ್ಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದ. ಇವರು ಊರು ಬಿಟ್ಟು ಒಂದು ಮೈಲಿ ಬಂದಿದ್ದರು. ದಾರಿಯ ಒಂದು ಮರದ ಕೆಳಗೆ ಒಂದು ಸಣ್ನ ರಾಗಿಯ ಗಂಟಿಗೆ ತಲೆ ಇಟ್ಟುಕೊಂಡು ಚೆನ್ನಿಗರಾಯರು ಮಲಗಿದ್ದರು. ಬಾಯಿ ತುಂಬ ಹೊಗೆಸೊಪ್ಪಿನ ರಸ ತುಂಬಿದ್ದ ಅವರು ಅಂಗಾತ ಮಲಗಿಯೇ, ಅದು ಕೆಳಗೆ ಸೋರದಂತೆ ತುಟಿಗಳನ್ನು ಸವಣಿಸಿಕೊಳ್ಳುತ್ತಿದ್ದರು. ಅವರನ್ನು ಅಯ್ಯನವರೂ ನೋದಿದರು. ಈ ಇಬ್ಬರ ಹೆಜ್ಜೆ ಸಪ್ಪಳದಿಂದ ತಿರುಗಿ ನೋದಿದ ಅವರು ಎದ್ದು ಕುಳಿತರು. ಅಯ್ಯನವರು ತಾವಾಗಿಯೇ ಅವರನ್ನು ಮಾತನಾಡಿಸಲಿಲ್ಲ. ಹತ್ತಿರವೇ ಇದ್ದ ಕಟ್ಟೆಯ ಹಿಂಭಾಗದಲ್ಲಿ ಗಂಗಮ್ಮ ನೀರಕಡೆಗೆ ಹೋಗಿರಬಹುದು. ಇನ್ನು ಅವಳು ಕಂಡರೆ-‘ನನ್ನ ಮಮ್ಮಗುನ್ನ ಎಲ್ಲಿಗೆ ಕರ್ಕಂಡ್‌ಹೋಗ್ತೀರಾ?’ ಅಂತ ಕೇಳಬಹುದು, ಎಂದು ಯೋಚಿಸಿದ ಅಯ್ಯನವರು ಬೇಗ ಬೇಗ ಹೆಜ್ಜೆ ಹಾಕಿದರು. ತಾವೇ ಮಾತನಾದಲು ಚೆನ್ನಿಗರಾಯರು ಬಾಯಿ ತುಂಬ ತಂಬುಲ ತುಂಬಿಕೊಂಡಿತ್ತು. +‘ನಮ್ಮಣ್ಣಲ್ವೇ?’- ವಿಶ್ವ ತಕ್ಷಣ ಕೇಳಿಬಿಟ್ಟ. ಚೆನ್ನಿಗರಾಯರಿಗೆ ಗುರುತು ಸಿಕ್ಕಿತು. ಏನೋ ಮಾತನಾದಬೇಕೆಂದು ಅವರ ಬಾಯಿ ಹವಣಿಸಿತು. ಆದರೆ, ಈಗ ತಾನೇ ರಸವನ್ನು ಒಸರಿಸುತ್ತಿದ್ದ ಹೊಗೆಸೊಪ್ಪನ್ನು ಉಗುಳಿಬಿಟ್ಟರೆ ಹತ್ತಿರ ಬೇರೆ ಒಂದು ಚೂರೂ ಇರಲಿಲ್ಲ. ಏನು ಮಾಡಬೇಕೆಂದು ಅವರು ನಿಶ್ಚಯಿಸುವಷ್ಟರಲ್ಲೇ ಅವರಿಬ್ಬರೂ ಮೂವತ್ತು ನಲವತ್ತು ಹೆಜ್ಜೆ ಮುಂದೆ ಹೋಗಿದ್ದರು. ವಿಶ್ವ ಹಿಂದೆ ಹಿಂದೆ ತಿರುಗಿ ನೋಡುತ್ತಿದ್ದ. +‘ಆ ಕಡೆ ನೋಡ್‌ಬ್ಯಾಡ, ಸುಮ್ನೆ ನಡಿ ಮರಿ’- ಅಯ್ಯನವರೆಂದರು. +ಬಾಯ ತಂಬುಲದ ರಸವನ್ನು ಉಗುಳುವುದು ಚೆನ್ನಿಗರಾಯರಿಗೆ ಆಗಲೇ ಇಲ್ಲ. ಆದುದರಿಂದ ಮಾತನಾಡುವುದು ಸಾಧ್ಯವಾಗಲಿಲ್ಲ. ಈ ಜಂಗಮಯ್ಯ ನನ್ನ ಕಂಡ್ರೂ ಮಾತಾಡುಸ್ದೆ ಹೋದ್ನಲಾ, ಅವ್ನು ಇನ್ನೊಂದ್ ಸಲಿ ಸಿಕ್ಲಿ, ಸರಿಯಾಗಿ ಕೇಳ್ತೀನಿ- ಎಂದು ಅವರ ಮನಸ್ಸು ಯೋಚಿಸುತ್ತಿತ್ತು. ಮುಂದೆ ಸಿಕ್ಕಿದ ದಿಬ್ಬವನ್ನು ಇಳಿದು ನದೆದಿದ್ದುದರಿಂದ ಅವರಿಬ್ಬರೂ ಅಷ್ಟರಲ್ಲಿ ಕಣ್ಮರೆಯಾಗಿ ಹೋಗಿದ್ದರು. +***** +ಮುಗಿಯಿತು +ಕೀಲಿಕರಣ: ಸೀತಾಶೇಖರ್ +ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […] +ಭವ ಕಾದಂಬರಿ ಮೊದಲು ಪ್ರಕಟವಾದದ್ದು ೧೯೯೪ ರಲ್ಲಿ. ಶ್ರೀ.ಯು.ಅರ್.ಅನಂತಮೂರ್ತಿಯವರ ಎಲ್ಲ ಕೃತಿಗಳನ್ನು ಪ್ರಕಟಿಸುವ ಹೆಗ್ಗೋಡಿನ ಅಕ್ಷರ ಪ್ರಕಾಶನ. ಒಟ್ಟು ೯೯ ಪುಟಗಳಿರುವ ಈ ಕಾದಂಬರಿಯ ಬೆಲೆ : ರೂ ೬೦.ಪ್ರತಿಗಳು ಬೇಕಾಗಿರುವವರು ಸಂಪರ್ಕಿಸಬೇಕಾದ ವಿಳಾಸ:ಅಕ್ಷರ […] +“ಅಲ್ಲವೆ, ಅಲ್ಲವೆ, ಅಲ್ಲವೆ…” ಎಂದು ಮಂಜಯ್ಯ ಒಪ್ಪಿ, “ಸ್ನಾನ ಮಾಡಿದ್ದೀರ, ಆಚಾರ್ಯರೆ?” ಎಂದು ಕೇಳಿದರು. ದಾಸಾಚಾರ್ಯನಿಗೆ ಮುಖ ಚಿರೋಟಿಯಗಲ ಹರಡಿ ಹರ್ಷವಾಯಿತು. “ಓಹೊ. ನದಿಯಲ್ಲಿ ಮಾಡಿಯೇ ಇತ್ತ ಬಂದೆ” ಎಂದ. “ಹಾಗಿದ್ದರೆ ಏನನ್ನಾದರೂ ತೆಗೆದುಕೊಳ್ಳಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_594.txt b/Kannada Sahitya/article_594.txt new file mode 100644 index 0000000000000000000000000000000000000000..b7b61d9017a8ff316930a88a4af8f6597e3767e2 --- /dev/null +++ b/Kannada Sahitya/article_594.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದಿಲ್ಲಿಯ ನೋಡಿರೇ, +ಬಾರಿನ ಏರಿಯ ಮೇಲೆ ಹಾರಿಹಾರಿ ಕುಣಿವ +ದಿಲ್ಲಿಯೆಂಬ ಕ್ಯಾಬರಿಯ ನೋಡಿರೇ, +ಭಾರತ ಭಾಗ್ಯವಿಧಾತನ +ಸೌಭಾಗ್ಯವತಿಯ ನೋಡಿರೇ, +ವಿದೇಶದ ದೀಬೆಸ್ಟಿನಿಂದ ವಮುದಿ +ಮುಚ್ಚಿಕೊಂಡು, ಹದಿ ಹರೆಯದ +ಬೆದೆ ಅಭಿನಯಿಸುವ +ಗೋಲಮಾಲಿಯ ನೋಡಿರೇ, +ಬೆಲೆಯುಳ್ಳ ನಕಲಿ ನಗೆಯನ್ನ +ವಿದೇಶೀ ವಿನಿಮಯದ ಸರಬರಾಜಿನಲ್ಲಿ +ಹರಾಜು ಮಾಡುವ +ಗಾಂಧೀ ಬಜಾರಿಯ ನೋಡಿರೇ, +ಜಗತ್ತಿನೆಲ್ಲ ಕೆಮರಾಗಳಿಗೆ +ಮೋಜಿನ ಪೋಜು ಕೊಟ್ಟು +ಪೋಲಿಕಥೆ ಪಾರ್ಟಿ ಜೋಕಿನಲ್ಲಿ +ತಾಜಾಬಿಸಿ ಮಾರುವ ಹೊಯ್ಮಾಲಿಯ ನೋಡಿರೇ, +ಗಾಯದಂಥ ಬಾಯಿ ತೆಗೆದು +ಹಾಯೆಂದು ಹಾಡುತ್ತ +ಹ್ಯಾಗೆಂದರೆ ಹಾಗೆ ತತ್ವ ಜಡಿಯುತ್ತ +ನಾಲಗೆಯ ರೀಲು ಬಿಡುತ್ತ +ಅತ್ತ ಸ್ಲಮ್ಮಿಗರಿಗೂ ಇತ್ತ ಬಿರ್‍ಲಾರಿಗೂ +ಕೈತಟ್ಟಿ ಅಂಗೈಯೊಳಗೆ, +ಒಬ್ಬೊಬ್ಬರಿಗೊಂದೊಂದು ಕೈಲಾಸ ತೋರುವ +ಬಾ ಚಾ ಬಜಂತ್ರಿಯ ನೋಡಿರೇ, +ನಕ್ಕರೆ ನಗುತ್ತ ಇಲ್ಲವೆ ಕುಣಿಯುತ್ತ +ಹಾಗಾದರೊಂದು ಪರಿ ಹೀಗಾದರೊಂದು ಪರಿ +ತುರಿಸಿ ಕೆರೆದದ್ದನ್ನ, ಲಾಗ ಹಾಕಿದ್ದನ್ನ +ಚರಿತ್ರೆ ಮಾಡುತ್ತ ಮೊಗಲಾಯಿ ದರ್ಬಾರು +ಮೆರೆವ ಮಾರಾಣಿಯ ನೋಡಿರೇ, +ಹೀಗೆಯೇ ಕುಣಿಯುತ್ತ ಕುಣಿಯುತ್ತ +ಪಿಟ್ಟೆನ್ನಿಸಿ ಕಟ್ಟಿದ ಕಾಚದ +ಸೊಂಟದ ಸೊನ್ನೆಯನ್ನೆತ್ತಿ +ಗಿ ಆಕಾರದಲ್ಲಿ ಕಾಲೆತ್ತಿ +‘ಖುಷಿಗಳ ಪ,ಪು ಮಾಡುತ್ತೇನೆ ಬಾ ರಾಜಾ +ಕಿಡಿ ತಾಗಿಸಿ ನೋಡು ಸಿಡಿಯುವ ಮಜಾ” +ಎಂದು ಕೂತವರ ಕರೆದರೆ, ಅರೆ ಅರೇ +ಎಲ್ಲರೂ ಸುಮ್ಮನಾಗಿದ್ದಾಗೊಬ್ಬ ಒರಟು ಆಸಾಮಿ +ಬಂದು ಉರಿವ ಸಿಗರೇಟನ್ನ ಹೊಕ್ಕುಳಲ್ಲೂರಿದರೆ, +ಹೊಟ್ಟೆ ಧಡಾರೆನೆ ಸಿಡಿದು, ಕರುಳು ಹೊರಬಂದು +ಒದ್ದಾಡುತ್ತಿದ್ದರೆ ಕೂತವರ್‍ಯಾರೂ ಸಮೀಪ ಬರದೆ +ನಾನು ಉಧೋ ಉಧೋ ತಾಯಿ ಭಾರತಾಂಬೀ ಎಂದು +ಕಿರುಚಿ ಅಳುತ್ತ ಹತ್ತು ರೂಪಾಯಿ ಕೊಡಹೋದರೆ +ಯಾರೋ ನನ್ನನ್ನೆತ್ತಿ +ಬಾರಿನಿಂದ ಹೊರಗೊಯ್ದರು- +ಅವಳ ಗತಿ ಏನಾಯ್ತು ನೋಡಿರೇ… +***** +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […] +ನಾನು, ಅವನು, ಮಳೆಯಲ್ಲಿ ನಿಂತಿದ್ದೇವೆ ಮೈಗೆ ಮೈ ಬೆಸೆದ ಅಂತರದಲ್ಲಿ ನೆನೆಯುತ್ತಾ ಅವನ ದೇಶದ ಕಾಡುಗಳನ್ನ. ಆಳೆತ್ತರ ಮರಗಳು ಅಲ್ಲಿ ಟೊಂಗೆ ಟೊಂಗೆಗಳಲ್ಲಿ ಗೂಡು ಕಟ್ಟಿದೆ ಪ್ರೀತಿ. ಮೆಲ್ಲಗೆ ನುಡಿಯುತ್ತಾನೆ, ‘ಅಲ್ಲೂ ಹೀಗೇ ಮಳೆ’. […] +ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_595.txt b/Kannada Sahitya/article_595.txt new file mode 100644 index 0000000000000000000000000000000000000000..862599292b632b53a22ec88a86bbf2a8bfd0bbda --- /dev/null +++ b/Kannada Sahitya/article_595.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು ಹೊದೆದು ಕುಳಿತಿದ್ದ ಶಾಸ್ತ್ರಿಗಳು ಕಾಫಿಯನ್ನು ಪಿಂಗಾಣಿಯ ಬಟ್ಟಲಿನಿಂದ ನಿಧಾನವಾಗಿ ಚುಂಬಿಸುತ್ತಾ ಆಸ್ವಾದಿಸುತ್ತಿದ್ದರು. ಶಾಮನೂ, ರಾಧಾಕೃಷ್ಣನೂ ಕಾಫಿಯನ್ನು ಕುಡಿದು ತಳದಲ್ಲಿದ್ದ ಗಸ್ಟನ್ನು ನಿರ್ವೇದದಿಂದ ಅವಲೋಕಿಸುತ್ತಿದ್ದರು. ನಾನೂ, ರಾಘವನೂ ಆಗತಾನೆ ಕುಡಿದು ಬಟ್ಟಲನ್ನು ಕೆಳಗಿಡುತ್ತಿದ್ದೆವು . ಪ್ರಾತಃಕಾಲ ಬಹಳ ತಂಪಾಗಿತ್ತು. ಅಗಸೆ ಮರದ ರೆಂಬೆಗಳ ಮೂಲಕ ಆಕಾಶವು ನಮ್ಮನ್ನು ಬೋನಿನ ಸಲಾಕೆಗಳ ನಡುವೆ ಕ್ಷುದ್ರಮೃಗಗಳನ್ನು ನೋಡುವಂತೆ ನೋಡುತ್ತಿತ್ತು. ನಾವೂ ಪ್ರತಿಯಾಗಿ ಅದನ್ನು ಅಷ್ಟೇ ಕುತೂಹಲದಿಂದ ದೃಷ್ಟಿಸುತ್ತಿದ್ದೆವು. ರಾಘವನೆಂದ, ” ಈ ದಿನ ಬಹಳ ಆನಂದವಾಗಿದೆ. ನಾವು ಇದೇ ರೀತಿ ಇಷ್ಟು ಶಾಂತಿ ತುಷ್ಟಿಗಳಿಂದ ಇರುಳಿನವರೆಗೂ ಇದ್ದುಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ” ಎಂದು. +ಶಾಸ್ತ್ರಿಗಳು ಇದನ್ನು ಕೇಳಿ ನಗುತ್ತಾ ಹಾಗಾದರೆ “ಕಾಲಪುರುಷನಿಗೆ ರಜ ಕೊಡಿಸಿಬಿಡಿ -ಆತ ಈವೊಂದು ದಿನವಾದರೂ ನಿದ್ದೆ ಹೋಗಲಿ” ಎಂದರು. +“ಯಾರನ್ನು ಕೇಳಿ ಯಾರಿಗೆ ರಜೆ ಕೊಡಿಸೋಣ? ಇದಕ್ಕೆ ಮದ್ದು ನಾವೇ ನಿದ್ದೆ ಹೋಗುವುದು” ಎಂದ ರಾಧಾಕೃಷ್ಣ. ನಾವೆಲ್ಲ ಅಂದು ಸಂಪೂರ್ಣವಾಗಿ ಎಚ್ಚೆತ್ತು ಹಗುರವಾಗಿದ್ದೆವು. ನಿದ್ದೆಯ ಮಾತು ಕೂಡ ನಮಗೆ ಅನಾರೋಗ್ಯದಂತೆ ಅನಿಷ್ಟವಾಗಿತ್ತು.ಅಂದು ನಾವು ಶಾಂತರು- ಶಾಂತರಲ್ಲ”ನೀನು ಜಡ- ಸೋಮಾರಿ, ನಿನ್ನ ಹಾಸಿಗೆಯನ್ನು ಇನ್ನೂ ಎತ್ತಿಯೇ ಇಲ್ಲ. ಬೇಕಾದರೆ ಮನೆಗೆ ಹೋಗಿ ಬಿದ್ದುಕೋ-ನಾವು ಕೂತೇ ಕಾಲವನ್ನು ಜಯಿಸುತ್ತೇವೆ” ಎಂದೆ ನಾನು. “ಕಾಲ ಅಜೇಯ,ಅವನನ್ನು ಜಯಿಸುವ ಮಾತೆಂತು” ಎಂದ ರಾಧಾಕೃಷ್ಣ. “ಆತ್ಮ ಅನಂತ, ನಾವು ಆತ್ಮವಂತರು,ಇಷ್ಟು ಸಾಕು-ನಮ್ಮನ್ನು ನೋಡಿ ಓಟ ಕೀಳುವುದಕ್ಕೆ”ಎಂದೆ ನಾನು. ಬರಿಮಾತು. ಶಬ್ದ, ಸದ್ದು -ಆತ್ಮವೆಂದರೇನೋ, ಕಾಲವೆಂದರೇನೋ, ಒಬ್ಬೊಬ್ಬರಿಗೆ ಒಂದೊಂದು ತಿಳಿವಳಿಕೆ ಈ ಶಬ್ದಗಳಿಂದ” ಎಂದ ಶಾಮ “ನಿಜವಾಗಿ ಕಾಲ ಎಂದರೇನು?”ಎಂದರು ಶಾಸ್ತ್ರಿಗಳು. ಹೀಗೆ ಆ ಪ್ರಾತಃಕಾಲ ನಾವು ಕಾಲದ ಚರ್ಚೆಯಿಂದ ಕಾಲಯಾಪನೆಗೆ ತೊಡಗಿದ್ದೆವು. +“ಶಿವನೆದೆಯ ಮೇಲೆ ಕಾಳಿ ಕುಣಿಯುತ್ತಾಳೆ. ಈ ತುಳಿತದಿಂದ ಕಾಲ ಹುಟ್ಟಿ ಹರಿಯುತ್ತದೆ.” ರಾಘವ ಈ ರೀತಿ ಹೇಳಲು , “ಶಿವ, ಕಾಳಿ ಇಬ್ಬರೂ ಇದ್ದರು ಎಂದಾಗಲೇ ಕಾಲವಿರಬೇಕಾಯಿತಲ್ಲ, ಕುಣಿತದಲ್ಲಿ ಕಾಲ ಹೇಗೆ ಹುಟ್ಟುತ್ತದೆ” ಎಂದು ಶಾಮ ಟೀಕಿಸಿದ. “ಹಾಗಲ್ಲ,ಹಾಗಲ್ಲ ಆಕೆ ಕುಣಿಯುವಾಗ ಹುಟ್ಟುತ್ತದೆ, ನಿಂತಾಗ ಅಳಿಯುತ್ತದೆ. ಸುಮ್ಮನಿದ್ದಾಗ ಯಾವುದೂ ಇಲ್ಲ.ಕಾಲ ಎನ್ನುವುದು ಶಿವ-ಶಕ್ತಿ ಜನ್ಯ ಶಕ್ತಿ” ಎಂದು ಮರು ನುಡಿದ ರಾಘವ. “ಓಹೋ, ಇವ ವಿಘ್ನರಾಜನಿಗೆ ಅಣ್ಣನೋ ತಮ್ಮನೋ ” ಎಂದು ಕಿರುನಗೆ ಬೀರಿದರು ಶಾಸ್ತ್ರಿಗಳು. “ಆತ ಅಣ್ಣ- ತಮ್ಮನನ್ನು ಒಲಿಸಿಕೊಳ್ಳದಿದ್ದರೆ ಅಣ್ಣ ನಡೆಯುವಂತೆಯೂ ಇಲ್ಲ” ಎಂದ ಶಾಮ. “ವಿಷ್ಣುವಿನ ಪಾದದಿಂದ ಗಂಗೆ ಹರಿದಂತೆ, ಕಾಳಿಯ ಕುಣಿತದಿಂದ ಮೃದುವಾದ ಶಿವನೆದೆಯಿಂದ ಕಾಲ ಹುಟ್ಟಿದರೆ, ದೇಶವೋ?” ಎಂದ ರಾಧಾಕೃಷ್ಣ. “ಆ ಕಲ್ಪನೆಯೇ ತಪ್ಪು, ಇದು ಸರಿ- ಅರ್ಧನಾರೀಶ್ವರ ಮೊದಲು ಢಮರು ಭಾರಿಸಿದ .ಒಂದುಗೂಟಿ ಗಾಢವಾಗಿದ್ದ ದಿಕ್ಕುಗಳೆಲ್ಲಾ ಆ ಶಬ್ದದ ನೋಕಿಗೆ ದೂರ ಸರಿದು, ತಂತಮ್ಮ ಜಾಗಗಳಲ್ಲಿ ನಿಂತವು. ಆ ಶಬ್ದದಿಂದಲೇ ಮೋದಗೊಂಡು ಆತ ಕಾಲನ್ನೆತ್ತಿ ಕುಣಿದ. ಕಾಲಿನ ತಾಳವೇ ಕಾಲ ಎನ್ನಿಸಿಕೊಂಡಿತು. ಡಮರು ನಿಂತರೆ ದೇಶವಳಿಯಾಗುತ್ತದೆ. ಹೀಗೆ ಡಮರುವಿನ ನಾದವೂ, ಕಾಲಿನ ತಾನವೂ ಹೊಂದಿಕೊಂಡು ನಡೆಯಬೇಕು. ಒಂದಿಲ್ಲದೆ ಇನ್ನೊಂದಿಲ್ಲ. ದೇಶ, ಕಾಲ ಇವೆರಡೂ ಪರಸ್ಪರ ಹೆಣೆದುಕೊಂಡು ಗಂಟು ಗಂಟಾಗುವುದೇ ಸೃಷ್ಟಿ” ಎಂದ ಶಾಮ. “ದಿಟ, ದಿಟ ಕಲ್ಪನೆ ಸುಂದರವಾಗಿದೆ, ಕೆಲವು ಗಂಟುಗಳು ಗೋಜಿಕೊಂಡಿವೆ, ಕೆಲವುಸರಳವಾಗಿವೆ, ಗೋಜಿಕೊಂಡಿರುವುದು ಅಸುಂದರ ಗಹನ, ಗೋಜಿಕೊಳ್ಳದಿರುವ ಗ್ರಂಥಿಯೇ ಸರಳ ಸುಂದರ” ಎಂದರು ಶಾಸ್ತ್ರಿಗಳು. +ಶಾಸ್ತ್ರಿಗಳು ಒಂದು ತೆರೆದ ಮನುಷ್ಯ. ಯಾವಾಗಲೂ ತರ್ಕ ನಮ್ಮದು, ಸಿಧ್ಧಾಂತ ಅವರದು. ಯಾವ ಸಿಧ್ಧಾಂತದಲ್ಲೂ ನಂಬಿಕೆಯಿಲ್ಲ. ಲೋಕ ಉಂಟೇ, ಉಂಟು. ಇಲ್ಲವೇ,ಇಲ್ಲ. ಸರ್ಪವೋ, ರಜ್ಜುವೋ, ಯಾವುದು ದಿಟ,ಎರಡೂ ದಿಟ. ಏಕೆಂದರೆ ಎರಡೂ ಅನಿತ್ಯ. ಎಲ್ಲ ಸತ್ಯವೂ ಕಾಲ ದೇಶಕ್ಕಂಟಿಕೊಂಡಿದೆ. ಕಾಲ ದೇಶವೋ, ಅರ್ಧ ನಾರೀಶ್ವರನ ನೃತ್ಯದಿಂದಲೂ, ಢಮರುವಿನ ಶಬ್ದದಿಂದಲೂ, ಹೊರಡುತ್ತಾ, ಹರಡುತ್ತಾ ಹೆಣೆದುಕೊಳ್ಳುತ್ತಿದೆ, ಬಿಚ್ಚಿಕೊಳ್ಳುತ್ತಿದೆ. ಸೃಷ್ಟಿಯೆಲ್ಲಾ ಈ ಹಾಸುಹೊಕ್ಕಿನ ಗಂಟುಗಂಟೇ. ಆದರೆ ಈ ಕುಣಿತಕ್ಕೆ ಮೂಲ, ಅರ್ಧ ಗಂಡು – ಅರ್ಧ ಹೆಣ್ಣು. ಕಾಲು ತಪ್ಪಿ ಲಯ ಕೆಡುವುದು ಸಹಜ. ಅಗ ಸೃಷ್ಟಿ ಗೋಜಿಕೊಳ್ಳುತ್ತದೆ-ಎಂದು ನಗುವುದಕ್ಕೆ ಮೊದಲಿಟ್ಟರು ಶಾಸ್ತ್ರಿಗಳು. ನಗುವುದಾತಂಕ.ಅದರ ಮುಂದೆ ಎಂಥವರ ಬುಧ್ಧಿಯೂ ಕುಂಠಿತವಾಗುತ್ತದೆ. ಅದರಷ್ಟು ಸಾಂಕ್ರಾಮಿಕ ಮತ್ತೊಂದಿಲ್ಲ, ನಾವೆಲ್ಲರೂ ನಗುವುದಕ್ಕೆ ಪ್ರಾರಂಭಿಸಿದೆವು. +ಅಷ್ಟು ಹೊತ್ತಿಗೆ, ನಮ್ಮ ಅಶ್ವತ್ಥ ನಮ್ಮನ್ನು ಹುಡುಕಿಕೊಂಡು ಶಾಸ್ತ್ರಿಗಳ ಮನೆಗೆ ಬರುತ್ತಿದ್ದ. ಅವನದು ಷಹರು- ನಮ್ಮದು ಬರಿ ಊರು. ನಮ್ಮೂರಿಗೂ ಅವನ ಪಟ್ಟಣಕ್ಕೂ ರೈಲಿನಲ್ಲಿ ಒಂದೂವರೆ ಗಂಟೆಯ ಕಾಲದ ಪ್ರಯಾಣ. ಅವನು ಬರುವ ನಿರೀಕ್ಷಣೆಯೇನೋ ನನಗಿತ್ತು. ಆದರೆ ದಿನ ಗೊತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆಯೇ ಅಶ್ವತ್ಥ ನಮ್ಮೂರಿಗೆ ಬರುವುದು ಪದ್ಧತಿ. ಅವನಿಗೆ ಅಭ್ಯಾಗತನಾಗುವುದಕ್ಕಿಂತ ಅತಿಥಿಯಾಗುವುದಕ್ಕೇ ಆಸೆ; ಅತಿಥಿ ಸ್ವತಂತ್ರ-ಅಭ್ಯಾಗತ ಪರತಂತ್ರ. ಆತ ಎಲ್ಲಿಂದಲೋ ತನ್ನೂರಿಗೆ ಹಿಂತಿರುಗುವಾಗ ದಾರಿಯಲ್ಲಿ ಇಲ್ಲಿ ತಂಗಿರಬೇಕು ಎಂದುಕೊಂಡೆ. ಅ ವೇಳೆಗೆ ಅವನೂರಿನಿಂದ ಬರುವ ಗಾಡಿ ಯಾವುದೂ ಇಲ್ಲ. ಆ ಊರಿಗೆ ಹೋಗುವ ಗಾಡಿಯ ವೇಳೆ ಇದು; ಆತ ಆಗತಾನೆ ರೈಲಿಳಿದು, ಗಂಟನ್ನು ನಮ್ಮಮನೆಯಲ್ಲಿ ಹಾಕಿ, ನಾವಿಲ್ಲಿರುವುದನ್ನು ತಿಳಿದು ಇಲ್ಲಿಗೇ ನೆಟ್ಟಗೆ ಬರುತ್ತಿದ್ದ. ಅಶ್ವತ್ಥ ಆರೋಗ್ಯಭಾಗ್ಯಶಾಲಿ. ಆದರೆ ಅದರ ಅರಿವು ಅವನಿಗಿಲ್ಲ. ನೋಡಿದವರಿಗೆ ತಾನು ಸುಖವಾಗಿಯೂ ಸಂತೋಷವಾಗಿಯೂ ಇರುತ್ತೇನೆ ಎಂಬ ಭಾವನೆ ಬಂದರೆ, ಎಲ್ಲಿ ತನ್ನ ಆರೋಗ್ಯಕ್ಕೂ, ಸೌಖ್ಯಕ್ಕೂ ದೃಷ್ಟಿ ತಾಗಿದಂತಾಗುತ್ತದೆಯೋ ಎಂದು ಆತ ಭಾಗ್ಯಗಳನ್ನು ಒಂದು ತೆರೆದ ಸುಯ್ಯಲಿನಿಂದ ಮರೆಸಲು ಪ್ರಯತ್ನಿಸುತ್ತಾನೆ- ಲೋಭಿ ತನ್ನೈಶ್ವರ್ಯ ಅಂತಃಸುಖವನ್ನು ಹೊರಗಿನ ಕಾರ್ಪಣ್ಯದಿಂದ ಮರೆಸಿಡುವಂತೆ. ಶಾಸ್ತ್ರಿಗಳು ಅದಕ್ಕೋಸ್ಕರ ಅಶ್ವತ್ಥನನ್ನು ಅವನ ಬೆನ್ನ ಹಿಂದೆ ಅಶ್ವತ್ಥ ಎನ್ನುತ್ತಾರೆ. ಅಶ್ವತ್ಥನನ್ನು ನೋಡಿ ನಾನು ಆಶ್ಚರ್ಯವನ್ನು ತೋರಿ, ಸ್ವಾಗತ ಸ್ಮಿತವನ್ನು ಬೀರಿದೆ. ಮಿಕ್ಕವರು ” ಹೋ ಬನ್ನಿ, ಬನ್ನಿ ” ಎಂದು ಉದ್ಗಾರ ತೆಗೆದರು. ಅಶ್ವತ್ಥ ಬಂದು ಕುಳಿತುಕೊಂಡ ಮೇಲೆ ಶಾಸ್ತ್ರಿಗಳು,ನನ್ನ ಕಡೆಗೆ ಕಿರುನಗೆ ಬೀರುತ್ತಾ” ಏನು ಅಶ್ವತ್ಥಯ್ಯನವರೇ, ಎಂದು ಬಂದಿದ್ದು, ಆರೋಗ್ಯವೇ” ಎಂದರು. +“ನೀವು ನೋಡುವ ಹಾಗೆ ಇದೋ ಈಗ ತಾನೆ ಬಂದೆ.ಏನೋ ಹೀಗಿದ್ದೀನಿ, ನೀವೆಲ್ಲ ಆರೋಗ್ಯ ತಾನೆ” ಎಂದ ಅಶ್ವತ್ಥ. +“ಎಲ್ಲಾ ಆರೋಗ್ಯ. ಒಳ್ಳೆಯ ಸಮಯಕ್ಕೆ ಬಂದಿರಿ. ಲೇ, ರುಕ್ಮಿಣಿ, ಅಶ್ವತ್ಥ ಮಾವನಿಗೆ ಒಂದು ಬಟ್ಟಲು ಕಾಫಿ ತಂದುಕೊಡು ” ಎಂದರು ಶಾಸ್ತ್ರಿಗಳು. +“ಏನು ಅಂಥ ಒಳ್ಳೆ ಸಮಯ, ಅಷ್ಟು ಕಾಕು ಹಾಕುತ್ತಿದ್ದೀರಲ್ಲಾ, ಏನು ಸಮಾಚಾರ? ಎಂದ ಅಶ್ವತ್ಥ. +“ನಾವು ಕಾಲ ಎಂದರೆ ಏನು ಎಂದು ತರ್ಕ ಮಾಡುತ್ತಿದ್ದೆವು,ಬಗೆ ಹರಿಯಲಿಲ್ಲ. ನಿಮ್ಮ ಸಲಹೆ ಬೇಕಾಗಿದೆ, ಈ ವಿಚಾರದಲ್ಲಿ. ಅದರ ರಹಸ್ಯ ನಿಮ್ಮಿಂದಲೇ ಬಯಲಾಗಬೇಕಾದದ್ದು” ಎಂದರು ಶಾಸ್ತ್ರಿಗಳು. +“ಒಳ್ಳೆಯ ವಿಚಾರ, ಒಳ್ಳೆಯ ಪ್ರಶ್ನೆ. ಅದರ ಮಾತು ಬಿಡಿ. ಅದೊಂದು ಹಾಳು! ನನಗೆ ಎಂಥ ಕಸರತ್ತು ಮಾಡಿಸಿತು, ನಿನ್ನೆಯ ದಿನ ಅದು. ಅದು ಅಲಾರಂ ಗಡಿಯಾರ, ಅದು ಮಿಲ್ಲಿನ ಕೊಂಯ್ ಕೊಳವೆ, ಅದು ದುರ್ಲಭ ಜಟಕಾಗಾಡಿ, ಅದು ಬಸ್ಸು, ಅದು ರೈಲು, ಅದು ಆ ಹೆಣ್ಣು- ಆ ಗಂಡು: ನಿನ್ನೆಯ ದಿನ ಅದರ ಮೇಲೆ ನನ್ನ ಯುಧ್ದ, ರಾಮ ರಾವಣರ ಯುಧ್ಧಕ್ಕೂ ಮಿಗಿಲು. ಸುಖವಾಗಿರಬೇಕಾಗಿದ್ದರೆ ಎರಡೇ ದಾರಿ ಅದನ್ನು ಗೆಲ್ಲಬೇಕು-ಯೂರೋಪಿನವರ ಹಾಗೆ – ಇಲ್ಲ ಅದನ್ನು ಅಲಕ್ಷ್ಯದಲ್ಲಿಡಬೇಕು-ನಮ್ಮ ಪೂರ್‍ವೀಕರ ಹಾಗೆ” ಎಂದ ಅಶ್ವಥ್ಥ. +“ಅದೆಂಥ ಯುಧ್ಧವಪ್ಪ ಇದು, ಕಾಲದ ಮೇಲೆ ನಿಮ್ಮದು” ಎಂದ ರಾಧಾಕೃಷ್ಣ. ರಾಧಾಕೃಷ್ಣನಿಗೂ, ಅಶ್ವತ್ಥನಿಗೂ ಒಂದು ತೆರೆದ ಮಮತೆ. ಅಶ್ವತ್ಥಯ್ಯ ಏನೆಂದರೂ ಸರಿಯೆ ಅದಕ್ಕೆ ರಾಧಾಕೃಷ್ಣ ನಗುತ್ತಾನೆ,ಒಬ್ಬನಿಂದ ಒಬ್ಬನಿಗೆ ಸ್ಪೂರ್ತಿ.ಇದು ಪರಸ್ಪರವಾಗಿ, ಇವರಿಬ್ಬರೂ ಸೇರಿದಾಗ ನಮ್ಮ ಕೂಟಕ್ಕೆ ಬಹಳ ಕಳೆ ಬರುತ್ತದೆ. ಮಾತೆಲ್ಲ ಅಶ್ವತ್ಥನದೇ. ಅವನಿರುವಾಗ ಬೇರೆಯವರು ಉಸಿರೆತ್ತುವುದಕ್ಕೂ ದಾರಿಯಿಲ್ಲ. ಮಾತಾಡುತ್ತಿರುವಾಗ ಆತನ ಮಾತನ್ನು ಕೇಳಿ ನಲಿಯಬಹುದು; ಇಲ್ಲದೇ ಹೋದರೆ ಆತನ ಅಭಿನಯಕ್ಕೆ ನಾವು ತಲೆದೂಗಬಹುದು. ತಲೆ ಜುಟ್ಟು ಬಿಚ್ಚಿಹೋಗುತ್ತದೆ. ಮುಂದುಗಡೆ ಮೇಜು ಇದ್ದರೆ, ಆತನ ಅಂಗೈ ತಾಳಕ್ಕೆ ಅದು ಗಡಗಡನೆ ನಡುಗುತ್ತಿರುತ್ತದೆ.(ಅದರ ಮೇಲೆ ಕಾಫಿ ಬಟ್ಟಲು ಇಲ್ಲದೇ ಇದ್ದರೇನೇ ಒಳ್ಳೆಯದು) ಅವನ ಕೈಗಳು ಗಾಳಿಯಲ್ಲಿ ಸಿಕ್ಕಿದ ಮರದ ರೆಂಬೆಗಳಂತೆ ಕುಣಿದಾಡುತ್ತಿರುತ್ತವೆ. ಆ ಸ್ವಾರಸ್ಯವಾದ ಮಾತುಗಳ ನೊರೆಯಂತೆ ಆತನ ನಗೆ ಗಳಿಗೆಗೊಮ್ಮೆ ಚಿಮ್ಮಿ ತೇಲುತ್ತದೆ. ನಮ್ಮ ಅಶ್ವತ್ಥ ಬಹು ಸರಸಿ, ರಸಿಕ. ಮಧ್ಯೆ ಮಧ್ಯೆ ಈ ನಗೆ ಮಾತನ್ನು ನಿಲ್ಲಿಸಿ, ‘ ಸಾಕಪ್ಪಾ ನನಗೆ ಸುಸ್ತು ಸಂಕಟ, ನಿಮಗೇನು ಹೇಳಿ, ಏಕೋ ನೋಡು ನಿನ್ನೆಯೆಲ್ಲಾ ನಿದ್ದೆಯೇ ಬರಲಿಲ್ಲ, ಅನ್ನ ಸ್ವಲ್ಪವೂ ಸೇರಲಿಲ್ಲ ’ ಎನ್ನುವಾಗ, ಈ ವಿಷ್ಕಂಭವೂ ಬಹು ಮುದ್ದಾಗುತ್ತದೆ. +ಈ ದಿನ ಅಶ್ವತ್ಥ, ತಾನು ಕಾಲದ ಮೇಲೆ ಮಾಡಿದ ಯುಧ್ಧವನ್ನು ವರ್ಣಿಸುವುದಕ್ಕೆ ಅಣಿಯಾದ. ರುಕ್ಮಿಣಿ (ಶಾಸ್ತ್ರಿಗಳ ಮಗಳು) ಕಾಫಿಯನ್ನು ತಂದುಕೊಟ್ಟಳು. ಅದನ್ನು ಕುಡಿದು, ಉಸ್ಸಪ್ಪಾ, ಬದುಕಿದೆ ಎಂದುಕೊಂಡು ಈ ತೆರೆದ ವರ್ಣನೆಗೆ ಪ್ರಾರಂಭಿಸಿದ. +“ಅದನ್ನು ಕೆಣಕಿದರೆ, ನಾವು ಬಹು ಜಾಗರೂಕರಾಗಿದ್ದುಕೊಂಡು ಗೆಲ್ಲಬೇಕು. ಇಲ್ಲದೇಹೋದರೆ ಅದನ್ನು ಲೆಕ್ಕಿಸಲೇಬಾರದು. ನಿನ್ನೆಯ ಗಂಟೆ ರೈಲಿನಲ್ಲಿ ಕುಳಿತು ಇಲ್ಲಿಗೆ ಬರಬೇಕೆಂದು ಮೊನ್ನೆ ಸಂಕಲ್ಪ ಮಾಡಿಕೊಂಡೆ. ಆದರೆ ಕಾಲ ನನ್ನ ಈ ನಿರ್ಧಾರವನ್ನು ಕಂಡು, ‘ನನ್ನ ಮೇಲೆ ತೊಡೆ ತಟ್ಟುತ್ತೀಯಾ’ ಎಂದಿತು: ನಾನು ಎದೆಗೆಡದೆ ಹ್ಞೂ ಎಂದೆ.‘ಅಲಾರಂ ಇಡಬೇಡ’ ಎಂದು ನಿದ್ದೆ ನನ್ನನ್ನು ಗೋಗರೆದುಕೊಂಡಿತು. ಕಾಲ ನನ್ನ ಕಡೆ ಇರುವ ಹಾಗೆ ‘ಅದರ ಮಾತು ಕೇಳಬೇಡ- ಇಡು’ ಎಂದಿತು. ನಾನು ಐದು ಗಂಟೆಗೇ ಅಲಾರಂ ಇಟ್ಟೆ. ಕೊಕ್ಕಾಟದಲ್ಲಿ ಕೊಕ್ ಕೊಡುವ ಹಾಗೆ ನಿದ್ದೆಗೇನೋ ಅಲಾರಂ ಸರಿಯಾಗಿ ಐದು ಗಂಟೆಗೇ ಕೊಕ್ಕೊಟ್ಟಿತು. ನನಗೂ ಎಚ್ಚರವಾಯಿತು. ಆದರೆ ಹೊರಗಡೆ ಇನ್ನೂ ಕತ್ತಲು. ಕನಸು ಬೇರೆ ಚೆನ್ನಾಗಿತ್ತು. ಅದರಲ್ಲಿ ಸುಳಿದುಹೋದವಳ ಕಣ್ಣು ಹೊಳಪನ್ನು ಇನ್ನೆಲ್ಲಿ ಕಾಣಬೇಕು, ತಿರುಗಿ ಅದೇ ಕನಸು ಬರಲೆಂದು ಕಣ್ಣು ಮುಚ್ಚಿಕೊಂಡೆ, ಬಸವನಿಗೆ ಕೆಂಪು ಶಾಲನ್ನು ತೋರಿಸುವಂತೆ, ಕಾಲ ನನಗೆ ಏಳು ಏಳು ಹೊತ್ತಾಯಿತು ಎನ್ನುತ್ತಲೇ ಇತ್ತು. ಆದರೆ ಅದೆಲ್ಲಾ ಬರಿಯ ಬೂಟಾಟಿಕೆ. ನನಗೆ ರೈಲು ತಪ್ಪಿಸಿ ಕಾಡಬೇಕೆಂದೇ ಅದಕ್ಕೆ ಆಸೆ. ನಾನು ಎದ್ದೆ. ಆಗ ಆರು ಗಂಟೆ. ಶೌಚಾಹಾರ ತೀರಿಸಿಕೊಂಡು, ಆಕೆ ಗೊಣಗುಟ್ಟುತ್ತಾ ಮಾಡಿಕೊಟ್ಟ ಕಾಪಿಯನ್ನು ಕುಡಿದು, ಕೆಳಗೆ ಬಟ್ಟಲಿಡುವ ಹೊತ್ತಿಗೆ ಆರೂವರೆ. ಅವಸರವರಸರವಾಗಿ ಹೊರಕ್ಕೆ ಹೊರಟೆ. +ಸಣ್ಣ ಗಂಟೊಂದು, ಆ ಮೇಲೆ ಈ ಛತ್ರಿ ಎರಡೇ ನನ್ನ ಸಾಮಾನು. ಹೊತ್ತೆತ್ತೋ ಆಗಿಹೋಯಿತು.ಜಟಕಾ ಸ್ಟಾಂಡಿನಲ್ಲಿ ಒಂದು ಜಟಕವೂ ಇಲ್ಲ. ಬಸ್ಸನ್ನಾದರೂ ಹಿಡಿಯೋಣ ಎಂದುಕೊಂಡು ಜೋರು ಜೋರಾಗಿ ನಡೆದೆ. ಬಸ್ ಸ್ಟಾಂಡಿರುವುದು ನಮ್ಮ ಮನೆಗೆ ಅರ್ಧ ಮೈಲಿ ದೂರ. ಬೆಳಕು ಹರಿಯುತ್ತಾ ಬರುತ್ತಿತ್ತು. ಯಾರೂ ಕಾಣದೆ ನಿರ್ಜನವಾಗಿರುವ ರಸ್ತೆಯಲ್ಲಿ ಸ್ವಲ್ಪದೂರ ಓಡಿಯೂ ಓಡಿದೆ. ಮಿಲ್ಲುಗಳು ಕೊಂಯ್ ಎಂದವು. ಅದು ಕಾಲದ ತುತ್ತೂರಿ. ನನ್ನ ಚಪ್ಪಲಿಗಳು ವೇಗವನ್ನು ತಪ್ಪಿಸುತ್ತಿವೆ ಎಂದು ಅವೆರಡನ್ನೂ ಬಲಗೈಯಲ್ಲಿ ಹಿಡಿದುಕೊಂಡೆ. ಛತ್ರಿಯೂ, ಗಂಟೂ ಎಡಗೈಯಲ್ಲಿ. ಬಿಚ್ಚಿಹೋದ ತಲೆ ಕೂದಲನ್ನು ಕಟ್ಟಿಕೊಳ್ಳುವುದಕ್ಕೂ ಆಸ್ಪದವಿಲ್ಲ.ನನಗೋ ಮೇಲುಸಿರು. ನಿಂತರೆ ತೊಡೆ ನಡುಗುವಷ್ಟು ನಿಶ್ಯಕ್ತಿ. ದೂರದಲ್ಲಿ ಬಸ್ಸು ಧ್ವನಿ ಮಾಡುತ್ತಿದೆ. ಕಾಲ ಕಾಮರೂಪಿ. ಈಗ ಅದು ಬಸ್ಸಿನ ಅವತಾರವನ್ನು ತಾಳಿ, ನನಗೆ ‘ ಓ ಬಾ ಹಿಡಿ’ ಎನ್ನುತ್ತಿದೆ. ನಾನು ಈ ಪೈಶಾಚಿ ವೇಷದಲ್ಲಿಯೇ, ಆವೇಶ ಬಂದವನಂತೆ ‘ಸ್ಟಾಪ್ ಸ್ಟಾಪ್ ಎಂದು ಕಿರುಚುತ್ತ, ಎಕ್ಕಡಗಳನ್ನೂ ಛತ್ರಿ, ಗಂಟುಗಳನ್ನೂ ಝಳಪಿಸುತ್ತಾ ನಿಲ್ದಾಣಕ್ಕೆ ಓಡಿದೆ. ಹತ್ತು ಮಾರು ದೂರದಲ್ಲಿರುವಾಗಲೇ ಬಸ್ಸು ಹೊರಟುಬಿಟ್ಟಿತು. ನಾನು ಸುಸ್ತಾಗಿಯೂ, ನಿರಾಶನಾಗಿಯೂ ಅದರ ಹತ್ತಿರದಲ್ಲಿದ್ದ ಸೈಕಲ್ಲಿನ ಕಾಂಪೌಂಡು ಗೋಡೆಯ ಮೇಲೆ ಕುಳಿತು, ಕೈ ಬಿಡುವು ಮಾಡಿಕೊಂಡು ಜುಟ್ಟು ಗಂಟು ಹಾಕಿದೆ. +ಆದರೆ ಆಸೆ ಸಾಮಾನ್ಯವಾಗಿ ಸಾಯುವುದಿಲ್ಲ. ನನ್ನ ಗಡಿಯಾರ ಆಗ ಏಳೂ ಹತ್ತು ಎನ್ನುತ್ತಿತ್ತು. ದೂರದಲ್ಲಿ ಮತ್ತೊಂದು ಬಸ್ಸು ಬರುತ್ತಿತ್ತು. ಏಳೂ ಕಾಲಿಗೆ ಅದನ್ನು ಹತ್ತಿ ಕುಳಿತುಕೊಂಡೆ. ಅದು ಹೊರಡುವುದಕ್ಕೆ ಎಷ್ಟು ವಿಘ್ನಗಳು, ಎಷ್ಟು ಸಲ ಮದ್ಯದಲ್ಲಿ ಅದು ನಿಲ್ಲಬೇಕು. ಈ ಜನಗಳೆಲ್ಲಾ ಕಾಲದ ವಿಕಟಾವತಾರಗಳೇ- ಎಲ್ಲ ವಿಘ್ನಕಾರಿಗಳು. ಅದರೊಡನೆ ನಾವಾಡುತ್ತಿರುವ ಈ ಕುಸ್ತಿಯಲ್ಲಿ ನನಗೆ ಜಯ ಬಯಸುವವರೊಬ್ಬರೂ ಇಲ್ಲ. ಏಳೂವರೆಗೆ ರೈಲ್ವೆ ಸ್ಟೇಷನ್ ತಲುಪಿದೆ. ಟಿಕೇಟು ಕೊಡುವ ಜಾಗದಲ್ಲಿ ಜನವೇ ಇಲ್ಲ. ಆದರೆ ಕಿಟಕಿ ಬಾಗಿಲು ಮುಚ್ಚಿರಲಿಲ್ಲ. ಆ ದಿನ ರೈಲು ಸ್ವಲ್ಪ ತಡವಾಗಿ ಹೊರಡುತ್ತದೆ ಎಂಬ ಸಮಾಚಾರವನ್ನು ಟಿಕೇಟು ಮಾರುವವನ ಹತ್ತಿರ ತಿಳಿದುಕೊಂಡೆ. ನನ್ನ ಜೇಬಿನಲ್ಲಿ ಚಿಲ್ಲರೆ ಇಲ್ಲ. ನನ್ನ ಅವಸರ ಅವನಿಗೆ ಗೊತ್ತು.ಅವನು ಚಿಲ್ಲರೆ ಇಲ್ಲವೆಂದು ತಡಕಾಡುತ್ತಿದ್ದ. ನಾನು ಚಿಲ್ಲರೆಯನ್ನು ಅಲ್ಲೆ ಬಿಟ್ಟು ಸ್ಟೇಷನೊಳಕ್ಕೆ ಓಡಿದೆ. ಪುಣ್ಯಕ್ಕೆ ರೈಲು ನಿಂತಿತ್ತು.ಕೂಗಿಕೊಳ್ಳುತ್ತಿತ್ತು. ಅದರ ಕೊಳವೆಯಿಂದ ತಿಮಿಂಗಿಲದ ಉಸಿರಿನಂತೆ ಆವಿ ಸಶಬ್ದವಾಗಿ ಏಳುತ್ತಿತ್ತು. ಗಾರ್ಡು ತುಟಿಗೆ ಶಿಲ್ಪಿ ಸಿಕ್ಕಿಸಿಕೊಂಡು ಓಡಿಯಾಡುತ್ತಿದ್ದ. ಕಾಲದ ಪರಿಪೂರ್ಣಾವತಾರ ಈ ರೈಲು ಪೆಡಂಭೂತ. ಇದರ ಗರ್ಭದಲ್ಲಿ ನಾನು ಹೋಗಿ ಕುಳಿತೆ. ಜೈ ಎಂದೆ. ಆ ಗಾಡಿಯಲ್ಲಿ ಹತ್ತು ಮಂದಿ ಹಾಯಾಗಿ ಕೂರಬಹುದು. ಅಲ್ಲಿದ್ದವರು ಐವರು. ಕೊನೆಯ ಗಾಡಿ. ಗಲಾಟೆ ಇರಲಿಲ್ಲ, ನನ್ನ ಪುಣ್ಯಕ್ಕೆ. +ನಾನು ಕುಳಿತುಕೊಳ್ಳುವಷ್ಟರಲ್ಲಿ ಓಡಿ ಬಂದರಯ್ಯಾ, ಮತ್ತೆ ಮೂವರು. ಹುಡುಗಿ ಒಬ್ಬಳು -ಬಲಿತ ಹುಡುಗಿ, ಒಬ್ಬ ಗಂಡಸು, ಒಬ್ಬ ಹುಡುಗ. ಆಕೆ ಹೇಗೆ ಓಡಿ ಬಂದಳಯ್ಯಾ, ಎಂಥ ಗೆಲುವಿತ್ತು ಆ ಕಾಲುಗಳಲ್ಲಿ. ಒಳ್ಳೆ ನಾಜೂಕಾದ ಹುಡುಗಿ. ಗಂಡು ಬೀರಿಯಲ್ಲ.ನಾನು ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ಛಂಗನೆ ಆಕೆ ಗಾಡಿಗೆ ಹತ್ತಿದಳು.ಅವಳ ಹಿಂದೆ ಆ ಹುಡುಗ, ಅವನ ಹಿಂದೆ ಆ ಗಂಡಸು. ಆಮೇಲೆ ಗಂಟನ್ನು ಹೊತ್ತುಕೊಂಡು ಬರುತ್ತಿದ್ದ ಕೂಲಿಯಾಳು. ಒಂದು ಕ್ಷಣದಲ್ಲಿ ಎಲ್ಲರೂ ಒಳಕ್ಕೆ ಬಂದರು. ಕೂಲಿ ಇಳಿದ ತಕ್ಷಣ ರೈಲು ಹೊರಟಿತು. ಕೂಲಿ ನಾಕಾಣೆ ಕೇಳಿದ. ಗಂಡಸು ತಕ್ಷಣ ಕೊಟ್ಟುಬಿಟ್ಟ. ರೈಲು ಹೊರಟ ಮೇಲೆ ನಾನು ನಿಧಾನವಾಗಿ ಉಸಿರಾಡುತ್ತಾ ಕೊನೆಗೂ ನಾನೇ ಗೆದ್ದೆ ಎಂದುಕೊಂಡೆ. ಅದು ಸ್ಟೇಷನ್ನು ಬಿಡುವ ಹೊತ್ತಿಗೆ, ಈ ಆಗಂತಕರೂ, ಸ್ವಸ್ಥವಾಗಿ ನನ್ನ ಬಲ ಪಕ್ಕಕ್ಕಿದ್ದ ಮೂರು- ನಾಲ್ಕು ಜನ ಕೂರುವಂಥಾ ಸೀಟಿನಲ್ಲಿ ಕುಳಿತುಕೊಂಡರು. ಆ ಹುಡುಗಿ ನನಗೆ ಹತ್ತಿರವಾಗಿ, ಆಮೇಲೆ ಆ ಹುಡುಗ ಅವನ ಮಗ್ಗುಲಲ್ಲಿ ಅ ಗಂಡಸು. ಆಕೆಯ ಮುಖ ಬೆವತಿತ್ತು. ಕುಂಕುಮ ಹರಡಿತ್ತು. ಕುರುಳು ಮುಖಕ್ಕೆ ಅಂಟಿಕೊಂಡು ಅಚಂಚಲವಾಗಿತ್ತು. ಕೆನ್ನೆ ಕೆಂಪಾಗಿತ್ತು. ಆಕೆ ಬುಲಾಕನ್ನು ತೊಟ್ಟುಕೊಂಡಿದ್ದಳು. ಈ ಆಭರಣವನ್ನು ಅಲ್ಲಗಳೆಯುವವರ ಮೌಢ್ಯಕ್ಕೆ ನಾವು ಏನು ಹೇಳೋಣ. ಆ ಬುಲಾಕಿನ ಮುತ್ತು ಆಕೆ ನಕ್ಕಾಗ ಬೆಳ್ಳಗಾಗುತ್ತಿತ್ತು. ಆಕೆಗೆ ಹದಿನೆಂಟು ವಯಸ್ಸಿರಬಹುದು. ಆದರೆ ಏನು ಗೆಲುವಯ್ಯಾ ಅವಳ ಮುಖದಲ್ಲಿ. ಎಂಥ ಸರಳತೆ-ಅವಳ ಉಡುಪಿನಲ್ಲಿ, ಎಂಥ ಬೆಡಗು, ರೀತಿಯಲ್ಲಿ ಎಂಥ ಕೊಂಕು. ಆಕೆ ನನ್ನನ್ನು ನೋಡಿ ತುಸು ನಗುತ್ತಾ ಕುರುಳನ್ನು ಸರಿಮಾಡಿಕೊಳ್ಳುತ್ತಿದ್ದಳು. ಆಕೆಯ ಬಳೆಗಳು – ಬಣ್ಣಗಳ ಹೊಂದಾಣಿಕೆ ಎಷ್ಟು ಸೊಗಸಾಗಿತ್ತು ಎನ್ನುತ್ತೀಯಾ – ಚಿನ್ನದ್ದು, ಗಾಜಿನದು, ರತ್ನಗಳದು- ಹಾ -ಹಾ ಅದೇನು ದನಿಗೈದುವಯ್ಯಾ, ನಾನು ಮೂಢನಾದೆ. +ಒಳ್ಳೆಯ ಬಲಿತ ಗೋಧಿನಾಗರಿನಂತ ದುಂಡು ತೋಳುಗಳು ಅಕೆಗೆ. ಕುರುಳನ್ನು ಸರಿಮಾಡಿಕೊಂಡು, ಸೀರೆಯ ನಿರಿಯನ್ನು ಅಲ್ಲಿ ಇಲ್ಲಿ ಮುಟ್ಟಿ, ಸುಕ್ಕನ್ನು ಸರಳವಾಗಿ ಹರಡಿಸುತ್ತಾ ತಿರುಗಿ ನನ್ನ ಕಡೆ ನೋಡಿ ನಕ್ಕಳು. ನಾನು ಸುಸ್ತಾದೆ. ಬೇರೆಯ ಕಡೆ ನೋಡಲು ತೊಡಗಿದೆ. ಆ ಗಂಡಸು ಮೊದ್ದ, ಶುದ್ಧ ಮೊದ್ದ. ಕೂಲಿ ಕೇಳಿದಷ್ಟು ಕೊಟ್ಟಾಗಲೇ ಅವನ ಯೋಗ್ಯತೆ ನನಗೆ ಗೊತ್ತಾಗಿಹೋಯಿತು. ಗಂಡನೇ ಇರಬಹುದು. ತಲೆಯಲ್ಲಿ ಬೈತಲೆ ತೆಗೆದ ಕ್ರಾಪು, ಅದಕ್ಕೆ ಬಾಚಣಿಗೆ ಊರಿ ಎಷ್ಟು ದಿನಗಳಾಗಿತ್ತೋ. ಗಡ್ಡದಲ್ಲಿ ಐದು ದಿನಗಳ ಕೂದಲು, ಅಂಗಿ ರೇಷ್ಮೆಯದು. ಆದರೆ ಶುದ್ಧ ಕೊಳಕು; ಇಸ್ತ್ರಿಯ ಪೆಟ್ಟಿಗೆಯನ್ನು ಅದು ಕಂಡ ಹಾಗೆ ಕಾಣುತ್ತಲೇ ಇರಲಿಲ್ಲ. ಕೈ ಬೆರಳುಗಳಿಗೆಲ್ಲಾ ಕಜ್ಜಿ ಹತ್ತಿದ ಹಾಗೆ ಉಂಗುರ.ಮುಖಕ್ಕೆ ನಾಮ.ಎಂಥ ಬಾಬಯ್ಯನ ಹಬ್ಬದ ಮನುಷ್ಯ ಈತ. ಸಿರಿವಂತ ಇರಬಹುದು. ಆದರೆ ಶುದ್ಧ ಅಸಂಸ್ಕೃತ. ಜತೆಗೆ ಮೊದ್ದ. ಒಂದು ಮಾತಿಲ್ಲ, ಒಂದು ಸದ್ದಿಲ್ಲ.ಸುಮ್ಮನೆ ಕತ್ತನ್ನು ಕೂತ ಕಿಟಕಿಯ ಹೊರಗೆ ಹಾಕಿ ಎಲ್ಲವನ್ನೂ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ. ಇವನೆಲ್ಲಿ, ಈಕೆ ಎಲ್ಲಿ? ಈಕೆಯ ಉಡುಗೆಯಲ್ಲೇ ಎಂಥ ಕಳೆ. ಈ ಅಪ್ಸರೆಗೆ ಇಂಥವನೇ ಗಂಡನಾಗಬೇಕೆ ಎಂದುಕೊಂಡೆ. +ಇವರಿಬ್ಬರ ನಡುವೆ ಕುಳಿತಿದ್ದ ಆ ಹುಡುಗ, ಅವನ ತಮ್ಮನೋ ಇವಳ ತಮ್ಮನೋ ಕಾಣೆ. ತಾನು ಈ ಪಕ್ಕದ ಕಿಟಕಿಯ ಹತ್ತಿರಕ್ಕೆ ಬರಬೇಕೆಂದು ಆ ಹುಡುಗಿಯನ್ನು ಕಾಡುತ್ತಿದ್ದ. ಅದಕ್ಕೆ ಸರಿಸಮನಾಗಿ ಆಕೆಯೂ ಹಠ ಹಿಡಿದು, ಆ ಹುಡುಗನ್ನು ಕೀಟಲೆ ಮಾಡಿ ಅಳಿಸುತ್ತ, ತನ್ನ ಜಾಗ ಬಿಡದೆಯೇ ಕುಳಿತಿದ್ದಳು. ತನ್ನ ಗಂಡನ ಹತ್ತಿರ ಕುಳಿತುಕೊಳ್ಳುವುದಕ್ಕೆ ಅವಳಿಗೆ ಇಷ್ಟವಿಲ್ಲವೇನೋ ಎಂದುಕೊಂಡೆ. ಆಕೆಯ ಮಾತು ಎಷ್ಟು ಮಧುರ. ದೋರುದಾಳಿಂಬೆಯ ಬಿತ್ತದ ಹಾಗೆ ಹಲ್ಲು,ಅವಳ ನಗುವಿನಲ್ಲಿ ಎಂಥ ಬೆಳಕಿನ ಸುಗ್ಗಿ .ಅದು ತುಟಿಯಲ್ಲಿ ಹರಡಿ, ಕೆನ್ನೆಯಲ್ಲಿ ಗುಳಿ ಬಿದ್ದಾಗ ಅದೆಂಥ ಮೋಹಕ ರೂಪ ಅವಳದು. ಆ ಬುಲಾಕಿನ ಮುತ್ತು ಈ ದಿವ್ಯಸ್ಮಿತಕ್ಕೆ ತಕ್ಕ ಕನ್ನಡಿ. ಆಕೆ ನಕ್ಕ ಬೆಳಕನ್ನೆಲ್ಲಾ ಶೇಖರಿಸಿಕೊಂಡು ಇದು ಇಷ್ಟು ಹೊಳಪೂ, ಗಾತ್ರವೂ ಆಯಿತೇನೋ, ನೋಟದ ಮಿಂಚಿದ ಘಾತ ಮಾತ್ರ ನನಗೆ. +ನನ್ನೊಡನೆ ಚೆಲ್ಲಾಟವಾಡಬೇಕೆಂದೇ ಆ ಹುಡುಗನನ್ನು ಈ ರೀತಿ ಕುಚೇಷ್ಟೆ ಮಾಡುತ್ತಿದ್ದಾಳೋ ಎಂದು ನನಗೆ ತೋರುತ್ತಿತ್ತು. ಒಮ್ಮೆ ಅವನನ್ನು ಸಿಡುಕಿಕೊಂಡು, ಒಂದು ತರದ ಕೊಂಕಿನಿಂದ ಮುಖವನ್ನು ಕಿಟಕಿಯ ಹೊರಕ್ಕೆ ಹಾಕುತ್ತಾಳೆ. ಇನ್ನೊಂದು ಕ್ಷಣದಲ್ಲಿ, ಆ ಹುಡುಗನ ಕಡೆಗೆ ಸರ್ರನೆ ತಿರುಗಿ ಒನಪಿನಿಂದ ತಿರುಗುವಾಗ, ಆಡುವ ಹಾವಿನ ಹೆಡೆಯಂತೆ ಈ ತೆಳುನಡುವಿನವಳ ದೇಹ ಮೋಹಕವಾಗುತ್ತದೆ. ಈ ಮಧ್ಯದಲ್ಲಿ ನನ್ನ ಕಡೆಗೆ ಬಲುತುಂಟ ಕಟಾಕ್ಷವನನ್ನು ಬೀರುತ್ತಾಳೆ. ಆ ಮಿಂಚಿನ ಹೊಳಪನ್ನು ಹೇಳತೀರದು. ನನ್ನ ಹೃದಯ ಮೊದಲೇ ಈ ರೂಪಿನಿಂದ ಅಸ್ಥಿರವಾಗಿಬಿಟ್ಟಿದೆ. ಈಗ ಈ ಕಣ್ಣಿನ ಝಳಕು ಬೇರೆ ಅದರ ಮೇಲೆ ಬಿದ್ದು ನನ್ನ ಭ್ರಾಂತ ಮನಸ್ಸು ಎಲ್ಲೆಲ್ಲಿಯೋ ಅಲೆಯುತ್ತಿದೆ- ಕೈಕನ್ನಡಿಯ ಮೇಲೆ ಬಿದ್ದ ಸೂರ್ಯಕಿರಣದ ಹಾಗೆ. ನನಗಾದ ಆ ಚಿತ್ತ ಚಾಂಚಲ್ಯವನ್ನೂ, ಆಗಿನ ನನ್ನಾತ್ಮದ ದೀಪ್ತಿಯನ್ನೂ ಹೇಳಲಾಸಲ್ಲ. ತುಂಟ ಹುಡುಗಿ- ಬಲು ತುಂಟ ಹುಡುಗಿ. +ಅವಳು ಸ್ವಲ್ಪ ಅಲುಗಿದರೂ, ಆಕೆ ಯಾವ ವಿಧವಾದ ಅಂಗಚಲನೆಯನ್ನು ಮಾಡಿದರೂ, ನನಗೊಂದು ತರದ ಹಿತವಾದ ನೋವಾಗುತ್ತಿತ್ತು. ಹಾಗೆ ನಗಬೇಡ, ಈ ತೆರ ಕಡೆಗಣ್ಣು ಹಾರಿಸಬೇಡ, ಈ ರೀತಿ ನಿನ್ನ ಮೈಯನ್ನು ತಿರುಗಿಸಬೇಡ, ಕೈ ಆಡಿಸಬೇಡ, ಸ್ವಸ್ಥಳಾಗಿರು ದಮ್ಮಯ್ಯಾ, ಎಂದು ಗೋಗರೆಯುವ ದುಃಸ್ಥಿತಿಗೆ ಇಳಿದಿದ್ದೆ ನಾನು. ಕೊನೆಗೆ ಆ ಹುಡುಗನಿಗೆ ಕಿಟಕಿಯ ಹತ್ತಿರ ಜಾಗಕೊಟ್ಟು ಈ ಕಡೆಗೆ ಒತ್ತರಿಸಿಕೊಂಡಳು. ಗಂಡ ಪಕ್ಕದಲ್ಲಿ ಮೊದ್ದಾಗಿ ಕಿಟಕಿಯ ಕಡೆ ತಲೆಹಾಕಕೊಂಡೇ ಕುಳಿತಿದ್ದ. ಈಕೆ ಅವನನ್ನು ಮಾತನಾಡಿಸುವುದಕ್ಕೆ ಪ್ರಯತ್ನಪಟ್ಟಳು. ಆತ ಮೌನ. ಇಲ್ಲವೇ ಏನೋ ಒಂದು ಮಾತಿನ ಗುಟುರನ್ನು ಹಾಕುತ್ತಾನೆ ಅಷ್ಟೆ. ಈ ಕಡೆಯೂ ನೋಡುವುದಿಲ್ಲ. ವಿಧಿ ಎಂತಹ ಕುರುಡ. ಎಂಥ ಗೆಲುವಾದ ಬೆಡಗಿ ಈ ಹೆಣ್ಣು , ಶುದ್ಧ ಮಂಕು ಈ ಗಂಡ ಎಂದು ನಾನು ಮನಸ್ಸಿನಲ್ಲಿ ಪರಿತಾಪ ಪಡುತ್ತಿರುವಾಗ, ಈ ವಿಷಾದಕ್ಕೆ ಅವಕಾಶ ಕೊಡದಂತೆ ಆಕೆ, ತಿರುಗಿ ನನ್ನ ಕಡೆಗೆ ಮಿಂಚಿನ ನೋಟವನ್ನೆಸೆದು, ಕಿಟಕಿಯ ಹತ್ತಿರ ಕುಳಿತಿದ್ದ ಆ ಹುಡುಗನನ್ನು ಕೀಟಳೆ ಮಾಡುತ್ತಾಳೆ. ಬಲು ಚಟುವಟಿಕೆಯುಳ್ಳ ಹುಡುಗಿ. ಅವಳ ಭಾವ ಭಂಗಿ ಎಂಥವರ ಮನಸ್ಸನ್ನೂ ಚಿಟುಕುಮುಳ್ಳಾಡಿಸುತ್ತದೆ. ಪ್ರಣಯ ಪ್ರಸಂಗದಲ್ಲಿ ಬಾಲೆಯಲ್ಲ, ಪ್ರೌಢೆ ಎನ್ನಿಸುವಂತಿತ್ತು ಆಕೆಯ ಆಟಗಾರಿಕೆ. ಆಕೆಗೆ ನಾನು ತೀರ ಬೆರಗಾದೆ. ಅಂಥ ಚೆಲುವುಳ್ಳ, ಅಷ್ಟು ಗೆಲುವುಳ್ಳ ಹೆಣ್ಣನ್ನು ನಾನು ನೋಡಿಯೇ ಇಲ್ಲ. ಅವಳು ನನ್ನನ್ನು ಈ ರೀತಿಯಾಗಿ ಗೋಳುಹೊಯ್ದುಕೊಳ್ಳುತ್ತಿರುವಾಗ ಒಂದು ಸ್ಠೇಷನ್ ಸಮೀಪಿಸಿತು.ಅಲ್ಲಿ ಒಂದು ಚಮತ್ಕಾರ ನಡೆಯಿತು. +ಅಲ್ಲಿ ರೈಲುಗಾಡಿಯ ಹತ್ತಿರಕ್ಕೆ ತಾಳೆ ಹೂಗಳನ್ನು ಕುಕ್ಕೆ ತುಂಬ ತುಂಬಿಕೊಂಡು ಒಬ್ಬ ಮಾರುವುದಕ್ಕೆ ಬಂದಿದ್ದ. ಆ ಹೂವನ್ನು ನೋಡಿ ಈ ಮೊದ್ದುಗಂಡ, ತಲೆಯನ್ನು ಗಾಡಿಯೊಳಕ್ಕೆ ತಿರುಗಿಸಿ, ಹೆಂಡತಿಯನ್ನು ಒಂದು ತೆರದ ನಗೆ ಭಾವದಲ್ಲಿ ‘ಬೇಕೇ?’ ಎನ್ನುವ ಹಾಗೆ ನೋಡುತ್ತಾನೆ. ಆಕೆ ತಲೆಯಾಡಿಸಿ, ದಿವ್ಯಸ್ಮಿತವೊಂದನ್ನು ಬೀರಿ, ಸನ್ನೆಯಿಂದಲೇ ಹ್ಞೂ ಎನ್ನುತ್ತಾಳೆ.ಆತನ ನಗೆ ಅವನ ರೂಕ್ಷ ಭಾವವನ್ನೆಲ್ಲ ತೊಳೆದು ಮುಖಕ್ಕೆ ಒಂದು ಅಲೌಕಿಕವಾದ ತೇಜಸ್ಸನ್ನು ಕೊಡುತ್ತದೆ. ಅದು ಪ್ರೇಮದ ಹೊಳಪು. ಈಕೆಯ ಮಿದು ನಗೆ ಅದಕ್ಕೆ ಹೊಳಲು ಕೊಡುತ್ತಿದೆ. ಆಕೆಯ ಈ ಮೊದಲಿನ ಚೆಲ್ಲಾಟಕ್ಕೂ, ಈಗಿನ ಈ ಭಾವಕ್ಕೂ ಯಾವ ಸಂಬಂಧವೂ ಇಲ್ಲ. ಅವಳ ಹೃದಯದ ಸ್ಥಿರ ಸ್ವರೂಪ ಈ ಪ್ರೇಮಭಾವ. ನನಗೆಸೆಯುತ್ತಿದ್ದ ಕಟಾಕ್ಷ ಅದರ ಚರ ಸ್ವರೂಪ. ಅದು ಸತ್ಯ, ಇದು ಮಿಥ್ಯ, ಮಾಯೆ. ಇವೆರಡೂ ಅನುಭಬೈಕವೇದ್ಯ. ಆತ ತೆಗೆದುಕೊಟ್ಟ ತಾಳೆ ಮೋತೆಯ ಒಂದೆಸಳನ್ನು ಆಕೆ, ನನ್ನನ್ನು ಮೊದಲಿನ ಕೊಂಕಿನ ಭಾವದಲ್ಲೇ ನೋಡುತ್ತಾ ಮುಡಿದುಕೊಳ್ಳುತ್ತಾಳೆ, ತಿರುಗಿ ಕಳೆದಿಡುತ್ತಾಳೆ. ಈಗ ಜಡೆ ಬಿಚ್ಚಿ ನಾಲ್ಕೆಸಳನ್ನು ಹೆಣೆದುಕೊಳ್ಳುತ್ತಾಳೆ, ಮೇಲೊಂದು ಮುಡಿಯುತ್ತಾಳೆ. ಆ ತೋಳಿನ ಕುಲುಕಾಟ, ಬೆರಳುಗಳ ಮನೋಹರವಾದ ನರ್ತನ, ಕೆನ್ನೆಗುಳಿ ಬೀಳಿಸುವ ನಗು. ತಲೆ ಬಗ್ಗಿ ಹೂವನ್ನು ಮುಡಿದುಕೊಳ್ಳುವಾಗ ನನ್ನ ಕಡೆಗೆಸೆಯುವ ಕೋರೆನೋಟ- ಎಲ್ಲ ಬಲು ಮನೋಹರವಾಗಿವೆ. +ಆದರೆ ಇವೊಂದೂ ಈಗ ನನ್ನನ್ನು ಮರುಳು ಮಾಡುತ್ತಿಲ್ಲ. ಆ ತುಂಟ ಹುಡುಗಿ ನನ್ನನ್ನು ಬೇಕೆಂದೇ ನೋಡಿ ನಗುತ್ತಿದ್ದಾಳೆ. ನನಗೆ ಅವಳಲ್ಲಿ ಆಸಕ್ತಿ ಈಗ ಕಡಿಮೆ. ಗಂಡಸಿಗೆ ಹೆಂಗಸಿನ ಮೇಲೆ ಗೌರವ ಹುಟ್ಟಿಬಿಟ್ಟ ಮೇಲೆ ಏನು ಪ್ರಯೋಜನ? ನನಗೆ ತೀರ ನಾಚಿಕೆಯಾಯಿತು. ಎಲೆ ಎಲಾ ಹುಡುಗಿ ಎಂದು ನಾನು ವಿಭ್ರಾಂತನಾದೆ. ರೈಲು ಹೊರಟಿತು. ಸ್ಟೇಷನ್ನಿನ ಹೆಸರು ನನಗೆ ಈಗ ಕಣ್ಣಿಗೆ ಬಿತ್ತು. ನಾನು ಇಳಿಯಬೇಕಾಗಿದ್ದುದು ಇದಕ್ಕೆ ಹಿಂದಿನ ಸ್ಟೇಷನ್ನಿನಲ್ಲಿ! ಈ ದಾರಿಯಲ್ಲಿ ಎಲ್ಲಾ ಸ್ಟೇಷನ್ನುಗಳೂ ಒಂದೇ ತರಹ. ಅಲ್ಲದೆ ಇದುವರೆವಿಗೂ ಈ ಚೆಲ್ಲಾಟದ ಹುಡುಗಿಯ ಭ್ರಮೆ ಬೇರೆ ನನಗೆ. ಹೊತ್ತೇ ಗೊತ್ತಾಗಲಿಲ್ಲ. ಎಂಥ ಮೋಸವಾಗಿ ಹೋಯಿತು, ಎಂಥ ಮೋಸವಾಗಿ ಹೋಯಿತು! ಆದರೆ ಅಬ್ಬ, ಎಂಥ ಹುಡುಗಿ, ಎಂಥ ಚಮತ್ಕಾರ. +ಕಾಲ ಈ ಮಾಯಾಂಗನೆಯ ವೇಷ ಹಾಕಿಕೊಂಡು ನನ್ನನ್ನು ಗೇಲಿಮಾಡುವುದಕ್ಕೆ ಈ ತೆರ ಬಂದಿತ್ತೇನೋ. ಅಬ್ಬ ಎಂಥ ಹುಡುಗಿ, ಎಂಥ ಚೆಲ್ಲಾಟ; ಆ ಮೊದ್ದನನ್ನು ಕಂಡರೆ ಎಂಥ ಪ್ರೇಮ, ಹೆಂಗಸರನ್ನು ನಂಬುವಂತೆಯೇ ಇಲ್ಲ. ಸದಾರಮೆ ಆ ಕಳ್ಳನನ್ನು ವಂಚಿಸಿದ ಹಾಗೆ ಈಕೆ ನನ್ನನ್ನು ವಂಚಿಸಿದಳು. ಅಂಥ ಠಕ್ಕಿನ ವಿಲಾಸ ಇವಳದು. ಅವಲ ಗಂಡನಿಗೊಂದು ತರದ ಭಾವ-ನಮ್ಮಂಥವರಿಗೊಂದು ಭಾವ. ಅಬ್ಬ ಎಂಥ ಹುಡುಗಿ.ಕೊನೆಗೆ ಕಾಲ ನನ್ನನ್ನು ಸೋಲಿಸಿತು. ನಿನ್ನೆ ನಮ್ಮೂರಿಗೆ ನಾನು ಬರಲೇ ಆಗಲಿಲ್ಲ. +ರೈಲು ಮುಂದುವರೆಯುತ್ತಿರಲು, ನನಗೆ ಕುತೂಹಲ ಕಡಮೆಯಾಗದಿದ್ದರೂ, ಆ ಹುಡುಗಿಯಲ್ಲಿದ್ದ ಮೋಹ ಹೊರಟುಹೋಯಿತು. ಈಗ ಗಂಡ ಕಿಟಕಿಯಿಂದ ಮುಖವನ್ನು ಒಳಕ್ಕೆ ಇಟ್ಟುಕೊಂಡು ಹೆಂಡತಿಯ ಕಡೆ ನೋಡುತ್ತಾನೆ. ಈಗ ಆತ ನನಗೆ ಮೊದ್ದನಂತೆ ಕಾಣುವುದಿಲ್ಲ. ಬಹಳ ಗೌರವಸ್ಥನಂತೆ ಕಾಣುತ್ತಾನೆ, ಆಕೆ ಒಂದು ಸಣ್ಣ ತಾಳೆಯ ಹೂವಿನ ಎಸಳನ್ನು ಆತನ ಅಂಗಿಗೆ ಸಿಕ್ಕಿಸಿ ಒಂದು ತೆರದಲ್ಲಿ ನಲಿಯುತ್ತಾಳೆ. ಆಮೇಲೆ ನನ್ನ ಕಡೆಗೆ ನೋಡಿ ನಗುತ್ತಾಳೆ. ಅಂಥ ಹುಡುಗಿಯನ್ನು ಈ ಜನ್ಮದಲ್ಲಿ ನಾನು ತಿರುಗಿ ನೋಡುವಂತಿಲ್ಲ. ಮುಂದಿನ ಸ್ಟೇಷನ್ನು ಬಂತು. ನನಗೆ ಈ ಹುಡುಗಿಯ ಸಹವಾಸ ಸಾಕಾಗಿ, ಪ್ರಕೃತಿ ದರ್ಶನದಲ್ಲಿ ನಾನು ಸಮಾಧಾನವನ್ನು ಕಾಣುತ್ತಿದ್ದೆ. ಈ ಸ್ಟೇಷನ್ನಿನಲ್ಲಿ ನನ್ನ ಹಳೆಯ ಸ್ನೇಹಿತ ರಾಮು ಕಣ್ಣಿಗೆ ಬಿದ್ದ. ಅದರ ಹತ್ತಿರದ ಒಂದು ಹಳ್ಳಿಯಲ್ಲಿ ಅವನ ಮನೆ. “ರಾಮೂ” ಎಂದೆ. ಅವ ಹತ್ತಿರ ಬಂದು, “ಎಲ್ಲಿಗೆ ಪ್ರಯಾಣ” ಎಂದ. “ಎಲ್ಲಿಗೂ ಇಲ್ಲ” ಎಂದೆ. ” ಹಾಗಾದರೆ ಇಲ್ಲೆ ಇಳಿ” ಎಂದ. ಹ್ಞೂ ಎಂದು ಇಳಿದೇಬಿಟ್ಟೆ. ರಾಮುವಿಗೂ ಆಶ್ಚರ್‍ಯ. +ನಾನು ರೈಲಿಳಿಯುವಾಗಲೂ ಆಕೆ ನನ್ನನ್ನು ನೋಡಿ ಒಂದು ಸಲ ನಕ್ಕಳು. ಆಮೇಲೆ ಗಂಡನನ್ನು ನೋಡಿ ಒಂದು ಕಿರುನಗೆ ಬೀರಿದಳು. ಆ ಹುಡುಗನಿಗೆ ಕಚಗುಳಿಯಿಟ್ಟು ಅವನ ಕೂದಲನ್ನೆಳೆದಳು. ಆಹಾ ಬಲು ಸೋಜಿಗದ ಹುಡುಗಿ ಆಕೆ. ನನಗೆಲ್ಲಿಯಾದರೂ ಆಕೆ ಗಂಟುಬಿದ್ದಿದ್ದರೆ, ನಾನು ಅಸೂಯೆಯಿಂದ ಏನಾಗಿಬಿಡುತ್ತಿದ್ದೆನೋ. ಅವಳ ಗಂಡ ಗಂಭೀರವಾದ ಹುಡುಗ, ಗಟ್ಟಿಗ. ಕಾಳಿ ಆಕೆ- ಕಾಲ ಸ್ವರೂಪಿಣಿ, ನನ್ನ ಹೃದಯವನ್ನು ಚೆನ್ನಾಗಿ ಕುಣಿಸಿದಳು. ರೈಲು ಹೊರಡುವವರೆಗೂ ರಾಮುವಿಗೆ ಅಞ ಊಞ ಎಂದು ಉತ್ತರ ಕೊಡುತ್ತಾ ಈ ದಂಪತಿಗಳ ಮೇಲೆ ನನ್ನ ಓರೆನೋಟವನ್ನಿಡುತ್ತಾ ಅಲ್ಲೆ ನಿಂತಿದ್ದೆ. ಅದು ಹಾಯಾಗಿ ಸಿಗರೇಟನ್ನು ಸೇದುವಂತೆ ಹೊಗೆಯನ್ನು ಕಾರುತ್ತಾ, ಮೂಲೆ ತಿರುಗಿ ಕೊಂಯ್ ಗುಟ್ಟಿದಾಗ, ಹಿಂದಕ್ಕೆ ತಿರುಗಿ ನೋಡಿ ನನ್ನನ್ನು ಗೇಲಿ ಮಾಡುತ್ತಿರುವಂತೆ ತೋರಿತು. ನಾನು ಖಿನ್ನನಾಗಿ ತಲೆತಗ್ಗಿಸಿಕೊಂಡೆ, ಸೋತನೆಂದು. ರಾಮುವಿನ ಹಳ್ಳಿಯಲ್ಲಿ ತಂಗಿದ್ದು, ಬೆಳಗಿನ ರೈಲಿನಲ್ಲಿ ನಾನು ಈ ಕಡೆಗೆ ಬಂದೆ. ವಿಚಿತ್ರ ಹುಡುಗಿ ಅವಳು, ಕಾಲದ ಗುಪ್ತಚಾರಿಣಿ. ಕಾಲದ ಮೇಲೆ ಮಾತ್ರ ಸ್ಪರ್ಧೆಗೆ ಹೋಗಬಾರದು. ಹೀಗೆ ಹಾಯಾಗಿದ್ದುಕೊಂಡು ಅದನ್ನು ಅಸಡ್ಡೆ ಮಾಡಬೇಕು. ಅದಕ್ಕೆ ಲಕ್ಷ್ಯಗೊಡುವುದೇ ಸಂಸಾರ. ಅದನ್ನು ಅಲಕ್ಷಿಸುವುದೇ ವಿಹಾರ. ಎಂಥ ಹುಡುಗಿ, ಎಂಥ ಮೋಸ. +ಹೀಗೆ ಅಶ್ವತ್ಥ ಮಾತು ಮುಗಿಸಿದ. ” ಒಳ್ಳೆಯ ಪ್ರಯಾಣ ನಿಮ್ಮದು” ಎಂದು ರಾಧಾಕೃಷ್ಣ ಗಟ್ಟಿಯಾಗಿ ನಕ್ಕ. ಶಾಮ ಮತ್ತು ರಾಘವ ಇದಕ್ಕೆ ಪಕ್ಕವಾದ್ಯ ಬಾರಿಸಿದರು. ನಾನು ಸುಮ್ಮನಿದ್ದೆ. ದಿಟವಾಗಿ ಬೆರಗುಗೊಳಿಸುವಂಥ ಅನುಭವ ಅಶ್ವತ್ಥನದು. ಅಷ್ಟು ಹೊತ್ತಿಗೆ ಫಲಾಹಾರ ಸಾಮಗ್ರಿಗಳೊಡನೆ ಇನ್ನೊಂದು ತಂಬಿಗೆ ತುಂಬ ಕಾಫಿ, ಶಾಸ್ತ್ರಿಗಳ ಮನೆಯಿಂದ ನಮ್ಮೆಡೆಗೆ ಬರುತ್ತಿತ್ತು. ನಮಗೆಲ್ಲಾ ಅದರ ಮೇಲೆ ಗಮನವಾಯಿತು. ಶಾಸ್ತ್ರಿಗಳು ” ಆ ಭದ್ರಕಾಳಿಯ ಕಡೆಗಣ್ಣು ಈತನ ಮೇಲೆ ಕಣಿದು, ಇವನ ಮನಸ್ಸನ್ನು ಸ್ವಲ್ಪಕಾಲ ಗೋಜ ಗೋಜಾಗಿ ಮಾಡಿತು” ಎನ್ನುತ್ತಾ ನಮ್ಮೆಡೆಗೆ ಸ್ಮಿತಪೂರ್‍ವಕವಾದ ದೃಷ್ಟಿಯನ್ನು ಬೀರಿದರು. ಅಶ್ವತ್ಥನಿಗೆ ಇದು ಕೇಳಿಸಲೇ ಇಲ್ಲ. ಆತ ಕುರ್ಚಿಯ ಹಿಂದಕ್ಕೆ ತಲೆಯಿಟ್ಟು, ಬಾನನ್ನು ದಿಟ್ಟಿಸಿತ್ತಾ, ನಿದ್ದೆಯಲ್ಲಿರುವವನು ಕನವರಿಸುವಂತೆ, ” ಅದು ಸಂಸಾರ, ಇದು ವಿಹಾರ” ಎನ್ನುತ್ತಲೇ ಇದ್ದ. +***** +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […] +ನಿರಂಜನ ಕಣತಿಯ ಮೂರೂವರೆ ತಿಂಗಳುಗಳ ಅನಿಶ್ಚಿತತೆಯಲ್ಲಿ ಏರನ್ನೋ, ತಿರುವನ್ನೋ ಹೂಡುವಂತೆ ಹಿಮ ಯುಗಾದಿಯ ಬಳಿಕದ ಮೂರನೆಯ ದಿನದಂದು ಅವನ ಮೊಬೈಲಿಗೆ ಫೋನಿಸಿದ್ದಳು. ಭಾನುವಾರದ ಎಂಟರ ಏರುಬಿಸಿಲಿನ ಬೆಳಗು. ಮುಂಬಿನ ಬೇಸಗೆಯ ಅತೀವ ಧಗೆಗೆ ಅಣಿಗೊಳ್ಳುತ್ತಿದ್ದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_596.txt b/Kannada Sahitya/article_596.txt new file mode 100644 index 0000000000000000000000000000000000000000..0bc9e62023ff29c6c1e978a93d81af91e5817e3f --- /dev/null +++ b/Kannada Sahitya/article_596.txt @@ -0,0 +1,159 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು ಎಳೆದುಕೊಂಡಳು. ಎಡ ಮೊಲೆಗೆ ಹುಣ್ಣಾಗಿದ್ದರಿಂದ ಬಲ ಮೊಲೆ ಉಣ್ಣಿಸುವುದೆಂದು ಕಂದಯ್ಯನನ್ನು ತೊಡೆ ಮೇಲೆ ಹಾಕಿಕೊಂಡು ‘ನೀಯೆಲ್ಲಿ ನಿಮಪ್ನಂಗಾತೀಯೋ ಈಗ್ಲೆ ಇಷ್ಟು ಸಿದುಗ ಅದಿ’ ಎಂದು ಮೊಲೆ ತೊಟ್ಟನ್ನು ಅದರ ಬಾಯಿಗೆ ತುರುಕಿದ ಮರು ಚಣದಲ್ಲೆ ‘ ಲ್ಲೇ ಭರಮ್ಯಾ…. ಭರಮ್ಯಣ್ಣಾ’ ಎಂಬೊಂದು ಕೂಗು ಕೇಳಿ ಬಂತು. ಆ ಧ್ವನಿ ಕೋಮಟಿಗರ ತಿಮ್ಮಯ್ಯ ಸೆಟ್ಟಿಯದೋ ಅಥವಾ ಕೊಲುಮ ಹಸನ ಸಾಬಿಯದೋ ಅಥವಾ ಕಟುಗರ ಇಟೋಬನದೋ ಎಂದು ಗುರುತಿಸಲು ಪ್ರಯತ್ನಿಸುತ್ತಿದ್ದಾಗ ಕ್ವಕ್…. ಕ್ವಕ್…. ಕೆಮ್ಮುತ್ತ ಮುದುಕಿ ವರಸಿನ ಮೇಲೆ ತನ್ನ ದೇಹದ ಮುಂಡ ಭಾಗವನ್ನು ಸೊಲುಪ ಅಂದರೆ ಸೊಲುಪ ಮೇಲೆತ್ತಿತ್ತು. ಮತ್ತೊಮ್ಮೆ ಕೆಮ್ಮಿ ಗಂಟಲ್ಲಲ್ಲಿ ಮೂಡಿದ ಕಫವನ್ನು ಮಣ್ಣಿನ ಕ್ವಾರೆ ಚಿಪ್ಪಿಗೆ ಉಗಿದು “ಲ್ಯೇ ಬಿಡಿಕಿ ಒಳಾಗೇನು ಪಡುಸ್ತಿದೀ…. ವರ್‍ಯಾಗ ಯಾರೋ ಕೂಗಿದಂಗಾತು. ಕಿವಿಗೇನು ಗೂಟ ಬೊಡ್ಕಂಡದೀಯಾ ಕ್ವಕ್… ಕ್ವಕ್…. ಹ್…. ಹ್….” ಎಂದು ಮುಲುಗುಟ್ಟುತ್ತ ಮತ್ತೆ ವರಸಿಗೊರಗಿತು. ತನ್ನ ಕಂದಯ್ಯಗೆ ಒಂಚೂರು ಮೊಲೆ ಉಣ್ಣಿಸುವುದಕ್ಕೂ ಈ ಮುದುಕಿ ಬಿಡುವುದಿಲ್ಲವಲ್ಲಾ ಎಂಬ ಸಿಟ್ಟು ನಾಗವ್ವಗೆ…. ನ್ವಾಡ್ತೀನಪ್ಪಾ…. ನ್ವಾಡ್ತೀನಿ….. ಕೈ ಬೆರಳುಗಳನ್ನ ಲೊಟ ಲೊಟ ಮುರಿದೆದ್ದಳು. ಎಂಥೆಂಥೋರ್‍ಗೇ ಸಾವು ಬರ್‍ತದೆ ಯಿದಕ್ಯಾಕೆ ಬರೊಲ್ಲಂತೀನಿ…. ನಂ ಕರುಮಽ…. ಎಂದು ಮುಸುಗುತಡುತ್ತ ಹ್ಯಾಟಿಯನ್ನು ಅಟ್ಟಿಸಿಕೊಂಡು ಕಾಲಾಗೆ ಬಂದು ಹೋದ ಹುಂಜವನ್ನು ನೋಡಿ ತನ್ನ ತವರೂರಾದ ಕಣ್ಕುಪ್ಪಿಯನ್ನು ನೆನಪು ಮಾಡಿಕೊಂಡಳು. ಬಲಗಾಲಿಗೆ ನಾರು ಹುಣ್ಣಾಗಿ ಮಲಗಿರುವ ತನ್ನ ತಂದೆ ತಳವಾರ ಹನುಮಂತನನ್ನು ನೋಡಲಿಕ್ಕೆ ಹೋಗ್ತೀನಿ ಎಂದಾಗ ಕಳೆದ ವಾರ ದೊಡ್ಡ ರಂಪಾಟವೇ ನಡೆದಿತ್ತು. ಮುದುಕಿ ಜೊತೆ ಮಗನೂ ಸೇರಿಕೊಂಡು ‘ಲ್ಯೇ ಲವುಡೀ ಓದಿ ಅಂದ್ರೆ ಕಾಲುಮುರಿತೀನಿ’ ಎಂದು ಹಲ್ಲಿನಿಂದ ಮಾಡಿದ ಸದ್ದನ್ನು ನೆನಪಿಸಿಕೊಳ್ಳುತ್ತ ಬಾಕುಲು ಓರೆ ಮಾಡಿ ನೋಡುತ್ತಾಳೆ…. ತಮಗೆ ಅಂಗುಲಂಗುಲ ಗೊತ್ತಿರುವ ಹೊಲ ಮನೆಯ ಸಾಹುಕಾರ ಸಿವಪೂಜೆ ಕ್ವಟ್ರಗೌಡ್ರು ಕಂಡೊಡನೆ ಕಂದಯ್ಯ ಜುಮಡುತ್ತಿದ್ದ ಮೊಲೆ ಕಾಣದಂತೆ ಅದರ ಮೇಲೆ ಹರಿದ ಸೆರಗೆಳೆದಳು. ಕೆಲಸವಿಲ್ಲದೆ ಕೆಳಗೇರಿಗೆ ಸುಮ್ಮ ಸುಮ್ನೆ ಬರುವ ಪೈಕಿಯಲ್ಲ ಗೌಡರು; ಬಂದರೆಂದರೆ ಏನಾದರೊಂದು ಅನಾಹುತ ತಪ್ಪದು…. ಅಂಥವರ ದೃಷ್ಟಿ ತನ್ನ ಎದೆ ಮೇಲಿಲ್ಲದಿರುವುದು ಪುಣ್ಯದ ಸಂಗತಿ. ಆದರೆ ಅವರ ಆಳಕ್ಕಿಳಿದಿರುವ ಕಣ್ಣುಗಳ ಅಳತೆಗೆ ದಕ್ಕದ ರೀತಿಯಲ್ಲಿ ಬೇವಿನಮರ ಬೆಳೆದು ಇಡೀ ತಮ್ಮ ಮನೆ ಎಂಬೋ ಮನೆಯ ಚರಾಚರಕ್ಕೆ ಹಸಿರ ಚವರಿ ಬೀಸುತ್ತಿರುವಂತೆ ಕಂಡಿತು. “ಅಯ್ಯೋ ಗೋಡನ ಕೊಣ್ಣುಗೋಳು ಸ್ಯೇದಿ ಓಗ” ಎಂದು ಆಕೆಯ ಮನಸ್ಸು ಶಪಿಸಲು ಕಾರಣಗಳು ಒಂದೆ ಎರಡೇ… ಬಸುರಿ ಲಚ್ಚಕ್ಕ ಜಳಕಕ್ಕೆ ಕೂತಿದ್ದಾಗ ಆಕೆಯ ಆರೇಳು ಮಾಸ ವಯಸ್ಸಿನ ಹೊಟ್ಟೆಯನ್ನು ಗೌಡರು ಅಚಾನಕ ನೆರಿಕೆ ಕಿಂಡಿಯಿಂದ ನೋಡಿದರು. ಅವತ್ತು ರಾತ್ರೀ ಲಚ್ಚಕ್ಕಗೆ ಗರ್ಭಪಾತವಾಗಿ ಬಿಟ್ಟಿತು…. ನೆಲ್ಲುಗದ್ದೆಯ ಬದು ಮೇಲೆ ತಿಮ್ಮಕ್ಕ ಕೂಸಿಗೆ ಮೊಲೆ ಉಣ್ಣಿಸುತ್ತಿದ್ದುದನ್ನು ಗೌಡರು ಅಕಸ್ಮಾತ್ ನೋಡಿದರು…. ಮರುದಿನವೇ ಆಕೆಯ ತುಂಬು ಮೊಲೆಗಳು ಬತ್ತಿ ಪೀಚಲಾಗಿ ಜೋತುಬಿದ್ದವು. ಆಕಳು ಎಮ್ಮೆಗಳ ಕೆಚ್ಚಲಾದರೂ ಅಷ್ಟೇ. ಗೌಡರ ಕೆಟ್ಟ ದೃಷ್ಟಿಗೆ ಮರಗಳು ಗೊಡ್ಡು ಬೀಳುತ್ತವೆ. ಗಿಡಗಳು ಗಿಡ್ಡವಾಗುತ್ತವೆ. ಬಳ್ಳಿಗಳಂತೂ ಬಿಳುಚಿಕೊಂಡು ಒಣಗಿಹೋಗುತ್ತವೆ. ಅವರು ಎತ್ತಿಕೊಂಡು ಮುದ್ದು ಕೊಟ್ಟರೆಲ್ಲಿ ತಮ್ಮ ಕೂಸುಗಳು ಒಣಗಿ ಹೋಗುವವೋ ಅಂತ ಯಾವ ತಾಯಂದಿರೂ ತಮ್ ಕುಸೂ ಕಂದಮ್ಮಗಳನ್ನು ಆತನ ಹತ್ತಿರ ಸುಳಿಯಲು ಬಿಡುವುದಿಲ್ಲ. ಆದ್ದರಿಂದ ತಮ್ಮ ಬೇವಿನಮರದ ಮೇಲೆ ಗೌಡನ ಕಣ್ಣುಗಳು ಓತಿಕ್ಯಾತದಂತೆ ಹರಿದಾಡಿದ್ದು ಸುಭ ಶಕುನ ಅಲ್ಲೆನಿಸಿತು. ಗೌಡರ ದೋತರ ಮೂಸಿ ನೋಡುವುದರಲ್ಲಿ ಯಶಸ್ವಿಯಾದ ಅರ್ಜುನನ ಕಡೆ ಅವರ ಗಮನ ಸೆಳೆದು “ಯ್ಯೋನು ಗೋಡಾ…. ಬಾಳ ದೂರ ಬಂದೀ….” ಎಂದು ವಿಚಾರಿಸಿದಳು. “ನಿನಗಂಡನತ್ರ ಒಂಚೂರು ಕ್ಯಲ್ಸ ಇತ್ತು ಅದ್ಕೆ ಬಂದಿದ್ದೆ…. ಯಲ್ಲಿ ಅವ್ನು…. ಬಾಳ ದಿನಾಯ್ತು ನೋಡೆ ಇಲ್ಲ…. ಆವಾಗೆಲ್ಲ ಅದ್ಕೆ ಇದ್ಕೆ ಅಂತ ಬತ್ತಿದ್ದ…. ಈಗ್ಯಾಕ ಬರ್‍ತಾನವ್ವಾ ಇಸಪೀಟಾಡೋರತ್ರ ಇದ್ರೆ ಎಲ್ಡು ಮೂರು ಸಿಕ್ತದೆ. ಮೈಯಿ ಕೂಡ ಬೊಗ್ಗಿಸಿ ದುಡ್ಯಾಂಗಿಲ್ಲ” ಎಂದು ಗೌಡರು ಮಾತಾಡುತ್ತಿದ್ದರೂ ಅವರ ಕಣ್ಣುಗಳು ಮಾತ್ರ ಸೀರೆ ಸೆರಗೊಳಗೆ ಪಿಳುಕು ಪಿಳುಕು ಕಣ್ಣು ಬಿಡುತ್ತಿದ್ದ ಕೂಸಿನ ಕಡೆಗೂ, ಮಿರಿ ಮಿರಿ ಮಿಂಚುತ್ತಿದ್ದ ಸ್ತನಗಳ ಕಡೆಗೂ ನೆಟ್ಟಿದ್ದವು. ಬಂದ್ಕೂಡ್ಲೆ ಕಳ್ಸು ನಾಗವ್ವಾ ಎಂದು ಹೇಳಿ ಏದುಸಿರುಬಿಡುತ್ತ ಆಮೆ ವೇಗದಲ್ಲಿ ಹೆಜ್ಜೆ ಹಾಕಿದ ಅಸ್ತಮಾದವುನು. +ತನ್ನ ಗಂಡ ಇಸಪೀಟಾಡುತ್ತಿರುಬಹುದಾದ ದೃಶ್ಯವನ್ನು ಊಹಿಸಿಕೊಳ್ಳುತ್ತಲೆ ನಾಗವ್ವ ಸಿಟ್ಟಿನಿಂದ ಕೆಂಡ ಮಂಡಲವಾದಳು…. “ಅಗ್ಲು ರಾತ್ಲೀ ಇಸಪೀಟೂ ಇಸಪೀಟು…. ಯ್ಯೋನು ಕರುಮಾ ಮಾಡಿದ್ನೋ ಈ ಮುದುಕಿ ಮನಗ ಕೈಯಿ ಯಿಡಿಯಾಕೆ…. ಬೊರ್‍ಲಿ…. ಬೊರ್‍ಲಿ…. ದೋತ್ರ ಯಿಡ್ದು ಕ್ಯೋಳೇ ಬುಡ್ತೀನಿ…. ನಿಂಗೇನು ಯಂಡ್ರು ಮಕ್ಳು ಬ್ಯೇಕಾ ಬ್ಯಾಡಾ ಅಂತ…. ಬ್ಯಾಡಾ ಅಂತ ಯ್ಯೋಳಿ ಬುಡ್ಳಿ…. ಕಣಗ್ಳಿಬ್ಯೇರು ಥೇದು ಮೊಕ್ಳಿಗೂ ಕುಡಿಸಿ ನಾನು ಸಾಯ್ತಿನಿ….” ಎಂದು ಒಳಗೆ ಹೋಗಿ ಕೋಳಿ ಮಂಕರಿ ಮಗ್ಗುಲು ಕಂದಯ್ಯನನ್ನು ಕುಕ್ಕುರು ಬಡಿಯುತ್ತಲೆ ಕುಂಯ್ಯೋ ಮರ್ರೋ ಎಂಬ ನಾದ ಮುಗಿಲು ಮುಟ್ಟಿತು. +“ಅದ್ಯೋನು ಬ್ವಗುಳ್ದಿ…. ಬ್ವಗುಳೇ” ವರಸಿನಿಂದ ಮುಂಡವನ್ನು ಮೇಲಕೆತ್ತಲಾರದೆ ಎತ್ತುತ್ತ ಕನಲಿ ಕೇಳಿತು “ನನ್ನೂ ನನ್ ಮಗನ್ನೂ ಆಡಿಕೆಂತೀಯಾ….ನನ್ ಮೊಗ ಗಂಡ್ಸಲೇ…. ಅವ್ನು ಇಸಪೀಟಾದ್ರು ಆಡ್ತಾನೆ ಟೇಮು ಬೊಂದ್ರೆ ಸೂಳ್ಯಾರ್‍ನಾರ ಮಾಡ್ತಾನೆ…. ಅದ್ನ ಕ್ಯೋಳಾಕೆ ನೀನ್ಯಾವೂರ ಅಪ್ಪಜೆಪ್ನ ಮೊಗ್ಳೇ…. ಕ್ವಕ್… ಕ್ವಕ್… ಹ್ಹ್… ಹ್ಹ್… ಹ್ಹ್…” +“ಯಾವೋಳು ಯಾಕಾತೀನೇನ್ಯೇಽಽ….” ನಾಗವ್ವ ಸೀರೆ ಮೇಲೆತ್ತಿ ಕಟ್ಟಿದಳಲ್ಲದೆ ತುರುಬನ್ನೂ ಬಿಗಿದು ಸಜ್ಜಾಗಿ ಹೇಳಿದಳು. “ಥಾಳಿ ಕಟ್ಟಿಸ್ಕಂಡೀರೋವತ್ಗೆ ನಿನ್ ಕೂಟಾಗೆ ಥೂ ಛೀ ಅನ್ನಿಸ್ಗಂತ ಬಿದ್ದಿದೀನಿ…. ಮನಿ ಸ್ವಸಿ ಅನ್ನೋ ಖಬರಿಲ್ದೆ ಮಾತಾಡ್ತೀಯಾ…. ಆತ ನಿಂಗ ಮೊಗ ಆಗಿರಬವ್ದು. ನಾನಾತ್ನ ಯಂಡ್ತಿ…. ಇಗೋ ನ್ವಾಡು…. ಕ್ವಳ್ಳಾಗ ಥಾಳಿ ಯಂಗ ಥಳಥಳಾ ಅಂತೈತೆ….” +ಗಲಾಟೆಗೆ ಒಲೆಯಲ್ಲಿ ಮಲಗಿದ್ದ ಬೆಕ್ಕು ಹೊರ ಬಂದು ಅಳುತ್ತಿದ್ದ ಕೂಸಿನ ಮುಖಕ್ಕೆ ಬಾಲದಿಂದ ಗಾಳಿ ಬೀಸುತ್ತ ಮ್ಯಾಂವ್‌ಗುಟ್ಟತೊಡಗಿತು. +“ಯ್ಯಾಳೂರು ಕಾಗೆ ಯೆಬುಸೋವ್ಕೆ ಥಾಳಿ ಒಂದ್ಕೇಡು…. ಹ್ಹ್….ಹ್ಹ್….ಕ್ವಕ್….ಕ್ವಕ್” ಗಂಟಲು ಬಿಟ್ಟು ಬರದೆ ಹಠ ಹಿಡಿದಿದ್ದ ಕಫ ಕಿತ್ತಲು ವಿಫಲಳಾಗಿ ಮುದುಕಿ ಹೇಳಿತು. “ಕಾಡಿಗಣ್ಣೋಳು ಬ್ಯಾಡಾ….ಬ್ಯಾಡಾ…. ಮಾಡ್ಕಂಡ್ರೆ ಮನೀಗೆ ವಳ್ಳೇದಾಗಲ್ಲ ಅಂತ ಬೊಡ್ಕಂಡೆ. ನನಗುಟ್ಟಿದ ಮೊಗ ನನ್ಮಾತ್ನ ಕ್ಯೇಳ್ಯಾನ ಹ್ಹ್… ಹ್.” +ಅತ್ತೆ ಸೊಸೆ ಬದ್ದ ವೈರಿಗಳಂತೆ ಜಗಳಾಡೋದು ಮಾಮೂಲಾಗಿದೆಯಲ್ಲ ಎಂಬ ಆತಂಕದಿಂದ ಅರ್ಜುನ ಕುಂಯ್ ಕುಂಯ್ ಎಂಬ ತನ್ನ ನಾಯಿ ಭಾಷೆಯಲ್ಲಿ ಏನೋ ಬುದ್ಧಿ ಹೇಳಲು ತೊಡಗಿದ್ದರ ಕಡೆ ಹುಲುಮಾನವರ ಗಮನ ಮಾತ್ರವಿರಲಿಲ್ಲ. +“ಹ್ಹಾ….ಹ್ಹಾ…. ಆಣಿಗಾಲ್ನೋನ ಮಾಡಿಕ್ಯಾಬ್ಯಾಡಾ. ಮಾಡ್ಕೊಂಡ್ರೆ ಒಂದ್ತುತ್ತು ಕೂಳು ಕಾಣಾ…. ಒಂಚೂರು ಬಟ್ಟೆಕಾಣಾ…. ಅಂತ ನಮ್ಮಪ್ಪ ಯ್ಯೋಳೇ ಯೋಳ್ದ…. ನಾನ್ ಕ್ಯೋಳಿದ್ನಾ…. ಆತ ತ್ವಟ್ಗಂಡಿದ್ದ ಟವುಜರ್‍ಗೆ ಮೊಳ್ಳಾಗಿ ವಪ್ಪಿದ್ನೋಡು. ನಂಗೆ ಬುದ್ದಿ ಕಡ್ಮಿ…. ನನ್ನ್ ಮಾಡ್ಕೆಳ್ಳಾಕೆ ಯೆಂಥೆಂಥ ತಳವಾರ್ರೆ ಬೊಂದು ಹ್ವಾದ್ರು…. ನಾನ್ಹೂ ಅಂದಿದ್ರೆ ತೆರವು ಕಟ್ಟಿ ಮಾಡ್ಕೊಂಡೋಗಿ ಸುಕ್ವಾಗಿಡ್ತಿದ್ರು…. ಅಯ್ಯೋ…. ನನ ಕರುಮಾವೇ ಮಿಂಜಾಲಿದ್ರೆ ಛಂಜಿಕಿಲ್ಲ… ಛಂಜಿಕಿದ್ರೆ ಮಿಂಜಾಲಿಗಿಲ್ಲ…. ಮೆಯ್ಗೆ ಬಟ್ಟಿ ಕಾಣ್ದೆ ಯೇಸೋ ವರ್ಸಾದ್ವು….” uಟಿಜeಜಿiಟಿeಜ +ಪುಟ್ಟ ಶಿಶ್ನಕ್ಕೆ ಅಡರಿಗೊದ್ದಿಗ ಕಡಿದ ಪರಣಾಮಕ್ಕೆ ಚಿಟಾರನೆ ಚೀರಿ ಅಳತೊಡಗಿದ ಕಂದಯ್ಯನನ್ನು ಬಾಚಿ ಎತ್ತಿಕೊಂಡಳು ನಾಗವ್ವ. ಮಾತುಮಾತಿಗೆ ಗಂಟೆ ಹೊಡೆದಂತೆ ಜವಾಬು ಕೊಡುವ ಸೊಸೆಯನ್ನು ಯಾವ ಶಸ್ತ್ರ ಉಪಯೋಗಿಸಿ ಮಣಿಸುವುದೆಂದು ತಿಳಿಯಲಾರದೆ ಪರಪರ ತಲೆ ಕೆರೆದುಕೊಳ್ಳುತ್ತ ಆಕೆ ಕಂಕುಳಲ್ಲಿದ್ದಃhಚಿgಚಿvಚಿಣhi ಏಚಿಜu, iಟಟusಣಡಿಚಿಣioಟಿ bಥಿ Pಡಿಚಿmoಜ P ಖಿಕೂಸನ್ನು ದಿಟ್ಟಿಸಿ ನೋಡಿದ ಒಂದು ಚಣದಲ್ಲಿಯೇ ಜ್ಞಾನೋದಯವಾಯಿತು ಮುದುಕಿಗೆ. ದಿನಕ್ಕೊಮ್ಮೆಯಾದರೂ ಅದನ್ನು ಎತ್ತಿಕೊಂಡು ಅದರ ಅಂಗೋಪಾಂಗಗಳು ತನ್ನ ಮಗನನ್ನು ಹೋಲದಿದ್ದರೂ ಊರಿನ ಯಾರನ್ನು ಹೋಲುತ್ತವೆ ಎಂದು ಯೋಚಿಸುತ್ತಿದ್ದಳು. ಅನುಮಾನಕ್ಕೆ ನಾಗವ್ವ ಮುರುಕು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ ಪೋಡರ ಹಚ್ಚಿಕೊಳ್ಳುತ್ತಿದ್ದುದು ಒಂದು ಕಾರಣವಾದರೆ ಊರಿನ ಡವುಲಾಗಿರು ಗಂಡಸರು ಮಾತಾಡಿಸಿದರೆಂದರೆ ಚಾವತ್ತಾದರೂ ನಿಂತು ನಗುನಗುತ್ತ ಮಾತಾಡುತ್ತಿದ್ದುದು ಇನ್ನೊಂದು ಕಾರಣ…. ಮಳ್ಳಿಮಳ್ಳೀ ಮಂಚಕ್ಕೇಸು ಕಾಲೂಂದ್ರೆ ಮೂರೂ ಮತ್ತೊಂದು ಎಂದುತ್ತರಿಸುವ ಪೈಕಿಯಾದ ಸೊಸೆಯ ನಡೆ ನುಡಿಯಲ್ಲಿ ಒಂದೊಂದು ತಪ್ಪು ಕಂಡು ಹಿಡಿದು ಮಗ ಭರಮಯ್ಯಗೆ ವರದಿ ಮಾಡುತ್ತಿತ್ತು. ಐದನೇ ತರಗತಿವರೆಗೆ ಓದಿರುವ ಭರಮ್ಯಾ ಮೂರನೇ ತರಗತಿವರೆಗೆ ಓದಿರುವ ತನ್ನ ಹೆಂಡತಿ ಮೇಲೆ ತಾಯಿ ಮುದುಕಿ ಹೇಳುತ್ತಿದ್ದ ಚಾಡಿ ಮಾತುಗಳನ್ನು ಎಡಗಿವಿಯಿಂದ ಕೇಳಿ ಬಲಗಿವಿಯಿಂದ ಬಿಟ್ಟು ಬಿಡುತ್ತಿದ್ದ…. ದೊಡ್ಡೂರಲ್ಲಿ ಹುಟ್ಟಿ ಬೆಳೆದೋಳು; ಮೇಲಾಗಿ ತಳವಾರನ ಮಗಳು…. ಸೊಲುಪ ಚೋಚಿಯಲ್ಲು ಎಂದೇ ಆತ ಸಣ್ಣಪುಟ್ಟ ಕಾರಣಗಳಿಗೆ ಹೆಂಡತಿ ಮೇಲೆ ಎಗರಿ ಬೀಳುತ್ತಿರಲಿಲ್ಲ. +“ಲೋ ಜೋಗಮ್ನಂಥೋನೆ…. ಮಾಡಿಕ್ವಂಡೋಳ್ಗೆ ಇಟಾಕೊಂದು ಸೊಡ್ಲಕ್ವಟ್ರೆ ಮುಂದೆ ಬಾಳೂವೆ ನೆಡೆದೀತೆ…. ಸಣ್ಣಪುಟ್ಟ ತೆಪ್ಪು ಕಂಡುಹಿಡ್ದು ಯೆಂಡ್ತೀ ಮೊಗ್ಲು ಮರೀತಿರಬೇಕು…. ಅದು ಗಂಡಸ್ರ ಲಚ್ಚಣ…. ನಿಮಪ್ಪಿದ್ನೋಡು…. ನನಗೆ ದಿನಕೊಂದ್ಸಾರಿಯಾದ್ರು ವಡೀದಿದ್ರೆ ಬೇಷಿ ಕಾಣ್ತಿರ್‍ಲಿಲ್ಲ…. ಅವ್ನಂದ್ರೆ ಥರಥರ ನಡೂಗ್ತಿದ್ದೆ…. ಅಂಥ ಗಂಡ್ಸೀಗೆ ವುಟ್ದೋನಾಗಿದ್ರೆ ನೀನ್ಯಾಕ ಯಿಂಗಿರ್‍ತಿದ್ದಿ….” ಮುದುಕಿ ಹೀಗೆ ವಾರಕ್ಕೊಮ್ಮೆಯಾದರೂ ಮಗನನ್ನು ಸೊಸೆ ಮೇಲೆ ಛೂ ಬಿಡಲು ಯತ್ನಿಸಿ ವಿಫಲಳಾಗುತ್ತಿತ್ತು. +ತಮ್ಮ ವಂಶದಲ್ಲಿ ಯಾರನ್ನೂ ಹೋಲದ ಕೂಸನ್ನೇ ಒಂದು ಅಸ್ತ್ರ ಮಾಡಿದ್ದನ್ನು ಹೆತ್ತ ತಾಯಿಯ ಮೇಲೆ ಯಾಕೆ ಪ್ರಯೋಗಿಸಬಾರದೆಂಬ ನಿರ್ಣಯಕ್ಕೆ ಬಂದು ಮುದುಕಿ “ಗಯ್ಯಾಳಿಯೆಣ್ಣೆ…. ಥಾಳಿ ಮುಂದಿಟ್ಕಂಡು ಆಡಬಾರದಾಟ ಆಡ ಬೋದಂದ್ಕಂಡದೀಯಾ…. ಅಂಗೈ ವುಣ್ಣು ನ್ವಾಡಾಕೆ ಕನ್ನೂಡಿ ಯಾಕ ಬೇಕಲೇ ಭೋಸುಡಿ” ಎಂದು ಕುಟುಕಿ ಪೀಠಿಕೆ ಹಾಕಿತು. +ಇದೇ ಸುಸಮಯವೆಂದು ಅರ್ಜುನ ಕುಯ್‌ಗುಡುತ್ತ ಬೆಕ್ಕಿನ ಮೂತಿ ನೆಕ್ಕಿ ಪಾಲೀಷು ಮಾಡಿ ತನ್ನನ್ಯಾರು ಗಮನಿಸಲಿಲ್ಲವೆಂದು ಪುತುಕ್ಕನೆ ಮನೆ ಒಳಗೆ ಓಡಿತು. ಮಿಯಾವ್ ಭಾಷೆಯಲ್ಲಿ ಕೂಗುತ್ತ ಬೆಕ್ಕೂ ಅದನ್ನು ಹಿಂಬಾಲಿಸಿತು. +“ಅಲಲಲಾ ಮುದ್ಕೀ” ನಾಗವ್ವ ಸಿಟ್ಟಿನಿಂದ ಕಂಕುಳಲ್ಲಿ ಹೋ…. ಅಂತಿದ್ದ ಕಂದಯ್ಯನ ಕುಂಡಿಯನ್ನು ಜೋರಾಗಿ ಚಿವುಟಿ ಗದ್ದಲವನ್ನು ರಾಪು ಮಾಡಿದಳು. “ಅದೇನು ವುಣ್ಣು ಗಿಣ್ಣು ಅಂತಾಡ್ತೀಯಾ…. ನಿಸೂರಾಗಿ ಬ್ವಗ್ಳು…. ನಾನೂ ಕ್ಯೋಳ್ತೀನಿ….” +“ನಿನ್ ಕಂಕ್ಳಾಗೇ ಐತೆ ನೋಡು-ಅದ್ಕಿಂತ ಬ್ಯಾರೆ ಸಾಕ್ಚಿ ಬೇಕೇನು…. ಹ್ಹ್…. ಹ್ಹ್…. ಕ್ವಕ್…. ಕ್ವಕ್” ಕೆಮ್ಮು ಬಂದು ಒಂದ್ತೊಲ ಕಫವನ್ನು ಕ್ವಾರೆ ಚಿಪ್ಪಿಗೆ ಉಗುಳಿತು. ಅದರಲ್ಲಿ ಸಿಕ್ಕೊಂಡು ಒದ್ದಾಡುತ್ತಿದ್ದ ನೊಣದಂತಾಯಿತು ನಾಗವ್ವನ ಪರಿಸ್ಥಿತಿ ಆ ಮಾತಿಗೆ. +ಕಂಕುಳಲ್ಲಿದ್ದ ಕಂದಯ್ಯನನ್ನು ಅದರ ಮುಂದೆ ಕುಕ್ಕುರು ಬಡಿದೇಟಿಗೆ ಅದರ ಸ್ವರ ಮುಗಿಲಿಗೆ ಪುಟಿಯಿತು. ಮನೆ ಒಳಗೆಲ್ಲ ತಲಾಷ್ ನಡೆಸಿ ಬಂದ ಅರ್ಜುನ ಅದರ ಅಳುವಿನ ಸೊಗಸಿಗೆ ಮರುಳಾಗಿ ಕಂದಯ್ಯನ ಮುಂದೆ ನಿಂತು ಬಾಲ ಅಲ್ಲಾಡಿಸಿತು. +“ಕ್ವಂಕ್ಣಸುತ್ತಿ ಮೈಲಾರಕ್ಕೆ ಬರಬ್ಯಾಡಬೇ ಮುದ್ಕಿ…. ಅದೇನು ಬ್ವಗುಳ್ತೀಯೋ ನಿಸೂರಾಗಿ ಬ್ವಗ್ಳು” ಸೊಂಟ ಕಟ್ಟಿ ಸಡ್ಡೊಡೆದು ನಿಂತಳು. +ತನ್ನೆರಡು ಕೈಗಳ ಒಂಬತ್ತು ಬೆರಳುಗಳನ್ನು ತಲೆಯ ಕೂದಲೊಳಗೆ ತೂರಿಸಿ ಪರ ಪರ ಕೆರೆದೂ ಕೆರೆದೂ ಉಗುರೊಳಗೆಲ್ಲಾದರೂ ಹೇನಾಗಲೀ, ಸೀರಾಗಲೀ ಸಿಲುಕಿ ಹಾಕಿಕೊಂಡಿರಬಹುದೇ ಎಂದು ಪರೀಕ್ಷಿಸಿದ ಮೇಲೆ ಮುದುಕಿ ಕಂದಯ್ಯನ ರೆಟ್ಟೆ ಹಿಡಿದು ತಿರುವಿ “ಇದು ಯಾರಿದ್ದಂಗೈತಿ…. ನಾನಿದ್ದಂಗೈತಾ…. ಇಲ್ಲಾ ನನ್ ಮೊಗಿದ್ದಂಗೈತಾ…. ನೀನಿದ್ದಂಗೇತಾ…. ಯಾರಿದ್ದಂಗೈತೆ…. ಬ್ವಗ್ಳಲೇ ಮತ್ತೆ…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ತಳ್ವಾರ ಹನುಮಂತನ ಮಗ್ಳಾಗಿ ವುಟ್ಟಿದ್ರೆ ನಿಜ ಬ್ವಗುಳ್ತೀ…. ಇಲ್ಲಾಂದ್ರೆ ಇಲ್ಲ…. ಬರಿ ಬಾಯಿ ಮಾತು ಕ್ಯೋಳಾಕಿಲ್ಲಲೇ ನಾನು…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ಈ ನಿನ್ ಮೊಗನ್ ಮ್ಯಾಲ ಪ್ರಮಾಣ ಮಾಡಿ ಬ್ವಗ್ಳು…. ಹ್ಹ್…. ಹ್ಹ್…. ಕ್ವಕ್…. ಕ್ವಕ್…. ಕೆಮ್ಮಿ ಮತ್ತೆ ಕಫ ಕೀಳಲೆತ್ನಿಸಿತು. +“ಅಲಲಲಾ” ನಾಗವ್ವ ಎದೆಯನ್ನು ದಪ ದಪ ಬಡಿದುಕೊಂಡಳು…. “ನೀನು ಮನಸ್ಯೋಳಲ್ಲಬೇ ರಾಕ್ಚಚಿ ನೀನು…. ನಮ್ಮನ್ನು ಯೇನು ಮಾಡಾಕೆ ಬದ್ಕಿದೇ…. ಥೂ ನಿನ್ ಜಲುಮಕ್ಕಸ್ಟು ಕಿಚ್ಚಿಡಾ…. ಹ್ಹಾ…. ಆಂ…. ಅಲಲಲಾ” ಮುಂದೊಂದು ಸಬುದ ಉಚ್ಚರಿಸಲಾಗದೇ ಬುಸುಗರಿಯತೊಡಗಿದಳು. +ಅತ್ತೆ ಸೊಸೆಯರ ಜಗಳ ವೀಕ್ಷಿಸಿ ಆನಂದ ಪಡೆಯಬೇಕೆಂದು ಕುಂಟಂಜಿನಿ : ನಂದಿ ಈರಕ್ಕ ಮೊದಲಾದವರು ಬಾಕುಲಾಚೆ ಜಮಾಸಿದ್ದುದರ ಕಡೆ ಹುಬ್ಬಿಗೆ ಕೈಯಿ ಹಚ್ಚಿ ನೋಡಿ ಮುದುಕಿ ವರಸಿನಿಂದ ಕುಪ್ಪಳಿಸಿ ಎದ್ದು ನಿಂತಿತು. +“ನಿನ್ ಮಾತಿಗೆ ಮೊಳ್ಳಾಗಾಕೆ ನಾನೇನು ಆ ಭಾಡ್ಕಾವಲ್ಲ ಹ್ಹ್…. ಹ್ಹ್ ತಿಳೀತಾ ಯಿದ್ರಮ್ಯಾಲ ಕೈಯಿ ಇಟ್ಟು ಪ್ರಮಾಣ ಮಾಡಿ ಯ್ಯೇಳು….ಯಿದು ಭರಮ್ಯಗವುಟ್ಟಿದ್ದಾ…. ಅಲ್ಲಾಽಽ…. ಹ್ಹ್….ಹ್…. ಸತ್ಯನಾರು ಜನ್ಕೆ ತಿಳೀಲಿ…. ಕ್ವಕ್…. ಕ್ವಕ್….” +“ಅಲಲಲಾ” ನಾಗವ್ವನ ಮರ್ಮಕ್ಕೆ ಆಘಾತವಾಯಿತು. “ಸಿವ್…. ಸಿವಾ…. ಯಂಥಾ ಮಾತಂತಲ್ಲಪೋ….ಯಿದ್ರ ಬಾಯಿ ಸ್ಯೇದಿ ಓಗಾ….ಽಽ ನಾಲೀಗೆ ವುಳಾ ಬೀಳಾ….ಯಿದು ನಿನ್ ಮೊಗ್ನೀಗೆ ವುಟ್ಟಿದ್ದಬೇ ಮಿಂಡ್ರಿಗುಟ್ಟಿದೋಳೆ…. ನಾನೊಂದ್ಕೇಳ್ತೀನಿ…. ಬ್ವಗುಳ್ತೀಯಾ ಮತ್ತೆ….” +“ಓಹೋ ಕ್ಯೋಳು…. ನಾನು ಅಳೇಕಾಲ್ದಾಕೆ…. ಸುಳ್ಳು ಥಾರಾ ತಿಗಡಿಗ್ವತ್ತಿಲ್ಲ…. ಹ್….ಹ್” +“ನಿನ್ ಮೊಗ….ಅಂದ್ರೆ ನನ್ ಗಂಡ… ನಿನ್ ಗಂಡಗೆ ವುಟ್ಟಿದೋನಾ” +“ಹ್ಹ್….ಹ್ಹ್….” ಬಯಲಾಟದಲ್ಲಿ ದುಶ್ಯಾಸನ ನಕ್ಕಂತೆ ವಿಲಕ್ಷಣವಾಗಿ ನಗಾಡಿತು. “ಅವ್ನು ನನ್ ಗಂಡಗುಟ್ಟಿದ್ರೆ…. ಈ ಮನೀನ ನನಕೈಲಿ ಕಟ್ಟಿಸಾಕಾಯ್ತಿತ್ತಾ…. ಅವ್ನ ಸಾಕಿ ಸಲಯಿ ಅಷ್ಟೆತ್ರ ಬ್ಯಳಸೋಕಾತಿತ್ತಾಽಽ…. ಗಂಡುಸ್ರು ನಡುವೆ ಗಂಡ್ಸಾಗಿ ಈಸುದಿನ ಬೊದುಕಾಗಾತಿತ್ತಾ…. ಹ್….ಹ್…. ಕ್ವಕ್…. ಕ್ವಕ್…. ಹ್…. ಹ್…. ನ್ವಾಡಲೇ ನ್ವಾಡು…. ಈ ಬಾಕ್ಲೂನ…. ಈ ಜನರಲ್ಲಾ…. ಯಿವ್ಯೆಲ್ಲ ಕಟ್ಗೆ ಝೋಡಿಸಿದ್ದೇ ದ್ವಡ್ ಕಥೀಯಲೇ ಲವುಡೀ…. ಕಲ್ಲಿಗೇಂಥ ಉಲಿಗುಡ್ಡದ ವಡ್ರು ಕಡಿ ತಿರುಗಿ ಯಲ್ಡು ಜತಿ ಕ್ಯೆರ ಹರ್‍ಕೊಂಡ್ನಲೇ…. ಬಿಡ್ಕೇ…. ಕ್ವಕ್…. ಕ್ವಕ್…. ಹ್….ಹ್…. ಪಾಪ…. ನಿಮ್ಮಾವ್ನಂಥ ಛಲೋ ಪಿರಾಣಿ ಈ ಪರಪಂಚದಾಗೆಲ್ಲಿಽಽಯಿಲ್ಲ ಬಿಡು… ವಂದ್ ವಳ್ಳೇದಂತಾ… ವಂದ್ ಕ್ಯೆಟ್ಟದ್ದಂತಾ…. ಯಿಟ್ಟಿದ್ ಥಿಂಥಿತ್…. ಗಪ್ನ ಮಕ್ಕಂಥಿತ್ತು…. ಮೊರಬದೀರಣ್ಣನ ಬ್ಯಾಟೀ ಆಡಾಕೆಂತ ಅಡ್ವೀಗೆ ವೋತು ಬ್ಯಾಡಾಂದ್ರೂ ಕ್ಯೋಳ್ಳಿಲ್ಲ…. ಯಾವೋನು ಯೇನು ಮಾಡಿದ್ನೋ…. ಯ್ಯಾನೋ…. ಅವ್ನು ಕೈಯಿ ಸ್ಯೇದ್ಯೋಗಾ…. ನಿಮ್ಮಾವ ವೂರ್ಗೆ ವಾಪಾಸು ಬರ್ಲೇಯಿಲ್ಲ…. ಅಯ್ಯೋ…. ಅಯ್ಯೋ…. ಬಂಗಾರ್‍ದಂಥೋನ್ನ ಕಳ್ಕೊಂಡು ಈಸು ದಿನ ಬೊದ್ಕಿದ್ನೆಲ್ಲಪೋ…. ಯಿಸಕುಡ್ಯಾ ಬುದ್ದೀನ ಆ ದ್ಯಾವುರು ಯಾಕ ಕ್ವಡ್ನಿಲ್ಲ ನಂಗೆ” ಮುದುಕಿಗೆ ತನ್ನ ಗಂಡನ ನೆಪ್ಪಾಗಿ ಅಳುವುದನ್ನು ನೋಡಿ ಮರದಲ್ಲಿ ವಾಸಿಸುತ್ತಿದ್ದ ಗುಬ್ಬಿ ಸಂಸಾರ ದುಃಖಿಸಿತು. ಮರ ಕೂಡ ಹಣ್ಣೆಲೆಗಳನ್ನುದುರಿಸಿ ಸಂತಾಪ ಸೂಚಿಸಿತು. uಟಿಜeಜಿiಟಿeಜ +“ಓಹೋ… ಎಂದಳುತ್ತಿದ್ದ ಕಂದಯ್ಯನನ್ನು ಮೂಲೇಲಿ ಕುಕ್ಕರಿಸಿ ನಾಗವ್ವ “ಅದ್ಯಾಕಂಗಳ್ತಿ ಬುಡು. ಅಳೇದ್ನೆಲ್ಲ ನೆಪ್ ಯಾಕ ಮಾಡ್ಕೇಂತಿ…. ನೀನತ್ರೆ ಸತ್ತೋನು ಬೊದ್ಕಿ ಬಂದಾನ….” ಎಂದು ರಮಿಸುತ್ತದ್ದಾಗ ಸಂಗವ್ವ ಬಾಕಲಲ್ಲಿಣುಕಿ ಮೂತಿ ತೂರಿಸಿ ಕ್ವಕ್ಕೆಂದು ಕೆಮ್ಮೆ ಸದ್ದು ಮಾಡಿತು. “ಬ್ಬೇ ಸೆವುಡವ್ವಾ…. ನಿನ್ನ ಗಂಡಾ…. ನಾಗವ್ವನ ವಟ್ಯಾಗ ವುಟ್ಟಿ ಬಂದ್ ಮೂಲ್ಯಗ ಯೆಂಗ ಅಳ್ತಾಕೂತಾನ್ನೋಡು….” ಎಂದು ಆಕೆ ಆಡಿದ ಮಾತು ಮುದುಕಿಯ ತಲೆಯೊಳಗೆ ಪುಸುಗಿ ಹೊಸಬೆಳಕನ್ನುಂಟುಮಾಡಿತು… ಮಸಗುಗಣ್ಣುಗಳನ್ನು ಮೂಲೆಗೆ ಹರಿಬಿಟ್ಟು ನೋಡಿತು. ಅದೇ ಗಿಣಿ ಮೂಗು ಅದೇ ಚಪ್ಪೆಯಾಕಾರದ ತಲೆ… ಅದೇ ಆನೆಕಿವಿ…. ಓಹ್…. ಖರೇವಂದ್ರೂ…. ಅವ್ನೇ ಇವ್ನು…. ವರಸು ಕಿರಕುಗುಟ್ಟುವಂತೆ ಸಿಡಿದೆದ್ದು ಏಳುತ್ತ ಬೀಳುತ್ತ ವ್ಯಟಕಿತ್ತು ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡು ಎದೆಯ ಗೂಡೊಳಗೆ ಹುದುಗಿಸಿಟ್ಟು ಕಣ್ಣುಗಳಿಂದ ಆನಂದಬಾಷ್ಪ ಉದುರಿಸಿತು. ನೋಡುತ್ತಿದ್ದ ಸರ್ವರು ಆ ಹನಿಗಳು ತಮ್ಮ ಎದೆಯ ಮೇಲೆ ಬಿದ್ದಂತೆ ಕ್ಷಣದಲ್ಲಿ ಮುಗ್ಧಭಾವದಿಂದ ಕಂಪಿಸಿದರು. ಆದರೆ ನಾಗವ್ವ ತನ್ನ ಕಂದಯ್ಯ ಮುದುಕಿಯ ಎದೆಯೊಳಗೆ ಅವಿತುಕೊಂಡಿರುವ ದೃಶ್ಯವನ್ನೇ ಒಂದು ಅಸ್ತ್ರವಾಗಿ ಉಪಯೋಗಿಸಲು ನಿರ್ಧರಿಸಿದಳು. “ಯಿದ್ ನಾನ್ ಮಾಡಿರೋ ನೆಳ್ಳು ಕಣ್ಲೇ ಲವುಡೀ…. ನಾನ್ ಯ್ಯೊಳ್ದಂಗೆ ಕ್ಯೋಳಂಗಿದ್ರೆ ಬಿದ್ದಿರ್ರಿ… ಯಿಲ್ಲಾಂದ್ರೆ, ವಂಟೋಗ್ರಿ” ಎಂದು ಇಂಥ ದಿನ ಇಲ್ಲಾ ಎಂಬಂತೆ ಅಕ್ಕಿ ಕಾಳು ಉದುರಿಸುತ್ತಿದ್ದುದು ದಿಢೀರನೆ ನೆನಪಾಗಿ ಕಿಚ್ಚಿಟ್ಟಿತು ಬೇರೆ… ಮದುವೆ ಮನೆಯ ಹೋಳಿಗೆಯಂಥ ಕಂದಯ್ಯನ ದೇಹದ ಹಿಂಭಾಗದ ಮೇಲಾದರೂ ನಾಲಗೆಯಾಡಿಸು ಇಚ್ಛೆಯಿಂದ ಅರ್ಜುನ ಅಲ್ಲಿಗೆ ಹೋಗಿ ಟ್ರೈ ಮಾಡಿ ಮುದುಕಿಯಿಂದ ಗುದ್ದಿಸಿಕೊಂಡು ಕುಯ್ಯೋ ಮರ್ರೋ ಅನ್ನಲಾಗದೆ ಕೇವಲ ಬುರುಗೂದಿದಂತೆ ಸಣ್ಣ ದನಿ ಹೊರಡಿಸುತ್ತ ನಾಗವ್ವನ ಕಾಲಬುಡಕ್ಕೆ ಬಂದು ಆಕೆಯ ಪಾರ್ಟಿ ಸೇರಿ ಬಾಲ ಅಲುಗಾಡಿಸಿತು. +ಮುದುಕಿ ತನ್ನ ಕಂದಯ್ಯನ ಮುಖದ ಪ್ರತಿಯೊಂದು ಭಾಗಗಳನ್ನೂ ಅತ್ತೂ ಅತ್ತೂ ಸ್ವಚ್ಛವಾದ ಪ್ರಖರ ಕಿರಣಗಳಿಂದ ತಿಕ್ಕಿ ತಿಕ್ಕಿ ನೋಡುತ್ತಿರುವುದನ್ನು ತೀಕ್ಷಣವಾಗಿ ಗಮನಿಸಿದ ನಾಗವ್ವ ತನ್ನ ವಾರಿಗೆಯವಳಾದ ಸಂಕುಳಿಯ ಬಳಿಗೆ ಸಾರಿದಳು. “ಅಲ್ಲಬೇ ನನ್ನೆಳ್ಳೂ…. ನನ್ನೆಳ್ಳೂಂತ…. ಪತ್ರಿಯ್ಯೇರಿಸಿದಂಗಾಡ್ತಲ್ಲ… ಸಾಯ್ವಾಗ ವಯ್ತಳನ್ನಂಗೆ…. ಯಾಕಿದ್ದೀತಂಥೀನಿ-ಆವಂದಷ್ಟೇ ಆದ್ರೂ… ನಾನೇನು ಕಡ್ಮೆ ಮಾಡೀನಿಯ್ಯೇಳು…. ಮಗ್ನಂಗೆ ದುಡ್ದಿಟ್ತಿಲ್ಲಾ…. ತಿಂದುಂಡು ಮಮ್ಮಗನ್ನಾಡಿಸ್ತಾ ಆರಾಮಿದ್‌ಬುಟ್ರಾಯ್ತು….” ತಾನು ತುಸುಗಟ್ಟಿಯಾಗಿ ನುಡಿಯುತ್ತಿರುವ ಮಾತುಗಳನ್ನು ಮುದುಕಿ ತದೇಕ ಚಿತ್ತದಿಂದ ಆಲಿಸುತ್ತಿರುವುದೋ ಇಲ್ಲೋಂತ ಖಚಿತಪಡಿಸಿಕೊಂಡು ಮುದುವರಿದು ಹೇಳಿದಳು…. “ಯಾಕಿದ್ದೀತವ್ವಾ ಥಾಯಿ… ಯೀಗೊಂದು ಬುದ್ಧಿ. ಯಿನ್ನೊಂದು ಸೊಲುಪೊತ್ತಿಗೆ ಯಿನ್ನೊಂದು ಬುದ್ದಿ… ಆಕಿ ಮಾಡಿದ್ನ ಆಕೇನೇ ಅನುಬೋಸ್ಲೇಳು…. ನಾನ್ಯೇನು ಬ್ಯಾಡಾಂದೀನಾ…. ನಾನು ಮದ್ಲೇ ತಳಾರ ಅನಮಂತ್ನ ಮೊಗ್ಳು… ಮಾತೆಂದ್ರೆ ಮಾತು… ಉಫ್… ಹ್ಹ್… ಬ್ಯಾಡವ್ವಾ… ಬ್ಯಾಡಾ… ಸುಡ್ಗಾಡೇ ವಾಸಿ… ಸತ್‌ಮ್ಯಾಲ ದೆವ್ವ ಆಗಿ ಆಸ್ತಿ ಕಾಯೋ ಮುದ್ಕಿ ಥಂಟಿ ಸಾಕವ್ವಾ ತಾಯಿ….” +ತಾನು ಮೈಮರೆತಿದ್ದಾಗ ತನ್ನ ತೊಡೆ ಏರಿ ರೆಸ್ಟು ತೆಗೆದುಕೊಂಡಿದ್ದ ಬೆಕ್ಕನ್ನು ಆಚೆಗದಮಿ ಮುದುಕಿ ಒಂದೊಂದು ಮಾತಿಗೂ ಅನೇಕ ಅರ್ಥಗಳನ್ನು ಕಲ್ಪಿಸಿಕೊಂಡು ವ್ಯಗ್ರವಾಗಯಿತು. ಈ ತನ್ನ ಸ್ವಯಾರ್ಜಿತ ಆಸ್ತಿಯಾದ ನೆಳ್ಳನ್ನು ಹೊಡೆಯಲು ಈ ಸೊಸೆ ಎಂಬ ಗಯ್ಯಾಳಿ ಮುಂಡೆ ಮುದ್ದಿ ಇಂಡಿಯೊಳಗೆ ಕಣಗೆಲೆ ಬೇರು ತೇದಿಡಲೂ ಹೇಸಲಾರಳೆಂದುಕೊಂಡ ಮುದುಕಿ “ಯಿಂದೇ ವಂಡ್ರಿ, ವರ್ಯಾಕೆ… ಬ್ಯಾಡಾಂತೀನ… ಸತ್‌ಮ್ಯಾಲ ನಾನು ದೆವ್ವಾರ ಆಕೀನಿ… ಪಿಚ್ಯಾಚ್ಯಾರ ಆಕೀನಿ ಅದ್ನ ಕ್ಯೋಳಾಕೆ ನೀನ್ಯಾವೋಳೆ ನನ್ನಾಟಗಿತ್ತೀ… ಕ್ವಕ್… ಕ್ವಕ್… ಹ್ಹ್…. ಹ್ಹ್… ವಂಡ್ರಿ… ಯೀಗಿಂದೀಗ್ಲೇ ವಂಡ್ರಿ-ಮಷಣದಾಗಾರಾಯಿರ್ರಿ…. ಸುಡುಗಾಡಾಗಾರಾಯಿರ್ರಿ…. ಬೆಟ್ ತೋರಿಸ್ಗೆಂಡು ಬಾಳುವೆ ಮಾಡಿದಾಕ್ಯೆಲ್ಲ ನಾನು. ಯೀ ಕ್ಯೇರ್‍ಯಾಗ ವಂದ್ತುತ್ತು ಮುದ್ದೀ ವುಟ್ಟಾಕಿಲ್ಲಾ ಅಂದ್ಕಂಡೀಯಾ…. ಹ್…ಹಾ… ಅಲಲಲಾ…. ಅವನದಾನವ್ನೂ…. ನಿನ್ ಚೆಲುವೀಕೆಗೆ ಮಳ್ಳಾಗಿ ಥಾಳಿ ಕಟ್ಟಿ ತಂದಾನ್ನೋಡು ಆಗ್ರಾಕ್ಕೋಗಿ ಗೂಗಿ ತಂದಂಗೆ…. ಹ್ಹ್…ಹ್ಹ್…. ಗಂಡನ್ನೆತ್ತಿಮ್ಯಾಲ ಮೆಣ್ಸು ಅರಿಯ್ಯೋಳೆ… ಗ್ಯಯ್ಯಾಳಿ… ಹ್ಹ್….ಹ್ಹ್….ಕ್ವಕ್….ಕ್ವಕ್….” ಎಂದು ನುಡಿಯುತ್ತಿರುವಷ್ಟರಲ್ಲಿ ಬೀಗೂತಿಯಂತೆ ಬಂದ ಕೆಮ್ಮು ಮಾತಿಗೆ ಅಡ್ಡಗಾಲು ಹಾಕಿತು. ಅಂತೂ ಸಾಹಸ ಮಾಡಿ ಗಂಟಲ ಡಿಪೋದಿಂದ ಬೊಗಸೆಯಷ್ಟು ಕಫ ಕಿತ್ತು ಕ್ವಾರೆಚಿಪ್ಪಿಗೆ ಉಗುಳುತ್ತಿರುವಾಗಲೇ ನಾಗವ್ವ ಗಾಳಿಯಂತೆ ನುಗ್ಗಿ ತನ್ನ ಕಂದಯ್ಯನನ್ನು ಬಾಚಿ ಎತ್ತಿಕೊಂಡಳು. ಅದು ನೋಡುವವರಿಗೆ ಅಗಲಿಸುವಿಕೆಯಂತೆ ಕಂಡುಬಂದು ನಾಗವ್ವ ‘ಮಹಾಗಯ್ಯಾಳಿ’ ಎಂಬ ಬಿರುದಿಗೆ ಪಾತ್ರಳಾದಳು. ಕಂದಯ್ಯನ ಸ್ಪರ್ಶದೇಟಿಗೆ ಮೊದಲೆ ತುಂಬಿಕೊಂಡಿದ್ದ ಮೊಲೆಗಳು ಜುಮ್ಮೆಂದು ಹಾಲು ಇನುಕಿ ಕುಬುಸ ಒದ್ದೆಯಾದದ್ದನ್ನು ಗೊಡ್ಡೀರವ್ವ ಗಮನಿಸಿ “ದ್ಯಾವ್ರೇ ನನಗ್ಯಾವಾಗ ತೊಟ್ಲು ಸೋಬಾಗ್ಯ ಕ್ವಡ್ತೀ… ಬಂಜೀ ಎಂಬ ಅಪವಾದದಿಂದ ಎಂದು ಮುಕ್ತಿ ಕೊಡ್ತೀ” ಎಂದು ಮೌನವಾಗಿ ಮೊರೆ ಇಟ್ಟಳು. ಆಕೆಯ ಮೊರೆ ಆಲಿಸಿದಂತೆ ಬೆಕ್ಕು ಮ್ಯಾಂವ್‌ಗುಟ್ಟುತ್ತ ಆಕೆಯ ಕಂದು ಬಣ್ಣದ ಕಾಲ ಮೀನ ಖಂಡಕ್ಕೆ ಮೈತಿಕ್ಕಿದ್ದಲ್ಲದೆ ಬೇವಿನ ಮರವೂ ಗಾಳಿಗೆ ಮಿಸುಕಾಡಿ ಹೊನ್ನೆಲೆಗಳುನ್ನದುರಿಸಿ ಅನುಮೋದಿಸಿತು. +ಅಂಥವೆರಡು ಎಲೆಗಳುದುರಿದ್ದ ಕಿರಾಪಿನ ಕರಿತಲಿಮಾನವನಾದ ಭರಮ್ಯ ದೂರದಿಂದ ಸುಂದರವಾಗಿ ಕಂಡ ಗೊಡ್ಡೀರವ್ವನ ಕಡೆ ಗುರಿ ಇಟ್ಟು ಬಂದವನೆ ಅತ್ತೆ ಸೊಸೆಯರ ಜಗಳದಿಂದಾಗಿ ಮನೆ ಮತ್ತೆ ನರಕದಂತೆ ಕಂಡಿತು. ತನ್ನ ಪ್ರಿಯವಾದ ಕಿರಾಪನ್ನು ಲೆಕ್ಕಿಸದೆ ಬೇಸರದಿಂದ ಕೂದಲು ಕಿತ್ತುಕೊಳ್ಳುತ್ತಲೆ ಬಾಕುಲು ತಟಾದು” ಏನ್ರಬೇಯಿದು ಗಲಾಟೆ…. ನಾನೇನು ಮನೀಗೆ ಬರಾಕ ಬ್ಯಾಡೇಳ್ರಿ” ಎಂದು ಹೇಷಾರವ ಮಾಡುತ್ತಲೆ ಅರ್ಜುನ ಬೋಽಽ ಬೋವ್ ಎಂದು ಮಾಲ್ ಕೌಂಸ್‌ರಾಗ ಹಾಡಿ ಸಂತೋಷ ವ್ಯಕ್ತಪಡಿಸಿತು. ಇಸಪೀಟಾಟದಲ್ಲಿ ಎಲ್ಡುಮೂರು ಕಳಕೊಂಡು ಬಂದಿರುವಾತನ ಮಾತು ಕೇಳಲು ಚಂದ ಎಂದು ಗೌಡರ ಹಟ್ಟಿ ಹೊಲಗಳಲ್ಲಿ ದುಡಿದು ಸುಣ್ಣವಾಗಿ ಬಂದಿದ್ದ ಕೇರಿ ಜನ ಕೆಲವರು ಉಚಿತ ಮನರಂಜನೆ ಆಸೆಯಿಂದ ನಾಮುಂದು ತಾಮುಂದು ಅಂತ ಬಾಕಲು ಗೋಡೆಗಾತು ನಿಲ್ಲಲು ಗೋಡೆ ಪೊಟರಲ್ಲಿ ವಾಸಿಸುತ್ತಿದ್ದ ಇಲಿಬುಡಕವೊಂದು ಟಣ್ಣನೆ ಜಿಗಿದು ಹಾರಿಹೋಯಿತು. ಆರನೇ ಕಿಲಾಸು ಓದಿರುವ ತಾನು ಕೇರಿಗರೆಲ್ಲರಿಗಿಂತ ಸುಸಂಸ್ಕೃತ ಎಂಬುದಾಗಿ ಭಾವಿಸಿದ್ದ ಆತ ತನ್ನ ಯೋಗ್ಯತೆಗೆ ಸರಿಯಾದ ತಾಯಿ ಮುದುಕಿ ಅಲ್ಲವೆಂದು; ತನ್ನ ಅಂತಸ್ತಿಗೆ ತಕ್ಕುದಾದ ಹೆಂಡತಿ ಆಕೆ ಅಲ್ಲವೆಂದೂ ಬಗೆದನು. ಇವರಿಬ್ಬರು ಸದಾ ತಲೆಯೊಳಗೆ ಕೂತು ಎಲೆ ಕಲೆಸುವಾಗೆಲ್ಲ ನೆನಪಾಗಿ ಯಾವುದು ಕಿಂಗೋ: ಯಾವುದು ಕ್ವೀನೋ: ಯಾವುದು ಜೋಕರ್ರೋ ಎಂದು ಆ ಕ್ಷಣ ಹೊಳೆಯದೆ ತಾನು ಎಷ್ಟೋ ಸಾರಿ ಆಟ ಬಿಟ್ಟುಕೊಟ್ಟಿರುವುದು ನೆಪ್ಪಾಯಿತು. ಇಂಥವರಿಂದಾಗಿ ತನಗೆ ಕುಂತರೂ ಲಾಸು; ನಿಂತರೂ ಲಾಸು; ಅವನು ಬಿಗಿ ಹಿಡಿದ ಮುಷ್ಠಿಗೆ ಮತ್ತು ಅವುಡು ಗಚ್ಚಿದ ಬಾಯಿಗೆ ರಕ್ತ ಸಡನ್ನ ನುಗ್ಗಿ ಒಂದು ರೀತಿಯ ನೋವು ಕಾಣಿಸಿಕೊಂಡು ಮುಖವನ್ನು ಒಂಥರಾ ಮಾಡಿ ಮತ್ತೆ ನಿಸೂರಾದನು. ಹೀಗೆ ಯೋಚಿಸುತ್ತ ಮಂಕಾಗಿರುವಾಗಲೇ ಮಗನನ್ನು ಮಾತಿನಿಂದ ಕಟ್ಟಬೇಕೆಂದು ಮುದುಕಿ ಚಿನ್ನಿಕೋಲು ಪುಟಿದಂತೆ ಮೇಲಕ್ಕೆದ್ದು ಲೋ ನೀನೊಂದು ಗೊಂಡ್ಸಾ… ಥೂ… ನಿನ ಬೋಯಾಗ ನನ ಹಾಟುಯ್ಯಾ. ನೀನಿಲ್ದ ಟೇಮಿನಾಗೆಂಥೆಂಥ ಮಾತಂಥಾಳೇಽಽ ಯೋನ್ಕಥೆ… ಸಿವ್‌ಸಿವಾ… ಯಿನ್ನಬ್ಬೋನಾಗಿದ್ರೆ ಕಣಗ ಥಗಂಡು ಯೆಂಡ್ತಿ ಸ್ವಂಟ ಮುರೀತಿದ್ದಾಽ… ನೀನೀದ್ದಿನ್ವಾಡು… ಕೂಳಿಗೆ ದಂಡಾಗಿ… ಯಿಲ್ಲ… ಕ್ವಕ್… ಕ್ವಕ್… ಹ್… ನಿನ್ನಂಥ ಮೊಗ ನನಗಿದ್ರೇನ್? ಯಿಲ್ದಿದ್ರೇನ್. ಕರ್‍ಕಂಡು ವಂಡು ನಿನ್ನೆಂಡ್ತಿ ಮೊಕ್ಳೂನ… ನನ್ನ ಮನ್ಯಾಗ ಬ್ಯಾಡಽಽ” ಕ್ವಕ್…. ಕ್ವಕ್….” ಎಂದನ್ನುತ್ತಿರುವಾಗ್ಗೆ ಬಂದ ಕೆಮ್ಮನ್ನು ನಿಗ್ರಹಿಸಲೆಂದು ನೆಲಕ್ಕೆ ಕೂತು ತಲೆಗೆ ಕೈ ಹಚ್ಚಿದಳು. +ಮುದುಕಿ ಎಂಬೋ ಬದುಕಿರೋ ಪಿಶಾಚಿಯ ಮಾತಿನ ಆಕ್ರಮಣದಿಂದ ಚೇತರಿಸಿಕೊಳ್ಳುವ ಮೊದಲೇ ತನ್ನ ಗಂಡನ ಮೇಲೆ ಮಾತಿನ ಸಮ್ಮೋಹನಾಸ್ತ್ರ ಪ್ರಯೋಗಿಸಬೇಕೆಂದು ಚೊಚ್ಚಿಲಿಗೆ ಗಂಡು ಹಡೆದ ಹಮ್ಮಿನಿಂದ ನಾಗವ್ವ ಕೆಂಡದ ಮೇಲೆ ಉಪ್ಪು ಚೆಲ್ಲಿದಂತೆ ಕೂಸು ಸಮೇತ ಅವನ ಮುಂದೆ ಕುಪ್ಪುಳಿಸಿದ್ದಕ್ಕೆ ಆನಂದಿಸುತ್ತಿದ್ದ ಪ್ರೇಕ್ಷಕರ ಪೈಕಿ ಸಿದ್ರಾಮ ಸೀಟಿ ಹೊಡೆದನು ಮತ್ತು ಎಂಕಟಿ ಶಬ್ಬಾಷ್ ಎಂದು ಕೂಗಿದನು. +“ಕ್ಯೋಳಿದ್ಯಾ…. ಕ್ಯೋಳಿದ್ಯಾ ನಿಮವ್ವಾಡಿದ ಮಾತ್ನ” ತನಗರಿವಿದ್ದೋ ಅರಿವಿಲ್ಲದೆಯೋ ಕಂಕುಳಲ್ಲಿದ್ದ ಕಂದಯ್ಯನ ಕುಂಡಿಯನ್ನು ಎಡಗೈಯ ಬೆರಳುಗಳಿಂದ ಚಿವುಟಿ ರೊಚ್ಚಿಗೆಬ್ಬಿಸಲು ಅದು ತಾಳ ವಾದ್ಯ ಕಛೇರಿ ಆರಂಭಿಸಿತು. “ಮಾತ್ ಮಾತ್ಗೂ ನಾನ್ ಕಟ್ಟಿಸಿದ ಮನಿ ನಾನು ಕಟ್ಟಿದ ಮನಿ….. ಯಾವದ್ವಡ್ ಬಂಗ್ಲಿ ಕಟ್ಟಿಸ್ಯಾಳನ್ನಂಗಡ್ತಾಳೆ…. ತನ್ ಮನ್ಯಾಗ ತಾನೇ ಸಿದಗಿ ಬೊಡ್ಕಂಡಿರ್‍ಲಿ… ನೀನಿಕಿ ವಟ್ಯಾಗುಟ್ಟಿದ ಮೊಗಾಗಿದ್ರೆ ಯಿಂಗಾಡ್ತಿರ್‍ಲಿಲ್ಲ… ಯೀ ಮನೀನೂ ಬ್ಯಾಡ…. ಯಿಕಿ ಸಾವಸಾನೂ ಬ್ಯಾಡ…. ವಂಡು ಯಲ್ಲಾರ ಸುಡ್ಗಾಡಾ ಗಾರಾಯಿಡು…. ಯಿರ್‍ತೀನಿ….” ಮಾತುದುರಿಸುತ್ತ ಗಂಡನ ಮುಖ ನೋಡಿ ಸಿಟ್ಟು ಬರಲಿಲ್ಲ ಇನ್ನೂ ಎಂದು ಖಚಿತಪಡಿಸಿಕೊಂಡು ನಾಗವ್ವ ತನ್ನ ಗಂಟಲ ಬಿರುಡಿಯನ್ನು ಎತ್ತರಕ್ಕೆ ತಿರುವಿದಳು. ಮುದುಕಿಗೆ ಬಾಯಿತೆರೆಯಲು ಆಸ್ಪದ ಕೊಡಬಾರದೆನ್ನುವುದೂ…. “ಅಯ್ಯಯ್ಯೋ…. ಮುತ್ತೈದಿ ಸಾವು ಯ್ಯಾಕ ಕ್ವಡುವಲ್ಲೋ…. ಯಿಂಥ ಕಂಟ್ಲುಗಿತ್ತಿ ಅತ್ತಿ ಕೈಯ್ಲಿ ಯಂಗ ಬಾಳುವೆಮಾಡ್ಲೊ…. ನನಗಂಡ ಕೈಲಾಗ್ದೋನಾಗಿದ್ಕೆ ತಾನಿ ಯಿದು ಯಿಸ್ಟು ಅಂತಿರೋದು…. ಯಿನ್ನೊಬ್ಬಾನಾಗಿದ್ರೆ ಯಿಸ್ಟು ದಿನ ಸುಮ್ನಿರ್ತಿದ್ನಾ…. ನಿಂತು ಬೈಟಕ್ಕೇಲೆಯಲ್ಲೋ ಗುಡುಸ್ಲಾಕಿ ಯಂಡ್ರುನಿಟ್ಟು ಮಾರಾಜ್ನಂಗೆ ಬಾಳುವೆ ಮಾಡ್ತಿದ್ದ… ಅವನನ್ನೊದೇನೈತೆ…. ನಾನು ಯಣ್ ಮುಂಡೇದು…. ಪಡೆದು ಬಂದಿರೋದೇ ಯಿಸ್ಟು… ಹ್‌ಹ್… ಹ್‌ಹ್…. ಹ್‌ಹ್” ಗಂಡನಿಂದ ಬೀಳಬಹುದಿದ್ದ ಹೊಡೆತಗಳಿಂದ ತಾನು ರಕ್ಷಿಸಿಕೊಳ್ಳಲೆಂದು ಸಿಟ್ಟನ್ನೇ ದುಃಖವನ್ನಾಗಿ ಮಾರ್ಪಡಿಸಿಕೊಂಡು ಪರಿಣಾಮಕ್ಕೆ ಕಣ್ಣುಮೂಗಿನಿಂದ ಸಣ್ಣಗೆ ಹರಿಯತೊಡಗಿದ ಹಳ್ಳವನ್ನು ಎಡಕ್ಕಿದ್ದ ಡೋಮನ ಕಡೆ ಸಿಡಿಸುತ್ತ ಜೋರಾಗಿ ಅಳತೊಡಗಿದಳು. +ಮೂರೂರುಳಿಕೆ ಉರುಳುವಂತೆ ಆಕೆಯ ಬೆನ್ನಿಗೆ ಝಾಡಿಸಿ ಒದೆಯಲೆಂದು ಎಷ್ಟು ಪ್ರಯತ್ನಿಸಿದರೂ ಭರಮ್ಯನಿಂದ ಬಲಗಾಲನ್ನು ಎತ್ತಲಾಗಲೇ ಇಲ್ಲ. ಆದರೆ ಅವನಿಂದ ಅಂಥ ಒಂದು ಒದೆತವನ್ನು ತಪ್ಪಿಸಿಕೊಂಡ ಜಾಣ ಅರ್ಜುನ ಬೆಕ್ಕಿನ ಸಹಾಯ ಪಡೆದು ಮನೆಯ ಅಡುಗೆ ಮನೆ ಒಳಕ್ಕೆ ಹೋಗಿ ಒಂದು ರವುಂಡು ಮುಗಿಸಿ ಮತ್ತೆ ಹೊರ ಬಂದು ಮುದುಕಿ ಕಡೆ ಆಕೆ ಮಾತು ಕೇಳುವ ಆಸೆಯಿಂದ ನೋಡಿತು. ಅದರ ಆಸೆಯನ್ನು ಈಡೇರಿಸಲೆಂದು ಮುದುಕಿ ‘ಅಲಲಲಾ ಅಂದಿತು’ ಬಿಡಕೀ… ಯಲಾಽಽಽ ಬಿಡಕೀಽಽ… ನನ್ಮಗ ಕಾಲು ಮುರುದು ಕಯ್ಯಾಗೆ ಕ್ವಡೋನಾಗಿದ್ರಿಂಗ್ಯಾಕಾಡ್ತಿದ್ದೆ… ಯೀ ಬಾಡ್ಕಾವನ ನ್ಯೆತ್ತೀಗೆ ಅದ್ಯಾವ ಗಿಡ ತೇದಚ್ಚೀಯೋ ಯ್ಯೋನೊ… ಆ ದ್ಯಾವ್ರೀಗೇ ಗ್ವತ್ತು. ಯಿವನ್ನ ಕರ್‍ಕಂಡು ಯಿವತ್ತೆ ವಂಡು ಬ್ಯಾಡಾಂದ್ರೆ ಕ್ಯೋಳ್ವಂತೆ ಕ್ವಕ್… ಕ್ವಕ್… ನನ್ ಮಮ್ಮಗನ ಮೊಖಾ ನೋಡ್ಕೊಂಡು ಯಿಸು ದಿನ ಸುಮ್ಕಿದ್ದೆ. ಹ್ಹ್… ಹ್ಹ್… ಬಡ್ಕಂಡೋಕಿ ನೀನು ಅಡಕಂಡೋಕಿ ನೀನು ನಡೆಸ್ತಿದ್ದೀ ನಡ್ಸು ಕ್ವಕ್… ಕ್ವಕ್… ಹ್ಹ್…” ಮುಷ್ಠಿ ಕಡೆಗೆ ಜೂಜುಕಾಯಿ ಸರಿದಂತೆ ತನ್ನೆರಡು ಕೈಗಳ ಆಸರೆಯಿಂದ ಕಾಲುಗಳನ್ನು ನಡೆಸುತ್ತ ಅವನಿಗೆ ಹತ್ತಿರ ಬಂದು ಮುದುಕಿ ಆದಷ್ಟು ಎತ್ತರ ಮುಖ ಎತ್ತಿ ನೋಡಿತು. ತನ್ನ ಎದೆ ಹಾಲು ಕುಡಿಯುವಾಗ ಸ್ವಾಟಿಯ ಎರಡೂ ಕಡಿಂದ ಹಾಲು ಇಳಿಸಿಕೊಂಡು ಮೈ‌ಎಲ್ಲ ಒದ್ದೆ ಮಾಡಿಕೊಳ್ಳುತ್ತಿದ್ದ ಅದೇ ಮಗನೇ ಇವನು? ಎಂಬ ಪ್ರಶ್ನೆ ಅದರ ಮುಖದ ಪ್ರತಿ ನೆರಿಗೆ ತುಂಬಿ ಜೀಕಿತು… ಬೇಡಿದ್ದೆಲ್ಲ ಕೊಡಿಸುತ್ತ ತಾನು ಸಾಲೆಗೆ ಹೊತ್ತು ಬಿಟ್ಟು ಆರನೆ ಕಿಲಾಸಿನವರೆಗೆ ಓದಿಸಿದ್ದೂ; ಅದು ಮನೀಗೆ ಬಂದ ಕೂಡಲೇ ಯವ್ವೋ ನಿಂಗೆ ಇಂಗ್ಲೀಸ್ನಲ್ಲಿ ಓಲ್ಡು ವುಮ್ಯಾನಂತಾರವ್ವೋ ಎಂದು ಉಲಿದಾಗ ರೋಮಾಂಚನಗೊಂಡು ಭಲೆ ಮಗ್ನೇ ಎಂದು ಉದ್ಗರಿಸಿದ್ದೂ; ಆಗ ಪ್ರೀತಿಯಿಂದ ಹಚ್ಚೇರು ಜ್ವಾಳಮಾರಿ ಗಂಗವ್ವನೋಟ್ಲಾಗೆ ಪಾವೂವರೆ ಕರಜೀಕಾಯಿ ಕೊಡಿಸಿದ್ದೂ ಎಲ್ಲ ನೆಪ್ಪಾಗಿ ಮತ್ತೆ ತಿಬ್ಬಳಿಸಿ ನೋಡುತ್ತದೆ…. ಆ ಮುಖ ಎಲ್ಲಿ! ಈ ಮುಖಾ ಎಲ್ಲಿ! ಕಿರಾಪು ಬಿಟ್ಟಿರುವ ತಲೆ, ಪ್ರೆಂಚು ಮೀಸೆ, ಅಲ್ಲದೆ ಬಲಗಿವಿ ಸಂಧಿಯಲ್ಲಿ ಕ್ವರೆ ಸೀಕರೇಟು ತುಂಡು… ಓಹ್ಹೋ ಬಂದವ್ನೆ ಯಂಡ್ತಿ ಸೆರ್‍ಗು ತೀಡಾಕೆ. ಹಲ್ಲು ಕಡಿಯಾಕೆ ಎಂದರೆ ಬಾಯೊಳಗೆ ಎರಡಾದರೂ ಹಲ್ಲುಗಳಿದ್ದಿದ್ದರೇ….. ಮುದುಕಿ ನೀರು ತುಂಬಿ ಮಂಜುಗವಿಯುತ್ತಿದ್ದರೂ ಅವುಡು ಗಚ್ಚಿ ಕ್ಯಾಕ್ಕನೆ ಕಫವನ್ನು ಬಾಯಿಗೆ ತಂದು ಕೊಂಡದ್ದೆ ಥೂ ಅಂತ ಉಗುಳುತ್ತಲೇ ಅದು ಪ್ರೇಕ್ಷಕರ ಪೈಕಿ ಸಿದ್ರಾಮ, ಸಂಗ, ದೊಡ್ಡಿಯರಿಗೂ ಬಿದ್ದು ಹೋ ಎಂಬ ಉದ್ಗಾರ ಹುಟ್ಟಲು ಕಾರಣವಾಯಿತು. “ಅಸ್ಟಾಡ್ತಿದ್ರೂ ನ್ವಾಡ್ತಾ ನಿಂತೀಯ್ಯೋನೋ… ಥೂ ನಿನ ಜಲುಮಾಕೆ ಬ್ಯೆಂಕಿ ಆಕಾ…. ಓಗು ಯಲ್ಲವ್ನ ಗುಡ್ಗೋಗಿ ಸೀರಿ ಉಟ್ಕುಂಡು ಬಳೀ ತ್ವಟ್ಕೋ….” ಹೀಗೆ ತನ್ನ ಗಂಡಸ್ತನಕ್ಕೆ ಹಡೆದ ತಾಯಿಯೇ ಸವಾಲು ಹಾಕಿದಾಗ ಭರಮ್ಯಗೆ ಸೊಲುಪಾದರೂ ಸಿಟ್ಟು ತೋರಿಸುವುದು ಅನಿವಾರ್ಯವಾಯಿತು. ಯಾವ ಅಸ್ತ್ರವನ್ನು ಯಾವ ರೀತಿ ಪ್ರಯೋಗಿಸಬೇಕೆಂದು ಯೋಚಿಸುತ್ತ ಕಾಲ ಕಳೆದರೆಲ್ಲಿ ಹೆಂಡತಿ ಕುಪ್ಪಳಿಸಿ ಎದ್ದು ಪ್ರತಿವಾದವನ್ನು ಮಂಡಿಸಿ ತನ್ನನ್ನು ಕಕ್ಕಾವಿಕ್ಕಿ ಮಾಡುವಳೋ ಎಂದು ಅನುಮಾನಿಸಿ ಕೂಡಲೇ ಬಲಗಾಲನ್ನೆತ್ತಿ ಹೆಂಡತಿ ಡುಬ್ಬಕ್ಕೆ ಬಾರಿಸುತ್ತಲೆ ಆಕೆ ಮೂರುರುಳುವಿಕೆ ಉರುಳಿ ಬಿದ್ದು ನೆಲದ ತುಂಬ ಉರುಳಾಡಿ ಕಾಡಿನ ಗುಬ್ಬಿಯಾಗಿ ರೋಧಿಸತೊಡಗಿದಳು. +ಹೆತ್ತಾಕಿ ಶಬ್ಬಾಷ್ ಎನ್ನಬುದೇನೋ ಅಂತ ಮುದುಕಿ ಕಡೆ ಅಂಜುತ್ತ ಅಳುಕುತ್ತ ಭರಮ್ಯ ನೋಡುತ್ತಿರಲು ಅದು “ವಡೀ ಅಂದ್ರ ಯಿಂಗ ವಡ್ಯೋದ್ಯೇನೋ… ನಿನ ಕಾಲು ಸ್ಯೇದ್ಯೋಗ ಕಾಲಾಗ ವುಳಾ ಬೀಳಾ… ಅಯ್ಯೋ ನನ ಸ್ವಸೀಗೆ ವಟ್ಟೆಗೆಲ್ಲಿ ವಡ್ತ ಬಿತ್ತೋ ಸಿವ್ನೆ” ಎಂದಾತುರದಿಂದ ನೆಲದ ಮೇಲೆ ಬಕ ಬೋರಲು ಬಿದ್ದು ಉರುಳಾಡುತ್ತಿದ್ದ ಸೊಸೆ ಕಡೆ ಅಬಡಾ ದಬಡಾ ಓಡಿತು. ನಾಗವ್ವ ಮುದುಕಿಯ ಸ್ವರ್ಶ ಕೊಸರಿ ದೂರ ಸರಿದಳು. “ವಡ್ಸೋದು ವಡ್ಸಿ ರಮುಸೋಕೆ ಬಂದೀಯ್ಯೇನಬೇ ನಿಂದೇನು ನಂಗೆ ಬ್ಯಾಡ ಓಗು… ವಡೀಲಿ ಅದ್ಯೆಸ್ಟು ವಡಿತೀಯೋ… ಪಿರಾಣ ಓಗಾಮಟಾ ವಡೀ…. ಯೀ ತಳಾರ್‍ಗೆ ಅನುಮಂತಪ್ಪ ಮೊಗ್ಳು ವಡ್ತಕ್ಕೆ ಯದ್ರಲ್ಲ… ತಿಳೀತ…” “ಅಯ್ಯೋ ಒದ್ದುಬಿಟ್ಟೆನಲ್ಲಾ” ಎಂದು ಕೈಯಿ ಕೈಯಿ ಹಿಚುಗಿಕೊಳ್ಳುತ್ತಿದ್ದ ಗಂಡನೆದುರು ಸಿಡಿದು ನಿಂತಳು. ಥಾಳಿ ಕಟ್ಟಿಸ್ಕೊಂಡೋಳ್ಗಿಂತ ಹಡ್ದೊಳೆ ಯಚ್ಚಾದ್ಳಾ ನಿಂಗೆ… ವಡ್ಯೋದಲ್ಲ… ಇಸಾಕ್ವಡು ಕುಡಿತೀನಿ” ಗಂಡನ ಕೊರಳಿಗೆ ತೋಳು ಹಾಕಿ ಮೇಲೆ ಎಳೆದುಕೊಂಡು ಜಗ್ಗಾಡಿದಳು. ಇಸಪೀಟು ಕಿಲಬ್ಬಿನಲ್ಲಿ ಬರೀ ಗಿಂಗಲ್ಲು ಚಾ… ಚೂರು ಪಾರು ಖಾರಸೇವು ಜಮುಡೇ ಜೀವ ಹಿಡಿದುಕೊಂಡಿದ್ದ ಭರಮ್ಯ ಆ ಎಳೆದಾಟಕ್ಕೆ ದುಬುಕ್ಕನೆ ಬಿದ್ದನು. ಗಂಡನ ಮೇಲೆ ಹೆಂಡತಿಯೋ, ಹೆಂಡತಿಯ ಮೇಲೆ ಗಂಡನೋ, ಮಗ ಸೊಸೆಯರ ಪರಸ್ಪರ ಈ ತೆರನ ಎಳೆದಾಟ ಮುದುಕಿಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. “ಮೈಲಾರಲಿಂಗಾ ನನ್ಮೊಗಾ ಸ್ವಸೀನ ಸಾಯೋಗಂಟಾಯಿಂಗೇ ಯಿಟ್ಟಿರು” ಅಂತ ಮುದುಕಿ ಬೇಡಿಕೊಳ್ಳುತ್ತಿರುವಾಗ್ಗೆ ಎಳೆದಾಟ ಉರುಳಾಟದಲ್ಲಿದ್ದ ನಾಗವ್ವ ತೆಳೂಪೆಂದರೆ ತೆಳೂಪಿರುವ ಗಂಡನ ಶರೀರದ ಮೇಲೆ ದಷ್ಟಪುಷ್ಟವಾಗಿರುವ ತಾನು ಕೂತರೆ ಜನರೂ, ಅಂತರಾತ್ಮವೂ ಮೆಚ್ಚದೆಂದು ತಾನೇ ಅಡಿಯಾಗಿ” ನನ್ನ ಸಾಯಿಸೋ… ನನ್ ಕುತ್ತಿಗೆ ಯಿಚ್ಗೋ” ಎಂದು ವೀರಾವೇಶದಿಂದ ಕ್ಷೀಣ ಸ್ವರ ತೆಗೆದಳು. +uಟಿಜeಜಿiಟಿeಜ +ಕೇರಿಗೆ ಯಜಮಾನನೆಂಬುದು ಯಾವ ಕಾರಣಕ್ಕೆಂದರೆ ಕಣುಕುಪ್ಪಿ ಗುರುಬಸ್ವಿಯನ್ನು ಲಗಾಯ್ತು ಇಟ್ಟುಕೊಂಡಿರುವ ಚೆನ್ನೀರನು ಇದೇ ಛಾನ್ಸು ಎಂದು ಮುನ್ನುಗಿದನು. ಕೇರಿಯ ಗಂಡ ಹೆಂಡಿರ ಜಗಳವನ್ನು ಬಿಡಿಸುವುದರಲ್ಲಿ ನಿಷ್ಣಾತನಾಗಿರುವ ಆತನು “ಯ್ಯೋನಬೇ ನಾಗವ್ವ ಬುದ್ದಿಯಲ್ಲಿಟ್ಟಿದ್ದೀ” ಎಂದು ಆಕೆ ತುಂಬುದೋಳಿಗೆ ಕೈಯನ್ನು ಭದ್ರವಾಗಿ ಹಚ್ಚಿದನು. “ಮಾಡ್ಕೆಂಡ ಗಂಡ ಯೆಂಥೋನೆ ಆಗಿರ್‍ಲಿ, …. ಅವ್ನು ದೇವ್ರಿಗೆ ಸಮಾನ, … ಅಂದ್ರ ಅನ್ನಿಸ್ಗೋ ಬೇಕು. ವದ್ರೆ ವದಿಸ್ಗೋ ಬ್ಯೇಕು. ಅದು ಬುಟ್ಟು ಯಿಂಗಾ ಮಾಡೋದು ಕ್ಯೇರಿ ಜನ್ಕೆ ಯದ್ರೋದು ಬ್ಯಾಡ ಬುಡು, ನಿಂ ಮನಸಿಗೆ ನೀವು ಯದ್ರೋದು ಬ್ಯಾಡೇನು… ಹ್ಹ್” ಸೆರಗಿರದೆ ಹಾಲುಕ್ಕಿ ಒದ್ದೆಯಾಗಿ ಪುಟದಿಳಿಬಿದ್ದಿದ್ದ ಮೊಲೆ ಕಡೇ ನಿಗಾ ಇಟ್ಟು ಬುದ್ಧೀವಾದ ಹೇಳಿ ಪಟ್ಟು ಸಡಿಲಿಸಿ ಜಲಜಲ ಬೆವತ ಚೆನ್ನೀರನು ಭರಮ್ಯಾಗೆ ತುಂಬ ಬೇಕಾದೋನು. ಕೇಳಿದಾಗ ಇಲ್ಲೆನ್ನದೆ ಎಂಟಾಣೆ ರೂಪೈ ಕೊಡುತ್ತಿದ್ದ ಚೆನ್ನೀರನಿಂದ ನಾಡಿದ್ದು ಬಿಕ್ಕಿ ಮರಡಿ ಜಾತ್ರೆಗೆ ಐದಾದರು ಪಡೆಯಬಹುದೆಂದು ತಮ್ಮವ್ವನ ಮಗ್ಗುಲು ನಿಂತಿದ್ದ ಭರಮ್ಯ ಲೆಕ್ಕ ಹಾಕುತ್ತಿದ್ದನು. +ರೆಟ್ಟೆ ಮುರಿದು ಕುಟುಂಬವನ್ನೇ ಸಲಹುತ್ತಿದ್ದ ನಾಗವ್ವಗೆ ಚೆನ್ನೀರನೆಂಥೋನೆಂಬುದು ಗೊತ್ತು… ಅದಕ್ಕೆ ಅವಳಿದ್ದು “ಓಗಲೋ ಓಗು… ನೀನ್ಯಾವೂರ ರಾಜ ಬುದ್ದಿ ಯ್ಯೋಳಾಕೆ… ನಾವು ಗಂಡಯೆಂಡ್ರು. ಯೀಗ ಜಗ್ಳ ಆಡ್ತೀವಿ… ಯಿನ್ನೊಂದು ಚಾವತ್ತಿಗೆ ವಂದಾಕ್ಕೀವಿ…” ಎಂದು ದಭಾಯಿಸಿದ್ದನ್ನು ಅಚ್ಚವ್ವನ ಮನಿ ಮ್ಯಾಳಿಗೆ ಮೇಲೆ ನಿಂತಿದ್ದ ಗುರುಬಸ್ವಿ ಕೇಳಿಸಿಕೊಂಡವಳೆ ಎಲಾ ಎಂದು ಕನಲಿದಳು. ಮೊದಲೆ ತನ್ನ ಐಬು ಎಡಗಾಲಿಗೆ ಹರುಕು ಸೀರೆ ತೊಡರಿ ಬಿದ್ದೆದ್ದು ಬಿರುಗಾಳಿಯಂತೆ ಸುಯ್ಯನೆ ಬಂದಳು. “ಯ್ಯೋನೇ ಭೋಸುಡಿ….. ನನ ಗಂಡಗೆ ಲೇಂತ… ಲೇ…. ಅಂತಾಡ್ತೀಯಾ….” ಎಂದು ಸೆಡ್ಡೊಡೆದು ನಿಂತಳು. ಕೆಂಪು ತೊಡೆ ತಟ್ಟಿದ್ದು ಮಾತ್ರಕ್ಕೆ ಹೆದರುವ ಪೈಕಿಯಾಗಿರಲಿಲ್ಲ ನಾಗವ್ವ….. ಸಜ್ಜನಳ ಪೈಕಿ ಸಜ್ಜನಳಾಗಿದ್ದ ಆಕೆಗೆ ಕೇರಿಯ ಯಾರ ಹಳ್ಳಗಳಲ್ಲಿ ಎಷ್ಟೆಷ್ಟು ನೀರಿದೆ ಎಂದು ಗೊತ್ತು. “ಹ್ಹಾ ಹ್ಹಾ… ಹ್ಹ… ಬೊಂದು ಬುಟ್ಳು ಆದ್ರಗಿತ್ತಿ… ತಾಳಿ ಕಟ್ಟಿದ ಗಂಡಾಗಿದ್ರೆ ಯಿನ್ನು ಯೇಟು ಅಂತಿದ್ಳೋ…” ಚದುರಿದ್ದ ಮುಡಿ ತುರುಬು ಬಿಗಿದು ಹೇಳಿದಳು “ಬ್ಯಾರ್‍ಯೋರ ಯೆಂಡ್ರು ಮೈಯಿ ಕೈಯಿ ಮುಟ್ಟಿ ಪಂಚಾತಿ ಯ್ಯೋಳಾಕೆ ಬರಾದಾ ನಿನ್ನೆಜುಮಾನ. ಮರುವಾದಿಯಿದ್ರೆ ಯೀಗೀಂದೀಗ್ಲೇ ಕರ್‍ಕಂಡು ವಂಡು” ತನ್ನ ಜಗಳಗಂಟಿ ಮುದುಕಿಯೇ ಸೈ ಅನ್ನುವಂತೆ ನಾಗವ್ವ ನುಡಿದಳು. ಅರ್ಜುನಗೂ ಆಕೆಯ ಮಾತು ಸೈ ಅನ್ನಿಸಿ ಕುಂಯ್ ಅಂತ ಆಕೆಯ ಕಾಲ ಮೀನಖಂಡಕ್ಕೆ ತನ್ನ ಮೈ ತಿಕ್ಕಿ ಸುಳಿಯಿತು. +ಬೀಸಿದ ಗಾಳಿಗೆ ಬೇವನಮರ ಹೊಯ್ದಾಡುತ್ತಿದ್ದಾಗ ಗುರಬಸ್ವಿ ಚೆನ್ನೀರನ ರೆಟ್ಟೆ ಹಿಡಿದು “ನಿಂಗೆ ಯೇಟು ಯ್ಯೋಳಿದ್ರೂ ಬುದ್ಧಿ ಬರ್‍ಲಿಲ್ಲ…” ಎಂದು ಜಗ್ಗಿದಳು. “ಲೇ ಲವುಡಿ-ಔದಲೇ ನಾನಿವನ್ನ ಯಿಟ್ಕಂಡೀನಿ… ಅದ್ನೇನ್ಯೋಳ್ತಿ ಬೋಳು ಬದ್ನೆಕಾಯಿ ತುಂಬು. ನಿನ್ನಣೇಲಿರೋ ಕುಂಕ್ಮ ನಿಂಗೇ ಸಾಸ್ವತ ಅಲ್ಲ – ನನ್ನಂಗೆ ನಿನ್ಗೂ ಗತಿ ಬರ್‍ಲೀ ತಿಳೀತತೆ-ಹ್ಹಾಂ ಅಹ್… ಅಯ್ಯೋ ನನ ಕರುಮವೇ. ನನ್ನ ಮಿಂಡ್ರುಗಳ್ಳಿ ಅಂದ್ಳಲ್ಲಪೋ…. ನನ್ನಿಟುಗೊಂಡಾನಾ ಸೀರೆ ಬಿಚ್ಚಿ ವದ್ಯೋನಾಗಿದ್ರೆ ಯಿಂಗಂತಿದ್ಯಾಽ.” ಕಣ್ಣು ಮೂಗಿಂದ ಧಾರಾಕಾರವಾಗಿ ಹರಿಯ ತೊಡಗಿದ ನೀರನ್ನು ಎಡಗೈಲೂ ಬಲಗೈಲೂ ಸುತ್ತಾನ್ನಾಕಡೆ ಶಾಪಗ್ರಸ್ತವಾಗಿ ಸಿಂಪಡಿಸುತ್ತ ಅಬ್ಬರಿಸಿದಳು. +ಬಂಜೆಯೂ ವಿಧವೆಯೂ ಆದ ಗುರುಬಸವಿ ತುಂಬಿದ ಮನೆಯಲ್ಲಿ ಅತ್ತರೆ ಒಳ್ಳೆಯದಾಗುವುದಿಲ್ಲವೆಂಬ ಉದ್ದೇಶದಿಂದ ಮುದುಕಿ ತನ್ನ ರುಗ್ಣಶಯ್ಯೆಯಿಂದ ಮೇಲೆದ್ದು “ಲ್ಯೇ ಗುರುಬೊಸ್ವಿ…. ನನ್ ಸ್ವಸೀ ಸಿಟ್ನಾಗ ಯ್ಯೋನ ಅಂದ್ಲು. ಸುಧಾರಿಸಗ್ಯಾ…” ಎಂದು ರಮಿಸುತ್ತ ಬಂದಿತು. ಊರಮ್ಮ ದೇವತೆಯ ಶಾಪದಿಂದ ತಾನು ಬಸುರಿಯಾಗದಿದ್ದಾಗ ಸುಂಕುಲಮ್ಮ ದೇವತೆಯ ಶಾಪದಿಂದ ತನ್ನ ಗಂಡ ಗೋಯಿಂದನು ವಿಚಿತ್ರ ರೋಗಕ್ಕೆ ಸತ್ತಾಗ ಮತ್ತು ಬಳ್ಳಾರಿ ಸೆಂಟ್ರಲು ಜೇಲಿನಲ್ಲಿ ಮೂರು ತಿಂಗಳು ಶಿಕ್ಷೆ ಅನುಭವಿಸಿ ಬಂದಿದ್ದ ಚೆನ್ನೀರನನ್ನು ತಾನು ಪರಮೆಂಟಾಗಿ ಯಿಟುಗೊಂಡಾಗ ತನಗೆ ಸಪೋರ್ಟೆಂದರ ಸಪೋರ್ಟು ನೀಡಿದ ಪುಣ್ಯಾತ್ಗಿತ್ತಿ ಸೆವುಡವ್ವನ ಮಾತಿಗೆ ಬೆಲೆ ಕೊಡದೆ ಇರಲಾಗಲಿಲ್ಲ ಗುರುಬಸವಿಗೆ. ಅಲ್ಲದೆ ಮಂಗ್ನಳ್ಳಿ ಸೆಂಬಯ್ಯ ಸಾಸ್ತ್ರಿಗಳು “ನೋಡವ್ವಾ ಈ ವರ್ಸ ಗ್ರಹಗತಿಗಳು ನಿಂಗೆ ದೂರಾಗ್ಯಾವ…. ಉಗಾದಿ ಅಮಾಸಿ ಕಳ್ಯೋಮಟ ಯಾರ್ ವದ್ರೂ ವದಿಸಿಗ್ಯಾ…. ಯಾರ್ ಬೈಯ್ದರೂ ಬೈಸಿಗ್ಯಾ…. ನೀನೊಂದುಲ್ಲು ಕಡ್ಡಿಯಿಡ್ಕಂಡ್ರೂ ಅದು ನಾಗ್ರಾವಾಗಿ ಬುಸ್ ಅಂತ ಕಚ್ಲಾಕ ಬರ್‍ತದೆ…. ತಿಳಿತಾ” ಎಂದು ಹೇಳಿದ್ದು ನೆನಪಾಗಿ ಸಿಟ್ಟನ್ನು ಗಂಟಲಿಂದ ಹೊಟ್ಟೆಗಿಳಿಸಿದಳು. ಚೆನ್ನೀರನ ಕೈ ಹಿಡಿದು ಎಳೆಯುತ್ತ “ಬಾರೋ ಬಾ. ಅಮಾಸಿ ಕಳೀಲಿ ಯೀಗ್ಯಾಕ ಆ ಮಾತು” ಎಂದು ಕರೆದುಕೊಂಡು ಬಾಕುಲು ದಾಟಿ ಹೋದಳು. ಜಗಳದ ವಿಷಯದಲ್ಲಿ ಮಾತ್ರ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಡದ ಸರ್ದಾರಿ ಎಂದು ಕ್ಯೇರಿ ಆದ್ಯಂತ ಹೆಸರಾಗಿದ್ದ ಗುರುಬಸವಿ ನಾಲಗೆಯಿಂದ ಬ್ರಹ್ಮಾಸ್ತ್ರ ಪ್ರಯೋಗಿಸದೆ ಮಿಂಡನೊಡನೆ ಹೋದದ್ದರಿಂದ ಸಾಂಬ, ಅಪಾರಿ, ಡೋಮ, ಎಂಕಟಿ ಇವೇ ಮೊದಲಾದ ಪ್ರೇಕ್ಷಕರಿಗೆ ತುಂಬ ನಿರಾಶೆಯಾಯಿತು. ಕೆಲವು ಚಣ ಕವಿದ ಮೌನದಲ್ಲಿ ಅವರೆಲ್ಲ ಪರಸ್ಪರ ಮುಖ ನೋಡಿಕೊಂಡರು. +ಸಣ್ಣಪುಟ್ಟ ಗೊಣಗಾಟ ಬಿಟ್ಟರೆ ರಂಪಾಟಕ್ಕೆ ಆಸ್ಪದ ಕೊಡುವಂಥ ಮತ್ತೊಂದು ಮಾತನ್ನು ಆಡಲು ಮುದುಕಿಯಾಗಲೀ, ನಾಗವ್ವನಾಗಲೀ ತಯಾರಿರಲಿಲ್ಲ. ಗಂಟೆಗಟ್ಟಲೆ ನಿರ್ವಿರಾಮ ಜಗಳಕ್ಕೆ ಖರ್ಚಾಗಿದ್ದ ಶಕ್ತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕೆಂದು ತೋಚದೆ ಅವರೆಲ್ಲ ಕೇವಲ ದೀರ್ಘ ಉಸಿರಾಟಕ್ಕೆ ತೊಡಗಿದ್ದರು. +ಇಷ್ಟು ಸುಲಭವಾಗಿ ಜಗಳ ಬಗೆಹರಿಯಬಹುದೆಂದು ಕನಸಲ್ಲೂ ಊಹಿಸಿರದಿದ್ದ ಭರಮ್ಯ ದೇವರ ದೊಡ್ಡಸ್ತಿಕೆಯನ್ನು ತನಗರಿವಿದಲ್ಲದಂತೆ ಕೊಂಡಾಡುತ್ತಾ ಕಿವಿ ಸಂಧಿಯಲ್ಲಿದ್ದ ಸಿಗರೇಟಿನ ತುಂಡು ಬೆವರಿಗೆ ತೋಯ್ದು ಚಪ್ಪಟೆಯಾಗಿರುವುದನ್ನು ಖಚಿತಪಡಿಸಿಕೊಂಡು ಎದೆಯ ಬಿಸಿಗೆ ಒಣಗಬಹುದೆಂಬ ಖಾತರಿಯಿಂದ ಜೇಬಿನಲ್ಲಿರಿಸಿದನು. +ನಿಡಿದಾಗಿ ಉಸಿರಾಟದ ರೀತಿಗೆ ಕೆಮ್ಮು ವಕ್ಕರಿಸುತ್ತಲೆ ಮುದುಕಿ ಕ್ವಕ್ ಕ್ವಕ್ ಕೆಮ್ಮುತ್ತ ಗಂಟಲಲ್ಲಿದ್ದ ಕಫವನ್ನು ಒಮ್ಮೆಗೆ ಬಾಯಿಗೆ ತಂದುಕೊಂಡು ಅದನ್ನು ಉಗುಳಲಿಕ್ಕಿದ್ದ ಚಿಪ್ಪು ಕಾಣದಾದಾಗ ಮೂಕ ಅಭಿನಯಕ್ಕೆ ತೊಡಗಿ ನೋಡುವವರಿಗೆ ಉತ್ತಮ ಮನರಂಜನೆಯನ್ನು ಒದಗಿಸಿದಳು. +ಗಂಡನ ಮೇಲಿನ ಸಿಟ್ಟನ್ನು ಗುರುಬಸವಿಯ ಮೇಲೆ ತೀರಿಸಿಕೊಳ್ಳಬೇಕೆಂದಿದ್ದಾಗ ಆಕಿ ತಮ್ಮನ್ನೆಲ್ಲ ಉದಾರವಾಗಿ ಕ್ಷಮಿಸಿ ಹೊರಟುಹೋಗಿದ್ದರಿಂದ ತನಗೆ ಅವಮಾನವಾಯಿತೆಂದು ಭಾವಿಸಿದ ನಾಗವ್ವ ನಾಗರದಂತೆ ಬುಸುಗುಟ್ಟಿದಳು. “ವತ್ತುಟ್ಟೋದ್ರೊಳಗಾಗಿ ಕನ್ನೀರವ್ವನ ಬಾವಿಗ್ಬೀಳ್ಲಿಲ್ಲ ನಾನು ತಳಾರ್‍ಗೆ ಅನುಮಂತಪ್ನ ಮೊಗ್ಳೆ ಅಲ್ಲಽಽ” ಎಂದಾಕೆ ಶಪಥ ಮಾಡಿದೇಟಿಗೆ ಮರ ಬಲವಾಗಿ ಮಿಸುಕಾಡಿ ಕೂತಿದ್ದ ಕಾಗೆಯನ್ನು ಝಾಡಿಸಿ ಮುಗಿಲಿಗೆ ತಳ್ಳಿತು. ಮಾಳಿಗೆ ಇಲ್ಲದ ಮನೆಯ ಮೇಲೆ ಕಾಗೆ ಪ್ರದಕ್ಷಿಣೆ ಹಾಕುತ್ತ ಬಿತ್ತತೊಡಗಿದ ಕಾಽಽ ಕಾಽಽ ಸ್ವರಕ್ಕೆ ಬೆಚ್ಚಿಬಿದ್ದೋ; ತನ್ನ ಮುಖ ಭಾಗವನ್ನು ಬೆಕ್ಕೂ ತಿಕಭಾಗವನ್ನೂ ಅರ್ಜುನನೂ ಗುತ್ತಿಗೆ ಹಿಡಿದು ಪುರುಸೊತ್ತಿಲ್ಲದೆ ನೆಕ್ಕುತ್ತಿದ್ದುದಕ್ಕೆ ಬೇಸರದಿಂದಲೋ ಹೋಽಽ ಅಂತ ಅಳುತ್ತಿದ್ದ ಕಂದಯ್ಯನ ಕಡೆ ಸುರ್ರಂತ ನುಗ್ಗಿ “ನನ್ವಟ್ಯಾಗ ವುಟ್ಟಿದ್ಕೆ ಅನುಭವ್ಸುಽಽ. ಮುಂಜಾನಿಂದ ಒಂದ್ತೊಟ್ಟು ಆಲುಕಾಣ….. ದರಿದ್ರದ್ದು…..” ಎಂದು ಸಿಟ್ಟಿನಿಂದಲೋ ಪ್ರೀತಿಯಿಂದಲೋ ಗೊಣಗುತ್ತ ಎತ್ತಿಕೊಂಡು ಜಿನುಗುತ್ತಿದ್ದ ಮೊಲೆಗೆ ಹಾಕ್ಕೊಂಡಳು. ಹಸಿದಿದ್ದ ಕಂದಯ್ಯ ಅಡಬುರಸಿ ಮೊಲೆ ಜವಡುತ್ತಿದ್ದ ಸೊಗಸಿಗೆ ಮೈ ಎಂಭೋ ಮೈ ರೋಮಾಂಚನದ ಸೆಳವಿಗೆ ಸಿಲುಕಿದಾಗ ಒಂದು ಕ್ಷಣ ಕಣ್ಣು ಮುಚ್ಚಿ ಸುಖದ ಉತ್ತುಂಗಕ್ಕೇರಿದಳು. ತಾನೂ ತನ್ನ ಕಂದಯ್ಯನೂ ನೆಲದಾಳಕ್ಕೆ ಬೇರುಚಾಚಿ ಚಕಪಕ ಚಿಗಿತು ಬಯಲ ತುಂಬ ಕೊಂಬೆಗಳ ಹರಡಿ ಎಲೆ ಹೂವು; ಈಚೂ; ಕಾಯೀ; ಹಣ್ಣೂ ಬಿಟ್ಟು ಸುವಾಸನೆ ಹರಡಿದಂತೆಯೂ ತಮ್ಮ ಮೇಲೆ ಕಾಗೆ, ಗುಬ್ಬಿ, ಗಿಳಿ, ಗೊರವಂಕ, ಇವೇ ಮೊದಲಾದ ನೂರೆಂಟು ನಮೂನೆ ಪಕ್ಷಿಗಳು, ಎಲೆಗೊಂದರಂತೆ ಗೂಡು ಕಟ್ಟಿ ಮೊಟ್ಟೆ ಇಟ್ಟಂತೆಯೂ; ಭರಮ್ಯ ಚೆನ್ನೀರ, ಸಾಂಬ, ಗೌಡ ಇವೇ ಮೊದಲಾದ ಮಾನವರು ಭಲ್ಲೆ ಭರ್ಚಿ; ಗಂಡರಗೊಡಲಿ; ಕುಡುಗೋಲು ಇವೇ ಮೊದಲಾದ ನೂರೆಂಟು ನಮೂನೆಯ ಮಾರಕಾಯುಧಗಳನ್ನು ಹಿಡಿದುಕೊಂಡು ತಮ್ಮ ಬುಡ ಸುತ್ತವರಿದು ನಿಂತು ಕೇಕೆ ಹಾಕಿದಂತೆಯೂ ಅವರು ಹಾಕುತ್ತಿದ್ದ ಒಂದೊಂದು ಏಟುಗಳಿಗೆ ಹಸಿರು ಬಣ್ಣದ ರಕ್ತ ಚೆಲ್ಲೆಂದು ಹರಿಯುತ್ತಿದ್ದು ಕ್ರಮೇಣ ಪ್ರವಾಹದಂತೆ; ಪಕ್ಷಿಗಳು ಕೋಪಗೊಂಡು ತಮ್ಮ ಚೂಪನೆಯ ಕೊಕ್ಕುಗಳಿಂದ ಮಾನ್ನವರ ಕಣ್ಣುಗಳನ್ನು ಕುಕ್ಕಲು, ಅವರೆಲ್ಲ ಕುರುಡಾಗಿ ಹಸಿರೊಳಗೆ ಜಳಕ ಮಾಡಿ ಕಣ್ಣುಳ್ಳವರಿಗೆ ಹಬ್ಬವನ್ನುಂಟು ಮಾಡಿದಂತೆ ವಿಚಿತ್ರವಾದ ಕನಸೊಂದನ್ನು ಆ ಕ್ಷಣವೊಂದರಲ್ಲಿ ಕಂಡು ಬೆಚ್ಚಿ ಬಿದ್ದು ಕಣ್ಣು ತೆರೆದು ಅದೇ ವಾಸ್ತವವನ್ನು ಕಂಡಳು. +ಯಲ್ಲಿಂದಲೋ ಬೆಂಕಿ ಸಂಪಾದಿಸಿಕೊಂಡು ಎರಡು ದಮ್ಮಿಗೆ ಕ್ವರೆ ಸಿಕರೇಟು ಸುಟ್ಟು ಬಿಸಾಕಿದ ಭರಮ್ಯ ಕಷ್ಟಪಟ್ಟು ಜಠರ, ಸಣ್ಣಕರುಳು, ದೊಡ್ಡ ಕರುಳು ಮುಂತಾದ ಸಂದಿಗೊಂದಿ ತುಂಬಿ ಅದುಮಿಡಿದಿದ್ದ ಹೊಗೆ ಅದಾವ ಮಾಯದಿಂದಲೋ ಮೂಗು ಬಾಯಿ ಕಿಂಡಿಗಳ ಮೂಲಕ ಎಳೆ‌ಎಳೆಯಾಗಿ ಹೊರ ಹಾದು ಅಖಿಲಾಂಡಕೋಟಿ ಬ್ರಹ್ಮಾಂಡದಲ್ಲಿ ಲೀನವಾಗುತ್ತಿತ್ತು. ಲೀನವಾಗುವ ಸೌಂದರ್ಯಕ್ಕೆ ಬೆರಗಾಗಿದ್ದರೂ ಭರಮ್ಯ ಬಳ್ಳಾರಿ ಪ್ಯಾಟಿಗೆ ಹೋಗಿ ಪಾತ್ರದ ಕೆಂಚವ್ವನ ಲಾರಿಯಲ್ಲಿ ಕಿಲೀನರನ ಕೆಲಸಕ್ಕೆ ಸೇರಿ ಪ್ರತಿ ತಿಂಗಳು ಇನ್ನೂರು ಮುನ್ನೂರು ಎಣಿಸಿ ಕೊಳ್ಳುವ ಪಿಲಾನು ಹಾಕುತ್ತಿದ್ದ, ಲಾರಿ ಎಂಬುದು ಅವನು ಚಿಕ್ಕಂದಿನಿಂದಲು ಯೋಚಿಸುತ್ತಿದ್ದ ಅದ್ಭುತ ವಾಹನ. ಅಕ್ಷರಗಳನ್ನು ಬರೆಯುವ ಬದಲು ಸೆಲೇಟಿನಲ್ಲಿ ಸೊಟ್ಟಗೆರೆಗಳಿಂದ ಒಂದು ಎಂಥಾದೋ ಚಿತ್ರ ಬರೆದು ಅದನ್ನು ಗೆಳೆಯರಿಗೂ ಮೈಲಿ ಮುಖದ ಮೇಸ್ಟ್ರಿಗೂ ಲಾರಿ ಎಂದು ವಿವರಿಸಿ ಒಪ್ಪಿಸುತ್ತಿದ್ದ. ಮೆಳ್ಳೆಗಣ್ಣಿನ ಮೇಸ್ಟ್ರಿಗಂತೂ ಅದು ಲಂಕಾದಹನ ನಾಟಕದ ಪುಪ್ಷಕವಿಮಾನದಂತೆ ಕಂಡಿತ್ತು. ಆದ್ದರಿಂದ ಅವರು “ಲೋ ಭರಮ್ಯಾ ಮುಂದೆ ನಿಂಗೆ ಲಾರಿ ಡ್ರೈಯವರ್ರಾಗೋ ಯೋಗ ಐತಲೋ” ಭವಿಷ್ಯ ನುಡಿದಿದ್ದರು. +uಟಿಜeಜಿiಟಿeಜ +ಆರನೇ ಕಿಲಾಸಿನ ಮಾತು. +ಕರಿಯಪ್ಪ ಮೇಸ್ಟ್ರು “ಲ್ರೇ ಮುಂದೆ ಯೇನೇನಾಕೀರಲೇ!” ಎಂದು ಕೇಳಿದ್ದಕ್ಕೆ ಒಬ್ಬೊಬ್ಬರು ಸಾ ನಾನಿಂಜೀನಿಯರಾಕೀನಿ…. ಸಾ ಡಾಟ್ರಾತೀನಿ…. ಸಾ ನಾ ವಕೀಲಾಕೀನಿ ಎಂದು ಉತ್ತರಿಸಿ ಸಂತೋಷವನ್ನುಂಟು ಮಾಡಿದರು. ಆದರೆ ಭರಮ್ಯ ‘ಸಾ ನಾ ಲಾರೀ ಡ್ರಯವರಾಕೀನಿ’ ಎಂದು ಹೇಳಿ ಕಿಲಾಸೆಂಭೋ ಕಿಲಾಸನ್ನು ನಗೆಯ ವಕ್ರಾಣಿಯಲ್ಲಿ ನೂಕಿದ್ದನು. ಆದರೆ ಕರಿಯಪ್ಪ ಮೇಸ್ಟ್ರು ಕೋಪದಿಂದ ಕಿಡಿಕಿಡಿಯಾಗಿದ್ದರು. ಕಿಲಾಸಿನಲ್ಲಿ ಜಾಣ ವಿದ್ಯಾರ್ಥಿಯಾದ ಭರಮ್ಯ ಲಾರಿ ಡ್ರಯವರಾಗುವುದೆಂದರೇನು! +“ಲಾರಿ ಡ್ರಯವರಾಕೀನಿ ಅಂದದ್ದು ತಪ್ಪಾತು ಸಾರ್ ಮುಂದೆ ನಾನಿಂಜಿನೀಯರ್ರಾಕ್ತೀನಿ ಎಂದು ಬೊಗಳ್ತೀಯೋ ಇಲ್ಲಾ ಕೈಕಾಲು ಮುರೀಲೋ” ಎಂದು ಕರಿಯಪ್ಪ ಮಾಸ್ಟರು ಲೆಕ್ಕಿ ಜುಳ್ಳಿ ಝಳಪಿಸಿದ್ದರು. ಅವರು ಎಷ್ಟು ಕೇಳಿದರೂ ಎಷ್ಟೇ ಹೊಡೆದರೂ ಭೂಪತಿಕರ್‍ಣನಾದ ಭರಮ್ಯನು ಆಡಿದ ಮಾತನ್ನು ವಾಪಸ್ಸು ತಕ್ಕೊಳ್ಳಲಿಲ್ಲ…. ಮೂರು ತಿಂಗಳುಗಳಿಂದ ಸಂಬಳ ಬಾರದ ಸಿಟ್ಟನ್ನೂ ಸದ್ಯದ ಸಿಟ್ಟಿಗೆ ಮಿಕ್ಸು ಮಾಡಿ ಅವನ ಕಪ್ಪು ಬಣ್ಣದ ಎಳೇ ದೇಹದ ಮೇಲೆ ರೇಖಾಗಣಿತದ ರೀತಿಯಲ್ಲಿ ಅನೇಕ ಬಾಸುಂಡೆಗಳನ್ನು ಎಳೆದೂ ಎಳೆದೂ ಮೇಸ್ಟ್ರು ಸುಸ್ತಾದರೇ ಹೊರತು ಭರಮ್ಯನ ಬಾಯಿಂದ ಕನಿಷ್ಠ ಪಕ್ಷ ಡಾಟ್ರಾತೀನಿ ಎಂದಾದರೂ ಅನ್ನಿಸಲಾಗಲಿಲ್ಲ. +ಬಾಲಕನಾದ ಭರಮ್ಯಾನು ಹೋ ಎಂದಳುತ್ತ ಗೌಡರ ಹಟ್ಟಿಯಲ್ಲಿ ಸೆಗಣಿ ಬಳಿಯುತ್ತಿದ್ದ ತನ್ನ ಪಿತೃಶ್ರೀ ಸೇಸನಿಗೆ ಅಂಗಿ ಚೊಣ್ಣಾಲ ಬಿಚ್ಚಿ ಬಾಸುಂಡೆಗಳನ್ನು ತೋರಿಸಿ ಅತ್ತನು. ‘ನಂಜಾತ್ಯೋನಾಗಿದ್ರವ್ನು ನನ್ಮಗನ್ನಿಂಗ್ವಡೀತಿದ್ನಾ’ ಎಂದು ಸೇಸನಿಗೆ ಸಿಟ್ಟು ಬಂತು. ಇನ್ನೇನು ಮೇಸ್ಟರ ಕೊರಳಪಟ್ಟಿ ಹಿಡಿದು ನಾಲ್ಕು ಝಾಡಿಸಿಯೇ ಬಿಡುವವನಂತೆ ಹೋದ ಸೇಸಿ, ಟೋಜರು ಬುಸ್‌ಸರಟು ತೊಟ್ಟು ಲಕಲಕ ಹೊಳೀತಿದ್ದ ಕರಿಯಪ್ಪ ಮೇಸ್ಟರನ್ನು ಕಾಣುತ್ತಲೇ ದೀನರ ಪೈಕಿ ದೀನನಾಗಿ ಮೈಯ ಇಸ್ಟೇ ಮಾಡಿಕೊಂಡು “ಸಾರೂ ನನ್ಮಗ ಬರಮ್ಯಾನ ದನಕ್ವಡದಾಂಗೆ ವಡ್ದೀರಿ…. ಮಗಾ ಸಾಲೀ ವಲ್ಲೆಂತೈತಿ… ಅದು ಮಾಡೋ ತೆಪ್ನ ವಟ್ಟಿಗೆ ಆಕ್ಕೆಂಡು ಯಿದ್ಯೆ ಕಲಿಸ್ರೀ ಸಾರೂ” ಎಂದು ಕಣ್ಣು ತುಂಬಿಕೊಂಡು ಕೇಳಿದ್ದನು. +ಅದರಿಂದ ಮೇಸ್ಟ್ರ ಕರುಳೇ ಚುರುಕ್ಕಂತು. ಅವರು ಮೆಳ್ಳೆಗಣ್ಣು ಮೇಸ್ಟ್ರಿಗೂ ತಮಗೂ ಆಗದ ಸಂಗತಿಯಿಂದ ಹಿಡಿದು ಇಂದಿನವರೆಗೆ ವಿವರಿಸಿ ಹೇಳಿದ ಮೇಲೆ ಸೇಸಿಗೆ ಭ್ರಮನಿರಸನವಾಯಿತು. ಮಗ ದೊಡ್ಡಾಪೀಸರ್ರಾಗಬೇಕೆಂದೇ ಆತ ಸಾಲೆಗೆ ಗದುಮುತ್ತಿದ್ದುದು, ಆದರೆ ಮಾಮೂಲಿ ಡ್ರಯವರಾಗೋದೆಂದರೇನು! ಜೊತೆಗೆ ಹೆಂಡತಿ ಸೇವುಡಿ ಬೇರೆ ಮಗ ಶಾಲೆಗೆ ಹೋಗುವುದನ್ನು; ಹೋಗಿ ಒದೆಸಿಕೊಳ್ಳುವದನ್ನು ವಿರೋಧಿಸಿದಳು. +ಸಾಲಿಬಿಟ್ಟ; ಎಲ್ಲಾ ಬಿಟ್ಟ ಮಗ ಭರಮ್ಯನನ್ನು ಅನ್ನಕೊಡುವ ಧಣಿ ಸಿವ ಪೂಜೆ ಕ್ವಟ್ರು ಗೌಡರ ಬಳಿಗೆ ಕರೆದೊಯ್ದು ಎಪ್ಪಾ ಹಿಂಗಿಂಗೆಂತ ಎಲ್ಲ ಹೇಳಿದ. ಕೇಳಿ ಸಂತೋಷಪಟ್ಟ ಗೌಡರು ಅವನಿಗೂ ಕೆಲಸ ಕೊಡುವುದಾಗಿ ಒಪ್ಪಿಕೊಂಡರು. ಆರನೇ ಕಿಲಾಸಿನವರೆಗೆ ಓದಿರುವ ಹುಡುಗನನ್ನು ಹೊಲದ ಕೆಲಸಗಳಿಗೆ ಹಚ್ಚಿದರೆ ದೇವರು ಮೆಚ್ಚುವುದಿಲ್ಲವೆಂದು ಅವನನ್ನು ತಮ್ಮ ಇಸಪೀಟು ಕಿಲಬ್ಬಿನ ಚಿಲ್ಲರೆ ಪಲ್ಲರೆ ಚಾಕರಿಗಳಿಗೆ ನಿಯಮಿಸಿಕೊಂಡರು. +ಅಲ್ಲೋ ಬೆವರು ಸುರಿಸದ ಕೆಲಸ; ಬೀಡಿ, ಸಿಕರೇಟು, ಚಾ ತಂದು ಕೊಡುವುದು, ಚಿಲ್ಲರೆ ಪಲ್ಲರೆ ಉಳಿದದ್ದನನ್ನು ಒಳಚೊಕ್ಕಣಕ್ಕಿಳಿಸುವುದು. ಬಹಳ ಜಲ್ದಿ ಈ ಕೆಲಸಕ್ಕೆ ಭರಮ್ಯ ಹೊಂದಿಕೊಂಡ. ರಾಜ, ರಾಣಿ ಜೋಕರುಗಳ ನಾಗರೀಕತೆಯನ್ನು ರೂಢಿಸಿಕೊಂಡು ಬೆಳೆದು ದೊಡ್ಡವನಾಗಿ ಸಂಸಾರವಂದಿಗನಾದ ಭರಮ್ಯ ದೊಡ್ಡ ಪ್ಯಾಟಿ ಸೇರುವ, ಕಿಲೀನರು ಕೆಲಸ ಬೊಗಳುವುದರ ಮೂಲಕ ಡ್ರಯವರ್ರಾಗುವ ಕನಸು ಕಾಣುವುದರಲ್ಲಿ ತಪ್ಪುಂಟೇನು? ಹಾಗೆ ಅವನು ಕೈಕಟ್ಟಿ ಕೂತಿಲ್ಲ. ಮನೆಯಲ್ಲಿ ಮುದುಕಿಗೂ ಹೆಂಡತಿಗೂ ಮಾರಾಮಾರಿಯಾದಾಗೆಲ್ಲ ದೆವ್ವದ ಮನಿ ಚಿನ್ನೋಬನ ಸಹವಾಸದಿಂದ ಶ್ರೀಮಂತಳಾಗಿ ಪ್ಯಾಟಿ ಸೇರಿ ಲಾರಿಗೆ ಒಡತಿಯಾಗಿರುವ ಪಾತ್ರದ ಕೆಂಚವ್ವನ ಕುರಿತು ಜಪ ಮಾಡುವನು. ಕಳೆದ ತಿಂಗಳು ಹಳ್ಳಿಗೆ ಆಕೆ ವಿಜಿಟ್ ಕೊಟ್ಟಾಗ ‘ಎವ್ವೋ’ ಅಂತ ಕಂಡಿದ್ದ. ಬಾರಲೋ ಬಾಡ್ಯಾ…. ನಿನಗಿಲ್ಲಂಥೀನೇನು! ಎಂದು ಆಶ್ವಾಸನೆಯನ್ನೂ ನೀಡಿದ್ದಳು. ಕೆಂಚವ್ವ ಮುಟ್ಟಿದ ಕೊರಡು ಕೊನರುವುದಯ್ಯಾ ಅಂದ ಮೇಲೆ ಆಕಿ ಎಡಗಾಲಿಂದ ಆಶೀರ್ವಾದ ಮಾಡಿದರೂ ಸಾಕು, ತಾನು ಉದ್ಧಾರವಾದಂತೆಯೇ ಲೆಕ್ಕ…. ಇಲ್ಲೆಂದರೆ ತಾನು ಇಷ್ಟು ಓದಿ ವಿದ್ಯಾವಂತನಾಗಿ ಏನು ಸಾರ್ಥಕ?…. ನಾಯಿಗಳ ಥರಾ ಕಚ್ಚಾಡುವ ತಾಯಿ…. ಹೆಂಡತಿಯರ ಮುಖ ನೋಡಿದ ಕೂಡಲೆ ಭರಮ್ಯ ಕೆಂಚವ್ವನನ್ನು ಧೇನಿಸಿ ಅವತ್ತು ಬೀಳುವ ಕನಸಿನಲ್ಲಿ ಕಂಡೇ ಬಿಡುವನು. ಆದ್ದರಿಂದಲೇ ಗಂಟಿ ಚವುಡಿಯರಿರುವ ನರಕ ಸದೃಶ ಮನೆಯಿಂದ ದೂರವಿದ್ದು ಟೈಮು ಪಾಸುಮಾಡಲಿಕ್ಕೆಂದು ನಂಜುಂಡಿಯ ಕಿಲಬ್ಬಿನಲ್ಲಿ ರಾಜ, ರಾಣಿಯರ ಸಹವಾಸ ಮಾಡಿಕೊಂಡು ತಾನೊಬ್ಬ ರಾಜ ಪರಿವಾರಕ್ಕೆ ಸೇರಿದವನಂತೆ ಠೀವಿಯಿಂದ ಬೀಗುತ್ತಿರುವನು. ಇಂಥ ದಿವ್ಯ ಹಿನ್ನೆಲೆ ಇರುವ ಭರಮ್ಯಗೆ ಬೇಸರವಾಗದಿರಲು ಸಾಧ್ಯವೆ! +ಜಗಳ ನಿಂತರೂ ವಟವಟಗುಡುತ್ತಿರುವ ತಾಯಿ ಕಡೆಗೂ ಹೆಂಡತಿ ಕಡೆಗೂ ದುರುಗುಟ್ಟಿ ನೋಡಿದನು. ಪರಮೇಸುರಗಿರುವಂತೆ ತನಗೂ ಹಣೆಗಣ್ಣಿದ್ದಿದ್ದರೆ ಹಿಂದು ಮುಂದು ನೋಡದೆ ಅವರನ್ನು ಸುಟ್ಟು ಬೂದಿ ಮಾಡಿ ಎರಡು ಚೀಲಕ್ಕೆ ತುಂಬಿ ಗೊಬ್ಬರವೆಂದು ಗೌಡರಿಗೆ ಮಾರಿ ಕನಿಷ್ಟ ಹತ್ತು ರೂಪಾಯಿಯನ್ನಾದರೂ ಗಿಟ್ಟಿಸಿಕೊಳ್ಳದೆ ಇರುತ್ತಿರಲಿಲ್ಲವೇನೋ…. ಹೀಗೆ ತನ್ನ ಬದುಕಿನ ಆಗುಹೋಗುಗಳನ್ನು ಕುರಿತು ಯೋಚಿಸುತ್ತ ಮೈಮರೆತಿದ್ದ ಭರಮ್ಯ ತನ್ನ ದೇಹದೊಳಗೆ ತಡೆಹಿಡಿದಿದ್ದ ಸೀಕರೇಟಿನ ಹೊಗೆ ಅದು ಹೇಗೋ ಬಯಲಿಗೆ ಹೋಗಿಬಿಟ್ಟಿತ್ತು. ನಿಡಿದಾಗಿ ನಿಟ್ಟುಸಿರು ಬಿಟ್ಟು ತ್ರಿಪುಟ ತಾಳ ಹಾಕುತ್ತಿದ್ದ ಜಠರ ಪ್ರದೇಶವನ್ನು ಬಲಗೈಯಿಂದ ಸವರಿಕೊಂಡು ಹ್ಹಾಂ…. ಅಂತ ಆಕಳಿಸಿದನು. +ಹಸಿದಿದ್ದ ಕಾರಣಕ್ಕೋ ಜಗಳ ಆಡಿ ದಣಿದಿದ್ದ ಕಾರಣಕ್ಕೋ ಜೊಂಪು ಹತ್ತಿ ತೂಕಡಿಸುತ್ತಿದ್ದ ನಾಗವ್ವನ ಮೊಲೆಗಳೊಂದಿಗೆ ಕುಡಿಯುವುದನ್ನು ಬಿಟ್ಟು ಆಟ ಆಡುತ್ತಿತ್ತು ಕಂದಯ್ಯ. ಗುಂಡಿಗಳಿಂದ ಹಾಲ ಹನಿಗಳು ಉದುರೀ ಉದುರೀ ಪುಟ್ಟ ಹಳ್ಳವೊಂದು ತಯಾರಾಗಿ ಕಂದಯ್ಯನ ಎದೆ ಮೆಲೆ ಹರಿಯುತ್ತಿದ್ದುದನ್ನು ಬೆಕ್ಕು ಆಸೆಯಿಂದ ಗಮನಿಸುತ್ತಿತ್ತು. +ಪಟ್ಟಾಗಿ ಹಿಡಿದು ಗಂಟಲಿಗೆ ಕೂತಿದ್ದ ಕಫ ಕೀಳಲು ಕೆಮ್ಮುವುದರ ಮೂಲಕ ಶತಪ್ರಯತ್ನಕ್ಕೆ ತೊಡಗಿದ್ದ ಮುದುಕಿಯ ಅಂಗ ಚೇಷ್ಟೆಗೆ ಅರ್ಜುನ ಬೆರಗಾಗಿ ನೋಡುತ್ತಿತ್ತು. +“ಓಹೋ, ಬರಮ್ಯಾ…. ಬರಮ್ಯೆಣ್ಣೊ… ವಳಾಗದಿಯಾ…” ಗೌಡರ ಮನಿ ಸಂಬಳದಾಳು ಎರಡು ಬಾರಿ ಕೂಗಿ ಒಳಗಿನ ಮೌನ ಕದಡಿದ. ಯಾಯಂಡ್ರು ಮಕ್ಳೀಗೆ ತಂದಾಕಿದೀಯ್ಯೋಳು…. ಸಾಲಕ್ವಟ್ಟೋರು ಆಳುಗಳ್ನ ಅಡ್ಡಾಡ್ಸಿದ್ದೇ ಅಡ್ಡಾಡ್ಸಿದ್ದು…. ನನಕರುಮವೇ, ದಿಗ್ಗನೆಚ್ಚತ್ತು ನಾಗವ್ವ ಕೆರಳಿ ನುಡಿದಳಲ್ಲದೆ ಕಂದಯ್ಯನ ಎಳೆ ಕುಂಡಿಯನ್ನು ಚಿವುಟಿ ರಾಪೆಬ್ಬಿಸಿದಳು. +ಅವಿತುಕೊಳ್ಳಲು ಜಾಗ ನೋಡುತ್ತಿದ್ದ ಏಕೈಕ ಪುತ್ರನ್ನು ನೋಡಿ ಮುದುಕಿ ಹಣೆ ಹಣೆ ಚಚ್ಚಿಕೊಂಡಿತು. ಅಯ್ಯೋ ಅಯ್ಯೋ…. ದುಡೀಲಿಲ್ಲಾ…. ದುಕ್ ಪಡೀಲಿಲ್ಲಾ…. ಸಾಲಗಾರ ಮೊಗನ್ನ ಕ್ವಟ್ಟೀಯಲ್ಲೋದ್ಯಾವ್ರೇ…. ಯಾವ ಸೋಬಾಗ್ಯಕ್ಕೆಯಿದೆಲ್ಲ…. ಹ್ಹ್…. ಹ್ಹ್…. ಕ್ವಕ್… ಕ್ವಕ್… ಯಂಗಿಸ್ನಂಗೆ ಯಾಕೊಕ್ಕಂತೀ ಓಗಿ ಉತ್ರ ಕ್ವಡು, ಮರುವಾದಿಯಿಂದ” +“ಬರಮಣ್ಣೋ” ಗೊಣಗಾಟ ಕೇಳಿಸಿಕೊಂಡ ಕಿವುಡ ಬಾಕುಲು ದಾಟಿ ಸೀದ ಒಳಗೆ ಒಂದೇ ಬಿಟ್ಟ ಮೇಲೆ ಅವಿತುಕೊಳ್ಳುವುದುಂಟೆ? ತಂದೆ ತಾಯಿ ಮದುವೆಯಾದ ಇಪ್ಪತ್ತೈದು ವರ್ಷಕ್ಕೆ ಹುಟ್ಟಿದಂಥ ಭರಮ್ಯನೂ ನಗುನಗುತ್ತಲೇ ಸ್ವಗತಿಸಿದ. ಅವರಿಬ್ಬರೂ ಬೀಡಿ ವಿನಿಮಯ ಮಾಡಿಕೊಂಡರು. ಎಷ್ಟೋ ಮಾತಾಡಬೇಕೆಂದಿರುವವನಂತೆ ಭರಮ್ಯಾ ಕೆಮ್ಮಿ ಗಂಟಲು ಸರಿಪಡಿಸಿಕೊಂಡ. +ಅವನ ಎದೆಯಲ್ಲಿ ಹೇಳಿಕೊಳ್ಳಬೇಕೆಂಬ ಎಷ್ಟೋ ವಿಷಯಗಳಿದ್ದವು. ಅವುಗಳ ಪೈಕಿ ಎಂದರೆ ಕಮ್ಮಗೆ ದುಡಿದುಕೊಂಡು ಬದುಕುತ್ತಿದ್ದ ತನ್ನನ್ನು ಕೈಬಿಟ್ಟು ಹಾರಕನಾಳು ಸೂಗನನ್ನು ಕೈಹಿಡಿದ ಹೆಂಡತಿ ಉಡಿಕೆ ಮಾಡಿಕೊಂಡದ್ದು, ಇದ್ದೊಬ್ಬ ಮಗ ಗೌಡರ ಎತ್ತು ಮೇಯಿಸಲೆಂದು ಅಡವಿ ಹೊಲಕ್ಕೆ ಹೋದಾಗ ಹಾವು ಕಚ್ಚಿ ಸತ್ತದ್ದು, ತಾನು ಕುಡಿದ ಅಮಲಿನಲ್ಲಿ ಕೋಮಟಿಗರ ತಿಮ್ಮಯ್ಯಶೆಟ್ಟಿ ಹೋಟ್ಲಲ್ಲಿ ನೂರು ರೂಪಾಯಿ ಗಟ್ಟಿ ನೋಡಿಗೇ ವಗ್ಗರಣಿ ಹಾಕಿಸಿಕೊಂಡು ತಿಂದು ಅದನ್ನು ಜಂಗಮರ ಈಸೂರಯ್ಯನ ಕಡೆ ಕೈ ಒರೆಸಿಕೊಂಡೆಸದದ್ದು ಹೀಗೆ ಎದೆಯೊಳಗೆ ಹುಣ್ಣು ಮಾಡಿದ್ದ ಸಂಗತಿಯಳನ್ನು ಕುರಿತು ಮಾತಾಡಿ ಹಗುರ ಮಾಡಿಕೊಂಡ. +ಅವನ ಕಣ್ಣುಗಳಲ್ಲಿ ಕಣ್ಣೀರು ಮಿನುಗುತ್ತಿರುವುದನ್ನು ಅಷ್ಟು ದೂರದಿಂದಲೇ ಗುರುತಿಸಿದ ಮುದುಕಿ “ನಿನ್ ಅಣ್ಯಾಗಷ್ಟು ಬರೆದಿತ್ತು, ಅಸ್ಟಾತು ಬುಡು…. ಕಾವಲಿ ಅನುಮಕ್ಕ ಯೆಂಗೋ ಗಂಡ ಬಿಟ್ಟು ಗಂಡಸಿನಂಗೆ ದುಡಿತಾ ಬದುಕ್ತಾಳೆ…. ಅಕಿನ್ಯಾಕೆ ಉಡಿಕೆಮಾಡ್ಕೊಂಡು ಬದುಕಬಾರ್‍ದು ನೀನು” ಎಂದು ದಿಗ್ಗನೆ ನಪ್ಪು ಮಾಡಿಕೊಂಡು ಹೇಳಿತು. +ಕಾವಲಿ ಅನುಮಕ್ಕನೆಂದರೆ ಗಂಡು ದೇವರಿಗೆ ಮೀಸಲು ಬಿಟ್ಟಂಥ ಎಮ್ಮೆಯಂಥ ಮೈಯವಳು. ತನಗಿಂತ ಎರಡು ಮೂರು ವರ್ಷ ಹಿರೆಯವಳಾದ ಆಕೆಯನ್ನು ಹೊಲಗಳಲ್ಲಿ ಗದ್ದೆಗಳಲ್ಲಿ ನೋಡಿ ತಾನು ಆಸೆಪಟ್ಟಿರುವುದುಂಟು. ಆದರೆ ತಾತ ಮುತ್ತಾತನ ಕಾಲದಿಂದ ಗೌಡರ ಕಮತದಲ್ಲಿ ಸಂಬಳಕ್ಕಿರುವ ತನ್ನನ್ನು ಆಕೆ ಉಡಿಕೆ ಮಾಡಿಕೊಳ್ಳಲು ಒಪ್ಪುವಳೇ ಎಂಬ ಅನುಮಾನ ಮೂಡಿತು ಕಿವುಡಗೆ. ಆದರೂ ನಾಚಿಕೊಂಡೇ ಮಾತಾಡಿದ- +“ಹಯ್…. ಆಕೀನ ಕಂಟ್ಲಿಸಿವ್ಲಿಂಗಪ್ಪ ಯಿಟ್ಕೊಂಡಾನಂತೆ…. ವಟ್ಗೆ ಬಟ್ಗೆ ಕಡ್ಮೆ ಮಾಡ್ದೆ ನೋಡ್ಕೊಂತಾನಂತವ್ನು…. ಅಂಥೋನ್ನ ಬಿಟ್ಟು ನನ್ನಂಥೋನ್ಗೆಂಗೆ ನೆಳ್ಳಾತಾಳೆ….” ಹಿಂದಲೆ ಕೆರೆಯುತ್ತ ನುಡಿದ…. ಅವನಿಗೆ ಆಕೆಯ ಮೇಲೆ ಆಸೆ ಇರಬಹುದೆಂದುಕೊಂಡರು ಎಲ್ಲರು. +“ಅದ್ಯೆಲ್ಲ ಮೈಯಾಗ ಮಾಂಸ ಸುಡ್ತಿರೋವರ್‍ಗೆಲೋ ಕಿವುಡ…. ಯಾ ಯೆಣ್ಣೆ ಆತು ಕಟ್ವಿಕ್ವಂಡೋನೇ ಕ್ವನೆ ತನ್ಕ ತಿಳಿ…. ನಿಂಗ್ಯಾಕ…. ಆಕೀನೆಲ್ಲ ನಾನ ಸರಿಮಾಡ್ತೀನಿ…. ನೀ ಸುಮ್ನಿರು…. ಆಕೀ ವಟ್ಯಾಗ ನಿಂದೊಂದು ಗೊಂಡು ಮೊಗು ಕಂಡೇ ನಾ ಸಾಯಾದು…. ಏನಂತೀ….” ಮುದುಕಿ ಮಾತಾಡಿ ಅವನ ಪಂಚೇಂದ್ರಿಯಗಳ ಕಡೆ ಇಗಾ ಇಟ್ಟು ಕೂತಿತು. +uಟಿಜeಜಿiಟಿeಜ +ಕಂದಯ್ಯನ ಮುಖಾ ನೆಕ್ಕುತ್ತಿದ್ದ ಬೆಕ್ಕೂ ಅಷ್ಟೆ, ಕಂದಯ್ಯನ ತಿಕಾ ನೆಕ್ಕುತ್ತಿದ್ದ ಅರ್ಜುನನೂ ಅಷ್ಟೆ. +“ಊಹ್ಹುಂ…” ನಾಚಿಕೆಯಿಂದ ಮುಖ ಕೊಡವಿ ನುಡಿದ ಕಿವುಡ “ನಂಗೇನು ಬ್ಯಾಡ-ಯವ್ವಾ… ಸಂಬ್ಳಕ್ಕಿರೋ ನನ್ನಿಂದ ಅಕೀಗೆಂಥ ಸುಕಾಸಿಕ್ಕೀತು… ಬ್ಯಾಡಾ ಬುಡು” +ಮುದುಕಿ ಎದ್ದು ಬಂದದ್ದೆ ಅವನ ಕಿವಿ ಹಿಂಡಿ “ಮಳ್ಳಿಗ… ನಾಡ ಮಳ್ಳಿಗ… ನಿಂದು ನಂಗ್ವೆತ್ತಿಲ್ಲಾಂಥ ತಿಳ್ಕಂಡಿಯಾ…. ವಡ್ಲಾಗ್ವಂದು ಯಿಟ್ಕೊಂಡು ವರಾಗೊಂದಾಡಿದ್ರೆ ಕ್ಯೋಳಾಕೆ ನಾನೇನು ದಡ್ಡಿ ಅಲ್ಲ…. ಅಕೀನ ನಿಂಗೆ ನಾನು ಗಂಟ್ಹಾಕೋದೇ ಸೈ…. ಕ್ವಕ್…. ಕ್ವಕ್….. ಹ್‌ಹ್‌ಹ್….” ಮುದುಕಿ ಕೆಮ್ಮುತ್ತ ಸಾವರಿಸಿಕೊಳ್ಳುತ್ತಿರುವಾಗ್ಯೇ ಕಿವುಡ ತನ್ನ ಮೈಯ್ಯಾಗಿನ ಚೂರುಪಾರು ರಕ್ತಾನ ಮುಖಕ್ಕೆ ತಂಡುಕೊಂಡು ನಗಾಡುತ್ತಲೆ, ಎಲ್ಲರೂ ಅದಕ್ಕೆ ತಂತಮ್ಮ ನಗೆ ಸೇರಿಸಿದರು. +ಬೀಸಿದ ಗಾಳಿಗೆ ಬೇವಿನ ಮರವೂ ತಲೆ ಅಲ್ಲಾಡಿಸಿ ತನ್ನ ಸಮ್ಮತಿ ಸೂಚಿಸಿತು. +ಹೆಣ್ಣಲ್ಲೂ ನೀನೆ ಆದಿ ಗಂಡಲ್ಲೂ ನೀನೇ ಆದಿ…. ಹೆಣ್ಣುಗಂಡು ಎರಡರ ನಡುವೆ ಹರನೋ ತಾನೋರ್ವನೋ ಸರ್ವರೊಳಗೇ ವ್ಯಾಪಿಸಿದಂತವನೋ…. ವಾತಾವರಣವನ್ನು ಅದರಲ್ಲೂ ತನ್ನ ಹೆಂಡತಿಯ ಮುಖವನ್ನು ತಿಳಿಗೊಳಿಸುವ ಉದ್ದೇಶದಿಂದ ಭರಮ್ಯಾ ಸುಶ್ರಾವ್ಯವಾಗಿ ಗೊಣಗಿದನು. +ಇಂಥ ಗಂಡನನ್ನು ಪಡೆದ ತಾನೇ ಪುಣ್ಯವಂತೆ ಎಂಬ ಭಾವನೆ ಬಂದು ನಾಗವ್ವ ಕುಡಿಗಣ್ಣಿಂದ ಗಂಡನ ಕಡೆ ನೋಡಿದಳು. +ಡಣ್… ಡಣ್…. ಡಣ್… ಎತ್ತರದಲ್ಲಿರುವ ಶಾನಬೋಗರ ಮನೆಯಿಂದ ಎರಡನೇ ಪೂಜೆಯ ಜಾಗಟೆ ಧ್ವನಿ ಕೇಳಿ ಬರುತ್ತಲೇ ಕಿವುಡ “ನಡಿಯಣ್ಣೋ ನಡಿ… ವತ್ತಾತು” ಎಂದು ಅವಸರಿಸಿದನು. +“ಕಿವುಡೋ…. ನಂಗೆ ಗೋಡ್ರಂದ್ರೆ ಯೆದ್ರೀಕೆ ಆತತೆ…. ಬಾಕಿ ಕಟ್ಟಂದ್ರೇನು ಮಾಡ್ಲಿ…. ಬೊಕ್ಣದಾಗೆ ದಮ್ಮಡಿಯಿಲ್ಲ” ಭರಮ್ಯ ತನ್ನ ಗೆಣೆಕಾರನ ಎಡಭುಜವನ್ನು ನೀವಿದನು. +“ಅಂಥಾದ್ದೇನೂ ಯಿಲ್ಲ ಬುಡು…. ಯಿಶ್ಯಾ ಬ್ಯಾರೆ ಐತೆ…. ನಿಂಗ್ವಪ್ಗಿ ಆದ್ರೆ…. ಊನ್ನು…. ಇಲ್ಲಾಂದ್ರೆ ಇಲ್ಲಾನ್ನು ತಿಳೀತಾ…. ಗೋಡ್ಕೀಗೆ ಯದ್ರಿ ಮಾತಾಡಬ್ಯಾಡ….” ಹೀಗೆ ನುಡಿದ ಕಿವುಡನನ್ನು ಹಿಂಬಾಲಿಸದಿರಲಾಗಲಿಲ್ಲ. ಭಯಂಕರ ಯುದ್ಧಕ್ಕೆ ಹೋಗಲಿರುವವನಂತೆ ಬಾಗಿಲು ದಾಟುವಾಗ ಒಮ್ಮೆ ಹಿಂತಿರುಗಿ ನೋಡಿದನು. ಕೊಟ್ಟಿದ್ದ ಹಣಕ್ಕೆ ಪೂರ್ತಿ ದುಡಿಯದೆ ಬಂದಿದ್ದೂ ಒಂದು ತಪ್ಪು. ಗೌಡರ ದಪ್ತರದೊಳಗೆ ಇರುವುದು ಬೇರೆ….. +ಹೊಲಸಾಗಿದ್ದ ಲುಂಗಿ, ಕೊಳಕು ಅಂಗಿ, ಕೆದಿರಿರುವ ಕಿರಾಪು…. ಈ ಸ್ಥಿತಿಯಲ್ಲಿ ತನ್ನ ಗಂಡ ಗೌಡರನ್ನು ಕಾಣಲು ಹೋಗುವುದೆಂದರೇನು? “ರವ್ವೋಟು ಬಂದೋಗಿಲ್ಲಿ” ನಾಗವ್ವ ಒಳಗಿನಿಂದ ಕೂಗಿಕರೆದಳು. ಕೈರ ಮೆಟ್ಟಿಕೊಳ್ಳುತ್ತಿದ್ದ ಅವನು ಮದಲಿಂಗನಂತೆ ಒಳಗೆ ಹೋದ. +“ಯಂಗದಿನ್ವಾಡು…. ಸಂಬ್ಳದಾಳ್ಗಿಂತ ಅತ್ತತ್ತ ಇದ್ದೀ. ದ್ವಡ್ಡೋರತ್ರ ಓಗುವಾಗ ಯಂಗಿರಬೇಕು?” ಅವನನ್ನು ಕದದ ಮರೆಗೆ ಕುಂಡ್ರಿಸಿದಳು. ಡಬ್ಬಿಯ ಮೂಲೆಯಲ್ಲಿದ್ದ ಕೊಬ್ರಿ ಎಣ್ಣೆಯನ್ನು ನೀರಿನೊಂದಿಗೆ ಮಿಕ್ಸು ಮಾಡಿ ಗಂಡನ ತಲೆಗೆ ಒತ್ತಿ ಒತ್ತಿ ಲೇಪಿಸಿದಳು. ತನ್ನ ಕಾಲ ಇಕ್ಕಳದಲ್ಲಿ ಅವನನ್ನು ಕುಂಡಿರಿಸಿಕೊಂಡು ಸೀರಣಿಗೆಯಿಂದ ಅವನ ತಲೆಯನ್ನು ಪರಪರ ಕೆರೆಯಲಾರಂಭಿಸಿದಳು. ಅವನು “ಅಯ್ಯೋ ಅವ್ವೋ…. ಬಿಡೇ…. ಬೆಡೆಲೇ….” ಎಂದು ಅರಚಿದರೂ ಬಿಡದೆ ಹತ್ತಿಪ್ಪತ್ತು ಸೀರೂ…. ಏಳೆಂಟು ಹೇನುಗಳನ್ನೂ ಹಿಡಿದು ಅವನ ಅಂಗೈಗೆ ಹಾಕಿ “ನಿನ್ತಲ್ಯಾಗ ಯಂಥೆಂಥೋವೈದಾವ ನೋಡು” ಎಂದಳು. +ಭರಮ್ಯ ನೋಡುತ್ತಾನೆ…. ತನ್ನ ಅಂಗೈ ತುಂಬಾ ಹರಿದಾಡುತ್ತಿರುವ ಕ್ರಿಮಿಗಳು…. ಯಾವನ್ನು ಕುಕ್ಕುವುದೋ! ಯಾವನ್ನು ಬಿಡುವುದೋ… ಸಿಕ್ಕವರಿಗೆ ಸಿವಲಿಂಗ ಅಂತ ಗಂಡ ಹೆಂಡತಿ ಇಬ್ಬರೂ ಕುಕ್ಕುತ್ತಿರವಾಗ ಪಟಾಕಿ ಹಾರಿಸುವಂಥ ಸವಂಡು ಬಂದಿತು. +“ಥಲಿ ತುಂಬ ಯಿಂಥೋವ್ನ ತುಂಬಿಕೆಂಡಿದ್ರೆ ಬಾಳುವೆ ಮಾಡಂದ್ರೆ ಯೆಂಗೆ ಮಾಡ್ತಿ”…. ಗೊಣಗುತ್ತ ಬಾಚಿ ತಲೆಗೂದಲನ್ನು ಒಪ್ಪ ಓರಣಮಾಡಿ ಕಾಲು ಹಾದಿಯಂಥ ಬೈತಲೆ ತೆಗೆದಳಲ್ಲದೆ ಏರಿಳಿತದ ಕಿರಾಪನ್ನೂ ಸೃಷ್ಟಿಸಿ ಹಲವು ಕೋನಗಳಿಂದ ನೋಡಿ ಥೇಟ್ ರಾಜ್ಕುಮಾರ ಕಂಡಂಗೆ ಕಾಣ್ತಿದೀ…. ದಾರ್‍ಯಾಗ ವುಷಾರು ಎಂದು ಎಚ್ಚರಿಸಿದಳು. +ತಾನೂ ಗೋಡೆಯಲ್ಲಿದ್ದ ಮುರುಕು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು ಗೊಡ್ಡೀರವ್ವ ತನಗೆ ಡವ್ವು ಹೊಡೆಯುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದುಕೊಂಡನು. +ತನ್ನಷ್ಟು ವಿದ್ಯಾವಂತನೂ ತನ್ನಂಥ ಸುಂದರಾಂಗನೂ ಈ ಕೇರಿಯಲ್ಲಿ ಯಾರೂ ಇರಲಿಕ್ಕಿಲ್ಲವೆಂದು ಭಾವಿಸಿ ಹೆಂಡತಿಯಿಂದ ಬೀಳ್ಕೊಂಡು ಬೀದಿ ಪಾಲಾದನು. ಅವನ ಬಣ್ಣದ ಲುಂಗಿಯೊಳಗಿದ್ದ ವಿದ್ಯೆಯನ್ನೂ ವಾಸನೆಯೊಳಗಿದ್ದ ಸೌಂದರ್ಯವನ್ನೂ ಮೂರಿಂಚು ದೂರದಿಂದಲೇ ಆಘ್ರಾಣಿಸುತ್ತ ಅರ್ಜುನ ಹಿಂಬಾಲಿಸಿತು. “ಅಚಾ…. ಗೋಡ್ರು ಮಂತ್ಯಾಕ ಓಗಿ ಬತ್ತೀನಿ ಓಗಲೇ ಅಜ್ಜುನಾ” ಹತ್ತು ಹೆಜ್ಜೆಗೊಮ್ಮೆ ಬುದ್ಧಿ ಹೇಳಿದ ಮತ್ತು ಗದರಿಸಿದ ಭರಮ್ಯಾ, “ಬೊರ್‍ಲಿ ಬಿಡು ಬಿಡು ಅದ್ಯೇನ್ಮಾಡತೈತಿ” ಎಂದು ಕಿವುಡ ಸೌಜನ್ಯಕ್ಕೆ ಹೇಳಿದ. ಆದರೆ ಅರ್ಜುನಗೂ ಗೌಡರ ಮನೆಯ ಮುಂದಿರೋ ರಾಮಾಗೂ ಆಗೊಲ್ಲ ಎಂಬ ಸತ್ಯ ಕಿವುಡಗೂ ಗೊತ್ತುಂಟು. ರಾಮನ ಧಿಮಾಕು ಏನಿದ್ರು ಅಲ್ಲಿಯೇ. ಅದರ ಆಟ ಕೆಳಗೇರಿಗೆ ಬಂದರೆ ನಡೆಯೊಲ್ಲ ಎಂಬುದಕ್ಕೆ ಉದಾಹರಣೆಗಳು ಉಂಟು. ರಾಮ ತಿಂಥಿರೋ ಆಹಾರದ ಪೈಕಿ ಆಣೆ ಭಾಗ ಬಿದ್ದಿದ್ದೇ ಆದರೆ ಅರ್ಜುನನ್ನು ಹಿಡಿಯುವವರು ಯಾರು? ಎಷ್ಟು ಗದರಿಸಿದರೂ ಸೊಪ್ಪು ಹಾಕದೆ ರಾಮನನ್ನು ದೂರದಿಂದಲೇ ಒಂದು ಕೈ ನೋಡಬೇಕೆಂಬಾಸೆಯಿಂದ ಹೊರಟ ಅರ್ಜುನ ಮೋಟುಗಲ್ಲಮೇಲೆ ಬಲ ಹಿಂಗಾಲೆತ್ತಿ ಮೂತ್ರಾಭಿಷೇಕ ಮಾಡುತ್ತ ನಿಂತಿದ್ದಾಗ ಭರಮ್ಯ ಕಿವುಡ ಗಪ್ಪಂತ ಊರಮ್ಮನ ಗುಡಿ ಸಂದಿಗೆ ತಿರುಗಿದರು. +ಸಂದಿಯ ನಿರ್ಮಾನುಷತೆಯಿಂದಾಗಿ ಕಿವುಡ ಭರಮ್ಯನ ಕಿವಿಗೆ ಹತ್ತಿರದಲ್ಲಿ ತನ್ನ ಬಾಯನ್ನಿರಿಸಿ ಗೌಡರ ಮಗ ಷಣ್ಮುಖ ಪ್ಯಾಟಿ ಸೇರಿ ಕಿರುಸ್ತಾನರ ಹುಡುಗಿ ಪೌಲಿಯನ್ನು ಗಾಂಧರ್ವ ವಿವಾಹವಾಗಿರುವುದಾಗಿ ವಿವರಿಸಿದಲ್ಲದೆ ಅವರ ಮಗಳು ಪಾರ್ವತಿ ಮುಸುಲ್ಮಾನರ ಹುಡುಗ ಷಾವಲಿಯನ್ನು ನಿಖಾ ಮಾಡಿಕೊಂಡು ಮಮ್ತಾಜ್ ಎಂದು ಹೆಸರು ಬದಲಾಯಿಸಿಕೊಂಡಿರುವುದಾಗಿ ಉಸುರಿದ. ಈ ಸುದ್ದಿ ತಿಳಿದಂದಿನಿಂದ ಗೌಡರು ಹಗಲು ಹೊತ್ತು ಮಲಗುತ್ತಾರೆಂದು ರಾತ್ರಿ ಹೊತ್ತು ಎಚ್ಚರಿದ್ದು ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ಳುತ್ತಿರುವರೆಂದೂ ಹೇಳಿದ ಮೇಲೆ ಭರಮ್ಯಗೆ ನಿಜಕ್ಕೂ ಖುಷಿಯಾಯಿತು. +ದೂರದಿಂದ ಸಾಬಾಣದ ಬಿಳುಪಿನಿಂದ ಮಾಡಿದ್ದೋ ಎಂಬಂತೆ ಕಂಡ ಮನೆ ಅಂಗಳ ಎಡವಿದನು. ತಾನು ಎಷ್ಟಿದ್ದರೂ ರಾಜಾ ರಾಣಿ ಜೋಕರರ ಒಡನಾಟದ ಮನುಷ್ಯ. ಗೌಡಗೆ ಹೆದರುವುದೋ, ಬ್ಯಾಡವೋ. ಅವನ ಮನಸ್ಸು ಅಡಕೆ ಗಿಡದಂತೆ ಹೊಯ್ದಾಡುತ್ತಿರಲು ಗೌಡ ಕೊಕ್ ಕೊಕ್ ಕೆಮ್ಮುತ್ತ ಬಂದು ಆಪಾದ ಮಸ್ತಕ ನಿಟ್ಟಿಸಿ ತನ್ನೊಳಗಿನ ಅಸ್ತಮಾವೇ ಮನುಷ್ಯ ರೂಪ ತಾಳಿ ಎದುರಿಗೆ ನಿಂತಿರುವುದೇನೋ ಎಂದು ಭಾವಿಸಿ ಪ್ರೀತಿ ಪ್ರಕಟಿಸಿದನು. ತಾನು ಅನ್ನ ಕೊಟ್ಟಿದ್ದು ಹಳೇ ದೋತರಗಳನ್ನು ಉಟ್ಟುಕೊಳ್ಳಲು ಕೊಟ್ಟಿದ್ದು ಅಲ್ಲದೆ ರೂಪಾಯಿಗಳನ್ನು ದರಕಾ ಇಲ್ಲದೆ ಬಿಸಾಕುತ್ತಿದ್ದುದರಿಂದ ಹಿಡಿದು ಲೆಕ್ಕದ ಬುಕ್ಕದೊಳಗೆ ಅಸ್ತಮಾ ರೋಗದಂತೆಯೇ ಬೆಳೆದಿರುವ ಬಾಕಿಯನ್ನು ಸೂಕ್ಷ್ಮವಾಗಿ ನೆಪ್ಪು ಮಾಡಿಕೊಟ್ಟ ಗೌಡನು ಸೀಕರೇಟನ್ನು ಅರ್ಧ ಸೇದಿ ಭರಮ್ಯಾನ ಬೊಗುಸೆಗೆ ಎಸೆದನು. ಧಮ್ಮು ಎಳೆದಂತೆ ನಟಿಸಿ ತನ್ನ ಕಾಲಮೀನ ಖಂಡಗಳನ್ನು ಮೂಸಿ ನೋಡಿದ ಗೌಡರ ನಾಯಿ ಕಡೆ ಎಸೆದು ಗೌಡ ತನ್ನನ್ನು ಬಾಕಿ ಕೇಳಲಾರನೆಂದು ಖುಷಿಯಾಗಿ ಬುರಬುರ ಊದಿದನು. +“ಲ್ಯೇ ಭರಮ್ಯಾ…. ನನ್ವಟ್ಟೀಲಿ ವುಟ್ಟಿದ ಮೊಗಾ ಬ್ಯಾರೆ ಅಲ್ಲ…. ನೀನು ಬ್ಯಾರೆ ಅಲ್ಲ…. ಐವತ್ತು ಕೊಡುವಲ್ಲಿ ನೂರು ಕೊಟ್ಟೇನು” ಕೆಮ್ಮು ಬಂತು ಬಡ್ಡಿ ಮಗನಂತೆ, ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಆಸರೆಗೆ ಗೋಡೆ ಹಿಡಿದು ನಿಸೂರಾಗಿ ಮುಂದುವರಿದು ಹೇಳಿದನು. “ನಾನೊಂದು ಕ್ಯೇಳ್ತೀನಿ…. ಹೂ ಅನ್ನಬೇಕಲೇ” +ನೂರರ ಗರಿಗರಿ ನೋಟು ಹಂಸ ಪಕ್ಷಿಯಂತೆ ಶುಕ್ಲಪಟಲದ ತುಂಬ ಹಾರಾಡಿ ಬಾಯಿ ತುಳುಕಿತು. +“ನಿಮ್ ಪಾದಾಣೆ ಗೋಡಾ…. ಇಲ್ಲಂದ್ರೆ ನಾಲಿಗ್ಯಾಗ ವುಳಾ ಬಿದ್ದಾವು. ಕಾಲೀಲೇ ಯ್ಯೋಳಿ, ಥಲೀಲೆ ವತ್ತು ನಡೆಸಿಕ್ವೊಡ್ತೀನಿ” ಚರ ಚರ ಅಂತ ಅರಳಿದ ಕನಸುಗಳ ಗೊಂಡಾರಣ್ಯದೊಳು ಒಂಚಣ ದಾರಿ ತಪ್ಪಿದನು ಭರಮ್ಯಾ. +ಲಯನು ಕ್ಲಿಯರು ಆದದ್ದೆ ಗೌಡ ತನಗೆ ಬೇಕಿರುವ ಬೇವಿನ ಮರ ಕುರಿತು ಹೇಳಿ ಒಪ್ಪಿಸಿ ಇಪ್ಪತ್ತರ ಎರಡು ನೋಟುಗಳನ್ನು ಮುಂಗಡವೆಂದು ಬೊಗಸೆಗೆ ಎಸೆದನು. ಆ ಒಂದು ಚಣ ನಡುಗಿ ಸೋಬನದ ಸುಖ ನೆಪ್ಪಿಗೆ ಬಂತು ಭರಮ್ಯಗ. +“ಬೆಳಗಾಗುತ್ಲೆ ಆಳುಗೋಳ್ನ ಕಳ್ಸಕ್ವಡು ಗೋಟಾ…. ಮರಾನ ಬುಡ ಸಮೇತ ಕಡಿಸಿ ಕಳಿಸತೇನಿ” ಎಂದು ಹೊರಟ ಭರಮ್ಯ ಗೋಡರ ಮೆನಯ ಅಂಗಳ ದಾಟಿ ಊರಮ್ಮನ ಬಯಲು ಸೇರುತ್ತಲೆ ಭಲಲಲೈ ಸಾರಥೀ ನಾನುದಾರೆಂದರೇ ಎಂದು ಗಟ್ಟಿಯಾಗಿ ಸಾರಬೇಕೆನಿಸಿತು. +ಆ ಎರಡು ಕೆಂಪನೆಯ ನೋಟುಗಳನ್ನು ಎಲ್ಲರಿಗೆ ಕಾಂಬುವಂತೆ ಬಕ್ಕೇಂದು ಜೇಬಿನಲ್ಲಿರಿಸಿ ಅವುಗಳ ಕಡೆ ಜನರ ಗಮನ ಸೆಳೆದು ತೋರಿಸುತ್ತ, ಸಾಲಿಗರು ಎದುರಾದಾಗ ಬಿಚ್ಚಿಟ್ಟುಕೊಳ್ಳುತ್ತ ಹೆಂಡದೆಲ್ಲಯ್ಯನ ಅಂಗಡೀಲಿ ಎಲ್ಡು ಬಾಟಲಿ ಖಾಲಿ ಮಾಡಿ, ಪಾತರದ ಸಣ್ಣಕ್ಕನ ಹತ್ತಿರ ಎರಡು ಕರಿದ ಮಾಂಸದ ತುಂಡು ಕರಕರ ಅಂತ ಜಮಡಿ ತಿಂದು ತಾನೊಬ್ಬ ಪರಿಸೇ ಪೈಕಿ ಪೈಲ್ವಾನನಂತೆ ಆಕಾಶಕ್ಕೂ ಭೂಮಿಗೂ ಏಕಾಗಿ ನಿಲ್ಲಲು ಯತ್ನಿಸುತ್ತ ಕೇರಿ ತುದಿಗೆ ಬಂದು ಕೇಕೆಕಣಣ ಎಂದು ಸಿಂಹನಾದ ಮಾಡಿದನು. ಅಲ್ಲಿಂದ ಸುಂಟರ ಗಾಳಿಯಂತೆ ಬರ ಬರ ಸುತ್ತ ಸೆಟ್ಟೀ ಶಂಕರಣ್ಣನ ಇಸಪೀಟಾಡುವ ಮನೆಗೆ ಹೋಗಿ ಸ್ಟಯಿಲಾಗಿ ಬೀಡಿ ಸೇದುತ್ತ ತನ್ನ ಬಳಿ ಇರುವ ನೋಟುಗಳನ್ನು ಇನ್‌ಡಯರೆಕ್ಟಾಗಿ ಪ್ರದರ್ಶಿಸಿದನು. ಜೀರ್ರ ಪೊಂಪ ಮಸಕಾ ಹೊಡೆಯಲು ಅವನು ಆಡದೆ ಇರಲಾಗಲಿಲ್ಲ. ಆಡುತ್ತಲೆ ಎಂಟೂವರೆ ಟುಸ್ ಎಂದು ಕೈಬಿಟ್ಟಿತು. ಅಲ್ಲಿಂದ ಸೀದ ಹೊರಟವನೆ ಡಾಣಿ ಗುಂಡಿನ ಅಂಗಡೀಲಿ ಅರ್ಧ ಕೇಜಿ ನೆಲ್ಲಕ್ಕಿ ಕೊಂಡುಕೊಂಡು ಮನೆ ಕಡೆ ನಡೆದನು. +ಕೇರಿಯ ಸಮಸ್ತ ಮನೆಗಳು ತನ್ನನ್ನು ಸ್ವಾಗತಿಸಲು ಒಳಗೊಳಗೇ ಪಿತೂರಿ ನಡೆಸಿವೆ ಅನ್ನಿಸಿತು ಮೊದಲ ನೋಟಕ್ಕೆ. ಆವಾಗಿನಿಂದ ತಲೆ ಎತ್ತಿ ನಡೆದಿದ್ದುದರಿಂದ ಬೆನ್ನೆಲೆಬಿನಲ್ಲಿ ಸಣ್ಣ ಸೆಳಕು ಕಾಣಿಸಿಕೊಂಡು ರಾಜ ಠೀವಿಯಲ್ಲಿ ನಡೆದು ಮನೆ ತಲುಪುವುದು ಸೊಲುಪ ಕಷ್ಟವಾಯಿತು. +“ಸೂರ್‍ಯ ವುಟ್ಟುತ್ಲೇ ಈ ಮಸಾಣ ಖಾಲಿ ಮಾಡಿ ಗಂಡನ್ನೂ, ಈ ಮೊಗನ್ನೂ ಕಟ್ಕೊಂಡು ವೋಗ್ಲಿಲ್ಲ…. ನಾನು ತಳಾರ ಅನುಮಂತ್ಗೆ ವುಟ್ಟಿದ ಮಗ್ಳೇ ಅಲ್ಲ” ಮೂಗಿನಲ್ಲಿಳಿದ ತಿಳಿ ಜಲವನ್ನು ಎಡಗೈಯಿಂದ ತೆಗೆದವಳೇ ರಭಸದಿಂದ ಗಂಡನ ಕಡೆ ಎಸೆದಳು ನಾಗವ್ವ. +“ಅಲಲಲಾ….! ಬಿಡಕೀ ಯದರಿಸ್ತೀಯ್ಯೋನಲೇ…. ವಂಟೋಗಲೇ…. ಬ್ಯಾಡಂತೀನಾ….. ಕಟ್ಕಂಡಿದ್ದು ಗಂಡಗಾಗಲ್ಲೀ…. ಇಟ್ಕಂಡಿದ್ದ ಮಿಂಡಗಾಗ್ಲೀ ಯದ್ರಿದೋಳಲ್ಲ ನಾನು ತಿಳೀತಾ….” ಕೂತುಕೊಳ್ಳಲಿಕ್ಕೂ ಆಗದೆ ಮುದುಕಿ ಶಿವನ ಧನಸ್ಸಿನಂತೆ ಬಾಗಿ ನಿಂತು ಕೊಕ್ ಕೊಕ್ ಕೆಮ್ಮಿ ಕಫವನ್ನು ಉಗುಳುವುದೆಂದು ಹೊಳೆಯದೆ ಬಾಯಿ ತುಂಬಿಕೊಂಡು ಸುತ್ತ ನಿಟ್ಟಿಸಿತು. ಅದರಿಂದ ಏನೋ ಅರ್ಥ ಮಾಡಿಕೊಂಡಂತೆ ಅರ್ಜುನ ಬಾಲ ಅಲ್ಲಾಡಿಸುತ್ತ ಬೆಕ್ಕಿನ ಕಡೆ ಅರ್ಥಪೂರ್ಣವಾಗಿ ನೋಡಿ ಕಂಯ್ ಕಂಯ್ ಎಂದು ರಾಗ ಮಾಡಿತು. +ಹೇಮರೆಡ್ಡಿಯಂತೆ ಸ್ಟಯಿಲ್ಲಾಗಿ ಬೀಡಿ ಹೊಗೆ ಬಿಡುತ್ತಲೂ ಕೈಲೊಂದು ಪೊಟ್ಟಣ ಹಿಡಿದುಕೊಂಡು ಬಂದ ಗಂಡನ ಕಡೆ ನಾಗವ್ವ ಅನುಮಾನದಿಂದ ನೋಡುತ್ತ ಭಾಳದಿನ್ಕೆ ಕಂಕುಳಾಗ ಸಿರಿಸಂಪತ್ತು ಇಟ್ಟುಕೊಂಡವನಂತೆ ಬರುತ್ತಿರುವನಲ್ಲಾ ಎಂದು ಅನುಮಾನಪಟ್ಟಳು. ಮುದುಕಿಗೂ ಮಗನ ಮುಖಾರವಿಂದ ಚೋಜಿಗದ ಸಂಗತಿಯೇ…. +ಬೇಯಿಸಲು ಹೆಂಡತಿಗೆ ಕಂಕುಳಲ್ಲಿದ್ದ ಅಕ್ಕಿಯನ್ನು ಕೊಟ್ಟವನೆ ಹೋ ಎಂದು ರಂಪಾಟ ಮಾಡುತ್ತಿದ್ದ ತನ್ನ ವಂಶದ ಕುಡಿಯನ್ನು ಎತ್ತಿಕೊಂಡು ಅದರ ಬಾಯಿಗೆ ಬ್ಯಾಗಡಿ ಚಾಕುಲೇಟು ಇಟ್ಟು ಅದು ಜೊಲ್ಲಿಳಿಸಿ ಚೀಪುವ ಸೊಬಗು ನೋಡುತ್ತ ಅಹಾ ನನ್ನ ಸಂಸಾರವೇ ಎಂದು ಉದ್ಗರಿಸಿದನು. +“ತಾಟಗಿತ್ತಿ ಗೀಟಗಿತ್ತಿ…. ನನ್ ಮೊಗುನ್ನ ಗೊಂಬಿ ಮಾಡಿ ಕುಣುಸ್ತಿದಿಯಾ…. ಕುಣುಸೂ…. ಅದ್ಯೆಲ್ಲಿವರ್‍ಗೆ ಕುಣುಸ್ತಿಯೋ ಕುಣುಸು….” ಪಟಪಟ ನುಡಿಯುತ್ತಲೇ ಬಾಗಿಕೊಂಡೇ ಹೋಗಿ ಮೂತರ ವಿಸರ್ಜಿಸಿ ಬಂತು…. +“ಯ್ಯೋನು ಪಾಪ ಮಾಡಿದ್ನೋ ಶಿವನೇ…. ಈ ಮನ್ಯಾಗ ಚೊಸಿಯಾಗ ಬರಾಕೆ…. ಊರಿಗಿಲ್ಲದ ಆಸ್ತಿ ಮಾಡ್ದೋಳಂಗೆ ಅಕ್ಕಿ ಕಾಳುದುರಿಸ್ತಿಯಾ ಮುದುಕಿ…. ಎಂದು ತಾನೂ ಉದುರಿಸುತ್ತ ಅನ್ನ ಬಸಿದಿಟ್ಟಳು…. +ಕಿಮ್ಮೆಕ್ಕನ್ನದೆ ತಾನೇ ಪರಿಪರಿ ರಮಿಸಿ ಹೆತ್ತ ತಾಯಿಗೆ ಉಂಬಾಕಿಟ್ಟು ಯವ್ವೋ…. ನೀನು ಪ್ರತ್ಯಚ್ಚ ದ್ಯಾವ್ರು… ನೀನು ಬೇಷಿರಬೇಕು ಎಂದು ಬೆಣ್ಣೆ ಹಚ್ಚಿದನು. “ಯ್ಯೊನೋ ನೀನು ನನ್ನ ಪಿರಾಣ ಪದಕ, ನೀನು ಬೇಷರ ಬ್ಯೇಕು” ಎಂದು ಡಾಲ್ಡಾ ಹಚ್ಚುತ್ತ ತಾನೂ ಉಂಡು ಹೆಂಡತಿ ಪಟಪಟ ನುಡಿಯುತ್ತ ಗಬಗಬ ಅಂತ ನಾಕುತುತ್ತು ಉಣ್ಣುತ್ತಿದ್ದುದನ್ನು ಕಣ್ತುಂಬ ನೋಡಿ ಸ್ಟಯಿಲ್ಲಾಗಿ ಸಿಕರೇಟು ಹಚ್ಚಿಕೊಂಡು ಬುಸ್ಸು ಎಂದು ಹೊಗೆ ಬಿಟ್ಟನು. +ಅಕ್ಕಿ ಬಾನ: ಕಡ್ಲಿ ಬಜ್ಜಿ ಉಂಡ ಮೇಲೆ ಅತ್ತೆ ಸೊಸೆಯರಿಬ್ಬರ ಉದರದೊಳು ಒಂದು ರೀತಿಯ ಸವುಂಡು ಕಾಣಿಸಿಕೊಂಡಿತು. ಮುಗಿಲಾಚೆ ಕೈಲಾಸವನ್ನೂ ಗ್ರಹಿಸುವ ಅವರಿಗೆ ಯಾಕೋ ಅನುಮಾನ ಬಂತು. ಈಟೊಂದು ರ್‍ವಕ್ಕ ಯಲ್ಲಿಂದ ತಂದೆ…. ಏನ್ಕಥೆ…. ಎಂದು ಎರಡು ಮಗ್ಗುಲಿಂದ ಇಬ್ಬರೂ ಪೀಡಿಸಲಾರಂಭಿಸಿದರು. ಹೆಂಡತಿಯೊಬ್ಬಳೆ ತನ್ನ ಪರವಾಗಿ ವಕಾಲತ್ತು ಮಾಡಿದರಾಯಿತು. ಬಾಕಿ ಅರವತ್ತರಲ್ಲಿ ಆಕೆಗೊಂದು ರೋಡ್‌ಗೋಲ್ಡು ಮೂಕಬೊಟ್ಟು ತಂದರಾಯಿತು ಎಂದು ಯೋಚಿಸುತ್ತ ಭರಮ್ಯಾ ತಾನು ಅಂಗಳದ ಬೇವಿನ ಮರವನ್ನು ಗೌಡಗೆ ಮಾರಿರುವ ಸಂಗತಿಯನ್ನು ಅರುಹಿ ಬಿಟ್ಟನು. ಅದನ್ನು ಕೇಳಿದ್ದೇ ಅತ್ತೆ ಸೊಸೆಯರಿಬ್ಬರೂ ಕಿಡಿಕಿಡಿಯಾಗಿಬಿಟ್ಟರು…. ಖಡೆ ಖಡೆ ಅಂತ ಆತನ ಎರಡೂ ಮಗ್ಗುಲು ನಿಂತರು. +“ಯ್ಯೋನಲೋ ಬಾಡ್ಯಾ…. ಯಿಲ್ಲಿ ತಂಕ ಬಂದ್ಯಾ…. ಇವತ್ತು ಮರ್ಽನಮಾರ್‍ತಿ…. ನಾಳೆ ಕಟ್ಕೊಂಡ ಹೆಂಡ್ತೀನ ಮಾರ್‍ತೀ…. ಥೂ…. ನಿನ ಜನುಮಕಸ್ಟು ಬೆಂಕಿ ಆಕ…. “ಮುದುಕಿ ಕೆಮ್ಮುತ್ತ ನಿಂತುಬಿಟ್ಟಿತು…. +“ಬ್ಯೇ ಮುದುಕೀ ಇಂಥೋನ ಕಟ್ಟಿಕೊಂಡು ಅದೆಂಗೆ ಬಾಳುವೆ ಮಾಡ್ಲಿ” ನಾಗವ್ವ ಪರಪರ ತಲೆ ಕೆರೆದುಕೊಂಡು ಕೂದಲು ಚೆಲ್ಲೊಡೆದಳು. +“ನನ್ನ ಕರುಮ ಬೇ ಬಿಡಕೀ….” ಮುದುಕಿ ಸೆಡ್ಡೊಡೆದು ನಿಂತು ಅಲಲಲಾ ಅಂದಿತು. “ಅದೆಂಗೆ ಕಡುಸ್ತಿ ಕಡುಸಲೋ ಬಾಡ್ಕಾವ್” +ತಾಯಿ ಹೆಂಡತಿ ಇಬ್ಬರೂ ಕ್ಷಣಾರ್ಧದಲ್ಲಿ ಒಂದಾಗಿದ್ದು ಕಂಡು ಭರಮ್ಯಾನ ತಲೆ ಗರಗರಂತ ತಿರುಗಿತು. “ಆಗ್ಲೆ ಅಡ್ವಾನ್ಸು ಇಸ್ಕ ಬಂದೀನಲ್ಲ…. ಈಗ ಎದೀ ಮಟ ತಿಂದ್ರೆಲ್ಲ ಅಕ್ಕಿಬಾನ…. ಅದರ್‍ದೇ ಮತ್ತೆ” ಸಿಟ್ಟು ಬಂದು ಅಂಗಿ ಎತ್ತಿ ಹೊಟ್ಟೆ ಪ್ರದೇಶವನ್ನು ಪಟಪಟ ಬಡಿದುಕೊಂಡನು…. +ಅದನ್ನು ಕೇಳಿದ್ದೆ ಅತ್ತೆಸೊಸೆ ಪರಸ್ಪರ ಮುಖ ನೋಡಿಕೊಂಡರು…. ಅಯ್ಯೋ ಯಂಥಾ ಕೆಲ್ಸ ಆಗೋಯ್ತೇ ನಾಗಿ…. ಅದ್ಕೇ ಬಡಬಡಸತೈತಿ ಬಾನ ಒಡಲಾಗೆ…. ಯ್ಯೋನುಮಾಡಲೀ ಶಿವ್ನೇ…. ಮುದುಕಿ ಅಂಗಳಕ್ಕೆ ಕುಂತು ಎದೆ ನಗಾರಿ ಮಡಿಕೊಂಡು ಬಡಿಯತೊಡಗಿತು. ಅತ್ತೆ ಸೊಸೆಯರಿಬ್ಬರು ಪರಸ್ಪರ ಎದುರು ಬದುರಾಗಿ ಕೂತು ಗಂಟಲಲ್ಲಿ ಕೈತೂರಿಸಿ ಕಕ್ಕಿಕೊಳ್ಳುವ ಪ್ರಯತ್ನಕ್ಕೆ ತೊಡಗಿದರು….. ದೇಹದ ಕಣ ಕಣಕ್ಕೂ ವ್ಯಾಪಿಸುತ್ತಿದ್ದ ಅನ್ನ ಬ್ರಹ್ಮ ಅಷ್ಟು ಸುಲಭವಾಗಿ ಹೊರಬಂದಾನೆಯೇ! ಹಠಕ್ಕೆ ಹೆಸರಾದ ಮುದುಕಿ ಬುದುಬುದು ಅಂಗಳ್ಕೆಕ ಓಡಿ ಎಮ್ಮೆಯ ಸೆಗಣಿಯನ್ನು ಸಿಲವಾರ ಡಬರಿಯಲ್ಲಿ ನೀರು ಹಾಕಿ ಕದಡಿತು. +“ಅದ್ಯೆಂಗ ವಾಂತಿ ಆಗಕಿಲ್ಲ ನೋಡೇ ಬುಡ್ತೀನಿ” ಗಟಗಟ ಕುಡಿದು ಹೋಬ್ಬ ಅಂತ ಡೇಗಿತು. ಅಪ್ಪಗುಟ್ಟಿದ ಮಗಳು ನಾಗವ್ವ ಹೇಗೆ ಸುಮ್ಮನಿದ್ದಾಳು? ತಾನೂ ಗಟಗಟ ಕುಡಿದು ಟೊಯ್ಯೋ ಅಂತ ಡೇಗಿದಳು…. ಮಿಂಡರಿಗುಟ್ಟಿದೋನೆ…. ಭರಮ್ಯಾ ಹಣೆ ಹಣೆ ಚಚ್ಚಿಕೊಳ್ಳುತ್ತಿರುವಾಗಲೇ ಅವರಿಬ್ಬರು ವ್ಯಯ್ಕ… ವಯ್ಕ ಅಂತ ವಾಂತಿ ಮಾಡಿಕೊಂಡರು. +uಟಿಜeಜಿiಟಿeಜ +“ಲೋ, ನೀನು ಈಟಿದ್ದಾಗ ನಿನ್ನ ಬೊದ್ಕಿಸಿದ್ದು ಆ ಮರಽಲೋ. ಅದೇ ಕೊಂಬೆಗೆ ತ್ವಟ್ಲ ಕಟ್ಟಿ ನಿನ್ನಾಕಿ ಬುಟ್ರೆ ಗಪ್ಪಂತ ಮಲಗ್ತಿದ್ದೆ…. ಹೆತ್ತಾಯಿ ಬ್ಯಾರೆ ಅಲ್ಲ… ಆ ಮರ ಬ್ಯಾರೆ ಅಲ್ಲ…. ಕ್ಯೇರ್‍ಯಾಗ ಒಂದ್ವಳ್ಳೇದ್ಕೂ ಆ ಮರ ಬೇಕು…. ಒಂದು ಕ್ಯೆಟ್ಟದ್ಕೂ ಆ ಮರಾಬ್ಯೇಕು…. ಅದು ಬರೀ ಬೇವಿನ ಮರ ಅಲ್ಲಲೋ…. ಅದ್ರಾಗ ಚವುಡವ್ವಾ ಮನಿಮಾಡ್ಕಂಡಾಳೇ…. ಅಂಥಾದಕ್ಕೆ ಕೊಡ್ಲಿ ಬುದ್ರೆ, ನರಮನುಸ್ರು ಬೊದ್ಕಿ ಉಳ್ದಾರಾ….. ಬಲುಗಂಡ್ಸು. ನೀರೊತ್ತು ಬೆಳೆಸ್ಸೋ ನನ್ನಂಗೆ. ಗೋಡ್ಗೆ ಮಾರಿ ತಂಬ್ಲ ತಿಂದು ಬೊಂದೀಯಾ…. ಬಾಡ್ಯಾ…. ಬೊರ್ಲಿ…. ಅದಾವನು ಬರ್ತಾನೆ ಬರ್ಲಿ…. ನ್ವಾಡೇಬುಡ್ತೀನಿ…. ಯಲೇ ನಾಗಿ…. ನೀನು ತಳಾರ ಅನುಮಂತ್ಗೆ ವುಟ್ಟಿದ್ ಮೊಗ್ಳಾಗಿದ್ರೆ ಆ ಮರಾನ ಉಳಿಸ್ಗೆಂತಿ…..” ನಾಲಿಗೆಯನ್ನು ಝಳಪಿಸಿ ಕಿಡಿಕಿಡಿ ಎಗರಿಸಿತು ಮುದುಕಿ. +“ಬರ್‍ಲಬೇ ಬರ್‍ಲಿ…. ಯಂಥಾ ಮೊಗುನ್ನ ಹಡ್ಕಂಡಿಯಬೇ…. ಹಡ್ಕಂಡೋಕಿ ನೀನು ಅನುಭೋಸು…..” ನಾಗವ್ವ ಮುದುಕಿಯ ಸೋಟಿ ತಿವಿದು ಗಂಡನೆದುರು ಕುಪ್ಪಳಿಸಿ ನಿಂತಳು. “ಯಾನೋ…. ಗಂಡ್ಸೇ…. ದುಡ್ಡು ಸಂಪಾದಿಸೋದು ಬುಟ್ಟು ಮರಾ ಮಾರಿ ಕೆಂಭಾಮಟ ಬಂದ್ಯಾ…. ನನ್ನೆಣಾಬೀಳ್ಲೀ…. ಸಿಂತೆ ಇಲ್ಲ….” ಅಬ್ಬರಿಸಿದಳು. +“ಲೇ ರಾಕ್ಕಚಿಮುಂಡೇರ…. ನಾನು ಗೊಂಡಸು…. ಬೇಕಾದ್ದು ಮಾರ್ಕೆಂತೀನಿ….. ಅದನ್ನ ಕೇಳಾಕೆ ನೀವ್ಯಾರು” ಭರಮ ಒದರಿದೇಟಿಗೆ ಮರ ಎಂಭೋಮರ ಅಳ್ಳಾಡಿ ಪ್ರತಿಭಟನೆ ಸೂಚಿಸಿತು. +ತಂತಮ್ಮದುಕ್ಕದಲ್ಲಿ ತಾವು ನಿರತರಾಗಲು ಕಂದಮ್ಮನ ಅರಣ್ಯರೋಧನ ಕೇಳಲಿಕ್ಕೆಂದು ಬಳಿಗೆ ನಾಯಿ ಬೆಕ್ಕು ಓಡಿ ಕುಯ್ ಕುಯ್ ರಾಗವಾಡಿದವು. ಓಹೋ ಎಂದಳುತ್ತಿದ್ದ ಕಂದಮ್ಮನ ಬಂಗಾರದ ಬಾಯಿಯಿಂದ ಓತೋಪ್ರೋತವಾಗಿ ಸುರಿಯುತ್ತಿದ್ದ ಚಾಕುಲೇಟಿನ ಅಂಟು ಅಂಟಾದ ದ್ರವದ ಆಸೆಯಿಂದ ನಾಯಿ ತನ್ನೆರಡು ಕಾಲುಗಳನ್ನು ಮಗುವಿನ ಭುಜಗಳ ಮೇಲೆ ಹಾಕಿ ನೀಳವಾಗಿ ನಾಲಿಗೆ ಚಾಚಿ ಕಂದಮ್ಮನ ಮೂಗು ಬಾಯಿ ಪರದೇಸವನ್ನು ಯಥೇಷ್ಟವಾಗಿ ನೆಕ್ಕಿತು. ಬೆಕ್ಕು ಮ್ಯಾವ್‌ಗುಟ್ಟುತ್ತ ಪ್ರತಿಭಟನೆ ಸೂಚಿಸಿತು. +ಹೆತ್ತವ್ವ ಮತ್ತು ಹೆಂಡತಿಯರೀರ್ವರ ಬೊಂಬಾಯಿಗೆ ತಡೆಯಲಾರದೆ ಭರಮ್ಯಾ ಉಳಿದಿದ್ದ ಯಾವತ್ತು ಹಣ ವಿನಿಯೋಗಿಸಿ ಕಂಠಮಟ ಕುಡಿದು ಬಂದು ನಿದ್ದೆ ಹೋದನು. +ಸೂರ್ಯಪರಮಾತುಮ ಹುಟ್ಟುವುದಕ್ಕೆ ಮುಂಚೆ ಹರಿಯುವ ಬೆಳಕಿನಂತೆ ಬೇವಿನಮರವನ್ನು ಭರಮ್ಯಾ ಮನಿಹಾಳು ಗೌಡಗೆ ಮಾರಿರುವ ಸಂಗತಿ ಕೇರಿ ಎಂಬೋ ಕೇರಿತುಂಬ ಹರಡಿಬಿಟ್ಟಿತು. ನಾಗವ್ವ ಮನಿಯೊಳಗಿನ ಸರ್ವ ಹನ್ನೊಂದು ಸಾಮಾನು ತಂದು ಬೆಳಕಿನ ಎಳೆ ಬೆಳಕಿನಲ್ಲಿ ಲಕಲಕ ಹೊಳೆಯುತ್ತಿದ್ದ ಬೇವಿನ ಮರದ ಕೊಂಬೆ ರೆಂಬೆಗೆ ಕಟ್ಟಿ ತೂಗಿಳಿಬಿಟ್ಟಳು. ಇನ್ನೊಂದು ರೆಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಿ ‘ಹೋ’ ಎಂದಳುತ್ತಿದ್ದ ತನ್ನ ಕಂದಮ್ಮನನ್ನು ಅದರಲ್ಲಿ ಕುಕ್ಕರು ಬಡಿದಳೂ. ಮುದುಕಿ ಮರದಡಿ ಮುರುಕು ಹೊರಸು ಹಾಕಿಸಿಕೊಂಡು ಅದರ ಮೇಲೆ ವಿರಾಜಮಾನಗೊಂಡು ಅಲಲಾ ಎಂದಬ್ಬರಿಸಲಾರಂಭಿಸಿತು ಇಡೀ ಓಣಿಗೆ ಕೇಳಿಸುವಂತೆ. ಮೇಲ್ಮನೆ ಸಿದ್ದಜ್ಜ ಕೆಳ್ಮನೆ ಕೇವಳಜ್ಜ; ಸಿಂಗಾರಿಗ; ಚವುಡ; ಅಲಸಂದಿಕಳ್ಳ ಇವೇ ಮೊದಲಾದ ಕೇರಿಯ ಪ್ರಮುಖರು ಒಬ್ಬೊಬ್ಬರಾಗಿ ಮುದುಕಿ ಸುತ್ತ ಜಮಾಯಿಸಿ, ಕೊರೆಚುಟ್ಟ ಹಚ್ಚಿಕೊಂಡು ಬುಸು ಬುಸು ಹೊಗೆ ಬಿಡತೊಡಗಿದರು. +ಹೊತ್ತು ಹುಟ್ಟಿ ಎರಡೂವರೆ ಗೇಣು ಮೇಲೇರುತ್ತಲೆ ಮಾರಕಾಯುಧಗಳನ್ನು ಹಿಡಿದುಕೊಂಡಿದ್ದ ಪಡೆಯ ನೇತೃತ್ವವಹಿಸಿ ಅಷ್ಟೊತ್ತಿಗೆ ಎಲ್ಡುಧರಾಮು ಹಾಕಿಕೊಂಡು ಭರಮ್ಯಾ ಬಂದುಬಿಟ್ಟನು. +“ಬಾಡ್ಕಾವ್ ಸೂಳ್ಯಾಮಕ್ಳಾ ನೀವು ಗಂಡುಸ್ರಾಗಿದ್ರೆ ಮರಾನ ಮುಟ್ತೀರಿ….” ಎಂದೋಡಿ ಬಂದದ್ದೇ ಮರದ ಬೊಡ್ಡೆ ಏರಿ ಅಬ್ಬರಿಸಿತು ಮುದುಕಿ. +“ಈ ನನ್ ಮನಿಮುರಕ ಗಂಡ ಯ್ಯೋಳಿಬುಟ್ಟ…. ನೀವು ಬೊಂದುಬುಟ್ರಾ…. ಥೂ…. ನಿಮಬಾಯಾಕಽ,” ನಾಗವ್ವ ಮರವನ್ನು ಎರಡು ಸುತ್ತು ಪರದಕ್ಷಿಣೆ ಹಾಕಿ ಕುಪ್ಪಳಿಸಿ ನಿಂತಳು. “ಇದು ನಮ್ಮತ್ತಿ ಸಾಕಿ ಬ್ಯೆಳೆಸಿದ ಮರ…. ತಿಳಿತೇನ್ರಲೋ.” +“ನಾನು ಆಕೀಮಗ…. ನಂಗಿದ್ರಮ್ಯಾಲೆ ಅಧಿಕಾರೈತೆ!” ಭರಮ್ಯ ಏರಿಹೋದದ್ದನ್ನು ಕೇವಳಜ್ಜ ಬಲವಾಗಿ ತಡೆದನು. “ಈ ಮರ ಕೇರಿಗೆ ಆಸ್ತಿ ಇದ್ದಂಗಲೇ ವುಡ್ಗ ಮುಂಡೇದೇ” ಎಂದು. +“ದುಡ್ಕಂಡು ತಿಂಭೋರು ನಾವು ನೀವೂ ಒಂದೆ…. ನಮ್ಮಿಬ್ರು ನಡ್ವೆ ಜಗಳ ಇಟ್ಟು ಗೋಡ ತಮಾಷೆ ನೋಡ್ತಿರಬಹುದು. ಬರ್ರೆಲೆ ಯಾಕಿದ್ದೀತು. ಕೂಲಿ ರೊಕ್ಕನ ಆತನ ಮೊಖದಮ್ಯಾಕೆ ಬಿಸಾಕಿ ಬ್ಯಾರೆ ಬೊದ್ಕೀಗೆ ಹೋಗಾಣು,” ಕೊಟ್ರ ತನ್ನ ಸಂಗಡಿಗರೊಂದಿಗೆ ವಾಪಾಸಾದನು. +“ಅವ್ರುವೋಗಿ ಬುಟ್ರಂದಾಕ್ಷಣ ಕಂಟಕ ಇಲ್ಗೆ ಬಗೆಹರೀತೂಂತ ತಿಳ್ಕಬ್ಯಾಡಬೇ ಮುದ್ಕೀ….” ಸಣ್ಣೀರಜ್ಜ ಹೇಳಿದ್ದು ನಿಜವೆಂಬಂತೆ ಕೆಮ್ಮು ದಮ್ಮಿನ ಗೋಡ ಇಪ್ಪತೈದು ಮಂದಿ ಬಲವಾದ ಆಳುಗಳೊಂದಿಗೆ ಬಂದು ಮರಕ್ಕೆ ಕೈಹಚ್ಚಿಸಿದ. ಆಗ ಮನೆಮನೆಯ ಮೇಲೆ ಅವಿತಿದ್ದ ಚಿಳ್ಳೆಮಿಳ್ಳೆಗಳು ಕಲ್ಲುಗಳ ಮಳೆಯನ್ನೇ ಕರೆದು ಓಡಿಸಿಬಿಟ್ಟರು ಅವರೆಲ್ಲರನ್ನೂ. +“ಕಂಟಕ ಇಷ್ಟಕ್ಕೇ ಬಗೆಹರಿತಂತ ತಿಳೀಬ್ಯಾಡಬೇಮುದ್ಕಿ” ಎಂದು ಅಲಸಂದಿ ಕಳ್ಳ ಹೇಳಿದ. ಸೊಲುಪ ಹೊತ್ತಿಗೆ ಗೋಡ ಇಲೇಜು ಅಕೌಂಟೆಂಟು ಮತ್ತು ಪೀಸಿ ರಂಗಣ್ಣನೊಂದಿಗೆ ಮೀಸೆತಿರುವುತ್ತ ಬಂದನು. ಅವರನ್ನು ಮಾನವರೊಂದೇ ಅಲ್ಲದೆ ಮರದ ಮೇಲಿದ್ದ ಹಿರಿಕಿರಿಯ ಪಕ್ಷಿಗಳು ಒಂದೆರಡು ಚಣದಲ್ಲಿ ನಿರಾಶ್ರಿತರಾಗುವ ತಮ್ಮಗತಿಗೆ ದಿಗ್ಭ್ರಮೆಯಾಗಿ ಚೀರಾಡುತ್ತ ನೆಗೆದಾಡತೊಡಗಿದವು. ಇಡೀ ಮರ ಚವುಡಿಕೆ ಮೀಟಿದಂತೆ ಸದ್ದು ಮಾಡಿತು. +ತಾನೊಬ್ಬ ಮಹಾತತ್ವಜ್ಞಾನಿಯಂತೆ ಅದುವೆರೆಗೆ ಮಾತಾಡುತ್ತಿದ್ದ ಗೌಡ ಕಣ್ಣು ಮಿಟುಕಿಸಿ ಮರದ ಮೇಲೆ ದಾಳಿ ಮಾಡಲು ತಮ್ಮವರಿಗೆ ಸೂಚಿಸಿದ. ಹೊಸ ಬ್ರಿಸ್ಟಾಲ್ ಪ್ಯಾಕಿನಿಂದ ಸಿಗರೇಟು ಹಚ್ಚಿದ ಪೀಸಿ ರಂಗಣ್ಣ ಕೇರಿಜನರ ಕಡೆ ತಿರುಗಿ “ಲ್ರೇ…. ಈ ಪೀಸಿ ರಂಗಣ್ಣನ ಲಿಸ್ಟಿಗೆ ಬಿದ್ದಿರಂದ್ರೆ ಮೈಮುಪ್ಪಾಗೋದಂತು ಗ್ಯಾರಂಟಿ… ಮರ ಕಡಿಯೋದ್ನ ನೋಡ್ತ ತೆಪ್ಪಗೆ ಕುಂತಿರಿ” ಎಂದು ಎಚ್ಚರಿಸಿ ತನ್ನನ್ನು ಕಳಿಸಿಕೊಟ್ಟ ಎಸೈ ಸಾಹೇಬರನ್ನು ಮನದಲ್ಲೆ ನೆನೆದ. ಆ ಮಾತಿಗೆ ಭಯ ಪಟ್ಟು ಕೆಲವರು ಹೋದಂತೆ ನಟಿಸಿ ಅಲ್ಲಲ್ಲಿ ನಿಂತರು. +ರಾತ್ರಿಯಿಂದ ಉಂಡರೂ ಉಪಾಸವಿದ್ದ ನಾಗವ್ವ ತಲೆ ತಿರುಗಿ ನೆಲಕ್ಕೊರಗಿದಳು. +“ನಾಗವ್ಗೇನಾತೋ ಏನೋ…. ಓಗಿ ಒಂಚೂರು ಇಚಾರಿಸ್ರೆಪೋ” ಮಾಳವ್ವ ಎಲ್ಲರಿಗೂ ಕೇಳಿಸುವಂತೆ ಕೂಗಿದಳು. “ಕೂಸಿನ್ತಾಯಿ ಬೇಸಿದ್ರೆ ಊರೇ ಬೇಷಿದ್ದಂಗೆ.” +ವುಸ್ರಾಟ ಸಜ್ಜಿಲ್ಲ. ಪ್ಯಾಟಿಗೆತ್ತಬೇಕಾತೈತೋ ಯ್ಯೇನೋ, ನಾಡಿ ನಿಪುಣ ಕುರುಬರ ಸೋಮಣ್ಣ ನೋಡಿ ಬಂದು ಹೇಳಿದ. +ಆ ಮಾತು ಕೇಳಿಸಿಕೊಳ್ಳುತ್ತಲೆ ಮುದುಕಿ ಒಬ್ಬನ ಕೈಯಿಂದ ಕೊಡಲಿ ಕಿತ್ತುಕೊಂಡು ನನ್ನ ಸ್ವಸಿಗೇನಾದ್ರೂ ಆದ್ರೆ ನಿಮ್ಮನ್ನ ಸುಮ್ನೇ ಬುಡಾಕಿಲ್ಲ…. ದೆವ್ವಾಗಿ ಬಂದು ಬಲಿತಕ್ಕಂತೀನಿ….ನೋಡ್ತೀರಿ ಹ್…ಹ್….ಹ್…. ಲಬೋಲಬೋ ಬಾಯಿ ಬಡಿದುಕೊಳ್ಳುತ್ತ ಒಳಗೂ ಹೊರಗೂ ಅಡ್ಡಾಡುತ್ತಿತ್ತು ಮುದುಕಿ ಸೇವುಡವ್ವಾ…. +ಮರಕ್ಕೆ ಜೋತು ಬಿದ್ದಿದ್ದ ತೊಟ್ಟಿಲಿಂದ ಹೋ ಎಂದಳುತ್ತಿದ್ದ ಕಂದಯ್ಯನನ್ನು ಕಂಕುಳಿಗೆ ಸಿಕ್ಕಿಸಿಕೊಂಡ ಭರಮ್ಯಾ “ಓಗಬೇ ಓಗು…ನಿನೂ ಆಕಿ ಇಬ್ರೂ ದೆವ್ವಾರ ಆಗ್ರಿ ಪಿಚಾಚ್ಯಾರ ಆಗ್ರಿ….ಅದ್ಕೆಲ್ಲ ಇಲ್ಲಿ ಯದ್ರೋಲ್ಲ” ಎಂದು ಗದರಿಸಿ, ಕಾನೂನಂದ್ರೆ ಕಾನೂನು….ಅದೇ ಎಲ್ಲ ದೆವ್ವ ಪಿಚಾಚಿಗಳಿಗಿಂತ ದೊಡ್ದು…. +ಅಷ್ಟೋತ್ತು ದಮ್ಮಾರಿಸಿಕೊಳ್ಳುತ್ತ ಕುಂತಿದ್ದ ತಿಂದಜ್ಜ ಕೋಲಿನಾಸರೆಗೆ ಕೈ ಕೊಟ್ಟು ಮೇಲೆದ್ದು ಸುತ್ತ ಕಣ್ಣಾಡಿಸಿದ. ಗೌಡ ತಮ್ಮನ್ನೂ ಒಂದು ಮರ ಅಂತ ತಿಳಿದುಕೊಂಡರೆ ಹೇಗೆ ತಪ್ಪಿಸಿಕೊಳ್ಳುವುದೆಂದು ಯೋಚಿಸುತ್ತಿರುವವರಂತೆ ನಿಂತಿದ್ದ ತಮ್ಮ ಕೇರಿ ಜನ ಬೇವಿನ ಮರವನ್ನಾಗಲೀ ನಾಗವ್ವನನ್ನಾಗಲೀ ರಕ್ಷಿಸಲು ಅಸಮರ್ಥರೆಂದೂಹಿಸಿಕೊಂಡು ನಿಟ್ಟುಸಿರುಬಿಟ್ಟ…. ಎಂಥ ಸುಮಾರು ಕಾಲ ಬಂತಲ್ಲಾ ಸಿವ್ನೇ ಎಂದು ಗೊಣಗುತ್ತ ಮರದ ಕಡೆ ನಡೆದು ತಿಂದಜ್ಜ ಅದಕ್ಕೆ ತನ್ನ ಮೈ ಆನಿಸಿ ಅದೇಸ್ನೂರುಜನ ಬಂದು ಕಡಿತಾರೊ ಕಡೀಲಿ ಎಂದು ಸರ್ವರಿಗೆ ಕೇಳಿಸುವಂತೆ ಗೊಣಗಿದ. +“ತಿಂದಜ್ಜಾ….ನಿಂಗ್ಯಾಕ ಬೇಕು ಯಿದ್ರ ಉಸಾಬರಿ…. ಇವತ್ತೋ ನಾಳ್ಯೋ ಸಾಯೋನ್ಗೆ” ಗೌಡ ಮೆತ್ತಗೆ ಬುದ್ಧಿ ಹೇಳಿದ. “ಇದು ನಂ ಕ್ಯೇರಾಗಿನ ಮಾತು ಗೋಡಾ….ನಮ್ ಕೇರ್‍ಯಾಗ ಒಂದು ಬೇವಿನಮರಾನಾದ್ರು ಇರಾಕೆ ಬುಡಬಾರದಂದ್ರೆಂಗೆ…. ಕ್ವಕ್… ಕ್ವಕ್….” ಮುದುಕ ಮರದ ಕಾಂಡಕ್ಕೆ ಮುತ್ತಿಟ್ಟ. +“ಏಯ್ ಮುದ್ಕಾ….ರೊಕ್ಕ ಕೊಟ್ಟು ಕೊಂಡ್ಕೊಂಡಿರೋ ಮರ….ಕಡ್ಕೋತಾರೆ….ಒಳ್ಳೇಮಾತೀಲಿ ಈ ಕಡೆ ಬಾ” ಪೀಸಿ ರಂಗ ಖಾಕಿ ಶೈಲಿಯಲ್ಲಿ ನುಡಿದ. +ಗೌಡನ ಆಜ್ಞೆ ಮೇರೆಗೆ ಗಿಡ್ಡ ಲುಂಗಿ ಅಡರುಗಟ್ಟಿ ಮುದುಕನ ರೆಟ್ಟೆಗೆ ಕೈಹಚ್ಚಿ ತಿಣುಕಿದ. ಸೌಗಂಧಿಕಾ ಪುಪ್ಪಹರಣದ ಕಾಲಕ್ಕೆ ಭೀಮನಿಂದ ಹನುಂತನ ಬಾಲ ಎತ್ತಲಿಕ್ಕೆ ಹೇಗೆ ಸಾಧ್ಯವಾಗಲಿಲ್ಲವೋ ಹಾಗೆ ಗಿಡ್ಡಗೆ ತಿಂದಜ್ಜನ ರೋಮ ಕೊಂದಿಸಲಾಗಲಿಲ್ಲ. +“ಎಲಾ ಇವ್ನ” ಕಳೆದವಾರವಷ್ಟೆ ಇಪ್ಪತ್ತೈದನೇ ಇಂಕ್ರಿಮೆಂಟು ಪಡೆದು ಸಿಲ್ವರುಜುಬ್ಲಿ ಆಚರಿಸಿರುವ ಪೀಸಿರಂಗಣ್ಣಗೆ ತಾನು ಗೌಡನಿಂದ ಪಡೆದಿರುವ ನೂರಾ ಒಂದರ ಋಣ ತೀರಿಸಲು ಉಡದಂತೆ ಕೂತಿರುವ ಮುದುಕನನ್ನು ಮರದ ಬೊಡ್ಡೆಯಿಂದ ಕದಲಿಸಲೇ ಬೇಕೆನಿಸಿತು. +ಎಂಥೆಂಥೋರ್‍ನೇ ನಡುಗಿಸಿರುವ ಲಾಠಿ ಇಂದ್ರನ ಕೈಯ ವಜ್ರಾಯುಧಕ್ಕಿಂತ ಯಾವುದರಲ್ಲಿ ತಾನೆ ಕಡಿಮೆ. ಕೋಪದಿಂದ ಬಾಂಛೋದ್ ಎಂದು ಝಳಪಿಸಿದ. ಮೊದಲೇ ಆತ ಕೆಟ್ಟಿರುವ ಲಿವರ್ರನ್ನೇ ಕೇರುಮಾಡದೆ ಡ್ಯೂಟಿಮಾಡುವ ಮನುಷ್ಯ. +ಭಿಕ್ಷೆ ಎತ್ತಲು ಪಕ್ಕದ ಹಳ್ಳಿಗಳಿಗೆ ಹೋಗಿದ್ದ ಹುಲಿಗೆಮ್ಮ ಓಡಿ ಬಂದು…. ಸಾರೂ ನಮ್ ಮುದಕನ ತಂಟೆಗೋಗಬ್ಯಾಡ….ಎಂದು ಅಡ್ಡ ನಿಂತಳು. ತನ್ನ ಹೆಗಲಗುಂಟ ಇಳಿಬಿದ್ದಿದ್ದ ಚವುಡಕೆಯಿಂದ ಟಿವ್ ಟಿವ್ ನುಡಿಸುತ್ತ “ರಾಮನೇ-ಪರಶುರಾಮನೇ-ಅರಣ್ಯದೊಳಗೆ ಕೋರಣ್ಯ ಮಾಡೋಳೆ-ದೇವದಾರಿ ಹೆಣ್ಣೆಂತ ನೆಲಸ್ಸಾಳೆ-ಯಲ್ಲವ್ವ-ದೇವಿಗತಿ ಎಂದು ನಡೆದೇವೋ….” ಎಂದು ಕುಣಿಯುತ್ತ ಹಾಡಲಾರಂಭಿಸಿದಳು. ಬಂಗಾರ ಬಣ್ಣದ ಹುಡಿಯನ್ನು ಜೋಳಿಗೆಯಿಂದ ತೆಗೆದು ಮರ ಕಡಿಯಲು ಬಂದವರ ಮೇಲೆರಚಿದಳು. ಹೆಣ್ಣು ದೇವತೆಗಳಿಗೆ ಸೊಲುಪಾದರೂ ಹೆದರುವ ಗೌಡ ಯವ್ವೋತಾಯಿ ನಿಂಗೆ ಬೆಳ್ಳಿ ಛತ್ರಿ ಮಾಡಿಸ್ತೀನಿ ಮರನ ಭೂಮಿಗುರುಳಿಸೂ….ಎಂದು ಬೇಡಿಕೊಂಡ. +ಪೊಲೀಸ್ರೆ ನಿಂತಮ್ಯಾಕೆ ಮರ ಬೂಳ್ದಂಗಿದ್ದೇತೇನು!….ಎಂಕಟಿ ಬೆಣ್ಣೆ ಮಾತಾಡಿ ಅಂತೂ ಭರಮ್ಯಾನಿಂದ ಸಿಗರೇಟು ಗಿಟ್ಟಿಸುವಲ್ಲಿ ಯಶಸ್ವಿಯಾದನು. +ತನ್ನ ಜೀವದ ಜೀವ ಮರದ ಬೊಡ್ಡೆಗೆ ತಲೆಗೆ ಢೀಕೊಡಲಾಗದೆ ಮುದುಕಿ ಭೂಮಿಯನ್ನು ನಗಾರಿಯಂತೆ ಬಡಿದುಕೊಳ್ಳುತ್ತ “ಅಯ್ಯೋ ನನ್ನ ಸೊಸಿ….ಅಯ್ಯೊ ನನ್ ಮರ….”ಎಂದಬ್ಬರಿಸುತ್ತಿತ್ತು. ಮರದ ಕೊಂಬೆರೆಂಬೆಗಳಲ್ಲಿ ಕಟ್ಟಿದ್ದ ಮನೆಯ ಸಾಮಾನು ಮುಂಕಟ್ಟುಗಳನ್ನು ಗೌಡನ ಆಳುಗಳು ಬಿಚ್ಚಲಾರಂಭಿಸಿದ್ದರು. ಪಕ್ಷಿಗಳ ಚೀತ್ಕಾರ ಮುಗಿಲಿಗೆ ಮುಟ್ಟಿತ್ತು. ಮರದ ಬೊಡ್ಡೆ ಮೇಲೆಲ್ಲ ಗಿಡ್ಡ ಇದ್ದಿಲಚೂರಿನಿಂದ ರೇಖಾ ಗಣಿತ ಬರೆಯತೊಡಗಿದ್ದ ಕಡಿವವರಿಗೆ ಅನುಕೂಲವಾಲೆಂದು….ಅಲ್ಲದೆ ಪೀಸಿ ರಂಗಣ್ಣ ಸೋಗುಗಿವಿಯಲ್ಲಿ ತನ್ನ ದಂತಕ್ಷಯದ ಬಾಯಿ ಇರಿಸಿ ಕೇರಿಯ ಶಿವುಗ ತಮ್ಮೀಕೇರಿಯಲ್ಲಿ ಯಾರು ಗಾಂಜಾ ಬೆಳೆಯುತ್ತಿರುವರು, ಯಾರು ಕಳ್ಳಭಟ್ಟಿ ಇಳಿಸುತ್ತಿರುವರು, ಅಕ್ಕಪಕ್ಕದ ಊರುಗಳಿಗೆ ಹೋಗಿ ಯಾರ್‍ಯಾರು ಸೂಳೆಗಾರಿಕೆ ಮಾಡುತ್ತಿರುವರು ಎಂದು ಗುಟ್ಟಾಗಿ ಮಾಯಿತಿ ನೀಡುತ್ತಿದ್ದನು. ಪದ ಹಾಡುತ್ತ, ಕುಣಿಯುತ್ತ ಮೈಮರೆತಿದ್ದ ಹುಲಿಗೆವ್ವನ ದೇಹದ ಆಯಕಟ್ಟಾದ ಜಾಗಗಳನ್ನು ಗಮನಿಸುತ್ತಿದ್ದ ರಂಗಣ್ಣ ಎಷ್ಟು ಕೇಳಿಸಿಕೊಂಡನೋ ಬಿಟ್ಟನೋ! +ಅಯ್ಯೋ ದ್ಯಾವ್ರೆ ನನ್ ಕೊಣ್ಣುಮುಚ್ಕೋ….ನನ್ ಸೊಸಿ ಕಣ್ ತಗೀವಲ್ಲು….ನನ್ ಮರಽನ ಉಳ್ಸೋ ಪರಾಕ್ರಮಿ ಗಂಡ್ಸು ಈ ಭೂಮಿಮ್ಯಾಕೆ ಇಲ್ಲೇನು…. ಇಂಥ ನರಸತ್ತ ಮೊಗುನ್ನ ಯಾಕಕ್ವಟ್ಟಿ ದ್ಯಾವ್ರೆ….ಬಂಜೇನಾದ್ರು ಮಾಡಬಾರ್‍ದಾಗಿತ್ತೇ…. ಎಂದು ಎದೆ ಎದೆ ಬಡಿದುಕೊಳ್ಳುತ್ತಿರುವ ತನ್ನ ತಾಯಿ ಈಕ್ಷಣ ಸತ್ತರೆಲ್ಲಿ ಹೆಣ ಹುಗಿಯಲು ಕೈಯಲ್ಲಿ ತಕತಕ ಕುಣಿಯುತ್ತಿರುವ ಹಣವನ್ನು ಖರ್ಚು ಮಾಡಬೇಕಾಗಬಹುದೋ ಎಂದು ಭರಮ್ಯ ಹೆದರಿ, ಬ್ಯೇ ಸುಮ್ಕಿರಬೇ ನಿಮವ್ನ, ಎಂದು ಕೂಗಿದ. ಮತ್ತೆ ಮುದುಕಿ ಪವುರುಷದಿಂದ ಪೀಸಿ ರಂಗಣ್ಣ ಮುಂದೆ ಕುಪ್ಪಳಿಸಿ ನಿಂತು. ಪೋಲೀಸಪ್ಪ….ನೀನಿಕಂಡಿರೋ ಕೋಲಿಗಾಗ್ಲೀ….ನೀ ತೊಟ್ಕಂಡಿರೋ ದಿರಿಸಿಗಾಗ್ಲೀ ಯದ್ರೋಳಲ್ಲ ಈ ಸೆವುಡೀ….ಮರಕಡ್ಸೋ ನಿನ್ ಕಾನೂನ್ಗೆ ಬೆಂಕಿ ಬೂಳ್ಲಿ….ನಿಂ ಕೈಯಲ್ಲಿ ಸೇದಿವಾಗ್ಲಿ. ಕ್ವಕ್….ಕ್ವಕ್ ಎಂದುಗುಳು ಸಿಂಪಡಿಸಿ ಮಾತಾಡಿತು. +ಮರದ ಸುತ್ತು ಕಟುಕರ ಕೊಡಲಿ ಹಿಡಿದು ಒಲ್ಲದ ಮನಸಿನಿಂದ ನಿಂತು ಮರದ ಕಡೆ ಪಿಳಿಪಿಳಿ ಕಣ್ಣುಬಿಟ್ಟರು. ಇಡೀ ಕೇರಿಯ ಇಡೀ ಶೂದ್ರ ಸಮುದಾಯದ ಇಚ್ಚಾ ಶಕ್ತಿಯೇ ಮರ ರೂಪ ಧರಿಸಿ ನಿಂತಿರುವಂತೆ ಕಂಡಿತವರಿಗೆ….ಕೊಡಲಿ ಎತ್ತುವ ಶಕ್ತಿಯೇ ತಮ್ಮ ರೆಟ್ಟೆಗಳಲ್ಲಿ ನಶಿಸಿ ಹೋಗಿದೆ ಎನ್ನಿಸಿ ಮಂಕಾದರು. +ಚಣದಿಂದ ಚಣಕ್ಕೆ ರಾಪಾಗುತ್ತಿದ್ದ ಹುಲಿಗೆವ್ವನಂತೂ ಮೈ ಮೇಲಿನ ಬಟ್ಟೆ ಖಬರಿಲ್ಲದೆ ಚವುಡಿಕೆ ಟಿವ್ವ….ಟಿವ್ವ ನುಡಿಸುತ್ತ ಹಾವಿನ ಹಾಸಿಗೆ ಚೇಳಿನ ತಲೆದಿಂಬು ನಾಗರಾವುನಡುಕಟ್ಟು ಈವೂರ ತಾಯಿಗೆ ಬಿರುದು ಸಲುವಾವೆ….ಟೆವ್….ಟೆವ್….ವೇಗದ ಗತಿಯಲ್ಲಿ ಹಾಡುತ್ತ….ಕುಣಿಯುತ್ತ ಚಿನ್ನದ ಹುಡಿಯಂಥ ಭಂಡಾರ ಚೆಲ್ಲಾಡುತ್ತ….ಮರವನ್ನು ರವಂಡು ಹಾಕಿ ನುಗ್ಗಿದಳು ಒಳಕ್ಕೆ….ಮೈಮೇಲೆ ಖಬರಿಲ್ಲದೆ ಮಲಗಿದ್ದ ನಾಗವ್ವನ ಎದೆ ಮಾತ್ರ ದೀರ್ಘ ಉಸಿರಾಟಕ್ಕೆ ಏರಿಳಿಯುತ್ತ ವಿಚಿತ್ರ ಸವಂಡು ಉಂಟು ಮಾಡಿದ್ದ ಪವಿತ್ರ ತಾವಿಗೆ. +ಚವುಡಿಕೆ ಸ್ವರ ಕಳೆದುಕೊಂಡು ಹರಿದ ತಂತಿ ದೇವಿಯ ಹರಿದ ರೋಮದಂತೆ ಕೆಳಕ್ಕೂ ಮ್ಯಾಕೂ ಜೋಕಾಲಿ ಆಡುತ್ತಿರುವಾಗ ಭಂಡಾರದ ಹುಡಿ ಪುತು ಪುತು ಅಂತ ಸಾದ್ವಿ ನಾಗವ್ವನ ದುಂಡು ಮುಖದ ಮೇಲುದುರಿತು. ಎಲ್ಲಿ ಕಾಣೆಲ್ಲಿ ಕಾಣೆ. ಎಲ್ಲವ್ವನಂತಾಕಿನೆಲ್ಲಿಕಾಣೆಲ್ಲಿ ಕಾಣೆ….ಕಂಚಿನ ಕಂಠ ನಿರರ್‍ಗಳವಾಗಿ ಹರಿಸುತ್ತ ಹುಲಿಗೆವ್ವ ಚವುಡಿಕೆಯನ್ನು ನುಡಿಸುತ್ತ ಕುಣಿದಾಡಿದಳು. ಗೆಜ್ಜೆ ಕಾಲುಗಳಿಂದ, ಮೇಲಿಂದ ಮೇಲೆ ಉದುರುತ್ತಿರುವ ಭಂಡಾರ….ಬಡವರದಲ್ಲ ಮನೆ ಅದು ಶ್ರೀಮಂತರ ಬಂಗಾರದ ಮನೆಯಂತೆ ಕಂಡಿತು ಒಂದು ಚಣ ಬಂಗಾರದ ಹುಡಿಯೊಳಗೆ. +ಮಾರೆಮ್ಮ ತಾಯೆ ನಿನಗಾರು ಸರಿಯೇ ಸರಿ ಅಂದವರ ಹಲ್ಲುಮುರಿಯೇ….ಬಹುಪರಾಕ್….ಹುಲಿಗೆವ್ವನ ಧ್ವನಿ ಸುತ್ತ ಇದ್ದ ಜನ ಧ್ವನಿ ಸೇರಿಸಲು ಮಾಡಿನಿಂದ ಮಣ್ಣುದುರಿತು. ಬೇವಿನಮರ ಎಲೆ ಉದುರಿಸಿ ಹರ್ಷ ಪ್ರಕಟಿಸಿತು. +“ಎದ್ದೇಳೆ ತಾಯಿ! ನಾಗವ್ವನ ಮೈಯಾಗ ಯಾಕ ಹೊಕ್ಕಂಡಿದೀ…ನಿನ್ ವಾಸಸ್ಥಾನ ಕಡಿಯಾಕ ಹತ್ತಿರೋದು ನೋಡಿದ್ರು ನೋಡ್ದೋಳಂಗೆ ಮಲಿಕ್ಕಂಡೀಯಲ್ಲಬೇ ತಾಯಿ….ಎಂಥೆಂಥ ರಾಕ್ಷಸರ್‍ನ ಧ್ವಂಸ ಮಾಡ್ದೋಳು ನೀನು….ಈಗ ತೋರಿಸೇ ನಿನ್ನ ಪ್ರತಾಪ…..” ಹುಲಿಗೆವ್ವ ಮಾಂತ್ರಿಕ ಶೈಲಿಯಲ್ಲಿ ಮಾತಾಡುತ್ತ ಒಂದು ಹಿಡಿ ಕುಂಕುಮ ತೆಗೆದು ನಾಗವ್ವನ ಮುಖದ ಮೇಲೆ ಸುರಿದಳು…. ಸುರಿಯುತ್ತ ರಕ್ತದಲ್ಲಿ ಅದ್ದಿ ತೆಗೆದಂತೆ ಕಂಡಿತು ಆಕೆಯ ಮೊಗ….ಪ್ರಪಂಚವನ್ನೆಲ್ಲ ಆಪೋಶನ ತೆಗೆದುಕೊಳ್ಳಲಿರುವವಳಂತೆ ಕಣ್ಣು ತೆರೆದು ಎಚ್ಚರಾದಳು ನಾಗವ್ವ….ಮುಗಿಲಮಟ ನಿಲ್ಲುವವಳಂತೆ….ನೆಲವನ್ನು ಪಾತಾಳಕ್ಕೆ ತಳ್ಳುವವಳಂತೆ ಆಕೆ ನಿಂತೇಟಿಗೆ ಜನ ಎಂಭೋಜನ ನಾಗವ್ವನ ಮೈಯಾಗ ಅವ್ವ ವಕ್ಕಂಡವಳೇ…. ಎಂದು ಹರ್ಷೋದ್ಗಾರ ಮಾಡಿದರು….ತಲೆಯನ್ನೂ ಅತ್ತ ಇತ್ತ ವೇಗವಾಗಿ ತಿರುಗಿಸುತ್ತ ನಾಗವ್ವ ಬಾಗಿಲಕಡೆ ಹೆಜ್ಜೆ ಇಡಲು ಹುಲಿಗೆವ್ವ ಚವುಡಿಕೆ ಹರಿದು ಹೋಗುವಂತೆ ನುಡಿಸತೊಡಗಿದಳು. +ಮೊದಲಿಗೆ ನಾಗವ್ವ ನಾಟಕ ಆಡ್ತಿದಾಳೇನೋ ಎಂದು ಭಾವಿಸಿದ ಗೌಡ ಉರಿಯುತ್ತಿದ್ದ ಕರ್ಪುರವನ್ನೇ ಆಕೆ ಬಾಯಲ್ಲಿಟ್ಟುಕೊಂಡು ನುಂಗುತ್ತಲೆ ಹಡಲ್ಲಾಗಿ ಹೋದನು. ದೋತರ ಒದ್ದೆ ಮಾಡಿಕೊಂಡು ಯವ್ವೇ ತಾಯಿ ಎಂದು ತನ್ನ ಪಾದಕ್ಕೆರಗಿದ ಗೌಡನ ಬೆನ್ನ ಮೇಲೆ ಕಾಲಿಟ್ಟು ಪೀಸಿ ರಂಗಣ್ಣನ ಕಡೆ ನುಗ್ಗಿದಳು ಬಿರುಗಾಳಿಯಂತೆ…. ಆ ಬಿರುಗಾಳಿಯಲ್ಲಿ ತರಗೆಲೆಗಳಂತಾದ ಪೀಸಿ ರಂಗಣ್ಣ, ಗಂಡ ಭರಮ್ಯಾ….ಮುಂತಾದವರನ್ನು ಓಡಿಸಿಕೊಂಡು ಬಹು ದೂರದವರೆಗೆ ಓಡಿಸಿಕೊಂಡು ಹೋದಳು. +ಸಂತೋಷದಿಂದ ಗಾಳಿಗೆ ಸಮಸ್ತ ಅಂಗೋಪಾಂಗ ಮಿಸುಕಾಡಿಸಿದ ಬೇವಿನ ಮರದ ಮೇಲೆ ಪಕ್ಷಿಗಳು ಕುಣಿದು ಕುಪ್ಪಳಿಸಿದವು. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ […] +ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_597.txt b/Kannada Sahitya/article_597.txt new file mode 100644 index 0000000000000000000000000000000000000000..ec4231f3905a784869542adf7d82ae50d0cfc1cb --- /dev/null +++ b/Kannada Sahitya/article_597.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾಗರ, ಎಲ್ಲ ರೀತಿಯ ಜಾತಿ, ಮತ, ವರ್ಗ, ಬೇಧಗಳನ್ನು ಒಳಗೊಂಡಂಥ ಊರು. ಮಂಜಿ ಎಂಬ ಮುದುಕಿಯಬ್ಬಳು ಊರ ತುಂಬ ಅಡ್ಡಾಡಿಕೊಂಡಿರುತ್ತಿದ್ದಳು. ಅವಳ ನಿಜವಾದ ಹೆಸರು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಿದ್ದಹಾಗೆ ಕಾಣೆ. ಅವಳನ್ನು ಎಲ್ಲರೂ ’ಹುಚ್ ಮಂಜಿ’ ಎಂದೇ ಕರೆಯುತ್ತಿದ್ದರು. ಅವಳು ಭಿಕ್ಷುಕಿಯಲ್ಲ. ಅವರಿವರು ಕೊಟ್ಟ ಚಿಲ್ಲರೆ ಹಣವನ್ನು ನೀರು ತುಂಬಿರುತ್ತಿದ್ದ ಹಿತ್ತಾಳೆ ಚೊಂಬೊಂದರಲ್ಲಿ ಹಾಕಿ ಇಟ್ಟುಕೊಂಡಿರುತ್ತಿದ್ದಳು. ಅವಳು ಬಂದರೆ ಸಾಕು ಮಕ್ಕಳು, ಪಡ್ಡೆ ಹುಡುಗರು ಅವಳನ್ನು ’ಮಂಜಿ ನಿನ್ ಗಂಡ ಎಲ್ಲೆ’ ಎಂದೋ ಅಥವ ’ಮಂಜಿ ನಿನ್ ಮಗ ಬಂದ’ ಎಂದೋ ಚುಡಾಯಿಸುತ್ತಿದ್ದರು. ಆಗ ಅವಳು ತನ್ನ ಕೈಲಿದ್ದ ದೊಣ್ಣೆಯನ್ನು ಅವರತ್ತ ಬೀಸಿ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಳು. ಯಾರಿಗೂ ಅವಳ ಆ ಗಂಡನ ಬಗ್ಗೆ ಯಾಗಲಿ ಮಗನ ಬಗ್ಗೆ ಯಾಗಲಿ ತಿಳಿದಿರಲಿಲ್ಲ. ಅವಳ ಸುತ್ತಲೂ ನೂರೆಂಟು ಕಥೆಗಳಿದ್ದರೂ ಸಹ, ಅವಳ ವ್ಯಕ್ತಿತ್ವ ನಿಗೂಢವಾದ್ದು. ಅವಳಿಗೆ ಗಂಡಸರನ್ನು ಕಂಡರಾಗುತ್ತಿರಲಿಲ್ಲ. ಪಾಪ ಅವಳು ಜೀವನದಲ್ಲಿ ಏನೇನೆಲ್ಲ ಅನುಭವಿಸಿದ್ದಳೋ ಅವಳಿಗೇ ಗೊತ್ತು. +ಇದೇ ಸಾಗರದ ಗೌಜ್ ಗೇರಿಯಲ್ಲಿ ನಾವಿದ್ದದ್ದು. ನಮ್ಮ ಕೇರಿ ಒಂದು ರೀತಿಯಲ್ಲಿ ಲಿಬೆರಲ್ ಮನೋಭಾವ ಉಳ್ಳ ರಸ್ತೆಯಾಗಿತ್ತು. ಸಂಜೆಯಾದರೆ ನಾವೆಲ್ಲರೂ ಆಟವಾಡುತ್ತಿದ್ದದ್ದು ರೋಡಿನಲ್ಲೇ. ಲಗೋರಿ, ಚಿನ್ನಿ-ದಾಂಡು, ಗೋಲಿ, ಬುಗುರಿ, ಕ್ರಿಕೆಟ್, ಐಸ್ಪೈ, ಕುಂಟಾಟ… ಎಲ್ಲವನ್ನೂ ಕೇರಿಯ ಗಂಡುಮಕ್ಕಳು, ಹೆಣ್ಣು ಮಕ್ಕಳು ಒಟ್ಟು ಸೇರಿ ಆಡುತ್ತಿದ್ದೆವು. ಹೆಚ್ಚು ಕಡಿಮೆ ನಮ್ಮ ಕೇರಿಯ ಮಕ್ಕಳೆಲ್ಲರ ಹೆಸರು ನನಗಿನ್ನೂ ನೆನಪಿದೆ. ಶಿವರಾತ್ರಿಯ ಜಾಗರಣೆ ಮತ್ತು ಹೋಲಿಹಬ್ಬದ ಸಂಭ್ರಮಗಳನ್ನು ಕೇರಿಗೆ ಕೇರಿಯೇ ಸೇರಿ ಆಚರಿಸುತ್ತಿತ್ತು. ಭೂಮಿ ಹುಣ್ಣಿಮೆಗೆ ಒಂದುಸಾರಿ ಕೇರಿಯ ಹೆಂಗಸರು ಮಕ್ಕಳು ಎಲ್ಲರೂ ಲಾರಿಯೊಂದರಲ್ಲಿ ಯಾರದ್ದೋ ಗದ್ದೆಗೆ ಹೋಗಿ ಅಲ್ಲೇ ಅಡಿಗೆ ಮಾಡಿ ಉಂಡು ಬಂದ ನೆನಪು ನನ್ನ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಹೈಸ್ಕೋಲ್ ದಾಟುವ ಹೊತ್ತಿಗೆ ರಸ್ತೆಯಮೇಲಾಡುವುದು ಕಡಿಮೆಯಾಗಿ, ಸಂಜೆಯ ಹೊತ್ತಿಗೆ ಕಾದಂಬರಿ ಓದುವುದು, ಜಗಲಿಯಮೇಲೆ ಕೂತು ಹರಟೆಕೊಚ್ಚುವುದು ಅಥವ ಗೆಳತಿಯರು ಸೇರಿ ಪೇಟೆ ಬೀದಿ ಸುತ್ತಿಬರುವುದು ರೂಢಿಯಾಯ್ತು. +ಗೌಜ್ ಗೇರಿಯಿಂದ ಶಾಲೆಗೆ ಹೋಗಲು ಚಿಕ್ಕದೊಂದು ರಸ್ತೆ ಇತ್ತು. ಇದು ನಮಗೆ ಶಾರ್ಟ್ಕಟ್. ಇದನ್ನು ಬಿಟ್ಟರೆ, ಪೇಟೆಬೀದಿ ಬಳಸಿ, ಸುಮಾರು ದೂರ ಸುತ್ತಿ ಹೋಗಬೇಕಿತ್ತು. ಈ ರಸ್ತೆ ಎಷ್ಟು ಚಿಕ್ಕದೆಂದರೆ, ಒಂದು ದಿಕ್ಕಿನಿಂದ ಆಟೋ ಹಾದು ಹೋದರೆ, ಮತ್ತೊಂದು ದಿಕ್ಕಿನಿಂದ ಸೈಕಲ್ ಬರಲಿಕ್ಕೆ ಸಹ ಜಾಗವಿರುತ್ತಿರಲಿಲ್ಲ. ರಸ್ತೆಯ ಆಚೆ ಈಚೆಗೆ ದೊಡ್ಡ ದೊಡ್ಡ ಚರಂಡಿಗಳು. ಈ ಚರಂಡಿಗಳ ಅಂಚಿನಲ್ಲಿ ಬೆಳಗಿನ ಜಾವದಿಂದಲೇ ಮಕ್ಕಳು ಕುಪ್ಪೆ ಕುಪ್ಪೆ ಬಳುವಳಿ ಬಿಟ್ಟಿರುತ್ತಿದ್ದರು. ಮಳೆ ಬಂದರಂತು ಚರಂಡಿ ತುಂಬಿ ಹರಿಯುತ್ತಿತ್ತು. ಅತ್ತಲಾಗಿನ ಹೊಲಸು ಇತ್ತಲಾಗೆ ಮತ್ತು ಇತ್ತಲಾಗಿನ ಹೊಲಸು ಅತ್ತಲಾಗೆ ಹರಿದು, ಚರಂಡಿ ಶುದ್ದವಾಗಿ ರಸ್ತೆ ರಾಡಿಯಾಗಿ ಬಿಡುತ್ತಿತ್ತು. ಈ ರಸ್ತೆಯ ಒಂದು ಬದಿಗೆ, ಆ ತುದಿಯಿಂದ ಈ ತುದಿಯವರೆಗೂ ಚಾಚಿಕೊಂಡ ಮನೆಯ ಗೋಡೆ. ಗೋಡೆಯ ಮೇಲೆ ಡಾಂಬರಿನಿಂದ ಆಲದಮರದ ಚಿತ್ರ ಹಾಗು ಅದರಡಿಗೆ “ಜಾಲಿಮಲೋಷನ” ಎಂದು ಬರೆದಿತ್ತು. ಮತ್ತೊಂದುಕಡೆ ದೊಡ್ಡದಾಗಿ ’ಸುಗಂಧರಾಜ ರಸ್ತೆ’ ಎಂದು ಬರೆದಿತ್ತು. ಇಷ್ಟು ಬಿಟ್ಟರೆ, ಅಪರೂಪಕ್ಕೆ ನಮ್ಮೂರಿಗೆ ಬರುತ್ತಿದ್ದ ಸರ್ಕಸ್ಸಿನದ್ದೋ, ಪಬ್ಲಿಕ್ ಮೀಟಿಂಗುಗಳದ್ದೋ ಜಾಹೀರಾತುಗಳು, ಇತ್ಯಾದಿ… ಹೊಸದು ಹಳೆಯದು ಹೀಗೆ ಏನೇನೋ ಇರುತ್ತಿತ್ತು. ಇವೆಲ್ಲವನ್ನೂ ಮೀರಿಸುವಂತೆ, ಆ ಗೋಡೆಯ ಮೇಲೆ ಒಂದರಮೇಲೊಂದರಂತೆ ಅಂಟಿಸಿದ ಸಿನೆಮಾ ಪೋಸ್ಟರ್‌ಗಳು ಇರುತ್ತಿದ್ದವು. ಹರಿದ ಪೋಸ್ಟರ್ಗಳ ಸಂದಿನಿಂದ ಯಾವುದೋ ಸಿನೆಮಾದ ನಟ, ಮತ್ಯಾವುದೋ ಸಿನೆಮಾದ ನಟಿಯರ ನಡುವೆ ಅಲ್ಲಿ ಇಲ್ಲಿ ಅರೆ ಬರೆ ಬಟ್ಟೆ ತೊಟ್ಟ ಕ್ಯಾಬರೆ ನರ್ತಕಿಯರ ಚಿತ್ರಗಳೂ ಹಣಕುತ್ತಿದ್ದವು. ಕೆಲವು ಅಶ್ಲೀಲ ಪೋಸ್ಟರ್‌ಗಳಂತೂ ಒಂದಲ್ಲ ಒಂದು ಕಡೆಗೆ ಈ ಗೋಡೆಯಮೇಲೆ ಇದ್ದೇ ಇರುತ್ತಿತ್ತು. ಈ ಪೋಸ್ಟರ್‌ಗಳಿಂದಾಗಿ ದಿನನಿತ್ಯ ಆ ರಸ್ತೆಯನ್ನು ಹಾದು ಹೋಗಬೇಕಾದರೆ ಎಲ್ಲಿಲ್ಲದ ಸಂಕೋಚವಾಗುತ್ತಿತ್ತು. ಅವನ್ನು ನೋಡುವ ಕುತೂಹಲವಿದ್ದರೂ, ಕಣ್ಣಕೊನೆಯಿಂದ ನೋಡಿ, ಅವಮಾನವಾದಂತಾಗಿ, ನೋಡಿದರೂ ನೋಡದಹಾಗೆ ತಲೆ ತಗ್ಗಿಸಿ (ಮೂಗೂ ಮುಚ್ಚಿಕೊಂಡು) ದಡಬಡಿಸಿ ಹೋಗುತ್ತಿದ್ದ ನೆನಪು. ’ಶ್….ಶೀ…. ಯಾವ ರೀತಿ ಪೋಸ್ಟರ್ ಮಾರಾಯ್ತಿ ಅದು!’ ಎಂದು ಗೆಳತಿಯರಲ್ಲಿ ಆಡಿಕೊಂಡದ್ದುಂಟು. ಇದೇ ರಸ್ತೆಯಿಂದ ಹುಡುಗರೂ ಹಾದು ಹೋಗುತ್ತಿದ್ದರು. ಅವರೂ ಸಹ ಈ ಪೋಸ್ಟರ್‌ಗಳನ್ನು ನೋಡುತ್ತಿದ್ದರು. ಕೆಲವರು ದಿಟ್ಟಿಸಿ, ಇನ್ನು ಕೆಲವರು ಸುಮ್ಮನೆ ಹಾಗೇ. ಹೀಗೆ, ಒಂದಲ್ಲ ಒಂದು ರೀತಿಯ ಕುತೂಹಲದಿಂದ ಈ ಪೋಸ್ಟರ್‌ಗಳನ್ನು ನೋಡಿದ ಹುಡುಗರಿಗೆ ಒಂದಾ, ಒಳಗೊಳಗೇ ಖುಷಿಯಾಗಿರಬೇಕು ಅಥವ ಮುಜಗರವಾಗಿರಬೇಕು. ಆದರೆ ಹುಡುಗಿಯರಿಗಾಗುತ್ತಿದ್ದಂಥ ಅವಮಾನವನ್ನು ಅವರೆಂದೂ ಅನುಭವಿಸಿರಲಿಕ್ಕಿಲ್ಲ. +ಇನ್ನೊಂದು ಘಟನೆ ನೆನಪಾಗುತ್ತಿದೆ, ಶಾಲೆಯ ಯಾವುದೋ ಕಾರ್ಯಕ್ರಮಕ್ಕಾಗಿ ನಾವು ಕೆಲವರು ಡ್ಯಾನ್ಸಿಗೆ ಸೇರಿದ್ದೆವು. ಆ ಡ್ಯಾನ್ಸಿಗೆ ಸೀರೆಯೋ ದಾವಣಿಯೋ ಹಾಕಿಕೊಳ್ಳಬೇಕಿತ್ತು. ಅದಕ್ಕಾಗಿ ಸೀರೆಯ ಬ್ಲೌಸ್ ಬೇಕು. ಒಂದಿಬ್ಬರು ಗೆಳತಿಯರು ಒಟ್ಟಿಗೆ ಅಂಗಡಿಗೆ ಹೋಗಿ ರೆಡಿಮೇಡ್ ಬ್ಲೌಸ್ ಕೊಂಡೆವು. ಬ್ಲೌಸ್ ಕೊಳ್ಳುವುದು ಕಷ್ಟವಾಗಲಿಲ್ಲ. ಆದರೆ ಅದರೊಳಗೆ ಹಾಕಿಕೊಳ್ಳಲು ಬ್ರಾ ಬೇಕಿತ್ತಲ್ಲ, ಅದನ್ನು ಕೊಳ್ಳುವುದೇ ನಮಗೆ ದೊಡ್ಡ ಸಮಸ್ಯೆ ಯಾಗಿತ್ತು. ಎಲ್ಲಾ ಬಟ್ಟೆ ಅಂಗಡಿಗಳಲ್ಲೂ ಗಂಡಸರೇ ಇರುತ್ತಿದ್ದರು. ಅವರಲ್ಲಿ ಹೋಗಿ ಮುಜಗರವನ್ನೆಲ್ಲಾ ಮೀರಿ, ’ಬ್ರಾ ತೋರಿಸಿ’, ಎಂದು ಕೇಳುವುದಾದರೂ ಹೇಗೆ? ಕೇಳಿದಾಗ ಅವರಿಗೆ ಸುಗಂಧರಾಜರಸ್ತೆಯ ಪೋಸ್ಟರ್‌ಗಳು ನೆನಪಾದರೆ, ಅಥವ ಬ್ರಾ – ಬ್ಲೌಸ್ – ಎದೆ – ಹುಡುಗಿಯರು – ಹೆಂಗಸರು – ಅವರ ಅಂಗಾಂಗಗಳು ಅಥವ ಇದರ ಸುತ್ತಲೂ ಇರುವ ನೂರಾರು ಪೋಲೀ ಜೋಕುಗಳಲ್ಲಿ ಏನಾದರೊಂದು ನೆನಪಾಗಿ ಅವರು ಸಣ್ಣಗೆ ನಕ್ಕರೆ! ಎಂಥಾ ಭಯವಾಗಿತ್ತು ಆಗ! ಅದು ಹೇಳಿಕೊಳ್ಳಲಿಕ್ಕಾಗದ ಭಯ. ನಾಚಿಕೆ ಅವಮಾನಗಳಿಂದ ಕೂಡಿದ ಭಯ! ಇದೇ ರೀತಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕೊಳ್ಳುವುದೂ ಎಷ್ಟೋ ಸಾರಿ ಸಮಸ್ಯೆಯಾಗಿಬಿಡುತ್ತದೆ. ಚಿಕ್ಕ ಊರುಗಳಲ್ಲಿ ಮಾತ್ರವಲ್ಲ ದೊಡ್ಡ ಪೇಟೆಗಳಲ್ಲೂ ಸಹ, ಹೆಣ್ಣು ಮಕ್ಕಳು ಇಂಥಾ ಅವಮಾನ ಮತ್ತು ಭಯದಿಂದ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು. +ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಇದರ ಕೇಂದ್ರ ಹೆಣ್ಣಿನ ದೇಹ ಮತ್ತು ಲೈಂಗಿಕತೆ, ಹಾಗು ಅದನ್ನು ಅರ್ಥ ಮಾಡಿಕೊಳ್ಳುವ ಬಗೆಯಲ್ಲಿದೆ. ಸಾಧಾರಣವಾಗಿ ಹೆಣ್ಣಿನ ದೇಹ ಮತ್ತು ಲೈಂಗಿಕತೆಯನ್ನು ವಿನಾಕಾರಣ ಹೀಗಳೆಯಲಾಗುತ್ತದೆ. ಅಶ್ಲೀಲತೆಯು ಪೋಸ್ಟರ್ಗಳ ಮೂಲಕ, ಪೋಲಿ ಜೋಕುಗಳ ಮೂಲಕ, ಕೊಳಕು ದೃಷ್ಟಿಯ ಮೂಲಕ, ಹೀಗೆ ಒಂದಲ್ಲ ಒಂದು ರೀತಿಯಿಂದ ಹೆಣ್ಣುಮಕ್ಕಳ ಬೆನ್ನಟ್ಟಿ ಬಂದ ಪಿಡುಗು. ಈ ಹಿಂದೆ ಇದು ಸಾಧಾರಣವಾಗಿ, ಮನೆಯ ಹೊರಗೆ ಎದುರಿಸುವಂಥದ್ದಾಗಿತ್ತು. ಆದರೆ ಈಗ ಈ ಎಲ್ಲದರ ಜೊತೆಗೆ ಟಿವಿ ಸೀರಿಯಲ್‌ಗಳು ಮತ್ತು ಟಿವಿ ಜಾಹೀರಾತುಗಳೂ ಸೇರಿರುವುದರಿಂದ, ಸಮಸ್ಯೆಯ ಒತ್ತಡ ದ್ವಿಗುಣವಾಗುತ್ತಿದೆ. ಮನೆಯೊಳಗೆ, ಮನೆ ಮಂದಿಯೆದುರೇ ಪ್ರತಿ ದಿನ ಪ್ರತಿ ಕ್ಷಣ ಅವರನ್ನೂ ನಮ್ಮನ್ನೂ ಅಶ್ಲೀಲತೆಗೆ ಇನ್ಸೆನ್ಸಿಟಿವ್ ಆಗಿಸಿ, ಅತಿ ಸಹಜವೆನ್ನುವಂತೆ ಎಲ್ಲವನ್ನೂ ಏಕಮುಖೇನವಾಗಿ ಒಪ್ಪಿಕೊಳ್ಳುವ ಮನೋಭಾವ ತಲೆದೋರುತ್ತಿದೆ. ಊರಿಗೆಲ್ಲ ಹೇಳಿಕೊಂಡು ಹೋಗುವ ಸಹನೆ ಅಥವ ಸಮಯ ನಮಗೆ ಇಲ್ಲ. ಆದರೆ ಕಡೇಪಕ್ಷ, ಟಿವಿ ನೋಡುವಾಗ ಮನೆಮಂದಿಯ ಅಥವ ಸ್ನೇಹಿತರ ಎದುರಾದರೂ ಅಶ್ಲೀಲತೆಯನ್ನು ವಿರೋಧಿಸಿ, ನಮ್ಮ ಅಸಮಾಧಾನವನ್ನು ನಾವು ಪ್ರಕಟಿಸುವುದು ಬಹಳಾಮುಖ್ಯ ಅನ್ನಿಸುತ್ತದೆ. ಹೀಗೆ ಹೇಳುವಾಗ ಮತ್ತೊಂದು ಆತಂಕ ಎದುರಾಗುತ್ತದೆ. ನಾವು ಏನನ್ನು ಎಷ್ಟರಮಟ್ಟಿಗೆ ಮತ್ತು ಯಾಕೆ ವಿರೋಧಿಸಬೇಕು ಎಂಬ ಪ್ರಶ್ನೆ. ಸ್ತೀತ್ವದ ಗುಣಾವಗುಣಾಗಳು ಹೀಗೆ ಹೀಗೇ ಇರಬೇಕೆಂಬುದು ಸತತವಾಗಿ ನಿರ್ಮಾಣಗೊಳ್ಳುತ್ತಿರುತ್ತದೆ. ಸ್ತೀತ್ವವು ಹೆಣ್ಣಿಗೆ ಸಹಜವಾಗಿ ಜನ್ಮತಃ ಬರುವಂಥದ್ದಲ್ಲ. ಪುರುಷತ್ವವು ಗಂಡಸಿಗೆ ಹೇಗೆ ಶೋಭಾಯಮಾನವೋ ಸ್ತೀತ್ವವು ಹೆಂಗಸಿಗೆ ಶೋಭಾಯಮಾನವೆಂದು ಬಾಲ್ಯದಿಂದ ಹೇಳಿಕೊಡಲಾಗುತ್ತದೆ. ಇದನ್ನಾಧರಿಸಿ ’ಒಳ್ಳೆಯ ಹೆಂಗಸಿನ ನಡತೆ’ ಎಂದರೆ ಈ…ಈ…ರೀತಿಯಲ್ಲಿರಬೇಕು ಮತ್ತು ’ಇಂಥಾ ಕೆಲವು ನಿರ್ದಿಷ್ಟ’ ಗುಣಗಳನ್ನು ಹೊಂದಿರದಿದ್ದರೆ ಆಕೆ ಒಳ್ಳೆಯ ಹೆಂಗಸಲ್ಲ ಎಂಬುದನ್ನು ಪದೇ ಪದೇ ನಮಗೆ ತಿಳಿಯ ಹೇಳಲಾಗುತ್ತದೆ. ಅಂಥಾ ಹೆಂಗಸರನ್ನು ಅವರ ಉಡಿಗೆ-ತೊಡಿಗೆ, ಹಾವ-ಭಾವಗಳ ಮೂಲಕ ನಮ್ಮೆದುರು ಇಡಲಾಗುತ್ತದೆ. ಟಿವಿ ಸೀರಿಯಲ್‌ಗಳನ್ನು, ಜಾಹಿರಾತುಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗಿಬಿಡುತ್ತದೆ. +ಮಹಿಳೆಯರಿಗೆ ಅತ್ಯವಷ್ಯಕವಾದ್ದು, ಬಹಳಾ ಪರ್ಸನಲ್ ಆದ್ದು, ಅಥವ ಮಹಿಳೆಯರ ದೇಹಕ್ಕೆ ಸಂಬಂದಿಸಿದಂಥದ್ದು ಮತ್ತು ಆ ಮೂಲಕ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವಂಥದ್ದು ಎಲ್ಲವೂ ನೈತಿಕತೆ ಮತ್ತು ಪಾತಿವ್ರತ್ಯದ ಹೆಸರಿನಲ್ಲಿ ತನ್ನ ವೈಯ್ಯಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿಬಿಡುತ್ತದೆ. ಹಾಗೇ ಅಶ್ಲೀಲತೆಯ ಹಿನ್ನೆಲೆಯಲ್ಲಿ ಸಹ ಈ ಎಲ್ಲವೂ ವೈಯ್ಯಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿಬಿಡುತ್ತವೆ. ಈ ಎರಡೂ ಕೂಡ ಒಂದೇ ಮನೋಭಾವದ ಎರಡು ಸ್ಥಿತಿಗಳು. ಈ ಎರಡೂ ಸ್ಥಿತಿಗಳೂ ಮಹಿಳೆಯರಲ್ಲಿ ಅಭದ್ರತೆಯನ್ನು ಹೆಚ್ಚಿಸುವಂಥದ್ದೇ ಆಗಿದೆ. ಆದ್ದರಿಂದ ನಮ್ಮ ವಿರೋಧ ಈ ಎರಡೂ ರೀತಿಯ ಅರ್ಥವಂತಿಕೆಗಳಿಗೂ ಸೂಕ್ಷ್ಮವಾಗಿ ಇರುವಂಥದ್ದಾಗಿರಬೇಕು. ಏಲ್ಲಕ್ಕಿಂತ ಹೆಚ್ಚಾಗಿ, ನಾವು ಇಂದು ಸ್ತೀತ್ವ ಮತ್ತು ಹೆಣ್ಣಿನ ಸೆಕ್ಷುವಾಲಿಟಿಯನ್ನು ಕುರಿತಂತೆ ಹೆಚ್ಚೆಚ್ಚು ಮುಕ್ತವಾಗಿ ಪ್ರಶ್ನಿಸುವ ಹಾಗು ಮಾತನಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಹದಿ ಹರೆಯದ ಹುಡುಗರು ಕ್ಷೌರ ಮಾಡಿಕೊಳ್ಳಲು ಅಂಗಡಿಗಳಿಂದ ಬ್ಲೇಡ್ ಅಥವ ರೇಜರ್ರನ್ನು ಎಷ್ಟು ನಿಃಸ್ಸಂಕೋಚವಾಗಿ ಕೊಳ್ಳುತ್ತಾರೋ ಅಷ್ಟೇ ನಿಃಸ್ಸಂಕೋಚವಾಗಿ ಯಾವುದೇ ಅಳುಕಿಲ್ಲದೇ ಹದಿ ಹರೆಯದ ಹೆಣ್ಣುಮಕ್ಕಳೂ ಅಂಗಡಿಗಳಿಂದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಕೊಳ್ಳುವಂಥ ಪರಿಸ್ಥಿತಿ ಬಂದಾಗ ಮಾತ್ರ ಭಯ, ಆತಂಕ, ಅವಮಾನಗಳನ್ನು ಮೀರಿ ಬದುಕುವ ಸ್ಥೈರ್ಯವನ್ನು ಹೆಣ್ಣುಮಕ್ಕಳಿಗೆ ನಮ್ಮ ಸಮಾಜ ಕೊಟ್ಟೀತೆಂದು ಆಶಿಸಬಹುದು. +***** +ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […] +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […] +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_598.txt b/Kannada Sahitya/article_598.txt new file mode 100644 index 0000000000000000000000000000000000000000..8ba4f2a1789fa7378974e551b401deab9bd44e47 --- /dev/null +++ b/Kannada Sahitya/article_598.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಣ್ಣಂತೆ, +ಅಲ್ಲೊಂದು ಹರಿಯೊ ನದಿಯಂತೆ +ಬಣ್ಣ ಬಣ್ಣದ ಕನಸು ಮೀನಂತೆ +ಕಪ್ಪು ನದಿಯ ಎದೆಯಲ್ಲಿ +ಫಳ ಫಳ ನಕ್ಷತ್ರ ಜಾತ್ರೆ +ತಾರೆ ಸಹಿತ ಧುಮುಕಿ +ನದಿ ಸೇರಿದ್ದಾನೆ ಚಂದ್ರ +ಆಕಾಶಕ್ಕೇ ಹುಟ್ಟು ಕೊಟ್ಟು +ಚಂದ್ರನ ಮೇಲೆ ಹೊರಟ ದೋಣಿ ಸವಾರಿ. +ಅಲ್ಲಲ್ಲಿ ಮೋಡ ಚೆಲ್ಲಾಪಿಲ್ಲಿ +ಬಾನಗಲದ ನೆನಪಲ್ಲಿ ಸುಳಿದು, +ಮರುಕ್ಷಣ ಮುಳುಗಿದ ಚಿತ್ರ. +***** +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […] +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +ಭಗವತಿ ಇಸ್ತಾರುಸಕಲ ಸೃಷ್ಠಿಯ ಮಾತೃದೇವತೆಸಮರದ ದೇವತೆ, ಕಾಮದ ದೇವತೆ. ಜಗಭಂಡೆ.ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_599.txt b/Kannada Sahitya/article_599.txt new file mode 100644 index 0000000000000000000000000000000000000000..03312cfc6557b6eaca2a1dc61cb752bd069d6d60 --- /dev/null +++ b/Kannada Sahitya/article_599.txt @@ -0,0 +1,117 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ ಅಲುಗಾಡಿತು. ನೋಡಿದರೆ ಆಳದಲ್ಲಿ ಬಸವರಾಜು ಮುಗುಳುನಗುತ್ತ ನಿಂತಿದ್ದವನು ಕೈಮಾಡಿ ಕರೆಯುತ್ತಿದ್ದ. ಸ್ವಲ್ಪ ಅಧೈರ್ಯವಾಯಿತು. ಓಡಿಬಿಡಲೇ ಎಂದುಕೊಂಡಳು. ಬಸವರಾಜು ಒಂದು ಚೆಂಡು ಹೂ ತಗೊಂಡು ಜೋರಿನಿಂದ ಇವಳ ಕಡೆ ಎಸೆದ. ಹೂಬಾಣ ಹುಡುಗಿಯ ಎದೆಗೇ ನಟ್ಟು ಒಂದು ಹೆಜ್ಜೆಯಿಟ್ಟು ಮತ್ತೆ ನಿಂತಳು. ಮತ್ತೊಂದು ಹೂ ಎಸೆದ. ಸೊಂಟಕ್ಕೆ ತಾಗಿ ತೊಡೆ ನಡುಗಿ ಒಂದೊಂದೇ ಹೆಜ್ಜೆಯಿಟ್ಟು ಅವನ ಬಳಿ ಹೋದಳು. ಹುಲಿ ಹಾರಿ ಜಿಂಕೆಮರಿಯನ್ನು ಮುರಿಯಿತು. ಗುದಮುರಿಗೆಗೆ ಎಳೆ ಜೋಳದ ಬೆಳೆ ಥರಥರ ನಡುಗಿತು. +ಎತ್ತಣಿಂದೆತ್ತವಯ್ಯ +ಆ ಊರಿನ ಜನಗಳ ತಲೆಯಲ್ಲೀಗ ಬೆಳೆ, ಭೂಮಿಗಳನ್ನು ಬಿಟ್ಟು ಬೇರೆ ವಿಚಾರ ಸುಳಿಯುವುದೇ ಸಾಧ್ಯವಿಲ್ಲ. ಪ್ರಕೃತಿಯೇನೋ ಸಮೃದ್ಧವಾಗಿ ಕೊಟ್ಟುಬಿಟ್ಟಿತ್ತು. ಮಳೆಯನ್ನು, ಬೆಳೆಯನ್ನು, ಕಳೆಯನ್ನು ಕೂಡ. ಬೆಳೆಕಳೆ ಬೇರ್ಪಡಿಸಬೇಕು. ಸಮೃದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ಗಟ್ಟಿಮುಟ್ಟಾದದ್ದಕ್ಕೆ, ಬೆಳೆಯುವ ಅವಕಾಶ ಕಲ್ಪಿಸಬೇಕು. ಮೈಕೈ ಮುರಿದು ಈಗ ದುಡಿದರೇ ಉಂಟು, ಇಲ್ಲದಿದ್ದರಿಲ್ಲ. ದಿನ ಹೆಚ್ಚುಕಮ್ಮಿಯಾದರೆ ಬೆಳೆ ಕೈಬಿಟ್ಟಂತೆ ಲೆಕ್ಕ. ಸಣ್ಣ ದೊಡ್ಡವರೆನ್ನದೇ, ಹೆಂಗಸು ಗಂಡಸೆನ್ನದೇ ಎಲ್ಲರೂ ಹೊಲಗಳಿಗೆ ಹೋಗುತ್ತಿದ್ದರು. ಬೆಳಗಿಂದ ರಾತ್ರಿಯ ತನಕ ಮೈಬಗ್ಗಿಸಿ ರಟ್ಟೆಮುರಿದು ದುಡಿಯುತ್ತಿದ್ದರು. ಇನ್ನು ಹರಟೆ ಹೊಡೆಯುವುದೆಲ್ಲಿಂದ ಬಂತು? ಸರಿಯಾಗಿ ಮೈತುರಿಸಿಕೊಂಡೇನೆಂದರೂ ಸಮಯವಿರಲಿಲ್ಲ ಯಾರಿಗೂ. ಹಾಗೆ ದುಡಿದು ಕತ್ತಲೆ ಮಾಡಿ ಮನೆಗೆ ಬಂದರೆ ಹಸಿದ ಹೊಟ್ಟೆಗಿಷ್ಟು ತಂದಳೋ, ಬಿಸಿಯೋ ಕೂಳು ಬಿದ್ದರಾಯ್ತು. ಆ ಮೇಲೆ ನೆಲ ಸಿಕ್ಕಿತೋ, ಇಲ್ಲವೋ ಅಂತ ಸಿಕ್ಕಸಿಕ್ಕಲ್ಲಿ ಸಿಕ್ಕ ಹಾಗೆ ಬಿದ್ದು ಗೊರಕಿ ಹೊಡೆಯುತ್ತಿದ್ದರು. ಈಗ ದುಡಿಯದವರೆಂದರೆ ಗುಡಸೀಕರ, ಬಸವರಾಜು ಮತ್ತು ಚಿಮಣಾ-ಮೂವರೇ. +ಗುಡಸೀಕರನ ಹೊಲದ ಕೆಲಸ ಆಳುಗಳು ಮಾಡುತ್ತಿದ್ದರು. ಬಸವರಾಜನಿಗಂತೂ ಸಿಗರೇಟು ಸೇದುವುದು, ರೇಡವೇ ಕೇಳುವುದು, ಗುಡಸೀಕರನ ತೋಟದ ಕಡೆ ಅಡ್ಡಾಡಿ ಬರುವುದು ಇಷ್ಟು ಬಿಟ್ಟರೆ ಬೇರೆ ಕೆಲಸವಿರಲಿಲ್ಲ. ಅವನ ಬೆಳಗಾವಿಯ ಪ್ರತಾಪ ಕೇಳುವುದಕ್ಕೆ ಈಗ ಒಬ್ಬನೂ ಸಿಕ್ಕುತ್ತಿರಲಿಲ್ಲ. ಜನ ಎಲ್ಲ ಮಲಗಿ ನಿದ್ರಿಸುತ್ತಿದ್ದರೆ ಈ ಮೂವರೇ ಭೂತಗಳ ಹಾಗೆ ಎಚ್ಚೆತ್ತಿದ್ದು, ಏನೇನೋ ಹಲುಬುತ್ತಿದ್ದರು. ಚಿಮಣಾಳ ಪೂರ್ವವೃತ್ತಾಂತವೂ ಅಸ್ಪಷ್ಟವಾಗೇ ಇದೆ. ಬಸವರಾಜು ಮತ್ತು ಚಿಮಣಾ ಇಬ್ಬರೇ ಮಾತಾಡಿದಾಗಿನ ಕೆಲವು ಸಂಭಾಷಣೆಗಳಿಂದ ಅವಳ ಜೀವನ ಹೀಗಿತ್ತೆಂದು ತಿಳಿಯುತ್ತದೆ: ಅವಳ ಹೆಸರು ಸುಂದರಿಯೆಂದು. ಅಲತಗಿ ಸೀತವ್ವನ ಬಳಿ ಚಿಮಣಾ ವೃತ್ತಿ ಕಲಿತಳಂತೆ. ಆದರೆ ಸುತ್ತಲಿನ ಯಾವುದೇ ಹಳ್ಳಿಗೆ ಬಯಲಾಟಕ್ಕೆ ಬಂದವಳಲ್ಲ. ಹೆಸರು ಮಾಡಿಕೊಂಡವಳಲ್ಲ. ಸುಂದರವಾದ ಮೈಯೊಂದೇ ಸದ್ಯಕ್ಕೆ ಅವಳಿಗಿದ್ದ ಚಿಮಣಾ ಲಕ್ಷಣ. ವಯಸ್ಸಿಗೆ ಮದ ನೆತ್ತಿಗೇರಿದ ದುರ್ಬಲ ಕ್ಷಣದಲ್ಲಿ ಬಸವರಾಜೂನೂ ವಶವಾಗಿರಬೇಕು. ಸೀತವ್ವನ ಮನೆ ಬಿಟ್ಟು ಒಂದೆರಡು ನಾಟಕ ಕಂಪನಿ ಸೇರಿದ್ದಳಂತೆ. ಸಿನಿಮಾ ನೋಡಿದ್ದಳಂತೆ, ಗಳಿಸಿದ್ದಳಂತೆ. ಗಳಿಸಿದ್ದನ್ನು ಉಂಡುಟ್ಟು ಖರ್ಚುಮಾಡಿದ್ದಳಂತೆ. ಅಂಥಾ ಚಿಕ್ಕವಯಸ್ಸಿನಲ್ಲೇ ಅವಳು ಉಂಗುಟಕ್ಕೆ ಹಾಕಿ ಹರಿದ ಹೆಚ್ಚಿನ ಸೀರೆಗಳ ಸಂಖ್ಯೆಯೇ ಒಂದು ಡಜನಾಗಿತ್ತಂತೆ! +ಬೆಳಗಾವಿಯಲ್ಲಿದ್ದಂಥ ಹಲ್‌ಚಲ್ ಭಾವನೆಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಉಟ್ಟು ತಿರುಗಲಿಕ್ಕಿಲ್ಲ, ನಗಾಡಿ ಮೆರೆದಾಡುವಂತಿಲ್ಲ. ಹಾಕಿಕೊಟ್ಟ ಚಹದಂಗಡಿ ಸರಿಯಾಗಿ ನಡೆಯಲಿಲ್ಲ. ಒಂದೆರಡು ಸಲ ಬಸವರಾಜನಿಗೆ ತನ್ನ ಅಸಮಧಾನ ತಿಳಿಸಿದಳು. ಅವನು ತಾಳು ವ್ಯವಹಾರ ಮುಗಿಯಲಿ ಎಂದು ಹೇಳುತ್ತಲೇ ಇದ್ದ. ಆ ವ್ಯವಹಾರ ಅದೇನಿತ್ತೋ, ಬಹುಶಃ ತಾನು ಇಷ್ಟು ದಿನ ಇಲ್ಲಿ ಇದ್ದದ್ದಕ್ಕೆ ಗುಡಸೀಕರನಿಂದ ಪ್ರತಿಫಲ ವಸೂಲಿ ಮಾಡುವುದೇ ಇದ್ದೀತೆಂದು ಭಾವಿಸಿದ್ದಳು. +ಇನ್ನೂ ಜಾಸ್ತಿ ಬೇಸರವಾದದ್ದು ಸದಾ ತನ್ನನ್ನು ಗುಡಿಸಲಿನಲ್ಲಿ ಕೊಳೆ ಹಾಕಿದ್ದಕ್ಕೆ. ಕಣ್ಣಿ ಬಿಚ್ಚಿದ ಮಣಕಿನಂತೆ ಅಡ್ಡಾಡಿದವಳು. ಠಸಿ ಉಂಡು ತಿರುಗಿದವಳು. ಇಲ್ಲಿ ಸದಾ ಒಲೆಯ ಮುಂದೆ ಕಟ್ಟಿದ ಮಣಕಿನಂತೆ ಬಿದ್ದಿರುವುದು ಅವಳ ಸ್ವಭಾವಕ್ಕೆ ಒಗ್ಗಲಿಲ್ಲ. ತಾನೇನು ಗುಡಸೀಕರನ ಕೈಹಿಡಿದ ಹೆಂಡತಿಯೆ? ಇವನು ಹಾಕಿದ ಕೂಳಿಗೆ ಹೇಳಿದಂತೆ ಕೇಳಿಕೊಂಡು ಒಲ್ಲದ ಮನಸ್ಸಿನಿಂದ ಯಾಕಿರಬೇಕು? ಗುಡಸೀಕರ ಬಾಯಿತುಂಬ ಬಡಿವಾರ ಆಡುತ್ತಿದ್ದ. ತಾಕತ್ತಿಲ್ಲದೆ ಮೈಪರಚಿಕೊಳ್ಳುತ್ತಿದ್ದ. ಹೆಂಗಸರ ಹಾಗೆ ಚಾಡಿ ನುಡಿಯುತ್ತಿದ್ದ, ಹೊಂಚುತ್ತಿದ್ದ. ಇಷ್ಟು ದುಡ್ಡು, ಇಷ್ಟು ವಯಸ್ಸು, ಇಷ್ಟು ಅಂತಸ್ತು ಇದ್ದವನು ಹ್ಯಾಗಿರಬೇಕು. ಔದಾರ್ಯವಿದೆ, ವ್ಯರ್ಥ ಸೋರುತ್ತದೆ. ಮಾನ, ಮರ್ಯಾದೆ ದುಡ್ಡಿನಿಂದ ಸಿಗುವುದೆಂದು ಭ್ರಮಿಸಿದವ. ಅಥವಾ ಅದೂ ನಿಜವಿದ್ದೀತು, ಕೆಲವರಿಗೆ ತನಗಲ್ಲ. ದಿಲ್‌ದಾರ್‍ತನಕ್ಕೆ ದುಡ್ಡು ಬೇಕು. ಹಾಗಂತ ದುಡ್ಡು ಸುರಿದು ದಿಲ್‌ದಾರನೆಂದೆನಿಸಿಕೊಳ್ಳುವುದೂ ಕ್ಷುದ್ರತನ. ಅದು ನಡವಳಿಕೆಯ ಮೇಲೆ ಒತ್ತಡ ಹೇರುವ ನೆತ್ತರಲ್ಲೇ ಇದ್ದಿರಬೇಕು. ಅಥವಾ ಸುತ್ತು ಬಳಸಿ ಯಾಕೆ? ಗುಡಸೀಕರ ತಾನು ಹತ್ತಬಯಸುವ ಕುದುರೆಯಲ್ಲ. ಬಸವರಾಜನೇನೋ ಗಂಡಸು ಖರೆ. ಆದರೆ ಅವನು ಅದಕ್ಕೂ ಬೆಲೆ ಕೇಳುತ್ತಿದ್ದ. +ಆದರೆ ಜಾತ್ಯಾ ಕಸಬೇರಿಗೂ, ಇವಳಿಗೂ ವ್ಯತ್ಯಾಸವಿತ್ತು. ದುಡ್ಡಿಗಾಗಿ ಇವಳನ್ನೊಮ್ಮೆಯೂ ಕಾಳಜಿ ಮಾಡಲಿಲ್ಲ. ಬರುತ್ತದೆ, ಹೋಗುತ್ತದೆ. ಅಥವಾ ಅದು ಬರೋದೇ ಹೋಗೋದಕ್ಕೆ. ಬಂದ ಗಿರಾಕಿ ಕೊಟ್ಟರೆ ಕೈ ಒಡ್ಡಿದಳು. ಕೊಡದಿದ್ದರೆ ಸುಮ್ಮನಾಗುತ್ತಿದ್ದಳು. ಕೊಟ್ಟಾಗ ಖುಶಿ ಪಡಲಿಲ್ಲ. ಕೊಡದಿದ್ದಾಗ ಕೊರಗಲಿಲ್ಲ. ಅವಳ ಈ ಸ್ವಭಾವ ಬಸವರಾಜುನಿಗೆ ಬಹಳ ಅನುಕೂಲವಾಗಿತ್ತು. ಗಿರಾಕಿಗಳ ಕೊಡುಕೊಳ್ಳುವ ವ್ಯವಹಾರ ತಾನು ನೋಡಿಕೊಂಡು ಹಸಿದ ಮೈಯನ್ನಷ್ಟೇ ಇವಳ ಬಳಿಗೆ ಕಳಿಸುತ್ತಿದ್ದ. ಅವನಿಗೆ ಬಂದ ಗಿರಾಕಿಯ ಜೇಬು ಕಾಣಿಸುತ್ತಿತ್ತು. ಇವಳಿಗೆ ಮೈ ಕಾಣುತ್ತಿತ್ತು. ಇವಳ ತೊಡೆಗೆ ಈಡಾಗುವ ಸೊಂಟ ಈ ಭೂಮಿಯ ಮೇಲೆ ಹುಟ್ಟಿಲ್ಲವೆಂದೇ ಅವನ ತೀರ್ಮಾನ. ಅದನ್ನೇ ಮುಂದೆ ಮಾಡಿ ಶೋಷಿಸುತ್ತಿದ್ದ. ಅವಳೋ ಅತೃಪ್ತ ಜೀವ. ತನಗೇನು ಬೇಕೆಂಬುದೇ ಗೊತ್ತಿಲ್ಲದೆ ಹುಡುಕುತ್ತಿದ್ದಳು. +ಈಗೀಗ ಗುಡಸೀಕರನ ಮೈ ಆಕರ್ಷಣೆ ನಂದಿತ್ತು. “ಸರಪಂಚರು” ಎಂದು ಬಹುವಚನದಲ್ಲಿ ಮಾತಾಡಿಸುತ್ತಿದ್ದವಳು ಈಗ ನೇರವಾಗಿ ಗುಡಸೀಕರನೆಂದು ಏಕವಚನದಲ್ಲೇ ಮಾತಾಡಿಸುತ್ತಿದ್ದಳು. ಅದು ಅವನ ಅಹಂಕಾರಕ್ಕೆ ಭಾರೀ ಪೆಟ್ಟಾಗಿತ್ತು. ಇದು ಕೂಡದೆಂದು ತಾನೇ ಅವಳಿಗೆ ಹೇಳಬೇಕೆಂದರೆ ಅದು ಹಗುರ ಬಾಯಿಯ ಹೆಂಗಸು. ನಾಲಗೆ ಬಿಗಿ ಹಿಡಿದು ಗೊತ್ತಿಲ್ಲ. ಸಟ್ಟನೇ ಏನಾದರೂ ಆಡಿಬಿಡುತ್ತಿತ್ತು. ಅದಕ್ಕೇ ಅವನು ಬಸವರಾಜುನಿಗೆ ಹೇಳಿದ. ಇದು ಗೊತ್ತಾಗಿ ಅದು ಇನ್ನೂ ಹೆಚ್ಚು ಅವನನ್ನು ನೋಯಿಸುತ್ತಿದ್ದಳು. ಒಮ್ಮೆ ಗುಡಸೀಕರ ಚತುಷ್ಟಯರೊಂದಿಗೆ ಕೂತಿದ್ದಾಗ ಕಳ್ಳ ಇವಳನ್ನು ಕದ್ದು ನೋಡುತ್ತಿದ್ದ. ಇವಳೂ ಪ್ರೋತ್ಸಾಹಿಸಿದಳು. ಕೊನೆಗೆ ಎಲ್ಲರ ಎದುರಿನಲ್ಲೇ “ಯಾಕೋ ಕಳ್ಳ ಹಂಗ ನೋಡತಿ ಬೇಕೇನ ಬಾ” ಎಂದಳು. ಗುಡಸೀಕರನ ಪಿತ್ಥ ನೆತ್ತಿಗೇರಿತು. +“ಯಾಕಽ ರಂಡೇ ಇದೇನ ಸೂಳೇರ ಮನಿ ಅಂತ ತಿಳದೇನ? ಹೇಳಿಧಾಂಗ ಕೇಳಿಕೊಂಡ ಸುಮ್ಮನೇ ಬಿದ್ದಕೊ” +ಎಂದ. ಇವಳೇನು ಕಮ್ಮಿ? +“ಯಾಕಲಾ ಭಾಡಕೌ? ನನ್ನ ಕೈಹಿಡಿದ ಮದಿವ್ಯಾದಿ? ರೊಕ್ಕಾ ಎಣಿಸಿಕೊಂಡ ತಂದಿ? ಇದ ಅನ್ನಾಣ ಅಂದಿ; ಇನ್ನೊಮ್ಮಿ ಹಿಂತಾ ಮಾತ ಅಂದರ ನಿನ್ನ ಕುರಿ ಮುರಿಧಾಂಗ ಮುರದೇನು?” +ಕೇಳಬೇಕೆ? ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರ ಕಾಲ್ಮರಿ ಹಿಡಿದು ಎದ್ದುನಿಂತ. ಇವಳು ‘ಹೊಡಿ’ ಎಂದು ಎದ್ದಳು. ಬಸವರಾಜು ಬರದಿದ್ದರೆ ಎಲ್ಲಿ ಮುಗಿಯುತ್ತಿತ್ತೋ! ಸಧ್ಯ ಹೇಳಿಕಳಿಸಿದಂತೆ ಬಂದು ಇಬ್ಬರನ್ನೂ ಸಮಾಧಾನ ಮಾಡಿದ. +ಆ ದಿನವೇ ಬಸವರಾಜೂನನ್ನು ಮನೆಗೆ ಕರೆದೊಯ್ದು, ಇನ್ನೂರು ರೂಪಾಯಿ ಕೊಟ್ಟು ಈಗಿಂದೀಗ ಇವಳನ್ನು ಬೆಳಗಾವಿಗೆ ಕಳಿಸಿಕೊಡೆಂದು ಹಟ ಹಿಡಿದ. ಆ ಇನ್ನೂರು ಕಿಸೆಗೆ ಹಾಕಿ ಬಸವರಾಜೂ ಮೊದಲು ಅವನಲ್ಲಿ ಒಂದು ತಗ್ಗು ತೋಡಿದ. ಆ ಮೇಲೆ ಅದನ್ನು ಮೂರು ಮಾತುಗಳಿಂದ ಭರ್ತಿಮಾಡಿದ. ಹಾದಿಬೀದಿಯ ಸೂಳೆಯರಿಗೆ ಗೌಡ ಔದಾರ್ಯ ತೋರಿಸಬಲ್ಲವನಾದರೆ ಚಿಮಣಾಳಿಗೆ ನೀ ಯಾಕ ತೋರಿಸಬಾರದು? ಅದು ದೊಡ್ಡದಲ್ಲ, ಅಥವಾ ಅದು ನಿನಗೆ ತಿಳಿಯುತ್ತದೆ; ಏನೋ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಹೀಗೆ ಮಾಡಿದ್ದಾಳು. ಒಂದುವೇಳೆ ಅವಳನ್ನು ಬೆಳಗಾವಿಗೆ ಕಳಿಸಿದರೆ ‘ಇವನೇನು ಇವಳನಾಳುತ್ತಾನೆ?’ ಅಂತ ದತ್ತಪ್ಪ ಹೇಳಿದ್ದು ನಿಜವಾಗಿ ಬಿಡುತ್ತದೆ. ಅದೂ ಬೇಡವಾದರೆ ಎಲೆಕ್ಷನ್ ಗೆಲ್ಲಲು ನಮಗವಳು ಬೇಕೇ ಬೇಕು-ಇತ್ಯಾದಿ. +ಒಂದು ದಿನ, ಮಧ್ಯಾಹ್ನ ಆಗಷ್ಟೇ ತಿರುಗಿತ್ತು. ಚಿಮಣಾ ನೀರು ತರಲಿಕ್ಕೆ ಕೊಡ ತಗೊಂಡು ಕೆರೆಗೆ ಹೋದಳು. ಅಂಥ ಅಪವೇಳೆಯಲ್ಲಿ ಅಲ್ಲಿ ಯಾರಿದ್ದಾರು? ನೀರು ಹೊಡೆದು ಕೊಡವನ್ನೇನೋ ತುಂಬಿದಳು. ದೊಡ್ಡ ಕೊಡ, ಹೊರಲಾಗಲಿಲ್ಲ. ಹೀಗೆ ಯಾರಿಲ್ಲದಾಗ ಒಬ್ಬಳೇ ಬಂದಳಲ್ಲ. ಯಾರಾದರೂ ಬಂದಾರೆಂದು ಕಾಯ್ದಳು. ಯಾರೂ ಬರಲಿಲ್ಲ. ಕೈಕಾಲು ಮುಖ ತಿಕ್ಕಿ ತಿಕ್ಕಿ ತೊಳೆದುಕೊಂಡಳು. ಅದೇನು ದುರ್ಬುದ್ಧಿ ಬಂತೋ, ಇಲ್ಲೇ ದಂಡೆಯಲ್ಲಿ ಈಜೋಣವೆಂದು ಇಳಿದು ನಾಕೆಂಟು ಹೆಜ್ಜೆ ಹೋದಳು. ಕಾಲ ನೆಲ ತಪ್ಪಿ ಕುಸಿದಳು. ಗಾಬರಿಯಿಂದ ಕೈಕಾಲು ಬಡಿಯುತ್ತ ಅಯ್ಯೋ ಅಯ್ಯೋ ಎವ್ವಾ, ಎಪ್ಪ ಎನ್ನುತ್ತ ಚೀರಾಡುತ್ತಾ ಆಳದ ಕೆಳಗಿಳಿಯುತ್ತಿದ್ದಳು. ಗೌಡನ ಮಗ ಶಿವಲಿಂಗ ದೂರದಲ್ಲಿದ್ದವನು ಚೀರಾಟ ಕೇಳಿ ಓಡಿಬಂದು, ಬಂದವನೇ ಕೆರೆಗೆ ಧುಮುಕಿದ. ಚಿಮಣಾ ಇನ್ನೂ ನಡುನೀರಿಗೆ ಹೋಗಿರಲಿಲ್ಲವಾದ್ದರಿಂದ ಅವಳನ್ನು ಬದುಕಿಸುವುದು ತೊಂದರೆಯಾಗಲಿಲ್ಲ. ಶಿವಲಿಂಗ ಅವಳ ಸೋರುಮುಡಿ ಹಿಡಿದೆಳೆದ. ಅವಳೋ ಗಾಬರಿಯಾಗಿ ಶಿವಲಿಂಗನನ್ನು ತಬ್ಬಿ ನಡುವಿನಲ್ಲೇ ಎಳೆಯುತ್ತಿದ್ದಳು. ಇದ್ದೆಲ್ಲ ಬಲಪ್ರಯೋಗಿಸಿ ಅವಳ ಹಿಡಿತದಿಂದ ತಪ್ಪಿಸಿ ಎಳೆದ. ಹಾಗೇ ಹಿಡಿದುಕೊಂಡು ಈಜುತ್ತ ದಂಡೆಗೆ ತಂದು ಡಬ್ಬು ಮಲಗಿಸಿ ಬೆನ್ನ ಮೇಲೆ ಭಾರ ಹಾಕಿದ. ನೀರು ಹೊರಬಂತು. ಅಷ್ಟರಲ್ಲಿ ಬಸೆಟ್ಟಿ, ಮೆರಮಿಂಡ ಬಂದರು. ಎಲ್ಲರೂ ಸೇರಿ ಉಪಚರಿಸಿ ಮರಳಿ ಗುಡಿಸಲಕ್ಕೊಯ್ದು ಬಿಟ್ಟುಬಂದರು. +ಸ್ವಲ್ಪವೇ ಕೈತಪ್ಪಿದ್ದರೆ, ಶಿವಲಿಂಗ ಬರುವುದು ತಡವಾಗಿದ್ದರೆ ಚಿಮಣಾಳ ಕತೆ ಇಂದಿಗೇ ಮುಕ್ತಾಯವಾಗುತ್ತಿತ್ತು. ಈ ಯೋಚನೆ ಬಸವರಾಜನ ಒಳಗಿಗೆ ಇಳಿಯಲೇ ಇಲ್ಲ. ಅವನ ತಲೆಯಲ್ಲಿ ಬೇರೆ ಹುಳು ಕೊರೆಯುತ್ತಿತ್ತು. ನಿಂಗೂನಿಗೆ ಹೇಳಿಕಳಿಸಿದ್ದ. ನಿರ್ಲಿಪ್ತನಾಗಿ ಒಳಗೆಹೋಗಿ ಬೇಹೂಶ್ ಆಗಿ ಬಿದ್ದಿದ್ದ ಚಿಮಣಾಳ ಮೇಲೊಂದು ಬಟ್ಟೆ ಹೊದಿಸಿದ. ನಿಂಗೂ ಕರೆದದ್ದು ಕೇಳಿಸಿ ಹೊರಗೆ ಬಂದ. +ಆಗಲೇ ಸಂಜೆಯಾಗಿತ್ತು. ಹೊಲಗಳಿಂದ ರೈತರು ಬರುತ್ತಿದ್ದರು. ಆದರೆ ಯಾರೂ ಗುಡಿಸಲು ಕಟ್ಟೆಯ ಮೇಲೆ ನಿಂಗೂ ಮತ್ತು ಬಸವರಾಜು ಅನ್ಯೋನ್ಯವಾಗಿ ಕೂತದ್ದನ್ನು ಗಮನಿಸಲಿಲ್ಲ. ಜನರ ಹಾದಾಟ ಕಮ್ಮಿಯಾಗೋ ತನಕ ಬಸವರಾಜು ಏನೇನೋ ಹರಟೆ ಹೊಡೆದ. ನಿಂಗೂನ ಪ್ರಿಯವಾದ ಅನೇಕ ಸಂಗತಿಗಳನ್ನು ವರ್ಣಿಸಿದ. ನಿಂಗೂ ದಾಡಿ ಮಾಡಿಕೊಳ್ಳದ ಬಗ್ಗೆ ಆಕ್ಷೇಪಿಸಿದ. ಆತ ನ್ಯಾಯವಾಗಿ ಮಾಡಬೇಕಾದ “ಹೇರ್ ಸ್ಟೈಲ್” ಬಗ್ಗೆ ಮಾತಾಡಿದ. ಆಗಲೇ ರಾತ್ರಿಯಾಗಿ ಜನಸಂಚಾರ ಕಮ್ಮಿಯಾಗಿತ್ತು. ಒಳಗೆ ಕರೆದೊಯ್ದು ಕಪ್ಪು ತುಂಬ ಭಿರಂಡಿ ಕೊಟ್ಟ. ಕುಡಿದ ಮೇಲೆ ಒಳಗಿನ್ನೂ ದೀಪ ಹಚ್ಚಿದ್ದಿಲ್ಲ. ನಿಂಗೂನ ಕೆನ್ನೆಯ ಮೇಲೆ ಕೈ ತುರಿಸಿದ. ತಾನು ಹುಲಿಯ ಜೊತೆ ಆಟವಾಡುತ್ತಿದ್ದೇನೆಂಬುದು ಬಸವರಾಜನಿಗೆ ಈತನಕ ಗೊತ್ತಾಗಿರಲಿಲ್ಲ. ಕೆನ್ನೆ ತುರಿಸಿದ್ದಷ್ಟೇ ತಡ ನಿಂಗೂ ಬೆದೆ ಬಂದ ಪ್ರಾಣಿಯಂತಾದ. ಬಸವರಾಜೂನನ್ನು ಹಿಡಿದೆಳೆದಡರಿ ಇಕ್ಕಟ್ಟಿನ ಸಂಕಟಕ್ಕೆ ಬಾಯಿ ಬಂದು ಬಾಯಿ ಬಾಯಿ ಬಿಟ್ಟಂತಾಗಿ ಕೊಡವಿಕೊಂಡು ಬಿಟ್ಟ. ಬಸವರಾಜು ಲಬೊ ಲಬೊ ಹೊಯ್ಕೊಳ್ಳುವುದೊಂದು ಬಾಕಿ. ಇಬ್ಬರೂ ಧಾಂಡಿಗ ಕುಳಗಳು ಕುಸ್ತಿ ಹಿಡಿದಂತೆ ಶಬ್ದವಾಗುವುದನ್ನು ಕೇಳಿ ಚಿಮಣಾಳಿಗೆ ಎಚ್ಚರವಾಗಿ ಯಾರವರಾ? ಎಂದಳು. ಇಬ್ಬರೂ ಮನುಷ್ಯರೊಳಗೆ ಬಂದರು. +ದೀಪ ಹಚ್ಚಿ ಅವನನ್ನು ದೂರ ಕೂರಿಸಿಕೊಂಡು ಯಾರಿಗೂ ಹೇಳುವುದಿಲ್ಲವೆಂಬ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಂಡು ಬಸವರಾಜು ಎಲ್ಲಾ ಬಿಚ್ಚಿ ಹೇಳಿದ: +ಗುಡಸೀಕರನನ್ನು ನೋಡಿ ದುರ್ಗಿ ಪುಳಕಿತಳಾಗೋದನ್ನ ಬಸವರಾಜ ಗಮನಿಸಿದ್ದ. ಗುಡಿಸಲಿಗೆ ಅವ ಬಂದೊಡನೆ ಅವಳು ಸೊಂಡಿ ಸುಟ್ಟ ಬೆಕ್ಕಿನ ಹಾಗೆ ತನ್ನ ಗುಡಿದಲ ಹಿಂದೆ ಮುಂದೆ ಏನೇನೋ ನೆವ ಒಡ್ಡಿ ಅಡ್ಡಾಡುತ್ತ ಎತ್ತರದ ದನಿಯಲ್ಲಿ ಲಗಮವ್ವನೊಂದಿಗೆ ಮಾತಾಡುತ್ತ ವಿನಾಕಾರಣ ನಗುತ್ತ ಕೂರದೆ ನಿಲ್ಲದೆ ಲಗಮವ್ವನೊಂದಿಗೆ ಮಾತಾಡುತ್ತ ಹಾರಾಡುವ ಪಾತರಗಿತ್ತಿಯಾಗುತ್ತಿದ್ದಳು. ಆತ ಇದ್ಯಾವುದನ್ನೂ ಗಮನಿಸಿರಲಿಲ್ಲ. ಒಂದು ದಿನ ಎಳೇ ಹುಡುಗನೊಬ್ಬನಿಂದ ಮಾದಚಿದ ಎಲಡಿಕೆ ಕೊಟ್ಟು ಸರಪಂಚನಿಗೆ ಕೊಡುವಂತೆ ಹೇಳಿಕಳಿಸಿದ್ದಳು. ಅದು ತಪ್ಪಿ ಬಸವರಾಜುನಿಗೆ ಸಿಕ್ಕಿತು. ಬಿಚ್ಚಿ ನೋಡಿದರೆ ಎಲೆಯ ಮೇಲೆ ಸುಣ್ಣದಿಂದ ಈ ಆಕಾರ ಬರೆಯಲಾಗಿತ್ತು. +ಈ ದಿನ ಚಿಮಣಾ ಹೋದಳಲ್ಲ. ಬಸವರಾಜು ಒಬ್ಬನೇ ಬಾಗಿಲಿಗೆಕ್ಕಿಕೊಂಡು ಒಳಗೇ ಮಲಗಿದ್ದ. ತೋಟಕ್ಕೆ ಹೊರಟಿದ್ದ ಗುಡಸೀಕರ ಹಾಗೇ ಗುಡಿಸಲ ಮೇಲೆ ಹಾದು ಹೋಗೋಣವೆಂದು ಬಂದ. ಚಿಮಣಾ ಇರಲಿಲ್ಲವಲ್ಲ. ಸ್ವಲ್ಪ ಹೊತ್ತು ಕೂತಿದ್ದು, ಎದ್ದು ಹೋದ. ತನ್ನ ಗುಡಿಸಲಲ್ಲಿದ್ದ ದುರ್ಗಿಗೆ ಸರಪಂಚ ಬಂದದ್ದು ಕಂಡಿತ್ತು. ಚಿಮಣಾ ಇಲ್ಲದ್ದು ಗೊತ್ತಿತ್ತು. ಕೂಡಲೇ ಒಳಗೆ ಹೋದಳು. ಮತ್ತೆ ಹೊರಬಂದಳು. ಗುಡಸೀಕರ ಎದ್ದು ಹೋದುದನ್ನು ಅವಳು ಗಮನಿಸಲೇ ಇಲ್ಲ. ಒಳಗೆ ಇದ್ದಾನೆಂದೇ ತಿಳಿದು ಮುತ್ತುಗದ ಎಲೆಯಲ್ಲಿ ಸುಣ್ಣದಿಂದೊಂದು ಮಂಡಲ ಬರೆದು, ಅದರಲ್ಲೊಂದು ಚುಕ್ಕೆಯಿಟ್ಟು ಮೂರು ಮಲ್ಲಿಗೆ ಹೂವಿಟ್ಟು ಮಡಚಿ ಗುಡಿಸಲಲ್ಲಿ ಎಸೆದು ಓಡಿದ್ದಳು, ಇದೂ ಸಹಜವಾಗಿ ಬಸವರಾಜನಿಗೇ ಸಿಕ್ಕಿತು. ಶಹರದಲ್ಲಿ ಬೆಳೆದ ಅವನಿಗೆ ಈ ಸಂಕೇತಗಳ ಅರ್ಥ ಬಗೆಹರಿಯಲಿಲ್ಲ. +ಇಂಥ ಆಪ್ತ ವಿಷಯಗಳನ್ನು ಹಂಚಿಕೊಳ್ಳಲು ಅವನಿಗ್ಯಾರೂ ಇರಲಿಲ್ಲ. ಚತುಷ್ಟಯರು ಲಾಯಖ್ಖಲ್ಲ. ಈಗೀಗ ನಿಂಗೂ ಇವನಿಗೆ ಹತ್ತಿರವಾಗುತ್ತಿದ್ದ, ಹೊಲಕ್ಕೆ ಹೋದಾಗ ಒಮ್ಮೊಮ್ಮೆ ನಿಂಗೂನ ಗುಡಿಸಲ ಕಡೆಗೂ ಹೋಗುತ್ತಿದ್ದ. ಆದ್ದರಿಂದ ಅವನನ್ನು ಕರೆಸಿದ್ದ. ಈಗ ಇದರ ಅರ್ಥವೇನೆಂದು ಕೇಳಿದ. +“ಯಾಕ? ಯಾವುದರ ಹುಡುಗಿ ಗಂಟ ಬಿದ್ದೈತೇನ?” ಎಂದು ನಿಂಗೂ ಮತ್ಸರದಿಂದ ಕೇಳಿದ. +“ನನಗೆಲ್ಲೋ ಮಾರಾಯ ಗುಡಸೀಕರಗ ಗಂಟು ಬಿದ್ದಾಳ” +“ಯಾರವಳು?” +ಎಂದು ನಿಂಗೂ ಪೀಡಿಸಿ ಕೇಳಿದಾಗ ದುರ್ಗಿಯ ಹೆಸರು ಹೇಳಿದ. ಕೊನೆಗೆ ಹುಣ್ಣಿಮೆಗೆ ಒಂದು ದಿನ ಮುಂಚೆ ಮೂರೂ ಸಂಜೆ ಗುಡೀ ಹಿಂದ ಬಾ” ಎಂಬುದಾಗಿ ಅದರರ್ಥ ಒಡೆದು ಹೇಳಿದ. “ಹಾಗಿದ್ದರೆ ಇದಕ್ಕೆ ಒಪ್ಪಿಗೆ ಸೂಚಿಸುವುದು ಹ್ಯಾಗೆ?” ಎಂದ ಬಸವರಾಜು. ಸರಪಂಚ ಅವಳ ಕಡೆಗೊಂದು ಅಡಕೆ ಎಸೆದರೆ ಅದೇ ಒಪ್ಪಿಗೆ ಎಂದ ನಿಂಗೂ ಎದ್ದು “ಮನೀ ಕಡೆ ಬಾ” ಎಂದು ಬಸವರಾಜನಿಗೆ ಹೇಳಿ ಹೋದ. +ಆ ದಿನ ರಾತ್ರಿ ನಿದ್ದೆಯಿಲ್ಲದೆ ಮಗ್ಗಲಿನಿಂದ ಮಗ್ಗುಲಿಗೆ ಹೊರಳಾಡಿದವರು, ಬಸವರಾಜೂ, ಚಿಮಣಾ ಮತ್ತು ದುರ್ಗಿ ಮೂವರೇ. ಚಿಮಣಾ ಅಂದಿನ ಘಟನೆಯಿಂದ ಬೆಚ್ಚಿ ಬಿದ್ದಿದ್ದಳು. ಬಸವರಾಜನ ಲೆಕ್ಕಾಚಾರದ ಮನಸ್ಸಿನಲ್ಲಿ ಚಕಮಕಿ ಕಿಡಿ ಹಾರತೊಡಗಿದ್ದವು. ಈ ತನಕ ಚಿಮಣಾಳನ್ನು ಹಿಂಡಿ ಹಿಂಡಿ ಪ್ರಯೋಜನ ಪಡೆದಿದ್ದ, ಈಗವಳು ಹಿಂಡಿದರೆ ರಸವೊಸರದಷ್ಟು ಒಣಗಿದ್ದಳು. ಅವಳನ್ನು ನಿವಾರಿಸಬೇಕಾಗಿತ್ತು. ಅದೂ ಉಪಾಯವಾಗಿ, ಲಾಭ ಸಿಕ್ಕುವಂತೆ. ಒಣಗಿದ್ದುದ್ದು ಉರುವಲಾಗಬೇಕು. ಇಲ್ಲಾ ಹೊಟ್ಟಾಗಬೇಕು. ಉರುವಲದಿಂದ ಒಲೆ ಉರಿಯುತ್ತದೆ. ಗುಡಸೀಕರನ ಒಲೆ ಈ ಉರುವಲದಿಂದ ಉರಿಯುವುದು ಸಾಧ್ಯವಿರಲಿಲ್ಲ. ಹೊಟ್ಟು ಹಾಕಿದರೆ ಹಿಂಡದ ದನ ಹೈನ ಕೊಡುತ್ತದೆ. +ದುರ್ಗಿಗಾದರೆ ವಿಚಿತ್ರ ಕಾತರ. ಅದು ಮೈ ಕಾತರವೋ, ಮನಸ್ಸಿನ ಕಾತರವೋ ಹೇಳುವುದೇ ಬಿಗಿಯೆಂಬಷ್ಟು ಮೈ ಬಿಗಿದಿತ್ತು. ಮುಗ್ಧಹುಡುಗಿ, ಹಸೀ ಮಣ್ಣಿನಂತಿದ್ದಳು. ಹೇಗೆ ಮಿದ್ದಿದರೆ, ಹೇಗೆ ನಾದಿದರೆ ಹಾಗೆ ಹದ, ಹಾಗೆ ಆಕಾರ ತಕ್ಕೊಳ್ಳಲು ಸಿದ್ಧಳಾದವಳು. ಅಬಾಯಿಯ ಖಾಸ ಮಗಳಲ್ಲ. ಸವದತ್ತಿಯ ಜೋಗತಿ ಎಲ್ಲವ್ವನ ಮಗಳು. ಅವಳು ಸಾಯುವ ಮುನ್ನ ದುರ್ಗಿ ಹತ್ತು ವರ್ಷದಾಕೆ. ಆಗಿನಿಂದಲೇ ತನ್ನ ಚಿಕ್ಕವ್ವ ಅಂದರೆ ಅಬಾಯಿಯ ಮನೆಯಲ್ಲೇ ಇದ್ದಳು. ಇನ್ನೇನು ವರ್ಷಾರು ತಿಂಗಳಲ್ಲಿ ಜೋಗತಿ ಬಿಡಬೇಕೆಂದು ಅಂಬಾಯಿ ಹೊಂಚಿದ್ದಳು. ಅಷ್ಟರಲ್ಲೇ ಇವಳು ಗುಡಸೀಕರನ ಹೆಸರಿನಲ್ಲಿ ಒಂಟಿಗಾಲಲ್ಲಿ ನಿಂತಿದ್ದಳು. ಮಧ್ಯೆ-ಬಸವರಾಜು ಪ್ರಯೋಜನದ ಲೆಕ್ಕ ಹಾಕುತ್ತಿದ್ದ. ಎಲ್ಲಿಂದೆಲ್ಲಿಗೆ ಸಂಬಂಧ? +ಬೆಂಕಿಯ ಹೊಂಡ +ಇದು ವಿಚಿತ್ರವಾದ ಹಂಗಾಮು, ಮಹಾನವಮಿಯ ಅಮವಾಸ್ಯೆಯಿಂದ ಶೀಗಿ ಹುಣ್ಣಿಮೆಯ ತನಕ ರೈತರಿಗೇನೂ ಕೆಲಸವಿರುವುದಿಲ್ಲ. ಕಳೆ ತೆಗೆಯಬೇಕಾದ್ದಿಲ್ಲ; ಬೆಳೆಯ ಕಾಳಜಿ ಮಾಡಬೇಕಾದ್ದಿಲ್ಲ. ಬೆಳೆಯ ಗಂಟಲಲ್ಲಿದ್ದ ಕಾಳು ಈ ಅವಧಿಯಲ್ಲೇ ಹೊರಕ್ಕೆ ಬರುತ್ತದೆ. ಈಗ ಭೂಮಿಯನ್ನು ನೋಡುವುದೇ ಚಂದ-ತುಂಬ ಬಸರಿಯ ಹಾಗೆ ಕಾಣಿಸುತ್ತದೆ. ನಿಜ ಹೇಳಬೇಕಂದರ ಬಸರಿಯಂತಹ ಸುಂದರಿ ಈ ಪ್ರಪಂಚದಲ್ಲೇ ಇಲ್ಲ. ಹೆಣ್ಣು ನಿಮಗೆ ಮಾಯೆ ಅನಿಸುವುದೇ ಆವಾಗ. ಅತ್ಯಂತ ಅದ್ಭುತವಾದ, ಮಾತಿಗೆ ಮೀರಿದ ಮಾದಕತೆ, ತೃಪ್ತಿ ಅವಳ ಅಂಗಾಂಗಗಳಲ್ಲಿ ಮೂಡಿರುತ್ತದೆ. ಆ ದಿವ್ಯ ಸೌಂದರ್ಯದ ಎದುರು ಮನುಷ್ಯ ಮಗುವಾಗುತ್ತಾನೆ. ಭೂಮಿಯ ಈಗಿನ ಸೌಂದರ್ಯವೂ ಅಂಥದೇ, ಗರ್ಭದ ನಿಧಿ ಚಡಪಡಿಸುವುದನ್ನು ಸಂತೋಷಿಸುತ್ತ, ಮೌನವಾಗಿರುವ ಈಗಿನ ಭೂಮಿಯನ್ನು ನೋಡಿ ‘ದೇವರನ್ನು ಕೊಂಡಾಡೋಣ; ಎನಿಸುತ್ತದೆ. +ಈಗ ಮುಟ್ಟಾದ ಹೆಂಗಸರು ಹೊಲದ ಕಡೆ ಸುಳಿಯಬಾರದು. ಗಂಡಸರು ಹಾದರ ಮಾಡಬಾರದು. ಕಾಲ್ಮರಿ ಹಾಕಿಕೊಂಡು ಮೆಣಸಿನ ಹೊಲದಲ್ಲಾಗಲಿ, ಬಳ್ಳಿಗಳಲ್ಲಾಗಲೀ ಹಾಯಬಾರದು. +ಇದು ರೈತರಿಗೂ ಗೊತ್ತು. ಆದ್ದರಿಂದಲೇ ಬಸುರಿಯ ಬಯಕೆಯನ್ನೀಡೇರಿಸುವಂತೆ ಥರಾವರಿ ಅಡಿಗೆ ಮಾಡಿಕೊಂಡು ಹೊಲಗಳ ತುಂಬ ಚೆರಗ ಚೆಲ್ಲಿ ಬರುತ್ತಾರೆ. ಈಗಿನ ಆಕಾಶ ಬಲು ಶುಭ್ರ; ಹಗಲಾಗಲಿ, ರಾತ್ರಿಯಾಗಲಿ. ಹಗಲಾದರೆ ಹಸನಾದ ಬಿಸಿಲು, ಸೂರ್ಯ ನಕ್ಕ ಹಾಗೆ. ರಾತ್ರಿಯಾದರೆ ಆಕಾಶದ ತುಂಬ ಹುರಿದರಳು ಚೆಲ್ಲಿದಂತೆ ನಕ್ಷತ್ರಗಳು ಇಕಾ ನನ್ನ ಬೆಳಕು, ಅಕಾ ನಿನ್ನ ಮಿಣುಕು! ಸಾಲದ್ದಕ್ಕೆ ಮೆತ್ತಗೆ ಒತ್ತೊತ್ತಿ ಮುತ್ತುವ ಥಂಡಿ. +ಥಂಡಿ ಎಂದೊಡನೆ ವಿರಹಿಗಳ ಪ್ರೇಮ, ಪ್ರೇಮಿಗಳ ಕಾಮ, ಕಾಮಿಗಳ ಭೋಗ ಜಾಸ್ತಿಯ‌ಎಂಬಂಥ ಮರ್ಣನೆಗಳನ್ನು ಕೇಳಬೇಡಿರಿ. ಅದೆಲ್ಲ ಮಾತಿಗೆ ಬಾರದ ಕಾವ್ಯಗಳಲ್ಲಿ, ಕಾವ್ಯಗಳ ಅರಮನೆಗಳಲ್ಲಿ, ಮಾಡುವುದಕ್ಕೆ ಕೆಲಸವಿಲ್ಲದ ನಗರಗಳಲ್ಲಿ ನಡೆದೀತು. ಯಾವುದಕ್ಕೂ ಒಂದೊಂದು ಋತುಮಾನವಿದೆ. ಇದಂತೂ ಕುಚೇಷ್ಟೆಗಳಿಗೆ ಹೇಳಿ ಮಾಡಿಸಿದ ಹಂಗಾಮಲ್ಲ. +ಈಗ ದೇವರೇಸಿಯ ಮುಖ ನೋಡುವುದೇ ಚೆಂದ. ಹಿಂದೆ ಮೊಳಕಾಲ ಮಟ ಉದ್ದನೆಯ ಜಡೆ ಬಿಟ್ಟುಕೊಂಡು ಹಣೆತುಂಬ ಬಂಡಾರ ಬಳಿದುಕೊಂಡು ಒಂದು ಹೆಗಲಿಗೆ ಗೊಂಗಡಿ ಇನ್ನೊಂದಕ್ಕೆ ಬಂಡಾರ ಚೀಲ ತೂಗು ಬಿಟ್ಟುಕೊಂಡು ಉಧೋ ಎಂದು ಹೊರಡುತ್ತಾನೆ. ಊರ ಸೀಮೆಯ ಗುಂಟ ಭಂಡಾರ ಚೆಲ್ಲುವುದೇ ಅವನ ಕಾರ್‍ಯಕ್ರಮ. ಹೊಲಹೊಲಕ್ಕೆ ಹೋಗಿ ಆತ ಹೆಂಗಸಿನ ಥರ ಕೂತು ‘ಹಂಗ ಮಗನ ಹಿಂಗ ಮಗನ’ ಎನ್ನುತ್ತ ಕೂತಿದ್ದರೆ ಭಾವುಕ ರೈತನಿಗೆ ಸ್ವಥಾ ಕರಿಮಾಯಿಯೇ ತಮ್ಮ ಹೊಲಕ್ಕೆ ಬಂದಂತಾಗುತ್ತದೆ. ಹಸಿರು ಭೂಮಿಯ ಚಂದ ನೋಡಲೋ, ತಾಯಿಯ ಬಂಡಾರ ಮುಖದ ಅಂದ ನೋಡಲೋ! ಜನ ಕೃತಜ್ಞತೆಯಿಂದ ತುಂಬಿ ಸೂಸುತ್ತಾರೆ. +ದಿನದಿನಕ್ಕೆ ಹುಣ್ಣಿವೆ ಸಮೀಪ ಬರತೊಡಗಿತ್ತು. ಈ ಹುಣ್ಣಿಮೆಯ ದಿನ ನಡೆಯುವ ಪೂಜೆ ತಾಯಿಯೇ ಆದಿಯಲ್ಲಿ ಹೇಳಿದ ವರ್ಷದ ಮೂರು ಮುಖ್ಯ ಪೂಜೆಗಳಲ್ಲಿ ಒಂದು. ಈ ಪೂಜೆಯಲ್ಲಿ ತಾಯಿಯನ್ನು ಎಷ್ಟೆಷ್ಟು ತೃಪ್ತಿಪಡಿಸಿದರೆ ಅಷ್ಟಷ್ಟು ಹುಲುಸಾಗುತ್ತದೆ. ಮಹಾನವಮಿಯಂದು ಸೀಮೆ ಕಟ್ಟಲಿಕ್ಕೆ ಹೋದ ತಾಯಿ ಅಂದರೆ ದೇವರೇಸಿ ಹುಣ್ಣಿಮೆಯ ಮುನ್ನಾದಿನ ಗೌಡನ ತೋಟಕ್ಕೆ ಬರುತ್ತಾಳೆ. ಆ ದಿನ ತಾಯಿಗೆ ಗೌಡನ ಮನೆಯಿಂದಲೇ ಊಟ. ಅದಕ್ಕೂ ನಿಯಮಗಳಿವೆ. ಗಂಡುಳ್ಳ ಗರತಿ, ಕೋಳಿ ಕೂಗುವಾಗಲೇ ಎದ್ದು ತಣ್ಣೀರಲ್ಲಿ ಜಳಕ ಮಾಡಿ ಒದ್ದೆ ಬಟ್ಟೆಯಲ್ಲೇ ಅಡಿಗೆ ಮಾಡಬೇಕು. ಆ ಗರತಿ ಎದ್ದಾಗಿನಿಂದ ಹಿಡಿದು ಖುದ್ದಾಗಿ ಹೋಗಿ ತೋಟದಲ್ಲಿಯ ತಾಯಿಗೆ ಬಡಿಸುವ ತನಕ ಒಬ್ಬರ ಜೊತೆ ಮಾತನಾಡಕೂಡದು, ಕಣ್ಣಿಟ್ಟು ಒಬ್ಬರ ಮುಖ ನೋಡಕೂಡದು. ಇದು ತಲೆತಲಾಂತರದಿಂದ ನಡೆದುಬಂದ ಪದ್ಧತಿಯಾದ್ದರಿಂದ ಊರವರು ಅಂಥ ಗರತಿಯನ್ನು ಮಾತಾಡಿಸುವುದಿಲ್ಲ. ಆಕೆ ಸುಳಿಯುವ ಸ್ಥಳದಲ್ಲಿ, ಆ ಸಮಯದಲ್ಲಿ ಯಾರೂ ಕಾಲಿಕ್ಕುವುದೂ ಇಲ್ಲ. +ಮೂರೂ ಸಂಜೆಯಾಯಿತೆಂದರೆ ತಾಯಿಗೆ ಅಂದರೆ ದೇವರೇಸಿಗೆ ಸೆರೆಯ ಅರ್ಪಣೆಯಾಗಬೇಕು. ಅದು ಲಗಮವ್ವನ ಜವಾಬ್ದಾರಿ. ಅದಕ್ಕಾಗಿ ಮೂರು ಹೊಸ ಪರಿವಾಣಗಳೇ ಆಗಬೇಕು. ಮೊದಲು ಒಂದು ಪರಿವಾಣದ ತುಂಬ ಹಾಕಿಕೊಟ್ತರೆ ತಾಯಿ ಒಂದೇ ಗುಟುಕಿಗೆ ಮುಗಿಸಿ ತಾಯಿ ಚಕಾರ ಶಬ್ದ ಎತ್ತದೆ ಹ್ಯಾಗಿದ್ದರೆ ಹಾಗೇ ಬೆನ್ನು ಮೇಲಾಗಿ ಬಿದ್ದು ಬಿಡುತ್ತಾಳೆ. ಲಗಮವ್ವನ ಹಾಡಿನಲ್ಲಿ ತಾಯಿ ಮೂರು ಗುಟುಕು ಸೆರೆ ಕುಡಿದಳೆಂದು ವರ್ಣನೆ ಬರುತ್ತದಲ್ಲ, ಆ ಮೂರೂ ಗುಟುಕು ಎಂದರೆ ಇಂಥವು; ಎಷ್ಟೆಂದರೂ ಮಹಾತಾಯಿ; ದೊಡ್ಡವರದೆಲ್ಲ ದೊಡ್ಡದೇ +ಅದೇ ದಿನ ಮಧ್ಯಾಹ್ನದ ಹೊತ್ತು ರೈತರು ಊದಿ ಬಾರಿಸುತ್ತ ಮರದ ದೊಡ್ದ ದೊಡ್ಡ ದಿಮ್ಮಿಗಳನ್ನು ತಗೊಂಡು ಗುಡಿಯ ಪೌಳಿಯಲ್ಲಿ ಕೊಂಡ ಮಾಡಿ ಅದರಲ್ಲೆಸೆದು ಬೆಂಕಿ ಹಚ್ಚಿ ಬರುತ್ತಾರೆ. ಒಮ್ಮೆ ಹಾಗೆ ಹೊರಗೆ ಬಂದರೆ ನಾಳೆ ತಾಯಿಯ ಜಿತೆಗೇ ಕಾಲಿಡಬೇಕು. ಅಲ್ಲಿಯ ತನಕ ಒಂದು ಹುಳು ಕೂಡ ಒಳಗೆ ಸುಳಿಯಬಾರದು. +ಮೊದಲೇ ಕೆಂಡದಂಥ ದೇವಿ; ಮಡಿ ಮೈಲಿಗೆ ಸರಿಯಾಗಿ ಪಾಲಿಸಬೇಕು. ಮಾರನೇ ದಿನ ತಾಯಿಯ ಬಂಗಾರ ಮೂರ್ತಿಯೊಂದಿಗೆ ಮೆರವಣಿಗೆ ಬಂದು ಕಾರಣಿಕವಾದರೆ ಅಂದಿನ ಉತ್ಸವ ಮುಗಿದಂತೆ. +ಆಯ್ತು; ಕರಿಮಾಯಿ ಸೀಮೆಕಟ್ಟಿ ಬಂದು ಗೌಡನ ತೋಟದಲ್ಲಿ ಬೀಡುಬಿಟ್ಟಿದ್ದಳು. ಬೆಳಗಿನ ಊಟೋಪಚಾರ ಮುಗಿದಿತ್ತು. ಸಮಯ ಬಾರಾಬಜೆಯಾಗಿದ್ದೀತು. ಗುಡಿಸಲಲ್ಲಿ ದುರ್ಗಿಯನ್ನು ಕೂರಿಸಿ ಲಗಮವ್ವ ಹೊಲಕ್ಕೆ ಹೂ, ಹುಲ್ಲು, ಜೋಳದ ಗರಿ ತರುವುದಕ್ಕೆ ಹೋದಳು. ದುರ್ಗಿ ಒಬ್ಬಳೇ ಆದಳಲ್ಲ. ಮತ್ತೆ ಮತ್ತೆ ಹೊರಗೆ ಬಂದು ಗುಡಸೀಕರ ಬಂದಿದ್ದಾನೆಯೇ ಎಂದು ನೋಡಿದಳು. ತಾನು ಈ ಹಿಂದೆ ಕಲಿಸಿದ ಸಂದೇಶ ತಲುಪಿದೆಯೆ? ಸಂಜೆ ಗುಡಿಕಡೆ ಬರುತ್ತಾನೊ? ಅಥವಾ ಚಿಮಣಾ ಇರುವಾಗ ತನ್ನನ್ನು ಬಯಸುತ್ತಾನೊ? ಹಾಗಿದ್ದರೆ ಹೋಳೀಹಬ್ಬದಲ್ಲಿ ದುಡ್ಯಾಕೆ ಕೊಟ್ಟುಕಳಿಸಿದ್ದು? ಹೀಗೆ ಅಚಿತ್ರೋ ವಿಚಿತ್ರ ತರ್ಕದಲ್ಲಿ ಮುಳುಗಿದ್ದಳು. ಅವಳು ಆಗಾಗ ಹೊರಬಂದು ಒಳಹೋದುದನ್ನು ಬಸವರಾಜೂ ಗಮನಿಸಿದನೇ ಹೊರತು ಗುಡಸೀಕರನಿಗೆ ಇದರ ತುದಿಬುಡ ತಿಳಿಯಲೇ ಇಲ್ಲ. +ಬಸವರಾಜು ಉಪಾಯವಾಗಿ ಗುಡಿಸಲಕಟ್ಟೆಯ ಮೇಲೆ ಗುಡಸೀಕರನನ್ನು ಕೂಡಿಸಿಕೊಂಡು ಸ್ವಲ್ಪ ಹೊತ್ತು ಅದು ಇದು ಮಾತಾಡಿದ, ಮೆಲ್ಲಗೆ ಒಳಗಿದ್ದ ಚಿಮಣಾಳಿಗೆ ಕೇಳಿಸದಂತೆ ವಿಷಯ ತೆಗೆದ. ಒಬ್ಬ ಹುಡುಗಿ ಇವನಿಗಾಗಿ ಹಸಿದು ನಿಂತುದನ್ನು ರಸವತ್ತಾಗಿ ಬಣ್ಣಿಸಿದ. ಗುಡಸೀಕರನ ಆಸಕ್ತಿ ಕೆರಳಿತು. ಯಾರು ಯಾರೆಂದು ಪೀಡಿಸಿದ. “ಯಾರಿರಬೇಕು ಹೇಳು ನೋಡೋಣ” ಎಂದು ಆಟವಾಡಿದ. ಕೊನೆಗೆ “ಈಗ ಕಣ್ಣು ಮುಚ್ಚಿಕೊ. ತೋರಸ್ತೀನಿ” ಎಂದು ಒತಾಯ ಮಾಡಿ ಕಣ್ಣು ಮುಚ್ಚಿಸಿ, ಅವನ ಕೈಗೊಂದು ಅಡಿಕೆ ಕೊಟ್ಟು ಎದುರಿಗೆ ಎಸೆದರೆ ಅದು ಬಿದ್ದಲ್ಲಿ ಅವಳಿರುತ್ತಾಳೆಂದು ಹೇಳಿದ. ಗುಡಸೀಕರ ಕಣ್ಣು ಮುಚ್ಚಿ ಅಡಿಕೆ ಎಸೆದ. ಅದು ಆಗಷ್ಟೆ ಹೊರಗೆ ಬಂದ ದುರ್ಗಿಯ ಮುಂದೆ ಬಿತ್ತು. ನಾಚಿ ಅಡಿಕೆ ತಗೊಂಡು ಒಳಗೋಡಿದಳು. ಗುದಸೀಕರನಿಗೆ ಹೌದಲ್ಲಾ ಎನಿಸಿತು. ಆದರೆ ಉತ್ಸಾಹಿತನಾಗಲಿಲ್ಲ. ಬಸವರಾಜು ಇದನ್ನು ಗ್ರಹಿಸಿದ. +ಆಗುವ ಮೋಜು ಹೇಗೂ ಆದೀತು. ಬರಲಿರುವ ಚುನಾವಣೆಯ ಹೆಸರಿನಲ್ಲಿ ಇದು ನಡೆಯಲೇಬೇಕೆಂಬುದನ್ನು ಖಾತ್ರಿ ಮಾಡಿದ. +“ಮುಂದಿನ ಹಾದಿ ಹೆಂಗ?” +“‘ಅದು ನನ್ನ ಜವಾಬ್ದಾರಿ.” +ಹೌಹಾರಿದಳು ದುರ್ಗಿ. ಸೂರ್ಯ ಮುಳುಗಲೊಲ್ಲ. ಸಂಜೆಯಾಗಲೊಲ್ಲದು. ಕಾಲು ನೆಲಕ್ಕೆ ಊರಲೊಲ್ಲವು. ಮನಸ್ಸು ನಿಂತಲ್ಲಿ ನಿಲ್ಲಲೊಲ್ಲದು. ಹೊರಗೆ ಬಂದು ಸೂರ್ಯನನ್ನು ಶಪಿಸಿದಳು. ಒಳಗೆ ಹೋಗಿ ಕುಳಿತಳು. ಕೂರದೆ ನಿಂತಳು. ನಿಲ್ಲದೆ ನಡೆದಾಡಿದಳು. ಕೂತಳು. ನಿಂತಳು. ಹರಿದಾಡಿದಳು. ನಿಟ್ಟುಸಿರು ಬಿಟ್ಟುಬಿಟ್ಟು ಎದೆಯ ಏರಿಳಿವುಗಳನ್ನು ಅಳೆದಳು. ಅಂತೂ ಸಂಜೆಯಾಯ್ತು. ಗುಡಿಸಲಲ್ಲಿ ಲಗಮವ್ವ ಇರಲಿಲ್ಲ. ರೈತರು ಕೊಂಡಕ್ಕೆ ದಿಮ್ಮಿ ಚೆಲ್ಲಿ ಬೆಂಕಿ ಹಚ್ಚಿ ಬಂದುದನ್ನು ವಾಲಗದ ಸಪ್ಪಳದಿಂದಲೇ ತಿಳಿದಿದ್ದಳು. ಹೊತ್ತೂ ಸಂಜೆಯಾಗಿತ್ತು. ಮೈಯಲ್ಲಿ ಬೆದೆಯಿತ್ತು. ಮನಸ್ಸಿನಲ್ಲಿ ಉಮೇದಿಯಿತ್ತು. ಇನ್ನು ಅವಳನ್ನು ತಡೆಯುವವರು ಯಾರು? +ಗುಡಿಯ ಹಿಂಭಾಗದ ಮರಗಳ ಬಳಿ ಹೋಗಿ ಅತ್ತಿತ್ತ ನೋಡಿದಳು. ಯಾರಿರಲಿಲ್ಲ. ಮತ್ತೆ ಮತ್ತೆ ನೋಡಿಬಂದಳು. ಇನ್ನೂ ಬಂದಿರಲಿಕ್ಕಿಲ್ಲವೇ? ಸುಳ್ಳು ಸುಳ್ಳೇ ಅಡಿಕೆ ಎಸೆದನೇ? ಎಂದೆಲ್ಲ ಚಿಂತಿಸಿದಳು. ಬಂದಾನೆಂದು ಅಲ್ಲೇ ಕುಳಿತಳು. ಬೇಸತ್ತು ಮತ್ತೆ ಹುಡುಕಿ ಬಂದಳು. ಕೊನೆಗೆ ಗುಡಿಯ ಮುಂದುಗಡೆ ಹಾದು ಬರುತ್ತಿದ್ದಾಗ ಹಿಂದಿನಿಂದ ಯಾರೋ ಕದ್ದು ಕರೆದಂತಾಯ್ತು. ತಿರುಗಿ ನೋಡಿದಳು. ಗುಡಿಯ ಒಳಭಾಗದ ಕತ್ತಲಲ್ಲಿ ನಿಂತು ಕೈಬೀಸಿ ಕರೆಯುತ್ತಿದ್ದ. ಈ ದಿನ ಯಾರೂ ಗುಡಿಯೊಳಕ್ಕೆ ಬರುವುದಿಲ್ಲವೆಂದು ಗೊತ್ತು. ಒಂದು ಕ್ಷಣ ಹೋಗುವುದೇ ಬೇಡವೇ ಎಂದು ಯೋಚಿಸುತ್ತ ನಿಂತಳು. ತಲೆಯಲ್ಲಿ ಗಾಳಿ ತುಂಬಿದ ಹಾಗೆ ಮಡಿಮೈಲಿಗೆ ಯಾವುದನ್ನೂ ಗಣನೆಗೆ ತಾರದೆ ಭರದಿಂದ ಒಳಹೊಕ್ಕಳು. ಬಂದು ಸಿಕ್ಕೊಡನೆ ಅಮಾತ ಅವಳನ್ನೆತ್ತಿ ದೇವೀ ಮೂರ್ತಿಯ ಹಿಂಭಾಗಕ್ಕೊಯ್ದ. ಅವರ ಗುದಮುರಿಗೆಗೆ ತಾಯಿಯ ಮರದ ಮೂರ್ತಿ ಗಡಗಡ ನಡುಗಿ ಖಡ್ಗ ಹಿಡಿದ ಬಲಗೈ ಮುರಿದು ಕೆಳಗೆ ಬಿತ್ತು. ಕತ್ತಲಲ್ಲಿ ಅದ್ಯಾವುದೂ ಗೊತ್ತಾಗಲಿಲ್ಲ. ಅಥವಾ ಗೊತ್ತಾಗುವ ಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ. ಕೊಂಡದ ಬೆಂಕಿ ಧಗಧಗ ಉರಿಯುತ್ತಿತ್ತು. +ತಾನು ಹೇಳಿದಂತೆ ಗುಡಸೀಕರ ಬಂದಿರಬಹುದೆಂದುಕೊಂಡು ನಿಂಗೂ ಗುಡಿಯ ಹಿಂದಿನ ಮರದ ಗುಂಪಿನಲ್ಲಿ ಹೋಗಿ ಹುಡುಕಿದ, ಯಾರೂ ಇರಲಿಲ್ಲ. ಎಲ್ಲಾ ಸುಳ್ಳು ಎಂದುಕೊಂಡು ಗುಡಿಯ ಬದಿಯ ಹಾದಿಯಿಂದ ಬರುತ್ತಿರುವಾಗ ಗುಡಿಯಲ್ಲಿ ಯಾರೋ ಹೆಣ್ಣು ನರಳುತ್ತಿದ್ದಂತೆ ಕೇಳಿಸಿತು. ಗರ್ಭಗುಡಿಯಲ್ಲಿ ಏನೋ ಅಕೃತ್ಯ ನಡೆದಿರಬಹುದೆಂಬುದನ್ನು ಊಹಿಸುವುದು ಅವನಿಗೆ ಅಸಾಧ್ಯವಾಯ್ತು. ಹೇಳಿ ಕೇಳಿ ನಾಳೆ ಹುಣ್ಣಿಮೆ, ಇಂದು ಗುಡಿಯಲ್ಲಿ ಭೂತ ಸೇರುತ್ತವೆಯೆಂಬುದು ಗೊತ್ತಿತ್ತಲ್ಲ. ಗಾಬರಿಯಾಯ್ತು. ಅಷ್ಟು ದೂರ ಓಡಿಹೋಗಿ ಪೌಳಿಯ ಬಾಗಿಲಿನಿಂದ ಗುಡಿಯ ಕಡೆ ನೋಡಿದ. ಕೊಂಡದಲ್ಲಿ ಆಗಷ್ಟೇ ಹೊತ್ತಿಸಿದ ಬೆಂಕಿ ಉರಿಯುತ್ತಿತ್ತು. ಜ್ವಾಲೆಯೊಳಗಿನಿಂದ ಗರ್ಭಗುಡಿ ಥರಥರ ನಡುಗಿದಂತೆ ಕಾಣುತ್ತಿತ್ತು. ಅಯ್ಯಯ್ಯೋ ಎಂದು ಓಡಿದ. ‘ಗುಡ್ಯಾಗ ಹೆಣ್ಣದೆವ್ವ ನರಳಾಕ ಹತ್ತಿತ್ರೋ, ಸ್ವತಾಃ ಕಿವೀಲೇ ಕೇಳಿದೆ’ ಎಂದು ಸುದ್ದಿ ಹಬ್ಬಿಸಿದ. +ತಿರುಗಿ ಗುಡಿಸಿಲಿಗೆ ಬಂದಾಗಲೇ ದುರ್ಗಿಯ ಅರಿವು ಮೂಡಿತು. ಈ ತನಕ ಮಹಾಪೂರದ ಸೆಳೆವಿಗೆ ಸಿಕ್ಕವಳು ಈಗ ಹೊರಗೆ ಬಂದಂತಾಗಿತ್ತು. ಇಂದ್ರಿಯಗಳು ತಂತಮ್ಮ ಸ್ಥಳಕ್ಕೆ ಬಂದು ಸಹಜ ವ್ಯಾಪಾರಕ್ಕೆ ತೊದಗಿದವು. ಹುಡುಗಿ ನಡುಗುತ್ತಿದ್ದಳು. ತೊಡೆಗಳಲ್ಲಿ ಹಸಿನೆತ್ತರು ಸೋರ್‍ಯಾಡಿತ್ತು, ಒರೆಸಿಕೊಂಡಳು. ಕರಿಮಾಯಿಯ ಗುಡಿಯಲ್ಲಿ ಆಗಬಾರದ್ದು ಆಗಿಹೋಗಿತ್ತು. ತಾಯಿಯ ಮರದ ಉಗ್ರಮುಖ, ಆಯುಧ ಹಿಡಿದ ಕೈ ನೆನಪಾದವು. ಮೈ ತುಂಬಿದ ದೇವರೇಸಿಯ ಮುಖ ನೆನಪಾಯ್ತು. ನಡುಕ ಇನ್ನೂ ಜಾಸ್ತಿಯಾಯ್ತು. ಬೇರೆ ದಿನಗಳಲ್ಲಾದರೆ ಹೇಗೋ ನಡೆದೀತು. ಇವು ಮಡಿ ಮೈಲಿಗೆಯ ದಿನಗಳು. ನಾಳೆ ತಾಯಿ ಗುಡಿಗೆ ಬರಲಿದ್ದಾಳೆ. ಮೈಲಿಗೆಯಾಯ್ತು. ತನಗಿನ್ನು ಉಳಿಗಾಲವಿಲ್ಲ. ದೇವೀ ನಾಳೆ ತನ್ನನ್ನೆಳೆದು ತಲೆಯ ಮೇಲೆ ಬೆಂಕಿಯಿಡುವುದು ಖಂಡಿತ, ಅಯ್ಯೋ, ಘಾತವಾಯಿತೆಂದು ಬೆದರಿದಳು. ಜೀವ ಕೈಯಲ್ಲಿ ಹಿಡಿದುಕೊಂಡು ಚಾಪೆಯ ಮೇಲೆ ಮುದ್ದೆಯಾಗಿ ಬಿದ್ದಳು. ಕಿವಿಗೆ ಕೇಳಿಸುವಷ್ಟು ಗಟ್ಟಿಯಾಗಿ ಹೊಡೆದುಕೊಳ್ಳುತ್ತಿತ್ತು. +ಬಸವರಾಜೂ ಬಂದಾಗ ಗುಡಸೀಕರ ಚಿಮಣಾಳ ಜೊತೆ ಮಾತಾಡುತ್ತ ಕೂತಿದ್ದ. ಬಸವರಾಜು ವಿಜಯದ ಉನ್ಮಾದದಲ್ಲಿದ್ದ! ‘ಹಲೋ ಸರಪಂಚ್’ ಎಂದು ದಿನಕ್ಕಿಂತ ಎತ್ತರದ ದನಿಯಲ್ಲಿ ಮಾತಾಡುತ್ತ ಒಳಗೆ ಹೋದ. ಚಡ್ಡಿಗೆ ಹಸೀ ರಕ್ತ ಅಂಟಿತ್ತು. ಬದಲಿಸಿ ಬಾಟ್ಲಿ ತಗೊಂಡೇ ಬಂದ. ತೃಪ್ತಿ ಮುಖದ ತುಂಬ ಹೊರಸೂಸುತ್ತಿತ್ತು. ಜೋರು ಮಾಡಿ ಗುಡಸೀಕರನಿಗೆ ಸುರಿದ. ಚಿಮಣಾಳಿಗೆ ಇನ್ನಷ್ಟು ಸುರಿದ. ಮಾತಿಗೊಮ್ಮೆ ‘ಓಲ್ಡ್ ಬಾಯ್’ ಎನ್ನುತ್ತ ಗುಡಸೀಕರನ ಭುಜ ತಟ್ಟಿದ. ಗೆದ್ದವನಂತೆ ಆಗಾಗ ದೊಡ್ಡ ದನಿ ತೆಗೆದು ನಕ್ಕ. ದಣಿದಿದ್ದನಲ್ಲ, ಕಪ್ಪೆ ನುಂಗಿದ ಸರ್ಪದಂತೆ ಸುಂದಾಗಿ ಕೂತಲ್ಲೇ ಒರಗಿದ. +ಕೋಳಿ ಕೂಗುವ ಮುನ್ನವೇ ಲಗಮವ್ವ ಎದ್ದು ಜಳಕ ಮಾಡಿದ್ದಳು. ಮಡಿ ಉಟ್ಟು ಸಾಮಾಗ್ರಿ ಸೇರಿಸಿ ಪಕ್ಕದ ಇಬ್ಬರು ಗರತಿಯರನ್ನು ಎಬ್ಬಿಸಿದಾಗ ಕೋಳಿ ಕೂಗಿತು. ಮೂವರು ಗುಡಿಗೆ ಹೋದರು. ಕೊಂಡದಲ್ಲಿಯ ಮರದ ದಿಮ್ಮಿಗಳು ಸುಟ್ಟು ನಿಗಿನಿಗಿ ಕೆಂಡವಾಗಿದ್ದವು. +ಕರಿಮಾಯಿಗೆ ಈ ದಿನ ವಿಶೇಷ ಅಲಂಕಾರ. ಕತ್ತಿನಿಂದ ಸೊಂಟದ ತನಕ ಅವರೆಯ ಹೂ ಅಂಟಿಸುತ್ತಾರೆ. ಅದು ತಾಯಿಯ ಹಳದಿ ಕುಪ್ಪಸದಂತೆ ಕಾಣಿಸುತ್ತದೆ. ಸೊಂಟದಿಂದ ಕೆಳಗೆ ಪಾದದ ತನಕ ಸಾಲಾಗಿ ಜೋಳದ ಗರಿಗಳನ್ನು ಅಂಟಿಸುತ್ತಾರೆ. ಅದು ತಾಯಿಯ ಗರಿಗರಿ ಹಸಿರು ನೆರಿಗೆಯಂತೆ ಕಾಣುತ್ತದೆ. ಉಳಿದಂತೆ ತರತರದ ಹೂವಾಭರಣಗಳನ್ನು ಅಂಟಿಸುತ್ತಾರೆ. ಕತ್ತಿನ ತುಂಬ ಚೆಂಡು ಹೂ ಮಾಲೆ ಅಂಟಿಸುತ್ತಾರೆ. ಮೆರವಣಿಗೆ ಬಂದಾಗ ಮೇಲೆ ಬಂಗಾರದ ಮುಖ ಕೂರಿಸುತ್ತಾರೆ. ಈ ಶೃಂಗಾರ ನೋಡುವವರ ಕಣ್ಣು ತುಂಬುತ್ತದೆ. ಆ ಹೂವು, ಆ ಗರಿ, ಬಂಗಾರದ ಆ ಮುಖ-ತಾಯಿ ಈ ದಿನ ಸಮೃದ್ಧಿ ದೇವತೆಯ ಅವತಾರ ತಾಳಿದಂತಿರುತ್ತದೆ. ಹೀಗೆ ಮೈ ಶೃಂಗಾರವಾಗುವ ಹೊತ್ತಿಗೆ ಸೂರ್ಯೋದಯವಾಗುತ್ತದೆ. +ಬೆಳಗಿನ ಬೆಳಕಿನಲ್ಲಿ, ತಾಯಿಯ ಮರದ ಮೂರ್ತಿಯ ಕೈ ಮುರಿದಿತ್ತಲ್ಲ, ಲಗಮವ್ವನಿಗೆ ಕಂಡಿತು. ಜೀವ ಜಲ್ಲೆಂದಿತು. ಎರಡೂ ಕೈ ಎದೆಯ ಮೇಲಿಟ್ಟುಕೊಂಡು ‘ಅಯ್ಯೋ ತಾಯಿ’ ಎಂದಳು. ನೋಡಿ ಎಲ್ಲರೂ ಗಾಬರಿಯಾದರು. ಮುರಿದ ಕೈ ಖಡ್ಗ ಸಮೇತ ದೂರ ಸಿಡಿದು ಬಿದ್ದಿತ್ತು. ಅದರ ಬಳಿಯಲ್ಲೇ ನೆತ್ತರು ಸೋರ್‍ಯಾಡಿತ್ತು! ಶೃಂಗಾರದ ಸಡಗರದಲ್ಲಿ ತಾವೇ ಕೈಮುರಿದೆವೊ ಎಂದುಕೊಂಡರು. ಹಾಗೆ ನೆನಪಾಗಲಿಲ್ಲ. ತಾಯಿ ಮುನಿದಳು ಎಂದರು. ಅಪಶಕುನ ಎಂದರು. ಲಗಮವ್ವ ಅಡರಾಸಿ ಗೌಡನ ಬಳಿಗೆ ಓಡಿದಳು. +ಗೌಡನ ಮನೆಯಲ್ಲಾಗಲೇ ಹಿರಿಯರು ಸೇರಿದ್ದರು. ಆರತಿಯ ಮುತ್ತೈದೆಯರು ಬಂದಿದ್ದರು. ಶಿಷ್ಯಮಕ್ಕಳು ಡೊಳ್ಳುಬಾರಿಸತೊಡಗಿದ್ದರು. ಕಾಳೀಸಿಂಗ ದಿಕ್ಕಿಗೊಮ್ಮೆ ಮುಖಮಾಡಿ ಕಾಳೀ ಊದಿದ್ದ. ಇನ್ನೂ ದತ್ತಪ್ಪ ಬಂದಿರಲಿಲ್ಲ. ಅಷ್ಟರಲ್ಲಿ ಲಗಮವ್ವ ಓಡಿಬಂದಳು. ಗೌಡನ ಕಿವಿಯಲ್ಲಿ ತಾಯಿಯ ಕೈಮುರಿದ ಸುದ್ದಿ ಹೇಳಿದಳು. ಕೇಳಿ ಗೌಡನ ಕೈಕಾಲಲ್ಲಿಯ ಶಕ್ತಿಯೇ ಉಡುಗಿತು. ಎಲ್ಲರಿಗೆ ಅಲ್ಲೇ ಇರಹೇಳಿ, ದೂರಬರುತ್ತಿದ್ದ ದತ್ತಪ್ಪನಿಗೆ ‘ಬಾ’ ಎಂದಷ್ಟೇ ಸನ್ನೆ ಮಾಡಿ ಗುಡಿಯ ಕಡೆ ಧಾವಿಸಿದ. ಲಗಮವ್ವ ಹಾಗೇ ಬೆನ್ನು ಹತ್ತಿದಳು. +ನೋಡಿ ಆಘಾತವಾಯ್ತು. ಗೌಡ ಲಗಮವ್ವನನ್ನು ನೋಡಿದ. ನಮ್ಮಿಂದ ಆದದ್ದಲ್ಲವೆಂದಳು. ಸದ್ಯ ದೇವೀ ಬರೋತನಕ ಹ್ಯಾಗೋ ಅಂಟಿಸಿ ಆಮೇಲೆ ಸರಿಪಡಿಸಿದರಾಯ್ತೆಂದು ದತ್ತಪ್ಪ ಸೂಚಿಸಿದ. ಬರೋಬರಿಯೆಂದು ಆ ಕೈ ಮೊದಲಿನಂತೆ ಕೂರಿಸಿ ಸಣ್ಣೆಳೆ ಹುರಿಯಿಂದ ಬಿಗಿದರು. ಗೊತ್ತಾಗದಿರಲೆಂದು ಆ ಭಾಗದಲ್ಲೆರಡು ಹೂವಿನ ಮಾಲೆ ಇಳಿಬಿಟ್ತರು. ಹೇಗೆ ಏನು ಮಾಡಿದರೂ ಎದೆ ಹೊಡೆದುಕೊಳ್ಳುವುದು ನಿಲ್ಲಲಿಲ್ಲ. ಮೈಲಿಗೆಯಾಗಿರಬೇಕೆಂದು ಸಂಶಯ ಬಂತು. ಗೌಡ ಲಗಮವ್ವನನ್ನು ಪ್ರತ್ಯೇಕ ಕರೆದು ಕೇಳಿದ. ಅವಳು ಇಲ್ಲವೆಂದು ಕರಿಮಾಯಿ ಆಣೆಮಾಡಿದಳು. ಅಲ್ಲದೆ ಲಗಮವ್ವನೇನೂ ಇದನ್ನೆಲ್ಲ ಅರಿಯದವಳಲ್ಲ, ದೇವರ ಜವಾಬ್ದಾರಿಗಳನ್ನು ಅವಳಿಗೆ ಹೇಳಿಕೊಡಬೇಕಾದ್ದಿದೆಯೆ! ಹಳಹಳಿ ತಡೆಯಲಾರದೆ ಕೇಳಿದ್ದ, ಅಷ್ಟೆ. ಉಳಿದವರನ್ನು ಕೇಳಿದ ಕಣ್ಣಗಲ ಮಾಡಿ. ಅವರು ಹೆದರಿ ಓಡಿಹೋಗಿ ತಾಯಿಯ ಭಂಡಾರ ಮುಟ್ಟಿದರು. ಇದನ್ನು ನಿರ್ಧರಿಸುತ್ತ ಕೂರಲು ಸಮಯವೂ ಇದಲ್ಲ. ದೇವರು ಬರುವುದರೊಳಗೆ ನೆಲ ಸಾರಿಸಿ ಇನ್ನೊಮ್ಮೆ ಮಡಿಯಾಗಿ ಗದ್ದಿಗಿ ಪೂಜೆ ಮಾಡೆಂದು ಲಗಮವ್ವನಿಗೆ ಹೇಳಿ ದತ್ತಪ್ಪ, ಗೌಡ ಹೋದರು. +ಇವರು ಬಾಯಿ ಬಿಟ್ಟು ಆಡದಿದ್ದರೂ ಏನೋ ಅಚಾತುರ್ಯವಾಗಿದೆಯೆಂದು ಕೂಡಿದ ಮಂದಿ, ಅವರ ಮುಖ ನೋಡಿಯೇ ಮನಗಂಡರು. ಗೌಡನ ಮನೆಯಲ್ಲಿದ್ದ ಬಂಗಾರದ ಮುಖವನ್ನು ತಂದು ಪಲ್ಲಕ್ಕಿಯಲ್ಲಿಟ್ಟರು. ಮೆರವಣಿಗೆ ಗೌಡನ ತೋಟಕ್ಕೆ ಹೋಯಿತು. ಅಲ್ಲಿ ಕೂತ ತಾಯಿಯನ್ನು ತಿರುಗಿ ಗುಡಿಗೆ ತರಬೇಕಾದರೆ ನಾಕು ತಾಸು ಹೊತ್ತೇರಿತು. +ಮೆರವಣಿಗೆ ಪೌಳಿಯ ಹತ್ತಿರ ಬರುವಷ್ಟರಲ್ಲಿ ಊರ ಮಂದಿ ಅಲ್ಲಿ ಸೇರಿದ್ದರು. ದುರ್ಗಿ ಬಂದಿರಲಿಲ್ಲ. ಸುಂದರಿ, ಬಸವರಾಜು, ಗುಡಸೀಕರ ಇವರೂ ಬಂದಿದ್ದರು. ಮೋಜು ನೋಡುವುದಕ್ಕೆ ಬಸವರಾಜು ಬಂದಿದ್ದ. ಗುಡಸೀಕರನಿಗೆ ಭಕ್ತಿಯೇನೋ ಇತ್ತು. ಬಸವರಾಜನ ಎದುರಿಗೆ ಅದನ್ನು ತೋರದೆ ಒತ್ತಾಯಕ್ಕೆ ಬಂದ ಹಾಗೆ ಬಂದಿದ್ದ. ಮೆರವಣಿಗೆ ಪೌಳಿಯ ಸಮೀಪಕ್ಕೆ ಬರುತ್ತಿತ್ತು. ಪೂಜಾರಿಯ ಮೈತುಂಬ ಕಂಬಳಿ ಹೊದಿಸಿದ್ದರು. ಪಲ್ಲಕ್ಕಿಯ ಕೋಲಿನ ಮೇಲೆ ಎಡಗೈ ಇಟ್ಟು ತೇಲಾಡುತ್ತಿದ್ದಂತೆ ಮೆರವಣಿಗೆಯಲ್ಲಿ ನಡೆದುಬರುತ್ತಿದ್ದ. ಪೌಳಿಯ ಬಾಗಿಲು ಅಷ್ಟು ದೂರ ಇದೆಯೆಂದು ಹರಕೆ ಹೊತ್ತ ಇಪ್ಪತ್ತು ಮೂವತ್ತು ಭಕ್ತರು ಗಂಡು-ಹೆಣ್ಣುಮಕ್ಕಳೆನ್ನದೆ ಬೆನ್ನು ಮೇಲಾಗಿ ಅಡ್ಡಬಿದ್ದಿದ್ದರು. ಎಲ್ಲರೂ “ಚಾಂಗು ಭಲೇ” ಎಂದು ಕಿರುಚಿ ನಾಗಾಲೋಟದಿಂದ ಗುಡಿಯ ಕಡೆ ಓಡಿದರು. ಡೊಳ್ಳಿನವರು ಡೊಳ್ಳು ಬಾರಿಸುತ್ತ, ಚೌರಿಯವರು ಚೌರಿ ಬೀಸುತ್ತ, ಕಾಡುಕೂಗುಗಳನ್ನು ಕಿರಿಚುತ್ತ ಪೌಳಿಯ ಬಾಗಿಲ ತನಕ ಓಡಿದರು. ದೇವಿಯ ಮಹಿಮೆಯೆಂದರೆ ಇದು; ಅಡ್ಡಬಿದ್ದ ಭಕ್ತರ ಮೇಲೆ ಇಡೀ ಮೆರವಣಿಗೆ ಓಡಿದರೂ ಒಬ್ಬರಿಗೊಂದು ಕಾಲು ತಾಕಲಿಲ್ಲ. ನಿಜ ಹೇಳಬೇಕಂದರೆ ಒಂದು ಹೆಜ್ಜೆ ಇಟ್ಟಿದ್ದರೆ ಅಲ್ಲೇ ಜಿಬ್ಬಿಯಾಗುವಂಥ ಮಕ್ಕಳಿದ್ದವು. ಆ ಹುಚ್ಚು ಓಟದಲ್ಲಿ ಹಾಗೆ ತುಳಿಯುವುದು ಅಸಂಭವವೂ ಅಲ್ಲ. ಇಲ್ಲದಿದ್ದರೆ ಜನರ ಭಕ್ತಿ ಸುಳ್ಳೆ? ‘ಗುಂಡು ತೇಲಿಸುವಾಕೆ, ಚೆಂಡು ಮುಳುಗಿಸುವಾಕಿ’ ಎಂಬ ಲಗಮವ್ವನ ಹಾಡು ಸುಳ್ಳೆ? +ಈ ದಿನ ಅದೇನು ಮಾಯೆಯೋ ಪೌಳಿಯ ಬಾಗಿಲಿಗೆ ಪಲ್ಲಕ್ಕಿ ಬಂದು ಥಟ್ಟನೆ ನಿಂತುಬಿಟ್ಟಿತು. ಪಲ್ಲಕ್ಕಿ ಹೊತ್ತವರು. ಒಳಹೋಗಬೇಕೆಂದರೆ ಕಾಲು ಏಳಲೊಲ್ಲವು! ದೇವರೇಸಿಯ ರಟ್ಟೆಗೆ ಕೈಹಾಕಿ ನಡೆಸಿಕೊಂಡು ಹೋದೇವೆಂದರೂ ಜಗ್ಗಲಿಲ್ಲ. ಎಲ್ಲರಿಗೂ ಭಯ, ಆಶ್ಚರ್ಯವಾಯಿತು. ಇಂಥದ್ದೇನೋ ಆಗುತ್ತದೆಂದು ಗೌಡ, ದತ್ತಪ್ಪ, ಲಗಮವ್ವನಿಗೆ ತಿಳಿದಿತ್ತು. ಒಂದು ಒಡೆಯುವಲ್ಲಿ ಹತ್ತು ತೆಂಗಿನಕಾಯಿ ಒಡೆದರು, ಹತ್ತೂ ದಿಕ್ಕಿಗೆ ಲಿಂಬಿಯ ಹಣ್ಣೆಸೆದರು. ಸಮಾನ್ಯವಾಗಿ ಪಲ್ಲಕ್ಕಿ ಪೌಳಿಗೆ ಬರುತ್ತಲೂ ತಾಯಿ ದೇವರೇಸಿಯ ಮೈತುಂಬುವುದು ವಾಡಿಕೆ. ಆದರೆ ಮೈತುಂಬಿ ಹೀಗೆ ನಿಲ್ಲುವುದಿಲ್ಲ. ಓಡೋಡುತ್ತ ಹೋಗಿ ಕೊಂಡಕ್ಕೆ ಪ್ರದಕ್ಷಿಣೆ ಹಾಕಬೇಕು. +ತೆಂಗಿನ ಕಾಯಿ ನಿಂಬೇಹಣ್ಣಿಗೂ ತಾಯಿ ಜಗ್ಗಲಿಲ್ಲ. ಹೀಗೆಂದೂ ಆಗಿರಲಿಲ್ಲ. ವಾದ್ಯದವರು ಸ್ತಬ್ಧರಾದರು ಮೈತುಂಬಿದ ತಾಯಿ ವಿಚಿತ್ರವಾಗಿ ನಡುಗುತ್ತಿದ್ದಳು. ಗೌಡ ಗಪ್ಪನೆ ತಾಯಿ ಕಾಲು ಹಿಡಿದು “ಮಕ್ಕಳ ತಪ್ಪ ಹೊಟ್ಯಾಗ ಹಾಕ್ಕೊಳ್ಳಽ ಎವ್ವಾ” ಎಂದ. ಜನ ವಿಸ್ಮಯದಿಂದ ಮೂಕರಾಗಿದ್ದರು. ಗೌಡ ಕಾಲು ಬಿಡಲೇ ಇಲ್ಲ. ತಾಯಿ ಬಾಯಿ ಬಿಡಲಿಲ್ಲ. ದತ್ತಪ್ಪನೂ ಬಗ್ಗಿ ಕಾಲು ಹಿಡಿದು “ತಾಯೀ, ಏನ ತಪ್ಪಾಗೇತ್ಯೋ ನಮಗ್ಗೊತ್ತಿಲ್ಲ. ಕೇಳಿದ ತಪ್ಪದಂಡ ಕೊಡತೀವು, ಒಳಗ ಬಾ” ಎಂದ. ತಾಯಿಗೊಮ್ಮೆಲೆ ಆವೇಶ ಬಂದಂತೆ ಕಾಲುಹಿಡಿದವರನ್ನು ತಳ್ಳಿ ಹಾಹಾ ಎಂದು ಕಿರಿಚುತ್ತ ಒಳಕ್ಕೆ ಓಡಿದಳು. +ಸಾಮಾನ್ಯವಾಗಿ ಒಳಗೆ ಹೋದೊಡನೆ ಓಡೋಡುತ್ತಲೇ ಆಗಲಿ, ಕೊಂಡವನ್ನು ಮೂರು ಸಲಿ ಪ್ರದಕ್ಷಿಣೆ ಹಾಕಬೇಕು. ಆಗಲೇ ಮುಡಿಪು ಕಟ್ಟಿಕೊಂಡ ಭಕ್ತರು ಕೆಂಡದಲ್ಲು ಉಪ್ಪು ಸುರಿಯುತ್ತಾರೆ. ಆಮೇಲೆ ತಾಯಿ ಕೊಂಡ ಹಾಯಬೇಕು. ಭಕ್ತಿ ಕಮ್ಮಿಯಾದ ಜನರನ್ನು ಗುರುತಿಸಿ ಓಡಿಹೋಗಿ ಅವರನ್ನು ಎಳೆದು ತಂದು ಕೆಂಡದಲ್ಲಿ ಓಡಾಡಿಸಬೇಕು. ಆ ಮೇಲೆ ಖಡ್ಗದಿಂದ ನಾಲಿಗೆ ಇರಿದುಕೊಳ್ಳುತ್ತಾಳೆ, ಅಲಗಿನಿಂದ ಹೊಟ್ಟೆ ಕಡಿದುಕೊಳ್ಳುತ್ತಾಳೆ. ಬಹುಶಃ ಇದು ನಂಬಿಕೆ ಕಡಿಮೆಯಾಗದಂತೆ ನೋಡಿಕೊಳ್ಳುವ ವಿಧಾನವಿದ್ದೀತು. ಆದರೆ ಭಕ್ತರು ಇದಕ್ಕೆ ಅವಕಾಶ ಕೊಡುವುದಿಲ್ಲ. ಶಾಸ್ತ್ರಾರೀತ್ಯಾ ಒಂದೆರಡು ಸಲ ಅಲಗು ಹಾಯುವುದರೊಳಗೇ ಓಡಿಹೋಗಿ ಅಲಗು, ಖಡ್ಗಗಳನ್ನು ಕಸಿದುಕೊಳ್ಳುತ್ತಾರೆ. ಗೊತ್ತಿದ್ದೂ ತಾಯಿಯ ಪರೀಕ್ಷೆ ಮಾಡುವುದೆಂದರೇನು? +ಈ ಸಲ ಹಾಗಾಗಲಿಲ್ಲ. ತಾಯಿ ಓಡೋಡುತ್ತ ಹೋಗಿ ಗುಡಸೀಕರನ ಹೆಗಲಮೇಲೆ ಕೈಹಾಕಿ ನಿಂತ ಬಸವರಾಜನ ಜುಟ್ಟು ಹಿಡಿದು ದರದರ ಎಳೆದು ತಂದಳು. ಜನ ಹೌಹಾರಿ ಹೋ ಎನ್ನುವುದರೊಳಗೆ ಉಪ್ಪು ಸುರಿಯದ ಕೊಂಡದಲ್ಲಿ ಬಸವರಾಜನನ್ನು ವೀರಾವೇಶದಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಸತೊಡಗಿದಳು. ಕೊಂಡದೀಚೆಗೆ ಖಡ್ಗಹಿರಿದು ನಿಂತಿದ್ದವನ ಖಡ್ಗ ಕಸಿದುಕೊಂಡು ಹೊಟ್ಟೆಯ ಮೇಲೆ, ನಾಲಗೆಯ ಮೇಲೆ ಹೊಡೆದುಕೊಳ್ಳುತ್ತ ರಭಸದಿಂದ ಹರಿದಾಡತೊಡಗಿದಳು. ಲಗಮವ್ವನ ಭಾವುಕ ಕಣ್ಣುಗಳಂತೂ ತಾಯಿಯ ಪೂರ್ವೀ ಅವತಾರವನ್ನೇ ಕಂಡವು. ಬಿಟ್ಟಿದ್ದರೇನೇನು ಆಗಲಿತ್ತೋ ಕುಸ್ತಿ ಹುಡುಗರು ಕೆಂಡದ ಕೊಂಡದಲ್ಲೇ ಧುಮುಕಿ ತಾಯಿಗೆ ತೆಕ್ಕೆ ಹಾದು ಬಸವರಾಜನನ್ನು ಬಿಡಿಸಿದರು. ಬಿಟ್ಟಿದ್ದೇ ತಡ ಬಸವರಾಜು ಕೊಂಡದಿಂದ ಜಿಗಿದುಹೋಗಿ ಅಲ್ಲೇ ಕುಸಿದು ಬಿದ್ದ. ಮುಡಿಪು ಕಟ್ಟಿದ ಭಕ್ತರು ಅವಸರವಸರವಾಗಿ ಕೊಂಡದಲ್ಲಿ ಉಪ್ಪು ಸುರಿದರು. ಕೂಡಲೇ ತಾಯಿ ಓಡಿಹೋಗಿ ಮುಳ್ಳಾವಿಗೆಯ ಮೇಲೆ ಹತ್ತಿನಿಂತಳು. +ಗೌಡ ಓಡಿಬಂದು ಕಾಲು ಹಿಡಿದ. ದತ್ತಪ್ಪ ಅವನ ಹಿಂದೆ ಕೂತ. ತಾಯಿಯ ಕೈಗೆ ಆಶೀರ್ವಾದದ ಕಾಯಿ ಕೊಟ್ಟರು. ಕೂಡಿದವರ ಕಿವಿ ಬಿರಿಯುವ ಹಾಗೆ ತಾಯಿ ಕಿಟಾರನೆ ಕಿರಿಚಿದಳು. ಎಲ್ಲರೂ ಸ್ತಬ್ಧರಾದರು. ತಾಯಿ ಬಿಕ್ಕುತ್ತಿದ್ದಳು. ಗಂಟಲಲ್ಲಿ ಸಿಕ್ಕ ನುಡಿ ಹೊರಗೆ ಬರಲಾರದಾಗಿತ್ತು. ಅಪ್ರಿಯವಾದದ್ದನ್ನು ಹೇಳಲಿರುವಂತೆ, ಹೇಗೆ ಹೇಳಲೆಂಬಂತೆ, ಹೇಗೆ ಹೇಳದೇ ಇರಲೆಂಬಂತೆ ತಾಯಿ ಸಂಕಟಪಡುತ್ತಿದ್ದಳು. ಕೊನೆಗೆ ನಿರ್ಧರಿಸಿದಂತೆ- +“ಗೌಡೌಽ” +ಎಂದಳು. ಈಗ ಬಿಕ್ಕಲಿಲ್ಲ. ಸ್ವಲ್ಪ ಹೊತ್ತು ತಡೆದು ಕಾರಣಿಕ ಮುಂದುವರಿಸಿದಳು. “ಗೌಡಾ, ಚಿನ್ನದ ಕೂಸನ್ನ ಕಸಕೊಂಡು ಹೋದಾರು ಹುಷಾರಲೇಽಽ” +-ಎನ್ನುತ್ತ ತೆಂಗಿನಕಾಯಿ ಬಿಟ್ಟಳು. ಸುದೈವದಿಂದ ಕೆಳಗೆ ಬೀಳಲಿಲ್ಲ. ದತ್ತಪ್ಪ ಅದಕ್ಕಾಗೇ ಸಿದ್ಧನಾಗಿದ್ದವನು ಹಿಡಿದುಕೊಂಡ. ತಾಯಿ ಗರ್ಭಗುಡಿ ಹೊಕ್ಕಳು. +ಕಾರಣಿಕದಿಂದ ಯಾರಿಗೂ ಸಂತೋಷವಾಗಲಿಲ್ಲ. ಜನ ಈ ದಿನ ಹೊಯ್ಕಿನ ಸರಮಾಲೆಯನ್ನೇ ಕಂಡಿದ್ದರು. ತಾಯಿ ಪೌಳಿ ಬಾಗಿಲಿಗೆ ನಿಂತದ್ದೊಂದು, ಪ್ರದಕ್ಷಿಣೆ ಹಾಕದೆ ಕೊಂಡ ಹಾಯ್ದಿದ್ದಿನ್ನೊಂದು, ಊರಿಗೇನೂ ಸಂಬಂಧವಿಲ್ಲದ ಬಸವರಾಜೂನನ್ನು ಎಳೆದಾಡಿದ್ದಿನ್ನೊಂದು…..ಬಸವರಾಜು ಏನೋ ತಪ್ಪು ಮಾಡಿರಬೇಕೆಂದು ಕೆಲವರಂದರು. ದೇವೀ ನಿಂದೆ ಮಾಡಿರಬೇಕೆಂದು ಮತ್ತೆ ಕೆಲವರು. ಶಹರದ ಹುಡುಗ, ನಂಬಿಕೆ ಕಡಿಮೆ, ಅದಕ್ಕೇ ಹೀಗಾಯಿತೆಂದು ಇನ್ನು ಕೆಲವರು. ಎಷ್ಟೆಲ್ಲ ಹೇಳಿಕೊಂಡರೂ ಯಾರಿಗೂ ಸಮಾಧಾನವಾಗಲಿಲ್ಲ. +ಬಸವರಾಜನಿಗೆ ಇನ್ನೂ ಜೀವದಲ್ಲಿ ಜೀವ ಇರಲಿಲ್ಲ. ಮೊದಲೇ ಇದು ಗೊತ್ತಾಗಿದ್ದರೆ ಮನಸ್ಸನ್ನು ಆ ರೀತಿ ಅಣಿಗೊಳಿಸಬಹುದಾಗಿತ್ತು. ಅಥವಾ ಬಾರದೇ ಇರಬಹುದಿತ್ತು. ದೇವಿಯ ಬಗ್ಗೆ ಭಕ್ತಿ ಇರಲಿಲ್ಲ ನಿಜ. ಇಷ್ಟೆಲ್ಲ ರಾದ್ಧಾಂತಕ್ಕೆ ಅದು ಹೊಸದಾಗಿ ಹುಟ್ಟುವುದೂ ಅಸಂಭವವೇ. ಉಳಿದೆಲ್ಲರ ಮನಸ್ಸು ಒಂದನ್ನು ಚಿಂತಿಸಿದರೆ ಈತ ಬೇರೆ ರೀತಿ ಯೋಚಿಸುತ್ತ ಗುಂಪಿನಿಂದ ಒಡೆದು ಎರಡನೆಯವನಾಗಿದ್ದ. ಇದು ನಿಜ, ಇಂಥ ಶಿಕ್ಷೆ, ಈ ಅವಮಾನವನ್ನಾತ ನಿರೀಕ್ಷಿಸಿರಲಿಲ್ಲ. ತಾ ಮಾಡಿದ ಯಾವುದೋ ಅಕರ್ಮಕ್ಕೆ ಪಶ್ಚಾತ್ತಾಪ ಪಡುವಷ್ಟು ಸಂಸ್ಕಾರವೂ ಅವನಲ್ಲಿರಲಿಲ್ಲ. ಏನೋ ಮೋಜು ನೋಡಲು ಬಂದಿದ್ದ. ಖುಷಿಯಾಗಿ ತಂಪು ಕನ್ನಡಕ ಹಾಕಿ ಗುಂಪಿನಲ್ಲಿ ದುರ್ಗಿಯನ್ನು ಹುಡುಕುತ್ತ, ನಗಾಡುತ್ತ ನಿಂತಿದ್ದ. ನಿರಾಯುಧನ ಮೇಲೆ ಏಕದಂ ಶತ್ರು ಬಿದ್ದಂತೆ ದೇವರೇಸಿ ಎಳೆದೊಯ್ದು. ಮುಂದೆ ಬಿಡಿಸುವ ತನಕ ಏನಾಯಿತೋ, ಏನಿಲ್ಲವೋ ಒಂದೂ ಗೊತ್ತಾಗಲಿಲ್ಲ. ಅರಿವು ಬಂದದ್ದು ದೇವರೇಸಿ ಬಿಟ್ಟಮೇಲೆಯೇ. ಬಿಟ್ಟಾಗ ಕೈಕಾಲು ನಾಲಿಗೆಯಲ್ಲಿ ಶಕ್ತಿಯಿರಲಿಲ್ಲ. ನಿಂತಲ್ಲೇ ಕುಸಿದಿದ್ದ. ತಾಯಿಯ ಕಾರಣಿಕೆ ಕೇಳುವುದನ್ನು ಬಿಟ್ಟು ಯಾರೂ, ಗುಡಸೀಕರನೂ ಇವನನ್ನು ಉಪಚರಿಸುವ ಗೋಜಿಗೆ ಹೋಗಲಿಲ್ಲ. +ಮುಂಗಾರಿ ಬೆಳೆ ಕುಯ್ಯುವುದಕ್ಕೆ ನಾಳೆಯಿಂದ ಸುರುವಾದ್ದರಿಂದ ಈ ದಿನ ಭಯಂಕರವೆನಿಸುವ ಘಟನೆ ಜರುಗಿಬಿಟ್ಟಿತ್ತು. ನಿಶ್ಚಿಂತರಾದ ಜನಗಳ ಮನಸ್ಸು ಈಗ ನಿಂತಲ್ಲಿ ನಿಲ್ಲದೆ ಚಂಚಲವಾಗಿತ್ತು. ಅಲ್ಲಲ್ಲಿ ಗುಂಪುಗೂಡಿ ಇದನ್ನು ಮಾತಾಡಿಕೊಂಡರು. ಯಾರು, ಎಂಥ ಮುಗ್ಧ, ಮೂರ್ಖ ವಿವರಣೆ ಕೊಟ್ಟರೂ ಜನ ಆಸಕ್ತಿಯಿಂದ ಕೇಳುತ್ತಿದ್ದರು. ಕಾರಣಿಕದ ಅರ್ಥ ಸರಿಯಾಗಿ ತಿಳಿದಿರಲಿಲ್ಲ ಬೇರೆ. ಚಿನ್ನದ ಕೂಸು ಅಂದರೇನು? ಕಸಿದೊಯ್ಯುವವರು ಯಾರು? ಯಾರಿಗೂ ಬಗೆಹರಿಯಲಿಲ್ಲ. ಗೌಡನೋ, ದತ್ತಪ್ಪನೋ, ಲಗಮವ್ವನೋ ಹೇಳಬೇಕು. ಅವರಿನ್ನೂ ಬಾಯಿಬಿಟ್ಟಿರಲಿಲ್ಲ. ಹಿರಿಯರು ಹಿಂದಿನ ಹಬ್ಬಗಳನ್ನು ಸ್ಮರಿಸಿ ಹೀಗೆಂದೂ ಆಗಿರಲಿಲ್ಲವೆಂದರು. ಲಗಮವ್ವನ ಹಾಡುಗಳಿಗೂ ಇಂದಿನ ಸಂಗತಿ ಹೊರತಾಗಿತ್ತು. +ತಾಯಿಯ ಕೈಮುರಿದ ಸುದ್ದಿ ಆಗಲೇ ಹಬ್ಬಿತ್ತು. ನಿಂಗೂ ನೆನ್ನೆ ರಾತ್ರಿ ಹೆಣ್ಣು ದೆವ್ವಿನ ನರಳುವ ದನಿ ಕೇಳಿದ್ದನಲ್ಲ. ಅದೂ ಸುದ್ದಿಯಲ್ಲಿತ್ತು. ಹೆಂಗಸರಂತೂ ಗುಂಪುಗೂಡಿ ಈ ವರ್ಷ ಸತ್ತ ಹೆಂಗಸರನ್ನೆಲ್ಲಾ ಸ್ಮರಿಸಿ ಅವಳು ದೆವ್ವವಾಗಿರಬಹುದೇ? ಇವಳಾಗಿರಬಹುದೇ? ಬಸ್ವಿಗೆ ಮಕ್ಕಳ ಮಾಯೆ, ಚೆಲುವಿಗೆ ಗಂಡನ ಪ್ರೀತಿ ಇತ್ಯಾದಿ ಊಹಿಸುತ್ತಿದ್ದರು. ಯಾಕೆಂದರೆ ಈ ಹಳ್ಳಿಯವರ ನಂಬಿಕೆಯ ಪ್ರಕಾರ ಸಾವಿನಲ್ಲಿ ಇರೋದು ಎರಡೇ ರೀತಿ. ಒಂದು ತೃಪ್ತಿಯಿಂದ ಸಾಯೋದು. ಇನ್ನೊಂದು ಅತೃಪ್ತಿಯಿಂದ ಸಾಯೋದು. ಹಾಗೆ ಸತ್ತ ಮೇಲೆ ಕೂಡ ಸತ್ತವರು ಹೋಗಿ ಸೇರುವುದು ಸ್ವರ್ಗವೋ, ವೈಕುಂಠವೋ, ಕೈಲಾಸದಂಥ ಅದ್ದೂರಿಯ ಸ್ಥಳಗಳಲ್ಲ. ತೃಪ್ತಿಯಿಂದ ಸತ್ತವರು ಜೇನುಹುಳಗಳಾಗಿ ತಾಯಿಯ ಕೈಂಕರ್ಯಕ್ಕೆ ನಿಲ್ಲುತ್ತಾರೆ. ಅತೃಪ್ತರು ಭೂತಗಣಗಳಾಗಿ ನರಳುತ್ತಾರೆ. ಬಹುಶಃ ದತ್ತಪ್ಪನಿಗೊಬ್ಬನಿಗೆ ಮಾತ್ರ, ಅದೂ ಅವನು ಬ್ರಾಹ್ಮಣನಾದುದರಿಂದ ವೈಕುಂಠದ ಆಸೆ ಇತ್ತೋ ಏನೊ! +ಇನ್ನು ಬಸವರಾಜುನ ಬಗ್ಗೆಯೂ ಮಾತು ಬಂತು. ಆತ ತಪ್ಪು ಮಾಡಿರಬಹುದೆಂದು ಯಾರೂ ಕಲ್ಪಿಸಲೇ ಇಲ್ಲ. ಆದರೆ ಅವನಿಗೊಂದು ಮಡಿ ಇಲ್ಲ, ಮೈಲಿಗೆಯಿಲ್ಲ. ದೇವರಂತೂ ಮೊದಲೇ ಇಲ್ಲ. ಹೀಗೆ ಜನ ಯೋಚಿಸಿದಷ್ಟೂ ಅದು ಬಗೆಹರಿಯಲಿಲ್ಲ. ಬಗೆಹರಿಯದಷ್ಟೂ ಅವರು ಯೋಚಿಸುವುದನ್ನು ಬಿಡಲಿಲ್ಲ. +ತಾಯಿಯ ಕರಿಮಾಯೆ ಯಾರ್‍ಯಾರ ಬುದ್ಧಿಗೆ ಏನೇನು ಮುಸುಕು ಹೊದಿಸಿತ್ತೋ ಅವರಿಗೆ ತಿಳಿದಂತೆ, ತಿಳಿದಷ್ಟು ಕಾರಣೀಕದ ಅರ್ಥ ಹೇಳಿದರು, ಕೇಳಿದರು. ಲಗಮವ್ವ ಸಾಮಾನ್ಯಳಲ್ಲ, ಕರಿಮಾಯಿಯನ್ನು ಪ್ರತ್ಯಕ್ಷ ಕಂಡು ಎದುರು ಕೂತು ಮಾತಾಡಿಸಿದವಳು. ಕರಿಮಾಯಿ ಅವಳ ನಾಲಿಗೆಯಲ್ಲಿ ಕೂತು ತನ್ನ ಚರಿತ್ರೆ ಹೇಳಿಸಿದ್ದಳು! ಅವಳಿಗೂ ತೋರುಬೆರಳು ಮೂಗಿನ ಮೇಲಿತ್ತು. +ದತ್ತಪ್ಪನ ಪುರಾಣಮತಿಗೆ ಸೋಲಾಯ್ತು. ಅವನ ಚಿಂತಾಮಣಿಯಲ್ಲೂ ಅರ್ಥ ಸಿಗಲಿಲ್ಲ. ಗೌಡನಿಗೆ ಬುದ್ಧಿಯಿತ್ತು, ವಿವೇಕವಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಅನುಭವವಿತ್ತು. ಈ ಯಾವುದರಿಂದಲೂ ಕಾರಣಿಕದ ಸಮೀಪ ಸುಳಿಯಲಾಗಲಿಲ್ಲ. ಆದರೆ ಇಷ್ಟಂತೂ ಖಾತ್ರಿಯಾಗಿತ್ತು. ದೇವಿಯ ಕೈ ಮುರಿದಿತ್ತು. ಕಾರಣಿಕ ಹೀಗಾಗಿತ್ತು. ಆದ್ದರಿಂದ ಊರಿಗೇನೋ ಅನಿಷ್ಟವಿದೆ. ಆದರೆ ಊರ ಗೌಡನಾಗಿ ದೇವಿಯ ಕೈ ಮುರಿದ ಕಾರಣ ಕಂಡುಹಿಡಿಯಲೇ ಬೇಕಾಗಿತ್ತು. ಬಹುಶಃ ಆಗ ಕಾರಣಿಕದ ಅರ್ಥ ತಿಳಿಯಬಹುದು. +ಇದ್ದುದರಲ್ಲೇ ಮನಸ್ಸು ಹಗುರಾದವಳು ದುರ್ಗಿ. ತಾಯಿ ಗುಡಿ ಹೋಗುವಾಗ ಅವಳು ಅಲ್ಲಿರಲಿಲ್ಲ. ಮೈಲಿಗೆ ಮಾಡಿದ ಭಯ ಇತ್ತು. ತಾಯಿ ತನ್ನನ್ನು ಕೆಂಡದಲ್ಲಿ ಹಾಯಿಸುವುದು ಖಂಡಿತ ಎಂದುಕೊಂಡಿದ್ದಳು. +ಅದಕ್ಕೆ ಅವಳು ಬೇಕೆಂದೇ ತಪ್ಪಿಸಿದ್ದಳು. ಆದರೆ ಸರಪಂಚನನ್ನು ಕೆಂಡ ಹಾಯಿಸುವುದೂ ಅಷ್ಟೇ ಖಂಡಿತವೆಂದುಕೊಂಡಿದ್ದಳು. ತಮ್ಮ ಗುದಮುರಿಗೆಯಲ್ಲೇ ತಾಯಿಯ ಕೈ ಮುರಿದಿದ್ದು ಖಾತ್ರಿಯಾಗಿತ್ತು. ಆದರೆ ದೇವೀ ಹಿಡಿದೆಳೆದದ್ದು ಬಸವರಾಜನನ್ನು! ಇದಕ್ಕೇನನ್ನಬೇಕು? ಹೊಯ್ಕೆನ್ನಲೇ, ತಾಯಿಯ ದಯೆ ಎನ್ನಲೇ, ತಾಯಿಗೂ ತಿಳಿಯಲಿಲ್ಲ ಎನ್ನಲೇ? ದಿನಾ ಎಷ್ಟೊಂದು ಒಟಗುಡುವ ಹುಡುಗಿ ಬಾಯಿಬಿಟ್ಟರೆ ಎಲ್ಲಿ ತಾ ಮಾಡಿದ ತಪ್ಪು ಹೊರ ಹೊಮ್ಮುವುದೋ ಎಂದು ಬಾಯಿ ಹೊಲಿದುಕೊಂಡಿದ್ದಳು. +ಸುಂದರಿಯ ಗುಡಿಸಲಲ್ಲಿ ಅಚಾನಕ ಮೀಟಿಂಗ್ ಸೇರಿತ್ತು. ಬಸವರಾಜನಿಗೆ ಅವಮಾನವಾದುದರಿಂದ ಮಾತಾಡಿಸಲಿಕ್ಕೆ ಬಂದವರಂತೆ ಚತುಷ್ಟಯರು ಸೇರಿದ್ದರು. ಅವನನ್ನು ದೇವಿ ಯಾಕೆ ಎಳೆದಳೆಂಬುದರ ಬಗೆಗೆ ಗುಡಸೀಕರನಿಗೇನೋ ಸ್ಪಷ್ಟವಾಗಿತ್ತು: ಬೆಳಗಾವಿಯವ, ನಂಬಿಕೆಯಿಲ್ಲದವ, ಈ ಊರಲ್ಲಿನ್ನೂ ಹೊಂದಿಕೊಳ್ಳದವ ಇತ್ಯಾದಿ. ಅದನ್ನೇ ಆತ ಹೇಳುತ್ತಿದ್ದ. ಚತುಷ್ಟಯರಿಗೆ ಕೆಡುಕೆನಿಸಲಿಲ್ಲ. ಖುಶಿಯೂ ಆಗಿರಲಿಲ್ಲ. ಲೋಕಾರೂಢಿ ಆಡಿದರು. ಎಲ್ಲರೂ ಮಾತಾಡುವುದಾದಮೇಲೆ ಬಸವರಾಜ ಮೆಲ್ಲನೆ ಮಾತು ಬಿಚ್ಚಿದ: ‘ಮುಂದಿನ ಎಲೆಕ್ಷನ್ನ್‌ನಲ್ಲಿ ಸರಪಂಚನಿಗೆ ತನ್ನ ಸಹಾಯ ಬೇಕೇ ಬೇಕು. ಅದಾಗಲೇ ಗೌಡನಿಗೆ ಗೊತ್ತಾಗಿದೆ. ಈಗಿನಿಂದಲೇ ಬಂದೋಬಸ್ತ್ ಮಾಡಿದರೆ ಮುಂದೆ ನಾನೇನು ತಂತ್ರ ಮಾಡಿದರೂ ಜನರ ಮನಸ್ಸಿಗೆ ನಾಟಿರಬಾರದು. ಅದಕ್ಕೇ ದೇವಿಯಿಂದ ಈ ರೀತಿ ಎಳೆಸಿದ್ದು, ಇದಂತೂ ಸ್ಪಷ್ಟವಾಗಿ ಹೇಳಿ ಮಾಡಿಸಿದ ಕೆಲಸ’! +ಎಲ್ಲರಿಗೂ ಈ ತರ್ಕ ಕೂಡಲೇ ಖಾತ್ರಿಯಾಯ್ತು. ಗುಡಸೀಕರನಿಗೆ ಇನ್ನೂ ಹೆಚ್ಚು. ತಮಗೆ ಗೊತ್ತಾಗದಂತೆ ಎಂಥಾ ‘ಟ್ರಿಕ್ಕು’ ಮಾಡಿದ್ದಾರಲ್ಲಾ! ಒಳಗೆ ಸುಂದರಿ ಖಿಖ್ಖ್ ಎಂದು ನಕ್ಕಳು. +ಇವರ ಮಾತುಕತೆಯಲ್ಲಿ ಸುಂದರಿಗೆ ಆಸಕ್ತಿಯಿರಲಿಲ್ಲ. ಒಳಗೆ ಹಾಸಿಗೆಯ ಮೇಲೆ ಬಿದ್ದುಕೊಂಡು ಧೇನಿಸುತ್ತಿದ್ದಳು. ದೇವರೇಸಿ ಎಲ್ಲರನ್ನು ಬಿಟ್ಟು ಬಸವರಾಜೂನನ್ನು ಹಿಡಿದೆಳೆದಿದ್ದು ಅವಳಿಗೂ ಆಶ್ಚರ್ಯವಾಗಿತ್ತು. ಅವನ ಹಿಂದು ಮುಂದನ್ನ ಬಲ್ಲವಳು, ನಿಂಗೂನೊಂದಿಗೆ ಆತ ದುರ್ಗಿಯ ವಿಷಯ ಪ್ರಸ್ತಾಪಿಸಿದ್ದನ್ನ ಕದ್ದು ಕೇಳಿದ್ದಳು. ನಿನ್ನೆ ರಾತ್ರಿಯಷ್ಟೇ ಅವನ ಚಡ್ಡಿಗೆ ಹಸಿ ರಕ್ತ ಅಂಟಿದ್ದನ್ನ ನೋಡಿದ್ದಳು. ಜನ ಮೈಲಿಗೆಯ ಮಾತಾಡಿದ್ದನ್ನು, ದೇವಿಯ ಕೈ ಮುರಿದದ್ದನ್ನು ಕೇಳಿದ್ದಳು. ಆದ್ದರಿಂದ ಅವನಿಗಾದ್ದದ್ದು ಸರಿಯಾದ ಶಿಕ್ಷೆಯೇ. ಆದರೆ ಕಳ್ಳನನ್ನು ಊರಹೊರಗಿನ ದೇವಿ ಪತ್ತೆ ಮಾಡಿದ್ದು ಹೇಗೆ? ಹೀಗೆ ಚಿಂತಿಸುತ್ತಿದ್ದಾಗ ಹೊರಗಡೆ ಬಸವರಾಜು ಎಲೆಕ್ಷನ್‌ಗಾಗಿ ಗೌಡನೇ ಹೀಗೆಲ್ಲ ಮಾಡಿಸಿದ್ದನೆಂದು ಹೇಳುತ್ತಿದ್ದ. ಕೇಳಿ ನಗು ತಡೆಯಲಾಗಲಿಲ್ಲ. ನಗುತ್ತಲೇ ಎದ್ದು ಹೊರಗೆ ಬಂದಳು. ಯಾರನ್ನೂ ಮಾತಾಡಿಸದೆ ಅವರ ಮುಂದಿದ್ದ ಸೆರೆಯ ಬಾಟ್ಲಿ ತಗೊಂಡು ಮೊದಲಿನ ನಗೆಯಲ್ಲಿ ಇನ್ನೊಂದು ಲಯ ಬೆರೆಸಿ ಒಳಕ್ಕೆ ಸುಳಿದಳು. ಬಸವರಾಜು ಗೆಲುವಿನಿಂದ ಸಿಗರೇಟು ಹೊತ್ತಿಸಿದ. +ಅಡ್ಡಮಳೆ +ಶಿವನಿಂಗ ಗೌಡನ ಮಗನೆಂದಲ್ಲ; ಸ್ವಂತ ಛಾತಿ ಇದ್ದವನು. ಯಾರಿಗೊಂದು ಅಂದವನಲ್ಲ, ಆಡಿಸಿಕೊಂಡವನಲ್ಲ, ತಾನುಂಟೋ ತನ್ನ ಹೊಲ ಮನೆಯುಂಟೋ. ಎದುರಾಡಿದವನಲ್ಲ. ಕಣ್ಣೆತ್ತಿ ಒಬ್ಬರ ಮುಖ ದಿಟ್ಟಿಸಿ ನೋಡಿದವನಲ್ಲ, ವಾಚಾಳಿಯಲ್ಲ, ಮುಂಗುಲಿ, ಗುಬ್ಬಿ, ಗಿಳಿಗಳನ್ನು ಹಿಡಿದು ಸಾಕುವುದರಲ್ಲಾಯಿತು. ಹಕ್ಕಿ ಹಾಗೂ ಕಾಡುಪ್ರಾಣಿಗಳಂತೆ ಕೂಗುವುದರಲ್ಲಾಯಿತು; ಮರಹತ್ತಿ ಕೋತಿಗಳಂತೆ ನೆಗೆದಾಡುವುದರಲ್ಲಾಯಿತು; ಅದಕ್ಕೇ ಅವನ ತಾಯಿ ಶಿವಸಾನಿ, ‘ಇವನೆಂದು ಮನುಷ್ಯರೊಳಗೆ ಬೆರೆಯುತ್ತಾನೋ!’ ಎಂದುಕೊಳ್ಳುತ್ತಿದ್ದಳು. ಹೆಂಗಸರನ್ನು ಕಂಡಾಗಲಂತೂ ಹುಡುಗ ಆಮೆಯ ಥರ ಒಳಗೊಳಗೆ ಇಂಗಿ ಸಂಕೋಚಗೊಳ್ಳುತ್ತಿದ್ದ. ಕೆರೆಯಲ್ಲಿ ಮುಳುಗುತ್ತಿದ್ದ ಸುಂದರಿಯನ್ನು ಬದುಕಿಸಿದಾಗ ಕೆಲವರು ಗುಡಸೀಕರನ ಮೇಲಿನ ಸಿಟ್ಟಿನಿಂದ ಹಾಗೆ ಮಾಡಬಾರದಿತ್ತು ಎಂದಿದ್ದರು. ಆದರೆ ದತ್ತಪ್ಪ ಭೇಶ್ ಅಂದಿದ್ದ. ಎಷ್ಟೆಂದರೂ ‘ಗೌಡನ ಬೀಜ’, ಎಂದಿದ್ದಳು ಲಗಮವ್ವ. +ತನ್ನ ಜೀವ ಉಳಿಸಿದ ಧೀರ ಬಾಲಕನನ್ನು ಸುಂದರಿ ಆಗಾಗ ಧ್ಯಾನಿಸುತ್ತಿದ್ದಳು. ಗುಡಸೀಕರನ ತೋಟದ ಕಡೆ ಹೋದರೆ, ಪಕ್ಕದಲ್ಲೇ ಅವರ ತೋಟ, ಅಲ್ಲಿರುತ್ತಿರಲಿಲ್ಲ. ಊರಲ್ಲಿ ಹಾದಾಡುವಾಗಲೂ, ನೀರು ತರುವಾಗಲೂ, ಯಾವಾಗಲೂ ಹೊರಬಿದ್ದಾಗಲೂ ಹುಡುಕಿದ್ದಳು. ಊರ ಬಾಲೆಯರಿಗೇ ಅಪರೂಪವಾದ ಹುಡುಗ ಇವಳಿಗೆಲ್ಲಿ ಸಿಕ್ಕಾನು? ಸುದ್ದಿಯವನಲ್ಲ, ಬೇಲಿ ಜಿಗಿದವನಲ್ಲ, ತೋರುಬೆರಳಿಗೆ ಗುರಿಯಾದವನಲ್ಲ, ಅವ್ವಾ ಎಂಥಾ ಗಂಭೀರ ಇದ್ದಿದ್ದಾನ! ಎಂದುಕೊಂಡಿದ್ದಳು. ಇನ್ನೇನು ಬೇಡ, ಒಮ್ಮೆ ಸಿಕ್ಕರೆ, ‘ಎಪ್ಪಾ ಉಪಕಾರಾತೊ’ ಎಂದಾದರೂ ತನ್ನ ಕೃತಜ್ಞತೆ ಹೇಳುವ ಮನಸ್ಸಾಗಿತ್ತು. ಆ ಅವಕಾಶವೂ ಸಿಕ್ಕಿತು. +ಒಂದು ದಿನ ಇನ್ನೂ ಇಳಿಹೊತ್ತಾಗಿರಲಿಲ್ಲ. ಆಕಾಶದಲ್ಲಿ ಅಡ್ಡಮಳೆಯ ದಟ್ಟ ಮಳೆಯ ಮೋಡಗಳು ಕಟ್ಟಿ ಸೂರ್ಯನನ್ನು ಮುಚ್ಚಿ, ಗುಡ್ಡದೋರೆಯಲ್ಲಿ ನೆಲ ಕಂಡು ಹುಬ್ಬು ಹಾರಿಸುವಂತೆ ಮಿಂಚುತ್ತಿದ್ದವು. ಕೊಯ್ಲಿಗೆ ಸಿದ್ಧವಾಗಿ ಬೆಳೆದ ಮಾಗಿ ಹಾಗೇ ನಿಂತಿತ್ತು. ಇನ್ನೇನು ನಾಕಾರು ದಿನಗಳಲ್ಲಿ ದೀಪಾವಳಿ ಹಬ್ಬವಾಗಿ ಬೆಳೆ ಕೈಗೆ ಬರಬೇಕಷ್ಟೆ. ಈಗ ಮಳೆಯಾದರೆ ಕೈಗೆ ಬಂದೂ ಬಾರದ ಹಾಗೆ. ರೈತರು ಹಿಂಡುಗಟ್ಟಿ ಹೊಲಗಳಿಗೆ ಹೋಗುವುದು ಈಗ ಕಡಿಮೆ. ಹೋದರೂ ಒಬ್ಬಿಬ್ಬರು ಮೇವಿಗೆ, ಕಾಯಿಪಲ್ಲೆ, ದನ ಮೇಯಿಸಲಿಕ್ಕೆ ಹೋಗಬೇಕಷ್ಟೆ. ಮೋಡ ಕಟ್ಟಿದೊಡನೆ ರೈತರು ಹುಬ್ಬಿಗೆ ಕೈಹಚ್ಚಿ ಆಕಾಶದ ಕಡೆ ದೈನಾಸದಿಂದ ನೋಡಿದರು. ತಂಗಾಳಿ ಸೂಸತೊಡಗಿತ್ತು. ಶೀಗೀ ಹುಣ್ಣಿವೆಯ ಬುಟ್ಟಿಯೊಳಗಿಂದ ಬರುವ ಚಳಿಗಾಳಿ ಇದಾಗಿರಲಿಲ್ಲ. ಮಳೆ ಬರುವುದೇ ಖಾತ್ರಿಯಾಗಿ ಹಳಹಳಿಸುತ್ತ ರೈತರು ದನ ಬಿಚ್ಚಿಕೊಂಡು ಊರ ಕಡೆ ತೆರೆಳಿದರು. ಗುಡಿಸಲು ಕಟ್ಟಿದ್ದವರು ಅಲ್ಲೇ ಉಳಿದರು. ಈ ಅಡ್ಡಮಳೆಯಿಂದಾಗಿ ಕರಿಮಾಯಿಯ ಕೋಪ ಸ್ಪಷ್ಟವಾಗಿತ್ತು. ತೋಟದ ಗುಡಿಸಲಲ್ಲಿ ಶಿವನಿಂಗ ಒಬ್ಬನೇ ನಾರಿನಿಂದ ಹುರಿ ಹೊಸೆಯುತ್ತ ಕೂತಿದ್ದ. ಪಕ್ಕದ ಗುಡಸೀಕರನ ತೋಟದಲ್ಲಿ ಚಿಮಣಾ ಇದ್ದಂತಿತ್ತು. ಸಿನಿಮಾ ಹಾಡು ಗೊಣಗುತ್ತಿದ್ದಳೆಂದು ತೋರುತ್ತದೆ. ಅಥವಾ ಅದು ಚಿಮಣಾಳ ಹಾಡೇ ಆಗಬೇಕಿರಲಿಲ್ಲ. ಯಾಕೆಂದರೆ ಬಸವರಾಜೂನ ರೇಡಿಯೋ ಕೂಡ ಹಾಡುತ್ತಿದ್ದುದು ಹಾಗೇ, ಇದ್ದಕ್ಕಿದ್ದಂತೆ ಹಾಡು ನಿಂತಿತು. ಹಾಡಿದರೂ, ಹಾಡದಿದ್ದರೂ ಅದರಿಂದ ಇವನಿಗೇನಾಗಬೇಕಾಗಿದೆ? ಹೊಸೆಯುತ್ತ ಕೂತ. +ಅಷ್ಟರಲ್ಲಿ ಸಮೀಪ ನಿಂತು ಯಾರೋ ತನ್ನನ್ನು ಗಮನಿಸುತ್ತಿದ್ದಾರೆನಿಸಿತು. ಕತ್ತೆತ್ತಿ ನೋಡಿದ. ಎದುರಿಗೆ ಚಿಮಣಾ ನಿಂತಿದ್ದಳು. ಹೊಯ್ಕಾಯಿತು. ಗಂಟಲೊಣಗಿ ಎದೆ ಧಸ್ಸೆಂದಿತು. ಬಂದವಳು ಯಾರೇ ಆಗಿರಲಿ ತನ್ನ ಗುಡಿಸಲಿಗೆ ಬಂದಿರೋಣದಿಂದ ಮಾತಾಡಿಸಬೇಕಾದವನು ತಾನಲ್ಲವೆ? ಹಿಡಿದ ಹುರಿ ಕೈಯಲ್ಲೇ, ಮೂಡಿದ ಮಾತು ಗಂಟಲಲ್ಲೇ, ಹೊಯ್ಕಿನ ಭಂಗಿಯಲ್ಲೇ ಹಾಗೇ ಕೂತ. ಹುಡುಗನ ಬೆರಗಿಗೆ ಚಿಮಣಾ ಕುಲುಕುಲು ನಕ್ಕಳು. +“ಒಬ್ಬನಽ ಏನ ಮಾಡಾಕ ಹತ್ತೀದಿ?” ಅಂದಳು. ಶಿವನಿಂಗ ಮಾತಾಡಲಿಲ್ಲ. ಕೈ ಮುಂದೆ ಮಾಡಿಹುರಿ ತೋರಿಸಿದ ಅಷ್ಟೆ, “ಅಲೀ ನೋಡೋಣು” ಎನ್ನುತ್ತ ಅವನ ಬಳಿಗೆ ಹೋದಳು. ತಕ್ಷಣ ಹಾವು ಕಂಡಂತೆ ದೂರ ಸಿಡಿದ. ಚಿಮಣಾ ಖಿಖ್ಖೆಂದು ನಕ್ಕಳು. ಎಂಥಾ ಹುಚ್ಚು ಹುಡುಗ ಎಂದುಕೊಂಡಳು. ಆ ಹುಚ್ಚುತನ ಸೂಜಿಗಲ್ಲಿನಂತೆ ಅವಳನ್ನೆಳೆಯಿತು. ಹುಡುಗ ತಬ್ಬಿಬ್ಬಾಗಿ ಇನ್ನೂ ದೂರ ನಿಂತಿದ್ದ. ಇವನನ್ನು ಮುಟ್ಟುವುದಿರಲಿ, ಮಾತಿಗೆಳೆಯುವುದೂ ಕಷ್ಟ. ಅವಳು ನಿಂತಷ್ಟೂ ಇವನ ಪೆದ್ದುತನ ಹೆಚ್ಚಿತು. ಪೆದ್ದುತನ ಕಂಡಷ್ಟೂ ಇವಳ ಉಮೇದಿ ಉಕ್ಕಿತು. +“ಅಲ್ಲಾ, ಹೊಲದಾಗ ಸೇಂಗಾ ಇದ್ದರ ಸುಟ್ಟುಕೊಡಬಾರದ?” ಎಂದಳು. ಶಿವನಿಂಗ ತೋಟದ ಅಂಚಿನ ಕಡೆ ಕೈಮಾಡಿ ತೋರಿಸಿ ಈಗಲೇ ಸುಟ್ಟುಕೊಡಬೇಕೆಂದು ಉತ್ಸಾಹದಿಂದ ಆ ಕಡೆ ನಡೆದ. ಚಿಮಣಾ ಅವನ ಹಿಂದಿನಿಂದಲೇ ನಡೆದಳು. ಈಗ ಓಡತೊಡಗಿದ. ಚಿಮಣಾ ಒಂದು ಹೆಜ್ಜೆ ಹಾಕಿದರೆ, ಇವನು ಹತ್ತು ಹೆಜ್ಜೆ ಧಾವಿಸುತ್ತಿದ್ದ. ತೋಟಕ್ಕಂಟಿ ಹಳ್ಳ, ಹಳ್ಳದಾಚೆ ಜೋಳದ ಹೊಲ, ಹೊಲದಂಚಿಗೆ ಸೇಂಗಾ ಬೆಳೆ-ಸುಮಾರು ಹತ್ತು ಕೂರಿಗೆ ನೆಲವನ್ನು ಹೀಗೆ ಕ್ರಮಿಸಿದರು. +ಶಿವನಿಂಗ ಪಸಪಸ ಹತ್ತು ಬಳ್ಳಿ ಕಿತ್ತ. ಕಾಯಿ ಹರಿದ. ಓಡಿಹೋಗಿ ಕೊರೆ ಬೇಲಿ ತಂದ, ಕೂಡಿಟ್ಟು ಮೇಲೆ ಸೇಂಗಾ ಸುರಿದ. ಬೆಂಕಿಗಾಗಿ ಸುತ್ತ ನೋಡಿದ. ದೂರ ಮರಡಿಯ ಓರೆಯಲ್ಲಿ ಹೊಗೆ ಹಾಯುತ್ತಿತ್ತು. ಓಡಿಹೋದ. ಹುಡುಗನ ಕಾಲಲ್ಲಿ ಕುದುರೆಯ ಗೆರೆಯಿದ್ದವೋ ಏನೋ! ನೋಡು ನೋಡುವುದರಲ್ಲಿ ಗುರಿಮುಟ್ಟಿದ. ಚಕಪಕ ಮಿಂಚಿನ ವೇಗದಲ್ಲಿ ಸಂಚರಿಸಿ ಕುಳ್ಳು ಬೆಂಕಿ ತಂದು ಹಚ್ಚಿದ. ದೂರ ಕೂತುಕೊಂಡು ಇವನನ್ನೇ ನೋಡುತ್ತಿದ್ದ ಚಿಮಣಾ “ಅದ್ಯಾಕೆ ಅಲ್ಲಿ ಬೆಂಕಿ?” ಎಂದು ಮರಡಿಯ ಕಡೆ ಕೈಮಾಡಿ ಕೇಳಿದಳು. ಕೇಳಿಸಿತೋ, ಕೇಳಿಸಿಲ್ಲವೋ ಎಂಬಂತೆ “ಲಗಮವ್ವನ ಸೆರೇದ ಭಟ್ಟಿ” ಅಂದ. ಸೆರೆ ಅಂದೊಡನೆ ಅವಳ ಬಾಯಿ ನೀರೂರಿತು. +“ಹೋಗಿ ಸೊಲಪ ಕುಡದ ಬರೋಣು ಬಾರಲಾ” ಎಂದಳು. ಇಷ್ಟು ಕೇಳಿದ್ದೇ ಯಾಕೆಂಬುದಿಲ್ಲ, ಏನೆಂಬುದಿಲ್ಲ. ಶಿವನಿಂಗ ಆ ಕಡೆ ಓಡತೊಡಗಿದ. ಇವಳಿಗಾಶ್ಚರ್ಯವಾಯ್ತು. ಅಷ್ಟು ದೂರ ಹೋದ ಮೇಲೆ ಸೆರೆ ತರಲಿಕ್ಕೆ ಓಡಿದನೆಂದು ಗೊತ್ತಾಯ್ತು. ಇವಳೂ ಬೆನ್ನುಹತ್ತಿದಳು. ಸಕಾಲಕ್ಕೆ ಇವಳು ಅಲ್ಲಿ ಮುಟ್ಟದಿದ್ದರೆ ಕಾಯ್ದ ಇಡೀ ಹರವಿಯನ್ನೇ ಹೊತ್ತು ತರುತ್ತಿದ್ದನೋ ಏನೋ! +ಮೆಳೆಯ ಮರೆಯಲ್ಲಿ ತಗ್ಗಿನಲ್ಲೊಂದು ಹರವಿಯಿಟ್ಟು ಬೆಂಕಿ ಹಚ್ಚಲಾಗಿತ್ತು. ಹರವಿಯ ಮೇಲೆ ದೊಡ್ಡ ಹರಿವಾಣ ಮುಚ್ಚಲಾಗಿತ್ತು. ಅದು ಲಗಮವ್ವನ ಸೆರೇದ ಭಟ್ಟಿ. ಹೇಳಿಕೊಂಡರಾಯ್ತೆಂದು ಹರವಿ ಬಗ್ಗಿಸಿ ಹರಿವಾಣ ತುಂಬಿದ. ಭಕ್ತಿಯಿಂದ ಸುಂದರಿಗೆ ಕೊಟ್ಟ. ಹದವೇರಿ ಸುಮಾರು ಹೊತಾಗಿದ್ದರಿಂದ, ಅಪರೂಪ ರುಚಿಯ ಉಗುರು ಬೆಚ್ಚಗಿನ ದೇಸೀ ಸೆರೆ ನಾಲಗೆಗೆ ಆಪ್ಯಾಯಮಾನವಾಗಿ ಗಟಗಟ ಹೀರಿದಳು. ಹೀರಿ ಮತ್ತೆ ಒಡ್ಡಿದಳು. ಮತ್ತೆ ತುಂಬಿದ. ಮತ್ತೂ ತುಂಬಿದ. ಮೂರಕ್ಕೆ ಡರ್ರ್ ಎಂದು ಗಂಡಸಿನಂತೆ ಡರಿಕೆ ತೇಗಿ ನೀ ಕುಡಿ ಎಂದು ಸನ್ನೆ ಮಾಡಿದಳು. ಒಲ್ಲೆನೆಂದ. +ಸೇಂಗಾ ಸುಟ್ಟಲ್ಲಿಗೆ ಬಂದು ಗುಡುಗುಟ್ಟುವ ಮೋಡವೆನ್ನದೆ. ಎದುರಿಗಿನ ಹುಡುಗನನ್ನು ನೋಡದೆ, ಎರಡೂ ಕಾಲು ಆರಹಾಕಿದಂತಿಟ್ಟು, ಅಂದರೆ ಕರಿಮಾಯಿಯ ಭಂಗಿಯಲ್ಲಿ ಕೂತು, ಪಚಪಚಾ ಸೇಂಗಾ ತಿಂದಳು. ಶಿವನಿಂಗನ ನೆನಪಾಯ್ತು. ಅವನ ಕಡೆ ತೇಲುಗಣ್ಣಾಡಿಸಿದಳು. ತಿನ್ನದೆ, ತಿನ್ನುವುದನ್ನೇ ನೋಡುತ್ತ ಕೂತಿದ್ದವನು ಈಗ ನಾಚಿ ಮುಖ ಕೆಳಗೆ ಹಾಕಿದ. ಇನ್ನೇನು ನಾಳಿಯೋ, ನಾಡಿದ್ದೋ ಪ್ರಾಯ ಬರಬೇಕು. ಎಸಳು ಎಸಳಾಗಿ ಜಾತ್ಯಾ ಹೋರಿಯಂತೆ ಬೆಳೆದಿದ್ದ. ಗೆರೆ ಬರೆದಂತೆ ಚಿಗುರುಮೀಸೆ; ಈಗಷ್ಟೇ ಒಡೆದ ಹಾಗೆ. ಕೆನ್ನೆ ಮುಖ ಮಿರಿಮಿರಿ ಮಿಂಚಿ ಗೌಡನ ಪ್ರಾಯ ನೆನಪಿಸುತ್ತಿದ್ದ. ಇಷ್ಟಗಲ ಹೊಳೆ ಹೊಳೆವ ಕದ್ದುನೋಡುವ ಬೆರಗಿನ ಕಣ್ಣಿನ ಚೆಲುವನನ್ನು ನೋಡಿ ನಕ್ಕು ಎರಡೂ ಕೈ ಮೇಲೆತ್ತಿ ಹಾ ಎಂದು ಆಕಳಿಸಿ ಮೇಲೆದ್ದಳು. ಮಳೆ ಸಣ್ಣಾಗಿ ಹನಿಯತೊಡಗಿತ್ತು. +ಶಿವನಿಂಗ ಮುಂದೆ ಮುಂದೆ ನಡೆದ. ಇವಳಿಗೋ ಸಮತೋಲ ಉಳಿಯಲೊಲ್ಲದು, ನಡಿಯಲಾರೆ, ನಿಲ್ಲಲಾರೆ; ತೂರಾಡುತ್ತ, ತಪ್ಪು ಹೆಜ್ಜೆಯಿಡುತ್ತ ನಡೆದಳು. ಅಷ್ಟು ದೂರ ನಡೆಯುತ್ತಿದ್ದವನು ಬಿದ್ದಾಳೆಂದು ಮತ್ತೆ ಹಿಂದೆ ಬರುತ್ತಿದ್ದ, ನಿಲ್ಲುತ್ತಿದ್ದ. ದೊಡ್ಡ ಹನಿಯ ಮಳೆ ಜೋರಾಗಿ ಸುರಿಯತೊಡಗಿತು. ಹುಡುಗ ಓಡುತ್ತಿದ್ದ, ಹಿಂದಿರುಗಿ ನಿಲ್ಲುತ್ತಿದ್ದ. ಇಬ್ಬರೂ ಆಗಲೇ ಒದ್ದೆಯಾಗಿದ್ದರು. +ಸೇಂಗಾ ಬೆಳೆ ದಾಟುವುದು ಕಷ್ಟವಾಗಲಿಲ್ಲ. ಜೋಳದ ಬೆಳೆಯಲ್ಲಿ ಹೊಕ್ಕಾಗ ಸಮತೋಲ ಹಿಡಿಯಲಾರದೆ ಬೆಳೆಯ ಮೇಲೆ ಬೀಳುತ್ತ ಏಳುತ್ತ ನಡೆದಳು. ಮೊದಲೇ ಎರೇ ನೆಲ, ನೀರು ಹರಿದಾಡಿ ಕೆಸರು ಜಾರಿಕೆಯಾಗಿತ್ತು. ಸರ್ರನೆ ಜಾರಿ, “ಎವ್ವಾ” ಎಂದು ಬಿದ್ದಳು. ಶಿವನಿಂಗ ಓಡಿಬಂದು ದೂರದಲ್ಲೇ ನಿಂತ. ಸೀರೆ ಕೆಸರಾಗಿತ್ತು. ಸಾವರಿಸಿಕೊಂಡೆದ್ದಳು. ಮೇಲೆ ಮಳೆ ಸುರಿಯುತ್ತಿತ್ತು. ಒಳಗೆ ಹೊಟ್ಟೆಯಲ್ಲಿ ಸೆರೆ ನೆತ್ತಿಗೇರಿ ತುಳುಕುತ್ತಿತ್ತು. ಹಾಗೇ ನೆತ್ತಿಯ ಮೇಲೆ ಎರಡೂ ಕೈ ಹೊತ್ತು ತಪ್ಪು ಹೆಜ್ಜೆ ಹಾಕುತ್ತಲೇ “ಎಲ್ಲಿ ಕಾಣೆಲ್ಲಿ ಕಾಣೆ” ಎಂದು ಹಾಡು ತೊದಲುತ್ತಲೇ ಕುಣಿಯತೊಡಗಿದಳು. ಸುತ್ತಲ ಬೆಳೆ ಅವಳ ಕುಣಿತದ ಧಡಪಡಿಕೆಗೆ ಅತ್ತಿತ್ತ ವಾಲಿತು. ಎದೆ ಸೆರಗು ಜಾರಿ ಸೊಂಟಕ್ಕಂಟಿದ ಸೀರೆ ಇನ್ನೇನು ಕಳಚಲಿತ್ತು. ಶಿವನಿಂಗ ಗಾಬರಿಯಾಗಿ ಹಿಂದಿರುಗಿ ಗುಡಿಸಲ ಕಡೆ ಓಡುವುದಕ್ಕೆ ಒಂದೆರಡು ಹೆಜ್ಜೆ ಧಾಪುಗಾಲು ಹಾಕಿದ್ದ. ಅಷ್ಟರಲ್ಲೇ ಸುಂದರಿ ಓಡಿಹೋಗಿ ಜೋರಿನಿಂದ ಅವನ ಸೊಂಟದ ಮೇಲೆ ಒದ್ದಳು. ಹುಡುಗ ಅನಿರೀಕ್ಷಿತ ಒದೆಗೆ ತತ್ತರಿಸಿ ಬಕ್ಕಬರಲೆ ಬೆನ್ನುಮೇಲಾಗಿ ಬಿದ್ದು ಕೆಸರು ಮುಕ್ಕಿದ. ಗಕ್ಕನೆ ಅಂಗಾತ ಹೊರಳಿ ಚಿಮಣಾಳನ್ನು ನೋಡಿ ಅವಾಕ್ಕಾದ! ಸೀರೆ ಜಾರಿತ್ತು. ತುಂಬಿಕೊಂಡ ಕೆಂಪು ಕೆಂಪಾದ ತೊಡೆಯ, ಒತ್ತೊತ್ತಿ ತಿಟಗುಡುವ ಕೆಂಪು ಚಡ್ಡಿಯ ತಳ್ಳಿಕೊಂಡು ಉಬ್ಬಿದ ದುಂಡುದುಂಡಾದ ನಿತಂಬ. ಸಣ್ಣ ನಡು, ಬಿಗಿದ ಕುಬಸದ ಕಟ್ಟಿಗೊಗ್ಗದ ಉಬ್ಬಿದೆದೆ- ಹೂನಗೆ ನಗುತ್ತ ತೊದಲಿ ಹಾಡುತ್ತ ತೇಲುಗಣ್ಣು ಮೇಲುಗಣ್ಣಾಗಿ ಕುಣಿಯುತ್ತಿದ್ದಳು. ಮೈಯಲ್ಲಿ ಬೆಂಕಿ ಹರಿದಾಡಿ ಸೊಂಟದಿಕ್ಕಟ್ಟಿನ ಹುರಿ ಬಿಗಿದು ಅಳ್ಳಳ್ಳಾಯ ಹೋರಿ ಹುಡುಗ ಹೊಸ ಸಡಗರಕ್ಕೆ ತಳ್ಳಂಕಗೊಂಡ. ಕಣ್ಣಿ ಕಿತ್ತಂತೆ ಒಂದೆರಡು ಬಾರಿ ಹುಕಿಯಿಂದುಕ್ಕುವಷ್ಟರಲ್ಲಿ ಚಿಮಣಾ ಅವನೆದೆಯ ಮೇಲೆ ಕೆಸರುಗಾಲೂರಿ ಹೊಸಕುವಾಗ ಜೋಲಿತಪ್ಪಿ ಬಿದ್ದಳು. ಹುಡುಗ ಏಳಬೇಕೆಂದಿದ್ದ. ಗಪ್ಪನೆ ತೆಕ್ಕೆ ಹಾದಳು. ಗಿಣಿ ಜೋಳದ ತೆನೆಗೆ ಜೋತುಬಿದ್ದು ತಿನ್ನುವಂತೆ ಎಳೆದೆಳೆದು ಕೆನ್ನೆ ಕಚ್ಚಿದಳು. ಇಬ್ಬರ ರಭಸಕ್ಕೆ ಸುತ್ತಲ ಜೋಳದ ಬೆಳೆ ಕಡಕಡಕಡ ಮುರಿಯಿತು. +ಮೋಡ ಒಡೆದವರಂತೆ ಖಡ್‌ಖಡಲ್ ಗರ್ಜಿಸಿ, ಘರ್ಷಿಸಿ ಗುಡುಗಿ ಮಳೆ ಬಿತ್ತು. ಇಡೀ ಮುಗಿಲು ಹಾಗೇ ಹರಿದುಬಿದ್ದಂತೆ ಧೋಧೋಧೋ ಒಂದೇ ಸವನೆ ನೀರು ಸುರಿಯಿತು. ನೀರು ಬೇರಿನ ಸಂದಿಗೊಂದಿಗಿಳಿದು ಹರಿದಾಡಿತು. ರಭಸ ತಡೆಯದೆ ಬೆಳೆ ಚಡಪಡಿಸಿ ಒಲೆದಾಡಿತು. ಬೆಳೆಗೆ ಏನಾದರಾಗಲಿ ಮುಗಿಲು ಮೋಡ ಖಾಲಿಯಾಗುವ ತನಕ ಸುರಿಯಿತು. ನೆಲ ಕಣ್ಣುಮುಚ್ಚುವಷ್ಟು ತೃಪ್ತವಾಯಿತು. +ಖಬರು ಬಂದಾಗ ಸುಂದರಿ ಬಾಡಿದ ಎಳೆಬಾಳೆಯ ಸೊಪ್ಪಾಗಿದ್ದಳು. ಸೊಂಟದ ಹುರಿ ಸಡಿಲಾಗಿ ಸಣ್ಣಗೆ ನೋಯುತ್ತಿತ್ತು. ತೇಗುಸಿರು ನಿಂತಿರಲಿಲ್ಲ. ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಹಾಗೆ ಮೈತುಂಬ ಗಾಯಗಳಾಗಿದ್ದವು. ಎದ್ದು ಕೆಸರು ಮೆತ್ತಿದ ಸೀರೆಯನ್ನೇ ಸುತ್ತಿಕೊಂಡಳು. ಶಿವನಿಂಗ ತಪ್ಪುಮಾಡಿದವನಂತೆ ಅಳುಮುಖ ಮಾಡಿಕೊಂಡು ಮುದ್ದೆಯಾಗಿ ದೂರ ಕೂತಿದ್ದ. ಕೆಳದುಟಿ ನೆತ್ತರಾಡಿತ್ತು. ಕೆನ್ನೆ, ಕತ್ತಿನ ಮೇಲೆ ಹಲ್ಲಿನ ಗುರುತು ಮೂಡಿದ್ದವು. ಬೆರಗಿನ ಎಳೆತನದಲ್ಲೊಬ್ಬ ಗಡುಸು ಗಂಡಸನ್ನು ಸೃಷ್ಟಿಸಿದ ತೃಪ್ತಿಯಿಂದ ಮಾತಾಡದೆ ಮುಂದೆ ನಡೆದಳು. ಈತ ಮಂದಿ ನೋಡ್ಯಾರೆಂದು ಬಾಗಿ ಬಾಗಿ ಬೆನ್ನುಹತ್ತಿದ. +ಜೋಳದ ಬೆಳೆ ದಾಟಿ ಬಂದರು. ಹಳ್ಳ ತುಂಬಿ ಹರಿಯುತ್ತಿತ್ತು. ಶಿವನಿಂಗ ಮುಂದಾಗಿ ದಾಟಿದ. ಎದೆಮಟ ನೀರಿತ್ತು, ಸೆಳೆವಿತ್ತು. ಇವಳಿನ್ನೂ ಈಚೆ ದಡದಲ್ಲೇ ಇದ್ದಳು. ಅವಳಿಗೂ ಭಯ. ಕುಡಿದ ಮತ್ತಿನ್ನೂ ಇಳಿದಿರಲಿಲ್ಲ. ನೆತ್ತಿ ಭಾರವಾಗಿತ್ತು. ಕೈ ಹಿಡಿದು ದಾಟಿಸೆಂಬಂತೆ ಸನ್ನೆ ಮಾಡಿದಳು. ಶಿವನಿಂಗ ಸುಮ್ಮನೇ ನಿಂತ. “ಯಾರ ಮುಂದ ಹೇಳಾಣಿಲ್ಲ ಬಾ” ಎಂದಳು. ಸುತ್ತ ಮಂದಿ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಬಂದ. ಕೈಹಿಡಿದ. ಹೌಹಾರಿದಂತೆ ಅಭಿನಯಿಸಿ “ಎತ್ತಿಕೊಂಡು ದಾಟಿಸಲ್ಲಾ” ಎನ್ನುತ್ತ ತಾನೇ ಅವನನ್ನು ಬಗ್ಗಿಸಿ ಹೆಗಲ ಮೇಲೆ ಕೂತಳು. ಅವಸರವಾಗಿಯೇ ದಾಟತೊಡಗಿದ. ಸುಂದರಿ ಅವನ ಕೆನ್ನೆಯ ಮೇಲಿನ ಹಲ್ಲಿನ ಗುರುತುಗಳನ್ನು ನೇವರಿಸುತ್ತಿದ್ದಳು. ಇನ್ನೇನು ದಾಟಲಿದ್ದವರು ಅಷ್ಟರಲ್ಲಿ ಯಾರೋ ದೂರದಲ್ಲಿ “ಏ ಶಿವನಿಂಗಾ” ಎಂದು ಕರೆದದ್ದು ಕೇಳಿತು. “ಎಪ್ಪಾ ಯಾರೋ ಬಂದ್ರೋ” ಎಂದವನೇ ಅವಳನ್ನಲ್ಲೇ ಚೆಲ್ಲಿ ಚೆಂಗನೇ ಹಾರಿ ಕಬ್ಬಿನ ತೋಟದಲ್ಲಿ ಮಾಯವಾದ. +ಕಳ್ಳ ಬಸುರು +ಮಾರನೇ ದಿನ ಹೊಲದಲ್ಲಿ ವಿಚಿತ್ರ ಚಟುವಟಿಕೆ ಕಂಡು ಬಂತು. ನಿನ್ನಿನ ಮಳೆಯ ಪ್ರಚಂಡ ಹೊಡೆತ ತಾಳದೆ ಜೋಳ ಭತ್ತಗಳು ಅಲ್ಲಲ್ಲಿ ಮಲಗಿದ್ದವು. ಅವನ್ನೆತ್ತಿ ಕಟ್ಟುತ್ತಿದ್ದರು. ಈಗ ಸೇಂಗಾ ಬೆಳೆ ಹಾಗೇ ಬಿಟ್ಟರೆ ಇಳಿದ ಕಾಯಿ ಮೊಳಕೆಯೊಡೆಯುವ ಸಂಭವವಿತ್ತು. ಕೆಲವೆಡೆ ಹೊರೆಹೊರೆ ಬಳ್ಳಿ ಕೊಚ್ಚಿಹೋಗಿತ್ತು. ಹೊಲ ಹೊಲದ ಅರ್ಧರ್ಧ ಬೆಳೆ ನೀರಲ್ಲೇ ನಿಂತಿದ್ದವು. ಸಜ್ಜೆಯ ತೆನೆ ಬಿಡಿಸಿಕೊಳ್ಳುತ್ತಿದ್ದರು. ಅಡಗಾಳು ಕೊಯ್ದುಕೊಂಡರು. ಜೋಳದ ಸ್ಥಿತಿ ಮಾತ್ರ ಅನಿಶ್ಚಿತವಾಗೇ ಇತ್ತು. +ಗುಡಿಸಲಲ್ಲಿ ಬಸವರಾಜು ಮಾತ್ರ ಸುಂದರಿ ಹೇಳಿದ್ದನ್ನು ಕೇಳಿ ತಬ್ಬಿಬ್ಬಾಗಿ ಕುಳಿತಿದ್ದ. ಅವಳು ಬಸಿರಾಗಿದ್ದಳು. ಗುಡಸೀಕರನಿಗೆ ಈ ಸುದ್ದಿ ಗೊತ್ತಾದರೆ ಅವನು ಸಿಡಿಯುವ ಸಂಭವವಿತ್ತು. ಎಲೆಕ್ಷನ್ ಸಮಯದಲ್ಲೇ ಹೀಗಾದರೆ ಹೇಗೆ? ವಿರೋಧಿಗಳು ಇದನ್ನು ಉಪಯೋಗಿಸಿಕೊಳ್ಳಬಹುದು. ಗುಡಸೀಕರ ಇಂಥಾದ್ದಕ್ಕೆ ಎದೆಗೊಡುವವನಲ್ಲ. ಒಳಗೊಳಗೇ ಪುಕ್ಕಲು ಸ್ವಭಾವದವ. ಈಗಿದ್ದ ಹಾಗೆ ಚುನಾವಣೆಯ ಬಗ್ಗೆ ಅವನಲ್ಲಿ ಭಾರೀ ಉತ್ಸಾಹವೇನೂ ಇರಲಿಲ್ಲ. ಗೌಡನ ಅನ್ಯಾಯಗಳನ್ನು ನೆನಪಿಸಿ ಸೇಡಿಗಾಗಿ ಅವನ ಮನಸ್ಸು ಮಸೆಯುತ್ತ, ಎಲೆಕ್ಷನ್ ಎನ್ನುತ್ತ ತಮ್ಮ ಅಗತ್ಯವನ್ನು ಮನದಟ್ಟು ಮಾಡಿಕೊಡುತ್ತ ಮತ್ತೆ ಮತ್ತೆ ಇವರೇ ಪಂಪು ಹೊಡೆಯಬೇಕಾಗಿತ್ತು. ಅಲ್ಲದೆ ಸುಂದರಿಯ ಮೈ ಬಗ್ಗೆ ಮೊದಲಿಗಿದ್ದ ಆಕರ್ಷಣೆ ಈಗ ಅವನಿಗಿರಲಿಲ್ಲ. +ಸುಂದರಿ ತುಂಬ ತಡವಾಗಿ ಸುದ್ದಿ ಹೇಳಿದ್ದಳು. ಉಳಿದವರಿಗೆ ಗೊತ್ತಾಗುವ ಮುನ್ನವೇ ಈ ಮುಳ್ಳು ತೆಗೆಯಬೇಕಾಗಿತ್ತು. ಹೇಗೆಂದು ಹೊಳೆಯಲೊಲ್ಲದು. ಗುಡಸೀಕರನ ಸ್ವಭಾವ ಅವಳು ಅರಿಯದವಳಲ್ಲ. ಅರಳಿಗಂಟಿನ ಮೇಲೆ ಲಾಗ ಹೊಡೆದವ ಬಸಿರೆಂದರೆ ಮಾರುದ್ದ ಹಾರುವುದರಲ್ಲಿ ಅನುಮಾನವೇ ಇರಲಿಲ್ಲ. ಬೇರೆ ಸೂಳೆಯರಿಗೆ ತಡೆದೀತು. ತನ್ನಂಥವರಿಗೆ ಇದು ಸಲ್ಲದೆಂದು ತೀರ್ಮಾನಿಸಿದ್ದಳು. ಈ ಶನಿಕಾಟವನ್ನು ನಿವಾರಿಸಲು ಏನೆಲ್ಲ ಉಪಾಯ ಮಾಡಲು ಸಿದ್ಧಳಾದಳು. ಹ್ಯಾಗಾದರೂ ಮಾಡಿ “ಈ ಪಾಪ ತೆಗಿ” ಎಂದು ಬಸವರಾಜನಿಗೆ ಮೊರೆಯಿಟ್ಟಳು. ಬಸವರಾಜನೂ ಹತಾಶನಾಗಿ ನಿಂಗೂನನ್ನು ಮೊರೆಹೊಕ್ಕ. +ಗರ್ಭಪಾತದ ವಿದ್ಯೆಯಲ್ಲಿ ನಿಂಗೂನನ್ನು ಬಿಟ್ಟರಿಲ್ಲವೆನ್ನುವುದೂ ನಿಜವೇ. ಅದಕ್ಕೇ ಕಳ್ಳಬಸುರಿನ ಸುದ್ದಿಗಳು ಅವನಿಗೆ ತಿಳಿದಷ್ಟು ಊರಲ್ಲಿ ಯಾರಿಗೂ ಗೊತ್ತಿಲ್ಲ. ಬಸವರಾಜೂ ಹೇಳಿದ್ದನ್ನೆಲ್ಲ ನಿಂಗೂ ಕೇಳಿಕೊಂಡ. ಯಾರು ಯಾರಿಗೆ ಎಂದು ಕೇಳದೆ, ಕೇಳಿ ತಿಳಿದುಕೊಳ್ಳದೆ ನಿಂಗೂ ಮದ್ದು ಕೊಟ್ಟಾನಾದರೂ ಹ್ಯಾಗೆ? ಬಸವರಾಜು ದುಃಖ ಅಭಿನಯಿಸಿ ಸಂಕಟ ತೋಡಿಕೊಂಡ. ಆದರೆ ಬಸಿರಾದವಳು ಸುಂದರಿ ಎಂದು ಹೇಳಲಿಲ್ಲ.ದುರ್ಗಿ ಎಂದಿದ್ದ…. ಅಷ್ಟೇ ಫರ್ಕಾಗಿತ್ತು ಸತ್ಯದಿಂದ. ಅವನ ಒದ್ದಾಟ ನೋಡಿ ನಿಂಗೂನಿಗೂ ಕರುಣೆ ಬಂತು. ಅಡವಿಗೆ ಹೋಗಿ ತಾನೇ ಗಿಡಮೂಲಿಕೆ ತಂದು, ಕುಟ್ಟಿ ರಸಮಾಡಿ ಕುಡಿಯಬೇಕೆಂದೂ, ಕುಡಿದಾಗ ಒಳಗೆ ಸಂಕಟವಾಗಿ ಸ್ವಲ್ಪ ಕೂಗಾಡಬಹುದಾದ್ದರಿಂದ ಹೊಲದ ಕಡೆ ಕರೆದುಕೊಂಡು ಹೋಗಿ ಕುಡಿಸು ಎಂದೂ ಹೇಳಿದ. ತನ್ನ ಜೊತೆ ಆಗಿದ್ದರೆ ಇದೆಲ್ಲ ತಾಪತ್ರಯ ಇರುತ್ತಿರಲಿಲ್ಲವೆಂಬ ಮಾತನ್ನು ಹೇಳದಿರಲಿಲ್ಲ. +ಒಂದು ದಿನ ಮಧ್ಯಾಹ್ನ ಗುಡಸೀಕರ ಮನೆಯಲ್ಲಿ ಮಲಗಿದ್ದ.ತೋಟದ ಕಡೆ ಆಗಾಗ ಸಾಯಂಕಾಲ ಅಡ್ಡಾಡಲಿಕ್ಕೆ ಹೋಗುವುದಿತ್ತು. ಹೋದರೆ ಹೋದ; ಇಲ್ಲದಿದ್ದರೆ ಇಲ್ಲ. ಈ ಹೊತ್ತು ಬಹುಶಃ ಹೋಗುವ ಸಂಭವ ಕಮ್ಮಿಯೆಂದು ಭಾವಿಸಿ ಬಸವರಾಜು ಗಿಡಮೂಲಿಕೆ ರಸದ ಬಟ್ಟಲು ತಗೊಂಡು ಸುಂದರಿಯನ್ನು ಕರೆದುಕೊಂಡು ಗುಡಸೀಕರನ ತೋಟಕ್ಕೆ ಹೋದ. ಸಮೀಪದಲ್ಲಿ ಯಾರೂ ಇರಲಿಲ್ಲ. ಮೊದಲು ಅವಳನ್ನು ಕಬ್ಬಿನ ಬೆಳೆಯಲ್ಲಿ ಹೊಗಿಸಿದ. ತಾನೂ ಹೋಗಬೇಕೆಂದಾಗ ಗೌಡನ ತೋಟದ ಬಾಂದಿನ ಮೇಲಿಂದ ಖಾದೀಧಾರಿಯೊಬ್ಬ ಇತ್ತ ಕಡೆಗೇ ಬರುತ್ತಿದ್ದ. ಅವನು ದಾಟಿ ಹೋಗುವ ತನಕ ಕಬ್ಬಿನ ಗಣಿ ಮುರಿದು ಸುಲಿಯುವ ನೆವಮಾಡಿ ನಿಂತ. ಅವನನ್ನೆಲ್ಲೋ ನೋಡಿದಂತಿತ್ತು. ನೆನಪಾಗಲಿಲ್ಲ. ಆತ ಮರೆಯಾದೊಡನೆ ತಾನೂ ಕಬ್ಬಿನಲ್ಲಿ ಮಾಯವಾದ. +ಒಳಗೆ ಹೊಕ್ಕು ಅರ್ಧ ತಾಸಾಗಿರಬಹುದು. ಸುಂದರಿ “ಸತ್ತೆನೋ ಎಪ್ಪಾ” ಎಂದು ಕಿರುಚತೊಡಗಿದಳು. ಮದ್ದು ಹೊಟ್ಟೆಗಿಳಿದಿದ್ದೇ ತಡೆ ಒಳಗಿನ ಕರುಳು ಚುರುಗುಟ್ಟಿ ಹರಿದು ಚೂರು ಚೂರಾದಂತಾಗಿ, ವೇದನೆ ಸಹಿಸಲಾರದೆ ಬಿದ್ದು ಹೊರಳಾಡಿದಳು. ಒಂದು ಕೈಯಿಂದ ಹೊಟ್ಟೆ ಕಿವುಚಿಕೊಳ್ಳುತ್ತ, ಇನ್ನೊಂದರಿಂದ ಬಾಯಿ ಬಾಯಿ ಬಡಿದುಕೊಳ್ಳುತ್ತ ಆಕಾಶ ಪಾತಾಳ ಒಂದು ಮಾಡುವಂತೆ ದೂರ ಗುಡಿಯ ಕರಿಮಾಯಿ ಮರದ ಮೂರ್ತಿಗೂ ಕೇಳಿಸುವಂತೆ ಒದರ್‍ಯಾಡಿದಳು. ಬಸವರಾಜನಿಗೆ ದಿಕ್ಕೇ ತೋಚದಾಯ್ತು. ಕೈಕಾಲು ಲಟಪಟ ಬಡಿದು ವಿಲಿವಿಲಿ ಒದ್ದಾಡುತ್ತಿದ್ದಳು. ಸಾಯುವುದೇ ಖಾತ್ರಿಯಾಗಿ ಅವಳ ಬಳಿ ಸುಳಿಯುವುದಕ್ಕೂ ಗಾಬರಿಯಾಗಿ ತಲೆಯ ಬುದ್ಧಿ ಕಾಲಿಗಿಳಿದು ಬೆಳೆ, ಕಲ್ಲು, ಮುಳ್ಳೆನ್ನದೆ ಹಾರಿ ಓಡಿಬಿಟ್ಟ. +ಪಕ್ಕದ ತೋಟದ ಗೌಡನಿಗೆ ಇದು ಕೇಳಿಸಿ ಕುಡುಗೋಲು ಹಿಡಿದುಕೊಂಡೇ ಓಡಿ ಬಂದ. ಅವನೊಂದಿಗೆ ಖಾದೀಧಾರಿ ಮುದುಕಪ್ಪ ಗೌಡನೂ ಬಂದ. ಗುಡಸೀಕರನ ಬೆಳೆ ಚಡಪಡಿಸುವಲ್ಲಿಗೆ ಓಡಿ ನೋಡಿದರೆ, ರಕ್ತ ಕಾರುತ್ತಾ ಸುಂದರಿ ಬಿದ್ದಿದ್ದಳು. ನಾಲಗೆ ಉಡುಗಿ ಹೋಗಿ ಗಂಟಲಿನಿಂದ ಗೊರ್ ಗೊರ್ ಶಬ್ಧ ಮಾತ್ರ ಬರುತ್ತಿತ್ತು. ಸಾಯಲಿರುವ, ಬಾಯಿಬಾರದ ಪ್ರಾಣಿಯ ಹಾಗೆ ಕೈಕಾಲು ಮಾತ್ರ ವಿಲಿವಿಲಿ ಒದ್ದಾಡುತ್ತಿದ್ದವು, ಮತ್ತೆ ಸ್ತಬ್ಧವಾಗುತ್ತಿದ್ದವು. ಗೌಡ ತಿರುಗಿ ನೋಡುವುದರೊಳಗೆ ಮುದುಕಪ್ಪ ಗೌಡ ದತ್ತಪ್ಪನನ್ನು ಕರೆತರಲು ಓಡಿಹೋಗಿದ್ದ. ಗೌಡ ಹೋದವನೇ ಅವಳ ಎಡಗೈ ಕಿರುಬೆಟ್ಟು ಹಿಸುಕಿದ. ಮತ್ತೆ ಒದ್ದಾಡಿತು. ಮತ್ತೆ ಹಿಸುಕಿದ. ಒದ್ದಾಡಲಿಲ್ಲ. ಕಿವಿಯಲ್ಲಿ ಜೋರಿನಿಂದ ಊದತೊಡಗಿದ. ಊದಿಯೇ ಊದಿದ. ಜೀವ ಬರಲೊಲ್ಲದು, ಗೌಡ ಬಿಡಲೊಲ್ಲ. ಓಡಿ ಹೊರಟ ಜೀವ ಹಿಡಿದು ತರುವ ಹಾಗೆ ಊದುತ್ತಿದ್ದ. ಬಹಳ ಹೊತ್ತಾದ ಮೇಲೆ ಜೀವ ಬರುವ ಲಕ್ಷಣ ಕಂಡವು. ಮೈಯಲ್ಲಿ ಬಿಸಿ ಬಂತು. ಕಿರುಬೆರಳು ಹಿಸುಕುತ್ತ “ಏ ಅವೂ, ಅವೂ” ಎಂದು ಕರೆದ. ಕಣ್ಣು ತೆರೆದೊಮ್ಮೆ ನೋಡಿ ಮತ್ತೆ ಮುಚ್ಚಿದಳು. ಸಧ್ಯ ಭಯವಿಲ್ಲ ಎಂದುಕೊಂಡ. ಇತ್ತ ಬಸವರಾಜ ದಿಕ್ಕೆಟ್ಟು ಸತ್ತೆನೋ, ಬದುಕಿದೆನೋ ಎಂದು ಬೇಟೆಗಾರನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪ್ರಾಣಿಯ ಹಾಗೆ ಓಡಿ ಹೊರಟಿದ್ದನಲ್ಲ, ತೋಟದ ಅಂಚಿನಿಂದ ಗುಡಸೀಕರ ಅಡ್ಡಾಡಲಿಕ್ಕೆ ಈ ಕಡೆಗೇ ಬರುತ್ತಿದ್ದ. ದಂಗು ಬಡಿದವರಂತೆ ಓಡುತ್ತಿದ್ದ ಬಸವರಾಜನನ್ನು ಕಂಡ. +“ಏ ಬಸವರಾಜು” ಎಂದು ಕೂಗಿ ಬಹುಶಃ ಏನೋ ಅನಾಹುತವಾಗಿರಬೇಕೆಂದು ತಾನೂ ಅವನ ಕಡೆ ಓಡಿದ. ಬಸವರಾಜ ಸಿಕ್ಕೊಡನೆ “ಯಾಕೊ? ಏನಾಯ್ತೋ?” ಎಂದು ರೆಟ್ಟೆ ಹಿಡಿದು ಅಲುಗಿ ಕೇಳುತ್ತಲೂ ಬಸವರಾಜು ಏನು ಮಾಡುತ್ತಿದ್ದೇನೆಂದು ತಿಳಿಯದೆ ಗುಡಸೀಕರನನ್ನು ಕರೆದುಕೊಂಡು ಸುಂದರಿ ಬಿದ್ದಲ್ಲಿಗೆ ಧಾವಿಸಿ ಬಂದ. +ಸುಂದರಿಯ ತಲೆ ಗೌಡನ ತೊಡೆಯ ಮೇಲಿತ್ತು. ಒಂದು ಕೈಯಿಂದ ಅವಳ ಎಡಗೈ ಕಿರಿಬೆರಳು ಗಟ್ಟಿಯಾಗಿ ಹಿಡಿದು ಬಲಗೈಯಿಂದ ಗಾಳಿ ಹಾಕುತ್ತಿದ್ದ. ಇಬ್ಬರ ತಲೆ ಕೆದರಿತ್ತು. ಸುಂದರಿಯ ಸೀರೆ ಅಸ್ತವ್ಯಸ್ತವಾಗಿತ್ತು. ಸರಪಂಚ ಅಂಗಾಲಿನಿಂದ ನೆತ್ತಿಯ ತನಕ ಕುದಿಯತೊಡಗಿದ. ಈ ದೃಶ್ಯ ಕಂಡೊಡನೆ ಬಸವರಾಜನಿಗೆ ಹೋದಜೀವ ಮರಳಿ ಬಂದಂತಾಯ್ತು. ಸುಂದರಿ ಸತ್ತಿರಲಿಲ್ಲ. ಗೌಡನ ತೊಡೆಯ ಮೇಲಿದ್ದಳು. ಕಂಡದ್ದೇ ತಡ ತನ್ನ ಮೂಲ ರೂಪಕ್ಕೆ ಬಂದ. ಬುದ್ಧಿ ಸಮತಲಗೊಂಡು ಚಕಮಕಿ ಕಿಡಿಯಂತೆ ‘ಐಡಿಯ’ ಹೊಳೆಯಿತು. ಕಿಡಿಗಣ್ಣು ಮಾಡಿಕೊಂಡು ತುಟಿ ಕಚ್ಚಿಕೊಂಡು ಸ್ವಹಿಂಸೆ ಮಾಡಿಕೊಳ್ಳುತ್ತಿದ್ದ ಗುಡಸೀಕರನ ಭುಜದ ಮೇಲೆ ಒಂದೆರಡು ಸಲ ತಟ್ಟಿ, ಅವರ ಗಮನ ತನ್ನ ಕಡೆ ಸೆಳೆಯಲು ಪ್ರಯತ್ನ ಮಾಡಿದ. ಗೌಡನೂ ಇವರನ್ನು ನೋಡಿರಲಿಲ್ಲ. ಕೂಡಲೇ ಬಲಗಾಲು ಕುಟ್ಟಿ “ಗೌಡಾ, ಈ ಮುದಿ ವಯಸ್ಸಿನಾಗ ಇಂಥಾ ಕೆಲಸ ಮಾಡಾಕ ನಾಚಿಕೆ ಬರಲಿಲ್ಲಾ?” ಎಂದು ಗುಡುಗಿದವನೇ ಉತ್ತರಕ್ಕಾಗಿ ಕಾಯದೇ, ಗುಡಸೀಕರ ಹೋಗಿಬಿಟ್ಟ. ಕಿವಿಗೆ ಈ ಶಬ್ಧ ಬೀಳುತ್ತಿದ್ದಂತೆ ಗೌಡ ತಲೆ ಎತ್ತಿ ನೋಡಿದ. ಏನಾಡುತ್ತಿದ್ದನೋ, ಏನು ಮಾಡುತ್ತಿದ್ದನೋ ಆಡಿದವನು ಅಲ್ಲೇ ಇದ್ದಿದ್ದರೆ, ಆಡಿದ್ದು ಅರ್ಥವಾಗಿದ್ದರೆ ನೋಡುನೋಡುವಷ್ಟರಲ್ಲಿ ಆಡುವುದಕ್ಕೆ ಬಾಯಿ ತೆರೆಯುವಷ್ಟರಲ್ಲಿ ಇಬ್ಬರೂ ಮರೆಯಾಗಿದ್ದರು. ಸಾಯಲಿದ್ದವಳನ್ನು ಉಳಿಸಿದ್ದಕ್ಕೆ ತನಗೆ ಕೃತಜ್ಞತೆ ಬೇಡ, ತನ್ನ ಹುಡುಗಿಯನ್ನೂ ನೋಡಿಕೊಳ್ಳದೆ, ಈ ರೀತಿ ಓಡಿಹೋದುದಕ್ಕೆ ಗೌಡನಿಗೆ ಕೆಡುಕೆನಿಸಿತು. ಗೌಡನಿಗೆ ಗುಡಸೀಕರನ ದನಿ ಕೇಳಿಸಿತ್ತೇ ಹೊರತು ಅವನೇನಾಡಿದ ಎಂದು ತಿಳಿದಿರಲಿಲ್ಲ. ಕೂಗಿ ಕರೆಯಬೇಕೆಂದುಕೊಂಡ. ಸುಂದರಿ ನರಳಿದಳು. ಬಿಟ್ಟೇಳುವ ಮನಸ್ಸಾಗಲಿಲ್ಲ. ಅಷ್ಟರಲ್ಲಿ ದತ್ತಪ್ಪ, ಲಗಮವ್ವ, ಮುದುಕಪ್ಪ ಗೌಡ ಓಡಿಬಂದರು. +ದತ್ತಪ್ಪ ನಾಡಿ ಹಿಡಿದು ನೋಡಿದ. ಹೆಚ್ಚು ಅರ್ಥವಾಗಲಿಲ್ಲ. ಕೂಡಲೇ ಗಿಡಮೂಲಿಕೆಯೊಂದರ ಹೆಸರನ್ನು ಲಗಮವ್ವನ ಕಿವಿಯಲ್ಲಿ ಹೇಳಿದ. ಲಗಮವ್ವ ಓಡಿದಳು. ಮದ್ದು ಕುಡಿಸಿ ಸುಂದರಿಯನ್ನು ಖಬರಿಗೆ ತರುವುದಕ್ಕೆ ಒಂದು ತಾಸು ಹಿಡಿಯಿತು. ಅವಳು ಚೇತರಿಸಿಕೊಳ್ಳುವುದಕ್ಕೆ ಇನ್ನಷ್ಟು ಸಮಯ ಹಿಡಿಯಿತು. ಆಗಲೇ ಸಂಜೆಯಾಗಿತ್ತು. ಅವಳಿಗೆ ನಡೆಯುವ ಚೇತನ ಇರಲಿಲ್ಲ. ಲಗಮವ್ವ ನಡೆಸಿಕೊಂಡು ಅವಳ ಗುಡಿಸಲಿಗೆ ಮುಟ್ಟಿಸಬೇಕಾದರೆ ಆಗಲೇ ರಾತ್ರಿಯಾಗಿತ್ತು. +ಸುಂದರಿಯನ್ನು ಗುಡಿಸಲಿಗೆ ತಂದಾಗ ಗುಡಸೀಕರ ಇರಲಿಲ್ಲ. ಬಸವರಾಜ ಬಾಯಿಬಿಡಲಿಲ್ಲ. ಲಗಮವ್ವ ಅವಳನ್ನು ಒಳಗೊಯ್ದು ಮಲಗಿಸಿ ತನ್ನ ಗುಡಿಸಲಿಗೆ ಹೋದಳು. ಸುಂದರಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದು ಆಮೇಲೆ ಮೆಲ್ಲನೆದ್ದು ತನ್ನ ಟ್ರಂಕಿನಲ್ಲಿಯ ಹಳೆಯ ದಿನಪತ್ರಿಕೆಯೊಂದನ್ನೆತ್ತಿ ಬಸವರಾಜನಿಗೆ ಕೊಟ್ಟಳು. ಅರ್ಥಪೂರ್ಣವಾಗಿ ನಕ್ಕು ಒಳಕ್ಕೆ ಕರೆದಳು. ಅವನ ಕಿವಿಯಲ್ಲಿ ಪಿಸುಪಿಸು ಸಂಚು ಉಸುರಿ ಮಲಗಿಕೊಂಡಳು. ಗುಡಸೀಕರ ಬಂದ. +ಗೌದನ ತೊಡೆಯ ಮೇಲಿನ ಸುಂದರಿಯನ್ನು ನೋಡಿ ಗುಡಸೀಕರ ಹಿಂದಿರುಗಿ ಬಂದನಲ್ಲ. ಸೀದಾ ಮನೆಗೆ ಹೋದ. ಬಸವರಾಜು ಗುಡಿಸಲಿಗೆ ಬಂದ. ಇಬ್ಬರೂ ಮಾತಾಡಲಿಲ್ಲ. ಪ್ರಾಯದ ತನ್ನ ಗಂಡಸುತನವನ್ನೇ ಮುದಿ ಗೌಡ ಪ್ರಶ್ನಿಸಿದಂತಾಗಿತ್ತು ಗುಡಸೀಕರನಿಗೆ. ಹಳೆಯ ಸೇಡುಗಳೆಲ್ಲ ಮರುಕಳಿಸಿ ಮೇಲೆದ್ದವು. ಅನ್ನ ಹಾಕಿದವನಿಗೇ ಸುಂದರಿ ಮೋಸ ಮಾಡಿದಂತಾಗಿತ್ತು. ಈ ಸುದ್ದಿ ಗೊತ್ತಾದರೆ ಇಡೀ ಊರು ವ್ಯಂಗ್ಯವಾಡಿ ಕೈತಟ್ಟಿ ನಗುವುದರಲ್ಲಿ ಸಂದೇಹವಿಲ್ಲ. ಅನೇಕ ಸಂದರ್ಭಗಳಲ್ಲಿ ಸೋತಿದ್ದು ನಿಜ. ಆದರೆ ಈ ಸೋಲು ಉಳಿದವುಗಳನ್ನು ಮೆಟ್ಟಿ ನಿಲ್ಲುವಂಥಾದ್ದು. +***** +ಮುಂದುವರೆಯುವುದು +ಅಧ್ಯಾಯ ಒಂದು ಇನ್ನೆರಡು ತಿಂಗಳು ಕಳೆಯುವುದರಲ್ಲಿ ದೀರ್ಘಕಾಲದ ನೌಕರಿಯಿಂದ ನಿವೃತ್ತನಾಗಲಿದ್ದ ಪಾರಸೀ ಗೃಹಸ್ಥ ಬೆಹರಾಮ್ ಕೇಕೀ ಪೋಚಖಾನಾವಾಲಾ, ಒಂದು ಶನಿವಾರದ ಮಧ್ಯಾಹ್ನ, ಮನೆಯ ಬಾಲ್ಕನಿಯಲ್ಲಿ ಕೂತು ವಿಶ್ರಾಂತಿಯ ದಿನಗಳ ಬಗ್ಗೆ ಧೇನಿಸುತ್ತ ಚಹ ಕುಡಿಯುತ್ತಿರುವಾಗ, […] +ಪತ್ತೇದಾರೀ ಕಿರುಕಾದಂಬರಿ -ಒಂದು- ನಿನ್ನೆ ಸಂಜೆ ತಮಿಳುನಾಡಿನ ಉತ್ತರ ತೀರಕ್ಕೆ ಅಪ್ಪಳಿಸಿದ ಭೀಷಣ ಚಂಡಮಾರುತ ಪಶ್ಚಿಮದಲ್ಲಿ ಒಳನಾಡಿನತ್ತ ಸಾಗಿದಂತೆ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತ್ತು. ಅದರ ಪ್ರಭಾವದಿಂದಾಗಿ ಕಪ್ಪು ಮೋಡಗಳು ಇಡೀ ಮೈಸೂರು ನಗರವನ್ನು ಬೆಳಗಿನಿಂದಲೂ […] +ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_6.txt b/Kannada Sahitya/article_6.txt new file mode 100644 index 0000000000000000000000000000000000000000..b7a13bc2ea67a4ee47fe72e4403acd838002f235 --- /dev/null +++ b/Kannada Sahitya/article_6.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಸಾರ ದಂದುಗದ ಹುರಿಹಂಚಿನಲಿ ಬೆಂದು +ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ +ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ +ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು +ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು +ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? +ಭಾವಶುದ್ಧಿಯ ಪಡೆದು ಮಿಥ್ಯತೆಯ ಕನಸೊಡೆದು +ಸತ್ಯಶಿವ ಸೌಂದರ್ಯಗಳನರಿತು ಹಾಡುವುದು? +ಶರಣ ಸಂದೇಶದಪರಂಪಾರ ಜಲಧಿಯಲಿ +ಮುಳುಗಿ ಕಾಣಲ್ಲಿಹುದು ವಚನ ರತ್ನದ ರಾಶಿ; +ಬೆಳಗಿನೊಳಗಿನ ಮಹಾ ಬೆಳಗಿನಿಂದುದ್ಭವಿಸಿ +ಘೋಷಿಸುವದೊಂದು ನುಡಿ ನವಖಂಡ ಪೃಥ್ವಿಯಲಿ: +“ಎಲೆ ದೇವ ನಿನ್ನದಿದೆ ಕೊಲುವೆನೆಂಬುವ ಭಾಷೆ +ಆದರಿದೊ ಭಕ್ತನದು ಗೆಲುವೆನೆಂಬುವ ಭಾಷೆ” +***** +ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […] +ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_60.txt b/Kannada Sahitya/article_60.txt new file mode 100644 index 0000000000000000000000000000000000000000..142a27c4197ee3d249815c55d6e90b4e9766e29a --- /dev/null +++ b/Kannada Sahitya/article_60.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ತೆರಳಿದರು +ಅತಿಧಿಗಳು ಮರಳಿದರು ಮನೆಗೆ +ನನ್ನ ಮನೆ +(ಗುಬ್ಬಿ ಹೆರವರ ಮನೆಗೆ +ತನ್ನ ಮನೆ ಎಂದಂತೆ) +ಬರಿದಾಯ್ತು ಕೊನೆಗೆ! +ಎದೆಯೊಲವನರಳಿಸುತ +ಕೆರಳಿಸುತ ಬಂದು +ಒಂದು ದಿನ ನಿಂದು, +ಏನೆಲ್ಲವನು ಒಮ್ಮೆ ಹೊಳಹಿನಲಿತಂದು +ಎದೆಯ ತೋಟಕೆ ದಯೆಯ ಮಳೆಗರೆದರು! +ಮೇಲುನೋಟಕೆ ತಣಿಸಿ +ಒಳಗೆ ಕನಿಕರಿಸಿ, +ಬೇಸಗೆಯ ಮಲ್ಲಿಗೆಯ ಗಾಳಿ ಬೀಸಿ +ಮೋಡದೊಲು ಬಯಲಾಗಿ +ಬೆರಗು ಗೊಳಿಸಿದರು. +………… +ತುಂಬಿದೀ ಬಟ್ಟಲವನಾರು ಕುಡಿದವರು? +೨ +ಅಲ್ಲೊಬ್ಬರು +ಇಲ್ಲೊಬ್ಬರು +ಬಾಳಕವಲುದಾರಿಯಲ್ಲಿ +ಸಾಗಿದತಿಧಿಗೆಳೆಯರು; +ನೋವಿನೆಳೆಯ ಜಗ್ಗಿದಂತೆ +ನೆನಹಿನೊಡನೆ ನುಡಿವರು; +ಹೀಜಿ ಬಿಟ್ಟ ರಬ್ಬರಿನೊಲು +ಎದೆಗೆ ಬಂದು ಬಡಿವರು! +ಕತ್ತರಿಸಿದ ಹಲ್ಲಿ ಬಾಲ +ಐದೊ ಆರೊ ಸಲ, +ಜಿಗಿದು ನೆಗೆದು ನಿಶ್ವೇತನ +ಅಂತ ಮನದ ಚಿಂತನ, +ಚಿರಂತನ +***** +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ನನ್ನ ಹಗುರು ಕಣ್ಣುಗಳಿಂದ ತಟತಟ ಉದುರುವ ಕಂಬನಿಯೇ ಮಂಡಿ ತರಚಿದಾಗೆಲ್ಲ ಬ್ಲೇಡು ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ ಕಡುರಕ್ತವೇ ತೆಪ್ಪಗೆ ಜಿನುಗುವ ಬೆವರೇ ಹೇಳಿ, ನಿಮ್ಮ ನಡುವೆಯೂ ಎಲ್ಲಿಗೆಲ್ಲಿಯ ಸಂಬಂಧ ನಿಮ್ಮ ಮೇಲಿಲ್ಲವೆ ನನಗೂ ಒಂದಿಷ್ಟು […] +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_600.txt b/Kannada Sahitya/article_600.txt new file mode 100644 index 0000000000000000000000000000000000000000..5f7d8c25d688ba2ef363275ace14776af843626a --- /dev/null +++ b/Kannada Sahitya/article_600.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ ಸಮಾರಂಭದಲ್ಲಿ ಆ ಇಂಗ್ಲೀಷ್ ಹೆಸರು ಕಿತ್ತು ಕನ್ನಡ ಹೆಸರಿಟ್ಟಲ್ಲಿ ಚಿತ್ರ ‘ಪ್ಲಾಪ್’ ಆಗಿಬಿಡುತ್ತದೆ ಎಂಬ ಭ್ರಮೆ ಅವರಿಗೆ. +ಆದ್ದರಿಂದಲೇ ಎ, ಜ್ಹಡ್, ಅಂಡರ್‌ವರ್ಲ್ಡ್, ಲಾಕಪ್ ಡೆತ್, ಎ.ಕೆ.ಫ್ಹಾರ್ಟಿಸೆವೆನ್, ಮಾಫಿಯಾ, ಲಾ ಅಂಡ್ ಆರ್ಡರ್‍, ಕರ್ಫ್ಯೂ, ಆಪರೇಷನ್ ಡೈಮಂಡ್ ರಾಕೆಟ್, ಸಿಐಡಿ ನೈನ್ ನೈನ್ ನೈನ್ ಹೀಗೆ ಬರುತ್ತಲೇ ಇವೆ. ಇದನ್ನು ನೋಡಿ ನೋಡಿ ಸಾಕಾಗಿ ಫಿಲಂ ಛೇಂಬರ್‍ಸ್ ಇನ್ನು ಮುಂದೆ ಇಂಗ್ಲೀಷ್ ಟೈಟಲ್‌ಗೆ ಅನುಮತಿ ನೀಡುವುದಿಲ್ಲ ಎಂದಿತು. +ರೀಮೇಕ್ ಚಿತ್ರಗಳಿಗೂ ಇಂಗ್ಲೀಷ್ ಹೆಸರಿಡುವ ದಿನ ಬಂದು ಇಂಗ್ಲೀಷ್ ಪದಗಳಿಗೆ ಸ್ಟಾರ್‌ವ್ಯಾಲ್ಯೂ ಬಂದೀತು ಎಂದುಕೊಂಡವರು ಬಹುಮಂದಿ. +ಫಿಲಂ ಚೇಂಬರ್‍ ತಕರಾರು ಎತ್ತಿ, ಆಕ್ಷೇಪಣೆಯ ದನಿ ಎತ್ತರಿಸಿದಾಗ ಸಣ್ಣ ಸಣ್ಣ ಬಜೆಟ್ ಚಿತ್ರ ಮಾಡುವವರು ಬೆದರಿ-ಬೆಂಡಾಗಿ, ಬಾಡಿ – ಬಸವಳಿದು ತುಂಬ ಬೇಸರದಿಂದಲೇ ಕನ್ನಡದ ಹೆಸರಿಡಲು ಕನ್ನಡ ನಿಘಂಟನ್ನು, ಪುಸ್ತಕ ಪ್ರಕಾಶನದ ಪಟ್ಟಿಯನ್ನು ಹಿಡಿದು ಜನಪ್ರಿಯ ಕತೆ, ಕಾದಂಬರಿಗಳ ಹೆಸರನ್ನು ಇದೀಗ ಭುತಕನ್ನಡಿ ಹಿಡಿದು ಹುಡಕ ಹೊರಟಿದ್ದಾರೆ. +ಆದರೆ ಬಿಗ್ ಬಜೆಟ್ ಫಿಲ್ಮ್‌ನವರು ‘ಫಿಲಂ ಚೇಂಬರ್‌ನ ಕ್ಯಾರೇ ಎನ್ನದೆ ಇಂಗ್ಲೀಷ್ ಹೆಸರನ್ನೇ ಉಳಿಸಿಕೊಳ್ಳುವ ಛಲ ಹೊತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ‘ಸೂಪರ್‍ ಸ್ಟಾರ್‍’ ಎಂಬ ಉಪೇಂದ್ರ ಚಿತ್ರವೇ ಸಾಕ್ಷಿ. +ಹಾಗೆ ಹೆಚ್ ಟು ಓ ಎಂಬ ಹೆಸರೂ ಈಗ ಕಾಂಟ್ರವರ್ಸಿಗೆ ಸಿಲುಕಿದೆ. ಈ ಇಂಗ್ಲೀಷ್ ಕನ್ನಡ ಜಗಳ ಕಾರು ಆಟೋಗಳತ್ತಲೂ ತಿರುಗಿದೆ. ಕನ್ನಡದಲ್ಲಿ ಅಂಕಿಗಳನ್ನು ಬರೆಸಿದವರನ್ನು ಪೊಲೀಸರು ಹಿಡಿಯುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡದ ಅಂಕಿಗಳಿರುತ್ತವೆ ಎಂದರೆ ಪೊಲೀಸಿನವ ಮನಬಂದಂತೆ ಫೈನ್ ಹಾಕುವ ದಿನ ಈಗ ಬಂದಿದೆ. +ಹಾಗೆ ಚಿಹ್ನೆಗಳನ್ನು ಚಿತ್ರ ಮಾಡುವ ಇನ್ನೊಂದು ಹುನ್ನಾರವೂ ನಡೆದಿತ್ತು. ಏಕೋ ಅದು ಪಾಸಾಗಲು ಕನ್ನಡಿಗರು ಬಿಡಲಿಲ್ಲ. ಸ್ವಸ್ತಿಕ್ ಚಿಹ್ನೆ ಚಿತ್ರ ಬಂತು. ಅದನ್ನು ಆರಂಭಿಸಿದವರೂ ಉಪೇಂದ್ರರೆ, ಆನಂತರ ಕೊಶ್ಚನ್ ಮಾರ್ಕ್ ಚಿತ್ರದ ಹೆಸರು ಬಂದೆ ಬರುವೆ ಎಂದು ಹೆದರಿಸಿತು. ಇಲ್ಲ – ಅದೂ ಠುಸ್ ಎಂದಿತು. +ಅಕಸ್ಮಾತ್ ಅದು ೧೦೦ ದಿನ ಓಡಿದ್ದರೆ ಫುಲ್‌ಸ್ಟಾಪ್, ಕಾಮ, ಆಶ್ಚರ್ಯ ಸೂಚಕ ಚಿಹ್ನೆಗಳೂ ಚಿತ್ರವಾಗಿ ಬರುತ್ತಿದ್ದವೇನೋ? +‘ವೈ’ ಇದೇಕೆ ಹೀಗೆ ಎಂಬುದನ್ನೀಗ ಚಿತ್ರರಂಗದ ಮಹಾಮಹಿಮರು ಚಿಂತಿಸಬೇಕಿದೆ. ಚಿತ್ರಕ್ಕೊಂದು ಕಥೆಯಂತೂ ಇದ್ದೇ ಇರುತ್ತದೆ. ಅದರ ಕಥಾ ತಿರುಳು ಗಮನಿಸಿ ಒಂದು ಹೆಸರು ಇಡುವುದೇ ಕಷ್ಟವಾದರೆ ಹೇಗೆ? +ಮನೆಯಲ್ಲಿ ಮಗುವೊಂದು ಹುಟ್ಟುವ ಶುಭ ಘಳಿಗೆ ಬಂದಾಗ ಮನೆಮಂದಿಗೆಲ್ಲಾ ಸಂಭ್ರಮವಿರುತ್ತದೆ. ಹುಟ್ಟುವ ಮಗು ಗಂಡಾದರೆ ಏನು ಹೆಸರು – ಹೆಣ್ಣಾದರೆ ಏನು ಹೆಸರು ಎಂದು ಗಂಡ-ಹೆಂಡತಿ ಇಬ್ಬರೇ ಏಕಾಂತದಲ್ಲಿ ಚಿಂತಿಸುತ್ತಾರೆ. ಆದರೆ ಗಂಡುಮಗು ಎಂದು ನಿರ್ಧರಿಸಿದಾಗ ಹೆಣ್ಣು ಮಗು ಹುಟ್ಟಿರುತ್ತದೆ. ಹೆಣ್ಣು ಎಂದುಕೊಂಡಾಗ ಗಂಡುಮಗು ಹುಟ್ಟಿರುತ್ತದೆ. ಕೆಲವೊಮ್ಮೆ ಅವಳಿಜವಳಿಯಾಗಿ ಮತ್ತೆ ಹೆಸರಿಗೆ ಹುಡುಕಾಟವಾಗುತ್ತದೆ. ಆದರೆ ಚಿತ್ರರಂಗದವರಿಗೆ ನಾಮಕರಣ ಸಮಸ್ಯೆಯೇ ಅಲ್ಲ. +ಕಥೆ-ಕಾದಂಬರಿಗಳಿಗೆ ಹೆಸರಿಡುವಾಗ ಲೇಖಕ ಬಹುವಾಗಿ ಚಿಂತಿಸುತ್ತಾನೆ. ಬಹಳಷ್ಟು ಲೇಖಕರು ಕಥೆ, ಕವನ, ಕಾದಂಬರಿ, ನಾಟಕ ಸಲೀಸಾಗಿ ಬರೆಯುತ್ತಾರೆ. ಆದರೆ ಹೆಸರಿಡುವುದೇ ಅವರಿಗೆ ಸಮಸ್ಯೆ ಎನಿಸಿರುತ್ತದೆ. +ಹಿಂದೊಮ್ಮೆ ನಾನು ಬರೆದ ಒಂದು ನಾಟಕಕ್ಕೆ “ಕ್ಷೇತ್ರದ ಕಾಗೆ” ಎಂದು ಹೆಸರಿಟ್ಟೆ. ಕು.ರಾ.ಸೀ., ಅ.ನ.ಸು, ಟಿ.ಟಿ.ಶರ್ಮ, ನವರತ್ನ ರಾಮರಾವ್ ಮುಂತಾದ ಹಿರಿಯ ಲೇಖಕರು ಆ ಹೆಸರು ಬಹು ಇಷ್ಟಪಟ್ಟರು. +ಕಾಗೆ ‘ಪಿಂಡ’ಕ್ಕಾಗಿ ಹಾರಿ ಬರುವಂತೆ ಆಸ್ತಿಗಾಗಿ ಇಲ್ಲದ ಸಂಬಂಧ ಹೇಳಿಕೊಂಡು ಬರುವ ನೆಂಟರಿಷ್ಟರ ಕಥೆ ಅದು. ಕೆರೆಯಲ್ಲಿ ನೀರಿದ್ದಾಗ ಕಪ್ಪೆಗಳು ಸೇರಿ ವಟಗುಟ್ಟುವಂತೆ ಇವರೂ ವಟಗುಟ್ಟುವವರೆ. +ನಾಟಕ ಬಹುವಾಗಿ ಮೆಚ್ಚಿದ ‘ಅನಕೃ’ ಹೇಳಿದರು ನನಗೆ. +“ನಾನೊಂದು ಹೊಸ ಕಾದಂಬರಿ ಬರೆದಿರುವೆ. ಆ ಕೃತಿಗೆ ಈ ಹೆಸರು ತುಂಬ ಚೆನ್ನಾಗಿ ಒಪ್ಪುತ್ತೆ” ಎಂದರು. +“ಹಾಗಾದರೆ ಆ ಕಾದಂಬರಿಗೆ ಇದೇ ಹೆಸರಿಡಿ” ಎಂದೆ. +“ನೀನಿಟ್ಟಿದೀಯಲ್ಲಯ್ಯ. ಮತ್ತೆ ನಾನು ಅದೇ ಹೆಸರಿಡಬಾರದು. ಅದರಿಂದ ನನ್ನ ಕಾದಂಬರಿಗೆ ‘ಕಬ್ಬಿಣದ ಕಾಗೆ’ ಎಂದು ಹೆಸರಿಸುವೆ” ಎಂದರು. +“ಅಂತ ದೊಡ್ಡ ಲೇಖಕರೆದುರು ನಾನಿನ್ನೂ ಆಗ ಹುಡುಗ. ನಾನೇ ನನ್ನ ನಾಟಕದ ಹೆಸರು ಬದಲಿಸಲೆ ಸಾರ್‍” ಎಂದೆ. +“ಯಾಕಯ್ಯ-ಕನ್ನಡದಲ್ಲಿ ಹೆಸರಿಗೆ ಬರವೇ” ಎಂದರು. +ಅದು ಸೌಜನ್ಯ-ಸಂಸ್ಕೃತಿ ಎಂದುಕೊಂಡೆ. +ಈಗ ಕಾಲ ಬದಲಾಗಿದೆ. ಯಾರು ಯಾರನ್ನೂ ಏನೂ ಕೇಳಬೇಕಿಲ್ಲ. +ರೆಹಮಾನ್ ‘ಸೇತು’ ಸಿನಿಮಾ ಕನ್ನಡ ರೀಮೇಕ್ ಮಾಡಿದಾಗ ನಾಯಕ ಸುದೀಪ್ ಹೆಸರೇ ಚಿತ್ರಕ್ಕಿಡಬಹುದಿತ್ತು. ಆದರೆ ಅದಕ್ಕೆ ‘ಹುಚ್ಚ’ ಎಂದು ಹೆಸರಿಸಿದರು. +“ಅರೆ! ಹುಚ್ಚ” ನಾನು ಬರೆದ ಮೂರನೆ ನಾಟಕ. ಆಗ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ಬಂದಿತ್ತು. ಅದರಿಂದ ನಾನು ಚಿತ್ರ ನಿರ್ಮಾಪಕ ‘ರೆಹಮಾನ್’ ಸಿಕ್ಕಾಗ “ಅಲ್ರೀ, ನನ್ನ ನಾಟಕದ ಹೆಸರೇ ಚಿತ್ರಕ್ಕಿಟ್ಟಿದ್ದೀರಲ್ಲ” ಎಂದೆ. +ಇದರಿಂದ ಅವರು ಚೂರೂ ವಿಚಲಿತರಾಗದೆ “ಹೌದೆ! ಇದು ನಂಗೆ ಪ್ರೆಸ್‌ಮೀಟ್‌ಗೆ ಮುಂಚೇನೇ ಗೊತ್ತಾಗಿದ್ರೆ ಮೂರ್ತಿಯವರು ನಾಟಕಕ್ಕೆ ಹುಚ್ಚ ಅಂತ ಹೆಸರಿಟ್ಟಿದ್ದಾರಲ್ಲ” ಎಂದು ಹೇಳುತ್ತಿದ್ದೆ ಎಂದರೆ ಹೊರತು ಮತ್ತೇನೂ ಹೇಳಲೇ ಇಲ್ಲ. +ಸುನೀಲ್ ಕುಮಾರ್‍ ದೇಸಾಯಿ ‘ಸ್ಪರ್ಶ’ ಚಿತ್ರ ನಂತರ ಹೊಸ ಚಿತ್ರವೊಂದು ಆರಂಭ ಮಾಡಿದರು. ವಿಷ್ಣುವರ್ಧನ್ ಅದರ ನಾಯಕ. ಅಂದು ಸುನೀಲ್‌ಕುಮಾರ್‍ ದೇಸಾಯಿ ಹೇಳಿದ ಮೊದಲ ಸ್ಟೇಟ್‌ಮೆಂಟ್ ಎಂದರೆ “ಇದು ಎಸ್.ಎಲ್. ಭೈರಪ್ಪನವರ ‘ಪರ್ವ ಅಲ್ಲ’” ಎಂದರು. ಮುಂದಿನ ವಾರ ಎಲ್ಲ ಪತ್ರಿಕೆಗಳಲ್ಲಿ ಇದು ದಪ್ಪ ಅಕ್ಷರಗಳಲ್ಲಿ ಬಂತು. +ಅದರಿಂದಲೇ ಟೈಟಲ್‌ಗಾಗಿ ಪುಸ್ತಕದ ಅಂಗಡಿಗಳಿಂದ ಬುಕ್‌ಲಿಸ್ಟ್ ತರಿಸಿಕೊಳ್ಳುವವರು ಅತಿಯಾಗಿದ್ದಾರೆ. ನಿಸಾರ್‍ ಅಹಮದ್ ಅವರ ‘ಕುರಿಗಳು ಸಾರ್‍ ಕುರಿಗಳು’ ಜನಪ್ರಿಯ ಕವಿತೆ. ಅಂಥ ಕವಿತೆ ಸಾಲು ಎಸ್.ವಿ. ರಾಜೇಂದ್ರಸಿಂಗ್ ಬಾಬು ಲಪಟಾಯಿಸಿ ತಾವೇ ಆ ಕುರಿ ಮಂದೆಗೆ ಕುರುಬರಾದದ್ದು ಒಂದು ಹಗರಣವೇ ಆಯಿತು. +ಆ ಅಂಶ ಪ್ರೆಸ್‌ಮೀಟ್‌ನಲ್ಲಿ ಕೆದಕಿದ್ದರಿಂದಾಗಿ ಬಾಬು ಪಾಲಿಗೆ ನಾನು ಕೆಟ್ಟವನಾದೆ. ಈಗ ಆ ಚಿತ್ರ ಶತದಿನೋತ್ಸವ ತಲುಪುತ್ತಿದೆ. ರಾಜ್ಯ ಪ್ರಶಸ್ತಿ ೩ನೆಯ ಬಹುಮಾನಗಳಿಸಿ ಅದಿಂದೂ ಚರ್ಚೆ ವಸ್ತು ಆಗಿ ಕೂತಿದೆ. +ಇಂಥ ಕಾಂಟ್ರವರ್ಸಿಗಳು ಬಾಬೂಗೆ ತುಂಬಾ ಇಷ್ಟ. ಅದರಿಂದಾಗಿಯೇ ಈಗ ‘ಕುರಿಗಳು ಸಾರ್‍ ಕುರಿಗಳು’ ಎರಡನೆಯ ಭಾಗ ತೆಗೆಯುವೆ ಎಂದು ಹೆದರಿಸುತ್ತಿದ್ದಾರೆ. +ಈ ಬಾರಿಯಾದರೂ ಬಾಬು ‘ಕುರಿಗಳು ಸಾರ್‍ ಕುರಿಗಳು’ ಮತ್ತೊಮ್ಮೆ ಓದಿ ಅದರ ವ್ಯಂಗ್ಯ ವಿಡಂಬನೆ ಗಮನಿಸಿ ಅಂಥ ಛಾಯೆಗಳು ಎರಡನೆ ಭಾಗದಲ್ಲಾದರೂ ಮಿಂಚುವಂತೆ ಮಾಡಿದರೆ ಒಳಿತು. ಚಿಂತಿಸಿ ಬಾಬು…ಮನಮಾಡಿದರೆ ನಿಮಗೆ ಅದು ಕಷ್ಟವೇನಲ್ಲ. +ಒಂದು ಸಮಾಧಾನ. ಹಲವಾರು ಇಂಗ್ಲೀಷ್ ಟೈಟಲ್ ಇಡಲು ಹೋಗದೆ-ಕನ್ನಡದ ಕೃತಿಗಳ ಹೆಸರು ಬಳಸುತ್ತಿದ್ದಾರೆ ಎನ್ನುವುದು. ಫಿಲಂ ಚೇಂಬರ್‍ಸ್ ಸೂಪರ್‍ ಸ್ಟಾರ್‍ ಹೆಸರು ಓ.ಕೆ. ಮಾಡುವುದೇ ಎಂಬುದನ್ನು ‘ಏಕೆ?’ ಎನ್ನದೆ ಕಾದು ನೋಡೋಣ. +***** +(೬-೭-೨೦೦೧) +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […] +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_601.txt b/Kannada Sahitya/article_601.txt new file mode 100644 index 0000000000000000000000000000000000000000..30c0d168c570bc6d7a2259ee9ffb70aab0578ffb --- /dev/null +++ b/Kannada Sahitya/article_601.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಾಮರದ ಆಸರದಿ ಮೇಲೇರಿ ಕುಡಿಚಾಚಿ +ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, +ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ +ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- +ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ +ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, +ಗರಿಗೆದರಿ ಎದೆದುಂಬಿ ಚಿಕ್ಕೆಲೋಕವ ಸುತ್ತಿ +ಹಾಡುತಿಹ ಹಕ್ಕಿಗಳ ಇಂಚರವ ಕೇಳಿ- +ಮೋಡಪಡೆ ಮಳೆಗರೆಯೆ ತುಂತುರಿನ ಸೊದೆ ಹೀರಿ +ಬಣ್ಣ ಬಣ್ಣದ ಬುಗ್ಗೆ ಬಿಲ್ಲಿನಂತಾಗಿ, +ಜಗವೆಲ್ಲ ತಿರುಗಾಡಿ ತೆಂಗುಗರಿಗಳ ನಡುವೆ +ತೂರಿ ಮರ್ಮರಗೈವ ಎಲರಿನಿಂ ತೂಗಿ- +ಚಂದಿರನ ಚೆಲುಮೊಗದ ಕಾಂತಿ ಬೆಳುದಿಂಗಳಿನ +ಹಾಲ್ಗುಡಿದು ಹಾಯಾಗಿ ಕಣ್ಣುಗಳ ಮುಚ್ಚಿ, +ಹೊಂಗನಸ ಕಾಣುತ್ತ ಜಿ‌ಯ್‌ಗುಡುವ ಹೆಗ್ಗಾಡ +ಜೋಗುಳದ ಲಲ್ಲೆಯಲಿ ಮೈಮರೆತು ಮೆಚ್ಚಿ- +ನಿದ್ರೆಗೈದಿಹ ಕಾಡಮಲ್ಲಿಗೆಯ ಕಣ್ಣೊರಸು +ತುಂಬಿ ಗುಂಗುಂಗಾನಗೈದು ಬಂದಿಹುದು; +ಅರಳುಗಳ ನೀಡವ್ವ, ಒಲಿದು ಬಂದಿಹನಾತ +ತುಂಬು-ಹೃದಯದಿ ತುಂಬು ಬೊಗಸೆಯಲಿ ತುಂಬು. +***** +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_602.txt b/Kannada Sahitya/article_602.txt new file mode 100644 index 0000000000000000000000000000000000000000..c2d966734b3f2b6b24b2a5dbefdfce378aba63e4 --- /dev/null +++ b/Kannada Sahitya/article_602.txt @@ -0,0 +1,117 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ +ಇಜಿಪ್ಷಿಯನ್ ಹುಡುಗಿಯ +ನಿರಾಕಾರ +ಮಸ್ತಿಷ್ಕ, +ನಿರಾಕಾರ +ಗಣಿತದಲ್ಲೆಲ್ಲೋ ಹುದುಗಿ, +ಅಲ್ಲೇಲ್ಲೋ +ಒಳಗೆ- +ಮಾನಸ ಪಪೈರಸ್‌ನ +ಮೇಲೆ, +ಗಣ-ಉಪಗಣ +ಅಂತೆಲ್ಲಾ +ವಿಭಾಜಿಸಿ, +ಕೂಡಿ ಕಳೆದು, +ಗುಣಿಸಿ, +ಅನುಲೋಮ ವಿಲೋಮ, +ಕ್ರಯ ವಿಕ್ರಯ ಮಾಡಿ, +ಆಕಾರ ತಳೆದು +ಆಕರವಾದ +ಬೀಜಾಕ್ಷರಗಳೆಲ್ಲಾ +ಕುಣಿದು ಕುಪ್ಪಳಿಸುವಾಗ. +ಥಟ್ಟನೇ, +ಹೊರಗೆ ಕಂಡಿದ್ದು- +ಇವಳು. +ನೆತ್ತಿಯ ಮೇಲೆ, +ತೊಂಬತ್ತು ಡಿಗ್ರಿ +ಕೋನದಲ್ಲಿ, +ಉರಿಯುವ +ವರ್ಜೀನಿಯಾದ ಕೆಂಗೋಳದ, +ತೊಂಬತ್ತು ಡಿಗ್ರಿ ಉಷ್ಣಾಂಶ +-ದಲ್ಲೂ, +‘ಥೀಟಾ’ ಮಾದರಿಯ +ಕಿವಿ ಕೂಡಾ ಕಾಣದಂತೆ +ಅವುಚಿಸುತ್ತಿದ್ದ ರುಮಾಲಿನಲ್ಲಿ, +ಉಂಗುಷ್ಟವನ್ನೂ ಮರೆಸಿದ್ದ +ನಿಲುವಂಗಿಯಲ್ಲಿ, +ತಲೆ ತಗ್ಗಿಸಿ +ನಡೆವ +ಇವಳ +ಬಿರುನಡೆ. +ಮತ್ತು, +ಅಲ್ಲಿ ಇವಳ ನಾಡಿನ +ಸ್ಫಿಂಕ್ಸ್ ಮೇಲಿಲ್ಲದ, +ತ್ರಿಕೋಣ ಮೂಗಿನ +ಮೇಲಿನ, +ಇವಳ +ವರ್ತುಳದ ಕನ್ನಡಕ- +ದತ್ತ, +ಒಂದೇ ಒಂದು +ಘಳಿಗೆ- +ಎದುರಿಗೆ ಕೂದಲು +ಹಾರಿಸುತ್ತಾ, +ಜಾಗ್ ಮಾಡುತ್ತಾ, +ಮಾತ್ರ +ಎದೆ, ತೊಡೆಗೆ +ರೋಮನ್ ಐದಂಕಿಯಂತೆ +ತುಂಡುಬಟ್ಟೆಯ, +ತೊಟ್ಟ, +ಹೆಡ್‌ಫೋನಿನಿಂದ +ಅದೇ ‘ಥೀಟಾ’ ಮಾದರಿಯ +ಕಿವಿಮುಚ್ಚಿದ್ದ, +ಅಮೇರಿಕನ್ ಹುಡುಗಿಯ +ಕಣ್ಣಿಂದ, +ಅವಳೀ ಘನ, +ಪಂಚಕೋನಾಕೃತಿಗಳಿಂದ, +ಸಿಡಿದೆದ್ದ, +ಒಂಬತ್ತು/ಹನ್ನೊಂದರ +ಕಿಡಿನೋಟ! +ಇವಳತ್ತ, +ಅವಳು ನೋಡುವ, +ಅವಳದ್ದೇ ಆದ +ಇನ್ನೊಂದು +ಆಯಾಮ! +ಪೂರ್ವಿಕರ +ನಿರಾಪಾಯ +ಗಣಿತದ ಮೇಲೆ +ಕಟ್ಟಿದ ಗಟ್ಟಿ +ಪಿರಮಿಡ್‌ಗೆ +ಆಕಾಶವಿರಿಯುವ +ಮೊನೆ!! +‘ಹೆಸರು +ಹಮೀದಾ ಆದರೂ, +ಆಕಡೆಯ +ಭಾಸ್ಕರಂಗೂ +ಈಕಡೆಯ +ಪೈಥಗೊರಸ್‌ಗೂ +ನಡುವೆ +ನಂಟು +ಗಂಟುಹಾಕಿದ್ದು +ನಾನು’- ಅಂತಾ, +ಎದೆಯುಬ್ಬಿಸಿ, +ಇವಳು +ಅವಳಿಗೆ +ಹೇಳಬೇಕಿತ್ತು, +ಅಂತ ನನಗನ್ನಿಸಿತು. +***** +ಮೇ ೨೮, ೨೦೦೨ +೧ ಒಂದು…. ಎರಡು… ಮೂರು ಒಂದೊಂದು ಹೂ ಹಗುರು ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು ಸೃಷ್ಟಿ ಕರ್ತ ! ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು ಶುಭ ಮುಹೂರ್‍ತ. ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು ಏಳುವನನಾಮತ್ತು […] +ಈ ದಿನ ಭಾನುವಾರ- ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ ನನ್ನ ದಡದಲ್ಲಿರುವ ಗಿಡಮರ ಬಳ್ಳಿ ಪ್ರತಿಫಲಿಸಿ, ಏನೋ ಸಮಾಧಾನ. ಅಂಥ ಅವಸರವಿಲ್ಲ, ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು. ಬೆಳೆದಿರುವ ಗಡ್ಡ ಇನ್ನೂ ಒಂದೆರಡು […] +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_603.txt b/Kannada Sahitya/article_603.txt new file mode 100644 index 0000000000000000000000000000000000000000..271cab06d0caff8d7e7eee4fb29cf7f910fdb003 --- /dev/null +++ b/Kannada Sahitya/article_603.txt @@ -0,0 +1,123 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಕಾಫಿಗೆ ಬರ್‍ತಿಯೇನೊ?” +ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. +ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. +“ಕಾಸಿಲ್ಲ ಕೊಡಿಸ್ತೀಯ?” +“ಬಾ ಹೋಗೋಣ…” +-ಹೊರಗಡೆ ಸಣ್ಣದಾಗಿ ಮಳೆ. ಮತ್ತೊಂದು ಸಂಜೆ ಕತ್ತಲೆಗೆ ತಿರುಗುತ್ತಿತ್ತು. ಪ್ರಿನ್ಸಿಪಾಲರ ರೂಮಿನಿಂದ ಹೊರಬಿದ್ದರು. ಅವಳು ಉಪಾಧ್ಯಾಯಿನಿ. ಅವನು ಗುಮಾಸ್ತ. ಅವಳ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ. ಅವನ ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ದೊಡ್ಡ ಪರಿವಾರ. ಬೆಳಗಾದರೆ ಕಾಲೇಜು. ಕಾಲೇಜಾದರೆ ಮನೆ. ಮಧ್ಯೆ ಒಂದಷ್ಟು ಜಗಳ. ಮನೆಯಲ್ಲೂ, ಕಾಲೇಜಿನಲ್ಲೂ. ಯಾರಿಗಾದರೂ ಸರಿ-ತನ್ನನ್ನು ತಾನು ತೆರೆದಿಡಲೇ ಬೇಕು ಎಂಬ ಗಳಿಗೆಗಳು ಬಂದೇ ಬರುತ್ತವೆ. ಮಾತನಾಡಲು ತೊಡಗುತ್ತಾರೆ. ಒಳಗೊಂದು- ಹೊರಗೊಂದು. ಆ ಹೊರಗಿಗೂ ಒಂದು ಅರ್ಥವಿರುತ್ತದೆ. ಆ ಆರ್ಥದಲ್ಲೂ ಸಾರ್ಥಕತೆ ಕಾಣುವಾಸೆ… ಹೊರಗಿನದೂ ಕೇಂದ್ರವಾಗುತ್ತಾ ಸಾಂದ್ರವಾಗುತ್ತಾ ಹೋಗುತ್ತದೆ. ಅವರಿಬ್ಬರೂ ಮಾತನಾಡಲು ತೊಡಗುತ್ತಾರೆ. ಹೆಚ್ಚಾಗಿ ಅವಳನ್ನೇ ಅವನು ಮಾತನಾಡಲು ಬಿಡುತ್ತಾನೆ. ಶೋತೃವಾಗುತ್ತಾನೆ-ಪ್ರೇಕ್ಷಕನಾಗುತ್ತಾನೆ. ಗೋಚರಿಸದ್ದನ್ನೆಲ್ಲ ತಬ್ಬಿಕೊಳ್ಳುತ್ತಾನೆ. ಶ್ರದ್ಧೆಯಾಗುತ್ತಾ ಹೋಗುತ್ತದೆ… +ಎಷ್ಟೋ ಬಾರಿ ಅವನು ಅವಳ ಮಾತುಗಳನ್ನು ನಿರಾಕರಿಸಿಬಿಡುತ್ತಿದ್ದ. ಅವನ ನಿಲುವನ್ನೆಲ್ಲ, ನಿರಾಕರಣೆಯನ್ನೆಲ್ಲ ಅವಳು ತಾತ್ಸಾರದಿಂದ ಕಡಿದು ಉಗಿದು ಬಿಡುತ್ತಿದ್ದಳು. ಈ ಆವಾಹನೆ – ವಿಸರ್ಜನೆಗಳ ನಡುವೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ…ಇಲ್ಲಡಿದ್ದರೆ ಕುಡಿಯುತ್ತಿದ್ದ ಕಾಫಿಗಾಗಲಿ, ಆಡುವ ಮಾತಿಗಾಗಲಿ ಅರ್ಥವೆಲ್ಲಿಯದು? ಅಪ್ಪಿಕೊಂಡಾಗ ಅವನಿಗಂತು ಅಂತರಂಗ ಸೇರಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪರಿವರ್ತನೆ. +ಒಮ್ಮೆ ಹೀಗೆ ಔಪಚಾರಿಕವಾಗಿ ಏನಾದರೂ ಮಾತನಾಡಲೆಬೇಕಲ್ಲ ಎಂಬ ಧ್ವನಿಯಲ್ಲಿ- +” ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದೆ..ಚಿಕ್ಕಹುಡುಗ.ಇನ್ನೂ ಹದಿನೆಂಟು ವರ್ಷ, ನಿರ್ದೇಶಿಸ್ತಾ ಇರೋದು..ಒಳ್ಳೆಯವನು, ಬರ್‍ತಿಯೇನೋ?” ಕೇಳಿದ್ದಳು. +” ಹದಿನೆಂಟು ವರ್ಷ…ದುರಹಂಕಾರ..” ಅವನು ಕೆಂಡ ಕಾರಿದ. ಅವಳ ಅಹ್ವಾನದಲ್ಲಿನ ಔಪಚಾರಿಕತೆಗೋ ಅಥವ.. +ಆಹ್ವಾನವನ್ನು ತಿರಸ್ಕರಿಸಿದ್ದಕ್ಕೋ ಅಥವ ಅವನ ತಾತ್ಸಾರಕ್ಕೋ ಅವಳಿಗೂ ರೇಗಿತು. ತಟಕ್ಕನೆ ಕೇಳಿದ್ದಳು: ” ನಿನಗಿರೋ ಕೊಬ್ಬು ನೋಡು.. ಆ ಹುಡುಗನ ಬಗ್ಗೆ ನಿನಗೇನೂ ಗೊತ್ತಿಲ್ಲ. ನಿನಗೇನು ಹಕ್ಕಿದೆ ಮಾತನಾಡೋಕ್ಕೆ?” ಆಹ್ವಾನದ ಹಿಂದಿನ +ಔಪಚಾರಿಕ ಭಾವ ಕಳೆದು ಅವಳು ಹೂಡಿದ ವಾದದಲ್ಲಿ : ಹೌದು ನಿಜ- ಎಂದನ್ನಿಸಿ ಬಿಟ್ಟಿತು. +ಸಂಜೆ ಅವನೂ ರವೀಂದ್ರ ಕಲಾಕ್ಷೇತ್ರಕ್ಕೆ ಹೋದ. ಹತ್ತು ರೂ ತೆತ್ತು ನಾಟಕ ಪೂರ್ತಿ ನೋಡಿದ. ನಾಟಕ್ ಕೆಟ್ಟದಾಗಿತ್ತು. ರವೀಂದ್ರ ಕಲಾಕ್ಷೇತ್ರದ ವಿರುದ್ಧವೇ ಅವನ ಹಠ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಅವನು ಅಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದ ಬಗೆಗೆ ಪಶ್ಚಾತ್ತಾಪವಿರಲಿಲ್ಲ. ಅವನ ಮಟ್ಟಿಗೆ ಅದು ಸಣ್ಣ ಪರಿವರ್ತನೆಯೇನು ಅಲ್ಲ. ಎಲ್ಲವನ್ನೂ ತೆರೆದ ಕಣ್ಣೀನಿಂದ ನೋಡು ನಂತರ ಮಾತನಾಡುವ ಹಾದಿಗೆ ಬಿದ್ದ. ಅವಳನ್ನು ಅವನು ತನ್ನನ್ನೂ ಮೀರಿ ಗುರುಸ್ಥಾನಕ್ಕೇರಿಸಿದ್ದ. ಮೊದಲು ನೋಡು, ನಂತರ ಮಾತನಾಡು- ಇದು ಅವಳ ಥಿಯರಿಯಾಗಿರಲಿಲ್ಲ. ಅವಳ ಸ್ವಭಾವದಲ್ಲೇ ಇತ್ತು , ಇರಲಿಲ್ಲ. ಅದು ಅವನಿಗೆ ಬೇಕಾಗಿರಲಿಲ್ಲ. ಇದೆ – ಅವಳಲ್ಲಿ ಇದೆ ಎಂಬ ನಂಬಿಕೆಯೆ ಅವಳನ್ನು ಅಪ್ಪಿಕೊಳ್ಳುವ ಶ್ರದ್ಧೆಯಾಗಿತ್ತು . ಆಧಾರವಾಯ್ತು . ಸಾಕು , ಅರ್ಥಗಳು ಗೋಚರಿಸಲಾರಂಭಿಸಿತು…. +ಹೋಟೆಲ್ಲಿಗೆ ಹೋಗುವ ಹಾದಿಯಲ್ಲಿ ಫುಟ್‌ಪಾತಿನ ಮೇಲೆ ರಾಶಿ ರಾಶಿ ಬಟ್ಟೆಗಳು. ಬಳಿಗೆ ಹೋಗಿ ರಾಶಿಯಿಂದ ಒಂದು ಅಂಗಿಯನ್ನು ಆರಿಸಿಕೊಂಡು ಅಳತೆಯನ್ನು ಅಂದಾಜು ನೋಡತೊಡಗಿದಳು. ” ಅಣ್ಣನಿಗಾ?” – ಕೇಳಿದ. “ಹೂಂ” ಅಳತೆಯಲ್ಲಿ ಮಗ್ನಳಾದಳು. ಅವನು ಅವಳನ್ನು ಮತ್ಸರದಿಂದ ನೋಡತೊಡಗಿದ. ಅವಳ ಮಗ್ನತೆ ಅವನಿಗೆ ಸಾಧ್ಯವಿರಲಿಲ್ಲ. ಅವಳು ಖರೀದಿಸಲಿಲ್ಲ. ಕಾರಣವೇ ಎಂದು ಅವನೇನೂ ಕೇಳಲಿಲ್ಲ. ಸುಮ್ಮನೆ ಮೆಜೆಸ್ಟಿಕ್‌ನ ಫುಟ್‌ಪಾತಿನ ಮೇಲೆ ಇನ್ನೂ ಕಡಿಮೆ ಕಾಸಿಗೆ ಸಿಕ್ಕುತ್ತೆ ಎಂದಷ್ಟೆ ಗೊಣಗಿದ. ಅವಳು ಹೂಂ ಅನ್ನಲಿಲ್ಲ- ಊಹೂಂ ಅನ್ನಲಿಲ್ಲ. ಹೋಟೆಲ್‌ನಲ್ಲಿ ಕಾಫಿಗೆ ಆರ್ಡರ್ ಮಾಡಿ ತಟಕ್ಕನೆ ತಪ್ಪು ಅರಿವಾದವಳಂತೆ ” ಏನಾದ್ರೂ ತಿಂತೀಯೇನೋ?” ಪ್ರಶ್ನಿಸಿದಳು. ರೋಟಿ ಆರ್ಡರ್ ಮಾಡಿದ. +ಅವ್ನಿಗೆ ರೋಟಿಯೆಂದರೆ ಬಹಳ ಇಷ್ಟ. ಬಯಸಿ ಬಯಸಿ ತಿನ್ನುತ್ತಿದ್ದ. ಬ್ರೆಡ್ ಬಟರ್ ಜಾಮ್, ಕಟ್ಲೆಟ್, ಸ್ಯಾಂಡ್‌ವಿಚ್, ಸ್ಕ್ರಾಂಬಲ್ಡ್ ಎಗ್, ಫ್ರೆಂಚ್ ಟೋಸ್ಟ್, ಹೀಗೆ ಮೆನುವನ್ನೆ ಮೆತ್ತಿಕೊಡು ಬೆಳೆದಿದ್ದ ಹೋಟೆಲ್ಲನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಶುದ್ಧ ಭಾರತೀಯ ಹೆಮ್ಮೆಯ ಘೋಷಣೆ ಬರಿಯ ಕವಚವಾಗಿದ್ದದ್ದನ್ನು ಕಂಡು ತೀರಾ ಅಸಹ್ಯಿಸಿಕೊಂಡಿದ್ದ. ಆ ರಸ್ತೆಯ ತುಂಬಾ ಅಂತಹ ಹೋಟೆಲ್ಲುಗಳೆ. ಊಳಿದದ್ದು ಪಬ್‌ಗಳು. ಅಲ್ಲೊಂದು ಇಲ್ಲೊಂದು ಪಾನಿಪುರಿ, ಭೇಲ್ ಪುರಿ ಗಾಡಿಗಳು.ಅವುಗಳ ಮುಂದೆ ರಸ್ತೆಯಲ್ಲಿ ಕಾರುಗಳು. +“ನಾನು ಹಳ್ಳಿಗೆ ಹೋದಾಗ ನಮ್ಮತ್ತೆ – ಅಜ್ಜಿ ಹೀಗೆ ಕೆಂಡದ ರೊಟ್ಟಿ ಸುಟ್ಟು ಕೊಡುತ್ತಿದ್ದರು.” – ಯಾಕೆ ರೋಟಿಯನ್ನು ಇಷ್ಟ ಪಡುತ್ತೇನೆ ಎಂಬುದಕ್ಕೆ ಕಾರಣ ಅವಳ ಸಮ್ಮುಖದಲ್ಲಿ ಬಯಲಾಗಿ , ಅವನ ಅರಿವಿಗೂ ಗೋಚರವಾದದ್ದು ಅವನಿಗೆ ಆಶ್ಚರ್ಯವಾಯ್ತು- ಆಗಲಿಲ್ಲ. ಅವಳ ಬಗೆಗೆ ಮತ್ತಷ್ಟು ಗೌರವ. +“ನಾನು ನಿನ್ನನ್ನು ಪ್ರೀತಿಸುತ್ತೇನೆ..” ಒಳಗೆ ಗಟ್ಟಿಯಾದ ಭಾವವನ್ನು ಹೊರಗೆಡವಲು ನಾಲಿಗೆ ತುದಿಗೆ ಬಂದಿದ್ದ ಪದಗಳನ್ನು ಕತ್ತರಿಸಿದ. “ಹಾಗಂದರೆ ಏನು?”- ಅವಳು ಕೇಳೆ ಕೇಳುತ್ತಾಳೆ.ಒಳಗೆ ತಡಕಿಕೊಂಡಾಗ ಉತ್ತರ ಅವನಿಗೆ ಸ್ಪಷ್ಟವಿರಲಿಲ್ಲ. ಹೀಗೆ ಸ್ಪಷ್ಟವಾಗದ್ದರ ಕುರಿತು ಏನೆ ಹೇಳಿದರೂ ಸುಳ್ಳಾಗುತ್ತದೆ. ಬೇಡವೆಂದು ನಿರ್ಣಯಿಸಿ ಸುಮ್ಮನಾದ. ಹೊರಗಡೆ ಕತ್ತಲು- ಒಳಗೆ ಮಂಕು ಬೆಳಕು. ರೊಟ್ಟಿ ತಿನ್ನುತ್ತಲೇ ಅವಳ ಮುಖವನ್ನು ನೋಡತೊಡಗಿದ. +” ನನಗೆ ಬೆಂಗಳೂರು ಬೇಜಾರಾಗಿ ಹೋಗಿದೆ. ದೂರ ಹೋಗ್ಬೇಕೂಂತನ್ನಿಸ್ತಿದೆ.” ಅವಳ ಮಾತುಗಳಲ್ಲಿ ಅವನ ಭಾವ ಧ್ವನಿಯೊಡೆದಿತ್ತು. ವಯಕ್ ಎಂದು ನಾಸಿಯಾ. “ಯಾಕೆ ?” ಕಷ್ಟ ಪಟ್ಟು ಕೇಳಿದ. ಅನುಚಿತವಾದರೆ…ಆತಂಕ. ತೀರಾ ವೈಯಕ್ತಿಕವಾದದ್ದನ್ನು ಕೇಳಲು ಸಂಕೋಚ. ಅವಳು: +” ಮನೇಲಿ ಮದುವೆ ಮಾಡ್ಕೋಂತ ಹಠ ಹಿಡಿದಿದ್ದಾರೆ…ನನಗೆ ಯಾರೋ ಅಪರಿಚಿತನ ಜೊತೆ …ಆಗೋಲ್ಲ…” +“ನಿನ್ನ ತಂದೆ ತಾಯಿ ಸಂಕಟಾನ ಅರ್ಥ ಮಾಡಿಕೋಬಲ್ಲೆಯ..? +ತಪ್ಪೂಂತನ್ನಿಸೋಲ್ವ?” +” ಆಯ್ತು- ಅರ್ಥವಾಗುತ್ತೆ…ಆದ್ರೂ ನನಗಾಗೋಲ್ಲ…ಅದಕ್ಕೇ ಈ ಕೆಲಸ ಬಿಟ್ಟು ಬೇರೆ ಕಡೆ ಹೋಗ್ಬೇಕೂಂತನ್ನಿಸ್ತಿದೆ…” +” ಆಗ ಅವರ ಸಂಕಟವೇನೂ ಕಮ್ಮಿಯಾಗೋಲ್ಲ. ನೀನು ನಿನ್ನ ನೀರ್ಣಯ ಏನೂನ್ನೋದನ್ನ ಅವರಿಗೆ ಹೇಳು. ಮನದಟ್ಟು ಮಾಡಿಸು…” +” ಅವರಿಗೆ ಅರ್ಥವಾಗೋಲ್ಲ. ಯಾರನ್ನಾದರೂ ಸರಿ ಮದ್ವೆ ಮಾಡ್ಕೋಂತ ಹಠ ಹಿಡೀತಾರೆ” +” ಈ ಪಲಾಯನದಿಂದ ಯಾರಿಗೂ ಏನೂ ಪರಿಹಾರ ಸಿಕ್ಕೋಲ್ಲ.” +” ನಿಜ ಇರಬಹುದು… ಆದರೂ..” +ಅವಳ ಹಠ ಅವಳ ತಳಮಳ ಅವನಿಗೆ ಅರ್ಥವಾಗುತ್ತೆ. ಆದರೂ ಅವನು ಅವಳ ತಾಯ್ತಂದೆಯರ ಪರವಾಗೇ ವಾದಿಸುತ್ತಾನೆ.ಹಾಗೆ ವಾದಿಸುವುದೂ ಪ್ರಯೋಜನವಿಲ್ಲ.- ನಿರ್ಣಯ ಅವಳದೇ ಅಲ್ಲವೆ..ಅವನಿಗೆ ಗೊತ್ತು. ಆದರೂ ಒಳಗೇ ಗೊಣಗಿಕೊಳ್ಳುತ್ತಾನೆ- ಅಪ್ಪ ಅಮ್ಮನ ಮಾತುಗಳನ್ನ ಕೇಳಿಕೊಡು ಇರೋಕ್ಕೆ ಯಾಕಾದ್ರು ಆಗೋಲ್ಲ? ಹಾಳಾಗಿ ಹೋಗಲಿ ಒಂದು ನಿರ್ಣಯಕ್ಕಾದರೂ ಬಂದು.. ಆಚೆಗೂ ನಿಲ್ಲದ ಈಚೆಗೂ ನಿಲ್ಲದ… ಹ್ಯಾಗೂ ಕಾಲ ಕಳೀತಿದೆ. ಜೀವನದಲ್ಲಿ ಮದ್ವೇನೆ ಎಲ್ಲವೂ ಅಲ್ಲ. ಅದು ಅವ್ನಿಗೂ ತಿಳಿದಿದೆ..ಆದರೂ ..ಮತನ್ನಾಡಿದರೆ ಜಗಳವಾಗುತ್ತೆ. +“ಅತಿಯಾಗಾಡ್ಬೇಡ ” ಗದರಿಸ್ತಾಳೆ. ಸಹಮತ ಯಾವುದರಲ್ಲೂ ಇಲ್ಲ. ಸದಾಜಗಳ.ಒಮ್ಮೊಮ್ಮೆ ಇಬ್ಬರಿಗೂ ಸಿಟ್ಟು ಬರುತ್ತೆ. ಕಪಾಳಕ್ಕೆ ಹೊಡೆಯುವಷ್ಟು. ಹಾಗಂತ ಅವಳೂ ಹೇಳಿದ್ದಾಳೆ. ಅವನೂ ಹೇಳಿದ್ದಾನೆ. ಒಮ್ಮೆ ಹೊಡೆದು ಬಿಡುವಷ್ಟು ಕೋಪ. +” ಹೊಡೀತೀನಿ ಈಗ..” +“ನಮ್ಮಪ್ಪ ಅಮ್ಮನೇ ಹೊಡೆದಿಲ್ಲ.” – ತಟಕ್ಕನೆ ಅವಳು ಮಾತುಗಳಲ್ಲಿ ಹೊಡೆದೇ ಬಿಟ್ಟಳು. +ಅವನಿ‌ಇಗೇನೂ ಬೇಸರವಾಗಲಿಲ್ಲ. ಗೆರೆ ಹಾಕಲೇ ಬೇಕಿತ್ತು. ಹಾಕಿಯಾಯ್ತು. ಅವಳಿಗೂ ಬೇಸರವಾಗಲಿಲ್ಲ. +ರೋಟಿ ತಿಂದು ಮುಗಿಸಿದ್ದ. ಕಾಫಿ ಆಯ್ತು. ಬಿಲ್ ಕೊಟ್ಟು ಒಂದು ರೂಪಾಯಿ ಟಿಪ್ಸ್ ಬಿಟ್ಟಳು. +” ಟಿಪ್ಸ್ ಯಾಕೆ ಬಿಡ್ತೀಯ?” ಜಗಳ ಆಡಬಾರದು ಎಂದು ಎಷ್ಟೇ ನಿರ್ಣಯಿಸಿದ್ದರೂ ಒಮ್ಮೊಮ್ಮೆ ಅತಿಯಾಗಿ ಆಡುತ್ತಾನೆ – ಬಫೂನ್. +ಅವಳ ಕಣ್ಣಲ್ಲಿ ಉರಿ ಕಾಣಿಸಿಕೊಂಡಿತು. ಈ ಪ್ರಶ್ನೆಯನ್ನು ಅವನು ನಾಲ್ಕನೆ ಬಾರಿ ಕೇಳುತ್ತಿರುವುದು. ಆದರೂ ಕೇಳಿದ ಪ್ರಶ್ನೆಗೆ ಸಂಕಟದ ಉತ್ತರ. +” ನನಗೆ ಗೊತ್ತಿಲ್ಲ. ನಮ್ಮಪ್ಪ ಅಮ್ಮನ ಜೊತೆ ಹೋಟೆಲ್‌ಗೆ ಹೋದಾಗ ಟಿಪ್ಸ್ ಬಿಡೋದು ನೋಡಿರಬೇಕು. ಬಹುಶಃ ಟಿಪ್ಸ್ ಬಿಡೋದು ನಮ್ಮಪ್ಪನಿಂದ ಕಲಿತಿದ್ದಿರಬೇಕು…” +ಅವನಿಗೆ ನಿಜವಾಗಿಯೂ ಕೋಪ ಉಮ್ಮಳಿಸಿಕೊಂಡು ಬಂದಿತ್ತು. ಕೋಪವನ್ನು ಮುಷ್ಠಿಗೆ ರವಾನಿಸಿ ಬೆರಳುಗಳ ಮೂಲಕ ಹೊರಗೆ ಹಾಕಿದ. ಆದರೂ ಅದು ಜಿಗುಟು ಸ್ವರದಲ್ಲಿ ಒಡೆದಿತ್ತು.” ಸುಳ್ಳು..” ಕಿರುಚಿದ. +” ಹೋಗೋ ಎಲ್ಲವನ್ನೂ ಕಾನ್ಶಿಯಸ್ಸಾಗೆ ಮಾಡ್ಬೇಕಾಗಿಲ್ಲ..ಯಾಕೇಂತ ನನಗೆ ಗೊತ್ತಿಲ್ಲ..”- ಅವಳಿಗೂ ಸಿಟ್ಟು-ವಾಕರಿಕೆ-ಅಸಹ್ಯ. +” ನನಗೆ ಗೊತ್ತು ಯಾಕೇಂತ, ನೀನು ಈ ಹ್ಯಾಬಿಟ್ಟನ್ನ ಎಲ್ಲಿ ಪಿಕಪ್ ಮಾಡಿದ್ದೀಯಾನ್ನೋದು..” +ಇದನ್ನು ಈವರೆಗೆ ಅವನು ಕಾಲೇಜಿನ ವಲಯದಲ್ಲಿ ಸಹೋದ್ಯೋಗಿಗಳ ನಡುವೆ ಸಾಕಷ್ಟು ಬಾರಿ ಹೇಳೀದ್ದ. ಬಹಳ ಜನಕ್ಕೆ ಹೇಳುತ್ತಲೇ ಇರುತ್ತಾನೆ. ಒಳ್ಗೆ ಮುಷ್ಠಿ ಹಿಡಿದು ಕಟಕಟಿಸಿ, ದ್ರವಿಸಿ… +” ಹೇಳು ಹಾಗಾದೆರೆ..” ಅವಳು ಸವಾಲು ಹಾಕಿದಳು. +“ಈಗಲ್ಲ , ಸಮಯ ಬರಲಿ ಸಾಧ್ಯಾವಾದರೆ ನೀನೆ ಯೋಚಿಸು, ಹೊಳೆದರೆ ಹೇಳು..” +” ಹೀಗೆ ಆಲೋಚಿಸ್ತಾ ಕೂತರೆ ಸಿಗೋ ಸಣ್ಣ ಪುಟ್ಟ ಸಂತೋಷಗಳನ್ನೂ ಕಳ್ಕೋಬೇಖಾಗುತ್ತೆ. ನಿನ್ನ ತರಹ ಎಲ್ಲವನ್ನೂ ಗಂಭೀರವಾಗಿ ಯೋಚಿಸಬಾರದು..” +ಇಬ್ಬರೂ ಹೋಟೆಲ್ಲಿಂದ ಎದ್ದು ಆಚೆಗೆ ಬಂದರು.ಸಣ್ಣದಾಗಿ ಮಳೆ ಹನಿಯುತ್ತಿತ್ತು. ಅಸಹನೆಯನ್ನೂ ಕೋಪವನ್ನು ಮುಚ್ಚಿಟ್ಟುಬಿಡುವಷ್ಟು ನಯಗಾರಿಕೆ ಅವಳಿಗಿಲ್ಲದ್ದು ಅವನಿಗೆ ಮೆಚ್ಚಿಗೆಯಾದ ಅಂಶ. ಕೋಪವನ್ನು ತೋರಿಸಿಕೊಳ್ಳೋದಕ್ಕೂ ಒಳಗಡೆ ಎಲ್ಲೋ ಇಂಟಗ್ರೆಟಿ ಇರಬೇಕು. ಅಸಲಿ ಗುಣವನ್ನ ಯಾವ ಎಗ್ಗೂ ಇಲ್ಲದೆ , ಅಪರೂಪಕ್ಕೊಮ್ಮೆ ಇಂತಹವರು ಕಾಣ ಸಿಗೋದು…ಕಾಲೇಜಿನ ಒಳಗೆ ಬಂದಿದ್ದರು. +“ಹ್ಯಾಗೆ ಹೋಗ್ತೀಯ?” ಕೇಳಿದ. +“ಬಸ್ ಸ್ಟಾಪಿಗೆ ನಡ್ಕೊಂಡು ಹೋಗ್ತೀನಿ.”- ಕಾಲೇಜಿನಿಂದ ಬಸ್ ಸ್ಟಾಪಿಗೆ ಐದು ನಿಮಿಷದ ಹಾದಿ. +” ಜೊತೆಗೆ ಬರಲ?” +” ಬೇಡ ಒಬ್ಬಳೆ ಹೋಗ್ತೀನಿ.” +ಕತ್ತಲಲ್ಲಿ ಒಬ್ಬಳೇ ನಡೆಯ ತೊಡಗಿದಳು. ಜನರೊಂದಿಗೆ ಅವಳು ಬೆರೆತರೂ ಅವಳು ಒಬ್ಬಂಟಿ ಎಂದನ್ನಿಸಿತವನಿಗೆ. ನಡೆಯುತ್ತಾ ಹೋಗುತ್ತಿದ್ದವಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತ. ಕ್ರಮೇಣ ಅವನ ದೃಷ್ಟಿಯಾಚೆಗೆ ಕರಗಿದಳು.ಅವಳಿಗೆ ಗೊತ್ತಿಲ್ಲ. ಸಣ್ಣ ಸಣ್ಣ ಸಂಗತಿಗಳಲ್ಲಿ ಅವನೂ ಸಂತೋಷಿಸುತ್ತಾನೆಂದು. ಅವನು ಹೇಳುವುದೂ ಇಲ್ಲ- ಅವಳು ಕೇಳುವುದೂ ಇಲ್ಲ. ಇಬ್ಬರಿಗೂ ಗೊತ್ತು. +” ಬೆಳೆಗಾಂ ಡಿಸ್ಟ್ರಿಕ್ಟ್‌ನಲ್ಲಿ ಒಂದು ಅಮೆರಿಕನ್ ಫ್ಯಾಕ್ಟ್ರಿ ಇದೆ. ಅದರ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡ್ಬೇಕೂಂತಿದ್ದಾರೆ. ಅವರಿಗೆ ಸೋಷಿಯಲ್ ವೆಲ್‌ಫೇರ್ ಆಫಿಸರ್ ಬೇಕಂತೆ. ನನಗೆ ಇಂಟೆರ್‌ವ್ಯೂ ಬಂದಿದೆ , ಹೋಗ್ತೀನಿ. ಯಾರೀಗೂ ಹೇಳ್ಬೇಡ..” +ಒಂದು ದಿನ ದಿಡೀರನೆ ಹೇಳಿದಳು. ಅವನಿಗೆ ಒಂದು ನಿಮಿಷ ಕಳವಳವಾಯ್ತು. ಆ ಕಳವಳಕ್ಕೆ ಎರಡು ಕಾರಣಗಳು ಅವನಿಗೆ ಸ್ಪಷ್ಟವಾಯ್ತು. ಒಂದನ್ನು ಹೇಳಿದ ಒಂದನ್ನು ಮುಚ್ಚಿಟ್ಟ. ಬಹಿರಂಗವಾದರೆ ಅದಕ್ಕೊಂದು ಲೆಜಿಟಿಮಸಿ ಹುಡುಕುವ ಪ್ರಯತ್ನ..ಥೂ ಹೇಳುವುದೇ ಬೇಡ. ಇನ್ನೊಂದು ಕಾರಣ ಅವನು ಪ್ರಾಮಾಣಿಕವಾಗಿ ಶ್ರದ್ಧೇಯಾಧಾರದಲ್ಲಿ ನಂಬಿಕೊಂಡು ಬಂದದ್ದು. ಅದನ್ನು ಹೇಳಿದ: +” ಅಮೆರಿಕನ್ ಕಂಪನಿ ಅಂತೀಯಾ. ಅಲ್ಟಿಮೇಟ್ಲಿ ಅದು ಲಾಭಬಡುಕ ಸಂಸ್ಥೆ. ಆ ಫ್ಯಾಕ್ಟ್ರೀ ಅಲ್ಲಿಲ್ಲದೆ ಹೋಗಿದ್ದರೆ ಅವರು ಯಾವ ಕುಗ್ರಾಮವನ್ನೂ ದತ್ತು ತೊಗೋತಾ ಇರ್‍ಲಿಲ್ಲ.ಪ್ರಾದೇಶಿಕವಾಗಿ ಯಾವುದೇ ವಿರೋಧ ಬರದೇ ಇರ್‍ಲೀಂತ ಅವರು ಈ ತರಹ ಮಾಡೋದು ಉಂಟು. ಒಲೈಸ್ತಾರೆ, ಮಣಿಯದೆ ಇದ್ದರೆ ಕರಾಮತ್ತು ಮಾಡ್ತಾರೆ. ಅಂತಹವರ ಮಧ್ಯೆ ನೀನು..? ಕಲ್ಪಿಸಿಕೊಳ್ಳೋಕ್ಕೂ ಆಗ್ತಿಲ್ಲ..” +” ಅಲ್ಲಿ ಸೇವಾಗ್ರಾಮದಲ್ಲಿ ಎಷ್ಟೊಂದು ಜನ ಮುಂದೆ ನಿಂತು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡೀತಿರ್‍ತಾರೆ ಗೊತ್ತಾ? ಇಲ್ಲಿ ಕೂತ್ಕೊಂಡು ಕಾಫಿ ಕುಡೀತ ಇಂಟಗ್ರಟಿ ಬಗ್ಗೆ ಮಾತಾಡೋದೂದ್ರೆ ಅಸಹ್ಯವಾಗಿಬಿಟ್ಟಿದೆ.” +” ಆದರೆ ನೀನು ಅಲ್ಲಿಗೆ ಹೋಗ್ಬೇಕೂಂತಿರೋದಕ್ಕೆ ನಿಜವಾದ ಕಾರಣ ಅದಲ್ಲ.” +“ನಿಜ, ಆದ್ರೆ ನಾನು ಹೋದ ಕಡೆ ಪ್ರಾಮಾಣಿಕವಾಗಿರ್‍ತೀನೀಂತ ನನಗನ್ನಿಸುತ್ತೆ. ಜನಸೇವೆ, ಸಮಾಜಸೇವೆಯ ಮಾತುಗಳನ್ನೇನೂ ಆಡೋದಿಲ್ಲ ಹೆದರ್‍ಕೋಬೇಡ…” +ಅವಳ ಮಾತುಗಳಲ್ಲಿ ಪ್ರಾಮಣಿಕತೆಯಿತ್ತು. ಅವನು ಸುಮ್ಮನೆ ಅವಳು ತೊಟ್ಟಿದ್ದ ಖಾದಿ ಸೆಲ್ವಾರ್ ಕಮೀಜನ್ನೇ ನೋಡತೊಡಗಿದ್ದ. ಒಮ್ಮೆ ಅವಳು ಹೇಳಿದ್ದಳು: +” ಖಾದಿ ನನಗೆ ಬಹಳ ಅನುಕೂಲ. ಮೂವತ್ತೊಂಬತ್ತು ರೂಪಾಯಿ ಮೀಟರ್. ಯಾರು ಕೊಡ್ತಾರೆ ಹೇಳು. ನಾನು ಅದನ್ನ ಹಾಕಿಕೊಂಡು ದೇಶಭಕ್ತಿಯ ಸೋಗು ಹಾಕ್ತಾ ಇಲ್ಲ. ಆ ಮಾತುಗಳನ್ನ ಆಡ್ತಲೂ ಇಲ್ಲ.ಅನುಕೂಲವಾಗಿದೆ, ಉಪಯೋಗಿಸ್ತಿದೀನಿ, ಅಷ್ಟೆ.” +ಅಮೆರಿಕನ್ ಫ್ಯಾಕ್ಟರಿ, ಸೋಷಿಯಲ್ ವೆಲ್‌ಫೇರ್ ಖಾದಿ, ಮನೆ ಹೀಗೆಲ್ಲ ಅವಳು ಅಂದು ಸುದೀರ್ಘವಾಗಿ ಮಾತನಾಡತೊಡಗಿದಳು. ಅವಳ ಧ್ವನಿಯಲ್ಲಿನ ಮುಗ್ಧತೆ, ಪ್ರಾಮಾಣಿಕತೆ, ಏಕಾಕಿತನವೆಲ್ಲ ಅವನಿಗೆ ಹೊಸ ಅರ್ಥಗಳೊಂದಿಗೆ ಗೋಚರವಾಗತೊಡಗಿ ಗೊಂದಲದಲ್ಲಿ ಅವಳೇ ಹುಟ್ಟಿಹಾಕಿಕೊಂಡಿದ್ದ ವಿಪರ್ಯಾಸಗಳನ್ನೆಲ್ಲ ಬದಿಗೊತ್ತಿ ಅವನು ಭಾವುಕನಾದ. +ಆಗ ಅವನಿಗೆ ಕಾಣಿಸಿದ್ದು- ಶ್ರದ್ಧೆ ಹುಟ್ಟಿಕೊಳ್ಳುವ ಮುನ್ನದ ಪೂರ್ವಾವಸ್ಥೆಯಾದ ಗೊಂದಲಗಳು.. ಆಲೋಚಿಸುತ್ತಲೇ ನಿರ್ಣಯ ಏನಾಗಬಹುದು ಎಂಬ ಕುತೂಹಲಕ್ಕೆ ಸಿಕ್ಕಿಕೊಂಡ. +ಬೆರಗಿನಿಂದ ನೋಡುತ್ತಿದ್ದ ಅವನ ಕಣ್ಣುಗಳಿಗೆ ಅವಳು ಹಿರಿಯವಳಾಗಿ ಅವನು ಕುಗ್ಗತೊಡಗಿದ್ದ. ಆದರೂ ಅವಳು ಹೋಗದೆ ಇದ್ದರೆ ಎಷ್ಟು ಚೆಂದವಲ್ಲವೆ. ಹೀಗೆಯೆ ಇವಳು ಮಾತನಾಡುತ್ತಿದ್ದರೆ ಎಷ್ಟು ಚೆಂದವಲ್ಲವೆ ಎಂದನ್ನಿಸ ತೊಡಗಿ ಹೋಗಿಯೇ ಬಿಡುತ್ತಾಳೆ ಎಂಬ ಆತಂಕವೂ ಅಧಿಕವಾಗಿ ” ಹೋಗ್ಬೇಡಾ” ಎಂದು ಚೀರಬೇಕನ್ನನಿಸಿತು. ಅವನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಆತ್ಮೀಯತೆ- ಸಲಿಗೆಗಳೂ ಸೋಗಾಗಿಬಿಡುವ ಅಸಹ್ಯ ಚೀರಾಟ, ಒಳಗೇ ಹುತು ಹೋಗಿ ಗೊಗ್ಗರು ಧ್ವನಿ ಹೊರಡತೊಡಗಿ ಜೋಕರ್ ಆದ, ‘ ಪಾಪ ’ ಎಂದು ಕನ ಆಡತೊಡಗಿದಂತೆ ಭಾಸವಾಗಿ ನಿಲ್ಲಿಸಿ ಎಂದು ಚೀರಬೇಕನ್ನಿಸಿತು. ಸಾಧ್ಯವಾಗದೆ ಹೋಯಿತು. +ಕಾಲೇಜಿಗೆ ಸಣ್ಣ ಬ್ರೀಫ್ ಕೇಸಿನೊಂದಿಗೆ ಬಂದಿದ್ದಳು. ಅಂದಿನ ಕೆಲಸ ಮುಗಿಸಿ ನೇರ ಸ್ಟೇಷನ್‌ಗೆ ಅಲ್ಲಿಂದ ಬೆಳಗಾಂಗೆ ಪ್ರಯಾಣ. +” ಸ್ಟೇಷನ್‌ಗೆ ನಾನು ಬರಲ..?” – ಕೇಳಿದ. +” ಬೇಡ , ನಾನು ನೇರ ಸ್ಟೇಷನ್‌ಗೆ ಹೋಗ್ತಾ ಇಲ್ಲ” +ಅವಳು ಬ್ರೀಫ್‌ಕೇಸ್ ಹಿಡಿದು ಹೊರಟಾಗ: +“ನನ್ನನ್ನ ಸೀರಿಯಸ್ಸಾಗಿ ತೊಗೋಬೇಡ..” +ಅವಳು ಬೇರೆ ಜನರ ನಡುವೆ ಮರೆಯಾಗುತ್ತಲೆ ಇವನೂ ಬೇರೆಯವರ ತೆಕ್ಕೆಗೆ ಬಿದ್ದ.ಅಷ್ಟು ಜನರ ನಡುವೆಯೂ ಏಕಸಕಿತನ ಖಾಲಿ ಖಾಲಿ. ಕಾಫಿ ತಿಂಡಿ ಮಾತುಗಳಲ್ಲಿ ತೊಡಗಿಸಿಕೊಳ್ಳಲಾಗದ ಒಳ ಚೀರಾಟ. +ಸ್ಟೇಷನ್‌ಗೆ ಹೋಗಲೋ ಬೇಡವೋ- ಸಂದಿಗ್ಧದ ನಡುವೆಯೇ ಅಂತೂ ಹೋಗಬೇಕೆಂಬ ಹಠ ಬೆಳೆದು ಜಿಟಿಜಿಟಿ ಮಳೆಯ ನಡುವೆಯೇ ಹೊರಟ. ಟ್ರೈನು ಹೊರಡುವುದಕ್ಕೆ ಇನ್ನೂ ಬಹಳ ಸಮಯವಿತ್ತು. ಬಂದಿರಲಾರಳೆ? ಹುಡುಕಿದ. ಶಬರಿಮಲೈಗೆ ಹೊರಟಿದ್ದ ದೊಡ್ಡ ಗುಂಪೊಂದರ ಮಧ್ಯೆ ಅವಳು ಕಾಣಿಸಲಿಲ್ಲ. ಬದಲಿಗೆ ಮುರುಗೇಸನ್ ಕಂಡ. ಮುರುಗೇಸನ್‌ಗೂ ಇವನನ್ನು ಕಂಡು ಸೋಜಿಗ.ದಡ ದಡ ಹೆಜ್ಜೆ ಹಾಕುತ್ತ ಅದೇ ಹಳೆ ಪ್ರೀತಿಯನ್ನು ಜಿನುಗಿಸಿ- +” ಏನ್ಗುರೂ ಸ್ಟೇಷನ್‌ನಲ್ಲಿ..?” – ತಮಿಳಿನಲ್ಲಿ. +” ಮುರುಗೇಸಾ ಏನೋ ಇದು- ಶಬರಿಮಲೈಗೆ ಹೊರಟಿದ್ದೀಯ..?” +” ಹೂಂ..ಎಂಟನೆ ವರ್ಷ…ನಿನ್ನನ್ನ ನೋಡಿ ಎಷ್ಟು ವರ್ಷಗಳಾಗೋಯ್ತು..! ನಿನ್ನ ಕತೇನೆಲ್ಲಾ ಒದ್ತಾ ಇರ್‍ತೀನಿ.” +” ಅದ್ಸರಿ ಈಗೇನ್ಮಾಡ್ತಾ ಇದ್ದೀಯ?” +” ಬಿನ್ನಿ ಮಿಲ್ಸ್ ಹತ್ತಿರ ಸಣ್ಣ ಹೊಟೆಲ್ ಇಟ್ಟೀದೀನಿ ಹೆಂಡ್ತಿ, ಅವಳ ತಮ್ಮ ಎಲ್ರೂ ಹೋಟೆಲ್ ನಡ್ಸೋಕ್ ಸಹಾಯ ಮಾಡ್ತಾರೆ. ಊಟ ತಿಂಡಿ ಬಾಡಿಗೆಗೇನೂ ಕೊರತೆ ಇಲ್ಲ. ಅದೇ, ಬೆಂಗಳೂರ್ ಯೂನಿವರ್ಸಿಟಿ ಕ್ಯಾಂಟೀನ್‌ನಲ್ಲಿ ಸಪ್ಲಯರ್ ಆಗಿದ್ದಾಗ ಎಷ್ಟು ಸಂತೋಷವಾಗಿದ್ನೋ ಅಷ್ಟೆ ಸಂತೋಷವಾಗಿದೀನಿ. ನೀನು ಕಾಮತ್ ಹೋಟ್ಲು ಬಿಟ್ಟು ಸಪ್ಲಯರ್ ಕೆಲಸ ಬಿಟ್ಟು ದೊಡ್ಡೋನಾಗಿದ್ದೀ. ನೀನು ಹ್ಯಾಗಿದ್ದೀ?” +” ಏನೋ ಇದೀನಿ. ನಾನೂ ನೀನು ಟಿಪ್ಸ್ ಕಾಸೆಲ್ಲಾ ಕೂಡಿಹಾಕಿ ಎಂಜಿ‌ಆರ್ ಸಿನಿಮಾ ನೋಡ್ತಿದ್ದು ಜ್ಞಾಪ್ಕ ಇದ್ಯ?” +” ಇಲ್ದೇ ಏನು ಗುರು, ನಿನ್ನ ಜತೆ ಸಿನಿಮಾ ನೋಡ್ಬೇಕೂಂತ ಆವಾಗಾವಗ್ ಅನ್ಸುತ್ತೆ.ನಾನು ಮಲೈನಿಂದ ವಾಪಸ್ ಬಂದ್ಮೇಲೆ ತಿರ್‍ಗಾ ಹೋಗೋಣ. ದರಿದ್ರ ಟಿಪ್ಸ್ ಕಾಸು ಬೇಡ. ನಂದೆ ಕಾಸು. ಏನಂತೀಯ?” +– ಮುರುಗೇಸನ ಮಾತುಗಳನ್ನ ಮತ್ಸರದಿಂದ ಕೇಳುತ್ತಾ ನಿಂತಾಗ ಒಳಗೆ ಖಾಲಿ ಖಾಲಿ- ಬಿಕ್ಕಿ ಬಿಕ್ಕಿ ಅಳಬೇಕನ್ನಿಸಿತು. ಅವಳು ಹೋಗುತ್ತಾಳೆ ಎಂಬ ವ್ಯಥೆಗೋ ಅಥವ ಮುರುಗೇಸನಂತ ಪ್ರೀತಿಯ ಒಡನಾಡಿ ಸಿಕ್ಕಿದ ಸಂತೋಷಕ್ಕೋ? ಗೊತ್ತಿಲ್ಲ. +” ಸಿಗರೇಟು ಸೇದ್ತೀಯೇನೊ?” +“ಬೀಡಿ ಗುರು, ಆದರೆ ಈಗ ವ್ರತ ಹಿಡಿದ್ದೀನಲ್ಲ….ಆಗಲ್ಲ. ಗುರುಚಾಮಿ ಕರೀತಾ ಅವ್ರೆ. ಬಂದ್ಮೇಲೆ ಸಿಗ್ತೀನಿ.” +ಮುರುಗೇಸ ಹೊರಟ. ಅವನ ಗುಂಪು- ಸ್ಥಳ ಬದಲಾಯಿಸುವುದನ್ನು ಇವನು ನೋಡುತ್ತಾ ನಿಂತ. ಖಾಲಿ ಖಾಲಿ. ಸಿಗರೇಟಿನ ಮೇಲೆ ಸಿಗರೇಟನ್ನ ಸುಟ್ಟ. ಅವಳು ಬಂದಿರುತ್ತಾಳೇನೊ ಎಂದು ಹುಡುಕಲಾರಂಭಿಸಿದ. ದೊಡ್ಡ ಉದ್ದದ ಟ್ರೈನಿನ ಪ್ರತಿಯೊಂದು ಬೋಗಿಯನ್ನೂ ಜಾಲಾಡಿದ. ಕಾಣಿಸಲಿಲ್ಲ. ತಟಕ್ಕನೆ ತಲೆ ಮೇಲೊಂದು ಏಟು ಬಿತ್ತು! ಹಿಂದಕ್ಕೆ ತಿರುಗಿದ- ” ಏನೋ ” ಎಂದು ಮುಗುಳ್ನಕ್ಕಳು! ಟ್ರೈನೂ ಹೊರಡುವುದಕ್ಕೆ ಐದು ನಿಮಿಷಗಳಷ್ಟೆ ಇತ್ತು. +” ಒಂದನ್ನು ಹೇಳ್ಬೇಕೂಂತನ್ನಿಸ್ತು. ಬಂದೆ. ಹೇಳದೆ ಹೋಗಿದ್ದಿದ್ದರೆ ನಿದ್ದೆ ಬರ್‍ತಿರಲಿಲ್ಲ.” +ತಟಕ್ಕನೆ ಅವನ ಎದುರಿಗೆ ಅರ್ಧ ಅಡಿಯೂ ಇರಲಿಲ್ಲ ಅಷ್ಟು ಸಮೀಪ ಬಂದು ನಿಂತು ಕಣ್ಣುಗಳಲ್ಲಿ ಜೀವಧ್ವನಿಯನ್ನು ತುಂಬಿಕೊಡು ಈಗಲಾದರೂ ಹೇಳುತ್ತಾನೆ- ” ಏನದು? ಏನು ಹೇಳೋ..” ಎಂದು ಕೇಳಿದಳು. +ಅವಳನ್ನೇ ನೋಡುತ್ತಾ – ಆಕಾರವನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಂಡು ಅದರ ಬೆರಗಿನಲ್ಲಿ ಮೈಮರೆತು- +ಮರೆತು ಹೋದಾತು- ಹೇಳಿಯೇ ಬಿಡಬೇಕು ಎಂದು ಅನ್ನಿಸಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಸಾಲುಗಳನ್ನು ಸಕಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಹೇಳಿದ- +” ನಾನು ಯಾವಾಗ್ಲಾದ್ರೂ ನೀನು ಹೋಗ್ಬೇಡಾ ಅಂತ ಹೇಳಿದ್ರೆ ಮರೆತು ಬಿಡು. ನೀನು ಹೋಗ್ಬೇಕೂಂತಿದ್ರೆ, ನಿರ್ಧಾರ ಅಚಲವಾಗಿದ್ರೆ ಸ್ನೇಹದ ಹೆಸರಿನಲ್ಲಿನಿರ್ಧಾರದ ಅಚಲತೆಯ ಶಕ್ತಿಹರಣ ಮಾಡೋದು ತಪ್ಪು..” +ಟ್ರೈನು ಹೊರಡುವ ಸೂಚನೆ ಕಾಣಿಸಿಕೊಡು ಲಗುಬಗೆಯಿಂದ ಅವಳು ಹತ್ತಿ ತನ್ನ ಸೀಟಿನಲ್ಲಿ ಕುಳಿತಿರಬೇಕು. ಕಿಟಕಿಯಲ್ಲೂ ಕಾಣಿಸಲಿಲ್ಲ. +ಕೈ ಬೀಸಲಿಲ್ಲ. ಅವನು ಪೆಚ್ಚು ಮುಖ ಹಾಕಿಕೊಂಡು ಒಂದೆರಡು ಸಿಗರೇಟು ಸುಟ್ಟು ಏನನ್ನೋ ಯೋಚಿಸಿದವನಂತೆ ಕರಿಮುಂಡು ಅಂಗಿಗಳಲ್ಲಿ, ಗುಂಪು ಗುಂಪಾಗಿ ನಿಂತಿದ್ದ ಯಾತ್ರಿಕರ ನಡುವೆ ಕರಗಿದ. ಅವನ ಮನಸ್ಸು ತುಟಿಗಳು ಒಂದಾಗಿ ಹಳೆ ಎಂಜಿ‌ಆರ್ ಚಿತ್ರದ ಹಾಡೊಂದನ್ನು ಗುಣಗುಣಿಸುತ್ತಿತ್ತು. +ವಾಳ್ಕೈ ಎನ್ರೊರು ಪಯಣತ್ತಿಲೆ +ಪಲರ್ ವರುವಾರ್ ಪೋವಾರ್ ಭೂಮಿಯಿಲೆ +ವಾನತ್ತು ನಿಲವಾಯ್ ಸಿಲರಿರುಪ್ಪಾರ್ +ಅಂದ ವರಿಸೈಯಿಲ್ ಮುದಲ್ವನ್ ತೊಳಿಲಾಳಿ. +ಜೊತೆಗೆ ಮನಸ್ಸಿನಲ್ಲಿ ಅಚ್ಚಾಗಿ ಹೋಗಿದ್ದ ಆಕಾರ ಮತ್ತಷ್ಟು ತುಂಬಿಬಂದಂತಾಗಿ +ಅವಿದ್ಯಾನಾಮಂತಸ್ತಿಮಿರಮಿಹಿರ ದ್ವೀಪನಗರಿ +ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿಝರಿ +ದರಿದ್ರಾನಾಂ ಚಿಂತಾಮಣಿ ಗುಣನಿಕಾ ಜನ್ಮಜಲಧೌ +ನಿಮಗ್ನಾನಾಂ ದಂಷ್ಟ್ರಾ ಮುರರಿಪು ವರಾಹಸ್ಯ ಭವತಿ +ಜೊತೆಗೆ- +ಓಂ-ಹರಿಃ ಓಂ-ಚತುಸ್ಸಾಗರ ಪರ್‍ಯಂತಂ +ಆತ್ರೇಯ ಗೋತ್ರಸ್ಯ ಋಗ್‌ಶಾಖಾಧ್ಯಾಯಿ +ಸೋಮಶೇಖರ ಶರ್ಮನ್ +ಅಹಂಬೋ ಅಭಿವಾದಯೇ..” +ಬರುತ್ತಾಳೋ ಬರುವುದಿಲ್ಲವೋ- ಬಂದರೂ ಚೆನ್ನ- ಬರದಿದ್ದರೂ ಚೆನ್ನ +ಅವಳು ಬರದೆ ಇದ್ದರೆ- ಪತ್ರ ಒಂದನ್ನು ಬರೆದ- +ಒಂದೇ ಒಂದು ಸಾಲಿನ ಪತ್ರ: +‘ಕ್ಷಮಿಸು, ನಿನ್ನನ್ನು ತಬ್ಬಿಕೊಂಡದ್ದಕ್ಕೆ-ವಾಸ್ತವವಾಗಿ ತಬ್ಬಿಕೊಳ್ಳದ್ದಕ್ಕೆ’ ಕಂಗಾಲಾದ. +***** +ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ […] +ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು, ಹಾಗೇ ಏಕನಾಥ ಶಟ್ಟಿಯ ಅಂಗಡಿಯಲ್ಲಿ ಪಾವುಸೇರು ಮೊಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ […] +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ ವರೆಸಿಕೊಳ್ಳುತ್ತ ಸುಮಾರು ಹೊತ್ತು ಅಲ್ಲೇ ಒಂಟಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_604.txt b/Kannada Sahitya/article_604.txt new file mode 100644 index 0000000000000000000000000000000000000000..ef685d70c2e59f3885f5a15c4c724ae8fdab8bb1 --- /dev/null +++ b/Kannada Sahitya/article_604.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ ಅಂತರ್ಜಾಲದಲ್ಲಿ ಕನ್ನಡ? ಹುಡುಕಿ ನೋಡಿದರೆ ದೊಡ್ಡ ಸಂಸ್ಥೆಗಳ ಬಂಡವಾಳದ ಬಲವಿರುವ ಒಂದೆರಡು ತಾಣಗಳನ್ನು ಬಿಟ್ಟರೆ ಅಲ್ಲಲ್ಲಿ ವೈಯಕ್ತಿಕ ಅರೆಬರೆ ಪ್ರಯತ್ನಗಳಷ್ಟೆ ಕಾಣುವುದು. ಈ ಅರೆಬರೆ ಪ್ರಯತ್ನಗಳೂ ಸಹ ಎಷ್ಟು ಗಂಭೀರ ಎಂದು ಹೇಳುವುದು ಕಷ್ಟ. ಎಷ್ಟು ಗಟ್ಟಿ ಎಂದು ಹೇಳುವುದೂ ಸಹ ಅಷ್ಟೆ ಕಷ್ಟ . ಏಕೆ ಹೀಗೆ? ಅಂತರ್ಜಾಲದಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲವೆ? ವೈಯಕ್ತಿಕ ಪ್ರಯತ್ನಗಳಿಗೆ ಮಿತಿಗಳಿರುತ್ತವೆ. +ಅಂತರ್ಜಾಲದ ಪುಟಗಳನ್ನು ತೆಗೆಯುತ್ತಾ ಹೋದರೆ ಕನ್ನಡವೂ ಕಾಣಿಸಿಕೊಳ್ಳುತ್ತದೆ. ಇಲ್ಲವೆಂದೇನೂ ಇಲ್ಲ. ಬಹುಶಃ ಕೈಬೇರೆಳೆಣಿಕೆಯಷ್ಟಿರುವ ಈ ಪುಟಗಳು ಕನ್ನಡವನ್ನು ಅಂತರ್ಜಾಲದಲ್ಲಿ ಕನ್ನಡವನ್ನು ಪ್ರತಿನಿಧಿಸುವಷ್ಟು ಶಕ್ತಿ ಹೊಂದಿದೆಯೆ? ಪ್ರಮುಖ ಪತ್ರಿಕೆಗಳ ಒಂದೆರಡು ಪ್ರಯತ್ನಗಳನ್ನು ಬಿಟ್ಟರೆ ಉಳಿದಂತೆ ಬಿಡಿ ಬಿಡಿಯಾಗಿ ಬಿಡಿ ಬಿಡಿ ವ್ಯಕ್ತಿಗಳ ಪ್ರಯತ್ನದಲ್ಲಿ ಕನ್ನಡ ತೀರಾ ಜಾಳು ಜಾಳಾದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. +ಇದರ ಜೊತೆಗೆ ಕನ್ನಡ ಪುಟಗಳನ್ನು ಅಂತರ್ಜಾಲಕ್ಕೆ ತರಲು ಅನೇಕ ತಾಂತ್ರಿಕ ಅಡಚಣೆಗಳು. ಡೈನಾಮಿಕ್ ಫಾಂಟ್ಸ್‌ಗಳನ್ನು ಸಪೋರ್ಟ್ ಮಾಡುವ ನೆಟ್‌ಸ್ಕೇಪ್‌ನಲ್ಲಿ ಕನ್ನಡ ಮುದ್ದಾದ ಅಕ್ಷರಗಳಲ್ಲಿ ಕಾಣಿಸಿಕೊಂಡರೆ ಅದೇ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಅಕ್ಷರಗಳು-ಪದಗಳು=ಸಾಲುಗಳು ಒಡೆದು ಓದಲು ತ್ರಾಸಗುತ್ತದೆ. ಅಲೈನ್‌ಮೆಂಟ್ ಬಳಸದ ಹೋದರೆ ಕನ್ನಡ ಸಾಲುಗಳು ಒಂದೇ ಸಮನೆ ಜಾಗವನ್ನು ಬಳಸದೆ ಅದು ತೀರಾ ಜಾಳ ಜಾಳಾಗಿ ಕಾಣಿಸಿಕೊಳ್ಳುತ್ತದೆ. +ಬರಹ ಒಂದು ಬಿಟ್ಟರೆ ಉಳಿದ ತಂತ್ರಾಂಶಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲ. ಸಿಡ್ಯಾಕ್‌ನವರ , ಅದೂ ವಿ‌ಎಸ್‌ಎನ್‌ಎಲ್ ಸಂಪರ್ಕವಿದ್ದರೆ ರೂ. ೫೦೦ ರಲ್ಲಿ ಸಿಗುತ್ತದೆ. ಫಾಂಟ್ಸ್‌ಗಳಲ್ಲಿ ವೈವಿಧ್ಯವಿಲ್ಲ. +ಈ ಎಲ್ಲದರ ಮಧ್ಯೆ ನಾವು ಕನ್ನಡಸಾಹಿತ್ಯ.ಕಾಂ ತರುತ್ತಿದ್ದೇವೆ. ನಮ್ಮ ಕಷ್ಟಗಳು ಇನ್ನೂ ಇವೆ. ಅವುಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. +ಶೇಖರ್‌ಪೂರ್ಣ +ಎಂ.ಆರ್.ರಕ್ಷಿತ್. +೨೯-೦೩-೨೦೦೧ +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ […] +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_605.txt b/Kannada Sahitya/article_605.txt new file mode 100644 index 0000000000000000000000000000000000000000..76b707ce4fbc9c8aa6f70404d30afa188d639816 --- /dev/null +++ b/Kannada Sahitya/article_605.txt @@ -0,0 +1,115 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು ರೋಸಿಹೋಗಿತ್ತು. ಆಫೀಸು ಬಿಟ್ಟಿದ್ದೇ ಅಲ್ಲಿ ಬರುತ್ತಿರುವಾಗ, ಒಂದು ಬಸ್ಸು ಅದೇ ನಿಲ್ದಾಣಕ್ಕೆ ಬರುತ್ತಿದ್ದುದು ಕಂಡು, ಬೂಟುಹಾಕಿದ ಕಾಲುಗಳಿಂದಲೇ ಓಡಿದ್ದ. ಏದುತ್ತ, ತೇಕುತ್ತ ನಿಲ್ದಾಣವನ್ನೇನೋ ತಲುಪಿದ; ಆದರೆ ಬಸ್ಸಿನಲ್ಲಿ ತನಗೊಬ್ಬನಿಗಷ್ಟೇ ಜಾಗ ಸಿಗದೇ ಹೋಗಬೇಕೆ? ಆ ಕಂಡಕ್ಟರನೂ ಎಷ್ಟು ಉದ್ಧಟ! ಒಬ್ಬನನ್ನು ಹೆಚ್ಚಿಗೆ ತೆಗೆದುಕೊಂಡಲ್ಲಿ ಅವನ ಅಪ್ಪನ ಗಂಟು ಹೋಗುತ್ತಿತ್ತೇ? ಹೊರಟು ನಿಂತ ಬಸ್ಸನ್ನು ಗಂಟೆ ಹೊಡೆದು ನಿಲ್ಲಿಸಿ ತನ್ನನ್ನು ಇಳಿಸಿದನಲ್ಲ! `ಈ ಜಗತ್ತೇ ನಿಷ್ಕರುಣ’ ಎನಿಸಿತು ಅನಂತನಿಗೆ. ಅಬ್ಬಬ್ಬ! ಬರಿಯೇ ಬಸ್ಸಿನಲ್ಲಿ ಜಾಗ ಸಿಗದೆ ನಿರಾಸೆಯಾದುದಕ್ಕೆ ಇಷ್ಟು ದೊಡ್ಡ ಉದ್ಗಾರವೆ? +ಏಕೊ, ಇತ್ತಿತ್ತ ಅನಂತನ ಮನಸ್ಸಿನ ರೀತಿಯೇ ಒಂದು ತರವಾಗಿದೆ. ಏನೋ ಒಂದು ಅಸಮಾಧಾನ, ಎಂತಹದೋ ಅಸ್ವಸ್ಥತೆ ಅವನ ಮನಸ್ಸಿನ ಶಾಂತಿಯನ್ನು ಕದಡಿವೆ. ತನ್ನ ಮನಸ್ಸಿನ ವಿರುದ್ಧ ನಡೆದ ಸಣ್ಣ ಪುಟ್ಟ ಸಂಗತಿಗಳಿಗೂ ಸಿಡಿದೇಳುತ್ತಿದ್ದ, ಕ್ಷೋಭೆಗೊಳ್ಳುತ್ತಿದ್ದ. +ಕಳೆದ ಏಳು ವರುಷಗಳ ತನ್ನ ಮುಂಬಯಿ ಜೀವನದಲ್ಲಿ ಹಾಸು ಹೊಕ್ಕಾಗಿ ನಿಂತ, ನಿತ್ಯ ಪರಿಚಯದ ಈ ರುಕ್ಷ ಆಫೀಸು ಕೆಲಸ; ದಣಿಸುವ ಬಸ್ ಕ್ಯೂ; ರುಚಿಯಿಲ್ಲದ ಬದಲಿಲ್ಲದ ಹೊಟೆಲ್ ಊಟ (ಊಟಕ್ಕೂ ಕ್ಯೂ ಮತ್ತೆ!) ಎಲ್ಲವೂ ಇತ್ತಿತ್ತ ಹೊಸ ಅರ್ಥ, ಹೊಸ ರೂಪ ತಳೆದು ಮನಸ್ಸನ್ನು ವ್ಯಗ್ರಗೊಳಿಸುತ್ತಿವೆ. ಬಾಳೆಲ್ಲ ಬರಿದು ಎನಿಸಹತ್ತಿದೆ. ಮುಂಬಯಿ ಜೀವನದ ವಿವಿಧ ರೀತಿ-ನೀತಿಗಳಿಗೆ ಅತಿ ಸಹಜವಾಗಿ ಹೊಂದಿಕೊಂಡ ಅನಂತನಲ್ಲಿ, ಒಮ್ಮಲೇ ಅರಿವು ಬಂದಂತಾಗಿ ಜೀವನ ಬೇಸರ ಬೇಸರ ಎನಿಸುತ್ತಿದೆ. +ಮೊದಲಿನ ಬಸ್ಸು ಹೊರಟು ಅದಾಗಲೇ ಇಪ್ಪತ್ತು ಮಿನಿಟುಗಳಾದರೂ ಇನ್ನೊಂದು ಬಸ್ಸು ಬರುವ ಲಕ್ಷಣ ತೋರಲಿಲ್ಲ. ಕ್ಯೂ ಭರದಿಂದ ಬೆಳೆಯುತ್ತಲಿತ್ತು. ಕ್ಯೂದಲ್ಲಿ ತನ್ನದೇ ಮೊದಲ ಸ್ಥಾನ. ತನ್ನಂತೆಯೇ ಬಸ್ಸಿಗಾಗಿ ಕಾಯುವ ಜನ ಅನೇಕರಿದ್ದಾರಲ್ಲ ಎನ್ನುವ ನಿತ್ಯದ ಸಮಾಧಾನ ಇಂದು ಅನಂತನಿಗಿಲ್ಲ. ಕ್ಷಣ ಕ್ಷಣಕ್ಕೂ ಅವನ ಮನಸ್ಸಿನ ಅಸ್ವಸ್ಥತೆ ಮಾತ್ರ ಹೆಚ್ಚುತ್ತಿತ್ತು. +ತನ್ನ ಜೀವನ ಈಗ ಒಂದು ಸ್ಥಿಮಿತಕ್ಕೆ ಬಂದಿದೆ, ಅದರ ಇತಿ ಮಿತಿ ತನಗೆ ತಿಳಿದಿದೆ ಎಂದು ತಿಳಿದ ಅನಂತ, ಇಂದು ಕ್ಷುಲ್ಲಕ ಕಾರಣಗಳಿಂದಲೂ ತನ್ನ ಮನಸ್ಸಿನ ಶಾಂತಿಯನ್ನು ಕಳಕೊಳ್ಳಲು ಕಾರಣವೇನು? +ಕಳೆದ ಐದಾರು ದಿನಗಳಲ್ಲಿ ಅನಂತನ ಜೇವನದಲ್ಲಿ ನಡೆದ ಒಂದು ದೊಡ್ಡ ಘಟನೆಯೆಂದರೆ ಅವನ ಗೆಳೆಯ-ಈಗ ಅವನು `ಪೇಯಿಂಗ್‍ಗೆಸ್ಟ್’ (ಪೀಜೀ) ಆಗಿ ನಿಂತ ಯಜಮಾನನ ಮಗ – ಅರವಿಂದನ ಮದುವೆ. ಆದರೆ ಈ ಮದುವೆಗೂ ತನಗೂ ಸಂಬಂಧವೇನು? ಸಂಬಂಧ ಇದೆಯೆ? ಇಲ್ಲವೆ? ತನಗಿಂತ ಎಷ್ಟೋ ವರುಷಗಳಿಂದ ಚಿಕ್ಕವನಾದ, ಒಮ್ಮೆ ತನ್ನ ವಿದ್ಯಾರ್ಥಿಯೂ ಆಗಿದ್ದ ಈ ಅರವಿಂದನ ಲಗ್ನದಿಂದ ತನ್ನ ಮನ:ಶಾಂತಿ ಏಕೆ ಕದಡಬೇಕು? ಅರವಿಂದನ ವಿಷಯದಲ್ಲಿ ತನಗೆ ಅಸೂಯೆಯೆ? ಮದುವೆಯನ್ನೇ ಮಾಡಿಕೊಳ್ಳಲಾರೆನೆಂದು ಮನ:ಪೂರ್ವಕಗಿಯೇ ನಿಶ್ಚಯಿಸಿದ್ದ ತನ್ನಲ್ಲಿ ಅಸೂಯೆ ಹುಟ್ಟುವ ಮಾತೆಲ್ಲಿ ಬಂತು? +ಬಸ್ ನಿಲ್ದಾಣದಲ್ಲಿ ನಿಂತು ನಿಂತು ಬೇಸರ ಬಂದಾಗ, ಬಸ್ಸೊಂದು ದೂರದಲ್ಲಿ ಬರುವುದು ತೋರಿತು॒.॒. `ಉಶ್! ಕೊನೆಗೂ ಬಂದಿತಲ್ಲ’ ಎಂಬ ಬಿಡುಗಡೆಯ ನಿಶ್ವಾಸ ಬಿಟ್ಟು ನಿಂತಲ್ಲಿಯೇ ಬಸ್ ಹತ್ತುವ ಸಿದ್ಧತೆಯ ಚಲನೆ ಮಾಡಿದ, ಅನಂತ. ಆದರೆ ಅವನ ದುರ್ದೈವ; ಇಲೆಕ್ಟ್ರಿಕ್ ಹೌಸ್ ಸ್ಟಾಪಿನಲ್ಲೇ ತುಂಬಿ ಬಂದ ಬಸ್ಸು ಈತ ನಿಂತ ನಿಲ್ದಾಣದಲ್ಲಿ ಇಳಿಯುವವರಾರೂ ಇಲ್ಲದ್ದರಿಂದ, ನಿಲ್ಲದೇ ಮುಂದೆ ಸಾಗಿತು. ಬಸ್ಸಿನಲ್ಲಿ ಒಂದೂ ಜಾಗ ಖಾಲಿಯಿಲ್ಲ ಎಂಬ ಸಂಕೇತದ (ಅವಿರತ) ಗಂಟೆ ಬಾರಿಸುತ್ತ ‘ನೋ ಸೀಟ್ ಪ್ಲೀಸ್’ ಎಂದು ಒದರಿದ ಕಂಡಕ್ಟರನ ಮೇಲೆ ಅನಂತನಿಗೆ ಬಂದ ಸಿಟ್ಟು ಅಷ್ಟಿಷ್ಟಲ್ಲ. Ňಥೂ ! ಇವರ ಮನೆ ಹಾಳಾಗ. ಇಲ್ಲಿಂದಲೇ ಒಂದು ಸ್ಪೆಶಲ್ ಬಸ್ಸು ಹೊರಡಿಸಿದರಾಗದೆ? ಇಷ್ಟೆಲ್ಲ ಜನ ಇಲ್ಲಿ ಕ್ಯೂದಲ್ಲಿ ಬಳಲುತ್ತಿರುವಾಗ॒.॒.ňňಆದರೆ ಇದು ದಿನ ನಿತ್ಯದ್ದೇ ಮಾತು. ಇಂದೇ ಏಕೆ ನೀನು ಇಷ್ಟು ಸಿಡಿಮಿಡಿಗೊಳ್ಳಬೇಕು? – ಎಂದು ವಿವೇಕ ಕೇಳಿದ ಪ್ರಶ್ನೆಗೆ ಅನಂತನ ಒಳಮನಸ್ಸು ಇನ್ನಿಷ್ಟು ಉದ್ವಿಗ್ನಗೊಂಡಿತ್ತು. +ಈ ಕ್ಯೂದಲ್ಲಿ ನಿಂತು ಹೀಗೆ ತೊಳಲುವುದಕ್ಕಿಂತ ಹೀಗೆಯೇ ನಡೆಯುತ್ತ `ಮರೀನ್ ಡ್ರಾȂವ್’ದ ಗುಂಟ ಚೌಪಾಟಿಗೆ ಹೋದರೆ ಹೇಗೆ? ಆದರೆ ಒಬ್ಬಂಟಿಗನಾಗಿ ಹೋಗುವುದೆಂದರೆ ಬೇಸರ. ಕ್ಯೂದಲ್ಲಿ ತನ್ನದೇ ಮೊದಲ ಸ್ಥಾನ. ಇನ್ನೊಂದು ಬಸ್ಸು ಬಂದರೆ ಜಾಗ ಸಿಕ್ಕೀತು ಎಂಬ ಆಸೆ. ಇಷ್ಟು ಹೊತ್ತು ನಿಂತಾಗಿದೆ, ಇನ್ನೂ ಕೆಲ ಹೊತ್ತು. ಅಷ್ಟರಲ್ಲಿ ಅಪರಿಚಿತ ದನಿಯೊಂದು ಇವನನ್ನು ಕರೆಯಿತು. Ňಹಲ್ಲೋ ಮಿಸ್ಟರ್ ಕುಲಕರ್ಣಿň ಎಂದು. ಯಾರಿರಬಹುದೆಂದು ಹಿಂತಿರುಗಿ ನೋಡಿದಾಗ, ಮೋರೆಯೆಲ್ಲ ನಗುವಾಗಿಸಿ ತನ್ನೆಡೆ ಬರುತ್ತಿದ್ದ ವ್ಯಕ್ತಿಯೊಂದನ್ನು ‘ಈತನೇ ಇರಬಹುದೇ ತನ್ನನ್ನು ಕರೆದವನು? ‘ ಎಂಬಂತೆ ಅನಂತ ನೋಡುತ್ತಿದ್ದಾಗ, ಹೊಸ ಆಗಂತುಕನು ಭರದಿಂದ ಅವನನ್ನು ಸಮೀಪಿಸಿ, ಅತಿ ಉತ್ಸಾಹದಿಂದ ಕೈ ಮುಂದೆ ಚಾಚಿ, Ňಅನಂತ ಕುಲಕರ್ಣಿಯವರಲ್ಲವೇ? ň ಎಂದು ಕೇಳಿದ. Ňನನ್ನ ಪರಿಚಯ ಸಿಗಲಿಲ್ಲವೆ? ಗಜಾನನ – ನಿಮ್ಮ ವರ್ಗದ ನಾರಾಯಣ ಪಾಟೀಲ – ಅವರ ತಮ್ಮň. Ňಆಂ! ಪಾಟೀಲ ನಾರಾಯಣನ ತಮ್ಮ!! ಓಹೊಹೋ, ಇಷ್ಟು ದೊಡ್ಡವನಾಗಿದ್ದೀಯಾ! ನಾನು ಧಾರವಾಡ ಬಿಟ್ಟಾಗ ಇನ್ನೂ ಇಷ್ಟು ಸಣ್ಣವನಿದ್ದೆň ಎಂದು ಆನಂದದಿಂದ ಗಜಾನನ ಮುಂದೆ ಮಾಡಿದ ಕೈಯನ್ನು ಕುಲುಕಿದ. +ಗಜಾನನನ ಮೋರೆಯಲ್ಲಿ ಅರಳಿದ ನಗೆಯಲ್ಲಿ ಆರೋಗ್ಯ ತುಂಬಿ ತುಳುಕಾಡುತ್ತಿತ್ತು. ಅರೆಕ್ಷಣದಲ್ಲಿ ಅನಂತ ತನ್ನ ಮನದ ಬೇಸರವನ್ನು ಮರೆತ. ಆದರೆ ಆ ಮರೆವಿನ ಹಿಂದೆಯೇ ಒಂದು ಅಧೀರತೆ ಮನೆ ಮಾಡಿತ್ತು. ಏಕೋ, ಇತ್ತಿತ್ತ ತುಂಬ ಚಟುವಟಿಕೆಯ ಊತ್ಸಾಹದ, ಸಾಮರ್ಥ್ಯ ತುಂಬಿದ ತಾರುಣ್ಯದ ಸಾನಿಧ್ಯದಲ್ಲಿ ಅನಂತನ ಮನಸ್ಸು ಅಧೀರಗೊಳ್ಳುತ್ತಿತ್ತು. +Ňಮುಂಬಯಿಗೆ ಯಾವಾಗ ಬಂದೆ? ň ನಗುತ್ತ ಕೇಳಿದ ಅನಂತ. +Ňಈಗ ಎರಡು ತಿಂಗಳಾದುವು. ನಾನು ಬಿ.ಎ. ಪಾಸಾದೆ, ಎರಡನೇ ವರ್ಗದಲ್ಲಿ. ಇಲ್ಲೇ ಸೆಕ್ರೆಟಾರಿಯೆಟ್ಟಿನಲ್ಲಿ ಕೆಲಸಕ್ಕಿದ್ದೇನೆ. ಆಯ್ ಏ. ಎಸ್ಸಕ್ಕೂ ಕೂಡ್ರುವ ಮನಸ್ಸಿದೆ. ಸಾಂತಾಕ್ರೂಝಿನಲ್ಲಿ ಗೆಳೆಯರೊಬ್ಬರ ಮನೆಯಲ್ಲಿರುತ್ತೇನೆ. ಇನ್ನೂ ಸ್ವಂತದ ಮನೆ ಸಿಕ್ಕಿಲ್ಲ; ಬೋರಿವ್ಲಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಸಿಗುವ ಸಂಭವವಿದೆ. ň ಗಜಾನನನ ಮಾತಿನಲ್ಲಿ ಹುರುಪು ಇತ್ತು. ತನ್ನ ಭವಿಷ್ಯತ್ತಿನ ಕುರಿತು ಅಪಾರ ವಿಶ್ವಾಸವಿತ್ತು. ಅನಂತ ಅತಿ ಆದರ, ಕೌತುಕ ತುಂಬಿದ ಭಾವದಿಂದ ಅವನ ಮಾತನ್ನು ಆಲಿಸುತ್ತಿದ್ದ. +Ňಬೋರಿವ್ಲಿ ಎಂದರೆ ಬಹಳೇ ದೂರವಾಯಿತು ಅಲ್ಲವೆ? ಮುಂಬಯಿಯಲ್ಲಿ ಮನೆ ಸಿಗುವುದೇ ಕಠಿಣವಂತೆ. ನಿಮಗೆ ಮಾತ್ರ ಒಳ್ಳೆ ಮನೆ ಸಿಕ್ಕಿರ ಬೇಕು — ನೀವು ಮುಂಬಯಿಗೆ ಬಂದು ಬಹಳ ವರುಷಗಳಾದುವು. ň ಗಜಾನನ ಅತಿ ಸಹಜವಾಗಿ ಕೇಳಿದ ಈ ಪ್ರಶ್ನೆಯಿಂದ ಅನಂತ ಒಮ್ಮಲೇ ಮ್ಲಾನಗೊಂಡ. ಅವನ ಇಂದಿನ ಮನ:ಸ್ಥಿತಿಯಲ್ಲಂತೂ ಈ ಪ್ರಶ್ನೆ ಅತೀವ ಗಾಸಿಗೊಳಿಸಿತು. +Ňಇಲ್ಲ, ನನಗೂ ಈ ವರೆಗೆ ಮನೆ ಸಿಗಲಿಲ್ಲ. (ಸಿಗುವ ಆಸೆಯೂ ಇಲ್ಲ. ನನಗೇಕೆ ಮನೆ?) ಗಿರಗಾಂವದಲ್ಲಿ ಒಂದು ಮಹಾರಾಷ್ಟ್ರಿಯನ್ ಕುಟುಂಬದಲ್ಲಿ `ಪೇಯಿಂಗ್ ಗೆಸ್ಟ್’ ಅಂತ ಇದ್ದೇನೆ ň ಅನಂತ ನುಡಿದ. +ಅಹುದೆ? `ಟೈಮ್ಸ್ ಆಫ ಇಂಡಿಯಾ’ ದಲ್ಲಿ ಬಹಳೇ ಬರುತ್ತಿವೆ ಜಾಹೀರಾತುಗಳು-?.ಉ. ಂಛಿಛಿđĉĉđಜಚಿಣąđಟಿ ಕುರಿತು. ಕೋಣೆಗಳೆಷ್ಟೊ? ಸಲುಗೆಯಿಂದ ಕೇಳಿದ ಗಜಾನನ. +Ňಕೋಣೆಗಳ ಪ್ರಶ್ನೆಯೇ ಇಲ್ಲ; ಒಂದೇ ಒಂದು ಕೋಣೆ. ಹಾಗೆ ನೋಡಿದರೆ ಕೋಣೆಯೇ ಅಲ್ಲ. ಬಾಲ್ಕನಿಯೊಂದನ್ನು ಎಲ್ಲ ಬದಿಯಿಂದಲೂ ಬ್ಲಾȂಂಡ್ಸು (ತಟ್ಟಿ) ಗಳಿಂದ ಮುಚ್ಚಿ ರೂಮಿನ ರೂಪ ತಂದಿದ್ದಾರೆň ಅನಂತನ ಮಾತಿನಲ್ಲಿ ತನ್ನ ಬಗ್ಗೆ ತನಗೇ ಕನಿಕರ ತುಂಬಿತ್ತು. +Ňಅಂದರೆ ನಿಮಗೆ ಮದುವೆ ಆಗಲಿಲ್ಲವೇ? ň ಗಜಾನನ ಈ ಪ್ರಶ್ನೆ ಕೇಳಲೂ ನಿಲ್ದಾಣಕ್ಕೆ ಬಸ್ಸು ಬರಲೂ ಸರಿಯಾಯಿತು. +Ňಓ ನನ್ನ ಬಸ್ಸು ಬಂದಿತು. ಇನ್ನೊಮ್ಮೆ ಎಂದಾದರೂ ಭೇಟಿಯಾಗೋಣ? ň ಎಂದವನೇ ಅನಂತ ತ್ವರೆಯಿಂದ ಬಸ್ಸು ಹತ್ತಿ ಜಾಗ ಹಿಡಿದು ಕುಳಿತ. ಬಸ್ಸಿನಲ್ಲಿ ಬರಿಯೇ ಇಬ್ಬರಿಗಷ್ಟೇ ಸ್ಥಳವಿತ್ತು. ಕೊನೆಗೊಮ್ಮೆ ಬಸ್ಸು ಸಿಕ್ಕಿತಲ್ಲ ಎಂದು ಹಿಗ್ಗಿದ ಅನಂತ. ಬಸ್ಸು ಹೊರಟಿತು. ಗಜಾನನ ಕಣ್ಮರೆಯಾದ. ಆದರೆ ಕಿವಿಯಲ್ಲಿನ್ನೂ ಅವನ ಕೊನೆಯ ಪ್ರಶ್ನೆ ಮಾರ್ದನಿಗೈಯುತ್ತಿತ್ತು: +Ňನಿಮಗೆ ಲಗ್ನ ಆಗಲಿಲ್ಲವ? ň +ತನ್ನಂತಹವನಿಗಲ್ಲ ಮದುವೆ. ಮನೆ, ಮದುವೆ, ಸಂಸಾರ ಎಂದರೆ ಹೋರಾಟ, ಹೋರಾಡುವ ಶಕ್ತಿ ತನ್ನಲ್ಲಿ ಉಳಿದಿದೆಯೆ? ಏಕೋ, ಇದ್ದಲ್ಲೇ ತಾನು ಹಣ್ಣಾಗುತ್ತಿದ್ದೇನೆ. ಒಣಗುತ್ತಿದ್ದೇನೆ. ತನ್ನಂತಹನಿಗಲ್ಲ ಮದುವೆ. ಅನಂತ ತನ್ನ ನೊಂದ ಮನಸ್ಸನ್ನು ಸಮಾಧಾನಗೊಳಿಸುತ್ತಿದ್ದ. +ಗಜಾನನನ ಉತ್ಸಾಹದ ಮೂರ್ತಿ ಕಣ್ಣ ಮುಂದೆ ನಿಂತಿತು. ಮೊನ್ನೆ ಮೊನ್ನೆ ‘ಕಚ್ಚೆಯುಟ್ಟು ತಿರುಗುತ್ತಿದ್ದ’ ಪೋರ, ಇಂದು ಇಷ್ಟು ದೊಡ್ಡವನಾಗಿ ಬೆಳೆದು ನಿಂತಾನಲ್ಲ! ಏಳು ವರುಷಗಳ ಹಿಂದೆ ತಾನೂ ಮೊದಲೊಮ್ಮೆ ಮುಂಬಯಿಗೆ ಬಂದಾಗ ತನ್ನಲ್ಲೂ ಇಂತಹದೇ ಉತ್ಸಾಹ, ಧೈರ್ಯ, ಸ್ಥೈರ್ಯ ಇರಲಿಲ್ಲವೇ? ಅಂದು ತನ್ನ ಬಿ.ಏ. ಪರೀಕ್ಷೆ ಮುಗಿಸಿ ನೌಕರಿಗೆಂದು ಮುಂಬಯಿಗೆ ಬಂದಾಗ ಏನೆಲ್ಲ ಸುಖದ ಕನಸನ್ನು ಕಟ್ಟಿ ಬಂದಿರಲಿಲ್ಲ! ಮುಂಬಯಿಯಲ್ಲಿ ಒಂದು ದೊಡ್ಡ ನೌಕರಿ ಹಿಡಿದು, (ಮುಂಬಯಿಯಲ್ಲಿ ನೌಕರಿಗೆ ಬರಗಾಲವೆ?) ಸಣ್ಣದೊಂದು ಮನೆಯನ್ನು ಮಾಡಿ ತಾಯನ್ನು ಕರೆಸಿಕೊಳ್ಳಬೇಕು. ಮುಂದೆ ಶಕ್ಯವಾದಲ್ಲಿ (ಅದರಲ್ಲೇನು ಅಶಕ್ಯ?) ತನ್ನ ಸೋದರಮಾವನ ಮಗಳಾದ ಸುಮತಿಯನ್ನು (ಅವಳೆಂದರೆ ತನಗೆ ಅದೆಷ್ಟು ಪ್ರೀತಿ!) ಮದುವೆಯಾಗಿ ಸುಖದ ಸಂಸಾರ ಹೂಡಬೇಕು. ಆಹಾ! ಎಂತಹ ಸೊಗಸಾದ ಕನಸು! ಆದರದು ಇಂದಿಗೂ ಕನಸಾಗಿಯೇ ಉಳಿದಿದೆ. ಮುಂದೆಯೂ ನನಸಾಗುವ ಆಸೆಯಿಲ್ಲ. ತಾಯಿ ತೀರಿ (ತಾನು ಇಂದು ತಂದೆ-ತಾಯಿ ಇಲ್ಲದ ಅನಾಥ) ಇದಾಗಲೇ ನಾಲ್ಕು ವರ್ಷಗಳಾಗಿವೆ. ಸುಮತಿಯ ಲಗ್ನ ಬೇರೊಬ್ಬನೊಡನೆ ಆಗಿ ಈಗ ಅವಳು ಮೂರು ಮಕ್ಕಳ ತಾಯಿ ಆಗಿದ್ದಾಳೆ- (ಎರಡು ಗಂಡು, ಒಂದು ಹೆಣ್ಣು ಎಂದು ಮೊನ್ನೆಯೇ ಯಾರೋ ಹೇಳಿದ್ದು ನೆನಪಿದೆ). +Ňಟಿಕೆಟ್ ಪ್ಲೀಜ್ň +Ňಏಕ್ ಚೌಪಾಟಿň +Ňಕಿಧರ್ಸೇ? ň +Ňಫೌಂಟನ್ň +ಅನಂತನ ಅಂತರ್ಮುಖತೆಗೆ ಭಂಗಬಂದಿತು. ಬಸ್ಸು ಧೋಬೀ ತಲಾವ, ಪ್ರಿನ್ಸೆಸ್ಸ್ ರೋಡ್ ದಾಟಿ, ಚಿರಾ ಬಝಾರದ ಜನದಟ್ಟಣೆಯ ಮಾರ್ಗದಿಂದ ಸಾಗಿತ್ತು. ಇಕ್ಕೆಲದ ಫೂಟ್ ಪಾಥಿನ ಮೇಲೆ ಲೆಕ್ಕವಿಲ್ಲದಷ್ಟು ಜನ. ಇಕ್ಕೆಲದ ಕೇರಿಗಳಲ್ಲಿ ಲೆಕ್ಕವಿಲ್ಲದಷ್ಟು ಮನೆಗಳು- ಒಂದರ ಹಿಂದೊಂದು, ಒಂದರ ಮೇಲೊಂದು – ಎಷ್ಟೆಲ್ಲ ಮನೆಗಳು! ಆದರೆ ಒಂದರಲ್ಲೂ ತನಗೆ ಜಾಗವಿಲ್ಲ. ಜಾಗವಿದ್ದಿದ್ದರೆ-ಇಂತಹ ಈ ಸುವಿಶಾಲ, ಪ್ರಚಂಡ ಮುಂಬಯಿ ನಗರದಲ್ಲಿ ತನಗೊಂದು ಮನೆ ಸಿಕ್ಕಿದ್ದರೆ॒.॒ ಸುಮತಿ ಇಂದು ತನ್ನ ಹೆಂಡತಿಯಾಗುತ್ತಿದ್ದಳೆ? +ತಾನು-ಸುಮತಿ! +ಆಗಬಹುದಿತ್ತೇ ಸುಮತಿಯೊಡನೆ ತನ್ನ ಲಗ್ನ? +ಯಾರು ಬಲ್ಲರು? +ಮಾವನ ಮನೆಯಲ್ಲೇನೋ ಎಲ್ಲರೂ ಚೇಷ್ಟೆ ಮಾಡುತ್ತಿದ್ದರು. ಮಾವನೂ ಸ್ಪಷ್ಟವಾಗಿ ಲಗ್ನದ ಮಾತನ್ನು ಎತ್ತಿರದಿದ್ದರೂ, ತಾನು ಮುಂಬಯಿಗೆ ಬಂದ ಕೆಲವು ತಿಂಗಳವರೆಗೆ ತಪ್ಪದೇ ಪತ್ರ ಬರೆಯುತ್ತಿದ್ದರು, ತನ್ನ ಕ್ಷೇಮಸಮಾಚಾರ ವಿಚಾರಿಸುತ್ತಿದ್ದರು, ಹಣವನ್ನೂ ಕಳಿಸಿದ್ದರು-ತನಗೆ ನೌಕರಿ ಸಿಗುವ ಮೊದಲು. ಆದರೆ ಇಷ್ಟರಿಂದಲೇ ಅವರಿಗೆ ತನ್ನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಇಚ್ಛೆಯಿತ್ತು ಎಂದು ಹೇಗೆ ಹೇಳಬಹುದು? ಆದರೆ ಇಷ್ಟೊಂದು ನಿಜ: ಅವರಿಗೆ ತನ್ನ ಭವಿಷ್ಯತ್ತಿನ ಕುರಿತು ಆಸ್ಥೆಯಿತ್ತು, ಕಳಕಳಿಯಿತ್ತು. ಆದರೆ ತಾನೇ ಅವರನ್ನೆಲ್ಲ- ತನ್ನ ತಾಯಿ, ತನ್ನ ಸೋದರಮಾವ, ಸುಮತಿಯನ್ನು ಕೂಡ ನಿರಾಶೆಗೊಳಿಸಿದೆ. ಮುಂಬಯಿಯಂತಹ ಉದ್ಯೋಗ, ಉದ್ಯಮಗಳ ಆಗರವಾದ ಈ ವಿಶಾಲ ನಗರಕ್ಕೆ ಬಂದು ಅವಿಶ್ರಾಂತ ಶ್ರಮದಿಂದ ದೊರಕಿಸಿದುದು ಯುನಿವ್ಹರ್ಸಿಟಿ ಆಫೀಸಿನಲ್ಲಿ ಒಂದು ಕಾರಕೂನಿಕೆಯ ಕೆಲಸ. ಬೇಸಿಕ್ ಸೆಲರಿ ಹಾಗೂ ಎಲೋವನ್ಸಿಸ್ ಕೂಡಿ ೧೫೦ ರೂ. ತಿಂಗಳಿಗೆ. ಸಾಲದೆ ಇಷ್ಟೆಲ್ಲ ಹಣ ಸುಖದ ಸಂಸಾರ ಹೂಡಲು! +ಮೊದಲಿನ ಎರಡು ವರ್ಷಗಳವರೆಗೂ ಮಾವನಿಂದ ಸರಿಯಾಗಿ ಪತ್ರ ಬರುತ್ತಿದ್ದವು. ತಾನೂ ಬರೆಯುತ್ತಿದ್ದ, ಸಣ್ಣದೊಂದು ಮನೆ ದೊರಕಿಸಲು ತಾನು ನಡೆಸಿದ ಹೋರಾಟ, ಅದರಲ್ಲಿಯ ತನ್ನ ಸೋಲು ಇತ್ಯಾದಿಯ ಕುರಿತು, ಹೆಚ್ಚಿನ ಪಗಾರದ ನೌಕರಿಯ ಬಗ್ಗೂ ಪ್ರಯತ್ನ ನಡೆದಿತ್ತು. ಎರಡು ವರ್ಷಗಳ ಅನಂತರ ಮಾತ್ರ ಮಾವನ ಪತ್ರಗಳು ಕ್ರಮೇಣ ವಿರಲವಾಗುತ್ತ ಬಂದು, ಒಂದು ದಿನ ನಿಂತೇ ಬಿಟ್ಟವು. ಆಮೇಲೆ ಒಮ್ಮೆಲೇ ಕೈಸೇರಿದುದು ಸುಮತಿಯ ಮದುವೆಯ ಆಮಂತ್ರಣ ಪತ್ರಿಕೆ. ಹುಡುಗನಿಗೆ ಧಾರವಾಡದಲ್ಲೇ ಕೆಲಸವಂತೆ. ದೊಡ್ಡದಲ್ಲ-ತನ್ನಂತಹದೇ ಕಾರಕೂನಿಕೆಯ ಕೆಲಸ. ಆದರೂ ನಿಲ್ಲಲು ಮನೆಯಿದೆ. ಸಂಸಾರ ಹೂಡುವ ತಾಕತ್ತಿದೆ. ಸುಮತಿಯೂ ಅವನಿಗೆ ತಕ್ಕ ಹೆಂಡತಿ- ಎಂತಹ ಕಷ್ಟ ಬಂದರೂ ಸಹಿಸಿಕೊಂಡು ಹೋಗುವ ಧೈರ್ಯದ ಹುಡುಗಿ ಎಷ್ಟು ಸೌಮ್ಯ ಸ್ವಭಾವ! ಎಂತಹ ತಾಳ್ಮೆ! ತನಗೊಂದು ಇರಲು ಮನೆಯಿದ್ದರೆ ಆಗಬಹುದಿತ್ತೇನೋ ಅವಳೊಡನೆ ಮದುವೆ॒॒ +ಅನಂತ ವಿಚಾರಮಗ್ನನಾಗಿದ್ದಾಗಲೇ ಬಸ್ಸು ಆಪೆರಾಹೌಸ್ ದಾಟಿ ಸೆಂಢರ್ಸ್ಟಬ್ರಿಜ್ ಏರುತ್ತಿತ್ತು. ಚೌಪಾಟಿಗೆ ಹೋಗುವ ಜನರೆಲ್ಲ ಇಳಿಯುವ ಸಿದ್ಧತೆಯಲ್ಲಿದ್ದರು. ಅಬ್ಬಾ! ಎಷ್ಟು ಬೇಗ ಬಂದಿತು ಬಸ್ಸು-ಬಂದದ್ದೇ ತಿಳಿಯಲಿಲ್ಲ! +ಬಸ್ಸಿನಿಂದ ಇಳಿದವನೇ ಅನಂತ ಚೌಪಾಟಿಯ ಮೇಲಿನ ಜನಸಮುದಾಯದಲ್ಲಿ ಒಂದಾದ. ಅಬ್ಬಬ್ಬ! ಚೌಪಾಟಿಯ ಮೇಲೆ ಏನೊಂದು ಗದ್ದಲ, ಗುಲ್ಲು-ಬದಿಯಲ್ಲೇ ಹಬ್ಬಿಕೊಂಡ ಸಾಗರದ ಅಬ್ಬರದಂತೆ! ಈ ಗದ್ದಲದಲ್ಲಿ ಅನಂತ ತುಸು ಹೊತ್ತು ಬಹಿರ್ಮುಖನಾದ. ಕಿಕ್ಕಿರಿದು ತುಂಬಿದ ಈ ಜನ ಸಂಡಣಿಯಲ್ಲಿ ಒಂದಾಗಿ ತನ್ನ ಪ್ರತ್ಯೇಕತೆಯನ್ನು ಕಳೆದುಕೊಳ್ಳವುದರಲ್ಲಿಯೇ ತನ್ನ ವೈಯಕ್ತಿಕ ಅಸಮಾಧಾನವನ್ನು ಕಳೆಯಲು ಯತ್ನಿಸಿದ. +ಫೂಟ್‍ಪಾಥಿನ ಮೇಲೆ ಎಷ್ಟೆಲ್ಲ ಜನ! +ಎಷ್ಟು ಬಗೆಯ ಜನ!!- +ಗಂಡಸರು, ಹೆಂಗಸರು-(ಹುಡುಗಿಯರು ಕೂಡ) +ಈ ಎಲ್ಲ ಜನರಿಗೆ ಮನೆಗಳಿವೆಯೆ? ಇಷ್ಟೆಲ್ಲ ಜನರಿಗೆ ಮನೆ ಒದಗಿಸಿದ ಈ ಮುಂಬಯಿ, ತನಗೊಬ್ಬನಿಗಷ್ಟೇ॒.॒. ಹುಚ್ಚು. ತನ್ನಂತೆಯೇ ಪರರ ಮನೆಯ ಬಾಲ್ಕನಿಯಲ್ಲೋ, ಅಡುಗೆಯ ಮನೆಯಲ್ಲೋ ಮಲಗುವ ಜನ ಇವರಲ್ಲೆಷ್ಟೋ! ತನ್ನಂತೆಯೇ ಕೂಡ್ರಲೂ ರೂಮು ಇಲ್ಲದೆ, ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವೇಳೆ ಕಳೆದು, ರಾತ್ರಿ ಮಲಗಲಷ್ಟೇ ಮನೆ (ಹೆರವರದು) ಸೇರುವ ಜನ ಅದೆಷ್ಟೋ! +ಅನಂತ ನಡೆಯುತ್ತ ನಡೆಯುತ್ತ ಚರ್ನಿರೋಡ್ ಸ್ಟೇಶನ್ ದಾಟಿ, ಹೆಣ್ಣು ಮಕ್ಕಳ ಹಾಸ್ಟೆಲನ್ನು ಸಮೀಪಿಸಿದ್ದ. Ňಇಲ್ಲೇ ಕೂತರೆ ಹೇಗೆ?ň ಎನ್ನುತ್ತ ಸಮುದ್ರ ತೀರದ ಗುಂಟ ಕಟ್ಟಿದ ಕಲ್ಲು ಕಟ್ಟೆಯ ಮೇಲೆ ಒಂದೆಡೆ ಕುಳಿತ. ಕುಳಿತು ತನ್ನ ನಿತ್ಯದ ಆಟದಲ್ಲಿ ತಲ್ಲೀನನಾದ: ಫೂಟ್‍ಪಾಥಿನ ಮೇಲೆ ನಡೆಯುವ ಜನರ ಮೋರೆಯ ಮೇಲೆ ಆಡುವ ವಿವಿಧ ಭಾವವಿಲಾಸವನ್ನು ಅವಲೋಕಿಸಿ, ಅದರ ಹಿಂದೆ ಅಡಗಿದ ಭಾವನೆಗಳನ್ನೂ ವಿಚಾರಗಳನ್ನೂ ತರ್ಕಿಸುವುದರಲ್ಲಿ. +ದೂರದಲ್ಲಿ ಬರುವ ಒಂದು ಮಹಾರಾಷ್ಟ್ರಿಯನ್ ಜೋಡಿಯನ್ನು ಕಂಡು ಎದೆ ಧಸ್ ಎಂದಿತು, Ňಅರವಿಂದನಿರಬಹುದೇ?ň ಎಂದು. ಅರವಿಂದನ ಹೆಂಡತಿಯನ್ನು ತಾನು ಇನ್ನೂ ನೋಡಿರಲಿಲ್ಲ. ಪುಣೆಯಲ್ಲಿ ಜರುಗಿದ ಅವರ ಲಗ್ನಕ್ಕೆ ತನಗೆ ಹೋಗಲಾಗಲಿಲ್ಲ, ಆಫೀಸಿನ ಕೆಲಸದ ಮೂಲಕ (ಇದು ನಿಜವೆ?) ಪುಣೆಯಿಂದಲೇ `ಹನಿಮೂನಿ’ ಗೆಂದು ಮಹಾಬಲೇಶ್ವರಕ್ಕೆ ಹೋದ ಅವರು ಇಂದೇ ಬರುವವರಿದ್ದರು-ಇದಾಗಲೇ ಬಂದಿರಬೇಕು. ಇಂದು ತಾನು ನೇರವಾಗಿ ಮನೆಗೆ ಹೋಗಿದ್ದರೆ ಅವಳ ಭೆಟ್ಟಿಯಾಗುತ್ತಿತ್ತು. ಆದರೆ॒॒ +ಏಕೋ ಆ ಪ್ರಸಂಗವನ್ನು ಎದುರಿಸಲು ಅವನ ಮನಸ್ಸು ಅಧೀರಗೊಳ್ಳುತ್ತಿತ್ತು. ಅವ್ಯಕ್ತ ಭೀತಿಯಿಂದ ನಡುಗುತ್ತಿತ್ತು. ಎಂತಹ ಭೀತಿ? ಎಂತಹ ಅಧೀರತೆ? ಅನಂತನಿಗೇ ಗೊತ್ತಿರಲಿಲ್ಲ. ಆದರೆ ಅವನ ವಿವೇಕ ಇಂತು ಸಮರ್ಥಿಸುತ್ತಿತ್ತು: +ಇಷ್ಟು ದಿನ ತಾನು, ಅರವಿಂದ-ಇಬ್ಬರೂ ಉಪಯೋಗಿಸುತ್ತಿದ್ದ ಕೋಣೆ ಇಂದಿನಿಂದ ಅರವಿಂದ ಹಾಗೂ ಅವನ ಹೆಂಡತಿಯ ಕೋಣೆಯಾಗಲಿದೆ. ಮನೆಯಲ್ಲೆಲ್ಲ ಒಬ್ಬ ಹೊಸ ಹೆಣ್ಣು (ಗೆಳೆಯನ ಹೆಂಡತಿಯಾದರೇನಂತೆ!) ಓಡಾಡುತ್ತಿರುವಾಗ, ತನೊಬ್ಬನೇ ಬಾಲ್ಕನಿಯಲ್ಲಿ ಒಂದು ಮೂಲೆಯಲ್ಲಿ ಮುದುಡಿ ಕೂಡ್ರುವುದಕ್ಕಿಂತ, ಇಲ್ಲಿ ತುಸು ಹೊತ್ತು ಕಳೆದು ಇಲ್ಲಿಂದಲೇ ಹೊಟೆಲ್ಲಿಗೆ ಹೋಗಿ ಆದಷ್ಟು ರಾತ್ರಿ ಮಾಡಿ ಮನೆ ಸೇರಿದರೆ ಬಾಲ್ಕನಿಯಲ್ಲಿ ಮಲಗುವ ತನಗೆ ಯಾರಿಂದಲೂ ತೊಂದರೆಯಿಲ್ಲ, ತನ್ನಿಂದಲೂ ಇತರರಿಗೆ ತೊಂದರೆಯಿಲ್ಲ. +ಅಂತೆಯೇ ಅವನು ಆಫೀಸು ಬಿಟ್ಟಿದ್ದೇ ನೇರವಾಗಿ ಇಲ್ಲಿಗೆ ಬಂದದ್ದು. ಚೌಪಾಟಿಯ ಮೇಲೆ ಸಂಜೆ ಕಳೆದು, ಅಲ್ಲಿಂದ ನಡೆಯುತ್ತ `ಬೆನ್ ಹೆಮ್ ಹಾಲ್ ಲೇನಿ’ ನ `ವಸಂತಭುವನ’ ದಲ್ಲಿ ಊಟ ಮುಗಿಸಿ ಹೊಟೆಲ್ ಮಾಲಕನ ಹತ್ತಿರ ಕೆಲಹೊತ್ತು ಹರಟೆ ಹೊಡೆದು, ಅಲ್ಲಿಂದ ಹೊರಬಿದ್ದು, ಬದಿಯ ಎಲೆ ಅಂಗಡಿಯೊಂದರಲ್ಲಿ `ಬನಾರಸಿ ಮಸಾಲೆ’ ಯೊಂದನ್ನು ಕೊಂಡು ಅಗಿಯುತ್ತ ಅನಂತ ತನ್ನ ರೂಮಿನತ್ತ ಸಾಗಿದ್ದ॒॒ +ತಾನು ಇಂದಿನಿಂದ ಬಾಲ್ಕನಿಯಲ್ಲಿ ಮಲಗಬೇಕು-ಒಬ್ಬನೇ! ತಾನು ಮೊತ್ತಮೊದಲು ಈ ಮನೆಯಲ್ಲಿ `ಪೀಜೀ’ ಎಂದು ಇರಲು ಬಂದಾಗ, ತನಗೆ ಈ ಬಾಲ್ಕನಿಯ ಕೋಣೆಯನ್ನೇ ಕೊಟ್ಟಿದ್ದರೂ, ತನ್ನ ಪರಿಚಯ ಬೆಳೆದ ಬಳಿಕ ತನ್ನನ್ನು ತಮ್ಮ ಮನೆಯವನೇ ಎಂಬಂತೆ ನೋಡಿಕೊಳ್ಳತ್ತಿದ್ದ ಮನೆಯ ಯಜಮಾನ, ಯಜಮಾನತಿ ಅಂದಿದ್ದರು, ತುಂಬಿದ ಮಮತೆಯಿಂದ : Ňಅನಂತ ರಾಯರೇ, ತುರ್ತಕ್ಕೆ ಮನೆಯಲ್ಲಿ ನಾವು ಮೂರೇ ಮಂದಿ; ನಮ್ಮಲ್ಲಿ ಅತಿಥಿಗಳು ಬಂದು ಇಲ್ಲವೆ ಬೇರೆ ಯಾವುದೇ ರೀತಿಯಿಂದ ಅಡಚಣೆಯಾದಾಗ ಮಾತ್ರ ನೀವು ಬಾಲ್ಕನಿಯ ಕೋಣೆಯಲ್ಲಿ ಮಲಗಬಹುದು. ಉಳಿದ ದಿನಗಳಲ್ಲಿ ಅರವಿಂದನ ಕೋಣೆಯಲ್ಲೇ ಮಲಗಲು ಅಡ್ಡಿಯಿಲ್ಲ.ň ಅಂತೆಯೇ ತನಗೆ ಈವರೆಗೆ (ಮೊದಲ ಐದಾರು ದಿನ ಬಿಟ್ಟು) ಬಾಲ್ಕನಿಯಲ್ಲಿ ಮಲಗುವ ಪ್ರಸಂಗ ಬಂದಿರಲ್ಲಿಲ್ಲ. ಆದರೆ ಇಂದಿನಿಂದ?.॒. ವಿಚಿತ್ರ ವೇದನೆಯೊಂದು ಅನಂತನ ಮನವನ್ನು ತಿರುಗಿ ಆವರಿಸಿತ್ತು. ಅರವಿಂದ ಈಗ ಏನು ಮಾಡುತ್ತಿರಬಹುದು? ರಾತ್ರೆ ಹತ್ತಿರ ಹತ್ತಿರ ಬಂದಿದೆ. ಊಟವನ್ನು ಆಗಲೇ ಮುಗಿಸಿ ತನ್ನ ಮುದ್ದಿನ ಮಡದಿಯೊಡನೆ ಕೋಣೆ ಸೇರಿರಬಹುಕು. ಅವರಿನ್ನೂ ಬಾಲ್ಕನಿಯಲ್ಲಿದ್ದು ತನ್ನನ್ನು ಮಾತನಾಡಿಸಿದರೆ?.॒. ಅದರಲ್ಲೇನಂತೆ?.॒.. ಆದರೂ ಈ ಪ್ರಸಂಗವನ್ನು ಎದುರಿಸಲು ಅನಂತನ ಮನಸ್ಸು ಇನ್ನೂ ಸಿದ್ಧವಿರಲಿಲ್ಲ. +ಅನಂತ ಮನೆ ತಲುಪಿದಾಗ ಬಾಲ್ಕನಿಯಲ್ಲಿ ದೀಪವಿರಲಿಲ್ಲ. ಸಾವಕಾಶ ಮಾಳಿಗೆಯ ಮೆಟ್ಟಿಲುಗಳನ್ನು ಏರಿ, ಕೋಣೆಯ ಬಾಗಿಲನ್ನು ತೆರೆದು ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡ, ಸದ್ದು ಮಾಡದೆ ದೀಪ ಹಚ್ಚಿದ. ಬಾಲ್ಕನಿಯಿಂದ ಬದಿಯ ಕೋಣೆಗೆ ಹೋಗುವ ಬಾಗಿಲು ಮುಚ್ಚಿತ್ತು. ಅನಂತನಿಗೆ ಸಮಾಧಾನವಾಯಿತು. ಲಗುಬಗೆಯಿಂದ ಡ್ರೆಸ್ಸು ಬದಲಿಸಿ, ಅದಾಗಲೇ ಅಲ್ಲಿ ತಂದಿಟ್ಟ ತನ್ನ ಹಾಸಿಗೆ ಹಾಸಿ, ದೀಪ ಆರಿಸಿ ಹಾಸಿಗೆಯಲ್ಲಿ ಅಡ್ಡಾದ. ಬದಿಯ ರೂಮಿನಲ್ಲಿ ಇನ್ನೂ ದೀಪವಿತ್ತು. ಏನೋ ಗುಜು ಗುಜು ದನಿ, ಬಳೆಗಳ ಸದ್ದು: `ಬಂದಿದ್ದಾರೆ’ ಅನಿಸಿತು ಅನಂತನಿಗೆ. ಮರುಕ್ಷಣ ಮನಸ್ಸಿನಲ್ಲೇನೋ ಕಳವಳ. +ಏಳು ದಿನಗಳ ಹಿಂದೆ ತನ್ನೊಡನೆ ಹರಟೆಯೊಡೆಯುತ್ತ, ತನ್ನ ಸಮಸಮೀಪ ಮಲಗುತ್ತಿದ್ದ ಅರವಿಂದ, ಇಂದು ಅದೇ ಕೋಣೆಯಲ್ಲಿ ಬೇರೊಬ್ಬರೊಡನೆ-ಒಬ್ಬ ಹೆಣ್ಣಿನೊಡನೆ ಮಲಗಿದ್ದ. ತಾನು ಪಾಪ ಇಲ್ಲಿ ಬಾಲ್ಕನಿಯಲ್ಲಿ ಏಕಾಂಗಿಯಾಗಿ ಮಲಗಿದ್ದಾಗ, ತನ್ನ ಬದಿಯ ಕೋಣೆಯಲ್ಲೇ-ಅಷ್ಟು ಸಮೀಪ-ತನ್ನ ಗೆಳೆಯ, ತನಗಿಂತ ಎಷ್ಟೋ ಸಣ್ಣವನಾದ ಅರವಿಂದ-ತನ್ನ ಹರೆಯದ ಮಡದಿಯೊಡನೆ (ಅವಳು ರೂಪದಲ್ಲಿ ಹೇಗಿರಬಹುದು?) ಸುಖವಾಗಿ ಮಲಗಿದ್ದ. +ಅರವಿಂದ ನಿಜಕ್ಕೂ ಭಾಗ್ಯವಂತ! ಏಳೇ ವರುಷಗಳ ಹಿಂದೆ ತಾನು ಗೆಳೆಯರೊಬ್ಬರ ಮುಖಾಂತರ ಈ ಮನೆಯಲ್ಲಿ `ಪೀಜೀ’ ಎಂದು ನಿಲ್ಲಲು ಬಂದಾಗ, ಅರವಿಂದನಿನ್ನೂ ಮೆಟ್ರಿಕ್ಕಿನಲ್ಲಿ ಓದುತ್ತಿದ್ದ ಹಸುಗೂಸು. ಇನ್ನೂ ಮೀಸೆಯ ಗೆರೆಯೂ ಮೂಡಿತ್ತೋ ಇಲ್ಲವೋ! ಎಷ್ಟೋ ವಿಷಯಗಳಲ್ಲಿ ತನ್ನಿಂದಲೇ ಟ್ಯೂಶನ್ ಪಡೆಯುತ್ತಿದ್ದ. ನೋಡು-ನೋಡುತ್ತಿರುವಾಗ ಆಳೆತ್ತರದ ತರುಣನಾಗಿ ಬೆಳೆದು ಈಗ ಎಂ. ಎ. ಪಾಸಾಗಿದ್ದಾನೆ. ಪರೀಕ್ಷೆಯ ಪರಿಣಾಮವಾದ ಕೆಲವೇ ದಿನಗಳಲ್ಲಿ ಅತಿ ಸುಲಭವಾದ ರೀತಿಯಲ್ಲೇ ಇಲ್ಲಿಯದೇ ಕಾಲೇಜೊಂದರಲ್ಲಿ ಲೆಕ್ಚರರ್‍ಶಿಪ್! ನೌಕರಿ ದೊರೆತ ಎರಡೇ ತಿಂಗಳಲ್ಲಿ ಅಕಸ್ಮಾತ್ತಾಗಿ ಒಂದು ದಿನ ಮದುವೆಯ ಸಂಬಂಧ ಹೇಳಿಬಂದು ಮದುವೆಯೂ ಆಗಿಬಿಟ್ಟಿತಲ್ಲ! +ಪರರ ಜೀವನದಲ್ಲಿ ಇಂತಹ ಸಂಗತಿಗಳು ಎಷ್ಟು ಸಹಜವಾಗಿ, ಎಷ್ಟು ತೀವ್ರಗತಿಯಲ್ಲಿ ನಡೆಯುತ್ತವೆ! +ತಾನು ಮಾತ್ರ ಇದ್ದಲ್ಲೇ ಹಣ್ಣಾಗುತ್ತಿದ್ದೇನೆ, ಇದ್ದಂತೆಯೇ ಒಣಗುತ್ತಿದ್ದೇನೆ-ಎನಿಸಿತು ಅನಂತನಿಗೆ. +ನಿಜವಾಗಿ ನೋಡಿದರೆ ಇವು ಅನಂತನ ಮಾತುಗಳಲ್ಲ. ಹಿಂದೊಮ್ಮೆ ಇಂತಹದೇ ಒಂದು ದು:ಖದ ಮನ:ಸ್ಥಿತಿಯಲ್ಲಿ ತನ್ನ ಮನಸ್ಸಿನ ನೋವನ್ನೆಲ್ಲ ತನ್ನೊಬ್ಬ ಗೆಳೆಯನ ಮುಂದೆ ತೋಡಿಕೊಂಡಿದ್ದ, ಅವನ ಸಹಾನುಭೂತಿಯನ್ನೇ ಬಯಸಿ. ಗೆಳೆಯನಿಗೆ ಇವನ ಬಗ್ಗೆ ಕನಿಕರವೆನಿಸಿದರೂ ಇವನ ಅಭಿಮಾನ ಕೆರಳಿಸಲೆಂದೇ ತುಸು ನಿಷ್ಠುರವಾಗಿಯೇ ನಿಡಿದಿದ್ದ : Ňನೀನು ನಿನ್ನ ಜನ್ಮದಲ್ಲಿ ಒಮ್ಮೆಯಾದರೂ ನಗುತ್ತ, ಹರುಷದಿಂದ ಮಾತನಾಡಿದ್ದೀಯಾ? ಮುಖ್ಯತ: ನೀನೊಬ್ಬ ದೊಡ್ಡ ಅಂಜುಬುರುಕ, ಅಳಬುರುಕ. ನಿನ್ನಲ್ಲಿ ಇಲ್ಲದುದು ಬಾಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸ ಹಾಗೂ ಉತ್ಸಾಹ. ಮನೋವಿಜ್ಞಾನದ ಭಾಷೆಯಲ್ಲಿ ಹೇಳಬೇಕಾದರೆ ನೀನೊಬ್ಬ ದು:ಖಪ್ರಿಯ ಜೀವಿ-ಒಚಿĕđಛಿĄąĕಣąಛಿ ?đėಟ. ಹೀಗೆಯೇ ನಡೆದಲ್ಲಿ ನೀನು ಇದ್ದಲ್ಲೇ ಹಣ್ಣಾಗುತ್ತಿ-ಇದ್ದಂತೆಯೇ ಒಣಗುತ್ತೀ, ನೋಡು. +ಸಹಾನುಭೂತಿ ಬಯಸಿ ಬಂದವನಿಗೆ ಇಂತಹ ಕಠಿಣ ಮಾತುಗಳೆ! ಆದರೆ ಅಚ್ಚರಿಯೆಂದರೆ, ಮೊದಮೊದಲು ತನ್ನನ್ನು ಅತಿಯಾಗಿ ನೋಯಿಸಿದ ಈ ಮಾತುಗಳೇ ಮುಂದೆ ತಾನೇ ತನ್ನೊಳಗೆ ತಿರುತಿರುಗಿ ಅಂದುಕೊಂಡಾಗ ಒಂದು ಬಗೆಯ ಸಮಾಧಾನ ಕೊಡುತ್ತಿದುವು-ನೋಯುತ್ತಿರುವ ಹುಣ್ಣಿನ ಮೇಲೆ ಮೃದುವಾಗಿ ಆಡುವ ಬೆರಳುಗಳಂತೆ. ತನ್ನಲ್ಲಿ ಅಡಗಿದ ಯಾವುದೋ ಸತ್ಯದೆಡೆ ಬೆರಳು ಮಾಡುತ್ತಿರಬೇಕು ಆ ಮಾತುಗಳು॒॒ +ಅರವಿಂದನ ಕೋಣೆಯಲ್ಲಿಯ ದೀಪ ನಂದಿತು! +ಬಳೆಗಳ ಕಿಂಕಿಣ! +ಏನೋ ಗುಜು ಗುಜು ಧ್ವನಿ!॒ +ಅನಂತನ ಕುತೂಹಲ ಕೆರಳಿ ಮೈ ಜುಂ ಎಂದಿತು. ಒಲ್ಲೆ ಒಲ್ಲೆನೆನ್ನುತ್ತಲೂ ಅನಂತ ಮೈಯಲ್ಲ ಕಿವಿಯಾಗಿಸಿ ಕೇಳುತ್ತಿದ್ದ, ಬದಿಯ ಕೋಣೆಯಲ್ಲಿಯ ಚಟುವಟಿಕೆಗಳ ಸದ್ದನ್ನು: +Ň॒.॒.ಯಾಕೆ?॒.॒ ಚಳಿಯಾಗುತ್ತದೆಯಿ?॒॒.॒ň +Ň॒.॒..ಶೀ!! ॒.॒.ನಾಚಿಕೆň +Ň॒.॒..ನಾಚಿಕೆ! ॒.॒ಇನ್ನೂ?ň +ಥೂ ಇದೇನು! ತುಸು ಸಾವಕಾಶ ನುಡಿಯಬಾರದೆ? ಗಿಆನು ಇಲ್ಲಿ ಮಲಗಿದ್ದೇನೆ ಎನ್ನುವ ಅರಿವೂ ಇರಬಾರದೇ?-ಅನಂತನ ಸುಸಂಸ್ಕೃತ ಮನಸ್ಸು ತಿರಸ್ಕಾರ ವ್ಯಕ್ತಪಡಿಸಿತು. ಆದರೆ?॒ ॒ಹೃದಯದಲ್ಲೋ ಅಲ್ಲೋಲ-ಕಲ್ಲೋಲ. ಮರುಕ್ಷಣ ತನ್ನ ಸ್ಥಿತಿಗೆ ತನಗೇ ಮರುಕವೆನಿಸಿತು. ತಾನಿದ್ದೇನೆ ಎನ್ನುವ ಅರಿವೇ ಇಲ್ಲ ಇವರಿಗೆ. ತಾನು ಇದ್ದರೇನು? ಇರದಿದ್ದರೇನು? .॒.. +Ňಕೆಲವೇ ದಿನಗಳಲ್ಲಿ ಬೋರಿವಿಲ್ಲಿಯಲ್ಲಿ ಮನೆ ಸಿಗುವ ಸಂಭವವಿದೆ. ň ಗಜಾನನನ ಮಾತು ನೆನಪಿಗೆ ಬಂತು. ಪ್ರಯತ್ನ ಪಟ್ಟರೆ ತನಗೂ ಸಿಗುತ್ತಿತ್ತೋ ಏನೋ. ಆದರೆ ಅಷ್ಟು ದೂರ! ಅಯ್ಯೋ! ಆ ಟ್ರೇನಿನಲ್ಲಿಯ ನೂಕು ನುಗ್ಗಾಟ, ಆ ಗುಂಗಾಡುಗಳ ಕಾಟ! ಮೇಲಾಗಿ ರೂಮು ಹಿಡಿದರೂ ಲಗ್ನವಾಗಿ ಸಂಸಾರ ಹೂಡುವ ಧೈರ್ಯ, ಹುಮ್ಮಸ್ಸು ಈಗ ತನಗೆ ಉಳಿದಿವೆಯೆ? ಮನೆ, ಹೆಂಡತಿ, ಮಕ್ಕಳು ಬೇನೆ ಬೇಸರಿಕೆ-ಬೇಡಪ್ಪ ಬೇಡ! ತನ್ನಂತಹನಿಗಲ್ಲ ಹೇಳಿದ್ದು ಮನೆ, ಮದುವೆ.॒. +Ňಸ್ವಲ್ಪ ಇತ್ತಿತ್ತ॒.॒.ň +ಎಲ್ಲೋ ಹರಿದಾಡುತ್ತಿದ್ದ ಅನಂತನ ಮನಸ್ಸು ತಿರುಗಿ ಬದಿಯ ರೂಮಿನತ್ತ ಸಾಗಿತು. ಅನಂತ ತಾನರಿಯದೇ ತನ್ನ ಶ್ವಾಸೋಚ್ಛ್ವಾಸವನ್ನೂ ನಿಲ್ಲಿಸಿ ಕೇಳುತ್ತಿದ್ದ: ಮಂಚ `ಕಿರ್` ಎಂದಿತು. +ಏನು ಮಾಡುತ್ತಿರಬಹುದು? +ಥೂ ! ತನಗೇನಂತೆ! +ಏನೋ ಗುಜುಗುಜು- +ಎರಡು ಹರೆಯದ ದೇಹಗಳು ಒಂದನ್ನೊಂದು ಅಪ್ಪಿಕೊಂಡ ಅಸ್ಪಷ್ಟ ಚಿತ್ರ ಕಣ್ಣ ಮುಂದೆ ನಿಂತು ಅನಂತನ ದೇಹದಲ್ಲಿ ಮಿಂಚು ಸಂಚರಿಸಿತು. ತುಸು ದೊಡ್ಡಕ್ಕೆ ಮಾತನಾಡಬಾರದೆ? ತಾನು ಕೇಳಿದರೆ ಇವರದೇನು ಗಂಟು ಹೋಗುತ್ತದೆಯೆ?-ಅನಂತನ ಮನಸ್ಸು ಭುಸುಗುಟ್ಟಿತು. +Ňತುಸು ಸಾವಕಾಶ॒.॒ň +ಏನು? +ಏನಿದ್ದರೇನು? +ಮಾತು ನಿಂತೇಬಿಟ್ಟಿತಲ್ಲ! +ನಿಂತೇಬಿಟ್ಟಿತೇ? +ಇಲ್ಲವೆ? ಏನೋ ಗುಜುಗುಜು! +ಏನಿರಬಹುದು? +ತನಗೇನಂತೆ? +ತಾ ಕೇಳಬಾರದೆ? +ಅದೂ ತಪ್ಪೇ? +ಬರಿಯೆ ಮಾತು ಕೇಳಿದರೇನಂತೆ? ಅನಂತನ ಮನಸ್ಸಿನಲ್ಲಿ ಏನೋ ಗುದ್ದಾಟ. ಕೊನೆಗೆ ಅನಂತನ ಜಾಗೃತ-ಸುಸಂಸ್ಕೃತ ಪ್ರಜ್ಞೆಯನ್ನು ಮೀರಿನಿಂತ ಅಗಾಧ ಶಕ್ತಿಯೊಂದು, ಅವನನ್ನು ಸಾವಕಾಶ ಹಾಸಿಗೆಯಿಂದ ಹೊಡೆದೆಬ್ಬಿಸಿ- Ňಬಾ, ಇಲ್ಲಿ ಬಾ, ಕಿವಿ ಹಚ್ಚು, ಕೇಳುň ಎಂದಿತು. ಅನಂತ ಮೆಲ್ಲನೆ ತನ್ನ ಹಾಸಿಗೆಯಿಂದ ಎದ್ದು, ಹುಚ್ಚನಂತೆ ಬದಿಯ ಕೋಣೆಯ ಬಾಗಿಲಿಗೆ ಕಿವಿ ಹಚ್ಚಿ ಕೇಳುತ್ತಿದ್ದ; ಆ ಬದಿಯಲ್ಲಿ ಮಲಗಿ ಸುಖಿಸುತ್ತಿದ್ದ ನವದಂಪತಿಗಳ ಏಕಾಂತದ ಸಂಭಾಷಣೆಯನ್ನು-ಅನಾಗರಿಕ ಕಿವಿಗಳ ಹೆದರಿಕೆಯಿಲ್ಲದೆ ಹೊರಟ ಮಾತನ್ನು:- +“ತುಸು ಸಾವಕಾಶ ( ಮಾತನಾಡಬಾರದೆ?) ” +“ನಾಳೆಯೇ ಹೇಳುತ್ತೀರಲ್ಲ, ಹಾಗಾದರೆ? ” +“ಏನೆಂದು? ” +“ಬೇರೆಯೆಡೆ ರೂಮು ಹಿಡಿಯಲು” +“ಅವನಿದ್ದರೆ ತೊಂದರೆಯೆ? ” +“ತೊಂದರೆಯಲ್ಲ.॒ ಏನೋ ಸಂಕೋಚ॒ ॒ಮೇಲಾಗಿ ಇದ್ದುದೊಂದು ಬಾಲ್ಕನಿ.॒.. ಆರಾಮವಾಗಿ ಕೂಡ್ರೋಣ ಎಂದರೆ॒” +“ಇಷ್ಟೆಲ್ಲ ವರುಷ ನಮ್ಮಲ್ಲಿದ್ದವ॒.॒ ಮೇಲಾಗಿ ಅಪ್ಪ ಒಪ್ಪುತ್ತಾರೋ ಇಲ್ಲವೋ: ಕುಳಿತಲ್ಲಿ ೪೦ ರೂ. ಬಾಡಿಗೆ. ” +“ಅವರನ್ನು ಒಪ್ಪಿಸುವ ಕೆಲಸ ನನ್ನದು. ” +“ಇಂತಹ ಸುಖದ ಸಮಯದಲ್ಲಿ ಅವನ ಹೆಸರೇಕೆ? .॒. ತುಸು ಹತ್ತಿರ ಬಾರಲ್ಲ॒” +ಅನಂತನಿಂದ ಮುಂದೆ ಕೇಳುವುದಾಗಲಿಲ್ಲ; ಯಾರೋ ಬಾರು ಕೋಲಿನಿಂದ ಬೆನ್ನ ಮೇಲೆ ಹೊಡೆದಂತಾಗಿತ್ತು. ಅದಾಗಲೇ ಹಾಸಿಗೆಯ ಮೇಲೆ ಕುಳಿತ ಅವನ ಮನಸ್ಸು ಯಾವುದೋ ಅವ್ಯಕ್ತ ಭೀತಿಯಿಂದ ಕಂಪಿಸಿತು. ಮೈ ಬೆವರಿತು. ತುಸು ಹೊತ್ತಿನಲ್ಲಿ ಏನೆಲ್ಲ ನೆನೆದು ಅವನ ಕಣ್ಣು ತುಂಬಿ ಬಂದುವು. ಎಂದೋ ಕಳಕೊಂಡ ಅಪ್ಪ-ಅಮ್ಮಂದಿರ ಚಿತ್ರ ಕಣ್ಣ ಮುಂದೆ ಕಟ್ಟಿ, ಸಣ್ಣ ಮಗುವಿನಂತೆ ಅತ್ತು ಬಿಟ್ಟ: +ತಾನಿಂದು ಈ ಜಗತ್ತಿನಲ್ಲಿ ಅನಾಥ! +ತಾನಿಂದು ಯಾರಿಗೂ ಬೇಡಾಗಿದ್ದೇನೆ!! +ಅಂದು ರಾತ್ರಿ ಕತ್ತಲಲ್ಲಿ ಹಾಸಿಗೆಯಲ್ಲಿ ಏಕಾಂಗಿಯಾಗಿ ಕುಳಿತಾಗ, ಅವನ ಗಂಡು ಕಣ್ಣುಗಳಿಂದ ಉದುರಿದ ಕಂಬನಿಗಳ ಅರ್ಥವೇನು?- +ತನ್ನ ಬಾಳಿನ ನಿರರ್ಥಕತೆಯ ಅರಿವೆ? +ತನ್ನ ಅನಾಗರಿಕತೆಯ ಬಗ್ಗೆ ಪಶ್ಚಾತ್ತಾಪವೆ? +ನಾಳೆಯ ಚಿಂತೆಯೆ? +ಇಲ್ಲವೆ, ಎಲ್ಲವೂನೊ? +ಯಾರು ಬಲ್ಲರು? +ಬದಿಯ ಕೋಣೆಯಲ್ಲಿ ಏಕಾಂತದ ಪಿಸುದನಿ, ಬಳೆಗಳ ಕಿಂಕಿಣ, ಮಂಚದ ಕಿರಕಿರ ಕ್ಷಣಕ್ಕೊಮ್ಮೆ ನಡೆದೇ ಇದ್ದವು. ಆದರೆ ಅನಂತ ಈಗ ಅವಕ್ಕೆಲ್ಲ ಕಿವುಡನಾಗಿದ್ದ. +***** +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […] +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_606.txt b/Kannada Sahitya/article_606.txt new file mode 100644 index 0000000000000000000000000000000000000000..daf370d8c68bfc3006e191a3f01ac12fe938dba7 --- /dev/null +++ b/Kannada Sahitya/article_606.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ ಮುಖಾಂತರ ಕ್ಷೆಭೆಯನ್ನು ಉಂಟು ಮಾಡಿ ಕ್ರಾಂತಿಯನ್ನು ಸಾಧ್ಯವಾಗಿಸುತ್ತೇವೆಂಬ ನಕ್ಸಲೈಟರ ಹಿಂಸಾಕ್ರಮಗಳಿಗೆ ಕೂಡಲೇ ಎಚ್ಚೆತ್ತು ಪ್ರತಿಕ್ರಿಯಿಸುತ್ತದೆ. ಈ ಮೂಲಕ ಪ್ರಜಾತಾಂತ್ರಿಕವಾದ ಒತ್ತಡಗಳು, ಚಳವಳಿಗಳು ನಿರುಪಯುಕ್ತ ಎನ್ನುವುದನ್ನು ನಮ್ಮ ವ್ಯವಸ್ಥೆಯೇ ಹೇಳುತ್ತಿದೆ. ಇದಾಗ ಕೂಡದು ಎಂದು ನಬುಂವ ನಾವೆಲ್ಲರೂ ಮೇಧಾ ಪಾಟ್ಕರ್ ಅವರ ಸತ್ಯಾಗ್ರಹ ನಮ್ಮೆಲ್ಲರ ಪರವಾಗಿ, ಪ್ರಜಾತಂತ್ರ ವ್ಯವಸ್ಥೆಯ ಕ್ರಿಯಾಶೀಲವಾದ ಸ್ಪಂದನಕ್ಕಾಗಿ ನಡೆಯುತ್ತಿರುವ ಸತ್ಯಾಗ್ರಹ ಎಂದು ತಿಳಿಯಬೇಕು. ಮೇಧಾ ಪಾಟ್ಕರ್‌ರಲ್ಲಿ ಗಾಂ ಇನ್ನೂ ಜೀವಂತವಾಗಿ ಇದ್ದಾರೆ. ಅವರ ಉಪವಾಸ ಸತ್ಯಾಗ್ರಹದಿಂದ ನಮ್ಮನ್ನು ಆಳುವವರಲ್ಲಿ ಇರಹಬುದಾದ ಒಳಿತು ಜಾಗೃತಗೊಳ್ಳಲಿ ಎಂದು ನಾವೆಲ್ಲರೂ ನಿರೀಕ್ಷಿಸಬೇಕು. +ಬಲಿ ತೆಗೆದುಕೊಳ್ಳುವುದಕ್ಕೂ ಅಭಿವೃದ್ಧಿ ಕಾರ್ಯಗಳಿಗೂ ಸಂಬಂಧವಿದೆ ಎಂಬ ಜಾನಪದ ಗಾಢ ನಂಬಿಕೆಯೊಂದಿದೆ. ‘ಕೆರೆಗೆ ಹಾರ’ವೆಂಬ ಕನ್ನಡದ ಒಂದು ಜಾನಪದ ಗೀತೆಯ ಬಗ್ಗೆ ರೆಯುತ್ತ, ಸುಬಣ್ಣ ಈ ಪ್ರಶ್ನೆ ಎತ್ತುತ್ತಾರೆ. ಯಜಮಾನ ಕಟ್ಟಿಸಿದ ಕೆರೆಯಲ್ಲಿ ನೀರು ತುಬಂಲು ಸರ್ವರ ಹಿತಕ್ಕಾಗಿ ಅವನ ಸೊಸೆ ಬಲಿಯಾಗುತ್ತಾಳೆ. ಯಾರನ್ನೂ ನಿಂದಿಸದ, ದುರಂತದ ದುಃಖವನ್ನು ನಿಯಮವೆನ್ನುವಂತೆ ಎದುರಿಸುವ ಮಾನವ ಅನುಕಂಪದ ವಿಚಿತ್ರ ಕಥೆ ಇದು. ತರುಣಿಯಾದ ತನ್ನ ಒಲವಿನ ಹೆಣ್ಣನ್ನು ಬಲಿಕೊಡುವುದನ್ನು ಕನಸಿನಲ್ಲಿ ಕಂಡ ದೂರದಲ್ಲೆಲ್ಲೋ ಇರುವ ಸಾಹಸಿಯಾದ ಅವಳ ಗಂಡ ಮಾದೇವರಾಯ ಆತಂಕದ ಅವಸರದಲ್ಲಿ ‘ಹತ್ತಿದ ಬೆತ್ತಲೆ ಕುದುರಿ’ ಎಂದು ಈ ಗೀತೆ ಮೊದಲಾಗುತ್ತದೆ. ನಾವು ಎಳೆಯರಿದ್ದಾಗ ತೀರ್ಥಹಳ್ಳಿಯಲ್ಲಿ ಆಗಿನ ಕಾಲದಲ್ಲಿ ವಿಶೇಷವೆನ್ನಿಸುವ ಒಂದು ಕಮಾನು ಸೇತುವೆಯನ್ನು ಕಟ್ಟಲು ಶುರುವಾದ ಸಂದರ್ಭದಲ್ಲಿ ಹಳ್ಳಿಯ ಹೆಂಗಸರು ನಡುವೆ ಕಂಗಳಿಲ್ಲದೆ ತೂಗುವಂತೆ ಕಟ್ಟುವ ಕಮಾನನ್ನು ನಿಲ್ಲುವಂತೆ ಮಾಡಲು ಮಕ್ಕಳ ಬಲಿಯನ್ನು ಅದು ಕೇಳುತ್ತದೆಯಂತೆ ಎಂದು ಭಯಪಡುತ್ತಿದ್ದುದು ನೆನಪಾಗುತ್ತದೆ. +ಜಾನಪದ ನಂಬಿಕೆಯಲ್ಲಿ ಗಾಢವಾಗಿ ಊರಿರುವ ಈ ಭಯ ನಮ್ಮ ಗಿರಿಜನರ ಬಗ್ಗೆಯಂತೂ ಈ ಕಾಲದಲ್ಲಿ ಅಕ್ಷರಶಃ ನಿಜವಾಗಿದೆ. ಇಲ್ಲಿ ಕಾಣೆಯಾಗಿರುವುದು ಸರ್ವಹಿತದ ಜಾನಪದ ಕಲ್ಪನೆ. ನಾವು ಕಟ್ಟುತ್ತಿರುವ ಡ್ಯಾಮ್‌ಗಳಿಂದಾಗಿ, ನಾವು ಬೆಳೆಸುತ್ತಿರುವ ಸಿಟಿಗಳಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತ ಇರುವ ಬಡ ರೈತರು ಪರ್ಯಾಯ ಭೂಮಿ ಸಿಕ್ಕರೂ ತಮ್ಮ ಕುಟುಂಗಳಿಂದ, ತಾವು ನಬುಂವ ಕ್ಷೇತ್ರ ದೇವತೆಗಳಿಂದ, ತಮಗೆ ಒಗ್ಗಿದ ಜೀವನ ಕ್ರಮಗಳಿಂದ ದೂರವಾಗುತ್ತಾರೆ. ಹೇಗೂ ಜಾನಪದ ಕಥೆ ಸೂಚಿಸುವಂತೆ ಬಲಿಯಾಗುತ್ತಾರೆ. ದುಃಖಿಗಳಾಗುತ್ತಾರೆ. +ಆದರೆ ನಮ್ಮ ಕಾಲದ ದುರದೃಷ್ಟವೆಂದರೆ ಹೀಗೆ ಅವರು ನೆಲೆಸಲ್ಲ ಭೂಮಿ ಸಿಗುವುದೂ ಅಪರೂಪ. ಲಂಚರುಷುವತ್ತುಗಳನ್ನು ಕೊಟ್ಟಾದ ಮೇಲೆ ಉಳಿದ ಒಂದಿಷ್ಟು ಹಣವನ್ನು ಅವರು ಪಡೆದು ಸಿಟಿಗಳಲ್ಲಿ ದಿನಗೂಲಿಗಳಾಗಿ ಬದುಕಬೇಕಾಗಿ ಬರುವ ಸಂದರ್ಭಗಳೆ ಹೆಚ್ಚು. +* +* +* +ನರ್ಮದಾ ಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಉಪವಾಸ ಕುಳಿತು ಇಂದಿಗೆ (೧೧-೦೪-೨೦೦೬) ಹದಿನಾಲ್ಕು ದಿನಗಳಾಗಿವೆ. ಭಾರತದ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾದ್ದು ಬಲಿ/ಅಭಿವೃದ್ಧಿಯ ನಡುವಿನ, ಅನಿವಾರ್‍ಯವಾಗಬೇಕಿಲ್ಲದ ಸಂಬಂಧ. ಈ ಪ್ರಶ್ನೆಯನ್ನು ಪರೋಕ್ಷವಾಗಿ ನಮಗೇ ನಾವು ಕೇಳಿಕೊಳ್ಳುವಂತೆ ಮೇಧಾ ಒತ್ತಾಯಿಸುತ್ತಲೇ ಇದ್ದಾರೆ- ಹಲವು ವರ್ಷಗಳಿಂದ. ಅಭಿವೃದ್ಧಿ ಮತ್ತು ಈ ಉಳ್ಳವರ ಲಂಪಟತನದ ಐಷಾರಾಮ ಜೀವನದ ಅಭಿವೃದ್ಧಿಗಾಗಿ ನಾವು ತೆಗೆದುಕೊಳ್ಳುವ ಬಲಿ- ಇದು ಸರ್ವಜನಹಿತದ ದೃಷ್ಟಿಯಿಂದ ಎಷ್ಟು ಅನಿವಾರ್‍ಯ? +ಗಾಂಜಿ ಸತ್ಯಾಗ್ರಹವನ್ನು ಕಲಿತದ್ದು ಅವರ ತಾಯಿಯಿಂದ. ಅವರ ತಂದೆಯ ವರ್ತನೆಯಲ್ಲಿ ಕೊಂಚ ಸ್ವೇಚ್ಛಾಚಾರವಿತ್ತೆಂದು ಹೇಳುತ್ತಾರೆ. ಇದರಿಂದ ಬೇಸತ್ತಾಗಲೆಲ್ಲಾ ತಾಯಿ ಉಪವಾಸ ಕೂರುತ್ತಿದ್ದರಂತೆ. ಮೌನವಾಗಿ ಇದ್ದು ಬಿಡುತ್ತಿದ್ದರಂತೆ. ಇಲ್ಲಿ ಬಹಳ ಮುಖ್ಯವಾದದ್ದು ಉಪವಾಸದ ಮೂಲಕ ಮಾಡುವ ಪ್ರತಿಭಟನೆ ಅಸತ್ಯದ ಮೇಲೆ ನಿಂತಿದ್ದರೆ ಅದರಿಂದ ನೋವಾಗುವುದು ಪ್ರತಿಭಟನಾಕಾರನಿಗೇ ಹೊರತು ಎದುರಾಳಿಗೆ ಅಲ್ಲ ಎಬುಂದು. ಆದರೆ ಅದು ಸತ್ಯದ ಮೇಲೆ ನಿಂತಿದ್ದ ಪಕ್ಷದಲ್ಲಿ ಯಾರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇವೋ ಅವರಿಗೂ ಈ ಸತ್ಯ ಗೋಚರವಾಗುವಂತೆ ಮಾಡುವ ನೈತಿಕ ಆಗ್ರಹ ಈ ಉಪವಾಸ. ಮೇಧಾ ಪಾಟ್ಕರ್ ಉಪವಾಸದ ಮೂಲಕ ಯಾರನ್ನು ವಿರೋಸುತ್ತಿದ್ದಾರೋ ಅವರೆಲ್ಲರೂ ತಾನು ಕಂಡ ಸತ್ಯವನ್ನು ಕಾಣದೇ ಹೋದ ತನ್ನ ಕುಟುಂಬ ಎಂಬ ಭಾವನೆ ಇರದಿದ್ದರೆ ಈ ಉಪವಾಸ ಅರ್ಥಹೀನವಾಗುತ್ತಿತ್ತು. +* +* +* +ಮೇಧಾ ಪಾಟ್ಕರ್ ಅವರ ಸತ್ಯಾಗ್ರಹ ಗಾಂಜಿಯವರು ಕೇರಳದಲ್ಲಿ ನಡೆಸಿದ ವೈಕಂ ಸತ್ಯಾಗ್ರಹವನ್ನು ನೆನಪು ಮಾಡುತ್ತಿದೆ. ಗಾಂಜಿ ವೈಕಂ ಸತ್ಯಾಗ್ರಹದಲ್ಲಿ ಹರಿಜನರ ದೇವಾಲಯ ಪ್ರವೇಶವನ್ನೂ ಕೇಳಲಿಲ್ಲ. ಅವರು ಕೇಳಿದ್ದು ಸರಕಾರೀ ರಸ್ತೆಯ ಮೇಲೆ ಎಲ್ಲರಿಗೂ ನಡೆಯುವ ಅಕಾರವಿದೆ; ಪೂಜೆಯ ಸಮಯದಲ್ಲಿ ಅಸ್ಪೃಶ್ಯರು ಈ ರಸ್ತೆಯ ಮೇಲೆ ನಡೆಯಬಾರದು ಎಬುಂದು ಸರಕಾರದ ಕಾನೂನನ್ನೇ ಉಲ್ಲಂಘಿಸಿದಂತೆ. ಆದ್ದರಿಂದ ತಾನು ಸರಕಾರದ ಕಾನೂನನ್ನು ಎತ್ತಿ ಹಿಡಿಯಲು ವೈಕಂಗೆ ಬಂದಿರುವುದಾಗಿ ಹೇಳಿದ್ದರು. +ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದಕ್ಕಿಂತ ಆರು ತಿಂಗಳ ಮುಂಚೆ ಅದರಿಂದ ನಿರಾಶ್ರಿತರಾಗುವ ಎಲ್ಲರಿಗೂ ಜೀವನೋಪಾಯದ ನೈಜ ನೆಲೆಗಳನ್ನು (ಪರಿಹಾರ ರೂಪದ ಹಣವನ್ನಲ್ಲ) ಒದಗಿಸಬೇಕೆಂದು ಇಲ್ಲಿ ಮೇಧಾ ಪಾಟ್ಕರ್ ಉಪವಾಸ ಕುಳಿತು ಆಗ್ರಹಿಸುತ್ತಿದ್ದಾರೆ. ಇದು ಸುಪ್ರೀಂ ಕೋರ್ಟ್‌ನ ಆದೇಶವೂ ಆಗಿದೆ. ಆದ್ದರಿಂದ ಕೆಲವರು ಅಪಪ್ರಚಾರ ಮಾಡುವಂತೆ ಮೇಧಾ ಮಾಡುತ್ತಿರುವುದು ಬ್ಲಾಕ್ ಮೇಲ್ ಅಲ್ಲ. ಇದಕ್ಕಿಂತ ಹಿಂದೆ ಮೇಧಾ ಪಾಟ್ಕರ್ ಹಲವು ಪ್ರತಿಭಟನೆಗಳನ್ನು ಮಾಡಿದ್ದಾರೆ. ಮೊದಲು ಈ ಬಗೆಯ ಅಣೆಕಟ್ಟುಗಳಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದ್ದರು. ಅಣೆಕಟ್ಟುಗಳು ಕೆಲವು ವರ್ಷಗಳ ನಂತರ ತಮ್ಮ ಉಪಯೋಗಗಳನ್ನು ಕಳೆದುಕೊಳ್ಳುತ್ತವೆ ಎಬುಂದು ವೈಜ್ಞಾನಿಕವಾಗಿ ಸತ್ಯವೆಂದು ಈಗ ಸಾಬೀತಾಗಿದೆ. ಈ ಹೋರಾಟದಲ್ಲಿ ಮೇಧಾ ಗೆಲ್ಲಲಿಲ್ಲ; ಆದರೆ ಕೈಚೆಲ್ಲಿ ಅವರು ಕೂರಲಿಲ್ಲ. ಕಟ್ಟಿಮುಗಿದ ಅಣೆಕಟ್ಟಿನ ಎತ್ತರವನ್ನಾದರೂ ಹೆಚ್ಚಿಸಲೇಬಾರದೆಂದೂ, ನೀರಿಲ್ಲದ ಪ್ರದೇಶಗಳಿಗೆ ನೀರು ಒದಗಿಸಲು ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಬೇಕೆಂದೂ ಅವರು ಹೋರಾಟ ಮಾಡಿದರು. ಸರ್ಕಾರ ಅವರ ಮಾತನ್ನು ಕೇಳಲಿಲ್ಲ. ಆಗ ಅವರು ತಮ್ಮ ಹೋರಾಟಕ್ಕೆ ಕೋರ್ಟಿನ ಬೆಂಬಲ ಸಿಗಬಹುದೆಂದು ತಿಳಿದು ಕೋರ್ಟಿಗೆ ಹೋದರು. ಹೋದದ್ದೇ ತಪ್ಪಾಯಿತೋ ಏನೋ? ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಹುದು ಎನ್ನುವ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಕೊಟ್ಟಿತು. ಜೊತೆಗೆ ಭೂಮಿ ಕಳೆದುಕೊಂಡ ಜನರಿಗೆ ಪರ್ಯಾಯವಾಗಿ ಆರು ತಿಂಗಳ ಮುನ್ನವೇ ಜಮೀನು ಕೊಡಬೇಕೆಂಬ ಶರತ್ತು ಹಾಕಿತ್ತು. +ಆ ಸಂದರ್ಭದಲ್ಲಿ ದೆಹಲಿಗೆ ಸಹಸ್ರಾರು ಗಿರಿಜನರೊಡನೆ ಆಕೆ ಬಂದು ಒಂದು ಸಭೆ ನಡೆಸಿದರು. ಈ ಸಭೆಗೆ ನನ್ನನ್ನೂ ಕರೆದಿದ್ದರು. ದಿಲ್ಲಿಗೆ ಆಗ ವಿಶ್ವಬ್ಯಾಂಕ್‌ನ ಅಧ್ಯಕ್ಷರು ಬಂದಿದ್ದರು. ನನಗಿನ್ನೂ ಕಣ್ಣಿಗೆ ಕಟ್ಟುವಂತಿದೆ ಆ ಚಿತ್ರ. +ಮೇಧಾ ತನ್ನ ಸಂಗಡಿಗರೊಡನೆ ವಿಶ್ವ ಬ್ಯಾಂಕ್‌ನ ಮುಖ್ಯಸ್ಥ ಇಳಿದುಕೊಂಡಿದ್ದ ಹೊಟೇಲಿಗೆ ಹೋಗಿ ಧರಣಿ ಕುಳಿತು ಆತ ಹೊರಗೆ ಬರುವಂತೆ ಮಾಡಿದರಲ್ಲದೆ, ಹೊರಬಂದವನನ್ನು ಬಿಸಿಲಲ್ಲಿ ನಿಲ್ಲಿಸಿ ಅಲ್ಲಿ ಸೇರಿದ್ದ ಗಿರಿಜನರ ಜತೆ ಒಂದು ಸಂವಾದವನ್ನು ಏರ್ಪಡಿಸಿದರು. ಏಕೆಂದರೆ ನರ್ಮದಾ ಅಣೆಕಟ್ಟಿನಿಂದ ದೂರ ಉಳಿದಿದ್ದ ವಿಶ್ವ ಬ್ಯಾಂಕ್ ಮತ್ತೆ ತನ್ನ ಆಸಕ್ತಿಯನ್ನು ತೋರಿಸಲು ಆರಂಭಿಸಿತ್ತು. ಮೇಧಾ ಅದನ್ನು ಪ್ರತಿಭಟಿಸಿದ ರೀತಿ, ಆಕೆ ತನ್ನ ಎಲ್ಲಾ ಸೌಜನ್ಯವನ್ನು ಉಳಿಸಿಕೊಂಡೇ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಬಿಸಿಲಲ್ಲೇ ನಿಂತು ಆದಿವಾಸಿಗಳ ಪ್ರಶ್ನೆಗೆ ಉತ್ತರ ಕೊಡುವಂತೆ ಮಾಡಿದ್ದು ನನ್ನ ಕಣ್ಣಿಗೆ ಕಟ್ಟುವಂತೆ ಇದೆ. +ಆನಂತರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಾಲ್ಕು ಮಂದಿ ನಿವೃತ್ತ ನ್ಯಾಯಾಶರ ಜತೆ ನಾವು ಕೆಲವು ಜನ ಕುಳಿತು ಮರು ವಿಚಾರಣೆ ನಡೆಸಿದೆವು. ಅಲ್ಲಿ ಸೇರಿದ್ದ ಗಿರಿಜನರ ನಾಯಕರು ಬ ಂದು ಆ ಅಣೆಕಟ್ಟನ್ನು ಯಾಕೆ ಎತ್ತರಿಸಬಾರದು ಎಂದಕ್ಕೆ ತಮ್ಮ ಕಾರಣಗಳನ್ನು ಕೊಟ್ಟರು. ಅವೆಲ್ಲವನ್ನೂ ಕೇಳಿ ನಾವು ಅಣೆಕಟ್ಟನ್ನು ಎತ್ತರಿಸುವುದರಿಂದ ನಿಜವಾಗಿ ಯಾವ ಪ್ರಯೋಜನವೂ ಇಲ್ಲ ಎಂಬ ನಿರ್ಣಯಕ್ಕೆ ಬಂದೆವು. +ಇಲ್ಲಿ ಹೇಳಲೇ ಬೇಕಾದ ಒಂದು ಮಾತು ಇದೆ. ತೀರ್ಪು ಕೊಡಲು ಕೂತ ಜನರ ಮಧ್ಯೆ ಅಣೆಕಟ್ಟು ಬೇಕೆಂದು ವಾದಿಸುತ್ತಿದ್ದ ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರೂ ಇದ್ದರು. ಅಣೆಕಟ್ಟು ಬೇಕೆಂದು ವಾದಿಸುತ್ತಿದ್ದ ಅವರು ಕೊನೆ ಕೊನೆಯಲ್ಲಿ ಪಶ್ಚಾತ್ತಾಪ ಪಟ್ಟು ತಾನು ವಾದಿಸಿದ್ದು ತಪ್ಪೆಂದು ಅರ್ಥ ಮಾಡಿಕೊಂಡಿದ್ದರು. ಆದರೂ ಅವರು ಸಂಪೂರ್ಣ ಬದಲಾಗಿರಲಿಲ್ಲ. ಅಣೆಕಟ್ಟು ಬೇಕು. ಆದರೆ ಅದು ಇಷ್ಟು ದೊಡ್ಡದಾಗಿರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ಅವರೂ ಅಂದು ಅಣೆಕಟ್ಟಿನ ಎತ್ತರವನ್ನು ವಿರೋಸಿ ನಮ್ಮ ಜೊತೆಯೇ ತೀರ್ಪಿತ್ತರು. ಮುಳುಗಡೆಯಾದ ಪ್ರದೇಶದ ಬಡಜನರನ್ನು ಸರ್ಕಾರ ನಡೆಸಿಕೊಂಡ ರೀತಿಯಿಂದ ಅವರು ರೋಸಿದ್ದರು. ಈ ತೀರ್ಪು ನೀಡಲು ಕುಳಿತವರಲ್ಲಿ ಎಲ್ಲರೂ ಮೇಧಾ ಅವರಂತೆ ಯೋಚಿಸುವರಾಗಿರಲಿಲ್ಲ. ಆದರೂ ಮೇಧಾ ಅವರ ನಿಲುವು ಸರಿಯೆಂದೂ ಸುಪ್ರೀಂ ಕೋರ್ಟ್ ತೀರ್ಪು ಅಷ್ಟು ಸರಿಯಲ್ಲವೆಂದೂ ಎಲ್ಲರ ಭಾವನೆಯಾಗಿತ್ತು. +ಸುಪ್ರೀಂ ಕೋರ್ಟ್‌ನ ತೀರ್ಪು ಬಂದ ನಂತರ ಮೇಧಾ ಅದನ್ನು ಒಪ್ಪಿಕೊಂಡೇ ಹೋರಾಟ ಮುಂದುವರಿಸುತ್ತಿದ್ದಾರೆ. ಕೇಂದ್ರದ ಜಲಸಂಪನ್ಮೂಲ ಸಚಿವ ಸೈಫುದ್ದೀನ್ ಸೋಜ್ ಕೂಡಾ ಅಣೆಕಟ್ಟನ್ನು ಎತ್ತರಿಸುವುದು ಇಷ್ಟು ಆತುರದಲ್ಲಿ ಮಾಡಬೇಕಾದ ಕಾರ್ಯವಲ್ಲ ಎಂದು ಹೇಳಿದ್ದಾರೆ. ಆದರೂ ಆತುರದಲ್ಲಿ ಈ ಕೆಲಸ ನಡೆಯುತ್ತಿದೆ, ಯಾಕೆ? +ಈ ಪ್ರಶ್ನೆಯ ಉತ್ತರ ಇಂದಿನ ವ್ಯವಸ್ಥೆ ಯಾವ ಪಕ್ಷದ್ದೇ ಆಗಲಿ, ಅದು ಏನಕೇನ ಭಾರತ ಶ್ರೀಮಂತ ರಾಷ್ಟ್ರವಾಗಬೇಕೆಂಬ ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿ ರಾಜಕಾರಣದ ನೆವದಲ್ಲಿ ಅನೈತಿಕವಾಗಿದೆ ಎಬುಂದರಲ್ಲಿದೆ. ಒಂದು ಕಾಲದಲ್ಲಿ ನಮ್ಮ ಆಡಳಿತದಲ್ಲಿ ಜಾತಿಯೇ ಮುಖ್ಯವಾಗಿತ್ತು ಎಂಬ ಆರೋಪವಿತ್ತು. ಜಾತಿ ಮುಖ್ಯವಾಗಿದ್ದಾಗ ಕಡೆಯ ಪಕ್ಷ ತನ್ನ ಜಾತಿಯಲ್ಲಿರುವ ಬಡಜನರನ್ನಾದರೂ ಮುಟ್ಟಬೇಕೆನ್ನುವ ಒತ್ತಾಯ ಆ ಜಾತಿವಾದಿ ರಾಜಕಾರಣಿಗೆ ಇರುವುದು ಸಾಧ್ಯವಿತ್ತು. ಇದರರ್ಥ ಜಾತಿವಾದಿ ರಾಜಕಾರಣಿಗಳೆಲ್ಲಾ ಹೀಗಿದ್ದರು ಎಂದಲ್ಲ. ಅಂಥದ್ದೊಂದು ಅಲ್ಪವಾದ ಸಂಕುಚಿತ ಕುಟುಂಬ ಭಾವನೆಯ ಸಾಧ್ಯತೆಯಾದರೂ ಈ ಜಾತಿ ರಾಜಕಾರಣದಲ್ಲಿ ಇತ್ತು ಎಂದು ತೋರುತ್ತದೆ. ಜಾತಿ ರಾಜಕಾರಣ ಮಾಡಹುದಾದ ಅನಾಹುತಕ್ಕಿಂತ ಘೋರವಾದ ಅಮಾನವೀಯತೆ ಇರುವುದು ಹಣದ ಮೇಲೆ ನಿಂತಿರುವ ಇಂದಿನ ರಾಜಕೀಯದಲ್ಲಿ. ಹಣದಷ್ಟು ಅಮೂರ್ತವಾದ ಕಾಮರೂಪಿಯಾದ ರಾಕ್ಷಸೀಯತೆ ಇನ್ನೊಂದಿಲ್ಲ. ಜಾತಿ ಮೂರ್ತವಾದದ್ದು. ಸ್ಥಳೀಯವಾದ್ದು. ಅಲ್ಲಿ ಪ್ರೀತಿ, ದ್ವೇಷ ಇತ್ಯಾದಿ ಮಾನವೀಯವಾದ ಭಾವನೆಗಳು ಇರುತ್ತವೆ. ಅವುಗಳನ್ನು ಗ್ರಹಿಸಿ ಅವುಗಳ ವಿರುದ್ಧ ಹೋರಾಡಹುದು. +ಆದರೆ ಹಣ ಎಬುಂದು ಒಂದು ಅಮೂರ್ತವಾದ ಮೌಲ್ಯ. ಅಲ್ಲಿ ಮಾನವೀಯ ಭಾವನೆಗಳೇ ಇಲ್ಲ. ಎಲ್ಲವೂ ವ್ಯಾಪಾರಕ್ಕಿರುವ ಅವಕಾಶಗಳು. ಪ್ರೇಮ, ಯುದ್ಧ, ಊಟ, ಫ್ಯಾಶನ್, ಮಕ್ಕಳ ಆಟದ ಸಾಮಗ್ರಿಗಳು, ಕಾಮುಕತೆ, ದೇವತಾದರ್ಶನ, ಯೋಗ-ಎಲ್ಲವೂ ವ್ಯಾಪಾರ. ತಂದೆ ಮಕ್ಕಳ, ಗಂಡ ಹೆಂಡಿರ ಸಂಬಂಧವೂ ವ್ಯವಹಾರ. +ಇವತ್ತು ಯಾರೇ ಅಕಾರಕ್ಕೆ ಬಂದರೂ ಎಷ್ಟು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಹುದು? ಎಷ್ಟು ಹೊಸ ಸೇತುವೆಗಳನ್ನು ನಿರ್ಮಾಣ ಮಾಡಹುದು? ಎಷ್ಟು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಹುದು? ಎಷ್ಟು ಹೊಸ ಅಣೆಕಟ್ಟುಗಳನ್ನು ನಿರ್ಮಾಣ ಮಾಡಹುದು? ಎಂದು ಯೋಚಿಸುತ್ತಾರೆ. ಹಾಗೆಂದು ಇವರಾರಿಗೂ ಸರ್ ಎಂ. ವಿಶ್ವೇಶ್ವರಯ್ಯನವರಿಗಿರುವ ತುರ್ತು ಇರುವುದಿಲ್ಲ. ವಿಶ್ವೇಶ್ವರಯ್ಯ ತಾನು ಜನ ಹಿತಕ್ಕಾಗಿ ಇದನ್ನು ಮಾಡುತ್ತಿದ್ದೇನೆಂದು ಪ್ರಾಮಾಣಿಕವಾಗಿ ಭಾವಿಸಿದ್ದರು. ಈಗಿನ ರಾಜಕಾರಣ ಜನ ಹಿತವನ್ನು ಮಾತಿನಲ್ಲಿ ಸಾರುತ್ತದೆಯೇ ಹೊರತಾಗಿ ತಾನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಜನ ಬೆಂಬಲ ಅಗತ್ಯವೆಂದು ಭಾವಿಸುವುದೂ ಇಲ್ಲ. ಏಕೆಂದರೆ ಈ ಎಲ್ಲಾ ನಿರ್ಮಾಣ ಕಾಮಗಾರಿಗಳಿಂದ ಅವರಿಗೆ ಕಮಿಷನ್ ದೊರೆಯುತ್ತದೆ. ಈ ಲಂಚಕ್ಕಾಗಿ ಎಲ್ಲರೂ ‘ಅಭಿವೃದ್ಧಿ’ಯನ್ನು ಕೈಗೆತ್ತಿಕೊಳ್ಳುತ್ತಾರೆ. +ಪರದೇಶಗಳಿಂದ ಎಷ್ಟು ಹಣ ಯಾವ ಕಾರಣಕ್ಕಾಗಿ- ಸಾಲವಾಗಿ, ದಾನವಾಗಿ- ಬಂದರೂ ಅದು ಅಲ್ಲಲ್ಲಿ ಸೋರಿ ಜನರಿಗೆ ತಲುಪುವುದು ಒಂದು ಸಣ್ಣ ಪಾಲು ಮಾತ್ರ. ಈ ಸೋರಿ ಹೋಗುವುದೆಲ್ಲವೂ ರಾಜಕಾರಣಿಗಳ/ವ್ಯವಹಾರಿ ವ್ಯಾಪಾರಿಗಳ/ಯೂರೋಕ್ರೇಟರುಗಳ ಕಿಸೆಗೆ ಸೇರುತ್ತದೆ. ಹಣದ ವಿಷಯಕ್ಕೆ ಬಂದಾಗ ಆಳುವ/ಆಳಲಿರುವ ಎಲ್ಲರಲ್ಲೂ ಒಂದು ಒಮ್ಮತವಿರುವಂತೆ ತೋರುತ್ತದೆ. ಭಾರತದಲ್ಲಿ ತನ್ನ ಜಾತಿಯ ಪ್ರೀತಿ ಅಪ್ರಸ್ತುತವಾಗುವಷ್ಟು ಹಣ ಹೆಚ್ಚಿಸುವ ವ್ಯಾಪಾರ ಬೆಳೆದಿದೆ. ನಮ್ಮ ಸ್ವಂತಿಕೆಯ ಗುರುತುಗಳಾದ ನಮ್ಮ ಮನುಷ್ಯ ಸಹಜ ಇತಿಮಿತಿಗಳನ್ನು ಕರಗಿಸಿ, ಯಾವ ಆತ್ಮೀಯ ಭಾವನೆಗಳೂ ಇಲ್ಲದ ಜಾಗತಿಕ ಬೊಂಬೆಗಳನ್ನಾಗಿ ನಮ್ಮನ್ನು ಎರಕಹೊಯ್ಯುತ್ತಿರುವ ಇಂದಿನ ಎರಡು ಸಾಧನಗಳೆಂದರೆ: ಅಮೆರಿಕನ್ ಇಂಗ್ಲಿಷ್ ಮತ್ತು ಅಮೆರಿಕನ್ ಡಾಲರ್. +* +* +* +ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದನ್ನು ಕೇಂದ್ರ ಜಲಸಂಪನ್ಮೂಲ ಸಚಿವರೇ ಪ್ರಿಮೆಚೂರ್ ಎಂದು ಹೇಳಿದ್ದಾರೆ. ೩೫,೦೦೦ ಸಂಸಾರಗಳು ತಮ್ಮ ಮನೆ, ಜಮೀನು, ತಮ್ಮ ಜೀವನಾಧಾರ, ತಮ್ಮ ಆಪ್ತರ ಜತೆಗೆ ಬದುಕುತ್ತಿದ್ದಾಗ ಅವರಿಗಿದ್ದ ಸೌಕರ್ಯಗಳು ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. ಮಾರ್ಚ್ ೩೧, ೨೦೦೧ರಂದು ಮಹಾ ಲೇಖಪಾಲರು (ಸಿ‌ಎಜಿ) ಗುಜರಾತಿನ ಆರ್ಥಿಕ ವ್ಯವಸ್ಥೆ ಅತ್ಯಂತ ದುಸ್ಥಿತಿಯಲ್ಲಿದೆ ಎಂದಿದ್ದರು. ಅವರು ಸರದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ ಮಾಡಿರುವ ಸಾಲ, ಅದರ ಮೇಲೆ ಪಾವತಿಸುತ್ತಿರುವ ಬಡ್ಡಿಯನ್ನು ಈ ಸಿ‌ಎಜಿ ವರದಿ ಖಂಡಿಸಿದೆ. ೨೦೦೧ರ ಮಾರ್ಚ್ ೩೧ರವರೆಗೆ ಈ ಅಣೆಕಟ್ಟಿಗೆ ಆಗಿರುವ ಖರ್ಚು ೧೦,೯೭೮ ಕೋಟಿ ರೂಪಾಯಿಗಳು. ಇದರ ಶೇಕಡಾ ೨೨ರಷ್ಟು ಭಾಗ ಸಾಲದ ನಿರ್ವಹಣೆ ಮತ್ತು ಬಡ್ಡಿ ಪಾವತಿಗಾಗಿಯೇ ಖರ್ಚಾಗುತ್ತಿದೆ. ಅಣೆಕಟ್ಟು ಕಟ್ಟುವುದಕ್ಕೆ ೧೯೯೪ರಿಂದಲೂ ಮೇಧಾ ಚಳುವಳಿ ಅಡ್ಡಗಾಲು ಹಾಕುತ್ತಿರುವುದರಿಂದ ಇಷ್ಟೆಲ್ಲಾ ಖರ್ಚಾಯಿತು ಎಂದು ಗುಜರಾತ್ ಸರಕಾರ ಹೇಳುತ್ತಿದೆ. ಈ ಬಗೆಯ ಆರೋಪಗಳನ್ನು ಮಾಡುತ್ತಿರುವುದು ಕೇವಲ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಾತ್ರ ಅಲ್ಲ. ಅಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಾ. +ಕೆಲವು ವಾರಗಳ ಹಿಂದೆ ನರ್ಮದಾ ಅಣೆಕಟ್ಟಿನ ವಿಚಾರದಲ್ಲಿ ಗುಜರಾತ್ ವಿಧಾನ ಸಭೆಯಲ್ಲಿ ಚರ್ಚೆಯಾದಾಗ ಕಾಂಗ್ರೆಸ್‌ನ ಮುಖ್ಯ ಸಚೇತಕ ಬಲವಂತ್ ಸಿಂಗ್ ರಾಜಪೂತ್ ಎನ್ನುವವರು ಹೀಗೆ ಹೇಳಿದರು; ‘ನಮ್ಮ ರಾಜ್ಯ ಬಡ್ಡಿ ಕೊಡಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡುತ್ತಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡಕೂಡದು. ಏಕೆಂದರೆ ಇದರಿಂದ ಬಡ್ಡಿ ಕೊಡಲು ಇನ್ನಷ್ಟು ಹಣ ಖರ್ಚಾಗುತ್ತದೆ’. ಹೀಗೆ ಮೋದಿ ಸರಕಾರವನ್ನು ಅದು ಬಡ್ಡಿ ಪಾವತಿಗೆ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿದೆ ಎಂದು ಜರೆಯುತ್ತಲೇ ಅಣೆಕಟ್ಟಿನ ಎತ್ತರವನ್ನು ಬೆಂಲಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. +ಸುಮಾರು ಸಾವಿರಾರು ಕೋಟಿ ರೂಪಾಯಿಗಳು ಬಡ್ಡಿಯಾಗಿಯೇ ಸಂದಿದೆ. ಅಂದರೆ ಸಾಲಕೊಟ್ಟ ಧನವಂತರಿಗೆ ಇದು ಕಿಂಚಿತ್ತೂ ತಡವಾಗದಂತೆ ಸಂದಾಯವಾಗಿದೆ. ಆದರೆ ಭೂಮಿ ಕಳೆದುಕೊಂಡವರಿಗೆ ಸಿಕ್ಕಿರುವುದು ಕಿಂಚಿತ್ತು ಮಾತ್ರ. +* +* +* +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ ಮುಖಾಂತರ ಕ್ಷೆಭೆಯನ್ನು ಉಂಟು ಮಾಡಿ ಕ್ರಾಂತಿಯನ್ನು ಸಾಧ್ಯವಾಗಿಸುತ್ತೇವೆಂಬ ನಕ್ಸಲೈಟರ ಹಿಂಸಾಕ್ರಮಗಳಿಗೆ ಕೂಡಲೇ ಎಚ್ಚೆತ್ತು ಪ್ರತಿಕ್ರಿಯಿಸುತ್ತದೆ. ಈ ಮೂಲಕ ಪ್ರಜಾತಾಂತ್ರಿಕವಾದ ಒತ್ತಡಗಳು, ಚಳವಳಿಗಳು ನಿರುಪಯುಕ್ತ ಎನ್ನುವುದನ್ನು ನಮ್ಮ ವ್ಯವಸ್ಥೆಯೇ ಹೇಳುತ್ತಿದೆ. ಇದಾಗ ಕೂಡದು ಎಂದು ನಬುಂವ ನಾವೆಲ್ಲರೂ ಮೇಧಾ ಪಾಟ್ಕರ್ ಅವರ ಸತ್ಯಾಗ್ರಹ ನಮ್ಮೆಲ್ಲರ ಪರವಾಗಿ, ಪ್ರಜಾತಂತ್ರ ವ್ಯವಸ್ಥೆಯ ಕ್ರಿಯಾಶೀಲವಾದ ಸ್ಪಂದನಕ್ಕಾಗಿ ನಡೆಯುತ್ತಿರುವ ಸತ್ಯಾಗ್ರಹ ಎಂದು ತಿಳಿಯಬೇಕು. +ಈಗ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಹಿಂಸೆ ಜರ್ಮನಿಯಲ್ಲಿ ಹಿಟ್ಲರ್ ಮಾಡಿದ ಹಿಂಸೆಗಿಂತ ಜೀವನ ಕ್ರಮಗಳ ನಾಶದ ದೃಷ್ಟಿಯಿಂದ ಕಡಿಮೆಯಾದ್ದಲ್ಲ.. ರಷ್ಯಾದಲ್ಲಿ ಸ್ಟಾಲಿನ್ ಕೂಡಾ ಅಭಿವೃದ್ಧಿಗಾಗಿಯೇ ಎಲ್ಲ ಹಿಂಸೆಯನ್ನೂ ಮಾಡಿದ್ದು. ಚೀನಾದಲ್ಲೂ ಆಗಿರುವ ಹಿಂಸೆ ಈ ಅಭಿವೃದ್ಧಿಗಾಗಿ. ಭಾರತದಲ್ಲಿಯೂ ಹಾಗೆಯೇ ಆಗುತ್ತಿದೆ. ಆದ್ದರಿಂದ ಈ ಅಭಿವೃದ್ಧಿ ಎನ್ನುವುದನ್ನು, ಅದು ಕೇಳುವ ಅಪಾರವಾದ, ಅನಿವಾರ್‍ಯವಲ್ಲದ ಬಲಿಯನ್ನು ನಾವು ಮರು ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿದೆ. +ಅಭಿವೃದ್ಧಿ ಬೇಡವೆಂದಲ್ಲ. ಬದುಕುತ್ತಿರುವ ಎಲ್ಲ ಸಮಾಜಗಳೂ ಬದಲಾಗುತ್ತಲೇ ಇರಬೇಕಾಗುತ್ತದೆ. ಆಯಾ ಕಾಲಘಟ್ಟದಲ್ಲಿ ತಾನು ಉಳಿದುಕೊಳ್ಳಲು ಯಾವ್ಯಾವ ಉಪಾಯಗಳನ್ನು ಮಾಡಬೇಕೋ ಅವನ್ನು ಎಲ್ಲ ಸಮಾಜಗಳೂ ಮಾಡುತ್ತಲೇ ಇರುತ್ತವೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಅದು ಹುಡುಕಿಕೊಳ್ಳುತ್ತದೆ. ಆದರೆ ಈಗ ತಂತ್ರಜ್ಞಾನ ದರಿದ್ರರನ್ನು ದೀನರನ್ನಾಗಿ ಮಾಡಿ, ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲು, ನಮ್ಮ ನಗರಗಳನ್ನು ಸಿಂಗಪುರಗಳನ್ನಾಗಿ ಮಾಡಲು ಬಳಕೆಯಾಗುತ್ತಿದೆ. +ಈಗಾಗಲೇ ಊರು ಸೇರಿಬಿಟ್ಟವರು ಅಥವಾ ದಡ ಸೇರಿದವರು ಹೇಗೋ ಬಚಾವಾಗುತ್ತಾರೆ. ಅಮೆರಿಕಾದ ಕಪ್ಪ್ಪು ಜನರಂತೆ ನಮ್ಮ ದಲಿತರೂ ಬಚಾವಾಗುತ್ತಾರೆ-ಏಕೆಂದರೆ ಅವರು ಕೆಲ ಮಟ್ಟಿಗೆ ದಡ ಸೇರಿಯಾಗಿದೆ. ಆದರೆ ದಡ ಸೇರದವರೆಂದರೆ ಈಗಲೂ ಕೊಳಚೆ ಪ್ರದೇಶದಲ್ಲಿ ಇರುವವರು ಮತ್ತು ತಮ್ಮದೇ ಆದ ಜೀವನ ಶೈಲಿಯಲ್ಲಿ ಪ್ರಕೃತಿಗೆ ಹತ್ತಿರವಾಗಿ ಇರುವ ಗಿರಿಜನರು. ಪಾಶ್ಚಾತ್ಯ ನಾಗರೀಕತೆ ಮೂಲನಿವಾಸಿಗಳನ್ನು ನಾಶಮಾಡಿದಂತೆಯೇ ನಾವು ಗಿರಿಜನರನ್ನು, ಅವರ ಅಮೂಲ್ಯ ಜೀವನ ಶೈಲಿಯನ್ನು ನಾಶಮಾಡಲು ತೊಡಗಿದ್ದೇವೆ +* +* +* +ಮೇಧಾ ಪಾಟ್ಕರ್‌ರಲ್ಲಿ ಗಾಂ ಇನ್ನೂ ಜೀವಂತವಾಗಿ ಇದ್ದಾರೆ. ಅವರ ಉಪವಾಸ ಸತ್ಯಾಗ್ರಹದಿಂದ ನಮ್ಮನ್ನು ಆಳುವವರಲ್ಲಿ ಇರಹುದಾದ ಒಳಿತು ಜಾಗೃತಗೊಳ್ಳಲಿ ಎಂದು ನಾವೆಲ್ಲರೂ ನಿರೀಕ್ಷಿಸಬೇಕು. ಗಾಂಜಿ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇದ್ದವರು ಎಂದು ನಾವೆಲ್ಲರೂ ತಿಳಿದಿದ್ದೇವೆ; ಜೊತೆಗೇ ಅವರು ಹೃದಯ ಪರಿವರ್ತನೆಯಾಗುವಂತೆ ಒತ್ತಾಯವನ್ನೂ ತರುತ್ತಿದ್ದವರು ಎನ್ನುವುದನ್ನು ಮರೆಯುತ್ತಿದ್ದೇವೆ. ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇದ್ದಾತ ಅದಕ್ಕೆ ಒತ್ತಾಯ ಅಗತ್ಯವೆನ್ನಿಸಿದಾಗ ರಾಜಕಾರಣಿಯೂ ಆಗುತ್ತಾನೆ. ವಿನೋಬಾಗೂ ಗಾಂಜಿಗೂ ಹೋಲಿಸಿದಾಗ ಈ ವ್ಯತ್ಯಾಸ ತಿಳಿಯುತ್ತದೆ. ವಿನೋಬಾ ಹೃದಯ ಪರಿವರ್ತನೆಯಲ್ಲಿ ನಂಬಿ ದೇಶಾದ್ಯಂತ ಓಡಾಡಿದರು. ಆದರೆ ಈ ಹೃದಯ ಪರಿವರ್ತನೆಗೆ ಅಗತ್ಯವಿದ್ದ ಒತ್ತಾಯವನ್ನು ಹೋರಾಟದ ಮೂಲಕ ಸೃಷ್ಟಿಸಲಿಲ್ಲ. ಗಾಂಜಿಗೆ ಹೃದಯ ಪರಿವರ್ತನೆಯಲ್ಲಿ ನಂಬಿಕೆ ಇತ್ತು. ಆದರೆ ಅಂತಹ ಹೃದಯ ಪರಿವರ್ತನೆಗೆ ಅಗತ್ಯವಿರುವ ಒತ್ತಡವನ್ನು ಅವರು ಜನಾಂದೋಲನದ ಮೂಲಕ ಸೃಷ್ಟಿಸುತ್ತಿದ್ದರು. ಮೇಧಾ ಪಾಟ್ಕರ್ ಅವರು ಮಾಡುತ್ತಿರುವುದೂ ಅದನ್ನೇ. +* +* +* +ಕೇಂದ್ರದ ಮೂವರು ಸಚಿವರ ತಂಡ ಮುಳುಗಡೆಯಿಂದ ಸಂತ್ರಸ್ತರಾದವರಿಗೆ ಏನೇನು ಪರಿಹಾರ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಕಣ್ಣಾರೆ ಕಂಡುಂದಿದೆ. ಈ ಲೇಖನವನ್ನು ನಾನು ಬರೆಯುವ ಹೊತ್ತಿಗೆ ಸಚಿವರ ತಂಡ ಹಿಂದಿರುಗಿ ನಾಲ್ಕು ದಿನಗಳಾಗಿವೆ. ಅವರು ಕಂಡದ್ದೇನು ಎಬುಂದನ್ನು ಅವರ ಮೌನದಿಂದಲೇ ಊಹಿಸಹುದು. ಮೇಧಾ ಆಸ್ಪತ್ರೆಯಲ್ಲಿ ಉಪವಾಸದಿಂದ ಬಳಲುತ್ತಲೇ ಇದ್ದಾರೆ. ನಮ್ಮ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂ ಮತ್ತು ಎಲ್ಲ ಕೇಂದ್ರ ಮಂತ್ರಿಗಳ ಮೇಲೆ ಮೇಧಾ ಉಪವಾಸ ನಿಲ್ಲಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ನಾವೆಲ್ಲಾ ಒತ್ತಾಯಿಸಬೇಕು. ಅಂದರೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬೇಡಿ, ಮೊದಲು ನಿರಾಶ್ರಿತರಾದವರಿಗೆ ಜೀವನಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಿ ಎಂದು ಕಾಗದಗಳನ್ನು ಸಹಸ್ರ ಸಂಖ್ಯೆಯಲ್ಲಿ ಬರೆಯಬೇಕು. ಇದು ಇರುವ ಕಾನೂನನ್ನು ಜಾರಿಗೊಳಿಸಲು ಮಾಡುತ್ತಿರುವ ಒತ್ತಾಯ. +(ನಿರೂಪಣೆ: ಇಸ್ಮಾಯಿಲ್) +ಉದಯವಾಣಿ: ಏಪ್ರಿಲ್ ೧೬, ೨೦೦೬ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನ ಹಾಗು ಎಂ ಎಸ್ ಶ್ರೀರಾಂರವರು ಆರು ವರ್ಷಗಳ ಹಿಂದೆ ಬರೆದಿರುವ ಲೇಖನ- ಈ ಎರಡನ್ನೂ ಒಟ್ಟಿಗೆ ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ – ಕರ್ನಾಟಕದ ತದಡಿ ಯೋಜನೆ ಬಗೆಗೂ ಸಂತೋಷ ಕುಮಾರ ಮೆಹಂದಳೆಯವರ ಲೇಖನವನ್ನೂ ಪ್ರಕಟಿಸಲಾಗಿದೆ – ಸಂ +***** +ಕೃಪೆ: ಉದಯವಾಣಿ +ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು […] +ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು […] +ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_607.txt b/Kannada Sahitya/article_607.txt new file mode 100644 index 0000000000000000000000000000000000000000..ef87642ee5c54842db0795fb2a6ef1a0835f139c --- /dev/null +++ b/Kannada Sahitya/article_607.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಇದು ಬಾಳಕೊರಡ ಮುಡಿ- +ಮೇಲೆ ಕಾಣದ ಕೈಯ ಕರಗಸವು +ರೌರವದಿ ಕೊರೆಯುತಿದೆ +ಕೊರಡಿನೆದೆ ಬಿರಿಯುತಿದೆ +ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು +ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! +ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ +ಮೊರೆಯುತಿದೆ ಬಯಲಿನಲ್ಲಿ +ಕಾಲನೊಡ್ಡಿಹ ತುಮುಲ ಜಾಲದಲ್ಲಿ! +ಚಣಚಣಕೆ ಕಟ್ಟಿಗೆಯ ಅಟ್ಟಹಾಸವು ಅಡಗಿ +ಅವನ ಕೈಮಗೆ ಓರೆಕೋರೆ ಹುಡಿ ಹೊಟ್ಟಾಗಿ +ಒಟ್ಟೈಸಿ ಉದುರುತಿದೆ ರಾಶಿಯಾಗಿ +ಬಾಳೆಲ್ಲ ಗಾಸಿಯಾಗಿ. +೨ +ತೀಡುತಿದೆ ಉಜ್ಜುಗೊರಡು +ಮೂಡುತಿದೆ ಹೊಸತು ಕೊರಡು +ಪೊಳ್ಳು ಪೊದರಿನ ಪದರು +ಬೆದರಿ ಚದುರುತ್ತಿಹವು +ಉರುಳುರುಳಿ ಸುರುಳಿಯಾಗಿ +ತನ್ನ ಬಲಹೀನತೆಗೆ ತಾನೆ ಬಾಗಿ. +ಮತ್ತೆ ಕೆತ್ತಿಹವಲ್ಲಿ ಹೂವು ಬಳ್ಳಿ +ಕೊರಡು ಕೊನರಿಸಿತೆಂಬ ಭ್ರಾಂತಿಯಲ್ಲಿ. +೩ +ಯಾವ ಮಂದಿರದ ಆಧಾರಸ್ತಂಭಕೊ ಕಾಣೆ +ಇಂತು ಜೀವಸ್ತಂಭ ಸಿದ್ಧವಾಗಿ +ನಿಂತಿಹುದು ಕರ್‍ತವ್ಯಬದ್ಧವಾಗಿ! +ಹೊತ್ತ ತಲೆಭಾರದಲಿ +ಕತ್ತು ತತ್ತರಿಸದೊಲು +ಯಾವ ಶಕ್ತಿಯು ನೆರವು ನೀಡಲಿಹುದೊ, +ಇಲ್ಲ, ಬೇರೆಯ ತರವು ಬೇಡಲಿಹುದೊ! +***** +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_608.txt b/Kannada Sahitya/article_608.txt new file mode 100644 index 0000000000000000000000000000000000000000..2b92fe09d3d3ed94cd4f4764a26de00adb98f797 --- /dev/null +++ b/Kannada Sahitya/article_608.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. +ಈ ಕೆಳಕಂಡ ವಿಷಯದ ಮೇಲಿನ ತಮ್ಮ ಸ್ವರಚಿತ ಕವನಗಳನ್ನು ಇದೇ ಜ.೧೦ ರ ಒಳಗಾಗಿ, ಕೆಳಕಂಡ ವಿಳಾಸಕ್ಕೆ ತಮ್ಮ ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ‘ಈ ಮೇಲ್’ (ಇದ್ದಲ್ಲಿ) ವಿಳಾಸ ಸಹಿತ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. +ಅತ್ಯುತ್ತಮ ಕವನಗಳಿಗೆ ಕ್ರಮವಾಗಿ ಪ್ರಥಮ (೫೦೦ ರೂ.) ದ್ವಿತೀಯ (೩೦೦ ರೂ.) ಹಾಗೂ ತೃತೀಯ (೨೦೦ ರೂ.) ಬಹುಮಾನಗಳನ್ನೂ ಇಡಲಾಗಿದೆ. ಬಹುಮಾನಿತ ಕವಿಗಳೂ ಸೇರಿದಂತೆ ಕವಿಗೋಷ್ಟಿಗೆ ಆಯ್ಕೆಯಾದ ಎಲ್ಲ ಕವಿಗಳಿಗೂ ಬಳಿಕ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಗುವುದು. ಕವಿಗಳಿಗೆ ಪ್ರಶಸ್ತಿ ಪತ್ರಗಳನ್ನೂ ವಿತರಿಸಲಾಗುವುದು. ನಂತರ ಗೋಷ್ಟಿಯಲ್ಲಿ ವಾಚಿಸಲ್ಪಟ್ಟ ಕವನಗಳನ್ನು ಕ್ರಮವಾಗಿ ಕವಿಗಳ ಭಾವಚಿತ್ರ ಸಹಿತ ‘ಕನ್ನಡ ಸಾಹಿತ್ಯ ಡಾಟ್ ಕಾಂ’ ವೆಬ್ ಸೈಟಿನಲ್ಲಿ (ಅಂತರ್ಜಾಲದಲ್ಲಿ) ಪ್ರಕಟಿಸಲಾಗುವುದು. +ಕವನಗಳ ವಿಷಯ: ‘ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ’. +ಕವನಗಳನ್ನು ಹಾಳೆಯ ಒಂದೇ ಮಗ್ಗುಲಿಗೆ ಸ್ಫುಟವಾಗಿ ತಪ್ಪಿಲ್ಲದೆ ಬರೆದು ಅಥವಾ ಟೈಪ್ ಮಾಡಿರಬೇಕು. +ಕವನ ೨೦ ಸಾಲುಗಳನ್ನು ಮೀರಿರಬಾರದು. +ಕವನಗಳನ್ನು ಕಳುಹಿಸಬೇಕಾದ ವಿಳಾಸ: +‘ಅಧ್ಯಕ್ಷರು, ಕ.ಸಾ.ಪ. ಜಿಲ್ಲಾ ಘಟಕ, +ಕನ್ನಡ ಸಾಹಿತ್ಯ ಪರಿಷತ್ ಭವನ, +ಕಲಾಭವನದ ಪಕ್ಕ, ಸಾಲಗಾಮೆ ರಸ್ತೆ, +ಹಾಸನ ೫೭೩೨೦೧’ +ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಈ ಮೇಲ್ ವಿಳಾಸ ಮತ್ತು ಭಾವಚಿತ್ರ ಸಹಿತ ಕವನಗಳು ತಲುಪಬೇಕಾದ ಕೊನೆಯ ದಿನಾಂಕ: ೧೦-೧-೨೦೦೯. +ಕವಿಗೋಷ್ಟಿಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ನಂತರ ತಿಳಿಸಲಾಗುವುದು. +ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: +ಉದಯರವಿ, ಅಧ್ಯಕ್ಷರು, ಕಸಾಪ, ಹಾಸನ- ೯೯೬೪೨೮೭೬೩೩ +ಎಚ್.ಎಸ್. ಪ್ರಭಾಕರ, ಸಂಚಾಲಕರು, ಕೆ.ಎಸ್.ಸಿ. ಬೆಂಬಲಿಗರ ಬಳಗ, ಹಾಸನ- ೯೪೪೮೩೬೫೮೧೬ ಮತ್ತು +ಕೃಷ್ಣಮೂರ್ತಿ, ಕಾಯರ್ದರ್ಶಿ, ಬಿ.ಸಿ.ಆರ್.ಟಿ. ಹಾಸನ- ೯೩೪೩೪೩೧೮೮೬ +***** +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […] +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_609.txt b/Kannada Sahitya/article_609.txt new file mode 100644 index 0000000000000000000000000000000000000000..bf4d67b5afd5b95326893efc2316f3eb2fa574a1 --- /dev/null +++ b/Kannada Sahitya/article_609.txt @@ -0,0 +1,121 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. ಪಾಪ ಆಸೇಕ ಬಿದ್ದದ… ಎಲ್ಲ ಸೇರಿ ಫಾತೀಮಾಗೆ ಕೆಟ್ಟ ಹೆಸರಲ್ರೀ. ಫಾತೀಮಾನ ಜೀಂವಾ ಅರಿಲಾಕ ಹುಟ್ಯಾವ ಹುಡುಗ್ರು ಹಿಂದಿನ ಮನೆಯವಳು ಹೇಳುತ್ತಲೇ ಇದ್ದಳು, ಕೇಳುತ್ತಿದ್ದ ಸರೋಜನಿಗೆ ಪ್ಯಾಂಟ್ ಒಗೆಯುವಾಗ ಗಂಡನ ಜೇಬಿನಲ್ಲಿ ಇಟ್ಟ ಹಣ, ರೊಟ್ಟಿ ಮಾಡುವಾಗ ತೆಗೆದಿಟ್ಟ ಬೆರಳಿನುಂಗುರವನ್ನು ಪರಾತದೊಂದಿಗೆ ತೊಳೆಯಲು ಇಟ್ಟಿದ್ದು.. ತಿಕ್ಕಕ್ಕ ಇಡೂ ಮುಂದ, ತೊಳಿಲಾಕ ಇಡೂ ಮುಂದ ಜರಾ ನೋಡಿ ಇಡಕ್ಕೆ ಬರಂಗಿಲ್ಲೇನು ಅಂತ ಬೈಯ್ದು ಒಳಗಿಟ್ಟು ಹೋದ ಫಾತೀಮಾನನ್ನು ನೆನೆಯುತ್ತ ಆ ಸಲೀಮಾ ಹೀಗೆ ಮಾಡಿದಳೇ ಎಂಬಂಥ ವಿಷಾದದ ಅಚ್ಚರಿಗೆ ಪಕ್ಕಾಗಿ ನಂಬಲಿಕ್ಕೇ ಆಗದಂತೆ ನಿಂತಿದ್ದಳು. +ಹಿಂದಿನ ಮನೆಯವಳು ಹೇಳಿದ್ದನ್ನು ಕೇಳಿಸಿಕೊಂಡ ಗೋಪಾಲ ಸಹಿತ ಹೇಳಿದ್ದ.. ಫಾತೀಮಾಗೆ ನೀ ಮತ್ತ ಅದನ್ನ ಕೇಳಬೇಡ ಎಂದು. ಯಾವಾಗಲೂ ಫಾತೀಮಾನ ಪರ ವಕಾಲತ್ತು ವಹಿಸುವ ಗಂಡನ ಬಗ್ಗೆ ಸರೋಜನಿಗೆ ತುಸು ಅಸಹನೆ ಕೂಡ. ಹೌದು ಬ್ಯಾರೆ ದಗದಿಲ್ಲ ನನಗ.. ಆಕಿ ಬರ್‍ತಿದ್ದಂಗ ಕೇಳ್ಕೋತ ನಿಂದ್ರತೀನಿ.. ನನಗೇನ ಅಷ್ಟ ಖಬರಿಲ್ಲೇನು. +ಹಂಗಲ್ಲ… ಮದ್ಲೇ ಆಕಿಗಿ ಬ್ಯಾಸರ ಆಗಿರ್‍ತದ.. ಮತ್ತ ನಾವಷ್ಟು ಕೇಳಿ ಲೊಚ್‌ಗುಟ್ಟಿ ಜೀಂವಾ ಹಿಡಿಯಾಗೂ ಹಂಗ ಎದಕ್ಕ ಮಾಡೂದು. ತುಡುಗು ಮಾಡಿದ್ದು ಆಕಿನ ಮಗಳು… ನಮ್ಮನ್ಯಾಗ ಒಂದಿನ ಆ ಹುಡುಗಿ ಹಂಗ ಮಾಡಿದಾಕಿ ಅಲ್ಲ… ಮತ್ತ ಆ ಸುದ್ದಿ ಎಷ್ಟ ಖರೇ ಅದೋ ಎಷ್ಟು ಸುಳ್ಳು ಅದನೋ ಯಾಂವ ಬಲ್ಲ +ಹಿಂದಿನ ಮನೆಯವಳು ಹೇಳಿದ್ದರಲ್ಲಿ ಗೋಪಾಲನಿಗೆ ಇನ್ನೂ ನಂಬಿಕೆಯಾದಂತಿರಲಿಲ್ಲ. +ಸರೋಜ ನಾಲ್ಕಾರು ದಿನ ಸುಮ್ಮನಿದ್ದರೂ ಕಡೆಗೊಂದು ದಿನ ತಡೆಯಲಾರದೆ ಕೇಳಿಯೇ ಬಿಟ್ಟಳು. +ಸಲೀಮನ್ನೂ ಬಿಟ್ಟು ಬರಾಕಹತ್ತಿ… ಒಬ್ಬಾಕಿನೇ ಎಷ್ಟ ಹೈರಾಣಾಗ್ತೀಯವ್ವ.. ಆಕಿ ಆರಾಮದಾಳಿಲ್ಲೋ? ಫಾತೀಮಾನ ಮುಖ ಚಿಕ್ಕದಾಯಿತು. ಇವರಿಗೂ ವಿಷಯ ಗೊತ್ತಾಗಿರಬಹುದೇ… +ಮುದುಕಂಗ ಜರಾ ಮೈಯಾಗ ಆರಾಮಿಲ್ರೀ… ಅದಕ್ಕ ಆಕಿ ಮನಿಯಾಗ ಅದಾಳ್ರೀ +ಫಾತೀಮಾನ ಮುಖಭಾವವನ್ನೇ ಗಮನಿಸುತ್ತಿದ್ದ ಸರೋಜನಿಗೆ ತಾನು ಕೇಳಬಾರದಿತ್ತು.. ಯಾಕೆ ಮನಸ್ಸು ಇಷ್ಟು ಕೀಳಾಗಿ ವರ್ತಿಸುತ್ತದೆ ಎನ್ನಿಸಿ ತನ್ನ ಮೇಲೆಯೇ ಬೇಸರವಾಗತೊಡಗಿತು. +ಮಳಿಗಪ್ಪಾಗೇದ. ಜರಾ ನಿಂತು ಹೋಗ್ತೀಯೇನ ನೋಡ ಎಂದರೂ ಕೇಳದೆ ಫಾತೀಮಾ ಹೊರಟೇ ಬಿಟ್ಟಳು. ಫಾತೀಮಾ ಮನೆ ತಲುಪುವಷ್ಟರಲ್ಲಿ ಜೋರು ಮಳೆ. ಗಾರೆ ಕೆಲಸಕ್ಕೆ ಹೋಗಿದ್ದ ಮಗ ಇನ್ನೂ ಬಂದಿರಲಿಲ್ಲ. ಮನೆ ಖರ್ಚಿಗೆಂದು ಮಗ ದುಡ್ಡು ಕೊಟ್ಟರೂ ಚೂರುಪಾರು ರೊಕ್ಕ ಉಳಿಸಿ ಪೋಲಿ ತಿರುಗುತ್ತಾನೆ ಎಂದು ಫಾತೀಮಾಗೆ ಬೇಸರ ಕೂಡ. ಸೋರುತ್ತಿದ್ದ ನಾಲ್ಕಾರು ಕಡೆ ಪಾತ್ರೆ ಇರಿಸಿ ಸಲೀಮಾ ಒಂದು ಮೂಲೆಯಲ್ಲಿ ಕುಳಿತಿದ್ದಳು. ಎರಡು ಕೊಠಡಿಯ ಆ ಚಿಕ್ಕ ಮನೆಯಲ್ಲಿ ಮುಂದಿನದರಲ್ಲಿ ಗೂರಲು ಕೆಮ್ಮಿನ ಗಂಡ ಮಲಗಿದ್ದ. +ಮಗಳಿಗೆ ಚಾ ಕಾಯಿಸುವಂತೆ ಹೇಳಿ ಗಪ್ಪನೆ ಕುಳಿತು ಮಳೆ ನೋಡತೊಡಗಿದಳು. ಫಾತೀಮಾಗೆ ವರ್ತಮಾನದ ಮಳೆಯ ಕ್ಷಣಗಳೆಂದರೆ ಹಿಂದಿನ ಎಷ್ಟೋ ಬೇಸಿಗೆಯ ಕ್ಷಣಗಳು ಒದ್ದೆಗೊಳ್ಳುವ ಹೊತ್ತಾಗಿರುತ್ತದೆ. +ಆ ದಿನ ಕೂಡ ಬಿರು ಬೇಸಿಗೆಯ ದಿನವಾಗಿತ್ತು. ಸಲೀಮಾ ಪಾಟೀಲನ ಕೈಯಲ್ಲಿ ಸಿಕ್ಕುಬಿದ್ದಾಗ ಯಾರದೋ ಮನೆಯ ಹಿತ್ತಲಿನಲ್ಲಿದ್ದ ಫಾತೀಮಾಳನ್ನು ಕರೆಸಿದ್ದ. ಕರೆಯಲು ಬಂದ ಹುಡುಗಿ ಅರೆಬರೆ ಹೇಳಿದ್ದನ್ನು ಕೇಳಿಯೇ ಫಾತೀಮಾಳಿಗೆ ಖಜೀಲಾಗತೊಡಗಿತ್ತು. ಹನಿಗಣ್ಣಾದ ಮಗಳು ಒಂದು ಮೂಲೆಯಲ್ಲಿ ನಿಂತಿದ್ದಳು. ಮತ್ತೊಂದಿಬ್ಬರು ಅಕ್ಕಪಕ್ಕದ ಹೆಣ್ಣುಮಕ್ಕಳು… ಫಾತೀಮಾ ಜೀವ ಅಂಗೈಯಲ್ಲಿ ಹಿಡಿದು ನಿಂತಿದ್ದಳು. +ಬಾಯಿ ಮಾಡಬ್ಯಾಡ್ರೀ ಅಣ್ಣಾರಾ.. ಏನೋ ಹುಡುಗಿ ತಪ್ಪು ಮಾಡ್ಯಾಳಾ… ಆ ರೊಕ್ಕ ನಾ ದುಡದು ಮುಟ್ಟಿಸತೀನ್ರೀ.. ಆದ್ರ ಬಾಯಿ ಮಾತ್ರ ಮಾಡಬ್ಯಾಡ್ರೀ… +ಕಡೆಯ ವಾಕ್ಯ ಹೇಳುವಷ್ಟರಲ್ಲಿ ಫಾತೀಮಾಗೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತ ಭೂಮಿ ಅಲ್ಲೇ ಬಾಯಿ ಬಿರಿಯಬಾರದೇ ಎನ್ನಿಸಿತು. ಮಗಳ ಕೈ ಹಿಡಿದು ಅಲ್ಲಿಂದ ದರದರ ಎಳೆಯುತ್ತ ರಸ್ತೆಯವರೆಗೆ ಬಂದವಳು ಮನೆ ಬಳಿ ಬಂದರೂ ಮಾತಾಡಿರಲಿಲ್ಲ. ಸೋಲಾಪುರ ನಾಖಾದಿಂದ ಮನೆಯತ್ತ ಹೊರಳುವಾಗ ನೂಕಿದಂತೆ ಮಾಡಿ ಕೈ ಬಿಟ್ಟವಳು ಆಗಲೂ ಮಾತನಾಡಿರಲಿಲ್ಲ. ಅವಳು ಅಲ್ಲಿಯೇ ಒಂದು ಹೊಡೆದಿದ್ದರೂ ಸಲೀಮನಿಗೆ ಅಷ್ಟು ಭಯವೆನ್ನಿಸ್ತಾ ಇರಲಿಲ್ಲ. ಸಲೀಮಾ ಒಳಗೊಳಗೇ ನಡುಗುತ್ತಿದ್ದಳು. +ಮರ್‍ಯಾದಿ ಅನ್ನೂದು ಇಷ್ಟೇ ಇರ್‍ತದ.. ಅದಿದ್ದರ ಪೂರ ಜಿಂದಗಿನೇ ಇದ್ದಂಗ.. ಕಳ್ಕೊಂಡ್ರ ಪೂರ ಜಿಂದಗಿನೇ ಬರಬಾದ ಆದಂಗ.. ಖೋಡಿ ಹುಚ್ಚು ಖೋಡಿ… ಕೈ ಸುಮಾರದ ಅಂತ ಗೊತ್ತಾದ್ರ ಯಾವ ಮನಿಯೋರಾದ್ರೂ ವಿಶ್ವಾಸ ಇಡ್ತಾರನು… ಅಷ್ಟ್ ಮಂದಿ ವಿಶ್ವಾಸ ಅದ ಅಂತ ನಾ ನಿಮ್ಮನ್ನ ಇಷ್ಟು ದೊಡ್ಡಾರಿನ್ನ ಮಾಡೀನಿ.. ಇಲ್ಲಾಂದ್ರ ಈ ಮುದುಕನ್ನ ಕಟ್ಕಂಡು ಚಂದಾಬಾವಡಿ ಹಾರೂದೊಂದ ಬಾಕಿ ಉಳೀತಿತ್ತು… ಮಂಗ್ಯಾನಂತಾಕೀನೆ.. ನಾ ಹೆಂಗ ಇನ್ನ ಮಂದಿಗೆ ಮಾರಿ ತೋರಿಸಬಕು.. +ಒಳಹೋಗಿದ್ದೇ ಫಾತೀಮಾ ಮಗಳನ್ನು ನೂಕಿ ತಾನು ಕೆಳಗೆ ಕುಳಿತು ತಲೆ ಗಟ್ಟಿಸಿಕೊಳ್ಳುತ್ತ ಹೇಳತೊಡಗಿದಳು. ಮೆಲ್ಲಗೆ ಫಾತೀಮಾ ಕೂಡ ನಡುಗತೊಡಗಿ ಕೊನೆಯ ವಾಕ್ಯಕ್ಕೆ ಬರುವಷ್ಟರಲ್ಲಿ ಕುಸಿದು ಅಳತೊಡಗಿದಳು. +ಆ ದಿನದಿಂದ ಮಗಳನ್ನು ಎಲ್ಲೂ ಕೆಲಸಕ್ಕೆ ಕಳಿಸಿರಲಿಲ್ಲ. ತಾನೇ ಎಲ್ಲ ಮನೆಗೆಲಸ ಮಾಡಿಕೊಂಡು ಬರುತ್ತಿದ್ದಳು. ಮಗಳೊಂದಿಗೆ ಹೆಚ್ಚು ಮಾತನ್ನೂ ಆಡಿರಲಿಲ್ಲ. ವಿಚಿತ್ರ ದುಗುಡ ಬೇಗುದಿಗೆ ಪಕ್ಕಾಗಿ ಮನೆ ಒಳಗಿನ ಮನೆ ಹೊರಗಿನ ಮಳೆ ನೋಡುತ್ತಾ ಕುಳಿತುಬಿಡುವ ಫಾತೀಮಾನ ಮನದೊಳಗೆ ಸದಾ ಬಿಸಿಲಿನ ಝಳ. +ಫಾತೀಮಾಗೆ ಅವಳ ಗಂಡನಿಗೆ ಕನಿಷ್ಟ ಇಪ್ಪತ್ತು ವರ್ಷಗಳಾದರೂ ಅಂತರವಿರಬಹುದು. ಫಾತೀಮಾ ಅವನಿಗೆ ಎರಡನೆಯ ಹೆಂಡತಿ. ಮೊದಲ ಹೆಂಡತಿ ತೀರಿದ ನಂತರ ಮಕ್ಕಳಿಬ್ಬರನ್ನೂ ತುಸು ಅನುಕೂಲಸ್ಥರಾದ ಆ ಹೆಂಡತಿಯ ತವರು ಮನೆಯವರೇ ಸಾಕುತ್ತಿದ್ದರು. ಫಾತೀಮಾಗೆ ಎರಡು ಮಕ್ಕಳಾದ ಮೇಲೆ ಗಂಡನ ದುಡಿಮೆಯೊಂದೇ ಯಾವುದಕ್ಕೂ ಸಾಲುವುದಿಲ್ಲ ಎಂದರಿವಾದಾಗ ಕೊನೇ ಮಗಳು ಸಲೀಮಳನ್ನು ಉಡಿಯಲ್ಲಿ ಹಾಕಿಕೊಂಡೇ ಕಾಲನಿಯಲ್ಲಿ ಕೆಲವು ಮನೆಗಳಿಗೆ ಕೆಲಸಕ್ಕೆ ಬರತೊಡಗಿದಳು. ಹಾಗೆ ಮೊದಲು ಹಿಡಿದಿದ್ದ ಮನೆಗಳಲ್ಲಿ ಸರೋಜನ ಮನೆಯೂ ಒಂದು. ಬಟ್ಟೆ ಕಲ್ಲಿನ ಆಚೆ ಇದ್ದ ಮರದ ನೆರಳಿನಲ್ಲಿ ಸರೋಜಳೇ ಕೊಟ್ಟಿದ್ದ ಹಳೇ ಹತ್ತಿ ಸೀರೆಯೊಂದರ ಮೇಲೆ ಮಗಳನ್ನು ಮಲಗಿಸಿ ಕೆಲಸಕ್ಕೆ ತೊಡಗುತ್ತಿದ್ದ ದಿನಗಳನ್ನು ಫಾತೀಮಾ ಎಂದೂ ಮರೆಯುವುದಿಲ್ಲ. ಫಾತೀಮಾ ಹಾಗೆ ಮರೆಯದ ಇನ್ನೂ ಹಲವಾರು ಸಂಗತಿಗಳೂ ಇದ್ದವು. ಸಲೀಮಳಿಗೆ ತನ್ನ ಮಕ್ಕಳ ಹಳೆ ಬಟ್ಟೆ ಸ್ವೆಟರ್ ಆಟದ ಸಾಮಾನು ಇತ್ಯಾದಿ ಕೊಡುತ್ತಿದ್ದ ಸರೋಜ ಮರೆಯದೇ ಅರ್ಧ ಲೋಟ ಹಾಲು ಕೊಡುತ್ತಿದ್ದಳು. +ಫಾತೀಮಾ ತನಗೆ ಹಿಡಿಸದ ಕೆಲವು ಮನೆಗಳನ್ನು ಬಿಟ್ಟು ಬಿಡುತ್ತಿದ್ದಳು. ಅದರಲ್ಲೂ ಹೊಸದಾಗಿ ಮದುವೆಯಾದವರು, ಒಂದು ಎರಡು ಮಕ್ಕಳಿರುವ ಚಿಕ್ಕ ಯುವ ದಂಪತಿಗಳ ಮನೆಯವರೊಂದಿಗೆ ಯಾಕೋ ಅವಳಿಗೆ ಸರಿ ಬರುತ್ತಲೇ ಇರಲಿಲ್ಲ. ಅವರೇನಾದರೂ ಹೊಸಬಟ್ಟೆ ತೊಟ್ಟುಕೊಂಡರೆ, ಒಡವೆ ಹಾಕಿಕೊಂಡರೆ, ಸಿನಿಮಾಗೆ ಗಂಡಂದಿರೊಡನೆ ಹೋದರೆ ಫಾತೀಮಾ ಏನಾದರೂ ಕೊಂಕು ನುಡಿದು ಬಿಡುತ್ತಿದ್ದಳು. +ಪಾಪ ಅಣ್ಣಾರು ಅಷ್ಟು ಕಷ್ಟಪಟ್ಟು ದುಡೀತಾರ.. ನಿಮಗೇನು ತ್ರಾಸದ… ಆರಾಮಾಗಿ ಹೋಗಿ ಚೈನಿ ಮಾಡಿಬರ್‍ತೀರಿ… ಎಂದೋ ಹೊಸಾದು ಹಾಕ್ಕೊಂಡೀರಲಾ… ನಿಮಗೇನವ್ವಾ.. ಎಲ್ಲಾ ಆರಾಮದ.. ನಕ್ಕೋತ ಹಾಕ್ಕೋತೀರಿ ಎಂದು ನುಡಿದು ಬಿಡುತ್ತಿದ್ದಳು. +ಹಾಗೆ ಹೇಳಿಸಿಕೊಂಡವರಿಗೆ ಸಿಟ್ಟು. +ಅಯ್ಯಾ.. ನಮ್ಮದ ನಾವ ಹಾಕ್ಕೊಂಡ್ರ ಈಕಿದೇನ ಕಾರಬಾರು.. ನಾವೆಲ್ಲಾರ ಹೋಕ್ಕೇವಿ, ಬರ್‍ತೇವಿ.. ಈಕಿಗೇನಂತ.. ತನ್ನದ ಎಷ್ಟ ಕೆಲಸ ಇರ್‍ತದ ಅಷ್ಟ ಮಾಡೂದು ಬಿಟ್ಟು ಸುಳ್ಳೆ ಒಣ ಕಾರಬಾರನ ಮಾಡ್ತಾಳ.. ಇತ್ಯಾದಿ ಅವರೂ ಅನ್ನುವಂತೆ ಮಾತಾಡಿ ಬಿಡುತ್ತಿದ್ದಳು. ತಾನು ಕೆಲಸ ಮಾಡುವ ಮನೆಗೆ ಯಾರು ಬಂದರು, ಅವರೇನಾಗಬೇಕು, ತವರು ಮನೆಯವರು ಈ ಸಲ ಹೋದಾಗ ಏನು ಕೊಟ್ಟರು, ನೆಂಟರು ಬಂದಾಗ ಏನು ಸಿಹಿ ತಿನಿಸು ಮಾಡಿದರು ಇತ್ಯಾದಿ ಎಲ್ಲ ವಿಚಾರಿಸಿಕೊಳ್ಳುವುದು ತನ್ನ ಹಕ್ಕು ಎಂದೇ ಭಾವಿಸಿದ್ದಳು. ನೆಂಟರು ಬಂದಾಗ, ಹಬ್ಬ ಹರಿದಿನಗಳಲ್ಲಿ ಏನಾದರೂ ಸಿಹಿತಿಂಡಿ ಮಾಡಿದಾಗ ಫಾತೀಮಾಳಿಗೆ ಕೊಡದಿದ್ದರೆ ಅಯ್ಯಾ ಅಷ್ಟ್ ತಿನಸು ಮಾಡ್ತಾರ.. ಅಷ್ಟ್ ಭಾಂಡೆ ತಿಕ್ಕಾಗ ಇಡ್ತಾರ.. ಒಂದಿನ ಫಾತೀಮಾ ಹಿಡಿಯ ಅಂತ್ಹೇಳಿ ಒಂದೀಟರ ಏನರ ಕೊಡೂದು ಮಾಡೂದು ಏನ ಕೇಳಬ್ಯಾಡ್ರೀ.. ಅಂತ ತನಗೆ ತೀರ ಹತ್ತಿರದ ಕೆಲವು ಮನೆಗಳಲ್ಲಿ ಹೇಳಿಕೊಳ್ಳುತ್ತಿದ್ದಳು. +ಇರ್‍ಲಿ ಬಿಡಾ ಪಾತೀಮಾ… ಕೆಲವು ಮಂದಿ ಹಂಗೇ ಇರ್‍ತಾರ.. ಅದ್ನೇ ಮತ್ತಮತ್ತ ಯಾಕ ಹೇಳ್ತೀ.. ಏನ ಅವರ ಮನ್ಯಾಗ ತಿನ್ನದಿದ್ದರೆ ನಿನಗೇನ ನಡಿಯೂದಿಲ್ಲೇನು ಸರೋಜ ಎಷ್ಟೋ ಬಾರಿ ಸಮಾಧಾನಿಸುತ್ತಿದ್ದಳು. +ಅಷ್ಟೇ ಅಲ್ಲ.. ಆ ಮನೆಗಳ ಹಿತ್ತಲಿನಲ್ಲಿ ಬೆಳೆಯುವ ಪೇರಲೆ, ಸೀತಾಫಲ, ಪಪ್ಪಾಯಿ ಇತ್ಯಾದಿ ಹಣ್ಣು ಹಂಪಲುಗಳನ್ನು ತೆಗೆದುಕೊಳ್ಳಬೇಕೆನ್ನಿಸಿದಾಗ ಮನೆಯವರನ್ನು ಕೇಳುವ ಅಗತ್ಯವಿದೆ ಎಂದು ಭಾವಿಸಿದವಳಲ್ಲ. +’ನಾನೂ ನೀರು ಹಾಕ್ಕೀನಿ.. ಅವಾಗವಾಗ ಹಿತ್ತಲ ಕಸಾ ಹೊಡದು ಸ್ವಚ್ಛ ಮಾಡ್ತೀನಿ.. ಗಿಡಗೋಳ ವಗಾಯ್ತಿ ಮಾಡ್ತೀನಿ.. ಗಿಡದಾಗಿರೂ ಎರಡು ಹಣ್ಣು ಹರ್‍ಕೊಂಡ್ರ ಏನಾತು’ ಎಂದುಕೊಳ್ಳುತ್ತಿದ್ದ ಫಾತೀಮಾ ನಾ ಎರಡು ಹರ್‍ಕೋತೀನ್ರೀ ಎಂದವಳೇ ಗಿಡ ಹತ್ತಿ ಹರಿದುಕೊಳ್ಳುತ್ತಿದ್ದಳು. ಫಾತೀಮಾನ ಈ ಸ್ವಭಾವದ ಅರಿವಿಲ್ಲದವರಿಗೆ ಸಿಟ್ಟು ಬರುತ್ತಿತ್ತು. +ನೀ ಯಾಕ ಕೈಹಾಕಿ ತಗೋತಿ.. ಕೇಳಿದ್ರ ನಾನ ಕೊಡ್ತಿದ್ನಲ್ಲವ್ವಾ ಎಂದು ಸಿಡುಕುತ್ತಿದ್ದರು. ಇಂತಹದು ನಾಲ್ಕಾರು ಬಾರಿ ನಡೆದ ನಂತರ ಮತ್ತೇನಕ್ಕೋ ಮನಸ್ತಾಪವಾಗಿ ಒಟ್ಟಾರೆ ಆ ಮನೆ ಬಿಟ್ಟಿರುತ್ತಿದ್ದಳು. ಫಾತೀಮಾಗೆ ಚಾ ಕುಡಿಯಲು ಹೊರಗಡೆಯೇ ಒಂದು ಕಪ್ ಇಟ್ಟಿರುವಂತಹವರ ಮನೆಗಳಲ್ಲಿ ಮೊದಮೊದಲು ಚಾ ಕುಡಿದರೂ ಕ್ರಮೇಣ ಚಾ ಬ್ಯಾಡ್ರೀ ಎಂದು ನಿಷ್ಟುರವಾಗಿಯೇ ಹೇಳಿಬಿಡುತ್ತಿದ್ದಳು. ಟಿವಿ ಇಟ್ಟಿರುವ ಹಾಲ್‌ನಿಂದ ಅಡಿಗೆ ಮನೆಯವರೆಗೆ ಫಾತೀಮಾ ಆರಾಮಾಗಿ ಓಡಾಡುವಂತಿಲ್ಲದ, ಹೊರಗಡೆಯಿಂದ ಹಿತ್ತಲಿಗೆ ಮಾತ್ರ ಪ್ರವೇಶ ಇರುವಂತಹ ಅತೀ ಮಡಿ ಮೈಲಿಗೆ ಇರುವಂತಹ ಮನೆಗಳಲ್ಲಿ ವರ್ಷಕ್ಕಿಂತ ಹೆಚ್ಚು ಫಾತೀಮಾ ನಿಲ್ಲುತ್ತಲೇ ಇರಲಿಲ್ಲ. ತಾನು ನೀರು ಕುಡಿಯುವಾಗ ಚೊಂಬು ಎಲ್ಲಿ ತುಟಿಗೆ ತಾಕಿಸಿಬಿಡ್ತೀನೋ ಎಂದು ಸೂಕ್ಷ್ಮವಾಗಿ ಅವರು ತನ್ನನ್ನೇ ನಿರುಕಿಸುತ್ತಿದ್ದಾರೆ ಎಂದರಿವಾದ ನಂತರ ಬೇಸಿಗೆ ದಿನಗಳಲ್ಲಿ ಗಂಟಲು, ಬಾಯೊಣಗಿ ಉಸಿರು ಕಟ್ಟುವಂತಾದರೂ ನೀರು ಕೇಳುತ್ತಿರಲಿಲ್ಲ. ಮನೆಯವರು ತುಸು ಔದಾರ್ಯವಿಲ್ಲದವರು, ಸಣ್ಣ ಮನಸ್ಸಿನವರು ಎಂದು ಒಂದು ಸಲ ಫಾತೀಮಾ ಗ್ರಹಿಸಿದಳೆಂದರೆ ಆ ಮನೆ ಬಿಟ್ಟಳೆಂದೇ ಅರ್ಥ. ಅವರು ಬೇರೆ ಯಾರನ್ನಾದರೂ ಮನೆಗೆಲಸಕ್ಕೆ ಇಟ್ಟುಕೊಂಡ ನಂತರ ಮತ್ತೆ ಅವರ ಮನೆ ಕಡೆ ಹೊಳ್ಳಿಯೂ ನೋಡುತ್ತಿರಲಿಲ್ಲ. ಹೊಸ ಕೆಲಸದವರು ಕೈ ಕೊಟ್ಟಾಗ ದಾರಿಯಲ್ಲಿ ಕಂಡ ಫಾತೀಮಾಗೆ ಇವತ್ತೊಂದಿನ ಭಾಂಡೆ ಬಟ್ಟೆ ಮಾಡಿಕೊಡವ್ವ ಎಂದರೆ ದಗದ ಭಾಳ ಅದರೀ ಎಂದು ನಯವಾಗಿ ಹೇಳಿ ಜಾರಿಕೊಂಡು ಬಿಡುತ್ತಿದ್ದಳು. ನಾಲ್ಕೈದು ಮನೆಗಳಲ್ಲಿ ಮಾತ್ರ ಕಳೆದ ಹದಿನೈದು ವರ್ಷಗಳಿಂದಲೂ ಬಿಡುವ ಮಾತೇ ಎತ್ತದೆ ಅವರ ಮನೆಯ ಒಂದು ಭಾಗವೆನ್ನುವಂತೆ ಆಗಿದ್ದಳು. ಅವರೆಲ್ಲರ ಒಂದೇ ಒಂದು ಸಾಮಾನ್ಯ ಗೊಣಗಾಟ ಎಂದರೆ ಆಗೀಗ ಫಾತೀಮಾ ಹೇಳದೆ ಕೇಳದೆ ಕೆಲಸಕ್ಕೆ ತಪ್ಪಿಸಿಬಿಡುತ್ತಿದ್ದುದು. +’ಯಾರೋ ಸತ್ತರು ಮಣ್ಣಿಗೆ ಹೋದೆ..’ ’ಮತ್ತಾರೋ ಹಡೆಯುವಾಗ ಜತೆಗ್ಯಾರಿರಲಿಲ್ಲ, ನಾನೇ ದವಾಖಾನಿಗಿ ಕರ್‍ಕೊಂಡು ಹೋದೆ..’ ’ಮತ್ತಾರಿಗೋ ದವಾಖಾನಿಗಿ ಹಾಕಿದ್ರು.. ನೋಡಾಕ ಹೋದೆ..’ +ಅಷ್ಟೇ ಅಲ್ಲ.. ಸನಿಹದಲ್ಲಿ ಎಲ್ಲಾದರೂ ಆಕ್ಸಿಡೆಂಟ್ ಆಗಿ ಸರಕಾರಿ ದವಾಖಾನೆಗೆ ಮಂದಿಯನ್ನು ಸೇರಿಸಿದ್ದಾರೆ ಅಂತ ಗೊತ್ತಾದರೆ ಫಾತೀಮಾ ಅಲ್ಲಿಗೂ ನೋಡಲು ಹೋಗುವವಳೇ… ಗಾಯಾಳುಗಳ ಪೈಕಿ ಯಾರಾದರೂ ಇನ್ನೂ ಬಂದಿಲ್ಲವೆಂದರೆ ತಾನೇ ಚಾ ಬಿಸ್ಕೆಟ್ ಪುಡಿಕೆಯನ್ನು ತಂದುಕೊಡುವವಳೇ… +ಎದಕ್ಕೆ ಕೆಲಸಕ್ಕೆ ಬಂದಿಲ್ಲ ಎಂದು ಕೇಳುವ ಮುಂಚೆಯೇ ಫಾತೀಮಾನ ವಿವರಣೆ ಸಿದ್ಧವಾಗಿಬಿಟ್ಟಿರುತ್ತಿತ್ತು. +’ನಮಗೆ ಯಾವಾಗ ಅಗದಿ ಹರಕತ್ತಿರ್‍ತದ ಆಗೇ ಕೈ ಕೊಡ್ತಾಳ ಸುಬ್ಬಿ’ ಅಂತೆಲ್ಲ ಮನಸ್ಸಿನಲ್ಲಿಯೇ ಬೈದುಕೊಂಡು ಕೆಲಸ ಮುಗಿಸಿರುತ್ತಿದ್ದರು. ಫಾತೀಮಾ ತಾನು ಹಾಗೆ ಹೋಗಿಬಂದಿದ್ದನ್ನು ಹೇಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದಳೆಂದರೆ ಬೈಯಬೇಕೆಂದುಕೊಂಡು ಮನಸ್ಸಿನಲ್ಲಿಯೇ ಸಿದ್ಧತೆ ಮಾಡಿಕೊಂಡ ಸರೋಜ ಸುಮ್ಮನಾಗಿಬಿಡ್ತಿದ್ದಳು. ಹಾಗಂತ ಫಾತೀಮಾ ಆ ಎಲ್ಲ ಘಟನೆಗಳನ್ನು ತಾನು ಕೆಲಸ ಮಾಡುವ ಎಲ್ಲ ಮನೆಗಳಲ್ಲಿಯೂ ವಿವರಿಸುತ್ತಿರಲಿಲ್ಲ. ಫಾತೀಮಾನ ನೋಡಿದ್ದೇ ಹಿಂದಿನ ದಿನದಿಂದ ಹಾಗೇ ಇಟ್ಟುಕೊಂಡಿದ್ದ ಎಲ್ಲವನ್ನೂ ಹೊರಗಿಟ್ಟು ಒಂದೇ ಸಮನೆ ಗೊಣಗಾಡಲು ನಿಲ್ಲುವ ಹೆಂಗಸರೆದುರಿಗೆ ಅವಳು ಬಾಯಿ ಬಿಚ್ಚುತ್ತಲೇ ಇರಲಿಲ್ಲ. ಬರಾಕಾಗಿರಲಿಲ್ರೀ ಎಂದವಳೇ ಉಸಿರೆತ್ತದೆ ಕೆಲಸ ಮಾಡಿ ಮುಗಿಸಿ ಅವರು ಚಾ ಕುಡ್ದ ಹೋಗು ಫಾತೀಮಾ ಎಂದರೂ ಹಾಗೇ ಹೊರಟು ಬಿಡುತ್ತಿದ್ದಳು. +ಮನುಷ್ಯಾ ಅಂದಿಂದ ಅನುವು, ಆಪತ್ತಿಗಾಗದಿದ್ರ ಹೆಂಗ ಅವಳ ಈ ಮಾತಿಗೆ ಹೌದೇಳವ್ವಾ ಫಾತೀಮಾ ಎನ್ನುವ ಒಂದಿಬ್ಬರು ಹೆಂಗಸರೊಟ್ಟಿಗೆ ಮಾತ್ರ ಫಾತೀಮಾನ ಇಂತಹ ಕಾಳಜಿಗಳು ಜೀವ ತಳೆಯುತ್ತಿತ್ತು. +ನಮ್ಮಂದಿಗಿ ಯಾರಿಗರ ಹುಷಾರಿಲ್ಲ.. ಯಾರಾರ ಸತ್ತಾರ ನಮಗ ಹೋಗಾಕ ಸವುಡಿಲ್ಲ ಅಂದ್ರ ಫಾತೀಮಾಗ ನಮ್ಮನಿ ವತಿಯಿಂದ ಕಳ್ಸಬಹುದು ಸರೋಜ ಕೆಲವು ಬಾರಿ ಗೋಪಾಲನೊಂದಿಗೆ ತಮಾಶೆಗೆ ಹೇಳುತ್ತಿದ್ದಳು. +ಫಾತೀಮಾ ಏಳುವುದೇ ಬೆಳಗಿನ ನಮಾಜಿನ ದನಿಗೆ. ಯಾವ ಮನೆಗೆ ಹೋಗಬೇಕೆಂದು ಮೊದಲೇ ನಿರ್ಧಾರಿತವಾಗಿರುತ್ತಿತ್ತು. ಎದ್ದವಳೇ ಮೊದಲು ಆ ಪುಟ್ಟ ಗುಡಸಲಿನ ಮುಂದಿನ ಜಾಗವನ್ನು ಪರಪರ ಎಂದು ಕಸ ಹೊಡೆಯುತ್ತಿದ್ದಳು. ರಾತ್ರಿಯಿಡೀ ಸರಿಯಾಗಿ ನಿದ್ದೆಯಾಗಿರದಿದ್ದ ಗಂಡ ಕೆಲವೊಮ್ಮೆ ಬೈಯುತ್ತಿದ್ದ. ಆದರೆ ಫಾತೀಮಾ ಮಾತ್ರ ತನಗೆ ಎಂತಹ ಹುಷಾರಿಲ್ಲದಿದ್ದಾಗ ಕೂಡ ಈ ಅಭ್ಯಾಸ ಬಿಟ್ಟವಳಲ್ಲ. ಚಾ ಕುಡಿದು ಗಂಡನಿಗೆ ಏನಾದರೂ ತಿನ್ನಲು ಮಾಡಿಟ್ಟು ಹಾಗೇ ಹೊರಡುವ ಫಾತೀಮಾನ ಊಟ, ತಿಂಡಿ ಎಲ್ಲ ಕೆಲಸ ಮಾಡುವ ಮನೆಗಳಲ್ಲೇ ಆಗುತ್ತಿತ್ತು. ಸಂಜೆ ಬರುವಾಗ ಯಾರ್‍ಯಾರದೋ ಮನೆಗಳಲ್ಲಿ ಕೊಟ್ಟಿದ್ದನ್ನು ಬೇರೆ ಬೇರೆ ಪಾಲಿಥಿನ್ ಕವರ್‌ಗಳಲ್ಲಿ ಹಾಕಿಕೊಂಡು ಅದೆಲ್ಲವನ್ನೂ ಒಂದು ಚೀಲದಲ್ಲಿ ಇಟ್ಟುಕೊಂಡು, ಕೆಲವು ಸಲ ತಲೆಯ ಮೇಲಿಟ್ಟುಕೊಂಡು ಮನೆಗೆ ವಾಪಾಸಾಗುತ್ತಿದ್ದಳು. +ಫಾತೀಮಾ ತೆಗೆದುಕೊಂಡ ಅತೀ ಒಳ್ಳೆಯ ನಿರ್ಧಾರವೆಂದರೆ ಎರಡನೇ ಮಗುವಾಗುತ್ತಿದ್ದಂತೆ ಆಪರೇಷನ್ ಮಾಡಿಸಿಕೊಂಡಿದ್ದು. ಗಂಡನಿಗೆ ಹೇಳಿದರೆ ಅವನು ಇನ್ನೊಂದೆರಡಾಗಲೀ ಎನ್ನುವುದು ಖಂಡಿತ ಎಂದು ಫಾತೀಮಾ ಅವನಿಗೆ ಹೇಳಿರಲಿಲ್ಲ. ಸರಕಾರಿ ದವಾಖಾನೆಯಲ್ಲಿದ್ದ ಹಿರಿಯ ಡಾಕ್ಟರ್‌ಗೆ ಮೊದಲೇ ಹೇಳಿಬಿಟ್ಟಿದ್ದಳು. ಅಂವಾ ಏನ ಸಹಿ ಮಾಡ್ತಾನ್ರೀ.. ಹೆಂಗೂ ಹೆಬ್ಬಟ್ಟು ಒತ್ತತಾನ. ಮತ್ತ ಅಂವಂಗ ಕೇಳಿದ್ರ ಬ್ಯಾಡ, ಇನ್ನೊಂದೆರಡಾಗಲಿ ಅಂತಾನ, ನೀವ ಏನರ ಮಾಡ್ರೀ ಎಂದಿದ್ದಳು. ನಾ ಎಲ್ಲ ಸಂಭಾಳಿಸ್ತೀನೇಳವಾ ಎಂದ ಆ ಡಾಕ್ಟರ್‌ನನ್ನು ಫಾತೀಮಾ ಇನ್ನೂವರೆಗೆ ನೆನೆಯುತ್ತಾಳೆ. +ಫಾತೀಮಾಗೆ ಮದುವೆಯಾಗಿ ಕೆಲವು ವರ್ಷಗಳವರೆಗೆ ವಿಚಿತ್ರ ನಿರೀಕ್ಷೆ ಇತ್ತು. ಬದುಕು ಬೇರೆ ಬಗೆಯಲ್ಲಿ ಸಾಗಬಹುದು ಎಂಬಂತಹದೇನೋ ಪುಟ್ಟ ನಿರೀಕ್ಷೆ ತೂಗಾಡುತ್ತಿತ್ತು. ಮಳೆ ನೋಡುತ್ತ ಕುಳಿತಾಗೆಲ್ಲ ಪುಟ್ಟ ಬೆಚ್ಚಗಿನ ಮನೆಯೊಂದರ ಕನಸು. ಗೋಪಾಲ ಸರೋಜನಂತಹವರ ಸಂಸಾರ ನೋಡುವಾಗೆಲ್ಲ ತಾನೂ ಎಂದಾದರೂ ಅಂತಹದಕ್ಕೆ ಪಕ್ಕಾಗುತ್ತೀನೇನೋ ಎಂಬಂತಹ ತೆಳು ಎಳೆಯೊಂದು ಹಾದು ಹೋಗುತ್ತಿತ್ತು. ತನ್ನನ್ನು ಯಾರಾದರೂ ಜೀವಕ್ಕಿಂತ ಅತಿಯಾಗಿ, ಆತ್ಯಂತಿಕವಾಗಿ, ಕಾರಣವೇ ಇಲ್ಲದೆ ಪ್ರೀತಿಸುವಂತಹ ಗಳಿಗೆಯೂ ಬರಬಹುದೇ ಎಂಬಂತಹ ಪ್ರತೀಕ್ಷೆ ಆತ್ಮದ ಮೂಲೆಯಲ್ಲಿ…. ಫಾತೀಮಾ ತೀರಾ ಮಹಾರಾಣಿ ರೀತಿಯಲ್ಲಿ ಜೀವಿಸುವ ಕನಸು ಕಂಡವಳಲ್ಲ. ಅವಳ ಕನಸು, ಪ್ರತೀಕ್ಷೆ ಎಲ್ಲ ಪ್ರೀತಿಸುವ ಒಂದು ಜೀವಕ್ಕಾಗಿ. ಅಪ್ಪ ಅಮ್ಮನ ಪ್ರೀತಿಯನ್ನೂ ಅನುಭವಿಸದ ಫಾತೀಮಾಗೆ ಪ್ರೀತಿಸುವ ಜೀವವೊಂದರ ತೊಡೆ ಮೇಲೆ ಮಲಗಿ ಮೆಲ್ಲಗೆ ಹಣೆ ಮೇಲೆ ತಟ್ಟಿಸಿಕೊಳ್ಳುತ್ತ ಹಾಗೆ ಹಾಗೆಯೇ ನಿದ್ದೆ ಹೋಗಿಬಿಡಬೇಕು… ಬೆಚ್ಚಗಿನ ಅಂಗೈಯೊಂದರಲ್ಲಿ ಮುಖ ಹುದುಗಿಸಿ ತಾನೊಂದು ಚಿಕ್ಕ ಗೆರೆಯಾಗಿ… ಗೆರೆಯೊಳಗಿನ ಜೀವಕಣವಾಗಿ ಕರಗಿಹೋಗಿಬಿಡಬೇಕು ಎಂಬ ಭಾವ ಆಗೀಗ. ಫಾತೀಮಾ ಆಗಸದಲ್ಲಿ ತೇಲುವ ಕನಸು ಕಂಡವಳಲ್ಲ. ನೆಲದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಿ ನಿಂತು ಎಲ್ಲವನ್ನೂ ಹಂಚಿಕೊಳ್ಳುವ… ಎಲ್ಲದಕ್ಕೆ ಜತೆಯಾಗುವ ಒಂದು ಜೀವದ ಪ್ರತೀಕ್ಷೆ ಮಾತ್ರ ಅವಳಲ್ಲಿತ್ತು. ಬರಬರುತ್ತ ಬದುಕಿನ ವಾಸ್ತವಗಳು ಹೇಗೆ ಅವಳನ್ನು ಹಣ್ಣು ಮಾಡಿತ್ತೆಂದರೆ ಇನ್ನು ಈ ಬದುಕಿನಲ್ಲಿ ಏನೂ ಸಾಧ್ಯವೇ ಇಲ್ಲ ಎಂಬಂತಹ ಆಳದ ಹತಾಶೆ ಅವಳನ್ನು ಆವರಿಸಿಕೊಳ್ಳುತ್ತಿತ್ತು. ಎಷ್ಟೇ ಎಲ್ಲವನ್ನೂ ಗಟ್ಟಿಯಾಗಿ ಎದುರಿಸಬೇಕೆಂದರೂ ಇನ್ನು ಏನೂ ಸಾಧ್ಯವೇ ಇಲ್ಲ ಎಂಬಂತಹ ಆಳದ ನೋವು ಅವಳನ್ನು ಅಲ್ಲಾಡಿಸಿ ತೀರಾ ಹತಾಶೆ ತಾಳಲಾರದೆ ಕೆಲವೊಮ್ಮೆ ಯಾರಿಗೂ ಗೊತ್ತಾಗದಂತೆ ಅಳುತ್ತ ಕುಳಿತುಬಿಡುತ್ತಿದ್ದಳು. ತಾನು ಹೀಗೆ ಯಾವ ಬಗೆಯ ಆತ್ಯಂತಿಕ ಪ್ರೀತಿಗೂ ಒಳಗಾಗದೆ, ಸಂಸಾರದ ಬೆಚ್ಚಗಿನ ಭಾವವನ್ನು ಅನುಭವಿಸದೇ ಹಾಗೆಯೇ ಒಂಟಿಯಾಗಿ ಸತ್ತು ಹೋಗಿಬಿಡುತ್ತೇನೆ ಎಂಬಂತಹ ಭಾವ ಆವರಿಸಿದಾಗ ತೀರಾ ಒಂಟಿ ಅನ್ನಿಸಿ ಅದನ್ನೆಲ್ಲ ಶಬ್ದದಲ್ಲೂ ಯಾರೊಂದಿಗೂ ಹಂಚಿಕೊಳ್ಳಲಾರದೆ ಒದ್ದಾಡಿ ಬಿಡುತ್ತಿದ್ದಳು. +ಫಾತೀಮಾಗೆ ಆಗೆಲ್ಲ ಎಲ್ಲಿಂದಲೋ ಕೇಳುವ ನಮಾಜಿನ ಧ್ವನಿ ವಿಚಿತ್ರ ಸಮಾಧಾನ ನೀಡಿದಂತೆ ಭಾಸವಾಗುತ್ತಿತ್ತು. ಎಷ್ಟೋ ಸಲ ಮಧ್ಯಾಹ್ನ ಒಂದು ಗಂಟೆ ಹೊತ್ತಿನಲ್ಲಿ ನಮಾಜಿನ ದನಿ ಕೇಳುತ್ತಿದ್ದಂತೆ ಕೈಯಲ್ಲಿದ್ದ ಭಾಂಡೆಯನ್ನೋ, ಬಟ್ಟೆಯನ್ನೋ ಹಿಡಿದು ಹಾಗೆಯೇ ಕುಳಿತುಬಿಡುತ್ತಿದ್ದಳು. ಆಗೆಲ್ಲ ಸರೋಜಳಂತೆ ತೀರಾ ಪರಿಚಯದ ಮನೆಯವರಾದರೆ ಏನ ಫಾತೀಮಾ ಕುಂತಲ್ಲೇ ನಮಾಜ ಮಾಡ್ಲಿಕ್ಕೆ ಹತ್ತೀಯೇನು ಎಂದು ಕೇಳುತ್ತಿದ್ದರು. ಫಾತೀಮಾ ಆಗೆಲ್ಲ ಉತ್ತರಿಸುತ್ತಲೇ ಇರಲಿಲ್ಲ. ಹನಿಗಣ್ಣಾಗಿ ಸುಮ್ಮನೆ ತಲೆ ತಗ್ಗಿಸಿ ಕೆಲಸ ಮುಂದುವರೆಸುತ್ತಿದ್ದಳು. ಅವಳು ಹಾಗೆ ಕುಳಿತಿದ್ದನ್ನು ಒಂದೆರಡು ಬಾರಿ ಗಮನಿಸಿದ ಸರೋಜ ಯಾಕ ಫಾತೀಮಾ… ಮನಸ್ಸಿಗಿ ಏನರ ತ್ರಾಸ ಮಾಡಿಕೊಂಡಿಯೇನ.. ಏನಾತ ಫಾತೀಮಾ ಎಂದು ಆಪ್ತವಾಗಿ ಕೇಳುತ್ತಿದ್ದಳು. ಸರೋಜ ಕೂಡ ಬಿಡುವಾಗಿದ್ದಾಳೆ ಅನ್ನಿಸಿದರೆ ಮಾತ್ರ ಫಾತೀಮಾ ಮೆಲ್ಲಗೆ ಯಾಕೋ ಜೀಂವಾ ಬ್ಯಾಸರಾಗೇದರೀ ಎಂದು ತುಸು ಹಂಚಿಕೊಳ್ಳುತ್ತಿದ್ದಳು. +ಮನೆಯಲ್ಲಿ ಎಷ್ಟೇ ಸೋರಿದರೂ ಜೋರಾಗಿ ಸುರಿಯುವ ಮಳೆಯೆಂದರೆ ಫಾತೀಮಾಗೆ ಖುಷಿ ಕೊಡುವ ಸಂಗತಿ. +ಅಯ್ಯಾ.. ಸೋರಿದ್ರೇನಂತ.. ಹಾಸಿಗಿ ಬಟ್ಟಿ ನೆನದ್ರ ಮತ್ತ ಒಣಗ್ತಾವ.. ಹೊಲದಾಗ ಕೆಲಸ ಮಾಡೋವ್ರಿಗಿ ಗೊತ್ರೀ ಮಳಿ ಬರದಿದ್ರ ಏನಾಗ್ತದ ಅಂತ. ಮಳಿಯಾಗಲಾರದ್ದಕ್ಕ ಎಷ್ಟ ಮಂದಿ ಮಹಾರಾಷ್ಟ್ರ ಕಡಿ ಗುಳೇ ಹೋಗ್ತಾರ… ನೆನಪಾದ್ರ ಜೀಂವಾ ಒಜ್ಜಿಯಾಗ್ತದ ಎನ್ನುತ್ತಿದ್ದಳು. +ಫಾತೀಮಾಗೆ ಗುಳೇ ಹೋಗುವ ಮಂದಿಯನ್ನು ನೋಡಿದಾಗೆಲ್ಲ ವಿಚಿತ್ರ ಸಂಕಟ. ಫಕ್ಕನೆ ಹಳೇ ನೆನಪಿಗೆ ಜಾರುವ ಫಾತೀಮಾಗೆ ಬಾಲ್ಯದಲ್ಲಿ ಆಲಿಯಾಬಾದಿನಲ್ಲಿದ್ದಾಗ ಪಕ್ಕದ ಮನೆಯ ಲತೀಫನ ಕುಟುಂಬದವರು ಗುಳೇ ಹೋಗಿದ್ದೇ ನೆನಪಾಗುತ್ತದೆ. ಲತೀಫಾ ಅವಳನ್ನು ಇಷ್ಟ ಪಟ್ಟಿದ್ದನೇ.. ಗೊತ್ತಿಲ್ಲ. ಮದುವೆಯಾಗೋಣ ಎಂದು ಹೇಳಿದ್ದನೇ.. ಇಲ್ಲ .. ಹಾಗೇನೂ ನಡೆದಿರಲೇ ಇಲ್ಲ. ಏನಾದರೂ ನಡೆಯುವ ಮುಂಚೆಯೇ ಗುಳೇ ಹೋದ ಆ ಕುಟುಂಬ ವಾಪಾಸಾಗಿರಲೇ ಇಲ್ಲ. ತಂದೆ ತಾಯಿ ಇಬ್ಬರೂ ಬೇಗನೆ ಸತ್ತಿದ್ದರಿಂದ ದುಡಿಯುವ ಅಣ್ಣನ ಮಾತನ್ನು ತೆಗೆದು ಹಾಕುವಂತೆಯೇ ಇರಲಿಲ್ಲ. ಅಣ್ಣ ಕೂಡ ಈ ದೊಡ್ಡ ಸಂಸಾರದ ತಾಪತ್ರಯಗಳಲ್ಲಿ ಮೆತ್ತಗಾಗುತ್ತಿದ್ದಾನೆ ಎಂದರಿವಾದ ಫಾತೀಮಾ ಅವನು ಮದುವೆಯನ್ನು ನಿಶ್ಚಿತಗೊಳಿಸಿದಾಗ ಉಸಿರೆತ್ತದೆ ಸಮ್ಮತಿಸಿದ್ದಳು. ಅವಳ ಅಭಿಪ್ರಾಯ, ಆಯ್ಕೆಯ ಪ್ರಶ್ನೆಯೇ ಇರಲಿಲ್ಲ. ವಾಸ್ತವ ಚೆನ್ನಾಗಿ ಅರಿತಿದ್ದ ಫಾತೀಮಾ ಎರಡನೇ ಗಂಡನಾದರೂ, ವಯಸ್ಸಿನಲ್ಲಿ ದೊಡ್ಡವನಾದರೂ ಸ್ವಲ್ಪ ಆತ ತನ್ನೊಂದಿಗೆ ಪ್ರೀತಿಯಿಂದಿದ್ದರೆ ಸಾಕು ಎಂದುಕೊಂಡಿದ್ದಳು. ಒಂದೆರಡು ವರ್ಷ ಏನೂ ತೊಂದರೆ ಅನ್ನಿಸಲಿಲ್ಲ. ಆದರೆ ಬರುಬರುತ್ತ ತಾನು ನಿರ್ಭಾವುಕ ವ್ಯಕ್ತಿಯೊಂದಿಗೆ ಸಂಸಾರ ಮಾಡ್ತಿದ್ದೇನೆ ಎನ್ನಿಸತೊಡಗಿ, ಬದುಕೆಂದರೆ ಎರಡು ಮಕ್ಕಳ ಹೊಟ್ಟೆ ಪಾಡಿಗೆ ದುಡಿಯುವುದು ಮಾತ್ರವಾಗುಳಿದಿತ್ತು. +ಗೋಪಾಲನಿಗೆ ಇತ್ತೀಚಿಗೆ ತುಸು ಹುಷಾರಿಲ್ಲದೆ ಆಗೀಗ ದವಾಖಾನೆಗೆ ಹೋಗಿ ಬಂದಿದ್ದು ಫಾತೀಮಾಗೂ ಗೊತ್ತಿತ್ತು. ಕ್ಯಾನ್ಸರ್ ಆಗೇದಂತಲ್ಲ ಫಾತೀಮಾ… ಸರೋಜಕ್ಕಾರು ನಿಂಗೇನು ಹೇಳೆ ಇಲ್ಲೇನು.. ಫಾತೀಮಾ ಕೆಲಸ ಮಾಡುವ ನಾಲ್ಕಾರು ಕಡೆ ಅವಳಿಗೇ ನೇರವಾಗಿ ಕೇಳಿದ್ದರು. +ಕ್ಯಾನ್ಸರ್ ಅಲ್ರೀ… ಮೈಯಾಗ ಜರಾ ಆರಾಮಿಲ್ಲ ಅಷ್ಟೇ ಹಿಂಜಿ ಹಿಂಜಿ ಕೇಳುವ ಜನರೆಂದರೆ ಫಾತೀಮಾಗೆ ಯಾವಾಗಲೂ ಮೈಯುರಿಯುತ್ತದೆ. ಸರೋಜ ನಾವು ಸೊಲ್ಲಾಪುರಕ್ಕ ಹೊಂಟೀವಿ.. ದವಾಖಾನಿಗಿ ತೋರಿಸಲಾಕ.. ಮನಿಯಾಗ ಹುಡುಗರಷ್ಟೇ ಇರ್‍ತಾರ.. ಭಾಂಡೆ ಬಟ್ಟೆ ಜೋಡಿ ಕಸಾ ಪರಿಷಿ ಮಾಡಿ ಹೋಗವಾ.. ಹಂಗೇ ಅಂಗಳಾ ಕಸಾನೂ ತೆಗೆದುಬಿಡವಾ ಎಂದಾಗ ಮಾತ್ರ ಅವಳಿಗೆ ’ಏನೋ ಗಡಬಡ್ ಅದ’ ಅನ್ನಿಸಿತು. +ಫಾತೀಮಾ ಕೇಳಿದರೂ ಸರೋಜ ಜಾಸ್ತಿ ಏನೂ ಹೇಳದಿದ್ದಾಗ ಕೆದಕಲು ಇಷ್ಟವಾಗದೆ ಸುಮ್ಮನಾದಳು. +ಪ್ರತಿ ದಿನ ಕೆಲಸಕ್ಕೆ ಬಂದಾಗ ಕಾಲೇಜಿಗೆ ಹೋಗುತ್ತಿದ್ದ ಸರೋಜನ ಮಗಳಿಗೆ ಹ್ಯಾಂಗದಾರಂತವ್ವಾ ಎಂದು ವಿಚಾರಿಸುತ್ತಿದ್ದಳು. ಹೊಟ್ಟಿ ಒಳಗೆ ಏನೋ ಗಡ್ಡಿ ಆಗೇದಂತ.. ಇನ್ನೂ ಸಣ್ಣದಂತ, ಈಗಲೇ ಆಪರೇಶನ್ ಮಾಡಿದ್ರ ಭೇಷ್ ಅಂತ ನನಗ ಪರೀಕ್ಷೆ ಅದಾವು, ತಮ್ಮಂಗ ಸಾಲಿ ಅದ ಹಂಗಾಗಿ ನಾವು ಹೋಗಂಗಿಲ್ಲ. ಅಪ್ಪಾನ ಜೀಂವ ನೆನಸಲಾಕ ಹತ್ತೇದ.. ನಾಳಿಗಿ ಆಪರೇಶನ್ ಅದಂತ.. ಅವ್ವಾನ ಜೋಡಿ ಮಾಮಾ ಅದಾನ +ಮಗಳು ದಿನಕ್ಕೊಂದು ಸುದ್ದಿ ಹೇಳುತ್ತಿದ್ದಳು. ಫಾತೀಮಾ ತನಗೆ ತಿಳಿದಂತೆ ಸಮಾಧಾನ ಮಾಡಿ ಹೋಗುತ್ತಿದ್ದಳು. +ಆಪರೇಶನ್ ಆಗಿದೆ ಎಂದು ಹೇಳಿದ ಮರುದಿನ ಯಾವ ದವಾಖಾನಿ, ಎಲ್ಲಿ ಅಂತ ಕೇಳಿಕೊಂಡ ಫಾತೀಮಾ ಮನಸ್ಸು ತಡೆಯದೇ ಸೊಲ್ಲಾಪುರಕ್ಕೆ ಹೊರಟೇ ಬಿಟ್ಟಳು. ದವಾಖಾನೆ ಹೊರಗಿನ ಮೆಡಿಕಲ್ ಶಾಪ್‌ನಿಂದ ಏನೋ ಔಷದಿ ತೆಗೆದುಕೊಂಡು ಒಳಹೊರಟಿದ್ದ ಸರೋಜನಿಗೆ ಅದೇ ತಾನೆ ಬಂದ ಫಾತೀಮಾನನ್ನು ನೋಡಿದ್ದೇ ತಡೆಯಲಾರದ ಅಚ್ಚರಿ. +ಇಲ್ನೋಡ್ರೀ… ಯಾರು ಬಂದಾರಂತ +ಫಾತೀಮಾ ಹೀಗೆ ಬರಬಹುದೆಂಬ ಊಹೆಯ ಬಿಂದುವಿನ ಬಳಿಯೂ ಹಾದು ಹೋಗಿರದಿದ್ದ ಗೋಪಾಲನಿಗೂ ಅಚ್ಚರಿ. +ಹೆಂಗ ಬಂದ್ಯವ್ವಾ… +ಹೆಂಗ ಅಂದ್ರ ಹಂಗಾ.. ರೇಲು ಗಾಡಿ ಒಳಗ ಕೂತು.. ನೀವು ಹೆಂಗದೀರ್ರೀ +ಆ ಸ್ಪೆಷಲ್ ರೂಮಿನ ಪುಟ್ಟ ಸ್ಟೂಲಿನ ಮೇಲೆ ಸರೋಜ ಒತ್ತಾಯಪಡಿಸಿ ಕೂರಿಸಿದ್ದರಿಂದ ಚೂಪಗೆ ಕುಳಿತ ಫಾತೀಮಾ ತನ್ನ ಎಂದಿನ ಹಗುರು ದನಿಯಲ್ಲಿದ್ದಳು. ಫಾತೀಮಾ ಹೇಳುವ ದವಾಖಾನೆಯ ಎಷ್ಟೋ ಘಟನೆಗಳೊಂದಿಗೆ ಸದಾ ಫಿನಾಯಿಲ್, ಔಷದಿಗಳು, ದವಾಖಾನೆಯ ಚಾದರದ ವಾಸನೆ ಇತ್ಯಾದಿ ಬೆರೆತಂತೆ ಸರೋಜನಿಗೆ ಅನ್ನಿಸುತ್ತಿತ್ತು. ಅದೀಗ ಈ ಸ್ಪೆಷಲ್ ರೂಮಿನಲ್ಲಿ ನೆನಪಾಗುತ್ತಿದ್ದಂತೆ ಫಾತೀಮಾನ ಕಾಳಜಿಗೆ ಕಣ್ಣುತುಂಬಿ ಬರುತ್ತಿತ್ತು. ಇಲ್ಲಿಗೆ ಬಂದಾಗಿನಿಂದ ಆಪರೇಶನ್ ಆದಾಗಿನವರೆಗೆ ಏನಾಯಿತೆಂದು ಸರೋಜ ಇಂಚಿಂಚೂ ಹೇಳತೊಡಗಿದಳು. ಇಷ್ಟು ದಿನ ಗೋಪಾಲನೆದುರಿಗೂ ತೋರಿಸದಿದ್ದ ಆತಂಕ, ಹೊಕ್ಕಳಿನಾಳದ ನಸುಕಂಪನ ಎಲ್ಲವನ್ನೂ ಬಿಟ್ಟೂ ಬಿಡದೆ ಹೇಳಿದಳು. ಹೊರಗೆ ತುಂಬ ಗಟ್ಟಿಯಿರುವಂತೆ ತೋರಿಸಿಕೊಂಡಿದ್ದ ಸರೋಜ ಒಳಗೆ ಇಷ್ಟು ಕಂಗಾಲು ಆಗಿದ್ದಳೇ… ಗೋಪಾಲ ಅವಳೊಳಗಿನ ನಡುಕವನ್ನು ಮೊದಲ ಬಾರಿ ಅನುಭವಿಸತೊಡಗಿದ್ದ. ಎಷ್ಟು ಸಹಜವಾಗಿ ಸರೋಜ ಫಾತೀಮಾನ ಬಳಿ ಅನಾವರಣಗೊಳ್ಳತೊಡಗಿದಳೆಂದರೆ ಅವಳು ಫಾತೀಮಾನೊಂದಿಗೆ ಹೇಳುತ್ತಿಲ್ಲ, ತನ್ನ ಆತ್ಮದೊಂದಿಗೆ ಮೆಲ್ಲ ಸಂವಾದದಲ್ಲಿ ತೊಡಗಿದ್ದಾಳೆ ಎಂಬಂತೆ. +ಕಾಲನಿ ಒಳಗ ಮಂದಿ ಕ್ಯಾನ್ಸರ್ ಅಂತ್ಲೇ ಸುದ್ದಿ ಹಬ್ಬಿಸಿರಬಹುದು ತುಸು ದಣಿದಿದ್ದ ಗೋಪಾಲ ನಗಲೆತ್ನಿಸಿದ. ಫಾತೀಮಾ ನಗಲಿಲ್ಲ. +ಮಂದಿಗೇನ್ರೀ.. ಆರಾಮಿಲ್ಲ ಅಂದ್ರ ಇಮಾನನೇ ಏರಿಸ್ತಾರ. ಮನಶ್ಯಾ ಯಾವಾಗೂ ಚಲೋ ಬಯಸಬೇಕ್ರೀ…. ನಿಮ್ಮ ಹಿಂದಿನ ಮನಿ ಅಕ್ಕೋರೆ ಕ್ಯಾನ್ಸರ್ ಅಂತ ಅರ್ಧ ಮಂದಿಗಿ ಹೇಳ್ಯಾರ್ರೀ.. +ತುಸು ಹೊತ್ತಿನ ನಂತರ ಸರೋಜ ನೀವು ಕುಂತಿರ್ರೀ ನಾ ಚಾ ತರ್‍ತೀನು… ಫಾತೀಮಾ ಲಗೂನೆ ಮನಿ ಬಿಟ್ಟಂಗ ಕಾಣಿಸ್ತದ. ಎಂದು ಫ್ಲಾಸ್ಕ್ ತೆಗೆದುಕೊಂಡು ಹೊರಟಳು. +ನಾನೂ ಭಾಳಾ ಅಂಜಿದ್ನೇಳವ್ವಾ… ನಾ ಯಾರಿಗೇನ ಪಾಪ ಮಾಡೀನಿ, ಏನ ಕೆಟ್ಟ ಚಟ ಮಾಡೀನಿ ಅಂತ ನನಗ ಹಿಂಗಾತು ಅಂತ ಚಿಂತಿ ಶುರು. ಬಯಾಪ್ಸಿ ಮಾಡಿಂದ ಹೇಳಿದ್ರು. ಹಂಗೇ ಗಡ್ಡಿ ಅದ. ಕ್ಯಾನ್ಸರ್ ಗಡ್ಡಿ ಅಲ್ಲ ಅಂತ ಗೋಪಾಲ ನಿಧಾನ ಉಸಿರೆಳೆದುಕೊಂಡ. +ಅಯ್ಯಾ ಏನಾಗಂಗಿಲ್ರೀ.. ಸುಮ್ನಿರ್ರೀ ಅಣ್ಣಾರಾ… ಹಂಗೇನರಾ ಆತಂದ್ರ ಅದನ್ನ ತಪ್ಪಿಸಾಕ ಆಗತದೇನು… ನಮ್ಮ ಕೈಯಾಗೇನೈತ್ರೀ ಅಣ್ಣಾರಾ… ಎಲ್ಲ ಖುದಾನ ಮರ್ಜಿರೀ.. ಹೆಂಗ ಬರ್‍ತದ ಹಂಗ ಎದುರಿಸಬೇಕ್ರೀ… +ಹಂಗಲ್ಲ ಫಾತೀಮಾ.. ಮಾತಾಡೂದು, ಒಣ ವೇದಾಂತ ಹೇಳೂದು ಬ್ಯಾರೆ, ಸಾವು ಖರೇಖರೇ ಬಾಗಿಲದಾಗ ಹಣಿಕಿ ಹಾಕಲಾಕ ಹತ್ತೇದ ಅಂತ ಗೊತ್ತಾಗಿಂದ ಯಾ ವೇದಾಂತಕ್ಕೂನೂ ಬೆಲಿನೇ ಇಲ್ಲ ಅನ್ನಿಸ್ತದ. ಇಷ್ಟ್ ದಿನ ನಾ ಏನ ಬಡಿದಾಡೀನಿ, ನಾನೇ ಮಾಡೀನಿ ಅಂತ ಅಹಂ ಪಟ್ಟೀನಿ ಯಾವುದಕ್ಕೂ ಬೆಲಿನೇ ಇಲ್ಲ ಅನ್ನಿಸ್ತದ. ಕಣ್ಣ ಮುಚ್ಚಿದರ ಸರೋಜನ ಮಾರಿ, ಹುಡುಗರ ಮಾರಿ ಕಣ್ಣಾಗ ಕಟ್ಟಿದಂಗ… ನಾ ಇವರಿಗೆ ಇಷ್ಟ್ ದಿನ ಆರಾಮಾಗಿ ಇಡೂದು ಆಗಿರಲಿಲ್ಲ. ಹಿಂಗ ಏನೇನೋ ಅನ್ನಿಸೂದು. ಸರೋಜಂಗೆ ಹೇಳೂಣು ಅಂದ್ರ ಆಕಿಗಿ ಮತ್ತಷ್ಟು ಅಂಜಿಕಿಯಾದ್ರ ಅಂತ. ಮತ್ತ ಆಕಿನೂ ಗಪ್ಪಾಗಿಬಿಟ್ಟಿದ್ದಳು. ನೀ ನಂಬ್ತಿ ಇಲ್ಲೋ ಫಾತೀಮಾ.. ಆ ಗಡ್ಡಿ ಒಳಗಿಂದು ಏನೋ ಚೂರು ತೆಗದು ಬಯಾಪ್ಸಿಗೆ ಅಂತ ಒಯ್ದರಲ್ಲ ಆವಾಗ ಹಿಂತಾದೇ ಏನೇನೋ ಯೋಚ್ನೆ ಮನಸ್ಸಿನಾಗ ಲಗುಲಗೂನೆ ಹಾದುಹೋಗೂದು… ಮನಸ್ಸು ಕಡೀಕೆ ಹೆಂಗ ಖಾಲಿಯಾತು ಅಂದ್ರ ನಾ ಇನ್ನ ಎಷು ದಿನದಾಂವ ಅನ್ನೂ ಅಂಜಿಕಿ ಮಾತ್ರ… ಯಾರೂ ಹಮೇಶಾ ಬದುಕೂದು ಸಾಧ್ಯಿಲ್ಲ ಬಿಡು… ಆದ್ರ ಎಷ್ಟ್ ದಿನದಾಗ ಸಾಯ್ತೀನಿ ಅಂತ ಲೆಕ್ಕ ಗೊತ್ತಾಗೂದು ಅದಲಾ ಅದರ ನಡುಕ ಬ್ಯಾರೆನೇ ಇರ್‍ತದ ಫಾತೀಮಾ +ಗೋಪಾಲ ಮೆತ್ತಗೆ ಹೇಳುತ್ತಿದ್ದ. +ಗೋಪಾಲ ಫಾತೀಮಾ ಇಬ್ಬರೇ ಇದ್ದಾಗ ಮಾತ್ರ ಹೀಗೆ ಆತ್ಮದ ಕೆಲವು ಪದರಗಳು ರಾತ್ರಿ ಹೂವರಳಿದಂತೆ ಸಾವಕಾಶವಾಗಿ ಅನಾವರಣಗೊಳ್ಳುತ್ತಿತ್ತು. ಒಂದೆರಡು ಸಲ ಮನೆಗೆಲಸ ಮಾಡಿ ಮುಗಿಸಿದ ಫಾತೀಮಾ ಹೆಚ್ಚುವರಿ ಹಣ ಕೇಳಲೆಂದೋ, ಏನೋ ಕಷ್ಟ ಹೇಳಿಕೊಳ್ಳಲೆಂದೋ ಬಂದಾಗ ಸರೋಜ ಎಲ್ಲಿಯೋ ಹೊರಟು ಹೋಗಿದ್ದಳು. ಹಿತ್ತಲಿನಲ್ಲಿ ಒಗೆಯುವ ಕಲ್ಲಿನ ಬಳಿ ಚೂಪಗೆ ಕುಳಿತ ಫಾತೀಮಾಳನ್ನು ಅಡಿಗೆ ಮನೆ ಒಳಗೆ ಕರೆದ ಗೋಪಾಲ ಏನವ್ವಾ ಫಾತೀಮಾ ಎಂದು ವಿಚಾರಿಸಿಕೊಂಡಾಗ ಅವನೊಂದಿಗೇ ಹೇಳಿಕೊಂಡಿದ್ದಳು. ಆಗೆಲ್ಲ ಪಾತೀಮಾನ ಬದುಕಿನ ಕೆಲ ವಿವರಗಳೂ ಸಂಜೆಯ ನಸುಗತ್ತಲಿಗೆ ಸೇರಿಕೊಳ್ಳುತ್ತಿತ್ತು. ನಾಲ್ಕೈದು ಸಲ ಗೋಪಾಲ ದುಡ್ಡು ಕೊಟ್ಟಿದ್ದ ಕೂಡ. +ಇದನ್ನ ಪಗಾರದಾಗ ಹಿಡಿಬ್ಯಾಡ್ರೀ ಅಣ್ಣಾರೆ… ಇದರ ಲೆಕ್ಕ ಬ್ಯಾರೆ ಇಡ್ರೀ ತುಸು ಮಜುಗರದಿಂದ ಫಾತೀಮಾ ಮೊದಲ ಬಾರಿಗೇ ಹೇಳಿದ್ದರೂ ವಿಚಿತ್ರ ಸ್ವಾಭಿಮಾನವೂ ಬೆರೆತಂತೆ ಇತ್ತು. ಸೂಕ್ಷ್ಮವಾಗಿ ಅವಳ ಮುಖಭಾವ ಗಮನಿಸಿದ್ದ ಗೋಪಾಲ ಸರೋಜನ ಮುಂದೆ ದುಡ್ಡು ಕೊಟ್ಟಿದ್ದನ್ನು ಹೇಳಿದ್ದರೂ ಎಷ್ಟು, ಏನು ಎಂದು ಹೇಳಿರಲಿಲ್ಲ. ಪ್ರತಿಯೊಂದಕ್ಕೆ ಚೌಕಾಸಿ ಮಾಡುವ, ರಿಪಿರಿಪಿ ಮಾಡುವ ಸರೋಜ ಕೂಡ ಜಾಸ್ತಿ ಏನೂ ಕೇಳದೆ ಸುಮ್ಮನಾಗಿ ಬಿಟ್ಟಿದ್ದಳು. ಸರೋಜನಿಲ್ಲದ ಬದುಕನ್ನು ಊಹಿಸಿಕೊಳ್ಳಲಾರದಷ್ಟು ಅವಳನ್ನ ಹಚ್ಚಿಕೊಂಡಿದ್ದ ಗೋಪಾಲ ಫಾತೀಮಾ ಎಲ್ಲವನ್ನು ಒಬ್ಬಳೇ ಹೇಗೆ ನಿಭಾಯಿಸುತ್ತಾಳೆ ಎಂಬ ಅಚ್ಚರಿಗೆ ಪಕ್ಕಾಗಿ ನಿಲ್ಲುತ್ತಿದ್ದ. +ಅದೂ ಖರೇ ಅದ ಬಿಡ್ರೀ ಅಣ್ಣಾರೆ… ಹೊರಗಿಂದ ಮಾತಾಡೂದು ಬ್ಯಾರೆ ಆಗ್ತದ, ಒಳಗೆ ನಾವೇ ಅನುಭವಿಸ್ತೀವಲ್ಲ, ಅದರ ನಡುಕಾ ಬ್ಯಾರೆ ಇರ್‍ತದ… ಮತ್ತ ಆ ನಡುಕಕ್ಕೆ ಯಾರೂ ಜತಿಯಾಗಂಗಿಲ್ಲ… ನಾವ ಒಳಗನ ಗಟ್ಟಿಯಾಗಬೇಕ್ರೀ +ಫಾತೀಮಾ ಗೋಪಾಲನ ನಡುಕದ ಮೂಲ ಕಾರಣವನ್ನು ಸ್ಪರ್ಶಿಸಿದಂತೆ ಕುಳಿತಿದ್ದಳು. +ಗೋಪಾಲ ಸರೋಜನೊಂದಿಗೂ ತೋಡಿಕೊಳ್ಳಲು ಸಾಧ್ಯವಾಗದೆ ಉಳಿದಿದ್ದು ಈ ನಡುಕವಾಗಿತ್ತು. ಇದು ಸಾವಿನ ಕುರಿತಾದ ನಡುಕವೋ… ಅಥವಾ ತಾನೊಬ್ಬನೇ ಎಂಬ ನಡುಕವೋ… +ನೀ ಹೇಳೂದು ಬರೋಬ್ಬರಿ ಫಾತೀಮಾ.. ಆದರ ಹೆಂಗ ಗಟ್ಟಿಯಾಗಬಕು ಅನ್ನೂದು ತಿಳಿಲಾರದ್ದಕ್ಕ ನಡುಕ ಮತ್ತಷ್ಟು ಹೆಚ್ಚಾಗ್ತದಲಾ ಅದಕ್ಕೇನು ಮಾಡೂಣಂತೀ ಗೋಪಾಲ ತುಸು ತಮಾಶೆಯಾಗಿ ಹೇಳಲೆತ್ನಿಸುತ್ತಾ ನಗಲು ಯತ್ನಿಸಿದ. +ನಮ್ಮ ಮೂಗಿನ ನೇರಕ್ಕ ಎಲ್ಲ ಇರಬಕು ಅಂದ್ರ ಹೆಂಗ ಸಾದ್ಯ ಆಗ್ತದ.. ಎಷ್ಟ ಏನ ಮಾತಾಡಿದ್ರೂ ಕಡೀಕಿ ನಾವು ಒಬ್ಬರೇರೀ.. ಮತ್ಯಾರೂ ಜತಿಯಾಗಂಗಿಲ್ರೀ.. ನಮನಮಗ ಹೆಂಗ ಕಬೂಲೆನ್ನಿಸಿತದ ಹಂಗ ಗಟ್ಟಿಯಾಕ್ಕೋತ ಹೋಗೂದರೀ… ಜಿಂದಗೀ ದೊಡ್ಡದದರೀ ಅಣ್ಣಾರ.. ಫಾತೀಮಾ ಕಣ್ಣುಮುಚ್ಚಿ ನಿಡಿದಾಗಿ ಉಸಿರೆಳೆದುಕೊಂಡಳು. ಬದುಕಲ್ಲಿ ಒಂಟಿಯಾಗಿ ಎದುರಿಸಿದ ಎಷ್ಟೆಲ್ಲ ಕ್ಷಣಗಳು ಕಣ್ಣು ಮುಂದೆ ಹಾದು ಹೋಗುತ್ತ, ಅದೆಲ್ಲ ಎಲ್ಲಿ ತುಟಿ ಮೇಲೆ ಒಡಮೂಡಿಬಿಡುತ್ತದೆಯೋ ಎಂಬ ಕಂಪನದಿಂದ ಮತ್ತಷ್ಟು ಬಿಗಿಯಾಗಿ ಕಣ್ಣುಮುಚ್ಚಿದಳು. ಅರೆಕ್ಷಣ ಅಷ್ಟೇ… ತಟ್ಟನೆ ನೆನಪಾದವಳಂತೆ +ಅಯ್ಯಾ ಮರೆತೇ ಬಿಟ್ಟಿದ್ನಿ ಎನ್ನುತ್ತ ಕೈಯಲ್ಲಿ ಮಡಚಿ ಹಿಡಿದಿದ್ದ ಮಾಸಲು ಚೀಲದಿಂದ ಎರಡು ಬಿಸ್ಕೆಟ್ ಪುಡಿಕೆ ಹೊರತೆಗೆದಳು. ಗೋಪಾಲನಿಗೆ ತುಸು ಮಜುಗರವೆನ್ನಿಸಿತು. ಸ್ವತಃ ಫಾತೀಮಾಗೆ ಮಜುಗರ. ಮತ್ತೆ ಅದರಿಂದ ಯಾರೋ ಕೊಟ್ಟಿದ್ದ ಹಳೆಯ ಪರ್ಸ್‌ನ್ನು ತೆರೆದಳು. +ಅಣ್ಣಾರೆ ನಿಮ್ಮ ಗೂಡ ಆವಾಗವಾಗ ರೊಕ್ಕ ಇಸ್ಕೊಂಡಿದ್ದನಲ್ರೀ.. ಆ ರೊಕ್ಕ ತಂದೀನ್ರೀ ಮೆಲ್ಲನೆ ಅವನ ಪಕ್ಕದಲ್ಲಿಟ್ಟಳು. ’ಅದನ್ಯಾಕೆ ತರಾಕೆ ಹೋಗಿದ್ಯಾ ಫಾತೀಮಾ..’ ’ರೊಕ್ಕ ಹೆಂಗ ಹೊಂದಿಸಿದೆಯವ್ವಾ..’ ’ಈಗೇನ ಹಂತಾ ಪರಿಯಿಂದ ಹರಕತ್ತಾಗಿತ್ತಂತ ಅದನ್ನ ತರಾಕೆ ಹೋಗಿದ್ಯವ್ವಾ..’ ಎರಡು ಮೂರು ವಾಕ್ಯಗಳು ಮನಸ್ಸಿನಲ್ಲಿ ಹಾದು ಹೋಗುತ್ತಿರುವಂತೆ ಗೋಪಾಲ ಏನಾದ್ರೂ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸರೋಜ ಬಂದ ಸದ್ದಾಯಿತು. ತಟ್ಟನೆ ಅದನ್ನು ಹಾಗೇ ಚಾದರದ ಕೆಳಗಿಟ್ಟ. +ಸರೋಜ ಸ್ವಲ್ಪ ತಿಂಡಿಯನ್ನೂ ಕಟ್ಟಿಸಿಕೊಂಡು ಬಂದಿದ್ದಳು. ತಿಂಡಿ ತಿಂದ ಫಾತೀಮಾ ಅದನ್ನೆಲ್ಲ ತೊಳೆದು, ಸರೋಜ ಬೇಡವೆಂದರೂ ಕೇಳದೆ ಅಲ್ಲಿಯ ಪುಟ್ಟ ಬಚ್ಚಲಿನಲ್ಲಿಟ್ಟಿದ್ದ ನಾಲ್ಕಾರು ಬಟ್ಟೆಗಳನ್ನು ಒಗೆದಳು. ಮಧ್ಯಾಹ್ನದವರೆಗೂ ಬಿಟ್ಟೂ ಬಿಡದೆ ಸರೋಜ ಫಾತೀಮಾಳೊಂದಿಗೆ ಮಾತಾಡುವಾಗ ಗೋಪಾಲ ಮಾತ್ರೆಯ ಪ್ರಭಾವದಿಂದ ನಿದ್ದೆ ಮಾಡಿದ್ದ. ಮಧ್ಯಾಹ್ನ ಎರಡು ಘಂಟೆ ಸುಮಾರಿಗೆ ನಾ ಹೋಕ್ಕೀನ್ರೀ ಅಂತ ಹೊರಟ ಫಾತೀಮಾ ಗೋಪಾಲನಿಗೆ ಆರಾಮಿರ್ರೀ ಅಣ್ಣಾರಾ… ಎಲ್ಲಾ ಬರೋಬ್ಬರಿಯಾಗ್ತದ… ಅಕ್ಕೋರು, ಡಾಕ್ಟ್ರು ಸಾಯೇಬ್ರು ಹೇಳಿದಂಗ ಕೇಳೂದೊಂದ ಕೆಲಸ ನಿಮ್ಮದು… ಎಷ್ಟು ಲಗೂ ಆರಾಮಾಗ್ತೀರಿ ಅಷ್ಟ ನಿಮಗ ಛಲೋರೀ ಒತ್ತಿ ಒತ್ತಿ ಹೇಳಿದಳು. +ಅವಳನ್ನು ಕಳಿಸಲು ಗೇಟ್‌ವರೆಗೆ ಬಂದ ಸರೋಜ ರೈಲಿಗಿ ಅಂದ್ರ ತಡಾಗ್ತದ ಬಸ್ಸಿಗಿ ಹೋಗವ್ವಾ ಎಂದು ಫಾತೀಮಾನ ಕೈಗೆ ಐವತ್ತರ ನೋಟೊಂದನ್ನು ತುರುಕಿದಳು. +ಬ್ಯಾಡ್ರೀ ಅಕ್ಕಾರೆ.. ದವಾಖಾನ್ಯಾಗ ಇದ್ದಾಗ ಎಷ್ಟ್ ರೊಕ್ಕ ಇದ್ರೂ ಸಾಲಂಗಿಲ್ಲ… ರೊಕ್ಕ ಅಲ್ಲಿ, ಇಲ್ಲಿ ಖರ್ಚ ಮಾಡಬ್ಯಾಡ್ರೀ ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳಿದ ಫಾತೀಮಾ ದುಡ್ಡನ್ನು ಮರಳಿ ಸರೋಜನ ಕೈಗೇ ತುರುಕಿದಳು. +ಮೇಲೆ ಬಂದ ಸರೋಜ ಮಂಪರು ಕವಿಯುತ್ತಿದ್ದ ಗಂಡನಿಗೆ ಚಾದರ ಸರಿಯಾಗಿ ಹೊದೆಸುವಾಗ ಮಾಸಲಾಗಿದ್ದ ನೋಟಿನ ಪುಡಿಕೆ ಕಾಣಿಸಿತು. ಅವಳ ಸ್ಪರ್ಶಕ್ಕೆ ಪೂರ್ಣ ಎಚ್ಚರವಾದ ಗೋಪಾಲ ಹೇಳುವ ಮೊದಲೇ ಸರೋಜನಿಗೆ ಅರ್ಥವಾದಂತೆ ಇತ್ತು. +ಫಾತೀಮಾ ಇದನ್ನ ಕೊಡಾಕೆ ಅಂತ್ಲೇ ಬಂದಿದ್ಲೋ ಏನೋ… ನೀವರ ಬ್ಯಾಡ ಅಂತ ಹೇಳಬಾರದಿತ್ತೇನು… ಎಲ್ಲಾರ ಸಾಲ ಮಾಡಿ ತಂದಿರ್‍ತಾಳ.. ಸಾಲ ತೀರಿಸಲಾಕ ಮತ್ತ ಎರಡು ಹೊಸ ಮನಿ ಕೆಲಸ ಹಿಡೀತಾಳ… ಆ ಮನಿಯವರು ಹಂಗಂದ್ರು, ಹಿಂಗಂದ್ರು ಅಂತ ಮನಸ್ಸಿಗಿ ತ್ರಾಸು ಮಾಡ್ಕೋತಾಳ… ಹಂಗಂತ ಸಾಲ ತೀರುವವರೆಗೆ ಕೆಲಸಕ್ಕೆ ಹೋಗೂದೂನೂ ಬಿಡಂಗಿಲ್ಲ ಗೊಣಗಿದಳು. ಗೋಪಾಲ ಮಾತಾಡಲಿಲ್ಲ. +ಬಸ್ಸಿನಲ್ಲಿ ಕುಳಿತ ಫಾತೀಮಾಗೆ ಬೈಪಾಸ್ ರಸ್ತೆ ಬರುವವರೆಗೆ ಜೋರು ನಿದ್ದೆ. ಸೊಲ್ಲಾಪುರ ನಾಖಾದ ಬಳಿ ನಿಲ್ಲಿಸ್ರೀ ಎಂದು ಕಂಡಕ್ಟರ್‌ಗೆ ನಾಲ್ಕಾರು ಬಾರಿ ತಾಕೀತು ಮಾಡಿದ್ದ ಫಾತೀಮಾ ಕಾಲೇಜಿನ ಬಳಿ ಬಸ್ಸು ಬರುತ್ತಿರುವಂತೆ ಕಾಲನಿಯಲ್ಲಿ ಸಂಜೆ ಕೆಲಸ ಮಾಡುವ ಒಂದೆರಡು ಮನೆಗಳ ಕೆಲಸವನ್ನಾದ್ರೂ ಮಾಡಿ ಹೋದ್ರಾಯ್ತು ಎಂದು ಅಲ್ಲಿಯೇ ಇಳಿದಳು. +ಎದಕ್ಕವ್ವಾ ಬೆಳಿಗ್ಗಿ ಬರಲೇ ಇಲ್ಲ.. ನಿನ್ನ ದಾರಿ ನೋಡಿ ನೋಡಿ ನಾವ ಎಲ್ಲ ಮಾಡಿ ಮುಗಿಸೀವಿ.. ಹೇಳಿನೂ ಕಳಿಸಂಗಿಲ್ಲ… ನಾವೇನ ರೊಕ್ಕ ಕೊಡ್ತೀವೋ ಹುಣಿಸಿಬೀಜ ಕೊಡ್ತೀವೋ… ಅದಕ್ಕೇನ ಕಿಮ್ಮತ್ತ ಇಲ್ಲೇನು ಎಂದೆಲ್ಲ ಬಾಯಿ ಮಾಡಿದವರಿಗೆ ಉತ್ತರಿಸುವ ಗೋಜಿಗೇ ಹೋಗದೆ ತಲೆಬಗ್ಗಿಸಿ ಕೆಲಸ ಮಾಡತೊಡಗಿದಳು. ಗೋಪಾಲನ ನೋಡಲು ಹೋಗಿದ್ದರ ಕುರಿತು ತುಟಿಪಿಟಕ್ ಎನ್ನದೆ ಹಾಗೇ ಹೊರಟಳು. ಅಲ್ಲಿಂದ ಸರೋಜನ ಮನೆಗೆ ಬಂದಳು. ದವಾಖಾನೆಗೆ ಹೋದ ಸುದ್ದಿ ಹೇಳಿದರೆ ಸರೋಜನ ಮಗಳಿಗೆ ನಂಬಿಕೆಯೇ ಆಗಲಿಲ್ಲ. +ಖರೇ ಹೇಳಾ ಫಾತೀಮಾ.. ನೀ ಹೋಗಿದ್ಯೇನಾ… ಮತ್ತ ಏನೂ ಹೇಳಲೇ ಇಲ್ಲ… ನೀ ಮದ್ಲಿಗೇ ಹೇಳಿದ್ಯಂದ್ರ ನಾ ಏನಾರ ಜರಾ ಬುತ್ತಿ ಮಾಡಿಕೊಡ್ತಿರಲಿಲ್ಲೇನು ಫಾತೀಮಾ ಅಂತ ನಾಲ್ಕಾರು ಸಲ ಹೇಳಿದಳು. +ನಾ ಸಜ್ಜಾಗಿದ್ದೇ ಬೆಳಿಗ್ಗಿ… ಇನ್ನ ಹೇಳ್ಕೋತ ಕೂತ್ರ ತಡಾಗ್ತದ ಅಂತ ಹಂಗೇ ಹೋದ್ನವ್ವಾ… ಅಷ್ಟ್ಯಾಕ ಮಾರಿ ಸಣ್ಣದ ಮಾಡ್ತೀಯವ್ವಾ… ಅಪ್ಪಾರು ಬೇಷ ಅದಾರ.. ಅವ್ವಾನೂ ಆರಾಮದಾಳ ಎಂದು ಸಮಾಧಾನಿಸಿದಳು. ಅಲ್ಲಿಂದ ಹೊರಡುವಾಗ ಸರೋಜನ ಮಗಳು ಮಳಿಗಪ್ಪಾಗೇದ.. ಜರಾ ನಿಂತ ಹೋಗವಾ. ಚಾ ಮಾಡಿ ಕೊಡ್ತೀನು ಎಂದರೂ ಕೇಳದೆ ಇಲ್ಲವಾ.. ನಾ ಬೆಳಿಗ್ಗಿ ಮನಿ ಬಿಟ್ಟಾಕಿ.. ಸಲೀಮಾ ಒಬ್ಬಳೇ ಮನ್ಯಾಗ ಅದಾಳ… ಮುದುಕಂಗೂ ಜರಾ ಬೇಷಿಲ್ಲ.. ಬರ್‍ತೀನವಾ ಎಂದು ಹೊರಟೇ ಬಿಟ್ಟಳು. ಅವಳು ಪಾಟೀಲನ ಮನೆ ಕಮ್ ಅಂಗಡಿ ಹತ್ತಿರ ಬರುವ ವೇಳೆಗೆ ಮುಂಗಾರು ಮಳೆ ರಪ್‌ರಪ್ ಹೊಡೆಯಲಾರಂಭಿಸಿತು. ಮೊದಲ ಮಳೆಗೆ ಸದಾ ಹೊಸಹೊಸ ಕಡೆ ಸೋರುವ ಮನೆ… ರಿಪೇರಿ ಮಾಡಲು ಸಾಧ್ಯವಾಗದೆ ಪ್ರತಿಸಲ ಅದರ ಮೇಲೆ ಪಾಲಿಥಿನ್ ಶೀಟ್ ಹೊಚ್ಚಿಸುವುದು… ’ಮನ್ಯಾಗ ಎಲ್ಲೆಲ್ಲಿ ಸೋರಲಾಕ ಹತ್ತದೇನ… ಶೀಟ್ ಇನ್ನ ಮ್ಯಾಗ ತರಬೇಕು.. ಹಾಸಿಗಿ ಗೀಸಗಿ ಮ್ಯಾಲ ಸೋರದಿದ್ದರ ಸಾಕು…’ ಯೋಚಿಸುತ್ತ ತಲೆ ಮೇಲೆ ಸೆರಗು ಹೊದ್ದುಕೊಂಡು ತೋಯ್ದುಕೊಂಡು ಬರುತ್ತಿದ್ದ ಫಾತೀಮಾಳನ್ನು ಅಂಗಡಿಯಲ್ಲಿ ಕೌಂಟರ್ ಮುಂದೆ ಕುಳಿತಿದ್ದ ಪಾಟೀಲ ನೋಡಿದ. +ತೋಯ್ಕಂಡು ಎದಕ್ಕ ಹೊಂಟೀಯ ಫಾತೀಮಾ.. ಅಂಗಡ್ಯಾಗ ನಿಂದ್ರು ಬಾ.. ಮಳಿ ನಿಂತಿಂದ ಹೋಗಾಕಂತಿ +ಫಾತೀಮಾ ಮರುಮಾತನಾಡದೆ ಅಂಗಡಿ ಒಳಗೆ ಸರಿದಳು. +ಹೋದವರ್ಷನೂ ಮಳಿ ಬೇಷಾಗಲಿಲ್ಲ. ಹೊಲದಾಗ ಹಾಕಿದ್ದೆಲ್ಲ ಒಣಗಿ ಕಟಗಿ ಆಗಿತ್ತು.. ಈ ವರ್ಷಾರ ಮಳಿ ಆದ್ರ ಮಂದಿಗಿ ನಾಕ ಜ್ವಾಳದ ತೆನಿಯಾರ ಕೈಗೆ ಹತ್ತತಾವ.. ಇಲ್ಲಂದ್ರ ಎಲ್ಲಾರ ಬಾಳೇ ಮೂರಾಬಟ್ಟಿಯಾಗ್ತದ.. +ಪಾಟೀಲನ ಮಾತಿಗೆ ತಾನೂ ಒಂದೊಂದೇ ಮಾತು ಜೋಡಿಸುತ್ತ ನಿಂತ ಫಾತೀಮಾಗೆ ಆ ದಿನ ಮಗಳು ಚೂಪಗೆ ಇಲ್ಲಿ ನಿಂತಿದ್ದು.. ಎಂದೂ ತಲೆ ತಗ್ಗಿಸದ ತಾನು ಜೀವ ಮೂರು ಹಿಡಿಯಾಗಿಸಿಕೊಂಡು ನಿಂತಿದ್ದು ನೆನಪಾಗುತ್ತ ತುಸು ಮಜುಗರದಿಂದಲೇ ನಿಂತಳು. ಮಳೆಯ ರಭಸ ಕಡಿಮೆಯಾದರೂ ಇನ್ನೂ ಸಣ್ಣದಾಗಿ ಹನಿಯುತ್ತಲೇ ಇತ್ತು. +ಫಾತೀಮಾ ಚಾ ಕುಡಿತೀಯೇನು.. ನನಗರ ಥಂಡಿ ಹಿಡಿದದ, ಚಾಕ್ಕಿಡ್ತೀನಿ +ಪಾಟೀಲ ಒಳಗೆದ್ದು ಹೊರಟ. +ಯಾಕ್ರೀ ಅಕ್ಕೋರು ಊರಾಗಿಲ್ಲೇನು.. +ನಮ್ಮ ಮಂದಿದೊಂದು ಮದಿವಿ ಅದ ಅಂತ ಆಕಿ ಊರಿಗಿ ಹೋಗ್ಯಾಳ.. ಬಾಂಡೆದಾಕಿನೂ ಎರಡು ಮೂರು ದಿನದಿಂದ ಬಂದಿಲ್ಲ. ನಂದೇನ ಫಜೀತಿ ಕೇಳ್ತೀಯವ್ವಾ.. ಹೇಳುತ್ತಲೇ ಪಾಟೀಲ ಒಳಗೆ ಹೋದ. ಮಳೆಯನ್ನೇ ದಿಟ್ಟಿಸುತ್ತ ಅರೆಕ್ಷಣ ಫಾತೀಮಾ ಅಲ್ಲಿಯೇ ನಿಂತಳು. ಸಿಂಕ್‌ನಲ್ಲಿ ಸದ್ದಾಗಿದ್ದನ್ನು ನೋಡಿ ಚಾಕ್ಕಿಡುತ್ತಿದ್ದ ಪಾಟೀಲ ತಿರುಗಿ ನೋಡಿದರೆ ಫಾತೀಮಾ ಪಾತ್ರೆ ತಿಕ್ಕತೊಡಗಿದ್ದಳು. ತಾನು ಅದಕ್ಕಾಗಿ ಕರೆದೆ, ತಾನಿಷ್ಟು ಸಣ್ಣ ಮನಸ್ಸಿನವನು ಎಂದವಳು ಭಾವಿಸಿಬಿಟ್ಟಳೇ ಎಂದು ಪಾಟೀಲನಿಗನ್ನಿಸಿತು. +ನಾ ಹಂಗೇ ನಿನಗ ಚಾ ಕುಡ್ದು ಹೋಗು ಅಂದ್ನಿ.. ನೀ ಹಂಗೇ ಭಾಂಡೆಗೇ ಕೈ ಹಾಕಿದ್ಯಲಾ.. ಮತ್ತ ನಾ ಅದಕ್ಕ ಕರದೀನಿ ಅಂದ್ಕಂಡ್ಯೇನು +ಅಯ್ಯಾ ಹಂಗೇನಿಲ್ರೀ.. ಚಾ ಆಗೂ ತನ ನಾಕ ಭಾಂಡಿ ತೊಳಿತೀನ್ರೀ.. ಫಾತೀಮಾ ಮತ್ತೆ ಮಾತಾಡಲಿಲ್ಲ… ಫಾತೀಮಾನ ಮನಸ್ಸಿನಲ್ಲಿಯೇ ಉಳಿದ ಒಂದು ವಾಕ್ಯ ’ಈ ಫಾತೀಮಾ ಇಲ್ಲಿ ತನ್ಕಾ ಯಾರ ಮನ್ಯಾಗೂ ಪುಗಸಟ್ಟೆ ಚಾ ಕುಡ್ದಿಲ್ಲ. ಎಂದೂ ಕುಡಿಯಂಗೂ ಇಲ್ಲ’ ಅವಳು ಹೇಳದೆಯೇ ಅವಳು ನಿಂತು ಭಾಂಡೆ ತಿಕ್ಕುತ್ತಿದ್ದ ರೀತಿಯಿಂದಲೇ ಇಂತಹದ್ಯಾವುದೋ ಭಾವ ಹೊರಹೊಮ್ಮಿದಂತೆ ಅನ್ನಿಸಿದ ಪಾಟೀಲನಿಗೆ ಆ ದಿನ ತಾನು ಕಟುವಾಗಿ ನಡೆದುಕೊಂಡೆನೇನೋ ಅನ್ನಿಸಿತು. +’ತುಡುಗು ಮಾಡೂದೇನು ಛಲೋ ಚಟ ಏನು? ಎಷ್ಟ್ ಸಲ ಇವರ ಮೇಲೆ ನಂಬಿ ಮನಿ ಬಿಟ್ಟು ಹೋಗಂಗಿಲ್ಲ.. ಮತ್ತ ಹಿಂಗ ಮಾಡಿದ್ರ ಯಾರರ ನಂಬಿಕಿ ಇಡ್ತಾರನು.. ತಪ್ಪ ಮಾಡ್ಯಾಳ ಅಂತ ಈಗ ತಿದ್ದಲಾರದ ಹಂಗ ಬಿಟ್ರ ಮುಂದ ಅದಾ ದೊಡ್ಡದಾಗ್ತದ… ನಾ ಏನ ಆಕಿಗಿ ಸುಳ್ಳ ತ್ರಾಸ ಕೊಡಬಕು ಅಂತ ಏನ ಮಾಡಿಲ್ಲಲ್ಲ..’ ಪಾಟೀಲ ತನ್ನೊಳಗೇ ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವಂತೆ ಫಾತೀಮಾ ಕೆಲಸ ಮುಗಿಸಿದ್ದಳು. +ಚಾ ಹೆಂಗಾಗೇದ ಫಾತೀಮಾ.. ನಿಮ್ಮ ಅಕ್ಕೋರಿಗಿಂತ ಛಲೋ ಮಾಡೀನಿಲ್ಲೋ ಪಾಟೀಲ ತುಸು ಹಗುರಾಗಲು ಪ್ರಯತ್ನಿಸಿದ. +ಅಗದಿ ಛಲೋ ಆಗೇದ… ದಿನಾ ಅಕ್ಕೋರಿಗೂ ನೀವ ಮಾಡಿಕೊಡ್ರಿ ಫಾತೀಮಾ ಕೂಡ ತುಸು ಬಿಡುಗಡೆಗೊಂಡಂತೆ ನಕ್ಕಳು. ಮಳೆ ಸ್ವಲ್ಪ ಕಡಿಮೆಯಾಗಿ ಈಗ ಸಣ್ಣಗೆ ಹನಿಯತೊಡಗಿತ್ತು. +ಛತ್ರಿ ಒಯ್ತೀಯೇನು? ಪಾಟೀಲ ಕೊಡಲು ಬಂದರೂ ಬೇಡವೆಂದು ಹಾಗೆಯೇ ಹೊರಟಳು. +ಮಳೆ ಬಂದ ನಂತರ ಕೆಲಸದ ಮನೆಗಳಿಂದ ಹೊರಡುವ ಫಾತೀಮಾಗೆ ಪ್ರತಿ ಬಾರಿ ಹೊಸದೇ ಪಯಣ ಆರಂಭಗೊಂಡಂತೆ… ಹೊಸದೇ ರಸ್ತೆಯಲ್ಲಿ ನಡೆಯುತ್ತಿರುವಂತೆ ಅನ್ನಿಸುತ್ತಿತ್ತು. ಮಳೆ ತುಸು ಹೊಳವಾಗಿ.. ಆಗಸ ನಸು ಸ್ವಚ್ಛವಾಗಿ.. ಇದೀಗ ಬೆಳಗಾದಂತಹ ಬೆಳಕು ಹರಡಿದ್ದ ಆ ಸಂಜೆಯಲ್ಲಿ ಮೆತ್ತಗೆ ದಾರಿಗುಂಟ ಹೊರಟ ಫಾತೀಮಾಳನ್ನು ನೋಡುತ್ತ ಪಾಟೀಲ ಮಾತ್ರ ಇಂಥದೆಂದು ಗುರುತಿಸಲಾಗದ ಭಾವಕ್ಕೆ ಪಕ್ಕಾಗಿ ನಿಂತಿದ್ದ. +ಫಾತೀಮಾಗೆ ಹೀಗೆ ಹನಿಯುವ ಜುಮುರು ಮಳೆಯೆಂದರೆ ತುಂಬ ಇಷ್ಟ. ಹನಿಗಳು ಸಿಡಿದು ಮುಖದ ಮೇಲಿನ ಬೆವರು, ಎಣ್ಣೆ ಜಿಡ್ಡು ಅಂಟಿಕೊಂಡಂತಿರುವ ನೀರು… ಎಲೆಗಳ ತುದಿಯಂಚಿನಿಂದ ಹಸಿರು ನೀರು… ಆಗಸದಿಂದ ಇಳಿಯುವ ಆಲಿಕಲ್ಲಿನಷ್ಟು ತಂಪಾದ ನೀರು.. ಮನೆಗಳ ತಾರಸಿಯಿಂದ ಇಳಿಯುವ ನಸುಗೆಂಪು ನೀರು.. ಎಲ್ಲ ಬಗೆಯ ನೀರಲ್ಲಿ ಆತ್ಮ ತೇವಗೊಳ್ಳುವಾಗ ಎಲ್ಲೋ ಒಣಗಿ ನಿಂತ ನೆಲ, ಗುಳೇ ಹೋಗುವ ಜನರ ನೆನಪುಗಳು ಒದ್ದೆಯಾಗುತ್ತ… ಮುಖಚಹರೆಯೂ ಮರೆತು ಲತೀಫ ಎಂಬ ಹೆಸರು ಮಾತ್ರವಾಗುಳಿದು, ಅವನೊಂದಿಗೆ ಮದುವೆಯಾಗಿದ್ದರೆ ಬದುಕು ಬೇರೆ ಬಗೆಯಲ್ಲಿರುತ್ತಿತ್ತೇ ಎಂಬ ನಿರೀಕ್ಷೆ ಕೂಡ ಬರಬರುತ್ತ ತೆಳ್ಳಗಾಗುತ್ತ… ಈ ದಾರಿಯಲ್ಲಿ ತಾನೊಬ್ಬಳೇ ಎಂಬ ವಾಸ್ತವವನ್ನು ಮುಖಕ್ಕೆ ಸಿಡಿಯುವ ಪ್ರತಿ ಮಳೆಹನಿಯೂ ಹೇಳಿದಂತೆ.. ಮೊದಲೆಲ್ಲ ಜೀವಕ್ಕಂಟಿದಂತೆ ಭಾಸವಾಗುತ್ತಿದ್ದ ಮಕ್ಕಳಿಬ್ಬರೂ ಕೂಡ ಬರಬರುತ್ತ ಪ್ರತ್ಯೇಕಗೊಂಡಂತೆ ಅಥವಾ ತಾನೇ ಅವರೆಲ್ಲರಿಂದ ಪ್ರತ್ಯೇಕಗೊಂಡು ನಡುಗಡ್ಡೆಯಾದಂತೆ… ಫಾತೀಮಾಗೆ ಹಾಗೆ ನಡೆಯುತ್ತ ಕಣ್ಣು ತುಂಬಿ ಬರುತ್ತಿತ್ತು. +ಫಾತೀಮಾಗೆ ಹಾಗೆ ಮಳೆಯಲ್ಲಿ ನಡೆಯುವುದೆಂದರೆ ತುಂಬ ಇಷ್ಟ…. ಯಾಕೆಂದರೆ ಅವಳು ಅಳುತ್ತಲೇ ನಡೆದರೂ ಕೆನ್ನೆ ಮೇಲೆ ಒಂದೇ ಸಮನೆ ನೀರು ಇಳಿದರೂ ಫಕ್ಕನೆ ಎದುರು ಬರುವವರಿಗೆ ಗೊತ್ತಾಗುವುದೇ ಇಲ್ಲ. ಅದು ಕಣ್ಣೀರು ಎನ್ನಿಸದೇ ಮಳೆಯ ನೀರು ಎನ್ನಿಸಿಬಿಡುತ್ತದೆ. +ಫಾತೀಮಾಗೆ ಮಳೆಯೆಂದರೆ ತುಂಬ ಇಷ್ಟ… ಮಳೆ ಹೊಳವಾದ ನಂತರ ಅತ್ತು ಮುಗಿಸಿದ ಫಾತೀಮಾ ಕೂಡ ಆಗಸದಷ್ಟೇ ನಿರಭ್ರವಾಗುತ್ತಾಳೆ…. ತೊಯ್ದ ಆತ್ಮ ಒದ್ದೆ ಭೂಮಿಯಂತೆ… ಫಾತೀಮಾ ಬೆಳಗು ಸಂಜೆಯ ಕ್ಷಣಗಳನ್ನು ಒದ್ದೆಭೂಮಿಯಲ್ಲಿ ಹೊಸದಾಗಿ ಚಿಗುರಿಸುತ್ತಾಳೆ. +***** +ಪದಗಳ ಅರ್ಥ. +ವಿಮಾನ/ಇಮಾನ: ಉತ್ತರ ಕರ್ನಾಟಕದ ಕೆಲವು ಜನಾಂಗಗಳಲ್ಲಿ ಹೆಣವನ್ನು ಮಲಗಿಸಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಹೆಣವನ್ನು ಕೂರಿಸಿ ನಂತರ ಒಂದು ಎತ್ತರದ ಗಾಡಿಯಲ್ಲಿರಿಸಿ ಸ್ಮಶಾನದವರೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆ ಗಾಡಿಗೆ ವಿಮಾನ/ಇಮಾನ ಎನ್ನುತ್ತಾರೆ. +ದಗದ- ಕೆಲಸ +ಹರಕತ್ತ – ಅವಶ್ಯಕತೆ +ಜೀಂವಾ ಅರೆಯುವುದು(ಜೀಂವಾ ಅರಿಯೂದು, ಜೀಂವಾ ಅರಿಲಾಕ) – ಮನಸ್ಸಿಗೆ ತುಂಬ ತೊಂದರೆ ಅಥವಾ ತ್ರಾಸು ಕೊಡುವುದು +ಕಸಪರಿಷಿ ಮಾಡುವುದು – ಕಸ ಹೊಡೆದು, ನೆಲ ಒರೆಸುವುದು (ಪರಿಷಿ ಅಂದರೆ ನೆಲಕ್ಕೆ ಸಿಮೆಂಟ್ ಬದಲಾಗಿ ಹಾಕುವ ಶಹಾಬಾದ್ ಚಪ್ಪಡಿ ಕಲ್ಲು) +ಜುಮುರು ಮಳೆ – ಸಣ್ಣದಾಗಿ, ಒಂದೇ ಸಮನೆ ಹನಿಯುವ ಮಳೆ. +ವಿಜಯಕರ್ನಾಟಕ – ೨೦೦೪ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಕತೆ +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು […] +“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂ‌ಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_61.txt b/Kannada Sahitya/article_61.txt new file mode 100644 index 0000000000000000000000000000000000000000..b5cc85b61ef217bc4fef34d6dcd623add4f7db58 --- /dev/null +++ b/Kannada Sahitya/article_61.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ ಹೆಣೆದುಕೊಂಡ ಪುಸ್ತಕ ಸಂಸ್ಕೃತಿ ಇತ್ಯಾದಿಗಳ ಕುರಿತಾಗಿ ತಿಳಿದುಕೊಳ್ಳುವ ಪ್ರಯತ್ನವಾಗಿಯೇ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ನಿರ್ಧಾರ ಮಾಡಿದ್ದೆ. ಮಾಡಿದ್ದು ಪುಣೆಯಲ್ಲಿ. ಸಮ್ಮೇಳನ ನಡೆಯಲು ನಿರ್ಧಾರವಾಗಿದ್ದುದು ಬೀದರದಲ್ಲಿ. ವರ್ಷವೊಂದರ ಅಂತರದಲ್ಲಿ ನಡೆಯಲು ತೀರ್ಮಾನವಾಗಿದ್ದ ಈ ಸಮ್ಮೇಳನ ಸಾಹಿತ್ಯೇತರ ಕಾರಣಗಳಿಂದಾಗಿಯೇ ಎರಡು ಬಾರಿ ಮುಂದೂಡಲ್ಪಟ್ಟು ಕಡೆಯದಾಗಿ ಈ ವರ್ಷದ ಜನವರಿಗೆ ಮೂಹೂರ್ತ ನಿಗದಿಪಡಿಸಿಕೊಂಡಿತ್ತು. ಕಡೆಯವರೆಗೆ ಸಮ್ಮೇಳನದ ಜರುಗುವಿಕೆಯ ಸುತ್ತ ಹಬ್ಬಿಕೊಂಡಿದ್ದ ಅನಿಶ್ಚತತೆಯೇ, ಹಾಗೂ ವೃತ್ತಿಯಲ್ಲಿ ಎದುರಾಗುಬಹುದಾದ ಅಕಾಲಿಕ ಸಂದರ್ಭಗಳೇ ನನ್ನ ಪ್ರಯಾಣದ ಕುರಿತಾದ ಅನಿಶ್ಚಿತತೆಗೆ ಕಾರಣವಾಗಿದ್ದುವು. ಸಮ್ಮೇಳನ ನಡೆಯಲು ಮೊದಲು ನಿರ್ಧಾರವಾಗಿದ್ದ ಸಮಯದಲ್ಲಿ ನಾನಿದ್ದುದು ಪುಣೆಯಲ್ಲಿ . ಆಗಷ್ಟೆ ಹೊಟ್ಟೆಪಾಡಿಗೆ ಹುಟ್ಟಿ ಬೆಳೆದ ಬೆಂಗಳೂರು ನಗರವನ್ನು ತೊರೆದು ೩-೪ ತಿಂಗಳುಗಳಾಗಿದ್ದುವು. ಆಗಿನ ಆ ನಿರ್ಧಾರವನ್ನು ನೆನೆಸಿಕೊಳ್ಳುವುದಾದರೆ, ಆ ನಿರ್ಧಾರಕ್ಕೆ ’ಕನ್ನಡ’ ಎಂಬ ಹುಂಬ ಆವೇಶಕ್ಕಿಂತ ಹೆಚ್ಚಿನ ಹಿನ್ನೆಲೆಯಿರಲಿಕ್ಕಿಲ್ಲ ಎಂಬುದು ನನ್ನ ಈಹೊತ್ತಿನ ಅನಿಸಿಕೆ. ಆದರೆ ಅದು ಕಡೆಗೂ ನಡೆದ ದಿನಮಾನದಲ್ಲಿ ನಾನು ನೆಲೆಸಿರುವುದು ಮುಂಬಯಿಯಲ್ಲಿ. ಈ ನಡುವಿನ ಅವಧಿಯಲ್ಲಿ ಒಂದಿಷ್ಟಾದರೂ ಪಕ್ವಗೊಂಡಿದ್ದೇನೆ ಎಂಬ ಭಾವನೆ. +ಇನ್ನು ಬೀದರದ ಸೆಲೆಯೂ ಇತ್ತೆನ್ನಬಹುದೇನೋ. ಬೆಂಗಳೂರಿನ ಬಳಿ ಹುಟ್ಟಿ ಬೆಳೆದ ನನ್ನ ತಂದೆ ತಮ್ಮ ವೃತ್ತಿ ಜೀವನದ ಪ್ರವಾಸ ಕಾಲದಲ್ಲಿ ಕಂಡ ’ಆ ನಾಡಿನ’ ಅನುಭವಗಳನ್ನು ಹಂಚಿಕೊಳ್ಳುವಾಗ, ಅದು ನನಗೆ ಸ್ವಾರಸ್ಯಕರವಾಗಿದ್ದು, ನಂತರದ ದಿನಗಳಲ್ಲಿ ನನ್ನ ಒಡಹುಟ್ಟಿದ ತಮ್ಮನು ಇದೇ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಇಂಜಿನಿಯರಿಂಗ್ ಪದವಿ ಪಡೆದದ್ದು, ಮತ್ತು ಅವನು ಕಂಡ ಅಲ್ಲಿನ ಜೀವನದ ಕುರಿತಾದ ವರ್ಣನೆಗಳು, ನನಗೆ ಒಂದು ರೀತಿಯ ಪ್ರೇರಣೆಯಾಗಿದ್ದುವು. ’ ಶರಣರ ನಾಡು’, ’ಬಹುಸಂಸ್ಕೃತಿಯ ಪ್ರದೇಶ’ ವೆಂಬ ಕುತೂಹಲಗಳೂ ಇದ್ದುವು. +ಸಮ್ಮೇಳನದ ಹಿಂದಿನ ದಿನವೇ ಸೋಲಾಪುರ ನೋಡುವ ಉದ್ದೇಶವಿಟ್ಟುಕೊಂಡಿದ್ದೆ. ಮರಾಠೀ ಸಾಹಿತ್ಯ ಸಮ್ಮೇಳನವೂ ಇದೇ ಸಂದರ್ಭಕ್ಕೆ ಅಲ್ಲಿ ನಡೆಯುವ ಪೂರ್ವವಾರ್ತೆಯಿದ್ದುದರಿಂದ ಅದರತ್ತಲೂ ಕಾಲು ಬೆಳೆಸಿ ನೋಡುವುದೆಂದುಕೊಂಡಿದ್ದೆ. ಎಣಿಸಿದಂತೆಯೇ ಕೂಡಿಬಂದ ಸಂದರ್ಭಗಳಿಂದಾಗಿ ಅನುಭವಗಳು ಒಳ್ಳೆಯವೇ ಆಗಿ ಪರಿಣಮಿಸಿವೆ. ಕರ್ಮಯೋಗಿಯ ಕರ್ಮಭೂಮಿಯನ್ನು ನೋಡುವ ಸದವಕಾಶವೂ ಆಯಿತು. ಇಲ್ಲಿ ನನ್ನ ಗಮನಕ್ಕೆ ಬಂದ ಒಂದು ವಿಚಾರ ಹೇಳಿ ಬಿಡುವುದು ಸೂಕ್ತವೆನಿಸುತ್ತಿದೆ. ’ಸೊನ್ನಲಿಗೆಯ ಸಿದ್ಧರಾಮನೊಂದಿಗೆ’ ಬೆಳೆದು ಬಂದಿರುವ ಮರಾಠೀ-ಕನ್ನಡ ಸಂಸ್ಕೃತಿಯ ಸಾಮರಸ್ಯವನ್ನು ಕಂಡು ದಂಗಾದೆನೆಂದೇ ಹೇಳಬೇಕು. +ಬೀದರಕ್ಕೆ ಪಯಣ +ಮುಂಬಯಿಯಿಂದ ಹೊರಟಾಗ ಸೊಲ್ಲಾಪುರದವರೆಗಿನ ಪ್ರಯಾಣದ ಸ್ಪಷ್ಟ ಕಲ್ಪನೆ ಇತ್ತಾದರೂ, ಮುಂದಕ್ಕಿನ ಪ್ರಯಾಣದ ಬಗೆಗಿನ ಜ್ಞಾನ(ಅಜ್ಞಾನ?) ಗೂಗಲ್ ಅರ್ಥನಿಂದ ಬಂದದ್ದು. ರಾತ್ರಿಯ ಪಯಣ. ಕರ್ನಾಟಕ ಪ್ರವೇಶಿಸುತ್ತಲೇ ಕುಲುಕುತ್ತಿದ್ದ ಬಸ್ಸಿನ ಅವಾಂತರಕ್ಕೆ ಅರೆನಿದ್ರೆಯಲ್ಲಿ ಎಚ್ಚರ….ನಡುವೆಯೇ ಹಾದು ಹೋದ ಊರುಗಳು ನೆನಪು ಅಷ್ಟಿಷ್ಟು….ಕಲ್ಯಾಣ, ಹುಲಸೂರ, ಭಾತಂಬ್ರ, ಭಾಲ್ಕಿ….. ಬೀದರ ತಲುಪಿದ್ದು ನಸುಕಿನ ಜಾವ ೫ರಲ್ಲಿ…..ನಂಬಲಾಗಲಿಲ್ಲ…ಬೀದರ್ ಬಸ್ಸು ನಿಲ್ದಾಣದಲ್ಲಿ ನಿಂತು ಬೆಂಗಳೂರಿನ ಚಳಿಯನ್ನು ವರ್ಷದ ನಂತರ ಅನುಭವಿಸುತ್ತಿದ್ದೆ. ಬೆಳಗಿನ ಮುಹೂರ್ತಕ್ಕೆ ಅಣಿಯಾಗಲು ಕಂಡುಕೊಂಡ ಸ್ಥಳ ಪ್ರಶಸ್ತವಾಗಿಯೂ ಮೂಲಭೂತ ಅನುಕೂಲತೆಗಳನ್ನೇನೋ ಒಳಗೊಂಡಿತ್ತು. ಬೀದರದ ನೆಹರೂ ಕ್ರೀಡಾಂಗಣದಲ್ಲಿ ಸಮ್ಮೇಳನದ ಪ್ರಥಮ ಕಾರ್ಯಕ್ರಮವಾದ ಮೆರವಣಿಗೆಯ ಉದ್ಘಾಟನೆಯಾಗುವುದಿತ್ತು. ಆ ಹೊತ್ತಿಗೆ ಕೆಲವೇ ಕೆಲವು ಪರಿಚಿತರು ಜೊತೆಗಾರರಾಗಿದ್ದರು. +೯೦ ವರ್ಷಗಳ ಸುದೀರ್ಘ ಇತಿಹಾಸದಲ್ಲಿ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಒಂದು ಸ್ವರೂಪವೇನೋ ಬಂದಿದೆ. ಆದರೆ ಅದರೊಳಗಿನ ಟೊಳ್ಳೆಷ್ಟು, ಗೆದ್ದಲು ಹತ್ತಿರುವ ಭಾಗಗಳೆಷ್ಟು ಅನ್ನೋದು ಅಲ್ಲಿಗೈತಂದಿದ್ದವರ ಹಾಗೂ ನನ್ನ ಅನುಭವಕ್ಕೂ ಬಾರದೇ ಇರಲಿಲ್ಲ. ನೆಪಮಾತ್ರಕ್ಕಾದರೂ ಆಯ್ದು ಕೊಳ್ಳಲಾಗಿದ್ದ ಪ್ರದರ್ಶನ ಕಲೆಗಳಲ್ಲಿ ಬೀದರ ಭಾಗದ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಮರೆಮಾಚಿದ್ದು ಉತ್ಸಾಹ ಹಾಗು ಜನರಿಗೆ ತಮ್ಮ ನಾಡಿನ ಬೇರೊಂದು ಪ್ರದೇಶದ ಕಲೆಗಳನ್ನು ಕಂಡ ಪುಳಕ. ಆಗಮಿಸಿದ್ದ ಪ್ರತಿನಿಧಿಗಳಗೆ ಬೀದರ ನಗರದ ಕಿರುದರ್ಶನವನ್ನಂತೂ ಇದು ಮಾಡಿಸಿತು. ಗವಾನನ ಮದರಸಾ, ಛೌಬಾರ ಗಡಿಯಾರದ ಗೋಪುರ, ನಯಾಕಮಾನ್ ಗಳು ’ಬರ’ಚಿತ್ರದಲ್ಲಿಂದ್ದಂತೆಯೇ ಇಂದಿಗೂ ಇವೆ. +ಸಮ್ಮೇಳನ, ಗೋಷ್ಟಿಗಳು…ಸಾಹಿತ್ಯದ ಓಗರ… +’ಸಾಹಿತ್ಯ ಸಮ್ಮೇಳನಗಳೊಂದಿಗೆ’ ತಳುಕು ಹಾಕಿಕೊಂಡಿರುವ ರಾಜಕಾರಣಿಗಳ ಅನುಪಸ್ಥಿತಿ, ಈ ಸಲದ ಸಮ್ಮೇಳನಕ್ಕೆ ಹೆಚ್ಚಿನ ವ್ಯತ್ಯಾಸವನ್ನೇನು ಉಂಟುಮಾಡಲಿಲ್ಲ. ಆಡಳಿತಶಾಹಿಯ ಬಾಹುಗಳು ಅಷ್ಟು ಭದ್ರವಾಗಿ ಈ ವರ್ಗದವರನ್ನು ಅಪ್ಪಿಕೊಂಡಿವೆ. ದೀರ್ಘಗೊಂಡ ’ಸಾಂಸ್ಕೃತಿಕ ನಡೆ’ ಯ ನಂತರ ನಡೆದ ಉದ್ಘಾಟನಾ ಸಮಾರಂಭವು ’ಸಾವಕಾಶ’ವಾಗಿ ಸಾಗಿತು. ಪ್ರಸ್ತಾವನಾ ಭಾಷಣ ಮಾಡಿದ ಪರಿಷತ್ತಿನ ಅಧ್ಯಕ್ಷ ಚಂಪಾರವರಿಗಂತೂ ತಾವು ಹಾಗು ತಮ್ಮ ಪರಿಷತ್ತು ಆಯೋಜಿಸಿದ್ದ ಈ ಹಕೀಕತ್ತು ಯಾವ ಸ್ವರೂಪದ್ದಾಗಿರಬೇಕೆಂಬ ಕಲ್ಪನೆಯಿದ್ದಂತೆ ಇತ್ತು. ಅದೇ ಮುಖ್ಯ…ಇಲ್ಲದೇ ಹೋದರೆ ಬೀದರನಲ್ಲಿ ನಡೆದದ್ದು ಒಂದು ಅಸಂಗತ ಜಾತ್ರೆ ಅನಿಸಿದರೆ ಆಶ್ಚರ್ಯವಿಲ್ಲ. ಅವರು ಹೇಳಿದ್ದಿಷ್ಟು. ಸಾಹಿತ್ಯ ಪರಿಷತ್ತು ಸಾಹಿತ್ಯೇತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡಿಗರಿಗೆ ತಾನೇ ಪ್ರತಿನಿಧಿ ಎಂದು. ಹಾಗಾಗಿ ಅದು ಕನ್ನಡದ ’ಉರುಸ್’ ಹೌದು.ಇದೇ ಸಮರ್ಥನೆಯೇ ಇರಬಹುದೇನೋ. ಇರಲಿ. ಆದರೆ ನಂತರ ಮಾತನಾಡಿದ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಕಮಲಾ೦ ಹಂಪನಾರವರು ಸಭಾಗೌರವಕ್ಕೆ ತಕ್ಕಂತೆ ಆಡಿದರು. ಯಾವುದೇ ಸಾಹಿತ್ಯ ಸಮ್ಮೇಳನದ ಬಹುಮುಖ್ಯ ಸಂದರ್ಭ ಸಮ್ಮೇಳನಾಧ್ಯಕ್ಷರ ಭಾಷಣ. ದಶಕದ ನಂತರ ಹೈದರಾಬಾದ ಕರ್ನಾಟಕ ಭಾಗದಲ್ಲಿ ನಡೆದ ಈ ಸಮ್ಮೇಳನದಲ್ಲಿ ಈ ಭಾಗದ ಹಿಂದುಳಿದಿರುವಿಕೆಯನ್ನೇ ಮತ್ತೆ ಆಡಳಿತವರ್ಗದ ಗಮನಕ್ಕೆ ತರಲು ಬೇಕಾದ ಘನತೆಪೂರ್ಣ ಮಾತುಗಳನ್ನು ಶಾಂತರಸರು ಆಡಿದರು….೨ ಗಂಟೆಗಳಷ್ಟು ವಿಸ್ತಾರ ಸಮಯದ ಹರವಿನಲ್ಲಿ ಅವರಾಡಿದ್ದು ಅವರ ’ಕೃತಿ’(ಇಲ್ಲಿ ಸಾಹಿತ್ಯ ಕೃತಿ ಎಂಬರ್ಥವಲ್ಲ ಕರ್ಮವೆಂದು ವಿಧಿತ)ಗೆ ಕನ್ನಡಿ ಹಿಡಿದಂತಿತ್ತು. ಹೈದರಾಬಾದ ಕರ್ನಾಟಕದ ಬದುಕಿನ ಮಾತುಗಳನ್ನೊಳಗೊಂಡು ಸಮಗ್ರ ಕನ್ನಡ ಜನ ಈ ಹೊತ್ತು ಎದುರಿಸುತ್ತಿರುವ ಬಹುಮುಖ್ಯ ಸವಾಲುಗಳ ಕುರಿತಾಗಿ ಅವರ ವಿಚಾರಗಳು ಹರಿದಾಡಿದವು. +ಇನ್ನುಳಿದಂತೆ ನನ್ನ ಗಮನಸೆಳೆದ/ಪಾಲ್ಗೊಳ್ಳಲು ಸಾಧ್ಯವಾದ ಕೆಲವಾರು ಗೋಷ್ಟಿಗಳ ಕುರಿತಾಗಿ ಬರೆಯುತ್ತೇನೆ. ಮೊದಲ ಗೋಷ್ಟಿ ’ಹೈದ್ರಾಬಾದ ಕರ್ನಾಟಕದ ಸಮಸ್ಯೆಗಳು’. ನೀರಸವಾಗಿದ್ದ ಗೋಷ್ಟಿಗೆ ಜೀವಕಳೆ ಕೊಟ್ಟಿದ್ದು ಗುಲಬರ್ಗಾದ ಕನ್ನಡ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿಯವರ ’ಸೊಗಡಿನ’ ಮಾತುಗಳು. ಆ ಭಾಗದ ಜಮೀನ್ದಾರಿ ಪದ್ಧತಿಯ ಪುನರಾವತಾರ, ಸಾಂಸ್ಕೃತಿಕ ಶೂದ್ರತನ ಇವುಗಳ ಸುತ್ತಲೇ ಅವರು ಆಡಿದ್ದು ಕೇಂದ್ರೀಕೃತವಾಗಿತ್ತು. +’ಭೇಷ್ ಯವ್ವಾ’ ಎಂದಷ್ಟೇ ಉದ್ಗಾರ ತೆಗೆಯಬೇಕು….. +ಅದು ಅವರ ವಾಕ್ಚಾತುರ್ಯಕ್ಕೆ ತಲೆದೂಗಿ ಬರೆದದ್ದು. +ಹೌದು ಕಾಲೇಜು ದಿನಗಳ ಆ ಉಪನ್ಯಾಸಗಳ ಸವಿನೆನಪುಗಳನ್ನು ತಂದದ್ದು…ಇಳಕಲ್ಲಿನ ಮಹಾಂತೇಶ ಕಾಲೇಜಿನ ಪ್ರಾಧ್ಯಾಪಕ ಶಂಭು ಬಳಿಗಾರ ಅವರ ಜಾನಪದ ಸಾಹಿತ್ಯ ಕುರಿತಾದ ಉಪನ್ಯಾಸ….ಗುನುಗುತ್ತಿವೆ ಅವರ್‍ಹಾಡಿದ ಪದಗೋಳು….. +ನಡೆಸಲೇ ಬೇಕಾದ ಅನಿವಾರ್ಯತೆಗೆ ನಡೆಸಿದ್ದು ಹನಿಗವನ ಗೋಷ್ಟಿ ……ಸರಿಹೊತ್ತಿನಲ್ಲಿ…. +ದಿನ ೨ : +ಬೆಳ್ಳಂಬೆಳಗ್ಗೆ ಇಂಗ್ಲಿಷ್ ದೈನಿಕವೊಂದನ್ನು ಹಿಡಿದಿದ್ದ ನೆರೆಯ ವ್ಯಕ್ತಿಯನ್ನು ದಿಟ್ಟಿಸುತ್ತಿದ್ದಾಗ ಗೋಚರಿಸಿದ್ದು ದೊಡ್ಡ ಕಪ್ಪು ಅಕ್ಷರಗಳಲ್ಲಿ ಅಚ್ಚಾಗಿದ್ದ ’ಕನ್ನಡ ಮೀಟ್ ಓಪನ್ಸ್ ಇನ್ ಗುಲ್ಬರ್ಗಾ’ ಎಂಬ ತಲೆಬರಹ ಹಾಗೂ ಹಿಂದಿನ ದಿನ ಸಮ್ಮೇಳನದ ಉದ್ಘಾಟನೆಯಾದಾಗಿನ ಒಂದು ಚಿತ್ರ. +’ಪುತಿನ’ ಬಗ್ಗೆ ಮಾತನಾಡಿದವರು ಶ್ರೀ ನರಹಳ್ಳಿ ಬಾಲಸುಬ್ರಹ್ಮಣ್ಯ, ’ಆ. ನೇ. ಉಪಾಧ್ಯೆ’ ಯವರ ಬಗ್ಗೆ ಡಾ. ಶುಭಚಂದ್ರ, ಹಾಗೂ ಸಿಂಪಿ ಲಿಂಗಣ್ಣನವರ ಬಗೆಗೆ ಡಾ.ಎಂ.ಎಸ್. ಮದಭಾವಿಯವರು…ಎಲ್ಲರೂ ಡಾ. ವಿವೇಕ ರೈಯವರ ಅಧ್ಯಕ್ಷತೆಯಡಿ ನಡೆದ ’ಶತಮಾನೋತ್ಸವ ಸಾಹಿತಿಗಳು’ ಗೋಷ್ಟಿಯಲ್ಲಿ. ಮುಂದೆ ಸಾಗಿ ಉಪನ್ಯಾಸ ಮಾಡಿದವರು ಪ್ರೊ.ಬಿ.ಆರ್.ಕೊಂಡಾ ಅವರು. +ಸಮ್ಮೇಳನಕ್ಕೆ ಅಂಗಣವಾಗಿದ್ದ ಬಿವಿಬಿ ಕಾಲೇಜಿನ ಮಾಜಿ ಪ್ರಾಂಶುಪಾಲರು. ಬೀದರಿನ ಇತಿಹಾಸದ ಮೆಲುಕು ಹಾಕಿದರು…. ಎಷ್ಟೋ ಹೊಸ ಸಂಗತಿಗಳಿದ್ದವು…..ವಿಕ್ರಮಾದಿತ್ಯ ೩ ಇವನ ಆಡಳಿತದ ರಾಜಧಾನಿಯಾಗಿದ್ದು ಕಲ್ಯಾಣ ನಗರ….’ಮಿತಾಕ್ಷರ’ ಬರೆದ ವಿಜ್ಞಾನೇಶ್ವರ ಜನಿಸಿದ್ದು ಭಾಲ್ಕಿ ತಾಲೂಕಿನ ಮಾಸೆಮಡುವಿನಲ್ಲಿ…..೧೬ನೇ ಶತಮಾನದ ಹೊತ್ತಿಗೇ ಬೀದರವು ಅಲೆಸೆ ನಿಕೆಟಿನ್ ಎಂಬ ರಷ್ಯನ್ ಪ್ರವಾಸಿಯ ಡೈರಿಯಲ್ಲಿ ಸ್ಥಾನ ಪಡೆದದ್ದು. ಹೀಗೆ ಮತ್ತೂ ಹಲವು. ವಚನ ಸಾಹಿತ್ಯ ಪರಂಪರೆಯ ಬಗ್ಗೆ ಪ್ರೊ. ಕಿ. ರಂ. ನಾಗರಾಜರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿಯಲ್ಲ ಕಿರಂ ರ ಮಾತುಗಳು ಮತ್ತೆ ಮತ್ತೆ ಕೇಳಬೇಕೆನಿಸಿದ್ದವು. ಅತ್ಯಂತ ಕಳೆಹೀನವಾಗಿದ್ದು ಮಾತ್ರ ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು ಕುರಿತಾದ ಶ್ರೀಮತಿ ಗೀತಾ ನಾಗಭೂಷಣರವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಗೋಷ್ಟಿ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕೇಳಲು ಅವಕಾಶವಿದ್ದದ್ದು ಒಂದೊಂದು ಪ್ರಶ್ನೆ ಮಾತ್ರ…..ಈ ಸಂವಾದದಲ್ಲಿ ಶಾಂತರಸರ ವೈಚಾರಿಕ ಗಟ್ಟಿತನ ಮತ್ತಷ್ಟು ಬೆಳಕಿಗೆ ಬಂತು. ಹೊತ್ತಲ್ಲದ ಹೊತ್ತಿನಲ್ಲಿ ನಡೆದದ್ದು ಮಕ್ಕಳ ಕವಿಗೋಷ್ಟಿ…ಮಕ್ಕಳ ಸಾಹಿತ್ಯ ಗೋಷ್ಟಿ ಎಂದಿರಬೇಕಿತ್ತೇನೋ… ಈ ನಡುವೆ ಈ ಹೊತ್ತಲ್ಲದ ಹೊತ್ತು ಆಗಲು ಕಾರಣ ನಡುವೆ ಕಾರ್ಯಕ್ರಮ ಪಟ್ಟಿಯಲ್ಲಿಲ್ಲದ ಜನಪ್ರಿಯ ನಟರುಗಳಾದ ’ಉಪೇಂದ್ರ’ ಹಾಗೂ ’ರಮೇಶ’ ರ ರಸಮಂಜರಿ ಹೆಸರಿನ ’ವಿಸಿಟ್’. +ಮೂರನೇ ದಿನ : +ಹಿರಿಯ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗಯ್ಯನವರು ಗಮನಸೆಳೆದರು. ಈ ದಿನ ಮುಖ್ಯಮಂಟಪದಲ್ಲಿ ನಡೆದ ಇನ್ಯಾವುದೇ ಕಾರ್ಯಕ್ರಮದಲ್ಲಿ ಹಾಜರಿರಲು ನನಗೆ ಸಾಧ್ಯವಿರಲಿಲ್ಲ. ಎರಡು ದಿನಗಳಿಂದಲೂ ಭೇಟಿ ನೀಡದಿದ್ದ, ಪುಸ್ತಕ ಮಳಿಗೆಗಳಿಗೆ ಹೋದೆ…ಒಂದೆರಡು ಕೆಲವಾದರೂ ಅಪರೂಪದ ಪುಸ್ತಕಗಳು ಸಿಕ್ಕಾವೇನೋ ಎಂದು. ಕನ್ನಡ ಪುಸ್ತಕಗಳನ್ನು ಚಾಪಿಸುವವರು, ಮಾರುವವರ ಒಂದು ದೊಡ್ಡದಲ್ಲದಿದ್ದರು ಗಮನ ಸೆಳೆಯುವ ವಾತಾವರಣವನ್ನು ಕಂಡೆ. ಅಲ್ಲಿ ಸೇಡಬಾಳ, ಅಥಣಿ ಯಂತಹ ಕರ್ನಾಟಕದ ಮೂಲೆಗಳಲ್ಲಿ ಧಾರ್ಮಿಕವಲ್ಲದ ಸೃಜನಶೀಲ ಕೃತಿಗಳನ್ನು ಪ್ರಕಟಿಸಿ ಮಾರುವ ಸಂಸ್ಥೆಗಳನ್ನು ಕಂಡೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಸಹ ಕೆಲವೇ ಕೆಲವು ಅಂಗಡಿಗಳಿಗೆ ಸೀಮಿತಗೊಂಡಿರುವ ಕನ್ನಡದ ಗಂಭೀರ ಸಾಹಿತ್ಯ ಕೃತಿಗಳನ್ನು ಮಾರುವ ಬುಕ್ ಸ್ಟಾಲ್ ಗಳು ಅಷ್ಟೇನು ಅಭಿವೃದ್ಧಿಯನ್ನೇನು ಕಾಣದ ಕೊಪ್ಪಳದಲ್ಲೂ, ಗಡಿ ಪ್ರದೇಶಗಳಾದ ಭಾಲ್ಕಿ, ಬೀದರ ಇವುಗಳಲ್ಲಿಯೂ ಇರುವುದು ಮಹತ್ವದ ಆರೋಗ್ಯಕರ ಸಂಗತಿ ಎನಿಸಿತು. ಆ ಕಾರಣಕ್ಕೇನೇ, ’ಸಂಸ್ಕೃತಿ ಕಥನ’ ವನ್ನು ಅಂಥಹ ಒಂದು ಮಳಿಗೆಯಲ್ಲೇ ಖರೀದಿ ಮಾಡಿ ಅವರಿಗೂ ’ಲಾಭ’ ಮಾಡಿದೆ!. +ಉಳಿದಂತೆ ಆ ಮೂರು ದಿನಗಳನ್ನು ಇಂದಿನ ನನ್ನ ಈ ಕ್ಯುಬಿಕಲ್ ನಿಂದ ನೋಡುವುದೂ ಅಗತ್ಯವೆನಿಸುತ್ತಿದೆ. ಸಾಹಿತ್ಯ ಸಮ್ಮೇಳನದ ಒಂದು ಕಲ್ಪನೆ ಹುಟ್ಟಿಕೊಂಡಿರುವದು, ಹಿಂದಿನಿಂದಲೂ ಸಹೃದಯರೆನಿಸಿಕೊಂಡಿರುವ ಕನ್ನಡ ಮರಾಠಿಗರಲ್ಲಿ…ಉಳಿದಂತೆ ದಕ್ಷಿಣದ ಇತರ ಭಾಷೆಗಳಲ್ಲಿ ಈ ಪ್ರಮಾಣದ ಸಮ್ಮೇಳನಗಳು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ನಡೆಯುವುದು ನನ್ನ ಗಮನಕ್ಕಂತೂ ಬಂದಿಲ್ಲ. ನಾವು ಹೆಮ್ಮೆ ಪಡಬಹುದಾದ ಕೆಲವೇ ನಮ್ಮತನಗಳಲ್ಲಿ ಇದೂ ಒಂದು! ಆದರೆ ಜಡ್ಡು ಹತ್ತಿರುವ ನಮ್ಮ ಒಟ್ಟೂ ವ್ಯವಸ್ಥೆಯ ಭಾಗವಾಗಿ ಇವು ರೂಪುತಳೆದಿರುವುದು ಮಾತ್ರ ವಿಪರ್‍ಯಾಸಕರ. ಪ್ರತಿ ಸಾಹಿತ್ಯ ಸಮ್ಮೇಳನವಾದಾಗಲೂ ನಮ್ಮ ಪತ್ರಿಕೆಗಳು, ಪಿರಿಯಾಡಿಕಲ್ ಗಳು ಮಣಗಟ್ಟಳೆ ಲೇಖನಗಳನ್ನು ಅನಿಸಿಕೆ-ವಿಚಾರಗಳನ್ನು ಪ್ರಕಟಿಸುತ್ತವೆ. ಮತ್ತೂ ವಿಪರ್‍ಯಾಸವೆಂದರೆ, ಇಷ್ಟು ಕ್ರಾಂತಿಯಾಗಿರುವ ಮಾಧ್ಯಮ ಕ್ಷೇತ್ರದ ಬಗೆಗೆ ಒಂದೇ ಒಂದು ಗಂಭೀರ ಗೋಷ್ಟಿಯೂ ಇರದಿರುವುದು. ಈ ಸಮ್ಮೇಳನ ಕನ್ನಡಿಗರ ಹಬ್ಬವೆಂಬುದೇನೋ ಸರಿ…ಆದರೆ ಯಾವ ಕನ್ನಡಿಗರು ಎಂದು ಉತ್ತರಿಸಹೊರಟರೆ, ಆಡಳಿತವರ್ಗಕ್ಕೆ ಹತ್ತಿರವಾದವರೂ, ತಮ್ಮ ವಿಚಾರಹೀನತೆನ್ನೂ ಇಂತಹ ವೇದಿಕೆಗಳಿಂದಲೇ ಸಮರ್ಥಿಸಿಕೊಂಡು ಬಿಡುವವರು ಎಂದು ಸ್ಪಷ್ಟವಾಗಿ ಕಣ್ಣಿಗೆಕಟ್ಟಿದಂತೆ ಗೋಚರವಾಗುತ್ತದೆ. ಯಾವ ಗೋಷ್ಟಿಗಳು ಗಂಭೀರತೆಯ ತುಸುವೇ ಸನಿಹಕ್ಕೂ ಹೋಗುತ್ತಿಲ್ಲ. ಗಂಭೀರತೆಯಿಲ್ಲದ ಯಾವ ಚರ್ಚೆಯಿಂದಲೂ ಕ್ರಿಯಾಶೀಲವಾದದ್ದು ಏನೂ ನಡೆಯಲಾಗದು. +***** +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ […] +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_610.txt b/Kannada Sahitya/article_610.txt new file mode 100644 index 0000000000000000000000000000000000000000..1a05d3dd2265589a40264fc54a03a516b5994f54 --- /dev/null +++ b/Kannada Sahitya/article_610.txt @@ -0,0 +1,383 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಣ್ಣ ಪದ +ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ +ಸದ್ದು ಗದ್ದಲ| ಮಾಡಬ್ಯಾಡ್ರಿ ಆಟದೊಳಗ +ಸಣ್ಣ ಹುಡುಗರು ನಾವು ಬಣ್ಣಕ ಹೆದರವರು +ಚೆನ್ನಾಗಿ ಕೇಳರಿ ನಮ್ಮ +ಕೂತೀರಿ ಹೆಣ್ಣು ಗಂಡು ಭರ್ತಿಸಭಾ ಇರಲಿ +ಬುದ್ಧಿವಂತರ ಪ್ರೀತಿ ನಮ್ಮ ಮ್ಯಾಲ +ಭೂಸನೂರಮಠದಯ್ಯಾ ಸಾವಳಗಿ ಶಿವಲಿಂಗಾ +ಇರಲೆಪ್ಪಾ ನಿಮ್ಮ ಪ್ರೀತಿ ನಮ್ಮ ಮ್ಯಾಗ|| +ಪೂರ್ವರಂಗ +[ರಂಗದ ಮಧ್ಯದಲ್ಲಿ ತರಕಾರಿ ತುಂಬಿದ ಒಂದು ಬುಟ್ಟಿ, ಅದರ ಮಧ್ಯದಲ್ಲಿ ಒಂದು ಪಡವಲ ಕಾಯನ್ನು ಲಂಬವಾಗಿ ನೆಟ್ಟಿದೆ.] +ಸೂತ್ರಧಾರ: ಕೂತ ನಿಂತಂಥಾ ಬುದ್ಧಿವಂತರಿಗೆಲ್ಲಾ ಶರಣು, ಈ ನಮ್ಮಾ ಹೊಸ ದೇವರು ಕಾಣಿಸ್ತಾನಲ್ಲ- ಹೆಸರು ಜೋಕುಮಾರಸ್ವಾಮಿ ಅಂತ. ಜೋಕುಮಾರನ ಸುದ್ದಿ ನಿಮಗೇನೂ ಹೊಸದಲ್ಲ. ಅದರ ಬ್ಯಾರೆ ದೇವರಿಗೂ ಈ ದೇವರಿಗೂ ಒಂದ ಫರಕ ಐತಿ. ಉಳಿದ ದೇವರು ಸ್ವಲ್ಪ ಮುಖ ಸ್ತುತಿ ಮಾಡಿದರ ಸಾಕು, ಬಾಯಿತುಂಬ ವರ ಕೊಡತಾವ. ಯಾಕೋ ಏನೋ ಒಂದು ವರಾನೂ ಖರೆ ಬರಾಣಿಲ್ಲ. ಅವೂ ಮಂತ್ರಿಗಳ ಮಾತಿನ್ಹಾಂಗ ಹುಸಿ ಹೋಗತಾವಷ್ಟೇ, ಆದರ ಈ ನಮ್ಮ ದೇವರು ನೈವೈದ್ಯ ನೀದಿದರ ಮಾತಾಡ್ಯಾನೂ ಅಂದೀರಿ, ಪೂಜಿಮಾಡಿ ಮ್ಯಾಲ ತೋಳ ತೆಕ್ಕಾಗ ಹಿಡಾಕೊಂಡಾರ, ಕೆಳಗ ಉಡೀತುಂಬ ಮಕ್ಕಳಾ ಕೊಟ್ಟಿರತಾನ! ಇಂಥಾ ವಿಪರೀತ ದೇವರ ಕಥೀನ ಇಂದಿನ ಆಟ. +ಎಲ್ಲಿ? ಅಪೂ ಹಿಮ್ಯಾಳ್ಯಾ- +ಹಿಮ್ಮೇಳ: ಯಾಕ್ಕರದಿ? ಯಾಕ್ಕರದಿ? +ಸೂತ್ರದಾರ: ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು. ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ ಪೂಜಿಸುವಂಥವನಾಗು. +ಹಿಮ್ಮೇಳ: ದೇವರು ಎಲ್ಲೈತೆಂದಿ? +ಸೂತ್ರಧಾರ: ಇಲ್ಲಿ ಕಾಣ್ಸಾಣಿಲ್ಲ? +ಹಿಮ್ಮೇಳ: ಈ ದೇವರ? +ಸೂತ್ರಧಾರ: ಯಾಕ ಈ ದೇವರಿಗೇನಾಗೇತಿ? +ಹಿಮ್ಮೇಳ: ಆಟದ ಆರಂಭಕ್ಕ ಗಣೇಶನ ಪೂಜೆ ಮಾಡೋದ ಬಿಟ್ಟ, ಇಂಥಾ ದೇವರ ಪೂಜೆ ಮಾಡಂತಿ; ತಿಳಿಬಾರದ? ನಾಕ ಮಂದಿ ಬುದ್ಧಿವಂತರೇನಂದಾರ? +ಸೂತ್ರಧಾರ: +ಹುಚ್ಚಾ, ಎಲ್ಲಾ ದೇವರೂ ಒಂದ ಅಂದಮ್ಯಾಲ ಯಾವ ದೇವರ ಪೂಜೆ ಮಾಡಿದರೇನಾ? ಹಾಂಗ ನೋಡಿದರ ಈ ಜೋಕುಮಾರಸ್ವಾಮಿ ಗಣೇಶಗ ಖಾಸ ತಮ್ಮಂದಿರಾಗಬೇಕು. ಇಂದಿನ ಆಟದ ಕಥೀನೂ ಈ ದೇವರ್‍ದ. ಮೂಲ ದೇವರನ್ನ ಹಾಂಗೆಲ್ಲಾ ಮರೀಬಾರದೇನಪಾ. +ಹಿಮ್ಮೇಳ: ಅಂಥಾದ್ದೇನಪಾ ಇವನ ಮಹಿಮಾ? +ಸೂತ್ರಧಾರ: ಈ ಹೊತ್ತಿನ ಶುಭಮುಹೂರ್ತದಲ್ಲಿ, ಮಕ್ಕಳಿಲ್ಲದ ಬಂಜೇರು ಬಂದು, ಪೂಜಾ ಮಾಡಿ, ಸ್ವಾಮೀನ ಪಲ್ಯಾ ಮಾಡಿ ಗಂಡಗ ತಿನ್ನಿಸಿದರ, ಅಪಾ ಹತ್ತೆಂಟ ಮಕ್ಕಳು ಹಾ ಅನ್ನೂದರೊಳಗ ಹುಟ್ಟುತಾವ! +ಹಿಮ್ಮೇಳ: ಬರೋಬರಿ. ಅದಕ್ಕ ಹೆಂಗಸರ ಬಂದಿಲ್ಲ. ಫೆಮಿಲಿ ಪ್ಲಾನಿಂಗ್ ಸಮಾಚಾರ ನಿನಗ ಗೊತ್ತ ಇಲ್ಲೇನ? +ಸೂತ್ರಧಾರ: ಅಪೂ ಹಿಮ್ಯಾಳ್ಯ, ಗಂದಂದಿರ ಪ್ರೀತಿ ಕಳಕೊಂಡಂಥ ಬಾಲೇರು ಬಂದು, ಸ್ವಾಮೀನ್ನ ಪಲ್ಯ ಮಾಡಿ ತಿನ್ನಿಸಿದರ ಗಂಡಂದಿರೆಲ್ಲ ಹಳೇ ನಾಯಿ ಹಾಂಗ ಮನ್ಯಾಗ ಬಿದ್ದಿರತಾರ! +ಹಿಮ್ಮೇಳ: ಹಾಂಗಿದ್ದರ ಇದು ಭಾಳ ಮಂದಿ ಹೆಂಗಸರಿಗೆ ಗೊತ್ತಿಲ್ಲ ಬಿಡು. +ಸೂತ್ರಧಾರ: ಇಂಥಾ ದೇವರಿಗೆ ಏನೇನೂ ಅನ್ನಬಾರದು. ಪೂಜಾ ಸಾಮಗ್ರಿ ತಗೊಂಬಾ. +ಹಿಮ್ಮೇಳ: ತಾ ಅಂದರ ತಂದೇನಪಾ,- ಅದರ ಮಂದಿ ಬೈದರ ಆ ಬೈಗಳ್ನೆಲ್ಲಾ ನಿನ್ನ ಹೆಸರಿಗೇ ಜಮಾ ಮಾಡಾವ ನಾನು, ತಾ ಅಂದಿ? +ಸೂತ್ರಧಾರ: ತಗೊಂಬರುವಂಥವನಾಗು. +ಹಿಮ್ಮೇಳ: ಘನಲಜ್ಜಿಗೇಡಿ ನೀನೂ! ಏನೇನ ತರಲಿ? +ಸೂತ್ರಧಾರ: ಕರಿಕಿ, ಪತ್ರಿ. +ಹಿಮ್ಮೇಳ: ಕರಿಕಿ ಪತ್ರಿ? ನಿಮ್ಮ ದೇವರು, ಯಾವದಾದರು ದನದ ಜಾತಿ ಇದ್ದಿರಬೇಕೇನ? ಹಾಗಿದ್ದರ ಹೊಲದ ಕಡೆ ಹೊಡದ ಬಿಡಲ್ಲ. ಮೇದ ಬರಲಿ. +ಸೂತ್ರಧಾರ: ಹುಚ್ಚಾ, ಬೆಂಕಿಯಂಥಾ ದೇವರಿಗಿ ಚೇಷ್ಟಾ ಮಾಡಬಾರದು. ಶುಚಿರ್ಭೂತನಾಗಿ ಕರಿಕಿ ಪತ್ರ ತರುವಂಥವನಾಗು. +ಹಿಮ್ಮೇಳ: ಹಾಂಗ ಆಗಲಿ, ಸೂತ್ರಧಾರ ನಾನಾದರು ಕರಿಕಿ ಪತ್ರ ತಂದೇನ್ನೋಡು. +ಸೂತ್ರಧಾರ: ಇನ್ನು ಮ್ಯಾಲೆ ಪನ್ನೀರು ತರುವಂಥವನಾಗು. +ಹಿಮ್ಮೇಳ: ಕಣ್ಣೀರಾ? +ಸೂತ್ರಧಾರ: ಪನ್ನೀರು, ಪನ್ನೀರು. +ಹಿಮ್ಮೇಳ: ತಿಳೀತ ಬಿಡು. +ಸೂತ್ರಧಾರ: ಏನ ತಿಳೀತು. +ಹಿಮ್ಮೇಳ: ಹಜಾಮರ ಬಟ್ಟಲದಾಗಿರತಾವ, ಅದ ನೀರ ಹೌಂದಲ್ಲ? +ಸೂತ್ರಧಾರ: ಹುಚ್ಚಾ, ಪರಿಶುದ್ಧವಾದ ನೀರಿಗೆ ಪನ್ನೀರು ಪನ್ನೀರು ಅಂತಾರ. ಅಂಥಾ ಪನ್ನೀರು ತಗೊಬರುವಂಥವನಾಗು. +ಹಿಮ್ಮೇಳ: ಸೂತ್ರಧಾರ, ಅವನ್ನಾದರೂ ತಂದಿದ್ದೇನ್ನೋಡು. +ಸೂತ್ರಧಾರ: ಇನ್ನು ಮೇಲೆ ಫಲಪುಷ್ಪ ತಗೊಂಡು ಪೂಜಾ ಮಾಡಲಿಕ್ಕೆ ಒಬ್ಬ ಗರತೀನ ಕರಕೊಂಡು ಬರುವಂಥವನಾಗು. +ಹಿಮ್ಮೇಳ: ನಿಮ್ಮ ದೇವರು ಭಾರೀ ತುಟ್ಟೀದಪಾ! ಫಲ ತಂದೇನು, ಪುಷ್ಪ ತಂದೇನು. ಗರತಿ ಬೇಕಂತಿ. ಎಲ್ಲಿಂದ ತರಲಿ? ಶುದ್ಧ ಗರತೀನ ಬೇಕಂದಿ? +ಸೂತ್ರಧಾರ: ಹೌಂದೌಂದು, ಶುದ್ಧ ಗರತೀನ ಆಗಬೇಕು. +ಹಿಮ್ಮೇಳ: ಅದರಾ‌ಅಗ ಸ್ವಲ್ಪ ಬೆರಕಿಯಿದ್ದರ? +ಸೂತ್ರಧಾರ: ಛೇ ಛೇ ಹಾಂಗೆಲ್ಲ ಹೇಳಬಾರದು. +ಹಿಮ್ಮೇಳ: ಸೂತ್ರಧಾರ, ಫಲಪುಷ್ಪ ತಂದೇನ್ನೋಡು. ಗರತಿ ಸಮಾಚಾರ ನನ್ನಿಂದ ಆಗಾಣಿಲ್ಲ ತಗಿ. ಬೇಕಂದರ ಈಗ ಯಾರೂ ಇಲ್ಲ. ನಾನ ಹೆಂಗಸಂತ ತಿಳಕೊಂಡು ಸಾಗಸೋ ಹಾಂಗಿದ್ದರ ಸಾಗಸು. +ಸೂತ್ರಧಾರ: ಅಪಾ, ಹೀಂಗ್ಯಾಂತೀಯೋ? +ಹಿಮ್ಮೇಳ: ಹೆಂಗೇನ? ಇಂಥಾ ದೇವರ ಪೂಜಿಗಿ ಮಾನ ಮರ್‍ಯಾದಿ ಇದ್ದವರು ಯಾರ ಬಂದಾರ ಹೇಳು? ಇದ್ದ ಮಾತ ಹೇಳಬೇಕಂದರ ಈ ಊರಾಗ ಖರೇ ಗರತೇರ ಯಾರಾದರೂ ಇದ್ದರ ಅದು ನಮ್ಮಂಥಾ ನಾಕೈದ ಮಂದಿ ಹುಡುಗೋರಂತ ತಿಳಿ ಮತ್ತ! ಅಲ್ಲಾ, ನಿಮ್ಮ ದೇವರಿಗಿ ಅದ್ಯಾಕಿಷ್ಟ ಹೆಂಗಸರ ಖಯಾಲಿ? +ಸೂತ್ರಧಾರ: ಹಾಂಗ ಆಗಲಿ, ನೀನ ಪೂಜೀ ಮಾಡು. +[ ಸೂತ್ರಧಾರ ಮೇಳದೊಂದಿಗೆ ಹಾಡುತ್ತಾನೆ. ಹಾಡಿನೊಂದಿಗೆ ಹಿಮ್ಮೇಳದವನು ಪೂಜಿ ಮಾಡುತ್ತಾನೆ.] +ಮೇಳ: ಸುವ್ವೀ ಬಾ ಸುಂದರ | ಸ್ವಾಮಿ +ಸುವ್ವೀ ಬಾ ಚಂದಿರ +ಸುವ್ವೀ ಬಾರಯ್ಯಾ ಜೋಕುಮಾರಸ್ವಾಮಿ|| +ಸೊಪ್ಪಿನ ದೆವರೂ ಬೈಗಳ ಮಂಗಳಾರತಿವನೊ +ಉಪ್ಪು ಹುಳಿ ಖಾರ ನವಿ‌ಅದ್ಯದವನೊ|| +ಮಳೆಯಾಗಿ ಬಿದ್ದವನೆ ಸ್ವಾಮಿ ಬೆಳೆಯಾಗಿ ಎದ್ದವನೆ +ಎಳಿನಗಿ ನಕ್ಕವನೆ ಬೇಲಿ ಹೂವಿನೊಳಗೆ|| +ಹುಟ್ಟಿದೆರಡ ದಿನಕ ಪಟ್ಣದ ಹುಡಿಗೇರನೆಳೆದವನೆ +ಮದ್ಮಿ ಬಂದಾರೊ ಕುಡಗೋಲ ಹಿಡದಾ|| +ಹಿಮ್ಮೇಳ: ಇಂಥಾ ಹಲ್ಕಾ ದೇವರನ್ನ, ಅದೂ ಇಂಥಾ ಸಾರ್ವಜನಿಕ ಸ್ಥಳದೊಳಗ ಹೆಂಗ ಪೂಜೀ ಮಾಡಂತೀಯೋ? +ಸೂತ್ರಧಾರ: ಅದೆಲ್ಲಾ ಮನುಷ್ಯರೊಳಗ ಇರತದೇನಪಾ, ದೇವರೊಳಗ ಸ್ಸಾಚಾ ದೇವರು, ಹಲ್ಕಾ ದೇವ ಇರೋದಿಲ್ಲಾ. +ಹಿಮ್ಮೇಳ: ನೀ ಈ ಹೊತ್ತ ಏನ ಮರತ ಬಂದಿದಿ‌ಈ ತಿಳೀತ ನನಗ. +ಸೂತ್ರಧಾರ: ಅದೇನಪಾ? +ಹಿಮ್ಮೇಳ: ನಾಚಿಕಿ ಹಿಡಿದರ ನಮ್ಮ ದೇವರು ಸಿಟ್ಟಾತಾನ. ಸುಮ್ಮನ ಕೇಳುವಂಥವನಾಗು. +ಸೂತ್ರಧಾರ: ಹೂ ಹೊಡಿ. +ಮೇಳ: ಹುಟ್ಟಿದ್ಮೂರನೆ ದಿನಕ ಮುಟ್ಯಾದ ಹುಡಿಗೇರನೆಳದವನೆ +ಮೂವರು ಬಂದಾರೊ ಕೋಲ ಕೊಡಲಿ ಹಿಡದಾ|| +ನಾಕನೆ ದಿನದೊಳಗ ಸ್ವಾಮಿ ಮುದಿಕೇರನೆಳದನೆ +ಮುದುಕರು ಬಂದಾರೊ ಗುಂಡುಕಲ್ಲ ಹಿಡದಾ|| +ಹುಟ್ಟಿದೈದನೆ ದಿನಕ ಸ್ವಾಮಿ ಐದೇರನೆಳಾzವನೆ +ಹೈದರು ಬಂದಾರೊ ಹಗ್ಗ ಬಲಿಯ ಹಿಡದಾ|| +ಹುಟ್ಟಿದಾರನೆ ದಿನಕ ಸ್ವಾಮಿ ನಾರೇರನೆಳದವನೆ +ಕರದ ತಂದಾರೊ ಐದನೂರ ಮಂದಿ|| +ಹಿಮ್ಮೇಳ: ಸಡ್ಲ ಬಿಟ್ಟರ ನೀನೂ ಭಾರಿ ಹಾಡವಪಾ| ಹಾಡಾಗಿ ಯಾರಿಗಿ ಬರಾಣಿಲ್ಲಾ? ಹಾಡ್ಲಿ?- +ಮೋತರದಾಗ ಇದ್ದವನೆ ಥೇಟರದಾಗ ಬಿದ್ದವನೆ +ಮನೆಯಿಲ್ಲೇನಯ್ಯಾ ಮಲಗಲಿಕ್ಕೆ?|| +ಸೂತ್ರಧಾರ: ಯಾಕ ನಾ ಚಂದದಿಂದ ಹಾಡಲಿಲ್ಲೇನು? +ಹಿಮ್ಮೇಳ: ಓಹೋ! ಬಾಳ ಚಂದದಿಂದ ಹಾಡಿದಿ. ಅದರ ಸೊಲ್ಪ ಕಡಿಮಿ ಚಂದದಿಂದ ಹಾಡಬಾರದ? ಇಲ್ಲದಿದ್ದರೆ ಕೂತ ಮಂದಿಗಿ ಹಾಡಿನರ್ಥ ತಿಳದರ ಏನ ಮಾಡತಿ? ಇಂಥಾ ಮಾತ ತಿಳೀಧಾಂಗ ಹೇಳಬೇಕೆನಪಾ! +ಸೂತ್ರಧಾರ: ಅಪಾ, ಈ ಯಾವ ಮಹಾದೇವರ ಮಹಿಮೆಯನ್ನು ನಾನು ಗದ್ಯದಲ್ಲಿ ವರ್ಣನೆ ಮಾಡಬೇಕೇನು? +ಹಿಮ್ಮೇಳ: ಇಲ್ಲದಿದ್ದರ ಇದು ಭಾಳ ರಿಸ್ಕೀ ದೇವರೋ ಹುಚ್ಚಾ. +ಸೂತ್ರಧಾರ: ಹಾಂಗಿದ್ದರ ಕೇಳುವಂಥವನಾಗು, ಈ ಯಾವ ನಮ್ಮ ಮಹಾದೇವರು, ಸೊಪ್ಪಿನ ದೇವರು, ಮಳೆ ದೇವರು, ಬಳೆ ದೇವರು, ಬೈಗುಳ ದೇವರು, ಜೋಕುಮಾರಸ್ವಾಮಿ. +ಹಿಮ್ಮೇಳ: ಓಹೋ! +ಸೂತ್ರಧಾರ: ಹುಟ್ಟಿದೆರಡೇ ದಿನದಲ್ಲಿ ಪಟ್ಟಾಣದ ಹುಡಿಗೇರನ್ನ, +ಹಿಮ್ಮೇಳ: ಆಹಾ! +ಸೂತ್ರಧಾರ: ಇಲ್ಲಿ ತಪ್ಪಿದಿ. +ಹಿಮ್ಮೇಳ: ಯಾಕ? +ಸೂತ್ರಧಾರ: ಎಂಥಾ ಅಪರೂಪ ದೇವರ ಬೆನ್ನ ಹತ್ತಿದೀಯೋ? ಮನಶೇರಿಗೊಂದ ಬ್ಯರೆ ಉದ್ಯೋಗಿಲ್ಲಾ ಎಳೀತಾರ, ನಿಮ್ಮ ದೇವರೂ ಎಳೇಯೋದಂದರ! ಹುಡಿಗೇರ್‍ನ ಎಳದಾ, ಮುದಿಕೇರ್‍ನ ಏಲದಾ! ಹೋಗಲಿ, ಅದನ್ನಷ್ಟ ಮುಚ್ಚಿಹೇಳಾಗಾ ಆಗಾಣೀಲ್ಲೇನ? +ಸೂತ್ರಧಾರ: ಎದನ್ನ? +ಹಿಮ್ಮೇಳ: ಎಳದಾ ಎಳದಾ ಅನ್ನೋದನ್ನ? ಇಂಥಾ ಮಾತಿಗಿ ಈ ಕಡೆ ಅಶ್ಲೀಲ ಅಂತಾರೇನಪಾ. ನೋಡಿಲ್ಲಿ ಯರ್‍ಯಾರ ಕುಂತಾರ…ಇಂಥಾ ಮಾನವಂತg ಸಭಾದೊಳಗ ಅಶ್ಲೀಲ ಅನ್ನಬಾರದು. ಅದಕ್ಕೊಂದಾ ಉಪಾಯ ಹೇಳಲ? ಎಳದಾ ಎಳದಾ ಬಂದಲ್ಲೆಲ್ಲಾ ಲವ್ ಮಾಡಿದಾ ಲವ್ ಮಾಡಿದಾ ಅನ್ನು. +ಸೂತ್ರಧಾರ: ಹಾಂಗ ಆಗಲಿ. ಈ ನಮ್ಮ ಮಹಾದೇವರು… +ಹಿಮ್ಮೇಳ: ಸೊಪ್ಪಿನ ದೇವರು ಆ ದೇವರು ಈ ದೇವರು ಇತ್ಯಾದಿ ದೇವರು…ಮುಂದ? +ಸೂತ್ರಧಾರ: ಹುಟ್ಟಿದ ಮೂರನೆ ದಿನದಲ್ಲಿ ಏನು ಮಾಡಿದ? +ಹಿಮ್ಮೇಳ: ಏನು ಮಾಡಿದಾ? +ಸೂತ್ರಧಾರ: ಮುಟ್ಟಾದಂಥಾ… +ಹಿಮ್ಮೇಳ: ಮತ್ತ ಅಶ್ಲೀಲ! ಆ ಪದ ತಗದು ಗಟ್ಟಿ ಹುಡಿಗೇರು ಅನ್ನು +ಸೂತ್ರಧಾರ: ಹುಟ್ಟಿದ ಮೂರನೆ ದಿನದಲಿ ಗಟ್ಟಿ ಹುಡಿಗೇರನ್ನ, +ಹಿಮ್ಮೇಳ: ಲವ್ ಮಾಡಿದಾ +ಸೂತ್ರಧಾರ: ನಾಕನೆ ದಿನ ಮುದಿಕೇರನ್ನ, +ಹಿಮ್ಮೇಳ: ಲವ್ ಮಾಡಿದಾ +ಸೂತ್ರಧಾರ: ಐದನೇ ದಿನದಲ್ಲಿ ಇ‌ಅದನೇರನ್ನ +ಹಿಮ್ಮೇಳ: ಲವ್ ಮಾಡಿದಾ +ಸೂತ್ರಧಾರ: ಆರನೇ ದಿನದಲ್ಲಿ ನಾರೇರನ್ನಾ +ಹಿಮ್ಮೇಳ: ಲವ್ ಮಾಡಿದಾ. ಅಪ್ಪಾ ಸೂತ್ರಧಾರ, ನಿಮ್ಮ ದೇವರು ಪ್ರಾಸಕ್ಕಾಗಿ ಅವರನ್ನೆಲ್ಲ ಲವ್ ಮಾಡಿದ್ನೋ? ಅಥವಾ ನೀನ ಹೊಂದಿಸಿಯೋ? ಇರಲಿ ಮುಂದೇನಾಯ್ತು? +ಸೂತ್ರಧಾರ: ಆವಾಗ ಏಳನೇ ದಿನಾ- ಹೆಂಡಂದಿರ ಗಂಡರು ಕೊಡಲಿ ಹಿಡಕೊಂಡು ಬಂದರು. ಮುದಿಕೇರ ಮುದುಕರು ಗುಂಡುಕಲ್ಲ ಹ್ಹಿಡಕೊಂಬಂದರು. ಐದೇರ ಹೈದರು ಹಗ್ಗದ ಬಲಿ ಹಿಡಕೊಂಬಂದರು. ಹಿಂಗ ಅಲ್ಲರೂ ಎಣಿಸಿ ಐನೂರ ಜನಾ ಆಗಿ ಎಲ್ಲಿ ಬಂದರು? +ಹಿಮ್ಮೇಳ: ಜೋಕುಮಾರಸ್ವಾಮಿ ಹತ್ತರ ಬಂದರು. +ಸೂತ್ರಧಾರ: ಬಂದೇನ ಮಾಡಿದರು? +ಹಿಮ್ಮೇಳ: ಅದಿರ್‍ಲಿ. ಮುಂದಿಂದ ನೀ ಹಾಡಿನಾಗ ಹೇಳೋಡು ಒಳ್ಳೇದೇನಪಾ, ಯಾಕಂದರ ನಿನ್ನ ಗದ್ಯ ಸೊಲ್ಪ ದೇಂಜರಸ್ ಕಾಣತದ +ಹಾಂಗಿದ್ದರ ಕೇವಂಥವನಾಗು. ಆ ಐನೂರ್‍ಮಂದಿ ಜೋಕುಮಾರಸ್ವಾಮಿ ಹತ್ತಿರ ಬಂದೇನ ಮಾಡಿದರು? +ಹಿಮ್ಮೇಳ: ಏನ ಮಾಡಿದರು? +ಮೇಳ: ಎಣಿಸಿ ಐನೂರ್‍ಮಂದಿ ಅವರಿಗಿ ಸಾವಿರ ಕೈಗಳು +ಹಿಡದ ಕಡದಾರೋ ಎಳೀ ದೇವರನ್ನಾ|| +ಸಾವಿರ ಕೈಗಳು ಕೈಗೊಂದ ಕೊಡಲಿ ಕುಡಗೋಲು +ಹೊಡದ ಕೊಂದಾರೋ ಎಲೀ ದೇವರನ್ನಾ|| +ಕೊಂದಾರೆ ಒಗದಾರೋ ಸ್ವಾಮೀನ ಕಡದಾರೆ ಒಗದಾರೊ +ನೆತ್ತರ ಹರಿದಾವೊ ಹೂಳಿಹಳ್ಳ ತುಂಬಿ|| +ನೆತ್ತರ ಬಿದ್ದಲ್ಲಿ ಆಹಾ ಬೆಳಿಗಳು ಎದ್ದಾವೊ +ಮಣ್ಣು ಮಣ್ಣೆಲ್ಲಾ ಹಸಿಹಸರ ತುಬಿ|| +[ ಅಷ್ಟರಲ್ಲಿ ಹೊಲೇರ ಶಾರಿ ನರ್ತಿಸುತ್ತಾ ಬಂದು ದೇವರಿಗೆ ನಮಸ್ಕರಿಸಿದೇವರ ಬುಟ್ಟಿ ಹೊರಬೇಕೆನ್ನುವಾಗ ಹಿಮ್ಮೇಳನದವನು ಗಮನಿಸುವನು ] +ಹಿಮ್ಮೇಳ: ನಿಮ್ಮ ದೇವರು ಅಡ್ಡಿಯಿಲ್ಲಪಾ! ಖರೇ ಗಿರಾಕೀನ್ನ ಹಿಡಾಕೊಂಡ ಬಂದಾನ್ನೋಡು. +[ಅವಳ ಬಳಿ ಓಡಿಹೋಗಿ] +ಅಂದವಾದ ಮಂದಿರವನ್ನ ಬಿಟ್ಟು +ಸುಂದರವಾದ ಈ ಸಭಾಂಗಣಕ್ಕೆ ಬಂದು} +ಬಂಧುರವಾದ ಈ ದೇವರನ್ನ ಹೊತ್ತು ಒಯ್ಯುವ +ಸುಂದರೀ ನೀನು ಧಾರು? ನಿನ್ನ ನಾಮಾಂಕಿತವದೇನು? +ಹೇಳುವಂಥವಳಾಗು- +ಶಾರಿ: ಇದ್ಯಾನದ ಪುಸ್ತಕಧಾಂಗ ಮಾತಾಡತೈತಿ! +ಹಿಮ್ಮೇಳ: ಸೂತ್ರಧಾರ, ನೀನ ಬಾರಪಾ, ನಮಗಿದು ಬಗಿಹರಿವೊಲ್ದು! +ಸೂತ್ರಧಾರ: ಅಮ್ಮಾ, ಬಂದಂಥವಳು ನೀನು ಧಾರು? ನಿನ್ನ ನಾಮಾಂಕಿತವೇನು? ಅಂದದಿಂದ ತಿಳಿಸುವಂಥವಳಾಗು. +ಶಾರಿ: ಸೂತ್ರಧಾರ, ತಿಳಿಸಾಕ ಬೇಕು? +ಸೂತ್ರಧಾರ: ಹೌಂದು, ತಿಳಿಸಾಕ ಬೇಕು. +ಶಾರಿ: ಸೂತ್ರಧಾರ, ಮುದುಕರು ಬಂದು ನನಗ ಏ ಪೋರಿ ಏ ಪೋರಿ ಅಂತಾರ, ಸಣ್ಣ ಹುಡುಗರು ಬಂದು ಏ ಮುದಿಕಿ ಏ ಮುದಿಕಿ ಅಂತಾರ. ಎರದೂ ಅಲ್ಲದ ಇಂಥಾ ಸಭ್ಯರು ಬಂದು ಹೊಲೇರ ಸೂಳಿ ಶಾರೀ ಶಾರೀ ಅಂಥಾರ ನೋಡು. +ಸೂತ್ರಧಾರ: ಅಮ್ಮಾ ನೀ ಶಾರವ್ವಂತ ನಮಗಾದರು ತಿಳಿತು, ಕೂತಂಥಾ ರಸಿಕರಿಗಾದರೂ ತಿಳೀತು. ಅದರ ಇಲ್ಲಿಗ್ಯಾಕ ಬಂದಿ? ಜೋಕುಮಾರಸ್ವಾಮಿನ್ನ ಯಾಕೆ ಒಯ್ತಿ? ಅದನ್ನಾದರೂ ತಿಳಿಸುವಂಥವಳಾಗು. +ಶಾರಿ: ಅಪ್ಪಾ, ಸೂತ್ರಧಾರ, ಜೋಕುಮಾರಸ್ವಾಮಿ ದೊಡ್ಡ ದೇವರು. ಬಂಜೇರಿಗೆ ಮಕ್ಕಳಾ ಕೊಡೋ ದೇವರು. ಗಂಡ ಇಲ್ಲದವರಿಗೆ ಗಂಡನ್ನ ಕೊಡೋ ದೇವರು. +ಹಿಮ್ಮೇಳ: ಹೊದು ನಿನಗ ಮಿಂಡನ್ನ ಕೊಡೋ ದೇವರು. +ಶಾರಿ: ಯಾರಾದರೂ ಮಕ್ಕಳಿಲ್ಲದ ಬಂಜೇರು ಬಂದು ಒಯ್ದಾರಂತ ಕಾದ ನೋಡಿದೆ, ಯಾರೂ ಬರಲಿಲ್ಲ. ನಾನಾದರೂ ಒಯ್ತೇನಿ. ನನಗೂ ವಯಸ್ಸಾಗಿ ಗಿರಾಕಿ ಕಡಿಮಿ ಆಗ್ಯಾವ, ಈ ಸ್ವಾಮೀನ್ನ ಪಲ್ಲೇ ಮಾಡಿ ನೀಡಿದರ ಇದ್ದ ಗಿರಾಕಿ ಆದರೂ ನನ್ನ ಮನೀ ಮುಂದ ಬಿದ್ದಿರ್‍ತಾವ! +ಹಿಮ್ಮೇಳ: ಅಂತೂ ದೇವರ ಉಪಯೋಗ ಐತಿ ಅಂಧಂಗಾಯ್ತು. +ಸೂತ್ರಧಾರ: ಶಾರವ್ವ ಹಾಂಗಿದ್ದರ ನೀನಾದರೂ ಸ್ವಾಮೀನ್ನ ಒಯ್ಯುವಂಥವಳಾಗು. +[ಶಾರಿ ಬುಟ್ಟಿ ಹೊರುವಳು] +ಹಿಮ್ಮೇಳ: ಏ ತಡಿ ತಡಿ, +[ ಓಡಿ ಹೋಗಿ ಅವಳ ಹಿಂದೆ ಆಶೀರ್ವಾದ ಮಾಡುವ ಭಂಗಿಯಲ್ಲಿ ನಿಂತುಕೊಡು] +ಮಗನೇ ಸೂತ್ರಧಾರ, ನಿನ್ನ ಪೂಜೆಯಿಂದ ನನಗೆ ಪ್ರೀತಿ ಆಗಿದೆ. ನಿನ್ನ ಆಟ ಸಾಧ್ಯವಾದರೆ ಸುಸೂತ್ರ ಸಾಗಲಿ ಅಂತ ಆಶಿರ್ವಾದ ಮಾಡತೇನು: ಇನ್ನು ಮೇಲೆ ನೀನು ನಿನ್ನ ಆಟ ಸುರುಮಾಡುವಂಥವನಾಗು. +[ಸೂತ್ರಧಾರ ನಮಿಸುತ್ತಾನೆ] +ಢಂ ಡಂ ದೇವರು +ಮೇಳ: ಒಂದ ಊರಾಗಿದ್ದಾನ್ರಿ ಒಬ್ಬ ಗೌಡ ಊರಾಗ ದೊಡ್ಡ ಪುಂಡಾ ಅವನ ಹೊಟ್ಟಿ ಗುಂಡಾ ತಿರಗತಾನ ಯಾವತ್ತೂ ಬಂದೂಕ ಹಿಡಕೊಂಡಾ|| ಊರ ಭೂಮಿ ಸೀಮಿಯ ಯಜಮಾನ ಬಂಗಾರ ಬೆಳ್ಳಿ ಚಿನ್ನ ಚೆಂದುಳ್ಳ ನಿವಳ ಹೆಣ್ಣಾ ಎಲ್ಲಾನೂ ತನ್ನದಂತ ಹೇಳ್ಯಾನ್ರೀ ಹೈವಾನ|| ಅವನಿಗಿದ್ದಾಳ್ರೀ ಒಬ್ಬ ಶ್ರೀಮತಿ ಕರಿಯೋಣ ಗೌಡತಿ ಚೆಮದ ಆಕೃತಿ ಬಾಯಿ ತೆರೆದ ನೋಡತಾಳ್ರಿ ಹಾರ್‍ಯಾಡುವ ಹಕ್ಕಿ|| [ಹಾಡು ಮುಗಿಯುತ್ತಿದ್ದಂತೆ ಗೌಡ ನಾಲ್ಕು ಜನರ ಮೇಲೆ ಬಂದೂಕು ಹೊರಿಸಿಕೊಂಡು ವೈಭವದಿಂದ, ಪ್ರೇಕ್ಷಕರ ಮಧ್ಯದಿಂದ ಬರುತ್ತಾನೆ. ಬದ್ಮೂಕ ಹೊತ್ತವರು, “ಸ್ವಾಮಿ ನಮ್ಮಯ್ ದೇವರೊ| ಢಂಢಂ ಇವರ ಹೆಸರೊ||” ಎಂದು ಹಾಡಿಕೊಂಡು, ನರ್ತಿಸಿಕೊಂಡು ಬರುತ್ತಾರೆ] +ಸೂತ್ರದಾರ: ಅಪ್ಪಾ, ಸುತ್ತ ಪರಿವಾರದೊಂದಿಗೆ ಬಂದಿರತಕ್ಕಂಥಾ ಧೀರಾ ನೀನು ಧಾರು? ನಿನ್ನ ನಾಮಾಂಕಿತವೇನು? ಚೆಂದದಿಂದ ಹೇಳುವಂಥವನಾಗು. +ಆಟದ ಆರಂಭಕ್ಕೆ ಜೋಕುಮಾರಸ್ವಾಮಿ ಪೂಜೆ ಮಾಡಬೇಕು. ಸಾಮಗ್ರಿ ಸಮೇತ ಬಂದು, ಶಾಸ್ತ್ರದ ಪ್ರಕಾರ ಈ ದೇವರನ್ನ ಪೂಜಿಸುವಂಥವನಾಗು. [ಗೊಡ ನಾಲ್ಕು ಜನರ ಕಡೆಗೆ ನೋಡಿ, ಸೂತ್ರಧಾರನಿಗೆ ಉತ್ತರಿಸಲು ಸೂಚಿಸಿ ಮಂಚದ ಮೇಲೆ ಕೂರತ್ತಾನೆ. ನಾಲ್ವರೂ ಂದೂಕು ತಂದು ಸೂತ್ರಧಾರನ ಮುಂದೆ ನಿಲ್ಲಿಸಿ ಅದರ ತುದಿಗೊಂದು ರುಂಬಾಲನ್ನಿಟ್ಟು ಪರಸ್ಪರ ನಗುತ್ತಾರೆ.) +ಒಬ್ಬ: ಇವರು ಯಾರಂದರ… +ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ || +ಸೂತ್ರದಾರ: ಇವರ ಹೆಸರು ಢಂ ಢಂ? ಕೂತಂಥಾ ಸಭಿಕರು ಕಾತರರಾಗಿದ್ದಾರೆ. ಇವರೇನ ಮಾಡತಾರ? ಸವಿಸ್ತಾರ ಕಥನಾ ಮಾಡಿ ತಿಳಿಸುವಂಥವನಾಗು. +ಒಬ್ಬ: ಇವರಿಗೆ ಒಂದ ಕುದುರಿ ಐತಿ. ಅದರ ಹಿಂದೊಂದ ಬೋಲ್ಟ ಐತಿ. ಗುರು ಹಿಡಿದರ ಸಾಕು- ಎದುರಿಗೇನಿರೂ ಢಂ ಅಂತ ಒಮ್ಮಿ ಕುಣೀತಾರ; ಮುಗೀತು! ಇಂಥಾ ಮಹಾಸ್ವಾಮಿ ನಮ್ಮ ದೇವರು- +ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ || +ಇನ್ನೊಬ್ಬ ಯುದ್ಧದೊಳಗ ಸೈನಿಕರು ಬರೀ ಹೆಣದ ಮ್ಯಾಲ ಹಾರಿಸ್ತಾರಂತ. ನಮ್ಮ ದೇವರು- ಉಹೂ ಗಟ್ಟಿಮುಟ್ಟ ಬಾಳೇವಂತರ ಆಗಬೇಕು. ಒಂದು ದಿವಸ ಒಬ್ಬ ರೋಗಿಷ್ಟನ ಮ್ಯಾಲ ಹಾರಿದರು- ಅದೆಲ್ಲೋ? +ಮತ್ತೊಬ್ಬ: ಅದ? ಆ ದೆವ್ವಿನ ಹೊಲದಾಗೊ! +ಇನ್ನೊಬ್ಬ: ಹೂ ಆ ದೆವ್ವಿನ ಹೊಲದಾಗ ಹಾರಿದರು. ರೋಗಿಷ್ಟನ ಮ್ಯಾಲ ಹಾರೋವಾಗ ನಮ್ಮ ಸ್ವಾಮಿ ಕುಣೀಲಿಲ್ಲ. ಹಾರಲಿಲ್ಲ. ಢಂ ಅನ್ನಲಿಲ್ಲ. ಮೂರ ದಿನಾ ಮಾತಾಡಲಿಲ್ಲ. ಹೋಗಲಿ ಅಂತ ಒಂದ ದಿನ ಹಾಡಾ ಹಗಲಿ ಹೊಲದಾಗ ಕೆಲಸಾ ಮಾಡೋ ಡಜನ್ ಹೊಲೇರನ್ನ ಸಾಲಾಗಿ ನಿಲ್ಲಿಸಿ ಹಾರಿದರು. ಸ್ವಾಮಿ ಕುಣಿದಾಡಿ ಒಮ್ಮೆ ಢಂ ಅಂದರ ಏನುಳೀತ ಹೇಳ್ನೋಡೋಣ. +ಸೂತ್ರಧಾರ: ಒಂದು ಡಜನ್ ಹೆಣಾ! +ಇನ್ನಬ್ಬ ಉಹೂ! ಬ್ಯಾರೇದವರು ಹಾರಿದರ ಹೆಣ ಬಿಳತಾವ. ನಮ್ಮ ಢಂಢಂ ಸ್ವಾಮಿ ಹಾರಿದರ ಇಷ್ಟ ಬೂದಿ: ತಟಕ್ ಹೊಗಿ! ಇಂಥಾ ನಮ್ಮ ಸ್ವಾಮಿ ಮಹಿಮಾ ಏನ್ಹೇಳೋಣು! +ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ || +ಸೂತ್ರಧಾರ: ಇದೆಲ್ಲ ಹೊಂದಪಾ, ನಿಮ್ಮ ಸ್ವಾಮಿ ಸ್ವರೂಪ ಏನು? +ಮಗದೊಬ್ಬ: ನಮ್ಮ ಸ್ವಾಮಿ ಢಂ ಢಂ ದೇವರಂದರ ಒಂದ ದೊಡ್ಡ ಹೊಟ್ಟಿ, ಏನ ತಿಂದರೂ ಅರಗಸ್ತಾರ. ನಿಮ್ಮಂಥವರಿಗೆ ಎರಡು, ಬ್ಯಾಡ ನಾಕ ರೊಟ್ಟಿ ಕೊಟ್ಟರೆ ಅಜೀರ್ಣ ಆಗತೈತಿ. ನಮ್ಮ ಸ್ವಾಮಿ ಮನಶೇರ ಮಾಂಸ ತಿಂದ ಅರಗಿಸಿಕೊಳ್ತಾರ! ಕೋಳಿ ಸಿಕ್ಕರಂತೂ ಹಬ್ಬಾ ಮಾಡತಾರ! ಅಂಥಾ ನಮ್ಮ ಸ್ವಾಮಿ- +ಎಲ್ಲರೂ: ಸ್ವಾಮಿ ನಮ್ಮಯ್ ದೇವರೊ ಢಂಢಂ ಇವರ ಹೆಸರೊ || +ಗೌಡ: ಏನಪಾ ಸೂತ್ರಧಾರ ನಾ ಯಾರಂತಾ ಈಗಲಾದರೂ ತಿಳೀತೊ? +ಸೂತ್ರಧಾರ: ಸ್ವಾಮಿ ತಾವು ಯಾರಂತ ನನಗಾದರೂ ತಿಳೀತು. ಕೂತಂಥಾ ಸಮಾಜವಾದಿಗಳಿಗಾದರೂ ತಿಳಿದು ಬಂತು. [ ನಿಧಾನವಾಗಿ ಬಂದ ಬಸವಣ್ಯಾನನ್ನು ನೋಡಿ] ಈತ ಯಾರು? ಅದ್ಯಾಕ ಹಿಂಗ ನಿಂತಾನ? +ಒಬ್ಬ: ಇದು ನಮ್ಮ ಢಂ ಢಂ ದೇವರು ತಿನ್ನೋ ರೊಟ್ಟಿ, +ಇನ್ನೊಬ್ಬ: ಅಲ್ಲಲ್ಲ, ನಮ್ಮ ಢಂಢಂ ದೇವರಿಗೆ ಹರಕೆ ಬಿಟ್ಟ ಕುರಿ. +ಮತ್ತೊಬ್ಬ: ಅಲ್ಲಲ್ಲ, ನಮ್ಮ ಢಂಢಂ ದೇವರಿಗೆ ಹಾಲು ಕೊಡೊ ಹಸು. +ಗೌಡ್ತಿ: [ಒಳಗಿನಿಂದ ಬಂದು) ಕೇಳಿದೇನ? +ಗೊಡ: ನಿಂದೇನ ಈ ಮಂದ್ಯಾಗ? ಆಮ್ಯಾಲ ಕೇಳತೀನಂತ ಹೋಗು. +ಮಗುದೊಬ್ಬ: [ಗೌಡ್ತಿಯನು ತೋರಿಸುತ್ತ] ಅದು ನಮ್ಮ ಢಂಢಂ ದೇವರ ಹೊಲಾ! [ ಗೌಡ್ತಿ ಒಳ ಹೋಗುವಳು] +ಸೂತ್ರಧಾರ: ಈತನಿಗೇನು ಹೆಸರ ಇಲ್ಲೇನು? +ಒಬ್ಬ: ಹೆಸರ? ಇವನ ಹೆಸರೇನೊ? +ಬಸಣ್ನ: ಬಸಣ್ಣ [ಗೌಡ ತಕ್ಷಣ ಏಳುವನು?] +ಗೌಡ: ಬಸಣ್ಣ? ಬಾರೋ ಬಸಣ್ನಾ…ಏ ಹೋಗ್ರೋ ಆಂಯಾಲ ಬರೀರಂತ ಹೋಗ್ರಿ. ಬಾರೋ ಬಸಣ್ಣಾ, ಬಂದ ಹೊರಗ ನಿಂತೀiಲ್ಲೋ? ಬಾ ಬಾ ಒಳಗ ಜೂರ ಬಾ. ಬೀಡಿ ಸೇದತೀಯೇನ? [ಇಬ್ಬರೂ ರಂಗದ ಒಂದು ಬದಿಗೆ ಸರಿಯುವರು. ಸೂತ್ರಧಾರ ಮೇಳದೊಡನೆ ಒಂದಾಗುವನು.] ನಿಮ್ಮಪ್ಪ ಸತ್ತದ್ದ ಭಾಳ ಮನಸಿಗೆ ಹಚ್ಚಿಕೊಂಡೀಯೊ ಏನೋ! ನಿಮ್ಮಪ್ಪ ಹೋದದ್ದಕ್ಕ ನನಗ ಹಳಹಳಿ ಆಗಿಲ್ಲಂತ ತಿಳೀಬ್ಯಾಡಪಾ ಮತ್ತ. ಏನ ಮುದುಕ ಏನಮುದುಕ ನಿಮ್ಮಪ್ಪ! ದಿನ ಬೆಳಗಾದರ ಗೌಡರ ಅಂತ ಬರತಿದ್ದಾ, ಬೀದಿ ಇಸಕೊಂಡ ಸೇದತಿದ್ದಾ. ಆದರ ಏನು ಮಾಡೋದು ಮುದುಕ ಭಾರೀ ಹಠಮಾರಿ. ಒಬ್ಬರ ಮಾತ ಕೇಳಾವಲ್ಲ. ಗಿಣೀಗೀ ಹೇಳಿಧಾಂಗ ಹೇಳಿದೆ; ಮುದುಕಾ ಆ ಹೊಲದಾಗ ಮಲಗಬ್ಯಾಡೊ; ಅಲ್ಲಿ ದೆವ್ವ ಐತಿ, ಪಿಶಾಚಿ ಐತಿ, ಏಳ ಮಕ್ಕಳ ತಾಯಿ ಐತಿ- ಅಂತ. ಕೇಳಿದನ ನನ್ನ ಮಾತ? ಉಹೂ! ದೆವ್ವಾ, ಪಿಶಾಚಿ ಮನಶೇರಷ್ಟ ಕೆಟ್ಟ ಇರಾಣಿಲ್ಲೊ ಹುಡುಗಾ ಅಂದ. ಹೋದ. ಬೆಳಿಗ್ಗೆದ್ದ ಮಾತಾಡಿಸಬೇಕಂತ ಹೋದರ ನಿಮ್ಮಪ್ಪ ಅಲ್ಲೆಲ್ಲಿರತಾನ! ಕೂತಕೊಳ್ಳೋ ಹಾಂಗ ನಿಂತ ಇದೀಯಲ್ಲ. ನೀ ಆಷ್ಟೇನೂ ಚಿಂತೀ ಮಾಡಬ್ಯಾಡ. ನಮ್ಮ ಮನ್ಯಾಗ ಇದ್ದೀಯಂತ ಬಿಡು. +ಬಸಣ್ಣ: ನಮ್ಮಪ್ಪ ಹೆಂಗ ಸತ್ತಂತ ನನಗೆ ಗೊತ್ತ ಐತಿ. +ಗೌಡ: ನಿನಗಷ್ಟಾ ಎನ, ಊರಿಗೂರ ತಿಳಿದೈತಿ. ಆ ಹೊಲದ ನೆಲ ಬಾಳ ಬಿರಸೈತಿ ಅಂತ ಯಾರಿಗಿ ಗೊತ್ತಿಲ್ಲ. ನಿನ್ನಿ ಗುರ್‍ಯಾನ ಎರಡ ಕುರಿ ಹೋದವಂತ ಕೇಳೀಯೇನ? +ಬಸಣ್ಣ: ನಮ್ಮಪ್ಪ ಹೆಂಗ ಸಂತ್ತಂತ ನನಗ ಗೊತ್ತೈತಿ. +ಗೌಡ: ಂiiಕೋ ಹುಚ್ಚ, ನನ್ನ ಮ್ಯಾಲ ಸಂಶೇ ಇದ್ದಾಂಗ ಮಾತಾದ್ತಿ. ಮನಸಿಗಿ ಭಾಳ ಹಚ್ಚಿಕೊಂಡೀಯಲ್ಲ, ಅದಕ್ಕ ಹಿಂಗಾಗತೈತಿ. ಬಾಬಾ, ಒಂದ ಬೀಡಿ ಸೇದ ಬಾ, ಬರೋಬರಿ ಬುದ್ಧಿ ಬರತೈತಿ. +ಬಸಣ್ಣ: ಒಂದ ಗಟ್ಟೀಮುಟ್ಟ ಮಾತ ಹೇಳತೇನ ಕೇಳ ಗೌಡ: ನಮ್ಮಪ್ಪ ಹೆಂಗ ಸತ್ತಂತ ನನಗ ಗೊತ್ತೈತಿ. ಕಾಡ ಕಡದ ಹೆಂಗ ಹೊಲ ಮಾಡಿದಾಂತ ಗೊತ್ತೈತಿ; ಅ ಹೊಲಾ ನಾ ಬಿಡಾಣಿಲ್ಲಾಂತ ನನಗ ಗೊತ್ತೈತಿ. +ಗೌಡ: ಇಷ್ಟ ಗೊತ್ತಿದ್ದಾವ ನಿಮ್ಮಪ್ಪ ಸಾಲ ಒಯ್ದಿದ್ದ ಗೊತ್ತೈತಿಲ್ಲೊ? +ಬಸಣ್ಣ: ತಿರಗಾಮುರಗಾ ಎರಡುನೂರ ರೂಪಾಯಿ ಸಾಲ; ಇಪ್ಪತ್ತವರ್ಷ ಅರ್ಧಾರಾಶಿ ಅಳದ ಕೊಟ್ಟಾ, ಇನ್ನ ತೀರಿಲ್ಲ ನಿನ್ನ ಸಾಲ? +ಗೌಡ: ಹೋಗಲಿ, ಆ ಹೊಲ ಯಾರ ಹೆಸರಿಗಿ ಐತೆಂತ ಗೊತ್ತೈತಿ? +ಬಸಣ್ನ: ಅದೆಲ್ಲಾ ನಂಗೊತ್ತಿಲ್ಲ. ಹೊಲಾ ನದ್ಮು, ನಾ ಉಳತೇನ. ಇನ್ನೇನ ಬಾಕಿ ಉಳಿದಿದ್ದರೂ ನನ್ನ ಬೆನ್ನಿಗಿ ಹೇಳ. +ಗೌಡ: ಹಾಂಗಿದ್ದರೆ ನೀ ಹೇಳೋಡು ನನಗ್ಗೊತ್ತಿಲ್ಲಾ. ಏನ ಹೇಳೋದೆಲ್ಲಾ ಈ ಬಂದೂಕಿಗೆ ಹೇಳ. [ ಬಸಣ್ಣಾ ಬಂದೂಕನ್ನೊದ್ದು ಹೋಗುವನು. ಗೌಡ್ತಿ ಆ ಸಮಯಕ್ಕೆ ಸರಿಯಾಗಿ ಬಂದು ನೋಡಿ ಬಸಣ್ಣ ಹೋದ ಮೇಲೆ ಮಾತನಾಡುವಳು] +ಗೌಡ್ತಿ: ಕೇಳಿದೇನ? [ದೂರದಲ್ಲಿ ಗುರ್‍ಯಾ ಬರುವುದನ್ನು ನೋಡಿ ಒಬ್ಬ, ಮತ್ತೊಬ್ಬ, ಇನ್ನೊಬ್ಬ, ಮಗದೊಬ್ಬ ಎದ್ದು ಬರುವರು. ಗೌಡ್ತಿ ಕೂಡಲೇ ಒಳಗೆ ಹೋಗುವಳು.] +ಒಬ್ಬ: ದೇವರೂ, ಹೊರಗ ಗುರ್‍ಯಾ ಬಂದ ನಿಂತಾನ್ರಿ. +ಗೌಡ: ಕರಕೊಂಬಾ ಒಳಗ. [ಗುರ್‍ಯಾ ಹೆದರುತ್ತಾ ಒಳಬರುತ್ತಾನೆ] ಬಾರೋ ಗುರ್‍ಯಾ, ಏ ಏ ಕುರಿ ಹೆದರೈತಿ ಹೋಗ್ರೊ. [ನಾಲ್ವರೂ ಹಿಂದೆ ಸರಿಯುವರು] +ಗುರ್‍ಯಾ: ದೇವರೂ ನಿನ್ನಿ ನನ್ನ ಎರಡು ಕುರಿ, ಆಳಮಕ್ಕಳು ತಿಂದರಂತೆ. +ಗೌಡ: ಯಾರ ಆಳುಮಕ್ಕಳೋ ಮಗನ? +ಗುರ್‍ಯಾ: ನಿಮ್ಮ ಆಳುಮಳು. ಅಲ್ಲಿದ್ದಾರಲ್ಲರಿ, ಅವರ +ಗೌಡ: ಯಾಕಲ ಮಗನ, ನಾಲಿಗಿ ಭಾಳ ಉದ್ದ ಬಿಡತಿ? ನಿನ್ನ ಕುರಿ ಯಾಕಡೆ ಮೇಯಾಕೆ ಬಿಟ್ಟಿದ್ದಿ? ಆ ದೆವ್ವಿನ ಹೊಲದ ಕಡೆ ಬಿಟ್ಟಿದ್ದಿಲ್ಲಾ? +ಗುರ್‍ಯಾ: ಹೂನ್ರಿ. +ಗೌಡ: ಅಲ್ಲಿ ಮೇಯಾಕ ಬಿಟ್ಟಿ; ದೆವ್ವ ಬಂದ ಜುರೀ ಮುರೀತು. ನಿಮ್ಮ ಆಳುಗೋಳಾ ಮುರದ ತಿಂದರಂತ ಹೇಳಾಕ ಬಂದಿ ಹೌಂದಲ್ಲ. ಮಗನ ಬಸಣ್ಯಾನ ಅಪ್ಪ್ನಂಥ ಅಪ್ಪನ್ನ ದೆವ್ವ ಮುರೀತು. ನಿನ್ನ ಕುರಿ ಬಿಟ್ಟೀತ? ಮತ್ತೆ ಊರ ತುಂಬೆಲ್ಲ ಸುದ್ದಿ! ಊರಾಗ ಏನ ಸತ್ತರೂ ಇಲ್ಲಾ ಗೌಡ ಕೊಂದಿರಬೇಕು, ಇಲ್ಲಾ ಅವನ ಆಳ ಕೊಂದಿರಬೇಕು. ಮಕ್ಕಳ್ರಾ ಊರ ಗೌಡರೆಂದರ ಕಿಮ್ಮತ್ತಿಲ್ಲಾ? ತಡಿ ನಿನ್ಗ ಹೇಳತೇನ- ಯಾರ ಕೊಂದರಂತ- [ಬಂದೂಕು ತೆಗೆದುಕೊಳ್ಳುವನು] +ಗುರ್‍ಯಾ: ನಾ ಅಲ್ಲರಿ; ಹಾಂಗಂತ ಬಸಣ್ಯಾ ಹೇಳಿದ. +ಗೌಡ: ಬಸಣ್ಯಾ ಹೇಳಿದ? ಖರೆ ಹೇಳ ಮಗನ ಯಾಕ ಬಂದಿದ್ದಿ? +ಗುರ್‍ಯಾ: [ಏನು ಹೇಳುವುದಕ್ಕೂ ತೋಚದೆ] ಯಾಕಿಲ್ಲರಿ, ಯಾಕಂದರ ನಿಮ್ಮ ಕಾಲ ತಿಕ್ಕಾಕ ಬಂದಿದ್ದೆ. +ಗೌಡ: ಹೌಂದು? ಬಾ, ತಿಕ್ಕಬಾ ಹಂಗಾದರ. [ಗುರ್‍ಯಾ ಹೆದರುತ್ತ ಗೌಡನ ಕಾಲು ತಿಕ್ಕುವನು] ಗುರ್‍ಯಾ, ಏ ಮಗನ ನಾ ಯಾರೋ? +ಗುರ್‍ಯಾ: ಊರ ಗೌಡರು. +ಗೌಡ: ನೀ ಯಾರೋ? +ಗುರ್‍ಯಾ: ನಿಮ್ಮ ಆಳರಿ. +ಗೌಡ: ಹೆದರಿದಿ? +ಗುರ್‍ಯಾ: ಇಲ್ಲರಿ. +ಗೌಡ: ಮಗನ, ಊರ ಗೌಡ ನನಗ ಹೆದರಾಣಿಲ್ಲ? ಆ ಬಸಣ್ಯಾಗ ಹೆದರ್‍ತಿ ಹೌಂದಲ್ಲ? +ಗುರ್‍ಯಾ: ಇಲ್ಲರಿ +ಗೌಡ: ನನಗೂ ಹೆದ್ರಾಣಿಲ್ಲ, ಬಸಣ್ಯಾಗೂ ಹೆದರಾಣಿಲ್ಲ, ಅಷ್ಟ ಪುಧಾರಿ ಆಗಿಬಿಟ್ಟಿ? +ಗುರ್‍ಯಾ: ನಿಮಗ ಹೆದರತೇನ್ರಿ. +ಗೌಡ: ನನಗ ಹೆದರಿದರ ಬಣ್ಯಾನ ಹಂತ್ಯಾಕ ಯಾಕ ಹೋಗಿದ್ದೀ? ಬೊಗಳತೀಯಲ್ಲ. +ಗುರ್‍ಯಾ: ಬೊಗಳತೇನ್ರಿ. +ಗೌಡ: ಬಸಣ್ಯಾನ ಹಂತ್ಯಾಕ ಹೋಗಿದ್ದೀ? +ಗುರ್‍ಯಾ: ಅವನ ನಿನ್ನ ಹಂತ್ಯಾಕ ಬಂದಿದ್ದಾ? +ಗುರ್‍ಯಾ: ಹೂನ್ರಿ. +ಗೌಡ: ನೀ ಏನಂದಿ? ಅವ ಏನಂದ? ಒಂದೂ ಬಿಡದ ಹೇಳಿದ್ರೆ,- ಬರೋ ಬರಿ, ಇಲ್ಲದಿದ್ದರ ಮಗನ ನಿನ್ನ ಚರ್ಮಾ ಸುಲೀತೇನ. +ಗುರ್‍ಯಾ: ಬಸಣ್ಯಾ ಅಂದ: ಯಾಕೋ ಗುರ್‍ಯಾ ಗೌಡಗ ಹೊಲಾ ಮಾರಿದೆಂತಲ್ಲೊ? ನಾ ಅಂದೆ: ಇಲ್ಲಪಾ, ಗೌಡರು ಸಾಲಾ ಕೊಟ್ಟಿದ್ದರು. ಸಾಲದಾಗ ಹೊಲ ಮುರಕೊಂಡರು ಬಸಣ್ಯಾ ಅಂದ: ಎಷ್ಟು ಸಾಲಿತ್ತು? ನಾ ಅಂದೆ: ಮುನ್ನೂರು ರೂಪಾಯಿ ಇತ್ತು. ಅಂವ ಅಂದ: ಮುನ್ನೂರು ರೂಪಾಯಿ ಸಾಲದಾಗ ಐದ ಎಕರೆ ಜಮೀನ ಹೆಂಗ ಮಾರಿದಿ? +ಗೌಡ: ನಾಯಿ ಮಗನ, ನಿನಗ ಗೊತ್ತಿಲ್ಲ? ಮುನ್ನೂರ ರೂಪಾಯಿ ಕೊಟ್ಟು ಎಷ್ಟು ದಿನಾ ಆಯ್ತು? +ಗುರ್‍ಯಾ: ಮೂರ ನಾಕ ವರ್ಷಾಯ್ತರಿ. +ಗೌಡ: ಮೂರು ನಾಕ ವರ್ಷಾ? ತರಸಲೀ ಕಾಗದ ಪತ್ರ? ಹತ್ತ ವರ್ಷಾತ ಹತ್ತ! +ಗುರ್‍ಯಾ: ನಾ ಆಗಿನ್ನೂ ಸಣ್ಣಾನಿದ್ದೆ. +ಗೌಡ: ಸಣ್ಣಾನಿದ್ದರ ಹೊಟ್ಟಿಗಿ ಅನ್ನ ಉಣ್ಣತಿದ್ಯೊ, ಶಗಣಿ ತಿನತಿದ್ಯೊ? ಬರದ ಕಾಗದ ಪತ್ರ ಸುಳ್ಳ ಹೇಳತಾವು? ನಿನ್ನ ಹೆಬ್ಬೆಟ್ಟಿನ ಗುರುತು ಸುಳ್ಳು ಹೇಳತೈತಿ? ದುರುಗವ್ವನ ಜಾತ್ರಿ ಅಮಾಸಿಗಿ ಒಯ್ಯಲಿಲ್ಲಾ ಹಣ? +ಗುರ್‍ಯಾ: ಹೌಂದ ಅಂದ ಅಮಾಸಿ ಇತ್ತರಿ. [ಹಿಂದೆ ಕುಳಿತ ನಾಲ್ವರೂ ಏಳುವರು] +ಗೌಡ: ಆ ಅಮಾಸಿ ಆಗಿ ಎಷ್ಟು ವರ್ಷಾದುವೋ ಮಗನ? +ಗುರ್‍ಯಾ: ಹತ್ತು ವರ್ಷಾದುವರಿ. +ಗೌಡ: ಹತ್ತು ವರ್ಷ ಅಸಲಾ ಬಡ್ಡಿ ಎಷ್ಟ ಆಯ್ತು? +ಗುರ್‍ಯಾ: ಐದ ಎಕರೆ ಆಯ್ತರಿ. [ಮತ್ತೆ ನಾಲ್ವರು ಹಿಂದೆ ಹೋಗಿ ಕೂರುವರು] +ಗೌಡ: ಹತ್ತ ಎಕರೆ ಆಗತ್ತಿತ್ತ, ಸೂಳೀ ಮಗನ ಬಡವ ನಮ್ಮ ಮನ್ಯ್ರಾಗ ದುಡಕೊಂಡಿರ್‍ಲೀ ಅಂತ ಬಿಟ್ಟೇನ ಬಾ, ಭೂಮಿ ಸೀಮೀ ಆಳೋ ಗೌಡಂದರ ಕಿಮ್ಮತ್ತಿಲ್ಲಾ? ನಾನು ಮನಸ್ಸ ಮಾಡಿದರೆ ನೀ ಅಲ್ಲ, ಬಸಣ್ಯಾ ಸೈತ ಮಣ್ಣ ಮುಕ್ಕಿ ಹೋಗತಾನ, ತಿಳೀತಿಲ್ಲ? +ಗುರ್‍ಯಾ: ತಿಳಿತ್ರಿ. +ಗೌಡ: ಏನ ತಿಳೀತ? +ಗುರ್‍ಯಾ: ಮಣ್ಣು ಮುಕ್ಕತಾನ್ರಿ. +ಗೌಡ: ಹೋಗಿ ಬಸಣ್ಯಾಗ ಹೇಳು: ಹೋದ ವರ್ಷದ ಕೋರಪಾಲ ನಿಮ್ಮಪ್ಪ ಕೊಟ್ಟಿಲ್ಲಾ, ಕೊಡದಿದ್ದರೆ ಹೊಲದಾಗ ಕಾಲ ಇಡಬ್ಯಾಡಾಂತ ಹೇಳು. +ಗುರ್‍ಯಾ: ಹೂನ್ರಿ. +ಗೌಡ: ಯಾವಾಗ ಹೋಗ್ತಿ? +ಗುರ್‍ಯಾ: ಈಗ ಹೋಗತೇನ್ರಿ. +ಗೌಡ: ಕಾಲ ತಿಕ್ಕಿ ಹೋಗ. [ಶಿವಿ, ಬಸ್ಸಿ ಬಂದು ಗೌಡನನ್ನು ನೋಡಿದೊಡನೆ ಮುದುಡಿ ಕೊಂಡು ಒಳಗೆ ಹೋಗುವರು. ಆಮೇಲೆ ನಿಂಗಿ ಬಂದು ಚಪ್ಪಲಿ ಕಳೆಯುತ್ತಿರುವಳು] +ಗೌಡ: ಯಾರದೋ ಗುರ್‍ಯಾ ಈ ಕೋಳಿ? ಏ ಹುಡುಗಿ ನಿಲ್ಲು. [ನಿಂಗಿ ಸೆರಗು ಮರೆ ಮಾಡಿಕೊಂಡು ನಿಲ್ಲುವಳು] +ಗುರ್‍ಯಾ: ಈಕಿ ಗುರುಪಾದನ ಮಗಳ್ರಿ. +ಗೌಡ: ಭರ್ತಿ ವಯಸ್ಸಿಗಿ ಬಂದಾಳಲ್ಲೋ, ನೋಡು ಎಷ್ಟು ತುಳುಕ್ಯಾಡತಾಳೊ? ಮದುವೆಯಾಗಿಲ್ಲೇನ ಇನ್ನೂ? +ಗುರ್‍ಯಾ: ಇನ್ನೂ ಇಲ್ಲರಿ. +ಗೌಡ: ಏನ ಹುಡುಗಿ ನಿನ್ನ ಹೆಸರ? +ಗುರ್‍ಯಾ: ಗೌಡರ ಕೇಳತಾರ ಹೇಳಲ್ಲ; ಊರ ಗೌಡ ಹೆಸರ ಕೇಳೋದ ಹೆಚ್ಚೊ? ನೀ ಹೇಳೋದ ಹೆಚ್ಚೊ? +ಗೌಡ: ಹೆದರತಾಳೋ ಎನೋ! ಅಂತೂ ನೋಡಿದವರ ಬಾಯಾಗ ನೀರ ಬರೋಹಾಂಗ ಮಸ್ತ ತುಂಬಿಕೊಂqಳ ಬಿಡು. ಹೆದರಿದಿ ಏನ? +ನಿಂಗಿ: [ಸೆರಗು ಚೆಲ್ಲಿ] ಹೆದರಾಕ ನೀ ಏನ ಹುಲಿ ಅಲ್ಲ, ಕರಡಿ ಅಲ್ಲ. ಊರಗೌಡ ಹೆಸರ ಕೇಳ್ಯಾನಂತ ನನ್ನ ಬಾಯಾಗೇನೂ ಜೊಲ್ಲ ಬಂದಿಲ್ಲದ ಆ… [ಯಿ ತೆರೆದು ಅಣಕಿಸುವಳು] +ಗೌಡ: ಏ ಹುಚ್ಚ ಹುಡಿಗೀ, ಯಾರ ಜೋಡಿ ಮಾತಾಡ್ತಿ, ಕಣ್ಣ ಬರೋಬರಿ ಕಾಣ್ತವಿಲ್ಲ? +ನಿಂಗಿ: ಕಾಣದೇನ? ಹೊರಗ ಸೂರ್ಯನ ಬೆಳಕ ಐತಿ, ನನಗೂ ಎರಡು ಕಣ್ಣದಾವು; ಹೇಳಲಿ? ಇದ ಊರು‌ಅ ಗೌಡನ ಮಸಡಿ, ಇವು ನನ್ನ ಚಪ್ಪಲಿ. [ಹೊರದಲನುವಾಗುವಳು] +ಗೌಡ: ತಡಿ, ಏ ಹುಡುಗಿ, ನಿಮ್ಮಪ್ಪಗ ಹೇಳು,ಈ ಊರಾಗಿನ ಎರೀನೆಲ ಯಾವುದೂ ನಾ ಬಿಟ್ಟೀಲ್ಲಂತ ಹೇಳು. +ನಿಂಗಿ: ಸೂರ್ಯನಂಥಾ ಸೂರ್ಯ ಮುಟ್ಟದ ಭೂಮಿ ಇದ ಊರಾಗ ಬೇಕಾದಷ್ಟ ಬಿದ್ದೈತಿ, ತಿಳಕೊ. [ಸರ್ರನೆ ಹೊರಗೆ ನಡೆವಳು] +ಗೌಡ: ನಮ್ಮ ಮನೀಗಿ ಬಂದ ನನಗ ಇಷ್ಟ ಧಿಮಾಕ ತೋರಿಸಿ ಹಾರಿ ಹೋಯ್ತಲ್ಲೋ ಕೋಳಿ ! ಗುರ್‍ಯಾ- +ಗುರ್‍ಯಾ: ಎಪ್ಪಾ. +ಗೌಡ: ಈಕೀನ ಮದವೆಯಾಗತೀಯೇನೋ? +ಗುರ್‍ಯಾ: ಎಪ್ಪಾ… +ಗೌಡ: ಈಕೀನ ಮದುವ್ಯಾಗತೀಯೇನೊ? +ಗುರ್‍ಯಾ: ಹ ಹ ಹ… +ಗೌಡ: ಮೂರು ರೂಪಾಯಿಗಿ ಈಕೀನ್ನ ಮಾರತೇನ, ತಗೊಳ್ತಿ? +ಗುರ್‍ಯಾ: ಹೆ ಹೆ ಹೆ…. +ಗೌಡ: ಹೋಗು, ಮಸಾಲಿ ಹಾಕು. ಹಲ್ಲಿಗಿ ರುಚಿ ಹತ್ತೋಹಾಂಗ ಪಲ್ಲೆ ಮಾಡು. ನನ್ನ ಹೆಸರ್‍ಹೇಳಿ ತಿನ್ಹೋಗ, ತಿನ್ನಾಕ ಆಗದಿದ್ದರ ನನಗ ಕೊಡ. ಎನಂತಿ? +ಗುರ್‍ಯಾ: ಹೆ ಹೆ ಹೆ… +ಗೌಡ: ಬಾಯ್ಮುಚ್ಚೋ ಸೂಳೀಮಗನ. ಹಲ್ಲ ಕಿಸದರ ಹೆಣ್ಣ ಒಲೀತಾವು! ನಿನ್ನಂಥಾ ನಾಯೀನ್ನೋಡಿ ಯಾವಾಕಿ ಬೆನ್ನ ಹತ್ಯಾಳೋ! ಬೆಳದ ನಿಂತೀ ಮಗನ ನಿನ್ನ ವಯಸ್ಸೆಷ್ಟ? +ಗುರ್‍ಯಾ: ಪಂಚವೀಸರಿ +ಗೌಡ: ಹೆಂಗಸಿನ ಮೊಣಕಾಲ ನೋಡೀಯೇನ? +ಗುರ್‍ಯಾ: ಇಲ್ಲರಿ. +ಗೌಡ: ನಿನ್ನಂಥವಗ ಏನ ತಿಳದೀತೋ? ಗುರ್‍ಯಾ, ಈ ಕಾಡಕೋಳಿ ಹಿಡೀಬೇಕಲ್ಲೊ. +ಗುರ್‍ಯಾ: ಕಾಡಕೋಳಿ ಹೆಂಗ ಹಿಡೀಬೇಕೂನ್ನೋದು ನನಗ ಗೊತ್ತೈತ್ರಿ. +ಗೌಡ: ಹೊಂದು? ಹೆಂಗ ಹೇಳು. +ಗುರ್‍ಯಾ: ಪಂಜರದಾಗೊಂದು ಹುಂಜಿನ ಗೊಂಬಿ ಇಟ್ಟಗೋಬೇಕ್ರಿ. ಇಟ್ಟಕೊಂಡ ಅಡವಿಗಿ ಹೋಗಬೇಕ್ರಿ. ಹೋಗಿ ಅಡವಿ ನಡುವ ಪಂಜರ ತೂಗ ಹಾಕಬೇಕ್ರಿ. ತೂಗಹಾಕಿ ಹುಂಜಧಾಂಗ ಕು ಕೂ ಕೂ ಅಂತ ಕ್ಯಾಕಿ ಹಾಕಬೇಕ್ರಿ. ಕ್ಯಾಕಿ ಹಾಕಿದರ ಕಾಡಕೋಳಿ ಬರತಾವರಿ. ಬಂದ ಕೂಡ್ಲೆ ಗುಂಡ ಹಾಕಬೇಕ್ರಿ. +ಗೌಡ: ಇಷ್ಟಾದರೂ ತಿಳಕೊಂದೀಯಲ್ಲ. +ಗುರ್‍ಯಾ: ಆದರ ನಿಮ್ಮಂಥಾ ಖರೆ ಹುಂಜ ಕೂಗಿದರೂ ಕೋಳಿ ಹುಸಾ ಅಂದ ಹೋಯ್ತಲ್ರಿ. +ಗೌಡ: ಬಾಯ್ಮುಚ್ಚು, ಏ ಮಗನ ಬಾಯಿಲ್ಲಿ, ಕಿವಿ ಹಿಡಕೊ, [ಗೌಡ ಹೇಳಿದಂತೆ ಗುರ್‍ಯಾ ಮಾಡುವನು] ಕೂಡ್ರು, ಏಳ, ಕೂರ, ಏಳ…ಕಾಲ ತಿಕ್ಕ. [ಗುರ್‍ಯಾ ಗೌಡನ ಕಾಲು ತಿಕ್ಕ ತೊಡಗುವನು] ಗುರ್‍ಯಾ, ಈ ಊರಾಗಿನ ಮಂದಿ ಯಾರಿಗಿ ಹೆಚ್ಚ ಕಿಮ್ಮತ್ತ ಕೊಡತಾರೊ? ನನಗೊ? ಬಸಣ್ಯಾಗೊ? +ಗುರ್‍ಯಾ: ನಿಮಗರಿ. +ಗೌಡ: ಖರೆ ಹೇಳ. +ಗುರ್‍ಯಾ: ಗಂಡಸರ ನಿಮಗ ಹೆದರತಾರ್ರಿ. ಹೆಂಗಸರ ಬಸಣ್ಯಾಗ ಹೆದರತಾರ್ರಿ. +ಗೌಡ: ಹೌಂದು? ಬಸಣ್ಯಾ ಮುಟ್ಟದ ಹೆಣ್ಣ ಯಾವುದು ಹೇಳು? +ಗುರ್‍ಯಾ: ಆಗಳೆ ಹೋದಳಲ್ಲರಿ. +ಗೌಡ: ಹೊಂದು? ಬಸಣ್ಯಾಗ ಏನಮಾಳ ಆಕಿ? +ಗುರ್‍ಯಾ: ಅಣ್ಣಾ ಅಂತಾಳ್ರಿ. +ಗೌಡ: ಹೊಂದು? ನನಗ ಮಾಮಾ ಅಂತಾಳ ಹೋಗು, ಗುರುಪಾದ್ಯಾ ಹೇಳು- +ಗುರ್‍ಯಾ: ಹೂನ್ರಿ +ಗೌಡ: ಏನ್ಹೇಳ್ತಿ? +ಗುರ್‍ಯಾ:: ಗೌಡರ ನಾಲಿಗಿ ಹೊಲಸಾಗೇತಿ. ತಿನ್ನಾಗ ನಿನ್ನ ಕೋಳಿ ಕೊಡಂತ ಹೇಳತೇನ್ರಿ. +ಗೌಡ: ನಾನು ಹಿಂದಿಂದ ಬರತೇನ್ನಡಿ. [ಗೌಡ ಹೋಗುವನು. ಗೌಡ ಬಂದೂಕು ತೆಗ್ದುಕೊಳ್ಳುತ್ತಿರುವಾಗ ಗೊಡ್ತಿ ಬರುವಳು] +ಗೌಡ್ತಿ ಯಾಕ, ಇಂದ ಎಲ್ಲಿಗಾದರೂ ಹೋಗ್ತಿಯೇನ? +ಗೌಡ: ಹಾಕಿದಿ ಹೌಂದಲ್ಲ, ಅಡ್ಡಬಾಯಿ? ಹೇಳಿಲ್ಲಾ ಹೊರಗ ಹೊಂಟಾಗ ಎಲ್ಲಿ, ಯಾಕ ಕೇಳಬಾರದಂತ? +ಗೌಡ್ತಿ: ಇಂದ ರಾತ್ರೀನಾದರೂ ಮನೀಗಿ ಬರ್‍ತೀಯಲ್ಲ? +ಗೌಡ: ಎಲೀ ಇವಳ, ಏನ ಕರಳ ಹರದ ಬೀಳವರ್‍ಹಾಂಗ ಕಾಳಜಿ ಮಾಡತಾಳೊ! ಒಂದು ಬೀಡಿ ಸೇದೋದರೊಳಗ ನಿಂದೆಲ್ಲ ಮುಗೀಬೇಕ ನೋದ: ಕೇಳತೇನ. [ಬೀಡಿ ಹೊತ್ತಿಸುವನು] +ಗೌಡ್ತಿ: ಇಂದ ಜೋಕುಮಾರಸ್ವಾಮಿ ಹುಣ್ಣಿವಿ. ಇಂದಿಗಿ ನಮ್ಮ ಮದಿವ್ಯಾಗಿ ಹತ್ತ ವರ್ಷ ತುಂಬಿದವು. +ಗೌಡ: ತುಂಬಲಿ +ಗೌಡ್ತಿ: ಅಂದ ಹುಣ್ಣಿವಿ ದಿನ ಇಷ್ಟ ದೊಡ್ಡ ಚಂದ್ರ ಮೂಡಿದ್ದಾ. +ಗೌಡ: ಮೂಡಿದ್ದಾ. +ಗೌಡ್ತಿ: ಅಂದ ನಮ್ಮವ್ವ- ಮುದಿನ ಜೋಕುಮಾರಸ್ವಾಮಿ ಹುಣ್ಣಿವಿಗೆಂದರ ಈ ಮನ್ಯಾಗೊಂದ ಗಂಡ ಆಡತಿರಬೇಕಪಾ ಅಳಿಯಾ-ಅಂದಿದ್ಲು. +ಗೌಡ: ಹೊಂದು? ನನಗ ನೆನಪ ಇಲ್ಲ. +ಗೌಡ್ತಿ: ನಿನ್ನಿ ರಾತ್ರಿ ನನಗೊಂದ ಕನಸ ಬಿದ್ದಿತ್ತು. +ಗೌಡ: ಹೌಂದು? ಮತ್ತೇನ ಕನಸಕಂಡಿ? +ಗೌಡ್ತಿ: ಹುಣ್ಣಿವಿ ಚಂದ್ರ ಮೂಡಿದ್ದಾ. ನಮ್ಮ ಹೊಲದಾಗಿನ ಗಿಡದಾಗೊಂದ ಪಂಚರಂಗಿ ಗಿಣೀ ಕಂತಿತ್ತು. ಬೆಳದಿಂಗಳದಾಗ ಸೈತ ಅದರ ಬಣ್ಣ ಥಳಾ ಥಳಾ ಹೊಳೀತಿತ್ತು. ಅಷ್ಟರಾಗ ಯಾಕೋ ಏನೋ ಎಲ್ಲಾ ಮಂದಿ ನಗಾಕ ಸುರು ಮಾಡಿದರು. ಮ್ಯಾಲ ನೋಡಿದರ ನಮ್ಮ ಚಂದ್ರ ಸಣ್ಣಸಣ್ಣವಾಗಿ ಸವುಕಳಿ ಪಾವಲಿಯಷ್ಟ ಕಾಣತಿದ್ದ. ನನ್ನ ನೀ ಇಷ್ಟೊಂದು ಯಾಕ ಮರತಿ? +ಗೌಡ: ಎರಡರೊಳಗ ಒಂದಂತೂ ಖರೆ: ಇಲ್ಲಾ ನಿನಗೈನ್ನೂ ಎಚ್ಚರಾಗಿಲ್ಲ. ಇಲ್ಲಾ ನಿನಗ ಜ್ವರ ಬಂದಿರಬೇಕು. ನಾ ನಿನಗ ಹೇಳೇನಿ, ಹೆಚ್ಚ ವಿಚಾರ ಮಾಡಬ್ಯಾಡ- ಅಂತ. ನಿನ್ನಪ್ಪ ವಿಚಾರ ಮಾಡಿದರ ನನ್ನ ತಲ್ಯಾಗಿನ ಕೂದಲು ಉಳದಾವು? +ಗೌಡ್ತಿ: ನಿನಗ ಹೆಂಗಸಿನ ತಳಮಳ ಹೆಂಗ ತಿಳೀಬೇಕು? +ಗೌಡ: ಏನ ತಿಳಸಿ ಹೇಳಲ್ಲ. ತಗೋ ಇನ್ನೊಂದಬೀಡಿ ಹೊತ್ತಸ್ತೇನ-ಹೇಳು. +ಗೌಡ್ತಿ: ನನ್ನ ಮಾತ ನೀ ನಡೆಸಿಕೊಡೋದ ಅಷ್ಟರಾಗ ಐತಿ ಬಿಡ. ಪಾವಲಿ ಚಂದ್ರನ ಹಿಂದೊಬ್ಬ ಮುದುಕ ಚೂರಿಯಂಥಾ ಕಣ್ಣ ತಕ್ಕೊಂಡ ಗಿಣೀಗೆ ಗುರಿ ಹಿಡಕೊಂಡ ಕುಂತಿದ್ದ. +ಗೌಡ: ನೀ ಇನ್ನ ಕನಸಿನಾಗಿಂದ ಎಚ್ಚರ ಆಗಿಲ್ಲ- [ನಿದ್ದೆಯಲ್ಲಿದ್ದವರನ್ನು ಎಬ್ಬಿಸುವಂತೆ] ಏ ಎಚ್ಚರಾಗ ಏಳ- +ಗೌಡ್ತಿ: ಗೊತ್ತೈತಿ ಬಿಡ. ಮದಿವ್ಯಾಗಿ ಹತ್ತ ವರ್ಷಾಯ್ತು. ಏನಾದರೂ ನದಿಸಿಕೊಡಂತ ಕೇಳನೇನ ಹೇಳು? +ಗೌಡ: ನಿನಗೇನ ಕಡಿಮಿ ಅಗೈತಿ. ಅದಾದರೂ ಹೇಳ. +ಗೌಡ್ತಿ: ಎಲ್ಲಾ, ಎಲ್ಲಾ ಐತಿ. ಹೊಟ್ಟಿ ತುಂಬಾ ಊಟ, ಮೈ ತುಂಬ ಬಟ್ಟಿ! ಗುರುಪಾದನ ಮಗಳು ಏನಂದಳು ಗೊತ್ತೈತಿ? +ಗೌಡ: ಏನಂದಳು? +ಗೌಡ್ತಿ: ಅಡವಿ ತುಂಬ ಹೊಲಾ, ಊರ ತುಂಬಾ ಮನೀ ಇದ್ರ ಮನ್ಯಾಗೊಂದ ಕೂಸಿಲ್ಲಾ ಕುನ್ನಿಲ್ಲಾ… +ಗೌಡ: ಅಂದ್ಲು? ಅದಕ್ಕೇನಾದರೂ ವ್ಯವಸ್ಥಾ ಮಾಡೋಣಲ್ಲ. +ಗೌಡ್ತಿ: ನನ್ನ ಮದುವ್ಯಾಗುವಾಗ್ಲೂ ಹಿಂಗ ಅಂದಿದ್ದಿ! +ಗೌಡ: ಹೌಂದು? ನನಗ ನೆನಪ ಇಲ್ಲ. ಈ ಸಲ ಮರೆಯೋದಿಲ್ಲಂತ ಆಕಿಗಿ ಹೇಳು. +ಗೌಡ್ತಿ: ಇಂದ ಜೋಕುಮಾರನ ಹುಣ್ಣಿವಿ. ಚೆಲೋ ದಿನ. ಪೂಜಿ ಮಾಡಿ ಜೋಕುಮಾರಸ್ವಾಮಿ ಪಲ್ಯ ಮಾಡಿ ತಿಂದ್ರ ಮಕ್ಕಳಾಗತಾವಂತ. ಅದಕ್ಕ ಊಟಕ್ಕ ಮನೀಗೇ ಬರಾಬೇಕು ವುತ್ತ. +ಗೌಡ: ಓಹೋ ! ಅದಕ್ಕ ಹೆಂಗಸರ ಬಂದಾರೇನ ಮನೀಗಿ? +ಗೌಡ್ತಿ: ಹೂ. +ಗೌಡ: ಗುರುಪಾದನ ಮಗು ಅದಕ್ಕ ಬಂದಿದ್ದಳೇನ? +ಗೌಡ್ತಿ: ಹೂ, ಆಕಿ ಹೆಸರೇನಂದಿ? +ಗೌಡ್ತಿ: ನಿಂಗಿ. +ಗೌಡ: ಹೂ ಆಗಲಿ ಸಂಜಿ ಊಟಕ್ಕ ಮನೀಗೇ ಬರ್‍ತೀನಾಯ್ತ? +ಗೌಡ್ತಿ: ಹಾಂಗ ಒಂದ ಗಿಣಿ ಸಿಕ್ಕರೆ ನೋಡತಿಯೇನ? +ಗೌಡ: ಒಂದು ಕೆಲಸಾ ಮಾಡತಿ +ಗೌಡ್ತಿ: ಒಂದ್ಯಾಕ ಹತ್ತ ಹೇಳಲ್ಲ +ಗೌಡ: ಹತ್ತ ಬ್ಯಾಡ, ಒಂದ ಸಾಕ, ಮಾಡ್ತಿ? +ಗೌಡ್ತಿ: ಏನ ಹೇಳಲ್ಲ. +ಗೌಡ: ಬಾಯ್ಮುಚ್ಚಿಕೊಂಡು ಒಳಗ ಹೋಗ್ತಿ? [ಹೊರಡುವನು. ಮೇಳದವರು ‘ಸ್ವಾಮಿ ನಮ್ಮಯ್ ದೇವರೊ! ಢಂಢಂ ಇವರ ಹೆಸರೊ ||’ ಎಂದ್ಮು ಹಾಡುವರು.| ಸಂಗೀತ +ಮೂಡಿಬಾರಯ್ಯ ಗಿಣಿರಾಮ +ಮೇಳ: ವುಡಿ ಬಾರಯ್ಯ ಬಾರೋ ಗಿಣಿರಾಮ|| ಮೂಡಣ ಗಾಳಿಗೆ ಸುಖಿಸಿ ಚಂದ್ರ| ಬೆಳದಿಂಗಳೊಳು ಭರಿತನಾಗಿ ಬಿರಿತಂಥ ಭೂಮಿಗೆ ಚಿಗುರ ಹೂವಿನ ಚೈತ್ರ ಬೇರೆ ನಾಡಿನ ಹಕ್ಕಿ ಬಾರೊ|| ಎದಿಯೊಳಗ ತುಂಬ್ಯಾವ ಮಳಲಾ ಜೋತ| ಬಿದ್ದಾವ ಒಣಗಿಡಕ ಗೂಡಾ ಮೂರು ಸಂಜೆಯ ರಾತ್ರಿ ಕೂಗ್ಯಾವ ಮರಿಗೂಸ ಹೌಹಾರಿ ನಿಂತೇನ ಬಾರೊ|| [ಪಡಸಾಲೆಯಲ್ಲಿ ಗೌಡ್ತಿ, ಒಳಗಡೆ ಅಡಿಗೆ ಮನೆಯಲ್ಲಿಬಸ್ಸಿಯಿದ್ದಾಳೆ. ಬಸ್ಸಿ ಒಳಗಿಂದಲೇ ಮಾತಾತ್ತಾಳೆ] +ಗೌಡ್ತಿ: ಬಸ್ಸೀ- +ಬಸ್ಸಿ: ಬಂದಿನೇ ಎವ್ವ. +ಗೌಡ್ತಿ: ಲಗೂ ಬಾ, ಸುಣ್ಣವಾಗ ಎಷ್ಟು ಹೊತ್ತ ಕೈ ಹಾಕಿಕೊಂಡ ಕೂರತೀಯೆ? +ಬಸ್ಸಿ: ಕೈ ಒರಸಿಕೊಂಡರ ಮುಗೀತ. +ಗೌಡ್ತಿ: ಬಾ ಇನ್ನ ನೆಲಾ ಗೂಡಸಬೇಕು. ಹೊಚ್ಚಲಾ ತೊಳೀಬೇಕು. +ಬಸ್ಸಿ: [ಹೊರಗೆ ಬಂದು] ನೀ ಜಳಕಾ ಮಾಡಿದಿ? +ಗೌಡ್ತಿ: ಯಾಕಮಾಡಿಧಾಂಗ ಕಾನ್ಸಾನಿಲ್ಲಾ? ಎಷ್ಟ ಮಾಡಿದರೂ ಅಷ್ಟ, ಅಂಗಾಲಿನಿಂದ ನೆತ್ತೀತನಕ ನೀರಡಿಸಿಧಾಂಗ ಆಗತೈತಿ. ಗೌಡ ಬರೂರಾಗ ಎಲ್ಲ ಮುಗೀ ಬೇಕ. ಶಿವೀಗಿ ಏನ ಹೇಳಿ ಕಳಿಸಿದೆ [ ಮುಂದಿನ ಮಾತು ನಡೆದಾಗ ಬಸ್ಸಿ ನೆಲ ಗುಡಿಸುವುದು, ರಂಗವಲ್ಲಿ ಹಾಕುವುದು. ಒಲೆ ಹೂಡುವುದು ಮಾಡುತ್ತಾಳೆ. ಗೌಡ್ತಿ ಆಗೀಗ ನೆರವಾಗುತ್ತಾಳೆ.] +ಗೌಡ್ತಿ: ಬಸ್ಸೀ. +ಬಸ್ಸಿ: ಯಾಕವ್ವ? +ಗೌಡ್ತಿ: ಈ ಪೂಜಿ ಬರೋಬರಿ ಆದರ ಮಕ್ಕಳಾದಾವೇನ? +ಬಸ್ಸಿ: ಎವ್ವಾ ಸುಳ್ಳ ಯಾಕ ಹೇಳೇನು? ತೆಗ್ಗಿನ ಮನೆ ದೇವೀರಿಲ್ಲಾ? +ಗೌಡ್ತಿ: ನನ್ನ ಮದಿವೀ ದಿನಾನ ಮದಿವ್ಯಾಗಿತ್ತು: ಆಕೀನ ಹೌಂದಲ್ಲ? +ಬಸ್ಸಿ: ಅದ ದೇವೀರಿ. +ಗೌಡ್ತಿ: ಆಕಿಗಿ ಮಕ್ಕಳಾಗ್ಯಾವಲ್ಲ? +ಬಸ್ಸಿ: ಹೌಂದ ಖರೆ, ಅದೂ ಒಂದು ದೊಡ್ಡ ಕತೀನ ಎವ್ವ. ಆಕೀಗೂ ನಿನ್ಹಾಂಗ ಭಾಳ ದಿನಾ ಮಕ್ಕಳ ಆಗಲಿಲ್ಲಾ. ಇನ್ನೊಂದ ಮದಿವ್ಯಾಗಬೇಕಂತ ಗಂಡ ತಯ್ಯಾರಾದ. ಅಲ್ಲಿಲ್ಲಿ ಕನ್ಯಾ ನೋಡಿ ಬಂದರು. ಒಂದ ದಿನಾ ದೇವೀರಿ ಹೊಲಕ್ಕ ಬಂದ ಮಾರಿಗಿ ಸೆರಗ ಹಾಕಿಕೊಂಡ ಅಳತಿದ್ದಳು. ‘ಯಾಕ ಮಗಳ ಹಿಂಗ ಅಳತಿ? ಅಂದೆ.’ ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ಇನ್ನೊಂದ ಮದುವ್ಯಾಗತಾನಂತ. ದೇವರು ನನ್ನ ಹಣ್ಯಾಗ ಮಕ್ಕಳು ಬರದಿಲ್ಲ.’ ಅಂದ್ಲು. ನೀ ಏನ ಹೇಳ ಎವ್ವಾ, ಬಂಜಿ ಯಾರಾ, ತಾಯಿ ಯಾರಾ ನನಗ ತಿಳೀದ ಇರತೈತಿ. ಅಷ್ಟು ದೂರ ನಿಂತರ ಇಲ್ಲಿ ಹರಗಿದ ಹೊಲಧಾಂಗ ನಾರತಿದ್ದಳು ದೇವೀರಿ. +ಗೌಡ್ತಿ: ಎದಕ್ಕೆಲ್ಲಾ ಒಂದೊಂದ ಹಂಗಾಮ ಇರತಾವ. ಹೌಂದನ್ನೊ ಹಂಗಾಮ ಮೀರಿದರ ಹೆಂಗ ಹೇಳು? +ಬಸ್ಸಿ: ನೀ ಏನ ಅನ್ನು. ಸಾವಿರ ಕೊಟ್ಟರೂ ಗೌಡನ ನಡಾವಳಿ ಹೇಳಬ್ಯಾಡ ತಗಿ. ಊರ ತುಂಬ ಹೊಲಾ ಇಟ್ಟ್ಟುಕೊಂಡ ಏನ ಮಾಡೊದೈತಿ? ಸತ್ತಮ್ಯಾಲ ಇದನ್ನೆಲ್ಲಾ ಯಾರಿಗಿ ಮಾಡತಾನ ಹೇಳು, ತಿಳೀಬಾರದ? ಮನ್ಯಾಗ ಎಳೀ ಹುಡುಗಿ, ಹಣೀಮ್ಯಾಲ ಕೈ ಇಟ್ಟೂಕೊಂಡ ಸೋ ಅಂತ ಹಾಡಿಕೊಂಡ ಕುಂತಿರ್‍ತಿ. ಹೇಂತೀ ಮುಖಾ ನೋಡೋ ಅಂದರ ಸೂಳೇರ ಮಣಕಾಲ ನೋಡೇನು ಅಂತಾನ! +ಗೌಡ್ತಿ: ಎದಕ್ಕೆಲ್ಲಾ ದೈವಬಲಾ ಬೇಕ ಬಾ. +ಬಸ್ಸಿ: ಎವ್ವಾ, ಮೊದಲ ನನ್ನ ಬಾಯಿ ಕಡಿಮೀದ ಅದನ್ಯಾಕ ಮಾಟಾಡಸ್ತಿ? ಬೀಜ ಬಲಾನ ‘ಇಲ್ಲದಿದ್ದರ ದೈ‌ಅವಬಲ ಏನ ಮಾಡೀತು? ಹೆಂಗಸಿನ ಹೊಟ್ಟೀ ಮ್ಯಾಲಿನ ಗೆರೀ ಅಳಸಾಕ ತಾಕತ್ತ ಬೇಕೇನವ! ಬರಿ ಬಾಯ್ಲೆ ಜಬರ ಮಾಡಿದರ ಏ ಬಂತು? ನೋಡಬಾರದ ನನ್ನ ಗಂಡನ್ನ? ಮದಿವ್ಯಾಗಿ ಇಷ್ಟು ವರ್ಷಾಯ್ತು- ಒಂದ ದಿನಾ ನನಗ ಬಾರಕೋಲ ತೋರಿಸೋಲ್ಲ. ಆದರೂ ಇನ್ನ ಅಲ್ಲಿ ಬರ್‍ತಾನಂದರ ಇಲ್ಲಿ ಗಾಳಿ ಹೊಕ್ಕ ಬಳ್ಳಿಹಾಂಗ ನಡಗತೇನ. ಸುಳ್ಳಲ್ಲ ಎವ್ವಾ ಅವನ ಉಚ್ಚೀ ದಾಟಿದರ ಮುದಿಕೇರ ಸೈತ ಬಸಿರಾಗತಾರ! +ಗೌಡ್ತಿ: ಬೇಡೀ ಬಂದೀ ಬಾ, ಸೆರಗೊಡ್ಡಿದರ ಶಿವಾ ನನ್ನ ಉಡ್ಯಾಗ ಕಸಬರಿಕಿ ಹಾಕಿ ಕಳಿಸ್ಯಾನ. +ಬಸ್ಸಿ: ಅಷ್ಟ ಯಾಕ ಮನಸಿಗಿ ಹಳಹಳಿ ಮಾಡಿಕೊಳ್ತಿ? ಈ ಪೂಜಿ ಹುಸಿಹೋದರ ನನ್ನ ಹೆಸರ ಬಸ್ಸಿ ಅಲ್ಲಾ ಅಂತ ತಿಳಿ +ಗೌಡ್ತಿ: ಅಂಧಾಂಗ ದೇವೀರಿಗಿ ಏನ ಹೇಳಿದಿ? +ಬಸ್ಸಿ: ಹಾ! ದೇವೀರಿ ಕಣ್ಣೀರ ಹಾಕಿ ಅಳತಿದ್ಲು–‘ಯಾಕ ಮಗಳ’ ಅಂದೆ. ‘ಏನ ಹೇಳ್ಲೆ ಹಡದವ್ವಾ, ನನ್ನ ಗಂಡ ನನ್ನ ಮ್ಯಾಲೊಂದ ಸ್ವತೀನ ತರತಾನಂತ’- ಅಂದ್ಲು. ಸವತೀನ ಯಾಕ ತರತಾನಂತ?’ ‘ನನಗ ಬಂಜೀ ಅಂತ ಬೈಯಾಕ’ ಅಂತ್ಹೇಳಿ ಅಳಾಕ ಶುರು ಮಾಡಿದಳು. ಗಂಡಸರ ಹಂತ್ಯಾಕ ಬಂದರ – ನಾನ ನೋಡೇನಲ್ಲ ಎವ್ವಾ- ದೇವೀರಿ ಕಣ್ಣ, ಬಳ್ಳೀ ಎಲೀ ಹಾಂಗ ನಡಗತಾವ! ಮಕ್ಕಳಾಗಣಿಲ್ಲಂದರ ಹೆಂಗ ನಂಬಲಿ? +ಗೌಡ್ತಿ: ಎಷ್ಟ ಸಲ ಹೇಳೇನಿ: ಈ ಮನೀಗಿ ಮಕ್ಕಳ ಬೇಕೋ ಗೌಡಾ-ಅಂತ. ಹೇಳಿದಾಗೊಮ್ಮಿ ‘ದಣಿದೀದಿ ಆರಾಮ ತಗೋ ಹೋಗಂತಾನ.’ ಹಾಡಾಹಗಲಿ ಮಕ್ಕಳ ಸೈತ ಈ ಕಡೆ ಬರಾಕ ಹೆದರತಾವ. ಮನ್ನಿ ಉಡೀತುಂಬ ಹುರಗಡ್ಡಿ ತಗೊಂಡ ಆದೋ ಮಕ್ಕಳ್ನ ಕರದ ಕರದೆ. ಒಂದ ಒಂದು ಹೊಲ್ಯ್ರಾರ ಕೂಸಾದರೂ ತಿರಿಗಿ ನೋಡೀತೇನ! ಓಡಿಹೋಗೋ ಮಕ್ಕಳ್ನ ನೋಡಿ ಎದಿ ಬೆವರಿತು. ಅಂಗಳದಾಗ ಹುರಗಡ್ಡಿ ಚೆಲ್ಲಿ ತಲೀಂಯಾಲ ಕೈಹೊತ್ತ ‘ಶಿವನ ಏನ ಹೆಣ್ಣಿನ ಜನ್ಮ?’ ಅಂದೆ. ನನ್ನ ಉಸಿರಿನ ಜಳ ಶಿವನಿಗೆ ಎಲ್ಲಿ ತಾಗೀತ ಹೇಳು? ಅವನ ಎದ್ಯಾಗ ಬರೀ ಕಲ್ಲ ತುಂಬ್ಯಾವೊ ಏನೋ? +ಬಸ್ಸಿ: ನೋಡ ಎವ್ವಾ, ನನಗ ಎಂಥಾ ಹೊಲತಿ ಅನ್ನವೊಲ್ಯಾಕ, ವನೀ ಅಂದ ಮ್ಯಾಲ ಕಲಕಲ ಸಪ್ಪಳಿರಬೇಕು. ಮಕ್ಕಳು ಅಳತಿರಬೇಕು. ತಾಯಿ, ಮಕ್ಕಳಿಗಿ ದೆವ್ವಿನ ಅಂಜಿಕಿ ಹಾಕತಿರಬೇಕು- ಅಂದರ ಚೆಂದ. ಇದೇನ ತಾಯಿ? ರಾತ್ರಿ ಈ ಕಡೆ ಬಂದರ ಒಂದ ಮನಿ, ಒಂದ ದೀಪ-ಮಿಣಕ್ ಮಿಣಕ್! ಈಗ ಆರಲ್ಯೋ? ಆಗ ಆರಲ್ಯೋ? ಶಿವನ್ನ ಕರೀಲ್ಯೋ? ಶಂಭೋ ಅನ್ನಲ್ಯೋ? ಮನ್ಯಾಗ ಮದ್ಮ್ದಿ ಇದ್ದಾರೊ ಇಲ್ಲ‌ಓ! ಇದ್ದವರೆಲ್ಲಾ ಬರೀ ನಿಟ್ಟುಸಿರಿನಾಗ ಮಾತಾಡತಾರೊ! +ಗೌಡ್ತಿ: ದೇವೀರಿಗಿ ಏನ ಹೇಳಿದಿ? +ಬಸ್ಸಿ: ಚಿಂತೀ ಮಾಡಬ್ಯಾಡ ಮಗಳ, ಜೋಕುಮಾರಸ್ವಾಮೀ ಪೂಜೀ ಮಾಡು ಅಂದೆ. ಪೂಜಿ ಮಾಡಿ ಸ್ವಾಮೀನ್ನ ಪಲ್ಲೆ ವಡಿ ಗಂಡಗ ನೀಡಿದಳು. ತಿಂದ್ನೋ ಇಲ್ಲೊ? ತಲೀ ಕೆಟ್ಟವರ್‍ಹಾಂಗ ಬಾಯಿ ತೆರಕೊಂಡ ದೇವೀರಿ ಸೀರಿ ಸೆರಗಿನಾಗ ಇರತಿದ್ದ! ಆಮ್ಯಾಲ ಏನ ಕೇಳ್ತಿ? ಬುಧವಾರಕೊಂದ, ಶನಿವಾರಕೊಂದ ಕೂಸ ಕೂಸ! ಹಡಿಯೋ ದಂದರ ತತ್ತಿ‌ಇಟ್ಟಷ್ಟ ಸರಳ ಎವ್ವಾ! +ಗೌಡ್ತಿ: ಆಕೀಗೂ ಜೋಕುಮಾರ ಸ್ವಾಮೀಂದ ಮಕ್ಕಳಾದುವು? +ಬಸ್ಸಿ: ಜೋಕುಮಾರಸ್ವಾಮಿ ಸಣ್ಣ ದೇವರಲ್ಲ ಎವ್ವಾ. +ಗೌಡ್ತಿ: ಬಸ್ಸೀ, ಯಾವುದಾದರೂ ಮನ್ಯಾಗ ಗಿಣಿ ಐತೇನಾ? +ಬಸ್ಸಿ: ಗಿಣೀ? ಹಾ! ಬಸಣ್ಯಾ ಇಲ್ಲಾ ಎವ್ವಾ? ಅವನ ಹಂತ್ಯಾಕೊಂದು ಗಿಣಿ ಐತಿ, ಭಾಳ ಚಂದ ಐತಿ. ಪಂಜರದಾಗಿಂದ ಬಿಟ್ಟರೂ ಹಾರಿ ಹೋಗಾಣಿಲ್ಲ- ಅವನ ಹೆಗಲ ಮ್ಯಾಲ ಕುಂತಿರತೈತಿ. +ಗೌಡ್ತಿ: ಹೌಂದೇನ? +ಬಸ್ಸಿ: ಎವ್ವಾ, ಅದಕ್ಕ ಮಾತ ಬ್ಯಾರಿ ಕಲಿಸ್ಯಾನ. ತೊದಲಿ ತೊದಲಿ ಎಂಥಾ ಚೆಂದ ಮಾತಾಡತೈತಿ! +ಗೌಡ್ತಿ: ಆಯ್ ಶಿವನ! ಖರೆ ಏನ? +ಬಸ್ಸಿ: ಖರೇಖರೇನ. ಊರ ಹುಡುಗೀರೆಲ್ಲಾ ನೀರ ತರಾಕ ಹೋದಾಗೊಮ್ಮಿ ಅದನ್ನ ಮಾತಾಡಿಸಿ ಬರತಾರ! [ಶಿವಿ ಬರುವಳು] +ಶಿವಿ: ಕೆಲಸ ಕೆಟ್ಟಿತಲ್ಲ ಎವ್ವ +ಗೌಡ್ತಿ: ಯಾಕ? +ಶಿವಿ: ನಾವು ಹೋಗೋದರೊಳಗ ಹೊಲೇರ ಶಾರಿ ಹೋಗಿದ್ದಳಂತ ಆ ಸೂತ್ರಧಾರನ ಹಂತ್ಯಾಕ. ಜೋಕುಮಾರಸ್ವಾಮೀನ್ನ ಇಸಕೊಂಡು ಹೋದಳಂತ. +ಗೌಡ್ತಿ: ಹಾಂಗ ನೀ ಹೊಲಗೇರಿಗ್ಯಾಕ ಹೋಗಿ ಬರಲಿಲ್ಲ? +ಶಿವಿ: ಹೊಲಗೇರಿಗೆ ಹ್ಯಾಂಗ ಹೋಗ? +ಗೌಡ್ತಿ: ನನ್ನ ಸಲುವಾಗಿ ಹೋಗ ಇನ್ನೊಂದ ವರ್ಷದ ತನಕ ಸ್ವಾಮೀ ಹೆಸರಿನಿಂದ ಹಾಂಗ ಹೆಂಗ ಕುಂತಿರಲಿ? ನಿನಗ ಉಡೀತುಂಬ ಆಯಾರ ಮಾಡತೇನ ಹೋಗ +ಶಿವಿ: ಗಂಡುಳ್ಳ ಗರತೇರ ಸೂಳೀ ಮನೀಗಿ ಹೆಂಗ ಹೋದಾರೂ ಎವ್ವಾ! +ಗೌಡ್ತಿ: ಖರೆ, ತಾ ಸಾಯದ ಸ್ವರ್ಗ ಸಿಣಿಲ್ಲಂತ. ಇಲ್ಲೇ ಇರ್ರಿ; ಬರತೇನ. [ಸಂಗೀತ] +***** +ಮುಂದುವರೆಯುವುದು +ಒಂದನೆಯ ದೃಶ್ಯ (ಹೊಲೆಯರ ಹಟ್ಟಿ. ಕೇರಿಗಳು ಕೂಡುವ ವಿಶಾಲ ಜಾಗ. ಒಂದು ಅರಳಿ ಕಟ್ಟೆ. ರಂಗದ ಎಡಭಾಗಕ್ಕೆ ಒಂದು ಮುರುಕಲು ಸೂರು ರಂಗದತ್ತ ಉಚಾಯಿಸಿದೆ. ಬಲ ಭಾಗದಲ್ಲಿ ಒಂದು ಬಿದಿರ ನೆರಕೆ. ಬೆಳಕು ಬಿದ್ದಾಗ […] +ಋತುಮಾನದ ಹಕ್ಕಿ [ಸೂಳೆ ಹೊಲೇರ ಶಾರಿಯ ಮನೆಯಂಗಳ. ಗೌಡ್ತಿ ಸೀರೆಯ ಸೆರಗಿನಿಂದ ಅಂಗಳ ಗುಡಿಸುತ್ತ ಬರುವಳು] ಗೌಡ್ತಿ: ಅವ್ವಾ ಸೂಳೆವ್ವ ತಾಯಿ ಸೂಳೆವ್ವ ಅದಿಯೇನ ಮನೆಯಾಗ || ಬಂಜಿ ಬಂದ ಕರಿಯುತೇನ ಕರುಣಾ ಇಲ್ಲೇಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_611.txt b/Kannada Sahitya/article_611.txt new file mode 100644 index 0000000000000000000000000000000000000000..d89d8db905373b1c0a4c319735cf8fda60603737 --- /dev/null +++ b/Kannada Sahitya/article_611.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಲೋಕವೇ, ನಿನಗಂಟಿಕೊಂಡಿರುವನಕ +ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: +ಕೆಟ್ಟು ಹೋದ ಬಲ್ಬಿನ ಥರ. +ನಾನಿರಲಿ ಇರದಿರಲಿ ನಿನಗಾವ ಬಾಧಕ? +ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. +ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, +ಮಂದಿಗೆ ನಿನ್ನ ಚಲನವಲನದ ಸೂಚಕ: +ನೀನು ಗಡಿಯಾರ, ನಾನದರ ಲೋಲಕ. +***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […] +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_612.txt b/Kannada Sahitya/article_612.txt new file mode 100644 index 0000000000000000000000000000000000000000..d00ee888b690411ec74ce05e126da5b7880bc43f --- /dev/null +++ b/Kannada Sahitya/article_612.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ ಕುಡಿಯುವಂತಿಲ್ಲ. ಕೊಬ್ಬರಿಯ ಸುದ್ದಿಯೇ ಕಾಣೆ. ಅಲ್ಲಿ ಅವನ್ನು ಅನುಭವಿಸಬೇಕು, ಇಲ್ಲಿ ನಾನು ಈ ಪದಾರ್ಥಗಳನ್ನು ಒಂದಕ್ಕೆ ಹತ್ತರಷ್ಟು ಕೊಟ್ಟು ಕೊಂಡುಕೊಳ್ಳಬೇಕು. ಈ ಕಾಯಿಗಳೆಲ್ಲಾ ನನ್ನ ದಕ್ಷತೆಯನ್ನು ನೋಡಿ ನಗುವಂತೆ ಕಾಣುತ್ತವೆ. ಆದ್ದರಿಂದ ಇವುಗಳ ಮತ್ತು ಈ ಮರಗಳ ದರ್ಶನ ನನಗೆ ಅಪ್ರಿಯ. +ಆದರೆ ಅದರ ಗೆಳೆಯನಾದ ಈಚಲು ಮರವನ್ನು ಕಂಡರೆ ನನಗೆ ಏನೋ ಒಂದು ಅಭಿಮಾನ. ಇದರ ಧೈರ್ಯವೇ ಧೈರ್ಯ, ದಾಷ್ಟೀಕವೇ ದಾಷ್ಟೀಕ. ಇದು ಇಲ್ಲದ ಜಾಗವಿಲ್ಲ. ಮೈದಾನದಲ್ಲಿ ಎಲ್ಲಿ ಸ್ವಲ್ಪ ನೀರಿನ ಆಸರೆ ಇದ್ದರೆ ಅಲ್ಲಿ ಹಾಜರು. ತಾನೇ ಕಾಡಾಗಿ ಬೆಳೆದರೂ ಸರಿಯೆ, ಒಂಟಿಯಾಗಿದ್ದರೂ ಸರಿಯೆ, ಇದು ನಿರ್ಭಯವಾಗಿ ಯಾರ ಹಂಗೂ ನನಗೆ ಬೇಡ, ನನ್ನನ್ನು ತಡೆಯುವವನಾವನು ಎಂದುಕೊಂಡು ಗುಂಗುರುತಲೆಯ ಗರಿಯನ್ನಲ್ಲಾಡಿಸುತ್ತಾ ನಿಂತಿರುತ್ತದೆ. ತರುಗಳಲ್ಲಿ ಇದು ಮ್ಲೇಚ್ಛ, ಕಲ್ಪದ್ರುಮಗಳಲ್ಲಿ ಕೌಶಿಕ ಕಲ್ಪದ್ರುಮ. ಹೊಲದ ಮಧ್ಯದಲ್ಲೋ ಗಿಡದ ಮಧ್ಯದಲ್ಲೋ ತೊರೆಯ ತಡಿಯಲ್ಲೋ ಗುಡಿಯ ತೋಟದಲ್ಲೋ ಹಾಳು ಮಂಟಪದ ಬದಿಯಲ್ಲೋ-ಅಂತೂ ಎಲ್ಲಾದರೂ ಸರಿಯೆ ಇದು ನಿಲ್ಲುವ ನಿಲುವೇ ನಿಲುವು! ಜನಕ್ಕೇನೋ ಇದನ್ನು ಕಂಡರೆ ಅಸಹ್ಯ, ಇದರ ಸೋಂಕು ಮೈಲಿಗೆ. ಆದರೆ ಅವರ ಮೂಗುಮುರಿತಕ್ಕೆ ಸರಿಯಾದ ಬಿಂಕ ಇದಕ್ಕೂ ಉಂಟು. ಕಾಸಿದ ಬಂಗಾರದಂಥ ಬಣ್ಣದ ಹೊಂಬಾಳೆಯನ್ನು ಮೆರೆಸುತ್ತಾ ತನ್ನ ನೀಳವಾದ ಅಲಗಿನಂತಿರುವ ಗರಿಗಳನ್ನು ಗಾಳಿಯಲ್ಲಿ ಅಲುಗಿಸುತ್ತಾ ಸಿತಾರು ಬಾರಿಸುವವನಂತೆ ನಿಂತಿರುವ ಈ ಮ್ಲೇಚ್ಛತರುವಿಲಾಸಿ ನನಗೆ ಯಾವಾಗಲೂ ಹೃದ್ಯನೇ. +ಇದರಿಂದ ನನಗೂ ಇದಕ್ಕೂ ಸರಸಸಂಬಂಧವುಂಟೆಂದು ಯಾರೂ ಭಾವಿಸಬಾರದು. ಇದು ವ್ಯಸನಕ್ಕೆ ಕಾರಣವಾಗಬಹುದೆಂದು ನಾನು ಜಾಗರೂಕನಾಗಿಯೇ ಇದ್ದೇನೆ. ಆದರೆ ಒಂದು ದಿನ ಅದರ ತಲದಲ್ಲಿ ನಾನು ಕುಳಿತು ಕೊಳ್ಳಬೇಕಾಯಿತು. ಸಂದರ್ಭ ಹೀಗೆ: ನಮ್ಮೂರ ತೊರೆ ಎಂದರೆ ನನಗೆ ಪ್ರೀತಿ. ಒಂದು ಬೇಸಗೆಯ ಮಧ್ಯಾಹ್ನ ನಾನು ಅದರ ಕಣಿವೆಯಲ್ಲಿ ಓಡಾಡುತ್ತಿದ್ದೆ. ಗೆಳೆಯರು ಬುತ್ತಿ ತೆಗೆದುಕೊಂಡು ಹಿಂದಿನಿಂದ ಬರುತ್ತೇವೆ ಎಂದಿದ್ದರು. ನಾನು ಒಬ್ಬನೇ ಮುಂದಾಗಿ ಹೊರಟು ಕಾಡುಮೇಡೆಲ್ಲಾ ಸುತ್ತಿ ದಣಿದು ತೊರೆಯ ಸನಿಹಕ್ಕೆ ಬಂದೆ. ಕುಳಿತುಕೊಳ್ಳೋಣ ಎಂದರೆ ಎಲ್ಲೂ ನೆರಳಿಲ್ಲ. ಆದರೆ ಆ ಕಣಿವೆಯ ನಟ್ಟನಡುವೆ ತೊರೆ ಹರಿಯುವ ಜಾಗದಲ್ಲೇ ಒಂದು ದೊಡ್ಡ ಈಚಲುಮರ ನಿಂತಿದೆ. ಅದರ ಕೆಳಗೆ ಒಂದು ಪ್ರಶಸ್ತವಾದ ಬಂಡೆ. ಆ ಬಂಡೆಯನ್ನು ತೊರೆ ತೊಳೆಯುತ್ತಾ ಹರಿಯುತ್ತಿದೆ. ಒಂದು ಮಾರು ದೂರದಲ್ಲಿ ಈ ಜಡೆಯಷ್ಟಗಲದ ನೀರ ಹರಿವು ಒಂದು ಆಳುದ್ದದ ನಾಲಗೆಯ ಕಲ್ಲಿನಿಂದ ಕೆಳಕ್ಕೆ ಧುಮುಕುತ್ತದೆ. ಇದಕ್ಕಿಂತ ಒಳ್ಳೆಯದಾದ ಜಾಗವನ್ನು ಎಲ್ಲಿ ತರೋಣ? ನಾನು ನಿರ್‍ವಾಹವಿಲ್ಲದೆ ಆ ಬಂಡೆಯ ಮೇಲೆ ಕುಳಿತೆ. ಮೇಲೆ ಈಚಲುಮರ. ಕಾಶಕುಸುಮದ ಚಾಮರದಂತೆ ಇದರ ಗರಿಯ ನೆರಳು ಮೃದುವಾಗಿ ನನ್ನ ತಲೆಯ ಮೇಲೆ ಬೀಸುತ್ತಿತ್ತು. ನನಗೇನೋ ಹಾಯಾಯಿತು. ಆದರೆ ಈ ಸ್ವಾದುವಾದ ನೆರಳನ್ನು ಚೆಲ್ಲುತ್ತಿದ್ದ ಮರ ಈಚಲುಮರ! ಒಂಟಿಯಾಗಿದ್ದರೂ ಅದು ದಿಟ್ಟವಾಗಿತ್ತು, ಅದರ ಗರಿಗಳು ಚಟುವಟಿಕೆಯನ್ನು ತೋರುತ್ತಿದ್ದವು. ಆ ಗರಿಗಳು ಸ್ತಬ್ಧವಾಗಿದ್ದಾಗ ಸಿಪಾಯಿಗಳ ಅಟೆನ್‌ಷನ್ ರೀತಿ, ಅಲುಗಾಡುವಾಗ ಕವಾಯತ್ತಿನ ರೀತಿ ತೋರುತ್ತಿದ್ದವು. ಅದು ಹಣ್ಣು ಹಿಡಿದ ಮರ. ಮರಕ್ಕೆ ಆ ಸಮಯದಲ್ಲೂ ಧ್ಯಾನಮೌನಗಳಿದ್ದಂತೆ ಕಾಣಲಿಲ್ಲ. ಸೂರ್ಯ ಸುಟ್ಟರೆ ಸುಡಲಿ, ಹಳ್ಳ ಒಣಗಿದರೆ ಒಣಗಲಿ, ತಾನೇನೋ ತಂಪಾಗಿದ್ದೇನೆ ಸಾಕು ಎನ್ನುವಂತಿತ್ತು ಅದು. ಅದನ್ನು ತುಸು ಕಾಲ ನಿಟ್ಟಿಸಿ ಭಲಾಪ್ಪ ಎಂದೆ. +ತಲೆಯ ಮೇಲೆ ನೆರಳು, ಕಾಲಿನ ಮೇಲೆ ಶೀತಲವಾರಿ, ಸುತ್ತ ನಿದಾಘ ರವಿಕಿರಣ ಸಮುದ್ರ. ನನಗೆ ಸ್ವಲ್ಪ ಜೋಂಪು ಹಿಡಿಯಿತೇನೋ. ಅಥವಾ ಈಚಲುಮರದ ಮಹಿಮೆಯೋ; ಅದೇ ಇರಬೇಕು. ಮನಸ್ಸು ಹಬೆಹಬೆಯಾಗಿ ಎದ್ದು ನನ್ನ ತಲೆಯ ಮೇಲೆ ತೇಲುತ್ತಿರುವಂತೆ ನನಗೆ ತೋರಿತು. ನನ್ನ ದೇಹ ಸ್ಥಿರ, ಮನಸ್ಸು ಅಸ್ಥಿರ; ನಾನು ಹೊಗೆಯಾಡುತ್ತಿದ್ದ ಕಾರ್ಖಾನೆಯ ಚಿಮಣಿಯಂತೆ ವನದೇವತೆಗಳಿಗೆ ಕಂಡಿರಬೇಕು. ಅಂತು ಪ್ರತ್ಯಕ್ಷದ ಕಠೋರ ಋತಕ್ಕೆ ನಾನು ಆಗ ಬದ್ಧನಾಗಿರಲಿಲ್ಲ. ಬಂಡೆಗಳು ದೊಡ್ಡದೊಡ್ಡ ಹಕ್ಕಿಗಳಂತೆ ತೋರಿದವು. ಅವುಗಳ ಪಕ್ಕದಲ್ಲಿದ್ದ ಸಣ್ಣಸಣ್ಣ ಬಂಡೆಗಳು ಅವುಗಳ ಮೊಟ್ಟೆಯಂತೆಯೂ, ಇವು ಅವುಗಳ ಮೇಲೆ ಕಾವು ಕೂತಿರುವಂತೆಯೂ ಕಂಡವು. ಸಿಂದಬಾದ್ ನಾವಿಕನ ಕತೆಯಲ್ಲಿ ಬರುವ ರಣಹದ್ದುಗಳ ಕಣಿವೆಯೆ ಇದು? ನಾನು ಇದರಿಂದ ಪಾರಾಗುವ ಬಗೆ ಹೇಗೆ? ಈ ತರದ ಒಂದು ದಿಗಿಲೂ ನನಗೆ ಬಡಿಯಿತು. ಆಗ ಈಚಲುಮರದ ಗರಿಯು ಮರ್ಮರಿಸುತ್ತಿತ್ತು. ನಾನು ಅದನ್ನು ಗಮನವಿಟ್ಟು ಆಲಿಸಹತ್ತಿದೆ. +ಮಧುರವಲ್ಲದಿದ್ದರೂ ಸ್ಪಷ್ಟವಾದ ಮರ್ಮರದ ಮೂಲಕ ಅದು ಹೇಳುತ್ತಿದ್ದುದು ಮಹರ್ಷಿ ವ್ಯಾಸರ ಮಾತು: ‘ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ’ ಎಂದು. ಈಚಲುಮರಕ್ಕೆ ನಮ್ಮ ಪುರಾತನ ಪವಿತ್ರ ಸಂಸ್ಕೃತಿಯ ಸುಭಾಷಿತ ಹೇಗೆ ತಿಳಿಯಿತು? ಪುರಾಣಪ್ರವಚನ ನಡೆಯುವ ಸ್ಥಳಗಳಲ್ಲಿ ಇದಕ್ಕೆ ಇರುವುದಕ್ಕೆ ಅವಕಾಶವಿಲ್ಲ. ಅಥವಾ ಇದು ಇರುವೆಡೆಯಲ್ಲಿ ಪುರಾಣಶ್ರವಣ ನಡೆಯುವುದಿಲ್ಲ. ನಾರಿಕೇಳಕ್ಕೆ ಈ ಆರ್ಯ ಸಂಸ್ಕೃತಿಯ ಗಂಧ ಸಹಜವಾಗಿಯೇ ಉಂಟು. ಅದರ ಸಂತಾನವಿಲ್ಲದ ಪೂಜೆ ಎಲ್ಲಿ, ಪುರಸ್ಕಾರವೆಲ್ಲಿ, ವೈದಿಕ ಕರ್ಮವೆಲ್ಲಿ, ಫಲದಾನವೆಲ್ಲಿ? ಸಂಸ್ಕೃತ ಅದರ ರಸಗತವಾಗಿದ್ದರೆ ಅದರಲ್ಲೇನೂ ಆಶ್ಚರ್ಯವಿಲ್ಲ. ನನ್ನ ತೀರ್ಥರೂಪರು ಶಿಷ್ಯರಿಗೆ ಧರ್ಮಶಾಸ್ತ್ರ ಪ್ರವಚನವನ್ನು ಮಾಡುತ್ತಿದ್ದಾಗ, ಎಷ್ಟೋ ರಹಸ್ಯಗಳನ್ನು ಅಟ್ಟದ ಮೇಲಿದ್ದ ತೆಂಗಿನ ಹಣ್ಣುಗಳುಶಿಷ್ಯರಿಗಿಂತ ಹೆಚ್ಚಾಗಿಯೇ ಗ್ರಹಿಸಿದ್ದುವೆಂದು ನನ್ನ ನಂಬಿಕೆ. ತೆಂಗಿನ ಮರ್ಮರದಲ್ಲಿ ವೇದಘೋಷದ ಹೊಳಲಿದೆ, ಸಂಸ್ಕೃತದ ಶೈಲಿಯಿದೆ. ಈಚಲುಮರಕ್ಕೆ ಈ ವೇದಭಾಷೆಯ ಪರಿಚಯ ಹೇಗಾಯಿತು ವಿಶ್ವಾಮಿತ್ರನಿಂದ ಕಲಿಯಿತೆ? ಇದು ರಾವಣನಂಥ ಬ್ರಾಹ್ಮಣಮರವೇ ಆಗಿರಬಹುದೇ? ಇದು ಎಂಥ ಪಂಡಿತವಕ್ಕಿಗೆ ಆಶ್ರಯ ಕೊಟ್ಟಿರಬಹುದು. ಇಂಥ ಮಡಿಜಾಗದಲ್ಲಿ ಇದು ಬೀಡುಮಾಡಿಕೊಂಡು ದೇವಭಾಷೆ ಮಾಡುತ್ತಿದೆಯಲ್ಲಾ? ಇದನ್ನು ಎಂತು ಸಹಿಸುವುದು? ಇದನ್ನು ಏಕೆ ಕದಿದುಹಾಕದೇ ಉಳಿಸಿಕೊಂಡಿದಾರೆ? ಇತ್ಯಾದಿ ದುರ್ಭಾವನೆಗಳು ನನ್ನಲ್ಲಿ ಉತ್ಪನ್ನವಾದವು. ಆದರೆ ತರು ಮರ್ಮರಿಸುವುದನ್ನು ನಿಲ್ಲಿಸಲಿಲ್ಲ. ಶ್ರೀ ಗೊರೂರು ಅವರ ಎಮ್ಮೆಗೆ ಮಾತು ಮಾತ್ರ ತಿಳಿಯುತ್ತಿತ್ತು. ಆ ಕೌಶಿಕ ಕಾಮಧೇನುವಿಗಿಂತ ಈ ಕೌಶಿಕ ಕಲ್ಪದ್ರುಮ ಹೆಚ್ಚು ಕುಶಲ. ಇದು ಮನಸ್ಸನ್ನೂ ಅರಿಯಬಲ್ಲದು. +“ನಿನ್ನನ್ನು ಅರಸಿಕೊಂಡು ನಾನು ಬರಲಿಲ್ಲ, ನನ್ನನ್ನು ಅರಸಿಕೊಂಡು ನೀನು ಬಂದಿದೀಯೆ. ಆದರೆ ನನಗೆ ಕೆಡುಕನ್ನು ಯೋಚಿಸುತ್ತಿದ್ದೀಯೆ. ನನಗೆ ಯಾರ ಆಶ್ರಯವೂ ಬೇಕಿಲ್ಲ. ನನಗೆ ಯಾರ ಹಂಗೂ ಇಲ್ಲ. ಯಾರ ಬೆದರಿಕೆಗೂ ನಾನು ಸಗ್ಗುವಂತಿಲ್ಲ. ನನಗೆ ಇಷ್ಟ ಬಂದ ಕಡೆ ನಾನು ಬೆಳೆಯುತ್ತೇನೆ. ನನಗೆ ಸಂಸ್ಕಾರದ ಬೆಂಬಲವಿದೆ ಎಂದು ನೀನು ತಿಳಿದುಕೊಂಡಿರಬಹುದು. ಯಾವ ಫಾರೆಸ್ಟು ಡಿಪಾರ್ಟಮೆಂಟ್ ಎಷ್ಟು ಖರ್ಚುಮಾಡಿ ನನ್ನನ್ನು ಹುಟ್ಟುಹಾಕಿ ಬೆಳೆಸಿದೆ? ಬೆರಳು ಮಡಿಸು. ಅಷ್ಟಕ್ಕೂ ಸಂಸ್ಕಾರಕ್ಕೇ ಅಲ್ಲವೇ ನನ್ನ ಬೆಂಬಲ? ನನ್ನ ರಸದಿಂದ ತಾನೇ ನಿಮಗೆ ಜ್ಞಾನ, ಮಿಕ್ಕವರಿಗೆ ಅಜ್ಞಾನ? ನಿಮ್ಮ ಜ್ಞಾನವೇ ಲೇಸೋ, ಅವರ ಅಜ್ಞಾನವೇ ಲೇಸೋ ಯಾರು ಹೇಳಬಲ್ಲರು? ಎರಡು ಒಂದೇ ನಾಣ್ಯದ ಎರಡು ಮುಖಗಳು. ತಲೆ ನೀವು, ತಳ ಅವರು. ನಿಮ್ಮಿಬ್ಬರ ಬುದ್ಧಿಯ ಟಂಕಸಾಲಿಗ ನಾನು. ನನ್ನ ವಿಷಯದಲ್ಲಿ ನೀನು ಗೌರವದಿಂದಿರಬೇಕು. ಆದರೆ ಮನುಷ್ಯಸ್ವಭಾವವೇ ಹೀಗೆ. ಹಾ-“ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯ ನೇಚ್ಛಂತಿ ಪುಣ್ಯಂ ಮಾನವಾಃ” ಎಂದು ನಿಡುಸುಯ್ಯುತ್ತಾ ಮೌನವಾಯಿತು ಈ ಕೌಶಿಕಕಲ್ಪದ್ರುಮ. +ಬಿಸಿಲು ಧಗೆ ಹೆಚ್ಚಿತ್ತು. ಅದನ್ನು ಸ್ಪರ್ಧಿಸುವಂತೆ ಹೊಟ್ಟೆಯಲ್ಲಿ ಹಸಿವು. ಈ ಸ್ಥಿತಿಯಲ್ಲಿ ಬುದ್ಧಿಮಾಂದ್ಯ ಸಹಜ. +ನಾತ್ಯಶ್ನತಸ್ತು ಯೋಗೋಸ್ತಿ +ನಚೈಕಾನ್ತಮನಶ್ನತಃ +ಬುದ್ಧದೇವನಿಗೆ ಪ್ರಜ್ಞೆ ಬಂದದ್ದು ಸುಜಾತೆಯ ತಂದಿದ್ದ ಹಾಲನ್ನು ಕುಡಿದ ಮೇಲೆ ತಾನೆ. ನನಗೆ ಬರುವ ಬುತ್ತಿ ಇನ್ನೂ ಬಂದಿಲ್ಲ. ಗೆಳೆಯರು ಮರೆತರೋ ಇಲ್ಲ ದಾರಿತಪ್ಪಿದರೋ ಕಾಣೆ. ಈ ಮರ ಜಾಣಮರ. ಇದರೊಡನೆ ಸಂಭಾಷಣೆ ನಡೆಸುವಷ್ಟು ಚೈತನ್ಯ ನನ್ನಲ್ಲಿ ಇಲ್ಲ. ಸೌಜನ್ಯಕ್ಕೋಸ್ಕರ ಅದು ಆಡುವುದನ್ನೆ ನಾನು ಲಾಲಿಸಬೇಕಾಯಿತು. +“ನಿನ್ನ ಬುದ್ಧಿ ಈಗ ನೆಟ್ಟಗಿಲ್ಲ, ದಿಟ. ನಾನು ಏನು ಮಾಡಲಿ? ಅದು ಯಾವಾಗ ತಾನೆ ನೆಟ್ಟಗಿದೆ? ನಿಮ್ಮ ಜೀವ ಮೂರು ಸ್ಥಾಯಿಗಳಲ್ಲಿ ನಡೆಯುತ್ತಿದೆ.-ನಿದ್ರಾ, ಸ್ವಪ್ನ, ಜಾಗೃತಿ. ಈ ಮೂರನ್ನೂ ಒಟ್ಟಿಗೆ ಒಂದೇ ಕಾಲದಲ್ಲಿ ಹೊಂದಿಸಿ ಅನುಭವಿಸಬೇಕೆಂದೇ ನಿಮ್ಮ ಜಾತಿಯ ಸತತ ಪ್ರಯತ್ನ. ಸ್ವಪ್ನ ಜಾಗೃತಿ ಇವುಗಳನ್ನು ಬೆರೆಸಿ ಅನುಭವಿಸುವುದು ಅಷ್ಟು ದುಷ್ಕರವಲ್ಲ. ಇದಕ್ಕೆ ನಿದ್ರೆಯನ್ನು ಬೆರೆಸಿಕೊಳ್ಳುವುದು-ಅದು ರಾಮಕೃಷ್ಣರಂಥ ಮಹಾ ಯೋಗಿಗಳಿಗೆ ಮಾತ್ರ ಸಾಧ್ಯ. ನಿನ್ನಂಥವರ ಪ್ರಯತ್ನ ಜಾಗ್ರದವಸ್ಥೆಯಲ್ಲಿ ಸ್ವಪ್ನಾವಸ್ಥೆಯನ್ನು ತಂದುಕೊಳ್ಳುವುದರಲ್ಲಿ ಮುಗಿಯುತ್ತದೆ. ಅದು ಹಾಲು, ಇದು ನೊರೆ. ರಸಿಕರಿಗೆ ಇಂಥ ನೊರೆಹಾಲು ಹೃದ್ಯ. ನಿದ್ರೆ ತರುವುದರಲ್ಲೂ ನೀನು ಗಟ್ಟಿಗ-ಇರಲಿ-ಅಂತೂ ನೀನು ಯತ್ನಶಾಲಿ. ಆದರೆ ನನ್ನಷ್ಟು ಕುಶಲನಲ್ಲ. ನನ್ನ ರಸಸಂಸರ್ಗದಿಂದ ಎಲ್ಲರ ಚೈತನ್ಯಕ್ಕೂ ಜಾಗ್ರದವಸ್ಥೆಯಲ್ಲಿಯೇ ಸ್ವಪ್ನಾವಸ್ಥೆ ನಿಸ್ಸಂಶಯವಾಗಿ ಪ್ರಾಪ್ತವಾಗುತ್ತದೆ. ಅದು ನಿದ್ರಾಂತವೂ ಆಗುತ್ತದೆ. ನಿನ್ನ ಕಸುಬೂ ನನ್ನ ಕಸುಬೂ ಒಂದೇ. ಏಕೆ, ನಿನಗಿಂತ ನಾನು ಹೆಚ್ಚು ಕುಶಲ. ಆದರೆ ನಿಮ್ಮ ಸಮಾಜದಲ್ಲಿ ನಿನಗಿಂತ ನನಗೆ ಹೆಚ್ಚು ತಿರಸ್ಕಾರ. ಏಕೋ ಕಾಣೆ. ಇದರಿಂದ ನನಗೇನೂ ವಿಷಾದವಿಲ್ಲ. ಇದನ್ನು ನಾನು ನಿನಗೆ ಹಾಕಿಕೊಳ್ಳುವ ಅರ್ಜಿ ಎಂದು ತಿಳಿದುಕೊಳ್ಳಬೇಡ. ಇದ್ದ ಸಂಗತಿಯನ್ನು ಹೇಳಿದೆ ಅಷ್ಟೆ. +ಈಚಲಮರ ಇಷ್ಟು ವಾಚಾಳನೆಂದು ನನಗೆ ಗೊತ್ತಿರಲಿಲ್ಲ. ನಾನೂ ಅದೂ ಒಂದೇ ಕಸುಬಿನವರೆಂದು ಅದು ಹೇಳಿದ್ದನ್ನು ಕೇಳಿ ನನಗೆ ಸ್ವಲ್ಪ ರೇಗಿತು. ಸರಸ್ವತೀಪ್ರಸಾದರೂಪನಾದ ನನ್ನ ಸಾರಸ್ವತ ಸಂಪತ್ತೆಲ್ಲಿ? ಅಜ್ಞಾನಾಂಧ ತಮಸ್ಸನ್ನು ಪ್ರಕೋಪನ ಮಾಡುವ ಅದರ ಸುರೆಯೆಲ್ಲಿ? ಆದರೆ ಅದರ ಮಾತಿನಲ್ಲಿ ಸತ್ಯಾಂಶವಿಲ್ಲದೆ ಇರಲಿಲ್ಲ. ಜಾಗ್ರದವಸ್ಥೆಯಲ್ಲಿ ಸ್ವಪ್ನವನ್ನು ತಂದು ನೆಲೆಗೊಳಿಸುವುದಲ್ಲವೇ ಎಲ್ಲಾ ಕವಿಗಳ ಕಾರ್ಯ? ಅಲ್ಲಿ ಜೀವನದ ಮೂರರಲ್ಲಿ ಎರಡು ಸ್ಥಿತಿಗಳ ಸಮಗ್ರ ದೃಷ್ಟಿ ಸಿಕ್ಕುತ್ತದೆ. ಆದರಿಂದಲೇ ಪ್ರತ್ಯಕ್ಷಕ್ಕಿಂತ ಕಾವ್ಯವೇ ಸತ್ಯಕ್ಕೆ ಹೆಚ್ಚು ಸಮೀಪವಾಗಿದೆ. ಸುರೆಯ ಗುರಿಯೂ ಇದೆಯೇ? ಮದ್ಯಮತ್ತ ಕಾಣುವುದು ತಾನೆ ಏನನ್ನು? ಸುರಾಮತ್ತತೆಯಲ್ಲಿ ಸ್ವಪ್ನ ಜಾಗೃತಿಗಳ ಸಾಮರಸ್ಯವಿದೆಯೇ? ನಾನೂ ಈ ಈಚಲಮರವೂ ಹೇಗೆ ಒಂದೇ ಕಸುಬಿನವರು? ನನ್ನದು ಸತ್ಯಾನ್ವೇಷಣೆ-ಇದರದೊ? +ಹೀಗೆಂದುಕೊಳ್ಳುತ್ತಿರುವಾಗ ಈಚಲುಮರ ತನ್ನ ಗರಿಗಳನ್ನು ಸದ್ದು ಮಾಡತೊಡಗಿತು. +“ನೀನು ನನ್ನಿಕಾರನೋ? ನಾನಲ್ಲವೋ? ಈ ಒಂದೇ ಒಂದು ಉದಾಹರಣೆಯನ್ನು ತೆಗೆದುಕೊ. ಭೂಮಿ ಸುತ್ತುತ್ತದೆಯೋ-ಸೂರ್ಯನೋ? ಭೂಮಿಯೇ-ಸೂರ್ಯನಲ್ಲ-ಎಂಬ ತತ್ವ ನಿಮ್ಮ ಜಾಗ್ರದಾವಸ್ಥೆಯಲ್ಲಿ ನೆಲೆಗೊಳ್ಳುವುದಕ್ಕೆ ಎಷ್ಟೊಂದು ವರ್ಷಗಳ ಕಾಲ ಹಿಡಿಯಿತು! ಲೆಕ್ಕ ಮಾಡು. ಇದು ನಿಮಗಿನ್ನೂ ಅನಿಮಿತ ಸತ್ಯ. ನಾನೋ, ಒಂದೇ ನಿಮಿಷದಲ್ಲಿ ಇದನ್ನು ಅನುಭೂತ ಸತ್ಯವನ್ನಾಗಿ ಮಾಡಬಲ್ಲೆ. ಈ ನೆಲ ಅಸ್ಥಿರ, ಏಕೆ, ಎಲ್ಲವೂ ಅಸ್ಥಿರ, ಒಂದು ಕ್ಷಣದಲ್ಲಿ ಇದ್ದ ಹಾಗೆ ಯಾವುದೂ ಮತ್ತೊಂದು ಕ್ಷಣದಲ್ಲಿ ಇಲ್ಲ. ಇಷ್ಟನ್ನು ತಿಳಿದುಕೊಳ್ಳುವುದಕ್ಕಾಗಿ ಗೌತಮಬುದ್ಧ ಎಷ್ಟು ಕಾಲ, ಎಷ್ಟು ಕಷ್ಟಪಟ್ಟ. ಅವನದೇನು ತಪ್ಪು. ಆತ ಆಶ್ರಯಿಸಿದ ಮರ ಅಷ್ಟು ಮೊದ್ದು. ಆದರೆ ಈ ಕ್ಷಣಿಕತ್ವವಾದ ನನ್ನ ರಕ್ತಗತವಾಗಿದೆ. ಜಗತ್ತೇ ಬರಿ ಭ್ರಮೆ. ಅದರ ಭ್ರಮಣ ಮಾತ್ರ ಸತ್ಯ. ನೀವು ಜಾಗ್ರದಾವಸ್ಥೆಯಲ್ಲಿ ಯಾವುದನ್ನು ಋತು ಎನ್ನುತ್ತೀರೋ ಅದೆ ಮಾಯೆ. ನೋಡು, ಈ ಸುಡುವ ಸೂರ್ಯನಿದ್ದಾನೆ ಇಲ್ಲಿ, ಈ ಮಾಯೆಗೆ ಈತನೇ ಮಾಯಾವಿ. ಮಾಯೆ ಎಂದರೆ ಏನು ನಿನಗೆ ಗೊತ್ತೆ?” +‘ಹಳ್ಳಕ್ಕೆ ಬಿದ್ದವನನ್ನು ಕಲ್ಲಿನಿಂದ ಹೊಡೆ’ ಎಂಬ ಗಾದೆಗೆ ಅನುಸಾರವಾಗಿ, ಕ್ಷುಧ್ರಾಶಾಂತವಾದ ನನ್ನ ಬುದ್ಧಿಯ ಮೇಲೆ ಈಚಲುಮರ ಇಂಥ ಗಾಢವಾದ ಪ್ರಶ್ನೆಯನ್ನು ಎಸೆಯಬೇಕೆ? ಆದರೆ ಅದು ಮ್ಲೇಚ್ಛತರು. ಕರುಣೆಯನ್ನು ಬೇಡದು-ಕರುಣೆಯನ್ನು ತೋರದು. ನನಗೆ ಗೊತ್ತಿಲ್ಲವೆಂದು ನಾನು ಶರಣಾಗತನಾದೆ. +“ಪಾಪ, ಪಾಪ, ಮಾಯೆಯ ಸ್ವರೂಪವನ್ನು ತಿಳಿದುಕೊಳ್ಳಬೇಕಾದರೆ ಕಷ್ಟ. ಈಗ ಸ್ವಲ್ಪ ಎದ್ದು ನಿಂತುಕೋ-ಮೊಳಕಾಲುಗಳ ಸಂದಿಯಲ್ಲಿ ತಲೆಯನ್ನು ಹಾಕು-ಸುತ್ತ ನೋಡು. ಜಗತ್ತು ಹೇಗೆ ಕಾಣುತ್ತದೆ ಹೇಳು. ಅನೇಕ ಪ್ರಾಣಿಗಳಿಗೆ ಜಗದ ಸತ್ಯ ಈ ರೀತಿ ತೋರುತ್ತದೆ. ನಿನಗೆ ಈ ದೃಷ್ಟಿ ಮಾಯೆ. ಹೀಗೆ ಮಾಯೆ ಪರಸ್ಪರ ದೃಷ್ಟಿ ಭೇದದಿಂದ ಉತ್ಪನ್ನವಾದ ಸತ್ಯ ಪರಿಸ್ಥಿತಿ. ನಿನಗೆ ಗೊತ್ತಿರುವುದು ಏಳುಬಣ್ಣ. ಅದರೀಚೆ ಆಚೆ ಎಷ್ಟೋ ಬಣ್ಣಗಳಿವೆ. ಅದನ್ನು ಕಾಣಬಲ್ಲವರಿಗೆ ಜಗತ್ತು ಬೇರೆ ತರವಾಗಿ ತೋರುತ್ತದೆ. ಎಷ್ಟು ಪ್ರಾಣಿಗಳಿವೆಯೋ ಅಷ್ಟು ಲೋಕಗಳು. ಒಂದರದು ಇನ್ನೊಂದಕ್ಕೆ ಭ್ರಮೆ. ಈಗ ಮೇಲೆ ಈ ಸೂರ್ಯನನ್ನೇ ನೋಡು. ಇಲ್ಲಿ, ಸುಡುತ್ತಾ ಬೆಳ್ಳಗೆ ನೋಡುವುದಕ್ಕೆ ಅಸಾಧ್ಯನಾಗಿದ್ದಾನೆ. ಅಲ್ಲೋ? ಕೆಂಪಗೆ ತಣ್ಣಗೆ ಮೂಡುತ್ತಾ ಇದ್ದಾನೆ. ಅಲ್ಲಿರುವವರು ನಡವಳಿಕೆಗೂ ಇಲ್ಲಿರುವವರ ನಡವಳಿಕೆಗೂ ಅರ್ಥಾರ್ಥ ಸಂಬಂಧವಿಲ್ಲ. ಮೈಮುರಿತ, ಆಕಳಿಕೆ, ಕಾಫಿ ರೈಲು, ದೇವಸ್ಥಾನ, ಕೆರೆ, ಗಂಟೆ, ಸ್ಕೂಲು, ಸಂಧ್ಯಾವಂದನೆ, ಮಿಲ್ಲು, ಮಂಜಿನಹನಿ, ಹಕ್ಕಿಯ ಚಿಲಿಪಿಲಿ ಇತ್ಯಾದಿ, ಇತ್ಯಾದಿ ಹುಚ್ಚಾಟಗಳು ಅಲ್ಲಿ. ಅದರಾಚೆ ಏನೂ ಇಲ್ಲ-ನಿದ್ರೆ. ಇಲ್ಲಿನವರಂತೆ ಅಲ್ಲಿನವರು, ಅಲ್ಲಿನವರಂತೆ ಇಲ್ಲಿನವರು, ನಡೆದರೋ?” +ಈಗ ಈಚಲುಮರ ಗಹಗಹಿಸಿ ನಕ್ಕಿತು. ಈ ಎರಡು ಸತ್ಯಸ್ಥಿತಿಗಳ ಬೆರಕೆಯೇ ಹುಚ್ಚು ಎನ್ನಿಸಿಕೊಳ್ಳುವ ಸ್ಥಿತಿಯೇ! ನಾನೂ ಬೆರಗಾದೆ. ಈಚಲುಮರದ ಗರಿ ಪುನಃ ಸದ್ದುಮಾಡತೊಡಗಿತು. +“ಅಲ್ಲಿನ ಸತ್ಯ ಇಲ್ಲಿನ ಬೆರಗು-ಇಲ್ಲಿನ ಸತ್ಯ ಅಲ್ಲಿನ ಬೆರಗು. ಇಕೊ ಇದೇ ಸಮಯಕ್ಕೆ ಸೂರ್ಯ ಈ ಕಡೆ ಕೆಂಪಗೆ ಮುಳುಗುತ್ತಲೂ ಇದಾನೆ. ಇಲ್ಲಿನ ಪರಿಸ್ಥಿತಿಯೇ ಬೆರೆ. ಇದನ್ನು ವರ್ಣಿಸುವುದು ಆತ್ಮಪ್ರಶಂಸೆ ಆಗುವುದರಿಂದ ನಿನ್ನ ಊಹೆಗೆ ಬಿಟ್ಟಿದ್ದೆನೆ. ಈಗ ಬೆಳಿಗ್ಗೆಯೋ ಮಧ್ಯಾಹ್ನವೋ? ಸಂಜೆಯೋ ಸತ್ಯವಾಗಿ ಹೇಳು ನೋಡೋಣ. ಸೂರ್ಯನನ್ನೇ ಕೇಳೋಣವೇ? ಪಾಪ, ಅವನಿಗೂ ಭ್ರಮೆ. ಏಕೆಂದರೆ, ಆತ ಈ ಎರಡು ಸಂಧ್ಯೆಗಳನ್ನೂ ಎರಡು ಕಂಕುಳಲ್ಲಿಯೂ ಯಾವಾಗಲೂ ಇರುಕಿಕೊಂಡೇ ಇದಾನೆ, ಅರ್ಧನಾರೀಶ್ವರನಿಗಿಂತ ಒಂದು ಕೈ ಹೆಚ್ಚು ಈತ. ಆದರೆ ಆತನನ್ನು ಕೇಳಿದರೆ ‘ಇಲ್ಲ-ಹಾಗಂದರೇನು?’ ಎಂದೇ ಕೇಳುತ್ತಾನೆ. ತನ್ನ ಮಾಯೆ ತನಗೇ ಗೊತ್ತಿಲ್ಲದ ದೇವರು ಇದು. ಒಂದು ನಿಲುವಿನಲ್ಲಿ ಎಲ್ಲವೂ ಸತ್ಯ ಸಮೂಹವೆ ಭ್ರಮೆ ಅಥವಾ ಬೆರಗು ಎನ್ನಿಸಿಕೊಳ್ಳುತ್ತದೆ. ಈ ಭ್ರಮಸಮಷ್ಟಿಯನ್ನು ವ್ಯಷ್ಟಿವ್ಯಷ್ಟಿಯಾಗಿ ದುರ್ಬೀನಿನಲ್ಲಿ ನೋಡುವಮ್ತೆ ನೋಡು-ಆಗ ಒಂದೊಂದೂ ಸತ್ಯವೇ. ನನ್ನ ರಸದಿಂದ ತೇಜಸ್ವಿಯಾಗಿರುವವನ ನಡೆಯನ್ನೂ ನುಡಿಯನ್ನೂ ನಿರುಕಿಸು. ಆತ ಹೆಗೆ ನಡೆಯುತ್ತಾನೋ, ನುಡಿಯುತ್ತಾನೋ, ಅವುಗಳನ್ನೆಲ್ಲಾ ಯಾರೋ ಎಲ್ಲೋ ಅಂತೂ ಮಾಡುತ್ತಲೂ ಇದಾರೆ, ನುಡಿಯುತ್ತಲೂ ಇದ್ದಾರೆ. ಅವನ ಎಲ್ಲಾ ಸ್ಥಿತಿಗೂ ಲೋಕದಲ್ಲಿ ಸತ್ಯ ಪ್ರತೀಕವನ್ನು ಕಾಣಬಹುದು. ಹೀಗಿರುವಾಗ, ಆತ ಸತ್ಯಸ್ವರೂಪನಲ್ಲದೆ ಮತ್ತೇನು? ಅವನು ತೋರುವುದು ಸತ್ಯದ ಸಮಗ್ರ ದರ್ಶನವನ್ನಲ್ಲವೇ? ಈ ನಿಲುವಿಗೇರಲು ಯಾರು ಬಯಸುವುದಿಲ್ಲ? ಬಲ್ಲವನಿಗೆ ಈ ಸಮಗ್ರ ದರ್ಶನದಲ್ಲಿಯೇ ಪ್ರೀತಿ ಮತ್ತು ಉತ್ಸಾಹ. ಯೋಗಿಗೆ ತನ್ನ ತುರಿಯಾವಸ್ಥೆಯಲ್ಲಿ ಈ ಸ್ಥಿತಿ ಮತ್ತು ಈ ದರ್ಶನ ಲಭಿಸುತ್ತದೆ. +ಕರ್‍ಮಣ್ಯಭಿಪ್ರವೃತ್ತೋಪಿ ನೈವ ಕಿಂಚಿತ್ ಕರೋತಿ ಸಃ +ಎನ್ನುವ ಸ್ಥಿತಿ ಅವನದು. ಆದರೆ ಆತ ಸಾಹಸಿ. ಆತನಿಗೆ ತೋಳು ತೀಟೆ ಇದೆ. ಈ ಕಡೆಯಿಂದ ಆ ಕಡೆಗೆ-ಪ್ರತ್ಯಕ್ಷದಿಂದ ಪರೋಕ್ಷಜ್ಞಾನದ ದಡಕ್ಕೆ ಈಜಿಕೊಂಡು ಹೋಗುತ್ತಾನೆ. ನನ್ನ ರಸಸಿದ್ಧನೂ ಅಷ್ಟೆ. ತೆಪ್ಪವಿರುವಾಗ ಬಹು ಅಸಮರ್ಪಕವಾದ ಸ್ಥಿತಿ ಎಂದೇ ನಮ್ಮಿಬ್ಬರದೂ ಮತ ಮತ್ತು ವಾದ. ಆದರೆ ನನ್ನ ರಸಾನುಭವ ಬೇಕು ಎಲ್ಲರಿಗೂ-ರಸ ಬೇಡ. ನಿಮ್ಮಿರವೇ ಹೀಗೆ-ಪುಣ್ಯಸ್ಯಫಲ……ಮಾನವಾಃ| ನಾವೇನು ಮಾಡೋಣ.” +ಈ ಮಾತು ಕೇಳಿ ನನಗೇನೋ ದಿಗ್‌ಭ್ರಮೆ ಹಿಡಿಯಿತು. ಮಾನವನಿಗೂ ಈ ಈಚಲುಮರಕ್ಕೂ ಇದರ ಅನುಬಂಧಿಗಳ ರಸಕ್ಕೂ ಇರುವ ಅತ್ಯಂತ ಮೋಹಕವಾದ ಸಂಬಂಧ ಈ ಸದ್ಧರ್ಶನಾಪೇಕ್ಷೆಯಲ್ಲಿ ಬೇರೂರಿದೆಯೇ! ಎಂದುಕೊಂಡೆ. ಆಮೇಲೆ ಈಚಲುಗರಿಗಳ ಮೂಲಕ ಸೂರ್ಯನನ್ನು ನಿಟ್ಟಿಸುತ್ತಾ ‘ಎಲ ಎಲ ಮಾಯಾವಿ!’ ಎಂದೆ. ಏಕಕಾಲದಲ್ಲಿ ಎಷ್ಟು ವೇಷ ಹಾಕಬಲ್ಲ ಇವ! ಈತನ ನಿಜಸ್ವರೂಪವೇನೋ. ಆದರೆ ಇವನ ಈ ಭ್ರಮೆ ಇಲ್ಲದೆ ಜಗತ್ತೇ ನಡೆಯುವ ಹಾಗಿಲ್ಲ. ಭೂಮಿ ನಿಂತಿದೆ ಎಂದೇ ನಾವು ನಡೆಯಬೇಕು. ನಮ್ಮ ತಲೆ ತಿರುಗಿದಾಗ ಮಾತ್ರ ಅದು ಅಸ್ಥಿರ. ಅದರ ಸತ್ಯಸ್ವರೂಪ ನಮಗೆ ತಿಳಿಯಬೇಕಾದರೆ ಇಂಥ ವಿಷಮಾವಸ್ಥೆಯಲ್ಲಿ ಮಾತ್ರ ಸಾಧ್ಯ. ಅದಕ್ಕೆಯೇ ಇದೇ ಸತ್ಯ ಎಂದು ಸ್ಥಾಪಿಸುವ ಮತಸ್ಥಾಪಕರೆಲ್ಲರೂ ತಪಶ್ಚರ್‍ಯೆಯಿಂದ ವಿಶಮಾವಸ್ಥೆಯನ್ನು ತಂದುಕೊಳ್ಳುತ್ತಾರೋ ಏನೋ! ಕೆಲವರಿಗೆ ಇದು ಪ್ರಕೃತಿದತ್ತವಾಗಿಯೂ ಬರುತ್ತದೆ. ಇಂಥ ವಿಷಮರಿಂದಲೇ ಜಗತ್ತು ನಡೆಯುತ್ತಿದೆ. ಸುರಾಗ್ರಹಣ ಮಾಡುವುದೂ ಈ ವಿಷಮಾವಸ್ಥೆಯನ್ನು ಪಡೆಯಬೇಕೆಂದೇ? ಈ ಈಚಲಮರವೂ ಸತ್ಯನಾರಾಯಣಾಶ್ರಯವೇ? ಇದಕ್ಕೂ ನಾವು ಪ್ರದಕ್ಷಿಣೆ ಮಾಡಬೇಕೇ? ಎಂದುಕೊಳ್ಳುತ್ತಿರುವಾಗ ಅದು: +ನನ್ನಲ್ಲಿಯೂ ದೇವತಾಂಶವುಂಟು” ಎಂದು ಮರ್ಮರಿಸಿತು. “ನಾನು ಅನೇಕರಿಗೆ ಮನೆದೇವರು. ನೀನು ವ್ರಾತ್ಯ, ನಿನಗೆ ಗೊತ್ತಿಲ್ಲದಿರಬಹುದು. ನನಗೂ ಪೂಜೆಪುರಸ್ಕಾರಗಳುಂಟು. ನೀನರಿತಿರುವಷ್ಟು ನಿಕೃಷ್ಟನಲ್ಲ ನಾನು. ನನಗೂ ನಿನಗೂ ಎಷ್ಟೋ ಬಗೆಯಲ್ಲಿ ಸಾಮರಸ್ಯವಿದೆ. ನಿನ್ನಂತೆ ನನಗೂ ಬಯಲು ಕಾಡೇ ಇಷ್ಟ. ನಿನ್ನಂತೆ ನಾನೂ ಸ್ವಪ್ನ ಪ್ರಚೋದಕ, ಸತ್ಯಪ್ರಿಯ. ಆದರೆ ನಿನ್ನ ‘ಮಡಿ’ ಭಾವ ನನಗಿಲ್ಲ. ನಾನು ನಿನ್ನಷ್ಟು ಅಸಹಾಯನೂ ಅಲ್ಲ. ನನಗಿಷ್ಟ ಬಂದಕಡೆ ನಾನು ಹೋಗುತ್ತೇನೆ, ನೆಲಸುತ್ತೇನೆ. ಸಿಕ್ಕಿದ ಜಾಗದಲ್ಲಿ ಬೆಳೆಯುತ್ತೇನೆ. ನಾನು ಯೋಗಿಯಂತೆ ಸ್ವತಂತ್ರ. ಇದುವರೆಗೂ ಯಾರೂ ಎಲ್ಲೂ ನನ್ನನ್ನು ಪೋಷಿಸಿ ಬೆಳೆಸಿಲ್ಲ. ನಾನು ಸತ್ತರೆ ಅತ್ತವರೂ ಇಲ್ಲ. ಇದುವರೆಗೆ ಹೀಗೇ ನಡೆಯಿತು. ಆದರೆ ನಿಮ್ಮ ಈ ಸ್ವರಾಜ್ಯದಲ್ಲಿ ನನಗೇನಾಗುತ್ತದೊ. ಆದುದು ಆಗಲಿ. ನಾನೇನು ಪರೋಪಜೀವಿಯೇ? ನಿರ್ಭಯ-ಹಾಗೂ ಉಪಕಾರಿ. ಅಂತೂ ಏನಾದರೂ ಆಗಲಿ-ಅನುಭವಿಸುವುದನ್ನು ಅನುಭವಿಸಿಯೇ ತೀರಬೇಕಲ್ಲ. ನಹುಶನಂಥ ಮಹಾರಾಜನಿಗೆ ಇಂದ್ರಪದವಿ ಬಂದಾಗ ಮಹರ್ಷಿಗಳೇ ಪಲ್ಲಕ್ಕಿ ಹೊರಬೇಕಾಯಿತಂತೆ. ಇನ್ನು ಜನಕ್ಕೆ ಇಂದ್ರಪದವಿ ಬಂದಾಗ ಕೇಳಬೇಕೆ? ನನ್ನಿಂದ ಬೆಲ್ಲ ಮಾಡಿಸಿದರೂ ಮಾಡಿಸಿದರೇ! ಆ ಕಥೆ ಇರಲಿ, ಈಗ ಹಸಿದಿದೆಯೇ-ಇಗೋ ತಿನ್ನು” ಎಂದು ಮರ್ಮರಿಸಿ ಸುಮ್ಮನಾಯಿತು. ಈ ಕಾಂತಾರ ಖರ್ಜೂರ ವೃಕ್ಷ. +ನಾನು ಆಶ್ಚರ್ಯದಿಂದಲೂ ಆಶೆಯಿಂದಲೂ ತಲೆಯನ್ನು ಮೇಲಕ್ಕೆತ್ತಿದೆ. ಕಾಗೆಯೊಂದು ಈಚಲುಹಣ್ಣನ್ನು ಮುಖದ ಮೆಲೆ ಕೆಡವಿ ಹಾರಿಹೋಯಿತು. ಅದು ಬಿದ್ದ ಏಟಿಗೆ ‘ಹಾ’ ಎಂದು ಮುಖ ಮುಚ್ಚಿಕೊಂಡೆ. ಎಷ್ಟಾದರೂ ಈಚಲುಮರ ಈಚಲುಮರವೇ-ಆದರೆ ಹಣ್ಣು ರುಚಿಯಾಗಿತ್ತು. ಏನು ದೈತ್ಯ ಮರವಯ್ಯಾ ಇದು ಎಂದು ಆ ಹಣ್ಣನ್ನು ಚೀಪುತ್ತಿರುವಾಗ ನನ್ನ ಗೆಳೆಯರು ಬಂದು ನನ್ನ ಸುತ್ತ ನಿಂತು ನಗುತ್ತಿದ್ದರು. +ಅಂದಿನಿಂದ ನನಗೂ ಈ ವೃಕ್ಷಕ್ಕೂ ಸ್ನೇಹ ಬೆಳೆದಿದೆ. ಈ ಸ್ನೇಹ ಹೇಗೆ ತಿರುಗುತ್ತದೆಯೋ ನೋಡಬೇಕು. +***** +ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […] +‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […] +“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_613.txt b/Kannada Sahitya/article_613.txt new file mode 100644 index 0000000000000000000000000000000000000000..b1b9c493cebce159cdc9479c6cbf816b7649c159 --- /dev/null +++ b/Kannada Sahitya/article_613.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು ಆಲೋಚಿಸಿ ನಾನು ಬಡವರಿಂದಲೇ ಬಡವರಿಗೆ ತೊಂದರೆ ಎಂಬ ನಿರ್ಧಾರಕ್ಕೆ ಬಂದೆ. ಈ ವಾದಸರಣಿ ಕ್ರಾಂತಿಕಾರಕವಾದುದರಿಂದ ನಾನು ಇಲ್ಲಿ ಈಗ ಬರೆಯುವುದಕ್ಕೆ ಅಂಜುತ್ತೇನೆ. ಅಂಜಿಕೆಗೆ ಮಾತು ಬಂದಿತಲ್ಲಾ. ಜಗತ್ತು ಯಾರಿಂದ ನಡೆಯುತ್ತದೆ ಎಂಬ ಪ್ರಶ್ನೆಗೆ, ಅಂಜಿ ನಡೆಯುವವರಿಂದಲೇ ಎಂಬ ಉತ್ತರ ಸದುತ್ತರವಲ್ಲವೇ? ಇಲ್ಲಿ ಕ್ರಾಂತಿಯ ಮಾತಿಲ್ಲ. ಶಕ್ತಿ ಪೂಜೆಯ ಈ ಉತ್ಸವ ದಿನಗಳಲ್ಲಿ ಇದರ ವಿವೇಚನೆಯನ್ನು ನಾನು ಏಕೆ ಸ್ವಲ್ಪ ಮಾಡಬಾರದು. ತಾಳಿದವ ಬಾಳಿಯಾನು-ಸರಿಯೆ, ಯಾರಿಲ್ಲವೆಂದರು? ಆದರೆ ಅಂಜುವವ ತಾನೆ ತಾಳಿಯಾನು! ಬಾಳಬೇಕೆಂಬ ಆಸೆಯ ತಳಹದಿಯಲ್ಲಿಯೇ ಅಂಜಿಕೆಯ ಆಸ್ತಿ ಭಾರವಿದೆ. ಜೀವನಮೀಮಾಂಸೆಗೆ ಈ ಭಯದ ವೇದಾಂತ ಬಹಳ ಮುಖ್ಯ. +ಭಯವನ್ನು ಯಾಕೆ ದುರ್ಗುಣವೆಂದು ಕರೆದರೋ, ಧೈರ್ಯ ಏಕೆ ಸದ್ಗುಣವಾಯಿತೋ, ನನಗಂತೂ ಇನ್ನೂ ಅರ್ಥವಾಗಿಲ್ಲ. ಭಯದಿಂದ ಧೈರ್ಯ ಹುಟ್ಟಿತೋ, ಧೈರ್ಯದಿಂದ ಭಯ ಹುಟ್ಟಿತೋ ಹೇಳುವವರಿದ್ದಾರೆಯೇ? ತುಪ್ಪಕ್ಕೆ ದೊನ್ನೆ ಆಧಾರವೋ, ದೊನ್ನೆಗೆ ತುಪ್ಪವೋ ಎಂಬ ತರ್ಕದಶ್ಟು ಸುಲಭವಲ್ಲ ಈ ಸಮಸ್ಯೆ. ಮೊಟ್ಟೆಯಿಂದ ಕೋಳಿಯೋ ಕೋಳಿಯಿಂದ ಮೊಟ್ಟೆಯೋ ಎನ್ನುವಷ್ಟು ಗಹನ. +ಬ್ರಹ್ಮಾಂಡದ ಸೃಷ್ಟಿ ಲಯಗಳಿಗೆ ಭಯ ಕಾರಣವೋ ಅಲ್ಲವೋ ನನಗೆ ತಿಳಿಯದು. ಅದರ ಸ್ಥಿತಿಗಂತೂ ಭಯವೇ ಮೂಲಕಾರಣ. ಭಯದಲ್ಲಿ ವೈಷ್ಣವಾಂಶವಿದೆ. “ಭಯಾದಗ್ನಿಸ್ತಪತಿ”, “ತೇನ ವಿನಾ ತೃಣಮಪಿ ನ ಚಲತಿ” ಇತ್ಯಾದಿ ಸೃತಿವಾಕ್ಯ ಪ್ರಮಾಣಗಳಿಂದಲೂ ಮತ್ತು “ಭಯಂ ಚಾಭಯಮೇವ ಚ” ಎಂಬ ಗೀತೋಪನಿಷತ್ತಿನ ಭಗವದ್ವಾಕ್ಯಗಳಿಂದಲೂ ಇದ್ದ ಸಿದ್ಧ. ಭಯವೆಂದರೆ ಭವ, ಅಭಯವೆಂದರೆ ವೈರಾಗ್ಯ-ಪ್ರಪಂಚದಲ್ಲಿ ವಿರಕ್ತರಂತೂ ಅಪರೂಪ. ಅಂದರೆ ಜಗತ್ತು ನಡೆಯುವುದು ಭಯಶಾಲೀನರಿಮ್ದ. ಪ್ರಾಣಕ್ಕಿಮ್ತಲೂ ಪ್ರಿಯವಾದುದು ಯಾವುದು, ಅದನ್ನು ನಡೆಯಗೊಡಿಸುವ ಭಯಕ್ಕಿಂತ ಉಪಕಾರವಾದ ಗುಣ ಮತ್ತಾವುದು? ಸೂರ್‍ಯನಿಗೆ ತೇಜಸ್ಸು ಹೇಗೆಯೋ ಹಾಗೆಯೇ ಪ್ರಾಣವಂತನಿಗೆ ಭಯ. ಯಾರಿಗೆ ಪ್ರಾಣದ ಮೇಲೆ ಆಸೆ ಇಲ್ಲವೋ ಆತನಿಗೆ ಮಾತ್ರ ಭವಿಲ್ಲ. ಅಂಥವನು ಏನೂ ಇಲ್ಲದವನು. “ನಾಹಮಸ್ಮೀತಿ ಸಾಹಸಂ.” ಅಂಥವರ ಮಾತು ಬಾಳಬೇಕೆಂಬ ನಮಗೇಕೆ? ಅಂಥವರಿಂದ ಲೋಕಕ್ಕೆ ತಾನೆ ಏನು ಪ್ರಯೋಜನ? +ಪ್ರಪಂಚದಲ್ಲಿ ಯಾವ ಯಾವವಕ್ಕೆ ಅಧ್ಯಾತ್ಮಿಕವಾದ ಬೆಲೆ ಇದೆಯೋ ಅವೆಲ್ಲಕ್ಕೂ ಭೀತರೇ ಆಶ್ರಯರು. ‘ದಯವೇ ಧರ್ಮದ ಮೂಲ’ ಎಂಬ ಮಾತಿನ ತಥ್ಯ ಸಂದೇಹಾಸ್ಪದವಾಗಿದೆ. ಭಯವೇ ಧರ್ಮದ ಮೂಲ ಎಂದರೆ ಸಮಂಜಸವಾದೀತು. ಪರ್ಷಿಯಾದೇಶದ ಪ್ರಾಚೀನ ಮತ ಯಾರಿಂದ ಈವರೆಗೆ ಉಳಿದಿದೆ? ಭೀತರಾಗಿ ಈ ದೇಶಕ್ಕೆ ಓಡಿಬಂದ ಝರತಿಷ್ಟ್ರಾನುಯಾಯಿಗಳಿಂದ ಅಲ್ಲವೇ/ ಮುಸಲ್ಮಾನರ ಮತ ಯಾರಿಂದ ಅಭಿವೃದ್ಧಿ ಹೊಂದಿತು? ಭಯಾರ್ತರು ಅದಕ್ಕೆ ತಲೆವಾಗಿ ತಮ್ಮ ತನುಮನಗಳನ್ನು ಕೋಟಿಗತ್ಟಲೆ ತೆತ್ತುದರಿಂದ ತಾನೆ. ಷೇಕ್ಸ್‌ಪಿಯರ್, ಷೆಲ್ಲಿ ಮುಂತಾದ ಪಾಶ್ಚಾತ್ಯ ಜನಾಂಗದ ಕವಿಗಳೂ, ಅವರ ಅಮೋಘವಾದ ಸಂಸ್ಕೃತಿಯೂ, ವಿಜ್ಞಾನವೂ ಯಾರ ಆಶ್ರಯವನ್ನು ಪಡೆದು ಈ ದೇಶದಲ್ಲಿ ಮನ್ನಣೆ ಪಡೆಯಿತು? ಆಂಗ್ಲಭೀತರಾದ ನಮ್ಮಿಮ್ದಲ್ಲವೆ? ಭಕ್ತಿಗೂ ಗೌರವಕ್ಕೂ ಭಯವೇ ಅಲ್ಲವೆ ವಾಹನ? ಯುದ್ಧಗಳಾಗುತ್ತಿರುವಾಗ ಉಳಿಯುವವರಾರು? ಸೋಲನ್ನೊಪ್ಪಿಕೊಳ್ಳುವವರಾರು? ಸಂಧಿಪ್ರಿಯರಾರು? ಶಾಂತಿ ಯಾರ ಇಷ್ಟ? ನಮ್ಮ ಪುರಾತನ ಸಂಸ್ಕೃತಿಗೆ ಯಾರಿಂದ ಉಳಿವು? ಎಲ್ಲ ಅಪಾಯಕ್ಕೂ ಹೆದರಿ, ವಿಪತ್ಪರಂಪರೆಗಳನ್ನು ತಾಳಿಕೊಂಡು, ಎಡವಿದರೆ ಅಂಜುತ್ತಾ, ಸಮಯ ಬಂದಾಗ ಪಲಾಯನ ಸೂತ್ರವನ್ನು ಅವಲಂಬಿಸುತ್ತಾ, ಕ್ರೋಧವಶರಾಗಬೇಕಾದ ಕಾಲದಲ್ಲಿ ಸ್ಥಿತಪ್ರಜ್ಞರಾಗುತ್ತಾ, ಅಮೂಲ್ಯವಾದ ಜೀವನವನ್ನು ಸಾಹಸಕ್ಕೀಡು ಮಾಡದೆ, ಸಾಮ್ರಾಜ್ಯಗಳು ಉಳಿಯಲಿ ಅಳಿಯಲಿ ಶಾಂತಚಿತ್ತರಾಗಿ, ಬಾಳುವೆಯನ್ನು ಅಂಜಲಿಪ್ರಮುಖರನ್ನಾಗಿ ಮಾಡಿ ನಡೆಯುವ ಭಯಶರಣ್ಯರಾದ ನೂರಕ್ಕೆ ತೊಂಬತ್ತೊಂಬತ್ತು ಜನ ಸತ್ಪ್ರಜೆಗಳಿಂದಲ್ಲವೇ “ಶತೇಷು ಜಾಯತೇ ಶೂರಃ” ಎಂಬ ಸುಭಾಷಿತ ಈಗ ನೆನಪಿಗೆ ಬಂದು ನನ್ನ ಈ ವಾದಕ್ಕೆ ಪೋಷಕವಾಗಿದೆ. ಸೃಷ್ಟಿಶಕ್ತಿಗೆ ಅಂಜಿಕೆಯುಳ್ಳವರಲ್ಲಿಯೆ ಹೆಚ್ಚು ವಾತ್ಸಲ್ಯ. +ಅಂದರೆ ಸಭ್ಯ ಜೀವನಕ್ಕೆ ಭಯವೇ ಮೂಲ. ಅದರ ಅಸ್ತಿವಾರದ ಮೆಲೆ ಧರ್ಮ, ಸಂಸ್ಕೃತಿ, ಶಿಸ್ತು, ಶಾಂತಿ, ಇತ್ಯಾದಿ, ಇತ್ಯಾದಿ ಸದ್ಗುಣಗಳು ಮೇಲೆಮೇಲೆ ಗೋಪುರಾಕಾರವಾಗಿ ಬೆಳೆದು ಮುಗಿಲನ್ನು ಮುಟ್ಟಿವೆ. ಇಂಥ ಅಮೂಲ್ಯ ಗುಣಸಂಪನ್ನರಾದ ನಮ್ಮ ಸ್ತ್ರೀಪುರುಷರು ಧನ್ಯರೇ ಸರಿ. +ಆದರೆ ಇದು ಹುಟ್ಟು ಗುಣ. ಭೂಗರ್ಭದಲ್ಲಿರುವ ಖನಿಜಗಳಂತೆ, ಇದನ್ನು ವೃದ್ಧಿಮಾಡುವುದು ದುಸ್ಸಾಧ್ಯ. ಬೇಕಾದರೆ ಅಗೆದು ತೋಡಿ ಹೊರತಂದು ಬಳಸಿಕೊಳ್ಳಬಹುದು ಅಷ್ಟೆ. ನಮ್ಮ ಮನಸ್ಸಿನಲ್ಲಿ ಇದರ ಪ್ರಮಾಣ ನಿಯತವಾದದ್ದು. ಅದಕ್ಕೆ ಮಿತಿಯುಂಟು. ಅದನ್ನು ಹೊರತುಳುಕಿದಷ್ಟೂ ಅದರ ಪರಿಮಾಣ ಮನಸ್ಸಿನಲ್ಲಿ ಕಡಿಮೆಯಾಗುತ್ತದೆ. ಚೆಲ್ಲಿಹೋದುದು ಹೋದ ಹಾಗೆಯೇ ಸರಿ; ಅದನ್ನು ತಿರುಗಿ ತಂದುಕೊಂಡು ಮನಸ್ಸಿಗೆ ತುಂಬಿಕೊಳ್ಳುವ ಹಾಗಿಲ್ಲ. ಅದು ಜನತೆಯಲ್ಲಿ ಕಡಿಮೆಯಾದಷ್ಟೂ ರಾಷ್ಟ್ರಕ್ಕೂ ಸಮಾಜ ಸಂಸ್ಕೃತಿಗಳಿಗೂ ಕೇಡು. ಅದರ ಒರತೆ ಇಂಗಿದ ಮನುಷ್ಯ ಕ್ರಾಂತಿಮೂಲನಾಗುತ್ತಾನೆ. ಸುವ್ಯವಸ್ಥಿತವಾದ ಯಾವ ಸಂಸ್ಥೆಗೂ ಆತನಿಂದ ಅಪಾಯ. ಜನತೆ ಭೀತಿಪ್ರರೂಢರಾದಾಗಲ್ಲವೇ ನಿರ್ಭೀತ ಪುರುಷರ ಅವತಾರವಾಗಿ ಜಗತ್ಕ್ರಾಂತಿಯಾಗುವುದು? ಆದುದರಿಂದ ಮಾನವನ ಮನಸ್ಸಿನಲ್ಲಿ ಅದನ್ನು ಆದಷ್ಟು ಸುರಕ್ಷತೆಯಿಂದ ಕಾಪಿಡುವುದು ರಾಜ್ಯತಂತ್ರದ ಪ್ರಮುಖನೀತಿಯಾಗಬೇಕು ಎನ್ನಿಸುತ್ತದೆ. ಜನದ ಚಿತ್ತದಿಂದ ಅದರ ಪ್ರಮೋಚನವನ್ನು ಆದಷ್ಟು ಕಡಿಮೆಮಾಡಿ ದೇಶಭದ್ರತೆಗೋಸ್ಕರ ಈ ಅಮೂಲ್ಯವಾದ ಗುಣವನ್ನು ನಾವು ಅಲ್ಲಿಯೇ ಉಳಿಸಿಕೊಳ್ಳಬೇಕು. ಅನಿವಾರ್ಯವಾದಾಗ ಹೊರತು ಅದನ್ನು ಹೊರತೋಡಬಾರದು. ನಾಡಹಬ್ಬದ ಶಕ್ತಿ ಪೂಜಾಕಾಲದಲ್ಲಿ ನಾವು ಎಲ್ಲರೂ ಈ ವೈಷ್ಣವಾಂಶದ ಸಂಗ್ರಹಣೋಪಾಯವಲ್ಲವೇ ಚಿಂತಿಸಬೇಕಾದುದು? +ಭಯಕ್ಕೆ ಸಲ್ಕೆ ಮಾನವಂ +ಇಲ್ಲ-ಅವನೆ ದಾನವಂ! +***** +ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […] +ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […] +‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_614.txt b/Kannada Sahitya/article_614.txt new file mode 100644 index 0000000000000000000000000000000000000000..84a3f94de06201878814a99bce0d87d5fcf2277c --- /dev/null +++ b/Kannada Sahitya/article_614.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, ಹಿರಿಯರೆನ್ನುವ ಭೇದ ರುಚಿಕಾರಕ ಉಪ್ಪಿನ ತಯಾರಿಕೆಯಲ್ಲಿ ಇಲ್ಲಿ ಶತಮಾನದಿಂದ ತೊಡಗಿಕೊಂಡಿದ್ದಾರೆ. ಅಷ್ಟು ದೂರದಲ್ಲಿ ಗಂಡಸರಿಗೆ ಕಮ್ಮಿ ಇಲ್ಲದಂತೆ ಮುಳುಗೇಳುವ ಹೆಂಗಸರು ಇನ್ನಿಲ್ಲದಂತೆ ಚಿಪ್ಪನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಚಿಕ್ಕ ದೋಣಿಯಲ್ಲಿ ಕುಳಿತೇ ಆ ವಯಸ್ಕ ಭರ ಭರನೆ ಬಲೆ ಎಳೆದೆಳೆದು ಮೀನು ಹಿಡಿದಾಕುತ್ತಿದ್ದಾನೆ. ಬೆಳ್ಳಂಬೆಳಿಗ್ಗೆ ನೀರು ಅಡ್ಡಹಾಕಿ ಸಿಗಡಿಗಳನ್ನು ಇನ್ನಾರೊ ಬಲಿ ಹಾಕುತ್ತಿದ್ದರೆ, ಆಗಷ್ಟೆ ದೂರದ ಹೈವೆಯಿಂದ ಬಂದಿಳಿಯುತ್ತಿರುವ ಮ೦ಜುಗಡ್ಡೆಯನ್ನು ಕೊಚ್ಚುತ್ತಿರುವ ಬ್ಯಾರಿಯೊಬ್ಬ ಅದನ್ನು ಹುಡಿ ಮಾಡಿ ಮೀನುಗಳ ಬುಡಕ್ಕೆ ಸರಿ ತಣ್ಣಗಾಗಿಸುತ್ತಿದ್ದಾನೆ. +ಇವೆಲ್ಲವನ್ನು ಯಾಮಾರಿಸಿ ಕಚ್ಚಿಕೊಂಡು ಹೋಗಲು ನಿಂತ ನಾಯಿ.. ಅದರ ಮೇಲೆ ವೃತ್ತಾಕಾರವಾಗಿ ಹಾರುತ್ತ ನಿಂತ ಕಾಗೆಯ ದಂಡು… ಉಳಿದುದರಲ್ಲಿ ಏನಾದರೂ ಸಿಕ್ಕೀತಾ ಎಂದು ಕಾಯುವ ಅಷ್ಟಿಷ್ಟು ಸಂಖ್ಯೆ ಚಿಳ್ಳೆಗಳ ಹಿಂಡು…. ಇನ್ನೂ ಜೀವಂತ ತಕಪಕ ಕುಣಿಯುತ್ತಿರುವ ಅರ್ಧ ಹಲ್ಲು ಮುರಿದ ಏಡಿ… ಕಾಲು ಮುರಿದುಕೊಂಡ ಸಿಗಡಿ… ಬಾಲದಲ್ಲಷ್ಟೆ ಜೀವ ಉಳಿಸ್ಕೊಂಡಿರುವ ಮೀನು ರಾಶಿ… ಎಲ್ಲ ಇದ್ಡೂ ಇಲ್ಲದಂತೆ ತೆಪ್ಪಗೆ ಬಿದ್ದು ಕೊಂಡ ಕಪ್ಪೆ ಚಿಪ್ಪು… ಯಾರಿಗೂ ಬೇಡದ ಅರ್ಧ ಮುರುಟಿಕೊಂಡ ಶ೦ಖುಗಳು… ರಾಡಿಯಲ್ಲಿಂದ ಎದ್ದು ಬಂದಂತಿರುವ ಬೆಸ್ತರ ಹುಡುಗ ಕಣ್ಣರಳಿಸುತ್ತಿದ್ದರೆ.. ಈ ವಾಸನೆಗೆ ಮೂಗು ಮುರಿಯುತ್ತಾ ಅತ್ತ ಧಾವಿಸುತ್ತಿರುವ ಹತ್ತಿರದ ಗೋಕರ್ಣದ ಭಟ್ಟರು… ಅಷ್ಟರಲ್ಲಾಗಲೇ ಮೀನು ದೂರದಿಂದ ಬುಟ್ಟಿಗಳನ್ನೇರಿಸಿಕೊಳ್ಳಲು ಸಜ್ಜಾಗಿ ಬಂದು ನಿಂತ ವ್ಯಾನುಗಳ ಪೊಂ..ಪೊಂ… ಇದಾವುದರ ಕಾಳಜಿ ಇಲ್ಲದೆ ಹರಿಯುತ್ತಿರುವ ಅಘನಾಶಿನಿ ಮಾತ್ರ ಇನ್ಮುಂದೆ ಎಲ್ಲದಕ್ಕೂ ನಿರ್ಲಿಪ್ತೆ. +ಯಾಕೆಂದರೆ ಆಕೆಯ ಮಡಿಲಲ್ಲಿ ನಡೆಯುತ್ತಿರುವ ಈ ದಿನವಹಿ, ಅದೂ ತಲೆತಲಾಂತರಗಳಿಂದ ಬಂದಿರುವ ವಿಶಿಷ್ಟ ಜನಜೀವನ ಅವರ ವ್ಯವಹಾರ… ಅದೇ ರಾಶಿಗಟ್ಟಲೇ ಮೀನು,.. ಅಚ್ಚ ಹಸಿರಿನ ಕಾಂಡ್ಲ ಕಾಡಿನ ಅಪರೂಪದ ಗುಂಪುಗಳು… ಸಾಣಿಕಟ್ಟಾದಿಂದ ಇತ್ತಲಿನ ತದಡಿ ಸೇರಿದಂತೆ ಅತ್ತಲಿನ ಬಂಕಿಕೊಡ್ಲದವರೆಗಿನ ಉಪ್ಪಿನ ದಿಬ್ಬಗಳು… ಯಾರೋ ಪೇರಿಸಿಟ್ಟಂತೆ ಸಾಲಾಗಿ ನಿಂತುಕೊಂಡು ಮೀನಿಗೆ ಗಾಳ ಹಾಕಿರುವ ನಿಶ್ಚಲ ದೋಣಿಗಳು… ಉಹೂಂ ಎಲ್ಲಾ ಈ ನದಿ ತಟದಿಂದೆದ್ದು ಹೋಗಲಿವೆ. ಇದನ್ನೇ ನಂಬಿಕೊಂಡಿರುವ ಸುಮಾರು ಹದಿನೈದು ಸಾವಿರ ಕುಟುಂಬಗಳು ಬೀದಿಗೆ ಬೀಳಲಿವೆ. ಅವ್ಯಾಹತವಾಗಿ ಪಸರಿಸಿಕೊಳ್ಳುವ ಹಾರು ಬೂದಿಗೆ ಇತ್ತಲಿನ ಗಂಗಾವಳಿ ಸೇರಿದಂತೆ ಅತ್ತಲಿನ ಸಮುದ್ರ ತಟ ಸೇರುವವರೆಗಿನ ಎಲ್ಲಾ ನದಿಗಳು ಕಪ್ಪಾಗಿ ರಾಡಿ ಎದ್ದು ಹೋಗಲಿವೆ. ಇದ್ದ ಬದ್ದ ಜೀವ ವೈವಿಧ್ಯವನ್ನು ಕಳೆದುಕೊಂಡು ಅಘನಾಶಿನಿ ಬಂಜೆಯಾಗಲಿದ್ದಾಳೆ. +ಜಗತ್ತಿನ ಅಪರೂಪದ ಜೀವ ವೈವಿಧ್ಯಗಳಲ್ಲಿ ಒಂದಾದ ಅಘನಾಶಿನಿಯ ಒಡಲು ರಾಡಿ ಎದ್ದು ಇದು ನದೀನಾ ಎನ್ನುವಂತಾಗುವ ಕಾಲ ದೂರವಿಲ್ಲ. ಅಪರೂಪದ ಜೀವ ಸಂಕುಲಾನ ಜನ ದನ ಕಾಡು ಬೆಟ್ಟ ಬೇಣ …ಸೇರಿದಂತೆ ಸಕಲ ಜೀವ ಜಂತುಗಳು ಈ ಹವಾಮಾನ ವೈಪರಿತ್ಯ ಮತ್ತು ವಾತಾವರಣದಲ್ಲಿ ಹೆಚ್ಚಾಗುವ ಶಾಖ ಹಾಗು ಹಾರು ಬೂದಿಯ ಆಕ್ಸೈಡ್‌ಗಳ ಹೊಡೆತಕ್ಕೆ ತೋಪೆದ್ಡು ಹೋಗಲಿವೆ. ಅಲ್ಲಿಂದ ಹೊರ ಹೊರಡುವ ಕರೆಂಟು ಲೈನಿಗೋಸ್ಕರ ಮತ್ತೇ ಎಕರೆಗಟ್ಟಲೇ ಜಮೀನು ನಾಪತ್ತೆಯಾಗಲಿದೆ. ಈ ಭೂಮಿ ಇರುವವರೆಗೆ ಈ ಲೈನುಗಳ ಬುಡದಲ್ಲಿ ಮತ್ತು ಸುತ್ತ ಮುತ್ತ ಜೀವ ವೈವಿಧ್ಯ ಬೆಳೆಯಲಾರದು. ಈ ಎಲ್ಲದಕ್ಕೂ ಕಾರಣ ಒಂದೇ. ಇನ್ನೆಲ್ಲೂ ನೆಲೆ ನಿಲ್ಲಲಾಗದೆ ಉ.ಕ.ಜಿಲ್ಲೆಯ ಬುಡಕ್ಕೆ ಬೆಂಕಿ ಇಡಲು ಸಜ್ಜಾಗಿರುವ ಉಷ್ಣ ವಿದ್ಯುತ್ ಸ್ಥಾವರದಿಂದಾಗಿ. +ಅಷ್ಟೇಕೆ ಸರಕಾರ ಸಮಜಾಯಿಸಿ ಪ್ರಕಾರ ಈ ನೆಲ ಖಾಲಿಯಾಗಿದೆ ಎನ್ನುವುದೇನೋ ನಿಜವೇ. ಅದರಿಂದ ಸಾರ್ವಜನಿಕರಿಗೆ ನಯಾ ಪೈಸೆ ಉತ್ಪನ್ನವೂ ಇಲ್ಲ ನಿಜವೇ. ಆದರೆ ಹಾಗಂತ ಈ ಜಾಗಲ್ಲಿ ಬಂದು ನಿಲ್ಲುವ ಭಸ್ಮಕಾರಕ ಯೋಜನೆಯಿಂದ ಸುತ್ತಲಿನ ಮೂವತ್ತು ಕೀ.ಮೀ. ವರೆಗೆ ಇರುವ ಮನೆ, ಮಠ, ಪಟ್ಟಣ, ಜನ-ದನ, ಕಾಡು, ಬೆಟ್ಟ, ಬೇಣ, ಕೊನೆಗೆ ಪಕ್ಕದಲ್ಲೇ ಇರುವ ಸಮುದ್ರ ತೀರ, ಅಸಂಖ್ಯ ಹಿಂದುಗಳ ಪವಿತ್ರ ನಂಬಿಕೆಯ ಧಾರ್ಮೀಕ ಕ್ಷೇತ್ರ ಗೋಕರ್ಣ ಸೇರಿದಂತೆ ಅದರ ಮಗ್ಗುಲ್ಲಲ್ಲೇ ಹರಿವ ಗಂಗಾವಳಿ ನದಿಯಂತೆ, ಇತರ ನದಿಗಳೂ ಕೂಡಾ ಅದರ ಹಾರು ಬೂದಿಗೆ ಒಳಗಾಗುತ್ತವಲ್ಲ. ಅದನ್ನು ತಪ್ಪಿಸುವವರಾರು…? +ಅಷ್ಟಕ್ಕೂ ಈ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಯೋಜನೆಗಳು ಆವರಿಸಿಕೊಂಡಿರುವಾಗ ಈ ಯೋಜನೆಯನ್ನು ಇಲ್ಲಿಗೆ ತುರುಕುತ್ತಿರುವ ಉದ್ದೇಶ ಸ್ಪಷ್ಟವಿಲ್ಲವಾದರೂ ಈಗಾಗಲೇ ಜಿಲ್ಲೆಯಾದ್ಯಂತದ ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವ ಸದ್ಯದ ರೀತಿಯನ್ನು ಗಮನಿಸಿದರೆ ಬಹುಶ: ಈ ಸ್ಥಾವರಕ್ಕೆ ಸುಲಭದಲ್ಲಿ ನೆಲ ಸಿಕ್ಕಲಿಕ್ಕಿಲ್ಲ. ದಿನಾಂಕ ೧೫.ಮಾರ್ಚ್ ೨೦೦೬ ರ ಬಹಿರಂಗ ಧರಣಿ ಮತ್ತು ರಸ್ತೆ ತಡೆ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಅಗಾಧ ಜನಸ್ತೋಮವೇ ಇದಕ್ಕೆ ಸಾಕ್ಷಿ. ಕೇವಲ ಎರಡು ಗಂಟೆಯ ಅವಧಿಯಲ್ಲಿ ಧಾವಿಸಿದ ಜನರ ಸಂಖ್ಯೆ ಆರು ಸಾವಿರ ಚಿಲ್ಲರೆ. ಅಷ್ಟಕ್ಕೂ ಹೀಗೆ ಜಿಲ್ಲೆಯ ಅದರಲ್ಲೂ ಅಘಾನಾಶಿನಿ ನದಿಯ ದಂಡೆಯ ಜನರು ಈ ಹೋರಾಟಕ್ಕೆ ಇನ್ನಿಲ್ಲದಂತೆ ಮುಂದಾಗಲು ಕಾರಣಗಳಿವೆ. ಅಲ್ಲಿನ ನೆಲ, ಜಲ, ನಾಡು, ನುಡಿಗಳಲ್ಲಿ ಒಂದಾಗಿ ಬೆರೆತುಹೋಗಿರುವ ಅಘನಾಶಿನಿ ಜೀವ ವೈವಿಧ್ಯತೆಯಿಂದಾಗಿ ಜಾಗತಿಕವಾಗಿ ಒಂದು ವಿಶಿಷ್ಟ ಜನಾಂಗೀಯ ಮತ್ತು ಭೌಗೋಳಿಕ ನದಿಯಾಗಿ ಗುರುತಿಸಿಕೊಂಡಿದೆ. +ಸಮುದ್ರ ಸುತ್ತಮುತ್ತಲೂ ಇನ್ನಿಲ್ಲದಂತೆ ಏರುವ ಉಷ್ಣತೆಯ ಪರಿಣಾಮವಾಗಿ ಸಮುದ್ರ ತಟದಿಂದ ಕನಿಷ್ಟ ಐದಾರು ಕೀ.ಮೀ.ವರೆಗೆ ಸಮುದ್ರ ಜೀವಿಗಳು ಸರಿದು ಹೋಗುವ ಕೆಲವೊಂದು ಅಪರೂಪದ ಜೀವಿಗಳು ಶಾಸ್ವತವಾಗಿ ದಂಡೆಯನ್ನೇ ತೊರೆದು ವಲಸೆ ಹೋರಟುಹೋಗುವ ಸಂದರ್ಭ ಸ್ಥಾವರ ಅರ೦ಭವಾದ ಒಂದು ವರ್ಷದ ಅವಧಿಯಲ್ಲಿ ನಡೆದು ಹೋಗುತ್ತದೆ. ಹಾಗಾದಲ್ಲಿ ಜಾಗತಿಕವಾಗಿ ಜೀವ ವೈವಿಧ್ಯತೆಯ ಪಟ್ಟಿಯಲ್ಲಿ ಹೆಸರು ಪಡೆದಿರುವ ಅಘನಾಶಿನಿ ಕೊಳ್ಳ ಮತ್ತು ಹರಿವಿನ ಪ್ರದೇಶದಲ್ಲಿ ಅಕ್ಷರಶ: ಜೀವಿಗಳೊಂದಿಗೆ ಒಂದು ಆಯಕಟ್ಟಿನ ಮೀನುಗಾರ ಸಂಸ್ಕೃತಿಯೇ ಈ ಭೂಮಿಯ ಮುಖದಿಂದ ಒರೆಸಿ ಹಾಕಿದಂತಾಗುತ್ತದೆ. +ಈ ಹಾರು ಬೂದಿಯನ್ನು ನಿಯಂತ್ರಿಸಲು ಅತ್ಯಾಧುನಿಕ ರೆಸ್ಪಿರೇಟರಗಳನ್ನು ಮತ್ತು ತಂಪು ನೀರಿನ ಶಿಥಲೀಕರಣದಂತಹ ತಂತ್ರಗಾರಿಕೆಯನ್ನು ಕೈಗೊಳ್ಳಲಾಗುತ್ತಿದೆಯಾದರೂ, ಸರಿ ಸುಮಾರು ಕೇಂದ್ರದಿಂದ ಮೂವತ್ತು ಕೀ.ಮೀ. ವರೆಗೂ ಈ ಹಾರು ಬೂದಿ ನುಗ್ಗಿ ಹೋಗಿ ಪಸರಿಸುವ ಸಾಮರ್ಥ್ಯ ಹೊ೦ದಿದ್ದು, ಇದರಿಂದ ಪ್ರಮುಖವಾಗಿ ಅದರಲ್ಲಿ ಅಡಗಿರುವಂತಹ ಕಾರ್ಬನ್ ಡೈ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ಇನ್ನಿತರ ತ್ಯಾಜ್ಯ ವಸ್ತುಗಳು ಶ್ವಾಸ ಸಂಬಂಧಿ ರೋಗಸಹಿತ ಮಾರಣಾಂತಿಕವಾಗಿ ಪರಿಣಮಿಸಬಲ್ಲ ಅಸ್ತಮಾಕ್ಕೆ ದಿವ್ಯ ವರವಾಗಲಿದೆ. ಮಿಗಿಲಾಗಿ ಈ ಹಾರು ಬೂದಿಯೊಂದಿಗೆ ಹೊರಹೋಗುವ ನೀರಿನ ಪ್ರಮಾಣವನ್ನು ಪರಿಗಣಿಸಿದರೆ ಈ ಸಮುದ್ರದಿಂದ ಮತ್ಸೊದ್ಯಮದ ಭವಿಷ್ಯವೇ ಅಳಸಿ ಹೋಗಲಿದೆ. +ಕಾರಣ ಸಾಮಾನ್ಯ ನೀರಿನ ಒಟ್ಟು ಪ್ರಮಾಣದಲ್ಲಿ ಇರಬೇಕಾದ ಉಷ್ಣಾಂಶ ಸೇರಿದಂತೆ, ಕಲುಷಿತತೆ, ನೀರಿಗೆ ಸೇರಲಿರುವ ತ್ಯಾಜ್ಯ ನೀರಿನಲ್ಲಿರುವ ಕಾರ್ಬನ್, ಸಲ್ಫರ್ ಹಾಗ್ ಇತ ಮೊನಾಕ್ಸೈಡ್‌ಗಳು ಸಮುದ್ರ ಜೀವಯನ್ನು ಸಾವಿನ೦ಚಿಗೆ ತಳ್ಳುತ್ತದೆ. ದಿನಕ್ಕೆ ಒಂದೂವರೆ ಕೋಟಿ ಗ್ಯಾಲನ್ ನೀರು ಇನ್‌ಟೇಕ್ ನಿಂದ ಒಳ ತೆಗೆದುಕೊಳ್ಳುವುದು ನೇರ ಅಘ್ನಾಶಿನಿ ನದಿಯಿಂದಲೇ. ಅಷ್ಟೇ ಪ್ರಮಾಣದಲ್ಲಿ ಔಟ್ ಲೆಟ್ ಆಗುವುದು ನೇರ ಸಮುದ್ರಕ್ಕೆ. ಆಲ್ಲಿಗೆ ದಿನಕ್ಕೆ ಕೋಟಿ ಗ್ಯಾಲನ್ ಪ್ರಮಾಣದಲ್ಲಿ ನೀರು ಅಘನಾಶಿನಿಯ ಮಡಿಲಿನಿಂದ ಮೊಗೆದು ತೆಗೆಯುತ್ತಿದ್ದರೆ ಪಶ್ಚಿಮ ಘಟ್ಟದಿಂದ ಹರಿದು ಬರುವ ಏಕ ಮಾತ್ರ ತೊರೆಯನ್ನು ಹೊಂದಿರುವ ನದಿ ವರ್ಷ ಕಳೆಯುವಷ್ಟರಲ್ಲಿ ಬರಡಾಗಿ ನಿಂತು ಬಿಡೋದಿಲ್ಲವಾ… ? +ಅಲ್ಲದೇ ಈ ಸ್ಥಾವರದಿಂದ ಹೊರಹೋಗುವ ನೀರಿನ ಉಷ್ಣಾಂಶದ ಕಾರಣ ಸಮುದ್ರ ಡಂಡೆಯಿಂದ ಸುಮಾರು ಹದಿನೆಂಟು ಕೀ.ಮೀ. ದೂರಕ್ಕೆ ಮೀನು ಸಂತತಿ ಸಾಮೂಹಿಕವಾಗಿ ಸರಿದು ಹೋಗಲಿದೆ. ಕಾರಣ ಈಸ್ಥಾವರದಿಂದ ಹೊರಹೋಗುವ ಸ್ಲರಿಯೊಂದಿಗೆ ತ್ಯಾಜ್ಯ ನೀರು ಎಷ್ಟೆ ತಂಪುಕಾರಕಕ್ಕೊಳಪಡಿಸಿದರೂ ಸಧ್ಯ ಕಂಪೆನಿ ಹೇಳಿಕೊಂಡಿರುವಂತೆ ಮೂರು ಕೀಮೀ.ದೂರ ಸಮುದ್ರದಲ್ಲಿ ತ್ಯಾಜ್ಯ ನೀರನ್ನು ಬಿಡುವುದರಿಂದಾಗಿ ಕನಿಷ್ಟ ತಾಪಮಾನಕ್ಕೆ ನೀರನ್ನು ಶೀತಗೊಳಿಸುವುದು ಸಾಧ್ಯವಿಲ್ಲವಾಗಿದೆ. ಒಮ್ಮೆ ಸ್ಥಾವರದಿಂದ ಹೊರಕ್ಕೆ ಹರಿಯುವ ಮಲೀನ ನೀರು ಅಷ್ಟೆ ಪ್ರಮಾಣದಲ್ಲಿ ಉಷ್ಣಾಂಶವನ್ನು ಹೊಂದಿರುವುದರಿಂದ ಅದು ಶೀತಲವಾಗಿ ಮಾಮೂಲಿನ ಸಮುದ್ರ ಉಷ್ಣಾಂಶಕ್ಕೆ ಬರಲು ಕನಿಷ್ಟ ಅಂತರ ಎಂಟು ಕೀ.ಮಿ. ಗಳಾದರೂ ಬೇಕು. ಅದೂ ಕೂಡಾ ನಿಯಂತ್ರಿತ ಒತ್ತಡ ಮತ್ತು ನೈಸರ್ಗಿಕ ಇಳಿಜಾರು ಒತ್ತಡದಲ್ಲಿ ಮಲೀನ ನೀರು ಸರಾಗವಾಗಿ ಯಾವುದೇ ಬಾಹ್ಯ ಒತ್ತಡವಿಲ್ಲದೇ ಹರಿದಲ್ಲಿ ಮಾತ್ರ. +ಆದರೆ ಹೊರಹೋಗುವ ನೀರಿನ ಪ್ರಮಾಣ ಹೆಚ್ಚಾಗಿಯೂ ಇರುವುದರಿಂದ, ಸಾಗುವ ಕನಿಷ್ಟ ಅಂತರದಿಂದಾಗಿ, ನೀರಿನ ಮೇಲಿನ ಒತ್ತಡ ಹೆಚ್ಚಾಗಿ, ನೀರು ಮತ್ತೆ ಇದ್ದ ಉಷ್ಣಾಂಶವನ್ನು ಕಾಯ್ದುಕೊಂಡು ಬಿಡುತ್ತದೆ. ಹೀಗಾಗಿ ಸ್ಲರಿ, ತಾಜ್ಯ ನೀರು ಹಾಗು ಇನ್ನುಳಿದ ಆಕ್ಸೈಡ್ ಭರಿತ ಮಲೀನ ಪದಾರ್ಥಗಳು ಸಮುದ್ರಕ್ಕೆ ನೇರಾ ನೇರ ಸೇರಿಬಿಡುವುದರಿಂದಾಗಿ ಸಂಪೂಣ೯ ಮತ್ಸೊದ್ಯಮ ಕುಸಿದು ಹೋಗಲಿದೆ. ಅಲ್ಲದೆ ಇಲ್ಲಿನ ಪ್ರಮುಖ ಕೈಗಾರಿಕೆಯಾಗಿರುವ ಚಿಪ್ಪು ಉದ್ಯಮಕ್ಕೆ ನೀರಿನಲ್ಲಿ ಕೊಂಚ ಮಾತ್ರದ ವ್ಯತ್ಯಾಸವೂ ಮಾರಾಣಾಂತಿಕವಾಗಿ ಪರಿಣಮಿಸುವುದರಿಂದ ಅದರ ಭವಿಷ್ಯ ಎಲ್ಲದರಿಗಿಂತಲೂ ಮೊದಲು ಆಘಾತಕ್ಕೊಳಗಾಗಲಿದೆ. +ಈಗಾಗಲೇ ಭಾರತದುದ್ದಕ್ಕೂ ಭರಿಸಲಾಗದೇ ಉಳಿದ ಹಾರು ಬೂದಿಯನ್ನು ೬೫೦೦೦ ಎಕರೆ ಪ್ರದೇಶದಲ್ಲಿ ಸಂಗ್ರಹಿಸಿ ಹೂಳಿಟ್ಟಿದ್ದಾರೆ. ಅವುಗಳನ್ನು ಹಾರು ಬೂದಿ ಮಡುಗಳೆಂದೇ ಕರೆಯಲಾಗುತ್ತಿದೆ. ಈ ಹಾರು ಬೂದಿಯ ಬಂಕರುಗಳ ಅಗಾಧತೆಯ ನಿರ್ವಹಣೆ ಮತ್ತು ನಿರ್ಮಿಸುವ ವೆಚ್ಚವೇ ಶೇ.೧೭ಕ್ಕಿಂತಲೂ ಹೆಚ್ಚು. ಪ್ರಸ್ತುತ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ವಾರ್ಷಿಕ ೭೭೦೦೦ ಲಕ್ಷ ಟನ್ ಹಾರು ಬೂದಿಯಲ್ಲಿ ಈವರೆಗೆ ಸಾರ್ವತ್ರಿಕವಾಗಿ, ಸರಕಾರ ಮುತುವರ್ಜಿವಹಿಸಿ ಉಪಯೋಗಿಸುವಂತೆ ಮಾಡಲು ಸಾಧ್ಯವಾಗಿದ್ದು ಕೇವಲ ೩.೮ ಶೇ. ಮಾತ್ರ. ಉಳಿದಂತೆ ಪ್ರತಿದಿನವೂ ಸಂಗ್ರಹವಾಗುತ್ತಿರುವ ಈ ಬೂದಿಯನ್ನು ಉಪಯೋಗಿಸಲಾರದ ಜಾಗವನ್ನು ಗುರುತಿಸಿ ಹುಗಿಯಲಾಗುತ್ತಿದೆ. ಅಲ್ಲಿಗೆ ಅಷ್ಟು ಜಾಗವನ್ನು ನಿರುಪಯುಕ್ತಗೊಳಿಸಿದರೆ ಭವಿಷ್ಯತ್ತಿನಲ್ಲಿ ಅದು ಬಂಜರು ನೆಲವಾಗಿ ಪರಿವರ್ತಿತವಾಗುತ್ತದೆ. ಒಮ್ಮೆ ಹೀಗೆ ಗುರುತಿಸಿ ಹುಗಿಯಲಾದ ಜಾಗವನ್ನು ಭವಿಷ್ಯತ್ತಿನಲ್ಲಿ ಯಾವುದಕ್ಕೂ ಉಪಯೋಗಿಸದಂತೆ ನೋಡಿಕೊಳ್ಳುಲಾಗುತ್ತದೆ. ಯಾಕೆಂದರೆ ಈ ಹಾರು ಬೂದಿಯಲ್ಲಿರುವ ವಿಷಕಾರಿ ಪದಾರ್ಥಗಳ ಸಂಯೋಜನೆಯಾದರೂ ಎಂಥದ್ದು…? ಅದು ಬರೀ ಅಕ್ಸೈಡ್‌ಗಳ ಕೊಂಪೆ. ಅದೊಮ್ಮೆ ನೆಲ ಸೇರಿದರೆ ಇನ್ನು ಬೆಳೆ ಸಾಯಲಿ, ಹುಲ್ಲುಗರಿಕೆಯೂ ಬೆಳೆಯಲಾರದು. +ಅಂದಹಾಗೆ ಹೀಗೆ ದಿನವಹಿ ಲಕ್ಷಗಟ್ಟಲೇ ಟನ್ ಹಾರು ಬೂದಿಯ ಉತ್ಪಾದನೆಯಾಗುತ್ತದಲ್ಲ. ಅದು ಸುಡುವ ಕಲ್ಲಿದ್ದಲಿನ ಪ್ರಮಾಣದ ಶೇ ೧೮ ರಿ೦ದ ಶೇ. ೨೩ ಭಾಗ ಮಾತ್ರವೇ. ಇದು ಎಲ್ಲಾ ಸ್ಥಾವರಗಳ ಸರಾಸರಿ ಶೇಕಡಾವಾರು. ಯಾಕೆಂದರೆ ರಾಯಚೂರಿನ ಪ್ಲಾಂಟ್ ಒ೦ದರಲ್ಲೇ ಶೇ.೩೦ ಕ್ಕಿಂತಲೂ ಹೆಚ್ಚು ಹಾರು ಬೂದಿ ಪರಿಸರವನ್ನು ನೇರವಾಗಿ ಸೇರುತ್ತದೆ. ಕೆಲವು ಕಡೆಗಳಲ್ಲಿ ನಿಯಂತ್ರಣ ಸಾಧ್ಯವಾಗಿದೆಯಾದರೂ ಕನಿಷ್ಟ ಪ್ರಮಾಣವನ್ನು ಪರಿಸರ ಹೊಂದುವುದು ಅನಿವಾರ್ಯವಾಗಿದೆ. ಇಷ್ಟು ಪ್ರಮಾಣದಲ್ಲಿ ಹಾರು ಬೂದಿ ಉತ್ಪಾದನೆಯಾಗಬೇಕಾದರೆ ಅದಾವ ಪರಿಯಲ್ಲಿ ಕಲಿದ್ದಲು ಸುಡಬೇಕಾದೀತು. ಈಗ ಪ್ರಕಟವಾಗಿರುವ ಮಾಹಿತಿಯಂತೆ ತದಡಿಯಲ್ಲೇ ದಿನಕ್ಕೆ ೪ ಲಕ್ಷ ಟನ್ ಕಲ್ಲಿದ್ದಲು ಸುಡಲಾಗುತ್ತದೆ. ಇನ್ನು ಇಷ್ಟು ಕಲ್ಲಿದ್ದಲು ಯಾವಾಗಲೂ ಲಭ್ಯವಿರುವಂತೆ ಮಾಡಿಕೊಳ್ಳಲು ಯುದ್ಧೋಪಾದಿಯಲ್ಲಿ ದಾಸ್ತಾನು ಮಾಡಬೇಕಲ್ಲ. +ಅದರ ಸಾರಿಗೆ, ರೈಲು ಸಾಗಾಟ, ಅದರ ರಸ್ತೆಯ ಇಕ್ಕೆಲಗಳಲ್ಲಿನ ಧೂಳು, ಜನ ಜೀವನ ಮೇಲೆ ಎರಗುವ ಕಲ್ಲಿದ್ದಲು ಹುಡಿ, ಕಪ್ಪು ಅಡರಿಕೊಂಡು ಎಲ್ಲೆಂದರಲ್ಲಿ ಧೂಳೆದ್ದು ಹೋಗುವ ಪರಿಸರ. ಮಳೆಯಲ್ಲೂ ಸುರಿವ ಕಪ್ಪು ರಾಡಿ, ಎಲ್ಲೆಲೂ ಕಪ್ಪು ಕಪ್ಪಾಗಿ ರಾಚುವ ಕೆಸರಾಗಿ ಅಲ್ಲಲ್ಲೆ ಗಟ್ಟಿಗೊಳ್ಳುವ, ನೀರಿನ ಚಲನೆಗೆ ಅಡ್ಡಿಯಾಗಿ ಇನ್ನಿಲ್ಲದಂತೆ ಕೊಂಪೆಯನ್ನಾಗಿಸುವ ಮಲಿನತೆ ಒಂದೇ ಎರಡೆ… ಈಗಾಗಲೇ ಉತ್ತರ ಕನ್ನಡದ ಬೇಲೆಕೆರಿಗೆ ಹಾಗು ಕಾರವಾರ ಬಂದರಿನಿಂದ ಮ್ಯಾಂಗನೀಸ್ ಅದಿರು ಸಾಗಾಟದ ಭಾರಕ್ಕೆ ತುತ್ತಾಗಿರುವ ಪರಿಸರ, ಸಾರಿಗೆ ಸಂಪರ್ಕ, ರಸ್ತೆ ಅಫಘಾತ, ಅಸ್ತವ್ಯಸ್ತಗೊಳುತ್ತಿರುವ ಜನಜೀವನ ಸುಧಾರಿಸಿಕೊಳ್ಳಲು ಕನಿಷ್ಟ ಅರ್ಧ ದಶಕವಾದರೂ ಬೇಕು. ಅದೂ ಈ ಕೂಡಲೇ ಮ್ಯಾಂಗನೀಸ್ ದಾಳಿ ತಪ್ಪಿಸಿದರೆ. ಹೀಗಿದ್ದಾಗ ಈ ಮ್ಯಾಂಗನೀಸ್‌ಗೆ ಹೋಲಿಸಿದರೆ ಇಲ್ಲಿ ಬರಲಿರೋ ಕಲ್ಲಿದ್ದಲಿನ ಅಗಾಧತೆ ಬೆಚ್ಚಿ ಬೀಳಿಸುವಂತಹದ್ದು. ಅಕ್ಷರಶ: ಅನೆ ಇರುವೆ ಹೋಲಿಕೆ ಇದು. +ಸಮುದ್ರ ಸುತ್ತಮುತ್ತಲೂ ಇನ್ನಿಲ್ಲದಂತೆ ಏರುವ ಉಷ್ಣತೆಯ ಪರಿಣಾಮವಾಗಿ ಸಮುದ್ರ ತಟದಿಂದ ಕನಿಷ್ಟ ಐದಾರು ಕೀ.ಮೀ. ವರೆಗೆ ಸಮುದ್ರ ಜೀವಿಗಳು ಸರಿದು ಹೋಗುವ ಕೆಲವೊಂದು ಅಪರೂಪದ ಜೀವಿಗಳು ಶಾಶ್ವತವಾಗಿ ದಂಡೆಯನ್ನೇ ತೊರೆದು ವಲಸೆ ಹೋರಟುಹೋಗುವ ಸಂದರ್ಭ ಸ್ಥಾವರ ಅರ೦ಭವಾದ ಒಂದು ವರ್ಷದ ಅವಧಿಯಲ್ಲಿ ನಡೆದು ಹೋಗುತ್ತದೆ. ಹಾಗಾದಲ್ಲಿ ಜಾಗತಿಕವಾಗಿ ಜೀವ ವೈವಿಧ್ಯತೆಯ ಪಟ್ಟಿಯಲ್ಲಿ ಹೆಸರು ಪಡೆದಿರುವ ಅಘನಾಶಿನಿಕೊಳ್ಳ ಮತ್ತು ಹರಿವಿನ ಪ್ರದೇಶದಲ್ಲಿ ಅಕ್ಷರಶ: ಜೀವಿಗಳೊಂದಿಗೆ ಒಂದು ಆಯಕಟ್ಟಿನ ಮೀನುಗಾರ ಸಂಸ್ಕೃತಿಯೇ ಈ ಭೂಮಿಯ ಮುಖದಿಂದ ಒರೆಸಿ ಹಾಕಿದಂತಾಗುತ್ತದೆ. +ಸರಕಾರ ತದಡಿ ಪ್ರದೇಶವನ್ನು ” ಹಾಟ್ ಸ್ಪಾಟ್ ” ಎಂದು ೨೦೦೩ ರಲ್ಲಿ ಪ್ರಕಟಿಸಿದ್ಡು ಇದನ್ನು ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕಾಗುತ್ತದೆ. ಈ ಮೊದಲೇ ಜುಲೈ ೨೩. ೨೦೦೫ ರಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಕೂಡಾ ಅದೇಶ ಹೊರಡಿಸಲಾಗಿತ್ತು. ಆದರೆ ಇವೆಲ್ಲವನ್ನೂ ಕಡೆಗಣಿಸಿ ಈಗ ತುರಾತುರಿಯಲ್ಲಿ ಈ ಸ್ಥಾವರವನ್ನು ಇಲ್ಲಿ ಸ್ಥಾಪಿಸಲು ಜಿಲ್ಲಾಡಳಿತ ಹೆಣಗುತ್ತಿದೆ. ಈ ಅಘನಾಶಿನಿ ಮುಖಜ ಭೂಮಿಯಿಂದ ಕನಿಷ್ಟ ದಿನವೊಂದಕ್ಕೆ ಎತ್ತಿಕೊಳ್ಳಲಾಗುವ ನೀರಿನ ಪ್ರಮಾಣವೇ ಒಂದೂವರೆ ಕೋಟಿ ಲೀಟರಗಳಷ್ಟು. ಅಷ್ಟು ನೀರನ್ನು ಉಷ್ಣಮಯವಾಗಿಸಿ ವಾಪಸ್ಸು ಅಘನಾಶಿನಿ ಮಡಿಲಿಗೆ ಸುರಿದರೆ ಅಘನಾಶಿನಿಯ ಸೂಕ್ಷ್ಮತೆಯ ಕಥೆ ಏನಾದೀತು…? ಸಧ್ಯಕ್ಕೆ ಇದಕ್ಕೆ ಯಾರೂ ಉತ್ತರಿಸುತ್ತಿಲ್ಲ. ಅಷ್ಟೇಕೆ ಒಂದು ವರ್ಷಕ್ಕೆ ಈ ಕಲ್ಲಿದ್ದಲು ಸ್ಥಾವರ ಸುಡಲಿರುವ ಕಲ್ಲಿಡ್ದಲು ಕನಿಷ್ಟ ೧೫೦ ಲಕ್ಷ ಟನ್. ಇದರ ಇಪ್ಪತ್ತು ಶೇ. ಹಾರು ಬೂದಿಯಾಗಿ ಸುತ್ತಲಿನ ೩೦ ಕಿ.ಮೀ. ಭಾಗವನ್ನು ಆವವರಿಸಿಕೊಳ್ಳಲಿದೆ. ಅಂದರೆ ತಿಂಗಳಿಗೆ ಸರಿ ಸುಮಾರು ಹನ್ನೆರಡು ಲಕ್ಷ ಟನ್ ಹಾರು ಬೂದಿಯನ್ನು ಹೊರಹಾಕುತ್ತದಲ್ಲ ಅದರ ಸಂಗ್ರಹಣೆ ಮತ್ತು ಕಲ್ಲಿದ್ದಲಿನ ದಾಸ್ತಾನಿಗೆ ಬೇಕಾಗುವ ಸ್ಥಳಕ್ಕಾಗಿ ಬೇಕಾಗುವ ಉಳಿದ ಎರಡೂವರೆ ಸಾವಿರ ಎಕರೆ ಪ್ರದೇಶಕ್ಕಾಗಿ ಇಲಾಖೆ ಯಾರ್‍ಯಾರನ್ನು ಒಕ್ಕಲೆಬ್ಬಿಸಲಿದೆಯೋ ದೇವರಿಗೂ ಗೊತ್ತಿಲ್ಲ. ಉಳಿದಂತೆ ಯಾರ ಬಳಿಯು ಉತ್ತರ ಕೂಡಾ ಇಲ್ಲ. ಅಸಲಿಗೆ ಇಲ್ಲಿಗೆ ಬರುತ್ತಿರುವ ಯಾವ ಅಧಿಕಾರಿಗೂ ತಾಂತ್ರಿಕವಾಗಿ ವಿವರಿಸಲು ಗೊತ್ತಾಗುತ್ತಿಲ್ಲ. ಕಾರಣ ಇಲ್ಲಿಗೆ ಇಲ್ಲಿಯವರಗೂ ಭೇಟಿ ನೀಡಿರುವ ಅಧಿಕಾರಗಳಿಗೆ ಒಂದೋ ಥರ್ಮಲ್ ಪ್ಲಾಂಟಿನ ಬಗ್ಗೆ ವೈಜ್ಞಾನಿಕ ಸತ್ಯಗಳು ನಿಖವಾಗಿ ಗೊಟ್ತಿಲ್ಲದಿರಬಹುದು ಅಥವಾ ಅನಿವಾರ್ಯವಾಗಿ ಸತ್ಯಸಂಗತಿಗಳನ್ನು ಮರೆಮಾಚುತ್ತಿರಬಹುದು. +ಇದಲ್ಲದೇ ಇದೇ ಹಾರು ಬೂದಿಯ ಮರುಪಯೋಗಕ್ಕಾಗಿ ಸ್ಥಾಪನೆಗೊಳ್ಳಲಿರುವ ಕೈಗಾರಿಕೆಗಳಿಗಾಗೇ ಕನಿಷ್ಠ ನಾಲ್ಕೂವರೆ ಸಾವಿರ ಎಕರೆ ಪ್ರದೇಶ ಬೇಕಾಗುತ್ತದೆ. ಅದೆಲ್ಲಕ್ಕಿಂತಲೂ ಈಗಾಗಲೇ ಸರಕಾರದ ವಶದಲ್ಲಿರುವ ೧೮೪೮ ಎಕರೆ ಭೂಮಿಯಲ್ಲಿ ೪೦೦ ಎಕರೆ ಸಿ.ಆರ್.ಝೆಡ್. ವ್ಯಾಪ್ತಿಯ ಕಾನೂನಿಗೆ ಒಳಪಡುವುದರಿಂದಾಗಿ ಅದನ್ನು ಸರಕಾರ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳಿಗೂ ಉಪಯೋಗಿಸುವ ಹಕ್ಕಿಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿರುವ ಆಜ್ಞೆಯಿದೆಯಲ್ಲ. ಅಲ್ಲಿಗೆ ಸರಕಾರದ ಬಳಿ ಇರುವ ಭೂಮಿಯ ವ್ಯಾಪ್ತಿ ಕೇವಲ ೧೪೦೦ ಎಕರೆ ಮಾತ್ರ. ಒಟ್ಟಾರೆ ದಾಸ್ತಾನು, ಹಾರು ಬೂದಿ ಮರು ಉಪಯೋಗಿ ಇಂಡಸ್ಟ್ರೀಯಲ್ ಎಸ್ಟೇಟು, ಈಗ ಸ್ಥಾಪಿಸಬೇಕೆಂದಿರುವ ಸ್ಥಾವರ ಎಲ್ಲ ಸೇರಿದರೆ ಒಟ್ಟು ಭೂಮಿಯ ಪ್ರಮಾಣ ೮೪೫೦ ಎಕರೆ ಪ್ರದೇಶ ಬೇಕಾಗುತ್ತದೆ. ಅಲ್ಲಿಗೆ ಅಳಿದುಳಿದ ನೆಲಕ್ಕಾಗಿ ಒಕ್ಕಲೆಬ್ಬಿಸಲಿರುವ ಕುಂಟುಂಬಗಳ ಸಂಖ್ಯೆ ಕನಿಷ್ಟ ೧೪೭೪೦. ಇವರೆಲ್ಲರನ್ನೂ ಎಲ್ಲಿ ಎಂದು ಮರುಸ್ಥಾಪನೆ ಮಾಡುತ್ತಾರೆ. ಜೊತೆಗೆ ಅದಕ್ಕಾಗಿ ಮತ್ತೆ ಜಾಗ ಹುಡುಕಬೇಕಲ್ಲ. ಅವರು ತಮ್ಮೊಡನೆ ಉಳಿಸಿಕೊ೦ಡಿರಬಹುದಾದ ವಸ್ತುಗಳ ನೆಂಟಾದರೂ ಎಂತಹದ್ದು. ಕುರಿ, ಕೋಳಿ, ತೆಂಗು, ಮೀನು, ರಂಪಣಿ, ದೋಣಿ, ಹಾಯಿಗಳು, ಚಿಪ್ಪುಗಳು, ಮನೆ ಮಾರು, ಆಸ್ತಿ, ಕಟ್ಟಿಗೆ, ವಾಹನಗಳು ಇತ್ಯಾದಿ ಯಾವ್ಯಾವುದನ್ನು ನಿರ್ಧರಿಸಿ ಕಂಪನ್ಸೆಟ್ ಕೊಡಲಿದೆ. ಯಾರಿಗೂ ಗೊತ್ತಿಲ್ಲ. +ಅದಕ್ಕಾಗಿ ಇನ್ನು ಈಗ ಗುರುತಿಸಿರುವ ತದಡಿ, ಬೇಲೆಕಾನ, ತೊರ್ಕೆ ಸಮುದ್ರ ತೀರಗಳು ಅಪ್ಪಟ ಮಾರಿಶಶ್‌ನಷ್ಟು ಸುಂದರ ಹಾಗು ಸ್ವಚ್ಛ. ತೀರ ಅಷ್ಟು ಅದ್ಭುತ ಬೀಚನ್ನು ಇದೇ ಜಿಲ್ಲೆಯಲ್ಲಿದ್ಡೂ ನೋಡದಿರುವವರು ಬಹುಶ ಶೇ.೯೦. ಈಗ ಸ್ಥಾವರದ ರಾಡಿ ಮತ್ತು ಸ್ಲರಿಯ ಶೇಷ ಪದಾರ್ಥವನ್ನು ಅಲ್ಲಿಗೆ ಸಾಗಿಸಲಿದೆ. ಅದರಷ್ಟು ರಾಡಿ ಮತ್ತು ಗಲೀಜು ಬಹುಶ: ಇನ್ನೊಂದಿರಲಿಕ್ಕಿಲ್ಲ. ಬೇಲೆ ಕಾನ್ ಬೀಚಿನಲ್ಲಿ ಒಂದು ಕ್ಷಣ ನಿಂತುಕೊಂಡಲ್ಲಿ ಎಲ್ಲ ಮರೆತು ಮಾರಿಶಶ್ ಎಂದೆನ್ನಿಸುವಷ್ಟು ನೈಜ ಸಮುದ್ರ ನಿಮ್ಮ ಎದುರಿಗಿರುತ್ತದೆ. ಆ ತೀರ ಇನು ಮೇಲೆ ಈ ಕೊಳೆಯ ದಾಸ್ತಾನಿಗೆ ಗೋಡೆಕಟ್ಟಿಸಿಕೊಂಡು ಕಣ್ಮರೆಯಾಗಲಿದೆ. +ಇನ್ನು ಇದಕ್ಕಾಗಿ ಕಾಡಿನ ನಾಶ ಹೇಗಾಗುತ್ತದೆ… ? ಇದಕ್ಕಾಗಿ ಮತ್ತೆ ಕಾಡು ಕಡಿತ ನಡೆಯಲಿದೆಯಾ…? ಆಫ್ ಕೊರ್ಸ್. ಈ ೪೦೦೦ ಮೆ.ವ್ಯಾಟ್. ವಿದ್ಯುತ್ ಉತ್ಪಾದನೆಗೆ ಬೇಕಾಗುವ ಹೈಟೆನ್ಶನ್ ಲೈನ್ ದಾಟಿಸಲು ಕಾಡು ಕಡಿತಕ್ಕೊಳಗಾಗುವುದು ನಿಸ್ಸಂಶಯ. ಕನಿಷ್ಟ ಎರಡು ಸಾವಿರ ಎಕರೆ ಕಾಡು ಸವರಿ ಹಾಕಲಾಗುತ್ತದೆ. ಜೊತೆಗೆ ಕೇಂದ್ರದಿಂದ ೩೦.ಕಿ.ಮಿ. ಸುತ್ತ ಹಾರು ಬೂದಿ ಪಸರಿಸಿಕೊಳ್ಳುವ ಕಾರಣ ಸುತ್ತಲಿನ ಸಹ್ಯಾದ್ರಿಯ ಪರ್ವತ ಶ್ರೇಣಿಯಲ್ಲಿ ಇರುವ ದಟ್ಟ ಅರಣ್ಯದ ಮೇಲೆ ಈ ಬೂದಿ ಕುಳಿತುಕೊಳ್ಳುವುದರೊಂದಿಗೆ ಕಾಡಿನಿಂದ ಕಾಡು ಉತ್ಪತ್ತಿಯಾಗುವ ನೈಸರ್ಗಿಕ ಕ್ರಿಯೆಗೆ ತಡೆ ಬೀಳಲಿದೆ. ಕಾಡಿನ ಸರ್ವ ಕಾರ್ಯವೂ ನಡೆಯುವುದು ಸೂರ್ಯನ ಬೆಳಕು ಮತ್ತು ಎಲೆಗಳಲ್ಲಿ ನಡೆಯುವ ಸಂಶ್ಲೇಷಣಾ ಕ್ರಿಯೆ ಮೂಲಕ. ಈ ಹಾರು ಬೂದಿ ಎಲೆಗಳ ಮೇಲೆ ಕಾ೦ಡಗಳ ಮೇಲೆ ಕುಳಿತುಕೊಳ್ಳುವುದರೊಂದಿಗೆ ಜೈವಿಕ ಕ್ರಿಯೆಗೆ ಬೇಕಾಗುವ ಸೂರ್ಯ ನೇರ ಶಾಖವನ್ನು ಹೀರಿಕೊಳ್ಳುವಲ್ಲಿ ಅಸಫಲವಾಗುವಂತೆ ಅದು ನೋಡಿಕೊಳ್ಳುತ್ತದೆ. ಇದರಿಂದಾಗಿ ವರ್ಷಾನುಗಟ್ಟಲೇ ಸೂಯ೯ನ ಶಾಖ ಮತ್ತು ಕಿರಣಗಳಲ್ಲಿ ಶಕ್ತಿಯನ್ನು ಹೀರಿಕೊಳ್ಳಲು ಸಸ್ಯ ಸಂಪತ್ತು ಅಸಮರ್ಥವಾಗುವುದರೊಂದಿಗೆ ಅದರ ಜೈವಿಕ ಚಕ್ರ ವಿಫಲಗೊಳ್ಳಲಾರಂಭಿಸುತ್ತದೆ. +ಹೀಗೆ ಸತತ ವಿಫಲತೆಯಿಂದ ಕಾಡು ತಾನೇ ತಾನಾಗಿ ತನ್ನ ಸುತ್ತ, ಮತ್ತೆ ಮತ್ತೆ ಸೃಷ್ಟಿಸುವ ಕ್ರಿಯೆಗೆ ನೇರ ಆಘಾತ ಉಂಟುಮಾಡಿಕೊಳ್ಳಲಿದೆ. ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳಲಿರುವ ಅರಣ್ಯ, ನಂಪುಸಕತೆಯನ್ನು ಕ್ರಮೇಣ ಮೈಗೂಡಿಸಿಕೊಳ್ಳುತ್ತದೆ. ಹೀಗೆ ನಿಸರ್ಗ ನಂಪುಸಕತೆಗೆ ಒಳಗಾಗುವ ಕಾಡಿನ ಸ್ಥಳ ಭವಿಷ್ಯತ್ತಿನ್ನಲ್ಲಿ ಯಾವತ್ತೂ ಚಿಗುರುವ ಲಕ್ಷಣವನ್ನೇ ಕಳೆದುಕೊಳ್ಳುತ್ತದೆ. ಇದರಿಂದಾಗಿ ಒಂದು ದಶಕದ ಅವಧಿಯಲ್ಲಿ ಹೊಸದಾಗಿ ಉತ್ಪನ್ನವಾಗಬೇಕಾದ ಅರಣ್ಯ ಬೆಳವಣಿಗೆಯಾಗದೇ ಕ್ರಮೇಣ ಅಲ್ಲೆಲ್ಲಾ ಬಂಜೆತನ ಸೃಷ್ಟಿಯಾಗುತ್ತದೆ. ಸಂಪೂರ್ಣ ಸಹ್ಯಾದ್ರಿ ಬೋಳು ಗುಡ್ಡಗಳಾಗಿ ನಿಲ್ಲಲಿವೆ. ಇಲ್ಲಿನ ಅರಣ್ಯ ಪ್ರದೇಶ ಸುತ್ತಲೂ ಬೆಟ್ಟಗಳಿಂದ ಸುತ್ತುವರಿದ ಪರಿಣಾಮ ಈ ಹಾರು ಬೂದಿಯ ಬಾಯಿಗೆ ಸಿಕ್ಕುವ ಸುತ್ತಮುತ್ತಲಿನ ಕಾಡು ಯಾವುದೇ ಕಾರಣಕ್ಕೂ ಸ್ವಚ್ಛವಾಗುಳಿಯಲಾರದು. +ಬೆಟ್ಟಗಳನ್ನು ದಾಟಿ ಹೊರಗೂ ಈ ಬೂದಿ ಪಸರಿಸಲಾರದು. ಏನಿದ್ದರೂ ಈ ೩೦ ಕಿ.ಮೀ. ವೃತ್ತದೊಳಗೇ ಅದು ಸಂಗ್ರಹವಾಗುತ್ತದೆ. ವರ್ಷಪೂರ್ತಿ ಬೂದಿಯ ಹೊಡೆತಕ್ಕೆ ನಲುಗುವ ಅರಣ್ಯ ಒಮ್ಮೆಲೆ ಇಲ್ಲಿನ ಮಳೆಗೆ ಸಿಕ್ಕು ಎಲ್ಲೆಡೆಯಿಂದ ಹರಿದು ಕೊಚ್ಚಿಕೊಂಡು ಹೊರಡುವ ಭರದಲ್ಲಿ ಅಲ್ಲಲ್ಲೇ ಗಡ್ಡೆ ಕಟ್ಟಿಕೊಂಡು ಸಂಪೂರ್ಣ ಅರಣ್ಯದ ಮೇಲ್ಭಾಗದಲ್ಲಿ ಬೂದಿಯ ಮೇಲ್ಪದರವೇ ನಿರ್ಮಾಣಗೊಂದು ಸಾವಯವ ಮಣ್ಣಿನ ಫಲವತ್ತತೆ ಮತ್ತು ವರ್ಷದ ಜೈವಿಕ ಚಕ್ರದ ಬದಲಾವಣೆಯಿಂದ ಭೂಮಿಯಿಂದ ಹೊರಬರಬೇಕಿದ್ದ ಚಿಗುರುಗಳು ಅಲ್ಲೇ ಮುರುಟಿ ಹೋಗುತ್ತವೆ. ಅದರಲ್ಲೂ ಈಗ ಈ ಮಲೆನಾಡಿನಲ್ಲಿ ಇಂಗು ಗುಂಡಿಗಳ ತೋಡುವಿಕೆ ಸಮರೋಪಾದಿಯಲ್ಲಿ ನಡೆದಿದ್ದು ಎಲ್ಲಾ ಬೂದಿ ನೀರಿನೊಂದಿಗೆ ಕರಗಿ ನೆಲದಲ್ಲೂ ಅಕ್ಸೈಡ್‌ಗಳ ಸಾರವನ್ನೇ ಇಂಗಿಸಿ ಬೇರುಗಳ ಬುಡಕ್ಕೂ ನುಗ್ಗುತ್ತದೆ. ಅಲ್ಲಿಗೆ ಭೂ ಮುಖದಿಂದ ಕಾಡಿನ ಒಂದು ಭಾಗ ಸ್ವಚ್ಛವಾಗಿ ಸವರಿ ಹಾಕಿದಂತಾಗುತ್ತದೆ. +ಈ ನದಿಯಲ್ಲಿ ನಡೆಯುವಷ್ಟು ಅದ್ಭುತ ಮೀನುಗಾರಿಕೆ ಕೃಷಿ, ಗಣಿಗಾರಿಕೆ, ವ್ಯವಸಾಯ, ಬಂದರು ಕೆಲಸ, ಇತರ ನದಿ ನೀರು ಅವಲಂಬಿತ ಕಾರ್ಯಗಳು, ಮೀನುಗಳ ಸಂತಾನೋತ್ಪತ್ತಿ, ಜನಜೀವನದ ಪ್ರಮುಖ ವ್ಯವಹಾರ ಹಾಗು ಜೀವನೋಪಾಯದ ಮೂಲವಾಗಿರುವ ಕೃತಕ ಮೀನು ಕೃಷಿಯಾದ “ಹ್ಯಾಚರಿ” ಇತ್ಯಾದಿ ಸೇರಿದಂತೆ ಬರೀ ನೀರ ಮೇಲೆ ನೆಲದ ಬೆಂಬಲವಿಲ್ಲದೇ ಬೆಳವಣಿಗೆಯಾಗುತ್ತಿರುವ ವಿಶಿಷ್ಟ ತಳಿಯ ಭತ್ತಗಳು… ಸರಿಸುಮಾರು ನೂರಕ್ಕೂ ಮೇಲ್ಪಟ್ಟು ವರ್ಗಗಳನ್ನು ಹೊ೦ದಿರುವ ನದಿಯ ಜೀವ ಸಂಕುಲನ, ಇವೆಲ್ಲಕ್ಕೂ ಕಳಸವಿಟ್ಟಂತೆ ಇದೆಲ್ಲವನ್ನೂ ನಂಬಿಕೊಂಡು ಶತಮಾನಗಳಿಂದ ಇಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಮತ್ತು ಇತರೆ ಮೀನುಗಾರರ ಕುಟುಂಬಗಳು ಜೀವ ಬೇಕಾದರೂ ಬಿಟ್ಟಾರು. ಅಘನಾಶಿಯನ್ನು ಬಿಡಲಿಕ್ಕಿಲ್ಲ ಎಂಬ ಪರಿಸ್ಥಿತಿಯೇ ಇದರ ಹೆಚ್ಚುಗಾರಿಕೆ. +ಇದರಲ್ಲಿರುವ ಜೀವ ಸಂಕುಲದಲ್ಲಿ ಮತ್ಸ್ಯ ವೈವಿಧ್ಯಗಳಾದರೂ ಎಂತಹವು ನೋಡಿ… ಕುರುಡೆ, ಕಾಗಾಳ್ಸಿ, ಬಣಗು, ಗೋಲಿ, ರಾಂಸಿ, ಏರಿ, ಕೆಂಸ, ಬೈಗೇ, ನೋಗಲ್ ಕಾಂಡಿ, ಶಾಡೇ, ಸಿಂಗಟಿ, ಉಡಾಲಿ, ಉಂಡಾರಿ, ಗೊಂಕ, ಬಿಂಗಲಿ, ಕಡಬಾಳೆ, ಕಂಡ್ಲಿ, ಸಳಕ, ಮಡ್ಲೆ, ಕೊಳೆ ಸೆಟ್ಲಿ, ನುಂಗು, ಬೊಂಡೆಕಾನ, ಅಡ್ಡ ಬಳಚು, ನೀಲಿ ಕಲಗ, ಒಣ ಕಾ೦ಡಿ, ಬುರಂಟೆ, ಕರಸಿ, ಬಾಳಿ, ವಡತಿ, ಸೊಗ, ಕೆಂಕ, ನುಚಿಕೆ, ಇವೆಲ್ಲಾ ಈಗ ಸದ್ಯ ಅಘನಾಶಿನಿಯ ತಟದಲ್ಲಿ ಹೇರಳವಾಗಿ ಲಭ್ಯವಾಗುತ್ತಿದ್ಡರೆ, ಈಗಾಗಲೇ ಈ ನದಿಯ ಮುಖಜ ಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಎಂದೆಣಿಸುವ ಸರಾಸರಿಗೆ ಇಳಿದಿರುವ ಮೀನುಗಳ ಜಾತಿ ಎಂದರೆ ಕೊಕ್ಕರಾ, ಕರಿ ಮಂಡ್ಲಿ, ಬಾಣ, ಸೋಗ, ನೆತ್ರ ಕೊಂಡಗ ಇತ್ಯಾದಿ…, ಒ೦ದೇ, ಎರಡೇ ಕನಿಷ್ಟ ನೂರಕ್ಕೂ ಹೆಚ್ಚು ವೈವಿಧ್ಯಮಯ ಪ್ರಕಾರಗಳು, ಈ ಮುಖಜ ಭೂಮಿಯಿಂದ ವಾತಾವರಣ ವೈಪರೀತ್ಯಕ್ಕೆ ಸಿಲುಕಿ ಈ ನದಿ ಮುಖಜ ಭೂಮಿಯಿಂದ ಕಾಣೆಯಾಗಲಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇದೇ ರೀತಿಯ ಜೀವ ವೈವಿಧ್ಯತೆ ಇದೇ ಜಿಲ್ಲೆಯ ಜೀವ ನದಿಗಳಾದ ಶರಾವತಿ ಮತ್ತು ಕಾಳಿ ನದಿಯ ಹರವಿನಲ್ಲೂ ಇತ್ತು. ಇವತ್ತು ಅಲ್ಲಿ ಕೇವಲ ಬಂಗುಡೆ, ಕರಿಬುಡ್ಡದಂತಹ ಆರ್ಡಿನರಿ ಮೀನು ಬಿಟ್ಟರೆ ಪೂರ್ತಿ ಬಲೆಗೆ ಸಿಗುವುದು ಬರೀ ಕೆಸರು ಜೊಂಡು ಮಾತ್ರ. +ನದಿಯ ಮುಖಜ ಭೂಮಿಯಲ್ಲಿ ಆರ೦ಭದ ಹೆಗಡೆ ಗ್ರಾಮದಿಂದ ನುಶಿಕೊಟೆ, ತೋರ್ಕೆ, ಸಾಣಿಕಟ್ಟಾ. ಬೋಲೆ, ಮಾದನಗೇರಿ, ತದಡಿ, ಬೆಲೆಕಾನದ ಹೆಬ್ಬಾಗಿಲಿನವರೆಗೂ ಸುಮಾರು ೨೫ ಸಾವಿರ ಹೆಕ್ಟೇರ್‌ನಷ್ಟು ಗಜನಿ ಭೂಮಿಯನ್ನು ಹೊಂದಿದ್ದು ಅಘನಾಶಿನಿಯ ಮಿಡ್ಲ ಗಜನಿ, ಬರ್ಗಿಗಜನಿ, ಕೆಪೆಕರು, ಯಂಕನಾ ಗಜನಿ, ಧವಾಲ, ಚೌಳಿಚರು, ಕೆಳಗಿನಪಾಲು, ಹಾಂಬ್ರಿ ಹೊಂಡ, ಕಾಗಲ ಗಜನಿ, ಕಲಕಟ್ಟಾ, ಹೋರಿ ಗಜನಿ, ತುಂಬ್ಲೆ, ಮಾನಿಕಟ್ಟಾ, ಲುಕ್ಕೇರಿ, ನರಿ ಬೋಳೆ, ಬೋಲೇ ಬೆಲೆ ಗಜನಿ, ಹೀಗೆ ಈ ಭೂಮಿಗಳನ್ನು ಗಜನಿ ಭೂಮಿಯೆಂದು ಗುರುತಿಸಲಾಗಿದ್ದು ಇಲ್ಲಿ ಭತ್ತ ಬೆಳೆಯುವ ಪದ್ದತಿಗೆ ವಿಶಿಷ್ಟ ಹೆಸರಿದೆ. ಅಷ್ಟಕ್ಕೂ ಎರಡಡಿಯಿಂದ ಹತ್ತಡಿ ಆಳದವರೆಗೆ ನೀರಿದ್ದರೂ ಅದರಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಭತ್ತದ ಮುಖ್ಯ ತಳಿ ಎಂದರೆ ಕಗ್ಗ ಮತ್ತು ಆರ್ಯ ಹಳಗಾ, ಬಿಳಿ ಕಗ್ಗ, ಜಯಾ ಭತ್ತಗಳು. ಇಲ್ಲಿಯ ಜಾತಿಯ ಭತ್ತಕ್ಕೆ ಯಾವುದೇ ಮಣ್ಣಿನ ಹಂಗಿಲ್ಲ. ಕೇವಲ ಅಘನಾಶಿನಿಯ ನದಿ ನೀರಿನ ಮೇಲೆ ತಲೆಯೆತ್ತಿ ನಿಂತುಬಿಡುವ ಇದು ಸದ್ಯಕ್ಕೆ ಲಭ್ಯವಿರುವ ಎಲ್ಲಾ ಭತ್ತದ ಜಾತಿಯಲ್ಲೇ ದೊಡ್ಡ ಸೈಜಿನದು ಎನ್ನುವ ಹೆಗ್ಗಳಿಕೆ ಇದಕ್ಕೆ. ಅದಕ್ಕೂ ಮಿಗಿಲಾಗಿ ತಿಂಗಳು ಕಾಲ ಭರ್ತಿ ನೀರು ಬಂದು ಪ್ರವಾಹ ಬಂದರೂ ಈ ಭತ್ತದ ಬೆಳೆ ಕದಲುವುದಿಲ್ಲ. ವರ್ಷ ಪೂರ್ತಿ ಮಳೆ- ಬಿಸಿಲು ಹೇಗೆ ಇದ್ದರೂ ಬೆಳೆ ಕೊಟ್ಟೆ ಕೊಡುವದು ಇದರ ಸ್ವಭಾವ. ಯಾಕೆಂದರೆ ಇದು ಸಂಪೂರ್ಣ ನೆಲ ಆಧಾರಿತ ಭತ್ತವಲ್ಲ. ಅಲ್ಲಿ ನೆಪಕ್ಕೆ ಬೇರಿಗೆ ಕೊಂಚ ಅನುಕೂಲಕಾರಿ ಸ್ಥಳ ಸಿಕ್ಕರೆ ಸಾಕು. +ಇದೆಲ್ಲಕ್ಕಿಂತಲೂ ಘೋರವಾಗಿ ಅಘನಾಶಿನಿ ದಂಡೆಯಿಂದ ತೋಪೆದ್ದು ಹೋಗಲಿರುವ ಜೀವ ಸಂತತಿ ಎಂದರೆ, ಮ್ಯಾಂಗ್ರೋ ಮರಗಳು. ಅಂದರೆ ಕಾಂಡ್ಲ ಕಾಡುಗಳದ್ದು. ಅಸಲಿಗೆ ಈ ಕಾಂಡ್ಲದ ಬುಡದಲ್ಲೇ ಮೀನುಗಳ ಪ್ರಮುಖ ಸಂತಾನೋತ್ಪತ್ತಿ ನಡೆಯುತ್ತಿದ್ದು ಜನೇವರಿಯ ಹೊತ್ತಿಗೆ ಏಡಿಗಳು ಇಲ್ಲಿ ಮರಿ ಕಾರ್ಯ ಮಾಡಿದರೆ, ಫೆಬ್ರುವರಿಯಲ್ಲಿ ಸೆಟ್ಲಿ ಮೀನುಗಳು, ಕೊನೆಗೆ ಮಾರ್ಚ್ ವೇಳೆಗೆ ಉಳಿದ ದೊಡ್ಡ ಸಣ್ಣ ಮೀನುಗಳ ಸಂತಾನೋತ್ಪತ್ತಿ ಪ್ರತಿ ವರ್ಷದ ಕಾರ್ಯಕ್ರಮ. ಈಗ ಈ ಕಾಂಡ್ಲ ಕಾಡುಗಳ ಕೊಂಚ ವ್ಯತ್ಯಾಸ ಕೂಡಾ ಇನ್ನಿಲ್ಲದಂತೆ ಮತ್ಸೊದ್ಯಮದ ಮೇಲೆ ಪರಿಣಾಮ ಬೀರಲಿದೆ. +ಅಷ್ಟಕ್ಕೂ ಮೀನುಗಳು ಮತ್ತು ಮತ್ಸೊದ್ಯಮ ಹಾಗು ಈ ಕಾಂಡ್ಲ ಕಾಡುಗಳು ಒಂದು ಪರಿಪೂರ್ಣ ನೈಸರ್ಗಿಕ ವೃತ್ತ. ಮೀನುಗಳಿಗೆ ಮರಿಮಾಡಲು ಕಾಂಡ್ಲ ಕಾಡು ಬೇಕಿದ್ದರೆ, ವ್ಯವಸ್ಥಿತ ಮತ್ಸೋದ್ಯಮಕ್ಕೆ ಅಗತ್ಯವಿರುವ ನೀರಿನ ಮಟ್ಟ ಮತ್ತು ನದಿಯ ಪಾತ್ರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಕಾಂಡ್ಲ ಕಾಡುಗಳು ಬೇಕೆ ಬೇಕು. ಅಲ್ಲಿಯ ನಿಶಬ್ದತೆ, ಕತ್ತಲಿನ ಮಂಕು ಬೆಳಕು, ಯಾವುದೇ ಇತರ ಜೀವಿಗಳು, ಶತ್ರುಗಳು ಆ ಬೇರ ಸಂದಿನಲ್ಲಿ ನುಗ್ಗಿ ಮೊಟ್ಟೆಗಳನ್ನು ಹಾಳುಗೆಡುವಲು ಅಸಾಧ್ಯವಾದ ಕಂದಕಗಳು, ಇತ್ಯಾದಿ ತುಂಬಾ ಅನುಕೂಲಕರವಾದ ಸ್ಥಳ ಮೀನು ಸಂತಾನೋತ್ಪತ್ಟಿಗೆ ಈ ಕಾಂಡ್ಲ ಕಾಡಿನ ಬೇರುಗಳ ಸಂದಿನಲ್ಲಿ ದೊರೆತಂತೆ ಉಳಿದೆಲ್ಲಿಯೂ ಲಭ್ಯವಾಗುತ್ತಿಲ್ಲ. +ಅಘನಾಶಿನಿ ನದಿಯು ಯಾವುದೇ ಪಾತ್ರ ಬದಲಾವಣೆ ಮಾಡಿಕೊಳ್ಳದೇ ಶತಮಾನಗಳಿಂದಲೂ ನಿಂತಿದೆಯೆಂದರೆ ಅದು ಕೇವಲ ಲಕ್ಷಾಂತರ ಸಂಖ್ಯೆ ಕಾಂಡ್ಲ ಮರಗಳ ಬೇರುಗಳ ಅಗಾಧ ಶಕ್ತಿಯ ಹಿಡಿತದಿಂದಾಗಿ ಮಾತ್ರವೇ. ಅಕಸ್ಮಾತಾಗಿ ಈ ಕಾಡಿನ ಮೂಲಕ್ಕೆ ಕೊಂಚ ಏರು ಪೇರಾದರೂ ಸಂಪೂರ್ಣ ಮತ್ಸೋದ್ಯಮವೇ ಕುಸಿದು ಬೀಳಲಿದೆ. ಯಾಕೆಂದರೆ ಕಾಂಡ್ಲ ಕಾಡುಗಳು ಒಮ್ಮೆ ಈ ನದಿ ಮುಖಜ ಭೂಮಿಯಿಂದ ಒರೆಸಿಕೊಂಡರೆ ಅದರೊಂದಿಗೆ ಪ್ರಮುಖವಾಗಿ ಮೀನು ಸಂತತಿ ಕೂಡಾ ಹೇಳ ಹೆಸರಿಲ್ಲದಂತೆ ಒರೆಸಿ ಹೋಗಲಿದೆ. ಇದರ ಹೊರತಾಗಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆ ಬಾಳುವ ಸೆಟ್ಲಿ( ಫ್ರಾನ್ಸ್ )ಗಳು ಇಲ್ಲಿನ ಮೀನುಗಾರ ಜೀವನವನ್ನೇ ಬದಲಾಯಿಸಬಲ್ಲ ತಾಕತ್ತಿನವು. ಅದರಲ್ಲೂ ಬಿಳಿಸೆಟ್ಲಿ (ವೈಟ್ ಫ್ರಾನ್ಸ್), ಕೊಳೆ ಸೆಟ್ಲಿ (ಬ್ರೌನ್ ಫ್ರಾನ್ಸ್), ಬಣ್ಣದ ಸೆಟ್ಲಿ (ಝೀಬ್ರಾ ಫ್ರಾನ್ಸ್), ಕೊಂಬು ಸೆಟ್ಲಿ (ಲೋಬ ಸ್ಟಾರ್), ಕಾಯಿಸೆಟ್ಲಿ (ಟೈಗರ್ ಫ್ರಾನ್ಸ್) ಇತ್ಯಾದಿಗಳನ್ನು ಹೇಗೆಂದರೆ ಹಾಗೆ ಬೆಳೆಯಲಾಗುವುದಿಲ್ಲ. ಕೊಂಚ ವಾತಾವರಣ ಏರು ಪೇರು ಕೂಡಾ ಇವನ್ನು ಇನ್ನಿಲ್ಲದಂತೆ ಸಾಯಿಸಿ ಬಿಡುತ್ತದೆ. ಈ ಸಿಗಡಿಗಳನ್ನು ಬೆಳೆಯಲು ವಿಶೇಷ ರೀತಿಯ ಗಜನಿ ಭೂಮಿಗಳಲ್ಲಿ ನಾಲ್ಕರಿಂದ ಐದು ಅಡಿ ನೀರು ನಿಲ್ಲಿಸಿ ಸಿಗಡಿ ಮರಿಗಳನ್ನು ಆಯಾ ಸ್ತರಕ್ಕನುಗುಣವಾಗಿ ಬೆಳೆಯಿಸಲಾಗುತ್ತದೆ. +ಇದಕ್ಕಾಗಿ ಆಳ ಸಮುದ್ರದಿಂದ ತಾಯಿ ಸಿಗಡಿಯನ್ನು ಹುಡುಕಿ, ಸರಿಯಾದ ಸಮಯಕ್ಕೆ ತಂದು, ಕೃತಕವಾದ ಜಾಗದಲ್ಲಿ ಸಾಕಿ, ಅದರ ಸಂತಿತಿಯನ್ನು ನಿರ್ದಿಷ್ಟವಾಗಿ ಬೇರ್ಪಡಿಸಿ ಒಂದು ಹೆಕ್ಟರ್‌ಗೆ ೫೦ ಸಾವಿರದಷ್ಟು ಅದರ ಮರಿಗಳನ್ನು ಬಿಡಲಾಗುತ್ತದೆ. ಇಲ್ಲಿ ಮೂರು ತಿಂಗಳಲ್ಲಿ ಬೆಳೆಯುವ ಮರಿಗಳು ನಾಲ್ಕನೆಯ ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತವೆ. ಹೀಗೆ ಒಂದು ಹಂತದಲ್ಲಿ ಗದ್ದೆಯಾಗಿ ಕಗ್ಗ ಭತ್ತವನ್ನು ಬೆಳೆಯಲು ಉಪಯೋಗಿಸುವ ಈ ಗಜನಿ ಭೂಮಿಯನ್ನು ಮಳೆಗಾಲದ ನಂತರ ಮೀನು ಕೃಷಿಗೆ ಬಳಸುವ ಈ ಪದ್ಧತಿಯನ್ನು “ಹ್ಯಾಚರಿ” ಎಂದು ಕರೆಯುತ್ತಾರೆ. ಈ ನೀರು ಕೊಂಚ ಉಪ್ಪಿನ ಸಾರವನ್ನೂ ಹೊ೦ದಿರುವುರಿಂದ ಇಲ್ಲಿನ ಸಿಗಡಿಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಿದೆ. ಕೇವಲ ನೂರು ದಿನಗಳ ಈ ವ್ಯವಹಾರವನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಕನಿಷ್ಟ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆದಾಯವನ್ನು ಕೇವಲ ಒಂದು ಹೆಕ್ಟೇರ್ ಪ್ರದೇಶದಲ್ಲಿ ತಂದುಕೊಡುವ ಈ ವ್ಯವಹಾರಕ್ಕೆ ಸಿಗಡಿಗಳಿಂದ ಮಾತ್ರ ಸಾಧ್ಯ. ಪ್ರಸ್ತುತ ಸುಮಾರು ನಾನೂರು ಹೆಕ್ಟೇರ್ ಪ್ರದೇಶದಲ್ಲಿ ಈ ಸಿಗಡಿಯ ಕೃತಕ ಬೆಳೆ ಬೆಳೆಯಲಾಗುತ್ತಿದೆ. ಒಂದು ಕೆ.ಜಿ. ಸಿಗಡಿಗೆ ನಾನೂರರಿಂದ, ಐನೂರು ರೂಪಾಯಿವರೆಗೆ ದರ ಇದ್ದು ಕೆ.ಜಿ.ಗೆ ಹೆಚ್ಚೆಂದರೆ ಇಪ್ಪತ್ತೈದರಿಂದ ಮೂವತ್ತು ಸೆಟ್ಲಿಗಳು ತೂಗುತ್ತವೆ. ಹಾಗೆ ನೋಡಿದರೆ ಲಭ್ಯವಿರುವ ಗಜನಿ ಭೂಮಿಯ ವ್ಯಾಪ್ತಿಯ ಅಘನಾಶಿನಿ ದಂಡೆಯಲ್ಲಿಯೇ ಸುಮಾರು ಹದಿನಾರು ಸಾವಿರ ಹೆಕ್ಟೇರ್. ಆದರೆ ಬಳಸಿಕೊಳ್ಳುವ ಮತ್ತು ಬೆಳೆಸುವ ಅನುಪಾತ ಯಾಕೋ ಅಷ್ಟು ಸರಿಯಾಗಿದ್ದಂತಿಲ್ಲ. +ಇದರ ಜೊತೆಗೆ ಸಾಣಿಕಟ್ಟಾ ಉಪ್ಪಿನ ರುಚಿ ಮತ್ತು ಪ್ರಸಿದ್ಧಿಯಂತೂ ಗಾಂಧೀಜಿಯ ಹೆಸರಿನೊಂದಿಗೆ ತಳಕು ಹಾಕಿಕೊಂಡಿದ್ದು. ಇಲ್ಲಿನ ಉಪ್ಪು ಸಾಕಷ್ಟು ನೈಸರ್ಗಿಕ ಅಯೋಡಿನ್ ಯುಕ್ತವಾಗಿರುವುದರಿ೦ದ, ಈ ಉಪ್ಪಿನ ಸೇವನೆಯಿಂದ ಗಳಗಂಡ ರೋಗ ಹತ್ತಿರ ಸುಳಿಯಲಾರದು ಎನ್ನುವುದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಉಪ್ಪಿನ ಉತ್ಪಾದನಾ ಕೇಂದ್ರವಾಗಿರುವ ಸಾಣಿಕಟ್ಟಾ ಮತ್ತು ತದಡಿಯ ಮುಖದಲ್ಲೀಗ ಉಷ್ಣ ವಿದ್ಯುತ್ತಿನ ರೆಕ್ಕೆಗಳು ಫಡಫಡಸತೊಡಗಿದರೆ ಉಪ್ಪು ಹೇಳಹೆಸರಿಲ್ಲದಂತಾಗಿ ಹೋಗಲಿದೆ. ನಾಗರಬೈಲ್ ಉಪ್ಪು ತಾಯಾರಿಕಾ ಸಂಘಟನೆ ಇದೆಲ್ಲದರ ವ್ಯವಹಾರ ಪ್ರಮುಖ ಕೇಂದ್ರವಾಗಿದೆ. ಸರಿ ಸುಮಾರು ನಾಲ್ಕು ಸಾವಿರ ಕುಟುಂಬಗಳು ನೇರವಾಗಿ ಇದರಲ್ಲಿ ಪಾಲ್ಗೊಂಡಿದ್ದರೆ, ವಸ್ತು ಸಾಗಾಣಿಕೆ, ಪ್ಯಾಕಿಂಗ್, ದಾಸ್ತಾನು, ಮಾರುಕಟ್ಟೆ ನಿರ್ವಹಣೆ, ಆಡಳಿತ, ಸಾರಿಗೆ ಸೌಲಭ್ಯ, ತೀರ ಕೆಳಹಂತದ ಕೂಲಿಕಾರಿಕೆ ಇತ್ಯಾದಿಗೆ ಪರೋಕ್ಷವಾಗಿ ಇದನ್ನೇ ಜೀವನಿರ್ವಹಣೆಗೆ ನಂಬಿಕೊಂಡವರ ಸಂಖ್ಯೆ ಸರಿ ಸುಮಾರು ಎರಡೂವರೆ ಸಾವಿರ ಕುಟುಂಬಗಳು. +ಉಳಿದಂತೆ ಉಸುಕು ತೆಗೆಯುವ ಉದ್ಯಮವನ್ನು ನಂಬಿಕೊಂಡು ಈ ನದಿ ದಂಡೆಯಲ್ಲಿ ಬದುಕು ಕ೦ಡುಕೊಂಡಿರುವವರು ಕನಿಷ್ಟ ಎರಡೂವರೆ ಸಾವಿರ ಕುಟುಂಬಗಳು. ಆಳ ನೀರಿನಿ೦ದ ಮೊಗೆದಷ್ಟೂ ಉಸುಕು ಎತ್ತಿ ಕೊಡುತ್ತಿರುವ ಅಘನಾಶಿನಿ ನದಿಯ ಪಾತ್ರ ನಿಜಕ್ಕೂ ರೇತಿಯ ದೃಷ್ಟಿಯಿಂದ ಅಕ್ಷಯ ಪಾತ್ರೆಯೇ ಸರಿ. ಗುಡಕಾಗಲ್, ಹಿಣಿ, ಮಾಸೂರ, ಹೆಗಡೆ, ಮಿರ್ಜಾನ್, ಮಿಡ್ಲ ಗಜನಿ, ಮಾದನಗೇರಿ, ಶಿರುಗುಳಿ ಇತ್ಯಾದಿ ನದಿ ಮುಖಜ ಭೂಮಿಗಳು ಶತಮಾನದಿಂದಲೂ ಉಸುಕು ಎತ್ತಿಸಿಕೊಳ್ಳುತ್ತಲೇ ಇದ್ದರೂ ಇವತ್ತಿಗೂ ಆಳ ಅಥವಾ ಕಂದಕಗಳಾಗಿ ನದಿಯ ಪಾತ್ರದಲ್ಲೇನೂ ಬದಲಾವಣೆಯಾಗಿಲ್ಲ. ಅದೇ ಪ್ರಮಾಣದಲ್ಲೇ ಇವತ್ತೀಗೂ ಉಸುಕು ಲಭ್ಯವಾಗುತ್ತಲೇ ಇದೆ. ಅಸಲಿಗೆ ಅತ್ಯಧಿಕವಾಗಿ ಕಟ್ಟಡ ನಿರ್ಮಾಣ ಕಾಮಗರಿಗಳು ನಡೆಯುವಾಗ ಲಭ್ಯವಾಗುತ್ತಿರುವ ಬೆಲೆ ಕೂಡಾ ಅಷ್ಟೆ ಆಕರ್ಷಣಿಯ. +ಉಳಿದೆಲ್ಲಾ ಸಲಕರಣೆ ಬಳಸಿ ಮಾಡುವ ಮತ್ಸೋದ್ಯಮವಾದರೆ ಸ್ತ್ರೀಯರು ಮತ್ತು ಬೇಸ್ತರ ಎಲ್ಲಾ ವಯೋಮಾನದವರೂ ಮಾಡಿಕೊಂಡು ಹೋಗುವ, ರಜೆಯಲ್ಲಿ ಮಕ್ಕಳೂ ನದಿದಂಡೆಗಿಳಿದು ದುಡ್ಡು ದುಡಿಯುವ ಕೆಲಸವೆಂದರೆ ಬಳಚು ತೆಗೆಯುವುದು. ಈ ಬಳಚು ಎಂದರೆ ಕಪ್ಪೆ ಚಿಪ್ಪು ಎಂದರ್ಥ. ಉತ್ತರ ಭಾರತದ ಯಾವುದೇ ನದಿಯಿಂದ, ಕೇರಳದ ಕೊಟ್ಟ ಕೊನೆಯ ನದಿಯವರೆಗೆ, ಯಾವುದೇ ನದಿಯ ಪಾತ್ರದಲ್ಲೂ ಇಷ್ಟೊಂದು ಮಟ್ಟದ ಚಿಪ್ಪುಗಳು ಲಭ್ಯವಿಲ್ಲ. ಉಳಿದ ನದಿಗಳಿಗೆ ಹೋಲಿಸಿದರೆ ಭಾರತದಲ್ಲಿ ಅಘನಾಶಿನಿಯೊಂದರಲ್ಲೇ ಶೇ. ೭೪ ರಷ್ಟು ಕಪ್ಪೆ ಚಿಪುಗಳ ವಿಫುಲ ಸಂಪನ್ಮೂಲ ಲಭ್ಯವಿದೆ. ಹೀಗಾಗಿ ದಿನಕ್ಕೆ ೪೦೦೦ ಎಕರೆ ಪ್ರದೇಶದಲ್ಲಿ ಈ ಬಳಚು ತೆಗೆಯುವ ಕಾರ್ಯ ಇಲ್ಲಿ ನಡೆಯುತ್ತಿದೆ. ಇದರಲ್ಲಿ ಮುಖ್ಯವಾಗಿ ಅಡ್ಡ ಬಳಚು, ಕರಿ ಬಳಚು, ಗೊಜ್ಜಲು ಬಳಚು, ಕೊಂಡಗ ಬಳಚು, ಮಾರ್ಗಿ, ನೆತ್ತರ ಬಳಚು, ಹೀಗೆ ಹಲವು ಬಗೆಗಳಿದ್ದು ಅಡ್ಡ ಬಳಚು, ಇದರಲ್ಲಿ ಅತ್ಯಂತ ಲಾಭದಾಯಕವಾಗಿ ಪರಿಗಣಿಸಿವೆ. ಇಲ್ಲಿ ಲಭ್ಯವಿರುವ ಚಿಪ್ಪಿನ ನಿಕ್ಷೇಪದ ಅಂದಾಜು ಮೂರ್ನೂರು ಲಕ್ಷ ಟನ್‌ನಷ್ಟಿರಬಹುದೆಂದು ಅಂದಾಜಿಸಲಾಗಿದೆ. +ಕೇವಲ ನದಿ ತೀರದ ಒಂದಡಿ ನೀರಿನಿಂದ ಆಳದ ನಾಲ್ವತ್ತು ಅಡಿಯವರೆಗೂ ಅಗಾಧ ನಿಕ್ಷೇಪದಂತೆ ಅಡಗಿಕೊಂಡಿರುವ ಬಳಚುಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಲಭ್ಯವಾಗಲು ಕಾರಣವೆನೆಂದರೆ ಈ ನದಿಗೆ ಇಲ್ಲಿಯವರೆಗೆ ಯಾವುದೇ ಅನೈಸರ್ಗಿಕ ಆಘಾತದ ಬಿಸಿ ತಟ್ಟಿಲ್ಲ. ಅದೇ ಕಾಳಿ ಮತ್ತು ಶರಾವತಿ ಹಾಗು ಇತರ ಯಾವುದೇ, ಯೋಜನೆಗಳಿಗೆ ಈಡಾಗಿರುವ ನದಿಗಳಲ್ಲಿ ಇವತ್ತು ಬಳಚುಗಳು ಲಭ್ಯವಾಗುತ್ತಿಲ್ಲ. ನದಿಗೆ ಸಾಕಷ್ಟು ನೀರು ಬಂದಾಗ ಸಂಪೂರ್ಣ ಸಿಹಿ ನೀರಾಗಿ ನದಿ ಪರಿವರ್ತಿತವಾದಾಗ ತನ್ನಿಂದ ತಾನೇ ಒಣಗಿದ೦ತಿದ್ದ ಜೀವ ಕಣ ಸ್ಫೋಟಗೊಂಡು ಬಳಚು (ಕಪ್ಪೆ ಚಿಪ್ಪು) ಉತ್ಪತಿಯಾದರೆ, ವರ್ಷಾಂತ್ಯದಲ್ಲಿ ಉಪ್ಪು ನೀರು ಬಂದು ಸೇರತೊಡಗಿದಂತೆ ತಾನೇ ಸಣ್ಣ ಕಣದಂತಾಗಿ ಕರಗಿ ಹೋಗುತ್ತಾ ನೀರ ಬುಡಕ್ಕೆ ಸೇರಿ ಬದುಕಿಕೊಂಡಿರುತ್ತದೆ. ಮತ್ತೆ ವರ್ಷಾರಂಭದಲ್ಲಿ ಮೈದಳೆಯುವ ಇದಕ್ಕೆ ದೇಶಾದ್ಯಂತ ಅಗಾಧ ಪ್ರಮಾಣದ ಬೇಡಿಕೆ ಇದ್ಡು ಅಘನಾಶಿನಿ ನದಿಯೊಂದರಿಂದ ರಫ್ತಾಗುವ ಬಳಚಿನ ಪ್ರಮಾಣವೇ ವಷ೯ಕ್ಕೆ ಸುಮಾರು ನಾನೂರು ಟನ್. +ಈ ಕೆಲಸಕ್ಕೆ ಸಂಬಂಧಿಸಿದಂತೆ ಗಾಂವಕರ್ ಮೈನ್ಸ್ ಇಲ್ಲಿ ಚಿಪ್ಪಿನ ಉದ್ಯಮದ ಮೂಲಕವೇ ಹೆಸರು ಮಾಡಿರುವ ಸಂಸ್ಥೆ. ಕೇವಲ ವರ್ಷವೊಂದಕ್ಕೇ ಒಂದು ಕೋಟಿಗೂ ಅಧಿಕ, ದಾಖಲೆ ತೆರಿಗೆ ಸಲ್ಲಿಸುತ್ತಿರುವ ಗಾಂವಕರ್ ಮೈನ್ಸ್ ಇಲ್ಲಿನ ಮೂರು ಸಾವಿರ ಮೀನುಗಾರರ ಕುಟುಂಬಗಳ ನೇರ ಅನ್ನದಾತರು. ಪರೋಕ್ಷವಾಗಿ ಸರಿ ಸುಮಾರು ಅಷ್ಟೆ ಸ೦ಖ್ಯೆಯ ಕೆಲಸಗಾರರು ಇವರ ಮೈನ್ಸ್ ನಂಬಿಕೊಂಡಿದ್ದಾರೆ. ಹತ್ತಿರದ ಹುಬ್ಬಳ್ಳಿಯಿಂದ ಹಿಡಿದು ದೂರದ ವೆಸ್ಟ್ ಬೆಂಗಾಲವರೆಗೂ ಇನ್ನೂರಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಉತ್ಪನ್ನಗಳಾದ ಔಷಧಿ, ಬಣ್ಣ, ಕಾಗದ ಮತ್ತು ರಸಾಯನಿಕಗಳಿಗೆ ನಂಬಿಕೊಂಡಿರುವುದು ಇದೇ ಗಾಂವಕರ್ ಮೈನ್ಸ್‌ನ ಬಳಚುಗಳನ್ನು. ಇದಲ್ಲದೇ ಇವರ ಉದ್ಯಮವನ್ನೇ ನಂಬಿಕೊಂಡಿರುವ ಸರಕು ಸಾಗಾಣಿಕೆ, ವಾಹನ, ಕೂಲಿಗಾರಿಕೆ, ದಾಸ್ತಾನು ವ್ಯವಹಾರ ಇತ್ಯಾದಿಗಳು ಈ ತದಡಿ ಸ್ಥಾವರದಿಂದಾಗಿ ತೋಪೆದ್ಡು ಹೋಗಲಿವೆ. ಈ ಎಲ್ಲಾ ರೀತಿಯ ನೂರಾರು ವರ್ಷಗಳ ಬದುಕನ್ನು ಹಾಳುಗೆಡುವಿದರೆ ಉದ್ಯಮಿಗಳಾದ ನಾವು ಹೇಗೋ ಬದುಕಿಯೇವು ಉಳಿದ ಈ ಒಟ್ಟಾರೆ ಎಳೂವರೆ ಸಾವಿರ ಕುಟುಂಬಗಳು ಎಲ್ಲಿ ಹೋಗಬೇಕು ಎನ್ನುತ್ತಾರೆ ಗಾಂವಕರ್ ಮೈನ್ಸ್‌ನ ಮುಖ್ಯಾಧಿಕಾರಿ ಸಂತೋಷ ನಾಯಕ. +ಈ ಎಲ್ಲಾ ರೀತಿಯ ಮೀನುಗಳು ಒಂದೇ ರೀತಿಯ ಬಲೆಗಾಗಲಿ, ಮೀನುಗಾರಿಕೆಗಾಗಲಿ ಲಭ್ಯವಾಗುವುದಿಲ್ಲ. ದೊಡ್ಡ ಮಟ್ಟದ ಮೀನುಗಾರಿಕೆ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲದ್ದರಿಂದಾಗಿ ಹಲವಾರು ರೀತಿಯಲ್ಲಿ ಈ ಜೀವನದಿ ಮೀನುಗಾರಿಕೆಗೆ ಅವರವರ ಅರ್ಹತೆಗೆ ತಕ್ಕಂತೆ ಲಭ್ಯವಾಗುವುದು ಇದರ ವಿಶೇಷ. ಹಾಗಾಗಿ ಇದರಲ್ಲಿ ಗೋರುವುದು, ಬೀಸುವುದು, ಚಾಚುವುದು, ಅಡ್ನ ಕಟ್ಟುವುದು, ಗಾಳ ಹಾಕುವುದು, ಗುಂಡಿ ಬಲೆ ಕಟ್ಟುವುದು, ಕುಳೆ ಹಾಕುವುದು, ಕಂಟ್ಲೆ ಹಾಕುವುದು, ಬಳಚು ತೆಗೆಯುವುದು, ಕಲಗ ಒಡೆಯುವಿಕೆ ಇತ್ಯಾದಿ ಪ್ರಕಾರದ ಮೀನುಗಾರಿಕೆಯಲ್ಲಿ ಇದನ್ನು ವಿಭಜಿಸಲಾಗಿದೆ. +ಸುಮಾರು ಮೂವತ್ತು ಅಡಿ ಉದ್ದ, ಆರು ಅಡಿ ಅಗಲದ ಬಲೆಯನ್ನು ಎರಡೂ ಕಡೆಯಿಂದ ಹಿಡಿದೆಳೆದುಕೊಂಡು ಕೋಲನ್ನು ಅದಕ್ಕೆ ಆಧಾರವಾಗಿ ಬಳಸಿ, ಜಾಳಿಸುತ್ತಾ ಒಂದು ಕಡೆಯಿಂದ ನದಿಯ ಮುಖಜ ಭೂಮಿಯಲ್ಲಿ ಎಳೆದೆಳೆದು ಮೀನು ಹಿಡಿಯುವುದೇ ಗೋರುವ ಪದ್ಧತಿಯಾಗಿ ಚಲಾವಣೆಯಲ್ಲಿದೆ. ಸೆಟ್ಲಿಗಳೂ ಸೇರಿದಂತೆ ಶಾಡೆಗಳು ಮತ್ತು ಮಟ್ಲೆಗಳೆಂಬ ಮೀನು ಬಹುತೇಕ ಇದರಲ್ಲಿ ಬೀಳುತ್ತವೆ. +ಗೋರುವ ಪದ್ಧತಿಯಲ್ಲಿ ಬಲೆಗೆ ಈಡಾಗದ ಮತ್ತು ಮಿಂಚಿನಂತೆ ತಪ್ಪಿಸಿಕೊಳ್ಳುವ ಮೇಲಸ್ತರದ ಮೀನುಗಳಿಗಾಗಿ ಬೀಸುವ ಪದ್ಧತಿಯನ್ನು ಬಳಸಲಾಗುತ್ತದೆ. ಇದರಲ್ಲಿ ಜೇಡರ ಬಲೆಯ ತರಹದ ವಿನ್ಯಾಸವಿದ್ದು ನೇರವಾಗಿ ನೀರಿನಲ್ಲಿ ಲಂಬವಾಗಿ ಇಳಿಯುವಂತೆ ನೋಡಿಕೊಳ್ಳಲು, ಬಲೆಯ ಸುತ್ತಲೂ ಭಾರದ ಸೀಸದ ತುಂಡುಗಳನ್ನು ಸೇರಿಸಿ ಹೊಲೆದಿರುತ್ತಾರೆ. ಇದರಿಂದ ನೀರಿಗೆ ಇದನ್ನು ಬೀಸಿದಾಗ ಭಾರದ ತುಂಡಿನ ಭಾಗದ ತುದಿಗಳು ನೇರ ನೀರಿಗೆ ಲ೦ಬವಾಗಿ ಇಳಿಯುತ್ತಿದ್ದರೆ ಅತ್ತಿತ್ತ ಚಲಿಸಿ ಮರೆಯಾಗಲೆತ್ನಿಸುವ ಮೀನುಗಳು ಇದರ ಬಲೆಗೆ ಸಿಕ್ಕಿಕೊಳ್ಳುತ್ತವೆ. ಈ ಮೀನುಗಾರಿಕೆಯನ್ನು ಬೀಸುವಿಕೆ ಎನ್ನುತ್ತಾರೆ. ಇದಕ್ಕೆ ಯಾವುದೇ ರೀತಿಯ ಅತ್ಯಾಧುನಿಕ ಸೌಲಭ್ಯಗಳು ಬೇಕಿಲ್ಲವಾದರೂ, ಒಂದು ಸಾದಾ ದೋಣಿ ಇದ್ದರೂ ಸಾಕು ಮಧ್ಯ ಸಮುದ್ರದಲ್ಲೂ ಈ ಕಸುಬು ನಡೆಸಬಹುದಾಗಿದೆ. ಆದರೆ ತುಂಬಾ ಆಳ ಸಮುದ್ರ ಅಥವಾ ನದಿಯ ಅಳದ ಪ್ರದೇಶದಲ್ಲಿ ಇದು ಸಮಂಜಸವಲ್ಲ. +ತಿ೦ಗಳ ಬೆಳಕು ಮತ್ತು ದ್ವಾದಶಮಿಯಿಂದ ಪಂಚಮಿಯವರೆಗಿನ ಒಂದೆರಡು ದಿನ ಮಾತ್ರ ಉಬ್ಬರವಿಳಿತ ನೋಡಿಕೊಂಡು ಮೀನು ಹಿಡಿಯಲು, ದೊಡ್ಡ ಮೀಟರುಗಟ್ಟಲೆ ದೊಡ್ಡ ಬಲೆ ಬಳಸಿ ಒಂದೆಡೆಯಿಂದ ಇನ್ನೊಂದೆಡೆಯವರೆಗೂ ಬಲೆಯನ್ನು ಚಾಚಿಕೊಂಡು ಬರಲಾಗುವುದರಿಂದ ಇದಕ್ಕೆ ಚಾಚುವುದು ಎಂದು ಹೆಸರಾಗಿದೆ. ಇದರಲ್ಲಿ ಸುಮಾರು ಕೀ.ಮೀ.ಗಟ್ಟಲೆ ಜಾಗವನ್ನು ಆವರಿಸಿಕೊಳ್ಳುವಂತೆ ಬಲೆಯನ್ನು ನೀರಿನಲ್ಲಿ ಹಾಸಿ ಮೀನನ್ನು ಹಿಡಿಯಲಾಗುತ್ತದೆ. ಈ ಬಲೆಯನ್ನು ದಾಟಲಾಗದೆ ತುಂಬಾ ದೊಡ್ಡ ಮತ್ತು ಅಪರೂಪದ, ಉಬ್ಬರ ಸಮಯದಲ್ಲಷ್ಟೆ ಲಭ್ಯವಾಗುವ ಕಾಗಾಳ್ಸಿ, ನೋಗಲ ಕಾಂಡಿ, ಗೋಲಿ, ಬಣಗು, ಶಾಡೇ, ಸಿಂಗಟಿ, ಮುಂತಾದವು ಲಭ್ಯವಾಗುತ್ತವೆ. +ತೀರ ಬಲೆ, ದೋಣಿ, ಇನ್ನಿತರ ತಾಂತ್ರಿಕ ವಸ್ತುಗಳು ಇದಾವುದೂ ಇಲ್ಲದ, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ಅಗತ್ಯದ ಸಾಮಗ್ರಿಗಳಿಲ್ಲದವರು, ನಿಯಂತ್ರಿತ ಪ್ರಮಾಣದಲ್ಲಿ ಮೀನುಗಳನ್ನು ಹಿಡಿಯುವ ಪದ್ಧತಿಯೇ ಅಡ್ನ ಕಟ್ಟುವಿಕೆ. ಸಮುದ್ರ ನೀರು ಉಬ್ಬರಕ್ಕೇರಿ, ಅಘನಾಶಿನಿ ತುಂಬಿ ಮೇಲೆರಿದಾಗ ಬಂದಾಗ, ನೀರು ಹಾಯ್ದು ಬರುವಂತೆ ಅದಕ್ಕಾಗಿಯೇ ನಿರ್ಮಿಸಲಾದ ಕಾಲುವೆಗಳಲ್ಲಿ ಹರಿಸಿ ಮೀನುಗಳನ್ನು ಮೊದಲು ಒಂದು ಕಕ್ಷೆಗೆ ತಂದುಕೊಳ್ಳಲಾಗುತ್ತದೆ. ನಂತರದಲ್ಲಿ ನೀರು ಉಬ್ಬರ ಇಳಿದು ಆಚೆಗೆ ಮುಂಚೆ ಅದರ ಬಾಯಿಗೆ ಬಲೆ ಬಿಡಿದು ಜಲಚರಿಗಳು ಅತ್ತ ಹೋಗದಂತೆ ತಡೆ ಹಿಡಿದು ಬಲೆಗೆ ಕೆಡುವಲಾಗುತ್ತದೆ. ಹೀಗೆ ಅಡ್ಡ ಕಟ್ಟಿ ಮೀನುಗಾರಿಕೆ ಮಾಡುವವರು ಸಾಮಾನ್ಯವಾಗಿ ಸಣ್ಣ ಮೀನುಗಾರರು, ಬಲೆಗಳಿಲ್ಲದವರು, ತಾಂತ್ರಿಕವಾಗಿ ಸೌಲಭ್ಯಗಳಿಲ್ಲದವರು, ಸಣ್ಣ ಪ್ರಮಾಣದ ಮೀನುಗಳಿಗೆ ತೃಪ್ತಿಪಟ್ಟುಕೊಳ್ಳುವವರದ್ಡು ಈ ಮೀನುಗಾರಿಕೆ. ಮಳೆಗಾಲಕ್ಕೆ ಬೇಕಾಗುವ ಸಮುದ್ರ ಉಪ್ಪಿನಕಾಯಿ, ಸಣ್ಣ ಒಣ ಮೀನುಗಳು, ಒಣ ಸೆಟ್ಲಿ, ಕೊಂಬು ಬಳಚುಗಳ ಪೂರೈಕೆಯಾಗುವುದೇ ಈ ಪದ್ಧತಿಯ ಮೀನುಗಾರಿಕೆ ಕೃಷಿಯಿಂದಾಗಿ. ಕೊಳೆ ಸೆಟ್ಲಿ, ಕಡಬಾಳೆ, ಬಿಂಗಲಿ, ಮಡ್ಲೆ, ಕಂಡ್ಲಿ, ಸಳಕ, ಬೊಂಡೆಕಾನ ಇತ್ಯಾದಿ ಮೀನುಗಳು ಇದರಲ್ಲಿ ಖಂಡಿತಕ್ಕೂ ಬೀಳುತ್ತವೆ. ಈ ಮೀನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳು ನಾಲ್ಕೂವರೇ ಸಾವಿರ. +ಇದೆಲ್ಲಕ್ಕಿಂತಲೂ ಅಗಾಧ ಮತ್ತು ಪ್ರಮಾಣದ ದೃಷ್ಟಿಯಿಂದ ದೊಡ್ಡ ಪ್ರಮಾಣದ ಮೀನುಗಾರಿಕೆ ಮಾಡುವವರು ಸಾಮಾನ್ಯವಾU ಬಳಸುವ ಪದ್ಧತಿಯೆಂದರೆ ಕಂಟ್ಲೆ ಕಟ್ಟುವಿಕೆ. ಇದಕ್ಕಾಗಿ ಒಂದೂವರೆ ಕೀ.ಮೀ.ನಿಂದ ಎರಡೂವರೆ ಕೀಮೀ.ವರೆಗೂ ಅಡ್ಡ ಬಲೆ ಹಾಕಿ ಎತ್ತರಕ್ಕೆ ಎರಡು ಮೀ. ನಷ್ಟು ಅಡ್ಡಗಟ್ಟಿ ಕಂಟ್ಲೆ ಕಟ್ಟುವ ಪದ್ಧತಿಯಲ್ಲಿ ಒಂದೇ ಬಾರಿಗೆ ಸುಮಾರು ಒಂದು ಲೋಡನಷ್ಟು ಮೀನು ಸಿಗುವುದೂ ಉಂಟು. ದೊಡ್ಡ ಸೈಜಿನ ಮೀನುಗಳು ಮತ್ತು ದೊಡ್ಡ ಪ್ರಮಾಣದ ಮೀನುಗಳು ಈ ಮೀನುಗಾರಿಕೆಯಲ್ಲಿ ಸಾಧ್ಯವಿದೆ. ಆದರೆ ಅಷ್ಟೆ ಸಧೃಡ ಮತ್ತು ತುಂಬಾ ಶಕ್ತಿಯುತ ಬಲೆ, ನೀರಿನಲ್ಲಿ ಹುಗಿಯುವ ಗೂಟದ ವಿನ್ಯಾಸ. Zರಿನ ಹರಿವಿಗೆ ಅಡ್ಡವಾಗಿಯೂ ಅಡ್ಡಲಾಗದಂತೆ ಬಲೆ ಬೀಗಿಯುವ ನೈಪುಣ್ಯತೆ ಈ ಮೀನುಗಾರಿಕೆಗೆ ಬೇಕು ಇಲ್ಲವಾದರೆ ಮೀನುಗಳು ಕೊಂಚ ಸಂಶಯಿಸಿದರೂ ಅತ್ತಾಸುಳಿಯದೇ ದಿನವಿಡಿ ಮಾಡಿ ಬೀಗಿದಿರಿಸಿದ್ದ ಬಲೆಗೆ ಬರಿ ಜೊಂಡುಗಳು ಬಿದ್ದಾವು. +ನದಿಯ ನೀರಿಗೆ ಅಬ್ಬರದ ಉಬ್ಬರ ಂದಾಗ ಅದರೊಂದಿಗೆ ಬಂದು ಬೀಳುವ ಮೀನುಗಳಿಗೆ ಮೊದಲು ಒಂದಷ್ಟು ಜಾಗ ಕಲ್ಪಿಸುವಂತೆ ಸಣ್ಣ ಕೆರೆಯಂತೆ ನಿರ್ಮಿಸಿ ಇಡಲಾಗುತ್ತದೆ. ಒಂದೆಡೆಯಿಂದ ಭರತದ ನೀರನ್ನು ಒಳಕ್ಕೆ ಬಿಟ್ಟುಕೊಂಡು ಅದರೊಂದಿಗೆ ಮೀನುಗಳೂ ಬಂದು ಬೀಳುವಂತೆ ಮಾಡಲಾಗುತ್ತದೆ. ಅದಕ್ಕೆ ಸುತ್ತಲೂ ಕಟ್ಟೆ ಕಟ್ಟಿ ಎಲ್ಲಿಂದಲೂ ಹೊರಕ್ಕೆ ಹೋಗದಂತೆ ಮೊದಲು ತಡೆದು ನಿಲ್ಲಿಸುವುದರಿಂದಾಗಿ ಭರತ ಇಳಿದ ಮೇಲೂ ನೀರು ಈ ಕೃತಕ ಕೆರೆಯಲ್ಲಿ ನಿಂತೇ ಇರುತ್ತದೆ. ಅದರೊಂದಿಗೆ ಸಿಕ್ಕಿ ಬಿದ್ದ ಮೀನುಗಳೂ ಕೂಡಾ. ತೀರ ಇಳಿಜಾರು ಇರುವ ಕಡೆ ಇದಕ್ಕೆ ಒಂದು ತೂಬನ್ನು ನಿರ್ಮಿಸಿರುತ್ತಾರೆ. ಒಂದೆರಡು ದಿನದ ನಂತರ ಒಂದೇ ಒಂದು ತೂಬು ತೆಗೆದು ಎಲ್ಲಾ ನೀರನ್ನು ಹೊರಕ್ಕೆ ಬಿಡಲಾರಂಭಿಸುತ್ತಾರೆ. ಇದರಿ೦ದಾಗಿ ಏಕತಾನತೆಯಿಂದ ಬೇಸತ್ತ ಮೀನುಗಳು ತೂಬಿನಿಂದ ಹೊರಕ್ಕೆ ಹೋಗಲು ಇನ್ನಿಲ್ಲದಂತೆ ಧಾವಿಸುತ್ತವೆ. ಹೊರಗೆ ತೂಬಿನ ಕೆಳಕ್ಕೆ ಇರಿಸಲಾಗಿರುವ ಕುಳಿ ಬಲೆಯ ಬುಡಕ್ಕೆ ಸಿಕ್ಕಿಕೊಳ್ಳುತ್ತವೆ. ಕುಳಿಯಲ್ಲಿ ಬಿದ್ದ ನೀರು ಹೊರಕ್ಕೆ ಹೋಗುತ್ತಿದ್ದರೆ ಬಲೆಯಲ್ಲಿ ಉಳಿವ ಮೀನು ಸುಲಭ ಶಿಕಾರಿಯಾಗುತ್ತದೆ. ಇದು ತ್ವರಿತಗತಿಯಲ್ಲಿ ಮತ್ತು ಎಷ್ಟು ಬೇಕೋ ಅಷ್ಟೆ ಮೀನು ಹಿಡಿಯಲು ಅನುಸರಿಸುವ ಕಲೆಗಾರಿಕೆಯಾಗಿದೆ. +ಇನ್ನುಳಿದಂತೆ ನೀರಿನೊಳಗೇ ಕಲ್ಲಿಗೆ ಅಂಟಿಕೊಂಡು ಬೆಳೆಯುವ “ಕಲಗಾ” ಸೇರಿದಂತೆ ಎಲ್ಲೆಂದರಲ್ಲಿ ಈ ಅಘನಾಶಿನಿಯ ಗಜನಿ ಭೂಮಿಯಲ್ಲಿ ಲಭ್ಯವಿರುವ ಏಡಿಗಳಿಗಾಗಿ, ತೈವಾನ್, ಮಲೇಶಿಯಾ, ಸಿಂಗಾಪುರ್ ಸೇರಿದಂತೆ ಎಷ್ಯಾದ ಎಲ್ಲಾ ದೇಶಗಳಲ್ಲಿ ಬಳಸಲ್ಪಡುತ್ತಿರುವ ಮಾಂಸದ ಏಡಿಗಳಿಗಾಗಿ ದಿನವಹಿ ಎರಡು ಸಾವಿರ ಕುಟುಂಬಗಳು ಈ ನದಿ ನೀರಿಗಿಳಿಯುತ್ತವೆ. ಕೇವಲ ಆಳ ಸಮುದ್ರದಲ್ಲಿ ಮಾತ್ರ ಬೆಳೆಯುವ ” ಕಲಗಾ ” ಜೀವಿಯ ಮಾಂಸಕ್ಕೆ ಅಗಾಧ ಬೇಡಿಕೆ ಇದ್ಡು, ಅಪರೂಪದ ವಿದ್ಯಾಮಾನ ಎನ್ನುವಂತೆ ಇದು ಅಘ್ನಾಶಿನಿಯ ಬಂಡೆಗಳ ಅಡಿಯಲ್ಲಿ ಮಾತ್ರ ಬೆಳೆಯುತ್ತದೆ. ಕನಿಷ್ಟ ಕಾಲು ಕೆ.ಜಿ.ಯಿಂದ ಎರಡ್ಮೂರು ಕೆ.ಜಿ.ವರೆಗೂ ತೂಗುವ ಇದರ ಚಿಪ್ಪಿನೊಳಗಿನ ಮಾಂಸಕ್ಕೆ ಸಾವಿರ ಲೆಕ್ಕದಲ್ಲಿ ರೇಟಿದೆ. ಕೇವಲ ಹತ್ತಿರದ ಕಾರವಾರ, ಪಣಜಿ, ವಾಸ್ಕೋ ಮಡಗಾ ಸೇರಿದಂತೆ ಹುಬ್ಬಳಿ ಮತ್ತು ಬೆಂಗಳೂರಿನವರೆಗಿನ ಬೇಡಿಕೆ ಪೂರೈಸಲು ಈ ನದಿಗೆ ಇಳಿಯುವ ಕುಟು೦ಬಗಳ ಸಂಖ್ಯೆ ಕನಿಷ್ಟ ಎರಡೂವರೆ ಸಾವಿರ. ತಿಂಗಳ ರಫ್ತಿನ ಪ್ರಮಾಣ ಸುಮಾರು ಒಂದು ಟನ್. +ಇಷ್ಟೆಲ್ಲಾ ರೀತಿಯ ಅಮೋಘವಾದ ಒಂದು ಜನ ಜೀವನ ಪದ್ಧತಿಯು ಈ ಅನ್ದಿ ಮುಖಜ ಭೂಮಿಯಿಂದ ಒರೆಸಿ ಹೋಗಲಿದೆ. ಯಾಕೆಂದರೆ ಈಗ ಪ್ರಸ್ತುತ ಯಾವ ನದಿಯಲ್ಲೊ ಈ ಎಲ್ಲ ರೀತಿಯ ಮೀನುಗಾರಿಕೆಯಾಗಲಿ, ಭತ್ತ ಬೆಳೆಯುವ ಪದ್ಧತಿಯಾಗಲಿ, ಚಿಪ್ಪಿನ ಕೋಟ್ಯಾಂತ ಉದ್ಯಮವಾಗಲಿ ಉಳಿದು ಬೆಳೆದು ಬಂದಿಲ್ಲ. ವಿವಿಧ ಹಂತದ ಮೀನುಗಾರಿಕೆಯಂತೂ ಕಣ್ಮರೆಯಾಗಿ ದಶಕಗಳೆ ಕಳೆದಿವೆ. ಆದರೆ ಅಘನಾಶಿಯ ದಂಡೆಯಲ್ಲಿ ಮಾತ್ರ ಈಗಲೂ ಈ ಬೇಸ್ತರ ಜನಾಂಗ ಈ ಎಲ್ಲಾ ವಿವಿಧತೆಯನ್ನು ಉಳಿಸ್ಕೊಂಡು ಬಂದಿದೆ. ಅಷ್ಟಕ್ಕೂ ಇದೆಲ್ಲ ಬಿಟ್ಟು ಕೊಟ್ಟರೆ ಜನಜೀವನಕ್ಕೆ ಪರಿಹಾರ ಮತ್ತು ನೌಕರಿಯ ಆಮಿಷ ಕೂಡಾ ಬರುತ್ತಿದೆ. +ಕುಚ್ಯೋದ್ಯವೆಂದರೆ ನಾಲ್ಕಕ್ಷರವೂ ಬಾರದ ನಿರಕ್ಷರಿಯಾದ ಹದಿನೈದು ಸಾವಿರ ಮೀನುಗಾರರಿಗೆ ಯಾವ ನೌಕರಿಯೆಂದು ಕೊಡುತ್ತೀರಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಅಷ್ಟಕ್ಕೂ ನದಿಯನ್ನೇ ನಂಬಿಕೊಂಡು ಮೀನು, ಚಿಪ್ಪು, ತರಹೇವಾರಿ ಬಳಚು, ಸಮುದ್ರ ಜೀವಿಗಳ ಬೇಟೆಯಾಡಿಕೊಂಡಿರುವವರಿಗೆ ಸೂಕ್ತವಾದ ಕೆಲಸ ಮತ್ತು ಕೈತುಂಬ ಸಂಬಳವನ್ನು ಈಗಾಗಲೇ ಗಾಂವಕರ ಮೈನ್ಸ್, ಸಾಣಿಕಟ್ಟಾ ಉಪ್ಪು ಕೇಂದ್ರಗಳು, ಸಾಯಿ ಎಕ್ಸ್ ಫೊರ್ಟ್ಸ್ ಕಂಪೆನಿಗಳು ಕೊಡುತ್ತಲೇ ಇದೆಯಲ್ಲ. ಒಂದು ಕಂಪೆನಿ ಸರಕಾರಕ್ಕೆ ವರ್ಷಕ್ಕೆ ಕೋಟಿ ರೂಪಾಯಿಗೂ ಮಿಗಿಲು ಕೇವಲ ತೆರಿಗೆ ಕಟ್ಟುತ್ತದೆಯೆಂದರೆ ಅಲ್ಲೇನು ಬರೀ ಅಂಗಡಿ ನಡೆಸುತ್ತಿಲ್ಲ. ಬದಲಿಗೆ ಮೀನುಗಾರಿಕೆಯ ಅಷ್ಟೂ ಮಜಲಿನ ನಿರ್ದಿಷ್ಟ, ವ್ಯವಸ್ಥಿತ ಕೈಗಾರಿಕೆಯೇ ನಡೆಯುತ್ತಿದೆ. ಅಸಲಿಗೆ ಚಿಪ್ಪು ತೆಗೆಯುವ ಒಂದು ಸ್ಥಳವೇ ಸಾಕು ಅಲ್ಲಿನ ಬ್ರಹತ್ ಮತ್ಸೋದ್ಯಮದ ದರ್ಶನವಾಗಲಿಕ್ಕೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮತ್ಸೊದ್ಯಮ, ತದಡಿ, ನುಶಿಕೋಟೆ, ತೋರ್ಕೆ, ಮಾದನಗೇರಿಗಳಲ್ಲಿ ದಿನವಹಿ ನಡೆಯುತ್ತಿರುವ ಉಸುಕಿನ ಉದ್ಯಮ, ಅದರ ನಿರ್ವಹಣೆ, ನದಿ ನೀರಿನಿಂದೆತ್ತಿ ದೋಣಿಗಳ ಮೂಲಕ ದಂಡೆಗೆ ಸುರಿದು, ಮತ್ತೆ ಅಷ್ಟೆ ಒಪ್ಪವಾಗಿ ಅದನ್ನು ಟಿಪ್ಪರುಗಳಿಗೇರಿಸಿ, ತುಂಬಾ ವ್ಯವಸ್ಥಿತವಾಗಿ ನಡೆಯುವ ಈ ಕೆಳಹಂತದ ಕೂಲಿಕಾರಿಕೆಯಿ೦ದ ಹಿಡಿದು ಅದು ಬಂದರು ವಹಿವಾಟಿನ ಪ್ರದೇಶದಿಂದ ಮುಖ್ಯ ಸಾರಿಗೆ ಕ್ಷೇತ್ರವನ್ನು ತಲುಪುವವರೆಗೂ ಅದರದ್ದೇ ಆದ ಸರಪಣಿ ವ್ಯವಹಾರದ ಕ್ರಮವಿದೆ. ಈ ಎಲ್ಲಾ ಲಿಂಕುಗಳು ತಪ್ಪುವ ಮೂಲಕ ಎಷ್ಟು ಜನರಿಗೆ ಪರಿಣಾಮ ಬೀರಲಿದೆ ಯೋಚಿಸಿ. +ಹೀಗೆ ಒಂದಿಲ್ಲ ಒಂದು ಕಾಲದಲ್ಲಿ ಈ ದಂಡೆಯಗುಂಟ ಬದುಕಿರುವ ಮೀನುಗಾರರಿಗೆ ನಿರಂತರ ಉದ್ಯೋಗಕ್ಕೆ ಬೆನ್ನೆಲುಬಾಗಿರುವ ಮತ್ಸೊದ್ಯಮದೊಂದಿಗೆ ಅಘನಾಶಿನಿ ತನ್ನ ಬೇಕು ಬೇಡಗಳನ್ನೂ ಕೂಡಾ ಈ ಮೀನುಗಾರರೊಂದಿಗೆ ಹಂಚಿಕೊಂಡಿರುವ ಪರಿ ಅನನ್ಯ. ಆದರೆ ಒಂದೇ ಒಂದು ಉಷ್ಣ ವಿದ್ಯುತ್ ಸ್ಥಾವರ ಈ ಎಲ್ಲಾ ನಂಬಿಕೆ, ಅನುಬಂಧ, ನದಿಯೊಂದಿಗಿನ ಮೂಲಭೂತ ಜೀವನವನ್ನು ರೂಢಿಸಿಕೊಂಡಿರುವವರ, ಮೀನುಗಾರರ, ಬೆಸ್ತರ, ಉಳಿದಂತೆ ಪರೋಕ್ಷವಾಗಿ ನದಿಯ ದಂಡೆಯಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿ೦ದ ಬದುಕು ಕ೦ಡುಕೊಂಡಿರುವವರನ್ನು ಬೀದಿಗೆ ಬಿಸಾಡಲಿದೆ. ಇದೆಲದಕ್ಕಿಂತಲೂ ಕೇವಲ ಯೊಜನೆಗಳ ಭಾರದಿಂದ ನಲುಗುತ್ತಿರುವ ಉತ್ತರ ಕನ್ನಡದ ಪರಿಸರಕ್ಕೆ ಈ ಯೋಜನೆಯಿಂದ ಯಾವುದೇ ಉಪಯೋಗವಂತೂ ಖಂಡಿತಾ ಇಲ್ಲ. ಆದರೆ ಮತ್ತೆ ಅಳಿದುಳಿದ ಕಾಡು, ನಾಡು, ಜನಜೀವನ, ಪರಿಸರ ಮಾಲಿನ್ಯ ಸೇರಿದಂತೆ ಆಘಾತಗಳು ಎರವಾಗುತ್ತಲೇ ಇರುವುದನ್ನು ನೋಡಿದರೆ ನಿಜಕ್ಕೂ ಉತ್ತರ ಕನ್ನಡ ಜಿಲ್ಲೆ ಯಾವುದೋ ಪಾಪ ಮಾಡಿರಲೇಬೇಕು ಅಥವಾ ತೀರ ಬಗೆಯರಿಯಲಾಗದ ಶಾಪಕ್ಕೊಳಗಾಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. +***** +ಕೃಪೆ: ತರಂಗ-ವಾರಪತ್ರಿಕೆ +-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […] +ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […] +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_615.txt b/Kannada Sahitya/article_615.txt new file mode 100644 index 0000000000000000000000000000000000000000..323a296eb7ad0d43ae88aea3ceecc0cd32d46772 --- /dev/null +++ b/Kannada Sahitya/article_615.txt @@ -0,0 +1,500 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. +ಎಲ್ಲವೂ ತಾನು ಊಹಿಸಿದಂತೇ ಇತ್ತು. +ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ ಮೃದು ವಸ್ತುವನ್ನಿಟ್ಟು ಒತ್ತಿ ಉಸಿರು ಕಟ್ಟುವಂತೆ ಮಾಡಲಾಗಿತ್ತು. ಕೊನೇಗಳಿಗೆಯಲ್ಲಿ ದೇವಕಿ ಹೋರಾಟ ನಡೆಸಿದುದರ ಸಾಧ್ಯತೆಯ ಬಗ್ಗೆ ರಿಪೋರ್ಟ್ ಹೇಳಿತ್ತು… ಕೊಲೆ ನಡೆದದ್ದು ರಾತ್ರಿ ಹನ್ನೊಂದೂವರೆಯಿಂದ ಹನ್ನೆರಡೂವರೆಯ ಒಳಗೆ. ಅದೂ ಹೊಸ ವಿಷಯವೇನಲ್ಲ… +ಫೊರೆನ್ಸಿಕ್ ರಿಪೋರ್ಟ್‌ನಲ್ಲೂ ಯಾವುದೇ ಹೊಸ ವಿಷಯ ಇದ್ದಂತಿರಲಿಲ್ಲ. ಶವದ ತಲೆಯ ಭಾಗದಲ್ಲಿ ಸಿಕ್ಕಿದ ಒದ್ದೆ ಕರವಸ್ತ್ರದಲ್ಲಿದ್ದುದು ದೇವಕಿಯದೇ ಬೆವರು ಮತ್ತು ಶ್ಲೇಷ್ಮ. +ರಿಪೋರ್ಟ್‌ನಲ್ಲಿ ಕಾಣುವ ಒಂದೇ ಒಂದು ಹೊಸ ವಿಷಯವೆಂದರೆ ದೇವಕಿ ಸ್ವಲ್ಪ ಹೆಚ್ಚಾಗಿಯೇ ಕಾಫಿ ಸೇವಿಸಿದ್ದಾರೆ. ಇದು ಅಚ್ಚರಿಯ ವಿಷಯ. ಆಕೆಯ ತಾಯಿ ಹೇಳುವ ಪ್ರಕಾರ ದೇವಕಿ ಊಟದ ನಂತರ ಮನೆಯಲ್ಲಿ ಕಾಫಿ ತೆಗೆದುಕೊಂಡಿಲ್ಲ! ಅಂದರೆ ಕಾಫಿ ಸೇವಿಸಿದ್ದು ಮನೆಯಿಂದ ಹೊರಟ ನಂತರವೇ? ಅದು ಕೊಲೆಗಾರನ ಜತೆಯಲ್ಲೇ? +ಭಾರದ ಪೇಪರ್ ವೆಯಿಟನ್ನು ಸಶಬ್ಧವಾಗಿ ರಿಪೋರ್ಟ್ ಮೇಲಿಟ್ಟ. ಅಟೆಂಡರ್ ಬೂಕಯ್ಯನನ್ನು ಕೂಗಿ ಕರೆದು ಕ್ಯಾಂಟೀನಿನಿಂದ ಮಸಾಲೆ ಟೀ ತರಲು ಹೇಳಿದ. ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕಣ್ಣು ಮುಚ್ಚಿದ. +ಮನದಲ್ಲಿ ಮತ್ತೆ ಪ್ರಶ್ನೆಗಳ ಮೇಳ. +ದೇವಕಿಯ ಮೇಲೆ ನರಹರಿಯ ಹೊರತಾಗಿ ಬೇರಾರಿಗೂ ದ್ವೇಷವಿದ್ದ ಸೂಚನೆ ಇಲ್ಲ. ಕೊಲೆ ನಡೆದ ರಾತ್ರಿ ತನಗೆ ಎಚ್ಚರವಿಲ್ಲದ ನಿದ್ದೆ ಎಂದು ಅವನು ಹೇಳಿದ ಮಾತು ಎಷ್ಟು ನಿಜ? ಮೊನ್ನೆ ರಾತ್ರಿ ಶವದಂತೆ ಬಿದ್ದಿದ್ದ, ಅಂಥವನು ಕಳೆದ ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ ಎಂದು ಪೇದೆ ಅಂತೋಣಿ ಹೇಳುತ್ತಾನೆ… +ಆಲೋಚನೆಯಲ್ಲಿ ಮುಳುಗಿದ ಟೈಟಸ್ ಹೆಜ್ಜೆ ಸಪ್ಪಳ ಕೇಳಿಬಂದಾಗ ಕಣ್ಣು ತೆರೆಯದೇ ಆದೇಶಿಸಿದ. +“ಇಟ್ಟುಹೋಗಯ್ಯ.” +“ಏನನ್ನ ಗುರೂ ಇಟ್ಟುಹೋಗೋದು?” ಪ್ರಶ್ನೆ ಬಂತು. +“ಟೀನ. ಇನ್ನೇನಂದ್ಕೊಂಡೆ? ನಿನ್ನಜ್ಜಿ ಪಿಂಡಾನಾ?” ಸಿಡುಕಿದ. +ಕ್ಷಣಕಾಲ ಮೌನ. ನಂತರ ಒಮ್ಮೆ ಲೊಚಗುಟ್ಟುವಿಕೆಯ ಶಬ್ಧ. ಹಿಂದೆಯೇ ಮಾತುಗಳು. +“ನೋಡೂ ಮಾದೇಶೂ, ನಮ್ ಸಾಹೇಬ್ರು ಯಾವುದೋ ಬೇರೆ ಲೋಕದಲ್ಲಿದ್ದಾರೆ. ಅವರನ್ನ ಸ್ವಲ್ಪ ಈ ಭೂಲೋಕಕ್ಕೆ ಇಳಿಸೋದಿಕ್ಕೆ ಪ್ರಯತ್ನಿಸ್ತೀನಿ. ಅಲ್ಲೀವರೆಗೆ ನೀನು ಸ್ವಲ್ಪ ಹೊರಗೆ ಕೂತಿರು ರಾಜಾ. ಬೇಜಾರು ಮಾಡ್ಕೋಬೇಡಪ್ಪ.” +ಅರೆ ಇದು ಈಪಾಟೀ ಕೋದಂಡಯ್ಯನ ದನಿ! ಟೈಟಸ್ ಗಕ್ಕನೆ ಕಣ್ಣು ತೆರೆದ. +ಕಣ್ಣಿಗೆ ಬಿದ್ದದ್ದು ಕೋದಂಡಯ್ಯನ ಹಲ್ಲು ಕಿರಿಯುವ ಮುಖ ಹಾಗೂ ಬಾಗಿಲತ್ತ ಸರಿದುಹೋಗುತ್ತಿದ್ದ ದೊಗಳೇ ಖಾಕಿ ಬೆನ್ನು. +“ಅಯ್ ನೀನಾ ಕೋದಂಡಯ್ಯಾ?” ಕಣ್ಣುಗಳನ್ನು ಅಗಲವಾಗಿ ತೆರೆದ. +“ಹ್ಞೂ ನಾನೇ ದೇವ್ರೂ.” ಕೋದಂಡಯ್ಯ ಮತ್ತಷ್ಟು ಅಗಲವಾಗಿ ಬಾಯಿ ತೆರೆದ. “ಮಸಾಲೆ ಟೀ ಹಿಡಕೊಂಡು ಬಂದಿರೋ ಅಟೆಂಡರ್ ಬೂಕಯ್ಯ ಅಂದ್ಕೊಂಡ್ರಾ?” +ಅವನ ಮಾತಿಗೆ ಉತ್ತರಿಸದೇ ಟೈಟಸ್ ಪ್ರಶ್ನೆ ಹಾಕಿದ. +“ಅದ್ಯಾರು ಅಲ್ಲಿ ಹೋಗ್ತಾ ಇರೋದು?” +“ಅವನೊಬ್ಬ ವಿ ಐ ಪಿ. ಇಡೀ ಮಧ್ಯಾಹ್ನ ಹುಡುಕಾಡಿದ್ದಕ್ಕೆ ಈಗ ಸಿಕ್ದ. ಒಂದು ಕಡೆ ಒಂದು ಕ್ಷಣ ನಿಲ್ಲೋನಲ್ಲ. ಮೂರು ಹೊತ್ತೂ ಕಾಲಿಗೆ ಚಕ್ರ ಕಟ್ಕೊಂಡು ಊರೆಲ್ಲಾ ತಿರುಗ್ತಾ ಇರ್ತಾನೆ. ಅಂಥಾ ಡಿಮ್ಯಾಂಡೋ ಡಿಮ್ಯಾಂಡು ಅವಂಗೆ. ಶೆಟ್ಟರ ಕುದುರೆ ಬಿಟ್ಟರೆ ಸಿಗದು ಅನ್ನೋ ಜಾತಿ. ಏನೋ ನನ್ನ ಪೂರ್ವಜನ್ಮದ ಪುಣ್ಯ, ಸಿಕ್ಕಿಬಿಟ್ಟ. ಸಿಕ್ಕಿದ ಕೂಡ್ಲೇ ಹಿಡಕೊಂಡು ಬಂದಿದ್ದೀನಿ.” +ಟೈಟಸ್ ಕಣ್ಣರಳಿಸಿದ. ನಗೆಯೊಂದಿಗೆ ಕೋದಂಡಯ್ಯನ ವಿವರಣೆ ಬಂತು. +“ರಾತ್ರಿ ಆಯಮ್ಮ ದೇವಕೀನ ಮನೇಗೆ ಕರಕೊಂಡು ಬಂದ ಆಟೋ ಡ್ರೈವರ್ ಅವ್ನು. ಮಾದೇಶು ಅಂತ ಹೆಸ್ರೂ. ಕೊಳ್ಳೇಗಾಲದ ಕಡೆಯ ಮಲೆಮಾದೇಶ್ವರ ಸ್ವಾಮಿಯ ಒಕ್ಕಲು. ನಂಗೆಲ್ಲಾ ಹೇಳಿದ್ದಾನೆ. ನಿಮಗೆ ನಾನೇ ಹೇಳಲೋ ಅಥವಾ ಅವನ ಬಾಯಿಂದಾನೇ ಕೇಳಿಸ್ಕೋತೀರೋ?” +“ನೀನೇನೂ ಹೇಳೋದು ಬ್ಯಾಡ. ನಿನ್ನ ಹರಿಕಥೆ ಕೇಳೋದಕ್ಕೆ ಪುರುಸೊತ್ತಿಲ್ಲ ನಂಗೆ. ಅವನನ್ನೇ ಕರಿ.” ಅಂದವನು ಟೀ ಕಪ್ ಹಿಡಿದುಕೊಂಡು ಬಂದ ಬೂಕಯ್ಯನಿಗೆ ಮತ್ತೆರಡು ಟೀ ತರುವಂತೆ ಆರ್ಡರ್ ಮಾಡಿದ. +“ಸರಿ ದೇವ್ರೂ, ತಮ್ಮ ಚಿತ್ತ” ಎಂದ ಕೋದಂಡಯ್ಯ ಆಟೋ ಡ್ರೈವರ್ ಮಾದೇಶುವನ್ನು ಒಳಗೆ ಕರೆದ. +ಹೊಳೆಯುತ್ತಿದ್ದ ಉಬ್ಬಿದ ಹಣೆಯ ದುಂಡು ಮುಖ, ಕಪ್ಪನೆಯ ಕುಳ್ಳುದೇಹ, ತೆಳ್ಳನೆಯ ಕೈಕಾಲುಗಳು… ಆಟೋ ಡ್ರೈವರ್ ಮಾದೇಶು “ನಮಸ್ಕಾರ ಸಾ” ಅಂದ. +“ದೇವಕಿಯನ್ನ ಕರಕೊಂಡು ಬಂದೋನು ನೀನೇನಯ್ಯಾ?” +“ಹ್ಞೂ ಸಾ.” +“ಎಲ್ಲಿಂದ?” +“ಕುವೆಂಪುನಗರ ಮಾರ್ಕೆಟ್‌ನಿಂದ ಸಾ.” +“ಎಷ್ಟೊತ್ನಲ್ಲಿ?” +“ರಾತ್ರಿ ಹತ್ತೂವರೆ ಅಂತ ಕಾಣುತ್ತೆ ಸಾ.” +“ಸರಿ. ಆಯಮ್ಮನ ಜತೇಲಿ ಯಾರಿದ್ರು?” +“ಯಾರೂ ಇರ್‍ಲಿಲ್ಲ ಸಾ. ಆಯಮ್ಮ ಒಬ್ಳೇ ಇದ್ಲು ಸಾ.” +ಟೈಟಸ್ ಅಚ್ಚರಿಗೊಂಡ. ಹುಬ್ಬುಗಳು ಚಕ್ಕನೆ ಮೇಲೇರಿದವು. ಅವನು ಬಾಯಿ ತೆರೆಯುವ ಮೊದಲೇ ಕೋದಂಡಯ್ಯ ಮಾದೇಶುವಿನ ಭುಜ ಒತ್ತಿದ. +“ಸ್ವಲ್ಪ ಡೀಟೇಲಾಗಿ ಹೇಳೂ ಮಾದೇಶಣ್ಣಾ. ನೀನು ಆಯಮ್ಮನ್ನ ನೋಡಿದ ಗಳಿಗೆಯಿಂದ ಶುರು ಮಾಡು ರಾಜಾ.” +ಮಾದೇಶು ಒಮ್ಮೆ ಗಂಟಲು ಸರಿಪಡಿಸಿಕೊಂಡ. +“ಸರಿ ಸಾ. ನಾನು ಬಸ್ ಸ್ಟ್ಯಾಂಡ್‌ನಿಂದ ಸವಾರಿ ಹತ್ತಿಸ್ಕೊಂಡು ಕುವೆಂಪುನಗರಕ್ಕೇ ಬಂದಿದ್ದೆ ಸಾ. ವೆಂಕಟೇಶ್ವರ ಭಂಢಾರದ ಹತ್ರ ಸವಾರೀನ ಇಳಿಸ್ಬಿಟ್ಟು ಇನ್ನು ಮನೇಗೆ ಹೋಗಿಬಿಡಾಣ ಅಂತಂದ್ಕೊಂಡು ಹಿಂದಕ್ಕೆ ತಿರುಗ್ದೆ ಸಾ. ಮಾರ್ಕೆಟ್ ತಾವಾ ಬಲಕ್ಕೆ ತಿರುಗ್ತಾ ಇದ್ದಾಗ ಯಾರೋ ಹೆಂಗ್ಸು ‘ಆಟೋ’ ಅಂತ ಕೂಗ್ದಂಗಾಯ್ತು ಸಾ. ರಸ್ತೇಲಿ ಒಂದು ಜನಾನೂ ಇರ್ಲಿಲ್ಲ ಸಾ. ಮಳೆ ಒಂದೇಸಮ್ನೆ ಸುರೀತಾ ಇತ್ತು ಸಾ. ಇದ್ಯಾರಪ್ಪ ಇದೂ ಅಂತ ಆಟೋ ನಿಲ್ಲಿಸ್ದೆ ಸಾ. ರಸ್ತೆ ಪಕ್ಕದ ಮರದ ಕೆಳಗಿನಿಂದ ಆಯಮ್ಮ ಓಡ್ಬಂದ್ಲು ಸಾ. ಬಂದವ್ಳೇ ಗುಡಕ್ಕನೆ ಆಟೋ ಒಳ್ಗೆ ಹತ್ಕೊಂಡು ಕೂತ್ಬುಟ್ಲು ಸಾ. ‘ವಿವೇಕಾನಂದ ನಗರಕ್ಕೆ ನಡೆಯಪ್ಪ’ ಅಂದ್ಲು ಸಾ. ನಂಗೆ ಪುನಃ ಹಿಂದಕ್ಕೆ ತಿರುಗೋದು ಇಷ್ಟ ಇರ್ಲಿಲ್ಲ ಸಾ. ಆದ್ರೆ ಏನ್ಮಾಡೋದು ಸಾ?” +ಕೈ ಅಡ್ಡ ತಂದು ಅವನನ್ನು ತಡೆದ ಟೈಟಸ್. +“ಮಾತುಮಾತಿಗೂ ‘ಸಾ ಸಾ’ ಅನ್ನೋದನ್ನ ನಿಲ್ಸಯ್ಯ. ಬರೀ ವಿಷಯ ಏನು ಅಂತ ಹೇಳು. ಅಷ್ಟು ಸಾಕು.” ಸಿಡುಕಿದ. +ಅರೆಕ್ಷಣ ಪೆಚ್ಚಾದ ಮಾದೇಶು. ಕೋದಂಡಯ್ಯ ಅವನ ಭುಜ ತಟ್ಟಿದ. +ಮಾದೇಶು ಬಾಯಿ ತೆರೆದ. +“ಸರಿ ಸಾ. ಇಲ್ಲ… ತಪ್ಪಾಯ್ತು. ಇನ್ನೊಂದ್ಸಲ ‘ಸಾ’ ಅನ್ನಲ್ಲ ಸಾ. ಅಯ್ ಥುತ್.” ಟೈಟಸ್‌ನತ್ತ ಮತ್ತೊಮ್ಮೆ ಪೆಚ್ಚುನೋಟ ಹೂಡಿದ. ಕೋದಂಡಯ್ಯ ಅವನ ಹೆಗಲು ಸವರಿದ. +“ಇರ್‍ಲಿ ಬಿಡು ಮಾದೇಶಣ್ಣಾ. ಗಾಬರಿಯಾಗಬೇಡ. ಮುಂದಕ್ಕೆ ಹೇಳು.” +ಮಾದೇಶು “ಹ್ಞೂಂ ಹಂಗೇ ಮಾಡ್ತೀನಿ” ಅಂದವನು ಮರುಕ್ಷಣ ಕೋದಂಡಯ್ಯನ ಕಡೆ ಮಿಕಿಮಿಕಿ ನೋಡಿದ. ಎಡಗೈ ಮೇಲೆತ್ತಿ ತಲೆ ಕೆರೆದುಕೊಂಡ. “ಸಾ ಸಾ” ಗಳ ಗೊಂದಲದಲ್ಲಿ ತಾನು ಏನು ಹೇಳುತ್ತಿದ್ದೆ ಎಂಬುದೇ ಅವನಿಗೆ ಮರೆತುಹೋಗಿತ್ತು. +ಕೋದಂಡಯ್ಯನಿಗೆ ಅವನ ಸಮಸ್ಯೆ ಅರ್ಥವಾಯಿತು. +“ಆಯಮ್ಮ ನಿನ್ನ ಆಟೋ ಹತ್ಕೊಂಡು ‘ವಿವೇಕಾನಂದ ನಗರದ ಕಡೆ ನಡೆಯಪ್ಪ’ ಅಂದ್ಲು. ಹ್ಞೂ ಈಗ ಮುಂದಕ್ಕೆ ಹೇಳು ರಾಜಾ. ಈಪಾಟಿ ಗಾಬರಿಯಾದ್ರೆ ಹೇಗೆ?” +ಮಾದೇಶುವಿನ ಮುಖ ಅರಳಿತು. “ಹ್ಞೂ ಸಾ. ಈಗ ನೆನಪಾಯ್ತು. ಆಯಮ್ಮ ಮಳೇಲಿ ನೆನೆದುಹೋಗಿದ್ಲು. ಛಳೀಲಿ ನಡುಗ್ತಾ ಇದ್ಲು. ಅಯ್ಯೋ ಪಾಪ ಅಂದ್ಕಂಡು ಆಟೋ ತಿರುಗುಸ್ದೆ ಸಾ. ತಕ್ಷಣ ಅಲ್ಲೇ ಮರದ ಕೆಳಗೆ ಕತ್ಲಲ್ಲಿ ನಿಂತಿದ್ದ ಒಂದು ಬೈಕು ಸ್ಟಾಟಾಯ್ತು. ಅದು ಅಲ್ಲಿ ನಿಂತಿದ್ದನ್ನ ನಾನು ಗಮನ್ಸೇ ಇರ್ಲಿಲ್ಲ. ಬೈಕ್‌ನಂವ ಆಟೋ ಹಿಂದೇನೇ ಬಂದ. ನಂಗೆ ಅನ್ಮಾನ ಆಯ್ತು. ‘ಅದ್ಯಾರಮ್ಮ ಅದೂ? ನಿಮ್ಮ ಕಡೆಯೋರಾ?’ ಅಂತ ಆಯಮ್ಮನ್ನ ಕೇಳ್ದೆ. ‘ಹ್ಞೂ ಕಣಪ್ಪ, ನೀನೇನು ಗಾಬರಿಯಾಗ್ಬೇಡಾ’ ಅಂತ ಆಯಮ್ಮ ನಗಾಡಿದ್ಲು. ಆಯಮ್ಮನ ಮನೆ ಗೇಟ್ ಮುಂದೆ ನಾನು ಆಟೋ ನಿಲ್ಲಿಸ್ದಾಗ ಆ ಬೈಕ್‌ನಂವ ನಮ್ಮ ಆಟೋನ ದಾಟಿ ಮುಂದಕ್ಕೋದ. ಕಾಂಪೌಂಡ್ ಪಕ್ಕ ಬಲಕ್ಕೆ ತಿರುಗಿ ನಿಂತ್ಕಂಡ. ಈಯಮ್ಮ ನಂಗೆ ದುಡ್ಡು ಕೊಟ್ಟು ಆಮೇಲೆ ಆಟೋದಿಂದ ಕೆಳಕ್ಕೆ ಇಳಿದ್ಲು. ತಲೇಮೇಲೆ ಸೆರಗು ಹೊದ್ಕೊಂಡು ಬೈಕ್‌ನವನ ಹತ್ರ ಓಡಿದ್ಲು. ಅವರಿಬ್ರೂ ಆಕಡೆ ಗೇಟ್ ತೆಕ್ಕೊಂಡು ಒಳಾಕೆ ಹೋದ್ರು.” +“ಆಮೇಲೆ?” ಕುತೂಹಲದಿಂದ ಕೇಳುತ್ತಿದ್ದ ಟೈಟಸ್ ಪ್ರಶ್ನೆ ಹಾಕಿದ. +“ಆಮೇಲೆ… ನಾನು ಆಟೋನ ಹಿಂದಕ್ಕೆ ತಿರುಗಿಸ್ಕಂಡು ಬಂದ್ಬುಟ್ಟೆ.” ಮಾದೇಶು ತಣ್ಣಗೆ ಹೇಳಿದ. +“ನೀನೇಳೋದು ಮೆಯಿನ್ ಗೇಟ್ ಮುಂದೆ ನೀನು ಆಯಮ್ಮನ್ನ ಇಳಿಸ್ದೆ. ಆದ್ರೆ ಅವ್ಳು ಆ ಗೇಟನ್ನ ಬಿಟ್ಟು ಮುಂದಕ್ಕೆ ನಡಕೊಂಡು ಹೋಗಿ ಬಲಗಡೆ ಇದ್ದ ಸಣ್ಣ ಗೇಟಿನ ಮೂಲಕ ಒಳಗೆ ಹೋದ್ಲು ಅಂತ ತಾನೆ?” +“ಹ್ಞೂ ಅದೇ ನಾನು ಹೇಳೋದು. ಆವಯ್ಯ ಮೊದ್ಲೇ ಅಲ್ಲೀಗೋಗಿ ನಿಂತಿದ್ನಲ್ಲ? ಹೀಗಾಗೀನೇ ಆಯಮ್ಮಾನೂ ಅತ್ಲಾಗೇ ಹೋದ್ಲು.” +“ಸರಿ, ಆ ಬೈಕ್‌ನಲ್ಲಿದ್ದೋನು ನೋಡೋಕೆ ಹೇಗಿದ್ದ?” ಅಧಿಕಾರಿ ಮುಖ ಮುಂದೆ ತಂದು ಪ್ರಶ್ನಿಸಿದ. +ಮಾದೇಶು ತಲೆ ಅಲುಗಿಸಿದ. “ಅವನ ಮುಖಾನ ನಾನು ನೋಡ್ಲಿಲ್ಲ. ಅವ್ನು ಕರೀ ಪ್ಯಾಂಟು, ಕರೀ ಜರ್ಕಿನ್ ಹಾಕ್ಕೊಂಡಿದ್ದ. ತಲೇ ಮೇಲೆ ಹೆಲ್ಮೆಟ್ಟು. ಕತ್ಲೇ ಬೇರೆ. ಅವನ ಮುಖಾ ನೋಡೋದಿಕ್ಕೇ ಆಗ್ಲಿಲ್ಲ” +ಆಟೋ ದ್ರೈವರ್‌ನಿಂದ ಇನ್ನೇನೂ ತಿಳಿಯುವಂತಿರಲಿಲ್ಲ. +“ಸರಿ ಮಾದೇಶು, ತುಂಬಾ ಥ್ಯಾಂಕ್ಸ್ ಕಣಪ್ಪ. ನಿನ್ನ ಅಡ್ರೆಸ್ಸು, ಫೋನಿದ್ರೆ ಅದ್ರ ನಂಬರ್ ಎರಡನ್ನೂ ಇದ್ರಲ್ಲಿ ಬರೆದುಬಿಡು. ಅಗತ್ಯ ಬಿದ್ರೆ ನಿನ್ನನ್ನ ಮತ್ತೆ ಕಾಂಟ್ಯಾಕ್ಟ್ ಮಾಡ್ತೀನಿ.” ಮಾತು ಮುಗಿಸಿ ಡೈರಿ ಮುಂದೆ ಮಾಡಿದ ಟೈಟಸ್. +ಡೈರಿಯಲ್ಲಿ ತನ್ನ ವಿಳಾಸ ಹಾಗೂ ಫೋನ್ ನಂಬರ್‌ಗಳನ್ನು ಬರೆದು ಎದ್ದು ನಿಂತ ಮಾದೇಶು. “ಸರಿ, ನಾ ಬರ್ತೀನಿ.” ಹೇಳಿ ಹಿಂದೆ ತಿರುಗಿದ. +ಅವನನ್ನೇ ವಿಚಿತ್ರವಾಗಿ ನೋಡಿದ ಟೈಟಸ್. ಕೋದಂಡಯ್ಯ ಅವನ ಭುಜ ಹಿಡಿದ. +“ಏನ್ ಮಾದೇಶಣ್ಣಾ, ನಮ್ ಸಾಹೇಬ್ರನ್ನ ನಿನ್ನ ಸೋದರಮಾವ ಅಂತ ತಿಳಿದ ಹಾಗಿದೆಯಲ್ಲಾ? ಲಕ್ಷಣವಾಗಿ ‘ನಾ ಬರ್ತೀನಿ ಸಾರ್’ ಅನ್ನೋದು ಬಿಟ್ಟು ಸಲೀಸಾಗಿ ‘ನಾ ಬರ್ತೀನಿ’ ಅಂತ ಕೈ ಅಲ್ಲಾಡಿಸ್ಬಿಟ್ಟು ಹೋಗ್ತಿದೀಯ?” +ಮಾದೇಶು ಪೆಚ್ಚಾದ. +“ಸರಿ ಸಾ, ನಾ ಹೋಗಿದ್ದು ಬರ್ತೀನಿ ಸಾ.” ಸಣ್ಣಗೆ ದನಿ ಹೊರಡಿಸಿದ. +ಮಾದೇಶು ಹೊರಟುಹೋದ ನಂತರ ಎಸ್ ಐ ಟೈಟಸ್ ನಿಮಿಷಗಳವರೆಗೆ ಮೌನವಾದ. ನಿಧಾನವಾಗಿ ಮಾತು ಹೊರಡಿಸಿದ. +“ನೀನು ಹೇಳಿದ ಹಾಗೇ ನಡೆದಿದೆ ಕೋದಂಡಯ್ಯ. ಒಂದೇ ಒಂದು ವ್ಯತ್ಯಾಸ ಅಂದ್ರೆ ಕೊಲೆಗಾರ ಆಯಮ್ಮನ ಜತೆ ಆಟೋದಲ್ಲಿ ಬಂದಿಲ್ಲ. ಆಟೋ ಹಿಂದೆ ಬೈಕ್‌ನಲ್ಲಿ ಬಂದಿದ್ದಾನೆ ಅಷ್ಟೇ.” +“ಹೌದು ದೇವ್ರೂ. ಮಾದೇಶು ಹೇಳಿದ ಮಾತುಗಳಿಂದ ಒಂದು ವಿಷ್ಯ ಸ್ಪಷ್ಟ ಆಗುತ್ತೆ. ಮೆಯಿನ್ ಗೇಟ್‌ನಿಂದ್ಲೇ ಮನೇ ಒಳಗೆ ಹೋಗೋ ಉದ್ದೇಶ ದೇವಕಿಯಮ್ಮನಿಗಿದ್ದಿರಬೇಕು. ಆದ್ರಿಂದಾನೇ ಅಲ್ಲೇ ಆಟೋ ನಿಲ್ಸೋದಿಕ್ಕೆ ಡ್ರೈವರ್‌ಗೆ ಹೇಳಿದ್ದಾಳೆ…” ಅವನ ಮಾತನ್ನು ಅಷ್ಟಕ್ಕೇ ಕತ್ತರಿಸಿದ ಟೈಟಸ್. “ನಾನು ಹೇಳ್ತೀನಿ ತಗೋ. ಚಿಕ್ಕ ಗೇಟ್‌ನಿಂದ ಒಳಗೆ ಹೋಗೋದು ಕೊಲೆಗಾರನ ಪ್ಲಾನು. ಹೀಗಾಗಿ ಅವ್ನು ಆಕಡೆ ಹೋಗಿದ್ದಾನೆ. ದೇವಕಿಯಮ್ಮ ಆ ದಾರೀನೇ ಹಿಡೀಬೇಕಾಯ್ತು.” +“ಸರಿಯಾಗಿ ಹೇಳಿದ್ರಿ ಗುರೂ. ಆ ದಾರಿ ಹಿಡಿದ ಆಯಮ್ಮ ಅದೇ ದಾರೀಲಿ ಹೊರಟುಹೋದ್ಲು. ಹಿಂದಕ್ಕೆ ಬರ್‍ಲೇ ಇಲ್ಲ.” +“ಹೌದು ಕೋದಂಡಯ್ಯ. ಆದ್ರೆ ಒಂದು ತಲೆನೋವು. ಆಯಮ್ಮ ತನ್ನ ಕಾರನ್ನ ಕುವೆಂಪುನಗರ ಮಾರ್ಕೆಟ್‌ನಲ್ಲಿ ನಿಲ್ಲಿಸ್ಬಿಟ್ಟು ಆಟೋದಲ್ಲಿ ಮನೆಗೆ ಬಂದದ್ದು ಯಾಕೆ? ಅದು ಹೀಗಿರಬೋದಾ? ಕೊಲೆಗಾರ ಅವಳಿಗೆ ಅಲ್ಲಿಗೆ ಬರೋ ಹಾಗೆ ಸೂಚನೆ ಕೊಟ್ಟಿದ್ದಾನೆ ಅಥವಾ ಅವಳು ಮನೆಯಿಂದ ಹೊರಟಾಗಲೇ ಅವಳನ್ನ ಗುಟ್ಟಾಗಿ ಹಿಂಬಾಲಿಸಿಕೊಂಡು ಬಂಧು ಅವ್ಳು ಆ ಜಾಗಕ್ಕೆ ಬಂದಾಗ ಅಲ್ಲಿ ಕಾರ್ ನಿಲ್ಸೋ ಹಾಗೆ ಮಾಡಿದ್ದಾನೆ. ಅಲ್ಲಿ ಮಳೇರಾತ್ರೀನಲ್ಲಿ ಅಷ್ಟೊತ್ನಲ್ಲೂ ತೆರೆದಿದ್ದ ಯಾವುದೋ ಹೋಟೆಲ್‌ನಲ್ಲಿ ಕಾಫಿ ಕುಡಿಸಿದ್ದಾನೆ. ಆಮೇಲೆ ಯಾವುದೋ ನೆಪ ಹೇಳಿ ಅವಳನ್ನ ಕಾರಿಂದ ಇಳಿಸಿ ಆಟೋ ಹತ್ತಿಸಿದ್ದಾನೆ. ಇದೂ ಅವನ ಕುತಂತ್ರದ ಒಂದು ಭಾಗ ಆಗಿರಬೋದು.” +“ಕರೆಕ್ಟಾಗಿ ಹೇಳಿದ್ರಿ ಗುರೂ. ಅದು ಹಾಗೇ ನಡೆದಿರೋದು.” +“ಅಲ್ಲಿರೋ ಹೋಟೆಲ್‌ನವರನ್ನ ವಿಚಾರಿಸಿದ್ರೆ ಕೊಲೆಗಾರನ ಬಗ್ಗೆ ನಮಗೆ ಏನಾದ್ರೂ ಸಮಾಚಾರ ಸಿಗಬೋದೇನೋ ಕಣಯ್ಯ.” ಉತ್ಸಾಹದಿಂದ ಹೇಳಿದ ಟೈಟಸ್. +ಲೊಚಗುಟ್ಟಿದ ಕೋದಂಡಯ್ಯ. +“ಆ ಕೆಲ್ಸ ಮಾಡಿಯಾಯ್ತು ಗುರೂ. ಪ್ರಯೋಜನ ಆಗ್ಲಿಲ್ಲ. ಕಾವೇರಿ ರೆಸ್ಟೋರೆಂಟಿನ ಸರ್ವರ್ ರಂಗನಾಥ ಹೇಳೋ ಪ್ರಕಾರ ರಾತ್ರಿ ಹತ್ತೂಕಾಲು ಹತ್ತೂವರೆ ಹೊತ್ನಲ್ಲಿ ರಸ್ತೆ ಪಕ್ಕ ನಿಂತಿದ್ದ ಕಾರ್‍ನಿಂದ ಒಬ್ಳು ಹೆಂಗ್ಸು ಕೈತಟ್ಟಿ ಕರೆದು ಎರಡು ದೊಡ್ಡ ಲೋಟಗಳ ಭರ್ತಿ ಕಾಫೀ ತರೋದಿಕ್ಕೆ ಹೇಳಿದಳಂತೆ. ಇವ್ನು ತಗೋಂಡು ಹೋಗಿ ಅವಳಿಗೊಂದು, ಕಾರ್ ಹೊರಗೆ ನಿಂತಿದ್ದ ಒಬ್ಬ ಗಂಡಸಿಗೊಂದು ಲೋಟ ಕೊಟ್ನಂತೆ. ಆ ಹೆಂಗ್ಸೇ ಅಂತೆ ದುಡ್ಡು ಕೊಟ್ಟಿದ್ದು.” +“ಹೌದಾ ಕೋದಂಡಯ್ಯಾ? ಅಂದ್ರೆ ಆ ರಂಗನಾಥ ಕೊಲೆಗಾರನ್ನ ನೋಡಿರಬೋದಲ್ಲ?” ಟೈಟಸ್ ಹೆಚ್ಚುಕಡಿಮೆ ಉದ್ವೇಗದಿಂದ ಅರಚಿದ. +“ಇಲ್ಲಾ ಗುರೂ. ನೀವು ಈಪಾಟೀ ಆಸೆ ಇಟ್ಕೊಳ್ಳೋದು ಒಳ್ಳೇದಲ್ಲಾ. ಆ ಕತ್ಲೇನಲ್ಲಿ ಆ ಮನುಷ್ಯನ ಮುಖ ಸರಿಯಾಗಿ ಕಾಣಿಸ್ಲಿಲ್ಲ ಅಂತಾನೆ ಅವ್ನು. ‘ಸ್ವಲ್ಪ ನೆನಪಿಸ್ಕೋ ರಾಜ’ ಅಂತ ನಾನು ಪುಸಲಾಯಿಸ್ದಾಗ ಅವ್ನು ‘ಇಲ್ಲಾ ಸಾರ್, ಬೀದಿ ದೀಪ ಇರ್‍ಲಿಲ್ಲ. ನಮ್ಮ ಹೋಟೆಲ್‌ನ ಮೇಣದಬತ್ತಿಗಳ ಬೆಳಕು ಅಲ್ಲೀವರೆಗೆ ಬೀಳ್ತಾ ಇರ್‍ಲಿಲ್ಲ. ಆ ಕತ್ಲೆನಲ್ಲಿ ಕರೀ ಜರ್ಕಿನ್ ಹಾಕ್ಕೊಂಡು ನಿಂತಿದ್ದ ಆವಯ್ಯ ಮನುಷ್ಯನೋ ಇಲ್ಲಾ ಕರಡೀನೋ ಅಂತ ನಂಗೆ ಗೊತ್ತಾಗ್ಲೇ ಇಲ್ಲ’ ಅಂತ ಕೈ ಆಡಿಸಿಬಿಟ್ಟ ಭೂಪ.” +ನಿರಾಶೆಯಿಂದ ತಲೆ ಕೆಳಗೆ ಹಾಕಿದ ಅಧಿಕಾರಿ. ನಿಮಿಷದ ನಂತರ ತಲೆಯೆತ್ತಿ ಹೇಳಿದ. +“ಇರಲಿ ಬಿಡು ಕೋದಂಡಯ್ಯ. ನಮ್ಮ ಹಣೇಬರಹಾನೇ ಚೆನ್ನಾಗಿಲ್ಲ ಅಂತ ಕಾಣುತ್ತೆ. ಇನ್ನೊಂದು ವಿಷ್ಯ. ಕೊಲೆಗಾರನ ಬೈಕ್ ಎಲ್ಲಿಗೋಯ್ತು ಕೋದಂಡಯ್ಯ? ಚಿಕ್ಕ ಗೇಟ್ ಹತ್ರ ಅದನ್ನ ನಿಲ್ಸಿ ದೇವಕಿಯಮ್ಮನ್ನ ಕರಕೊಂಡು ಮನೆಯೊಳಗೆ ಹೋದ. ಅವಳನ್ನ ಕೊಲೆ ಮಾಡಿ ಬೆಂಕಿ ಹಾಕ್ದ. ಆ ಗಳಿಗೇಗೆ ಸರಿಯಾಗಿ ಮಾನ್ಸಿ ಹೊರಗೆ ಬಂದ್ಲು. ಅವ್ಳು ನೀರು ಹಾಯ್ಸೋವಾಗ ಅವ್ನು…” +ಅವನ ಮಾತನ್ನು ಅಲ್ಲಿಗೇ ತಡೆದ ಕೋದಂಡಯ್ಯ. +“ಗೊತ್ತಾಯ್ತು. ನಿಮ್ಮ ಪ್ರಶ್ನೆ ಏನು ಅಂತ ಗೊತ್ತಾಯ್ತೂ. ನೀವು ಈಪಾಟೀ ವಿವರಣೆ ಕೊದ್ಬೇಕಾಗಿಲ್ಲ. ಗೇಟ್ ಪಕ್ಕ ನಿಲ್ಸಿದ್ದ ಬೈಕನ್ನ ಕೊಲೆಗಾರ ಯಾರಿಗೂ ಗೊತ್ತಾಗದ ಹಾಗೆ ಯಾವಾಗ ತಗೋಂಡ್ ಹೋದ ಅನ್ನೋದು ನಿಮ್ಮ ಪ್ರಶ್ನೆ ತಾನೆ? ಅದನ್ನ ನಾನು ಹೇಳ್ತೀನಿ. ಸಾಯಂಕಾಲ ಆ ಏರಿಯಾದಲ್ಲಿ ಸ್ವಲ್ಪ ಸುತ್ತಾಡ್ದೆ. ಆ ಚಿಕ್ಕ ಗೇಟ್‌ನ ಕಡೆಯ ಸಾಲಿನ ಮನೆಗಳ ಮುಂದೆ ಕಾಲಾಡಿಸ್ದೆ. ಎಂಟು ಮನೆಗಳಾಚೆ ಇರೋ ರಾಜಾರಾಂ ಅನ್ನೋರಿಂದ ಬೇಕಾದ ಮಾಹಿತಿ ಸಿಕ್ತು. ಅವರು ಹೇಳೋ ಪ್ರಕಾರ ರಾತ್ರಿ ಹನ್ನೆರಡೂಕಾಲು-ಹನ್ನೆರಡೂವರೆಯ ಹೊತ್ನಲ್ಲಿ ಕರೀ ಪ್ಯಾಂಟು, ಕರೀ ಜರ್ಕಿನ್, ತಲೆಗೆ ಹೆಲ್ಮೆಟ್ ಹಾಕ್ಕೊಂಡಿದ್ದವನೊಬ್ಬ ಒಂದು ಬೈಕನ್ನ ತಳ್ಕೊಂಡು ಹೋಗ್ತಾ ಇದ್ನಂತೆ. ಹಾಗೇ ಸ್ವಲ್ಪ ದೂರ ಹೋಗಿ ಆಮೇಲೆ ಬೈಕ್ ಸ್ಟಾರ್ಟ್ ಮಾಡ್ಕೊಂಡು ಹೊರಟ್ಹೋದನಂತೆ. ಇದರರ್ಥ ಆ ಎದುರು ಮನೆ ಶಿವಶಂಕರಪ್ಪ ಹೊರಗೆ ಬಂದದ್ದನ್ನ ನೋಡಿದ ಕೊಲೆಗಾರ ಹೆದರಿ ಕಾಂಪೌಂಡ್ ಹಾರಿ ಹೊರ ಹೋದ. ಅಲ್ಲೇ ಬೈಕ್ ಸ್ಟಾರ್ಟ್ ಮಾಡಿದ್ರೆ ಮಾನ್ಸಿಗೆ, ಶಿವಶಂಕರಪ್ಪಂಗೆ ಗೊತ್ತಾಗ್ಬಿಡುತ್ತೆ ಅಂತಂದ್ಕೊಂಡು ಬೈಕನ್ನ ಸ್ವಲ್ಪ ದೂರ ತಳ್ಕೊಂಡು ಹೋಗಿದ್ದಾನೆ. ಇಷ್ಟೇ ನಡೆದಿರೋದು.” +“ಓಹ್, ಅವ್ನು ಭಾಳಾ ಚಾಲಾಕಿ ಕೋದಂಡಯ್ಯ! ಎಷ್ಟು ಎಚ್ಚರಿಕೆ ತಗೋಂಡಿದ್ದಾನೆ ನೋಡು.” ಉದ್ಗರಿಸಿದ ಟೈಟಸ್. +“ಹೌದೂ ಗುರೂ. ಅವ್ನು ಭಾಳಾ ಚಾಲಾಕೀನೇ. ನೀವು ಅವನಿಗೇನು ಕಡಿಮೆ? ಹೇಳಿ ಮತ್ತೆ ಅವನ್ಯಾರು ಅಂತ.” ಕೋದಂಡಯ್ಯನ ಮುಖದಲ್ಲಿ ತುಂಟ ನಗೆ. +ಟೈಟಸ್ ನಗಲಿಲ್ಲ. ಗಂಭೀರ ದನಿಯಲ್ಲಿ ಮಾತು ಹೊರಡಿಸಿದ. +“ನಾನು ಸರಿಸುಮಾರು ಒಂದು ತೀರ್ಮಾನಕ್ಕೆ ಬಂದಿದ್ದೀನಿ ಕೋದಂಡಯ್ಯ. ಈ ಕೊಲೆ ಮಾಡಿದೋನು ಯಾರು ಅಂತ ಗೊತ್ತಿಲ್ಲ. ಆದ್ರೆ ಕೊಲೆ ಮಾಡಿಸಿದೋನು ಯಾರು ಅಂತ ಗೊತ್ತು.” +ಕೋದಂಡಯ್ಯ ಕಣ್ಣರಳಿಸಿದ. ಅಧಿಕಾರಿ ಮುಂದುವರೆಸಿದ. +ಸಾಯಂಕಾಲ ಆ ವಿವೇಕ್ ಜತೆ ಮಾತಾಡ್ದೆ. ಅವನಿಂದ ಒಂದು ಮುಖ್ಯ ವಿಷಯ ತಿಳೀತು. ಆ ನರಹರಿ ಇದ್ದಾನಲ್ಲ ಅವನಿಗೆ ಆಯಮ್ಮನ ಮೇಲೆ ದ್ವೇಷ. ಅವನಿಲ್ಲಿಗೆ ಬಂದ ಎರಡನೆಯ ದಿನಾನೇ ಅವನಿಗೂ ಆಯಮ್ಮನಿಗೂ ಮಾರಾಮಾರಿ. ‘ನಿನ್ನನ್ನ ಸಿಗಿದು ಹಾಕ್ಬಿಡ್ತೀನಿ’ ಅಂತ ಆವಯ್ಯ ಅವಳ ಮೇಲೆ ಏರಿಹೋದ್ನಂತೆ. ಅವ್ಳು ಹೆದರಿ ಬಾತ್‌ರೂಂ ಒಳಗೆ ಸೇರ್ಕೊಂಡು ಬಾಗಿಲು ಮುಚ್ಕೊಂಡ್ಲಂತೆ. ಇವ್ನು ಹುಚ್ಚು ಹಿಡಿದೋನ ಹಾಗೆ ಬಾಗಿಲಿಗೆ ಮೂರು ನಾಲ್ಕು ಸಲ ಒದ್ನಂತೆ. ಆ ಮಾನ್ಸಿ ಮತ್ತು ಅವರತ್ತಿಗೆ ಓಡಿಬಂದ್ರಂತೆ. ಅವರನ್ನ ಕಂಡ ಮೇಲೆ ಅವ್ನು ಹೊರಗೆ ಹೊರಟೋದ್ನಂತೆ.” +“ಓ ಹೀಗಾ ಗುರೂ? ಇದು ಆ ದಯಾನಂದನಿಗೆ ಗೊತ್ತಾ?” +“ಗೊತ್ತಂತೆ. ಮಾನ್ಸೀನೇ ಹೇಳಿದ್ಲಂತೆ.” +“ಈ ನರಹರೀನೇ ಕೊಲೆ ಮಾಡಿಸ್ದೋನು ಅಂತ ನೀವು ಹೇಳೋದು?” +“ಹೌದು ಕಣಯ್ಯ. ಬೇರೊಬ್ಬನ ಮೂಲಕ ಕೊಲೆ ಮಾಡಿಸಿದ್ದಾನೆ.” +ಕೋದಂಡಯ್ಯ ಮುಖ ಕೆಳಗೆ ಹಾಕಿದ. ಅವನಿಗೆ ನಿರಾಶೆಯಾದಂತಿತ್ತು. ತಲೆ ತಗ್ಗಿಸಿದಂತೇ ಸಣ್ಣಗೆ ದನಿ ತೆಗೆದ. +“ನಿಮ್ಮ ಮಾತಿಗೆ ಏನು ಆಧಾರ ಗುರುದೇವಾ?” +“ನೋಡೂ ಕೋದಂಡಯ್ಯ, ಈ ಕೊಲೆಗೆ ದರೋಡೆ ಕಾರಣ ಅಲ್ಲ ಅನ್ನೋದು ಸ್ಪಷ್ಟವಾಗೇ ಇದೆ. ಪೋಸ್ಟ್‌ಮಾರ್ಟಂ ರಿಪೋರ್ಟ್ ಹೇಳೋ ಪ್ರಕಾರ ಆಯಮ್ಮನ ಮೇಲೆ ಲೈಂಗಿಕ ಅತ್ಯಾಚಾರವೇನೂ ನಡೆದಿಲ್ಲ. ಅಂದ್ರೆ ಈ ಕೊಲೆಗೆ ಹಣ ಮತ್ತು ಸೆಕ್ಸ್ ಎರಡೂ ಕಾರಣ ಅಲ್ಲ. ಅಂದಮೇಲೆ ವೈಯುಕ್ತಿಕ ದ್ವೇಷದ ಸಾಧ್ಯತೆ ಮಾತ್ರ ಉಳಿಯುತ್ತೆ ಅಲ್ವಾ?” ಪ್ರಶ್ನಿಸಿದ. +ಕೋದಂಡಯ್ಯ ತಲೆದೂಗಿದ. “ಮುಂದೆ ಹೇಳಿ.” ಪ್ರೋತ್ಸಾಹಿಸಿದ. +“ದೇವಕಿಯ ಮೇಲೆ ಅಂಥಾ ವೈಯುಕ್ತಿಕ ದ್ವೇಷ ಇದ್ದದ್ದು ಇವನೊಬ್ಬನಿಗೆ ಮಾತ್ರ. ತನ್ನ ಮೇಲೆ ಅನುಮಾನ ಬರದಿರಲಿ ಅಂತ ಬೇರಾರಿಂದಲೋ ಕೊಲೆ ಮಾಡ್ಸಿದಾನೆ. ತಾನು ಎಲ್ಲಾನೂ ನೋಡ್ತಾ ಅಥವಾ ಕೊಲೆಗಾರನಿಗೆ ಅಗತ್ಯವಾದ ಸೂಚನೆಗಳನ್ನ ಕೊಡ್ತಾ ದೂರದಲ್ಲಿ ನಿಂತಿದ್ದಾನೆ. ತಾನು ಕುಂಭಕರ್ಣನ ಹಾಗೆ ನಿದ್ದೆ ಮಾಡ್ಬಿಟ್ಟೆ, ನಂಗೇನೂ ಗೊತ್ತೇ ಇಲ್ಲ ಅನ್ನೋದು ನಾಟಕ.” +“ಹೌದು ಗುರೂ.” ತಲೆದೂಗಿದ ಕೋದಂಡಯ್ಯ. “ಕೊಲೆ ಮಾಡಿದೋನು ಯಾರು?” ಪ್ರಶ್ನಿಸಿದ. +“ಅದನ್ನ ಪತ್ತೇ ಮಾಡೋದಿಕ್ಕೇ ನಾನಿಷ್ಟು ಶ್ರಮ ಪಡ್ತಾ ಇರೋದು.” ಕ್ಷಣ ನಿಧಾನಿಸಿ ಹೇಳಿದ. “ನಾನೀಗ ಕೊಲೆಗಾರನ ಬೆನ್ನು ಹತ್ತಿದ್ದೀನಿ ಕಣಯ್ಯ. ಒಂದೆರಡು ಸುಳಿವು ಸಿಕ್ಕಿವೆ.” +“ಏನು ಸ್ವಾಮೀ ಅವೂ? ನಂಗೆ ಹೇಳಬಾರದೇ?” +“ಯಾರಿಗೆ ಹೇಳಿದ್ರೂ ನಿಂಗೆ ಹೇಳಬಾರದು. ಹರಕುಬಾಯಿ ನಿಂದು.” ಕಿಡಿಗೇಡಿಯ ನಗೆ ನಕ್ಕ. +ಕೋದಂಡಯ್ಯ ಅಧಿಕಾರಿಯನ್ನೇ ನೇರವಾಗಿ ನೋಡಿದ. ಮುಖ ಗಂಟು ಹಾಕಿ ಹೇಳಿದ. “ಸರಿ, ನಂಗೇನೂ ಬ್ಯಾಡ ಅದು. ನೀವೇ ಮಡಿಕ್ಕೊಳ್ಳೀ.” ಹಾಗೆಂದವನು ಟೇಬಲ್‌ನ ಅಂಚಿನಲ್ಲಿದ್ದ ನಿದ್ರೆಯ ಗುಳಿಗೆಗಳ ಬಾಟಲಿನತ್ತ ಬೆರಳು ಮಾಡಿ ಅಚ್ಚರಿಯ ಪ್ರಶ್ನೆ ಹಾಕಿದ. +“ಇದ್ಯಾವಾಗ ಶುರೂ ಆಯ್ತೂ ಗುರೂ ನಿಮ್ಗೆ ಈ ಗುಳಿಗೆ ಚಟ?” +“ಅಯ್ ನಂದಲ್ಲ ಕಣಯ್ಯ ಅದೂ. ಆ ದಯಾನಂದ ಮನೇಲೂ ಒಂದು ಕೋಣೇನ ಆಫೀಸ್ ರೂಂ ಅಂತ ಮಾಡ್ಕೊಂಡಿದ್ದಾನೆ. ಆ ಕೋಣೇನಲ್ಲಿ ಬೆಳಿಗ್ಗೆ ಹುಡುಕಾಡೋವಾಗ ಸಿಕ್ತು. ಟೇಬಲ್ ಡ್ರಾ ಒಳಗಿತ್ತು. ಇದ್ಯಾತಕ್ಕೆ ಇಟ್ಕೊಂಡಿರಬೋದು ಅಂತ ಕುತೂಹಲ ಆಯ್ತು. ಎತ್ಕೊಂಡು ಬಂದೆ ಅಷ್ಟೇ.” +ಬಾಟಲು ಕೈಗೆತ್ತಿಕೊಂಡು ಮುಚ್ಚಳ ತೆರೆದ ಕೋದಂಡಯ್ಯ. ಪುಟ್ಟ ಪುಟ್ಟ ಬಿಳುಪು ಮಾತ್ರೆಗಳನ್ನು ಅಂಗೈಗೆ ಸುರಿದುಕೊಂಡ. ಒಂದೊಂದಾಗಿ ಲೆಕ್ಕ ಹಾಕಿದ. +ಇಪ್ಪತ್ತೊಂದು ಗುಳಿಗೆಗಳಿದ್ದವು. +“ಮೂವತ್ತು ಗುಳಿಗೆಗಳ ಬಾಟಲು ಇದು ಗುರೂ. ಆವಯ್ಯ ಒಂಬತ್ತು ಗುಳಿಗೆಗಳನ್ನ ತಿಂದಿದ್ದಾನೆ. ಈ ಬಿಸಿನೆಸ್‌ಮೆನ್‌ಗಳಿಗೆ ಇದಿಲ್ಲದೇ ನಿದ್ದೆ ಬರೋದಿಲ್ಲ. ಕರ್ಮ.” ಗೊಣಗಿದ. +ನಕಾರದಲ್ಲಿ ತಲೆಯಾಡಿಸಿದ ಟೈಟಸ್. +“ಆವಯ್ಯ ಇದನ್ನ ಉಪಯೋಗಿಸಿಲ್ಲ ಕೋದಂಡಯ್ಯ.” +“ಅಂ! ಹಾಗಂದನಾ? ಹಾಗಿದ್ರೆ ಒಂಬತ್ತು ಗುಳಿಗೆಗಳನ್ನ ಯಾರಿಗೆ ತಿನ್ನಿಸಿದನಂತೆ?” +“ಅಪರೂಪಕ್ಕೊಂದ್ಸಲ ಆ ದೇವಕಿ ತಗೋತಿದ್ಲಂತೆ. ಹಾಗಂತ ಹೇಳ್ದ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೋದು ಬೇಡ.” +ಕೋದಂಡಯ್ಯನ ಮುಖದಲ್ಲಿ ಅಪನಂಬಿಕೆ ಎದ್ದುಕಂಡಿತು. +“ಆಯಮ್ಮ ತಗೋಳೋ ಹಾಗಿದ್ರೆ ಇದು ಬೆಡ್‌ರೂಂನಲ್ಲಿರಬೇಕಾಗಿತ್ತು. ದಯಾನಂದನ ಆಫೀಸ್‌ರೂಂನಲ್ಲಿ ಯಾಕಿರುತ್ತೆ ಹೇಳೀ?” +“ಅಯ್ ಬಿಡಯ್ಯ. ಬೇಕಾದಾಗ ಗಂಡನ ಆಫೀಸ್‌ರೂಂಗೆ ಹೋಗಿ ಇದನ್ನ ತಗೊಳ್ಳೋ ಸ್ವಾತಂತ್ರ್ಯ ಹೆಂಡತಿಗಿಲ್ವಾ?” ಅಸಹನೆಯ ದನಿಯಲ್ಲಿ ಮಾತು ಮುಗಿಸಿ ಮೌನವಾದ ಅಧಿಕಾರಿ. +ಅಧಿಕಾರಿಗೆ ಆಯಾಸವಾಗಿದೆಯೆಂದು ಕೋದಂಡಯ್ಯನಿಗೆ ಗೊತ್ತಾಯಿತು. +ತನ್ನ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಹೊರಹಾಕಲು ಇದು ಸರಿಯಾದ ಸಮಯವಲ್ಲ! ವಿವೇಕ ಎಚ್ಚರಿಸಿತು. ದನಿ ಮೃದುಗೊಳಿಸಿ ಹೇಳಿದ. +“ಇರಲಿ ಗುರೂ, ಟೈಮ್ ಒಂಬತ್ತಾಗ್ತಾ ಬಂತು. ಮನೇಗೆ ಹೋಗಿ ನೆಮ್ಮದಿಯಾಗಿ ನಿದ್ದೆ ಮಾಡಿ. ಬೇರೆ ಏನು ರಾಜಕಾರ್ಯ ಇದ್ರೂ ನಾಳೆ ನೋಡ್ಕೊಳ್ಳೋಣ.” +“ಹೌದು ಕೋದಂಡಯ್ಯ, ಇನ್ನು ಹೊರಡೋಣ. ನಂಗೆ ಹಸಿವಾಗ್ತಿದೆ.” ಮೇಲೆದ್ದು ನಿಂತ ಟೈಟಸ್. +“ಒಂದ್ವಿಷ್ಯಾ ಗುರೂ.” ಸಣ್ಣಗೆ ಸ್ವರ ಹೊರಡಿಸಿದ ಕೋದಂಡಯ್ಯ. +“ಏನಯ್ಯಾ ಅದೂ?” ಅಧಿಕಾರಿ ಕುತೂಹಲಗೊಂಡಿದ್ದ. +“ನೋಡಿ ಗುರೂ, ಆ ದೇವರಿಗೆ ನಿಮ್ಮ ಮೇಲೆ ಅದೇನೋ ಭಾಳಾ ಪ್ರೀತಿ ಅಂತ ಕಾಣುತ್ತೆ. ನಿಮಗೆ ಬಡಿಸೋದಿಕ್ಕೆ ಬಿರಿಯಾನೀನ ಈಗಲೂ ರೆಡೀ ಮಾಡಿಟ್ಕೊಂಡು ಕೂತಿದ್ದಾನಂತೆ. ಹೋಗಿ ಹೊಡೆದುಬಿಡೋಣವಾ?” +“ಬೇಡ ಕೋದಂಡಯ್ಯ. ಒಂದು ದಿನಕ್ಕೆ ಎರಡು ಸಲ ಮಟನ್ ತಿನ್ನೋದು ಮೈಗೆ ಒಳ್ಳೇದಲ್ಲ. ಕೊಲೆಸ್ಟರಾಲು ಗಿಲೆಸ್ಟರಾಲು ಅಂತ ಏನೇನೋ ತಾಪತ್ರಯ.” +“ಹ್ಞು ಸರಿ ಬಿಡಿ.” ಕೋದಂಡಯ್ಯ ಲೊಚಗುಟ್ಟಿದ. ಗೋಡೆಯ ಮೇಲಿದ್ದ ನಾಗರಹೊಳೆಯ ಹುಲಿಯ ಚಿತ್ರದತ್ತಲೇ ನೋಡುತ್ತಾ ಹೇಳಿದ. “ಅಲ್ಲಾ ಗುರೂ, ನಾವು ಅಮಾವಾಸ್ಯೆಗೋ ಹುಣ್ಣಿಮೆಗೋ ಒಂದೊಂದ್ಸಲ ಒಂದು ನೂರೋ ಇನ್ನೂರೋ ಗ್ರಾಮ್ ಮಟನ್ ತಿಂದುಬಿಟ್ರೆ ಕೊಲೆಸ್ಟೆರಾಲ್ ಏರಿಬಿಡುತ್ತೇ ಅಂತ ಗೋಳಾಡ್ತೀವಿ. ಈ ಹುಲಿ, ಸಿಂಹ, ಚಿರತೆ ಅವೆಲ್ಲಾ ದಿನಕ್ಕೆ ಮೂರುಹೊತ್ತೂ, ಮುನ್ನೂರ ಅರವತ್ತೈದು ದಿನಾನೂ ತಿನ್ನೋದು ಬರೀ ಮಟನ್ನೇ. ಅವಕ್ಕೆ ಕೊಲೆಸ್ಟರಾಲ್ ಹೆಚ್ಚಾಗಲ್ವಾ ಸಾರ್?” +“ಹೋಗಯ್ಯ ನಂಗೊತ್ತಿಲ್ಲ.” ಕೈ ಒದರಿ ಹೊರನಡೆದ ಟೈಟಸ್. +* * * +-ಏಳು- +ಬೈಕ್ ನಿಂತ ಶಬ್ಧ ಕೇಳಿ ಚಕ್ಕನೆ ತಲೆಯೆತ್ತಿದ ಪೇದೆ ಅಂತೋಣಿ ವಾಹನದಿಂದ +ಕೆಳಗಿಳಿಯುತ್ತಿದ್ದ ವ್ಯಕ್ತಿಯನ್ನು ನೋಡಿ ಕಣ್ಣರಳಿಸಿದ. +‘ಈಪಾಟೀ ಕೋದಂಡಯ್ಯ! ಇಷ್ಟೊತ್ತಿನಲ್ಲಿ ಯಾಕೆ ಬಂದ?’ ಅಚ್ಚರಿಯ ಜತೆ ಪ್ರಶ್ನೆಯೂ ಮೂಡಿತು. +“ಇದೇನ್ಸಾರ್ ಇಷ್ಟೊತ್ನಲ್ಲೀ?” ಕೇಳಿಯೇಬಿಟ್ಟ. +“ಸುಮ್ನೆ ಗಾಳಿ ಸೇವನೆಗೆ ಅಂತ ಬಂದೆ ಕಣಯ್ಯ. ಹಾಗೇ ನಿನ್ನನ್ನ ಸ್ವಲ್ಪ ನೋಡ್ಕೊಂಡು ಹೋಗೋಣ ಅನ್ನಿಸ್ತು. ಬಂದೆ. ನಾ ಬಂದದ್ದು ನಿಂಗಿಷ್ಟ ಇಲ್ಲ ಅಂದ್ರೆ ಹಾಗಂತ ಹೇಳ್ಬಿಡು. ಹಿಂದಕ್ಕೆ ಹೊರಟುಬಿಡ್ತೀನಿ.” ನಗೆಯಾಡಿದ ಕೋದಂಡಯ್ಯ. +“ಅಯ್ಯಯ್ಯೋ! ನಾನ್ಯಾಕೆ ಹಾಗನ್ಲಿ? ಧಾರಾಳವಾಗಿ ಬನ್ನಿ. ಬಂದೋರು ರಾತ್ರಿ ಪೂರ್ತಿ ಇಲ್ಲೇ ಇರಿ. ನಂಗೂ ಜತೆ ಅಂತ ಒಬ್ಬರು ಇದ್ದ ಹಾಗೆ ಆಗುತ್ತೆ.” ಪ್ರತಿಯಾಗಿ ನಗೆ ಬೀರಿದ ಅಂತೋಣಿ. +“ಸರಿ ಬಿಡು. ಹಂಗೇ ಮಾಡೋಣ.” ಹೇಳಿದ ಕೋದಂಡಯ್ಯ ಹತ್ತಿರ ಬಂದ. ತಗ್ಗಿದ ಸ್ವರದಲ್ಲಿ ಪ್ರಶ್ನಿಸಿದ. “ಈ ಮನೇಲಿ ನರಹರಿ ಅಂತ ಒಬ್ಬ ಇದ್ದಾನಂತಲ್ಲ, ಎಲ್ಲಿ ಅವ್ನು?” +“ಅವ್ನಾ? ಗುಮ್ಮನ ಗುಸಕ ಅವ್ನು. ಯಾರ ಕಣ್ಣಿಗೂ ಬೀಳೋದಿಲ್ಲ. ಮೂರು ಹೊತ್ತೂ ಆ ಔಟ್‌ಹೌಸ್‌ನಲ್ಲಿ ಕಂಬ್ಳಿ ಹೊದ್ಕೊಂಡು ಬಿದ್ದಿರ್ತಾನೆ.” ಅಂತೋಣಿಯ ದನಿಯಲ್ಲಿ ಅಸಡ್ಡೆಯಿತ್ತು. +“ಸರಿ, ನಾ ಹೋಗಿ ಸ್ವಲ್ಪ ಅವನನ್ನ ಒದ್ದು ಎಬ್ಬಿಸ್ತೀನಿ” ಎನ್ನುತ್ತಾ ಔಟ್‌ಹೌಸ್‌ನತ್ತ ನಡೆದ ಕೋದಂಡಯ್ಯ. +ಕಲ್ಲು ಚಪ್ಪಡಿಗಳ ಹಾಸಿನ ಹಾದಿಯಲ್ಲಿ ನಡೆದು ಕತ್ತಲೆಯಲ್ಲಿ ಮುಳುಗಿದ್ದ ಔಟ್‌ಹೌಸ್ ಸಮೀಪಿಸಿದ. ಮೈಕೈಗೆ ತಾಗುತ್ತಿದ್ದ ಗಿಡಗಳ ರೆಂಬೆಗಳನ್ನು ಸರಿಸುತ್ತಾ ಗೊಣಗಿದ. “ಥತ್! ಯಾವ ಸೀಮೆ ಜನ! ಈಪಾಟೀ ಗಿಡಗಂಟೆ ಬೆಳೆಸ್ಕೊಂಡಿದ್ದಾರೆ! ಕತ್ತರಿಸೋದಿಕ್ಕೇನು ಧಾಡಿ?” +ಕಿಟಕಿಯ ಮುಂದೆ ನಿಂತು ಗಾಜಿಗೆ ಮುಖ ಒತ್ತಿದ. ಒಳಗೆ ಗಾಢಾಂಧಕಾರ. ಏನೊಂದೂ ಕಾಣಿಸಲಿಲ್ಲ. ಎರಡು ಹೆಜ್ಜೆ ಮುಂದಿಟ್ಟು ನಸುತೆರೆದಿದ್ದ ಮತ್ತೊಂದು ಕಿಟಕಿಯನ್ನು ಸಮೀಪಿಸಿದ. ಕಿವಿಗಳು ಚುರುಕಾದವು. +ನೀಳ ನಿಟ್ಟುಸಿರಿನ ಶಬ್ಧ! +ಹಿಂದೆಯೇ ಹೊರಳಾಟದ ಮಸುಕು ಶಬ್ಧಗಳು! +ಒಳಗಿರುವ ವ್ಯಕ್ತಿಗೆ ನಿದ್ದೆ ಹತ್ತಿಲ್ಲ! ನಿಟ್ಟುಸುರುಗರೆಯುತ್ತಾ ಹೊರಳಾಟ ನಡೆಸಿದೆ! +ಕಿಟಕಿಗೆ ಸಮೀಪವಾಗಿ ನಿಂತು ಲಘುವಾಗಿ ಕೆಮ್ಮಿದ ಕೋದಂಡಯ್ಯ. +ಒಳಗಿನಿಂದ ಯಾವ ಪ್ರತಿಕ್ರಿಯೆಯೂ ಇಲ್ಲ! ಕಿಟಕಿಯ ಸರಳಿಗೆ ಮುಖ ಒತ್ತಿ ಮತ್ತೊಮ್ಮೆ ಕೆಮ್ಮಿದ. +“ಯಾರದು?” ಈಗ ಒಳಗಿನಿಂದ ಪ್ರಶ್ನೆ ಬಂತು. +“ನಾನು ಕಣಪ್ಪ… ನಿನ್ನ ದೋಸ್ತ್.” ಮೆಲ್ಲಗೆ ಹೇಳಿದ ಕೋದಂಡಯ್ಯ. +“ಯಾರ್ರೀ ಅದೂ?” ಈ ಸಲ ಪ್ರಶ್ನೆಯಲ್ಲಿ ಅಸಹನೆಯಿತ್ತು. +“ನನ್ನನ್ನ ಕೋದಂಡಯ್ಯ ಅಂತಾರೆ. ಹೊಟ್ಟೆಪಾಡಿಗೆ ಪೋಲೀಸು ಇಲಾಖೆ ಸೇರಿದ್ದೀನಿ.” +ಕೆಲಕ್ಷಣಗಳ ಮೌನ. ನಂತರ ಗೊಣಗಾಟದ ಶಬ್ಧ ಕಿವಿಗಳನ್ನು ಇರಿಯಿತು. +“ಇಷ್ಟೊತ್ನಲ್ಲಿ ಈ ಪೋಲೀಸ್ ಕಾಟ ನಂಗ್ಯಾಕೆ? ಇದ್ಯಾವ ಜನ್ಮದ ಕರ್ಮ ಇದು. ಸುಮ್ನೆ ನೆಮ್ಮದಿಯಾಗಿ ನಿದ್ದೆ ಮಾಡೋದಕ್ಕೂ ಬಿಡೋದಿಲ್ಲ ಶನಿಗಳು.” +“ಸ್ವಲ್ಪ ಬಾಗಿಲು ತೆಗೆಯಪ್ಪ. ಬೇಸರ ಆದ್ರೂನೂ ಅದನ್ನ ಮುಚ್ಚಿಟ್ಕೊಂಡು ಒಂದೆರಡು ಒಳ್ಳೇ ಮಾತಾಡೋ ನಟನೆಯನ್ನಾದ್ರೂ ಮಾಡಬಾರ್ದಾ? ಅದೆಂಥಾ ಆಕ್ಟರ್ ನೀನು?” +ಮರುಕ್ಷಣ ಕೋಣೆಯಲ್ಲಿ ಬೆಳಕು ಮೂಡಿತು. ದಢಾರನೆ ಬಾಗಿಲು ತೆರೆದ ನರಹರಿ. +ಸುಕ್ಕುಗಟ್ಟಿದ ಪೈಜಾಮಾ, ತೋಳಿಲ್ಲದ ಬನಿಯನ್‌ನಲ್ಲಿದ್ದ ಕೆದರಿದ ತಲೆಯ ನರಹರಿ ಕೋದಂಡಯ್ಯನತ್ತ ಉರಿನೋಟ ಬೀರಿದ. +“ನೀನು ನೆಮ್ಮದಿಯಾಗಿ ನಿದ್ದೆ ಮಾಡ್ತಾ ಇದ್ದಿದ್ರೆ ನಾನು ನಿಂಗೆ ತೊಂದ್ರೆ ಕೊಡ್ತಾ ಇರ್‍ಲಿಲ್ಲ. ಆದ್ರೆ ನೀನು ನಿದ್ದೆ ಬಾರದೇ ಹೊರಳಾಡ್ತಾ ಇರೋದನ್ನ ನೋಡ್ದಾಗ ನಿನ್ ಜತೆ ಆತ್ಮೀಯವಾಗಿ ಎರಡು ಮಾತಾಡೋಣ, ನಿನ್ ಮನಸ್ನಲ್ಲಿ ಕೊರೀತಾ ಇರೋ ಚಿಂತೆ ಏನೂ ಅಂತ ವಿಚಾರಿಕೊಳ್ಳೋಣ ಅಂತ ಬಂದೆ. ಹೇಳು, ಅದು ತಪ್ಪಾ?” +ನರಹರಿಯ ಮುಖದ ಬಣ್ಣ ಏಕಾ‌ಏಕಿ ಬದಲಾಯಿತು. ಕೋಪದ ಜಾಗದಲ್ಲಿ ಅಚ್ಚರಿ, ಗೊಂದಲ. +ಬೆಳಗಿನಿಂದ ಎರಡು ಸಾರಿ ವಕ್ಕರಿಸಿ ತಲೆ ತಿಂದಿದ್ದ ಎಸ್. ಐ. ಟೈಟಸ್‌ನಂತಿಲ್ಲ ಇವನು! ಮಾತು ಬೇರೆ ಇಷ್ಟು ಮೃದುವಾಗಿದೆ! ಪೋಲೀಸರಿಗೂ ಮೃದುಹೃದಯ ಅನ್ನುವುದು ಇರುತ್ತದೆಯೇ? +ಕೋದಂಡಯ್ಯನನ್ನೇ ಮಿಕಿಮಿಕಿ ನೋಡಿದ. +ಅವನ ಭುಜದ ಮೇಲೆ ಕೈಯಿಟ್ಟ ಕೋದಂಡಯ್ಯ. +“ಹೊರಗೆ ಹವಾ ತಣ್ಣಗಿದೆ. ಒಂದೆರಡು ನಿಮಿಷ ಕೂರೋಣ ಬಾ.” ಅವನ ಭುಜ ಹಿಡಿದಂತೆಯೇ ಹೊರಗೆ ಕರೆತಂದು ಸಿಮೆಂಟ್ ಬೆಂಚಿನ ಮೇಲೆ ಕೂರಿಸಿದ. ತಾನು ಪಕ್ಕದಲ್ಲಿ ಕುಳಿತ. +“ಕೊಳ್ಳಿದೆವ್ವ ಸಿನಿಮಾದಲ್ಲಿ ಹೀರೋಯಿನ್‌ನ ಚುಡಾಯಿಸ್ಕೊಂದು ಓಡಾಡ್ತಿದ್ದ ಕಾಲೇಜು ಹುಡುಗ ನೀನೇ ಅಲ್ವೇನಪ್ಪ?” +ನರಹರಿಯ ಮುಖದಲ್ಲಿ ಕಿರುನಗೆ ಹರಡಿದ್ದು ಬೀದೀ ದೀಪದ ಮಸಕು ಬೆಳಕಿನಲ್ಲಿ ಸ್ಪಷ್ಟವಾಗಿ ಕಂಡಿತು. +“ಭಾಳಾ ಚೆನ್ನಾಗಿ ಆಕ್ಟ್ ಮಾಡಿದ್ದೀಯ ಕಣಪ್ಪ.” ಕೋದಂಡಯ್ಯ ಜಾಲ ಹೊಸೆದ. +ನರಹರಿ ಹಳ್ಳಕ್ಕೆ ಬಿದ್ದ. +“ಹ್ಞೂಂ ಸಾರ್. ಆ ರೋಲ್ ನಂಗೂ ಇಷ್ಟ ಆಯ್ತು. ಆಮೇಲೆ ಮತ್ತೆ ಅಂಥದೇ ಮತ್ತೊಂದೆರಡು ರೋಲ್ ಬಂದ್ವು ಲವ್ ಇನ್ ಪಾಂಡಿಚೆರಿ, ಕನ್ಯಾಕುಮಾರಿ, ಸೆರಗಿನ ಕೆಂಡ ಫಿಲ್ಮ್‌ಗಳಲ್ಲಿ. ನೀವು ನೋಡಿರಬೇಕಲ್ಲ?” ಉತ್ಸಾಹದಿಂದ ಹೇಳಿದ. +“ಹ್ಞಾ ನೋಡಿದ್ದೀನಿ ಕಣಪ್ಪ. ನನ್ ಹೆಂಡ್ತೀ ಮಕ್ಳೂ ನೋಡಿದ್ದಾರೆ. ಅವರಿಗೂ ತುಂಬಾ ಇಷ್ಟ ಆಯ್ತು.” ಸ್ವಲ್ಪ ತಡೆದು ಪ್ರಶ್ನಿಸಿದ. “ಇತ್ತೀಚೆಗೆ ಯಾವ ಸಿನಿಮಾದಲ್ಲಿ ಮಾಡಿದ್ದೀಯಪ್ಪ?” +ನರಹರಿ ತಲೆ ಕೆಳಗೆ ಹಾಕಿದ. “ಇಲ್ಲಾ ಸಾರ್, ಇತ್ತೀಚೆಗೆ ಅಂಥಾ ಒಳ್ಳೇ ರೋಲ್ಸ್ ಸಿಗ್ಲೇ ಇಲ್ಲಾ.” ಕ್ಷಣ ತಡೆದು ಮುಂದುವರೆಸಿದ. “ಎಲ್ಲಾ ಮೋಸ ಸಾರ್. ಸಿನಿಮಾ ಅಂದ್ರೆ ಹೊರಗಷ್ಟೇ ಚಂದ. ಒಳಗೆ ಹೋದ್ರೆ ಕಾಲು ಹಾಕಿದ ಕಡೇಲೆಲ್ಲಾ ಬರೀ ಕಚಡಾ. ಬೇಜಾರಾಗಿಬಿಡ್ತು. ಹಿಂದಕ್ಕೆ ಬಂದ್ಬಿಟ್ಟೆ. ಇನ್ನು ಆ ಕಡೆ ತಲೆ ಹಾಕೋದಿಲ್ಲ.” ದನಿಯಲ್ಲಿ ಅತೀವ ಬೇಸರವಿತ್ತು. +“ಸಿನಿಮಾ ಜಗತ್ತು ಅಂದ್ರೆ ಹಾಗೇ ಕಣಪ್ಪ. ಇರಲಿ, ಮುಂದೇನು ಮಾಡಬೇಕು ಅಂತಿದೀಯ?” ಬೇಸರಗೊಂಡವನ ಮುಂಗೈಯನ್ನು ಮೃದುವಾಗಿ ತಟ್ಟಿದ ಕೋದಂಡಯ್ಯ. +“ಏನು ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ. ಏನಾದ್ರೂ ಬಿಸಿನೆಸ್ ಮಾಡು ಅಂತ ಅಣ್ಣ ಹೇಳ್ತಾನೆ.” +“ಒಳ್ಳೇ ಯೋಚನೆ.” ಕೋದಂಡಯ್ಯ ಮೆಚ್ಚುಗೆ ತೋರಿದ. ಹಿಂದೆಯೇ ಮಾತು ಸೇರಿಸಿದ. “ನಿಮ್ಮಣ್ಣನಿಗೆ ಅಕ್ಸಿಡೆಂಟ್ ಆಯ್ತು. ಇನ್ನು ಅವ್ರು ಆಸ್ಪತ್ರೆಯಿಂದ ಬಂದು ವ್ಯವಹಾರ ನೋಡ್ಕೊಳ್ಳೋದಕ್ಕೆ ತಿಂಗಳೇ ಬೇಕಾಗಬೋದು. ಈ ಸಮಯದಲ್ಲಿ ನೀನು ವ್ಯವಹಾರಕ್ಕೆ ಕೈಹಾಕಿದ್ರೆ ನಿಮ್ಮಣ್ಣನಿಗೆ ನೆಮ್ಮದಿ.” +“ಹೌದು ಸರ್. ನಾನೂ ಅದೇ ಯೋಚಿಸ್ತಿದೀನಿ. ಅಣ್ಣಂಗೆ ಈಗ ನನ್ನ ಸಹಾಯದ ಅಗತ್ಯ ತುಂಬಾ ಇದೆ. ಈಗ ನಾನು ಅವನ ಬೆನ್ನಿಗೆ ನಿಲ್ಲಬೇಕು.” ಕಪ್ಪು ಆಕಾಶದತ್ತ ಮೋಗ ಹೂಡಿ ನಿಧಾನವಾಗಿ ಮಾತು ಹೊರಡಿಸಿದ ನರಹರಿ. +“ಹೆಂಡತಿಯ ಕೊಲೆಯ ಶಾಕ್‌ನಿಂದ ಚೇತರಿಸಿಕೊಳ್ಳೋದಿಕ್ಕೆ ನಿಮ್ಮಣ್ಣಂಗೆ ತುಂಬಾ ಕಾಲ ಬೇಕಾಗಬೋದು. ಆ ದುಃಖಾನ್ನ ಮರೆತು ಆತ ವ್ಯವಹಾರದ ಕಡೆ ಗಮನ ಕೊಡೋದಿಕ್ಕೆ ಸಧ್ಯಕ್ಕಂತೂ ಆಗೋದಿಲ್ಲ. ಎಲ್ಲಾ ಜವಾಬ್ಧಾರಿ ನಿನ್ನ ತಲೇ ಮೇಲೇ.” ಎಚ್ಚರಿಕೆಯಿಂದ ಪದಗಳನ್ನು ಜೋಡಿಸಿದ ಕೋದಂಡಯ್ಯ. +ನರಹರಿ ಮಾತಾಡಲಿಲ್ಲ. +ಕೋದಂಡಯ್ಯ ಮತ್ತೊಂದು ಅಸ್ತ್ರ ಪ್ರಯೋಗಿಸಿದ. +“ನಿಮ್ಮತ್ತಿಗೆಯ ಕೊಲೆಗಾರ ಸಿಕ್ಕಿಬಿಟ್ರೆ ನಿಮ್ಮಣ್ಣನಿಗೆ ನೆಮ್ಮದಿ.” +ಮೀನು ಗಾಳ ನುಂಗಿತು. +“ಸಿಕ್ಕದೇ ಎಲ್ಲಿ ಹೋಗ್ತಾನೆ ಬಿಡಿ. ಈ ಕಾಲದಲ್ಲಿ ಕೊಲೆ ಮಾಡಿ ತಪ್ಪಿಸ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಅವ್ನು ಆದಷ್ಟು ಬೇಗ ಸಿಕ್ಕಲೀ ಅಂತ ನಾನೂ ಬಯಸ್ತೀನಿ. ನಂಗೆ ನಿಮ್ಮ ಆ ಎಸ್ ಐ ಕಾಟ ತಪ್ಪುತ್ತೆ.” ಬಿಡಿಬಿಡಿಯಾಗಿ ಹೇಳಿದ ನರಹರಿ. +ಅದನ್ನೇ ಪಟ್ಟಾಗಿ ಹಿಡಿದ ಕೋದಂಡಯ್ಯ. +“ಛೇ ಅವರ್‍ಯಾಕೆ ನಿನ್ನ ಹಿಂದೆ ಬಿದ್ದಿದ್ದಾರೋ ನಂಗರ್ಥ ಆಗ್ತಾ ಇಲ್ಲ.” ಲೊಚಗುಟ್ಟಿದ. ವಾರೆಗಣ್ಣಿಂದಲೇ ನರಹರಿಯ ಮುಖಭಾವವನ್ನು ಅಳೆದ. +“ಕೊಲೆ ನಡೆದ ಸಮಯದಲ್ಲಿ ನಾನು ಇಲ್ಲಿದ್ದೆ ಅನ್ನೋದೇ ನನ್ನ ಮೇಲೆ ಅವರ ಅನುಮಾನಕ್ಕೆ ಕಾರಣ.” ದನಿ ಎಳೆದ ನರಹರಿ. +“ಹೌದು ಕಣಪ್ಪ. ನೀನು ನಿದ್ದೆ ಮಾಡ್ತಾ ಇದ್ದೆ, ನಡೆದದ್ದು ಏನೂ ನಿನ್ನ ಗಮನಕ್ಕೆ ಬಂದಿಲ್ಲ ಅನ್ನೋದನ್ನ ಅವ್ರು ನಂಬ್ತಾ ಇಲ್ಲ.” ಮೆಲ್ಲಗೆ ಹೇಳಿದ ಕೋದಂಡಯ್ಯ. +ನರಹರಿಯ ಉತ್ತರ ಸರಕ್ಕನೆ ಬಂತು. +“ಅವ್ರು ನಂಬಲ್ಲ ಅಂದ್ರೆ ನಾನೇನು ಮಾಡ್ಲಿ? ನಾನು ನಿದ್ದೆ ಮಾಡಿದ್ದಂತೂ ನಿಜ.” +ಸಂಭಾಷಣೆಯ ನಿರ್ಣಾಯಕ ಗಳಿಗೆ ಹತ್ತಿರಾಗಿರುವುದನ್ನು ಕೋದಂಡಯ್ಯ ಗ್ರಹಿಸಿದ. ಒಮ್ಮೆ ಲಘುವಾಗಿ ಕೆಮ್ಮಿ ಬಾಯಿ ತೆರೆದ. +“ಒಂದ್ವೇಳೆ ಈಗ ನನ್ನ ಬದಲಿಗೆ ನಮ್ಮ ಎಸ್ ಐ ಬಂದಿದ್ರೆ ಹೇಗಿರ್ತಿತ್ತು? ಕೊಲೆ ನಡೆದ ರಾತ್ರಿ +ನಿಂಗೆ ಎಚ್ಚರವಿಲ್ಲದ ನಿದ್ದೆ. ಈಗ ನಿದ್ದೆ ಬಾರದೇ ಹೊರಳಾಡ್ತಾ ಇದೀಯ. ಇದನ್ನ ನೋಡಿದ್ರೆ ಅವ್ರು ಏನಂದ್ಕೋಬೋದು ಸ್ವಲ್ಪ ಯೋಚ್ನೆ ಮಾಡು.” +ನರಹರಿಯ ಉತ್ತರ ನಿಧಾನವಾಗಿ ಬಂತು. +“ನಂಗೆ ಅದೇ ಅರ್ಥ ಆಗ್ತಾ ಇಲ್ಲ ಸರ್. ಮೊನ್ನೆ ರಾತ್ರಿ ಅಂದ್ರೆ ನಮ್ಮತ್ತಿಗೆ ಕೊಲೆ ಆದ ರಾತ್ರಿವರೆಗೆ ನಂಗೆ ಇಡೀ ರಾತ್ರಿ ಎಚ್ಚರ ಇಲ್ಲದಷ್ಟು ನಿದ್ದೆ ಬರ್ತಿತ್ತು. ಆದ್ರೆ ನಿನ್ನೆ ರಾತ್ರಿಯಿಂದ ನಿದ್ದೇನೇ ಬರ್ತಾ ಇಲ್ಲ. ಇಡೀ ರಾತ್ರಿ ಹಾಸಿಗೇನಲ್ಲಿ ಹೊರಳಾಡೋದೇ ಆಗಿದೆ.” +“ಅಂದ್ರೆ ಇಲ್ಲಿಗೆ ಬಂದಾಗಿನಿಂದ ಮೊನ್ನೆ ರಾತ್ರಿವರೆಗೆ ಸೊಗಸಾದ ನಿದ್ದೆ ಬರ್ತಿತ್ತು ಅನ್ನು.” +“ಇಲ್ಲ. ಬಂದ ಎರಡು ದಿನ ನಂಗೆ ಅಷ್ಟು ಚೆನ್ನಾಗಿ ನಿದ್ದೆ ಬರಲೇ ಇಲ್ಲ. ಮೂರನೇ ರಾತ್ರಿಯಿಂದ ತಗೋಳೀ, ಅದೇನು ಮ್ಯಾಜಿಕ್ಕೋ ಹತ್ತುಗಂಟೆಗೆ ಮಲಗಿದ್ರೆ ಬೆಳಗ್ಗೆ ಎಂಟು ಗಂಟೇವರೆಗೂ ಎಚ್ಚರವೇ ಇರದ ನಿದ್ದೆ. ನಿನ್ನೆ ರಾತ್ರಿಯಿಂದ ಮತ್ತೆ ಅದೇ ಹಳೇ ಕತೆ. ನಿದ್ದೇನೇ ಇಲ್ಲ.” +ಕೋದಂಡಯ್ಯ ಉದ್ವೇಗಗೊಂಡ. ಅಭ್ಯಾಸಬಲದಿಂದ ಮನದ ಉದ್ವೇಗವನ್ನು ಹತ್ತಿಕ್ಕಿ ಪ್ರಶ್ನಿಸಿದ. “ನೀನು ಇಲ್ಲಿಗೆ ಬಂದದ್ದು ಯಾವತ್ತು ನರಹರೀ.” +“ಎರಡು ವಾರದ ಹತ್ರ ಆಯ್ತು ಸಾರ್.” +“ಯಾವ ಡೇಟು ಅಂತ ಸ್ವಲ್ಪ ನೆನಪಿಸಿಕೊಳ್ಳೋದಿಕ್ಕೆ ಆಗುತ್ತಪ್ಪಾ?” ಹತ್ತಿರ ಸರಿದ. +“ಆವತ್ತು ಭಾನುವಾರ. ತಾರೀಖು ಹನ್ನೆರಡು ಅಂತ ಕಾಣುತ್ತೆ.” ನಿಧಾನವಾಗಿ ಹೇಳಿದ ನರಹರಿ. +“ಕೋದಂಡಯ್ಯನ ಹೃದಯ ವೇಗವಾಗಿ ಬಡಿದುಕೊಂಡಿತು. ಅವನ ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆಗೆ ಉತ್ತರ ದೊರೆತಿತ್ತು! +ನರಹರಿ ಇಲ್ಲಿಗೆ ಬಂದು ಇಂದಿಗೆ ಸರಿಯಾಗಿ ಹದಿಮೂರು ದಿನಗಳಾಗಿವೆ. ಮೊದಲ ಎರಡುದಿನಗಳು ಅವನಿಗೆ ಸರಿಯಾಗಿ ನಿದ್ದೆ ಇಲ್ಲ. ಮೂರನೆಯ ರಾತ್ರಿಯಿಂದ ಸೊಗಸಾದ ನಿದ್ದೆ. ಇದು ಒಂಬತ್ತು ರಾತ್ರಿಗಳವರೆಗೆ ಅಂದರೆ ದೇವಕಿ ಕೊಲೆಯಾದ ರಾತ್ರಿಯವರೆಗೆ ನಡೆದಿದೆ. ನಿನ್ನೆ ರಾತ್ರಿಯಿಂದ ಮತ್ತೆ ನಿದ್ದೆ ಇಲ್ಲ! +ಒಂಬತ್ತು ರಾತ್ರಿಗಳವರೆಗೆ ಅವನಿಗೆ ಭರ್ಜರಿ ನಿದ್ದೆ! +ದಯಾನಂದನ ಆಫೀಸುಕೋಣೆಯ ಮೇಜಿನ ಡ್ರಾನಲ್ಲಿ ಸಿಕ್ಕಿದ ನಿದ್ರೆಯ ಗುಳಿಗೆಗಳ ಬಾಟಲಿನಲ್ಲಿ ಒಂಬತ್ತು ಗುಳಿಗೆಗಳು ಕಡಿಮೆಯಾಗಿವೆ! +ಅಂದರೆ ನರಹರಿಯ ಮೇಲೆ ಅವನಿಗರಿವಿಲ್ಲದಂತೇ ನಿದ್ರೆಯ ಗುಳಿಗೆಗಳ ಪ್ರಯೋಗ ನಡೆದಿದೆಯೇ? ಹಾಗೇ ಆಗಿದ್ದರೆ ಅದನ್ನು ಪ್ರಯೋಗಿಸಿದವರಾರು? ದಯಾನಂದನೇ? ಅಥವಾ ದೇವಕಿಯೇ? +“ಅಡಿಗೆಯೋಳು ಬಂದಹಾಗೆ ಕಾಣ್ಲಿಲ್ಲ. ನೀನು ಊಟ ಎಲ್ಲಿ ಮಾಡಿದೆ ನರಹರೀ?” ಕೋದಂಡಯ್ಯ ಬತ್ತಳಿಕೆಯಿಂದ ಮತ್ತೊಂದು ಬಾಣ ಹೊರತೆಗೆದ. +“ಇಲ್ಲೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರೋ ರೆಸ್ಟೋರೆಂಟ್‌ನಲ್ಲಿ ಊಟ ಮಾಡ್ದೆ. ನಿನ್ನೆ ಬೆಳಿಗ್ಗೆಯಿಂದ್ಲೂ ಹಾಗೇ ಮಾಡ್ತಿದೀನಿ.” +“ಅದಕ್ಕೆ ಮೊದ್ಲು ನಿಮ್ಮತ್ತಿಗೆ ಬಡಿಸ್ತಿದ್ರು ಅನ್ನು.” +ರಭಸವಾಗಿ ತಲೆ ಒದರಿದ ನರಹರಿ. +“ಇಲ್ಲ ಅವಳ ಕೈನ ಊಟ ಮಾಡೋದನ್ನ ಬಂದ ಎರಡನೇ ದಿನಕ್ಕೇ ನಿಲ್ಲಿಸ್ದೆ. ಊಟ ಯಾಕೆ ಅವಳಿರೋ ಮನೇ ಒಳಗೇ ಹೋಗ್ತಾ ಇರ್‍ಲಿಲ್ಲ ನಾನು. ಮೂರುಹೊತ್ತೂ ಊಟಾನಾ ಅಡಿಗೆಯೋಳೇ ನಂಗೆ ಇಲ್ಲಿಗೇ ತಂದು ಕೊಡ್ತಾ ಇದ್ಲು.” +“ನಿಮ್ಮತ್ತಿಗೆ ಮೇಲೆ ನಿಂಗೆ ಅಷ್ಟು ಕೋಪ ಯಾಕೆ ನರಹರೀ?” ದನಿಯನ್ನು ಆದಷ್ಟು ಮೃದುಗೊಳಿಸಿದ ಕೋದಂಡಯ್ಯ. +ಸೆಟೆದು ಕುಳಿತ ನರಹರಿ. +“ಇದೆಲ್ಲಾ ಯಾಕೆ ಕೇಳ್ತಾ ಇದೀರಿ ನೀವು? ಅದೂ ಈ ಅಪರಾತ್ರೀನಲ್ಲಿ?” ಅವನು ಬೇಸರಗೊಂಡದ್ದು ಸ್ಪಷ್ಟವಾಗಿತ್ತು. +ಕೋದಂಡಯ್ಯ ತಾಳ್ಮೆ ವಹಿಸಿದ. ಅದೇ ಮೃದುದನಿಯಲ್ಲಿ ಹೇಳಿದ. +“ನಾನು ನಿನ್ನ ದೋಸ್ತ್ ಅಂತ ಆವಾಗ್ಲೇ ಹೇಳ್ದೆ. ಒಬ್ಬ ನಿಜವಾದ ದೋಸ್ತ್ ಮಾಡೋ ಕೆಲಸಾನ್ನೆ ಮಾಡ್ತಾ ಇದೀನಿ ನಾನು.” +ನರಹರಿಯ ಕಣ್ಣುಗಳಲ್ಲಿ ಗೊಂದಲ. ಅವನ ಮುಂಗೈ ತಟ್ಟಿ ಮಾತು ಮುಂದುವರೆಸಿದ ಕೋದಂಡಯ್ಯ. “ನಿಮ್ಮತ್ತಿಗೆಯ ಮೇಲೆ ನಿಂಗೆ ಸಖತ್ ಕೋಪ ಅಂತ ತಿಳಿದ ನಮ್ಮ ಎಸ್ ಐ ಆ ದಿಕ್ಕಿನಲ್ಲಿ ತಮ್ಮ ಊಹೆನ ಲಂಗುಲಗಾಮಿಲ್ದೇ ಹರಿಸ್ತಿದಾರೆ. ನೀನು ತೊಂದ್ರೇಗೆ ಸಿಕ್ಕಿಕೊಳ್ಳೋ ಸಾಧ್ಯತೇ ಇದೆ. ಅದನ್ನ ತಪ್ಪಿಸೋ ಉದ್ದೇಶದಿಂದ ನಿನ್ನ ಜತೆ ನಾಲ್ಕು ಮಾತಾಡಿ ವಿಷಯ ತಿಳಕೋತಾ ಇದೀನಿ. ದೋಸ್ತ್ ಅಂತ ಹೇಳಿಕೊಂಡ ಮೇಲೆ ಅಷ್ಟಾದರೂ ಮಾಡಬೇಡವೇ ನಾನು?” +ನರಹರಿ ಮೌನವಾಗಿ ಅವನನ್ನೇ ದಿಟ್ಟಿಸಿದ. +“ಹೇಳಪ್ಪ.” ನರಹರಿಯ ಬೆನ್ನನ್ನು ಮೃದುವಾಗಿ ಸವರಿದ ಕೋದಂಡಯ್ಯ. +ನಿಮಿಷದ ಮೌನದ ನಂತರ ಬಾಯಿ ತೆರೆದ ನರಹರಿ. +* * * +ಮತ್ತೆ ಕಂಪ್ಯೂಟರಿನ ಮುಂದೆ ಕುಳಿತಳು ಮಾನ್ಸಿ. +ದೇವಕಿಯ ಇ ಮೇಲ್‌ನ ಪಾಸ್‌ವರ್ಡ್ ಕಂಡುಹಿಡಿಯಲು ನಿನ್ನೆಯಿಡೀ ನಡೆಸಿದ ಶ್ರಮ ವ್ಯರ್ಥವಾಗಿತ್ತು. ತೋಚಿದ ಎಲ್ಲಾ ಪದಗಳ ಜತೆ ಮಹಾಭಾರತದ ದೇವಕಿಗೆ ಸಂಬಂಧಿಸಿದ ಎಲ್ಲ ಹೆಸರುಗಳನ್ನೂ ಒಂದೊಂದಾಗಿ ಕಂಪ್ಯೂಟರಿಗೆ ತುರುಕಿದ್ದಳು. ವಸುದೇವ, ಕೃಷ್ಣ, ಯಶೋದಾ, ಮಥುರಾ, ಯಮುನಾ… ಹೀಗೆ ನೂರೊಂದು ಹೆಸರುಗಳು. ಕೊನೆಗೆ ಬೇಸತ್ತು ಕಂಸನನ್ನೂ ಪ್ರಯತ್ನಿಸಿದ್ದಳು. ಪ್ರಯೋಜನವಾಗಿರಲಿಲ್ಲ. ಆ ಯಂತ್ರ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿರಲಿಲ್ಲ. +ತನ್ನ ಇ ಮೇಲ್‌ಗಳ ರಹಸ್ಯವನ್ನು ಕಾಪಾಡಲು ದೇವಕಿ ಆಂಟಿ ಅದ್ಯಾವ ಬೀಗ ಜಡಿದಿರಬಹುದು? ಪುರಾಣದ ದೇವಕಿ ತನ್ನ ಕಂದನನ್ನು ಕಾಪಾಡುವುದಕ್ಕೆ ಮಾಡಿದ ಉಪಾಯಕ್ಕಿಂತಲೂ ಈ ಕಲಿಯುಗದ ದೇವಕಿ ಹೂಡಿದ ಉಪಾಯ ಭಾರಿಯಾಗಿದೆಯಲ್ಲ? +ಅಂದಹಾಗೆ ಆ ದೇವಕಿಯ ಕಂದ ಕೃಷ್ಣನನ್ನು ಬಿರುಮಳೆಯಿಂದ ರಕ್ಷಿಸಿದ್ದು ವಾಸುಕಿ. ಅದೇ ಮಹಾಸರ್ಪ ಈಗ ದೇವಕಿ ಆಂಟಿಯ ಮೇಲ್ ಬಾಕ್ಸನ್ನು ಕಾಯುತ್ತಿರಬಹುದೇ? +ಆ ಯೋಚನೆ ಬಂದದ್ದೇ ತಡ ಸರ್ರನೆ ಮುಂದೆ ಬಾಗಿದಳು. ಬೆರಳುಗಳು ಕೀಬೋರ್ಡ್‌ನ ಗುಂಡಿಗಳನ್ನು ಪಟಪಟನೆ ಒತ್ತಿದವು. +ಬಿಟ್ಟಕಣ್ಣು ಬಿಟ್ಟಂತೆ ನೋಡಿದಳು ಮಾನ್ಸಿ. ವಾಸುಕಿ ವಿಶ್ವಾಸ ಉಳಿಸಿಕೊಂಡಿದ್ದ. ದೇವಕಿಯ ಮೇಲ್ ಬಾಕ್ಸ್ ತೆರೆದುಕೊಂಡಿತ್ತು! +“ಹುರ್ರಾ.” ಕೂಗಿದಳು ಮಾನ್ಸಿ. +* * * +-ಎಂಟು- +ಬೆಳಿಗ್ಗೆ ದಯಾನಂದನ ಮನೆಯ ಅಡಿಗೆಯವಳ ಮನೆಗೆ ಹೋಗಿ ಅವಳೊಡನೆ ಅರ್ಧಗಂಟೆ ಮಾತಾಡಿ ಕೋದಂಡಯ್ಯ ಠಾಣೆ ತಲುಪಿದಾಗ ಎಸ್ ಐ ಎಲ್ಲೂ ಕಾಣಿಸಲಿಲ್ಲ. ನಿಧಾನವಾಗಿ ಬರಬಹುದೇನೋ ಎಂದುಕೊಂಡು ತನ್ನ ಜಾಗಕ್ಕೆ ನಡೆದವನಿಗೆ ಪಿ ಸಿ ಸತೀಶ್ ಎದುರಾದ. +“ಈವತ್ತು ಎಸ್ ಐ ಸಾಹೇಬ್ರು ಬರೋದಿಲ್ಲ ಸಾರ್.” +“ಅದೇನಯ್ಯ ಹಂಗಂದ್ರೆ?” +“ಬೆಳಿಗ್ಗೆ ಬೆಳಿಗ್ಗೇನೇ ಬೆಂಗ್ಳೂರಿಗೆ ಹೊರಟ್ರು ಸಾರ್.” +ಕೋದಂಡಯ್ಯನಿಗೆ ಅಚ್ಚರಿ. ಇದ್ದಕ್ಕಿದ್ದಂತೆ ಬೆಂಗಳೂರಿಗೆ! ಯಾಕಿರಬಹುದು? +“ಈಪಾಟೀ ಅರ್ಜೆಂಟಾಗಿ ಅಲ್ಲಿಗೆ ಹಾರಿದ್ದಾರೆ. ವಿಷಯ ಏನಯ್ಯ? ಡ್ಯೂಟಿ ಮೇಲೆ ಹೋಗಿದ್ದಾರೋ ಇಲ್ಲಾ ಸ್ವಂತಕ್ಕೋ?” ಪ್ರಶ್ನಿಸಿದ. +“ಅದೇನೋ ನಂಗೊತ್ತಿಲ್ಲಾ ಸಾರ್.” +“ಸರಿ, ಸಾಹೇಬರ ಸವಾರಿ ಯಾವಾಗ ಹಿಂದಕ್ಕೆ ಬರೋದು? ಅದಾದರೂ ಗೊತ್ತಾ?” +“ಅದೂ ಗೊತ್ತಿಲ್ಲಾ ಸಾರ್.” +ಕೋದಂಡಯ್ಯ ತಲೆ ತುರಿಸಿಕೊಂಡ. ನನಗೆ ಒಂದು ಮಾತನ್ನೂ ಹೇಳಲಿಲ್ಲವಲ್ಲ? ಇದೆಂಥಾ ಸೀಕ್ರೆಟ್ ಮಿಷನ್? +ಆಲೋಚನೆಯಲ್ಲಿ ಮುಳುಗಿದವನನ್ನು ಪೇದೆಯ ಕರೆ ಎಚ್ಚರಿಸಿತು. +“ಸಾರ್, ಒಂದು ಹುಡ್ಗೀ, ಅದೇನೋ ಮಾನ್ಸಿ ಅಂತ. ಅರ್ಧಗಂಟೆಯಿಂದ ಐದಾರು ಸಲ ಫೋನ್ ಮಾಡಿದ್ದಾಳೆ.” +ಕೋದಂಡಯ್ಯನ ಕಿವಿಗಳು ಚುರುಕಾದವು. +“ವಿಷಯ ಏನಂತೇ?” +“ಅದೇನೋ ಮೇಲು ಫೀಮೇಲು ಅಂತೇನೋ ಹೇಳ್ದಂಗಿತ್ತು. ನಂಗೆ ಸರಿಯಾಗಿ ಅರ್ಥ ಆಗ್ಲಿಲ್ಲ. ನೀವು ಬಂದ ಮೇಲೆ ತಿಳಿಸ್ತೀನಿ ಅಂದೆ. ಅದೇನೋ ನೀವೇ…” ಅವನ ಮಾತು ಮುಗಿಯುವ ಮೊದಲೇ ಫೋನ್ ಹೊಡೆದುಕೊಂಡಿತು. “…ಅವಳೇ ಇರಬೇಕು. ಫೋನ್ ಎತ್ಕೊಳ್ಳಿ.” ಮಾತು ಮುಗಿಸಿದ ಸತೀಶ. ಆತುರಾತುರವಾಗಿ ಫೋನ್ ಎತ್ತಿ ಕಿವಿಗಿಟ್ಟ ಕೋದಂಡಯ್ಯ. +ಅತ್ತ ಕಡೆಯಿಂದ ಮಾನ್ಸಿಯ ದನಿ ತೂರಿಬಂತು. +“ಎಸ್ ಐ ಅವರಾ?” +“ನಾನು ಕೋದಂಡಯ್ಯ ಕಣಮ್ಮ. ವಿಷಯ ಏನು ಹೇಳು.” +“ಓ ನೀವಾ ಸರ್? ಸರ್ ನಾನು ದೇವಕಿ ಆಂಟೀದು ಮೇಲ್ ಬಾಕ್ಸನ್ನ ಓಪನ್ ಮಾಡಿದ್ದೀನಿ ಸರ್. ಅವರಿಗೆ ಬಂದಿದ್ದ ಇ ಮೇಲನ್ನ ಪತ್ತೆ ಮಾಡಿಬಿಟ್ಟಿದ್ದೀನಿ. ನಿಮಗೆ ತೋರಿಸ್ಬೇಕು. ನೀವು ಈಗ್ಲೇ ಬನ್ನಿ ಸರ್.” ದನಿಯಲ್ಲಿ ಉದ್ವೇಗವಿತ್ತು. +ಕೋದಂಡಯ್ಯನೂ ಉದ್ವೇಗಗೊಂಡಿದ್ದ. +“ಆಯ್ತಮ್ಮ, ಈಗ್ಲೇ ಬರ್ತೀನಿ.” ಹೇಳಿ ಫೋನ್ ಕೆಳಗಿಟ್ಟ. +ಠಾಣೆಯಲ್ಲಿ ಎಸ್ ಐ ಇಲ್ಲದ ದಿನಗಳಲ್ಲಿ ಕೋದಂಡಯ್ಯನದೇ ರಾಜ್ಯಭಾರ. ಇದ್ದ ಮೂರು ನಾಲ್ಕು ಪೇದೆಗಳಿಗೆ ಒಂದೆರಡು ಸೂಚನೆಗಳಿತ್ತು ವಿವೇಕಾನಂದನಗರದತ್ತ ವಾಹನ ಚಲಾಯಿಸಿದ. +“ಕೊಲೆಗಾರ ದೇವಕಿ ಆಂಟಿಗೆ ಕಳಿಸಿದ ಇ ಮೇಲ್ ಸರ್ ಇದೂ. ಅವರ ಪಾಸ್‌ವರ್ಡ್ ಕಂಡುಹಿಡಿದುಬಿಟ್ಟೆ ಸರ್. ಅದು ವಾಸುಕಿ ಅಂತ. ರಾತ್ರಿ ಹತ್ತೂವರೆಗೆ ತನ್ನನ್ನ ಭೇಟಿಯಾಗೋದಿಕ್ಕೆ ಇ ಮೇಲ್ ಮೂಲಕ ಸೂಚಿಸಿದ್ದಾನೆ. ಇಲ್ಲಿ ನೋಡಿ ಸರ್.” ಮೇಲಿನ ಅರ್ಧಭಾಗದಲ್ಲಿ ಪುಟ್ಟ ಪುಟ್ಟ ಕಪ್ಪು ಅಕ್ಷರಗಳಿಂದ ತುಂಬಿದ್ದ ಬಿಳಿಯ ಹಾಳೆಯೊಂದನ್ನು ಅವನ ಮುಂದೆ ಹಿಡಿದಳು ಮಾನ್ಸಿ. +ಹಾಳೆಯನ್ನು ಕೈಗೆ ತೆಗೆದುಕೊಂದು ಕಣ್ಣಾಡಿಸಿದ ಕೋದಂಡಯ್ಯ. ಕಣ್ಣುಗಳನ್ನು ಕಿರಿದುಗೊಳಿಸಿದ. ತುಟಿಗಳು ಸೊಟ್ಟಗಾದವು. ಹಾಳೆಯನ್ನು ಅವಳಿಗೇ ಹಿಂತಿರುಗಿಸಿದ. +“ಈ ಪರಂಗೀ ಭಾಷೇನ ಸರಿಯಾಗಿ ಕಲೀಲಿಲ್ಲಮ್ಮ ನಾನು. ಸ್ವಲ್ಪ ಇದನ್ನ ನಮ್ಮ ಕಸ್ತೂರಿ ಕನ್ನಡಕ್ಕೆ ಅನುವಾದ ಮಾಡಿಬಿಡು ತಾಯೀ.” ಕಿರುನಗೆ ಸೂಸಿದ. +ಐದು ನಿಮಿಷಗಳಲ್ಲಿ ಮುದ್ದಾದ ಅಕ್ಷರಗಳಲ್ಲಿದ್ದ ಕನ್ನಡ ಅನುವಾದ ಅವನ ಕೈಯಲ್ಲಿತ್ತು. ಕಣ್ಣರಳಿಸಿ ಓದಿದ. +ನನ್ನ ಬದುಕನ್ನ ನಾನು ಈಗ ಸರಿ ಮಾಡಿಕೊಳ್ಳೋದಿಕ್ಕೆ ಹೊರಟಿದ್ದೀನಿ. ಇದಕ್ಕೆ ನಿನ್ನಿಂದ ಈ +ರೀತಿಯ ವಿರೋಧವನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಮಾಡೋದಿಕ್ಕೆ ಹೊರಟಿರೋ +ಕೆಲಸದಿಂದ ನಿನಗಾಗೋ ನಷ್ಟ ಏನು ಅಂತ ನಂಗರ್ಥ ಆಗ್ತಾ ಇಲ್ಲ. ನೀನು ಯಾವುದನ್ನೂ +ಸರಿಯಾಗಿ ಹೇಳ್ತಾನೇ ಇಲ್ಲ. ಇದರ ಬಗ್ಗೆ ನಾವಿಬ್ಬರೇ ಒಂದುಕಡೆ ಕೂತು ಮಾತಾಡಿದ್ರೆ +ಹೇಗೆ? ಈ ರಾತ್ರಿ ಹತ್ತೂವರೆಯ ಹೊತ್ತಿಗೆ ಮನೆಗೆ ಬಾ. ನಾನು ಕಾಯ್ತಾ ಇರ್ತೀನಿ. +ನನ್ನ ಮನಸ್ನಲ್ಲಿರೋದನ್ನ ನಿಂಗೆ ಹೇಳ್ತೀನಿ; ನಿನ್ನ ಮನಸ್ನಲ್ಲಿರೋದನ್ನ ನಂಗೆ ಹೇಳು. ಏನು +ಮಾಡೋದು ಅನ್ನೋದನ್ನ ಇಬ್ರೂ ಸೇರಿ ತೀರ್ಮಾನಿಸೋಣ. ನಿಂಗೆ ಇಷ್ಟ ಇಲ್ಲವೇ ಇಲ್ಲ +ಅಂದರೆ ನಾನು ಈ ಕೆಲಸವನ್ನ ಮಾಡೋದಿಕ್ಕೆ ಹೋಗೋದೇ ಇಲ್ಲ. ಆದರೆ ನೀನು ಹಾಗೆ +ಹೇಳೋದಿಕ್ಕೆ ಮೊದ್ಲು ನನ್ನ ಅನಿಸಿಕೆಗಳೇನು ಅನ್ನೋದನ್ನ ತಿಳಕೊಳ್ಳೋದು ನ್ಯಾಯ ಅಲ್ವಾ? +ರಾತ್ರಿ ಹತ್ತು ಗಂಟೆಗೆ ಮನೇನಲ್ಲಿ ಕಾಯ್ತಾ ಇರ್ತೀನಿ. ಬಾ. +ಅದರ ಮೇಲೆ ಒಮ್ಮೆ ಕಣ್ಣಾಡಿಸಿದ ಕೋದಂಡಯ್ಯ. ತಲೆಯೆತ್ತಿ ಪ್ರಶ್ನಿಸಿದ. +“ಇದನ್ನ ಕಳಿಸಿರೋ ಮನುಷ್ಯನ ಹೆಸ್ರೂ ಗಿಸ್ರೂ ಇಲ್ವಮ್ಮ?” +“ಏನೋ ಡೆಸರ್ಟ್ ಫಾಕ್ಸ್ ಅಂತ ಇದೆ. ಆದ್ರೆ ಅದು ನಿಜವಾದ ಹೆಸರಿನ ಹಾಗೆ ಕಾಣೋದಿಲ್ಲ ಸರ್. ಕೊಲೆಗಾರ ಈ ಕಳ್ಳ ಹೆಸರಲ್ಲಿ ಸೃಷ್ಟಿಕೊಂಡಿರೋ ಇ ಮೇಲ್ ಐಡಿ ಮಾತ್ರ ಇದೆ.” ಇಂಗ್ಲಿಷ್ ಪ್ರತಿಯ ಒಂದುಕಡೆ ಬೆರಳು ಮಾಡಿದಳು. ಕೋದಂಡಯ್ಯ ಅದರ ಮೇಲೆ ಕಣ್ಣಾಡಿಸಿದ. ಲೊಚಗುಟ್ಟುತ್ತಾ ಪ್ರಶ್ನೆ ಹಾಕಿದ. +“ಇದೇನಮ್ಮ ಇದೂ?” +“ಅದೇ ಸರ್ ಡೆಸರ್ಟ್ ಫಾಕ್ಸ್ ಅನ್ನೋ ಕಳ್ಳ ಹೆಸರು ಮತ್ತು ಅವನ ಇ ಮೇಲ್ ಐಡಿ. +“ಈ ಐಡಿ ನೋಡಿದ್ರೆ ಏನೂ ಐಡಿಯಾ ಹೊಳೆಯೋದಿಲ್ವಾ ಮಾನ್ಸೀ?” ಕಣ್ಣುಗಳನ್ನು ಪಕಪಕನೆ ಆಡಿಸುತ್ತಾ ಪ್ರಶ್ನಿಸಿದ ಕೋಡಂಡಯ್ಯ. ಅವನನ್ನೇ ಒಮ್ಮೆ ಪೆಚ್ಚಾಗಿ ನೋಡಿದ ಮಾನ್ಸಿ ಸಾವರಿಸಿಕೊಂಡು ಉತ್ತರಿಸಿದಳು. “ದೇವಕಿ ಆಂಟೀ ತನ್ನ ಪರಿಚಯದವರ ಹೆಸರು ಮತ್ತು ಇ ಮೇಲ್ ಐಡೀಗಳನ್ನ ಒಂದು ನೀಲೀ ಡೈರೀನಲ್ಲಿ ಬರೆದಿಟ್ಟಿದ್ದಾರೆ. ಅದನ್ನ ನೋಡಿದ್ರೆ ಡೆಸರ್ಟ್ ಫಾಕ್ಸ್ ಅನ್ನೋ ಹೆಸರಿನ ವ್ಯಕ್ತಿ ಯಾರು ಅಂತ ಗೊತ್ತಾಗಿಬಿಡತ್ತೆ.” ಅತುರಾತುರವಾಗಿ ಹೇಳಿದಳು. ಉಸಿರೆಳೆದುಕೊಂಡು ದನಿ ಎತ್ತರಿಸಿದಳು. “ಕೊಲೆಗಾರ ಸಿಕ್ಕಿಹೋಗ್ತಾನೆ.” +ತನ್ನ ಪ್ರೀತಿಯ ದೇವಕಿ ಆಂಟಿಯ ಕೊಲೆಗಾರನನ್ನು ತಾನು ಪತ್ತೆ ಮಾಡಿಬಿಟ್ಟೆ ಎಂಬ ಸಮಾಧಾನ, ಸಂತೋಷ ಅವಳಿಗೆ. +ಅವಳ ಬೆವರುಗಟ್ಟಿದ ಮುಖವನ್ನೂ, ಹೊಳೆಯುತ್ತಿದ್ದ ಕಣ್ಣುಗಳನ್ನೂ ತದೇಕಚಿತ್ತನಾಗಿ ದಿಟ್ಟಿಸಿದ ಕೋದಂಡಯ್ಯ. +“ಆಯ್ತಮ್ಮ, ಆ ಡೈರೀನ ಪತ್ತೇ ಮಾಡ್ತೀನಿ.” ಮೆಲ್ಲಗೆ ಹೇಳಿದ. +“ಆ ಡೈರಿ ಅವರ ಬೆಡ್ ರೂಂನ ಟೇಬಲ್ ಮೇಲೇ ಇದೆ ಸರ್. ಈಗ್ಲೇ ಹೋಗಿ ನೋಡೋಣ ಸರ್.” ಕಣ್ಣುಗಳನ್ನು ಅರಳಿಸಿ ಹೇಳಿದಳು ಮಾನ್ಸಿ. +“ಬೆಡ್ ರೂಂನ ಟೇಬಲ್ ಮೇಲೆ.” ಬೇಸರದ ಉಸಿರು ಹಾಕಿದ ಕೋದಂಡಯ್ಯ. ಮುಖದಲ್ಲಿ ನಿರಾಶೆ ಮೂಡಿತು. ಮಾನ್ಸಿ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದಳು. ಕೋದಂಡಯ್ಯನ ಉತ್ತರ ತಡೆದುಬಂತು. +“ಆ ಕೋಣೇನ ಎಸ್. ಐ. ಸೀಲ್ ಮಾಡಿಬಿಟ್ಟಿದ್ದಾರೆ ಕಣಮ್ಮ.” ಅವಳೇನೋ ಹೇಳಲು ಬಾಯಿ ತೆರೆಯುತ್ತಿದ್ದಂತೇ ಮುಂದಿನ ಮಾತು ಹೊರಹಾಕಿದ. “ಎಸ್. ಐ. ಈವತ್ತು ಬೆಳಿಗ್ಗೆ ಬೆಂಗ್ಳೂರಿಗೆ ಹೋದ್ರು ಕಣಮ್ಮ. ಹಿಂತಿರುಗೋದಿಕ್ಕೆ ಎರಡು ದಿನ ಆಗುತ್ತೆ.” +“ಓಹ್.” ನಿರಾಶೆಯಲ್ಲಿ ಉದ್ಗರಿಸಿದಳು ಮಾನ್ಸಿ. +ಅವಳಿಗೇನೋ ಹೇಳಲು ಅವನು ಬಾಯಿ ತೆರೆಯುವಷ್ಟರಲ್ಲಿ ಕಿಟಕಿಯಲ್ಲಿ ನೆರಳು ಕಂಡಿತು. ಇಬ್ಬರೂ ಸರಕ್ಕನೆ ಅತ್ತ ತಿರುಗಿದರು. +ಗೇಟ್‌ನತ್ತ ಸರಸರನೆ ನಡೆದುಹೋಗುತ್ತಿದ್ದ ನರಹರಿ. +* * * +ಕಣ್ಣು ಮುಚ್ಚಿದಂತೇ ಮಸಾಲೆ ಚಾಯನ್ನು ಒಂದೊಂದು ಗುಟುಕಾಗಿ ಹೀರಿದ ಕೋದಂಡಯ್ಯ. ತಲೆಯಲ್ಲಿ ಚಕ್ರ ಭ್ರಮಿಸುತ್ತಿತ್ತು. +ಇದ್ದಕ್ಕಿದ್ದಂತೇ ಬೆಂಗಳೂರಿಗೆ ಹಾರುವ ಹುಚ್ಚು ಎಸ್ ಐಗೆ ಯಾಕೆ ಬಂತು? ಕರ್ತವ್ಯದ ಮೇಲೆ ಹೋಗುತ್ತಿರುವುದಾಗಿ ರಜಾ ಅರ್ಜಿಯಲ್ಲಿ ಬರೆದಿದ್ದಾರೆ. ಎರಡು ದಿನಗಳ ಆನ್ ಡ್ಯೂಟಿ ಲೀವ್ ತೆಗೆದುಕೊಂಡು ಯಾರಿಗೂ ಹೇಳದೇ ಗುಟ್ಟಾಗಿ ಮಾಡುವ ಅದೆಂತಹ ಡ್ಯೂಟಿ ಅದು? ಆತ ಈಗ ಇಲ್ಲಿದ್ದರೆ ದೇವಕಿಯ ನೀಲೀ ಡೈರಿಯನ್ನ ನೋಡಬಹುದಾಗಿತ್ತು. ಕೊಲೆಗಾರನ ಪತ್ತೆ ಆಗಿಹೋಗಿರುತ್ತಿತ್ತು. +ಇರಲಿ, ಯಾವತ್ತು ಬರುತ್ತಾರೋ ಬರಲಿ. ನನಗೇಕೆ ಅದರ ಚಿಂತೆ? ಈ ಕೊಲೆಯ ತನಿಖೆ ನನ್ನ ತಲೆನೋವೆನೂ ಅಲ್ಲವಲ್ಲ? ಅದೇನಿದ್ದರೂ ಅವರ ಕೆಲಸ. ಅವರು ಹೇಳಿದ್ದನ್ನು ಮಾಡುವುದಷ್ಟೇ ನನ್ನ ಕೆಲಸ… +ಕಣ್ಣು ತೆರೆದು ಖಾಲಿ ಕಪ್ಪನ್ನು ಟೇಬಲ್ ಮೇಲಿಡುತ್ತಿದ್ದಂತೇ ಬಾಗಿಲಲ್ಲಿ ನೆರಳು ಕಂದಿತು. ಗೋಕುಲ್ ತಲೆ ಒಳಗೆ ಹಾಕಿದ. +“ಸಾರ್, ಅಕ್ಕನಿಗೆ ಬಂದ ಇ ಮೇಲ್‌ನ ನೀವು ಓದಿದ್ರಂತೆ. ಮಾನ್ಸಿ ಹೇಳಿದ್ಲು.” ಉದ್ವೇಗದಲ್ಲಿ ಅವನ ದನಿ ಕಂಪಿಸುತ್ತಿತ್ತು. +“ಹೌದು ನೋಡ್ದೆ. ಮಾನ್ಸಿಗೆ ನಮ್ಮ ಇಲಾಖೆ ಮೆಡಲ್ ಕೊಟ್ಟು ಗೌರವಿಸಬೇಕು.” ಹಾಗೆಂದವನು ಅಟೆಂಡರ್ ಬೂಕಯ್ಯನನ್ನು ಕರೆದು ಮತ್ತೊಂದು ಟೀ ತರಲು ಹೇಳಿದ. +ಕುರ್ಚಿಯಲ್ಲಿ ಕುಳಿತ ಗೋಕುಲ್ ಜೇಬಿನಿಂದ ಕರವಸ್ತ್ರ ತೆಗೆದು ಮುಖ ಒರೆಸಿಕೊಂಡ. “ಇನ್ಸ್‌ಪೆಕ್ಟರ್ ಬೆಂಗ್ಲೂರ್‍ನಿಂದ ಇನ್ನೂ ಬಂದಿಲ್ವಾ ಸರ್?” ಪ್ರಶ್ನಿಸಿದ. +“ಅವರು ಬೆಂಗ್ಳೂರಿಗೆ ಹೋಗಿದ್ದಾರೆ ಅಂತ ಮಾನ್ಸಿ ಹೇಳಿದ್ರೇನು?” +“ಹ್ಞೂಂ.” ಕರವಸ್ತ್ರದಿಂದ ಮತ್ತೊಮ್ಮೆ ಹಣೆ ಒತ್ತಿದ ಗೋಕುಲ್. +“ಇನ್ಸ್‌ಪೆಕ್ಟರ್ ಇದ್ದಿದ್ರೆ ಸೀಲ್ ತೆಗೆಸಿ ಕೋಣೆ ಒಳಗೆ ಹೋಗಬೋದಾಗಿತ್ತು. ಡೈರಿ ನೋಡಿದ ಕೂಡ್ಲೇ ಅದು ಯಾರು ಅಂತ ಗೊತ್ತಾಗಿಬಿಡ್ತಿತ್ತು.” ಲೊಚಗುಟ್ಟಿದ ಕೋದಂಡಯ್ಯ. +ಗೋಕುಲ್ ಮುಖ ಮುಂದೆ ತಂದ. +“ಟೇಬಲ್ ಮೇಲೆ ಡೈರಿ ಇಲ್ಲಾ ಸರ್. ಅರ್ಧಗಂಟೇ ಹಿಂದೆ ನಾನೂ ಮಾನ್ಸೀನೂ ಕಿಟಕಿ ಮೂಲಕ ರೂಂ ಒಳಗೆ ನೋಡಿದ್ವಿ. ಟೇಬಲ್ ಮೇಲೆ ಡೈರಿ ಇಲ್ಲ.” +ಕೋದಂಡಯ್ಯ ಬೆಚ್ಚಿದ. +“ನಿಮ್ಮಕ್ಕ ಅದನ್ನ ಬೇರೆಲ್ಲಾದ್ರೂ ಇಟ್ಟಿರಬೋದೇನೋ.” ದನಿ ಎಳೆದ. +ನಕಾರದಲ್ಲಿ ತಲೆ ಅಲುಗಿಸಿದ ಗೋಕುಲ್. +“ಅಕ್ಕ ಅದನ್ನ ಯಾವಾಗ್ಲೂ ಅಲ್ಲೇ ಇಡೋದು. ನಾನಿಲ್ಲಿಗೆ ಬಂದಾಗಿನಿಂದ ಅದನ್ನ ಆ ಜಾಗ ಬಿಟ್ಟು ಬೇರೆ ಕಡೆ ನೋಡಿಲ್ಲ. ಅದೀಗ ಅಲ್ಲಿಲ್ಲ ಅಂದ್ರೆ ಕೊಲೆಗಾರ ಅದನ್ನ ಎತ್ಕೊಂಡು ಹೋಗಿದ್ದಾನೆ ಅಂತಾನೇ ಅರ್ಥ.” +ಅವನ ದನಿಯಲ್ಲಿನ ನಿಖರತೆಗೆ ಅವಾಕ್ಕಾದ ಕೋದಂಡಯ್ಯ. ಇಬ್ಬರ ನಡುವೆ ಮೌನ ನೆಲೆಸಿತು. ನಿಮಿಷಗಳ ಮೌನವನ್ನು ಗೋಕುಲ್‌ನೇ ಭಂಗಿಸಿದ. +“ಆ ಇ ಮೇಲ್ ನೋಡಿದ್ರಲ್ಲ ನಿಮಗೇನನ್ಸುತ್ತೆ? ಯಾರ ಮೇಲಾದ್ರೂ ಸಂದೇಹ?” +ಕೋದಂಡಯ್ಯ ತಲೆಯೆತ್ತಿ ತಿರುಗುತ್ತಿದ್ದ ಫ್ಯಾನಿನ ಮೇಲೆ ದೃಷ್ಟಿ ನೆಟ್ಟ. +“ಡೈರಿ ಸಿಕ್ಕಿಬಿಟ್ರೆ ಕೊಲೆಗಾರನ ಪತ್ತೆಯಾಗಿಹೋಗುತ್ತೆ ಅನ್ನೋ ಸಮಾಧಾನ ಇದ್ದಿದ್ರಿಂದ ಯಾರ ಮೇಲೂ ಸಂದೇಹ ಪಡೋ ಶ್ರಮಾನ ತಗೋಂಡಿರಲಿಲ್ಲ. ಈಗ ಆ ಡೈರಿ ಸುಲಭವಾಗಿ ಸಿಗೋದಿಲ್ಲ ಅಂತ ತಿಳಿದ ಮೇಲೆ ಸ್ವಲ್ಪ ತಲೆಗೆ ಕೆಲಸ ಕೊಡಬೇಕು. ಊಹೆ ಮಾಡೋ ಸರ್ಕಸ್ ಶುರು ಮಾಡಬೇಕು. ಮತ್ತೊಂದು ಸಲ ಆ ಇ ಮೇಲ್ ನೋಡಿದ್ರೆ ಮೆದುಳು ತನ್ನ ಕೆಲಸ ಆರಂಭಿಸೋದಿಕ್ಕೆ ಅನುಕೂಲ.” ಹೇಳುತ್ತಾ ಟೇಬಲ್ ಮೇಲಿದ್ದ ಫೈಲ್‌ಗಳನ್ನು ಅತ್ತಿತ್ತ ಸರಿಸತೊಡಗಿದ. +ಮೂರುನಾಲ್ಕು ನಿಮಿಷಗಳ ಹುಡುಕಾಟ ವ್ಯರ್ಥವಾಯಿತು. ಮಾನ್ಸಿ ಮಾಡಿಕೊಟ್ಟಿದ್ದ ಈ ಮೇಲ್‌ನ ಕನ್ನಡ ಅನುವಾದ ಇದ್ದ ಹಾಳೆ ಕಾಣೆಯಾಗಿತ್ತು! +ಬೆಳಿಗ್ಗೆ ತಾನೇ ತಂದು ಇಲ್ಲಿಟ್ಟ ಹಾಳೆ ಅದೆಲ್ಲಿ ಮಾಯವಾಯಿತು? +“ಇಲ್ಲೇ ಇಟ್ಟಿದ್ದೆ. ಈಗ ಕಾಣ್ತಾ ಇಲ್ಲ.” ಬೇಸರದ ಉದ್ಗಾರ ತೆಗೆದು ಮತ್ತೊಮ್ಮೆ ಫೈಲುಗಳನ್ನು ಅತ್ತಿತ್ತ ಎಳೆದಾಡಿದ. +ಗೋಕುಲ್‌ನ ಮುಖದಲ್ಲಿ ಕಿರುನಗೆ ಮಿಂಚಿತು. +“ಅದು ಕಳೆದುಹೋದ್ರೆ ಚಿಂತೆ ಬೇಡ. ಹತ್ತಿರದ ಯಾವುದಾದ್ರೂ ಇಂಟಟ್‌ನೆಟ್ ಕೆಫೆಗೆ ಹೋದ್ರೆ ಎರಡು ನಿಮಿಷದಲ್ಲಿ ಅದರ ಇನ್ನೊಂದು ಕಾಪಿ ತೆಗೆದುಕೊಡ್ತೀನಿ. ಅಕ್ಕನ ಪಾಸ್‌ವರ್ಡ್ ಏನಂತ ನಂಗೆ ಗೊತ್ತು. ಮಾನ್ಸಿ ಅದನ್ನ ನಂಗೆ ಹೇಳಿದ್ದಾಳೆ.” +ಕೋದಂಡಯ್ಯನ ಮುಖದ ಬೇಸರ ಕ್ಷಣದಲ್ಲಿ ಮಾಯವಾಯಿತು. ಗೋಕುಲ್ ಆಪದ್ಭಾಂಧವನಂತೆ ಕಂಡ. +“ಇಂಟರ್‌ನೆಟ್ ಕೆಫೆ ಯಾಕೆ? ನಮ್ಮ ಸ್ಟೇಷನ್‌ನಲ್ಲೇ ಕಂಪ್ಯೂಟರ್ ಇದೆ. ಇಂಟರ್‌ನೆಟ್ಟೂ ಇದೆ. ನಡೀರೀ ಅಲ್ಲಿಗೆ ಹೋಗೋಣ.” ಉತ್ಸಾಹದಿಂದ ಮೇಲೆದ್ದ. ಗೋಕುಲ್ ಕಿರುನಗೆ ಸೂಸುತ್ತಾ ಅವನ ಹಿಂದೆಯೇ ನಡೆದ. +ಸ್ಟೆನೋ ಮಹೇಶ್ ಪೋಲಿ ವೆಬ್ ಸೈಟ್‌ಗಳನ್ನು ನೋಡಲು ಮಾತ್ರ ಉಪಯೋಗವಾಗುತ್ತಿದ್ದ ಕಂಪ್ಯೂಟರ್ ಈಗ ಮುಸುಕು ಹೊದ್ದು ಕುಳಿತಿತ್ತು. ಮಹೇಶ್ ಎಲ್ಲೂ ಕಾಣಲಿಲ್ಲ. ಎಸ್. ಐ. ಠಾಣೆಯಲ್ಲಿ ಇಲ್ಲದ ದಿನಗಳಲ್ಲಿ ಅವನನ್ನು ಕೇಳುವವರಾರೂ ಇರಲಿಲ್ಲ. +ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಣ್ಣರಳಿಸಿ ನೋಡಿದ ಕೋದಂಡಯ್ಯ. +“ನಿಮ್ಮ ಪ್ರಿಂಟರ್ ಕೆಲಸ ಮಾಡ್ತಾ ಇಲ್ಲ. ಧೂಳು ಹಿಡಿದು ಕೂತಿದೆ. ತಿಪ್ಪೆಗೆ ಹಾಕಿ ಇದನ್ನ.” ಅದರ ಮೇಲೆ ಅಸಡ್ಡೆಯಿಂದ ಬಡಿದ ಗೋಕುಲ್. +ಕೋದಂಡಯ್ಯ ಕೈ ಅಲ್ಲಾಡಿಸಿದ. +“ಅದು ಹಾಳಾಗಲೀ. ಪ್ರಿಂಟು ಗಿಂಟು ಏನೂ ಬ್ಯಾಡ ಈ ಇಂಗ್ಲೀಷ್‌ನಲ್ಲಿರೋದನ್ನ ತಗೋಂಡು ನಾನೇನು ಉಪ್ಪಿನಕಾಯಿ ಹಾಕ್ಕೊಂಡು ನೆಕ್ಕಲೇ? ಈ ಹಾಳೇನಲ್ಲಿ ಅದರ ಕನ್ನಡ ಅನುವಾದ ಬರೆದುಬಿಡಿ. ನಂಗೆ ಅದು ಸಾಕು. ಇಂಗ್ಲೀಷು ಪಂಗ್ಲೀಷು ನಮ್ ಸಾಹೇಬ್ರು ಬಂದು ನೋಡ್ಕೋತಾರೆ.” ಹಾಳೆಯೊಂದನ್ನು ಅವನ ಮುಂದಿಟ್ಟ. +ಗೋಕುಲ್‌ನ ಮುಖದ ನಗೆ ದೊಡ್ಡದಾಯಿತು. “ಸರಿ ಹಾಗೇ ಮಾಡ್ತೀನಿ. ಎರಡು ನಿಮಿಷದ ಕೆಲಸ ಅದು.” ಕಂಪ್ಯೂಟರಿನ ಪರದೆಯನ್ನೇ ನೋಡುತ್ತಾ ಹೇಳಿದ. +ಗೋಕುಲ್ ನೀಡಿದ ಹಾಳೆಯನ್ನು ತೆಗೆದುಕೊಂಡ ಕೋದಂಡಯ್ಯ ಅವನಿಗೆ ಮೂರು ನಾಲ್ಕು ಸಲ “ಥ್ಯಾಂಕ್ಸ್” ಹೇಳಿದ. ಹಾಳೆಯ ಮೇಲೆ ಕಣ್ಣಾಡಿಸುವಷ್ಟರಲ್ಲಿ ಹೊರಗೆ ಗದ್ದಲ ಕೇಳಿಸಿತು. “ಫಕ್ರುದ್ದೀನ್ ಅದೇನು ನೋಡೋ.” ಕೂಗಿ ಹೇಳಿದ. ಫಕ್ರುದ್ದೀನ್‌ನ ದನಿ ಹಿಂದೆಯೇ ಬಂತು. “ಸ್ವಲ್ಪ ನೀವೇ ಬಂದ್ರೆ ಒಳ್ಳೇದು.” +“ಥತ್” ಎಂದು ಗೊಣಗುತ್ತಾ ಹೊರಗೆ ನಡೆದ. ಅಲ್ಲಿ ಕಂಡದ್ದು ಯುವಕನೊಬ್ಬನನ್ನು ಸುತ್ತುಗಟ್ಟಿ ನಿಂತಿದ್ದ ಏಳೆಂಟು ಜನ. ಒಂದಿಬ್ಬರು ಹೆಂಗಸರೂ ಇದ್ದರು. +ಕೈಲಿದ್ದ ಹಾಳೆಯನ್ನು ತನ್ನ ಟೇಬಲ್‌ನ ಡ್ರಾ ಒಳಗೆ ಸೇರಿಸಿ ಹಿಂದೆಯೇ ಬಂದಿದ್ದ ಗೋಕುಲ್‌ನತ್ತ ತಿರುಗಿದ. +“ಯಾವುದೋ ರೋಡ್ ರೋಮಿಯೋ ಕೇಸ್ ಇರಬೇಕು. ನಿಮಗೆ ಬೇರೇನಾದ್ರೂ ಕೆಲಸ ಇದ್ರೆ ಹೊರಟುಬಿಡಿ. ಆಮೇಲೆ ಮತ್ತೆ ಭೇಟಿಯಾಗೋಣ.” +ಗಡಿಯಾರ ನೋಡಿದ ಗೋಕುಲ್ ಗಾಬರಿಯ ಮುಖ ಮಾಡಿದ. ಆತುರಾತುರವಾಗಿ ಹೇಳಿದ. “ನರಹರಿ ಜತೆ ಲಂಚ್‌ಗೆ ಹೋಗೋ ಪ್ರೋಗ್ರಾಂ ಇದೆ. ನೀವು ನಿಮ್ಮ ಕೆಲಸ ಮಾಡಿ. ನಾನಿನ್ನು ಹೊರಡ್ತೀನಿ. ತಡ ಆದ್ರೆ ನರಹರಿ ಹುಚ್ಚುಕುದುರೆ ಥರಾ ಆಡ್ತಾನೆ.” ಮಾತು ಮುಗಿಸಿ ತಲೆತಗ್ಗಿಸಿ ಸರಸರನೆ ನಡೆದುಹೋದ. +ರೋಡ್ ರೋಮಿಯೋಗೆ ಸರಿಯಾದ ಸತ್ಕಾರ ಮಾಡಿ ಉದ್ರಿಕ್ತ ಜನರ ಗುಂಪನ್ನು ಶಾಂತಗೊಳಿಸುವಷ್ಟರಲ್ಲಿ ಒಂದುಗಂಟೆಗೂ ಹೆಚ್ಚು ಸಮಯ ಕಳೆದುಹೋಯಿತು. ಮೂರುಗಂಟೆಗೆ ಮನೆ ಸೇರಿ ಊಟ ಮುಗಿಸಿ ಒಂದುಗಂಟೆ ರೆಸ್ಟ್ ತೆಗೆದುಕೊಂಡು ಠಾಣೆಗೆ ಹಿಂತಿರುಗಿದ ಕೋದಂಡಯ್ಯ. +ಗೋಕುಲ್ ಮಾಡಿಕೊಟ್ಟಿದ್ದ ಇ ಮೇಲ್‌ನ ಕನ್ನಡ ಅನುವಾದವನ್ನು ಮತ್ತೊಮ್ಮೆ ಓದಿದ. ಬೆಳಿಗ್ಗೆ ಮಾನ್ಸಿ ಮಾಡಿದ್ದ ಪ್ರತಿಯನ್ನು ಸರಿಯಾಗಿ ಓದಲೇ ಆಗಿರಲಿಲ್ಲ. ಈಗ ಇದನ್ನು ಓದುತ್ತಿದ್ದಂತೇ ಮನಸ್ಸಿಗೆ ಹತ್ತಿದ್ದ ಪೊರೆ ಸರಿಯುತ್ತಿರುವಂತೆನಿಸಿತು. ‘ಇಡೀ ಪ್ರಕರಣದ ಕೀಲಿ ಕೈ ಇದು. ಇದನ್ನು ಜೋಪಾನವಾಗಿಡಬೇಕು. ಎಸ್. ಐ. ಬಂದ ಒಡನೇ ಅವರ ಮುಂದೆ ಹಿಡೀಬೇಕು.’ ಯೋಚಿಸುತ್ತಾ ಟೈಟಸ್‌ನ ಕೋಣೆಯತ್ತ ನಡೆದ. ಮನದಲ್ಲಿ ಗೊಂದಲ. +“ನಿನ್ನೆ ರಾತ್ರಿ ನರಹರಿ ಹೇಳಿದ ವಿಷಯಗಳಲ್ಲಿ ಎಷ್ಟು ನಿಜ?” +ತನ್ನಲ್ಲೇ ಗೊಣಗಿಕೊಂಡು ಕೋಣೆಯೊಳಗೆ ಕಾಲಿಟ್ಟ. ಟೇಬಲ್ ಸಮೀಪಿಸಿದವನು ಅವಾಕ್ಕಾಗಿ ನಿಂತ. +ಬೆಳಿಗ್ಗೆ ಮಾನ್ಸಿ ಕೊಟ್ಟ ಹಾಳೆಗಳು ಅಲ್ಲೇ ಇದ್ದವು! +ಅರೆ! ಬೆಳಿಗ್ಗೆ ಇದನ್ನು ಇಲ್ಲಿ ತಂದಿಟ್ಟಿದ್ದು ಮರೆತೇಹೋಗಿತ್ತಲ್ಲ! ಅನ್ಯಾಯವಾಗಿ ಆ ಗೋಕುಲ್‌ಗೆ ತೊಂದರೆ ಕೊಟ್ಟೆನಲ್ಲ? +ಪೇಪರ್ ವೆಯಿಟ್ ಕೆಳಗಿದ್ದ ಹಾಳೆಯನ್ನೇ ಕಣ್ಣು ಮಿಟುಕಿಸದೇ ನೋಡಿದ. ಮಾನ್ಸಿಯ ಅಕ್ಷರಗಳು ಮುದ್ದಾಗಿ ಕಂಡವು. ಕೈಗೆತ್ತಿಕೊಂಡು ಒಮ್ಮೆ ಓದಿದ. ತುಟಿಗಳನ್ನು ಅಲುಗಿಸುತ್ತಾ ಮತ್ತೆರಡು ಸಲ ಓದಿದ. ಇನ್ನೊಂದು ಸಲ… +“ಅದನ್ನೇನು ಸಾರ್ ಹಂಗೆ ನೋಡ್ತಿದೀರಿ?” ಒಳಬಂದ ಫಕ್ರುದ್ದೀನ್ ಪ್ರಶ್ನಿಸಿದ. +ಕೋದಂಡಯ್ಯನ ಮುಖದಲ್ಲಿ ನಗೆ ಅರಳಿತು. +“ನೋಡಬೇಕಾದದ್ದೇ ಕಣಯ್ಯ. ಈ ಎರಡು ಹಾಳೆಗಳನ್ನೂ ನೋಡು. ಎರಡರಲ್ಲೂ ಇರೋ ವಿಷಯ ಒಂದೇ. ಅದ್ರಲ್ಲಿ ವ್ಯತ್ಯಾಸ ಇಲ್ಲ. ಆದ್ರೆ ಬರವಣಿಗೆ ನೋಡಯ್ಯ. ಇದು ಹುಡುಗಿ ಬರೆದದ್ದು. ಅಕ್ಷರಗಳು ಮುತ್ತಿನ ಮಣಿಯಂತಿವೆ. ಇದು ನೋಡು, ಹುಡುಗ ಬರೆದದ್ದು. ಕೋಳಿ ಕೆದಕಿದ ಹಾಗಿದೆ.” +“ಹುಡುಗ ಹುಡುಗಿ ಬರೆದಿರೋ ಕಾಗದಗಳನ್ನ ಹಿಡಕೊಂಡು ನೀವು ಕನಸು ಕಾಣಿ. ನಂಗೆ ಬೇರೆ ಕೆಲ್ಸಾ ಇದೆ.” ಹೇಳುತ್ತಾ ಟೇಬಲ್ ಮೇಲೆ ಪತ್ರಗಳನ್ನಿಟ್ಟು ಹೊರಗೆ ನಡೆದ ಫಕ್ರುದ್ದೀನ್. +ಅವನನ್ನು ತಡೆದು ಹೇಳಿದ ಕೋದಂಡಯ್ಯ. +“ಭರ್ಜರಿ ಮಸಾಲೆ ಟೀ ಕುಡೀಬೇಕು ಅನಿಸ್ತಿದೆ ಕಣಯ್ಯ. ಗಂಗಣ್ಣಿ ಹೋಟೆಲ್‌ನಿಂದ ತರೋದಿಕ್ಕೆ ಆ ಬೂಕಯ್ಯನಿಗೆ ಹೇಳು. ನಮ್ಮ ಕ್ಯಾಂಟೀನಿನ ಟೀ ಬ್ಯಾಡ. ಕತ್ತೆ ಉಚ್ಚೆ ಹಂಗಿರತ್ತೆ ಅದು. ಅದನ್ನ ಕುಡಿದ್ರೆ ಬಾಯೆಲ್ಲಾ ಕೆಟ್ಟುಹೋಗುತ್ತೆ.” ಮಾತು ಮುಗಿಸಿ ಸಿಳ್ಳು ಹಾಕುತ್ತಾ ತನ್ನ ಟೇಬಲ್‌ನತ್ತ ನಡೆದ. +* * * +ದುಂಡುಮೈನ ಗಂಗಣ್ಣಿ ವಿಶೇಷ ಅಸ್ಥೆಯಿಂದ ತಯಾರಿಸಿದ ಮಸಾಲೆ ಟೀನ ಒಂದೊಂದು ಹನಿಯನ್ನೂ ಆಸ್ವಾದಿಸಿದ ಕೋದಂಡಯ್ಯ ತೃಪ್ತಿಯಿಂದ ತಲೆದೂಗಿದ. ಎದ್ದು ಸೀದಾ ಹೊರಗೆ ನಡೆದು ಮೂಲೆಯ ಇಂಟರ್‌ನೆಟ್ ಕೆಫೆಗೆ ನುಗ್ಗಿದ. ಅತ್ತಿತ್ತ ನೋಡಿ ಖಾಲಿಯಿದ್ದ ಗೂಡೊಂದರೊಳಗೆ ಸೇರಿಕೊಂಡ. +ಠಾಣೆಯಲ್ಲಿರುವ ಕಂಪ್ಯೂಟರ್ ಬಿಟ್ಟು ಇಲ್ಲಿಗೆ ಬಂದ ಪೋಲೀಸಯ್ಯನನ್ನು ಕೆಫೆಯ ಹುಡುಗಿ ಅಚ್ಚರಿಯಿಂದ ದಿಟ್ಟಿಸಿದಳು. +ಮುಕ್ಕಾಲು ಗಂಟೆಗಳ ನಂತರ ಕೊದಂಡಯ್ಯ ಗೂಡೊಳಗಿಂದ ಹೊರಬಂದ. “ಪರವಾಗಿಲ್ಲ ಬಿಡೀ ಸಾರ್” ಎನ್ನುತ್ತಾ ತುಸುವೇ ಹಲ್ಲು ತೋರಿಸಿದ ಹುಡುಗಿಯ ಮುಂದೆ ಹತ್ತು ರೂಗಳ ಎರಡು ನೋಟುಗಳನ್ನಿಟ್ಟು ಸಿಳ್ಳು ಹಾಕುತ್ತಾ ಹೊರನಡೆದ. ಬೈಕ್ ಹತ್ತಿ ಸೀದಾ ವಿವೇಕಾನಂದ ನಗರದತ್ತ ಸಾಗಿದ. +ಬಾಗಿಲು ತೆರೆದ ಅಪರಿಚಿತ ಹೆಂಗಸು ಅಚ್ಚರಿಯ ಮುಖ ಮಾಡಿದಳು. ಕೋದಂಡಯ್ಯ ಪರಿಚಯ ಹೇಳಿಕೊಳ್ಳುವಷ್ಟರಲ್ಲಿ ಊರುಗೋಲಿನ ಆಸರೆಯಲ್ಲಿ ಮಾನ್ಸಿ ಹೊರಬಂದಳು. ಕೋದಂಡಯ್ಯನನ್ನು ನೋಡಿ ನಗೆ ಬೀರಿದಳು. ನೀಳ ನಿಲುವಿನ ಆಕರ್ಷಕ ಹೆಂಗಸು ತನ್ನ ಅತ್ತಿಗೆ ಎಂದು ಪರಿಚಯಿಸಿದಳು. +ಅರ್ಧಗಂಟೆಯ ಹಿಂದೆಯಷ್ಟೇ ಬೆಳಗಾವಿಯಿಂದ ಹಿಂತಿರುಗಿದ್ದ ವಸಂತರಾವ್ ದೇಶಪಾಂಡೆ ಮತ್ತವನ ಹೆಂಡತಿ ರಜನಿ ಕೋದಂಡಯ್ಯನ ಜತೆ ದೇವಕಿಯ ಕೊಲೆಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದರು. ನೆರೆಯಲ್ಲಾದ ದುರಂತ ಅವರಿಗೆ ಅತೀವ ನೋವುಂಟುಮಾಡಿದ್ದುದು ಅವರ ಮಾತುಗಳಿಂದ ಸ್ಪಷ್ಟವಾಗಿತ್ತು. +ಟೀ ಮಾಡಲು ಹೊರಟ ರಜನಿಗೆ ಬೇಡವೆಂದು ಹೇಳಿ ಮಾನ್ಸಿಯತ್ತ ತಿರುಗಿದ ಕೋದಂಡಯ್ಯ. +“ಬೆಳಿಗ್ಗೆ ಒಂದು ವಿಷಯ ಕೇಳೋದನ್ನ ಮರೆತೆ. ಈಗ ಕೇಳ್ತೀನಿ. ಬೇಸರ ಮಾಡ್ಕೋಬೇಡಮ್ಮ.” +ಅಡಿಗೆಮನೆಯತ್ತ ನಡೆಯುತ್ತಿದ್ದ ರಜನಿ ಹೆಜ್ಜೆ ಸ್ಥಗಿತಗೊಳಿಸಿದಳು. ದೇಶಪಾಂಡೆ ಕಣ್ಣರಳಿಸಿದ. ಮಾನ್ಸಿ ಕೋದಂಡಯ್ಯನತ್ತ ಕುತೂಹಲದ ನೋಟ ಬೀರಿದಳು. +ಕೋದಂಡಯ್ಯ ನೇರವಾಗಿ ವಿಷಯಕ್ಕೆ ಬಂದ. +“ನರಹರಿ ನಿನ್ನನ್ನ ಮದುವೆಯಾಗೋ ಆಸೆ ತೋರಿಸಿದ್ರೇ?” +ಮಾನ್ಸಿ ಬೆದರಿದಳು. ನರಹರಿಯ ಪ್ರಸ್ತಾಪ ಅವಳ ಕಣ್ಣುಗಳಲ್ಲಿ ಭೀತಿ ತಂದಿತ್ತು. +“ಹ್ಞೂ.” ಪಿಸುಗಿದಳು. +“ಅದನ್ನ ದೇವಕಿ ವಿರೋಧಿಸಿದರೇ?” +ಮಾನ್ಸಿ ಮತ್ತಷ್ಟು ಬೆದರಿದಳು. ಉತ್ತರಿಸದೇ ಅಣ್ಣನ ಮುಖವನ್ನೊಮ್ಮೆ, ಅತ್ತಿಗೆಯ ಮುಖವನ್ನೊಮ್ಮೆ ದಿಟ್ಟಿಸಿದಳು. ರಜನಿ ಅವಳ ನೆರವಿಗೆ ಬಂದಳು. +“ನಾನು ಹೇಳ್ತೀನಿ ಸರ್. ದೇವಕಿ ಅದನ್ನ ವಿರೋಧಿಸಿದ್ದು ನಿಜ. ಆಕೆಗೆ ಅದು ಸುತರಾಂ ಇಷ್ಟ ಇರ್ಲಿಲ್ಲ. ಈ ಮದುವೆ ನಡೆಯೋದಿಕ್ಕೆ ಸಾಧ್ಯಾನೇ ಇಲ್ಲ ಅಂತೆ ರಂಪ ಮಾಡಿಬಿಟ್ರು.” +“ಯಾಕೆ? ಅವರ ವಿರೋಧಕ್ಕೆ ಏನು ಕಾರಣ?” +“ನರಹರಿ ಸಿನಿಮಾ ಗೀಳು ಹತ್ತಿಸ್ಕೊಂಡು ಬದುಕನ್ನ ಹಾಳು ಮಾಡಿಕೊಂಡೋನು. ಅವನು ಮಾನ್ಸೀನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ನಂಬಿಕೆ ದೇವಕಿಗೆ ಇರ್‍ಲಿಲ್ಲ. ಮಾನ್ಸೀನ ಮದುವೆ ಮಾಡ್ಕೊಂಡು ಅವಳ ಪಾಲಿನ ಅಸ್ತಿಯನ್ನ ಲಪಟಾಯಿಸೋ ಯೋಜನೆ ಅವಂದು ಅಂತ ಆಕೆ ತಿಳಿದ್ಲು. ಅದನ್ನ ಆಕೆ ನೇರವಾಗಿ ಅವನಿಗೇ ಹೇಳಿದ್ಲು.” ಮಾತು ನಿಲ್ಲಿಸಿ ಒಮ್ಮೆ ಕಿಟಕಿಯತ್ತ ನೋಡಿ ಮತ್ತೆ ಮುಂದುವರೆಸಿದಳು ರಜನಿ. “ಮಾನ್ಸಿಯ ಅಸ್ತೀನ ಹೊಡಕೊಂಡು ಅದರಿಂದ ಐಷಾರಾಮದ ಬದುಕು ನಡೆಸೋದಿಕ್ಕೆ ಪ್ಲಾನ್ ಹಾಕ್ತಾ ಇರೋ ಪರಾವಲಂಬಿ ನೀನು ಅಂತ ಅವನ ಮುಖಕ್ಕೇ ಹೇಳಿ ಉಗಿದ್ಲು.” ಮಾತು ಮುಗಿಸಿ ಮತ್ತೊಮ್ಮೆ ಕಿಟಕಿಯತ್ತ ಬೆದರಿದ ನೋಟ ಹೂಡಿದಳು ರಜನಿ. +ಕೋದಂಡಯ್ಯ ಮುಖ ಮುಂದೆ ತಂದ. +“ಅದಕ್ಕೆ ನರಹರಿಯ ಪ್ರತಿಕ್ರಿಯೆ?” +“ಓಹ್ ಕೇಳಬೇಡಿ. ಹುಚ್ಚುನಾಯಿಯ ಥರಾ ಆಡಿಬಿಟ್ಟ. ನಿನ್ನನ್ನ ಕೊಂದುಬಿಡ್ತೀನಿ ಅಂತ ಅವಳ ಮೇಲೆ ಏರಿಹೋದ. ದೇವಕಿ ಬಾತ್‌ರೂಂನೊಳಗೆ ನುಗ್ಗಿ ತಪ್ಪಿಸ್ಕೊಂಡ್ಲು. ಅವನಿಲ್ಲಿಗೆ ಬಂದ ಎರಡನೇ ದಿನಕ್ಕೆ ಇಷ್ಟೆಲ್ಲಾ ಆಯ್ತು.” +“ಅವನಿಗೇಕೆ ಅಂಥಾ ಕೋಪ ಬಂತು?” +“ಅವ್ಳು ಅವನನ್ನ ಪರಾವಲಂಬಿ ಅಂತ ಕರೆದ್ಲಲ್ಲ ಅದನ್ನ ಅವ್ನು ಸಹಿಸ್ಲಿಲ್ಲ.” +“ಐ ಸೀ” ಕೋದಂಡಯ್ಯ ಛಾವಣಿಗೆ ಮೊಗವೆತ್ತಿದ. +“ಅಂದ್ರೆ ನರಹರಿ ಜೀವನದಲ್ಲಿ ಯಶಸ್ವಿ ಮನುಷ್ಯನಾಗಿದ್ದು ಅವಂಗೆ ಸ್ವಂತ ಸಂಪಾದನೆ ಇದ್ದಿದ್ರೆ ಅವ್ನು ಮಾನ್ಸೀನ ಮದುವೆಯಾಗೋದಿಕ್ಕೆ ದೇವಕಿ ಅಡ್ಡಿ ಬರ್ತಾ ಇರ್‍ಲಿಲ್ಲ ಅಲ್ವೇ?” ರಜನಿಯನ್ನೇ ನೇರವಾಗಿ ನೋಡುತ್ತಾ ಪ್ರಶ್ನೆ ಹಾಕಿದ. +ಅವಳ ಉತ್ತರ ಥಟ್ಟನೆ ಬಂತು. +“ನೀವು ಹೇಳೋದು ನಿಜ. ಹಾಗಂತ ಅವ್ಳು ನಂಗೆ ನಾಲ್ಕೈದು ಸಲ ಹೇಳಿದ್ಲು. ಮಾನ್ಸಿಯ ಬಗ್ಗೆ ಅವಳಿಗೆ ತುಂಬ ಪ್ರೀತಿ. ಮಾನ್ಸಿಯ ಹಣಕ್ಕೆ ಆಸೆ ಪಡದೇ ತನ್ನ ಸ್ವಂತ ಸಂಪಾದನೇಲಿ ಅವಳನ್ನ ಪ್ರೀತಿಯಿಂದ ನೋಡಿಕೊಳ್ಳೋ ಹುಡುಗನಿಗೆ ಮಾತ್ರ ಅವಳನ್ನ ಮದುವೆ ಮಾಡಿ ಅಂತ ಯಾವಾಗ್ಲೂ ಹೇಳ್ತಾ ಇದ್ಲು. ನೌಕರಿ ಇಲ್ಲದ ಉಡಾಳರಿಗೆ ಅವಳನ್ನ ಕೊಡಬೇಡಿ, ಅಂಥೋರು ಮದುವೆಯಾದ ಮೇಲೆ ಆಸ್ತೀನೆಲ್ಲಾ ಹೊಡಕೊಂಡು ಮಾನ್ಸೀನ ಕಡೆಗಣಿಸಿಬಿಡ್ತಾರೆ ಅಂತ ಹೇಳ್ತಿದ್ಲು.” +ಮತ್ತೊಮ್ಮೆ ಛಾವಣಿಗೆ ಮೊಗವೆತ್ತಿದ ಕೋದಂಡಯ್ಯ. +* * * +ಐದು ಗಂಟೆಗೆ ಠಾಣೆಗೆ ಹಿಂತಿರುಗಿ ಐದು ನಿಮಿಷ ಅಲ್ಲಿ ಕುಳಿತಿದ್ದ ಶಾಸ್ತ್ರ ಮಾಡಿ ಮನೆಗೆ ಹೋದ ಕೋದಂಡಯ್ಯ. ಯೂನಿಫಾರ್ಮ್ ತೆಗೆದೆಸೆದು ಸಾದಾ ಉಡುಪು ಧರಿಸಿ, ತಲೆಗೊಂದು ಗಾಂಧಿಟೋಪಿ ಏರಿಸಿ ಹೊರಗೆ ಹೊರಟ. ಬೃಂದಾವನ್ ಎಕ್ಸ್‌ಟೆನ್ಷನ್, ಕಾವೇರಿ ನರ್ಸಿಂಗ್ ಹೋಂ, ಜಯನಗರ, ಬಸ್ ಸ್ಟ್ಯಾಂಡ್- ಹೀಗೆ ಹತ್ತಾರು ಕಡೆ ಸುತ್ತಿ ಅವನು ಮನೆ ಸೇರಿದಾಗ ಸಮಯ ರಾತ್ರಿ ಹನ್ನೆರಡು ದಾಟಿತ್ತು. ರಾತ್ರಿ ನಿದ್ದೆಗೆಟ್ಟರೂ ಬೆಳಿಗ್ಗೆ ಬೇಗ ಎದ್ದು ನರಹರಿಯ ಬಳಿಗೆ ಓಡಿದ. +* * * +-ಒಂಬತ್ತು- +ಸಬ್ ಇನ್ಸ್‌ಪೆಕ್ಟರ್ ಟೈಟಸ್ ಬೆಂಗಳೂರಿನಿಂದ ಹಿಂತಿರುಗಿದಾಗ ಸಮಯ ಸಂಜೆ ನಾಲ್ಕು ಗಂಟೆ. ನೇರ ಮನೆಗೆ ಹೋಗಿ ಬಿಸಿನೀರಿನಲ್ಲಿ ಸ್ನಾನ ಮಾಡಿ ರೋಸಮ್ಮ ನೀಡಿದ ಬಿಸಿಬಿಸಿ ಕಾಫಿ ಹೀರಿ ಠಾಣೆಯತ್ತ ಹೊರಟ. ಠಾಣೆ ಖಾಲಿಖಾಲಿಯಾಗಿದ್ದಂತೆ ಕಂಡಿತು. ಕೋದಂಡಯ್ಯನೂ ಎಲ್ಲೂ ಕಾಣಿಸದೇ ಹೋದಾಗ ಅಟೆಂಡರ್ ಬೂಕಯ್ಯನನ್ನು ಪ್ರಶ್ನಿಸಿದ. +“ಅವ್ರು ನಿನ್ನೆ ಸಾಯಂಕಾಲದಿಂದ್ಲೂ ಪತ್ತೆ ಇಲ್ಲ ಸಾರ್.” ಬೂಕಯ್ಯನ ಉತ್ತರ ಕೇಳಿ ಕಣ್ಣರಳಿಸಿದ. +“ಬೆಳಗಿನಿಂದ ಸ್ಟೇಷನ್‌ಗೆ ಬರ್‍ಲೇ ಇಲ್ವೇನಯ್ಯ?” ದನಿಯಲ್ಲಿ ಕೋಪವಿತ್ತು. +ಬೂಕಯ್ಯ ಒಮ್ಮೆ ತಲೆ ಕೆರೆದುಕೊಂಡ. “ಒಂದ್ಸಲ ಬಂದ್ರಿದ್ರು ಅನ್ಸುತ್ತೆ ಸಾ.” ರಾಗ ಎಳೆದ. +ಒಮ್ಮೆ ಹೂಂಕರಿಸಿ ಜೊರ್ರನೆ ಕುರ್ಚಿ ಎಳೆದು ಕೂತ. “ನಾನಿಲ್ದೇ ಇದ್ರೆ ಸ್ಟೇಷನ್ ಕುಲಗೆಟ್ಟುಹೋಗುತ್ತೆ.” ಗೊಣಗಿದ. ಹೆದರುತ್ತಲೇ “ಮಸಾಲೆ ಟೀ ತರಲಾ ಸಾ?” ಎಂದು ಕೇಳಿದ ಬೂಕಯ್ಯನ ಮೇಲೆ ಹರಿಹಾಯ್ದ. “ತಗೋಂಡು ಬಂದು ನಿನ್ನ ತಲೆ ಮೇಲೆ ಸುರಕೋ.” +ಬಡಪಾಯಿ ಬೂಕಯ್ಯ ಸದ್ದಿಲ್ಲದೇ ಜಾಗ ಖಾಲಿ ಮಾಡಿದ. +ಟೈಟಸ್ ಕೈಬೆರಳುಗಳನ್ನು ಅಸಹನೆಯಿಂದ ಹಿಸುಕಿದ. +“ಎರಡು ದಿನ ಬೆಂಗಳೂರಿನಲ್ಲಿದ್ದುಕೊಂಡು ನಾನಿಷ್ಟು ಕೆಲಸ ಮಾಡಿಕೊಂಡು ಬಂದಿರೋವಾಗ ಇಲ್ಲಿ ಎಲ್ರೂ ಮಜಾ ಉಡಾಯಿಸ್ತಿದಾರೆ! ಈ ಈಪಾಟೀ ಕೋದಂಡ ಎಲ್ಲಿ ಹಾಳಾಗಿ ಹೋದ?” +ಬೇಸರದಿಂದ ಕಣ್ಣುಮುಚ್ಚಿದ. ಎರಡು ಕ್ಷಣಗಳ ನಂತರ ಕಣ್ಣು ತೆರೆದರೆ ಎದುರಿಗೆ ಕೋದಂಡಯ್ಯ! +“ಎಲ್ಲಯ್ಯ ಹಾಳಾಗಿದ್ದೆ?” ಅರಚಿದ. +“ಇಲ್ಲೇ ಇದ್ದೆ ಸಾರ್. ನಾನೆಲ್ಲಿಗೆ ಹೋಗ್ಲಿ? ನಂಗೇನು ಬೆಂಗ್ಳೂರು ಮಂಗ್ಳೂರು ಅಲ್ಲೆಲ್ಲಾ ನೆಂಟ್ರು ಇದ್ದಾರಾ? ಇಲ್ಲಾ ಕೊಲೇ ತನಿಖೆಗೆ ಅಂತ ಅಲ್ಲಿಗೆಲ್ಲಾ ಹೋಗೋದಿಕ್ಕೆ ನಾನೇನು ಸಬ್ ಇನ್ಸ್‌ಪೆಕ್ಟರಾ?” ವಿಶಾಲವಾಗಿ ನಕ್ಕ ಕೋದಂಡಯ್ಯ. +“ನಾನು ಬೆಂಗ್ಳೂರಿಗೆ ಹೋಗಿದ್ದದ್ದು ಕೊಲೇ ತನಿಖೆಗೇ ಅಂತ ಹ್ಯಾಗಯ್ಯ ಹೇಳ್ತೀಯ?” +ಕೋದಂಡಯ್ಯ ಕುರ್ಚಿ ಎಳೆದು ಕೂತ. +“ಅದೇನು ದೊಡ್ಡ ವಿಷಯ ಬಿಡಿ ಸಾರ್. ನೀವು ಕೊಲೆ ತನಿಖೆ ನಡೆಸ್ತಾ ಇದ್ದಾಗ ನಾನು ನಿಮ್ಮ ಬಗ್ಗೆ ಸ್ವಲ್ಪ ತನಿಖೆ ನಡೆಸ್ದೆ. ವಿಷಯ ತಿಳಿದುಹೋಯ್ತು.” ಮತ್ತೊಮ್ಮೆ ಹಲ್ಲು ಬಿಟ್ಟ. ಟೈಟಸ್ ಮತ್ತೆ ಬಾಯಿ ತೆರೆಯುವ ಮೊದಲೇ ಹೇಳಿದ. “ಅದೆಲ್ಲಾ ಇರ್‍ಲಿ, ನೀವು ಬೆಂಗ್ಳೂರಿಗೆ ಹೋಗಿದ್ದ ವಿಷಯ ಏನಾಯ್ತು ಹೇಳಿ.” +“ದೇವಕಿಯ ಕೊಲೆಗಾರನ ಬಗ್ಗೆ ಸಾಕಷ್ಟು ವಿವರ ಕಲೆಕ್ಟ್ ಮಾಡ್ಕೊಂಡು ಬಂದಿದೀನಿ” ಎನ್ನುತ್ತಾ ಬ್ರೀಫ್ ಕೇಸ್ ತೆರೆದ ಟೈಟಸ್. ಹಾಳೆಯೊಂದನ್ನು ಹೊರತೆಗೆದು ಕೋದಂಡಯ್ಯನ ಮುಂದೆ ಹಿಡಿದ. +“ಕೊಲೆಗಾರ ದೇವಕಿಗೆ ಕಳಿಸಿದ್ದ ಇ ಮೇಲ್ ಕಣಯ್ಯ ಇದು. ಐ ಜಿ ಪಿ ಅವರ ಆಫೀಸ್‌ನಲ್ಲಿರೋ ಕಂಪ್ಯೂಟರ್ ತಜ್ಞರು ನಿನ್ನೆ ದಿನಪೂರ್ತಿ ತಿಣುಕಾಡಿದ ಮೇಲೆ ಆಯಮ್ಮನ ಮೇಲ್ ಬಾಕ್ಸ್ ಓಪನ್ ಆಯ್ತು.” +“ಭಾರೀ ದೊಡ್ಡ ಸಾಧನೆ. ನಿಮಗೆ ಶಹಬ್ಬಾಸ್ ಹೇಳಬೇಕು” ಎಂದ ಕೋದಂಡಯ್ಯ ಕೈನಲ್ಲಿದ್ದ ಫೈಲಿನಿಂದ ಹಾಳೆಯೊಂದನ್ನೆತ್ತಿ ಟೈಟಸ್‌ನ ಮುಖಕ್ಕೆ ಹಿಡಿದ. +“ಇದೇನಯ್ಯ ಇದೂ?” ಎನ್ನುತ್ತಾ ಅದನ್ನೇ ನೋಡಿದ ಟೈಟಸ್. ಬಾಯಿ ಅಗಲವಾಗಿ ತೆರೆದುಕೊಂಡಿತು. +ತಾನು ತಂದ ಇ ಮೇಲ್‌ನ ಪ್ರಿಂಟ್‌ಔಟ್‌ನ ಪಡಿಯಚ್ಚು! +ಟೈಟಸ್ ದಂಗಾಗಿಹೋಗಿದ್ದ. +“ಇದು… ಇದೆಲ್ಲಯ್ಯ ಸಿಕ್ತು?” ಬೆರಗಿನ ಪ್ರಶ್ನೆ ಹೊರಬಂತು. +“ನಿಮ್ಮ ಬೆಂಗಳೂರಿನ ಕಂಪ್ಯೂಟರ್ ತಜ್ಞರು ದಿನಪೂರ್ತಿ ತಿಣುಕಾಡಿ ಸಾಢಿಸಿದ ಕೆಲಸಾನ್ನ ನಮ್ಮ ಆ ಮಾನ್ಸಿ ಇಲ್ಲೇ ತನ್ನ ಮನೇಲೇ ಮಾಡಿದ್ದಾಳೆ.” ಮತ್ತೊಮ್ಮೆ ನಕ್ಕ ಕೋದಂಡಯ್ಯ. +ಎಸ್ ಐಗೆ ನಿಮಿಷಗಳವರೆಗೆ ಮಾತೇ ಹೊರಡಲಿಲ್ಲ. ಕಣ್ಣೆದುರಿಗಿದ್ದ ಸತ್ಯವನ್ನು ಅರಗಿಸಿಕೊಳ್ಳಲು ಅವನಿಗೆ ಕಷ್ಟವಾಗಿತ್ತು. +“ಅವಳು ಮಾಡಿದ್ಲಾ? ನಾನು ಇದಕ್ಕಾಗಿ ಬೆಂಗಳೂರಿನವರೆಗೆ ಅಲೆದೆನಲ್ಲ.” ತನ್ನಲ್ಲಿಯೇ ಗೊಣಗಿಕೊಂಡ. +“ಅದು ಯಾವಾಗ್ಲೂ ಹಾಗೇ ತಾನೆ? ಹಿತ್ತಲ ಗಿಡ ಮದ್ದಲ್ಲ ಅನ್ನೋ ಜಾತಿ ನಿಮ್ದು. ಇರಲಿ, ಈ ಇ ಮೇಲ್ ನೋಡಿ ಏನು ತೀರ್ಮಾನ ತಗೋಂಡ್ರಿ?” ನಗೆ ಸೂಸಿ ಪ್ರಶ್ನೆ ಹಾಕಿದ ಕೋದಂಡಯ್ಯ. +ಟೈಟಸ್ ಸುಧಾರಿಸಿಕೊಂಡಿದ್ದ. ನಿಧಾನವಾಗಿ ಬಾಯಿ ತೆರೆದ. +“ನೀನೇ ಹೇಳು. ಇದನ್ನ ನೀನೂ ಓದಿದ್ದೀಯಲ್ಲ?” +ಒಮ್ಮೆ ಗಂಟಲು ಸರಿಪಡಿಸಿಕೊಂಡ ಕೋದಂಡಯ್ಯ. +“ನೋಡಿ ಗುರೂ. ಇದನ್ನ ಕಳಿಸ್ದೋನು ಅಡ್ಡದಾರಿ ಹಿಡಿದು ಹಾಳು ಮಾಡಿಕೊಂಡ ತನ್ನ ಜೀವನವನ್ನ ಈಗ ಸರಿ ಮಾಡಿಕೊಳ್ಳೋದಕ್ಕೆ ಹೊರಟಿದ್ದಾನೆ. ಅದಕ್ಕೆ ದೇವಕಿಯಿಂದ ವಿರೋಧ ಬಂದಿದೆ. ಭಿನ್ನಾಭಿಪ್ರಾಯಗಳನ್ನ ದೂರ ಮಾಡಿಕೊಳ್ಳೋದಿಕ್ಕೆ ಆಯಮ್ಮನ್ನ ಮಾತುಕತೆಗೆ ಆಹ್ವಾನಿಸಿದ್ದಾನೆ.” +“ಅದು ಯಾರಿರಬೋದು?” +“ಅದೇನು ದೊಡ್ಡ ವಿಷಯವಲ್ಲ. ದೇವಕಿಯ ಪರಿಚಯದವರಲ್ಲಿ ಅಡ್ಡದಾರಿ ಹಿಡಿದಿದ್ದೋನು ಅಂದ್ರೆ ನರಹರಿ. ಈಗ ಮಾನ್ಸಿಯನ್ನ ಮದುವೆಯಾಗಿ ತನ್ನ ಬದುಕನ್ನ ಸರಿ ಮಾಡಿಕೊಳ್ಳೋ ಯೋಚನೆ ಅವಂಗೆ. ಇದನ್ನ ದೇವಕಿ ವಿರೋಧಿಸಿದ್ದಾಳೆ. ಈ ವಿಷಯದಲ್ಲಿ ಇಬ್ಬರ ನಡುವೆ ಘರ್ಷಣೆ ಆಗಿದೆ. ಅದರ ಬಗ್ಗೆ ಮಾತಾಡೋದಿಕ್ಕೆ ನರಹರಿ ದೇವಕಿಯನ್ನ ಕರೆದಿದ್ದಾನೆ ಅಂತ ಊಹಿಸಬೋದು.” +ಟೈಟಸ್‌ನ ಬಾಯಿ ಗುಹೆಯಂತೆ ತೆರೆದುಕೊಂಡಿತು. ನರಹರಿ ಮಾನ್ಸಿಯನ್ನು ಮದುವೆಯಾಗುವುದನ್ನು ದೇವಕಿ ಕಡುವಾಗಿ ವಿರೋಧಿಸಿದ ವಿಷಯವನ್ನು ತಾನು ಬೆಂಗಳೂರಿನ ಗಾಂಧಿನಗರದಲ್ಲಿದ್ದ ನರಹರಿಯ ಜೀವದ ಗೆಳೆಯನೊಬ್ಬನಿಂದ ಸಂಗ್ರಹಿಸಿದ್ದೆ! ಈ ಮಾಹಿತಿ ಕೋದಂಡಯ್ಯನಿಗೆಲ್ಲಿ ಸಿಕ್ಕಿತು? +“ಇದು ನಿಂಗೆ ಹ್ಯಾಗೆ ಗೊತ್ತಾಯ್ತು ಕೋದಂಡಯ್ಯ?” ಕೇಳಿಯೇಬಿಟ್ಟ. +“ನರಹರಿಯೇ ಹೇಳ್ದ.” ತಣ್ಣಗೆ ಹೇಳಿದ ಕೋದಂಡಯ್ಯ. “ಮಾನ್ಸಿ ಮತ್ತವಳ ಅತ್ತಿಗೆನೂ ಸಾಕಷ್ಟು ವಿವರ ಕೊಟ್ರು.” ಸೇರಿಸಿದ. +ಟೈಟಸ್‌ನ ಬಾಯಿ ಮತ್ತಷ್ಟು ಅಗಲವಾಗಿ ತೆರೆದುಕೊಂಡಿತು. +“ಅಲ್ಲಾ ಅ ನರಹರಿ ನಾನು ಮಾತಾಡಿಸಿದ್ರೆ ಮೈಮೇಲೇ ಬೀಳ್ತಾನೆ. ನಿಂಗೆ ಇದನ್ನೆಲ್ಲಾ ಯಾವಾಗ ಹೇಳ್ದ?” ಅಚ್ಚರಿಯ ಪ್ರಶ್ನೆ ಹೊರಬಂತು. +ಕೋದಂಡಯ್ಯ ಹುಸಿನಗೆ ನಕ್ಕ. +“ತಪ್ಪು ನಿಮ್ಮದೇ ಗುರೂ. ಅವನನ್ನ ಬೈಯ್ಯಬೇಡಿ. ನೀವು ಅವನ ಮೇಲೆ ವಿಶ್ವಾಸ ತೋರ್‍ಸಿ ಮಾತಾಡಿಸಿದ್ರೆ ಅವನು ನಿಮ್ಮ ಜತೇನೂ ಚೆನ್ನಾಗೇ ಮಾತಾಡ್ತಿದ್ದ. ನೀವಂತೂ… ಹ್ಞು ಬಿಡಿ.” ಸ್ವಲ್ಪ ಗಟ್ಟಿಯಾಗಿಯೇ ಲೊಚಗುಟ್ಟಿದ. +ಠಾನು ಎರಡು ದಿನಗಳು ಬೆಂಗಳೂರಿನಲ್ಲಿ ಅಲೆದಾಡಿ ಸಂಗ್ರಹಿಸಿದ ವಿಷಯಗಳೆಲ್ಲವನ್ನೂ ಈ ಈಪಾಟೀ ಕೋದಂಡಯ್ಯ ಮೈಸೂರಿನಲ್ಲೇ ಸಂಗ್ರಹಿಸಿಬಿಟ್ಟಿದ್ದಾನೆ! ಇವನೆಷ್ಟು ಘಾಟಿ! +ಕೋದಂದಯ್ಯನೇ ಮಾತಾಡಿದ. +“ಇದೆಲ್ಲಾನೂ ನೋಡಿ ನೀವು ದೇವಕಿಯ ಕೊಲೆ ಹಿಂದಿರೋ ವ್ಯಕ್ತಿ ನರಹರಿಯೇ ಅಂತ ತೀರ್ಮಾನ ಮಾಡಿದ್ದೀರಿ ಅಲ್ಲವೇ?” +ಒಂದುಕ್ಷಣ ಅವನನ್ನೇ ನೋಡಿದ ಟೈಟಸ್. +“ಹೌದು. ನೀನು ಬೇರೇನಾದ್ರೂ ಹೇಳ್ತೀಯಾ?” ದನಿಯಲ್ಲಿ ತುಸು ಗಾಬರಿಯಿತ್ತು. ತನಗೆ ಸಿಗದ ಬೇರೇನಾದರೂ ವಿಷಯವನ್ನು ಕೋದಂಡಯ್ಯ ಪತ್ತೆ ಹಚ್ಚಿರಬಹುದೇನೋ ಎನ್ನುವ ಆತಂಕ ಅವನ ಮನಸ್ಸಿನಲ್ಲಿ ಧುತ್ತನೆ ಎದ್ದು ನಿಂತಿತ್ತು. +“ಇಲ್ಲಾ ಗುರೂ. ಈ ವಿಚಾರದಲ್ಲಿ ನಿಮ್ಮ ತೀರ್ಮಾನವೇ ನನ್ನ ತೀರ್ಮಾನ. ಬೇರೆ ಮಾತಿಲ್ಲ.” ಕೋದಂಡಯ್ಯ ಘೋಷಿಸಿದ. +ಟೈಟಸ್‌ನ ಕಣ್ಣುಗಳಲ್ಲಿ ಹೊಳಪು. +“ಅಂದ್ರೆ ನರಹರಿಯೇ ಅಪರಾಧೀ ಅಂತ ನೀನೂ ಹೇಳ್ತೀಯ?” ಖಚಿತಪಡಿಸಿಕೊಳ್ಳಲು ಪ್ರಶ್ನೆಯನ್ನು ಒತ್ತಿ ಕೇಳಿದ. +“ಅದರಲ್ಲಿ ಅನುಮಾನ ಏನು ಬಂತು ದೇವ್ರೂ?” +ಟೈಟಸ್ ತೃಪ್ತಿಯಿಂದ ತಲೆದೂಗಿದ. +“ಕೊಲೆ ನಡೆದ ದಿನವೇ ಅವನೇ ಕೊಲೆಗಾರ ಅಂತ ನಾನು ತೀರ್ಮಾನ ಮಾಡಿಬಿಟ್ಟೆ ಕೋದಂಡಯ್ಯ. ತನಗೆ ಎಚ್ಚರವಿಲ್ಲದ ನಿದ್ದೆ ಅನ್ನೋ ಅವನ ಮಾತನ್ನ ನಾನು ಒಂಚೂರೂ ನಂಬಿರ್‍ಲಿಲ್ಲ. ಸರಿಯಾದ ಆಧಾರಗಳನ್ನ ಸೇರಿಸಿಕೊಂಡು ಅವನನ್ನ ಹಿಡೀಬೇಕು ಅಂತ ತೀರ್ಮಾನ ಮಾಡ್ದೆ. ಈಗ ನನ್ನಲ್ಲಿ ಆಧಾರಗಳಿವೆ. ನಾನೀಗ ಅವನನ್ನ ಅರೆಸ್ಟ್ ಮಾಡೋದಿಕ್ಕೆ ಹೊರಟಿದ್ದೀನಿ. ಬರ್‍ತೀಯಾ ನನ್ ಜತೆ?” ಹೇಳುತ್ತಾ ಎದ್ದು ನಿಂತ. +“ಬರದೇ ಇರ್‍ತೀನಾ ಸಾರ್? ಏನು ಮಾತು ಅಂತ ಕೇಳ್ತೀರಿ? ನಡೀರಿ ಹೊರಡೋಣ. ಇಬ್ರೂ ಸೇರಿ ನರಹರಿಯ ನರ ಹರಿದುಬಿಡೋಣ.” ಕೋದಂಡಯ್ಯನೂ ಎದ್ದುನಿಂತ. ಹೊರಡುವ ಮೊದಲು ಗೋಕುಲ್‌ನ ಸೆಲ್‌ಗೆ ಫೋನ್ ಮಾಡಿ “ಮಾನ್ಸಿ ಮನೇಗೆ ಬನ್ನಿ. ಒಂದು ಭರ್ಜರಿ ನಾಟಕ ತೋರಿಸ್ತೀನಿ” ಎಂದು ಹೇಳಿದ. +* * * +ಅವರಿಬ್ಬರೂ ಅಲ್ಲಿಗೆ ತಲುಪುವ ಹೊತ್ತಿಗೆ ಗೋಕುಲ್ ಬಂದಾಗಿತ್ತು. ಇಬ್ಬರನ್ನೂ ನಗುಮೊಗದಿಂದ ಸ್ವಾಗತಿಸಿದ. +“ನರಹರಿ ತನ್ನ ಅಂತಃಪುರದಲ್ಲಿದ್ದಾರೇನು?” ಕೋದಂಡಯ್ಯ ಮೆಲ್ಲಗೆ ಪ್ರಶ್ನಿಸಿದ. +“ಇದ್ದಾನೆ ಅಂತ ಕಾಣುತ್ತೆ. ಏನು ವಿಷಯ?” ಅಷ್ಟೇ ಮೆಲ್ಲಗೆ ಮರುಪ್ರಶ್ನಿಸಿದ ಗೋಕುಲ್. +“ಈ ಸಂಜೆಯ ನಾಟಕದ ಹೀರೋ ಅವನೇ. ಸ್ವಲ್ಪ ಅವನನ್ನ ಉಪಾಯವಾಗಿ ಇಲ್ಲಿಗೆ ಕರೆತರ್ತೀರಾ?” ಬೇಡಿಕೆ ಸಲ್ಲಿಸಿದ. +ಗೋಕುಲ್‌ನ ಕಣ್ಣುಗಳು ವಿಶಾಲಗೊಂಡವು. “ಈಗ್ಲೇ ಕರಕೊಂಡು ಬರ್ತೀನಿ.” ಮಾತು ಮುಗಿಸಿ ಹೊರಟವನನ್ನು ತಡೆದು ಪಿಸುದನಿಯಲ್ಲಿ ಹೇಳಿದ ಕೋದಂಡಯ್ಯ. “ನಾನೂ ಎಸ್ ಐ ಸಾಹೇಬರೂ ಇಲ್ಲಿದೀವಿ ಅಂತ ಅವನಿಗೆ ಹೇಳಬೇಡಿ. ಬೇರೇನಾದ್ರೂ ಸುಳ್ಳು ಕಾರಣ ಕೊಟ್ಟು ಅವನು ಇಲ್ಲಿಗೆ ಬರೋಹಾಗೆ ಮಾಡಿ.” +ಗೋಕುಲ್‌ನ ಬೆನ್ನಹಿಂದೆ ತಲೆತಗ್ಗಿಸಿ ಒಳಬಂದ ನರಹರಿ ಅಲ್ಲಿದ್ದವರನ್ನು ಕಂಡು ಬೆಚ್ಚಿದ. ಅವನ ಪ್ರಶ್ನಾರ್ಥಕ ನೋಟವನ್ನು ಗಮನಿಸಿದ ಗೋಕುಲ್ ಅವನ ಭುಜ ತಟ್ಟಿದ. “ನಮ್ಮ ಈ ಸಂಜೆಯ ಸಂತೋಷಕೂಟಕ್ಕೆ ಸಬ್ ಇನ್ಸ್‌ಪೆಕ್ಟರ್ ಟೈಟಸ್ ಮತ್ತು ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ ಅನಿರೀಕ್ಷಿತ ಅತಿಥಿಗಳು.” ಕ್ಷಣ ತಡೆದು ಸೇರಿಸಿದ. “ಇವರಿಬ್ಬರೂ ಐದು ಹತ್ತು ನಿಮಿಷವಿದ್ದು ಹೊರಟುಹೋಗ್ತಾರೆ. ಆಮೇಲೆ ಇಡೀ ಸಂಜೆ ನಮ್ಮದೇ.” +ರಜನಿ ನೀಡಿದ ಕಾಫಿಯನ್ನು ಎಲ್ಲರೂ ಮೌನವಾಗಿ ಗುಟುಕರಿಸಿದರು. ನರಹರಿಯನ್ನುಳಿದು ಎಲ್ಲರ ಮನದಲ್ಲಿದ್ದುದು ಮುಂದೇನು ನಡೆಯಲಿದೆ ಎಂಬ ಕುತೂಹಲ, ಆತಂಕ. +ಖಾಲೀ ಕಪ್ಪನ್ನು ಸಶಬ್ಧವಾಗಿ ಟೀಪಾಯ್ ಮೇಲಿಟ್ಟು ಎದ್ದು ನಿಂತ ಎಸ್ ಐ ಟೈಟಸ್. ಕೋದಂಡಯ್ಯನತ್ತ ಅರ್ಥಪೂರ್ಣವಾಗಿ ನೋಡಿದ. +ಕೋದಂಡಯ್ಯ ಒಮ್ಮೆ ಕೆಮ್ಮಿ ಬಾಯಿ ತೆರೆದ. +“ನಾವಿಲ್ಲಿ ಉಳಿದು ನಿಮ್ಮ ಸೊಗಸಾದ ಸಂಜೇನ ಹಾಳು ಮಾಡೋದಿಕ್ಕೆ ಇಷ್ಟಪಡೋದಿಲ್ಲ. ನಾವಿನ್ನು ಹೊರಡ್ತೀವಿ. ಹೊರಡೋದಿಕ್ಕೆ ಮೊದಲು ನಿಮಗೊಂದು ಸುದ್ದಿ ಹೇಳಬೇಕು.” ಮತ್ತೊಮ್ಮೆ ಕೆಮ್ಮಿ ಮುಂದುವರೆಸಿದ. “ದೇವಕಿಯವರ ಕೊಲೆಗಾರನನ್ನ ನಮ್ಮ ಎಸ್ ಐ ಸಾಹೇಬರು ಪತ್ತೆ ಹಚ್ಚಿದ್ದಾರೆ. ಅವನನ್ನು ಅರೆಸ್ಟ್ ಮಾಡೋದಿಕ್ಕೇ ನಾವೀಗ ಹೊರಟಿರೋದು.” +ಅಲ್ಲಿದ್ದವರ ಮೇಲೆ ಅವನ ಮಾತಿನ ಪರಿಣಾಮ ಅಸಾಧಾರಣವಾಗಿತ್ತು. +ವಸಂತರಾವ್ ಮತ್ತು ರಜನಿ ಸರಕ್ಕನೆ ತಲೆ ಮೇಲೆತ್ತಿದರು. ಮಾನ್ಸಿಯ ಕಣ್ಣುಗಳು ಕಣ್ಣುಗುಡ್ಡೆಗಳು ಹೊರಬರುವಷ್ಟು ಅಗಲಗೊಂಡವು. ನರಹರಿಯ ಕೈ ಅಲುಗಿ ಕಪ್ಪಿನಿಂದ ಕಾಫಿ ಹೊರಚೆಲ್ಲಿತು. ಗೋಕುಲ್ ಥಟ್ಟನೆ ಮೇಲೆದ್ದು ನಿಂತ. ಅತೀವ ಅಚ್ಚರಿಯಲ್ಲಿ ಪ್ರಶ್ನೆ ಹಾಕಿದ. +“ಕೊಲೆಗಾರ… ಯಾರು? ಎಲ್ಲಿದ್ದಾನೆ ಅವನು?” +ಅವನತ್ತ ತಿರುಗಿದ ಕೋದಂಡಯ್ಯ. +“ಈ ಊರಲ್ಲೇ ಇದ್ದಾನೆ. ನಾವೀಗ ಅವನ ಮನೆಗೇ ಹೊರಟಿರೋದು. ನೀವೂ ಬರ್ತೀರೇನು ನಮ್ಮ ಜತೆ? ನಿಮ್ಮ ಸಹಕಾರ ಇದ್ರೆ ಅಪರಾಧಿಯನ್ನ ಹಿಡಿಯೋದು ನಮಗೆ ಸುಲಭ.” +ಗೋಕುಲ್‌ನ ಕಣ್ಣುಗಳು ಮಿಂಚಿದವು. ಎರಡು ಹೆಜ್ಜೆ ಮುಂದೆ ಬಂದ. +“ನಮ್ಮಕ್ಕನ ಕೊಲೆ ಮಾಡಿದ ಪಾಪಿಯನ್ನ ಅರೆಸ್ಟ್ ಮಾಡೋ ನಿಮ್ಮ ಕೆಲಸಕ್ಕೆ ಎಂಥಾ ಸಹಾಯಕ್ಕಾದರೂ ನಾನು ಸಿದ್ಧ.” +“ಗುಡ್.” ಟೈಟಸ್‌ನ ಕಣ್ಣುಗಳಲ್ಲಿ ಮೆಚ್ಚುಗೆ ಮೂಡಿತು. +ನಸುನಗೆ ಬೀರುತ್ತಾ ಕೋದಂಡಯ್ಯ ಮುಂದೆ ಸರಿದ. ಪ್ಯಾಂಟಿನ ಜೇಬಿನಿಂದ ಕೋಳಗಳನ್ನು ಹೊರತೆಗೆದು ಗೋಕುಲ್‌ನತ್ತ ಚಾಚಿದ. +“ತಗೋಳಿ. ನಿಮ್ಮಕ್ಕನ ಕೊಲೆಗಾರನ ಕೈಗೆ ಕೋಳ ತೊಡಿಸೋ ಕೆಲಸ ನಿಮ್ಮಿಂದಲೇ ಆಗಲಿ. ಆಗ ನಿಮ್ಮಕ್ಕನ ಆತ್ಮಕ್ಕೆ ಶಾಂತಿ ಸಿಗಬೋದು.” +ಕೋಳಗಳನ್ನೇ ಒಂದುಕ್ಷಣ ಬೆರಗಿನಿಂದ ದಿಟ್ಟಿಸಿದ ಗೋಕುಲ್. ನಿಧಾನವಾಗಿ ಕೈಚಾಚಿ ಕೋಳಗಳನ್ನು ತೆಗೆದುಕೊಂಡ. +“ಯಾರು ಹೇಳಿ ಕೊಲೆಗಾರ?” ಕನಸಿನಲ್ಲಿರುವಂತೆ ಪ್ರಶ್ನಿಸಿದ. ಇಡೀ ಪ್ರಕರಣ ಅವನಿಗೆ ತೀರಾ ಅನಿರೀಕ್ಷಿತವಾಗಿದ್ದುದು ಸ್ಪಷ್ಟವಾಗಿತ್ತು. +ಟೈಟಸ್ ಮುಂದೆ ಬಂದ. +“ಅಲ್ಲಿದ್ದಾನೆ ನೋಡಿ ಕೊಲೆಗಾರ.” ನರಹರಿಯತ್ತ ಬೆರಳು ಮಾಡಿದ. +ನರಹರಿ ಥಟ್ಟನೆ ಎದ್ದುನಿಂತ. +“ಇನ್ಸ್‌ಪೆಕ್ಟರ್ ಹುಡುಗಾಟ ಆಡ್ತಿದೀರೇನು?” ಅರಚಿದ. ಕೋದಂಡಯ್ಯನತ್ತ ತಿರುಗಿ ಹತಾಷೆಯ ನೋಟ ಬೀರಿದ. +ಕೋದಂಡಯ್ಯ ಅವನ ನೋಟ ತಪ್ಪಿಸಿದ. +ಹೂಂಕರಿಸಿದ ಟೈಟಸ್. “ನಟನೆ ಸಾಕು ನಟಸಾರ್ನಭೌಮ. ಇದು ಸಿನಿಮಾ ಶೂಟಿಂಗ್ ಅಲ್ಲ. ಮರ್ಯಾದೆಯಾಗಿ ಕೋಳಕ್ಕೆ ಕೈ‌ಒಡ್ಡು. ಇಲ್ಲದ ಆಟ ಆಡಿದ್ರೆ ಗೋಲಿ ಉಡಾಯಿಸಿಬಿಡ್ತೀನಿ.” ರಿವಾಲ್ವರ್ ಮುಂದೆ ಮಾಡಿದ. ಗೋಕುಲ್‌ನತ್ತ ತಿರುಗಿ ಉತ್ತೇಜಕ ದನಿಯಲ್ಲಿ ಹೇಳಿದ. “ಕಮಾನ್ ಗೋಕುಲ್. ಗೋ ಅಹೆಡ್ ಅಂಡ್ ಅರೆಸ್ಟ್ ಹಿಮ್.” +ನರಹರಿ ಸರ್ರನೆ ನಾಲ್ಕು ಹೆಜ್ಜೆ ಹಿಂದೆ ಹಾರಿದ. ಕೈಗೆ ಸಿಕ್ಕಿದ ಒಂದೂವರೆ ಅಡಿ ಉದ್ದದ ಕಂಚಿನ ಹೂದಾನಿಯನ್ನು ಕೈಗೆತ್ತಿಕೊಂಡ. ಗೋಕುಲ್‌ನತ್ತ ಉರಿನೋಟ ಬೀರಿದ. “ಹತ್ರ ಬಂದ್ರೆ ಬುರುಡೆ ಚಚ್ಚಿಬಿಡ್ತೀನಿ.” ಪೂತ್ಕರಿಸಿದ. +ಗೋಕುಲ್ ಅನುಮಾನಿಸುತ್ತಾ ನಿಂತ. ಅವನ ಬೆನ್ನು ತಟ್ಟಿದ ಕೋದಂಡಯ್ಯ. +“ಅಕ್ಕನ ಕೊಲೆಗಾರನ್ನ ಹಿಡಿಯೋದರಲ್ಲಿ ಎಂಥಾ ಸಹಾಯಕ್ಕಾದ್ರೂ ರೆಡೀ ಅಂತ ಎರಡು ನಿಮಿಷಗಳ ಹಿಂದೆ ಹೇಳಿದ್ರಿ. ಈಗ ನೋಡಿದ್ರೆ…?” ಛೇಡಿಸಿದ. +ಸುತ್ತಲೂ ಬೊಂಬೆಗಳಂತೆ ನಿಂತಿದ್ದವರತ್ತ ಒಮ್ಮೆ ನೋಡಿ ಒಂದು ಹೆಜ್ಜೆ ಮುಂದಿಟ್ಟ ಗೋಕುಲ್. ಅವನ ಮೇಲೆ ಕಣ್ಣಿಟ್ಟ ನರಹರಿ ಕೈಯಲ್ಲಿದ್ದ ಹೂದಾನಿಯನ್ನು ತೂಗಾಡಿಸಿದ. ಮಾನ್ಸಿ ಉಸಿರು ಬಿಗಿ ಹಿಡಿದಳು. +ಗೋಕುಲ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟ… +ಕೋದಂಡಯ್ಯ ಅವನನ್ನು ಸಮೀಪಿಸಿದ. ಅವನ ಭುಜ ಒತ್ತಿ ಪ್ರಶ್ನೆ ಹಾಕಿದ. “ಕೈಗಳಿಗೆ ಕೋಳ ತೊಡಿಸೋದು ಹೇಗೆ ಅಂತ ಗೊತ್ತೇನು ನಿಮಗೆ?” +ಗೋಕುಲ್ ಒಂದುಕ್ಷಣ ಪೆಚ್ಚಾದ. ಕಣ್ಣುಗಳಲ್ಲಿ ಮೂಡಿದ ಗೊಂದಲ ಕೋಳ ತೊಡಿಸುವ ವಿಧಾನ ಅವನಿಗೆ ತಿಳಿದಿಲ್ಲವೆಂದು ಸಾರಿತು. +ಕೋದಂಡಯ್ಯನ ಮುಖದಲ್ಲಿ ನಸುನಗೆ. +“ಐ ಐ ಎಂ, ಅಹ್ಮದಾಬಾದ್‌ನಲ್ಲಿ ಇದನ್ನ ನಿಮಗೆ ಹೇಳಿಕೊಟ್ಟಿಲ್ಲ ಅಂತ ತಿಳೀತೀನಿ. ಚಿಂತೆಯಿಲ್ಲ. ನಾನು ಹೇಳಿಕೊಡ್ತೀನಿ.” ಕೋಳಗಳನ್ನು ತನ್ನ ಕೈಗೆ ತೆಗೆದುಕೊಂಡ. “ಎಲ್ಲೀ ನಿಮ್ಮ ಕೈಗಳನ್ನ ಮುಂದೆ ಚಾಚಿ… ಹೀಗೇ… ಹ್ಞಾ ಹೀಗೇ…” ಎನ್ನುತ್ತಾ ಗೋಕುಲ್‌ನ ಎರಡು ಕೈಗಳಿಗೂ ಕೋಳ ತೂರಿಸಿದ. ಅಧಿಕಾರಿಯತ್ತ ತಿರುಗಿ ಹೇಳಿದ. +“ಕೊಲೆಗಾರನ ಕೈಗೆ ಕೋಳ ತೊಡಿಸಿಯಾಯ್ತು ಗುರೂ. ಇನ್ನು ಮುಂದಿನ ಕೆಲಸ ನಿಮ್ಮದು.” +ಒಂದುಕ್ಷಣ ಎಲ್ಲರೂ ಬೆಚ್ಚಿದರು. ಟೈಟಸ್ ಅವಾಕ್ಕಾಗಿದ್ದ. +ಗೋಕುಲ್‌ನ ಕಣ್ಣುಗಳಲ್ಲಿ ಅರೆಕ್ಷಣ ಭೀತಿ ಚಿಮ್ಮಿತು. ಮರುಕ್ಷಣ ದನಿಯೆತ್ತರಿಸಿ ಅರಚಿದ. “ಹುಡುಗಾಟ ಆಡ್ತಿದಿರೇನ್ರೀ?” ಕೋಳಗಳಿದ್ದ ಕೈಗಳನ್ನು ರಭಸವಾಗಿ ಅಲುಗಿಸಿದ. +“ಗಾಂಚಾಲಿ ಮಾಡ್ತೀಯೇನಲೇ ಹೈವಾನ್?” ಛಟ್ಟನೆ ಅವನ ಕೆನ್ನೆಗೆ ಬಾರಿಸಿದ ಕೋದಂಡಯ್ಯ. ಅವನ ರಟ್ಟೆ ಹಿಡಿದು ಅಧಿಕಾರಿಯತ್ತ ನೂಕಿದ. “ಸ್ವಂತ ಅಕ್ಕನನ್ನ ಕೊಂದ ಪಾಪಿ ಇವನೇ ಸಾರ್. ಎಳಕೊಂಡು ಹೋಗಿ ಒದ್ದು ಲಾಕಪ್‌ಗೆ ಹಾಕಿ.” +ಸಬ್ ಇನ್ಸ್‌ಪೆಕ್ಟರ್ ಟೈಟಸ್ ಗರಬಡಿದವನಂತೆ ನಿಂತುಬಿಟ್ಟಿದ್ದ. ವಸಂತರಾವ್ ಬಿಟ್ಟಕಣ್ಣು ಬಿಟ್ಟಂತೆ ನಿಂತಿದ್ದ. ರಜನಿ ಎದೆಗೆ ಕೈ ಒತ್ತಿದಳು. ಮಾನ್ಸಿ ಬಾಯಿಗೆ ಕೈ ಒತ್ತಿ ಚೀತ್ಕಾರ ತಡೆದಳು. ನರಹರಿಯ ಕೈನಿಂದ ಹೂದಾನಿ ಜಾರಿ ಸಶಬ್ಧವಾಗಿ ಕೆಳಗೆ ಬಿತ್ತು. +* * * +-ಹತ್ತು- +ತನ್ನ ಅಪರಾಧವನ್ನು ಒಪ್ಪಿಕೊಂಡು ಹೇಳಿಕೆ ಕೊಟ್ಟ ಗೋಕುಲ್‌ನನ್ನು ಲಾಕಪ್‌ಗೆ ಹಾಕಿ ರೆಕಾರ್ಡ್‌ಗಳ ರಗಳೆಯನ್ನು ಪೂರ್ಣಗೊಳಿಸಿ ಕುರ್ಚಿಯಲ್ಲಿ ಕುಸಿದು ನೀಳವಾಗಿ ಉಸಿರೆಳೆದುಕೊಂಡ ಎಸ್ ಐ ಟೈಟಸ್. +ಅವನನ್ನೇ ಅನುಸರಿಸಿ ಠಾಣೆಗೆ ಬಂದಿದ್ದ ವಸಂತರಾವ್, ರಜನಿ ಮತ್ತು ಮಾನ್ಸಿ ತಮ್ಮತಮ್ಮೊಳಗಿನ ಗುಸುಗುಸು ನಿಲ್ಲಿಸಿ ಅವನತ್ತ ತಿರುಗಿದರು. ಕೋದಂಡಯ್ಯ ಅಟೆಂಡರ್ ಬೂಕಯ್ಯನ ಜತೆ ಏನೋ ಚಟಾಕಿ ಹಾರಿಸಿ ಠಾಣೆಯ ಸೂರು ಹಾರಿಹೋಗುವಂತೆ ನಗುತ್ತಿದ್ದ. +“ಕೋದಂಡಯ್ಯಾ” ಕೂಗಿದ ಟೈಟಸ್. “ಇವನೇ ಕೊಲೆಗಾರ ಅಂತ ಹೇಗೆ ಕಂಡುಹಿಡಿದೆ ಅಂತ ಈಗಲಾದ್ರೂ ಸ್ವಲ್ಪ ದೀಟೇಲಾಗಿ ಹೇಳಿಬಿಡು ಮಾರಾಯಾ. ಇನ್ನು ಸತಾಯಿಸಬೇಡ.” +ಹಲ್ಲು ಕಿರಿಯುತ್ತಲೇ ಹತ್ತಿರ ಬಂದ ಕೋದಂಡಯ್ಯ. “ನಿಮಗೆ ಹೇಳದೇ ಇನ್ನಾರಿಗೆ ಹೇಳ್ತೀನಿ ಗುರೂ? ನೀವು ಸ್ವಲ್ಪ ಆರಾಮವಾಗಿ ಕೂರಲಿ ಅಂತಾನೇ ಕಾಯ್ತಿದ್ದೆ.” ಹೇಳುತ್ತಾ ಕುರ್ಚಿ ಎಳೆದು ಕೂತು ಮಾತು ಮುಂದುವರೆಸಿದ. +“ನಿನ್ನೆ ಮಧ್ಯಾಹ್ನದವರೆಗೂ ಇವನ ಮೇಲೆ ನಂಗೆ ಯಾವ ಅನುಮಾನವೂ ಇರಲಿಲ್ಲ. ಆದ್ರೆ ಇವನು ತೋರಿಸಿದ ಒಂದು ಅತೀ ಬುದ್ಧಿವಂತಿಕೆಯ ಕೆಲಸ ಇವನ ಮೇಲೆ ಸಂಶಯ ಬರೋ ಹಾಗೆ ಮಾಡ್ತು. ದೇವಕಿಗೆ ಬಂದ ಇ ಮೇಲ್‌ನ ಒಂದು ಪ್ರಿಂಟ್‌ಔಟನ್ನ ಮಾನ್ಸಿ ಕೊಟ್ಟಿದ್ಲು. ಅದರ ಕನ್ನಡ ಅನುವಾದಾನೂ ಮಾಡಿಕೊಟ್ಟಿದ್ಲು. ನಾನು ಅವೆರಡನ್ನೂ ನಿಮ್ಮ ಟೇಬಲ್ ಮೇಲಿಟ್ಟು ಮರೆತುಬಿಟ್ಟೆ. ಅವು ಕಳೆದುಹೋದ್ವೇನೋ ಅಂತ ಯೋಚಿಸ್ತಾ ಇದ್ದಾಗ ಇವನು ನಮ್ಮ ಕಂಪ್ಯೂಟರ್‌ನಲ್ಲೇ ದೇವಕಿಯ ಮೇಲ್ ಬಾಕ್ಸ್ ಓಪನ್ ಮಾಡಿ ತಾನೇ ಮತ್ತೊಂದು ಕನ್ನಡ ಅನುವಾದ ಮಾಡಿಕೊಟ್ಟ. ಸ್ವಲ್ಪ ಹೊತ್ತಾದ ಮೇಲೆ ನಂಗೆ ಮಾನ್ಸಿ ಕೊಟ್ಟಿದ್ದ ಪ್ರತಿಗಳು ಸಿಕ್ಕಿದ್ವು. ಎರಡನ್ನೂ ನೋಡ್ದಾಗ ಒಂದು ಮುಖ್ಯ ವ್ಯತ್ಯಾಸ ಕಂಡುಬಂತು. ಗೋಕುಲ್ ಮಾಡಿದ್ದ ಅನುವಾದದಲ್ಲಿ ಶುರೂನಲ್ಲೇ ‘ನಂಗೆ ಸಿನಿಮಾ ಗೀಳು ಬಿಟ್ಟುಹೋಯ್ತು’ ಅಂತ ಇತ್ತು. ಮಾನ್ಸಿ ಮಾಡಿದ ಅನುವಾದದಲ್ಲಿ ಅದಿಲ್ಲ! ಅರೆರೆರೆ ಇದೇನು ಅಂತ ಇಂಗ್ಲೀಷ್ ಪ್ರತಿಯನ್ನ ನೋಡ್ದೆ. ನಂಗೆ ಇಂಗ್ಲೀಷ್ ಸರಿಯಾಗಿ ಬರೋದಿಲ್ಲ ನಿಜ. ಆದ್ರೆ ಗೋಕುಲ್ ಈ ವಾಕ್ಯಾನ ತಾನೇ ಸೇರ್‍ಸಿದಾನೆ ಅಂತ ತಿಳಿದುಕೊಳ್ಳದಷ್ಟು ದಡ್ಡ ಅಲ್ಲ ನಾನು. ಆದ್ರೂ ಅನುಮಾನ ಪರಿಹರಿಸಿಕೊಳ್ಳೋದಿಕ್ಕೆ ನನ್ನ ಹೆಂಡತಿಗೆ ತೋರಿಸ್ದೆ. ಅವಳು ಸ್ಕೂಲ್‌ನಲ್ಲಿ ಇಂಗ್ಲೀಷ್ ಮೇಡಮ್ಮು ಅನ್ನೋದು ನಿಮ್ಗೆ ಗೊತ್ತು. ಗೋಕುಲ್ ಮಾಡಿರೋ ತಪ್ಪನ್ನ ಅವ್ಳು ಎತ್ತಿತೋರಿಸಿದ್ಲು. +“ಈ ಆಸಾಮಿ ಇದೇಕೆ ಹೀಗೆ ಮಾಡಿದ ಅಂತ ತಲೆ ಕೆಡಿಸಿಕೊಂಡೆ. ಒರಿಜಿನಲ್ ಇ ಮೇಲ್ ನೋಡಿದ್ರೆ ಅದನ್ನ ಕಳಿಸಿರೋದು ನರಹರಿ ಇರಬೋದೇನೋ ಅನ್ನೋ ಅನುಮಾನ ಬಂದರೂ ಬರಬೋದು. ಗ್ಯಾರಂಟಿಯಾಗಿ ಹೇಳಕ್ಕಾಗಲ್ಲ. ಆದ್ರೆ ಈ ಗೋಕುಲ್ ಮಾಡಿರೋ ಅನುವಾದ ನೋಡಿದ್ರೆ, ಅಲ್ಲಿರೋ ‘ನಂಗೆ ಸಿನಿಮಾ ಗೀಳು ಬಿಟ್ಟುಹೋಯ್ತು’ ಅನ್ನೋ ವಾಕ್ಯ ನೋಡಿದ್ರೆ ಇದನ್ನ ಕಳಿಸಿದೋನು ನರಹರಿಯೇ ಅಂತ ಗ್ಯಾರಂಟಿಯಾಗಿ ಹೇಳಿಬಿಡಬೋದು. ಗೋಕುಲ್ ಹೀಗೇಕೆ ಮಾಡಿದ? ನರಹರಿಯ ಮೇಲೆ ಅನುಮಾನ ತಿರುಗೋ ಹಾಗೆ ಮಾಡಿದ್ರೆ ಇವನಿಗೇನು ಲಾಭ ಅಂತ ತಲೆ ಕೆಡಿಸ್ಕೊಂಡೆ. ಇವನೇ ಕೊಲೆಗಾರನೇ ಅಥವಾ ನಿಜವಾದ ಕೊಲೆಗಾರಂಗೆ ಇವ್ನು ರಕ್ಷಣೆ ಕೊಡ್ತಾ ಇರಬೋದಾ ಅನ್ನೋ ಹುಳು ತಲೇಲಿ ಕೊರೀತು. ಅವನ ಬಗ್ಗೆ ಆ ಒಂದು ಸಂಶಯ ಬಂದದ್ದೇ ತಡ ಬೇರೆ ಬೇರೆ ಸಂಶಯಗಳು ನನ್ನ ತಲೇಲಿ ಮೂಡೋದಿಕ್ಕೆ ಶುರೂ ಆಯ್ತು. ಇವ್ನು ತನ್ನ ಬಗ್ಗೆ ಹೇಳಿಕೊಂಡ ವಿಷಯಗಳಲ್ಲಿ ಎಷ್ಟು ಸುಳ್ಳಿರಬೋದು ಅಂತ ಅನುಮಾನ ಬಂತು. ಪಕ್ಕದ ಇಂಟರ್‌ನೆಟ್ ಕೆಫೆಗೆ ನುಗ್ಗಿ ಅಹ್ಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವೆಬ್‌ಸೈಟ್ ತೆಗೆದು ಅಲ್ಲಿ ಎಂ ಬಿ ಎ ಮಾಡಿದವರ ಲಿಸ್ಟ್ ಗಮನಿಸ್ದೆ. ಈ ವರ್ಷ ಇರಲಿ, ಕಳೆದ ಹತ್ತು ವರ್ಷಗಳಲ್ಲೂ ಗೋಕುಲ್ ಅನ್ನೋ ಸ್ಟೂಡೆಂಟ್ ಅಲ್ಲಿ ಎಂ ಬಿ ಎ ಮಾಡಿದ ಕುರುಹೇ ಇಲ್ಲ! ಅಂದರೆ ಈ ಆಸಾಮಿ ತಾನು ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಂತ ಹೇಳಿದ್ದು ಅಪ್ಪಟ ಸುಳ್ಳು ಅಂತ ಸಾಬೀತಾಗಿಹೋಯ್ತು. ನಿನ್ನೆ ಸಂಜೆ ಇವನ ಬಗ್ಗೆ ಒಂದೆರಡು ಕಡೆ ಪತ್ತೇದಾರಿ ನಡೆಸ್ದೆ. ಇವ್ನು ಓದಿರೋದು ಬರೀ ಪಿ ಯು ಸಿ; ಎಂಜಿನೀರಿಂಗ್ ಡಿಪ್ಲೋಮಾ ಫೇಲು ಅಂತ ತಿಳಿತು. ಮೊನ್ನೆ ಮೊನ್ನೆವರೆಗೂ ಓದೋ ನೆಪದಲ್ಲಿ ರಾಯಚೂರಿನ ಕಡೆ ಕಾಲ ಹಾಕ್ತಾ ಇದ್ದ ಅಂತ ಜಯನಗರದಲ್ಲಿರೋ ಅವನ ಸೋದರತ್ತೆ ಹೇಳಿದ್ರು. ಅವನ ಒಂದೆರಡು ಗೆಳೆಯರನ್ನ ಪತ್ತೆ ಮಾಡಿ ಸೂಕ್ಷ್ಮವಾಗಿ ಮಾತಾಡ್ದೆ. ಇವನ ಬಂಡವಾಳ ಮತ್ತೂ ಬಯಲಾಯ್ತು. +“ತಾನು ಮಾನ್ಸಿಯನ್ನ ಮದುವೆಯಾಗೋದಕ್ಕೆ ದೇವಕಿ ಅಡ್ಡಿಬಂದ್ಲು ಅನ್ನೋ ವಿಷಯವನ್ನ ನರಹರಿಯೇ ನಂಗೆ ಮೊನ್ನೆ ರಾತ್ರಿ ಹೇಳ್ದ. ತಾನು ಕೆಲಸವಿಲ್ಲದ ಉಂಡಾಡಿ ಅನ್ನೋದು ಅವಳ ಭಾವನೆ ಆಗಿತ್ತು ಅಂತಾನೂ ಹೇಳ್ದ. ನಿನ್ನೆ ಸಂಜೆ ರಜನಿಯಮ್ಮ ಇದನ್ನ ಖಚಿತ ಪಡಿಸಿದ್ರು. ಬದುಕನ್ನ ಹಾಳು ಮಾಡಿಕೊಂಡ ಯಾವುದೇ ಬೇಜವಾಬ್ದಾರಿ ಮನುಷ್ಯನಿಗೂ ಮಾನ್ಸಿಯನ್ನ ಮದುವೆ ಮಾಡಕೂಡದು ಅನ್ನೋದು ದೇವಕಿಯ ಅಭಿಪ್ರಾಯ ಆಗಿತ್ತು ಅಂತಾನೂ ಆಕೆ ಹೇಳಿದ್ರು. ವಿಷಯ ಹೀಗಿದ್ರೆ ಮಾನ್ಸೀನ ಗೋಕುಲ್ ಮದುವೆಯಾಗೋದನ್ನೂ ದೇವಕಿ ಒಪ್ಪೋದಿಲ್ಲ ಅಂತ ಯೋಚಿಸ್ದೆ. ಇವನೇನೋ ತಾನು ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಂತ ಬುರುಡೆ ಹೊಡಕೊಂಡಿದ್ದ. ಇನ್ನಾರು ತಿಂಗಳಲ್ಲಿ ತಾನು ಒಂದು ಬಿಸಿನೆಸ್ ಕನ್ಸಲ್ಟೆನ್ಸಿ ಶುರು ಮಾಡ್ತೀನಿ ಅಂತ ಮಾನ್ಸಿಗೆ ಹೇಳಿ ನಂಬಿಸಿದ್ದ. ನಿನ್ನನ್ನ ಅದರ ಡೈರೆಕ್ಟರ್ ಮಾಡ್ತೀನಿ ಅಂತ ಅವಳನ್ನ ಉಬ್ಬಿಸಿದ್ದ. ಆದ್ರೆ ಇವನ ನಿಜವಾದ ಬಣ್ಣ ಸ್ವಂತ ಅಕ್ಕನಿಗೆ ಗೊತ್ತೇ ಇರುತ್ತೆ ಅಲ್ವಾ? ಇವನಿಗೆ ಒಂದು ಪೈಸೆಯನ್ನೂ ಸಂಪಾದಿಸೋ ಯೋಗ್ಯತೆ ಇರ್‍ಲಿಲ್ಲ. ದೇವಕಿಗೆ ತಿಳಿಯದ ಹಾಗೆ ಯಾವುಯಾವುದೋ ಸಬೂಬು ಹೂಡಿ ದಯಾನಂದ ಅವರಿಂದ ಕಾಸು ಕೀಳ್ತಾ ಇದ್ದ. ಇದು ದೇವಕಿಗೆ ತಿಳಿದಾಗ ಆಕೆ ಅದಕ್ಕೆ ತಡೆ ಒಡ್ಡಿದ್ರು. ಈ ವಿಷಯಾನ್ನ ನಿನ್ನೆ ಸಾಯಂಕಾಲ ದಯಾನಂದ ಅವರೇ ನಂಗೆ ಹೇಳಿದ್ರು. ಇವನು ಆಸ್ತಿಯ ಆಸೆಗಾಗಿ ಮಾನ್ಸಿಯ ಸುತ್ತ ಬಲೆ ಹೆಣೀತಾ ಇರೋದನ್ನ ದೇವಕಿ ಗಮನಿಸಿದ್ದಾರೆ. ಇವನ ಪರಾವಲಂಬಿ ಮನೋಭಾವವನ್ನ ಆಕೆ ಸಹಿಸಿಲ್ಲ ಅಂತ ಗ್ಯಾರಂಟಿಯಾಗಿ ಹೇಳಬೋದು. ಮಾನ್ಸೀನ ಇವ್ನು ಮದುವೆಯಾಗೋದನ್ನ ಆಕೆ ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ನರಹರಿಯ ಬಗ್ಗೆ ವಿರೋಧವನ್ನ ಬಹಿರಂಗವಾಗೇ ತೋರ್‍ಸಿದಾರೆ. ಆದ್ರೆ ಇವನ ಬಗ್ಗೆ ಅಷ್ಟು ರಂಪ ಮಾಡೋದಿಕ್ಕೆ ಹೋಗಿಲ್ಲ. ಈ ಬಗ್ಗೆ ಗಂಡನಿಗೂ ಏನೂ ಹೇಳಿಲ್ಲ. ಸ್ವಂತ ತಮ್ಮ ಅನ್ನೋದು ಕಾರಣ ಇರಬೋದು. ಆದ್ರೂ ಅಕ್ಕ ತಮ್ಮನ ಮಧ್ಯೆ ವಿರಸ ಏರ್‍ತಾ ಹೋಗಿದೆ. ಇವನ ಕಾಟ ಅತಿಯಾದಾಗ ದೇವಕಿ ಇವನಿಗೆ ಬೆದರಿಕೆ ಹಾಕಿರಬೋದು. ‘ನಿನ್ನ ಬಗ್ಗೆ ಸತ್ಯ ಸಂಗತಿಗಳನ್ನ ಮಾನ್ಸಿಗೆ ತಿಳಿಸಿ ಅವಳು ತಾನಾಗೆ ನಿನ್ನನ್ನ ದೂರ ಇಡೋ ಹಾಗೆ ಮಾಡ್ತೀನಿ’ ಅಂತ ಆಕೆ ಅವನನ್ನ ಹೆದರಿಸಿರಬೋದು. ಇಲ್ಲಿಗೆ ಇವನ ಪಿತ್ಥ ಕೆದರಿದೆ. ಆಕೇನ್ನ ಕೊಲೆ ಮಾಡೋ ಯೋಜನೇನ ಇವನು ಹಾಕೋದಿಕ್ಕೆ ಇದು ಕಾರಣ ಇರಬೋದು. ಮಾನ್ಸಿಯ ಆಸ್ತಿಯನ್ನ ಹೊಡಕೊಂಡು ಮಜ ಉಡಾಯಿಸೋ ತನ್ನ ಆಸೆಗೆ ದೇವಕಿ ಮುಳ್ಳಾಗಿ ನಿಂತಿರೋದನ್ನ ಇವನು ಸಹಿಸಿಲ್ಲ. ತನ್ನ ಆಸೆಗಳೆಲ್ಲ ನೆರವೇರಬೇಕಾದ್ರೆ ದೇವಕಿ ಸಾಯಬೇಕು ಅಂತ ಅವ್ನು ನಿರ್ಧಾರ ಮಾಡಿದ್ದಾನೆ. ಹಾಗೇ ಕೊಲೆಗೆ ಯೋಜನೆ ರೂಪಿಸಿದ್ದಾನೆ. ಇ ಮೇಲ್ ಮೂಲಕ ದೇವಕಿಯನ್ನ ಮನೆಗೆ ಬರೋ ಹಾಗೆ ಮಾಡಿದ್ದಾನೆ. ತನ್ನ ಪ್ಲಾನ್‌ಗೆ ಅವಳನ್ನ ಒಪ್ಪಿಸೋ ಕಡೇ ಪ್ರಯತ್ನ ಮಾಡೋದು, ಆಕೆ ಒಪ್ಪದೇ ಹೋದ್ರೆ ಅವಳನ್ನ ಕೊನೆಗಾಣಿಸಿಬಿಡೋದು ಅನ್ನೋದು ಅವನ ಯೋಜನೆ. ಅವನ ಉದ್ದೇಶಾನ ತಿಳಿಯದ ದೇವಕಿ ಮನೆಗೆ ಬಂದಿದ್ದಾರೆ. ಅವನಿಗೆ ಏಕಾಂತದಲ್ಲಿ ಬುದ್ಧಿಮಾತು ಹೇಳೋ ಪ್ರಯತ್ನ ಮಾಡಬೇಕು ಅನ್ನೋದು ಆಕೆಯ ಯೋಚನೆಯಾಗಿತ್ತೇನೋ. ಅವನ ದುರುದ್ದೇಶ ಆಕೆಯ ಅರಿವಿಗೆ ಬಂದಿರಲಾರದು. ಹೀಗಾಗೇ ಆಕೆ ಹಾಸಿಗೆ ಮೇಲೆ ಆರಾಮವಾಗಿ ಮಲಗಿ ಅವನ ಕೈಯಿಂದ್ಲೇ ಹಣೆಗೆ, ಕುತ್ತಿಗೆಗೆ ಅಮೃತಾಂಜನ್ ಹಚ್ಚಿಸಿಕೊಂಡಿದ್ದಾರೆ. ಹಾಗೇ ಇಬ್ಬರ ನಡುವೆ ಮಾತುಕಥೆ ನಡೆದಿದೆ. ಅಕ್ಕ ತನ್ನ ಮನಸ್ಸನ್ನ ಬದಲಾಯಿಸೋದೇ ಇಲ್ಲ ಅಂತ ಇವನಿಗೆ ಖಚಿತ ಆದಾಗ ತನ್ನ ಯೋಜನೇನ ಕಾರ್ಯರೂಪಕ್ಕಿಳಿಸಿದ್ದಾನೆ. ಜೇಬಿನಲ್ಲಿದ್ದ ನೈಲಾನ್ ಹುರಿಯನ್ನ ಹೊರತೆಗೆದು ದೇವಕಿಯ ಕುತ್ತಿಗೆಗೆ ಸುತ್ತಿ ಬಿಗಿಯಾಗಿ ಎಳೆದಿದ್ದಾನೆ. ದೇವಕಿಗೆ ಇದು ಅನಿರೀಕ್ಷಿತ. ಮಂಚದ ಮೇಲೆ ಒರಗಿದ್ದ ಆಕೆ ಎಮರ್ಜೆನ್ಸಿ ಲ್ಯಾಂಪ್‌ನ ಮಂದ ಬೆಳಕಿನಲ್ಲಿ ಅವನ ಬೆರಳುಗಳ ಆಟಾನ ಗಮನಿಸಿರೋ ಸಾಧ್ಯತೆ ಇಲ್ಲ. ಅಲ್ಲದೇ ಅವನ ದುರುದ್ದೇಶದ ಬಗ್ಗೆ ಯಾವುದೇ ಪೂರ್ವಾನುಮಾನವೂ ಇಲ್ಲದ ಆಕೆ ಅವನ ಕುತಂತ್ರಕ್ಕೆ ಸುಲಭವಾಗಿ ಬಲಿಯಾಗಿಹೋಗಿದ್ದಾರೆ. ದೇವಕಿಯನ್ನ ಕೊಂದ ನಂತರ ಆಕೆಯ ದೇಹಕ್ಕೆ ಬೆಂಕಿ ಹಾಕಿದ್ದು ಯಾಕೆ ಅಂತ ಗೊತ್ತಾಗ್ತಾ ಇಲ್ಲ. ಬೆಂಕೀನಲ್ಲಿ ಶವದ ಜತೆ ಇಡೀ ಕೋಣೆ ಸುಟ್ಟುಹೋದ್ರೆ ಆಗ ದೇವಕಿಯ ಸಾವು ಬೆಂಕಿ ಆಕಸ್ಮಿಕ ಅಂತ ಎಲ್ರೂ ತಿಳೀತಾರೆ ಅನ್ನೋ ಉದ್ದೇಶ ಅವನಿಗಿತ್ತೇನೋ. ಕೆಲಸ ಮುಗಿಸಿ ಮುಂಬಾಗಿಲಿಂದ್ಲೇ ಹೊರಬಂದಿದ್ದಾನೆ. ಅದಕ್ಕೆ ಸ್ಪ್ರಿಂಗ್ ಲಾಕ್ ಇರೋದ್ರಿಂದ ಬಾಗಿಲು ಮುಚ್ಚಿದ ಕೂಡಲೇ ಲಾಕ್ ಆಗಿಬಿಟ್ಟಿದೆ. ಇವ್ನು ತನ್ನ ಬೆರಳಗುರುತುಗಳು ಎಲ್ಲೂ ಬೀಳದ ಹಾಗೆ ಎಚ್ಚರ ವಹಿಸಿದ್ದಾನೆ. ದೇವಕಿಯ ಹಣೆಗೆ ಅಮೃತಾಂಜನ್ ಹಚ್ಚೋವಾಗ್ಲೂ ಬಹುಷಃ ಕೈಗೆ ತೆಳುವಾದ ಪ್ಲಾಸ್ಟಿಕ್ ಗ್ಲೋವ್ಸ್ ಹಾಕ್ಕೊಂಡಿದ್ದಾನೆ. ಹೆಚ್ಚು ಶಬ್ಧಗಳು ಆಗದ ಹಾಗೆ ನೋಡ್ಕೊಂಡಿದ್ದಾನೆ. ಸಣ್ಣಪುಟ್ಟ ಶಬ್ಧಗಳು ಆಗಿದ್ರೂ ಸುರೀತಾ ಇದ್ದ ಮಳೇನಲ್ಲಿ ಅವು ಯಾರಿಗೂ ಕೇಳಿಸಿರೋ ಸಾಧ್ಯತೆ ಇಲ್ಲ. ಒಂದುವೇಳೆ ಮಾನ್ಸಿಯ ಗಮನಕ್ಕೆ ಬೆಂಕಿ ಬಾರದೇಹೋಗಿದ್ರೆ ಅವನ ಪ್ಲಾನ್ ಪೂರ್ಣವಾಗಿ ಯಶಸ್ವಿಯಾಗ್ತಾ ಇತ್ತು. ಶವ ಸುಟ್ಟು ಕರಕಲಾಗಿಬಿಟ್ಟಿರ್ತಿತ್ತು.” ವಿವರಣೆ ಮುಗಿಸಿ ಕಿರುನಗೆ ನಕ್ಕ ಕೋದಂಡಯ್ಯ. +“ಮಾನ್ಸಿ ನೀರು ಹಾಯಿಸ್ತಾ ಇದ್ದಾಗ ಅವಳ ಹಿಂದೆ ಯಾಕೆ ನಿಂತಿದ್ದ?” ಅಧಿಕಾರಿಯ ಸಂದೇಹಗಳಿನ್ನೂ ದೂರಾಗಿರಲಿಲ್ಲ. +ಕೋದಂಡಯ್ಯ ನಕಾರದಲ್ಲಿ ತಲೆಯಾಡಿಸಿದ. +“ಅದು ನಂಗೂ ಅರ್ಥ ಆಗ್ತಾ ಇಲ್ಲ ಗುರೂ. ಅವನನ್ನೇ ಕೇಳಬೇಕು. ಮಾನ್ಸೀನ ಕೊಲ್ಲೋ ಉದ್ದೇಶವಂತೂ ಅವನಿಗರಲಿಲ್ಲ ಅಂತ ಗ್ಯಾರಂಟಿಯಾಗಿ ಹೇಳಬೋದು. ಅವಳನ್ನ ಪಡಕೊಳ್ಳೋದಿಕ್ಕೇ ಅಲ್ಲವೇ ಆ ಪಾಪಿ ಒಡಹುಟ್ಟಿದ ಅಕ್ಕನನ್ನೇ ಕೊಲೆ ಮಾಡಿದ್ದು? ಈ ಸೈತಾನನ ಮನಸ್ನಲ್ಲಿ ಬೇರೇನು ಕೆಟ್ಟ ಯೋಚನೆ ಇತ್ತೋ ಅವನನ್ನೇ ಕೇಳಬೇಕು. ಹೇಗೂ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನಲ್ಲ, ಬುರುಡೆಗೆ ನಾಲ್ಕು ಬಾರಿಸಿ ಎಲ್ಲಾ ವಿಷಯಾನ್ನೂ ಕಕ್ಕಿಸೋಣ ಬಿಡಿ.” +“ಕೊಲೆ ನಡೆದ ರಾತ್ರಿ ತಾನು ಹೈದರಾಬಾದಿನಿಂದ ಮೈಸೂರಿಗೆ ಪ್ರಯಾಣ ಮಾಡಿದೆ ಅಂತ ಹೇಳಿದನಲ್ಲ?” ಅಧಿಕಾರಿಯಿಂದ ಮತ್ತೊಂದು ಪ್ರಶ್ನೆ ಬಂತು. +“ಇವನು ಹೈದರಾಬಾದಿಗೆ ಹೋಗಲೇ ಇಲ್ಲ. ಇದೆಲ್ಲಾ ಬರೀ ಬುರುಡೆ. ಅವನ ನಾಟಕದ ಒಂದು ಭಾಗ. ದೇವಕಿಯನ್ನ ಕೊನೆಗಾಣಿಸೋದಿಕ್ಕೆ ಬಹುಷಃ ಒಂದು ವಾರದ ಹಿಂದೇನೇ ಪ್ಲಾನ್ ಹಾಕಿದ್ದನೆ. ತನ್ನ ಮೇಲೆ ಅನುಮಾನ ಬರದಿರಲಿ ಅಂತ ಹೈದರಾಬಾದ್ ಕಥೆ ಕಟ್ಟಿದ್ದಾನೆ. ವಾಸ್ತವವಾಗಿ ಕೊಲೆ ನಡೆದ ಸಂಜೆ ಅವ್ನು ಮೈಸೂರಿನಲ್ಲೇ ಇದ್ದ ಅಂತ ನಾನು ಪತ್ತೆ ಮಾಡಿದ್ದೀನಿ. ತನ್ನ ರೂಂನಲ್ಲೇ ಸಿಗರೇಟ್ ಹೊಗೆ ಮಧ್ಯೆ ಸಂಜೆಪೂರ್ತಿ ಕೂತಿದ್ದ ಅಂತ ಅವನ ಒಬ್ಬ ಫ್ರೆಂಡ್ ಹೇಳ್ತಾನೆ. ಅಲ್ಲದೇ ಕೊಲೆ ನಡೆದ ರಾತ್ರಿ ಬನ್ನೂರಿನ ತನ್ನ ಫ್ರೆಂಡ್ ಒಬ್ಬನ ಬೈಕನ್ನ ತಗೋಂಡಿದ್ದ ಅಂತಾನೂ ತಿಳೀತು.” +“ಭಾಳಾ ಚಾಲಾಕಿ ಕಣಯ್ಯ ಇವ್ನು.” ಟೈಟಸ್ ಉದ್ಗರಿಸಿದ. +“ನಿಜ ಗುರೂ. ಅಂತಿಂಥಾ ಚಾಲಾಕಿ ಅಲ್ಲ. ಸರಿಯಾದ ಕೇಪ್‌ಮಾರಿ. ಇವನ ಇ ಮೇಲ್ ಕಥೆ ಕೇಳಿ. ಒಂದಲ್ಲಾ ನಾಕೈದು ಇ ಮೇಲ್ ಐಡಿ ಇಟ್ಕೊಂಡಿದ್ದ. ಮಾನ್ಸಿಗೆ ಕೊಟ್ಟಿದ್ದೇ ಒಂದು, ತನ್ನಕ್ಕನಿಗೆ ಕೊಟ್ಟಿದ್ದೇ ಒಂದು, ಫ್ರೆಂಡ್ಸ್‌ಗೆ ಕೊಟ್ಟಿದ್ದು ಇನ್ನೊಂದು- ಹೀಗೆ. ಒಬ್ಬರಿಗೆ ಕೊಟ್ಟಿದ್ದು ಇನ್ನೊಬ್ಬರಿಗೆ ಗೊತ್ತಿಲ್ಲ! ದೇವಕಿಗೆ ಇವನು ಕಳಿಸಿದ್ದ ಇ ಮೇಲನ್ನ ಮಾನ್ಸಿ ಪತ್ತೆ ಹಚ್ಚಿಬಿಟ್ಟದ್ದರಿಂದ ಇವನಿಗೇನೂ ಹೆದರಿಕೆ ಆದಹಾಗೆ ಕಾಣೋದಿಲ್ಲ. ಅದರಲ್ಲಿರೋ ತನ್ನ ಇ ಮೇಲ್ ಐಡಿಯಿಂದ ತನ್ನ ಪತ್ತೆ ಆಗಿಬಿಡಬೋದೇನೋ ಅನ್ನೋ ಹೆದರಿಕೆ ಅವನಿಗಿರಲಿಲ್ಲ. ದೇವಕಿ ಅವನ ಇ ಮೇಲ್ ಐಡಿನ ಬರೆದಿಟ್ಟಿದ್ದ ಡೈರಿಯನ್ನ ಮಂಗಮಾಯ ಮಾಡಿಬಿಟ್ಟಿದ್ದನಲ್ಲ?” +“ನಡೆದಿರೋದು ಹೀಗೆ. ನನ್ನ ತಲೆ ಎತ್ತೆತ್ತಲೋ ಓಡಿಬಿಟ್ಟಿತ್ತು. ಢಯಾನಂದ ಅವರ ಆಫೀಸ್‌ರೂಂನಲ್ಲಿ ನಿದ್ರೆಯ ಗುಳಿಗೆಗಳ ಬಾಟಲು ನೋಡಿ ನಾನು ಏನೇನೋ ಊಹೆ ಮಾಡೋದಿಕ್ಕೆ ಹೊರಟಿದ್ದೆ.” ಟೈಟಸ್ ಹಣೆ ಉಜ್ಜಿದ. +ಕೋದಂಡಯ್ಯ ನಕ್ಕ. +“ಆ ನಿದ್ರೆಗುಳಿಗೆಗಳದ್ದೇನೂ ದೊಡ್ಡ ರಹಸ್ಯ ಅಲ್ಲ. ಅವುಗಳ ಪ್ರಯೋಗಕ್ಕೆ ಒಳಗಾದ ಬಡಪಾಯಿ ನರಹರಿ.” +“ಅಂ! ಅದ್ಹೇಗೆ?” ಅಧಿಕಾರಿಯಿಂದ ಅಚ್ಚರಿಯ ಪ್ರಶ್ನೆ ಹೊರಬಂತು. +“ನರಹರಿಯ ಜತೆ ಘರ್ಷಣೆ ಆದಾಗಿನಿಂದ ದೇವಕಿಗೆ ಅವನ ಬಗ್ಗೆ ವಿಪರೀತ ಹೆದರಿಕೆ ಇತ್ತು. ರಾತ್ರಿ ತಾನು ಒಂಟಿಯಾಗಿರೋವಾಗ ಅವನೇನಾದರೂ ತೊಂದರೆ ಕೋಡಬೋದೇನೋ ಅನ್ನೋ ಭಯ ಅವಳನ್ನ ಯಾವಾಗಲೂ ಕಾಡ್ತಾ ಇತ್ತು. ಇದನ್ನ ಗಂಡನ ಜತೆ ಹೇಳಿಕೊಂಡ್ಲು. ನರಹರಿಗೆ ನಿದ್ರೆಯ ಔಷದಿ ಕೊಟ್ಟು ಅವನು ರಾತ್ರಿಯಿಡೀ ಕೊರಡಿನ ಹಾಗೆ ನಿದ್ದೆ ಮಾಡೋ ಪ್ಲಾನ್ ಹಾಕಿದ್ದು ದಯಾನಂದ. ದಿನಾ ರಾತ್ರಿಯೂಟಕ್ಕೆ ನಿದ್ರೆಮಾತ್ರೆ ಬೆರೆಸಿ ಅವನಿಗೆ ಕೋಡೋದು ಅಡಿಗೆಯಾಕೆ ಅಂಬುಜಮ್ಮನ ಕೆಲಸ. ನಿನ್ನೆ ಬೆಳಿಗ್ಗೆ ಅವಳೇ ಇದನ್ನ ನಂಗೆ ಹೇಳಿದ್ಲು.” +“ಇದು ನಂಗೂ ಗೊತ್ತಿತ್ತು.” ರಜನಿ ಮೆಲ್ಲಗೆ ದನಿಗೂಡಿಸಿದಳು. +ಹೆಂಡತಿಯತ್ತ ಅಚ್ಚರಿಯ ನೋಟ ಬೀರಿದ ವಸಂತರಾವ್ ಕೋದಂಡಯ್ಯನತ್ತ ತಿರುಗಿದ. +“ಗೋಕುಲ್ ಇಂಥೋನು ಅಂತ ನಮಗೆ ಗೊತ್ತೇ ಇರಲಿಲ್ಲ.” ಬೆರಗು ಹತ್ತಿದ ದನಿಯಲ್ಲಿ ಉದ್ಗರಿಸಿದ. ಕೋದಂಡಯ್ಯ ಅವನ ಕಡೆ ತಿರುಗಿದ. +“ಇವನೊಬ್ಬ ಭಯಂಕರ ಆಕ್ಟರ್. ತನ್ನ ಬಗ್ಗೆ ಭಾರಿ ಭಾರಿ ಸುಳ್ಳುಗಳನ್ನೇ ಹೇಳಿ ನಿಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದ. ವಾಸ್ತವವಾಗಿ ಹೇಳೋದಾದ್ರೆ ಮಾನ್ಸಿಯ ಆಸ್ತಿಯನ್ನ ಹೊಡಕೊಂಡು ಸುಖಜೀವನ ನಡೆಸೋದಿಕ್ಕೆ ಪ್ಲಾನ್ ಹಾಕಿದ್ದ ಪರಾವಲಂಬಿ ಇವನು.” +“ನಾವೆಲ್ಲಾ ನರಹರಿ ಪರಾವಲಂಬಿ ಅಂತ ತಿಳಿದಿದ್ವು.” ರಜನಿಯ ದನಿಯಲ್ಲಿ ಪಶ್ಚಾತ್ತಾಪವಿತ್ತು. +“ನಾನು ನರಹರಿಯನ್ನ ಸೂಕ್ಷ್ಮವಾಗಿ ಗಮನ್ಸಿದ್ದೀನಿ. ಅವನದು ಪರಾವಲಂಬಿಯ ಮನೋಭಾವ ಅಲ್ಲ. ಇಲ್ಲೀವರೆಗೆ ತನ್ನ ಬದುಕನ್ನ ಹಾಳು ಮಾಡಿಕೊಂಡದ್ದರ ಅರಿವು ಅವನಿಗಿದೆ. ಅದರ ಬಗ್ಗೆ ಪಶ್ಚಾತ್ತಾಪಾನೂ ಇದೆ. ಇನ್ನು ಮುಂದಾದರೂ ಜವಾಬ್ದಾರಿಯುತ ಬದುಕು ನಡೆಸಬೇಕು ಅಂತ ಅವನು ಧೃಢ ನಿರ್ಧಾರ ಮಾಡಿದ್ದಾನೆ. ಅಣ್ಣನ ವ್ಯವಹಾರದಲ್ಲಿ ಕೈಗೂಡಿಸಿ ಅದನ್ನ ಇನ್ನೂ ಚೆನ್ನಾಗಿ ಬೆಳೆಸಬೇಕು ಅನ್ನೋ ಛಲ ಅವನಲ್ಲಿ ಮೂಡಿದೆ. ಅವನು ಮಾನ್ಸಿಯ ಹಣವನ್ನ ಬಯಸ್ಲಿಲ್ಲ. ಅವನಿಗದು ಬೇಕಾಗೂ ಇಲ್ಲ. ವಾಸ್ತವವಾಗಿ ಹೇಳೋದಾದ್ರೆ ಅವನು ಮಾನ್ಸೀನ ತುಂಬಾ ಇಷ್ಟ ಪಡ್ತಾನೆ. ‘ಅವಳ ಆಸ್ತಿಯಲ್ಲಿ ನಂಗೆ ಒಂದು ಬಿಡಿಗಾಸೂ ಬೇಡ. ಅವಳು ನನ್ನ ಹೆಂಡತಿಯಾದರೆ ಸಾಕು, ಅವಳನ್ನ ನಾನು ನನ್ನ ಸಂಪಾದನೇಲಿ ಹೂವಿನ ಹಾಗೆ ನೋಡ್ಕೋತೀನಿ’ ಅಂತ ನಂಗೆ ಹೇಳ್ದ. ಅವನ ಮಾತುಗಳನ್ನ ನಂಬಬೋದು. ಅವನು ಪರಾವಲಂಬಿ ಅಲ್ಲ. ನಿಜವಾದ ಪರಾವಲಂಬಿ ಜೈಲು ಸೇರಿದ್ದಾನೆ.” ಮಾತು ಮುಗಿಸಿ ನಕ್ಕ ಕೋದಂಡಯ್ಯ. +“ಅಂದ್ರೆ ನರಹರಿ ಒಳ್ಳೇ ಮನುಷ್ಯ ಅಂತೀರಾ? ದೇವಕಿ ಜತೆ ಅವನು ವರ್ತಿಸಿದ ರೀತಿ ನೋಡಿದ್ರೆ…” ವಸಂತರಾವ್‌ನ ದನಿಯಲ್ಲಿ ಇನ್ನೂ ಅಪನಂಬಿಕೆ ಇತ್ತು. +“ಆಯಮ್ಮ ಅವನನ್ನ ಪರಾವಲಂಬಿ ಅಂತ ಕರೆದದ್ದನ್ನ ಸಹಿಸೋದಿಕ್ಕೆ ಅವನಿಗೆ ಆಗಿಲ್ಲ. ಕಾರಣ ಸ್ಪಷ್ಟ. ಅವನು ಪರಾವಲಂಬಿ ಅಲ್ಲ. ನರಹರಿ ಸ್ವಾಭಿಮಾನಿ. ತನ್ನ ಹೆಸರಿಗೆ ಕಳಂಕ ಹತ್ತೋದನ್ನ ಅವನು ಒಪ್ಪಿಕೊಳ್ಳೋದು ಅಸಂಭವ. ಸ್ವಾಭಿಮಾನಿಯಾದ ಒಬ್ಬ ಗಂಡಸು ತನ್ನದೆಲ್ಲವನ್ನೂ ಜೋಪಾನವಾಗಿ ಕಾಪಾಡಿಕೊಳ್ತಾನೆ- ತನ್ನ ಹೆಸರನ್ನೂ ಸಹ, ಹೆಂಡತಿಯನ್ನೂ ಸಹ.” +ವಸಂತರಾವ್ ಕಣ್ಣುಮುಚ್ಚಿ ಆಲೋಚನೆಯಲ್ಲಿ ಮುಳುಗಿದ. +“ಅವನನ್ನ ನಾನೂ ತಪ್ಪು ತಿಳಿದಿದ್ದೆ.” ಅಧಿಕಾರಿ ಸಂತಾಪದ ದನಿ ತೆಗೆದ. ವಸಂತರಾವ್‌ನತ್ತ ತಿರುಗಿ ಪ್ರಶ್ನಿಸಿದ. “ಅಂದಹಾಗೆ ಈಗೆಲ್ಲಿ ಆತ? ನಿಮ್ಮ ಜತೆ ಬರಲಿಲ್ವೇನು?” +ಕಣ್ಣುಮುಚ್ಚಿ ಚಿಂತನೆಯಲ್ಲಿ ಮುಳುಗಿದ್ದ ಗಂಡ ಬಾಯಿ ತೆರೆಯುವುದಕ್ಕೂ ಮೊದಲೇ ರಜನಿ ಹೇಳಿದಳು. +“ನಮ್ಮ ಜತೆ ಇಲ್ಲಿಗೆ ಬರೋದಿಕ್ಕೆ ಹೊರಟಿದ್ರು. ಆದ್ರೆ ಅದೇ ಸಮಯಕ್ಕೆ ಫ್ಯಾಕ್ಟರೀನಲ್ಲಿ ಏನೋ ಪ್ರಾಬ್ಲಂ ಆಗಿದೆಯಂತೆ, ಹೋಗಿ ನೋಡು ಅಂತ ದಯಾನಂದ ನರ್ಸಿಂಗ್ ಹೋಂನಿಂದ ಫೋನ್ ಮಾಡಿದ್ರು. ನಂಗೆ ಆ ಕೆಲಸ ಮುಖ್ಯ ಅಂತ ಹೇಳಿ ನರಹರಿ ಅಲ್ಲಿಗೆ ಓಡಿದ್ರು.” +ಕೋದಂಡಯ್ಯನ ಮುಖದ ನಗೆ ವಿಶಾಲವಾಯಿತು. +“ನೋಡಿದ್ರಾ. ಅವನು ಜವಾಬ್ದಾರಿಯುತ ಮನುಷ್ಯ ಆಗ್ತಾ ಇದ್ದಾನೆ ಅಂತ ನಾನು ಹೇಳ್ಲಿಲ್ವಾ?” ಹೇಳುತ್ತಾ ತಲೆ ತಗ್ಗಿಸಿ ಕುಳಿತು ಕಣ್ಣಿಗೆ ಕರವಸ್ತ್ರ ಒತ್ತಿದ್ದ ಮಾನ್ಸಿಯತ್ತ ನಡೆದ. ಅವಳ ಭುಜ ಒತ್ತಿ ಮೃದುದನಿಯಲ್ಲಿ ಹೇಳಿದ. +“ನೀನು ಈಪಾಟೀ ಶೋಕ ಮಾಡೋದಿಕ್ಕೆ ಕಾರಣ ಇಲ್ಲಮ್ಮ. ನಿನ್ನ ಬದುಕಿನಲ್ಲಿ ಬಂದಿದ್ದ ಧೂಮಕೇತು ನಾಶವಾಯ್ತು. ಅದಕ್ಕಾಗಿ ಸಂತೋಷ ಪಡಬೇಕು ನೀನು.” ಸ್ವಲ್ಪ ತಡೆದು ಮುಂದುವರೆಸಿದ. “ಒಂದು ಮಾತು ಹೇಳ್ತೀನಿ ಕೇಳು. ನರಹರಿ ಎಂ ಬಿ ಎ ರ್‍ಯಾಂಕ್ ಹೋಲ್ಡರ್ ಅಲ್ಲದಿರಬೋದು, ನಿನ್ನನ್ನ ಅವನು ದೊಡ್ಡ ಕಂಪನಿಯ ಡೈರೆಕ್ಟರ್ ಮಾಡದೇ ಇರಬೋದು. ಆದ್ರೆ ನಿನ್ನನ್ನ ಹೂವಿನ ಹಾಗೆ ನೋಡ್ಕೋತಾನೆ. ನೀನು ಬಯಸಿದ ನೆಮ್ಮದಿಯ ಬದುಕನ್ನ ನಿನಗೆ ಕೊಡ್ತಾನೆ.” ಕ್ಷಣ ನಿಧಾನಿಸಿ ಧೃಢದನಿಯಲ್ಲಿ ಹೇಳಿದ. “ಈ ಬಗ್ಗೆ ನಾನು ಗ್ಯಾರಂಟಿ ಕೊಡ್ತೀನಿ ಕಣಮ್ಮ. ಇದುವರೆಗೂ ನಾನು ಗ್ಯಾರಂಟಿ ನಿಂತ ಯಾವ ಪಾರ್ಟಿಯೂ ಡಿಫಾಲ್ಟರ್ ಆಗಿಲ್ಲ.” +ಮಾನ್ಸಿಯ ತಲೆ ಮತ್ತೂ ಬಾಗಿತು. +***** +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ದ್ವಿತೀಯಾಶ್ವಾಸಂ ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ […] +ಅಧ್ಯಾಯ ಮೂರು ಬ್ರಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟುಹೋದ ಮೇಲೆ ಪ್ರಾಣೀಶಾಚಾರ್ಯರು ಚಂದ್ರಿಗೆ ’ಕೂತುಕೊ’ ಎಂದು ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಬಂದರು. ’ಇವಳೇ, ಚಂದ್ರಿಯದು ತುಂಬ ನಿಷ್ಕಲ್ಮಷ ಹೃದಯ ಕಾಣೇ’ ಎಂದು ಅವಳು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_616.txt b/Kannada Sahitya/article_616.txt new file mode 100644 index 0000000000000000000000000000000000000000..31a6d8df1a4502072b0c72002449cbfb98a04d0c --- /dev/null +++ b/Kannada Sahitya/article_616.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ ಕಲ್ಪನೆಯೇ ಅಪೂರ್ವ. ಜೀವದೊಳಗಿಂದ ಜಾರಿ ಮತ್ತೊಂದು ಕುಡಿಯೊಡೆ ಯುವ ಬದುಕೇ ಅಸದಳ. +ನೀಲಿ ಬಟ್ಟೆಯ ನರ್ಸ್‌ಗಳು ಮಳೆಗೆ ಮುನ್ನ ಆಕಾಶದಲ್ಲಿ ಮೋಡಗಳು ಒಟ್ಟಾದಂತೆ ಲಗುಬಗೆಯಿಂದ ಓಡಾಡುತ್ತಾರೆ. ಮಳೆಗೆ ಮುನ್ನ ಅದುರುವ ಕೆರೆಯಂಚಿನ ಕಪ್ಪೆಗಳಂತೆ ಮಿಡಿವ ನಾಡಿಗಳನ್ನು ಅಳೆಯುತ್ತಾರೆ. ಬಳ್ಳಿಯುದರದಲ್ಲಿ ಮುದುಡಿ ಕುಳಿತ ಮೊಗ್ಗಿನ ಬಡಿತವೆಣಿಸುತ್ತಾರೆ. ಬಿಳೀಗೋಡೆ, ಬಿಳೀನೆಲದ ನಿರ್ಜೀವಿ ಕಟ್ಟಡದಲ್ಲಿ ಜೀವೋದಯದ ಮಹೂರ್ತಕ್ಕಾಗಿ ಸಂಭ್ರಮವೋ ಸಂಭ್ರಮ. ಗೋಡೆಯ ಮೇಲಿನ ಡಿಜಿಟಲ್ ಕ್ಲಾಕ್ ಗಂಟೆ ನಿಮಿಷ ಸೆಕೆಂಡುಗಳನ್ನು ಎಣಿಸುತ್ತದೆ- ಟಿಕ್ ಟಿಕ್‌ಗಳ ನಡುವೆ ಸಂಭವಿಸಲಿರುವ ಮರೆಯದ ಅಲೌಕಿಕ ಘಟನೆಗಾಗಿ. +ಕಂಪನಗಳು. ಭೂಮಿತಾಯಿಯಂತೆ ಶಾಂತ ಮುಖಮುದ್ರೆಯಲ್ಲಿದ್ದ ಬಳ್ಳಿ ರೋಮಾಂಚನದಿಂದ ಕಂಪನಗಳನ್ನು ಅನುಭವಿಸುತ್ತದೆ. ತಿಳಿನೀರಿನಲ್ಲಿ ಮೂಡಿದ ಉಂಗುರಗಳಂತೆ ನಿಧಾನವಾಗಿ ಸುತ್ತಲೂ ಹರಡುತ್ತ ದಡ ಮುಟ್ಟುವ ಮುನ್ನ ಕರಗುವ ಕಂಪನಗಳು. ಸುಖದ ಹಂತವನ್ನು ದಾಟಿ ನಿದಾನವಾಗಿ ಕಂಪನಗಳು ವೇಗವನ್ನು ಪಡೆಯುತ್ತವೆ. ಗುಡ್ಡ ಬೆಟ್ಟಗಳನ್ನು ಹಾದು ನಾಡು ಕಾಡನ್ನೆಲ್ಲ ಅದುರಿಸುವ ಭೀಕರ ಅಲೆಗಳು ಅವು ಈಗ. ಎದೆಯಿಂದ ಮೂಡಿ ಜೀವದ ಇಂಚಿಂಚನ್ನು ಬಟ್ಟೆಯಂತೆ ಹಿಂಡುವ ನೋವಿನ ತರಂಗಗಳು. ಈ ಕಂಪನಗಳಿಗೆ ಭೂಮಿತಾಯಿ ನೋವಿನಿಂದ ನಲುಗಿ ಒಸಡು ಕಚ್ಚುತ್ತಾಳೆ. ಹೆದರಿ ಕಂಗಾಲಾದ ಕಣ್ಣುಗಳಿಗೆ ರೆಪ್ಪೆಗಳು ಕಪ್ಪು ಮುಸುಕನ್ನೆಳೆಯುತ್ತವೆ. ಉಸಿರು ಏದುಸಿರಾಗಿ ನಿಟ್ಟುಸಿರಾಗಿ ವೇಗಕ್ಕಿಳಿದ ಓಟಗಾರನಂತೆ ನೋವನ್ನು ನಿಯಂತ್ರಿಸಲು ನೋಡುತ್ತದೆ. +ನೋವು ಉರಿ ಭಯ ಅಸಹಾಯಕತೆಗಳಿಂದ ಚೀರುತ್ತದೆ ಬಳ್ಳಿ. ಸೃಷ್ಟಿಯ ಎಷ್ಟೇ ಅನುಪಮ ಕೊಡುಗೆಗಳ ಆಸೆಯ ನಡುವೆಯೂ ತಡೆಯಲಾರದ್ದು ಇದು. ತಡೆಯಲೇ ಬೇಕು ಇವಳು, ಏಕೆಂದರೆ ಈ ವಿಶ್ವದಲ್ಲೇ ವಿಶೇಷ ಇವಳು. ಇವಳು ಮೊಗ್ಗುಗಳನ್ನು ಕುಡಿಯೊಡೆಸದಿದ್ದರೆ ಹಸಿರು ನೆಲವಿಲ್ಲ, ಹರಿವ ಜಲವಿಲ್ಲ, ಹರಿತ ದೃಷ್ಟಿಗಳಿಲ್ಲ, ಸಂಭ್ರಮದ ಕಿವಿಗಳಿಲ್ಲ. ಇವಳಿಂದಲೇ ಜೀವಕೋಟಿ ಹುಟ್ಟಿ ಬದುಕಿ ಬಾಳಿ ಬಿರಿದ ಹಣ್ಣಿನಿಂದ ಬೀಜಗಳು ಸಿಡಿದಂತೆ ನೂರ್ಪಟ್ಟಾಗುತ್ತಿವೆ. ಬದುಕನ್ನು ಇಂಪು ಸಂಗೀತದಂತೆ ಜೀವಂತವಾಗಿಟ್ಟವಳು ಇವಳು. ಹೆಣ್ಣಿವಳು, ತಾನೇ ಎರಡಾಗಿ ಮೂರಾಗಿ ಹತ್ತಾಗಿ ಸಾವಿರವಾಗಿ ಸಲಹ ಬಲ್ಲವಳು. +ಬೆಚ್ಚನೆಯ ಕೋಶದಲ್ಲಿ ಟಸಿಲೊಡೆದು ಆರೈಕೆಯ ಕುಡಿಯಾಗಿ ಬೆಳೆದು ದುಂಡನೆಯ ಆಕಾರದ, ಜೀವ ಜಗತ್ತಿನ ಪ್ರತಿನಿಧಿಯಾದ ಮೊಗ್ಗು ಪ್ರಪಂಚಕ್ಕೆ ಕಾಲಿಡಲು ಹಂಬಲಿಸುತ್ತಿದೆ. ತಾಯಿ ಕಂಪನಗಳೊಳಗೆ ತಾನೂ ತೇಲಿ ಕತ್ತಲ ಭೇದಿಸಿ ಹೊರಟ ಜಗದೇಕ ವೀರನಂತೆ ನೆತ್ತಿಯಲ್ಲೇ ಗುದ್ದಿ ಹಾದಿ ಬರೆಯಲು ನೋಡುತ್ತದೆ. ಒಮ್ಮೆ ಮತ್ತೊಮ್ಮೆ ಮಗದೊಮ್ಮೆ ಎದೆ ಮಂಡಿ ಮೊಣಕಾಲುಗಳನ್ನೆಲ್ಲಾ ಚಿಮ್ಮಿ ಜೀವಜಗತ್ತಿನ ಆಶಯವೇ ತಾನಾದಂತೆ ದಿಟ್ಟಲೋಕದ ಅಷ್ಟೂ ಮನೋಸ್ಥೈರ್ಯವನ್ನು ತಾನೊಂದೇ ಹೊತ್ತಂತೆ ಮುಂದುಮುಂದಕ್ಕೆ ಮೀನಿನಂತೆ ಈಜಿ ತಲೆ ಎತ್ತಲು ನೋಡುತ್ತದೆ. ಸುತ್ತಲಿನ ಮಾಸು ಚಳಿತಾಗದ ಚೀಲ ಗಾಳಿಪಟದ ಸೂತ್ರದಂತೆ ಹಿಡಿದಿಡುವ ಹೊಕ್ಕುಳಬಳ್ಳಿಯ ಸುಖಗಳನ್ನು ಮೀರಿ ಹೊರಜಗತ್ತನ್ನು ನೋಡುವ ಕೌತುಕತೆ ಅದಕ್ಕೆ. ತಾನೇ ಬದುಕಬೇಕೆಂಬ ಛಲ. +ಇನ್ನೊಂದು ಜೀವವಿದೆ ಇಲ್ಲಿ. ಬಳ್ಳಿಯ ಸುತ್ತುಗಳಿಗೆ ಎದೆ ನೀಡಿರುವ ಕೋಲು ಅದು. ಬಳ್ಳಿಗೆ ಚಪ್ಪರ, ಮೊಗ್ಗಿಗೆ ಆಸರೆ. ಬಳ್ಳಿ ಮೊಗ್ಗುಗಳ ಜೀವಯಾತನೆಯನ್ನು ಕಂಡು ಮೌನವಾಗಿ ನೋಯುತ್ತಿದೆ ಇದು. ಕೈಹಿಡಿದು ಸಂತೈಸುವುದರ ಹೊರತಾಗಿ ಮತ್ತೇನೂ ಮಾಡಲಾಗದು. ಈ ಜೀವಪ್ರಸವದಲ್ಲಿ ಮತ್ತೇನು ಮಾಡಲೂ ದೇವರಾಗಬೇಕು. ದೇವರಲ್ಲ ಇದು. ನೋವಿನಲೆಗಳಲ್ಲಿ ತಾನೂ ಈಜುತ್ತಾ ಬಳ್ಳಿಯ ನೋವಿಗೆ ಆತಂಕಗೊಳ್ಳುತ್ತ ಮೊಗ್ಗನ್ನು ಹೊರುವ ಕಲ್ಪನೆಯಲ್ಲಿ ಮುಖವನ್ನು ಅರಳಿಸುವ ಸಾಧಾರಣ ಜೀವವಿದು. ನಗುವರೊಂದಿಗೆ ನಕ್ಕು ಅಳುವರೊಂದಿಗೆ ಅಳುವ ಇದು ಮತ್ತೇನು ತಾನೇ ಮಾಡೀತು. ಕುದಿವ ನೀರಿನಲ್ಲಿ ಬೆರೆತ ಮಸಾಲೆ ಪುಡಿಗಳಂತೆ ಆ ಕ್ಷಣದ ಇದರ ಭಾವಲೋಕಕ್ಕೆ ನೂರೆಂಟು ರುಚಿ, ನೂರೆಂಟು ಸುಗಂಧ, ನೂರೆಂಟು ಬಣ್ಣಗಳು. ಅವೆಲ್ಲವನ್ನೂ ಮೀರಿ ಹೆಪ್ಪುಗಟ್ಟಿದ ಆತಂಕ. +ಪೂರ್ತಿ ರಾತ್ರಿ ಭಯ ಆತಂಕ ನೋವುಗಳದ್ದೇ ಕಾರುಬಾರು. ನುಚ್ಚ್ಜುನೂರಾದ ದೇಹ ಮನಸ್ಸುಗಳು ಬೆಳಕಿಗಾಗಿ ದೀನವಾಗಿ ಬೇಡುತ್ತಿವೆ. ಕತ್ತಲೆಯನ್ನು ಸೀಳುವ ಮೊಗ್ಗಿಗೆ ಮೊಗೆದಷ್ಟೂ ಕತ್ತಲೆ ಗವ್ವನೆ ಮುತ್ತುತ್ತಿದೆ. ಯುದ್ಧಕ್ಕೆ ಹರಿಹಾಯ್ದ ಸೈನಿಕರಂತೆ ಕಂಪನಗಳು ಒಂದರ ಹಿಂದೊಂದು ಆವರ್ತಿಸಿ ಮೊಗ್ಗನ್ನು ಬೆಳಕಿಗೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಬಳ್ಳಿಗೆ, ಬಳ್ಳಿಯ ಸಂಗಾತಿ ಚಪ್ಪರಕ್ಕೆ ಕೊನೆಗೊಳ್ಳದ ರಾತ್ರಿಯ ಆ ವಿಷಣ್ಣತೆಯಲ್ಲಿ ದಿಕ್ಕು ತಪ್ಪಿ ಸಮುದ್ರದ ಮೇಲೆ ಹಾರುತ್ತಿರುವ ಜೋಡಿಹಕ್ಕಿಗಳ ಅನುಭವವಾಗುತ್ತಿದೆ. +ನೋವು! ನೋವು! ಹುಟ್ಟಿನ ಸಾಕ್ಷಾತ್ಕಾರದ ಘಳಿಗೆಯ ಹಿಂದೆ ಎದೆಬಗೆಯುವ ನೋವಿನದೇ ರಾಜ್ಯಭಾರ. +ಎಂತಹಾ ರಾತ್ರಿಯಾದರೂ ಅದಕ್ಕೆ ಕೊನೆಯಿಲ್ಲವೇನು? ಎಂತಹಾ ನೋವಾದರೂ ನಿರಂತg ವೇನು? ಅದೋ, ಪೂರ್ವದಿಕ್ಕಿನ ಆಸ್ಪತ್ರೆಯ ಕಿಟಕಿಯಿಂದ ನಿಶಾಂತನ ಎಳೆಯ ಕಿರಣಗಳು ಬರುತ್ತಿವೆ. ಒಂದೊಂದು ಕಿರಣವೂ ಹಾದಿಯುದ್ದಕ್ಕೂ ಕತ್ತಲೆಯನ್ನು ಕರಗಿಸಿ ಬೆಳಕಿನ ಹೊಳಪನ್ನು ನೀಡುತ್ತಿದೆ. ಸುತ್ತಲಿನ ಗಿಡ ಮರ ರಸ್ತೆ ಮನೆಗಳೆಲ್ಲಾ ಇಬ್ಬನಿಯ ಭಾಷ್ಪವನ್ನು ಸುರಿಸುತ್ತ ಭಾಸ್ಕರನನ್ನು ಸ್ವಾಗತಿಸುತ್ತಿವೆ. +ಇಗೋ, ಬಳ್ಳಿಯ ಕೊನೆಯ ಕಂಪನಕ್ಕೆ ಮೊಗ್ಗು ಬೆಳಕನ್ನು ಕಂಡೇಬಿಟ್ಟಿದೆ. ಸೋತು ಸೊರಗಿದರೂ ಬಳ್ಳಿ ಒಮ್ಮೆ ಹಗುರಾಗಿ ನಕ್ಕು ಮೊಗ್ಗನ್ನು ಸವರುತ್ತದೆ. ಚಪ್ಪರ ಮೂಕವಿಸ್ಮಿತವಾಗಿದೆ. ಮೊಗ್ಗನ್ನು ತಬ್ಬಿ ಹಿಡಿಯಲು ನೋಡುತ್ತಿದೆ. ಅಡಿಗರ ಸಾಲುಗಳು ಎಲ್ಲಿಂದಲೋ ತೂರಿಬರುತ್ತಿವೆ: +ಪ್ರತಿಯೊಂದು ಮಗು ಕೂಡ ಬಾನಿಂದಲೇ ಕೆಳ +ಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ; +ಗರಿಸುಟ್ಟ ಗರುಡ ಬರುತ್ತಾನೆ ಆರೈಕೆಗೆ +ನಮ್ಮ ನಿಮ್ಮವರಿವರ ಎಡೆಗೆ, ತೊಡೆಗೆ. +ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ, ಗುಡಿಸಲುಗಳಲ್ಲಿ, ಜೋಪಡಿಗಳಲ್ಲಿ, ಮರುಭೂಮಿಗಳಲ್ಲಿ, ಗಡಿಗಳ ರಕ್ತದಂಚಿನ ಹೆಂಚಿನ ಮನೆಗಳಲ್ಲಿ, ಕಾಡುಗಳಲ್ಲಿ, ನಗರಗಳಲ್ಲಿ, ಆಸ್ಪತ್ರೆಯ ಆಪರೇಷನ್ ಥಿಯೇಟರುಗಳಲ್ಲಿ, ಅಜ್ಜಿಯ ಬೆಚ್ಚನೆಯ ಕೋಣೆಗಳಲ್ಲಿ, ಹಣತೆಯ ಬೆಳಕಿನಲ್ಲಿ, ಸೋಡಿಯಂ ದೀಪಗಳ ಅಡಿಗಳಲ್ಲಿ, ಬಯಲಿನ ಹಾಲ್ಚೆಲ್ಲಿದ ಬೆಳದಿಂಗಳಲ್ಲಿ … ಭೂಮಂಡಲದ ಪೂರಾ ಬೆಳಕಿನ ಮರಿಗಳು ಧರೆಗಿಳಿಯುತ್ತಿವೆ. ಮಣ್ಣನ್ನು ಮುತ್ತಿಕ್ಕಿದೊಡನೆಯೇ ಬೆಳಕನ್ನು ಚೆಲ್ಲಿ ಸೂರ್ಯನಂತೆ ಪ್ರಕಾಶಮಾನವಾಗಿ ನಿಲ್ಲುತ್ತಿವೆ. +ದೂರದಲ್ಲಿ ಮಿನುಗುವ ನಕ್ಷತ್ರಗಳು ನೋಡಿ ಕಣ್ಣು ಮಿಟುಕಿಸಿ ನಗುತ್ತವೆ ಅಷ್ಟೆ, ಅವುಗಳನ್ನು ಮುಟ್ಟಲಾಗುವುದಿಲ್ಲ. ಮುಟ್ಟಲಾಗದ ನಕ್ಷತ್ರವೊಂದು ಎದುರಿಗೇ ಬಂದಿದೆ ನಮ್ಮ ಸ್ವರೂಪದಲ್ಲಿಯೇ, ನಮ್ಮ ರಕ್ತ ಮಾಂಸ ಮೂಳೆ ಮಜ್ಜೆಗಳನ್ನು ಹೊತ್ತು. ನಮ್ಮೆದುರಿಗೇ ಇದೆ ಕೋಟಿವರ್ಷಗಳನ್ನು ಕ್ರಮಿಸಿ ಬಂದ ಬೆಳಕಿನ ಕಿರಣದಂತೆ. ನಮ್ಮೆದುರಿಗೇ ಇದೆ ಶುಭ್ರ ಧವಳಗಿರಿಯ ಸ್ಪರ್ಶಾತೀತ ಹಿಮರಾಶಿಯಂತೆ. ನಮ್ಮೆದುರಿಗೇ ಇದೆ, ದಾರಿ ಮರೆತು ಧರೆಗಿಳಿದ ಗಂಧರ್ವನಂತೆ. ನಮ್ಮೆದುರಿಗೇ ಇದೆ, ಗರಿಸುಟ್ಟು ಭೂಮಿ ಮುಟ್ಟಿದ ಗರುಡನಂತೆ. +ಬೊಗಸೆಯಲ್ಲಿ ಬಾಚಿ ತಬ್ಬಿ ಹಿಡಿದು ಬೆರಗುಗಣ್ಣುಗಳಿಂದ ನೋಡುತ್ತಾ ಆಸರೆಯ ಹಂದರ ಮೆಲುದನಿಯಲ್ಲಿ, ಬರೀ ಮೊಗ್ಗಿಗೆ ಕೇಳುವಷ್ಟೇ ದನಿಯಲ್ಲಿ ‘ನನ್ನ ಸೂರ್ಯ’ ಎನ್ನುತ್ತದೆ. +ಬೆಳಕಿನ ಮೊಗ್ಗು ಕಣ್ಣಗಲಿಸಿ ಧ್ವನಿ ಮೂಡಿದೆಡೆಗೆ ನೋಡುತ್ತದೆ. +ಪೂರ್ವ ಪಶ್ಚಿಮ ಸೀಮೋಲ್ಲಂಘಿತ ಬರಹಗಳು -ಸಂಕಲನದಿಂದ +ಕನ್ನಡಸಾಹಿತ್ಯ.ಕಾಂ ಪ್ರಕಟಣೆ: ಫೆಬ್ರವರಿ, ೨೦೦೬ +ಕೃಪೆ: ಛಂದ ಪುಸ್ತಕ +ಪ್ರತಿಗಳಿಗೆ: ಛಿhಚಿಟಿಜಚಿಠಿusಣಚಿಞಚಿ ಂಖಿ ಥಿಚಿhoo.ಛಿom +ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […] +ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […] +ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_617.txt b/Kannada Sahitya/article_617.txt new file mode 100644 index 0000000000000000000000000000000000000000..57b267bc4b3ec4f49f6041ff5c447dc7fc03a3dc --- /dev/null +++ b/Kannada Sahitya/article_617.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಹಳ ಬೇಸರದಿಂದ ಸುಸ್ತಾಗಿ, ಹತಾಶೆಯಿಂದ ಆದರೂ ಎಂತದೋ ಒಂದು ಪುಟ್ಟ ಆಸೆಯಿಂದ, ದುಗುಡದಿಂದ ಜೋಗಿ ಬಂದು ಎಂದಿನಂತೆ ಸಾಲದ ಮುಖದಲ್ಲಿ ‘ಟೀ ತತ್ತಪಾ ಒಂದಾ’ ಎಂದ. ಮಟಮಟ ಮಧ್ಯಾಹ್ನದ ಬಿಸಿಲು ಎಲ್ಲೆಡೆ ಚೆಲ್ಲಿತ್ತು. ಗಿರಾಕಿಗಳು ಹೋಟೆಲಲ್ಲಿ ಇಲ್ಲದಿದ್ದರಿಂದ ಒಂದು ಬಗೆಯ ಬಿಸಿಲು ಮಿಶ್ರಿತ ಸೆಖೆಯ ಮೌನ ತುಂಬಿಕೊಂಡಿತ್ತು. ಅಂತಹ ಬಿಸಿಲಲ್ಲಿ ಬಿಸಿಯಾದ ಟೀ ಕುಡಿದರೇ ಸಮಾಧಾನ ಎಂದು ನನ್ನ ತಾತನ ಜೊತೆ ಏನೋ ಹೇಳುತ್ತಿದ್ದ. ನಾನು ಟೀ ಕಲಾಯಿಸಿ ಲೋಟಕ್ಕೆ ತುಂಬಿಕೊಂಡು ಹೋಗಿ ಅವನ ಪಕ್ಕವೇ ಇಡುವಾಗ ಸುಮ್ಮನೇ ಅವನನ್ನೇ ಗಮನಿಸಿದೆ. ನೋಡುವುದಕ್ಕೆ ಥೇಟ್ ಶ್ರೀಲಂಕಾದ ಕ್ರಿಕೆಟ್ ಪಟು ಮುತ್ತಯ್ಯ ಮುರಳೀಧರನ ತರವೇ ಇದ್ದದ್ದು ಈಗ ನೆನಪಾಗುತ್ತದೆ. ಬಿಸಿಲು ತುಂಬಿದ ಆ ಮೌನದಲ್ಲಿ ಏನೋ ಒಂದು ಬಗೆಯ ಲಯಬದ್ಧವಾದ ಧ್ವನಿ ಅವನ ಹೊಟ್ಟೆಯಿಂದ ಸಮನಾಗಿ ಹರಿದು ಬರುತ್ತಿತ್ತು. +ಸೊರ್ರ ಸೊರ್ರಾ ಎಂದು ಬಿಸಿ ಬಿಸಿ ಟೀಯನ್ನು ಬೋಂಡದ ಜೊತೆ ಹೀರುತ್ತಾ ಸವಿಯುತ್ತಾ ಆಗಾಗ ಹೊಟ್ಟೆಯನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಬಾಲಗ್ರಹದ ಮಂತ್ರಗಳ ಪುಸ್ತಕದಲ್ಲಿ ಮಗ್ನನಾಗಿದ್ದ ನನ್ನ ತಾತ ಅವನ ಕಡೆಗೊಮ್ಮೆ ಆಲಿಸಿ ದಿಟ್ಟಿಸಿ ‘ಏನೋ ಜೋಗೀ, ನಿನ್ನ ಹೊಟ್ಟೆ ಕೆಟ್ಟಿರೋ ಹಾಗಿದೆ, ಏನಾಯ್ತು? ಯಾಕೆ ಒಂದ್ ವಾರದಿಂದ್ಲೂ ನಿನ್ನ ದರ್ಶನವೇ ಆಗಲಿಲ್ಲವಲ್ಲಾ, ಎಲ್ಲ ಸರಿಯಾಗಿದೆ ತಾನೆ’ ಎಂದು ಕೇಳಿದರು. ‘ಅಯ್ಯೋ ನನ್ ಕತೆ ಗೊತ್ತೇ ಅದಲ್ಲಪ್ಪಾ ನಿಮಗೇ, ಎಲ್ರುಗೂ ಬಿಟ್ಟಿ ಚಾಕ್ರಿ ಮಾಡುದು…..ಅಲ್ಲಿ ಇಲ್ಲಿ ಸಾಲ ಮಾಡುದು….. ಸಿಕ್ಕಿದ್ದಾ ತಿನ್ನೂದೂ…..ವಟ್ಟೆಯಾ ಕೆಡಿಸ್ಕೊದೂ. ಮೊನ್ನೆ ಗೌಡ್ರು ಬಾಳೆ ತ್ವಾಟ್‌ದೆಲಿ ಸರಿಯಾದ್ ತ್ವಾಡಗೊಳು ಸೇರ್ಕೊಂಡಿದ್ದೋ; ಅವಾ ವಡುದು ಹಿಡುದು ಸುಟ್ಟಿ ಸಾರ ಮಾಡ್ಕಂಡು ತುಂದೇ….. ಅದೇನ್ ವತ್ಯಾಸ ಆಯ್ತೋ ಹಾಳಾದ್ ವಟ್ಟೆ ಗೊಳ್‌ಗರಿತದೆ’ ಎಂದು ಟೀ ಹೀರಿ ಮತ್ತೊಂದು ಲೋಟ ಟೀ ಬಿಡಿಸಿಕೊಂಡು ಐದಾರು ಬೋಂಡಗಳ ಮುಗಿಸಿದ. ನನ್ನ ತಾತ ಇವನ ಇಕಮತ್ತುಗಳನ್ನೆಲ್ಲ ಚೆನ್ನಾಗಿ ಬಲ್ಲವರಾಗಿದ್ದರು. ಜೋಗಿಯ ವ್ಯವಹಾರವೇ ಅಂತಾದ್ದು. ಏನೂ ಸಿಗಲಿಲ್ಲ ಎಂದರೆ ಗುಡ್ಡೆಗೋ, ಗವಿಗೋ, ಹೊಲಮಾಳಗಳಿಗೋ ಹೋಗಿ ಯಾವುದಾದರೂ ಮಿಕವನ್ನು ಬೇಟೆಯಾಡಿ, ಅದನ್ನು ಮಾರಿಯೋ ಅಥವಾ ಮಾರಾಟವಾಗದಿದ್ದರೆ ತಾನೇ ಅದನ್ನು ಅರ್ಧಂಬರ್ಧ ಬೇಯಿಸಿ ತಿಂದು ಕಾಲಯಾಪನೆ ಮಾಡುವವನಾಗಿದ್ದ. +ನಿರ್ದಿಷ್ಟವಾಗಿ ಅವನಿಗೆ ಇಂತಾದ್ದೇ ಚಾಕರಿ ಎಂಬುದೇ ಇರಲಿಲ್ಲ. ಅವನಂತಹ ನೂರಾರು ಜನ ನಮ್ಮೂರಲ್ಲಿ ಅವರವರ ಶಕ್ತ್ಯಾನುಸಾರ ತಮ್ಮ ಪ್ರತಿಭೆ ಮಾತ್ರದಿಂದಲೇ ಹೊಟ್ಟೆಗಾಗಿ ಏನೇನೋ ಇಕಮತ್ತುಗಳನ್ನು ಹೂಡಿ ಗೆದ್ದುಬಿಡುತ್ತಿದ್ದರು. ಅಂತಾದ್ದರಲ್ಲಿ ಜೋಗಿ ಒಂದು ವಿಶೇಷ. ಬಹುಪಾಲು ಊರ ಎಲ್ಲ ಕುಳಗಳ ಬಳಿಯೂ ಮುಂದಾಗಿಯೇ ಕೂಲಿ ಹಣವನ್ನು ಸಾಲ ರೂಪದಲ್ಲಿ ಪಡೆದು, ಅವರ ಅಗತ್ಯ ಬಿದ್ದಾಗ ಹೋಗಿ ಕೆಲಸ ಮಾಡಿ, ಈ ಹಿಂದೆ ಪಡೆದಿದ್ದ ಹಣಕ್ಕೆ ಜಮಾ ಮಾಡಿಕೊಂಡು ಮತ್ತೆ ಹೊಸ ಸಾಲಗಳಿಗಾಗಿ ಸಿದ್ಧನಾಗುತ್ತಿದ್ದ. ನೋಡಲು ಬಹಳ ಗಟ್ಟಿಮುಟ್ಟಾಗಿ ಕರಿಗೊಬ್ಬಳಿಕೊಂಟಿನ ಹಾಗೆ ಇದ್ದ ಅವನಿಗೆ ಅನೇಕರು ಮೊದಲೇ ದುಡ್ಡುಕೊಟ್ಟು ಯಾವುದಕ್ಕೂ ಮುಂದೆ ಮಳೆಗಾಲದ ಬಿತ್ತನೆ ಕಾಲಕ್ಕೋ, ಕೊಯ್ಲಿನ ಕಾಲಕ್ಕೋ ಇವನು ಬೇಕಾಗುತ್ತದೆ ಎಂದು ದಡಕಸ್ತಾಗಿ ಇದ್ದವರು ದುಡ್ಡು ಕೊಡುತ್ತಿದ್ದರು. ಹೀಗಾಗಿಯೇ ಊರ ತುಂಬಾ ಅವನು ಅನೇಕರಿಂದ ಅಡ್ವಾನ್ಸ್ ಪಡೆದು ಅದರ ಹೊಡೆತ ತಾಳಲಾರದೆ, ಒಂದೇ ಬಾರಿಗೆ ಎಲ್ಲರಿಗೂ ಕೆಲಸಕ್ಕೆ ಹೋಗಲಾರದೆ, ಒಬ್ಬರಿಗೆ ಒಂದೊ ಎರಡೋ ಅವರ ಮಟ್ಟಕ್ಕಾಗುವಷ್ಟು ಸುಳ್ಳು ಹೇಳಿ ಜಾರಿಕೊಂಡು ತಪ್ಪಿಸಿಕೊಳ್ಳುತ್ತಿದ್ದ. ಅವರಿಗೆ ಯಾವ ಕೂಲಿ ಮಾಡಿಸುವ ಕೆಲಸ ಇಲ್ಲದಿದ್ದರೂ ಅಂತಹ ವೇಳೆ ಹೋಗಿ ‘ಖುದ್ದಾಗಿ ನಾನೇ ಬಂದಿವಿನಲ್ರಪ್ಪಾ, ಕೆಲ್ಸ ಮಾಡಿಸ್ಕನಿ ಅಂದ್ರೆ ಅದ್ಯಾರೂ ವಪ್ಪುದಿಲ್ಲ, ನೀವೂ ವೂಂ ಅನ್ನುದಿಲ್ಲ. ಇಂಗಿದ್ರೆ ನಾನೆಂಗೆ ಗೇದು ಸಾಲ ತೀರಿಸ್ಕೊದು. ಮೈಯಿನ್ ಜಲುವೆಲ್ಲ ಬೆವುರಾಗಿ ಹರ್ಸಿ ಮೈಯ ಕಾವ ಇಳ್ಸಿ ಸಕತ್ತಾಗಿ ಕೆಲ್ಸ ಮಾಡಿದ್ರೆ ನನ್ಗೆ ಹಿಡ್ಕಂದಿರು ಜ್ವರವೆಲ್ಲ ಬಿಟ್ಟೋತದೆ ಅಂತಾ ನಾನೆ ನಿಮ್ಮಟ್ಟಿತಕೇ ಬಂದಿದ್ರೂ ಇವತ್ತು ಕೆಲ್ಸ ಇಲ್ಲ ವೋಗಯ್ಯಾ ಅಂತಿರಲ್ಲಾ, ಇದು ನ್ಯಾಯವೇ. ನಿಮ್ಮರುಣ ತೀರಿಸ್ಕಂದೇ ತಾನೇ ನಾನು ಮುಂದುನ್ ಯವಾರ ಮಾಡ್ಬೇಕಾಗಿರುದೂ’ ಎಂದು ಒಂದು ವಾದವನ್ನೇ ಹೂಡಿ ಏನೂ ಕೆಲಸ ಇಲ್ಲದಿದ್ದರೂ ‘ಆಗ್ಲಿ ಹೋಗಪ್ಪಾ ಏನಾರ ವಸಿ ತ್ವಾಟದಲ್ಲಿ ಮಾಡೋಗು’ ಎಂದು ಗುದ್ಲಿಯೋ, ಅರೆಯೋ ಏನೋ ಕೊಟ್ಟು ಕಳಿಸುತ್ತಿದ್ದರು. ಇಂತಹ ಸಂದರ್ಭಗಳನ್ನು ತಾನೇ ಸೃಷ್ಟಿಸಿ ಉಪಾಯವಾಗಿ ಯಾವ ಕಷ್ಟವೂ ಇಲ್ಲದೆ ತೆಳ್ಳಗೆ ಬೆಳ್ಳಗೆ ಏನೋ ಒಂದು ಕೆಲಸವನ್ನು ಮಾಡಿ ಆ ದಿನದ ಊಟ ತಿಂಡಿಯನ್ನೆಲ್ಲ ಅಲ್ಲೇ ಮುಗಿಸಿ ಬೀಡಿ, ಬೆಂಕಿಗೆ ಕಡ್ಡಿಗೆ ಆಗುವಷ್ಟು ಕಾಸನ್ನು ದಕ್ಕಿಸಿಕೊಂಡು ಮುಂದಲವರ ಮನೆಗೆ ಹೋಗುತ್ತಿದ್ದ. +ಅದರೂ ಅವನ ಬಗ್ಗೆ ಯಾರುಗೂ ಅಂತಹ ದ್ವೇಷ ಇರಲಿಲ್ಲ. ಅವನಿಗೆ ಕೆಲ್ಸದ ಬಗ್ಗೆ ಹುಕೀ ಹತ್ತಿತೆಂದರೆ ಮೂರು ನಾಲ್ಕು ಜನ ಗೇಯುವಷ್ಟೆಲ್ಲವನ್ನು ಅವನೊಬ್ಬನೇ ಮಾಡಿ ಮುಗಿಸಿ, ಕಾಸನ್ನೂ ಕೇಳದೆ ಹೆಂಡದ ಅಂಗಡಿಗೋ, ಸರಾಯಿ ಗುಡಿಸಲಿಗೋ ಹೊರಟು ಹೋಗುತ್ತಿದ್ದ. ಅವನಿಗೆ ಹೆಂಡತಿ ಮಕ್ಕಳು ಅಂತಾ ಯಾರೂ ಇರಲೂ ಇಲ್ಲ. ಬೇಸರ ಬಂತೆಂದರೆ ಒಂದಷ್ಟು ದಿನ ಊರು ಬಿಟ್ಟು ಇನ್ನಾವುದೋ ಸ್ಥಳಕ್ಕೆ ಹೋಗಿ ಅಲ್ಲಿ ಕಾಲ ಕಳೆದು ಮತ್ತೆ ತವರಿಗೆ ಬಂದಂತೆ ಸಡಗರದಿಂದ ಊರು ತಲುಪಿ ಎಂದಿನಂತೆ ಗೌಡರ ತೋಟಗಳ ಖಾಯಂ ಜೀತಗಾರನಂತೆ ಒಂದಷ್ಟು ದಿನ ನಿಯತ್ತಿನಿಂದ ದುಡಿದು ಕೊನೆಗೊಂದು ದಿನ ಬಾಳೆ ಗೊನೆಯನ್ನೋ, ಕೊಬ್ಬರಿಯನ್ನೋ ಕದ್ದುಕೊಂಡು ಹೋಗಿ ಆ ಕಾಸಿನಲ್ಲಿ ಒಂದಷ್ಟು ದಿನ ಪೇಟೆನೆಲ್ಲ ಸುತ್ತಿ ತಾನು ಯಾವ ತಪ್ಪನ್ನೂ ಮಾಡಲಿಲ್ಲ ಎಂಬಂತೆ ಹಿಂತಿರುಗಿ ಬಂದು ಅದೇ ಗೌಡರ ಕೊಟ್ಟಿಗೆಯಲ್ಲಿ ಕುಳಿತು ಕದ್ದು ಹೋಗಿ ಸುತ್ತಾಡಿ ಬಂದದ್ದಕ್ಕೆಲ್ಲ ಒಂದು ಅತಿಮಾನುಷವಾದ ಆರೋಪವನ್ನು ಹೇರಿ ತನ್ನ ತಲೆ ಕೆಟ್ಟು ಹೋಗಿತ್ತು, ಯಾರೋ ಬಂದು ಮಾಟ ಮಾಡಿ ಅಂತಹ ಕೆಲಸವನ್ನು ತನ್ನಿಂದ ಮಾಡಿಸಿದರು ಎಂದು ರೀಲುಬಿಟ್ಟು, ‘ತಕ್ಕೊಳ್ಳಿ ಈ ಪರ್ಸಾದವ, ದೇವುರು ದೂಳ್ತವಾ ಇಟ್ಕಳಿ ಮನೇಲಿ’ ಎಂದು ಎಂತೆಂತದೋ ಪೊಟ್ಟಣಗಳ ಬಿಚ್ಚಿ ಅವರ ಮುಂದಿಡುತ್ತಿದ್ದ. ಆಗೆಲ್ಲ ಅವರಿಗೆ ಇವನನ್ನು ಯಾವ ರೀತಿ ಶಿಕ್ಷಿಸಬೇಕೆಂದು ತೋಚದೆ ಹಾಳಾಗಿ ಹೋಗು ಎಂದು ಬೈಯ್ದು ಉಣ್ಣಲು ತಂಗಳು ಕೊಡುತ್ತಿದ್ದರು. ಆಮೇಲೆ ಮತ್ತೆ ಎಂದಿನಂತೆ ಮತ್ತೊಂದು ಮನೆಯ ಚಾಕರಿಗೆ ಅಂಟಿಕೊಳ್ಳುತ್ತಿದ್ದ. ಅರೆ ಅಲೆಮಾರಿಯಂತಿದ್ದ ಕಳ್ಳತನವಾಗುವಂತದೇನೂ ಇರಲಿಲ್ಲ. ‘ಮನೆ ಮನೆ ಹಿಟ್ಟು, ಮಾರಿ ಗುಡಿ ನಿದ್ದೆ’ ಎಂಬ ಗಾದೆ ಅವನಿಗೆ ಹೊಂದಿಕೊಳ್ಳುತ್ತಿತ್ತು. ಕುಡಿದು ಅಮಲೇರಿದಾಗ ತಾನು ಇಂತಿಂತವರ ತೋಟದ ಕೆಲಸಗಳನ್ನೆಲ್ಲ ಮಾಡಬೇಕಾಗಿದೆ ಎಂದು ಯಾರ್‍ಯಾರಿಗೂ ಒಪ್ಪಿಸಿ ಎಲ್ಲರೂ ತನಗೆ ಒಂದೇ ಬಾರಿಗೆ ಯಾಕೆ ಅಡ್ವಾನ್ಸ್ ಕೊಟ್ಟು ಕೆಲ್ಸಕ್ಕೆ ಕರೆಯುತ್ತಾರೆಂದು ಬೈಯುತ್ತಿದ್ದ. +ಒಟ್ಟಿನಲ್ಲಿ ಜೋಗಿ ತನ್ನ ಹೊಟ್ಟೆ ಪುರಾಣವನ್ನು ಯಾರ ಮುಂದೆಯೂ ಕಕ್ಕಿಕೊಂಡು ತನಗೆ ಅಪಾರವಾದ ಹಲ್ಲೆ, ಶೋಷಣೆ, ಅನ್ಯಾಯವಾಗುತ್ತಿದೆ ಎಂದು ಮಾತ್ರ ಯಾರಲ್ಲೂ ಹೇಳಿಕೊಳ್ಳದೆ, ತಾನು ಹೇಗೆ ಒಂದೇ ಬಾರಿಗೆ ಇವರಿಗೆಲ್ಲ ಕೆಲಸ ಮಾಡಿಕೊಡಲಿ ಎಂಬ ತಗಾದೆಯನ್ನು ಎತ್ತುತ್ತಿದ್ದ. ಇದ್ದಕ್ಕಿದ್ದಂತೆ ಬೇಸಿಗೆ ಬಂತೆಂದರೆ ಸಾಕು, ಅವನ ಆರ್ಥಿಕ ವ್ಯವಸ್ಥೆಗೆ ಬರಬಡಿದು ಕ್ಷೋಭೆ, ಕ್ಷಾಮ ಡಾಮರಗಳೆಲ್ಲ ಒಟ್ಟಿಗೇ ನುಗ್ಗಿ ತತ್ತರಿಸಿ ಹೋಗುತ್ತಿದ್ದ. ದಮ್ಮಯ್ಯ ದಪ್ಪಯ್ಯ ಎಂದು ಕಾಡಿ ಬೇಡಿ ಏನಾದರೂ ಗಿಟ್ಟಿಸಿಕೊಳ್ಳುವ ಸಂಚು ಮಾಡಿ ಗೌಡರ ಬಳಿಗೆ ಅಂತಹ ಕಾಲದಲ್ಲಿ ಹೋಗುತ್ತಿದ್ದ. +ಮತ್ತೆ ಯಥಾ ಪ್ರಕಾರ ಹಳೆ ಗಂಡನ ಪಾದವೇ ಗತಿ ಎಂಬಂತೆ ಖಾಯಂ ಕುಳ ಗೌಡರ ಬಳಿ ಹೋಗಿ ‘ಏನೋ ವಸಿ ನೀವೇ ನೋಡ್ರಪ್ಪಾ, ಅನಾದಿಗೆ ಆಕಾಸ್‌ವೇ ಆಧಾರ ಅಂದಂಗೆ, ನನಂತ ಬಿಕನಾಸಿಗೆ ನೀವೇ ದಾರಿ’ ಎಂದು ನುಣ್ಣಗೆ ಮಾತಾಡಿ ಅತ್ಯಂತ ವಿನಯದಿಂದ ಅವರು ಬರುವ ದಾರಿಗಡ್ಡವಾಗಿ ಕುಳಿತು ಬೇಡಿಕೊಳ್ಳುತ್ತಿದ್ದ. ಆಯ್ತು ಹೋಯ್ತು ನಡಿಲಾ ಇಪಟು. ನಿನ್ ನಾಟುಕ್‌ಗೊಳೆಲ್ಲಾ ಸಾಕು ಎಂದು ಗೌಡರು ಹೇಳಿದ ಕೂಡಲೆ ಅತ್ಯುತ್ಸಾಹದಿಂದ ಎದ್ದು ಜಿಗಿದು ತೋಟದ ಆಗತೆ ಕೆಲಸಗಳನ್ನೆಲ್ಲ ಭರ್ಜರಿಯಾಗಿ ನಿರ್ವಹಿಸುತ್ತಿದ್ದ. ಈಗಲೂ ಹಾಗೇ ಆಯಿತು. ಅದೇ ಬೇಸಿಗೆ ಬರದಿಂದಾಗಿ ಗೌಡರ ತೋಟಕ್ಕೆ ಹೋದ ಕೂಡಲೆ ಗೌಡರು ಇವನಿಗಾಗಿಯೇ ಕಾದಿದ್ದವರಂತೆ, ‘ಅಯ್ಯೋ ನಿನ್ ಮೊಕ ನನ್ನ ಲವುಡಾ ವಡಿಯಾ, ಎಲ್ ಹಾಳಾಗೊಗಿದ್ಲಾ, ಊರೆಲ್ಲನು ವುಡುಕಿಸಬೇಕಲ್ಲಾ ನಿನ್ ಕರ್‌ತರುಕೇ, ಆಮೆಕೆ ನಿನ್ ಪುರಾಣವ ಹೇಳುವಂತೆ, ಮೊದ್ಲು ಬಾಳೆ ತೋಟುದ್ ಕೆಲ್ಸ ಮಾಡೋಗ್ಲ. ಅಲ್ಲೇ ನಮ್ಮುಡಗ ಅವ್ನೆ’ ಎಂದದ್ದನ್ನು ಕೇಳಿಸಿಕೊಂಡು ಸದ್ಯ ಯಾವ ಕಿರಿಕಿರಿಯೂ ಎದುರಾಗಲಿಲ್ಲ ಎಂದುಕೊಳ್ಳುತ್ತಾ ಗೌಡರ ತೋಟದ ಕೆಲಸವನ್ನು ವಾರಪೂರ್ತಿ ಮಾಡಿ ಮುಗಿಸಿದ. ಗೌಡರು ಮೆಚ್ಚಿಕ್ಕೊಳ್ಳಲಿ ಎಂದು ಬೋ ಪಸಂದಾಗಿ ಗೇದ. ಗೌಡರು ಒಳಗೊಳಗೆ ಸಂತೋಷಪಡುತ್ತಾ, ‘ಯೀ ಬೊಡ್ಡಿಮಗ ಕೆಲ್ಸವ ಇಡಿಸ್ಕಂಡ ಅಂದ್ರೆ ಆಯ್ತು. ಹತ್ತಾಳ್ ಕೆಲ್ಸವ ವಬ್ಬನೇ ಮಾಡ್ತಾನೆ. ಸದ್ಯ ಇವನಿದ್ದಿದ್ರಿಂದ ಎಷ್ಟೋ ಸಲೀಸಾಯ್ತು’ ಎಂದುಕೊಂಡು ಮನೆಗೆ ಹೊರಟು ಹೋದರು. +ವಾರಪೂರ್ತಿ ಕೆಲಸ ಮಾಡಿರುವುದರಿಂದ ಗೌಡತಿಯೂ ಅವನಿಗೆ ಕರುಣೆ ತೋರಿ ಬಿಸಿಬಿಸಿ ರಾಗಿ ರೊಟ್ಟಿಗೆ ಒಳ್ಳೆ ಕಾರವನ್ನು, ಬೆಣ್ಣೆ ಮುದ್ದೆಯನ್ನೂ ಹಾಕಿಕೊಟ್ಟು ಹೊಟ್ಟೆ ತುಂಬ ತಿನ್ನಿಸಿದಳು. ‘ಇದ್ಯಾಕ್ಲಾ ಜೋಗಿ ಇಂಗಾಗೋದಲ್ಲಾ, ಊರೂರ್ ತಿರಿಕಂದು ಇಂಗೆ ಇರುಕಿಂತಾ ಎಲ್ಲಾರ ಯಾವುಳ್‌ನಾರ ಲಗ್ನ ಮಾಡ್ಕಂದು ಸಂಸಾರ ಕಟ್ಕಂದು ಚೆಂದ್ವಾಗಿ ಹೆಂಡ್ತಿ ಜೊತೆ ಇರುಕಿಲ್ಲಲಾ. ಇನ್ನೂ ಎಸ್ಟ್ ದಿವ್ಸ ಅಂತಾ ಇಂಗೆ ಅಲ್ಲಿ ಇಲ್ಲಿ ನೋಡ್ಕಂದು, ಅಲ್ಕಂದು ಕಾಲ ಕಳ್ದಿಯೆ…..’ ಎಂದು ಬುದ್ಧಿ ಹೇಳಿದಳು. ಜೋಗಿಗೆ ಅವೆಲ್ಲ ತಲೆಗೆ ಇಳಿಯುವಂತಿರಲಿಲ್ಲ. ಅಯ್ಯೋ ಬಿಡ್ರವ್ವಾ, ನಿಮ್ಮಂತ ತಾಯಿದೀರು ಇದ್ದೀರಲ್ಲಾ, ನಿಮ್ ಕೈಯ್ನ ಒಂದ್ ಮುದ್ದೆಯಿದ್ರೆ ಅದೇ ಸಾಕು. ನನ್ನಂತ ಅನಾದಿಗೆ ಲಗ್ನ ಬೇರೇ ಕೇಡು’ ಎಂದು ಮಾತು ಬದಲಿಸಿದ್ದ. +ಅಂತೂ ಸಂಜೆ ಆಯ್ತು, ರಾತ್ರಿ ಆಯ್ತು, ಬೆಳಗಾಯ್ತು, ಮತ್ತೆ ಮಧ್ಯಾಹ್ನವಾಯ್ತು, ಎಡಗಲಾಯ್ತು, ಗೌಡರು ತೋಟಕ್ಕೆ ಬಂದು ಮುಂದಿನ ಕೆಲಸ ಹೇಳಲಿಲ್ಲ ಮತ್ತು ಮುಖ್ಯವಾಗಿ ಈ ಹಿಂದೆ ಪಡೆದಿದ್ದ ಸಾಲಕ್ಕೆ ಹಣ ಚುಕ್ತ ಮಾಡಿಕೊಂಡು ಉಳಿಕೆ ಹಣವನ್ನು ನೀಡಲಿಲ್ಲ. ಕಾದು ಕಾದು ಸಾಕಾಯ್ತು. ಮಾರನೆ ದಿನ ಗೌಡರು ಬಂದರು. ತೋಟದ ಮನೆಯ ಅಂಗಳದಲ್ಲೇ ನಾಯಿಗಳ ಜೊತೆ ಜೋಗಿ ಕುಳಿತಿದ್ದ. ‘ಅರೇ ಇದೇನ್ಲಾ ಜೋಗಿ, ಇಲ್ಲೆ ಇದ್ದಿಯಲಾ ಇನ್ನೂವೆ. ಬ್ಯಾರೆ ಯಾರ್‍ಲೂ ಕೆಲುಸಕ್ಕೆ ವೋಲಿಲ್ಲವೇ’ ಎಂದರು. ಅವರ ಮಾತಿನ ಧಾಟಿಗೆ ದಂಗಾದ ಜೋಗಿ ‘ಇದೇನ್ರಪ್ಪಾ ಇಂಗಂತೀರಿ…. ಅಸ್ಟ್ ದಿನದಿಂದ ನಿಮ್‌ತಾವೇ ಕೆಲ್ಸ ಮಾಡಿವಿನೀ…. ಈಗ ಇಂಗಂತೀರಲ್ಲಾ’ ಎಂದ. ‘ಅಂಗಂದ್ರೆ ಅದೇನ್ಲಾ ಅರ್ಥ’ ಎಂಬಂತೆ ಗೌಡರು ಅವನನ್ನೇ ದಿಟ್ಟಿಸಿದರು. ವಿನಯದಿಂದ, ಆತಂಕದಿಂದ ‘ಅಂಗಂದ್ರೇ……. ಅದೇ ಕನ್ರಪ್ಪಾ, ಬಾಕಿ ಕಾಸು………’ ಎಂದು ಉಸುರಿದ. ಗೌಡರು ಕಿರಿಕಿರಿಯಾಗಿ ‘ಇನ್ಯಾವ್ ಕಾಸ್‌ಲಾ ನಿನಗೆ ಕೊಡ್‌ಬೇಕಾಗಿರುವುದು. ಕೊಟ್ಟಿರುದೇ ಸಾಕಾಗದೇ. ಇನ್ಯಾವ್‌ದುನ್‌ಲಾ ಕೊಡಬೇಕಾಗಿರುವುದು. ಕೊಟ್ಟು ಕೊಟ್ಟು ನನಗೇ ಸಾಕಾಗೋಗದೆ, ಇಂದೆ ಅಡ್ವಾನ್ಸ್ ತಕಂದಿರುದು ಎಸ್ಟಾಗದೆ ಅನ್ನುದಾ ಲೆಕ್ಕ ಮಡಗಿದಿಯಾ….. ಅದ್ಕೆ ಅಸ್ಟ್ ದಿನ್‌ಕಂಟಾ ಆಗಿರು ಬಡ್ಡಿಯಾ ಬರ್ದು ಮಡಗಿದ್ದಿಯಾ…. ಅಹಹಾ ಬಂದ್‌ಬುಟಾ ಬಾಕಿ ವಸೂಲಿಗೆ ಇದ್ಕೆ ಕಣ್ಲಾ ನಿನ್ನ ಸಣ್ ಜಾತಿ ಅನ್ನುದೂ ಕೊಟ್ಟೋನೂ ಕೋಡಂಗಿ ಇಸ್ಕಂಡೋನು ಈರಬದ್ರಾ ಅಂತಾ ನಿಮ್‌ತಾವು ಎಲ್ಲಾ ಬರೀ ಇದೇ ನ್ಯಾಯ’ ಎಂದು ಆರೋಪಿಸಿದ. ಗೌಡರ ಮುಂದೆ ಜೋಗಿ ನಿತ್ರಾಣನಾಗಿಬಿಟ್ಟ. +‘ಅಂಗಲ್ಲ ಕನ್ರಪ್ಪಾ….. ಇಗಾ ಅಂಗೆ ಲೆಕ್ಕ ಮಾಡುದಾದ್ರೇ ನೋಡ್ರಪ್ಪಾ…’ ಎಂದು ತೊದಲುತ್ತಾ ಜೋಗಿ ಏನೇನೋ ಹೇಳಲು ತೊಡಗಿದರೂ ಗೌಡರು ಕಿವಿ ಮ್ಯಾಲೆ ಹಾಕಿಕೊಳ್ಳದೆ ‘ಸುಮ್ನೆ ತಿಕಾ ಮುಚ್ಕಂಡು ವೋಲ ಇಪಟು. ಅಯ್ಯೋ ಅಂದ್ರೆ ಆರ್ ತಿಂಗಳು ಕರ್ಮ ಅಂತೇ. ವೋಗೋಗಿಪಟು’ ಎಂದು ನಡೆದೇಬಿಟ್ಟರು. +ಜೋಗಿಗೆ ಕಣ್ಣು ಕಿರ್ರಗಾದವು. ತಲೆ ಅದುರಿತು. ಏನೇನೋ ಲೆಕ್ಕ ಹಾಕಿಕೊಂಡಿದ್ದೆಲ್ಲ ತಲೆಕೆಳಗಾಗಿತ್ತು. ಈಗ ಏನ್ ಮಾಡುವುದು, ಇದು ಇಂಗಾಯ್ತಲ್ಲಾ ಎಂದು ಹತಾಶೆಯಿಂದ ಅಲ್ಲೇ ಸುಮಾರು ಹೊತ್ತು ಜೋಗಿ ಕುಳಿತು ಏನೇನೋ ಯೋಚನೆ ಮಾಡತೊಡಗಿದ. ಏನು ಹೊಸದಾಗಿ ಹೊಳೆಯಲಿಲ್ಲ. ಪೇಟೆಗೆ ಹೋಗುವಾ ಅಂದರೆ ಅದಕ್ಕೂ ನೂರೆಂಟು ತಾಪತ್ರಯಗಳೆಂದು ಹಿಂಜರಿದ. ಎಷ್ಟೋ ಹೊತ್ತು ಕುಳಿತಿದ್ದ ಮೇಲೆ ಒಂದು ಐಡಿಯಾ ಅವನೊಳಗೆ ಎಂದಿನಂತೆ ಬಂತು. ಅದರಂತೆಯೇ ಮಾಡಲು ಸಿದ್ಧನಾದ. +ಎದ್ದು ನಿಂತು ಸುತ್ತ ಮುತ್ತ ನೋಡಿದ. ಯಾರೂ ಇರಲಿಲ್ಲ. ತೋಟದ ಕಾವಲುಗಾರ ಎಲ್ಲೋ ಹೋಗಿದ್ದ. ಗೌಡರ ತೋಟದ ಮನೆ ಒಂಟಿಯಾಗಿತ್ತು. ನಮ್ಮ ಕಡೆಯ ದೊಡ್ಡ ಗೌಡರು ತೋಟದಲ್ಲಿ ಒಂದು ಮನೆಯನ್ನೂ, ಊರಲ್ಲಿ ಇನ್ನೊಂದು ಮನೆಯನ್ನೂ ಹೊಂದಿರುತ್ತಾರೆ. ಸಾಮಾನ್ಯವಾಗಿ ತೋಟದ ಮನೆಯಲ್ಲಿ ಸಂಸಾರ ಇರುವುದಿಲ್ಲ. ಕೃಷಿ ಸಲಕರಣೆಗಳು, ತೋಟದ ಫಸಲನ್ನು ದನ, ಕುರಿ, ಎಮ್ಮೆಗಳನ್ನು ಒಂದೆಡೆ ಕೂಡಿಡಲು ಇಂತಹ ಮನೆಗಳನ್ನು ಕಟ್ಟಿಕೊಂಡಿದ್ದು, ಗೌಡರ ನೂರೆಂಟು ಸೈಡ್ ಬಿಸಿನೆಸ್‌ಗೂ ಅರ್ಥಪೂರ್ಣವಾಗಿ ಬಳಕೆ ಆಗುತ್ತಿರುತ್ತವೆ. ಅಂತಹ ಮನೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನಿಸುತ್ತಿದ್ದು ಕಾವಲುಗಾರನೇ ಅದರ ಜವಾಬ್ದಾರಿ ಹೊತ್ತಿರುತ್ತಾನೆ. +ಹೀಗಿರುವಾಗ ಜೋಗಿ ಅಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿ ಏನಾದರೂ ಒಳಗೆ ಸಿಗಬಹುದೆಂದು ತರ್ಕಿಸಿದ. ಮನೆಯ ಪಡಸಾಲೆಯಲ್ಲಿ ಒಂದು ಕ್ಷಣ ಕುಳಿತು ಅಮೂಲಾಗ್ರವಾಗಿ ಸುತ್ತೆಲ್ಲ ವೀಕ್ಷಿಸಿದ. ಎಲ್ಲ ಸರಿ ಇದೆ ಅನಿಸಿತು. ಮನೆಯ ಮುಂಬಾಗಿಲಿನಿಂದ ಹಿಂಬಾಗಿಲ ತನಕ ದೂರ ದೃಷ್ಟಿ ಇಟ್ಟ. ಇಣುಕಾಡಿದ ಏನೂ ಮಹತ್ವದ್ದು ಕಾಣಲಿಲ್ಲ. ತೊಟ್ಟಿ ಮನೆಯ ಹಜಾರದ ದೀಪದ ಗೂಡಿನ ಕಡೆಗೆ ಅವನ ಕಣ್ಣು ನುಸುಳಿತು. ಅರೇ! ಅಲ್ಲಿ ಅಲಾರಂ ಗಡಿಯಾರ ಕುಳಿತಿದೆ! ನೋಡಿದ ಕೂಡಲೇ ಇದೇ ಸೂಕ್ತವಾದದ್ದೆಂದು ಅದನ್ನು ಎತ್ತಿಕೊಂಡು ಹೊಟ್ಟೆಗೆ ಸಿಕ್ಕಿಸಿಕೊಂಡು ಯಾರಿಗೂ ಕಾಣದಂತೆ ಬಂದುಬಿಟ್ಟ. ಎಲ್ಲವೂ ಸಲೀಸು ಎನಿಸಿತು. ಜೋಗಿ ಗಡಿಯಾರ ಕದ್ದದ್ದು ಯಾರಿಗೂ ತಿಳಿಯಲಿಲ್ಲ. ನೇರ ಹೊರಟವನೆ ನಮ್ಮ ಹೋಟಲಿಗೆ ಬಂದ. +ಬಂದವನೇ ಬೋಂಡ ಟೀ ಕೊಡಪ್ಪ ಎಂದು ಕೇಳಿದ್ದ. ಆಗಲೇ ಅವನ ಹೊಟ್ಟೆಯಿಂದ ಏನೋ ಒಂದು ನಿಗೂಢವಾಗಿ ಲಟ್‌ಲಟ್ ಲಟ್‌ಲಟ್ ಎಂದು ಲಯಬದ್ಧವಾಗಿ ಮಿಡಿಯುವುದನ್ನು ನಾನು ಕೇಳಿಸಿಕೊಂಡದ್ದು. ಅಂತಹ ಸುದ್ದಿಗೆ ಕಾರಣವಾಗಿ ಆತ ನಮ್ಮ ತಾತನ ಜೊತೆ ಏನೋ ಹೊಟ್ಟೆ ಕೆಟ್ಟಿದೆ ಎಂಬ ಸಬೂಬು ಹೇಳಿದ್ದ. ಹೋಟೆಲಿಂದ ಎದ್ದು ಬೇಗ ಹೊರಟವನು, ನಾಳೆ ಕಾಸು ಕೊಡುವುದಾಗಿಯೂ ಹೊಟ್ಟೆ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಪೇಟೆಯ ಡಾಕ್ಟರ ಬಳಿಗೆ ಹೋಗುತ್ತಿರುವುದಾಗಿಯೂ ಹೇಳಿ ಕ್ಷಣಾರ್ಧದಲ್ಲಿ ಮರೆಯಾಗಿದ್ದ. ನನಗಂತೂ ಅವನ ಹಾವಭಾವಗಳನ್ನು ನೋಡಿ ಎಲ್ಲೋ ಇವನಿಗೆ ಭೇದಿ ಹೊಡೆಯುತ್ತಿದೆ, ದಾರಿಯಲ್ಲಿ ಚಡ್ಡಿಗೆ ಏನಾದರೂ ತೊಂದರೆ ಮಾಡಿಕೊಳ್ಳುತ್ತಾನೆ ಎಂದು ಶಕುನವಾಗಿತ್ತು. +ಆಮೇಲೆ ಮುಂದೆ ಬೇರೆಯೇ ಆಗಿತ್ತು. +ಪೇಟೆಗೆ ಹೋಗುವುದೇ ಸರಿ ಎಂದು ಎಲ್ಲರೀತಿಯಿಂದಲೂ ಅವನಿಗೆ ಅನಿಸಿತ್ತು. ಅಲಾರಾಂ ಗಡಿಯಾರವನ್ನು ಕದ್ದಿದ್ದರಿಂದ ಅದನ್ನು ಅವನ ಹಳ್ಳಿಯಲ್ಲೇ ಯಾರಿಗಾದರೂ ಮಾರುವ ಅವಕಾಶವಿರಲಿಲ್ಲ. ಆ ವೇಳೆಗೆ ಅಲಾರಾಂ ಗಡಿಯಾರಗಳು ನಮ್ಮ ಊರಲ್ಲಿ ಗೌಡರ ಮನೆ ಬಿಟ್ಟರೆ ನಮ್ಮ ಮನೆಯಲ್ಲಿ ಮಾತ್ರ ಇತ್ತು. ಅದೂ ಅಲ್ಲದೆ ಅಲಾರಾಂ ಗಡಿಯಾರವನ್ನು ಇಟ್ಟುಕೊಂಡು ಅದರ ಪ್ರಕಾರ ಮುಂಜಾವಿಗೇ ಏಳಬೇಕಾದ ಅಗತ್ಯ ಊರಿನವರಿಗೆ ಇರಲಿಲ್ಲ. ಗೌಡರಿಗೂ ಇರಲಿಲ್ಲವಾದರೂ ಅವರನ್ನು ಬೇಗ ಎಚ್ಚರಿಸಲು ಹಿಂಡು ಹುಂಜಗಳೇ ಇದ್ದರೂ ಕೇವಲ ಗೌಡಿಕೆಯ ಗತ್ತು ತೋರಿಸಿಕೊಳ್ಳಲು ಹಾಗೂ ತಾವು ಬಹಳ ನಾಗರಿಕರು ಎಂದು ಗುರುತಿಸಿಕೊಳ್ಳಲು ತಂದು ಇಟ್ಟುಕೊಂಡಿದ್ದರು. ತೋಟದ ಆಳುಕಾಳುಗಳ ಲೆಕ್ಕಕ್ಕೂ ಬರುತ್ತದೆ ಎಂಬ ಅಭಿಲಾಷೆ ಅವರಿಗಿತ್ತು. +ನಮ್ಮ ತಾತನಂತೂ ಹೋಟೆಲಿನ ಗಿರಾಕಿಗಳಿಗೆ ಟೈಂ ತಿಳಿಯಲೆಂದೂ, ಬೇಗ ಎಚ್ಚರಗೊಳ್ಳಲು ಅಲಾರಾಂ ಯಂತ್ರ ಉಪಕಾರ ಮಾಡುತ್ತದೆಂತಲೂ ಭಾವಿಸಿದ್ದರಿಂದ ಹೋಟೆಲಿಗೆ ಒಂದು ಅಲಂಕಾರ ಎಂದು ಇಟ್ಟುಕೊಂಡಿದ್ದರು. ಜೋಗಿ ತಾನು ಕದ್ದಿದ್ದ ಅಲಾರಾಂ ಗಡಿಯಾರವನ್ನು ನಮಗೆ ಮಾರುವಂತಿರಲಿಲ್ಲ. ಊರಿನವರು ಅಲಾರಾಂ ಅನ್ನು ಜೋಗಿಯಿಂದ ಕಡಿಮೆ ಬೆಲೆಗೆ ಕದ್ದು ವ್ಯಾಪಾರ ಮಾಡಿ ತೆಗೆದುಕೊಂಡಿದ್ದರೂ ಕದ್ದೇ ಬಳಸಬೇಕಾಗಿತ್ತು. ಆದರೆ ಅಲಾರಾಂ ಅನ್ನು ಕದ್ದು ಬಳಸುವುದು ಹಾಗಿರಲಿ, ಅದರ ಅಲಾರಾಂ ಕೂಗನ್ನು ಸುಲಭದಲ್ಲಿ ಮುಚ್ಚಿ ಹಾಕಲು ಸಾಧ್ಯವಿರಲಿಲ್ಲ. ಮತ್ತೆ ಅಲಾರಾಂ ಗಡಿಯಾರ ಆಗ ಒಂದು ಸಾಮಾಜಿಕ ಪ್ರತಿಷ್ಠೆಯೂ, ಮೇಲರಿಮೆಯೂ ಆಗಿದ್ದರಿಂದ ಅದರ ಬಗ್ಗೆ ಹುಡುಗರು ಶಾಲೆಯ ಜೊತೆಗಾರರ ಜೊತೆ ಹೇಳಿಕೊಂಡು ನಮ್ಮ ಮನೆಯಲ್ಲೂ ಅಲಾರಾಂ ಗಡಿಯಾರ ಇದೆ ಎಂದು ಬೀಗುವ ಮೂಲಕ ಕಳ್ಳತನವನ್ನು ಬಯಲು ಮಾಡಿದಂತಾಗುತ್ತಿತ್ತು. ಈ ಅಲಾರಾಂ ಮಾಲಿನಿಂದ ಮುಂದಾಗುವ ಎಲ್ಲಾ ಲಾಭ ನಷ್ಟಗಳನ್ನು ಲೆಕ್ಕ ಹಾಕಿಯೇ ಜೋಗಿ ಇದನ್ನು ಯಾಕಾದರೂ ಕದ್ದೆನೋ, ಮೊದಲು ಇದರ ಫಜೀತಿಯಿಂದ ತಪ್ಪಿಸಿಕೊಳ್ಳಬೇಕೆಂದು ಕಳ್ಳಾ…..ಹೇ ಕಳ್ಳಾ ನನ್ನ ಕದ್ದುಕೊಂಡು ಬಂದಿದ್ದೀಯೇನೋ ಮೂರ್ಖ, ನಾನು ಯಾರು ಗೊತ್ತೇನೋ, ಕಾಲ ಕಣೋ ಕಾಲ. ಕಾಲಪುರುಷನಾದ ನನ್ನನ್ನು ನೀನು ಕದ್ದುಕೊಂಡು ಹೋಗುವಷ್ಟು ಎಚ್ಚರವಾಗಿ ಬಿಟ್ಟಿರುವೆಯಾ, ಕದಿಯಲು ನಿನಗೆ ಇನ್ನೇನೂ ಸಿಗಲಿಲ್ಲವಾ. ಕಾಲ ಕಣೋ ಮೂರ್ಖಾ ನಾನು ಕಾಲ. ಮೈ ನೇಮ್ ಈಸ್ ಟೈಂ, ನನ್ನನ್ನೇ ಹಿಡಿದು ಕಟ್ಟಿಹಾಕಿ ಮಾರಲು ತೆಗೆದುಕೊಂಡು ಹೋಗುತ್ತಿರುವೆಯಾ? ಎಂದು ರೇಗಿಸಿದಂತಾಗಿ ಅವನ ತಲೆ ಕೆಟ್ಟು ಹೋಯಿತು. ಎಲ್ಲಿಯಾದರೂ ತಿಪ್ಪೆಗೆ ಬಿಸಾಕಿ ಬರುವಾ ಎಂದರೆ ಗೌಡರು ವಿಪರೀತ ಕೆಲಸ ಮಾಡಿಸಿಕೊಂಡು ಯಾವುದೋ ಲಡಾಸು ಅಡ್ವಾನ್ಸ್‌ಗೆ ಎಲ್ಲವನ್ನೂ ಸಮ ಮಾಡಿಕೊಂಡು ಹೀಗೆ ಮಾಡಿರುವಾಗ ಈ ಗಡಿಯಾರವನ್ನು ಬಿಸಾಡಲೂ ಮನಸ್ಸು ಬರದೆ ಉದ್ವೇಗಕ್ಕೆ ಒಳಗಾದ. +ಅಂತೂ ಈ ಶನಿಯನ್ನು ಮೊದಲು ಎಲ್ಲಿಯಾದರೂ ಬಿಕರಿ ಮಾಡಿಯೇ ತೀರಬೇಕೆಂದು ಪೇಟೆಯ ಸಾಬರ ಕೇರಿಯಲ್ಲಿ ಇಂತಹ ಮಾಲನ್ನು ‘ಅರೇ ವಾರೇ ವಾಹ್, ಕ್ಯಾ ಮಾಲ್ ಹೈ’ ಎಂದು, ಆವ್‌ಜಿ ಜೋಗೀ ಎಂದು ಸಲಾಮ್ ಮಾಡಿ ಕರೆದುಕೊಂಡು ಗುಟ್ಟಾಗಿ ದುಡ್ಡುಕೊಟ್ಟು ಕಳಿಸ್ತಾರೆ ಎಂದು ಲೆಕ್ಕಿಸಿ, ಪೇಟೆಗೆ ಈ ಮಧ್ಯಾಹ್ನದ ಬಸ್ಸು ಹತ್ತುವುದೇ ಎಲ್ಲ ರೀತಿಯಿಂದಲೂ ಸೂಕ್ತ ಎಂದು ಸರ್ಕಲ್ಲಿಗೆ ಬಂದು ಬಸ್ಸಿಗೆ ಕಾದಿದ್ದ. ಬಸ್ಸೂ ಬಂತು. ಎಲ್ಲರಿಗಿಂತಲೂ ಮೊದಲೇ ನುಗ್ಗಿ ಸೀಟಿಗಾಗಿ ಹುಡುಕಾಡಿ ಸಿಗದೆ ನಿಂತುಕೊಂಡ. ಬಿಸಿಲು ಜಡಿಯುತ್ತಿತ್ತು. ಒಂದೇ ಸಮನೆ ಜನರ ದಂಡು ಬಸ್ಸಿನ ಒಳಕ್ಕೆ ಜಮಾಯಿಸಿಕೊಂಡಿತು. ಇಂತಹ ಬಿಸಿಲು ಧಗೆಯಲ್ಲೂ ಜನ ಪೇಟೆಗೆ ಯಾಕ್ಹೀಗೆ ಹೋಗುತ್ತಾರೋ ಎಂದು ಯಾರೋ ದೊಡ್ಡದನಿಯಲ್ಲಿ ಆರೋಪಿಸಿದಂತಾಗಿ, ಆ ಸುದ್ದಿಗೆ ಕಿವಿಗೊಟ್ಟು ಆ ಕಡೆ ನೋಡಿದ. ಆ ನೂಕುನುಗ್ಗಲಲ್ಲಿ ಮುಖ ಕಾಣಲಿಲ್ಲ. ಆದರೆ ಆ ದನಿಗೆ ಯಾಕೋ ಸಂಶಯ ಬಂತು. ನಮ್ಮ ಊರು ದೊಡ್ದದಾದ್ದರಿಂದಲೂ ಸ್ವಲ್ಪ ನಾಗರಿಕತೆ ಕಂಡಿದ್ದರಿಂದಲೂ ಸರ್ಕಲ್ಲಿನ ಬಳಿ ಬರುವ ಎಲ್ಲ ಬಸ್ಸುಗಳೂ ಒಂದೋ ಎರಡೋ ನಿಮಿಷ ನಿಂತು ಹೋಗುವುದು ವಾಡಿಕೆ. ಬಸ್ಸು ಹಾಗೇ ನಿಂತಿತು. ಕಂಡಕ್ಟರ್ ಯಾಕೋ ಅವತ್ತು ವಿಪರೀತ ತಡ ಮಾಡುತ್ತಿದ್ದ. ಜೊತೆಗೆ ಗೂಡಿನ ಹತ್ತಾರು ಮಂಕರಿಗಳನ್ನು ಟಾಪ್‌ಗೆ ಹಾಕಲು ನಿಧಾನ ಮಾಡುತ್ತಿದ್ದರು. ಹೀಗಾಗಿ ಡ್ರೈವರ್ ಎಂಜಿನ್ ಸ್ಟಾಪ್ ಮಾಡಿದ್ದ. ಇದ್ದಕ್ಕಿದ್ದಂತೆ ಗಪ್ ಎಂದು ಮೌನ ಆವರಿಸಿಕೊಳ್ಳತೊಡಗಿತು. ಕಂಡಕ್ಟರ್ ಮುಂದೆ ಹೋಗಿ ಎಂದು ಎಲ್ಲರನ್ನೂ ತಳ್ಳುತ್ತಿರುವಂತೆಯೇ ಸಂದರ್ಭ ಬಿಗಡಾಯಿಸಿತು. +ಗೌಡರೂ ಕೂಡ ಕಾರಣಾರ್ಥವಾಗಿ ಪೇಟೆಗೆ ಹೋಗಲು ಅದೇ ಬಸ್ಸು ಹತ್ತಿದ್ದು ಮುಂದೆ ಮುಂದೆ ಜಾಗ ಮಾಡಿಕೊಂಡು ಬಸ್ಸಿನ ಮಧ್ಯೆ ಬರುವುದಕ್ಕೂ ಜೋಗಿ ಅಲ್ಲಿ ನಿಂತಿರುವುದಕ್ಕೂ ಸರಿಯಾಗಿ, ಇನ್ನು ಹಿಂದಕ್ಕೂ ಮುಂದಕ್ಕೂ ಹೋಗಲು ಜಗ್ಗಲೂ ಆಗದಂತಾಗಿಬಿಟ್ಟಿತು. ‘ಓಹೋ ಏನ್ಲಾ ಜೋಗಿ, ಅಲೆ ಇಲ್ಲಿ ಬಸ್ಸಲ್ಲಿದ್ದಿಯೋ, ಏನ್ ಪಿಚ್ಚರಿಗೆ ಪ್ಯಾಟೇಗೊಯ್ತಿದ್ದಿಯಾ?’ ಎಂದು ಗೌಡರು ಕೇಳಿದರು. ‘ಆಯ್ ವೋಗ್ರಾಪ್ಪೋ ಯಾವ ನಿನ್ ಮಗ ಕಂಡಾ ಪಿಚ್ಚರ್‌ನಾಸೆಯಾ ತಿನ್ನುಕೇ ಇಟ್ಟಿಲ್ಲ ಇನ್ನು ಪಿಚ್ಚರ್ ಬ್ಯಾರೇ’ ಎಂದು ಗೌಡರ ಪಕ್ಕ ನಿಂತುಕೊಳ್ಳುವುದು ಸರಿ ಅಲ್ಲ ಎಂದು ಮುಂದಕ್ಕೆ ಹೋಗಲು ನುಗ್ಗಾಡಿದ. +ಹಿಂದೆ ಮುಂದೆ ನಿಂತಿದ್ದವರು ಇವನ ವಸಕಾಟ, ನೂಕಾಟ ಕಂಡು ರೇಗಿ ‘ಸುಮ್ನೆ ಒಂತಾವ ನಿಂತ್ಕಯ್ಯಾ, ಇಲ್ಲೆಲ್ಲ ನಿಂತಿರುರು ಜನಾ ಅಲ್ಲವಾ, ಏನೋ ಹೆಂಗುಸ್ರು ಮಕ್ಕಳು ಅನ್ನದು ಯಾವುದೂ ಬ್ಯಾಡವೇ, ಏನ್ ನೀನೇ ಸರಿಯಾ ಗಂಡ್ಸು, ಮೆತ್‌ಮೆತ್ಗೆ ವಸಿಕದ್ ಪಸಿಕಂದು ಒಳಾಕ್ ಬತ್ತೀಯಲಾ’ ಎಂದು ಯಾವುದೋ ಒಂದು ನಡು ವಯಸ್ಸಿನ ಹೆಂಗಸು ತನ್ನ ಮಗಳನ್ನು ಮುಂದೆ ಬಿಟ್ಟುಕೊಂಡು ಜೋಗಿಯ ಮೇಲೆ ರೇಗಾಡಿದಳು. ಅಕ್ಕಪಕ್ಕದ ಗಂಡಸರು ಅವನೇನೋ ತರಲೆ ಮಾಡಿರಬೇಕೆಂದು ಕೆಂಗಣ್ಣು ಕಾರಿ ಎಚ್ಚರಿಸಿದರು. ಅಯ್ಯೋ ದೇವ್ರೇ ಏನಪ್ಪಾ ಮಾಡುದು ಎನ್ನುತ್ತಾ ‘ರೀ ಡ್ರೈವರ್, ಬಸ್ಸಾ ಸುರು ಮಾಡ್ರಿ ಇನ್ನೂ ಯೆಸ್ಟೊತ್ತು ಅಂತ ನಿಲ್ಲಿಸ್ಕಂಡಿದ್ದೀರೀ’ ಎಂದು ಸಿಟ್ಟುಕಾರಿದ. ಗೌಡರು ಶಾಂತವಾಗಿ ‘ಅಯ್ಯೋ’ ಸುಮ್ಲಿರ್ಲಾ, ಗೂಡುನ್ ಮಂಕ್ರಿಯಾ ಮ್ಯಾಕೆ ಹಾಕ್ತಾವರೆ ಕನಾ’ ಎಂದು ಕಿಟಿಕಿಯ ಕಡೆಗೆ ತಿರುಗಿ ನಿಂತರು. ಕ್ಷಣ ಕ್ಷಣಕ್ಕೂ ಜೋಗಿಯ ಎದೆ ಬಡಿದುಕೊಳ್ಳುತ್ತಾ, ಅವನ ಹೊಟ್ಟೆಯೊಳಗಿನ ಅಲಾರಾಂ ಗಡಿಯಾರವೂ, ಎದೆಗುಂಡಿಗೆಯೂ ಒಂದಕ್ಕೊಂದು ಮಲ್ಲಯುದ್ಧಕ್ಕೆ ಸಜ್ಜಾಗಿ ನಿಂತವರಂತಾಗಿ ಆ ಅಲಾರಾಂ ಗಡಿಯಾರದ ಮೇಲೆ ಅಸಾಧ್ಯವಾದ ಸಿಟ್ಟು ಬಂದು ತಾನೆಂತಹ ದರಿದ್ರವನ್ನು ಕದ್ದೆನಲ್ಲಾ ಎಂದು ತನ್ನನ್ನು ತಾನೇ ಬೈದುಕೊಳ್ಳುತ್ತಾ, ಪಕ್ಕದಲ್ಲೇ ನಿಂತಿದ್ದ ಗೌಡರ ಮೇಲೂ ಸಿಟ್ಟು ಬರುತ್ತಾ, ಏನೂ ಮಾಡದೆ ನಿಂತಿದ್ದ. ಕ್ಷಣದಿಂದ ಕ್ಷಣಕ್ಕೆ ಅಲಾರಾಂ ಗಡಿಯಾರದ ಸದ್ದು ಅವನ ಹೊಟ್ಟೆಯನ್ನೇ ಬಗೆದುಕೊಂಡು ಈಚೆಗೆ ಬಂದು ಕೂಗಿ ಕೂಗಿ ಲಟ್‌ಲಟ್…..ಲಟ್‌ಲಟ್…..ಲಟ ಲಟ ಲಟಾರ್ ಎಂದು ಆರ್ಭಟಿಸಿದಂತಾಗಿ ಬೆರೆತು ಹೋದ. ‘ನಡೀ ಡ್ರೈವರಣ್ಣಾ’ ಎಂದು ಜೋಗಿ ಪ್ರಾರ್ಥಿಸಿದರೂ ಚಾಲಕ ಕೇಳಲಿಲ್ಲ. ಜೋಗಿಯ ಅದೃಷ್ಟ ಕೆಟ್ಟಿತ್ತು ಎಂದು ಕಾಣುತ್ತದೆ. ಆ ಅಲಾರಾಂ ಗಡಿಯಾರವನ್ನು ಗೌಡರು ಹಿಂದೆ ಯಾವುದೋ ಖುಷಿಗೆ ಒಳಗಾಗಿ ಹೊಂಗನೂರಿನ ಸಾಬರ ಬಳಿ ತೆಗೆದುಕೊಂಡು ಬಂದಿದ್ದರು. ಅದು ನೋಡಲು ಬಹಳ ಆಕರ್ಷಕವಾಗಿ ಸಾವಿರಾರು ರೂಪಾಯಿಗಳ ಬೆಲೆಯುಳ್ಳದ್ದು ಎಂಬಂತೆ ಚಿನ್ನದ ಬಣ್ಣದ ಗಿಲೀಟನ್ನು ಗಡಿಯಾರದ ಒಳಗೆಲ್ಲ ಹೊಂದಿದ್ದು ಕಂಗೊಳಿಸುತ್ತಿತ್ತು. ಅದನ್ನು ಯಾರಿಗಾದರೂ ಮಾರಿದರೆ ನಿಸ್ಸಂದೇಹವಾಗಿ ನೂರಾರು ರೂಗಳು ಕೈಗೆ ಬಂದು ಬೀಳುತ್ತವೆ ಎನಿಸುವಂತಿತ್ತು. +ಹೀಗಾಗಿಯೇ ಜೋಗಿ ಗೌಡರಿಗೆ ಪ್ರತಿಭಟನಾರ್ಥವಾಗಿ ತನ್ನ ಅಸಹಾಯತೆಗೊಂದು ಸಮಾಧಾನವಾಗಿ ಆ ಗಡಿಯಾರವನ್ನು ಕದ್ದು ಹೇಗೋ ಈ ಬೇಸಿಗೆಯ ನಾಲ್ಕಾರು ದಿನಗಳನ್ನು ಚೆಂದವಾಗಿ ಕಳೆಯಬಹುದೆಂದು ತಿಳಿದಿದ್ದ. ಆದರೆ ವಾಸ್ತವವೇ ಬೇರೆ ಇತ್ತು. ಗೌಡರ ಅನೇಕ ಅಂತಹ ಕಣ್‌ಸೆಳೆಯುವ ವಸ್ತುಗಳಲ್ಲಿ ಇದೂ ಕೂಡ ಒಂದು ಲಡಾಸು ಮಾಲಾಗಿದ್ದು, ಕೆಟ್ಟದ್ದು ಸರಿಯಾಗಿ ಟೈಂ ತೋರಿಸದೆ ಯಾವಾಗಲೋ ತಟ್ಟಕ್ಕನೆ ನಿಂತು, ಮತ್ಯಾವಾಗಲೋ ದಿಢೀರನೆ ವೇಗವಾಗಿ ಓಡಿ, ಮತ್ತೆ ಮಂದವಾಗಿ, ತನಗೆ ಇಷ್ಟ ಬಂದಂತೆಲ್ಲ ತಿರುಗಿಕೊಂಡು ತೋಟದ ಮನೆಯ ದೀಪದ ಗೂಡಿನಲ್ಲಿ ಕುಳಿತಿತ್ತು. ಇಂತಹ ಚರಿತ್ರೆಯುಳ್ಳ ಆ ಗಡಿಯಾರವನ್ನು ಗೌಡರು ವಿಕ್ಟೋರಿಯಾ ರಾಣಿಯ ಅರಮನೆಯಲ್ಲಿ ಇದು ಇತ್ತು ಎಂಬಂತೆ ಅದು ತನಗೆ ಬಳುವಳಿಯಾಗಿ ಬಂದಿದೆ ಎಂದು ಭ್ರಮಿಸಿ ಇಟ್ಟುಕೊಂಡಿದ್ದರು. ಈಗ ಕೆಟ್ಟು ನಿಂತು ನಡೆವ ಆ ಅಲಾರಾಂ ಗಡಿಯಾರ ಯಾಕೋ ಸಿಟ್ಟಾದಂತೆ ತನ್ನ ಮುಳ್ಳುಗಳನ್ನು ಸುತ್ತಿ ಸತ್ತಿರುವಂತಾಗಿತ್ತು. ಎಲ್ಲವೂ ಬಹಿರಂಗವಾಗಿತ್ತು. ಬಸ್ಸು ಇನ್ನೇನು ಹೊರಡಬೇಕು ಅನ್ನುವ ಹೊತ್ತಿಗೆ ಬಸ್ಸಿನಲ್ಲಿದ್ದ ಎಲ್ಲರಿಗೂ ತಿಳಿಯುವಂತೆ ಆ ಅಲಾರಾಂ ಗಡಿಯಾರ ಜೋಗಿಯ ಪಂಚೆ ಮರೆಯನ್ನು ಸೀಳಿ ಟಣ…ಣ…ಣ ಟ್ರಿಂಣ್ ಟ್ರಿಂಣ್ ಟ್ರೀ೦೦೦ ಎಂದು ಕರ್ಕಶವಾಗಿ ಕೂಗಿಕೊಂಡು ಎಲ್ಲರ ಗಮನ ಸೆಳೆಯಿತು. +ಇದ್ದಕ್ಕಿದ್ದಂತೆ ಗೌಡರು ಅವನ ಪಕ್ಕದಲ್ಲೇ ಇದ್ದವರು ವಿಶೇಷವಾಗಿ ಎಚ್ಚರಗೊಂಡು, ‘ಅರರೇ…..ಇದೇನ್ಲಾ ಜೋಗಿ ಅಲಾರಾಮು….. ಇದೆಲಿತ್ಲಾ ನಿನ್ನ ತಾವು….’ ಅನ್ನುವಷ್ಟರಲ್ಲೇ ಜೋಗಿ ಬೆದರಿದ ಗೊಂಬೆಯಾಗಿ ಕೊನೆಗೂ ನನ್ನನ್ನು ಸ್ವತಃ ನನ್ನ ಕಳ್ಳಮಾಲೇ ಹಿಡಿದುಕೊಟ್ಟುಬಿಟ್ಟಿತಲ್ಲಾ ಎಂದು ಹತಾಶನಾಗಿ ‘ಅಯ್ಯಯ್ಯೋ’ ತಪ್ಪಾಯ್ತು ಕಣ್ರಪ್ಪಾ, ಏನೋ ತಿಳಿದೇ ತಪ್ಪು ಮಾಡಿಬುಟ್ಟೆ. ಬುಟ್ ಬುಡ್ರಪ್ಪೋ’ ಎಂದು ಆ ನೂಕಾಟದಲ್ಲೂ ಗೌಡರ ಕಾಲು ಕಟ್ಟಿಕೊಳ್ಳಲು ಹೋದ. ಗೌಡರಿಗೆ ಅಲಾರಾಂ ಕಳುವಾಗಿದೆ ಎಂಬುದೇ ಗೊತ್ತಿರಲಿಲ್ಲ. ಸ್ವತಃ ಅವರೇ ಅವನ ಕಳ್ಳತನಕ್ಕೆ ಒಂದು ಕ್ಷಣ ಬೆಪ್ಪಾಗಿ ಮತ್ತೆ ಸಿಟ್ಟಾಗಿ, ಗಡಿಯಾರವನ್ನು ಅವನಿಂದ ಕಿತ್ತುಕೊಂಡು ಆ ಜನರ ಸಮ್ಮುಖದಲ್ಲಿ ಹೊಲಸಾಗಿ ಬೈಯ್ಯಲು ಆಗದಿದ್ದಕ್ಕೆ ಸಿಟ್ಟಾಗಿ, ಏನೂ ಮಾಡಲು ತೋಚದಾಗಿ, ಕೊನೆಗೆ ಆ ಗಡಿಯಾರದ ಕಳವಿನ ಸಮಾಚಾರ ಬಸ್ಸಿನವರಿಗೆಲ್ಲ ಅರಿವಾಗಿ, ಅವರೆಲ್ಲ ಗೊಳ್ಳನೆ ನಗುತ್ತಾ ಕಳ್ಳ ಕದ್ದ ಮಾಲ, ಅದೇ ಮಾಲು ಅವನನ್ನೇ ಹಿಡಿದುಕೊಟ್ಟಿತಲ್ಲಾ; ಗೌಡರು ಎಂತಾ ಇಕಮತ್ತಾದ ಅಲಾರಾಂ ಮಡಗಿದ್ದಾರು ನೋಡಿದಿರಾ ಎಂದು ಕತೆ ಕಟ್ಟಿ ಬೆರಗಾಗಿ ಜೋಗಿಗೆ ಛೀಮಾರಿ ಹಾಕಿ ನಗತೊಡಗಿದರು. ಡ್ರೈವರನೂ, ಕಂಡಕ್ಟರನೂ ಜೋಗಿಯ ಪಜೀತಿ ಕಂಡು ಕೆಳಗಿಳಿಸಿದರು. +ಯಾಕೋ, ಮಾಲು ಮತ್ತು ಜೋಗಿ ಸಹಿತ ಗೌಡರೂ ಬಸ್ಸಿಂದ ಕೆಳಗಿಳಿದರು. ಊರ ಜನ ಮುತ್ತಿಕೊಂಡರು. ಸುದ್ದಿ ಕ್ಷಣಾರ್ಧದಲ್ಲಿ ಸರ್ಕಲ್ಲಿನ ನಾಲ್ದೆಸೆಗಳ ಅಂಗಡಿ ಸಾಲುಗಳಿಗೂ ಬಡಿದು ಅದು ಅಲ್ಲಿಂದ ಊರೊಳಕ್ಕೂ ಮೊಳಗಿ ವಿಚಿತ್ರ ಪರಿವೇಷ ವಿರ್ಮಾಣವಾಯಿತು. ಜೋಗಿಗೆ ತಲೆಕೆಟ್ಟುಹೋಗಿತ್ತು. ಗೌಡರು ಕಳ್ಳನನ್ನು ಹಿಡಿದ ಗತ್ತಿನಿಂದ ಹತ್ತಾರು ಜನಕ್ಕೆ ಜೋಗಿಯ ಅಪರಾಧವನ್ನು ದೊಡ್ಡ ಗಂಟಲಿನಿಂದ ವಿವರಿಸುತ್ತಿದ್ದರು. ಗೌಡರೇ ಸ್ವತಃ ಒಂದು ವಾರ ಪೂರ್ತಿ ಕೆಲಸ ಮಾಡಿಸಿಕೊಂಡು, ಕೊಟ್ಟಿದ್ದ ಪುಡಿಕಾಸಿಗೆ ಅಷ್ಟೂ ಕೂಲಿಯ ಹಣವನ್ನು ಸಮ ಮಾಡಿಕೊಂಡರು ಎಂದು ಹೇಳಲು ಬಂದ ಧೈರ್ಯ ಬಾಯ ಹೊರಕ್ಕೆ ಬರದೇ ಅದೇ ಮರೆತು ಹೋಗಿ ಆ ಮರೆವೇ ಅವನನ್ನು ಮುಚ್ಚಿಕೊಂಡು ಜನರ ತಮಾಷೆ ಮಾತುಗಳೇ ಅಲ್ಲೆಲ್ಲ ಚೆಲ್ಲಾಡಿ, ಸ್ವತಃ ಜೋಗಿಯೇ ನಾಚಿಕೆಯಿಂದ ತಬ್ಬಿಬ್ಬಾಗಿ ಎಲ್ಲರ ಕಡೆ ಮಿಕಿ ಮಿಕಿ ನೋಡತೊಡಗಿದ. +ಗೌಡರಿಗೆ ಏನನಿಸಿತೋ ಏನೋ, ಅಷ್ಟು ದೂರ ತೋಟದ ದಾರಿ ಹಿಡಿದು ಹೋಗಿದ್ದವರು ಹಿಂತಿರುಗಿ ಬಂದು ಮರದ ಕೆಳಗೆ ಎತ್ತಲೋ ನೋಡುತ್ತ ಕುಳಿತಿದ್ದ ಜೋಗಿಯ ಬಳಿ ಹೋಗಿ ಆ ಅಲಾರಾಂ ಗಡಿಯಾರವನ್ನು ಅವನ ಕೈಗೇ ಕೊಟ್ಟು ‘ತಕೋ ಇದಾ…. ನೀನೇ ಮಡಿಕೋ ಹೋಗು’ ಎಂದು ತುಂಡರಿಸಿ, ಏನೋ ತಡವರಿಸಿ ಮುಂದೆ ಮಾತು ಹೊರಡದೆ ಹೊರಟುಹೋದರು. ಕಾಲವನ್ನು ಯಾರೂ ಕದಿಯಲು ಸಾಧ್ಯವಿರಲಿಲ್ಲ. ಅಥವಾ ಆ ಕಾಲವನ್ನು ಬಚ್ಚಿಟ್ಟುಕೊಂಡು ತನ್ನ ಸ್ವಂತಕ್ಕೆ ತನ್ನೊಳಗೇ ಬಂಧಿಸಿಡಲು ಸಾಧ್ಯವಿರಲಿಲ್ಲ ಎಂಬಂತೆ ಗೌಡರು ಆ ಅಲಾರಾಂ ಗಡಿಯಾರವನ್ನು ಜೋಗಿಗೇ ಕೊಟ್ಟುಬಿಟ್ಟು ಹೋದ ಮೇಲೆ ಎಷ್ಟೋ ಸಮಯದ ನಂತರ ಜೋಗಿ ಎದ್ದು ಹಿಂತಿರುಗಿ ಮತ್ತೆ ನಮ್ಮ ಹೋಟೆಲಿಗೆ ಬಂದ. ಅಷ್ಟು ಹೊತ್ತಿಗಾಗಲೇ ನಮಗೆಲ್ಲ ಸುದ್ದಿ ಗೊತ್ತಾಗಿತ್ತು. ಸಂಜೆ ಆಗುತ್ತಿತ್ತು. ಕಾಲ ನಿಗೂಢವಾಗಿ ಸರಿಯುತ್ತಿತ್ತು. ಮರೆಯಲ್ಲಿ ಲಟಗುಟ್ಟುತ್ತಿದ್ದ ಅಲಾರಾಂ ಈಗ ಸ್ವತಃ ಜೋಗಿಯ ಅಂಗೈಯಲ್ಲಿ ಹೊಳೆಯುತ್ತ ಚೆಂದವಾಗಿ ಕುಳಿತಿತ್ತು. ನನ್ನ ತಾತ ಅವನನ್ನು ಎಂತದೋ ಮಾರ್ಮಿಕ ಭಾವದಲ್ಲಿ ನೋಡಿ ನಗಾಡಿ ಇದ್ದಕ್ಕಿದ್ದಂತೆ ಅವನಿಗೊಂದು ವಿಶೇಷಣವನ್ನಿಟ್ಟು ಗಂಟೆಜೋಗಿ ಎಂದು ಕರೆದರು. ಹೋಟೆಲಿನಲ್ಲಿದ್ದವರೆಲ್ಲ ಇದು ಸರಿಯಾದ ಹೆಸರು ಎಂಬಂತೆ ಗಡಿಯಾರ ಕದ್ದು ಕೊನೆಗೆ ಸಿಕ್ಕಿಬಿದ್ದು ಈಗ ಸ್ವತಃ ಅದನ್ನೇ ಅಸಲಿಯಾಗಿ ಪಡೆದು ಬಂದದ್ದಕ್ಕೆ ಗಂಟೆ ಎನ್ನುವುದು ಅವನಿಗೆ ಅನ್ವರ್ಥವಾಗಿತ್ತು. +ಆಮೇಲೆ ಊರಿನವರೆಲ್ಲ ಅವನನ್ನು ಗಂಟೆಜೋಗಿ ಎಂದೇ ಕರೆಯಲು ಆರಂಭಿಸಿ ಗೌಡರೂ ಕೂಡ ಗಂಟೆ ಜೋಗಿ ಎಂದೇ ಸಂಬೋಧಿಸುವಂತಾಯಿತು. ಇದ್ದಕ್ಕಿದ್ದಂತೆ ಒಂದು ದಿನ ಯಾರಿಗೂ ಏನನ್ನೂ ಹೇಳದೇ ಕೇಳದೇ ಜೋಗಿ ಬೆಂಗಳೂರಿಗೆ ಹೋದವನು ಹಿಂತಿರುಗಿ ಬರಲಿಲ್ಲ. ಊರಲ್ಲಿ ಜನ ಅವನ ಬಗ್ಗೇ ಕತೆ ಕಟ್ಟುತ್ತಾ ಬೆಂಗಳೂರಿನ ಎಚ್.ಎಂ.ಟಿ. ಕೈಗಡಿಯಾರ ಕಂಪನಿಯಲ್ಲೇ ಕದಿಯಲು ಹೋಗಿದ್ದಾನೆಂದು ಆಗಾಗ ನೆನಪಿಸಿಕೊಳ್ಳುತ್ತಾರೆ. ನಿಜಕ್ಕೂ ಆ ಜೋಗಿ, ನಮ್ಮ ಗಂಟೆ ಜೋಗಿ ಈಗ ಆ ಕಾಲದ ಯಾವ ಅಲೆಯ ಯಾವ ಜಾಲದಲ್ಲಿ ಎಲ್ಲಿ ಹಾರಿಹೋಗುತ್ತಿರುವನೋ! ಈ ಕಾಲದ ಮಾಯೆಯಲ್ಲಿ ಯಾವುದು ತಾನೇ ಸುಲಭವಾಗಿ ಅರಿವಿಗೆ ದಕ್ಕುತ್ತದೆ? +***** +ಬರೆದದ್ದು: ೧೯೯೩ ಪ್ರಕಟವಾದದ್ದು: ೧೯೯೯ +(ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ) +ಕೀಲಿಕರಣ: ನಂದಿನಿಶೇಖರ್ ಮತ್ತು ಸೀತಾಶೇಖರ್ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_618.txt b/Kannada Sahitya/article_618.txt new file mode 100644 index 0000000000000000000000000000000000000000..4029b665b7ba63544e64b84b13c8f255a98a45c6 --- /dev/null +++ b/Kannada Sahitya/article_618.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ +ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ +ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ +ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ +ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ +ಅರಸದಿದ್ದರು ಕಾಲ ತೊಡಕುವೀ ಹೂಬೇಲಿ +ಯಾವ ಜನುಮದ ನೇಹ ನಲುಮೆಯಾವೇಶದಲಿ +ಎದೆಯನೊಪ್ಪಿಸಲಿತ್ತೊ! ಮುಳ್ಳು ಮಂಚದೊಳಲ್ಲಿ +ನವುರು ಹೂಹಾಸಿಗೆಯಲೊರಗಿ ಪಾತರಗಿತ್ತಿ +ಚಂಚಲತ ಚೈತನ್ಯವಡೆದಂತೆಹಾರುತಿದೆ! +ಜೇಡಹುಳು ತಂತು ತಂತುವನೇರಿ ಇಳಿಯುತಿದೆ- +ಇಂತೆಲ್ಲವನು ನನ್ನ ದೃಷ್ಟಿಪಥದಲಿ ಬಿತ್ತಿ +ಸೊಂಪೇರಿ ಬೆಳೆದು ನಿಂತಿಹುದಿದೋ ಹೂಬೇಲಿ +ಹಾದಿಹೋಕರು ನಸುವೆ ನೋಡಬಹುದೇ ಹೊರಳಿ? +***** +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […] +ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ ಸಂಕಲ್ಪವೊಂದೇ ಮೋಡ; ಶಾಖ ಮರೆ, ಬರೆದರೆ ಬರೀ ಅಕ್ಷರಗಳ ಹೊರೆ; ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ ಒರಗಿದರೆ ಬರೆಯಿಸುವ ಅದೃಢತೆ; ಹೊರಗಾಗುವುದು ಕವಿತೆ. ಒಮ್ಮೊಮ್ಮೆ […] +೧ ಏಸುಕ್ರಿಸ್ತ ಏಸು ಬುದ್ಧ ಏಸು ಬಸವ ಬಂದರೂ, ತಮ್ಮ ಅಂತರಂಗವನ್ನೆ ಲೋಕದೆದುರು ತೆರೆದರೂ ನಶ್ವರದಲಿ ಈಶ್ವರನನು ಕಂಡು ಜಗದ ಕಲ್ಯಾಣಕೆ ಎದೆಯ ಪ್ರಣತಿ ಜ್ಯೋತಿಯಲ್ಲಿ ದಯೆಯ ತೈಲವೆರೆದರೂ, ಪುಣ್ಯ ಪುರುಷ ಗಾಂಧಿ ತಂದೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_619.txt b/Kannada Sahitya/article_619.txt new file mode 100644 index 0000000000000000000000000000000000000000..6a2c5602b360c1e3a3aee64d3f16cf8317d54413 --- /dev/null +++ b/Kannada Sahitya/article_619.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹದವಾಗಿ ಮಿದುವಾಗಿ +ಥಣ್ಣಗೆ +ತೇಯುತ್ತಿರುವ +ಗಂಧದ ಮರಗಳ ನಡುವೆ +ಒಮ್ಮೆಗೇ ಕಾವು ಕಕ್ಕುವ +ಬೆಂಕಿಯುರಿ +***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ರವಿ ಕೂತಿದ್ದಾನೆ ಪಡುವಣದ ಅಂಗಡಿಯಲ್ಲಿ ಸೀರೆಗಳ ಹ ರವಿ. ***** +ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_62.txt b/Kannada Sahitya/article_62.txt new file mode 100644 index 0000000000000000000000000000000000000000..91a9d7b4fb760624e81e90d6f0f38f810b63ae9f --- /dev/null +++ b/Kannada Sahitya/article_62.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಪ್ಪನ ಬಿಗಿ +ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ +ಅವ ಬಿಡಲಿಲ್ಲ +-ವೆಂದಲ್ಲ ನಾ ಹಿಂತೆಗೆದದ್ದು +ಅದಿಲ್ಲದಿರೆ +ಅವನ ಕಳೆಯೋ +ಕತ್ತಲ ಹೊಳೆಯೋ +ಗೊತ್ತಾಗುವಂತಿರಲಿಲ್ಲ. +ಅದೊಂದು ದಿನ ಬರಲಿಕ್ಕುಂಟು +ನಮ್ಮ ಮನೆ ಆತನ ಕಳಕೊಂಡು +ಬಿಕ್ಕಿ ಬಿಕ್ಕಿ ಅಳಲಿಕ್ಕುಂಟು +ಆಗ ಅದಕ್ಕೆ ಸರಿ +ಯಾಗುವ ಪರಿ +ಯಲ್ಲಿ ನಾ ಕಾಲ ಹೊಂದಿಸುವದುಂಟು +ಆದರೆ ದಿನ ನೂಕು +ವದೂ ಒಂದು ಜೋಕಾದ +ಈ ಇಲ್ಲಿ ಮಡಿಕೆಗಳಲ್ಲಿ +ನಾ ಬೆಳೆಯುವುದೆಂದೋ +ಒಂದೊಂದೇ ಮೆಟ್ಟಿಲ ಮೇಲೂ +ತಲಾ ಬೆಲೆಗಳನಿಟ್ಟು +ಕಾವು ಕೂರುವದೆಂದೋ +ಎಂದೆಲ್ಲ ಚಿಂತೆ ತುರಿಸುವ ವೇಳೆ +ಆಷಾಢದ ಮಳೆ +ತುಟುತುಟಿಸುವ ಥರ +ಬಂತೋ ಬಂತು ನಾ ಹುಟ್ಟಿದಾಗಲೇ ಅಪ್ಪ +ನನ್ನ ಮತ್ತವನ ಚಪ್ಪಲಿಗಳ +ಅದಲು ಬದಲಿಸಿದ-ಸಮಾಚಾರ +ಹಾ ಎನುವುದರೊಳಗೇ +ಹೊಂದಾಣಿಕೆ ಮರೆತುಬಿಟ್ಟೆ. +***** +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_620.txt b/Kannada Sahitya/article_620.txt new file mode 100644 index 0000000000000000000000000000000000000000..8b1b83d0598434bfbb18e39eeb6171643920c0a2 --- /dev/null +++ b/Kannada Sahitya/article_620.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊದಲ ಮಳೆ ಸುರಿದಾಗ +ಮನೆಯ ನುಣ್ಣನಂಗಳಕೆಲ್ಲ +ಪರಿಮಳದ ಮಾತು +ಮುಂಜಾನೆ ಎದ್ದು ಕಣ್ಣುಜ್ಜುತ +ಬೆಚ್ಚನೆ ಹಾಸಿಗೆ ಬಿಟ್ಟು +ಹೊಸ್ತಿಲಿಗೆ ಬಂದಾಗ +ಮೆಟ್ಟಿಲಿನೆತ್ತರಕೂ +ಕರಗಿದ ಕಾಗದ ಕಸ ಮಣ್ಣು ಚೂರು +ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ +ಒತ್ತರಿಸಿದ ಪದರು ಪದರು +ನೀರೆರೆದುಕೊಂಡು ಕೆದರು ತಲೆ ಹೊತ್ತಂಥ +ಕರವೀರ, ದಾಸಾಳ ಶಂಖಪುಷ್ಪ +ಬಿರಿದು ನೀರ್ಕುಡಿದು ಗಳಗಳ +ಮದನ ಮಸ್ತಾಗಿ ಪುಟಿವ ಹಸಿರು ಹುಲ್ಲು +ತೊಯ್ದು ತೊಟ್ಟಿಕ್ಕುತ್ತ ತೂಗುವ +ಬೇಸಿಗೆಯ ಚಪ್ಪರದಲ್ಲಿ +ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ +ಮನೆಯೊಳಗೆ: ಹೊಸಯತ್ತೆಯ +ಹೊಸ ಪುಸ್ತಕ ತೆರೆದ ಹಿತವಾಸನೆ +ಸ್ಲೇಟು ಉದ್ದುವ ಖುಷಿಗೆ +ಟ್ರಂಕಿನೊಳಗಿಂದೆದ್ದು ನುಸುನುಸುಳಿ ಬರುವ +ಡಾಂಬರಗುಳಿಗೆಯ ಘಮಘಮ +ಒತ್ತಾಗಿ ಕೂತ ಟನ್ನು ಡಬ್ಬಗಳೊಳಗೆ +ಒಪ್ಪವಾಗೊಟ್ಟಿದ ತಿಂಗಳ್ಹಿಂದಿನ ಬಿಸಿಲು- +ಚುರುಗುಟ್ಟಿ ಮುರಿವ ಖಾರ ಹಪ್ಪಳ +ಬಾಳೆ ಗೆಣಸಿನ ಬಾಳಕ ಸೊಳೆಕೊಚ್ಚಲು +ತೋಟಕ್ಕೆ ನೀರೆರೆಯಬಂದ ಕರಿಗಂಬಳಿಯಾಳು +ಮೂಲೆ ಕುಕ್ಕರಿಸಿ ಮೆಲ್ಲುವ ತಂಬಾಕು ಕವಳ +ಗುಡಿಗೆ ಪೂಜೆ ಹೊರಟ +ನೆರೆಮನೆಯ ಕೆಂಪು ಪೀತಾಂಬರ +ಹೂ ಕಾಯಿ ಪಂಚಾಮೃತ ಧೂಪ ನೀಲಾಂಜನ ತಟ್ಟೆ +ಮೇಲೆ ಟಪಟಪಗುಡುವ ತಾಳೆಕೊಡೆ ತಾಳ… +ಸೊರೊ ಸೊರೊ ಸೋರುವ ಊರ ಹೆಂಚು +ಢಬಢಬಾ ಸದ್ದಿಸುವ ತಗಡುಮಾಡು +ಪೂರ್ತಿಯೊಣಗದ ಚಡ್ಡಿ ಹಸಿ ಹಸಿ +ಸಿಕ್ಕಿಸಿಕೊಂಡು ಬರಸು ಕೊಡೆಯೆತ್ತಿ +ಜುಳು ಜುಳು ಕೆಸರು ತಂಪುಪಾದ… +ಹೆಗಲಿಗಂಟಿದ ಪಾಟಿ ಚೀಲ… ಹೊತ್ತು +ಶಾಲೆ ಹೊರಟ ಕೇರಿ ಹಿಂಡು ಹಿಂಡು +ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ +ಥಂಡಾ ಥಂಡಾ ಚಾ- +ನಿನ್ನೇತನಕ ಹಾರಾಡುತ್ತಿದ್ದ +ಟೂರಿಂಗ್ ಟಾಕೀಸಿನ ತಂಬು ಒಮ್ಮೆಗೇ ಸ್ತಬ್ಧ +ತನ್ನವಧಿಗೆ ಮೊದಲಾಗೇ ನೆಲ ಕಚ್ಚಿತು ಬಾನು +ಶಾಲೆ ಮುಟ್ಟುವದರೊಳಗೆ ಉಪ್ಪಿಟ್ಟಿನ ತೇಗು +ಪ್ರಾರ್ಥನೆಗೆ ನಿಂತ ಒದ್ದೆ ಕೊಡೆಗಳ ಸಾಲು +ಸ್ಲೇಟಿನಲ್ಲಿಯ ಮಗ್ಗಿ ಮಳೆನೀರ ಪಾಲು +***** +ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. ***** +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_621.txt b/Kannada Sahitya/article_621.txt new file mode 100644 index 0000000000000000000000000000000000000000..36ff37e46b9b0158a53ba6a59536638374500862 --- /dev/null +++ b/Kannada Sahitya/article_621.txt @@ -0,0 +1,412 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೬ +– ೧ – +ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ ಇವನನ್ನು ಕಂಡು, ‘ಅದೆಲ್ಲಿಗ್ ಓಗಿಬಿಟ್ಟಿದ್ರಿ ಸ್ವಾಮಿ?’ ಎಂದು ಕೇಳಿದ. +‘ಪೋಲೀಸ್‌ಗೀಲೀಸ್ನೋರು ಹುಡುಕ್ತಿದಾರೇನೋ ನನ್ನ?’ +‘ಯಂತಾ ಪೋಲೀಸ್ನೋರು ಸಾಮಿ?’ +‘ಅದೇ ಅವತ್ತು……’ +ಮಾಟನಿಗೆ ಈಗ ಹಿಂದಿನದೆಲ್ಲ ನೆನಪಾಯಿತು; ಹೇಳಿದ: ‘ಅವ್ರು ಪೋಲೀಸ್ನೋರಲ್ವಂತೆ. +ಹ್ವಲ ಅಳಿಯೋ ಮೋಜಣೀದಾರ್ರಂತೆ. ನಮ್ಮೂರಾಗೆ ಮೂರು ತಿಂಗ್ಳಿದ್ರು. ನೀವ್ಯಾಕ್ ಈಟ್ ದಿನ ಅವುತ್‌ಕಂಡಿದ್ರಿ ಸಾಮಿ? ಅಮ್ಮಾರು, ನನ್ನ ಮಗು ಎಲ್ಲಿ ಓಯ್ತೋ ಅಂತ ಪೇಚಾಡ್ಕಂತಿದ್ರು.’ +‘ಹಾಗಾದ್ರೆ ನಾನು ಮನೆಗೆ ಹೋಗ್ಲೆ?’ +‘ನಡೀರಿ ಸಾಮಿ.’ +‘ನಂಗ್ ಹ್ಯದ್‌ರಿಕೆಯಾಗುತ್ತೆ. ಜೊತೆಗೆ ನೀನೂ ಬಾ’-ಎಂದು ಮಾಟನನ್ನು ಕಾವಲಿರಿಸಿಕೊಂಡು ಅಪ್ಪಣ್ಣಯ್ಯ ಅರೆ ಧೈರ್ಯದಿಂದ ತನ್ನ ಮನೆಯ ಕದ ತಟ್ಟಿದ. ‘ಅದ್ಯಾರೋ ಇಷ್ಟೊತ್ನಲ್ಲಿ ಬಾಗ್ಲು ಬಡಿಯೋರು?’-ಎಂದು ಒಳಗಿನಿಂದ ಕೂಗಿದ ಗಂಗಮ್ಮನಿಗೆ ಮಾಟನೇ ಉತ್ತರ ಹೇಳಿದ. ಸೀಮೆ ಎಣ್ಣೆಯ ಬುಡ್ಡಿ ಹೊತ್ತಿಸಿಕೊಂಡು ಹೊರಗೆ ಬಂದ ಗಂಗಮ್ಮ ಮಗನನ್ನು ಕಂಡು-‘ನನ್ ಕಂದಾ, ಇಷ್ಟು ದಿನ ಎಲ್ಲಿಗ್ಹೋಗಿದ್ಯಪ್ಪ. ಆ ಅನಿಷ್ಟಮುಂಡೆಗೆ ಹ್ಯದರ್ಕಂಡು ಎಲ್ಲೆಲ್ಲಿ ತಿರುಗ್ದೆಯಪ್ಪಾ?’ ಎಂದು ಕಣ್ಣಿನಲ್ಲಿ ನೀರು ತಂದುಕೊಂಡಳು. ಮಾಟ ಒಳಗೆ ಬಂದು ಕುಳಿತ. ನಂಜಮ್ಮ ಬಾಣಂತಿತನಕ್ಕೆ ನಾಗಲಾಪುರಕ್ಕೆ ಹೋಗಿದ್ದಳು. ಚೆನ್ನಿಗರಾಯನದು ಬೇಗ ಎಚ್ಚರವಾಗುವ ನಿದ್ದೆಯಲ್ಲ. ಮಗ ಎಲ್ಲೆಲ್ಲಿ ತಿರುಗಿದ, ಊಟ ತಿಂಡಿಗೆ ಏನೇನು ಮಾಡಿದ, ಎಲ್ಲವನ್ನೂ ಗಂಗಮ್ಮ ವಿಚಾರಿಸಿದಳು. +‘ನಾನೇನ್ ಹ್ಯದರ್ಕಳ್ಳಿಲ್ಲ. ಎಲ್ಲ ಕಡೇಲೂ ನಿಭಾಯಿಸ್ಕಂಡ್ ಬಂದೆ’-ವೀರಪುತ್ರ ತನ್ನ ಸಾಹಸದ ಕಥೆ ಹೇಳಿದ: “ಇಲ್ಲಿಂದ ಜಾವಗಲ್ಲು ಕಡೀಕ್ ಹೋದೆ. ದಾರೀಲಿ ಬಿದರೆ ಸಣ್ಣೇಗೌಡನ ಮನೆಗೆ ಹೋಗಿ, ‘ನಾವು ಬಾಮ್ರು. ಅಡಿಗೆ ಮಾಡ್ಕಳುಕ್ ಸಾಮಾನು ಕೊಡ್ಸಿ’ ಅಂದೆ. ಎರಡು ಸೇರಕ್ಕಿ, ಅವರೇಬ್ಯಾಳೆ, ಖಾರಾಪುಡಿ, ಬ್ಯಣ್ಣೆ, ಎಲ್ಲಾ ಕೊಟ್ರು. ಊಟ ಮಾಡಿ ಮಿಕ್ಕಿದ್ದನ್ನು ಕಟ್ಕಂಡು ಜಾವಗಲ್ಲಿನ ಕಡೆಗೆ ಹೋದೆ. ಅಲ್ಲಿ ಒಂದ್ ತಿಂಗ್ಳಿದ್ದೆ. ಈಗ್ಯಾಕ್ ಬಂದಿದೀಯಾ, ಊರಲ್ಲಿ ಎಲ್ಲ ಹ್ಯಾಗಿದಾರೆ, ಅವರ್ಯಾಕ್ ಬರ್ಲಿಲ್ಲ ಅಂತ ಆ ಅವ್ಳಿದಾಳಲ, ಆ ಸುಕನಾತಿಮುಂಡೆ, ಯಂಕಟರಾಮು ಹೆಂಡ್ತಿ, ಕೇಳಿದ್ಲು. ಒಂದಿನ ರಾತ್ರಿನಾಗ ಅಲ್ಲಿಂದ ಹ್ವರಟು ಅರಸೀಕೆರೆ ಕಡೀಕ್ ಹೋದೆ. ಹಾಗೇ ಸುತ್ಕಂಡು ಬಾಣಾವರ ಕಡೂರು ಮ್ಯಾಲ್ಹಾಸಿ ಶಿವಮೊಗ್ಗುಕ್ ಹೋದೆ. ಅಲ್ಲಿ ಹ್ವಳೇ ದಡ್‌ದಾಗೆ ಬೆಕ್ಕಿನ ಕಲ್ಲಿನ ಮಟ ಅಂತ ಇದೆ. ಅಲ್ಲೇ ಕೂತ್ಕಳುಕ್ಕೆ ಮಲೀಕಳುಕ್ಕೆ ಆಗ್ತಿತ್ತು” +‘ಊಟುಕ್ಕೇನ್ಮಾಡ್ದೆಯೋ?’ +‘ಆ ಮಟದೋರೇ ಹೇಳ್ಕೊಟ್ರು. ಅವ್ರು ಲಿಂಗಾಯತರು, ನಾನು ಊಟ ಮಾಡೂ ಹಾಗಿಲ್ವಲ್ಲ. ಆ ಊರಲ್ಲಿ ದೊಡ್ದ ಬ್ರಾಮ್ರಕೇರಿ ಅಂತ ಇದೆ. ಯಲ್ಲ ಅನುಕೂಲವಂತ್ರು. ದಿನಾ ಬಿಕ್ಷಾನ್ನ ಮಾಡ್ತಿದ್ದೆ. ಅಮ್ಮಾ, ನೀನೇನೇ ಹೇಳು, ಬಿಕ್ಷಾನ್ನದ ಮುಂದೆ ಇನ್‌ಹ್ಯಾಗ್ ಅಡಿಗೆ ಮಾಡಿದ್ರೂ ಚನ್ನಲ್ಲ. ಜೋಳಿಗೆ ಅನ್ನ ಕೊಳದಪ್ಪಲೆ ಹುಳಿ ಸಾರು ತಂದು ನದೀ ದಡದ ಬಂಡೆ ತೊಳೆದು ಬಿಟ್ಟು ಅದರ ಮ್ಯಾಲೆ ಹಾಕ್ಕಂಡು ಹ್ವಡೀತಿದ್ದೆ.’ +‘ಬಿಕ್ಷಾನ್ನ ಅಂದ್ರೇನು ಸಾಮಿ?’-ಮಾಟ ಕೇಳಿದ. +‘ಊಟದ ಹೊತ್ನಲ್ಲಿ ಹೋಗಿ ಯಲ್ಲ ಮನೇ ಮುಂದೂ ನಿಂತ್ಕಂಡು ಬವತಿ ಬಿಕ್ಷಾಂದೇಹಿ ಅಂದ್ರೆ ಜೋಳಿಗೆಗೆ ಅನ್ನ ಕೊಳದಪ್ಪಲೆಗೆ ಸಾರೋ ಹುಳಿಯೋ, ಮ್ಯಾಲೋಗರವೋ ಹೊಜ್ಜೋ, ಯಲ್ಲಾನೂ ಒಂದಕ್ಕೇ ಹಾಕ್ತಾರೆ. ಆಮ್ಯಾಲೆ ಕೂಡ್ಸಿ ಊಟ ಮಾಡೂದು. ಏನು ವೈನಾಗಿರುತ್ತೆ ಅಂತೀಯಾ!’ +‘ವೈನಾಗಿರ್ದೆ ಏನ್ ಮಾಡ್ತೈತೆ. ಅಲವು ಮನೆ ಎಸರು ಚಂದ, ಆದರ್‌ಗಿತ್ತಿ ಮಗಳು ಚಂದ ಅಂತ ಗಾದೆಯೇ ಇಲ್ವರಾ?’-ಬಾಯಲ್ಲಿ ನೀರೂಡಿಸಿಕೊಳ್ಳುತ್ತಾ ಮಾಟ ಚಪ್ಪರಿಸಿದ. +‘ಅಮ್ಮಾ, ಆ ಹಾಳು ಶಿವಮೊಗ್ಗದಲ್ಲಿ ಬರೀ ಅನ್ನಾನೇ ತಿಂದು ಬೇಜಾರಾಗಿದೆ. ಒಂದಿಷ್ಟು ಹಿಟ್ಟು ಮಾಡಿ ಹಾಕಮ್ಮ . ಹ್ವಟ್ಟೆ ಹಸಿಯುತ್ತೆ.’ +‘ಇಷ್ಟೊತ್ನಲ್ಲೇನೋ?’ +‘ರಾತ್ರಿ ಏನೂ ತಿಂದಿಲ್ಲ.’ +‘ಆ ಮುಂಡೇರು ಯಾರಾರು ಇದ್ದಿದ್ರೆ ಎದ್ದು ಕೆರೆಯೇ ಅಂತಿದ್ದೆ. ಯಾರೂ ಇಲ್ಲ ಅಪ್ಪಣ್ಣಯ್ಯ, ನಿನ್ನ ಹೆಂಡ್ತಿ ಹೆಣ್ಣು ಮಗು ಹೆತ್ಳಂತೆ. ನಾಮ್‌ಕರಣಕ್ಕೆ ಕರೆಯುಕ್ ಬಂದಿದ್ರು. ಈಗ ನಾಕು ತಿಂಗ್ಳಾಗಿರ್‌ಬೇಕು. ಹೋಗಿ ಕರ್ಕಂಡ್ ಬಾ. ಅಡಿಗೆ ಮಾಡಿ ಮಾಡಿ ನಂಗ್ ಅಸ್ಸಪ್ಪ ಅನ್ನೂ ಹಾಗಾಗಿದೆ’-ಎನ್ನುತ್ತಾ ಗಂಗಮ್ಮ ಮೇಲೆ ಎದ್ದಳು. +– ೨ – +ಊರಿನಲ್ಲೆಲ್ಲ ನಾಲ್ಕು ದಿನ ಧೈರ್ಯವಾಗಿ ತಲೆ ಎತ್ತಿ ತಿರುಗಾಡಿದ ಮೇಲೆ ಅಪ್ಪಣ್ಣಯ್ಯ ಹೆಂಡತಿ ಮಗುವನ್ನು ಕರೆದುಕೊಂಡು ಬರಲು ನುಗ್ಗೀಕೆರೆಗೆ ಹೊರಟ. ರೊಟ್ಟಿ ಚಟ್ನಿಯ ಗಂಟನ್ನು ಹೆಗಲಿಗೆ ಹಾಕಿ ತಿಪಟೂರಿನ ತನಕ ನಡೆದು, ರೈಲಿನಲ್ಲಿ ಒಬ್ಬನೇ ಕಡೂರಿಗೆ ಹೋಗಿ, ಅಲ್ಲಿಂದ ಒಂಬತ್ತು ಮೈಲಿ ನಡೆದು ಮಾವನ ಮನೆ ಮುಟ್ಟಿದ. ಮಗುವಿಗೆ ನಾಲ್ಕು ತಿಂಗಳಾಗಿತ್ತು. ಅವರೇ ಜಯಲಕ್ಷ್ಮಿ ಎಂದು ಹೆಸಟ್ಟಿದ್ದರು. +ಅಪ್ಪಣ್ಣಯ್ಯ ಹೋದಾಗ ಸಂಜೆಯಾಗಿತ್ತು. ಸಾತು ಇನ್ನೂ ಬಾಣಂತಿಯ ಕೋಣೆಯಲ್ಲಿ ಇದ್ದಳು. ಇವನು ಹೋಗಿ ಮಗು ಎತ್ತಿಕೊಂಡು ಆಡಿಸಿದ. ಹೆಂಡತಿಯನ್ನು ಮಾತಾಡಿಸಿದ. ರಾತ್ರಿ ಊಟವಾದ ಮೇಲೆ ನಡುಮನೆಯಲ್ಲಿ ಮಾವನವರ ಹಾಸಿಗೆಯ ಹತ್ತಿರ ಇವನದನ್ನೂ ಹಾಸಿದ್ದರು. ಮುಖ ಸಪ್ಪಗೆ ಮಾಡಿಕೊಂಡು ಹೋಗಿ ಅವನು ಹಾಸಿಗೆಯ ಮೇಲೆ ಕುಳಿತಾಗ ಮಾವನವರು ಕೇಳಿದರು: ‘ನಾಮಕರಣಕ್ಕೆ ಹೇಳಿಕಳಿಸಿದ್ವು. ಆಗ ಎಲ್ಲಿಗೆ ಹೋಗಿದ್ದೆ?’ +‘ಶಿವಮೊಗ್ಗಕ್ಕೆ, ಅಲ್ಲ ಜಾವಗಲ್ಲಿಗೆ.’ +‘ಹೆಂಡತಿ ಹೆರಿಗೆ ಅನ್ನೂದು ಗೊತ್ತಿರ್ಲಿಲ್ವೆ? ಅದೇನು ಹಾಗೆ ಹೇಳ್ದೆ ಕೇಳ್ದೆ ಊರು ಬಿಟ್ಟು ಹೋಗಿದ್ದುದು?’ +‘ಒಂದಿಷ್ಟು ಕೆಲ್ಸವಿತ್ತು.’ +ಬಾಣಂತಿಯ ಕೋಣೆಯಲ್ಲಿ ಮಲಗಿದ್ದ ಸಾತು ಎದ್ದು ಕೂತು ಹೇಳಿದಳು: ‘ಅದೇನು ಸೂರೆ ಹೋಗೋ ಕೆಲ್ಸವಿದ್ದದ್ದು? ಸುಳ್‌ಸುಳ್ಳೇ ಯಾಕ್ ಹೇಳ್ತೀರಾ? ನಿಜ ಹೇಳಿಬಿಡಿ. ಅತ್ತಿಗೇನಾ ಕಾಲಾಗೆ ಒದ್ದು, ಆಮ್ಯಾಲೆ ಪೋಲೀಸ್ನೋರು ಹಿಡ್‌ಕತ್ತಾರೆ ಅಂತ ಕದ್ದು ಹೋಗಿರ್ಲಿಲ್ವೆ?’ +ಅಪ್ಪಣ್ಣಯ್ಯ ಉತ್ತರ ಹೇಳಲಿಲ್ಲ; ತಲೆ ತಗ್ಗಿಸಿ ಕುಳಿತ. ಸಾತು ಕೇಳಿದಳು: ‘ನಿಮ್ಮಮ್ಮ ಒದೆಯೋ ಅಂದ್ಲು. ನೀವು ಒದ್ದುಬಿಟ್ರೇನೋ? ಆ ಸುಡುಗಾಡು ಹೆಂಗ್ಸು ಸಾಯದೆ ನಿಮಗೆ ಬುದ್ಧಿ ಬರುಲ್ಲ.’ +ತನ್ನ ತಾಯಿಯನ್ನು ಬೈದದ್ದಕ್ಕೆ ಅಪ್ಪಣ್ಣಯ್ಯನಿಗೆ ಅಗಾಧ ಸಿಟ್ಟು ಬಂತು. ಆದರೆ ಅದನ್ನು ತೋರಿಸಲು ಇದು ಸಮಯವಲ್ಲ. ಅಲ್ಲದೆ ಸಾತು ಅತ್ತಿಗೆಯಂತಹ ಸಾಧು ಹೆಂಗಸಲ್ಲ. ಆದುದರಿಂದ ಅವನು ಸುಮ್ಮನಿದ್ದ. ಸಾತು ಒಳಗಿನಿಂದ ಮಾತನಾಡಿದಳು: ‘ನಿಮ್ಮಮ್ಮನ ಸಾವಾಸ ನಂಗೆ ಬ್ಯಾಡ. ನಿಮ್ಮನೆ ಹಿಂದುಗಡೆ ಖಾಲಿ ಜಾಗ ಇದ್ಯಲ್ಲಾ, ಅಲ್ಲಿ ಸಣ್ಣದಾಗಿ ಒಂದು ಮನೆ ಕಟ್ಸಿ, ಬ್ಯಾರೆ ಇರುಕ್ಕೆ ಅನುಕೂಲ ಮಾಡಿ. ಆಮ್ಯಾಲೆ ಬಂದು ನನ್ನೂ ಮಗೂನೂ ಕರ್ಕಂಡ್ ಹೋಗಿ.’ +‘ಅದ್‌ಹ್ಯಾಗ್ ಆಗುತ್ತೆ?’-ಹಿಡಿದಿದ್ದ ಗಂಟಲನ್ನು ಬಿಡಿಸಿಕೊಳ್ಳಲು ಕೊಸರುತ್ತಾ ಅವನು ಕೇಳಿದ. +‘ಅದ್ಯಾಕ್ ಆಗುಲ್ಲ? ನೀವು ಇರೂಕ್ಕೆ ಸಣ್ಣ ಮನೆ ಕಟ್ಸಿ. ಅಣ್ಣ ತಮ್ಮಂದಿರು ಪಾಲಾಗಿ. ಮನೆಗೆ ಬೇಕಾದ ಪಾತ್ರೆ ಪರಟಿ ನನ್ನ ಮದುವೇಲಿ ಕೊಟ್ಟಿದ್ದೇ ಇದೆ. ಸಾಕಾಗದೆ ಇದ್ರೆ ನಾನು ಇನ್ನಷ್ಟು ತತ್ತೀನಿ.’ +ಅವನು ಈಗಲೂ ಮಾತನಾಡಲಿಲ್ಲ. ಸಾತು ಮುಂದುವರಿಸಿದಳು: ‘ನೀವು ಬ್ಯಾರೆ ಆಗ್‌ಬೇಕು ಅಂತಲೇನೂ ಅಲ್ಲ. ಅಣ್ಣತಮ್ಮಂದಿರು ಒಟ್ಟಿಗೆ ಇರಿ. ನಾನು ಅಕ್ಕನ ಜೊತೆ ಇರ್ತೀನಿ. ಆದ್ರೆ ನಿಮ್ಮಮ್ಮ ಬ್ಯಾರೆ ಇರ್‌ಬೇಕು. ಅವ್ಳಿಗೇ ಬೇಕಾದ್ರೆ ಬ್ಯಾರೆ ಒಂದು ಒಪ್ಪಾರು ಕಟ್ಸಿಕೊಟ್ಟು ಹೊರಗೆ ಹಾಕಿ, ಆಮ್ಯಾಲೆ ಬಂದು ನನ್ನೂ ಮಗೂನೂ ಕರ್ಕಂಡ್ ಹೋಗಿ.’ +ತಾಯಿಯನ್ನು ಬೈದದ್ದಕ್ಕೆ ಅವನಿಗೆ ಸಿಟ್ಟು ಬಂದು ಮುಖ ಸಿಂಡರಿಸಿತು. ಅದನ್ನು ಗಮನಿಸಿದ ಅತ್ತೆಮ್ಮ ಹೇಳಿದರು: ‘ನಮ್ಮ ಅಪ್ಪಣ್ಣನ ಸ್ವಭಾವ ಒಳ್ಳೇದು. ಅವನು ಚಿನ್ನದಂಥಾ ಹುಡುಗ ಅಂತ ಸಾತು ಹೇಳ್‌ತಾನೇ ಇರ್ತಾಳೆ. ಅತ್ತೆ ಸ್ವಸೆಗೆ ಆಗುಲ್ಲ-ನೀವು ಬ್ಯಾರೆ ಇರಿ. ಸಾತು ಬೇಕಾದ್ರೆ ನಿಮ್ಮಮ್ಮನ ಮನೇಲೂ ಕೈಲಾದ ಕೆಲ್ಸ ಬದುಕು ಮಾಡಿ ಕೊಡ್ತಾಳೆ.’ ಈಗ ಅವನ ಮುಖದ ಮೇಲೆ ಪ್ರಸನ್ನತೆ ಮೂಡಿತು. +ಮಾವನವರು ಕೊನೆಯದಾಗಿ ಹೇಳಿದರು: ‘ಅಂತೂ ಗಂಡ ಹೆಂಡತಿ ಅನ್ಯೋನ್ಯವಾಗಿ ಸಂತೋಷವಾಗಿರೂದು ಮುಖ್ಯ. ಬೆಳಿಗ್ಗೆ ಎದ್ದರೆ ಮುಂಡೆ ರಂಡೆ ಅಂತ ಕೆಟ್ಟ ಮಾತು ಆಡ್ಕಂಡು ಇರ್‌ಬಾರ್ದು. ಒಟ್ನಲ್ಲಿ ನೀನು ಅದಕ್ಕೆ ಬೇಕಾದ ಏರ್ಪಾಡು ಮಾಡ್ಕಂಡು ಹೆಂಡ್ತಿ ಕರ್ಕಂಡು ಹೋಗು. ನಮಗಿರೋಳು ಒಬ್ಬಳೇ ಒಬ್ಬಳು ಮಗಳು. ಇನ್ನು ಮತ್ತೆ ಹೆಣ್ಣೂ ಇಲ್ಲ ಗಂಡೂ ಇಲ್ಲ.’ +ಅಪ್ಪಣ್ಣಯ್ಯ ಎಂಟು ದಿನ ಮಾವನವರ ಮನೆಯಲ್ಲಿದ್ದ. ಹೆಂಡತಿಯನ್ನು ಬೈಯದೆ ಸಂತೋಷದಿಂದ ಮಗು ಎತ್ತಿ ಆಡಿಸುತ್ತಿದ್ದ. ಆದರೆ ಅವನ ಮಾತು ನಡೆಗಳಲ್ಲಿ ವಿನಾ ಕಾರಣ ಕಾಣುತ್ತಿದ್ದ ಸೆಡವು ಒರಟುಗಳನ್ನು ಕಂಡರೆ ಎಲ್ಲರಿಗೂ ಕಿರಿಕಿರಿ ಎನ್ನಿಸುತ್ತಿತ್ತು. ಒಂದು ದಿನ ತೆಂಗಿನಕಾಯಿ ಸುಲಿಯುವಾಗ ಸಿಪ್ಪೆ ಗಟ್ಟಿಯಾಗಿ ಅಂಟಿಕೊಂಡು, ಎಳೆದರೆ ಬರದಿದ್ದುದಕ್ಕೆ ‘ಇದರವ್ವನ್ನಾ…..’ ಎಂದುಬಿಟ್ಟ. ಇನ್ನೊಂದು ದಿನ ಕೊಟ್ಟಿಗೆಯಲ್ಲಿ ಹಸು ಕೋಡು ಆಡಿಸಿದುದಕ್ಕೆ, ‘ಅಯ್ಯೋ ನಿನ್ನ ಹೆತ್ತೋಳ್ನಾ’ ಎಂದಾಗ ಅತ್ತೆ ಹತ್ತಿರದಲ್ಲಿಯೇ ಇದ್ದು ಕೇಳಿಸಿಕೊಂಡರು. ಇವನನ್ನು ತಿದ್ದುವುದೆಂದರೆ ಸಾಮಾನ್ಯವಲ್ಲವೆಂಬುದು ಅವರಿಗೂ ಗೊತ್ತು. ತಮ್ಮ ಮಗಳ ಹಣೆಬರಹವನ್ನು ಯೋಚಿಸಿಕೊಂಡು ಅವರು ನಿಟ್ಟುಸಿರು ಬಿಟ್ಟರು. +ಊರಿಗೆ ಹೊರಡುವ ದಿನ, ಬೇರೆ ಇರಲು ವ್ಯವಸ್ಥೆ ಮಾಡಲು ಮತ್ತೆ ಹೇಳಿ ಸಾತು ಅವನಿಂದ ಹೂಂ ಎನಿಸಿದಳು. ಕಡೂರಿಗೆ ನಡೆದು ಬಂದ ಅವನು ಅಲ್ಲಿಂದ ರೈಲು ಹತ್ತಿ ತಿಪಟೂರಿನಲ್ಲಿ ಇಳಿದ. ಇನ್ನೂ ತಿಪಟೂರಿನಿಂದ ಊರಿಗೆ ಹದಿನಾರು ಮೈಲಿ ನಡೆಯಬೇಕು. ಮೊದಲಿಯಾರ್ ಕಂಪನಿಯವರು ಮೋಟಾರು ಶುರು ಮಾಡಿದ್ದರೂ ಅದು ದಿನ ಬಿಟ್ಟು ದಿನ ಹೋಗುತ್ತಿತ್ತು. ಸೋಮವಾರ ಬುಧವಾರ ಶುಕ್ರವಾರ ಮಾತ್ರ ಮೋಟಾರು ಇದ್ದದು. ಅಪ್ಪಣ್ಣಯ್ಯ ಆಗಲೇ ಒಂದು ದಿನ ಕೂತು ಅದರ ಮಜ ಕಂಡಿದ್ದ. ಅವನಿಗೆ ಹೆದರಿಕೆಯೇ ಆಗಿರಲಿಲ್ಲ. ರೈಲಿನಲ್ಲಿ ಒಬ್ಬನೇ ಕೂತು ಬಂದಿರುವ ಅವನಿಗೆ ಮೋಟಾರದೇನು ಭಯ? ಆದರೆ ಈ ದಿನ ಶುಕ್ರವಾರ ಸಾಯಂಕಾಲವಾಗಿತ್ತು. ನಾಳೆ ನಾಡಿದ್ದು ಎರಡು ದಿನವೂ ಮೋಟಾರು ಇರಲಿಲ್ಲ. ನಡೆದುಕೊಂಡು ಹೋಗುವುದೇನೂ ಕಷ್ಟವಲ್ಲ ಆದರೆ ಮೋಟಾರಿನಲ್ಲಿ ಕುಳಿತುಕೊಳ್ಳುವ ಮಜ ತಪ್ಪಿಹೋಯಿತು. +ಆಗಲೇ ಸಂಜೆಯಾಗಿದ್ದುದರಿಂದ ತಿಪಟೂರಿನಲ್ಲಿ ಉಳಿದ. ಹೋಟೆಲಿನಲ್ಲಿ ಆಲೂಗಡ್ಡೆ ನೀರುಳ್ಳಿ ಹುಳಿ, ಬದನೇಕಾಯಿ ಪಲ್ಯ, ಹಪ್ಪಳ ಸಂಡಿಗೆ, ಸಾರು, ಮೊಸರು ಸಮೃದ್ಧಿಯಾಗಿ ಮೂರು ಸಲ ಕಲಸಿಕೊಂಡು ಊಟ ಮಾಡಿದ. ಆರಾಣೆ ದುಡ್ಡು. ಛತ್ರದ ಜಗುಲಿಯ ಮೇಲೆ ಮಲಗಿದ್ದು ಬೆಳಿಗ್ಗೆ ಎದ್ದು ಕೆರೆಯ ಕಡೆಗೆ ಹೋಗಿ ಬಂದು ಅದೇ ಹೋಟೆಲಿಗೆ ಹೋಗಿ ಒಂದು ಮಸಾಲೆ ದೋಸೆ ತಿಂದ. ಅವನು ಶಿವಮೊಗ್ಗದಲ್ಲಿಯೂ ಎರಡು ದಿನ ಮಸಾಲೆ ದೋಸೆ ತಿಂದಿದ್ದ. ಆದರೆ ತಿಪಟೂರಿನಲ್ಲಿ ಇವರು ಮಾಡಿದ್ದ ಹಾಗೆ ಇರಲಿಲ್ಲ. ಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಆಲೂಗಡ್ಡೆ, ದಪ್ಪ ನೀರುಳ್ಳಿಯ ಪಲ್ಯ. ಒಳಗೆ ದೋಸೆಗೆ ಸವರಿದ್ದ ಕಾಯಿ ಚಟ್ನಿ. ಸ್ವಲ್ಪ ಖಾರಖಾರವಾಗಿದ್ದ ಅದನ್ನು ಲೊಟ್ಟೆ ಹೊಡೆಯುತ್ತಾ ಮುಗಿಸಿದ ಅವನು ಮತ್ತೆ ಆರು ದೋಸೆಗೆ ಹೇಳಿದ. ಬಿಸಿಬಿಸಿಯಾಗಿ ಬಂದ ಎಲ್ಲವನ್ನೂ ತಿಂದು, ಒಟ್ಟಿನಲ್ಲಿ ಏಳಾಣೆ ಕೊಟ್ಟು ಕಾಲುದಾರಿಯಲ್ಲಿ ರಾಮಸಂದ್ರದ ಕಡೆಗೆ ಹೊರಟ. ಎರಡು ಮೈಲಿ ಬರುವುದರಲ್ಲಿಯೇ ಬಾಯಾರಿಕೆಯಾಯಿತು. ‘ಇದರವ್ವನಾ, ಈ ದ್ವಾಸೆ ತಿಂದುದ್ದೇ ಬಾಯಾರುತ್ತೆ’-ಎಂದು ದಾರಿಯ ಬಲಪಕ್ಕದ ತೆಂಗಿನ ತೋಟದ ಕಡೆ ನೋಡಿದ. ಯಾರೂ ಕಾಣಲಿಲ್ಲ. ಮೆಲ್ಲಗೆ ಬೇಲಿ ನುಸಿದು ಒಳದೋಟದ ಕಡೆಗೆ ಹೋಗಿ ಬುಡ್ಡವಾದ ಮರದಿಂದ ಮೂರು ಎಳನೀರು ಕಿತ್ತು ಒಂದು ಕಡ್ಡಿಯಿಂದ ಅವುಗಳ ಕಣ್ಣು ಕುಕ್ಕಿ ಗಟಗಟನೆ ಗಂಟಲಿಗೆ ಬಗ್ಗಿಸಿದ. ಬಂಬಲಿನ ಆಸೆಯಾದರೂ, ಸಿಕ್ಕಿಹಾಕಿಕೊಳ್ಳುವ ಭಯವಾಗಿ ಬುರುಡೆಗಳನ್ನು ಅಲ್ಲಿಯೇ ಬಿಟ್ಟು ಬೇಲಿ ಬಳಸಿಕೊಂಡು ಹೋಗಿ ದಾರಿ ಸೇರಿ, ಊರ ಕಡೆ ದಾಪುಗಾಲು ಹಾಕಿದ. ದಾರಿಯಲ್ಲಿ ಸಿಕ್ಕಿದ ಒಬ್ಬ ದನ ಕಾಯುವ ಗೌಡ ಇವನಿಗೆ ಒಂದು ಬೀಡಿ ಕೊಟ್ಟ. ಅಪ್ಪಣ್ಣಯ್ಯ ತಾನಾಗಿಯೇ ದುಡ್ಡು ಕೊಟ್ಟು ಬೀಡಿ ಸೇದುತ್ತಿರಲಿಲ್ಲ. ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿದಮೇಲೆ ಅದನ್ನು ಬಿಟ್ಟೇ ಇದ್ದ. ಆದರೆ ಯಾರನ್ನಾದರೂ ಕೇಳಿ ಬಿಟ್ಟಿಯಾಗಿ ಕೊಟ್ಟರೆ ಅಲ್ಲಿಯೇ ಸೇದಿ ಬಿಸಾಕಿಬಿಡುತ್ತಿದ್ದ. +– ೩ – +ಊರು ಮುಟ್ಟುವ ಹೊತ್ತಿಗೆ ಸಂಜೆ ನಾಲ್ಕು ಗಂಟೆಯಾಗಿತ್ತು. ಅವನು ಮನೆಗೆ ಬಂದಾಗ ಅದೇ ತಾನೇ ಪಟೇಲ ಶಿವೇಗೌಡ, ಅವನ ಭಾಮೈದ ಮಾಜೀ ಬದಲಿ ಶ್ಯಾನುಭೋಗ ಸಿವಲಿಂಗೇಗೌಡ ಬಂದು ಕೂತಿದ್ದರು. ಇವನು ಬಂದ ತಕ್ಷಣ ಶಿವೇಗೌಡ ಮಾತು ಪ್ರಾರಂಭಿಸಿದ. +‘ಗಂಗವ್ವ, ಏಳ್‌ಕಳಸ್ತಂಗೆ ಅಪ್ಪಣ್ಣಯ್ಯನೂ ಬಂದ. ನನ್ನ ದುಡ್ಡಿಂದು ಏನು ಮಾಡ್ದೆ? ಮರ್‌ತೇಬಿಟ್ಟಿದೀರಾ?’ +ಯಾವ ದುಡ್ಡು ಎಂಬುದು ಗಂಗಮ್ಮನಿಗೆ ಎರಡು ನಿಮಿಷ ನೆನಪಿಗೆ ಬರಲಿಲ್ಲ. ಶಿವೇಗೌಡ ಹೇಳಿದ: ‘ಅಸಲು ಎಲ್ಡು ಸಾವಿರ. ಏಳು ವರ್ಸದ ಬಡ್ಡಿ ಅಂದ್ರೆ ಸಾವಿರದೆಂಟನೂರ ಎಂಬತ್ತು. ಈಟು ವರ್ಸ ಬಡ್ಡೀನೂ ಕಟ್ನಿಲ್ಲ. ಅದರ ಬಡ್ಡಿ ಲ್ಯಕ್ಕ ಇಡುದ್ರೆ ಮ್ಯಾಲೆ ಆರು ನೂರು. ಅಂದ್ರೆ ನಾಕು ಸಾವಿರದ ಆರು ನೂರು ಎಂಬತ್ತಾಯ್ತದೆ. ಇನ್ನೊಂದು ತಿಂಗ್ಳಾಗೆ ನನ್ ಅನ ಮಡಗ್‌ಬಿಡಿ. ವಾಯ್ದೆ ಕಳೀತಿದೆ. ಇಲ್ದಿರಾ ನಾನು ಕೋಲ್ಟಿಗ್ ಓಯ್ತೀನಿ.’ +‘ಏನೋ ಹುಡ್ಗ ತಿಳೀದೇ ಯಾವತ್ತೋ ಮಾಡಿದ್ದುಕ್ಕೆ ಇಷ್ಟೊಂದು ದುಡ್ದು ಎಲ್ಲಿ ತರಾಣ ಶಿವೇಗೌಡ?’ +‘ಹುಡ್ಗ ಮಾಡಿದ್ದು ಅಂತ ನಾನು ಅಣ ಕೊಟ್ಟಿದ್ ಸುಳ್ಳಾ? ಎಂತಾ ಮಾತಾಡ್ತೀರಾ ನೀವು? ಚನ್ನಯ್ಯ, ಶ್ಯಾನುಭೋಕೆ ಮಾಡ್ತಿಯಲಾ ನೀನೇ ಏಳು. ನಾನ್ ಗಂಟು ಮಡಗಿದ್ದು ಸುಳ್ಳಾ.’ +ಚೆನ್ನಿಗರಾಯ ಸುಮ್ಮನೆ ಕುಳಿತಿದ್ದರು. ‘ಇನ್ ಎಂಟು ದಿನದಲ್ಲಿ ಗಂಟು ಮಡ್‌ಗದೆ ಇದ್ರೆ ನಾನು ಕೇಸಾಕ್ತೀನಿ. ನನ್ ಮೇಲೇನೂ ಮಾತಿಲ್ಲ. ಹೂಂ’-ಎಂದು ಹೇಳಿ ಶಿವೇಗೌಡ ಸಿವಲಿಂಗೇಗೌಡನೊಡನೆ ಎದ್ದು ಹೊರಟುಹೋದ. +‘ಈಗೇನ್ಮಾಡೂದೋ ಚಿನ್ನಯ್ಯ?’-ಗಂಗಮ್ಮ ಕೇಳಿದಳು. +‘ನಂಗೇನು ಗೊತ್ತಮ್ಮಾ?’ +‘ಶ್ಯಾನುಭೋಗ, ನಿಂಗೆ ಗೊತ್ತಿರ್‌ಬ್ಯಾಡ್ವೇನೋ?’ +ಅಪ್ಪಣ್ಣಯ್ಯ ಮಾತನಾಡಿದ: ‘ನಮ್‌ತಾವ ಅವ್ನೇನು ಕಿತ್ಕತಾನೆ ನೋಡಾಣ. ಕೊಡುಲ್ಲ ಅನ್ನು. +‘ಅನ್ನಣೇನೋ?’ +‘ಹೂಂ, ಕಣಮ್ಮ.’ +‘ಅಮ್ಮ, ನಂಗ್ ಹ್ವಟ್ಟೆ ಹಶೀತಿದೆ. ಮದ್ಲು ಊಟಕ್ಕಿಕ್ಕು. ಅವ್ನೇನ್ ಕಿತ್ಕತಾನೆ ಆಮ್ಯಾಲೆ ನೋಡ್ಕಂಡ್ರಾಗುತ್ತೆ’-ಎಂದ ಅಪ್ಪಣ್ಣಯ್ಯನಿಗೆ ಬಡಿಸಲು ಅವಳು ಒಳಗೆ ಹೋದಳು +ಈ ವಿಷಯದಲ್ಲಿ ಯಾರನ್ನು ಕೇಳಿದರೆ ಸರಿ ಎಂದು ಅವಳು ಯೋಚಿಸಿದಳು. ತಕ್ಷಣ ರೇವಣ್ಣಶೆಟ್ಟಿಯ ಹೆಸರು ಹೊಳೆಯಿತು. ರೇವಣ್ಣಶೆಟ್ಟಿಯನ್ನು ಊರಿನ ಎಷ್ಟೋ ಜನ ಲಾಯರು ಎಂದೇ ಕರೆಯುತ್ತಿದ್ದರು. ಯಾವುಯಾವುದೋ ಕೇಸುಗಳ ಪರವಹಿಸಿ ಅವನು ಆಗಾಗ್ಗೆ ತಿಪಟೂರಿಗೆ ಹೋಗುತ್ತಿದ್ದ. ದೊಡ್ಡ ಲಾಯರಿಗೆ ಗೊತ್ತಿಲ್ಲದ ಪಾಯಿಂಟುಗಳೂ ಅವನಿಗೆ ಗೊತ್ತಿವೆಯಂತೆ. ಗಂಗಮ್ಮ ನೇರವಾಗಿ ಅವನ ಮನೆಗೆ ಹೋದಳು. ಅವನ ಹೆಂಡತಿ ಸರ್ವಕ್ಕ ಹೇಳಿದಳು: ‘ಅವ್ರು ಇಲ್ರ, ಕೋಡೀ-ಅಳ್ಳಿಗೆ ಓಗ್ಯವ್ರೆ.’ +‘ಅದೇನ್ ಜಂಬ್ರ?’ +‘ಗಂಗಮ್ಮನೋರೇ, ನಿಮಗೆ ಗೊತ್ತಿಲ್ವರಾ?’-ಎಂದು ಅನುಮಾನಿಸಿ ಅವಳು ಹೇಳಿದಳು: ‘ಇಸ್ಪೀಟಾಡಾಕೆ. ಅದೇನ್ ಬಂದಿದ್ರಿ? ಕುಂತ್ಕಳ್ರಿ ಮಣೆ ಆಕ್ಕೊಡ್ತೀನಿ.’ +ಗಂಗಮ್ಮ ಮಣೆಯ ಮೇಲೆ ಕುಳಿತು, ಶಿವೇಗೌಡ ಬಂದಿದ್ದ ಸಂಗತಿಯನ್ನೂ ಹಿಂದೆ ಜಮೀನು ಆಧಾರವಾಗಿದ್ದ ಸಂದರ್ಭವನ್ನೂ ಹೇಳಿದಳು. ಜಮೀನು ಆಧಾರವಾಗಿದ್ದುದು ಊರೆಲ್ಲರಿಗೂ ಗೊತ್ತಿದ್ದ ಸಂಗತಿಯೇ. ಸರ್ವಕ್ಕ ಎಂದಳು” ‘ಅವ್ನ ದುಡ್ಡು ನೀವು ಅವ್ನಿಗೆ ಮದ್ಲೇ ತೀರಿಸ್‌ಬ್ಯಾಡ್ದಾ? ಇಷ್ಟೊಂದು ದಿನ ಯಾಕ್ ಬಿಟ್ಕಂಡ್ ಕುಂತಿದ್ರಿ?’ +‘ಅದೇನ್ ಉಂಡುದ್ದೇ, ತಿಂದುದ್ದೇ ಗಂಟು? ಅದ್ ಹ್ಯಾಗ್ ಕೊಡಾಣ?’ +ಈ ಮಾತಿಗೆ ಸಮಾಧಾನ ಹೇಳುವಷ್ಟು ತಿಳಿವಳಿಕೆ ಸರ್ವಕ್ಕನಿಗೆ ಇರಲಿಲ್ಲ. ಅವಳ ವಯಸ್ಸು ಮೂವತ್ತರ ಸುಮಾರು. ಐದು ಮಕ್ಕಳಿವೆ. ಇನ್ನು ಮೂರು ಮಕ್ಕಳು ಸತ್ತಿವೆ ಎರಡು ವರ್ಷದಿಂದ ಬಸುರಿಯಾಗಿಲ್ಲ. ಅಪ್ಪಣ್ಣಯ್ಯ ಕಬ್ಬಿನ ಗದ್ದೆಗೆ ಬೆಂಕಿ ತಗುಲಿಸಿದ್ದಾಗ ಅವಳ ಗಂಡ ಕೂಳೆಕಬ್ಬಿನ ಲೆಕ್ಕ ಹೇಳಿ ಇಪ್ಪತ್ತೈದು ರೂಪಾಯಿ ತೆಗೆದುಕೊಂಡದ್ದು ಅವಳಿಗೆ ಗೊತ್ತು. ಕೂಳೆಕಬ್ಬನ್ನು ಮತ್ತೆ ಬಿಡುವುದಿಲ್ಲವೆಂದು ಮೊದಲೇ ಹೇಳುತ್ತಿದ್ದ ಅವನು, ಈಗ ಅದರ ಹೆಸರಿನಲ್ಲಿ ದುಡ್ಡು ತೆಗೆದುಕೊಂಡದ್ದು ಅನ್ಯಾಯವೆಂದು ಹೇಳಿ ಅವಳು ದವಡೆಯ ಮೇಲೆ ಏಟು ತಿಂದಿದ್ದಳು. +ಅವರು ಅದೂ ಇದೂ ಮಾತನಾಡುವುದರಲ್ಲಿ ರೇವಣ್ಣಶೆಟ್ಟಿಯೇ ಬಂದ. ಕೊಕ್ಕರೆಯ ಗರಿಯಂತಹ ಬಿಳಿಯ ಪಂಚೆ, ಕಾಲಿಗೆ ರಬ್ಬರು ಚಡಾವು, ಇಸ್ತ್ರಿ ತಿಕ್ಕಿದ ಶರಟು, ಕೊರಳಲ್ಲಿ ಕಾಣುವಂತಹ ಚಿನ್ನದ ಚೈನು, ಕೈಬೆರಳುಗಳಿಗೆ ಕೆಂಪಗೆ ಹೊಳೆಯುವ ಮೂರು ಉಂಗುರಗಳಿಂದ ಭೂಷಿತನಾಗಿ, ಮುಖದಮೇಲೆ ಇನ್ನೂ ಚಿಗುರಾಗಿ ಕಾಣುವಂತೆ ಕತ್ತರಿಸಿದ ಮೀಸೆಯಿಂದ ಕೂಡಿದ ರೇವಣ್ಣಶೆಟ್ಟಿಯನ್ನು ಕಂಡ ಗಂಗಮ್ಮನಿಗೆ, ಶಿವೇಗೌಡನ ಹಣ ಗೆದ್ದೇಬಿಟ್ಟಿತೆಂಬ ನಂಬಿಕೆ ಹುಟ್ಟಿತು. +ಇವರ ಮಾತನ್ನು ಕೇಳಿದ ಮೆಲೆ ಅವನು ಹೇಳಿದ: ‘ಯಾರ ಮನೆ ಬಿಟ್ಟೀ ಗಂಟು ಅಂತ ತಿಳ್ಕಂಡವ್ನೆ ಆ ಅನ್ಯಾಯಕೋರ ನನ್‌ಮಗ? ಕೋಲ್ಟಿಗೆ ಓಗ್ತಾನಂತಾ? ಓಗು ಅನ್ನಿ. ಓಗಿ ನಮ್‌ತಾವ ಏನು ಕಿತ್ಕತೀಯೋ ಕಿತ್ಕ ಅನ್ನಿ. ತಿಪ್ಟೂರ್ನಲ್ಲಿ ನಂಗೆ ದೊಡ್ಡ ಲಾಯರೇ ಗೊತ್ತವ್ರೆ.’ +ಗಂಗಮ್ಮನಿಗೆ ಧೈರ್ಯ ಬಂತು. ‘ನಾನು ಹೋಗಿ ಹಾಗಂತ ಹೇಳಿ ಬರಲೇ ರೇವಣ್ಣ?’ +‘ಹೋಗಿ ಬನ್ನಿ ಅಮ್ನೋರೆ. ನೀವು ಹ್ಯದರ್ಕಬ್ಯಾಡಿ. ಮುಂದ್ಲುದ್ದೆಲ್ಲಾ ನಾನ್ ನೋಡ್ಕಂತೀನಿ.’ +‘ನೀನೂ ಬಾ ನನ್ ಜೊತ್ಗೆ.’ +‘ನಾನ್ ಬರಾದು ಚಂದಾಗಿರಾಕಿಲ್ಲ. ನಾನು ಒಳಗ್ ನಿಂತ್ ಕೆಲ್ಸ ಮಾಡ್‌ಬೇಕು. ಹ್ಯದ್‌ರಿಕೆ ಏನು ನಿಮ್ಗೆ? ಗಂಗಮ್ನೋರ ಎದೆಗುಂಡಿಗೆ ಸುತ್ತ ಅರವತ್ತನಾಕು ಹಳ್ಳೀಲಿ ಯಾವ ಗಂಡಸು ಬೋಳೀಮಗಂಗೂ ಇಲ್ಲ ಅಂತಾರೆ ಜನ. ನಿಮ್‌ಗ್ಯಾಕೆ ಹ್ಯದರ್ಕೆ?’ +ಈ ಮಾತು ತಕ್ಕ ಪರಿಣಾಮವನ್ನುಂಟುಮಾಡಿತು. ‘ನಾನೇನಂತ ಹ್ಯದರ್‌ಪುಕ್ಲಿ ಮುಂಡೆ ಅಲ್ಲ’-ಎಂದು ಮೇಲೆ ಎದ್ದವಳೇ ಅವಳು ನೇರವಾಗಿ ಶಿವೇಗೌಡನ ಮನೆಯ ಮುಂದೆ ಹೋಗಿ ನಿಂತು ಹೇಳಿದಳು: ‘ನನ್ನ ಗಂಡ ಶ್ಯಾನುಭೋಗ್‌ಕೆ ಮಾಡ್ತಿದ್ದ ಕಾಲ್‌ದಾಗೆ ನಾಯಿಮರಿ ಹಾಗೆ ಇದ್ದೆಯಲ್ಲೋ ಗೌಡ. ಈಗ ಅನ್ಯಾಯದಲ್ಲಿ ದಂಡ ಹಾಕಿಸಿ ಕೋರ್ಟಿಗೆ ಹೋಗ್ತೀನಿ ಅಂತ ಹೆದ್‌ರುಸ್ತೀಯಾ? ಕೋರ್ಟಿಗಲ್ಲದೆ ಇದ್ರೆ ದಿವಾನ್‌ರ ತಂಕ ಹೋಗು. ನಾನೂ ಲಾಯ್ರುನ್ನಿಡ್ತೀನಿ. ನಮ್ಮ ಹತ್ರ ನೀನು ಒಂದು ದಮ್ಡೀನೂ ಕಿತ್ಕಳುಕ್ ಆಗುಲ್ಲ. ಹೆಣ್ಣು ಹೆಂಗಸು ಅಂತ ನಾನೇನು ಹೆದುರ್ಕಳುಲ್ಲ.’ +ಒಳಗಿನಿಂದ ಬಂದ ಶಿವೇಗೌಡ ಕೇಳಿದ: ‘ಇದೇನ್ರಮ್ಮಾ, ಈ ಎಲ್ಡು ಗಂಟೇನಾಗ ತಾನೇ ನ್ಯಾಯವಾಗಿ ಮಾತಾಡ್ತಿದ್ರಿ. ಈಗ ಹಿಂಗ್ ಅಂತೀರ? +‘ಅನ್‌ದೇ ಏನ್ ಅಂತೀಯಾ? ನಂಗೂ ಕಷ್ಟಕಾಲಕ್ಕೆ ಆಗೂ ಜನ ಇದಾರೆ. ನಾನೇನು ಪರದೇಶಿಯಲ್ಲ’-ಎಂದವಳೇ ಗಂಗಮ್ಮ ನೇರವಾಗಿ ಮನೆಗೆ ಬಂದಳು. +ಅವಳು ಬರುವ ಹೊತ್ತಿಗೆ ರೇವಣ್ಣಶೆಟ್ಟಿ ಬಂದು ಕುಳಿತಿದ್ದ. ಮುಖ ಕಂಡೇ ಅವಳು ಶಿವೇಗೌಡನ ಕೈಲಿ ಏನು ಹೇಳಿರಬಹುದೆಂದು ಅವನು ಅರಿತುಕೊಂಡ. ಅವನು ತಾನಾಗಿಯೇ ಹೇಳಿದ: ‘ಅಮ್ನೋರೇ, ನೀವು, ಇಬ್ಬರು ಗಂಡು ಮಕ್ಳೂ ಆಗಾಗ್ಗೆ ಗಾಡಿ ಕಟ್ಟಿಕೊಂಡು ಒಂದ್ ನಾಕು ಸಲ ತಿಪ್ಟೂರಿಗೆ ಬರ್‌ಬೇಕಾಯ್ತದೆ. ಹೋಗಿ ಇದು ಅನ್ಯಾಯ ಅಂತ ಜಡ್ಜಿಗಳ ಮುಂದೆ ಬಾಯ್ಬಿಟ್ಟು ಕೇಳ್ಕಂಡ್ರೆ ಕೇಸು ನಿಮ್ಮ ಕಡೆಯೇ ಆಯ್ತದೆ. ಒಟ್ನಲ್ಲಿ ಒಂದೈನೂರು ಖರ್ಚು ಮಾಡಿದ್ರೆ ಸಾಕು.’ +‘ತಿಪ್‌ಟೂರ್ಗೆ ಹೋದ್ರೆ ಅಲ್ಲಿ ಊಟ ತಿಂಡಿಗೆ ಏನು?’-ಅಪ್ಪಣ್ಣಯ್ಯ ಕೇಳಿದ. +‘ಹೋಟ್ಳಿಲ್ವಾ!’ +ಹೋಟೇಲು ಅಂದ ತಕ್ಷಣ ಅವನ ಬಾಯಿ ನೀರೂರಿತು. ಆಲೂಗಡ್ಡೆ ನೀರುಳ್ಳಿಯ ಹುಳಿ, ಪಲ್ಯ, ಹುರಿಗಡಲೆ ಸೇರಿಸಿದ ಗಮಗಮ ಕಾಯಿಚಟ್ನಿ, ಮೊಸರು. ತಿಂಡಿಗೆ ಮಸಾಲೆ ದೋಸೆ. ‘ಹೂಂ ಕಣಮ್ಮ, ತಿಪ್ಟೂರಿಗೆ ಹೋಗಿ ಕೇಸು ಹಾಕಾಣ’- ಎಂದು ನಿಶ್ಚಯದ ಧ್ವನಿಯಲ್ಲಿ ಅವನು ಹೇಳಿದ. +‘ಏನಂತಿಯೋ ಶ್ಯಾನುಭೋಗ?’-ತಾಯಿ ಕೇಳಿದುದಕ್ಕೆ ಚೆನ್ನಿಗರಾಯರು, ‘ಯಾರಾದ್ರೂ ಬುದ್ಧಿವಂತ್‌ರುನ್ನ ಕೇಳ್ಬೇಕು’ ಎಂದರು. +ಅಂತೂ ಶಿವೇಗೌಡ ಕೇಸು ಹಾಕಿದ. ಇವರು ಮೂವರೂ ರೇವಣ್ಣಶೆಟ್ಟಿಯ ಜೊತೆಯಲ್ಲಿ ತಿಪಟೂರಿಗೆ ಹೋಗಿ, ಅವನು ಕರೆದುಕೊಂಡು ಹೋದ ಮಹಾಂತಯ್ಯನವರನ್ನು ಲಾಯರಾಗಿ ಇಟ್ಟರು. ಅವರ ಕಡೆಯ ಕೇಸನ್ನು ರೇವಣ್ಣಶೆಟ್ಟಿಯೇ ಹೇಳಿದ: ‘ಊರಿನ ಕೆಲವರು ಸೇರಿಕೊಂಡು ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು, ತಿಳಿವಳಿಕೆ ಇಲ್ಲದ ಇವರ ಮೇಲೆ ತಪ್ಪು ಹಾಕಿ ದುಡ್ಡು ಕಿತ್ತರು. ಇದಕ್ಕೆ ರುಜು ಮಾಡಿದ್ದು ಮೈನರ್ ಗಂಡು ಮಕ್ಕಳು. ಆಧಾರವಾಗಿರುವುದು ಪಿತ್ರಾರ್ಜಿತ ಆಸ್ತಿ. ಕಾಗದ ಬರೆಯಲು ಬಿಕಲಂ ಹಾಕಿರುವವನು, ಹಣ ಕೊಟ್ಟು ಆಧಾರ ಬರೆಸಿಕೊಂಡಿರುವವನ ಸ್ವಂತ ಬಾಮೈದ. ಈಟೆಲ್ಲ ಇರುವಾಗ ಕೇಸು ಗೆಲ್ಲಾಕಿಲ್ವಾ ಬುದ್ಧಿ?’ +‘ಗೆಲ್ದೆ ಉಂಟೆ?’-ಲಾಯರು ಎಂದರು. +ಮೊದಲ ದಿನದ ಖರ್ಚಿಗೆ ಇವರು ಮನೆಯ ಚಿನ್ನ ಮಾರಿ ಇನ್ನೂರು ರೂಪಾಯಿ ಹೊಂದಿಸಿದರು. ಎಲ್ಲರೆದುರಿಗೂ ದುಡ್ಡು ಕೊಟ್ಟರೆ ಲಾಯರು ಮುಟ್ಟುವವರಲ್ಲವೆಂದು ಹೇಳಿ ರೇವಣ್ಣಶೆಟ್ಟಿ ನೂರ ಎಪ್ಪತ್ತೈದು ರೂಪಾಯಿ ಇಸಿದುಕೊಂಡು, ತಾನೊಬ್ಬನೇ ಅನಂತರ ಬೇರೆಯಾಗಿ ಲಾಯರ ಮನೆಗೆ ಹೋಗಿ ಲೆಕ್ಕಾಚಾರ ಮಾಡಿಬಂದ. ಅಪ್ಪಣ್ಣಯ್ಯ ಹೋಟೆಲಿನಲ್ಲಿ ಊಟ ಮಾಡಿದುದೇ ಅಲ್ಲದೆ ಅದರ ಜೊತೆಗೇ ಮೂರು ಮಸಾಲೆ ದೋಸೆ ತಿಂದ. ಶ್ಯಾನುಭೋಗ ಚೆನ್ನಿಗರಾಯರು ಹೋಟೆಲನ್ನು ಚೆನ್ನಾಗಿ ಕಂಡವರು. ವರ್ಷಕ್ಕೆ ನಾಲ್ಕು ಸಲವಾದರೂ ದ್ಯಾವರಸಯ್ಯನವರ ಜೊತೆ ತಿಪಟೂರಿಗೆ ಬಂದು ಹೋಗಿ ಮಾಡುವವರು. ಅವರು ಖಾರ ಶೇವು, ರವೆ ಉಂಡೆ, ಮೈಸೂರು ಪಾಕುಗಳನ್ನೇ ಹೊಟ್ಟೆ ತುಂಬುವಷ್ಟು ತಿಂದರು. ವಿಧವೆ ಗಂಗಮ್ಮ ಊರಿನಿಂದ ತಂದ ಹುರಿಟ್ಟಿನ ಜೊತೆಗೆ ನಾಲ್ಕು ಬಾಳೆ ಹಣ್ಣಿನಲ್ಲಿ ಫಲಾರ ಮುಗಿಸಿದಳು. +– ೪ – +ನಂಜು ಗಂಡು ಮಗು ಹೆತ್ತಳು. ನಾಮಕರಣಕ್ಕೆ ಬಂದ ಚೆನ್ನಿಗರಾಯರು, ಅವರ ಅಮ್ಮ ಹೇಳಿಕಳಿಸಿದ್ದಂತ ತಮ್ಮ ತಂದೆಯ ಹೆಸರಾದ ರಾಮಣ್ಣ ಎಂದು ಇಟ್ಟರು. ಈ ಸಲ ಅವರು ಮಾವನ ಮನೆಯಲ್ಲಿ ಹೆಚ್ಚು ದಿನ ಇರಲಿಲ್ಲ. ಭಾವಮೈದುನನನ್ನು ಕಂಡರೆ ಅವರಿಗೆ ಒಳಗಿಂದೊಳಗೇ ಒಂದು ವಿಧವಾದ ಭಯವಾಗುತ್ತಿತ್ತು. ಅಲ್ಲದೆ ಅವನ ಹೆಂಡತಿ ಕಮಲು ಸಿಡಸಿಡ ಎನ್ನುತಿದ್ದಳು. +ಮೂರು ತಿಂಗಳ ಬಾಣಂತಿತನ ಮುಗಿಸಿಕೊಂಡು ಊರಿಗೆ ಬಂದ ಎರಡನೆಯ ದಿನವೇ ನಂಜುವಿಗೆ ಶಿವೇಗೌಡನ ಜೊತೆ ಕೋರ್ಟಿನಲ್ಲಿ ನಡೆಯುತ್ತಿದ್ದ ಕೇಸಿನ ವಿಷಯ ತಿಳಿದಿದ್ದು. ಶಿವೇಗೌಡನ ಹತ್ತಿರ ಇವರ ಸಾಲವಿರುವುದು ಅವಳಿಗೆ ಮೊದಲೂ ಗೊತ್ತಿತ್ತು. ಜಮೀನು ಆಧಾರ ಮಾಡಿ ಅವನಿಂದ ಎರಡು ಸಾವಿರ ರೂಪಾಯಿ ಪಡೆದು, ಕಬ್ಬಿನ ಗದ್ದೆಗೆ ಬೆಂಕಿ ಬೀಳಿಸಿದುದಕ್ಕೆ ಇವರು ಊರೊಟ್ಟಿನ ದಂಡ ಕೊಟ್ಟರು ಎಂಬ ಮಾತನ್ನು ಈ ಮನೆಯ ಸೊಸೆಯಾಗಿ ಬಂದು ಒಂದು ತಿಂಗಳಿಗೆ ಕೆರೆಯಲ್ಲಿ ಪಾತ್ರೆ ಬೆಳಗುವಾಗ ಕೇಳಿದ್ದಳು. ಆ ಬಗೆಗೆ ತಾನಾಗಿ ಮನೆಯಲ್ಲಿ ಯಾರನ್ನಾದರೂ ಕೇಳಲಾರಳು. ಒಂದು ದಿನ ಗಂಡನನ್ನು ಕೇಳಿದುದಕ್ಕೆ-‘ನಿಂಗ್ಯಾಕೆ ಯಜಮಾನಿಕೆ, ಸುಮ್ಮುನ್ ಕುಕ್ಕರಿಸ್ಕೊ’ಎಂದು ಉತ್ತರ ಬಂದಿತ್ತು. +ತಾನು ಶ್ಯಾನುಭೋಗಿಕೆ ಲೆಕ್ಕ ಬರೆಯಲು ಪ್ರಾರಂಭಿಸಿದ ಮೇಲೆ, ಅವಳಿಗೆ ಆಧಾರ ಸಾಲದ ಪರಿಣಾಮವೇನಾಗಬಹುದೆಂಬ ಕಲ್ಪನೆ ಹುಟ್ಟಿತು. ತಾನಾಗಿಯೇ ಒಂದು ದಿನ ಈ ಮಾತನ್ನು ಮತ್ತೆ ತೆಗೆದು ವಿಚಾರಿಸಬೇಕೆಂಬ ಯೋಚನೆ ಬರುತ್ತಿದ್ದ ಸಮಯದಲ್ಲಿಯೇ ಅಪ್ಪಣ್ಣಯ್ಯ ಅವಳನ್ನು ಕಾಲಿನಿಂದ ಒದೆದು ಊರು ಬಿಟ್ಟು ಓಡಿಹೋಗಿದ್ದ. ‘ಈ ಅನಿಷ್ಟ ಮುಂಡೆಯಿಂದಲೇ ನನ್ನ ಕಂದ ಪರದೇಶಿಯಾಗಿಹೋಯ್ತು’-ಎಂದು ಅತ್ತೆ ಮೊದಲೇ ಅನ್ನುತ್ತಿದ್ದಳು. ಈಗ ಈ ಮಾತು ತೆಗೆದರೆ ತನಗ್ಯಾಕೆ ಯಜಮಾನಿಕೆ ಎಂದು ಬೈಸಿಕೊಳ್ಳಬೇಕಾಗುತ್ತದೆಂದು ಭಯಪಟ್ಟು ಸುಮ್ಮನಾಗಿದ್ದಳು. ಅಷ್ಟರಲ್ಲಿ ಹೆರಿಗೆಗೆ ಊರಿಗೆ ಹೋಗಿ ಈಗ ಹಿಂತಿರುಗುವುದರಲ್ಲಿ ಇದು ಕೋರ್ಟಿಗೇ ಹೋಗಿದೆ. ಒಂದು ದಿನ ಉಪಾಯವಾಗಿ ಗಂಡನನ್ನು ಕೇಳಿದರೆ-‘ಆ ನನ್ ಮಗುನ್ಗೆ ಒಂದು ದಮ್‌ಡೀನೂ ಕೊಡುಲ್ಲ. ಕೋರ್ಟಿನಲ್ಲಿ ಅವನ ಕೈಲೇ ಕಾಸು ಕುಕ್ಕುಸ್ತೀನಿ’ ಎಂದು ಪ್ರತಾಪ ಹೇಳಿಬಿಟ್ಟರು. +‘ಕೇಸು ಗೆಲ್ಲುತ್ತೆ ಅಂತ ನಿಮಗೆ ಯಾರು ಹೇಳಿದರು?’ +‘ರೇವಣ್ಣಶೆಟ್ರು.’ +‘ರೇವಣ್ಣಶೆಟ್ರ ಮಾತು ಹ್ಯಾಗೆ ನಂಬ್‌ಬೇಕು? ಅವರು ಎಂಥೋರು ಅಂತ ನಿಮ್ಗೆ ಗೊತ್ತಿಲ್ವೆ?’ +‘ಕತ್ತೆಮುಂಡೆ, ಅವುನ್ನ ಬೈಯ್ತಿಯೇನೇ? ಇವ್ಳು ನಿಮ್ಮುನ್ನ ಹೀಗಂದ್ಲು ಅಂತ ನಾಳೆ ದಿನ ಅವರ ಕೈಲೇ ಹೇಳ್ತೀನಿ ನೋಡು.’ +ಗಂಡ ಅವಿವೇಕಿ ಎಂದು ಅವಳಿಗೆ ಹೊಸದಾಗಿ ತಿಳಿಯಬೇಕಾಗಿರಲಿಲ್ಲ. ಆದರೆ ಅದು ಇಷ್ಟು ಮಟ್ಟಿನದು ಎಂಬುದರ ಅರಿವಾಗಿ ಕಣ್ಣಿನಲ್ಲಿ ನೀರು ಬಂತು. ಅಲ್ಲಿಗೆ ಆ ಮಾತನ್ನು ನಿಲ್ಲಿಸಿದಳು. ಆದರೆ ಅದೇ ಯೋಚನೆ ಮನಸ್ಸನ್ನು ಕೊರೆಯುತ್ತಿತ್ತು. ರೇವಣ್ಣಶೆಟ್ಟಿ ಇಸ್ಪೀಟು ಆಡುತ್ತಾನೆ, ಕುಡಿಯುತ್ತಾನಂತೆ, ಅವನು ಬೀದಿಯಲ್ಲಿ ಹೋಗುವಾಗ ಹೆಂಗಸರ ಕಡೆ ನೋಡುವ ರೀತಿ ಚೆನ್ನಾಗಿಲ್ಲ, ಮನೆಯಲ್ಲಿ ಸರ್ವಕ್ಕ ಸಂತೋಷವಾಗಿಲ್ಲ, ಎಂಬುದೆಲ್ಲ ಅವಳಿಗೆ ಚೆನ್ನಾಗಿ ಗೊತ್ತು. ಅವು ಊರಿನಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿಗಳೇ. ಮರುದಿನ ಪಾತ್ರೆ ಬೆಳಗಲು ಕೆರೆಗೆ ಹೋದಾಗ ರೇವಣ್ಣಶೆಟ್ಟಿಯು ಹಿರೀ ಮಗಳು ರುದ್ರಾಣಿ ಇವಳ ಪಕ್ಕದ ಕಲ್ಲಿನಲ್ಲಿ ಇಳಿದುಕೊಂಡಿದ್ದಳು. ‘ರುದ್ರಾಣೀ, ನಿಮ್ಮವ್ವಯ್ಯ ಮನ್ಲೇ ಐತಾ?’ +‘ಊಂ, ಐತೆ!’ +‘ಅಪ್ಪಾಜಿ?’ +‘ಕೋಡೀಹಳ್ಳೀಗ್ ಹೋಗೈತೆ.’ ಅದು ಇಸ್ಪೀಟಿಗೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. +‘ಹಂಗಾದ್ರೆ ನೀನು ಈಗ್ಲೇ ಮನ್ಗೆ ಹೋಗಿ, ನಾನು ಬರಹೇಳ್ದೆ ಅಂತ ನಿಮ್ಮವ್ವಯ್ಯನ್ನ ಒಂದ್ ಸಟಿಗ್ ಕರ್ಕಂಡ್‌ಬತ್ತೀಯಾ? ನಿನ್ನ ಪಾತ್ರೆ ಇಲ್ಲೇ ಇರ್ಲಿ. ನಾನ್ ನೋಡ್ಕತ್ತೀನಿ. ನೀನು ಮನ್ಲೇ ಇದ್ದು ಅವ್ರುನ್ನ ಕಳ್ಸು.’ +ಹತ್ತು ನಿಮಿಷದಲ್ಲಿ ಸರ್ವಕ್ಕ ಬಂದಳು. ಒಂದೆರಡು ನಿಮಿಷ ಪರಸ್ಪರ ಕ್ಷೇಮಸಮಾಚಾರ ವಿಚಾರಿಸಿದ ಮೆಲೆ ನಂಜಮ್ಮ ಒಂದು ಸಲ ಸುತ್ತಮುತ್ತ ನೋಡಿ, ಯಾರೂ ಇಲ್ಲವೆಂದು ಖಚಿತವಾದ ಮೇಲೆ ಕೇಳಿದಳು: ‘ನೋಡ್ರಿ, ನಾನೊನ್ದು ವಿಷಯ ಗುಟ್ನಲ್ಲಿ ಕೇಳ್ತೀನಿ ನೀವು ಹೇಳ್ಬೇಕು.’ +‘ಏನು ಹೇಳ್ರಿ.’ +‘ನಿಮ್ಮನೆಯೋರು ನಮ್ಮನೇ ಕೇಸು ನಡುಸ್ತೀನಿ ಅಂತ ನಿಂತಿದಾರಲಾ, ಅದು ನಿಜವಾಗ್ಲೂ ಗೆಲ್ಲುತ್ತಾ?’ +‘ನಂಜಮ್‌ನೋರೇ, ಗಂಡು ಗಂಡುಸ್ರ ಇಚಾರ ನಮ್ಗೇನು ತಿಳೀತೈತೆ? ನಮಗ್ಯಾಕ್ ಬುಡಿ ಆ ಮಾತು.’ +‘ಇಲ್ಲ, ಖಂಡಿತ ನೀವು ನಿಮಗೆ ತಿಳಿದದ್ದ ಹೇಳ್ಲೇ ಬೇಕು.’ +‘ತಾನೂ ಒಂದು ಸಲ ಸುತ್ತ ಮುತ್ತ ನೋಡಿ ಸರ್ವಕ್ಕ ಹೇಳಿದಳು: ‘ನಮ್ಮ ಶೆಟ್ರಿಗ್ ತಿಳುದ್ರೆ ನನ್ನ ಸಾಯ್ಸಾಕ್‌ಬುಡ್ತಾರೆ. ಯಾರ್ ಕುಟ್ಟೂ ಹೇಳಾದಿಲ್ಲ ಅಂತ ಗಂಗಮ್ ತಾಯಿ ಮುಟ್ಟಿ ಆಣೆ ಮಡಗ್‌ಬೇಕು.’ +‘ಗಂಗಮ್ ತಾಯಿ ಆಣೆಗೂ ಯಾರ ಕೈಲೂ ಹೇಳುಲ್ಲ’-ಎಂದು ನಂಜಮ್ಮ ಕೆರೆಯ ನೀರನ್ನು ಕೈಲಿ ಹಿಡಿದು ಎಂದಳು. +‘ವಳಗೇರಳ್ಳಿ ನಿಂಗಪ್ಪನ ಮನೆ ಅಣ್‌ತಮ್ದೀರ ಜಗಳ್ದಾಗೆ ನಮ್ಮನೆಯೋರು ಲಾಯ್ರಿ ಮಾಡದ್ರಲ. ನಾನು ಗೆಲ್ಲಿಸ್‌ಕೊಡ್ತೀನಿ ಅಂತ ದುಡ್ ತಿಂದಿದ್ರಂತೆ. ಅವ್ರು ಸೋತ್ರಂತೆ. ಒಂದ್ ದಿನ ನಮ್ಮನೆ ಮುಂದುಕ್ ಬಂದಿ, ನಿಮ್ಮವ್ವ ಅಪ್ಪ ಅಂತ ಬೈದಿ, ನಿನ್ ಮಕ್ಳ ಸುಳಿ ನಾಸ್ನಾಗ ಅಂತ ಮಣ್ ತೂರಿ ಹ್ವಾದ. ಇವ್ರು ಇಸ್ಪೀಟಾಡಾಕ್ ದುಡ್ಗೆ ಹಿಂಗೆಲ್ಲ ಲಾಯ್ರಿ ಮಾಡ್ತಾರೆ.’ +ತಾನು ಭಾವಿಸಿದ್ದಂತೆಯೇ ಸರ್ವಕ್ಕನೂ ನುಡಿದಳು. ಇನ್ನು ಈ ಕೋರ್ಟಿನ ವ್ಯವಹಾರದಿಂದ ತಪ್ಪಿಸಿಕೊಂಡು, ಇರುವ ಜಮೀನು ಉಳಿಸಿಕೊಳ್ಳುವ ದಾರಿ ಯಾವುದು ಎಂದು ಯೋಚಿಸುತ್ತಾ ನಂಜಮ್ಮ ಮೂಕಳಾದಳು. ಸರ್ವಕ್ಕನೇ ನಿಟ್ಟಿಸಿರಿಟ್ಟು-‘ನಂಜಮ್ಮೋರೆ, ನಂದು ನಿಮ್ದೂ ಒಂದೇ ಹಣೇಬರಾವು. ನಮ್ಮನೆಯೋರ್ಗೆ ಮನೆ ಮರಿಯೂ ಬುದ್ಧಿ ನಿಮ್ಮೋರಿಗ್ ಬುದ್ಧಿಯೇ ಇಲ್ಲ. ಯಾರ್ಗೂ ಸುಕವಿಲ್ಲ. ನಾ ಹೋಯ್ತೀನಿ, ನಾನ್ಹೇಳಿದ್ದು ಮಾತ್ರ ಯಾರ್ಗೂ ಏಳ್‌ಬ್ಯಾಡಿ. ಗಂಗಮ್ಮತಾಯಿ ಆಣೆ ಮಡಗಿದೀರ’ ಎಂದು ಹೇಳಿ ತನ್ನ ಪಾತ್ರೆಗಳನ್ನು ಗೆರಸಿಗೆ ತುಂಬಿಕೊಂಡು ಮನೆಗೆ ಹೋದಳು. +ನಂಜಮ್ಮ ಆ ರಾತ್ರಿ ಎಲ್ಲ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಎದ್ದು ಒಂದು ಹಾಳೆ ಕಾಗದದ ಮೇಲೆ ಕ್ಷೇಮ ಸಮಾಚಾರ ತಿಳಿಸಿ-‘ಇಲ್ಲಿಯ ಜಮೀನೆಲ್ಲ ಆಧಾರ ಮಾಡಿದ್ದರು. ಈಗ ಕೋರ್ಟಿನಲ್ಲಿ ಕೇಸು ಹಾಕಿದಾರೆ. ಖಂಡಿತ ನೀವು ತಕ್ಷಣ ಇಲ್ಲಿಗೆ ಬಂದು ಹೋಗುವುದು’ ಎಂದು ಅಣ್ಣನಿಗೆ ಬರೆದು, ಪಾತ್ರೆ ತೆಗೆದುಕೊಂಡು ಕೆರೆಯ ಕಡೆಗೆ ಹೊರಟಳು. ಕೆರೆಯಲ್ಲಿ ಯಾರಾದರೂ ಸಿಕ್ಕಿ ಅವರಿಂದ ಅದನ್ನು ತೌರಿಗೆ ತಲುಪಿಸುವ ಆಸೆ ಮನಸ್ಸಿನಲ್ಲಿತ್ತು. ಅಲ್ಲಿ ಯಾರೂ ಇರಲಿಲ್ಲ. ಆದರೆ ಗುಡಿಯ ಮಾದೇವಯ್ಯನವರು, ಜೋಳಿಗೆಯಲ್ಲಿ ಎತ್ತಿದ ಗಂಟಿ ಬಿಲ್ವಪತ್ರೆಗಳನ್ನು ನೀರಿಗೆ ಅದ್ದಲು ಇವಳು ಇಳಕೊಂಡಿದ್ದ ಕಡೆಗೆ ಬರುತ್ತಿದ್ದರು. ಅಯ್ಯನವರ ಮೇಲೆ ನಂಜಮ್ಮನಿಗೆ ತುಂಬ ಭಕ್ತಿ ಗೌರವಗಳಿದ್ದವು. ಅವರು ಇತ್ತೀಚೆಗೆ ಈ ಮನೆಗೆ ಹೆಚ್ಚಾಗಿ ಬರದಿದ್ದರೂ ಈ ಹಿರಿ ಸೊಸೆಯ ಬಗೆಗೆ ಅವರಲ್ಲಿ ಗೌರವವಿತ್ತು. ನಂಜಮ್ಮನೇ-‘ಅಯ್ನೋರೇ ಸ್ವಲ್ಪ ಇಲ್ಲಿ ಬನ್ನಿ’ ಎಂದು ಕೂಗಿದಳು. ಸುತ್ತಮುತ್ತ ಒಂದು ಸಲ ಸೂಕ್ಷ್ಮವಾಗಿ ನೋಡಿ, ತನ್ನ ಬಾಳೇಕಾಯಿಯಲ್ಲಿ ಮಡಿಸಿ ಇಟ್ಟುಕೊಂಡಿದ್ದ ಕಾಗದವನ್ನು ತೆಗೆದು ಅವರ ಹತ್ತಿರ ಬೀಳುವಂತೆ ಎಸೆದು, ‘ಇದನ್ನ ನೀವು ಓದಿಕಳ್ಳಿ, ನಿಮಗೇ ತಿಳಿಯುತ್ತೆ. ಏನಾರಾ ಮಾಡಿ ನಮ್ಮ ಅಣ್ಣನಿಗೆ ತಲುಪುಸ್ಬೇಕು. ಯಾರಿಗೂ ತಿಳಿಯಕೂಡದು’ ಎಂದು ಹೇಳಿ, ಏನೂ ತಿಳಿಯದವಳಂತೆ ಕತ್ತು ಬಗ್ಗಿಸಿಕೊಂಡು ಪಾತ್ರೆ ತೊಳೆಯಲು ಶುರು ಮಾಡಿದಳು. +ಕಾಗದದ ಮಡಿಕೆಯನ್ನು ಎತ್ತಿ ಅಯ್ಯನವರು ತಮ್ಮ ಕಾವಿಯ ಅಂಗಿಯ ಜೇಬಿಗೆ ಇಟ್ಟು-‘ಆಗ್ಲವ್ವ’ ಎಂದು ಹೇಳಿ ಜೋಳಿಗೆಯ ಹೂವು ಪತ್ರೆಗಳನ್ನು ನೀರಿನಲ್ಲಿ ಅದ್ದಿಕೊಂಡು ಹೊರಟು ಹೋದರು. ಆದಿನ ಅವರು ಊರಿನಲ್ಲಿ ಗುರುಕೋರಣ್ಯದ ಭಿಕ್ಷೆ ಮಾಡಲಿಲ್ಲ. ಶಿವಗೆರೆಯ ಒಂದೆರಡು ಹಳ್ಳಿಗಳಿಗೆ ಹೋಗಿದ್ದರಂತೆ. +ಮಾರನೆಯ ದಿನ ಮಧ್ಯಾಹ್ನ ಕಲ್ಲೇಶ ಕಾಲುನಡಿಗೆಯಲ್ಲಿ ತಂಗಿಯ ಮನೆಗೆ ಬಂದ. ಅಣ್ಣನ ಕೈಲಿ ಎಲ್ಲವನ್ನೂ ಮಾತನಾಡಲು ಒಂದು ಜಾಗವಿಲ್ಲ. ಹಾಗೆ ಎಲ್ಲಿಯಾದರೂ ಹೋಗಿ ಆಡುವುದಕ್ಕಿಂತ ಎದುರಿಗೆ ಕೂತು ಹೇಳುವುದೇ ಸರಿ ಎಂದು ತೀರ್ಮಾನಿಸಿದ ಅವಳು ಎಲ್ಲರ ಎದುರಿಗೇ ಮಾತನ್ನು ತೆಗೆದಳು. ಆಗಿರುವ ವಿಷಯವನ್ನು ಹೇಳಿ, ಮುಂದೆ ತಾವು ಏನು ಮಾಡಬೇಕೆಂಬ ಬಗೆಗೆ ಅವನ ಸಲಹೆ ಕೇಳಿದಳು. +ಯಾರ ಮೂಲಕವೋ ಹೇಳಿ ಕಳಿಸಿ ಇವಳು ಅಣ್ಣನನ್ನು ಕರೆಸಿಕೊಂಡಿದ್ದಾಳೆ ಎಂಬ ಅನುಮಾನ ಗಂಗಮ್ಮನಿಗೆ ಉಂಟಾಗದೆ ಇರಲಿಲ್ಲ. ಆದರೆ ಪೋಲೀಸು ಕೆಲಸದಲ್ಲಿದ್ದ ಈ ಬೀಗನ ಮಗನ ಎದುರಿಗೆ ಮಾತನಾಡಬಾರದೆಂದು ಅವಳು ಸುಮ್ಮನಿದ್ದಳು. ಇವರು ಆಧಾರ ಪತ್ರದಲ್ಲಿ ಬರೆದಿರುವುದೇನೆಂದು ನಿಖರವಾಗಿ ಕಲ್ಲೇಶನಿಗೆ ಗೊತ್ತಿಲ್ಲ. ಶ್ಯಾನುಭೋಗರಾದ ಭಾವನವರನ್ನು ಕೇಳಿದರೆ, ‘ಅದೇನೋ ನಂಗ್ ಗೊತ್ತಿಲ್ಲ. ಸಿವಲಿಂಗ ಬರದ’ ಎಂದುಬಿಟ್ಟರು. +‘ಏನೂ ಗೊತ್ತಿಲ್ಲದೆ ನೀವು ಕೋರ್ಟಿಗೆ ಹ್ಯಾಗೆ ಹೋದ್ರಿ?’-ಎಂದುದಕ್ಕೆ. ‘ರೇವಣ್ಣಶೆಟ್ರಿಗೂ ಲಾಯರಿಗೂ ಗೊತ್ತು. ಅವ್ರೇನ್ ಸುಳ್ ಹೇಳ್ತಾರೆಯೇ? ಕೇಸು ಗೆದ್ದೇ ಗೆಲ್ಲುತ್ತೆ’ ಎಂದರು. +ನಂಜಮ್ಮ ಧೈರ್ಯವಾಗಿ ರೇವಣ್ಣಶೆಟ್ಟಿಯ ಹಿಂದು ಮುಂದುಗಳನ್ನು ವಿವರಿಸಿದಳು. ‘ಅವ್ರುನ್ನ ನಂಬಿಕಂಡ್ರೆ ಸಂಸಾರ ಮುಳುಗುತ್ತೆ. ಈಗ ನಮಗೆ ತಿಳಿದ ಹಾಗೆ ವಿವೇಕದಿಂದ ನಡೀಬೇಕು. ಪರಬುದ್ಧಿ ಮಾತು ಬ್ಯಾಡ.’ +‘ಭಾವಾ ನನ್ನ ಜೊತೆ ಬಾ. ಶಿವೇಗೌಡನ ಮನೆಗೇ ಹೋಗಿ ಕಾಗದದ ವಕ್ಕಣೆ ಏನಿದೆ ಅಂತ ಕೇಳಾಣ’-ಕಲ್ಲೇಶ ಕರೆದ. +ಆದರೆ ಅವನ ಮನೆಗೆ ಹೋಗಲು ಶ್ಯಾನುಭೋಗರಿಗೆ ಹೆದರಿಕೆ. ‘ಈಗ ಯಾಕ್ಲಪ್ಪಯ್ಯ ಬಂದೆ ನನ್ ತಾವುಕ್ಕೆ? ಅದೇನಿದ್ರು ಕೋಲ್ಟಿನಾಗೇ ಮಾಡ್ಕ ಓಗು’-ಎಂದು ಅವನು ಅಂದುಕಳಿಸುತ್ತಾನೆಂಬ ಭಯ ಒಳಗೇ ಕೊರೆಯುತ್ತಿತ್ತು. ಅವರು ಹೇಳಿದರು: ‘ಆ ಬೋಳೀಮಗನ ಮನೆಗೆ ಏನು ಹೋಗೂದು? ನಮ್ಮ ಕೇಸು ಗೆಲ್ಲುತ್ತೆ. ನಂಗಷ್ಟೂ ಗೊತ್ತಿಲ್ವೇನೋ!’ +ಕಲ್ಲೇಶ ಒಬ್ಬನೇ ಶಿವೇಗೌಡನ ಮನೆಗೆ ಹೋದ. ಶಿವೇಗೌಡ, ನಿರೀಕ್ಷಿಸಿದ್ದಂತೆಯೇ ಉತ್ತರ ಕೊಟ್ಟು ಕಳಿಸಿದ. ತಿಮ್ಲಾಪುರದ ದ್ಯಾವರಸಯ್ಯನವರನ್ನು ಹೋಗಿ ಕೇಳುವಂತೆ ನಂಜಮ್ಮ ಹೇಳಿದಳು. +ಅವನು ಆ ಊರಿನ ದಾರಿ ಕೇಳಿಕೊಂಡು ಕಾಲಿಗೆ ಎಕ್ಕಡ ಮೆಟ್ಟಿ ಹೊರಟ. ಅವನು ಮನೆಯಿಂದ ಹೋಗಿ ಹತ್ತು ನಿಮಿಷ ಕಳೆಯುವುದೇ ತಡ, ಗಂಗಮ್ಮ ಸೊಸೆಯನ್ನು ಕೇಳಿದಳು: ‘ಅದ್ಯಾವನ್ ಕೈಲಿ ಹೇಳಿಕಳ್ಸಿ ಕರಸ್ಕಂಡ್ಯೆ ನಿನ್ನ ಮಿಂಡನ್ನ? ಇವತ್ತು ರಾತ್ರಿಗೆ ಅವನ ಮಗ್ಗುಲಿಗೇ ಮಲಕ್ಕತೀ ಏನೇ?’ +ಈ ಮಾತನ್ನು ಕೇಳಿದ ನಂಜಮ್ಮನಿಗೆ ಇನ್ನಿಲ್ಲದ ಸಿಟ್ಟು ಬಂದುದು ಮಾತ್ರವಲ್ಲ; ಈ ಮೊದಲು ಇಲ್ಲದ ಧೈರ್ಯವೂ ಹುಟ್ಟಿತು. ಅವಳು ಹೇಳಿದಳು: ‘ಅಂಥ ಕೆಲ್ಸ ನೀವು ಮಾಡ್ತಿದ್ರಿ ಅಂತ ಕಾಣುತ್ತೆ. ಅದ್ಕೇ ಆ ಮಾತು ನಿಮ್ಮ ಬಾಯಲ್ಲಿ ಬರುತ್ತೆ. ನಿಮ್ಮ ನಾಲಿಗೆ ಬಿಗಿಯಾಗಿ ಹಿಡ್ಕಳಿ. ಚಿಕ್ಕವಯಸ್ನಿಂದ ನ್ಯಟ್ಟಗೆ ಬುದ್ಧಿ ಕಲ್ತಿದ್ರೆ ನೀವ್ಯಾಕ್ ಹೀಗ್ ಆಗ್ತಿದ್ರಿ? ನಿಮ್ಮ ಮಕ್ಳು ಯಾಕ್ ಹೀಗ್ ಆಗ್ತಿದ್ರು?’ +‘ಕೇಳ್ದೆ ಏನೋ ಚಿನ್ನಯ್ಯ? ಎದ್ದು ಒಂದ್ ಸಲಿ ಒದೆಯೋ ಆ ಮುಂಡೆ ಸ್ವಂಟದ ಮ್ಯಾಲೆ?’ +‘ಹಾಗಂತ ನನ್ನ ತಂಟೆಗೆ ಬನ್ನಿ. ನಮ್ಮಣ್ಣಯ್ಯ ಸಾಯಂಕಾಲಕ್ಕೆ ಮತ್ತೆ ಬತ್ತಾನೆ’ +ಎದ್ದು ಹೆಂಡತಿಯನ್ನು ಒದೆಯುವ ಧೈರ್ಯವಿರಲಿಲ್ಲವೋ, ಅಥವಾ ಅಷ್ಟು ಮಾಡಲು ಸೋಮಾರಿತನವೋ, ಅಂತೂ ಚೆನ್ನಿಗರಾಯರು ಮೇಲೆ ಏಳಲಿಲ್ಲ. ಗಂಗಮ್ಮ ಎರಡನೆಯ ಮಗನಿಗೆ ಆ ಮಾತು ಹೇಳಲಿಲ್ಲ. ಹೇಳಿದ್ದರೂ ಅವನು ಇನ್ನೊಂದು ಸಲ ಧೈರ್ಯ ಮಾಡುತ್ತಿರಲಿಲ್ಲವೋ ಏನೋ! +ಕಲ್ಲೇಶ ಮರುದಿನವೂ ಬರಲಿಲ್ಲ. ಎರಡನೆಯ ದಿನ ಬಂದ. ಅವನ ಜೊತೆಗೆ ದ್ಯಾವರಸಯ್ಯನವರೂ ಇದ್ದರು. ಮೊನ್ನೆಯ ದಿನ ದ್ಯಾವರಸಯ್ಯನವರ ಊರಿನಲ್ಲಿ ಇದ್ದು ಅವನು ನೆನ್ನೆ ಅವರನ್ನೂ ಜೊತೆಗೆ ಕರೆದುಕೊಂಡು ತಿಪಟೂರಿಗೆ ಹೋಗಿ ಸಿವೇಗೌಡನ ಲಾಯರನ್ನೇ ಕಂಡುಬಂದಿದ್ದ. ಇವರ ಎಲ್ಲ ಜಮೀನೂ ಆಧಾರಕ್ಕೆ ಸೇರಿದುದಾಗಿಯೂ ಕಕ್ಷಿಗಾರರನ್ನು ಒಪ್ಪಿಸಿ ಅಸಲು, ಬಡ್ಡಿ, ಕೋರ್ಟು ಖರ್ಚುಗಳನ್ನು ಕೊಟ್ಟರೆ ಕೇಸು ಹಿಂದಿರುಗಿಸುವಂತೆ ಅವನಿಗೆ ತಾವು ಹೇಳುವುದಾಗಿಯೂ ಅವರು ಹೇಳಿದ್ದರು. +ಗಂಗಮ್ಮ, ತನ್ನ ಭಾವ, ಮತ್ತು ಅಪ್ಪಣ್ಣಯ್ಯರನ್ನು ಕೂರಿಸಿಕೊಂಡು ಕಲ್ಲೇಶ ಹೇಳಿದ: ‘ಅಸ್ಲು ಹಣ ಯಾರೂ ಬಿಡೂದಿಲ್ಲ. ಕೋರ್ಟಿಗೆ ಖರ್ಚು ಮಾಡಿರೂದನ್ನೂ ಯಾರೂ ಬಿಡುಲ್ಲ. ಬಡ್ಡೀಲಿ ಒಂದಿಷ್ಟು ಬಿಟ್ಟುಬಿಡಪ್ಪ ಅಂತ ಅವ್ನುನ್ನ ಕೇಳ್ಕಭೌದು. ಒಟ್ನಲ್ಲಿ ಒಂದು ಐದು ಸಾವಿರದಲ್ಲಿ ಬಗೆಹರಿಯೂ ಹಾಗಿದ್ರೆ ಯಾವುದಾದ್ರೂ ಒಂದು ದೊಡ್ದ ಜಮೀನು ಮಾರಿಯೋ, ಅಥವಾ ಅವನಿಗೆ ಖರೀದಿಗೆ ಬರೆದೋ, ಉಳಿದ ಜಮೀನಾದ್ರೂ ಉಳಿಸಿಕೋಭೌದು. ಅವನ ಮನೆಗೆ ಹೋಗಾಣ ನಡೀರಿ.’ +ಈ ಸಲಹೆಗೆ ಗಂಗಮ್ಮ ಒಪ್ಪಲಿಲ್ಲ. ಆದರೆ ಕಲ್ಲೇಶ ಬಿಡಲಿಲ್ಲ. ಜೊತೆಗೆ ದ್ಯಾವರಸಯ್ಯನವರು ಚೆನ್ನಿಗರಾಯನಿಗೆ ವಿವೇಕ ಹೇಳಿದರು. ಒಟ್ಟಿನಲ್ಲಿ ತಾಯಿ, ಇಬ್ಬರು ಗಂಡು ಮಕ್ಕಳು, ಕಲ್ಲೇಶ, ದ್ಯಾವರಸಯ್ಯನವರು, ಐದು ಜನವೂ ಶಿವೇಗೌಡನ ಮನೆಗೆ ಹೋದರು. ಇವರಾಗಿಯೇ ಅವರು ಬಂದದಕ್ಕೆ ಅವನು ಮೇಲೆ ಏರಿದ. ಆದರೆ ಕಲ್ಲೇಶ ಮತ್ತು ದ್ಯಾವರಸಯ್ಯನವರು ತಾಳ್ಮೆಯಿಂದ ಅವನ ಮಾತಿಗೆ ಒಂದೊಂದಾಗಿ ಸಮಾಧಾನ ಹೇಳಿ ಒಪ್ಪಿಸುತ್ತಿದ್ದರು. ಶಿವೇಗೌಡ ಒಂದು ಸಲ ಗಂಗಮ್ಮನ ಕಡೆಗೆ ತಿರುಗಿ ಮುಯ್ಯಿ ತೀರಿಸಿಕೊಳ್ಳುವ ಧ್ವನಿಯಲ್ಲಿ ಹೇಳಿದ: ‘ಏನಮ್ಮ, ನನ್ನ ನಾಯಿಮರಿ ಅಂತ ಬೈದು, ನನ್ ತಾವ ಒಂದ್ ದಮ್ಡೀನೂ ಕಿತ್ಕಳಾಕ್ ಆಗಾಕುಲ್ಲ ಅಂದಿದ್ದೆ. ಈಗ ಮತ್ತೆ ಬಾಕ್ಲಿಗೇ ಬಂದ್ಯಲ, ನಾಚಿಕೆಯಾಗ್ಲಿಲ್ವ?’ +‘ಅಮ್ಮ, ನೀವು ಈಗ ತಾಳ್ಮೆ ತಗೋಬೇಕು?’-ಎಂದು ದ್ಯಾವರಸಯ್ಯನವರು ಗಂಗಮ್ಮನಿಗೆ ಹೇಳುತ್ತಿದ್ದರು. ಅಷ್ಟರಲ್ಲಿ ಅವಳು ಬೆಂಕಿಯಂತೆ ಉರಿದು ಮಾತನಾಡಿಬಿಟ್ಟಳು: ‘ಏನೋ ಗೌಡ, ನನ್ ಹಂಗ್‌ಸುಕ್ ನಿಂತ್‌ಕಂಡ್ಯೇನೋ? ನೀನೆಷ್ಟು, ನಿನ್ ಯೋಗ್ತಿ ಎಷ್ಟು? ನಾಯಿ ಮುಂಡೆಗಂಡ.’ +‘ಹಂಗಾದ್ರೆ, ನೀನ್ ನನ್ ತಾವ ಕಿತ್ಕ ನೋಡಾನಾ.’ +‘ನೀನ್ ಕೊಡ್ದೆ ಇದ್ರೆ ಕೋಲ್ಟ್‌ನಾಗೆ ಕಿತ್ಕತ್ತೀನಿ ಕಣೋ. ನೀನು ನನ್ ನೀನು ತಾನು ಅಂತ ಮಾತಾಡ್ತೀಯಾ, ಪಾಪಿ ಮುಂಡೇಮಗನೆ. ಲೋ ಅಪ್ಪಣ್ಣಯ್ಯ, ಚಿನ್ನಯ್ಯ, ಏಳ್ರೋ ಮನೆಗೆ ಹೋಗಾಣ. ಯಾಕ್ರೋ ಏಳ್ಲಿಲ್ಲ, ಅಪ್ಪುಂಗ್ ಹುಟ್ಟಿದ ಮಕ್ಳಲ್ವೇನ್ರೋ ನೀವು?’ +ಅಪ್ಪಣ್ಣಯ್ಯ ತಕ್ಷಣ ಎದ್ದು ಅಮ್ಮನ ಪಕ್ಕದಲ್ಲಿ ನಿಂತ. ಗಂಗಮ್ಮ ಚಿನ್ನಯ್ಯನಿಗೆ ಹೇಳಿದಳು: ‘ಲೋ ಚಿನ್ನಯ್ಯ, ನೀನು ಅಲ್ಲೇ ಕೂತಿರ್ತಿ ಏನೋ? ನೀನು ಅಪ್ಪುಂಗ್ ಹುಟ್ಲಿಲ್ವೇನೋ? ಮಿಂಡ್‌ರಿಗ್ಹುಟ್ಟಿದ್ ಸೂಳೇಮಗ್ನೆ ಏಳೋಮ್ಯಾಲೆ.’ +ಶ್ಯಾನುಭೋಗ್ ಚೆನ್ನಿಗರಾಯರ ಗೌರವ ಕೆರಳಿತು. ತಾವು ಅಪ್ಪನಿಗೆ ಹುಟ್ಟಿದವರೆಂಬುದನ್ನು ತನ್ನ ಭಾವಮೈದ, ದ್ಯಾವರಸಯ್ಯನವರು, ಮತ್ತು ಪ್ರತೀಕಕ್ಷಿ ಶಿವೇಗೌಡ, ಒಳ ಬಾಗಿಲಿನಲ್ಲಿ ನಿಂತಿದ್ದ ಅವನ ಹೆಂಡತಿ, ಮತ್ತು ಬಾಗಿಲಿನ ಹತ್ತಿರವಿದ್ದ ಆಳು, ಇಷ್ಟು ಜನರೆದುರೂ ಸಿದ್ಧ ಮಾಡಿ ತೋರಿಸುವುದು ಹೇಗೆ? ತಾವೂ ಮೇಲೆ ಎದ್ದು, ತಮ್ಮ ಮತ್ತು ತಾಯಿಯೊಡನೆ ಮನೆಗೆ ಹೊರಟುಹೋದರು. ಕಲ್ಲೇಶ, ದ್ಯಾವರಸಯ್ಯನವರು ಅಲ್ಲಿಯೇ ಉಳಿದು, ಇನ್ನು ಮುಂದೆ ಮಾತನಾಡಲು ಪ್ರಯತ್ನಿಸಿದರಾದರೂ ಶಿವೇಗೌಡ ಅವಕಾಶ ಕೊಡಲಿಲ್ಲ: ‘ಆವಮ್ಮುಂಗೇ ಈಟ್ ಶಡಕು ಇರಬೇಕಾದ್ರೆ ನಂಗೇನ್ರೀ? ಆ ನನ್ ಮಕ್ಳು ಬೀದೀಲಿ ತಿರುಪೆ ಮಾಡ್ಕಂಡ್ ತಿನ್ನೂ ಹಂಗ್ ಮಾಡ್ದೆ ಇದ್ರೆ ನಾನೂ ಅಪ್ಪಂಗ್ ಹುಟ್ಟಿದ ಸೂಳೇಮಗ ಅಲ್ಲ ಅಂತ ತಿಳ್ಕಳಿ. ಕೋಲ್ಟಾಗೆ ಕೇಸ್ ಗೆಲ್ದೇ ಇದ್ರೆ ಥೂ ಬಾಂಚೋತ್ ಅಂತ ನನ್ನ ಎದಿಗ್ ಒದ್ದು ಜೋಡ್ನಾಗೆ ಹೊಡೀರಿ. ಚೀಪ್ ಕೋಲ್ಟ್ ತಂಕ ಆಗ್ಲಿ. ಮಹಾರಾಜರ ಮ್ಯಾಲಿಂತಂಕಾಲಾದ್ರೂ ಆಗ್ಲಿ’-ಎಂದು ತನ್ನ ಕೊರಳಿನ ಕರಡಿಗೆಯನ್ನು ಬಲಗೈಲಿ ಹಿಡಿದು ಆಣೆ ಮಾಡಿ ಹೇಳಿದ: ‘ಆ ಬಣಜಿಗ್ ನನ್ನ್ ಮಗ ರೇವಣ್ಣುನ್ನ ಕಟ್ಕಂಡ್ ನಿಂತವ್ರಲಾ, ತೋರುಸ್ತೀನಿ ನಾನ್ಯಂತ ನೊಣಬಣ್ಣ ಅಂತ.’ +ಇನ್ನು ಸಂಧಾನದ ಮಾತಾಡಿ ಪ್ರಯೋಜನವಿಲ್ಲವೆಂದರಿತು, ಕಲ್ಲೇಶ, ದ್ಯಾವರಸಯ್ಯ, ಇಬ್ಬರೂ ಮನೆಗೆ ಬಂದರು. ಗಂಗಮ್ಮ ಜಗುಲಿಯ ಮೇಲೆ ಕೂತು ತನ್ನ ಪ್ರತಾಪಗೀತೆ ಹಾಡುತ್ತಿದ್ದಳು. ಶ್ಯಾನುಭೋಗರು ನಿಧಾನವಾಗಿ ವೀಳ್ಯೆದೆಲೆ ಹೊಗೆಸೊಪ್ಪುಗಳನ್ನು ಮೆಲ್ಲುತ್ತಿದ್ದರೆ, ಮಾತೃಭಕ್ತಸಂಪನ್ನನಾದ ಅಪ್ಪಣ್ಣಯ್ಯ, ಶಿವೇಗೌಡನ ಹೆಂಡಿರ ಮುಡಿಯನ್ನು ಬೋಳಿಸುವ ಮಾತಾಡುತ್ತಿದ್ದ. ಕಲ್ಲೇಶನಿಗೆ ರೇಗಿಹೋಗಿತ್ತು. ಜಗುಲಿಯ ಕೆಳಗೆ ನಿಂತು ಅವನು ಹೇಳಿದ: ‘ಕುರುಬ ನನ್ ಮಕ್ಳಾ. ನಿಮಗೆ ಖುದ್ದು ಬುದ್ಧಿ ಇಲ್ಲ. ನಮ್ಮಂತೋರು ಬಂದು ಏನಾದ್ರೂ ದಾರಿ ಮಾಡಾಣ ಅಂತ ನಿಂತ್ಕಂಡ್ರೆ ಹೆಡಸಾಡ್ತೀರಾ? ಲೇ ಮುದ್ಕೀ, ನೀನು ಸಾಯ್ದೆ ಈ ಮನೆ ಉಳುಯುಲ್ಲ. ಯಲ್ಲಾ ಬಿಟ್ಟು ನಿನ್ನಂತೋಳ ಮನೆಗೆ ಹೆಣ್ಣು ಕೊಟ್ಟ ನಮ್ಮಪ್ಪುಂಗೆ ಮೆಟ್ಟು ತಗಂಡ್ ಹೊಡಿಬೇಕು.’ ಗಂಗಮ್ಮ ಮೊದಲೇ ವಿಜೃಂಭಿಸಿದ್ದಳು. ಮನೆಗೆ ಬಂದಾಗ ತನಗೆ ನಮಸ್ಕಾರ ಮಾಡಬೇಕಾದ ಈ ಬೀಗಮಗ ಹೀಗಂದುದರಿಂದ ಇನ್ನೂ ಕೆರಳಿಬಿಟ್ಟಳು. ‘ಪಾಪರ್ ಸೂಳೇಮಗನೆ, ನನ್ನ ಹೀಗಂತಿ ಏನೋ? ನಿನ್ನ ಯಾರೋ ಇಲ್ಲಿ ಕರೆಸಿದ್ದೋರು? ಅವ್ಳು ಹೇಳ್ಕಳ್ಸಿದ್ಲು ಅಂತ ಕದ್ದು ಅವ್ಳ ಜೊತೆ ಮಲೀಕಳುಕ್ ಬಂದಿದ್ದೆ ಏನೋ? ಲೋ ಅಪ್ಪಣ್ಣಯ್ಯ ಹಿಡಕಂಡು ಅವ್ನ ಕಪಾಳುಕ್ ಎರಡು ಹಾಕೋ.’ +ಅಪ್ಪಣ್ಣಯ್ಯನಿಗೆ ಧೈರ್ಯವಿರುವುದು ಸಾಧ್ಯವೇ ಇರಲಿಲ್ಲ. ಕಲ್ಲೇಶ ತಿರುಗಿ ಹೇಳಿದ: ‘ಪಾಪಿ ಮುಂಡೆ, ನಿನ್ನ ಬಾಯ್ಲಿ ಬರೂ ಮಾತಿಗೆ ನಿನ್ನ ನಾಲಿಗೆ ಕೊಳೆತು ಬೀಳುತ್ತೆ. ಸಿವಲಿಂಗನ್ತಾವ ಶ್ಯಾನುಭೋಗ್‌ಕೆ ತಗಳುಕ್ಕಾಗ್ದೆ ಪರದಾಡ್ತಿದ್ರಲ, ಆಗ ಎಲ್ಲಿ ಹೋಗಿತ್ತು ನಿಮ್ಮ ಗಂಡುಸ್ತನ? +ಅವನು ಹೊಸಲ ಒಳಗೆ ಹೋಗಿ ತಂಗಿಗೆ ಹೇಳಿದ: ಲೇ, ನಂಜು, ಇಂಥಾ ಸೂಳೆ ಮಕ್ಳು ಮನ್ಲಿ ಅದೇನು ಸಂಸಾರ ಮಾಡ್ಕಂಡಿದೀಯಾ? ಮಕ್ಳುನ್ನೂ ಕರ್ಕಂಡ್ ಹೊರಡು. ನನ್ ಮನ್ಲಿ ದೇವರು ಕೊಟ್ಟುದ್ದು ಊಟ ಮಾಡ್ಕಂಡಿರೂವಂತೆ.’ +ನಂಜು ಶಾಂತಳಾಗಿ ನಿಂತಿದ್ದಳು. ಕಲ್ಲೇಶನೇ ಕೇಳಿದ: ‘ಯಾಕೆ ನಿಂತಿದೀಯಾ? ನಡಿ.’ +‘ಅಣ್ಣಯ್ಯ, ಕೋಪದಲ್ಲಿ ಏನೂ ಮಾಡಬಾರ್‌ದು. ಒಳಗೆ ಬಂದು ಕೂತ್ಕಬಾ.’ +‘ಈ ಬೋಸುಡಿ ಮನ್ಲಿ ಒಂದು ಲೋಟ ನೀರೂ ಮುಟ್ಟುಲ್ಲ ನಾನು’-ಎಂದು ಹೇಳಿದವನೇ, ಎದುರಿನ ಗೂಟಕ್ಕೆ ತಗುಲಹಾಕಿದ್ದ ತನ್ನ ಕೈಚೀಲ ತೆಗೆದುಕೊಂಡು, ಕಾಲಿಗೆ ಎಕ್ಕಡ ಮೆಟ್ಟಿ ಅವನು ಹೊರಟುಹೋದ. ‘ಅಣ್ಣಯ್ಯಾ, ಇದೇನು ಹೀಗ್ ಮಾಡ್ತೀಯಾ?’- ಎಂದು ಅವಳು ಕೂಗಿಕೊಂಡರೂ ನಿಲ್ಲಲಿಲ್ಲ. ಸಿವೇಗೌಡನ ಮನೆಯಲ್ಲಿ ನಡೆದದ್ದನ್ನು ಈ ಸಮಯದಲ್ಲಿ ತಾವು ನಂಜಮ್ಮನಿಗೆ ಹೇಳಿದರೆ ಜಗುಲಿಯ ಮೇಲಿರುವವರು ಇನ್ನೂ ಕೆರಳುತ್ತಾರೆಂಬುದನ್ನು ಅರಿತ ದ್ಯಾವರಸಯ್ಯನವರೂ ಊರಿಗೆ ಹೊರಟುಹೋದರು. +– ೫ – +ನಂಜಮ್ಮನಿಗೆ ಈಗ ಮೊದಲಿಲ್ಲದ ಧೈರ್ಯ ಬಂದಿತ್ತು. ಸಾತುವಿನ ತಂದೆಗೆ ವಿಷಯ ತಿಳಿಸಿದರೆ ಅವರಾದರೂ ಬಂದು ಇವರಿಗೆ ಏನಾದರೂ ಬುದ್ಧಿ ಹೇಳಬಹುದು-ಎಂಬ ಆಸೆಯೊಂದು ಹುಟ್ಟಿತು. ಕಲ್ಲೇಶನೇನೋ ಸ್ವಂತ ಅಣ್ಣ, ಕಾಗದ ಬರೆದಳು. ಆದರೆ ಅವರಿಗೆ ಹೇಗೆ ಬರೆಯುವುದು? ಹೇಗಾದರೂ ಸರಿ, ಅವರೂ ತನಗೆ ತಂದೆಯ ಸಮಾನರೇ ಎಂದು ಯೋಚಿಸಿ ಒಂದು ಮಧ್ಯಾಹ್ನ ಇವರೆಲ್ಲ ನಿದ್ದೆ ಮಾಡುತ್ತಿದ್ದ, ಪಾರ್ವತಿ ಹೊರಗೆ ಆಟ ಆಡುತ್ತಿದ್ದಾಗ ಕೂತು ಒಂದು ಹಾಳೆಯ ಮೇಲೆ ಬರೆದಳು. ಕಡೂರು ಡಿಸ್ಟ್ರಿಕಟ್ಟು, ಕಸಬಾ ತಾಲ್ಲೂಕು ನುಗ್ಗೀಕೆರೆ ಗ್ರಾಮದ ವೇ|| ಶ್ಯಾಮಭಟ್ಟರು ಎಂಬ ವಿಳಾಸ ಅವಳಿಗೆ ಗೊತ್ತೇ ಇತ್ತು. ಊರಿಗೆ ವಾರಕ್ಕೊಂದು ದಿನ ಕಂಬನಕೆರೆಯಿಂದ ಪೋಸ್ಟ್‌ಮ್ಯಾನ್ ವಾಸಪ್ಪನವರು ಬರುತ್ತಾರೆ. ಈ ಗ್ರಾಮಕ್ಕೆ ಬಂದ ಸಾಕ್ಷಿಯಾಗಿ ಅವರು ಶ್ಯಾನುಭೋಗರಾದ ಚೆನ್ನಿಗರಾಯರ ರುಜುಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಅವರು ನಂಜಮ್ಮನಿಗೆ ಗೊತ್ತಿದೆ. +ಈ ವಾರ ಅವರು ಬಂದಾಗ ಮಕ್ಕಳು ವಿನಾ ಮತ್ತೆ ಮನೆಯಲ್ಲಿ ಯಾರೂ ಇರಲಿಲ್ಲ. ನಂಜಮ್ಮ ಕೇಳಿದಳು: ‘ವಾಸಪ್ಪ್‌ನೋರೇ. ನನಗೊಂದು ಲಕೋಟೆ ಬೇಕು. ನನ್ನ ಹತ್ತಿರ ದುಡ್ಡಿಲ್ಲ. ಎರಡು ಗಿಟುಕು ಕೊಬ್ಬರಿ ಕೊಡ್ತೀನಿ. ಆಗುತ್ತೆಯೆ?’ +‘ಅಮ್ಮಾ, ನಾನು ಬಂದಾಗ್‌ಲೆಲ್ಲ ತಿಂಡಿ ಕೊಡ್ತೀರಿ. ನಿಮ್ಮ ಹತ್ರ ಕೊಬ್ಬರಿ ತಗಂಡು ಕವರು ಕೊಡಲೆ? ಆ ಮುಕ್ಕನ ಯೋಗ್ತಿ ಎಷ್ಟು? ತಗಳಿ.’ +‘ಈ ವಿಷಯ ಯಾರ ಕೈಲೂ ಹೇಳ್‌ಬಾರ್ದು. ನಮ್ಮನೇ ಕೇಸು ನಿಮಗೂ ಗೊತ್ತಿದೆಯಲ್ಲ. ನನ್ನ ಮೈದುನನ ಮಾವ್‌ನೋರಿಗೆ ಬನ್ನಿ ಅಂತ ಬರ್ದಿದೀನಿ’-ಎಂದು ತನ್ನ ಕಾಗದ ಅವರ ಕೈಲೇ ಕೊಟ್ಟು ವಿಳಾಸ ಹೇಳಿದಳು. ಹಾಕುವುದಾಗಿ ಹೇಳಿ ಅವರು ಕಾಗದವನ್ನು ತಮ್ಮ ಖಾಕಿಯ ಜೇಬಿನಲ್ಲಿ ಇಟ್ಟುಕೊಂಡರು. ಶ್ಯಾನುಭೋಗರು ಊರಮುಂದಿನ ವೀರಾಚಾರಿಯ ಕುಲುಮೆಯ ಹತ್ತಿರವೋ, ಗುಡಿಯ ಮಾದೇವಯ್ಯನವರ ಮುಂದೋ ಕೂತು ಹೊಗೆಸೊಪ್ಪು ಜಗಿಯುತ್ತಿರುತ್ತಾರೆಂಬುದು ಅವರಿಗೂ ಗೊತ್ತು. ಅಲ್ಲಿಯೇ ರುಜು ಮಾಡಿಸಿಕೊಳ್ಳುವುದಾಗಿ ಹೇಳಿ ಹೋದರು. +ತಾನು ತಪ್ಪು ಕೆಲಸ ಮಾಡಿದೆನೆಂದು ಅವರು ಹೊರಟು ಹೋದಮೇಲೆ ಅವಳಿಗೆ ಎನಿಸಿತು. ತಾನು ತಾಯಿಯನ್ನು ಬಿಟ್ಟು ಬೇರೆ ಇರುವಂತಾದರೆ ಬಂದು ಹೆಂಡತಿ ಮಗುವನ್ನು ಕರೆದುಕೊಂಡು ಹೋಗುವಂತೆ ಅವರು ಹೇಳಿದ್ದ ವಿಷಯವನ್ನು ಅಪ್ಪಣ್ಣಯ್ಯ ಊರಿಗೆ ಬಂದ ಕೆಲವು ದಿನಗಳ ಮೇಲೆ ಅಮ್ಮನ ಕೈಲಿ ಹೇಳಿದ್ದ. ‘ನನ್ ಮನೆ ಒಡೆಯುಕ್ ನಿಂತ್ಕಂಡ್ನೋ ಈ ಕಡೂರು ಸೀಮೆಯ ಸುಕನಾತಿ ಜೋಯ್ಸ!’-ಎಂದು ಗಂಗಮ್ಮ ಕೆಲವು ದಿನ ಹಾರಾಡಿದ್ದಳು. ಅದಾದ ನಂತರ ತಿಪಟೂರು ಪ್ರವಾಸಗಳು ಒದಗಿ ಆಕೆಗೆ ಮಾತನಾಡಲು ಬೇರೆ ವಿಷಯಗಳಿದ್ದುದರಿಂದ ಬೀಗರ ಮಾತು ಬರುತ್ತಿರಲಿಲ್ಲ. ಮೊದಲೇ ದ್ವೇಷವಿರುವಾಗ ಇನ್ನು ಅವರು ಬಂದರೆ ಇವರು ಸುಮ್ಮನಿರುವುದಿಲ್ಲ. ತಾನಾಗಿಯೇ ಅವರನ್ನು ಕರೆಸಿ ಜಗಳಕ್ಕೆ ದಾರಿ ಮಾಡಿದಂತೆ ಆಯಿತು-ಎಂಬ ಯೋಚನೆ ಅವಳ ಮನಸ್ಸಿನಲ್ಲಿ ಹೊಕ್ಕಿತು. ಆದರೂ ತಾನು ಮಾಡಿದುದು ಪೂರ್ತಿ ತಪ್ಪಲ್ಲ ಎಂಬ ಒಂದು ಪ್ರಜ್ಞೆಯು ಈ ಯೋಚನೆಗೆ ಸಮಾಧಾನ ಹೇಳುತ್ತಿತ್ತು. +ಅವಳು ವಾಸಪ್ಪನವರೊಡನೆ ಕಾಗದ ಕಳಿಸಿದ ಹನ್ನೆರಡನೆಯ ದಿನ ಮದ್ಯಾಹ್ನಾ ನಂತರ ನಾಲ್ಕು ಗಂಟೆಯ ಹೊತ್ತಿಗೆ ಶ್ಯಾಮಭಟ್ಟರು ಒಬ್ಬರೇ ಬಂದರು. ತೋಟದ ಹಳ್ಳದಲ್ಲಿ ಹೊನ್ನಗೊನೆ ಸೊಪ್ಪು ಕಿತ್ತುತರಲು ಗಂಗಮ್ಮ ಹೋಗಿದ್ದಳು; ಅಪ್ಪಣ್ಣಯ್ಯ ಹಸುವಿನ ಹಿಂದಣ ಹೋರಿಗರುವಿನಂತೆ ಅಮ್ಮನನ್ನು ಹಿಂಬಾಲಿಸಿದ್ದ. ಚೆನ್ನಿಗರಾಯರು ಮನೆಯಲ್ಲಿಯೇ ಇದ್ದರು. ಬಂದವರನ್ನು ಕೈಕಾಲು ತೊಳೆದುಕೊಳ್ಳುವಂತೆ ಹೇಳಿ, ಊಟಕ್ಕೆ ಬಡಿಸುವಾಗಲೇ ನಂಜಮ್ಮ ಕೋರ್ಟಿನ ಎಲ್ಲ ವಿಷಯವನ್ನೂ ತನ್ನ ಅಣ್ಣ ಬಂದಿದ್ದುದನ್ನೂ ಹೇಳಿದಳು. ಹೆಂಡತಿ ಈ ಮಾತನಾಡುತ್ತಿರುವುದಕ್ಕೆ ಶ್ಯಾನುಭೋಗರಿಗೆ ಕೋಪವೇನೋ ಬಂದಿತ್ತು. ಆದರೆ ಬೀಗರ ಎದುರಿಗೆ ಅವಳನ್ನು ಬೈಯುವುದಕ್ಕೆ ಧೈರ್ಯವಿಲ್ಲದೆಯೋ ಅಥವಾ ನಾಚಿಕೆಯಿಂದಲೋ ಅವರು ಅಂಗಳದಲ್ಲಿ ಕೂತು, ಹೊರಗೆ ಸುರಿಯದಂತೆ ಹೊಗೆಸೊಪ್ಪಿನ ರಸವನ್ನು ಬಾಯಲ್ಲೇ ಇಟ್ಟುಕೊಳ್ಳುವ ಸಾಹಸ ಮಾಡುತ್ತಿದ್ದರು. +ಶ್ಯಾಮಭಟ್ಟರು ಊಟಮಾಡಿ ಹೊರಗೆ ಬಂದು ನಶ್ಯ ತಿಕ್ಕುವ ವೇಳೆಗೆ ಗಂಗಮ್ಮ ಒಂದು ಹಿಂಡುವ ಕುಕ್ಕೆಯ ಭರ್ತಿ ಹೊನ್ನಗೊನೆ ಸೊಪ್ಪನ್ನು ಹೊತ್ತುಕೊಂಡು ಬಂದಳು. ಅವಳ ಹಿಂದೆಯೇ ಅಪ್ಪಣ್ಣಯ್ಯ ಕರಾವಿನ ಹಸುವಿನ ಹಗ್ಗ ಹಿಡಿದು ತಂದು ಕೊಟ್ಟಿಗೆಯ ಕಡೆಗೆ ಹೋದ. ಈ ಬೀಗನನ್ನು ಕಂಡ ಗಂಗಮ್ಮನಿಗೆ ಕೋಪ ಉರಿದೆದ್ದಿತು. ನನ್ನ ಮಗುನ್ನ ಬೇರೆ ಮಾಡಿಸೋ ಮಾತು ಹೇಳಿಕೊಟ್ಟಿದ್ದ ಈ ಮನೆಮುರುಕ ಸೂಳೇಮಗ ನಾಚಿಕೆ ಇಲ್ದೆ ಬಂದು ಕೂತಿದಾನೆ, ಇರ್ಲಿ ಮಾಡ್ತೀನಿ, ಎಂದು ಒಳಗೆ ಹೋಗಿ ಸೊಪ್ಪಿನ ಕುಕ್ಕೆಯನ್ನು ಅಡಿಗೆಯ ಮನೆಯಲ್ಲಿ ನೆಲಕ್ಕೆ ಕುಕ್ಕಿದಳು. ಹೊರಗೆ ಬಂದು ಬೀಗನ ಮುಂದೆ ನಿಂತು, ‘ಏನೋ, ನನ್ನ ಮಗುನ್ನ ಬ್ಯಾರೆ ಮಾಡ್ಸುಕ್ಕೆ ಬಂದೆ ಏನೋ ಬ್ರಾಹ್ಮಣಾರ್ಥ ಮಾಡಿ ಹ್ವಟ್ಟೆ ಹೊರೆಯೋ ಜೋಯ್ಸ?’ ಎಂದು ಸಿಡಿದಳು. +ತನ್ನ ಬೀಗಿತ್ತಿ ಲಗಾಮಿಲ್ಲದವಳೆಂಬುದು ಶ್ಯಾಮಭಟ್ಟರಿಗೆ ಗೊತ್ತಿತ್ತು. ಆದರೆ ತನ್ನ ಎದುರಿಗೇ ನಿಂತು ಹೀಗೆ ಮಾತನಾಡುತ್ತಾಳೆಂಬ ಕಲ್ಪನೆ ಸಹ ಅವರಿಗೆ ಎಂದೂ ಹುಟ್ಟಿರಲಿಲ್ಲ. ಅವರು ಅವಾಕ್ಕಾಗಿ ಅವಳನ್ನೇ ನೋಡುತ್ತಾ ಎರಡು ನಿಮಿಷ ಕುಳಿತಿದ್ದು ಹೇಳಿದರು: ‘ನೋಡಿ ನೀವು ತಾಳ್ಮೆ ಇಟ್ಟುಕೊಂಡು ಮಾತಾಡಬೇಕು. ನಿಮ್ಮ ಮಗ ನಿಮ್ಮ ಜೊತೆ ಇದ್ರೆ ನಮಗೇನೂ ಹೊಟ್ಟೆಕಿಚ್ಚಲ್ಲ. ನಾನು ಈಗ ಬಂದ ಮುಖ್ಯ ವಿಷಯ ಅಂದ್ರೆ, ನೀವು ಕೋರ್ಟಿಗೆ ಹೋಗಿ ಹಿರೀಕರು ಮಾಡಿರೋ ಆಸ್ತೀನ ಕಳ್ಕೋಬಾರ್ದು. ವಿವೇಕವಾಗಿ ನಡೆದು…..’ +ಅವರಿನ್ನೂ ಮಾತನ್ನು ಪೂರ್ತಿ ಮಾಡುವ ಮೊದಲೇ ಗಂಗಮ್ಮನ ಮನಸ್ಸಿನಲ್ಲಿ ಇವರು ಬಂದಿರುವ ಹಿನ್ನೆಲೆಯು ಚಕಮಕಿಯ ಬೆಂಕಿಯಂತೆ ಕಿಡಿಯಿತು. ಅಡಿಗೆಯ ಮನೆಯ ಬಾಗಿಲಿಗೆ ಹೋಗಿ ಸೊಸೆಯ ಕಡೆ ಗೋಣು ತಿರುಗಿಸಿ ಎಂದಳು: ‘ಏನೇ ಹಾದರಗಿತ್ತಿ ಮುಂಡೆ. ಆಗ ನಿಮ್ಮಣ್ಣನಿಗೆ ಹೇಳಿಕಳ್ಸಿ ಅವನುನ್ನ ಜೊತೇಲಿ ಮಲಗಿಸ್ಕಂಡಿದ್ದೆ. ಈಗ ಈ ಮುದುಕ ಜೋಯ್ಸನಿಗೆ ಹೇಳಿ ಕರಸ್ಕಂಡಿದೀಯಾ. ಇವತ್ತು ರಾತ್ರಿ ಇವನ ಜೊತೆ ವಾಲಾಡಬೇಕೇನೆ? ಬಾರು ಬಂದು ಕುಣೀತಾ ಇದಿ ಏನು ನೀನು?’ ಒಂದು ಸಲ ಜಗುಲಿಯ ಹತ್ತಿರ ಹೋಗಿ ತಂಬುಲವನ್ನು ಉಗಿದು ಬಂದು ಮತ್ತೆ ಆಸೀನನಾಗಿದ್ದ ಮಗನ ಹತ್ತಿರ ಬಂದು ಎಂದಳು: ‘ಏನೋ ಶಂಢಸೂಳೇಮಗನೆ, ಅಪ್ಪುಂಗೆ ಹುಟ್ಟಿಲ್ವೇನೋ ನೀನು? ನಿನ್ನ ಹೆಂಡ್ತಿ ಇವನಿಗೆ ಕಾಗದ ಬರ್ದು ಕರ್ಸಿಕಂಡಿದಾಳೆ. ಇವತ್ತು ನೀನು ಹೊರಗೆ ಜಗಲಿಮ್ಯಾಲೆ ಮಲಿಕ್ಕ. ಅವಳು ಇವನ ಜೊತೆ ಅಟ್ಟದ ಮ್ಯಾಲೆ ವಾಲಾಡ್‌ಲಿ.’ +ಅಷ್ಟರಲ್ಲಿ ತಮ್ಮ ಕೈಗಳನ್ನು ಕಿವಿಗಳ ಮೇಲೆ ಇಟ್ಟು ಅದುಮಿಕೊಂಡು ಬಾಯಲ್ಲಿ ‘ರಾಮ ರಾಮ’ ಎನ್ನುತ್ತಿದ್ದ ಶ್ಯಾಮಭಟ್ಟರ ಕಣ್ಣು ಮಾತ್ರ ಬೀಗಿತ್ತಿಯ ಕಡೆ ನೋಡುತ್ತಿದ್ದವು. ಇಷ್ಟು ಹೇಳಿದ ಗಂಗಮ್ಮ ಅಲ್ಲಿ ನಿಲ್ಲದೆ ಹೊರಗೆ ಬಂದು ಅಪ್ಪಣ್ಣಯ್ಯನನ್ನು ಕರೆದುಕೊಂಡು ನೇರವಾಗಿ ರೇವಣ್ಣಶೆಟ್ಟಿಯ ಮನೆಗೆ ಹೋದಳು. +ಕೈಗಳನ್ನು ಕಿವಿಯಿಂದ ತೆಗೆದು ಶ್ಯಾಮಭಟ್ಟರು ಚೆನ್ನಿಗರಾಯನಿಗೆ ಹೇಳಿದರು: ‘ನೋಡಿ, ಮನೇ ಯಜಮಾನ್ರು ಅಂತ ನಾನು ನಿಮಗೆ ಹೇಳ್ತೀನಿ. ಮನೆಗೆ ದೊಡ್ಡವರಾದೋರು ಹೀಗೆ ಮನಸೋ ಇಚ್ಛೆ ಮಾತಾಡಿ ನಡುದ್ರೆ ಸಂಸಾರ ಹ್ಯಾಗೆ ನಿಲ್ಲುತ್ತೆ? ನಮ್ಮ ಸಾತೂನೂ ಹೇಳ್ತೀರ್ತಾಳೆ, ನಿಮ್ಮ ಕುಟುಂಬ ನಂಜಮ್ಮನ ಗುಣ, ಬುದ್ಧಿಶಕ್ತಿ ಗುಣ ತುಂಬ ಚನ್ನಾದ್ದು ಅಂತ. ಆ ಮಗೂನ್ನ, ಅದರಲ್ಲೂ ಹಿರೀ ಸೊಸೇನ ಇವರು ನನ್ನ ಕಣ್ಣೆದುರ್ಗೇ ಹೀಗಂತಿದ್ರೆ, ಇನ್ನು ಕಿರಿಯೋಳು ನನ್ನ ಮಗಳನ್ನ ಏನೇನಂತಾರೆ ಅಂತ ಗೊತ್ತಾಗುತ್ತೆ. ಏನೋ, ಜಾವಗಲ್ಲು ಕಡೆಯೋರು ನಂಟರ ಪೈಕೀನೇ ಹೇಳಿದ್ರು ಅಂತ ನಾವು ಇಲ್ಲಿಗೆ ಹೆಣ್ಣು ಕೊಟ್ಟುಬಿಟ್ವು. ಈಗ ಹ್ಯಾಗಿದ್ರೂ ಉಭಯತಾಪಿ ಹೊಂದಿಕಂಡ್ ಹೋಗ್‌ಬೇಕು. ನಾನು ಹೇಳೂದು ತಿಳೀತೆ?’ +‘ಇನ್ನೊಂದೆರ್ಡು ವಿಳ್ಳೇದೆಲೆ ತಗಂಡ್ಬಾರೇ’-ಶ್ಯಾನುಭೋಗರು ಹೆಂಡತಿಗೆ ಹೇಳಿದರು. ನಂಜಮ್ಮ ತಂದುಕೊಟ್ಟ ಮೇಲೆ ಅದಕ್ಕೆ ಸುಣ್ಣ ಹಾಕಿ ಬಾಯಿಗೆ ಹಾಕಿಕೊಂಡು, ಹೊಗೆ ಸೊಪ್ಪು ತೀಡುತ್ತಾ ಅವರು, ‘ಹೂಂ’ ಎಂದರು. +‘ನಿಮ್ಮುನ್ನ ಬ್ಯಾರೆ ಮಾಡ್‌ಬೇಕು ಅಂತ ನಮ್ಮ ಆಶೆಯಲ್ಲ. ಆದ್ರೆ ಮನೇಲಿ ಗಂಡಸ್ರಾದ ನೀವು ವಿವೇಕ ಉಪಯೋಗಿಸಬೇಕು. ಈಗ ಸಾಲಗಾರರನ್ನೇ ಹಿಡಿದು ವ್ಯವಹಾರ ತೀರ್ಮಾನಿಸ್ಕಳ್ಳಿ. ನಂಜಮ್ಮ ಹೇಳೂ ಹಾಗೆ ಯಾವ್ದಾದ್‌ರೂ ಒಂದೆರಡು ಜಮೀನು ಅವನಿಗೇ ಕೊಟ್ಟು, ಋಣ ಹರೀತು ಅಂತ ಆಧಾರಪತ್ರಕ್ಕೆ ಷರಾ ಬರಿಸಿ ತಗೋಳಿ. ಇದ್ದುದ್ರಲ್ಲೇ ಹ್ಯಾಗೋ ಜೀವನ ಮಾಡಿ.’ +ಶ್ಯಾನುಭೋಗರು ದವಡೆಯಲ್ಲಿ ಗುಳುಗುಳುಗುಟ್ಟುವ ತಂಬುಲದ ರಸದಲ್ಲಿ ವಿಹರಿಸುತ್ತಿದ್ದರು. ಅವರ ಉತ್ತರಕ್ಕಾಗಿ ಕಾಯ್ದ ಬೀಗರು ‘ಅಲ್ವೆ?’ ಎಂದರೆ, ಮಾತನಾಡುವಂತೆ ಮುಖವನ್ನು ಅಟ್ಟದ ಕಡೆಗೆ ಎತ್ತಿ ಬಾಯಿ ತೆಗೆದರೇ ಹೊರತು ತಂಬುಲದ ರಸದಿಂದ ಮೇಲೆ ಎದ್ದು ನಾಲಿಗೆಯು ಏನೂ ನುಡಿಯಲಿಲ್ಲ. ಅವರು ಎದ್ದು ಹೋಗಿ ಉಗುಳಿ ಬರುವ ತನಗೆ ಕಾದಿದ್ದ ಇವರು ಮತ್ತೊಂದು ಸಲ ಕೇಳಿದರು: ‘ಈಗ ನೀವು ಮಾತಾಡಲೇಬೇಕು.’ +ಚೆನ್ನಿಗರಾಯರಿಗೆ ಏನು ಹೇಳುವುದಕ್ಕೂ ಭಯ. ಕೊನೆಗೆ ಕಷ್ಟಪಟ್ಟು ಒಂದು ತೀರ್ಮಾನಕ್ಕೆ ಬಂದು, ‘ನಂಗೊತ್ತಿಲ್ಲ, ನೀವುಂಟು ನಮ್ಮಮ್ಮ ಉಂಟು’ ಎಂದು ಹೇಳಿ ಹೊರಗೆ ಹೊರಟುಹೋದರು. +‘ಅಮ್ಮಾ, ಕೇಳಿದೆಯಾ?’-ಭಟ್ಟರು ಕೇಳಿದರು. +ನಂಜಮ್ಮ ಹೊರಗೆ ಬಂದು ಎಂದಳು: ‘ಇವರ ಸ್ವಭಾವ ನಿಮಗೆ ಚೆನ್ನಾಗಿ ಗೊತ್ತಿಲ್ಲ. ನಿಮ್ಮ ಅಳಿಯನ್ನೇ ಹಿಡಿದು ಕೇಳಿ. ಏನಿಲ್ದೆ ಇದ್ರೂ ನಮ್ಮ ನಮ್ಮ ಪಾಲು ನಮಗೆ ಬಂದುಬಿಡ್ಳಿ, ಸಾಲಾನೂ ಅರ್ಧರ್ಧ ತೀರುಸ್ತೀವಿ ಅಂತ ಅಪ್ಪಣ್ಣಯ್ಯ ಹಟ ಮಾಡಿದ್ರೆ ಒಂದು ತೀರಾಗುತ್ತೋ ಏನೋ.’ +ಅವನ ಯೋಗ್ತಿ ಏನು ಅಂತ ನಿಂಗೆ ಗೊತ್ತಿಲ್ವೆ? ಈ ಕೋರ್ಟಿನ ವಿಷಯ ‘ನಂಗೆ ಗೊತ್ತಿರಲಿಲ್ಲ. ಆದರೆ ಅದಕ್ಕೆ ಮೊದಲೇ ನಾವು ತೀರ್ಮಾನ ಮಾಡಿದ್ವು. ಇರೋಳೊಬ್ಳು ಮಗಳು. ಹ್ಯಾಗೂ ಸಾಕ್ತೀವಿ. ದೇವರು ಎರಡು ಹೊತ್ತಿನ ಅನ್ನಕ್ಕೆ ಇಲ್ಲ ಅನ್ಸಿಲ್ಲ. ಈ ಅತ್ತೆ ಕೆಳಗೆ ನಮ್ಮ ಮಗೂನ ಹ್ಯಾಗೆ ಕಳುಸ್ಲಿ? ಅದ್ಕೇ ಬಾಣಂತನ ಮುಗುದ್‌ಮ್ಯಾಲೆ ಅಲ್ಲೇ ಇಟ್ಕಂಡಿದೀವಿ’ +ಏನು ಹೇಳುವುದಕ್ಕೂ ತಿಳಿಯದೆ ನಂಜಮ್ಮ ಸುಮ್ಮನೆ ನಿಂತಿದ್ದಳು. ಅಷ್ಟರಲ್ಲಿ ಮನೆಗೆ ನುಗ್ಗಿದ ಗಂಗಮ್ಮ ಸೊಸೆಯನ್ನು ಕಂಡ ತಕ್ಷಣ ಉರಿದುಬಿದ್ದಳು: ‘ಆಯ್ತೇನೇ ಮಿಂಡನ ಕೈಲಿ ಚಕ್ಕಂದ? ನಿನ್ನ ಗಂಡ ಮನೆ ಬಿಟ್ಟು ಹೋಗಿ ಗುಡೀಲಿ ಕುಕ್ಕರು ಬಡ್‌ಕಂಡಿದಾನೆ ತಾನೇ?’ +ನಂಜಮ್ಮನಿಗೆ ರೇಗಿದುದು ಮಾತ್ರವಲ್ಲ, ಧೈರ್ಯವೂ ಬಂತು. ತಿರುಗಿಬಿದ್ದಳು: ‘ಅಂಥ ಕೆಲ್ಸ ಮಾಡ್ತೀರಾ ಅಂತ ಕಾಣುತ್ತೆ. ಅದಕ್ಕೇ ಗರತಿ ಹೆಣ್ಣುಮಕ್ಳನ್ನೆಲ್ಲ ಹಾಗಂತೀರಾ. ನಿಮ್ಮ ನಾಲಿಗೇಲಿ ಹುಳ ಬೀಳ. ಸ್ವಲ್ಪ ಬಾಯಿ ಮುಚ್ಕತ್ತೀರೋ ಇಲ್ವೋ ಹೇಳಿ.’ +‘ಹೊಲೆಮುಂಡೆ. ನನ್ನ ನನ್ನೇ ಅನ್ನೂಹಾಗಾದ್ಯಾ? ನನ್ ಮಗುಂಗೆ ಹೇಳಿ ನಿನ್ನ ತಾಳಿ ಕಿತ್ಹಾಕುಸ್ದೆ ಇದ್ರೆ ನಾನು ಜಾವಗಲ್ ಹೆಣ್ಣೇ ಅಲ್ಲ ಕಣೇ’-ಎಂದು ಅಬ್ಬರಿಸುತ್ತಲೇ ಗಂಗಮ್ಮ ಗುಡಿಗೆ ಹೋಗಿ ಮಗನ ಮುಂದೆ ನಿಂತು ಗುಡುಗಿದಳು: ‘ನೀನು ಅಪ್ಪಂಗೆ ಹುಟ್ಟಿದ್ ಸೂಳೇಮಗನಾದ್ರೆ ಬಂದು ನಿನ್ನ ಹೆಂಡ್ತಿ ದವಡೆ ಹಲ್ಲು ಉದುರ್ಸಿ, ಅವಳ ತಾಳಿ ಕಿತ್ ಹಾಕೊ. ನನ್ನ ಬಾಯಿಗೆ ಹುಳ ಬೀಳ ಅಂದ್ಲಲಾ ಆ ಹಾದರಗಿತ್ತಿ.’ +ಏಕತಾರಿ ಮಿಡಿದುಕೊಂಡು, ‘ಎಚ್ಚರವಾಗೋ ತಮ್ಮಾ! ಹಾವು ಕಚ್ಚುವ ಮೊದಲು……’ ಎಂದು ಹಾಡುತ್ತಿದ್ದ ಮಾದೇವಯ್ಯನವರು ಗಕ್ಕನೆ ನಿಲ್ಲಿಸಿ ನೋಡುತ್ತಾ ಕೂತರು. ‘ನೀನು ಅಪ್ಪುಂಗೆ ಹುಟ್ಟಿದೋನೋ ಅಲ್ವೋ ಹೇಳಿಬಿಡೋ. ಅಪ್ಪುಂಗ್ ಹುಟ್ಟಿದೋನೇ ಆದ್ರೆ ನೀನು ಬಂದು ಅವಳ ತಾಳಿ ಕೀಳ್ತೀಯಾ ನೋಡು’-ಎಂದು ಇನ್ನೊಂದು ಸಲ ಸವಾಲು ಹಾಕಿದಾಗ ತಮ್ಮ ಹುಟ್ಟಿನ ಪಾವಿತ್ರ್ಯವನ್ನು ತಾಯಿಗೆ ಸಾಧಿಸಿ ಹೇಳುವ ಬಗೆ ತಿಳಿಯದೆ ಎರಡು ನಿಮಿಷ ಒದ್ದಾಡುತ್ತಿದ್ದು ಚೆನ್ನಿಗರಾಯರು ಕೊನೆಗೆ ಧೈರ್ಯ ಮಾಡಿ ಮೇಲೆ ಎದ್ದರು. ಹತ್ತಿರದಲ್ಲಿಯೇ ಕುಳಿತಿದ್ದ ಮಾದೇವಯ್ಯನವರು ಅವರ ಕೈ ಹಿಡಿದು ಎಳೆದು ಕೂರಿಸಿ ಹೇಳಿದರು: ‘ಶ್ಯಾನುಭೋಗ್ರೇ, ಇಷ್ಟೊಂತಂಕ ಭಜನೆ ಕೇಳಿದ್ರಿ, ಎಲ್ಲಿಗ್ ಹೋಯ್ತು ಬುದ್ದಿ?’ +ಮತ್ತೆ ಏನೂ ತಿಳಿಯದೆ ಶ್ಯಾನುಭೋಗರು-‘ಹೋಕ್ಕಳ್ಳಿ, ಹಾಡೇಳ್ರಿ ಕೇಳಾಣ’ ಎಂದರು. ಅಯ್ಯನವರು ಏಕತಾರಿ ಮಿಡಿಯುತ್ತಾ ಅದೇ ಭಜನೆಯನ್ನು ಶುರು ಮಾಡುತ್ತಲೇ ಗಂಗಮ್ಮ, ‘ಸನ್ಯಾಸಿ ಸೂಳೇಮಗನ ಮಾತು ಕೇಳ್ತಾನೆ, ಈ ಪಾಪರ್ ಮುಂಡೇಗಂಡ. ಹೆತ್ತೋಳ್ ಮರ್ಯಾದೆ ಮ್ಯಾಲೆ ನಿಗಾ ಇಲ್ಲ’ ಎಂದುಕೊಂಡು ಮತ್ತೆ ರೇವಣ್ಣಶೆಟ್ಟಿಯ ಮನೆಗೆ ಹೋದಳು. +ಇತ್ತ ಶ್ಯಾಮಭಟ್ಟರು ನಂಜಮ್ಮನಿಗೆ-‘ಅಮ್ಮಾ, ಇಲ್ಲಿಗೆ ನಾನು ಬಂದು ಏನೂ ಪ್ರಯೋಜನವಾಗಲಿಲ್ಲ. ನಾನ್ ಹೊರಡ್‌ತೀನಿ. ನಂಗೂ ಹದಿನೆಂಟು ಊರ ಪೌರೋಹಿತ್ಯವಿದೆ. ಮಗಳನ್ನೂ ಮೊಮ್ಮಗಳನ್ನೂ ಸಾಕ್ತೀನಿ’ ಎಂದು ಹೇಳಿ ತಮ್ಮ ಗಂಟು ಮತ್ತು ಕೊಡೆಗಳನ್ನು ಕೈಗೆ ಎತ್ತಿಕೊಂಡರು. ಮತ್ತೆ ಏನು ಹೇಳುವುದಕ್ಕೂ ತಿಳಿಯದೆ ಅವಳು. ‘ಹ್ಯಾಗಾದ್ರೆ ಹಾಗಾಗ್ಲಿ, ಸಾತೂನ ಕಳಿಸಿ’ ಎಂದುದಕ್ಕೆ-‘ಯಾಕ್ ಕಳುಸ್ಬೇಕು? ನಿಂಗೇ ಎಲ್ಲಾ ಗೊತ್ತಿಲ್ವೆ?’ ಎಂದರು. +ಅವಳು ಮತ್ತೆ ಮಾತನಾಡಲಿಲ್ಲ. ಹೊರಟು ನಿಂತವರಿಗೆ ನಮಸ್ಕಾರ ಮಾಡಿದಳು. ‘ದೀರ್ಗ ಸುಮಂಗಲೀ ಭವ. ಸಕಲ ಸನ್ಮಂಗಳಾನಿ ಭವಂತು’-ಎಂದು ಹೇಳಿ ಅವರು ಹೊರಟರು. ಬಾಗಿಲಿನ ಹತ್ತಿರಕ್ಕೆ ಬಂದು ನಂಜಮ್ಮ ಹೇಳಿದಳು: ‘ತಿಪಟೂರಿನ ಕಡೆಗೇ ತಿಮ್ಲಾಪುರ ಅಂತ ಇದೆ. ಆ ಊರ್ನಲ್ಲಿ ಶ್ಯಾನುಭೋಗ್ ದ್ಯಾವರಸಯ್ಯನೋರು ಅಂತ ಇದಾರೆ. ಅವರ ಮನೆಗೆ ಹೋಗಿ ರಾತ್ರಿ ಇದ್ದು ಬೆಳಿಗ್ಗೆ ಹೋಗಿ. ಕತ್ತಲಾದ ಮ್ಯಾಲೆ ತಿಪಟೂರು ತಂಕ ನಡೀಬ್ಯಾಡಿ. ಬುಕ್ಕನ ತಿಟ್ಟಿನಲ್ಲಿ ಕಳ್ಳರಿರ್ತಾರೆ. ಒಂದೊಂದು ಎರಡೆರಡು ಗಾಡಿ ಜನ ಹೋಗ್ತಿದ್ರೂ ಚಚ್ಚಿಹಾಕಿ ಇದ್ದುದ್ದೆಲ್ಲ ಕಿತ್ಕಂಡ್‌ಹೋಗ್ತಾರೆ.’ +ಅಧ್ಯಾಯ ೭ +– ೧ – +ಗಂಡುಮಗು ರಾಮಣ್ಣನಿಗೆ ಒಂದು ವರ್ಷ ತುಂಬಿ ಆರು ತಿಂಗಳಾಗಿತ್ತು. ನಂಜಮ್ಮ ಮತ್ತೆ ಬಸುರಿಯಾಗಿದ್ದಳು. ಕೋರ್ಟಿನ ವ್ಯವಹಾರದಲ್ಲಿ ಜಮೀನೆಲ್ಲವೂ ಹೋಗುತ್ತದೆಂದು ಅವಳ ಅಂತರಂಗವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿತ್ತು. ‘ನಮ್ಮದೇ ಈ ಗೋಳು, ಇನ್ನು ಯಾಕಪ್ಪಾ ಮತ್ತೆ ಮಕ್ಕಳು?’ ಎಂದು ಹಲವು ಸಲ ಬೇಸರಪಟ್ಟುಕೊಳ್ಳುವಳು. ಆದರೆ ಮದುವೆಯಾಗಿ ಇಷ್ಟು ದಿನವಾದರೂ ತೌರಿನಲ್ಲಿ ಅಣ್ಣನಿಗೆ ಮಕ್ಕಳೆ ಆಗಿಲ್ಲ; ದೇವರು ಹಣೆಯಲ್ಲಿ ಬರೆದಿಲ್ಲ ಎಂಬ ನೆನಪಾಗಿ-‘ನಮಗೆ ದೇವರು ಕೊಡುವಾಗ ಬ್ಯಾಡ ಅನ್‌ಬಾರ್‌ದು’ ಎಂದು ಸಮಾಧಾನ ತಂದುಕೊಳ್ಳುವಳು. +ಇದೇ ಸಮಯದಲ್ಲಿ ಊರಿನಲ್ಲಿ ಎರಡು ಘಟನೆಗಳು ನಡೆದುವು. ಮೊದಲನೆಯದು ಊರಿಗೆ ಪ್ಲೇಗು ಬಂದದ್ದು. ಅದು ಆ ಸುತ್ತಿಗೆ ಹೊಸದೇನಲ್ಲ. ಎರಡು ಮೂರು ವರ್ಷಕ್ಕೆ ಒಂದು ಸಲ ಊರು ಬಿಟ್ಟು ಹೊರಗೆ ಶೆಡ್ಡಿನಲ್ಲಿ ವಾಸ ಮಾಡುವುದು ಜನರಿಗೆ ಅಭ್ಯಾಸವಾಗಿಹೋಗಿತ್ತು. ಎರಡನೆಯ ಅಪೂರ್ವ ಸಂಗತಿ ಎಂದರೆ ಆ ಊರಿಗೆ ಕಾಶಿಂಬಡ್ಡಿ ಸಾಹುಕಾರರು ಎಂಬ ಒಬ್ಬ ಲೇವಾದೇವಿಯವರು ಬಂದು ವ್ಯವಹಾರ ಪ್ರಾರಂಭಿಸಿದ್ದರು. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಮೊದಲಾದ ಸಾಮಾನಿನ ಅಡವಿನ ಮೇಲೆ ಸಾಲ ಕೊಟ್ಟು ಒಂದು ರೂಪಾಯಿಗೆ ಒಂದು ದಿನಕ್ಕೆ ಒಂದು ಕಾಸಿನಂತೆ ಬಡ್ಡಿ ತೆಗೆದುಕೊಳ್ಳುತ್ತಿದ್ದ ಅವರು ಮಲಬಾರ್ ಸೀಮೆಯ ಮಾಪಿಳ್ಳೆ ಮುಸಲ್ಮಾನರು. ಲಂಬಾಣಿಯವರ ಲಂಗದಂತೆ ಪಟ್ಟಿಪಟ್ಟಿಯ ಲುಂಗಿ ಕಟ್ಟಿ ತಲೆಗೆ ಕುಚ್ಚಿನ ಟೋಪಿ ಇಡುತ್ತಿದ್ದರು. ವಯಸ್ಸು ಐವತ್ತರ ಸುಮಾರು. ‘ಒಂದ್ ಕಾಸು ಅಂದ್ರೆ ಯಾವ ಗೋಪಾಳುದ್ದು? ಹರ್‌ಕತ್ತಿಗೆ ದುಡ್ಡು ಕೊಡಾಕುಲ್ವಾ?’-ಎಂದು ಶಿವೇಗೌಡನೇ ಹೇಳಿ ಅವರ ಲೇವಾದೇವಿಯ ಔದಾರ್ಯವನ್ನು ಜನಗಳಿಗೆ ವಿವರಿಸಿದ್ದ. ಪರಸ್ಥಳದವರಾದ ಅವರಿಗೆ ಅವನೇ ಇರಲು ಸ್ಥಳ ಕೊಟ್ಟಿದ್ದ. ಶಿವೇಗೌಡನದು ಊರಿನಲ್ಲಿ ಒಟ್ಟು ಮೂರು ಮನೆಗಳಿದ್ದುವು. ಬೀದಿಯ ಪಕ್ಕದಲ್ಲಿದ್ದ ಒಂದು ಪುಟ್ಟ ಮನೆಯಲ್ಲಿ ಒಂದು ದೊಡ್ದ ಕಬ್ಬಿಣದ ಪೆಟ್ಟಿಗೆ ತಂದಿಟ್ಟುಕೊಂಡು ಅವರು ವ್ಯವಹಾರ ಪ್ರಾರಂಭಿಸಿದರು. ಆ ಮನೆಗೆ ವರ್ಷಕ್ಕೆ ಹದಿನೆಂಟು ರೂಪಾಯಿ ಬಾಡಿಗೆ ಕೊಡುತ್ತಿದ್ದರಂತೆ. ಶಿವೇಗೌಡನಿಗೂ ಅವರ ವ್ಯವಹಾರಕ್ಕೂ ಯಾವ ಸಂಬಂಧವೂ ಇಲ್ಲ; ಹಾಗೆಂದು ಅವನೇ ಸ್ಪಷ್ಟವಾಗಿ ಎಲ್ಲರೊಡನೆಯೂ ಹೇಳಿದ. +ಕಾಶಿಂಬಡ್ಡಿ ಸಾಹುಕಾರರು ಊರಿಗೆ ಬಂದ ಒಂದೆರಡು ತಿಂಗಳಲ್ಲಿಯೇ ಹೆಚ್ಚುಕಡಿಮೆ ಊರಿನವರೆಲ್ಲ ಅವರ ಹತ್ತಿರ ಸಾಲ ತರಲು ಶುರು ಮಾಡಿದರು. ಶಿವೇಗೌಡನೂ ಸಮಯವೆಂದರೆ ಅವರ ಹತ್ತಿರವೇ ಬಡ್ಡಿ ಕೊತ್ತು ಸಾಲ ತೆಗೆದುಕೊಳ್ಳುತ್ತಿದ್ದನಂತೆ. ಲೆಕ್ಕಾಚಾರ ಕರಾರುವಾಕ್ಕು; ಸುಳ್ಳಿಲ್ಲ, ಮೋಸವಿಲ್ಲ. ಬಡ್ಡಿಯ ಲೆಕ್ಕಹಾಕುವುದೂ ಕಷ್ಟವಲ್ಲ. ಒಂದು ದಿನಕ್ಕೆ ಒಂದು ರೂಪಾಯಿಗೆ ಒಂದು ಕಾಸು ತಾನೇ. ಹೀಗಾಗಿ ಅವರು ಊರಿಗೆಲ್ಲ ಬೇಕಾದವರಾಗಿದ್ದರು. ಪ್ಲೇಗು ಬಂದು ಊರು ಬಿಡುವಾಗ ಕಾಶಿಂಬಡ್ಡಿಯವರೂ ಶಿವೇಗೌಡನ ತೋಟದಲ್ಲಿ ಅವನ ಶೆಡ್ಡಿನ ಹತ್ತಿರವೇ ಶೆಡ್ಡು ಹಾಕಿಸಿಕೊಂಡರು. ಲೇವಾದೇವಿಯ ಕಬ್ಬಿಣದ ಪೆಟ್ಟಿಗೆಯೂ ಅಲ್ಲಿಯೇ ವಿರಾಜಮಾನವಾಯಿತು. +ಗಂಗಮ್ಮನ ಕುಟುಂಬವು ಎಂದಿನಂತೆ ಊರ ಮುಂದಿನ ತಮ್ಮ ತೋಟದಲ್ಲಿ ಶೆಡ್ಡು ಹಾಕಿತು. ನಂಜಮ್ಮನಿಗೆ ಆಗ ಇನ್ನೂ ಮೂರು ತಿಂಗಳು. ನಡುನಡುವೆ ವಾಂತಿಯಾಗುತ್ತಿದ್ದರೂ ಮನೆಯ ಸಾಮಾನುಗಳೆಲ್ಲ ಕಟ್ಟಿ ಅಲ್ಲಿಗೆ ಸಾಗಿಸಿ ವ್ಯವಸ್ಥೆ ಮಾಡುವತನಕ ಎಲ್ಲ ಕೆಲಸವೂ ಅವಳ ಮೇಲೆಯೇ ಬಿತ್ತು. ಮಾದೇವಯ್ಯನವರೂ ಊರಿನ ಗುಡಿಯನ್ನು ಬಿಡಬೇಕು. ಚೋಳೇಶ್ವರನ ಗುಡಿಯ ಮೂಲ ಲಿಂಗವಿರುವುದು ಕೆರೆಯ ಏರಿಯ ಮೇಲೆ. ಏರಿಯ ಮೇಲಿನ ಗುಡಿ ಕಲ್ಲಿನಕಟ್ಟಡ. ಜಕಣಾಚಾರಿ ಕಟ್ಟಿದ್ದೆಂದು ಎಲ್ಲರೂ ಹೇಳುತ್ತಾರೆ. ಅಲ್ಲಿ ಹಾವುಗಳು ಹೆಚ್ಚೆಂದು ಎಲ್ಲರೂ ಬಲ್ಲರು. ಹಾವೆಂದರೆ ಏನು, ಶಿವನ ಕಂಠಾಭರಣವಲ್ಲವೆ? ಅದು ನನಗೇನು ಮಾಡೀತು?-ಎಂದು ಅಯ್ಯನವರು ತಮ್ಮ ಏಕತಾರಿ, ದಮಡಿ, ಭಿಕ್ಷದ ಜೋಳಿಗೆ, ಕಾಲಿನ ಆವುಗೆ, ಇದ್ದ ದಿನಸಿ ಧಾನ್ಯ ಮೊದಲಾದುವನ್ನು ತೆಗೆದುಕೊಂಡು ಅಲ್ಲಿಗೇ ಹೋದರು. ಗಂಗಮ್ಮನ ಶೆಡ್ಡಿಗೂ ಏರಿಯ ಮೇಲಿನ ಗುಡಿಗೂ ಸ್ವಲ್ಪ ದೂರವೇ. ಹೀಗಾಗಿ ಶ್ಯಾನುಭೋಗ ಚೆನ್ನಿಗರಾಯರು ಈಗ ಅಲ್ಲಿಗೆ ಹೋಗುವುದು ವಿರಳ. ಕಾಶಿಂಬಡ್ಡಿಯವರೂ ಹೊಗೆಸೊಪ್ಪು ಹಾಕುತ್ತಾರೆ. ಆದುದರಿಂದ ಚೆನ್ನಿಗರಾಯರು ಅವರ ಶೆಡ್ಡಿಗೆ ಹೋಗು ಕೂರುತ್ತಾರೆ. ಅಲ್ಲಿಗೆ ಒಮ್ಮೊಮ್ಮೆ ಶಿವೇಗೌಡನೂ ಬರುತ್ತಾನೆ. ಅವರಿಬ್ಬರೂ ಮಾತು ಬಿಟ್ಟಿಲ್ಲ. ಎಷ್ಟಾದರೂ ಶ್ಯಾನುಭೋಗ ಪಟೇಲರು ತಾನೆ? ಅಲ್ಲದೆ ಜಗಳ ನಡೆಯುತ್ತಿರುವುದು ಗಂಗಮ್ಮ, ಶಿವೇಗೌಡನಿಗೆ. ಆದರೆ ಮಗ ಅಲ್ಲಿಗೆ ಹೋಗುವುದನ್ನು ಕೇಳಿದಾಗ ಗಂಗಮ್ಮ ಅವನನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ. +ಊರು ಬಿಡುವ ಮೊದಲು ಪ್ಲೇಗು ಬಡಿದು ಸತ್ತ ಆರು ಜನ ದೊಡ್ಡವರು, ಇಬ್ಬರು ಮಕ್ಕಳನ್ನು ಬಿಟ್ಟರೆ ಗ್ರಾಮದಲ್ಲಿ ಈ ಸಲ ಹೆಚ್ಚು ಸಾವುಗಳಾಗಿಲ್ಲ. ಊರಿನವರೆಲ್ಲ ಮಾರೀ ಪೂಜೆ ಮಾಡಿಸಿದರು. ತಕ್ಷಣ ಊರ ಹೊರಗೆ ಬಂದರು. ಊರು ಬಿಟ್ಟರೂ, ರೋಗ ಮರಣಗಳಿಲ್ಲದ್ದರಿಂದ ಎಲ್ಲರಿಗೂ ಮನಸ್ಸಿನಲ್ಲಿ ಸಮಧಾನವಿದ್ದರೂ ವಿನಾಕಾರಣ ಊರ ಹೊರಗಿರಲು ಬೇಸರವಾಗುತ್ತಿತ್ತು. ಆದರೆ ಅದನ್ನು ಕಳೆಯುವ ಒಂದು ಮಾತು ಈಗ ಎಲ್ಲರ ನಾಲಿಗೆಗೂ ಸಿಕ್ಕಿತ್ತು. +ಗಂಗಮ್ಮ ಶಿವೇಗೌಡನ ವ್ಯಾಜ್ಯ ಕೋರ್ಟಿನಲ್ಲಿ ಮುಗಿಯುತ್ತ ಬಂದಿತ್ತಂತೆ. ಎರಡು ಕಡೆಯ ಲಾಯರೂ ಕೋರ್ಟಿನಲ್ಲಿ ಪಾಯಿಂಟ್ ಜಡಿದು ವಾದ ಮಾಡಿದರಂತೆ. ‘ನಮ್ ಕಡೆ ಲಾಯ್ರು ಆಕಿದ್ ಪಾಯಿಂಟಿಗೆ ಜಡ್ಜಿಗಳೇ ಅಳ್ಳಾಡಿಹೋಗ್ಬಿಟ್ರು’ -ರೇವಣ್ಣಶೆಟ್ಟಿ ಹೇಳಿದ ಮಾತು ಊರಿನಲ್ಲೆಲ್ಲ ಹರಡಿತು. ‘ನಂ ಲಾಯ್ರಿ ಪಾಯಿಂಟ್ ಮಾಡಿದ್ದುಕ್ಕೆ ಗಂಗಮ್ಮನ ಕಡೆಯೋನು ಅಲ್ಲೇ ಎಲ್ಡಾ ಮಾಡ್ಕ್ಯಂಬುಟ್ಟ’-ಎಂದು ಶಿವೇಗೌಡ ಪ್ರತಿಯಾಗಿ ಹೇಳಿದ. ಎರಡು ಕಡೆಯವರೂ ಹುರುಪಿನಿಂದ ತಿಪಟೂರಿಗೆ ಹೋಗಿಬರುತ್ತಿದ್ದರು. ಅಪ್ಪಣ್ಣಯ್ಯ ಎಲ್ಲರಿಗಿಂತ ಮುಂಚೆ ಗಾಡಿಯಿಂದ ಇಳಿದು ತಿಪಟೂರಿನ ಹೋಟೆಲಿಗೆ ಹೋಗುತ್ತಿದ್ದ. ಚೆನ್ನಿಗರಾಯರು ತಮ್ಮನಿಗಿಂತ ಎಂದೂ ಹಿಂದೆ ಬೀಳಲಿಲ್ಲ. ಶಿವೇಗೌಡ ರಾಗಿರೊಟ್ಟಿ ಹುಚ್ಚೆಳ್ಳುಪುರಿಗಳಲ್ಲೇ ಕೋರ್ಟು ಕೆಲಸ ಮಾಡಿಕೊಂಡು ಹಿಂತಿರುಗುತ್ತಿದ್ದ. +ಜಜ್‌ಮೆಂಟಿನ ದಿನ ಎರಡು ಕಡೆಯವರೂ ಗಾಡಿ ಹೂಡಿಕೊಂಡು ಹೋದರು. ಗಂಗಮ್ಮ ಎದೆಯ ಮೇಲೆ ಕೈ ಇಟ್ಟುಕೊಂಡು ಜಡ್ಜಿಗಳ ತೀರ್ಮಾನವನ್ನು ಕೇಳಿದಳು; ಶಿವೇಗೌಡನಿಂದ ಇವರು ಹಣ ಪಡೆದದ್ದು ಉಂಟು. ಅದಕ್ಕೆ ಬಡ್ದಿ, ಬಡ್ಡಿಯ ಬಡ್ಡಿ, ಅವನ ಕೋರ್ಟು ಖರ್ಚುಗಳು ಸೇರಿ ಐದೂವರೆ ಸಾವಿರ ರೂಪಾಯಿಗಳನ್ನು ಇವರು ಕೋರ್ಟಿಗೆ ಕಟ್ಟಬೇಕು. ಇಲ್ಲದಿದ್ದರೆ ಕೋರ್ಟಿನವರು ಜಮೀನೆಲ್ಲವನ್ನು ಹರಾಜು ಮಾಡಿ ಸಾಲಗಾರನ ಗಂಟು ತೀರಿಸುತ್ತಾರೆ. ‘ನಿನ್ ಹೆಂಡ್ರ ಬಳೆ ಕುಕ್ಕ, ಸೂಳೆಮಗನೆ’-ಎಂದು ಜಡ್ಜಿಗಳನ್ನು ಬೈಯಬೇಕೆಂದು ಗಂಗಮ್ಮನ ನಾಲಿಗೆಗೆ ಬಂದರೂ ಕೋರ್ಟಿನ ಬಾಗಿಲಿನಲ್ಲಿಯೇ ಇದ್ದ ಪೋಲೀಸಿನವರ ನೆನಪಾಗಿ ಅವಳು ಸುಮ್ಮನಾದಳು. +ಕೋರ್ಟಿನಿಂದ ಹೊರಗೆ ಬಂದಮೇಲೆ ಲಾಯರ್ ಮಹಾಂತಯ್ಯನವರು ಹೇಳಿದರು: ‘ತುಮಕೂರು ಕೋರ್ಟಿಗೆ ಅಪೀಲ್ ಹೋಗಬಹುದು. ದುಡ್ದು ಖರ್ಚಾಗುತ್ತೆ. ತಂದಿದೀರಾ?’ +‘ಲಾಯ್ರು ಸ್ವಾಮಿಯೋರೆ, ನನ್ನ ಮನೇಲಿದ್ದ ಚಿನ್ನ ಬೆಳ್ಳಿ, ಪಾತ್ರೆ ಪಡಗವೆಲ್ಲ ಅಡೂ ಇಟ್ಟಿದೀನಿ. ಗಂಡ ಸತ್ತ ಮುಂಡೆ ನಾನೆಲ್ಲಿ ದುಡ್ದು ತರ್ಲಿ?’ +ಅಷ್ಟರಲ್ಲಿ ಶಿವೇಗೌಡನ ಕಡೆಯ ಲಾಯರು ಅಲ್ಲಿಗೆ ಬಂದರು. ಈ ಇಬ್ಬರು ಲಾಯರೂ ಇಂಗ್ಲೀಷಿನಲ್ಲಿ ಏನೇನೋ ಮಾತನಾಡಿದ ಮೇಲೆ ಗಂಗಮ್ಮನ ಕಡೆಯವರು ಹೇಳಿದರು: ‘ನೋಡಿ ಅಮ್ಮಾ, ಶಿವೇಗೌಡನಿಂದ ನಿಮಗೆ ಇನ್ನೂ ಒಂದಿಷ್ಟು ಸಾಲ ಕೊಡಿಸ್ತಾರಂತೆ. ನಿನ್ನ ಸಾಲ ನೀನು ತೀರಿಸ್ಕ. ನಮ್ಮದೇನೂ ಇಲ್ಲ ಅಂತ ಜಮೀನೆಲ್ಲ ಅವನಿಗೇ ಬರೆದುಕೊಟ್ಟುಬಿಡ್ತೀರಾ? ನಿಮಗೂ ಕೊನೆಗೆ ಅನ್ಯಾಯವಾಗೂದು ಬೇಡ.’ +‘ಜಮೀನ್ ಕಳ್‌ಕಂಡು ಹೊಟ್ಟೇಗೇನು ಮಾಡ್ಲಿ ಲಾಯ್ರು ಸ್ವಾಮಿಯೋರೇ?’-ಗಂಗಮ್ಮ ಕೇಳಿದಳು. ಬಾಯಲ್ಲಿ ಹೊಗೆಸೊಪ್ಪಿನ ರಸ ತುಂಬಿದ್ದುದರಿಂದ ಚೆನ್ನಿಗರಾಯರು ಸುಮ್ಮನಿದ್ದರು. +‘ಇಲ್ದೆ ಇದ್ರೆ ಮೇಲಿನ ಕೋರ್ಟಿಗೆ ಹೋಗಬೇಕು. ಅದುಕ್ಕೆ ಸಾವಿರಾರು ರೂಪಾಯಿ ಬೇಕು. ದುಡ್ಡು ಹೊಂದುಸ್ತೀನಿ ಅನ್ನೋ ಧೈರ್ಯವಿದ್ರೆ ಬೇರೆ ಮಾತು.’ +ಇನ್ನು ಬೇರೆ ದಾರಿ ಕಾಣಲಿಲ್ಲ. ಶಿವೇಗೌಡನನ್ನು ಅಲ್ಲಿಗೇ ಕರೆಸಿದರು. ತಾನೇ ಇನ್ನೂ ಎರಡು ಸಾವಿರ ಕೊಡುವುದಾಗಿ ಅವನು ಒಪ್ಪಿಕೊಂಡ. ಕೋರ್ಟಿನ ಮೂಲಕ ಹರಾಜು ಮಾಡಿದರೆ ತನ್ನನ್ನು ಬಿಟ್ಟು ಆ ಜಮೀನನ್ನು ಕೂಗುವವರು ಊರಿನಲ್ಲಿ ಮತ್ತೆ ಯಾರಾದರೂ ಹುಟ್ಟಿಕೊಂಡಾರೆಂಬ ಭಯ ಅವನಿಗೆ. ಗಂಗಮ್ಮ ದಿಕ್ಕು ತೋಚದವಳಾಗಿದ್ದಳು. ಎರಡು ಸಾವಿರ ರೂಪಾಯಿಗಳನ್ನು ಅವನು ಅಲ್ಲಿಯೇ ಕೊಪ್ಪರಿ ಅಂಗಡಿಗೆ ಹೋಗಿ ತಂದು ಕೊಟ್ಟ. ಇಬ್ಬರು ಲಾಯರೂ ಸೇರಿ ಕಾಗದ ಬರೆದು ತೀರ್ಮಾನ ಮಾಡಿದರು. ಮಹಾಂತಯ್ಯನವರ ಕೊನೆಯ ಫೀಜು ನೂರು ರೂಪಾಯಿಗಳನ್ನು ಕೊಡಬೇಕಾಗಿತ್ತು. ಅದನ್ನು ರೇವಣ್ಣಶೆಟ್ಟಿ ಕೊಟ್ಟಿಲ್ಲವೆಂದು ಅವರು ಹೇಳಿದರು. +‘ನಿಮಗೆ ಅಂತ ಒಟ್ಟು ಎಂಟು ನೂರು ರೂಪಾಯಿ ಕೊಟ್ಟಿದೀನಿ ಸ್ವಾಮಿಯೋರೇ’-ಎಂದು ಗಂಗಮ್ಮ ಆಣೆ ಇಟ್ಟು ಹೇಳಿದಳು. +‘ಒಟ್ನಲ್ಲಿ ನನಗೆ ನೂರೈವತ್ತು ಮಾತ್ರ ಬಂದಿದೆ’-ಅವರೆಂದರು. +ಜಜ್‌ಮೆಂಟಿನ ದಿನ-‘ನೀವು ಗಾಡೀಲಿ ನಡೀರಿ, ನಾನು ಬ್ಯಳಿಗ್ಗೆ ಮೋಟರಿನಲ್ಲಿ ಬತ್ತೀನಿ’ ಎಂದು ಹೇಳಿದ್ದ ರೇವಣ್ಣಶೆಟ್ಟಿ ಬರಲಿಲ್ಲ. ಅಂತೂ ಇವರು ಲಾಯರಿಗೆ ನೂರು ರೂಪಾಯಿ ಕೊಟ್ಟರು. ಮರುದಿನ, ಮುಂದಿನ ಕಾಗದ ಪತ್ರಗಳನ್ನು ರಿಜಿಸ್ಟರ್ ಮಾಡಿಸಿದ ಮೇಲೆ ಗಾದಿ ಕಟ್ಟಿಸಿಕೊಂಡು ಊರಿಗೆ ಹೊರಟರು. ಸಾವಿರದ ಒಂಬೈನೂರಿ ರೂಪಾಯಿಯ ಗಂಟನ್ನು ಗಂಗಮ್ಮ ತಾನೇ ತೊಡೆಯ ಸಂದಿಯಲ್ಲಿ ಇಟ್ಟುಕೊಂಡು ಕಣ್ಣು ಮಿಟುಕಿಸದೆ ಗಾಡಿಯಲ್ಲಿ ಕೂತು ಊರಿಗೆ ಬಂದಳು. +ಊರಿಗೆ ಬಂದ ಮೇಲೆ ಅವಳು ಕೋರ್ಟಿನ ತೀರ್ಮಾನವನ್ನು ಯಾರ ಕೈಲೂ ಹೇಳಲಿಲ್ಲ. ಆದರೆ ಶಿವೇಗೌಡ ಹೇಳದೆ ಯಾಕೆ ಬಿಟ್ಟಾನು? ಸುದ್ದಿ ತಿಳಿಯುವುದೇ ತಡ, ಇವರು ಕೋರ್ಟಿನ ಖರ್ಚಿಗೆಂದು ಐವತ್ತು ನೂರರಂತೆ ಕಾಗದ ಬರೆದುಕೊಟ್ಟು ತಂದಿದ್ದ ಸಾಲಗಾರರೆಲ್ಲ ಶೆಡ್ಡಿಗೆ ನುಗ್ಗಿದರು. ಒಟ್ಟು ಎಂಟು ನೂರು ರೂಪಾಯಿ ಸಾಲಕ್ಕೆ ಹೋಯಿತು. ಉಳಿದದ್ದನ್ನು ಗಂಗಮ್ಮ ತನ್ನ ಹಾಸಿಗೆಯ ದಟ್ಟದ ಕೆಳಗೆ ಹಾಕಿಕೊಂಡು, ಅದರ ಮೇಲೆ ಎಚ್ಚರದಿಂದ ಮಲಗುತ್ತಿದ್ದಳು. ಒಂದು ದಿನ ರೇವಣ್ಣಶೆಟ್ಟಿಯ ಶೆಡ್ಡಿಗೆ ಹೋಗಿ ಕೇಳಿದಳು: ‘ರೇವಣ್ಣ, ನೀನು ಲಾಯರಿಗೆ ಪೂರ್ತಿ ದುಡ್ಡು ಕೊಟ್ಟೇ ಇಲ್ವಂತೆ. ನನ್ನತಾವ ನೂರು ರೂಪಾಯಿ ತಗಂಡ್ರು.’ +‘ಯಾವನು ಏಳ್ದೋನು?’ +‘ಲಾಯ್ರೇ ಹಾಗಂದ್ರು.” +‘ಮಿಂಡ್‌ರಿಗೆ ಉಟ್ಟಿದ ನನ್ಮಗನ್ನ ತಂದು. ನಡೀರಿ, ನನ್ನೆದ್ರಿಗ್ ಹಂಗಂದ್ರೆ ಯಕ್‌ಡ ತಗಂಡ್ ಹ್ವಡ್‌ದುಬಿಡ್ತೀನಿ ಕಳ್ಳ ನನ್ ಹೆಂಡ್ತಿಮಗುಂಗೆ’-ಎಂದು ರೇವಣ್ಣಶೆಟ್ಟಿ ಕೆಂಪು ಕಣ್ಣುಗಳನ್ನು ಹೊರಳಿಸಿದ. ಅದೇನೋ ಗಂಗಮ್ಮನಿಗೆ ಮುಂದೆ ಮಾತು ಬೆಳೆಸುವ ಇಚ್ಛೆಯಾಗಲಿಲ್ಲ. ಭಯವೋ ಬೇಸರವೋ, ಅಥವಾ ರೇವಣ್ಣಶೆಟ್ಟಿಯ ಸತ್ಯಸಂಧತೆಯ ಬಗೆಗೆ ನಂಬಿಕೆಯೋ, ಸುಮ್ಮನಾದಳು. +‘ರೇವಣ್ಣಾ, ಗೆಲ್ಲಿಸ್ಕೊಡ್ತೀನಿ ಅಂದಿದ್ರಲಾ ಲಾಯ್ರು, ಅದ್ಯಾಕ್ ಸೋತ್ ಹೋಯ್ತು?’ +‘ಜಡ್ಜಿಗಳಿಗೆ ಲಂಚ ತಿನ್ಸಿದ್ರಂತೆ ಕಣ್ರಿ, ಕಂಡೋನ ಹೆಂಡ್ತಿ ಹೇಲ. ಶಿವೇಗೌಡ ಅವ್ರಿಗೇ ಎಲ್ಡು ಸಾವಿರ ರೂಪಾಯಿ ಕೊಟ್ನಂತೆ ಹಿಂದಿನ ದಿನ. ಅದುಕ್ಕೆ ಅವ್ನು ಗಾಡಿ ಕಟ್ಕಂಡು ಒಂದಿನ ಮದ್ಲೇ ಹೋಗಿರ್ಲಿಲ್ವಾ? ನಂಗ್ ಗೊತ್ತಾಯ್ತು. ನಮ್‌ತಾವ ಎಲ್ಡು ಸಾವಿರ ಇದ್ದಿದ್ರೆ ನಾವು ಕೊಡಬೈದಾಗಿತ್ತು. ನಿಮ್‌ತಾವ ಇಲ್ಲ ಅಂತ ನಂಗ್ ಗೊತ್ತಿತ್ತು. ಅದ್ಕೇ ನಾನು ಜಡ್ಜ್‌ಮಿಂಟಿನ ದಿನ ಬರ್ಲಿಲ್ಲ.’ +ಗಂಗಮ್ಮ ಸುಮ್ಮನೆ ತನ್ನ ಶೆಡ್ಡಿಗೆ ಹೋದಳು. +– ೨ – +ಎಷ್ಟೋ ಜನರು ಗಂಗಮ್ಮನ ಶೆಡ್ಡಿಗೆ ಹೋಗಿ ಶಿವೇಗೌಡನನ್ನೂ ಕೋರ್ಟಿನ ಜಡ್ಜಿಗಳನ್ನು ಬೈದು ಅವಳಿಗೆ ಅನುತಾಪ ವ್ಯಕ್ತಪಡಿಸಿದರು. ಒಂದು ದಿನ ಬೆಳಿಗ್ಗೆ ಅಯ್ಯಾಶಾಸ್ತ್ರಿಗಳು ಶಿವೇಗೌಡನನ್ನು ಬೈದು, ‘ಗಂಗಮ್ಮಾ, ನಮ್ಮನೆಯೋಳು ನಿನ್ನ ಕೈಲೆ ಮಾತಾಡಬೇಕು ಅಂತಿದ್ಲು ಬಾ, ಬರೂವಂತೆ’-ಎಂದು ತಮ್ಮ ಶೆಡ್ಡಿಗೆ ಕರೆದುಕೊಂಡು ಹೋದರು. ಶಾಸ್ತ್ರಿಗಳ ಹೆಂಡತಿಯೂ ಸೇರಿ ಮತ್ತೆ ಶಿವೇಗೌಡನನ್ನು ಶಪಿಸಿದರು. ಆ ಜಡ್ಜಿಯ ಹೆಂಡತಿ ಮಕ್ಕಳೆಲ್ಲ ಸಾಯುವುದು ಖಂಡಿತವೆಂದು ಶಾಸ್ತ್ರಿಗಳು ಪಂಚಾಂಗ ನೋಡಿ ಭವಿಷ್ಯ ನುಡಿದರು. +‘ಗಂಗಕ್ಕಾ, ನೀನಿಲ್ಲೇ ಮಡಿ ಉಟ್ಕಂಡು ಮಕುಟ ಸುತ್ತಿಕಂಡ್ ಊಟ ಮಾಡು. ನಿಂಗ್ಯಾರು ಅಯ್ಯೋ ಅನ್ನೋರು ಪಾಪ!’-ಎಂದು ಶಾಸ್ತ್ರಿಗಳ ಹೆಂಡತಿ ಸುಬ್ಬಮ್ಮ ಬಲವಂತ ಮಾಡಿದಾಗ ಗಂಗಮ್ಮ ತನ್ನ ಸೊಸೆಯನ್ನು ಮನಃಪೂರ್ವ ಬಯ್ಯಲು ಪ್ರಾರಂಭಿಸಿದಳು: ‘ತಾಟಗಿತ್ತಿ ಮುಂಡೆ ನಮ್ಮನೆಗೆ ಕಾಲಿಟ್ಳು ನೋಡು. ಕಷ್ಟ ಬರೂಕ್ ಶುರುವಾಯ್ತು. ಈಗ ಜಮೀನೆಲ್ಲ ಹೋಯ್ತು. ಹುಟ್ತಾ ಹುಟ್ತಾ ಮಕ್ಕಳ ಪುಣ್ಯ, ಬತ್ತಾ ಬತ್ತಾ ಸ್ವಸೆ ಪುಣ್ಯ ಅನ್ನೂ ಮಾತು ಸುಳ್ಳೆ?’ +ಅವಳು ಸ್ನಾನ ಮಾಡಿ ಮಕುಟ ಸುತ್ತಿ ವಿಭೂತಿ ಇಟ್ಟು ಮೂರು ಆಚಮನ ಹೊತ್ತಿಗೆ ಶಾಸ್ತ್ರಿಗಳು ಅವಳ ಶೆಡ್ದಿಗೆ ಹೋಗಿ ಅಪ್ಪಣ್ಣಯ್ಯನನ್ನು ಕರೆದುಕೊಂಡು ಬಂದರು. ಶಾಸ್ತ್ರಿಗಳ ದೊಡ್ದಪ್ಪನ ಮೊಮ್ಮಗ ಅಣ್ಣಾಜೋಯಿಸ ಅಷ್ಟು ಹೊತ್ತಿಗೆ ಬಂದ. ಇವರಿಬ್ಬರಿಗೂ ಸೇರಿಸಿಯೇ ಸುಬ್ಬಮ್ಮ ಅಡಿಗೆ ಮಾಡಿದ್ದಳು. ಬೂದುಗುಂಬಳಕಾಯಿಯ ಮಜ್ಜಿಗೆ ಹುಳಿ, ಹಿಟ್ಟು, ಅನ್ನ ಮಜ್ಜಿಗೆಗಳನ್ನು ಅಡಿಕೆ ಪಟ್ಟಿಯಲ್ಲಿ ಬಡಿಸಿ, ಅವಳು ಉಪಚರಿಸುತ್ತಿರುವಾಗ ಅಯ್ಯಾಶಾಸ್ತ್ರಿಗಳು ಮಾತು ತೆಗೆದರು: ‘ರಾಮಣ್ಣೋರು ಇರಬೇಕಾಗಿತ್ತು. ಅದರ ಕತೆ ಬ್ಯಾರೆಯೇ ಇತ್ತು. ನಾನು ಇವಳ ಕೈಲಿ ಎಷ್ಟು ಹೇಳ್ಕಂಡು ಪೇಚಾಡ್ತಿರ್ತೀನಿ ಕೇಳು. ಅವರು ಹೋದದ್ದು ನಮ್ಮೂರ ಕಲಶ ಬಿದ್‌ಹೋದಾಗೆ ಆಯ್ತು.’ +‘ಇಂಥ ಸ್ವಸೆಮುಂಡೇರು ಬತ್ತಾರೆ ಅಂತ ನನ್ನ ಹಣೇಲಿ ಬರ್‌ದಿರೂವಾಗ ಅವರು ಹ್ಯಾಗೆ ಇರ್ತಾರೆ ಹೇಳಿ.’ +ಸುಬ್ಬಮ್ಮ ಕೇಳಿದಳು: ‘ಗಂಗಕ್ಕಾ, ನಿಂಗೆ ಮುಟ್ಟು ನಿಂತು ಎರಡು ವರ್ಷ ಆಯ್ತಲ್ವೆ?’ +‘ಮೂರು ವರ್ಷವಾಯ್ತು.’ +ಶಾಸ್ತ್ರಿಗಳು ಎಂದರು: ‘ನೋಡ್ದ್ಯಾ, ನೀನೂ ಬಾಳಿದೆ ಬದುಕಿದೆ. ನೀನು ಮಾಡ್ದೆ ಇದ್ದ ವ್ರತ ಕತೆ ದಾನ ಧರ್ಮ ಯಾವುದೂ ಇಲ್ಲ. ಮುಟ್ಟು ನಿಂತಮ್ಯಾಲೆ ಹೆಂಗಸರು ಋಷಿ ಪಂಚಮಿ ವ್ರತ ಒಂದು ಮಾಡಿ ಮುಗಿಸಬೇಕು. ನಿನ್ನ ಕಷ್ಟ ಎಲ್ಲ ಬಿಡುಗಡೆಯಾಗುತ್ತೆ.’ +ಅಣ್ಣಾಜೋಯಿಸ, ಚಿಕ್ಕಪ್ಪನಿಗಿಂತ ಶಾಸ್ತ್ರ ಮಂತ್ರಗಳನ್ನು ಹೆಚ್ಚು ಕಲಿತವನು. ಶಿಂಧ ಘಟ್ಟದ ಸೂರಣ್ಣಜೋಯಿಸರ ಹತ್ತಿರ ಪಾಠ ಹೇಳಿಸಿಕೊಂಡವನು. ಋಷಿಪಂಚಮಿ ವ್ರತದ ಮಹಿಮೆಯನ್ನು ಮಂತ್ರ ಸಮೇತ ಹೇಳಿದ. +‘ಹ್ಯಾಗಾದ್ರೆ ಹಾಗಾಗ್ಲಿ, ನೀನು ಅದೊಂದು ಮಾಡಿಬಿಡು. ಇಲ್ಲೇ ಶೆಡ್ಡಿನಲ್ಲಿದ್ದರೂ ಪರವಾಗಿಲ್ಲ. ನಿಂಗೆ ಬೇಕಾದ ಸಹಾಯ ನಾನು ಮಾಡ್ತೀನಿ. ಅಣ್ಣಪ್ಪನ ಹೆಂಡ್ತಿ ಯಂಕಟಲಕ್ಷ್ಮಿ ಇದಾಳೆ. ಅದುಕ್ಕೇ ಬ್ಯಾರೆ ಒಂದು ಚಪ್ಪರ ಹಾಕಿಸ್‌ಬಿಟ್ರೆ ಆಗುತ್ತೆ. ನಮ್ಮ ಶೆಡ್ಡಿನ ಮುಂದೆ ದೊಡ್ಡಾದಾಗಿ ಹಾಕ್ಸಾಣ. ನಿಮ್ಮ ಶೆಡ್ಡಿನ ಹತ್ರ ಇತರೇ ಜನಗಳ ಕಾಟ. ಮಡಿ ಮೈಲಿಗೆ ಸರಿಯಾಗುಲ್ಲ’-ಸುಬ್ಬಮ್ಮ ಎಂದಳು. +‘ಮಾಡಣೇನೋ ಅಪ್ಪಣ್ಣಯ್ಯ?’-ಹಿಟ್ಟು ನುಂಗುವುದನ್ನು ಮುಗಿಸಿ ಮಜ್ಜಿಗೆ ಹುಳಿಯಲ್ಲಿ ಅನ್ನ ಕಲಸುತ್ತಿದ್ದ ಮಗನನ್ನು ಕೇಳಿದಳು. ಚನ್ನೇನಹಳ್ಳಿಯ ವೆಂಕಟಾಚಲಯ್ಯನವರ ತಾಯಿ ಋಷಿಪಂಚಮಿ ಮಾಡಿದ್ದಾಗ ಊಟಕ್ಕೆ ಅಪ್ಪಣ್ಣಯ್ಯನೂ ಹೋಗಿದ್ದ. ಒಬ್ಬಟ್ಟು, ಮಾವಿನಕಾಯಿ ಅನ್ನ, ಮೊದಲಾಗಿ ಮೂಗು ನಾಲಿಗೆಗಳೆರಡರಲ್ಲೂ ನೀರು ಬರುವ ಹಾಗೆ ಅಡಿಗೆ ಮಾಡಿಸಿದ್ದರು. ಅವನಿಗೆ ತಕ್ಷಣ ಅದರ ನೆನಪಾಗಿ, ಮುಂದಿದ್ದ ಮಜ್ಜಿಗೆಯ ಹುಳಿ ರಾಗಿ ಮುದ್ದೆಗಳ ಜಾಗದಲ್ಲಿ ಮಾವಿನಕಾಯಿಯ ಅನ್ನ ಮತ್ತು ಒಬ್ಬಟ್ಟಿನ ತೆಕ್ಕೆಗಳು ಕಾಣಿಸಿದುವು. +‘ಮಾಡಾಣ ಕಣಮ್ಮ. ಆ ಯಂಕ್ಟಾಚಲಯ್ಯ್ನೋರಿಗಿಂತ ನಾವೇನು ಕಮ್ಮಿ?’ +ಸರಿ, ವ್ರತ ನಿಶ್ಚಯವಾಯಿತು. ಸುಬ್ಬಮ್ಮ ಎಂದರು: ‘ಗಂಗಕ್ಕ ಅಂದ್ರೆ ಏನು ಅಂತೀರಾ? ಆಡಿದ್ದೊಂದೇ ಮಾತು. ಬ್ರಹ್ಮದೇವರ ಅಪ್ಪಾ ಬಂದ್ರೂ ಅವಳು ಆಡಿದ ಮಾತು ಬ್ಯಾರೆ ಮಾಡುಲ್ಲ.’ +ಗಂಗಮ್ಮ ಮಾತು ಬದಲಿಸಲಿಲ್ಲ. ಬದಲಿಸಿದರೆ ಅವಳ ಹೆಸರೇನಾಗಬೇಕು? ಅಣ್ಣಾಜೋಯಿಸ ಊಟವಾದ ಮೇಲೆ ಕೂತು ಪಂಚಾಂಗ ನೋಡಿ, ಎರಡೂ ಕೈ ಬೆರಳುಗಳ ಗೆರೆಗಳ ಸಹಾಯದಿಂದ ಎಣಿಸಿ ದಿನ ನಿಶ್ಚಯಿಸಿದ. ಚೆನ್ನೇನಹಳ್ಳಿಯ ವೆಂಕಟಾಚಲಯ್ಯ ತನ್ನ ತಾಯಿಗೆ ಮಾಡಿಸಿದಂತೆ ಗೋಪಾಳದ ಋಷಿಪಂಚಮಿ ಮಾಡುವುದು ಗಂಗಮ್ಮನ ಘನತೆಗೆ ಸಲ್ಲುವುದಿಲ್ಲ. ದೊಡ್ಡದಾಗಿಯೇ ಸಾಮಾನುಗಳನ್ನು ತರಬೇಕು. ಅಯ್ಯಾಶಾಸ್ತ್ರಿಗಳ ಮನೆಯ ರಾಗಿಕರುಕಿನ ಶಾಯಿ ಮತ್ತು ಸ್ಟೀಲುಗಳಿಂದ ಸಾಮಾನುಗಳ ಪಟ್ಟಿ ಮಾಡಿಸಿದರು. ಊರಿನಲ್ಲಿರುವ ಇಬ್ಬರು ಪುರೋಹಿತರಿಗೂ ರೇಷ್ಮೆಯ ಮಗುಟ, ಮೇಲುಕೋಟೆ ಅಂಚಿನ ಪಂಚೆ. ಅವರ ಹೆಂಡತಿಯರಿಗೆ ಐವತ್ತು ಐವತ್ತು ರೂಪಾಯಿಗಳ ಸೀರೆ. ದಾನಕ್ಕೆ ಮನೆಯಲ್ಲಿರುವ ಹಸುವೇ ಆಗುತ್ತೆ. ಇನ್ನು ಸಣ್ಣ ಅಕ್ಕಿ, ಬೇಳೆ, ಸಕ್ಕರೆ, ರವೆ ಮೊದಲಾದುವೆಲ್ಲ ಬೇಕು. ಒಟ್ಟಿನಲ್ಲಿ ಸಾಮಾನು ತರಲು ತಿಪಟೂರಿಗೆ ಗಾಡಿ ಕಟ್ಟಿಸಿಕೊಂಡು ಹೋಗಬೇಕು. ಜೊತೆಗೆ ಅಣ್ಣಾಜೋಯಿಸ, ಅಯ್ಯಾಶಾಸ್ತ್ರಿಗಳು, ಇಬ್ಬರೂ ಹೋಗುವುದೆಂದು ನಿಶ್ಚಯವಾಯಿತು. ಅಪ್ಪಣ್ಣಯ್ಯನಿಗೆ ಮತ್ತೊಮ್ಮೆ ತಿಪಟೂರಿಗೆ ಹೋಗುವ ಯೋಗ ಒದಗಿತು. +– ೩ – +ಭರ್ಜರಿಯಾಗಿ ಋಷಿಪಂಚಮಿ ನಡೆಯಿತು. ಎಂಟು ದಿನ ಕಳೆದ ಮೇಲೆ ಎಲ್ಲರೂ ಊರನ್ನು ಪ್ರವೇಶಿಸುವುದೆಂದು ನಿರ್ಧಾರವಾಯಿತು. ವ್ರತಕ್ಕೆ ತಂದಿದ್ದ ರವೆ ಸಕ್ಕರೆ ತುಪ್ಪಗಳು ಇನ್ನೂ ಉಳಿದಿದ್ದುವು. ಗಂಗಮ್ಮ ಒಂದು ದಿನ ಸೊಸೆಗೆ ಹೇಳಿಬಿಟ್ಟಳು: ‘ನೀನು ಯಾವತ್ತು ಈ ಮನೆಗೆ ಕಾಲಿಟ್ಟೆಯೇ ತಾಟಗಿತ್ತಿ, ಮನೆ ಹಾಳಾಯ್ತು. ಜಮೀನೆಲ್ಲ ಹಾಳಾಯ್ತು. ಊರೊಳಕ್ಕೆ ಬರುವಾಗ ನೀನು, ನಿನ್ನ ಮಕ್ಳು, ಬ್ಯಾರೆ ಇರಿ. ನಾವು ಮನ್ಲಿರ್ತೀವಿ.’ +ಅತ್ತೆಯ ಮಾತಿನ, ‘ನೀನು, ನಿನ್ನ ಮಕ್ಳು’ ಎಂಬುದು ನಂಜಮ್ಮನಿಗೆ ತಕ್ಷಣ ಅರ್ಥವಾಗಲಿಲ್ಲ. ಅವಳು ಕೇಳಿದಳು: ‘ಯಾವ ಮನ್ಲಿರ್ತೀರಿ?’ +‘ಯಾವ ಮನ್ಲೇ? ನನ್ನ ಗಂಡ ಕಟ್ಸಿದ್ದ ಮನ್ಲಿರ್ತೀವಿ.’ +‘ಶಿವೇಗೌಡ ನಿಮ್ಮುನ್ನ ಮನೆ ಒಳಕ್ಕೆ ಹೋಗುಕ್ಕೆ ಬಿಟ್ರೆ ತಾನೆ?’-ಎನ್ನುವ ಮಾತು ನಾಲಿಗೆಯಲ್ಲಿ ಬಂದಿತಾದರೂ, ಅವಳು ಬಾಯಿಬಿಟ್ಟು ಹಾಗೆ ಹೇಳಲಿಲ್ಲ. ಈ ಸಂಸಾರಕ್ಕೆ ಸೇರಿದ ಜಮೀನೆಲ್ಲವೂ ಕೋರ್ಟಿನಲ್ಲಿ ಹೋಗುತ್ತದೆಂದು ಅವಳ ಅಂತರಾತ್ಮವು ಮೊದಲೇ ಸ್ಪಷ್ಟವಾಗಿ ನುಡಿದಿತ್ತು. ಆನಂತರ ಶಿವೇಗೌಡನಿಂದಲೇ ಎರಡು ಸಾವಿರ ರೂಪಾಯಿ ಬರುತ್ತದೆಂದು ಅವಳು ನಿರೀಕ್ಷಿಸಿರಲಿಲ್ಲ. ಬಂದರೂ ಅದರ ಬಗೆಗೆ ವಿವೇಕ ಹೇಳುವ ಗೊಡವೆಗೆ ಹೋಗಲಿಲ್ಲ. ಹೇಳಿದರೆ ಸುಮ್ಮನೆ ಜಗಳ; ಕೆಟ್ಟ ಮಾತುಗಳನ್ನು ಕೇಳಬೇಕಾಗುತ್ತದೆ. ಈಗ ಅವಳು ಆರು ತಿಂಗಳ ಬಸುರಿ. ಗರ್ಭಿಣಿಯರು ಕೆಟ್ಟ ಮಾತು ಕೇಳಬಾರದು, ಕೆಟ್ಟ ಯೋಚನೆ ಮಾಡಬಾರದು, ಸದಾ ಒಳ್ಳೆಯದನ್ನು ಕೇಳುತ್ತಾ ಉಲ್ಲಾಸಚಿತ್ತರಾಗಿರಬೇಕು ಎನ್ನುವುದನ್ನು ಅವಳು ಚಿಕ್ಕವಯಸ್ಸಿನಿಂದಲೇ ಕೇಳಿದ್ದಳು. ಮೊದಲು ಎರಡು ಬಸುರಿಯಲ್ಲಿ ಈ ಮಾತು ಅಷ್ಟಾಗಿ ನೆನಪಿಗೆ ಬಂದಿರಲಿಲ್ಲ. ಈಗ ಇದ್ದಕ್ಕಿದ್ದಹಾಗೆಯೇ ಅದು ಮನಸ್ಸನ್ನು ತುಂಬಿಬಿಟ್ಟಿತು. ದಿನವೂ ಯಾವಾಗಲಾದರೂ ಧ್ರುವಚರಿತ್ರೆ, ಭಕ್ತ ಪ್ರಹ್ಲಾದ, ರಾಮ ಪಟ್ಟಾಭಿಷೇಕದ ಕಥೆಯ ಹಾಡುಗಳನ್ನು ಹೇಳಿಕೊಳ್ಳುವಳು. ಸದಾ ಇಂಥ ಕಥೆಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಳ್ಳುವಳು. +ಆ ದಿನ ಮಧ್ಯಾಹ್ನ ಗಂಡ ಮಲಗಿದ್ದಾಗ ಅತ್ತೆಯ ಆಜ್ಞೆಯನ್ನು ತಿಳಿಸಿ, ಕೇಳಿದಳು: ‘ಬ್ಯಾರೆ ಹೋಗಿ ಅಂದ್ರು. ಎಲ್ಲಿಗೆ ಹೋಗೂದು, ಜೀವನಕ್ಕೆ ಏನು ಮಾಡೂದು, ಯೋಚನೆ ಮಾಡಿದೀರಾ?’ +‘ನಿನ್ನ ಯೋಗ್ತಿ ಕಂಡೇ ನಮ್ಮಮ್ಮ ಹಾಗಂದಿದಾಳೆ. ನೀನು ನನ್ಮಕ್ಳು ಏನು ಬೇಕಾದ್ರೂ ಮಾಡ್ಕಳಿ.’ +‘ನನ್ನ ಯೋಗ್ತಿ ಎಂಥದು ಅಂತ ಊರಿನೋರಿಗೆಲ್ಲ ಗೊತ್ತು. ಈಗ ಅದರ ಮಾತು ಬ್ಯಾಡ. ಮುಂದೆ ಏನು ಮಾಡೂದು ಹೇಳಿ.’ +‘ನಾನ್ಹೇಳ್ಳಿಲ್ವೇನೆ? ನಾನು ನಮ್ಮಮ್ಮನ ಜೊತೆ ಇರ್ತೀನಿ’-ಎಂದು ಶ್ಯಾನುಭೋಗರು ಮುಸುಕು ಹಾಕಿಕೊಂಡು ಮಲಗಿದರು. +ಅವಳಿಗೆ ರೇಗಿತು: ‘ಏನು ಮಾತಾಡ್ತಾ ಇದೀರಾ? ಬುದ್ಧಿ ನ್ಯಟ್ಟಗಿದೆಯೋ ಇಲ್ವೋ?’ +‘ಹೋಗೇ ಕತ್ತೆಮುಂಡೆ, ನನ್ನ ನಿದ್ದೆ ಹಾಳುಮಾಡ್ಯಾಡ.’ +ನಂಜಮ್ಮ ಮತ್ತೆ ಮಾತನಾಡಲಿಲ್ಲ. ತಾವು ಬೇರೆ ಇರುವುದೇ ನಿಶ್ಚಯವೆಂದು ಅವಳು ತಿಳಿದಿದ್ದಳು. ಆದರೆ ಅತ್ತೆ ತನ್ನ ಗಂಡನನ್ನೂ ತನ್ನಿಂದ ಹೀಗೆ ಬಿಡಿಸುತ್ತಾಳೆಂದು ಕಲ್ಪಿಸಿಕೊಂಡಿರಲಿಲ್ಲ. ಇನ್ನು ಜಮೀನೆಲ್ಲ ಹೋದಮೇಲೆ ಅಮ್ಮ ಈ ಮಗನನ್ನು ಎಷ್ಟು ದಿನ ಇಟ್ಟುಕೊಂಡಾಳು ಎನಿಸುತ್ತಲೂ ಇತ್ತು. ಹೇಗಾದರೂ ಇನ್ನು ಮೇಲೆ ಸಂಸಾರದ ಹೊಣೆ ತನ್ನದು, ಮಕ್ಕಳೂ ಸೇರಿ ಎಲ್ಲರನ್ನೂ ಸಾಕುವ ಭಾರ ತನ್ನ ಮೇಲೆ ಬೀಳುತ್ತದೆ ಎಂಬುದು ಅವಳಿಗೆ ಗೊತ್ತು. ಹೇಗೆ ಎಂದು ಮಾತ್ರ ಹೊಳೆಯಲಿಲ್ಲ. ಎಷ್ಟೇ ಕಷ್ಟವಾದರೂ, ಗರ್ಭಿಣಿಯಾದ ತಾನು ಅಳಬಾರದು, ಮನಸ್ಸನ್ನು ಕಲಕಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡಿದ್ದಳು. +ಗಂಡನಿಗೆ ನಿದ್ದೆ ಬಂದಮೇಲೆ ಮಗು ರಾಮಣ್ಣನನ್ನು ಎತ್ತಿಕೊಂಡಳು. ಹೊಟ್ಟೆ ತುಂಬಿ ಬೆಳೆದದ್ದರಿಂದ ಅದನ್ನು ಸೊಂಟಕ್ಕೆ ಎತ್ತಿಕೊಳ್ಳದೆ ಹೆಗಲಿಗೆ ಒರಗಿಸಿಕೊಂಡು, ಬಲಗೈಲಿ ಪಾರ್ವತಿಯ ಕೈ ಹಿಡಿದು ಏರಿಯ ಮೇಲೆ ನಡೆದಳು. ಕೆರೆಯಲ್ಲಿ ನೀರಿರಲಿಲ್ಲ. ಅಂಗಳದಲ್ಲಿ ಗೋಡುಮಣ್ಣು ಕಾದಿತ್ತು. ಏರಿಯ ಧೂಳು ದಾರಿಯಮೇಲೆ ಬಿಸಿಲಿನ ಝಳ ರಾಚುತ್ತಿತ್ತು. ಏದುಸಿರು ಬರುತ್ತಿದ್ದುದರಿಂದ ನಿಧಾನವಾಗಿ ನಡೆದು ಗುಡಿಯ ಪೌಳಿಯ ಬಾಗಿಲನ್ನು ಹೊಕ್ಕಾಗ ಮಾದೇವಯ್ಯನವರು ಆಗ ತಾನೇ ಸ್ನಾನ ಮಾಡಿ ಕಾವಿಪಂಚೆಯನ್ನು ಒಣಗಹಾಕುತ್ತಿದ್ದುದು ಕಾಣಿಸಿತು. ಇಟ್ಟಿಗೆಯ ಒಲೆಯ ಮೇಲೆ ಒಂದು ಮಡಿಕೆಯಲ್ಲಿ ಅನ್ನ ಕುದಿಯುತ್ತಿತ್ತು. ಅವರೇ-‘ಬಾರವ್ವಾ, ಬಾರವ್ವ. ನಾನೇ ನಿಮ್ಮ ಶೆಡ್ಡಿಗೆ ಬರ್‌ಬೇಕು ಅಂತಿದ್ದೆ. ಅತ್ತ್ಯಮ್ಮ ಏನಂತದೋ ಅಂತ ಬರ್ನಿಲ್ಲ’ ಎಂದರು. +‘ಇನ್ನು ಅತ್ತ್ಯಮ್ಮ ಏನೂ ಅನ್ನೂ ಹಾಗಿಲ್ಲ. ನಾನೇ ಬಂದೆ.’ +ಈ ಸಂಸಾರದ ವಿಷಯದಲ್ಲಿ ಮಾದೇವಯ್ಯನವರಿಗೆ ಮಾತ್ರವಲ್ಲ, ಊರಿನ ಸಮಸ್ತರಿಗೂ ತಿಳಿಯದಿದ್ದ ಒಂದು ವಿವರವೂ ಇರಲಿಲ್ಲ. ಆದುದರಿಂದ ಯಾವುದನ್ನೂ ಅವರಿಗೆ ಸ್ವತಃ ಹೇಳುವ ಅಗತ್ಯವಿರಲಿಲ್ಲ. ತನ್ನನ್ನು ಬೇರೆ ಹೋಗುವಂತೆ ಅತ್ತೆ ಹೇಳಿದುದು, ಮತ್ತು ತಾನು ಕೇಳಿದುದುಕ್ಕೆ ಗಂಡ ಹೇಳಿದ ಉತ್ತರ, ಎರಡನ್ನು ಮಾತ್ರ ಅವಳು ಹೇಳಿದಳು. +‘ಎಲ್ಡು ಸಾವಿರ ಬಂತಲ್ಲ, ಅದರಲ್ಲಿ ಸಾಲ ತೀರಿಸಿ ಒಂದು ಸಾವಿರ ಉಳ್ಕಂಡಿತ್ತಂತೆ. ಜೋಯಿಸನ ಕೈಗೆ ಸಿಕ್ಕಿ ಆ ಯಮ್ಮ ಪಂಚಮಿಹಬ್ಬ ಅಂತ ಮುಳುಕು ಹಾಕಿ ದಂಡ ತೆರುವಾಗ ನೀನ್ಯಾಕೆ ಸುಮ್ನಿದ್ದಿ?’ +‘ಅಯ್ನೋರೆ, ಎಲ್ಲಾ ಹೋದ್‌ಮೇಲೆ ಇದೂ ಹೋಯ್ತು. ನಾನು ಬ್ಯಾಡ ಅಂದಿದ್ರೆ ಅವ್ರು ಕೇಳ್ತಿರ್‍ಲಿಲ್ಲ. ಸುಮ್ನೆ ಯಾಕ್ ಜಗಳ?’ +‘ನಿಮ್ಮ ಮಾತೂ ವೈನ.’ +ಅಯ್ಯನವರು ಅನ್ನ ಮತ್ತು ಅವರೇಬೇಳೆಯ ಎಸರುಗಳನ್ನು ಅಲ್ಯುಮಿನಿಯಂ ತಟ್ಟೆಗೆ ಹಾಕಿಕೊಂಡು ಉಂಡರು. ಪ್ರತಿದಿನ ಮಧ್ಯಾಹ್ನವೂ ಅವರು ಲಿಂಗಾಯತರ ಮನೆಗಳಲ್ಲಿ ಕಂತೆಭಿಕ್ಷೆ ಮಾಡಿ ಊಟ ಮುಗಿಸುತ್ತಿದ್ದರು. ಆದರೆ ಮಧ್ಯಾಹ್ನ ಸ್ವಾಮಿ ನೆತ್ತಿಯಿಂದ ವಾಲುವ ಹೊತ್ತಾದ ಮೇಲೆಯಾದರೆ ಭಿಕ್ಷಕ್ಕೆ ಹೋಗುತ್ತಿರಲಿಲ್ಲ. ಈ ದಿನ ಸೋಮವಾರವಾಗಿದ್ದುದರಿಂದ ದೂರದ ಹಳ್ಳಿಗಳಿಗೆ ಭಿಕ್ಷಕ್ಕೆ ಹೋಗಿದ್ದು, ಬರುವುದು ತಡವಾಗಿ, ತಾವೇ ಅಡಿಗೆ ಮಾಡಿಕೊಂಡಿದ್ದರು. ನಂಜಮ್ಮ ಮತ್ತು ಪಾರ್ವತಿಯರಿಗೆ ತಿನ್ನಲು ಒಂದು ಚೂರು ಕಾಯಿ ಬೆಲ್ಲಗಳನ್ನು ಕೊಟ್ಟು, ಅವರೂ ಯೋಚನೆ ಮಾಡುತ್ತಾ ಒಂದು ಗಳಿಗೆ ಸುಮ್ಮನೆ ಕುಳಿತರು. +‘ಅಯ್ನೋರೆ, ನನ್ನ ತೌರುಮನೆ ವಿಷಯ ನಿಮಗೆ ಗೊತ್ತಿದೆಯೋ ಇಲ್ಲವೋ. ನಮ್ಮ ಮನೆ ಒಳಗಿಂದು ನಾವಾಗಿಯೇ ಯಾಕೆ ಯಾರಿಗೋ ಹೇಳ್ಕೋಬೇಕು? ನಾನು ಯಾರಿಗೂ ಹೇಳಿಲ್ಲ. ಅತ್ತಿಗೆ ಸ್ವಭಾವ ಚನ್ನಲ್ಲ. ಇನ್ನು ಬಾಣಂತನಕ್ಕಾಗಲಿ ಮತ್ತೆ ಯಾವ ಕಷ್ಟ ಸುಖಕ್ಕಾಗಲೀ ನಾನು ಅಲ್ಲಿಗೆ ಹೋಗುಲ್ಲ. ಇಲ್ಲೇ ಬಾ ಅಂತ ಕರ್ಕಂಡ್ ಬಂದ್ರೆ ನನ್ನ ಅಜ್ಜಿ ಬಂದು ಮಾಡುತ್ತೆ. ಅದಕ್ಕೂ ಎಪ್ಪತ್ತೈದರ ಮೇಲೆ ಆಗಿದೆ. ಕೈಲಾಗುಲ್ಲ. ಆದ್ರೂ ಹೆಣಗುತ್ತೆ. ಆದರೆ ಇರುಕ್ಕೆ ಒಂದು ನೆರಳು, ತಿನ್ನುಕ್ಕೆ ಒಂದು ಹಿಡಿ ದಿನಸಿ ಬೇಕಲ್ಲ. ಅಲ್ಲದೆ ಈ ಪುಣ್ಯಾತ್ಮರೂ ನನ್ನ ಕೈಬಿಟ್ರೆ ಏನು ಮಾಡ್ಲಿ?’ +ಅಯ್ಯನವರು ಯೋಚಿಸಿ ಹೇಳಿದರು: ‘ಚೆನ್ನಯ್ಯ ಎಲ್ಡು ದಿನ್ದಾಗೆ ಹುಡುಕ್ಕಂಡ್ ಬತ್ತೈತೆ. ಅದ ಯೋಚ್ನೆ ಮಾಡ್‌ಬ್ಯಾಡ. ಕುರುಬರಹಳ್ಳಿ ಪಟೇಲ ಗುಂಡೇಗೌಡರು ಗೊತ್ತೈತಲ್ಲ, ಅವರ ಬೆನ್ನುಬಿದ್ರೆ ಬಿಡಾಕಿಲ್ಲ. ಈ ಊರ್ನಲ್ಲಿ ನಿಮ್ಗೆ ಆಗೂ ಜನ ಯಾರೂ ಇಲ್ಲ.’ +ಕುರುಬರಹಳ್ಳಿ ಇವರ ಶ್ಯಾನುಭೋಗಿಕೆಗೆ ಸೇರಿದ ಗ್ರಾಮ. ಊರಿನ ನಲವತ್ತು ಮನೆಯೂ ಒಂದೇ ಜಾತಿ: ಹಾಲು ಮತದವರು. ಗುಂಡೇಗೌಡರು ಕಳೆದ ನಲವತ್ತು ವರ್ಷದಿಂದ ಊರಿನ ಪಟೇಲಿಕೆ ಮಾಡುತ್ತಿದ್ದಾರೆ. ಧರ್ಮರಾಯ ಪಟೇಲ ಎಂದು ಸುತ್ತ ಮುತ್ತಿನ ಜನರೆಲ್ಲ ಹೇಳುವುದನ್ನು ನಂಜಮ್ಮನೂ ಕೇಳಿದ್ದಳು. ಅವರ ಪಟೇಲಿಕೆ ಶುರುವಾದ ಇಷ್ಟು ವರ್ಷದಲ್ಲಿ ಆ ಊರಿನಲ್ಲಿ ಒಂದು ಕಳ್ಳತನವಾಗಿಲ್ಲ, ಒಂದು ಹಾದರ ನಡೆದಿಲ್ಲವಂತೆ. ಹೊಟ್ಟೆಗಿಲ್ಲ ಎಂಬ ಕಾರಣದಿಂದ ಯಾರೂ ಊರು ಬಿಟ್ಟು ಬೇರೆ ಊರಿಗೆ ಒಕ್ಕಲೆತ್ತಿಕೊಂಡು ಹೋಗಿಲ್ಲವಂತೆ. +ಅಯ್ಯನವರು ಎಂದರು: ‘ಕೆಳಗಿನ ಕೇರೀಲಿ ಅವ್‌ರುದ್ದೇ ಮನೆ ಐತಲ್ಲ, ಖಾಲಿ ಬುಟ್ಟವ್ರೆ. ಅದ್ರಾಗೆ ವಾಸ ಮಾಡ್ತೀನಿ ಅಂತ ಕೇಳಿ. ಇಲ್ಲ ಅನ್ನಾದಿಲ್ಲ.’ +ನಂಜಮ್ಮನಿಗೆ ಈಗ ನೆನಪಾಯಿತು. ಈಗ ರಾಮಸಂದ್ರದಲ್ಲಿಯೇ ಗುಂಡೇಗೌಡರ ಒಂದು ಮನೆಯಿದೆ. ಅದರಲ್ಲಿ ಯಾರೂ ವಾಸಿಸುತ್ತಿಲ್ಲ. ಅವರು ಅದನ್ನು ಬಿಟ್ಟುಕೊಟ್ಟರೆ ವಾಸದ ಯೋಚನೆ ಬಗೆಹರಿಯುತ್ತೆ. ಅವರನ್ನು ಅವಳು ನೋಡಿ ಬಲ್ಲಳು. ಆದರೆ ಚನ್ನಾದ ಪರಿಚಯವಿಲ್ಲ. ಇವರ ಶ್ಯಾನುಭೋಗಿಕೆಗೆ ಸೇರಿದ ಪಟೇಲರೇ ಆದುದರಿಂದ ಎಷ್ಟೋ ಸಲ ಇವರ ಮನೆಗೆ ಬಂದಿದ್ದರು. ಕೆಲವು ಸಲ ನಂಜಮ್ಮ ಅವರಿಗೆ ಊಟಕ್ಕೆ ನೀಡಿದ್ದಳು. ದಪ್ಪ ಬಿಳೀ ಮೀಸೆ, ಅಗಲವಾದ ಮುಖ, ಬಲಗೈ ಮಣಿಕಟ್ಟಿಗೆ ಒಂದು ಬೆರಳಿನ ಗಾತ್ರದ ಚಿನ್ನದ ಕಪ್ಪ. ಮೈಮೇಲೆ ಕೋಟು ಧರಿಸಿದರೂ ಮೊಣಕಾಲು ಕಾಣಿಸುವಂತಹ ದಟ್ಟಿ ಸುತ್ತಿ ಕಾಲಿಗೆ ಕೊಪ್ಪಲಿನ ಮೋಚಿ ಹೊಲಿದ ಗಂಡುಮೆಟ್ಟು ಹಾಕುತ್ತಿದ್ದರು. +‘ನಾಳೀಕೆ ಒಂಬತ್ ಹತ್ ಗಂಟೇ ಹೊತ್ಗೆ ನೀವು ಕುರುಬರ ಹಳ್ಳೀಗ್ ನಡೀರಿ. ನಾನೂ ಭಿಕ್ಷುಕ್ಕೆ ಅಂತ ಬಂದಿರ್ತೀನಿ. ಗೌಡ್ರುನ್ನ ಕೇಳಿ. ನಾನೂ ಮಾತಾಡ್ತೀನಿ. ಅವ್ರು ಇಲ್ಲ ಅನ್ನಾಕಿಲ್ಲ. ಚಿನ್ನಯ್ಯ ಅವ್ವನ ಕುಟ್ಟಿ ಇರಾ ಮಾತು ಅಲ್ಲಿ ಆಡ್‌ಬ್ಯಾಡಿ’ – ಎಂದು ಅಯ್ಯನವರು ಹೇಳಿದ ಮೇಲೆ ನಂಜಮ್ಮ ತಮ್ಮ ಶೆಡ್ಡಿಗೆ ಹೋದಳು. +‘ಬಸವಿ ಎಲ್ಲೋ ಬೀದಿ ತಿರುಗುಕ್ ಹೋಗಿದ್ಲು’ – ಎಂದು ಗಂಗಮ್ಮ ಬೈದರೂ ಮಾತನಾಡಲಿಲ್ಲ. +ಮರುದಿನ ಎದ್ದು ಸ್ನಾನ ಮಾಡಿ ಮಕ್ಕಳಿಗೂ ಮಡಿ ಉಡಿಸಿ ರೊಟ್ಟಿ ಮಾಡಿಕೊಟ್ಟು ತಾನೂ ತಿಂದಳು. ತಲೆ ಬಾಚಿ ಹಣೆಗೆ ಕುಂಕುಮ ಚಂದ್ರಗಳನ್ನಿಟ್ಟುಕೊಂಡಳು. ರಾಮಣ್ಣನನ್ನು ಹೆಗಲಿಗೆ ಹಾಕಿಕೊಂಡು ಪಾರ್ವತಿಯ ಕೈಹಿಡಿದು ಶೆಡ್ಡಿನಿಂದ ಹೊರಟಾಗ ಎದುರಿನ ಮರದ ಕೆಳಗೆ ಕುಳಿತಿದ್ದ ಗಂಗಮ್ಮ – ‘ಅದ್ಯಾವ ಮಿಂಡನ ಮನೆಗೆ ಹೊರಟೆಯೇ ಬಸವಿ?’ ಎಂದು ಗಟ್ಟಿಯಾಗಿ ಕೇಳಿದರೂ ಉತ್ತರ ಹೇಳದೆ ತನ್ನ ಪಾಡಿಗೆ ತಾನು ಹೊರಟು ಹೋದಳು. ಸ್ವಲ್ಪ ದೂರ ಹೋಗಿ ಹಿಂತಿರುಗಿ ನೋಡಿದಳು. ಅತ್ತೆಯಾಗಲಿ ಗಂಡ ಅಥವಾ ಮೈದುನನಾಗಲಿ ಇವಳು ಎಲ್ಲಿ ಹೋಗುತ್ತಾಳೆಂದು ನೋಡಲು ಬರುತ್ತಿರಲಿಲ್ಲ. +ಕುರುಬರಹಳ್ಳಿಗೂ ರಾಮಸಂದ್ರಕ್ಕೂ ಎರಡು ಮೈಲಿಯ ದೂರ. ನಡುವೆ ಒಂದು ಬೋರೆ ಹತ್ತಿ ಇಳಿಯಬೇಕು. ನಂಜಮ್ಮನಿಗೆ ತಾನೊಬ್ಬಳೇ ಹೋಗುತ್ತಿರುವೆನೆಂಬ ಭಯವಾಗುತ್ತಿಲ್ಲ. ಆದರೆ ಹೆಗಲಿನಲ್ಲಿದ್ದ ಮಗುವನ್ನು ಎತ್ತಿಕೊಂಡು ಬೋರೆಯ ಏರನ್ನು ಹತ್ತುವಾಗ, ಬಸುರಿಯಾದ ಅವಳಿಗೆ ಎದೆ ಹೊತ್ತಿಕೊಂಡುಬಂದಂತೆ ಆಗುತ್ತಿತ್ತು. ನಾಲ್ಕು ವರ್ಷ ತುಂಬಿರದಿದ್ದ ಪಾರ್ವತಿ ಕಾಲು ನೋಯುತ್ತದೆಂದು ಅಳುತ್ತಾ ಅಮ್ಮನ ಬಲಗೈ ಹಿಡಿದು ಬರುತ್ತಿತ್ತು. ನಂಜಮ್ಮನಿಗೂ ಇದ್ದಕ್ಕಿದ್ದ ಹಾಗೆಯೇ ದುಃಖ ಹೊತ್ತಿಕೊಂಡು ಅಳು ಬಂದಿತು. ಮಗುವನ್ನು ಕೆಳಗೆ ಇಳಿಸಿ ನೆಲದಮೇಲೆ ಕುಳಿತು ಒಂದು ಸಲ ಪೂರ್ತಿಯಾಗಿ ಅತ್ತು ಸೆರಗಿನಲ್ಲಿ ಕಣ್ಣು ಒರೆಸಿಕೊಂಡಳು. ಯಾವುದಾದರೂ ಕೆರೆಗೋ ಬಾವಿಗೋ ಮಕ್ಕಳನ್ನೂ ಹಾಕು ತಾನೂ ಮಗುಚಿಕೊಳ್ಳಬೇಕೆಂಬ ಯೋಚನೆ ಒಂದು ಕ್ಷಣ ಚಿಮ್ಮಿತು. ಬಸುರಿಯಾದ ತಾನು ಇಂತಹ ಯೋಚನೆ ಮಾಡಬಾರದು, ಅಳಲೂಬಾರದು ಎಂಬ ನೆನಪಾಗಿ ಮತ್ತೆ ಮೇಲೆ ಎದ್ದಳು. ಈ ಸಲ ಮಗುವನ್ನು ಬಲ ಹೆಗಲಿಗೆ ಹಾಕಿಕೊಂಡು ಪಾರ್ವತಿಯನ್ನು ಎಡಗೈಲಿ ಹಿಡಿದು ಮುಂದೆ ಸಾಗಿದಳು. ಬೋರೆ ಏರಿದಮೇಲೆ ಕುರುಬರಹಳ್ಳಿ ಕಾಣಿಸುತ್ತದೆ. ಊರ ನಡುವೆ ಕಾಣಿಸುವುದೇ ಬಸವಣ್ಣನ ಗುಡಿ. ಗುಡಿಯ ಪಕ್ಕದ್ದೇ ಗುಂಡೇಗೌಡರ ಮನೆಯಂತೆ. ದೇವರೇ, ಗುಂಡೇಗೌಡರಿಗೆ ದಯ ಬರುವ ಮಾಡಪ್ಪ ಎಂದು ಪ್ರಾರ್ಥಿಸುತ್ತಾ ನಂಜಮ್ಮ ಇಳಿವಿನಲ್ಲಿ ನಡೆದಳು. +ಗೌಡರು ಜಗುಲಿಯ ಮೇಲೆ ಕೂತು ಹೊಗೆಸೊಪ್ಪು ಜಗಿಯುತ್ತಿದ್ದರು. ಅವರನ್ನು ನೋಡಿ ನಂಜಮ್ಮನಿಗೆ ಮನೆಯ ಪತ್ತೆ ಸಿಕ್ಕಿತು. ಇವಳನ್ನು ಕಂಡ ಗೌಡರು ಮೇಲೆ ಎದ್ದು – ‘ಬಾರವ್ವಾ, ಬಾರವ್ವಾ, ಬಾ. ಲಕುಸ್ಮಿ ಬಂದ ಹಾಂಗ್ ಬಂದುಬುಟ್ಟೆ. ಮಗಾ ಎತ್ತಿಕಂಡೇ ಬಂದ್ಯಾ ಬಿಸಿಲ್ನಾಗೆ’ ಎಂದು ಒಳಬಾಗಿಲಿಗೆ ನೋಡಿ – ‘ಲೇ, ಏ ಲಡ್‌ಗ್ಯಾ, ನಮ್ ಶ್ಯಾನುಭೋಗ್ರಮ್ಮ ಬಂದೈತೆ ಒಂದ್ ಚಾಪೆ ಆಕ್ರಲೇ’ ಎಂದು ಒಳಗೆ ಕರೆದುಕೊಂಡು ಹೋದರು. ಗೋಡೆಗೆ ಆತು ನಂಜಮ್ಮ ಮಕ್ಕಳೊಡನೆ ಕುಳಿತಳು. ಕಂಬಕ್ಕೆ ಒರಗಿ ಗೌಡರು ಕೂತರು. ಇನ್ನೂ ಅಳುತ್ತಿದ್ದ ಪಾರ್ವತಿಯ ಕೈಗೆ ಕೊಬ್ಬರಿ ಬೆಲ್ಲ ಕೊಟ್ಟು ಗೌಡತಿ ಲಕ್ಕಮ್ಮ ಸುಮ್ಮನಾಗಿಸಿದಳು. +‘ನಮ್ಮನೇ ಸಮಾಚಾರವೆಲ್ಲಾ ಗೊತ್ತಾಯ್ತೆ ಗೌಡ್ರೆ?’ +‘ಗೊತ್ತಾಯ್ತು ಕಣವ್ವ. ನಿಮ್ಮತ್ತೆ ಅಂದ್ರೆ ಕಟ್ ಹರಿದ್ ಪಂಜು. ಕಟ್ಟಿರಾಗಂಟ ಪಂಜೂ ಉರೀತೈತೆ, ತಾನೂ ಉಳ್ಕಂತೈತೆ. ಅದೇ ಕಿತ್ತಾಕಿದ್‌ಮ್ಯಾಲೆ ಉಳಿಯಾದೇನು? ನಿನ್ನ ಮಾವ ನನ್ನಂತಾ ಹ್ಯಡ್‌ಮುಂಡೇದು. ಇವ್ಳು ಬಂದೇ ಬಂದ್ಳು ನೋಡು, ಮಾರಾಯ್ತಿ ಮನೇ ಹದೀಗೆ ಗುದ್ಲಿ ಆಕಿದ್ಲು. ಇನ್ನೇನಿದ್ರೂ ನೀನು ಉಳುಸ್ಬೇಕು’ – ಎಂದು ಹೆಂಡತಿಯ ಕಡೆಗೆ ತಿರುಗಿ ಹೇಳಿದರು: ‘ಶ್ಯಾನುಬಾಕಿ ಲ್ಯಕ್ಕಾ ಯಲ್ಲಾ ಈ ಯಮ್ಮನೇ ಬರೀತೈತೆ ಕಣ್ಳೇ. ಆ ಚಿನ್ನಯ್ಯನ ಕಲಿ ಕಿಸೀತೈತಾ? ಬಸವಣ್ಣ ಅದು. ಉಲ್ಲು ತಿಂತೀಯ ಬಶಣ್ಣಾ ಅನ್ನು. ಊಂ ಅಂತೈತೆ. ನೀರ್ ಕುಡೀತೀಯಾ ಬಶಣ್ಣಾ? ಊಂ ಅಂತ ಕತ್ತಾಕ್ತೈತೆ. ಆರು ಉಳ್‌ಬೇಕು ಹೆಗಲು ಕೊಡ್ತಿಯಾ ಬಶಣ್ಣ ಅನ್ನು. ವಲ್ಲೆ ವಲ್ಲೆ ಅಂತ ಕೋಡು ಆಡಿಶ್ಕಂಡ್ ವಾಟ ಹ್ವಡೀತೈತೆ. ನಿನ್ನ ಗಂಡುನ್ನ ಬೈದೆ ಅಂತ ಶಿಟ್ಕಾಬ್ಯಾಡ ಕಣವ್ವ.’ +‘ಅದ್ಯಾಕ್ ಶಿಟ್ಕತ್ತಾರೆ? ಆ ವಯ್ಯ ಮಾಡಾದೇ ಹಂಗೆ’ – ಗೌಡಮ್ಮ ಎಂದಳು. +ಹೀಗೆಯೇ ಯೋಗಕ್ಷೇಮ ಮಾತಾಡುವುದರಲ್ಲಿ ಗೌರಮ್ಮ ಒಳಗೆ ಹೋಗಿ ಮೂರು ಲೋಟಗಳ ಭರ್ತಿ ಬಿಸಿ ಹಾಲಿಗೆ ಬೆಲ್ಲ ಹೆರೆದು ಹಾಕಿ ಮೂರು ಮೂರು ಮಿಳ್ಳೆ ತುಪ್ಪ ಕರಗಿಸಿ ತಂದು ಮುಂದೆ ಇಟ್ಟಳು. +‘ನಂಗೆ ಈಗ ಹಾಲು ಬ್ಯಾಡ’ – ನಂಜಮ್ಮ ಹೇಳಿದುದಕ್ಕೆ ಗೌಡಮ್ಮ ಎಂದಳು: ‘ಬಸ್ರಿ ಎಂಗ್ಸು ಆಲು ಬ್ಯಾಡ ಅನ್ಬ್ಯಾಡ್ದು. ಕುಡೀರಿ.’ +‘ಗೌಡ್ರೆ, ನಿಮ್ಮನೆ ಹಾಲು ಬ್ಯಾಡ ಅನ್ನುಲ್ಲ. ಆದರೆ ನನ್ನ ಕೈ ಬಿಡುಲ್ಲ ಅಂತ ನೀವು ಮಾತು ಕೊಡಬೇಕು.’ +‘ಅದೇನು ಏಳವ್ವ.’ +‘ನೀವು ಬ್ಯಾರೆ ಹೋಗಿ ಅಂತ ನಮ್ಮತ್ತೆ ನೆನ್ನೆ ದಿನ ಹೇಳಿದ್ರು. ನಮಗೆ ಇರುಕ್ಕೆ ಒಂದು ನೆರಳಿಲ್ಲ.’ +‘ನ್ಯಳ್‌ಗೇನಂತೆ, ನಂದೇ ಮನೆ ಇಲ್ವರಾ? ಅದ್ರಲ್ಲಿರೋರಂತೆ. ಆಲು ಕುಡಿ.’ +ಗುಂಡೇಗೌಡರನ್ನು ಏನು ಕೇಳಲು ತಾನು ಬಂದಿದ್ದಳೋ ಅದನ್ನು ಕೇಳುವ ಮೊದಲೇ ಅವರೇ ಕೊಟ್ಟಿದ್ದಾರೆ. ಬೇತು ಕೇಳಿಸಿಕೊಳ್ಳಲಿಲ್ಲ, ಏನೂ ಇಲ್ಲ. ದಾನ ಕೊಡುವುದು ತಮಗೆ ಸ್ವಲ್ಪವೂ ಕಷ್ಟವೇ ಇಲ್ಲವೇನೋ ಎಂಬಂತೆ ಕೊಟ್ಟುಬಿಟ್ಟಿದ್ದಾರೆ. ನಂಜಮ್ಮ ಮಕ್ಕಳಿಗೂ ಕುಡಿಸಿ ತಾನೂ ಹಾಲು ಕುಡಿದಳು. ಗೌಡರು ಹೆಂಡತಿಗೆ ಹೇಳಿದರು: ‘ನಾನ್ ನಿನ್‌ಕುಟ್ಟೆ ಅಂತಿರ್ನಿಲ್ವೇನ್ಲೇ? ಈ ಯಮ್ಮನ ಮಕದ ಕಳೆ ನೋಡು ಹ್ಯಂಗೈತೆ. ಸೀತಮ್ನೋರ ಮಕ ಇದ್ದ ಹಂಗೇ ಇಲ್ವಾ?’ +ಅಷ್ಟರಲ್ಲಿ ಮಾದೇವಯ್ಯನವರು ಭಿಕ್ಷೆಗೆ ಬಂದರು. ಅಲ್ಲಿಯೇ ನಂಜಮ್ಮ ಕುಳಿತಿರುವುದನ್ನು ನೋಡಿ ತಾವೂ ಕುಳಿತರು. ಗೌಡಮ್ಮ ಅವರಿಗೆ ಮಣೆ ಹಾಕಿ ಕೊಟ್ಟಳು. ತಮಗೆ ಏನೂ ತಿಳಿಯದವರಂತೆ ನಂಜಮ್ಮ ಬಂದ ವಿಷಯವನ್ನು ವಿಚಾರಿಸಿ, ಗೌಡರು ಇವರಿಗೆ ವಾಸಕ್ಕೆ ಮನೆ ಕೊಡುವುದಾಗಿ ಹೇಳಿದುದನ್ನು ತಿಳಿದಮೇಲೆ ಅಯ್ಯನವರು ಕೇಳಿದರು: ‘ಗೌಡಯ್ಯ, ಇರುಕ್ಕೆ ನೆರಳು ಕೊಟ್ರಿ. ಮನೇ ಒಳಗೆ ಕಾಲು ಚಾಚಿಕೊಂಡ್ ಮನೀಕಾ ಬೇಕಾ? ಉಣ್ಣಾಕ್ ಮುದ್ದೇಗೇನು ದಾರಿ?’ +‘ಸ್ಯಾನುಬಾಕಿ ಇಲ್ವಾ? ದುಡ್ಕಂಡ್ ತಿನ್ನಾ ಗಂಡಿಗೆ ಸ್ಯಾನುಬಾಕಿಗಿಂತ ಬೇಕಾ ಆಸ್ತಿ?’ +‘ಆ ಗಂಡು ಎಂತದು ಅಂತ ನಿಂಗೆ ಗೊತ್ತಿಲ್ವಾ?’ +‘ಅದೊಂದು ಸಿಕಂಡಿ ಸೂಳೆಮಗನ ಗಂಡು, ಬುಡಿ. ಜೋಡೀಲಿ ಒಂದು ಬಡಕಲಾದ್ರೆ ಇನ್ನೊಂದು ಮೋಪಾಗಿದ್ರೆ ಸೈ’-ಎಂದು ನಂಜಮ್ಮನ ಕಡೆಗೆ ತಿರುಗಿ ಗೌಡರು ಹೇಳಿದರು: ‘ನೀನೇಳ್ದಂಗೆ ಕೇಳ್ಕಂಡಿರು ಅಂತ ಬಶಣ್ಣುಂಗೆ ಏಳು. ಹ್ವಟ್ಟೆಪಾಡ್ಗೆ ಎಗ್ಗಿಲ್ಲ.’ +‘ಹಂಗೆ ಕೇಳ್ಕಂಡಿರಾ ಬೀಜವಾ ಅದು?’-ಗೌಡಮ್ಮ ಕೇಳಿದರು. +‘ಹಣೇಬರಾವು ಕಣ್ರೀ, ಅನುಬೈಸ್ಬೇಕು’-ಗೌಡಮ್ಮ ಎಂದಳು. +ಆಗಲೇ ಮಧ್ಯಾಹ್ನವಾಗಿತ್ತು. ಊಟ ಮಾಡಿಸದೆ ಇವರನ್ನು ಗೌಡರು ಗೌಡಮ್ಮ ಕಳಿಸಲಾರರು. ಗೌಡಮ್ಮ ಒಳಗೆ ಹೋಗಿ ನಾಲ್ಕು ಹಿತ್ತಾಳೆಯ ಪಾತ್ರೆ ಎರಡು ಬಿಂದಿಗೆಗಳನ್ನು ತಂದು ಇಟ್ಟಳು. ತಾವು ಊರಿಗೆ ಹೋಗುವುದಾಗಿ ಹೇಳಿದರೂ ಅಯ್ಯನವರನ್ನೂ ಬಿಡಲಿಲ್ಲ. ಪಾತ್ರೆಗೆ ಹುಳಿ ಹಚ್ಚಿ ಗುಡಿಯ ಮುಂದಿನ ಬಾವಿಯಲ್ಲಿ ನಂಜಮ್ಮ ಮಾದೇವಯ್ಯನವರು ಬೇರೆಬೇರೆಯಾಗಿ ನೀರು ಸೇದಿಕೊಂಡರು. ಗುಡಿಯ ಜಗುಲಿಯ ಮೇಲೆ ಗೌಡರು ಬೇಯಿಸಿಕೊಂಡರು. ಕಾಯಿತುರಿ ಉಪ್ಪು ಮೊಸರಿನಲ್ಲಿ ಎಲ್ಲರದೂ ಊಟವಾಯಿತು. ಮಕ್ಕಳಿಗೆ ಮತ್ತೆ ಹಾಲು ಕುಡಿಸಿಸಿ ತಮ್ಮ ಗಾಡಿ ಹೂಡಿಸಿ ಗೌಡರು ಅದರಲ್ಲಿ ಬಸುರಿ ಮತ್ತು ಮಕ್ಕಳನ್ನು ಕೂರಿಸಿದರು. ತಮ್ಮ ಭಿಕ್ಷದ ಜೋಳಿಗೆಯನ್ನು ಇಟ್ಟುಕೊಂಡು ಮಾದೇವಯ್ಯನವರೂ ಅದೇ ಗಾಡಿಯಲ್ಲಿ ಕುಳಿತರು. +– ೪ – +ಶೆಡ್ಡು ಬಿಟ್ಟು ಊರಿಗೆ ಪ್ರವೇಶ ಮಾಡುತ್ತಲೂ ಗಂಗಮ್ಮ ಹೋಗಿ ತನ್ನ ಹಳೇ ಮನೆಯ ಬಾಗಿಲು ತೆಗೆದಳು. ಅವಳಿನ್ನೂ ಮನೆಯ ಒಳಗೆ ಪ್ರವೇಶಿಸಿ ಅಪ್ಪಣ್ಣಯ್ಯನೊಡನೆ ಅದರ ನಡುಮನೆಯ ಧೂಳು ಗುಡಿಸಿರಲಿಲ್ಲ. ಕೈಲಿ ಒಂದು ದಪ್ಪ ಬೀಗ ಹಿಡಿದು ಶಿವೇಗೌಡನ ಮನೆಯ ಆಳು ಮುರುವ ಬಂದು ಹೇಳಿದ: ‘ನಿಮ್ಮ ಸಾಮಾನು ಎತ್ಕಂಡಿ ವಾಗ್ಬೇಕಂತೆ. ಮನೆಗೆ ಬೀಗ ಮೆಟ್ಟಿಕ್ಯಂಡ್ ಬಾ ಅಂತ ಗೌಡ್ರು ಏಳ್ಯವ್ರೆ.’ +‘ಯಾವ ಗೌಡ್ನೋ ಸೂಳೇಮಗ ಹಾಗಂದೋನು?’ +‘ಸಿವೇಗೌಡ್ರು ಕಣ್ರವ್ವ.’ +‘ಅಯ್ಯೋ ಅವ್ನ ಮನೆತನ ಹಾಳಾಗ. ಜಮೀನೆಲ್ಲ ಹೋಯ್ತು. ಮನೇನೂ ಬಿಟ್ಕೊಡುಕೆ ಅವನಪ್ಪನ ಗಂಟು ಅಂತ ತಿಳ್ಕೊಂಡಿದಾನೇನೋ?’-ಎಂದವಳೇ ಗಂಗಮ್ಮ ಅವನ ಮನೆಯ ಮುಂದೆ ಹೋಗಿ ನಿಂತು ಕೂಗಿಕೊಂಡಳು: ‘ಮನೆ ಏನು ನಿಮ್ಮಪ್ಪುಂದು ಅಂತ ತಿಳ್ಕಂಡೆ ಏನೋ ಗೌಡ? ಕೋರ್ಟಿನಾಗೆ ಇತ್ಯರ್ಥವಾದ್ದು ಜಮೀನು.’ +‘ಬೇಕಾದ್ರೆ ತಿಪಟೂರಿಗೆ ಹ್ವಾಗಿ ಇಚಾರಿಸ್ಕಂಡ್ ಬಾರಮ್ಮ. ನೀನೂ ನಿನ್ನ ಮಕ್ಳೂ ಬರಕೊಟ್ಟಿರಾ ಖರೂದಿ ಪತ್ರದ ಕಾಗಜ ಕಬ್ಬುಣದ ಪೆಟ್ಟಿಗೇಲಿ ಐತೆ. ತಂದು ತೋರುಸ್ಲೇನು?’-ಎನ್ನುತ್ತಾ ಗೌಡ ಹೊರಗೆ ಬಂದ. +‘ಅಯ್ಯೋ ಇವನ ಮನೆತನ ಹಾಳಾಗ’-ಎನ್ನುವುದನ್ನು ಬಿಟ್ಟು ಗಂಗಮ್ಮನಿಗೆ ಮತ್ತೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಸ್ವಲ್ಪ ಹೊತ್ತು ಏನೂ ತಿಳಿಯದೆ ನಿಂತಿದ್ದ ಅವಳು ಕೇಲಿದಳು: ‘ಹಾಗಾದ್ರೆ ನಾವು ಎಲ್ಲಿ ಬಿದ್ದು ಸಾಯಾಣ, ಗ್ರಾಮದ ಪಟೇಲ ನೀನೇ ಹ್ಯೇಳು.’ +‘ಮನೆ ಇಲ್ದೋರಿಗೆಲ್ಲ ಮನೆ ಕಟ್ಟುಸ್ಕೊಡ್ತೀನಿ ಅಂತ ನಾನೇನು ಪಟೇಲಿಕೆ ಮಾಡ್ತಿಲ್ಲ. ಸುಮ್ಕೆ ವಾಗಮ್ಮ’-ಎಂದ ಗೌಡ ಒಳಗೆ ಹೋಗಿ ಧಬ್ ಎಂದು ಬಾಗಿಲು ಹಾಕಿಕೊಂಡ. +‘ಇವನ ಮನೆ ಬಿದ್ದುಹೋಗಿ ಉತ್ತು ಹರಳು ಹಾಕ . ಮೋಸದಲ್ಲಿ ಆಸ್ತಿ ಬಂತು ಅಂತ ಮ್ಯರೀತಿದಾನೆ ಮನೆಹಾಳ ಸೂಳೆಮಗ. ನಂಗೆ ಯಾರೂ ಇಲ್ದೇ ಇಲ್ಲ’-ಎಂದವಳೇ ಗಂಗಮ್ಮ ನೇರವಾಗಿ ರೇವಣ್ಣಶೆಟ್ಟಿಯ ಮನೆಗೆ ಹೋಗಿ ನಡೆದ ವಿಷಯ ತಿಳಿಸಿ ಕೇಳಿದಳು: ‘ನಿನ್ನ ದನ ಕಟ್ಟೂ ಮನೆ ಇದೆಯಲಾ, ಅಲ್ಲೇ ಒಂದು ತಡಿಕೆ ಕಟ್ಕಂಡು ನಾನೂ ನನ್ನ ಇಬ್ರು ಗಂಡು ಮಕ್ಳೂ ಇರ್ತೀವಿ. ಬಿಟ್ಕೊಡು.’ +‘ಅಮ್ನೋರೇ, ನಮ್ಮ ಎಮ್ಮೆ ಕರು ಹಾಕಿದ್ರೆ ಅದ ಕಟ್ಟುಕೆ ಜಾಗವಿಲ್ಲ. ಇನ್ನು ನೀವೆಲ್ಲಿ ಇರ್‍ತೀರಾ? ನಿಮ್ಮೋರೇ ಅಯ್ಯಾಶಾಸ್ತ್ರಿಗಳು ಅವ್ರಲ ಕೇಳಿ ನೋಡಿ.’ +‘ನನ್ನ ಹತ್ರ ತಿನ್ನೂತಂಕಲೇ ನಾನು ಬೇಕಾಗಿತ್ತು ಈ ಸೂಳೇಮಗುಂಗೆ’-ಎಂದು ಬೈದುಕೊಳ್ಳುತ್ತಾ ಅವಳು ಅಯ್ಯಾಶಾಸ್ತ್ರಿಗಳನ್ನು ಹೋಗಿ ಕೇಳಿದಳು. ಅವರ ಕೊಟ್ಟಿಗೆಯಲ್ಲೂ ಅವಳಿಗೆ ಸ್ಥಳವಿರಲಿಲ್ಲ. +‘ನನ್ನ ಮನ್ಲಿ ತಿನ್ನೂವಾಗ ಬೇಕಾಗಿತ್ತು. ಈಗ ನಾಕು ಮಳ ಜಾಗವಿಲ್ಲ ಅಂತಿ ಏನೋ ತಿರುಪೆ ಜೋಯ್ಸ?’-ಎಂದು ಅವಳು ಬೀದಿಯಲ್ಲಿ ನಿಂತು ಕೇಳಿದಳು. +ಜೋಯಿಸರಿಗೆ ಸ್ವಲ್ಪ ಕಿರಿಕಿರಿ ಎನ್ನಿಸಿತು. ಅವಳನ್ನು ತಮ್ಮ ದನದ ಸೇರಿಸಲೂ ಇಷ್ಟವಿಲ್ಲ. ಹಾಗೆಂದು ಅವಳ ನಾಲಿಗೆಗೆ ಸಿಕ್ಕಲೂ ಬೇಕಿಲ್ಲ. ಕೊನೆಗೆ ತಮ್ಮ ದೊಡ್ಡಪ್ಪನ ಮೊಮ್ಮಗ ಅಣ್ಣಾಜೋಯಿಸನನ್ನು ಕರೆಸಿ ಮಾತನಾಡಿ ಒಂದು ಉಪಾಯ ಸೂಚಿಸಿದರು. ಊರಿನ ಪೂರ್ವ ದಿಕ್ಕಿನ ಮೂಲೆಯಲ್ಲಿ ಹನುಮಂತರಾಯನ ಗುಡಿ ಇದೆ. ನಾಲ್ಕು ಅಂಕಣದ ಆ ಕಲ್ಲು-ಇಟ್ಟಿಗೆಯ ಕಟ್ಟಡಕ್ಕೆ ಬಾಗಿಲು ಬೀಗಗಳೂ ಇವೆ. ಅಣ್ಣಾಜೋಯಿಸನೇ ಅದರ ಪೂಜಾರಿ. ಈ ತಾಯಿ, ಇಬ್ಬರು ಮಕ್ಕಳು, ಮೂವರು ಅಲ್ಲಿ ಇರಲು ಅಡ್ಡಿಯಿಲ್ಲ. ಆದರೆ ಅದಕ್ಕೆ ಗ್ರಾಮಸ್ಥರ ಒಪ್ಪಿಗೆಬೇಕು. ಗ್ರಾಮಸ್ಥರೆಂದರೆ ಯಾರು? ಮುಖ್ಯ ಮುಖ್ಯವಾದ ಕುಳಗಳು. ಶ್ಯಾನುಭೋಗ, ಪಟೇಲ, ಪಂಚಾಯ್ತಿ ಛೇರ್‌ಮನ್ ಮತ್ತು ಮೆಂಬರುಗಳು. ಉಳಿದವರನ್ನು ಒಪ್ಪಿಸುವುದು ಕಷ್ಟವಿಲ್ಲ. ಆದರೆ ಗ್ರಾಮದ ಪಟೇಲ, ಛೇರ್‌ಮನ್, ಇಬ್ಬರೂ ಆಗಿರುವ ಶಿವೇಗೌಡ ಒಪ್ಪುತ್ತಾನೋ ಇಲ್ಲವೋ! ‘ಗಂಗಮ್ಮ, ನೀನೊಂದು ರವಷ್ಟು ಮಾತು ಬಿಗಿಯಾಗಿ ಆಡ್ಬೇಕು. ಅವನುನ್ನ ಬೀದೀಲಿ ನಿಂತ್ಕಂಡು ಬೋಳೀಮಗ ಸೂಳೇಮಗ ಅಂತ ಮಾತಾಡ್ಬ್ಯಾಡ’-ಎಂದು ಅಯ್ಯಾಶಾಸ್ತ್ರಿಗಳು ಹೇಳಿದುದಕ್ಕೆ ಅವಳು, ‘ನಾನ್ಯಾವ ಸೂಳೇಮಗುಂಗೆ ಹ್ಯದರ್ಬೇಕು ಬಿಡಿ’ಎಂದಳು. +ಜೋಯಿಸರುಗಳಿಬ್ಬರೂ ಶಿವೇಗೌಡನ ಮನೆಗೆ ರಾಯಭಾರಕ್ಕೆ ಹೋದರು. ಅವನು ಒಪ್ಪುತ್ತಿದ್ದನೋ ಇಲ್ಲವೋ. ಆದರೆ ಅವನ ಹೆಂಡತಿ ಗೌರಮ್ಮನಿಗೆ ಒಂದು ಭಯವಿತ್ತು: ಗಂಗಮ್ಮನ ಬಾಯಿ ಒಳ್ಳೇದಲ್ಲ. ಆ ವಮ್ಮನ ನಾಲಿಗೇಲಿ ಕರೀಮತ್ತಿ ಐತಂತೆ. ವಳ್ಳೇ ಹೊತ್ತಲ್ಲ ಕ್ಯಟ್ ಹೊತ್ತಲ್ಲ, ಬೀದೀಲಿ ನಿಂತ್ಕಂಡಿ ಮಣ್ ತೂರಿ ಬೋಯ್ತದೆ. ಈಟುಕ್ಕೂ ಅನುಮಂತರಾಯನ ಗುಡಿ ಹಾರುವರದ್ದೇ. ಅವರವ್ರೆ ಜಾತಿಯೋರು ಅದ್ಕಳ್ಳಿ-ಎಂಬುದು ಅವಳ ವಿಚಾರ. ಗಂಡನನ್ನು ಒಳಗೆ ಕರೆದುಕೊಂಡುಹೋಗಿ ಕಿವಿಯಲ್ಲಿ ಹೇಳಿದಳು. ಅದೆಲ್ಲವನ್ನೂ ಶಿವೇಗೌಡ ನಂಬಿದನೋ ಬಿಟ್ಟನೋ, ತಾನು ಅದರಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲವಾದುದರಿಂದ ಹೊರಗೆ ಬಂದು, ‘ಆಯ್ತು. ಬದುಕ್ಕಳ್ಳಿ ಹೋಗಿ’ ಎಂದ. +ಇವರು ಹನುಮಂತರಾಯನ ಗುಡಿಗೆ ಬಂದುದರಿಂದ ಅಣ್ಣಾಜೋಯಿಸನಿಗೆ ಒಂದು ಅನುಕೂಲವಾಯಿತು. ಅದು ಪೂಜಾರಿಗೆಂದು ಐದು ಎಕರೆ ಹೊಲ, ಒಂದು ಎಕರೆ ಗದ್ದೆಯನ್ನು ಬಿಟ್ಟಿದ್ದ ಗುಡಿ. ಪೂಜಾರಿಯಾದ ಅಣ್ಣಾಜೋಯಿಸ ಜಮೀನು ಅನುಭವಿಸುತ್ತಿದ್ದ. ಆದರೆ ಪ್ರತಿದಿನ ಗುಡಿಗೆ ಬಂದು ಅಂಕಣ ಪೌಳಿಗಳನ್ನೆಲ್ಲ ಗುಡಿಸಿ ತೊಳೆದು ದೇವರಿಗೆ ನೀರು ಹಾಕಿ ಪೂಜೆ ಮಾಡುವುದು ಅವನಿಗೆ ಆಗುತ್ತಿರಲಿಲ್ಲ. ದಾನ ದಕ್ಷಿಣೆಗಳಿಗಾಗಿ ಹಳ್ಳಿಗೆ ಹೋದ ದಿನವಂತೂ ಹನುಮಂತರಾಯ ನೀರು ಕಾಣುತ್ತಿರಲಿಲ್ಲ. ಎಷ್ಟೋ ದಿನ ಅಂಕಣದಲ್ಲಿ ತುಂಬುತ್ತಿದ್ದ ಹಕ್ಕಿ ಪಕ್ಷಿಗಳ ಹಿಕ್ಕೆ ಬಿದ್ದು ವಾಸನೆ ಬರುತ್ತಿತ್ತು. ಗ್ರಾಮದ ಪಟೇಲ ಕೆಲವು ದಿನ ಜೋಯಿಸನ ಮೇಲೆ ಕಂಪ್ಲೇಂಟು ಬರೆದದ್ದೂ ಉಂಟು. ಗುಡಿಯ ಮುಂಬಾಗಿಲಿನ ಕಿಂಡಿಯಿಂದ ನೋಡಿದರೆ ಒಳಗೆ ದೇವರಿಗೆ ಪೂಜೆ ಆಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಜೋಯಿಸರು ದೇವರಿಗೆ ಹೂವು ನೀರು ಕಾಣಿಸದಿದ್ದ ದಿನ ಊರಿನವರು ನೋಡಿ ಪರೀಕ್ಷಿಸಿ ಬೈದುಕೊಳ್ಳುತ್ತಿದರು. +ಈಗ ಅಣ್ಣಾಜೋಯಿಸ ಅಪ್ಪಣ್ಣಯ್ಯನಿಗೆ ಹೇಳಿದ: ‘ನಿಂಗೆ ಗುಡೀಲಿರೂಕ್ಕೆ ಜಾಗ ಕೊಟ್ಟಿದೀನಿ ನೋಡು. ನೀವು ದಿನಾ ಅದರ ಪೌಳಿ, ಅಂಕಣ, ಯಲ್ಲಾನೂ ಚನ್ನಾಗಿ ಗುಡಿಸಿ ನೀರು ಹಾಕಿ ತೊಳೀಬೇಕು. ಸ್ವಲ್ಪಾನೂ ಕೊಳೆ ಬಿಡುಕೂಡ್ದು. ಮಡೀಲಿ ದೇವರನ್ನೂ ತೊಳ್ದು ಗಂಟೇ ಹೂವು ತಂದು ಪೂಜೆ ಮಾಡ್‌ಬೇಕು. ನೀನು ಪೂಜೆ ಮಾಡ್ತೀಯಾ ಅಂತ ಯಾರ್ಗೂ ಹೇಳುಕೂಡ್ದು. ಹೇಳಿದ್ರೆ ನಿಮ್ಮುನ್ನ ಗುಡಿಯಿಂದ ಬಿಡುಸ್ಬುಡ್ತೀವಿ. ನಾನೂ ಒಂದೊಂದು ದಿನ ಬಂದು ಪೂಜೆ ಮಾಡ್ತೀನಿ.’ +ಅಪ್ಪಣ್ಣಯ್ಯ ಒಪ್ಪಿಕೊಂಡ. ದೇವರ ಪೂಜೆಗೆ ಗಂಗಮ್ಮನೂ ಬೇಡವೆನ್ನುವವಳಲ್ಲ. ಅವಳ ದೈವಭಕ್ತಿ ಅಗಾಧವೇ. ಚೆನ್ನಿಗರಾಯರಿಗೆ ಹೇಗೂ ಪೂಜೆಯ ಮಂತ್ರ ಬರುತ್ತಿತ್ತು. +– ೫ – +ನಂಜಮ್ಮನ ಮದುವೆಯಲ್ಲಿ ತೌರಿನವರು ಕೊಟ್ಟಿದ್ದ ನಾಗರು, ಶೇವಂತಿಗೆ ಹೂವು, ಜೋಡಿ ಬಳೆ, ಮತ್ತು ಬೆಳ್ಳಿಯ ರುಳಿಗಳನ್ನು ಚೆನ್ನಿಗರಾಯರ ಶ್ಯಾನುಭೋಗಿಕೆಯ ಮುಖ್ಯ ವಾದ ಲೆಕ್ಕಗಳನ್ನಿಡುವ ಪೆಟಾರಿಯ ಕೆಳಭಾಗದ ಒಂದು ಮೂಲೆಯಲ್ಲಿ ಇಟ್ಟಿದ್ದರು. ಅವಾದರೂ ತನಗೆ ಬೇಕು. ತಾನೇ ಹೋಗಿ ಕೇಳಿದುದಕ್ಕೆ ಗಂಡ ಸರಿಯಾಗಿ ಉತ್ತರ ಹೇಳಲಿಲ್ಲ. ಮತ್ತೆ ಕೇಳಿದಾಗ ಎಂದರು: ‘ನಿಮ್ಮಪ್ಪನ ಮನ್ಲಿ ಕೊಟ್ಟುದ್ದು ಅಂತ ಇರುತ್ತೇನು? ಖರ್ಚಾತು.’ +‘ಅದ್ಯಾಕ್ ಖರ್ಚಾಗುತ್ತೆ? ಏನ್ ಮಾಡಿದ್ರಿ?’ +‘ಕೋರ್ಟಿಗ್ ಖರ್ಚಾತು.’ +‘ಏನು ಮಾಡುದ್ರಿ?’ +‘ಕಾಶಿಂಬಡ್ಡಿ ತಾವ ಐವತ್ತು ರೂಪಾಯಿಗೆ ಅಡವಿಟ್ಟಿದೆ. ಬೇಕಾದ್ರೆ ದುಡ್ ಕೊಟ್ ಬಿಡುಸ್ಕ.’ +‘ಎಷ್ಟು ದಿನವಾಯ್ತು ಇಟ್ಟು?’ +‘ಹೋದ ದೀವಳಿಗೆ ಹಬ್ಬದಾಗೆ.’ +ಎಂದರೆ ಏಳು ತಿಂಗಳಾಗಿದೆ. ಬಡ್ಡಿಯೇ ಐವತ್ತು ರೂಪಾಯಿಯ ಮೇಲೆ ಬೆಳೆದಿದೆ. ಈಗ ನೂರು ರೂಪಾಯಿ ಹೊಂದಿಸಿ ಅವನ್ನು ಬಿಡಿಸಿಕೊಳ್ಳುವುದು ಕನಸಿನಲ್ಲೂ ಆಗದ ಮಾತು. +‘ನನ್ನ ತೌರುಮನೇಲಿ ಕೊಟ್ಟುದ್ದು ನನ್ನ ಹೇಳ್ದೆ ಕೇಳ್ದೆ ಹ್ಯಾಗೆ ಮುಟ್ಟಿದಿರಿ?’ +‘ಅಮ್ಮ ತಗಂಡ್ಹೋಗ್ ಇಡು ಅಂದ್ಲು, ಇಟ್ಟೆ.’ +ತಾನು ಯಾವ ಕಾರಣಕ್ಕೂ ತಾಳ್ಮೆಗೆಡಬಾರದೆಂಬ ಅವಳ ಸಂಕಲ್ಪ ಇಳಿಯಲಿಲ್ಲ ಮನೆಯ ಪಾತ್ರೆ ಪರಟಿಗಳಲ್ಲಿ ಅತ್ತೆ ಅವಳಿಗೆ ಸ್ವಲ್ಪವೂ ಕೊಡಲಿಲ್ಲ. ಅವಳ ಮದುವೆಯಲ್ಲಿ ಕೊಟ್ಟಿದ್ದ ತಪ್ಪಲೆ, ಕೊಳದಪ್ಪಲೆ, ಅರಕಿನ ಚಿಟ್ಟಿಗಳನ್ನೂ ಇಲ್ಲವೆಂದಿದ್ದಳು. ಈ ಚಿನ್ನವಾದರೂ ಇದ್ದಿದ್ದರೆ ಕಷ್ಟಕಾಲಕ್ಕೆ ಆಗುತ್ತಿತ್ತು. ಈಗ ಹೊಸದಾಗಿ ಸಂಸಾರ ಹೂಡಲು ಒಂದು ಚೊಂಬು ಸಹಾ ಇಲ್ಲ. ಮನೆಯಲ್ಲಿ ಮಕ್ಕಳಿಗೆ ಕೆಂಡರೊಟ್ಟಿ ಬಡಚಿಕೊಡಲು ಒಂದು ಪಾವು ರಾಗಿ ಹಿಟ್ಟಿಲ್ಲ. ಇನ್ನು ಈ ಸ್ಥಿತಿಯಲ್ಲಿ ತನ್ನ ಹೆರಿಗೆ ಬಾಣಂತನಗಳು ಬೇರೆ ಆಗಬೇಕು. ಬಾಣಂತನಕ್ಕೆ ತೌರಿಗೆ ಹೋಗುವ ಕಲ್ಪನೆಯನ್ನೂ ಅವಳು ಬಿಟ್ಟಿದ್ದಳು. ಅಂತಹ ಹೆಂಗಸು ಅವಳ ಅಣ್ಣನಿಗೆ ಹೆಂಡತಿಯಾಗಿ ಬರಲಿಲ್ಲ. +ಈಗ ಕೋಪ ತುಂಬಿಬಂದು ಅವಳು ಗಂಡನನ್ನು ಕೇಳಿದಳು: ‘ಯಾವ ಗಂಡಸರಾದ್ರೂ ಹೆಂಡ್ತಿಗೆ ಸ್ವಂತ ಸಂಪಾದನೆ ಮಾಡಿ ವಡವೆ ವಸ್ತ್ರ ಮಾಡಿಸಿ ಕೊಡಬೇಕು. ಅಂಥಾದ್ರಲ್ಲಿ ತೌರುಮನೇಲಿ ಇಟ್ಟಿದ್ದನ್ನ ನಂಗೆ ಕಾಣದ ಹಾಗೆ ಅವ್ವ ಮಗ ಸೇರ್ಕಂಡು ಕಳುದ್ರಲಾ, ನಾಚಿಕೆಯಾಗುಲ್ವೆ ಜನ್ಮುಕ್ಕೆ?’ +ಪತಿದೇವರು ಮಾತನಾಡಲಿಲ್ಲ. ಆಡಿನಂತೆ ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ ನಿಂತಿದ್ದರು. ‘ಈಗ ಮಕ್ಳಿಗೆ ಹೊಟ್ಟೆಗೆ ಏನು ಮಾಡ್ತೀರಿ? ಬ್ಯಾಡ ಅಂತ ಗಿಣಿಗೆ ಹೇಳ್ದಹಾಗೆ ಹೇಳಿದ್ರೂ ಕೋರ್ಟಿಗೆ ಹೋಗಿ ಜಮೀನೆಲ್ಲ ನೀಗಿ ನೀರು ಕುಡ್ದು ಕೂತ್ಕಂಡ್ರಲಾ.’ +ಅವಳ ಮಾತಿಗೆ ಉತ್ತರ ಹೇಳುವುದಕ್ಕೆ ಚೆನ್ನಿಗರಾಯರಿಗೆ ತಿಳಿಯಲಿಲ್ಲ. ಆದುದರಿಂದ ತುಂಬ ಕೋಪ ಬಂತು. ಏನಾದರೂ ಬೈಯಬೇಕು. ತಕ್ಷಣಕ್ಕೆ ಹೊಸ ಬೈಗುಳಗಳಾವುವೂ ಪ್ರತಿಭೆಯಲ್ಲಿ ಮೂಡಲಿಲ್ಲ. ‘ಮುಂಡೆ, ಮುಂಡೆ, ಮುಂಡೆ, ಕತ್ತೆಮುಂಡೆ, ಬೋಳಿಮುಂಡೆ, ಸೂಳೆಮುಂಡೆ’-ಎಂದು ಮೂರು ಸಲ ಸಾದಾ ರೀತಿಯಲ್ಲೂ ಎರಡು ಸಲ ವಿಶೇಷ ರೀತಿಯಲ್ಲೂ ಪ್ರಯೋಗಿಸಿ ಅಲ್ಲಿಂದ ಜಾಗ ಬಿಟ್ಟು ಎದ್ದು ಹೊರಟು ಹೋದರು. ನಂಜಮ್ಮನಿಗೂ ಸಿಟ್ಟು ಬಂದಿತ್ತು. ಹಾಗೆಯೇ ಹತ್ತು ನಿಮಿಷ ಕೂತು ಅತ್ತು ಕಣ್ಣು ಒರೆಸಿಕೊಂಡಳು. +ಅದೇ ದಿನ ಅವಳು ಮಾದೇವಯ್ಯನವರ ಗುಡಿಗೆ ಹೋಗಿ ಐದು ರೂಪಾಯಿ ಸಾಲ ಇಸಿದುಕೊಂಡಳು. ಮರುದಿನ ಬೆಳಿಗ್ಗೆ ಮಕ್ಕಳನ್ನು ಗಂಡನ ಹತ್ತಿರ ಬಿಟ್ಟು, ನೋಡಿಕೊಳ್ಳುವಂತೆ ಹೇಳಿ, ಮಗ್ಗದ ಪುಟ್ಟವ್ವನನ್ನು ಜೊತೆಗೆ ಕರೆದುಕೊಂಡು ಸಣ್ಣೇನಹಳ್ಳಿಗೆ ಹೋದಳು. ರಾಮಸಂದ್ರಕ್ಕೆ ಮೂರು ಮೈಲಿ ದೂರದ ಸಣ್ಣೇನಹಳ್ಳಿ ಬರೀ ಕುಂಬಾರರ ಊರು. ಪುಟ್ಟವ್ವ ಕರೆದುಕೊಂಡು ಹೋದ ಒಂದು ಮನೆಯಲ್ಲಿ ಅಡಿಗೆಗೆ ಬೇಕಾದ ಆರು ಸಣ್ಣ ಪುಟ್ಟ ಮಡಿಕೆಗಳು, ನೀರು ಸೇದಲು ಎರಡು ಗಡಿಗೆ, ನೀರು ಕಾಯಿಸಲು ಒಂದು ಗುಡಾಣ, ರೊಟ್ಟಿ ತಟ್ಟುವ ಸಾವೆ ಮೊದಲಾಗಿ ಸಂಸಾರಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡಳು. ಪುಟ್ಟವ್ವ ಚೌಕಾಶಿ ಮಾಡಿದುದರಿಂದ ಎಲ್ಲ ಸಾಮಾನೂ ಹನ್ನೆರಡಾಣೆಗೆ ಬಂದವು. ಮುಕ್ಕಾಲು ಭಾಗವನ್ನೂ ಪುಟ್ಟವ್ವ ಹೊತ್ತಳು. ಉಳಿದುವನ್ನು ನಂಜಮ್ಮ ಹಿಡಿದುಕೊಂಡಳು. ಬಿಸಿಲಿನಲ್ಲಿ ಇವರು ಊರು ಮುಟ್ಟುವ ಹೊತ್ತಿಗೆ ಸ್ವಾಮಿ ನೆತ್ತಿಯ ಮೇಲೆ ಬಂದಿದ್ದ. ಸಾಮಾನುಗಳನ್ನು ಊರೊಳಗಿನ ಗುಂಡೇಗೌಡರ ಮನೆಯಲ್ಲಿಟ್ಟು ಈಗ ಮೆಟ್ಟಿಕೊಂಡು ಶೆಡ್ಡಿಗೆ ಹೋದರೆ ಅಷ್ಟರಲ್ಲಿ ಅತ್ತೆ ಮೈದುನರು ತಮ್ಮ ಸಾಮಾನುಗಳನ್ನು ಹನುಮಂತರಾಯನ ಗುಡಿಗೆ ಸಾಗಿಸಿ ಖಾಲಿ ಮಾಡಿದ್ದಾರೆ. ಶೆಡ್ಡಿನ ಮುಂದೆ ರಾಮಣ್ಣ ಅಳುತ್ತಾ ಬಿದ್ದುಕೊಂಡಿದೆ. ಪಾರ್ವತಿಯೂ ಇಲ್ಲ. ಚೆನ್ನಿಗರಾಯರಂತೂ ಇಲ್ಲವೇ ಇಲ್ಲ. ಮಗುವನ್ನು ಕೈಗೆ ಎತ್ತಿಕೊಂಡು ಹತ್ತಿರವೇ ಇದ್ದ ಕೊಳದಲ್ಲಿ ಅದರ ಕೈ ಮೈಗಳ ಮಣ್ಣನ್ನು ತೊಳೆದಳು. ಅದೃಷ್ಟಕ್ಕೆ ಮಗು ಕೊಳದ ಹತ್ತಿರಕ್ಕೆ ಹೋಗಿರಲಿಲ್ಲ. ಈ ಯೋಚನೆ ಬಂದ ತಕ್ಷಣ ಅವಳಿಗೆ ಪಾರ್ವತಿಯ ನೆನಪಾಯಿತು. ಎಲ್ಲರೂ ಶೆಡ್ಡು ಬಿಟ್ಟು ಊರೊಳಕ್ಕೆ ಸಾಮಾನು ಸಾಗಿಸುತ್ತಿದ್ದಾರೆ. ಇದು ಎಲ್ಲಿ ಹೋಯಿತೋ ಏನು ಕತೆಯೋ! ರಾಮಣ್ಣನನ್ನು ಎತ್ತಿಕೊಂಡು ಅವಳು ಮತ್ತೆ ಊರೊಳಕ್ಕೆ ಬಂದಳು. ಇವರ ಮೊದಲಿನ ಮನೆಯ ಮುಂದಿನ ತಮ್ಮ ಮೂಲದ ಗುಡಿಗೆ ಮಾದೇವಯ್ಯನವರು ಸಾಮಾನು ಸಾಗಿಸುತ್ತಿದ್ದರು. ಚೆನ್ನಿಗರಾಯರು ಗುಡಿಯ ಜಗುಲಿಯ ಮೇಲೆ ಕೂತು ಹೊಗೆಸೊಪ್ಪಿನ ಬಾಯನ್ನು ಮುಲುಕಿಸುತ್ತಿದ್ದರು. ಹತ್ತಿರಬಂದ ನಂಜಮ್ಮ , ‘ಪಾರ್ವತಿ ಎಲ್ಲಿ?’ ಎಂದು ಕೇಳಿದರೆ ಅವರು ಎದ್ದು ಬೀದಿಗೆ ಬಂದು ಬಾಯ ತಂಬುಲವನ್ನು ಉಗುಳಿ, ‘ನಂಗೇನು ಗೊತ್ತು, ಎಲ್ಲ್ಯಾರ ನೋಡು’ ಎಂದರು +‘ಅಯ್ನೋರೇ, ಮಕ್ಳುನ್ನ ನೋಡ್ಕಾಳುಕ್ಕೆ ಹೇಳಿ ನಾನು ಒಂದಿಷ್ಟು ಮಡಿಕೆ ತರಾಣ ಅಂತ ಸಣ್ಣೇನಹಳ್ಳಿಗೆ ಹೋಗಿದ್ದೆ. ಈಗ ಬಂದ್ರೆ ಪಾರ್ವತಿ ಇಲ್ಲ. ಇವರು ಹೀಗಂತಾರೆ ನೋಡಿ.’ +‘ಏನ್ರೀ, ಬೆಳಿಗ್ಗೆಯಿಂದ ಇಲ್ಲೇ ಕೂತಿದೀರಲ, ಮಗ ಎಲ್ರಿ?’ – ಎಂದು ಅಯ್ಯನವರು ಕೇಳಿದರೆ ‘ಎಲ್ಲಿ ಹೋಯ್ತೋ ಅನಿಷ್ಟ ಮುಂಡೇದು. ಒಂದ್ ಕಡೆ ಕುಕ್ಕರು ಬಡಿದಿದ್ತೆ ತಾನೇ ಅದು!’ ಎಂದರು. +ಹುಡುಕಲು ನಂಜಮ್ಮ ಒಂದು ಕಡೆಗೆ ಹೋದಳು. ಅಯ್ಯನವರು ಇನ್ನೊಂದು ಕಡೆ ಹೊರಟರು. ಅದು ಬೆಸ್ತರ ಕೇರಿಯಲ್ಲಿ ಇದ್ದುದನ್ನು ತಾವು ಕಂಡಿದ್ದಾಗಿ ಯಾರೋ ಹೇಳಿದರು. ನಂಜಮ್ಮ ಅಲ್ಲಿಗೇ ನುಗ್ಗಿದಳು. ಅದೃಷ್ಟಕ್ಕೆ ಮಗು ಅಲ್ಲಿಯೇ ಒಂದು ಗುಡಿಸಲಿನ ಜಗುಲಿಯ ಕೆಳಗೆ ಅಳುತ್ತಾ ಕೂತಿತ್ತು. ಎಲ್ಲರಿಗೂ ಶೆಡ್ಡುಗಳಿಂದ ಸಾಮಾನು ಸಾಗಿಸುವ ಗಡಿಬಿಡಿ. ಇದು ಯಾವ ಮಗು ಎಂದು ಯಾರೂ ಗಮನಿಸಿರಲಿಲ್ಲ. +ಮಗುವನ್ನು ಕೈಹಿಡಿದು ನಡೆಸಿಕೊಂಡು ನಂಜಮ್ಮ ಮನೆಗೆ ಬಂದಳು. ಮನೆಯ ಪರಿಸ್ಥಿತಿಯರಿತ ಮಾದೇವಯ್ಯನವರು, ತಾವೇ ಒಂದು ಮೊರದಲ್ಲಿ ಎರಡು ಸೇರು ರಾಗಿಹಿಟ್ಟು, ಒಂದಿಷ್ಟು ಅವರೇಬೇಳೆ, ಖಾರದಪುಡಿ ಉಪ್ಪು ಹುಣಿಸೇಹಣ್ಣು, ತಾವು ಎಸರಿಗೆ ಹಾಕಿಬಿಟ್ಟಿದ್ದ ಕಾಯಿತುರಿಗಳನ್ನು ಇಟ್ಟು ತಂದುಕೊಟ್ಟರು. ಹೊಟ್ಟೆ ಹಸಿಯುತ್ತದೆಂದು ಮಕ್ಕಳೆರಡೂ ರಚ್ಚೆ ಮಾಡುತ್ತಿದ್ದವು. ಅವಳಿಗೂ ಹಸಿವಾಗಿತ್ತು. ಬಿಸಿಲಿನಲ್ಲಿ ಆರು ಮೈಲಿ ನಡೆದು ಕಳಲಿಕೆ ಬರುತ್ತಿತ್ತು. ಶಕ್ತಿವಂತ ಹೆಂಗಸಾದರೂ ಒಟ್ಟಿಗೆ ಆರು ಮೈಲಿಯನ್ನು ಅವಳು ಈ ಹಿಂದೆ ಎಂದೂ ನಡೆದಿರಲಿಲ್ಲ. ಅಲ್ಲದೆ ಬಸುರಿನಲ್ಲಿದ್ದ ಮಗುವಿನ ತೂಕವನ್ನು ಹೊತ್ತು ಇಷ್ಟು ದೂರ ನಡೆದಿದ್ದಳು. +ಸಂಕಟವಾಗುತ್ತದೆಂದು ಸುಮ್ಮನೆ ಕೂತಿರುವಂತಿಲ್ಲ. ಎದ್ದು ಹೊಸ ಗಡಿಗೆಯಲ್ಲಿ ನೀರು ಸೇದಿ ತಂದಳು. ಮನೆಯ ಒಳಗೆ ಒಲೆ ಇತ್ತು. ಅದಕ್ಕೇ ನೀರು ಚಿಮುಕಿಸಿದಳು. ಅಯ್ಯನವರೇ ಒಂದು ತಬ್ಬು ಕುರುಂಬಾಳೆ, ಹೆಡೆಮೊಟ್ಟೆಗಳನ್ನು ತಂದುಹಾಕಿದರು. ಹೊಸ ಮಡಿಕೆಗಳನ್ನು ತೊಳೆದು ಮಣ್ಣಿನ ವಾಸನೆಯಾಗುತ್ತದೆಂದು ಗೊತ್ತಿದ್ದರೂ ಅದರಲ್ಲಿಯೇ ಒಂದರಲ್ಲಿ ಅವರೇಬೇಳೆಯ ಹುಳಿ, ಮತ್ತೊಂದರಲ್ಲಿ ರಾಗಿಯ ಮುದ್ದೆಗೆ ಇಟ್ಟಳು. ನಾಲ್ಕು ಗಂಟೆಯ ಹೊತ್ತಿಗೆ ಅಡಿಗೆಯಾಯಿತು. ಊಟಕ್ಕೆ ಬಡಿಸಿದರೆ ಪಾರ್ವತಿ ಹಸಿವನ್ನು ತಡೆಯಲಾರದೆ ಅರ್ಧ ಮುದ್ದೆಯನ್ನು ಚೂರುಚೂರು ಮಾಡಿಕೊಂಡು ಹುಳಿಯಲ್ಲಿ ಹೊರಳಿಸಿ ನುಂಗಿತು. ಆದರೆ ಇನ್ನೂ ಎರಡು ವರ್ಷವೂ ಆಗದಿದ್ದ ರಾಮಣ್ಣನಿಗೆ ಅದು ಸೇರದು. ಒಂದು ಸಲ ಹಲ್ಲಿನಲ್ಲಿ ಅಗಿದು ದವಡೆಗೆ ಮೆತ್ತಿಕೊಂಡಾಗ, ‘ನಂಗ್ ಬ್ಯಾಡಾ’ ಎಂದು ರಚ್ಚೆ ಹಿಡಿಯಿತು. ನಂಜಮ್ಮ ಅಚ್ಚೇರಿನಷ್ಟು ರಾಗಿಯ ಹಿಟ್ಟನ್ನು ಇಟ್ಟಿದ್ದಳು. ಬೇಗ ಎರಡು ಹಿಡಿಯನ್ನು ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಸಾವೆಯ ಮೇಲೆ ಒಂದು ರೊಟ್ಟಿ ಹಾಕಿ ಕೊಟ್ಟಳು. ಅದನ್ನೇ ಹುಳಿಯಲ್ಲಿ ಅದ್ದಿಕೊಂಡು ಅಗಿಯುತ್ತಾ ಮಗು ಸುಮ್ಮನಾಯಿತು. ಇನ್ನು ಅರ್ಧ ರೊಟ್ಟಿ ಉಳಿಯಿತು. +ಅಷ್ಟರಲ್ಲಿ ಪತಿದೇವರು ಮನೆಗೆ ಬಂದರು. ಅಡಿಗೆ ಮನೆಯ ಬಾಗಿಲಿನಲ್ಲಿ ಒಂದು ನಿಮಿಷ ನಿಂತು ಒಳಗೆ ನೋಡಿದರು. ನೇರವಾಗಿ ಹೊರಗೆ ನಡೆದವರು ಯಾರ ಹಿತ್ತಲಿಗೋ ಹೋಗಿ ಒಂದು ದೊಡ್ಡ ಸೀಳು ಬಾಳೆಯ ಎಲೆ ಹರಿದು ತಂದು ಒಲೆಯ ಹತ್ತಿರ ಅವಳ ಮುಂದೆ ಹಾಕಿಕೊಂಡು ಚಕ್ಕಲಮಕ್ಕಲದಲ್ಲಿ ಮಂಡಿಸಿದರು. ಅಡಿಗೆ ಮಾಡುವಾಗ ಗಂಡ ಊಟಕ್ಕೆ ಬರುತ್ತಾರೆ ಅಥವಾ ಬರುವುದಿಲ್ಲ ಎಂಬ ಯಾವ ಪ್ರಜ್ಞೆಯೂ ಅವಳಿಗೆ ಇರಲಿಲ್ಲ. ಧ್ಯಾನವೆಲ್ಲ. ಒಂದೇ ಸಮನೆ ಹೊಡೆದುಕೊಳ್ಳುತ್ತಿದ್ದ ಮಕ್ಕಳ ಹೊಟ್ಟೆಯ ಮೇಲಿತ್ತು. ಈಗ ಮಕ್ಕಳು ಸುಮ್ಮನಾಗುತ್ತಿವೆ. ಗಂಡ ಬಂದು ಕೂತಿದಾನೆ. ತಾನು ಅವ್ವನ ಜೊತೆ ಇರುವುದಾಗಿ ಹೇಳಿದ್ದವನು ಈಗ ಯಾಕೆ ಬಂದರು? ಅವ್ವನ ಮನೆಯಲ್ಲಿ ಇನ್ನೂ ಮುದ್ದೆ ತಿರುವಿಲ್ಲವೋ, ನಿನ್ನ ಹೆಂಡತಿಯ ಕೈಲೇ ಉಣ್ಣು ಹೋಗು ಎಂದು ಅವರು ಮಗನಿಗೆ ಹೇಳಿದರೋ, ಅಥವಾ ಇವರಾಗಿಯೇ ಇಲ್ಲಿಗೆ ಬಂದಿದ್ದಾರೆಯೋ! ಬೆಳಗಿನಿಂದ, ನೀನು ಸತ್ತೆಯಾ ಬದುಕಿದೆಯಾ ಎಂದು ಕೇಳಿರಲಿಲ್ಲ. ಮಕ್ಕಳ ಮೇಲೆ ನಿಗವಿಲ್ಲ. ಅಯ್ಯನವರು ಧರ್ಮಕ್ಕೆಂದು ತಂದುಕೊಟ್ಟ ಹಿಟ್ಟು ಬೇಳೆ ಬೇಯಿಸಲು, ಒಂದು ಗಡಿಗೆ ನೀರು ಸೇದಿಕೊಡುತ್ತೇನೆಂದು ಬರಲಿಲ್ಲ. ಈಗ ಬಾಳೆ ಎಲೆ ಅದೂ ತಮಗೆ ಬೇಕಾದ ಒಂದೇ ಒಂದು ಸೀಳು – ತಂದುಹಾಕಿಕೊಂಡು ಕುಳಿತಿದ್ದಾರೆ. ಇವರಿಗೆ ಊಟಕ್ಕೆ ಬಡಿಸಬೇಕೊ ಬೇಡವೊ ಎಂಬ ಯೋಚನೆ ಅವಳಿಗೆ ಬರಲಿಲ್ಲ. ಆದರೆ ಅಲ್ಲಿ ಕೂರುವುದಕ್ಕೇ ಬೇಸರವಾಗಿ ಮಕ್ಕಳನ್ನು ಎತ್ತಿಕೊಂಡು ಹೊರಗೆ ಬಂದುಬಿಟ್ಟಳು. +ಅಷ್ಟು ಹೊತ್ತಿಗಾಗಲೇ ಮಕ್ಕಳೆರಡೂ ತೂಕಡಿಸುತ್ತಿದ್ದುವು. ಅವನ್ನು ಮಲಗಿಸಲು ಒಂದು ಚಾಪೆ ಇಲ್ಲ. ತನ್ನ ಒಂದು ಹಳೆಯ ಸೀರೆಯನ್ನೇ ಹಾಸಿ ಮಲಗಿಸಿದಳು. ತನಗೂ ಆಯಾಸವಾಗಿತ್ತು. ಬಲಗೈಯನ್ನು ತೋಳಿಗೆ ಕೊಟ್ಟು ರಾಮಣ್ಣನ ಪಕ್ಕದಲ್ಲಿ ಉರುಟಿದಳು. ತಾನೇ ಎದ್ದು ಹೋಗಿ ಗಂಡನಿಗೆ ಬಡಿಸಲೆ ಎಂಬ ಯೋಚನೆ ಒಂದು ಸಲ ಬಂತು. ಅವರೇ ಒಂದು ಸಲ ಕೂಗಲಿ ಎಂಬ ಮತ್ತೊಂದು ಯೋಚನೆ. ಹೀಗಾಗಿ ಮೇಲೆ ಏಳದೆ ಹಾಗೆಯೇ ಮಲಗಿದಳು. ಬೆಳಗಿನಿಂದ ಆಗಿದ್ದ ಆಯಾಸಕ್ಕೂ ಹೊಟ್ಟೆಗಿಲ್ಲದ ಕಳಲಿಕೆಗೂ ಕಣ್ಣು ಹೊತ್ತಿಕೊಂಡು ಬಂತು. +ಎಚ್ಚರವಾಗುವ ಹೊತ್ತಿಗೆ ಆಗಲೇ ಒಂದು ಗಂಟೆಗೂ ಮೀರಿ ನಿದ್ದೆ ಮಾಡಿದ್ದುದಾಗಿ ಎನಿಸಿತು. ಹೊರಗಡೆ ಬಿಸಿಲು ಕಂದುತ್ತಿತ್ತು. ಗಂಡ ಊಟ ಮಾಡಿದರೋ ಅಥವಾ ಸಿಟ್ಟು ಮಾಡಿಕೊಂಡು ಹೋದರೋ ಎಂಬ ಯೋಚನೆಯೂ ಆಯಿತು. ಎದ್ದು ಒಳಗೆ ಹೋಗಿ ನೋಡುತ್ತಾಳೆ: ಅಡಿಗೆಯ ಮಡಕೆಗಳ ಮೇಲೆ ಬಿಸಿಲುಕೋಲು ಬಿದ್ದಿದೆ. ಅದರ ಪಕ್ಕದಲ್ಲಿ ಅವರು ಊಟ ಮಾಡಿ ಬಿಟ್ಟುಹೋಗಿದ್ದ ಬಾಳೆಯ ಎಲೆ ಹಾಗೆಯೇ ಇದೆ. ಅವಳು ಒಟ್ಟು ಐದು ಮುದ್ದೆ ಕಟ್ಟಿದ್ದಳು. ಅರ್ಧವನ್ನು ಪಾರ್ವತಿ ತಿಂದಿತ್ತು. ಇನ್ನು ನಾಲ್ಕುವರೆ ಮಡಿಕೆಯಲ್ಲಿತ್ತು. ಈಗ ಅರ್ಧ ಮುದ್ದೆ ಮಾತ್ರ ಇದೆ. ಮಡಿಕೆಯ ತಳದಲ್ಲಿ ಬರೀ ಒಂದು ಸೊಟಕದಷ್ಟು ಹುಳಿ ಇದೆ. ಇಷ್ಟನ್ನು ಅವರು ಹೆಂಡತಿಗೆಂದು ಉಳಿಸಿದರೋ ಅಥವ ಹೊಟ್ಟೆಯಲ್ಲಿ ಇನ್ನು ಜಾಗವಿರಲಿಲ್ಲವೋ ಎಂಬುದು ಅವಳಿಗೆ ತಿಳಿಯಲಿಲ್ಲ. ಅವಳ ಹೊಟ್ಟೆಯೂ ಬೆಂಕಿ ಹಾಕಿ ಉರಿಸಿದಂತೆ ಹಸಿಯುತ್ತಿತ್ತು. ಇರುವ ಅರ್ಧ ಮುದ್ದೆಯನ್ನು ತಿನ್ನಬೇಕೆಂದು ಕೈ ಹೋಯಿತು. ಆದರೆ ರಾತ್ರಿಯ ಊಟಕ್ಕೆ ಮಕ್ಕಳಿಗೆ ಏನು ಇಕ್ಕುವುದು? ಇನ್ನೂ ಒಂದೂವರೆ ಪಾವಿನಷ್ಟು ರಾಗಿಯ ಹಿಟ್ಟಿದೆ. ಅದರಲ್ಲಿ ರೊಟ್ಟಿ ಮಾಡಿಕೊಡಬಹುದು. ಆದರೆ ಗಂಡ ನುಂಗಿ ಬಿಟ್ಟು ಹೋಗಿರುವ ಅರ್ಧ ಮುದ್ದೆಯನ್ನು ತಿನ್ನಲು ಅಸಹ್ಯವಾಯಿತು. ಸುಮ್ಮನೆ ಎದ್ದು ಹೊರಗೆ ಬಂದು ಕಂಬದ ಹತ್ತಿರ ಕುಳಿತಳು. +ಮಕ್ಕಳು ಇನ್ನೂ ನಿದ್ರಿಸುತ್ತಿದ್ದವು. ಆಗಲೇ ಹೊತ್ತು ಮುಳುಗುವ ಹೊತ್ತಾಯಿತು. ಇಷ್ಟು ಹೊತ್ತಿನಲ್ಲಿ ಮಲಗಿರಬಾರದು. ಅವಳೇ ಅವನ್ನು ಎಬ್ಬಿಸಿದಳು. ಆಗ ನೆನಪಾಯಿತು: ಈ ದಿನ ತಾನಾಗಲೀ ಮಕ್ಕಳಾಗಲೀ ಸ್ನಾನ ಮಾಡಿಲ್ಲ. ಅವಳು ಸಣ್ಣೇನಹಳ್ಳಿಯಿಂದ ಬಂದ ಮೇಲೆ ಮುಖ ತೊಳೆದು ಹಣೆಗೆ ಮತ್ತೆ ಕುಂಕುಮವನ್ನೂ ಇಟ್ಟಿಲ್ಲ. ಕುಂಕುಮದ ಬಟ್ಟಲು ಸಹ ಅತ್ತೆಯ ಮನೆಯಲ್ಲಿಯೇ ಇದೆ. ಅದನ್ನಾದರೂ ಕೊಡುತ್ತಾರೆಯೋ ಇಲ್ಲವೋ. ರಾತ್ರಿ ಹಚ್ಚುವುದಕ್ಕೆ ಒಂದು ಸೀಮೆ ಎಣ್ಣೆಯ ಬುಡ್ಡಿ ಇಲ್ಲ. ಹತ್ತಿರ ಇನ್ನೂ ನಾಲ್ಕೂಕಾಲು ರೂಪಾಯಿ ಇತ್ತು. ಮಕ್ಕಳನ್ನು ಕರೆದುಕೊಂಡು ಬಾಗಿಲಿಗೆ ಬೀಗ ಮೆಟ್ಟಿ, ಅವಳೇ ಮಗ್ಗದ ಕೇರಿಯ ಚೆನ್ನಶೆಟ್ಟಿಯ ಅಂಗಡಿಗೆ ಹೋಗಿ ಎರಡು ದೀಪದ ಬುಡ್ಡಿ, ಒಂದು ಸೀಸೆ, ಅದರ ಭರ್ತಿ ಎಣ್ಣೆ, ಒಂದು ಕಡ್ಡಿಪೆಟ್ಟಿಗೆಯನ್ನೂ ತಂದಳು. ಒಟ್ಟೂ ಮೂರೂವರೆ ಆಣೆಯಾಯಿತು. ಆರು ಕಾಸಿಗೆ ಮಕ್ಕಳಿಗೆ ಬತ್ತಾಸು ಕೊಡಿಸಿದಳು. ಮನೆಗ ಬಂದು ತನ್ನ ಹಳೇ ಸೀರೆಯ ಒಂದು ಕೊನೆಯನ್ನು ಹರಿದು ಹೊರಗೆ ಬಂದು, ಇನ್ನೂ ಮಬ್ಬಾಗಿದ್ದ ಬೆಳಕಿನಲ್ಲಿ ಒಂದು ಬುಡ್ಡಿಗೆ ಬತ್ತಿ ಹಾಕಿ ಎಣ್ಣೆ ತುಂಬಿದಳು. ಅದರ ಬೆಳಕಿನಲ್ಲಿ ಒಳಗೆ ಕೂತು ಇನ್ನೊಂದಕ್ಕೆ ಎಣ್ಣೆ ಬತ್ತಿ ಹಾಕಿ ಇಟ್ಟಳು. ಮತ್ತೆ ಏನು ಮಾಡುವುದಕ್ಕೂ ತೋಚಲಿಲ್ಲ; ಮೈಯಲ್ಲಿ ಶಕ್ತಿಯೂ ಇರಲಿಲ್ಲ. ಆದುದರಿಂದ ಕಂಬವನ್ನೊರಗಿ ಸುಮ್ಮನೆ ಕುಳಿತಳು. ಮಕ್ಕಳೆರಡೂ ಎರಡು ತೊಡೆಗಳ ಮೇಲೂ ಒಂದೊಂದರಂತೆ ತಲೆ ಇಟ್ಟು ಕಾಲು ಚಾಚಿದವು. ಹೊಸ ಜಾಗ, ಅವಕ್ಕೆ ಏನೋ ಒಂದು ತರದ ಅಂಜಿಕೆ. +ಸ್ವಲ್ಪ ಹೊತ್ತಿನ ಮೇಲೆ ಅವನ್ನು ಒಳಗೆ ಕರೆದುಕೊಂಡು ಹೋಗಿ, ಉಳಿದಿದ್ದ ಅರ್ಧ ರೊಟ್ಟಿಯನ್ನು ರಾಮಣ್ಣನಿಗೂ ಅರ್ಧ ಮುದ್ದೆ ಹಿಟ್ಟನ್ನು ಪಾರ್ವತಿಗೂ ಹಾಕಿದಳು. ರಾಮಣ್ಣ ತನಗೆ ಕೊಟ್ಟ ಅರ್ಧ ಭಾಗವನ್ನು ತಿಂದು ಸಾಕು ಎಂದಿತು. ಪಾರ್ವತಿ ಎರಡು ಗುಳಿಗೆ ಹಿಟ್ಟನ್ನು ಉಳಿಸಿ ಸಾಕು ಎಂದಿತು. ಅವಳ ಹೊಟ್ಟೆಯ ಒಳಗಡೆ ಶೂಲೆ ಬಂದಂತೆ ಆಗುತ್ತಿತ್ತು. ಕಾಲುಭಾಗ ರೊಟ್ಟಿ ಮತ್ತು ಪಾರ್ವತಿ ಬಿಟ್ಟ ಮುದ್ದೆಯನ್ನು, ಅದು ಉಳಿಸಿದ್ದ ಹುಳಿಯಲ್ಲಿ ಹೊರಳಿಸಿ ತಿಂದಳು. ಉಳಿದಿದ್ದ ಒಂದೂವರೆ ಪಾವಿನಷ್ಟು ರಾಗಿಯ ಹಿಟ್ಟಿನಲ್ಲಿ ರೊಟ್ಟಿಯನ್ನಾದರೂ ಬಡಚಿ ತಿನ್ನುವ ಮನಸ್ಸಾಯಿತು. ಆದರೆ ಏನೋ ಒಂದು ತರಹ ಬೇಸರ ತಿರಸ್ಕಾರಗಳಿಂದ ಸುಮ್ಮನೆ ಮೇಲೆ ಎದ್ದು ಹುಡುಗರನ್ನು ಕರೆದುಕೊಂಡು ಎಡಗೈಯಲ್ಲಿ ದೀಪದ ಬುಡ್ಡಿ ಹಿಡಿದು ನಡುಮನೆಗೆ ಬಂದಳು. ಅದೇ ಹೊತ್ತಿಗೆ ಗಂಡ ಹಾಸಿಗೆಯ ಸುರುಳಿಯನ್ನು ಹೆಗಲ ಮೇಲೆ ಹೊತ್ತು ಮನೆಗೆ ಬಂದರು. ಹುಡುಗರನ್ನು ಯಾವುದರ ಮೇಲೆ ಮಲಗಿಸಬೇಕೆಂಬ ಯೋಚನೆಯಲ್ಲಿರುವಾಗ ಅವರು ಇಷ್ಟಾದರೂ ಮಾಡಿದರಲ್ಲ ಎಂಬ ಸಮಾಧಾನವಾಯಿತು. ಅವರು ತಂದಿದ್ದ ಸುರುಳಿಯನ್ನು ಬಿಚ್ಚಿ ನೋಡಿದಳು. ಅವಳ ಪ್ರಸ್ತದಲ್ಲಿ ತೌರಿನವರು ಕೊಟ್ಟಿದ್ದ ಎರಡು ಜಾನ, ಎರಡು ಜಮಖಾನ, ದಿಂಬು ಮತ್ತು ಕರಿಯ ಕಂಬಳಿಗಳಿದ್ದವು. ಒಂದು ಜಾನವಂತೂ ಪಾರ್ವತಿ ರಾಮಣ್ಣರು ಉಚ್ಚೆ ಹುಯ್ದು ಹುಯ್ದು ಕರಗುವ ಸ್ಥಿತಿಗೆ ಬಂದಿತ್ತು. ಕಂಬಳಿ ಅರ್ಧ ಜೀರ್ಣವಾಗಿತ್ತು. ಮಕ್ಕಳಿಬ್ಬರಿಗೂ ಜೊತೆಯಲ್ಲಿ ಒಂದು ಜಾನ ಹಾಕಿ ಅದರ ಪಕ್ಕದಲ್ಲಿ ತಾನೂ ಒಂದು ಜಮಖಾನ ಹಾಸಿ ದಿಂಬು ಇಟ್ಟುಕೊಂಡಳು. ಗಂಡನಿಗೆ ಬೇರೆ ಅಂಕಣದಲ್ಲಿ ಹಾಸಿ ಕೊಟ್ಟಳು. +ಅದನ್ನು ನೋಡುತ್ತಾ ನಿಂತಿದ್ದ ಅವರು ಸಿಡಾರನೆ ಕೇಳಿದರು; ‘ನನ್ನ ಹಾಸಿಗೇನ ನಿಂದ್ರಜೊತೆಗೇ ಯಾಕೇ ಹಾಕ್ಲಿಲ್ಲ?’ +ಅವಳು ಮಾತನಾಡಲಿಲ್ಲ. ರಾಮಣ್ಣನನ್ನು ಮಲಗಿಸಿ ಬೆನ್ನು ತಟ್ಟುತ್ತಿದ್ದಳು. +‘ನೀನು ಬ್ಯಾರೆ ಹಾಸ್ಲಿ ಅಂತ್ಲೇನೇ ನಾನು ಅಲ್ಲಿಂದ ಕಷ್ಟಪಟ್ಟು ಹಾಸಿಗೆ ಹೊತ್ಕಂಡ್ ಬಂದದ್ದು?’ +ಅವಳೂ ಈಗಲೂ ಮಾತನಾಡಲಿಲ್ಲ. +‘ಅದ್ಯಾಕೆ ಮುಂಡೆ, ಸುಮ್ನಿದೀಯ?’ +ತಾಳ್ಮೆ ಕೆಡಬಾರದೆಂದು ಅವಳು ಮತ್ತೆ ನಿಶ್ಚಯಿಸಿಕೊಂಡು ಹೇಳಿದಳು ‘ನಂಗಾಗಲೇ ಆರು ತಿಂಗಳು ತುಂಬ್ತು’ +‘ಏನಂತೆ ತುಂಬಿದ್ರೆ?’ – ಎಂದು ಅವರೇ, ಬೇರೆ ಅಂಕಣದಲ್ಲಿದ್ದ ತಮ್ಮ ಹಾಸಿಗೆಯನ್ನು ಅವಳ ಜಮಖಾನದ ಹತ್ತಿರಕ್ಕೆ ಎಳೆದುಕೊಂಡರು. ಉರಿಯುತ್ತಿದ್ದ ಬುಡ್ಡಿಯನ್ನು ಕೈಲಿ ಹಿಡಿದು ಅಡಿಗೆ ಮನೆಗೆ ಹೋಗಿ ನೋಡಿ ಒಳಗಿನಿಂದಲೇ ಕೂಗಿ ಕೇಳಿದರು; ‘ನಂಗೇನೂ ಇಟ್ಟೇ ಇಲ್ವಲ್ಲ ಯಾಕೆ?’ +‘ಮಧ್ಯಾಹ್ನ ನೀವು ಊಟ ಮಾಡಿ ಏನು ಉಳಿಸಿಹೋಗಿದ್ರಿ ಇಡೂಕೆ?’- ಅವಳು ಹೊರಗಿನಿಂದ ಉತ್ತರ ಕೊಟ್ಟಳು. +ಅವರು ಆ ಮಾತಿಗೆ ಉತ್ತರ ಹೇಳಲಿಲ್ಲ. ಮೊರದಲ್ಲಿ ಇದ್ದ ಒಂದೂವರೆ ಪಾವು ಹಿಟ್ಟಿಗೆ ಉಪ್ಪು ಹಾಕಿ ಕಲಸಿದರು. ತಾವೇ ಒಲೆ ಹೊತ್ತಿಸಿ, ಸಾವೆಯ ಮೇಲೆ ದಪ್ಪನಾಗಿ ಎರಡು ರೊಟ್ಟಿ ಹಾಕಿ ತಮಗೆ ತಿಳಿದಂತೆ ಬೇಯಿಸಿದರು. ಅದನ್ನೇ ಬಿಸಿಬಿಸಿಯಾಗಿ ತಿಂದು, ಮಡಕೆಯಲ್ಲಿಯೇ ಎತ್ತಿ ನೀರು ಕುಡಿದು ದೀಪದ ಬುಡ್ಡಿ ಹಿಡಿದು ನಡುಮನೆಗೆ ಬಂದರು. ಅಷ್ಟು ಹೊತ್ತಿಗೆ ಮಕ್ಕಳಿಬ್ಬರಿಗೂ ನಿದ್ದೆ ಬಂದಿತ್ತು. ಹೆಂಡತಿ ಕಣ್ಣು ಮುಚ್ಚಿಕೊಂಡು ಮಲಗಿದ್ದಳು. ಅವರು ಹೋಗಿ ಪಕ್ಕದಲ್ಲಿದ್ದ ತಮ್ಮ ಮೆತ್ತನೆಯ ಹಾಸಿಗೆಯಲ್ಲಿ ಪವಡಿಸಿದರು. ನಂಜಮ್ಮನಿಗೆ ನಿದ್ದೆ ಬಂದಿರಲಿಲ್ಲ. ಬರುವುದು ಸಾಧ್ಯವಿರಲಿಲ್ಲ. ಬೆಳಗಿನಿಂದ ಏನೂ ಬೀಳದಿದ್ದ ಅವಳ ಹೊಟ್ಟೆಯ ಒಳಗೆ ಉರಿ ಹೊತ್ತಿದಂತೆ ಆಗಿತ್ತು. ಸಂಕಟ ಕಳಲಿಕೆ. ಪಾಪಿ ಹೊಟ್ಟೆಗೆ ಒಂದು ದಿನ ಇಲ್ದೇ ಇದ್ರೆ ಅದೇನು ಗೋಳಾಡ್ಸುತ್ತೆ! ಎಂಬ ಪ್ರಶ್ನೆಯನ್ನು ಅವಳೇ ಕೇಳಿಕೊಂಡಳು. ಇಷ್ಟು ಹಸಿವಾಗಿದ್ದರೂ ತನ್ನ ಹೊಟ್ಟೆ ಭಾರವಾಗಿರುವ ನೆನಪಾಯಿತು ಬಸುರಿ ಉಪವಾಸ ಇರಬಾರ್ದು. ನಾವು ಹ್ಯಾಗಾದರೂ ಇರ್ತೀವಿ ಹೊಟ್ಟೇಲಿರೂ ಮಗೂಗೆ ಆಹಾರ ಹ್ಯಾಗೆ ಸಿಕ್ಕಬೇಕು? ನಾನಿವತ್ತು ಮಧ್ಯಾಹ್ನ ಅವ್ರು ಉಳಿಸಿದ್ದ ಅರ್ಧ ಮುದ್ದೇನಾದ್ರು ತಿನ್ನ ಬೇಕಾಗಿತ್ತು- ಎಂಬ ಯೋಚನೆ ಬಂತು. ಆದರೆ ರಾತ್ರಿಗೆ ಮಕ್ಕಳಿಗೆ ಏನೂ ಉಳಿಯುತ್ತಿರಲಿಲ್ಲ ಎಂಬ ನೆನಪಾಗಿ, ತಾನೂ ತಿನ್ನದೆ ಇದ್ದುದೇ ಸರಿಯಾಯಿತೆಂದುಕೊಂಡಳು. ಉಳಿದಿದ್ದ ಒಂದೂವರೆ ಪಾವು ಹಿಟ್ಟಿನಲ್ಲಿ ರೊಟ್ಟಿಯನ್ನಾದರೂ ತಟ್ಟಿ ತಿನ್ನಬೇಕಾಗಿತ್ತು. ಆದರೆ ನಾಳೆ ಬೆಳಗ್ಗೆ ಎದ್ದ ತಕ್ಷಣ ಮಕ್ಕಳು ಅತ್ತಾಗ ಏನು ಮಾಡಿಕೊಡುವುದು ಎಂಬ ಯೋಚನೆಯೂ ಮನಸ್ಸಿನಲ್ಲಿತ್ತು. ಈಗ ಅದೇ ಹಿಟ್ಟನ್ನು ಕಲಸಿ ರೊಟ್ಟಿ ಮಾಡಿಕೊಂಡು, ಇವೇ ಮಕ್ಕಳನ್ನು ಹುಟ್ಟಿಸಿದ ಅಪ್ಪ ತಿಂದು ಬಂದಿದ್ದಾರೆ. ಸಾಯಂಕಾಲ ತಾನೇ ನಾಲ್ಕು ಮುದ್ದೆ ನುಂಗಿದ ಇವರಿಗೆ ಇಷ್ಟು ಬೇಗ ಹ್ಯಾಗೆ ಹಸಿವಾಯಿತು? ಕೆಲವರಿಗೆ ಅಗ್ನಿ ಪುಟ ತುಂಬ ಇರುತ್ತಂತೆ-ಎಂಬ ನೆನಪಾಯಿತು. ಮಧ್ಯಾಹ್ನ ತಾವೇ ಕೂತು ಬಾಳೆ ಎಲೆಯ ಮೇಲೆ ಹಾಕಿಕೊಂಡು ಉಣ್ಣುವಾಗ ಅವರಿಗೆ ಹೆಂಡತಿಯ ಹೊಟ್ಟೆಯ ಯೋಚನೆ ಬರಲಿಲ್ಲ. ಈಗ ರೊಟ್ಟಿ ತಿನ್ನುವಾಗ ಬರಲಿಲ್ಲ. ಈಗ ಬಂದು ಪಕ್ಕದಲ್ಲಿ ಮಲಗಿ ಹತ್ತಿರ ಬಂದಿದ್ದಾರೆ. ಅವಳ ಆರೋಗ್ಯವೇನು, ಎಷ್ಟು ತಿಂಗಳಾಗಿದೆ, ಬೆಳಗಿನಿಂದ ಹೊಟ್ಟೆಗೆ ತಿಂದಳೇ ಇಲ್ಲವೇ, ಮೈಯಲ್ಲಿ ಶಕ್ತಿ ಇದೆಯೇ ಅಥವಾ ಸಂಕಟ ಪಡುತ್ತಿದ್ದಾಳೆಯೇ ಎಂಬ ಯಾವ ಯೋಚನೆಯೂ ಇಲ್ಲ? ‘ಎದ್ದು ದೂರ ಬಿದ್ಕಳಿ’- ಎನ್ನಬೇಕೆಂದು ಮನಸ್ಸಿನಲ್ಲಿ ಬಂತು. +ಆದರೆ ತನ್ನ ಅವ್ವನ ಜೊತೆ ಇರುವುದಾಗಿ ಹೇಳಿದ್ದ ಗಂಡ ಮಧ್ಯಾಹ್ನ ತಾನಾಗಿಯೇ ಬಂದು ಮುದ್ದೆ ನುಂಗಿ, ಈಗ ರೊಟ್ಟಿ ತಿಂದು, ತನ್ನ ಹತ್ತಿರ ಮಲಗಿಕೊಳ್ಳುಕ್ಕೆ ಅಂತಲೇ ಹಾಸಿಗೆ ಹೊತ್ತುಕೊಂಡು ಬಂದರಂತೆ. ಈಗ ಅವರನ್ನು ಹತ್ತಿರ ಸೇರಿಸದೆ ಇದ್ದರೆ ತನ್ನನ್ನೂ ಮಕ್ಕಳನ್ನೂ ಬಿಟ್ಟು ಹೋಗಿ ಮತ್ತೆ ಅವ್ವನ ಜೊತೆ ಸೇರಿಕೊಳ್ಳಬಹುದು. ಅವರು ಅವ್ವನ ಕುಟ್ಟೆ ಇರಾಕಿಲ್ಲ, ಅದೆಲ್ಲ ಎಲ್ಡು ದಿನ ಅಂತ ಅಯ್ಯನವರು ಹೇಳಿದ ಮಾತಿನ ಅರ್ಥ ಇದೇ ಏನೋ! ನನ್ನ ಸಂಸಾರ ಅಂತ ಉಳೀಬೇಕಾದ್ರೆ ಈ ಕರ್ಮವನ್ನೂ ಅನುಭವಿಸಬೇಕು ಎಂದು ನಿರ್ಧರಿಸಿ ಸುಮ್ಮನಾದಳು. ಸಣ್ಣೇನಹಳ್ಳಿಗೆ ಹೋಗಿ ಬಂದ ಆಯಾಸ, ಮಧ್ಯಾಹ್ನದಿಂದ ಮಾಡಿದ್ದ ಕೆಲಸ, ಬಸುರು ತುಂಬಿದ್ದರೂ ಒಂದು ಮುರುಕು ಹಿಟ್ಟು ಕಾಣದಿದ್ದ ಹೊಟ್ಟೆಯಿಂದ ಅವಳ ಮೈ ಸೋತು ಮಲಗಿತ್ತು. ಚೆನ್ನಿಗರಾಯರಿಗೆ ಆಯಾಸವಾಗುವ ಕಾರಣವೇನೂ ಇರಲಿಲ್ಲ. +ಇವಳಿಗೆ ಇದ್ದಕ್ಕಿದ್ದಹಾಗೆಯೇ ತನ್ನ ತಂದೆಯ ನೆನಪಾಯಿತು. ಅಪ್ಪ ದೈತ್ಯ ಸ್ವಭಾವದವನು. ಯಾವುದೂ ಲೆಕ್ಕವಿಲ್ಲ. ಕೋಪ ಬಂದರೆ ಹೆಂಡತಿಯಾಗಲಿ ಮಕ್ಕಳಾಗಲಿ ತಾಯಿಯಾಗಲಿ, ಸಾಯುವರೇ ಉಳಿಯುವರೇ ಎಂಬುದನ್ನೂ ನೋಡದೆ ಹೊಡೆಯುವ ಯಮರಾಯ ಬುದ್ಧಿ. ಆದರೆ ಅಂತಃಕರಣ ತುಂಬಿಬಂದಾಗ ಅಷ್ಟೇ ಮರುಗುತ್ತಾರೆ. ಕಲ್ಲೇಶನಿಗೆ ಪ್ಲೇಗು ಆಗಿದ್ದಾಗ ಒಂದು ರಾತ್ರಿಯೆಲ್ಲ ಅವನ ತಲೆಯನ್ನು ತೊಡೆಯ ಮೇಲೆಯೇ ಇಟ್ಟುಕೊಂಡು ಕೂತಿದ್ದರಂತೆ. ದೇವರೇ, ಗಂಡ ಹೆಂಡ್ತಿನ ಹೊಡೆದರೂ ಸರಿ- ಅವಳು ಉಂಡಳೇ ಉಪವಾಸ ಮಾಡಿದಳೇ, ಮಕ್ಕಳ ಹೊಟ್ಟೆಗೆ ಏನಾಯ್ತು ಅಂತ ಕೇಳುವಷ್ಟಾದರೂ ಅಂತಃಕರಣ ಇಲ್ಲದಿದ್ದರೆ ಅದೆಂಥ ಸಂಸಾರ? ಇಂಥಾ ಸಂಸಾರದಲ್ಲಿ ಯಾಕ್ ಬದುಕಿರ್ಬೇಕು?-ಎಂದು ಅವಳ ಮನಸ್ಸು ಕೇಳಿಕೊಂಡಿತು. ಅಕ್ಕಮ್ಮನ ನೆನಪು ಬಂತು. ತಾನು ಹುಟ್ಟಿದ ಮೇಲೆ ತಾಯಿಯ ಹಾಲು ಕುಡಿಯಲೇ ಇಲ್ಲವಂತೆ. ಮಗು ಹುಟ್ಟಿತು. ತಾಯಿ ಹಾಗೆಯೇ ಕಣ್ಣು ಮುಚ್ಚಿದಳು. ಆಗಿನಿಂದ ಅಕ್ಕಮ್ಮನೇ ನನ್ನ ಸಾಕಿದ್ದು. ನಾನು ಅಂದರೆ ಕರುಳು ಇಟ್ಟುಕೊಂಡಿರೋದು ಅಕ್ಕಮ್ಮ ಒಬ್ಬಳೇ. ಅವಳಿಗೂ ಎಪ್ಪತ್ತೈದರ ಮೇಲೆ ಆಯಿತು. ಅವ್ಳುನ್ನಾದ್ರೂ ಕರೆಸಿಕೋಬೇಕು. ನಮಗೇ ತಿನ್ನೋಕೆ ಇಲ್ಲ. ಅವ್ಳುನ್ನ ಕರಸ್ಕಂಡ್ ಏನ್ ಮಾಡೂದು? ಬಾಣಂತನ ಮಾಡೋರು ಯಾರು? ಇನ್ನು ನಾಗಲಾಪುರಕ್ಕೆ ಹೋಗೂದಂತೂ ಮುಗಿದೇ ಹೋಯ್ತು. ಇಲ್ಲಿಗೇ ಅಕ್ಕಮ್ಮುನ್ನ ಕರಸ್ಕಂಡ್ರೆ ಬಂದು ಒಂದು ತಿಂಗಳಾದ್ರೂ ನಂಗೂ ಮಗೂಗು ಒಂದಿಷ್ಟು ಎಣ್ಣೆ ನೀರು ಹಾಕ್ತಾಳೆ. ಅವ್ಳು ಬಂದ್ರೂ ಮನೇಲಿ ತಿನ್ನುಕ್ಕೇ ಇಲ್ಲ. ಒಂದು ಹನಿ ಹರಳೆಣ್ಣೆ, ಒಂದಿಷ್ಟು ಸಿಗೇಪುಡಿಯೂ ಇಲ್ಲ. ಈ ಯೋಚನೆಯ ಜೊತೆಗೆ, ನಾಳೆ ಬೆಳಿಗ್ಗೆ ಎದ್ದರೆ ಮಡಕೆಗಳು ಖಾಲಿ ಎಂಬ ನೆನಪಾಯಿತು. ಮಕ್ಕಳಿಗೆ ಏನು ಕೊಡೂದು ಎಂಬುದರ ಜೊತೆಗೆ ತನಗೇ ಆಗಿರುವ ಹಸಿವು ಅರಿವಿಗೆ ಬಂತು. ಒಂದೆ ಮಗ್ಗುಲಿಗೆ ಮಲಗಿ ಮಲಗಿ ಬಲಭಾಗ ನೋವು ಬಂದಿತು. ಬೇರೆ ಮಗ್ಗುಲಾಗಲೆಂದು ಎಡಗಡೆಗೆ ತಿರುಗಿದಳು. ಯಜಮಾನರು ಪಕ್ಕದಲ್ಲಿ ಅಂಗಾತ ಮಲಗಿ ಗೊರಕೆ ಎಳೆದು ಬಿಡುತ್ತಿದ್ದರು. ಅವಳಿಗೆ ಅಸಹ್ಯವಾಯಿತು. ಎದ್ದು ತನ್ನ ಜಮಖಾನ ಮತ್ತು ದಿಂಬನ್ನು ಎತ್ತಿ ಕತ್ತಲೆಯಲ್ಲಿಯೇ ಮಕ್ಕಳ ಆ ಕಡೆಗೆ ಹಾಕಿಕೊಂಡು, ನಿದ್ದೆ ಮಾಡುತ್ತಿದ್ದ ಪಾರ್ವತಿಯ ಮೇಲೆ ಎಡತೋಳು ಇಟ್ಟು ಮಲಗಿದಳು. +– ೬ – +ಬೆಳಿಗ್ಗೆ ಎದ್ದು ಗಡಿಗೆಯಲ್ಲಿ ನೀರು ಸೇದಿ ಮುಖ ತೊಳೆದುಕೊಂಡಳು. ಮಕ್ಕಳ ಮುಖವನ್ನು ತೊಳೆದು ತನ್ನ ಸೀರೆಯಿಂದ ಒರೆಸಿದಳು. ನಿಧಾನವಾಗಿ ಅಡಿಗೆಮನೆಗೆ ಹೋಗಿ ಒಲೆ ಬೂದಿ ತೆಗೆದು ಸಾರಿಸಿ, ನೆನ್ನೆ ಅಡಿಗೆ ಮಾಡಿದ್ದ ಮಡಿಕೆಗಳನ್ನು ತೊಳೆದಳು. ನೆನ್ನೆ ಹಿಟ್ಟು ಮಾಡಿದ್ದ ಮಡಿಕೆಗೆ ನೀರು ಹಾಕಿ ಇಡುವುದು ಮರೆತಿದ್ದರಿಂದ ಒಳಭಾಗವೆಲ್ಲ ಒಣಗಿ ಹಿಡಿದುಕೊಂಡಿತ್ತು. ಅದರ ಭರ್ತಿ ನೀರು ತುಂಬಿ ನಡುಮನೆಗೆ ಬಂದರೂ ಯಜಮಾನರು ಬೀದಿಯ ಬಾಗಿಲಿನ ಕಡೆಗೆ ಕಾಲು ಚಾಚಿ ಸುಖವಾಗಿ ಗೊರಕೆ ಎಳೆಯುತ್ತಿದ್ದರು. ಬೀದಿಯ ಬಾಗಿಲು ಅರ್ಧ ತೆಗೆದು ಬರೀ ನೀರು ಹಾಕಿ ಮುಂಭಾಗವನ್ನು ಸಾರಿಸಿದಳು. ಆದರೆ ಇಡಲು ರಂಗೋಲಿ ಇರಲಿಲ್ಲ. ಪಕ್ಕದ ಮನೆಯ ಚನ್ನಶೆಟ್ಟಿಯ ಸೊಸೆಯನ್ನು ಕೇಳಿ ಒಂದು ಕರಟ ರಂಗೋಲಿ ತಂದು ಬಾಗಿಲಿಗೆ ಹಾಕಿ, ಉಳಿದಿದ್ದನ್ನು ಒಳಗಿಟ್ಟು ಸುಮ್ಮನೆ ಕುಳಿತುಕೊಂಡಳು. ಮುಂದೆ ಮಾಡಲು ಕೆಲಸವೂ ಇರಲಿಲ್ಲ. ಆ ದಿನ ಹೊಟ್ಟೆಯ ಪಾಡು ಏನೆಂಬುದೂ ತಿಳಿಯಲಿಲ್ಲ. +ಬೀದಿಯಲ್ಲಿ ಒಂದು ಎಮ್ಮೆ ಗಟ್ಟಿಯಾಗಿ ಒರಲಿದ ಸದ್ದಿಗೆ ಎಚ್ಚರವಾದ ಚೆನ್ನಿಗರಾಯರು – ‘ಥುತ್ ಇದರವ್ವನ….. ಎಂದು ಮೇಲೆ ಎದ್ದರು. ಹಾಸಿಗೆಯ ಮೇಲೆ ಕುಳಿತೇ ಕೌಸಲ್ಯಾ ಸುಪ್ರಜಾರಾಮ ನುಡಿದು ಕೈಗಳನ್ನು ಮಸೆದು ಪಂಚ ಕನ್ಯಾಃ ಸ್ಮರೇನ್ನಿತ್ಯಂ ಹೇಳಿಕೊಂಡು ಮೇಲೆ ಎದ್ದು ಕೆರೆ ಏರಿಯ ಕಡೆಗೆ ಹೋದರು. ನಂಜಮ್ಮ ಅವರ ಹಾಸಿಗೆ ಸುತ್ತಿ ಇಡುವ ಹೊತ್ತಿಗೆ ಮಾದೇವಯ್ಯನವರ ಹೆಗಲ ಮೇಲೆ ಒಂದು ಚೀಲ ಹೊತ್ತುಕೊಂಡು ಬಂದು ಚೀಲವನ್ನು ಕಂಬದ ಹತ್ತಿರ ಇಳಿಸಿ ಹೇಳಿದರು: ‘ನಾನು ಹಳ್ಳೀಕಡೆ ಭಿಕ್ಷಕ್ಕೆ ಓಯ್ತೀನಿ, ಇದ್ರಾಗೆ ಇಪ್ಪತ್ತು ಸೇರು ರಾಗಿ ನಾಕು ಸೇರು ಅವರೇಕಾಳು ಇವೆ. ನೀವು ಮಾಡ್ಕಳಿ.’ +ಈ ದಿನದ ಕಥೆ ಏನು ಎಂದು ಯೋಚಿಸುತ್ತಿದ್ದಾಗ ಮನೆಗೆ ದಿನಸಿ ಬಂದದ್ದರಿಂದ ಒಂದು ವಿಧದಲ್ಲಿ ಸಂತೋಷವಾದರೂ ಅವಳು ಹೇಳಿದಳು: ‘ಅಯ್ನೋರೇ, ನೆನ್ನೆ ದಿನವೂ ಕೊಟ್ರಿ. ಇವತ್ತು ಇದ ತಂದಿದೀರಿ. ನೀವೇ ಊರೂರು ತಿರುಗಿ ಭಿಕ್ಷೆಮಾಡೋರು. ಇದುನ್ನ ಮತ್ತೆ ಹ್ಯಾಗೆ ಕೊಡ್ಳಿ ನಾನು?’‘ಅವ್ವಾ’ ನಾನು ಕರ್ಚು ಮಾಡಾದು ಹ್ಯೆಂಗೆ ಅಂತ ನಿಮಗೇ ಗೊತ್ತಲ್ಲಾ? ನನ್ನ ಹಂಗೇ ಊರಿಗೆ ಸಾಧು ಸನ್ಯಾಸಿಗಳು ಬಂದ್ರೆ ಯೆಡೆಮಾಡಿ ಇಕ್ತೀನಿ. ಇದರಿಂದ ನೀವು ಒಂದ್ ಯೆಂಟು ದಿನ ಉಂಡ್ರೆ ಏನಾಯ್ತದೆ? ಮಾಡ್ಕಂಡ್ ಉಣ್ನೆ. ಶಿವ ಅಟ್ಹೊತ್ತಿಗೆ ಏನಾರಾ ದಿಕ್ ತೋರುಸ್ತಾನೆ’ – ಎಂದು ಎಂದು ಹೇಳಿ ಅವರು ಹೊರಟುಹೋದರು. ಅಯ್ಯನವರು ನೆನ್ನೆ ತಂದು ಕೊಟ್ಟಿದ್ದ ಮೊರ ಮನೆಯಲ್ಲೇ ಇತ್ತು. ಅವಳು ಅದರಲ್ಲಿ ಎರಡು ಸೇರು ರಾಗಿ ಮಾಡಿ ಬೀಸಲು ಕೂತಳು. ಆ ಮನೆಯಲ್ಲಿಯೇ ಹದಿದ ಬೀಸುವ ಕಲ್ಲು, ಒರಳು ಕಲ್ಲು, ಗುಂಡುಗಳೆಲ್ಲ ಇದ್ದುವು. ಆದರೆ ಒಂದು ಪಾವು ಬೀಸುವುದರಲ್ಲಿಯೇ ಸುಸ್ತಾಗಿ ಹೋಯಿತು. ನೆನ್ನೆ ತಾನು ಏನೂ ತಿಂದಿಲ್ಲವೆಂಬ ನೆನಪಾಗಿ ಐದು ನಿಮಿಷ ಸುಧಾರಿಸಿಕೊಳ್ಳುತ್ತ ಕುಳಿತಳು. ಅಷ್ಟರಲ್ಲಿ ಗಂಡ ಮನೆಗೆ ಬಂದರು. ರಾಗಿ ಎಲ್ಲಿಂದ ಬಂತು, ಏನು ಮಾಡಿದೆ ಎಂದು ಅವರು ಏನೂ ಕೇಳಲಿಲ್ಲ. ಸುಮ್ಮನೆ ಕಂಬವನ್ನೊರಗಿ ಕೂತು ಜೇಬಿನಲ್ಲಿದ್ದ ತಾಂಬೂಲ ಮಡಿಸಿ ಹೊಗೆಸೊಪ್ಪು ತಿಕ್ಕಲು ಪ್ರಾರಂಭಿಸಿದರು. +‘ನನ್ನ ಕೈಲಾಗುಲ್ಲ. ಇದುನ್ನೊಂದಿಷ್ಟು ಬೀಸಿಯಾದ್ರೂ ಕೊಡ್ತೀರಾ?’- ನಂಜಮ್ಮ ಕೇಳಿದಳು. +ಅವರು ಮಾತನಾಡಲಿಲ್ಲ. ಅವಳು ಮತ್ತೆ ಕೇಳಿದಾಗ – ‘ಗಂಡುಸ್ರು ಬೀಸೂ ಕಲ್ಲು ತಿರುಗುಸ್ತಾರೇನೆ? ನನ್ನೇನು ಹೆಂಗ್ಸು ಅಂತ ತಿಳ್ಕಂಡಿದಿಯೋ ಗಂಡ್ಸು ಅಂತ ತಿಳ್ಕಂಡಿದಿಯೋ?’ ಎಂದು ಗರ್ಜಿಸಿದರು. +ತಾಳ್ಮೆಗೆಡಕೂಡದೆಂದು ತನ್ನ ಸಂಕಲ್ಪ ನೆನೆಪಾಗಿ ನಂಜಮ್ಮ ಪುನಃ ಮಾತನಾಡಲಿಲ್ಲ. ಮಗ್ಗದ ಕೇರಿಗೆ ಹೋಗಿ ಪುಟ್ಟವ್ವನನ್ನು ಕರೆದುಕೊಂಡು ಬಂದಳು. ಎರಡು ಬಿಲ್ಲೆಗೆ ಒಂದು ಮರ ರಾಗಿ ಬೀಸಿಕೊಡುವುದಾಗಿ ಪುಟ್ಟವ್ವ ಬೀಸುವ ಕಲ್ಲಿನ ಮುಂದೆ ಕುಳಿತಳು. ನಂಜಮ್ಮ ಚೆನ್ನಶೆಟ್ಟಿಯ ಅಂಗಡಿಗೆ ಹೋಗಿ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಉಪ್ಪು, ಎಣ್ಣೆ ಮೊದಲಾಗಿ ಒಟ್ಟು ಒಂದು ರೂಪಾಯಿಯ ಸಾಮಾನುಗಳನ್ನು ತಂದು ಅಡಿಗೆ ಪ್ರಾರಂಭಿಸಿದಳು. ಹನ್ನೊಂದು ಗಂಟೆಯ ಹೊತ್ತಿಗೆ ಅವರೇಕಾಳಿನ ಹುಳಿ, ಹಿಟ್ಟು, ರಾಮಣ್ಣನಿಗೆ ರೊಟ್ಟಿ ಸಿದ್ಧವಾದುವು. ನೆನ್ನೆ ಸಹ ಅವಳು ಸ್ನಾನ ಮಾಡಿರಲಿಲ್ಲ. ಬಾವಿಯಲ್ಲಿ ನೀರು ಸೇದಿ ಹುಡುಗರಿಗೂ ಮೈ ತೊಳೆದು ತಾನೂ ಮಡಿ ಉಟ್ಟು ಬೇರೆ ಸೀರೆಯುಟ್ಟು ಒಳಗೆ ಬಂದಳು. ನೆನ್ನೆಯಂತೆ ಯಜಮಾನರು ಬಾಳೆ ಎಲೆ ಹಾಕಿಕೊಂಡು ಹಿಟ್ಟಿನ ಮುದ್ದೆ ನುಂಗುತ್ತಿದ್ದಾರೆ. ತನಗೂ ಮಕ್ಕಳಿಗೂ ಉಳಿಸಿ ಎಂದು ಅವಳು ಹೇಳಲಿಲ್ಲ. ಆದರೆ ಅವರೇ ಮೂರು ಮುದ್ದೆಗಳನ್ನು ಉಳಿಸಿ ಮೇಲೆ ಎದ್ದರು. ಅವಳು ಒಟ್ಟು ತಿರುವಿದ್ದುದು ಏಳು ಮುದ್ದೆ ಅವಳು ಹುಳಿ ಹಾಕಿಕೊಂಡು ಪಾರ್ವತಿಯೊಡನೆ ಊಟಕ್ಕೆ ಕುಳಿತಳು. ತಾನು ಒಟ್ಟು ಒಂದೂವರೆ ಮುದ್ದೆ ನುಂಗಿದಳು. ಪಾರ್ವತಿಗೆ ಅರ್ಧಕ್ಕೆ ಸಾಕಾಯಿತು. ರೊಟ್ಟಿ ಕಡಿದ ರಾಮಣ್ಣ ನಡುವೆ ನಾಲ್ಕು ಸಲ ನೀರು ಕುಡಿದು ‘ಅನ್ನ’ ಎಂದು ಅಳಲು ಪ್ರಾರಂಭಿಸಿತು. ‘ಅಂಗ್ಡೀಲಿ ಒಂದೂವರಾಣೆ ಕೊಟ್ಟು ಒಂದು ಸೇರು ಅಕ್ಕಿನಾದ್ರೂ ತರ್‌ಬೇಕಾಗಿತ್ತು’ – ಎಂದು ಯೋಚಿಸುತ್ತಾ ಅವಳು ಊಟ ಮುಗಿಸಿದಳು. ಹೊಟ್ಟೆಗೆ ಮುದ್ದೆ ಬಿದ್ದ ತಕ್ಷಣ ಕಳಲಿಕೆ ಬಂದಂತಾಗಿ ಹೊರಗೆ ಬಂದು ಜಮಖಾನ ಹಾಕಿಕೊಂಡು ಮಲಗಿದಳು. +ರಾತ್ರಿಗೆ ಅಡಿಗೆ ಮಾಡಲು ಸೌದೆ ಇಲ್ಲ. ನೆನ್ನೆ ಅಯ್ಯನವರು ತಂದು ಕೊಟ್ಟಿದ್ದುದು ಮುಗಿದು ಹೋಗಿದೆ. ಗಂಡ ಮಲಗಿದ್ದರು. ‘ಎಲ್ಲಾದ್ರೂ ಹೋಗಿ ಒಂದಿಷ್ಟು ಸೌದೆ ತಂದಿದ್ರೆ ಆಗ್ತಿತ್ತು ’ -ಎಂದಳು. +‘ನಾನ್ಯಾವನ್ ಕೇಳುಕ್ ಹೋಗ್ಲಿ ಹೋಗು.’ +‘ಹಾಗಂದ್ರೆ ಏನು ಮಾಡಾದು? ತ್ವಾಟದ ಕಡೆ ಹೋಗಿ ಯಾರನ್ನಾದ್ರೂಕೇಳಿ ಒಂದಿಷ್ಟು ಕುರುಂಬಾಳೆ ಹೆಡೆಮೊಟ್ಟೆ ಕಟ್ಕಂಡ್ ಬನ್ನಿ.’ +‘ತೆವಲಿದ್ರೆ ನೀನೇ ಹೋಗಿ ಹೊತ್ಕೊಂಡ್ ಬಾ. ನನ್ನ ಕೈಲಾಗುಲ್ಲ’-ಎಂದು ಹೇಳಿ, ತಾವು ನುಂಗಿದುದನ್ನು ಅರಗಿಸಲು ನಿದ್ರೆಯನ್ನು ಆಹ್ವಾನಿಸುತ್ತಾ ಅವರು ಇನ್ನೊಂದು ಮಗ್ಗುಲಾಗಿ ಮಲಗಿದರು. +ಸೌದೆ ಕೇಳಲು ಅವಳು ಯಾರ ತೋಟಕ್ಕೂ ಹೋಗಲಿಲ್ಲ. ಪಕ್ಕದ ಮನೆಯ ಚಿಣ್ಣಯ್ಯನ ಹೆಂಡತಿಯನ್ನು ಕೇಳಿದುದಕ್ಕೆ ಒಂದು ದೊಡ್ದ ಮಂಕರಿ ಕೊಬ್ಬರಿ ಮೊಟ್ಟ ಹದಿನೈದು ಹೆಡೆದಿಬ್ಬಿ, ನಾಲ್ಕು ತುಂಡು ಸೋಗೆಗಳನ್ನು ಕೊಟ್ಟಳು. ನಂಜಮ್ಮ ಚನ್ನಶೆಟ್ಟಿಯ ಅಂಗಡಿಗೆ ಹೋಗಿ ಕೇಳಿದಳು: ‘ಅಕ್ಕಿ ಹ್ಯಾಗೆ ಚನ್ನಶೆಟ್ಟಿ?’ +‘ಸಣ್ಣಕ್ಕಿ ಒಂಬತ್ತು ಸೇರು, ದಪ್ಪದ್ದು ಹನ್ನೆಲ್ಡು ಸೇರು.’ +ಒಂದು ಪಾವಲಿ ಕೊಟ್ಟು ಮೂರು ಸೇರು ದಪ್ಪಕ್ಕಿ ತೆಗೆದುಕೊಂಡು ಬಂದು ರಾತ್ರಿಗೆ ಅಚ್ಚೇರು ಹಾಕಿ ಅನ್ನ ಮಾಡಿದಳು. ಪಾರ್ವತಿ, ರಾಮಣ್ಣ, ಇಬ್ಬರೂ ಸಂತೋಷವಾಗಿ ಊಟ ಮಾಡಿದರು. ಚಿಣ್ಣಯ್ಯನ ಹೆಂಡತಿ ರಂಗಮ್ಮ ಅರ್ಧ ಚರುಕುಲು ಮಜ್ಜಿಗೆಯನ್ನೂ ಕೊಟ್ಟಿದ್ದಳು. ಹುಡುಗರ ಊಟವಾದಮೇಲೆ ಉಳಿದ ಅನ್ನ ಮಜ್ಜಿಗೆಗೆ ಚೆನ್ನಿಗರಾಯರು ಬಂದರು. ಅದೃಷ್ಟಕ್ಕೆ ಅವರು ಮಕ್ಕಳ ಊಟಕ್ಕೆ ಮೊದಲೇ ಮನೆಗೆ ಬರಲಿಲ್ಲ. +ಮಾದೇವಯ್ಯನವರು ಕೊಟ್ಟಿರುವ ದಿನಸಿ ಎಂಟು ಒಂಬತ್ತು ದಿನಕ್ಕಾಗಬಹುದು. ಆಮೇಲೆ ಏನು ಮಾಡುವುದು ಎಂಬ ಯೋಚನೆ ಅವಳನ್ನು ಬಾಧಿಸುತ್ತಲೇ ಇತ್ತು. ಅದಕ್ಕೆ ಇನ್ನೂ ಉಪಾಯ ಹೊಳೆದಿರಲಿಲ್ಲ. ನಾಳೆ ರಾಮಸಂದ್ರದ ಸಂತೆ ನಡೆಯುತ್ತದೆ. ಹೋಗಿ ಒಂದೆರಡು ಊಟದ ಪಾತ್ರೆ ಕುಡಿಯುವ ಬಟ್ಟಲುಗಳನ್ನಾದರೂ ತರಬೇಕು ಎಂದು ನಿಶ್ಚಯಿಸಿದಳು. ಮರುದಿನ ಬೆಳಗಿನ ಊಟವಾದಮೇಲೆ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಮಕ್ಕಳನ್ನೂ ಕರೆದುಕೊಂಡು ಸಂತೆಗೆ ಹೋದಳು. ಊರಿಗೆ ಮುಕ್ಕಾಲು ಮೈಲಿ ದೂರದ ತೋಪಿನಲ್ಲಿ ಸೇರುವ ಅದಕ್ಕೆ ತಿಪಟೂರಿನ ಸಾಬರು ಅಲ್ಯುಮಿನಿಯಂ ಪಾತ್ರೆಗಳನ್ನು ತಂದಿರುತ್ತಾರೆಂಬುದು ಅವಳಿಗೆ ಗೊತ್ತಿತ್ತು. ತನಗೆ ತಿಳಿದಂತೆ ಚೌಕಾಶಿ ಮಾಡಿ ನಾಲ್ಕು ಊಟದ ತಟ್ಟೆ, ನಾಲ್ಕು ಕುಡಿಯುವ ಲೋಟ, ಒಂದು ಸೌಟು ಮತ್ತು ಒಂದು ಸ್ನಾನ ಮಾಡುವ ಚೊಂಬುಗಳನ್ನು ಕೊಂಡಳು, ಒಟ್ಟು ಒಂದೂ ಮುಕ್ಕಾಲು ರೂಪಾಯಿಯಾಯಿತು. ಅಳುತ್ತಿದ್ದ ಮಕ್ಕಳಿಗೆ ಮೂರು ಮೂರು ಕಾಸಿನ ಸಕ್ಕರೆ ಕಡ್ಡಿ, ಒಂದೊಂದು ಗಿಲಿಕೆಗಳನ್ನು ಕೊಡಿಸಿಕೊಂಡು ಮನೆಗೆ ತಿರುಗುವಾಗ ಪಟೇಲ ಗುಂಡೇಗೌಡರು ಸಿಕ್ಕಿದರು. ಅವರೇ ಕೇಳಿದರು: ‘ಮನ್ಲಿ ಯಲ್ಲಾ ಚಂದಾಗೈತೇನವ್ವ?’ +‘ಚನ್ನಾಗಿದೆ ಗೌಡರೇ, ಬನ್ನಿ ಮನೆಗೆ ಹೋಗಿಬರಾಣ.’ +ಅಲ್ಯುಮಿನಿಯಂ ಪಾತ್ರೆಗಳನ್ನು ಗೌಡರೇ ಹಿಡಿದುಕೊಂಡರು. ರಾಮಣ್ಣನನ್ನು ಹೆಗಲಿಗೆ ಹಾಕಿಕೊಂಡ ಅವಳು ಹಿಂದೆ ಹಿಂದೆ ನಡೆದಳು. ಮನೆಗೆ ಬಂದು ಬೀಗ ತೆಗೆದ ಮೇಲೆ ಒಳಗೆಲ್ಲ ಒಂದು ಸಲ ನೋಡಿದ ಗೌಡರು ಕೇಳಿದರು: ‘ಮೇವಿಗೆ ಏನು ಗ್ರಾಸ?’ +‘ಅದ ನಿಮ್ಮುನ್ನೇ ಕೇಳಾಣ ಅಂತಿದ್ದೆ.’ +‘ಅವತ್ತೇ ಕೇಳಿದ್ರೆ ಒಂದಿಪ್ಪತ್ತೈದು ಸೇರು ರಾಗಿ ಕೊಡುಸ್ತಿದ್ನಲಾ?’ +‘ಅದರಿಂದ ಎಷ್ಟು ದಿನ ಕಳೆಯುತ್ತೆ?’-ತಕ್ಷಣ ಅವಳಿಗೆ ಒಂದು ಉಪಾಯ ಹೊಳೆದು ಹೇಳಿದಳು: ‘ನೀವು ಹಾಗೇ ಕೊಡೂದೇನು ಬ್ಯಾಡಿ. ನಾನೊಂದು ಮಾತು ಹೇಳ್ತೀನಿ. ಹಾಗೆ ಮಾಡಿದ್ರೆ ನಿಮಗೂ ತೊಂದರೆಯಾಗುಲ್ಲ, ನಮಗೂ ಉಪಕಾರವಾಗುತ್ತೆ.’ +‘ಏನ್ಹೇಳವ್ವ.’ +‘ನಿಮ್ಮ ಒಟ್ಟು ಕಂದಾಯ ಎಷ್ಟು, ಎಂಬತ್ತು ರೂಪಾಯಿ ಅಲ್ಲವೆ?’ +‘ಯಾಕೆ?’ +‘ಒಂದು ಕೆಲ್ಸ ಮಾಡಿ. ನಿಮ್ಮ ಕಂದಾಯದ ಬಾಬ್ತು ಈ ವರ್ಷದ್ದು ಐವತ್ತು ರೂಪಾಯಿ ಸಂದಾಯವಾಗಿದೆ ಅಂತ ಇವರ ಕೈಲಿ ರಶೀತಿ ಬರುಸ್ಕಳಿ. ಆ ಐವತ್ತು ರೂಪಾಯಿಗೆ ನಮಗೆ ರಾಗಿ, ಅವರೇಕಾಳು, ಮೆಣಸಿನಕಾಯಿ, ಮನೇಲಿದ್ರೆ ಒಂದಿಷ್ಟು ಬತ್ತ ಕೊಡಿ. ನಮ್ಮ ಜೀವನ ಆಗುತ್ತೆ.’ +‘ಈಗ ರಶೀತಿ ಬರಿಸ್ಕ್ಯಂಡ್ರೆ ಆಮ್ಯಾಲೆ ಹ್ಯಂಗೆ ಕಟ್ತೀರಾ ಸರ್ಕಾರಿ ಹಣಾನಾ?’ +‘ನಮ್ಮ ಪೋಟಿಗೆ ನೂರಾ ಇಪ್ಪತ್ತು ರೂಪಾಯಿ ಇರುತ್ತಲ್ಲ. ಅದರಲ್ಲಿ ಸರ್ಕಾರ್‌ದೋರು ಕಟಾ ಇಸ್ಕತ್ತಾರೆ.’ +ಗೌಡರಿಗೆ ಈ ಉಪಾಯ ವೈನವೆನಿಸಿತು. ‘ನಿಂಗೆ ದಿವಾನಿಕೆ ಮಾಡೂವೋಟು ಬುದ್ಧಿಯೈಯ್ತೆ’-ಎಂದು ಹೇಳಿ ತಮ್ಮ ಒಪ್ಪಿಗೆ ಸೂಚಿಸಿದರು. ಗಂಡ ಮಾದೇವಯ್ಯನವರು ಗುಡಿಯಲ್ಲಿ ಕೂತು ಹೊಗೆಸೊಪ್ಪು ಅಗಿಯುತ್ತಿರುತ್ತಾರೆಂಬುದು ಅವಳಿಗೆ ಗೊತ್ತು. ಗುಂಡೇಗೌಡರು ಬಂದಿರುವುದಾಗಿ ಹೇಳಿ ಕರಕೊಂಡು ಬರುವಂತೆ ಪಾರ್ವತಿಯನ್ನು ಕಳಿಸಿದಳು. ಮನೆಗೆ ಬಂದ ಶ್ಯಾನುಭೋಗರು ಪಟೇಲ ಗುಂಡೇಗೌಡರಿಂದ ಇಸಕೊಂಡು ಇನ್ನೊಂದು ಸಲ ಎಲೆ ಅಡಿಕೆ ಹೊಗೆಸೊಪ್ಪುಗಳನ್ನು ಅಗಿದಮೇಲೆ ಗೌಡರು ಕೇಳಿದರು: ‘ಎಲ್ಲಿ ನಿನ್ನ ಕಾತೆ ಕಿರ್ದಿ ವಸೀ ತೆಗಿ.’ +‘ಅದಿಲ್ಲೆಲ್ಲಿದೆ?’ +‘ಎಲ್ಲೈತೆ?’ +‘ನಮ್ಮಮ್ಮುನ ಮನ್ಲಿ.’ +‘ಅಲ್ಲ ಕಣಯ್ಯ, ಶ್ಯಾನುಬಾಕಿ ಅಂದ್ರೆ ಅದೇನು ತರಿಯಾ ಕೆಲ್ಸ ಅಂತ ತಿಳ್ಕಂಡ್ಯಾ? ನಿನ್ನ ಮನೆ ಎಲ್ಲೈತೋ ಅಲ್ಲಿ ಕಡ್ತ ಮಡೀಕ್ಕಂಡಿರ್ಬೇಕು. ಲ್ಯಕ್ಕ ಮಡೀಕ್ಕಳ್ಲಿ ಅಂತ ಅಲ್ವಾ ನಾನು ಮನೆ ಕೊಟ್ಟಿರಾದು? ಸರ್ಕಾರೀ ಕಾನೂನು ಗೊತ್ತೈತಾ ನಿಂಗೆ? ಎಲ್ಲಿ, ಓಡ್ಯಲೇ ಹ್ವಾಗಿ ಕಡ್‌ತಾ ಹೊತ್ಕಂಬಾ.’ +ಶ್ಯಾನುಭೋಗರು ಹನುಮಂತರಾಯನ ಗುಡಿಗೆ ಹೋದರೆ ಗಂಗಮ್ಮ ಲೆಕ್ಕದ ಗಂಟನ್ನು ಕೊಡಲಿಲ್ಲ. ಪಟೇಲ ಗುಂಡೇಗೌಡರೇ ಹೇಳಿದ್ದಾರೆಂದ ಮೇಲೆ ಅವಳೇ ಇಲ್ಲಿಗೆ ಬಂದಳು. ‘ಸರ್ಕಾರೀ ಕಾನೂನೇ ಹಂಗೈತೆ ಕಣ್ರಮ್ಮ’-ಎಂದು ಅವರು ಹೇಳಿದ ಮೇಲೆ, ‘ಹಾಗಾದ್ರೆ ನಾನೂ ಇಲ್ಲಿಗೆ ಬಂದು ಇರ್ತೀನಿ’ ಎಂದಳು. +‘ಇರಿ. ನನ್ನ ಗಂಟೇನು ಹೋಗ್ಬೇಕು?’ +ಆದರೆ ನಂಜಮ್ಮ ತಕ್ಷಣ ಮಾತನಾಡಿದಳು: ‘ಅದೆಲ್ಲ ಆಗುಲ್ಲ. ಒಂದ್ ಸಲ ಬ್ಯಾರೆ ಅಂತ ನೂಕಿದಮ್ಯಾಲೆ ನಿಮ್ಮ ಪಾಡಿಗೆ ನೀವಿರಿ. ನಮ್ಮ ಪಾಡಿಗೆ ನಾವಿರ್ತೀವಿ.’ +‘ನೋಡ್ದ್ಯಾ ಗುಂಡೇಗೌಡ, ಈ ತಾಟಗಿತ್ತಿಮುಂಡೇ ಮಾತ?’ +‘ಗಂಗವ್ವಾ, ನಾನು ಈ ಮನೆ ಕೊಟ್ಟಿರಾದು ಶ್ಯಾನುಬಾಕಿ ಪುಸ್ತಕಕ್ಕೆ, ಪುಸ್ತಕ ಬರಿಯೂ ಈ ಯಮ್ಮುಂಗೆ; ಬಾಕಿಯೋರ್ಗಲ್ಲ. ನೀನ್ ಸುಮ್‌ಸುಮ್ಕೆ ಬೊಯ್‌ಬ್ಯಾಡ’- ಎಂದು ಗೌಡರು ಹೇಳಿದುದಕ್ಕೆ ಗಂಗಮ್ಮ ಗಟ್ಟಿಯಾಗಿ ಬೈಯುತ್ತಾ ಹನುಮಂತರಾಯನ ಗುಡಿಗೆ ಹಿಂತಿರುಗಿದಳು. ಶ್ಯಾನುಭೋಗರು ತಾವೇ ಹೋಗಿ ಲೆಕ್ಕದ ಪುಸ್ತಕಗಳನ್ನು ನಾಲ್ಕು ಸಲ ತಲೆಯ ಮೇಲೆ ಹೊತ್ತು ತಂದರು. ಅದನ್ನು ಹಾಕಿದ್ದ ಪೆಟಾರಿಯನ್ನು ಮಾತ್ರ ಗಂಗಮ್ಮ ಕೊಡಲಿಲ್ಲ. +ಎಲ್ಲ ತಂದಮೇಲೆ ಗುಂಡೇಗೌಡರು ಕೇಳಿದರು: ‘ಬಶಣ್ಣಪ್ಪಾ, ಈಟು ವರ್ಸ ಶ್ಯಾನುಭಾಕಿ ಮಾಡ್ದೆ. ಸರ್ಕಾರ್‌ದೋರು ತೋಟಿ ತಳವಾರ್ರುನ್ನ ಯಾಕ್ ಮಡಗ್ಯವ್ರೆ ಗೊತ್ತಿಲ್ವಾ?’ +ಶ್ಯಾನುಭೋಗರು ಉತ್ತರ ಹೇಳಲಿಲ್ಲ. ಪಟೇಲರೇ ಕೇಳಿದರು: ‘ಈ ಲ್ಯಕ್ಕದ ಬುಕ್ಕೆಲ್ಲ ನೀನೇ ತಲೆಮ್ಯಾಲೆ ಹೊತ್ಕಂಡ್ ಬಂದ್ಯಲಾ. ತೋಟಿಗ್ ಕರ್ದು, ತಂದು ಮಡುಗ್ಲಾ ಅನ್ನಾಕ್ ಆಗ್ತಿರ್ಲಿಲ್ವಾ? ನೀನ್ಯಂತಾ ಅಧಿಕಾರ ಮಾಡ್ತಿಯಾ, ಬರೀ ಚೆಂಡು ಹ್ವಡಿಯಾದಾ! ಆಯ್ತು, ಕಾಗಜ ದೌತಿ ತಗಂಡ್ ಬರಿ. ಅದೇನ್ ನೀನು ಏಳಿ ಬರ್ಸವ್ವ.’ +ಕರಣಿಕ ಚೆನ್ನಿಗರಾಯರು ಕರಣಿ ಹಿಡಿದರು. ಹೆಂಡತಿ ಹೇಳಿದಳು: ‘ರಾಮಸಂದ್ರದ ಫಿರ್ಕಾ ಕುರುಬರಹಳ್ಳಿಯ ಪಟೇಲ್ ಗುಂಡೇಗೌಡರಿಂದ, ಅವರ ಈ ಸಾಲಿನ ರೆವಿನ್ಯೂ ಕಂದಾಯದ ಬಾಬ್ತು ಐವತ್ತು ರೂಪಾಯಿ ಸಂದಾಯವಾಗಿದೆ. ವಸೂಲಿ ಕಾಲದಲ್ಲಿ ಈ ಮೊಬಲಗನ್ನು ಕಟಾಯಿಸಿ ಉಳಿದದ್ದನ್ನು ವಸೂಲಿ ಮಾಡಿ ನಿಮ್ಮ ಪಟ್ಟಿಯಲ್ಲಿ ಬರೆದು ಕೊಡುತ್ತೇನೆ ಶ್ಯಾನುಭೋಗ್ ಚೆನ್ನಿಗರಾಯ. ತಾ…..’ +ಅವಳು ಹೇಳಿದಂತೆ ಬರೆದು ಅದನ್ನು ಗೌಡರ ಕೈಗೆ ಕೊಟ್ಟರು. ಕೊಟ್ಟ ಹತ್ತು ನಿಮಿಷದ ತನಕ ಅವರಿಗೆ ತಾವು ಬರೆದುದರ ಅರ್ಥ ಆಗಲಿಲ್ಲ. ಆಮೇಲೆ ಜ್ಞಾಪಿಸಿಕೊಂಡವರಂತೆ, ‘ಎಲ್ರಿ ದುಡ್ಡು?’ ಎಂದರು. +‘ದುಡ್ಡೆಲ್ಲಿ ಹೋಯ್ತದೆ? ನನ್ನ ಕೇಳಬ್ಯಾಡ ಸುಮ್ಕುರಯ್ಯಾ’-ಎಂದುದಕ್ಕೆ ಅವರು ಗೊಣಗುವುದನ್ನು ಬಿಡಲಿಲ್ಲ. +ಅದರ ಮರುದಿನ ಗುಂಡೇಗೌಡರು ಗಾಡಿ ಹೊಡೆಸಿಕೊಂಡು ಬಂದು ಮನೆಗೆ ಚೀಲಗಳನ್ನು ಇಳಿಸಿ ನಂಜಮ್ಮನಿಗೆ ಹೇಳಿದರು: ‘ನೋಡವ್ವ, ನಾಲ್ಕು ಖಂಡುಗ ರಾಗಿ, ಅಂದ್ರೆ ಇಪ್ಪತ್ತನಾಕು ರೂಪಾಯಿ. ಒಂದು ಪಲ್ಲ ಅವರೇಕಾಳು ಎಂಟು ರೂಪಾಯಿ. ಒಂದು ಮಣ ಮೆಣಸಿನಕಾಯಿ ಮೂರು ರೂಪಾಯಿ. ಒಟ್ಟು ಏಟಾಯ್ತು?’ +‘ಮೂವತ್ತ ಐದು.’ +‘ತಗ ಈ ಐದು ರೂಪಾಯ. ನಲವತ್ತಾಯ್ತಲ. ಇನ್ನು ಹತ್ತು ರೂಪಾಯಿ ತಿಪಟೂರ್ನಾಗೆ ಕೊಪ್ಪರಿ ಬುಟ್‌ಮ್ಯಾಲೆ ಕೊಡ್ತೀನಿ. ನಮ್ಮನ್ಲಿ ಬತ್ತ ಇರಾಕೆ ಇಲ್ಲ. ನೀನೇ ಅಂಗ್ಡೀಲಿ ಅಕ್ಕಿ ತಗಾ.’ +ನಂಜಮ್ಮನಿಗೆ ಧೈರ್ಯ ಬಂತು. ಆ ಐದು ರೂಪಾಯಿ, ಜೊತೆಗೆ ತನ್ನಲ್ಲಿದ್ದ ಹೆಚ್ಚು ಕಡಿಮೆ ಎರಡು ರೂಪಾಯಿಗಳನ್ನು ಒಂದು ಅರಿವೆಯಲ್ಲಿ ಕಟ್ಟಿ ತೊಲೆಯ ಒಂದು ಸಂದಿಯಲ್ಲಿ ಮುಚ್ಚಿಟ್ಟಳು. +– ೭ – +ಎಂಟನೇ ತಿಂಗಳು ನಡೆಯುತ್ತಿದ್ದಾಗ ಒಂದು ಮಧ್ಯಾಹ್ನ ಕೂತು ನಂಜಮ್ಮ ಪಹಣಿ ಪುಸ್ತಕಕ್ಕೆ ರೂಲು ಎಳೆಯುತ್ತಿದ್ದಳು. ಬಸುರು ಆಗಲೇ ತುಂಬಿ ಬೆಳೆದಿದ್ದುದರಿಂದ ಕುಕ್ಕುರುಗಾಲಿನಲ್ಲಿ ಕುಳಿತು ರೂಲು ಹಾಕುವುದು ಸಾಧ್ಯವಾಗುತ್ತಿರಲಿಲ್ಲ. ಆದರೂ ಹೆಣಗಿ ಭಂಗಿಯನ್ನು ಬದಲಾಯಿಸಿಕೊಂಡು ಕೆಲಸ ಮಾಡುತ್ತಿದ್ದಳು. ಚೆನ್ನಿಗರಾಯರು ಅಲ್ಲಿಯೇ ಇನ್ನೊಂದು ಅಂಕಣದಲ್ಲಿ ಮಲಗಿ ಹದವಾಗಿ ಗೊರಕೆ ಹೊಡೆಯುತ್ತಿದ್ದರು. +ಇದ್ದಕ್ಕಿದ್ದಹಾಗೆಯೇ ಗಂಗಮ್ಮ ಮನೆಯೊಳಗೆ ಬಂದಳು. ಹಿಂದೆ ಗುಂಡೇಗೌಡರು ಶ್ಯಾನುಭೋಗಿಕೆ ಪುಸ್ತಕಗಳನ್ನು ತರಿಸಿದ ದಿನವನ್ನು ಬಿಟ್ಟರೆ ಅವಳು ಎಂದೂ ಈ ಮನೆಗೆ ಬಂದಿರಲಿಲ್ಲ. ಬಂದವಳು ಯಾರನ್ನೂ ಹೇಳಲೂ ಇಲ್ಲ, ಕೇಳಲೂ ಇಲ್ಲ. ಒಂದು ವಾಡೆಯ ಮುಚ್ಚಳ ತೆಗೆದು, ತಾನು ತಂದಿದ್ದ ಚೀಲಕ್ಕೆ ರಾಗಿಯನ್ನು ತುಂಬಿಕೊಳ್ಳತೊಡಗಿದಳು. ಈಗ ಏನು ಮಾಡಬೇಕು ಎಂಬುದು ತಿಳಿಯದೆ ಎರಡು ನಿಮಿಷ ಸುಮ್ಮನಿದ್ದ ನಂಜಮ್ಮ ಕೇಳಿದಳು: ‘ಅಮ್ಮ, ಏನ್‌ಮಾಡ್ತಿದೀರಾ?’ +‘ಏನ್ ಮಾಡ್ತಿದೀನೇ? ರಾಗಿ ತಗಿತಿದೀನಿ. ಅದುನ್ನ ಕೇಳುಕ್ ನೀನ್ಯಾವಳೇ?’ +‘ಮದ್ಲು ಆ ಚೀಲ ಅಲ್ಲಿಟ್ಟು ದೂರ ನಿಂತ್ಕಂಡ್ ಮಾತಾಡಿ. ಹೇಳ್ದೆ ಕೇಳ್ದೆ ಬಂದು ನಮ್ಮನೆ ದಿನಸಿ ಧಾನ್ಯ ಹ್ಯಾಗ್ ಮುಟ್ತೀರಾ?’ +‘ಇವ್ಳ ಮನೆಯಂತೆ. ನಿಮ್ಮಪ್ಪ ಕಟ್ಸಿದ್ದೇನೆ ಮನೆ? ಕೇಳ್ದೆ ಏನೋ ಶಿಖಂಡಿ ಸೂಳೇಮಗನೆ? ಇವತ್ತು ಬ್ಯಳಿಗ್ಗೆಯಿಂದ ಮನ್ಲಿ ಏನೂ ಇಲ್ದೆ ನಾನು ಒಲೆ ಹಚ್ಚಿಲ್ಲ. ರಾಗಿ ತಗುಳಕ್ ಬಂದ್ರೆ ಇವಳಪ್ಪ ತಂದ್ಕೊಟ್ಹಾಗ್ ಆಡ್ತಾಳೆ. ಕುರುಬರಹಳ್ಳಿ ಗುಂಡೇಗೌಡ ನಮ್ಮ ಪಟೇಲ; ನಿನ್ನ ಮಿಂಡಲ್ಲ ಬಿಟ್ಟಿ ಕೊಡುಕ್ಕೆ.’ +ಅಷ್ಟರಲ್ಲಿ ಎಚ್ಚೆತ್ತ ಚೆನ್ನಿಗರಾಯರು-‘ತಗಂಡ್ರೆ ತಗಳ್ಳಿ ಬಿಡೆ, ನಿನ್ನವ್ವನಾ……’ಎಂದರು. +‘ಗುಂಡೇಗೌಡರು ನಿಮಿಗ್ ಕೊಡಿ ಅಂತ ಧರ್ಮಕ್ ಕೊಟ್ಟಿಲ್ಲ. ಕಂದಾಯಕ್ಕೆ ವಜಾ ಕಟ್ಕಳುಕ್ಕೆ ಅಂತ ನಾನು ಹೇಳಿ ತರ್ಸಿದೀನಿ.’ +‘ಶ್ಯಾನುಬಾಕಿ ನನ್ನ ಗಂಡಂದು. ನಿಮ್ಮಪ್ಪುಂದೇನಲ್ಲ ಕಣೆ ಬೋಸುಡಿಮುಂಡೆ’ ಅತ್ತೆ ಎಂದಳು. +‘ನಮ್ಮಪ್ಪನೇ ಕುದುರೆಮೇಲೆ ಬಂದು ಕೊಡ್ಸಿದ್ದು. ಇಲ್ದೆ ಇದ್ರೆ ಅದು ಕೈಗೆ ಸಿಕ್ತಿರ್ಲಿಲ್ಲ ತಿಳ್ಕಳಿ. ಈಗ ಕಣ್ಣಿಗೆ ಎಣ್ಣೆ ಬಿಟ್ಕಂಡು ಲೆಕ್ಕ ಬರೀತಿರೋಳು ನಾನು. ನನ್ನ ಮನೆಗೆ ಬಂದು ಏನಾದ್ರೂ ದಿನಸಿ ಧಾನ್ಯ ಮುಟ್ಟಿದ್ರೆ ಗುಂಡೇಗೌಡ್ರಿಗೇ ಹೇಳಿಕಳುಸ್ತೀನಿ.’ +‘ಇವತ್ತು ಬೆಳಗ್ಗೆಯಿಂದ ಊಟ ಮಾಡಿಲ್ವಲ್ಲ, ಏನು ಮಾಡ್ಲೋ ಮುಂಡೇಮಗನೆ?’ +‘ಹೋಗಿ ಶಿವೇಗೌಡುನ್ನೋ ಕಾಶಿಂಬಡ್ಡಿನೋ ಕೇಳಿ. ಇಲ್ದೆ ಇದ್ರೆ ರೇವಣ್ಣಶೆಟ್ಟಿಗ್ ಕೇಳಿ’-ನಂಜಮ್ಮನೇ ಉತ್ತರ ಹೇಳಿದಳು. +ಅವಳ ಮಾತಿನ ವ್ಯಂಗ್ಯ ಗಂಗಮ್ಮನಿಗೆ ತಿಳಿಯಲಿಲ್ಲ. ಚೀಲವನ್ನು ಅಲ್ಲಿಯೇ ಬಿಟ್ಟು ನೇರವಾಗಿ ಶಿವೇಗೌಡನ ಮನೆಗೆ ಹೋದಳು. ಅವಳು ಹೋದಮೇಲೆ ನಂಜಮ್ಮನಿಗೇ ಕಸಿವಿಸಿ ಎನಿಸಿತು. ಬೆಳಗಿನಿಂದ ಉಪವಾಸವೆಂಬುದನ್ನು ಕಿವಿಯಲ್ಲಿ ಕೇಳಿಯೂ ತಾನು ಹಾಗೆಯೇ ಕಳಿಸಬಾರದಾಗಿತ್ತು ಎಂದುಕೊಂಡು ಒಳಗೆ ಹೋಗಿ ಒಂದು ಮೊರಕ್ಕೆ ಮೂರು ಸೇರಿನಷ್ಟು ರಾಗಿಯ ಹಿಟ್ಟನ್ನು ಹಾಕಿ, ಅದನ್ನು ಕೊಟ್ಟುಬರುವಂತೆ ಗಂಡನಿಗೆ ಹೇಳಿದಳು. ಮೊರವನ್ನು ಕೈಲಿ ಹಿಡಿದು ಮಗ ಅವ್ವನ ಮನೆಗೆ ಹೋದ. +ಗಂಗಮ್ಮ ನೇರವಾಗಿ ಶಿವೇಗೌಡನ ಮನೆಗೆ ಹೋಗಿ ಕೇಳಿದಳು: ‘ಏನಪ್ಪಾ ಪಟೇಲ, ಇವತ್ತು ಬೆಳಗ್ಗೆಯಿಂದ ಒಲೆ ಹಚ್ಚಿಲ್ಲ. ಒಂದಿಪ್ಪತ್ತೈದು ಸೇರು ರಾಗಿ ಕೊಡು.’ +‘ನಿಂಗೇನ್ ಗುರುಗುಟ್ತೈತೇನಮ್ಮ? ಎಲ್ಲಿ ಬತ್ತೈತೆ ಇಪ್ಪತ್ತೈದು ಸೇರು ರಾಗಿ?’ +‘ಮನೆಹಾಳ ಸೂಳೇಮಗ್ನೇ, ನನ್ನ ಆಸ್ತೀನೆಲ್ಲ ಹ್ವಡ್ಕಂಡು ಈಗ ಹೀಗಂತೀಯೇನೋ? ನಿನ್ನ ವಂಶ ಉಳಿಯೋಲ್ಲ ನೋಡು.’ +‘ಆಸ್ತಿ ಹ್ವಡಕಣಾಕೆ ದುಡ್ಡು ಸುರೀಲಿಲ್ವೇನೇ ಮುಂಡೆ? ನ್ಯಾಲ್ಗೆ ಇಡ್ಕಂಡ್ ಮಾತಾಡ್ತಿಯೋ ಕುತ್ಗೆ ಇಡ್ದು ಆಚಿಕಡೀಕ್ ನೂಕುಸ್ಲೋ?’ +ಶಿವೇಗೌಡನ ಹೆಂಡತಿ ಗೌರಮ್ಮ ತಕ್ಷಣ ಮುಂದೆ ಬಂದು ಗಂಡನಿಗೆ ಹೇಳಿದಳು: ‘ಆ ಯಮ್ಮ ಹಂಗಂತೈತಿ ಅಂತ ನೀನದೇನಂತಿ ಸುಮ್ಕುರು. ನೀನ್ ತ್ವಾಟದ್ ತಾವುಕ್ ನಡಿ.’ +ಈ ಮುದುಕಿ ಬೀದಿಯಲ್ಲಿ ನಿಂತು ಮಣ್ಣು ತೂರಿ ಶಾಪ ಹಾಕಿದರೆ ತಮ್ಮ ಮನೆಗೆ ಏನಾದರೂ ಕೇಡಾಗುತ್ತದೆಂಬ ಭಯ ಗೌರಮ್ಮನಿಗೆ. ಗಂಗಮ್ಮನ ಸಂಗಡ ನಾಲಗೆಯ ವ್ಯಾಜ್ಯಕ್ಕೆ ನಿಲ್ಲುವುದು ಪಟೇಲನಿಗೂ ಬೇಕಿರಲಿಲ್ಲ. ಹೆಂಡತಿ ಹೇಳಿದ ನೆಪವೇ ಅವನಿಗೆ ಸಾಕಾಯಿತು. ಅವನು ಕಾಲಿಗೆ ಜೋಡು ಮೆಟ್ಟಿಕೊಂಡು ತೋಟದ ಕಡೆಗೆ ಹೊರಟು ಹೋದ. ಗೌರಮ್ಮ ಎರಡು ಮೊರದ ತುಂಬ ರಾಗಿ ತುಂಬಿ ಒಂದು ಸಾರಿಸಿದ ಕುಕ್ಕೆಗೆ ಹಾಕಿ ತಂದು ಮುಂದಿಟ್ಟು ಹೇಳಿದಳು: ‘ಅವ್ರು ಅಂತಾರೆ ಅಂತ ಕ್ವಾಪಸ್ಕಾಬ್ಯಾಡಿ. ಇದ ಕೊಂಡೊಯ್ರಿ.’ +ಸಿಟ್ಟಿನಿಂದ ಉರಿಯುತ್ತಿದ್ದ ಗಂಗಮ್ಮ ಅದನ್ನು ಬೇಡವೆನ್ನುತ್ತಿದ್ದಳೋ ಹೇಗೋ. ಆದರೆ ಗೌರಮ್ಮ ಮತ್ತೆ ಹೇಳಿದಮೇಲೆ ಕುಕ್ಕೆಯನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಂಡು ತಾನು ವಾಸವಾಗಿದ್ದ ಗುಡಿಗೆ ಬಂದಳು. +ಚೆನ್ನಿಗರಾಯರು ರಾಗಿ ಹಿಟ್ಟಿನ ಮೊರವನ್ನು ಅಪ್ಪಣ್ಣಯ್ಯನಿಗೆ ಕೊಟ್ಟು ಮಾದೇವಯ್ಯನವರ ಗುಡಿಗೆ ಹೋಗಿ ಕುಳಿತಿದ್ದರು. ನಂಜಮ್ಮ ಮತ್ತೆ ಕೂತು ಕತ್ತು ಬಗ್ಗಿಸಿಕೊಂಡು ಪುಸ್ತಕಕ್ಕೆ ಕೆಂಪು ಶಾಯಿಯ ರೂಲು ಎಳೆಯುತ್ತಿದ್ದಳು. ಯಾರೋ ಮನೆಯ ಒಳಗೆ ಬಂದಂತೆ ನೆರಳಾಯಿತು. ಅದು ಯಾರೆಂದು ತಲೆ ಎತ್ತಿ ನೋಡುವುದರೊಳಗೇ ಗಂಗಮ್ಮ ರಾಗೀಹಿಟ್ಟಿನ ಮೊರವನ್ನು ಕೈಲಿ ಹಿಡಿದು ಬಂದು ಇವಳ ಮುಂದೆ ನಿಂತಳು. ಯಾಕೆ, ಏನು, ಎಂದು ಕೇಳುವ ಮೊದಲೇ ಅವಳು ಮೊರದ ತುಂಬ ಇದ್ದ ಹಿಟ್ಟನ್ನು ಸೊಸೆಯ ತಲೆಯಮೇಲೆ ಸುರಿದು ಮೊರವನ್ನು ಒಂದು ಸಲ ನೆತ್ತಿಯಮೇಲೆ ಕುಕ್ಕಿ-‘ನಿನ್ನ ಮನೆ ಭಿಕ್ಷದ ಮುದ್ದೆ ತಿಂತೀನಿ ನಾನು ಅಂತ ತಿಳ್ಕಂಡೆ ಏನೇ ತಿರುಪದ ಮುಂಡೆ? ಗಂಗಮ್ಮ ಅಂದ್ರೆ ಏನು ಅಂತ ಮಾಡ್ಕಂಡೆ?’ ಎಂದು ಬಿರಬಿರನೆ ನಡೆದು ಹೋಗಿಬಿಟ್ಟಳು. +ತಲೆ, ಮೈ ಕೈ, ಪುಸ್ತಕ, ಕೆಂಪು ಶಾಯಿಯ ದೌತಿ, ಎಲ್ಲವೂ ರಾಗಿಯ ಹಿಟ್ಟಾಯಿತು. ಎದ್ದು ಹಿಂದಿನಿಂದ ಹೋಗಿ ಅತ್ತೆಯನ್ನು ಹಿಡಿದು ನಿಲ್ಲಿಸಬೇಕೆಂದು ನಂಜಮ್ಮನಿಗೆ ಮನಸ್ಸಾಯಿತು. ಅಥವಾ ಯಾರಾದರೂ ಇಬ್ಬರು ಪುಣ್ಯಾತ್ಮರಿಗೆ ತೋರಿಸಲೇ ಎಂಬ ಯೋಚನೆಯೂ ಬಂತು. ಆದರೆ ತನ್ನ ಮನೆಯ ಜಗಳ ಹೊರಗಿನವರ ಹತ್ತಿರ ಹೋದರೆ ಊರಿಗೆಲ್ಲ ನಗುವುದಕ್ಕೆ ದಾರಿಯಾಗುತ್ತೆ. ಈಗಲೇ ಎಷ್ಟು ಜನ ನಗುತ್ತಿದ್ದಾರೋ ಎಂದು ಯೋಚಿಸಿ ಸುಮ್ಮನಾದಳು. ಮೇಲೆ ಎದ್ದು ಸೀರೆಯ ಸೆರಗನ್ನು ಕೊಡವಿದಳು. ಅದೃಷ್ಟಕ್ಕೆ ಹಿಟ್ಟೆಲ್ಲವೂ ಅವಳು ಕೂತಿದ್ದ ಈಚಲು ಚಾಪೆಯ ಮೇಲೆ ಬಿದ್ದಿತ್ತು. ಪುಸ್ತಕವನ್ನೂ ಕೊಡವಿ ಹಿಟ್ಟನ್ನು ಗುಡ್ಡೆ ಮಾಡಿ ಎತ್ತಿ ಒಂದರಿಯಾಡಿಸಿ ಇಟ್ಟಳು. ತಲೆಗೆ ಸ್ನಾನ ಮಾಡಿ ಹಿಟ್ಟನ್ನು ತೊಳೆದುಕೊಂಡು, ದೌತಿ ಕುಡಿಕೆ ತೊಳೆದು ಚನ್ನಶೆಟ್ಟಿ ಅಂಗಡಿಯಿಂದ ಮೂರುಕಾಸು ಕೊಟ್ಟು ಎರಡು ಪೊಟ್ಟಣ ಕೆಂಪು ಶಾಯಿ ಪುಡಿ ತಂದು ಶಾಯಿ ಮಾಡಿ ಮತ್ತೆ ರೂಲು ಹಾಕಲು ಕುಳಿತಳು. +– ೮ – +ಇದಾದ ಮೂರನೆಯ ದಿನ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ನಂಜಮ್ಮ ಒಳಗೆ ಅಡಿಗೆ ಮಾಡುತ್ತಿದ್ದಾಗ ಹೊರಗಿನಿಂದ ‘ನಂಜೂ’ ಎಂದು ಕೂಗಿದಂತೆ ಆಯಿತು. ಧ್ವನಿಯನ್ನು ಕೇಳಿಯೇ ಅಕ್ಕಮ್ಮ ಎಂದು ಗೊತ್ತಾಗಿ ಅವಳು ಸಡಗರದಿಂದ ಹೊರಗೆ ಬಂದು ನೋಡಿದರೆ ನಿಜವಾಗಿತ್ತು-ತಲೆಯ ಮೇಲೆ ಒಂದು ಸೀರೆಯ ಗಂಟು ಇಟ್ಟುಕೊಂಡು ಬಾಗಿದ ಬೆನ್ನಿನಿಂದ ಅಕ್ಕಮ್ಮ ನಿಂತಿದ್ದಾಳೆ. ಅವಳ ಹಿಂದೆ ಎರಡು ಗಂಡಾಳುಗಳು ಒಂದೊಂದು ಗೋಣಿಯ ಚೀಲಗಳನ್ನು ಹೊತ್ತು ನಿಂತಿದ್ದಾರೆ. ‘ನಂಜು, ನೀನು ಬಸುರಿ ಅಂತ ನಂಗೆ ಹೇಳಿ ಕಳುಸ್ಲೇಬ್ಯಾಡ್ವೇ? ಹೀಗಾಗಿದೆ ಅಂತ ಕಷ್ಟ ಸುಖ ತಿಳುಸ್ಲೇಬ್ಯಾಡ್ವೇ?’ +‘ನಾನು ಹೇಳಿಕಳ್ಸಾಣ ಅಂತಿದ್ದೆ. ವಳಿಕ್ ನಡಿ. ಮಡಿ ಉಟ್ಕಂಡಿದೀಯಾ?’ +‘ನನ್ನ ಮಡಿ ಆಮ್ಯಾಲಾಗುತ್ತೆ. ಅಡಿಗೆಯಾಗಿದ್ರೆ ಮದ್ಲು ಇವರಿಬ್ಬರಿಗೂ ಇಕ್ಕು. ಅವ್ರು ಊರಿಗೆ ಹೋಗ್‌ಬೇಕು.’ +ಒಳಗೆ ಹುಳಿ ಕುದಿಯುತ್ತಿತ್ತು. ಹಿಟ್ಟು ಮುದ್ದೆ ಕಟ್ಟುವುದೊಂದು ಬಾಕಿ ಇತ್ತು. ನಂಜು ಒಳಗೆ ಹೋಗಿ ಉರಿ ಜೋರು ಮಾಡಿ ಕಾಲುಗಂಟೆಯಲ್ಲಿ ಹುಳಿ ಹಿಟ್ಟು ಮುಗಿಸಿದಳು. ಕೆರೆಯ ಕಡೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದ ಆಳುಗಳಿಗೆ ಬಡಿಸುವಾಗ ಅಕ್ಕಮ್ಮ ಕೇಳಿದಳು: ‘ಮಜ್ಜಿಗೆ ಇಲ್ವೆ?’ +‘ಎಲ್ಲಿ ಬರ್‌ಬೇಕು?’ +ಆಳುಗಳ ಊಟವಾದ ಮೇಲೆ ಅವರ ಪೈಕಿ ಒಬ್ಬನ ಕೈಲಿ ಅಕ್ಕಮ್ಮ ಹೇಳಿದಳು: ‘ಹೊನ್ನ, ನೋಡು, ಲಕ್ಕ ಏನಾದರೂ ಬಾಯಿಬಿಟ್ಟಾನು. ಅವನಿಗೆ ಇನ್ನೊಂದು ಸಲಿ ಹೇಳು. ಮನೆಗೆ ಹೋದ ತಕ್ಷಣ ಕಲ್ಲೇಶುಂಗೆ ಹೇಳು. ಮನ್ಲಿ ಕರಾವಿಲ್ಲ. ಮುಂದೆ ಬಾಣಂತಿಗೆ ಹಾಲಿಲ್ಲ. ನಮ್ಮ ಬಿಳೀ ಹಸೀನ ತಳಿ ಐತಲಾ-ಈಗ ಒಂದು ತಿಂಗ್ಳಲ್ಲಿ ಈದದ್ದು, ಅದ ಹೊಡೆದು ಕಳ್ಸು ಅಂತ ಹೇಳು. ಅದರ ಅವ್ವುನ್ನ ಧಾರೇಲಿ ನಂಜಮ್ಮುಂಗೆ ಕೊಟ್ಟಿದ್ವು. ಆಮ್ಯಾಲೆ ಇಲ್ಲಿಗೆ ಕಳುಸ್ಲಿಲ್ಲ. ಈಗ ಅದರ ಮಗಳುನ್ನಾದ್ರೂ ಕಳ್ಸು ಅಂತ ನಾನಂದೆ ಅನ್ನು.’ +ಆಳುಗಳು ಹೊರಟುಹೋದರು. ತಣ್ಣೀರಿನಲ್ಲಿಯೇ ಸ್ನಾನ ಮಾಡಿ ಒದ್ದೆಯ ಸೀರೆ ಸುತ್ತಿಕೊಂಡು ಹಣೆಗೆ ವಿಭೂತಿ ಇಟ್ಟು ಮೂರು ಆಚಮನ ಮಾಡಿದಮೇಲೆ ಅಕ್ಕಮ್ಮ ಅಡಿಗೆ ಮನೆಗೆ ಬಂದು ಒದ್ದೆ ಸೀರೆ ಕಾಯಿಸಿಕೊಳ್ಳುತ್ತಾ ಒಲೆಯ ಮುಂದೆ ಕುಳಿತಳು. ನಂಜು ಕೇಳಿದಳು: ‘ನಿಂಗ್ ಹ್ಯಾಗೆ ಗೊತ್ತಾಯ್ತು?’ +‘ನಮ್ಮೂರ ಮಗ್ಗದ ತಮ್ಮಯ್ಯಶೆಟ್ಟಿಗೆ ಈ ಊರುದ್ದೇ ಅಲ್ವೇ ಹೆಣ್ಣು ಕೊಟ್ಟಿರೂದು? ಈಗೊಂದೇಳೆಂಟು ದಿನದಾಗೆ ಕೆರೆಗೆ ಹೋಗಿದ್ದೆ. ತಿರುಮಲಮ್ಮ ಬಂದಿದ್ಲು. ಯಲ್ಲಾ ಹೇಳಿದ್ಲು. ನೀವೀಗ ಕುರುಬರಹಳ್ಳಿ ಪಟೇಲರ ಮನ್ಲಿದೀರಂತೆ. ಏಳೆಂಟು ತಿಂಗಳು ಬಸುರಿಯಂತೆ. ನಿಮ್ಮತ್ತೆ, ಒಂದು ಕುಡಿಯೂ ಪಂಚಪಾತ್ರೇನೂ ಕೊಡ್ಲಿಲ್ವಂತೆ. ಜಮೀನೇನೋ ಹೋಗುತ್ತೆ ಅಂತ ಆವಾಗ್ಲೇ ಕಲ್ಲೇಶ್ನೇ ಅಂದಿದ್ದ.’ +‘ನೀನ್ಯಾವಾಗ ಹೊರಟೆ ಊರಿಂದ?’ +’ನೆನ್ನೆ ದಿನವೇ ಹೊರಟೆ. ಸಂಜೆ ಹೊತ್ತಿಗೆ, ಇನ್ನಿಲ್ಲ ಅನ್ನೂವಷ್ಟು ಮಳೆ ಬಂದುಬಿಡ್ತು. ಮೂರು ಜನವೂ ದಾರೀಲಿ ಸಿಕ್ಕುತ್ತಲ್ಲಾ, ಗುಡ್ಡದ ಆಚೆಗೆ ಹೂವಿನಹಳ್ಳಿ ಅಂತ, ಅವರ ಪಟೇಲನ ಮನೆ ಜಗುಲಿಮ್ಯಾಲೆ ಮಲಗಿದ್ವು. ಪಟೇಲನ ಮನೆಯೋರು ಅವರಿಬ್ರಿಗೂ ಊಟಕ್ಕಿಕ್ಕಿ, ನಂಗೆ ಒಂದಿಷ್ಟು ಕಾಯಿತುರಿ ಬೆಲ್ಲ ಮಾಡಿ ಕೊಟ್ರು.’ +ಹೊರಗೆ ಆಟಕ್ಕೆ ಹೋಗಿದ್ದ ಹುಡುಗರು ಮನೆಗೆ ಬಂದರು. ಪಾರ್ವತಿಗೆ ಅಕ್ಕಮ್ಮನ ನೆನಪು ಮರೆತಿರಲಿಲ್ಲ. ರಾಮಣ್ಣನಿಗೆ ಏನೂ ಜ್ಞಾಪಕವಿರುವುದು ಸಾಧ್ಯವಿರಲಿಲ್ಲ. ಆದರೆ ಅರ್ಧ ಗಂಟೆಗೆ ಅವು ಅವಳ ಹತ್ತಿರ ಹೋದುವು. ಊಟದ ಹೊತ್ತಿಗೆ ಚೆನ್ನಿಗರಾಯರು ಮನೆಗೆ ಬಂದರು. ’ಚನ್ನಾಗಿದೀರಾ?’ -ಎಂಬುದನ್ನು ಬಿಟ್ಟರೆ ಅವರು ಅಜ್ಜಿಯನ್ನು ಹೆಚ್ಚು ಏನೂ ವಿಚಾರಿಸಲಿಲ್ಲ. ಅಜ್ಜಿಯೂ ಅವರ ಕಡೆಗೆ ಗಮನ ಕೊಡಲಿಲ್ಲ. ಊಟ ಮುಗಿಸಿದ ಮೇಲೆ ಅವರು ಮನೆಯಲ್ಲಿ ಮಲಗದೆ ಮಾದೇವಯ್ಯನವರ ಗುಡಿಯ ಜಗುಲಿಗೆ ಹೋದರು. ಅಕ್ಕಮ್ಮ ತಾನು ತಂದಿದ್ದ ಎರಡು ಮೂಟೆಗಳನ್ನು ಬಿಚ್ಚಿದಳು. ಒಂದರಲ್ಲಿ ತಾಮ್ರ ಹಿತ್ತಾಳೆಯ ಪಾತ್ರೆಗಳು. ನಾಲ್ಕು ಸಣ್ಣ ದೊಡ್ಡ ಅರಕಿನ ಚೆಟ್ಟಿ, ಎರಡು ಹಿತ್ತಾಳೆಯ ಚೊಂಬು, ಒಂದು ಬಿಂದಿಗೆ, ಐದು ಹಿತ್ತಾಳೆಯ ಗಳಾಸು, ಎರಡು ತಾಮ್ರದ ಪಂಚಪಾತ್ರೆ, ಎರಡು ಅನ್ನದ ತಪ್ಪಲೆ, ಎರಡು ಚರಕಲು ಮೊದಲಾಗಿ ಒಂದು ಆಳು ಹೊರುವಷ್ಟು ಪಾತ್ರೆಗಳು. ಇನ್ನೊಂದರಲ್ಲಿ ಅವಲಕ್ಕಿ ಹುರಿಟ್ಟುಗಳಲ್ಲದೆ ಬೆಲ್ಲದ ಉಂಡೆಗಳು. ಮೇಲೆ ಹದಿನೈದು ಸೇರಿನಷ್ಟು ಮುಂಗೇಸರಿ ಅಕ್ಕಿ. +‘ಅಕ್ಕಮ್ಮ, ಇದೆಲ್ಲ ಯಾಕೆ ತಂದೆ?’ +‘ಮಕ್ಕಳ ಮನೆ. ಅವಲಕ್ಕಿ ಹುರಿಟ್ಟು ಮಾಡ್ಕಂಡು ಹೋಗು ಅಂತ ಕಲ್ಲೇಶನೇ ಅಂದ. ಬೈಲಲ್ಲಿ ಆಲೆ ಕಟ್ಟಿದೆ. ಗಣೇಶನ ಉಂಡೆ ಮನೇಲಿ ಮೂರು ಗುಡಾಣ ತುಂಬಿದೆ. ಅವನೇ ಬೆಲ್ಲಾನೂ ಕೊಟ್ಟ, ಅಕ್ಕೀನೂ ಗಂಟುಕಟ್ಟಿ ಕೊಟ್ಟ.’ +‘ಈ ಪಾತ್ರೆ?’ +‘ನೋಡು ಕಲ್ಲೇಶ ಪೋಲೀಸ್ ಕೆಲಸದಾಗಿದ್ನಲ್ಲ, ಆಗ ದಾನದಲ್ಲಿ ಬಂದ ಪಾತ್ರೆ ಪರಟಿಗಳೆಲ್ಲ ನಾನೇ ಅಟ್ಟದ ಮ್ಯಾಲೆ ಒಂದೊಂದು ಕೊಮ್ಮೇಲಿ ತುಂಬಿ ಇಟ್ಟಿದ್ದೆ. ಅದರ ಲೆಕ್ಕ ಯಾರಿಗೂ ಗೊತ್ತಿರ್ಲಿಲ್ಲ. ಇಲ್ಲಿ ನಿಂಗೆ ಹೀಗಾಗಿದೆ ಅಂತ ಕೇಳಿದಮ್ಯಾಲೆ ಅವ್ಳು ಕೆರೆಗೆ ಹೋಗಿದ್ದಾಗ ನೋಡಿ ಒಂದೊಂದಿಷ್ಟು ತೆಗೆದು ಹೊನ್ನನ ಹೆಂಡ್ತೀ ಕೈಲಿ ಕೊಟ್ಟಿದ್ದೆ. ನಾವು ಬರೂವಾಗ ಯಾರಿಗೂ ಕಾಣದ ಹಾಗೆ ಅದುನ್ನ ಲಕ್ಕನ ಕೈಲಿ ಹೊರಿಸಿ ಹೊನ್ನ ಮದ್ಲೇ ಚೌಡೇನಹಳ್ಳಿ ಕೋಡೀ ಹತ್ರ ಕಾಯ್ಕಂಡಿರೂ ಹಾಗೆ ಹೇಳಿಕಳ್ಸಿದ್ದೆ.’ +‘ಆದ್ರೂ ನೀನು ಇದ ತರಬಾರದಾಗಿತ್ತು ಅಕ್ಕಮ್ಮ. ಗೊತ್ತಾದ್ರೆ ಕಲ್ಲೇಶಣ್ಣಯ್ಯನಾದ್ರೂ ಸುಮ್ನಿರ್ತಾನೆಯೇ?’ +‘ಅವನ್ಗೂ ಗೊತ್ತಾಗುಲ್ಲ ಸುಮ್ನಿರೇ. ಕಂಠಿ ಇದ್ದಾಗ ದಾನದಲ್ಲಿ ಬಂದುದ್ದು’ ಎನ್ನುವಾಗ ಮಗನ ನೆನಪಾಗಿ ಮುದುಕಿ ಕಣ್ಣಿನಲ್ಲಿ ನೀರು ತುಂಬಿಕೊಂಡು ಹೇಳಿತು: ‘ಮುಂಡೇದು ಎಲ್ಲಿ ಹೋಯ್ತೋ, ಏನು ಮಾಡ್ಕಂಡಿದೆಯೋ! ಮೊದಲಿನಿಂದಲೂ ಅಷ್ಟೇ, ಏನೇನೋ ಮಾಡುಕ್ಹೋಗುತ್ತೆ. ತೆಪ್ಪಗೆ ಮನ್ಲಿದ್ದು ದೇವರು ಕೊಟ್ಟುದ್ದ ಉಂಡ್ಕಂಡಿರುಲ್ಲ.’ +ತಂದೆಯ ನೆನಪಾಗಿ ನಂಜುವಿನ ಕಣ್ಣಿನಲ್ಲೂ ನೀರು ಬಂತು: ‘ಅಪ್ಪನ ಸಮಾಚಾರ ಏನೂ ತಿಳೀಲಿಲ್ವೇ?’ +‘ಏನೂ ಗೊತ್ತಿಲ್ಲ. ಅವನೆಲ್ಲಿದಾನೆ, ಎಲ್ಲೋ ಸತ್ಗಿತ್ ಹೋಗಿದಾನೆ ಅಂತಾರೆ. ಅವ್ನು ಹ್ಯಾಗೆ ಸಾಯ್ತಾನೆ? ವಳ್ಳೇ ಭೋಜರಾಜನ ಹಾಗಿರೋನು.’ +‘ಸತ್ತಿಲ್ಲ, ಅದೆಲ್ಲ ಸುಳ್ಳು’-ಎಂದು ಮೊಮ್ಮಗಳು ಹೇಳಿದ ಮೇಲೆ ಅಜ್ಜಿಗೆ ಸಮಾಧಾನವಾಯಿತು. +ಅಕ್ಕಮ್ಮನಿಗೆ ಆಯಾಸವಾಗಿತ್ತು. ಮನೆಯಲ್ಲಿ ಮಂದಲಿಗೆ ಇರಲಿಲ್ಲ. ಮಡಿಯ ಹೆಂಗಸಾದ ಅವಳು ಈಚಲು ಚಾಪೆಯ ಮೇಲೆ ಮಲಗುವವಳಲ್ಲ. ಆದುದರಿಂದ ಬರೀ ನೆಲದ ಮೇಲೆ ಉರುಟಿದಳು. ನಂಜು ಕೇಳಿದಳು: ‘ಈಗ ಅತ್ತಿಗೆಮ್ಮ ಹ್ಯಾಗಿದಾಳೆ?’ +‘ಹೀನ ಸುಳಿ ಬೋಳಿಸಿದ್ರೆ ಹೋಗುತ್ತೆಯೇ? ನಿಮ್ಮಪ್ಪುನ ಐಲುಪೈಲಿಗೆ ಏನು ಹೇಳ್ಬೇಕು? ಹಿಂದೆ ಮುಂದೆ ನೋಡ್ಲಿಲ್ಲ, ನಾಕು ಕಡೆ ವಿಚಾರುಸ್ಲಿಲ್ಲ. ಇಲ್ಲಿ ಬಂದ ನಿನ್ನ ಕೊಟ್ಟುಬಿಟ್ಟ. ಅಲ್ಲಿಗ್ಹೋದ, ಅವ್ಳುನ್ನ ತಂದುಬಿಟ್ಟ. ಅವ್ಳು ಸುಖವಾಗಿ ತಿಂತಾಳೆ. ಕರದಿಟ್ಟಿದ್ದ ಕಡೇಲಿ ಕದ್ದು ಹಾಲು ಬಗ್ಗಿಸ್ಕಂಡ್ ಕುಡಿತಾಳೆ. ದೊಕ್ಕಂಡ್ ದೊಕ್ಕಂಡ್ ಕದ್ದು ತುಪ್ಪಾನೇ ನುಂಗ್ತಾಳೆ. ವಾರಕ್ಕೊಂದಿನ ಎಣ್ಣೆ ಒತ್ಕಂಡು ನೀರು ಹುಯ್ಕತಾಳೆ. ನನ್ನ ಕೈಲೂ ಹಾಕುಸ್ಕಳುಲ್ಲ. ಇಷ್ಟೆಲ್ಲ ಆರೈಕೆ ಮಾಡ್ಕಂಡ್ರೂ ಅನಿಷ್ಟ ಮುಂಡೇದು ಬಸರಿ ಮಾತ್ರ ಆಗ್ಲಿಲ್ಲ.’ +‘ಗಂಡ ಹೆಂಡ್ತಿ ಚನ್ನಾಗಿದಾರೆಯೇ?’ +“ಚನ್ನವೇನು? ಒಂದು ನಾಕು ದಿನ ರಾತ್ರಿ ಚಿಕ್ಕ ಮನೇಲಿ ಮಲಿಕಂಡಾಗ ಪಿಶ್‌ಪಿಶಿ ನಶ್‌ನಶಿ ಅಂತ ಮಾತಾಡ್ಕತಿರ್ತಾರೆ. ಇನ್ನು ನಾಕು ದಿನ ಅವ್ನು ಅವಳಿಗೆ ಹಿಡಕಂಡು ಹೇರಿ ಕೆಡುವ್ತಾನೆ. ನಾನೇ ಮೊಮ್ಮಗುಂಗೆ ಹೇಳಿ ಹೊಡುಸ್ತೀನಿ ಅಂತ ಅದು ನಂಗೆ ಶಾಪ ಹಾಕುತ್ತೆ. ‘ಬ್ಯಾಡ ಕಣೋ, ಹೆಂಡ್ತೀನ ಹೀಗೆ ಹ್ವಡೀಬಾರ್ದು’ +ಅಂದ್ರೆ, ‘ಆ ಮುಂಡೆ ಹ್ವಡಿದೇ ಇದ್ರೆ ಎಲ್ಲಿ ನ್ಯಟ್ಕಿರ್ತಾಳೆ? ನೀನು ಸುಮ್ನಿರು’ +ಅಂತ ಅವ್ನು ನನ್ನೇ ಗದರುಸ್ಕತಾನೆ. ಕೆಂಪಿ ಅಂತ ಇದ್ಲು ಗೊತ್ತಾ ಹ್ವಲೇರ ಕಾಳನ ಮಗಳು?” +‘ಗೊತ್ತಿಲ್ದೇ ಏನು?’ +“ಕಲ್ಲೇಶ ಅವಳ ಜೊತೆ ಕಬ್ಬಿನ ಗದ್ದೇಲಿ ಇರ್ತಾನೆ ಅಂತ ಯಾರ್ಯಾರೋ ಮಾತಾಡ್ಕತ್ತಿದ್ರು. ಬೆಸ್ತರಕೇರಿ ಮಾಯಗ ಇದ್ನಲ್ಲ, ಈಗ ಮೂರು ವರ್ಷದಾಗೆ ಸತ್ಹೋದ. ಅವ್ನ ಹೆಂಡ್ತಿ, ಎರಡು ಚಿಕ್ಕ ಮಕ್ಳು ಇದುವೆ. ಅವಳ ಮನೆಗೆ ಹೋಗಿ ಕೂತಿರ್ತಾನಂತೆ. ಇನ್ನೂ ಏನೇನೋ ಹೇಳ್ತಾರೆ. ಇದೇನೋ ಇದು ಅಂತ ನಾನು ಒಂದ್ ದಿನ ಕೇಳ್ದೆ. ‘ಅದ್ಯಾವ ಸೂಳೇಮಗ ನಿಂಗ್ ಹೇಳ್ದೋನು? ಅವ್ನಿಗೆ ಜೋಡು ತಗೊಂಡು ನೆತ್ತಿ ಕೂದ್ಲು ಉದುರೂ ಹಾಗ್ ಮುಟ್ಟುಸ್ಬಿಡ್ತೀನಿ’ ಅಂದ. ನಾನ್ಯಾಕೆ ಕ್ಯೆದುಕ್ಲಿ ಅಂತ ಸುಮ್ನಾದೆ.” +‘ಮನ್ಲಿ ಹೆಂಡ್ತಿ ಇದ್ರೂ ಅವ್ನ್ಯಾಕ್ ಹೀಗೆಲ್ಲ ಮಾಡ್‌ಬೇಕು ಹೇಳು.’ +‘ಪರದೇಶಿ ಮುಂಡೇದು ಕಣೆ ಅದು. ಮದುವೆಯಾದ್‌ಮ್ಯಾಲೆ ನ್ಯೆಟ್‌ಗೆ ಗಂಡನ ಹತ್ರ ನಡಕಂಡಿದ್ರೆ ಅವ್ನ್ಯಾಕೆ ಹೀಗಾಗ್ತಿದ್ದ ಹೇಳು.’ +ಅಜ್ಜಿ ಮೊಮ್ಮಗಳ ಕಷ್ಟಸುಖಗಳನ್ನೆಲ್ಲ ಕೇಳಿದಳು. ಅಡಿಗೆಯ ಕೆಲಸವನ್ನು ತಾನೇ ವಹಿಸಿಕೊಂಡಳು. ನಂಜುವಿಗೆ ಆಗಲೇ ಎಂಟು ತಿಂಗಳು ತುಂಬಿತ್ತು. ರಾತ್ರಿಯ ಹೊತ್ತು ಅವಳು ಅಕ್ಕಮ್ಮನ ಹತ್ತಿರ ಹಾಸಿಕೊಂಡು ಚಾಪೆಯ ಮೇಲೆ ಮಲಗಲು ಪ್ರಾರಂಭಿಸಿದಳು. ಮಕ್ಕಳು ಅಕ್ಕಮ್ಮನ ಎರಡು ಪಕ್ಕಕ್ಕೂ ಒಂದೊಂದರಂತೆ ತಬ್ಬಿಕೊಂಡು ಮಲಗುತ್ತಿದ್ದುವು. ಅಜ್ಜಿ ಮೊಮ್ಮಗಳು ನಿದ್ರೆ ಬರುವ ತನಕ ಏನಾದರೂ ಮಾತನಾಡುತ್ತಿದ್ದರು. ಚೆನ್ನಿಗರಾಯರಿಗೆ ಮನೆಯಲ್ಲಿ ಮಲಗುವುದು ಬೇಸರವಾಯಿತು. ಒಂದು ರಾತ್ರಿ ಊಟವಾದಮೇಲೆ ಅವರೇ ತಮ್ಮ ಹಾಸಿಗೆ ಹೊತ್ತುಕೊಂಡು ಮಾದೇವಯ್ಯನವರ ಗುಡಿಯ ಜಗುಲಿಯ ಮೇಲಕ್ಕೆ ಹೋದರು. +ಅಕ್ಕಮ್ಮ ಬಂದ ಎಂಟು ದಿನಕ್ಕೆ ಒಂದು ದಿನ ಕಲ್ಲೇಶನೇ ಬಿಳಿಯ ಹಸು ಮತ್ತು ಕರುಗಳನ್ನು ಹೊಡೆದುಕೊಂಡು ಬಂದ. ಎರಡು ದಿನ ತಂಗಿಯ ಮನೆಯಲ್ಲಿದ್ದು ಊರಿಗೆ ಹಿಂತಿರುಗಿದ. ಒಂಬತ್ತನೆಯ ತಿಂಗಳು ತುಂಬಿದ ಮೇಲೆ ನಂಜು ಗಂಡು ಮಗು ಹೆತ್ತಳು. ಮೈ ಕೈ ತುಂಬಿಕೊಂಡಿದ್ದ ಮಗು ದಪ್ಪಗೆ ಆರೋಗ್ಯವಾಗಿ ಲಕ್ಷಣವಾಗಿತ್ತು. ನಾಮಕರಣ ಮಾಡಲು ಹತ್ತಿರ ದುಡ್ಡಿಲ್ಲ. ಆದರೆ ಶಾಸ್ತ್ರ ಬಿಡುವಂತಿಲ್ಲ. ಅಕ್ಕಮ್ಮ ಹೇಗೂ ಬೆಲ್ಲ ಅಕ್ಕಿಗಳನ್ನು ತಂದಿದ್ದಳು. ಅವಳ ಹತ್ತಿರ ಐದು ರೂಪಾಯಿ ಇತ್ತು. ಅದನ್ನೇ ಖರ್ಚು ಮಾಡಿ ಊರಿನ ನಾಲ್ಕು ಬ್ರಾಹ್ಮಣರ ಮನೆಗೂ, ಇಬ್ಬರು ಜೋಯಿಸರ ಮನೆಗೂ ಊಟಕ್ಕೆ ಹೇಳಿ ಶಾಸ್ತ್ರ ಮಾಡಿಸಿ ವಿಶ್ವನಾಥ ಎಂದು ಹೆಸರಿಡಿಸಿದಳು. ಅದೇ ದಿನ ಗಂಗಮ್ಮ ಮತ್ತು ಅಪ್ಪಣ್ಣಯ್ಯ ಊರಿನಲ್ಲಿರಲಿಲ್ಲ; ಹಿಂದಿನ ದಿನವೇ ಎಲ್ಲೋ ಬೇರೆ ಊರಿಗೆ ಹೋಗಿ ಬಿಟ್ಟಿದ್ದರು. +***** +ಮುಂದುವರೆಯುವುದು +– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […] +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_622.txt b/Kannada Sahitya/article_622.txt new file mode 100644 index 0000000000000000000000000000000000000000..fac8949c2cf05d47de71962dc4f5aa0239ed69cd --- /dev/null +++ b/Kannada Sahitya/article_622.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಖಾರಿ ಝಂಪೆ +ಏನು ಮಡಿದರೇನು ಭವ ಹಿಂಗದು +ದಾನವಾಂತಕ ನಿನ್ನ ದಯವಾಗದನಕ ಪ +ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ +ಬೆರಳೆಣಿಸದೆ ಅದರ ನಿಜವರಿಯದೆ +ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ +ಹರಿ ನಿನ್ನ ಕರುಣಕಟಾಕ್ಷವಾಗದನಕ ೧ +ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ +ಅತಿಶೀಲಗಳನೆಲ್ಲ ಮಾಡಿ ದಣಿದೆ +ಗತಿಯ ಪಡೆವೇನೆಂದು ಕಾಯ ದಂಡಿಸಿದೆನೊ +ರತಿಪತಿಪಿತ ನಿನ್ನ ದಯವಾಗದನಕ ೨ +ಧ್ಯಾನವನು ಮಾಡಿದೆನು ಮೌನವನು ತಾಳಿದೆನು +ನಾನು ಪುರುಷಾರ್ಥಕೆ ಮನವನಿಕ್ಕಿ +ಅನಾಥ ಬಂಧು ಶ್ರೀ ಪುರಂದರವಿಠ್ಠಲನ +ಧ್ಯಾನಿಸುವರೊಡಗೂಡಿ ನೆಲೆಗಾಣದನಕ ೩ +***** +ಮಾನವ ಜನ್ಮ ದೊಡ್ಡದು, ಇದ ಪಂತುವರಾಳಿ ಅಟ್ಟ ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ ಪ ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ […] +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_623.txt b/Kannada Sahitya/article_623.txt new file mode 100644 index 0000000000000000000000000000000000000000..f4f6669ac19196bf8d0d045ba5ee628317a72d37 --- /dev/null +++ b/Kannada Sahitya/article_623.txt @@ -0,0 +1,106 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ ಕೇಳಬೇಕು. ಹೇಗೆ? +ಹೀಗೆ ಇದ್ದದ್ದನೆಲ್ಲ ಇದ್ದ ಹಾಗೆ ಬಿಟ್ಟು ಬರಲಿ ‘ಇದ್ದ’ ಕಾರಣ ಇನ್ನೊಬ್ಬರಿಗೆ ಹೇಳಿದರೆ ಕ್ಷುಲ್ಲಕವಾಗಿ ಕಾಣುತ್ತದೆ. ಬಂದದ್ದು ನಿಜ. ಯಾಕೆ ಅಂತ ವಿವರಿಸತೊಡಗಿದರೆ ನನಗೇ ಸುಳ್ಳಾಗಿ ಕಾಣತೊಡಗುತ್ತದೆ. ಈ ಮುದುಕ ಒಪ್ಪುವಂಥ ಮಾತು ಏನು ಹೇಳಲಿ? +ಜಗಲಿಯ ಮೇಲೆ ಕೂತು ನನ್ನನ್ನೂ ಪಕ್ಕದಲ್ಲಿ ಕೂಡಿಸಿಕೊಂಡ. +“ಬೆಂಗಳೂರಿನಿಂದ ಬಂದಿದ್ದೇನೆ.” +ಬಹುಶಃ ಅರ್ಥ ಆಗಲಿಲ್ಲ. +“ನನಗೆ ಹಿಂದಿ ಬರಲ್ಲ.” +ಅದು ಅವನಿಗೆ ತಿಳಿಯಿತು. +“ಬಂದದ್ದು ಯಾಕೆ?” +“ಗಣೇಶಪುರಿಯನ್ನು ನೋಡಲು ಬಂದೆ.” +ತಕ್ಷಣ ಆತ ನನ್ನನ್ನು ತಡೆದು ಗಣೇಶ ಪುರಿ ಅನ್ನಬಾರದು. ಗಣೇಶಾನಂದ ಪುರಿ ಮಾಹಾರಾಜ್ ಅನ್ನಬೇಕು, ತಿಳಿಯಿತೆ.” ಅಂದ. +ತಪ್ಪಾಯಿತು ಅಂತ ಕ್ಷಮೆ ಕೇಳಿದೆ. +“ಯಾರು ಅವರನ್ನು ನಿಮಗೆ ತಿಳಿಸಿದ್ದು? ಯಾಕೆ ಬಂದಿರಿ?” +ಯಾರು ಅನ್ನುವುದಕ್ಕೆ ಉತ್ತರ ಸುಲಭ. +“ಉಬ್ಬ ಅಂಗ್ರೇಜಿ ಮಹಿಳೆ. ಬನಾರಸ್ಸಿನಲ್ಲಿ ಹೇಳಿದರು.” +ಯಾಕೆ ಅನ್ನುವ ಪ್ರಶ್ನೆಗೆ ಉತ್ತರ ಹೇಳಲಿ ಕಷ್ಟ ಆಯಿತು. +“ಮನಸ್ಸಿಗೆ ನೆಮ್ಮದಿ ಇಲ್ಲ. ಮನೆ ಬಿಟ್ಟಿದ್ದೇನೆ. ಇಲ್ಲಿ ಗುರುವನ್ನು ನೋಡಬಹುದೆ? ಇಲ್ಲಿ ನಾನು ಇರಬಹುದೆ?” +“ಇರುವುದಕ್ಕೆ ಮಾಹಾರಾಜ್ ಹೇಳಬೇಕು. ಅವರು ಸಂಚಾರ ಹೋಗಿದ್ದಾರೆ. ಇನ್ನೂ ಹದಿನೈದು ದಿನ ಆಗುತ್ತೆ ಬರೋದು. ಅಲ್ಲಿಯವರೆಗೆ ಬೇಕಾದರೆ ಇಲ್ಲಿ ಇರಿ. ಮುಂದೆ ಅವರು ಹೇಳಿದ ಹಾಗೆ ಮಾಡಿ.” +ಆ ಮುದುಕ “ನಿಮ್ಮ ಸಾಮಗ್ರಿಗಳು ಎಲ್ಲಿವೆ” ಅಂತ ಕೇಳಿದ. +“ಸ್ಟೇಶನ್ನಿನಲ್ಲಿ” ಅಂದೆ. +“ಅಲ್ಲಿ ಯಾಕೆ ಇಲ್ಲೆ ತಂದುಬಿಡಿ.” +ಬಹಳ ನಿಧಾನವಾಗಿ ಮಾತನಾಡುತ್ತಿದ್ದ. ಆತನ ನಿಧಾನ ನನಗೆ ಇಷ್ಟ ಆಯಿತು. ಸ್ಟೇಶನ್ನಿನಿಂದ ಚೀಲ ತರುತ್ತೇನೆ ಅಂತ ಹೇಳಿ ಹೊರ ಬಂದೆ. +ಸ್ಟೇಶನ್ನಿನ ಕೆಲಸದಾಕೆಗೆ ತುಂಬ ಸಂತೋಷ ಆಯಿತು. ನನಗೂ. ಇನ್ನು ಹದಿನೈದು ದಿನ ಇರಲು +ಒಂದು ಜಾಗ ಸಿಕ್ಕಿತು. ದಿನ ದೂಡಲು ಒಂದು ನೆಪ ಸಿಕ್ಕಿತು. ನಡೆದು ಹೋಗಿ ನಡೆದು ಬಂದೆ. ಹರಿದ್ವಾರ ನನ್ನ ಊರು ಅನ್ನಿಸತೊಡಗಿತ್ತು. ವಾಪಸ್ಸು ಬಂದಾಗ ಸಂಜೆ ಆಗುತ್ತಿತ್ತು. ಇನ್ನೊಬ್ಬ, ಎತ್ತರ ನಿಲವಿನ, ಕಠಿಣ ಎಂಬಂತಿದ್ದ ದೃಷ್ಟಿಯ, ಖಚಿತವಾಗಿ ಗೆರೆಕೊರೆದಂತಿದ್ದ ಮುಖದ ಕಾವಿ ಧಾರಿ ಎದುರಾದ. ಆತ ಅಲ್ಲಿ ಮಹಾ ಪ್ರಧಾನ ಎಂದು ತಿಳಿಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜೆಗೆ ಬರಬೇಕು; ಪ್ರವಚನ ತಪ್ಪಿಸಿಕೊಳ್ಳಬಾರದು; ಇಲ್ಲಿನ ನಿಯಮಗಳನ್ನು ಪಾಲಿಸಬೇಕು ಅಂತ ಹೇಳಿದ. ಒಬ್ಬ ಹುಡುಗನನ್ನು ಕೂಗಿ “ಯಾರೋ ಭಗತ್ ಬಂದಿದ್ದಾನೆ. ಸಾಧಕನಿವಾಸದಲ್ಲಿ ಜಾಗ ಕೊಡು” ಅಂತ ಶುದ್ಧ ಹಿಂದಿಯಲ್ಲಿ ಹೇಳಿದ. ನಾನೆಂಥ ಭಗತ! ಆಮೇಲೆ ಹೊಳೆಯಿತು. ಅದು ಹಿಂದಿಯಲ್ಲಿ ‘ಭಕ್ತ’ತಾಳುವ ರೂಪ. ಆದರೆ, ಆ ಮಹಾ ಪ್ರಧಾನನಿಗೆ ನನ್ನ ಬಗ್ಗೆ ಅಂಥ ಒಳ್ಳೆಯ ಅಭಿಪ್ರಾಯ ಬಂದಿಲ್ಲ ಅನ್ನಿಸಿತು. +ನಾಲ್ಕು ಅಂತಸ್ತುಗಳು. ಒಂದೊಂದರಲ್ಲೂ ಹತ್ತು ಹದಿನೈದು ಕೋಣೆಗಳು. ಒಬ್ಬ ಹುಡುಗ ನನ್ನನ್ನು ಚಾವಣಿಯ ಮೇಲೆ ಕರೆದುಕೊಂಡು ಹೋದ. ಚಾವಣಿಯ ಮೇಲೆ, ಮೆಟ್ಟಿಲಿನಿಂದ ದೂರ, ಎಡತುದಿಗೆ ಒಂದು ಬಲತುದಿಗೆ ಇನ್ನೊಂದು, ಚಿಕ್ಕ ಎರಡು ಕೋಣೆಗಳು. ಕೋಣೆಯೊಳಗೆ ಒಂದು ಮಂಚ. ಎರಡು ಕಿಟಕಿ. ಕಿಟಕಿಯ ತುಂಬ, ನೆಲದ ತುಂಬ ಧೂಳು. ಒಂದು ಬಾಗಿಲು. ಅದರಾಚೆಗೆ ಒಳಗೆ ಬಚ್ಚಲು ಮನೆ, ನಲ್ಲಿ. +ನನ್ನ ಕೋಣೆಯ ಆಚೆ ಬಂದರೆ ಹಿತ್ತಿಲು ಕಾಣುತ್ತಿತ್ತು. ಅಲ್ಲೆ, ನಾಲ್ಕು ಅಂತಸ್ತು ಕೆಳಗೆ, ಕಾಂಪೌಂಡಿನ ಆಚೆ, ಗಂಗಾ ನದಿ. ನದಿಯ ದಡದಲ್ಲಿ ಉರುಟುರುಟು ಕಲ್ಲುಗಳ ರಾಶಿ ಹರಡಿ ಬಿದ್ದಿತ್ತು. ಸಂಜೆಯ ತಣ್ಣನೆ ಬಿಸಿಲು ಕತ್ತಲ ಬಣ್ಣಕ್ಕೆ ಬದಲಾಗುತ್ತಿತ್ತು. ಗಂಟೆಯ ಶಬ್ದ ಕೇಳಿಸಿತು. ಹಿತ್ತಿಲಲ್ಲಿ ಪುಟ್ಟ ಪುಟ್ಟ ಗುಡಿಗಳು ಕಂಡವು. ಆರೆಂಟು ಹದಿನೈದು ವಯಸಿನೊಳಗಿನ ಹುಡುಗರು ಬಿಳೀ ಪಂಚೆ ಉಟ್ಟು, ಬಿಳೀ ಬಟ್ಟೆ ಹೊದ್ದು ಒಂದು ಗುಡಿಯ ಮುಂದೆ ನಿಂತಿದ್ದರು. ನೋಡಲು ಹೋದೆ. +ಸ್ತೋತ್ರಗಳನ್ನು ಹೇಳುತ್ತಿದ್ದರು. ಮಂಗಳಾರತಿ ಮಾಡಿದರು. ಇನ್ನೊಂದು ಗುಡಿಗೆ ಹೋದರು. ಅಲ್ಲೂ ಅದೇ. ಅಮೇಲೆ ಇನ್ನೊ೦ದು ಗುಡಿಗೆ. ಅಲ್ಲೂ ಅದೆ. ಬಿಳಿ ಉಡುಗೆಯ ಆ ಮಕ್ಕಳ ನಡುವೆ ಪ್ಯಾಂಟು ಜರ್ಕಿನ್ನು ಹಾಕಿಕೊಂಡ ನಾನು ವಿಚಿತ್ರವಾಗಿದ್ದೆ. ಅಲ್ಲೆ ಒಂದು ಮೆಟ್ಟಿಲ ಮೇಲೆ ಬಿಳೀ ಬಿಳೀ ಸೀರೆ ಕುಪ್ಪಸ ತೊಟ್ಟ ಮಧ್ಯವಯಸ್ಸಿನ ಹೆಂಗಸು ಕುಳಿತಿದ್ದಳು. ಸುಮ್ಮನೆ ನಮ್ಮನ್ನೆಲ್ಲ ನೋಡುತ್ತಿದಳು. ನಾನು ಮೊದಲು ನೋಡಿದ್ದ ಅಂಗಳದಲ್ಲಿ ಗಂಟೆ ಸದ್ದು ಕೇಳಿಸಿತು. ಎಲ್ಲರೂ ಅಲ್ಲಿಗೆ ಹೋದರು. ನಾನೂ. ಅಲ್ಲಿ ಆರೆಂಟು ಜನ ಸನ್ಯಾಸಿಗಳಿದ್ದರು. +ಮತ್ತೆ ಬರವಣಿಗೆಯ ಎರಡನೆಯ ದಿನ +ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ ಶರಟುಗಳು. ಹಿಮ ಇದ್ದೀತೆಂಬ ಹೆದರಿಕೆಯಿಂದ ತಂಪು ಕನ್ನಡಕ, ಕಾಲಿಗೆ ಹಂಟರ್ ಶೂಗಳು, ನೀರಿನ ಬಾಟಲು, ಊಟಕ್ಕೆ ಪ್ಲಾಸ್ಟಿಕ್ಕು ತಟ್ಟೆಗಳು, ಬೆನ್ನಿಗೆ ದೊಡ್ಡ ಆನೆ ಚೀಲಗಳು – ನನ್ನ ಬದುಕಿನಲ್ಲಿ ಅದೇ ಮೊದಲ ಬಾರಿ ಅಂಥ ಉಡುಪು ತೊಡುತ್ತಿದ್ದೆ. ಏನೋ ನಾನೇ ಬದಲಾಗಿಬಿಟ್ಟಂತೆ. ಕಾಣದ ಹಿಮಾಲಯದಲ್ಲಿ ನಾನು ಹೀಗೆ ಹೀಗೆ ಕಾಣಿಸಿಕೊಳ್ಳಬೇಕೆಂಬ ಉತ್ಸಾಹ ಹುಮ್ಮಸ್ಸುಗಳು ಮಾತಿನಲ್ಲಿ, ನಡಿಗೆಯಲ್ಲಿ, ಸುಮ್ಮನೆ ಇದ್ದಾಗ ಮತ್ತು ನಿದ್ದೆಯಲ್ಲಿ ಕೂಡ ವ್ಯಕ್ತವಾಗೇ ತುಳುಕುತ್ತಿದ್ದವು. ಚಂದ್ರಾ, ಧಾರಿಣಿಯರೂ ಅಷ್ಟೇ. ಅದೇ ಮೊದಲ ಬಾರಿಗೆ ಚೂಡಿದಾರ್‌ಗಳನ್ನು ಜೀನ್ಸ್ ಪ್ಯಾಂಟು ಶರಟುಗಳನ್ನು, ಉಣ್ಣೆ ಟೋಪಿಗಳನ್ನು ತೊಟ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಟಿಕೆಟ್ಟು ರಿಸರ್ವ್ ಮಾಡಿಸುವ, ಮ್ಯಾಪು ತೆಗೆದುಕೊಂಡು ದಾರು ಹೀಗೆ ಹೀಗೆ ಹೋಗುತ್ತದೆ ಎಂದು ಊಹಿಸುವ ಸಂಭ್ರಮದಲ್ಲಿ ತಿಂಗಳು ಉರುಳಿದ್ದೇ ನಮಗೆ ಯಾರಿಗೂ ತಿಳಿಯಲಿಲ್ಲ. ಬೆಂಗಳೂರಿಗೆ, ಭದ್ರಾವತಿಗೆ, ದೆಹಲಿಗೆ, ಹರಿಹರಕ್ಕೆ ಕಾಗದಗಳು ಎಷ್ಟೊಂದು ಓಡಾಡಿದವು. ನಡೆಯಲು, ಹಿಮಾಲಯದಲ್ಲಿ ಗುಡ್ಡ ಹತ್ತಲು ಅಭ್ಯಾಸ ಇರಲಿ ಅಂತ ದಿನಾ ಸಂಜೆ ನಾಲ್ಕು ನಾಲ್ಕು ಕಿಲೋಮೀಟರ್ ನಡೆದೆವು. ಅದು ನಿಜವಾಗಿ ಏನೂ ಉಪಯೋಗಕ್ಕೆ ಬರಲಿಲ್ಲ ಅನ್ನುವುದು ಬೇರೆ ಮಾತು. +ಆದರೂ ಮನಸ್ಸಿನಲ್ಲಿ ಅಮ್ಮ ಎಲ್ಲೋ ಸಣ್ಣಗೆ ಒತ್ತುತ್ತಿದ್ದರು. ಮುಳ್ಳಿನ ಹಾಗೆ. ನಾನು ಅಲ್ಲೆಲ್ಲೋ ಹೋದಾಗ ಅವರು ಸತ್ತು ಹೋದರೆ? ಅಥವ ಎಂದಿನ ಹಾಗೆ ‘ಅಯ್ಯೊ. ನನ್ನ ಮಗ ಕಷ್ಟ ಪಡುತ್ತಾನಲ್ಲ’ ಅಂತ ಸುಮ್ಮನೆ ತಾವು ಕಷ್ಟ, ಸಂಕಟ ಪಟ್ಟರೆ? ಅದಕ್ಕೇ ತೀರ್ಮಾನ ಮಾಡಿದೆ. ನಾವು ನಡೆದು ಹೋಗುತ್ತೇವೆ ಅಂತ ಅಮ್ಮನಿಗೆ ಹೇಳುವುದೇ ಬೇಡ. ಟೂರ್ ಹೋಗುತ್ತೇವೆ ಅಂದೆ. ಅಯ್ಯೊ, ಸುಳ್ಳು ಹೇಳುತ್ತೇನಲ್ಲ ಅಂತ ಕೊರಗು. ಇರಲಿ. ಪ್ರತಿ ವಾರ, ಅಥವ ಮೂರು ದಿನಕ್ಕೆ ಒಂದು ಕಾಗದ ಬರೆಯುವುದು. ಹಿಮಾಲಯದ ಜೊತೆ ಇದ್ದಾಗ, ಗೆಳೆಯರ ಜೊತೆ ಇದ್ದಾಗ ಅಮ್ಮನ ನೆನಪು ಬರಬಾರದು. ನಾನು ಮಗ ಆಗಿ ಅಲ್ಲ, ಗಂಡ ಆಗಿ ಅಲ್ಲ, ಗೆಳೆಯ ಆಗಿ ಅಲ್ಲ, ನಾನೇ ಅಂತ ಅಲ್ಲಿ ಇರಬೇಕು. ಆದರೆ ಅಮ್ಮನನ್ನು ಅಷ್ಟು ಸುಲಭವಾಗಿ ಒರೆಸಿ ಹಾಕಲು ಸಾಧ್ಯವೆ ಮನಸ್ಸಿನಿಂದ. ಶಿವಮೊಗ್ಗದಲ್ಲಿ ಕೂತೇ ಹೊರಡುವ ಹದಿನೈದು ದಿನ ಮೊದಲೇ ಒಂದಷ್ಟು ಕಾರ್ಡುಗಳಿಗೆ ಅಡ್ರೆಸ್ಸಿನ ಸಮೇತ ಬರೆದಿಟ್ಟುಕೊಂಡೆ: “ಅಮ್ಮನಿಗೆ ನಮಸ್ಕಾರಗಳು. ನಾವು ಕ್ಷೇಮ. ಅರೋಗ್ಯವಾಗಿದ್ದೇನೆ. ತುಂಬ ಚೆನ್ನಾಗಿದ್ದೇನೆ. ಇಂಥಾ ತಾರೀಖು ವಾಪಸ್ಸು ಬರುತ್ತೇವೆ. ಚಂದ್ರಾ ಚನ್ನಾಗಿದ್ದಾಳೆ.” ಅಂತ ಒಕ್ಕಣಿಸಿ ಜೋಡಿಸಿಟ್ಟುಕೊಂಡೆ. ಡಬ್ಬ ಕಂಡ ಕಡೆಯಲ್ಲೆಲ್ಲ ತಾರೀಖು ಬರೆದು ಹಾಕುತ್ತಿದ್ದೆ. ಎಂಥದೋ ಕರ್ತವ್ಯ ನೆರವೇರಿಸಿದ ಸಮಾಧಾನ ಸಿಕ್ಕಿತು – ಅಂದುಕೊಂಡೆ. ಬೆಂಗಳೂರಲ್ಲಿ ರೈಲು ಹತ್ತಿ ಇನ್ನೇನು ಹೊರಡಬೇಕು ಅನ್ನುವ ಹತ್ತು ನಿಮಿಷ ಮುಂಚೆ ಅಮ್ಮ ನಮ್ಮ ಮಾವನನ್ನು ಜೊತೆ ಮಾಡಿಕೊಂಡು ಆಟೋ ಹತ್ತಿ ಓಡಿ ಬಂದಿದ್ದರು. ನಾನು ಬಿಟ್ಟು ಬಂದಿದ್ದ ಗಡಿಯಾರ ಕೊಡಲು. ಹಿಮಾಲಯದಲ್ಲಿ ಗಡಿಯಾರ ಇರಬಾರದು ಅಂತಲೇ ಬಿಟ್ಟಿದ್ದೆ. ಅಮ್ಮನಿಗೆ ಗಡಿಯಾರ ಕೊಡುವುದಕ್ಕಿಂತ ನನ್ನ ಜೊತೆ ಇನ್ನಷ್ಟು ಹೊತ್ತು ಇರುವ ಆಸೆ ಇದ್ದಿರಬಹುದು. ಮಗನಿಗೆ ಅವನು ಮರೆತು ಬಂದಿರುವುದನ್ನು ಕೊಟ್ಟು ಉಪಕಾರ ಮಾಡುವ ಅಪೇಕ್ಷೆ ಇರಬಹುದು. ನನಗೆ ಮುಜುಗರ ಆಯಿತು. +ಆದು ಮೊದಲ ಬಾರಿ: ಎರಡನೆ ಬಾರಿ ನಾನು ಹಿಮಾಲಯಕ್ಕೆ ಹೋಗಿ ಆ ಊರಿನವನೇ ಆದಾಗ ನನಗೆ ಯಾರೂ ನೆನಪು ಬರಲಿಲ್ಲ, ಇರಲಿಲ್ಲ. ಹಾಗೂ ಒಂದು ಸಲ ಸಂಜೆ ನೆದರ್ ಲ್ಯಾಂಡಿನ ಹ್ಯಾನ್ಸ್ ಜೊತೆ ಟೀ ಕುಡಿದು, ಸಂಜೆ ಕತ್ತಲಲ್ಲಿ ಗಂಗೆಯ ಜುಳು ಜುಳು ಕೇಳುತ್ತ, ತಲೆಕೆಳಗಾಗಿ ಕಾಣುವ ಹೃಷಿಕೇಶದ ದೀಪಗಳನ್ನು ನೋಡುತ್ತ ಅವನು ತನ್ನ ಮನೆಯ ಬಗ್ಗೆ ನಾನು ನನ್ನ ಬಗ್ಗೆ ಆಪ್ತವಾಗಿ ಮಾತಾಡಿಕೊಂಡೆವು. ಅವನು ಒಂದು ತಿಂಗಳ ಮಟ್ಟಿಗೆ ಇನ್ನಿಲ್ಲದಂಥ ಆಪ್ತನಾಗಿದ್ದ. ಒಂದು ಕ್ಷಣ ನಾವು ಒಬ್ಬರನ್ನೊಬ್ಬರು ನೋಡದಿದ್ದರೆ ಏನೋ ಕಳಕೊಂಡಂತೆ ನಮಗೆ ಅನಿಸುತ್ತಿತ್ತು. ನಾನು ಮೀಸೆ ತೆಗೆದಿದ್ದೆ. ಆಶ್ರಮಕ್ಕೆ ಮೀಸೆ ಹೊಂದುವುದಿಲ್ಲ ಅಂತ. ಮೀಸೆಯ ಜೊತೆಗೆ ನನ್ನ ಹಳೆಯ ನಾನು ಕೂಡ ಹೊರಟು ಹೋಗಿತ್ತು. ಆಶ್ರಮದವರು ನನಗೆ ಬಿಳೀ ಪಂಚೆ ಕೊಟ್ಟಿದ್ದರು. ನನ್ನ ಖಾದಿ ಜುಬ್ಬ ಇದ್ದವು. ಅಲ್ಲ, ಉಡುಪು ಹೇಗೆ ಎಂತೆಂಥ ಆಸೆ ಹುಟ್ಟಿಸುತ್ತೆ. ಈಗ ನನಗೆ ಹಂಬಲ ಇದ್ದದ್ದು ಅಲ್ಲಿನ ಬಟ್ಟೆಗಳ ವ್ಯವಸ್ಥೆಯಲ್ಲಿ ತೀರ ಮೇಲಕ್ಕೇರಬೇಕು ಅಂತ. ನಮ್ಮಂಥವರು ಬಿಳಿ ಉಡುಗೆಯವರು. ಬ್ರಹ್ಮಚಾರಿಗಳದ್ದು ಹಳದಿ ಬಟ್ಟೆ. ಸನ್ಯಾಸಿಗಳದು ಕಾವಿ. ಕಾವಿಗೆ ಬೇಕಾದ ಸಿದ್ಧತೆಯನ್ನು ಅಥವಾ ಯೋಗ್ಯತೆಯನ್ನು ಪಡೆವ ಅವಕಾಶ ನನಗೆ ಸಿಗುವುದು ಸಾಧ್ಯವೇ ಇರಲಿಲ್ಲ. ಕಾವಿ ಧರಿಸುವ ಅವಕಾಶವಲ್ಲ, ಅಧಿಕಾರ ಇದ್ದಿದ್ದರೆ ನನಗೆ ಚೆನ್ನಾಗಿರುತ್ತಿತ್ತು ಅನ್ನುವ ಆಸೆ ಇತ್ತು. ಸುಮ್ಮನೆ ಅಲ್ಲ ನಿಜವಾಗಲೂ ಆ ಅಧಿಕಾರ ನಾನು ಪಡೆವಂತಿದ್ದರೆ! ಅರಿಶಿನದ ಬಟ್ಟೆಗಳಿಗೆ ಬೇಕಾದ ಯೋಗ್ಯತೆಯನ್ನೂ ಕಳಕೊಂಡಿದ್ದೆ. ಆಶ್ರಮದ ಶ್ರೇಣಿಯಲ್ಲಿ ತೀರ ಕೆಳಹಂತದ ಬಿಳಿ ಉಡುಪಿನವನಾಗಿಯಷ್ಟೆ ಇರಬೇಕು. ಆದರೂ ಒಂದು ಥರ ಹೆಮ್ಮೆ. ನನ್ನ ಬಿಳಿ ಬಟ್ಟೆಯ ಅಧಿಕಾರ ಹ್ಯಾನ್ಸ್‌ನ ಕಿರುಗಡ್ಡ, ಮೀಸೆ, ನಗುಮುಖ, ಪ್ಯಾಂಟು ಶರಟುಗಳಿಗಿಂತ ಮೇಲಿನದು ಅಂತ. ಅವನು ಎಷ್ಟೆಂದರೂ ಕೆಲವು ದಿನಗಳ ಅತಿಥಿ. ನಾನು ಅಲ್ಲಿಯವನು. ಆಶ್ರಮ ವಾಸಿ. ಅವನು ಹಕ್ಕಿ, ನಾನು ಬೇರು ಭದ್ರ ಮಾಡಿಕೊಳ್ಳುತ್ತಿರುವ ಸಸಿ. ಇಂಥ ಹೆಮ್ಮೆ ಅಹಂಕಾರವಾಗಿದ್ದು ಇಂಗ್ಲೆಂಡಿನ ಡಾಕ್ಟರು ಥಾಮಸ್‌ನ ಜೊತೆ ಪಾಥೆಗಾವ್‌ನ ಗುಡ್ಡ ಹತ್ತಿ ಇಳಿಯುತ್ತಿದ್ದಾಗ. ಅವನ ಕೋಟು, ಶೂ, ತುಂಬು ತೋಳಿನ ಬಿಳೀ ಶರ್ಟ್, ಇವುಗಳ ಜೊತೆ ನನ್ನ ಸರಳ ಉಡುಪನ್ನು ಹೋಲಿಸಿ ಮಾತಾಡಿದ್ದೆ. ನಿಜವಾಗಲೂ ಹಾಗನ್ನಿಸಿದ್ದೂ ಹೌದು. ಎರಡು ಬಿಳೀ ಪಂಚೆ, ಎರಡು ಖಾದಿ ಜುಬ್ಬ ಸಾಕಲ್ಲವೇ. ಯಾಕೆ ನಾವು ಉಡುಪಿನ ಬಗ್ಗೆ ಇಷ್ಟು ಆಸೆ ಇಟ್ಟುಕೊಳ್ಳುತ್ತೇವೆ? ಆದರೂ ಆಶ್ರಮ ಬಿಟ್ಟು ಮೂರು ಮೈಲು ಆಚೆ ಹೋಗುವಾಗ, ಪೇಟೆಗೆ ಪ್ಯಾಂಟು ಚೆನ್ನ ಅಂತ ಕೆಲವು ಸಾರಿ ಅನ್ನಿಸುತ್ತಿತ್ತು. ಕ್ರಮೇಣ ಅದೂ ಹೋಯಿತು. ಆದರೆ ಡೆಹರಾಡೂನಿಗೆ ಹೋಗುವುದಾದರೆ ಪ್ಯಾಂಟನ್ನೇ ತೊಡುತ್ತಿದ್ದೆ. ಶಿವಮೊಗ್ಗದಲ್ಲಿ ಕಾಲೇಜಿನ ಉಡುಪು – ಆದರೆ ಚಂದ್ರ ಸಿಡುಕುತ್ತಿದ್ದಳು: ನೀಟಾಗಿರುವುದಿಲ್ಲ, ಇಸ್ತ್ರಿ ಮಾಡುವುದಿಲ್ಲ ಅಂತೆಲ್ಲ, ಬಟ್ಟೆ ಆಗ ಬಹಳ ಇತ್ತು, ಸರಿಯಾಗಿರಲಿಲ್ಲ. ಈಗ ಹಿಮಾಲಯದಿಂದ ಬಂದಮೇಲೆ ಬಟ್ಟೆ ಬದಲಾಗಿದೆ. ಇಸ್ತ್ರಿ ಬಂದಿದೆ, ವೈವಿಧ್ಯ ಬಂದಿದೆ. ಈಗಲೂ ಆಶ್ರಮ ನನಗೆಕೊಟ್ಟ ಎರಡು ಬಿಳೀ ಅಂಗಿ, ಎರಡು ಪಂಚೆ ಇವೆ. ಅವನ್ನು ತೊಟ್ಟಾಗ, ತೊಟ್ಟಷ್ಟು ಹೊತ್ತು ಬೇರೆಯೇ ಅನ್ನಿಸುತ್ತದೆ. +ಹ್ಯಾನ್ಸ್ ಮತ್ತು ನಾನು ನದಿಯ ಪಕ್ಕದಲ್ಲಿ ಕೂತು ಮಾತಾಡುತ್ತಿದ್ದೆವು. ಹ್ಯಾನ್ಸ್‌ಗೆ ಹೆಂಡತಿ ಇದ್ದಾಳೆ. ಇವನ ಆಧ್ಯಾತ್ಮಿಕ ಅಪೇಕ್ಷೆ ಅವಳಿಗೆ ಹಿಡಿಸುವುದಿಲ್ಲ. ಇವನು ಓದಿದ ಕೆಮಿಸ್ಟ್ರಿ ಮತ್ತು ಸೈಕಾಲಜಿ ಇವನಿಗೆ ಸಮಾಧಾನ ಕೊಟ್ಟಿಲ್ಲ. ತುಂಬ ನಿಶಿತ ಬುದ್ಧಿಯ ಹ್ಯಾನ್ಸ್ ಬ್ರಹ್ಮಾನಂದರನ್ನೂ ಕೃಷ್ಣಾನಂದರನ್ನೂ ಕೇಳುವ ಪ್ರಶ್ನೆಗಳು ಕೆಲವುಬಾರಿ ನನ್ನವೂ ಹೌದು. ಅವನು ಹೆಂಡತಿ ಜೊತೆ ಜಗಳಾಡಿದ. ಕಾರಣ ಬೇರೆಯೂ ಇರಬಹುದು ಅನ್ನುವ ಸೂಚನೆಯಷ್ಟೆ ನನಗೆ ಹೊಳೆಯಿತು. ಇಲ್ಲಿಗೆ ಬಂದ ತತ್ತ್ವಶಾಸ್ತ್ರ ಅವನಿಗೆ ಒಡ್ಡುವ ಸಮಸ್ಯೆ, ಪ್ರಶ್ನೆ ಬೇರೆ ರೀತಿಯದು, ನನಗೆ ಬೇರೆ ರೀತಿಯದು. ಆದರೆ ನನಗೆ ಅರ್ಥ ಆದಂತೆ ಅನ್ನಿಸಿದ್ದು ಹೊಳೆದದ್ದು ಅವನಿಗೆ ಹೊಳೆಯುತ್ತಿರಲಿಲ್ಲ. ಆದರೆ ಇಬ್ಬರೂ ಅವು ಜೀವನ್ಮರಣದ ಪ್ರಶ್ನೆಗಳು ಅನ್ನುವ ಹಾಗೆ ಚರ್ಚೆ ಮಾಡುತ್ತಿದ್ದೆವು. ತತ್ತ್ವ ಕಲಿಯುವ ಅನಿವಾರ್ಯವಾಗಿರಲಿಲ್ಲ ನಮ್ಮ ಅನಿವಾರ್ಯ, ಹಿಂಗಿದ, ಹಸಿವು ಆಗಿತ್ತು. ನಿಜವಾಗಿ ತತ್ತ್ವದ ಬಗ್ಗೆ ಅಲ್ಲ ನಮ್ಮ ಬಗ್ಗೆ ತಿಳಿಯುತ್ತಿದ್ದೆವು. +ಟೀ ಕುಡಿದು ಮತ್ತೆ ಬಂದು ಕೂತೆವು. ಹೇಳಿದೆ. ಅಪರಿಚಿತರೊಂದಿಗೆ ಹೇಳಿಕೊಳ್ಳುವಾಗ ನಮ್ಮ ಬಗ್ಗೆಯೇ ಆದರೂ ನಾವೇ ನಮ್ಮನ್ನು ಅಪರಿಚಿತರೆಂಬಂತೆ ಕತೆಮಾಡಿ ಹೇಳಿಕೊಳ್ಳುತ್ತೀವೋ ಏನೋ. ಕತೆಯಲ್ಲಿ ಪಾತ್ರದ ಬಗ್ಗೆ ಬೇಕಾದ ಕೆಲವೇ ಮಾತು ಹೇಳುವ ಹಾಗೆ ನಮ್ಮ ಬಗ್ಗೆ ನಾವೇ ಒಂದೆರಡು ಮಾತುಗಳಲ್ಲಿ ನಮ್ಮ ಸತ್ವ ನಿರೂಪಿಸುವುದಕ್ಕೆ ತೊದಗುತ್ತೇವೇನೋ. ಹಾಗ್ ಹ್ಯಾನ್ಸ್ ನನಗೆ ಅಪರಿಚಿತನೂ ಅಲ್ಲ. ಅವನ ಅಗಲ ದಪ್ಪ ಕೈ, ಸ್ವಲ್ಪ ಚೌಕ ಮುಖ, ಪುಟ್ಟ ಬಾಯಿ, ಹಸುವಿನಂಥ ಕಣ್ಣು, ನುಣುಪಾದ ಹದವಾಗಿ ಕತ್ತರಿಸಿದ ಕೆದರು ಕೂದಲು, ಹುಡುಗುತನ ಮತ್ತು ಪ್ರಬುದ್ಧತೆ ಎರಡೂ ಇದ್ದ ದೃಢವಾದ ಕತ್ತು, ಕೊರಳು, ಭುಜದ ಹ್ಯಾನ್ಸ್ ನನ್ಗೆ, ಸ್ವಲ್ಪ, ಗೆಳೆಯ ರಾಮುನ ನಮ್ಮ ವೇಣುವಿನ ನೆನಪನ್ನೂ ಅವರ ಮನೆಯಲ್ಲಿದ್ದ ಹಸುವಿನ ನೆನಪನ್ನೂ ತರುತ್ತಿದ್ದ. +ಹೇಳಿದೆ – “ಬಹಳ ಸಾರಿ ನನಗೆ ಯೋಚನೆ ಮಾಡುವುದಕ್ಕೆ ಭಯವಾಗುತ್ತದೆ. ಯಾಕೆಂದರೆ ಯೋಚನೆ ಮಾಡಿದ್ದು ಇಚ್ಛೆಯಾಗಿ, ಇಚ್ಛೆ ಪ್ರಬಲವಾಗಿ, ಪ್ರಬಲವಾದ ಇಚ್ಛೆ ನಿಜವಾಗಿಯೇ ಬಿಡುತ್ತದೆ. ನನಗೆ ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಯಾರೂ ನನಗೆ ಇರಬಾರದು ಅನ್ನಿಸಿತ್ತು. ಒಬ್ಬನೇ ಯಾರಿಗೂ ಹೇಳದೇ ಕೇಳದೇ ಅಲೆಮಾರಿಯಾಗಿ ಹೊರಟು ಹೋಗಬೇಕು ಅನ್ನಿಸಿತ್ತು. ನನ್ನ ಅಪ್ಪ ಅಮ್ಮ ಹೆಂಡತಿ ಎಲ್ಲರೂ ನನ್ನ ಬಗ್ಗೆ ತುಂಬ ಪ್ರೀತಿ ಇದ್ದವರೆ, ಇಟ್ಟುಕೊಂಡವರೇ. ನನಗೆ ಕೆಲವು ಸಾರಿ ಅದು ಮನಸ್ಸಿಗೆ ಬಂದಾಗ ಅಯ್ಯೊ ಅನ್ನಿಸುತ್ತೆ. ಅಯೋಗ್ಯ ಅನ್ನಿಸುತ್ತೆ, ಬೇರೆ ಥರ ಇರಬೇಕು ಅನ್ನಿಸುತ್ತೆ. ನನ್ನ ಹೆಂಡತಿ ಜೊತೆ ಇರಲು ನಾನು ಅಯೋಗ್ಯ ಅನ್ನಿಸಿದಾಗ ಥಟ್ಟಂತ ಹೊರಟುಬಿಟ್ಟೆ. ಈಗ ಮತ್ತೆ ವಾಪಸ್ಸು ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಇಲ್ಲೆ ಯಾಕಿದ್ದೇನೋ ಗೊತ್ತಿಲ್ಲ. ನನಗೆ ಬೇಕಾದ್ದಿ ಸಿಕ್ಕಿದೆಯೋ ಗೊತ್ತಿಲ್ಲ. ಹಾಗೆಯೇ ಮನೆಯ ನೆನಪು ಕೂಡ ಯಾವಾಗಲೂ ಬರಲ್ಲ. ವಾಪಸ್ಸು ಹೋಗಬೇಕು ಆನ್ನಿಸಲ್ಲ.” +ಹ್ಯಾನ್ಸ್ ಕೇಳಿದ – “ನಿನ್ನ ಹೆಂಡತಿಗೆ, ನಿನ್ನ ಅಮ್ಮನಿಗೆ ನೋವು ಆಗುವುದಿಲ್ಲವಾ? ನೀನು ಇಲ್ಲಿರುವುದು ಅವರಿಗೆ ಗೊತ್ತಾ?” +“ಇಲ್ಲ ಗೊತ್ತಿಲ್ಲ. ನೋವಾಗುತ್ತೆ. ನಾನು ಅಲ್ಲೇ ಇದ್ದಿದ್ದರೆ ನನಗೆ ನೋವಾಗುತ್ತಿತ್ತು. ಈಗ ನೋವು ಇಲ್ಲ. ಹೋಗಬಾರದು ಅಂತಲೂ ಇಲ್ಲ. ನಾನು ಬದಲಾಗಿದ್ದೇನೆ ಅನ್ನುವುದು ನಿಜ.” +ನಾವಿಬ್ಬರೂ ನಮ್ಮದಲ್ಲದ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದೆವು. ಎಷ್ಟು ಹೇಳಿದೆವೊ ಎಷ್ಟು ತಿಳಿಯಿತೊ. ಆದರೂ ಹಿಮಾಲಯದ ಬೆಟ್ಟಗಳು, ಗಂಗೆ, ಆಶ್ರಮದ ಬದುಕು, ಒಂದು ತಿಂಗಳ ನಮ್ಮ ಒಡನಾಟ ಎಲ್ಲ ಸೇರಿ ನಾನು ಬದಲಾಗಿರುವುದು ನನಗೆ, ಅವನು ಬದಲಾಗಿರುವುದು ಅವನಿಗೆ ತಿಳಿವಂತೆ ಮಾಡಿದ್ದವು. +ನಿಜ ಒಂದು ಸಾಯಂಕಾಲ. ಫೆಬ್ರುವರಿ ತಿಂಗಳ ಚಳಿ ಬಿಸಿಲಲ್ಲಿ ಥಾಮಸ್‌ನ ಜೊತೆ ಪಾಥೆಗಾವ್‌ದ ಸಾಸುವೆ ಹೊಲದ ಹೂ ತುಂಬಿದ ಗಿಡಗಳನ್ನು ನೋಡಿ ಇಳಿಯುತ್ತ ಹೇಳಿದೆ. ಅವನಿಗೆ ಆಶ್ರಮದ ಜನರ ಬಗ್ಗೆ ಕುತೂಹಲ ಇತ್ತು. ಹೇಳಿದೆ – “ಇಲ್ಲಿ ಇರುವ ಎಲ್ಲರಿಗೂ ಭೂತಕಾಲ ಮಾತ್ರ ಇದೆ. ಭವಿಷ್ಯ ಇಲ್ಲ. ಹಾಗೆ ಇದ್ದೇವೆ.” ಉದ್ದ ಗಡ್ಡದ ದಪ್ಪ ಮೈಯ ಮುದುಕ ಕಾವಲುಗಾರ. ಕ್ರಿಸ್ತನ ಹಾಗೆ ತಲೆಗೂದಲು ಗಡ್ಡ ಇರುವ ಕೇರಳದ ತರುಣ ಮೈಕೆಲ್, ಊಟ ಬಡಿಸುವ ಸಂಸ್ಕೃತ ವಿದ್ವಾಂಸ, ಮನೆಯವರೆಲ್ಲರ ಕಗ್ಗೊಲೆ ನೋಡಿ ಶ್ರೀಲಂಕೆಯಿಂದ ತಾನೊಬ್ಬನೆ ಉಳಿದು ಬಂದು ಇಲ್ಲಿರುವ ಯುವಕ ಕಾವಿಧಾರಿ, ಲೆಕ್ಕ ಪತ್ರ ನೋಡಿಕೊಳ್ಳುವ ಅಲಾವುದೀನ್ ಕತೆಯ ಭೂತದಂತಿರುವ ಮಲೆಯೇಷಿಯಾದ ಕಪ್ಪು ಮನುಷ್ಯ, ಕರಾಟೆಯಲ್ಲಿ ಒಬ್ಬನನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿ ವೈರಾಗ್ಯ ಹುಟ್ಟಿ ಇಲ್ಲಿ ಪ್ರೆಸ್ಸಿನ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಯುವಕ ಭಾವಗ್ರಾಹಿ – ನನ್ನ ಪರಿಚಯಕ್ಕೆ ಹಲವು ತಿಂಗಳಲ್ಲಿ ಒದಗಿಬಂದ ಹಲವು ನೂರು ಜನಕ್ಕೆ ಅವರದೇ ಆದ ಭೂತಗಳಿವೆ. ಭವಿಷ್ಯ ಗೊತ್ತಿಲ್ಲದೆ ಇದ್ದಾರೆ. ಭವಿಷ್ಯ ಇಲ್ಲವೇ ಇಲ್ಲ ಅನ್ನುವ ಹಾಗೆ ಇದ್ದಾರೆ. ನಾನೂ. +ಅಲ್ಲೆ ಆಶ್ರಮದ ಹತ್ತಿರವೆ ಪೋಲೀಸ್ ಇನ್ಸ್‌ಪೆಕ್ಟರರ ಮನೆ. ಸೈಕಲ್ಲು. ಒಣಹಾಕಿರುವ ಬಟ್ಟೆಗಳು. ಮಕ್ಕಳು. ಟ್ರಾನ್ಸಿಸ್ಟರ್ ಕೇಳುತ್ತ ಕೂರುವ ಹುಡುಗಿಯರು. ಸಂಜೆ ಟಿವಿ ನೋಡಲು ಅಲ್ಲಲ್ಲಿ ಗುಂಪು ಸೇರುವ ಜನ. ಭವಿಷ್ಯದ ಗುರಿ ಕನಸು ಇರುವವರು. ನನಗೆ ಒಮ್ಮೆ ಪರಿಚಿತವಾಗಿದ್ದ ನನ್ನದೂ ಆಗಿದ್ದ ಬದುಕು ಕೈಯಳತೆಯಲ್ಲೆ ಇದೆ. ಆಶ್ರಮದಲ್ಲಿ ಎರಡೂ ಹೊತ್ತು ಉಳಿದು ಹೋದ ಊಟವನ್ನು ಬೇಡಲು ಬರುವ ಭಿಕ್ಷುಕರ ಗುಂಪು ಇದೆ. ಅವರಿಗೂ ಭವಿಷ್ಯ ಇಲ್ಲ. ಬೇರೆ ಥರದಲ್ಲಿ ಭವಿಷ್ಯ ಇಲ್ಲ. +ಇರುವುದು ಈ ಕ್ಷಣ ಮಾತ್ರ ಅಂತ ಆಗಲೂ ಅನ್ನಿಸಿತ್ತು – ಮೈ ಕೊರೆವ ಸೊನ್ನೆಗೆ ಹತ್ತಿರದ ಚಳಿಯಲ್ಲಿ ರಾತ್ರಿ ದಿನವೆಲ್ಲ ನಡೆದು ಸುಸ್ತಾಗಿ, ಗುರುದ್ವಾರದ ಜನ ಕರುಣಿಸಿದ ಕಂಬಳಿ ಹೊದ್ದು, ರಾಜು ಮತ್ತು ಶ್ರೀನಾಥ ತಂದ ಕೇಜಿಗಟ್ಟಲೆ ಜಿಲೇಬಿಗಳನ್ನು ಬಿಸಿ ಬಿಸಿಯಾಗಿ ನಾವು ಕಬಳಿಸುತ್ತ ಕೂತಿದ್ದಾಗ ಹಾಗನ್ನಿಸಿತ್ತು. +ಮತ್ತೆ ಆಗಲೂ ಹಾಗೇ ಅನ್ನಿಸಿತ್ತು – ಹಿಮದ ಮೇಲೆ ಕೋಲೂರಿ ನಡೆದು ತೀರ ಬೆಳಗಿನ ಜಾವದಲ್ಲಿ ಹೂಗಳ ಕಣಿವೆಗ ಹೋಗಿ ನಿಂತಾಗ. ಕೈಗೆ ತಗಲುವಷ್ಟು ಸಮೀಪ ಇರುವಂತೆನ್ನಿಸುವ ಆದರೆ ನೂರಾರು ಅಡಿ ದೂರವಿರುವ, ಬೃಹತ್ ಅತೀ ಬೃಹತ್ ಗಾತ್ರದಿಂದ ಮೈಮೇಲೆ ಬೀಳುವಂತೆಯೇ ಇರುವ, ಮೊನಚು ಕಲ್ಲುಗಳ ಬೆಟ್ಟಸಾಲುಗಳು ಎತ್ತರ ಅತೀ ಎತ್ತರವಾಗಿ ಎಡಬಲಗಳಲ್ಲಿ ಕಣ್ಣು ಹರಿವಷ್ಟು ದೂರವೂ ನಿಂತು, ಮೇಲೆ ಕವುಚಿ ಬೀಳುವಂತಿರುವ ಮಳೆ ಮೋಡವೂ ಬೆಟ್ಟದ ಮಧ್ಯಂತರದಲ್ಲಿ ನಮ್ಮ ತಲೆ ಸವರಲೆಂದು ಇಳಿದು ಬರುತ್ತಿರುವ ನೇರಳೆ – ಬಿಳಿ ಮೋಡವೂ ಇದ್ದು, ತೇವ ತುಂಬಿದ ಗಾಳಿ ಬೀಸುತ್ತ, ಅಷ್ಟಿಷ್ಟೆ ಎಳೆ ಬಿಸಿಲು ಬೀಳುತ್ತ, ಹೂಗಳ ಬಣ್ಣ ಕಣ್ಣು ತುಂಬುತ್ತ – ಕಲ್ಲುಗಳ ಬಣ್ಣ, ಅಷ್ಟಿಷ್ಟು ಆಗೀಗ ತೋರಿಸುವ ಆಕಾಶದ ಬಣ್ಣ, ಮೋಡದ ಬಣ್ಣ, ಬಿಸಿಲು ಬಿದ್ದ ಮೋಡದ ಬಣ್ಣ, ಮಳೆ ಮೋಡದ ಬಣ್ಣ, ಹೆಪ್ಪುಗಟ್ಟಿದ ಹಿಮನದಿಯ ಬಣ್ಣ, ಹುಲ್ಲು ಹಾಸಿನ ಮೇಲೆ ಬೆಳಗಿನ ಬೆಳಕಿನ ಬೇರೆ ಬೇರೆ ವಿನ್ಯಾಸ, ಅಪ್ಪಟ ಚಳಿಯ ಗಾಳಿಗೆ ನನಗೆ ಚಳಿಚಳಿಯಾಗುತ್ತಿರುವಾಗಲೇ ನನ್ನೊಳಗೆ ಸ್ವಲ್ಪ ಬೆಚ್ಚಗೆ ಹರಿಯುತ್ತಿರುವ ರಕ್ತದ ಬಿಸುಪು, ಉಸಿರಾಡಿದಂತೆಲ್ಲ ಬರುವ ಹಬೆ, ನಾನಿರುವಷ್ಟು ಜಾಗ, ನನ್ನ ಕಣ್ಣಿಗೆ ಬೀಳುವಷ್ಟು ಲೋಕ ಬಿಟ್ಟರೆ ಇನ್ನೇನೂ ಇಲ್ಲವೇ ಇಲ್ಲ ಅಂತ ಅನ್ನಿಸಿದಾಗ – ಇರುವುದು ಈ ಕ್ಷಣ ಮಾತ್ರ. ಆ ದೊಡ್ಡ ಕಣಿವೆಯಲ್ಲಿ ಇದ್ದ ನಾವು ಹತ್ತು ಜನ ಚದುರಿ ಒಬ್ಬೊಬ್ಬರೆ ಇಬ್ಬಿಬ್ಬರೆ ಆದಾಗ ಏಕಾಂತದ ಭಯ ಸ್ವಲ್ಪ ಆಯಿತಲ್ಲ ಆ ಭಯ ಬಿಟ್ಟರೆ ಬೇರೆ ಏನೂ ಇಲ್ಲ ಅನ್ನಿಸಿದ್ದೂ ಇದೆ. +ಆದರೆ ಹಾಗೆ ಬಹಳ ಹೊತ್ತು ಇರಲಿಲ್ಲ. ರಾತ್ರಿ ಬಿದ್ದ ಮಳೆಯ ಹನಿಗಳನ್ನು ಈಗಲೂ ಉದುರಿಸುತ್ತಿರುವ ಎತ್ತರ ಮರಗಳ ಹಿಂದೆ ಇನ್ನೂ ಕತ್ತಲು ಇದೆ. ನಡೆದಷ್ಟೂ ಇರುವ ಕಣಿವೆ, ತಿರುವುಗಳಲ್ಲಿ ಧುತ್ತನೆ ಎದುರಾಗುವ ಬೃಹತ್ ಮತ್ತು ಮೊನಚು ಕೋಡುಗಲ್ಲುಗಳು. ದೇವರು ಇದ್ದರೆ ಇಲ್ಲೆ ಎಲ್ಲೊ ಮುಂದಿನ ತಿರುವಿನಲ್ಲಿ, ಅಲ್ಲಿ ತೇಲುತ್ತಿರುವ ಮೋಡದ ಕೆಳಗೆ, ಇಷ್ಟೆ ಬಿದ್ದಿರುವ ಬೆಳಗಿನ ಬಿಸಿಲಿನಲ್ಲಿ, ಹಿಮದ ಮೇಲೆ ಏನೋ ಮಾಡುತ್ತ ಕೂತಿರಬಹುದು ಅನ್ನಿಸುವ ಹಾಗೆ. ಅಕಸ್ಮಾತ್ತಾಗಿ ಬೀಳುವ ಕನಸೂ ಕೂಡ ಹೂಗಳ ಕಣಿವೆಯಷ್ಟು ಸುಂದರ, ಏಕಾಕಿ, ಭಯಂಕರ, ಮುಗ್ಧವಾಗಿರಲಾರದು. ಆದರೆ ಬಹಳ ಹೊತ್ತು ಹಾಗೇ ಅಲ್ಲಿ ಇರಲಾಗದು. ಮತ್ತೆ ನಡೆದು ಹಿಂದಿರುಗಿ ಗುರುದ್ವಾರಕ್ಕೆ ಹೋಗಿ, ಅಲ್ಲಿಂದ ನಡೆದು ರಸ್ತೆ ತಲುಪಿ, ಅಲ್ಲಿಂದ ಬಸ್ಸು ಹಿಡಿದು ಬದರಿಗೆ ಹೋಗಿ, ಅಲ್ಲಿಂದ ದೆಹಲಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಕಾಲೇಜಿಗೆ ತಲುಪಿ ಪಾಠ ಮಾಡಬೇಕು ಅನ್ನುವ ಭವಿಷ್ಯ ಇಲ್ಲೇ ಇದೇ ನಿಜ ಅನ್ನುವ ಕ್ಷಣಗಳನ್ನು ಆಳುತ್ತಿತ್ತು. +ಹೃಷೀಕೇಶ ಹಾಗಲ್ಲ. ಭೂತ ಮಾತ್ರ ಇತ್ತು. ಭೂತದ ಅಳುಕು, ಅಪರಾಧ, ಪಶ್ಚಾತ್ತಾಪಗಳು ನಿಧಾನವಾಗಿ – ಅವತ್ತು ಪೀನಿಯಲ್ಲಿ ಮಳೆ ಬಂದಾಗ ಬಿದ್ದ ಆಲಿಕಲ್ಲಿನಂತೆ – ಕರಗುತ್ತಿದ್ದವು. ಹಿಂದಿರುಗುವ ಆಸೆ ಇಲ್ಲದೆ, ಭವಿಷ್ಯದಲ್ಲಿ ಏನಿದೆ ಅನ್ನುವ ಚಿಂತೆ ಇಲ್ಲದೆ, ನಾಳೆಯ ಒತ್ತಾಯ ಇಲ್ಲದೆ ದಿನ ದಿನಾ ಸುಮ್ಮನೆ ಇದ್ದೆ. ಇರುತ್ತಿದ್ದೆ, ಭೂತಗಳನ್ನು ಹೊತ್ತ ಜನ, ಭೂತದಿಂದ ತಪ್ಪಿಸಿಕೊಳ್ಳಲು ಬರುವ ಜನ, ಆಶ್ರಮದ ಮೇಲೆ ಕರುಣೆ ತೋರುವ ಜನ, ಅತಿಥಿಗಳಾಗಿ ಬರುವ ಜನ, ಎಲ್ಲರೂ ಬಂದು ಹೋಗುವುದನ್ನು ನೋಡುತ್ತ ಸುಮ್ಮನೆ ಬೆಟ್ಟದಹಾಗೆ ನದಿಯಹಾಗೆ ಇದ್ದೆ. ಎಷ್ಟು ದಿನ ಹೀಗೆ ಇರುತ್ತೇನೋ ಗೊತ್ತಿಲ್ಲದ ಹಾಗೆ ಇದ್ದೆ. +ನಿದ್ದೆ ಬರಲಿಲ್ಲ. ಹೀಗಾಗುವುದು ಅಪರೂಪ. ಮತ್ತೆ ಎದ್ದು ಬರೆಯುತ್ತಿದ್ದೇನೆ. ಹಿಮಾಲಯ ದಿನಗಳ ತುಣುಕುಗಳು ಹಾಸಿಗೆಯಲ್ಲಿ ಹೊರಳಾಡಿಸಿದವು. ನನ್ನ ಇಚ್ಛೆಯದಲ್ಲದ ಆದರೆ ನಾನು ಮಾಡಬೇಕಾದ ಕೆಲಸಗಳು ಬೆಳಗಾಗಲೆಂದೆ ಕಾದಿವೆ. ಆದರೆ – +ಕೈ ಮುಗಿದಾಗ ಹಿಂದೆಂದೂ ಹಾಗೆ ಅನ್ನಿಸಿರಲಿಲ್ಲ. ಹಾಗೆ ಹೃತ್ಪೂರ್ವಕ ಕೈ ಮುಗಿದೂ ಇರಲಿಲ್ಲ. ನನ್ನವೇ ಕೈ ಬೆರಳುಗಳು ಒಂದಕ್ಕೊಂದು ವಿರುದ್ಧವಾಗಿ ಒತ್ತಿಕೊಂಡು, ಅಂಗೈಗೆ ಅಂಗೈ ಒತ್ತಿ, ಒಂದು ಬೆರಳಲ್ಲಿ ಹರಿವ ರಕ್ತದ ಚಲನೆ ಇನ್ನೊಂದು ಬೆರಳಿಗೆ ಗೊತ್ತಾಗಿ, ಇಡೀ ನಾನು ಮುಗಿದ ಕೈಯಾಗಿ, ಕಣ್ಣುಮುಚ್ಚಿ, ಗಂಟೆ ಸದ್ದು ಕಿವಿ ತುಂಬ ತುಂಬಿಕೊಂಡು, ಅಹಂಕಾರ ಮುಕ್ಕು ಮಾಡಿಕೊಳ್ಳುತ್ತ, ನೋಯುತ್ತಲೂ ಸಂತೋಷ ಪಡುತ್ತಲೂ ಸ್ವಲ್ಪಹೊತ್ತು ಇದ್ದೆ. ಮತ್ತೆ, ಆಮೇಲೆ, ನಮಸ್ಕಾರ ಪೂರ್ತಿಮಾಡಿದೆ. ನನ್ನ ಇಡೀ ಮೈಯನ್ನು ನೆಲ ಎತ್ತಿ ಹಿಡಿದಿತ್ತು. ಹಣೆಗೆ ತಗಲುವ ತಣ್ಣಗೆ ಕೊರೆಯುವ ನೆಲ, ತೊಡೆಗೆ ಒತ್ತುವ ನೆಲ, ಕಾಲ ಬೆರಳಿಗೆ ತಂಪ್ಪೆನ್ನಿಸುವ ನೆಲ, ಮನಸ್ಸು ಪೂರ್ತಿ ಇಟ್ಟು ಮಾಡುವ ನಮಸ್ಕಾರ ನೆಲದ ಜೊತೆಗೆ ನನ್ನನ್ನು ಸೇರಿಸಿಕೊಂಡಿತ್ತು. ಆಗಲೂ ಹಿಂದೆ ಒಮ್ಮೆ ಜೊತೆಯಲ್ಲಿದ್ದವರನ್ನೆಲ್ಲ ಮರೆತು, ಸುಸ್ತಾಗಿ, ಬ್ರಿಂಗ್ಟಾ ಟಾಪನ್ನು ಹತ್ತಿ ನೆಲಕ್ಕೆ ಬೆನ್ನು ಕೊಟ್ಟು ಮಲಗಿದಾಗ – ಅದು ಮಲಗಿದ್ದು. ನೆಲ ನನಗೆ ಶಕ್ತಿ ಕೊಟ್ಟಿತ್ತು. ಆ ಶಕ್ತಿಯಲ್ಲಿ ಕೆಲವು ಕ್ಷಣ ಇದ್ದವರನ್ನು ಮರೆತು, ಇರಬೇಕೆಂದು ಬಯಸಿದ – ನನಗೆ ಬೇಕೇ ಬೇಕೆಂದು ನಾನು ಹಂಬಲಿಸಿದ ಮುಖಗಳನ್ನು ಮನಸ್ಸಿಗೆ ತಂದುಕೊಂಡಿದ್ದೆ. ಪಾರ್ವತಿ ನದಿ, ದೂರದಲ್ಲಿ ಕೆಳಗೆ, ಆಳದಲ್ಲಿ, ಸಾವಿರ ಸಾವಿರ ಅಡಿ ಏರಿ ಹತ್ತಿದ ಅಹಂಕಾರ. ಕಾಮನೆಯ ನೆನಪುಗಳು, ಚಿತ್ರಗಳು. ಈಗ ಆಯಾಸವಿಲ್ಲದೆ, ಹತ್ತಿದ ಅಹಂಕಾರವಿಲ್ಲದೆ, ಕಾಡಿದ ಕಾಮನೆಗಳು ನಿಜವಾಗಿ ಉಬ್ಬಿದ ಅಹಂಕಾರಕ್ಕೆ ಕೊಟ್ಟ ನೋವು ಇಲ್ಲದೆ, ಮನುಷ್ಯ ಎಷ್ಟೋ ಕಾಲದಿಂದ ಕಲ್ಪಿಸಿಕೊಂಡ ಇನ್ನೊಂದರ ಎದುರು ಸುಮ್ಮನೆ ನಮಸ್ಕಾರ ಮಾಡಿದಾಗ ತಿಳಿಯಿತು ನಮಸ್ಕಾತ ಎಂಥ ಬಿಡುಗಡೆ ತರುತ್ತದೆ ಎಂದು. ಹುಡುಗನಾಗಿದ್ದಾಗ ಅಪ್ಪ ಅಮ್ಮ ಹೇಳಿಕೊಟ್ಟಹಾಗೆ, ಹೆದರಿಕೊಂಡು, ನಮಸ್ಕಾರ ಮಾಡದಿದ್ದರೆ ಏನಾದೀತೋ ಎಂದು ಕೈ ಮುಗಿದದ್ದು ಬರೀ ಸುಳ್ಳು. ಅವತ್ತು, ಆ ಬೆಳಗ್ಗೆ, ನಿಜವಾಗಿ, ನನಗೇ ನಿಜ ಅನ್ನಿಸುವ ಹಾಗೆ, ನಮಸ್ಕಾರ ಮಾಡಿದ್ದು ಒಂದೇ ಸಲ. ಕೆಲವು ಬಾರಿ ಹೀಗೂ ನಾನು ಕೈ ಮುಗಿದೇನು ಅಂತ ಎಂದೂ ಕಲ್ಪಿಸಿಕೊಂಡೂ ಇರಲಿಲ್ಲ. ಒಮ್ಮೆಯಾದರೂ ಆಯಿತಲ್ಲ. ಸಾಕು. +ಅಂದು ಒಂದು ದಿನ ಹೀಗೇ ರಾತ್ರಿ ನಿದ್ದೆ ಬಾರದೆ ನನ್ನ ಕೋಣೆಯ ಆಚೆ ಕಾಸಾಲೆಯಲ್ಲಿ ಬಂದು ಸುಮ್ಮನೆ ಕೂತಿದ್ದೆ. ಆಗಲೂ ಈಗ ಇರುವ ಹಾಗೇ ಮುಕ್ಕಾಲು ಚಂದ್ರನ ಬೆಳಕಿತ್ತು. ನನಗೆ ನಿದ್ರೆ ಬಾರದಿರುವುದು ಅಪರೂಪ. ನಿದ್ರೆ ಬರಲಿಲ್ಲ. ಅಷ್ಟೆ. ಯಾಕೋ. ಈಗಾದರೂ ಹಿಮಾಲಯದ ಚಿತ್ರ ಮನಸ್ಸಿಗೆ ಬರುತ್ತಿವೆ. ಆಗ ಕಾಡುವ ಚಿತ್ರಗಳೂ ಇರಲಿಲ್ಲ. ವಿಶಾಲ ಅಂಗಳದಲ್ಲಿ ಮರ ಸುಮ್ಮನೆ ನಿಂತಿತ್ತು. ಅಂಗಳದ ತುಂಬ ಚೌಕ ಚೌಕ ಜೋಡಿಸಿದ ಚಪ್ಪಡಿ ಕಲ್ಲುಗಳ ಮೇಲೆದೀಪದ ಬೆಳಕು, ಚಂದ್ರನ ಬೆಳಕು ಇತ್ತು. ಮರದ ಹಿಂದೆ ಅಡುಗೆ ಮನೆಯ ಬಿಸಿಲು ಮಚ್ಚು. ಎರಡು ಮೂಟೆಗಳು ಕೆಲವು ಸೌದೆ ತುಂಡುಗಳು ಸುಮ್ಮನೆ ಇದ್ದವು. ಮರದ ಪಕ್ಕದಲ್ಲಿ ಸ್ಟೀಲಿನ ಗೇಟು ಹಳೆಯ ಹೊಳಪನ್ನು ಬೀರುತ್ತಿತ್ತು. ಅಡುಗೆ ಕೋಣೆಯ ಆಚೆ ಬದಿಗೆ ಗುಡ್ಡ. ಗುಡ್ಡದ ತುಂಬ ಕಾಡು. ಅದರಾಚೆ ಮುಖ್ಯ ರಸ್ತೆ. ಅದರಾಚೆ ಅಲೆಗಳ ಹಾಗೆ ಆರಂಭವಾಗುವ ಹಿಮಾಲಯದ ಬೆಟ್ಟಗಳ ಶ್ರೇಣಿ. ಅಲ್ಲೆ ಹತ್ತಿರದಲ್ಲಿ ಪಾಥೆಗಾವ್ ಹಳ್ಳಿ. ಅಲ್ಲಿ ಎಷ್ಟೊಂದು ಸಾಸುವೆ ಹೂಗಳು ನೆಲದ ತುಂಬ ಹರಡಿದ್ದವು. ಗಂಗಾನದಿಯ ಶಬ್ದ ತೆಳುವಾಗಿ ಕೇಳುತ್ತಿತ್ತು. ಇನ್ನೂ ಹಿಮ ಕರಗಿಲ್ಲ. ನದಿಯ ನೀರು ಹೆಚ್ಚಿಲ್ಲ. ಕೈಸಾಲೆಯಲ್ಲಿ ಖಾಲಿ ಮಂಚ. ಉದ್ದಕ್ಕೂ ಮುಚ್ಚಿದ ಬಾಗಿಲುಗಳು. ಕೆಳಗೆ ಎರಡು ಅಂತಸ್ತು. ನಿದ್ದೆ ಮಾಡುತ್ತಿರುವ ಜನ. ಸನ್ಯಾಸಿಗಳು, ಬ್ರಹ್ಮಾಚಾರಿಗಳು, ನನ್ನಂಥವರು, ಅತಿಥಿಗಳು, ಕೆಲಸದವರು. ಸುಮ್ಮನೆ ಕೂತೇ ಇದ್ದೆ. ಹೀಗೂ ಸುಮ್ಮನೆ ಕೂತೇ ಇರಬಹುದು ಒಂದೊಂದು ಸಲ. ತಟ್ಟನೆ ಎಲ್ಲ ಖಾಲಿಯಾಗಿದೆ. ಈಗ ರಾತ್ರಿ ಎರಡು ಗಂಟೆ. ಸಾಕು. +ಮತ್ತೆ ಮೂರನೆಯ ದಿನದ ಬರವಣಿಗೆ +ಬೇಜವಾಬ್ದಾರಿಯ ಬದುಕು ಅದು. ನನ್ನ ಸುತ್ತಲೆಲ್ಲ ಒಂದು ಸಮುದ್ರದಷ್ಟು ಜನ ಇದ್ದರೂ ನಾನು ಯಾರಿಗೂ ಏನೂ ಹೇಳಬೇಕಾಗಿರಲಿಲ್ಲ. ಸುಮಾರು ಒಂದು ತಿಂಗಳ ಕಾಲ ಭಾಷೆಯ ಜವಾಬ್ದಾರಿ ಕೂಡ ಇಲ್ಲದವನಂತೆ ಅಲೆದೆ. ತೀರ ಕೆಲವು ಅಗತ್ಯದ ನಾಮಪದಗಳನ್ನು ಮಾತ್ರ – ಚಾ, ಕಾಫಿ, ಮಧುರೆ, ಕ್ವಿಲಾನ್ ಇಂಥವು – ಆಡಬೇಕಿತ್ತು. ಎಲ್ಲಿಗೆ ಹೋಗುತ್ತೇನೆ, ಯಾಕೆ ಹೋಗುತ್ತೇನೆ, ಯಾವಾಗ ಹೋಗುತ್ತೇನೆ, ಎಲ್ಲಿ ಇರುತ್ತೇನೆ ಇವು ಯಾವುದಕ್ಕೂ ಯಾರಿಗೂ, ನನಗೂ ಕೂಡ ವಿವರಣೆ ಕೊಟ್ಟುಕೊಳ್ಳುವ ಅಗತ್ಯವೇ ಇಲ್ಲದೆ ಸುಮ್ಮನೆ ಅಲೆದೆ. ಸವಾಲು ಇದ್ದರೆ ತಾನೆ ಜವಾಬಿನ ಮಾತು. ಬಹುಶಃ ಆಗ ನನ್ನೊಳಗೆ ಪ್ರಶ್ನೆಗಳೂ ಇರಲಿಲ್ಲ. ಆದ್ದರಿಂದ ನಾನು ಬೇಜವಾಬ್ದಾರ ಕೂಡ ಆಗಿರಲಿಲ್ಲ. +ಹೋಗಬೇಕು, ಹೋಗಬೇಕು, ಹೋಗಬೇಕು, ಹೋಗಿಬಿಡಬೇಕು ಎಂಬ ಒತ್ತಾಯ ಮಾತ್ರ ಆ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ದಿನದ ಎಲ್ಲ ಕ್ಷಣಗಳಲ್ಲೂ ನನ್ನೊಳಗೆ ಅಗಾಧವಾಗಿ ಬೆಳೆದು ಹಬ್ಬತೊಡಗಿತು. ಅಸ್ಪಷ್ಟವಾಗಿ ಬೆಟ್ಟದ ಕಾಡಿನ ಒಂದು ಚಿತ್ರ ನನ್ನ ಮನಸ್ಸಿನಲ್ಲಿತ್ತು. ಬಹುಶಃ ಕೊಡಚಾದ್ರಿ ಇರಬೇಕು. ಈ ಚಿತ್ರ ಬೆಳೆದು ಹಿಮಾಲಯವೇ ಆಗಿ ನನ್ನ ಅಲ್ಲಿಗೆ ಒಯ್ದದ್ದು ಇನ್ನೂ ಇಪ್ಪತ್ತು ದಿನ ಆದಮೇಲೆ. +ಬೆಂಗಳೂರಿನಲ್ಲಿದ್ದೆ. ಆ ವರ್ಷದ ಕೊನೆಯ ತಿಂಗಳ ಮೊದಲನೆಯ ದಿನ. ಅಂದು ನಾವು ಒಂದು ಮದುವೆಗೆ ಹೋಗಬೇಕಿತ್ತು. ಬೆಳಗಿನ ಜಾವ ಎದ್ದು ಗೀಸರಿನ ಬಿಸಿನೀರು ಸ್ನಾನ ಮಾಡುತ್ತ “ಇದೇ ನನ್ನ ಮನೆಯ ಕೊನೆಯ ಸ್ನಾನ” ಅಂದುಕೊಂಡೆ. ಬಚ್ಚಲಿನ ಚೌಕ ಇಟ್ಟಿಗೆಗಳ ಗೆರೆಗಳನ್ನೇ ನೋಡುತ್ತ ತುಂಬ ಹೊತ್ತು ಹಬೆ ನೀರಲ್ಲಿ ಮಿಂದೆ. ರಾತ್ರಿಯೇ ಬರೆದಿಟ್ಟ ಕಾಗದವನ್ನು ಇನ್ನೂ ಮಲಗಿದ್ದ ಚಂದ್ರಳ ಪಕ್ಕದಲ್ಲಿಟ್ಟು “ಹೋಗುತ್ತೇನೆ” ಅಂದು ಹೊರಟುಬಿಟ್ಟೆ. ಹೇಳಿದೆ ಅನ್ನುವ ನನ್ನ ಸಮಾಧಾನಕ್ಕೆ ಅಷ್ಟೆ ಅಂದದ್ದು. ಬಹುಶಃ ಅವಳಿಗೆ ಕೇಳಿಸಲಿಲ್ಲ. ಸಣ್ಣದೊಂದು ಚೀಲದಲ್ಲಿ ಒಂದು ಜೊತೆ ಬಟ್ಟೆ ಇಟ್ಟುಕೊಂಡು ರಸ್ತೆಗೆ ಇಳಿದೆ. +ನಮ್ಮ ಮನೆಯ ಬೀದಿಯೊಂದು ದಾಟಿದರೆ ಸಾಕು ಅನ್ನುವ ಆತುರ. ಎಲ್ಲಿಗೆ? ಬಸ್ಸೊ? ರೈಲೊ? ಆಟೋ ಸಿಕ್ಕಿತು. ಹಳ್ಳಿಯವರು ಯಾರೋ ಸಿಟಿ ಮಾರ್ಕೆಟ್ಟಿಗೆ ತರಕಾರಿ ಒಯ್ಯುತ್ತಿದ್ದರು. ಚಳಿಯ ಬಗ್ಗೆ ಮಾತಾಡುತ್ತಿದ್ದರು. ಯಾರನ್ನೋ ಆಡಿಕೊಳ್ಳುತ್ತಿದ್ದರು. ಒಂದಷ್ಟು ದೂರ ನಿದ್ದೆ ಮಾಡುತ್ತಿರುವ ಮನೆಗಳ ಸಾಲು. ಅಲ್ಲೊಂದು ಇಲ್ಲೊಂದು, ಬೆಳಗಾದ ಮೇಲೆ ಸಾಧ್ಯವೇ ಇರದ ಬಿಡುಬೀಸು ವೇಗದಿಂದ ಸಾಗುವ, ಸ್ಕೂಟರುಗಳು. ಹಾಲಿನ ಡಬ್ಬಿಗಳನ್ನು ಹೊತ್ತು, ಪ್ಯಾಕೆಟ್ಟುಗಳನ್ನು ಹೊತ್ತು, ಹೊರಡಲು ಸಿದ್ಧವಾಗುತ್ತಿದ್ದ ಸೈಕಲ್ಲುಗಳ ಗುಂಪು. ಪೇಪರುಗಳನ್ನು ಹಂಚಿಕೊಳ್ಳುವ ಹುಡುಗರು. ನೂಕು ಗಾಡಿಗಳನ್ನು ದಬ್ಬಿಕೊಂಡು, ಕೆಲವರು ಅದರ ಮೇಲೆ ಕೂತುಕೊಂಡು, ಹೋಗುವವರು. ಫ್ಯಾಕ್ಟರಿ ಬಸ್ಸಿಗೆ ಕಾದವರು. ಹೊತ್ತಲ್ಲದ ಹೊತ್ತಲ್ಲಿ ಬರುವ ನೀರಿಗೆ ನಲ್ಲಿಗಳ ಮುಂದೆ ನಿಂತ ಹೆಂಗಸರು. ರಸ್ತೆ ಬದಿಯ ಟೀ ಕಾಫಿ ಅಂಗಡಿಗಳ ಮುಂದೆ ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಕಾಫಿ ಕುಡಿಯುವ ಟವಲು ಹೊದ್ದ ಬೀಡಿ ಸಿಗರೇಟುಗಳು – ಮಾರ್ಕೆಟ್ಟು ಬೆಳೆದಾಗ ತನ್ನತ್ತ ಬರುವ ಸವಾಲುಗಳಿಗೆ ಉತ್ತರ ಕೊಡಲು ಸಿದ್ಧವಾಗುತ್ತಿತ್ತು. ಇನ್ನೊಂದು ಆಟೋ ಹಿಡಿದು ರೇಲ್ವೇ ಸ್ಟೇಷನ್ನಿಗೆ ಹೋದೆ. ನನ್ನ ಅವನು ತೀರಜವಾಬ್ದಾರಿಯಿಂದ ಸ್ಟೇಷನ್ನಿಗೆ ತಲುಪಿಸಿದ. ರೇಲುಗಳ ವೇಳಾಪಟ್ಟಿ. ಜವಾಬ್ದಾರಿಯಿಂದ ಓಡಾಡುವ ರೇಲುಗಳು. ಮದರಾಸಿಗೆ ಇದ್ದ ರೇಲು ಹತ್ತಿದೆ. ಯಾವ ಊರಿಗಾದರೂ ಆಗಬಹುದಾಗಿತ್ತು. ಇತ್ತು, ಮದರಾಸಿಗೆ. ಹತ್ತಿದೆ. +ಕಿಟಕಿಯಾಚೆ ಮುಖ ಇಟ್ಟು ನೋಡುತ್ತ ಕುಳಿತೆ. ನಿಧಾನವಾಗಿ ಬಿಸಿಲು ಏರುತ್ತಿತ್ತು. ಡಬ್ಬಿಯ ತುಂಬ ಜನ ತುಂಬಿಕೊಂಡರು. ಎಲ್ಲ ಜವಾಬ್ದಾರಿ ಹೊತ್ತ ಜನ. ಕಾಟ್ಪಾಡಿಯಲ್ಲಿ ಇಳಿದು ಹೋದ, ಕಂದು ಬಣ್ಣದ ಸೀರೆ ಉಟ್ಟ, ಎಣ್ಣೆಗೆಂಪು ಬಣ್ಣದ ಹುಡುಗಿ ಬಟ್ಟಲುಗಣ್ಣಗಲಿಸಿ ಸುಮ್ಮನೆ ನೋಡುತ್ತ ಕುಳಿತದ್ದು ಇನ್ನೂ ಯಾಕೋ ನೆನಪಲ್ಲಿ ಉಳಿದಿದೆ. +ಸಮುದ್ರದ ಮುಂದೆ ಕುಳಿತೆ. ಇಳಿ ಬಿಸಿಲಲ್ಲಿ ಸಮುದ್ರದ ಅಲೆಗಳೊಡನೆ ಆಡುವ ಜನ. ಮನೆಯಿಂದ ಬಂದವರು. ಮನೆಗೆ ಹೋಗುವವರು. ತೊಯ್ದ ಕಾಲುಗಳು. ಅಂಟಿದ ಬಟ್ಟೆಗಳು. ಬಿಸಿ ಕಳೆದು ತಣ್ಣಗಾಗುತ್ತಿರುವ ಮರಳು. ಕೂಗುವ, ಕುಪ್ಪಳಿಸುವ, ಓಡುವ, ಬೀಳುವ, ಉರುಳುವ, ಮಾತಾಡುವ, ತಿನ್ನುವ, ಸುಮ್ಮನೆ ಇರುವ ಜನ. ಜನ. ವಾಹನದ ಸದ್ದು. ನಾನು ಇವರು ಯಾರ ಹಾಗೂ ಅಲ್ಲ. ಓಡುವ ವಾಹನಗಳು, ಹೋಗಲಿರುವ ಜನಗಳು, ಅವರಿಗಾಗಿ ಕಾದಿರುವ ಮನೆಗಳು, ನನ್ನ ಹೊತ್ತು ತಂದ ಆಟೋಗಳು, ರೈಲು, ಬೀದಿ – ಏನೂ ಅನ್ನಿಸದೆ ನನ್ನೊಳಗೆ ತುಂಬಿಕೊಂಡ ಖಾಲಿಯಾಗಿ ಹೋದ, ಮತ್ತೆ ಈಗ ಬರೆಯುವಾಗ ನೆನಪಿಗೆ ಬರುತ್ತಿರುವ ಆಗ ಗಮನಿಸಿದ್ದೆನೋ ಇಲ್ಲವೋ ಗೊತ್ತಿಲ್ಲದಿದ್ದ ಜಗತ್ತು – ಈಗ ಅನ್ನಿಸುತ್ತಿದೆ – ನನ್ನಂಥವನು ಒಬ್ಬ ಬೇಜವಾಬ್ದಾರಿಯಿಂದ ಬದುಕಬೇಕದರೆ ಇಡೀ ಜಗತ್ತು ಜವಾಬ್ದಾರಿಯಿಂದ ಬದುಕುತ್ತಿದ್ದರೆ ಮಾತ್ರ ಸಾಧ್ಯ. ಹೀಗೆ ಗಾಢವಾಗಿ ಅನ್ನಿಸಿದ್ದು ನಾನು ಹಿಮಾಲಯ ತಲುಪಿದ ಮೇಲೆ ಅಂತ ಈಗ ಅನ್ನಿಸುತ್ತಿದೆ. +ಮತ್ತೆ ಮೂರನೆಯ ದಿನವೇ ಬರೆದದ್ದು +ಹರಿದ್ವಾರದ ಒಂದೊಂದು ಬೀದಿಯನ್ನೂ ಬಿಡದೆ ದಿನವೂ ಅಲೆಯುತ್ತಿದ್ದೆ. ಅಲ್ಲಿನ ಸಾಧಕ ನಿವಾಸದಲ್ಲಿ ಗುಜಾರಾತಿನ ವೃದ್ಧ ದಂಪತಿಗಳ ಪರಿಚಯ ಆಯಿತು. ಅವನಿಗೆ ಸುಮಾರು ಅರುವತ್ತು ವರ್ಷ ವಯಸ್ಸು. ಆಕೆಗೆ ಐವತ್ತು ದಾಟಿತ್ತು. ಅವನು ತೆಳ್ಳಗೆ ಇದ್ದ. ತಲೆ ಬೋಳಾಗಿತ್ತು. ಬೆನ್ನು ಸ್ವಲ್ಪವೇ ಸ್ವಲ್ಪ ಬಗ್ಗಿತ್ತು. ಹುಬ್ಬಿನ ಹತ್ತಿರ ಮತ್ತು ಮುಂಗೈ ಮೇಲೆ ಅಲ್ಲಲ್ಲಿ ಚರ್ಮ ಬೆಳ್ಳಗಾಗಿತ್ತು. ಆಕೆ ದಪ್ಪಗೆ ಇದ್ದಳು. ಕೂದಲು ಬಹಳಷ್ಟು ಬೆಳ್ಳಗೆ ಇದ್ದವು. ಸುಖವಾಗಿ ಬೆಳೆದ ಮುದುಕಿ. ಅವನು ಮಾತಾಡುವಾಗ ಸ್ವಲ್ಪ ಉಗ್ಗುತ್ತಿದ್ದ. ಅವರಿಬ್ಬರೂ ಗಣೇಶಪುರಿ ಮಹಾರಾಜ್ ಬರುವುದನ್ನು ಕಾಯುತ್ತಿದ್ದರು. ಒಂದು ತಿಂಗಳಿನಿಂದ ಆ ಆಶ್ರಮದಲ್ಲಿ ದೇವರ ಸೇವೆ ಮಾಡುತ್ತ ಇದ್ದಾರಂತೆ. ಅವನಿಗೆ ಬರೋಡಾದಲ್ಲಿ ಕ್ಯಾಸೆಟ್ಟುಗಳ ಅಂಗಡಿ ಇದೆಯಂತೆ. ಹಿಂದೆ ಫಿಲಿಪ್ಸ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದನೆಂತೆ. ಇಡೀ ಸಾಧಕ ನಿವಾಸದ ಸುಮಾರು ಐವತ್ತು ಕೋಣೆಗಳಲ್ಲಿ ‘ಲೌಕಿಕರು’ ಇದ್ದದ್ದು ಆ ದಂಪತಿಗಳು ಮತ್ತು ನಾನು ಮಾತ್ರ. ಉಳಿದ ಸುಮಾರು ನಲವತ್ತು ಖಾಲಿ ಇದ್ದವು. ನನ್ನ ಕೋಣೆಯ ಕಸ ಗುಡಿಸಲು ಅವರ ಬಳಿ ಇದ್ದ ಪೊರಕೆ ಸಾಲ ಕೇಳಿದ್ದೆ ಆರಂಭ, ನಮ್ಮ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯಿತು. +ಹರಿದ್ವಾರದ ಆ ಸನ್ಯಾಸಿಗಳ ವ್ಯವಸ್ಥೆಯೇ ಬೇರೆ. ತುಂಬ ಪರಿಣತ ಸನ್ಯಾಸಿಗಳು. ನಾನು ಬಂದಾಗ ಕರೆದು ಮಾತನಾಡಿಸಿದ ಮುದುಕ – ಆತ ದಿನಾ ಬೆಳಗಿನ ಜಾವ ಎದ್ದು ಮೈಕಿನಲ್ಲಿ ಶಾಂತಿ ಮಂತ್ರ ಪಠಿಸುತ್ತಿದ್ದ. ಆತ ‘ಶಾನ್ತಿಃ’ ಎಂದು ಉಚ್ಚರಿಸುವ ರೀತಿಯೇ ಕೇಳುವ ನನ್ನೊಳಗೆ ಶಾಂತಿ ತುಂಬಿಕೊಳ್ಳುವಂತೆ ಮಾಡುತ್ತಿತ್ತು. ಆಮೇಲೆ ವಿಷ್ಣು ಸಹಸ್ರನಾಮ ಓದುತ್ತಿದ್ದ. ನಾನೂ ಹೋಗಿ ಕೂಡಬೇಕಾಗಿತ್ತು. ಇನ್ನೊಬ್ಬ ದಪ್ಪ ಕನ್ನಡಕದ. ಅಗಲ ಮುಖದ, ಗೆರೆಬಿದ್ದ ಮುಖದ ಯಜಮಾನ ವಿದ್ವಾಂಸ. ಅವನೊಡನೆ ಉಬ್ಬು ಹಲ್ಲಿನ ತೆಳ್ಳನೆ ಮೈಯ ಕುರುಚಲು ಗಡ್ಡದ, ಶೃಂಗೇರಿಯ ಬ್ರಾಹ್ಮಣನಂತೆ ಕಾಣುವ ವ್ಯಾಖ್ಯಾನಕಾರ ವಿದ್ವಾಂಸ. ಜೊತೆಗೆ ಅಲ್ಲಿನ ಬಹುಶಃ ಶಾಶ್ವತ ನಿವಾಸಿಗಳಾದ ಇನ್ನು ಕೆಲವರು ಸಂಚಾರಿಗಳಾದ ಸನ್ಯಾಸಿಗಳು. ಯುವಕರು ಅವರೆಲ್ಲ. +ವೃದ್ಧ ದಂಪತಿಗಳು ಗಣೇಶಪುರಿಯವರ ದರ್ಶನ ಪಡೆಯಲೇಬೇಕೆಂದು ಕಾಯುತ್ತಿದ್ದರು. ಪ್ರತಿವರ್ಷ ಬರುವವರು ಅವರು. ನನಗೆ ಭಕ್ತಿ ಇರದಿದ್ದರೂ ಕಾಯುತ್ತಿದ್ದೆ. ಬಹುಶಃ ನನ್ನ ಗುರು ಅವರಿರಬಹುದು ಎಂದು. ಎಲ್ಲಾದರೂ ಇರಲೇಬೇಕಲ್ಲ ಎಂದು. ಅಲ್ಲೇ ಇರಲು ಕಾಯುವ ನೆಪ ಇದೆ ಎಂದು. +ಅಲ್ಲಿ ಇನ್ನೊಬ್ಬ ಮಹಿಳೆ ಇದ್ದಳು. ಬಿಳೀ ಸೀರೆ, ತುಂಬ ತೋಳಿನ ಬಿಳೀ ರವಿಕೆ, ದಟ್ಟ ಕಪ್ಪು ಕೂದಲು, ಅಗಲ ಕಣ್ಣು, ಖಾಲಿ ಹಣೆ, ಹಾಲಿನಂಥ ಮೈಬಣ್ಣ. ಆದರೆ ಆಕೆ ಮಾತನಾಡಿದ್ದನ್ನು ನಾನು ಎಂದೂ ನೋಡಲಿಲ್ಲ. ಸುಮ್ಮನೆ ನಿಶ್ಚಲವಾಗಿ ಕೂತಿರುತ್ತಿದ್ದಳು. ಮೆಟ್ಟಿಲ ಮೇಲೆ ಅಥವ ಚಾವಣಿಯ ಮೇಲೆ. ನಕ್ಕದ್ದು ನೋಡಲಿಲ್ಲ. ಆ ಆಶ್ರಮದಲ್ಲಿ ಶಾಶ್ವತವಾಗಿದ್ದ ಸನ್ಯಾಸಿಗಳು ಮತ್ತು ಎಂಟು ಹತ್ತು ಹುಡುಗರನ್ನು ಬಿಟ್ಟರೆ ಅಪರಿಚಿತನಾದ ನನ್ನ ಬಗ್ಗೆಯೂ ಯಾವ ಕುತೂಹಲವೂ ಇಲ್ಲದಂತೆ ಇದ್ದಳು. ನಿರ್ಭಾವ, ನಿಶ್ಚಲ, ನೀರವ ಮಹಿಳೆ. ನನ್ನ ಹಳೆಯ ಬುದ್ಧಿ ಆಗಾಗ ನನ್ನಲ್ಲಿ ಅವಳಿಗೆ ಆಸೆ ಹುಟ್ಟುವಂತೆ ಮಾಡಬೇಕು. ಆಕೆ ಯಾಕೆ ಹೀಗೆ ಎಂದು ತಿಳಿಯಬೇಕು ಎಂಬ ಕುತೂಹಲ ಹುಟ್ಟಿಸುತ್ತಿತ್ತು. ಆಕೆ ಬಹಳ ದುಃಖಿ ಇರಬಹುದು. ಹೌದಾದರೆ ‘ನಿಮ್ಮ ದುಃಖ ಅರ್ಥ ಆಗುತ್ತದೆ’ ಅನ್ನಬೇಕು ಅನ್ನಿಸಿತು. +ಆದರೆ ನನ್ನನ್ನು ಬಹಳ ಹಚ್ಚಿಕೊಂಡವರು ಬರೋಡದ ದಂಪತಿಗಳು. “ಬಬನ್ ನ್ನಿ. ತತತರಕಾರಿ ತರಣ…. ಕೃಷನ್ ಪರಮಾತ್ಮಂಗೆ ಶಾಲು ತರಣ…. ನನ್ನ ಹೆಂಡತಿ ಇವತ್ತು ಮಾಡಿದ ಅಡಿಗೆ ಊಟ ಮಾಡಿ..” ಇತ್ಯಾದಿ ಮಾತಾಡಿಸುತ್ತದ್ದರು. ಅಥವ “ನನ್ನ ಮಗ ಇಂಥ ಕೆಲಸದಲ್ಲಿದ್ದಾನೆ, ಇನ್ನೊಬ್ಬ ಹೀಗೆ, ನೀವು ಯಾವ ಕೆಲಸದಲ್ಲಿದ್ದೀರಿ? ನಿಮ್ಮ ಮನೆಯವರು? ಮಕ್ಕಳು? ಇಲ್ಲವೆ. ಅಯ್ಯೊ ಪಾಪ.” “ನೋಡಿದೆಯಾ ಈ ಬೇಚಾರ ಪಾಪ ಪೇಪರು ಓದಿ ಹದಿನೈದು ದಿನ ಆಯಿತಂತೆ. ನಿನ್ನೆ ಬರೀ ಬ್ರೆಡ್ಡು ತಿಂದನಂತೆ..” ಹೀಗೆ ಉಗ್ಗುತ್ತ ಹೆಂಡತಿ ಹತ್ತಿರ ಹೇಳುತ್ತಿದ್ದರು. +ಅವರಿಗೆ ಯಾರಾದರೂ ನನ್ನಂಥವನ ಜೊತೆ ಬೇಕಿತ್ತು. ಹರಿದ್ವಾರದ ಆ ಸಾಧನಾ ಮಂದಿರದ ಸನ್ಯಾಸಿಗಳು ಬ್ರಹ್ಮಸೂತ್ರ ಓದಿ ಅರ್ಥ ಹೇಳುತ್ತಿದ್ದರು. ಭಗವದ್ಗೀತೆ ಓದಿ ವ್ಯಾಖ್ಯಾನ ಮಾಡುತ್ತಿದ್ದರು. ದೇವರ ಸಾಕ್ಷಾತ್ಕಾರದ ಬಗ್ಗೆ ಮಾತಾಡುತ್ತಿದ್ದರು. ಆದರೆ ‘ಲೌಕಿಕ’ರ ಬಗ್ಗೆ ಅಪಾರವಾದ, ಅಗಾಧವಾದ, ಅನಂತವಾದ, ತೀವ್ರವಾದ, ಅವರು ಒಂದಿಷ್ಟೂ ಅದನ್ನು ಮರೆಮಾಚಿಕೊಳ್ಳದ, ಇಂಥ ಇನ್ನೂ ಹತ್ತು ವಿಶೇಷಣ ಸೇರಿಸಬಹುದಾದ, ತಿರಸ್ಕಾರ ಇತ್ತು. ಇಂಗ್ಲಿಷು ಬಲ್ಲವರಿಗೆ ಬಣ್ಣದ ಬಟ್ಟೆ ತೊಡುವವರ ಬಗ್ಗೆ ಮರುಕ ಬೆರೆತ ಹೀಯಾಳಿಕೆ ಇತ್ತು. ಅವರ ಸತ್ಸಂಗ ಕೇಳಬೇಕಾದರೆ ‘ನಾವು’ ಕೂರುವುದಕ್ಕೇ ಬೇರೆ ಜಾಗ. ಅವರ ವಿದ್ವತ್ತು ನನ್ನ ಬುದ್ಧಿಯನ್ನು ಕೆಣಕಿದ್ದು ನಿಜ. ಅಲ್ಲಿದ್ದಷ್ಟು ದಿನ ತುಂಬ ಶ್ರದ್ಧೆಯಿಂದ ಅವರ ವ್ಯಾಖ್ಯಾನಗಳನ್ನು ಟಿಪ್ಪಣಿ ಮಾಡಿಕೊಂಡು ಒಂದಷ್ಟು ಬ್ರಹ್ಮ ಸೂತ್ರಗಳನ್ನು ಬಾಯಿ ಪಾಠ ಮಾಡಿಕೊಂಡೆ. ಆದರೂ ಅವರ ನೋಟವನ್ನು ತಿರಸ್ಕಾರ ಮಾಡಬೇಕು, ಅವರ ಮೇಲೆ ಕೋಪ ಮಾಡಿಕೊಳ್ಳಬೇಕು ಅನ್ನಿಸುತ್ತಿತ್ತು. +ನನಗೆ ಅಲ್ಲೇ ಊಟ ಮಾಡುವಂತೆ ಹೇಳಿದ್ದು ನಿಜ. ಎರಡು ದಿನ ಊಟ ಮಾಡಿದೆ. ಅಕ್ಕಿ ಮೂಟೆ ಎತ್ತಿಡಲು ಸಹಾಯ ಮಾಡಿದ್ದು, ಕಡಲೆ ಕಾಳು ಆರಿಸಿದ್ದು ಎಲ್ಲ ಸರಿ. ಅವರು ಮುದ್ದೆ ಜೊತೆ ಕೊಟ್ಟ ಉಪ್ಪು ಸೋಕಿಸಿದ, ತರಕಾರಿ ಹಾಕದ, ತಿಳೀ ಮೆಣಸಿನ ಸಾರನ್ನೂ ಬಹಳ ಸಂತೋಷಪಟ್ಟೆ ತಿಂದೆ ಆದರೆ, ಒಬ್ಬ ಹುಡುಗ, ಆಶ್ರಮದ ಶಾಶ್ವತ ವಾಸಿ. ನನ್ನನ್ನು ‘ನೀವು ಯಾರು’ ಎಂದು ಕೇಳಿದ ರೀತಿಗೆ ಮುನಿಸು ಬಂದು ಅಲ್ಲಿ ಊಟ ಮಾಡುವುದನ್ನೆ ಬಿಟ್ಟೆ. ಮುಂಬೈನ ಯುವಕ, ಕರೀ ಗಡ್ಡದ, ಚಿನ್ನದ ಕಟ್ಟಿನ ಕನ್ನಡಕದ ಸನ್ಯಾಸಿ ‘ಕೋಯೀ ಬಗತ್’ ಅಂತ ಕ್ಷುಲ್ಲಕ ಸಂಗತಿ ಅದು ಎಂಬಂತೆ ಉತ್ತರಿಸಿದ್ದು ಇನ್ನೂ ಕೆರಳಿಸಿತು. +ಕಾಯಬೇಕಿತ್ತು ಗಣೇಶ ಪುರಿಯವರಿಗಾಗಿ. ಹರಿದ್ವಾರ ನನಗೆ ಅನ್ನ ಹಾಕಿತು. ನನ್ನ ಹೊಟ್ಟೆಗೆ ನಾನೆ ಜವಾಬ್ದಾರನಾದೆ. ಅಲ್ಲ. ನನ್ನ ಜೇಬಿನಲ್ಲಿದ್ದ ಸ್ವಲ್ಪ ಹಣ ಪೇಟೆ ಬೀದಿಯಲ್ಲಿ ಸದಾ ಬಾಗಿಲು ಮುಚ್ಚಿರುವ ಆಫೀಸು ಮತ್ತು ರಸ್ತೆಯ ನಡುವೆ ಇದ್ದ ದೊಡ್ಡ ಚರಂಡಿಗೆ ಮರದ ಹಲಗೆ ಹಾಕಿ, ಅದರ ಮೇಲೆ ಪಂಕ್ಚರಾದ ಸೈಕಲ್ ಚಕ್ರಗಳ ಗಾಡಿ ನಿಲ್ಲಿಸಿಕೊಂಡು, ಐದು ರುಪಾಯಿಗೊಂದು ಅದ್ಭುತ ಊಟ ಕೊಡುವ ಅಂಗಡಿ ಪತ್ತೆ ಮಾಡಿದೆ. ಎರಡು ರೋಟಿ, ಎರಡು ಥರ ಪಲ್ಯ, ಸ್ವಲ್ಪ ಅನ್ನ, ದಾಲ್ ಮತ್ತು ಉಪ್ಪಿನಕಾಯಿ ಅಥವಾ ಇನ್ನು ಕೆಲವು ದಿನ ಬ್ರೆಡ್ಡು ತಿಂದು ಕಳೆದೆ. ನಾನು ಏನು ತಿಂದೆ ಅಥವ ತಿನ್ನಲಿಲ್ಲ ಅಂತ ಕೇಳುವವರು ಯಾರೂ ಇರಲಿಲ್ಲ. ಇರಬೇಕಾಗೂ ಇರಲಿಲ್ಲ. +ಗುಜರಾತಿನ ಮುದುಕ ಇಪ್ಪತ್ತು ಸಾವಿರ ರೂಪಾಯಿ ತಂದಿದ್ದನಂತೆ. ಅದೆಲ್ಲವನ್ನೂ ಯಾತ್ರೆ ಮಾಡುತ್ತ ಮಾಡುತ್ತ ‘ಬಾಂಟ್ ದಿಯಾ’ ಅಂದ. ಆಶ್ರಮದಲ್ಲಿ ಒಂದು ತಿಂಗಳಿನಿಂದ ಇದ್ದೀವಿ. ಇವರ ಋಣ ಬೇಡ. ಇಲ್ಲಿನ ಮೂರು ದೇವರಿಗೂ ಶಾಲು ಕೊಟ್ಟುಬಿಡೋಣ ಅಂತಿದ್ದೀನಿ. ಹೋಗಿ ತರೋಣ ಬಾ ಅಂತ ನನ್ನನ್ನು ಕರೆದೊಯ್ದ. ಅವನು ಶಾಲು ವ್ಯಾಪಾರ ಮಾಡಿದ್ದು ತುಂಬ ಚೆನ್ನಾಗಿತ್ತು. ಮಹದೇವ್‌ಜೀ ಗೆ, ರಾಧಾಕಿಶನ್‌ಜೀ ಗೆ ಸಿಯಾರಾಮ್ ಗೆ ಒಳ್ಳೊಳ್ಳೆ ಶಾಲು ಬೇಕು, ಅಂಚು ಹೀಗಿರಬೇಕು, ಬಣ್ಣ ಹೀಗಿರಬೇಕು, ನಯವಾಗಿರಬೇಕು ಅಂತೆಲ್ಲ ಅಂಗಡಿ ಅಂಗಡಿ ಅಲೆದು ಸಾವಿರದ ಇನ್ನೂರು ರೂಪಾಯಿ ಕೊಟ್ಟು ಶಾಲು ತಂದ. ಅಂಚು, ಜರಿ, ಬಣ್ಣ, ಡಿಸೈನು – ಹೆಂಗಸರು ಸೀರೆ ಆರಿಸುವಷ್ಟೆ ಮುತುವರ್ಜಿಯಿಂದ ದೇವರಿಗೆ ಶಾಲು ಆರಿಸಿದ. ದೇವರು ನನಗೆ ಕೊಟ್ಟದ್ದನ್ನ ದೇವರಿಗೆ ಕೊಡುತ್ತೀನಿ. ಈ ಆಶ್ರಮ, ಈ ಗುರು ನನಗೆ ನೆಮ್ಮದಿ ಕೊಟ್ಟಿದ್ದಾರೆ. ಅವರ ಋಣ ಹೀಗೆ ತೀರಿಸ್ತೀನಿ ಅಂತ ತುಂಬ ಪ್ರಾಮಾಣಿಕವಾಗಿ ಹೇಳಿದ. +ಮತ್ತೆ ಬರವಣಿಗೆಯ ನಾಲ್ಕನೆಯ ದಿನ +ಮೊದಲ ಬಾರಿ ನಾವು ನಮ್ಮ ಬಹುದಿನದ ಬಯಕೆಯ ಹಿಮಾಲಯನ್ ಟ್ರೆಕ್ಕಿಂಗ್ ಮುಗಿಸಿ ಹರಿದ್ವಾರದಿಂದ ದೆಹಲಿಗೆ ಬಸ್ ಹತ್ತಿದಾಗ ಮನೆ ಬಿಟ್ಟು ಹೋಗುತ್ತಿರುವಂತೆ ಅನ್ನಿಸಿತ್ತು. ಹಿಮಾಲಯ ನನ್ನ ಬೆನ್ನಿಗಾಗಿ ಬೈಲಿನ ಗದ್ದೆಗಳು ಮರಿ ಸೂರ್ಯನ ಬಿಸಿ ಎಳೆತನದಲ್ಲಿ ಹರಡಿಕೊಂಡು ಕಾಣುತ್ತಿರುವಾಗ ತಿಮ್ಮೇಗೌಡರು ನನ್ನ ಮಾತನ್ನೇ ಜೋರಾಗಿ ಹೇಳಿದ್ದರು: “ನಾವು ಊರು ಬಿಟ್ಟು ಹೋಗುತ್ತಿದ್ದೇವೆ ಅನ್ನಿಸುತ್ತೆ. ಮತ್ತೆ ಯಾವಾಗ ಬರುತ್ತೇವೋ ಏನೋ.” ಮತ್ತೆ ಒಂದೇ ವರ್ಷದಲ್ಲಿ ಶ್ರೀನಾಥ ಹೆಂಡತಿ ಮಕ್ಕಳನ್ನು ಕರೆದುಕೊಂಡು ನಾವು ಹೋದ ಎಡೆಗಳಿಗೆಲ್ಲ ಹೋಗಿ ಬಂದ. ನಾನು ಮತ್ತೆ ಈ ರೀತಿ ಹಿಮಾಲಯಕ್ಕೆ ಹೋಗುತ್ತೇನೆ ಅಂದುಕೊಂಡಿರಲಿಲ್ಲ. +ಎರಡನೆಯ ಬಾರಿ ಹೃಷೀಕೇಶದತ್ತ ಬಸ್ಸು ಹೋಗುತ್ತಿದ್ದಂತೆ ಮತ್ತೆ ನನ್ನ ಮನೆಗೆ ಹೋಗುತ್ತಿದ್ದೇನೆ ಅನ್ನಿಸಿತು. ಸನಿಹದಲ್ಲೆ ಕಣುವ ಆದರೆ ದೂರ ಇರುವ, ದೂರ ಇದ್ದರೂ ಸಹ್ಯಾದ್ರಿಗಿಂತ ಎತ್ತೆತ್ತರ ಇರುವ ಬೆಟ್ಟಗಳ ಬುಡದಲ್ಲೆ ಇರುವ ಊರು. ಅಲ್ಲಿ ಇದ್ದಷ್ಟು ದಿನವೂ ನಡೆದಾಡುವಾಗ ನಾನು ಅಲ್ಲಿಯವನೇ ಅನ್ನಿಸುತ್ತಿತ್ತು. ವಕ್ರವಾದ ರಸ್ತೆ. ಎಷ್ಟೊಂದು ತಿರುವುಗಳು. ಒಂದೊಂದು ತಿರುವಿನಲ್ಲೂ ರಸ್ತೆ ಅಲ್ಲಿಗೇ ಮುಗಿಯುತ್ತದೆ ಅನ್ನಿಸುವ ಹಾಗೆ. ಆದರೆ ಬೆಟ್ಟದ ಕರುಣೆಯಿಂದ ರಸ್ತೆ ತಿರುಗಿ ಮತ್ತೆ ಮುಂದುವರೆದು ಮತ್ತೆ ತಿರುಗಿ-ಬೆಟ್ಟ ಕರುಣೆ ತೋರಿದ್ದೋ ಅಥವ ಮನುಷ್ಯ ಹಟ ಹಿಡಿದು ದಾರಿ ಮಾಡಿಕೊಂಡಿದ್ದೋ? ರಾಜು ಹೇಳುತ್ತಿದ್ದ ಮಾತು ಥಟ್ಟನೆ ಜ್ಞಾಪಕ ಬರುತ್ತಿತ್ತು. ಹಿಮಾಲಯದಲ್ಲಿ ಕಾಣುವ ಭೋರ್ಗರೆಯುವ ಅಸಂಖ್ಯಾತ ಜಲಪಾತಗಳನ್ನೂ ಸುತ್ತಿ ಸುತ್ತಿ ಹರಿದು ಬರುವ ಅಸಂಖ್ಯಾತ ನದಿಗಳನ್ನೂ ನೋಡಿ ನೋಡಿ ಒಂದು ದಿನ ರಾಜು ಹೇಳಿದ್ದು-“ತಗ್ಗು ಎಲ್ಲೆಲ್ಲಿ ಇದೆ ಅಂತ ಹುಡುಕಿ ಹುಡುಕಿ ಈ ನೀರು ಹರಿಯುತ್ತದೋ ಅಥವಾ ನೀರು ಹರಿದು ಹರಿದು ಈ ಬೆಟ್ಟ, ಈ ಕಲ್ಲು ಎಲ್ಲ ಈ ಶೇಪು ಆಗಿವೆಯೋ.” +ಹೃಷಿಕೇಶಕ್ಕೆ ಹೋಗುವಂತೆ ಗಣೇಶ ಪುರಿಯವರೇ ಹೇಳಿದ್ದು. ಅವರು ಹೇಳದಿದ್ದರೂ ಬಹುಶಃ ನಾನೇ ಹೋಗುತ್ತಿದ್ದೆನೋ ಏನೋ. ದಿನಾ ಇನ್ನೊಂದು ಜಾಗ ಹುಡುಕುತ್ತಿದ್ದೆ. ಗಣೇಶಪುರಿ ಹಿಂದಿರುಗಲು ಇನ್ನೂ ಹತ್ತುಹನ್ನೆರಡು ದಿನ ಇತ್ತು. ನನಗೆ ಅವರನ್ನು ಕಾಯುವ ನೆಪ ಇತ್ತು. ದಿನಾ ದಿನಾ ಹರಿದ್ವಾರದ ಎಲ್ಲ ಬೀದಿಗಳನ್ನು ಅಲೆಯುತ್ತಿದ್ದೆ. ಗೋರಖನಾಥನ ಹೆಸರು ಹೊತ್ತ ಒಂದು ಆಶ್ರಮ. ನದಿಯ ದಡದಲ್ಲೆ ಇತ್ತು. ದೊಡ್ಡ ಕಲ್ಲಿನ ಕಟ್ಟಡ. ಅದರಲ್ಲಿ ಯಾವತ್ತೂ ಯಾರೂ ಕಾಣಲಿಲ್ಲ. ವೇದವನ್ನೂ ವಿಜ್ಞಾನವನ್ನೂ ಅಥವಾ ವೇದದ ವಿಜ್ಞಾನವನ್ನು ಅಥವ ವಿಜ್ಞಾನದ ವೇದವನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲು ಕಟ್ಟಿದ ದೊಡ್ಡಾತಿದೊಡ್ಡ ಮಠ-ಪ್ರಯೋಗಾಲಯ. ಅಲ್ಲಿ ಸದಾ ಆಹಾ ಓಹೋ ಅನ್ನುತ್ತ ಗಿಜಿ ಗಿಜಿ ಯಾತ್ರಿಕರು. ಎಲ್ಲರಿಗೂ ಆನಂದವನ್ನು ಕೊಡುತ್ತೇನೆನ್ನುವ ಮಾತಾಜಿಯ ಮಂದಿರ. ಜಾತಿ ಕುಲ ಗೋತ್ರ ಕೇಳದೆ ಬಂದವರಿಗೆ ಊಟ ಬಡಿಸುವ ಸಿಖ್‌ರ ಲಂಗರ್. ಗುಡ್ಡದ ಮೇಲೆ ಇರುವ ಮಾನಸಾ ದೇವಿ. ದಕ್ಷನ ರುಂಡ ಕತ್ತರಿಸಿದ ಜಾಗ ಕನ್ ಖಾಲ್. ಮತ್ತು ಎಲ್ಲ ಎಡೆಗಳಲ್ಲೂ ಅರ್ಧ ಗಂಟೆಯಲ್ಲಿ ಇಡೀ ಊರು ನೋಡಿ ಮತ್ತೆ ಇನ್ನೊಂದು ಊರಿಗೆ ಹೋಗಲು ಬಯಸುವ ಯಾತ್ರಿಕರು. +ನಾನು ಸರಿಯಾದ ಜಾಗವನ್ನು ಹುಡುಕುತ್ತಿದ್ದೆ. ಸರಿಯಾದ ಮಾತನ್ನು ಹುಡುಕುತ್ತಿದ್ದೆ. ಹರಿದ್ವಾರದ ಬೀದಿಗಳಲ್ಲಿ. ಮಳೆ ಬಿದ್ದು ಕೆಸರಾದ ರಸ್ತೆಗಳಲ್ಲಿ. ಅಲೆಯುವುದೆ ಉದ್ದೇಶವಾಗಿ ಅಲೆಯುತ್ತಿದ್ದಾಗಲೂ, ಕನ್ ಖಾಲ್‌ನ ಶಕ್ತಿ ದೇವತೆಗಳ ವಿಗ್ರಹ ನೋಡುತ್ತ-ಇಲ್ಲೆ ದಕ್ಷ ಯಜ್ಞ ಮಾಡಿದ್ದನೊ, ಇಲ್ಲೆ ಅವನ ಶಿರ ಹೋಗಿತ್ತೊ ಅಂತೆಲ್ಲ ಹಳೆ ಕತೆ ಮನಸ್ಸಿಗೆ ಬರುತ್ತಿದ್ದಾಗಲೂ, ಮುದುಕರು ತಿಳಿಯಲಾರದೆ ಸೈಕಲ್ ರಿಕ್ಷಾ ತುಳಿಯುವುದನ್ನು ನೋಡುತ್ತಿದ್ದಾಗಲೂ, ಹುಡುಕುತ್ತಿದ್ದೆ. ಹುಡುಕುತ್ತಿದ್ದೆ. ಎತ್ತರವಾದ, ಮಜಬೂತಾಗಿದ್ದು ಈಗ ಹಾಳಾಗುತ್ತಿರುವ ಇಮಾರತುಗಳು. ಅವುಗಳ ದೊಡ್ಡ ದೊಡ್ಡ ಬಾಗಿಲುಗಳು. ಗೋಡೆಗಳ ಮೇಲೆ ಬಾಗಿಲ ಸುತ್ತ ಕಿಟಕಿಗಳ ಸುತ್ತ ಬಿಡಿಸಿದ ಗಾರೆ ಚಿತ್ರಗಳು. ಬಣ್ಣದ ನವಿಲುಗಳು ಬಳ್ಳಿ ಹೂ ಹಣ್ಣು ಆನೆಗಳು; ಕಲ್ಲಿನ ಕೆತ್ತನೆ ಕಿಟಕಿಗಳು; ಈಗ ಅವೆಲ್ಲ ಛತ್ರಗಳಾಗಿ ಒಂದೊಂದು ರಾಜ್ಯದ, ಭಾಷೆಯ, ಜಾತಿಯ ಹೆಸರು ಹೊತ್ತ ಛತ್ರಗಳು-ಹುಡುಕುತ್ತಿದ್ದೆ. ಕರ್ನಾಟಕ ಛತ್ರದ ಮುಂದೆ ಹೋದಾಗೆಲ್ಲ ಹಿಂದೆ ಚಂದ್ರ, ನಾನು ಮತ್ತು ನಾವೆಲ್ಲ ಅಲ್ಲಿ ಉಳಿದುಕೊಂಡಿದ್ದ ನೆನಪು ಬರುತ್ತಿತ್ತು.ಊರ ತುಂಬ ನೂರಕ್ಕೆ ಐವತ್ತುಜನ ಪ್ರವಾಸಿಗಳು. ಯಾತ್ರಾರ್ಥಿಗಳು. ಆತಂಕದ ಜೊತೆ ಸ್ವಲ್ಪ ಭಕ್ತಿ. ಚೂರು ಶ್ರದ್ಧೆ. ಇಲ್ಲದಿದ್ದರೂ ಇದೆ ಎಂದು ನಟಿಸುವ ಉತ್ಸಾಹ, ಬೇಗ ನೋಡಿ ಬೇಗ ಹಿಂದಿರುಗುವ ಆತುರ, ಮತ್ತೊಂದು ದೇವಸ್ಥಾನಕ್ಕೆ. ಮತ್ತೊಂದು ಊರಿಗೆ. ಮತ್ತೊಂದು…….ಕೊನೆಗೆ ಬೇಗ ಮನೆಗೆ ಮುಟ್ಟುವ ಆತುರ. ಯಾಕೆ ಈ ಯಾತ್ರಿಗಳೆಲ್ಲ ಐವತ್ತು ದಾಟಿದವರು? ಹುಡುಕುತ್ತಿದ್ದೆ. ಊರತುಂಬ ನೂರಕ್ಕೆ ಇಪ್ಪತ್ತೈದು ಜನ ಸನ್ಯಾಸಿಗಳು. ಹಾಡುಹೇಳುವವರು. ಸುಮ್ಮನೆ ಇರುವವರು. ಭಿಕ್ಷೆ ಬೇಡುವವರು. ತಾವೇ ಹರಿದ್ವಾರದ ಹಕ್ಕುದಾರರೆಂದು ತಿಳಿದವರು. ಒಂದೊಂದು ಮಠ, ಒಂದೊಂದು ಆಶ್ರಮ ಹಿಡಿದು, ಅಲ್ಲಿನ ಗುರುವಿನ ಪಾದ ಹಿಡಿದು, ನಿಧಾನವಾಗಿ ಮೇಲೇರುತ್ತಾ ತಾವೂ ಮಹಾರಾಜ್, ಮಾಂಡಲಿಕ್, ಮಹಾ ಮಾಂಡಲೇಶ್ವರ್ ಆಗುವ ದಾರಿಯನ್ನು ಬೇಗ ಸಾಗಿಸಿ ಮುಗಿಸಬೇಕೆನ್ನುವ ಸನ್ಯಾಸಿಗಳು. ಎಲ್ಲೆಲ್ಲಿ ವಿಶೇಷ ಭಂಡಾರ ಇದೆಯೋ ಅಲ್ಲಿಗೆಲ್ಲ ಪಾಸು ಗಿಟ್ಟಿಸಿ, ಕೈಯಲ್ಲಿ ಥಳಥಳ ಹೊಳೆಯುವ ತಂಬಿಗೆ ಹಿಡಿದು ಮೊದಲ ಪಂಕ್ತಿಯಲ್ಲೆ ಜಾಗ ಗಿಟ್ಟಿಸಲು ಧಾವಿಸುವ ಸಾಧುಗಳು. ಊಟದ ನಂತರ ದಕ್ಷಿಣೆ ಕಡಿಮೆಯಾಯುತೆನ್ನುವ, ಜಗಳಾಡುವ ಸಾಧುಗಳು. ಹುಡುಕುತ್ತಿದ್ದೆ. +ಗುರು ಆಗಬಹುದೋ ಗಣೇಶ ಪುರಿ? ಏನು ಹೇಳಲಿ ಅವರಿಗೆ? ಯಾವಾಗಲೂ ಈ ಪ್ರಶ್ನೆ ಮನಸ್ಸಿನಲ್ಲಿ ಒತ್ತುತ್ತಲೇ ಇತ್ತು. ಅಪರಿಚಿತರೊಡನೆ ಸತ್ಯ ಹೇಳುವುದು ಸುಲಭವಂತೆ. ಹೇಗೆ? ಹೀಗೆ ನಾನು ಮನೆಯಿಂದ ಹಿಮಾಲಯದ ಮನೆಗೆ ಬಂದದ್ದು ಯಾಕೆ ಎಂಬುದನ್ನು ಅಪರಿಚಿತ ಇತರನೂ ಒಪ್ಪುವಂತೆ ಹೇಳುವುದು ಹೇಗೆ? ಬಂದಿದ್ದೇನೆ ಎಂಬ ಆದಷ್ಟನ್ನು, ಆದಷಟನ್ನೇ ಒಪ್ಪಿಕೊಳ್ಳುವವರು ಸಿಗುತ್ತಾರೋ ಯಾರಾದರೂ? ‘ಯಾಕೆ’ ಎಂಬುದಕ್ಕೆ ಏನಾದರೂ ಕಾರಣ ಹೇಳಬೇಕಲ್ಲ. ಏನೇ ಹೇಳಿದರೂ ಅದು ಕಾರಣ ಮಾತ್ರವಾಗಿರುತ್ತದೆ. ನಿಜವಾಗಲಾರದು. ಬಹುಶಃ ನಿಜವನ್ನು ನನಗೂ ಕೂಡ ಹೇಳಿಕೊಳ್ಳಲಾರೆನೇನೋ. ಹೇಳಿದ ತಕ್ಷಣ ಅದು ಒಂದು ಕಾರಣ ಆಗಿ ಬಿಡುತ್ತದೆ. ನಿಜವಾಗಿ ಇರುವುದಿಲ್ಲ. +ಹರಿದ್ವಾರದ ಬೀದಿಗಳನ್ನು ಅಲೆಯುತ್ತ ಮನಸ್ಸಿನಲ್ಲೆ ಗಣೇಶ ಪುರಿಗೆ ಹೇಳಬೇಕಾದ ಮಾತುಗಳನ್ನು ಜೋಡಿಸಿಕೊಳ್ಳುತ್ತಿದ್ದೆ. ಅವರಿಗೆ ಕನ್ನಡ ಗೊತ್ತಿರಲು ಸಾಧ್ಯವಿಲ್ಲ. ಖಂಡಿತ. ಇಂಗ್ಲಿಷು ತಿಳಿಯಲಾರದು. ನನಗೆ ಹಿಂದಿ ತಿಳಿದರೂ ಮಾತನಾಡಲು ಬರುವುದಿಲ್ಲ. ನಾನಿದ್ದ ಹರಿದ್ವಾರದ ಸಾಧಕ ನಿವಾಸದಲ್ಲಿದ್ದವರಿಗೆಲ್ಲ ಇಂಗ್ಲಿಷು ವಿದ್ಯೆಯಬಗ್ಗೆ ಅಪಾರ ತಿರಸ್ಕಾರ ಇತ್ತು. ಚಾವಣೆಯ ಮೇಲೆ ನಾನಿದ್ದ ರೂಮಿನ ಪಕ್ಕದ ಇನ್ನೊಂದರಲ್ಲಿ ಸಂಸ್ಕೃತ ವಿದ್ವಾಂಸನೊಬ್ಬ ತನ್ನ ಹೆಂಡತಿ ಮತ್ತು ಮಗನೊಡನೆ ಇದ್ದ. ಅವರ ರೂಮಿಗೆ ಬಚ್ಚಲು ಇರಲಿಲ್ಲ.ನನ್ನ ರೂಮಿಗೇ ಬರಬೇಕಾಗಿತ್ತು. ಆ ವಿದ್ವಾಂಸ ಸಾಧುವೊಬ್ಬನಿಗೆ ಯಾವುದೋ ಆಧ್ಯಾತ್ಮ ಗ್ರಂಥದ ಪಾಠ ಹೇಳುತ್ತಿದ್ದ. ಸಾಧುವಿಗೆ ಸಂಸ್ಕೃತ ಉಚ್ಚಾರ ಮಾಡುವುದು ಕಷ್ಟವಾಗುತ್ತಿತ್ತು. ವಿದ್ವಾಂಸ ಹೇಳಿದ್ದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಅವನಿಗೆ ಇತ್ತೆಂದೂ ಅನಿಸಲಿಲ್ಲ. ಅವರ ಪಾಠ ದಿನಾ ನನಗೆ ಕೇಳಿಸುತ್ತಿತ್ತು. ಆ ವಿದ್ವಾಂಸ ಹಳ್ಳಿಯ ರೈತನ ಹಾಗಿದ್ದ. ರಸ್ತೆಯಲ್ಲಿ ಕಂಡರೆ ಅವನೊಬ್ಬ ವಿದ್ವಾಂಸ ಇರಬಹುದು ಅನ್ನಿಸುವುದು ಸಾಧ್ಯವೇ ಇರಲಿಲ್ಲ. ಕಚ್ಚೆ ಪಂಚೆ ಕಸೆ ಅಂಗಿ ಹಾಕಿಕೊಳ್ಳುತ್ತಿದ್ದ. ಅದಕ್ಕೆ ಜೇಬು ಇರಲಿಲ್ಲ. ಮುಖದ ಮೇಲೆ ಗಡ್ಡ ಕುರುಚಲಾಗಿತ್ತು. ಹಲ್ಲು ಸ್ವಲ್ಪ ಮುಂದಿತ್ತು. +ಅವನ ಹತ್ತಿರ ಬ್ರಹ್ಮ ಸೂತ್ರಗಳ ಬಗ್ಗೆ ಒಂದು ದಿನ ಮಾತಾಡಿದೆ. ಯಾಕೆಂದರೆ ಆ ಸಾಧಕ ನಿವಾಸದಲ್ಲಿ ದಿನಾ ಬೆಳಿಗ್ಗೆ ಬ್ರಹ್ಮ ಸೂತ್ರದ ಪಾಠ ನಡೆಯುತ್ತಿತ್ತು. ಕನ್ನಡಕ ಹಾಕಿಕೊಂಡ ಮುದಿ ಸನ್ಯಾಸಿ ತುಂಬ ಅಹಂಕಾರದಿಂದೆಂಬಂತೆ ಪಾಠ ಹೇಳುತ್ತಿದ್ದ. ಕೇಳುವ ಶಿಷ್ಯರು ಬಿಳಿಯ ಸೀರೆಯ ಮಹಿಳೆ, ಸ್ಥಳೀಯ ವೃದ್ಧನೊಬ್ಬ, ಗುಜರಾತಿನ ಆ ಮುದುಕ ಮತ್ತು ನಾನು. ಮುದಿ ಸನ್ಯಾಸಿ ತಾನು ಕಲಿತ ಪಾಠ ಒಪ್ಪಿಸುತ್ತಿದ್ದಂತೆ ಇತ್ತು. ಕಲ್ಪಿತ ‘ಶತ್ರು’ಗಳೊಡನೆವಾದ ಮಾಡುವಂತೆ ಇತ್ತು. ಅಧುನಿಕ ಶಿಕ್ಷಣ, ಇಂಗ್ಲಿಷು ಇತ್ಯಾದಿಗಳನ್ನು ಖಂಡಿಸುವಂತೆ ಮಾತ್ರ ಇತ್ತು. ಲೋಕದ ಬದುಕಿನಲ್ಲಿ ಮುಳುಗಿ ಉಸಿರು ಕಟ್ಟಿಸಿಕೊಂಡವರಬಗ್ಗೆ ತಿರಸ್ಕಾರ ಇತ್ತು. ಅವರ ಪಾಠ ಕೇಳುತ್ತ ನನ್ನಲ್ಲಿ ಇದ್ದ ಹಳೆಯ ಪ್ರಶ್ನೆಗಳೇ ಹೊಸ ಕೋಪದೊಡನೆ ಮನಸ್ಸಿನಲ್ಲಿ ಮತ್ತೆ ಹುಟ್ಟುತ್ತಿದ್ದವು. +ನನ್ನ ‘ನೆರೆಮನೆ’ಯ ಸಂಸ್ಕೃತ ವಿದ್ವಾಂಸ ದಕ್ಷಿಣ ಭಾರತದವರ ಸಂಸ್ಕೃತಿ ಉಚ್ಚಾರಣೆ ಬಗ್ಗೆ ಟೀಕೆ ಮಾಡುತ್ತಿದ್ದ. ಶಾಸ್ತ್ರಗಳನ್ನು ಸರಿಯಾದ ಗುರುವಿನಿಂದ ಅರಿಯಬೇಕು ಅನ್ನುತ್ತಿದ್ದ. ಅವನಿಗೆ ತನ್ನ ಹಳ್ಳಿ, ಬನಾರಸ್ ಮತ್ತು ಹರಿದ್ವಾರ ಬಿಟ್ಟರೆ ಬೇರೆ ಜಗತ್ತು ತಿಳಿಯುತ್ತಿರಲಿಲ್ಲ. ಅವನ ಮಗನೂ ಹಾಗೇ. ಬಹುಶಃ ಆರನೆಯದೋ ಏಳನೆಯದೋ ಕ್ಲಾಸಿನ ಹುಡುಗನ ವಯಸ್ಸು. ಅವನು ನನ್ನ ಹತ್ತಿರ ಇದ್ದ ರೇಲ್ವೇ ಗೈಡನ್ನು ತೀರ ಅಶ್ಚರ್ಯಪಟ್ಟು ನೋಡಿ ತಂದೆಗೆ ತೋರಿಸಲು ಓಡಿಹೋಗಿದ್ದ. ರೇಲು ಗೈಡು ಅಂತ ಒಂದು ಇರುತ್ತದೆ, ಅದರಲ್ಲಿ ಮ್ಯಾಪು ಇರುತ್ತದೆ. ಅದು ನಮ್ಮ ದೇಶದ ಮ್ಯಾಪು ಇವೆಲ್ಲ ಅವನಿಗೆ ಅಶ್ಚರ್ಯದ ತಿಳಿವಳಿಕೆಗಳಾಗಿದ್ದವು. ಅವನ ಹೆಸರನ್ನು ಬೇರೆ ಭಾಷೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು – ನನ್ನಿಂದ ಬರೆಸಿ ನೋಡಿ ನೋಡಿ ಆಶ್ಚರ್ಯಪಡುತ್ತಿದ್ದ. +ನಾನು ಹುಡುಕುತ್ತಿದ್ದೆ. ಗಣೇಶಪುರಿ ನಾಳಿದ್ದು ಬಂದಾಗ ಏನು ಹೇಳಲಿ? ಹೇಗೆ ಹೇಳಲಿ? ಸಾಧಕ ನಿವಾಸಕ್ಕೆ ಮೊದಲು ನನ್ನ ಸ್ವಾಗತಿಸಿದ ಮುದುಕ ದಿನಾ ಬೆಳಗಿನ ನಾಲ್ಕುವರೆಗೆ ಹೇಳುವ ಶಾಂತಿ ಪಾಠದ ಸೂತ್ರಗಳನ್ನು ಕೇಳುತ್ತ- ತುಂಬ ಹಿತವಾಗಿ, ಮನಸ್ಸಿಗೆ ಶಾಂತಿ ನಿಜವಾಗಲೂ ಸಿಗುವ ಹಾಗೆ ತುಂಬ ಮಾಗಿದ ಧ್ವನಿಯಲ್ಲಿ ಹೇಳುತ್ತಿದ್ದ – ಸಂಜೆ ಭಗವದ್ಗೀತೆಯ ಪಾಠವನ್ನು ಸಿಡಿಮಿಡಿಗೊಳ್ಳುತ್ತ ಕೇಳಿಸಿಕೊಳ್ಳುತ್ತ, ರಾಧಾಕೃಷ್ಣ, ಶಿವ, ರಾಮಸೀತೆಯರ ಗುಡಿ ಸುತ್ತ ಓಣಿಯಂಥ ಪ್ರದಕ್ಷಿಣೆದಾರಿಯಲ್ಲಿ ಕಾವಿಧಾರಿಗಳ ರೈಲಿನ ಕೊನೆಯ ಡಬ್ಬಿಯಾಗಿ ಹಾಡು ಹೇಳಿಕೊಂಡು ಸುತ್ತಿ ಬರುತ್ತ, ಗಣೇಶಪುರಿಯವರಿಗೆ ಏನು ಹೇಳಲಿ? ಏನು ಹೇಳಿಯಾರು ಅವರು? ಗುರುವೇ ನನಗೆ? ಹೌದೋ? ಏನು ಹೇಳಲಿ ಎಂದು ಹುಡುಕುತ್ತ ಹರಿದ್ವಾರದಲ್ಲಿ ಅಲೆಯುತ್ತ ಇದ್ದೆ. +ಮತ್ತೆ ಬರವಣಿಗೆಯ ಐದನೆಯ ದಿನ +ನನಗೆ ಹೀಗೆ, ಹೀಗೇ ಇರಲು ಆಸೆ ಇದೆಯೆ? ಹೃಷಿಕೇಶದಲ್ಲಿರುತ್ತ ನನ್ನನ್ನು ಈ ಪ್ರಶ್ನೆ ಬಹಳ ಬಾರಿ ಕೇಳಿಕೊಂಡಿದ್ದೆ. ನನಗೆ ಹಾಗೇ ಇರಲು ಆಸೆ ಇತ್ತೆ? ಇದೆಯೇ ಇನ್ನೂ? ಅಂತ ಈಗಲೂ ಕೇಳಿಕೊಳ್ಳುತ್ತಿದ್ದೇನೆ-ಫೆಬ್ರವರಿಯಲ್ಲಿ. ಹೆಚ್ಚುತ್ತಿರುವ ಹಂಪಿಯ ಬಿಸಿಲಲ್ಲಿ, ಇವತ್ತು ಕಾಫಿಯ ನೆಪಕ್ಕೆ ನಾಲ್ಕು ಸಾರಿ ಅಲೆದು, ಹೀಗೆಲ್ಲ ಬರೆಯುವುದು, ಇನ್ನೂ ಹೇಗೆ ಎಂದು ನನ್ನ ಒಳಗನ್ನೆ ಬೇಯಿಸಿಕೊಳ್ಳುತ್ತ. ಮತ್ತೆ ಮತ್ತೆ ನನ್ನ ಕೋಣೆಗೆ ಬಂದು ಎರಡು ಸಾಲು, ನಾಲ್ಕು ಸಾಲು ಆಗಾಗ ಬರೆಯುತ್ತಿದ್ದೇನೆ. +ಈಜಬಹುದು. ಮುಳುಗಬಹುದೆ? ಹೇಮ ಕುಂಡ ನೆನಪಾಗುತ್ತಿದೆ. ಹದಿನಾಲ್ಕುವರೆಸಾವಿರ ಅಡಿ ಎತ್ತರದಲ್ಲಿದ್ದ ಸರೋವರ. ಹೂಗಳ ಕಣಿವೆಯ ಕೊಂಚ ಆ ಬದಿಯಲ್ಲಿ. ಸಿಖ್ಖರು ಸಿಖ್ಖರು ಎಷ್ಟೊಂದು ಮಂದಿ ಸಿಕ್ಕರು. ಜೊತೆಯವರು ಸಿಕ್ಕರು. ಸಿಕ್ಕರೂ ಸಿಕ್ಕರು. ಆರಡಿ ಮೀರಿದ ದೇಹ ಅವನದು. ಪಂಜಾಬಿನ ಗೋಧಿಯೆಲ್ಲ ಬಣ್ಣವಾಗಿ ಅವನ ಮೈಗೆ ಇಳಿದಿತ್ತು. ಗಂಡುಕಾಲು, ಗಂಡು ಭುಜ, ಗಂಡು ಗಡ್ಡ ಮೀಸೆ ಥಳ ಥಳ ಕಪ್ಪು. ಕಣಿವೆಯೆಲ್ಲ ತುಂಬುವಂಥ ಧ್ವನಿ. ಸಲೀಸಾಗಿ ದಪ ದಪ ಹೆಜ್ಜೆ ಹಾಕುತ್ತ. ಅಲ್ಲ, ಅವನು ನಡೆಯಲು ಶ್ರಮ ಪಡುತ್ತಲೇ ಇಲ್ಲವೇನೋ ಎಂಬಂತೆ ತೇಲು ನಡೆಯುತ್ತ ಯಾವ ಆತಂಕವೂ ಇಲ್ಲದೆ ಹಾಡುತ್ತಿದ್ದ. ಹಾಡು ನನ್ನ ತುಂಬ ಹಿಡಿಸಿತು. ನನ್ನ ತುಂಬಿ, ನನ್ನ ಸುತ್ತಲೂ ಗಾಳಿಯಾಗಿ ಹಿಮವಾಗಿ ಚಳಿಯಾಗಿ ಬಿಸಿ ಹಬೆಯಾಗಿ ವಾತಾ-ಆವರಣವಾಯಿತು. ಗಂಡುಸೆಂದರೆ ಇವನೆ, ಈ ಹಾಡೆ ನನ್ನ ಮೈಯಾಗಲೀ ನನ್ನ ಧ್ವನಿಯಾಗಲೀ ನನ್ನ ನನ್ನ ಕಾಲಾಗಲೀ ನನ್ನ ಎತ್ತರವಾಗಲೀ ಗಂಡಸು ಅವನಾದರೆ ನಾನಲ್ಲ. ನಾವು ಯಾರೂ ಅಲ್ಲ ಅನ್ನುವ ಹಾಗೆ ಮಾಡಿಬಿಟ್ಟಿತು. ಬೆಳಗಿನ ಜಾವದ ಕತ್ತಲಲ್ಲಿ ಅವನು ಕಾಣುತ್ತಿರಲಿಲ್ಲ. ಅವನ ಹಾಡು ಕೇಳುತ್ತಿತ್ತು. ಗಂಡಸುತನದಲ್ಲಿ ಹೋಲಿಕೆ ತೊಡಗಿಬಿಟ್ಟರೆ ಎಷ್ಟೊಂದು ಹಿಂಸೆ ಆಗುತ್ತದೆ. ಎಷ್ಟೊಂದು ಕೀಳುತನ ಕಾಡುತ್ತದೆ. ನನ್ನ ಹಿಂದಿನಿಂದ ಕೇಳುತ್ತ ಬಂದ ಹಾಡಿನ ದನಿ ಕೆಲವೇ ನಿಮಿಷದಲ್ಲಿ ನನ್ನ ಪಕ್ಕ ಬಂದು, ನಾಲ್ಕು ಹೆಜ್ಜೆ ನನ್ನ ಜೊತೆ ನಡೆದು, ಮಂಜಿನಲ್ಲಿ ಮರೆಯಾಗಿ ಬೆಟ್ಟ ಹತ್ತಿಕೊಂಡು ಹೋಗಿ ದನಿಯಾಗಿ ಗೊತ್ತೇ ಆಗದಷ್ಟು ಸ್ವಲ್ಪ ಸ್ವಲ್ಪ ಕ್ಷೀಣವಾಗುತ್ತ ಉಳಿದುಬಿಟ್ಟಿತು. ನಾವು ಯಾರೂ ಟ್ರಕಿಂಗಿನಲ್ಲಿ ಅಷ್ಟು ಎತ್ತರ ಹತ್ತಿರಲಿಲ್ಲ. ಮೊಣಕಾಲು ಕುಸಿದು, ಬೆನ್ನು ನೊಂದು, ಬಾಯಿ ಉಸಿರಾಡಿ, ಮೂಗು ಚಳಿಗೆ ತಣ್ಣಗಾಗಿ, ಮೈಯೆಲ್ಲ ಬೆವರಾಗಿ, ಹಾಡು ನನ್ನೊಳಗೆಲ್ಲ ತುಂಬಿ. ಇವನೆಂಥ ಗಂಡು ಅನ್ನುವ ಮೆಚ್ಚುಗೆಯೋ, ಅಸೂಯೆಯೋ, ನೋವೋ, ಹಾಡಿನ ಸವಿಯೋ, ಎಲ್ಲ ಬೆರೆತು ಚಂದ್ರಳೊಡನೆ ನಿಧಾನ ನಿಧಾನ ಏರುತ್ತ ಬಂದರೆ ಅಲ್ಲೆ ಕುಳಿತಿದ್ದ. ಉದ್ದನೆಯ, ನೀಲಿ ನಿಲುವಂಗಿ ಮಾತ್ರ ತೊಟ್ಟು, ಸೊಂಟಕ್ಕೆ ಹೊಳೆಯುವ ಕೃಪಾಣ ಸಿಕ್ಕಿಸಿಕೊಂಡು. “ನಿಮ್ಮ ಹಾಡು ತುಂಬ ಚೆನ್ನಾಗಿತ್ತು” ಅಂತ ನಿಜವಾಗಲೂ ನಾನು ಹೇಳಿದರೆ ಹೂಂಕರಿಸಿ ಗಂಡುತಿರಸ್ಕಾರ ತೋರಿಸಿಬಿಟ್ಟ. ಮೆಚ್ಚಿದ್ದಕ್ಕೇ ಅವಮಾನ ಅನಿಸಿಬಿಟ್ಟಿತು ನನಗೆ. ಉಳಿದ ಸಿಖ್ಖರು ಆ ಹಾಡು ಇರಲೇ ಇಲ್ಲವೇನೋ ಅನ್ನುವಂತೆ ತಮ್ಮ ಪಾಡಿಗೆ ತಾವು ಹತ್ತಿಹೋಗುತ್ತಿದ್ದರು. ತಿರಸ್ಕೃತ ಮೆಚ್ಚುಗೆ ಮನಸ್ಸನ್ನು ನಡುಗಿಸಿತು. +ಏಳು ಬೆಟ್ಟಗಳ ಶಿಖರದ ಮೈಮೇಲೆಲ್ಲ ಬಿಳಿಬಿಳೀ ಹಿಮ. ನುಣ್ಣನೆ, ತೆಳ್ಳನೆ ಹಿಮ. ಏಳೂ ಶಿಖರಗಳ ನಡುವೆ ದೊಡ್ಡ ಬೋಗುಣಿ. ಅದರ ತುಂಬ ನೀರು. ಆಗತಾನೆ ಗುಡ್ಡದ ನೆತ್ತಿಯ ಅಂಚಿನಿಂದ ಎರಡು ಶಿಖರಗಳ ನಡುವೆ ಇಣುಕುವ ಸೂರ್ಯ. ಇಣುಕುವ ಸೂರ್ಯ ಬಹುಶಃ ಕೆಂಪಗಿದ್ದರೂ ಮೋಡ ಮಂಜುಕವಿದು ಬೂದಿಬಳಿದುಕೊಂಡ ಹಿತ್ತಾಳೆ ತಟ್ಟೆಯಾಗಿದ್ದ. ಅವನ ಬಿಸಿಲು ಎರಡು ಕ್ಷಣ ಚಿನ್ನವಾಗಿ ಹೊಳೆಯಿತು. ಹಿಮಕ್ಕೆ ಬಣ್ಣ ಬಂತು. ಹಿಮದ ಬಣ್ಣ ಕೊಳದ ನೀರಿನಲ್ಲಿ, ನೀರಲ್ಲ, ಹೆಪ್ಪುಗಟ್ಟಿ ತೇಲುವ ಹಿಮದ ತೆಳ್ಳನೆ ಹಾಳೆಯ ಮೇಲೆ ಬಿದ್ದು ಹೊಳೆಯಿತು. ತೇಲುವ ಹಾಳೆಗಳ ನಡುವೆ ಅಲ್ಲಲ್ಲಿನ ನೀರಿನಲ್ಲಿ ತಲೆಕೆಳಕಾಗಿ ಕಂಡವು. ಪ್ರತಿಫಲನಕ್ಕೇ ಬೇರೆ ಬಣ್ಣ, ಮೂಲಕ್ಕೇ ಬೇರೆ ಬಣ್ಣ. ಮೋಡ ಬಂದು ಎಲ್ಲ ಮಬ್ಬು. ಕೆಲಹೊತ್ತು ಮತ್ತೆ ಬಿಸಿಲು. ಕೊಳದ ನೀರಿನಿಂದ ಚಳಿಯ ಹಬೆ ನುಸುಳಿ ಏಳುತ್ತ ಬಿಸಿಲಲ್ಲಿ ಚಳಿಯ ಹಬೆಗೇ ಮತ್ತಿನ್ನೊಂದು ಬಣ್ಣ. ನೀರು ಹೆಪ್ಪಾಗುವ ಸೊನ್ನೆ ದಾಟಿದ ಚಳಿಯಲ್ಲಿ ಹೇಮಕುಂಡದ ಸರೋವರದಲ್ಲಿ ಮುಳುಗುವ ಧೈರ್ಯ ಚಂದ್ರಳಿಗೆ ಮಾತ್ರ ಬಂತು. ಒಮ್ಮೆ ಮುಳುಗಬಹುದೇನೋ. ನನಗೆ ಆ ಧೈರ್ಯವೂ ಬರಲಿಲ್ಲ. +ಬಹುಶಃ ರಶೋಲ್ ಝೂಟ್ ಹತ್ತುವಾಗ ಮತ್ತು ಎರಡೇ ದಿನದ ಹಿಂದೆ ಈ ಹೇಮಕುಂಡದ ದಾರಿಯ ಆರಂಭದಲ್ಲಿ ಮೂರ್ತಿಯ ಮೇಲೆ ಸಿಟ್ಟುಮಾಡಿಕೊಂಡಿದ್ದೆ. ನಿನ್ನ ಜೊತೆ ಇನ್ನು ಎಂದೂ ಎಲ್ಲೂ ಟ್ರೆಕ್ಕಿಂಗ್ ಬರಲ್ಲ ಅಂದಿದ್ದೆ. ಮೂರ್ತಿಗೆ ತಾನು ಮತ್ತು ಧಾರಿಣಿ ಮಾತ್ರ ಈ ಜಗತ್ತಿನ ಅತ್ಯಂತ ಆದರ್ಶ ದಂಪತಿಗಳೆಂಬ ಬಲವಾದ ನಂಬಿಕೆ ಇತ್ತು. ನಿಜ ಇರಬಹುದು. ಹಾಗಾದರೆ ಅವನು ಧಾರಿಣಿ ಜೊತೆ ಇರುವ ಹಾಗೆ ನನಗೆ ಯಾಕೆ ಚಂದ್ರಳ ಜೊತೆ ಇರಲು ಆಗುವುದಿಲ್ಲ? ಹೋಲಿಕೆಗಿಂತ ಹಿಂಸೆ ಕೊಡುವುದು ಇನ್ನೊಂದಿಲ್ಲ. ಅಥವ ನಾನು ಏನು ಅಪೇಕ್ಷಿಸುತ್ತೇನೆ. ಏನು ನೋಡುತ್ತೇನೆ ನನಗೇ ಗೊತ್ತಿದೆಯೇ? ಚಂದ್ರಳಿಗೆ ನಾನು ಸರ್ವಸ್ವ ಅಗಬಹುದಾದಂತೆ ಅವಳು ಯಾಕೆ ನನಗೆ ಅಲ್ಲ? +ನಾನು ಮೇಲೆ ಮಾಡಿದ ವರ್ಣನೆ ಪೂರ್ತಿ ನಿಜ ಅಲ್ಲ. ಯಾಕೆಂದರೆ ನಾನು ಚಂದ್ರಳೊಡನೆ ಹೇಮಕುಂಡ ತಲುಪುವ ಹೊತ್ತಿಗೆ ಮೋಡ ಕವಿದು ಸೂರ್ಯ ಪೂರ್ತಿ ಮರೆಯಾಗಿದ್ದ. ಅಲ್ಲಿಗೆ ಮೊದಲೇ ತಲುಪಿದ್ದ ರಾಜು. ಶ್ರೀನಾಥ, ತಿಮ್ಮೇಗೌಡ, ಅವರೆಲ್ಲ ಕಂಡು ವರ್ಣಿಸಿದ ವೈಭವವನ್ನು ನಾನು ಕಂಡಷ್ಟು ಹೇಮಕುಂಡದ ನೆನಪಿಗೆ ಜೋಡಿಸಿ ವರ್ಣಿಸಿದ್ದೇನೆ. ನಿಜ ಏನೆಂದರೆ ನಾನು ಮುಳುಗುವ ಧೈರ್ಯ ಮಾಡಲಿಲ್ಲ. +ಮತ್ತೆ ಬರವಣಿಗೆಯ ಆರನೆಯ ದಿನ +ಅವನ ಹೆಸರು ಗೊತ್ತಿರಲಿಲ್ಲ. ಅವತ್ತು ಬೆಳಿಗ್ಗೆ ಅವನು ಸತ್ತುಹೋದ. ನಾನು ಹೃಷಿಕೇಶದಲ್ಲಿರುತ್ತ ಎರಡು ತಿಂಗಳು ಕಳೆದಿತ್ತು. ಅವನಿಗೆ ಕಾಯಿಲೆ ಅಂತ ಒಂದು ವಾರದಿಂದ ಕೇಳುತ್ತಿದ್ದೆ.ಅವನು ಸತ್ತುಹೋದ. +ಸನ್ಯಾಸಿಯ ಸಾವು ಹೀಗಿರುತ್ತೆ ಅಂತ ಗೊತ್ತಿರಲಿಲ್ಲ. ನಾನು ಹೀಗೇ ಇದ್ದುಬಿಡಬೇಕು ಅಂದುಕೊಂಡಿದ್ದೆ. ತುಂಬ ವಿಷಾದ ಆಯಿತು. ಬೆಳಿಗ್ಗೆ ಊಟದ ಮನೆಗೆ ಹೋಗಿ ಎಲ್ಲರೂ ಕಡಲೆಕಾಳು ಉಸಲಿ ತಿನ್ನುವಾಗ ಯಾರೂ ಮಾತಾಡುತ್ತಿರಲಿಲ್ಲ. ಅವತ್ತು ಆಶ್ರಮದ ಎಲ್ಲ ಕೆಲಸ ನಿಂತು ಹೋಗಿತ್ತು. ಯಾರು ಯಾರನ್ನೂ ಮಾತಾಡಿಸುತ್ತಿರಲಿಲ್ಲ. ಮೋಡ ಮುತ್ತಿಕೊಂಡು ಹೌದೋ ಅಲ್ಲವೋ ಅನ್ನುವ ಹಾಗೆ ತುಂತುರು ಮಳೆ ಆಗಾಗ ಬರುತ್ತಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ನನಗೆ ಮಾತ್ರ ವಿಷಾದ ಇತ್ತೋ ಎಲ್ಲರಿಗೂ ವಿಷಾದ ಆವರಿಸಿ ತಾವೇ ಸತ್ತುಹೋದವರ ಹಾಗೆ ಓಡಾಡುತ್ತಿದ್ದರೋ ತಿಳಿಯಲಿಲ್ಲ. +ನಮ್ಮ ವಸತಿ ಗುಡ್ಡದ ಮೇಲೆ. ಒಂದು ನೂರು ಮೆಟ್ಟಿಲಿಳಿದು ರಸ್ತೆಗೆ ಬಂದು ಆಚೆಗೆ ಇರುವ ಆಶ್ರಮದ್ದೇ ಆಸ್ಪತ್ರೆ. ಆಶ್ರಮದ್ದೇ ಆಫೀಸು. ಪಕ್ಕದಲ್ಲಿ ಅಧ್ಯಕ್ಷರ ನಿವಾಸ. ಅಲ್ಲಿ ಹೆಣ ಇಟ್ಟಿದ್ದರಂತೆ. ಬಹುಶಃ ಪೂಜೆ ಮಾಡಿದ್ದರೋ? +ಇದ್ದಲ್ಲಿ ಇರಲಾರದೆ, ನನಗೆ ಗೊತ್ತಿಲ್ಲದ ಸನ್ಯಾಸಿಯ ಹೆಣ ನೋಡಲಾರದೆ, ಅಲ್ಲಲ್ಲೆ ಸುಳಿದಾಡಿದೆ. ತುಂಬ ರಾಗವಾಗಿ ಶ್ಲೋಕಗಳನ್ನು ಹೇಳುತ್ತಿರುವುದು ಕೇಳುತ್ತಿತ್ತು. ಇನ್ನೇನು ಈಗ, ಬೆಳಗಿನ ಹತ್ತು ಗಂಟೆ ಹೊತ್ತಿಗೆ ಸಂಸ್ಕಾರ ಮಾಡುತ್ತಾರಂತೆ. +ಆತ ಸನ್ಯಾಸಿಯಾಗಿ ಹದಿನೆಂಟು ಇಪ್ಪತ್ತು ವರ್ಷದಿಂದ ನಮ್ಮ ಆಶ್ರಮದಲ್ಲೆ ಇದ್ದನಂತೆ. ನಮ್ಮ ನಡುವೆಯೇ ಸಾವು ಬಂದು ಇದ್ದಾಗ, ಅಲ್ಲಿ ಮೊದಲಿಂದಲೂ ಇದ್ದಿದ್ದು ಗೊತ್ತಾದಾಗ, ವಿಷಾದದ ಜೊತೆಗೆ ಮನಸ್ಸೆಲ್ಲ ಖಾಲಿ ಆಗಿ ಬಿಡುತ್ತದೆ. ನೋಡುತ್ತಿದ್ದೆ. ಕೇಳುತ್ತಿದ್ದೆ. ಖಾಲಿಯಾಗಿದ್ದೆ. ಸುಮ್ಮನೆ ಮೆಟ್ಟಿಲಿಳಿದೆ. ರಾಜುಗಾರು ಸಿಕ್ಕ. ಅರವತ್ತು ವರ್ಷ, ಬೊಚ್ಚುಬಾಯಿ. ಬಿಳೀ ಅಂಗಿ ಪಂಚೆ. ದುಂಡು ದುಂಡು. ಎಣ್ಣೆ ಊಟ ಕದ್ದು ಕದ್ದು ಮಾಡಿ ಬೆಳೆದ, ಕಪ್ಪು ಬೊಜ್ಜು ಮೈ. ಇಬ್ಬರನ್ನು ಮದುವೆ ಆಗಿ ಒಬ್ಬಳನ್ನು ಕೊಂದು ಬಂದವನೋ ಏನೋ ಅಂತೆ. ಅವನದು ಕೀಳು ಅನ್ನಿಸುವಂಥ, ಎಲ್ಲರ ಗುಟ್ಟುಗಳನ್ನು ಕೆದಕಿ ತಿಳಿದು ಅವೆಲ್ಲ ಗೊತ್ತು ಎಂದೇ ಖುಷಿ ಪಡುವ ಮನಸಾಶ್ರಮದ ಹಳೆಯ ಹಂದಿಯಂಥ ಕರಡಿ. +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […] +ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […] +ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_624.txt b/Kannada Sahitya/article_624.txt new file mode 100644 index 0000000000000000000000000000000000000000..d263f6454b59512d653f532414b22212be53f1e0 --- /dev/null +++ b/Kannada Sahitya/article_624.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಬರಹ ೫.೦’ರ ಮಧ್ಯಾವೃತ್ತಿ, ತಂತ್ರಾಂಶ ಅಭಿವೃದ್ಧಿ ಪೆಟ್ಟಿಯ ಸಹಿತ, ಇದೀಗ ಕನ್ನಡ ತಂತ್ರಾಂಶ ಆಸಕ್ತರ ಮುಂದಿದೆ. ಕನ್ನಡಕ್ಕೆ ಸಂಬಂಧಪಟ್ಟ ತಂತ್ರಾಂಶಗಳ ಅಭಿವೃದ್ಧಿಯೂ ಸೇರಿದಂತೆ, ಬರಲಿರುವ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಕೂಡ ಕನ್ನಡದ ಬೆಳವಣಿಗೆಗೆ ಇದೊಂದು ಮಹತ್ವದ ಹೆಜ್ಜೆಯಾಗಬಲ್ಲದೆಂದು ನಮ್ಮ ಅನಿಸಿಕೆಯಾಗಿದೆ. ಬರಹ ಡೈರಕ್ಟನ್ನು ಮುಖ್ಯ ವಿಂಡೋದಿಂದ ಬೇರ್ಪಡಿಸಿ ಸ್ವತಂತ್ರಗೊಳಿಸಿದ್ದು ಕನ್ನಡ ತಂತ್ರಾಂಶ ಅಭಿವೃದ್ದಿಗೆ ಸಹಾಯವಾಗಿದ್ದರೆ, ಇಂದು ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಎಲ್ಲಾ ಭಾಷೆಯ ಫಾಂಟ್‌ಗಳ ಶಿಷ್ಟರೂಪವಾಗಿರುವ ‘೧೬ ಬಿಟ್ ಕೋಡ್’ಅನ್ನು ಇದರಲ್ಲಿ ಅಳವಡಿಸಿರುವುದು ಅಂತರ್ಜಾಲದ ದೃಷ್ಟಿಯಿಂದ ಇದೊಂದು ಗುಣಾತ್ಮಕ ಅಂಶವಾಗಿದೆ. ‘ಬರಹ ೫.೦’ರ ಮಧ್ಯಾವೃತ್ತಿ, ಈ ಯುನಿಕೋಡ್ ಅಷ್ಟೇ ಅಲ್ಲದೆ, ಇನ್ನಿತರ ರೂಪಗಳಾದ ೧) ಕಾನ್ಟ್ರಾನ್ಸ್(ಕನ್ನಡ) ೨)ಕನ್ನಡ ಗಣಕ ಪರಿಷತ್ತು ನಿಗದಿಪಡಿಸಿರುವ ಶಿಷ್ಟರೂಪ, ೩) ೮ ಬಿಟ್ ಕೋಡ್ ೪) ೮-ಬಿಟ್ ಯುಟಿ‌ಎಫ್ ೫) ೮ ಬಿಟ್ ಆನ್ಸಿ ಇಂಥವುಗಳಲ್ಲಿ, ಒಂದರಿಂದ ಇನ್ನೊಂದಕ್ಕೆ ಸುಲಭದಲ್ಲಿ ಮಾರ್ಪಾಡಿಸಲು ನೆರವಾಗುವ ಸಹತಂತ್ರಾಂಶವೊಂದನ್ನು ಒಳಗೊಂಡಿದೆ. ಈ ಬಗೆಯ ರೂಪಾಂತರ ತಂತ್ರಾಂಶದಿಂದ ಫಾಂಟ್ ಕಿರುಕುಳದಿಂದ ಬಳಕೆದಾರರು ಬಿಡುಗಡೆ ಅನುಭವಿಸಬಹುದೆಂದು ನಾವು ಆಶಿಸುತ್ತೇವೆ. ಅಕ್ಷರಗಳ ಆರೋಹಣ ಅವರೋಹಣ ಕ್ರಮದಲ್ಲಿ ಕನ್ನಡದ ಪದಗಳನ್ನು ಹಂಚಬಲ್ಲ ಸಹತಂತ್ರಾಶವೂ ಇದರಲ್ಲಿ ಅಡಕವಾಗಿರುವುದು ಇನ್ನೊಂದು ಹೆಗ್ಗಳಿಕೆ. +ಶ್ರೀಶೇಷಾದ್ರಿವಾಸುರವರ ಕನ್ನಡದ ಪ್ರೀತಿ ಮತ್ತವರ ಔದಾರ್ಯ ವಾಣಿಜ್ಯಮಯವಾಗಿರುವ ಈ ದಿನಗಳಲ್ಲಿ ಇಂಥದನ್ನು ಎಲ್ಲಾ ಕನ್ನಡಿಗರಿಗೆ ನಿರಾಪೇಕ್ಷೆಯಿಂದ ಕೊಟ್ಟಿದೆಯಂಬುದನ್ನು ನೆನೆದು, ಕನ್ನಡಿಗರ ಪರವಾಗಿ ಕನ್ನಡಸಾಹಿತ್ಯ.ಕಾಂ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆಯಲ್ಲದೆ, ಬಳಕೆದಾರರಿಂದ ಈ ’ಬರಹ ೫.೦’ರ ಮಧ್ಯಾವೃತ್ತಿಯ ಬಗ್ಗೆ ಟಿಪ್ಪಣಿಯನ್ನು ‘ಬರಹ.ಕಾಂ’ಗೆ ತಲುಪಿಸಲು ಕನ್ನಡಸಾಹಿತ್ಯ.ಕಾಂ ಉತ್ಸುಕವಾಗಿರುತ್ತದೆ. +‘ಬರಹ ೫.೦’ರ ಒಂದು ಉಪಯುಕ್ತ ಅಂಶವೇನೆಂದರೆ, ಇದನ್ನು ಯೂನಿಕೋಡ್ ಕನ್ನಡ ಕಡತ (ಡಾಕ್ಯೂಮೆಂಟ್) ಗಳನ್ನು ತಯಾರಿಸಲು ಬಳಸಬಹುದು. ವಿಶ್ವದ ಪ್ರಮುಖ ಭಾಷೆಗಳ ಅಕ್ಷರ ಮತ್ತು ಸಂಖ್ಯೆಗಳನ್ನು ಶಿಷ್ಟರೀತಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಳಸುವುದು ಯೂನಿಕೋಡ್ ಶಿಷ್ಟ ಪದ್ಧತಿಯ ಉದ್ದೇಶ. ಕನ್ನಡ ಕಡತ ತಯಾರಿಸುವಾಗ ಯೂನಿಕೋಡ್ ಪದ್ಧತಿಯನ್ನು ಅನುಸರಿಸುವುದರಿಂದ ಹಲವು ಲಾಭಗಳುಂಟು. ಆವುಗಳಲ್ಲಿ ಮುಖ್ಯವಾದವು ಫ಼ಾಂಟುಗಳ ಜಂಜಾಟದಿಂದ ಮುಕ್ತಿ ಮತ್ತು ನಿಮಗೆ ಇಷ್ಟವಾದ ಅಥವಾ ನಿಮ್ಮ ಬಳಿ ಇರುವ ಫ಼ಾಂಟುಗಳನ್ನು ಉಪಯೋಗಿಸಲು ದೊರೆಯುವ ಸ್ವಾತಂತ್ರ್ಯ. ಜೊತೆಗೆ ಯೂನಿಕೋಡ್ ಡಾಕ್ಯೂಮೆಂಟ್ ಗಳನ್ನು ಯಾವುದೇ ಗಣಕ ಪ್ಲಾಟ್ ಫ಼ಾರ್ಮ್ ನಲ್ಲಿ ಬಳಸಬಹುದು. ಅಂತರ್ಜಾಲದ ಮಟ್ಟಿಗೆ ಹೇಳುವುದಾದರೆ ಯೂನಿಕೋಡ್ ನ ಬಳಕೆ ಅನಿವಾರ್ಯ. ‘ಕಡತ ನಿರ್ಮಾಣ’ ಕಾಲದಲ್ಲಿ ನೀವು ಫ಼ಾಂಟುಗಳ ಬಗೆಗಾಗಲಿ, ಅದನ್ನು ಯಾವ ಪ್ಲಾಟ್ ಫ಼ಾರ್ಮ್ ನಲ್ಲಿ ಬಳಸಬಹುದು ಎಂಬುದರ ಬಗೆಗಾಗಲಿ ಯೋಚಿಸುವ ಅಗತ್ಯವನ್ನು ಯೂನಿಕೋಡ್ ತೆಗೆದುಹಾಕಿದೆ. +‘ಬರಹ ೫.೦’ ಯೂನಿಕೋಡನ್ನು ಕನ್ನಡಕ್ಕೆ ತಂದಿದೆ. ಯೂನಿಕೋಡ್ ನ ಬಳಕೆಯಿಂದ ಕನ್ನಡ ಲಿಪಿಗಳನ್ನು ಒಂದು ಶಿಷ್ಟ ರೀತಿಯಲ್ಲಿ ಬಳಸಬಹುದಾಗಿದೆ. ‘ಬರಹ ೫.೦’ ಬಳಸಿ ನೀವು ತಯಾರಿಸುವ ಡಾಕ್ಯೂಮೆಂಟ್ ಗಳನ್ನು ಯೂನಿಕೋಡ್ ಶಕ್ತ ಯಾವುದೇ ಸಾಫ಼್ಟ್ ವೇರ್ ಜೊತೆ ಬಳಸಬಹುದು. ಉದಾಹರಣೆಗೆ ನಿಮ್ಮ ಎಚ್. ಟಿ. ಎಂ. ಎಲ್. ಪುಟದಲ್ಲಿ ನೀವು ಆಂಗ್ಲ ಭಾಷೆಯಲ್ಲಿ ನಿಮ್ಮ ವೃತ್ತಿಯ ಬಗ್ಗೆ, ಕನ್ನಡದಲ್ಲಿ ನಿಮ್ಮ ಸಾಹಿತ್ಯಾಸಕ್ತಿಯ ಬಗ್ಗೆ ಮಾಹಿತಿ ಒದಗಿಸಬಹುದು. ‘ಬರಹ ೫.೦’ ರ ನೆರವಿನಿಂದ ನೀವು ಯಾವುದೇ ಶ್ರಮವಿಲ್ಲದೆ ನಿಮ್ಮ ಮೆಚ್ಚಿನ ವರ್ಡ್ ಪ್ರೋಸೆಸರ್ ನಲ್ಲಿ ಬರಹ ಲಿಪ್ಯಂತರಣ ಕ್ರಮದ ಮೂಲಕ ಕನ್ನಡ ಅಕ್ಷರಗಳನ್ನು ಬರೆಯಬಹುದು ಮತ್ತು ಯೂನಿಕೋಡ್ ಪದ್ಧತಿಗೆ ಅನುಗುಣವಾಗಿ ಡಾಕ್ಯೂಮೆಂಟ್ ತಯಾರಿಸಬಹುದು. +ಟಿಪ್ಪಣಿ: ಆರ್. ಉಡುಪ. +೦೬-೦೬-೨೦೦೨ +ಸಂಭ್ರಮ: ಯಶವಂತ ಚಿತ್ತಾಲ ಹಾಗು ಚನ್ನವೀರ ಕಾಣವಿಯವರಿಗೆ ಎಪ್ಪತ್ತೈದು. ಈ ಅವರ ಕೃತಿಗಳನ್ನು ಸ್ಮರಿಸಿಕೊಳ್ಳುವುದರ ದೃಷ್ಟಿಯಿಂದ ಈ ಸಂಚಿಕೆಯ ಬಹುಭಾಗ ಆ ದೊಡ್ಡಜೀವಗಳಿಗೆ ಮೀಸಲಾಗಿಟ್ಟಿರುವುದು ಸ್ಪಷ್ಟವಾಗಿದೆ. ಅಹಂಕಾರವೋ- ಕೃತಿಗಿಂತಲೂ ಅಧಿಕವಾದದ್ದನ್ನು ಲೇಖಕ ಹೇಳಲಾಗದು ಎಂಬ […] +ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […] +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_625.txt b/Kannada Sahitya/article_625.txt new file mode 100644 index 0000000000000000000000000000000000000000..395f12e5de9bbe43f430682a019d1bc4293ab756 --- /dev/null +++ b/Kannada Sahitya/article_625.txt @@ -0,0 +1,158 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೀಠಿಕಾ ಸಂಧಿ +ಶ್ರೀ ವನಿತೆಯರಸನೆವಿಮಲ ರಾ +ಜೀವ ಪೀಠನ ಪಿತನೆ ಜಗತಿ +ಪಾವನನೆ ಸನಕಾದಿ ಸಜ್ಜನಿಕರ ದಾತಾರ +ರಾವಣಾಸುರ ಮಥನ ಶ್ರವಣ ಸು +ಧಾ ವಿನೂತನ ಜನದ ಗದುಗಿನ ವೀರನಾರಾಯಣ ೧ +ಶರಣ ಸಂಗವ್ಯಸನ ಭುಜಗಾ +ಭರಣನಮರ ಕಿರೀಟ ಪಂಡಿತ +ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ +ಕರಣನಿರ್ಮಲ ಭಜಕರಘ ಸಂ +ಹರಣ ದಂತಿ ಚಮೂರು ಚರ್ಮಾಂ +ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨ +ವರಮಣಿಗಳಿಂದೆಸೆವ ಮೌಳಿಯ +ಸರಸಿಜಾರಿಯ ಕಿರಣದೋಳಿಯ +ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ +ಕವಿ ನಿಭಾಕೃತಿಯೆನಿಪ ವದನದ +ಕರದ ಪಾಶದ ಮೋದಕದ ವಿ +ಸ್ವರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩ +ಗಜಮುಖನೆ ಮೆರೆವೇಕದಂತನೆ +ನಿಜಗುಣಾನ್ವಿತ ಪರಶುಧಾರನೆ +ರಜತಗಿರಿಗೊಡೆಯನ ಕುಮಾರನೆ ವಿಧ್ಯೆವಾರಿಧಿಯೆ +ಅಜನು ಹರಿ ರುದ್ರಾದಿಗಳು ನೆರೆ +ಭಜಿಸುತಿಹರನವರತ ನಿನ್ನನು +ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪ +ವಾರಿಜಾಸನೆ ಸಕಲಶಾಸ್ತ್ರ ವಿ +ಚಾರದುದ್ಭವೆ ವಚನರಚನೋ +ದ್ಧಾರೆ ಶೃತಿ ಪೌರಾಣದಾಗಮ ಸಿದ್ಧಿದಾಯಕಿಯೆ +ಶೌರಿ ಸುರಪತಿ ಸಕಲ ಮುನಿಜನ +ಸೂರಿಗಳಿಗನುಪಮದ ಯುಕುತಿಯೆ +ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ೫ +ಆದಿ ನಾರಾಯಣಿ ಪರಾಯಣಿ +ನಾದಮಯೆ ಗಜಲಕ್ಷ್ಮಿ ಸತ್ವಗು +ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ +ವೇದಮಾತೆಯೆ ವಿಶ್ವತೋಮುಖೆ +ಯೈದು ಭೂತಾಧಾರಿಯೆನಿಪೀ +ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬ +ವೀರನಾರಾಯಣನೆ ಕವಿ ಲಿಪಿ +ಕಾರ ಕುವರವ್ಯಾಸ ಕೇಳುವ +ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು +ಚಾರುಕವಿತೆಯ ಬಳಕೆಯಲ್ಲ ವಿ +ಚಾರಿಸುವಡಳವಲ್ಲ ಚಿತ್ತವ +ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭ +ಶ್ರೀಮದಮರಾಧೀಶ ನತಪದ +ತಾಮರಸ ಘನವಿಪುಳ ನಿರ್ಮಲ +ರಾಮನನುಪಮ ಮಹಿಮೆ ಸನ್ಮುನಿ ವಿನುತ ಜಗಭರಿತ +ಶ್ರೀಮದೂರ್ಚಿತ ಧಾಮ ಸುದಯಾ +ನಾಮನಾಹವ ಭೀಮ ರಘುಕುಲ +ರಾಮ ರಕ್ಷಿಸುವೊಲಿದು ಗದುಗಿನ ವೀರನಾರಾಯಣ ೮ +ಶರಧಿಸುತೆ ಸನಕಾದಿ ವಂದಿತೆ +ಸುರನರೋರಗ ಮಾತೆ ಸುಜನರ +ಪೊರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ +ಪರಮ ಕರುಣಾ ಸಿಂಧು ಪಾವನ +ಚರಿತೆ ಪದ್ಮಜ ಮುಖ್ಯ ಸಕಲಾ +ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯ +ಗಜಮುಖನ ವರಮಾತೆ ಗೌರಿಯೆ +ತ್ರಿಜಗದರ್ಚಿತ ಚಾರು ಚರಣಾಂ +ಬುಜೆಯ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ +ಭಜಕರಘ ಸಂಹರಣೆ ಸುಜನ +ವ್ರಜ ಸುಸೇವಿತ ಮಹಿಷ ಮರ್ದಿನಿ +ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦ +ದುರಿತಕುಲಗಿರಿ ವಜ್ರದಂಡನು +ಧರೆಯ ಜಂಗಮ ಮೂರ್ತಿ ಕವಿ ವಾ +ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು +ತರಳನನು ತನ್ನವನೆನುತೆ ಪತಿ +ಕರಿಸಿ ಮಗನೊಲಿದು ಕರುಣದಿ +ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧ +ವಂದಿತಾಮಳ ಚರಿತನಮರಾ +ನಂದ ಯದುಕುಲ ಚಕ್ರವರ್ತಿಯ +ಕಂದ ನತ ಸಂಸಾರ ಕಾನನ ಘನ ದವಾನಳನು +ನಂದನಂದನ ಸನ್ನಿಭನು ಸಾ +ನಂದದಿಂದಲೇ ನಮ್ಮುವನು ಕೃಪೆ +ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨ +ತಿಳಿದು ಹೇಳುವೆ ಕೃಷ್ಣ ಕಥೆಯನು +ಇಳೆಯ ಜಾಣರು ಮೆಚ್ಚುವಂತಿರೆ +ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ +ಹಲವು ಜನ್ಮದ ಪಾಪರಾಶಿಯ +ತೊಳೆವ ಜಲವಿದು ಶ್ರೀಮದಾಗಮ +ಕುಲಕೆ ನಾಯಕ ಭರತಾಕೃತಿ ಪಂಚಮ ಶ್ರುತಿಯ ೧೩ +ಪದದ ಪ್ರೌಢಿಯ ನವರಸಂಗಳ +ವುದಿತವೆನುವಭಿದಾನ ಭಾವವ +ಬೆದಕಲಾಗದು ಬಲ್ಲ ಪ್ರೌಢರುಮೀ ಕಥಾಂತರಕೆ +ಇದ ವಿಚಾರಿಸೆ ಬಱಿಯ ತೊಳಸಿಯ +ವುದಕದಂತಿರೆಯಿಲ್ಲಿ ನೋಳ್ಪುದು +ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪ +ಹಲಗೆ ಬಳಪವ ಪಿಡಿಯದೊಂದ +ಗ್ಗಳಿಕೆ ಪರರೊಡ್ದವದ ರೀತಿಯ ಕೊಳ್ಳದಗ್ಗಳಿಕೆ +ಬಳಸಿ ಬರೆಯಲು ಕಂಠಪತ್ರದ +ವುಲುಹುಗೆಡದಗ್ಗಳಿಕೆಯೆಂಬೀ +ಬಲುಹು ಗದುಗಿನ ವೀರನಾರಾಯಣನ ಕಿಂಕರಿಗೆ ೧೫ +ಕೃತಿಯನವಧರಿಸುವುದು ಸುಕವಿಯ +ಮತಿಗೆ ಮಂಗಳವೀವುದಧಿಕರು +ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು +ನುತಗುಣರು ಭಾವುಕರು ವರಪಂ +ಡಿತರು ಸುಜನರು ಸೂಕ್ತಿಕಾರರೌ +ಮತಿಯನೀವುದು ವೀರನಾರಾಯಣನ ಕಿಂಕರಿಗೆ ೧೬ +ತಿಣಿಕೆ‌ಇದೆನು ಫಣಿರಾಯ ರಾಮಾ +ಯಣದ ಕವಿಗಳ ಭಾರದಲಿ ತಿಂ +ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ +ಬಣಗು ಕವಿಗಳ ಲೆಕ್ಕಿಪನೆ ಸಾ +ಕೆಣಿಸದಿರು ಶುಕರೂಪನಲ್ಲವೆ +ಕುಣಿಸಿ ನಗನೇ ಕವಿಕುಮಾರವ್ಯಾಸನುಳಿದವರ ೧೭ +ಹರಿಯಬಸುರೊಳಗಖಿಳ ಲೋಕದ +ವಿರಡವಡಗಿಹವೋಲು ಭಾರತ +ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು +ಪರಮ ಭಕ್ತಿಯಲೀ ಕೃತಿಯನವ +ಧರಿಸಿ ಕೇಳ್ಪಾ ನರರ ಬೇಗೆಯೆಂದರುಹಿದನು ಮುನಿನಾಥ ೧೮ +ಅರಸುಗಳಿಗಿದು ವೀರ ದ್ವಿಜರಿಗೆ +ಪರಮ ವೇದದ ಸಾರ ಯೋಗೀ +ಶ್ವರರ ತತ್ವವಿಚಾರ ಮಂತ್ರಿಜನಕೆ ಬುದ್ದಿಗುಣ +ವಿರಹಿಗಳ ಶೃಂಗಾರ ವಿದ್ಯಾ +ಪರಿಣತರಲಂಕಾರ ಕಾವ್ಯಕೆ +ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯ +ವೇದ ಪಾರಾಯಣಾದ ಫಲ ಗಂ +ಗಾದಿ ತೀರ್ಥಸ್ನಾನ ಫಲ ಕೃ +ಚ್ಚ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ +ಮೇದಿನಿಯನೊಲಿದಿತ್ತ ಫಲ ವ +ಸ್ತ್ರಾದಿ ಕನ್ಯಾದಾನ ಫಲವಹು +ದಾದರಿಸಿ ಭಾರತದೊಳೊಂದಕ್ಷರವ ಕೇಳ್ಪರಿಗೆ ೨೦ +ಹೇಮ ಖುರ ಶೃಂಗಾರಭರಣದಲಿ +ಕಾಮಧೇನು ಸಹಸ್ರ ಕಪಿಲೆಯ +ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ +ಶ್ರೀಮುಕುಂದಾರ್ಪಣವೆನಿಸಿ ಶತ +ಭೂಮಿದೇವರಿಗಿತ್ತಫಲವಹು +ದೀ ಮಹಾ ಭಾರತದೊಳೊಂದಕ್ಷರವ ಕೇಳ್ಪರಿಗೆ ೨೧ +ಚೋರ ನಿಂದಿಸಿ ಶಶಿಯ ಬೈದಡೆ +ಕ್ಷೀರವನು ಕ್ಷಯರೋಗಿ ಹಳಿದರೆ +ವಾರಣಾಸಿಯ ಹೆಲವ ನಿಂದಿಸಿ ನಕ್ಕರೇನಹುದು +ಭಾರತದ ಕಥನ ಪ್ರಸಂಗವ +ಕ್ರೂರ ಕರ್ಮಿಗಳೆತ್ತ ಬಲ್ಲರು +ಘೋರರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ ೨೨ +ವೇದಪುರುಷನ ಸುತನ ಸುತನ ಸ +ಹೋದರನ ಹೆಮ್ಮಗನ ಮಗನ ತ +ಳೋದರಿಯ ಮಾತುಳನ ರೂಪನತುಳನ ಭುಜಬಲದಿ +ಕಾದಿ ಗೆಲಿದನನಣ್ಣನವ್ವೆಯ +ನಾದಿನಿಯ ಜಠರದಲಿ ಜನಿಸಿದ +ನಾದಿ ಮೂರುತಿ ಸಲಹೊ ಗದುಗಿನ ವೀರನಾರಾಯಣ ೨೩ +ಅತ್ಯಂತ ಸಂತೊಷದ ಸಂಗತಿಯೆಂದರೆ ಹಳಗನ್ನಡ ಮಹಾಕಾವ್ಯಗಳನ್ನು ಪ್ರಕಟಿಸಿ ಎಂದು ಕೋರಿ ನಮಗೆ ಒಂದಷ್ಟು ಈಮೈಲ್‌ಗಳು ಬಂದವು. ಡಿವಿಜಿಯವರ ‘ಮಂಕುತಿಮ್ಮನಕಗ್ಗ’ ವನ್ನು ಜರ್ಮನಿಯಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್ರಾದ ಶ್ರೀ ಪ್ರಸನ್ನರವರು ಪ್ರಸ್ತಾಪಿಸಿದ್ದರು. ಎ.ಆರ್.ಕೃಷ್ಣಶಾಸ್ತ್ರಿಯವರ ‘ವಚನಭಾರತ’ ಓದುವ ಬಯಕೆಯನ್ನು ಮುಂದಿಟ್ಟಿದ್ದರು. ಅದರ ಸಾಧ್ಯತೆಯನ್ನು ಪರಿಶೀಲಿಸುತ್ತಿರುವಾಗ ಕುಮಾರವ್ಯಾಸಭಾರತ ಏಕೆ ಪ್ರಕಟಿಸಬಾರದು ಎಂದು ಕೆಲ ಮಿತ್ರರು ಸಲಹೆ ನೀಡಿದರು. ವ್ಯಾಸಭಾರತ ಗಾತ್ರದಲ್ಲಿ ದೊಡ್ಡದು. ಅದನ್ನೆಲ್ಲ ಇಡಿಯಾಗಿ ಪ್ರಕಟಿಸಲು ಸಾಧ್ಯವಿಲ್ಲದಿದ್ದರು‌ಆ ದಿಕ್ಕಿನಲ್ಲಿ ಪ್ರಯತ್ನ ಪಡಬಾರದೇಕೆ ಎಂದು ಹೊರಟಿದ್ದೇವೆ. ಸಮಯವಿದ್ದಾಗಲೆಲ್ಲ ಈ ಕೃತಿಯನ್ನು ಕಂತಿನಲ್ಲಿ ಸೇರಿಸುತ್ತ ಬರುವ ಆಲೋಚನೆ ನಮ್ಮದು. ಸಾಫ್ಟ್‌ವೇರ್ ಇಂಜಿನಿಯರಿಂಗ್‌ಗೂ ಕನ್ನಡ ಸಾಹಿತ್ಯಕ್ಕೂ ಸಂಬಂಧ ಕಲ್ಪಿಸಲು ಮನಸ್ಸು ಒಡಂಬಡದಿದ್ದರೂ ಪ್ರಸನ್ನರಂತಹವರ ‘ಬಯಕೆ’ ಕುರಿತಂತೆ ಸಂಭ್ರಮ ಪಡದೆ ಇರಲು ಸಾಧ್ಯವಿಲ್ಲ, ಅಲವೆ? ನಮ್ಮನ್ನು ಪರೋಕ್ಷವಾಗಿ ಈ ಕೆಲಸಕ್ಕೆ ಉತ್ತೇಜಿಸಿದ ಪ್ರಸನ್ನರವರಿಗೆ ಧನ್ಯವಾದಗಳು. +ಶೇಖರ್‌ಪೂರ್ಣ +ಸಂಗೀತ ಕಲಿಸಿದವನು.ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ-ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕಇಂಥ ಕಚಡ […] +ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […] +ಅದಕ್ಕೇ ಹೇಳಿದೆ: ಯಾರಾದರೊಬ್ಬರುಕಾಯಬೇಕಿದೆ ನಿನ್ನ ತೋಟವ. ಅದಕ್ಕೇಎಲ್ಲಿದ್ದರೆ ಅಲ್ಲಿಂದಮಗನೇ ನೀ ಬೇಗನೆ ಬಾ–ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು. ದಿನಾ ಕಣ್ಣಲ್ಲಿ ಕಂಬನಿಯಾಯ್ತು.ಎಷ್ಟು ದಿನ ಕಾದರೂ ಮಗ ಬಾರದೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_626.txt b/Kannada Sahitya/article_626.txt new file mode 100644 index 0000000000000000000000000000000000000000..6a329c2ee3c27ee823360fb7c58b18425c40589d --- /dev/null +++ b/Kannada Sahitya/article_626.txt @@ -0,0 +1,148 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ ಬಾಳನ್ನ ಒಡೀಲಿಕ್ಕೆ ಅಂತ ಬಂದೋನಲ್ಲ, ನೀನು ಬಾವ ಇರು ಅಂದ್ರೆ ಇರ್ತೀನಿ. ಆದರೆ ನನ್ನ ಬಗ್ಗೆ ಹೆಚ್ಚಿನ ಆಸಕ್ತೀನ ನೀನು ದಯವಿಟ್ಟು ತೋರಿಸಬೇಡ” +ಕೃಷ್ಣಯ್ಯ ನೆರೆಬಂದ ನದಿಯಂತೆ ನುಡಿದು ಹೊರಟ. ನಾಗವೇಣಿ ತನ್ನ ಮನಸ್ಸಿನಲ್ಲಿರುವ ವಸ್ತು ಸ್ಥಿತಿಯನ್ನೇ ಕಂಡವಳಂತೆ ಸ್ತಬ್ದಳಾಗಿ ನಿಂತಳು. ಕೃಷ್ಣಯ್ಯ ಚಪ್ಪಲಿ ಸಿಕ್ಕಿಸಿಕೊಂಡು ಕೆಳಗಿಳಿದ. +ಗಣಪಯ್ಯ ಬಾಳೆ ಎಲೆ ಕತ್ತರಿಸಿ ಸಣ್ಣ ಪಿಂಡಿಯಾಕಾರದಲ್ಲಿ ಸುತ್ತಿ ಮನೆಯತ್ತ ತಿರುಗಿದಾಗ ಕೃಷ್ಣಯ್ಯ ಎದುರಾದ. ಕೃಷ್ಣಯ್ಯನ ಗಂಭೀರ ಮುಖ, ಬಿಗಿದುಕೊಂಡ ಅವನ ಮೈನೋಡಿ ಗಣಪಯ್ಯನಿಗೆ ಅಂಜಿಕೆ ಎನಿಸಿತು. ಕೃಷ್ಣಯ್ಯ ಸೈಂಧವ, ಮುಷ್ಠಿಕಟ್ಟಿ ಗುದ್ದಿದರೆ ತಾನು ಚಟ್ನಿಯಾಗಿ ಹೋಗುತ್ತೇನೆ. ತನ್ನದೋ ನರಪೇತಲಕಾಯ. ಗಾಳಿ ಮರದಂತೆ ಬೆಳೆದಿದ್ದೇನೆ ನಾನು. ಮೈಯಲ್ಲಿ ಬಲವಿಲ್ಲ. ಕೃಷ್ಣಯ್ಯನೊಡನೆ ಮಾತಿಗೆ ನಿಲ್ಲುವುದೂ ಅಪಾಯವೆ. ಹೀಗೆಂದು ತನ್ನ ಹೆಂಡತಿಯನ್ನು ಇವನಿಗೊಪ್ಪಿಸಿ ಕುಳಿತಿರುವುದೂ ಸಾಧ್ಯವಿಲ್ಲ. ನಾಗವೇಣಿಯನ್ನು ಸರಿದಾರಿಗೆ ತರಲಾರೆನಾದರೆ ತಾನು ಎಂತಹಾ ಗಂಡಸು! +ಕೃಷ್ಣಯ್ಯ ಬದುವಿನ ಮೇಲೆ ನಿಂತೇ- +“ಬಾವಯ್ಯಾ” ಎಂದ. +ಏಟು ತಿಂದ ನಾಗರಹಾವು ಬುಸುಗುಟ್ಟಿದಂತಾಯ್ತು. ಕೃಷ್ಣಯ್ಯನ ಕಣ್ಣುಗಳು ಕೆಂಪೇರಿದವು, +“ಬಾವಯ್ಯ, ನಾಗು ನನ್ನ ಹತ್ರ ಮಾತಾಡಿದ್ಲು ಅಂತ ನೀವು ಅವಳ ಮೇಲೆ ಅನುಮಾನ ಪಡೋದು ನ್ಯಾಯವಲ್ಲ, ನಾಗು ನಾನು ಜೊತೇಲಿ ಬೆಳೆದೋರು… ಅವಳು ನನ್ನ ತಂಗಿ ಇದ್ದ ಹಾಗೆ… ಅವಳ ಮೇಲೆ ನೀವು ಸಂಶಯ ಪಡೋದು ಅಂದರೆ ಕುಡಿಯೋ ನೀರಿಗೆ ಎಂಜಲು ಹಾಕಿದ ಹಾಗೆ ಅಷ್ಟೆ. ನಿಮಗೆ ಸಹಾಯವಾಗ್ಲಿ ಅಂತ ನಾನು ಬಂದ್ನೇ ಹೊರತು ಬೇರಾವ ಕಾರಣಕ್ಕೂ ಅಲ್ಲ. ನನ್ನ ಮನಸ್ಸಿನಲ್ಲಿ ಹಾಗೇನಾದ್ರೂ ಇದ್ದಿದ್ರೆ ನನಗೆ ಕೆಲಸ ಕಷ್ಟದ್ದಾಗಿರಲಿಲ್ಲ. ನಾನಿಲ್ಲಿ ಇರೋದು ನಿಮಗೆ ಬೇದವಾಗಿದ್ರೆ ನಾನು ಹೋಗ್ತೀನಿ…ಹಾಗಂತ ಹೇಳಿಬಿಡಿ. ಯಜಮಾನರಿಗೆ ಉತ್ತರ ಕೊಡಬೇಕಲ್ಲ ಅಂತ ನಾನಿಲ್ಲಿ ಇದೀನಿಯೇ ಹೊರತು…ಈ ಹತ್ತಾಳು ನೀರು ನನಗೆ ಹೆಚ್ಚಲ್ಲ. ನೀವು ನಾಗೂಗೆ ಮತ್ತೆ ಹಿಂಸೆ ಕೊಟ್ಟರೆ ನಾನೂ ನಿಮಗೆ ಹೇಲದೆ ಕೇಳದೆ ಹೋಗೋವ್ನೆ” +ಕತ್ತಿಯನ್ನು ಒಡ್ಯಾಣಕ್ಕೆ ಸೇರಿಸಿ ಗಣಪಯ್ಯ ಎಡಗೈಲಿದ್ದ ಎಲೆಯ ಪಿಂಡಿಯನ್ನು ಬಲಗೈಗೆ ದಾಟಿಸಿದ. ಕೃಷ್ಣಯ್ಯನ ಆಕಾರದ ಹಾಗೆಯೇ ಮಾತೂ ಗಡುಸು ಎನ್ನುವುದರ ಅರಿವಾದುದು ಈಗಲೇ. ಈ ಗಡುಸು ಮಾತಿನಲ್ಲೂ ಕೇಳುವವರ ಎದೆ ನಡುಗಿಸುವ ಶಕ್ತಿ ಇದೆ ಎಂಬ ಅನುಭವವೂ ಆಯಿತು. ಮಳೆಗಾಲದ ತಿಳಿಬಿಸಿಲಿಗೆ ಮೈಯಲ್ಲಿ ಸಣ್ಣಗೆ ಬೆವರು ಕಾಣಿಸಿಕೊಂಡಿತು. ಕೃಷ್ಣಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ ಎನಿಸಿ ಗಣಪಯ್ಯನೆಂದ, +“ಏನೋ ಆಗಿಹೋಯ್ತಲ್ಲ ಕೃಷ್ಣಯ್ಯ, ಅವಳಿಗೆ ನಾನು ಕೇಳಿದ್ದೇ ಒಂದು, ಅವಳು ಹೇಳಿದ್ದೇ ಒಂದು. ನಾನೂ ತಾಳ್ಮೆ ಕಳೆದುಕೊಂಡೆ. ಹೋಗ್ಲಿ ನಡಿ…ಮನೆಗೆ ಹೋಗೋಣ” +ಇಬ್ಬರೂ ಮತ್ತೆ ತೋಟದ ಸಂಕ ದಾಟಿದರು. +ಆ ಬೇವಾರ್ಸಿ ನಿನಗೆ ಯಾರೆ ಎಂದು ಗಂಡ ಜೇನು ಹುಳುಗಳ ಕೈಯಲ್ಲಿ ಕಡಿಸಿಕೊಂಡಂತೆ ಕುಣಿಯುತ್ತ ಕೇಳಿದಾಗ, ತಾನು ಅವನು ತನ್ನ ಒಡಹುಟ್ಟಿದವನು ಎಂದೇನೋ ಹೇಳಿದ್ದೆ, ಅವನು ತನಗೆ ಅಣ್ಣನಾಗಬೇಕು ಎನ್ನುವ ಭಾವ ಮನಸ್ಸಿನಲ್ಲಿ ಆಗಾಗ್ಗೆ ಬಂದುಹೋಗುತ್ತಿತ್ತು. ಗಂಡನ ಕಲ್ಪನೆ ಸುಳ್ಳೆಂದು ಸಾರಲು ತಾನೊಂದು ಮಾತನ್ನು ಹೇಳಿದೆನಾದರೂ ಇದು ಹೃದಯ ಒಪ್ಪದ ಮಾತು. ಕೃಷ್ಣಯ್ಯ ತನ್ನ ಒಡನಾಡಿ ಎಂಬುದೇ ಸತ್ಯ. ಮನಸ್ಸಿನ ಆಲದಲ್ಲಿ ಅವನ ಬಗ್ಗೆ ಇರುವ ಭಾವನೆಯೇ ಬೇರೆ. ಕೃಷ್ಣಯ್ಯ ಅಂದಾಕ್ಷಣ, ಅವನ ಮುಖ ಕಂಡಾಕ್ಷಣ ಬಣ್ಣದ ಮತಾಪು ಹೊತ್ತಿಕೊಂಡು, ನಕ್ಷತ್ರದ ಕುಡಿಕೆ ಚಿಮ್ಮಿ, ಕಾಮನಬಿಲ್ಲು ಆಕಾಶಕ್ಕೂ ಭೂಮಿಗೂ ಒಂದಾಗಿ ನಿಂತು, ತಾನು ಮೈಮರೆಯಲು ಕಾರಣವಾಗುವ ಕಲ್ಪನೆಯೇ ಬೇರೆ. +ಕೃಷ್ಣಯ್ಯನೂ ಇದೀಗ ಏನೋ ಹೇಳಿಹೋದ. ಅದೆಲ್ಲ ಅವನ ನಾಲಿಗೆ ತುದಿಯ ಮಾತು. ತನಗೆ ನೋವಾಗದಿರಲಿ, ತನ್ನನ್ನು ಹೊಡೆದು-ಬಡಿದು ಕಾಡದಿರಲಿ ಎಂದಾತ ಹೇಳಿದ ಮಾತಿದು. ಅವನ ಹೃದಯದಲ್ಲಿರುವುದನ್ನು ತಾನು ಬಲ್ಲೆ. ಅವನು ತನ್ನನ್ನು ನೋಡಲು, ಮಾತಾಡಲು ಹಾತೊರೆಯುತ್ತಾನೆಂಬುದನ್ನೂ ತಾನು ಬಲ್ಲೆ. +ಈಗೀಗ ಕೃಷ್ನಯ್ಯನೇ ಎಲ್ಲೆಲ್ಲೂ ತುಂಬಿಕೊಂಡಿದ್ದಾನೆ. ಗಂಡನ ಬಗ್ಗೆ ಈಗ ಮತ್ತೂ ಜಿಗುಪ್ಸೆ, ಹೇಸಿಗೆ, ತಿರಸ್ಕಾರ. ಗಂಡನೊಡನೆ ಬದುಕುವುದೇಬೇಕಿಲ್ಲ ಅನ್ನುವಲ್ಲಿಗೂ ತಾನು ಬಂದು ಮುಟ್ಟಿದ್ದೇನೆ. ತನಗೆ ಕೃಷ್ಣಯ್ಯನೇ ಬೇಕು. ಧರ್ಮವೋ-ಅಧರ್ಮವೋ, ಸರಿಯೋ-ತಪ್ಪೋ ಕೃಷ್ಣಯ್ಯನಿಗಾಗಿ ಜೀವ ಹಂಬಲಿಸುತ್ತದೆ. ಅವನನ್ನು ಸಂಪೂರ್ಣವಾಗಿ ಪಡೆಯುವತನಕ ಈ ಹಂಬಲ ನಿಲ್ಲುವುದಿಲ್ಲ… +ಆದರೆ ಹೇಗೆ… +ಗಂಡ ಸುಮ್ಮನಿದ್ದಾನೆಯೇ? ಕೃಷ್ಣಯ್ಯ ಒಪ್ಪಬಹುದೇ? ಅಮ್ಮ ಏನೆಂದಾಳು? ಅಪ್ಪ ಏನು ಹೇಳಬಹುದು? ತಮ್ಮ-ತಂಗಿಯರು, ಊರುಜನ, ಅರಲಗೋಡಿನವರು, ಗುರುತು-ಪರಿಚಯದವರು ಏನೆಂದಾರು? ಈ ಮಧ್ಯೆ ಮನಸ್ಸೂ ಹಿಂದೇಟು ಹಾಕುತ್ತಿದೆ. ಇಷ್ಟೊಂದು ನಿರ್ಲಜ್ಜಳಾಗಿ ವರ್ತಿಸುವುದರ ಬದಲು ಶರಾವತಿಗೆ ಹಾರಿ ಸಾಯಬಾರದೇಕೆ ತಾನು? +ನಾಗವೇಣಿ ಒಲೆಗೆ ಸೌದೆ ಸೀಳು ಹಾಕಿ ಬೆಂಕಿ ಸರಿಪಡಿಸಿದಳು. ಗಲ್ಲಕ್ಕೆ ಕೈಕೊಟ್ಟು ಕುಳಿತು ಬೆಂಕಿಯನ್ನೇ ದಿಟ್ಟಿಸಿದಳು. ನಗ್ನಳಾಗಿ ನಿಂತ ಹೆಣ್ಣೊಂದು ಕೈಕಾಲುಗಳನ್ನು ಬೀಸುತ್ತಿರುವಂತೆ ಬೆಂಕಿಯ ಕೆನ್ನಾಲಿಗೆ ಕಂಡಾಗ ತಾನು ಅಡ್ಡ ಹಾದಿ ಹಿಡಿದಿದ್ದೇನೆಯೇ ಎಂದು ಯೋಚಿಸಿದಳು. ಕೃಷ್ಣಯ್ಯ ಹೇಳಿದುದನ್ನು ಮತ್ತೊಮ್ಮೆ ನೆನಪಿಗೆ ತಂದುಕೊಂಡಳು. ಗಣಪಯ್ಯ ಅಗ್ನಿಸಾಕ್ಷಿಯಾಗಿ ತನ್ನ ಕೈಹಿಡಿದಾತ. ಅವನಿಗೆ ಮೋಸ ಮಾಡುವುದೆ ಎಂದು ಎದ್ದಳು. ಕೃಷ್ಣಯ್ಯ, ಗಣಪಯ್ಯ ಮನೆಗೆ ಬಂದಾಗ ನಾಗವೇಣಿ ಮುಖ ತೊಳೆದುಕೊಂಡು ಬಂದಳು. +ಪುಷ್ಯ +ಎಂಟು ಹತ್ತು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭವಾಯಿತು. ಆಕಾಶದಲ್ಲಿ ಮೋಡಗಳು ಜಮೆಯಾಗಿ ಕತ್ತಲು ಕವಿಯಿತು. ಗಾಳಿ ಅದೆಲ್ಲಿತ್ತೋ ಮೈಯಲ್ಲಿ ದೆವ್ವಹೊಕ್ಕಂತೆ ಬೀಸತೊಡಗಿತು. ಹೊರಗೆ ಓಡಿಯಾಡಿಕೊಂಡಿದ್ದ ಜಾನುವಾರುಗಳೆಲ್ಲ ಕೊಟ್ಟಿಗೆಗೆ ಹಿಂದಿರುಗಿದವು. ಕೃಷ್ಣಯ್ಯ ಎಂಟುದಿನಕ್ಕಾಗುವಷ್ಟು ಊಟದೆಲೆ, ವೀಳೆದೆಲೆ ಕೊಯ್ದು ತಂದ. +ಮಳೆ ಸುರಿಯಿತು. ಭರ್ ಎಂದು ಹನಿಗಳುದುರಿದವು. ಕೃಷ್ಣಯ್ಯ ಜಗುಲಿಯ ಮೇಲೆ ಕುಳಿತು ತಾಂಬೂಲ ಧ್ವಂಸಮಾಡಲಾರಂಭಿಸಿದ. ಬೇಸರವಾದರೆ ಇಲ್ಲಿ ಇದೊಂದು ಕೆಲಸ ಮಾಡಲು ಅವಕಾಶವಿತ್ತು. ಮಳೆಗಾಲದಲ್ಲಿ ಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಯುವುದೆಂದರೆ ಇಸ್ಪೀಟಿನಾಟ. ಆದರೆ ತಾನು ಈ ಆಟ ಕಲಿಯಲಿಲ್ಲ. ಯಜಮಾನರ ಹೆದರಿಕೆ ಇಲ್ಲದಿದ್ದರೆ ಕಲಿಯಿತ್ತಿದ್ದೆನೇನೋ. ಆದರೆ ಅವರು ಈ ಆಟದ ಪರಮ ವಿರೋಧಿ. ಹೀಗಾಗಿ ತಾನು ಆಟ ಆಡುವಲ್ಲಿ ಹೋಗದಾದೆ. ಇನ್ನು ಮನೆಯಲ್ಲಿ ಪಗಡೆ ಆಡುವುದಿತ್ತು. ಚನ್ನಮನೆಯಿತ್ತು, ಆಡಲು ಜನರೂ ಇರುತ್ತಿದ್ದರು. ಇಲ್ಲಿ ಯಾರಿದ್ದಾರೆ? ಪಗಡೆಯ ಹಾಸು ನಾಗವೇಣಿಯ ಹತ್ತಿರ ಇದ್ದೀತು. ಆದರೆ ಅವಳೊಡನೆ ಆಡುವ ಅವಕಾಶ ಕಲ್ಪಿಸಿಕೊಳ್ಳುವ ಮನಸ್ಸು ತನಗಿಲ್ಲ. +ಹಿಂದಾಗಿದ್ದರೆ ಅವಳಾಗಿಯೇ ಕರೆಯುತ್ತಿದ್ದಳು. +“ಕೃಷ್ಣಯ್ಯ ಪಗಡೆ ಆಡೋಣ ಬರ್ತೀಯಾ?” +ಇದು ಹಿಂದೆ, ಬಹಳ ಹಿಂದೆ. ಈಗ ಹೀಗೆ ಅವಳು ಕೇಳಿದರೂ ಆಡುವ ಧೈರ್ಯ ತನಗಿಲ್ಲ. +ಮನೆಯ ಮಾಡಿನಿಂದ ಧಾರೆಧಾರೆಯಾಗಿ ಸುರಿದ ನೀರು ಹರಿದು ಹೋಗುತ್ತಲಿತ್ತು. ಗುಡ್ಡದ ಮೇಲಿನಿಂದ, ಮನೆಯ ಹಿಂಬದಿಯಿಂದ ಹರಿದು ಬಂದ ನೀರೆಲ್ಲ ಸಣ್ನ ಹಳ್ಲವಾಗಿ ತೋತದತ್ತ ಧುಮುಕುತ್ತಿತ್ತು. ಆ ಸದ್ದು ಮಳೆಗಾಳಿಯ ಸದ್ದಿನೊಡನೆ ಒಂದಾಗಿ ಕಿವಿಗೆ ಬಂದು ಅಪ್ಪಳಿಸುತ್ತಿತ್ತು. +ಗಣಪಯ್ಯ ಒಳಗಿದ್ದ, ಮಲಗಿರಬಹುದು. ಮದ್ಯಾಹ್ನದ ಊಟ ಮುಗಿಸಿದ ಮೇಲೆ ಒಂದು ನುದ್ದೆ ತೆಗೆಯುವ ಅಭ್ಯಾಸ ಆತನದು. ನಾಗವೇಣಿಯೂ ಮಲಗಿರಬೇಕು. ತಾನೂ ಮಲಗಿದ್ದರಾಗುತ್ತಿತ್ತು. ಆದರೆ ಅದೇಕೋ ಹಗಲು ಹೊತ್ತು ನಿದ್ದೆ ಬರುವುದಿಲ್ಲ ತನಗೆ. ಹಗಲು ಹೊತ್ತು ಮಲಗುವ ಅಭ್ಯಾಸ ಮಾಡಿಕೊಳ್ಲಬಾರದು ಎನಿಸುತ್ತದೆ. ಉಂಡು ಮಲಗಲು ತಾನೇನು ಯಜಮಾನನೆ, ಜಮೀನುದಾರನೆ, ಒಡೆಯನೆ? ಹೊತ್ತು ಹೊತ್ತಿಗೆ ಹಾಕುವ ಕೂಳಿಗೆ ಕೆಲಸ ಮಾಡುವಾತ ತಾನು ಈ ಶ್ರೀಮಂತಿಕೆ ತನಗೇಕೆ? +ಎದ್ದ, ಒಡ್ಯಾಣದ ಹಗ್ಗ ಹರಿದಿತ್ತು. ಸೆಣಬು ತಂದಿರಿಸಿದ್ದು, ಸೆಣಬಿನ ಉಂಡೆಯನ್ನು ಎದುರಿರಿಸಿಕೊಂಡು ಜಗುಲಿಯ ಅಂಚಿನಲ್ಲಿ ಕುಳಿತು ದಾರಹೊಸೆಯತೊಡಗಿದ, ಎಳೀಳೆಯಾಗಿ ದಾರ ಬಿಡಿಸಿಕೊಂಡು, ಮೂರು ಎಳೆಗಳನ್ನು ಒಂದಾಗಿ ಹಿಡಿದು, ತೊಡೆಯ ಮೇಲೆ ಮಲಗಿದ್ದ ಮೂರೂ ಎಲೆಗಳನ್ನು ಅಂಗೈಯಿಂದ ತೀಡಿ ಹಗ್ಗ ಹುರಿ ಮಾಡಿ ಹೊಸೆಯತೊಡಗಿದ. +ಕೈಬಳೆಗಳ ಸದ್ದಾಗಲು ತಿರುಗಿ ನೋಡಿದ. ನಾಗವೇಣಿ ಮಾತಾಡಲಿಲ್ಲ. ಅವಳನ್ನು ಗಮನಿಸಿಯೂ ಗಮನಿಸದಂತೆ ತನ್ನ ಕೆಲಸದಲ್ಲಿ ತೊಡಗಿದ. ನಾಗವೇಣಿ ಎಷ್ಟು ಹೊತ್ತು ಬಾಗಿಲಲ್ಲಿ ನಿಂತಿದ್ದಳೋ, ಕೃಷ್ನಯ್ಯ ಮತ್ತೊಮ್ಮೆ ತಲೆ ಎತ್ತಿ ನೋಡಿದಾಗ ನಾಗವೇಣಿ ಅಲ್ಲಿರಲಿಲ್ಲ. +ನಾಗೂ ಎಂದು ಹೃದಯ ಚೀರಾಡಿತು. ನಿನ್ನ ಮದುವೆಯಾಯಿತು, ಗಂಡನ ಮನೆ ಸಿಕ್ಕಿತು. ನೀನಿನ್ನು ಸುಖಿ ಅಂದುಕೊಂಡೆ, ಆದರೆ ಇದೇನು ನಿನ್ನ ಬಾಳು ಹೀಗಾಯಿತು ಎಂದು ಅಂಗೈಯಿಂದ ಬಲವಾಗಿ ಹುರಿಯನ್ನು ಹೊಸಕಿಹಾಕಿದ. ತೊಡೆ ಕೆಂಪೇರಿ ಚುರುಗುಟ್ಟಿತು. ನಾಗವೇಣಿ ತನ್ನ ಹತ್ತಿರ ಮಾತನಾಡುವುದನ್ನೇ ಬಿಟ್ಟಿದ್ದಾಳೆ. ಗಂಡನೊಡನೆಯೂ ಮಾತಿಲ್ಲ. ನಾಲಿಗೆ ಬಿದ್ದು ಹೋದಂತೆ ಮೌನವಾಗಿರುತ್ತಾಳೆ. ಮಾತಿಲ್ಲ, ನಗೆಯಿಲ್ಲ-ದಿನದಿನಕ್ಕೂ ಸವೆದುಹೋಗುತ್ತಿದ್ದಾಳೆ. +“ನಾಗೂ ಇದೆಲ್ಲ ಏನು?” +ಎಂದು ಕೇಳಲೆ? ಮಾತು ನಾಲಿಗೆಯ ತುದಿಗೆ ಬರುತ್ತದೆ. ಕೇಳಿಯೇ ಬಿಡೋಣ ಎಂದು ತಲೆ ಎತ್ತುತ್ತೇನೆ. ಬೇಡ, ನಾನು ಯಾರು ಇದನ್ನೆಲ್ಲ ಕೇಳಲು ಎಂದು ತಲೆ ತಗ್ಗಿಸುತ್ತೇನೆ. ನಾಲಿಗೆ ಕಚ್ಚಿಕೊಳ್ಳುತ್ತೇನೆ. +ನಾಗವೇಣಿಯೊಡನೆ ಮಾತನಾಡಬೇಕೆಂದು ಮನಸ್ಸು ಹಪಹಪಿಸುತ್ತದೆ. ಬೇರೇನೋ ಆಸೆಗಳು ನುಗ್ಗಿ ಬರುತ್ತವೆ. ಆದರೂ ತಡೆದುಕೊಳ್ಳುತ್ತೇನೆ. ಅವಳ ಮುಂದಿನ ಜೀವನ ಹಾಳಾಗಬಾರದು. ಸುಖ-ನೆಮ್ಮದಿಗೆ ಅವಳು ಎರವಾಗಬಾರದು ಎಂದು ಬಯಸುತ್ತೇನೆ. ಈಗ ಅವಳೆಲ್ಲಿ ಸುಖವಾಗಿದ್ದಾಳೋ ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ. ಅವಳನ್ನು ಹೀಗೆ ಕೊಲ್ಲುವುದರ ಬದಲು ಮನಸ್ಸು ಬಯಸುವಂತೆ ವರ್ತಿಸಿ ಅವಳನ್ನು ಸುಖವಾಗಿಡುವುದೇ ಲೇಸು ಎಂದುಕೊಳ್ಳುತ್ತೇನೆ. ಆದರೆ ಅದಕ್ಕೂ ಹಿಂಜರಿಯುತ್ತೇನೆ. ಯಾವುದು ಸರಿ ಎಂದು ಕೈ ಹಿಸುಕಿಕೊಳ್ಳುತ್ತೇನೆ. +ಹಗ್ಗ ಹೊಸೆಯುವುದು ಬೇದವೆನ್ನಿಸಿ ಆ ಕೆಲಸವನ್ನು ಅಲ್ಲಿಗೇನೆ ನಿಲ್ಲಿಸಿ ಕೆಳಗಿಳಿದ. ಚಪ್ಪರ ಅಲ್ಲಲ್ಲಿ ಸೋರುತ್ತಿತ್ತು. ಮೇಲೆ ಹೊದಿಸಿದ ಅಡಕೆ ಸೋಗೆ ಗಾಳಿಗೆ ಹಾರಿ ಹೋಗಿತ್ತು. ನೀರು ಒಳಗೆ ಜಿನುಗುತ್ತಿತ್ತು. ಮಳೆಗಾಲ ಮುಗಿದ ಮೇಲೆಯೇ ಅದನ್ನು ರಿಪೇರಿ ಮಾಡುವುದು. ಅಲ್ಲಿಯವರೆಗೂ ಈ ಜಿನುಗಾಟ ಇದ್ದುದೇ…ತೋತ ಮಳೆಗೆ ಮೈಯೊಡ್ಡಿ ಬಿದ್ದುಕೊಂಡಿದೆ. ಅಡಿಕೆ ಮರಗಳು ಗಾಳಿಗೆ ಭ್ರ್ ಎಂದು ಓಲಾಡುತ್ತಿವೆ. ಗರಿಗಳು ಕೆದರಿಕೊಂಡಿವೆ. ಹಾಳೆಕಟ್ಟದ ಅಡಕೆಗೊನೆ ತೂಗಾಡುತ್ತಿದೆ. ಅಡಕೆ ಕೊಯ್ಯಲು ತಾನು ಇರುವುದಿಲ್ಲ, ಇರಬಾರದು. ಮಳೆಗಾಲ ಮುಗಿದಾಕ್ಷಣ ಶರಾವತಿಯ ನೀರು ಇಳಿದು ಇಲ್ಲಿಗೆ ಜನ ಬಂದು ಹೋಗಲು ಆರಂಭಿಸಿದ ಕೂಡಲೇ ತಾನಿಲ್ಲಿಂದ ಹೊರಟುಬಿಡಬೇಕು. ಅಲ್ಲಿಗೆ ತಾನಿಲ್ಲಿಗೆ ಬಂದ ಕಾರ್ಯ ಮುಗಿದ ಹಾಗೆ. +ಮಳೆಯ ಅಬ್ಬರ ಕಡಿಮೆಯಾಯಿತು. ಇದು ಒಂದು ಕ್ಷಣ, ಮತ್ತೆ ಕಣಿವೆಯತ್ತಣಿಂದ ಮಳೆ ನುಗ್ಗಿ ಬಂದೇಬಂದಿತು. ಆಕಾಶಕ್ಕೂ ಭೂಮಿಗೂ ಒಂದೇ ಒಂದಾಗಿ ಇಳಿಬಿದ್ದ ಪರದೆ ಈ ಮಳೆ. ಧೋ ಎಂದು ಸುರಿಯುವುದೊಂದಲ್ಲದೆ ಬೇರೇನೂ ಅರಿಯದು ಮಳೆಗೆ. ಹೆಣ್ಣಿನ ಕಣ್ಣೀರಿನ ಹಾಗೆ. +ನಾಗವೇಣಿ ಏಳೆಂಟು ದಿನಗಳಿಂದ ಅಳುತ್ತಿದ್ದಾಳೆ. ಹೆಪ್ಪುಗಟ್ಟಿದ ಮೋದ ಮುಕದ ಮೆಲೆ, ಕಣ್ಣಲ್ಲಿ ಹನಿ. ಸೀತಾಪರ್ವತದ ಮೇಲಿನಿಂದ ಬೀಸಿಬರುವ ಗಾಳಿಯ ನಿಟ್ಟುಸಿರು. ಈ ಮೋಡ, ಹನಿ, ಗಾಳಿಗೆ ಎದೆಗೊಟ್ಟು ತಳಮಳಿಸುವವನು ತಾನು, ತಾನೊಬ್ಬನೆ. ಗಣಪಯ್ಯನಿಗೆ ಇದರ ಅರಿವೇ ಇಲ್ಲ. ಗಣಪಯ್ಯ ತನ್ನೊಡನೆ ಎಂದಿನಂತೆಯೇ ಇದ್ದಾನೆ, ಆದರೆ ತನ್ನ ವ್ಯಥೆ ಬೇರೆ. ನಾಗವೇಣಿ ಹೀಗೆಯೇ ಇರಬೇಕೆ? ಹೆಪ್ಪುಗಟ್ತಿದ ಕಪ್ಪುಮೋದವಾಗಿ? ಗಾಳಿಗೆ ತೂರಿಹೋಗುವ ಹನಿಯಾಗಿ? ಬಂಡೆಗಳನ್ನು ಸವರಿಕೊಂಡು ಬರುವ ಗಾಳಿಯಾಗಿ? ಹೀಗೆಯೇ ಇರಬೇಕೆ? +ಚಪ್ಪರದ ಒಳಗೆ ಇರಚಲು ಹೊಡೆದಾಗ ಮತ್ತೆ ಜಗಲಿಯನ್ನೇರಿದ. ಏನಾದರೂ ಮಾದಬೇಕೆನಿಸುತ್ತದೆ. ಏನು ಮಾಡುವುದು ಎಂದು ಸುತ್ತಲೂ ನೋಡಿದ. ಹಂಚಿನ ಮಾಡು, ತೊಲೆ-ಪಕಾಶಿಗಳು, ಸುಣ್ಣದ ಗೋಡೆ, ಗೋಡೆಯ ಮೇಲಿನ ನಾಲ್ಕು ಗಿಳಿಗೂಟಗಳು, ಉದ್ದಕ್ಕೂ ಕಟ್ಟಿದ ಬಳ್ಳಿಯೊಂದು, ಈ ತುದಿಯಲ್ಲಿ ಕಡುಕಿನ ಮಣೆ, ದೋಟಿ, ಒಡ್ಯಾಣ, ಕತ್ತಿ, ಗಣಪಯ್ಯನ ತುಂಡು ಪಂಚೆ, ಆ ತುದಿಯಲ್ಲಿ ಮಳೆಗೆ ನೆನೆದು ಗಾಲಿಗೆ ಫಡಫಡಿಸುತ್ತಿದ್ದ ನಾಗವೇಣಿಯ ರವಕೆ, ಏನು ಮಾಡುವುದು? +ಗಣಪಯ್ಯ ಒಳಗಿನಿಂದ ನಿದ್ದೆಗಣ್ಣಿನಲ್ಲೇ ಹೊರಬಂದ. ಸೊಂಟದ ಪಂಚೆಯನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತ ಆಕಳಿಸಿ ಮೈಮುರಿದ. ಹೊರಗಿನ ಛಳಿಗೆ ಮೈ ಮುದುರಿಕೊಂಡ, ಹಾಹಾಹಾ ಎಂದು ವಿಕಾರವಾಗಿ ಸದ್ದು ಮಾಡಿ- +“ಅಣ್ಣನ ಬದಲಿಗೆ ತಮ್ಮ ಹೊಡೀತಿದಾನ?” +ಎಂದ, ಮಳೆಯನ್ನು ನೋಡಿ. ಕೃಷ್ಣಯ್ಯನತ್ತ ತಿರುಗಿ-ನೀನು ಏನ್ ಮಾಡ್ತಿದೀಯ ಎಂದು ಕೇಳಿದ. ಹೊಸೆದ ಹಗ್ಗವನ್ನು ನೋಡಿ-ಹುಂ, ಇದೂ ಸರಿಯೆ ಎಂದ. ಕೃಷ್ಣಾ ನಿನಗೆ ನಿದ್ದೆ ಬರೋದಿಲ್ವ ಎಂದು ವಿಚಾರಿಸಿ ತಾನೇ ಉತ್ತರ ಕಂಡುಕೊಂಡವನಂತೆ-ಹಗಲು ನಿದ್ದೆ ಒಳ್ಳೇದಲ್ಲ ಮಾರಾಯ ಎಂದು ತೀರ್ಪು ನೀಡಿದ. +ಕೃಷ್ಣಯ್ಯ ಹಾಂಹೂಂ ಎಂದು ಹೇಳಲಿಲ್ಲ. ಕಣ್ಣು ಅರೆಮುಚ್ಚಿಕೊಂಡು, ಅದೇನನ್ನೋ ಹೇಳುತ್ತ ಕಂಕುಳಲ್ಲಿ ಕೈ ಹಾಕಿ ಕೆರೆದುಕೊಳ್ಳುತ್ತಿದ್ದ ಗನಪಯ್ಯನನ್ನು ನೋಡಿ ಆತ ನಕ್ಕನಷ್ಟೆ. +ಗಣಪಯ್ಯ ಜಗುಲಿಯ ಅಂಚಿಗೆ ಹೋಗಿ, ಅಲ್ಲಿ ಮಾಡಿನ ನೀರು ಬಿದ್ದು ತುಂಬಿಕೊಂಡ ನೀರ ಬಾನಿಯಿಂದ ಬಾಯಿ ಮುಕ್ಕಳಿಸಿ, ಮುಖ ತೊಳೆದುಕೊಂಡು ಬಳ್ಳಿಯ ಮೇಲೆ ಒಣ ಹಾಕಿದ್ದ ವಸ್ತ್ರದಿಂದ ಮುಖವರೆಸಿಕೊಂಡು ಬಾಗಿಲಬಳಿಬಂದು ಒಳಗೆ ತಲೆ ಹಾಕಿ- +“ನಾಗೂ….ಬಿಸಿಬಿಸಿ ಕಾಫಿ ಮಾಡು ಎರಡು ಲೋಟ” ಎಂದು ಹೇಳಿ, ಚಾಪೆ ಎಳೆದುಕೊಂಡು ಕುಳಿತ. ಕೃಷ್ನಯ್ಯ ಅಷ್ಟು ದೂರದಲ್ಲಿ ಕುಳಿತು ಹೊಸೆದ ಹಗ್ಗವನ್ನು ಕೈಗೆತ್ತಿಕೊಂಡ. +ಗಣಪಯ್ಯ ಮಾತನಾಡುತ್ತಲಿದ್ದ. ಮಳೆಗಾಲದ ಮಾತು. ಈ ವರುಷವೇ ಮಳೆ ಕಡಿಮೆ ಎಂಬ ಮಾತು. ಇಲ್ಲೆಲ್ಲ ಕಾಡು ಕಡಿದಮೇಲೆ ಮಳೆ ಕಡಿಮೆಯಾದಿದ್ದೀತೆ ಎಂಬ ಮಾತು. ಮಲೆನಾಡು ಈಗೀಗ ಬಯಲುಸೀಮೆಯಾಗುತ್ತಿದೆ. ರೈಲು ರಸ್ತೆ, ಬಸ್ಸು ರಸ್ತೆ, ತಂತಿ ಮಾರ್ಗ, ಡ್ಯಾಮು, ಮನೆಗಳು ಎಂದೆಲ್ಲ ಕಾಡು ಕಡಿಯುತ್ತಿದ್ದಾರೆ. ಹೀಗೆಯೇ ಕಡಿಯುತ್ತ ಹೋದರೆ ಮಳೆ ಬಂದ ಹಾಗೆಯೆ. ಡ್ಯಾಮಿನಲ್ಲಿ ನೀರು ನಿಂತ ಹಾಗೆಯೆ ಎಂದ. ಸರಕಾರಕ್ಕೆ ಶಾಪ ಹಾಕಿದ. ತನಗೆ ಜಮೀನು ಪರಿಹಾರ ಸಿಗದಿದ್ದುದರಿಂದ ಒಳ್ಳೆಯದೇ ಆಯಿತು ಎಂದ. ತನ್ನ ಹೊಲ-ತೋಟಗಳಲ್ಲೂ ಈ ವರ್ಷ ಒಳ್ಳೆಯ ಫಸಲಾಗಿದೆ. ಹೇರಂಬನ ಹೊಲ-ತೋಟಗಳಲ್ಲೂ ಒಳ್ಳೆಯ ಬೆಳೆಯಾಗಿದೆ ಎಂದು ಸಂತಸಪಟ್ಟ. +“ಕೃಷ್ಣಯ್ಯ… ನೀನು ಸ್ವಂತ ಜಮೀನು ಮಾಡಿಕೊಂಡಿದಿಯೋ ಹೇಗೆ?” +ಕೃಷ್ಣಯ್ಯನನ್ನು ಮಾತಿಗೆ ಎಳೆದ. +“ನಾನಂತೂ ಮಾಡಿಕೊಂಡಿಲ್ಲ…ಯಜಮಾನರು ನನಗೆ ಅಂತ ಒಂದಿಷ್ಟು ಮಾಡಿ ಕೊಟ್ಟಿದ್ದಾರೆ” +“ಹೌದಾ…ಬೇಗ ಮದುವೆಯಾಗಿ ಒಂದು ಸಂಸಾರ ಹೂದಯ್ಯ…ಎಷ್ಟು ದಿನ ಅಂತ ಪರರ ಮನೇಲಿ ಇರ್ತೀಯ” +“ಯೋಚನೆ ಇದೆ…ಮುಂದಿನ ವರ್ಷ ಆದೀತು…” +ನಾಗವೇಣಿ ಕಾಫಿ ತೆಗೆದುಕೊಂಡು ಬಂದಳು. ಗಂಡನ ಕೈಗೆ ಒಂದು ಲೋಟವಿರಿಸಿ, ಕೃಷ್ಣಯ್ಯನ ಎದುರು ಒಂದು ಲೋಟವಿರಿಸಿ ಅವಳು ಹೊರಟಾಗ ಗಣಪಯ್ಯ ಕೂಗಿದ- +“ಕೇಳಿದ್ಯೇನೆ” +ನಾಗವೇಣಿ ನಿಂತು-ಏನು-ಎಂಬಂತೆ ಗಂಡನತ್ತ ನೋಡಿದಳು. ಕಾಫಿ ಗುಟುಕರಿಸಿ ಗಣಪಯ್ಯನೆಂದ- +“ಮುಂದಿನ ಬೇಸಿಗೇಲಿ ಕೃಷ್ಣಯ್ಯನ ಮದುವೆ…ನಿನಗೊಬ್ಳು ಅತ್ತಿಗೆ ಬರ್ತಾಳೆ…ಅತ್ತಿಗೆ…” +ನಾಗವೇಣಿಯ ಕಾಲ ಹೆಬ್ಬೆರಳು ಹೊಸಿಲಿಗೆ ಬಡಿಯಿತು. ಕೃಷ್ಣಯ್ಯ ಕೈಗೆತ್ತಿಕೊಂಡಿದ್ದ ಲೋಟವನ್ನು ಕೆಳಗಿರಿಸಿದ. +ಮಳೆ ನಿಂತಿದೆ ಎಂದು ಕೊಟ್ಟಿಗೆ ಬಾಗಿಲು ತೆರೆದು, ಕಣ್ಣಿ ಬಿಚ್ಚಿ ದನಗಳನ್ನು ಬಿಟ್ಟಿದ್ದೇ ತಪ್ಪಾಯಿತು. ಎರಡು ಗಂಟೆಯಷ್ಟೊತ್ತಿಗೆ ಹೋದ ದನಕರುಗಳೆಲ್ಲ ತಿರುಗಿ ಬಂದವು. ಬೆಳ್ಲಿ ಪತ್ತೆಯಿಲ್ಲ, ಮೋಡ ಮತ್ತೆ ಕವಿಯುತ್ತಿತ್ತು. ಮಳೆ ಹಿಡಿದರೆ ಇನ್ನೆಂಟು ದಿನ ಬರುವುದಿಲ್ಲ, ಬೆಳ್ಳಿ ಎತ್ತ ಹೋಯಿತು? +ದನಗಳನ್ನು ಕಟ್ಟಿ ಹುಲ್ಲು ಹಾಕಿ ಬಂದ ಕೃಷ್ಣಯ್ಯ. +“ಬಾವಯ್ಯ ಬೆಳ್ಳಿ ಬಮ್ಮ್ದಿಲ್ವಲ್ಲ” +ಎಂದಾಗ, ಜಗುಲಿಯ ಅಂಚಿನ ಕಂಬಕ್ಕೆ ಬೆನ್ನುಕೊಟ್ಟು ಕುಳಿತು ಹಸಿ ಅಡಕೆಯ ಸಿಪ್ಪೆ ಸುಲಿಯುತ್ತಿದ್ದ ಗಣಪಯ್ಯ- +“ಆ ಹಡಬೆ ದನಕೆ ಇದೊಂದು ಚಾಳಿ ಮಾರಾಯ…ಈಗ ಅಂತ ಅಲ್ಲ…ಹಿಂದಿನಿಂದಾನೂ ಅಷ್ಟೆ. ಗುಡ್ಡದ ಮೇಲಿನ ಗುಹೆ ಹತ್ರ ಹೋಗಿ ಸಾಯುತ್ತೆ…ಅಲ್ಲೇನಿದೆಯೋ ಅದರಮ್ಮನ ಪಿಂಡ.” +ಎಂದ ವ್ಯಗ್ರನಾಗಿ. +“ಹುಡುಕಿಕೊಂಡು ಬರ್ತೇನೆ” +ಎಂದು ಕೃಷ್ಣಯ್ಯ ನುಡಿದಾಗ- +“ದಾರಿ ಗೊತ್ತುಂಟ?” +ಎಂದು ಕೇಳಿ, ಎಚ್ಚರದಿಂದ ಹೋಗಿ ಬಾ…ಇಂಬಳಗಳ ಕಾಟ ಎಂದ. +ಕಾಡಿನಲ್ಲಿ ಕಾಲಿಟ್ಟಲೆಲ್ಲ ಮಿಚಗುಡುವ ಇಂಬಳಗಳಿಗೆ ಅಂಜಿ ಕೃಷ್ಣಯ್ಯ ಎಣ್ಣೆಯನ್ನು ಕಾಲುಗಳಿಗೆ ಬಳಿದುಕೊಂಡು ಕಂಬಳಿಕೊಪ್ಪೆ ಹೆಗಲಮೇಲೆ ಹಾಕಿಕೊಂಡು ಹೊರಟ. +ಸೀತಾಪರ್ವತವನ್ನೇರುವ ಕಾಲು ಹಾದಿಯ ಮೇಲೆಲ್ಲ ಹುಲ್ಲು ಬೆಳೆದು ದಾರಿ ಮಾಯವಾಗಿತ್ತು. ಹಿಂದೆ ಒಂದು ಬಾರಿ ಹತ್ತಿದ ನೆನಪಿನ ಮೇಲೆ, ಅಂದಾಜಿನಿಂದ ದಾರಿ ಕಂಡುಹಿಡಿಯುತ್ತ ಮುಂದೆ ನಡೆದ ಕೃಷ್ಣಯ್ಯ. ಕಾಡು, ಪೊದೆ, ಬಳ್ಳಿಗಳು ಬೇಕಾಬಿಟ್ಟಿಯಾಗಿ ಬೆಳೆದಿದ್ದವು. ಮಳೆಗಾಲದಲ್ಲಿ ಜನಸಂಚಾರ ಕಡಿಮೆ. ಹುಲ್ಲು ಮೇಯಲು ದನಗಳೂ ಬರುವುದಿಲ್ಲ. ಈಗೀಗ ಕೊಟ್ಟಿಗೆಗೆ ಸೊಪ್ಪು ಕಡಿಯುವವನೆಂದರೆ ಗಣಪಯ್ಯ ಒಬ್ಬನೇ. ಕಾಡು ಯಥೇಚ್ಛವಾಗಿ ಬೆಳೆದಿತ್ತು. ದಟ್ಟವಾಗಿ ಒಂದನ್ನೊಂದು ತಬ್ಬಿಕೊಂಡ ಮರಗಳ ಕೆಳಗೆ ರಾಶಿ ಕತ್ತಲು, ಕತ್ತಲಲ್ಲಿ ಪೊದೆಗಳ ಮರೆಯಲ್ಲಿ ಅದೇನೋ ಓಡಾಡಿದ ಹಾಗೆ. ಅಲ್ಲೊಂದು ಮೊಲ ಕುಪ್ಪಳಿಸಿತು, ಇಲ್ಲೊಂದು ಕೋಳಿ ಚಿಮ್ಮಿತು, ಮರದ ಮೇಲೆ ನವಿಲಕ್ಕಿ ಕೂಗಿತು. ಮಳೆ-ಗಾಳಿಗೆ ಈ ಜೀವ ಜಂತುಗಳು ಇಲ್ಲಿ ಹೇಗಿರುತ್ತವೆ ಎಂದು ಯೋಚಿಸುತ್ತ ನಡೆದ. +ಗುಡ್ಡದ ನೆತ್ತಿಯವರೆಗೂ ಕಾಡಿಲ್ಲ; ಅರ್ಧವರೆಗಷ್ಟೇ ಕಾಡು. ಅನಂತರ ಬೋಳು ಬೋಳು ಹಸಿರು ನೆಲ. ಅಲ್ಲಲ್ಲಿ ಬಿದ್ದಿರುವ ಹೆಬ್ಬಂಡೆಗಳು; ದೂರದ ನೋಟ ಸಿಗುವುದು ಇಲ್ಲಿಂದ. ತಲೆಯ ಮೇಲೆ ಕವಚಿಕೊಂಡ ಮರಗಳ ಕತ್ತಲು ಹಿಂದಾಯಿತು. ಕಾಲಿಗೆ ತೊಡರುತ್ತಿದ್ದ ಬಳ್ಳಿ ಪೊದೆಗಳು ಹಿಂದುಳಿದವು. ಬಟ್ಟಬಯಲಲ್ಲಿ ನಿಂತು ನೋಡಿದ. ಎದುರಿಗೆ ಸಮುದ್ರ. ಮಣ್ಣಿನ ಬಣ್ಣಕ್ಕೆ ತಿರುಗಿ ನಿಂತ ನೀರು. ಕಣ್ಣ ದೃಷ್ಟಿ ಹಾಯುವವರೆಗೂ ನೀರೇ ನೀರು. ದೂರದಲ್ಲಿ ಲಿಂಗನಮಕ್ಕಿ ಅಣೆಕಟ್ಟು. ಈ ಅಣೆಕಟ್ಟಿನ ಬಳಿಯಲ್ಲಿ ಧುಮುಕಿ ಮಂಜಾಗಿ ಮೋಡವಾಗಿ ಮೇಲೇರುತ್ತಿದ್ದ ಬಿಳಿಮುಗಿಲು. ನಿಂತ ನೀರಿನ ಮಧ್ಯೆ ಅಲ್ಲಲ್ಲಿ ತೇಲುತ್ತಿದ್ದ ಹಸಿರು ಗುಡ್ದಗಳು. ಒಂದು ಕಾಲದಲ್ಲಿ ದೊಡ್ಡ ದೊಡ್ಡ ಗುಡ್ಡಗಳಾಗಿದ್ದು ಈಗ ನೀರಿನಲ್ಲಿ ಪೂರ್ಣ ಮುಳುಗಿ ಗುಡ್ಡಗಳ ನೆತ್ತಿಯಷ್ಟೇ ಕಾಣುತ್ತಿತ್ತು. +ನಾಳೆ ಡ್ಯಾಮು ಮುಗಿದ ಮೇಲೆ ಈ ಗುಡ್ಡದ ಗತಿಯೂ ಇದೆ. ಇಲ್ಲೂ ನೀರು ನಿಲ್ಲುತ್ತದೆ. ಗುಡ್ಡ ಪೂರ್ಣ ಮುಳುಗುತ್ತದೆ. ಹೊಸಮನೆಹಳ್ಳಿ, ನಾಗವೇಣಿಯ ಮನೆ, ಈ ಗುಹೆ ಎಲ್ಲವೂ ಶರಾವತಿಯ ಜಲೋಧರದಲ್ಲಿ ಮಾಯವಾಗಿಬಿಡುತ್ತದೆ. ಡ್ಯಾಮು ಪೂರ್ಣ ಮುಗಿದಿಲ್ಲವೆಂದೇ ನೀರು ಹರಿದು ಹೋಗುತ್ತಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನೀರು ಎಲ್ಲಿಯವರೆಗೂ ಏರುತ್ತಿತ್ತೋ….. +‘ಬೆಳ್ಳೀ…ಬಾ ಬಾ ಬಾ… +ಕೃಷ್ಣಯ್ಯ ಅತ್ತಿತ್ತ ದೃಷ್ಟಿ ಹಾಯಿಸುತ್ತ ಸಾಗಿದ. ಬಂಡೆಗಳು ಎದುರಾದವು. ಮೊದಲಬಾರಿಗೆ ನಾಗವೇಣಿಯೊಂದಿಗೆ ಬಂದಾಗ ಕುಳಿತ ಬಂಡೆ ಗೋಚರಿಸಿಸಿತು. ಮಧುರ ನೆನಪು: ಹಸಿರು ಸೀರೆ, ಕೆಂಪು ರವಿಕೆ ತೊಟ್ತ ನಾಗವೇಣಿ ಕಪ್ಪು ಬಂಡೆಗೆ ಒರಗಿ ಕುಳಿತಿದ್ದಳು. ಅಬ್ಬ ಸಾಕಾಗಿಹೋಯ್ತು ಎಂದಾಕೆ ಕತ್ತು, ಕಿವಿ, ಕೆನ್ನೆಗಳ ಮೇಲಿಳಿಯುತ್ತಿದ್ದ ಬೆವರುಗಳನ್ನು ತೊಡೆದುಕೊಳ್ಳುತ್ತಿದ್ದಳು. ನಾಗು ಎಷ್ಟು ಚೆನ್ನಾಗಿ ಕಾಣುತ್ತಾಳಲ್ಲ ಎಂದು ಆಸೆಯಿಂದ, ಹಸಿವಿನಿಂದ, ಕಾಮದಿಂದ, ಉದ್ರೇಕದಿಂದ ನೋಡಿದ್ದೆ. ಮೈ ಬಿಸಿ ಏರಿತ್ತು. ಇದೊಂದು ಕ್ಷಣ, ಎದುರು ನಿಂತ ಗಣಪಯ್ಯನಿಂದಾಗಿ ಈ ಎಲ್ಲ ಬಿಸಿ ಆರಿತು. ನಾಗು ಈಗ ಗಣಪಯ್ಯನ ಸ್ವತ್ತು ಎಂದು ತುಟಿ ಕಚ್ಚಿ, ಕೈಬೊಗಸೆಯಲ್ಲಿಯ ನೀರು ಮತ್ತೆ ನದಿಗೇ ಬಿಟ್ಟವನಂತೆ ಹಿಂದೆಸರಿದ…ಈಗಲೂ ನಾಗವೇಣಿ ತನ್ನ ಪಾಲಿಗೆ ಪರಕೀಯಳು, ತಾನು ಬಯಸಬಾರದ ತಂಪು ಜಲ ಆಕೆ… +ಆ ಬಂಡೆಯ ಬಳಿ ಒಂದುಕ್ಷಣ ನಿಂತು, ಆ ಬಂಡೆಯನ್ನು ಹತ್ತಿ ಅತ್ತ ಇಳಿದ. ಗುಹೆ ಕಂಡಿತು. ಗುಹೆಯ ಎದುರು ಬೆಳ್ಳಿ ಮಲಗಿದ್ದಾಳೆ. +“ಬೆಳ್ಳೀ…ಬಾ ಬಾ ಬಾ…” +ನಾಲ್ಕು ಹೆಜ್ಜೆ ಇಟ್ಟವ ಹಿಮ್ಮೆಟ್ಟಿನಿಂತ. ಬೆಳ್ಳೀ ಮಲಗಿಲ್ಲ. ಬಿದ್ದುಕೊಂಡಿದೆ. ಕತ್ತು ಮುರಿದು ಪಕ್ಕಕ್ಕೆ ಹೊರಳಿದೆ. ರಕ್ತ-ಕೆಂಪುರಕ್ತ-ದಪ್ಪಗೆ ಹಸಿಹಸಿಯಾಗಿ ಅಷ್ಟಗಲ ಹಸಿರು ಹುಲ್ಲಿನಮೇಲೆ ನಿಂತಿದೆ… +“ಬೆಳ್ಳೀ… +ಅಚ್ಚಬಿಳಿಯ, ಮೂರೋ ನಾಲ್ಕೋ ಕಡೆ ಅಂಗೈ‌ಅಗಲದ ಕಪ್ಪು ಮಚ್ಚೆಗಳುಳ್ಳ ಬೆಳ್ಳಿ ಕಿವಿಬಡಿದು, ತಲೆತಿರುಗಿಸಿ ನೋಡಲಿಲ್ಲ. ಬದಲಿಗೆ, ಗುಹೆಯ ಒಳಗಿನಿಂದ ಗುರುಗುಡುವ ಸದ್ದ ಕೇಳಿಸಿತು. ಮೈಮೇಲೆ ನೀರು ಉಗ್ಗಿದಂತಾಗಿ ಬೆಳ್ಳಿಯತ್ತ ಬಾಗಿ ಅದರ ಮೈನೇವರಿಸುತ್ತಿದ್ದ ಕೃಷ್ಣಯ್ಯ ಬೆದರಿ ನಿಂತ. ಗುರುಗುಡುವ ಸದ್ದು ಇನ್ನೂ ಜೋರಾಗಲು ನಾಲ್ಕು ಹೆಜ್ಜೆ ಹಿಂದೆಬಂದು, ಹತ್ತಿಬಂದ ಬಂಡೆಯತ್ತ ಸರಿದು, ಬಂಡೆಯ ಹಿಂಬದಿಯಲ್ಲಿ ರಕ್ಷಣೆಪಡೆದ. +ಗುಹೆಯ ಒಳಗಿನಿಂದ ಹುಲಿ ಹೊರಬರಲಿಲ್ಲ. ಕೃಷ್ನಯ್ಯ ಬರಿಗೈಯಲ್ಲಿ ಮುಂದೆ ಹೋಗುವುದೂ ಅಪಾಯ ಎಂದರಿತು ವೇಗವಾಗಿಯೇ ಅತ್ತ ಬೆನ್ನು ಹಾಕಿ ಇಳಿಯತೊಡಗಿದ. +ಗಣಪಯ್ಯ ವಿಷಯ ಕೇಳಿಯೇ ಕುಸಿದುಬಿದ್ದ. ಬೆಳ್ಳಿ ಹೋದರೆ ಹೋಗಲಿ. ಹುಲಿ ಮನೆಯ ಹಿಂಬದಿಯಲ್ಲೇ ಇದೆ ಎಂದರೆ ಇಲ್ಲಿ ಬದುಕುವುದು ಹೇಗೆ, ಓಡಿಯಾಡುವುದು ಹೇಗೆ? ಈ ಹುಲಿ ಇನ್ನು ಎಷ್ಟು ದಿನ ಇಲ್ಲಿ ಇರುತ್ತದಂತೆ? ಇಂದು ಬೆಳ್ಳಿಯನ್ನು ಹಿಡಿದ ಹುಲಿ ನಾಳೆ ಕೊಟ್ಟಿಗೆಗೆ, ನಾಡಿದ್ದು ಮನೆಯೊಳಗೇ ನುಗ್ಗಲಾರದೆ? ಹುಲು ತಾನಿಲ್ಲಿಗೆ ಬಂದಿದ್ದೇನೆಂಬುದನ್ನು ಈ ಹಿಂದೆಯೇ ಮುನ್ಸೂಚನೆ ಕೊಟ್ಟಿತ್ತು. ಆದರೂ ಹುಲಿಹಿಡಿದ ಬೆಳ್ಳಿಯನ್ನು ತಾನು ಕಣ್ಣಾರೆ ಕಂಡುಬಂದೆನೆಂದು, ಹುಲಿಯ ಕೂಗನ್ನು ತಾನು ಕಿವಿಯಾರೆ ಕೇಳಿದೆನೆಂದು ಕೃಷ್ಣಯ್ಯ ಹೇಳಿದ ಮೇಲೆ ಗಣಪಯ್ಯ ಮತ್ತೂ ಇಳಿದು ಹೋದ. ಒಳಹೋಗಿ ಹೆಂಡತಿಗೆ- +“ಕೇಳಿದ್ಯೇನೆ, ಬೆಳ್ಳೀನ ಹುಲಿ ಹಿಡೀತಂತೆ” +ಎಂದು ಹೇಳಿದ. ಅವಳು ತಲೆ ಎತ್ತಿ ಸಪ್ಪೆ ನೋಟ ಬೀರಿದಾಗ- +“ಆ ಹುಲಿಯೊಂದು ನಿನ್ನ ಹಿಡಕೊಂಡು ಹೋಗಿದಿದ್ರೆ ಒಂದು ಪೀಡೆ ಕಳೀತಿತ್ತು” +ಎಂದು ಕೂಗಾಡಿದ. +“ಸುತ್ಲೂ ನೀರು ನಿಂತಿರೋದಕ್ಕೂ, ಕಾಡುಪ್ರಾಣಿಗಳು ಬಂದು ಮನೇ ಹತ್ರ ಸೇರಿಕೊಂಡಿರೋದಕ್ಕೂ, ನಿನ್ ಸುಡುಗಾಡು ಮುಖದ ಮೇಲೆ ಕತ್ತಲು ಕವಿದಿರೋದಿಕ್ಕೂ ಸರಿಯಾಗಿದೆ…” +ಎಂದು ಬೊಬ್ಬೆ ಹೊಡೆದ. +ಮುಂಜಾನೆಯಿಂದ ನಿಂತಿದ್ದ ಮಳೆ ಅದೇ ಆರಂಭವಾಗಿತ್ತು. ಕೃಷ್ಣಯ್ಯ ಜಗುಲಿಯ ಮೇಲೆ ನಿಂತಿದ್ದು ಗಣಪಯ್ಯನ ಮಾತನ್ನು ಆಲಿಸುತ್ತಿದ್ದ. ನಾಗವೇಣಿಯ ಸದ್ದೇ ಇರಲಿಲ್ಲ. ನಿಧಾನವಾಗಿ ಪ್ರಾರಂಭವಾದ ಮಳೆ ಕ್ರಮೇಣ ಹೆಚ್ಚಾಗುತ್ತಾಹೋಯಿತು. ಈ ಬದಿಯಿಂದ ಕತ್ತಲೆಯೂ ಕವಿಯಿತು. +ಆಸ್ಲೇಷ +ಹೊಸಮನೆಯ ಸುತ್ತ ಆವರಿಸಿಕೊಂಡ ಮಲಿನಜಲ. ಉಕ್ಕಿ ಬಂದ ನೀರಿಗೆ ಅಂಜಿ ಪೊಟರೆ, ಹೊದರು, ಗುಹೆ ಹುತ್ತಗಳಿಂದ ಹೊರಬಂದ ಕ್ರಿಮಿಕೀಟ ಮೃಗಜಂತುಗಳ ಧಾಲಿ. ಹೊರಗಿನ ಜನರ ದರ್ಶನವಿಲ್ಲದೆ, ಹೊರಗಿನ ಜನರ ಮಾತು ಕಿವಿಗೆ ಬೀಲದೆ, ಮೂರನೆಯವರಲ್ಲದೆ ನಾಲ್ಕನೆಯವರಾಗಿ ಇನ್ನೊಬ್ಬರನ್ನು ಕಾಣದಂತಾಗಿ ಸಿಡಿದು ಹೋಗಿರುವ ತಲೆ. ಈ ಮಧ್ಯೆ, ಇದಿಷ್ಟೇ ಸಾಲದೆಂಬಂತೆ ಮೂರು ತಿಂಗಳಿಂದ ನಾಲ್ಕು ಎಂಟುದಿನ ಹೊಳವು ಕೊಟ್ಟರೂ, ಕಷ್ಟದ ಮೇಲೆ ಕಷ್ಟಗಳನ್ನು ಎದುರಿಸಬೇಕಾಗಿ ಬಂದ ನಿರ್ಭಾಗ್ಯ ಹೆಣ್ಣಿನ ಕಣ್ಣೀರಿನಂತೆ ಸುರಿಯುತ್ತಿರುವ ಮಳೆ, ಗಾಳಿ, ಜೊತೆಗೆ… +ಮನ ಪೂರ್ತಿಯಾಗಿ ನಗುವಂತಿಲ್ಲ, ಊಟ ಮಾಡುವಂತಿಲ್ಲ, ನಿದ್ದೆ ಮಾಡುವಂತಿಲ್ಲ, ಹೃದಯ ಬಿಚ್ಚಿ ಮಾತನಾಡುವಂತಿಲ್ಲ, ತನ್ನವರು ಎಂದು ಯಾರನ್ನೂ ನಂಬುವಂತಿಲ್ಲ. ಅಪ್ಪಿ ಮುದ್ದಿಡುವಂತಿಲ್ಲ. +ಮನೆ ಯಜಮಾನ ಗಣಪಯ್ಯನದೂ ಇದೇ ಪಾಡು. ನಾಗವೇಣಿಯದೂ ಇದೇ ಪಾಡು. ಕಾಲಿಗೆ ಸರಲ್ಪಳಿ ಹಾಕಿ, ಆ ಸರಪಳಿಯ ಇನ್ನೊಂದು ತುದಿಗೆ ಮರದ ದೊಡ್ದ ಕೊರಡು ಕಟ್ಟಿ ಅದನ್ನು ತಲೆಯ ಮೇಲೆ ಹೊರಿಸಿದಂತೆ. ಕಾಲಿಗೆ ಚುಚ್ಚಿಕೊಂಡ ಮುಳ್ಳಿನ ತುದಿ ಒಳಗೇನೇ ಉಳಿದು ಆಗಾಗ್ಗೆ ಅನಿರೀಕ್ಶಿತವಾಗಿ ಚುಚ್ಚುವಂತೆ…ಬದುಕು ಅಸಹನೀಯ… +ಗಣಪಯ್ಯನಿಗೆ ಹೆಂಡತಿಯ ಮೇಲೆ ನಂಬಿಕೆ ಬರುವುದೇ ಇಲ್ಲ. ಅವಳು ಕೃಷ್ನಯ್ಯನನ್ನು ತನ್ನ ಒಡಹುಟ್ಟಿದವನೆಂದು ಕರೆದಿರಬಹುದು. ಕೃಷ್ಣಯ್ಯ ಅವಳನ್ನು ತನ್ಗಿ ಎಂದು ಒಪ್ಪಿರಬಹುದು, ಆದರೂ ಅವರಿಬ್ಬರ ಮನಸ್ಸಿನಲ್ಲಿ ಬೇರೇನೋ ಇದೆ ಎಂಬ ಅನುಮಾನ. ನಾಗವೇಣಿ ಹಾವು ಬಂದರೆ ಹೊಡೆಯಲು ಕೃಷ್ಣಯ್ಯನನ್ನು ಕರೆಯುತ್ತಾಳೆ. ಅವಕಾಶ ಸಿಕ್ಕಾಗಲೆಲ್ಲ ಕೃಷ್ಣಯ್ಯನನ್ನು ತಿನ್ನುವಂತೆ, ಬಯಸುವಂತೆ, ಕೆಟ್ಟದಾಗಿ ನೋಡುತ್ತಾಳೆ. ಅವನೊಡನೆ ಮಾತನಾಡುವುದು, ನಗುವುದು ಈಗ ಕಡಿಮೆಯಾಗಿದೆಯಾದರೂ, ತಾನು ಒಂದೆರಡು ಬಾರಿ ಈ ಬಗ್ಗೆ ಕೇಳಿದ್ದೇ ಅಪರಾಧವಾಗಿ, ನಾಗವೇಣಿ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾಳೆ. +ಇನ್ನೇನು ತಾನೆ ಮಾಡುವುದು ಸಾಧ್ಯ? ಇಲ್ಲ, ಯಾವುದನ್ನೂ ವಿಚಾರಿಸದೆ ನಿನ್ನ ಮನಸ್ಸಿಗೆ ಬಂದ ಹಾಗೆ ಕೃಷ್ಣಯ್ಯನೊಡನೆ ಇದ್ದುಬಿಡು ಎಂದು ಹೇಳುವುದು ಸಾಧ್ಯವೇ? ಹೀಗೇ ಹೇಳಿದರೆ ನಾಗವೇಣಿ ಇದ್ದಾಳು. ಆದರೆ ತಾನು ಬದುಕಿರುವುದು ಹೇಗೆ ಅನಂತರ? ಕೃಷ್ಣಯ್ಯ ಅವಳ ಮನೆಯಲ್ಲೇ ಇದ್ದವ ಮದುವೆ ಮುನ್ನ ಇವರ ಸಂಬಂಧ ಹೇಗಿತ್ತೋ ಯಾರು ಬಲ್ಲರು? ಇವಳು ಕೃಷ್ಣಯ್ಯ ಕೃಷ್ಣಯ್ಯ ಎಂದು ಸಂಭ್ರಮಿಸುವಾಗ, ಕೃಷ್ಣಯ್ಯನನ್ನು ಇಲ್ಲಿಗೆ ಕರೆಸೋಣ ಎಂದಾಗ ತನಗೆ ಇದಾವುದೂ ಅರ್ಥವಾಗಲಿಲ್ಲ. ಈಗ ಆಗುತ್ತಿದೆ. ಎಲ್ಲವೂ ಅರ್ಥವಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ನಿಂತೀತು ಎಂಬುದರ ಅರಿವು ಮಾತ್ರ ಆಗುತ್ತಿಲ್ಲ. ಒಳ್ಳೆಯವಳೆಂದು ತಾನು ನಂಬಿದ, ಪ್ರೀತಿಸಿದ, ಕಾಮಿಸಿದ ನಾಗವೇಣಿ ತನಗೇನೇ ಮೋಸಮಾಡಬಹುದೇ? +ಗಣಪಯ್ಯ ಮೈಯಲ್ಲಿ ನಂಜು ಏರಿದಂತಾಗಿ ಹೆಂದತಿಯ ಮೇಲೆ ರೇಗಿಬೀಳತೊಡಗಿದ. ಕೃಷ್ನಯ್ಯನೊಡನೆ ಅದೊಂದು ರೀತಿಯಲ್ಲಿ ಮುಖ ಬಿಗಿದುಕೊಂಡು ಇರತೊಡಗಿದ. +ನಾಗವೇಣಿಯ ನಿರ್ಧಾರ ಬೇರೆಯಾಗಿತ್ತು. ಗಂದ ಎನ್ನುವ ಪ್ರಾಣಿಯ ಮೇಲೆ ಅವಳಿಗಿದ್ದ ಪ್ರೀತಿ, ವಿಶ್ವಾಸ ಊರಿಗೆ ಹೋಗುವುದು ಬೇಡ, ಇಲ್ಲೇ ಇರೋಣ ಎಂದಾಗಲೇ ಕಡಿಮೆಯಾಗಿತ್ತು. ಶರಾವತಿಯಲ್ಲಿ ನೀರು ಏರುತ್ತ, ಹಾವು, ಹುಲಿ ಹೊಸಮನೆಯ ಸೀತಾಪರ್ವತದಲ್ಲಿ ಬಂದು ಸೇರಿಕೊಳ್ಳತೊಡಗಿದಾಗ ಅವಳು ಗಂಡನನ್ನು ದೂರ ಮಾಡಿದಳು. ಕೃಷ್ಣಯ್ಯ ಯಾವಾಗಲೂ ಕಣ್ಣೆದುರು ಓಡಿಯಾಡುತ್ತಿರಲು ಗಣಪಯ್ಯ ಮನಸ್ಸಿನಿಂದ ಪೂರ್ಣವಾಗಿ ಹೊರಟಿದ್ದ. ಕೃಷ್ಣಯ್ಯನಿಗಾಗಿ ಮೈಮನಸ್ಸು ತುಡಿಯತೊಡಗಿತು, ಜೀವ ಹಂಬಲಿಸತೊಡಗಿತು. +ಕೃಷ್ಣಯ್ಯ ಶರಾವತಿ ಹೊಸಮನೆಯ ಸುತ್ತ ಮಡುವಾಗಿ ನಿಲ್ಲದೇ ಇದ್ದಿದ್ದರೆ, ಕಾಡುಪ್ರಾಣಿಗಳೆಲ್ಲ ಮನೆಯ ಸುತ್ತ ಓಡಾಡದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಹೊಸಮನೆಹಳ್ಳಿಯಿಂದ ಹೊರಟುಹೋಗಿರುತ್ತಿದ್ದ. ಕೃಷ್ಣಯ್ಯ ಮುಖ್ಯವಾಗಿ ನಾಗವೇಣಿಗಾಗಿ ಉಳಿದ. ಅವಳ ಸುಕ-ಸಂತೋಷಕ್ಕಾಗಿ ಉಳಿದ. ತನ್ನ ಅವಳ ಸ್ನೇಹದಿಂದಾಗಿ ಅವಳ ದಾಂಪತ್ಯ ಜೀವನ ಹಾಳಾಗಬಹುದು ಎನಿಸಿತಾದರೂ ಉಳಿದ. ಅವರಿಬ್ಬರ ಬಾಳಿನಲ್ಲಿ ತಾನು ಹುಳಿಹಿಂಡಬಾರದೆಂದು ನಿರ್ಧರಿಸಿದ. +ಆದರೂ ಹೊಸಮನೆಹಳ್ಳಿಯ ಸುತ್ತ ಆವೃತಗೊಂಡ ನೀರು ಇಳಿದಿರಲಿಲ್ಲ, ಗಾಳಿಯ ಹೊಡೆತ ಕಡಿಮೆಯಾಗಿರಲಿಲ್ಲ, ಆಸ್ಲೇಷ ಹಗಲು ರಾತ್ರಿಯೆನ್ನದೆ ಬೀಳುತ್ತಲೇ ಇತ್ತು. +ಯಾರೋ ಮೈ ಮುಟ್ಟಿ ಅಲುಗಾಡಿಸಿದಂತಾದಾಗ ಕಣ್ ತೆರೆದು ನೋಡಿದ, ಕಗ್ಗತ್ತಲು. ಸೂಜಿಮೊನೆಯಷ್ಟೂ ಬೆಳಕಿಲ್ಲ. ಸನಿಹದಲ್ಲಿ ಮೈಗೊರಗಿ ಅದಾರೋ ಕುಳಿತ ಅನುಭವ. ಭುಜ, ಮುಖದ ಮೇಲೆ ಓಡಿಯಾಡುತ್ತಿದ್ದ ಕೋಮಲ ಹಸ್ತ. +“ನಾಗೂ…” +“ಕೃಷ್ಣಾ…” +ನಾಗೂ ತನ್ನೆದೆಯ ಮೇಲೊರಗಿ, ತನ್ನ ಮುಖದ ಮೇಲೆ ಮುಖವಿರಿಸಿ- +“ಕೃಷ್ಣಯ್ಯ, ನನ್ನ ಹೀಗೆ ಯಾಕೆ ಕೊಲ್ತಿದೀಯಾ?” ಎಂದು ಹೇಳಿ ಬಲವಾಗಿ ಬಿರುಸಗಿ ಅವಚಿಕೊಂಡಾಗ, ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಗಣಪಯ್ಯ ಎದ್ದುಬಂದರೇನು ಗತಿ ಎಂದು ಹೆದರಿ, ಇದು ಎಂತಹ ಹೇಸಿಗೆಯ ಕೆಲಸ ಎಂದು ಅಸಹ್ಯಪಟ್ಟುಕೊಂಡು, ನಾಗವೇಣಿಯ ಕೈ ಕಿತ್ತೆಸೆದು ಅವಳನ್ನು ದೂರ ತಳ್ಳಿ ಕೆನ್ನೆಗೆ ಎರಡೇಟು ಬಿಗಿದು, ಏಕೆ ಅವಳ ಉದ್ರೇಕಕ್ಕೆ ತಕ್ಕ ಶಿಕ್ಷೆ ಕೊಡಬಾರದು ಎಂದು ಪ್ರಶ್ನಿಸಿಕೊಂಡು, ನಾಗವೇಣಿಯ ಕೋಮಲವಾದ, ಮೃದುವಾದ, ಬಿಸಿಯಾದ, ಕಾಯ ತನ್ನ ಮೈಯನ್ನು ಒತ್ತುತ್ತಿರಲು, ಬೇರೆಲ್ಲ ವಿಷಯಗಳ ಮೇಲೂ ಬುಟ್ಟಿ ಕವಚಿಹಾಕಿ, ಬೀಸುವ ಕಲ್ಲು ಹೇರಿ, ನಾಗವೇಣಿ ತನ್ನ ತೋಳುಗಳಲ್ಲಿರುವ ವಿಷಯ ಒಂದೇ ಪ್ರಮುಖವೆಂದು ನಿರ್ಧರಿಸಿ, ನಾಗೂ ಎಂದವಳ ಕಿವಿಯಲ್ಲಿ ಉಸುರಿದಾಗ ಅವಳು ಬಿಕ್ಕುತ್ತ, ಮೇಲುಸಿರು ಬಿಡುತ್ತ, ತೇಕುತ್ತ- +“ಕೃಷ್ಣಯ್ಯಾ” +ಎಂದು ತೇಲಿ ಹೋಗುತ್ತಿರುವಂತೆ ಚೀರಿದಳು. +ಉಕ್ಕಿ ಬಂದ ಪ್ರವಾಹದಲ್ಲಿ ಅವಳನ್ನು ತೆಕ್ಕೆ ಹಿಡಿದು ಕೃಷ್ಣಯ್ಯನೂ ತೇಲಿದ. ನಾಗವೇಣಿಯನ್ನು ಭರಸೆಳೆದು ಹಾಸಿಗೆಯತ್ತ ಎಳೆದುಕೊಂಡಾಗ ಹೊರಗೆ ಮಳೆ ಅಬ್ಬರಿಸಿತು. ಸೀತಾಪರ್ವತದ ಮೇಲಿನಿಂದ ನುಗ್ಗಿಬಂದ ಗಾಳಿ ಭರ್ ಎಂದು ಬೀಸಿತು. ಪಣತದ ಸುತ್ತ ಸುತ್ತುತ್ತಿದ್ದ ಇಲಿಗಳು ಕಿಚ್…ಕಿಚ್ ಎಂದು ಕಚ್ಚಾಡಿಕೊಂಡವು. ಗಣಪಯ್ಯನ ಗೊರಕೆ ಸದ್ದು ನಡುಮನೆಯವರೆಗೂ ಉರುಳಿಬಂದು ಇವರಿಬ್ಬರ ಬೆನ್ನು ತಟ್ಟಿತು. +ನಾಗವೇಣಿಯನ್ನು ದೂರಸರಿಸಿ ಕೃಷ್ಣಯ್ಯ ಎದ್ದು ಕುಳಿತ. ಹೋಗು ಹೋಗು ಎನ್ನಿವಂತೆ ಅವಳ ತಣ್ಣಗಿನ ತೋಳನ್ನು ನೂಕಿದ. ಎದ್ದ ನಾಗವೇಣಿ ಕೃಷ್ಣಯ್ಯನ ಹೆಗಲಿಗೇನೆ ಜೋತು ಬಿದ್ದಾಗ ಕೃಷ್ಣಯ್ಯ- +“ನಾಗೂ…ಇದೇನು ಆಯ್ತು?” +ಎಂದು ಬಿಕ್ಕಿದ. ಅವನೊಡನೆ ನಾಗವೇಣಿಯೂ ಬಿಕ್ಕಿದಳು. +“ಕೃಷ್ಣಯ್ಯ ನಾನು ನಿನ್ನ ಬಿಟ್ಟು ಇರಲಾರೆ…ಈ ಮನೇಲಿ ಬಾಳಲಾರೆ…” +“ನಾಗೂ, ಇದು ನೀನು ಹೇಳೋ ಮಾತಲ್ಲ….ಇದು ನಿನ್ನ ಮನೆ…ಗಣಪಯ್ಯ ನಿನ್ನ ಗಂಡ. ನೀನು ಇಲ್ಲಿ ಬದುಕಲೇಬೇಕು…ನನ್ನಿಂದ ನಿನ್ನ ಜೀವನ ಹಾಳಾಗಬಾರದು. ನಾನು ಕಾಲು ಜಾರಿದೆ ನಿಜ, ಆದರೆ ಇದೇ ಮೊದಲು…ಇದೇ ಕೊನೆ…ನಾನು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಟೆ…ಇಲ್ಲಿಂದ ಹೊರಟೆ…” +ಯಾವ ವಿಷಯಗಳ ಮೇಲೆ ಮುಸುಕೆಳೆದು ನಾಗವೇಣಿಯನ್ನು ಹತ್ತಿರ ಎಳೆದುಕೊಂಡಿದ್ದನೋ ಆ ಎಲ್ಲಾ ವಿಷಯಗಳೂ ಮುಸುಕು ಸರಿಸಿ ಬಂದು ಎದುರು ನಿಂತವು. ಕೃಷ್ಣಯ್ಯ ಹುಲಿಯನ್ನು ಕಂಡಂತೆ ಕಂಗಾಲಾಗಿಹೋದ. ಇದೇನು ನಡೆಯಿತು ದೇವರೆ ಎಂದು ಮೈಪರಚಿಕೊಂಡ. ಕೊನೆಗೂ ಈ ಕೆಲಸವಾಯಿತೆ ಎಂದು ತಲೆಯನ್ನು ಗೋಡೆಗೆ ಗಟ್ಟಿಸಿಕೊಂಡ. ಶರಾವತಿ ಏರಿಬಂದಳೇ? ನೀರು ಮನೆಯವರೆಗೂ ಮಡುಗಟ್ಟಿ ನಿಂತಿತೆ? ಸೀತಾಪರ್ವತ ನೀರಿನಲ್ಲಿ ಮುಳುಗಿಹೋಯಿತೇ ಎಂದು ಹಲುಬಿದ. ಮುಂದೇನು ಮಾಡುವುದೆಂದು ಕೈಹಿಸುಕಿಕೊಂಡ. ನಾಗವೇಣಿಯನ್ನು ಹತ್ತಿರ ಎಳೆದುಕೊಂಡು ಕ್ರೋಧದಿಂದ ನುಡಿದ- +“ನಾಗೂ, ನೀನು ಇಷ್ಟು ಮುಂದುವರಿಯಬಾರದಿತ್ತು. ಗಂಡನಿಗೆ ವಂಚಿಸಿ ಇಲ್ಲಿಗೆ ಬರಬಾರದಿತ್ತು. ನನ್ನನ್ನು ಅಡ್ಡಹಾದಿಗೆ ಎಳೆಯಬಾರದಿತ್ತು. ಆಯ್ತು, ಏನೋ ಆಗಿಹೋಯ್ತು, ಇನ್ನು ನಡಿ…ಹುಂ… +ಅವಳನ್ನು ಬಿರುಸಾಗಿ ನೂಕಿದ, ನಾಗವೇಣಿ ಸಾವರಿಸಿಕೊಂಡಳು. ಕೃಷ್ಣಯ್ಯನ ತೋಳನ್ನು ಚಪಲತೆಯಿಂದ ಸವರುತ್ತ ಅವಳೆಂದಳು- +“ಕೃಷ್ಣಯ್ಯ, ನಾನಿವತ್ತು ಸುಖಿ, ನಾಳೆ ಬೇಕಾದ್ರೆ ನದೀಗೆ ಹಾರಿ ಸಾಯಲಿಕ್ಕೂ ನಾನು ಸಿದ್ಧ. ನನ್ನ ಆಸೆ ಈವತ್ತಿಗೆ ಈಡೇರಿತು…” +ನಾಗವೇಣಿ ಎದ್ದು ಹೋದ ಅನುಭವವಾಯಿತು. ಕೃಷ್ಣಯ್ಯ ಯೋಚಿಸುತ್ತ ಕುಳಿತೇ ಇದ್ದ. +ನಾನಿವತ್ತು ಸುಖಿ…ನನ್ನ ಆಸೆ ಈವತ್ತಿಗೆ ಈಡೇರಿತು… +ಇದು ಯಾರು ಹೇಳಿದ ಮಾತು? ನಾಗವೇಣಿಯೇ ಇಲ್ಲ, ತನ್ನ ಹೃದಯದ ಮಾತನ್ನೇ ನಾಗವೇಣಿ ತನಗೆ ಹೇಳಿಹೋದಳೆ ಹೇಗೆ? ಈಗ ಆದುದು ಸರಿಯೋ, ತಪ್ಪೋ ಎಂಬ ಪ್ರಶ್ನೆ ಬೇರೆ. ಆದರೆ ಕಳೆದುಹೋದ ಈ ಹಲವಾರು ನಿಮಿಷಗಳಿಂದ ಜೀವಕ್ಕೆ ಹಾ ಎನಿಸಿತಲ್ಲವೆ? ದೇಹಕ್ಕೆ ತಂಪಾಯಿತಲ್ಲವೆ? +ಕೃಷ್ಣಯ್ಯ ತಲೆಕೊಡವಿ ಕಂಬಳಿ ಎಳೆದುಕೊಂಡು ಮಲಗಿದ. ಮಳೆ ಜೋಗುಳ ಹಾಡುತ್ತಿತ್ತು. +ಬೆಲಕು ಹರಿಯುತ್ತಿರುವಂತೆಯೇ ಕೃಷ್ಣಯ್ಯ ಎದ್ದ. ಇಲ್ಲೇ ಉಳಿದರೆ ಮುಂದಿನ ಅನಾಹುತಗಳಿಗೆಲ್ಲ ತಾನೇ ಕಾರಣನಾಗಬೇಕು. ಇನ್ನು ಇಲ್ಲಿಂದ ಹೊರಟುಬಿಡಬೇಕು. ಸೀತಾಪರ್ವತದ ಆ ಬದಿಯಿಂದ ಸಂಪದ ಗುಡ್ಡದ ಬೆನ್ನಿಗೆ ಹೆಚ್ಚು ದೂರವೇನಿಲ್ಲ, ನಿಂತ ನೀರಿನಲ್ಲಿ ಈಜು ಹೊಡೆದುಕೊಂಡು ಹೋಗಬಹುದು. ಮರಬಳ್ಳಿ ಕಾಲಿಗೆ ತೊಡರದಂತೆ ನೋಡಿಕೊಂಡರಾಯಿತು. ಹೇಗೂ ನಾಗವೇಣಿಗೆ ಹೇಳಿದ್ದೇನೆ. ಗಣಪಯ್ಯನಿಗೆ ಅರ್ಥವಾದೀತು, ಯಜಮಾನರಿಗೆ ಏನಾದರೂ ಕುಂಟು ಹೆಳೆ ಹೇಳಿದರಾಯಿತು. ಇನ್ನು ಇಲ್ಲಿರಬಾರದು. +ಎದ್ದ. ನಿಧಾನವಾಗಿ ಬಾಗಿಲು ತೆರೆದುಕೊಂಡು ಹೊರಬಂದ. ಮಳೆ ತುಂತುರಾಗಿ ಬೀಳುತ್ತಿತ್ತು. ಕಂಬಳಿ ಮರೆತು ನೆನೆಯುತ್ತಲೇ ನಡೆದ, ನಾಗವೇಣಿಯ ನೆನಪಾಯಿತು. ಇದ್ದು ಬಿಡಲೇ? ಗಣಪಯ್ಯನಿಗೆ ತಿಳಿಯದ ಹಾಗೆ ಇಲ್ಲಿಯೇ ನಾಗವೇಣಿಯ ಅಣ್ಣನಾಗಿ ಉಳಿಯಲೇ? ಇದು ಹೇಸಿಗೆಯ ಕೆಲಸ. ತನಗೆ ಹೇಳಿದ್ದಲ್ಲ. ಹಿಂದಿನ ರಾತ್ರಿ ನಡೆದುದೇ ಹೆಚ್ಚಾಯಿತು. ಮತ್ತೂ ಮುಂದುವರೆಯುವುದು ಬೇಡ. +ಸೀತಾಪರ್ವತದ ಬೆನ್ನಮೇಲಿಂದ ಅರಲಗೋಡಿನತ್ತ ತಿರುಗಿ, ಇಳಿದ, ನೀರು ತಣ್ಣಗೆ ನಿಂತಿತ್ತು. ಸಂಪ ಕಾಣುತ್ತಿತ್ತು. ಅಲ್ಲಿಯವರೆಗೂ ಈಜಬಲ್ಲೆನೆಂಬ ಭರವಸೆ ಇತ್ತು. ಅಂಗಿ-ಪಂಚೆ ಬಿಚ್ಚಿ ತಲೆಗೆ ಕಟ್ಟಿಕೊಂಡು ನೀರಿಗೆ ಹಾರಿದ. ಹೆಚ್ಚು ಯೋಚನೆ ಮಾಡುವಂತಿರಲಿಲ್ಲ. +ನೀರಿನಲ್ಲಿ ಪ್ರವಾಹ ಸೆಳೆತವಿರಲಿಲ್ಲ. ನೀರು ಶಾಂತವಾಗಿಯೇ ಇತ್ತು. ಕೈ ಬೀಸುತ್ತ, ನೀರನ್ನು ಹಿಂದಕ್ಕೆ ತಳ್ಳಿಕೊಂಡು ಅಷ್ಟು ದೂರ ಬಂದವನು, ಬೇಕೆಂದೇ ತಿರುಗಿ ನೋಡಿದ. ನಾಗವೇಣಿ ದಂಡೆಯ ಮೇಲೆ ನಿಂತು ಕೈ ಬೀಸುತ್ತಿದ್ದಾಳೆ. ಅವಳನ್ನು ಗಮನಿಸದೆ ಎದೆಯನ್ನು ಕಲ್ಲುಮಾಡಿಕೊಂಡು ಕೈ ಬಡಿದ. ಇನ್ನೂ ಸ್ವಲ್ಪ ಮುಂದೆ ಬಂದು ನೋಡಿದ. ದಂಡೆಯ ಮೇಲೆ ನಾಗವೇಣಿ ಇರಲಿಲ್ಲ. ಅವಳ ತಲೆಯಷ್ಟೆ ನೀರಿನಲ್ಲಿ ಮೇಲೆದ್ದು ಕಾಣದಾಯಿತು. ‘ನಾಗೂ’ ಎಂದು ಕೂಗಿ ತಿರುಗಿದ. ವೇಗವಾಗಿ ನೀರನ್ನು ಸೀಳಿಕೊಂಡು ಅತ್ತ ನುಗ್ಗಿದ. +ನಾಗವೇಣಿ ‘ಕೃಷ್ಣಯ್ಯಾ’ ಎಂದು ಕೂಗಿಕೊಂಡು ಮನೆಯಿಂದ ಹೊರಬಿದ್ದಾಗ ಗಣಪಯ್ಯನಿಗೆ ಎಚ್ಚರ. ಇವಳೇಕೆ ಕೂಗಿಕೊಂಡಳು ಎಂದು ಎದ್ದು ಹೊರಬಂದ. ನಾಗವೇಣಿ ಅರಲಗೋಡಿನ ದಾರಿ ಹಿಡಿದು ಓಡುತ್ತಿದ್ದಾಳೆ. +ಗಣಪಯ್ಯ ಬಾಗಿಲೆಳೆದುಕೊಂಡು ನಾಗವೇಣಿಯ ಬೆನ್ನು ಹತ್ತಿದ. ಇದು ಇಲ್ಲಿಗೆ ಬಂದು ಮುಟ್ಟುತ್ತದೆಂಬುದು ಎಂದೋ ಖಚಿತವಾಗಿತ್ತು. ಇಂದು ಮಾತ್ರ ಯಾವುದಾದರೊಂದು ತೀರ್ಮಾನವಾಗಿಬಿಡಬೇಕು ಎಂದು ನಿರ್ಧರಿಸಿದ. ಯಾವುದೋ ಕ್ರೀಡೆಯನ್ನು ದೂರ ನಿಂತು ನೋಡುವವನಂತೆ ನಿರಾಸಕ್ತಿಯಿಂದ ಸೀತಾಪರ್ವತ ಹತ್ತಿ ಇಳಿದು, ನೀರಿನತ್ತ ಬಂದ. ಕೃಷ್ಣಯ್ಯ ಈಜಿಕೊಂಡು ಹೋಗುತ್ತಿದ್ದ. ದಂಡೆಯ ಮೇಲೆ ನಿಂತ ನಾಗವೇಣಿ ಅಳುತ್ತ-ಕರೆಯುತ್ತ ಪರದಾಡುತ್ತಿದ್ದಳು. ಗಣಪಯ್ಯ ಮರಗಲ ಮರೆಯಲ್ಲಿ ನಿಂತು ನೋಡಿದ. ನೋಡಿಯೇ ನೋಡಿದ… +ನಾಗವೇಣಿ ಧ್ವನಿ ಎತ್ತರಿಸಿ ಕೂಗಿದಳು. ಕೃಷ್ಣಯ್ಯ ತಿರುಗಿಬಾರದಿರಲು ಅವಳು ದಂಡೆಯ ಮೇಲಿಂದ ನೀರಿಗೆ ಹಾರಿಕೊಂಡಳು. +ಗಣಪಯ್ಯ ಮುನ್ನುಗ್ಗಿದ. ಕೃಷ್ಣಯ್ಯ ವೇಗವಾಗಿಯೇ ಬಂದ-ನಾಗವೇಣಿ ನೀರಿಗೆ ಬಿದ್ದಲ್ಲಿಗೆ. ಎರಡು ಮೂರು ನಿಮಿಷಗಳವರೆಗೆ ಅದೇನೋ ಹೋರಾಟ-ನೀರ ಚೆಲ್ಲಾಟ ಕಾಣಿಸಿತು. ಆ ನಂತರ ಏನೂ ಕಾಣಿಸಲಿಲ್ಲ. ಎಲ್ಲವೂ ಸ್ತಬ್ದವಾಗಿ, ಶಾಂತವಾಗಿ ನೀರು ಎಂದಿನಂತೆಯೇ ತಣ್ಣಗೆ ಹೆಪ್ಪುಗಟ್ಟಿ ನಿಂತುಬಿಟ್ಟಿತು. +ಏನು ಮಾಡಬೇಕೆಂದೇ ತಿಳಿಯದಾಯಿತು, ಅಳಬೇಕೆ? ನಗಬೇಕೆ? ನೀರಿಗೆ ಹಾರಿ ಅವರನ್ನು ಹುಡುಕಬೇಕೆ? ಇಲ್ಲ ತಾನೂ ಅವರ ದಾರಿ ಹಿಡಿಯಬೇಕೆ? +ನಿಧಾನವಾಗಿ ನಡೆದುಕೊಂಡು ಮನೆಯತ್ತ ಬಂದ. ಚಪ್ಪರದ ಒಳಗೆ ಕಾಲಿಡುತ್ತಿರುವಾಗ ಅದೇನೋ ಗುರುಗುಡುವ ಸದ್ದು ಕೇಳಿಸಿತು. ತಲೆ ಎತ್ತಿ ನೋಡಿದ-ಹುಲಿ! +ಮುಂದಿನ ಪಂಜಗಳನ್ನು ನೆಲದ ಮೇಲೆ ಊರಿಕೊಂಡು, ಜಗುಲಿಯ ಸೆಗಣಿ ಸಾರಿಸಿದ ನೆಲಕ್ಕೆ ಬಾಲ ಬಡಿಯುತ್ತ, ಒಮ್ಮೆ ಆ ಎಂದು ಆಕಳಿಸಿ, ನಾಲಿಗೆಯಿಂದ ಗಾಳಿ ನೆಕ್ಕಿ, ಗಣಪಯ್ಯನನ್ನು ಹಸಿವಿನಿಂದ, ಆಸೆಯಿಂದ, ಕಾಮದಿಂದ ನೋಡಿ ಗುರ್ರ್ ಎಂದಿತು ಹುಲಿ. +ಗಣಪಯ್ಯ ಮುಂದಿಟ್ತ ಹೆಜ್ಜೆಯನ್ನು ಪ್ರಯಾಸದಿಂದ ಕಿತ್ತು ಹಿಂದೆ ಸರಿಯಲಾರಂಭಿಸಿದ. ಹುಲುಯ ಕಣ್ಣು ಮಿಂಚಿತು. ಮೈ ಅರಳಿತು. ಹುಲಿ ನೆಲವನ್ನು ಕಾಲುಗಳಿಂದ ಅಮುಕಿ ಮೇಲೆ ನೆಗೆಯಿತು. ಗಣಪಯ್ಯ ಅರಚಿಕೊಳ್ಳಲೆಂದು ಬಾಯಿ ತೆರೆದ ಅಷ್ಟೆ… +ಹೊಸಮನೆ ಹಳ್ಳಿಯ ಸುತ್ತ ಶರಾವತಿಯ ನೀರು ನಿಂತೇ ಇತ್ತು. ಸೀತಾಪರ್ವತದ ಮೇಲಿಂದ ಗಾಳಿ ಬೀಸುತ್ತಲೇ ಇತ್ತು. ಮಳೆ ಬೀಳುತ್ತಲೇ ಇತ್ತು-ಮೊಗ್ಗೆ….ಉಬ್ಬೆ…ಉತ್ತರೆ…ಹಸ್ತ…ಚಿತ್ತ……. +***** +ಮುಗಿಯಿತು +ಕೀಲಿಕರಣ: ಸೀತಾಶೇಖರ್ +ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […] +ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […] +– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_627.txt b/Kannada Sahitya/article_627.txt new file mode 100644 index 0000000000000000000000000000000000000000..0cea7ea4db32c542b6de554b9b7d76740242c64a --- /dev/null +++ b/Kannada Sahitya/article_627.txt @@ -0,0 +1,32 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: +ರಭಸದ ತಾಂತ್ರಿಕತೆ- +ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, ಪಲ್ಲಟಗಳು, ಆರ್ಥಿಕ ವಿಭಜನೆ- ಕಂದರ ಇವ್ಯಾವುಗಳನ್ನು ಗಮನಿಸಲಾಗದಷ್ಟು ರಭಸ. ಈ ರಭಸ ಎಷ್ಟರ ಮಟ್ಟಿಗಿನದೆಂದರೆ ಇದನ್ನು ಗ್ರಹಿಸಿ ಸೃಜನಶೀಲವಾಗಿ ಕೃತಿಗಳಲ್ಲಿ- ಆಲೋಚನೆಗಳಲ್ಲಿ- ಕ್ರಿಯಾತ್ಮಕತೆಯಲ್ಲಿ ಬಳಸಲಾಗದಂತಹ ದೌರ್ಬಲ್ಯಕ್ಕೆ – ಎಂತಹ ಪ್ರಜ್ಞೆಯನ್ನೂ ನೂಕಿಬಿಡುವಷ್ಟು ಶಕ್ತಿಶಾಲಿಯಾದ ರಭಸ. +ಈಗಿರುವ ಎಲ್ಲ ಸಾಹಿತ್ಯವನ್ನು ಹಠ ಹಿಡಿದು, ಬರೆದದ್ದೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತುತಕ್ಕೆ ತಳಕು ಹಾಕಿಬಿಡಬಹುದು. ತಾರ್ಕಿಕವಾಗಿ ವಾದಿಸಿಬಿಡಬಹುದು. ಅಭಿನಂದನೆ-ಮೆಚ್ಚುಗೆಯ ವಿಮರ್ಶೆ ಎಲ್ಲವನ್ನು ಪಡೆದುಬಿಡಬಹುದು. ಆದರೆ ಮೂಲ ಆಶಯದಲ್ಲಿ, ಪ್ರಜ್ಞಾಪೂರ್ವಕವಾದ ಪ್ರಯತ್ನವಿಲ್ಲದಿದ್ದರೆ ಎಷ್ಟು ಪ್ರಸ್ತುತವಾಗಿ ಉಳಿಯುತ್ತದೆ. ಇದು ನಿಜವಾಗಿ ನಮ್ಮ ಮನಸ್ಸುಗಳನ್ನು ಕಾಡಬೇಕಾದ ಪ್ರಶ್ನೆ. ಲೇಖಕರನ್ನು, ಚಿಂತಕರನ್ನು ಕಾಡಬೇಕಾಗಿರುವ ಪ್ರಶ್ನೆ. ಕನ್ನಡದಲ್ಲಿ ಇಂತಹ ಪ್ರಯತ್ನಗಳು ನಡೆದಿವೆಯೆ? – ಕೃತಿಗಳು ಬಂದಿವೆಯೆ? ಎಂಬ ಪ್ರಶ್ನೆಯನ್ನು, ಇತ್ತೀಚೆಗೆ ಬೆಂಗಳೂರಿನ ಸಮಕ್ಷಮ ದಲ್ಲಿ ವಿವೇಕ ಶಾನಭಾಗರು ಸಿಕ್ಕಿದಾಗ ಅವರ ಮುಂದಿಟ್ಟಿದ್ದೆ: ವಿವೇಕರ ಉತ್ತರ ಭರವಸೆ ನೀಡುವಂತದ್ದಾಗಿರಲಿಲ್ಲ. ಅಂತಹ ಸಾಮರ್ಥ್ಯ ಇನ್ನೂ ಗಳಿಸಬೇಕಾಗಿದೆ ಎಂಬ ಅರ್ಥದಲ್ಲಿ ಮಾತನಾಡಿದರು. ಇದು ನಿಜಕ್ಕೂ ಶೋಚನೀಯ ಸ್ಥಿತಿ. ಅದೆ ಸಂದರ್ಭದಲ್ಲಿ ಬಂದ ಪ್ರಶ್ನೆಗೆ ಅವರು ತಾಂತ್ರಿಕತೆಯ ಬಳಕೆ ‘ಸಹಜ’ವಾಗ ಬೇಕೆಂದರು. ಅದಾಗುವುದು ಬಹುಶಃ ದೂರದ ಮಾತು. ಅದಕ್ಕಿಂತಲೂ ಮುಂಚೆ ತಾಂತ್ರಿಕತೆಯನ್ನು ‘ಕನ್ನಡಕ್ಕೆ, ನಮ್ಮ ಅರ್ಥಿಕ ಪರಿಸರಕ್ಕೆ, ಸಂಸ್ಕೃತಿಗೆ ಒಗ್ಗಿಸುವ ಬಗ್ಗಿಸುವ’ ದಿಕ್ಕಿನಲ್ಲಿ ವಿವೇಕರಂತಹ, ಕನ್ನಡಸಾಹಿತ್ಯ.ಕಾಂ ಸುತ್ತಲೂ ವ್ಯಾಪಿಸಿರುವ ಯುವ ಜನಾಂಗ ಆಲೋಚಿಸಬೇಕಿದೆ. ಇಲ್ಲದಿದ್ದರೆ ತಾಂತ್ರಿಕ ವ್ಯಾಪ್ತಿಯ ಪರಿಸರದಲ್ಲಿ ನಮಗೆ ನಾವೇ ಅನ್ಯರಾಗಿ ಬಿಡುವ, ಒಬ್ಬಂಟಿಗಳಾಗಿಬಿಡುವ. ಅಪ್ರಾಮಾಣಿಕರಾಗಿಬಿಡುವ ಅಪಾಯ ತಪ್ಪಿದ್ದಲ್ಲ. ಇದು ಹೇಗಾಗಬಲ್ಲದು ಎಂಬುದಕ್ಕೆ ದೃಷ್ಟಾಂತವಾಗಿ ನಮ್ಮ ಸುದರ್ಶನ ಪಾಟೀಲ ಕುಲಕರ್ಣಿಯವರು ‘ಬರಹ’ದ ವಾಸುರವರ ಬಗೆಗೆ ಬರೆದಿರುವ ಸಣ್ಣ ಟಿಪ್ಪಣಿಯನ್ನು ನೋಡಿ. +ಇಂತಹ ಅಪಾಯಗಳ ಸೂಚನೆಗಳ ಮಧ್ಯದಲ್ಲಿ ಎರಡು ಸಂತೋಷದ ಮಾತುಗಳು. ನುಡಿಯ ಬಗೆಗೆ. ಕನ್ನಡ ಗಣಕ ಪರಿಷತ್ ನುಡಿ- ೪ ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಇರುವ ಮೈಕ್ರೊಸಾಫ್ಟ್ ಆಫೀಸ್‌ನ ಮ್ಯಾಕ್ರೋ ದಲ್ಲಿರುವ ಸಣ್ಣ ಪುಟ್ಟ ದೋಷಗಳು ಇದ್ದೇ ಇರುತ್ತವೆ. ಅವೆಲ್ಲ ಬಳಕೆಯ ವ್ಯಾಪ್ತಿ ಹೆಚ್ಚಾಗುತ್ತಿದ್ದಂತೆಯೇ ನಿವಾರಿಸಬಹುದಾದಂತಹವು. ಸಂಭ್ರಮಿಸಬೇಕಾದ ಸಂಗತಿಯೆಂದರೆ ಅದರಲ್ಲಿ ‘ಸ್ಪೆಲ್ ಚೆಕ್ಕರ್’ ಇರುವುದು. ಸುಮಾರು ೪೩,೦೦೦ ಪದಗಳಿಗಿಂತಲು ಅಧಿಕವಾಗಿರುವ ಸ್ಪೆಲ್ ಚೆಕ್ಕರ್. ಜೊತೆಗೆ ಡಿಕ್ಷನರಿ ಎಡಿಟರ್ ಸಹ ಇದೆ. ಇದನ್ನು ಬಳಸಿ ಅವರವರಿಗೆ ಬೇಕಾದಂತಹ ನಿಘಂಟನ್ನು ನಿರ್ಮಿಸಿಕೊಳ್ಳಬಹುದು. ಇಲ್ಲದಿದ್ದರೆ ಮತ್ತೊಂದು ನಿಘಂಟಿಗೆ ಪದಗಳನ್ನು ಸೇರಿಸುತ್ತಾ ಹೋಗಬಹುದು. ಲಿನಕ್ಸ್ ಆಪರೇಟಿಂಗ್ ಸಿಸ್ಟಂನಲ್ಲಿ ಕನ್ನಡವನ್ನು ಬಳಸುವಂತಹ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಣಕ ಪರಿಷತ್ ಹೊರಟಿರುವುದು ನಿಜಕ್ಕೂ ಪ್ರಶಂಸನೀಯ. ಸಾದ್ಯವಾದಷ್ಟೂ ಬೇಗ ನುಡಿಯ ಲಿನಕ್ಸ್ ಆವೃತ್ತಿ ಬಿಡುಗಡೆಯಾಗಲಿ. ಅಲ್ಲೂ ಟಿಟಿ‌ಏಫ್ ಹಾಗು ಓಟಿ‌ಎಫ್ ಫಾಂಟ್‌ಗಳಿಗೂ ಅವಕಾಶವಿರುವಂತಾಗಲಿ. ಇದರೊಂದಿಗೆ ಬರಹದ ವಾಸುರವರು ಮುಂದಿನ ಬರಹ ಆವೃತ್ತಿಯನ್ನು ತಮಿಳು ತೆಲುಗಿಗೂ ವಿಸ್ತರಿಸಲಿದ್ದಾರೆ. ಇದೂ ಸಹ ಸಂಭ್ರಮಿಸಬೇಕಾದ ವಿಷಯ. +ಜೊತೆಗೆ, ಈ ಬಾರಿ ಕನ್ನಡಸಾಹಿತ್ಯ.ಕಾಂ ನುಡಿ ಫಾಂಟ್‌ಗಳಿರುವವರಿಗೂ ಲಭ್ಯವಿದೆ. ನುಡಿ ಅಥವ ಬರಹ ಯಾವುದೇ ಇದ್ದರೂ ಕನ್ನಡಸಾಹಿತ್ಯ.ಕಾಂ ಪುಟಗಳನ್ನು ಓದಬಹುದು. ನುಡಿ ನಾಲ್ಕರ ಆವೃತ್ತಿಯನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. +ಅಂತರ್ಜಾಲದ ಉಪಯುಕ್ತತೆಗೆ ಅನುಕೂಲಕರವಾಗಿರುವಂತೆ ಬರಹ ಹಾಗು ನುಡಿಯನ್ನು ಬೆಳೆಸಬಹುದು ಎಂಬ ಆಶಯಗಳೊಂದಿಗೆ ಈ ಕೆಳಕಂಡಂತೆ ಕೆಲವು ಅಂಶಗಳನ್ನು ಪಟ್ಟಿ ಮಾಡಿದ್ದೇನೆ: +೧. ಎಚ್‌ಟಿ‌ಎಮ್‌ಎಲ್ ಪುಟಗಳನ್ನು ಅಲ್ಲೇ ಎಡಿಟ್ ಮಾಡುವಂತಹ ಅನುಕೂಲವಿರಬೇಕು. ಈಗ ‘ಬೈ ಡಿಫಾಲ್ಟ್’ ಅವು ಕೊಡುವ ಪುಟಗಳು ಯಾವುದೆ ನಿಗದಿತ ಶಿಫಾರಸ್ಸಿನನ್ವಯವಿಲ್ಲ. ಅಂದರೆ ನಮಗೆ ಬೇಕಾದ ಕೋಡ್-ಟ್ಯಾಗ್ಸ್, ಆಟ್ರಿಬ್ಯೂಟ್ಸ್‌ಗಳನ್ನು ನಾವೇ ಕೊಡುವಂತಿರಬೇಕು. ಸ್ಟೈಲ್ ಶೀಟ್‌ಗಳನ್ನು ಬರಹದ/ನುಡಿ ಕಡತಕ್ಕೆ ಹೊಂದಿಸುವಂತಿನ ಅನುಕೂಲವಿರಬೇಕಾದ್ದು ಬಹಳ ಮುಖ್ಯ. ತಾಂತ್ರಿಕ ಕಷ್ಟಗಳ ಅರಿವಿಲ್ಲದೆ ಹೆಚ್ಚು ಬಯಸುತ್ತಿದ್ದೇನೆಯೆ ಎಂಬುದು ನನಗೆ ತಿಳಿಯದು. ಆದರೆ ಪ್ರಾರಂಭದಲ್ಲಿಯೇ ಇವುಗಳತ್ತ ಗಮನ ನೀಡುವುದು ಸೂಕ್ತವೆಂದೆನ್ನಿಸುತ್ತದೆ. ಬರಿಯ ಎಚ್‌ಟಿ‌ಎಂಎಲ್ ಮಾತ್ರವಾದರೆ ಸಾಲದು- ಎಕ್ಸ್‌ಎಚ್‌ಟಿ‌ಎಮ್‌ಎಲ್ ಹಾಗು ಕೆಲವು ತಿಂಗಳಲ್ಲೇ ಎಕ್ಸ್‌ಎಮ್‌ಎಲ್ ಬಳಕೆಗೆ ಬರುತ್ತದೆ ಎನ್ನುವುದರತ್ತಲೂ ಗಮನ ಕೊಟ್ಟರೆ ಒಳ್ಳೆಯದು. ಕಡತಗಳನ್ನು ನೋಟ್‌ಪ್ಯಾಡ್‌ನಲ್ಲಿ ತೆಗೆದು ಬೇಕಾದ್ದನ್ನು ಮಾಡಬಹುದು ಎಂಬ ವಾದ ಸರಿಯಾದ್ದಲ್ಲ. +ಟಿಪ್ಪಣಿ ಮುಗಿಸುವ ಮುನ್ನ ಈ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನಮ್ಮ ಕೆ ವಿ ಸುಬ್ಬಣ್ಣನವರಿಗೆ ನೀಡಲಾಗಿದೆ. ಈ ಸಂಚಿಕೆ ಸಂದರ್ಭೋಚಿತವಾಗಿ ಹಿಂದೆ ಕನ್ನಡಸಾಹಿತ್ಯ.ಕಾಂ ಪ್ರಕಟಿಸಿದ್ದ ಸುಬ್ಬಣ್ಣನವರ ಲೇಖನಗಳನ್ನು ಮುಂದಿನ ಪುಟಕ್ಕೆ ತರಲಾಗಿದೆ. ಜೊತೆಗೆ ಅವರ ‘ಕವಿರಾಜ ಮಾರ್ಗ ಹಾಗು ಕನ್ನಡ ಜಗತ್ತು’ ಕೃತಿಯ ಎಲ್ಲ ಲೇಖನಗಳು ಸೇರಿವೆ. ಕವಿರಾಜ ಮಾರ್ಗ ಸುದೀರ್ಘವಾದ ಪ್ರಬಂಧ/ಲೇಖನ. ಅದರ ನಲವತ್ತು ಪುಟಗಳನ್ನು ನೀಡಲಾಗಿದೆ. ಉಳಿದ ನಲವತ್ತು ಪುಟಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. +ಹಳೆಯ ಸಂಚಿಕೆ ವಿಭಾಗದಲ್ಲಿನ ಸಣ್ಣಕತೆಗಳನ್ನು ಸೇರಿಸಲಾಗಿದೆ. ಹೀಗೆಯೇ ಲೇಖನಗಳನ್ನು, ಕವನಗಳನ್ನು ಕಾಲಾನುಕ್ರಮದಲ್ಲಿ ಸೇರಿಸುತ್ತ ಹೋಗುತ್ತೇನೆ. +ಶೇಖರ್‌ಪೂರ್ಣ +೦೭-೦೧-೨೦೦೪ +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […] +ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ […] +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_628.txt b/Kannada Sahitya/article_628.txt new file mode 100644 index 0000000000000000000000000000000000000000..7d12404d84e6c09814e4c266bd09d0044cfca834 --- /dev/null +++ b/Kannada Sahitya/article_628.txt @@ -0,0 +1,68 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾಯಂಕಾಲ ಐದೂವರೆ ಹೊತ್ತಿಗೆ ಸೋಂಪಗೌಡರ ಮನೆಯ ಸೈರನ್ ಕಿವಿ ತೂತಾಗುವಂತೆ ‘ಕೊಂಯ್ಯೋ…’ಎಂದು ಕೂಗತೊಡಗಿದಾಗ ಕಾಡೆಮನೆ ಲಿಂಗಪ್ಪಣ್ಣನ ಮನಸ್ಸು ವ್ಯಗ್ರವಾಗಿ ಸಿಟ್ಟು ಏರುತ್ತಾ ಏರುತ್ತಾ ತಾರಕಕ್ಕೆ ಮುಟ್ಟಿ ಮುಖ ಕೆಂಪೇರಿ ಗಂಟಲುಬ್ಬಿತು! ಸೈರನ್ ಕೂಗಿನಿಂದ ಸ್ಪೂರ್ತಿ ಪಡೆದ ಲಿಂಗಪ್ಪಣ್ಣನ ನಾಯಿ ಟೈಗರ್, ಸೈರನ್ ಕೂಗಿನೊಂದಿಗೆ ಸ್ಪರ್ಧೆಗಿಳಿದಂತೆ ಊಳಿಡತೊಡಗಿದಾಗ ಲಿಂಗಪ್ಪಣ್ಣನ ಸಿಟ್ಟು ಸ್ಫೋಟಗೊಂಡು ಬೈಗುಳಗಳಾಗಿ ಸಿಡಿಯತೊಡಗಿತು, “ಥೆಕ್; ಈ ಅಪಶಕುನದ ಅರೆಬ್ಬಾಯಿ, ಯಾವ ಕುಂಭಕರ್ಣನ ಎಬ್ಬಿಸಿಕೇಂತ?… ಇದರ ಶನಿ ಹಿಡಿಯ. ಇದರೊಟ್ಟಿಗೆ ಈ ಹಡಬೆ ನಾಯಿನೂ….” ಲಿಂಗಪ್ಪಣ್ಣ ಹಲ್ಲುಕಚ್ಚಿ ಕಿವಿ ಮುಚ್ಚಿಕೊಂಡರು. ಲಿಂಗಪ್ಪಣ್ಣನ ಅರಚಾಟ ಕೇಳಿದ ಜಾನಕಿ, “ಹಾಂ…. ಇವರ್ದ್ ಸುರಾತ್…ಈ ಸ್ಯೊರನೂ…ಇವರ ಬೊಬ್ಬೆನೂ. ಈ ನಾಯಿನೂ….ನನ್ನ ಜಲ್ಮಕ್ಕೆ ಸಾಕ್.” ಎಂದು ಗೊಣಗುತ್ತಾ ತೋಟದ ಕೆಲಸದವರು ಸೈರನ್ ಕೇಳಿ ಕೆಲಸ ಬಿಟ್ಟು ಬರುತ್ತಾರೆಂಬ ಗಡಿಬಿಡಿಯಲ್ಲಿ ಕಾಫಿ, ತಿಂಡಿಯ ತಯಾರಿಗೆ ಅಡುಗೆ ಕೋಣೆ ಹೊಕ್ಕರು. ಕೋಪ, ಅಸಹನೆ, ಅಸಹಾಯಕತೆಯಿಂದ ಕುದಿಯುತ್ತಿದ್ದ ಲಿಂಗಪ್ಪಣ್ಣ ದರ್ಶನ ಬಂದವರಂತೆ ಅಂಗಳದಲ್ಲಿ ತಕಧಿಮಿ ಕುಣಿಯುತ್ತಾ ಚಡಪಡಿಸತೊಡಗಿದರು. ಸೈರನ್ ಧ್ವನಿ ಏರುತ್ತಾ ಜೋರಾಗುತ್ತಿದ್ದಂತೆ ಲಿಂಗಪ್ಪಣ್ಣನ ಬಯ್ಗಳ ಅಶ್ಲೀಲತೆಯ ಆಯಾಮ ಪಡೆಯಿತಾದರೂ, ಸೈರನ್ ಭೋರ್ಗರೆವ ಶಬ್ದಕ್ಕೆ ಯಾವುದೂ ಕೇಳದಂತಾಯಿತು. ಟೈಗರ್ ನಾಯಿ ಊಳಿಡುವುದೂ ಕೇಳದಂತಾಯುತು. ಜೊತೆಗೆ ಟಾಮಿ ನಾಯಿಯೂ ಸೇರಿಕೊಂಡು ಊಳಿಡತೊಡಗಿದ್ದು, ಆಕಾಶಕ್ಕೆ ಮೊಗ ಮಾಡಿದ ಅದರ ಮೂತಿಯಿಂದ ಮಾತ್ರ ಗೊತ್ತಾಗುವಂತಿತ್ತು. +ಸೈರನ್ ಕೇಳಿ ನಾಯಿಗಳು ಊಳಿಡುವುದು ಲಿಂಗಪ್ಪಣ್ಣನ ಮನೆಯಲ್ಲಿ ಮಾತ್ರ ಅಲ್ಲ! ಮೊದಲಿಗೆ ಸೋಂಪಗೌಡರ ಮನೆಯ ಆಲ್ಸೇಶನ್ ನಾಯಿ ‘ಜಿಮ್ಮಿ’ ಸೈರನ್ ಆರಂಭವಾಗುತ್ತಿದ್ದಂತೆ ಅದರ ಎದುರು ಮಹಾಭಕ್ತನೊಬ್ಬ ದೇವರ ಮುಂದೆ ಮೊಣಕಾಲೂರಿ ಬೇಡಿಕೊಳ್ಳುವಂತೆ ಕುಳಿತು ಊಳಿಡಲು ಆರಂಭಿಸುತ್ತದೆ. ಪ್ರತಿ ಬೇಟೆಯಲ್ಲೂ ‘ಜಿಮ್ಮಿ’ ಯನ್ನೇ ನಾಯಕನೆಂದು ಒಪ್ಪಿಕೊಂಡಿರುವ ರೂಬಿ, ಸಿಂಗ, ಜೂಲಿ ಮತ್ತು ಮರಿನಾಯಿಗಳು ‘ಜಿಮ್ಮಿ’ಯನ್ನು ಅನುಸರಿಸಿ ಸಾಮೂಹಿಕವಾಗಿ ಊಳಿಡತೊಡಗುತ್ತವೆ. ಇದನ್ನು ಕೇಳಿದ ಸೋಂಪಗೌಡರ ತೋಟದ ಪಕ್ಕದ ತೋಟದ ಲಿಂಗಪ್ಪಣ್ಣನ ಟೈಗರ್ ಉತ್ಸಾಹಗೊಂಡು ಊಳಿಡತೊಡಗುತ್ತವೆ. ಜೊತೆಯಲ್ಲಿ ಅದರ ಸಂಗಾತಿ ಟಾಮಿಯೂ! ಇದನ್ನು ಕೇಳಿದ ಇತರ ಮನೆಗಳ ನಾಯಿಗಳೂ ತಾವೂ ಈ ಕೋರಸ್‌ನಲ್ಲಿ ಸೇರಿಕೊಳ್ಳುತ್ತವೆ. ಈ ಸಾಮೂಹಿಕ ಆಲಾಪನೆ ಮನೆಯಿಂದ ಮನೆಗೆ ಮಿಂಚಿನಂತೆ ಹಬ್ಬುತ್ತಾ ಅನುರಣಿಸಿದಾಗ ಆ ಗ್ರಾಮ ಇಡೀ ನಿಸ್ಸಹಾಯಕತೆಯಿಂದ ಅನಾಥವಾಗಿ ರೋಧಿಸುವಂತಿರುತ್ತದೆ. ಎಲ್ಲ ತೋಟಗಳ ಯಜಮಾನರೂ ಸಿಟ್ಟು, ಅಸಹನೆಯಿಂದ ಏನೂ ಮಾಡಲಾಗದೆ ನಾಯಿಗಳಿಗೆ ಶಪಿಸುತ್ತಾರೆ. ಆ ಹೊತ್ತಲ್ಲಿ ಯಾರು ಏನು ಮಾತಾಡಿದರೂ ಯಾರಿಗೂ ಕೇಳಿಸದು. ಎಲ್ಲರೂ ಕಿವಿಮುಚ್ಚಿ ತಮ್ಮಷ್ಟಕ್ಕೇ ಗೊಣಗುತ್ತಿರುವುದು ಎಲ್ಲ ಮನೆಗಳ ಸಾಮಾನ್ಯ ದೃಶ್ಯವಾಗಿರುತ್ತಿತ್ತು. +ಸೈರನ್ ಕಿವಿ ಹರಿದು ಹೋಗುವಂಥ ಸದ್ದಿನೊಂದಿಗೆ ನಾಯಿಗಳ ಊಳಿಡುವ ಕೋರಸ್ ಸೇರಿ ಉಳಿದೆಲ್ಲ ನಿತ್ಯದ ಶಬ್ದಗಳೂ, ಮಾತುಗಳೂ ಕೇಳಿಸದಿದ್ದಾಗ ಲಿಂಗಪ್ಪಣ್ಣನ ಹೆಗಲಲ್ಲಿದ್ದ ಬೈರಾಸನ್ನು ಕಿವಿಗಳೆರಡೂ ಮುಚ್ಚಿಕೊಂಡಂತೆ ತಲೆಗೆ ಗಟ್ಟಿಯಾಗಿ ಬಿಗಿದುಕೊಂಡರು. ಕೆಲನಿಮಿಷ ಕಣ್ಣುಮುಚ್ಚಿ ಧ್ಯಾನಸ್ಥನಂತೆ ಕುಕ್ಕರು ಕುಳಿತ ಲಿಂಗಪ್ಪಣ್ಣ ಸೈರನ್ ಧ್ವನಿ ಇಳಿಮುಖ ಆಗುತ್ತಿದ್ದಂತೆ, ಮತ್ತೆ ಬೈಗುಳ ಚೆಲ್ಲತೊಡಗಿದರು. “ಅವ್ಕೇ…..ಸಂಬಳಕ್ಕೆ ಸರಿ ಕೆಲಸ ಮಾಡ್ದು ಬೇಡಾಂತ ಇರ್ದು; ಊರವ್ಕೆ ಯಾಕೆ ಉಪದ್ರಾ? ಕೆಲ್ಸದವರ ಇಸುವಲ್ಲೇ ಇಸೊಕು! ಅಲ್ಲ; ಐದ್…. ಐದೂವರೆ ಗಂಟೆಗೆ ಕೆಲ್ಸ ಕೈದ್ ಮಾಡ್ದೂಂತ ಹೇಳ್ರೆ. ಹೇಂಗೆ ಬದುಕುದು? ದುಡ್ಡುನ ಹಂಕಾರದವು….ಒಟ್ಟಾರೆ ಈ ಊರುಲಿ ಹೇಳೊವು ಕೇಳೊವು ಯಾರೂ ಇಲ್ಲೇಂತಾವುಟ್ಟು….” ಸೈರನ್ ಆರ್ಭಟ ತಗ್ಗಿ ನಿಂತರೂ ಕಿವಿಯೊಳಗೆ ಇನ್ನೂ ‘ಗುಂಯಿ’ ಎನ್ನುತ್ತಿದ್ದುದರಿಂದ ಏನೇನೂ ಕೇಳಿಸದೆ ಕೆಪ್ಪನಂತಾದ ಲಿಂಗಪ್ಪಣ್ಣ. ಮೇಲಕ್ಕೆ ಮೊಗ ಮಾಡಿದ ನಾಯಿಗಳ ಮೂತಿ ನೋಡಿದಾಗಲೇ ಅವಿನ್ನೂ ಊಳಿಡುತ್ತಿವೆಯೆಂದು ಗೊತ್ತಾಗಿ. ಕಲ್ಲೊಂದನ್ನು ಎತ್ತಿ ನಾಯಿಗಳತ್ತ ಹುಚ್ಚನಂತೆ ಎಸೆದರು. ಅಂಗಳದ ತುದಿಯಲ್ಲಿ ಲಿಂಗಪ್ಪಣ್ಣನ ಕಟ್ಟಿದ ಹುಂಜ ‘ಕೆಮ್ಮೈರ’ ತಪಸ್ಸಿಗೆ ನಿಂತತೆ ಒಂಟಿಕಾಲಲ್ಲಿ ನಿಂತು ಕತ್ತನ್ನು ನೀಳ ಚಾಚಿ ತಲೆ ಕೊಂಚ ಆನಿಸಿ ಈ ಭಯಂಕರ ಶಬ್ದ, ಕಿರುಚಾಟ ಏನೆಂದು ಪ್ರಶ್ನಾರ್ಥಕವಾಗಿ ನೋಡುತ್ತಿತ್ತು. ಲಿಂಗಪ್ಪಣ್ಣ ಎಸೆದ ಕಲ್ಲು ಗುರಿ ತಪ್ಪಿತನ್ನ ಪಕ್ಕದಲ್ಲೇ ಸಿಡಿದು ಭೂಕಂಪವಾದಂತೆ ಭಾಸವಾಗಿ ಬೆದರಿದ ಹುಂಜ ರೆಕ್ಕೆ ಬಿಚ್ಚಿ‘ಕತ ಕತ’ ಎನ್ನುತ್ತಾ ಒಮ್ಮೆ ಮೇಲೆ ಎತ್ತರಕ್ಕೆ ಹಾರಿ, ಜಾನಕಿ ಕರಂಡೆ ಉಪ್ಪಿನಕಾಯಿಗೆಂದು ಒಣಗಲು ಚಾಪೆಯಲ್ಲಿ ಹರಡಿದ ಮೆಣಸಿನಕಾಯಿ ಮೇಲೆ ವಿರಮಿಸಲು ಯತ್ನಿಸಿ ಮೆಣಸೆಲ್ಲಾ ಚೆಲ್ಲಾಪಿಲ್ಲಿಯಾದಾಗ ಗಲಿಬಿಲಿಗೊಂಡು ಹಾರುತ್ತಾ. ಜಾರುತ್ತಾ ಹೇಗೇಗೋ ಓಡಿ ಮನೆಯಾಚೆ ಹಟ್ಟಿಯ ಹಿಂದೆ ಎಲ್ಲೋ ಮರೆಯಾಯಿತು. +ಕಳೆದ ಸೆಪ್ಟಂಬರ್‌ನಲ್ಲಿ ಸೋಂಪ ಗೌಡರು ಅವರ ಪತ್ನಿ ಹೊನ್ನಮ್ಮನವರೊಂದಿಗೆ ತಮ್ಮ ಭಾವ ಅಂದರೆ ಹೊನ್ನಮ್ಮನವರ ಅಣ್ಣನಿರುವ ದೆಹಲಿಗೆ ಹೋಗಿದ್ದರು. ಅಲ್ಲಿಂದ ಕಾಶಿ, ರಾಮೇಶ್ವರ ಪುಣ್ಯಕ್ಷೇತ್ರಗಳಿಗೆ ಭೇಟಿಯಿತ್ತು ಹೊರಡುವಾಗ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಭಾವನವರು ತೋಟದ ಕೆಲಸದವರನ್ನು ಮಧ್ಯಾಹ್ನ, ಸಂಜೆ ಊಟ ಕಾಫಿಗೆ ಕರೆಯುವುದು ಸುಲಭವಾಗಲೆಂದು ಕಾರ್ಖಾನೆಗಳಲ್ಲಿ ಸಮಯಸೂಚಕವಾಗಿ ಕೂಗುವಂಥ ಸೈರನ್ ಒಂದನ್ನು ಗೌಡರಿಗೆ ಒತ್ತಾಯಪೂರ್ವಕ ಕೊಡಿಸಿದ್ದರು. ಸೋಂಪ ಗೌಡರಿಗೇನೋ ಇದಿಷ್ಟು ಉಪಯೋಗಕ್ಕೆ ಬಂದೀತೆಂದು ಆಗ ಅನ್ನಿಸಿರಲಿಲ್ಲ. ಆದರೂ ಭಾವನವರ ಪ್ರೀತಿಗಾಗಿ ತೆಗೆದುಕೊಂಡಿದ್ದರು. ಗೌಡರಿಗೆ ತಮ್ಮ ತೋಟದ ಕೆಲಸದವರನ್ನು ಮಧ್ಯಾಹ್ನ, ಸಂಜೆ, ಊಟ ಕಾಫಿಗೆ ಕರೆಯುವುದು ನಿಜವಾಗಿಯೂ ಒಂದು ತಲೆಬೇನೆಯಾಗಿತ್ತು. ಈಗ ಹಿಂದಿನಂತಲ್ಲ; ಮೊದಲಿದ್ದ ಗದ್ದೆಗಳೆಲ್ಲವಕ್ಕೆ ಅಡಿಕೆ ಗಿಡ ಹಾಕಿ ಮೈಲುದ್ದ ತೋಟವೇ ಆಗಿರುವುದರಿಂದ ತೋಟದ ತುದಿಯಲ್ಲೆಲ್ಲೋ ಕೆಲಸಮಾಡುತ್ತಿರುವವರನ್ನು ಕರೆಯಬೇಕಾದರೆ ಕೂಗು ಹಾಕಿ ಹಾಕಿ ಗಂಟಲು ನೋಯುತ್ತಿತ್ತು. ಈಗಂತೂ ತೋಟಕ್ಕೆ ನೀರು ಹಾರಿಸುವ ಸ್ಟ್ರಿಂಕ್ಲರ್‌ಗಳ ಸದ್ದಿನೊಂದಿಗೆ ಇವರ ಕೂಗು ಆರ್ತನಾದದಂತೆ ಕೇಳಿಸುತ್ತಿತ್ತು. ಅಲ್ಲದೆ ಗೌಡರ ತೋಟದ ಕೆಲಸಕ್ಕೆ ಬರುವವರು ಏಳೆಂಟು ಮೈಲು ದೂರದ ಅರಂಬೂರು ಕಡೆಯವರಾದ್ದರಿಂದ ಗೌಡರು ಮೊದಲಿನಿಂದಲೂ ಸಂಜೆ ಸರಿಯಾಗಿ ಐದೂವರೆ ಗಂಟೆಗೆ ಕೆಲಸ ನಿಲ್ಲಿಸುವಂತೆ ಹೇಳಿ ಕಳಿಸುತ್ತಿದ್ದರು. ಸುತ್ತಮುತ್ತಲಿನ ತೋಟಗಳಲ್ಲಿ ಆರೂವರೆ ಆರು ಮುಕ್ಕಾಲಾದರೂ ಕೆಲಸ ಕೈಲಾಗದಿದ್ದರೂ, ಸೋಂಪ ಗೌಡರೇಕೋ ಈ ಪರಿಪಾಠ ಬೆಳೆಸಿದ್ದರು. ಬೆಳಿಗ್ಗೆ ಒಂಭತ್ತು ಗಂಟೆಗೆ ಕೆಲಸ ಆರಂಭವಾದರೆ ಮಧ್ಯಾಹ್ನ ಒಂದೂವರೆಗೆ ಮನೆಯವರೆಲ್ಲ ಊಟಕ್ಕೇಳುವ ಹೊತ್ತಿಗೇ ಸರಿಯಾಗಿ ಕೆಲಸದವರಿಗೂ ಊಟ. ಆಮೇಲೆ ಎರಡು ಗಂಟೆಯಿಂದ ಐದೂವರೆವರೆಗೆ ಕೆಲಸ, ಮತ್ತೆ ಸಂಜೆ ಕಾಫಿಯಾಗಿ ಕೆಲಸದವರು ಹೊರಡುತ್ತಾರೆ. ಹೀಗೆ ಬೆಳಿಗ್ಗೆ ಒಂಭತ್ತಕ್ಕೆ ಗೌಡರ ಸೈರನ್ ಕೂಗಿದರೆ ಮತ್ತೆ ಸರಿಯಾಗಿ ಮಧ್ಯಾಹ್ನ ಒಂದೂವರೆಗೆ ಕೂಗುತ್ತದೆ, ಬಳಿಕ ಸಂಜೆ ಐದೂವರೆಗೆ ಕೊನೆಯ ಕೂಗು. ಸೈರನ್ ಸಾಧಾರಣ ಮೂರು ನಾಲ್ಕು ಮೈಲು ಸುತ್ತಳತೆಗೆ ಕೇಳುವಷ್ಟು ಜೋರಾಗಿದೆ ಬೇರೆ. +ಮೊದಮೊದಲು ಈ ಸೈರನ್ ಕೂಗಿನಿಂದ ಎಲ್ಲರೂ ಮೋಜು ಪಡೆಯುತ್ತಿದ್ದರು. ಅದೊಂದು ಹೊಸ ತಮಾಷೆಯ ಸಂಗತಿಯಾಯಿತು. ಚಿಕ್ಕ ಮಕ್ಕಳಂತೂ ಸೈರನ್‌ನೊಂದಿಗೇ ಕಿರುಚಾಡುತ್ತಾ ಕುಣಿದಾಡುತ್ತಾರೆ. ಬೆಳಿಗ್ಗೆ ಒಂಭತ್ತೂಕಾಲಕ್ಕೆ ಸುಳ್ಯಕ್ಕೆ ಹೊರಡುವ ಎರಡನೆ ಟ್ರಿಪ್ಪಿನ ಅವಿನಾಶ್ ಬಸ್ಸಲ್ಲಿ ಶಾಲೆಗೋ, ಕಾಲೇಜಿಗೋ, ತಾಲ್ಲೂಕಾಫೀಸಿಗೋ, ಸೊಸೈಟಿಗೋ, ಕೇಪಿನ ಬೆಡಿಯ ಚರೆಮದ್ದಿಗೋ ಅಥವಾ ‘ಹೀಂಗ ಸುಮ್ಮಂಗೆ’ ಹೊರಟವರಿಗೋ, ಎಲ್ಲರಿಗೂ ಒಂಭತ್ತರ ಸೈರನ್ ಕೇಳಿದೊಡನೆ ಗಡಿಬಿಡಿಯೋ ಗಡಿಬಿಡಿ. ಮನೆಯಲ್ಲೇ ಕೂತು ಬೀಡಿ ಕಟ್ಟಿ ಸಂಜೆ ಐದೂವರೆಗೆ ಸೈರನ್ ಕೇಳಿದೊಡನೆ ಕೆಲಸ ನಿಲ್ಲಿಸಿ, ಅಂದವಾಗಿ ಶೃಂಗಾರ ಮಾಡಿ ಬೀಡಿಯ ಪ್ಲ್ಯಾಸ್ಟಿಕ್ ಬ್ಯಾಗ್‌ನೊಂದಿಗೆ ಬ್ರೇಂಚ್‌ಗೆ ಹೋಗುವ ಹುಡುಗಿಯರನ್ನೂ, ಶಾಲೆ ಕಾಲೇಜಿನಿಂದ ಐದೂಮುಕ್ಕಾಲರ ಬಸ್ಸಲ್ಲಿ ಬಂದಿಳಿವ ಹುಡುಗಿಯರನ್ನೂ ಏನಾದರೂ ಕಾರಣ ಹುಡುಕಿ ಮಾತಾಡಿಸಲು ತವಕಿಸುವ, ಎಸ್ಸೆಲ್ಸಿಯಲ್ಲಿ ನಾಲ್ಕನೇ ಬಾರಿಗೆ ಓದುತ್ತಿರುವ ಮೇಗಡೆಮನೆ ಕೃಷ್ಣ, ಕಾನದ ಸುರೇಶ, ಕಲ್ಲರ್ಪೆ ಜಗ್ಗ ಮುಂತಾದ ಹುಡುಗರು, ಸೈರನ್ ಕೂಗುತ್ತಿದ್ದಂತೆ ತಲೆ, ಎದೆಯೊಳಗೆ ಏನೋ ಹರಿದಾಡಿದಂತಾಗಿ ಯಾರದೋ ಮಾತಿಗೆ ಏನೇನೋ ಉತ್ತರಿಸುತ್ತಾ, ನಗಬಾರದ್ದಕ್ಕೆ ನಗುತ್ತ ಆಚೀಚೆ ಸುಳಿದಾಡುತ್ತಾರೆ. ಬೆತ್ತಕ್ಕೋ, ಬಿದಿರುಗಳೆಗೋ, ಮೊಜೆಂಟಿ, ಕೋಲ್ಜೇನು ಹುಡುಕಿ ಹೊರಟವರೋ ಅಥವ ಹೊಟ್ಟ ಹೊಡಿಯಲು ಕೇಪಿನ ಬೆಡಿಯೊಂದಿಗೆ ಹೋದವರೋ ಎಲ್ಲರೂ ಸಂಜೆ ಸೈರನ್ ಕೇಳಿದ ಕೂಡಲೆ ಎಲ್ಲ ಬಿಟ್ಟು ಕಾಡಿನಿಂದ ಇಳಿಯಲು ಶುರುಮಾಡುತ್ತಾರೆ. ಗುಡ್ಡೆಗೆ ಮೇಯಲು ಹೋದ ದನಕರುಗಳಿನ್ನೂ ಬಾರದಿದ್ದರೆ ಸೇಸನಂಥವರು ಪುರುಪುರೂಂತ ಕಾಡಿನತ್ತ ತೆರಳಿ ಬೇಗ ಬೇಗ ಹೊಡಕೊಂಡು ಬರುತ್ತಾರೆ. ಆದರೆ ಈಗ, ಸೈರನ್ ಕೇಳಿದರೆ ಸಾಕು. ದನಕರು ಅವಾಗಿ ಗುಡ್ಡೆ ಇಳಿದು ಹಟ್ಟಿಗೆ ಕೂಡಲು ಬರುವುದರಿಂದ ಸೇಸ ಉದ್‌ಗಿಲ್ ಮೇಲೆ ಕೈ ಇಟ್ಟು ಬೀಡಿ ಹೊಗೆ ಬಿಡುತ್ತಾ ಖುಶಿಯಾಗಿರುತ್ತಾನೆ. +ಸೈರನ್ನೊಂದಿಗೆ ಊರಿನ ಎಲ್ಲರ ಮನೆಯ ನಾಯಿಗಳೂ ಊಳಿಡುವುದು ಆರಂಭದಲ್ಲಿ ಮೋಜೆನಿಸಿ ಕ್ರಮೇಣ ಎಲ್ಲರಿಗೂ ಕಿರಿಕಿರಿಯೆನಿಸತೊಡಗಿತು. ಉಳಿದೆಲ್ಲಾ ತೋಟಗಳ ಕೆಲಸದವರೂ ಸೈರನ್ ಶಬ್ದದಿಂದ ಮುದಗೊಳ್ಳುತ್ತಾ ಐದೂವರೆಗೇ ಕೆಲಸ ನಿಲ್ಲಿಸಿ ಮನೆಗೆ ಹೋಗುವುದು ರೂಢಿಯಾಗತೊಡಗಿತು. +ಅರಂಬೂರು, ಅಜ್ಜಾವರ, ಕಲ್ಲುಮಕ್ಕಿ ಕಡೆಗಳಿಂದ ಬರುವ ಮೂರು ಮಣ್ಣಿನ ರಸ್ತೆಗಳೂ ಸೇರುವ ಜಂಕ್ಷನ್‌ನಲ್ಲಿ ‘ಜಯಲಕ್ಷ್ಮಿ ಭವನ’ ಎಂಬ ಹೋಟೆಲು ನಡೆಸುತ್ತಿರುವ ಶಂಭಟ್ಟರಿಗೂ ಸೈರನ್ ಸದ್ದು ಕೇಳಿದೊಡನೆ ಬಿ.ಪಿ ಏರಲಾರಂಭಿಸುತ್ತದೆ. ಕಲ್ಲುಮಕ್ಕಿ ಕಡೆಯ ಶೀನ ಎಂಬ ಹುಡುಗನನ್ನು ಕ್ಲೀನಿಂಗ್ ಕಂ ಕುಕ್ಕಿಂಗ್ ಕೆಲಸಕ್ಕಿಟ್ಟುಕೊಂಡಿರುವ ಶಂಭಟ್ಟರ ಹೋಟೆಲಿಗೆ ವ್ಯಾಪಾರ ಚೆನ್ನಾಗಿದೆ. ಮಗ ಸುಳ್ಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ. ಹೋಟೆಲ್ನ ಹಿಂಬದಿಯಲ್ಲೇ ಇರುವ ಭಟ್ಟರ ಮನೆ ನೋಡಿದರೆ ಭಟ್ಟರು ಗಟ್ಟಿ ಆಗಿದ್ದಾರೆ ಎನ್ನಬಹುದು. ಪ್ರತಿದಿನ ಗಂಟೆ ಏಳಾದರೂ ಶೀನನಿಗೆ ಕೆಲಸದಿಂದ ಬಿಡುಗಡೆಯಾಗುತ್ತಿರಲಿಲ್ಲ. ಬೆಳಿಗ್ಗೆ ಏಳಕ್ಕೆ ಆರಂಭವಾಗುವ ಕ್ಲೀನಿಂಗ್ ಕಂ ಕುಕ್ಕಿಂಗ್ ಕೆಲಸ ಸಂಜೆ ಆರರ ತನಕ, ಎಂದು ಮೊದಲಿಗೆ ಇದ್ದ ನಿಯಮ ಈಗೀಗ ಗಂಟೆ ಏಳಾದರೂ ಮುಗಿಯುತ್ತಿರಲಿಲ್ಲ. ಶೀನನಿಗೆ ಕೈಕಾಲೆಲ್ಲ ನೀರಿನಲ್ಲಿ ತೊಯ್ದು ತೊಯ್ದು ಹುಳುಕಡಿತ ಆರಂಭವಾಗಿದೆ. ಕತ್ತಲಾದಂತೆ ಶೀನನಿಗೆ ದೂರದ ಮನೆ ತವಕ. ಆದರೆ ಶಂಭಟ್ಟರು ಏನಾದರೂ ಕೆಲಸ ಹೇಳಿ ತಡ ಆಗುವಂತೆ ಮಾಡುತ್ತಿದ್ದರು. ಸಮಯ ನೋಡಲು ಅರಿಯದ ಶೀನ ಸೂರ್ಯನನ್ನೇ ನಂಬಿದವ. +ಆದರೆ ಈಗ ಸೈರನ್ ಸದ್ದು ಕೇಳಿದೊಡನೆ ಶೀನನ ಕಿವಿ ನಿಮಿರುತ್ತದೆ. ಇನ್ನು ಕೆಲ ಹೊತ್ತಲ್ಲಿ ಕೆಲಸಕ್ಕೆ ಬಿಡುಗಡೆ ಎಂಬ ಆಶೆ. ಆರು ಗಂಟೆಯಾಗುತ್ತಿದ್ದಂತೆ ಶೀನ ಹೊರಡುವ ತಯಾರಿಯಾಗಿ ಕೈಕಾಲು ತೊಳೆದುಕೊಳ್ಳುವುದು, ಭಟ್ಟರಿಗೆ, ಈಗೀಗ ಭಯಂಕರ ಸಿಟ್ಟು ಬರಿಸುತ್ತಿತ್ತು. ಏನಾದರೂ ಮಾಡಿ ಕೆಲಸ ಮುಂದುವರಿಸುವಂತೆ ಇನ್ನೇನೋ ಹೆಚ್ಚಿನ ಕೆಲಸ ಹೇಳಿದರೆ, ಶೀನ-ಗೌಡರ ಮನೆಯ ಸೈರನ್ ಆಗಲೇ ಆಯಿತಲ್ಲಾ? ಎನ್ನುವುದು ಭಟ್ಟರಿಗೆ ಎದುರು ಮಾತಾಡಿದಂತಾದರೂ, ಭಟ್ಟರು ಕೊಡುವ ಸಂಬಳಕ್ಕೆ ಯಾರೂ ಸಿಗದ ಕಾರಣ ಸುಮ್ಮನೆ ಗುರುಗುಟ್ಟುತ್ತಿದ್ದರಷ್ಟೇ. ಆದರೂ ಹಾಗೂ ಹೀಗೂ ಮಾಡಿ ಆರೂವರೆ ಆರು ಮುಕ್ಕಾಲವರೆಗೂ ತಳ್ಳುತ್ತಿದ್ದರು. +ಬೆದ್ರಾಡಿ ತ್ಯಾಂಪಣ್ಣ ಗೌಡರದ್ದು ಬೇರೆಯೇ ತಲೆಬೇನೆ. ಊರಿನ ಕೆಲಸದವರು ಸೈರನ್ ಕೇಳಿ ಐದೂವರೆಗೆ ಕೆಲಸ ನಿಲ್ಲಿಸುತ್ತಾರೆಂದು ಬಿಜಾಪುರ, ಧಾರವಾಡ ಕಡೆಯ ಆಳುಗಳನ್ನು ಕೆಲಸಕ್ಕಿಟ್ಟಿದ್ದರು. ಆದರೆ ಇತ್ತೀಚೆಗೆ ಈ ಬಿಜಾಪುರದವರೂ ಸೈರನ್ ಕೇಳಿದ ಕೂಡಲೆ ಕೆಲಸ ನಿಲ್ಲಿಸುತ್ತಿದ್ದುದರಿಂದ ದೊಡ್ಡ ತಲೆಬೇನೆ ಶುರುವಾಗಿತ್ತು. ಆಳಿಗೆ ಐವತ್ತು ರೂಪಾಯಿ ಸಂಬಳ ಕೊಟ್ಟು ಐದೂವರೆಗೆ ಕೆಲಸ ಕೈದು ಮಾಡುವುದೆಂದರೆ ನಷ್ಟ ಎಷ್ಟಾಯಿತು? ಕೆಲಸದವರನ್ನು ಆದಷ್ಟು ದುಡಿಸದಿದ್ದರೆ ಹೇಗೆ? ಅಡಿಕೆ ರೇಟು ನೆಲ ಮುಟ್ಟಿರುವಾಗ ಈಗಲೇ ಹೀಗಾದರೆ, ಮುಂದೆ ಇವರಿಂದ ಕೆಲಸ ಮಾಡಿಸಲು ಸಾಧ್ಯವೆ? ಈ ಬಗೆಯ ಯೋಚನೆ ಸುತ್ತಮುತ್ತಲಿನ ತೋಟದ ಧನಿಗಳೆಲ್ಲರ ತಲೆಯಲ್ಲೂ ಹೊಗೆಯೆಬ್ಬಿಸಿತ್ತು. ಆದರೆ ಹೆಚ್ಚಿನವರು ಮದುವೆ, ಬೊಜ್ಜ, ಎಂಥದೇ ಜಂಬರವಿರಲಿ ಅಡಿಗೆಗೆ ಕಡಾಯಿ, ಕವಂಗ, ಚೆಂಬು, ಚೆರಿಗೆಯಿಂದ ಗ್ಯಾಸ್‌ಲೈಟ್‌ವರೆಗೆ; ತೋಟಕ್ಕೆ ಮದ್ದು ಬಿಡುವ ಗಟಾರ್ ಪಂಪಿನಿಂದ ಎಮ್ಮೆಗೆ ಜೋಡಿ ಮಾಡಿಸಲು ಬೀಜದ ಕೋಣನವರೆಗೆ ಯಾವುದಕ್ಕಾದರೂ ಸೋಂಪ ಗೌಡರಲ್ಲಿಗೇ ಹೋಗುವುದು. ಆಗೀಗ ಕೈಕಡಕ್ಕೂ ಗೌಡರೇ ನೆನಪಾಗುವುದರಿಂದ ಈಗ ಯಾರೂ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಕೆಲವು ದೊಡ್ಡ ತೋಟಗಳ ಶ್ರೀಮಂತರಿಗೆ ಸರ್ಕಾರದ ಉನ್ನತ ಪ್ರಭಾವೀ ಅಧಿಕಾರದಲ್ಲಿರುವ ಗೌಡರ ಭಾವನವರೇ ಈ ಸೈರನ್ ಕೊಡಿಸಿದ್ದು ಗೊತ್ತಿದ್ದುದರಿಂದ ಏನು ಹೇಳಲೂ ಮನಸ್ಸಿಲ್ಲ. ಕಾಡೆಮನೆ ಲಿಂಗಪ್ಪಣ್ಣನಿಗೆ ಸೋಂಪಗೌಡರ ಶ್ರೀಮಂತಿಕೆಯಿಂದ ಮೊದಲೇ ಹೊಟ್ಟೆಯುರಿ. ಈಗ ಸೈರನ್ ಹಾವಳಿಯಿಂದಾಗಿ ಏನೂ ಮಾಡಲಾಗದೆ ಹುಚ್ಚನಂತಾಗಿದ್ದರು. ಮಹಾ ಕಂಜೂಸ್ ಎಂದೇ ಹೆಸರು ಪಡೆದಿರುವ ಲಿಂಗಪ್ಪಣ್ಣ ಆಲಿಯಾಸ್ ಲಿಂಗಪ್ಪ ಗೌಡ ಸಂಬಳ ಕೊಡುವುದರಲ್ಲಿ, ಕೆಲಸ ಮಾಡಿಸುವುದರಲ್ಲಿ ಭಾರೀ ಸತಾಯಿಸುವ ಆಸಾಮಿ. ಹೀಗಾಗಿಯೇ ಇರಬೇಕು. ಕೆಲದಿನಗಳ ಹಿಂದೆ ಸೈರನ್ ಕೇಳಿದೊಡನೆ ಕೋಪ ನೆತ್ತಿಗೇರಿ ರಕ್ತದೊತ್ತಡ ಖಂಡಾಬಟ್ಟೆಯಾಗಿ ತಲೆತಿರುಗಿ ಬಿದ್ದಿದ್ದರಂತೆ. ಏನಾದರೂ ಮಾಡಿ ಈ ಸೈರನ್ ಶಬ್ದ ನಿಲ್ಲುವಂತೆ ಮಾಡದಿದ್ದರೆ ತನಗೆ ಉಳುಗಾಲವಿಲ್ಲ, ಎಂದು ಲಿಂಗಪ್ಪಣ್ಣ ದಿನಾ ಏನೇನೋ ಉಪಾಯ ಹುಡುಕುತ್ತಿದ್ದರು. +ಸಾಯಂಕಾಲ ಶಂಭಟ್ಟರ ಜಯಲಕ್ಷ್ಮಿ ಭವನದಲ್ಲಿ ಬೆದ್ರಾಡಿ ತ್ಯಾಂಪಣ್ಣ ಗೌಡರೂ ಸುಬ್ಬಯ್ಯ ಪಾಟಾಳಿಯವರೂ ಚಾ ಹೀರುತ್ತಿದ್ದಾಗ ಕಾಡಮನೆ ಲಿಂಗಪ್ಪಣ್ಣ, “ಹೀಂಗಾದರೆ ನಾವು ಈ ಜಲ್ಮಲಿ ಬರ್ಖತ್ ಅಕಿಲ್ಲೆ…” ಎಂದು ಗೊಣಗುತ್ತಾ ಒಳಗೆ ಬಂದರು. ತ್ಯಾಂಪಣ್ಣ ಗೌಡರೂ, ಸುಬ್ಬಯ್ಯ ಪಾಟಾಳಿಯವರೂ ಏನಾಯ್ತೆಂದು ಲಿಂಗಪ್ಪಣ್ಣನ ಮುಖ ನೋಡಿದರು. “ಅಲ್ಲ; ಐದ್ ಐದೂವರೆಗೆ ಕೆಲ್ಸ ಕೈದ್ ಮಾಡ್ರೆ ನಾವು ಹೇಂಗೆ ಕೆಲ್ಸ ಮಾಡ್ಸುದು.? ಅಡಿಕೆ ರೇಟ್ ಪಾತಾಳಕ್ಕಿಳ್ದುಟ್ಟು. ಆದರ ಎಡೆಲಿ ಈ ಕೆಲ್ಸದವರ ಐದೂವರೆಗೆ ಬುಟ್ರೆ ನಾವ್ ಹೇಂಗೆ ಬದ್ಕುದು ತ್ಯಾಂಪಣ್ಣ? ಏನ್ ಹೇಳ್ರೆ ಸುಬ್ಬಣ್ಣಯ್ಯ….? ಎಂದು ಲಿಂಗಪ್ಪಣ್ಣ ತನ್ನ ಬಹುದಿನಗಳ ಅಸಹನೆಯನ್ನು ಚೆಲ್ಲಿದರು. “ಹೌದೂಂತ! ನಮ್ಮಲ್ಲಿನೂ ಈ ಸುಟ್ಟ ಬಿಜಾಪುರದ ಕೆಲ್ಸದವುನೂ ಐದೂವರೇಗೆ ಕೆಲ್ಸ ನಿಲ್ಸಿಕೆ ಸುರು ಮಾಡ್ಯೊಳೋ!! ಹೀಂಗಾದರೆ ಇನ್ನ್… ಕೆಲ್ಸ ಮಾಡ್ಸೂದು ಹೇಂಗೆ? ಸಂಬಳ ಕೊಡ್ದು ಹೇಂಗೆ?” ತ್ಯಾಂಪಣ್ಣ ಗೌಡರೂ ತಮ್ಮ ಅಸಮಧಾನವನ್ನೂ ಹೊರಹಾಕಿದರು. ಅಷ್ಟರಲ್ಲಿ ದಬ್ಬಡ್ಕ ರಾಮಣ್ಣ ರೈಗಳೂ ಕೊಂರ್ದೋಡಿ ಮಾಲಿಂಗ ಮಣಿಯಾಣಿಗಳೂ ಹೋಟೆಲಿಗೆ ಬಂದರು. “ಏನ್? ಎಲ್ಲವೂ ಭಾರೀ ತಲೆಬೆಚ್ಚಲಿದ್ಹಾಂಗೆ ಕಂಡದೆ, ಸಂಗತಿ ಎಂಥಾ?” ರಾಮಣ್ಣ ರೈಗಳು ಪ್ರಶ್ನಿಸಿದ್ದೇ ತಡ ಸುಡುತ್ತಿರುವ ಬಿಸಿ ಬಿಸಿ ಚಾವನ್ನೂ ಲೆಕ್ಕಿಸದೆ ಒಂದೇ ಗುಟುಕಿಗೆ ಗಟಗಟನೆ ಕುಡಿದ ಲಿಂಗಪ್ಪಣ್ಣ “ಇದರ ಹೀಂಗೇ ಬುಟ್ರೆ ಆಕಿಲ್ಲೆ ರೈಗಳೇ… ಆಕಿಲ್ಲೆ! ಹೇಂಗಾರ್ ಮಾಡಿ ಈ ಸ್ಯೊರನ್ ಶಬ್ದ ನಿಲ್ಸುವ್ಹಾಂಗೆ ಮಾಡೂಕು. ಏನ್ ಹೇಳ್ರೆ ಮಾಲಿಂಗಣ್ಣ?” ಎಂದು ಕಣ್ಣು ಕಿರಿದುಗೊಳಿಸಿ ಮೂತಿಯನ್ನು ಚೂಪು ಮಾಡಿದರು. +“ಸಂಗತಿ ಸತ್ಯ! ನೀವ್ ಹೇಳ್ದಾಂಗೆ ಈ ಸೈರನ್ ಶಬ್ದಂದಾಗಿ ನಮ್ಮಲ್ಲಿನೂ ಸರಿ ಕೆಲ್ಸ ಸಾಗೂದುಲ್ಲೆ! ಐದೂವರೆ ಆಕನ ಎಲ್ಲವೂ ಹೊರ್ಡುದೇಂತ….!?” ಮಾಲಿಂಗ ಮಣಿಯಾಣಿ ದನಿಗೂಡಿಸಿದರು. +“ಸಂಗತಿ ನಂಗೂ ಗೊತ್ತಾವುಟ್ಟು, ಆದರೆ ನಿಲ್ಸುದು ಅಂದರೇ…. ಹೇಂಗೆ? ಸೋಂಪ ಗೌಡ್ರ್ ಎಂಥಕ್ಕಾರು ಬೇಕಾದ್ದೆ. ಅವರೊಟ್ಟಿಗೆ ಹೇಂಗೆ ಹೇಳ್ದು….? ಅದೂ ಅಲ್ಲದೆ, ಸೈರನ್ ಹಾಕಿಕೆ ಹೇಳ್ದ ಗೌಡ್ರ ಭಾವ ಏನ್ ತಿಳ್ಕಂಬೊ? ಅವೂ ಬೇಕಲ್ಲೆ ನವ್ಗೇ…? ಇದ್ದುದ್ದನ್ನು ಇದ್ದಹಾಗೆ ಹೇಳುವ ರಾಮಣ್ಣ ರೈಗಳು ಸಮಸ್ಯೆ ಬಗೆಹರಿಸುವುದಕ್ಕೆ ದಾರಿ ಹುಡುಕತೊಡಗಿದರು. ಉಳಿದವರು ಇದ್ದದ್ದನ್ನು, ಇಲ್ಲದ್ದನ್ನೂ ಸೇರಿಸಿ ಹೇಗೆ ಹೇಳುವುದೆಂದು ತೋಚದೆ ಮುಖ ಮುಖ ನೋಡತೊಡಗಿದರು. “ರೈಗಳು ಮನ್ಸು ಮಾಡಿದ್ರೆ ಹೇಗಾದ್ರೂ ಹೇಳಿ ನಿಲ್ಲಿಸಬಹುದು. ಅಲ್ವಾ ತ್ಯಾಂಪಣ್ಣ?”ಎಂದು ಸುಬ್ಬಯ್ಯ ಪಾಟಾಳಿಯವರು ಮೆಲ್ಲಗೆ ಮಗ್ಗ ಎಳೆಯತೊಡಗಿದರು. +ಇವರೆಲ್ಲರ ಮಾತನ್ನು ಚಾ ಹಿಂಡುವವರಂತೆ ನಟಿಸುತ್ತಾ ಕೇಳುತ್ತಿದ್ದ ಶಂಭಟ್ಟರು, ಈಗ ಬಾಯಿ ಹಾಕಿದರು. “ಪಾಟಾಳಿಯವರು ಹೇಳಿದ್ದು ಸರಿ. ರೈಗಳು ಮನಸ್ಸು ಮಾಡಿದ್ರೆ ಇದನ್ನು ನಿಲ್ಲಿಸಬಹುದು, ಅದಿಕ್ಕೆ ಒಂದು ಉಪಾಯ ಕೂಡಾ ಉಂಟು ನನ್ನೊಟ್ಟಿಗೆ….” ಎಂದು ರೈಗಳಿಗೆ ಹಬೆಯಾಡುತ್ತಿರುವ ಬಿಸಿ ಚಾದ ಗ್ಲಾಸ್ ಕೊಡುತ್ತಾ ಕಿವಿಯಲ್ಲಿ ಖುಸುಖುಸು ಅಂತೇನೋ ಉಸುರಿ, ಯಾವಾಗಲೂ ಹೊತ್ತಿಗೆ ಮೂರು ಸೇರು ಹಾಲು ಕೊಡುವ, ಒಮ್ಮೊಮ್ಮೆ ಬೀಜದ ಹೋರಿಯಂತೆ ಬುಸುಗುಡುತ್ತಾ ಹಾಲು ಕೊಡದೆ ಒದೆಯುವ ಅಭ್ಯಾಸವಿರುವ ಜರ್ಸಿದನಕ್ಕೆ ಮೂಗುದಾರ ಹಾಕಲು ಬೆಂಚಲ್ಲಿ ಕಾಲು ನೀಡಿ ಕುಳಿತು, ಕಾಲ ಹೆಬ್ಬೆರಳಿಗೆ ಸಪೂರ ನೈಲಾನ್ ಹಗ್ಗವೊಂದರ ತುದಿಯನ್ನು ಉರುಳು ಹಾಕಿ ಸಿಕ್ಕಿಸಿ, ಮತ್ತೆ ನಾಲ್ಕೈದು ಹತ್ತಿಯ ಸಪೂರ ಹಗ್ಗಗಳೊಂದಿಗೆ ಹುರಿಮಾಡತೊಡಗಿದರು. +ನಿಧಾನವಾಗಿ ಚಾ ಹೀರುತ್ತಿದ್ದ ರಾಮಣ್ಣ ರೈಗಳ ಮುಖ ಅರಳಿತು. +ರಾತ್ರಿ ರಾಮಣ್ಣ ರೈಗಳ ಮನೆಯಲ್ಲಿ ಸೇರಿದ ಎಲ್ಲರೂ ಒಂದೊಂದು ಬಗೆಯಲ್ಲಿ ಮಾತಾಡಿ ಸರಿ ತಪ್ಪುಗಳ ಮಧ್ಯೆ ಗೊಂದಲದಲ್ಲಿ ಬಿದ್ದರು. ಕೊನೆಗೆ ಮಾಲಿಂಗ ಮಣಿಯಾಣಿಯವರು ತಡೆಯಲಿಕ್ಕಾಗದೆ “ಹೀಂಗೆ ಮಾಡ್ರೆ ಸರಿಯಾದೊ ತ್ಯಾಂಪಣ್ಣ?”ಎಂದು ಕೇಳಿಯೇಬಿಟ್ಟರು. ತ್ಯಾಂಪಣ್ಣ ಗೌಡರು ಬಾಯಲ್ಲಿದ್ದ ಎಲೆ‌ಅಡಿಕೆ ರಸ ಹೊರಚಿಮ್ಮದಂತೆ ಮುಖ ಮೇಲೆತ್ತಿ ಕೆಳದವಡೆಯನ್ನು ಕೊಂಚ ಮುಂದಕ್ಕೆ ತಂದಾಗ ನಾಲಿಗೆ ಸರಿಯಾಗಿ ಹೊರಳದೆ “ಉಮ್ಮ….ಣಂಗೊಂಡು ಗೊಠಾ‌ಅಡುಲ್ಳೆ” ಎಂದು ಅಸ್ಪಷ್ಟವಾಗಿ ಉಸುರಿ, ತುಟಿಯ ಬದಿಯಿಂದ ಇಳಿಯುತ್ತಿದ್ದ ವೀಳ್ಯರಸವನ್ನು ಎಡಮುಂಗೈಯಲ್ಲಿ ಒರೆಸುತ್ತಾ ಬಲಗೈ ಚೆಲ್ಲಿದರು. ಮೊದಲೇ ಒಲೆಯ ಮೆಲೆ ಕೂತಂತಿದ್ದ ಕಾಡೆಮನೆ ಲಿಂಗಪ್ಪಣ್ಣ “ಉಮ್ಮ… ನಂಗೊಂದು ಗೊತ್ತಾದುಲ್ಲೆ-ಅಂತ ಹೇಳಿ ಬುಟ್ರೆ ಮುಗ್ತಾ ತ್ಯಾಂಪಣಣ್ಣ….? ಎಂದು ಕುಂಡೆ ಸುಟ್ಟವರಂತೆ ಆಡತೊಡಗಿದರು. +“ಸರೀಂತೇಳ್ರೆ ಸರಿ. ತಪ್ಪೂಂತ ಗ್ರೇಸಿಕಂಡ್ರೆ… ತಪ್ಪು! ಯಾಕೆ ಗೊತ್ತುಟ್ಟೋ?” ಎಂದು ಎಲ್ಲರ ಮುಖವನ್ನೊಮ್ಮೆ ಕಣ್ಣಿಟ್ಟು ನೋಡಿದ ರೈಗಳು, “ನಾವು ಧೈವಕ್ಕೆ ತಪ್ಪಿ ನಡ್ಕಂಬ್‌ದಲ್ಲೆಲ್ಲೋ? ಹಾಂಗಾರೆ ಸರಿ; ಮತ್ತೇ….ತಪ್ಪೂಂತಾದರೆ ಅದ್ ಏನಂತ್ ನಿವ್ಗೇ…. ಗೊತ್ತುಟ್ಟಲ್ಲೇ?” ಎಂದು ಭೂತ ಕಟ್ಟ್ ಹೇಳುವ ರೀತಿಯಲ್ಲಿ, ಪೂರಾ ಹೇಳದಿದ್ದರೂ ತಿಳಿಯುವಂತೆ, ಹೇಳಿದರು. “ಸರಿಯೋ…. ತಪ್ಪೋ…ನಂಗೊತ್ತಿಲ್ಲೆ. ಒಟ್ಟಾರೆ ಆ ಅರೆಬ್ಬಾಯಿ ನಿಲ್ಲೋಕು, ಅಷ್ಟೆ” ಲಿಂಗಪ್ಪಣ್ಣ ತಾನು ಸಂಜೆಯಿಂದ ಹಲವು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದರು. ಆಗ ರಾಮಣ್ಣ ರೈಗಳು, “ಸುಮ್ಮಂಗೆ…ಇನ್ನ್ ಸನ ಚಪ್ಪೆ ಗುದ್ದುದು ಎಂಥರ? ಎಲ್ಲವ್ಕೂ ಆದೂಂತಾದರೆ ನಾಳೆ ಬೊಳ್ಪಿಗೆ ಗೌಡ್ರಲ್ಲಿಗೆ ಪೋಯಿ. ಹೇಂಗೆ? ಆಗದಾ….?” ನಿರ್ಧರಿಸಿಯೇ ಬಿಟ್ಟಂತೆ ಕೇಳಿದರು. ಎಲ್ಲರೂ ಆಯಿತೆಂದು ಒಪ್ಪಿಕೊಂಡವರಂತೆ ಬೈರಾಸು, ಮುಂಡ ಕೊಡವಿ ಮೇಲೆದ್ದರು. +ಮರುದಿನ ಗೌಡರ ಮನೆಗೆ ರಾಮಣ್ಣ ರೈ, ತ್ಯಾಂಪಣ್ಣ ಗೌಡ, ಸುಬ್ಬಯ್ಯ ಪಾಟಾಳಿ, ಮಾಲಿಂಗ ಮಣಿಯಾಣಿ, ಲಿಂಗಪ್ಪಣ್ಣ ಅಲಿಯಾಸ್ ಲಿಂಗಪ್ಪ ಅಲ್ಲದೆ, ಭೂತ ಕಟ್ಟುವ ಮೋಂಟ ಪರವ ಮತ್ತು ಕೇಂಪು; ಒಟ್ಟಾಗಿ ಬಂದರು. ಎಲ್ಲರಿಗೂ ಚಾ ಅವಲಕ್ಕಿ ಬಾಳೆಹಣ್ಣಿನ ಉಪಚಾರವಾದ ಮೇಲೆ ಸೋಂಪ ಗೌಡರು, “ಎಲ್ಲವೂ ಅಪರೂಪಕ್ಕೆ ಒಟ್ಟಿಗೆ ಬಂದೊಳರಿ, ಏನಾರ್ ವಿಶೇಷ ಉಟ್ಟೋ ಹೇಂಗೆ?” ಎಂದರು. ಸೋಂಪ ಗೌಡರೇ ಆರಂಭಿಸಿದ್ದು ಒಳ್ಳೆದಾಯಿತೆಂದು ರೈಗಳು. “ನಮ್ಮ ಮೋಂಟಂಗೆ ಏನೋ ಬಾಧೆ ಸುರು ಆವುಟ್ಟು ಗಡ….. ಎಂದು ಹಾಗೇ ಮೋಂಟನತ್ತ ನೋಡಿ, ”ಹೌದಾ ಮೋಂಟ, ಅದೆಂಥ ಗೌಡ್ರೊಟ್ಟಿಗೆ ಸರಿ ಹೇಳ್…” ಎಂದು ಅಹವಾಲನ್ನು ಅಂಗಳದಲ್ಲಿ ಕುಳಿತ ಮೋಂಟನ ಹೆಗಲಿಗೆ ದಾಟಿಸಿದರು. ಗೌಡರಿಗೂ ಗೌಡರ ಹಿಂದೆ ನಿಂತಿದ್ದ ಅವರ ಪತ್ನಿಗೂ ಏನೂ ಸುಳಿವು ಸಿಗಲಿಲ್ಲ. +“ನನ್ನಿಂದಾಗಿ ಎಂಥ ದೋಷ ಆವುಟ್ಟೂಂತ ನಂಗೆ ಗೊತ್ತಿಲ್ಲೆ ಉಳ್ಳಾಯ! ದಿನೊಳು ಹಿಂಬೊತ್ತಾಕನ ನಂಗೆ ದರ್ಸನ ಬಂದದೆ! ಯಾಕೇಂತ ಗೊತ್ತಾತ್‌ಲ್ಲೆ ಸುಮಾರ್ ಕಡೆ ಕೇಳ್ಸಿದೆ. ಕಡೇಗೆ ಕಿರ್ಲಾಯ ತಂತ್ರಿಗೆ ಹೇಳ್ದೊ-ಅದ್ ನಾವ್ ನಂಬುವ ಪಿಲಿಚಾಮುಂಡಿದ್ ಉಪದ್ರಾಂತ. ಚಾವಡಿಗೆ ಅಸುದ್ದೊ ಆವುಟ್ಟುಗಡಾ! ಎಂಥಾ ಅಸುದ್ದೋಂತ ಕೇಳ್ರೆ…ಗಾದೊಲಿ ಮೂರ್ತ ಭಂಗಾಂತ….ಹೇಳ್ದೊ” ತಕ್ಷಣ ರಾಮಣ್ಣ ರೈಗಳು “ಗಾದೊಲಿ ಅಲ್ಲ ಮಾರಾಯಾ ಅದ್…” ಗೌಡರತ್ತ ನೋಡಿ “ಗೌಡ್ರೆ….ಅದ್-‘ಗೋಧೂಳಿ ಮಹೂರ್ತ ಭಂಗಾಂತ’-ತಂತ್ರಿಗ ಹೇಳ್ದ್ ಗಡ….” ಎಂದು ಸರಿಪಡಿಸಿ ಹೇಳಿದರು. “ಉಮ್ಮ ನಂಗೆ ಎಂಥದೂ ಗೊತ್ತಾದುಲ್ಲೆ. ಹಿಂಬೋತ್ತಾಕನ ಭೂತ ಚಾವಡಿ ಹಕ್ಕಲೆ ಒಂದು ಚೂರೂ ಶಬ್ದ ಮಾಡಿಕೆ ಬೊತ್ತ್ ಗಡ….ಧೈವಕ್ಕೆ ಶಾಂತಿಭಂಗ ಅದೆ ಗಡ… ನೀವು ಹಾಕುವ ಸ್ಕೊರನ್ ಶಬ್ದೊ ಆಗಿರ್ದೂಂತ ನಾ ಹೇಳಿಕೊಂಬೊದು….ಸೈರನ್ ಶಬ್ದ ಕೇಳ್ಯಾಕನೇ ಯಾಗೊಳು ನಂಗೆ ದರ್ಸನ ಸುರು ಅದು….” ಎಂದು ಮೋಂಟ ತನ್ನ ಕಷ್ಟ ತೋಡಿಕೊಂಡ. ಸೋಂಪ ಗೌಡರು ಆಶ್ಚರ್ಯ ಆತಂಕದಿಂದ ಬಾಯಿ ಬಿಟ್ಟರು. ಕಳೆದ ಗುರುವಾರ ಹೊತ್ತಿಗೆ ಎರಡು ಸೇರು ಹಾಲು ಕೊಡುವ ಪ್ರೀತಿಯ ಕಪಿಲೆ ಹಸು ಹಟ್ಟಿಯಲ್ಲಿ ನಿಂತಲ್ಲೇ ಬಡ್ಡಾಂತ ಬಿದ್ದು ಗೊರ…ಗೊರ ಎಂದು ಕಾಲು ನಿಮಿರಿ ಸತ್ತದ್ದು!? ಗೌಡತಿಯ ಬೊಳ್ಳೆ ಹೇಂಟೆ “ಕೆಕ್…ಕೆಕ್…”ಎನ್ನುತ್ತಾ ಪಟ್ಟನೆ ಬಿದ್ದು ಮರಗಟ್ಟಿದ್ದು!? ವಾರದಿಂದ ಬಲಗಣ್ಣ ರೆಪ್ಪೆ ತನ್ನಿಂತಾನೆ ಹೊಡಕೊಳ್ಳುತ್ತಿರುವುದು! ಗೌಡರಿಗೆ ಎಲ್ಲದರ ಸೂಚನೆ ಏನೆಂದು ಹೊಳೆಯಿತು. ಅಷ್ಟರಲ್ಲಿ ಲಿಂಗಪ್ಪಣ್ಣ, ‘ಒಟ್ಟಿಗೇ ಈ ನಾಯಿಗಳೂ ಎಲ್ಲರ ಮನೇಲಿ ಬೊಬ್ಬೆ ಹಾಕುದು ಭಾರೀ ಅಸುದ್ದೂ ಆಗಿರ್ದು….”ಎಂದು ತನ್ನ ಸಂಶಯ ಸೇರಿಸಿದರು. “ನಮ್ಮ ಲಿಂಗಪ್ಪಣ್ಣಂಗೂ ಕೆಲ ಸರ್ತಿ ದರ್ಸನ ಬಂದದೇಂತ… ಕೆಲೊವು ಹೇಳುವೆ! ಹೌದಾ ಲಿಂಗಪ್ಪಣ್ಣ….?”ಎಂದು ಸುಬ್ಬಯ್ಯ ಪಾಟಾಳಿಯವರು ಸೇರಿಸಿದ್ದು ಮಾತಿಗೆ ಬಲ ಬರಲೆಂದೇ ಇರಬಹುದೆಂದು ಭಾವಿಸಿದ ಲಿಂಗಪ್ಪಣ್ಣ,”ಹ್ಹೆ… ಹ್ಹೆ…. ಹೌ…. ಹೌದ್… ಹೌದ್…ಒಮ್ಮೊಮ್ಮೆ ನೆಲ ಅದ್ರಿದಾಂಗೆ ಅದೆ…ನಂಗೆ…”ಎಂದು ಆಚೀಚೆ, ಮತ್ತೊಮ್ಮೆ ಮೇಲೆ ಕೆಳಗೆ ನೋಡಿ ಒಪ್ಪಿಕೊಂಡರು. +“ಉಳ್ಳಾಯ ನನ್ನ ಜೀವಲಿ ಬದ್ಕಿಕೆ ಬುಡೊಕು; ಇಲ್ಲರೇ ನಾ ದಿನೊಳು ದರ್ಸನ ಹಿಡ್ದ್ ಸತ್ತೇ ಹೋನೆ….!! ಮತ್ತೆ ನನ್ನ ಹೆಣ್, ಮಕ್ಕಳಿಗೆ ನೀವೇ…” ಮೋಂಟ ಅಳಲಾರಂಭಿಸಿದ. ಕೇಪು ಆಧರಿಸಿ ಹಿಡಿದುಕೊಂಡ. +ಗೌಡರ ಕಿವಿಗಳು ಬಿಸಿಯಾಗಿದ್ದವು. ಗೌಡರ ಪತ್ನಿ ಭಯಭೀತರಾಗಿದ್ದರು. ಇನ್ನು ಏನೇನು ಆಗಲಿದೆಯೋ? ಗೌಡರು ದೈವಭಕ್ತ. ತಾನು ನಂಬುವ ಪಿಲಿ ಚಾಮುಂಡಿಗೆ ತನ್ನಿಂದ ಏನು ಅಪರಾಧವಾಯಿತೋ? ದೈವದ ಶಾತಿಭಂಗ ಮಾಡಿದರೆ ಉಳಿವೆನೆ? ಗೌಡರು ಚಿಳ್ಳನೆ ಬೆವರಿದರು. ಕುಳಿತಲ್ಲಿಂದ ಎದ್ದರು. ಸೀದಾ ಒಳಹೋಗಿ ಸೈರನ್‌ನ ಪ್ಲಗ್ ಕನೆಕ್ಷನ್ ತೆಗೆದೇ ಬಿಟ್ಟರು. ಮತ್ತೆ ಸುಸ್ತಾದಂತೆ ಬಂದು ಕುರ್ಚಿಯಲ್ಲಿ ಕುಳಿತರು. +ಮೌನ; ಯಾರೂ ಮಾತು ಮುಂದುವರಿಸಲಿಲ್ಲ. ಲಿಂಗಪ್ಪಣ್ಣ ತನ್ನ ಸಂತಸ ಪ್ರಕಟಿಸಲಾಗದೆ ಒದ್ದಾಡತೊಡಗಿ, ಸುಬ್ಬಯ್ಯಪಾಟಾಳಿಯವರ ದೈತ್ಯ ದೇಹದ ಮರೆಗೆ ನಿಂತುಕೊಂಡು ಸಾವರಿಸಿಕೊಂಡರು. ರಾಮಣ್ಣರೈಗಳು ಗೆಲುವಿನ ಓರೆನೋಟವನ್ನು ತ್ಯಾಂಪಣ್ಣಗೌಡ, ಮಾಲಿಂಗ ಮಣಿಯಾಣಿಯವರ ಕಡೆ ಹಾಯಿಸಿದರು. ಬಂದ ಕೆಲಸವಾಗಿತ್ತು. ಎಲ್ಲರೂ ಸಂತೋಷದಿಂದ ಗೌಡರಿಗೆ ವಂದಿಸಿ ಹೊರಟರು. ಗೌಡರು ಕುರ್ಚಿಯಲ್ಲಿ ಕುಳಿತೇ ಇದ್ದರು. ಪಿಲಿ ಚಾಮುಂಡಿ ಗೌಡರ ಮುಂದೆ ಕುಣಿಯುತ್ತಿತ್ತು. ಕಡ್ತಲೆಯನ್ನು ಝಳಪಿಸುತ್ತಾ, ಇಟ್ಟಲ್ಲಿ ಮತ್ತೆ ಹೆಜ್ಜೆಯಿಡದ ದೆವ್ವದ ಕಾಲಿನ ಗಗ್ಗರದ ಭೀಕರ ಝೇಂಕಾರ ಗೌಡರ ಕಿವಿಗೆ ಅಪ್ಪಳಿಸುತ್ತಿತ್ತು. ಆಳೆತ್ತರ ಘೋರವರ್ಣದ ಅಣಿಯ ನಡುವಿನಿಂದ ರಕ್ತವರ್ಣದ ನಾಲಿಗೆಯನ್ನು ಹೊರ ಚಾಚಿ ಕೆಂಡದಂಥ ಕಣ್ಣಿಂದ ಗೌಡರನ್ನು ತಿವಿಯುವಂತೆ ನೋಡುತ್ತಿತ್ತು. ಗೌಡರ ಪತ್ನಿ ಗೌಡರನ್ನು ಸಂತೈಸುವಂತೆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. +* * * +ಶಂಭಟ್ಟರ ಜಯಲಕ್ಷ್ಮಿ ಭವನದಲ್ಲಿ ಎಲ್ಲರಿಗೂ ಸಂಜೆ ಉಚಿತ ಚಾ ಸಮಾರಾಧನೆಯಾಯಿತು. ಲಿಂಗಪ್ಪಣ್ಣ ಒಂದು ಗೇಣು ಮೇಲೆ ನಡೆಯುತ್ತಿದ್ದರು. ಹೊರಗೆ ಮೋಂಟ ಮತ್ತು ಕೇಪು ಒಬ್ಬರನ್ನೊಬ್ಬರು ಆಧರಿಸಿಕೊಂಡು ನೆಟ್ಟಗೆ ನಿಲ್ಲಲು ಪ್ರಯತ್ನಿಸುತ್ತಿದ್ದರು. +ಸಾಯಂಕಾಲ ಐದೂವರೆಗೆ ಗೌಡರ ಸೈರನ್ ಕೂಗಲಿಲ್ಲ! ಎಲ್ಲರೂ ಸಂತಸ, ನೆಮ್ಮದಿಯಿಂದ ನಿರಾಳವಾದರು. +ಗೌಡರ ಜಿಮ್ಮಿ ಅತ್ತಿತ್ತ ಕುಂಯಿ ಕುಂಯಿ ಅನ್ನುತ್ತಾ ಅತ್ತಿತ್ತ ಸುತ್ತಾಡತೊಡಗಿತು. ಉಳಿದ ನಾಯಿಗಳೂ ಉಚ್ಚೆ ಬಂದವುಗಳಂತೆ ಆಚೀಚೆ ಸುಳಿಯತೊಡಗಿದವು. ಸೈರನ್ ಎದುರು ಜಿಮ್ಮಿ ಮಹಾ ಭಕ್ತನಂತೆ ಕುಳಿತು ಮೂತಿ ಮೇಲಕ್ಕೆತ್ತಿ ಮತ್ತೆ ಕುಂಯಿಗುಡುತ್ತಾ ಮುಂಗಾಲುಗಳನ್ನು ಮಡಚಿ ಮೂತಿಯನ್ನು ನೆಲದ ಮೇಲಿರಿಸಿತು. +ಇದ್ದಕ್ಕಿದ್ದಂತೆ ಲಿಂಗಪ್ಪಣ್ಣನ ಟೈಗರ್ ಊಳಿಡತೊಡಗಿತು. ಜತೆಗೆ ಟಾಮಿಯೂ, ಇದನ್ನು ಕೇಳಿದ ಜಿಮ್ಮಿ, ರೂಬಿ, ಸಿಂಗ, ಜೂಲಿ…. ಎಲ್ಲರ ಮನೆಯ ನಾಯಿಗಳೂ ಒಂದೊಂದಾಗಿ ಕೋರಸ್‌ನಲ್ಲಿ ಸೇರಿಕೊಂಡವು. ಮನೆಯಿಂದ ಮನೆಗೆ ಈ ಆಲಾಪನೆ ಮಿಂಚಿನಂತೆ ಹರಡಿತು. ಊರಿಡೀ ಕಿವಿ ಮುಚ್ಚಿಕೊಂಡಿತು. ತೋಟದ ಧನಿಗಳೆಲ್ಲರೂ ಕಿವಿಮುಚ್ಚಿ ಕುಳಿತರು. ನಾಯಿಗಳ ರೋಧನ ತಾರಕಕ್ಕೇರುತ್ತಿತ್ತು. +ಕಾಡೆಮನೆ ಲಿಂಗಪ್ಪಣ್ಣ ಕಿವಿಮುಚ್ಚಿಕೊಳ್ಳುವಂತೆ ಬೈರಾಸನ್ನು ತಲೆಗೆ ಗಟ್ಟಿಯಾಗಿ ಬಿಗಿದು, ಸಿಕ್ಕ ಸಿಕ್ಕವರನ್ನು ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈಯುತ್ತಾ ಅಂಗಳದಲ್ಲಿ ಹುಚ್ಚನಂತೆ ತಕಧಿಮಿ ಕುಣಿಯತೊಡಗಿದರು. +ಕೆಲವು ಶಬ್ದಗಳ ಅರ್ಥ +ರೆಬ್ಬಾಯಿ= ಆರ್ಭಟ +ಬೈರಾಸ್= ರುಮಾಲು +ಇಸುವಲ್ಲೇ ಇಸೊಕು= ಇಡುವಲ್ಲೇ ಇಡಬೇಕು +ಗಡ= ಅಂತೆ +ಮುಂಡು= ಧೋತಿ +ಉಳ್ಳಾಯ= ಧನಿಗಳೇ +ಹಿಂಬೊತ್ತಾಕನ= ಸಂಜೆಯಾಗುವಾಗ +ಹೋನೆ= ಹೋಗುತ್ತೇನೆ +ಕಡ್ತಲೆ= ಭೂತದ ಖಡ್ಗ/ಕಠಾರಿ +ಅಣಿ= ಭೂತದ ಪ್ರಭಾವಳಿ +ಗಗ್ಗರ= ಭೂತದ ಕಾಲಿನ ಆಭರಣ +ಮೊಜೆಂಟಿ= ಚಿಕ್ಕ ಗಾತ್ರದ ಜೇನ್ನೊಣದ ಹಿಂಡು ಮತ್ತು ಗೂಡು +ಹೊಟ್ಟ= ದಪ್ಪದಾದ ದೊಡ್ಡ ಕೊಕ್ಕಿನ ಕಾಡು ಪಕ್ಷಿ +ಉದ್‌ಗಿಲ್= ಬದಿಗೆ ಸರಿಸಲು ಸಾಧ್ಯವಿರುವ ಉದ್ದ ಕೋಲುಗಳ ಗೇಟಿನಂಥ ತಡೆ +ಕಟ್ ಹೇಳುವುದು= ಭೂತ ನುಡಿ ಕೊಡುವುದು +ಕೈಕಡ= ಕೈಸಾಲ +ಇನ್‌ಸನ= ಇನ್ನೂ ಸಹ +ಪರವ= ಭೂತ ಕಟ್ಟುವ ಒಂದು ಜನಾಂಗ +***** +ಕೀಲಿಕರಣ: ಸೀತಾಶೇಖರ +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು […] +ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು […] +ಬೆಂಗಳೂರಲ್ಲಿ ಮನೆ ಕಟ್ಟಿಸಿದೆ; ಫೋನ್ ಹಾಕಿಸಿದೆ; ಎರಡು ಮಕ್ಕಳನ್ನೂ ಒಳ್ಳೆ ಸ್ಕೂಲಿಗೆ ಸೇರಿಸಿದೆ. ಇವುಗಳಿಂದಾಗಿ ಸಿಕ್ಕಿಬಿದ್ದಿರುವ ನಾನು ಸಿಟ್ಟು ಬಂದಾಗೆಲ್ಲ ‘ಹೋಗಯ್ಯ’ ಎಂದು ಕೆಲಸಕ್ಕೆ ರಾಜಿನಾಮೆ ಕೊಟ್ಟ ಅಪ್ಪನಂತೆ ಬದುಕಲಾರೆ. ನಾನು ಕೆಲಸಕ್ಕೆ ಸೇರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_629.txt b/Kannada Sahitya/article_629.txt new file mode 100644 index 0000000000000000000000000000000000000000..edb3116e448e82914f0058ab1a3c7496fa7a0e35 --- /dev/null +++ b/Kannada Sahitya/article_629.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ +ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. +ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ +ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. +ಈ ಭಯೋತ್ಪಾದಕನೆಲ್ಲಿ ಅಡಗಿದ್ದ? +(ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) +ಜಂತಿಯಿಂದ ಲೊಟ್ಟನೆ ಬಿದ್ದಾಗ, ಅವ್ವ +ದೀಪಹಚ್ಚಿ ಹುಡುಕಿ, ಪಟ್ಟನೆ ಹಿಡಿದು ಗತಿಗಾಣಿಸಿದ್ದು +ನೆನಪಿನ ಕೊಂಡಿಯಲ್ಲಿ ಜೀವಂತವಿದೆ. +ಸುತ್ತಿಟ್ಟ ಗಾದಿ, ಬಿಚ್ಚಿ ಹಾಸಿರುವ ಜಮಖಾನೆ +ಮಾಡಿನಲ್ಲಿ ಬಿಟ್ಟ ಚಪ್ಪಲಿ, ಬೂಟಿನೊಳಗೆ +ಕಲ್ಲು, ದಿಮ್ಮಿಗಳ ಬುಡದಲ್ಲಿ, ಇಲ್ಲ ಗುದ್ದಿನೊಳಗೆ. +ಇರುಳು ಹೊರಬಿದ್ದು ಮೆಲ್ಲಗೆ ನುಸುಳಿ +ಹುಳು-ಹುಪ್ಪಡಿಯ ಬೇಟೆ. +ಸಂದಿಗೊಂದಿಗಳೆ ತಂಗುದಾಣ. +ತುಳಿದರೆ ಇರುವೆಯೂ ಕಚ್ಚುವುದು, ಚೇಳು +ಬಿಡುವುದೆ ಹೇಳು? +ಗುರಿಯಿಟ್ಟು ಹೊರಟಿರದಿದ್ದರೂ +ತಡವಿದರೆ, ಅಡ್ಡದಾರಿಗೆ ಬಿದ್ದು ಎಡವಿದರೆ +ಆತ್ಮರಕ್ಷಣೆಯ ಗಡಿಯಲ್ಲಿ +ಹಿಂಸೆಗೆ ಪ್ರಚೋದನೆ. +ವಂಶ ಬೆಳೆಸುವ ಇಚ್ಛೆಗಾವ ಪ್ರಾಣಿಯೂ ಹೊರತಲ್ಲ. +ಗಂಡು-ಹೆಣ್ಣು ಕೈ ಹಿಡಿದು ಕುಣಿದು +ಕೊಂಡಿ ಕೊಂಡಿಗೆ ಹೆಣೆದು +ತಿರುಗಿ ತಿರುಗಣಿಯಂತೆ, ಕೊನೆಗೊಂದು ತಿರುವಿನಲಿ +ಗಂಡು,ಹೆಣ್ಣಿಗೆ ಭಕ್ಷ್ಯವಾಗುವುದಕ್ಕೆ +ಸಾಕ್ಷಿಯುಂಟು. +ಪ್ರಣಯ ನೃತ್ಯದ ಕ್ರೂರಕೃತ್ಯಕ್ಕೆ ಮುಂದೆ +ತಾಯ್ತನದ ಸಂಭ್ರಮ. +ಮಿದುವಾದ ಮರಿಗಳನ್ನೆಲ್ಲ ಬೆನ್ನಿನ ಮೇಲೆ ಹೊತ್ತು +ಹೊರೆಯುವದು, ಇಳಿದು ಓಡಾಡುವರೆಗೆ +‘ಚೇಳಿಗೊಂದೇ ಬಸಿರು’ ಇರಬಹುದು- +‘ಊರದ ಚೇಳು, ಏರದ ಬೇನೆಯಲ್ಲಿ +ಮೂರು ಲೋಕ ನರಳುವುದು’ ಬರಿಯ ಬೆಡಗೆ? +***** +ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […] +ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] +ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ ಹಾಳಾದ ಕಾರಖಾನೆ ! ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ ! […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_63.txt b/Kannada Sahitya/article_63.txt new file mode 100644 index 0000000000000000000000000000000000000000..63ae5ef024c82f5c8f633010e519e4d64a64b481 --- /dev/null +++ b/Kannada Sahitya/article_63.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಲ್ಯಾಣಿ ತಾಳ — ಅಟ್ಟ +ದಾಸನಾಗಬೇಕು – ಸಾದಾಶಿವನ | +ದಾಸನಾಗಬೇಕು ||ಪ|| +ದಾಸನಾಗಬೇಕು ಕ್ಲೇಶಪಂಚಕವಳಿದು | +ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| +ಮನದ ಕಲ್ಮಷ ಕಳೆದು ಶ್ರೀಮಹೇ – | +ಶನ ಮಹಿಮೆಯ ತಿಳಿದು || +ಇನಿತು ಇನಿಜಗವೆಲ್ಲ ಈಶ್ವರಮಯವೆಂದು | +ಘನವಾದ ಮೋಹದ ಗಡಿಯನು ದಾಟುತ ||೧|| +ತನುವು ಅಸ್ಥಿರವೆನ್ನುತ ತಿಳಿದು ಶಂಕ – | +ರನ ಹೃದಯವ ಕಾಣುತ || +ಘನವಾದ ಇಂದ್ರಜಾಲದ ಮಾಯೆಯೆನ್ನುತ | +ಬಿನುಗು ಸಂಸಾರದ ಮಮತೆಯ ಬಿಡುತ ||೨|| +ಆರುಚಕ್ರದಿ ಮೆರೆವ ಅಖಂಡನ | +ಮೂರು ಗುಣುವ ತಿಳಿದು || +ಆರು ಮೂರು ಹದಿನಾರು ತತ್ತ್ವವ ಮೀರಿ | +ತೋರುವ ಕಾಗಿನೆಲೆಯಾದಿ ಕೇಶವನಡಿ ||೩|| +ಅಮ್ಮಿ: ಮೊಲೆ ಹಾಲುಠಾವಿಲಿ- ಸ್ಥಳದಲ್ಲಿ, ಜಾಗದಲ್ಲಿಧರ್ಮವೇ ಜಯವೆಂಬ ದಿವ್ಯ ಮಂತ್ರಧರ್ಮವೇ ಜಯವೆಂಬ ದಿವ್ಯ ಮಂತ್ರ ಪ ಮರ್ಮವನರಿತು ಮಾಡಲಿಕೆ ಬೇಕು ತಂತ್ರ ಅವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕುದ್ವೇಷ ಮಾಡಿದವನ ಪೋಷಿಸಲಿಬೇಕುಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿ […] +ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […] +ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_630.txt b/Kannada Sahitya/article_630.txt new file mode 100644 index 0000000000000000000000000000000000000000..c4a788036f4eaf8c28c587d331438be7bd76a0c0 --- /dev/null +++ b/Kannada Sahitya/article_630.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ ನನ್ನ ಸುತ್ತೆಲ್ಲ ಇದ್ದ ಸ್ನೇಹಿತರು, ಕನ್ನಡಸಾಹಿತ್ಯ.ಕಾಂ ಉತ್ಸಾಹಿಗಳು ಕಾಪಾಡಿದರು. ಇಂದು ಹೆಚ್ಚು ಸಾಲವಿಲ್ಲದೆ ಬದುಕಿದ್ದೇನೆಂದರೆ, ಅದರೆಲ್ಲ ಶ್ರೇಯಸ್ಸೂ ಅವರುಗಳಿಗೆ ಹೋಗಬೇಕು. ಅಂತೆಯೇ ನನ್ನ ಕುಟುಂಬದ ಆತ್ಮೀಯರಿಗೂ ಸಹ. ರವಿ ಅರೇಹಳ್ಳಿ, ಕಿರಣ್, ರಾಘವ ಕೋಟೇಕರ್, ದತ್ತಾತ್ರೇಯ, ರಾಜೀವ್, ಸೀತಾ, ಅನ್ನಪೂರ್ಣ, ಟಿ ಆರ್ ಸುಬ್ಬರಾವ್, ಯಶಸ್ವಿನಿ ಹೆಗಡೆ, ಪ್ರಶಾಂತ್..೭೪ ವರ್ಷ ವಯಸ್ಸಿನ ಮಿತ್ರರಾದ ಕೋಟೆ ನಾಗಭೂಷಣ್, ಹೀಗೆ ಒಬ್ಬರೆ ಇಬ್ಬರೆ. ಎಷ್ಟೋಂದು ಜನ….‘ಏನೂ ಯೋಚನೆ ಮಾಡಬೇಡಿ’, ಸಮಾಧಾನ ಹೇಳುತ್ತಲೇ ಹೋಗಿದ್ದರು. +ಹಾಸಿಗೆಯ ಮೇಲೆ ಅರೆಜ್ಞಾನದಲ್ಲಿದ್ದಾಗಲೂ, ಸುದ್ಧಿ ಕೇಳಿ ಬಂದಿದ್ದ ಸ್ನೇಹಿತರ ಪಟ್ಟಿಯನ್ನು ಸಾದರ ಪಡಿಸುತ್ತಲೇ ಇದ್ದರು – ಬಳಿಯೇ ಇದ್ದವರು, ಆಗ ಅನ್ನಿಸಿದ್ದು: ನಾನು ಸಾಯ ಬಾರದು, ಬದುಕಬೇಕು. ಇಷ್ಟೊಂದು ಜನರಿದ್ದಾರ? ಬದುಕು ಧನ್ಯವೆಂದನ್ನಿಸಿದ್ದಂತೂ ನಿಜ. ಈ ಧನ್ಯತೆಯನ್ನು ಮತ್ತಷ್ಟು ಅನುಭವಿಸಲಾದರೂ ನಾನು ಇನ್ನೂ ಒಂದಷ್ಟು ದಿನ ಉಳಿಯಬೇಕು. ಇವರನ್ನೆಲ್ಲ-ಜೊತೆಗೆ, ಶಸ್ತ್ರ ಚಿಕಿತ್ಸೆಯನಂತರ ಆಸ್ಪತ್ರೆಯಿಂದ ಹೊರಬಂದ ಮೇಲೆ, ಬಂದು ನೋಡಿಹೋಗಿದ್ದ ಹರೀಶ ಕಡಲಬಾಳು, ಹೇಮಾ ಇನ್ನೂ ಅನೇಕಾನೇಕರನ್ನು ಕೃತಜ್ಞತೆಯಿಂದ ನೆನೆಯುತ್ತಾ, ಕನ್ನಡಸಾಹಿತ್ಯ.ಕಾಂನ ಈ ಸಂಚಿಕೆಯನ್ನು ಮುಂದಿಡುತ್ತಿದ್ದೇನೆ. +ಬರಿಯ ಪ್ರಾಣಾಂತಿಕ ಮಾತ್ರವಲ್ಲ… +ಎರಡನೆಯ ಆಘಾತ ಬರಿಯ ಪ್ರಾಣಾಂತಿಕ ಮಾತ್ರವಲ್ಲ, ಸಾಕಷ್ಟು ಜನರ ಶ್ರಮ, ಸೃಜನಶೀಲತೆಯಿಂದ ತನ್ನೆಲ್ಲ ಸಾಕಾರವನ್ನು ಪಡೆದಿದ್ದ ಕನ್ನಡಸಾಹಿತ್ಯ.ಕಾಂನ ಡಾಟಾಬೇಸ್, ಎರಡು ಬ್ಯಾಕಪ್ ಸೇರಿದಂತೆ ನಾಶವಾದದ್ದು. ನಾನು, ಮೊದಲಿನಿಂದಲೂ ಒಂದು ತಪ್ಪು ಮಾಡಿದೆ ಎಂದನ್ನಿಸುತ್ತದೆ: ಅದು ತಾಂತ್ರಿಕತೆ ಹಾಗು ಪ್ರಾದೇಶಿಕ ಭಾಷೆ, ಸಂಸ್ಕೃತಿಯ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಂಡದ್ದು. ಒಂದೆಡೆ ತಾಂತ್ರಿಕತೆ, ಇನ್ನೊಂದೆಡೆ ಸಾಂಸ್ಕೃತಿಕ ಭಾಷೆ, ಸಾಮಾಜಿಕ ಪರಿಸರ-ಎರಡಲಗಿನ ಕತ್ತಿಯ ಮೇಲೆ ಹೆಚ್ಚೆ ಇಟ್ಟದ್ದು. +ಆನ್ಸಿ ಹಾಗು ಯುನಿಕೋಡ್ ಎರಡೂ ಗುಣ-ಶೈಲಿಯ ಅಗತ್ಯಗಳನ್ನು ಕನ್ನಡಸಾಹಿತ್ಯ.ಕಾಂ ಪ್ರತಿನಿಧಿಸುವಂತಿದ್ದರೆ ಮಾತ್ರವೇ ಅದಕ್ಕೆ ‘ತಾಂತ್ರಿಕ ದುರಹಂಕಾರರಹಿತ’ವಾದ ಅಗತ್ಯಗುಣ ಬರುತ್ತದೆ ಎಂದೇಕೆ ನಾನು ಆಲೋಚಿಸಿದ್ದು? – ಒಮ್ಮೊಮ್ಮೆ ಜಿಗುಪ್ಸೆಯಿಂದ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಯಾವುದಾದರೂ ಒಂದನ್ನು ಹಿಡಿದಿದ್ದರೂ ಸಾಕಾಗಿತ್ತು, ಇನ್ನೊಂದಷ್ಟು ಜನ ‘ಹಿಂದುಳಿದಿರಲಿ’ ಏನಂತೆ ಎಂದು ‘ಮುಂದಕ್ಕೆ ಹೆಜ್ಜೆ ಇಡಬಹುದಿತ್ತು’. ಸೈಬರ್‌ಸ್ಪೇಸ್ ಎನ್ನುವುದು ನಮಗಷ್ಟೇ ಇದ್ದರೆ ಸಾಕು….? ಈ ಧೋರಣೆ ವ್ಯಾಪಕವಾಗುತ್ತಿದ್ದಂತೆ, ಆಗಬಹುದಾದ ವೈಯಕ್ತಿಕ ಹಾಗು ಸಾಮಾಜಿಕ ನ್ಯಾಯ ಹೇಗಿರುತ್ತದೆ ಎಂದು ಇಲ್ಲಿ ಹೆಚ್ಚು ವಿವರಿಸಬೇಕಾಗಿಲ್ಲ. ಕನ್ನಡದಲ್ಲಿ ಯುನಿಕೋಡನ್ನು ಪ್ರಥಮ ಬಾರಿಗೆ ಬಳಸಿದ್ದು ‘ಕನ್ನಡಸಾಹಿತ್ಯ.ಕಾಂ’, ಆದರೂ ಅದು, ನಮ್ಮವರ, ಅಂದರೆ ಭಾರತೀಯ ಆರ್ಥಿಕಶಕ್ತಿಯನ್ನು ಪರಿಶೀಲನೆಯಲ್ಲಿಟ್ಟುಕೊಂಡು – ‘ಆನ್ಸಿ’ಯನ್ನು ಕೈಬಿಡಲಿಲ್ಲ. ಈ ಎರಡನ್ನೂ ಒಂದೆಡೇಯೇ ನಿರ್ವಹಿಸುವಂತಾಗುವ ಕೇಂದ್ರವ್ಯವಸ್ಥೆಯೊಂದು ಸಾಧ್ಯವಾದಲ್ಲಿ..ಎನ್ನುವ ಕನಸಿಗೆ ಇಂಬು ಕೊಟ್ಟವರು: ರಾಘವ ಕೋಟೇಕರ್. ಆಗ, ನಿರ್ಮಾಣವಾದದ್ದೇ “ಸಂಪೂರ್ಣ ಸಿ‌ಎಂಎಸ್”. ಅದರ ವಿನ್ಯಾಸಕಾರನಾಗಿ ನಾನು ಒಂದು ತಪ್ಪು ಮಾಡಿದ್ದೆ: ಮೈಸೀಕ್ವಲ್ ಹಾಗು ಪಿ‌ಎಚ್‌ಪಿಗಳ ನಡುವೆ ಪಠ್ಯದ ರೆಂಡರಿಂಗ್‌ನಲ್ಲಿ ಶಿಷ್ಟಾಚಾರವಿಲ್ಲದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಅಲ್ಲಿಯವರೆಗೆ ಪಿ‌ಎಚ್‌ಪಿ-೪ ಹಾಗು ಮೈಸಿಕ್ವೆಲ್ ೪+ನೆ ಆವೃತ್ತಿಯನ್ನು ಬಳಸುತ್ತಿದ್ದೆವು. ಯುನಿಕೋಡನ್ನು ಪಿ‌ಎಚ್‌ಪಿ ೪ ಇನ್ನೂ ಸರಿಯಾಗಿ ತೋರುತ್ತಿರಲಿಲ್ಲ. ಆದುದರಿಂದ ಮೈಸೀಕ್ವಲ್‌ನಲ್ಲಿ ಯುನಿಕೋಡ್‌ನ ಹೆಕ್ಸಾಡೇಸಿಮಲ್ ಹಾಕಿ ಪಠ್ಯವನ್ನು ಹೊರಗೆ ಎಳೆದು ಹಾಕುತ್ತಿದ್ದೆವು. ಪಿ‌ಎಚ್‌ಪಿ ೫ ಯುನಿಕೋಡನ್ನು ಬೆಂಬಲಿಸಲಾರಂಭಿಸಿದಂತೆ- ಎಲ್ಲವನ್ನೂ ಒಂದೇ ಮೈಸೀಕ್ವೆಲ್ ಡಾಟಾಬೇಸ್ ಟೇಬಲ್‌ನಲ್ಲಿ ಹಾಕಿ ಅಲ್ಲಿಂದ ನಿರ್ವಹಿಸಬಹುದು ಎಂಬ ಆಲೋಚನೆಯೊಂದಿಗೆ “ಸಂಪೂರ್ಣ ಸಿ‌ಎಂಎಸ್” ಆರಂಭಿಸಿದ್ದು. ಎಲ್ಲವನ್ನೂ ಒಂದೆಡೆ ಹಾಕಿ ಬಹುಭಾಷಾ ಪಠ್ಯವನ್ನು ಒಂದೇ ಟೇಬಲ್ಲಿನಿಂದ, ಒಂದೇ ಸರ್ವರ್‌ಸ್ಕ್ರಿಪ್ಟ್‌ನಿಂದ ನಿರ್ವಹಿಸಬಹುದು ಎನ್ನುವುದನ್ನು ಖಚಿತಪಡಿಸಲೋ ಎನ್ನುವಂತೆ ನಮ್ಮ ಪ್ರಯತ್ನಗಳು ಯಶಸ್ವಿಯಾಗಿತ್ತು. ಕಾನ್‌ಲಿಟ್.ಕಾಮ್ ಅನ್ನು ಅದರಿಂದಲೇ ನಿರ್ವಹಿಸಲಾರಂಭಿಸಿದೆವು. ಅಲ್ಲಿದ್ದಿರಬಹುದಾದ ಅಘಾತಕಾರಿ ಅಂಶ ಮೂಲವಿನ್ಯಾಸಕಾರನಾಗಿದ್ದ ನನ್ನ ಅರಿವಿಗೆ ಬಂದೇ ಇರಲಿಲ್ಲ. ಯುನಿಕೋಡ್ ಹಾಗು ಯುನಿಕೋಡೇತರ ಗುಣಶೈಲಿಯನ್ನಾಧರಿಸಿದ (ಕ್ಯಾರೆಕ್ಟರ್ ಎನ್‌ಕೋಡಿಂಗ್) ಭಾಷೆ-ಅಕ್ಷರಗಳನ್ನು ಮೈಸೀಕ್ವೆಲ್ ಇಂಜಿನ್ ಎರಡರಲ್ಲಿ ಯಾವುದಾದರೂ ಒಂದನ್ನು (ಫೀಲ್ಡ್ ಹೆಸರುಗಳಿಗೆ ಯುಟಿ‌ಎಫ್, ಲ್ಯಾಟಿನ್-೧ರ ಸೂಕ್ತ ಆಯ್ಕೆಯನಂತರವೂ) ಇಂಪೋರ್ಟ್ ಮಾಡಿಕೊಂಡ ಟೇಬಲ್ಲನ್ನು ಮತ್ತೆ ಡಂಪ್ ಮಾಡಿದಾಗ ಅಕ್ಷರಗಳೆಲ್ಲ ವಿರೂಪಗೊಂಡು ಬಿಡುತ್ತಿದ್ದವು. ಆಗ, ನನ್ನ ವಿನ್ಯಾಸದಲ್ಲಿನ ತಪ್ಪು ಅರಿವಾದದ್ದು. ಕೈ ಕೈ ಹಿಸುಕಿಕೊಳ್ಳುವಂತಾಯಿತು. ಇದೇ ಸಂದರ್ಭದಲ್ಲಿ, ನಮ್ಮ ಸಂಪೂರ್ಣಸಿ‌ಎಂಎಸ್‌ನಲ್ಲಿ ಯಥೇಚ್ಛವಾಗಿ ‘.ಎಚ್‌ಟಿ‌ಆಕ್ಸೆಸ್’ ಬಳಸಿದ್ದೆವು. ಶೇರ್‍ಡ್ ಹೋಸ್ಟಿಂಗ್ ಪರಿಸರಕ್ಕೆ ನಿಮ್ಮ ಸ್ಕ್ರಿಪ್ಟ್‌ಗಳು ಹೊಂದುವುದಿಲ್ಲ ಎಂದು ಹೋಸ್ಟಿಂಗ್ ಕಂಪನಿಯವರು ಮೂಗೆಳೆಯಲಾರಂಭಿಸಿದರು. ‘ಇನ್ನೇನು ವರ್ಷವಾಗುತ್ತಾ ಬಂತು-ಬೇರೆಡೆಗೆ ವರ್ಗಾಯಿಸಿದರಾಯಿತು’ ಎಂದು ಸುಮ್ಮನಾಗಿ, ಬೇರೆ ಸಂಸ್ಥೆಯಲ್ಲಿ ಜಾಗವನ್ನು ಬಾಡಿಗೆಗೆ ಹಿಡಿದಿದ್ದೆವು. ಜೊತೆಗೆ, ಕೆ‌ಎಸ್‌ಸಿ ಡಾಟಾಬೇಸ್, ನನ್ನ ಡೆಸ್ಕ್‌ಟಾಪ್ ಹಾಗು ಲ್ಯಾಪ್‌ಟಾಪ್‌ಗಳೆರಡಲ್ಲೂ ‘ಬ್ಯಾಕಪ್’ ಇತ್ತು. +ಹೃದಯಾಘಾತವಾದೊಡನೆ ಆಸ್ಪತ್ರೆ, ಆಜೀವ ಪರ್ಯಂತ ದಿನನಿತ್ಯದ ಚಟುವಟಿಕೆಯಾಗಿ ಅಂಟಿಕೊಂಡ ಔಷಧಿಗಳು ಮನಸ್ಸು-ದೇಹವೆಲ್ಲವನ್ನೂ ಹಾಳು ಮಾಡಿತ್ತು. ಕನ್ನಡಸಾಹಿತ್ಯ.ಕಾಂನತ್ತ ಗಮನ ನೀಡಲಾಗಲೇ ಇಲ್ಲ. ಜೊತೆಗೆ ಅಪಾರವಾದ ವಿಶ್ರಾಂತಿಯ ಅಗತ್ಯವೂ ಇತ್ತು. +ಈ ನಮ್ಮ ರವಿ ಅರೇಹಳ್ಳಿ ಸುಮ್ಮನಿರುವ ಪೈಕಿಯಲ್ಲ, ‘ಸಾರ್ ಅಪ್‌ಡೇಟ್ ಮಾಡಿ’ ಎಂದು ವಿಶ್ವಾಸಪೂರ್ವಕವಾದ ವರಾತ ಹಚ್ಚಿದರು. ರಾಘವ ಕೋಟೇಕರ್‌ನನ್ನು ಸಂಪರ್ಕಿಸಿ ಕರೆತಂದರು. ಅಗ್ಯೆಗಾಗಲೇ ಸಂಪೂರ್‍ಣ ಸಿ‌ಎಂಎಸ್‌ನಲ್ಲಿದ್ದ ಲೋಪಗಳ ಅರಿವಿದ್ದ ರಾಘವ ಅದನ್ನು ಪುನರ್‌ರಚಿಸಲಾರಂಭಿಸಿದ್ದರು: ಕೇಕ್ ಫ್ರೇಂವರ್ಕ್ ಬಳಸಿ, ಕನಿಷ್ಟ ಕೋಡ್‌ನಲ್ಲಿ ಈ ಬಾರಿ ಎರಡು ಮೈಸೀಕ್ವೆಲ್ ಟೇಬಲ್ ಬಳಸೋಣವೆಂದು ತೀರ್ಮಾನವಾಗಿತ್ತು. ಅಂತೆಯೆ ವಾರಗಟ್ಟಲೆ ಮತ್ತೆ ಕೂತೆವು. ಜೊತೆಗೆ ರವಿ. +ಹೇಗಿದ್ದರೂ ನಾವು ಹೋಸ್ಟಿಂಗ್ ಕಂಪನಿ ಬದಲಾಯಿಸಬೇಕಲ್ಲ ಎಂದು ಇದ್ದ ಕ್ಯಾನ್‌ಲಿಟ್ ಕಾಂ ಕಡೆಗಾಗಲಿ, ಕನ್ನಡಸಾಹಿತ್ಯ.ಕಾಂ ಕಡೆಗಾಗಲಿ ಗಮನ ಹರಿಸಲಿಲ್ಲ. ಹೇಗಿದ್ದರೂ ಬೇರೆ ಕಡೆ ಹೋಗಬೇಕು, ನಮ್ಮ ಲೋಕಲ್ ಕಂಪ್ಯೂಟರ್‌ಗಳಲ್ಲಿರುವುದನ್ನೇ ಅಪ್‌ಲೋಡ್ ಮಾಡಬೇಕಾಗಿರುವುದು ಎಂದು ಉತ್ಪ್ರೇಕ್ಷಿಸಿದೆವು. ಮಳೆ, ಧಾರಕಾರ ಸಿಡಿಲು, ಡೆಸ್ಕ್‌ಟಾಪ್ ಹಾಗು ಕೆಲಸ ಮಾಡುತ್ತಿದ್ದ ಲ್ಯಾಪ್‌ಟಾಪ್ ಎರಡೂ ಕೈಕೊಡಲಾರಂಭಿಸಿತು. ಹಾರ್ಡ್‌ವೇರ್ ಇಂಜಿನಿಯರ್‌ನನ್ನು ಕರೆಸಿದಾಗ ಹಾರ್ಡ್‌ಡಿಸ್ಕ್ ಹೋಗಿರುವುದರ ಬಗೆಗೆ ತಿಳಿಸಿದಾಗ ಎದೆ ಧಸಕ್ಕೆಂದು ಕುಸಿದಿತ್ತು. ಲ್ಯಾಪ್‌ಟಾಪ್ ಹಾರ್ಡ್ ಡಿಸ್ಕ್ ತೆಗೆದಾಗ ಅದು ಶೇ೪೦.೦೦ರಷ್ಟು ಬ್ಯಾಡ್‌ಸೆಕ್ಟರ್‌ಗಳಿಂದ ಕರಫ್ಟ್ ಆಗಿದ್ದು ಪ್ರಯೋಜನಕ್ಕೆ ಬರದಂತಾಗಿತ್ತು. ಏಳು ವರ್ಷಗಳಷ್ಟು ಕಾಲ, ನೂರಾರು ಜನ ಶ್ರಮ ಪಟ್ಟು ಕಟ್ಟಿದ್ದು-ಕಣ್ಣ ಮುಂದೆ ನಾಶವಾಗಿತ್ತು. ಇದು ಎರಡನೆಯ ದೊಡ್ಡ ಆಘಾತ. ನಂತರ ಶುರುವಾಯಿತು, ಹಳೆಯ ಸಿಡಿ, ಡೀವಿಡಿಗಳನ್ನು ಹುಡುಕಿ ಒಂದೊಂದನ್ನೂ ಡಿವಿಡಿಡ್ರೈವ್‌ಗೆ ಹಾಕಿ, ಏನಾದರೂ ಕೆ‌ಎಸ್‌ಸಿಯ ಪಠ್ಯವಿದೆಯೇ ಎಂದೆನ್ನುವ ಹುಡುಕಾಟ. ಛಿದ್ರ ಛಿದ್ರವಾಗಿ ತುಣುಕು ತುಣುಕಾಗಿ ಅಲ್ಲಲ್ಲಿ ಬಿದ್ದಿದ್ದನ್ನೆಲ್ಲ ಆಯ್ದುಕೊಂಡೆವು…ಮತ್ತೆ ಅದನ್ನೆಲ್ಲ ವೆಬ್‌ಪುಟಗಳಿಗೆ ಪುನರ್‌ವಿನ್ಯಾಸಗೊಳ್ಸಿಸುವುದನ್ನು ಪ್ರಾರಂಭಿಸಿದೆವು. ಎಲ್ಲರಿಗೂ ಸುಸ್ತು, ಅಂತೆಯೇ, ರಘು ಹಾಗು ರವಿಗೂ. ಕೇವಲ ೭೦% ಭಾಗದಷ್ಟು ಮಾತ್ರ ಸಿಕ್ಕಿದ್ದು. ಏನೂ ಇಲ್ಲದೆ ಹೋಗುವುದಕ್ಕಿಂತಲೂ ಇರುವುದಷ್ಟನ್ನಾದರೂ ಹಾಕೋಣವೆಂದನ್ನಿಸಿತು. ಹುಡುಕಾಟವಂತೂ ನಡೇದೇ ಇತ್ತು. ಕಳೆದ ಮೂರು ಈ ಹುಡುಕಾಟದಲ್ಲಿದ್ದಾಗ, ಮುಂಬೈನ ಮಿಶ್ರಿಕೋಟಿಯವರು ಕನ್ನಡಸಾಹಿತ್ಯ.ಕಾಂನ ಸಾಕಷ್ಟು ಪಠ್ಯವನ್ನು ಅಕ್ಷರದೋಷಗಳಿಗಾಗಿ ಪರೀಕ್ಷಿಸಿ ಶುದ್ಧೀಕರಿಸಿದ್ದರು. ಅದರ ಫಲವಾಗಿ ಒಂದು ಲಕ್ಷ ಪದಗಳಷ್ಟು ಪದಪರೀಕ್ಷಕಕ್ಕೆ ಸೇರಿಸುವುದೂ ಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ಅವರು ಕಳಿಸಿದ ಅಟಾಚ್‌ಮೆಂಟ್ಸ್‌ಗಳೆಲ್ಲ ಸಿಕ್ಕಿದವು. ಜೊತೆಗೆ ‘ಅರ್ಕೈವ್.ಆರ್ಗ್’ ಕನ್ನಡಸಾಹಿತ್ಯ.ಕಾಂನ ಸುಮಾರು ೭೦೦೦ ಲಿಂಕ್‌ಗಳನ್ನು ಸಾಕಷ್ಟು ಪಠ್ಯವನ್ನು ರಕ್ಷಿಸಿಟ್ಟಿದ್ದರು. ಈಗಲೂ ಇವೆ. ಅವು ನನ್ನ ಗಮನಕ್ಕೆ ತೀರಾ ತಡವಾಗಿ ಬಂದಿದೆ, ಅವುಗಳಿಂದ ಈಗ ಕಾಪಿ ಮಾಡಿ ಇಟ್ಟಿದ್ದೇನೆ. ಆದರೆ ಅವುಗಳನ್ನೆಲ್ಲ ಪುನರ್‌ವಿನ್ಯಾಸ ಪಡಿಸಬೇಕಗಿದೆ. ಜೊತೆಗೆ ಮಿಶ್ರಿಕೋಟಿಯವರ ಶ್ರಮದ ಸದುಪಯೋಗವೂ ಆಗಬೇಕಾಗಿದೆ. ಈ ಎಲ್ಲ ದೃಷ್ಟಿಗಳಿಂದ ಇರುವ ಡಾಟಾವನ್ನೆಲ್ಲ ಪುನರ್‌ರಚಿಸಬೇಕಾಗಿದೆ. ಆದರೆ, ಅಲ್ಲಿಯತನಕ ಅಪ್‌ಡೇಟ್ ಮಾಡದೆ ಇರುವುದು ಸರಿಯಲ್ಲ ಎಂದೂ ಸಹ ಆಗ್ರಹಪೂರ್ವಕವಾಗಿ ಎಲ್ಲರೂ ಹೇಳತೊಡಗಿದಾಗ, ಈ ಸಂಚಿಕೆಯನ್ನು ಈ ಅವಸರದ ಕಾರಣದಿಂದಲೇ ನಿಮ್ಮ ಮುಂದಿದೆ. ಇದರ ಹೆಮ್ಮೆ, ಗೌರವ, ಬಯ್ಗಳ ಏನಿದ್ದರೂ ನಮ್ಮ ರಾಘವ, ರವಿ ಇನ್ನೂ ಅನೇಕಾನೇಕ ಕನ್ನಡಸಾಹಿತ್ಯ.ಕಾಂ ಉತ್ಸಾಹಿಗಳಿಗೆ ಸಲ್ಲಬೇಕಾಗುತ್ತದೆ. ಇದರ ಮಧ್ಯೆ ಈ ಅರುಣ್ ರಾಚೇಗೌಡರನ್ನು ಮರೆಯಲಾಗುತ್ತದೆಯೆ…? +ಮುಂದೇನು? +ಸಾಕಷ್ಟು ಸಭೆಗಳಾಗಿವೆ. ಎಂ ಕಿರಣ್, ರವಿ, ರಾಘವ ಕೋಟೇಕರ್, ರುದ್ರಮೂರ್ತಿ ಹೀಗೆ ಅನೇಕಾನೇಕ ಉತ್ಸಾಹಿಗಳು ಕೆ‌ಎಸ್‌ಸಿಯ ಮುಂಚೂಣಿಗೆ ಬರುವ ಮಾತುಗಳು ತೇಲಿಬರುತ್ತಲಿವೆ. ಹೇಗೆ ನಡೆಸಿಕೊಂಡು ಹೋಗಬೇಕಿದೆ ಎಂಬ ನಿಯಮಾವಳಿಯನ್ನು ಇನ್ನೂ ರಚಿಸಬೇಕಾಗಿದೆ. ಅದಾದನಂತರ, ಅದನ್ನು ಅವರೆಲ್ಲ ಒಪ್ಪಿದ ಮೇಲೆ ಇದೇ ಪುಟಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ. +ಈ ಮಧ್ಯೆ ನಮ್ಮ ವಿಕ್ರಂ ಹತ್ವಾರ್‌ರವರು ಕನ್ನಡಸಾಹಿತ್ಯ.ಕಾಂನ ಲೇಖಕರ ಬಗೆಗೆ ವಿವರವಾದ ವ್ಯಕ್ತಿಚಿತ್ರಣದ ಸಂಗ್ರಹಣೆ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ಅವರೀಗಾಗಲೇ ಕಾರ್ಯನಿರತರೂ ಆಗಿದ್ದಾರೆ. ವಿಕ್ರಂರವರ ಕೊಡುಗೆ ಇಲ್ಲೇ ನಿಲ್ಲುವುದಿಲ್ಲ-ಕನ್ನಡಸಾಹಿತ್ಯ.ಕಾಂನ ಪುಸ್ತಕ ಪ್ರಕಾಶನವಾದ ಸಲ್ಲಾಪದ ಹಿಂದೆಯೂ ಅವರ ದುಡಿಮೆ ಇದೆ. +ಅರುಣ್ ರಾಚೇಗೌಡ, ವಿವೇಕ್ ಶಂಕರ್ ಇಬ್ಬರೂ ತಲಾ ಹತ್ತುಸಾವಿರ ರೂಗಳನ್ನು ನೀಡಿದ್ದಾರೆ. ಅದನ್ನು ಈ ವರ್ಷದ ದೂರವಾಣಿ ಹಾಗು ಬ್ರಾಡ್‌ಬ್ಯಾಂಡಿನ ಖರ್ಚಿಗೆ ತೆಗೆದಿರಿಸಲಾಗಿದೆ. ಅಮೆರಿಕದಿಂದ, ಹೆಸರು ಹೇಳಬಹುದೋ, ಇಲ್ಲವೋ ಗೊತ್ತಿಲ್ಲ (ರಘು) ವಿಂಡೋಸ್ ಆಫೀಸ್-೨೦೦೭ ಹಾಗು ವೆಬ್ ಸ್ಟುಡಿಯೋ ಕಳುಹಿಸಿಕೊಟ್ಟಿದ್ದಾರೆ. +ಇವರಿಗೆಲ್ಲ ನನ್ನ ಕೃತಜ್ಞತೆಗಳನ್ನು ತಿಳಿಸುತ್ತಾ, ಜೊತೆಗೆ ತಮ್ಮ ಸೃಜನಶೀಲತೆಯಿಂದ ಈ ಸಂ ಚಿಕೆಯ ಮೆರುಗು ಹೆಚ್ಚಿಸಿರುವ ಪ್ರಮೋದ್ ಪಿ ಟಿಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಾ- ವಿಶ್ರಾಂತಿ ಬಯಸುತ್ತಿರುವ +ಶೇಖರ್‌ಪೂರ್ಣ +೦೮-೬-೨೦೦೮ +ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […] +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ಇಂದು ಮಾಹಿತಿ ತಂತ್ರಜ್ಞಾನದ ಗಮನ ಸೆಳೆಯುತ್ತಿದೆ. ಕನ್ನಡಿಗರೇ ಆದ ನಾರಾಯಣಮೂರ್ತಿಗಳಿದ್ದಾರೆ, ಜಗದೀಶ್ ಇದ್ದಾರೆ, ಗುರುರಾಜ್‌ರವರಿದ್ದಾರೆ – ಬಹುಶಃ ಈ ಹೆಸರಿನ ಪಟ್ಟಿಗೆ ಇನ್ನೂ ಅನೇಕ ಗಣ್ಯರನ್ನು ಹುಡುಕುವುದು ಸುಲಭವಾದೀತು. ಆದರೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_631.txt b/Kannada Sahitya/article_631.txt new file mode 100644 index 0000000000000000000000000000000000000000..73ceecb2b445e2a2735f85f3948e6daa630a82d8 --- /dev/null +++ b/Kannada Sahitya/article_631.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನುವಾದ: ಶ್ರೀಧರ ಕಲ್ಲಾಳ +ಭಾರತದ ಮುಸ್ಲಿಮರೇನಾದರೂ ಅತ್ಯಂತ ಉದಾರತೆಯನ್ನು ತೋರಿ ಒಂದೊಮ್ಮೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ತಮ್ಮ ಒಪ್ಪಿಗೆಯನ್ನು ನೀಡಬಹುದೇ ಎಂದು ಕನಸು ಕಾಣುತ್ತೇನೆ. ಹಾಗಾದಲ್ಲಿ ಈ ಇಡೀ ಸಮಸ್ಯೆ ಪರಿಹಾರವಾಗಿ ಕಹಿ ಭಾವನೆಯ ಹಿಂದುತ್ವದ ಚಳುವಳಿ ನಮ್ಮ ದೇಶದಲ್ಲಿ ಅಂತ್ಯವಾಗಬಹುದೇನೊ? +ಇದಕ್ಕಿಂತಲೂ ಹೆಚ್ಚು ಅಮರ್ಪಕವಾದ್ದೆಂದರೆ ನಾವು ಹಿಂದೂಗಳು ನಿಜವಾದ ಆದ್ಯಾತ್ಮಿಕ ದೃಷ್ಟಿಯುಳ್ಳವರಾಗುವುದು; ಮತೀಯತೆಯಿಂದ ಮುಕ್ತರಾಗುವುದು; ರಾಮನ ದೇವಸ್ಥಾನವನ್ನು ಅಯೋಧ್ಯೆಯಲ್ಲೇ ಕಟ್ಟಬೇಕೆಂಬ ಹಠವನ್ನು ತೊರೆಯುವುದು; ಬಾಬ್ರಿ ಮಸೀದಿಯನ್ನು ಹೇಡಿತನದಿಂದ ನಾಶಪಡಿಸಿದ್ದಕ್ಕಾಗಿ ಮುಸಲ್ಮಾನರಲ್ಲಿ ಕ್ಷಮೆಕೋರುವುದು; ಸಿಮೆಂಟು ಮತ್ತು ಇಟ್ಟಿಗೆಯ ರಾಮನ ಗುಡಿಗೆ ಬದಲಾಗಿ ನಮ್ಮ ಕವಿಗಳಾದ ವಾಲ್ಮೀಕಿ, ತುಳಸಿ, ಕಂಬನ್, ಎಡುತ್ತಚ್ಚನ್ ಮುಂತಾದವರು ಕಂಡ ರಾಮನಲ್ಲಿ ಜೀವಿಸುವುದು. +ಹೀಗೆ ಸ್ಫಂದಿಸುವುದೇ ಹಿಂದುಗಳಾದ ನಮಗೆ ಹೆಚ್ಚು ಸಹಜವಾದ್ದು. ರಾಮನು ನಮ್ಮ ದೇಶದ ಸಾವಿರಾರು ಅಲಿಖಿತ ಜನಪದ ರಾಮಾಯಣಗಳಲ್ಲಿ ಹೀಗೆಯೇ ಜೀವಂತವಾಗಿರುವುದು. +ನಿಜವಾಗಿ ನಮ್ಮ ದೇವರಾದ ರಾಮ ಎಲ್ಲಿ ಜನಿಸಿದ? +ನಾವು ಹಿಂದೂಗಳು ಚಾರಿತ್ರಿಕವಾಗಿ ನಮ್ಮ ಅವತಾರ ಪುರುಷರನ್ನಂತೂ ನೋಡುವುದಿಲ್ಲ. ಎಲ್ಲವನ್ನೂ ಚಾರಿತ್ರಿಕವಾಗಿ ನೋಡುವುದು ಪಾಶ್ಚಾತ್ಯರ ಸ್ವಭಾವ; ಸೆಮಿಟಿಕ್ ಮೂಲದ ಧರ್ಮಗಳ ಅಗತ್ಯ. ನಮಗಾದರೋ ರಾಮನ ತ್ರೇತಾಯುಗದ ಅಯೋಧ್ಯ ಈ ಭೂಮಿಯಮೇಲೆ ಈಗ ಎಲ್ಲೂ ಇಲ್ಲ; ಅಥವಾ ಎಲ್ಲೆಲ್ಲೂ ಇದೆ. ರಾಮ ಪುನಃ ಹುಟ್ಟಿದ್ದು ಅವನ ಪರಮ ಭಕ್ತರಾದ ಗಾಂಧೀಜಿ ಅವನನ್ನು ಪ್ರಾರ್ಥಿಸಲೆಂದೇ ತೆರಳುತ್ತಿದ್ದಾಗ ಗುಂಡಿಗೆ ಬಲಿಯಾಗಿ ‘ಹೇ ರಾಮ್‘ ಎಂದು ಪ್ರಾಣಬಿಟ್ಟಾಗ. +ರಾಮ ಇಂಥ ದಿನವೇ, ಬಾಬ್ರಿಮಸೀದಿಯಿದ್ದ ಜಾಗದಲ್ಲೇ ಹುಟ್ಟಿದ ಎಂದು ಚಾರಿತ್ರೀಕರಿಸಿ ನೋಡುವುದು ನಮ್ಮ ಪುರಾಣ ಕಲ್ಪನೆಯನ್ನೂ, ಪೌರಾತ್ಯ ಹಿಂದೂ ಪರಂಪರೆಯನ್ನೂ ಕಡೆಗಣಿಸಿದಂತೆಯೇ. ಆದ್ದರಿಂದ ಭಾರತವು ಪುನಃ ಅನನ್ಯವಾಗಿ ಉಳಿಯಲು ಎರಡು ರೀತಿಗಳಲ್ಲೂ ಸಾಧ್ಯವಿದೆ. ಭಾರತೀಯ ಮುಸ್ಲಿಮರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ಉದಾರವಾಗಿ ಒಪ್ಪುವುದು; ಅಥವಾ ನಾವು ಹಿಂದೂಗಳು ಮಸೀದಿಯನ್ನು ಹೇಯವಾಗಿ ಕೆಡವಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ನಮ್ಮ ಮಹಾಕವಿಗಳ ಜೀವಂತ ಮಾತುಗಳಲ್ಲಿ ರಾಮನನ್ನು ಅರಸುವುದು. +ಆಗ ಮಾತ್ರ ಇಂದಿನ ಕಹಿ ವಾತಾವರಣ ಬದಲಾಗಬಲ್ಲುದು. ಎರಡೂ ಸಮುದಾಯಗಳ ಹೃದಯ ಬೆಸೆಯಬಹುದು. ಕೇವಲ ಮಾತುಕತೆಗಳಿಂದಾಗಲೀ ನ್ಯಾಯಾಲಯದ ತೀರ್ಪಿಗಾಗಿ ಕಾಯುವುದರಿಂದಾಗಲೀ ಅಲ್ಲ. +***** +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […] +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […] +(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_632.txt b/Kannada Sahitya/article_632.txt new file mode 100644 index 0000000000000000000000000000000000000000..516ce6f1a3b5d5298bc0b843723c55690510e073 --- /dev/null +++ b/Kannada Sahitya/article_632.txt @@ -0,0 +1,314 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೪ +– ೧ – +ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು ಗಂಟೆಯ ನಂತರ, ದಿಂಬುಗಳಿಂದ ಕೂಡಿದ ಒಂದು ಕಮಾನುಗಾಡಿ ಬಂತು. ಬಾಣಂತನಕ್ಕೆ ಮಗಳನ್ನು ಕರೆದೊಯ್ಯಲು ಬಂದ ಅವರು ಕಲ್ಲೇಶನ ಮದುವೆಯ ವರ್ತಮಾನವನ್ನೂ ಹೇಳಿದರು. ಇನ್ನು ಮದುವೆ ಹದಿನೈದು ದಿನಕ್ಕೆ ಸರಿಯಾಗಿ ಹೆಣ್ಣಿನ ಮನೆಯಲ್ಲಿ ನಡೆಯುತ್ತೆ. ಹಾಸನದ ಹೆಣ್ಣು. ಎಲ್ಲರೂ ಮದುವೆಯ ಹೊತ್ತಿಗೆ ನಾಗಲಾಪುರಕ್ಕೆ ಬರಬೇಕೆಂದೂ, ಅಲ್ಲಿಂದ ಗಾಡಿಯಲ್ಲಿ ಮುಂದೆ ಒಟ್ಟಿಗೆ ಹೋಗುವುದೆಂತಲೂ ಹೇಳಿ ಮಗಳ ಜೊತೆ ಪ್ರಯಾಣ ಮಾಡಿದರು. ನಂಜಮ್ಮ ಗಾಡಿಯ ಮೇಲೆ ಕುಳಿತಳು. ಮುಂಭಾಗದಲ್ಲಿ ದಂಡಿನ ದಳಪತಿಯ ಠೀವಿಯಲ್ಲಿ ಕಂಠೀಜೋಯಿಸರು ಬಿಳೀಕುದುರೆಯ ಮೇಲೆ ಸವಾರಿ ನಡೆಸಿದರು. +ನಾಗಲಾಪುರದ ಮನೆಯಲ್ಲಿ ಈಗಲೂ ಅಜ್ಜಿ ಒಬ್ಬಳೇ ಇದ್ದಳು. ನಂಜಮ್ಮ ಹುಟ್ಟಿದಾಗಿನಿಂದ ಸಾಕಿ ಸಲಹಿದವಳು ಅವಳೇ. ಅಕ್ಕಮ್ಮನನ್ನು ಕಂಡು ನಂಜಮ್ಮ ಕಣ್ಣೀರು ಹಾಕಿದಳು. ತುಂಬ ದಿನ ಅಜ್ಜಿಯನ್ನು ಬಿಟ್ಟಿದ್ದುದಕ್ಕೋ, ಅಥವಾ ಮತ್ತೆ ಯಾವ ಕಾರಣಕ್ಕೋ ಎಂಬುದು ಅವಳಿಗೇ ತಿಳಿಯಲಿಲ್ಲ. ಬಸುರಿಯಾದ ಮೊಮ್ಮಗಳನ್ನು ಇದಕ್ಕೂ ಮೊದಲು ತೌರುಮನೆಗೆ ಕರೆಸಿಕೊಳ್ಳಬೇಕೆಂದು ಅಕ್ಕಮ್ಮನ ಆಶೆಯಾಗಿತ್ತು. ಆದರೆ ಎಲ್ಲೆಲ್ಲಿಯೋ ಸಂಚಾರ ಹೋಗಿದ್ದ ಕಂಠೀಜೋಯಿಸರು ಊರಿಗೆ ಬಂದದ್ದೇ ನೆನ್ನೆ ರಾತ್ರಿ. ಅದೂ ಮಗನ ವಿವಾಹ ಮತ್ತು ದಿನವನ್ನು ನಿಷ್ಕರ್ಷಿಸಿಕೊಂಡೇ ಬಂದಿದ್ದರು. ಮಗನಿಗೆ ಇದಕ್ಕೂ ಮೊದಲೇ ಮಾಡಬೇಕಾಗಿತ್ತು. ಅವರು ಅದಕ್ಕೆ ಗಮನವನ್ನೇ ಕೊಟ್ಟಿರಲಿಲ್ಲ. ಕೆಲವು ದಿನದಿಂದ ಅವನ ಸಂಚಾರ ಕ್ರಮ ಸರಿಯಾಗಿಲ್ಲವೆಂದು ಬೇರೆ ಒಬ್ಬ ಕಾನಿಸ್ಟೇಬಲ್ಲಿನಿಂದ ತಿಳಿಯಿತು. ಸರಿ, ಎರಡೇ ದಿನದಲ್ಲಿ ಹೆಣ್ಣು ಗೊತ್ತುಮಾಡಿ ಲಗ್ನ ನಿಶ್ಚಯಿಸಿದರು. +ಅಣ್ಣನ ಮದುವೆಗೆ ನಂಜಮ್ಮನೂ ತಯಾರಿ ಮಾಡತೊಡಗಿದಳು. ಮನೆಗೆ ಸುಣ್ಣ ಕಾರಿಣೆ ಮೊದಲಾಗಿ ಆಳುಗಳ ಕೆಲಸವನ್ನೆಲ್ಲ ನಿರ್ದೇಶಿಸುವ ಹೊಣೆ ಅವಳದ್ದೇ. ಊರಿನಲ್ಲಿ ಒಂದೇ ಸಮನೆ ಇರುವುದು ಕಂಠೀಜೋಯಿಸರ ಜಾಯಮಾನಕ್ಕೆ ಬಂದದ್ದಲ್ಲ. ಕುದುರೆ ಏರಿ ಹೋದ ಅವರು ಮತ್ತೆ ಎಂಟು ದಿನಕ್ಕೆ ಬಂದರು. ಮದುವೆ ಇನ್ನು ಆರು ದಿನವಿದೆ ಎನ್ನುವಾಗ ಕಲ್ಲೇಶಿ ಪೋಲೀಸರ ವೇಷದಲ್ಲಿಯೇ ಊರಿಗೆ ಬಂದ. ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಅವನು ಬುದ್ಧಿವಂತ. ಮದುವೆಯ ಸಿದ್ಧತೆಯಲ್ಲಿ ತಂಗಿ ಮತ್ತು ಅಕ್ಕಮ್ಮರಿಗೆ ಬೇಕಾದ ಸಹಾಯ ಮಾಡಿದ. ಅವರ ಪೈಕಿಯ ಮುಖ್ಯ ನೆಂಟರೆಂದರೆ ರಾಮಸಂದ್ರದವರೇ. ದೇವರ ಸಮಾರಾಧನೆಗೆ ಒಂದು ದಿನ ಮುಂಚಿತವಾಗಿ ಚೆನ್ನಿಗರಾಯ, ಅಪ್ಪಣ್ಣಯ್ಯ , ಮತ್ತು ಸಾತು ಗಾಡಿಯಲ್ಲಿ ಬಂದರು. ವಿಧವೆಯಾದ ತಾನು ಬರುವುದಿಲ್ಲವೆಂದು ಗಂಗಮ್ಮ ಹೇಳಿಕಳಿಸಿದ್ದಳು. ದೇವರ ಸಂತರ್ಪಣೆಯಾದ ರಾತ್ರಿಗೆ ಎಲ್ಲರೂ ಹೊರಡಬೇಕು. ಆದರೆ ಬಸುರಿ ನಂಜಮ್ಮನಿಗೆ ಮಧ್ಯಾಹ್ನದಿಂದಲೇ ಆಯಾಸವಾಗಿ ಜ್ವರ ಬಂದಂತೆ ಆಗುತ್ತಿತ್ತು. ಸಂಜೆಯ ವೇಳೆಗೆ ಮಲಗಿಬಿಟ್ಟಳು. ಇನ್ನು ರಾತ್ರಿಯ ಹೊತ್ತು ಎತ್ತಿನ ಗಾಡಿಯಲ್ಲಿ ಅವಳು ಇಪ್ಪತ್ತನಾಲ್ಕು ಮೈಲಿಯ ಪ್ರಯಾಣ ಮಾಡುವುದು ಕ್ಷೇಮವಲ್ಲವೆಂದು ಎಲ್ಲರೂ ನಿರ್ಧರಿಸಿದರು. ಅವಳು ಮತ್ತು ಅಕ್ಕಮ್ಮ ಊರಿನಲ್ಲಿ ಉಳಿಯುವುದೆಂದು ನಿರ್ಧಾರವಾಯಿತು. +ಉರಿನಲ್ಲಿ ತಾನು ಮತ್ತು ಅಜ್ಜಿ ಇಬ್ಬರೇ. ಅದೂ ಮೊದಲ ಬಸುರು. ನಂಜಮ್ಮನಿಗೆ ಈ ಹೊಸ ಅನುಭವದಲ್ಲಿ ಸಹಜವಾಗಿಯೇ ಇರುವ ಭಯ ಬೇರೆ. ಆದುದರಿಂದ ಗಂಡ ತನ್ನ ಸಂಗಡ ಇಲ್ಲಿಯೇ ಉಳಿದರೆ ಚೆನ್ನವೆಂದು ಯೋಚಿಸಿದಳು. ತಾನಿದ್ದ ಕಡೆಗೆ ಅವರಿಗೆ ಹೇಳಿಕಳಿಸಿದಳು. ಗಾಡಿಯ ಮೇಲೆ ರಾತ್ರಿ ನಿದ್ದೆಮಾಡಲು ಸರಿಯಾದ ಸ್ಥಳದಲ್ಲಿ ಮೊದಲೇ ಕುಳಿತುಕೊಳ್ಳುವ ಸಿದ್ಧತೆಯಲ್ಲಿದ್ದ ಚೆನ್ನಿಗರಾಯರು ಬಂದು ಗುರ್ರೆನ್ನುವ ಧ್ವನಿಯಲ್ಲಿ, ಆದರೆ ಉಳಿದ ಯಾರಿಗೂ ಕೇಳಿಸದಂತೆ, ‘ಏನು?’ ಎಂದು ಕೇಳಿದರು. +‘ನಂಗೆ ಯಾಕೋ ಒಂದ್ ಥರಾ ಆಗ್ತಿದೆ. ಮನೇಲಿ ಇನ್ಯಾರೂ ಗಂಡಸರು ಇರುಲ್ಲ. ಮದುವೆಗೆ ಅಪ್ಪಣ್ಣಯ್ಯ ಸಾತೂ ಹೋಗ್ಲಿ. ನೀವು ಇಲ್ಲೇ ಇರಿ.’ +‘ಅದ್ ಹ್ಯಾಗಾಗುತ್ತೆ?’ ಎಂದು ಕೇಳುವಾಗ, ಮದುವೆಯ ಮನೆಯಲ್ಲಿ ಗೋಪುರದಂತೆ ಬಡಿಸಿದ ಹುಳಿಯನ್ನ, ತೆಕ್ಕೆ ಹಾಕಿದ್ದ ಒಬ್ಬಟ್ಟುಗಳೆಲ್ಲವನ್ನೂ ಅವರ ಎಡೆಯಿಂದ ಯಾರೋ ಕಿತ್ತುಕೊಂಡು ಹೋದ ನಿರಾಶೆ ಒಡೆಯುತ್ತಿತ್ತು. +‘ಯಾಕ್ ಆಗುಲ್ಲ? ನೀವಿಲ್ಲೇ ಇರ್ಲಿ ಅಂತ ನಾನು ಕಲ್ಲೇಶಣ್ಣಯ್ಯಂಗೂ ಅಪ್ಪಂಗೂ ಹೇಳ್ತೀನಿ.’ +‘ಏನ್ ಬ್ಯಾಡ ನೀನ್ ಬೇಕಾದ್ರೆ ಸಾತಮ್ಮನ್ನ ಇಲ್ಲೇ ಇಟ್ಕ.’ +ನಂಜಮ್ಮ ಮತ್ತೆ ಮಾತನಾಡಲಿಲ್ಲ. ಎರಡು ವರ್ಷ ಸಂಸಾರ ಮಾಡಿದುದರಲ್ಲಿ ಅವರ ಸ್ವಭಾವವೆಂಥದೆಂಬುದು ಅವಳಿಗೆ ತಿಳಿದಿತ್ತು. ‘ಪರವಾಗಿಲ್ಲ, ನೀವು ಹೋಗಿ’-ಎಂದಳು. ಅವರು ಹೋಗಿ ತಾವು ದೃಷ್ಟಿಯಿಟ್ಟಿದ್ದ ಅಗಲವಾದ ಕಮಾನು ಗಾಡಿಯ ಮಧ್ಯೆ ಚಳಿಯಾಗದ ಸ್ಥಳ ಹಿಡಿದು ಒರಗಿ ಕುಳಿತುಕೊಂಡರು. ಸಾತು ತಾನಾಗಿಯೇ ಬಂದು-‘ನಾನು ನಿಮ್ಮ ಜೊತೆ ಇರಲೇ ಅಕ್ಕ?’ ಎಂದು ಕೇಳಿದಳು. +‘ಬ್ಯಾಡ, ನೀನು ಹೋಗಿ ಬಾ’-ಎಂದು ನಂಜಮ್ಮ ಹೇಳಿದರೂ ಕೇಳಲಿಲ್ಲ. ಅವಳೇ ಅಕ್ಕಮ್ಮನ ಹತ್ತಿರ ಹೋಗಿ ಕೇಳಿದಳು: ‘ನೀವೊಬ್ಬರೇ ಮುದುಕರು. ಮನೇಲಿ ಮತ್ತೆ ಯಾರೂ ಇಲ್ಲ. ನಾನು ಇಲ್ಲೇ ಇರ್ತೀನಿ.; +‘ಅಲ್ಲಿ ನಮ್ಮ ಮನೆಯೋರು ಅಂತ ಓಡಾಡುಕ್ಕೆ ಹೆಂಗಸರೇ ಇಲ್ಲದ ಹಾಗೆ ಆಗುತ್ತೆ. ನೀನಾದ್ರೂ ಹೋಗಿ ಹಸೆಮಣೆ ಮುಂದಿನ ಕೆಲಸ ನೋಡ್ಕ. ನಾನು ಇಲ್ಲಿ ನಂಜನ್ನ ನೋಡ್ಕತ್ತೀನಿ, ಪರವಾಗಿಲ್ಲ’-ಎಂದು ಅಕ್ಕಮ್ಮ ಬಲವಂತ ಮಾಡಿದ ಮೇಲೆ ಅವಳು ಹೊರಟಳು. +ರಾತ್ರಿ ಎಂಟು ಗಂಟೆಗೆ ನಾಲ್ಕು ಗಾಡಿಗಳ ಕೊರಳೆತ್ತಿದರು. ಕಂಠೀಜೋಯಿಸರು ಬೂಟು ನಿಕ್ಕರು ಕೋಟುಗಳನ್ನು ಧರಿಸಿ ಕುದುರೆ ಏರಿ ಮುಂಭಾಗದಲ್ಲಿ ಹೊರಟರು. ತನ್ನ ಸ್ನೇಹಿತರಾದ ಕೆಲವರು ಕಾನಿಷ್ಟೇಬಲು ದಫೇದಾರರೊಡನೆ ಕಲ್ಲೇಶಿ ಹಿಂದಿನ ಗಾಡಿಯಲ್ಲಿ ಕುಳಿತ. ನಂಜಮ್ಮ ಎದ್ದು ಬಾಗಿಲಿನ ಹತ್ತಿರ ನಿಂತು ನಾಲ್ಕು ಗಾಡಿಗಳೂ ಕಣ್ಮರೆಯಾಗುವ ತನಕ ನೋಡಿದಳು. +ಆ ರಾತ್ರಿ ಮಲಗಿದಾಗ ಅಕ್ಕಮ್ಮ ಅಂದಳು: ‘ನೋಡು ನಂಜ, ಆಡಿನ ಮೊಲೆ ಹಾಗೆ ನೀವಿಬ್ಬರೇ ಮಕ್ಕಳು. ನೀನು ಏಳು ತಿಂಗಳ ಬಸುರಿ ಅಂತ ನಿಮ್ಮಪ್ಪನಿಗೆ ಗೊತ್ತಿದೆ. ಆದರೂ ಈಗಲೇ ಕಲ್ಲೇಶನ ಮದುವೆ ಗೊತ್ತು ಮಾಡ್ಕಂಡ್ ಬಂದಿದಾನೆ. ಅವ್ನಿಗೆ ಬುದ್ಧಿ ಇದೆ ಅಂತೀಯೋ ಇಲ್ಲ ಅಂತೀಯೋ?’ +‘ಅವನ ಸ್ವಭಾವ ಯಾವತ್ತೂ ಯಲ್ಲಾ ಯಡ್ಡಂ ದಡ್ಡಂ.’ +‘ನಿನ್ನ ಹೆತ್ತು ನಿಮ್ಮಮ್ಮ ಸತ್ತಾಗಿನಿಂದ ನಾನು ಒಂಟಿಯೇ. ಕಲ್ಲೇಶ ಗಂಡುಹುಡುಗ. ನೀನು ಹುಟ್ಟಿದಾಗ ಅವನಿಗೆ ಏಳು ವರ್ಷ ಅಲ್ಲವೇ? ಗಂಡು ಹುಡುಗರು ಹ್ಯಾಗೋ ಬೆಳೀತೂವೆ. ನಿಮ್ಮಪ್ಪ ಮೂರು ದಿನ ಮನೇಲಿದ್ರೆ ಇನ್ನು ಮೂರು ತಿಂಗಳು ಇರುಲ್ಲ. ನೀನು ಮದುವೆಯಾಗಿ ಹೋದಮ್ಯಾಲೆ ನನಗಂತೂ ಒಬ್ಳೆ ಇದ್ದೂ ಇದ್ದೂ ಬೇಜಾರಾಗಿಹೋಗಿದೆ. ಏನೋ ನಿನ್ನ ಹೊಟ್ಟೇಲಿ ನಾಕು ಮಕ್ಳು ಕಂಡು ಬಾಣಂತನ ಮಾಡಬೇಕು ಅಂತ ಒಂದು ಆಶೆ ಇತ್ತು. ದೇವ್ರು ಅದ್ನೂ ನಡುಸ್ತಿದಾನೆ. ಆದ್ರೂ ಹೆಣ್ಣು ಮಕ್ಕಳು, ಕೊಟ್ಟ ಮೇಲೆ ನಾವು ಬೇಕು ಅಂದಾಗ ಎಲ್ಲಿ ಬರುತ್ವೆ?’ +‘ಇನ್ನು ಪರವಾಗಿಲ್ಲ. ಕಲ್ಲೇಶಣ್ಣಯ್ಯನ ಹೆಂಡ್ತಿ ಬತ್ತಾಳೆ. ನಿಂಗೆ ಜೊತೆಯಾಗುತ್ತೆ.’ +ನಿಂಗೆಲ್ಲೋ ಬ್ರಾಂತು. ಅವ್ನಿರೋದು ಪೋಲೀಸ್ನಲ್ಲಿ. ಯಾವ್ಯಾವ ಊರಿಗೆ ವರ್ಗವಾಗುತ್ತೋ ಹೋಗ್ತಾನೆ. ಅವನ ಜೊತೆ ಅವನ ಹೆಂಡ್ತಿ ಹೋಗಬೇಕು. ಇಷ್ಟಕ್ಕೂ ಅವಳು ಹಾಸನ ಪ್ಯಾಟೆಯೋಳು. ಮಗನಿಗೆ ಹೆಣ್ಣು ಗೊತ್ತು ಮಾಡುವಾಗ ನಿಮ್ಮಪ್ಪ ನನ್ನೇನು ಒಂದು ಮಾತು ಹೇಳಿದನೇ, ಕೇಳಿದನೇ? ಅವನ ಮನಸ್ಸಿಗೆ ಬಂದದ್ದೇ ಬಂದದ್ದು. ಈ ಯಂಬ್ರಮ್ಮುನ್ನ ಹೆತ್ತ ನನ್ನ ಹೊಟ್ಟೆಪುಣ್ಯಕ್ಕೆ ಏನನ್‌ಬೇಕೋ!’ +ನಂಜಮ್ಮನ ಮನಸ್ಸು ತಂದೆಯ ಸ್ವಭಾವವನ್ನು ಕುರಿತು ಚಿಂತಿಸಲು ತೊಡಗಿತು. ಅಷ್ಟರಲ್ಲಿ ಅಕ್ಕಮ್ಮ ಕೇಳಿದಳು: ‘ನಿಮ್ಮತ್ತೆ ನಿನ್ನ ನಿಜವಾಗೂ ಚನ್ನಾಗಿ ನೋಡ್ಕತ್ತಾ ಇದಾಳ್ಯೆ?’ +‘ಹೂಂ. ಚನ್ನಾಗಿಯೇ ನೋಡ್ಕತ್ತಿದಾರೆ.’ +‘ಸದ್ಯಕ್ ಬಿಡು. ಹೆಣ್ಮಕ್ಳಿಗೆ ಅದುಕ್ಕಿಂತ ಹೆಚ್ಚು ಇನ್ನೇನ್ ಬೇಕು?’-ಎಂದು ಅಕ್ಕಮ್ಮ ಸುಮ್ಮನಾದಳು. +ಸ್ವಲ್ಪ ಹೊತ್ತಾದ ಮೇಲೆ ಅವಳೇ ಮಾತನಾಡಿದಳು: ‘ನೋಡೇ ಪುಟ್ಟ, ನೀನು ಆವಾಗ ಹೇಳ್ತಿದ್ದೆಯಲ್ಲಾ, ಸೀತಾ ವನವಾಸದ ಹಾಡು, ಲವ ಕುಶರು ಕಾಳಗ ಮಾಡಿದ್ದು. ಅದಿನ್ನೂ ಜ್ಞಾಪಕದಲ್ಲಿದೆಯೇ?’ +“ಅಲ್ಲಿಗೆ ಹೋದಮೇಲೆ ನಾನು ಒಂದ್ಸಲೀನೂ ಹೇಳ್ಕಂಡಿಲ್ಲ. ಬೆಳಗಿನಜಾವ ರಾಗಿ ಬೀಸುವಾಗ ಒಂದ್ ದಿನ ಹೇಳ್ಕಳುಕ್ ಶುರು ಮಾಡ್ದೆ. ನನ್ನ ನಿದ್ದೆ ಹಾಳ್ಮಾಡ್‌ಬ್ಯಾಡ ಅಂತ ಅವರೆಲ್ಲ ಅಂದ್‌ಬಿಟ್ರು. ಸುಮ್ಮನೆ ಬೀಸುಕ್ ಶುರು ಮಾಡ್ದೆ.’ +‘ನಾಳೆಯಿಂದ ದಿನಾ ಹೇಳೇ. ನಂಗೆ ಕೇಳ್‌ಬೇಕು ಅಂತ ಆಸೆಯಾಗಿದೆ’-ಎಂದವಳು ಏನೋ ಜ್ಞಾಪಿಸಿಕೊಂಡು, ‘ಏನೂ ಬ್ಯಾಡ ಬಿಡು. ಬಸುರಿ ಹುಡುಗಿ, ಸೀತಾ ವನವಾಸದಂಥ ಹಾಡು ಹೇಳ್ಲೂ ಬಾರ್ದು, ಕೇಳ್ಲೂ ಬಾರ್ದು’ ಎಂದಳು. +ಎರಡು ನಿಮಿಷವಾದ ಮೇಲೆ ಮತ್ತೆ ಹೇಳಿದಳು: ‘ನೋಡು, ನೀನು ಹೋದಮ್ಯಾಲೆ ನಮ್ಮ ಊರಿನಲ್ಲೇ ಹಾಡು ಹೇಳೋ ಹೆಣ್ಮಕ್ಳು ಯಾರೂ ಇಲ್ಲ. ಯಾರ ಮನೇಲಾದ್ರೂ ಆರತಿ ಅಕ್ಷತೆ ಆದ್ರೆ ಪಿಚ್ ಅನ್ಸುತ್ತೆ ಅಂತ ಯಲ್ಲಾರೂ ಹೇಳ್ತಾರೆ. ನಿನ್ನ ಹಾಡಿನ ಪುಸ್ತಕಾನೂ ಮರ್ತೇ ಹೋಗಿದ್ದೀಯಂತೆ. ಅವತ್ತೊಂದು ದಿನ ಕಂಟಿಗೆ ಸಿಕ್ತಂತೆ. ಪಾಪುಂದು ಅಂತ ಅದೆಲ್ಲೋ ತೆಗೆದಿಟ್ಟಿದ್ದಾನೆ. ಬೆಳಿಗ್ಗೆ ಹುಡುಕಿ ತಗಂಡು ಹೇಳ್ಕ. ಇಲ್ದೆ ಇದ್ರೆ ಮರೆತ್ಹೋಗುತ್ತೆ.’ +– ೨ – +ಹಾಸನದಲ್ಲಿ ಕಲ್ಲೇಶನ ಧಾರೆಯಾದ ದಿನ ನಾಗಲಾಪುರದ ಬೆಸ್ತರ ಕೇರಿಯಲ್ಲಿ ಇಲಿ ಬಿದ್ದಿತ್ತು. ಅಂದರೆ ಪಿಳೇಗುಮಾರಮ್ಮ ಊರಿಗೆ ಬರುತ್ತಾಳೆ. ತನಗೆ ಯಾರು ಹರಕೆ ನಡೆಸಿಲ್ಲವೋ,ಯಾರು ಭಕ್ತಿಯಿಂದ ನಡೆದುಕೊಳ್ಳುವುದಿಲ್ಲವೋ, ಅಂಥವರನ್ನೆಲ್ಲ ನುಂಗಿ ನೀರು ಕುಡಿಯುತ್ತಾಳೆ. ಗ್ರಾಮಕ್ಕೆ ಅವಳು ಬರುವುದರೊಳಗೆ ಜನವೆಲ್ಲ ಮನೆ ಕೇರಿಗಳನ್ನು ಬಿಟ್ಟು ಊರ ಹೊರಗೆ ಹೊಲದಲ್ಲೋ ತೋಟದಲ್ಲೋ ಸೋಗೆಗುಡಿಸಲು ಹಾಕಿಕೊಂಡು ಇರಬೇಕು. ಮೂರು ತಿಂಗಳೋ ಅಥವಾ ಸ್ವಲ್ಪ ಹೆಚ್ಚಾಗಿಯೋ ಗ್ರಾಮದಲ್ಲಿ ಇದ್ದು ಅಮ್ಮ ಹೊರಟುಹೋದಮೇಲೆ ಜನರೆಲ್ಲ ಹಿಂತಿರುಗಬಹುದು. +ಆದರ ಮಾರನೆಯ ದಿನ ಗೂಡೆಮಾರಮ್ಮನವರು ಬಂದರು. ರಟ್ಟಿ ದಪ್ಪದ, ಮಾರುದ್ದದ ಸೆಣಬಿನ ಚಾವಟಿಯನ್ನು ಬೀಸಿ ತನ್ನ ಮೈಯಿಗೆ ಫಟಾರನೆ ಹೊಡೆದುಕೊಳ್ಳುತ್ತಾ, ಮೈಗೆ ಅರಿಶಿನ ಕುಂಕುಮಗಳನ್ನು ಮೆತ್ತಿಕೊಂಡಿದ್ದ ಅಮ್ಮನವನು ಗೂಡೆ ಹೊತ್ತು ಬಂದ. ಅವನ ಹಿಂದೆ ಅವನ ಹೆಂಡತಿ ಕಣಿ ಹೇಳುತ್ತಿದ್ದಳು: ‘ಸುತ್ತ ಅರವತ್ತನಾಲ್ಕು ಹಳ್ಳಿಯಾಗೆ ಅಮ್ಮ ಕಾಣಿಸಿಕೊಂಡವ್ಳೆ! ದೂಳಿ ದುಪ್ಪಟ ಮಾಡುತವ್ಳೆ! ತಾಯೀರ ಬಿಟ್ಟು ಮಗೂನ ತಿಂತವ್ಳೆ! ಮಕ್ಕಳ ತಾಯೀರ ಎಳಕೊಂಡು ಹೋಗ್ತವ್ಳೆ! ಸೋಬನವಾಗದ ಹುಡುಗೀ ತಿಂತವ್ಳೆ! ಸೋಬನಕ್ಕೋದ ಗಂಡಿನ ಮುಂಡಿಗೆ ಮುರಿದವ್ಳೆ! ಬಸಿರ ಹೆಂಗಸಿನ ಜೀವ ತಿಗದವ್ಳೆ!’ ಹಾ, ಲ, ಲಲಲಲಲಲ ಛಟೀರ್, ಛಟ್ ಎಂದು ನಡುನಡುವೆ ಗಂಡಸು ಚಾವಟಿಯಿಂದ ತನ್ನ ಬರಿಯ ಮೈಮೇಲೆ ಹೊಡೆದುಕೊಳ್ಳುತ್ತಿದ್ದ. +ಹೀಗೆ ಗೂಡೆಮಾರಮ್ಮ ಬರುವುದು, ಬಂದು ಕಣಿ ಹೇಳುವುದೂ ಅಪರೂಪವೇನಲ್ಲ. ಆದರೆ ಬಸಿರ ಹೆಂಗಸಿನ ಜೀವ ತಿಗದವ್ಳೆ-ಎಂಬ ಮಾತನ್ನು ಕೇಳಿ ಅಕ್ಕಮ್ಮನಿಗೆ ಗಾಬರಿಯಾಯಿತು. ಅರಿಶಿನ, ಕುಂಕುಮ, ಅಕ್ಕಿ, ಬೇಳೆ, ತೆಂಗಿನಕಾಯಿ, ಮೇಲೆ ಮೂರು ಕಾಸಿನ ದಕ್ಷಿಣೆಗಳನ್ನು ಮೊರದಲ್ಲಿಟ್ಟುಕೊಂಡು, ತಾನೇ ಎಲ್ಲರಿಗಿಂತ ಮೊದಲು ಹೋಗಿ ಅಮ್ಮನಿಗೆ ಒಪ್ಪಿಸಿ ಅವಳ ಪ್ರಸಾದದ ಕುಂಕುಮ ತಂದು ಇಟ್ಟುಕೊಳ್ಳುವಂತೆ ನಂಜುವಿಗೆ ಕೊಟ್ಟಳು. +ಮರುದಿನ ಇನ್ನೂ ಹೆಚ್ಚು ಇಲಿಗಳು ಬಿದ್ದವು; ಊರಿನ ಇತರ ಕೇರಿಗಳಲ್ಲಿ ಕಾಣಿಸಿಕೊಂಡವು. ಸುತ್ತ ಹಳ್ಳಿಗಳವರೆಲ್ಲ ಆಗಲೇ ಊರು ಬಿಡುತ್ತಿರುವ ಸುದ್ದಿ ಬಂತು. ಇನ್ನು ಇವರು ಸಹ ಸಾಧ್ಯವಾದಷ್ಟು ಬೇಗ ಶೆಡ್ಡು ಹಾಕಬೇಕು. ಗ್ರಾಮದ ಶ್ಯಾನುಭೋಗ ಶ್ಯಾಮಣ್ಣನವರು ಸಂಜೆಗೇ ಮನೆಗೆ ಒಂದು ಆಳಿನಂತೆ ಬರಹೇಳಿ ಪಂಚಾಯ್ತಿ ಮಾಡಿ, ಬರುವ ಸೋಮವಾರದೊಳಗೆ ಎಲ್ಲರೂ ಊರು ಬಿಡಬೇಕೆಂದು ತೀರ್ಮಾನಿಸಿದರು. ಸರಿ, ಮರುದಿನ ಬೆಳಿಗ್ಗೆಯಿಂದಲೇ ಜನಗಳು ತಮ್ಮ ತಮ್ಮ ಹೊಲ ತೋಟಗಳಲ್ಲಿ, ಜಮೀನಿಲ್ಲದವರು ಮತ್ತೊಬ್ಬರ ಭೂಮಿಯಲ್ಲಿ ಶೆಡ್ಡು ಹಾಕಲು ಪ್ರಾರಂಭಿಸಿದರು. ಸಣ್ಣ ವೈವಾಟಿನವರು ಸಾಮಾನುಗಳನ್ನೂ ಸಾಗಿಸಿದರು. +ಕಂಠೀಜೋಯಿಸರು ಮಗನ ಮದುವೆ ಮಾಡಿಕೊಂಡು ಊರಿಗೆ ಬರುವ ದಿನಕ್ಕೆ ಆಗಲೇ ಎಷ್ಟೋ ಮನೆಗಳವರು ಸಾಮಾನು ಸಾಗಿಸಿದ್ದರು. ಮದುವೆಯ ಗಲಾಟೆ ಕಳೆದು ವಿರಾಮ ತೆಗೆದುಕೊಳ್ಳಬೇಕೆಂಬ ಹೊತ್ತಿಗೆ ಸರಿಯಾಗಿ ಇದೊಂದು ಕೆಲಸ ಬಿತ್ತು. ಹೊಸದಾಗಿ ಸುಣ್ಣಕಾರಿಣೆ ಮಾಡಿಸಿದ್ದ ಮನೆಯನ್ನು ಖಾಲಿ ಮಾಡಬೇಕು. ಊರು ಬಿಡಬೇಕಾದರೆ ಗ್ರಾಮದ ಪುರೋಹಿತರನ್ನು ಕೇಳಿ ನಿರ್ಧರಿಸುವುದು ವಾಡಿಕೆ. ಸಣ್ಣಪುಟ್ಟ ಪೌರೋಹಿತ್ಯ ಕೆಲಸಗಳಿಗೆ ಕಂಠೀಜೋಯಿಸರೇ, ಪುಟ್ಟಭಟ್ಟರು ಎಂಬ ಒಬ್ಬ ಎಡತೊರೆ ಕಡೆಯ ಬಡ ಬ್ರಾಹ್ಮಣನನ್ನು ನೇಮಿಸಿ ಅದರ ಆದಾಯವನ್ನೆಲ್ಲ ಅವರಿಗೇ ಬಿಟ್ಟಿದ್ದರು. ಆದರೆ ಈ ಸಲ ಶ್ಯಾನುಭೋಗ ಶ್ಯಾಮಣ್ಣ ಇವರನ್ನೂ ಕೇಳಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಪುಟ್ಟಭಟ್ಟರನ್ನೂ ಕರೆಸಿರಲಿಲ್ಲ. ತಾನೇ ಎಲ್ಲ ತೀರ್ಮಾನವನ್ನೂ ಮಾಡಿದ್ದ. ಅವನಿಗೂ ಇವರಿಗೂ ಮೊದಲಿನಿಂದ ವೈರ. ಜೊತೆಗೆ, ಹೋದ ವರ್ಷ ಇಬ್ಬರಿಗೂ ಗದ್ದೆಯ ನೀರಿನ ವಿಷಯವಾಗಿ ಜಗಳವಾಗಿತ್ತು. ಆಗಿನಿಂದ ಅವನು ಹೀಗೆಯೇ ಏನಾದರೂ ಮಾಡುತ್ತಿದ್ದಾನೆ. ಅವನ ತೀರ್ಮಾನವನ್ನು ತಾವು ವಿರೋಧಿಸಬೇಕೆಂದು ಅವರು ನಿಶ್ಚಯಿಸಿದರು. +ಮದುವೆಯವರು ಹಿಂತಿರುಗಿದ ಮರುದಿನವೇ ತಿಂಗಳ ಕಂಬೋಲಿ ಶಾಸ್ತ್ರ ಮಾಡಿ ಚಪ್ಪರ ಅಳ್ಳಾಡಿಸಿದರು. ಚೆನ್ನಿಗರಾಯ, ಅಪ್ಪಣ್ಣಯ್ಯ, ಸಾತು, ಮೂವರೂ ಗಾಡಿಯ ಮೇಲೆ ಊರಿಗೆ ಹೋದರು. +ಈ ಶ್ಯಾಮಣ್ಣನಿಗೆ ಏನು ಮಾಡಬೇಕು? ಅವನು ಮಾಡಿರುವ ತೀರ್ಮಾನವನ್ನು ವಿರೋಧಿಸಬೇಕು. ಆದರೆ ಜನಗಳು ಆಗಲೇ ಸಾಮಾನು ಸಾಗಿಸಿ ಮನೆಗೆ ಬೀಗ ಹಾಕಿ, ಅಕ್ಷರ ಬಲ್ಲವರು ಬಾಗಿಲ ಮೇಲೆ ‘ನಾಳೆ ಬಾ’ ಎಂದು ಬರೆದು ಶೆಡ್ಡಿಗೆ ಹೋಗುತ್ತಿದ್ದಾರೆ. ಒಬ್ಬರು ಊರು ಬಿಡುವುದೇ ತಡ, ಉಳಿದವರೆಲ್ಲ ಹೆದರಿಕೆಯಿಂದ ಬೇಗ ಬೇಗ ಸಾಮಾನು ಕಟ್ಟುತ್ತಾರೆ. ‘ನಾನು ಶಾಸ್ತ್ರ ನೋಡಿದೀನಿ. ಊರಿಗೆ ಏನೂ ಆಗುಲ್ಲ. ಯಾರೂ ಬಿಡಬೇಡಿ’ ಎಂದು ಕಂಠೀಜೋಯಿಸರು ಹೇಳಿದರೂ ಯಾರೂ ಕೇಳಲಿಲ್ಲ. ‘ಹಂಗಾದ್ರೆ ನೀವು ಊರೊಳಗೇ ಇರ್ತೀರಾ?’-ಎಂದು ಯಾರೋ ಒಬ್ಬರು ಕೇಳಿದರು ‘ಹೂಂ. ಇರ್ತೀನಿ’-ಎಂದು ಇವರು ಹಟದ ಭರದಲ್ಲಿ ಅಂದುಬಿಟ್ಟರು. ತಾವೇ ಆಡಿದ ಆ ಮಾತನ್ನು +ಉಳಿಸಿಕೊಳ್ಳಬೇಕೆಂದು, ಬಿಟ್ಟ ಊರಿನಲ್ಲಿ ಒಬ್ಬರೇ ಇರಲು ನಿಶ್ಚಯಿಸಿದರು. +ಈ ತೀರ್ಮಾನವನ್ನು ಅಕ್ಕಮ್ಮ ಉಗ್ರವಾಗಿ ವಿರೋಧಿಸಿದಳು: ‘ಮೊಮ್ಮಗಳು ಚೊಚ್ಚಲು ಬಾಣಂತನಕ್ಕೆ ಬಂದಿದ್ದಾಳೆ. ಹಾಳುಬಡಿದ ಊರಿನಲ್ಲಿ ಒಂದೇ ಒಂದು ಸಂಸಾರ ಇರೋದು ಹ್ಯಾಗೆ? ನಾವೂ ಬಿಡಲೇಬೇಕು. ಇಲ್ಲದಿದ್ದರೆ ಅವಳನ್ನು ಅವಳ ಅತ್ತೆಯ ಮನೆಗೇ ಕಳಿಸಿಬಿಡ್ತೀನಿ. ಬಾಣಂತನ ಮಾಡೂಕೆ ಶಕ್ತಿ ಇಲ್ಲದೆ ಕಳಿಸಿದ್ರು ಅಂತ ಅವರು ಅಂದ್‌ಕಂಡ್ರೆ ಅಂದ್‌ಕಳ್ಲಿ. ಬೇಕಾದ್ರೆ ನಾನೂ ಅಲ್ಲಿಗೇ ಹೋಗಿ ಬಾಣಂತನ ಮಾಡಿ ಬರ್ತೀನಿ.’ +‘ನಾನು ಊರು ಬಿಡೂದಿಲ್ಲ ಅಂತ ಜೂರತ್ತಿನಿಂದ ಹೇಳಿದೀನಲ್ಲ. ಬಿಟ್ರೆ ನನ್ ಮರ್ಯಾದೆ ಏನಾಗ್‌ಬೇಕು?’ +‘ಅದರಲ್ಲೆಂಥ ಮರ್ಯಾದೆ? ಸುಮ್‌ನೆ ಬಾ.’ +ಕಂಠೀಜೋಯಿಸರು ತಮ್ಮ ಮರ್ಯಾದೆಯನ್ನು ಕೈಬಿಡಲು ಒಪ್ಪಲಿಲ್ಲ. ಮತ್ತೆ ವಾಗ್ವಾದ ನಡೆದು ಊರ ಆಚೆಯ ಅವರ ಹೊಲದಲ್ಲಿ ಶೆಡ್ಡು ಹಾಕಿಸುವುದು, ಅಲ್ಲಿ ಅಕ್ಕಮ್ಮ ನಂಜಮ್ಮರು ಇರುವುದು, ನಂಜಮ್ಮನ ಬಾಣಂತಿತನ ಶೆಡ್ಡಿನಲ್ಲೇ ಆಗುವುದು ಎಂದು ನಿಶ್ಚಯವಾಯಿತು. ಆದರೆ ಕಂಠೀಜೋಯಿಸರು ಮಾತ್ರ ಊರಿನಲ್ಲಿ ಮನೆಯಲ್ಲಿಯೇ ಉಳಿಯಲು ತೀರ್ಮಾನಿಸಿದರು. ‘ನಿಂದು ಮೊದಲಿಂದ ಯಂಬ್ರಮ್ಮ ಬುದ್ಧಿ. ನೀನೊಬ್ಬನೇ ಇಲ್ಲಿ ಯಾಕಿರಬೇಕು? ಅಲ್ಲಿಗೆ ಬರೂಕಾದೇ? +‘ಫ್ಲೇಗಿನ ಅಮ್ಮ ನನ್‌ತಾವ ಏನೂ ಕಿತ್‌ಕಳಾದಿಲ್ಲ. ನಾನು ಗಂಡು, ಇಲ್ಲೇ ಇರ್ತೀನಿ.’ +ಬೇರೆ ಉಪಾಯವಿರಲಿಲ್ಲ. ಅವರು ಹಾಕಿಕೊಟ್ಟ ಶೆಡ್ಡಿಗೆ ಸಾಮಾನು ಸಮೇತ ಅಜ್ಜಿ ಮತ್ತು ಬಸುರಿ ಮೊಮ್ಮಗಳು ಹೋದರು. ಆದರೆ ಬಿಟ್ಟ ಊರಿನಲ್ಲಿ ಒಬ್ಬನೇ ಇರುವ ಅವರ ಮೈಮೇಲೆ ಅಮ್ಮ ಇರುವುದರಿಂದ ಅವರು ಊರ ಹೊರಗಿನ ಶೆಡ್ಡಿಗೆ ಹೋಗಿ ತಮ್ಮ ತಾಯಿ ಮತ್ತು ಮಗಳನ್ನು ಆಗಾಗ್ಗೆ ನೋಡಕೂಡದೆಂದು ಶ್ಯಾಮಣ್ಣ ಪಂಚಾಯ್ತಿ ಮಾಡಿಸಿ ಕಟ್ಟು ಮಾಡಿಸಿದ. ಎಂದರೆ ನಂಜುವಿನ ಹೆರಿಗೆ ಬಾಣಂತಿತನಗಳ ಕಷ್ಟ ಸುಖವೇನಿದ್ದರೂ ಮುದುಕಿ ಅಕ್ಕಮ್ಮನ ಮೇಲೆ ಮಾತ್ರ ಬಿತ್ತು. +– ೩ – +ಇಡೀ ಊರಿಗೇ ಕಂಠೀಜೋಯಿಸರು ಒಬ್ಬರೇ ಉಳಿದರು. ಒಂದು ಹಸುವನ್ನು ಅವರು ಶೆಡ್ಡಿಗೆ ಕಳುಹಿಸಿದ್ದರು. ಇನ್ನೊಂದು ಹಸು ಕರುವನ್ನು ತಮಗೆ ಇಟ್ಟುಕೊಂಡರು. ತಮ್ಮ ಅಡಿಗೆ ತಾವೇ ಮಾಡಿಕೊಳ್ಳುತ್ತಿದ್ದರು. ಮನೆಯನ್ನು ಗುಡಿಸಿ ಚೊಕ್ಕಟವಾಗಿಟ್ಟುಕೊಂಡು ಹುಲಿ ಚರ್ಮದ ಮೇಲೆ ಕೂತು ಜೋತಿಷ್ಯದ ಓಲೆಗರಿಗಳನ್ನು ಎಷ್ಟೋ ತರಹದ ಮಂಡಲಗಳು, ತ್ರಿಕೋಣ, ಚತುಷ್ಕೋಣ, ಪಂಚಕೋಣಾದಿ ಆಕೃತಿಗಳು, ಹ್ರೀಂ, ಧೀಂ, ಓಂ ಮೊದಲಾದುವುಗಳ ಮಂತ್ರ ಶಕ್ತಿಗಳನ್ನು ಕುರಿತು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದರು. ಇಲ್ಲವೇ ಗಟ್ಟಿಯಾಗಿ ಯಾವುದಾದರೂ ಮಂತ್ರ ಹೇಳಿಕೊಂಡು ಹಿತ್ತಲ ಕಡೆ ಸುತ್ತಾಡುವರು. ತುಂಬ ಬೇಸರವಾದರೆ ಒಂದೊಂದು ದಿನ ಕುದುರೆ ಏರಿ ದೂರದ ಚೆನ್ನರಾಯಪಟ್ಟಣದ ಕಡೆಗೆ ಹೋಗಿಬರುವರು. +ಅವರು ಒಟ್ಟಿಗೆ ಇಷ್ಟು ದಿನ ಊರಿನಲ್ಲಿ ಇದ್ದುದೇ ಇಲ್ಲ. ಈಗಲೂ ಇರುವ ಅಗತ್ಯವಿರಲಿಲ್ಲ. ಆದರೆ ಒಂದು ವಿಧವಾದ, ಶ್ಯಾನುಭೋಗ ಶ್ಯಾಮಣ್ಣನ ಮೇಲಿನದಿರಬಹುದು, ಅಥವಾ ತಾವು ಬೇಡವೆಂದರೂ ಕೇಳದೆ ಹೆದರಿ ಊರು ಬಿಟ್ಟು ಹೋದ ಇಡೀ ಗ್ರಾಮಸ್ಥರ ಮೇಲಿನದಿರಬಹುದು, ಹಟದ ಮೇಲೆ ಎಲ್ಲಿಯೂ ಹೋಗದೆ, ಬಿಟ್ಟ ಊರಿನಲ್ಲಿ ಒಬ್ಬರೇ ಇದ್ದರು. ಕತ್ತಲೆ, ಒಂಟಿತನ, ಕಳ್ಳಕಾಕರು, ತಲೆಯೊಡೆಯುವವರು. ಹಾವು, ಹಲ್ಲಿ ಮೊದಲಾಗಿ ಯಾವುದಕ್ಕೂ ಹೆದರುವುದು ಅವರ ರಕ್ತದಲ್ಲೇ ಇರಲಿಲ್ಲ. +ಒಂದು ದಿನ, ಬಿಟ್ಟ ಊರಿನೊಳಕ್ಕೆ ಒಬ್ಬರು ಬಂದರು. ಸುಮಾರು ಐವತ್ತು ವರ್ಷ ವಯಸ್ಸು. ಕಮಾನಿನಂತೆ ನೆತ್ತಿಯ ಮುಂಭಾಗ ಬೋಳಿಸಿದೆ. ಹಿಂಬಾಗದ ಬಿಳೀ ಜುಟ್ಟನ್ನು ಗಂಟುಹಾಕಿ ಕಟ್ಟಿರುವ ಆತ ಒಂದು ಕೆಂಪು ಅಂಗಿ, ಕೊಳೆಯಾದ ಕರಿ ಕೋಟು ಹಾಕಿ ಕಚ್ಚೆ ಪಂಚೆ ಉಟ್ಟಿದ್ದಾರೆ. ಮುಂಭಾಗದ ಎರಡು ಹಲ್ಲು ಬಿದ್ದಿದ್ದ ಬಾಯಿ ಹೊಗೆಸೊಪ್ಪು ಹಾಕುವ ಅಭ್ಯಾಸವನ್ನು ತೋರಿಸುತ್ತದೆ. ಬಲಗೈಯ ಮಧ್ಯದ ಬೆರಳಿಗೆ ಚಿನ್ನದ ದಾರದಲ್ಲಿ ಹೆಣೆದು ಮಾಡಿದಂತಹ ಮಾಂತ್ರಿಕ ಉಂಗುರ. ಬಂದವರ ಗುರುತು ತಕ್ಷಣ ಹತ್ತಲಿಲ್ಲವಾದರೂ ಒಂದು ನಿಮಿಷದ ಮೇಲೆ ನೆನಪಾಗಿ ಕಂಠೀಜೋಯಿಸರೇ ಮಾತನಾಡಿಸಿದರು: ‘ಏನು ವೀರಾಚಾರೀ, ಬಿಟ್ಟ ಊರೊಳಕ್ಕೆ ಬಂದುಬಿಟ್ಟೆ?’ +‘ನಿಮ್ಮುನ್ನೇ ಕಂಡು ಹೋಗಾನ ಅಂತ ಎಲ್ಡು ವರ್ಸದಿಂದ ಒಟ್ಟು ನಾಕು ದಿನ ಬಂದಿದ್ದೆ. ನೀವು ಊರಲ್ಲಿ ಇರ್ತೀರಾ ಇಲ್ಲಾ ಅನ್ನೂದು ಯಾರಿಗೂ ತಿಳಿಯಾಕಿಲ್ಲ. ಇವತ್ತು ಹಂಗೇ ನೋಡ್ಕಂಡ್ ಹೋಗಾನಾ ಅಂತ ಮತ್ತೆ ಬಂದೆ.’ +‘ಬಾ,ಬಾ. ಒಳಗೆ ಕೂತುಕೊ.’ +ವೀರಾಚಾರಿ ಒಳಗೆ ಬಂದು ಕುಳಿತ. ತಮ್ಮ ಆಸನದ ಹತ್ತಿರ ಕಂಠೀಜೋಯಿಸರು ನಾಲ್ಕು ಹಳೇ ಎಕ್ಕಡಗಳನ್ನಿಟ್ಟಿದ್ದರು. ಅವನು ಕೇಳಿದ: ‘ಅಳೇ ಯಕ್ಡ್‌ದ ಸಂಗ್‌ತಿ ನೀವ್ ಒಪ್‌ತೀರಾ ಬುದ್ಧಿ?’ +‘ಹೂ. ಕೈಗೆ ತಗಂಡ್ ನಿಂತ್ಕಂಡ್ರೆ ಯಾವನಾದ್ರೂ ಮಾತು ಕೇಳ್ತಾನೆ.’ +‘ಅದುಕ್ಕಲ್ಲ ಏಳಿದ್ದು. ಗಾಳಿ ಪೀಡೆ ಓಡುಸ್ತದಂತೆ ಅದು.’ +‘ಅದೂ ಆಗುತ್ತೆ ಅನ್ನು. ನಾನು ಇಟ್‌ಕಂಡಿರೋದು ಮನುಷ್ಯರಿಗೆ.’ +ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿದ ಮೇಲೆ ಜೋಯಿಸರೇ ಕೇಳಿದರು: ‘ಏನು ನೀನು ಬಂದ ಜಂಬ್ರ?’ +‘ಹಂಗೇ ಬಂದೆ. ಈಗ ಎಲ್ಡು ವರ್ಸದಾಗೆ ಒಂದ್ ಕೆಲ್ಸವಾಯ್ತು. ಚೋಳನ ಗುಡ್ಡದ್ ತಾವ್‌ಳ ಕಟಿಗೇ‌ಅಳ್ಳಿಯೋರುದ್ದ ಒಂದು ಮಾಟ ಮಾಡ್ಸಿದ್ದೆ. ಅಮಾಸೆ ದಿನ. ಚೌಡಮ್ಮನ್ ಮ್ಯಾಲೆ ಮಡ್‌ಗಿದ್ ದಕ್ಷಿಣೆ ದುಡ್ದು, ಮೂರು ಚಿಪ್ಪು ಬಾಳೇಹಣ್ಣು, ಎಲ್ಲಾನೂ ಯಾರೋ ಯಗರಿಸ್‌ಕಂಡ್ ಓಗಿದ್ರು. ನಿಮ್‌ಗೇನಾರಾ ಗೊತ್ತಾ ಕೇಳಾಣಾ ಅಂತ ಬಂದೆ.’ +‘ಮಾಟ ಮಾಡಾದು ಕಲ್ತಿರೋನ್ಗೆ ಕವಡೆ ಬಿಟ್ಟು ಶಾಸ್ತ್ರ ನೋಡಾಕ್ ಬರುಲ್ವೇನೊ? ನನ್ನೇನ್ ಕೇಳ್ತೀಯಾ? ಶಾಸ್ತ್ರ ನೋಡಾಕೆ ನಿಂಗಿಂತ ನಂಗೆ ಗೊತ್ತಾ?’ +ಇದುಕ್ ಸಾಸ್ತ್ರವೂ ಬ್ಯಾಡ ಸುಕನಾತಿಯೂ ಬ್ಯಾಡ. ಅವತ್ ರಾತ್ರಿನಾಗ ಮತ್ತೆ ಬಂದ್ ನೋಡಿದ ಪಟೀಗೆ ನನ್ಗೆ ಗೊತ್ತಾಗ್‌ಹೋಯ್ತು. ನಾನ್ ಮಾಡಿ ಮಡಗಿದ ಚೌಡಮ್ಮನ್ನ ಮುರ್‌ದ್‌ಹಾಕಿ ಅವಳ ಮೈಮ್ಯಾಲಿನ ದುಡ್ಡು ತಗಂಡು ಬಾಳೆಹಣ್ಣು ತಿಂದು ಅರಗಿಸ್‌ಕಳಾ ಸಗ್‌ತಿ ಇನ್ಯಾರಿಗೂ ಇಲ್ಲ. ಅಮಾಸೆ ರಾತ್ರಿ ಹೊತ್ನಾಗ ಅಲ್ಲಿಗೆ ಹೋಗಾ ಗುಂಡಿಗೆ ಯಾರಿಗೈತೆ? ಈ ಸೀಮೇಲೇ ಕಂಠ್ಯಪ್‌ನೋರಲ್ದೆ ಇನ್ಯಾರ್ಗೂ ಇದು ಎಟ್‌ಕಾ ಮಾತಲ್ಲ ಅಂತ ನನಗೆ ತಿಳಿದ್‌ಹೋಯ್ತು. ನಿಜ ಹೇಳಿ ದೋಸ್‌ರೆ.’ +‘ನಿಂಗೂ ಬುದ್ಧಿ ಇದೆ ಕಣೋ ಆಚಾರಿ. ಈಗ್ ಏನ್ ಆ ದುಡ್ದು ಕೇಳಾಕ್ ಬಂದ್ಯೇನು?’ +‘ಆ ದುಡ್ದಿನ ಮನೆ ಆಳಾಯ್ತು. ಅದು ಬ್ಯಾಡ. ಇನ್ ಯಾವತ್ತೂ ನಾನ್ ಕೈ ಆಕಿದ್ ತಾವುಕ್ ನೀವು ಕಾಲ್ ಆಕ್‌ಬ್ಯಾಡಿ ಕಣಪ್ಪ. ನಿಮಿಗ್ ಕೈ ಮುಗೀತೀನಿ.’ +‘ಆಯ್ತು ಬಿಡು. ನಾನಿನ್ನೂ ಅಡಿಗೆ ಮಾಡಿಲ್ಲ. ಈಗ ಇಬ್ರಿಗೂ ಮಾಡ್ತೀನಿ. ಇದ್ದು ಊಟ ಮಾಡ್‌ಕಂಡು ಹೋಗು.’ +ವೀರಾಚಾರಿ ಊಟಕ್ಕೆ ಉಳಿದ. ಸಂಜೆ ನಾಲ್ಕು ಗಂಟೆಯ ತನಕ ಇದ್ದು ಹೊರಟು ಹೋದ. ಆ ದಿನ ರಾತ್ರಿ ಕಂಠೀಜೋಯಿಸರಿಗೆ ಇದ್ದಕ್ಕಿದ್ದಹಾಗೆಯೇ ಮಗಳ ನೆನಪು ಬಂತು. ‘ಈಗ ಹೆರಿಗೆಯ ದಿನ ಹತ್ತಿರವಾಗಿರಬಹುದು. ನಾನು ಹೋಗಿ ನೋಡಿಯೇ ಇಲ್ಲ. ಆ ಬದ್ಮಾಷ್ ಶಾಮಣ್ಣ ಪಂಚಾಯ್ತೀಲಿ ಕಟ್ಟು ಮಾಡಿಸಿದ ಅಂತ ನಾನ್ಯಾಕೆ ಹೆದರ್‌ಕಂಡು ಅಲ್ಲಿಗೆ ಹೋಗದೆ ಇರಬೇಕು.? ನಾಳೆ ಹೋಗಿ ನೋಡ್‌ಕಂಡೇ ಬತ್ತೀನಿ. ಅವ್ನು ನನ್‌ತಾವ ಅದೇನು ಕಿತ್ಕತಾನೋ ನೋಡಾಣ. ಅವನ ಶೆಡ್ಡು ನಮ್ಮುದ್ರ ಹತ್ರಾನೇ ಇದೆ. ರಾಜಾರೋಷಾಗಿ ಅವನ ಎದುರಿಗೇ ಹೋಗ್ತೀನಿ. ಅವ್ನೇನಾದ್ರು ಗುರ್ ಅಂದ್ರೆ ಚಮ್‌ಡ ನಿಕಾಲ್ ಮಾಡ್ತೀನಿ, ಮಾದರ್‌ಚೋದಂದು. ನಾನು ಇಷ್ಟು ದಿನ ಅಲ್ಲಿಗೆ ಹೋಗದೆ ಇದ್ದುದೇ ಸರಿಯಾಗಲಿಲ್ಲ. ನನ್ನ ಪಂಚಾಯ್ತಿ ಕಟ್ಟೆಗೆ ಹೆದರ್ಕಂಡೇ ಕಂಠಿ ಬರಲಿಲ್ಲ ಅಂತ ತಿಳ್ಕಂಡು ಅವ್ನು ಮೀಸೆ ತಿರುವ್‌ಕತ್ತಿರಭೌದು. ನನ್ ಉಚ್ಚೇಲಿ ಬೋಳಿಸ್‌ಬೇಕು ಆ ಮಿಂಡ್ರಿಗೆ ಹುಟ್ಟಿದ ಮಗನ ಮೀಸೇನ’-ಎಂಬ ಆಲೋಚನೆಯಲ್ಲಿ ಅವರು ಆ ಮಗ್ಗುಲು ಆಡುತ್ತಿರುವಾಗ ಮನೆಯ ಹೆಂಚಿನ ಮೇಲೆ ಎನೋ ಬಿದ್ದಂತೆ ಆಯಿತು. ಮತ್ತೆ ಒಂದು ನಿಮಿಷದಲ್ಲಿ ಎರಡು ಕಲ್ಲು ಬಿದ್ದ ಶಬ್ದವಾಯಿತು. ಈ ವೀರಾಚಾರಿದೇನಾರಾ ಇದೆಯೇ ಕೆಲಸ ಎಂಬ ಯೋಚನೆ ಮನಸ್ಸಿನಲ್ಲಿ ಬರುತ್ತಿರುವಂತೆಯೇ ಮನೆಯ ಮೇಲೆ ಪಟಪಟನೆ ಇಪ್ಪತ್ತು ಮೂವತ್ತು ಕಲ್ಲು ರೊಂಯ್ ರೊಂಯ್ ಎನ್ನುತ್ತಾ ಬಂದು ಬಿದ್ದವು. ‘ವೀರಾಚಾರಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ಈ ಊರ್ನೋರೇ ಯಾರೋ ಇರಬೇಕು, ನನ್ನ ಹೆದರುಸ್‌ಬೇಕು ಅಂತ ಏನೋ ಮಡಿದಾರೆ. ಇರ್ಲಿ ಈ ಶಿಖಂಡಿ ಸೂಳೆಮಕ್ಳಿಗೆ ತೋರುಸ್ತೀನಿ ಕೈಯ’-ಎಂದು ಅವರು ಹಾಗೆಯೇ ಮೇಲೆ ಎದ್ದು, ಶಬ್ದವಾಗದಂತೆ ಹಿಂಭಾಗದ ಬಾಗಿಲು ತೆಗೆದು ಹಿತ್ತಿಲಿಗೆ ಬಂದರು. ಮೆಲ್ಲಗೆ ಹಿತ್ತಿಲಿನ ಗೋಡೆ ಹಾರಿ ಪಕ್ಕದ ಮನೆಯನ್ನು ಬಳಸಿ ಬೀದಿಗೆ ಬಂದು ಒಂದು ಸಲ ಗಟ್ಟಿಯಾಗಿ ‘ಯಾವನೋ ಅವನು ಬೋಳೀಮಗನೇ, ನಿನ್ನ ಆವ್‌ತಿ ತಗಂಡ್‌ಬಿಡ್ತೀನಿ’ ಎಂದು ಅಬ್ಬರಿಸಿದರು. ನಾಲ್ಕೈದು ಜನಗಳು ದಿಕ್ಕು ತೋಚದೆ ಎತ್ತೆತ್ತಲೋ ಓಡತೊಡಗಿದರು. ಅವರು ಭಯದಿಂದ ತತ್ತರಿಸುತ್ತಿರುವಂತೆ ಇವರು ಇನ್ನೊಂದು ಸಲ ಅಬ್ಬರಿಸುತ್ತಾ ಮುನ್ನುಗ್ಗಿ ಹೋಗಿ ಅವರ ಪೈಕಿ ಒಬ್ಬನನ್ನು ಹಿಡಿದರು. ಉಳಿದವರು ತಪ್ಪಿಸಿಕೊಂಡು ಪರಾರಿಯಾದರು. +ಸಿಕ್ಕಿದವನ ಹೆಸರು ಜುಟ್ಟಗ. ಶ್ಯಾನುಭೋಗ ಶ್ಯಾಮಣ್ಣನವರ ಗದ್ದೆಯನ್ನು ವಾರಕ್ಕೆ ಗೇಯುತ್ತಿದ್ದ ಅವನು ಧೈರ್ಯಶಾಲಿ, ನಿಜ. ಆದರೆ ಈಗ ಭಯದಿಂದ ಗಡಗಡ ನಡುಗಲು ಪ್ರಾರಂಭಿಸಿದ. ಕಂಠೀಜೋಯಿಸರೆಂದರೇ ಒಂದು ಮಾರಮ್ಮನಿಗೆ ಸಮಾನ. ಬಿಟ್ಟ ಊರಿನಲ್ಲಿ ಮಾರಮ್ಮ ಇದ್ದೇ ಇರುತ್ತಾಳೆ ಎಂದು ಅವನು ಕೇಳಿದ್ದ. ಕತ್ತಲೆಯ ಈ ನಡು ರಾತ್ರಿಯಲ್ಲಿ ತನ್ನ ಜೊತೆಯವರೆಲ್ಲ ಹೊರಟು ಹೋಗಿರುವಾಗ ಅಬ್ಬರಿಸಿಕೊಂಡು ಬಂದು ತನ್ನನ್ನು ಹಿಡಿದು ಕೆಡವಿಕೊಂಡಿರುವುದು ಮಾರಮ್ಮನೋ ಅಥವಾ ಕಂಠೀಜೋಯಿಸರೋ ಎಂಬುದು ಅವನಿಗೆ ನಿಶ್ಚಯವಾಗಿ ತಿಳಿಯಲಿಲ್ಲ. ಕಂಠೀಜೋಯಿಸರೆಂದು ಸ್ಪಷ್ಟವಾಗಿ ತಿಳಿದಿದ್ದರೂ, ಅವರೂ ಮಾರಮ್ಮನೇ ಅಲ್ಲವೆಂದು ನಂಬಿಕೆಯಾಗುವಂತಿರಲಿಲ್ಲ. +‘ಯ ಯ ಯಪ್ಪಾ, ನನನನ್ ಬು ಬು ಬುಟ್‌ಬುಡಿ’-ಎಂದು ಕೈ ಮುಗಿದ. +‘ನೀನ್ ಯಾರು, ಶ್ಯಾಮಣ್ಣ ಕಳಿಸಿದ್ನೇನೋ?’ +‘ಊಂ.’ +‘ಇಲ್ಲೀಗ್ ಬರೋ ಧೈರ್ಯ ಹೆಂಗಾಯ್ತೋ ನಿಂಗೆ?’ +‘ನೀ ನೀ ನೀವ್ ಊರಾಗಿರಾಕಿಲ್ಲ ಅಂತ ಏ ಏಳಿದ್ರು.’ +‘ನಾನು ಊರಾಗಿಲ್ದೇಹೋದ್ರೂ ನನ್ನ ಮನೇ ಮೇಲೆ ಕಲ್ಲು ಹೊಡಿಯೋ ಧೈರ್ಯ ಹ್ಯಂಗೆ ಬಂತೋ ನಿಂಗೆ?’ +‘ನೀನು ಹೋಗ್ದೇ ಇದ್ರೆ ನಿನ್ನ ಗದ್ದೆ ಬುಡುಸ್‌ಬುಡ್ತೀನಿ ಅಂದ್ರು.’ +‘ಬಾಕಿಯೋರ್ಯಾರ್ಯಾರು?’ +‘ತಿಮ್ಮಕ್ಕನ ಮನೆ ಗಿಡ್ಡ, ಮ್ಯಾಗಳ ಕೇರಿ ಗುಳ್ಳಿಗ, ತಳವಾರರ ಸಿದ್ದೂರ.’ +‘ಅವರಿಗೆಲ್ಲ ಹ್ಯಂಗೆ ಧೈರ್ಯ ಬಂತು?’ +‘ಇಲ್ದೆ ಇದ್ರೆ ದರಕಾಸ್ತಿನಾಗೆ ಸರ್ಕಾರೀ ಜಮೀನು ಕೊಡಿಸಾಕಿಲ್ಲ ಅಂದ್ರು.’ +‘ಆಯ್ತು. ನಿನ್ ಹೆಂಡ್ತಿ ಮುಂಡೆಯಾಗ್ಬೇಕು ಅಂತ ನಿಂಗೆ ಆಶೆಯಾಗೈತೋ?’ +‘ನಿಮ್ ದಮ್ಮಯ್ಯ ಬುದ್ಧಿ, ಹಂಗ್ ಮಾಡಿಸ್‌ಬ್ಯಾಡಿ.’ +‘ನನ್ ಮನೆ ಮ್ಯಾಲೆ ಕಲ್ಲು ಹೊಡ್ದು ನೀನಿನ್ಹೆಂಗ್ ಉಳ್ಕತೀಯಾ ಹ್ಯೇಳು?’ +ಜುಟ್ಟಗ ಮತ್ತೆ ಏನೂ ಹೇಳದೆ ನಡುಗುತ್ತಾ ನಿಂತುಕೊಂಡ. ಈಗಲೇ ಹೋಗಿ ಶ್ಯಾನುಭೋಗ ಶ್ಯಾಮಣ್ಣನ ಶೆಡ್ಡಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಹೊತ್ತಿಸಬೇಕೆಂದು ಕಂಠೀಜೋಯಿಸರ ಮನಸ್ಸಿನಲ್ಲಿ ಬಂತು. ಆದರೆ ಅವರ ಶೆಡ್ಡಿಗೆ ಹತ್ತಿರವಾಗಿ ಇವರ ತಾಯಿ ಮತ್ತು ಮಗಳು ಇದ್ದ ಶೆಡ್ಡೂ ಇತ್ತು. ಉರಿ ಅಲ್ಲಿಂದ ಇದಕ್ಕೆ ಬಡಿದೀತೆಂಬ ಯೋಚನೆ ಬಂದು ಅವರು ಅದನ್ನು ಕೈಬಿಟ್ಟರು. ಆ ನಾಯಿಮರಿಗೆ ಬುದ್ಧಿ ಕಲಿಸ್ಬೇಕಾದ್ರೆ ಹಾಡಾಹಗಲು ಮಾಡಬೇಕು. ರಾತ್ರಿ ಹೊತ್ನಲ್ಲಿ ಮಾಡಿದ್ರೆ ಅವನ್ಗೂ ನನ್ಗೂ ಏನು ವ್ಯತ್ಯಾಸ-ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಹುಟ್ಟಿತು. ಜುಟ್ಟಗ ಅಲ್ಲಿಯೇ ಕೈಮುಗಿದುಕೊಂಡು ನಿಂತಿದ್ದ. +‘ನಮ್ಮ ಶೆಡ್ಡಿನ ಕಡೆ ಹೋಗಿದ್ಯೇನೋ?’ +‘ಒಲೀಕ್ ಓಗಿರ್ನಿಲ್ಲ. ಅದ್ರ ತಾವುಕ್ ಓಗಿದ್ದೆ.’ +‘ಹ್ಯಂಗವ್ರೆ ಅಮ್‌ನೋರು?’ +‘ನಂಜವ್ವ ಎಣ್ ಮಗ ಎತ್‌ತಂತೆ ಇವತ್ ಮದ್ಯಾನ್‌ದಾಗ. ಮಗ ಬಾಣಂತಿ ವೈನವಾಗ್ಯವ್ರಂತೆ.’ +ಈ ಮಾತನ್ನು ಕೇಳಿ ಅವರಿಗೆ ಸಮಾಧಾನವಾಯಿತು. ನಾಳೆ ಬೆಳಿಗ್ಗೆ ಅಲ್ಲಿಗೆ ಹೋಗಿ ಅವರನ್ನು ನೋಡಿಕೊಂಡೇ ಬರಬೇಕು.-ಎಂದು ನಿಶ್ಚಯಿಸಿ ಅವರು ಜುಟ್ಟಗನಿಗೆ ಹೇಳಿದರು: ‘ಆಯ್ತು. ನೀನು ಹೋಗು.’ +ಆದರೆ ಅವನು ಹೋಗದೆ ಅಲ್ಲಿಯೆ ಉಳಿದ ‘ಯಾಕೋ?’-ಎಂದು ಕೇಳಿದರೆ, ‘ಒಬ್ಬನೇ ಓಗಾಕ್ ಎದ್‌ರಿಕೆಯಾಯ್ತದೆ. ನೀವು ಸಟಾಗ್ ಬಂದು ಕಳ್ಸಿ’ ಎಂದ. +‘ವಾರೆವಾ ಸೂಳೇಮಗನೇ. ಇಲ್ಲಿಗ್ ಬರಾಕ್ ಹೆದ್‌ರಿಕೆಯಾಗಲಿಲ್ಲ. ಈಗ ಹೋಗು ಅಂದ್ರೆ ಜೊತೆಗೆ ಬರ್‌ಬೇಕಂತೆ. ಸುಮ್ಮನೆ ಹೋಗ್ತೀಯೋ ಇಲ್ಲಾ ನಾಲ್ಕು ಬಿಡ್ಲೋ ಬೆನ್‌ಮ್ಯಾಲೆ?’ +‘ಇಲ್ಲ ಕಣಪಾ ಓಯ್ತೀನಿ’-ಎಂದು ಅವನು ಬೇಗ ಬೇಗ ಊರ ಹೊರಗೆ ನಡೆದ. ಆದರೆ ಸಂದಿ ಗೊಂದಿಯ ಹಾದಿಯಲ್ಲಿ ಸುತ್ತಿ, ಮಾರಿಬಡಿದ ಆ ಊರಿನ ಹೊರಗೆ ಹೋಗಬೇಕಾದರೆ ಇನ್ನೂರು ಮುನ್ನೂರು ಹೆಜ್ಜೆಯಾದರೂ ನಡೆಯಬೇಕಾಗಿತ್ತು. ಯಾವುದೋ ಧೈರ್ಯದಿಂದ ಕಂಠೀಜೋಯಿಸರ ಮನೆಯ ಸಂದಿಯನ್ನು ದಾಟಿ ನಡೆದ. ಅವನು ದೂರದಲ್ಲಿ ಇದ್ದಕ್ಕಿದ್ದಹಾಗೆಯೇ-‘ಅಯ್ಯಯ್ಯಪ್ಪೋ’ ಎಂದು ವಿಕಾರವಾಗಿ ಕಿರುಚಿಕೊಂಡು ಓಡಿಹೋದಂತೆ ಕೇಳಿತು. +ಮನೆಯ ಮುಂಬಾಗಿಲಿಗೆ ಒಳಗಿನಿಂದ ಅಗಳಿ ಹಾಕಿದ್ದುದರಿಂದ ಜೋಯಿಸರು ಪುನಃ ಹಿತ್ತಿಲು ಗೋಡೆ ಹಾರಿ, ತಾವು ಬಂದ ಹಿಂಬಾಗಿಲಿನಿಂದಲೇ ಒಳಗೆ ಹೋಗಿ ಮಲಗಿಕೊಂಡರು. ಆದರೆ ತಕ್ಷಣ ನಿದ್ದೆಬರಲಿಲ್ಲ. ನಾಳೆದಿನ ಶ್ಯಾಮನ್ಣನಿಗೆ ಏನು ಮಾಡಬೇಕೆಂಬ ಬಗೆಗೆ ಹಲವು ಯೋಚನೆಗಳು ತಲೆಯಲ್ಲಿ ಸುಳಿಯುತ್ತಿದ್ದವು. ಅವರ ಅಪ್ಪನ ಕಾಲದಿಂದಲೂ ಇವರ ಮತ್ತು ಅವರ ಮನೆಗಳಿಗೆ ಆಗುತ್ತಿರಲಿಲ್ಲ. ಶ್ಯಾನುಭೋಗಿಕೆ ಎಂದರೆ ಅರಮನೆ ಕೆಲಸವಂತೆ. ಅವರು ರಾಜಪ್ರತಿನಿಧಿಗಳಂತೆ. ಶ್ಯಾಮಣ್ಣನ ಅಪ್ಪ ನರಸಿಂಹಯ್ಯ ಹಾಗೆ ಹೇಳಿಕೊಳ್ಳುತ್ತಿದ್ದ. ಈ ಬೋಳೀಮಗನೂ ಹಾಗೆಯೇ ಅಂತಿರ್ತಾನೆ. ನಮ್ಮದೇನು ಕಡಿಮೆ? ಅವನದ್ದು ಅರಮನೆ ಕೆಲಸವಾದರೆ ನಮ್ಮದು ಗುರುಮನೆ ಕೆಲಸ. ಅರಮನೆಯೋರು ಗುರುಮನೆಯೋರನ್ನ ಬೆದರಿಸಿಕೊಂಡು ತಿಂತಿದ್ರು. ಈಗ ನನ್ನ ಕಾಲದಲ್ಲಿ ಅದು ನಿಂತಿದೆ. ದಾನ ತಂದು ಜೀವನ ಮಾಡ್ತಾ, ಇವರು ಹೇಳಿದ್ದು ಕೇಳ್ಕಂಡಿದ್ರೆ ಇವರಿಗೆ ಬೇಕು. ನನ್ನಂಥಾ ಗಂಡು ಜೋಯಿಸನಾದ್ರೆ ಇವ್ರ ಆಟ ನಡೆಯುಲ್ಲ. ಕಂಠೀಜೋಯಿಸ ಅಂದ್ರೆ ಏನಂತ ತಿಳ್ಕಂಡಿದಾರೆ? ಕಂಠಿ ಅಂದ್ರೆ ರಣಧೀರ ಕಂಠೀರವ ಅಂತ. ಈ ಅರಮನೆಗಳಿಗೆಲ್ಲ ಮೇಲಿನ ಮಿಂಡ ಭೂಪತಿ. ನಾಳೆ ದಿನ ತೋರುಸ್ತೀನಿ ಈ ಷಂಡ ಸೂಳೇಮಕ್ಳಿಗೆ!-ಎಂಬ ಯೋಚನೆಯಲ್ಲಿ ಬೆಳಗಿನ ಜಾವದ ವೇಳೆಗೆ ನಿದ್ರೆ ಬಂತು. +ಬೆಳಿಗ್ಗೆ ಎಚ್ಚರವಾಗುವ ಹೊತ್ತಿಗೆ ಹತ್ತು ಗಂಟೆಯೇ ಆಗಿತ್ತು. ಶ್ಯಾಮಣ್ಣನ ಗುಡಿಸಲು ತಾವಕ್ಕೆ ಹೋಗಬೇಕೆಂದು ಎದ್ದು ಹಿತ್ತಿಲ ಕಡೆಗೆ ಹೋಗಿ ಬರುವ ಹೊತ್ತಿಗೆ ಮನೆಯ ಮುಂದೆ ಒಬ್ಬ ಪೋಲೀಸ್ ಕಾನಿಸ್ಟೇಬಲ್ ನಿಂತಿದ್ದುದು ಕಾಣಿಸಿತು. ಸಮಾಚಾರವೇನೆಂದು ಕೇಳಿದ ತಕ್ಷಣ ಅವನು ಹೇಳಿದ: ‘ನಿಮ್ಮ ಮಗ ಕಲ್ಲೇಶನಿಗೆ ಪ್ಲೇಗ್ ಆಗಿದೆ. ಎಡಗಡೆ ಕಂಕುಳಲ್ಲಿ ಗೆಡ್ಡೆ ಕಾಣಿಸ್ಕಂಡಿದೆ. ನೀವು ಈಗ್ಲೆ ಬರ್‌ಬೇಕು.’ +ಆಂ, ಎಲ್ಲಿ?’ +‘ಬೆಳಗೊಳದಲ್ಲೇ ಇದಾನೆ. ಇನ್ನೂ ಜ್ಞಾನ ನ್ಯೆಟ್ಟಗಿದೆ. ನಿಮ್ಮುನ್ನ ಕರ್ಕಂಡ್ ಬಾ ಅಂತ ದಫೇದಾರ್ರು ಕಳ್ಸಿದ್ರು. ಹಳ್ಳೀ ಬೀಟಿಗೆ ಹೋಗಿದ್ದಾಗ ಅಮ್ಮನ ಕೈಲಿ ಬಡಿಸ್ಕಂಡ್ ಬಂದುಬಿಟ್ಟ. ಬ್ಯಾಗ ನಡೀರಿ.’ +ಇನ್ನು ಮಾತನಾಡುವಂತೆ ಇರಲಿಲ್ಲ. ಹಿತ್ತಿಲ ಕಡೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಕರುವನ್ನು ಬಿಚ್ಚಿ ಊರ ಹೊರಗೆ ಹೊಡೆದುಕೊಂಡು ಹೋಗಿ, ಎದುರಿಗೆ ಸಿಕ್ಕಿದ ಒಬ್ಬನಿಗೆ-‘ಇದನ್ನು ನಮ್ಮ ಶೆಡ್ಡಿಗೆ ಅಟ್ಟು’ ಎಂದು ಹೇಳಿಕಳಿಸಿದರು. ಮನೆಗೆ ಬೀಗ ಹಾಕಿ ಕಾನಿಸ್ಟೇಬಲನ್ನು ತಮ್ಮ ಹಿಂದೆಯೇ ಕೂರಿಸಿಕೊಂಡು ಕುದುರೆ ಏರಿ ಶ್ರವಣಬೆಳಗೊಳದ ಕಡೆಗೆ ನಾಗಾಲೋಟ ಓಡಿಸಿದರು. +– ೪ – +ಈ ಸಲದ ಪ್ಲೇಗು ನಾಗಲಾಪುರದ ಯಾರಿಗೂ ಬಡಿಯಲಿಲ್ಲ. ಸುತ್ತಮುತ್ತ ಎಲ್ಲೆಲ್ಲಿಯೂ ಊರು ಬಿಟ್ಟಿದ್ದರು. ರಾಮಸಂದ್ರದವರು ಶೆಡ್ಡು ಹಕಿಕೊಂಡು ಹೊರಗೆ ಹೋಗಿದ್ದರೂ ಅಲ್ಲಿ ಮೂರು ಜನ ಸತ್ತರು. ಇತರ ಊರುಗಳಲ್ಲಿಯೂ ಸಾಕಷ್ಟು ಜನ ಬಲಿಯಾಗಿದ್ದರು. ಹಾಗೆ ನೋಡಿದರೆ ನಾಗಲಾಪುರದಲ್ಲಿ ಅಮ್ಮನಿಗೆ ಒಂದೂ ಬಲಿ ಸಿಕ್ಕಲಿಲ್ಲವೆಂದು ಹೇಳುವಂತಿರಲಿಲ್ಲ. ರಾತ್ರಿಯ ಹೊತ್ತಿನಲ್ಲಿ ಕಂಠೀಜೋಯಿಸರ ಮನೆಗೆ ಕಲ್ಲು ಹೊಡೆಯಲು ಹೋಗಿ ಸಿಕ್ಕಿಕೊಂಡ ಜುಟ್ಟಗನಿಗೆ, ಮನೆಗೆ ಬಂದ ಸ್ವಲ್ಪ ಹೊತ್ತಿಗೇ ಜ್ವರ ಏರಿತು. ತಾನು ಊರಿನ ಒಳಕ್ಕೆ ಹೋಗಿದ್ದುದಾಗಿಯೂ ಅಲ್ಲಿಂದ ಒಬ್ಬನೇ ಬರುವಾಗ ಒಂದು ಓಣಿಯಲ್ಲಿ ಹಿಂದಿನಿಂದ ಕಪ್ಪು ಬಣ್ಣದ ಒಬ್ಬ ದೊಡ್ಡ ಹೆಂಗಸು ತನ್ನ ಮೇಲೆ ಕರೀ ಸೆರಗು ಬೀಸಿದಂತೆಯೂ ಆಯಿತೆಂದು ಅವನು ಹೆಂಡತಿಗೆ ಹೇಳಿದ. ಜ್ವರ ಬಹು ಬೇಗ ಏರಿತು; ಮತ್ತೆ ಇಳಿಯಲಿಲ್ಲ. ಮರುದಿನ ಮದ್ಯಾಹ್ನದ ವೇಳೆಗೆ ಪ್ರಜ್ಞೆ ತಪ್ಪಿತು. ಸಂಜೆಗೆ ಸ್ವಲ್ಪ ಎಚ್ಚರವಾಯಿತು. ಎಚ್ಚರಾದವನೇ, ‘ಕಂಟ್ಯಪ್ಪ ದೋಸರ ತಾವ ಮಂತ್ರ ಮಾಡ್ಸು’ ಎಂದು ಹೆಂಡತಿಗೆ ಹೇಳಿದ. ಅವಳು ತನ್ನ ಚಿಕ್ಕ ಮಾವನನ್ನು ಊರೊಳಕ್ಕೆ ಅಟ್ಟಿದಳು. ಮನೆ ಬಾಗಿಲು ಹಾಕಿ ಬೀಗ ಮೆಟ್ಟಿದ್ದುದರಿಂದ ಕಂಠ್ಯಪ್ಪಜೋಯಿಸರ ಪತ್ತೆ ಹತ್ತಲಿಲ್ಲ. ಮರುದಿನ ಬೆಳಿಗ್ಗೆ ಮತ್ತೆ ನೋಡಿದರೂ ಬಾಗಿಲಿನ ಬೀಗ ಹಾಗೆಯೇ ಇತ್ತು. ಜುಟ್ಟಗನಿಗೆ ಮತ್ತೆ ಒಂದು ಸಲ ಪ್ರಜ್ಞೆ ಬಂದು, ‘ದೋಸರು ಬಂದ್ರಾ?’ ಎಂದು ಕೇಳಿದ. ಇಲ್ಲವೆಂದು ತಿಳಿಯುತ್ತಲೂ ಕಣ್ಣು ಮುಚ್ಚಿದ. ಮತ್ತೆ ಜ್ಞಾನ ಬರಲಿಲ್ಲ. ಎರಡು ದಿನಕ್ಕೆ ಸತ್ತುಹೋದ. ಅವನಿಗೆ ಗೆಡ್ಡೆ ಬಂದಿತ್ತೋ ಇಲ್ಲವೋ ಯಾರಿಗೂ ತಿಳಿಯಲಿಲ್ಲ. ಅಮ್ಮ ಬಡಿದು ಸಾಯಬೇಕಾದರೆ ಗೆಡ್ದೆ ಹೊಮ್ಮಿ ಕಾಣಿಸಿಕೊಳ್ಳಬೇಕೆಂಬ ನಿಯಮವುಂಟೆ? ಅಂತೂ ಜುಟ್ಟಗನ ಹೆಂಡತಿ ಮುಂಡೆ ಆದಳು. ಅವಳು ಹಾಗಾಗುವುದು ಬೇಡವೆಂದು ಅವನು ಕಂಠೀಜೋಯಿಸರ ಮುಂದೆ ತತ್ತರಿಸುತ್ತಾ ಅಂಗಲಾಚಿದ್ದ. +ನಂಜು ಹೆಣ್ಣು ಮಗು ಹೆತ್ತು ಮಗು ಬಾಣಂತಿ ಸುಖವಾಗಿರುವುದನ್ನು ಕಂಠಿಗೆ ತಿಳಿಸುವಂತೆ ಅಕ್ಕಮ್ಮ ಅವರ ಹೊಲದ ವಾರದಾರ ಹೊನ್ನನನ್ನು, ಹೆರಿಗೆಯಾದ ಮರುದಿನ ಮಧ್ಯಾಹ್ನದ ಹೊತ್ತಿಗೆ ಕಳಿಸಿದಳು. ಮನೆಗೆ ಬೀಗ ಹಾಕಿರುವುದಾಗಿ ಅವನು ಬಂದು ಹೇಳಿದ. ತಾವು ಊರ ಒಳಗೆ ಹೋಗಿದ್ದ ಸಂಗತಿಯನ್ನು ಕಲ್ಲು ಬೀರಲು ಹೋಗಿದ್ದ ತಿಮ್ಮಕ್ಕನ ಮನೆ ಗಿಡ್ಡನಾಗಲಿ, ಮ್ಯಾಗಳಕೇರಿ ಗುಳ್ಳಿಗನಾಗಲಿ, ತಳವಾರರ ಸಿದ್ದೂರನಾಗಲಿ ಮತ್ತೆ ಯಾರ ಕೈಲೂ ಬಾಯಿಬಿಟ್ಟಿರಲಿಲ್ಲ. ಆದುದರಿಂದ ಆ ವಿಷಯ ಅಕ್ಕಮ್ಮ ನಂಜಮ್ಮರಿಗೆ ಸ್ವಲ್ಪವೂ ತಿಳಿಯಲಿಲ್ಲ. ಹಸು ಕರುವನ್ನು ಕೊಟ್ಟು ಕಳುಹಿಸಿದ್ದುದರಿಂದ ಮಗ ಎಲ್ಲೋ ಸಂಚಾರ ಹೋಗಿದ್ದಾನೆ, ಇನ್ನೂ ಬಂದಿಲ್ಲ, ಎಂದು ಅಕ್ಕಮ್ಮ ಅರ್ಥ ಮಾಡಿಕೊಂಡಳು. ಪುರೋಹಿತ ಪುಟ್ಟಭಟ್ಟರ ಹೆಂಡತಿ ಅಕ್ಕಮ್ಮನಿಗೆ ನೆರವಾದರು. ಪುಟ್ಟಭಟ್ಟರೇ ರಾಮಸಂದ್ರಕ್ಕೆ ಹೋಗಿ ವಿಷಯ ತಿಳಿಸಿ ನಾಮಕರಣದ ದಿನಕ್ಕೆ ಬರುವಂತೆ ಚೆನ್ನಿಗರಾಯನನ್ನು ಕರೆದು ಬರುವಂತೆ ಅಕ್ಕಮ್ಮ ಹೇಳಿದಳು. ಬಿಟ್ಟ ಊರಿನಿಂದ ಅಲ್ಲಿಗೆ ಹೋಗಬಹುದೋ ಬೇಡವೋ ಎಂದು ಅವರು ಅನುಮಾನಿಸಿದಾಗ ಹೊಲೆಮನೆಯಲ್ಲಿ ಮಲಗಿದ್ದ ನಂಜುವೇ- ಆ ಊರು ಬಿಟ್ಟಿದೆ. ನಮ್ಮ ಶೆಡ್ಡು ಊರ ಮುಂದಿನ ಅಮ್ಮನ ಗುಡೀ ಹಿಂದೆ ಅತ್ತೀಮರದ ಹತ್ತಿರ ಇದೆ ಅಂತ ಕಾಣುತ್ತೆ. ನಮ್ಮ ತೋಟ ಇರೂದು ಅಲ್ಲೇ. ನೀವು ಹೋಗಿ ಬನ್ನಿ’ ಎಂದಳು. ಪುಟ್ಟಭಟ್ಟರು ಪೂರ್ವದಿಕ್ಕಿಗೆ ಪಯಣ ಹೊರಟರು. +ಶೆಡ್ಡಿನಲ್ಲಿ ಪುರುಡನ್ನು ಅನುಸರಿಸಿ ಹತ್ತನೆಯ ದಿನ ಚೆನ್ನಿಗರಾಯ ನಾಮಕರಣಕ್ಕೆ ನಡೆದು ಹೊರಟ. ಗಾಡಿ ಹೊಡೆಸಿಕೊಂಡು ಅಪ್ಪಣ್ಣಾಯ್ಯ, ಸಾತು, ಇಬ್ಬರನ್ನೂ ಜೊತೆಗೆ ಕರೆದುಕೊಂಡು ಹೋಗಬಹುದಾಗಿತ್ತು. ಸಾತು ಈಗ ಬಸುರಿಯಾಗಿದ್ದಳು. ವಾಂತಿ ಇನ್ನೂ ನಿಂತಿರಲಿಲ್ಲ. ಅಲ್ಲದೆ ಈಗ ಅವಳು ಗಂಗಮ್ಮನ ಕೈಲಾಗಲಿ ತನ್ನ ಗಂಡನ ಕೈಲಾಗಲಿ ಮಾತನಾಡುತ್ತಿರಲಿಲ್ಲ. ಒಂದು ದಿನ ಹಿಂದಿರುಗಿ ಅವರಿಬ್ಬರನ್ನೂ ಚನ್ನಾಗಿ ಬೈದುಬಿಟ್ಟಿದ್ದಳು. ಭಾವನವರ ಕೈಲಿ ಮೊದಲಿನಿಂದಲೂ ಹೆಚ್ಚಾಗಿ ಮಾತನಾಡಿರಲಿಲ್ಲ. ಅವರೂ ಅವಳನ್ನು ತಾವಾಗಿಯೇ ಮಾತನಾಡಿಸಿರಲಿಲ್ಲ. ಹೀಗಾಗಿ ಅವರೊಬ್ಬರೇ ನಾಗಲಾಪುರಕ್ಕೆ ಹೊರಟರು. +ಹನ್ನೊಂದು ಗಂಟೆಯ ಹೊತ್ತಿಗೆ ಅವರು ಮರಳುಹಳ್ಳ ಕಳೆದು ಚೋಳನಗುಡ್ಡ, ಕಟಿಗೆಹಳ್ಳಿ ದಾಟಿ ನಡುದಾರಿಯಲ್ಲಿ ಸಿಕ್ಕುವ ಹೂವಿನಹಳ್ಳಿಗೆ ಬಂದರು. ಹಳ್ಳಿಯ ಮುಂದುಗಡೆ ಒಂದು ಅಂಗಡಿಯಲ್ಲಿ ಮಾಗಿದ ರಸಬಾಳೆಹಣ್ಣಿನ ಚಿಪ್ಪುಗಳನ್ನು ತೂಗುಹಾಕಿದ್ದರು. ಮೂರಾಣೆಗೆ ಒಂದು ಚಿಪ್ಪಿನಂತೆ ಚೆನ್ನಿಗರಾಯರು ಒಟ್ಟು ಮೂರು ಚಿಪ್ಪನ್ನು ಕೊಂಡರು. ನಾಳೆ ನಾಮಕರಣದ ತಾಂಬೂಲದ ತಟ್ಟೆಗೆ ಇಡಲು ಆಗುತ್ತದೆಂದು ಅವರ ಮನಸ್ಸು ನಿರ್ಧರಿಸಿತು. ಅಂಗಡಿಯಲ್ಲಿ ಒಂದು ತೆರೆದ ಡಬ್ಬದಲ್ಲಿ ಬೂರಾ ಸಕ್ಕರೆ ಇಟ್ಟಿದ್ದುದೂ ಕಣ್ಣಿಗೆ ಬಿತ್ತು. ಸವಾಸೇರು ಅದನ್ನೂ ಕಾಗದದ ಪೊಟ್ಟಣದಲ್ಲಿ ಕಟ್ಟಿಸಿ ತಮ್ಮ ಗಂಟಿಗೆ ಹಾಕಿಕೊಂಡು ಮತ್ತೆ ದಾರಿ ನಡೆಯಲು ಪ್ರಾರಂಭಿಸಿದರು. +ಎರಡು ಮೈಲಿ ಮುಂದೆ ನಡೆಯುವ ಹೊತ್ತಿಗೆ ಅವರ ಮನಸ್ಸಿನಲ್ಲಿ ಒಂದು ಯೋಚನೆ ಹುಟ್ಟಿತು: ಬಾಣಂತನ ಅಂದ್ರೆ ಮೂರು ದಿನಕ್ಕೆ ಒಂದು ಸಲ ಎಣ್ಣೆ ನೀರು, ಊಟಕ್ಕೆ ಒಂದೊಂದು ಸೌಟು ತುಪ್ಪ, ಒಳ್ಳೇ ಘಮ ಘಮ ಅನ್ನೂವಂಥ ಲೇಹ, ಇದೆಲ್ಲ ತಿಂದು ಯಾವಾಗ್ಲೂ ಸುಖವಾಗಿ ಮಲಿಕ್ಕಂಡು ನಿದ್ದೆ ಮಾಡೂದು. ನಂಗೆ ಮಾತ್ರ ಏನೂ ಇಲ್ಲ. ಇವ್ಳು ನಾಗಲಾಪುರಕ್ಕೆ ಹೋದ ಮೇಲೆ ನಂಗೆ ಚನ್ನಾಗಿ ಎಣ್ಣೆ ಒತ್ತಿ ಬಿಸಿಬಿಸಿಯಾಗಿ ಯಾರೂ ನೀರು ಹಾಕೇ ಇಲ್ಲ. ನಂಗೆ ಮೈ ಕೈ ನೋಯುಲ್ವೆ? ಅವಳ ಅಜ್ಜಿ ಇದಾಳಲಾ, ಆ ಅಕ್ಕಮ್ಮ, ಮುದುಕಿ, ಅವ್ಳು ಮೊಮ್ಮಗಳಿಗೆ ಬಯಕೆ ಅಂತ, ಬಸುರೀಲಿ ಕೇಳಿ ಕೇಳಿದ್ದು ಮಾಡಿಕೊಡ್ತಿದ್ಲಂತೆ. ತಾಯಿ ಇಲ್ಲದ ತಬ್ಬಲಿ ಮೊಮ್ಮಗ್ಳು ಅಂತ ಉಪಚಾರ ಮಾಡ್ತಿದ್ಲಂತೆ. ಹಾಗಂತ ಪುಟ್ಟಭಟ್ಟರೇ ಹ್ಯೇಳಿದ್ರಲಾ, ನನ್ನ ಕರಿಯುಕ್ಕೆ ನಮ್ಮೂರಿಗೆ ಬಂದಿದ್ದಾಗ. ನಂಗೆ ಏನಾದ್ರೂ ಕೊಟ್‌ಕಳ್ಸಿದ್ರೇ? ಅಥ್ವಾ, ಹೀಗೆ ತಿಂಡಿ ಮಾಡ್ತೀವಿ, ನೀನು ಬಾ ಅಂತ ನಂಗೆ ಹೇಳಿಕಳ್ಸಿದ್ರೇ? ಇವರ ಯೋಗ್ತೀಗೆ ನನ್ನ ಯಕ್‌ಡ ಹೊಡೆಯ. +ಅವರು ಯೋಚಿಸುತ್ತಿರುವಾಗಲೇ ದಾರಿಯಲ್ಲಿ ಒಂದು ಆಲದ ಮರ ಸಿಕ್ಕಿತು.ಅದರಿಂದ ಹತ್ತು ಮಾರು ದೂರದಲ್ಲಿ ಒಂದು ಕೊಳ ಕಾಣಿಸಿತು. ತಮಗೇ ತಿಳಿಯದಂತೆ ಶ್ಯಾನುಭೋಗರು ನೆರಳಿನಲ್ಲಿ ಗಂಟು ಇಟ್ಟುಕೊಂಡು ಕೂತರು. ಈ ಬಾಳೇಹಣ್ಣೂ ಬೂರಾ ಸಕ್‌ರೇನ ಅಲ್ಲಿಗ್ ಯಾಕ್ ತಗಂಡ್ ಹೋಗ್ಬೇಕು ಆ ಸೂಳೇಮಕ್ಳ ಮನೆಗೆ?- ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟೀದ್ದೇ ತಡ, ಚಿಪ್ಪುಗಳನ್ನು ಹೊರಕ್ಕೆ ತೆಗೆದರು. ಬೂರಾಸಕ್ಕರೆ ಪೊಟ್ಟಣ ಬಿಚ್ಚಿ ಇಟ್ಟುಕೊಂಡು, ಒಂದೊಂದಾಗಿ ಸಿಪ್ಪೆ ಬಿಡಿಸಿ ಸಕ್ಕರೆಯಲ್ಲಿ ಒತ್ತಿ ಅದ್ದಿಕೊಂಡು ಅರ್ಧ ಭಾಗ ಮೆಲುಕು ಹಾಕುವ ಮೊದಲೇ ಗುಳುಕ್ ಎಂದು ನುಂಗಿ, ಮುಂದಿನ ಹಣ್ಣಿನ ಸಿಪ್ಪೆ ಬಿಡಿಸಿ ಅದರ ಮೂತಿಯನ್ನು ಹಿಟ್ಟು ಸಕ್ಕರೆಯಲ್ಲಿ ಒತ್ತುತ್ತಿದ್ದರು. +ಒಟ್ಟು ಮೂವತ್ತೆಂಟು ಹಣ್ಣು, ಸವಾಸೇರು ಸಕ್ಕರೆಯೂ ಮುಗಿದ ಮೇಲೆ ಬಾಯಾರಿಕೆ ಎನಿಸಿತು. ಕೊಳದಲ್ಲಿ ನೀರು ಕುಡಿದು ಬಂದು ಗಂಟನ್ನು ತಲೆದಿಂಬಿಗೆ ಇಟ್ಟುಕೊಂಡು ಗೊರಕೆ ಹೊಡೆಯುತ್ತಾ ಸಂಜೆಯಾಗುವತನಕ ನಿದ್ದೆ ಮಾಡಿದರು. ಎಚ್ಚರವಾದಮೇಲೆ ಗಡಿಬಿಡಿಯಿಂದ ಎದ್ದು ನಾಗಲಾಪುರದ ಕಡೆಗೆ ಹೆಜ್ಜೆ ಓಡಿಸಿದರು. ಅವರ ಶೆಡ್ಡು ಇಂಥ ಕಡೆಯೇ ಎಂದು ಪುಟ್ಟಭಟ್ಟರು ಹೇಳಿದ್ದುದರಿಂದ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಅದುವರೆಗೂ ಅವರ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಅಕ್ಕಮ್ಮ, ಮದ್ಯಾಹ್ನದ ಅಡಿಗೆ ಆರಿಹೋಗಿದ್ದುದರಿಂದ ಬಿಸಿಯಾಗಿ ಅಡಿಗೆ ಮಾಡಲು ಒಳಗೆ ಹೋದಳು. ಶೆಡ್ದಿನ ಒಂದು ಭಾಗದಲ್ಲಿ ಬಾಣಂತಿಗೆಂದು ಕಟ್ಟಿದ್ದ ಕೋಣೆಯಲ್ಲಿ ಒಂದು ಮಂಚದ ಮೇಲೆ, ಮಗುವುನೊಡನೆ ಬಾಣಂತಿ ಮಲಗಿದ್ದಳು. ಚೆನ್ನಿಗರಾಯರು ಅದರ ಬಾಗಿಲಿನ ಹತ್ತಿರ ಹೋದಾಗ ಅವಳು ಕೇಳಿದಳು: ‘ಮಧ್ಯಾಹ್ನ ನಿಮಗೆ ಅಂತ ಮಾಡಿದ ಅಡಿಗೆ ಆರಿಹೋಯ್ತು. ನೇರವಾಗಿ ಊರಿಗ್ ಬರದೆ ಆ ಮರದ ಕೆಳಗೆ ಯಾಕೆ ಮಲಗಿದ್ದಿರಿ?’ +ಈ ಮಾತನ್ನು ಕೇಳಿ ಚೆನ್ನಿಗರಾಯರಿಗೆ ಆಶ್ಚರ್ಯವಾಯಿತು: ‘ಅದ್ಯಾವ್ನು ಹೇಳ್ದ ಹಾಗಂತ?’ +‘ಹೂವಿನಹಳ್ಳಿ ಅಂಗಡಿ ಚಿನ್ನಯ್ಯ ನಮ್ಮನೆ ಪೌರೋಹಿತ್ಯಕ್ಕೆ ಸೇರಿದೋನು. ನೀವು ಅವನ ಅಂಗ್‌ಡೀಲಿ ಮೂರು ಚಿಪ್ಪು ರಸಬಾಳೆಹಣ್ಣು ಒಂದು ಸವಾಸೇರು ಬೂರಾಸಕ್‌ರೆ ತಗಂಡ ಮೇಲೆ ಅವನು ಅಂಗಡಿ ಸಾಮಾನಿಗೆ ಅಂತ ಈ ಊರಿಗೆ ಹೊರಟನಂತೆ. ಬರ್ತಾ ದಾರೀಲಿ ನೀವು ಆಲದ ಮರದ ಕೆಳಗೆ ಮಲಗಿದ್ದಿರಂತೆ. ಬಾಳೆಹಣ್ಣಿನ ಸಿಪ್ಪೆ ಮಗ್ಗುಲಲ್ಲಿ ಬಿದ್ದಿತ್ತಂತೆ.’ +‘ಹಾಗಂತ ಹೇಳಿದ್ನೋ ಅವ್ನು? ಅವನವ್ವನ…..’-ಎಂಬ ಅವರ ಮಾತನ್ನು ಮಧ್ಯಕ್ಕೆ ತಡೆದು ಅವಳು ಕೇಳಿದಳು: ‘ಕೆಟ್ಟ ಮಾತು ಯಾಕೆ ಆಡ್ತೀರಾ? ದಾರೀಲಿ ಹೊಟ್ಟೆ ಹಸ್ತಿದೆ ಹಣ್ಣು ತಗಂಡು ತಿಂದ್ರಿ. ಯಾರೂ ಮಾಡದೆ ಇರೂ ಕೆಲಸವೇ ಅದು? ಬೇಗ ಬೇಗ ಬಂದು ಮನೇಲಿ ಊಟಾನೇ ಮಾಡಬಾರದಾಗಿತ್ತೆ?’ +ಅವರಿಗೆ ಮತ್ತೆ ಯಾವ ಉತ್ತರವೂ ಹೊಳೆಯಲಿಲ್ಲ; ಅಥವಾ ತಕ್ಷಣಕ್ಕೆ ಯಾವ ಬೈಗುಳವೂ ಬರಲಿಲ್ಲ. +ಪುಟ್ಟಭಟ್ಟರು ಮತ್ತು ಅವರ ಹೆಂಡತಿಯ ಸಹಾಯದಿಂದ ಅಕ್ಕಮ್ಮ ಊಟಕ್ಕೆ ಹತ್ತು ಜನ ಕರೆದೇ ನಾಮಕರಣ ಮಾಡಿಸಿದಳು. ಶ್ಯಾನುಭೋಗ ಶ್ಯಾಮಣ್ಣನವರೂ ಬಂದಿದ್ದರು. ಮನೆಯ ಮೊದಲ ಹೆಣ್ಣುಮಗುವಾದುದರಿಂದ ಅದಕ್ಕೆ ಅಜ್ಜಿಯ ಹೆಸರು ಗಂಗಮ್ಮನೆಂದು ಇಡಬೇಕಾಗಿತ್ತು. ಆದರೆ ಅವರು ಜೀವಂತ ಇರುವುದರಿಂದ, ಕೂಗಲು ಅನುಕೂಲವಾಗುವಂತೆ ಮತ್ತು ಜನ್ಮ ನಕ್ಷತ್ರಕ್ಕೆ ಹೊಂದುವಂತೆ ಪಾರ್ವತಿ ಎಂದು ಇಟ್ಟರು. ಚೆನ್ನಿಗರಾಯರು ಎಂಟು ದಿನ ಅಲ್ಲಿಯೇ ಇದ್ದು ಅಕ್ಕಮ್ಮನಿಂದ ಬಿಸಿಬಿಸಿ ಅಡಿಗೆ ಮತ್ತು ಆದರೋಪಚಾರ ಮಾಡಿಸಿಕೊಂಡರು. ಬಾಣಂತಿಗೆಂದು ತರಿಸಿ ಇಟ್ಟಿದ್ದ ಕೊಬ್ಬರಿ ಬೆಲ್ಲ ಅವರ ಬಾಯಿಗೂ ರುಚಿಯಾಗಿತ್ತು. ಬಾಣಂತಿಯೇ ವೀಳ್ಯದೆಲೆ ಮಡಿಸಿ ಸುಣ್ಣ ಹಾಕಿಕೊಡುತ್ತಿದ್ದಳು. ಮೊಮ್ಮಗಳ ಗಂಡನಿಗೆ ಬಗೆಬಗೆಯಾಗಿ ಮಾಡಿಹಾಕಲು ಅಜ್ಜಿಗೇನೋ ಆಶೆ. ಆದರೆ ಮುದುಕಿಯಾದ ಅವರ ಕೈಲಿ ಆಗುತ್ತಿರಲಿಲ್ಲ. ಅಲ್ಲದೆ ಬೇಕಾದ ಸಾಮಾನುಗಳನ್ನು ಧಾರಾಳವಾಗಿ ತರಿಸಲು ಹತ್ತಿರ ದುಡ್ಡಿಲ್ಲ. ಮಗ ಕಂಠಿ ಎಲ್ಲಿ ಹೋದನೆಂಬುದು ಯಾರಿಗೂ ಗೊತ್ತಿಲ್ಲ. +ನಂಜುವೇ ಒಂದು ದಿನ ಗಂಡನ ಕೈಲಿ- ‘ಊರಿನಲ್ಲಿ ಶ್ಯಾನುಭೋಗ್‌ಕೆ ಇದೆ. ನೀವು ಶೇಕ್‌ದಾರರಿಗೂ ಹೇಳದೆ ಇಲ್ಲೇ ಇದ್ರೆ ಏನು ಗತಿ?’ ಎಂದಳು. +‘ಬೇಕಾದ್ರೆ ಶೇಕ್‌ದಾರರಿಗೆ ಹಾಗಂತ ಕಾಗದ ಬರೆದು ಕಳಿಸಲೇನು?’-ಗಂಡ ಕೇಳಿದರು. +‘ವಸೂಲಿ ಕಾಲ ಹತ್ರ ಬಂತಲ್ಲ. ನೀವೇ ಊರಲ್ಲಿಲ್ದೆ ಇದ್ರೆ ದ್ಯಾವರಸಯ್‌ನೋರು ಏನು ಮಾಡ್ತಾರೆ? ಇಷ್ಟಕ್ಕೂ ವಸೂಲಿ ನಿಮ್ಮ ಕೆಲಸ ತಾನೆ? ಇವತ್ತಾಗಲೇ ತಾರೀಖು ಹದಿನೈದೋ ಹದಿನಾರೋ ಆಯ್ತಲ, ಒಂದು ಹದ ಮಳೆ ಬೇರೆ ಆಯ್ತು. ಊರಿನಲ್ಲಿ ಜಮೀನಿನ ಗತಿ ಏನು ನೋಡಬಾರದೆ?’ +ಊರಿಗೆ ಹೊರಡದೆ ನಿರ್ವಾಹವಿರಲಿಲ್ಲ. ಆದುದರಿಂದ ಶ್ಯಾನುಭೋಗ ಚೆನ್ನಿಗರಾಯರು ಮರುದಿನ ತಿಂಡಿ ತಿಂದು, ಅಜ್ಜಿ ಮಾಡಿಕೊಟ್ಟ ಮಾವಿನಕಾಯಿ ಅನ್ನದ ಅಡಿಕೆ ಪಟ್ಟೆಯ ಗಂಟನ್ನು ಹೊತ್ತುಕೊಂಡು ಹೊರಟರು. ಅವರು ಹೋದ ಮೇಲೆ ಅಕ್ಕಮ್ಮ ಅಂದಳು: ‘ನಂಜೂ ನಿನ್ನ ಗಂಡ ಒಂದು ಸಲವಾದರೂ ಮಗೂನ ಕೈಲಿ ಎತ್ತಿಕಳ್‌ಲಿಲ್ವಲಾ? ಹೆಣ್ಣಾಯ್ತು ಅಂತ ಬೇಜಾರೇನು ಅವನಿಗೆ?’ +ನಂಜು ಯಾವ ಮಾತೂ ಆಡಲಿಲ್ಲ. ಅವಳ ಕಣ್ಣಿನಲ್ಲಿ ನೀರು ತುಂಬಿಬಂತು. ಅದು ಗಂಡಾಗಿದ್ದರೂ ಎತ್ತಿಕೊಳ್ತಿರಲಿಲ್ಲ-ಎನ್ನಬೇಕೆಂದು ನಾಲಗೆಯಲ್ಲಿ ಬಂದಿತಾದರೂ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ಅಜ್ಜಿಯ ಮಾತು ತನಗೆ ಕೇಳಲೇ ಇಲ್ಲವೆನ್ನುವಂತೆ ಸುಮ್ಮನಾಗಿ ಕಣ್ಣೀರು ಒರೆಸಿಕೊಂಡಳು. +– ೫ – +ಕಂಠೀಜೋಯಿಸರು ಬರುವ ವೇಳೆಗೆ ಕಲ್ಲೇಶನ ಕಂಕುಳಿನಲ್ಲಿದ್ದ ಗೆಡ್ಡೆ ಊದಿಕೊಂಡು ನೋವು ಜಾಸ್ತಿಯಾಗಿತ್ತು. ಸರ್ಕಾರಿ ಆಸ್ಪತ್ರೆಯ ಡಾಕ್ಟರು ಔಷಧಿ ಕೊಟ್ಟಿದ್ದರೂ, ‘ಇದಕ್ಕೆ ದೊಡ್ಡ ಡಾಕ್ಟರಾದರೇ ಒಳ್ಳೇದು ಆದರೆ ರೋಗೀನ ಇಂಥಾ ಸ್ಥಿತೀಲಿ ಕರಕೊಂಡು ಹೋಗೋದು ಕಷ್ಟ. ನನ್ನ ಕೈಲಾದ್ದು ಮಾಡ್ತೀನಿ’ ಎಂದಿದ್ದರು. ಜೋಯಿಸರು ಹೋದ ತಕ್ಷಣ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ದಫೇದಾರರನ್ನು ಕೇಳಿದರು: +‘ನೀವು ಒಂದು ವ್ಯಾನ್ ಕೊಡಿಸಿಬಿಡಿ. ನಾನು ಹಾಸನಕ್ಕೆ ಕರೆದುಕೊಂಡು ಹೋಗ್ತೀನಿ.’ +ದಫೇದಾರರು ಚೆನ್ನರಾಯಪಟ್ಟಣಕ್ಕೆ ಹೋಗಿ ಒಂದು ವ್ಯಾನ್ ತಂದು ಅದರಲ್ಲಿ ಮಲಗಿಸಿಕೊಂಡು ಕಲ್ಲೇಶನನ್ನು ಹಾಸನಕ್ಕೆ ಕರೆದುಕೊಂಡು ಹೋದದ್ದಾಯಿತು. ಅವನು ದಾರಿಯಲ್ಲಿ ಸತ್ತಿದ್ದರೂ ಸಾಯಬಹುದಾಗಿತ್ತು. ಸಾಯಲಿಲ್ಲ. ದೊಡ್ಡ ಆಸ್ಪತ್ರೆಯವರು ಸೇರಿಸಿಕೊಂಡರು. ಕಲ್ಲೇಶನ ಮಾವ ರಂಗಣ್ಣನವರು ಹಾಸನದಲ್ಲೇ ಕಳೆದ ಇಪ್ಪತ್ತೈದು ವರ್ಷದಿಂದ ಪೋಸ್ಟ್‌ಮ್ಯಾನ್ ಆಗಿದ್ದವರು. ಅವರಿಗೂ ದೊಡ್ಡ ಆಸ್ಪತ್ರೆಯ ಡಾಕ್ಟರಿಗೂ ಪರಿಚಯ. ಡಾಕ್ಟರು ತಮ್ಮ ಕೈಲಾದ ಪ್ರಯತ್ನ ಮಾಡಿದರು. ಕಂಕುಳಿನ ಗೆಡ್ಡೆಯನ್ನು ಕೊಯ್ದು ಕೀವು ಮತ್ತು ಕೊಳೆತ ಭಾಗವನ್ನು ತೆಗೆದು ಹಾಕಿ ಔಷಧಿ ಕಟ್ಟಿದರು. ಜೀವಕ್ಕೆ ಭಯವಿಲ್ಲವೆನ್ನುವಂತಾಯಿತು. ಅಷ್ಟರಲ್ಲಿ ಅವನು ಕೃಶವಾಗಿ ಹೋಗಿದ್ದ. ‘ಇನ್ನು ಹದಿನೈದು ದಿನವಾದರೂ ಆಸ್ಪತ್ರೆಯಲ್ಲಿರಲಿ’ -ಎಂದು ಡಾಕ್ಟರು ಹೇಳಿದರು. ಅಲ್ಲಿಯವರೆಗೂ ಕಂಠೀಜೋಯಿಸರು ಬೀಗರ ಮನೆಯಲ್ಲಿಯೇ ಇದ್ದು ಮಗನನ್ನು ನೋಡಿಕೊಳ್ಳುತ್ತಿದ್ದರು. +ಆಸ್ಪತ್ರೆಯಿಂದ ಬಿಡುಗಡೆ ಮಾಡುವ ದಿನ ಬಂದರೂ ಅವನ ಎಡಗೈ ಸರಿಯಾಗಿ ಸ್ವಾಧೀನಕ್ಕೆ ಬಂದಿರಲಿಲ್ಲ. ಗೆಡ್ಡೆಯಾಗಿದ್ದುದು ಅದೇ ಭಾಗದ ಕಂಕುಳಿನಲ್ಲಿ. ‘ಇವರು ಈ ಊರಿನಲ್ಲೇ ಇರಲಿ, ನಾವು ಔಷಧಿ ಮುಂದುವರಿಸ್ತೀವಿ’- ಎಂದು ಡಾಕ್ಟರ್ ಹೇಳಿದರು. ರಂಗಣ್ಣನವರು ತಮ್ಮ ಅಳಿಯನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಎಂಟು ದಿನದ ನಂತರ ಕಂಠೀಜೋಯಿಸರು ಕುದುರೆ ಏರಿ ಊರಿಗೆ ಹೊರಟರು. ಕಳೆದ ಇಪ್ಪತ್ತೈದು ದಿನಗಳ ವಾಸ್ತವ್ಯದಲ್ಲಿ ತುಂಬ ನಲುಗಿದ್ದುದೆಂದರೆ ಅವರ ಕುದುರೆ. ಬೀಗರ ಮನೆಯಲ್ಲಿ ಜೋಯಿಸರ ಊಟ ತಿಂಡಿ ಆಗುತ್ತಿತ್ತು. ಹಾಸನದ ಪೇಟೆಯಲ್ಲಿ ಪೋಸ್ಟ್‌ಮ್ಯಾನ್ ಆಗಿದ್ದ ರಂಗಣ್ಣನವರ ಮನೆಯಲ್ಲಿ ಕಂಠೀಜೋಯಿಸರು ತಿನ್ನುವ ಪ್ರಮಾಣದ ಹಾಲು ತುಪ್ಪಗಳು ಸಿಕ್ಕದಿದ್ದರೂ ಹೊಟ್ಟೆತುಂಬ ಗ್ರಾಸಕ್ಕೆ ತೊಂದರೆ ಇರಲಿಲ್ಲ. ಆದರೆ ಅವರ ಬಿಳೀ ಕುದುರೆಗೆ ಬೇಕಾದ ಮೇವನ್ನು ಅವರು ಎಲ್ಲಿಂದ ಹೊಂದಿಸಿಯಾರು? +ಇವರು ಊರಿಗೆ ಬರುವ ಹೊತ್ತಿಗೆ ಪ್ಲೇಗಿನ ಸೂಚನೆ ಕಳೆದು ಆ ಸುತ್ತಿನಲ್ಲೆಲ್ಲ ಎರಡು ಹದ ಮಳೆ ಬಿದ್ದಿತ್ತು. ನಾಗಲಾಪುರದವರು ಶೆಡ್ಡುಗಳನ್ನು ಬಿಟ್ಟು ಊರಿಗೆ ಬಂದಿದ್ದರು. ಕಲ್ಲೇಶನಿಗೆ ಪ್ಲೇಗು ಆಗಿ ಅವನನ್ನು ಹಾಸನಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಗುಣವಾಗಿರುವುದು ಮತ್ತು ಕಂಠಿಯೂ ಅಲ್ಲೇ ಇರುವುದು ಅಕ್ಕಮ್ಮ ನಂಜಮ್ಮರಿಗೆ ಗಾಳಿ ವರ್ತಮಾನದಿಂದ ತಿಳಿಯಿತು. ಇನ್ನು ಊರಿನೊಳಗೆ ಹೋಗಲು ಮಗನನ್ನು ಕಾಯುವುದು ಸಾಧ್ಯವಿಲ್ಲ. ಅವರ ಜಮೀನಿನ ರೈತರಿದ್ದಾರೆ. ಪುಟ್ಟಭಟ್ಟರಿದ್ದಾರೆ. ಅವರ ಸಹಾಯದಿಂದ ತಾನೇ ಶೆಡ್ದಿನ ಸಾಮಾನು ಸಾಗಿಸಿ ಮಗು ಬಾಣಂತಿಯನ್ನು ಮನೆಗೆ ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ ಅಕ್ಕಮ್ಮ, ಮೊದಲು ಮನೆಗೆ ಹೋಗಿ ಆಚಾರಿಯನ್ನು ಕರೆಸಿ ಬಾಗಿಲಿಗೆ ಹಾಕಿದ್ದ ಬೀಗ ಒಡೆಸಿ ಒಳಗೆ ಹೋಗಿ ನೋಡುತ್ತಾಳೆ: ಮಳೆಯ ನೀರು ಒಳಗೆಲ್ಲ ಸೋರಿ ನೆಲ ನೆನೆದು ಕಿಚಿಕಿಚಿಯಾಗಿದೆ. ಅಟ್ಟದ ಹಲಗೆ ದಬ್ಬೆಗಳ ಮೇಲೆಲ್ಲ ನೀರು ಹರಿದು ಅವೆಲ್ಲವೂ ಇನ್ನೂ ಆರದೆ ಒದ್ದೆಯಾಗಿಯೇ ಇದೆ. ಯಾರೋ ತುಂಟರು ಮನೆಗೆ ಕಲ್ಲು ಹೊಡೆದಿದ್ದಾರೆಂಬುದು ಯಾರೂ ಹೇಳದೆಯೇ ಗೊತ್ತಾಯಿತು. ಅದು ಯಾರು ಎಂದು ಈಗ ವಿಚಾರಿಸುತ್ತಾ ಕೂರಲು ಸಮಯವಿರಲಿಲ್ಲ. ವಾರದ ಹೊನ್ನ ಏಣಿ ಹಾಕಿಕೊಂಡು ಅಟ್ಟಕ್ಕೆ ಹತ್ತಿ ಅಲ್ಲಿಂದಲೇ ಹೆಂಚುಗಳನ್ನು ಹಿಂದೆ ಮುಂದೆ ಸರಿಸಿ ಸರಿಮಾಡಿದ. ಎರಡೂ ಕಡೆಯ ಬಾಗಿಲುಗಳನ್ನು ತೆಗೆದು, ನೆಲವು ಗಾಳಿಗೆ ಆರಿಕೊಳ್ಳಲು ಬಿಟ್ಟ. ಆದರೂ ಹೊಸ ಮಣ್ಣು ಹಾಕಿ ಗಟ್ಟಣೆ ಮಾಡಲೇಬೇಕಾಯಿತು. ಅಂತೂ ಅಕ್ಕಮ್ಮ ಸುತ್ತಮುತ್ತಲಿನವರಿಗಿಂತ ನಾಲ್ಕು ದಿನ ತಡವಾಗಿ ಬಾಣಂತಿ ಮತ್ತು ಮಗುವಿನೊಡನೆ ಮನೆಯನ್ನು ಹೊಕ್ಕಳು. ನಂಜು ಹೆತ್ತು ಇನ್ನೂ ಒಂದು ತಿಂಗಳಾಗಿತ್ತು. ಎದ್ದು ಏನಾದರೂ ಕೆಲಸ ಮಾಡುವುದಾಗಿ ಅವಳು ಹೇಳಿದರೂ ಅಕ್ಕಮ್ಮ ಬಿಡಲಿಲ್ಲ. ಮನೆ ಗುಡಿಸಿ ಧೂಳು ಹೊಡೆಯುವುದರಿಂದ ಹಿಡಿದು ಹಸುಗಳಿಂದ ಹಾಲು ಕರೆಯುವತನಕ ಎಲ್ಲವನ್ನೂ ಅವಳೇ ಮಾಡುತ್ತಿದ್ದಳು. +ಇವರು ಇಲ್ಲಿಗೆ ಬಂದು ನಾಲ್ಕನೆಯ ದಿನ ಮದ್ಯಾಹ್ನ ಮೂರು ಗಂಟೆಗೆ ಕಂಠೀಜೋಯಿಸರು ಕುದುರೆಯ ಮೇಲೆ ಮನೆಗೆ ಬಂದರು. ಕಲ್ಲೇಶನ ಕ್ಷೇಮಸಮಾಚಾರವನ್ನು ಅಕ್ಕಮ್ಮ ಮತ್ತು ನಂಜುವಿಗೆ ಹೇಳಿದ ಮೇಲೆ, ಅವರ ಗಮನವು ನೆಲದ ಕಡೆಗೆ ಹೋಯಿತು. ‘ಇದೇನು, ನೆಲಕ್ಕೆ ಹೊಸದಾಗಿ ಗಟ್ಟಣೆ ಮಾಡ್ಸಿದ್ರಾ? ಈಗೇನು ಅವಸರವಾಗಿತ್ತು ಅದುಕ್ಕೆ?’ +‘ನೋಡು, ಮನೆ ಮ್ಯಾಲೆ ಯಾರಾದ್ರೂ ಕಲ್ಲು ಹೊಡೆದಿದ್ರೋ, ಹದ್ದುಗಿದ್ದು ಕೂತು ಹೆಂಚು ಎಳದಿತ್ತೋ. ಮಳೆ ನೀರೆಲ್ಲ ಒಳಗೆ ಸೋರಿ ನೆಂದು ನ್ಯಲ ಅಟ್ಳು ಗದ್ದೆಯಾಗಿತ್ತು. ಒಳಕ್ಕೆ ಕಾಲಿಡುಕ್ ಆಗ್ತಿರ್‌ಲಿಲ್ಲ. ಹೊನ್ನನ ಕೈಲಿ ಮದ್ಲು ಗಟ್ಟಣೆ ಮಾಡ್ಸಿ ಆಮ್ಯಾಲೆ ನಾವು ಸಾಮಾನು ಸಾಗಿಸಿದ್ವು.’ +‘ಇವನವ್ವೇ ಹೊಲೇರ….. ಮಾಡ್ತೀನಿ ಭಾಡ್‌ಕೋವ್ ನನ್ಮಗುಂಗೆ’ -ಎಂದವರೇ ಕಂಠೀಜೋಯಿಸರು ಹೊರಗೆ ಹೋಗಿಬಿಟ್ಟರು. ಯಾಕೆ ಏನು ಎಂಬುದು ಅಕ್ಕಮ್ಮನಿಗಾಗಲಿ ನಂಜುವಿಗಾಗಲಿ ತಿಳಿಯಲಿಲ್ಲ. +ಮದ್ಯಾಹ್ನ ಊಟವಾದ ಮೇಲೆ ಶ್ಯಾನುಭೋಗ ಶ್ಯಾಮಣ್ಣನ ಮನೆಯ ದೊಡ್ಡ ಜಗುಲಿಯ ಮೇಲೆ ಗ್ರಾಮದ ಹಲವು ಮುಖ್ಯರು ಸೇರಿ ಸಂಜೆ ಕತ್ತಲಾಗುವ ತನಕ ಪಗಡೆ ಆಡುವುದು ರೂಢಿ. ಈ ಹೊತ್ತಿನಲ್ಲಿ ಶ್ಯಾಮಣ್ಣ ಅಲ್ಲೇ ಇರುತ್ತಾನೆಂಬುದು ಕಂಠೀಜೋಯಿಸರಿಗೆ ಗೊತ್ತು. ಅವರು ನೇರವಾಗಿ ಹೋಗಿ ಜಗುಲಿಯನ್ನು ಹತ್ತಿ ನಿಂತು ಕೇಳಿದರು: ‘ರಾತ್ರಿ ಹೊತ್ನಲ್ಲಿ ನನ್ ಮನೆ ಮೇಲೆ ಕಲ್ಲು ಹೊಡ್ಸಿದೆ ಏನ್ಲಾ ಹಲಾಲ್‌ಕೋರ ನನ್ಮಗನೇ? ಗಂಡುಸ್ತನ ಇದ್ರೆ ಹಗಲು ಹೊತ್ತು ಬರಬೇಕಾಗಿತ್ತು. ಅದೂ ತುಂಬಿದ ಊರಿನಲ್ಲಿ ಬರಬೇಕಾಗಿತ್ತು. ಲೇ, ನಾನು ಅಂದ್ರೆ ಏನಂತ ತಿಳ್ಕಂಡಿದೀಯಾ? ಗಂಡು, ನಿಮ್ಮವ್ವನ ಮಿಂಡ ಅಂತ ತಿಳ್ಕೊ ಬಾಂಚೋತ್.’ +ಇವರ ಅನಿರೀಕ್ಷಿತ ಆಗಮನದಿಂದ ಮಾತ್ರವಲ್ಲದೆ ಈ ರೀತಿಯ ಅನಿರೀಕ್ಷಿತ ಯುದ್ಧ ಘೋಷಣೆಯಿಂದ ಪಗಡೆಯ ದಳಪತಿಗಳೆಲ್ಲ ಅವಾಕ್ಕಾದರು. ಶ್ಯಾಮಣ್ಣನೂ ಕಕ್ಕಾಬಿಕ್ಕಿಯಾದ. ಕಂಠೀಜೋಯಿಸರು ಸೀದಾ ಶ್ಯಾಮಣ್ಣನ ಮನೆಯ ಒಳಗೆ ನುಗ್ಗಿ, ಬಾಗಿಲು ಹಿಂಭಾಗದ ಒರಳಿನ ಹತ್ತಿರ ಗೋಡೆಗೆ ಒರಗಿಸಿ ನಿಲ್ಲಿಸಿದ್ದ ಒಂದು ಒನಕೆಯನ್ನು ಬಲಗೈಲಿ ತೆಗೆದುಕೊಂಡರು. ಅಡಿಕೆ ದಬ್ಬೆಗಳ ಅಟ್ಟಕ್ಕೆ ಹಾಕಿದ್ದ ಬಿದಿರಿನ ಏಣಿಯನ್ನು ಎಡಗೈಲಿ ಹಿಡಿದು ಹೊರಕ್ಕೆ ಬಂದು, ಏಣಿಯನ್ನು ಸೂರಿಗೆ ಒರಗಿಸಿ ಹೆಂಚಿನ ಮೇಲೆ ಹತ್ತಿದವರೇ ಎತ್ತಿ ಎತ್ತಿ ಒನಕೆಯಿಂದ ಹೆಂಚನ್ನು ಬಡಿಯಲು ಶುರುಮಾಡಿದರು. ನಾಲ್ಕಾರು ಏಟಿಗೆ, ಇವರು ಪಗಡೆಯಾಡುತ್ತಿದ್ದ ಜಗುಲಿಯ ಅಂಕಣದ ಮೇಲಿನ ಹೆಂಚೆಲ್ಲ ಪುಡಿಪುಡಿಯಾಗಿ ಅವರು ಮೇಲ್ಭಾಗಕ್ಕೆ ಏರಿದರು. +ಜಗುಲಿಯ ಮೇಲ್ಭಾಗದ ಹೆಂಚಿನ ಮೇಲೆ ಒನಕೆ ಒಂದು ಪೆಟ್ಟು ಬೀಳುವುದೇ ತಂಡ, ಪಗಡೆಯವರು ಎದ್ದು ಬೀದಿಗೆ ಬಂದರು. ಮೇಲೆ ನಿಂತ ಕಂಠೀಜೋಯಿಸರು ಅವರ ಕಡೆ ಒಂದು ಸಲ ನೋಡಿ ಗರ್ಜಿಸಿ-‘ಲೇ ಶಿಖಂಡಿಗಳಾ, ಅಲ್ಲಿ ನಿಂತ್ಕಳಿ, ನಿಮ್ಮ ಹೆಂಡ್ತಿ ತಲೆ ಬೋಳ್ಸಿ ತಾಳಿ ಕೀಳುಸ್ತೀನಿ’ ಎಂದು ಬಾಗಿ ಎರಡು ಹೆಂಚುಗಳನ್ನು ತೆಗೆದು ರೊಂಯ್ ಎಂದು ಇವರ ಕಡೆ ಬೀಸಿದುದು ಇಬ್ಬರಿಗೆ ತಗುಲಿ, ಒಬ್ಬರ ಹಣೆಯಿಂದ ಮತ್ತೊಬ್ಬರ ಭುಜದಿಂದ ರಕ್ತ ಹನಿಯಿತು. ಜನಗಳು ಚಲ್ಲಾಪಿಲ್ಲಿಯಾದರು. ತಾನು ಮೇಲೆ ಹತ್ತಿ ಕಂಠೀಜೋಯಿಸನಿಗೆ ಬುದ್ಧಿ ಕಲಿಸಬೇಕೆಂದು ಶ್ಯಾಮಣ್ಣನ ಮನಸ್ಸಿಗೇನೋ ಬಂತು. ಅವನೂ ತಕ್ಕಮಟ್ಟಿನ ಗಟ್ಟೀಗನೇ. ಆದರೆ ಹಾಗೆ ಮೇಲೆ ಹತ್ತುವುದು ಅಪಾಯವೆಂದು ಅವನ ಮನಸ್ಸು ಹೇಳಿದುದೇ ಅಲ್ಲ. ಅದು ಬೇರೆ ಏನೋ ಯೋಚಿಸಿ ತೀರ್ಮಾನಿಸುತ್ತಿತ್ತು. +ಸುಮಾರು ಹತ್ತು ಸಾವಿರ ಉಂಡೆಹೆಂಚುಗಳನ್ನು ಕಂಠೀಜೋಯಿಸರು ಅರ್ಧ ಗಂಟೆಗೂ ಕಡಿಮೆಯಲ್ಲಿ ಬಡಿದು ಪುಡಿ ಮಾಡಿದರು. ನಂತರ ನಿಧಾನವಾಗಿ ಕೆಳಗೆ ಇಳಿದು ಏಣಿ ಒನಕೆಗಳನ್ನು ಅದರದರ ಜಾಗದಲ್ಲಿ ಇಟ್ಟು ಹೊರಕ್ಕೆ ಬಂದರು. ಭಯದಿಂದ ಬೀದಿಗೆ ಬಂದು ಎದುರು ಮನೆಯ ಜಗುಲಿಯ ಮೇಲೆ ಮಕ್ಕಳೊಡನೆ ನಿಂತಿದ್ದ ಶ್ಯಾಮಣ್ಣನ ಹೆಂಡತಿಯ ಮುಂದೆ ನಿಂತು, ‘ನೋಡಮ್ಮ, ನೀನು ತೂಬಿನಕೆರೆ ತಮ್ಮಯ್ಯ ಜೋಯಿಸರ ಮಗಳು ಅಂತ ನಿನ್ನ ಕೈಲಿ ಹೇಳ್ತಿದೀನಿ. ತಮ್ಮಯ್ಯ ಜೋಯಿಸರು ಅಂದ್ರೆ ನನಗೆ ಗುರುಗಳ ಸಮಾನ. ಬಿಟ್ಟ ಊರೊಳಗೆ ನಾನು ಒಬ್ಬನೇ ಇದ್ದೆ ಅಂತ ನಿನ್ನ ಗಂಡ ನಡುರಾತ್ರೀಲಿ ಆಳುಗಳನ್ನು ಕಳಿಸಿ ಮನೆ ಮೇಲೆ ಕದ್ದು ಕಲ್ಲು ಹೊಡುಸ್ದ. ಆದ್ರೆ ನನ್ನ ನೋಡು, ಹಗಲು ಹೊತ್ತಿನಲ್ಲಿ ಬಂದು ಕೆಲ್ಸ ಮಾಡಿದೀನಿ. ಕಂಠಿ ಅಂದ್ರೆ ಗಂಡು. ಇನ್ನು ಮ್ಯಾಲೆ ಏನಿದ್ರೂ ಶಿಖಂಡಿಗಳ ಕೆಲ್ಸ ಮಾಡ್‌ಬ್ಯಾಡ, ಗಂಡಸು ಮಾಡೋ ಕೆಲ್ಸ ಮಾಡು ಅಂತ ನಿನ್ನ ಗಂಡಂಗೆ ಹೇಳು. ಆ ಮಿಂಡರಿಗೆ ಹುಟ್ಟಿದ ಸೂಳೇಮಗನ ಕೈಲಿ ನಾನು ಮಾತಾಡುಲ್ಲ’ ಎಂದು ಹೇಳಿ ನೇರವಾಗಿ ತಮ್ಮ ಮನೆಗೆ ಹೊರಟು ಹೋದರು. ಶ್ಯಾಮಣ್ಣನ ಹೆಂಡತಿ ತಬ್ಬಿಬ್ಬಾಗಿ ನಿಂತುಕೊಂಡಿದ್ದಳು. +ನೇರವಾಗಿ ಮನೆಗೆ ಹೋದ ಕಂಠೀಜೋಯಿಸರು ಅಡಿಗೆ ಮನೆ ಹೊಕ್ಕರು. ಅಷ್ಟು ಹೊತ್ತಿಗೆ ಅಕ್ಕಮ್ಮ ಒಲೆಯಮೇಲೆ ಏರಿಸಿದ್ದ ಕೆಂಪು ಮುಂಗೇಸರಿ ಅಕ್ಕಿಯ ಅನ್ನದ ತಪ್ಪಲೆ ಕುದಿಯುತ್ತಿತ್ತು. ಪಕ್ಕದ ಮನೆಯಿಂದ ಅವಳು ತಂದು ಇಟ್ಟಿದ್ದ ಹುಳಿ, ಕಲಾಯಿ ಮಾಡಿದ ಚುರುಕಿನಲ್ಲಿತ್ತು. ಜೋಯಿಸರು ಹಿತ್ತಿಲ ಕಡೆಗೆ ಹೋಗಿ ಬಾವಿಯಿಂದ ಸೇದಿ ಎರಡು ಬಿಂದಿಗೆ ನೀರು ಹೊಯ್ದುಕೊಂಡು ಸ್ನಾನ ಮಾಡಿದರು. ಜೊತೆಯಲ್ಲಿಯೇ ತಮ್ಮ ಕಂಚಿನ ಕಂಠದಲ್ಲಿ ಗಟ್ಟಿಯಾಗಿ ಸಂಧ್ಯಾವಂದನೆಯ ಮಂತ್ರ ಹೇಳುತ್ತಾ ಮೈ ಒರಸಿಕೊಂಡು ಪಂಚೆ ಉಟ್ಟರು. ದೇವರ ಗೂಡಿನ ಹತ್ತಿರ ಇದ್ದ ಕರಟದಿಂದ ಸಾದನ್ನು ತೇಯ್ದು ನಡುಹಣೆಗೆ ಇಟ್ಟು ಬೆರಳುಗಳನ್ನು ತೊಳೆದು ಊಟಕ್ಕೆ ಕೂತರು. ಒಂದು ಸೇರಕ್ಕಿಯ ಅನ್ನ ಬಿಸಿಬಿಸಿಯಾಗಿ ಸಿದ್ಧವಾಗಿತ್ತು. ಕರೆಯುತ್ತಿದ್ದ ಹಸುವಿನ ತುಪ್ಪ ಬಾಣಂತಿಗೆ ಆಗಿ ಮಿಕ್ಕಿತ್ತು. ಮೊದಲು ಅಡಿಕೆ ಪಟ್ಟಿಯ ತುಂಬ ಹುಳಿಯಲ್ಲಿ ಕಲಸಿದ ಅನ್ನವು ಮೂರೇ ನಿಮಿಷದಲ್ಲಿ ಮುಗಿದ ಮೇಲೆ ಉಪ್ಪಿನಕಾಯಿ ಎಣ್ಣೆಯಲ್ಲಿ ಎರಡನೆಯ ಸಲ ಕಲಸಿಕೊಳ್ಳುತ್ತಾ ಅಕ್ಕಮ್ಮನನ್ನು ಕೇಳಿದರು: ‘ಹಸು ಕೊಡೂದು ಬಾಣಂತಿಗೆ ಸಾಕಾಗುತ್ತೊ?’ +‘ಬೇಕಾದಷ್ಟಾಗುತ್ತೆ. ಇನ್ನೂ ಒಂದು ಬುದ್ದಲಿ ತುಂಬ ತುಪ್ಪ ತುಂಬಿಟ್ಟಿದೀನಿ.’ +‘ಒಳ್ಳೇದು, ಅವಳು ಬಾಣಂತನ ಮುಗಿಸ್ಕಂಡು ಹೋಗೂ ಹೊತ್ತಿಗೆ ಗುಡ್ಡೆ ಹಾಕಿ ನಾಲ್ಕು ಬುದ್ದಲಿ ತುಪ್ಪ ಕೊಟ್ಟುಕಳ್ಸು. ಸುಖವಾಗಿ ಊಟ ಮಾಡ್‌ಲಿ. ಚಿಟ್ಟಹರಳು ಅರೆಸಿದ್ಯೋ, ದೊಡ್ಡಹರಳು ಅರೆಸಿದ್ಯೋ’ +‘ಇನ್ನೂ ಹಸಿ ಬಾಣಂತಿಗೆ ಚಿಟ್ಟ ಹರಳೆಣ್ಣೆ ಒತ್ತಿ ಯಾರು ನೀರು ಹಾಕ್ತಾರೆ? ಶೀತವಾಗುತ್ತೆ.’ +‘ಸರಿ, ನಾಮಕರಣ ಮಾಡ್ಸಿದ್ರೊ?’ +‘ಹೂಂ, ಚೆನ್ನಿಗರಾಯ ಬಂದಿದ್ದ. ಪಾರ್ವತಿ ಅಂತ ಹೆಸರಿಟ್ತು.’ +ಮೊಸರನ್ನವನ್ನು ಪೂರ್ತಿ ಮಾಡಿ ಗಟ್ಟಿಯಾಗಿ ತೇಗುತ್ತಾ ಅವರುಬಾಣಂತಿ ಮಲಗಿದ್ದ ಕೋಣೆಗೆ ಬಂದು ಕೇಳಿದರು: ‘ನಂಜಾ ಎಲ್ಲಿ, ನಿನ್ನ ಮಗಳನ್ನ ಕೊಡಿಲ್ಲಿ ನೋಡಾಣಾ.’ +ಮಗುವನ್ನು ಎತ್ತಿ ತೊಡೆಯ ಮೇಲೆ ಮಲಗಿಸಿಕೊಂಡು ಅವರು ಕೋಣೆಯ ಹೊಸಿಲ ಮೇಲೆ ಕೂತರು. ಮಗು ಬೆಳ್ಳಗೆ ದಪ್ಪದಪ್ಪವಾಗಿ ಸುಟಿಯಾಗಿತ್ತು. ‘ಇವ್ಳೂ ನಿನ್ನ ಹಾಗೇ ಇದಾಳೆ ಕಣೆ. ನೋಡು ಹಣೆ ಎಷ್ಟು ದೊಡ್ಡ ದೊಡ್ಡದಾಗಿದೆ. ಯಾವ ನಕ್ಷತ್ರವಂತೆ?’ +‘ಪುಟ್ಟಭಟ್ಟರು ಅದ್ಯಾವುದೋ ಅಂದ್ರು. ಜಾತಕ ನೀನೇ ಬಂದ ಮೇಲೆ ಬರೀಲಿ, ಅವ್ರು ನನಗಿಂತ ಚನ್ನಾಗಿ ಬರೀತಾರೆ ಅಂದ್ರು.’ +‘ಆಯ್ತು, ನಾಳೆ ದಿನ ಜ್ಞಾಪಿಸು. ಹುಟ್ಟಿದ ಟೈಂ ಸರಿಯಾಗಿ ಗುರುತು ಹಾಕಿದೀರಿ ತಾನೇ? ಎಲ್ಲಿ, ನನಗೆ ಒಂದಿಷ್ಟು ವೀಳ್ಳೆದೆಲೆ ಕೊಡು. ಬೆಳಿಗ್ಗೆಯಿಂದ ಹೊಗೆಸೊಪ್ಪು ಹಾಕ್ಕಂಡಿಲ್ಲ’-ಎಂದು ಹೇಳಿ ಮಗುವನ್ನು ಎತ್ತಿಕೊಂಡೇ ಅಡಿಗೆಯ ಮನೆಗೆ ಹೋಗಿ ಕೇಳಿದರು: ‘ಅಕ್ಕಮ್ಮ, ಖಾರ, ಮೆಣಸು, ಲೇಹ, ಇದಕ್ಕೆಲ್ಲ ದುಡ್ಡಿಗೆ ಏನು ಮಾಡ್ದೆ? ನಂಗೆ ಈ ಕಡೆ ಜ್ಞಾಪಕವೇ ಬರಲಿಲ್ಲ. ತಡಿ ಇಲ್ಲಿ.’ ಆಮೇಲೆ ಹೊರಗೆ ಬಂದು ತಮ್ಮ ಕೋಟಿನ ಜೇಬಿನಿಂದ ಮೂವತ್ತು ರೂಪಾಯಿ ತಂದುಕೊಟ್ಟು-‘ಎಲ್ಲಾದ್ರೂ ಸಾಲಗೀಲ ಮಾಡಿದ್ರೆ ಕೊಟ್ಟುಬಿಡು. ಇನ್ನು ನಾನು ಊರಲ್ಲೇ ಇರ್ತೀನಿ. ಇನ್ನೊಂದು ಇಪ್ಪತ್ತು ದಿನವಾದ ಮೇಲೆ ಹಾಸನಕ್ ಹೋಗಿ ಕಲ್ಲೇಶನಿಗೆ ಗುಣವಾಗಿದ್ರೆ ಕರ್ಕಂಡ್ ಬರಬೇಕು’ ಎಂದರು. +ಮಗಳು ಮಡಿಸಿಕೊಟ್ಟ ವೀಳ್ಯದೆಲೆ ಅಗಿದು, ಮಗುವನ್ನು ಅವಳ ತೊಡೆಯ ಮೇಲೆ ಮಲಗಿಸಿ, ತಮ್ಮ ಎಡ ಅಂಗೈ ಮೇಲೆ ಎರಡು ಚೂರು ಹೊಗೆಸೊಪ್ಪು ಹಾಕಿ ಬಲ ಹೆಬ್ಬೆಟ್ಟಿನಿಂದ ತಿಕ್ಕಿ ಬಾಯಿಗೆ ತುಂಬಿ ಐದಾರು ಸಲ ಹೊರಕ್ಕೆ ಹೋಗಿ ಚರಂಡಿಯ ಹತ್ತಿರ ಚಿಲ್ ಎಂದು ಉಗುಳಿ ಬಂದ ಮೇಲೆ ಮಂದಲಿಗೆ ಹಾಸಿ ತಲೆಯ ಕೆಳಗೆ ಒಂದು ಮಣೆ ಇಟ್ಟುಕೊಂಡು ಒಂದು ಗಳಿಗೆ ನಿದ್ದೆ ತೆಗೆದರು. ಸಾಯಂಕಾಲ ಎದ್ದು ಗದ್ದೆಯ ಹತ್ತಿರ ಹೋಗಿಬಂದು, ರಾತ್ರಿ ಬಿಸಿಬಿಸಿಯಾಗಿ ಅನ್ನ ಹುಳಿ ಹಿಟ್ಟುಗಳನ್ನು ಊಟ ಮಾಡಿ ಬೆಚ್ಚಗೆ ಮಲಗಿದರು. +– ೬ – +ಮಧ್ಯರಾತ್ರಿಯ ಹೊತ್ತಿಗೆ ಯಾರೋ ಮನೆಯ ಬಾಗಿಲನ್ನು ತಟ್ಟಿದಂತೆ ಆಯಿತು. ‘ಯಾರೋ ಅದು?’-ಎಂದು ಕಠೀಜೋಯಿಸರೇ ಎಚ್ಚರವಾಗಿ ಕೇಳಿದುದಕ್ಕೆ ಬಂದ ಉತ್ತರ ಅವರನ್ನು ಚಕಿತಗೊಳಿಸಿತು: ‘ನಿಮ್ಮ ಮಾವನ ಮನೆಯೋರು. ಬಾಗಿಲು ತೆಗೀರ್ರಿ ಸುಮ್ಗೆ.’ +‘ಅದ್ಯಾವ್ನೋ ಜ್ಞಾನ ನ್ಯಟ್ಟಗಿಲ್ವೇನೋ ಹೈವಾನ್’-ಎಂದು ಕೋಪದಿಂದ ಅಗಳಿ ಸಡಲಿಸಿ ಬಾಗಿಲು ತೆಗೆಯುತ್ತಾರೆ: ನಾಲ್ಕು ಜನ ಪೋಲೀಸು ಕಾನಿಸ್ಟೆಬಲುಗಳು ಮುಂದೆ ನುಗ್ಗಿ ಇವರ ತೋಳುಗಳನ್ನು ಗಟ್ಟಿಯಾಗಿ ಹಿಡಿದರು. ಕೊಸರಿದರೂ ಬಿಡಲಿಲ್ಲ. ದಫೇದಾರರು ಒಂದು ಸಲ ಸಿಳ್ಳೆ ಹಾಕಿದರು. ಹಿತ್ತಿಲಕಡೆಯ ಬಾಗಿಲಿನಲ್ಲಿ ಹೊರಗಡೆ ನಿಂತಿದ್ದ ಇಬ್ಬರು ಕಾನಿಸ್ಟೇಬಲುಗಳು ಗೋಡೆಯನ್ನು ಬಳಸಿ ಬಂದು ಇವರನ್ನು ಕೂಡಿಕೊಂಡರು. +ಯಾಕ್ರೀ, ಏನ್ ಮಾಡಿದ್ದುಕ್ರೀ ನನ್ನ ಹಿಡ್‌ಕಂಡಿರೋದು? ನಿಮಗೆ ಯಾವ ಅಥಾರ್ಟಿ ಇದೇರಿ?’ -ಎಂದು ಇವರು ಕೇಳಿದುದಕ್ಕೆ ದಫೇದಾರರು, ‘ಅದೇನಿದ್ರೂ ಸ್ಟೇಶನ್‌ನಾಗೆ ಬಂದು ಕೇಳೋರಂತೆ ನಡೀರಿ’ ಎಂದು ಮುಂದೆ ಹೊರಟರು. ಅಷ್ಟರಲ್ಲಿ ಎಚ್ಚರವಾದ ಅಕ್ಕಮ್ಮ ನಂಜಮ್ಮರು ಎದ್ದು ಬಂದು, ‘ಅಯ್ಯೋ’ ಎಂದು ಅಳಲು ಪ್ರಾರಂಭಿಸಿದರು. ಕಂಠೀಜೋಯಿಸರೇ, ಅಕ್ಕಮ್ಮ ನೀನ್ ಅಳಬ್ಯಾಡ. ಈ ನನ್ಮಗ ಶ್ಯಾಮಣ್ಣಂದೇ ಕಿತಾಪತಿ ಅಂತ ಕಾಣುತ್ತೆ. ನಾನು ಚೆನ್ನರಾಯಪಟ್ಟಣದ ತಂಕ ಹೋಗಿ ಬತ್ತೀನಿ. ನೀವು ಬಾಗ್ಲು ಹಾಕ್ಕಳಿ. ನಾನಿಲ್ದೆ ಇರೂವಾಗ ಮನೆತಾವುಕ್ ಯಾವ ನಾಯಿನಾದ್ರೂ ಬಂದ್ರೆ ಕೆರ ತಗಂಡ್ ಹೊಡೆದು ಕಳ್ಸಿ’ ಎಂದು ಹೇಳಿ ಅವರೊಡನೆ ನಡೆದರು. ಊರ ಹೊರಗೆ ವ್ಯಾನು ನಿಂತಿತ್ತು. ಅದರಲ್ಲಿ ಕೂರಿಸಿಕೊಂಡು ಪೋಲೀಸಿನವರು ಚನ್ನರಾಯಪಟ್ಟಣಕ್ಕೆ ನಡೆದರು. ಶ್ಯಾಮಣ್ಣ ಊರಿನಲ್ಲೇ ಉಳಿದ. +ಮಗ ಹೋಗಿ ಶ್ಯಾಮಣ್ಣನ ಮನೆಯ ಹೆಂಚು ಬಡಿದು ಬಂದದ್ದು ಸಾಯಂಕಾಲ ಅವನು ಗದ್ದೆಯ ಕಡೆಗೆ ಹೋಗಿದ್ದಾಗ ಅಕ್ಕಮ್ಮನಿಗೆ ತಿಳಿದಿತ್ತು. ಅದರ ಕಾರಣವೂ ಗೊತ್ತಾಗಿತ್ತು. ಈಗ ಪೋಲೀಸಿನವರನ್ನು ಕರೆಸಿ ಶ್ಯಾಮಣ್ಣ ತನ್ನ ಮಗನನ್ನು ಹಿಡಿಸಿಕೊಂಡು ಹೋದುದಕ್ಕೆ ಅಕ್ಕಮ್ಮನಿಗೆ ಮಹಾ ಸಿಟ್ಟು ಬಂದಿತು. ರಾತ್ರಿಯಲ್ಲಿ ತಾನೊಬ್ಬಳೇ ಶ್ಯಾಮಣ್ಣನ ಮನೆಯ ಮುಂದೆ ಹೋಗಿ ನಿಂತು ಬೀದಿಯ ಮಣ್ಣನ್ನು ಗುಡ್ಡೆ ಮಾಡಿ ಬೊಗಸೆಯಿಂದ ತೂರುತ್ತಾ ಬೈಯಲು ಪ್ರಾರಂಭಿಸಿದಳು: ‘ಅಯ್ಯೋ ನಿನ್ನ ಹೆತ್ತೋರು ಬಾಯಿಗೆ ನನ್ನ ಹೇಲು ಹಾಕ. ಹೆಣ್ಣಿಗ ಸೂಳೇಮಗನೇ, ರಾತ್ರಿ ಹೊತ್ತು ನಮ್ಮ ಮನೆಗೆ ಕಲ್ಲು ಹೊಡ್‌ಸುಕ್ಕೆ ಕಳ್ಸಿದ್ದೆ ಏನೋ ಶಿಖಂಡಿ ಮುಂಡೇಮಗನೆ? ನನ್ನ ಮಗನ್ನ ಗಂಡಸು ಅಂತ ನಾನು ಹೆತ್ತು ಮೊರಕ್ಕೆ ಹಾಕಿದ್ದೆ ಕಣೊ. ಅದುಕ್ಕೇ ಹಗಲು ಹೊತ್ತು ಬಂದು ನಿನ್ನ ಮನೆ ಹೆಂಚು ಬಡಿದ. ಹೆದ್‌ರಿಕಂಡು ಪೋಲೀಸ್ನೋರ್ಗೆ ಹೇಳೂಕ್ ಹೋಗಿದ್ಯಲಾ, ನೀನೇನು ಸೀರೆ ಉಟ್ಕಂಡಿದಿಯೇನೋ? ನಿನ್ನ ವಂಶ ನಿರ್ವಂಶವಾಗ. ನಿನ್ನ ಮಕ್ಕಳ ಸುಳಿ ಅಡಗ. ನಿನ್ನ ಹೆಂಡತಿ ಮುಂಡೆಯಾಗ. ಸೂಳೇಮಗನೇ, ಈಗ ನಾನು ಆಗಿದೀನಲಾ, ತಲೆ ಬೋಳಿಸ್ಕಂಡು ಕೆಂಪಿನ ಸೀರೆ ಉಟ್ಕಂಡು, ನಿನ್ನ ಹೆಂಡ್ತಿಯೂ ಹಾಗೇ ಆಗ್ತಾಳೆ ನೋಡು ಬೇಕಾದ್ರೆ. ಗಂಡ ಸತ್ತ ಮುಂಡೆ ಶಾಪ ಅಂದ್ರೆ ಏನಂತ ತಿಳ್ಕಂಡಿದೀಯಾ?….. +ಅಷ್ಟರಲ್ಲಿ ಸುತ್ತಮುತ್ತ ಎಷ್ಟೋ ಜನರು ಎದ್ದು ಬಂದು ಸೇರಿದರು. ಎಲ್ಲರಿಗೂ ನಡೆದ ವಿಷಯ ಗೊತ್ತಾಯಿತು. ಯಾರೂ ಏನೂ ಬಾಯಿ ಬಿಟ್ಟು ಆಡಲಿಲ್ಲ. ಶ್ಯಾಮಣ್ಣನ ಮನೆಯ ಬಾಗಿಲು ತೆಗೆಯಲಿಲ್ಲ. ಮನೆಯಲ್ಲಿ ನಂಜು ಒಬ್ಬಳೇ ಮಗುವಿನ ಸಂಗಡ ಇರುವ ನೆನಪಾಗಿ, ಅಕ್ಕಮ್ಮ ಮತ್ತೆ ಹತ್ತು ಮಾತಿನಲ್ಲಿ ಬೈಗುಳವನ್ನು ಮುಗಿಸಿ ಮನೆಗೆ ಬಂದಳು. +ಚೆನ್ನರಾಯಪಟ್ಟಣದ ಪೋಲೀಸ್ ಸ್ಟೇಶನ್ನಿಗೆ ಹೋದಾಗ-‘ರಾತ್ರಿ ಇಲ್ಲೇ ಇರಿ. ಬೆಳಿಗ್ಗೆ ಸಬ್‌ಇನ್‌ಸ್ಪೆಕ್ಟರು ಬಂದಮೇಲೆ ನಿಮ್ಮ ಹೇಳಿಕೆ ತಗಾತಾರೆ’ ಎಂದು ದಫೇದಾರರು ಹೇಳಿದರೆ ಕಂಠೀಜೋಯಿಸರು ಕೇಳಲಿಲ್ಲ; ‘ಅವ್‌ರನ್ನ ಈಗ್ಲೇ ಕರಸಿ. ಅದೇನು ಕೇಳಲಿ. ನಿಮ್ಮ ಸ್ಟೇಶನ್ನಿನ್ನಲ್ಲಿ ಸುಮ್‌ಸುಮ್‌ನೆ ಇರೂಕೆ ನಾನೇನೂ ಕಳ್ಳತನ ಮಾಡಿಲ್ಲ’-ಎಂದು ಬಾಯಿ ಜೋರು ಮಾಡಿದರು. ಹೊಡೆದು ಸುಮ್ಮನಾಗಿಸಲು ಪೋಲೀಸಿನವರಿಗೂ ಭಯ ಇವರ ವಿಷಯದಲ್ಲಿ ಅವರೂ ಸಾಕಷ್ಟು ಕೇಳಿ ತಿಳಿದುಕೊಂಡಿದ್ದರು. ಸಬ್‌ಇನ್‌ಸ್ಪೆಕ್ಟರು ಆಗಲೇ ಬಂದರು. ಶ್ಯಾಮಣ್ಣ ಶ್ಯಾನುಭೋಗ; ಎಂದರೆ ಸರ್ಕಾರಿ ಅಧಿಕಾರಿ. ಅವರ ಮನೆ ಹೆಂಚುಗಳನ್ನು ಹೊಡೆದದ್ದೇ ಅಲ್ಲದೆ, ಒಳಗೆ ನುಗ್ಗಿ ಶ್ಯಾನುಭೋಗಿಕೆಯ ಲೆಕ್ಕದ ಪುಸ್ತಕಗಳನ್ನು ಹೊತ್ತುಕೊಂಡು ಹೋದನೆಂದು ಅವನು ಕಂಪ್ಲೇಂಟು ಕೊಟ್ಟಿದ್ದ. ಹೆಂಚು ಒಡೆದುದಕ್ಕೆ ಪೋಲೀಸಿನವರು ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರೋ ಇಲ್ಲವೋ, ಆದರೆ ಸರ್ಕಾರೀ ಲೆಕ್ಕವನ್ನು ಅಪಹರಿಸಿರುವ ದೂರಿಗೆ ಶ್ರದ್ಧೆ ವಹಿಸಲೇಬೇಕು. ಈ ದೂರಿನ ಪ್ರತಿಯನ್ನು ಶ್ಯಾಮಣ್ಣ ತಾಲ್ಲೂಕು ಅಮಲ್ದಾರರಿಗೂ ಕೊಟ್ಟಿದ್ದ. +‘ನನಗೇನೂ ಗೊತ್ತಿಲ್ಲ. ನಾನು ಅವನ ಮನೆಗೂ ಹೋಗಿಲ್ಲ. ಇದೆಲ್ಲ ಸುಳ್ಳು’-ಎಂದು ಕಂಠೀಜೋಯಿಸರು ಹೇಳಿಕೆ ಕೊಟ್ಟರು. ಮರುದಿನ, ಸ್ಥಳೀಯ ಮ್ಯಾಜಿಸ್ಟ್ರೇಟರಾದ ಅಮಲ್ದಾರರ ಎದುರಿಗೂ ಇದೇ ಹೇಳಿಕೆ ಕೊಟ್ಟರು. ಪೋಲೀಸಿನವರು ಇವರ ಮೇಲೆ ಕೇಸು ದಾಖಲು ಮಾಡಿಕೊಂಡರು. ಸ್ಥಳದ ಮುನಿಸಿಪಾಲಿಟಿ ಮೆಂಬರು ಹನುಮಂತಶೆಟ್ಟರು ಜಾಮೀನು ನಿಂತದ್ದರಿಂದ ಕಂಠೀಜೋಯಿಸರನ್ನು ಪೋಲೀಸು ವಶದಿಂದ ಹೊರಗೆ ಬಿಟ್ಟರು. ಊರಿಗೆ ಬಂದ ಅವರು ಮೀಸೆಯ ಮೇಲೆ ಕೈಹಾಕಿಕೊಂಡೇ ಎಲ್ಲ ಬೀದಿಗಳಲ್ಲಿಯೂ ಒಂದು ಸುತ್ತು ತಿರುಗಿ ಮನೆಗೆ ಹೋದರು. +ಶ್ಯಾಮಣ್ಣನನ್ನು ಹಿಡಿದು ಬಗ್ಗಿಸಿ ಚಚ್ಚಿಬಿಡಬೇಕೆಂದು ಮನಸ್ಸಿನಲ್ಲೇನೋ ಬರುತ್ತಿತ್ತು. ಆದರೆ ತಮ್ಮ ಮೇಲೆ ಕೇಸು ಇರುವಾಗ ಹಾಗೆ ಮಾಡಬಾರದೆಂದು ಸುಮ್ಮನಾದರು. ಕೆಲವು ದಿನದಲ್ಲಿ ಹೊಳೇನರಸೀಪುರದ ಕೋರ್ಟಿನಿಂದ ಸಮನ್ ಬಂತು. ಪ್ರಸಿದ್ಧರಾಗಿದ್ದ ಲಾಯರ್ ವೆಂಕಟರಾಯರನ್ನು ಇವರು ಗೊತ್ತು ಮಾಡಿದರು. ಮೂರು ತಿಂಗಳು ಕಂಠೀಜೋಯಿಸರು ಹೊಳೆನರಸೀಪುರ ಹಾಸನಗಳಿಗೆ ಕುದುರೆಯ ಮೇಲೆ ತಿರುಗಿದರು. +ಸಾಕ್ಷಿ ವಿಚಾರಣೆಯ ದಿನ ಬೆಳಿಗ್ಗೆಯೇ ಇವರು ಹೋಗಿ ಲಾಯರನ್ನು ಕಾಣಬೇಕಾಗಿತ್ತು. ರಾತ್ರಿಗೆ ಊರು ಬಿಟ್ಟ ಕಂಠೀಜೋಯಿಸರು ಕುದುರೆ ಏರಿ ಚೆನ್ನರಾಯಪಟ್ಟಣವನ್ನು ಹಾಯ್ದು ಗನ್ನಿಯ ಉಕ್ಕಡಕ್ಕೆ ಬಂದಾಗ ಹೊಳೆ ತುಂಬಿಬರುತ್ತಿತ್ತು. ಈಗ ಹೊಳೆ ಬರುವುದು ಅನಿರೀಕ್ಷಿತ. ಆದರೆ ಅವರು ಹೊಳೆ ದಾಟಿ ಬೆಳಗಿನ ಒಳಗೆ ನರಸೀಪುರ ಮುಟ್ಟಲೇಬೇಕು. ಆಗಲೇ ಅರ್ಧರಾತ್ರಿಯಾಗಿದೆ. ಬೆಳದಿಂಗಳಿನಲ್ಲಿ ಭರ್ ಎಂದು ಮೊರೆಯುತ್ತಿದ್ದ ಹೊಳೆ ಉಕ್ಕಡದ ಎರಡು ದಂಡೆಗಳನ್ನೂ ಕಟ್ಟಿ ಹರಿಯುತ್ತಿದೆ. ಇನ್ನು ಕುದುರೆಯ ಮೇಲೆ ಏರಿ ಹೋಗುವುದು ಸಾಧ್ಯವಿಲ್ಲ. ನದಿಯ ದಡದಲ್ಲಿಯೇ ಇದ್ದ ಮುಸಾಫಿರ್ ಬಂಗ್ಲೆಗೆ ಹೋಗಿ ಜವಾನನನ್ನು ಎಬ್ಬಿಸಿ ಕೇಳಿದರೆ-‘ಎರಡು ದಿನದಿಂದ ಹರಿಗೋಲೂ ಬಿಡ್ತಿಲ್ಲ, ಅನಾಡಿ ಹ್ವಳೆ ಬಂದೈತೆ’ ಎಂದ. ಆದರೆ ಇವರು ಹಿಂದೆ ನಿಲ್ಲುವಂತಿಲ್ಲ. ತಮ್ಮ ಕುದುರೆ ನೋಡಿಕೊಳ್ಳುವಂತೆ ಅವನಿಗೆ ಹೇಳಿ ಒಪ್ಪಿಸಿ ಖರ್ಚಿಗೆಂದು ಒಂದು ರೂಪಾಯಿ ಕೊಟ್ಟರು. ತಮ್ಮ ಹತ್ತಿರ ಇದ್ದ ಬೆಳ್ಳಿ ರೂಪಾಯಿಯ ಇಮ್ಮಣ್ಣಿಚೀಲವನ್ನು ಬಿಗಿಯಾಗಿ ಸೊಂಟಕ್ಕೆ ಕಟ್ಟಿದರು. ಕೋಟು ಶರಟು ನಿಕ್ಕರುಗಳನ್ನು ಬಿಚ್ಚಿ ತಲೆಗೆ ಕಟ್ಟಿಕೊಂಡು ಒಂದು ಚೌಕ ಬಿಗಿದರು. ಜವಾನ ಬೇಡಬೇಡವೆಂದರೂ ಉಕ್ಕಡದಿಂದ ಸ್ವಲ್ಪ ಮೇಲೆ ಹೋಗಿ ನದಿಯಲ್ಲಿ ಈಜು ಬಿದ್ದರು. +ಸುಮಾರು ಅರ್ಧಮೈಲಿ ಕೆಳಭಾಗದಲ್ಲಿ ಹೊಳೆಯ ಆಚೆ ದಡವನ್ನು ಮುಟ್ಟಿಯೇ ಮುಟ್ಟಿದರು. ಮೈ ಮತ್ತು ಕಟ್ಟಿದ ಲಂಗೋಟಿಗಳು ಮಾತ್ರ ಒದ್ದೆಯಾಗಿದ್ದವು. ತಲೆಗೆ ಕಟ್ಟಿದ್ದ ಬಟ್ಟೆಗಳಲ್ಲಿ ಸ್ವಲ್ಪ ಭಾಗ ನೆನೆದಿತ್ತು. ಹಾಗೆಯೇ ಅರ್ಧ ಮೈಲಿ ನಡೆಯುವುದರಲ್ಲಿ ಮೈ ಒಣಗಿತು. ನಿಕ್ಕರು ಶರಟು ಕೋಟುಗಳನ್ನು ಹಾಕಿಕೊಂಡು ಬರಿ ಕಾಲಿನಲ್ಲಿ ಸರಸರನೆ ಮುಂದೆ ನಡೆದರು. ಇನ್ನು ಎಂಟೇಮೈಲಿಯ ದೂರ. ನರಸೀಪುರದಲ್ಲಿ ಕೋಳಿ ಕೂಗುವ ಹೊತ್ತಿಗೆ ತಲುಪಿದರು. ಹೊಳೆದಂಡೆಗೆ ಹೋಗಿ ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಮಾಡಿ ಸಂಧ್ಯಾವಂದನೆ ಮುಗಿಸಿ ಬೆಳಕಾಗುವ ಹೊತ್ತಿಗೆ ಲಾಯರ ಮನೆಗೆ ಬಂದರು. +ಆ ದಿನ ಮುಖ್ಯವಾದ ಎರಡು ಸಾಕ್ಷಿಗಳಿದ್ದವು ಒಂದು ಶ್ಯಾಮಣ್ಣನ ಹೆಂಡತಿಯದೇ. ಕೋರ್ಟಿನ ಎದುರಿಗಿರುವ ಬಸವಣ್ಣನನ್ನು ಆಕೆಯ ಕೈಯಿಂದ ಮುಟ್ಟಿಸಿ ಆಣೆ ಪ್ರಮಾಣ ಮಾಡಿಸಿ, ಸುಳ್ಳು ಹೇಳಿದರೆ ಗಂಡ ಮತ್ತು ಮಕ್ಕಳು ಸಾಯುತ್ತಾರೆಂದು ಲಾಯರು ಹೇಳಿದಾಗ ಅವಳಿಗೆ ಅಕ್ಕಮ್ಮ ಹಾಕಿದ ಶಾಪಗಳೆಲ್ಲವೂ ನೆನಪಾಗಿ ಅರ್ಧ ಅಳುವೇ ಬರುತ್ತಿತ್ತು. ನಿಜ ಹೇಳಬೇಕು ಎಂದು ಲಾಯರು ಹೇಳಿದಾಗ ಅವಳು ಹೆದರಿಕೊಂಡು ಹೇಳಿಬಿಟ್ಟಳು: ‘ಕಂಟ್ಯಪ್ಪಜೋಯಿಸರು ನಮ್ಮನೆ ಒಳಕ್ ನುಗ್ಗಿ ಒನಕೆ ತಗಂಡ್ ಹೆಂಚು ಬಡಿದುದ್ ಉಂಟು. ಊರು ಬಿಟ್ಟಿದ್ದಾಗ ನಮ್ಮನೆ ಇವರು ಗುಳ್ಳುಗ, ಜುಟ್ಟಗ, ಅವರುನ್ನೆಲ್ಲ ಕಳ್ಸಿ ಕಂಟಪ್‌ನೋರ ಮನೆಗೆ ಕಲ್ಲು ಹೊಡೆಸಿದ್ರು. ಅದ್ಕೇ ಹಾಗೆ ಮಾಡಿದ್ರಂತೆ.’ +ಅಲ್ಲಿಯೇ ಇದ್ದ ಶ್ಯಾಮಣ್ಣ ಹೆಂಡತಿಯನ್ನು ನುಂಗುವಂತೆ ನೋಡುತ್ತಿದ್ದ. ಜೋಯಿಸರ ಕಡೆಯ ಲಾಯರು ಅವಳನ್ನು ಕೇಳಿದರು: ‘ಅಮ್ಮ, ನಿಜ ಹೇಳಿ. ದೇವರ ಮ್ಯಾಲೆ ಪ್ರಮಾಣ ಮಾಡಿದೀರಾ. ಜೋಯಿಸರು ನಿಮ್ಮನೆಗೆ ನುಗ್ಗಿ ಶ್ಯಾನುಭೋಗ್‌ಕೆ ಲೆಕ್ಕದ ಪುಸ್ತಕಾನ ಹೊತ್‌ಕೊಂಡ್ ಹೊದದ್ದು ಸುಳ್ಳಲ್ಲವೆ?’ +‘ಲ್ಯಕ್ಕದ ಪುಸ್ತಕ ಏನೂ ಹೊತ್ಕಂಡ್ ಹೋಗ್ಲಿಲ್ಲ. ನಾನು ಅಲ್ಲೇ ಇದ್ದೆ.’ +ಊರಿಗೆ ಹೋದಮೇಲೆ ಶ್ಯಾಮಣ್ಣ ಹೆಂಡತಿಯನ್ನು ಮೈಮುರಿಯ ಹೊಡೆದನಂತೆ. +ಶ್ರವಣಬೆಳಗೊಳದ ಫೋಲೀಸು ದಫೇದಾರರು ಇವರ ಪರವಾಗಿ, ಆ ದಿನ ಮಧ್ಯಾಹ್ನ ಮೂರು ಗಂಟೆಯಲ್ಲಿ ತಾವು ಹಾಸನಕ್ಕೆ ಹೋಗಿದ್ದುದಾಗಿಯೂ ಆಗ ಕಂಠೀಜೋಯಿಸರನ್ನು ಅಲ್ಲಿ ಕಂಡಿದ್ದುದಾಗಿಯೂ ಸಾಕ್ಷಿ ಕೊಟ್ಟರು. ಇವರು ತಮ್ಮ ಮನೆಗೆ ನುಗ್ಗಿ ಶ್ಯಾನುಭೋಗಿಕೆ ಲೆಕ್ಕದ ಪುಸ್ತಕ ಹೊತ್ತುಕೊಂಡು ಹೋಗಿ ಹೆಂಚು ಬಡಿದುದು ಅದೇ ದಿನ ಮಧ್ಯಾಹ್ನ ಮೂರು ಗಂಟೆಗೆ ಎಂಬುದು ಶ್ಯಾಮಣ್ಣನ ಕಂಪ್ಲೇಂಟ್ ಆಗಿತ್ತು. +ಇನ್ನು ಎಂಟು ದಿನಕ್ಕೆ ಜಜ್‌ಮೆಂಟ್ ಎಂದು ಜಡ್ಜಿಗಳು ಹೇಳಿದರು. ಜಜ್‌ಮೆಂಟಿನ ದಿನ ಶ್ಯಾಮಣ್ಣನೂ ಬಂದಿದ್ದ. ಕಂಠೀಜೋಯಿಸರೂ ಬಂದಿದ್ದರು. ಒಂದು ಗಂಟೆಗೆ ಸರಿಯಾಗಿ ಜಡ್ಜಿಗಳು ಓದಿ ಹೇಳಿದರು: ‘ಶ್ಯಾನುಭೋಗಿಕೆ ಲೆಕ್ಕಗಳನ್ನು ಕೈಲೂ ಮುಟ್ಟಿಲ್ಲವೆಂದು ಫಿರ್ಯಾದಿಯ ಹೆಂಡತಿಯೇ ಹೇಳುತ್ತಾಲೆ. ಆಪಾದಿತನ ಮನೆಯ ಮೇಲೆ ಫಿರ್ಯಾದಿಯು ರಾತ್ರಿ ಹೊತ್ತು ಕಲ್ಲು ಹೊಡೆಸಿದ್ದನಂತೆ. ಅದಕ್ಕೆ ಪ್ರತೀಕಾರವಾಗಿ ಆಪಾದಿತನು ಇವರ ಮನೆಯ ಹೆಂಚನ್ನು ಒಡೆದಿರಬಹುದು. ಆದರೆ ಮುಖ್ಯವಾದ ಆಪಾದನೆ ಇರುವುದು ಸರ್ಕಾರೀ ಲೆಕ್ಕದ ಪುಸ್ತಕವನ್ನು ಹೊತ್ತುಕೊಂಡು ಹೋದ ಎಂದು. ಘಟನೆ ನಡೆಯಿತೆಂದು ಆಪಾದಿಸಿದ ಸಮಯದಲ್ಲಿ ಆಪಾದಿತನನ್ನು ಹಾಸನದಲ್ಲಿ ನೋಡಿದುದಾಗಿ ಶ್ರವಣಬೆಳಗೊಳದ ದಫೇದಾರರು ಸಾಕ್ಷಿ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನೂ ಗಮನಕ್ಕೆ ತೆಗೆದುಕೊಂಡು ನೋಡಿದರೆ ಆಪಾದನೆಯಲ್ಲಿ ಹುರುಳಿಲ್ಲವೆಂದು ತಿಳಿಯುತ್ತದೆ. ಇವರಿಬ್ಬರಿಗೂ ಪರಸ್ಪರ ದ್ವೇಷವಿದ್ದು ಸಣ್ಣಪುಟ್ಟ ಜಗಳವೇನೋ ನಡೆದಿರಬಹುದು. ಈ ಕೇಸನ್ನು ಖುಲಾಸೆ ಮಾಡಲಾಗಿದೆ.’ +– ೭ – +ತಮ್ಮ ಲಾಯರಿಗೆ ಕೊಡಲು ಕಂಠೀಜೋಯಿಸರು ಐವತ್ತು ರೂಪಾಯಿ ತಂದಿದ್ದರು. ಅದನ್ನು ಮನೆಯಲ್ಲಿ ಕೊಡಬೇಕು. ಲಾಯರಿಗೆ ಕೋರ್ಟಿನ ಆಫೀಸಿನಲ್ಲಿ ಸ್ವಲ್ಪ ಕೆಲಸವಿತ್ತು. ಅಷ್ಟರಲ್ಲಿ ಹೋಟೆಲಿಗೆ ಹೋಗಿ ಊಟ ಮಾಡಿಕೊಂಡು ಬರುವುದಾಗಿ ಹೇಳಿ ಜೋಯಿಸರು ಕೋರ್ಟು ಕಟ್ಟಡದ ಹೊರಗೆ ಬಂದು, ಮರಕ್ಕೆ ಕಟ್ಟಿದ್ದ ತಮ್ಮ ಕುದುರೆಯನ್ನು ಏರಿ ಒಂದು ಫರ್ಲಾಂಗ್ ಮುಂದೆ ಹೋದರು. ಅಷ್ಟರಲ್ಲಿ ಶ್ಯಾಮಣ್ಣ ಒಬ್ಬನೇ ಹೋಗುತ್ತಿದ್ದುದು ಕಾಣಿಸಿತು. ಅವರಿಗೆ ಇದ್ದಕ್ಕಿದ್ದಂತೆಯೇ ಕೋಪ ಭುಗ್ ಎಂದಿತು. +‘ಎಲಾ, ನಿನ್ನ ಹೆತ್ತೋಳ್ನಾ…..ಏನ್ಲಾ ಕಿತ್‌ಕಂಡೆ ನನ್ ತಾವ, ಕೋರ್ಟಿಗ್ ಹೋಗಿ?’-ಎಂದು ಕುದುರೆಯಿಂದ ಇಳಿದು ಅವನ ಮುಂದೆ ನಿಂತರು. ಶ್ಯಾಮಣ್ಣ ಗಾಬರಿಯಿಂದ ಸುಮ್ಮನೆ ನಿಂತುಕೊಂಡ. ಜೋಯಿಸರು ತಮ್ಮ ಬಲಗಾಲಿನ ಬೂಟನ್ನು ಕೈಗೆ ತೆಗೆದುಕೊಂಡು ಅವನ ತಲೆಯ ಮೇಲೆ ಮೆಟ್ಟಿದರು. ಶ್ಯಾಮಣ್ಣನೂ ಕೈ ಮಾಡಿದ. ಇವರು ತಮ್ಮ ಬಲವನ್ನೆಲ್ಲ ಬಿಟ್ಟು ಕುತ್ತಿಗೆ ಬಗ್ಗಿಸಿಕೊಂಡು ಬೆನ್ನಿನ ಮೇಲೆ ಇಡಿದ ರಭಸಕ್ಕೆ ಅವನು ನೆಲಕ್ಕೆ ಉರುಳಿದುದೇ ಅಲ್ಲ, ಬಾಯಿಯಿಂದ ರಕ್ತ ಬಂದು ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ. ಅದುವರೆಗೂ ಕಂಠೀಜೋಯಿಸರಿಗೆ ಸಾಧಾರಣ ಬುದ್ಧಿಯೇ ಕೈಲಿರಲಿಲ್ಲ. ಈಗ ಗಾಬರಿಯಾಯಿತು. ಅಷ್ಟರಲ್ಲಿ ಯಾರೋ ಹಿಂಬಾಗದಲ್ಲಿ-‘ಮರ್ಡರ್ ಇರಬಹುದು. ತಕ್ಷಣ ಹಿಡ್‌ಕೊ’-ಎಂಬತೆ ಕೂಗಿದ ಶಬ್ದವಾಯಿತು. ಹಿಂತಿರುಗಿ ನೋಡುತ್ತಾರೆ: ಕೂಗಿದವರು ಇವರ ಕೇಸಿನ ವಿಚಾರಣೆ ಮಾಡಿದ ಜಡ್ಜಿಗಳು. ಹೇಳುತ್ತಿದ್ದುದು: ಅವರ ಜೊತೆಯಲ್ಲಿ ರಕ್ಷಕನಾಗಿ ಬರುತ್ತಿದ್ದ ಪೋಲೀಸ್ ಪ್ಯಾದೆಗೆ. ಜೋಯಿಸರ ಮೈ ಇದ್ದಕ್ಕಿದ್ದಂತೆಯೇ ಬೆವರಿತು. ಪೋಲೀಸಿನವನು ನುಗ್ಗಿ ಬಂದ. ಇವರು ಮಿಂಚಿನಂತೆ ತಮ್ಮ ಕುದುರೆಯ ಮೇಲೆ ನೆಗೆದು ಅದರ ಬೆನ್ನು ಚಬುಕಿಸಿದರು. ಇನ್ನು ಒಂದು ಮಾರು ಹತ್ತಿರ ಇದ್ದರೆ ಪೋಲೀಸಿನವನು ಇವರನ್ನು ಹಿಡಿಯುತ್ತಿದ್ದ. ಅಷ್ಟರಲ್ಲಿ ಕುದುರೆ ಛಂಗನೆ ನೆಗೆದು ಬಾಣದಂತೆ ದೌಡಾಯಿಸಿತು. ಜೋಯಿಸರು ತಿರುಗಿ ನೋಡಲಿಲ್ಲ. +ಮೋಟಾರು ಸೇತುವೆಯ ಮೇಲೆ ಜೋರಿನಿಂದ ಕುದುರೆಯನ್ನು ಓಡಿಸಿ ಅಲ್ಲಿಂದ ಬಲಭಾಗದ ಹಳ್ಳಗಳ ಕಡೆಗೆ ತಿರುಗಿಸಿದರು. ಸಿಕ್ಕಿದ ದಾರಿಯಲ್ಲಿ ನುಗ್ಗಿಸಿ ಸಂಜೆಯ ಹೊತ್ತಿಗೆ ಬರಗೂರಿನ ಹತ್ತಿರಕ್ಕೆ ಬಂದರು. ಪೋಲೀಸಿನವರು ತನ್ನ ಹಿಂದೆ ಖಂಡಿತ ಹೊರಟಿದ್ದಾರೆ. ಕೊಲೆ ಮಾಡಿದವನನ್ನು ಎಲ್ಲಿದ್ದರೂ ಹಿಡಿಯಬೇಕೆಂದು ಸಂಸ್ಥಾನದ ಆಮ್ಳೆ ಹುಕುಂ ಕೊಟ್ಟಿರುತ್ತಾರೆ. ಫಾಸಿ ಶಿಕ್ಷೆಯಾಗುತ್ತೆ. ಜಡ್ಜಿಗಳೇ ಕಣ್ಣಾರೆ ಕಂಡಿರುವುದರಿಂದ ಯಾವ ಲಾಯರೂ ಏನೂ ಮಾಡೂಹಾಗಿಲ್ಲ. ಈ ಸಂಸ್ಥಾನಾನೇ ಬಿಟ್ಟು ಬಿಡಬೇಕು….ಎಂಬ ನಿಶ್ಚಯ ಮನಸ್ಸಿನಲ್ಲಿ ಬಂತು. ಈ ಕುದುರೆಯ ಮೇಲೆ ಹೋಗುವುದು ಅಪಾಯ ಎಂಬ ಅರಿವು ಬಂದರೂ ಅದನ್ನು ಎಲ್ಲಿ ಬಿಡುವುದು ಎಂಬ ಯೋಚನೆಯೂ ಹುಟ್ಟಿತು. ಬಲಭಾಗಕ್ಕೆ ನಾಲ್ಕುಮೈಲಿ ತಿರುಗಿ, ದಣಿದು ಹೋಗಿದ್ದ ಕುದುರೆಯನ್ನು ನಿಲ್ಲಿಸಿ ಊರ ಕಡೆಗೆ ಹೊಡೆದರು. ಅಲ್ಲಿಂದ ನಾಗಲಾಪುರ ಐದು ಮೈಲಿಯ ದೂರ. ಕುದುರೆಗೆ ಪರಿಚಿತವಾದ ದಾರಿ. ಹೇಗೆ ಹೋದರೂ ಮನೆಗೆ ಹೋಗುತ್ತೆ-ಅಥವಾ ಮತ್ತೆ ಯಾರ ಕೈಗೆ ಸಿಕ್ಕಿದರೂ ಬೇಕಾದರೆ ಕಟ್ಟಿ ಹಾಕಿ ಸವಾರಿ ಮಾಡಿಕೊಳ್ಳಲಿ. ಅಲ್ಲಿಂದ ಎಡಗಡೆಗೆ ಬಂದು ಅಲ್ಲಿ ಸಿಕ್ಕಿದ ಒಂದು ಹಳ್ಳಿಗೆ ಹೋದರು. ಅದು ಬೇವಿನ ಹಳ್ಳಿ ಎಂಬುದು ಅವರಿಗೆ ಗೊತ್ತಿತ್ತು. ಅಲ್ಲಿ ಒಂದು ಬಟ್ಟಿ ಅಂಗಡಿಯೂ ಇದೆ. ಅಂಗಡಿಗೆ ಹೋಗಿ ಒಂದು ದಪ್ಪನಾದ ಪಂಚೆಯನ್ನು ಕೊಂಡರು. ಅದೇ ಅಂಗಡಿಗೆ ಲಗತ್ತಿಸಿ ಇದ್ದ ಚಿಲ್ಲರೆ ಅಂಗಡಿಯಲ್ಲಿ ಒಂದು ಆಣೆಗೆ ಅರಿಶಿನದ ಪುಡಿ ಒಂದು ಬೆಂಕೀಪೊಟ್ಟಣ ತೆಗೆದುಕೊಂಡು ಗ್ರಾಮದಿಂದ ಹೊರಗೆ ಹೋದರು. +ಒಂದು ತೋಟದ ಬಾವಿಯಲ್ಲಿ ಹೊಸ ಪಂಚೆಯನ್ನು ನೆನಸಿ ಗಂಜಿ ಹೋಗುವಂತೆ ಚೆನ್ನಾಗಿ ಕಸಕಿ, ಅದಕ್ಕೆ ಅರಿಶಿನ ಹಾಕಿ, ತಮ್ಮ ಹತ್ತಿರ ಇದ್ದ ಎಲೆ ಅಡಿಕೆ ಚೀಲದ ಸುಣ್ಣದ ಡಬ್ಬಿಯಿಂದ ಸುಣ್ಣ ತೆಗೆದು ಬೆರೆಸಿ, ಪಂಚೆಯನ್ನು ಕಾದಿಯ ಶಾಟಿಯಾಗಿ ಪರಿವರ್ತಿಸಿದರು. ಅದನ್ನು ತಲೆಯ ಮೇಲೆ ಹಾಕಿಕೊಂಡು ಉತ್ತರದ ಕಡೆಗೆ ನಡೆಯುವಾಗ ನಡುರಾತ್ರಿಯ ವೇಳೆಗೆ ಒಣಗಿತು. +ಹತ್ತಿರ ಸಿಕ್ಕಿದ ಒಂದು ಮರಳ ಹಳ್ಳದಲ್ಲಿ ಒಂದಿಷ್ಟು ಮರಳನ್ನು ಬಗೆದರು. ಕಾವಿಯನ್ನು ಧರಿಸಿ, ತಾವು ತೊಟ್ಟಿದ್ದ ನಿಕ್ಕರು, ಕೋಟು ಶರಟುಗಳನ್ನು ಬಿಚ್ಚಿ, ತರಗು ಕಡ್ಡಿಗಳನ್ನು ಸೇರಿಸಿ ಅದಕ್ಕೆ ಬೆಂಕಿ ಹಾಕಿದರು. ಚನ್ನಾಗಿ ಉರಿದು ಬೂದಿಯಾದ ಮೇಲೆ ಅದರ ಭರ್ತಿ ಮರಳು ತುಂಬಿ ಮೊದಲಿದ್ದಂತೆಯೇ ಮಾಡಿದರು. ಹತ್ತಿರ ಇದ್ದ ದುಡ್ಡನ್ನು ಗಂಟು ಕಟ್ಟಿ ಒಳಗಿನ ಲಂಗೋಟಿಯಲ್ಲಿ ಸೇರಿಸಿದರು. ಇನ್ನು ಎಂಟು ಮೈಲಿ ನಡೆದರೆ ಅರಸೀಕೆರೆ ಬರುತ್ತೆ. ತಡ ಮಾಡಿದರೆ ಅಪಾಯ. ಮತ್ತೆ ಬೇಗ ಬೇಗ ಹೆಜ್ಜೆ ಹಾಕಿ ಅರಸೀಕೆರೆ ಮುಟ್ಟಿ ಸ್ಟೇಷನ್ನಿನಲ್ಲಿ ವಿಚಾರಿಸಿದರು. ಹುಬ್ಬಳ್ಳಿಯ ಕಡೆಗೆ ಹೋಗುವ ಒಂದು ರೈಲು ಬೆಳಕು ಹರಿದ ಮೇಲೆ ಹೊರಡುತ್ತದೆಂದು ತಿಳಿಯಿತು. ಧೈರ್ಯವಾಗಿ ಸ್ಟೇಷನ್ನಿನಲ್ಲಿಯೇ ಕಾದಿದ್ದು ಬೆಳಗ್ಗೆ ಆ ಗಾಡಿಯಲ್ಲಿ ಹೊರಟೂಹೋದರು. ಸಂಸ್ಥಾನದ ಕೊನೆಯ ಗಡಿ ಹರಿಹರ ದಾಟಿ ಬಿಟ್ಟರೆ ಕುಂಪಣೀ ಸರ್ಕಾರ. ಈ ನನ್ ಮಕ್ಳು ಆಮ್ಯಾಲೆ ನನ್ ತಾವ ಏನೂ ಕಿತ್ಕಳೂ ಹಾಗಿಲ್ಲ – ಎಂಬ ಧೈರ್ಯ ಇದ್ದೇ ಇತ್ತು. +– ೮ – +ಎಂಟು ತಿಂಗಳು ಒಂದೇಸಮನೆ ಔಷಧಿ ಉಪಚಾರಗಳು ನಡೆದರೂ ಕಲ್ಲೇಶನ ಎಡಗೈ ಸ್ವಾಧೀನಕ್ಕೆ ಬರಲಿಲ್ಲ. ಕೈನಡುಕ ಸ್ಪಷ್ಟವಾಗಿ ಕಾಣುತ್ತಿರಲಿಲ್ಲವಾದರೂ ಎಡಗೈಯಲ್ಲಿ ಏನಾದರೂ ಬಿಗಿಯಾಗಿ ಹಿಡಿದು ನಿಭಾಯಿಸಲು ಆಗುತ್ತಿರಲಿಲ್ಲ. ಬಲಗೈ ಒಂದನ್ನೇ ಉಪಯೋಗಿಸಿ ಸೈಕಲ್ ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಅಂತೂ ಮತ್ತೆ ಪೋಲೀಸ್ ಕಾನಿಸ್ಟೇಬಲಾಗಿ ಮುಂದುವರೆಯುವಂತಿರಲಿಲ್ಲ. ಸಮರ್ಪಕ ದೇಹಾದಾರ್ಢ್ಯ ಇಲ್ಲವೆಂದು ಅವನನ್ನು ಕೆಲಸದಿಂದ ತೆಗೆಯಲಾಯಿತು. ಪೋಲೀಸ್ ಖಾತೆಯಲ್ಲಿ ಕನಿಷ್ಠ ಮಟ್ಟದ ಕೆಲಸವಾದ ಕಾನಿಸ್ಟೇಬಲ್ ಆಗಿದ್ದರೂ ಅವನು ಅದುವರೆಗೆ ಸರ್ಕಾರೀ ನೌಕರನ ದರ್ಪ ದೌಲತ್ತುಗಳನ್ನು ಮಾಡುತ್ತಿದ್ದ. ಈಗ ಅದು ಹೋಯಿತು. ಸರಿಯಾಗಿ ನೋಡಿಕೊಂಡರೆ ಜೀವನಕ್ಕೆ ಯೋಚನೆ ಇಲ್ಲದಷ್ಟು ಗದ್ದೆ ತೋಟ ಹೊಲ ಮನೆಗಳು ಊರಿನಲ್ಲಿವೆ. ಅವನು ಅದಕ್ಕೆ ಯೋಚಿಸಲಿಲ್ಲ. +ಈ ನಡುವೆ ನರಸೀಪುರದ ಕೇಸು ತನ್ನ ತಂದೆಯ ಪರ ಆಗಿ, ಆಮೇಲೆ ಶ್ಯಾಮಣ್ಣನನ್ನು ಹಿಡಿದು ಜ್ಞಾನ ತಪ್ಪಿ ಬಾಯಲ್ಲಿ ರಕ್ತ ಬರುವಂತೆ ಹೊಡೆದು ತಾವು ತಲೆ ತಪ್ಪಿಸಿಕೊಂಡು ಹೋಗಿರುವುದು ಅವನಿಗೆ ತಿಳಿಯಿತು. ವಾಸ್ತವಾಗಿ ಶ್ಯಾಮಣ್ಣ ಸತ್ತಿರಲಿಲ್ಲ. ಬೂಟೀನ ಏಟು ಬಾಯಮೇಲೆ ಬಿದ್ದ ರಭಸಕ್ಕೆ ಮುಂದಿನ ಎರಡು ಹಲ್ಲು ಮುರಿದು ರಕ್ತ ಸುರಿದಿತ್ತು; ಹಾಗೆಯೇ ಪ್ರಜ್ಞೆ ತಪ್ಪಿಹೋಗಿತ್ತು. ಜಡ್ಜಿಗಳು ಅಲ್ಲಿಯೇ ನಿಂತು ಡಾಕ್ಟರನ್ನು ಕರೆಸಿದರು. ಡಾಕ್ಟರು ಬರುವ ಮುನ್ನವೇ ಅವನಿಗೆ ಜ್ಞುನ ಬಂದಿತ್ತು. ಎರಡನೇ ಬಾರಿ ಕಂಠೀಜೋಯಿಸರ ಮೇಲೆ ಕೇಸು ಹಾಕಲು ಅವನೇ ಒಪ್ಪಲಿಲ್ಲ. ಕೇಸು ಹಾಕಿ ಅವರಿಗೆ ಜುಲ್ಮಾನೆ ಹಾಕಿಸಬಹುದು; ಅಥವಾ ಜೈಲು ಮಾಡಿಸಬಹುದು. ಆದರೆ ಜೈಲಿನಿಂದ ಬಂದ ಮೇಲೆ ಅವರು ಊರಿನಲ್ಲಿ ರಾತ್ರಿಯ ಹೊತ್ತು ತನ್ನ ಮನೆಗೆ ಹೊರಗಿನಿಂದ ಬೀಗ ಹಾಕಿ ಮೇಲಿನಿಂದ ಸೀಮೆ ಎಣ್ಣೆ ಸುರಿದು ಹೊತ್ತಿಸಿದರೆ ಕಾಯುವವರಾರು? – ಎಂಬ ಯೋಚನೆ ಬಂದು ಸುಮ್ಮನಾಗಿಬಿಟ್ಟ. +ಕಂಠೀಜೋಯಿಸರ ಕುದುರೆ ಮನೆಯನ್ನು ಮುಟ್ಟಿತು. ಅಕ್ಕಮ್ಮ ಹೊನನನ್ನು ಕರೆಸಿ ಕಟ್ಟಿ ಹಾಕಿಸಿದಳು. ಮಗ ಎಲ್ಲಿಗೆ ಹೋದ, ಯಾಕೆ ಹೋದ ಎಂಬುದು ಅವಳಿಗಾಗಲಿ ಕಲ್ಲೇಶನಿಗಾಗಲಿ ತಿಳಿಯಲಿಲ್ಲ. ಈ ನಡುವೆ ಕಲ್ಲೇಶ ಊರಿಗೆ ಬಂದು ತನ್ನ ಎಡತೋಳಿಗೆ ಉಡದ ತುಪ್ಪದ ಔಷಧಿ ಪ್ರಾರಂಭಿಸಿದ. ಕಂಠೀಜೋಯಿಸರ ವಿಷಯವಾಗಿ ಅವನು ಸಹ ಏನೂ ಹೇಳಲು ಅಸಮರ್ಥನಾದ. +ಅಷ್ಟರಲ್ಲಿ ಕಲ್ಲೇಶನ ಹೆಂಡತಿ ಕಮಲು ಮೈನೆರೆದಳು. ಇವರು ಆರು ತಿಂಗಳು ಕಾದರೂ ಕಂಠೀಜೋಯಿಸರ ಸುಳಿವು ಹತ್ತಲಿಲ್ಲ. ‘ಅವನನ್ನು ಕಾಯೂದು ಬ್ಯಾಡ. ಪ್ರಸ್ತ ಮಾಡ್ಕಂಡು ಹುಡುಗೀನ ಕರ್ಕಂಡ್ಬರ್ಬೇಕು. ಇನ್ ಸುಮ್ನಿರೋದು ಚನ್ನಲ್ಲ’ – ಎಂದು ಅಕ್ಕಮ್ಮ ಹೇಳಿದಳು. ದಿನ ನಿಶ್ಚಯವಾಯಿತು. ಕಲ್ಲೇಶ ರಾಮಸಂದ್ರಕ್ಕೆ ಹೋಗಿ ತಂಗಿ, ತಂಗಿಯ ಮಗು, ಮತ್ತು ಭಾವನನ್ನು ಕರೆದುಕೊಂಡು ಬಂದ. ಅಕ್ಕಮ್ಮನೂ ಜೊತೆಗೆ ಸೇರಿ ಗಾಡಿ ಹೊಡೆಸಿಕೊಂಡು ಹಾಸನಕ್ಕೆ ಹೋದರು. +ಬೇರೆ ಮನೆಗೆ ಬಿಟ್ಟಾಗ ಕಮಲು ಗಂಡನಿಗೆ ಅವಕಾಶವನ್ನೇ ಕೊಡಲಿಲ್ಲ. ಮೊಂಡು ಹಿಡಿದು ಮೈ ಮುದುಡಿಕೊಂಡು ರಾತ್ರಿಯನ್ನು ಕಳೆದಳು. ಕಲ್ಲೇಶ ಹೆಣ್ಣನ್ನೇ ಕಾಣದ ಗಂಡಲ್ಲ; ಯಾವ ತಿಳಿವಳಿಕೆಯೂ ಇಲ್ಲದವನಲ್ಲ. ಏಳು ತಿಂಗಳ ಕಾಲ ಅವರ ಮನೆಯಲ್ಲೇ ಇದ್ದುದರಿಂದ ಅವಳೊಡನೆ ಪರಿಚಯವೂ ಇತ್ತು. ಆದರೆ ಈಗ ಪರಿಪರಿಯಾಗಿ ಮಾತನಾಡಿಸಿ ಒಲಿಸಿದರೂ ಅವಳು ಮಣಿಯಲಿಲ್ಲ; ಮಾತೂ ಆಡಲಿಲ್ಲ. ಮುಂದಿನ ರಾತ್ರಿ ಮರಿಪ್ರಸ್ತಕ್ಕೆ ಬಿಟ್ಟಾಗ ಬಾಯಿಬಿಟ್ಟಳು: ‘ಆ ಹಾಳು ಹಳ್ಳಿಗೆ ಬಂದಿರೂಕ್ಕೆ ನನ್ನ ಕೈಲಿ ಆಗುಲ್ಲ.’ +ಕಲ್ಲೇಶನಿಗೆ ಅವಳ ಒಳಗು ತಕ್ಷಣ ಹೊಳೆಯಿತು. ಆದರೆ ಅವನು ಏನೂ ಮಾಡುವಂತಿರಲಿಲ್ಲ. ರಮಿಸಿ ಪಿಸುಗುಟ್ಟಿದ: ‘ಹಳ್ಳಿಯಾದ್ರೆ ಏನಂತೆ? ಎರಡು ಹಸು ಕರೆಯುತ್ತೆ. ಈ ಊರಿನ ಹಾಗೆ ಹಾಲು ತುಪ್ಪಕ್ಕೆ ಕಾರ್ಪಣ್ಯವಿಲ್ಲ. ಕಾಳು ಕಡ್ಡಿ ಬತ್ತ ಭರಣ ಯಲ್ಲಾ ಬೇಕಾದಷ್ಟು ಬೆಳೆಯುತ್ತೆ. ಹಳ್ಳೀ ದಾನದಲ್ಲಿ ಪ್ರತಿಯೊಂದೂ ಬರುತ್ತೆ.’ +‘ನಂಗ್ ಹಳ್ಳೇಲಿರುಕ್ ಆಗುಲ್ಲ.’ +‘ನನೂ ಸರ್ಕಾರೀ ಕೆಲಸದಲ್ಲೇ ಇದ್ನಲ್ಲ. ಅದೃಷ್ಟ ಹೀಗಾಯ್ತು ಏನ್ಮಾಡುಕ್ಯಾಗುತ್ತೆ? ಊರಲ್ಲಿ ಹೊಲ ಮನೆ ಇದ್ಯಲ. ಸುಖವಾಗಿರಾಣ.’ +‘ಇನ್ಯಾವ್ದಾದ್ರೂ ಸರ್ಕಾರಿ ಕೆಲ್ಸ ಮಾಡ್ಕಳಿ’ – ಗೋಡೆಯ ಕಡೆಗೆ ತಿರುಗಿಕೊಂಡೇ ಅವಳು ಪಿಟಪಿಟನೆ ಮಾತನಾಡುತ್ತಿದ್ದಳು. +‘ನೋಡಾಣ. ಮೆಡಿಕಲಿ ಆನ್‌ಫಿಟ್ ಅಂತ ಒಂದು ಇಲಾಖೆಯೋರು ಮಾಡಿರುವಾಗ ಇನ್ ಬೇರೆ ಇಲಾಖೆಯೋರು ಸೇರಿಸ್ಕತ್ತಾರೋ ಇಲ್ಲೋ?’ +‘ನಂಗದೆಲ್ಲ ಗೊತ್ತಿಲ್ಲ’ – ಎಂದಳೇ ವಿನಾ ಅವಳು ಅವಕಾಶ ಕೊಡಲಿಲ್ಲ. ಕೆನ್ನೆ ಊದುವ ಹಾಗೆ ಬಾರಿಸಿಬಿಡಬೇಕೆಂದು ಅವನ ಬಲಗೈ ಚಲಿಸಿತು. ಆದರೆ ಹೊರಗೆ ಮಾವನ ಕಡೆಯ ನೆಂಟರಿಷ್ಟರೆಲ್ಲ ಇದಾರೆ. ತನ್ನ ಅಜ್ಜಿ, ತಂಗಿ, ಭಾವ ಇದಾರೆ. ಈ ಸಮಯದಲ್ಲಿ ಗದ್ದಲವಾಗುವುದು ತರವಲ್ಲವೆಂದು ಸುಮ್ಮನಾದ. +ಮನಸ್ಸಿನಲ್ಲಿ ಇನ್ನೂ ಒಂದು ಅಂಶ ತೂಗುತ್ತಿತ್ತು. ತಾನು ಕಾಹಿಲೆ ಮಲಗಿದ್ದಾಗ ಇಷ್ಟು ದಿವಸ ಇವರು ಮನೆಯಲ್ಲಿಟ್ಟುಕೊಂಡು ಸೇವೆ ಮಾಡಿದ್ದರು. ಅದರಲ್ಲಿಯೂ ಮಾವನವರು ಅಳಿಯನಿಗಾಗಿ, ಅವನ ಎಡಗೈ ಸ್ವಾಧೀನಕ್ಕೆ ಬರುವಂತೆ ಮಾಡಲು, ಬಹಳ ಮುತುವರ್ಜಿ ವಹಿಸಿದ್ದರು. ಅವರ ಮನಸ್ಸನ್ನು ನೋಯಿಸುವುದು ಅವನಿಗೆ ಸ್ವಲ್ಪ ಕಷ್ಟವಾಯಿತು. ಸುಮ್ಮನಾದ. +ಮರುದಿನ ಎಲ್ಲರೂ ಪಯಣದ ಸಿದ್ಧತೆಯಲ್ಲಿರುವಾಗ ಕಮಲು ತಾಯಿಯ ಕೈಲಿ ಹೇಳಿದಳು: ‘ನಾನು ಅಲ್ಲಿಗ್ ಹೋಗುಲ್ಲ.’ +‘ಯಾರಾರು ನಕ್ಕಾರು ಸುಮ್ನಿರು. ಹಾಗೆಲ್ಲ ಅನ್‌ಬಾರ್ದು.’ +ಅದಕ್ಕಿಂತ ಹೆಚ್ಚಾಗಿ ಅವರು ಏನೂ ಹೇಳಲಿಲ್ಲ. ತೌರನ್ನು ಬಿಟ್ಟು ಹೋಗುವಾಗ ಹೆಣ್ಣು ಮಕ್ಕಳು ಹೀಗೆಲ್ಲ ಅನ್ನುವುದು ಅಸಹಜವಲ್ಲ ಎಂದು ಸುಮ್ಮನಾದರು. ಅವಳ ತಂದೆ ತಾಯಿ, ತಮ್ಮಂದಿರು, ತಂಗಿಯರು, ಎಲ್ಲರೂ ಗಾಡಿಯಲ್ಲಿ ನಾಗಲಾಪುರಕ್ಕೆ ಬಂದರು. ನಾಲ್ಕು ದಿನದ ನಂತರ ಔತಣ ಉಡುಗೊರೆ ಮಾಡಿಸಿಕೊಂಡು ಹಿಂದಿರುಗಿದರು. ಅದೇ ದಿನ ನಂಜುವೂ ಗಂಡ ಮಗುವಿನೊಡನೆ ತನ್ನ ಊರಿಗೆ ಹೋದಳು. +ಆ ದಿನ ರಾತ್ರಿ ಕಮಲು ಮತ್ತೆ ಅದೇ ಮಾತನಾಡಿದಳು. ಕಲ್ಲೇಶ ಹೇಳಿದ: ‘ನೀನೇ ನೋಡಿದಿಯಲ. ಈ ಮನೇಲಿ ಯಾವುದಕ್ಕೆ ಕಮ್ಮಿ ಇದೆ? ಇಷ್ಟು ಹಾಲು ಮೊಸರು, ತುಪ್ಪ, ಕಾಯಿ ಕಡ್ಡಿ, ಹಾಸನದಲ್ಲೆಲ್ಲಿದೆ?’ +‘ನಂಗದೆಲ್ಲ ಗೊತ್ತಿಲ್ಲ’ – ಎಂದು ಅವಳು ಗೋಡೆಯ ಕಡೆಗೆ ತಿರುಗಿ ಮಂಡಿ ಮುದುರಿಕೊಂಡಳು. ಅತ್ತೆ ಮಾವ ಇಲ್ಲಿರುವ ತನಕ ಕಲ್ಲೇಶ ತಾಳ್ಮೆ ಉಳಿಸಿಕೊಂಡಿದ್ದ. ಈಗ ತಡೆಯಲಿಲ್ಲ. ಎತ್ತಿ ಕಪಾಳಕ್ಕೆ ಹೊಡೆದ. ಅವಳು ಬಿಕ್ಕಿ ಅತ್ತಳು. ಪೋಲೀಸ್ ಇಲಾಖೆಯಲ್ಲಿದ್ದ ಅವನು ಎತ್ತಿ ಎತ್ತಿ ಬೆನ್ನಿಗೆ ಬಾರಿಸಿದ. ಹೊರಗೆ ಮಲಗಿದ್ದ ಅಕ್ಕಮ್ಮ – ‘ಇದೇನೋ ಇದು?’ ಎಂದು ಕೇಳಿದಳು. +‘ಪುಲ್ಲುಲ್ಲಿ ಮುಂಡೆ ತಂದು, ನಾನೇನು ಯಾವತ್ತೂ ಕಂಡೇ ಇಲ್ಲ ಅನ್ನೂ ಹಂಗ್ ಆಡ್ತಾಳೆ’ – ಎಂದು ಅವನು ತನ್ನ ಹಾಸಿಗೆಯನ್ನು ತಂದು ಕೋಣೆಯಿಂದ ಹೊರಗೆ ಹಾಕಿಕೊಂಡು ಮಲಗಿದ. ಅಕ್ಕಮ್ಮನಿಗೆ ವಿಷಯ ಹೇಳಿದಾಗ ಅವಳೂ ಕೋಣೆಯ ಒಳಗೆ ಹೋಗಿ ಸಮಾಧಾನ ಹೇಳಲು ಪ್ರಾರಂಭಿಸಿದಳು: ‘ಅದ್ಯಾಕ್ ಹಾಗಂತಿಯೇ? ಇಲ್ಲಿ ನಿಂಗೇನ್ ಕಮ್ಮಿಯಾಗಿರೂದು? ತಿನ್ನೂಕಿಲ್ವೆ, ಉಣ್ಣೂಕಿಲ್ವೆ? ಹಾಗೆಲ್ಲ ಆಡ್‌ಬಾರ್ದು. ನಾವೇನ್ ನಿಂಗೆ ಕಷ್ಟ ಕೊಡುಲ್ಲ. ಸುಖವಾಗಿರು.’ +‘ನಂಗ್ ಈ ಸುಡುಗಾಡು ಹಳ್ಳಿ ಆಗುಲ್ಲ’ – ಬಿಕ್ಕಳಿಸಿ ಅವಳು ಅಳುತ್ತ ಅವಳು ಹೇಳಿದಳು. +ಇದಕ್ಕೆ ಸಮಾಧಾನ ಹೇಳಲು ಅಕ್ಕಮ್ಮನಿಗೆ ತಿಳಿಯಲಿಲ್ಲ. ಈ ಪಟ್ಟಣದ ಹೆಣ್ಣನ್ನು ತರುವಾಗಲೇ ಅವಳಿಗೆ ಅನುಮಾವಿತ್ತು. ಆದರೆ ಯಾರನ್ನೂ ಹೇಳದೆ ಕೇಳದೆ ಮಗ ಕಂಟಿ ಗೊತ್ತು ಮಾಡಿದ್ದ. ಈಗ ಆಗುವುದು ಆಯಿತು. ಹೇಗಾದರೂ ಹೊಂದಿಕೊಳ್ಳಬೇಕು ಎಂಬುದು ಮುದುಕಿಯ ಮನಸ್ಸು. +ಹೊರಗೆ ಇದ್ದ ಕಲ್ಲೇಶ ಹೇಳಿದ: ‘ಇದು ಶಿಂಡಾಡುತ್ತೆ ಅಂತ ನೀನು ತುರಿಸುಕ್ ಹೋಗ್‌ಬ್ಯಾಡ. ಸುಮ್ಮಗೆ ಬಾ ಇಲ್ಲಿ.’ +ತನಗೆ ತಿಳಿದ ಮಾತನ್ನು ಹೇಳಿ ಅಕ್ಕಮ್ಮ ಬಂದು ಮಲಗಿದಳು. ಕಲ್ಲೇಶ ಸ್ವಲ್ಪ ಹೊತ್ತಿನ ಮೇಲೆ ನಿದ್ರೆ ಮಾಡಿದ. ಬೆಳಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ತಿಂದು, ಅಪ್ಪನ ಬಿಳಿ ಕುದುರೆಯನ್ನೇರಿ ಶ್ರವಣಬೆಳಗೊಳಕ್ಕೆ ಹೋದ. ಅವನ ಹಳೆಯ ಪರಿಚಿತಳು ಅಲ್ಲೇ ಹತ್ತಿರದ ಹಳ್ಳಿಯಲ್ಲಿದಳು. +ಅಧ್ಯಾಯ ೫ +– ೧ – +ಸಾತು ಬಸುರಿಯಾಗಿ ಐದನೆಯ ತಿಂಗಳಿನಲ್ಲಿ ಅವಳ ತಂದೆ ಬಂದು ಬಾಣಂತಿತನಕ್ಕೆ ಕರೆದುಕೊಂಡು ಹೋದರು. ನಂಜಮ್ಮ ಮತ್ತೆ ಬಸುರಿಯಾದಳು. +ಶ್ಯಾನುಭೋಗಿಕೆಯ ಲೆಕ್ಕ ಬರೆಯುತ್ತಿದ್ದ ತಿಮ್ಲಾಪುರದ ದ್ಯಾವರಸಯ್ಯನವರಿಗೆ ಅರವತ್ತಕ್ಕೂ ಮೀರಿದ ವಯಸ್ಸಾಗಿತ್ತು. ತಮ್ಮ ಫಿರ್ಕಾದ ಲೆಕ್ಕ ಪತ್ರ ಬರೆಯಬೇಕಾಗಿದ್ದ ಅವರಿಗೆ ಚೆನ್ನಿಗರಾಯದನ್ನೂ ಗೇಯುವುದು ಕಷ್ಟವಾಗುತ್ತಿತ್ತು. ಇವರು ಕೊಡುತ್ತಿದ್ದ ಐವತ್ತು ರೂಪಾಯಿಯೇ ಅಲ್ಲದೆ ಅವರಿಗೆ ಈ ಮನೆಯ ಮೇಲೆ ಒಂದು ವಿಧವಾದ ವಿಶ್ವಾಸ ಹುಟ್ಟಿತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಮೂರ್ಖರಾದ ಈ ಸಂಸಾರದಲ್ಲಿ ಸೊಸೆ ನಂಜಮ್ಮನ ಗುಣ ಸ್ವಭಾವಗಳನ್ನು ಕಂಡರೆ ಅವರಿಗೆ ಗೌರವವಿತ್ತು. +ಒಂದು ದಿನ ಮನೆಯಲ್ಲಿ ನಂಜಮ್ಮನ ವಿನಾ ಬೇರೆಯವರು ಇರಲಿಲ್ಲ. ಚೆನ್ನಿಗರಾಯರು ಎದುರಿನ ದೇವಸ್ಥಾನಕ್ಕೆ ಹೋಗಿ ಹೊಗೆಸೊಪ್ಪು ನವಣಿಸುತ್ತಾ ಮಾದೇವಯ್ಯನವರ ಭಜನೆ ಕೇಳುತ್ತಿದ್ದರು. ಅಪ್ಪಣ್ಣಯ್ಯ ಬೆಸ್ತರಕೇರಿಯ ಮಾಟನ ಮನೆಯಲ್ಲಿ ಕೂತು ಬೀಡಿ ಸೇದುತ್ತಿದ್ದ. ಗಂಗಮ್ಮ ಗಾಣಿಗರ ಈರಕ್ಕನ ಮನೆಯ ಮುಂದೆ ಹುಚ್ಚೆಳ್ಳನ್ನು ಗಾಣ ಆಡಿಸುತ್ತಿದ್ದಳು. +ದ್ಯಾವರಸಯ್ಯನವರು ನಂಜಮ್ಮನಿಗೆ ಹೇಳಿದರು: ‘ನೋಡಮ್ಮ, ನಂಗೂ ವಯಸ್ಸಾಯ್ರು. ಇನ್ನೆಲ್ಲ ನಾನು ಒಂದೆರಡು ವರ್ಷ ಲೆಕ್ಕ ಬರೆದುಕೊಟ್ಟೇನು. ನಮ್ಮ ಚೆನ್ನಿಗರಾಯರು ಸ್ವತಃ ಲೆಕ್ಕ ಕಲಿಯಲಿಲ್ಲ. ಮುಂದೇನು ಗತಿ?’ +‘ನೀವೇ ಅವರಿಗೆ ಚನ್ನಾಗಿ ಬಿಡಿಸಿ ಬಿಡಿಸಿ ಹೇಳಿಕೊಡಿ ಮಾವಯ್ಯ.’ +‘ಈ ಲೆಕ್ಕದಲ್ಲಿ ಏನಿದೆ ಅಂತಲಮ್ಮ ಮಣ್ಣು? ಹೊನ್ನವಳ್ಳಿ ಸೀತಾರಾಮಯ್‌ನೋರ್ ಹತ್ರ ಮೂರು ವರ್ಷ ಇದ್ದೂ ಇವರು ಕಲೀಲಿಲ್ಲ ಅಂದ್ರೆ ಇವ್‌ರಿಗೆ ಬರುಲ್ಲ ಅಂತಲೇ ಇಷ್ಟು ದಿನ ನಾನು ಇಲ್ಲಿದ್ದು ಬರೀತಿದೀನಲಾ, ಎಲ್ಲಾನೂ ನನ್ನ ಮೇಲೆ ಹಾಕಿ ಅವರು ಮಲಿಕ್ಕಂಡು ನಿದ್ದೆ ಮಾಡ್ತಾರೆಯೇ ಹೊರತು ನನ್ನ ಜೊತೆಗೆ ಕೂತ್ಕಂಡು ಬರೀತಾರೆಯೇ ಬರೀತಾ ಬರೀತಾ ತಾನೇ ತಿಳಿಯೂದು? ಮಧ್ಯ ಮಧ್ಯ ನನ್ನ ಕೇಳಿದ್ರೆ ಹೇಳಿಕೊಡ್ತೀನಿ. ತಮ್ಮ ಕಸುಬು ತಾವು ಮಾಡುಕ್ಕಾಗುಲ್ವೆ? ಎಷ್ಟು ದಿನ ಅಂತ ದುಡ್ದು ಕೊಟ್ಟು ಬರಸೋದು?’ +ನಂಜಮ್ಮನಿಗೆ ಈ ವಿಚಾರಗಳು ಎರಡು ವರ್ಷ ಮೊದಲಿನಿಂದಲೇ ಮನಸ್ಸಿನಲ್ಲಿ ಬಂದಿದ್ದುವು. ಆದರೆ ಅವಳು ಏನು ಮಾಡಿಯಾಳು?: ‘ಮಾವಯ್ಯ, ನನ್ನ ಅದೃಷ್ಟ ನಿಮಗೇ ಗೊತ್ತಿದೆ. ಏನ್ ಮಾಡ್ಬೇಕು ಅಂತ ನೀವೇ ಹೇಳಿ.’ +‘ಅಮ್ಮಾ ನಿನಗೆ ಇಷ್ಟು ಚನ್ನಾಗಿ ಓದುಕ್ಕೆ ಬರಿಯುಕ್ಕೆ ಬರುತ್ತೆ. ನಿನ್ನ ಹಾಡಿನ ಪುಸ್ತಕ ನಾನು ನೋಡಿದೀನಿ. ಒಳ್ಳೇ ಕಡ್ಲೆಕಾಳಿನ ಹಾಗೆ ದುಂಡಗೆ ಅಕ್ಷರ ಬರೀತೀಯಾ. ನಾನು ಹೇಳಿಕೊಡ್ತೀನಿ. ನೀನು ಎಲ್ಲಾನೂ ಕಲ್ತುಕೊ. ಮನೇಲಿ ಕೂತು ಎಲ್ಲಾನೂ ಬರಕೊಡು. ಚೆನ್ನಿಗರಾಯರು ಕೋಟು ಪೇಟ ಕಟ್ಟಿಕೊಂಡು ಹೋಗಿ ಜಮಾಬಂದಿ ಮಾಡ್ಕಂಡು ಬರ್ಲಿ ಇಲ್ದೆ ಹೋದ್ರೆ ಇದು ಊರ್ಜಿತವಾಗುಲ್ಲ.’ +‘ಹೆಂಗಸ್ರು ಸರ್ಕಾರಿ ಲೆಕ್ಕ ಬರೀಭೌದೆ?’ +ಈ ಅನುಮಾನಕ್ಕೆ ಸಮಾಧಾನವು ದ್ಯಾವರಸಯ್ಯನವರಿಗೂ ತಕ್ಷಣ ತಿಳಿಯಲಿಲ್ಲ. ಸರ್ಕಾರದ ಕಾನೂನು ಈ ವಿಷಯದಲ್ಲಿ ಏನಿದೆಯೋ ಅವರಿಗೂ ಗೊತ್ತಿಲ್ಲ. ಆದರೂ ಹೇಳಿದರು: ‘ನೋಡು, ನೀನೇನು ಶ್ಯಾನುಭೋಗಿಕೆ ಚಾರ್ಜು ತಗಂಡು ನೋಡುಲ್ಲ. ಮನೇಲಿ ಕೂತ್ಕಂಡು ಒಳಗೇ ಲೆಕ್ಕ ಬರೆಯೋದು. ಗಂಡಸು ಬರೆಯೋದೋ ಹೆಂಗಸು ಬರಿಯೋದೋ ಅಂತ ಮೇಲಿನೋರಿಗೆ ಏನು ಗೊತ್ತಾಗುತ್ತೆ? ನೀನು ಸುಮ್ಮನೆ ಕಲುತ್ಕೊ.’ +ತಾವು ರೂಲು ಹಾಕುತ್ತಿದ್ದ ಪುಸ್ತಕವನ್ನು ಮುಂದೆ ಸರಿಸಿ ದ್ಯಾವರಸಯ್ಯನವರು ಹೇಳಿದರು: ‘ಎಲ್ಲಿ, ಇದಕ್ಕೆ ಮೊದಲು ರೂಲು ಹಾಕು. ಇಲ್ಲಿ ನೋಡು, ರೂಲುದೊಣ್ಣೆ ಹೆಡಿಂಗಿನ ಕೆಂಪು ಗೀಟಿಗೆ ಸಮನಾಗಿ ಬರಬೇಕು. ಎಡಗೈ ಬೆರಳಿನಲ್ಲಿ ರೂಲುದೊಣ್ಣೇನ ಹಗುರವಾಗಿ ಆಡಿಸಬೇಕು. ಸ್ಟೀಲಿನಿಂದ ಶಾಯಿ ಧುಮುಕದ ಹಾಗೆ ನೋಡಿಕೋಬೇಕು. ಹಾಕು ನೋಡೋಣ.’ +ನಂಜಮ್ಮ ಅವರು ಹೇಳಿದಂತೆಯೇ ಹಾಕಿದಳು. ಅವರಷ್ಟು ಬೇಗ ಬೇಗ ಆಗದಿದ್ದರೂ ಗೆರೆಗಳು ನೇರವಾಗಿ ಸರಿಯಾದ ಜಾಗದಲ್ಲಿ ಬಿದ್ದುವು. ‘ಸೊಗಸಾಗಿದೆ. ಅಭ್ಯಾಸವಾಗಲಿ. ಪುಸ್ತಕಕ್ಕೆಲ್ಲ ನೀನೇ ಹಾಕು’ – ಎಂದು ಹೇಳಿ ಅವರು ಕೆರೆಯ ಕಡೆಗೆ ಹೋದರು. ನಂಜಮ್ಮನಿಗೆ ಇದು ಹೊಸ ಅನುಭವ. ಈ ಹಿಂದೆ ಅವಳು ಹುಡುಗಿಯಾಗಿದ್ದಾಗ ತನ್ನ ಹಾಡಿನ ಪುಸ್ತಕಕ್ಕೆ ಸ್ಲೇಟಿನ ಕಟ್ಟಿನಿಂದ ರೂಲು ಹಾಕಿಕೊಂಡಿದ್ದುಂಟು. ಆದರೆ ರೂಲುದೊಣ್ಣೆಯಿಂದ, ಅದೂ ಸರ್ಕಾರಿ ಪುಸ್ತಕಕ್ಕೆ ಹಾಕುವುದೆಂದರೆ ಏನೋ ಒಂದು ತೆರನಾದ ಸಂಭ್ರಮವಾಗುತ್ತಿತ್ತು. ಅಲ್ಲದೆ ಮೊದಲನೆಯ ಸಲಕ್ಕೇ ತಪ್ಪಿಲ್ಲದೆ ಬಂದುಬಿಟ್ಟಿತು. ‘ಶ್ಯಾನುಭೋಗಿಕೆ ಅಂದ್ರೆ ಏನು, ಸರಿಯಾಗಿ ರೂಲು ಹಾಕಬೇಕಾದರೇ ಆರು ವರ್ಷವಾದರೂ ರೂಲುದೊಣ್ಣೇಲಿ ಕೈಗೆಣ್ಣು ಊದೂತಂಕ ಏಟು ತಿನ್ನಬೇಕು. ಲೆಕ್ಕವೇನು ಪುಕ್ಸಟ್ಟೆ ಬರುಲ್ಲ’ – ಎಂದು ಶ್ಯಾನುಭೋಗರುಗಳು ಹೇಳುವುದನ್ನು ಕೇಳಿದ್ದಳು. +ಅವಳು ರೂಲು ಹಾಕುತ್ತಿರುವಾಗ ಅಪ್ಪಣ್ಣಯ್ಯ ಮನೆಗೆ ಬಂದ. ಅತ್ತಿಗೆ ಮಾಡೂತ್ತಿರುವ ಕೆಲಸವನ್ನು ನೋಡಿ ಅವನಿಗೆ ಕಕ್ಕಾಬಿಕ್ಕಿಯಾಯಿತು. ಕೋಪ ಬಂದುಬಿಟ್ಟಿತು. ನೇರವಾಗಿ ಗಾಣಿಗರ ಕೇರಿಗೆ ಹೋಗಿ ಅಮ್ಮನ ಕೈಲಿ ಹೇಳಿದ: ‘ನೋಡಮ್ಮ ಆ ಅವಳು ಲೆಕ್ಕದ ಬುಕ್ಕು ಹಾಳು ಮಾಡ್ತಾ ಇದಾಳೆ.’ +‘ಯಾವಳೋ?’ +‘ನಿನ್ನ ದ್ವಡ್ಡ ಸೊಸೆ. ಬುಕ್ಕಿಗೆ ರೂಲು ಹಾಕ್ತಿದಾಳೆ.’ +‘ಇದೇನೋ ಇವಳ ಮನ್‌ತನ ಹಾಳಾಗ, ಕತ್ತೆಮುಂಡೆ ತಂದು’ – ಎನ್ನುತ್ತಾ ಗಂಗಮ್ಮ ಒಂದೇ ಉಸುರಿಗೆ ಓಡಿಬಂದಳು. ಅವಳು ಬರುವ ಹೊತ್ತಿಗೆ ದ್ಯಾವರಸಯ್ಯನವರು ಕೆರೆಯ ಕಡೆಯಿಂದ ಹಿಂತಿರುಗಿ ಬಂದು ಜಗುಲಿಯ ಮೇಲೆ ಕೂತು ನೆಶ್ಯ ತೀಡುತ್ತಿದ್ದರು. ಸೊಸೆ ಒಳಗೆ ರೂಲು ಹಾಕುತ್ತಿದ್ದಳು. ‘ನಿಂಗೇನ್ ಗ್ಯಾನ ನ್ಯಟ್ಟಗಿಲ್ವೇನೆ ಭೋಸುಡಿ., ಏನ್ಮಾಡ್‌ತಿದೀಯಾ?’ – ಎಂಬ ಅವಳ ಮಾತನ್ನು ಕೇಳಿ ಚ್ಯಾವರಸಯ್ಯನವರೇ ಒಳಗೆ ಬಂದು ಕೇಳಿದರು: ‘ಯಾಕೆ, ಏನಾಯ್ತು?’ +‘ಇವ್ಳು ಲೆಕ್ಕದ ಪುಸ್ತಕ ಮುಟ್ಟಿ ಹೀಗ್ ಮಾಡ್‌ಭೌದೆ?’ +‘ಇಲ್ಲಮ್ಮ, ರೂಲು ಹಾಕು ಅಂತ ನಾನೇ ಹೇಳ್ದೆ. ನಂಗೆ ಮೈಲಿ ಹುಶಾರಿಲ್ಲ. ಲೆಕ್ಕ ಟೈಮಿಗೆ ಸರಿಯಾಗಿ ಮುಗೀಬೇಕು. ಚೆನ್ನಿಗರಾಯರಂತೂ ಏನೂ ಮಾಡೂದಿಲ್ಲ.’ +‘ಹೆಂಗಸು ಮುಂಡೆ ಕೈಲಿ ಲೆಕ್ಕ ಮುಟ್ಟುಸ್ತಾರೇನ್ರೀ?’ +‘ಕೆಟ್ಟ ಮಾತು ಯಾಕಮ್ಮಾ ಆಡ್ತೀರಾ ಮುಟ್ಟಿಸಿದ್ರೆ ಏನೂ ಆಗುಲ್ಲ.’ +‘ನಮ್ಮ ಯಜಮಾನ್ರು ಮಾಡ್ತಿದ್ದ ಶ್ಯಾನುಭೋಕಿ. ಅದರ ಲೆಕ್ಕ ಇವ್‌ಳು ಮುಟ್ಭೌದೇನ್ರೀ?’ +‘ನಿಮ್ಮ ಯಜಮಾನ್ರ ಸೊಸೆಯೇ ಅಲ್ವೇನ್ರಮ್ಮ ಇವ್ಳು? ಬ್ಯಾರೆಯೋಳೇನಲ್ಲ. ’ – ಅಷ್ಟರಲ್ಲಿ ನಂಜಮ್ಮ ರೂಲುದೊಣ್ಣೆ ಸ್ಟೀಲುಮುಳ್ಳುಗಳನ್ನು ಅಲ್ಲಿಯೇ ಬಿಟ್ಟು ಎದ್ದು ಒಳಗೆ ಹೋಗಿಬಿಟ್ಟಿದ್ದಳು. ದ್ಯಾವರಸಯ್ಯನವರೇ ಕೂಗಿ ‘ನಂಜಮ್ಮ, ಅದ್ಯಾಕ್ ಎದ್ದುಹೋದೆ? ಬಾ ನಿನ್ನ ಕೆಲ್ಸ ನೀನು ಮಾಡು. ನಿಮ್ಮತ್ತೆಮ್‌ನೋರಿಗೆ ನಾನು ಹೇಳಿದೀನಿ’ ಎಂದರು. +ಗಂಗಮ್ಮ ದೇವಸ್ಥಾನಕ್ಕೆ ಹೋಗಿ ಮಗನನ್ನು ಕರೆದುಕೊಂಡು ಬಂದರು. ಅಷ್ಟರಲ್ಲಿ ನಂಜಮ್ಮ ಮತ್ತೆ ರೂಲು ಹಾಕುತ್ತಿದ್ದಳು. ಅವಳನ್ನು ತೋರಿಸಿ ಗಂಗಮ್ಮ ಹೇಳಿದಳು: ‘ನೋಡೋ ನಿನ್ನ ಹೆಂಡ್ತಿ ನಿನ್ನ ಸಮಕ್ಕೂ ಶ್ಯಾನುಬಾಕಿ ಮಾಡೂಕ್ ಹೊರಟಿದಾಳೆ.’ +ದ್ಯಾವರಸಯ್ಯನವರು ತಾವಾಗಿಯೇ ಚೆನ್ನಿಗರಾಯರಿಗೆ ಹೇಳಿದರು: ‘ನೋಡಿ ಶ್ಯಾನುಭೋಗ್ರೇ, ನಂಗೆ ಹುಶಾರಿಲ್ಲ. ಕೂತು ರೂಲು ಹಾಕಿ ಹಾಕಿ ಬೆನ್ನುನೋವು ಬಂದಿದೆ. ಪುಸ್ತಕ ಕಟ್ಟೋದು, ರೂಲು ಹಾಕೂದು, ಎಡಗಡೆ ಲೆಕ್ಕ ಬರೆಯೋದು, ಇದೆಲ್ಲಾನೂ ಮಾಡ್ತೀನಿ ಅಂತ ನಾನು ಒಪ್ಕಂಡಿರ್‌ಲಿಲ್ಲ. ಇದನ್ನ ನೀವು ಮಾಡಿಕೊಟ್ರೇ ನಾನು ಮುಂದಿಂದು ಬರೀತೀನಿ. ನಿಮ್ಮ ಹೆಂಡ್ತಿ ಸೊಗಸಾಗಿ ರೂಲು ಹಾಕ್ತಾಳೆ. ದುಂಡಗೆ ಅಕ್ಷರ ಬರೀತಾಳೆ. ಅವಳ ಕೈಲಿ ಮಾಡ್ಸಿಸ್‌ಕೊಡುಸ್ತೀರೋ ಅಥ್ವಾ ನೀವೇ ಕೂತ್ಕಂಡ್ ಮಾಡಿ ಕೊಡ್ತೀರೋ ಹೇಳಿ. ಇಲ್ದೆ ಇದ್ರೆ ನನ್ನ ಪಾಡಿಗೆ ನಾನು ತೆಪ್ಪಗೆ ಊರಿಗೆ ಹೋಗ್ತೀನಿ.’ +ಚೆನ್ನಿಗರಾಯರಿಗೆ ಈಗ ಸಂಕಟಕ್ಕೆ ಇಟ್ಟುಕೊಂಡಿತು. ಒಂ,ದು ನಿಮಿಷ ಯೋಚಿಸಿ – ‘ಈ ಮುಂಡೇದ್ರ ಕೈಲೇ ಮಾಡ್ಸಿಸ್ಕಳಿ. ನಾನು ಭಜನೆ ಕೇಳುಕ್ ಹೋಗ್ಬೇಕು’ ಎಂದು ಹೇಳಿ ಹೊರಟುಹೋದರು. ಮಗನನ್ನು ಬೈದುಕೊಳ್ಳುತ್ತಾ ಗಂಗಮ್ಮ ಗಾಣಿಗರ ಕೇರಿಗೆ ಹೋದಳು. ಇಲ್ಲಿ ಒಬ್ಬನೇ ಇರಲು ಅವಮಾನವಾಗಿ ಅಪ್ಪಣ್ಣಯ್ಯ ಮತ್ತೆ ಬೆಸ್ತರಕೇರಿಗೆ ಪಾದ ಬೆಳೆಸಿದ. +ದ್ಯಾವರಸಯ್ಯನವರು ನಂಜಮ್ಮನಿಗೆ ಹೇಳಿದರು: ‘ಅಮ್ಮಾ, ಈ ಮನೆ ಸಮಾಚಾರ ನಂಗೆ ಮೊದಲಿನಿಂದ ಗೊತ್ತು. ನಿಮ್ಮ ಮಾವ್‌ನೋರಿಗೆ ಮೊದಲ ಹೆಂಡತಿ ಸತ್ತು ಈ ಮದುವೆಯಾದಾಗ ನಲವತ್ತು ಮೀರಿತ್ತು ಅಂತ ಕಾಣುತ್ತೆ. ನಿಮ್ಮತ್ತೆ ಬುದ್ಧಿಯೇ ಹೀಗೆ. ಅವರೇನಾದ್ರೂ ಅನ್ಲಿ. ನೀನು ಶ್ರದ್ಧೆ ಇಟ್ಟು ಲೆಕ್ಕಪತ್ರ ಎಲ್ಲಾನೂ ಕಲುತ್ಕ. ಇಲ್ದೇ ಇದ್ರೆ ಸಂಸಾರ ಉದ್ಧಾರವಾಗುಲ್ಲ. ನಿಮ್ಮ ಮಾವ್‌ನೋರು ಶ್ಯಾನುಭೋಗ್ರಾಗಿದ್ದಾಗ ಹಿಂದೆ ನಮಗೆ ಒಂದು ಸಮಯದಲ್ಲಿ ಆಗಿದ್ರು. ಅದುಕ್ಕೆ ನಾನು ನನಗೆ ತಿಳಿದಿರೋ ಲೆಕ್ಕಾನೆಲ್ಲ ನಿಂಗೆ ಹೇಳಿಕೊಡ್ತೀನಿ. ನಾನು ಹೇಳ್ದಾಗೆ ಪ್ರತಿಯೊಂದನ್ನೂ ಮಾಡು.’ +– ೨ – +ಇದಾದ ಮೂರು ತಿಂಗಳಿಗೆ ಸಾಲಾಖೈರಿನೆ ಲೆಕ್ಕ ಮುಗಿಸಬೇಕಾಗಿತ್ತು. ಶ್ಯಾನುಭೋಗಿಕೆಯ ಲೆಕ್ಕದಲ್ಲಿ ಇದು ತುಂಬ ಮುಖ್ಯವಾದುದು. ಇದನ್ನು ತಪ್ಪಿಲ್ಲದೆ ಬರೆದರೆ ಮುಂದಿನ ವರ್ಷದ ಲೆಕ್ಕಪತ್ರಗಳಲ್ಲಿ ತಪ್ಪಾಗುವ ಸಂಭವ ಇರುವುದಿಲ್ಲ. ‘ಅಮ್ಮಾ, ನಿನಗೆ ದೇವರು ಇಷ್ಟೊಂದು ಬುದ್ಧಿ ಕೊಟ್ಟಿದಾನೆ. ಉಳಿದೋರೆಲ್ಲ ನಾಲ್ಕು ವರ್ಷವಾದರೂ ಎಡ ಬಲ ಎರಡೂ ಅರ್ಥ ಮಾಡಿಕೊಂಡು ಬರೆಯುಲ್ಲ. ಕಷ್ಟವಾದರೂ ನಾನು ಹೇಳಿದ ಹಾಗೆ ಇದೆಲ್ಲ ಬರಿ. ನಾನು ನಿನಗೆ ಆಮೇಲೆ ಸಾಲಾಖೈರಿನ ಲೆಕ್ಕ ಹೇಳಿಕೊಡ್ತೀನಿ’-ಎಂದು, ಅವಳು ಬರೆಯಬೇಕಾದ ಲೆಕ್ಕವನ್ನು ವಹಿಸಿಕೊಟ್ಟು ದ್ಯವಾವರಸಯ್ಯನವರು ಊರಿಗೆ ಹೋದರು. ಅವರು ಬರುವ ದಿನದಲ್ಲಿ ಅವಳು ಎಲ್ಲವನ್ನೂ ಮುಗಿಸಬೇಕಾಗಿತ್ತು. +ನಂಜಮ್ಮನಿಗೆ ಈಗ ಆರು ತಿಂಗಳು ನಡೆಯುತ್ತಿದೆ. ಸಾತು ಹೆರಿಗೆಗೆ ತನ್ನ ತೌರಿಗೆ ಹೋಗಿದ್ದಾಳೆ. ಹೆರಿಗೆಯಾಗಿದೆಯೋ ಇಲ್ಲವೇ ಇವರಿಗೆ ತಿಳಿದಿಲ್ಲ. ಮನೆಯ ಕೆಲಸವನ್ನೂ ಮಾಡಿಕೊಂಡು ಬಸುರಿ ಒಂದೇಸಮನೆ ಕೂತು ಲೆಕ್ಕ ಬರೆಯಲಾರಳು. ಹೆಂಗಸಾದ ಮುಂಡೆ ಗಂಡಸಿನ ಹಾಗೆ ಲೆಕ್ಕ ಬರೆಯೋಕೆ ಕೂತ್ರೆ ನಾನ್ಯಾಕೆ ಕೆಲಸ ಮಾಡಬೇಕು?-ಎಂದು ಗಂಗಮ್ಮ ಅಡಿಗೆಯನ್ನೂ ಮಾಡದೆ ಹಟ ಹಿಡಿದಿದ್ದಳು. ಒಂದು ಮದ್ಯಾಹ್ನ ಊಟವಾದ ಮೇಲೆ ನಂಜಮ್ಮ ಬರೆಯುತ್ತಿದ್ದಳು. ಚೆನ್ನಿಗರಾಯ ಅಪ್ಪಣ್ಣಯ್ಯ, ಇಬ್ಬರೂ ಅದೇ ತೊಟ್ಟಿಯಲ್ಲಿ ಮಲಗಿ ಗೊರಕೆ ಹೊಡೆಯುವುದರಲ್ಲಿ ಸ್ಪರ್ಧಿಸುತ್ತಿದ್ದರು. ಗಂಗಮ್ಮ ಬಾಗಿಲಿನ ಹತ್ತಿರ ಕೂತು ರಾತ್ರಿಯ ತನ್ನ ಫಲಾರಕ್ಕೆ ಉಸಲಿ ಮಾಡಲು ಹೆಸರುಕಾಳು ಆರಿಸುತ್ತಿದ್ದಳು. ಹೆಣ್ಣು ಮಗು ಪಾರ್ವತಿ ಒಳಗೆ ಮಲಗಿತ್ತು. +ಹೊರಗೆ ಕಟ್ಟಿ ಹಾಕಿದ್ದ ಹಸುವನ್ನು ಯಾರೂ ಬಿಚ್ಚಿ ಮೇಯಿಸಲು ಹೊಡೆದುಕೊಂಡು ಹೋಗಿರಲಿಲ್ಲ. ಅದಕ್ಕೆ ಒಣ ಹುಲ್ಲನ್ನಾದರೂ ಹಾಕಿ ನೀರು ಸಹ ಇಟ್ಟಿರಲಿಲ್ಲ. ಎರಡು ಸಲ ಗಟ್ಟಿಯಾಗಿ ಕಿರಿಚಿಕೊಂಡು ಹಸು ಕಟ್ಟಿದ್ದಲ್ಲಿಯೇ ದಡಬಡನೆ ಸುತ್ತುವರಿಯಲು ಪ್ರಾರಂಭಿಸಿತು. ನಂಜಮ್ಮ ಗಂಡನನ್ನು ಕೂಗಿದಳು: ‘ಕೇಳ್ತೇ?’ +ಅವರಿಗೆ ಎಚ್ಚರವಾಗಲಿಲ್ಲ ಅಪ್ಪಣ್ಣಯ್ಯ ಮಗ್ಗುಲು ಬದಲಿಸಿದ. ಅವಳು ಅವನಿಗೇ ಹೇಳಿದಳು: ‘ಅಪ್ಪಣ್ಣಯ್ಯಾ, ಎಚ್ಚರವಾಯ್ತೇ? +‘ಊಂ’-ಎಂದು ಮತ್ತೆ ಅವನು ಮುಸುಕು ಎಳೆದುಕೊಂಡ. +‘ನಮ್ಮದೆಲ್ಲ ಊಟವಾಯ್ತು. ಗೋತಾಯಿ ಉಪಾಸ ಇದೆ. ಅದನ್ನ ಹೊಡ್‌ಕಂಡು ತ್ವಾಟಕ್ ಹೋಗಿ ಮೇಯಸ್‌ಕಂಡ್ ಬಂದಿದ್ರೆ ಆಗ್ತಿರ್‌ಲಿಲ್ವೆ?’ +‘ಊಂ’-ಎಂದು ಅವನು ಮತ್ತೆ ಗಟ್ಟಿಯಾಗಿ ಉಸಿರೆಳೆದ. +ಹತ್ತು ನಿಮಿಷದ ಮೇಲೆ ನಂಜಮ್ಮ ಎಂದಳು: ‘ಅದು ದಿನಕ್ಕೆರಡು ಸರ್ತಿ ಹಾಲು ಕೊಡಬೇಕು. ಅದರ ನಿಗ ಮಾತ್ರ ಯಾರೂ ಮಾಡೂಹಾಗಿಲ್ಲ. ಇಷ್ಟು ಸೋಮಾರಿಗಳಾದ್ರೆ ದೇವರು, ತಿನ್ನುವ ಅನ್ನ ಹ್ಯಾಗ್ ಕೊಡ್‌ಬೇಕೋ!’ +ಈ ಮಾತಿನಿಂದ ಗಂಗಮ್ಮನಿಗೆ ಕೋಪ ಬಂತು: ‘ಏನೇ ನೀನು ಬಗುಳ್‌ತಿರೋದು?’ – ಎಂದು ಕೇಳಿದಳು. +‘ನಾನೇನು ತಪ್ಪಿನ ಮಾತು ಅನ್ಲಿಲ್ಲ. ಹಸೂನ ಪು‌ಆಸ ಕಟ್ಟಿದೆಯಲ್ಲಾ ಅಂತ ಅಂದೆ.’ +‘ಅಂಥೋಳು ನೀನೇ ಹೋಗಿ ಮೇಯಿಸ್ಕಂಡ್ ಬಾ.’ +‘ಇಲ್ಲಿ ಈ ಲೆಕ್ಕ ಯಾರು ಬರೆಯೋರು?’ +‘ಆ ಹಾ ಹಾ ಹಾ ತಾಟಗಿತ್ತಿ. ಲೆಕ್ಕ ಬರೀತೀಯಾ ಅಂತ ಸುಬೇದಾರ್ರ ದೌಲತ್ತು ಬಂತೇನೆ ನಿಂಗೆ? ಬೆದೆ ಹತ್ತಿ ಕುಣೀತಿದೀ ಏನೇ ಕಳ್ಳಮುಂಡೆ?’ +ಕಂಠೀಜೋಯಿಸರು ಇದ್ದಕ್ಕಿದ್ದಹಾಗೆಯೇ ತಲೆ ತಪ್ಪಿಸಿಕೊಂಡು ಹೋಗಿ ಇನ್ನು ಅವರು ಬರುವ ಸಂಭವವೂ ಕಡಿಮೆಯಾದಮೇಲೆ ಈ ಸೊಸೆಯ ಬಗೆಗೆ ಗಂಗಮ್ಮನಿಗೆ ಸ್ವಲ್ಪವೂ ಭಯ ಉಳಿದಿರಲಿಲ್ಲ. ಈ ಮುಂಡೆ ರಂಡೆ ಮಾತುಗಳನ್ನು ಕೇಳುವುದು ನಂಜಮ್ಮನಿಗೂ ಅಭ್ಯಾಸವಾಗಿಹೋಗಿತ್ತು. +ಅಮ್ಮನ ಮಾತಿನಿಂದ ಎಚ್ಚರವಾದ ಅಪ್ಪಣ್ಣಯ್ಯ ಮಧ್ಯಾಹ್ನದ ನಿದ್ರೆಗೆ ಮಧ್ಯದಲ್ಲೇ ಭಂಗವಾದುದರಿಂದ ಕುಪಿತನಾಗಿ – ‘ಏನಮ್ಮಾ ಅದು?’ ಎಂದು ಹೊರಳಿ ಕೇಳಿದ. +‘ನಾನು ಲೆಕ್ಕ ಬರೆದು ಸುಬೇದಾರಿಕೆ ಮಾಡ್ತೀನಿ. ನೀವು ತಿಂದ್‌ಕಂಡು ಬಿದ್ದಿದೀರಾ ಎದ್ದು ಹೋಗಿ ದನ ಕಾಯ್ಕಂಡ್ ಬರ್ಲಾ ಸೂಳೇಮಗನೆ ಅಂತ ನಿನ್‌ಮ್ಯಾಲೆ ಹುಕುಂ ಮಾಡ್ತಾಳೆ ನೋಡು ಇವ್ಳು.’ +ಅಪ್ಪಣ್ಣಯ್ಯ ಕೆರಳಿ ಎದ್ದು ಕೂತು ಕೇಳಿದ: ‘ಏನಲೇ. ಹೀಗೆಲ್ಲ ಅಂತೀಯಾ ಗ್ಯಾನಗೀನ ಎತ್ಲಾಗಿದೆ?’ +‘ಅಮ್ಮಾ, ಸುಳ್ಳು ಸುಳ್ಳು ಮಾತು ಯಾಕಂತೀರಾ? ದೇವರಾಣೆ ಹೇಳಿ. ನಾನು ಹಾಗಂದ್ನೆ?’ +‘ನೋಡೋ ಅಪ್ಪಣ್ಣಯ್ಯ. ನಾನು ದೇವರಾಣೆ ಇಡಬೇಕೆ? ಸುಳ್ಹೇಳುಕ್ಕೆ ನಾನೇನು ಹಿಟ್ಟು ತಿಂದಿದೀನೋ ಹೇಲ್ ತಿಂದಿದೀನೋ? ನಿಮ್ಮಮ್ಮುನ್ನ ಸುಳ್ಳುಮುಂಡೆ ಅಂದ್ಲಲ್ಲಾ ಇವ್ಳು. ಅದೇನು ಮಕಾ ನೋಡ್ತೀಯಾ, ಎತ್ತಿ ಒಂದು ಸಲ ಒದಿಯೋ ಈ ಲೌಡಿಗೆ?’-ಎಂದು ಗಂಗಮ್ಮ ಹೇಳಿ ಮುಗಿಸುವುದೇ ತಡ, ಅಪ್ಪಣ್ಣಯ್ಯ ಎದ್ದು ಬಂದು ಬಲಗಾಲನ್ನು ಎತ್ತಿ ಅತ್ತಿಗೆಯ ಬೆನ್ನಿಗೆ ಒದೆದ. ಅವಳು ಹಾಗೆಯೇ ನೆಲಕ್ಕೆ ಉರುಟಿದಳು. ಇನ್ನೊಂದು ಸಲ ಕಾಲನ್ನು ಎತ್ತಿ-‘ನಿನ್ನ ಗುಂಡಿ ತೆಗೆದು ಹೂತುಬಿಡ್ತೀನಿ ನೋಡು, ನಮ್ಮಮ್ಮುನ್ನ ಹಾಗಂದ್ರೆ ಎಂದು ಗರ್ಜಿಸುತ್ತಿದ್ದ. ಅಷ್ಟರಲ್ಲಿ ಹೊರಗಿನಿಂದ ಯಾರೋ ಪೋಲೀಸಿನವರು ಬಂದರು. ಕಾಖಿ ಷರಾಯಿ, ಕಾಖಿ ಹ್ಯಾಟು, ಕಾಲಿಗೆ ಬೂಟು, ಕೈಲಿ ಚರ್ಮದ ಚೀಲ, ಕರಿಯ ಕೋಟು. ಅಂದ್ರೆ ಪೋಲೀಸಿನವರೇ. ಅವರ ಹಾಗೆಯೇ ಇಬ್ಬರು ಕಾಖಿ ಲಪ್ಪಟಿ ಸುತ್ತಿದವರು ಚರ್ಮದ ಚೀಲ, ಸರಪಳಿ, ಸಲಾಕಿ, ಏನೇನೋ ಹಿಡಿದು ಬಂದಿದ್ದಾರೆ. ಅಪ್ಪಣ್ಣಯ್ಯನ ಎದೆ ಹಾರಿಹೋಯಿತು. ‘ಅಯ್ಯಯ್ಯಪ್ಪಾ ನಾ ಕೆಟ್ನಲ್ಲೊ’-ಎಂದು ಬಾಗಿಲಿನಿಂದ ನುಗ್ಗಿ ಬೀದಿಗೆ ಓಡಿಹೋದ. ಅಲ್ಲಿಂದ ಅವನು ಪಕ್ಕದ ಓಣಿಯಲ್ಲಿ ನುಗ್ಗಿದ ವೇಗಕ್ಕೆ ಓಣಿಯ ನಾಯಿಗಳೆಲ್ಲ ಬೌ ಎಂದವು. +ಇವರನ್ನು ಕಂಡು ಗಂಗಮ್ಮನಿಗೂ ದಿಗ್ಬ್ರಮೆಯಾಯಿತು. ನಡುಗುತ್ತಾ ಎದ್ದು ನಿಂತುಕೊಂಡಳು. ಅಪ್ಪಣ್ಣಯ್ಯ ಹೀಗೆ ಕಿರುಚಿಕೊಂಡು ಓಡಿದ ಶಬ್ದಕ್ಕೆ ಚೆನ್ನಿಗರಾಯರೂ ಎಚ್ಚರವಾಗಿ ಕುಳಿತರು. ಒಳಗೆ ಮಗು ಅಳಲು ಪ್ರಾರಂಭಿಸಿತು. ಹಾಗೆಯೇ ತಿರುಗಿ, ಬಂದವರನ್ನು ನೋಡಿದ ನಂಜಮ್ಮ ಎದ್ದು ಮಗು ಎತ್ತಿಕೊಳ್ಳಲು ಒಳಗೆ ಹೋಗಲು ಏಳುತ್ತಾಳೆ: ಸೊಂಟ ವಿಪರೀತ ನೋಯುತ್ತಿದೆ. ನರ ಹೊರಳಿಯೋ ಉಳುಕಿಯೋ ಇದೆ. ಹಾಗೆಯೇ ಗೂನುಬೆನ್ನು ಮಾಡಿಕೊಂಡು ಅವಳು ಒಳಗೆ ಹೋಗುವ ಹೊತ್ತಿಗೆ ಚೆನ್ನಿಗರಾಯರು ಮೇಲೆ ಎದ್ದು ಭಯಭಕ್ತಿಗಳಿಂದ ಬಂದವರನ್ನು ಮಾತನಾಡಿಸಿದರು: ‘ಮ ಮ ಮಹಾಸ್ವಾಮಿಗಳು ದ ದ ದಯಮಾಡಿಸ್ಬೇಕು.’ +‘ನೀವೇ ಏನ್ರೀ, ಶ್ಯಾನುಭೋಗ ಚೆನ್ನಿಗರಾಯರು?’ +‘ಹೂಂ ಸ್ವಾಮಿ.’ +‘ಅವರ್ಯಾರು ನಿಮ್ಮ ತಮ್ಮನೋ ಹೆಂಡ್ತಿ ಒದೀತಿದ್ದೋರು?’ +‘ಅವ್ಳು ನನ್ನ ಹೆಂಡ್ತಿ ಸ್ವಾಮಿ.’ +‘ಓ, ಅತ್ತಿಗೇನ ಒದೀತಿದ್ರೊ?’ +‘ಇಲ್ಲ ಸ್ವಾಮಿ.’ +‘ಏನ್ರೀ, ಸರ್ಕಾರಿ ಅಧಿಕಾರಿಯಾಗಿ ನೀವು ಸುಳ್ ಹೇಳ್ತೀರಿ? ಸರಿಯಾಗಿ ಹೆಂಡ್ತಿ ನೋಡ್ಕೊಳ್ಳುಕ್ ಆಗುಲ್ವೆ?’ +ಗಂಗಮ್ಮನ ಮೈ ಬೆವರುತ್ತಿತ್ತು. ಬಂದವರು ಇದಕ್ಕಿಂತ ಹೆಚ್ಚು ಏನೂ ಹೇಳಲಿಲ್ಲ. ಚೆನ್ನಿಗರಾಯರು ಜಗುಲಿಯ ಮೇಲೆ ಒಂದು ಮದಲಿಗೆ ಹಾಕಿ ಅವರನ್ನು ಕೂರಿಸಿ ಕೈ ಜೋಡಿಸಿ ನಿಂತುಕೊಂಡಿದ್ದರು. ಅದೇ ಸಮಯದಲ್ಲಿ ಗಂಗಮ್ಮ ಮನೆಯಿಂದ ನೇರವಾಗಿ ಬೆಸ್ತರ ಕೇರಿಗೆ ಹೋದಳು. ಮಾಟನ ಮನೆಗೆ ಹೋಗಿ ಕೇಳಿದಾಗ ಅವನು ಇವಳ ಹತ್ತಿರ ಬಂದು ಪಿಸುಗುಟ್ಟಿದ: ‘ಅಟ್ಟದ ಮ್ಯಾಲೆ ಕುರುಂಬಾಳೆವಳ್ಗೆ ಅವಿಸಿಟ್ಟಿವ್ನಿ.’ ಗಂಗಮ್ಮನೇ ಏಣಿ ಹಾಕಿಕೊಂಡು ಅಟ್ಟಕ್ಕೆ ಹತ್ತಿ ಮಗನ ಹತ್ತಿರ ಬಂದು ಪಿಸುಗುಟ್ಟಿದಳು: ‘ಅವರ ಜೊತೆ ಬಂದಿರೋರ ಹತ್ರ ನೋಡಿದೆಯಾ? ಹಗ್ಗದ ಸಿಂಬಿ ತಂದ ಹಾಗೆ ಸರಪಣಿ ತಂದಿದಾರೆ. ಉದ್ದನೇ ಹಾರೆ ಹಾಗಿರೋ ಸಲಾಕಿ ಇದೆ. ಸಿಕ್ಕಿಬಿಟ್ರೆ ಸರಪಣೀನ ಕೈಗೆ ಬಿಗಿದು ಹಾರೇಲಿ ಗುಂಡಿ ತೋಡಿ ನೇಣುಗಟ್ತಾರೋ ಏನೋ. ಅವಳ ಅಣ್ಣ ಕಲ್ಲೇಶ ಪೋಲೀಸ್ನೋನಾಗಿದ್ದ. ಅವರ ಕಡೆಯೋರು. ನೀನು ತ್ವಾಟದ ಕಡೆಯಿಂದ ವಾಟ ಹ್ವಡ್‌ದುಬಿಡು. ಇನ್ನೊಂದ್ ಐದಾರು ತಿಂಗ್ಳು ಇಲ್ಲೆಲ್ಲೂ ತಲೆಹಾಕ್ಬೇಡ. ಜಾವಗಲ್ಲು ಕಡಿಗೆ ಹೊರಟ್ಹೋಗು.’ +ಅಪ್ಪಣ್ಣಯ್ಯ-‘ಇನ್ನೇನು ಗತಿಯಮ್ಮಾ?’ ಎಂದು ಕಣ್ಣನ್ನು ಅರಳಿಸಿದ. ‘ನನ್ನ ಕಂದಾ, ಬ್ಯಾಗ ಹ್ವರ್ಡೋ. ಈ ಕೆಟ್ಟಗಾಲಿನ ಮುಂಡೆ ನಮ್ಮನೆ ಸೇರಿದ್ಲು. ನಮಗೆ ಬಂತು ನೋಡು ಗ್ರಾಚಾರ’-ಎಂದಳು. ಅವನು ಕುರುಂಬಾಳೆಗಳ ಒಟ್ಟಿನಿಂದ ಹೊರಕ್ಕೆ ಬಂದು ಏಣಿಯಿಂದ ಸರಸರನೆ ಇಳಿದು ಹೊರಬಾಗಿಲಿನಲ್ಲಿ ಒಂದು ಸಲ ಎರಡು ಕಡೆಗೂ ಇಣಿಕಿ ನೋಡಿ ಹುಲ್ಲುಮೆದೆಯ ಹಿತ್ತಿಲುಗಳ ಬೇಲಿಯ ಸಂದಿಯಿಂದ ಬಗ್ಗಿ ಓಟ ಹೊಡೆದುಬಿಟ್ಟ. ಅವನು ಕೆರೆಯ ಏರಿ ಇಳಿದು ಮರೆಯಾಗುವತನಕ ಹಿತ್ತಿಲಿನ ಬೇಲಿಯ ಸಂದಿಯಿಂದ ನೋಡುತ್ತಿದ್ದು ಗಂಗಮ್ಮ ಸ್ವಲ್ಪ ಧೈರ್ಯ ತಂದುಕೊಂಡಳು. +ಇಲ್ಲಿ ಮನೆಗೆ ಬಂದಿದ್ದವರು ಸರ್ಕಾರಿ ಮೋಜುಂದಾರರು. ಸಂಸ್ಥಾನದಲ್ಲಿರುವ ವ್ಯವಸಾಯದ ಭೂಮಿಯನ್ನೆಲ್ಲ ಅದರದರ ಹಿಡುವಳಿದಾರರ ಲೆಕ್ಕದ ಪ್ರಕಾರ ಹೊಸದಾಗಿ ಅಳೆದು ಅದರ ವಿಸ್ತೀರ್ಣ ಮತ್ತು ಆಕಾರಗಳನ್ನು ನಿರ್ಧರಿಸಿ ಇಂಡೆಕ್ಸ್ ತಯಾರಿಸಲು ರೆವಿನ್ಯೂ ಕಮಿಶನರು ಆರ್ಡರ್ ಮಾಡಿದ್ದರು. ಹೊಸ ಅಳತೆಗಾಗಿ ನಿಯೋಜಿತರಾದ ಮೋಜುಂದಾರರು ತಮ್ಮ ಶಿಬ್ಬಂದಿಯೊಡನೆ ಇಲ್ಲಿಗೆ ಬಂದಿದ್ದರು. ಸುಮಾರು ಮೂರು ತಿಂಗಳು ರಾಮಸಂದ್ರದಲ್ಲಿ ಕ್ಯಾಂಪ್ ಮಾಡಿ ಸುತ್ತಮುತ್ತಣ ಹಳ್ಳಿಗಳ ಭೂಮಿಯನ್ನೆಲ್ಲ ಅಳೆಯುವುದು ಅವರ ಕೆಲಸವಾಗಿತ್ತು. ಅವರ ವಾಸದ ಏರ್ಪಾಟು ಮಾಡುವುದರಿಂದ ಹಿಡಿದು ತಳವಾರ, ಕುಳವಾಡಿ, ಮೊದಲಾದವರ ಸಹಾಯ ಕೊಡಿಸುವ ಜವಾಬ್ದಾರಿ ಶ್ಯಾನುಭೋಗರದ್ದು. +– ೩ – +ಎರಡನೇ ಬಾಣಂತನಕ್ಕೆ ಅಕ್ಕಮ್ಮನೇ ಗಾಡಿ ಹೂಡಿಸಿಕೊಂಡು ಬಂದು ನಂಜುವನ್ನು ಕರೆದುಕೊಂಡು ಹೋದಳು. ಈಗ ಕಲ್ಲೇಶನ ಎಡಗೈ ಇನ್ನೂ ಸ್ವಲ್ಪ ಉತ್ತಮವಾಗಿದೆ. ಎರಡು ಕೈಯಲ್ಲಿಯೂ ತಬ್ಬಿ ತೆಂಗಿನ ಮರ ಹತ್ತುತ್ತಾನೆ. ಹೊಲಗದ್ದೆಯ ಕೆಲಸವನ್ನೂ ಅಲ್ಪ ಸ್ವಲ್ಪ ಮಾಡುತ್ತಾನೆ. ಅವನ ಹೆಂಡತಿ ಹಳ್ಳಿ ಬೇಡವೆಂದರೂ ಅವನಿಗೆ ಸರ್ಕಾರೀ ನೌಕರಿ ಸಿಕ್ಕುವುದು ಸಾಧ್ಯವಿಲ್ಲ. ಅವನಿಗೆ ಅದು ಬೇಡವೂ ಬೇಡ. ಆದರೆ ಅವಳು ಹಳ್ಳಿಗೆ ಹೊಂದಿಕೊಳ್ಳಲಾರಳೋ, ಅಥವಾ ಸ್ವಾಭಾವವೇ ಹಾಗೋ, ಅಂತೂ ಅಜ್ಜಿ ಮೊಮ್ಮಗ, ಇಬ್ಬರಿಗೂ ಅವಳಿಂದ ಸುಖವಿಲ್ಲ. +ನಂಜು ಬಾಣಂತನಕ್ಕೆ ಬಂದಾಗ ಜೊತೆಯಲ್ಲಿ ಎರಡೂವರೆ ವರ್ಷದ ಮಗು ಪಾರ್ವತಿಯೂ ಬಂದಿತ್ತು. ಕಲ್ಲೇಶ ಅದನ್ನು ಎತ್ತಿ ಮುದ್ದಿಸುತ್ತಿದ್ದ. ಒಂದು ದಿನ ಅವನು ಗದ್ದೆಯ ಹತ್ತಿರಕ್ಕೆ ಹೋಗಿದ್ದಾಗ ಕಮಲು ತನಗೆ ತಾನೇ ಹೇಳಿಕೊಳ್ಳುವವಳಂತೆ ಗಟ್ಟಿಯಾಗಿ ಎಂದಳು: ‘ಹಂದಿ ಈದ ಹಾಗೆ ಬ್ಯಾಗ ಬ್ಯಾಗ ಬಸುರಿಯಾಗಿಬಿಟ್ರೆ ಆಯ್ತೆ? ಗಂಡನ ಮನೆಯೊರಿಗೆ ಬಾಣಂತನ ಮಾಡೋ ಯೋಗ್ತಿ ಇಲ್ಲದ ಮ್ಯಾಲೆ ಬಸ್‌ರಿ ಯಾಕಾಗಬೇಕೋ,! ತೌರು ಮನೇರು ಮಾಡ್ತಾರೆ ಮಾಡ್ತಾರೆ ಅಂತ ಅವರ ರಕ್ತ ಎಷ್ಟು ಹೀರಿದ್ರೂ ಸಾಲ್ದು.’ +ಈ ಮಾತು ನಂಜುವಿಗೆ ಕೇಳಿಸಿತು. ತನಗೆ ಒಳ್ಳೆಯ ಅತ್ತೆ ಸಿಕ್ಕಲಿಲ್ಲ; ಹಾಗೆಯೇ ಒಳ್ಳೆಯ ಅತ್ತಿಗೆಯೂ ಸಿಕ್ಕಲಿಲ್ಲ. ತನ್ನ ಅದೃಷ್ಟವೇ ಹೀಗೆ. ಈಗ ಇನ್ನೂ ಏಳು ತಿಂಗಳು ಇನ್ನು ಹೆರಿಗೆಯಾಗಿ ಮಗುವಿಗೆ ಮೂರು ತಿಂಗಳಾದರೂ ಆಗಬೇಕಾದರೆ ಐದಾರು ತಿಂಗಳಾದರೂ ಇಲ್ಲಿರಬೇಕು. ಸುಮ್ಮನೆ ಊರಿಗೆ ಹೋಗಿಬಿಡುವುದೇ ಚನ್ನ. ಆದರೆ ಅಲ್ಲಿ ಅತ್ತೆಯ ಕಾಟ. ತೌರುಮನೆಗೆ ಬಾಣಂತಿತನಕ್ಕೆ ಹೋಗಿದ್ದವಳು ಹಾಗೆಯೇ ವಾಪಸು ಹೋದರೆ ಅತ್ತೆ ಕುಕ್ಕದೆ ಬಿಡುವುದಿಲ್ಲ. ಇನ್ನು ಹೆಂಡತಿಯ ಪರವಾಗಿ ಒಂದು ಮಾತಾದರೂ ಆಡುವ ಗಂಡನೇ! ಪುಣ್ಯಕ್ಕೆ ಹೊಟ್ಟೆ ತೊಳಕೋಬೇಕು. ಅವಳ ಕಣ್ಣಿನಲ್ಲಿ ಒಂದು ಹನಿ ನೀರು ತುಳುಕಿತು. +ಕಮಲುವಿನ ಮಾತು ಅಕ್ಕಮ್ಮನಿಗೂ ಕೇಳಿಸಿತ್ತು. ತಾಳ್ಮೆ ಇಟ್ಟುಕೊಂಡಿದ್ದ ಅವಳು ಮೊಮ್ಮಗಳ ಕಣ್ಣಿನಿಂದ ಉರುಳಿದ ನೀರನ್ನು ಕಂಡು ಕ್ರುದ್ಧಳಾದಳು. ಕಮಲುವಿನ ಮುಂದೆ ಹೋಗಿ ನಿಂತು ಕೇಳಿದಳು: ‘ಪ್ರಸ್ತ ಮಾಡ್ಕಂಡ್ ಬಂದು ಒಂದು ವರ್ಷವಾದ್ರೂ ಬಸ್‌ರಿಯಾಗೂ ಯೋಗ್ತಿ ಇಲ್ಲದೋಳೇ. ಅವ್ಳುನ್ನ ಯಾಕೆ ಹಂದಿ ಅಂತೀಯೇ? ಕಟ್ಟೇಲಿ ನೀರಿಲ್ಲ, ಹೊಟ್ಟೇಲಿ ಮಕ್ಳಿಲ್ಲ ಅಂತ ನಿನ್ನಂತ ಪಾಪಿ ಹೊಟ್ಟೇಲಿ ಬಸುರು ಹ್ಯಾಗೆ ನಿಲ್ಲುತ್ತೆ ಹೇಳು.’ +‘ನಿನ್ನ ಮೊಮ್ಮಗ ಹೋಗಿ ಪೋಲೀಮುಂಡೇರ ಜೊತೆ ಎಲ್ಲ ಮಲೀಕಂಡು ಬರ್ತಿದ್ರೆ ಮನೆ ಹೆಂಡ್ತಿ ಬಸ್‌ರಿ ಹ್ಯಾಗಾಗ್ತಾಳೆಯೇ ಮುದುಕಿ? ಇಂಥಾ ಪೋಲೀಸೂಳೇಮಕ್ಳು ನಿಮ್ಮನೇಲಿ ಹುಟ್ಟಿರೂದು.’ +‘ನಾಚಿಕೆ ಇಲ್ದೆ ಮಾತಾಡಬ್ಯಾಡ, ಕತ್ತೆ ಲೌಡಿ. ನ್ಯಟ್ಟಗೆ ಗಂಡನ ಜೊತೆ ಮಲೀಕಳೂದು ಕಲ್ತಿದ್ರೆ ಗಂಡ್‌ಸ್ಯಾಕ್ ಹ್ವರಗಡೆ ಹೋಕ್ತಾನೆಯೆ? ನೀನು ಹೆಣ್ಣುಜಾತೀಲಿ ಹುಟ್ಟಿದೀಯೇನೇ?’ +ಈ ಮಾತಿನಿಂದ ನಂಜುವಿಗೆ ಹೊಸ ವಿಷಯಗಳು ತಿಳಿದವು. ಆದರೂ ಅವಳು ಹತ್ತಿರ ಬಂದು ಹೇಳಿದಳು: ‘ಅಕ್ಕಮ್ಮ, ಮೆಲ್ಲಗಾದರೂ ಮಾತಾಡಿ. ಮಗ್ಗಲು ಮನೆಯೋರಿಗೆ ಕೇಳಿದರೆ?’ +‘ಮಗ್ಗಲು ಮನೆಯೋರೇನು, ಈ ಊರ್ನಲ್ಲಿ ಎಲ್ರಿಗೂ ಗೊತ್ತಿದೆ, ಈ ಚಿನ್ನಾಲಿ ಕತೆ. ಇವ್ಳು ಬಂದು ಒಂದು ತಿಂಗ್ಳಿಗೇ ನಮ್ಮನೆ ಮರ್ಯಾದಿ ತೆಗುದ್ಲು. ಕೆರಿಗ್ ನೀರಿಗ್ಹೋದಾಗ್ಲೆಲ್ಲ ನಮ್ಮನೆ ವಿಷಯಾನ ಊರೋರ್ಗೆಲ್ಲ ಹೇಳ್ಕಂಡ್ ಬತ್ತಾಳೆ. ವಂಶೀಕರ ಮನ್ಲಿ ಹುಟ್ಟಿ ಬೆಳೆದಿದ್ದ ಹೆಣ್ಣಾದ್ರೆ ತಾನೇ ಇದು!’ +‘ಲೇ ಮುದುಕಿಮುಂಡೆ, ನಮ್ಮಪ್ಪನ ಮನೆಯೋರ್ನ ಅಂತೀಯಾ? ನಮ್ಮನೆ ಬಚ್ಚಲು ಗುಂಡೀಲಿ ಮಡಿ ಉಟ್ಕಂಡ್ರೆ ನಿಂಗೆ ಪುಣ್ಯ ಬರುತ್ತೆ.’ +‘ಅಕ್ಕಮ್ಮ, ನೀನು ಇನ್ನು ಮಾತಾಡಬ್ಯಾಡ, ಒಳಿಕ್ನಡಿ’-ಎಂದು ನಂಜು ಅಜ್ಜಿಯನ್ನು ಒಳಗೆ ಕರೆದುಕೊಂಡು ಹೋದಳು. ಮತ್ತೆ ಅಂಗಳಕ್ಕೆ ಬಂದು ಅತ್ತಿಗೆಗೆ ಹೇಳಿದಳು: ‘ಅತ್ತಿಗ್ಯಮ್ಮ, ಸ್ವಲ್ಪ ನಿಧಾನವಾಗಿರಬಾರದೆ? ನಮ್ಮ ನಮ್ಮ ಮನೆ ವಿಷಯ ಬಾಕಿಯೋರಿಗೆ ತಿಳುದ್ರೆ ಹಿಂದ್ಗಡೆ ಆಡ್ಕಂಡ್ ನಗ್ತಾರೆ.’ +‘ಗಂಡನ ಮನ್ಲಿ ತಿನ್ನುಕ್ ಹಿಟ್ಟಿಲ್ದೆ ಬಾಣಂತನಕ್ಕೆ ಅಂತ ಬಂದಿದೀಯಾ. ನಂಗ್ ಬುದ್ಧಿ ಹೇಳುಕ್ ಬರ್‌ಬ್ಯಾಡ ಹೋಗು.’ +ನಂಜು ಸುಮ್ಮನೆ ಒಳಗೆ ಹೋದಳು. ಕಮಲು ಮಲಗುವ ಕೋಣೆಗೆ ಹೋಗಿ ಚಾಪೆಯ ಮೆಲೆ ಮಕಾಡೆ ಮಲಗಿಕೊಂಡಳು. ಕೋಪಗೃಹದಲ್ಲಿ ಕೈಕಾದೇವಿಯು ಬಿದ್ದುಕೊಂಡಂತೆ ತಲೆ ಕೆದರಿಕೊಂಡು ಹಣೆಯ ಕುಂಕುಮ ಅಳಿಸಿಹಾಕಿ, ಮೊದಲೆ ದಪ್ಪವಾಗಿದ್ದ ಮುಖವನ್ನು ಇನ್ನೂ ಊದಿಸಿಕೊಂಡಳು. ಇನ್ನು ಯಾರೂ ಅವಳನ್ನು ಮಾತನಾಡಿಸಲಿಲ್ಲ. +ಒಂದು ಗಂಟೆಯ ಹೊತ್ತಿಗೆ ಕಲ್ಲೇಶ ಮನೆಗೆ ಬಂದು ಸ್ನಾನ ಮಾಡಿದ. ಹೆಂಡತಿಯ ಸುಳಿವು ಇಲ್ಲದುದನ್ನ ಅವನು ಗಮನಿಸಲಿಲ್ಲ. ಆದರೆ ಕಮಲು ಸುಮ್ಮನಿರುವುದು ಹೇಗೆ? ಒಳಗಿನಿಂದ ಪಿಟಿಪಿಟಿ ಬಯ್ದುಕೊಳ್ಳಲು ಪ್ರಾರಂಭಿಸಿದಳು. ಅವನ ಗಮನ ಅತ್ತ ಹರಿಯಿತು. ಓರೆ ಮಾಡಿದ್ದ ಕೋಣೆಯ ಬಾಗಿಲಿನ ಹತ್ತಿರ ನಿಂತುಕೊಂಡ. ನಿಮಿಷಕ್ಕೆ ನೂರು ಶಬ್ದದಷ್ಟಾದರೂ ವೇಗವಾಗಿ ಆಡುತ್ತಿದ್ದ ಅವಳ ಪಿಟಿಪಿಟಿ ಸ್ಪಷ್ಟವಾಗಿ ಕೇಳಿಸಿತು: ‘ಸೂಳೇ ಮಕ್ಳ ಮನೆ ಹಾಳಾಗ. ಇವರ ವಂಶ ಅಡಗ. ಇವರ ಮನೆ ಗುಡಿಸಿ ಗುಂಡಾಂತರವಾಗ ಈ ಮುಂಡೇವೆಲ್ಲ ಮಾರಿ ಬಡಿದು ಸಾಯ. ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು ಮುಂಡೆ ಮುಂಡೆ ಮುಂಡೆ, ಮುಂಡೇಮಕ್ಳು…..’ +ಗದ್ದೆಯಲ್ಲಿ ದುಡಿದು ಬಿಸಿಲಿನಲ್ಲಿ ಮನೆಗೆ ಬಂದಿದ್ದ ಕಲ್ಲೇಶ ಕೇಳಿದ: ‘ಯಾರುನ್ನೇ ಬೋಸುಡಿ ನೀನ್ ಬೈಕತ್ತಿರಾದು?’ +‘ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು ಮುಂಡೇಮಕ್ಳು……’ ಎಂದು ಮಂತ್ರ ಹೇಳುತ್ತಾ ಅವಳು ತನ್ನ ಎರಡು ಕೈಗಳನ್ನೂ ಜೋಡಿಸಿ ಚಟಾಕಿಯ ಸರ ಹಾರಿಸಿದಂತೆ ಪಟಪಟನೆ ನೆಟಿಕೆ ಮುರಿದಳು. +‘ಗಾಂಚಾಲಿ ಬಾಂಚೋತ್’-ಎಂದು ಅವನು ಬಲಗೈ ಎತ್ತಿ ಅವಳ ಬೆನ್ನಿನ ಮೇಲೆ ಒಂದು ಸಲ ಗುದ್ದಿದ. +ಮುಖ ತಿರುಗಿಸಿ ಅವಳು ಹೇಳಿದಳು: ಮುಂಡೇಮಗನೆ, ನನ್ನ ಗುದ್‌ತೀಯೇನೋ? ನಿನ್ನ ಎಡಗೈ ಸೇದಿಹೋದ ಹಾಗೆ ಬಲಗೈಯೂ ಸೇದಿಹೋಗುತ್ತೆ. ನನ್ನ ಶಾಪ ಅಂದ್ರೆ ಏನಂತ ತಿಳ್ಕಂಡಿದೀಯಾ?’ ಇನ್ನೂ ಒಂದು ಗುದಿಗೆ ಬಿತ್ತು. ಅವಳು ಅದೇ ಉಸಿರಿನಲ್ಲಿ ಮುಂದುವರಿಸಿದಳು: ‘ಖಾಯ್‌ಲೆ ಅಂತ ಬಂದ್ ಮಲಕ್ಕಂಡು ನಮ್ಮಪ್ಪನ ಮನ್ಲಿ ಎಂಟು ತಿಂಗ್ಳು ಒಂದೇ ಸಮಕ್ ತಿಂದ್ಯಲ್ಲೊ ಕೂಳ. ನನ್ನ ಗುದ್ದುಕ್ ಹ್ಯಾಗ್ ಕೈ ಬಂತೋ? ನಿನ್ನ ಕೈಗೆ ಹುಳ ಬೀಳ.’ +ಅಷ್ಟರಲ್ಲಿ ನಂಜು ಅಲ್ಲಿಗೆ ಓಡಿಬಂದಳು. ಈ ಏಟಿನ ಶಬ್ದಕ್ಕೆ ಮಗು ಪಾರ್ವತಿ ಅಡಿಗೆಯ ಮನೆಯಲ್ಲಿಯೇ ಅಳಲು ಪ್ರಾರಂಭಿಸಿತು. ನಂಜು ಅಣ್ಣನ ಕೈ ಎಳೆಯುತ್ತಾ ಹೇಳಿದಳು: ‘ಅಣ್ಣಯ್ಯಾ, ನಿಂಗೇನು ಬುದ್ಧಿ ಸ್ವಾಧೀನದಲ್ಲಿದೆಯೋ ಇಲ್ಲವೋ? ಹೆಂಡ್ತೀನ ಹೀಗೆ ಹೊಡೀತಾರೆಯೆ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನು ಗತಿ? ಸುಮ್ಮನೆ ಒಳಗೆ ಬಂದು ಊಟ ಮಾಡು.’ +‘ನನ್ ಕೈ ಬಿಡು. ಈ ದನಗರ್ ಬಾಂಚೋತೀನ ಗತಿ ಕಾಣುಸ್ತೀನಿ ಇವತ್ತು’-ಎಂದು ಅವನು ಕೊಸರಿಕೊಂಡ. +ಮಲಗಿದ್ದ ಕಮಲು ಹುರಿ ಕಿತ್ತ ಬಿಲ್ಲಿನಂತೆ ಮೇಲೆ ಎದ್ದು ಅವನ ಕಡೆಗೆ ಬೆನ್ನು ತಿರುಗಿಸಿ ನಿಂತು ಸವಾಲು ಹಾಕಿದಳು: ‘ಹೋಡೀಬೇಕೇನೋ? ರಟ್ಟೆ ಮುರೀಯೂವಷ್ಟು ಹೊಡೆಯೋ. ನಿನ್ನ ಇವತ್ತು ನೇಣುಗಟುಸ್ತೀನಿ. ಇವತ್ತೇ ಕಡೇ ದಿನ, ಹೊಡಿ.’ +ನಂಜು ಅಣ್ಣನ ಕೈಯನ್ನು ಇನ್ನೂ ಬಲವಾಗಿ ಹಿಡಿದುಕೊಂಡು ಹೊರಗೆ ಎಳೆಯಲು ಶುರು ಮಾಡಿದಳು. ಅವಳೂ ಶಕ್ತಿವಂತೆಯಾದ ಹೆಂಗಸು. ಕಲ್ಲೇಶಿ ಕಡಿಮೆ ಶಕ್ತಿಯ ಆಳಲ್ಲ. ಇಬ್ಬರೂ ಕಂಠೀಜೋಯಿಸರ ಮಕ್ಕಳೇ. ಅವನು ಕೈ ಬಿಡಿಸಿಕೊಳ್ಳಲಿಲ್ಲ. ಎಡಗಾಲನ್ನು ಎತ್ತಿ ಕಮಲುವಿನ ಸೊಂಟಕ್ಕೆ ಒದೆದ. ಆ ರಭಸಕ್ಕೆ ಅವಳು ಮುರಿದುಬಿದ್ದಳು. ‘ಬಾಂಚೋತ್, ಮತ್ತೆ ಗಾಂಚಾಲಿ ಮಾಡು ನಿಂಗ್ ಮಾಡ್ತೀನಿ’-ಎಂದು ಹೇಳಿ ಹೊರಗೆ ಬಂದ. ‘ನಿನ್ ನೇಣುಗಟ್ಟುಸ್ತೀನಿ’-ಎಂದು ಅವಳು ಒಳಗಿನಿಂದ ಹೇಳಿದಳು. +ಕಲ್ಲೇಶ ಒಳಗೆ ಕೂತು ಊಟ ಮಾಡುತ್ತಿದ್ದ. ಈ ದಿನ ನಡೆದಂತಹ ಘಟನೆ ಆ ಮನೆಗೆ ಹೊಸದಲ್ಲ. ಆದರೆ ಈ ದಿನ ಅದು ಹದ್ದುಮೀರಿತ್ತು. ಇವಳನ್ನು ಏನು ಮಾಡಿ ಹತೋಟಿಗೆ ತರಬೇಕೆಂಬುದು ತಿಳಿಯದೆ ಅವನು ಮೌನವಾಗಿ ಹಿಟ್ಟನ್ನು ಮುರಿದು ಕೈಲಿ ಹಿಸುಕಿ ಹುಳಿಯಲ್ಲಿ ಹೊರಳಿಸಿ ಗುಳುಕ್ಕನೆ ನುಂಗುತ್ತಿದ್ದ. ಅವನ ಜೊತೆ ಕುಳಿತುಕೊಳ್ಳದೆ ನಂಜು, ‘ನಾನು ಆಮ್ಯಾಲೆ ಮಾಡ್ತೀನಿ’ ಎಂದು ಹೇಳಿ ಹಿತ್ತಿಲಕಡೆಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಅಕ್ಕಮ್ಮ ಹಿಟ್ಟಿನ ಚರುಕಿಗೆ ನೀರು ತುಂಬಿ ನೆನೆಯಹಾಕುತ್ತಿದ್ದಳು. ಅಷ್ಟರಲ್ಲಿ ನಂಜು ಹಿತ್ತಿಲಿನಿಂದ ಕೂಗಿಕೊಂಡಳು: ‘ಅಣ್ಣಯ್ಯ, ಓಡ್ಬಾ, ಅತ್ತಿಗ್ಯಮ್ಮ ಭಾವಿಗ್ ಬಿದ್ರು.’ +‘ಎಲಾ ಇವ್ಳಾ’- ಎಂದು ಕಲ್ಲೇಶ ಒಂದೇ ದಾಪಿಗೆ ಹಿತ್ತಿಲ ಬಾವಿಯ ಹತ್ತಿರಕ್ಕೆ ಧಾವಿಸಿದ. ಅಕ್ಕಮ್ಮನೂ ತನ್ನ ಬಗ್ಗಿದ ಸೊಂಟವನ್ನು ಬಗ್ಗಿಸಿಕೊಂಡೇ ಓಡಿ ಬಂದಳು. ಬಾವಿಯ ಹತ್ತಿರ ಇದ್ದ ಹಗ್ಗವನ್ನು ಒಳಕ್ಕೆ ಬಿಟ್ಟು, ‘ಇದ ಗಟ್ಟಿಯಾಗಿ ಹಿಡ್ಕೊ’ ಎಂದು ನಂಜುವಿಗೆ ಹೇಳಿ ಕಲ್ಲೇಶ ಸರ್ರ್ ಎಂದು ಒಳಗೆ ಇಳಿದ. ನಂಜು ಬಾವಿಯ ಕಟ್ಟೆಗೆ ಕಾಲು ಒದೆಕೊಟ್ಟು ಹಗ್ಗ ಹಿಡಿದುಕೊಂಡಳು. ಅವನು ಅದನ್ನು ಹಿಡಿದುಕೊಂಡು ಜಾರಿ ಕೆಳಗೆ ಹೋದ. +ನಂಜು ಕೂಗಿಕೊಂಡದ್ದು ಪಕ್ಕದ ಮನೆಯ ಕಪಿನೀಪತಯ್ಯನವರ ಹೆಂಡತಿಗೆ ಕೇಳಿತು. ‘ಕಮಲಮ್ಮ ಬಾವಿಗೆ ಬಿದ್ಲಂತೆ ಹೋಗೀ’-ಎಂದು ಗಂಡನಿಗೆ ಹೇಳುತ್ತಾ ಅವರೂ ಓಡಿ ಬಂದರು. ಕಪಿನೀಪತಯ್ಯನವರೂ ಕೂಗಿಕೊಂಡು ಬಂದರು. ಅದನ್ನು ಕೇಳಿದ ಅಕ್ಕಪಕ್ಕದವರೆಲ್ಲ ಸೇರಿದರು. ಸುದ್ದಿ ಮಿಂಚಿನಂತೆ ಹಬ್ಬಿ ಅಕ್ಕಪಕ್ಕದ ಕೇರಿಯವರೂ ಜಮಾಯಿಸಿದರು. +ಕಮಲು ಒಂದು ಸಲ ಮುಳುಗಿ ಎದ್ದು ಎರಡನೆಯ ಸಲ ಮುಳುಗಿದ್ದಳು. ಮೇಲೆ ಬಂದಾಗ, ಪ್ರಾಣ ಉಳಿಸಿಕೊಳ್ಳಬೇಕೆಂದು ಅವಳೂ ಎರಡು ಕೈಗಳನ್ನೂ ಬಡಿಯಲು ಆಡಿಸಿದಳು. ಸಾಯಬೇಕೆಂದು ಅವಳು ಬಾವಿಗೆ ಬೀಳಲಿಲ್ಲ. ಗಂಡನಿಗೆ ನೇಣುಗಟ್ಟಿಸುತ್ತೇನೆಂಬ ತನ್ನ ಮಾತನ್ನು ಸಾಧಿಸಲು ಮಾತ್ರ ಬಿದ್ದಿದ್ದಳು. ಆದರೆ ನೀರಿನಲ್ಲಿ ಒಂದು ಸಲ ಮುಳುಗಿ ಎದ್ದಮೇಲೆ ಜೀವದ ಆಶೆ, ಸಾವಿನ ಭಯಗಳು ತುಂಬಿಕೊಂಡು ಒಂದು ಸಲ ಕೂಗಿಕೊಂಡಿದ್ದಳು. ಅದು ಮೇಲಿದ್ದ ನಂಜುವಿಗೆ ಕೇಳಿಸುವ ಮೊದಲೇ ನೀರು ಎರಡನೆಯ ಬಾರಿಗೆ ಒಳಗೆ ಎಳೆದುಕೊಂಡಿತ್ತು. ಮತ್ತೆ ನೀರು ಕುಡಿಸಿ ಕೊನೆಯ ಸಲದ ಅವಕಾಶಕ್ಕಾಗಿ ಗಂಗಮ್ಮ ತಾಯಿ ಅವಳನ್ನು ಮೇಲೆ ಎತ್ತಿದಳು. ಕಲ್ಲೇಶಿ ಗಟ್ಟಿಯಾಗಿ ಜಡೆ ಹಿಡಿದುಕೊಂಡ. ಅಷ್ಟರಲ್ಲಿ ಕಪಿನೀಪತಯ್ಯ ಮೊದಲಾಗಿ ಮೇಲುಗಡೆ ಜನಗಳು ಸೇರಿದ್ದರು. ‘ಹಗ್ಗ ಸ್ವಲ್ಪ ಮೇಲೆ ಎಳ್ಕ’-ಎಂದು ಅವನು ಕೆಳಗಿನಿಂದ ಕೂಗಿ ಹೇಳಿದ. ಎಡಗೈಲಿ ಅವನು ಹಗ್ಗ ಹಿಡಿದಿದ್ದ. ಬಲಗೈಲಿ ಅವಳ ಜಡೆಯಿತ್ತು. ಈಗ ಅವನೇ ಎದೆಗಿಂತ ಕೆಳಗಿನ ಮಟ್ಟಕ್ಕೆ ನೀರಿನಿಂದ ಮೇಲೆ ಬಂದಿದ್ದ. ಅವಳ ಭುಜ ನೀರಿನ ಮೇಲೆ ಇತ್ತು. ಅವನ ಎಡಗೈಗೆ ಸಾಕಷ್ಟು ಬಿಗಿ ಸಿಕ್ಕಿರಲಿಲ್ಲ. ಈ ಭಾರವನ್ನು ಹೆಚ್ಚು ತಡೆಯುವ ಶಕ್ತಿ ಆ ಕೈಗೆ ಇರಲಿಲ್ಲ. ಬಾವಿ ಇಳಿಯಲು ಮಾಡಿದ್ದ ಪೊಟರೆಯನ್ನು ಹುಡುಕಿ ಅದಕ್ಕೆ ಕಾಲುಗಳನ್ನು ಅಡ್ಡ ಕೊಟ್ಟು ಭದ್ರ ಮಾಡಿಕೊಂಡ. ‘ಅಯ್ಯಯ್ಯಪ್ಪಾ, ನಂಗ್ ಹೆದರಿಕೆಯಾಗುತ್ತೆ. ಬ್ಯಾಗ ಮ್ಯಾಲುಕ್ಕೆಳ್ಕಳೀ’-ಎಂದು ಅವಳು ಬಡಬಡಿಸಲು ಮೊದಲು ಮಾಡಿದಳು. +ಅಷ್ಟರಲ್ಲಿ ಮೇಲಿದ್ದವರು ಒಂದು ಪುಟ್ಟ ಬಣ್ಣದ ತೊಟ್ಟಿಲನ್ನು ತಂದು ಬಂದೂಬಸ್ತಾದ ಹಗ್ಗ ಕಟ್ಟಿ ನಿಧಾನವಾಗಿ ಬಾವಿಯ ಒಳಗೆ ಬಿಟ್ಟರು. ಅದನ್ನು ನೀರಿನ ತನಕ ಇಳಿಸಿಸಿ ಕಲ್ಲೇಶ ಅವಳನ್ನು ಅದರಲ್ಲಿ ಎತ್ತಿ ಕೂರಿಸಿದ. ‘ ಹಗ್ಗ ಎಳೀರಿ ’ -ಎಂದು ಅವನು ಕೂಗಿ ಹೇಳಿದರೆ ಇವಳು, ‘ ನಂಗ್ ಹ್ಯದ್‌ರಿಕೆಯಾಗುತ್ತೆ. ನಾ ವಲ್ಲೆ ’ ಎಂದು ಬಡಬಡಿಸಲು ತೊಡಗಿದಳು. ತೊಟ್ಟಿಲು ಮೇಲೆ ಹೋಗುತ್ತಿರುವಾಗ ಇವಳು ಕಪಿಯಂತೆ ನೆಗೆದು ಕುಣಿದು ಮಾಡಿ ಕೆಳಗಿರುವ ತನ್ನ ಮೇಲೆ ಬಿದ್ದರೆ ಆ ರಭಸಕ್ಕೆ ತಾನು ಉಳಿಯುವುದಿಲ್ಲವೆಂದು ಯೋಚಿಸಿದ ಕಲ್ಲೇಶ, ತಾನು ಉಟ್ಟಿದ್ದ ಪಂಚೆ ಬಿಚ್ಚಿ ಅವಳನ್ನು ಸೇರಿಸಿ ತೊಟ್ಟಿಲಿನ ಕಟ್ಟಿಗೆ ಕಟ್ಟಿದ. ಮೈಮೇಲೆ ಹಾಕಿಕೊಂಡಿದ್ದ ಬನೀನು ಬಿಚ್ಚಿ ಅದನ್ನೆ ಲಂಗೋಟಿ ಮಾಡಿಕೊಂಡ. ತೊಟ್ಟಿಲು ನಿಧಾನವಾಗಿ ಮೇಲಕ್ಕೆ ಹೋಯಿತು. ನಾಲ್ಕು ಜನ ಗಂಡಾಳುಗಳು ಸೇರಿ ಎಳೆದ ತೊಟ್ಟಿಲಿನಲ್ಲಿ ಕೂತು ಒಂಬತ್ತು ಮೊಳದ ಪಂಚೆಯಿಂದ ಕಟ್ಟಿಸಿಕೊಂಡ ಅವಳು ಗೌರಿ ಹಬ್ಬದ ದಿನ ಕೆರೆಯಿಲ್ಲದ ಊರಿನಲ್ಲಿ ಬಾವಿಯ ಒಳಗಿನಿಂದ ಬರುವ ಗೌರಮ್ಮನಂತೆ ಮೇಲೆ ಬಂದಳು. +ಅವಳ ಹಿಂದೆಯೇ ಕಲ್ಲೇಶನೂ ಮೇಲೆ ಹತ್ತಿ ಬಂದ. ಒಳಗೆ ಸಾಕಷ್ಟು ನೀರು ಹೋಗಿ ಅವಳ ಹೊಟ್ಟೆ ದಪ್ಪವಾಗಿತ್ತು. ಭಯ, ಗಾಬರಿ, ನಾಚಿಕೆ ಮೊದಲಾದುವೆಲ್ಲ ಸೇರಿ ಕಣ್ಣು ಕೆಂಪಗಾಗಿದ್ದವು. ಮೇಲಿನಿಂದ ಬೀಳುವಾಗ ಬಾವಿಯ ಒಳದಡಕ್ಕೆ ಸವರಿಕೊಂಡು ಹೋಗಿ ಭುಜ, ಬೆನ್ನು ಮತ್ತು ತಲೆಯ ಒಂದು ಪಾರ್ಶ್ವದಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಮೊದಲು ಅವಳನ್ನು ನೆಲದ ಮೇಲೆ ಮಕಾಡೆ ಮಲಗಿಸಿ ಕಲ್ಲೇಶ ಸೊಂಟವನ್ನು ನಿಧಾನವಾಗಿ ಅಮುಕಿದ. ಹೊಟ್ಟೆಯೊಳಗೆ ಸೇರಿದ್ದ ನೀರು ಬಾಯಿಯಿಂದ ಹೊರಗೆ ಬಂದು ಕಕ್ಕಿಕೊಂಡಳು. ರೋಜಾಸೊಪ್ಪು ಅರೆದು, ರಕ್ತ ಬರುತ್ತಿದ್ದ ಜಾಗವನ್ನು ಒರೆಸಿ ಮೆತ್ತಿದಾಗ ಅಯ್ಯಯ್ಯಮ್ಮ ಎಂದು ಹೊಡೆದುಕೊಳ್ಳಲು ಪ್ರಾರಂಭಿಸಿದಳು. +ಕಲ್ಲೇಶ ಅಲ್ಲಿ ನೆರೆದಿದ್ದವರ ಕಡೆ ತಿರುಗಿ ಹೇಳಿದ: ‘ಇಲ್ಲೇನು ಕೆಲಸ, ನೀವೆಲ್ಲ ಮನೆಗೆ ಹೋಗಿ.’ ಜನಗಳು ಹೋಗಲೊಲ್ಲರು. ಆದರೆ ಕಲ್ಲೇಶ, ಅಕ್ಕಮ್ಮ, ಪಕ್ಕದ ಮನೆಗಳ ಇಬ್ಬರು ಗಂಡಸರು ಸೇರಿ ಎಲ್ಲರನ್ನು ಅಲ್ಲಿಂದ ಅಟ್ಟಿದರು. +‘ಬಿಸಿಬಿಸಿಯಾಗಿ ಅವಳಿಗೆ ಒಂದು ಬಟ್ಲು ಕಾಫಿ ಮಾಡಿಕೊಡಿ.’ -ಎಂದು ಕಪಿನೀಪತಯ್ಯನವರ ಹೆಂಡತಿ ಪುಟ್ಟಮ್ಮ ಹೇಳಿದರು. +‘ಈ ಮುಂಡ್ಹೇತ್ತದಕ್ಕೆ ಕಾಫಿ ಬೇರೆ ಕೇಡು. ಇವರವ್ವನ ಮಾದಿಗರು …….’-ಎಂದು ಕಲ್ಲೇಶ ಬೇರೆ ಪಂಚೆ ಉಟ್ಟುಕೊಳ್ಳಲು ಹೋದ. ಅವನು ಪೋಲೀಸು ನೌಕರಿಯಲ್ಲಿದ್ದು ಕಾಫಿ ಕುಡಿಯುವುದು ಕಲಿತಿದ್ದವನು. ಆದರೆ ದಿನವೂ ಬೇಕೆಂಬ ಚಟವಿರಲಿಲ್ಲ. ಆದರೆ ಹಾಸನದಂತಹ ಟೌನಿನಲ್ಲಿದ್ದು, ಅದು ಪೋಸ್ಟ್‌ಮ್ಯಾನರ ಮಗಳಾದ ಕಮಲು ಹಳ್ಳಿಗೆ ಬಂದರೂ ಕಾಫಿ ಇಲ್ಲದಿದ್ದರೆ ಹ್ಯಾಗೆ? ಆದುದರಿಂದ ಅವರ ಮನೆಯಲ್ಲಿ ಕಾಫಿ ಪುಡಿ ಇತ್ತು. ನಂಜುವೆ ಹೋಗಿ ಒಂದು ಲೋಟ ಮಾಡಿ ತಂದು ಅತ್ತಿಗೆಗೆ ಕೊಟ್ಟಳು. ಒಂದು ಸಲ ಬಾಯಿಯಿಂದ ಹೀರಿದ ಕಮಲ ಲೋಟವನ್ನು ನೆಲದ ಮೇಲೆ ಇಟ್ಟು, ‘ಥೂ, ಈ ಹಳ್ಳಿ ಮುಂಡೇವುಕ್ಕೆ ನ್ಯಟ್ಟಗೆ ಕಾಫಿ ಮಾಡಕ್ಕ್ ಬರಲ್ಲ. ಯಾವತ್ತಾದ್ರೂ ಕುಡ್ದಿದ್ರೆ ತಾನೇ’-ಎಂದುದು ಕಲ್ಲೇಶನಿಗೆ ಕೇಳಿಸಿತು. ಅವನು ಹತ್ತಿರ ಬಂದು ಆ ಲೋಟವನ್ನು ಕೈಗೆ ತೆಗೆದುಕೊಂಡು ಅವಳ ತಲೆಯ ಮೇಲೆ ಸುರಿದ. ಅವಳು ಮತ್ತೆ ಬಾಯಿ ತೆಗೆಯಲಿಲ್ಲ. ಅವನು ಒಳಗೆ ಹೋದ, ‘ಏಳೇ, ಬ್ಯಾರೆ ಸೀರೆ ಉಟ್ಕ’ -ಎಂದು ಅಕ್ಕಮ್ಮ ಅವಳಿಗೆ ಹೇಳಿದಳು. ಅಲ್ಲಿ ಉಳಿದಿದ್ದ ಇಬ್ಬರು ಗಂಡಸರು ಒಳಗೆ ಹೋಗಿ ಅಲ್ಲಿ ಬರೀ ಹೆಂಗಸರನ್ನೇ ಬಿಟ್ಟರು. ಅವಳು ಮೇಲೆ ಏಳಲಿಲ್ಲ, ಒದ್ದೆಯಾದ ಸೀರೆಯನ್ನು ಬದಲಾಯಿಸಲೂ ಇಲ್ಲ. ಕೆದರಿದ ಒದ್ದೆ ಕೂದಲನ್ನು ಬಿಟ್ಟುಕೊಂಡು ಬಾವಿಯ ದಡದಲ್ಲಿಯೇ ಕುಕ್ಕುರು ಬಡಿದಿದ್ದಳು. +ಆ ದಿನ ರಾತ್ರಿಯೂ ಕಮಲೂ ಊಟ ಮಾಡಲಿಲ್ಲ. ಕಲ್ಲೇಶ ತನ್ನ ಪಾಡಿಗೆ ತಾನು ಊಟ ಮುಗಿಸಿದ. ನಂಜು ಬೇಡವೆಂದರೂ, ಬಸುರಿಯೆಂದು ಬಲವಂತಮಾಡಿ ಅಕ್ಕಮ್ಮ ಬಡಿಸಿದಳು. ಅಕ್ಕಮ್ಮನದಂತೂ ರಾತ್ರಿ ಊಟವಿಲ್ಲ. ವಯಸ್ಸಾಗಿ ಅರಗುವುದಿಲ್ಲವೆಂದು ಫಲಹಾರ ಸಹ ಬಿಟ್ಟು ಆಗಲೇ ಹತ್ತು ವರ್ಷದ ಮೇಲೆ ಆಗಿತ್ತು. +ರಾತ್ರಿ ಕಮಲು ತನ್ನ ಮಲಗುವ ಕೋಣೆಯಲ್ಲಿ ಬಿದ್ದುಕೊಂಡಳು. ಅಕ್ಕಮ್ಮ, ನಂಜು, ಇಬ್ಬರನ್ನು ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಹೊಂದಿಕೊಂಡು ಮಲಗುವಂತೆ ಕಲ್ಲೇಶ ಸೂಚನೆ ಕೊಟ್ಟ. ಮತ್ತೆ ರಾತ್ರಿಯ ಹೊತ್ತು ಎದ್ದು ಅವಳು ಹೊರಗೆ ಹೋಗಿ ಬಾವಿಗೆ ಬಿದ್ದಾಳೆಂದು ಪೋಲೀಸ್ ಇಲಾಖೆಯಲ್ಲಿದ್ದ ಅವನು ಶಂಕಿಸಿದ. ಅವರಿಬ್ಬರೂ ಹಾಗೆ ಮಲಗಿದುದರಿಂದ ಯಾರೂ ರಾತ್ರಿ ಹೊತ್ತು ಬಾಗಿಲು ತೆಗೆದು ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಕಲ್ಲೇಶ ಕೋಣೆಯ ಬಾಗಿಲಿನಲ್ಲಿ ಹಾಸಿಗೆ ಹಾಕಿಕೊಂಡು ಮಲಗಿದ. ಅವನಿಗೆ ಬೇಗ ನಿದ್ರೆ ಹತ್ತಲಿಲ್ಲ. ಏನೇನೋ ಯೋಚನೆ. ತನಗೆ ಎಂತಹ ಹೆಣ್ಣು ಗೊತ್ತು ಮಾಡಿದ ಎಂದು ತಂದೆಯ ಮೇಲೆ ಕೋಪ. ಹೊರಗೆ ಯಾರಯಾರದೋ ನೆನಪು. ಎಷ್ಟೋ ಹೊತ್ತಿನ ಮೇಲೆ ಕಣ್ಣು ಹೊತ್ತಿಕೊಂಡು ಬಂತು. +ಆದರೆ ಇದ್ದಕ್ಕಿದ್ದ ಹಾಗೆಯೇ ಎಚ್ಚರವಾಯಿತು. ಅಡಿಗೆ ಮನೆಯಲ್ಲಿ ಏನೋ ಬೆಳಕು ಕಂಡಹಾಗೆ ಆಯಿತು. ಮಲಗಿದ್ದವನು ತಲೆ ಎತ್ತಿ ಕೋಣೆಯೊಳಗೆ ನೋಡಿದರೆ ಅವಳು ಇರಲಿಲ್ಲ. ಶಬ್ದ ಮಾಡದೆ ಎದ್ದು, ಅಡುಗೆ ಮನೆಯ ಬಾಗಿಲಿಗೆ ಬೆಕ್ಕಿನ ಹೆಜ್ಜೆ ಇಟ್ಟುಕೊಂಡು ಹೋಗಿ ನೋಡುತ್ತಾನೆ: ಒಲೆಯ ಮುಂದೆ ಕುಳಿತಿದ್ದಾಳೆ. ತಲೆಕೂದಲು ಕೆದರಿಯೇ ಇದೆ. ದೇವರ ಗೂಡಿನ ಸಣ್ಣ ಸೊಡರು ಉರಿಯುತ್ತಿದೆ. ಅವಳು ಅದೇನೋ ತಿನ್ನುತ್ತಿರುವಂತೆ ಕಾಣಿಸಿತು. ಮೆಲ್ಲನೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನೋಡುತ್ತಾನೆ: ರಾತ್ರಿ ಊಟ ಬೇಡವೆಂದು ಹಟ ಮಾಡಿದ್ದ ಅವಳು ಅನ್ನದ ಚರುಕಿಗೆ ಉಳಿ ಸುರಿದು ಕಲಸಿಕೊಂಡು ಗದುಗುತ್ತಿದ್ದಾಳೆ. ಪಕ್ಕದಲ್ಲಿಯೇ ಮಜ್ಜಿಗೆಯ ಮಡಿಕೆ. +ಅವನು ಶಬ್ದ ಮಾಡದೆ ಹಾಗೆಯೇ ಹಿಂತಿರುಗಿ ಬಂದು ಮಲಗಿಕೊಂಡ. ಅವಳು ಹಿಂದೆ ಎಷ್ಟೋ ದಿನ ಹಟ ಮಾಡಿ ಊಟ ಬಿಟ್ಟಿದ್ದಳು. ನಂತರ ಎಲ್ಲರೂ ಮಲಗಿದ ಮೇಲೆ ಹೀಗೆ ಏಕಾಂತದಲ್ಲಿ ನಿಶಾಭೋಜನ ಮುಗಿಸಿ ಏನೂ ತಿಳಿಯದವಳಂತೆ ಬಂದು ಮಲಗಿ ನಿದ್ರೆ ಮಾಡಿ ನಾಳೆ ಬೆಳಿಗ್ಗೆ ಎದ್ದು, ‘ನಿನ್ನೆ ರಾತ್ರಿ ನನ್ನ ಉಪವಾಸ ಕೆಡವಿದ್ರು, ಇವರ ಮನೆ ಹಾಳಾಗ’ ಎಂದು ಪಿಟಿ ಪಿಟಿ ಬೈದುಕೊಂಡು ನೆಟಿಕೆ ಮುರಿದಳು. ಅವಳು ಹಾಗೆ ಮಾಡುತ್ತಾಳೆ ಎಂಬುದಕ್ಕೆ ರಾತ್ರಿ ಮುಚ್ಚಿಟ್ಟಿದ್ದ ಅನ್ನ ಮಾಯವಾಗುತ್ತಿದ್ದುದೇ ಸಾಕ್ಷಿಯಾಗುತ್ತಿತ್ತು. ಆದರೆ ಆದಿನ ಅದನ್ನು ಪ್ರತ್ಯಕ್ಷ ಕಂಡಂತೆ ಆಯಿತು. ಇನ್ನೊಂದು ಮದುವೆ ಮಾಡಿಕೊಂಡು ಬಿಡಬೇಕು, ಈ ಹೀನಸುಳಿ ಮುಂಡೇದ ಒದ್ದು ಓಡಿಸಬೇಕು, ಎಂದು ಅವನು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದ. ಅಷ್ಟರಲ್ಲಿ ಹೊರಗಡೆ ಮೋಟಾರಿನದೋ ಕಾರಿನದೋ ಆಗುವಂತಹ ಶಬ್ದವಾಯಿತು. ಯಾವುದಿರಬಹುದು, ಯಾರಮನೆಗಿರಬಹುದು ಎಂದು ಅವನು ಯೋಚಿಸುತ್ತಿರುವಂತೆಯೇ ಜನಗಳು ಕಾರಿನಿಂದ ಇಳಿದು ಬಂದು ಇವರ ಮನೆಯ ಕದವನ್ನೇ ತಟ್ಟಿದರು. ‘ ಯಾರು? ’ -ಎನ್ನುತ್ತ ಇವನು ಎದ್ದು ದೀಪ ಹೊತ್ತಿಸಿ ಬಾಗಿಲಿಗೆ ಒತ್ತಿ ಮಲಗಿದ್ದ ಅಕ್ಕಮ್ಮನನ್ನು ಎಬ್ಬಿಸಿ ಕದ ತೆಗೆದ. ಬಂದಿದ್ದವರು ಅವರ ಮಾವನವರು, ಅತ್ತೆ. ಜೊತೆಗೆ ಅವರ ಸಂಬಧಿಕರೇ ನಾಲ್ಕು ಜನ. ಕಾರಿನ ಡ್ರೈವರ್ ಯಾರೋ ಅವನಿಗೆ ಗೊತ್ತಿಲ್ಲ. ಅವರನ್ನು ಕಂಡು ಇವನಿಗೆ ಆಶ್ಚರ್ಯ. +‘ಕಮಲು ಹ್ಯಾಗಿದಾಳೆ? ’ -ಗೊಳೋ ಎನ್ನುತ್ತಲೇ ಅವಳ ತಾಯಿ ಒಳಗೆ ಬಂದರು. ‘ಅಡಿಗೆ ಮನೇಲಿ ನೋಡಿ’- ಅವನು ಹೇಳಿದ. +ಅವರು ಅಲ್ಲಿಗೆ ಹೋಗಿ ನೋಡಿದರೆ ಅವಳಿಲ್ಲ. ದೇವರ ಸೊಡರನ್ನು ಅದೇ ತಾನೇ ಆರಿಸಿದ ವಾಸನೆ ಬರುತ್ತಿದೆ. ಎಲ್ಲಿ ಹೋದಳು ಎಂದು ಅವನ ಕೋಣೆಗೆ ಬಂದು ನೋಡಿದರೆ ಚಾಪೆಯ ಮೆಲೆ ಮುಕಾಡೆ ಮಲಗಿ, ತಾನು ಮೇಲೆ ಎದ್ದೇ ಇರಲಿಲ್ಲವೆಂಬಂತೆ ಕಣ್ಣು ಮುಚ್ಚಿಕೊಂಡಿದ್ದಾಳೆ. +‘ನೋಡಿ, ನೀವು ಬಂದಾಗ ಇವಳು ಕದ್ದು ಅಡಿಗೆ ಮನೇಲಿ ಕೂತ್ಕೊಂಡು ಅನ್ನದ ಚರುಕಿನಲ್ಲೇ ಅನ್ನ ಹುಳಿ ತಿಂತಿದ್ಲು. ಈಗ ದೀಪ ಉರುಬಿಬಿಟ್ಟು ಇಲ್ಲಿ ಬಂದು ಏನೂ ತಿಳಿದೋಳ ಹಾಗೆ ಮಲಗಿದಾಳೆ. ನೀವೇ ನೋಡಿ ಬನ್ನಿ’-ಎಂದು ಕೈಲಿ ದೀಪದ ಬುಡ್ಡಿ ಹಿಡಿದು ಅವರನ್ನೆ ಕರೆದುಕೊಂಡು ಹೋಗಿ ತೋರಿಸಿದ. +‘ಈಗ ಹೋಕ್ಕಳ್ಲಿ. ಏನಾಯ್ತು, ಯಲ್ಲಾ ಆರೋಗ್ಯ ತಾನೆ?’ -ಮಾವನವರು ಕೇಳಿದರು. +‘ನೀವು ಯಾಕೆ ಬಂದ್ರಿ? ಏನು ಸಮಾಚಾರ? ’-ಮಾಜಿ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ಕೇಳಿದ. ‘ನಮಗೆ ನೀನೇ ಟೆಲಿಫೋನ್ ಮಾಡಿಸಿದ್ದೆಯಲ್ಲ: ಕಮಲು ಬಾವಿಗೆ ಬಿದ್ದಿದ್ದಾಳೆ, ಬನ್ನಿ ಅಂತ.’ +‘ಹೂಂ. ಹೂಂ. ನಿಮಗೆ ಬಂದು ಫೋನ್ ಮಾಡ್ಸ್‌ದೋರು ಯಾರು ಹೇಳಿ. ಗಡಿಬಿಡೀಲಿ ನಂಗೆ ಮರೆತೇ ಹೋಯ್ತು.’ +‘ಯಾವನಾದ್ರೆ ಇವರಿಗೇನಾಗ್ಬೇಕು’-ಎಂದು ಕಮಲು ಒಳಗಿನಿಂದ ಚಟಾರನೆ ಮಾತನಾಡಿದಳು. +ಅಂತು ಮಾಡಿಸಿದವಳು ಅವಳೇ ಎಂಬುದು ಎಲ್ಲರಿಗೂ ಗೊತ್ತಾಯಿತು. ಅವಳ ಪರವಾಗಿ ಮಾಡಿದವರು ಯಾರು ಎಂಬುದು ಮಾತ್ರ ತಿಳಿಯಲಿಲ್ಲ. ಅಷ್ಟು ಪತ್ತೆ ಮಾಡುವುದೇನೂ ಕಷ್ಟವಲ್ಲವೆಂದು ಕಲ್ಲೇಶ ಆ ಮಾತನ್ನು ಮುಂದಕ್ಕೆ ಕೆದಕಲಿಲ್ಲ. ಅವನು ನೇರವಾಗಿ ಪಕ್ಕದ ಮನೆಗೆ ಹೋಗಿ ಬಾಗಿಲು ತಟ್ಟಿದ. ಕಾರು ಬಂದ ಶಬ್ದಕ್ಕೆ ಅವರಿಗೂ ಎಚ್ಚರವಾಗಿತ್ತು. ಕಪಿನೀಪತಯ್ಯ, ಪುಟ್ಟಮ್ಮ, ಇಬ್ಬರನ್ನೂ ಮನೆಗೆ ಕರೆದುಕೊಂಡು ಬಂದ. ಹಾಗೆಯೇ ಇನ್ನೊಂದು ಪಕ್ಕದ ಮನೆಯವರನ್ನೂ ಎಬ್ಬಿಸಿ ತಂದು ಅವನೇ ಮಾತನ್ನು ಪ್ರಾರಂಭಿಸಿದ: ‘ನಾವು ಮಾತಾಡಿದ್ರೆ ಸುಳ್ಳು ಅನ್ನಿಸ್‌ಭೌದು. ಇವರನ್ನೇ ಕೇಳಿ. ಕಪಿನೀಮಾವಯ್ಯ, ಇರೋ ಸಮಾಚಾರ ನೀವೇ ಇವರಿಗೆ ಹೇಳಿ.’ +ಅಕ್ಕಪಕ್ಕದವರು ತಾವಾಗಿಯೇ ಮಾತನಾಡಲಿಲ್ಲ. ಕಲ್ಲೇಶನೇ ನಡೆದುದನ್ನು ಹೇಳಿದ. ತಾನು ಒಡೆದುದಾಗಿ ಹೇಳಿದನೇ ಹೊರತು ಒದೆದುದನ್ನು ಆಡಲಿಲ್ಲ. ಅವನು ಹೇಳಿದ್ದೆಲ್ಲ ಸತ್ಯವೆಂದು ಅಕ್ಕಪಕ್ಕದವರು ಬಾಯಿಬಿಟ್ಟು ಒಪ್ಪಿಕೊಂಡರು. ಕಲ್ಲೇಶನ ಅತ್ತೆ ಮಾತನಾಡಿದರು: ‘ಆದ್ರೂನೂ ನಾನು ಸಾಕಿದ ಹೆಣ್ಣುಮಗೂನ ನಿಮ್ಮ ಮನೆ ಹಳ್ಳಿಗಾಡಿಗೆ ಕಳ್ಸಿದೀವಿ. ನೀವು ಅನುಸರಿಸಿಕೊಂಡು ಹೋಗ್ಬೇಕು.’ +ಆದರೆ ಮಾವ ಪೋಸ್ಟ್‌ಮ್ಯಾನ್ ರಂಗಣ್ಣನವರು, ತಗ್ಗಿಸಿದ ತಲೆಯನ್ನು ಮೇಲೆ ಎತ್ತಲಿಲ್ಲ. ಕಲ್ಲೇಶ ಅವರನ್ನೇ ಕೇಳಿದ: ‘ನೀವು ಈಗ ಹೇಳಿ. ಅದ್ಯಾವ ಸೂಳೇಮಗ ನಿಮಗೆ ಫೋನು ಮಾಡಿಸ್ದೋನು?’ +‘ನನ್ನ ಬಾಯಲ್ಲಿ ಸುಳ್ಳು ಬರುಲ್ಲ. ಫೋನ್ ಬಂದದ್ದು ಚೆನ್ನರಾಯಪಟ್ಟಣದಿಂದ. ಅಲ್ಲಿಯ ಎಲೆಕ್ಟ್ರಿಕ್ ಕ್ಯಾಂಪಿನಿಂದ ಹಾಸನದ ಕ್ಯಾಂಪಿಗೆ ಮಾತಾಡಿದರಂತೆ. ಪೋಸ್ಟ್‌ಮ್ಯಾನ್ ರಂಗಣ್ಣನೋರಿಗೆ ತಕ್ಷಣ ತಿಳಿಸಬೇಕು ಅಂದರಂತೆ. ದಿನಾ ಕಾಗದ ಕೊಡುಕೆ ಆ ಕಡೆ ಹೋಗ್ತಿನಲಾ ನಾನು. ನನ್ನ ಗುರುತಿತ್ತು. ಎಲೆಕ್ಟ್ರಿಕ್ ಫೋರ್‌ಮ್ಯಾನ್ ಬಂದು ವಿಷಯ ಹೇಳ್ದ. ಕಲ್ಲೇಶ ಅನ್ನೋರೇ ಫೋನ್ ಮಾಡಿದ್ರು ಅಂದ. ಇದೇನಪ್ಪ ಗ್ರಾಚಾರ ಅಂತ ಇಪ್ಪತ್ತೈದು ರೂಪಾಯಿ ಬಾಡಿಗೆ ಗೊತ್ತುಮಾಡಿ ಓಡಿಬಂದ್ವು.’ +‘ಈಗ ಹ್ಯಾಗೂ ಬಂದಿದೀರಾ. ಜೊತೇಲಿ ಕಾರಿದೆ. ನಿಮ್ಮ ಮಗಳಿಗೂ ಬೇಜಾರು, ಕರ್ಕಂಡು ಹೋಗಿ.’ +‘ಒಂದ್ ನಾಕು ದಿನ ಬಂದು ಸುದಾರಿಸ್ಕಳ್ಲಿ’-ಎಂದು ಅತ್ತೆ ತಕ್ಷಣ ಹೇಳಿದರು. +ಆದರೆ ಅಷ್ಟೇ ತಕ್ಷಣ ಮಾವನವರು ಎಂದರು: ‘ಬ್ಯಾಡ, ಬ್ಯಾಡ. ಗಂಡ ಹೆಂಡ್ತಿ ಜಗಳ ಕಾದಿರುವಾಗ ನಾವು ಮಗಳನ್ನ ಕರ್‌ಕಂಡು ಹೋಗ್‌ಬಾರ್‌ದು. ಅವರು ನಗ್ತಾನಗ್ತಾ ಇರುವಾಗ ಬರಬೇಕು ಹೋಗಬೇಕು.’ +‘ನಮ್ಮ ಮಗೂನ ನಾವು ತೌರುಮನೆಗೆ ಕರ್ಕಂಡ್ ಹೋಗೂಕ್ಕೆ ಏನೂ ಅಂದ್ರೆ?’-ಅವರ ಹೆಂಡತಿ ಕೇಳಿದರು. +‘ನಿಂಗೇನು ಗೊತ್ತಾಗುತ್ತೆ, ಸುಮ್‌ನಿರು. ಈ ಸಮಯದಲ್ಲಲ್ಲ’-ಯಜಮಾನರು ನುಡಿದರು. +‘ನಾನು ಬಂದೇ ಬತ್ತೀನಿ’-ಎಂದು ಮೊದಲ ಬಾರಿಗೆ ಮಾತನಾಡಿ ಕಮಲು ಮಲಗಿದಲ್ಲಿಂದ ಮೇಲೆ ಎದ್ದು ಬಂದು ತಾಯಿಯ ಪಕ್ಕದಲ್ಲಿ ನಿಂತಳು. +‘ಅಮ್ಮಾ, ನಾನು ಹೇಳ್ದಾಗೆ ಕೇಳು. ನೀನು ಈಗ ಬರ್ಬಾರ್ದು’-ಎಂದು ತಂದೆ ಹೇಳಿದ್ದನ್ನು ಅವಳು ಕೇಳಲಿಲ್ಲ. ಇನ್ನು ನಿಧಾನ ಮಾಡಬಾರದೆಂದು ಯೋಚಿಸಿದ ಅವರು ಮೇಲೆ ಎದ್ದು, ತಮ್ಮ ಜೊತೆಗೆ ಬಂದಿದ್ದವರನ್ನು, ‘ಯಲ್ಲಾ ನಡೀರಿ, ಕಾರಿನಲ್ಲಿ ಕೂತ್ಕಳಿ. ಊರಿಗೆ ಹೋಗ್‌ಬೇಕು’-ಎಂದು ಎಬ್ಬಿಸಿಯೇ ಬಿಟ್ಟರು. ‘ನಮ್ಮ ಹೆಣ್ಮಗು…..’ ಎನ್ನುತ್ತಿದ್ದ ಹೆಂಡತಿಗೆ, ‘ಉದ್ದಕೂ ನಿನ್ನ ಮಾತಿನಂತೆ ನಡೆದು ಹೀಗಾಯ್ತು. ಇನ್ನು ಬಾಯಿ ಮುಚ್ಚು’ ಎಂದರು. ಎಲ್ಲರೂ ಹೋಗಿ ಕಾರಿನಲ್ಲಿ ಕುಳಿತರು. ಕಮಲು ಹಟ ಹಿಡಿದು ತಾನೂ ಒಳಗೆ ನುಗ್ಗಲು ಬಂದಳು. ರಂಗಣ್ಣನವರೇ ಅವಳ ಕೈ ಹಿಡಿದು ಹೊರಗೆ ನಿಲ್ಲಿಸಿದರು. ಓಡಿ ಬಂದು ನಂಜು ಅಣ್ಣನ ಅತ್ತೆಯ ಮುಂದೆ ಕುಂಕುಮ ಹಿಡಿಯುವಷ್ಟರಲ್ಲಿಯೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಡ್ರೈವರು ಕಾರನ್ನು ಸ್ಟಾರ್ಟ್‌ಮಾಡಿ ಮುಂದೆ ಚಲಿಸಿಸಿದ. ‘ಇಪ್ಪತ್ತೈದು ರೂಪಾಯಿ ಸುಮ್ನೆ ದಂಡ. ಒಂದು ತಿಂಗಳ ಸಂಬಳ. ಎಲ್ಲಿಂದ ತರೂದು?’-ಎಂದು ರಂಗಣ್ಣನವರು ಅನ್ನುತ್ತಿದ್ದುದು ನಂಜುವಿಗೆ ಕೇಳಿಸಿತು. +ಇಪ್ಪತ್ತು ಮಾರು ಹೋದ ಮೇಲೆ ಕಾರು ನಿಂತಿತು. ‘ಕಲ್ಲೇಶಣ್ಣ, ಸ್ವಲ್ಪ ಇಲ್ಲಿ ಬಾ’-ಎಂದು ಮಾವ ರಂಗಣ್ಣನವರು ಕೂಗಿದರು. ಕಲ್ಲೇಶ ಹೋಗಿ ಕಾರಿನ ಪಕ್ಕದಲ್ಲಿ ನಿಂತುಕೊಂಡ. ಕೆಳಗೆ ಇಳಿದು ಅವನ ಕೈ ಹಿಡಿದುಕೊಂಡು-‘ಸಿಟ್ ಮಾಡ್‌ಬ್ಯಾಡ. ಹೀನ ಚಾಳಿ ಹಸು ತಂದ್ರೂ ಮೇಯ್ಸಿ ಕಟ್ಟಿ ನಿಭಾಯಿಸ್‌ಬೇಕು. ಅವ್ಳುನ್ನ ನೋಡ್‌ಬ್ಯಾಡ. ನನ್ನ ಮುಖ ನೋಡು’ ಎಂದು ಹೇಳುವಾಗ ಅವರ ಕಣ್ಣೀನಲ್ಲಿ ಪಟಪಟನೆ ನೀರು ತೊಟ್ಟಿಕ್ಕಿತು. +‘ನೀವೊಳ್ಳೇ ಹುಡುಗರ ಹಾಗೆ ಆಡ್ತೀರಿ ಅಂದ್ರೆ. ಅದೇನು ಹೀನ ಚಾಳಿ ಅವ್ಳು ಮಾಡಿದ್ದು?’-ಹೆಂಡತಿ ಗಂಡನನ್ನು ಕೇಳಿದಳು. +‘ಮಾತಾಡಿ ಪ್ರಯೋಜನವಿಲ್ಲ’-ಎನ್ನುತ್ತಾ ಯಜಮಾನರು ಮತ್ತೆ ಕಾರಿನಲ್ಲಿ ಕೂತರು. ಡ್ರೈವರ್ ಬೇಗ ಮುಂದೆ ನಡೆಸಿಬಿಟ್ಟ. +ಅಕ್ಕಪಕ್ಕದವರು ಹೋಗಿ ಮಲಗಿಕೊಂಡರು. ಕಲ್ಲೇಶನ ಮನೆಯವರೂ ಮಲಗಿದರು. ಮಾತನಾಡುವುದು ಬೆಟ್ಟದಷ್ಟಿದ್ದರೂ ಆಡುವಂತಿರಲಿಲ್ಲ. ‘ನಸುಗುನಿ ಕಾಯಿನಂಥಾ ತಾಟಗಿತ್ತಿ’-ಎಂದು ಅಕ್ಕಮ್ಮ ನಾಲ್ಕು ಸಲ ಅಂದಳು. ನಂಜು ಮಾತ್ರ ಎಂದಿನಂತೆ ಮೌನವಾಗಿದ್ದಳು. ಕಲ್ಲೇಶನೂ ಸುಮ್ಮನಿದ್ದುದರಿಂದ ಅಕ್ಕಮ್ಮನಿಗೆ ಮಾತಾಡಲು ಅವಕಾಶ ಆಗಲಿಲ್ಲ. ಅವನ ಕೈಮೇಲೆ ಹನಿಕಿದ ಮಾವನವರ ಕಣ್ಣೀರು ಮನಸ್ಸನ್ನು ಕೊರೆಯಿತ್ತಿತ್ತು. ತನಗೆ ಪ್ಲೇಗು ಆದಾಗ ಅವರು ಮಗುವಿನಂತೆ ಪಾಲಿಸಿದ್ದರು. ಅವರ ಸ್ವಭಾವ ಅಂತಃಕರಣಗಳ ಬಗೆಗೆ ಅವನಲ್ಲಿ ಗೌರವ ಹುಟ್ಟಿತ್ತು. ಮೇಲೆ ಎದ್ದು ಹೆಂಡತಿಯ ಸೊಂಟ ಮುರಿಯುವಂತೆ ಒದೆಯಬೇಕೆಂಬ ಯೋಚನೆ ಹೊತ್ತಿಬರುತ್ತಿತ್ತು. ಆದರೆ ಮಾವನವರ ಕಣ್ಣೀರು ಅವನನ್ನು ಕಟ್ಟಿ ಹಾಕಿ ಹಾಸಿಗೆಯಲ್ಲಿಯೇ ಮಲಗುವಂತೆ ಮಾಡಿತ್ತು. +***** +ಮುಂದುವರೆಯುವುದು +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_633.txt b/Kannada Sahitya/article_633.txt new file mode 100644 index 0000000000000000000000000000000000000000..8789cc48fc6a6443d75dce48edf164566a039c5b --- /dev/null +++ b/Kannada Sahitya/article_633.txt @@ -0,0 +1,56 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. +ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ +ಬೀಳದಲ್ಲಿ ಜೋಪಾನ ಬಚ್ಚಿಟ್ಟು +ಬಲಿತು ನಡೆವನಕೆ ಕಾಪಿಟ್ಟು +ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ +ಪವಾಡ ಮಾಡುವಿಯೆಂದು ತಿಳಿದಿತ್ತು. +ಹಳೆಜಿಡ್ಡು ಕಳೆದ ಹೊಸ ಕಾಲಿಗಂಟುವುದಕ್ಕೆ +ನನಗೊಂದಿಷ್ಟು ಸಮಯ ಬೇಕಿತ್ತು. ಅದಕ್ಕೇ +ಹಾರುವ ನಿನ್ನ ತಡೆಯುವುದಕ್ಕೆ +ರೆಕ್ಕೆಗೆ ಗುರಿ ಹಿಡಿದರೆ ತಪ್ಪಿ +ಎದೆಗೇಟು ಬಿತ್ತು. ಅದಕ್ಕೂ ನೀನು +ರಕ್ತವಿದೆಕೋ ಮಾಂಸವಿದೆಕೋ ಅಂತ ಹಲುಬಿದಾಗ +ಹಸುವಿನ ರಕ್ಷಣೆಗೆ ವೈಕುಂಠ ಅವತರಿಸಲಿಲ್ಲ. +ರಾಮನ ಮುಖವಾಡ ನಿನ್ನ ಕಾಪಾಡಲಿಲ್ಲ. +ನೀ ಬಿದ್ದ ಭಂಗಿ ನಡುಗುವ ನನ್ನ ನೋಡಿ +ಕನಿಕರಿಸಿದಂತಿತ್ತು. +ನೆಲದ ಮೇಲೆ ನೆರಳು ನೆತ್ತರಲ್ಲದ್ದಿ +ಒದ್ದೆಯಾಗಿತ್ತು. +ಕಥೆಯ ನಾಯಕನಂತೆ ಹೇಳವರ ಬಾಯಲ್ಲಿ ಸತ್ತದ್ದೇ +ನಿನಗೆ ಸದ್ಗತಿಯಾಯ್ತು. +ನಮಗೇನು ಸುಳವೆ? ನೋಡು ಏನಾಗಿದೆ: +ನಿನ್ನ ನೆತ್ತರು ಬಿರುಗಾಳಿಗಳನ್ನ ಎಚ್ಚರಿಸಿ +ಅವು ಬೀಸಿ, ಕೂತವರ ಕಣ್ಣಿಗೆ ಮಣ್ಣೆರಚಿ +ಮಳಲಿನ ಮರುಭೂಮಿಯಲ್ಲಿ ಹಸಿರು +ಹುರುಪಳಿಸಿದೆ. +ದೇಶದ ನಕಾಶೆಗಂಟಿದ ಹಸಿರಕ್ತದ ಕಲೆಯಿನ್ನೂ +ಹಾಗೇ ಇದೆ. +ತಪ್ಪು ನಾನೇ ಮಾಡಿರಬಹುದು, ಹಾಗಂತ +ಹೆಜ್ಜೆಗಳನ್ನ ಜೊತೆಗೊಯ್ದದ್ದೂ ತಪ್ಪು. +ಈಗಲಾದರೂ ನಂಬು: +ಕೊಲೆಗಲ್ಲ ಮಾರಾಯಾ ನಾನು ಬಂದದ್ದು, +ನೀ ಸರಾಗ ಹಾರುವ ನೀಲಿ ಕೈಲಾಸದ +ಖಜಾನೆಯ ಮಣಿಗಳಿಗಾಗಿ ಬಂದಿದ್ದೆ. +ಅವಕಾಶ ತಪ್ಪಿಸಿಕೊಂಡೆ, +ನೀನು ಕೂಡ. +***** +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_634.txt b/Kannada Sahitya/article_634.txt new file mode 100644 index 0000000000000000000000000000000000000000..b7b3d804103cbea8e518b69a7ad9ce60c5ef8dc9 --- /dev/null +++ b/Kannada Sahitya/article_634.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ. +ಪರಮ ನೀಚನಾದ, ಅಮಾನವೀಯ ವರ್ತನೆಯ ಈ ವೀರಪ್ಪನ್ ಎಂಬ ಮೃಗ ಈ ಬಾರಿ ತನ್ನ ಬೇಡಿಕೆಗಳು ಈಡೇರಿಸಿಕೊಳ್ಳಲು ಹಸು ಮನಸ್ಸಿನ ಡಾ. ರಾಜ್‌ಕುಮಾರ್‍ ಅಂಥ ನಟ ಸಾರ್ವಭೌಮರನ್ನು ಅಪಹರಿಸಿ ೨೪ ದಿನಗಳು ಕಳೆದಿವೆ. +ಕನ್ನಡ ಕುಲಕೋಟಿ ಡಾ. ರಾಜ್‌ರ ಬರುವಿಕೆಗಾಗಿ ಶಬರಿಯಂತೆ ಕಾದು ಕುಳಿತಿದ್ದಾರೆ. ಯಾವ ಘಳಿಗೆ ಬಂದಾರು ಎಂದು ಎಲ್ಲ ಗಡಿಯಾರದ ಮುಳ್ಳುಗಳನ್ನು ಎಣಿಸುತ್ತಿದ್ದಾರೆ. ಹೀಗಾಗಿ ಚಿತ್ರರಂಗ ತಣ್ಣಗಿದೆ. ಚಿತ್ರ ಮಂದಿರಗಳು ಬಂದಾಗಿವೆ. ಷೂಟಿಂಗ್‌ಗಳು ನಡೆಯುತ್ತಿಲ್ಲ. ಶ್ರೀಮಂತ ನಿರ್ಮಾಪಕ-ನಿರ್ದೇಶಕರು, ನಟ-ನಟಿಯರು-ವಿತರಕರಿಗೆ ಈ ಪ್ರಸಂಗ ಭಾರಿ ಸಮಸ್ಯೆ ಎನಿಸಿಲ್ಲದಿರಲು ಕಾರಣ ಅವರ ಬ್ಯಾಂಕ್ ಬ್ಯಾಲೆನ್ಸ್ ಸಾಕಷ್ಟಿದೆ. +ನಿಜವಾಗಿ ಇಂದು ಹಸಿವಿನ ಹಿಂಸೆಗೆ ಸಿಲುಕಿ ವಿಲಿವಿಲಿ ಒದ್ದಾಡುತ್ತಿರುವವರು ದಿನಗೂಲಿಯವರು. ‘ಎರಡು ದಿನದಿಂದ ಊಟ ಇಲ್ರಣ್ಣ’, “ನಾಷ್ಟಾನೇ ಮಾಡಿಲ್ರಣ್ಣ”, “ಮನೆ ಮಂದಿ ೩ ದಿನದಿಂದ ಉಪಾಸನಣ್ಣೋ” ಎನ್ನುವವರನ್ನು ಗಾಂಧೀನಗರದಲ್ಲಿ ಸಾಕಷ್ಟು ಕಾಣಬಹುದು. +ಅಂಥ ದಿನಗೂಲಿ ಮಂದಿಯನ್ನು ಕರೆದು ಯಾವ ಚಾನೆಲ್‌ನವರೂ ಮಾತನಾಡಿಸಿಲ್ಲ. ಇಂಥ ಘಳಿಗೆಯಲ್ಲಿ ಮೊನ್ನೆ ಡಾ. ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕದ ಮೊದಲ ಪ್ರದರ್ಶನ ನೋಡಲು ಮೋಟಾರ್‍ ಬೈಕ್ ಹಿಡಿದು ಹೊರಟೆ. ಮಳೆ ‘ಧೋ’ ಎಂದು ಧುಮ್ಮಿಕಲು ಸುರುವಾಯಿತು. +ತಕ್ಷಣ ಗಾಡಿ ಮನೆಯಲ್ಲೇ ಬಿಟ್ಟು ಒಂದು ಆಟೋ ಏರಿದೆ. ಮಾನವೀಯ ಹೃದಯವಿದ್ದ ಆಟೋದವ ಇದೆ ಸುಸಮಯವೆಂದು “ಡಬ್ಬಲ್ ಛಾರ್ಜ್ ನೀಡಿ” ಎಂದು ಕೇಳದೆ ಎ.ಡಿ.ಎ ರಂಗಮಂದಿರದತ್ತ ತೆರಳಿದ. +“ಹ್ಯಾಗಿದೆಯಣ್ಣ ಆಟೋ ಯವಾರ” ಎಂದೆ. +“ಯಾಪಾರ ಬೋ ಡಲ್ ಆಗದೆ ಗುರುವೇ. ಸಿನ್ಮಾ ಥೇಟರ್‌ಗಳು ಬಂದ್. ಜನಕ್ಕೂವೇ ಬೇಗ ಮನೆ ಸೇರ್‍ಕೊಳ್ಳೊ ಆತ್ರ. ೯ ಗಂಟೆ ಒಳಗೆ ಸಿಟಿ ಖಾಲಿ ಆಗ್ ಬುಡತದೆ ‘ಕರೋಡ್‌ಪತಿ’ ನೋಡಾಕೆ. ಅಂದ್ಮೇಲೆ ಡಬ್ಬಲ್ ಮೀಟರ್‍ ಛಾರ್ಜ್ ತೆಪ್ತು. ಬಾಳ ದಿನ ಬಾರ್‌ಗಳು ಬಂದಾಗಿದ್ದೋ. ಅಂದ್ಮಾಗೆ ಆ ಯಾಪಾರವೊ ತೆಪ್ಪೋಯಿತ್ರ. ಮುಂಚೆ ದಿನಾ ಮುನ್ನೂರು ರೂಪಾಯಿ ಸಂಪಾದ್ಸೇವೆ. ಈಗ ನೂರು ರೂ. ಕೂಡಾ ಆಗಕಿಲ್ಲ. ಯಾಕೆ ಹೇಳ್ತೀರಿ ನಮ್ಮ ಕಷ್ಟ”. +“ಇನ್ನೇನು ಒಂದೆಲ್ಡು ದಿನದಲ್ಲಿ ಡಾ. ರಾಜ್‌ಕುಮಾರ್‍ ಬಂದ್ ಬುಡ್ತಾರೆ ಬುಡು” +“ಆ ಎಪ್ನು ದೇವ್ರಂಥಾ ಮನ್ಸ ಸೊಮೆ. ಬರಬೇಕು ಬೇಗ. ಆದ್ರೆ ಬರೋವರೆಗೂ ದಿನಗೂಲಿಯೋರ ಕಥೆಯೇಳ್ರಿ?” +“ನಿಂದೇನು ದಿನಗೂಲಿ ಅಲ್ಲವಲ್ಲ. ಆಟೋ ಇದೆ. ಯಾಪಾರ ಆಗೆ ಆಗುತ್ತೆ” +“ಯಾರೇ ಆಗ್ಲಿ ನಾನೊಬ್ಬ ಆಯಾಗೀವ್ನಿ. ಬೇರವ್ರ ಕಷ್ಟ-ಸುಖ ಕಟ್ಕೊಂಡು ನಮಗೇನಾಗಬೇಕು ಅಂದ್ರೆ ಅದು ತೆಪ್ಪಾಯ್ತದೆ”. +“ಹಾಗಂತ ನೀನು ಸಂಪಾದಿಸಿದ್ರಲ್ಲಿ ಬೇರೆಯವರಿಗೆ ಹಂಚೋದು ಸಾಧ್ಯವೆ?” +“ಅಂಗಾರೆ ದಿನಗೂಲಿಯವನ ಈ ಕಥೇ ಕೇಳ್ರಿ. ಈವೊತ್ತು ಬೆಳಗ್ಗೆ ಗಾಂಧೀನಗರದ ದರ್ಶಿನಿ ಓಟ್ಲಾಗೆ ಊಟ ಮಾಡಾಕೆ ಓಗಿದ್ದೆ ಸೋಮೆ. ಇನ್ನೇನು ಒಂದು ತುತ್ತು ಬಾಯಿಗಿಟ್ಕೊಂಬೇಕು ಹನ್ನೆಲ್ಡು ವರ್ಸದ ಉಡ್ಗ ಒಬ್ಬ ಬಂದ. ಬಾಡಿ ಬಸವಳಿದು ಓಗಿತ್ತು ಅವನ ಮುಖ. ಅವನ ಕಣ್ಣಾಗೆ ನೋವು ತುಂಬಿ ತುಳುಕಿತ್ತು. ನಾನು ತಿನ್ನೋದ್ನೇ ನೋಡ್ತಿದ್ದ. ಏನ್ ಮಗ ಅಂಗ ನೊಡ್ತಿದಿ ಅಂದೆ. “ಅಣ್ಣಾ, ಊಟ ಮಾಡಿ ಎಲ್ಡು ದಿನ ಆಯಿತು. ನಂಗೆ ಕಾಸು ಬೇಡ. ಪ್ಲೇಟ್ ಮೀಲ್ಸ್ ಕೊಡ್ಸಣ್ಣ” ಎಂದ. “ಏನು ಕೆಲಸ ಮಾಡ್ತಿದೀ” ಎಂದೆ. “ಸೈಕಲ್ ಸ್ಟಾಂಡ್‌ನಾಗೆ ದಿನಗೂಲಿ ಮಾಡಾವೆ. ಈಗ ಥೇಟ್ರೆಲ್ಲಾ ಬಂದಾಗವೆ. ಅಣ್ಣಾವ್ರು ಬರೋವರ್‍ಗೆ ಥೇಟ್ರುಗಳು ತೆಗೆಯಾಕಿಲ್ವಂತೆ. ಕೆಲ್ಸಾ ಇಲ್ಲ ಅದ್ಕೆ ಊಟಾನೂ ಇಲ್ಲಾ” ಅಂದ. ಆ ಹುಡುಗನ ಸ್ಥಿತಿ ಕಂಡು ಅಯ್ಯೋ ಎನಿಸಿತು. ಅವನಿಗೊಂದು ಊಟ ಕೊಡಿಸಿದೆ. ಊಟ ಮಾಡಿ ‘ಇವತ್ತಿನ ದಿನ ಕಳೀತ್ರಣ್ಣ ನಿಮ್ಮಿಂದ. ಬರ್‍ತೀನ್ರಿ’ ಎಂದ. “ಈಗ ಊಟ ಆಯಿತು. ನಾಳೆ ಏನು ಮಾಡ್ತಿ ಅಂದೆ?” +‘ಇಂಗೇ ನಾಳೆ ಯಾರಾನಾ ಪುಣ್ಯಾತ್ಮ ಸಿಗ್ತಾನೆ. ಆ ಎಪ್ನು ಊಟಾನೇ ಕೊಡಿಸಬೈದು- ಇಲ್ವೇ ಕೈಗೊಂದು ಎಲ್ಡು ರೂಪಾಯಿ ಕೊಡಬೈದು. ಆಗ ಫುಟ್ಪಾತಾಗೆ ಮಾರೋ ಇಡ್ಲಿಯೋ, ಚಿತ್ರಾನ್ನವೋ ಏನಾರಾ ತಿಂತೀನಿ’ ಎಂದ. +‘ಅಲ್ಲಾ ಮಗಾ, ದಿನಾ ನೀನು ಇಂಗೆ ಭಿಕ್ಷೆ ಬೇಡ್ತಾ ಓದ್ರೆ – ನೀನು ಭಿಕ್ಷುಕನಾಗ್ತೀಯೇ ಹೊರ್‍ತು ಒಳ್ಳೆ ಕೆಲಸಗಾರನಾಗಲ್ಲ. ನಿನ್ನ ಅನ್ನ ನೀನೇ ಸಂಪಾದಿಸ್ಕೊಳ್ಳೋ ದಿನಾ ಬರೋದೇ ಇಲ್ಲ. ನೀನು ನಿಗಾವಹಿಸಬೇಕಾದ್ದು ಆ ಕಡೆ ಅಂದೆ’ +‘ನಮ್ಮಂತಾ ಬಡವರ ಕಸ್ಟ ಕೇಳಿ ರೆಕಮಂಡ್ ಮಾಡೋರು ಎಲ್ಲೌವ್ರೆ? ನಮ್ಮಂತಾ ಬಿಕನಾಸಿಗಳ ಕಸ್ಟ ಯಾರೂ ಕೇಳ್ತಾರೆ ಏಳ್ರಿ?’ ಎಂದ. +‘ಅಂಗಾರೆ ಕುಂತ್ಕೋಬಾ’ ಅಂತ ಆಟೋಲಿ ಕೂರಿಸ್ಕೊಂಡು, ನಾನು ಆಟೋ ರಿಪೇರಿ ಮಾಡೋ ನಮ್ಮ ಗ್ಯಾರೇಜಿಗೆ ಕರ್‍ಕೊಂಡು ಓಗೀ ನೋಡು ಸಿವಾ, ಈ ಉಡ್ಗನ್ನ ನಿನ್ನ ಅಸಿಸ್ಟೆಂಟ್ ಆಗಿ ಮಡಿಕ್ಕೊಂಡು ಕೆಲ್ಸ ಕಲಿಸು. ದಿನಾ ಊಟಕ್ಕೆ ಒಂದಷ್ಟು ಕಾಸು ಕೊಡು. ಥೇಟರ್‌ನಲ್ಲಿ ದಿನಗೂಲಿ ಮಾಡ್ಕೊಂಡಿದ್ದ ಬಡಪಾಯಿ’ ಅಂದೆ. +‘ಆಗ್ಲಿ ಬಾ ತಮ್ಮ’ ಅಂತಂದು ‘ಆ ಸ್ಪಾನರ್‍ ತಕಾ’ ಅಂತ ಕೆಲ್ಸ ಹೇಳೇ ಬಿಟ್ಟ. ಹುಡುಗ ಹುಮ್ಮಸ್ಸಿನಿಂದ ಕೆಲಸ ಕಲಿಯಲು ಅನುವಾದ. +ಆ ಗಾಡಿ ರಿಪೇರಿಯಾದ ನಂತರ ನೋಡುತ್ತಾನೆ ಗೋಡೆಯ ಮೇಲೆ ಡಾ. ರಾಜ್ ಅವರ ದೊಡ್ಡ ಭಾವಚಿತ್ರವಿದೆ. ಕೆಳಗೆ ‘ಅಣ್ಣ – ನೀವಿಲ್ಲದ ಕನ್ನಡ ನಾಡು ತುಂಬ ಬಡವಾಗಿದೇಣ್ಣ – ಬೇಗ ಬಾರಣ್ಣ’ ಎಂಬ ಹೇಳಿಕೆ ಕಂಡು ನಾನೂ ಸುಸ್ತು” ಎಂದು ಆಟೋದವ ಕಥೆ ಮುಗಿಸುವ ಹೊತ್ತಿಗೆ ಎಡಿಎ ರಂಗಮಂದಿರ ಬಂದಿತ್ತು. +ಮೀಟರ್‍ ೧೯ ರೂ. ತೋರುತ್ತಿತ್ತು. ನಾನು ೨೦ ರೂ. ತೆತ್ತು ಹೊರಟೆ. ಆತ ಕರೆದು ‘ಸಾರ್‍! ಚಿಲ್ರೆ ತಗೊಳ್ಳಿ’ ಎಂದ. +“ಅದೂ ನೀನೇ ಇಟ್ಟುಕೊ. ನಾಳೆ ಹಸಿವು ಅಂತ ಇನ್ಯಾರಾರೂ ದಿನಗೂಲಿಯವನು ಬಂದಾಗ ಅವನಿಗೆ ಕೊಡು’ ಎಂದೆ. +ನಾಟಕ ಆರಂಭವಾಗಿತ್ತು. ಒಳಗೆ ನಡೆಯುತ್ತ ಯೋಚಿಸಿದೆ. +‘ಆ ಆಟೋದವನಿಗೆ ದಿನಗೂಲಿ ಹುಡುಗರ ಬಗ್ಗೆ ಇರುವ ಕಳಕಳಿ ಫಿಲಂ ಛೇಂಬರ್‌ನವರಿಗೆ, ಶ್ರೀಮಂತ ನಿರ್ಮಾಪಕ-ನಿರ್ದೇಶಕ-ನಟ-ನಟಿಯರಿಗಿಲ್ಲವಲ್ಲ’ ಎಂದುಕೊಂಡೆ. +ನಾಟಕ ನೋಡುತ್ತ ಕುಳಿತಾಗಲೂ ಈ ಅಂಶವೇ ನನ್ನ ಮನ ಕೊರೆಯುತ್ತಿತ್ತು. +ಆ ನಾಟಕದಲ್ಲಿ ಸಂಜೀವ ಶಿವ ಒಬ್ಬ ವೈದ್ಯ. ಆತನ ತಾಯಿ ಸಾವಿನ ಸಂಕೇತವಾದ ಶೆಟವಿ. ರೋಗಿ ಬಂದಾಗ ಆಕೆ ಒಂದು ಪಕ್ಕ ನಿಂತರೆ ಖಾಯಿಲೆ ವಾಸಿಯಾಗುತ್ತದೆಂದು. ಇನ್ನೊಂದು ಪಕ್ಕ ನಿಂತರೆ ರೋಗಿ ಗೊಟಕ್ ಎನ್ನುತ್ತಾನೆ ಎಂಬುದೊಂದು ಮುಢನಂಬಿಕೆ. +ಆ ಮೂಢನಂಬಿಕೆಗನುಗುಣವಾಗಿ ಮಗ ನಡೆದುಕೊಳ್ಳುತ್ತಾನೆ. ಸಾಯುವ ರೋಗಿ ಎಂದು ಗೊತ್ತಾದಾಗ ಆತ ಅವರಿಗೆ ಚಿಕಿತ್ಸೆ ನೀಡುವುದೇ ಇಲ್ಲ. +ತಾನೊಬ್ಬ ರಾಜಕುಮಾರಿಯನ್ನು ಮೋಹಿಸಿದಾಗ ತಾಯಿಯೊಂದಿಗೆ ಘರ್ಷಣೆಯುಂಟಾಗಿ ಅವಳಿಂದ ಬಿಡುಗಡೆ ಪಡೆಯಲು ಮುಂದಾಗುವುದೇ ನಾಟಕದ ತಿರುಳು. +ಆಗಲೂ ನನಗೆ ನೆನಪಾದದ್ದು ವೀರಪ್ಪನ್ ಹಿಡಿತದಲ್ಲಿ ಬಂಧಿಯಾಗಿರುವ ಡಾ. ರಾಜ್‌ರನ್ನು ಬಿಡಿಸಿಕೊಳ್ಳಲು ಎರಡು ಸರ್ಕಾರಗಳು ಪಡುತ್ತಿರುವ ಪಡಿಪಾಟಲು. ಸಂಯಮ ತಂದುಕೊಂಡು ಮಾಡಲು ಏನು ತೋರದೆ ಪೂಜೆ-ಪುನಸ್ಕಾರ, ಉರುಳುಸೇವೆ, ಈಡುಗಾಯಿ ಒಡೆತಕ್ಕೆ, ಹವನ ಹೋಮಗಳ ಪರಂಪರೆಗೆ ಜೋತುಬಿದ್ದ ಸಾಮಾನ್ಯರ ಅಸಹಾಯಕ ಪರಿಸ್ಥಿತಿ. +ನಾಟಕ ಮುಗಿದು ಹೊರಟಾಗ ಮತ್ತೊಂದು ಆಟೋ ಕಾಯುವ ಪರಿಸ್ಥಿತಿ ಬರಲಿಲ್ಲ. ಬಂಧುಗಳ ಕಾರು ನನ್ನನ್ನು ಮನೆಗೆ ಕರೆತಂದಿತ್ತು. ಅಂದು ನೋಡಿದ ‘ಮಹಾಮಾಯಿ’ ನಾಟಕಕ್ಕಿಂತ – ಆಟೋದವನ ಮಾನವೀಯತೆ, ದಿನಗೂಲಿಯವನ ಭವಿಷ್ಯದ ಬಗೆಗೆ ಆತ ಚಿಂತಿಸಿದ ದಿಕ್ಕು ನನ್ನ ಮನಸ್ಸಿನ ಮೇಲೆ ಮಹತ್ತರ ಪರಿಣಾಮ ಬೀರಿತ್ತು. +-ಕಣ್ತೆರೆದು ನೋಡಿದರೆ ಇಂಥ ದಿನಗೂಲಿಯವರ ದಾರುಣ ಕತೆಗಳು ಲೆಕ್ಕವಿಲ್ಲದಷ್ಟಿದೆ. +ಯಾರಿಗೆ ಬೇಕು ಅವರ ಕಥೆ? +ಯಾತಕೆ ಬೇಕು ಅವರ ಕಥೆ? +***** +(೨೫-೮-೨೦೦೦) +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” -ಬೇಂದ್ರೆ ಕಳೆದ ತಿಂಗಳು ಪ್ರಕಟಿಸಿದ ದ್ವೀಪ ಚಿತ್ರಕ್ಕೆ ಶಿವಕುಮಾರ್ ಜಿ ವಿ ಬರೆದ ವಿಮರ್ಶೆಗೆ ಯಶಸ್ವಿನಿ ಹೆಗಡೆಯವರ ಪ್ರತಿಕ್ರಿಯೆ… ‘ಮರದ ಎಲೆ ದಿನಾ ಬಿದ್ದು, […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_635.txt b/Kannada Sahitya/article_635.txt new file mode 100644 index 0000000000000000000000000000000000000000..d7d07cad46a1846f1542975159a1bb128b0228d2 --- /dev/null +++ b/Kannada Sahitya/article_635.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- +ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ +ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ +ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! +ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ +ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ +ಪಂಜಿನೊಲು ಪರಿಸರವ ಪ್ರತಿನಿಧಿಸಿ, ಹೆಗ್ಗುರಿಯ +ತೋರುವುದು! ಭಾರತದ ಬಿಡುಗಡೆಯ ಬವರದಲಿ +ಕನ್ನಾಡ ವೀರ ವಾಲಿಯ ದಂಡು ಕಾಳೆಗದ +ಮುಖದಲ್ಲಿ ಮಸಗಿದುದು- ಕಣ್ಣೆವೆಯ ಮುಚ್ಚಿ ತೆರೆ- +ವನಿತರೊಳೆ ಅಚ್ಚರಿಯ ಕೃತಿ ನೂರು ಬೆಟ್ಟದೊರೆ! +ಪಡವಳನಸೀಮ ಸಾಹಸ ನಾಡ ಬಾವುಟದ +ಹೆಮ್ಮೆ; ಧೃತಿಗೆಡದ ಕೃತಿವೀರನೇಗಳು ಗೆಲ್ಗೆ! +ನಾಡಸೇವೆಯಲಿಂತು ಉತ್ಸಾಹದಿಂ ಬಾಳ್ಗೆ. +***** +೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […] +ಬಾನಿನೊಂದೆಡೆ ತಮದ ರುಂದ್ರ ಪಾತ್ರೆಯಲಿಳಿದು ದೀನ ಮೊಗದಲಿ ಕಿರಣ ತಾನ ಸೋಪಾನದಲಿ ನಿರ್‍ನಿಮೇಷಾಕ್ಷಿಯೊಳಗೇನನೀಕ್ಷಿಸುತಿರುವೆ ಲಲಿತಾಂಗಿ ನಕ್ಷತ್ರವೆ? ಉನ್ನತದ ತಾರಕಿತ ಗಗನದೊಳು ಏಕಾಕಿ ಬಿನ್ನಗಾಗುತ ಮೌನವ್ರತಧಾರಿಯಾಗಿರಲು ಪನ್ನತಿಕೆ ಬಹುದೆಂದು? ಎದ ಭಾರವನು ಇಳುಹಲಾರದೆಯೆ ಕೊರಗುತಿರುವೆ! ಭವದ […] +ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್‍ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_636.txt b/Kannada Sahitya/article_636.txt new file mode 100644 index 0000000000000000000000000000000000000000..808b7afecaafca3ebb73e313bc0e7f2225944805 --- /dev/null +++ b/Kannada Sahitya/article_636.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? +ಗೆರೆಯ ಬರುವುದರೊಳಗೆ, ನೀರು ಕರಗಿ +ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, +ನದಿಯಾಗಿ ಹರಿದು, +ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ +ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ +ಮತ್ತೆ ನೀರಾಗುವುದರೊಳಗೆ +ನೀವೆಲ್ಲಿರಿತ್ತೀರಿ? +ಇಷ್ಟಾಗಿ ನೀವೆಳೆದ ಎರಡು ರೇಖೆಗಳಲ್ಲಿ +ಕೂಡಬೇಕಾದ್ದಿಲ್ಲ. ಕೂಡಿದರೂ ಅಡ್ಡಿಯಿಲ್ಲ. ನೀರಿನಲ್ಲೊಮ್ಮೊಮ್ಮೆ ಸಮಾಂತರ ಗೆರೆ +ಮೂಡಿದ್ದಿದೆ, ಕೂಡಿದ್ದಿದೆ. +ಮುರಿದು ಅಗಲಿದ್ದೂ ಇದೆ. +ಗೆರೆ ನಂಬಿ ಜಗಳಾಡಿದ್ದಿದೆ, ಕೊಲೆಗಳಾಗಿದ್ದಾವೆ. +ಇಷ್ಟಾಗಿ ನೀವು ಬೆರಳೂರಿದ್ದೆ ಕೇಂದ್ರ +ಸುತ್ತಿದ್ದೆ ಪರಿಘ. +ಪರಿಘದ ಹಾಗೆ ಕೇಂದ್ರಗಳೂ ಅಪರಂಪಾರ +ಯಾಕೆಂದರೆ ನೋಡಿ ಇದು ನೀರಿನ ವ್ಯವಹಾರ| +***** +ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […] +೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […] +ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_637.txt b/Kannada Sahitya/article_637.txt new file mode 100644 index 0000000000000000000000000000000000000000..c1e7bc62a5ceea518ae5e277a7f04a07623d3a45 --- /dev/null +++ b/Kannada Sahitya/article_637.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇಂಗ್ಲೀಷಿನಲ್ಲಿ ಎರಡು ಸಾಲು ಮಾಡಬೇಕು. +ಕತೆ ಬರೆಯುವ ವಿಶ್ವಾಸವನ್ನು ಅವನ ಕೆಲ ಸ್ನೇಹಿತರು ಕೇಳುತ್ತಲೇ ಇರುತ್ತಾರೆ. ನೀವು ಕತೆ ಹೇಗೆ ಬರೆಯುತ್ತೀರಿ? ಮೂಡ್ ಯಾವಾಗ ಬರುತ್ತೆ? ಹೀಗೇ ಇರಬೇಕೂಂತ ನಿರ್ಧಾರ ಮಾಡಿ ಬರೀತೀರಾ? ಸಂಭಾಷಣೆ ಹೇಗೆ ಹೊಂದಿಸ್ತೀರಿ? ಇತ್ಯಾದಿ, ಇತ್ಯಾದಿ. ಇವೆಲ್ಲಾ ಅವನಿಗೆ ತೊಡಕಿನ ಪ್ರಶ್ನೆಗಳು. ಏಕೆಂದರೆ ಪ್ರತೀಕತೆಗೂ ಒಂದು ವಿಭಿನ್ನ ಹಿನ್ನೆಲೆ ಇರುತ್ತದೆ. ಅದಕ್ಕೇ ಅವನೆಷ್ಟೋ ಬಾರಿ ಭಾಷಣವನ್ನೇ ಕೊಟ್ಟಿದ್ದಾನೆ. +ಕತೆ ಬರೆಯುವುದು ಹತ್ತರಿಂದ ಐದರವರೆಗೆ ಆಫೀಸಿಗೆ ಹೋಗಿ ಬರುವಂತಹ ಪೂರ್ವಯೋಜಿತ ಕಾರ್ಯಕ್ರಮವಲ್ಲ. ಅಥವಾ ಚಿತ್ರ ಕಲೆಯಂತೆ ಒಂದು ಮಾಡೆಲ್ ಎದುರಿಗಿಟ್ಟುಕೊಂಡು ಬಣ್ಣ ಬಳಿಯುವ ರೀತಿಯಂತೂ ಅಲ್ಲವೇ ಅಲ್ಲ, ಮನಸ್ಸಿನ ಭಾವತೀವ್ರತೆಯಿಂದ ಹೊರಹೊಮ್ಮುವ ಕವನವೂ ಅಲ್ಲ. ಅದೊಂದು ವಿಭಿನ್ನ ಮಾನಸಿಕ ಪರಿಸ್ಥಿತಿಯಲ್ಲಿ ಹೊರಹೊಮ್ಮುವ ಅಕ್ಷರ ಗುಚ್ಚ. ಅದು ಹೇಗೆ ಬರೀತಿರಿ ಅಂದರೆ ಉತ್ತರ ನನ್ನಲ್ಲಿಲ್ಲ. ಏಕೆಂದರೆ ಕೇಳಿದರೂ ಹೇಳಲಾರೆ. ಇವುಗಳ ಹಿಂದಿರುವ ಪ್ರೇರಕ ಶಕ್ತಿಯ ಅರಿವು ನನಗಿನ್ನೂ ಆಗಿಲ್ಲ….” +ಹೀಗೆಲ್ಲಾ ಹೇಳುವಾಗ ಕೆಲ ಪದಗಳು ಅವನ ಕೃತ್ರಿಮತೆಯ ಸಂಕೇತ ಎಂದು ಅವನಿಗನ್ನಿಸುತ್ತದೆ. ಆದರೂ ಆ ಹಿನ್ನೆಲೆಯಲ್ಲಿ ಅವನು ಎಷ್ಟೋ ಬಾರಿ ಆಲೋಚಿಸಿದ್ದಾನೆ. ಉತ್ತರ ಹುಡುಕಿದಷ್ಟೂ ಜಟಿಲ ಪ್ರಶ್ನೆಗಳು ಉದ್ಭವಿಸುವುದನ್ನೂ ಕಂಡಿದ್ದಾನೆ. ಅವನನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾಡುತ್ತಿದ್ದುದೆಂದರೆ ಎರಡು ವರ್ಷಗಳ ಹಿಂದೆ ಬರೆಯಲುಪಕ್ರಮಿಸಿ ಪೂರ್ಣಗೊಳಿಸಲಾಗದ ಒಂದು ಕತೆ. ಅರ್ಧ ಬರೆದ ಕತೆ ಇನ್ನೂ ಅವನ ಬಳಿ ಇದೆ. ಅದನ್ನು‌ಅವನು ಅಗಾಗ ಓದುವುದುಂಟು.ಅದರ ಬಗ್ಗೆ ಚಿಂತಿಸುವುದುಂಟ್. ಹಾಗೇ ಇನ್ನೊಮ್ಮೆ ಆ ಕತೆಯನ್ನು ಓದಬೇಕೆನಿಸಿತು ವಿಶ್ವಾಸನಿಗೆ…. +ವಿವೇಕ ಬೆಂಗಳೂರಿನಿಂದ ಬಂದು ಮೂರು ದಿನಗಳಾಗಿದ್ದವು. ಮೂರು ವಾರಗಳ ರಜೆಯ ಮೇಲೆ ಅವನು ಊರಿಗೆ ಬಂದಿದ್ದಾನೆ. ಈ ಬಾರಿ ಹಲವು ವಿಷಯಗಳನ್ನು ಅವ ಇತ್ಯರ್ಥ ಮಾಡಿಕೊಳ್ಲಬೇಕಿದೆ. ಬೆಂಗಳೂರಿನಲ್ಲಿರುವ ಹೆಂಡತಿ ವಿದ್ಯಾ, ಮಗಳು ವರ್ಷಾ, ಒಂದೆಡೆ ಅವನನ್ನುಸೆಳೆದರೆ ಇತ್ತ ತಂದೆಯ ಬಗೆಗೆ ಬೇರೆಯದೇ ಆಲೋಚನೆ. ತೀರ್ಥಹಳ್ಳಿಯ ಬಳಿ‌ಅ ಕೊಣಂದೂರಿನಲ್ಲಿ ಇರುವ ಮನೆ, ಜಮೀನು, ಅಲ್ಲಿನ ಅಡಿಕೆ ತೋಟ, ಪ್ರಕೃತಿ ಇವುಗಳ ಮಧ್ಯೆ ಸುಖವಾಗಿ ಇರುವ ಅಪ್ಪ ಬೆಂಗಳೂರಿಗೆ ಬರಲು ಸುತರಾಂ ಒಪ್ಪದ ಒಂಟಿಯಾಗಿ ಹಳ್ಳಿಯಲ್ಲಿರಲಾಗದ ಪರಿಸ್ಥಿತಿ. ‘ಅಗ್ರಹಾರ’ ಹೋಬ್ಳಿಯಲ್ಲಿಯೇ ಅತಿ ಹೆಚ್ಚು ಇಳುವರಿ ಕೊಡುವ ಭೂಮಿ ಮತ್ತದರ ಒಡೆಯ ಅಪ್ಪ. +ಇತ್ತ ಕೋರಮಂಗಲದಲ್ಲಿ ಸ್ವಂತ ಮನೆ, ನೌಕರಿ ವರ್ಷಾಳ ವಿದ್ಯಾಭ್ಯಾಸ ವಿದ್ಯಾಳ ಕೆಲಸ, ಹೀಗೆ ದ್ವಂಧ್ವ. ಹಳ್ಳಿಯನ್ನು ಬಿಡಲು ಅಪ್ಪನಿಗೆ ಹೇಳಲಾರ, ತಾನೂ ಬಂದು ಇಲ್ಲಿರಲಾರ….ಅಮ್ಮ ಇದ್ದಷ್ಟು ದಿನವಂತೂ ಯೋಚನೆ ಇರಲಿಲ್ಲ. ಈಗ ಈ ಮೂರು ವಾರದೊಳಗೆ ಏನಾದರೂ ಇತ್ಯರ್ಥವಾಗಲೇಬೇಕಾಗಿದೆ. ಅಪ್ಪ ಒಪ್ಪಿದರೆ ತೋಟ, ಮನೆ ಮಾರಾಟ ಮಾಡಿ ಆರಾಮವಾಗಿ ಬೆಂಗಳೂರಿಗೆ ಹೋಗಬಹುದು. ಅಥವಾ ಏನಾದರಾಲಲಿ ಎಂದು ತಾವೇ ಊರಿಗೆ ಬಂದುಬಿಡುವುದೇ? ಹೀಗೆ ದ್ವಂಧ್ವಗಳ ಮಧ್ಯೆ ಅವನ ಮನ ಎಡತಾಕುತ್ತಿತ್ತು. +ಈ ಹೊಯ್ದಾಟಕ್ಕೆ ಕಾರಣ ಇಲ್ಲದಿರಲಿಲ್ಲ. ಅಪ್ಪನನ್ನು ಒಂಟಿಯಾಗಿ ಬಿಟ್ಟು ಹೋಗುವ ಮಾತು ಅವಶ್ಯವಾಗಿತ್ತು. ಅಮ್ಮ ಹೋದಮೇಲಂತೂ ಅಪ್ಪ ಆರೋಗ್ಯದ ಬಗ್ಗೆ ಉದಾಸೀನದಿಂದಲೇ ಇದ್ದರು. ಅವರಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಮತ್ತೆ ಮುದಿತನದೊಂದಿಗೆ ಅಂಟಿ ಬರುವ ಮಣ್ಣಿನ ಅಟಾಚ್‌ಮೆಂಟಿನ ಸೆಂಟಿಮೆಂಟಾಲಿಟಿಯ ಖಾಯಿಲೆಯೂ ಇದೆ. ಇಂಥೆಲ್ಲ ಖಾಯಿಲೆಗಳ ನಡುವೆ ಒಮ್ತಿಯಾಗಿ ನರಳುತ್ತಿರುವ ಅಪ ಕೆಲದಿನಗಳಿಂದ ಅಟ್ಟಾಗಿ ಹಾಸಿಗೆ ಹಿಡಿದಿದ್ದರು. ಅದೇನು ರೋಗವೋ ತಿಳಿಯದು. ಬೆಂಗಳೂರಿಗೆ ಕರೆದೊಯ್ದರೆ ಒಳ್ಳೆಯ ಡಾಕ್ಟರಿಗಾದರು ತೋರಿಸಬಹುದು. ಆದರೆ ಈ ಅಪ್ಪ ಒಪ್ಪುವುದೇ ಇಲ್ಲ. ಇವರಿಗೆ ಈ ಹಾಸಿಗೆಯ ಮೇಲೆ ಸಾವು ಬದುಕುಗಳ ನಡುವೆ ಎಡತಾಕುವುದೇ ಹೆಚ್ಚು ಪ್ರಿಯ. +ಅತ್ತ ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ. ಮಲೆನಾಡ ಹೆಣ್ಣೇ ಆದರೂ ವಿದ್ಯಾ ಮಾತ್ರ ತೀರ್ಥಹಳ್ಳಿಗೆ ಹಿಂದಿರುಗಲು ಸಿದ್ಧಳಿಲ್ಲ. ತೀರ್ಥಹಳ್ಳಿಗೇ ಬರದವಳು ಕೊಣಂದೂರಿಗೇನು ಬಂದಾಳು? ಎಶ್ಃಟೋ ಹೇಳಿದ್ದಾಗಿದೆ ಅವಳಿಗೆ-ತೀರ್ಥಹಳ್ಳಿ ಇತ್ತೀಚೆಗೆ ಡೆವಲಪ್ ಆಗಿದೆ, ಅಷ್ಟೇಕೆ? ಕೊಣಂದೂರಿನಲ್ಲೂ ಒಂದು ಸಿನೇಮಾ ಒಂದು ವಿಡಿಯೋ ಒಂದು ಟೈ ಇನ್ಸ್‌ಟಿಟ್ಯೂಟ್ ಇತ್ಯಾದಿಗಳೆಲ್ಲಾ ಬಂದಿವೆ….ಉಹುಂ. ಎಷ್ಟು ಹೇಳಿದರು ಅವಳಿಗೆ ಬೆಂಗಳೂರಿನ ಮೋಜು ಇಳಿಯುವುದಿಲ್ಲ. ವರ್ಷಾಳ ಓದಿನ ಪ್ರಶ್ನೆಯನ್ನು ತಂದಿಟ್ಟುಬಿಡುತ್ತಾಳೆ…ಇಂಥಾ ಸ್ಕೂಲಿಂಗ್ ನಿಮ್ಮೂರಿನಲ್ಲಿ ಎಲ್ಲಿ ದೊರೆಯಬೇಕು? ಎಂದು ಮೂದಲಿಕೆಯ ಪ್ರಶ್ನೆ. +ಹೀಗೆಲಾ ಪ್ರಶ್ನಿಸುವ ವಿದ್ಯಾಳನ್ನು ನಾಣ್ಯದ ಈ ಭಾಗ ನೋಡುವಂತೆ ಮಾಡಲು ವಿವೇಕ ಎಷ್ಟೋ ಬಾರಿ ಪ್ರಯತ್ನಿಸಿದ್ದಾನೆ. ತಾನೂ ತೀರ್ಥಹಳ್ಳಿ ಶಿವಮೊಗ್ಗೆಯಲ್ಲಿ ಓದಿ ಮೇಲೆ ಬಂದವ. ಅಲ್ಲಿಯೇ ಈಗ ಸಹ್ಯಾದ್ರಿ ಯೂನಿವರ್ಸಿಟಿ ಬೇರೆ ಆಗುತ್ತಿದೆ. ನಸೀಬಿದ್ದರೆ ಎಲ್ಲಾದರೂ ಓದಿ ಮೇಲೆ ಬರಬಹುದು ಇತ್ಯಾದಿ….ಆದರೆ ವಿದ್ಯಾಳದು ಇವಕ್ಕೆಲ್ಲಾ ಅನುಕೂಲದ ಕಿವುಡು. +ಹೀಗೆ ಆಲೋಚಿಸುತ್ತಿದ್ದ ವಿವೇಕ ಈ ಬಾರಿ ಬೆಂಗಳೂರಿಗೆ ಹಿಂದಿರುಗಿ ಹೋಗುವ ಮುನ್ನ ಏನೊಂದೂ ನಿರ್ಧರಿಸಬೇಕು ಎಂದುಕೊಂಡ.” +ಇದಿಷ್ಟೇ ವಿಶ್ವಾಸ ಅಂದು ಬರೆದಿಟ್ಟಿದ್ದ ಸಾರಾಂಶ. ಈ ಕತೆಯನ್ನು ಅದೇಕೋ ಅವನಿಗೆ ಮುಂದಕ್ಕೆ ಒಯ್ಯಲು ಸಾಧ್ಯವೇ ಆಗಲಿಲ್ಲ. ಪ್ರಾರಂಭಿಸಿದಾಗ ಮೂರು ವಾರಗಳೊಳಗಾಗಿ ವಿವೇಕನ ತಂದೆಯ ಸಾವು ಸಂಭವಿಸುವುದೆಂದೂ ಅಂತ್ಯ ಕ್ರಿಯೆ ಕುಗಿಸಿ, ಅದರೊಂದಿಗೇ ಜಮೀನು ಮಾರಿ ಬೆಂಗಳೂರಿಗೆ ವಿವೇಕ ಹಿಂದಿರುಗುವ ಚಿತ್ರಣವನ್ನು ನೀಡಿ ಯಾಂತ್ರಿಕತೆಯ ಆಕರ್ಷಣೆಯಲ್ಲಿ ಮುಳುಗಿದ ವ್ಯಕ್ತಿ, ಪ್ರಕೃತಿಯನ್ನೇ ಮರೆತು ಮುಂದಕ್ಕೆ ಸಾಗುವ ವಸ್ತುವನ್ನು ಸಂಕೇತಿಸುವಂತೆ ಬರೆಯಬೇಕೆಂದು ನಿರ್ಧರಿಸಿದ್ದ. +ಆದರೆ….. +ಕತೆ ಮಾತ್ರ ಅದೇಕೋ ಇಲ್ಲಿಂದ ಮುಂದಕ್ಕೆ ಆಗಲೇ ಇಲ್ಲ. ವಿಶ್ವಾಸನನ್ನು ಒಂದು ರೀತಿಯ ಅಪರಾಧೀ ಭಾವ ಕಾಡತೊಡಗಿತು. ವಿವೇಕನ ತಂದೆಯ ಸಾವು ಒಂದು ಸುಲಭೋಪಾಯವೆನ್ನಿಸಿ ಪಲಾಯನವಾದದತ್ತ ಬೊಟ್ಟು ತೋರಿತು. ಹೌದು ಲೇಖಕನಾಗಿ ಒಂದು ಜಟಿಲ ಸಮಸ್ಯೆಯನ್ನು ಎದುರಿಸಲಾಗದೇ ಅದಕ್ಕೆ ಸಾವಿನಲ್ಲಿ ಸುಲಭೋಪಾಯ ಕಂಡುಕೊಂಡದ್ದು ಏಕೆ? ಹೀಗೆ ಕತೆ ಬರೆದರೆ ಒಂದೇ ನಿಮಿಷದಲ್ಲಿ ಪಾತ್ರವನ್ನು ಕೊಂದು ಲೇಖನಿ ಖಡ್ಗಕ್ಕಿಂತ ಹರಿತ ಎಂದು ನಿರೂಪಿಸಬಹುದು, ಅಷ್ಟೇ. ತಾನು ಕತೆ ಬರೆಯುವುದು ಜೀವನ ಮೌಲ್ಯಗಳನ್ನು ಸಂದಿಗ್ಧಗಳನ್ನೂ ವಿಶ್ಲೇಷಿಸುವುದಕ್ಕಾಗಿ, ಮಾನವ ಪ್ರವರ್ತನಗಳನ್ನು ದಾಖಲಿಸುವುದಕ್ಕಾಗಿ, ಹಾಗಾದಲ್ಲಿ ಇಂಥ ಕತೆಗಳು ಕೇವಲ ಕೀರ್ತಿಗಾಗಿ ಬರೆಯಬೇಕೇ? ಅಥವಾ ಅಂತ್ಯದ ಬಗ್ಗೆ ಪುನರಾಲೋಚಿಸಬೇಕೇ? ಜೀವನವನ್ನು ವಾಸ್ತವವಾಗಿ ಅಲ್ಲದಿದ್ದರೂ ಕಥಾಮಾಧ್ಯಮ ದಲ್ಲಾದರೂ ಎದುರಿಸದಿದ್ದರೆ ಹೇಗೆ? ತಾನೇ ಈ ವಿವೇಕನಾಗಿದ್ದು ತಂದೆ ಸಾಯದಿದ್ದರೆ ಆಗುತ್ತಿದ್ದುದೇನು? ಅದನ್ನ್ದುರಿಸುವ ಎದೆಗಾರಿಕೆಯನ್ನು ತನ್ನ ಸೃಷ್ಟಿಯ ಕಥಾನಾಯಕ ತೋರದಿದ್ದರೆ ಹೇಗೆ? +ಹೀಗೆಲ್ಲ ಅಲೋಚನಗಳು ಒತ್ತರಿಸಿಕೊಂಡು ಬಂದಾಗ ವಿಶ್ವಾಸ ಕತೆಯನ್ನು ಹೇಗೆ ಮುಂದುವರಿಸಬೇಕೆಂದು ತಿಳಿಯದೇ ಅಲ್ಲೇ ನಿಲ್ಲಸಿದ. ಅದನ್ನು ಅವನು ಅಲ್ಲಿಗೇ ಮರೆತುಬಿಡೋಣವೆಂದುಕೊಂಡರೂ ಅದು ಮಾತ್ರ ಅವನನ್ನು ಭೂತದಂತೆ ಕಾಡುತ್ತಿತ್ತು. ಕತೆ ಬರೆಯದಿದ್ದರೆ ತನ್ನ ಕತೆಯನ್ನೂ ತಾನು ಎದುರಿಸಲಾಗದ ಪರಿಸ್ಥಿತಿ ಒದಗುತ್ತದೆ. ಇಲ್ಲಿ ಬರೆಯದೇ ಇರುವುದು ಪಲಾಯನವಾದದ ಮತ್ತೊಂದು ಮಜಲಾಗುತ್ತದೆ. ಅವನಿಗೆ ಇದು ಸಮ್ಮತವಿರಲಿಲ್ಲ. ಈ ಕತೆ ತನ್ನೊಳಗಿನ ಬರಹಗಾರ ಪ್ರವೃತ್ತಿಗೆ ಸವಾಲಾಗಿತ್ತು. ಅದೂ ಎಷ್ಟರಮಟ್ಟಿಗೆಂದರೆ ತನ್ನೊಳಗಿನ ಬರಹಗಾರ ಹಾಗೂ ತನ್ನ ದ್ವಂಧ್ವ ವ್ಯಕ್ತಿತ್ವವನ್ನೂ ಮೀರಿ ನಿಂತು ತಾನೇ ಎರಡೂ ವ್ಯಕ್ತಿತ್ವಗಳ ಸಾಕಾರ ಮೂರ್ತಿ ಎಂಬಂತೆ ಈ ಕತೆ ತನ್ನನ್ನು ಕಾಡುತ್ತಿತ್ತು. ಕತೆಯ ಹುಳ ಅವನ ಮೆದುಳನ್ನು ತೀವ್ರವಾಗಿ ಕೊರೆಯತೊಡಗಿತ್ತು. +ವಿವೇಕನ ತಂದೆಯನ್ನು ಬದುಕಿಸಿದರೆ, ಮುಂದೆ? ವಿವೇಕನನ್ನೂ ಆಕಸ್ಮಿಕವೊಂದರಲ್ಲಿ ಕೊಂದು ಕತೆಗೆ ನಾಟಕೀಯ ತಿರುವನ್ನು ಕೊಡಬಹುದೆನಿಸಿತು. ವಿಶ್ವಾಸನಿಗೆ ಇಲ್ಲಿ ಪಲಾಯನವಾದ ಪ್ರಶ್ನೆಯೇ ಇಲ್ಲ. ಏಕೆಂದರೆ ಕಥೆಯಲ್ಲಿ ಅನಿರೀಕ್ಷಿತ ತೊಂದರೆಗಳನ್ನು ತಾನೇ ಆಹ್ವಾನಿಸಿ, ಅವುಗಳ ವಿಶ್ಲೇಷಣೆ ಮಾಡಿ, ಸಮಸ್ಯೆಯ ವಿವಿಧ ಪದರಗಳ ಚಿತ್ರಣ ನೀಡಬಹುದು. ಕತೆ ಸಮಸ್ಯೆಗಳ ಹಂದರವಾಗುತ್ತದೆ. ಬರೆಯಲುಬೇಕಾದಷ್ಟು ಸರಕಂತೂ ಇರುತ್ತದೆ. ವಿದ್ಯಾ ಅನಿವಾರ್ಯವಾಗಿ ಕೊಣಂದೂರಿಗೆ ಹಿಂದಿರುಗುವ, ವರ್ಷಾ ಅಲ್ಲೇ ವಿದ್ಯಾಭ್ಯಾಸ ಮಾಡುವ ಕತೆ ಬೆಂಗಳೂರಿನಿಂದ ಏಕಾ‌ಏಕೀ ಕೊಣಂದೂರಿಗೆ ಬಂದಾಗ ಆಗುವ ಗೊಂದಲ. ಒಂದು ವ್ಯಕ್ತಿಯ ನಾಸ್ತಿತ್ವದ ಕೋಟಲೆಗಳು, ಅಲ್ಲೋಲಕಲ್ಲೋಲಗಳು. ವಿಧವೆಯ ಬದುಕಿನ ಪ್ರಶ್ನೆ….ಹೀಗೆ ಆಲೋಚಿಸುತ್ತಾ ಹೋದಂತೆ ವಿಶ್ವಾಸನಿಗೆ ಎರಡು ವಿಷಯ ತಕ್ಷಣಕ್ಕೆ ಹೊಳೆದವು….ಇಲ್ಲಿ ವಿವೇಕ ಕಥೆಯಿಂದಾಚೆ ಹೋಗುವುದರಿಂದ, ಇದು ಮತ್ತೊಮ್ಮೆ ಪಲಾಯನದತ್ತ ಬೆರಳು ಮಾಡಿತು. ವಿಶ್ಲೇಷಣೆಗೆ ಜೀವನ ಮೌಲ್ಯಗಳ ಮಂಥನಕ್ಕೆ ಗ್ರಾಸ ಎಂದು ಕೊಂಡಾಗಲೂ ವಿಶ್ವಾಸನಿಗೆ ಅದೇಕೋ ಇದು ಒಪ್ಪಿತವಾಗಲಿಲ್ಲ. ಅವನು ತನ್ನನ್ನೇ ಸಮಾಧಾನಪಡಿಸಿಕೊಳ್ಳಲು ಒಂದೆರದು ಕಾರಣಗಳನ್ನು ಒಡ್ಡಿಕೊಂಡ. +ಒಂದು : ಇಲ್ಲಿ ಕತೆಯ ದೃಷ್ಟಿಕೋನ ಹೆಣ್ಣಿನದಾಗುತ್ತದೆ. ಸಮಸ್ಯೆಯ ಚಿತ್ರೀಕರಣ ಆ ದೃಷ್ಟೀಕೋನದಿಂದ ತಾನು ಸಮರ್ಥನಾಗಿ ಮಾಡಲಾರ. +ಎರಡು : ಸಮಸ್ಯೆಗಳು ಗೋಜಲಾಗಿ ಕತೆ ಏಕತಾನತೆಯಲ್ಲಿ ಪರ್ಯಾವಸನ ಆಗಬಹುದು. +ಮೂರು : ಸಣ್ಣ ಕತೆಯಾಗಿ ಉಳಿಯದೇ ಕಣ್ಣೀರಿನ ಕಾದಂಬರಿಯಾಗಿ, ತನ್ನ ಹೆಂಡತಿಯ ಹೆಸರಿನಲ್ಲಿ ಪ್ರಕಟಿಸಬೇಕಾದ ಪ್ರಮಾದ ಒದಗಬಹುದು ಎಂಬ ಅಳುಕು. +ಅವನಿಗೇ ಹಾಗೆ ಮಿಣುಕುಳುಗಳಂತೆ ಇನ್ನೆರಡು ಅಂತ್ಯಗಳೂ ಗೋಚರಿಸಿದವು. ಅದೂ ಸಾವಿಗೆ ಸಂಬಂಧಿಸಿದ್ದೇ, ಒಂದು ವಿದ್ಯಾಳದ್ದು, ಮತ್ತೊಂದು ವರ್ಷಾಳದ್ದು. ಆದರೆ ಎರಡನ್ನೂ ಕೂಡಲೇ ತಳ್ಳಿಹಾಕಿದ. +ಈ ಕತೆಯ ಬಗ್ಗೆ ತನ್ನ ಸ್ನೇಹಿತ ಪಾಣಿಯ ಬಳಿ ಕುಳಿತು ಒಂದು ದಿನ ದೀರ್ಘ ಚರ್ಚೆ ನಡೆಸಿದ. ಅದೇಕೆ ಒಂದು ಸಣ್ಣ ಕತೆ ಇಷ್ಟು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದು ಅವನಿಗೆ ಅರ್ಥವೇ ಆಗಲಿಲ್ಲ. ದೀಪಾವಳೀ ವಿಷೇಷಾಂಕಕ್ಕಾಗಿ ಕತೆ ಕೋರುತ್ತಾ ಬಂದ ಸಂಪಾದಕರ ಪತ್ರ ಅವನನ್ನು ಈ ಕತೆಯ ಬಗ್ಗೆ ಮತ್ತೊಮ್ಮೆ ಜಾಗ್ರತನನ್ನಾಗಿಸಿತು. +ಆ ಕ್ಷಣದಲ್ಲಿ ವಿಶ್ವಾಸನಿಗೆ ಅದೇಕೋ ಜೀವನದಲ್ಲಿ ಅತೀ ದೊಡ್ಡ ಸಂದಿಗ್ಧ ಎನಿಸಿತ್ತು. ಇದು ಒಳ್ಳೆ ಮಲಬದ್ಧತೆಯಂತೆ ಪರಿಣಮಿಸಿತ್ತು. ಒಳಗಿತ್ತು ಹೊರಬರುತ್ತಿರಲಿಲ್ಲ! +ಯಾರನ್ನೂ ಕೊಲ್ಲದೆ ಕತೆ ಮುಗಿಸಬೇಕೆಂದು ಹೊರಟಾಗ ಈ ಬಾರಿ ಅವನಿಗೆ ವಿವೇಕನ ದೃಷ್ಟೀಕೋನದಿಂದ ಅವನ ತಂದೆಯ ದೃಷ್ಟಿಕೋನವೇ ಪ್ರಭಾವಶಾಲಿಯಾಗಿರಬಹುದೆಂದು ವಿಶ್ವಾಸ ಹಾಗೇ ಪ್ರಾರಂಭಿಸಿದ. ಈಗ ಬಂದು ಎರಡು ವಾರಗಳಾಯ್ತು. ಮುಂದಿನ ವಾರ ಹೊರಡುತ್ತಾನೆ. ಹೋಗುವ ಮೊದಲು ನನಗೊಂದು ಗಂಭೀರ ಪ್ರಶ್ನೆ ಹಾಕಿದ್ದಾನೆ. ನಾನೇ ಬೆಂಗಳೂರಿಗೆ ಹೋಗಬೇಕೋ ಅಥವಾ ಅವನೇ ಸಂಸಾರ ಸಮೇತ ಕೊಣಂದೂರಿಗೆ ಬರಬೇಕೋ ನಿರ್ಧರಿಸಿ ಹೇಳಬೇಕಂತೆ. ನನ್ನ ನಿರ್ಧಾರಕ್ಕೆ ಹಿನ್ನೆಲೆಯಾಗಿ ವಿದ್ಯಾಳ ಮನಸ್ತತ್ವ ಮಗಳು ವರ್ಷಾಳ ವಿದ್ಯಾರ್ಜನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾನೆ. ಈಗ ಅವ ನನ್ನ ಮೇಲೇ ಸಂಪೂರ್ಣ ಬಿಟ್ಟಿರುವುದರಿಂದ ಸೆಂಟಿಮೆಂಟಾಲಿಟಿಯಿಂದ ಹೊರಬಂದು ಆಲೋಚಿಸಬೇಕಾಗುತ್ತದೆ. ‘ಬಂದುಬಿಡಿ’ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಅವನ, ವಿದ್ಯಾಳ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.” +ಹೀಗೆ ವಿವೇಕನ ತಂದೆಯ ಕತೆಯೆಂಬಂತೆ ಬರೆಯಲು ಪ್ರಾರಂಭಿಸಿದರೂ ಅದೇಕೋ ಅಂತ್ಯಕ್ಕೆ ಬರುವ ವೇಳೆಗೆ ಸಹಜವಾಗಿ ವಿವೇಕನ ತಂದೆಯ ಆತ್ಮಹತ್ಯೆಯಲ್ಲಿ ಕತೆ ಪರ್ಯಾವಸನಗೊಂಡಿತು. ಅಂತ್ಯದಲ್ಲಿ ತೋಟ ಮಾರಿ ಬೆಂಗಳೂರಿಗೆ ಹೋಗಬೇಕೆಂಬ ವಿವೇಕನ ತಂದೆಯ ನಿರ್ಧಾರದೊಂದಿಗೆ ಕತೆ ಮುಗಿಸಬೇಕೆಂದಿದ್ದ, ವಿಶ್ವಾಸ. ಅದೇಕೋ ಹಾಗೆ ಮಾಡಲಿಲ್ಲ. ಆತ್ಮಹತ್ಯೆಯ ಸುಲಭೋಪಾಯ ಕಂಡಾಗ ಅವನಿಗೆ ಮತ್ತೊಮ್ಮೆ ಪಲಾಯನವಾದದ ಭೀತಿ ಉಂಟಾಯಿತು. +ಆದರೆ ಆಶ್ಚರ್ಯಕರ ವಿಷಯವೆಂದರೆ ಯಾವ ಕತೆಯ ಬಗೆಗೂ ಇಷ್ಟು ತಲೆಕೆಡಿಸಿಕೊಳ್ಳದ ವಿಶ್ವಾಸ ಈ ಕತೆಯೊಂದಿಗೆ ತನ್ನನ್ನು ತಾನೇ ಗುರುತಿಸಿಕೊಂಡದ್ದು. ಈ ಕತೆಯ ಸಫಲತೆ ಕತೆಗಾರನ ಸಫಲತೆ ವಿಫಲತೆ ತನ್ನ ತಥಾಜೀವನಕ್ಕೆ ಅಂತ್ಯ ಎನ್ನುವಷ್ಟರ ಮಟ್ಟಿಗೆ ಈ ಕತೆಯಲ್ಲಿ ತಾನು ಅಂತರ್ಲೀನವಾಗಿಹೋಗಿದ್ದ. +ಕಡೆಗೂ ಅದೇಕೋ ಕತೆಯನ್ನು ಕಳುಹಿಸಬೇಕೆಂದು ಅನ್ನಿಸಲಿಲ್ಲ. ಅಸಮಾಧಾನದಿಂದಲೇ ಸಂಪಾದಕರಿಗೆ ಪತ್ರ ಬರೆದ….ಕತೆ ಕಳಿಸಲಾರದ್ದಕ್ಕೆ ಕ್ಷಮೆ ಕೋರುತ್ತಾ ವಿದ್ಯಾಳ ದೃಷ್ಟಿಯಿಂದ ಕತೆಯ ಬಗ್ಗೆ ಮತ್ತೊಮ್ಮೆ ಆಲೋಚಿಸಿದಾಗಲೂ ಸಾವೇ ಅವನಿಗೆ ಉತ್ತರವಾಗಿ ಗೋಚರಿಸಿದ್ದರಿಂದ ಅವನಿಗೆ ಭೀತಿಯುಂಟಾಯಿತು. ತನ್ನ ಮಾನಸಿಕ ಸ್ವಾಸ್ಥ್ಯದ ಬಗೆಗೇ ಅನುಮಾನ ಬರುವಷ್ಟು ಭಯವಾಯಿತು. ಕತೆಯ ಪಾತ್ರದಲ್ಲಿ ಯಾವುದಾದರೊಂದನ್ನು ಸಾಯಿಸಲೇಬೇಕೆಂಬ ತನ್ನ ಪೂರ್ವಗ್ರಹ ಏಕೆ ಎಂಬುದು ವಿಶ್ವಾಸನಿಗೆ ಅರ್ಥವಾಗಲಿಲ್ಲ. ಹಾಗೇ ಅದನ್ನು ಒಪ್ಪದೇ ಕತೆ ಬರೆಯದೇ ಇರುವ ದ್ವಂದ್ವವೂ ಅರ್ಥವಾಗಲಿಲ್ಲ. +ವಿಶ್ವಾಸನಿಗೆ ದೃಢವಾಗಿ ಅನ್ನಿಸಿದ್ದಿಷ್ಟು….ಈ ರೀತಿಯ ತನ್ನ ಪ್ರವರ್ತನೆಗೆ ಏನೋ ಬಲವಾದ ಹಿನ್ನೆಲೆ ಇರಬೇಕು. ಇಲ್ಲದಿದ್ದರೆ ಅದು ತನ್ನನ್ನು ಹೀಗೆ ಕಾಡುವುದಿಲ್ಲ. ಇದರ ಚೆರಿತ್ರೆಯನ್ನು ಪರಿಶೋಧಿಸಲೇಬೇಕು. ಇದಕ್ಕೊಂದು ಮಾರ್ಗ ಕಂಡುಹಿಡಿಯುವವರೆಗೆ ಏನನ್ನೂ ಬರೆಯಬಾರದು. ಹೀಗೆಲ್ಲಾ ನಿರ್ಧರಿಸಿದ. ಏನನ್ನೂ ಬರೆಯಬಾರದು ಎಂಬುದನ್ನೇನೋ ಅವನು ನಿರ್ಧರಿಸಿದ್ದರೂ ಅವನ ಗಮನಕ್ಕೆ ಇನ್ನೂ ಬಂದಿರದಿದ್ದ ಅಂಶವೆಂದರೆ ಅವನು ಬರೆಯಲು ಪ್ರಯತ್ನಿಸಿದ್ದರೂ ಅವನಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ ಎಂಬುದು! +ಜನ್ಮಾಂತರ. ಟೆಲಿಪಥಿ ಇತ್ಯಾದಿಗಳ ಬಗೆಗೆ ಸ್ವಲ್ಪ ಮಟ್ಟಿನ ಸಂಶೋಧನಾತ್ಮಕ ದೃಷ್ಟಿಯಿಂದ ವಿಶ್ವಾಸ ಘಟನೆಯ ಬಗ್ಗೆಗೆ ಅತಿಯಾಗಿ ತಲೆ ಕೆಡಿಸಿಕೊಂಡ. ಹಾಗೆಂದೇ ವಾರ್ಷಿಕ ರಜೆ ಬಂದಾಗ ತೀರ್ಥಹಳ್ಳಿಗೂ ಕೊಣಂದೂರಿಗೂ ಒಮ್ಮೆ ಹೋಗಿ ಬಂದದ್ದು. ಈ ಊರುಗಳಿಗೂ ತನ್ನ ಕಡೆಗು ನಿಕಟ ಸಂಬಂಧವಿದ್ದು ಒಂದು ಸತ್ಯ ಘಟನೆಯ ಅಗೋಚರ ಪ್ರೇರಣೆ ಈ ಕತೆ ಇರಬಹುದೆನಿಸಿತ್ತು. ತೀರ್ಥಹಳ್ಳಿ ಕೊಣಂದೂರುಗಳಲ್ಲಿ ಮೂರು ವಾರಗಳ ಕಾಲ ತಿರುಗಾಡಿದರೂ ಏನೂ ಕಂಡು ಬರಲಿಲ್ಲ. ವಿಶ್ವಾಸ ಊರಿಗೆ ಹಿಂದಿರುಗಿದ. +ಊರಿನಿಂದ ಹಿಂದಿರುಗಿದ ನಂತರ ಪಾಣಿಯನ್ನು ಇನ್ನೊಮ್ಮೆ ಭೇಟಿಯಾಗಿ ಕತೆಯ ಬಗ್ಗೆ ಚರ್ಚಿಸಿದ್ದಾಯ್ತು. ಚರ್ಚೆಯನ್ನು ನೋಡಿ ಪಾಣಿಗೆ ರೇಗಿದ್ದೂ ಉಂಟು. +“ಏನಯ್ಯಾ ನಿನ್ನ ರಾಮಾಯಣ, ಒಂದು ಕತೆಯ ಬಗ್ಗೆ ಇಷ್ಟೊಂದು ಯೋಚನೆ ಮಾಡಿ ನನ್ನ ತಲೇನೂ ಕೆಡಿಸ್ತಾ ಇದ್ದೀಯಲ್ಲಾ.” +“ಅಲ್ಲಾ ಅದ್ಯಾಕೋ ಇದಕ್ಕೊಂದು ಅಂತ್ಯ ಹಾಡಲೇಬೇಕು.” +“ನೋಡು ನೀನು ಏನೇ ಅನ್ನು, ನನಗನ್ನಿಸೋದು ಇಷ್ಟೇ….ಒಂದು ಕತೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿರೋ ವ್ಯಕ್ತೀನ ನೋಡ್ತಾ ಇರೋದು ಇದೇ ಮೊದಲು. ನೀನು ಈ ಕತೆ ನಿಂಗಿಷ್ಟ ಬಂದ ಹಾಗೇ ಬರೀ….ಇಲ್ಲದಿದ್ದರೆ ಬಿಟ್ಟುಬಿಡು….ಅದೂ ಸಾಧ್ಯವಾಗಲಿಲ್ಲಾಂದ್ರೆ ಈ ಕತೆ ನಿನ್ನನ್ನು ಕಾಡಿದ ಬಗ್ಗೆ ಒಂದು ಕತೆ ಬರೆದು ಬಿಡು…..ನನಗೆ ಮಾತ್ರ ಈ ಕತೆಯೊಂದಿಗೆ ತೊಂದ್ರೆ ಕೊಡಬೇಡ.” +ಹೀಗೆ ಎರಡು ವರ್ಷಗಳ ಕೆಳಗೆ ಅರ್ಧದಲ್ಲಿ ನಿಲ್ಲಿಸಿದ್ದ ಕತೆಯನ್ನು ವಿಶ್ವಾಸ ಕಾಲಗಮನದಲ್ಲಿ ಮರೆತಿರಬೇಕಿತ್ತು. ಆದರೆ ಅದೇಕೋ ಸಾಧ್ಯವೇ ಆಗಲಿಲ್ಲ. ಅದಕ್ಕೆ ಒಂದು ಕಾರಣ ಆ ಕತೆಯೇ ಅವನ ಅಂತಿಮ ಕತೆಯಾದದ್ದು ಇರಬಹುದು. ನಂತರ ವಿಶ್ವಾಸ ಕತೆಗಳನ್ನು ಬರೆಯಲೇ ಇಲ್ಲ. ಕತೆಗಳ ಕ್ಷೇತ್ರದಿಂದ ತನ್ನನ್ನು ಸಂಪೂರ್ಣವಾಗಿ ಹೊರಗುಳಿಸಿಕೊಂಡು ಅಜ್ಞಾತವಾಸದಲ್ಲಿದ್ದ. +ಹೀಗೆ ಯೋಚನೆಗಳು ಕಾಡುವಾಗಲೇ ಮೊನ್ನೆ ವಿಶ್ವಾಸನಿಗೆ ವಿಮರ್ಶೆಗೆಂದು ಒಂದು ಪುಸ್ತಕ ಬಂದಿತು. ಪೂರ್ಣೇಶರ ದಶಕದ ಹಿಂದೆ ಬಂದ ಮೂರು ಕಥಾ ಸಂಕಲನಗಳನ್ನು ಒಟ್ಟುಗೂಡಿಸಿ ಅವರ ಎಲ್ಲ ಕೃತಿಗಳ ಸಮಗ್ರ ಸಂಪುಟವೊಂದನ್ನು ಮುದ್ರಿಸಿ ಹೊರತರಲಾಗಿತ್ತು. ಆ ಮೂರೂ ಸಂಕಲನಗಳನ್ನೂ ವಿಶ್ವಾಸ ಓದಿದ್ದ. ಆದರೂ ವಿಮರ್ಶೆಗಾಗಿ ಮತ್ತೊಮ್ಮೆ ಓದತೊಡಗಿದ. +ಓದುತ್ತಿದ್ದಂತೆ ಒಂದು ಕತೆ ಅವನನ್ನು ವಿಶೇಷವಾಗಿ ಸೆಳೆಯಿತು. ತಾನು ಬರೆಯದೇ ಉಳಿಸಿದ್ದ ಕತೆಯ ಕಂತುಗಳನ್ನೇ ಹೊತ್ತ ಕತೆಯದು. ವಿವೇಕನ ಪಾತ್ರ, ಅವನ ತಂದೆಯ ಪಾತ್ರ, ಅದೇ ರೀತಿಯ ಸಂದರ್ಭ. ಬೊಂಬಾಯಿಯಲ್ಲಿ ಕಥಾನಾಯಕನ ವಾಸ್ತವ್ಯ. ಹಳ್ಳಿಯ ಸೆಳೆತ, ಇತ್ಯಾದಿ. ಕತೆಯ ಅಂತ್ಯದಲ್ಲಿ ಯಾರೂ ಸಿಗುತ್ತಿಲ್ಲ. ಮಗ ಮುಂಬಯಿಗೆ ಹಿಂದಿರುಗಿದ. ತಂದೆ ಹಳ್ಳಿಯಲ್ಲಿಯೇ ಉಳಿದುಕೊಂಡಿದ್ದ. ಮನೆಯ ಆಳು ಮಹದೇಶ್ವರ ದತ್ತು ಪುತ್ರನಂತೆ ವರ್ತಿಸುತ್ತಿದ್ದ. ತಂದೆಯನ್ನು ಅವನೇ ನೋಡಿಕೊಳ್ಳುತ್ತಿದ್ದ. ಆಸ್ತಿ ಮಹದೇಶ್ವರನಿಗೇ ಕೊಡುವಂತೆ ಮಗ ಹೇಳಿ ಮುಂಬಯಿಗೆ ಪಲಾಯನ ಗೈದಿದ್ದ. +ಹೌದು ವಿಶ್ವಾಸನಿಗೆ ಈಗ ನೆನಪಾಯ್ತು. ಈ ಕತೆಯನ್ನು ತಾನು ಓದಿದ್ದೆ ಓದಿದಾಕ್ಷಣಕ್ಕೆ ಇಲ್ಲಿ ಮಗನನ್ನು ಮುಂಬಯಿಗೆ ಕಳಿಸುವುದರಲ್ಲಿ ಲೇಖಕರದ್ದು ಪಲಾಯನವಾದವೆನಿಸಿತ್ತು. ಈ ಕಥೆ ತನ್ನ ಕಾಲೇಜು ದಿನಗಳಲ್ಲಿ ತನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಆದರೆ ಅದನ್ನು ಕಾಲಗಮನದಲ್ಲಿ ಮರೆತಿದ್ದ. ಹಾಗಾದರೆ ತನಗೆ ಅದೇ ಕಥಾವಸ್ತುವಿನ ಚೌಕಟ್ಟಿನಲ್ಲಿ ಕತೆ ಬರೆಯಬೇಕೆನಿಸಿದ್ದು ಏಕೆ? ಈ ಕತೆ ಮುಗಿಸಿ ಪ್ರಕಟಿಸಿದ್ದರೆ ತನ್ನ ಮೇಲೆ ಕೃತಿಚೌರ್ಯದ ಅಪಾದನೆ ಬರುತ್ತಿತ್ತೇ? ಹೀಗೆಲ್ಲಾ ಆಗಬಹುದಿದ್ದ ಅನಂತ ಸಾಧ್ಯತೆಗಳ ಬಗೆಗೆ ವಿಶ್ವಾಸ ಆಲೋಚಿಸಿದ. +ಕಥೆಗಾರನಾಗಿ ವಿಶ್ವಾಸ ಸೋಲನ್ನೊಪ್ಪಿಕೊಂಡ. ತಾನೆಂದೂ ಕತೆಗಳನ್ನು ಬರೆಯಲಾರೆ ಎಂದು ನಿರ್ಧರಿಸಿದ. +ಇತ್ತೀಚೆಗೆ ಪ್ರಕಟಗೊಂಡ ವಿಶ್ವಾಸನ ಪ್ರಬಂಧ – ಪೂರ್ಣೇಶರ ಕತೆಗಳು – ಅನಂತ ಸಾಧ್ಯತೆಗಳು – ಅಪಾರ ಜನಮನ್ನಣೆ ಪಡೆದಿರುವ ವಿಷಯ ವಾಚಕರಿಗೆ ತಿಳಿದದ್ದೇ. ವಿಶ್ವಾಸನಿಗೆ ಪೂರ್ಣೇಶರ ಭೇಟಿ ಆಗಿಲ್ಲ. ಪೂರ್ಣೇಶನೆಂಬ ವ್ಯಕ್ತಿ ಹೇಗಿದ್ದಾನೋ ಯಾರೂ ನೋಡಿಲ್ಲ. ಪೂರ್ಣೇಶರು ಬರೆದ ಕಟ್ಟ ಕಡೆಯ ಕಥೆ ಎರಡು ವರ್ಷಗಳ ಕೆಳಗೆ ಪ್ರಕಟಗೊಂಡಿತ್ತು. ಆಗಿನಿಂದ ಆತ ಅಜ್ಞಾತವಾಸದಲ್ಲಿದ್ದಾರೆ. ವಿಶ್ವಾಸ ಈಗ ದೊಡ್ಡ ವಿಮರ್ಶಕನಾಗುವ ಲಕ್ಷಣ ತೋರುತ್ತಿದ್ದಾನೆ. ಈ ಪೂರ್ಣೇಶ ಯಾರೂ ಎಂಬ ಜಟಿಲ ಪ್ರಶ್ನೆ ಈಗ ಅವನನ್ನು ಕಾಡುತ್ತಿರುವ ಸಂಗತಿಯಾಗಿದೆ. +***** +ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […] +ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […] +ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_638.txt b/Kannada Sahitya/article_638.txt new file mode 100644 index 0000000000000000000000000000000000000000..9e13d2938b40882d1da33eb7e6eb8fd4ab0ae8fe --- /dev/null +++ b/Kannada Sahitya/article_638.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಕಾಸಾರದ ಕೆಸರಿನಿಂದ +ಪಾಚಿ ಜೊಂಡು ನೀರಿನಿಂದ +ವಿಮಲ ಕಮಲ ಮೇಲಕ್ಕೆದ್ದು +ಕೊಳದ ಎದೆಯನಮರಿ ಗೆದ್ದು +ದಲ ದಲ ದಲವರಳುವಂತೆ +ಥಳ ಥಳ ಥಳ ತೊಳಗುವಂತೆ +ಎತ್ತು ಮೇಲಕನ್ನನು +ಜೀವಪಥದಿ ಪತಿತನು. +೨ +ಮುಳ್ಳು ಬೆಳೆದ ಕಂಟಿಯಲ್ಲಿ +ಅದರ ಹರಿತ ಕೊರೆತದಲ್ಲಿ +ಚೆಂಗುಲಾಬಿ ಚಿಮ್ಮಿ ಬಂದು +ಹಂಗುದೊರದು ಅರಳಿನಿಂದು +ಪಕಳೆ ಪಕಳೆ ತೆರೆಯುವಂತೆ +ಚೆಲುವನೊಲಿದು ಕರೆಯುವಂತೆ +ಎತ್ತು ಮೇಲಕೆನ್ನನು +ಕಂಟಕದಲಿ ನೊಂದನು. +೩ +ಕಡಲಿನೊಡಲು ಕಾದು ಕಾದು +ಉಗಿಯ ರೂಪವಾಗಿ ನೆಗೆದು +ಮೋಡವಾಗಿ ಬಾನನಲೆದು +ಬಂಧವಿರದ ಲೀಲೆ ಮೆರೆದು +ಮಿಂಚಿ, ಗುಡುಗಿ, ಹನಿಯುವಂತೆ +ಮಳೆಯಬಿಲ್ಲ ತಳೆಯುವಂತೆ +ಎತ್ತು ಮೇಲಕೆನ್ನನು +ಜಾಡ್ಯದಲ್ಲಿ ಸುಪ್ತನು. +೪ +ಗಗನದಲ್ಲಿ ಹಕ್ಕಿ ಹಾರೆ +ಪುಚ್ಚವೊಂದು ತಿರೆಗೆ ಜಾರೆ, +ಸಿಳ್ಳುಗಾಳಿ ಸುತ್ತಿ ಸುಳಿಯೆ +ಗರಿಯು ಮತ್ತೆ ಜೀವತಳೆಯೆ +ಭೋಂಕನೆದ್ದು ಹಾರುವಂತೆ +ಮುಗಿಲಿಗಿದಿರು ಸಾರುವಂತೆ +ಎತ್ತು ಮೇಲಕೆನ್ನನು +ನಿಸ್ಸಹಾಯನೀತನು. +೫ +ಬೀದಿಬದಿಯ ಧೂಳಿನಲ್ಲಿ +ಗೆಳೆಯರೊಡನೆ ಮೇಳದಲ್ಲಿ +ಮನೆಯ ಮರೆತು ಆಡುತಿರಲು +ಮತ್ತೆ ನೆನಸಿ ಆಳುತಲಿರಲು +ತಾಯಿ ಕೂಸನೆತ್ತುವಂತೆ +ಮುದ್ದು ಮೆದ್ದು ಅಪ್ಪುವಂತೆ +ಎತ್ತು ಮೇಲಕೆನ್ನನು +ಮೋಹಗೊಂಡ ಮರುಳನು. +***** +ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […] +ಹತ್ತಾರು ರಸ್ತೆಗಳು ಒಂದನ್ನೊಂದು ಕತ್ತರಿಸುತ್ತ ಕೂತರೆ ಹೋಗುವುದೆಲ್ಲಿಗೆ ಹೇಳು ಹತ್ತೂ ಕಡೆ ಕನ್ನಡಿ ಹಿಡಿದು ನೀ ಕೂತರೆ ನಾ ಬತ್ತಲಾಗದೆ ಉಪಾಯವಿದೆಯೆ? ***** +ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_639.txt b/Kannada Sahitya/article_639.txt new file mode 100644 index 0000000000000000000000000000000000000000..c4b563db8f848c4829e8fe4398332b4277b77ac8 --- /dev/null +++ b/Kannada Sahitya/article_639.txt @@ -0,0 +1,103 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ಒಂದು +ಇನ್ನೆರಡು ತಿಂಗಳು ಕಳೆಯುವುದರಲ್ಲಿ ದೀರ್ಘಕಾಲದ ನೌಕರಿಯಿಂದ ನಿವೃತ್ತನಾಗಲಿದ್ದ ಪಾರಸೀ ಗೃಹಸ್ಥ ಬೆಹರಾಮ್ ಕೇಕೀ ಪೋಚಖಾನಾವಾಲಾ, ಒಂದು ಶನಿವಾರದ ಮಧ್ಯಾಹ್ನ, ಮನೆಯ ಬಾಲ್ಕನಿಯಲ್ಲಿ ಕೂತು ವಿಶ್ರಾಂತಿಯ ದಿನಗಳ ಬಗ್ಗೆ ಧೇನಿಸುತ್ತ ಚಹ ಕುಡಿಯುತ್ತಿರುವಾಗ, ಕದದ ಕರೆಗಂಟೆ ಬಾರಿಸಿ ಗುರುತು ತಿಳಿಸುವ ಕಾರ್ಡು ಕೊಟ್ಟು, ಪರವಾನಗಿ ಸಿಕ್ಕ ಬಳಿಕ ಒಳಗೆ ಬಂದ ಸುಮಾರು ಇಪ್ಪತ್ತೈದು ವರ್ಷದ ಅಪರಿಚಿತ ಯುವಕನೊಬ್ಬ ಅವನ ಇದಿರಿನ ಕುರ್ಚಿಯಲ್ಲಿ ಕೂರುತ್ತ, “ನಾನು ಕರುಣಾಕರನ್, ಸರ್, ” ಎಂದು ತನ್ನ ಹೆಸರು ಹೇಳಿದ. “ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕೆಲವು ತಿಂಗಳ ಹಿಂದೆ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ನಿಮ್ಮಿಂದ ಮಾಹಿತಿ ಬೇಕಿತ್ತು,” ಎಂದು ತಾನು ಬಂದಂಥ ಕಾರ್ಯವನ್ನೂ ಜಾಹೀರುಪಡಿಸಿದ. +ಬೆಹರಾಮ್ ಮುಂಬಯಿಯ, ಬ್ರಿಟಿಷ್ ಆಡಳಿತವುಳ್ಳ, ದೊಡ್ಡ ರಾಸಾಯನಿಕ ಉದ್ಯೋಗಕ್ಕೆ ಸಂಬಂಧಪಟ್ಟ ಕಂಪನಿಯೊಂದರಲ್ಲಿ ಮೇಲಿನ ಹುದ್ದೆಯಲ್ಲಿದ್ದವನು. ಕಂಪನಿಯ ನಿಯಮಗಳ ಪ್ರಕಾರ ಎರಡು ವರ್ಷಗಳ ಹಿಂದೆ ವಯಸ್ಸಿನ ಐವತ್ತೆಂಟು ವರ್ಷ ಮುಗಿದಕೂಡಲೇ ನಿವೃತ್ತನಾಗಬೇಕಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಆಡಳಿತದಲ್ಲಿ ಬದಲುಗಳಾಗಿ ಮಾರವಾಡಿ ಉದ್ಯೋಗಪತಿಯೊಬ್ಬನು ಕಂಪನಿಯನ್ನು ತನ್ನ ಒಡೆತನಕ್ಕೆ ತೆಗೆದುಕೊಂಡ ಮೇಲೆ ಆವರೆಗೂ ಇಲ್ಲದ ದುಷ್ಟ ರಾಜಕಾರಣ ತಲೆಯೆತ್ತಲು ಶುರುಮಾಡಿದಾಗ ಹಲವು ತರುಣ ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೆ ಕಂಪನಿಗಳನ್ನು ಸೇರಿದರು. ಹೊಸಬರನ್ನು ನೇಮಿಸಿ ತರಬೇತುಗೊಳಿಸಲು ಸಮಯ ಬೇಕಿತ್ತು. ಹೀಗಾಗಿ, ಬಹಳ ವರ್ಷಗಳ ಅನುಭವವಿದ್ದ ಬೆಹರಾಮನ ನಿವೃತ್ತಿಯ ದಿವಸ ಎರಡು ವರ್ಷಗಳಿಂದ ಮುಂದೆ ಬಿದ್ದಿತು. ಈ ಎರಡು ವರ್ಷಗಳಲ್ಲಿ ಅವನಿಗೆ ಬಂದ ಅನುಭವ ಮಾತ್ರ ಮುವ್ವತ್ತಾರು ವರ್ಷಗಳಷ್ಟು ಧೀರ್ಘಕಾಲ ಒಂದೇ ಸಂಸ್ಥೆಗೆ ಅಂಟಿಕೊಳ್ಳುವಂತೆ ಮಾಡಿದ ಕೆಲಸದ ಬಗೆಗಿನ ತನ್ನ ಶ್ರದ್ಧೆಯನ್ನೇ ನಾಶಮಾಡುತ್ತಿದೆ ಎನ್ನುವಂಥ ಭಾವನೆಗೆ ಎಡೆಮಾಡಿಕೊಡಹತ್ತಿತ್ತು. +ಹಾಗೆ ನೋಡಿದರೆ ಬೆಹರಾಮನಿಗೆ ಈ ಕೆಲಸದ ಗರಜೇ ಇರಲಿಲ್ಲ. ಅವನಿಗೆ ಇಬ್ಬರೇ ಮಕ್ಕಳು. ಇಬ್ಬರೂ ದೊಡ್ಡವರಾಗಿದ್ದಾರೆ. ಒಬ್ಬಳು ಮಗಳು, ಒಬ್ಬ ಮಗ. ಮಗಳೇ ಹಿರಿಯವಳು-ಶಿರೀನ್. ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿ, ಜಮ್‌ಶೇದ್‌ಪೂರದಲ್ಲಿ ಗಂಡ, ಮೂವರು ಮಕ್ಕಳ ಜೊತೆಗೆ ಸುಖವಾಗಿ ಸಂಸಾರ ಹೂಡಿದ್ದಾಳೆ. ಅವಳ ಗಂಡನಾದ ಬೇಜನ್ ದಾರೂವಾಲಾ ಅಲ್ಲಿಯ ದೊಡ್ಡ ಉಕ್ಕಿನ ಕಾರಖಾನೆಯಲ್ಲಿ ಫೌಂಡ್ರಿ ಮ್ಯಾನೇಜರನಾಗಿ ಕೆಲಸ ಮಾಡುತ್ತಿದ್ದಾನೆ. ಶಿರೀನಳ ಹಿಂದೆ ಹುಟ್ಟಿದ ಕೇಕೀ ಅಮೇರಿಕೆಗೆ ಇಂಜಿನಿಯರಿಂಗ್ ಕಲಿಯಲು ಹೋದವನು ಕಲಿಯುವುದು ಮುಗಿದು ಐದು ವರ್ಷಗಳಾದರೂ ಇನ್ನೂ ಹಿಂತಿರುಗಿ ಬಂದಿರಲಿಲ್ಲ. ಬರುವ ಭರವಸೆಯೂ ಇರಲಿಲ್ಲ. ಅಲ್ಲಿಯವಳೇ ಒಬ್ಬ ಹುಡುಗಿಯನ್ನು ಮದುವೆಯಾಗಿ, ಅಲ್ಲೇ ಒಂದು ಒಳ್ಳೆಯ ನೌಕರಿಯನ್ನೂ ದೊರಕಿಸಿ ಮಜವಾಗಿದ್ದಾನೆ. ನಿವೃತ್ತರಾದ ಕೂಡಲೇ ಒಂದೆರಡು ತಿಂಗಳ ಮಟ್ಟಿಗಾದರೂ ತಂದೆತಾಯಿಗಳೇ ತಮ್ಮಲ್ಲಿಗೆ ಬರಬೇಕು, ಅಮೇರಿಕೆಯ ವೈಭವವನ್ನು ಸವಿಯಬೇಕು ಎನ್ನುವ ಆಶಯದಿಂದ ಪತ್ರ ಕೂಡ ಕೆಲವು ದಿನಗಳ ಹಿಂದೆ ಬಂದಿದೆ. ಸೊಸೆಯ ಮೊದಲ ಹೆರಿಗೆಗೆ ಹೋದರಾಯಿತು ಎಂದು ಹೇಳಿದ ಹೆಂಡತಿ ಅಮೇರಿಕೆಗೆ ಹೋಗುವ ಉತ್ಸಾಹ ಪ್ರಕಟಿಸುವಾಗ ಹೋಗಲು ಯೋಗ್ಯವಾದ ಅವಕಾಶವನ್ನೂ ಕಲ್ಪಿಸಿಕೊಂಡಿದ್ದಾಳೆ. +ಬೆಹರಾಮನಿಗೆ ಕೆಲಸ ಆರ್ಥಿಕ ಗರಜಾಗಿರಲಿಲ್ಲ. ಇಷ್ಟಾಗಿ, ಯಾಕೆಂದು ಯಾರಿಗಾಗಿ ತಾನು ಈ ಕೆಲಸಕ್ಕೆ ಇಷ್ಟೊಂದು ಚಿಕಾಟಿಯಿಂದ ಅಂಟಿಕೊಂಡಿದ್ದೇನೆ ಎಂಬುದರ ಬಗೆಗೆ ವಿಚಾರ ಮಾಡಿದವನೂ ಅಲ್ಲ. ಅದೊಂದು ವಿಚಾರ ಮಾಡಬೇಕಾದ ವಿಷಯವೆ! ಕೆಲಸ ಮನುಷ್ಯನಿಗೆ ತೀರ ಸಹಜವಾದ ಸಂಗತಿಯಲ್ಲವೆ! ಎಂದುಕೊಂಡಂತಿದ್ದ ಅವನಿಗೆ ಎರಡು ವರ್ಷಗಳ ಹಿಂದೆಯೇ, ನಿವೃತ್ತಿಯ ದಿನ ಹತ್ತಿರವಾಗುತ್ತಿದ್ದ ಹಾಗೆ, ಅರ್ಥವಾಗದ ಅಸ್ಪಷ್ಟವಾದ ಭಯ ಕಾಡಹತ್ತಿತು ಎಂಬುದು ಮಾತ್ರ ನಿಜ. ಕಂಪನಿಯ ಆಡಳಿತದಲ್ಲಾದ ಪಲ್ಲಟ, ನಿವೃತ್ತಿಯ ದಿನವನ್ನು ಮುಂದೆ ಹಾಕುವಂತೆ ಮೇಲಧಿಕಾರಿಗಳಿಂದ ಬಂದ ಬಿನ್ನಹ ಇವುಗಳಿಂದಾಗಿ ಆ ನಿರ್ಣಾಯಕ ದಿನ ಸದ್ಯಕ್ಕಂತೂ ಮುಂದೆ ಸರಿದಾಗ ಮನಸ್ಸಿಗೆ ನೆಮ್ಮದಿಯೆನಿಸಿತ್ತು ಎನ್ನುವುದೂ ನಿಜ. ಮುಂದೆ ಈ ನೆಮ್ಮದಿ ಬಹಳ ದಿನ ಬಾಳಲಿಲ್ಲ, ಆ ಮಾತು ಬೇರೆ. ಮಾತ್ರವಲ್ಲ, ಕಳೆದ ಕೆಲವು ತಿಂಗಳಿಂದಂತೂ ಹೊಸ ನಿವೃತ್ತಿಯ ದಿನವನ್ನು ಅತ್ಯಂತ ಕಾತರದಿಂದಲೇ ಇದಿರುನೋಡುವಂತಾಗಿದೆ. ಒಂದು ರೀತಿಯಿಂದ ಈ ಹೊಸ ಅನುಭವವೇ ಅವನ ಮನಸ್ಸನ್ನು ವಿಶ್ರಾಂತಿಗಾಗಿ ಸಿದ್ಧಗೊಳಿಸಿತು ಎನ್ನಬಹುದು. +ನಿವೃತ್ತಿ ಪಡೆದ ದಿನವೇ ಅವನನ್ನು ಜಮ್‌ಶೇದ್‌ಪೂರಕ್ಕೆ ಕರೆದೊಯ್ಯಲೆಂದು, ಮೊನ್ನೆಯಷ್ಟೇ, ಅವನ ಮಗಳೂ ಬಂದಿದ್ದಾಳೆ, ಸಾಲೆಗೆ ರಜೆ ಬಿದ್ದ ಮಕ್ಕಳೊಂದಿಗೆ. ಮುಂಬಯಿಯಲ್ಲಿ ಅಪ್ಪ-ಅಮ್ಮರ ಸಹವಾಸದಲ್ಲಿ ಕೆಲವು ಕಾಲ ಕಳೆದು ತಿರುಗಿ ಹೋಗುವಾಗ ಅವರಿಬ್ಬರನ್ನೂ ಜೊತೆಗೆ ಕರೆದೊಯ್ಯಲಿದ್ದಾಳೆ. ಇಷ್ಟು ದೀರ್ಘಕಾಲದ ಸೇವೆಯ ನಂತರ ವಿಶ್ರಾಂತಿ ಪಡೆಯುವ ಅರವತ್ತು ದಾಟಲಿದ್ದವನ ಮಾನಸಿಕ ಸ್ಥಿತಿಯ ಬಗ್ಗೆ ಬೆಹರಾಮನಿಗಿಂತ ಹೆಚ್ಚಾಗಿ ಅವನ ಮಗಳೇ ಯೋಚಿಸಿದಂತಿತ್ತು. +ಕರುಣಾಕರನ್ ಕೇಳಿದ ಪ್ರಶ್ನೆಗಳಿಗೆ ಮೈಮೇಲೆ ನವಿರೇಳಲು ಕಾರಣವಾಗಿದ್ದು ಅವನು ಪ್ರಶ್ನೆ ಕೇಳಿದ ರೀತಿಯೋ ಅಥವಾ ತನ್ನ ಸದ್ಯದ ದೇಹಮಾನವೋ ಬೆಹರಾಮನಿಗೆ ಸ್ಪಷ್ಟವಾಗಲಿಲ್ಲ. ಹಾಗೆ ನೋಡಿದರೆ ಕರುಣಾಕರನ್ ಯಾವ ಪ್ರಶ್ನೆಯನ್ನೂ ಕೇಳಿರಲಿಲ್ಲ. ಬಹುಶಃ ಅವನು ತನ್ನ ಭೇಟಿಯ ಇರಾದೆಯನ್ನು ಪ್ರಕಟಿಸಿದ ನೇರವಾದ, ಚುಟುಕಾದ ರೀತಿಯೇ ತನ್ನ ಈಗಿನ ಇಳಿವಯಸ್ಸಿನ ಆರೋಗ್ಯದ ಸ್ಥಿತಿಯಲ್ಲಿ ಹಲವು ಪ್ರಶ್ನೆಗಳಾಗಿ ಕೇಳಿಸಿರಬೇಕು, ಅನ್ನಿಸಿತು. ಆಗ, ಕರುಣಾಕರನ್ ಕರೆಗಂಟೆ ಬಾರಿಸಿದಾಗ ಕದ ತೆರೆದು ಅವನನ್ನು ಒಳಗೆ ಬಿಟ್ಟ ಕೆಲಸದ ಹುಡುಗಿ, ಚಿಕ್ಕ ಪ್ರಾಯದ ಸೀತೆ, ಕರುಣಾಕರನ್ ಸಲುವಾಗಿ ಚಹಾ ಮಾಡಿ ತಂದಳು. ಹುಡುಗಿಯ ಚುರುಕುತನಕ್ಕೆ ತಲೆದೂಗುತ್ತ, “ತೆಗೆದುಕೊಳ್ಳಿ. ಮನೆಯವರೆಲ್ಲ ಹೊರಗೆ ಹೋಗಿದ್ದಾರೆ, ನನ್ನನ್ನು ಈ ಯಜಮಾನಿಯ ವಶಕ್ಕೆ ಬಿಟ್ಟು,” ಎನ್ನುತ್ತ ಸೀತೆಯ ಕೈಯಿಂದ ಕಪ್ಪನ್ನು ತೆಗೆದುಕೊಂಡು ಅದನ್ನು ಕರುಣಾಕರನ್ನನ ಕೈಗೆ ಒಪ್ಪಿಸಿದ. ಸೀತೆಗೂ ಮುದುಕನ ಮಾತಿನಿಂದ ಖುಶಿಯಾಯಿತು. ಇಂಗ್ಲೀಷ್‌ನಲ್ಲಿ ಆಡಿದ ಮಾತುಗಳಾದರೂ ಅವುಗಳಲ್ಲಿ ತನ್ನ ಬಗೆಗೆ ಪ್ರಶಂಸೆ ಇದ್ದುದರ ಅರಿವು ಬಂದ ಹುಡುಗಿ ಹಲ್ಲು ತೋರಿಸಿ ನಗುತ್ತ ಒಳಗೆ ಓಡಿದಳು. ಚಹದ ಗುಟುಕಿನ ಬಿಸಿಗೆ ಎಂಬಂತೆ ಕೆಲಹೊತ್ತಿನ ಮೊದಲಷ್ಟೇ ಕರುಳಲ್ಲಿ ಸೇರಿಕೊಂಡಂತೆ ಭಾಸವಾದ ನಡುಕ ಈಗ ತುಸು ದೂರವಾದಂತೆ ತೋರಿದಾಗ ಬೆಹರಾಮನಿಗೆಸುಖವೆನಿಸಿತು. +ಕಳೆದ ಹಲವು ವರ್ಷಗಳಲ್ಲಿ ಒಮ್ಮೆಯೂ ಆರೋಗ್ಯ ಕೆಟ್ಟು ಹಾಸಿಗೆ ಹಿಡಿದವನಲ್ಲವಾದರೂ ಬೆಹರಾಮ್ ಕಾಣಲು ನಾಜೂಕುಪ್ರಕೃತಿಯವನೇ. ಹೆಚ್ಚುಕಡಿಮೆ ಆರು ಫೂಟಿನ ಎತ್ತರಕ್ಕೆ ಶೋಭಿಸದ ಸಪೂರವಾದ ಕೈಕಾಲುಗಳು. ಉದ್ದವಾದ ಮೋರೆಯಲ್ಲಿ ಪ್ರತಿಯೊಂದೂ ಉದ್ದವಾದದ್ದು : ಕಿವಿ, ಮೂಗು, ಹಣೆ ಎಲ್ಲ. ಬಂಗಾರದ ಗಿಲೀಟು ಉಳ್ಳ ಫ್ರೇಮ್, ಲಕಲಕನೆ ಹೊಳೆಯುವ ದಪ್ಪ ಗಾಜುಗಳ ಕನ್ನಡಕದೊಳಗಿಂದ ತೀಕ್ಷ್ಣವಾಗಿ ಅವಲೋಕಿಸುವ ಕಣ್ಣುಗಳ ಮೇಲಿನ ಹುಬ್ಬುಗಳು ಅಳತೆ ಮೀರಿ ದಪ್ಪವಾಗಿದ್ದುವು. ಒಟ್ಟೂ ವ್ಯಕ್ತಿತ್ವ ದರ್ಪ ಸಾರುವಂತಹದಲ್ಲ;ಶಾಂತ, ಮೆತ್ತಗಿನ ಸ್ವಭಾವವನ್ನು ಪ್ರಕಟಿಸುವಂತಹದು. ಕೇರಿಯ ಮನೆಗಳಲ್ಲಿ, ಆಫೀಸಿನಲ್ಲಿ ಹಲವರ ಪ್ರೀತಿ ಗೌರವಗಳನ್ನು ದೊರಕಿಸಿಕೊಟ್ಟದ್ದು ಕೆಲಸದ ಬಗೆಗಿನ ಅವನ ದಕ್ಷತೆ, ಅಗಾಧ ಜ್ಞಾನ ಮತ್ತು ಅನುಭವಗಳಾಗಿದ್ದುವು; ಹೊರತು, ದೈಹಿಕ ವ್ಯಕ್ತಿತ್ವವಲ್ಲ. +ಇತ್ತೀಚೆಗೆ ಕೆಲವು ದಿನಗಳಿಂದ ಯಾವ ಸ್ಪಷ್ಟ ಕಾರಣವೂ ಇಲ್ಲದೇನೆ ದೇಹದಲ್ಲಿ ಸೇರಿಕೊಂಡ ಒಂದು ಬಗೆಯ ಬಳಲಿಕೆಯ ಕಾರಣ ಮಾನಸಿಕವಾಗಿರಬಹುದೆಂಬ ಗುಮಾನಿ ಬೆಹರಾಮನಿಗೆ ಇಲ್ಲದಿಲ್ಲ. ದಿನವೂ ರಾತ್ರಿ ಕಾಂಪೋಜ್ ಗುಳಿಗೆಯನ್ನು ಸೇವಿಸಿದ ಮೇಲೆಯೇ ನಿದ್ದೆ ಬರುತ್ತಿತ್ತು. ಶಿರೀನಳ ಚಿಂತೆಗೆ ಕಾರಣವಾದ ಸಂಗತಿ ಕೂಡ ಇದೇ ಆಗಿತ್ತು: ಕೆಲಸದಲ್ಲಿ ತೊಡಗಿರುವವರೆಗೂ ಇಬ್ಬರೂ ಮಕ್ಕಳಿಂದ ದೂರವಾಗಿರಬೇಕಾದ ತಮ್ಮ ಸ್ಥಿತಿಯ ಬಗ್ಗೆ ಅವನು ಈವರೆಗೂ ವಿಚಾರ ಮಾಡಿದವನೇ ಅಲ್ಲ ಎಂಬುದನ್ನು ಅವಳು ಬಲ್ಲಳು. +ಚಹ ಕುಡಿಯುತ್ತ ಕರುಣಾಕರನ್ ಕಡೆಗೆ ನೋಡುತ್ತಿದ್ದ ಹಾಗೆ ಅವನು ಕೇಳಿದನೆಂದುಕೊಂಡ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕೆಂದು ಬೆಹರಾಮ್ ಚಿಂತಿಸತೊಡಗಿದ. +ಕರುಣಾಕರನ್ ತುಂಬ ಸುಟಿಯಾದ ಹುಡುಗ. ಯಾರೂ ಸಹಜವಾಗಿ ಮೆಚ್ಛಿಕೊಳ್ಳುವ ಹಾಗಿದ್ದ. ಸ್ವಚ್ಛವಾದ ಅಚ್ಚನೀಲಿಬಣ್ಣದ ಜೀನ್ಸ್; ಕಾಲರ್ ಇಲ್ಲದ, ಅರ್ಧತೋಳಿನ ಹಳದೀ ಬಣ್ಣದ ಜರ್ಸಿ; ಜರ್ಸಿಯ ಎದೆಯ ಮೇಲಿನ ದೊಡ್ಡ ಕಿಸೆಯ ಹತ್ತಿರ ನಿರ್ಮಾಪಕರ ಹೆಸರಿನ ಚಿಹ್ನೆ; ಕಾಲಲ್ಲಿ ಚೆನ್ನಾಗಿ ಲಕಲಕಿಸುವ ಹಾಗೆ ಪಾಲಿಶ್ ಮಾಡಿಸಿದ ಕಪ್ಪು ಬಣ್ಣದ ಲೆದರ್ ಬೂಟುಗಳು; ಸರಿಯಾಗಿ ಮಧ್ಯದಲ್ಲಿ ಬೈತಲೆ ತೆಗೆದು ಬಾಚಿಕೊಂಡ ತಲೆಗೂದಲು; ವಿಶೇಷ ಕಾಳಜಿ ತೆಗೆದುಕೊಳ್ಳದೆ ಅದರಷ್ಟಕ್ಕೆ ಬೆಳೆಯಲು ಬಿಟ್ಟಂತೆ ತೋರುತ್ತಿದ್ದ ದಪ್ಪ ಮೀಸೆ; ಸೆಲ್ಯುಲಾಯ್ಡ್ ಫ್ರೇಮಿನ ಕನ್ನಡಕ; ಇವೆಲ್ಲವುಗಳಿಗೆ ಆರೋಗ್ಯದ, ಲವಲವಿಕೆಯ ಕಳೆ ತಂದದ್ದು ಸೌಜನ್ಯ ತುಂಬಿದ ಹಸನ್ಮುಖತೆಯಾಗಿತ್ತು. +‘ನೋಡಿ ಕರುಣಾಕರನ್, ಇನ್ನೆರಡು ತಿಂಗಳಲ್ಲಿ ನಾನು ನಿವೃತ್ತನಾಗುವವನು’ ಎಂದು ಆರಂಭಿಸಬೇಕು ಎನ್ನುವಷ್ಟರಲ್ಲಿ ತನ್ನ ಉತ್ತರ ಅಪ್ರಸ್ತುತವಾಗಿ ಕಂಡಿತು. ‘ಆಫೀಸಿನ ರಾಜಕಾರಣಕ್ಕೇ ಬೇಸತ್ತಿರುವಾಗ ಈ ಹೊಸ ರಾಜಕಾರಣದಲ್ಲಿ ಸಿಕ್ಕಿಬೀಳುವ ಮನಸ್ಸಿಲ್ಲ.’-ಇದು ಬಹಳಷ್ಟನ್ನು ಗ್ರಹೀತ ಹಿಡಿಯುವ ಮಾತಾಗಿ ತೋರಿತು. ಚಹ ಕುಡಿದು ಕಪ್ಪನ್ನು ಕೆಳಗಿರಿಸುತ್ತಿದ್ದಹಾಗೆ, ‘ಆಫೀಸಿನ ಕೆಲಸದಲ್ಲಿ ಎಂಥೆಂಥ ಕಠಿಣ ಸನ್ನಿವೇಶಗಳನ್ನು ಇದಿರಿಸಿದವನಿಗೆ ನೀನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯ ಮಾತ್ರ ಎಳ್ಳಷ್ಟೂ ಇಲ್ಲ ನೋಡು. ನಾಳೆ ಇನ್ನೊಮ್ಮೆ ಬಾರಲ್ಲ, ನನ್ನ ಮಗಳೂ ಇರುತ್ತಾಳೆ ಆಗ, ನಿನ್ನ ಪ್ರಶ್ನೆಗಳಿಗೆ ಅವಳೇ ಉತ್ತರ ಕೊಡಲಿ’ ಎಂದು ಹೇಳಬೇಕು ಎಂದುಕೊಂಡು ಬಾಯಿ ತೆರೆದರೆ ಬಾಯಿಂದ ಹೊರಟಿದ್ದು ಇನ್ನೊಂದು ಪ್ರಶ್ನೆಯೇ ಆಗಿತ್ತು: “ಯಾವ ರೀತಿಯಿಂದಲೂ ಸಂಬಂಧವಿಲ್ಲದ ಈ ಖೂನಿಯ ಬಗ್ಗೆ ನನ್ನ ಹತ್ತಿರ ಮಾಹಿತಿ ಇದೆಯೆಂದು ಯಾರು ಹೇಳಿದರು?” ಪ್ರಶ್ನೆಯಲ್ಲಿ ಮೂಡಿದ ಅನವಶ್ಯಕ ಅಳುಕಿನಿಂದ ಸ್ವತಃ ಬೆಹರಾಮನಿಗೇ ಅಸಮಾಧಾನವೆನಿಸಿತು. +“ನಿಮ್ಮ ನೆರೆಹೊರೆಯಲ್ಲೇ ನಡೆದ ಕೊಲೆಯಲ್ಲವೆ?” +‘ಪೇಪರಿನಲ್ಲಿ ದಿನವೂ ಹತ್ತಾರು ಕೊಲೆಗಳ ಸುದ್ದಿ ಓದಿ ಜಡ್ಡು ಬಿದ್ದಂತಿದ್ದ ನನ್ನ ಮನಸ್ಸಿನ ಮೇಲೆ ಈ ಕೊಲೆಯ ಸುದ್ದಿ -ಅದೂ ಒಬ್ಬ ಯಃಕಶ್ಚಿತ ರದ್ದೀವಾಲಾನ ಖೂನಿಯ ಸುದ್ದಿ -ಪರಿಣಾಮ ಮಾಡಿರಲಿಕ್ಕಿಲ್ಲ. ಈ ಕೊಲೆಯಂತೂ ಪೇಪರಿನಲ್ಲಿ ಕೂಡ ವರದಿಯಾಗಿರಲಿಲ್ಲ’ ಎನ್ನಲು ಹೊರಟವನು, ಕೊನೆಗೂ ಇದು ಒಬ್ಬ ಮನುಷ್ಯನ ಸಾವು ಎನ್ನುವುದು ಅರಿವಿಗೆ ಬಂದವನ ಹಾಗೆ: +“ಅವರಿವರಿಂದ ಕೇಳಿ ತಿಳಿದ ಸಂಗತಿಯೆಂದರೆ ಇವನು ಮಗ್ಗಲು ಝೋಪಡಿಯಲ್ಲಿ ಕಳ್ಳಭಟ್ಟಿಯನ್ನು ನಡೆಸುತ್ತಿದ್ದವರ ಬಗ್ಗೆ ಇವನು ಪೋಲಿಸರಿಗೆ ಮಾಹಿತಿ ಒದಗಿಸುತ್ತಿದ್ದ ಎಂಬ ಗುಮಾನಿ ಈ ಕೊಲೆಗೆ ಕಾರಣವಾಯಿತಂತೆ” ಎಂದ. +“ಇದು ನಿಮಗೆ ಹೇಗೆ ತಿಳಿಯಿತು?” +ಕರುಣಾಕರನ್‌ನ ಪ್ರಶ್ನೆಯೊಳಗಿನ ತನಿಖೆಯ ಧಾಟಿ ಬೆಹರಾಮನಿಗೆ ಸೇರಲಿಲ್ಲ. ಹಾಗೆಂದು ಹೇಳುವ ಧೈರ್ಯವೂ ಆಗಲಿಲ್ಲ. ಕೆಲಸದ ವಾತಾವರಣದಲ್ಲಿ ಅನ್ನಿಸುತ್ತಿದ್ದ ಧೈರ್ಯ ಈ ಸಣ್ಣ ಪ್ರಾಯದ ಯುವಕನ ಇದಿರು ಸಂಪೂರ್ಣವಾಗಿ ಉಡುಗಿಹೋದಂತೆ ತೋರಿದಾಗ ಖೂನಿಗೆ ಸಂಬಂಧಪಟ್ಟ ಮಾತುಕತೆಯಾದ್ದರಿಂದ ತನಿಖೆಯ ಧಾಟಿ ತಂತಾನೆ ಬಂದು ಸೇರಿಕೊಳ್ಳುತ್ತಿರಬೇಕು ಎಂದು ಸಮಾಧಾನ ತಂದುಕೊಂಡ. +‘ಸುಳ್ಳೇ ಅವರಿವರ ಹೆಸರುಗಳು ಯಾಕೆ? ನೀವು ಈಗ ನಡೆಸಿದ ತನಿಖೆಯ ಉದ್ದೇಶವೇನು? ಇಂಥದರಲ್ಲಿ ನನ್ನಂಥವನು ತಾನೇ ಏನು ಮಾಡುಬಲ್ಲ? ನಗರಗಳು ಬೆಳೆದಲ್ಲೆಲ್ಲ ಇಂಥ ಪಾತಾಳಲೋಕಗಳು ತೆರೆದುಕೊಳ್ಳುವುದರಲ್ಲಿ ಅಶ್ಚರ್ಯವೇನಿದೆ? ನಿಯಾನ್ ದೀಪಗಳ ಕಣ್ಣು ಕುಕ್ಕಿಸುವ ಬೆಳಕಿನಿಂದಾಗಿ ಹದ್ದು ಪಾರಾಗಬೇಕಾಗಿಬಂದ ಕತ್ತಲೆ ಇಂಥಲ್ಲಿ ತನ್ನ ಸಾಮ್ರಾಜ್ಯ ತೆರೆದರೆ ಅದಕ್ಕೆ ನಾವು ಹೊಣೆಗಾರರೆ? ಇಷ್ಟಕ್ಕೂ ರದ್ದೀವಾಲಾ ಕೊಲೆಯಾದದ್ದು ಈ ಕಾರಣಕ್ಕಾಗಿ ಅಲ್ಲ-ಈ ಕಾರಣಕ್ಕಾಗಿ ಅಂದರೆ ಹೋದವನು ತಿರುಗಿ ಬರುತ್ತಾನೆಯೇ? ಹೆಂಡತಿ-ಮಕ್ಕಳಾಗಲಿ, ಹುಟ್ಟಿಸಿದವರು ಒಡಹುಟ್ಟಿದವರು ಯಾರೂ ಇಲ್ಲದೆಯೆ, ಅನಾಥ ಹೆಣವಾಗಿ ಸರಕಾರದ ಹಣದಿಂದಲೇ ಬೂದಿಯಾದವನ ಸಾವಿಗಾಗಿ ನಾವು ಯಾಕೆ ಈಗ ತಲೆ ಕೆಡಿಸಿಕೊಳ್ಳಬೇಕು?’-ಹಲವು ಪ್ರಶ್ನೆಗಳು ಒಮ್ಮೆಗೆಲೇ ಕೋಲಾಹಲ ನಡೆಸಿದರೂ ಒಂದೂ ಮಾತಾಗಿ ಹೊರಗೆ ಬರಲಿಲ್ಲ. ನಿಜವಾಗಿ ನೋಡಿದರೆ ಈ ಪ್ರಶ್ನೆಗಳು ಇಷ್ಟೊಂದು ತ್ವರೆಯಲ್ಲಿ, ಇಷ್ಟೊಂದು ಸ್ಪಷ್ಟ ರೂಪದಲ್ಲಿ ಮೊಳೆದದ್ದಕ್ಕೆ ಕರುಣಾಕರನ್ ಹೊಣೆಯಾಗಿರಲಿಲ್ಲ. ಬಹಳ ಹಿಂದೆಯೆ ಮನೆಗೆಲಸದ ಹೆಣ್ಣು ಪಾರ್ವತಿಯಿಂದಾಗಿ ಎದುರಾದ ಒಂದು ಸನ್ನಿವೇಶದಲ್ಲಿ ಹುಟ್ಟಿದ ಈ ಪ್ರಶ್ನೆಗಳು ಈಗ ಮತ್ತೆ ಪಟಪಟನೆ ಹುಟ್ಟಿಕೊಂಡದ್ದಕ್ಕೆ ಕರುಣಾಕರನ್ ನಿಮಿತ್ತ ಮಾತ್ರನಾಗಿದ್ದ. +“ನೋಡಿ ಕರುಣಾಕರನ್, ನನಗೀಗ ವಯಸ್ಸಾದುದ್ದಕ್ಕೋ ಏನೋ ಇಂಥದ್ದನ್ನೆಲ್ಲ ಸಹಿಸುವ ಗಟ್ಟಿತನವೇ ಇಲ್ಲವಾಗಿಬಿಟ್ಟಿದೆ. ಆಗ ನಮಗೆ ಚಹ ಮಾಡಿ ತಂದ ಹುಡುಗಿಯಿದ್ದಾಳಲ್ಲ-ಅವಳ ತಾಯಿ ಪಾರ್ವತಿ ನಮ್ಮಲ್ಲಿ ಕಸಮುಸುರೆಯ ಕೆಲಸ ಮಾಡುತ್ತಾಳೆ. ಅವಳೆಲ್ಲೋ ರಾಜಕಾರಣಿಯಾಗಬೇಕಿತ್ತು, ತಪ್ಪಿ ಇಂಥ ಕೆಲಸಕ್ಕೆ ಸೇರಿದಳೆಂದು ತೋರುತ್ತದೆ. ಅವಳಿಗೆ ಈ ಖೂನಿಯ ಬಗ್ಗೆ ಬಹಳಷ್ಟು ಗೊತ್ತಿದ್ದಂತಿದೆ. ನಾಳೆ ಇದೇ ಹೊತ್ತಿಗೆ ಬನ್ನಿ, ಅವಳನ್ನು ಕರೆದಿರುತ್ತೇನೆ. ಜಮ್‌ಶೇದ್‌ಪೂರದಿಂದ ನನ್ನ ಹಿರಿಯ ಮಗಳು ಬಂದಿದ್ದಾಳೆ. ಅವಳು ಬೇಕಾದರೆ ನಿಮ್ಮೊಡನೆ ಮಾತನಾಡಲಿ. ಸಾಯ್ಕಾಲಜಿಯಲ್ಲಿ ಎಂ. ಎ ಅವಳು. ಇಂಥದರ ಬಗ್ಗೆ ತುಂಬ ಓದಿಕೊಂಡವಳು, ತಿಳಿದುಕೊಂಡವಳು.” ಇಷ್ಟನ್ನೂ ಹೇಳುವುದರೊಳಗೆ ಬೆಹರಾಮನಿಗೆ ದಣಿವಾಯಿತು. ತನ್ನನ್ನೇ ವಿಚಿತ್ರ ಕುತೂಹಲದಿಂದ ನೋಡುತ್ತ ಕುಳಿತುಬಿಟ್ಟ ಕರುಣಾಕರನ್‌ನನ್ನು ನೋಡಿ, ಸನ್ನಿವೇಶವನ್ನು ಹಗುರಗೊಳಿಸಲೆಂಬಂತೆ, “ಇನ್ನೊಂದು ಕಪ್ಪು ಚಹ ತರಿಸಲೇ? ನನಗಂತೂ ಬೇಕು”, ಎನ್ನುತ್ತ ಅವನ ಉತ್ತರಕ್ಕಾಗಿ ಕಾಯದೆ ಸೀತೆಯನ್ನು ಕರೆದು ಖಾಲಿಯಾದ ಕಪ್ಪು-ಬಶಿಗಳನ್ನು ಒಳಗೆ ಒಯ್ಯಲು ಹೇಳಿ ಇನ್ನೆರಡು ಚಹ ತರಲು ಹೇಳಿದ. ಕರುಣಾಕರನ್‌ನ ಕಡೆಗೆ ತಿರುಗಿ, “ನಿಮ್ಮ ಕಿಸೆಯಲ್ಲಿಯ ಸಿಗರೇಟ್ ಪ್ಯಾಕೆಟ್ ನಾನು ಕಾಣದೇ ಇಲ್ಲ. ಸೇದಬೇಕು ಎನಿಸಿದರೆ ಸೇದಲು ಭಿಡೆ ಮಾಡಿಕೊಳ್ಳಬೇಡಿ. ನಾನೇ ಸೇದಲಾರೆ,” ಎನ್ನುತ್ತ ಕುರ್ಚಿಯಿಂದ ಎದ್ದು ಆಶ್‌ಟ್ರೇ ಹುಡುಕಿ ತಂದ. ಜೊತೆಗೆ ಬೆಂಕೀಕಡ್ಡಿಯ ಪೊಟ್ಟಣವನ್ನೂ. ಹಾಗೂ, “ಇದೀಗ ಬಂದೆ,” ಎನ್ನುತ್ತ ಒಳಗೆ ನಡೆದ. +ಸಿಗರೇಟೊಂದನ್ನು ಹಚ್ಚಿಕೊಳ್ಳುವಾಗ ಕರುಣಾಕರನ್‌ಗೆ ಹಾಯೆನಿಸಿತು. ಹೊರಗೆ ತೋರಿಸಿಕೊಂಡಿರದಿದ್ದರೂ ಹಿಂದೆಂದೂ ಕಂಡು ಗೊತ್ತಿರದ ಈ ಹಿರಿಯನ ಇದಿರು ಕೂತು ಮಾತನಾಡುವಾಗ ಒಳಗೊಳಗೇ ಶೇಖರಿಸಹತ್ತಿದ ಆತಂಕದಿಂದ ಕರುಣಾಕರನ್ ಬಿಗಿಗೊಂಡಿದ್ದ. ಸಿಗರೇಟ್ ಹೊತ್ತಿಸಿ, ಕುರ್ಚಿಯನ್ನು ತುಸು ಹಿಂದಕ್ಕೆ ಸರಿಸಿ ಕುಳಿತುಕೊಂಡ. ಅನಾಯಾಸವಾಗಿಯೇ ದೃಷ್ಟಿ ಬಾಲ್ಕನಿಯ ಕಟಕಟೆಯ ಹೊರಗೆ ಸರಿದು ಆವರೆಗೂ ಲಕ್ಷ್ಯಕ್ಕೆ ಬಂದಿರದ ಸಮುದ್ರದ ಮೇಲೆ ಊರಿತು: ನೀರಿಗೆ ಆಗ ಇಳಿತವಾದ್ದರಿಂದ ಸ್ತಬ್ಧವಾಗಿತ್ತು. ಸಂಜೆಯ ಐದು ಗಂಟೆಯಾಗುತ್ತ ಬಂದಿದ್ದರೂ ನೀರ ಮೇಲಿನ ಬೆಳಕು ಇನ್ನೂ ಬಾಡಿರಲಿಲ್ಲ. ಆದರೂ ನೀರಿನ ನೋಟವೇ ಅವನಂಥ ಕೇರಳದವನ ಮನಸ್ಸಿಗೆ ಹುಚ್ಚು ಹಿಡಿಸುವಂತಹದು. ಮುದುಕ ಒಳ್ಳೆಯ ಜಾಗದಲ್ಲಿ ಮನೆ ಮಾಡಿದ್ದಾನೆ ಅನ್ನಿಸಿತು. +ಆಗಿನಿಂದಲೂ ಬಿಳಿಯ ಪಜಾಮ, ಬಟ್ಟೆಯಿಂದ ಹೊಲಿಸಿದ ಬನಿಯನ್ನಿನಂಥ ತೋಳಿಲ್ಲದ ಬಿಳಿಯ ಅಂಗಿ-ಸುದ್ರೇಹ್-ತೊಟ್ಟು ಕೂತ ಮುದುಕ ಒಳಗೆ ಹೋಗಿ ಪ್ಯಾಂಟು, ಶರ್ಟು ಧರಿಸಿ ಹೊರಗೆ ಬಂದ. “ಗಾಳಿಯಲ್ಲಿ ತುಸು ಚಳಿ ಸೇರಿಕೊಂಡಂತೆ ಅನ್ನಿಸಿತು,” ಎಂದು ಉಡುಪು ಬದಲಿಸಿದ್ದಕ್ಕೆ ವಿವರಣೆ ಈಯುತ್ತಿರುವಾಗ ಎರಡನೇ ಬಾರಿಯ ಚಹವೂ ಬಂತು. ಈ ಬಾರಿ ಒಂದು ಬಶಿಯಲ್ಲಿ ಕೆಲವು ಬ್ರಿಟಾನಿಯಾ ಬಿಸ್ಕೀಟುಗಳೂ ಇದ್ದುವು. +“ತೆಗೆದುಕೊಳ್ಳಿ, ಒಂದನ್ನು ನೀವು ವಿವರಿಸಲೇ ಇಲ್ಲ. ಈ ಖೂನಿಯ ಬಗೆಗಿನ ಮಾಹಿತಿಗಾಗಿ ನಮ್ಮ ಮನೆಗೇ ಬಂದದ್ದು ಹೇಗೆ?” +“ಇಲ್ಲಾ ಸರ್, ನನಗೂ ಗೊತ್ತಿಲ್ಲ. ಬಹುಶಃ ಬಸ್‌ಸ್ಟಾಪಿನಲ್ಲಿ ಇಳಿದ ಕೂಡಲೇ ಕಣ್ಣಿಗೆ ಬಿದ್ದ ಮೊದಲ ಮನೆಯೇ ನಿಮ್ಮದಾದುದಕ್ಕೇ ಇರಬೇಕು, ಅನ್ನಿಸುತ್ತದೆ ನೀವು ನನ್ನನ್ನು ನಂಬಬೇಕು , ಸರ್ ; ಈ ಖೂನಿಯ ಬಗ್ಗೆ ಯಾವುದೇ ಬಗೆಯ ದುಷ್ಟ ಕುತೂಹಲದಿಂದ ಬಂದವನಲ್ಲ. ಮಾಹಿತಿ ದೊರಕಿಸುವ ಉದ್ದೇಶವನ್ನೂ ಅರಿತವನಲ್ಲ. ಮೊನ್ನೆ ನಮ್ಮ ಆಫೀಸಿಗೆ, ಸಂಪಾದಕರ ಹೆಸರಿಗೆ, ಸಹಿಯಿಲ್ಲದ ಒಂದು ಪತ್ರ ಬಂದಿತು. ಈ ಪತ್ರ ನನ್ನ ಟ್ರೇಗೆ ಬಂದಿತು. ಅದರ ಮೇಲೆ ಸಂಪಾದಕರಿಂದ ಯಾವುದೇ ಷರಾ ಇರಲಿಲ್ಲ. ಅಂದರೆ ಅವರೂ ಕೂಡ ನನ್ನಿಂದ ಯಾವ ನಿರ್ದಿಷ್ಟ ಕ್ರಮವನ್ನೂ ಬಯಸಿರಲಿಲ್ಲ. ಬಹುಶಃ ಅವರು ಆ ಪತ್ರವನ್ನು ಪೂರ್ತಿಯಾಗಿ ಓದಿರಲಿಕ್ಕೂ ಇಲ್ಲ. ಅಥವಾ ಇಂಥ ಪತ್ರಗಳನ್ನು ದಿನವೂ ಓದುವುದು ಅಭ್ಯಾಸವಾಗಿಬಿಟ್ಟ ಅವರ ಮೇಲೆ ಅದು ಅಂಥ ಪರಿಣಾಮವನ್ನು ಮಾಡಿರಲಿಕ್ಕೂ ಇಲ್ಲ. ಈ ಪತ್ರಿಕಾ ವ್ಯವಸಾಯಕ್ಕೆ ತೀರ ಹೊಸಬನಾದ ನನ್ನ ಮೇಲೆ ಮಾಡಿದ ಪರಿಣಾಮದಿಂದಾಗಿ ನಿದ್ದೆಗೆ ಎರವಾಗಿದ್ದೇನೆ. ಆ ಪತ್ರ ಒಂದು ಖೂನಿಗೆ ಸಂಬಂಧಪಟ್ಟದ್ದು. ಸದ್ಯ ನಿಮಗೆ ತೋರಿಸುವ ಹಾಗಿಲ್ಲ. ತಪ್ಪು ತಿಳಿಯಬೇಡಿ. ಮಾಹಿತಿ ದೊರಕಿಸುವ ಉದ್ದೇಶ : ನಾನು ಕಳೆದುಕೊಂಡ ನಿದ್ದೆಯನ್ನು ತಿರುಗಿ ಪಡೆಯುವುದು.” ಇಲ್ಲಿಗೆ ಬರುವ ಮೊದಲೇ ಮನಸ್ಸಿನಲ್ಲಿ ಸಿದ್ಧಮಾಡಿಕೊಂಡ ಈ ಮಾತುಗಳಲ್ಲಿ ಎಷ್ಟೊಂದನ್ನು ಮುದುಕನ ಇದಿರು ಕೂತಾಗ ಆಡುವುದು ಸಾಧ್ಯವಾಯಿತೋ ಕರುಣಾಕರನ್‌ಗೆ ತಿಳಿಯಲಿಲ್ಲ. ಅವನ ಕಣ್ಣಿನಲ್ಲಿ ಕಣ್ಣಿಟ್ಟು ಆಡಿದ, ಆಡಲು ಸಾಧ್ಯವಾದ ಕೆಲವೇ ಕೆಲವು ಮಾತುಗಳು ಕೂಡ ಚಹ ಕುಡಿಯುವುದನ್ನೂ ಮರೆಯುವಂತೆ ಮಾಡಿದ್ದುವು. ಕೈಯಲ್ಲಿ ಹಿಡಿದ ಸಿಗರೇಟು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ತುದಿಯಲ್ಲಿನ್ನೂ ಕೆಂಡವುಳ್ಳ ಹಿಡಿಕೆಯನ್ನು ಆಶ್-ಟ್ರೇದಲ್ಲಿ ಮುರುಟಿ ಕೆಂಡ ಆರಿಸಿದಮೇಲೆ ಚಹದ ಕಪ್ಪನ್ನು ಕೈಗೆತ್ತಿಕೊಂಡ. +ಅವನ ಮಾತುಗಳಲ್ಲಿಯ ಅತೀವ ಸಹಜತೆಯೇ ಬೆಹರಾಮನನ್ನು ತಕ್ಷಣ ತಟ್ಟಿತು. “ನೋಡೋಣ ಕರುಣಾಕರನ್, ನಾಳೆಗೆ ಬನ್ನಿ. ಬರುವಾಗ ನೀವು ಆಗ ಉಲ್ಲೇಖಿಸಿದ ಆ ಸಹಿಯಿಲ್ಲದ ಪತ್ರವನ್ನೂ ತರಲು ಮರೆಯಬೇಡಿ,” ಎಂದ. ಆ ಆಶ್ವಾಸನೆಯೊಳಗಿನ ಪ್ರಾಮಾಣಿಕತೆ ಕರುಣಾಕರನ್‌ನ ಮೇಲೆ ಪರಿಣಾಮ ಮಾಡದೇ ಇರಲಿಲ್ಲ. “ತರುತ್ತೇನೆ, ಸರ್,” ಎಂದು ಎದ್ದುನಿಂತ. ಬೆಹರಾಮನೂ ಎದ್ದುನಿಂತು ಅವನನ್ನು ಕೈಕುಲುಕಿ ಬೀಳ್ಕೊಟ್ಟ. ನಿನ್ನೆಯವರೆಗೂ, ಪರಸ್ಪರರ ಅಸ್ತಿತ್ವದ ಅರಿವೂ ಇಲ್ಲದ ಇಬ್ಬರು ಒಬ್ಬರನ್ನೊಬ್ಬರು ಸಂಧಿಸಿದ ಅನಿರೀಕ್ಷಿತ ಗಳಿಗೆಯಲ್ಲಿ, ಸಂಧಿಸಿದಾಗ ಪರಸ್ಪರರ ಸಮ್ಮುಖದಲ್ಲಿ ಆಡಲು ಸಾಧ್ಯವಾದ ಕೆಲವೇ ಕೆಲವು ಮಾತುಗಳಿಂದಾಗಿಯೇ ತಮ್ಮ ಊಹೆಗೆ ಮೀರಿದ ಒಂದು ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಿದ್ದ ರೀತಿ ಇಬ್ಬರಿಗೂ ಅಶ್ಚರ್ಯವನ್ನುಂಟುಮಾಡಿತ್ತು. ಅಂಥ ಆಶ್ಚರ್ಯದ ಗುಂಗಿನಲ್ಲಿರುವಾಗಲೇ, ಆಗ ತನಗೆ ಚಹ ಬಿಸ್ಕೀಟುಗಳನ್ನು ತಂದುಕೊಟ್ಟ ಸೀತೆ, ಅಡುಗೆಯ ಮನೆಯಲ್ಲಿ ಬಾಗಿಲಲ್ಲಿ ಕಾಣಿಸಿಕೊಂಡಾಗ ಅವಳಿಗೂ ಬರುತ್ತೇನೆ ಎಂದು ಹೇಳುವಹಾಗೆ ಕೈಮುಗಿದ. ಅವಳ ಮೋರೆಯನ್ನು ಬೆಳಗಿದ ಮುಗ್ಧ ಮುಗುಳುನಗೆ ಅಂತಃಕರಣವನ್ನು ವ್ಯಾಪಿಸುತ್ತಿರುವಾಗ ಮನೆಯ ಹೊರಗೆ ಕಾಲಿಟ್ಟ. +ಅವನು ಹೋದಕೂಡಲೇ ಬೆಹರಾಮ್, ಮಧ್ಯಾಹ್ನದ ನಿದ್ದೆ ಸರಿಯಾಗಿರದವನ ಹಾಗೆ, ಮಲಗುವ ಕೋಣೆಗೆ ನಡೆದು ಹಾಸಿಗೆಯ ಮೇಲೆ ಅಡ್ಡವಾಗಿ, ಹೊರಗೆ ಹೋದ ಹೆಂಡತಿ-ಮಕ್ಕಳು ಹಿಂತಿರುಗಿ ಬರುವುದರ ಹಾದಿ ಕಾಯಹತ್ತಿದ. ಯಾವುದರ ಬಗೆಗೂ ಧೇನಿಸುವ ಮನಸ್ಸಿಲ್ಲದವನ ಶೂನ್ಯದೃಷ್ಟಿ ಮೇಲೆ ಸಂತವಾಗಿ ತಿರುಗುತ್ತಿದ್ದ ಫ್ಯಾನಿನ ಮೇಲೇ ನೆಟ್ಟಿತ್ತು, ಸರಕ್ಕನೆಂಬಂತೆ, ಕರುಣಾಕರನ್‌ಗೆ ಕೊಟ್ಟ ಮಾತು ಶಿರೀನ್ ಮಾಡಿಕೊಂಡು ಬಂದ ಇಡಿಯ ಯೋಜನೆಯನ್ನೇ ಹಾಳುಮಾಡುವುದು ನಿಶ್ಚಿತ ಎಂಬುದು ಹೊಳೆದು ಹೋಯಿತು. +ಮನೆಯ ಇದಿರೇ ಬಾಂದ್ರಾ ಸ್ಟೇಶನ್ನಿಗೆ ಹೋಗುವ ಬಸ್ಸು ನಿಲ್ಲುವ ಸ್ಟಾಪು. ವಿಚಾರ ಮಾಡುವ ಮೊದಲೇ ಬಸ್‌ಸ್ಟಾಪಿನಲ್ಲಿ ನಿಂತು ಕರುಣಾಕರನ್ ಬಸ್ಸಿನ ಹಾದಿ ಕಾಯಹತ್ತಿದ. ಬಾಂದ್ರಾ ಸ್ಟೇಶನ್ನಿನಲ್ಲಿ ಟ್ರೇನ್ ಹತ್ತಿ ದಾದರ ಸ್ಟೇಶನ್ನಿಗೆ, ಅಲ್ಲಿ ಟ್ರೇನ್ ಬದಲಿಸಿ ಡೊಂಬಿವ್ಲಿಗೆ ಹೋಗಿ ಆದಷ್ಟು ಬೇಗ ತನ್ನ ಕೋಣೆ ಸೇರುವ ಮನಸ್ಸಾಗಿತ್ತು. ಬಸ್‌ಸ್ಟಾಪಿನ ಇದಿರುಗಡೆಯಲ್ಲಿ, ತಾನು ಇದೀಗ ಭೇಟಿಯಿತ್ತ ಮನೆಯ ಬಲಮಗ್ಗುಲಲ್ಲಿ ಕಾಣಿಸುತ್ತಿದ್ದ, ಹಾಳುಬಿದ್ದ ಗೋಲಾಕಾರಾದ ಹಳೆಯ ಕಟ್ಟಡವೇ ಪತ್ರದಲ್ಲಿಯ ಭೂತಬಂಗಲೆ ಇದ್ದರೂ ಇದ್ದೀತು. ಸ್ಟಾಪಿನಲ್ಲಿ ನಿಂತ ಮುದುಕಿಯೊಬ್ಬಳನ್ನು ಕೇಳಿ ನೋಡುವ ಮನಸ್ಸಾದರೂ ಕೇಳಲಿಲ್ಲ. ಕೆಲಹೊತ್ತಿನ ಮೊದಲು ಮುದುಕನನ್ನು ಭೇಟಿಯಾದ ಬಾಲ್ಕನಿಯ ಕಡೆಗೆ ಕಣ್ಣು ಹಾಯಿಸಿದ; ಯಾರೂ ನಿಂತಿರಲಿಲ್ಲ. ಅಷ್ಟರಲ್ಲಿ ತಾನು ಹತ್ತಬೇಕಾದ ಬಸ್ಸೂ ಬಂದಿತು. ಬಸ್ಸು ಹತ್ತಿ ಸ್ಟೇಶನ್ನಿಗೆ ಹೋಗುವಾಗ, ಟ್ರೇನ್ ಹತ್ತಿ ಮನೆಯ ಕಡೆಗೆ ಸಾಗಿದಾಗ ಮನೆ ತಲುಪುವತನಕವೂ ಈ ಭೇಟಿಯ ಬಗ್ಗೆ ವಿಚಾರವನ್ನೇ ಮಾಡಕೂಡದು ಎಂದು ನಿರ್ಧರಿಸಿದವನ ಹಾಗೆ ಲಕ್ಷ್ಯವನ್ನು ಸುತ್ತಲಿನದರ ಮೇಲೆಯೇ ನೆಲೆಸಿದ್ದ. +ಮನೆ ತಲುಪುವ ಪುರಸತ್ತಿಲ್ಲ, ಕರುಣಾಕರನ್ ತನ್ನ ಕೋಣೆಗೆ ಧಾವಿಸಿ ಕದ ತೆರೆದು ದೀಪ ಹಾಕಲು ಸ್ವಿಚ್ಚನ್ನೊತ್ತಿದ. ದೀಪ ಬೆಳಗಲಿಲ್ಲ. ಅವನು ‘ಪೀಜೀ’ ಆಗಿದ್ದ ಮನೆಯ ಒಡತಿಯನ್ನು ಕೇಳಿದಾಗ ಇಡೀ ಕೇರಿಯ ದೀಪಗಳೇ ಹೋದದ್ದು ತಿಳಿಯಿತು. ಡೊಂಬಿವ್ಲಿಯಲ್ಲಿ ಇದೇನು ಹೊಸದಾಗಿರಲಿಲ್ಲ. ಮುದುಕಿಯ ಮನೆಯಲ್ಲಿ ಮೇಣಬತ್ತಿ ಹೊತ್ತಿಸಿದ್ದು ಕಂಡಿತು. ವಿದ್ಯುತ್ ದೀಪದ ಹಾದಿ ಕಾಯುವ ಮನಸ್ಸು ತನಗೂ ಇಲ್ಲದವನಹಾಗೆ ಮೇಜಿನ ಖಣದಲ್ಲಿರಿಸಿದ ಮೇಣಬತ್ತಿಯನ್ನು ಹೊರತೆಗೆದು ಹಚ್ಚಿದ. ಅದರ ಬೆಳಕು ತನ್ನ ಸದ್ಯದ ಮೂಡಿಗೆ ಕಳೆ ತರುವಂತೆ ತೋರಿತು. ಲಗುಬಗೆಯಿಂದ ಡ್ರೆಸ್ಸು ಬದಲಿಸಿ, ಬಚ್ಚಲುಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದ. ಮೇಣಬತ್ತಿಯನ್ನು ಮೇಜಿನ ಮೇಲೆ ನಿಲ್ಲಿಸಿ ಅದರ ಬೆಳಕಿನಲ್ಲಿ ಬರೆಯಲು ಕೂತ. +ಕೇರಳದಿಂದ ಬಂದಮೇಲೆ, ಕಳೆದ ಕೆಲವು ತಿಂಗಳಿಂದ ಇಟ್ಟುಕೊಂಡ ಪರಿಪಾಠವಿದು. ಊರಿನಲ್ಲಿ ಬಿಟ್ಟುಬಂದ ಕಿರಿಯ ತಂಗಿ ಲಲಿತಳಿಗೆ ಬರೆದ ಪತ್ರಗಳ ರೂಪದಲ್ಲಿ ಈ ಡಾಯರಿಯ ಬರವಣಿಗೆಯಿತ್ತು. ತಿಂಗಳಿಗೊಮ್ಮೆ ಅವಳಿಗೆ ಬರೆದ ಪತ್ರಗಳಲ್ಲಿ ಈ ಡಾಯರಿಯಿಂದಲೇ ಎತ್ತಿಹೇಳಿದ ಸಂಗತಿಗಳಿರುತ್ತಿದ್ದುವು. ಡಾಯರಿಯಲ್ಲಿ ಬರೆಯುತ್ತಿದ್ದ ಸಂಗತಿಗಳ ಬಗ್ಗೆ ಯಾವುದೇ ಒಂದು ನಿಶ್ಚಿತ ಯೋಜನೆಯಿರುತ್ತಿರಲಿಲ್ಲ. ಬರೆದಾಗ ಮನಸ್ಸಿಗೆ ಸುಖವೆನಿಸುತ್ತಿದ್ದ ಕ್ರಮದಲ್ಲಿ ಸಂಗತಿಗಳು ದಾಖಲೆಗೊಳ್ಳುತ್ತಿದ್ದುವು. ಎಂದಿನಹಾಗೆಯೇ ‘ಪ್ರೀತಿಯ ಲಲಿತಾ,’ ಎಂಬುದನ್ನು ಮನಸ್ಸಿನಲ್ಲೇ ಅಂದುಕೊಂಡು ಬರೆಯಲು ಶುರು ಮಾಡೋಣವೆಂದರೆ ಕಾಗದದ ಮೇಲೆ ಮೂಡಬಹುದಾದ ಮೊಟ್ಟಮೊದಲಿನ ಶಬ್ಧ ಯಾವುದಾಗಬಹುದು ಎಂಬುದರ ಬಗೆಗೇ ಕುತೂಹಲಪಟ್ಟವನ ಹಾಗೆ ಮೇಣಬತ್ತಿಯ ಬಂಗಾರದ ಬಣ್ಣದ ಜ್ಯೋತಿಯನ್ನು ನೋಡುತ್ತ ಕುಳಿತುಬಿಟ್ಟ, ತಾನು ಕಾಯುತ್ತಿದ್ದ ಶಬ್ದ ಆ ಜ್ಯೋತಿಯೊಳಗಿಂದಲೇ ಬರಲಿದೆ ಎಂಬಂತೆ! +ಹೀಗೆ ಆದದ್ದು ಇದುವೇ ಮೊದಲ ಬಾರಿ ಅಲ್ಲವಾಗಿತ್ತು. ಬರೆಯಲು ಕೂತಮೇಲೆ, ಕೇರಳದಲ್ಲಿಯ ತಮ್ಮ ಮನೆಯನ್ನು ಅದಕ್ಕಿಂತ ಹೆಚ್ಚಾಗಿ ತಂಗಿ ಲಲಿತಳನ್ನು ಕಣ್ಣಮುಂದೆ ನಿಲ್ಲಿಸಿಕೊಳ್ಳಲು ಮಾಡಿದ ಪ್ರಯತ್ನದೊಳಗಿಂದಲೇ ಎದ್ದು ಬರುವ ಸ್ಪಷ್ಟವಾದ ಪ್ರತಿಮೆ ಮೊದಲ ವಾಕ್ಯವನ್ನು ನಿರ್ಧರಿಸುತ್ತಿತ್ತು. ಈಗಲೂ ಹಾಗೆಯೇ ಆಯಿತು: “ನಾವು ಅಂಗಳದ ಸಂಪಿಗೆ ಮರದ ಮೇಲೆ ಕೂತು ಮಾತನಾಡುತ್ತಿದ್ದುದು ನೆನಪಿದೆಯೆ?-ರಾಜರಾಣಿಯರ ಕತೆಯ ಧಾಟಿಯಲ್ಲಿ ನಮ್ಮ ಅಪ್ಪನಿಗೆ ಇಬ್ಬರು ಹೆಂಡಂದಿರು. ನಾನು, ಲಲಿತ ಕಿರಿಯ ಹೆಂಡತಿಯ ಮಕ್ಕಳು. ಅಣ್ಣ ಹಿರಿಯ ಹೆಂಡತಿಯ ಮಗ. ನಾನೇ ಕಂಡಿಲ್ಲವಾದರೂ ಅವನ ಅಮ್ಮ ಅಣ್ಣನ ಹಾಗೇ ತುಂಬ ಚೆಂದಳಿದ್ದಳೆಂದು ಕೇಳಿ ಬಲ್ಲೆವು.” ಮೇಣಬತ್ತಿಯ ಬೆಳಕು ಸುತ್ತಲಿನ ಗೋಡೆಗಳ ಮೇಲೆಕುಣಿಸತೊಡಗಿದ ಹಲವು ಅಸ್ಪಷ್ಟ ಆಕೃತಿಗಳ ಹಾಗೆಯೇ ಹಲವು ಆಕೃತಿಗಳು ಮನಸ್ಸಿನಲ್ಲಿ ಮೂಡಿ ಶಬ್ದಗಳಾಗುವುದಕ್ಕೆ, ಅರ್ಥವಾಗಬಹುದಾದ ವಿನ್ಯಾಸವುಳ್ಳ ವಾಕ್ಯವಾಗುವುದಕ್ಕೆ ಹವಣಿಸುತ್ತಿರುವಾಗ ಮೈತುಂಬ ಮುಳ್ಳು ಹಾಸಿಕೊಂಡ ರೀತಿಗೆ ಕರುಣಾಕರನ್ ಪೆನ್ನನ್ನು ಕೆಳಗಿಟ್ಟುಬಿಟ್ಟ. ಅವನು ಬರೆಯಬೇಕೆಂದುಕೊಂಡದ್ದು ಇಂದು ಭೇಟಿಯಾಗಿಬಂದ ಮುದುಕನ ಬಗೆಗಾಗಿತ್ತು; ತಂಗಿಯ ನೆನಪು ಕೆದಕಿದ ಪುಟ್ಟ ಸೀತೆ, ಬಸ್‌ಸ್ಟಾಪಿನಲ್ಲಿ ನಿಂತಾಗ ನಸುಗೆಂಪಿಗೆ ತಿರುಗಿದ ಸಂಜೆಯ ಬೆಳಕಿನಲ್ಲಿ ವಿಚಿತ್ರವಾಗಿ ಕಂಡ ಭೂತಬಂಗಲೆಯ ಬಗೆಗೂ ಆಗಿತ್ತು. ಹೊರತು, ಅಣ್ಣನ ಬಗೆಗೆ ಆಗಿರಲೇ ಇಲ್ಲ. ಕೇವಲ ಹೊಟ್ಟೆಪಾಡಿಗಾಗಿ ದೂರದ ಕೇರಳದಲ್ಲಿ, ಪಾಲಘಾಟದ ಹತ್ತಿರದ ಪಲಯನ್ನೂರು ಎಂಬ ಹಳ್ಳಿಯಲ್ಲಿ ಮಡಲು ಹೊದೆಸಿದ ತಮ್ಮ ಸಣ್ಣ ಮನೆಯನ್ನು, ವಯಸ್ಸಾದ ಅಪ್ಪ, ವಯಸ್ಸಾಗಿರದ ಅಮ್ಮ, ಸಾಲೆಗೆ ಹೋಗುತ್ತಿದ್ದ ತಂಗಿಯರನ್ನು ಬಿಟ್ಟು ಮುಂಬಯಿಗೆ ಬಂದಾಗ ನೌಕರಿಯನ್ನು, ಇರಲು ಕೋಣೆಯನ್ನು ದೊರಕಿಸಿಕೊಳ್ಳುವಾಗ ಪಟ್ಟ ಶ್ರಮವನ್ನು ಕುರಿತು ಇತ್ತೀಚಿಗೆ ನಡೆದ ಒಂದು ಖೂನಿಯನ್ನು ಕುರಿತು ಬರೆಯುತ್ತಿದ್ದ ಈ ಡಾಯರಿಯಲ್ಲಿ ಎಂದೋ ಕಳಕೊಂಡ ಅಣ್ಣನಿಗೆ ಸಂಬಂಧಪಟ್ಟ ವಾಕ್ಯವೊಂದು ಸಂಕಲ್ಪವನ್ನು ಮೀರಿ ಮನಸ್ಸಿನಲ್ಲಿ ರೂಪ ತಳೆಯುತ್ತಿದ್ದ ರೀತಿಗೆ ದಂಗುಬಡೆದವನ ಹಾಗೆ ಕುಳಿತುಬಿಟ್ಟ. +ಕಡಿದುಹೋದ ವಿದ್ಯುತ್‌ಪ್ರವಾಹ ಮತ್ತೆ ಹರಿಯಲು ತೊಡಗಿರಬೇಕು. ಹಾಕಿಯೇ ಇದ್ದ ಸ್ವಿಚ್ಚಿನಿಂದಾಗಿ ಕೋಣೆಯೊಳಗಿನ ದೀಪ ಕಣ್ಣಿಗೆ ಧಕ್ಕೆ ಕೊಡುವ ಹಾಗೆ ಬೆಳಗಿಕೊಂಡಿತು. ಮೇಣಬತ್ತಿಯನ್ನು ಕೆಲಹೊತ್ತು ಹಾಗೇ ಉರಿಯಲು ಬಿಟ್ಟು, ಕರುಣಾಕರನ್ ಕುರ್ಚಿಯಿಂದ ಎದ್ದ. ತನ್ನ ಕೋಣೆಯೊಳಗಿನ ಮಂಚ, ಕಿಡಕಿಯ ಹತ್ತಿರ ಗೋಡೆಯೊಳಗೆ ಹುಗಿದ ಮರದ ಬಾಗಿಲುಳ್ಳ ಕಪಾಟು, ಅದರಾಚೆಯ ಮೂಲೆಯನ್ನು ರಚಿಸಿದ ಎರಡೂ ಗೋಡೆಗಳಿಗೆ ಮೊಳೆ ಹೊಡೆದು ಕಟ್ಟಿದ ಸರಿಗೆಯ ಮೇಲೆ ಒಣಗಲು ಹಾಕಿದ ಸ್ನಾನದ ಟವೆಲ್, ಬನಿಯನ್, ಚಡ್ಡಿಗಳು-ಎಲ್ಲವುಗಳ ಮೇಲೆ ಕಣ್ಣುಹಾಯಿಸುತ್ತ ಬಚ್ಚಲುಮನೆಗೆ ಹೋಗಿ ಇನ್ನೊಮ್ಮೆ ತಂಪು ನೀರಿನಿಂದ ಕಾಲು ತೊಳೆದುಕೊಂಡ. ನೀರನ್ನು ಒರಸಿಕೊಳ್ಳದೆಯೆ ಮೇಜಿಗೆ ಬಂದ. ಮೇಣಬತ್ತಿಯನ್ನು ಆರಿಸಿ ಇಂದಿನ ಭೇಟಿಯ ಬಗ್ಗೆ ಬರೆಯಬೇಕೆಂದುಕೊಂಡಿದ್ದನ್ನು ಬರೆದು ತೆಗೆದ; ಮುದುಕನನ್ನು ತಾನು ಮೆಚ್ಚಿಕೊಂಡ ರೀತಿ ಅರಿವಿಗೆ ಬಂದು ಖುಶಿಯಾಯಿತು. ಇವನ ಮುಖಾಂತರವಾದರೂ ತನ್ನ ಭಾವನೆಗಳ ಆಕೃತಿಯಲ್ಲಿ ಸೇರಿಕೊಳ್ಳಲು ಈವರೆಗೂ ನಿರಾಕರಿಸುತ್ತ ಬಂದ ಈ ಅಕರಾಳವಿಕರಾಳ ಮುಂಬಯಿಗೆ ಒಂದು ಆತ್ಮೀಯವಾದ ಆಕಾರ ಬಣ್ಣಗಳು ಮೂಡಬಹುದೇನೋ ಎಂದು ಆಶಿಸಿದ. +ಅಧ್ಯಾಯ ಎರಡು +ಮರುದಿವಸ, ಮುದುಕ ಹೇಳಿದ ಹೊತ್ತಿಗೆ ಸರಿಯಾಗಿ ಅವನ ಮನೆಯನ್ನು ತಲುಪುವ ತವಕದಲ್ಲಿದ್ದ ಕರುಣಾಕರನ್ನನ ಮನಸ್ಸು, ಬಾಂದ್ರಾ ರೇಲ್ವೆ ಸ್ಟೇಶನ್ನಿನಲ್ಲಿ ಇಳಿಯುವ ಹೊತ್ತಿಗೆ ಈವರೆಗೂ ಮೊಳೆತಿರದ ಹಲವು ಹೊಸ ಭಾವನೆಗಳ ತುಮುಲಕ್ಕೆ ಒಳಗಾಯಿತು. ತಾನು ಇದೀಗ ಯೋಜಿಸಿಕೊಂಡ ಭೇಟಿಯಿಂದ ಹಿಡಿದು ಕೇರಳವನ್ನು ಬಿಟ್ಟು ನೌಕರಿಗಾಗಿ ಮುಂಬಯಿಗೇ ಬರಲು ಕಾರಣವಾದ ಸನ್ನಿವೇಶದವರೆಗಿನ ಹಲವು ಸಂಗತಿಗಳ ಕಡೆಗೆ ಮೋರೆ ತಿರುವಿದ ಮನಸ್ಸು ಎಲ್ಲವನ್ನೂ ಕೂಡಲೇ ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ತಾನು ಹೋಗಬೇಕಾದ ಮನೆ ಸಮೀಪಿಸುತ್ತಿದ್ದ ಹಾಗೆ ಅರ್ಥವಾಗದ ಅಧೈರ್ಯ ಮನಸ್ಸನ್ನಾವರಿಸತೊಡಗಿತು. ಮನೆಯ ಇದಿರಿನ ಬಸ್‌ಸ್ಟಾಪಿನಲ್ಲಿ ಇಳಿದ ಬಳಿಕವೇ, ತಾನು ಇಂದು ಭೇಟಿಯಾಗಲಿದ್ದ ಇನ್ನು ಮೂವರು- ಮುದುಕನ ಹೆಂಡತಿ, ಮಗಳು ಹಾಗೂ ಸೀತೆಯ ತಾಯಿಯಾದ ಪಾರ್ವತಿ-ಎಂಥ ಜನವೋ ಎಂಬ ಅನುಮಾನ ತನ್ನ ಅಧೈರ್ಯಕ್ಕೆ ಕಾರಣವಾಗಿರಬೇಕು ಎಂದುಕೊಂಡ. ಇನ್ನೊಬ್ಬರ ವಿಶ್ವನ್ನು ಹೊಗುವ ಈ ಕೆಲಸ ಎಷ್ಟೊಂದು ಕಷ್ಟದ್ದು ಅನ್ನಿಸಿದಾಗ, ಮುದುಕನ ಮನೆಗೆ ಹೋಗುವ ಜಿನ್ನೆಯ ಮೆಟ್ಟಿಲುಗಳನ್ನು ಹತ್ತುವವನ ಹೆಜ್ಜೆಗಳು ತಮ್ಮ ಸದ್ದನ್ನು ಅವನ ಇಚ್ಚೆಯನ್ನು ಮೀರಿ ತಗ್ಗಿಸಿಕೊಂಡಿದ್ದುವು. ಕದದ ಮೇಲಿನ ಕರೆಗಂಟೆಯನ್ನು ಒತ್ತಿದ ಕೈಬೆರಳಿನಲ್ಲಿ ಕೂಡ ನಿನ್ನೆ ದಿನದ ಆತ್ಮವಿಶ್ವಾಸ ಇರಲಿಲ್ಲ. +ಎರಡೂ ಜಡೆಗಳ ತುದಿಗಳಲ್ಲಿ ಬಿಳಿಯ ರಿಬ್ಬನ್ ಕಟ್ಟಿಕೊಂಡು, ದುಂಡಗಿನ ಕಪ್ಪು ಕಣ್ಣುಗಳನ್ನು ಅರಳಿಸಿ, ಹಲ್ಲು ತೋರಿಸಿ ನಗುತ್ತ ಸೀತೆ ಕದ ತೆರೆಯುತ್ತಾಳೆಂದು ಕಲ್ಪಿಸಿಕೊಂಡು ತಾನೂ ಮುಗುಳುನಗುತ್ತ ನಿಂತವನನ್ನು ಇದಿರುಗೊಂಡವಳು ಸೀತೆಯಾಗಿರಲಿಲ್ಲ ; ಬೆಹರಾಮನ ಮಗಳು ಶಿರೀನಳಾಗಿದ್ದಳು. ‘ನೀವು ಕರುಣಾಕರನ್ ಅಲ್ಲವೆ?’ ಎಂದು ಕೇಳುವ ಧಾಟಿಯಲ್ಲಿ ಚುಟುಕಾಗಿ, “ಕರುಣಾಕರನ್?” ಎಂದಳು. ಕರುಣಾಕರನ್ “ಹೌದು”, ಎಂದಕೂಡಲೇ, ‘ನಿನ್ನ ಹಾದಿಯನ್ನೇ ಕಾಯುತ್ತಿದ್ದೆ,’ ಎನ್ನುವವಳ ಹಾಗೆ, “ಬನ್ನಿ,” ಎಂದು ಅವನನ್ನು ಒಳಗೆ ಬಿಟ್ಟು ಕದ ಮುಚ್ಚಿಕೊಂಡಳು. “ಹೀಗೆ ಬನ್ನಿ,” ಎನ್ನುತ್ತ ಅವನು ನಿರೀಕ್ಷಿಸಿದ ಬಾಲ್ಕನಿಯ ಕಡೆಗೆ ಹೋಗದೇ ಅದರಿಂದ ದೂರವಾದ ಹಾಲಿನ ಇನ್ನೊಂದು ಮೂಲೆಗೆ ಕರೆದೊಯ್ದು ಅಲ್ಲಿದ್ದ ಸೋಫಾ ಒಂದರಲ್ಲಿ ಕೂರಲು ಹೇಳಿ ತಾನೂ ಇನ್ನೊಂದರಲ್ಲಿ ಕುಳಿತುಕೊಂಡಳು. +ತೀರ ಅನಿರೀಕ್ಷಿತವಾದ ರೀತಿಯಲ್ಲಿ ನಡೆಯತೊಡಗಿದ ಈ ಭೇಟಿ ತಾನು ಸರಿಯಾದ ಮನೆಗೇ ಬಂದಿರುವೆ ತಾನೇ ಎಂಬುದರ ಬಗೆಗೇ ಸಂಶಯ ಹುಟ್ಟಿಸತೊಡಗಿತು. +“ನಿನ್ನೆ ನಾನು ಇಲ್ಲಿಗೆ ಬಂದಿದ್ದೆ,” ಎಂದ ತಡವರಿಸುತ್ತ. +“ನನಗೆ ಗೊತ್ತಿದೆ. ಅಪ್ಪ ಮಲಗಿದ್ದಾರೆ. ಅವರು ಏಳುವ ಮೊದಲು ನಾನೇ ನಿಮ್ಮ ಹತ್ತಿರ ಮಾತನಾಡುವ ಕೆಲವು ಸಂಗತಿಗಳಿವೆ.” +ಕರುಣಾಕರನ್‌ಗೆ ಅವಳ ಮಾತಿನಲ್ಲಿ ಏನೋ ತಪ್ಪು ತಿಳುವಳಿಕೆಯಿಂದಾಗಿ ಹುಟ್ಟಿದ ಅಸಮಾಧಾನವಿದ್ದಂತೆ ಕಂಡಿತು. ಅದರಿಂದಾಗಿಯೋ ಏನೋ ಮುಂದೆ ಕುಳಿತವಳು ಶಿರೀನಳೇ ಎಂದು ಊಹಿಸಿಕೊಂಡರೂ ಅವಳ ರೂಪದ ವಿವರಗಳನ್ನು ಗ್ರಹಿಸುವುದು ಕಷ್ಟವಾಯಿತು. ಸೀತೆ ಕಣ್ಣಿಗೆ ಬಿದ್ದರಾದರೂ ಮನಸ್ಸಿಗೆ ನೆಮ್ಮದಿಯಾಗುತ್ತಿತ್ತು ಅನ್ನಿಸಿದಾಗ ಅತ್ತಿತ್ತ ಕಣ್ಣುಕಾಯಿಸುವುದು ಸಾಧ್ಯವಾಗಲಿಲ್ಲ. ಅವಳು ಅಲ್ಲೆಲ್ಲೂ ಇದ್ದಂತೆಯೂ ತೋರಲಿಲ್ಲ; ಮನೆಯಲ್ಲಿ ತಮ್ಮಿಬ್ಬರನ್ನು ಬಿಟ್ಟರೆ ಇನ್ನಾರೂ ಇಲ್ಲವೇ ಇಲ್ಲವೇನೋ ಅಥವಾ ಇದ್ದರೂ ನಿದ್ದೆಯ ಸೋಗು ಮಾಡುತ್ತಿದ್ದಾರೇನೋ ಅನ್ನಿಸಿದಾಗ-ಅರೆ! ಮುದುಕ ನಾಳೆಗೆ ಬಾ ಎಂದು ಹೇಳಿ ಈಗ ಎಂತಹದೋ ಆಟ ಆಡಲು ನಿಶ್ಚಯಿಸಿರಬಹುದೇ ಎಂಬ ಗುಮಾನಿಯಿಂದ ನಿನ್ನೆಯಷ್ಟೇ ಆತ್ಮೀಯವಾಗಲು ತೊಡಗಿದೆ ಎಂದು ತೋರಿದ ಮುಂಬಯಿ ಈಗ ಮತ್ತೆ ತನ್ನ ಹಿಡಿತದಿಂದ ಜಾರಿಕೊಳ್ಳುತ್ತಿದೆ ಎಂಬಂತಹ ಭಾಸವಾಗಿ ಮೈಮೇಲೆ ಬೆವರು ಮೂಡಲು ತೊಡಗಿದ ಅನುಭವವಾಯಿತು. ಅವನಿಗೆ ಅರಿವಿಲ್ಲದೇನೆ ಅವನ ಕಣ್ಣು ಮೇಲಿನ ಫ್ಯಾನಿನ ಕಡೆಗೆ ಹೋಯಿತು, ಅದನ್ನು ಕಂಡು ಶಿರೀನ್ ಎದ್ದು ಫ್ಯಾನ್ ಹಾಕಿದಳು: ತುಸು ಹಾಯೆನಿಸಿತು. ಕಣ್ಣ ಇದಿರಿನ ಕಿಡಕಿಯ ಹೊರಗೆ ಇನ್ನೊಂದು ಬಾಲ್ಕನಿ ಇದ್ದಂತೆ ತೋರಿತು. ಭೂತಬಂಗಲೆಗೆ ಸಮ್ಮುಖವಾಗಿ. ಬಾಲ್ಕನಿಯಲ್ಲಿ ಗಿಡಗಳನ್ನು ನೆಟ್ಟಿರಬೇಕು. ರಬ್ಬರು ಗಿಡದ ಹಾಗೆ ತೋರುವ ಎತ್ತರದ ಗಿಡವೊಂದು ದಪ್ಪವಾದ ಹಸಿರು ಎಲೆಗಳಲ್ಲೆಲ್ಲ ಶೇಖರಿಸಿಕೊಂಡಿದ್ದ ತನ್ನ ಆರೋಗ್ಯವನ್ನು ಪ್ರದರ್ಶಿಸುತ್ತ ಕಿಡಕಿಯ ದಡಿಯ ಮೇಲೆ ತಲೆಯೆತ್ತಿ ಕೋಣೆಯೊಳಗಿನವರ ಲಕ್ಷ್ಯ ಸೆಳೆಯುವ ಪ್ರಯತ್ನದಲ್ಲಿ ತೊಡಗಿರುವಂತೆ ಕಂಡಿತು. ಗಿಡಗಳ ಹಸಿರೂ ಕೂಡ ಕೇರಳದವನ ಮನಸ್ಸಿಗೆ ಸಂತೋಷ ಕೊಡುವಂತಹದೇ. ಮುಂದೆ ಕುಳಿತು ಎಲ್ಲಿಂದ ಆರಂಭಿಸಲಿ ಎಂದು ಲೆಕ್ಕ ಹಾಕುತ್ತಿದ್ದ ಹೆಂಗಸಿನ ಪ್ರಶ್ನೆಯನ್ನು ಕೇಳುವ ಧೈರ್ಯ ಕೊನೆಗೂ ಆ ಗಿಡ ಕೊಡುತ್ತಿದ್ದ ಹಾಗೆ ತೋರಿತು. ಸೀತೆ, ತಂಗಿ ಲಲಿತಾರನ್ನು ನೆನಪಿಗೆ ತರುತ್ತಿದ್ದ ಗಿಡ ಬರಬರುತ್ತ ಅವರ ಹಾಗೆಯೆ ಕಾಣಲು ತೊಡಗಿತು. +“ನಿನ್ನೆ ನೀವು ಬಂದದ್ದನ್ನು ಅಪ್ಪ ತಿಳಿಸಿದರು. ಬಂದ ಕಾರಣವನ್ನೂ ವಿವರಿಸಿದರು. ಅವರ ಮನಸ್ಸನ್ನು, ಆರೋಗ್ಯವನ್ನು ಲಕ್ಷ್ಯದಲ್ಲಿರಿಸಿಕೊಂಡಾದರೂ ನೀವು ಅವರನ್ನು ಇಂತಹ ಉಪದ್ವ್ಯಾಪದಲ್ಲಿ ತೊಡಗಿಸುವ ಸಾಹಸ ಮಾಡಬಾರದಿತ್ತು.” +ಅವಳ ದನಿಯಲ್ಲಿ ಇದೆಯೆಂದು ತೋರಿದ ಸೌಮ್ಯ ಗದರಿಕೆಯಿಂದಾಗಿ ಕೂಡಲೇ ಉತ್ತರ ಕೊಡುವ ಧೈರ್ಯವಾಗಲಿಲ್ಲ. ರಬ್ಬರು ಗಿಡವನ್ನು ನೋಡುತ್ತ ಕುಳಿತುಬಿಟ್ಟ, ಕರುಣಾಕರನ್. ಹಾಗೆ ನೋಡಿದರೆ ಅವನ ಬಳಿ ಉತ್ತರವೇ ಇರಲಿಲ್ಲ. ಗಿಡವನ್ನು ನೋಡುತ್ತಿದ್ದಹಾಗೆ-ತಾನು ಮುದುಕನನ್ನು ಯಾವುದರಲ್ಲೋ ತೊಡಗಿಸುವ ಬದಲು ಮುದುಕನೆ ತನ್ನನ್ನು ಯಾವುದಕ್ಕೋ ಸಿದ್ಧಗೊಳಿಸುತ್ತಿರುವಂತೆ ಭಾಸವಾಯಿತು. ಬಾಲ್ಕನಿಯ ದಡಿಯ ಮೇಲೆ ಬಂದು ಕುಳಿತ ಕಾಗೆಯೊಂದು ಕರ್ಕಶವಾಗಿ ಧ್ವನಿ ತೆಗೆದು ಬಂದಹಾಗೆಯೆ ಹಾರಿಹೋಯಿತು. ಕಿಡಕಿಯಿಂದ ಅರ್ಧಂಬರ್ಧಕಾಣುತ್ತಿದ್ದ ಭೂತಬಂಗಲೆಯ ಎರಡನೇ ಮಜಲೆಯ ಕಿಡಕಿಯ ಚೌಕಟ್ಟಿನ ಕೆಳದಡಿಯ ಮೇಲೆ ನಾಯಿಮರಿಯೊಂದು ಗೋಣು ಚೆಲ್ಲಿದ ರೀತಿ ವಿಚಿತ್ರವಾಗಿ ಕಂಡಿತು. +“ನಿಮ್ಮ ಪ್ರಶ್ನೆಗೆ ನನ್ನಲ್ಲಿ ನೇರವಾದ ಉತ್ತರವಿಲ್ಲ. ಯಾಕೆಂದರೆ ನನಗೇ ಇದೆಲ್ಲ ಸರಿಯಾಗಿ ತಿಳಿದದ್ದಲ್ಲ.” +“ಅಂದಮೇಲೆ! ನಾನು ಇಲ್ಲಿಗೆ ಬಂದದ್ದು ಅಪ್ಪ-ಅಮ್ಮರನ್ನು ಜಮ್‌ಶೇದ್‌ಪೂರಕ್ಕೆ ಕರೆದೊಯ್ಯಲು. ನಿನ್ನೆ ನೀವು ಬಂದುಹೋದಾಗಿನಿಂದ ಅಪ್ಪ ತುಂಬ ಬೇಚೈನುಗೊಂಡಿದ್ದಾರೆ. ರಾತ್ರಿಯಿಡೀ ನಿದ್ದೆ ಕೂಡ ಸರಿಯಾಗಿ ಮಾಡಿದಂತಿಲ್ಲ- ಕಾಂಪೋಜ್ ಗುಳಿಗೆ ತೆಗೆದುಕೊಂಡರೂ. ಮಧ್ಯಾಹ್ನದ ಊಟವಾದಮೇಲೆ ಅಡ್ಡವಾದವರಿಗೆ ಈಗಷ್ಟೇ ನಿದ್ದೆಹತ್ತಿರಬೇಕು. ದಯಮಾಡಿ ನನ್ನನ್ನು ತಪ್ಪು ತಿಳಿಯಬೇಡಿ. ಅಪ್ಪನ ಆರೋಗ್ಯದ ಬಗ್ಗೆ ಕಾಳಜಿಯಾಗುತ್ತದೆ, ಅಷ್ಟೆ.” +ಅಪ್ಪ ಏಳುವ ಮೊದಲೇ ನೀನು ಇಲ್ಲಿಂದ ಹೋಗುವುದು ಒಳ್ಳೆಯದೆಂದು ಸೂಚಿಸುತ್ತಿರಬಹುದೇ? ಇವಳಿಗೆ ಹೀಗೆಲ್ಲ ಹೇಳಲು ಹೇಳಿ ಮುದುಕ ತಾನೇ ಮಲಗಿರುವ ನಟನೆ ಮಾಡುತ್ತಿರಬಹುದೇ? ಈ ಗುಮಾನಿಯಲ್ಲಿ ಕೂಡಲೇ ಹೊರಟುಹೋಗುವಂತಹ ಕ್ರಿಯೆಗೆ ಕಾರಣವಾಗುವ ಬಲ ಎಳ್ಳಷ್ಟೂ ಇರಲಿಲ್ಲ. ನಿನ್ನೆಯ ಭೇಟಿಯಲ್ಲಿ ಮುದುಕ ಮೂಡಿಸಿದ ಪ್ರತಿಮೆಯ ಬೆಳಕು ಅಂತಃಕರಣವನ್ನು ವ್ಯಾಪಿಸಿಬಿಟ್ಟಿತು. +“ಅವರೇ ಇದರಲ್ಲಿ ತೊಡಗಿಸಿಕೊಳ್ಳಬೇಕಾಗಿಲ್ಲ. ನೀವು ಹಾಗೂ ನಿಮ್ಮ ಕೆಲಸದ ಹೆಣ್ಣುಮಗಳು ಪಾರ್ವತಿ ನಿಮನಿಮಗೆ ಗೊತ್ತಿದ್ದ ಮಾಹಿತಿ ಕೊಟ್ಟರೂ ಸಾಕು.” +“ಆ ಮಾಹಿತಿಯಿಂದ ಈಗ ಆಗಬೇಕಾದ್ದೇನಿದೆ? ನಿಜವಾಗಿ ನೋಡಿದರೆ ಪೋಲೀಸು ಖಾತೆಯವರಿಗೆ ಸೇರಿದ ಕೆಲಸವಿದು. ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು?” +“ಮನುಷ್ಯನೊಬ್ಬನ ಖೂನಿಯಲ್ಲವೇ ಇದು?” +“ನಿಮ್ಮ ಮಾತಿನಲ್ಲಿಯ-ಇನ್ನೊಬ್ಬರನ್ನು ದೂರುವ-ಧ್ವನಿಯ ಬಗ್ಗೆ ನನ್ನ ಆಕ್ಷೇಪವಿದೆ. ನಿನ್ನೆ ಅಪ್ಪನ ಮುಂದೆ ಇಂಥ ಮಾತನ್ನೇ ಆಡಿರಬೇಕು, ಅನ್ನಿಸುತ್ತದೆ. ನಮಗೆ ಭಾವನೆಗಳಿಲ್ಲವೆಂದೆ? ಪಾರ್ವತಿ ಇಂಥ ಸಂಗತಿಗಳ ಬಗ್ಗೆ ಆಡಿಕೊಳ್ಳುವಾಗ ಪ್ರಕಟಿಸುವ ಧೈರ್ಯ ನಮಗೇಕೆ ಇಲ್ಲದೇ ಹೋಯಿತು? ಈ ಸಾವು ಇದ್ದಕ್ಕಿದ್ದ ಹಾಗೆ ಎಚ್ಚರಿಸಬಹುದಾದ ರಾಜಕೀಯ ಶಕ್ತಿಗಳಿಗೆ ನಾನು ಹೆದರಿದ್ದೇನೆ.” +“ನಾನು ಕೂಡಿಸುವ ಮಾಹಿತಿಯಲ್ಲಿ ಯಾವ ಹೆಸರನ್ನೂ ಸೇರಿಸುವುದಿಲ್ಲ, ಯಾರೊಬ್ಬರ ಹೆಸರೂ ನನಗೆ ಬೇಕಾಗಿಲ್ಲ. ನೀವೂ ಹೇಳುವುದು ಬೇಡ.” +“ನಂಬುವ ಮಾತೆ? ನಿನ್ನೆ ನೀವು ನಮ್ಮ ಮನೆಯನ್ನೇ ಹುಡುಕಿಕೊಂಡು ಬಂದಂತೆ ಬಂದದ್ದು ಕೇವಲ ಆಕಸ್ಮಿಕವೆಂದು ವಿವರಿಸಿದಿರಂತೆ. ನಿಮ್ಮನ್ನು ಇಲ್ಲಿಗೆ ಕಳುಹಿಸಿದ ನಿಮ್ಮ ಪತ್ರಿಕೆಯ ಸಂಪಾದಕನನ್ನು ನನ್ನಪ್ಪ ಚೆನ್ನಾಗಿ ಬಲ್ಲ. ನೇರವಾಗಿ ಕೇಳಿ ಸಿಕ್ಕಿರದ ಮಾಹಿತಿಯನ್ನು ನಿಮ್ಮ ಮುಖಾಂತರ ಪಡೆಯುವ ಹಿಕ್ಮತಿಯಿದು.” +“ಇಲ್ಲ ಇಲ್ಲ,” ಎಂದ ಕರುಣಾಕರನ್, ‘ನನ್ನನ್ನು ನಂಬಿ’ ಎನ್ನುವ ಧಾಟಿಯಲ್ಲಿ. “ನನಗೂ ಸಂಪಾದಕನಿಗೂ ಯಾವ ಮಾತುಕತೆಯೂ ನಡೆದಿಲ್ಲ. ಬಸ್ಸಿನಿಂದ ಇಳಿದದ್ದೇ ಮುಂದೆ ಕಂಡ ಮನೆಯೆಂದು ಇಲ್ಲಿ ಬಂದೆನೇ ಹೊರತು ನಿಮ್ಮ ಅಪ್ಪನನ್ನು ಹುಡುಕಿಕೊಂಡು ಬಂದವನಲ್ಲ.” +ಕರುಣಾಕರನ್ ತುಂಬ ಕಳವಳಕ್ಕೊಳಗಾದ. ತಾನು ಸಹಜಸ್ಪೂರ್ತಿಯಿಂದ ಹೊರಟುಬಂದ ಕಾರ್ಯದ ಹೇತು ಈ ಹೆಣ್ಣಿನ ಕಣ್ಣುಗಳಲ್ಲಿ ಪಡೆಯುತ್ತಿದ್ದ ಆಕೃತಿ ಅವನನ್ನು ಧೃತಿಗೆಡಿಸಿತು. ಇವಳು ತನ್ನನ್ನು ನಂಬುತ್ತಿಲ್ಲವಲ್ಲ ಎಂಬ ಸಂಗತಿ ಅವನನ್ನು ಗಾಸಿಗೊಳಿಸುತ್ತಿದ್ದಹಾಗೆ, ತನ್ನ ಶಕ್ತಿಗೆ ಮೀರಿದ ಕೆಲಸದಲ್ಲಿ ತಾನು ತೊಡಗಿಸಿಕೊಳ್ಳಲು ಹೊರಟಿರುವೆ ಮಾತ್ರವಲ್ಲ, ತನ್ನ ಊಹೆಗೆ ಮೀರಿದ ವರ್ಚಸ್ಸಿನ ಗೃಹಸ್ಥನ ಮನೆಗೆ ತಾನು ಬಂದಿದ್ದೇನೆ ಎಂಬ ಅರಿವೂ ಮೂಡತೊಡಗಿತು. ಮಾತನಾಡಿದರೆ ಧ್ವನಿ ನಡುಗಬಹುದೆಂಬ ಭೀತಿಯಿಂದ ಅವುಡು ಕಚ್ಚಿಹಿಡಿದ. ಕೊರಳ ಸೆರೆಗಳು ಉಬ್ಬಿಕೊಂಡವು. ಫ್ಯಾನಿನ ಕೆಳಗೇ ಕೂತಿರುವಾಗಲೂ ಕಾಲರ್ ಸುತ್ತಲಿನ ಕೊರಳ ಭಾಗದಲ್ಲಿ ಬೆವರ ಹನಿ ಮೂಡುತ್ತಿರುವ ಭಾಸವಾಯಿತು. “ಕುಡಿಯಲು ನೀರು ಬೇಕು,” ಎನ್ನುವಷ್ಟರಲ್ಲಿ ಕದದ ಕರೆಗಂಟೆ ಎಡೆಬಿಡದೆ ಕಿರುಚಿತು. +“ಇದು ನನ್ನ ಮಗನ ಪ್ರತಾಪ! ಅಪ್ಪನಿಗೆ ನಿದ್ದೆ ಹತ್ತಿರಬೇಕೆಂದು ಕೊಂಡು ಮಕ್ಕಳನ್ನೆಲ್ಲ ಅಮ್ಮನ ಜೊತೆಗೆ ನೆರೆಮನೆಯವರಲ್ಲಿ ಕಳಿಸಿದ್ದೆ. ಅಪ್ಪ ಈಗ ನಿದ್ದೆ ಮಾಡಿದಹಾಗೆಯೆ! ಅಪ್ಪ ಎದ್ದುಬಂದರೆ ದಯಮಾಡಿ ಅವರ ಭಾವನೆಗಳ ಮೇಲೆ ಪರಿಣಾಮ ಮಾಡುವಂತಹದನ್ನು ಏನೂ ಮಾತನಾಡಲು ಹೋಗಬೇಡಿ.” +ಇಷ್ಟು ಹೇಳಿ ಶಿರೀನ್ ಕದ ತೆರೆಯಲು ಹೊರಟುಹೋದಳು. ಕದ ತೆರೆದ ಕೂಡಲೇ ಒಳಗೆ ಓಡಿಬಂದ ಮೂರೂ ಮಕ್ಕಳ ಹಿಂಡು ನೇರವಾಗಿ ದಿವಾಣಖಾನೆಗೆ ನುಗ್ಗಿ, ಕರುಣಾಕರನ್ನನನ್ನ ನೋಡಿ ಅವನನ್ನು ಸುತ್ತುಗಟ್ಟಿ ನಿಂತು ಪ್ರಶ್ನೆಗಳ ಪಟಾಕಿ ಸರ ಹಚ್ಚಿಬಿಟ್ಟರು: ಹೆಸರೇನು? ಎಲ್ಲಿಂದ ಬಂದಿರಿ? ಯಾಕೆ ಬಂದಿರಿ? ಈ ಮಕ್ಕಳ ಜತೆಗೇ ಒಳಗೆ ಬಂದಂತಿದ್ದ ಸೀತೆಯೇ ಚಿಕ್ಕ ಟ್ರೇದಲ್ಲಿ ನೀರಿನ ಗ್ಲಾಸನ್ನು ತಂದಳು. ಅವಳನ್ನು ಕಂಡಕೂಡಲೇ ತನ್ನ ಸುತ್ತಲಿನ ಎಲ್ಲದಕ್ಕೆ-ಕೋಣೆಯ ಬಾಗಿಲು, ಕಿಡಕಿಗಳಿಗೆ ಹಾಕಿದ ಬಣ್ಣದ ಪರದೆಗಳಿಗೆ, ಫರ್ನಿಚರ್‌ನ ಸಜ್ಜಿಕೆಗೆ, ಇದೀಗ ನಡೆಯತೊಡಗಿದ ವಿದ್ಯಮಾನಗಳಿಗೆ ದೂರದ ಕೇರಳದ ಚಿಕ್ಕ ಹಳ್ಳಿಯೊಂದರಲ್ಲಿ ಬೆಳೆದ ತನ್ನಂಥವನ ಮನಸ್ಸಿಗೂ ಅರ್ಥವಾಗಬಹುದಾದಂಥ ರೂಪ ಬರತೊಡಗಿದಾಗ ಮನಸ್ಸಿಗೆ ನೆಮ್ಮದಿ ಅನ್ನಿಸಿತು. ಸೀತೆಯ ಕೈಯಿಂದ ಗ್ಲಾಸನ್ನು ಪಡೆದು ಒಂದೇ ಗುಟುಕಿಗೆ ಎಂಬಂತೆ ಅದನ್ನು ಖಾಲಿಮಾಡಿ ಸೀತೆಗೆ ವಾಪಸ್ಸು ಕೊಟ್ಟ. ಸೀತೆಯ ಹಿಂದೆಯೇ, ಈವರೆಗೂ ಮೋರೆ ತೋರಿಸಿರದ ಮುದುಕಿಯೂ ಈಗ ದಿವಾಣಖಾನೆಗೆ ಬಂದು, ‘ನಿನ್ನೆ ಬಂದು ನನ್ನ ಗಂಡನ ನಿದ್ದೆ ಹಾಳುಮಾಡಿದವನು ನೀನೇಯೋ,’ ಎನ್ನುವಹಾಗೆ ಅವನತ್ತ ಒಮ್ಮೆ ನೊಡಿ ಮುಗುಳುನಕ್ಕು, “ಇವರು ಈಗ ಬರುತ್ತಾರೆ, ಕೂತಿರಿ.” ಎಂದು ಮಕ್ಕಳನ್ನು ಒಳಗೆ ಕರೆದೊಯ್ದಳು. ಮುದುಕಿ ಮುಗುಳುನಕ್ಕದ್ದನ್ನು ಕಂಡಾಗ ಆಗಿನಿಂದಲೂ ತಡೆ ಹಿಡಿದ ಕಂಬನಿ ಕೊನೆಗೂ ಕಣ್ಣುಗಳನ್ನು ಒದ್ದೆಮಾಡಿತ್ತು. ಜೀನ್ಸ್‌ನ ಕಿಸೆಯಿಂದ ಕರ್ಚೀಫನ್ನು ಹೊರತೆಗೆದು ಕಣ್ಣೊರೆಸಿಕೊಳ್ಳುವಾಗ, ಮುದುಕನ ಹೆಂಡತಿ ಇರಬೇಕು ಎಂದುಕೊಂಡ. ಸೀತೆಯ ತಾಯಿ ಪಾರ್ವತಿಯೊಬ್ಬಳು ಕಣ್ಣಿಗೆ ಬೀಳುವುದುಳಿಯಿತು ಎಂದೂ ಹೊಳೆಯಿತು. +ಶಿರೀನ್ ಚಹದ ಟ್ರೇ ಹೊತ್ತು ಬಂದಳು. “ಅಪ್ಪ ಇದೀಗ ಎದ್ದಿದ್ದಾರೆ. ಮೋರೆ ತೊಳೆದುಕೊಳ್ಳಲು ಹೋಗಿದ್ದಾರೆ. ನಿನ್ನೆಯ ಮೊದಲ ಭೇಟಿಯಲ್ಲೇ ನಿಮ್ಮನ್ನು ತುಂಬ ಹಚ್ಚಿಕೊಂಡಿದ್ದಾರೆ. ಆಗ ಹೇಳಿದ್ದು ಮಾತ್ರ ನೆನಪಿರಲಿ. ಪಾರ್ವತಿಗೂ ಹೇಳಿಕಳಿಸಿದ್ದೇವೆ. ಈಗ ಬರಬಹುದು,” ಎನ್ನುತ್ತ ಕಿಟ್ಲಿಯಿಂದ ಮೂರು ಕಪ್ಪುಗಳಿಗೆ ಚಹ ಸುರಿದು ಒಂದನ್ನು ಕರುಣಾಕರನ್ನನ ಕೈಗೆ ಕೊಟ್ಟಳು. “ಸಕ್ಕರೆ ಹಾಕಿಲ್ಲ. ನೀವೇ ಬೇಕಷ್ಟನ್ನು ಹಾಕಿಕೊಳ್ಳಿ. ನಾನು ಅಪ್ಪ ಸಕ್ಕರೆ ತಕ್ಕೊಳ್ಳುವುದಿಲ್ಲ,” ಎಂದು ಸಕ್ಕರೆಯ ತಟ್ಟೆಯನ್ನು ಟ್ರೇದಲ್ಲೇ ಅವನಿಗೆ ಹತ್ತಿರವಾಗುವ ಹಾಗೆ ಸರಿಸಿ ಇಟ್ಟಳು. ತಾನೂ ಒಂದು ಕಪ್ಪನ್ನು ಕೈಗೆತ್ತಿಕೊಂಡು ಅವನ ಇದಿರಿನ ಸೋಫಾದಲ್ಲಿ ಕುಳಿತುಕೊಂಡಳು. ಇವಳ ಸಾನಿಧ್ಯದಲ್ಲಿ ತನ್ನ ಭಾವನೆಗಳ ಆಕಾರವೇ ಬದಲಾಗುತ್ತಿರುವ ಭಯವಾಯಿತು, ಕರುಣಾಕರನ್‌ಗೆ. ಪರಿಚಯವಿಲ್ಲದ ಹೆಂಗಸಿನ ಇದಿರು ಸಿಗರೇಟು ಸೇದುವ ಧೈರ್ಯವಾಗಲಿಲ್ಲ. ಒಳಗೊಳಗೆ ಶೇಖರಿಸಹತ್ತಿದ ಆತಂಕದಿಂದಾಗಿ ಕಪ್ಪು ಹಿಡಿದ ಕೈ ನಡುಗಬಹುದೆ ಎಂಬ ಅನುಮಾನ ಬಂದು ಕಪ್ಪನ್ನು ಮೆಲ್ಲಗೆ ಟೀಪಾಯಿಯ ಮೇಲೆ ಇರಿಸಿದ, ಚಹ ತುಸು ತಣಿಯಲಿ ಎಂಬ ಧರ್ತಿಯಲ್ಲಿ. ಅದಾಗ ಹಾಲಿಗೆ ಬರಹತ್ತಿದ ಮುದುಕನ ಹೆಜ್ಜೆಗಳ ಸದ್ದು ಕೇಳಿಸಿದಾಗ ಸುಖವೆನಿಸತೊಡಗಿತು. ದೇವರೇ, ಅವನು ನಿನ್ನೆ ಕಂಡ ಮುದುಕನೇ ಆಗಿರಲಿ ಎಂಬ ತನ್ನ ವಿಚಿತ್ರ ಪ್ರಾರ್ಥನೆಯಿಂದ ತಾನೇ ಮುಜುಗರಪಟ್ಟ. +“ಬಂದು ಬಹಳ ಹೊತ್ತಾಯಿತೆ? ಚಹ ತೆಗೆದುಕೊಳ್ಳಿ,” ಎಂದು ಯಾವ ಸುಳ್ಳು ಆಡಂಬರವಿಲ್ಲದೆ ತನ್ನನ್ನು ಬರಮಾಡಿಕೊಂಡ ಆತ್ಮೀಯತೆಯಿಂದ ಕರುಣಾಕರನ್ನನಿಗೆ ಒಳಗೊಳಗೇ ಏನೋ ದ್ರವಿಸಹತ್ತಿದ ಅನಿಸಿಕೆ. ಚಹದ ಕಪ್ಪನ್ನು ಕೈಗೆ ಎತ್ತಿಕೊಳ್ಳುವಾಗ ಸದ್ದಾದರೂ ಎದೆಗುಂದಲಿಲ್ಲ. ಮುದುಕನನ್ನು ಮನಸ್ಸಿನಲ್ಲೇ ಕೃತಜ್ಞತೆಯಿಂದ ವಂದಿಸುತ್ತ, ಅಪ್ಪ-ಮಗಳು ಇಬ್ಬರ ಕಡೆಗೂ ಒಂದೇ ಕಾಲಕ್ಕೆ ನೋಡುತ್ತ ಮುಗುಳುನಕ್ಕ. ಶಿರೀನ್ ತೊಟ್ಟ ತಿಳಿನೀಲಿ ಬಣ್ಣದ ಡ್ರೆಸ್ಸು ಮೊದಲ ಬಾರಿಗೇ ಕಣ್ಣಿಗೆ ಬಿತ್ತು. ಕೊರಳಲ್ಲಿ ಧರಿಸಿದ ಒಂದೆಳೆಯ ಸಣ್ಣ ಮುತ್ತುಗಳ ಸರ ಕೂಡ. ಅವಳು ತುಂಬ ಲಾವಣ್ಯವತಿ ಎಂಬುದೂ ಇದೀಗ ಲಕ್ಷ್ಯಕ್ಕೆ ಬಂದವನಹಾಗೆ ಒಳಗೊಳಗೇ ಲಜ್ಜಿತನಾಗುವಾಗಲೂ ಸಂತೋಷಪಟ್ಟ. +“ಶಿರೀನ್ ಹೇಳಿರಬೇಕು: ನೀವು ನಿನ್ನೆಯ ಭೇಟಿಯಲ್ಲಿ ಬಹಳ ಏನೂ ಹೇಳಿರದಿದ್ದರೂ ಕೇಳಿದ ಕೆಲವೇ ಪ್ರಶ್ನೆಗಳೂ ನನ್ನನ್ನು ತುಂಬ ಬೇಚೈನುಗೊಳಿಸಿದುವು.” +ಅರವತ್ತು ವರ್ಷಗಳ ವಯೋವೃದ್ಧ ಹಿರಿಯನಿಂದ ನಿರೀಕ್ಷಿಸಿರದ ಈ ಮಾತುಗಳಿಗೆ ಹೇಗೆ ಪ್ರತಿಕ್ರಯಿಸಬೇಕೊ, ಕರುಣಾಕರನ್‌ಗೆ ತಿಳಿಯಲಿಲ್ಲ. ಮುದುಕ ತುಂಬ ಉತ್ತೇಜಿತನಾಗಿರುವಂತೆ ಕಂಡ. ತನ್ನ ಬಾಯಿಂದ ಹೊರಟ ಮಾತುಗಳಿಂದ ಸ್ವತಃ ಬೆಹರಾಮನಿಗೂ ಆಶ್ಚರ್ಯವಾಗಿತ್ತು. ಬೆಹರಾಮನಿಗೆ ಬಹಳ ಹೇಳುವುದಿತ್ತು. ಹಾಸಿಗೆಯಲ್ಲಿ ಅಡ್ಡವಾದಾಗ ಏನೆಲ್ಲ ಮಾತನಾಡಬೇಕೆಂದು ಯೋಜಿಸಿಕೊಂಡಿದ್ದ. ಅವುಗಳಲ್ಲಿಯ ಹಲವು ಮಾತುಗಳು,‘ನೋಡಿ, ಕರುಣಾಕರನ್, ನಿನ್ನೆ ನೀವು ಕೇಳಿದ ಪ್ರಶ್ನೆಗಳೇನಿವೆ: ಪ್ರತಿಯೊಬ್ಬ ಮನುಷ್ಯನ ಅಂತಃಕರಣದಲ್ಲಿ ಏಳುತ್ತಿರುವಂಥವುಗಳೇ. ಅವುಗಳಿಗೆ ಕಿವಿಗೊಡುವ ಧೈರ್ಯ ಮಾತ್ರ ನಮಗೆ ವ್ಯಕ್ತಿಗತವಾಗಿ ಇಲ್ಲ,” ಎನ್ನುವಂಥ ಹೇಳಿಕೆಯ ಸುತ್ತಲೂ ಹುಟ್ಟಿಕೊಂಡವುಗಳಾಗಿದ್ದರೆ ಇನ್ನು ಕೆಲವು-‘ಇನ್ನೊಬ್ಬನನ್ನು ಕೊಲ್ಲುವುದು ಯಾಕೆ ತಪ್ಪು? ಎಂಬ ಪ್ರಶ್ನೆಗೆ ಅದು ಕಾಯದೆಗೆ ವಿರುದ್ಧವಾದದ್ದು, ಪೋಲೀಸರು ಹಿಡಿಯುತ್ತಾರೆ ಎಂದು ಉತ್ತರ ಕೊಡಬೇಕಾದ ಹಾಸ್ಯಾಸ್ಪದ ಸ್ಥಿತಿಗೆ ಬಂದಿದ್ದೇವೆ ಅಲ್ಲವೆ?’ ಎಂಬಂಥ ಪ್ರಶ್ನೆಯ ಸುತ್ತಲೂ ಹುಟ್ಟಿಕೊಂಡವುಗಳಾಗಿದ್ದುವು ಆದರೆ ಇಂಥ ಯಾವ ಮಾತನ್ನೂ ಬೆಹರಾಮ್ ಆಡಲಿಲ್ಲ. ತಾನು ತನ್ನಷ್ಟಕ್ಕೇ ಆಡಿಕೊಂಡಾಗ ಅತ್ಯಂತ ಸಹಜವಾಗಿ ತೋರಿದ ಮಾತುಗಳು ಇನ್ನೊಬ್ಬನಿಗೆ ತಿಳಿಸಬೇಕು ಎನ್ನುವ ಗಳಿಗೆಯಲ್ಲೇ ತೀರ ನಾಟಕೀಯವಾಗಿ ತೋರಿದುವು. ಕೊನೆಗೆ, ‘ನಿಜ ಹೇಳಲೇ: ನಿನ್ನೆ ನೀವು ನಮ್ಮ ಮನೆಗೆ ಬಂದದ್ದೇ ನನಗೆ ತುಂಬ ತುಂಬ ಖುಶಿ ಕೊಟ್ಟಿದೆ ನೋಡಿ,’ ಎನ್ನುವಂತಹ ಮಾತೂ ಕೂಡ ಶಿರೀನಳ ಉಪಸ್ಥಿತಿಯಲ್ಲಿ ಹೊರಗೆ ಬರುವುದು ಕಷ್ಟವಾಯಿತು. ಶಿರೀನಳ ಉಪಸ್ಥಿತಿಯಿಂದಾಗಿ ತನ್ನ ಭಾವನೆಗಳ ಆಕೃತಿಯೇ ಡೊಂಕಾಗುತ್ತಿದೆ ಎನ್ನುವಂಥ ಅನ್ನಿಸಿಕೆ ಮಾತಿಗೆ ಅಡ್ಡಬಂದಿತು. +“ನಿಜ ಹೇಳಿ ಕರುಣಾಕರನ್, ನೀವೇ ಮತ್ತೆಮತ್ತೆ ಇದು ಮನುಷ್ಯನೊಬ್ಬನ ಸಾವಲ್ಲವೆ? ಎಂದು ಕೆದಕಿ ಕೇಳಿದ ಪ್ರಶ್ನೆಯ ಹಿಂದಿನ ಆಸ್ಥೆ ಕೇವಲ ಪತ್ರಿಕೋದ್ಯಮಿಯೊಬ್ಬನ ಆಸ್ಥೆಯಲ್ಲ ತಾನೆ?” +ಮೂವರೂ ಒಮ್ಮೆಗೆಲೇ ಧರಿಸಿಬಿಟ್ಟ ಮೌನವನ್ನು ಒಡೆದು ಬಂದ, ಬೆಹರಾಮ್‌ನಿಂದ ಕೊನೆಗೂ ಆಡಲು ಸಾಧ್ಯವಾದ, ಮಾತು ಮೂವರನ್ನೂ ಎಚ್ಚರಿಸಿತು. ತನ್ನ ಪ್ರಶ್ನೆ ತಳೆದ ರೂಪದಂತೆ ಅದು ಪ್ರಕಟಗೊಂಡ ರಭಸದಿಂದ ಬೆಹರಾಮನಿಗೆ ಮುಜುಗರವಾಯಿತು. ಕರುಣಾಕರನ್ ತಬ್ಬಿಬ್ಬುಗೊಂಡು ಚಹ ಕುಡಿದು ಖಾಲಿಯಾದ ಕಪ್ಪನ್ನು ಕೆಳಗಿಡುವಾಗ ಅತ್ತಿತ್ತ ನೋಡುವ ಧೈರ್ಯವಾಗಲಿಲ್ಲ. +“ಆಣೆ ಮಾಡಿ ಹೇಳುತ್ತೇನೆ, ಸರ್! ನನಗೂ ನನ್ನ ಸಂಪಾದಕನಿಗೂ ಯಾವ ಮಾತುಕತೆಯೂ ಆಗಿಲ್ಲ.” +ಶಿರೀನಳ ಮೋರೆಯಮೇಲಿನ ಅಪನಂಬಿಕೆಯ ಛಾಯೆ ಕಂಡು ಬೆಹರಾಮ್ ‘ಅದು ಬೇಡ,’ ಎನ್ನುವಹಾಗೆ ಅವಳ ಕಡೆಗೊಮ್ಮೆ ನೋಡಿ: +“ನಾನು ಹೇಳಿದ್ದು ಅದಲ್ಲ, ಕರುಣಾಕರನ್. ನನಗೆ ತಿಳಿಯಬೇಕಾದದ್ದು ಈ ಕೊಲೆಯಲ್ಲಿ ನಿಮಗಿರುವ ಆಸ್ಥೆಯ ಸ್ವರೂಪವನ್ನು. ಅದು ನಿಮ್ಮನ್ನು ಇಷ್ಟೊಂದು ಗಾಢವಾಗಿ ತಟ್ಟಿದ ಕಾರಣ ತಿಳಿಯುವ ಆಸೆಯಾಗಿದೆ. ನಿಮ್ಮನ್ನೇ ಮರುಪರೀಕ್ಷೆಗೆ ಒಡ್ಡುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ನಾನು ನಿಮ್ಮನ್ನು ಕೂಡಲೇ ಮೆಚ್ಚಿಕೊಂಡದ್ದು ನಿಮಗೆ ಇದರಲ್ಲಿರುವ ಆಸ್ಥೆಯಿಂದಾಗಿ ಎಂಬುದನ್ನು ದಯಮಾಡಿ ನಂಬಿ.” +“ನನಗೆ ಗೊತ್ತಿಲ್ಲ ಸರ್,” ಕರುಣಾಕರನ್ ಸಂಪೂರ್ಣವಾಗಿ ಗೊಂದಲಿಸಿದ. ಒಂದು ಬಗೆಯ ಅಳುಬುರುಕುತನ ಅವನ ಮಾತಿನಲ್ಲಿ ಸೇರಿಕೊಂಡಿತು. ಇನ್ನೂ ಹೆಚ್ಚು ಒತ್ತಾಯಪಡಿಸಿದರೆ ಅತ್ತೇಬಿಡುವನೇನೋ ಎಂದು ಬೆಹರಾಮನಿಗೆ ಭಯವಾಯಿತು. +“ನಿಮ್ಮ ನಿದ್ದೆಗೇಡಿಗೆ ಕಾರಣವಾಗಿದೆಯೆಂದು ಹೇಳಿದ ಆ ಸಹಿಯಿಲ್ಲದ ಪತ್ರ ನೋಡಬಹುದೇ?” ತಾನು ಕೇಳಿದ ಪ್ರಶ್ನೆ ಬಯಸಿದ್ದಕ್ಕಿಂತ ಹೆಚ್ಚು ನಿಷ್ಠುರವಾಯಿತು ಎನ್ನುವುದು ಸ್ವತಃ ಅವಳ ಲಕ್ಷ್ಯಕ್ಕೇ ಬಂದಾಗ ತನ್ನ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡಿದಳು. +ಕರುಣಾಕರನ್ ನೀರಡಿಸಿ ಗ್ಲಾಸು ನೀರನ್ನು ಕೇಳಬೇಕು ಎನ್ನುವಷ್ಟರಲ್ಲಿ ಈ ಮೂವರನ್ನು, ಅವರು ತಾವು ಅರಿಯದೇನೆ ಸಿಕ್ಕಿಸಿಕೊಂಡ ವಿಚಿತ್ರ ಸನ್ನಿವೇಶದಿಂದ ಬಿಡಿಸಲೋ ಎಂಬಂತೆ ಆಗ ಒಮ್ಮೆ ಮಾತ್ರ ಮೋರೆ ತೋರಿಸಿ ಹೋದ ಮುದುಕಿ ಟ್ರಾಲಿಯೊಂದರ ಮೇಲೆ ಚಹ-ತಿಂಡಿಗಳ ಸರಂಜಾಮನ್ನು ಹೊತ್ತು ಬಂದಳು. ಟ್ರಾಲಿಯಲ್ಲಿ ನೀರು ತುಂಬಿದ ಗ್ಲಾಸುಗಳೂ ಇದ್ದುವು. ಅವುಗಳನ್ನೇ ಮೊದಲು ಎತ್ತಿ ಟೀಪಾಯಿಯ ಮೇಲೆ ಇಟ್ಟಾಗ ಕರುಣಾಕರನ್ ಎಲ್ಲ ಸಂಕೋಚವನ್ನೂ ಮರೆತು ಒಂದುಗ್ಲಾಸನ್ನು ಎತ್ತಿಕೊಂಡು ನೀರಿನ ಗುಟುಕೊಂದನ್ನು ಹೀರಿದ್ದೇ, ರಿಫ್ರಿಜರೇಟರಿನಲ್ಲಿಟ್ಟು ತಂಪುಗೊಳಿಸಿದ ನೀರಿನಿಂದ ಜೀವಕ್ಕೆ ಹಿತವೆನಿಸಿತು. ಅವನಿಗೆ ಅರಿವಿಲ್ಲದೇನೆ ಮನಸ್ಸು ದೊಡ್ಡ ನಿರ್ಧಾರಕ್ಕೆ ಸಿದ್ಧವಾಗತೊಡಗಿತ್ತು. +ಮುದುಕಿ, ತನ್ನ ಸಹಾಯಕ್ಕೆ ಬರುವ ಹವಣಿಕೆಯಲ್ಲಿದ್ದ ಮಗಳಿಗೆ ಬೇಡವೆನ್ನುವ ಸನ್ನೆ ಮಾಡಿದಳು. ಚಹ ಕುಡಿದು ಖಾಲಿಯಾದ ಕಪ್ಪುಬಶಿಗಳನ್ನು ಟೀಪಾಯಿಯಿಂದ ಮೊದಲು ಎತ್ತಿ ಟ್ರಾಲಿಯ ತೀರ ಕೆಳಗಿನ ಅಂತಸ್ತಿನ ಮೇಲೆ ಇರಿಸಿದಳು. ಆಮೇಲೆ ಟ್ರಾಲಿಯೊಳಗಿನ ಸಾಮಾನನ್ನು ಒಂದೊಂದೇ ಎತ್ತಿ ಟೀಪಾಯಿಗೆ ಸಾಗಿಸತೊಡಗಿದಳು. ಅವಳ ಈ ಚಟುವಟಿಕೆಯೊಳಗಿನ ಚಾಕಚಕ್ಯತೆಯನ್ನು ಉಳಿದ ಮೂವರೂ ಕೌತುಕ ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟರು. ಹಾಲಿನಲ್ಲಿ ನೆಲೆಸಿದ ಮೌನ ಪ್ರತಿಯೊಬ್ಬರ ಲಕ್ಷ್ಯಕ್ಕೆ ಬಂದು ಕ್ಷಣಹೊತ್ತು ಅವರ ಮುಜುಗರಕ್ಕೆ ಕಾರಣವಾಗುತ್ತಿರುವಾಗಲೂ ಅವರು ಅದನ್ನೇ ಬಯಸಿದಂತಿತ್ತು. ಒಂದು ಪ್ಲೇಟಿನಲ್ಲಿ ಚೆಂದವಾಗಿ ಕತ್ತರಿಸಿ ಓರಣವಾಗಿ ಇರಿಸಿದ ಕೇಕ್‌ನ ಹೋಳುಗಳು; ಇನ್ನೊಂದರಲ್ಲಿ ಹಾಗೆಯೆ ಒಪ್ಪವಾಗಿರಿಸಿದ ಬರ್ಫಿಯ ಚಚ್ಚೌಕು ತುಂಡುಗಳು; ಮಗದೊಂದರಲ್ಲಿ ಮಸಾಲೆ ಹಚ್ಚಿದ ಗೇರುಬೀಜ, ಬಾಳೆಕಾಯಿಯ ಬಾಳಕಗಳು: ಈ ಕೊನೆಯ ಪ್ಲೇಟನ್ನು ಇಡುವಾಗ-“ಇವು ಖಾಸಾ ನಿಮ್ಮ ಕೇರಳದವು,” ಎನ್ನುತ್ತ ಆಗಿನಿಂದಲೂ ನೆಲೆಸಿದ ಮೌನಕ್ಕೆ ಭಂಗತಂದಳು. “ತೆಗೆದುಕೊಳ್ಳಿ” ಎಂದು ಹೇಳಿ, ಕಪ್ಪುಗಳಲ್ಲಿ ಚಹ ಸುರಿಯುವಾಗ, “ಹೋದ ವಾರವಷ್ಟೇ ನಮ್ಮ ಮಗ ಕೇಕಿಯ ಜನ್ಮದಿವಸ. ಅಮೆರಿಕೆಯಲ್ಲಿ ಇರುವವನು. ಅವನ ಅನುಪಸ್ಥಿತಿಯಲ್ಲಿ ನಾವಿಬ್ಬರೇ ಅಚರಿಸಿದೆವು. ಮಗಳು ಮೊಮ್ಮಕ್ಕಳು ಕೂಡ ಎರಡು ದಿನ ತಡಮಾಡಿ ಬಂದರು. ಅವರು ಬಂದಮೇಲೆ ಇನ್ನೊಮ್ಮೆ ಹಬ್ಬವಾಯಿತು. ನಮ್ಮ ಕೇಕೀ ಅಮೆರಿಕೆಗೆ ಹೋದಾಗ ನಿಮ್ಮಷ್ಟೇ ವಯಸ್ಸಿನವನು. ನಿನ್ನೆ ಇವರು ನಿಮ್ಮ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು,” ಎನ್ನುತ್ತ ಚಹ ತುಂಬಿದ ಕಪ್ಪುಗಳನ್ನು, ಟೀಪಾಯಿಯ ಮೇಲೆ ಕುಡಿಯುವವರಿಗೆ ಹತ್ತಿರವಾಗುವ ಹಾಗೆ ಅವರವರ ಎದುರಿನಲ್ಲಿ ಇಡತೊಡಗಿದಳು. ಕಪ್ಪುಬಶಿಗಳು ಒಂದಕ್ಕೊಂದು ಅಪ್ಪಳಿಸಿ ಸದ್ದುಮಾಡದ ಹಾಗೆ, ಚಹದ ಒಂದು ಹನಿ ಕೂಡ ಹೊರಚೆಲ್ಲದ ಹಾಗೆ ಜಾಗ್ರತೆ ವಹಿಸಿದ ಮುದುಕಿಯ ಕೈಯ ದಕ್ಷತೆಯನ್ನು ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ನೋಡುತ್ತಿರುವಾಗ, ಶಿರೀನ್ ಕೇಕ್ ತುಂಬಿದ ಪ್ಲೇಟನ್ನು ಕರುಣಾಕರನ್ ಇದಿರು ಹಿಡಿದಳು. ಕೇಕ್ ತುಂಡೊಂದಕ್ಕೆ ಕರುಣಾಕರನ್ ಕೈಹಾಕುತ್ತಿದ್ದಾಗ ಮುದುಕಿ,”ನಿಮಗೆ ಅಣ್ಣತಮ್ಮಂದಿರೆಷ್ಟು?” ಎಂದು ಕೇಳಿದಳು. ಸನ್ನಿವೇಶಕ್ಕೆ ತೀರ ಸಹಜವಾದ ಪ್ರಶ್ನೆಯಾಗಿತ್ತಾದರೂ ಕರುಣಾಕರನ್‌ಗೆ ಅದು ವಿಶೇಷ ರೀತಿಯಲ್ಲಿ ಕೇಳಿಸಿತೆಂಬಂತೆ ತುಂಬ ವಿಹ್ವಲನಾದ. ಕೇಕಿನ ಹೋಳನ್ನು ಹಿಡಿದ ಕೈ ನಡುಗಹತ್ತಿತೇ ಹೊರತು ಬಾಯಿಗೆ ಹೋಗದಾಯಿತು. ಮೊದಲೇ ತುಸು ಗಾಬರಿ ತುಂಬಿ ದೊಡ್ಡವಾದಹಾಗೆ ತೋರುತ್ತಿದ್ದ ಕಣ್ಣುಗಳು ಇನ್ನಷ್ಟು ದೊಡ್ಡವಾದವು. ಒಂದು ಬಗೆಯ ದೈನ್ಯ ಸೇರಿದ ನೋಟದಿಂದ, ಸರಸರನೆ, ಮೊದಲೊಮ್ಮೆ ಮುದುಕನ ಕಡೆಗೆ ಆಮೇಲೆ ಮುದುಕಿಯ ಕಡೆಗೆ ನೋಡಿ ಕೊನೆಗೆ ಶಿರೀನಳತ್ತ ನೋಡುತ್ತ ಕುಳಿತುಬಿಟ್ಟ. ಅವನ ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಎಲ್ಲರಿಗೂ ಆಶ್ಚರ್ವಾಯಿತು. +“ಮೊದಲು ತಿನ್ನಿ, ಆಮೇಲೆ ಮಾತಾಡೋಣ. ಅಮ್ಮ ಬಂದವರಿಗೆಲ್ಲ ಕೇಳುವ ಮಾಮೂಲು ಪ್ರಶ್ನೆಯಿದು. ಮಗನ ಹುಟ್ಟುಹಬ್ಬದ ನೆನಪಿಗೆ ಮಾಡಿದ ಕೇಕನ್ನು ತಿಂದರೆ ಅವಳಿಗೆ ಸುಖವೆನಿಸುತ್ತದೆ.” ಶಿರೀನಳ ಮಾತಿನಲ್ಲಿ ಸೇರಿಕೊಂಡ ಸಂತಯಿಸುವ ದನಿ ಅವಳು ಬಯಸಿದ್ದಾಗಿರಲಿಲ್ಲ. +ತನ್ನ ಬಾಯನ್ನು ಕಟ್ಟಿಬಿಟ್ಟ ಸನ್ನಿವೇಶದಿಂದ ಸ್ವತಃ ಕರುಣಾಕರನ್‌ನೇ ಚಕಿತನಾದ. ಉತ್ತರ ಕೊಡಲು ತಡವಾದಷ್ಟೂ ತನ್ನ ಮೌನ ಬಯಸಿರದ ಪದಾರ್ಥಕ್ಕೆ ಎಡೆಮಾಡಿಕೊಡಬಹುದೆಂಬ ಭಯವೂ ಕಾಡದೇ ಇರಲಿಲ್ಲ. ಆದರೂ ತನ್ನಿಂದ ಹೊರಗೆ ಬರಬೇಕಾದದ್ದು ಬರಿಯ ಒಂದು ಪ್ರಶ್ನೆಗೆ ಉತ್ತರವೆಂದು ತೋರಲಿಲ್ಲ. ಹಲವು ತಿಂಗಳಿಂದ ಕಾಡುತ್ತ ಬಂದ ಒಂದು ಭಾವನೆ ಮಾತಾಗುವಷ್ಟರಲ್ಲೇ ರೂಪ ಬದಲಿಸುತ್ತಿರುವ ವಿಚಿತ್ರ ಅನುಭವದಿಂದಾಗಿ ತುಟಿ ತೆರೆಯುವುದೇ ಕಷ್ಟವಾಗಹತ್ತಿತು. ಮುದುಕ-ಮುದುಕಿಯರನ್ನು ನೋಡುತ್ತಿದ್ದಾಗ ಅನ್ನಿಸುತ್ತಿದ್ದ ಸಂತವಾದ ಧೈರ್ಯ ಶಿರೀನಳನ್ನು ನೋಡುತ್ತಿದ್ದಾಗ ಅಲುಗಾಡುತ್ತಿತ್ತು. ಮುದುಕಿ ಒಬ್ಬಳೇ ಇದ್ದಾಗ ಕೊಡಬಹುದಾಗಿದ್ದ ಉತ್ತರದ ಸಹಜತೆ ಮೊದಲಿನಿಂದಲೂ ತನ್ನನ್ನು ಅನುಮಾನದಿಂದಲೇ ನೋಡುತ್ತಬಂದ ಈ ಹೆಣ್ಣಿನ ಇದಿರು ಸಾಧ್ಯವಾಗಿ ತೋರದಾಯಿತು. +‘ನೋಡಿ ಶಿರೀನ್, ನಾನು ಕೇರಳವನ್ನು ಬಿಟ್ಟು ಮುಂಬಯಿಗೆ ಬಂದದ್ದು ಹೊಟ್ಟೆಪಾಡಿಗಾಗಿಯೇ. ಆದರೆ ಮುಂಬಯಿಗೆ ಬಂದದ್ದು ನನ್ನ ಅಣ್ಣನೊಬ್ಬ ಇಲ್ಲಿಯದೇ ಝೋಪಡಪಟ್ಟಿಯಲ್ಲಿ ಮೂರು ವರ್ಷಗಳ ಹಿಂದೆ ಕೊಲೆಯಾಗಿದ್ದರಿಂದ. ಆಗ ನಾನು ಸಹಿಯಿಲ್ಲದ ಪತ್ರದ ಬಗ್ಗೆ ಹೇಳಿದ್ದೆನಲ್ಲ, ಅದು ನನ್ನ ನಿದ್ದೆಗೇಡಿಗೆ ಕಾರಣವಾದದ್ದನ್ನೂ ತಿಳಿಸಿದೆನಲ್ಲ. ಈ ಎಲ್ಲ ಸಂಗತಿಗಳೂ ಸತ್ಯವಾದವು. ಆದರೆ ಅ ಪತ್ರ ನಾನು ಮಾತಿನಲ್ಲಿ ಹೇಳಿದ ಹಾಗೆ ಸಂಪಾದಕನಿಗೆ ಬಂದದ್ದಲ್ಲ. ಅಪ್ಪನಿಗೆ ಬಂದದ್ದು. ನಾನು ಒಂದು ಅರ್ಥದಲ್ಲಿ ಸುಳ್ಳು ಹೇಳಿರಬಹುದು. ನಾನು ಯಾವ ಉದ್ದೇಶಕ್ಕಾಗಿ ಬಂದಿರುವೆನೋ ಅದನ್ನು ಸಾಧಿಸಬೇಕಾದರೆ ಬೇರೆ ಉಪಾಯ ಹೊಳೆಯಲಿಲ್ಲ. ಸದ್ಯವೇ ನಡೆದ ರದ್ದೀವಾಲಾನ ಖೂನಿಯ ಬಗ್ಗೆ ಮಾತನಾಡುವಾಗ ಸರಕ್ಕನೆ ನಿಮ್ಮಲ್ಲಿಯ ಯಾರಾದರೂ ಮೂರು ವರ್ಷಗಳ ಹಿಂದೆ ನಡೆದ ನನ್ನ ಅಣ್ಣನ ಖೂನಿಯ ಬಗ್ಗೆ ಮಾತನಾಡಿದ್ದರೆ! ನೀವಾಗಿ ಮಾತನಾಡುವುದು ಮುಖ್ಯ. ನಾನೇ ಕೇಳಿದಾಗ ನೀವು ಕೊಡಬಹುದಾದ ಉತ್ತರವನ್ನು ನಂಬುವಂತಿಲ್ಲ. ಯಾಕೆಂದರೆ ಇಂಥ ವಿಷಯದಲ್ಲಿ ನಮ್ಮ ನೆನಪುಗಳನ್ನು ನಂಬುವುದು ಕಷ್ಟ. ನಿಮಗೆ ಗೊತ್ತಿದ್ದುದೇ ಆದಲ್ಲಿ ನೀವು ಮಾತನಾಡದೇ ಇರುವುದು ಶಕ್ಯವೇ ಇಲ್ಲ ಎನ್ನುವಷ್ಟು ಭೀಕರವಾದ ಕೊಲೆಯದು-ಅಂದರೆ ಆ ಸಹಿಯಿಲ್ಲದ ಪತ್ರದ ಪ್ರಕಾರ. ಈ ಕೇರಿಯಲ್ಲೇ ನಡೆದದ್ದಂತೆ. ಇಲ್ಲಿಯ ಮುದುಕನೊಬ್ಬನಿಗೆ ಅದರ ಬಗ್ಗೆ ಬಹಳಷ್ಟು ಗೊತ್ತಿದೆಯಂತೆ. ದೊಡ್ಡ ರಾಜಕಾರಣಿಯೊಬ್ಬನಿಗೆ, ಪೋಲೀಸರಿಗೆ ಹೆದರಿಕೊಂಡು ಸುಮ್ಮನಿದ್ದಾನಂತೆ. ಪತ್ರ ಬರೆದವನು ಕೇರಳದವನೇ. ಈ ಮುದುಕನ ಮನೆಯಲ್ಲೇ ಕೆಲಸಕ್ಕಿದ್ದ. ಪತ್ರ ಮಲೆಯಾಳಮ್‌ದಲ್ಲಿದೆ. ನಾನು ಬಂದದ್ದು ಅಣ್ಣನ ಕೊಲೆಯಾದದ್ದನ್ನು ಖಾತ್ರಿಮಾಡಿಕೊಳ್ಳಲಲ್ಲ. ಅವನು ಬದುಕಿದ್ದಾನೆಂದು ಗುರುತುಹಿಡಿಯಲು. ಇಲ್ಲಿಯದೇ ಝೋಪಡಪಟ್ಟಿಯಲ್ಲಿ ವಾಸಿಸುತ್ತಿರಬಹುದು. ಅಪ್ಪನಿಗೆ, ನಮಗೆ ಮೋರೆ ತೋರಿಸಲು ಆಗದ ಸ್ಥಿತಿಯಲ್ಲಿ ಬದುಕುತ್ತಿರಬಹುದು. ಹಾಗೆಂದೇ ಆ ಪತ್ರವನ್ನು ಅವನೇ ಬರೆಸಿರಬಹುದು. ನಿಜ ಹೇಳ ಬೇಕೆಂದರೆ ಇದು ನನಗೆ ತಾನಾಗಿಯೆ ಹೊಳೆದ ವಿಚಾರವಲ್ಲ. ಅಪ್ಪ ಲಲಿತಾ ಮನೆಯಲ್ಲಿಲ್ಲದ ಹೊತ್ತಿನಲ್ಲೊಮ್ಮೆ ಅಣ್ಣನ ಬಗ್ಗೆ ನನ್ನೆದುರು ಕೆಟ್ಟ ಚಾಡಿ ಹೇಳುತ್ತಿರುವಾಗ ಅಮ್ಮ ನನ್ನ ತಲೆಯಲ್ಲಿ ಹಾಕಿದ್ದು. ಅಮ್ಮನಿಗೆ ಅಣ್ಣನೆಂದರೆ ಆಗುತ್ತಿರಲಿಲ್ಲ. ಈ ಅಣ್ಣನ ಬಗ್ಗೆ, ಅವನು ಊರು ಬಿಟ್ಟು ಬಂದ ಸಂದರ್ಭದ ಬಗ್ಗೆ ಹೇಳಬೇಕಾದರೆ- ಕೇರಳದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ಈ ಸ್ಕಾಯ್‌ಸ್ಕ್ರೇಪರ್ ಜಗತ್ತಿನಲ್ಲಿ ವಾಸಿಸುತ್ತಿದ್ದವರ ಮನಸ್ಸನ್ನೂ ಮುಟ್ಟುವಹಾಗೆ- ಹೇಳಬೇಕಾದರೆ ನನ್ನ ಮುತ್ತಜ್ಜ, ಅಜ್ಜರಿಂದಲೇ ಅರಂಭಿಸಬೇಕು. ಅಪ್ಪ, ಅವನ ಇಬ್ಬರು ಹೆಂಡಂದಿರ ಬಗ್ಗೆ ಹೇಳಬೇಕು. ನಮ್ಮ ಚಿಕ್ಕ ಹಳ್ಳಿ, ಚಿಕ್ಕ ಮನೆ, ಚಾಪೆ, ಬುಟ್ಟಿಗಳನ್ನು ತಯಾರಿಸುವ ಅಪ್ಪನ ಧಂದೆಯ ಬಗೆಗೂ ಹೇಳಬೇಕು. ನಮ್ಮ ಹಿತ್ತಿಲು, ಅಲ್ಲಿಯ ಗಿಡ ಮರ ಬಳ್ಳಿ, ದನಕರುಗಳನ್ನೂ ವರ್ಣಿಸಬೇಕು. ನಿನಗೆ ಅಣ್ಣತಮ್ಮಂದಿರೆಷ್ಟು? ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಸಂಖ್ಯೆ ಹೇಳಿದರೆ ಸಾಕೆ? ನನ್ನ ಅಪ್ಪನಿಗೆ ನಾವು ಮೂರು ಮಂದಿ ಮಕ್ಕಳು. ನಾನು ಈಗ ಹುಡುಕಲು ಹೊರಟ ಅಣ್ಣ ಅಪ್ಪನಿಗೆ ಹಿರಿಯ ಹೆಂಡತಿಯಿಂದ ಹುಟ್ಟಿದವನು. ನನ್ನ ಅಮ್ಮನಿಗೆ ನಾವು ಇಬ್ಬರೇ ಮಕ್ಕಳು-ನಾನು, ನನ್ನ ಕಿರಿಯ ತಂಗಿ ಲಲಿತಾ. ಏನು ಹೇಳಿದಹಾಗಾಯಿತು? ಕಳೆದ ಹಲವು ತಿಂಗಳಲ್ಲಿ ಇಲ್ಲಿಯ ಎಷ್ಟೊಂದು ಮನೆಗಳಿಗೆ ಹೋಗಿ ಬಂದಿದ್ದೇನೆ. ರದ್ದೀವಾಲಾನ ಖೂನಿಯ ಬಗ್ಗೆ, ಇಲ್ಲಿಯ ಜೀವನದ ಆರೋಗ್ಯಕ್ಕೆ ಈ ಝೋಪಡಪಟ್ಟಿಗಳಿಂದ ಉಂಟಾದ ಅಪಾಯದ ಬಗ್ಗೆ, ಸರಕಾರದ ನಿರ್ಲಕ್ಷ್ಯದ ಬಗ್ಗೆ ಮಾತು ಕೇಳಿಸಿದುವು. ಇಂಥಲ್ಲಿ ಕೊಲೆಗಳು ನಡೆದರೆ ಆಶ್ಚರ್ಯವೇನು ಎಂಬಂಥ ಪ್ರಶ್ನೆ ಕೇಳಿಸಿದುವು. ಹೊರತು, ಖೂನಿಯ ಬಗ್ಗೆ ಬಹಳಷ್ಟು ತಿಳಿಯಲಿಲ್ಲ. ಮೂರು ವರ್ಷಗಳ ಹಿಂದಿನ ಖೂನಿಯ ಬಗೆಗೆ ಒಬ್ಬರಿಂದಲೂ ಮಾತು ಹೊರಡದೇ ಇದ್ದಾಗ ಒಳಗೊಳಗೇ ಖುಶಿಯಾಗುತ್ತಿತ್ತು. ಕೊನೆಗೂ ಅಣ್ಣ ಸತ್ತಿರಲಿಕ್ಕಿಲ್ಲ, ಬದುಕಿರಬಹುದು; ನಮ್ಮ ಕಣ್ಣು ತಪ್ಪಿಸಿಕೊಂಡಿರಬಹುದು. ನೀವೂ ಆ ಕೊಲೆಯ ಬಗ್ಗೆ ಮಾತನ್ನೆತ್ತದೇ ಉಳಿದುಬಿಟ್ಟರೆ ನಾನು ಮಾಡಿಕೊಂಡಿರುವ ಊಹೆ ಸರಿಯಾದದ್ದೆಂದು ತಿಳಿದು ಸಂತೋಷದಿಂದ ಕುಣಿದುಬಿಡುತ್ತೇನೆ. ‘ನೀವೂ’ ಎಂದು ಯಾಕೆ ಅಂದೆನೆಂದರೆ, ನಿಮ್ಮ ಅಪ್ಪನನ್ನು ಕಂಡಂದಿನಿಂದಲೂ ಪತ್ರದಲ್ಲಿ ಉಲ್ಲೇಖಗೊಂಡ ಮುದುಕ ಅವರೇ ಇರಬಹುದೆಂದು ಅನ್ನಿಸತೊಡಗಿದೆ. ಯಾಕೆ? ಹೇಗೆ? ಎಂದು ಕೇಳಬೇಡಿ. ನಿನ್ನೆ ಬಾಲ್ಕನಿಯಲ್ಲಿ ಕೂತಾಗ ಇದಿರು ಕಂಡ ಸಮುದ್ರದ ನೊರೆ ಕಾರುತ್ತ ಮೊರೆಯುವ ನೀರು ಹೇಳಿತೆಂದು; ಕಿಡಕಿಯ ದಡಿಯ ಮೇಲಿಂದ ಹಣಕಿಕ್ಕಿ ನೋಡುತ್ತಿದ್ದ ಈ ರಬ್ಬರು ಗಿಡ ಕೂಡ ಇದೀಗ ಅದನ್ನೇ ಮತ್ತೆ ಹೊಳೆಯಿಸಿತೆಂದು ತಿಳಿದುಕೊಳ್ಳಿ. ಪತ್ರ ಬರೆದ ಕೇರಳದ ಹುಡುಗ ಕೆಲಸ ಮಾಡುತ್ತಿದ್ದುದು ಈ ಮನೆಯಲ್ಲೇ ಇರಬೇಕು. ಬಹುಶಃ ಅವನು ಇಲ್ಲಿಂದ ಹೋದನಂತರವೇ ಪಾರ್ವತೀ ಸೀತೆ ಇಲ್ಲಿ ಕೆಲಸಕ್ಕೆ ಹತ್ತಿರಬೇಕು..’ +ಆಡಿದ್ದರೆ ಈ ಧಾಟಿಯ ಮಾತುಗಳಾಗಬಹುದಾಗಿದ್ದ ಹಲವು ಭಾವನೆಗಳು ಆಕೃತಿ ಪಡೆಯುವಷ್ಟರಲ್ಲಿ ಕರಗಿಹೋಗುತ್ತಿದ್ದುವೇ ಹೊರತು ಶಬ್ದಗಳಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಡಾಯರಿ ಬರೆಯುವಾಗ ಕಣ್ಣ ಇದಿರು ನಿಂತ ಮೇಣಬತ್ತಿ, ಜ್ಯೋತಿಯ ಜಳಕ್ಕೆ ಕರಗುತ್ತಿದ್ದಂತೆಯೆ ಚಿತ್ರವಿಚಿತ್ರ ಆಕಾರಗಳಲ್ಲಿ ಹೆಪ್ಪುಗಟ್ಟುತ್ತಿದ್ದ ಅದರ ಮೇಣ ಈಗ ಮತ್ತೆ ಕಣ್ಣ ಮುಂದೆ ನಿಲ್ಲತೊಡಗಿದಾಗ ದೊಡ್ಡಕ್ಕೆ-“ನನಗೆ ಒಬ್ಬ ಅಣ್ಣ, ಒಬ್ಬ ತಂಗಿ,” ಎಂದ. ಎಷ್ಟೋ ಹೊತ್ತಿಗೆ ಮೊದಲು ಕೇಳಿದ ಒಂದು ಪ್ರಶ್ನೆಗೆ ಉತ್ತರವಾಗಿ ಈಗ ಬಾಯಿಂದ ಹೊರಬಂದ ಮಾತು ಎಲ್ಲರನ್ನೂ ದಂಗುಬಡಿಸುತ್ತಿರುವಾಗಲೇ ಹಾಲಿನಲ್ಲಿ ಹೊಸತಾಗಿ ಪ್ರವೇಶಿಸಿದ ಹೆಣ್ಣು ಅವರ ಲಕ್ಷ್ಯವನ್ನು ತನ್ನತ್ತ ಸೆಳೆದುಕೊಂಡಳು. ಬಂದವಳು ಪಾರ್ವತಿ ಎಂದು ತಿಳಿಯಲು ಕರುಣಾಕರನ್ನನಿಗೆ ಕಷ್ಟವಾಗಲಿಲ್ಲ. ಇವರೆಲ್ಲ ಕೂತ ಸ್ಥಳದಿಂದ ತುಸು ದೂರ ನಿಂತು ಕರುಣಾಕರನ್ನನನ್ನೇ ಗಂಭೀರವಾಗಿ ನೋಡುತ್ತಿದ್ದ ಪಾರ್ವತಿ, ಶಿರೀನಳ ದೃಷ್ಟಿ ತನ್ನದನ್ನು ಸಂಧಿಸಿದ್ದೇ ಗೋಣಿನಿಂದ ಹೌದು ಎನ್ನುವಂತೆ ಸನ್ನೆಮಾಡಿದಳು. ಹಾಗೂ ಒಳಗಿನ ಕೋಣೆಯಲ್ಲೆಲ್ಲೋ ಗಲಾಟೆ ಮಾಡಹತ್ತಿದ್ದ ಮಕ್ಕಳ ಗುಲ್ಲು ಕೇಳಿಸಿ ಅತ್ತ ಹೋಗಲು ಆತುರಪಟ್ಟವಳಹಾಗೆ ಹಾಲಿನಲ್ಲಿ ಪ್ರಕಟವಾದ ತರಾತುರಿಯಿಂದಲೇ ಅಲ್ಲಿಂದ ಹೊರಟುಹೋದಳು. ಈ ತೀರ ಅಲ್ಪಕಾಲದ ಪ್ರವೇಶದಿಂದ ಕರುಣಾಕರನ್ ದುಗುಡ ತುಂಬಿದ ನಿರಾಸೆಗೆ ಒಳಗಾದ. ಸೀತೆಯ ತಾಯಿಯನ್ನು ನೋಡಲು ತುಂಬ ಉತ್ಸುಕನಾಗಿದ್ದ. ಆದರೆ, ನಿರೀಕ್ಷೆಗೆ ಮೀರಿದ ಅವಳ ಮೋರೆಯ ಮೇಲಿನ ಗಾಂಭೀರ್ಯ, ಶಿರೀನಳಿಗೆ ಮಾಡಿದ ಸನ್ನೆ ಇವುಗಳಿಂದಾಗಿ ಅವಳ ಪ್ರವೇಶ ಕಳವಳಕ್ಕೆ ಕಾರಣವಾಗತೊಡಗಿತು. ಅವಳ ವರ್ತನೆ ಕೆಲಹೊತ್ತಿನ ಮೊದಲು ಮುದುಕಿ ಕೇಳಿದ ಪ್ರಶ್ನೆಗೆ ತಳಕು ಹಾಕಿಕೊಂಡಿರುವಂತೆ ಭಾಸವಾದಾಗ, ಊಹೆಗೆ ಮೀರಿದ ಒಂದು ನಾಟಕೀಯ ಪ್ರಸಂಗದಲ್ಲಿ ತಾನು ಸಿಲುಕಿಕೊಂಡಿದ್ದೇನೆ ಎಂದು ಅನುಮಾನವಾಗಿ ತಾನು ಯಾವುದೋ ಹುಚ್ಚಿನ ಭರದಲ್ಲಿ ತೊಡಗಿಸಿಕೊಂಡ-ತನ್ನ ಶಕ್ತಿಯ ಅಳಿವಿನ ಅಚೆಯ- ಈ ಉದ್ಯೋಗಕ್ಕೆ ಈ ಬೇರೆಯೇ ಅರ್ಥ ಹೊಳೆಯಹತ್ತಿತು; ತನ್ನ ಪ್ರಶ್ನೆಗಳು ಅನವಶ್ಯಕವಾಗಿ, ಅನೇಕರಲ್ಲಿ ಸಲ್ಲದ ಸಂಶಯ ಹುಟ್ಟಿಸಿ ಅವರ ಭಯಕ್ಕೆ, ಅಸಮಾಧಾನಕ್ಕೆ ಕಾರಣವಾಗುತ್ತಿರಬಹುದೆ? ತನ್ನನ್ನು ಮಾತನಾಡಿಸಲು ಸರಿಯಾದ ಅವಕಾಶದ ಹಾದಿ ಕಾಯುತ್ತಿರುವವನ ಹಾಗೆ ತೋರುತ್ತಿದ್ದ ಮುದುಕನ ಪ್ರೀತಿ ತುಂಬಿದ, ಶಾಂತ ಮೋರೆ ಮಾತ್ರ ಇಂಥ ಭಾವನೆಗೆ ಎಡೆಕೊಡದಾಯಿತು. ಆ ಮೋರೆಯ ಮೇಲಿನ ಭಾವವೊಂದನ್ನೇ ನಂಬಿ ಕರುಳಲ್ಲಿ ಸೇರಿದ ನಡುಕವನ್ನು ತಡೆಯುವ ಪ್ರಯತ್ನ ಮಾಡುತ್ತ ಕೈಯಲ್ಲಿನ ಕೇಕಿನ ಹೋಳನ್ನು ತಿಂದು ಮುಗಿಸಿದ. ಹಾಗೂ ಚಹದ ಕಪ್ಪನ್ನು ಕೈಗೆತ್ತಿ ಇತರರ ಜೊತೆಗೆ ತಾನೂ ಚಹ ಗುಟುಕರಿಸಹತ್ತಿದ. +ಅವನು ಚಹ ಕುಡಿದು ಮುಗಿಸುವುದರ ಹಾದಿಯನ್ನೇ ಕಾಯುತ್ತ ಕುಳಿತಂತಿದ್ದ ಶಿರೀನ್, ಅವನು ಚಹದ ಕಪ್ಪನ್ನು ಕೆಳಗಿರಿಸುತ್ತಲೇ: “ಹೇಳಿ ಕರುಣಾಕರನ್, ನೀವು ಈ ಪ್ರಶ್ನೆಗಳನ್ನು ಕೇಳಲು ಬಂದದ್ದು ಕೇವಲ ನಮ್ಮ ಮನೆಗೆ ಮಾತ್ರ ಅಲ್ಲ, ಅಲ್ಲವೆ?” +ಕರುಣಾಕರನ್ ತಬ್ಬಿಬ್ಬಾದ. ಪ್ರಶ್ನೆ ಕೇಳಿದವಳು ಶಿರೀನಳಾದರೂ ಅವನು ಮೋರೆ ತಿರುವಿದ್ದು ಬೆಹರಾಮನ ಕಡೆಗಾಗಿತ್ತು. ಅವನ ದೃಷ್ಟಿಯಲ್ಲಿಯ ಅಸಹಾಯಕತೆ ಬೆಹರಾಮನನ್ನು ತಟ್ಟದೆ ಇರಲಿಲ್ಲ. +“ಶಿರೀನ್, ನಿನ್ನ ಇಂಥ ಪ್ರಶ್ನೆಯ ಉದ್ದೇಶವೇನು? ಅವರು ನಿನ್ನೆಯೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.” +“ಅಪ್ಪ, ನೀನು ಸ್ವಲ್ಪ ಹೊತ್ತು ನನಗೆ ಮಾತನಾಡಲು ಬಿಡು. ನಾನೇನು ಅವರ ಮರುತಪಾಸಣೆಗೆ ಹೊರಟಿಲ್ಲ. ಆದರೂ ನನಗೊಂದು ಕೆಟ್ಟ ಗುಮಾನಿ. ಅದರ ನಿವಾರಣೆಯಾಗದೇ ಇವರ ಯಾವ ಪ್ರಶ್ನೆಗೂ ಉತ್ತರ ಕೊಡಲು ನಿನ್ನನ್ನು ಬಿಡಲಾರೆ.” +ಇದನ್ನು ಹೇಳುವಾಗಿನ ಅವಳ ದನಿ ಕರುಣಾಕರನ್ನನಿಗೆ ಸೇರಲಿಲ್ಲ. ಆಶ್ಚರ್ಯವೆಂದರೆ, ಆ ದನಿಯೇ ಈಗ ಸರಕ್ಕನೆಂಬಂತೆ ಅವಳನ್ನು ಎದುರಿಸುವ ಧೈರ್ಯ ತಂದುಕೊಡಹತ್ತಿತು. ತಾನೇನು ಯಾರನ್ನೂ ಯಾವುದೇ ಬಗೆಯ ಹಾನಿಗೆ ಗುರಿ ಮಾಡುವ ಉದ್ದೇಶದಿಂದ ಬಂದವನಲ್ಲ ಬಹಳವೆಂದರೆ ತಾನು ಯಾವುದೋ ಹುಚ್ಚಿನ ಭರದಲ್ಲಿ ಹುಡುಕಿಕೊಂಡು ಬಂದದ್ದು ತನಗೆ ದೊರಕದೇ ಹೋಗಬಹುದು, ಅಷ್ಟೇ. ತಾನು ಈವರೆಗೆ ಭೇಟಿಯಿತ್ತ ಎಲ್ಲ ಮನೆಗಳಲ್ಲಿ ಹೇಳುತ್ತ ಬಂದ ಒಂದು ಸಣ್ಣ ಸುಳ್ಳನ್ನು ಸಮರ್ಥಿಸಿಕೊಳ್ಳುವ ಧೈರ್ಯವೂ ಈಗ ಮೊದಲ ಬಾರಿಗೇ ಬರತೊಡಗಿದಂತೆ ತೋರಿತು. ಆದರೆ ಶಿರೀನ್ ಕೇಳಿದ ಪ್ರಶ್ನೆಯ ಹಿಂದೆ ತನ್ನನ್ನೇಕೋ ಸುಳ್ಳುಮಾಡುವ ಉದ್ದೇಶ ಸ್ಪಷ್ಟವಾಗಿ ಕಂಡದ್ದಕ್ಕೋ ಏನೋ ಅವನ ಬಾಯಿಂದ ಪ್ರತ್ಯಕ್ಷವಾಗಿ ಹೊರಟ ಮಾತು ಮಾತ್ರ ಸ್ವತಃ ಅವನಿಗೇ ಆಶ್ಚರ್ಯವನ್ನುಂಟುಮಾಡಿತು: “ಅಣ್ಣನ ಶೋಧದಲ್ಲಿದ್ದವನು ಒಂದೆರಡು ಸುಳ್ಳುಗಳನ್ನು ಹೇಳಬೇಕಾಗಿ ಬಂದರೆ..” ಕರುಣಾಕರನ್‌ಗೆ ತನ್ನ ವಾಕ್ಯವನ್ನು ಪೂರ್ಣಗೊಳಿಸುವುದಾಗಲಿಲ್ಲ. ವ್ಯಕ್ತಪಡಿಸಲು ಸಾಧ್ಯವಾದಷ್ಟು ಮಾತುಗಳಿಂದಲೇ ಖುದ್ದು ದಂಗುಬಡೆಯಲು ಕಾರಣವಾದ ಸಂಗತಿ-ಉಳಿದವರೂ ತನ್ನ ಹೇಳಿಕೆಯಿಂದ ದಂಗುಬಡೆಯಬಹುದೆಂಬ ನಿರೀಕ್ಷೆಯಾಗಿತ್ತು. ಕೇಳುತ್ತಿದ್ದ ಮುದುಕ, ಮುದುಕಿಯರ ಮೋರೆಗಳ ಮೇಲೆ ಅಂಥ ಭಾವ ಮೊಳೆಯಹತ್ತಿದ್ದನ್ನು ಕಂಡಿದ್ದ ಕೂಡ. ಆದರೆ ಮನೋವಿಜ್ಞಾನದಲ್ಲಿ ಎಂ. ಎ. ಪದವೀಧರಳಾದ ಶಿರೀನ್‌ಗೆ ಈ ಹೇಳಿಕೆ ತೀರ ಮಾಮೂಲಾಗಿ ಕಂಡಿರಬೇಕು: “ಅಣ್ಣನ ಶೋಧವೆಂಬುದೇ ಸುಳ್ಳು ಸಬೂಬಾಗಿದ್ದರೆ?” +ಮುದುಕ ಮುದುಕಿಯರಿಬ್ಬರಿಗೂ ಈ ಮಾತು ತುಂಬ ದುಡುಕಿನದಾಗಿ ಕಂಡಿತು. ತನ್ನ ಅಸಮ್ಮತಿಯನ್ನು ಕಣ್ಣಿನಿಂದಲೇ ವ್ಯಕ್ತಪಡಿಸಿದ ಮುದುಕಿ, ಚಹದ ಸರಂಜಾಮನೆಲ್ಲ ಟ್ರಾಲಿಗೆ ಸಾಗಿಸುತ್ತ “ಪಾರ್ವತೀ,” ಎಂದು ಕರೆದಳು. ಈ ಕರೆಯ ಹಾದಿಯನ್ನೇ ಕಾಯುತ್ತಿದ್ದೆ ಎನ್ನುವವಳ ಹಾಗೆ ದುಡುದುಡು ಒಳಗೆ ಬಂದವಳು, ಮುದುಕಿ ” ಈ ಟ್ರಾಲಿಯನ್ನು ಒಳಗೆ ತೆಗೆದುಕೊಂಡು ಹೋಗು,” ಎಂದು ಹೇಳಿದಾಗ, ‘ಓ! ಕರೆದದ್ದು ಬರಿಯೆ ಈ ಕೆಲಸಕ್ಕಾಗಿಯೆ?” ಎನ್ನುವಂತೆ ತನ್ನ ನಿರಾಸೆಯನ್ನು ತೋರಿಸುವಷ್ಟರಲ್ಲಿ, “ಪಾರ್ವತಿ, ಟ್ರಾಲಿ ಒಳಗಿಟ್ಟು ಇಲ್ಲಿ ಬಾ,” ಎಂದು ಶಿರೀನ್ ಹೇಳಿದಾಗ, ಪಾರ್ವತಿ ಮತ್ತೆ ಚೇತರಿಸಿಕೊಂಡಳು. +“ಅಪ್ಪಾ, ನನ್ನನ್ನು ದಯಮಾಡಿ ಕೆಲಹೊತ್ತು ಮಾತನಾಡಲು ಬಿಡು. ನನ್ನನ್ನು ಕಾಡುತ್ತಿದ್ದ ಒಂದು ಕೆಟ್ಟ ಸಂಶಯದ ನಿವಾರಣೆಯಾಗುವ ಸಮಯ ಈಗ ಬಂದಿದೆ. ಇವರನ್ನು ಬಲ್ಲ ಮೂವರು ಗೃಹಸ್ಥರು ಇನ್ನು ಕೆಲಹೊತ್ತಿನಲ್ಲೇ ಇಲ್ಲಿ ಬರಲಿದ್ದಾರೆ.” +ಶಿರೀನಳ ಈ ಮಾತನ್ನು ಕೇಳಿದೊಡನೆ, ಆಗ ಪಾರ್ವತಿ ಮಾಡಿದ ಸನ್ನೆಯ ಅರ್ಥ ಕರುಣಾಕರನ್‌ಗೆ ಹೊಳೆದುಹೋಯಿತು: ಹೌದು, ಈಗ ನೆನಪಾಗುತ್ತದೆ, ಇವಳನ್ನೆಲ್ಲೋ ಈ ಮೊದಲು ಕಂಡಿದ್ದೇನೆ. ಈಗ ಬರಲಿರುವ ಗ್ರುಹಸ್ಥರೊಬ್ಬರಲ್ಲಿ ಅಥವಾ ಮೂರೂ ಜನರ ಮನೆಗಳಲ್ಲಿ ಇವಳು ಕೆಲಸ ಮಾಡುತ್ತಿರಬೇಕು; ಅಲ್ಲಿ ಕಂಡ ಹುಡುಗ ನಾನೇ ಎಂಬುದನ್ನು ಸನ್ನೆಯಿಂದ ಶಿರೀನಳಿಗೆ ತಿಳಿಸಿರಬೇಕು. ನಾನು ಹುಟ್ಟುವುದಕ್ಕಿಂತ ಮೊದಲೇ ಬರೆದ ಪುಸ್ತಕಗಳ ಆಧಾರದ ಮೇಲೆ ನನ್ನ ಸತ್ವಪರೀಕ್ಷೆ ಮಾಡಲು ಹೊರಟಿರಬೇಕು ಸಾಯ್ಕಾಲಾಜಿ ಕಲಿತ ಈ ಹೆಣ್ಣು: ‘ನಿಮ್ಮನ್ನು ಹೇಗೆ ಕರೆಯಬೇಕೋ ತಿಳಿಯುವುದಿಲ್ಲ. ಅಕ್ಕಾ ಎಂದು ಕರೆಯೋಣ, ಅನ್ನಿಸುತ್ತದೆ. ನಾವು ಭೇಟಿಯಾಗುತ್ತಿದ್ದುದು ಇದೇ ಮೊದಲು. ಭೇಟಿಯಾಗುತ್ತಿದ್ದ ಸಂದರ್ಭ ಕೂಡ ನಮ್ಮಲ್ಲಿಯ ಯಾರೂ ಊಹಿಸಿದಂತಹದಲ್ಲ. ಯಾವುದೋ ಆವೇಶದ ಭರದಲ್ಲಿ, ಬಾಯಿ ಬಿಟ್ಟು ಹೇಳಲು ಆಗದ ಸಹಾಯ ಬೇಡಿ ಬಂದವನನ್ನು ಠಕ್ಕನೆಂದು ತೋರಿಸಿಕೊಡಲು ಹೊರಟಿರುವಿರಲ್ಲ?..” ಕರುಣಾಕರನ್ನನ ಈ ಭಾವಸರಣಿ ಎಲ್ಲರಿಗೂ ಕೇಳಿಸುವಷ್ಟು ದೊಡ್ಡ ಮಾತಾದದ್ದು-“ನಾನು ಠಕ್ಕನಲ್ಲ,” ಎಂಬ ಶಬ್ದಗಳಲ್ಲಿ. ಆದರೆ ಅದು ಶಿರೀನಳ ಮೇಲೆ ಪರಿಣಾಮ ಮಾಡಿದಂತೆ ತೋರಲಿಲ್ಲ. “ಅದು ಈಗ ಗೊತ್ತಾಗುತ್ತದೆ,” ಎಂದಳು, ಚುಟುಕಾಗಿ. ಮುದುಕ, ಮುದುಕಿ ಇಬ್ಬರೂ ಒಂದೇ ಕಾಲಕ್ಕೆ-“ನೀನು ಬಹಳ ದುಡುಕುತ್ತಿದ್ದೀ, ಇದು ಒಳ್ಳೆಯದಕ್ಕಲ್ಲ, ಹುಡುಗೀ,” ಎನ್ನುತ್ತಿರುವದಕ್ಕೂ ಕರೆಗಂಟೆ ಕಿರುಚುವುದಕ್ಕೂ ಸರಿಹೋಯಿತು. +ಕದ ತೆರೆಯಲು ಸೀತೆ, ಪಾರ್ವತಿ ಇಬ್ಬರೂ ಮನೆಯಲ್ಲಿ ಇದ್ದರೂ, ಅವರು ಹೋಗಿ ಯಾರೆಂದು ನೋಡಿ ತಿಳಿಸಬೇಕು, ಆಮೇಲೆ ಮತ್ತೆ ಹೋಗಿ ಕದ ತೆರೆಯಬೇಕು-ಈ ಯಾವ ರೀತಿಯ ವಿಲಂಬಕ್ಕೂ ಕಾಯುವ ತಾಳ್ಮೆ ಈಗ ಇಲ್ಲದವಳ ಹಾಗೆ, ಶಿರೀನ್ ತಾನೇ ಕದ ತೆರೆಯಲು ಎದ್ದಳು. ಬಂದವರು ಯಾರೆಂಬುದರ ಬಗ್ಗೆ ಸಂಶಯ ಇಲ್ಲದವಳ ಹಾಗೆ-“ನಾನು ತೆಗೆಯುತ್ತೇನೆ,” ಎನ್ನುತ್ತ ಕದ ತೆರೆಯಲು ಮುಂದಾಗಬಹುದಾದ ಇನ್ನಿಬ್ಬರನ್ನು ತಡೆದಳು. ಹೊತ್ತು ಮುಳುಗಿ ಮನೆಯೊಳಗಿನ ಬೆಳಕು ಕಡಿಮೆಯಾಗಲು ತೊಡಗಿದ್ದರಿಂದ ಬಾಗಿಲ ಕಡೆಗೆ ಹೋಗುವಾಗ ಹಾಲಿನಲ್ಲಿ ಮೂರೂ ಕಡೆಗಳಲ್ಲಿಯ ದೀಪಗಳನ್ನು ಬೆಳಗಿಸಿದಳು. +ತನ್ನ ಕಡೆಗೇ ಕಕ್ಕಾವಿಕ್ಕಿಯಾಗಿ ನೋಡುತ್ತಿದ್ದ ಕರುಣಾಕರನ್‌ನ ಬಗೆಗೆ ಬೆಹರಾಮನಿಗೆ ಕೆಡುಕೆನಿಸಿತು. ಶಿರೀನಳ ಮನಸ್ಸಿನಲ್ಲಿದ್ದ ಸಂಶಯವನ್ನು ಅವನಿಗೆ ಸ್ಪಷ್ಟಪಡಿಸುವುದು ಬೆಹರಾಮನಿಗೆ ಶಕ್ಯವೇ ಇರಲಿಲ್ಲ. ಅವಳ ಪ್ರಕಾರ ಅವನು ಈ ಖೂನಿಗೆ ಸಂಬಂಧಿಸಿ ಅಲ್ಲವೇ ಅಲ್ಲವಾಗಿತ್ತು. ಯಾವುದೋ ಠಕ್ಕರ ಗುಂಪಿಗೆ ಸೇರಿದ ಇವನು ಇಲ್ಲಿಗೆ ಬಂದದ್ದು ತಮ್ಮ ಮನೆಯ ಬಗ್ಗೆ, ಮನೆಯವರ ಬಗ್ಗೆ ಮಾಹಿತಿ ಒಟ್ಟುಮಾಡಲು. ರದ್ದೀವಾಲಾನ ಖೂನಿಯ ಬಗೆಗಿನ ಮಾಹಿತಿ ಮನೆ ಹೊಗಲು ಯೋಜಿಸಿಕೊಂಡ ಸಭ್ಯ ಸಬೂಬು. ಅಪ್ಪನಂಥವರು ಮೋಸಹೋಗಬಹುದೇ ಹೊರತು ತಾನಲ್ಲ! ಅಷ್ಟೇಕೆ, ವಯೋವೃದ್ಧರಾದ ಅಪ್ಪ ಅಮ್ಮ ಇಬ್ಬರೇ ಮನೆಯಲ್ಲಿರುತ್ತಾರೆ ಎಂದು ಇವನು ಮಾಡಿಕೊಂಡ ಎಣಿಕೆ ತನ್ನ ಅನಿರೀಕ್ಷಿತ ಉಪಸ್ಥಿತಿಯಿಂದ ಹಾಳಾಗಿರಬೇಕು! ಇತ್ತಲಾಗಿ ಮುಂಬಯಿಯಲ್ಲಿ ನಡೆಯುತ್ತಿರುವ ದರೋಡೆಗಳ ಹಿಂದೆ ಎಂಥೆಂಥ ಸುಶಿಕ್ಷಿತ ಮೆದುಳುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಓದಿದವಳು ಬಲ್ಲಳು. ದಿನಪತ್ರಿಕೆಗಳಲ್ಲಿ ಬಂದ ಇಂಥ ಸುದ್ದಿಗಳನ್ನು ಬೆಹರಾಮ್ ಓದಿಲ್ಲವೆಂದಲ್ಲ. ಟೀವೀ ಮೇಲೆ ಕೂಡ ಇಂಥವರಿಂದ ರಕ್ಷಿಸಿಕೊಳ್ಳಲು ನೆರವು ನೀಡುವಂಥ ‘ಜಾಗರೂಕರಾಗಿರಿ’ ಎಂಬ ಹೆಸರಿನ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದರಂತೆ. ಜನರೇನೋ ತಮ್ಮತಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗ ಕಲಿಯಬಹುದು. ಆದರೆ ಅದೇ ಹೊತ್ತಿಗೆ ಪರಸ್ಪರರ ಬಗೆಗೆ ಇರಬೇಕಾದ ಸಹಜ ವಿಶ್ವಾಸವನ್ನೇ ನಾಶಮಾಡುತ್ತಿದ್ದೇವೆ ಅನ್ನಿಸಿತು, ಬೆಹರಾಮನಿಗೆ. ಕರುಣಾಕರನ್ ಕಡೆಗೆ ನೋಡಿದಷ್ಟೂ ಅವನ ಮುಗ್ಧ ಮೋರೆಯ ಹಿಂದೆ ಠಕ್ಕುತನ ಅಡಗಿರುವುದು ಶಕ್ಯವೇ ಇಲ್ಲ ಎಂದೂ ತೋರಿತು. ಧೈರ್ಯ ಸಾಲದೋ ನಂಬಿಕೆ ಸಾಲದೋ, ಹುಡುಗ ತಾನು ಬಂದಂಥ ಕಾರ್ಯವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಶಿರೀನ್ ದುಡುಕಿನ ಮಾತುಗಳನ್ನು ಆಡಿರದಿದ್ದರೆ ಎಲ್ಲವನ್ನೂ ಇಷ್ಟರಲ್ಲಿ ತಿಳಿಸುತ್ತಿದ್ದನೋ ಏನೋ. ಏನೂ ಹೆದರಬೇಡಿ, ನಾನಿದ್ದೇನೆ. ಇಷ್ಟೇ, ತನಿಖೆಯ ಧಾಟಿಯನ್ನು ಬಿಟ್ಟುಕೊಟ್ಟು ನಿಮಗೆ ಈ ಖೂನಿಯಲ್ಲಿದ್ದ ಆಸ್ಥೆಯ ನಿಜವಾದ ಕಾರಣವನ್ನು ತಿಳಿಸಿಬಿಡಿ. ಆಗ ನಿಮ್ಮ ಅಣ್ಣನ ಮಾತೆತ್ತಿದಿರಲ್ಲ-ಯಾವ ಹೆದರಿಕೆಯಿಲ್ಲದೆ ಹೇಳಿಬಿಡಿ. ನಮ್ಮಿಂದ ಯಾರಿಂದಲೂ ಏನೂ ತಿಳಿಯದೇ ಹೋಗಬಹುದು. ನಿಮ್ಮ ಮೇಲಿನ ಶಿರೀನಳ ಇಲ್ಲದ ಸಂಶಯವಾದರೂ ದೂರವಾದೀತು,’ ಎಂದೆನ್ನಬೇಕೆಂದರೆ ನೋಟದಲ್ಲಿಯ ಏನೋ ಅಡ್ಡಬರುವಂತೆ ಕಂಡಿತು. ಅವಳೂ ಅಲ್ಲಿಂದ ಹೊರಟುಹೋದಕೂಡಲೇ, ” ಹೆದರಬೇಡಿ ಕರುಣಾಕರನ್, ಈಗ ಬರುವವರ ಇದಿರಾದರೂ ನಿಮ್ಮ ತನಿಖೆಯ ಉದ್ದೇಶವನ್ನು ಯಾವ ಮುಚ್ಚುಮರೆ ಇಲ್ಲದೆ ಸ್ಪಷ್ಟಪಡಿಸಿಬಿಡಿ.” ಎಂದ. +ಅಷ್ಟುಹೊತ್ತಿಗೆ, ಶಿರೀನ್ ತನ್ನ ದುಡುಕಿನ ಸ್ವಭಾವದಿಂದಾಗಿ ಇಲ್ಲಿಗೆ ಬರುವಂತೆ ಮಾಡಿದ ಗೃಹಸ್ಥರು ಒಬ್ಬರ ಹಿಂದೊಬ್ಬರು ಸಾಲುಗಟ್ಟಿ ಇವರು ಕೂತಲ್ಲಿಗೆ ಬರತೊಡಗಿದರು. ನೆಲಕ್ಕೆ ಹಾಸಿದ ಮೊಸಾಯಿಕ್ ಟೈಲ್ಸ್ಗಳ ಮೇಲೆ ಬೂಟುಗಳ ಸದ್ದು ನಿರೀಕ್ಷೆ ಮೀರಿ ದೊಡ್ಡದಾಗಿತ್ತು. ಕರುಣಾಕರನ್ ಕಣ್ಣುಗಳನ್ನು ದೊಡ್ಡವು ಮಾಡಿ ಬಂದವರನ್ನು ನೋಡಹತ್ತಿದ: ಬಂದವರು ಮೂವರಾಗಿರಲಿಲ್ಲ, ನಾಲ್ವರಾಗಿದ್ದರು. ಐದು ಜನ ಕೂಡಬಹುದಾಗಿದ್ದ ಸೋಫಾಗಳಲ್ಲಿ ಎಲ್ಲರಿಗೂ ಜಾಗ ಸಾಲುವಂತಿರಲಿಲ್ಲ. ಬೆಹರಾಮ್ ತಾನು ಕೂತಿದ್ದ ಉದ್ದನೆಯ ಸೋಫಾದಲ್ಲಿ ಬಂದವರಲ್ಲಿಯ ಮೂವರನ್ನು ಕರುಣಾಕರನ್ ಕೂತ ಸೋಫಾದ ಮಗ್ಗುಲಲ್ಲಿಯ ಸೋಫಾದಲ್ಲಿ ನಾಲ್ಕನೆಯವನನ್ನು ಕೂಡಲು ಹೇಳಿ ಪಾರ್ವತಿಗೆ ಇನ್ನೆರಡು ಕುರ್ಚಿಗಳನ್ನು ತರಹೇಳಲು ಅಡುಗೆಯ ಮನೆಯ ಕಡೆಗೆ ನಡೆದ. ಅಲ್ಲಿ ಭೇಟಿಯಾದ ಶಿರೀನಳಿಗೆ ಕೇಳಿದ: ” ಇಷ್ಟೇನೊ? ಇಡೀ ಕೇರಿಯ ಜನವನ್ನೇ ಕರೆದಿದ್ದೀಯೊ? ಅದೂ ವ್ಯವಹಾರಜ್ಞಾನವಿಲ್ಲದ ಒಬ್ಬ ಯುವಕನ ಠಕ್ಕುತನವನ್ನು ಹೊರಗೆಡಹಲು?” ಬೆಹರಾಮ್ ತನಗಾದ ತೀವ್ರ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡಲಿಲ್ಲ. “ಪಾರ್ವತಿಗೆ ಅಲ್ಲಿ ಎರಡು ಕುರ್ಚಿ ಹಾಕಲು ಹೇಳು,” ಎಂದು ಹೇಳಿ ಸೀದ ತನ್ನ ಮಲಗುವ ಕೋಣೆಗೆ ನಡೆದ. +ಶಿರೀನ್ ಕೂಡ ಸನ್ನಿವೇಶ ತಾನು ಬಯಸಿದ್ದಕ್ಕಿಂತ ಭಿನ್ನವಾಗಿಯೆ ಬೆಳೆಯುತ್ತಿದೆಯೇನೋ ಅನ್ನಿಸಿ ಗಾಬರಿಗೊಂಡಳು. ತಾವು ಕರುಣಾಕರನ್‌ನ ಬಗ್ಗೆ ಬೆಳಿಗ್ಗೆ ಆಡಿಕೊಂಡದ್ದನ್ನು ಪಾರ್ವತಿಯಿಂದ ತಿಳಿದು ಫೋನ್ ಮಾಡಿ ಬಂದ ವ್ಯಕ್ತಿ ತಾನು ಊಹಿಸಿಕೊಂಡವನಿಗಿಂತ ಬೇರೆಯಾಗಿದ್ದ. ಅವನು ಜೊತೆಗೆ ತರುತ್ತೇನೆಂದು ಹೇಳಿದ ಇನ್ನಿಬ್ಬರು ಕೇವಲ ಇಬ್ಬರಾಗಿರಲಿಲ್ಲ, ಮೂವರಾಗಿದ್ದರು. ಇವರಲ್ಲಿಯ ಒಬ್ಬರೂ ಪರಿಚಯದವರಾಗಿರಲಿಲ್ಲ. ಗಂಟೆ ಬಾರಿಸಿ ಬಾಗಿಲಲ್ಲಿ ನಿಂತ ರೀತಿ, ಕದ ತೆರೆದದ್ದೇ ತನ್ನತ್ತ ನೋಡಿದ ರೀತಿ, ಹಾಲಿನಲ್ಲಿ ನಡೆಯುವಾಗ ಬೂಟುಗಳು ಸದ್ದುಮಾಡಿದ ರೀತಿ ಇದ್ದಕ್ಕಿದ್ದಂತೆ ಇವರು ಒಳ್ಳೆಯ ಜನವಲ್ಲ ಎಂಬ ಗುಮಾನಿಗೆ ಎಡೆಮಾಡಿಕೊಡತೊಡಗಿದುವು. ಮುದುಕನಿತ್ತ ಆದೇಶದ ಪ್ರಕಾರ ಕುರ್ಚಿಗಳನ್ನಿಟ್ಟುಬಂದ ಪಾರ್ವತಿಯಿಂದ, ಇವರಲ್ಲಿಯ ಒಬ್ಬರೂ ಅವಳ ಪರಿಚಯದವರೇ ಅಲ್ಲವೆಂದು ತಿಳಿದಮೇಲಂತೂ ತನ್ನ ಗುಮಾನಿ ನಿರಾಧಾರವಲ್ಲವೆಂಬ ಅರಿವಿನಿಂದ ಇನ್ನಷ್ಟು ಕಂಗಾಲಾಗಿಬಿಟ್ಟಳು. ಹಾಗಾದರೆ ಈಗ ಬಂದವರು ನಿಜಕ್ಕೂ ಯಾರು? ಎಂಬ ಪ್ರಶ್ನೆ ಹುಟ್ಟಿ ಬಂದಷ್ಟೇ ತ್ವರೆಯಲ್ಲಿ ಉತ್ತರವೂ ಹೊಳೆದಂತಾಯಿತು: ತಮ್ಮ ಮನೆಗೆ ಬಂದಹಾಗೆಯೇ ಈ ಹುಡುಗ ಭೇಟಿಯಿತ್ತಿರಬಹುದಾದ ಮನೆಗಳ ಈ ಗೃಹಸ್ಥರು ಈ ಕೇರಿಯವರಾಗಿಯೂ ತಾನು ಈವರೆಗೂ ಕಂಡಿರದವರಿರಬಹುದು. ಇಲ್ಲಿಯ ಮನೆಗಳ ಒಡೆತನ ಕೂಡ ಮೇಲಿಂದ ಮೇಲೆ ಬದಲಿಸುತ್ತಿರುವಂಥದ್ದು. ಬಹುಶಃ ಅಪ್ಪನ ಪರಿಚಯದವರಿರಬೇಕೆಂದು ಸಮಾಧಾನ ತಂದುಕೊಳ್ಳುವಷ್ಟರಲ್ಲಿ ಇವರಲ್ಲಿಯ ಯಾರೂ ಗೃಹಸ್ಥರಾಗಿ ಕಂಡಿರದ್ದೂ ನೆನಪಿಗೆ ಬಂದು ಕರುಣಾಕರನ್ ಸೇರಿರಬಹುದಾದ ಗ್ಯಾಂಗಿನ ಜನವಿರಬಹುದೇ ಎಂದು ಹುಟ್ಟಿದ ಸಂಶಯ ತೀರ ಸಿನೇಮಾ ತರಹದ್ದಾಗಿ ತೋರಿತು. ಬಂದವರು ಉಟ್ಟ ಧೋತಿ, ಜುಬ್ಬಾ ತರಹದ ಉದ್ದ ಅಂಗಿಗಳು, ಒಂದಿಬ್ಬರು ಹಾಕಿಕೊಂಡಿರುವಂತೆ ಹೊಳೆದ ಟೋಪಿಗಳು, ಇದೆಯೆಂದು ತೋರಿದ ಮೀಸೆ-ಅಪ್ಪ ಕರುಣಾಕರನ್ನನನ್ನು ಸಹಜಸ್ಪೂರ್ತಿಯಿಂದ ಹಂಚಿಕೊಂಡ ಬಗೆಯನ್ನು ಹಠಾತ್ತನೆ ನೆನಪಿಗೆ ತಂದವು. ಒಳಗೆಲ್ಲೋ ಏನೋ ಸಟಕ್ಕನೆ ಸಡಿಲಿಸಿಕೊಂಡಂತಹ ಅನುಭವವಾದಾಗ, ಅಸ್ಪಷ್ಟವಾಗಿಯಾದರೂ ಆಗಲೊಲ್ಲದೇಕೆ, ಅರೆಕ್ಷಣದ ಮಟ್ಟಿಗೇ ಆಗಲೊಲ್ಲದೇಕೆ, ತನ್ನಲ್ಲಿ ಮೊಳೆತ ನಿರ್ಧಾರದಿಂದ ತಾನೇ ಪುಳಕಿತಗೊಂಡಳು: ‘ ಏನೇ ಆಗಲಿ, ಕರುಣಾಕರನ್‌ಗೆ ಇವರಿಂದ ಎಳ್ಳಷ್ಟೂ ಹಾನಿಯಾಗದಹಾಗೆ ನೋಡಿಕೊಳ್ಳುತ್ತೇನೆ..’ +***** +ಮುಂದುವರೆಯುವುದು +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ […] +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_64.txt b/Kannada Sahitya/article_64.txt new file mode 100644 index 0000000000000000000000000000000000000000..2b27d99ef4f05e6afa28a77b427b17dcab62a9f6 --- /dev/null +++ b/Kannada Sahitya/article_64.txt @@ -0,0 +1,109 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹದ್ದುಗಳನ್ನು ಓಡಿಸಿದ ಬ್ರಾಹ್ಮಣರು ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, ತಮ್ಮ ಬ್ರಾಹ್ಮಣ್ಯವನ್ನೆಲ್ಲ ಗಂಟುಕಟ್ಟಿ ತನ್ನ ತಲೆಯ ಮೇಲೆ ಹೊರೆಸಿ-ಅನಾಥರಂತೆ ತನ್ನನ್ನು ನೋಡುತ್ತಿದ್ದ ಕಣ್ಣುಗಳನ್ನು ಕಂಡು ಆಚಾರ್ಯರಿಗೆ ಪಶ್ಚಾತ್ತಾಪದ ಜೊತೆಗೆ ಮಾರ್ಗದರ್ಶನ ಮಾಡಬೇಕಾದ ತನ್ನ ಜವಾಬ್ದಾರಿ, ಅಧಿಕಾರ ನಾಶವಾಗಿ ತಾನು ಸ್ವತಂತ್ರನಾದೆ ಎಂದು ಹಗುರೆನ್ನಿಸಿತು. ನಾನು ಯಾತರವ? ನಿಮ್ಮ ಹಾಗೇ ಒಬ್ಬ ಕೇವಲ ಮನುಷ್ಯ-ರಾಗ ದ್ವೇಷಯುಕ್ತವಾದಫ್ ಪ್ರಾಣಿ-ಎನ್ನಿಸಿ ಹರ್ಷವಾಯಿತು. ಇದು ವಿನಯವೇ, ಅಹಂಕಾರಭಂಗವಾದ ಲಕ್ಷಣವೇ, ತನ್ನ ಮೊದಲನೆಯ ಪಾಠವೇ-ಆಶೋದಯವಾದಂತಾಯಿತು, ’ಚಂದ್ರೀ-ಇಲ್ಲಿ ಬಾ, ಹೇಳು. ನನ್ನನ್ನು ಸಂಕೋಲೆಗಳಿಂದ ಪಾರುಮಾಡು. ಗುರುತ್ವದ ಹೊರೆ ಇಳಿಸು’ ಎಂದು ಮನಸ್ಸಿನಲ್ಲೇ ಅಂದುಕೊಂಡು ಸುತ್ತ ಹುಡುಕಿದರು. ಇಲ್ಲ-ಅವಳು ಇಲ್ಲ. ಇಲ್ಲಿ ಎಲ್ಲೂ ಇಲ್ಲ. ಊರ್ವಶಿಯ ಹಾಗೆ ನಡೆದುಬಿಟ್ಟಳು. ತಾನಾಗಿ ಬಾಯಿಬಿಟ್ಟು ಹೇಳಲು, ನಾರಣಪ್ಪ ಪಟ್ಟ ಸುಖದಲ್ಲಿ ನಾನೂ ಪಾಲು ಪಡೆದೆ ಎಂದು ಬಾಯಾರೆ ಅಂದುಬಿಡಲು ದಿಗಿಲಾಯಿತು. ಕೆ ಬೆವತು ತಣ್ಣಗಾಯಿತು. ಮನುಷ್ಯಮಾತ್ರದವನಿಗೆ ಸಹಜವಾದ ಸುಳ್ಳು ಹೇಳಬೇಕು, ಮುಚ್ಚಿಟ್ಟುಕೊಳ್ಳಬೇಕು, ಸ್ವಕ್ಷೇಮಚಿಂತನೆ ಮಾಡಿಕೊಳ್ಳಬೇಕು ಎಂಬ ಆಸೆ ಪ್ರಥಮ ಬಾರಿಗೆ ಉತ್ಪನ್ನವಾಯಿತು. ಇವರು ನನ್ನಲ್ಲಿ ಇಟ್ಟ ನಂಬಿಕೆ, ಗೌರವಗಳನ್ನು ಆಘಾತಗೊಳಿಸುವ ಧೆರ್ಯ ಒಳಗೆ ಇಲ್ಲ. ಇದು ಪಶ್ಚಾತ್ತಾಪವೋ, ಸ್ವಕ್ಷೇಮಚಿಂತನೆಯೋ, ರೂಢಿಯೋ, ತಮಸ್ಸೋ, ದಗವೋ-ಹೃದ್ಗತವಾದ ಅಭ್ಯಾಸಬಿದ್ದ ಮಂತ್ರ ಮನಸ್ಸನ್ನು ಸುಳಿಯಿತು : ’ಪಾಪೋಹಂ, ಪಾಪಕರ್ಮೋಹಂ, ಪಾಪಾತ್ಮಾ, ಪಾಪಸಂಭವಃ.’ ಇಲ್ಲ ಇಲ್ಲ, ಅದು ಕೂಡ ಸುಳ್ಳು. ಮೊದಲು ಹೃದ್ಗತವಾದ ಮಂತ್ರಗಳನ್ನೆಲ್ಲ ಮರೆಯಬೇಕು; ಬಾಲಕನಂತೆ ಜಳಜಳ ಮನಸ್ಸಿನವನಾಗಬೇಕು. ಚಂದ್ರಿಯ ಮೊಲೆಗಳನ್ನು ಹಿಸುಕುವಾಗ ಪಾಪೋಹಂ ಎಂದು ಅನಿಸಲಿಲ್ಲ. ಈಗ ಚಂದ್ರಿ ಇಲ್ಲಿ ತನ್ನ ಮಾನ ತೆಗೆಯಲು ಇಲ್ಲವೆಂದು ಸಂತೋಷವೇ ಆಗುತ್ತಿದೆ. ಎಚ್ಚೆತ್ತಮೇಲೆ ಬರುವ ಭಾವನೆ ಬೇರೆ, ಎಚ್ಚರ ತಪ್ಪಿದಾಗ ಅನ್ನಿಸುವುದು ಬೇರೆ. ಇಬ್ಬಂದಿ ಈ ಬಾಳೆಂದು ಅರಿವಾಯಿತು. ಈಗ ನಾನು ನಿಜವಾಗಿ ಕರ್ಮಚಕ್ರದಲ್ಲಿ ತೊಡಗಿದ್ದೇನೆ ಎನ್ನಿಸಿತು. ಈ ಸಂಕಟ ನಿವಾರಣೆಗೆ ಮತ್ತೆ ಅರಿವುಗೆಟ್ಟು ಅವಳನ್ನು ಅವುಚಿಕೊಬೇಕು, ಸಂಕಟದಲ್ಲಿ ಎಚ್ಚರವಾಗಬೇಕು, ನಿವಾರಣೆಗೆ ಅವಳ ಬಳಿಯೇ ಹೋಗಬೇಕು. ಚಕ್ರ, ಕರ್ಮಚಕ್ರ. ಇದು ರಜಸ್ಸು. ಕಾಮವನ್ನು ನಾನು ಬಿಟ್ಟರೂ ಕಾಮ ನನ್ನನ್ನು ಬಿಡಲಿಲ್ಲ. +ಕಸಿವಿಸಿಯಾಗಿ ಬಾಯಲ್ಲಿ ಮಾತು ಹೊರಡದೆ, ಕೂತ ಬ್ರಾಹ್ಮಣರನ್ನೆಲ್ಲ ಬಿಟ್ಟು, ದೇವರ ಕೋಣೆಗೆ ಹೋದರು. ನಾಮಸ್ಮರಣೆ ಮಾಡಿದರು-ಅಭ್ಯಾಸದಂತೆ. ನಿಜ ಹೇಳದಿದ್ದರೆ-ಮಡಿಲಿನಲ್ಲಿ ಕಟ್ಟಿಕೊಂಡ ಕೆಂಡದಂತುರಿದರೆ…. ಇನ್ನು ಮುಂದೆ ನಾನೆಂದೂ ಮಾರುತಿಯ ಮುಖ ನೋಡಲಾರೆ, ನಿಷ್ಕಲ್ಮಷ ಮನಸ್ಸಿನಿಂದ ರೋಗಗ್ರಸ್ತಳನ್ನು ಉಪಚರಿಸಲಾರೆ, ದೇವರೇ, ಈ ತಳಮಳದಿಂದ ಪಾರುಮಾಡಪ್ಪ, ಚಂದ್ರಿ ಬಂದಿದ್ದಾಳೋ, ಹೇಳಿಬಿಡುತ್ತಾಳೋ-ಎಂದು ಕಾತರದಿಂದ, ಭಯದಿಂದ ಹೊರಗೆ ಬಂದರು. ಬ್ರಾಹ್ಮಣರು ಕಾದೇ ಇದ್ದರು. ಮತ್ತೆ ರಣಹದ್ದುಗಳು ಬಂದು ಮನೆಗಳ ಮೇಲೆ ಕೂತಿದ್ದವು. ಆಚಾರ್ಯರು ಕಣ್ಣು ಮುಚ್ಚಿ ಉಸಿರೆಳೆದು ಧೆರ್ಯ ತಂದುಕೊಂಡರು. ಆದರೆ ಹೊರಟ ಮಾತು ಮಾತ್ರ : +“ನಾನು ಸೋತೆ, ಮಾರುತಿಯ ಅಪ್ಪಣೆ ದೊರೆಯಲಿಲ್ಲ. ನನಗೆ ಏನೂ ತಿಳಿಯದು. ಈಗ ನೀವು ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ.” +ಬ್ರಾಹ್ಮಣರೆಲ್ಲರೂ ಅವಾಕ್ಕಾಗಿ ’ಹಾ’ ಎಂದರು. ’ಛೆ ಛೆ’ ಎಂದ ಗರುಡಾಚಾರ್ಯ. ಹಿಂದಿನ ದಿನ ಹೊಟ್ಟೆ ತುಂಬ ಉಂಡಿದ್ದರಿಂದ ಸ್ವಲ್ಪ ಜೀವವಿದ್ದ ದಾಸಾಚಾರ್ಯ ಹೇಳಿದ : +“ಏನು ಮಾಡೋಣ ಹಾಗಾದರೆ? ಕೆಮರದ ಅಗ್ರಹಾರಕ್ಕೆ ಹೋಗುವ. ಅಲ್ಲಿ ಪಂಡಿತ ಸುಬ್ಬಣ್ಣಾಚಾರ್ಯರನ್ನು ಕೇಳಿ ನೋಡುವ. ನಮ್ಮ ಆಚಾರ್ಯರಿಗೆ ತಿಳಿಯದಿದ್ದುದು ಅವರಿಗೆ ತಿಳಿಯುತ್ತೆ ಎಂದಲ್ಲ. ಅವರಿಗೂ ತಿಳಿಯದೇ ಹೋದ ಪಕ್ಷದಲ್ಲಿ ನಡೆದು ಸೀದ ಮಠಕ್ಕೆ ಹೋಗಿ ಸ್ವಾಮಿಗಳನ್ನೇ ಕೇಳಿಬಿಡುವ. ಈ ದುರ್ನಾತದಲ್ಲಿ ಶವಾನ್ನ ಇಟ್ಟುಕೊಂಡು ಊಟ ಉಪಾಹಾರವಿಲ್ಲದೆ ಅಗ್ರಹಾರದಲ್ಲಿ ಬಿದ್ದಿರಲಿಕ್ಕಾಗುತ್ತದ? ಗುರುದರ್ಶನವಾದ ಹಾಗೂ ಆಯಿತು. ಅಲ್ಲದೆ ತ್ರಯೋದಶಿ ದಿನ ಮಠದಲ್ಲಿ ಆರಾಧನೆ ಬೇರೆ ಇದೆ. ಏನೂಂತೀರ? ಕೆಮರಕ್ಕೆ ನಡೆದು ಯಜ್ಞೋಪವೀತ ಬದಲಾಯಿಸುವ. ಅಲ್ಲಿ ಬ್ರಾಹ್ಮಣರು ಊಟಕ್ಕೇಳಿ ಎನ್ನದೇ ಇರುತ್ತಾರ? ಹೆಣವಿರುವ ಅಗ್ರಹಾರದಲ್ಲಿ ಊಟಮಾಡಬಾರದೆಂದು ನಿಯಮವೇ ಹೊರತು ಕೆಮರದಲ್ಲಿ ಏನು ದೋಷ? ಏನೂಂತೀರ?” +ಎಲ್ಲ ಬ್ರಾಹ್ಮಣರೂ ಸರಿ ಸರಿ ಎಂದು ಒಪ್ಪಿದರು. ಲಕ್ಷ್ಮಣಾಚಾರ್ಯ ನೆನೆಸಿಕೊಂಡ : ಕೆಮರದಲ್ಲಿ ವೆಂಕಣ್ಣಾಚಾರ್ಯ ಒಂದು ನೂರು ದೊನ್ನೆ ಒಂದು ಸಾವಿರ ಒಣಗಿದೆಲೆ ಬೇಕು ಎಂದಿದ್ದ. ತೆಗೆದುಕೊಂಡು ಹೋಗಿ ಕೊಟ್ಟ ಹಾಗೂ ಆಯಿತು. ಗರುಡಾಚಾರ್ಯನಿಗೂ ಶ್ರೀಗುರುಗಳ ಹತ್ತಿರ ಸ್ವಲ್ಪ ವ್ಯವಹಾರದ ಮಾತೂ ಇತ್ತು. ಪ್ರಾಣೇಶಾಚಾರ್ಯರಿಗೆ ಈ ಸೂಚನೆಯಿಂದ ದೊಡ್ಡದೊಂದು ಭಾರ ಇಳಿದು ಆಯಾಸ ಪರಿಹಾರವಾದಂತಾಯಿತು. +ದಾಸಾಚಾರ್ಯ ತನ್ನ ಮಾತನ್ನು ಎಲ್ಲರೂ ಒಪ್ಪಿದ್ದು ಕಂಡು ಪರಮ ಹರ್ಷಿತನಾಗಿ ಎಂದ : +“ಮೂರು ದಿನವಾದರೂ ನಾವು ಅಗ್ರಹಾರ ಬಿಟ್ಟಿರಬೇಕಾಗುತ್ತೆ. ಹೆಂಗಸರು ಮಕ್ಕಳ ಗತಿ ಏನು. ಸದ್ಯಕ್ಕೆ ಅವರನ್ನು ತೌರಿಗೆ ಕಳಿಸುವ?” +ಇದಕ್ಕೆ ಎಲ್ಲರೂ ಒಪ್ಪಿದರು. +ಅಧ್ಯಾಯ : ನಾಲ್ಕು +ಮನೆಗೆ ಮರಳಿದ ದುರ್ಗಾಭಟ್ಟ ಈ ಮಾಧ್ವ ಮುಂಡೇಗಂಡರ ಸಹವಾಸದಲ್ಲಿ ಕೆಟ್ಟೆನೆಂದುಕೊಂಡು, ಗಾಡಿ ಕಟ್ಟಿಸಿ, ಹೆಂಡತಿಮಕ್ಕಳ ಜೊತೆ ಅವನ ಅತ್ತೆಯ ಊರಿಗೆ ಹೋಗಿಬಿಟ್ಟ. ಲಕ್ಷ್ಮಣಾಚಾರ್ಯ ಬಾಳೆಲೆ ದೊನ್ನೆಗಳನ್ನು ಕಟ್ಟಿಕೊಂಡು, ದಾಸಾಚಾರ್ಯ ದಾರಿಗೆಂದು ಅರಳು ಕಟ್ಟಿಕೊಂಡು, ಹೆಂಗಸರು ಮಕ್ಕಳನ್ನು ತೌರಿಗೆಂದು ಎಬ್ಬಿಸಿ, ಲಕ್ಷ್ಮೀದೇವಮ್ಮನನ್ನು ಲಕ್ಷ್ಮಣನ ಅತ್ತೆಯ ಮನೆಗೆ ಹೊರಡಿಸಿ, ಬ್ರಾಹ್ಮಣರೆಲ್ಲರೂ ಪ್ರಾಣೇಶಾಚಾರ್ಯರ ಜಗುಲಿ ಸೇರುವ ವೇಳೆಗೆ ಆಚಾರ್ಯರ ಹೆಂಡತಿ ಮುಟ್ಟಾಗಿ ಬಿಟ್ಟಿದ್ದಳು. “ಹಾಸಿಗೆ ಹಿಡಿದವಳನ್ನು ನಾನು ಬಿಟ್ಟು ಬರುವಂತಿಲ್ಲ, ನೀವು ಹೋಗಿ” ಎಂದರು ಆಚಾರ್ಯರು. ಸರಿ ಎಂದು ಬ್ರಾಹ್ಮಣರು ಹೊರಬಂದು, ಮನೆಗಳ ಮೇಲೆ ಕೂತ ಹದ್ದುಗಳನ್ನು ಲೆಕ್ಕಿಸದೆ ಆತುರವಾಗಿ ಕೆಮರದ ಮಾರ್ಗದಲ್ಲಿ ನಡೆದುಬಿಟ್ಟರು. +ಕೆಮರ ಸೇರುವಾಗ ಮಧ್ಯಾಹ್ನದ ಧಗೆ ಆರಿ ಸಂಜೆಯಾಗಿತ್ತು. ಸ್ನಾನಮಾಡಿ, ಯಜ್ಞೋಪವೀತ ಬದಲಾಯಿಸಿ, ಗೋಪಿಚಂದನಗಳನ್ನು ಧರಿಸಿ ಸುಬ್ಬಣ್ಣಾಚಾರ್ಯರ ಜಗುಲಿಯ ಮೇಲೆ ಕೂತರು. ಮೊದಲು ಊಟವಾಗಲಿ ಎಂದರು ಪಂಡಿತರು. ಅದೇ ಸೂಚನೆಗೆಂದು ಕಾದ ಬ್ರಾಹ್ಮಣರು ಬಿಸಿ ಬಿಸಿ ಅನ್ನಸಾರನ್ನು ಒಳಗಿನ ಪರಮಾತ್ಮನಿಗೆ ತಾಗುವಂತೆ ಸುರಿದು, ಹಿತವಾದ ಆಯಾಸದಲ್ಲಿ ಸುಬ್ಬಣ್ಣಾಚಾರ್ಯರ ಸುತ್ತ ನೆರೆದರು. ಸುಬ್ಬಣ್ಣಾಚಾರ್ಯರು ಜ್ಯೋತಿಷಿಗಳಾದ್ದರಿಂದ ನಾರಣಪ್ಪ ಸತ್ತ ವೇಳೆ ಅಮೃತವೋ ವಿಷವೋ ಎಂದು ತಿಳಿದರೆ ಸಂಸ್ಕಾರದ ಅರ್ಹತೆ ಅನರ್ಹತೆಯ ಬಗ್ಗೆ ಹೊಳೆಯಬಹುದೆಂದು, ಕನ್ನಡಕ ಧರಿಸಿ ಪಂಚಾಂಗ ನೋಡಿ, ಕವಡೆಗಳನ್ನು ಎಣಿಸಿ-“ವಿಷ” ಎಂದರು, ’ಪ್ರಾಣೇಶಾಚಾರ್ಯರಿಗೆ ತಿಳಿಯದಿದ್ದನ್ನು ನಾನು ಹೇಗೆ ಹೇಳಲಿ’ ಎಂದು ತಲೆಯಾಡಿಸಿದರು. ದಾಸಾಚಾರ್ಯನಿಗೆ ಇದರಿಂದ ಸಂತೋಷವೇ ಆಯಿತು; ಹೊರಟವರು ಹಾಗೆ, ಮಠಕ್ಕೂ ಹೋಗಿ ಆರಾಧನೆಯ ಪ್ರಸಾದ ಸ್ವೀಕರಿಸಿ ಬಂದುಬಿಡಬಹುದಲ್ಲ ಎಂದು. +“ಕತ್ತಲೆಯಾಯಿತಲ್ಲ. ಇವತ್ತು ರಾತ್ರೆ ಇಲ್ಲೇ ತಂಗಿ, ನಸುಕಿನಲ್ಲೆದ್ದು ಮುಂದೆ ಹೊರಡಿ-” ಎಂದು ಕೆಮರದವರು ಮಾಡಿದ ಉಪಚಾರಕ್ಕೆ ಬ್ರಾಹ್ಮಣರು ಬೇಡವೆನ್ನಲಿಲ್ಲ. ಆದರೆ ನಸುಕಿನಲ್ಲೆದ್ದಾಗ ದಾಸಾಚಾರ್ಯ ಜ್ವರ ಬಂದು ಹಾಸಿಗೆ ಹಿಡಿದಿದ್ದ. ಎಬ್ಬಿಸಹೋದರೆ ಅವನಿಗೆ ಧ್ಯಾಸವೇ ಇರಲಿಲ್ಲ. ತುಂಬ ಉಂಡು ಅಜೀರ್ಣವಾಗಿರಬೇಕೆಂದು ಗರುಡಾಚಾರ್ಯ ಸಮಾಧಾನ ಹೇಳಿದ. ಪಾಪ! ಅವನಿಗೆ ಆರಾಧನೆಯ ಊಟ ತಪ್ಪಿತಲ್ಲ ಎಂದು ಬಡ ಬ್ರಾಹ್ಮಣರು ಕೊರಗಿದರು. ಅವಸರವಾಗಿ ಎದ್ದು ಮುಖ ತೊಳೆದು ಅವಲಕ್ಕಿ-ಮೊಸರು ತಿಂದು, ನಿಧಾನವಾಗಿ ಇಪ್ಪತ್ತು ಮೆಲಿ ನಡೆದು ಕತ್ತಲಾಗುವ ಹೊತ್ತಿಗೆ ಇನ್ನೊಂದು ಅಗ್ರಹಾರವನ್ನು ತಲ್ಪಿದರು. ಅವತ್ತು ರಾತ್ರೆ ಅಲ್ಲೇ ಊಟಮಾಡಿ ನಸುಕಿನಲ್ಲೆದ್ದಾಗ ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ. ನಡೆದ ಆಯಾಸವಿರಬೇಕೆಂದು ಅವನನ್ನು ಅಲ್ಲೇ ಬಿಟ್ಟು ಮತ್ತೆ ಹತ್ತು ಮೆಲಿ ನಡೆದು ಮಠವನ್ನು ತಲ್ಪುವಾಗ ಮಧ್ಯಾಹ್ನದ ಪೂಜೆಗೆ ನಗಾರಿ ಬಾರಿಸುತ್ತಿತ್ತು. +ಅಧ್ಯಾಯ : ಐದು +ಹಾಸಿಗೆ ಹಿಡಿದು ಜ್ವರ ಬಂದು ಬಹಿಷ್ಠೆಯಾದ ಹೆಂಡತಿಯನ್ನು ಬಿಟ್ಟರೆ, ಹದ್ದು, ಕಾಗೆಗಳನ್ನುಳಿದು ನರಪ್ರಾಣಿ ಕಣ್ಣಿಗೆ ಬೀಳದಿದ್ದ ಅಗ್ರಹಾರದಲ್ಲಿ ಪ್ರಾಣೇಶಾಚಾರ್ಯರು ಒಬ್ಬರೇ ಉಳಿದರು. ಪೂಜೆಪುನಸ್ಕಾರಾದಿ ಕರ್ಮಗಳು ನಿಂತು ಭಣಗುಟ್ಟುವ ಭಯಂಕರ ಶೂನ್ಯ ಕವಿದುಬಿಟ್ಟಿತ್ತು. ಮೂಗಿಗೆ ಅಡರಿ ಪ್ರಾಣಸ್ಥವಾಗಿ ನಿಂತ ದುರ್ವಾಸನೆ, ಮನೆಮನೆಗೂ ಕೂತ ಹದ್ದುಗಳು ನಾರಣಪ್ಪನ ಶವವನ್ನು ಮರೆಯಲು ಬಿಡದಂತೆ ಕಾಡಿದವು. ದೇವರ ಕೋಣೆಗೆ ಹೋದ ಪ್ರಾಣೇಶಾಚಾರ್ಯರು-ಇಲಿಯೊಂದು ಬಂದು ಅಪ್ರದಕ್ಷಿಣೆ ಸುತ್ತಿ ಅಂಗಾತ್ತನೆ ಬಿದ್ದು ನಿಶ್ಚೇಷ್ಟಿತವಾದ್ದನ್ನು ಕಂಡು, ಹೇಸಿ, ಬಾಲದಿಂದೆತ್ತಿ ಹದ್ದಿಗೆ ಹಾಕಿ ಬಂದರು. ಒಳಗೆ ಬಂದರೆ ಕಾಗೆಹದ್ದುಗಳ ಕರ್ಕಶ ಗದ್ದಲಕ್ಕೆ ಭೀತರಾಗಿ ಹೊರಬಂದರು. ಮಧ್ಯಾಹ್ನದ ಯಮಮೌನದ ಬಿಸಿಲಿಗೆ ಕಣ್ಣನ್ನು ಮೇಲೆತ್ತಲಾರದೆ ’ಹು, ಹು’ ಎಂದು ಬರಿದೇ ಕೂಗಿಕೊಂಡರು. ಹೊಟ್ಟೆಯ ಸಂಕಟ ತಡೆಯಲಾರದೆ ಪೇಚಾಡಿ, ಧೋತ್ರದಲ್ಲಷ್ಟು ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಸ್ನಾನಮಾಡಿ, ಹೊಳೆ ದಾಟಿ, ಮರದ ನೆರಳಿನಲ್ಲಿ ಕೂತು ತಿಂದರು. ನೆಮ್ಮದಿಯಾಯಿತು. ಚಂದ್ರಿ ತನ್ನ ಮಡಿಲಿನ ಹಣ್ಣನ್ನು ತಿನ್ನಿಸಿದ ಕತ್ತಲಿನ ನೆನಪಾಯಿತು. +ಆಗ ತಾನು ಅವಳನ್ನು ಮುಟ್ಟಿದ್ದು ಪಶ್ಚಾತ್ತಾಪದಿಂದಲೋ? – ಅನುಮಾನವಾಯಿತು. ಪಶ್ಚಾತ್ತಾಪದ, ಮರುಕದ ರೂಪತಾಳಿ ನನ್ನನ್ನು ಇಷ್ಟು ದಿನ ನಡೆಸಿಕೊಂಡು ಬಂದಿದ್ದ ಧರ್ಮ, ಪಳಗಿಸಿಟ್ಟ ಹುಲಿಯಂತಹ ಕಾಮ ಇದ್ದಿರಬೇಕು-ಅಷ್ಟೆ. ಚಂದ್ರಿಯ ಮೊಲೆ ತಾಗಿದಾಕ್ಷಣ ಚಂಗನೆ ಸ್ವಧರ್ಮಕ್ಕೆ ನೆಗೆದು ಹಲ್ಲು ತೋರಿಸಿಬಿಟ್ಟಿತು. ನಾರಣಪ್ಪ ಹೇಳಿದ ಮಾತು ನೆನಪಾಯಿತು : ’ಗೆಲ್ಲುವುದು ನಾನೊ ನೀವೊ ನೋಡುವ… ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ’…ನಮ್ಮ ಕರ್ಮಕ್ಕೆಲ್ಲ ತದ್ವಿರುದ್ಧ ಫಲ ದೊರೆಯುತ್ತದೆಂಬುದಕ್ಕೊಂದು ಕತೆ ಹೇಳಿದ್ದ. ನಾನು ಶಾಕುಂತಳ ಓದಿದಾಗ ಅವನು ಅಂದ ಹಾಗೇ ಆಗಿರಬೇಕು. ನಾರಣಪ್ಪನಿಂದಲ್ಲ-ನನ್ನ ಹಟದಿಂದ, ನನ್ನ ಕರ್ಮದಿಂದ ಈ ಅಗ್ರಹಾರದ ಬಾಳು ಬುಡಮೇಲಾಗಿಬಿಟ್ಟಿರಬಹುದು. ಯಾವ ಯುವಕ ಹಾಗೆ ನದಿಗೆ ಹೋಗಿ ಹೊಲತಿಯೊಬ್ಬಳನ್ನು ತಬ್ಬಿಕೊಂಡಿದ್ದಿರಬಹುದು? ನನ್ನ ವರ್ಣನೆ ಕೇಳಿ? ಶಕುಂತಳೆಯನ್ನು ಮನಸ್ಸಿಗೆ ತರುವಂತಹ ಹೊಲೆಯರ ಹುಡುಗಿ ಯಾರಿದ್ದಿರಬಹುದು? ಆಚಾರ್ಯರ ಕಲ್ಪನೆ-ಮೊದಲ ಬಾರಿಗೆ-ತಾನೆಂದೂ ಗಮನಿಸದಿದ್ದ ಅಸ್ಪೃಶ್ಯ ಹುಡುಗಿಯರನ್ನೆಲ್ಲ ಎಳೆದು ತಂದು ನಿರ್ವಸ್ತ್ರಗೊಳಿಸಿ ನೋಡಿತು. ಯಾರು? ಯಾರು? ಬೆಳ್ಳಿ? ಹೌದು ಬೆಳ್ಳಿ. ತಾನು ಹಿಂದೆಂದೂ ಲೆಖ್ಖಕ್ಕೆ ತಾರದ ಅವಳ ಮಣ್ಣಿನ ಬಣ್ಣದ ಮೊಲೆಗಳ ಕಲ್ಪನೆಯಾಗಿ ಮೆ ಜುಮ್ಮೆಂದಿತು. ತನ್ನ ಕಲ್ಪನೆಗೆ ತಾನೇ ಕಂಗಾಲಾದರು. ನಾರಣಪ್ಪ ಗೇಲಿಗೆ ಹೇಳಿದ್ದ : ಬ್ರಾಹ್ಮಣ್ಯ ಉಳಿಯಲು ವೇದ ಪುರಾಣಗಳನ್ನು ಅರ್ಥ ತಿಳಿಯದೆ ಓದಬೇಕು ಅಂತ. ತನ್ನಲ್ಲಿದ್ದ ಮರುಕದಲ್ಲಿ, ಜ್ಞಾನದಲ್ಲಿ ಉಳಿದ ಬ್ರಾಹ್ಮಣರ ಮೌಢ್ಯದಲ್ಲಿರದಂತಹ ಒಂದು ಸಿಡಿಯುವ ಕಿಡಿ ಹುದುಗಿದ್ದಿರಬೇಕು. ಈಗ ಚಂಗನೆ ಪಳಗಿಸಿಟ್ಟ ಹುಲಿ ನೆಗೆದು ಹಲ್ಲು ತೋರಿಸುತ್ತಿದೆ- +ಬೆಳ್ಳಿಯ ಮೊಲೆಗಳನ್ನೂ ಹೋಗಿ ಮೃದುವಾಗಿ ಅಮುಕಬೇಕೆನ್ನಿಸುತ್ತಿದೆ. ಅನುಭವಕ್ಕಾಗಿ ದಾಹವಾಗುತ್ತಿದೆ. ಇಷ್ಟು ದಿನ ತಾನು ಬದುಕಲೇ ಇಲ್ಲ : ಮಾಡಿದ್ದನ್ನೆ ಮಾಡಿಕೊಂಡಿದ್ದು, ಹೇಳಿದ ಗಾಯತ್ರಿಯನ್ನೇ ಹೇಳಿಕೊಂಡಿದ್ದು, ನಿರನುಭವಿಯಾಗಿ ಉಳಿದುಬಿಟ್ಟೆ. ಅನುಭವ ಎಂದರೆ ಆಘಾತ. ಇರದೇ ಇದ್ದುದೊಂದು ಕತ್ತಲಿನಲ್ಲಿ, ಕಾಡಿನಲ್ಲಿ ನಿರಪೇಕ್ಷಿತವಾಗಿ ಬಂದು ಸೇರಿಕೊಳ್ಳೋದು. ಬಯಸಿದ್ದು ಕೆಗೂಡೋದು ಪರಮ ಅನುಭವಾಂತ ತಿಳಿದಿದ್ದೆ : ನಾವು ಕಾಣದಿದ್ದುದು ನಮ್ಮ ಜೀವಕ್ಕೆ ಮೊಲೆಗಳಂತೆ ಒಡ್ಡಿ ಬಂದು ಹೊಕ್ಕುಬಿಡೋದು ಅನುಭವಾಂತ ಈಗ ಅನ್ನಿಸುತ್ತೆ. ನನಗೆ ಹೆಣ್ಣಿನ ಸ್ಪರ್ಶವಾದಂತೆ ನಾರಣಪ್ಪನಿಗೆ ಕತ್ತಲಿನಲ್ಲಿ ನಿರಪೇಕ್ಷಿತವಾಗಿ ಪರಮಾತ್ಮಸ್ಪರ್ಶವಾಗಿದ್ದರೆ-ಬಿದ್ದ ಮಳೆಗೆ ಮೃದುವಾಗಿ, ಒತ್ತಿದ ಮಣ್ಣಿಗೆ ಪುಳಕಿತವಾಗಿ ಓಟೆ ಒಡೆದು ಸಸಿಯಾಗುತ್ತದೆ : ಹಟ ಮಾಡಿದರೆ ಗೊರಟವಾಗಿ ಒಣಗುತ್ತದೆ. ನಾರಣಪ್ಪ ಹಟದ ಗೊರಟವಾಗಿದ್ದು ಈಗ ಸತ್ತು ನಾರುತ್ತಿದ್ದಾನೆ. ಚಂದ್ರಿಯನ್ನು ಮುಟ್ಟುವ ವರೆಗೆ ನಾನು ಅವನಿಗೆ ’ಪ್ರತಿಹಟ’ದ ಗೊರಟವಾಗಿ ಉಳಿದೆ…ನಾನು ಕಾಮಾನ್ನ ಬಿಟ್ಟರೂ ಕಾಮ ನನ್ನನ್ನು ಬಿಡದಷ್ಟೇ ಸಹಜವಾಗಿ ಯಾಕೆ ಪರಮಾತ್ಮ ನಮ್ಮನ್ನು ಬಂದು ಮುಟ್ಟಿಬಿಡಬಾರದು? +ಈಗ ಚಂದ್ರಿ ಎಲ್ಲಿ? ನನಗೆ ಕಷ್ಟವಾಗಬಾರದೆಂದು ಶವದ ಜೊತೆ ಹೋಗಿ ಕೂತುಬಿಟ್ಟಳೋ, ಆ ದುರ್ನಾತವನ್ನು ಹೇಗೆ ಸಹಿಸುವಳೋ-ಕಳವಳವಾಯಿತು. ಹೊಳೆಯ ನೀರಿಗೆ ಬಿದ್ದು ಈಜಿದರು. ಇಲ್ಲೆ, ಹೀಗೆ, ಈಜುತ್ತ ಇದ್ದುಬಿಡುವ ಎನ್ನಿಸಿತು. ತಾಯಿಯ ಕಣ್ಣು ತಪ್ಪಿಸಿ ಹೊಳೆಯಲ್ಲೀಜಲು ತಾನು ಬಾಲಕನಾಗಿದ್ದಾಗ ಓಡುತ್ತಿದ್ದ ದಿನಗಳು ನೆನಪಾದುವು. ಎಷ್ಟು ವರ್ಷಗಳ ನಂತರ ನನ್ನ ಬಾಲ್ಯದ ಆಸೆ ಹೀಗೆ ಮರುಕಳಿಸುಬಿಟ್ಟಿತಲ್ಲ ಎಂದು ಆಶ್ಚರ್ಯವಾಯಿತು. ತಾಯಿಗೆ ತಿಳಿಯದಿರಲೆಂದು ಈಜಿ, ಮರಳಿನಲ್ಲಿ ಮಲಗಿ ಮೆಯೊಣಗಿಸಿಕೊಂಡು ಹೋಗುತ್ತಿದ್ದೆ. ತಣ್ಣೀರಿನಲ್ಲಿ ಈಸಿದ ನಂತರ ಕಾದ ಮರಳಿನಲ್ಲಿ ಹೊರಳುವುದಕ್ಕೆ ಸಮನಾದ ಸುಖ ಇನ್ನೆಲ್ಲಿದೆ? ಅಗ್ರಹಾರಕ್ಕೆ ಮರಳಲು ಮನಸ್ಸಾಗಲಿಲ್ಲ. ದಡಕ್ಕೆದ್ದು ಬಂದು ಮರಳಿನಲ್ಲಿ ಮಲಗಿದರು. ಮಧ್ಯಾಹ್ನದ ಧಗೆಗೆ ಕ್ಷಣದಲ್ಲಿ ಮೆ ಆರಿ ಬೆನ್ನು ಸುಡಹತ್ತಿತು. +ಥಟ್ಟನೊಂದು ಹೊಳೆದು ಎದ್ದರು. ಮಣ್ಣಿಗೆ ಮೂಗಿಟ್ಟು ನಡೆಯುವ ಮೃಗದಂತೆ ತಾನು ಚಂದ್ರಿಯನ್ನು ಕೂಡಿದ ಕಾಡು ಹೊಕ್ಕರು. ಹಾಡು ಹಗಲಿನಲ್ಲೂ ಮಬ್ಬು ಮಬ್ಬು. ಜೀರ್ರೆನುವ ಕತ್ತಲು ಮೊಟ್ಟುಪೊದೆಗಳಲ್ಲಿ, ತನ್ನ ಬಾಳು ಹೊರಳಿಕೊಂಡ ಜಾಗದಲ್ಲಿ-ಅಂತಃಪ್ರೇರಣೆಯಿಂದೆಂಬಂತೆ-ಬಂದು ನಿಂತರು. ಹಸಿರಾದ ಹುಲ್ಲಿನ ಮೇಲೆ ಒತ್ತಿದ ಮೆಯ ಆಕಾರ ಇನ್ನೂ ಉಳಿದಿತ್ತು. ಕೂತರು. ಮಂಕಾದವರಂತೆ ಹುಲ್ಲಿನ ಗರಿಕೆಗಳನ್ನು ಕಿತ್ತು ಮೂಸಿನೋಡಿದರು. ಅಸಹ್ಯವಾಗಿ ನಾರುವ ಅಗ್ರಹಾರದಿಂದ ಬಂದವರಿಗೆ ಮೃದು ಹಸಿಮಣ್ಣು ಹತ್ತಿಕೊಂಡ ಹುಲ್ಲಿನ ಬೇರಿನ ವಾಸನೆ ಚಟದಂತೆ ಕಾಡಿತು. ನೆಲವನ್ನು ಹೆಕ್ಕುವ ಕೋಳಿಯಂತೆ ಕೆಗೆ ಸಿಕ್ಕಿದ್ದನ್ನು ಕಿತ್ತು ಕಿತ್ತು ಮೂಸಿದರು. ಹೀಗೆ ಮರದ ನೆರಳಿನಲ್ಲಿ ತಂಪಾಗಿ ಕೂತಿರುವುದೇ ಒಂದು ಪುರುಷಾರ್ಥವೆನ್ನಿಸಿತು. ಇದ್ದುಬಿಡುವುದು. ಹುಲ್ಲಿಗೆ, ಹಸಿರಿಗೆ, ಹೂವಿಗೆ, ನೋವಿಗೆ, ಬಿಸಿಲಿಗೆ, ತಂಪಿಗೆ ಚುರುಕಾಗಿ ಇದ್ದುಬಿಡುವುದು. ಕಾಮ ಪುರುಷಾರ್ಥಗಳೆರಡನ್ನೂ ಸರಿಸಿಬಿಟ್ಟು-ಉದ್ಬಾಹುವಿನಂತೆ ನೆಗೆಯುತ್ತಿರದೆ-ಬರಿದೇ ಇದ್ದುಬಿಡುವುದು. ’ಇಕೊ’ ಎಂದು ಅವ್ಯಕ್ತದಿಂದ ಬಂದದ್ದನ್ನ ಕೃತಜ್ಞತೆಯಿಂದ ಸ್ವೀಕರಿಸುವುದು. ಧರೆ ಹತ್ತುವ ಪರದಾಟ ಬೇಡ. ಕೆಗೊಂದು ಸುಗಂಧಿ ಸಸಿ ತಾಗಿತು. ಎಳೆದರು. ಭದ್ರವಾಗಿ ಬೇರು ನೆಟ್ಟು ನೀಳಬಳ್ಳಿಯಾದ ಸುಗಂಧಿ ಜಗ್ಗಲಿಲ್ಲ. ಹುಲ್ಲಿನಂತಲ್ಲದೆ, ಹುದುಲು ಹಸಿ ಮಣ್ಣಿನಾಚೆ ಗಟ್ಟಿನೆಲದಲ್ಲಿ ಅದರ ಚೂಪು ಚುರುಕು ಬೇರು ನೆಟ್ಟಿತ್ತು. ಎದ್ದುಕೂತು ಎರಡು ಕೆಯಲ್ಲೂ ಜಗ್ಗಿದರು. ತಾಯಿಬೇರು ಅರ್ಧ ಕಡಿದುಕೊಂಡು ಬಳ್ಳಿಯಾಗಿ ಬೆಳೆದ ಸುಗಂಧಿ ಕೆಗೆ ಬಂತು. ಮೂಸಿದರು. ದೀರ್ಘವಾಗಿ ಉಸಿರನ್ನೆಳೆದುಕೊಳ್ಳುತ್ತ ಬೇರನ್ನು ಮೂಸಿದರು. ಮಣ್ಣು ಮತ್ತು ಆಕಾಶದ, ತಂಪು ಮತ್ತು ಬಿಸಿಲಿನ ಎಣೆಯಾಗಿ, ಗಂಟಾಗಿ, ನೆಂಟಾಗಿ ಸುಗಂಧಿಯ ಬೇರು ಪಡೆದ ವಾಸನೆ ಪಂಚಪ್ರಾಣಕ್ಕಿಳಿಯಿತು. ಆಸೆಬುರುಕನಂತೆ ಮೂಸುತ್ತಲೇ ಕೂತರು. ಸುಗಂಧ ಮೂಗಿನಲ್ಲಿ ನಿಂತು, ಸುವಾಸನೆ ಪ್ರಾಣಗತವಾಗಿ, ಪರಿಮಳದ ಅನುಭವ ಮಾಯವಾಗಿ ಅತೃಪ್ತಿಯಾಯಿತು. ಬೇರನ್ನು ಮೂಗಿನಿಂದ ದೂರವಿಟ್ಟು, ಕಾಡಿನ ವಾಸನೆಯನ್ನು ಆಘ್ರಾಣಿಸುತ್ತಿದ್ದು, ಮತ್ತೆ ನವ್ಯವಾದ ಸುಗಂಧಿಯನ್ನು ಮೂಸಿದರು. ಎದ್ದು ಕಾಡು ಬಿಟ್ಟು ಹೊರಗೆ ಬಂದು, ನೆರಳಿನಲ್ಲಿ ನೀಲಮಣಿಗಳಾದ ವಿಷ್ಣುಕಾಂತಿಯ ತುಣುಕುಮಿಣುಕುಗಳನ್ನು-ನೋಡುವುದೇ ಪರಮೆಶ್ವರ್ಯವೆನ್ನುವಂತೆ-ನೋಡುತ್ತಾ ನಿಂತರು. ತಿರುಗಿ ಹೊಳೆಯಲ್ಲಿಳಿದು ಈಜಿದರು. ಕಂಠದವರೆಗೆ ನೀರಿರುವ ಮಡುವಿನಲ್ಲಿ ಬಂದು ನಿಂತರು. ಮೀನುಗಳು ಮುತ್ತಿ ಕಚಕುಳಿಯ ಅವರ ಕಾಲುಬೆರಳಿನ ಸಂದಿಗಳನ್ನು, ಕಂಕುಳನ್ನು ಪಕ್ಕೆಗಳನ್ನು ಚುಚ್ಚಿದುವು. ಪ್ರಾಣೇಶಾಚಾರ್ಯರು ಅಹಹಾ ಎನ್ನುತ್ತ ಕಚಕುಳಿಗೆ ಓಡುವ ಬಾಲಕನಂತೆ ನೀರಿಗೆ ಈಸುಬಿದ್ದು, ದಡ ಸೇರಿ, ಬಿಸಿಲಿನಲ್ಲಿ ನಿಂತು ಒಣಗಿಸಿಕೊಂಡರು. ಹೆಂಡತಿಗೆ ಗಂಜಿ ಕೊಡುವ ಹೊತ್ತಾಯಿತೆಂದು ಅರಿವಾಗಿ ಬೇಗ ಬೇಗ ನಡೆದು ಅಗ್ರಹಾರಕ್ಕೆ ಬಂದರು. +ಥಟ್ಟನೆ ಕಾಗೆ ರಣಹದ್ದುಗಳನ್ನು ಕಂಡು ಕಪಾಳಕ್ಕೆ ಫಟೀರನೆ ಏಟು ಬಿದ್ದಂತಾಯಿತು. ಮನೆಗೆ ಬಂದು ನೋಡಿದರೆ ಹೆಂಡತಿಯ ಮುಖ ಕೆಂಪಾಗಿ ಕುದಿಯುತ್ತಿತ್ತು. ’ಇವಳೇ ಇವಳೇ’ ಎಂದು ಕೂಗಿದರು. ಉತ್ತರವಿಲ್ಲ. ಜ್ವರ ಏರಿರಬಹುದೇ? ಬಹಿಷ್ಠೆಯಾದವಳನ್ನು ಮುಟ್ಟುವುದು ಹೇಗೆ? ’ಛೆ’ ಎಂದು ತಮ್ಮ ಜಾಡು ಹಿಡಿದ ಸಂಕೋಚಕ್ಕೆ ಹೇಸಿ, ಅವಳ ಹಣೆ ಮುಟ್ಟಿದವರು ಸರಕ್ಕನೆ ಕೆಯೆಳೆದುಕೊಂಡರು. ದಿಕ್ಕು ತೋಚದಂತಾಗಿ ಹಣೆಗೆ ಒದ್ದೆಬಟ್ಟೆ ಹಾಕಿ , ಅನುಮಾನದಿಂದ ಅವಳ ಹೊದ್ದಿಕೆ ಎಳೆದು ಮೆಯನ್ನು ಪರೀಕ್ಷಿಸಿದರು. ಪಕ್ಕದಲ್ಲಿ ಗಡ್ಡೆ. ನಾರಣಪ್ಪನನ್ನು ನುಂಗಿದ ಜ್ವರವೆ? ಗೊತ್ತಿದ್ದ ಮೂಲಿಕೆಗಳನ್ನೆಲ್ಲ ತೇದು , ಅವಳ ಬಾಯನ್ನು ಬಿಡಿಸಿ ಹೊಯ್ದರು. ಯಾವ ಔಷದವೂ ಗಂಟಲನ್ನಿಳಿಯಲಿಲ್ಲ. ಇದು ಯಾವ ರೀತಿಯ ಪರೀಕ್ಷೆಯೆಂದು ಹಂಬಲಿಸುತ್ತ ಅತ್ತಿಂದಿತ್ತ ಅಲೆದರು. ಕಾಗೆ ಹದ್ದುಗಳ ಕಿರುಚಾಟ ಅತಿಯಾಗಿ , ದುರ್ನಾತದಲ್ಲಿ ಬುದ್ಧಿಭ್ರಮಣೆಯಾದಂತಾಗಿ ಹಿತ್ತಿಲಿಗೆ ಓಡಿದರು. ಮಂಕಾಗಿ ನಿಂತರು. ಕಾಲ ಹೋದದು ಕಂಡು ಸಮಾಧಾನವಾಗಿ – ಜ್ವರದಲ್ಲಿರುವ ಹೆಂಡತಿಯನ್ನು ಹೀಗೆ ಬಿಟ್ಟುಬಂದೆನಲ್ಲ ಎಂದು ಕಸಿವಿಸಿಯಾಗಿ – ಮನೆಯ ಹಿಂದಕ್ಕೆ ಬಂದರು. ದಿಗಿಲಾಯಿತು. ದೀಪ ಹತ್ತಿಸಿ ‘ ಇವಳೇ ಇವಳೇ ’ ಎಂದರು. ಉತ್ತರವಿಲ್ಲ. ಬಿಕೋ ಎನ್ನತೊಡಗಿತು. ನಂತರ ಅವಾಕ್ಕಾಗುವಂತೆ ಹೆಂಡತಿ ಕಿಟಾರನೆ ಕಿರುಚಿಕೊಂಡಳು. ದೀರ್ಘ ದಾರುಣ ಕರ್ಕಶಸ್ವರ ಅವಳ ಗಂಟಲಿನಿಂದ ಬಂದದ್ದು ಕೇಳಿ ಹಸಿಹಸಿ ಪ್ರಾಣವನ್ನು ಮುಟ್ಟಿದಂತಾಗಿ ಆಚಾರ್ಯರು ಥತ್ತರ ನಡುಗಿದರು. ಊಳಿದಂತಹ ಧ್ವನಿ ನಿಂತೊಡನೆ ಮಿಂಚು ಥಳಿಸಿ ಕತ್ತಲಾದಂತಾಯಿತು. ಇಲ್ಲಿ ನಾನೊಬ್ಬನೆ ಇರಲಾರೆ ಎನ್ನಿಸಿತು. ತಾನೇನು ಮಾಡುತ್ತಿದ್ದೇನೆಂದು ತಿಳಿಯುವುದರೊಳಗೆ ’ಚಂದ್ರೀ’ ಎಂದು ಕರೆಯುತ್ತ ನಾರಣಪ್ಪನ ಮನೆಗೆ ಓಡಿದರು. ’ಚಂದ್ರೀ ಚಂದ್ರೀ’ ಎಂದು ಕರೆದರೆ ಉತ್ತರವಿಲ್ಲ. ಒಳಗೆ ಹೋದರು. ಕತ್ತಲು. ನಡುಮನೆ, ಅಡಿಗೆಮನೆ ಹುಡುಕಿದರು. ಇಲ್ಲ. ಮಹಡಿ ಮೆಟ್ಟಲನ್ನು ಇನ್ನೇನು ಹತ್ತಬೇಕು ಎನ್ನುವುದರೊಳಗೆ, ಅಲ್ಲಿ ಶವವಿದೆ ಎನ್ನಿಸಿ, ತಾನು ಹುಡುಗನಾಗಿದ್ದಾಗ ಕತ್ತಲಿನ ಕೋಣೆಯೊಳಕ್ಕೆ ಹೋಗುವ ಮುನ್ನ ಗುಮ್ಮನಿದ್ದಾನೆಂಬ ಭಯವಾಗುತ್ತಿದ್ದಂತಹ ದಿಗಿಲು ಮರುಕಳಿಸಿ ಓಡುತ್ತೋಡುತ್ತ ತಮ್ಮ ಮನೆಗೆ ಬಂದರು. ಹೆಂಡತಿಯ ಹಣೆ ಮುಟ್ಟಿ ನೋಡಿದರು : ತಣ್ಣಗೆ ಕೊರೆಯುತ್ತಿತ್ತು. +ರಾತ್ರಾನುರಾತ್ರೆ ಲಾಟೀನು ಹಿಡಿದು ನಡೆದು ಕೆಮರಕ್ಕೆ ಹೋಗಿ ಸುಬ್ಬಣ್ಣಾಚಾರ್ಯರ ಮನೆ ಹೊಗುತ್ತಿದ್ದಂತೆ, ಅವರ ಬೆನ್ನ ಹಿಂದೆಯೇ ದಾಸಾಚಾರ್ಯನನ್ನು ಸುಟ್ಟು ಹಿಂದಿರುಗಿದ ನಾಲ್ಕು ಬ್ರಾಹ್ಮಣರು ಒದ್ದೆ ಪಾಣಿಪಂಚೆಯನ್ನು ತಲೆಯ ಮೇಲೆ ಧರಿಸಿ ’ನಾರಾಯಣ ನಾರಾಯಣ’ ಎಂದರು. ಆ ಬ್ರಾಹ್ಮಣರನ್ನೆ ಜೊತೆಗೆ ಕರೆದುಕೊಂಡು ಬಂದು, ಹೆಂಡತಿಯ ಹೆಣ ಸಾಗಿಸಿ, ನಸುಕಾಗುವುದರೊಳಗೆ ಬೆಂಕಿ ಕೊಟ್ಟಿದ್ದಾಯ್ತು. ಬ್ರಾಹ್ಮಣರ ಹತ್ತಿರ ’ಅಗ್ರಹಾರದಲ್ಲಿ ಸಂಸ್ಕಾರವಾಗಬೇಕಾದ ಇನ್ನೊಂದು ಹೆಣವಿದೆ’ ಎಂದು ತನ್ನೊಳಗೆ ಆಡಿಕೊಂಡವರಂತೆ ಅಂದರು. ’ನಾಳೆ ಆ ಬಗ್ಗೆ ಗುರುಗಳ ಹತ್ತಿರ ಇತ್ಯರ್ಥವಾಗುತ್ತದಲ್ಲ’ ಎಂದು ನುಡಿದ ಬ್ರಾಹ್ಮಣರಿಗೆ ’ನೀವಿನ್ನು ಹೊರಡಿ’ ಎಂದರು. ತನ್ನ ತಪೋಭೂಮಿಯಾಗಿದ್ದ ಒಂದು ಹಿಡಿಜೀವದ ಹೆಂಡತಿ ಧಗಧಗನೆ ಉರಿಯುವುದನ್ನು ನೋಡುತ್ತ, ಬಂದ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸದೆ, ಆಯಾಸವೆಲ್ಲ ಪರಿಹಾರವಾಗುವಷ್ಟು ಅತ್ತುಬಿಟ್ಟರು. +ಅಧ್ಯಾಯ : ಆರು +ಆರಾಧನೆಯ ಊಟವಾಗುವ ತನಕ ಅಮಂಗಳವನ್ನು ಆಡಕೂಡದೆಂದು ಬ್ರಾಹ್ಮಣರು ಮೌನವಾಗಿದ್ದು ಸ್ವಾಮಿಗಳಿಂದ ತೀರ್ಥ ಪಡೆದು, ಭಕ್ಷ್ಯ ಭೋಜ್ಯ ಪಾಯಸದ ಊಟವನ್ನು ಮಾಡಿ ಮುಗಿಸಿದರು. ಬರೇ ಒಂದೊಂದಾಣೆ ದಕ್ಷಿಣೆಯನ್ನು ಗುರುಗಳು ಕೊಟ್ಟಿದ್ದರಿಂದ ಲಕ್ಷ್ಮಣಾಚಾರ್ಯನಿಗೆ ನಿರಾಶೆಯಾಯಿತು-ಏನು ಜಿಪುಣರು ಈ ಯತಿ ಎಂದು ಗೊಣಗಿಕೊಳ್ಳುತ್ತ ಸೊಂಟಕ್ಕೆ ಸಿಕ್ಕಿಸಿಕೊಂಡ. ಮಕ್ಕಳಿಲ್ಲ, ಮರಿಯಿಲ್ಲ; ಆದರೂ ದುಡ್ಡೆಂದರೆ ಪ್ರಾಣಬಿಡುತ್ತಾರೆ. ಊಟ ಮುಗಿದ ಮೇಲೆ ಮಠದ ಪ್ರಾಂಗಣದಲ್ಲಿ ತಂಪಾದ ಸಿಮೆಂಟು ನೆಲೆದ ಮೇಲೆ ಕೂತ ಬ್ರಾಹ್ಮಣರ ನಡುವೆ ಕುರ್ಚಿಯ ಮೇಲೆ ಸ್ವಾಮಿಗಳು ಕಾವಿ ಶಾಟಿಯುಟ್ಟು, ತುಳಸಿಮಣಿಸರ ಧರಿಸಿ, ಅಂಗಾರ ಅಕ್ಷತೆಯಿಟ್ಟು ರಕ್ತದಲ್ಲಿ ಪುಟಿಯುವ ಗುಂಡಗಿನ ಗೊಂಬೆಯಂತೆ ಕೂತು, ತಮ್ಮ ಪುಟ್ಟ ಪುಟ್ಟ ಪಾದಗಳನ್ನು ಉಜ್ಜಿಕೊಳ್ಳುತ್ತ ಕುಶಲಪ್ರಶ್ನೆ ಮಾಡಿದರು : “ಪ್ರಾಣೇಶಾಚಾರ್ಯರು ಯಾಕೆ ಬರಲಿಲ್ಲ? ಹೇಗಿದ್ದಾರೆ? ಆರೋಗ್ಯವೇ? ಏನು, ಹೇಳಿಕೆ ತಲ್ಪಲಿಲ್ಲವೆ ಅವರಿಗೆ?” +ಗರುಡಾಚಾರ್ಯ ಗಂಟಲನ್ನು ಸರಿಮಾಡಿಕೊಂಡು ಆಮೂಲಾಗ್ರ ವಿಷಯವನ್ನು ನಿವೇದಿಸಿದ. +ಗುರುಗಳು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡು ಅನುಮಾನವೇ ಇಲ್ಲವೆಂಬಂತೆ ಅಂದರು : +“ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲ. ಅರ್ಥಾv ಶವಸಂಸ್ಕಾರ ಮಾಡೋದು ಉಚಿತವಾದ ಯೋಗ್ಯವಾದ ಕರ್ತವ್ಯ. ಆದರೆ ದೋಷಪರಿಹಾರಾನೂ ಆಗಬೇಕು. ತತ್ಕಾರಣವಾಗಿ ಅವನ ಆಸ್ತಿಪಾಸ್ತಿ ಬೆಳ್ಳಿಬಂಗಾರಗಳೆಲ್ಲ ಶ್ರೀಮಠದ ಕೃಷ್ಣದೇವರಿಗೆ ಸೇರಬೇಕು.” +ಗರುಡ ಧೆರ್ಯ ಮಾಡಿ ಧೋತ್ರದಿಂದ ಮುಖವನ್ನೊರಸಿಕೊಂಡ : +“ಬುದ್ಧಿ, ನನಗೂ ಅವನ ತಂದೆಗೂ ಇದ್ದ ವ್ಯಾಜ್ಯದ ವಿಷಯ ತಮಗೆ ಗೊತ್ತುಂಟಲ್ಲ. ಅವನ ತೋಟದ ಮುನ್ನೂರು ಅಡಿಕೆಮರ ಹಾಗೆ ನ್ಯಾಯವಾಗಿ ನನಗೇ…” +ಲಕ್ಷ್ಮಣಾಚಾರ್ಯ ’ಹ್ಹ’ ಎಂದು ನಡುವೆ ಬಾಯಿ ಹಾಕಿದ : +“ಬುದ್ಧಿ, ಇದರಲ್ಲೊಂದು ನ್ಯಾಯಧರ್ಮ ಬೇಡವ? ತಮಗೆ ತಿಳಿದಂತೆ ನಾರಣಪ್ಪನ ಹೆಂಡತಿಯೂ ನನ್ನ ಮನೆಯವಳೂ ಅಕ್ಕತಂಗಿಯರು…” +ಕೆಂಪಗೆ ದುಂಡಗೆ ಇದ್ದ ಸ್ವಾಮಿಗಳ ಮುಖದಲ್ಲಿ ಸಟ್ಟನೆ ಕೋಪ ಕಾಣಿಸಿಕೊಂಡಿತು : +“ಎಂತಹ ನೀಚರಯ್ಯ ನೀವು. ದೇವರ ಸೇವೆಗೆ ಅನಾಥರ ಆಸ್ತಿಯೆಲ್ಲ ಸೇರಬೇಕಾದ್ದೆಂದು ಹಿಂದಿನಿಂದ ಬಂದ ನೇಮ. ಅವನ ಶವಸಂಸ್ಕಾರಕ್ಕೆ ನಾವು ನಿಮಗೆ ಅಪ್ಪಣೆಕೊಡದಿದ್ದರೆ ನೀವು ಅಗ್ರಹಾರಾನ್ನೇ ಬಿಡಬೇಕಾಗುತ್ತೆಂದು ನೆನಪಿಟ್ಟುಕೊಳ್ಳಿ” ಎಂದು ಗುಡುಗಿದರು. +ತಪ್ಪಾಯಿತೆಂದು ಕ್ಷಮಾ ಯಾಚಿಸಿ ಇಬ್ಬರು ಬ್ರಾಹ್ಮಣರೂ ಉಳಿದವರ ಜೊತೆ ಸ್ವಾಮಿಗಳಿಗೆ ಅಡ್ಡಬಿದ್ದು ನಿಂತು ತಮ್ಮೊಡನಿದ್ದ ಗುಂಡಾಚಾರ್ಯನ ಮುಖ ಕಾಣಿಸದೆ ಹುಡುಕಿದರು. ನೋಡುವಾಗ ಅವನು ಊಟ ಸಹ ಮಾಡದೆ ಜ್ವರ ಬಂದು ಮಠದ ಅಟ್ಟದ ಮೇಲೆ ಮಲಗಿಬಿಟ್ಟಿದ್ದಾನೆಂದು ತಿಳಿಯಿತು. ಶವಸಂಸ್ಕಾರದ ಅವಸರವಿದ್ದುದರಿಂದ ಊರಿನ ಮಾರ್ಗ ಹಿಡಿದು-ಗುಂಡಾಚಾರ್ಯನನ್ನು ಅಲ್ಲೇ ಬಿಟ್ಟು -ಬ್ರಾಹ್ಮಣರು ನಡೆದುಬಿಟ್ಟರು. +ಹೆಂಡತಿಯ ಶವಸಂಸ್ಕಾರವಾದ ಮೇಲೆ ಅಗ್ರಹಾರಕ್ಕೆ ಆಚಾರ್ಯರು ಮರಳಲಿಲ್ಲ. ತಮ್ಮ ಪೆಟ್ಟಗೆಯಲ್ಲಿದ್ದ ಹದಿನೆದು ಜರಿಯ ಶಾಲಾಗಲಿ, ಕೂಡಿಟ್ಟ ಇನ್ನೂರು ರೂಪಾಯಿಗಳಾಗಲಿ, ಮಠದಲ್ಲಿ ಕೊಟ್ಟ ಬಂಗಾರದಲ್ಲಿ ಕಟ್ಟಿಸಿದ ತುಳಸಿಮಣಿಸರವಾಗಲಿ ಅವರ ಧ್ಯಾನಕ್ಕೇ ಬರಲಿಲ್ಲ. +ಕಾಲುಕೊಂಡಲ್ಲಿಗೆ ನಡೆದುಬಿಡುವುದೆಂದು ಉಟ್ಟ ವಸ್ತ್ರದಲ್ಲೆ ಪೂರ್ವಾಭಿಮುಖವಾಗಿ ನಡೆದುಬಿಟ್ಟರು. +ಭಾಗ ಮೂರು +ಅಧ್ಯಾಯ : ಒಂದು +ಪ್ರಾತಃಕಾಲದ ಸೂರ್‍ಯನ ಬಿಸಿಲು ಕಾಡಿನಲ್ಲಿ ರಂಗವಲ್ಲಿಗಳಾಗಿ ನೆಲಕ್ಕಿಳಿದಿದ್ದುವು. ಆಯಾಸದಿಂದ ಕಾಲುಗಳನ್ನು ಎಳೆಯುತ್ತ ನಡೆಯುತ್ತಿದ್ದ ಪ್ರಾಣೇಶಾಚಾರ್ಯರಿಗೆ ಬಹಳ ಹೊತ್ತು ತನ್ನ ದಿಕ್ಕು-ದಿವಾಣಿ ಲೆಖ್ಖಕ್ಕೇ ಬರಲಿಲ್ಲ. ಸುಟ್ಟುಹೋಗದೆ ಉಳಿದ ಹೆಂಡತಿಯ ದೇಹದ ಅವಶೇಷಗಳನ್ನು, ಎಲುಬುಗಳ ಚೂರುಗಳನ್ನು ನಾಯಿ ನರಿಗಳೆಲ್ಲ ಬಂದು ಹೆಕ್ಕುತ್ತಾವೊ ಎಂದು ಆತಂಕವಾಗಿ, ಕಾದಿದ್ದು ಅವುಗಳನ್ನು ನೀರಿಗೆ ಚೆಲ್ಲುವಷ್ಟು ವ್ಯವಧಾನ ನನಗೆ ಇಲ್ಲದೇ ಹೋಯಿತಲ್ಲ ಎಂದು ಒಂದು ಕ್ಷಣ ವ್ಯಥೆಯಾಯಿತು. ಎಲ್ಲವನ್ನೂ ಹಿಂದಕ್ಕೆಬಿಟ್ಟು ಕೆಬೀಸಿ ಹೊರಟ ನನಗೆ ಯಾವ ಋಣದ ಬಾಧೆಯೂ ಇನ್ನಿಲ್ಲವೆಂದು ಸಮಾಧಾನ ತಂದುಕೊಂಡರು. ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದುಕೊಂಡು; ಆ ನಿಶ್ಚಯಕ್ಕೆ ಸರಿಯಾಗಿ ನಡೆದುಬಿಡುವೆ ಎಂದು ಮನಸ್ಸನ್ನು ಸಮಸ್ಥಿತಿಗೆ ತರಲು ಯತ್ನಿಸುತ್ತ ನಡೆದರು. +ಹಿಂದೆ ಜಾಗೃತವಾಗಿದ್ದಾಗಲೆಲ್ಲ ಹರಿಯುವ ಚಿತ್ತವನ್ನು ಏಕಾಗ್ರಗೊಳಿಸಿಕೊಳ್ಳಲು ’ಅಚ್ಯುತಾನಂತಗೋವಿಂದ’ ಎಂದು ನಾಮೋಚ್ಚಾರ ಮಾಡುತ್ತಿದ್ದಂತೆ ಮಾಡುವ ಮನಸ್ಸಾಯಿತು. ’ಯೋಗೋ ಚಿತ್ತವೃತ್ತಿನಿರೋಧಃ” ಎಂದು ಸ್ಮರಿಸಿದರು. ಮತ್ತೆ ’ಛೀ’ ಎಂದುಕೊಂಡರು. ನಾಮಸ್ಮರಣೆಯ ನೆಮ್ಮದಿಯನ್ನೂ ವರ್ಜಿಸಿ ನಿಲ್ಲು ಎಂದು ಎಚ್ಚರ ಹೇಳಿಕೊಂಡರು. ಮರಗಳ ಕೊಂಬೆಗಳು ಕೊಟ್ಟ ರೂಪಕ್ಕೆ ಬಿಸಿಲು ಪಡೆಯುವ ರಂಗವಲ್ಲಿಯಂತೆಯೇ ಸದ್ಯಕ್ಕೆ ಇರಲಿ ಮನಸ್ಸು, ನಿರಂಬಳ ತೆರೆದುಬಿಡಲಿ. ಗಗನದಲ್ಲಿ ಬೆಳಕು, ಮರದ ಕೆಳಗೆ ನೆರಳು, ನೆಲದ ಮೇಲೆ ರಂಗವಲ್ಲಿ. ಭಾಗ್ಯವಿದ್ದು ತುಂತುರಿನ ಸ್ಪರ್ಶವಾದರೆ ಕಾಮನಬಿಲ್ಲು. ಜೀವ ಬಿಸಿಲಿನಂತಿದ್ದು ಬಿಡಬೇಕು. ಬರಿಯ ಒಂದು ಎಚ್ಚರವಾಗಿ, ಬರಿಯ ಒಂದು ಅಚ್ಚರಿಯಾಗಿ. ಆಕಾಶದಲ್ಲಿ ರೆಕ್ಕೆಗಳನ್ನು ಹರಡಿ ಸ್ತಬ್ಧ, ತೃಪ್ತ ತೇಲುವ ಗರುಡನಂತೆ. ಕಾಲು ನಡೆಯುತ್ತಿದೆ, ಕಣ್ಣು ನೋಡುತ್ತಿದೆ, ಕಿವಿ ಆಲಿಸುತ್ತಿದೆ-ಅಪೇಕ್ಷೆಯಿಲ್ಲದೆ ಇದ್ದುಬಿಡಬೇಕು. ಆಗ ಜೀವ ಸ್ವೀಕರಿಸುವ ಸ್ಥಿತಿಯನ್ನು ಮುಟ್ಟುತ್ತದೆ. ಇಲ್ಲದಿದ್ದರೆ ಅಪೇಕ್ಷೆಯಲ್ಲಿ ಗೊರಟವಾಗುತ್ತದೆ, ಮುರುಟುತ್ತದೆ, ಕಲಿತ ಮಗ್ಗಿಯಾಗಿ ಬಿಡುತ್ತದೆ. ಕನಕನ ಮನಸ್ಸು ಬರಿಯ ಒಂದು ಎಚ್ಚರ, ಅಚ್ಚರಿಯಾದ್ದರಿಂದ ಗುರುಗಳ ಎದುರು ಬಂದು ಹೇಳಿದ : ಗುಟ್ಟಾಗಿ ಎಲ್ಲೆಂದು ತಿನ್ನಲಿ ಈ ಬಾಳೆಹಣ್ಣನ್ನ? ದೇವರು ಎಲ್ಲ ಎಡೆಗೂ ಇದ್ದಾನಲ್ಲ! ದೇವರು ನನಗೆ ಬಾಯಿಗೆ ಕಲಿತ ಮಗ್ಗಿಯಾಗಿಬಿಟ್ಟ; ಕನಕನಿಗಿದ್ದಂತೆ ಅಚ್ಚರಿ, ಎಚ್ಚರವಾಗಲಿಲ್ಲ-ಆದ್ದರಿಂದ ಈ ಮುಂದೆ ದೇವರು ವರ್ಜ್ಯ ನನಗೆ. +ದೇವರನ್ನು ಬಿಟ್ಟಮೇಲೆ ಗುರು‌ಋಣ, ಪಿತೃ‌ಋಣ, ದೇವ‌ಋಣದ ಬಗ್ಗೆ ಇರುವ ಆತಂಕವನ್ನೂ ಬಿಡಬೇಕು. ಅಂದರೆ ಸಮಾಜವನ್ನು ಬಿಟ್ಟು ನಿಲ್ಲಬೇಕು. ಆ ಕಾರಣಕ್ಕಾಗಿಯೇ ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದು ಮನಸ್ಸುಮಾಡಿ ಹೊರಟುಬಿಟ್ಟ ನಿಶ್ಚಯ ಸರಿ. ದಾರಿಯಿಲ್ಲದ ಈ ಅರಣ್ಯದಲ್ಲಿ ಹೀಗೇ ನಡೆಯುತ್ತಲೇ ಇರಬೇಕು. ಆಯಾಸವಾದರೆ, ಹಸಿವಾದರೆ, ತೃಷೆಯಾದರೆ-ಪ್ರಾಣೇಶಾಚಾರ್ಯರ ಯೋಚನೆಯ ಸರಣಿ ಥಟ್ಟನೆ ನಿಂತಿತು. ಇನ್ನೊಂದು ಆತ್ಮವಂಚನೆಯ ಗುಹೆಯನ್ನು ಹೊಗುತ್ತಿದ್ದೇನೆ ನಾನು. ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದು ನಿಶ್ಚಯಿಸಿದ್ದರೂ ದೂರದಲ್ಲೆಲ್ಲೋ ದನಕಾಯುವ ಹುಡುಗನ ಕೊಳಲಿನಿಂದ, ಹಸುಗಳ ಕೊರಳಿನ ಬಿದಿರು-ಗಂಟೆಗಳ ನಾದದಿಂದ ಯಾಕೆ ನಾನು ಅತಿ ದೂರನಾಗದಂತೆ ನಡೆದೆ? ನನ್ನ ನಿಶ್ಚಯವೇನಿದ್ದರೂ ಕಾಲು ಮಾತ್ರ ಜನವಸಿತಿಗೆ ಹತ್ತಿರವಾಗಿಯೇ ನನ್ನನ್ನು ನಡೆಸಿತು. ನನ್ನ ಲೋಕದ ಪರಿಮಿತಿ ಇದು. ನನ್ನ ಸ್ವಾತಂತ್ರ್ಯದ ಪರಿಮಿತಿ ಇದು. ಮನುಷ್ಯಸಂಸರ್ಗ ಬಿಟ್ಟು ಇರಲಾರೆ. ಸಂನ್ಯಾಸಿಯ ಕೌಪೀನದ ಕಥೆಯ ಹಾಗೆ : ಲಂಗೋಟಿಯನ್ನು ಇಲಿಗಳು ಕಡಿಯುತ್ತವೆಂದು ಬೆಕ್ಕು ಸಾಕಿದ, ಬೆಕ್ಕಿಗೆ ಹಾಲು ಎಂದು ಹಸು ಸಾಕಿದ, ಹಸುವನ್ನು ನೋಡಿಕೊಳ್ಳಲೆಂದು ಮದುವೆಯಾದ. +ಪ್ರಾಣೇಶಾಚಾರ್ಯರು ಹಲಸಿನ ಮರ ಒಂದರ ಬುಡದಲ್ಲಿ ಕೂತರು. ಮೊದಲು ಈ ವಿಷಯವನ್ನು ನೆಟ್ಟಗೆ ನೋಡಬೇಕು. ಕಿಂಚಿತ್ತೂ ವಂಚಿಸಿಕೊಳ್ಳದೆ ನನ್ನ ಮುಂದಿನ ಜೀವನವನ್ನು ನಡೆಸಬೇಕು. ಸ್ಪಷ್ಟವಾಗಿ ಪರೀಕ್ಷಿಸುವ : ಯಾಕೆ ಹೆಂಡತಿಯನ್ನು ಸುಟ್ಟಮೇಲೆ ನಡೆದುಬಿಟ್ಟೆ? ಅಗ್ರಹಾರ ನಾರುತ್ತಿದೆಯೆಂದು ಅಲ್ಲಿಗೆ ಮರಳಲು ಅಸಹ್ಯವಾಯಿತು. ಇದು ನನ್ನ ಇಡೀ ಜೀವವೇ ಒಪ್ಪುವಂತಹ ಕಾರಣ : ಮೂಗಿಗೆ ಆದ ಅಸಹ್ಯ, ಅಶುಚಿಯ ಭಾವನೆ ಸರಿ. ಮುಂದೆ? ನನ್ನನ್ನು ಮಾರ್ಗದರ್ಶನಕ್ಕಾಗಿ ಆಶ್ರಯಿಸಿದ ಬ್ರಾಹ್ಮಣರನ್ನು ಪುನಃ ಸಂಧಿಸಲು ಇಷ್ಟವಾಗದೆ ಹೋಯಿತು. ಇದಕ್ಕೆ ಕಾರಣ? ಪ್ರಾಣೇಶಾಚಾರ್ಯರು ಕಾಲುಗಳನ್ನು ಚಾಚಿ ಆಯಾಸವನ್ನು ಕಳೆದುಕೊಳ್ಳಲು ಯತ್ನಿಸುತ್ತ ತನ್ನ ಮನಸ್ಸು ಸ್ಪಷ್ಟವಾಗಲು ಕಾದರು. ಅವರಿಗೆ ಕಾಣಿಸದಂತೆ ಅವರ ಪಕ್ಕದಲ್ಲಿ ಒಂದು ಕರು ಬಂದು ನಿಂತಿತು. ಅವರ ಕತ್ತನ್ನು ಮೂತಿಯೆತ್ತಿ ಮೂಸಿ, ಉಸಿರಾಡಿತು. ಪ್ರಾಣೇಶಾಚಾರ್ಯರಿಗೆ ಮೆ ಜುಮ್ಮೆಂದು-ತಿರುಗಿದರು. ಪ್ರಾಯಕ್ಕೆ ಬಂದ ಕರುವಿನ ಆರ್ತ ಸ್ನೇಹಪರ ಕಣ್ಣುಗಳನ್ನು ನೋಡಿ ಒಳಗಿನಿಂದ ಉಕ್ಕಿದಂತಾಯಿತು. ಕರುವಿನ ಕತ್ತನ್ನು ತುರಿಸಿದರು. ಕೊರಳನ್ನೆತ್ತಿ, ಹತ್ತಿರ ಹತ್ತಿರ ಸರಿದು, ತುರಿಸುವ ಕೆಗೆ ತನ್ನ ರೋಮಾಂಚಿತ ದೇಹವನ್ನೆಲ್ಲ ಒಡ್ಡುತ್ತ ಕರು ಪುಳಕಿತವಾಗಿ ಅವರ ಕಿವಿಗಳನ್ನು ಕೆನ್ನೆಗಳನ್ನು ತನ್ನ ಹಿತವಾದ ದರುಗು-ನಾಲಗೆಯಿಂದ ನೆಕ್ಕಲು ಪ್ರಾರಂಭಿಸಿತು. ಕಚಕುಳಿಯಾಗಿ ಪ್ರಾಣೇಶಾಚಾರ್ಯರು ಎದ್ದು ನಿಂತು ಕರುವಿನ ಜೊತೆ ಚೇಷ್ಟೆಯಾಡುವ ಆಸೆಯಿಂದ ಅದರ ಕೊರಳಿನ ಕೆಳಗೆ ಕೆಯಿಟ್ಟು ಉಪ್ಪುಪ್ಪುಪ್ಪು ಎಂದರು. ಕರು ಎರಡೂ ಕಾಲುಗಳನ್ನು ಎತ್ತಿ ಏರಿಬಂದು ಚಂಗನೆ ನೆಗೆದು, ಬಿಸಿಲಿನಲ್ಲಿ ಕುಣಿಯುತ್ತ ಕಣ್ಮರೆಯಾಯಿತು. ಪ್ರಾಣೇಶಾಚಾರ್ಯರು ಏನು ಯೋಚಿಸುತ್ತಿದ್ದೆ ಎಂದು ನೆನಪುಮಾಡಿಕೊಳ್ಳಲು ಯತ್ನಿಸಿದರು. ಅದೇ ಹಿಂದಕ್ಕೆ ನಾನು ಯಾಕೆ ಹೋಗಿ ಬ್ರಾಹ್ಮಣರನ್ನು ನೋಡಲಿಲ್ಲ ಎನ್ನುವ ಪ್ರಶ್ನೆಯಲ್ಲವೇ?-ಆದರೆ ಮನಸ್ಸು ಕೂರಲಿಲ್ಲ. ಹಸಿವಾಗುತ್ತಿದೆ, ಇಲ್ಲೇ ಹತ್ತಿರದಲ್ಲಿರುವ ಗ್ರಾಮದಲ್ಲಾದರೂ ಹೋಗಿ ಹಸಿವನ್ನು ಕಳೆದುಕೊಳ್ಳಬೇಕೆನ್ನಿಸಿ ನಡೆದರು. ದನಗಳ ಸೆಗಣಿ ಗೊರಸಿನ ಗುರುತುಗಳನ್ನೆ ಲಕ್ಷ್ಯದಲ್ಲಿಟ್ಟುಕೊಂಡು ಒಂದು ಗಂಟೆ ಕಾಡಿನಲ್ಲಿ ಸುತ್ತಿ ನಡೆಯುವುದರಲ್ಲಿ ಒಂದು ಮಾರಿಗುಡಿ ಕಾಣಿಸಿತು. ಬ್ರಾಹ್ಮಣರಿರುವ ಅಗ್ರಹಾರವಲ್ಲವಲ್ಲ ಎಂದುಕೊಂಡರು. ಒಂದಷ್ಟು ದೂರ ಹೋಗಿ ಗ್ರಾಮದ ಒಂದು ತುದಿಗಿದ್ದ ಮರದ ಬುಡದಲ್ಲಿ ಕೂತರು. +ಬಿಸಿಲೇರಲು ಹತ್ತಿದ್ದರಿಂದ ಮರದ ನೆರಳಿನಲ್ಲೂ ಸೆಖೆಯಾಗಿ ತೃಷೆಯಾಯಿತು. ಯಾರಾದರೂ ಗೌಡನೊಬ್ಬನ ಕಣ್ಣಿಗೆ ತಾನು ಬಿದ್ದರೆ ಹಾಲು ಹಣ್ಣನ್ನು ತಂದುಕೊಟ್ಟಾನೆಂದು ಆಶಿಸಿದರು. ಎಮ್ಮೆಗಳನ್ನು ಕೆರೆಗೆ ಅಟ್ಟುತ್ತ ಬರುತ್ತಿದ್ದ ಒಬ್ಬ ಗೌಡ ಹಣೆಗೆ ಕೆಮಾಡಿ ನೋಡಿ ಹತ್ತಿರ ಬಂದು ನಿಂತ. ಬಾಯಿ ತುಂಬ ಕವಳ ತುಂಬಿ, ಭರ್ಜರಿ ಮೀಸೆ ಬಿಟ್ಟು, ತಲೆಗೆ ಚೌಕುಳಿಬಟ್ಟೆಯ ಮುಂಡಾಸು ಸುತ್ತಿದ್ದವ ಗ್ರಾಮದ ಹಿರಿಯ ಗೌಡನಿರಬೇಕೆಂದು ಪ್ರಾಣೇಶಾಚಾರ್ಯರು ಊಹಿಸಿದರು. ತಾನು ಕಂಡು ಅರಿಯದ ಒಬ್ಬಾತ ಸಿಕ್ಕಿದ್ದರಿಂದ ಅವರಿಗೆ ಸಮಾಧಾನವೆನ್ನಿಸಿತು. ಕವಳ ತುಂಬಿದ್ದರಿಂದ ಬಾಯನ್ನು ಎತ್ತಿ ಗೌಡ ಕೆಸನ್ನೆ ಮಾಡಿ ಎಲ್ಲಿಂದ ಬಂದವರೆಂದು ಕೇಳಿದ. ತಾನು ಪ್ರಾಣೇಶಾಚಾರ್ಯನೆಂದು ಈ ಗೌಡ ತಿಳಿದಿದ್ದರೆ ಕವಳ ತುಂಬಿದ ಬಾಯಲ್ಲಿ ಹೀಗೆ ಎಗ್ಗಿಲ್ಲದೆ ಎದುರು ನಿಂತು ಪ್ರಶ್ನಿಸುತ್ತಿರಲಿಲ್ಲ. ಸಂಸ್ಕಾರವನ್ನೂ, ಭೂತವನ್ನು ತೊರೆದು ನಿಂತರೆ ಲೋಕ ತನ್ನನ್ನು ಇವನಿನ್ನೊಬ್ಬ ಹಾರುವ ಎಂದು ಬಗೆಯುತ್ತದೆ. ಇದರಿಂದಾಗಿ ಅವರಿಗೆ ಕೊಂಚ ಕಸಿವಿಸಿಯಾಯಿತು. ತನ್ನಿಂದ ಉತ್ತರ ಬರದೇ ಇದ್ದುದು ನೋಡಿ ಗೌಡ ಬಾಯಲ್ಲಿನ ಕವಳವನ್ನು ಉಗಿದು ಒಂದು ಸ್ವಲ್ಪ ವಿನೀತನಾಗಿ, ಮೀಸೆಗೆ ಹತ್ತಿದ ಕೆಂಪು ಕವಳವನ್ನು ವಸ್ತ್ರದಿಂದ ಒರೆಸಿಕೊಳ್ಳುತ್ತ : +“ಎತ್ತ ಮುಖ ಹೊಂಟವರೊ?” ಎಂದು ಪ್ರಶ್ನಾರ್ಥವಾಗಿ ನೋಡಿ ಕೇಳಿದ. ಬ್ರಾಹ್ಮಣನನ್ನು ’ಎಲ್ಲಿಗೆ?’ ಎಂದು ಕೇಳುವುದು ಅಶುಭವೆಂದು ಮರ್ಯಾದೆ ತೋರಿಸಿದನಲ್ಲ ಎಂದು ಪ್ರಾಣೇಶಾಚಾರ್ಯರಿಗೆ ಸಮಾಧಾನವಾಯಿತು. ಆದರೆ ಏನುತ್ತರ ಕೊಡಬೇಕೆಂಬುದು ತಿಳಿಯದೆ, “ಹೀಗೇ…” ಎಂದು ಕೆಬೀಸಿ ತೋರಿಸಿ ಬೆವರೊರಸಿಕೊಂಡರು. ದೇವರ ದಯೆಯಿಂದ ಗೌಡನಿಗೆ ತನ್ನ ಗುರುತು ಹತ್ತಲಿಲ್ಲವಲ್ಲ ಎಂದು ನೆಮ್ಮದಿ ಎನ್ನಿಸಿತು. +“ಘಟ್ಟದ ಕೆಳಗಿನವರೊ ಹೇಗೆ?” ಎಂದು ಗೌಡ ಕುತೂಹಲದಿಂದ ಇನ್ನೊಂದು ಪ್ರಶ್ನೆ ಹಾಕಿದ; ಸುಳ್ಳು ಸುಲಭವಾಗಿ ಬಾರದ ಪ್ರಾಣೇಶಾಚಾರ್ಯರ ಬಾಯಿ ’ಹಾ’ ಎಂದಿತು. +“ಸಂಭಾವನೆಗೆ ಹೊಂಟವರು ಇರಬೇಕು.” +ಪ್ರಾಣೇಶಾಚಾರ್ಯರಿಗೆ ಥಟ್ಟನೆ ತಲೆತಗ್ಗಿಸುವಂತಾಯಿತು. ತನ್ನನ್ನು ಒಬ್ಬ ಭಿಕ್ಷೆ ಎತ್ತುವ ಸಂಭಾವನೆಯ ಬ್ರಾಹ್ಮಣ ಎಂದು ಈ ಗೌಡ ಬಗೆದುಬಿಟ್ಟನಲ್ಲ. ಎಲ್ಲ ತೇಜಸ್ಸು, ವರ್ಚಸ್ಸು ಕಳೆದು ಈಗ ನಾನು ಸಂಭಾವನೆ ಎತ್ತುವ ಹಾರುವನಂತೆಯೇ ಕಾಣಿಸುತ್ತಿರಬೇಕು. ವಿನಯದ ಪಾಠ ಪ್ರಾರಂಭವಾಗಿದೆ, ಬಗ್ಗಿಬಿಡು, ತಗ್ಗಿಬಿಡು ಎಂದುಕೊಂಡು ’ಹಾ’ ಎಂದರು ಮತ್ತೆ. ಅಪರಿಚಿತನೊಬ್ಬನ ಕಣ್ಣುಗಳ ಎದುರಿಗೆ ತಾನು ಇಚ್ಛಿಸಿದ ರೂಪವನ್ನು, ವ್ಯಕ್ತಿತ್ವವನ್ನು ತಾಳಬಹುದೆಂಬುದು ತನ್ನ ಸ್ವಾತಂತ್ರ್ಯದ ಮಿತಿಯನ್ನು ಹಿಗ್ಗಿಸಿದಂತೆನ್ನಿಸಿತು. +“ಆಸುಪಾಸನಲ್ಲೆಲ್ಲೂ ಬ್ರಾಂಬ್ರ ಮನೆಯಿಲ್ಲ” ಎಂದ ಗೌಡ, ಎಮ್ಮೆಗೆ ಆತುಕೊಂಡು ನಿಂತು. +“ಹೌದ?” ಎಂದರು ಪ್ರಾಣೇಶಾಚಾರ್ಯರು ಉದಾಸೀನ ಧ್ವನಿಯಲ್ಲಿ. +“ಸುಮಾರು ಹತ್ತನ್ನೆರಡು ಮೆಲಾಚೆ ಒಂದು ಬ್ರಾಂಬ್ರ ಅಗ್ರಹಾರ ಐತೆ.” +“ಓಹೊ…” +“ಗಾಡಿ- ದಾರೀಂದ ಇನ್ನಷ್ಟು ದೂರ ಆತೆತೆ. ಒಳದಾರೀಂದ ಸಮೀಪ ಆತೆತೆ…” +“ಸರಿ.” +“ಇಲ್ಲೆ ಬಾವಿ ಐತೆ. ಕೊಡ ಕೊಡ್ತೀನಿ, ನೀರು ಸೇದಿ ಸ್ನಾನಮಾಡಿ. ಅಕ್ಕಿ ಬೇಳೆ ಕೊಡ್ತೀನಿ. ಒಲೆ ಹೂಡಿ ಬೇಯಿಸಿ ಉಣ್ಣಿ. ಆಯಾಸ ಆಗಿರಬೇಕು, ಪಾಪ. ಅಗ್ರಹಾರಕ್ಕೆ ಹೋಗಬೇಕೂಂತಿದ್ದರೆ ಹೇಳಿ, ಗಾಡಿ-ಶೇಷಪ್ಪ ಇಲ್ಲೊಬ್ಬ ನೆಂಟರ ಮನೆಗೆ ಬಂದವ್ನೆ. ಅವ್ನ ಗಾಡಿ ಖಾಲಿ ಹೋತೆತೆ. ಅಗ್ರಹಾರಕ್ಕೆ ಹತ್ತಿರ ಅವ ಇರೋದು… ಆದರೆ ಅವ ಅಂದದ್ದು ನೋಡಿದ್ರೆ ನೀವು ಆ ಅಗ್ರಹಾರಕ್ಕೆ ಹೋಗಕ್ಕೆ ಇಷ್ಟಪಡ್ತೀರೊ ಇಲ್ಲೊ ನಾ ಕಾಣೆ. ಒಂದು ಹೆಣಾ ಅಲ್ಲಿ ಮೂರು ರಾತ್ರೆ ಮೂರು ಹಗಲು ಕೊಳೀತಾ ಬಿದ್ದೆತಂತೆ. ಬ್ರಾಂಬ್ರ ಹೆಣ, ಉ… ಶೇಷಪ್ಪ ಅಂದ : ರಾತ್ರೋರಾತ್ರೆ ಆ ಹೆಣಾನ್ನ ಸುಡಕ್ಕೇಂತ ಕೇಳಲಿಕ್ಕೆ ಆ ಪುಣ್ಯಾತ್ಮನ ಸೂಳೆ ಶೇಷಪ್ಪನ ಮನೆಗೆ ಬಂತಂತೆ. ದಾತಾರರೇ ಇಲ್ಲವಂತೆ ಆ ಹೆಣಕ್ಕೆ. ಉ… ಬ್ರಾಂಬ್ರ ಹೆಣ ಹೀಗೆ ಕೋಳೆಯೋದೂಂದ್ರೇನು? ಶೇಷಪ್ಪ ಆ ಮಾರ್ಗ ಬೆಳಿಗ್ಗೆ ಗಾಡೀಲಿ ಬರೋವಾಗ ರಣಹದ್ದುಗಳು ಅಗ್ರಹಾರದ ಮನೆಗಳ ಮ್ಯಾಲೆ ಬಂದು ಕೂತಿದ್ವಂತೆ…” +ಗೌಡ ಹೊಗೆಸೊಪ್ಪನ್ನು ತಿಕ್ಕುತ್ತ ಮಾತಾಡುತ್ತ ಕೂತುಬಿಟ್ಟ. +ಪ್ರಾಣೇಶಾಚಾರ್ಯರಿಗೆ ಇಲ್ಲಿಗೆ ಶೇಷಪ್ಪ ಬಂದ ಸುದ್ದಿ ಕೇಳಿ ಎದೆ ಜಗ್ಗೆಂದಿತು. ಅವನು ತನ್ನನ್ನು ಈ ಸ್ಥಿತಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗಲಿಲ್ಲ. ಇಲ್ಲಿ ಇನ್ನು ಹೆಚ್ಚು ಹೊತ್ತು ಕಳೆದರೆ ಕೇಡು. +“ಒಂದಿಷ್ಟು ಬಾಳೆಹಣ್ಣು ಹಾಲು ಕೊಟ್ಟರೆ ಮುಂದೆ ನಡೆದುಬಿಡುವೆ” ಎಂದರು ಗೌಡನ ಕಡೆ ನೋಡಿ. +“ಅದಕ್ಕೇನಾಗಬೇಕು ಸ್ವಾಮಿ. ಈ ಚಣವೇ ತರುವೆ. ಹಸಿದ ಬ್ರಾಂಬ್ರು ಒಬ್ಬರು ಗ್ರಾಮದಲ್ಲಿ ಕೂತಿದ್ದಾಗ ನಾವು ಊಟ ಮಾಡೋದು ಶಕ್ಯ ಅಲ್ಲಾಂತ ಅಕ್ಕಿ ಕೊಡುವೆ ಎಂದೆ” +ಎಂದು ಸೀದ ಹೊರಟು ಹೋದ. ಪ್ರಾಣೇಶಾಚಾರ್ಯರಿಗೆ ಅಲ್ಲಿ ಮುಳ್ಳಿನ ಮೇಲೆ ಕೂತಿದ್ದಂತೆನಿಸಿತು. ಶೇಷಪ್ಪನ ಕಣ್ಣಿಗೆಲ್ಲಾದರೂ ತಾನು ಬಿದ್ದುಬಿಟ್ಟರೆ? ಸುತ್ತುಮುತ್ತ ನೋಡುತ್ತ ಭಯದಲ್ಲಿ ಸಣ್ಣಗಾಗಿ ಮುದುರಿ ಕೂತರು. ಎಲ್ಲ ಬಿಟ್ಟು ನಡೆದುಬಿಟ್ಟ ನನ್ನಲ್ಲೇಕೆ ಈ ಭಯ ಉತ್ಪತ್ತಿಯಾಯಿತೆಂದು ಕಸಿವಿಸಿಪಡುತ್ತ ಏರಿಬಂದ ದಿಗಿಲನ್ನು ಹತ್ತಿಕ್ಕಲಾರದೆ ಚಡಪಡಿಸಿದರು. ಗೌಡ ಬಟ್ಟಲಿನ ತುಂಬ ತಂಬಾಲನ್ನು , ಒಂದು ಚಿಪ್ಪು ಬಾಳೆಯ ಹಣ್ಣನ್ನು ತಂದು ಆಚಾರ್ಯರ ಎದುರಿಟ್ಟು- +“ಒಳ್ಳೇ ಹೊತ್ತಿಗೆ ಗ್ರಾಮಕ್ಕೊಬ್ಬರು ಬ್ರಾಂಬ್ರು ಬಂದ್ಹಂಗಾಯ್ತು. ಒಂದು ನಿಮಿತ್ಯ ಹೇಳ್ತೀರಾಂತ? ನನ್ನ ಮಗಾಗೆ ನೂರು ರೂಪಾಯಿ ತೆರ ತೆತ್ತು ಒಂದು ಹೆಣ್ಣನ್ನು ತಂದೆ. ಅದು ಬಂದಾಗಿಂದ ಒಂದು ಥರಾ ಮಂಕಾಗಿ ಕೂತುಬಿಟ್ಟಿದೆ, ಜಕಣಿ ಹಿಡಿದು. ತಾವು ಮಂತ್ರಿಸಿಕೊಟ್ಟರೆ…” +ಅಭ್ಯಾಸಬಲದ ಮೇಲೆ ಥಟ್ಟನೆ ತನ್ನ ಬ್ರಾಹ್ಮಣಧರ್ಮದ ಉದ್ಯೋಗವನ್ನು ನೆರವೇರಿಸಲು ಉದ್ಯುಕ್ತರಾದ ಪ್ರಾಣೇಶಾಚಾರ್ಯರು ಮನಸ್ಸಿಗೆ ಲಗಾಮು ಹಾಕಿ ನಿಲ್ಲಿಸಿದರು. ತಾನು ಎಲ್ಲವನ್ನು ಬಿಟ್ಟರೂ ಸಮಾಜ ಮಾತ್ರ ಬ್ರಾಹ್ಮಣಸಹಜವಾದ ಕರ್ತವ್ಯಗಳನ್ನೆಲ್ಲ ನೆರವೇರಿಸೆಂದು ತನಗೆ ದುಂಬಾಲು ಬೀಳುತ್ತಿದೆ. ಇದರಿಂದ ಬಿಡುಗಡೆ ಸುಲಭವಲ್ಲ. ಹಾಲು ಹಣ್ಣನ್ನು ಇಷ್ಟು ಶ್ರದ್ಧೆಯಿಂದ ಅಪರಿಚಿತನೊಬ್ಬನಿಗೆ ತಂದುಕೊಟ್ಟ ಗೌಡನಿಗೆ ಈಗ ತಾನೇನು ಹೇಳಬೇಕು? ತಾನು ತಪೋಭ್ರಷ್ಟನಾದವನೆಂದೆ? ತಾನು ಬ್ರಾಹ್ಮಣನಲ್ಲವೆಂದೆ? ಅಥವಾ ಸತ್ಯವನ್ನೆ? +“”ನಾನಿವತ್ತು ಮಂತ್ರಿಸಿಕೊಡುವಂತಿಲ್ಲಪ್ಪ. ನನ್ನ ಜ್ಞಾತಿಗಳೊಬ್ಬರು ತೀರಿ ಹೋದದ್ದರ ಸೂತಕ ನನಗೆ” ಎಂದು ಥಟ್ಟನೆ ಹೊಳೆದ ಉತ್ತರಕ್ಕೆ ಹಿಗ್ಗಿ ಹೇಳಿದರು. ಹಾಲನ್ನು ಕುಡಿದು, ಬಟ್ಟಲನ್ನು ಹಿಂದಕ್ಕೆ ಕೊಟ್ಟು, ಬಾಳೆಹಣ್ಣನ್ನು ವಸ್ತ್ರದಲ್ಲಿ ಕಟ್ಟಿಕೊಂಡು ಎದ್ದುನಿಂತರು. +“ಈ ಮುಖ ಒಂದ್ಹತ್ತು ಮೆಲಿ ನಡೆದರೆ ಮೇಳಿಗೆ ಎಂಬೊ ಊರು ಸಿಗುತ್ತೆ. ಅಲ್ಲಿ ಇವತ್ತು, ನಾಳೆ, ನಾಡಿದ್ದು ರತೋಸ್ತವ. ನಿಮಗೆ ಅಲ್ಲಿ ಚೆನ್ನಾಗಿ ಸಂಭಾವ್ನೆ ಆತೆತೆ ಹ್ವಾದರೆ…” ಎಂದು ಗೌಡ ಎಲೆಯಡಿಕೆ ಜಗಿಯುತ್ತ ಎಮ್ಮೆಗಳನ್ನು ನಡೆಸಿಕೊಂಡು ಹೋದ. +ಗೌಡ ಕಣ್ಮರೆಯಾಗುತ್ತಿದ್ದಂತೆ ಪ್ರಾಣೇಶಾಚಾರ್ಯರು ಮತ್ತೆ ಕಾಡು ಹೊಕ್ಕು ಕಾಲುದಾರಿಯನ್ನು ಹಿಡಿದು ನಡೆದರು. ತನ್ನ ಸಮಸ್ಯೆ ಇನ್ನಷ್ಟು ಬಿಕ್ಕಟ್ಟಾಗಿಬಿಟ್ಟಿತೆಂದುಕೊಂಡು ಚಿಂತಿಸಿದರು. ಇಂತಹ ದಿಗಿಲನ್ನು ನಾನು ಹಿಂದೆ ಎಂದೂ ಅನುಭವಿಸಿರಲಿಲ್ಲ, ಏನೋ ಪತ್ತೆಯಾಗಿಬಿಡುತ್ತದೆಂಬ ದಿಗಿಲು. ಯಾರ ಕಣ್ಣಿಂದಲೂ ಏನನ್ನೂ ಗುಪ್ತವಾಗಿ ಇಟ್ಟುಕೊಳ್ಳಲಾರೆನೆಂಬ ದಿಗಿಲು. ನನ್ನ ಮೊದಲಿನ ನಿರ್ಭಯವನ್ನು ಕಳೆದುಕೊಂಡೆ. ಹೇಗೆ? ಯಾಕೆ? ನಾನು ಅಗ್ರಹಾರಕ್ಕೆ ಮರಳದೇ ಇರಲು ಮುಖ್ಯ ಕಾರಣ ಆ ಬ್ರಹ್ಮಣರ ಕಣ್ಣುಗಳ ಎದಿರು ಬದುಕಲಾರದ ದಿಗಿಲು. ಸುಳ್ಳನ್ನು ಮಡಿಲಿನಲ್ಲಿ ಕಟ್ಟಿಕೊಂಡು ಬದುಕಲಾರೆ ಎನ್ನುವ ಆತಂಕ. +ಕಾಡಿನ ಮೌನ ಗಾಢವಾಗಿ ಕವಿದಂತೆ ಅವರ ಮನಸ್ಸು ತಿಳಿಯಾಗತೊಡಗಿತು. ಬಾಳೆಹಣ್ಣುಗಳನ್ನು ಸುಲಿದು ತಿನ್ನುತ್ತ ನಿಧಾನವಾಗಿ ಕಾಲು ಹಾಕಿ ನಡೆದರು. ಗೌಡನನ್ನು ನೋಡಿದಾಗಿನಿಂದ ಸಮಸ್ಯೆ ಇನ್ನಷ್ಟು ಗಹನವಾಗಿದೆ. ಜುಟ್ಟು ಹಿಡಿದು ಎತ್ತಿ ಮುಖಕ್ಕೆ ಮುಖಕೊಟ್ಟು ನೋಡಬೇಕು. ಮೂಲದಲ್ಲಿದ್ದುದು ಸುಡಬೇಕಾದ ಒಂದು ವಸ್ತು. ಆ ವಸ್ತು ಬ್ರಾಹ್ಮಣ್ಯವನ್ನು ಕಾಲಿನಿಂದೊದ್ದು ಬದುಕಿದ ನಾರಣಪ್ಪ. ಸುಡಬೇಕಾದ ಒಂದು ವಸ್ತು ಕೊನೆಗೊಂದು ದಿನ ಸುಟ್ಟುಹೋಗುವ ವಸ್ತುಗಳ ಮಧ್ಯೆ ಸಮಸ್ಯೆಯಾಯಿತು. ಈ ಸಮಸ್ಯೆ ಧರ್ಮಕ್ಕೆ ಸೇರಿದ್ದು ಎಂದು ಶಾಸ್ತ್ರದ ಮೊರಹೊಕ್ಕೆ. ದೇವರ ಮೊರೆಹೊಕ್ಕೆ. ಕೊನೆಗೆ ಕಾಡಿನಲ್ಲಿ ಕತ್ತಲಿನಲ್ಲಿ… +ನಿಂತರು. ಖಚಿತವಾಗಿ ಅರಿಯಲೆಂದು ಮನಸ್ಸಿನಲ್ಲಿ ತೂಗುತ್ತ ಕಾದರು. +…ಆದದ್ದು ಖಚಿತವಾಗಿ ಏನು, ಹೇಗೆ ಎಂಬುದನ್ನು ಪುನಃ ಸೃಷ್ಟಿಸಿಕೊಳ್ಳಲು ಹೋದಾಗ ಸ್ವಪ್ನದ ಬೆನ್ನುಹತ್ತಿ ನಡೆದ ಭಾವವಾಗುತ್ತದೆ. +ಅವಳ ಮೊಲೆಗಳ ಅಕಸ್ಮಾv ಸ್ಪರ್ಶದಿಂದ ಪುಳಕಿತನಾದೆ, ಮತ್ತೆ ಅವಳು ಮಡಿಲಿನಿಂದ ತೆಗೆದು ತಿನ್ನಿಸಿದ ಬಾಳೆಹಣ್ಣುಗಳನ್ನು ತಿಂದೆ. ಹಸಿವು, ದಣಿವು, ಮಾರುತಿಯಿಂದ ಆದ ನಿರಾಶೆ-ಕಾರಣ. ನಿರಪೇಕ್ಷಿತವಾಗಿ, ದೆವಸಂಕಲ್ಪವೆಂಬಂತೆ ಒದಗಿ ಬಂದ ಆ ಮುಹೂರ್ತವೇ ಅದಕ್ಕೆ ಕಾರಣ. ಅದೊಂದು ಮುಹೂರ್ತ-ಅದರ ಆಚೆಗೆ ಏನೂ ಇರಲಿಲ್ಲ-ಈಚೆಗೆ ಏನೂ ಇಲ್ಲ. ಇಲ್ಲದಿದ್ದೊಂದು ಆಗಿ ಮತ್ತೆ ಇಲ್ಲವಾದ ಮುಹೂರ್ತ. ಆಚೆಗೆ ನಿರಾಕಾರ. ಈಚೆಗೆ ನಿರಾಕಾರ. ಮಧ್ಯೆ ಮೆ ಏರಿ ಬಂದ ಮುಹೂರ್ತ. ಅಂದು ನಾನು ಅವಳನ್ನು ಸಂಭೋಗಿಸಿದ್ದಕ್ಕೆ ಸರ್ವಥಾ ಜವಾಬ್ದಾರನಲ್ಲ. ಅಂದರೆ ಆ ಘಳಿಗೆಗೆ ಜವಾಬ್ದಾರನಲ್ಲ. ಆದರೆ ಆ ಘಳಿಗೆ ನನ್ನನ್ನು ಬದಲು ಮಾಡಿಬಿಟ್ಟಿತಲ್ಲ-ಯಾಕೆ? ಬದಲಾದ ವ್ಯಕ್ತಿಗೆ ನಾನು ಜವಬ್ದಾರ ಎಂದು ತಾನೇ ಈಗಿನ ಕಸಿವಿಸಿ? ಮುಹೂರ್ತ ಸ್ಮೃತಿಯಾಗಿಬಿಟ್ಟಿದ್ದರಿಂದ ತಾನೆ? ಅಪೇಕ್ಷೆಯಿಲ್ಲದೆ ಒದಗಿತು. ಈಗ ಸ್ಮೃತಿಯಾಯಿತು-ಆ ಸ್ಮೃತಿಯನ್ನು ಕೆದುಕುತ್ತಿದ್ದಂತೆ ಮತ್ತೆ ಅಪೇಕ್ಷೆಯಾಗತೊಡಗಿದೆ. ಮತ್ತೊಮ್ಮೆ ಚಂದ್ರಿಯನ್ನು ಅವಚಿಕೊಳ್ಳಬೇಕೆನ್ನಿಸುತ್ತಿದೆ. +ಅಪೇಕ್ಷೆಯ ಸಂಚಾರವಾಗಿ ಆಚಾರ್ಯರ ದೇಹ ಸ್ಪರ್ಶ ಕಾತರವಾಯಿತು. ಕಣ್ಣುಗಳು ಮಂಜಾದವು. ಚಂದ್ರಿಯನ್ನರಸಿಕೊಂಡು ಕುಂದಾಪುರಕ್ಕೆ ಹೋಗಿಬಿಡಬೇಕೆನ್ನಿಸಿತು. ತರ್ಕಶುದ್ಧವಾಗಿ ತನ್ನನ್ನು ಪರೀಕ್ಷಿಸಿಕೊಳ್ಳುವ ಚಿತ್ತವೃತ್ತಿಗೆ ಭಂಗ ಬಂದಂತಾಯಿತು. ಈಗ ನಾನು ಅವಳನ್ನು ಹುಡುಕಿಕೊಂಡು ಹೋಗಿ ಅವಳ ಸಂಗ ಮಾಡಿದರೆ ನನ್ನ ಕ್ರಿಯೆಗೆ ನಾನೇ ಸಂಪೂರ್ಣ +ಜವಾಬ್ದಾರನಾಗಿ ಬಿಟ್ಟಂತಲ್ಲವೆ ಎನ್ನಿಸಿತು. ಆಗಲಾದರೂ ಹೀಗೆ ಅಕಸ್ಮಾv ಹೊರಳಿಬಿಟ್ಟಿದ್ದರ ಸ್ಮೃತಿಯ ಸಂಕಟದಿಂದ ಪಾರಾಗಬಹುದು. ಇದು ನಾನು, ನನ್ನದು, ನನ್ನಿಂದ ಸೃಷ್ಟಿತವಾದ ನನ್ನ ಹೊಸ ಸತ್ಯ, ಹೊಸ ವ್ಯಕ್ತಿತ್ವ ಎಂದು ದೆವವನ್ನು ಗಟ್ಟಿಯಾಗಿ ನೋಡಬಹುದು. ಈಗ ನನ್ನ ವ್ಯಕ್ತಿತ್ವ ರೂಪಭ್ರಷ್ಟವಾಗಿ, ಹೊಸ ರೂಪ ಪಡೆಯದೆ, ಗರ್ಭಕೋಶದಿಂದ ಅವಸರದಲ್ಲಿ ಹೊರಗೆ ತೆಗೆದ ರಾಕ್ಷಸ-ಪಿಂಡದಂತಾಗಿದೆ. ಕಾಡಿನಲ್ಲಿ ಕತ್ತಲಿನಲ್ಲಿ ಆ ಮುಹೂರ್ತ ಅಕಸ್ಮಾತ್ತಾಗಿ ಒದಗಿ ಬಂತೆಂಬುದು ನಿಜ. ನಾನಾಗಿ ಬಯಸಿ ಅದನ್ನು ಪಡೆಯಲಿಲ್ಲೆಂಬುದು ನಿಜ. ಚಾಚಿದ ಕೆಗಳು ಮೊಲೆಗಳನ್ನು ಮುಟ್ಟಿದುವು-ಮತ್ತೆ, ಆಸೆ ಹುಟ್ಟಿತು, ಮತ್ತೆ-ಅಲ್ಲಿದೆ ಗುಟ್ಟು. ನನ್ನ ಬಾಳು ಅತ್ತಲಿಗೋ, ಇತ್ತಲಿಗೋ ಎಂದು ನಿರ್ಧರಿತವಾಗಬೇಕಾಗಿದ್ದ ಗಳಿಗೆಯದು. ಅಲ್ಲ-ನಾನು ನಿರ್ಧಾರಮಾಡಬಹುದಾಗಿದ್ದ ಗಳಿಗೆಯದು. ನನ್ನ ದೇಹ ಅದಕ್ಕೆ ಒಪ್ಪಿತು ಎಂಬೋದು ಸಮಾಧಾನವಲ್ಲ, ಕತ್ತಲಿನಲ್ಲಿ ಅವರಸದ ಕೆಗಳು ಹುಡುಕಿದುವು; ಚಂದ್ರಿಯ ಮೃದುವಾದ ತೊಡೆ ನಿತಂಬಗಳನ್ನೆಲ್ಲ-ಯಾವ ಧರ್ಮವನ್ನೂ ನಾನು ಹುಡುಕಾಡದ ಬಗೆಯಲ್ಲಿ-ಹುಡುಕಿದುವು. ನನ್ನ ಬಾಳು ಅತ್ತಲಿಗೋ ಇತ್ತಲಿಗೋ ಎಂದು ನಿರ್ಧರಿತವಾಗಬೇಕಾಗಿದ್ದ ಗಳಿಗೆಯಲ್ಲಿ ಚಂದ್ರಿಯ ಜೊತೆ ಸಂಭೋಗಿಸುವ ನಿಶ್ಚಯ ಆಗಿಬಿಟ್ಟಿತು. ಸ್ವಾಧೀನ ತಪ್ಪಿದರೂ ನಿಶ್ಚಯ ಮಾಡುವ ಜವಾಬ್ದಾರಿ ನನ್ನ ಮೇಲೇ ಇತ್ತು. ಮನುಷ್ಯನ ನಿಶ್ಚಯಕ್ಕೆ ಬೆಲೆಯಿರುವುದು ಹೀಗೆ ಸ್ವಾಧೀನ ತಪ್ಪುವುದು ಸಾಧ್ಯವಿರುವುದರಿಂದಲೇ ಹೊರತಾಗಿ ನಿಶ್ಚಯ ನೀರು ಕುಡಿದಷ್ಟು ಸರಾಗವಾದ್ದರಿಂದಲ್ಲ. ನಮ್ಮ ನಿಶ್ಚಯದ ಮೂಲಕ ನಮ್ಮನ್ನು ನಾವು ರೂಪಿಸಿಕೊಳ್ಳುತ್ತೇವೆ, ಈ ಘಟ್ಟಕ್ಕೊಂದು ವ್ಯಕ್ತಿತ್ವದ ರೂಪುರೇಷೆ ತರುತ್ತೇವೆ. ಹೇಗಾಗಬೇಕೆಂದು ನಾರಣಪ್ಪ ನಿಶ್ಚಯಿಸಿ ಬದುಕಿದನೋ ಅಂತಹ ವ್ಯಕ್ತಿ ಅವನಾದ. ನಾನೂ ಇನ್ನೊಂದಾಗಬೇಕೆಂದು ನಿಶ್ಚಯಿಸಿ ಬದುಕಿದೆ. ಥಟ್ಟನೊಂದು ತಿರುವಿನಲ್ಲಿ ತಿರುಗಿಬಿಟ್ಟೆ. ತಿರುಗಿಬಿಟ್ಟಿದ್ದರ ಜವಾಬ್ದಾರಿಯೂ ನನ್ನದು ಎಂಬುದು ನನಗೆ ಸ್ಪಷ್ಟವಾಗುವ ತನಕ ಸ್ವಾತಂತ್ರ್ಯವಿಲ್ಲ. ತಿರುಗಿಬಿಟ್ಟಿದ್ದರಿಂದ ಏನಾಯಿತು? ದ್ವಂದ್ವ ಜೀವನಕ್ಕೆ ನುಗ್ಗಿಬಂತು. ಎರಡು ಸತ್ಯಗಳ ನಡುವೆ ತ್ರಿಶಂಕುವಾದೆ. ಋಷಿಗಳು ಜೀವನದ ಇಂತಹ ಅನುಭವಗಳನ್ನು ಹೇಗೆ ಎದುರಿಸಿದರು, ದ್ವಂದ್ವವಿಲ್ಲದೆ ಎದುರಿಸಿದರೇ-ಎಂದು ಅನುಮಾನವಾಗುತ್ತದೆ. ಮತ್ಸ್ಯಗಂಧಿಯನ್ನು ದೋಣಿಯಲ್ಲಿ ಕೂಡಿ ವ್ಯಾಸನಿಗೆ ಜನ್ಮವಿತ್ತು ಹೊರಟುಬಿಟ್ಟ ಆ ಮಹಾನುಭಾವ ನನ್ನ ಹಾಗೆ ಸಂಕಟಪಟ್ಟನೆ! ತಪೋಭ್ರಷ್ಟನಾದ ವಿಶ್ವಾಮಿತ್ರ ಈ ಆತಂಕವನ್ನನುಭವಿಸಿದನೆ? ಇಡೀ ಜೀವನವನ್ನೇ ವಿಸರ್ಜನೆಯ ಅವಸರದ ಘಳಿಗೆಗಳಂತೆ ಕಂಡು ಸದಾ ಪರಮಾತ್ಮವಶರಾಗಿದ್ದು, ದ್ವಂದ್ವದಲ್ಲಿ ಬದುಕುವುದರ ಮೂಲಕವೇ ದ್ವಂದ್ವಾತೀತರಾಗಿ, ಭೂಮಿ ಕೊರದ ರೂಪಾಂತರಗಳನ್ನೆಲ್ಲ ತಳೆದು, ಹರಿದು ಕೊನೆಗೆ ಸಾಗರದಲ್ಲಿ ರೂಪಾತೀತವಾಗುವ ನದಿಯಂತೆ ಅವರು ಬಾಳಿದ್ದಿರಬಹುದೆ? ನನ್ನ ಮಟ್ಟಿಗೆ ಪರಮಾತ್ಮನೆಂದೂ ಅಂತಹ ಸದ್ಯದ ಅವಸರವಾಗಲೇ ಇಲ್ಲ. ಆಗಿದ್ದರೆ ಅದು ನನ್ನ ಪರಮಾಪ್ತ ಮಿತ್ರ ಮಹಾಬಲನಿಗೆ ಆಗಿದ್ದಿರಬೇಕು. ಬಾಲ್ಯದ ಗೆಳೆಯ ಅವನೊಬ್ಬನಲ್ಲಿ ಮಾತ್ರ ಪರಮಾತ್ಮ ಒಂದು ಹಂಬಲವಾಗಿ ಬಿಟ್ಟಿದ್ದ. ಇಬ್ಬರೂ ಕೂಡಿ ಕಾಶಿಗೆ ಹೋದೆವು. ಅವನು ಅಸಾಧ್ಯ ಜಾಣ. ತೆಳ್ಳಗೆ ಬೆಳ್ಳಗೆ ಉದ್ದಗೆ ಇದ್ದ. ಅವನ ಮನಸ್ಸಿಗೆ ಮೀರಿದ ವಿಷಯವೇ ಇರಲಿಲ್ಲ. ಗುರುಗಳು ಈ ಪಾಠ ಹೇಳುವಾಗಲೇ ಮುಂದಿನದನ್ನು ಅವ ಊಹಿಸಿ ಬಿಡುವ. ಅವನೊಬ್ಬನ ಬಗ್ಗೆ ಮಾತ್ರ ತನಗೆ ಅಸಾಧ್ಯವಾದ ಅಸೂಯೆ, ಪ್ರೇಮ ಹುಟ್ಟಿತ್ತು. ಅವನಿಗೆ ಹೋಲಿಸಿಕೊಂಡರೆ ರೂಪದಲ್ಲಾಗಲೀ ಬುದ್ಧಿಯಲ್ಲಾಗಲೀ ತಾನು ಸ್ವಲ್ಪ ಸ್ಥೂಲವೆ. ತಾನು ಮಾಧ್ವ, ಅವನು ಸ್ಮಾರ್ತ ಎಂಬೋದು ಇಬ್ಬರ ನಡುವಿನ ಗಾಢವಾದ ಪ್ರೇಮಕ್ಕೆ ಅಡ್ಡಿಯಾಗಿರಲಿಲ್ಲ. ತಾನು ಸದಾ ಮಾಧ್ವಮತ ಪ್ರತಿಪಾದನೆ ಮಾಡಬೇಕೆಂದು ಹಟತೊಟ್ಟುಕೊಂಡಿದ್ದರೆ ಅವನು ಮಾತ್ರ ಪರಮಾತ್ಮನ ಅನುಭವವೇ ನನಗೆ ಮುಖ್ಯವಾದದ್ದು, ಉಳಿದದ್ದೆಲ್ಲ ಅಮುಖ್ಯ ಎಂದು ಹೇಳುತ್ತಿದ್ದ. ಪರಮಾತ್ಮನ ಅನುಭವಕ್ಕೊಂದು ದಾರಿ ಬೇಡವೇ, ದ್ವೆತ ಅಂತಹ ದಾರಿ ಎಂದು ತಾನು ವಾದಿಸಿದರೆ ದಾರಿಯಲ್ಲಿ ನಡೆದು ಸಿಗಲು ವೆಕುಂಠವೇನೊಂದು ಊರೇ, ಗ್ರಾಮವೇ, ನಿಂತಲ್ಲೆ ಅದು ಸಿಕ್ಕಿಬಿಡಬೇಕೆಂದು ಅವನು ಅನ್ನುತ್ತಿದ್ದ. ತರ್ಕ ಮೀಮಾಂಸಕ್ಕಿಂತ ಅವನಿಗೆ ಪ್ರಿಯವಾದದ್ಡು ಸಂಗೀತ. ಜಯದೇವ ಕವಿಯ ಗೀತಗೋವಿಂದವನ್ನು ಅವನು ಹಾಡತೊಡಗಿದನೆಂದರೆ ನಂದನದಲ್ಲಿದ್ದಂತಾಗಿ ಬಿಡುತ್ತಿತ್ತು. ’ಲಲಿತ ಲವಂಗ ಲತಾಪರಿಶೀಲನ ಕೋಮಲ ಮಲಯ ಸಮೀರೇ’-ಸ್ಮೃತಿಯು ಉಕ್ಕಿಬಂದು ಗೆಳೆಯನ ನೆನಪಾಗಿ ಪ್ರಾಣೇಶಾಚಾರ್ಯರು ಗದ್ಗದಿತರಾದರು. ಪರಮಾತ್ಮ-ಇಂತಹ ಪ್ರೇಮವನ್ನು ಬಹಳ ದಿನ ನಾನು ಪಟ್ಟೇ ಇರಲಿಲ್ಲ. ಏನಾಗಿಹೋದನೋ ಮಹಾಬಲ. ಕಾಶಿಯಲ್ಲಿದ್ದಾಗ ತನ್ನಿಂದ ಅವ ದೂರದೂರವಾದ. ಯಾಕೆಂದು ಹೊಳೆಯಲೇ ಇಲ್ಲ. ಅತ್ಯಂತ ದುಃಖಕ್ಕೊಳಗಾಗಿಬಿಟ್ಟೆ ಆಗ. ಓದು ವಿದ್ಯಾ ಏನೂ ಹತ್ತದೇ ಹೋಯಿತು. ಸದಾ ಜೊತೆಗಿರುತ್ತಿದ್ದವ ತಪ್ಪಿಸಿಕೊಂಡು ಅಲೆಯಲು ಪ್ರಾರಂಭಿಸಿದ. ಕಾರಣ ತಿಳಿಯಲೇ ಇಲ್ಲ. ಹಗಲು ರಾತ್ರೆ ಆಗ ತಾನು ಮಹಾಬಲನಿಗಾಗಿ ಹಲುಬಿದಂತೆ ಯಾರ ಬಗ್ಗೆಯೂ ಹಲುಬಿದ್ದಿಲ್ಲ. ಮೋಹವಶನಾಗಿಬಿಟ್ಟಿದ್ದೆ. ತಿರುಗಿ ಇಡೀ ಜೀವನವನ್ನೇ ನೋಡಿಕೊಂಡರೆ ಮಹಾಬಲನ ಮೇಲೆ ಪಟ್ಟ ಪ್ರೇಮ ಯಾರ ಮೇಲೂ ನಾನು ಪಟ್ಟಿಲ್ಲ. ಎಡ ಕೆಂಗೆನ್ನೆಯ ಮೇಲೆ ಕಪ್ಪುಮಚ್ಚೆಯಿದ್ದ ಅವನ ವ್ಯಾಕುಲಮುಖ ಒಂದೊಂದು ದಿನ ಕಣ್ಣಿಗೆ ಕಟ್ಟಿದಂತಾಗಿ ಅವನ ಸ್ನೇಹಕ್ಕೆ ಹಲುಬುವಂತಾಗಿಬಿಡುತ್ತಿತ್ತು. ಆದರೆ ಹತ್ತಿರ ಸುಳಿದರೆ ಏನಾದರೂ ನೆವ ಹೇಳಿ ಅವ ತಪ್ಪಿಸಿಕೊಂಡುಬಿಡುವ. ಒಂದು ದಿನ ಅವ ಇದ್ದಿಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟ; ಪಾಠಕ್ಕೆ ಬರೋದನ್ನ ನಿಲ್ಲಿಸಿಬಿಟ್ಟ. ಹುಡುಕುತ್ತ ಕಾಶಿಯ ಬೀದಿಗಳನ್ನೆಲ್ಲ ಅಲೆದೆ. ಎಲ್ಲಿ ಯಾರು ಅವನನ್ನು ಬಲಿಕೊಟ್ಟುಬಿಟ್ಟರೊ ಎಂದು ಕಂಗಾಲಾದೆ. ಒಂದು ದಿನ ಮನೆಯೊಂದರ ಚಾವಡಿಯ ಮೇಲೆ ಕೂತಿದ್ದ. ಆಶ್ಚರ್ಯಪಟ್ಟು ನೋಡಿದೆ-ಗುಡುಗುಡಿ ಸೇದುತ್ತ ಒಂಟಿಯಾಗಿ ಕೂತಿದ್ದ. ತಡೆಯಲಾರದೆ ಓಡಿದೆ, ಕೆ ಹಿಡಿದು ಎಳೆದೆ. ಭಾರವಾದ ಕಣ್ಣುಗಳನ್ನು ಎತ್ತಿ “ಪ್ರಾಣೇಶ, ನಿನ್ನ ಪಾಡಿಗೆ ನೀನು ಹೋಗು” ಎಂದುಬಿಟ್ಟ. ಹಿಡಿದು ಜಗ್ಗಿದೆ. ರೇಗಿ ಎದ್ದು ನಿಂತು ಅವ “ನಿನಗೆ ಸತ್ಯ ಬೇಕೇ? ಕೇಳು. ನಾನು ನನ್ನ ವ್ಯಾಸಂಗಾನ್ನ ಬಿಟ್ಟುಬಿಟ್ಟೆ. ಈಗ ಯಾವುದಕ್ಕಾಗಿ ಬದುಕುವೆ ಗೊತ್ತೆ? ಒಳಗೆ ಬಾ. ತೋರಿಸುತ್ತೇನೆ” ಎಂದು ಒಳಗೆ ಎಳೆದುಕೊಂಡು ಹೋಗಿ ಸುಪ್ಪತ್ತಿಗೆಯ ಮೇಲೆ ಮಲಗಿ ಹಗಲಿನಲ್ಲಿ ನಿದ್ದೆಹೋದ ಒಬ್ಬ ಹುಡುಗಿಯನ್ನು ತೋರಿಸಿದ. ಕೆಗಳನ್ನು ಚೆಲ್ಲಿ ಅವಳು ಮಲಗಿದ್ದಳು. ಅವಳ ವೇಷವಸ್ತ್ರದ ಬೆಡಗಿನಿಂದಲೇ ಅವಳು ವೇಶ್ಯೆ ಎಂದು ತಿಳಿಯುವಂತಿತ್ತು. ನಾನು ಭಯದಿಂದ, ಆಶ್ಚರ್ಯದಿಂದ ನಡುಗಿಬಿಟ್ಟೆ. ಮಹಾಬಲ “ತಿಳಿಯಿತಲ್ಲವೇ ಪ್ರಾಣೇಶ. ನನಗಾಗಿ ಇನ್ನು ಯೋಚಿಸಬೇಡ. ಹೋಗು” ಎಂದುಬಿಟ್ಟ. ಬುದ್ಧಿ ಭ್ರಮಣೆಯಾದಂತಾಗಿ ಏನೊಂದು ಅನ್ನುವುದೂ ತೋರದೆ ನಡೆದುಬಿಟ್ಟೆ. ಮತ್ತೆ ಮನಸ್ಸು ಕಲ್ಲಾಗಿಬಿಟ್ಟಿತು. ಭ್ರಷ್ಟನಾಗಿಹೋದ ಮಹಾಬಲನಿಗೆ ವಿರುದ್ಧ ದಿಕ್ಕಿನಲ್ಲಿ ಬಾಳನ್ನು ನಡೆಸಿಬಿಡುತ್ತೇನೆಂದು ಹಟತೊಟ್ಟು ಬಂದುಬಿಟ್ಟೆ. ಇಲ್ಲಿ ನಾರಣಪ್ಪನನ್ನು ಕಂಡಾಗಲೆಲ್ಲ ಮಹಾಬಲನ ಜ್ಞಾಪಕ. ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸವಿದ್ದೂ ಕೂಡ. +ಈಗ ಅನ್ನಿಸುತ್ತಿದೆ; ಮಹಾಬಲನನ್ನು ನೋಡಬೇಕು. ಕೇಳಬೇಕು : ಯಾಕೆ ನೀನು ಸ್ವೇಚ್ಛೆಯಿಂದಲೇ ನಿನ್ನ ಜೇವನದ ಗತಿಯನ್ನೆ ಬದಲಾಯಿಸಿಬಿಟ್ಟೆ? ಯಾವ ಅನುಭವ, ಯಾವ ಆಕಾಂಕ್ಷೆ, ಯಾವ ಮೋಹ ನಿನ್ನನ್ನು ಹೀಗೆ ನಡೆಸಿತು? ಈಗ ನನಗೆ ನೀನು ಏನು ಮಾಡೆಂದು ಹೇಳುತ್ತಿ? ನಿನಗೆ ಸ್ತ್ರೀಸುಖದಿಂದಲೇ ಸರ್ವತೃಪ್ತಿಯೂ ಆಯಿತೆ? ಅಷ್ಟೊಂದು ಶ್ರೀಮಂತನಾಗಿದ್ದ ನಿನ್ನ ಬಾಳು ಹೆಣ್ಣೊಬ್ಬಳಿಂದಲೇ ತೃಪ್ತವಾಗುವುದು ಸಾಧ್ಯವೇ? +ಆಹಾ ಹೊಳೆದುಬಿಟ್ಟಿತು. ಪ್ರಾಣೇಶಾಚಾರ್ಯರು ಎದ್ದು ನಿಂತು ನಡೆಯತೊಡಗಿದರು. ಮೂಲ ಇರುವುದು ಅಲ್ಲಿ. ಮಹಾಬಲನಿಂದ ನನಗೆ ಆದ ನಿರಾಶೆ ಉಳಿದೇ ಬಿಟ್ಟಿದ್ದಿರಬೇಕು. ಅಪ್ರತ್ಯಕ್ಷವಾಗಿ ನಾರಣಪ್ಪನಲ್ಲಿ ನಾನು ಮಹಾಬಲನನ್ನ ಕಂಡಿರಬೇಕು. ಅಲ್ಲಿ ಆದ ಸೋಲಿಗೆ ಸಮಾಧಾನವಾಗಲೆಂದು ನಾರಣಪ್ಪನನ್ನು ಗೆಲ್ಲಲು ಪ್ರಯತ್ನಿಸಿರಬೇಕು. ಆದರೆ ಸೋತೆ, ಸೋತೆ-ಮೂಗಡಿಯಾಗಿ ಬಿದ್ದುಬಿಟ್ಟೆ. ಯಾವುದರ ವಿರುದ್ಧ ಹೋರಾಡುತ್ತ ಬಂದೆನೋ ಅದೇ ನಾನಾಗಿ ಬಿಟ್ಟೆ. ಯಾಕೆ? ಯಾಕೆ? ಎಲ್ಲಿ, ಹೇಗೆ, ಸೋತೆ? ಹುಡುಕಲು ಹೋದರೆ ಮತ್ತೆಲ್ಲ ಗಂಟುಕಟ್ಟಿಕೊಂಡುಬಿಡುತ್ತದೆ. +ನೋಡಹೋದರೆ ಒಂದಕ್ಕಿನ್ನೊಂದು ಗಂಟುಹಾಕಿಕೊಂಡಿದೆ. ಮಹಾಬಲನಿಂದ ನಾರಣಪ್ಪ, ನಾರಣಪ್ಪನಿಂದ ನನ್ನ ಹಠ, ನಾನು ಓದಿದ ಪುರಾಣ, ಅದರ ಪರಿಣಾಮ, ಕೊನೆಗೆ ನನಗೇ ಬೆಳ್ಳಿಯ ಮೊಲೆಗಳ ಮೇಲೆ ಬಂದ ಆಸೆ, ಈಗ ನಾನು ಪಡೆಯುತ್ತಿರುವ ರೂಪ, ಜೀವನದುದ್ದಕ್ಕೂ ತಯಾರಾಗುತ್ತಿತ್ತು-ಪರೋಕ್ಷವಾಗಿ. ಚಂದ್ರಿಯನ್ನು ಕೂಡಿದ ಮುಹೂರ್ತ ಹೀಗೆ ನೋಡಿದಲ್ಲಿ ನಿರಪೇಕ್ಷಿತವಾಗಿ ಬಂದದ್ದೆ ಎಂದೂ ಅನುಮಾನವಾಗುತ್ತದೆ. ಒಳಗಿದ್ದುದೆಲ್ಲ ಹೊರಗೆ ಬಂದುಬಿಟ್ಟ ಕ್ಷಣವಿರಬೇಕು ಅದು-ಉಗ್ರಾಣದಿಂದ ಧುಮುಕಿದ ಇಲಿಗಳ ಹಾಗೆ. ಮತ್ತೆ ಅಗ್ರಹಾರ ನೆನಪಾಗಿ ಅಸಹ್ಯದ ಅನುಭವ ಮರುಕಳಿಸುತ್ತದೆ. ತಾನು ಎದುರಿಸುತ್ತಿರುವ ಸಂದಿಗ್ಧದ ಸ್ಪಷ್ಟ ರೂಪವಾಗಿ ಅಗ್ರಹಾರ ನಿಂತಿದೆ-ನನ್ನ ಇಡೀ ಬಾಳಿಗೊಂದು ವ್ಯಾಖ್ಯಾನ ಬರೆದು, ಅಲ್ಲಿಂದ ಓಡಿಬಿಡಬೇಕೆಂಬುದೊಂದೇ ಈಗ ನನಗೆ ಸ್ಪಷ್ಟ. ಪ್ರಾಯಶಃ ಚಂದ್ರಿಯಿದ್ದಲ್ಲಿಗೆ ಹೋಗಿಬಿಡುವುದು. ಮಹಾಬಲನಂತಾಗಿಬಿಡುವುದು. ಹಾಗೆ-ಸ್ಪಷ್ಟವಾದೊಂದು ರೂಪ ಪಡೆದುಬಿಡುವುದು. ತ್ರಿಶಂಕು ಅವಸ್ಥೆಯಿಂದ ಪಾರಾಗಿಬಿಡುವುದು. ಯಾರ ಕಣ್ಣೆಗೂ ಬೀಳದಂತೆ, ಪತ್ತೆಯಾಗದಂತೆ, ನಾನೀಗ ನಡೆದುಬಿಡಬೇಕು. +ನಡೆಯುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಕಾಡಿನಲ್ಲಿ ತನ್ನ ಬೆನ್ನಿನ ಹಿಂದೆ ಯಾರೋ ಬರುತ್ತಿದ್ದಾರೆ ಎಂದು ಅನ್ನಿಸತೊಡಗಿತು. ಯಾವನೋ ಒಬ್ಬನ ಎರಡು ಕಣ್ಣುಗಳು ನೆಟ್ಟಗೆ ನನ್ನನ್ನು ನೋಡುತ್ತಿವೆ ಎನ್ನಿಸಿತು. ಬೆನ್ನನ್ನು ನೇರ ಮಾಡಿ ನಡೆಯತೊಡಗಿದರು. ಹಿಂದಕ್ಕೆ ತಿರುಗಿ ನೋಡಬೇಕೆನ್ನಿಸಿತು. ದಿಗಿಲಾಯಿತು. ಸಪ್ಪಳವಾದಂತಾಯಿತು, ತಿರುಗಿದರು. ದೂರದಲ್ಲೊಬ್ಬ ಪ್ರಾಯಕ್ಕೆ ಬಂದ ತರುಣ ವೇಗವೇಗವಾಗಿ ಹೆಜ್ಜೆಹಾಕಿ ಬರುವುದು ಕಾಣಿಸಿತು. ಪ್ರಾಣೇಶಾಚಾರ್ಯರೂ ವೇಗವಾಗಿ ಹೆಜ್ಜೆಹಾಕಿದರು. ತಿರುತಿರುಗಿ ನೋಡಿದರೆ ಅವನೂ ವೇಗವಾಗಿ ಹೆಜ್ಜೆಹಾಕುತ್ತಿದ್ದಾನೆ. ಅದೇ ವೇಗದಲ್ಲಿ ನಡೆಯತೊಡಗಿದರು. ಆದರೆ ಆತ ಜಗ್ಗಿದಂತೆ ಕಾಣಲಿಲ್ಲ. ತರುಣನಾದ್ದರಿಂದ ಇನ್ನಷ್ಟು ವೇಗವಾಗಿ ನಡೆದು ಹತ್ತಿರವಾಗತೊಡಗಿದ. ಎಲ್ಲಾದರೂ ಅವ ತನ್ನ ಪರಿಚಯವಿದ್ದವನಾಗಿ ಬಿಟ್ಟಿದ್ದರೆ ಎಂದು ದಿಗಿಲಾಯಿತು. ಎಷ್ಟು ವೇಗವಾಗಿ ನಡೆದರೂ ಅವ ಇನ್ನಷ್ಟು ಹತ್ತಿರವಾದ. ಪ್ರಾಣೇಶಾಚಾರ್ಯರಿಗೆ ಕಾಲು ನೋವಾಗಿ ನಡಿಗೆಯ ವೇಗ ಕಡಿಮೆಯಾಯಿತು. ಆತ ಜೊತೆಯಾಗಿಬಿಟ್ಟ. ಏದುಸಿರು ಬಿಡುತ್ತ ಮೆಲ್ಲಗೆ ತನ್ನ ಜೊತೆಗೇ ನಡೆಯಲು ತೊಡಗಿದ. ಯಾರಿರಬಹುದೋ ಎಂದು ನೋಡಿದರು. ಪರಿಚಯ ಹತ್ತದು- +“ನಾನು ಮಾಲೇರರ ಪುಟ್ಟ. ಮೇಳಿಗೆಯ ರಥೋತ್ಸವಕ್ಕೆ ಹೊರಟವ. ನಿಮ್ಮ ಕಡೆ ಎತ್ತಲೊ?” +ಎಂದು ಅವನಾಗಿಯೇ ಪ್ರಾರಂಭಿಸಿದ. ಪ್ರಾಣೇಶಾಚಾರ್ಯರಿಗೆ ಮಾತಾಡಲು ಇಷ್ಟವಾಗಲಿಲ್ಲ. ಏನು ಹೇಳಬೇಕೆಂದು ಹೊಳೆಯದೆ ಅವನ ಮುಖವನ್ನೇ ನೋಡಿದರು. ಕಪ್ಪಗೆ ಬಾಡಿದ ಅವನ ಮುಖದಲ್ಲಿ ಬೆವರಿನ ಹನಿಗಳು ನಿಂತಿದ್ದುವು. ನೀಳವಾದ ದೀರ್ಘವಾದ ಮೂಗಿನಿಂದಾಗಿ ಅವನ ಮುಖಕ್ಕೊಂದು ಹಠವಾದಿಯ ಸ್ವರೂಪ ಬಂದಿತ್ತು. ಕಣ್ಣುಗಳು ಸಣ್ಣಗೆ ಹತ್ತಿರ ಹತ್ತಿರವಿದ್ದುದರಿಂದ ಅವನ ದೃಷ್ಟಿ ಚೂಪಾಗಿ ಅವನ ಕಣ್ಣಿಗೆ ಬಿದ್ದವರು ಕಸಿವಿಸಿಪಡುವಂತಿತ್ತು. ಕ್ರಾಪು ಬಿಟ್ಟು, ಅಂಗಿ ಪಂಚೆಯುಟ್ಟು ಪೇಟೆಯ ಯುವಕನಂತೆ ಕಾಣುತ್ತಿದ್ದ. +“ನಿಮ್ಮನ್ನು ಬೆನ್ನ ಹಿಂದಿಂದ ನೋಡಿ, ನಿಮ್ಮ ನಡಿಗೆಯ ಕ್ರಮದಿಂದ ಯಾರೋ ಪರಿಚಯದವರೆಂದುಕೊಂಡೆ. ಈಗ ನಿಮ್ಮ ಮುಖ ನೋಡಿದರೆ ಎಲ್ಲೋ ಕಂಡಂತೆ ಅನ್ನಿಸುತ್ತೆ…” +ಸಾಮಾನ್ಯವಾಗಿ ಹಳ್ಳಿಯವರೆಲ್ಲ ಮಾತಿನ ಪ್ರಾರಂಭದಲ್ಲಿ ಹೇಳುವ ಪ್ರಕಾರ ಪುಟ್ಟ ಅಂದಿದ್ದರೂ ಪ್ರಾಣೇಶಾಚಾರ್ಯರಿಗೆ ಕಸಿವಿಸಿಯಾಯಿತು. +“ಇಲ್ಲ, ನಾನು ಘಟ್ಟದ ಕೆಳಗಿನವ. ಸಂಭಾವನೆಗೆಂದು ಹೊರಟವ” ಎಂದು ಪ್ರಾಣೇಶಾಚಾರ್ಯರು ಮಾತನ್ನು ಮುಗಿಸಲು ಪ್ರಯತ್ನಿಸಿದರು. +“ಓಹೋ-ನನಗೂ ಘಟ್ಟದ ಕೆಳಗಿನ ಪರಿಚಯವಿದೆ. ಅಲ್ಲೇ ನನ್ನ ಮಾವನ ಮನೆ. ಆಗಾಗ್ಗೆ ಹೋಗಿಬರೋದು ಉಂಟು. ಘಟ್ಟದ ಕೆಳಗೆ ಎಲ್ಲಿಯಾಯಿತು ನಿಮ್ಮ ಊರು? ” +“ಕುಂದಾಪುರ”. +“ಓಹೋ ಕುಂದಾಪುರವೆ? ಅಲ್ಲಿ ನಿಮಗೆ ಶೀನಪ್ಪಯ್ಯನ ಪರಿಚಯವೆ?” +“ಇಲ್ಲ” ಎಂದು ಪ್ರಾಣೇಶಾಚಾರ್ಯರು ಸರಸರನೆ ನಡೆಯತೊಡಗಿದರು. ಆದರೆ ಮಾತನ್ನು ಬಯಸಿ ಬಂದ ಪುಟ್ಟ ಅಷ್ಟಿಷ್ಟಕ್ಕೆ ಸಮಾಧಾನವಾಗುವಂತೆ ಕಾಣಲಿಲ್ಲ. +“ಆ ಶೀನಪ್ಪಯ್ಯ ನಮಗೆ ತುಂಬ ಬೇಕಾದವರು. ನಮ್ಮ ಮಾವಂದಿರಿಗೂ ಅವರಿಗೂ ತುಂಬ ಕೇವಲ. ನಮ್ಮ ಇವಳ ತಂಗಿಯನ್ನೇ ಅವಳ ಎರಡನೆಯ ಮಗನಿಗೆ ತಂದುಕೊಂಡಿದ್ದಾರೆ…” +’ಹೂ ಹೂ’ ಎನ್ನುತ್ತ ಪ್ರಾಣೇಶಾಚಾರ್ಯರು ನಡೆದರು. ಬಿಟ್ಟುಕೊಟ್ಟು ನಡೆದರೂ ಬಿಡುವಂಥದಲ್ಲ ಇದು. ಅವನು ಅವಸರದಲ್ಲಿದ್ದರೆ ಮುಂದೆ ಹೋಗಿಬಿಡಲಿ ಎಂದು ಆಯಾಸವಾದವರಂತೆ ಮರ ಒಂದರ ಬುಡದಲ್ಲಿ ಕೂತರು. ಪುಟ್ಟನಿಗೆ ಅದರಿಂದ ಸಂತೋಷವಾದ ಹಾಗೆ ಕಂಡಿತು. ಅವನೂ ಉಶ್ಶಪ್ಪ ಎಂದು ಕೂತು ಅಂಗಿಯ ಜೇಬಿನಿಂದ ಬೀಡಿ ಬೆಂಕಿಪೊಟ್ಟಣ ತೆರೆದು ಬೀಡಿಯನ್ನು ಒಡ್ಡಿದ. ಪ್ರಾಣೇಶಾಚಾರ್ಯರು ಬೇಡವೆಂದರು. ಅವನು ಬೀಡಿ ಹತ್ತಿಸಿದ. ಪ್ರಾಣೇಶಾಚಾರ್ಯರು ಇಷ್ಟಕ್ಕೇ ತನ್ನ ಆಯಾಸ ಪರಿಹಾರವಾದಂತೆ ನಟಿಸುತ್ತ ಎದ್ದುನಿಂತು ಹೊರಟರು. ಪುಟ್ಟನೂ ಎದ್ದುನಿಂತು ಹೊರಟುಬಿಟ್ಟ. “ದಾರಿಯಲ್ಲೊಬ್ಬರು ಮಾತಿಗೆ ಸಿಕ್ಕರೆ ದಾರಿ ಕಳೆದದ್ದು ಗೊತ್ತಾಗುವುದಿಲ್ಲ ಅಲ್ಲವೇ? ನನಗಂತೂ ಮಾತಿಗೊಂದು ಜನ ಬೇಕಪ್ಪ” ಎಂದು ಪುಟ್ಟ ಹಸನ್ಮುಖಿಯಾಗಿ ಪ್ರಾಣೇಶಾಚಾರ್ಯರನ್ನು ಕುತೂಹಲದಿಂದ ನೋಡುತ್ತ ನಡೆದ. +* * * +ಇತ್ತಲಾಗಿ ಪ್ರಾಣೇಶಾಚಾರ್ಯರು ತಮ್ಮ ಹೆಂಡತಿಯ ಶವಸಂಸ್ಕಾರ ಮಾಡಿ ಕಾಲುಕೊಂಡಲ್ಲಿಗೆ ನಡೆದುಬಿಡುವುದೆಂದು ಹೊರಟುಬಿಟ್ಟ ಒಂದೆರಡು ಗಂಟೆಗಳೊಳಗೆ ಪಾರಿಜಾತಪುರದವರಿಗೆ ಎಲ್ಲ ವಿಷಯ ತಿಳಿದುಬಿಟ್ಟಿತು-ನಾರಣಪ್ಪನ ಶವವನ್ನು ಬ್ಯಾರಿಯೊಬ್ಬ ಸುಟ್ಟುಬಿಟ್ಟ ಎಂಬ ಸಂಗತಿಯೊಂದು ಹೊರತಾಗಿ. ಕುಡಿತದ ಅಮಲಿನಲ್ಲಿ ಮುಹೂರ್ತ ಮಾತ್ರವಾದರೂ ಧೀರರಾಗಿ ನಾರಣಪ್ಪನ ಶವಸಂಸ್ಕಾರದ ಮನಸ್ಸುಮಾಡಿ, ನಂತರ ಸತ್ತೆವೋ ಕೆಟ್ಟೆವೋ ಎಂದು ಓಡಿಬಿಟ್ಟಿದ್ದ ಪಾರಿಜಾತಪುರದ ತರುಣರು ಮಾತ್ರ ತಾವು ಕಂಡ ಸತ್ಯವನ್ನು ಯಾರಿಗೂ ಹೇಳಲಾರದೆ ಬಾಯಿ ಮುಚ್ಚಿಕೊಂಡುಬಿಟ್ಟಿದ್ದರು. ಮುಖ್ಯವಾಗಿ ಸಾಹುಕಾರ ಮಂಜಯ್ಯನವರಿಗೆ ಗಾಬರಿಯುಂಟು ಮಾಡಿದ ವಿಷಯವೆಂದರೆ ಒಂದರ ಹಿಂದೆ ಒಂದರಂತೆ ಬಂದ ಸಾವು. ನಾರಣಪ್ಪ, ಮತ್ತೆ ದಾಸಾಚಾರ್ಯ, ಮತ್ತೆ ಪ್ರಾಣೇಶಾಚಾರ್ಯರ ಹೆಂಡತಿ-ಅಂದರೆ ಒಂದೇ ಅರ್ಥ : ಇದು ಪಿಡುಗು. ಶಿವಮೊಗ್ಗೆಯ ಮಂಡಿಪೇಟೆ, ಕೋರ್ಟು, ಕಛೇರಿಗಳ ವ್ಯವಹಾರದಲ್ಲಿ ಪಳಗಿದ ಅವರು ತಮ್ಮ ಅಗ್ರಹಾರದ ಇತರ ಬ್ರಾಹ್ಮಣರ ವಿಚಾರಕ್ಕೆ ನಕ್ಕುಬಿಟ್ಟರು. ಎಲ್ಲರ ಮತ, ನಾರಣಪ್ಪನ ಅಪಮೃತ್ಯುವಿನಿಂದ ಮತ್ತು ಅವನ ಶವಸಂಸ್ಕಾರ ಮಾಡದೇ ಹೋದ ಕರ್ತವ್ಯಭಂಗದಿಂದಾಗಿ ಹೀಗಾಗುತ್ತಿದೆ ಅಂತ. ಮಂಜಯ್ಯನಿಗೆ, ’ಅಯ್ಯೊ ಮೊನ್ನೆ ತಾನೇ ನಮ್ಮಲ್ಲಿಂದ ಉಪ್ಪಿಟ್ಟು ತಿಂದು ಹೋದ ದಾಸಾಚಾರ್ಯ ಸತ್ತುಬಿಟ್ಟನಲ್ಲ’ ಎಂದು ವ್ಯಥೆಯಾದರೂ- ಹಾಗೆ ಗಟ್ಟಿಯಾಗಿ ಅಂದರೂ-ಒಳಗೊಳಗೆ ಆ ಬ್ರಾಹ್ಮಣನನ್ನು ಒಳಗಡೆಗೆ ಬಿಟ್ಟುಕೊಂಡುಬಿಟ್ಟೆನಲ್ಲ ಎಂಬ ಭಯ. ಅವತ್ತು ದೂರ್ವಾಸಪುರದ ಬ್ರಾಹ್ಮಣರೆಲ್ಲ ಬಂದು ಶಿವಮೊಗ್ಗೆಯಿಂದ ಬಂದ ನಾರಣಪ್ಪ ಗೆಡ್ಡೆಯೆದ್ದು ಜ್ವರ ಬಂದು ಸತ್ತ ಎಂದು ಹೇಳಿದಾಗಲೆ ಅವರಿಗೆ ಅನುಮಾನವಾಗಿತ್ತು. ಆದರೆ ಬಾಯಾರ ಆ ಭಯಂಕರ ರೋಗದ ಹೆಸರನ್ನು ಹೇಳಲೂ ಹೆದರಿಕೆಯಾಗಿತ್ತು. ನನಗೇಕೆ ಅಧಿಕಪ್ರಸಂಗ ಎನ್ನಿಸಿತ್ತು. ಮತ್ತೀಗ ಇಲಿಗಳು ಬಿದ್ದು ಸಾಯುತ್ತಿವೆ, ಅಗ್ರಹಾರ ಬಿಟ್ಟು ಓಡಲಿಕ್ಕೆ ಹತ್ತಿದ್ದಾವೆ, ರಣಹದ್ದುಗಳು, ಅವುಗಳಿಗಾಗಿ ಬಂದಿದ್ದಾವೆಂಬ ಸುದ್ದಿ ಕೇಳಿದಮೇಲಂತೂ ಅನುಮಾನ ಸಂಪೂರ್ಣ ಬಿಟ್ಟುಹೋಯಿತು. ರೂಪಾಯಿಗೆ ಹದಿನಾರಾಣೆಯಷ್ಟು ಖಚಿತ ತನ್ನ ಊಹೆ. ಅಲ್ಲದೆ ನೆನ್ನೆ ಬಂದ ’ತಾಯಿನಾಡು’ ಪತ್ರಿಕೆ-ವಾರದ ಹಿಂದಿನದ್ದಾದರೂ-ಏನಂತೆ-ಮೂಲೆಯೊಂದರಲ್ಲಿ ಸುದ್ದಿಯನ್ನು ಅಚ್ಚುಮಾಡಿತ್ತು. “ಶಿವಮೊಗ್ಗೆಯಲ್ಲಿ ಪ್ಲೇU” ಎಂದು ಸುದ್ದಿ. ನಾರಣಪ್ಪ ಪ್ಲೇಗನ್ನು ತಂದ. ಅದು ಕಾಳ್ಗಿಚ್ಚಿನಂತೆ ಹರಡುವ ಪಿಡುಗು. ಇಷ್ಟು ದಿನ ಸುಮ್ಮನಿದ್ದದ್ದು, ಯಾವುದೋ ಕುರುಡುಧರ್ಮಕ್ಕೆ ಗಂಟು ಬಿದ್ದು ಸತ್ತವನ ಶವಸಂಸ್ಕಾರ ಮಾಡದೇ ಹೋದದ್ದು-ಸ್ವತಃ ಕಲ್ಲುಚಪ್ಪಡಿಯನ್ನು ತಲೆಯ ಮೇಲೆ ಎಳೆದುಕೊಂಡು ಬಿಟ್ಟಂತಾಯಿತು. ಮುಟ್ಠಾಳರು ನಾವು. ನಾನೂ ಪೆದ್ದನಾಗಿಬಿಟ್ಟೆನಲ್ಲ! “ಕೂಡಲೇ ಗಾಡಿಕಟ್ಟಿರಿ” ಎಂದು ಚಾವಡಿಯಲ್ಲಿ ನಿಂತವರು ಕೂಗಿದರು. ಸ್ವಲ್ಪವೂ ಕಾಲಹರಣ ಮಾಡುವಂತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಪ್ಲೇಗು ಹೊಳೆ ದಾಟಿ ತಮ್ಮ ಅಗ್ರಹಾರಕ್ಕೂ ಬಂದೀತು. ಪ್ಲೇಗಿನಿಂದ ಸತ್ತ ಒಂದು ಇಲಿಯನ್ನ ಹದ್ದೋ ಕಾಗೆಯೋ ಕಚ್ಚಿತಂದು ತಮ್ಮ ಅಗ್ರಹಾರದಲ್ಲಿ ಎಸೆದುಬಿಟ್ಟರೂ ಸಾಕು-ಎಲ್ಲ ಮುಗಿದಂತೆ. ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಮನೆಯ ಹೊರಗೆ ನಿಂತು ಕೂಗಿ ಹೇಳಿದರು : ನಾನು ಪೇಟೆಯಿಂದ ಹಿಂದಕ್ಕೆ ಬರುವತನಕ ಯಾರೂ ದೂರ್ವಾಸಪುರದ ಹತ್ತಿರ ಸುಳಿಯಕೂಡದು ಎಂದು. ಆದರೆ ಅಗ್ರಹಾರದ ನಾಯಕ ತಾವಾದ್ದರಿಂದ ಯಾರಿಗೂ ಇದು ಪ್ಲೇಗಿರಬಹುದೆಂಬ ಭೀತಿಯನ್ನು ಮುಟ್ಟಿಸುವ ಮನಸ್ಸಾಗಲಿಲ್ಲ. ಗಾಡಿ ಕಟ್ಟಿಯಾದ್ದೇ ತಡ ಕಮಾನುಗಾಡಿಯೊಳಗೆ ದಿಂಬಿಗೊರಗಿ ಕೂತು, ಗಾಡಿ ಹೊಡೆಯುವವನಿಗೆ ತೀರ್ಥಹಳ್ಳಿಗೆ ಓಡಿಸು ಎಂದರು. ಅವರ ವ್ಯವಹಾರ ಚತುರ ಮನಸ್ಸಿನಲ್ಲಿ ಸ್ಪಷ್ಟವಾದ ಸಂಕಲ್ಪ ಮೂಡಿತ್ತು : ಒಂದು-ಮುನಿಸಿಪಾಲಿಟಿಗೆ ತಿಳಿಸಿ ಹೆಣ ಎತ್ತಿಸಬೇಕು. ಎರಡು-ಡಾಕ್ಟರನ್ನು ಕರೆಸಿ ಇನಾಕ್ಯುಲೇಶ ಮಾಡಿಸಬೇಕು. ಮೂರು-ಪಂಪು ತರಿಸಿ ವಿಷವಾಯುವನ್ನು ದೋರುಗಳಿಗೆಲ್ಲ ತುಂಬಿಸಿ ಇಲಿಯ ಬಿಲಗಳನ್ನು ಮುಚ್ಚಿಸಬೇಕು. ನಾಲ್ಕು-ಅವಶ್ಯವಾದರೆ ಅಗ್ರಹಾರವನ್ನೆ ಎಲ್ಲರೂ ಬಿಟ್ಟು ಹೋಗಬೇಕು-ಸ್ವಲ್ಪ ಕಾಲದವರೆಗಾದರೂ. ದಾರಿಯುದ್ದಕ್ಕೂ ’ಮುಟ್ಠಾಳರು ಮುಟ್ಠಾಳರು’ ಎಂದು ಜಪಿಸುತ್ತ ಎತ್ತುಗಳ ಬಾಲ ತಿರುವಿ ಓಡಿಸಲು ಗಾಡಿ ಹೊಡೆಯುವವನಿಗೆ ಹುರಿದುಂಬಿಸಿದರು. ಗಾಡಿ ತೀರ್ಥಹಳ್ಳಿಯ ಮಾರ್ಗ ಹಿಡಿದು ಓಡಿತು. +***** +ಮುಂದುವರೆಯುವುದು +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +ಸಾವಿರದ ಶರಣವ್ವ ಕರಿಮಾಯಿ ತಾಯೆ ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ […] +ಅಧ್ಯಾಯ ೪ – ೧ – ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು […] +ಅಧ್ಯಾಯ ೧೦ – ೧ – ಗಂಡನನ್ನು ಒಳಗೆ ಸೇರಿಸಿಕೊಂಡು ತನ್ನೊಬ್ಬಳನ್ನು ಇನ್ನೂ ಬಹಿಷ್ಕಾರದಲ್ಲಿ ಇಟ್ಟ ಸಂಗತಿಯನ್ನು ಕೇಳಿದಾಗ ನಂಜುವಿಗೆ ದುಃಖಕ್ಕಿಂತ ಹೆಚ್ಚಾಗಿ ತಿರಸ್ಕಾರ ಉಂಟಾಯಿತು. ಧರ್ಮ, ಕರ್ಮ, ಶ್ರಾದ್ಧ ಸಂಬಂಧ ಮೊದಲಾದ ಬಗೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_640.txt b/Kannada Sahitya/article_640.txt new file mode 100644 index 0000000000000000000000000000000000000000..965962918e343818d6f6962fc1f903ec481fe440 --- /dev/null +++ b/Kannada Sahitya/article_640.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, +ನನ್ನ ಬೊಗಸೆಯಲ್ಲೊಂದು ನದಿ. +ಮೇಲೆರಚಿದರೆ ಹನಿಹನಿಯಾಗಿ +ಚೆಲ್ಲುವುದು ಮೈ ಮೇಲೆ +ನದಿ – ಆಕಾಶ – ಮೋಡ – ಸೂರ್ಯ. +ಬೊಗಸೆ ನೀರು ಕುಡಿದರೆ, ಕುಡಿದಂತೆ +ನದಿ – ಆಕಾಶ – ಮೋಡ – ಸೂರ್ಯರನ್ನ +ಅಡಕ ಯಾರು ಯಾರೊಳಗೆ? +***** +ನಾನು ನನ್ನಮ್ಮನ ಹಾಗೆ. ಪೀಚು ದೇಹ, ಎಲುಬು ಕಾಣುವ ಕೆ, ಕಣ್ಣ ಕೆಳಗೆ ಹರಡಿದ ಕಪ್ಪು ಒಳಗೆ ಹೊರೆಹೊರೆ ದುಃಖ ಹೊತ್ತ ಎದೆ ಭಾರ ಹೊರಲಾರದ ಚಿಂತೆ ಮನಸ್ಸಿಗೆ ಮೇಲೊಂದು ಮುಗುಳ್ನಗೆ. ನಾನು ನನ್ನಮ್ಮನ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +೧ ಇದು ಬಾಳಕೊರಡ ಮುಡಿ- ಮೇಲೆ ಕಾಣದ ಕೈಯ ಕರಗಸವು ರೌರವದಿ ಕೊರೆಯುತಿದೆ ಕೊರಡಿನೆದೆ ಬಿರಿಯುತಿದೆ ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_641.txt b/Kannada Sahitya/article_641.txt new file mode 100644 index 0000000000000000000000000000000000000000..88f4f9076f6e3b8deebe93a4af9172664833d6b4 --- /dev/null +++ b/Kannada Sahitya/article_641.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕ +ಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. +ಬೆಳಗು ಮುಂಜಾವದಲಿ ಕೇಳಿಸಿದ ಹಾಡು +ಇದರದೇ ಇರಬಹುದು, ಎಲ್ಲಿದರ ಗೂಡು? +ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ, +ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. +ತಾ ನನಗು ಒಂದಿಷ್ಟು ಈ ಬೊಗಸೆಯೊಳಗೆ +ಹಗುರಾಗಿ ಹಿಡಿಯುವೆನು ಹಸುಗೂಸಿನಂತೆ. +ಹವಳದಂತಹ ಕಣ್ಣು, ಆಹಾ ಬೆಳ್ಳಿ ಚುಂಚು! +ನೋಡಿಲ್ಲಿ ಕಾಲಿನಲಿ ಉಂಗುರದ ಮಿಂಚು. +ಯಾರನೋ ಹುಡುಕಿ, ದುಡುಕಿ ಬಂದಿರಬಹುದೆ ತಂಗಿ? +ಹಾಗೆಯೇ ತೋರುವುದು ನೋಡದರ ಭಾವಭಂಗಿ. +ತಮ್ಮೊಳಗೇನೊ ಮಾತಾಡಿಕೊಳುತಿಹರಲ್ಲ ಅಪ್ಪ ಅವ್ವ? +ನಮ್ಮ ಮೂವರ ನಡುವೆ ಬೆಳುದಿಂಗಳಿನ ಟಿಂವಕ್ಕಿ ಚಕ್ಕಚವ್ವ. +ಚಂದ್ರ ಹೊರಬಂದನದೊ ಕುತೂಹಲದಿ ಮೋಡದಾಚೆಯಿಂದ +ಹಾರಿಸಿಬಿಡೋಣ, ಹೋಗಿ ಮುಟ್ಟಲಿ ಅವಗು ನಮ್ಮ ಆನಂದ. +(ಎಂ.ಜಿ.ಬಂಗ್ಲೆವಾಲೆಯವರ ವರ್ಣಚಿತ್ರದಿಂದ ಪ್ರೇರಿತ) +ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_642.txt b/Kannada Sahitya/article_642.txt new file mode 100644 index 0000000000000000000000000000000000000000..20a60e4e067ce89e4c2f027e0a5673e360e92e71 --- /dev/null +++ b/Kannada Sahitya/article_642.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು ಹಾಗೆ ಮಾಡಿರದೆ ಇದ್ದರೆ ಎಷ್ಟು ಹೊತ್ತಿನವರೆಗೆ ಇಬ್ಬರೂ ಶಬ್ದಗಳಿಗಾಗಿ ಪರದಾಡುತ್ತಿದ್ದೆವೊ ಎಂದೆನ್ನಿಸಿತು. “ಎಷ್ಟೊಂದು ಬದಲಾಗಿದ್ದೀಯೋ. ಆದರೂ ನನಗೆ ಗುರುತು ಹತ್ತಿತು ನೋಡು” ಅಂದಳು. +ಇಂದು ಸತೀಶ ಬಂದು ಕರೆಯದೇ ಹೋಗಿದ್ದರೆ, ಇಂದು ಶನಿವಾರವಾಗದೇ ಬೇರೆ ದಿನವಾಗಿದ್ದರೆ, ಬರೇ ಐದು ನಿಮಿಷ ತಡವಾಗಿದ್ದರೆ ಅಶೋಕ ರಾಧಿಕಾಳನ್ನು ನೋಡುತ್ತಿರಲಿಲ್ಲ. ಅಶೋಕ ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಬಂದು ಸತೀಶ ಅವನನ್ನು ಒತ್ತಾಯಿಸಿ, ತನ್ನ ಕಸಿನ್ ಬಂದಿದ್ದಾಳೆ ಪೋಸ್ಟಲ್ ಟ್ರೇನಿಂಗ್ ಸೆಂಟರಿನಲ್ಲಿ, ಅವಳನ್ನು ನೋಡಿ ಬರೋಣ ಎಂದು ಕರಕೊಂಡು ಬಂದ. ಅಶೋಕನನ್ನು ಹೊರಗೆ ನಿಲ್ಲಿಸಿ ಒಂದು ನಿಮಿಷದಲ್ಲಿ ಬಂದೆ ಎಂದು ಸತೀಶ ಒಳಹೋದ. ಆಗಲೇ ರಾಧಿಕಾಳನ್ನು ನೋಡಿದ್ದು. ಅವಳು ಮೆಟ್ಟಿಲಿಳಿದು ಹೊರಬರುತ್ತಿದ್ದಳು. ಮೊಂಡ ಮೂಗು ನೋಡುತ್ತ ದೊಡ್ಡ ಕಣ್ಣುಗಳನ್ನು ನೋಡುತ್ತ ಗುಂಗುರು ಕೂದಲು ನೋಡುತ್ತ ಗುರುತು ಹತ್ತಿತು. “ನಾವು ಭೆಟ್ಟಿಯಾಗದೆ ಎಷ್ಟು ವರ್ಷವಾಯಿತು ಗೊತ್ತಾ?” ಅಂದಳು. “ಹತ್ತು” ಅಂದ. “ನೆನಪಿಟ್ಟಿದ್ದೀಯಲ್ಲ” ಎಂದು ನಕ್ಕಳು. ಅಶೋಕನಿಗೆ ಒಮ್ಮೆಲೇ ಅವಳ ಬಗ್ಗೆ ಅಕ್ಕರೆಯಾಯಿತು. ಅವಳ ಕೆನ್ನೆಗುಳಿಗಳಲ್ಲಿ ಬೆರಳಿಟ್ಟು ಬಾಲ್ಯದಲ್ಲಿ ಮಾಡುತ್ತಿದ್ದ ಹಾಗೆ ಕಚಗುಳಿಯಿಟ್ಟು ನಗಿಸಬೇಕೆನಿಸಿತು. “ನೀನು ಮೈಸೂರಿನಲ್ಲಿ ಪ್ರತ್ಯಕ್ಷವಾದದ್ದು ಹೇಗೆ?” ಅಂದ. “ಅಲ್ಲಿ ಹುಲ್ಲಿನ ಮೇಲೆ ಕೂತು ಮಾತಾಡುವ, ಎಲ್ಲ ಹೇಳುತ್ತೇನೆ” ಅನ್ನುತ್ತ ನಡೆದಳು. +ಅಪ್ಪನ ಸಾವಿನ ನಂತರ ಅಶೋಕ ಅಮ್ಮನ ಜೊತೆ ಅಂಕೋಲೆ ಬಿಟ್ಟು ಶಿರಸಿಗೆ ಹೋಗುವಾಗ ಮೆಟ್ರಿಕ್ ಪಾಸಾಗಿದ್ದ. ರಾಧಿಕಾ ಅವನ ವಯಸ್ಸಿನವಳೇ. ಇಬ್ಬರೂ ಒಂದೇ ಸಾಲೆಯಲ್ಲಿ ಕಲಿಯುತ್ತಿದ್ದರು. ತನಗೆ ಮೆಟ್ರಿಕ್ ಪರೀಕ್ಷೆಯ ವೇಳೆಗೆ ಜ್ವರ ಬಂದಿದ್ದರಿಂದ ಆರಂಭಿಸಿ ರಾಧಿಕಾ, ಮೆಟ್ರಿಕ್ ನಂತರ ಒಂದು ವರ್ಷ ಮನೆಯಲ್ಲೇ ಕೂತಿದ್ದು, ನಂತರ ಕುಮಟೆಯ ಸೋದರಮಾವ ತನ್ನ ಮನೆಯಲ್ಲಿರಿಸಿಕೊಂಡು ಬಿ.ಎ. ಮಾಡಿಸಿದ್ದು, ಈ ನಡುವೆ ತಾವು ವಾಸವಾಗಿದ್ದ ಅಂಕೋಲೆಯ ಮನೆ ಮಾರಿದ್ದು, ಈ ವ್ಯವಹಾರದಲ್ಲಿ ಸೋದರಮಾವ ದುಡ್ಡು ಎತ್ತಿಹಾಕಿದ್ದು, ಅವನಿಗೂ ಅಮ್ಮನಿಗೂ ಮನಸ್ತಾಪವಾಗಿದ್ದು, ತನಗೆ ಪೋಸ್ಟಿನಲ್ಲಿ ನೌಕರಿ ಸಿಕ್ಕಿ ಎರಡು ವರ್ಷಗಳಾಗಿದ್ದು, ಹಾಗೂ ಈಗ ಆರು ತಿಂಗಳೀಚೆಗೆ ಮೈಸೂರಿಗೆ ಟ್ರಾನ್ಸ್‌ಫರ್ ಆಗಿದ್ದು ಎಲ್ಲವನ್ನೂ ಸವಿಸ್ತಾರ ಹೇಳಿದಳು. ಅಶೋಕನಿಗೆ ಅವಳ ಮಾತು ಕೇಳುತ್ತ ನಮ್ಮ ಈ ಅವಸ್ಥೆಗೆ ನೀವೇ ಕಾರಣ ಅಂದಂತೆ ಅನಿಸಿ ಅಸ್ವಸ್ಥನಾದ. ಅಷ್ಟರಲ್ಲಿ ಸತೀಶ ಬಂದದ್ದರಿಂದ ಮಾತು ಅಲ್ಲೇ ನಿಂತಿತು. “ನಮ್ಮ ಮನೆ ನಜರ್‌ಬಾದ್‌ನಲ್ಲಿ, ನಾಳೆ ಹ್ಯಾಗೂ ರವಿವಾರ, ತಪ್ಪದೇ ಬಾ” ಎಂದು ವಿಳಾಸ ಕೊಟ್ಟಳು. “ಮನೆಯಲ್ಲಿ ಮತ್ತೆ ಯಾರಿದ್ದಾರೆ?” ಎಂದು ಅಧಿಕಪ್ರಸಂಗಿಯಂತೆ ಕೇಳಿದ. “ಮತ್ತ್ಯಾರು….ನಮ್ಮಮ್ಮ ಒಬ್ಬಳೇ” ಅನ್ನುತ್ತ ಹೊರಡಲು ಎದ್ದಳು. ‘ಹೋಗಬೇಡ ಇರು’ ಅನ್ನಬೇಕೆನಿಸಿತು. ಆದರೆ ಯಾಕೆ? ಅವಳನ್ನು ಅಕ್ಕರೆಗೈಯಬೇಕೆನಿಸಿತು. ಆದರೆ ಹೇಗೆ? ಅಂತ ತಿಳಿಯದೇ ಹೃದಯ ತುಂಬಿ ಬಂದಂತಾಯಿತು. ಎದ್ದು ನಿಂತ. ಗಾಳಿಮರಗಳ ಎಡೆಯಿಂದ ಸುಂಯ್ ಶಬ್ದದೊಡನೆ ತಣ್ಣನೆ ಗಾಳಿ ಬೀಸಿತು. ಅವಳ ಕಣ್ಣುಗಳನ್ನು ನಿರುಕಿಸುತ್ತ ಬಗೆಯುತ್ತ ಹುಡುಕುತ್ತ ಒಪ್ಪಿಸಿಕೊಳ್ಳುತ್ತ ಅರೆಗಳಿಗೆ ನಿಂತ. ದಾರಿ ತಪ್ಪಿದಂತೆ ಮರುಭೂಮಿಯಲ್ಲಿ ದಿಕ್ಕು ತಪ್ಪಿದಂತೆ ಸಮುದ್ರದಲ್ಲಿ ವಿಹ್ವಲನಾದ. “ಬಾ ನಾಳೆ” ಎಂದು ಮತ್ತೊಮ್ಮೆ ಹೇಳಿ ಅವಳು ಪುಟು ಪುಟು ನಡೆದು ಹೋದಳು. ಆ ಸಂತರ ಸತೀಶನ ಜೊತೆ ಒಂದಷ್ಟು ಅಲೆದಾಡಿ ಅಶೋಕ ರೂಮಿಗೆ ಬರುವಷ್ಟರಲ್ಲಿ ಜಿಟಿ ಜಿಟಿ ಮಳೆ ಸುರುವಾಯಿತು. ತಲೆತುಂಬ ರಾಧಿಕೆ. +ಮೆಟ್ರಿಕ್‌ವರೆಗೂ ಅಶೋಕ ಅಂಕೋಲೆಯಲ್ಲೇ ಕಲಿತದ್ದು. ಅವನ ಅಪ್ಪ ಶ್ರೀಧರ ನಾಯಕರದು ಚಿಕ್ಕ ಕಿರಾಣಿ ಅಂಗಡಿಯಿತ್ತು. ನಾಯಕರು ನೋಡಲಿಕ್ಕೆ ಕಟ್ಟುಮಸ್ತಾಗಿ ಪಠಾಯನ ಹಾಗಿದ್ದರು. ಹಾಗೇನೂ ಅವರಿಗೆ ಹೆಣ್ಣಿನ ಚಪಲವಿರಲಿಲ್ಲ. ಆದರೂ ರಾಧಿಕೆಯ ಅಮ್ಮ ಗುಲಾಬಿ ಅದು ಹೇಗೆ ಗಂಟುಬಿದ್ದಳೊ! ಅವಳು ಕಲಾವಂತರವಳು. ಹೆಸರಿಗೊಬ್ಬ ಗಂಡನೂ ಇದ್ದ-ನರಪೇತಲ. ರಾಧಿಕೆ ಹುಟ್ಟಿದ ವರ್ಷವೇ ತೀರಿಕೊಂಡ. ಗಂಡನೆದುರಿಗೇ ರಾಜಾರೋಷ ನಡೆಸುತ್ತಿದ್ದವಳಿಗೆ ಈಗ ಇನ್ನೂ ಅನುಕೂಲವಾಯಿತು. ಹಾಗಂತ ಅಷ್ಟು ಹಗುರ ಹೆಣ್ಣಲ್ಲ ಗುಲಾಬಿ. ಮೊದಲು ಅವರ್ಸೆಯ ಕೊಂಕಣಿಯೊಬ್ಬ ಖಾಯಂ ಬರುತ್ತಿದ್ದ. ಆತ ಮಚವೆಯಲ್ಲಿ ಮುಂಬೈಗೆ ಹೋಗುತ್ತಿದ್ದಾಗ ತೂಫಾನು ಬಂದು ನೀರುಪಾಲಾದ. ನಂತರ ಅವಳು ಶ್ರೀಧರ ನಾಯಕರಿಗೇ ನಿಷ್ಠೆಯಿಂದಿದ್ದಳು. ಮೊದಮೊದಲು ಒಳಗಿಂದೊಳಗೇ ನಡೆಯಿತು. ಬಹಿರಂಗ ಪಡಿಸಲು ಗುಲಾಬಿಯೇನೂ ಬಯಸಿರಲಿಲ್ಲ. ಆದರೆ ಅವಳು ಬಸಿರಾಗಿದ್ದಾಗ “ಒಂದೇ ಒಂದು ಸಲ ನಿಮ್ಮ ಜೊತೆ ಮುತ್ತೈದೆಯ ಹಾಗೆ ಹನುಮಟ್ಟೆಯ ದೇವಸ್ಥಾನಕ್ಕೆ ಹೋಗಬೇಕಂತ ಆಸೆ” ಎಂದು ತನ್ನ ಬಯಕೆಯನ್ನು ಶ್ರೀಧರ ನಾಯಕರಿಗೆ ತಿಳಿಸಿದಳಂತೆ. ನಾಯಕರು ಯಾರಿಗೂ ಹೆದರುವ ಪೈಕಿಯಲ್ಲ ಹೂಂ ಅಂದು ಆಸೆ ಈಡೇರಿಸಿದರು. ಅವಳು ಅಗಲ ಕುಂಕುಮವಿಟ್ಟು ಕೈಗೆ ಹಸಿರು ಬಳೆ ತೊಟ್ಟು, ಜರಿಯ ಹಸಿರ ಸೀರೆಯುಟ್ಟು ದೇವಿಯ ಹಾಗೆ ಕಂಗೊಳಿಸುತ್ತ ಬಂದಳಂತೆ. ಯಾರನ್ನೂ ಲೆಕ್ಕಿಸದೆ ನಾಯಕರು ಗಂಭೀರವಾಗಿ ಅವಳ ಜೊತೆ ನಡೆದರಂತೆ. ಮರುದಿನವೇ ಸುದ್ದಿ ಹರಡಿತು. ಪಿಸು ಉಸಿರಾಗಿ ಹಬ್ಬಿದ ಸುದ್ದಿ ಬಿರುಗಾಳಿಯಾಗಿ ನಾಯಕರ ಮನೆ ತಲುಪಿತ್ತು. ಯುಗಾದಿ ಬಂತೆಂದರೆ ಉಮ್ಮಳಿಸುವ ಆ ನೆನಪಿನಿಂದ ತಪ್ಪಿಸಿಕೊಳ್ಳುವುದು ಅಶೋಕನಿಗೆ ಕಷ್ಟವಾಗುತ್ತದೆ: +ಅವತ್ತು ಯುಗಾದಿ. ಹಬ್ಬದ ದಿನ ಬೇಗ ಅಂಗಡಿ ಮುಚ್ಚಿ ಮಧ್ಯಾಹ್ನ ಊಟಕ್ಕೆ ಬರಬೇಕಾಗಿದ್ದ ಅಪ್ಪ ಬರಲೇ ಇಲ್ಲ. ಅವರು ಹಿಂದಿನ ದಿವಸ ಗುಲಾಬಿಯನ್ನು ದೇವಸ್ಥಾನಕ್ಕೆ ಕರಕೊಂಡು ಹೋದ ಸುದ್ದಿ ಅಮ್ಮನನ್ನು ತಲುಪಿತ್ತು. ಅಪ್ಪನಿಗಾಗಿ ಊಟ ಮಾಡದೇ ಕಾಯುತ್ತ ಕೂತವನಿಗೆ ‘ನಿನ್ನದಾಗಲಿ ಮೊದಲು’ ಎಂದು ಬಡಿಸಿ ತಾನು ಊಟ ಮಾಡದೆ ದಾರಿನೋಡುತ್ತ ಕೂತಳು. ಮನೆ ತುಂಬ ತುಂಬಿದ ವಿಶೇಷ ಹಬ್ಬದ ಅಡಿಗೆಯ ಘಮಘಮ ಆರುತ್ತ ಬಂತು. ಅಪ್ಪ ಬಂದದ್ದು ಸಂಜೆಗೆ. “ಊಟ ಮುಗಿಸಿಯೇ ಬಂದೆ” ಅಂದರು. ಆ ಮಾತಿಗೆ ಅಮ್ಮ ಚಂಡಿಯಾದದ್ದು ನೋಡಿದರೆ….ಅದೆಂಥ ಸಿಟ್ಟು ಬಂತವಳಿಗೆ! “ಯಾರಲ್ಲಿ ಹೋಗಿದ್ದಿರಿ? ಆ ರಂಡೆಯ ಮನೆಗಲ್ಲವೆ? ಮನೆಯಲ್ಲಿ ಹೆಂಡತಿ ಇದ್ದೂ ಅವಳ ಜೊತೆ ದೇವಸ್ಥಾನಕ್ಕೆ ಹೋಗುವಷ್ಟು ನಾಚಿಕೆ ಬಿಟ್ಟಿರಲ್ಲ….ಹಬ್ಬ ಅಂತ ನಾನಿಲ್ಲಿ ಊಟ ಮಾಡದೇ ಕಾಯುತ್ತಿದ್ದರೆ ಅವಳ ಎಂಜಲು ತಿನ್ನಲು ಹೋಗಿದ್ದಿರಲ್ಲ….ನನ್ನ ತಲೆಯ ಮೇಲೆ ಕಲ್ಲು ಹಾಕಿ ಕೊಂದುಬಿಡಿ….” ಅಪ್ಪ ಯಾವುದಕ್ಕೂ ಜಗ್ಗಲಿಲ್ಲ. ಎಲ್ಲವೂ ಸಹಜವೆಂಬಂತೆ “ಹೌದೇ ಅಲ್ಲೇ ಹೋಗಿದ್ದು….ಮತ್ತೆ ಈ ನಿನ್ನ ಸುಟ್ಟ ಮೋರೆ ನೋಡಲಿಕ್ಕೆ ಬಂದದ್ದೇ ತಪ್ಪಾಯಿತು ನೋಡು….” ಅಂದರು. “ಹೌದು ಹೌದು ನನ್ನದು ಸುಟ್ಟಮೋರೆ….ಅವಳೆಂಥ ರಂಭೆಯೆಂದು ನಾನು ನೋಡಿದ್ದೇನೆ. ಆ ಆವಾರ್ಸೆಯ ಕೊಂಕಣಿ ಮಲಗಿದ ಹಾಸಿಗೆಯೇ ಅದು….” ಅಂದಳು. ಅಪ್ಪ ಸಿಡಿದ. ಅಮ್ಮನ ಬೆನ್ನಮೇಲೆ ದಬದಬ ಗುದ್ದಿದ. ಅಳು ರಂಪ-ಗದ್ದಲ. ಅಪ್ಪ ಸಟಸಟನೇ ನಡೆದು ಎಲ್ಲೋ ಹೋದ. ಬಹಳ ಹೊತ್ತಿನವರೆಗೆ ಅಮ್ಮ ಅಳುತ್ತ ಕೂತಿದ್ದಳು. ಯುಗಾದಿಯ ದಿನ ಸಂಜೆ ದೇವಸ್ಥಾನದಲ್ಲಿ ನಡೆಯುವ ಪಾನಕ ಪೂಜೆಗೆ ನಂತರದ ಪಂಚಾಂಗ ಪಠನಕ್ಕೆ ಹೋಗುವ ಪರಿಪಾಠವಿತ್ತು. ಆದರೆ ಅವತ್ತು ರಾತ್ರಿ ಅಪ್ಪ ಮನೆಗೆ ಬರಲೇ ಇಲ್ಲ. ಅಮ್ಮ ರಾತ್ರಿಯೂ ಊಟ ಮಾಡಲಿಲ್ಲ. +ಇಷ್ಟೆಲ್ಲ ಹಗರಣಕ್ಕೆ ಕಾರಣವಾದ ಗುಲಾಬಿಯ ಗರ್ಭ ನಿಲ್ಲಲಿಲ್ಲ. ಅಶೋಕನ ಅಮ್ಮ ಸಾವಿತ್ರಿಯ ಮನದ ಉರಿ ತಗುಲಿ ಹಾಗಾಯಿತೆಂದು ಅವರಿವರು ಆಡಿಕೊಂಡರು. ನಂತರ ಅವಳು ಮತ್ತೊಮ್ಮೆ ಗರ್ಭಣಿಯಾದರೂ ಆ ಸಲವೂ ಹಾಗೆಯೇ ಆಯಿತು. ಶ್ರೀಧರ ನಾಯಕರಂತು ಅವಳ ಮತ್ತಿನಲ್ಲಿ ಹುಚ್ಚರಾಗಿದ್ದರು. ಮನೆಯಲ್ಲಿ ಸದಾ ಜಗಳ-ಗಲಾಟೆ. ನಾಯಕರು ಮನೆಗೆ ಬಂದರೆ ಬಂದರು ಇಲ್ಲವಾದರೆ ಇಲ್ಲ. ಅಶೋಕನ ಅಮ್ಮ ಪೂರ್ತಿ ಬದಲಾಗಿ ಹೋಗಿದ್ದಳು. ಮನೆಗೆ ಆದಾಯ ಸರಿಯಾಗಿರಲಿಲ್ಲ. ಇದ್ದ ಕಿರಾಣಿಯೊಂದು ಸೊರಗುತ್ತ ಬಂತು. ಐದು ವರ್ಷಗಳವರೆಗೆ ಹುಚ್ಚು ಇಳಿಯಲಿಲ್ಲ. ಸಾಲ ಬೆಳೆಯಿತು. ಕೊನೆಕೊನೆಗೆ ಬೀಡಿ ಸೇದುವುದು, ಕೆಮ್ಮುವುದು ಇಷ್ಟು ಮಾತ್ರವೇ ಕೆಲಸವಾಯಿತು. ಒಂದು ದಿವಸ ಕಟ್ಟಿಗೆ ಡಿಪೋದ ಪುಂಡರೀನಾಥ ಪ್ರಭು ಅವಳ ಮನೆಗೆ ಪದೇ ಪದೇ ದೋಗುತ್ತಾನೆಂಬ ಸುದ್ದಿ ಕೇಳಿ ಖಿನ್ನರಾದರು. ಗುಲಾಬಿಯಲ್ಲಿ ವಿಚಾರಿಸಿದಾಗ ಮೊದಮೊದಲು ಮುಚ್ಚಿಟ್ಟಳು. ನಂತರ ಮೌನತಾಳಿದಳು. ಆನಂತರ “ಖರ್ಚಿಗೆ ಏನಾದರೂ ಸ್ವಲ್ಪ ಬೇಡವೇ? ನಿಮಗೆ ಏನೂ ವ್ಯತ್ಯಾಸವಾಗದ ಹಾಗೆ ನೋಡಿಕೊಳ್ಳುತ್ತೇನೆ….ನನ್ನನ್ನು ನಂಬಿ….” ಅಂದಳು. ಅದೇ ಕೊನೆ. ನಾಯಕರು ಅಲ್ಲಿ ಹೋಗುವುದನ್ನೇ ಬಿಟ್ಟರು. ಆಮೇಲಿನ ನಾಯಕರೇ ಬೇರೆ. ಸೊರಗಿ ಸೊರಗಿ ಬರೀ ಎಲುಬು ಗೂಡು ಮಾತ್ರ ಉಳಿಯಿತು. ಕಫದಲ್ಲಿ ರಕ್ತ ಬರುತ್ತಿತ್ತು. ಹುಬ್ಬಳ್ಳಿಯ ಡಾಕ್ಟರರಿಗೆ ತೋರಿಸುವುದು ಅದೂ ಇದೂ ಅಂತ ಇದ್ದಬದ್ದ ಹಣವೆಲ್ಲ ಖರ್ಚಾಯಿತು. ಅಂಗಡಿ ಮಾರಿಯಾಯಿತು. ಮನೆಯೊಂದು ಉಳಿದಿತ್ತು. ಗುಲಾಬಿ ಅವರನ್ನು ಮತ್ತೆ ಬಳಿ ಸೇರಿಸಿಕೊಳ್ಳಲು ಪ್ರಯತ್ನಿಸಿದಳು. ಅವರು ಹೋಗಲಿಲ್ಲ. ಅವರ ಕೊನೆಗಾಲದಲ್ಲಿ ಕೈಸಾಗದೇ ಇದ್ದಾಗ ತನ್ನಲ್ಲಿ ಬಂದು ಉಳಿಯುವಂತೆ ಕೇಳಿಕೊಂಡಳು. ನಾಯಕರು ಮಾತ್ರ ಮತ್ತೆ ಅಲ್ಲಿ ಕಾಲಿಡಲಿಲ್ಲ. ಅಶೋಕನ ಮೆಟ್ರಿಕ್ ಪರೀಕ್ಷೆ ಮುಗಿದ ಎಂಟೇ ದಿನಗಳಲ್ಲಿ ಒಮ್ಮೆಲೇ ಕಾಯಿಲೆ ಉಲ್ಬಣಿಸಿ ತೀರಿಕೊಂಡರು. ಅವರ ಸಾವಿಗೆ ಗುಲಾಬಿಯೇ ಮೂಲ ಕಾರಣವೆಂಬುದು ಅಶೋಕನ ಅಮ್ಮನ ನಂಬಿಕೆಯಾಗಿತ್ತು. ಅಂಕೋಲೆ ಬಿಟ್ಟು ಹೋಗುವಾಗ ಅಶೋಕ ರಾಧಿಕೆಗೆ ಹೇಳದೆ ಹೊರಟಿದ್ದಕ್ಕೆ ಅಮ್ಮ ಸಿಟ್ಟಿಗೇಳಬಹುದೆಂಬುದೂ ಒಂದು ಕಾರಣವಾಗಿತ್ತು. ಮೊದಲಿನಿಂದಲೂ ರಾಧಿಕೆಯ ಸ್ನೇಹ ಅಶೋಕನಿಗೆ ಅಪ್ಯಾಯಮಾನವಾಗಿತ್ತು. ಇಬ್ಬರೂ ಒಂದೇ ಕ್ಲಾಸಿನಲ್ಲಿದ್ದವರು. ಅವಳು ತೊಡುತ್ತಿದ್ದ ನಿರಿಗೆ ನಿರಿಗೆಯ ನೀಲಿ ಫ್ರಾಕು ಅಶೋಕನಿಗೆ ತುಂಬ ಸೇರುತ್ತಿತ್ತು. ನಕ್ಕರೆ ಅವಳ ಕೆನ್ನೆಗಳಲ್ಲಿ ಬೀಳುತ್ತಿದ್ದ ಗುಳಿಗಳೆಂದರೆ ಮಹಾ ಖುಷಿ ಅವನಿಗೆ. ಮಣ್ಣಲ್ಲಿ ಪುಟ್ಟ ಗುಳಿ ತೋಡಿ, ಹುದುಗಿ ಕೂರುತ್ತಿದ್ದ ಹುಳುಗಳನ್ನು ಹುಡುಕಲು ಬೆರಳಿನಿಂದ ಆ ಗುಳಿಗಳನ್ನು ಕೆದರುತ್ತ ದಾರಿ ತೋರ್ಸೋ ಮಹರಾಯ ಎಂದು ಗೊಣಗುವಂತೆ, ಅವಳ ಕೆನ್ನೆಗುಳಿಗಳಲ್ಲಿ ಬೆರೆಳಿಟ್ಟು ದಾರಿ ತೋರ್ಸೋ ಮಹರಾಯ ಅನ್ನುತ್ತಿದ್ದ. ಕಚಗುಳಿಯಾದಂತಾಗಿ ರಾಧಿಕೆ ನಗುತ್ತಿದ್ದಳು. ಬೆಳೆಬೆಳೆಯುತ್ತ ಇಬ್ಬರ ಒಡನಾಟ ಕಡಿಮೆಯಾಗುತ್ತ ಹೋಯಿತು. ಶಾಲೆಯಲ್ಲಿ ಸರಸ್ವತೀ ಪೂಜೆಯ ದಿವಸ ಪ್ರಸಾದ ಹಂಚುವಾಗ; ಗ್ಯಾದರಿಂಗ್ ದಿನ ಡ್ಯಾನ್ಸ್ ಮಾಡಲು ಅವಳು ಬಣ್ಣ ಬಳಿದು ತೀರ ಬೇರೆಯಾಗಿ ಕಾಣುತ್ತ ತನ್ನ ಸರದಿಗಾಗಿ ಕಾಯುತ್ತ ವಿಂಗಿನಲ್ಲಿ ನಿಂತಾಗ ಅವಕಾಶ ಕಾದು ಅವಳನ್ನು ಮಾತಾಡಿಸಿ ಅಷ್ಟರಿಂದಲೇ ಪುಲಕಿತನಾಗುತ್ತಿದ್ದ. ಅವನ ಅಮ್ಮನಿಗೆ ಮಾತ್ರ ಆತ ಅವಳ ಜೊತೆ ಒಡನಾಡುವುದು ಎಳ್ಳಷ್ಟೂ ಸೇರುತ್ತಿರಲಿಲ್ಲ. ಒಮ್ಮೆ ಅಶೋಕ ಅವಳಿಗೆ ತನ್ನ ಬಣ್ಣದ ಪೆನ್ಸಿಲ್‌ನ್ನು ಕೊಟ್ಟುಬಿಟ್ಟನೆಂದು ಅವನನ್ನು ಚೆನ್ನಾಗಿ ಥಳಿಸಿದ್ದಳು. “ಮನೆಯಲ್ಲಿ ಮತ್ತೆ ಉಂಟಲ್ಲ, ಒಂದು ಕೊಟ್ಟರೇನಾಯಿತು?” ಎಂದು ಅಶೋಕ ಪ್ರತಿ ಹೇಳಿದ್ದಕ್ಕೆ “ಅಪ್ಪ ಅವಳ ಅಮ್ಮನ ಪಾದಕ್ಕೆ ಎಲ್ಲ ಸುರಿಯುತ್ತಾರೆ. ನೀನು ಮಗಳಿಗೆ ಪೂಜೆ ಮಾಡು…. ಎಲ್ಲ ನನ್ನ ಕರ್ಮ….” ಎಂದು ಅಳಲಿಕ್ಕೇ ಆರಂಭಿಸಿದಳು. ಅಶೋಕನಿಗೆ ಏನು ಎತ್ತ ತಿಳಿಯದೇ ಕಕ್ಕಾಬಿಕ್ಕಿಯಾದ. ಅವತ್ತಿನಿಂದ ರಾಧಿಕೆಯ ಜೊತೆ ಸೇರಲು ಏನೋ ಭಯವಾಗುತ್ತಿತ್ತು. +ಇದೆಲ್ಲ ಮೆಟ್ರಿಕ್‌ವರೆಗೆ ಮಾತ್ರ. ಬೀಳ್ಕೊಡುಗೆ ಸಮಾರಂಭದ ದಿನ ಎಲ್ಲ ಮಾಸ್ತರರ ಜೊತೆ ನಿಂತು ಫೋಟೋ ತೆಗೆಸಿ ಮೂರು +ರೂಪಾಯಿ ಕೊಟ್ಟು ಒಂದೊಂದು ಕಾಪಿ ಪಡೆದು ಟ್ರಂಕಿನಲ್ಲಿ ಡಾಂಬರು ಗುಳಿಗೆಗಳ ಜೊತೆ ಇಟ್ಟ ದಿನವೇ ಎಲ್ಲ ಮುಗಿಯಿತು. ಆಮೇಲಂತೂ ಪರೀಕ್ಷೆಯ ಅಭ್ಯಾಸ. ಪರೀಕ್ಷೆ ಮುಗಿದ ಎಂಟೇ ದಿನಕ್ಕೆ ಅಪ್ಪನ ಸಾವು. ನಂತರ ಅಂಕೋಲೆಯ ಮನೆಯನ್ನು ಬಾಡಿಗೆಗೆ ಕೊಟ್ಟು ಶಿರಸಿಯ ಚಿಕ್ಕಪ್ಪನ ಮನೆ ಸೇರಿದ. ಅಲ್ಲಿ ಕಾಲೇಜು ಮುಗಿದು ಈ ಬ್ಯಾಂಕಿನದೊಂದು ನೌಕರಿ ಸಿಗುವವರೆಗೂ ಹೋರಾಟ-ನೋವು-ಅವಮಾನ. ನೌಕರಿ ಸಿಕ್ಕ ನಂತರ ಹಠಹಿಡಿದು ಅಮ್ಮ ಅಂಕೋಲೆಯ ಮನೆಗೆ ವಾಪಸು ಹೋದಳು. ಮಗ ನೌಕರಿಯಲ್ಲಿದ್ದಾನೆ. ತಿಂಗಳೂ ತಪ್ಪದೆ ದುಡ್ಡು ಕಳಿಸುತ್ತಾನೆ. ಗಂಡನ ಕಾಲದಲ್ಲಿ ಕಷ್ಟವಾದರೇನಾಯಿತು, ಈಗ ಮಗ ಯಾವುದಕ್ಕೂ ಕಡಿಮೆ ಮಾಡಲಿಲ್ಲ ಎಂದು ಬೀಗಿದಳು. ಅಲ್ಲಿಂದೀಚೆಗೆ ವರ್ಗವಾಗುತ್ತ ಈಗ ಅಶೋಕ ಮೈಸೂರಿಗೆ ಬಂದು ಮೂರು ವರ್ಷಗಳೇ ಸಂದವು…. +* +* +* +ಮರುದಿನ ಅಶೋಕ ಹತ್ತು ಗಂಟೆಗೇ ರಾಧಿಕೆಯ ಮನೆಗೆ ಹೊರಟ. ವಿಳಾಸವಿದ್ದರೂ ಮನೆ ಹುಡುಕುವುದು ಕಷ್ಟವಾಯಿತು. ಅವಳ ಮನೆ ನಂಬರು ಕೇಳುತ್ತ ಕೇಳುತ್ತ ಒಂದು ಮಾಂಸದಂಗಡಿಯ ಮುಂದೆ ಬಂದು ನಿಂತ. ಆ ಅಂಗಡಿಯದೂ ಅವಳ ಮನೆಯದೂ ಒಂದೇ ನಂಬರಾಗಿತ್ತು. ಅಂಗಡಿಯವನೇ ಮನೆ ತೋರಿಸಿದ. ಅಂಗಡಿಕೆ ಅಂಟಿಕೊಂಡಂತೆ ಹಿಂಭಾಗಕ್ಕೆ ಇತ್ತು. ಮನೆಯ ಎದುರೇ ಕೊಳೆ ನೀರು ಹರಿಯಲು ಬಿಟ್ಟ ಚರಂಡಿ. ಅದನ್ನು ದಾಟಲೊಂದು ಕಲ್ಲುಚಪ್ಪಡಿ. ಬಾಗಿಲು ಬಡಿದು ತೆರೆಯುವ ನಿರೀಕ್ಷೆಯಲ್ಲಿ ನಿಂತಾಗ ಯಾಕೋ ಮನಸ್ಸು ಮಂಕಾಯಿತು. ಬಾಗಿಲು ತೆರೆದವಳು ರಾಧಿಕೆ. ತಲೆಸ್ನಾನ ಮಾಡಿ ಒದ್ದೆ ಕೂದಲು ಹಿಂದಕ್ಕೆ ಹರವಿಕೊಂಡಿದ್ದಳು. ಒಳಗೆ ಎರಡು ಖುರ್ಚಿ ಒಂದು ಟೇಬಲನ್ನು ಓರಣವಾಗಿ ಜೋಡಿಸಿದ್ದರು. ಒಳಕೋಣೆಗ ಹೋಗುವ ಒಂದು ಚೌಕಟ್ಟಿನ ಮೇಲ್ಗಡೆ ಕಸೂತಿಯ ಮೊಲ…. ದೇವರ ಫೋಟೋಗಳು ಒಂದು ನಯೆಪೈಸೆಯ ವೆಲ್‌ಕಂ ಮಾಸುತ್ತಿದ್ದವು. “ಬಂದನೇನೇ” ಅನ್ನುತ್ತ ಗುಲಾಬಿ ಹೊರಬಂದಳು. ತುಂಬ ವಯಸ್ಸಾದವಳ ಹಾಗೆ ತೋರುತ್ತಿದ್ದಳು. ಗಂಡ ಸತ್ತಾಗಲೂ ಹಣೆಯ ಕುಂಕುಮ ಅಳಿಸದ, ಹೂ ಮುಡಿಯುವುದನ್ನು ನಿಲ್ಲಿಸಿದವಳು ಈಗ ಕುಂಕುಮ ಅಳಿಸಿ ವಿಧವೆಯಾಗಿದ್ದಳು. ಕಟ್ಟಿಗೆ ಡಿಪೋದ ಪಂಡರೀನಾಥ ಪ್ರಭು ಇವಳನ್ನು ಇಟ್ಟುಕೊಂಡ ಎರಡು ವರ್ಷಕ್ಕೇ ತೀರಿಕೊಂಡನೆಂದು ಅಶೋಕ ಸುದ್ದಿ ಕೇಳಿದ್ದ. “ಇಟ್ಟುಕೊಂಡವರ ಜೀವ ತಿನ್ನುತ್ತಾಳೆ ಮಾರಿ. ಮೂರು ಜನವಾಯಿತು….” ಎಂದು ಊರಲ್ಲಿ ಸುದ್ದಿ ಹಬ್ಬಿ ಯಾರೂ ಮೂಸಿ ನೋಡಲಿಲ್ಲವಂತೆ. ಅದರ ನಂತರ ಅವಳ ಕಷ್ಟದ ದಿನಗಳು ಆರಂಭವಾಗಿರಬೇಕು. ಜೊತೆಗೆ ವಯಸ್ಸೂ ಹಲ್ಲು ಮಸೆದಿರಬಹುದು. ಕೂದಲನ್ನೂ ಹಿಂದಕ್ಕೆ ಬಿಗಿದು ತುರುಬು ಕಟ್ಟುವ, ತುರುಬು ತುಂಬ ಹೂ ತುಂಬುವ, ಕಾಲಿಗೆ ಬೆಳ್ಳಿ ಗೆಜ್ಜೆ ಬಿಗಿದು ಝಲ್ಲು ಝಲ್ಲೆನುತ ನಡೆಯುವ, ಥಳಥಳ ಹೊಳೆಯುವ ನತ್ತು ಮೂಗಿಗೆ ಇಟ್ಟು ಹುಂ ಎಂದು ಮೂಗು ಮುರಿಯುವ ಯಕ್ಷಿ ಗುಲಾಬಿಯನ್ನು ಹೀಗೆ ನೋಡುವುದು ತ್ರಾಸಾಯಿತು. ಅವಳ ಆಡಂಬರದ ದಿನಗಳಲ್ಲಿ ಅವಳನ್ನು ಊರಲ್ಲಿ ನೋಡುವುದೇ ಅಪರೂಪ. ಯಾವಾಗಲಾದರೊಮ್ಮೆ ಹನುಮಟ್ಟೆಯ ಪಂಚಮೀ ದೇವಕಾರ್ಯದ ದಿವಸ ಅಥವಾ ಬಂಡೀಹಬ್ಬದ ದಿವಸ ಅಲಂಕರಿಸಿಕೊಂಡು ಪ್ರಸಾದ ಪಡೆಯಲು ಬಂದರೆ ಹುಡುಗರಿಗೆಲ್ಲ ಅವಳು ಚಂದಮಾಮ ಕತೆಗಳಲ್ಲಿ ಬರುವ ಖೇಚರ ಹೆಣ್ಣಿನಂತೆ ತೋರುತ್ತಿದ್ದಳು. ಅಶೋಕ ಅವಳನ್ನು ಇಷ್ಟು ನಿರಾಡಂಬರವಾಗಿ ನೋಡೇ ಇರಲಿಲ್ಲ. ಗುಲಾಬಿ ಮೆಲ್ಲನೆ ಮಾತು ಸುರುಮಾಡಿದಳು. ಏನು, ಹೇಗಿದ್ದೀ ಎಂದು ವಿಚಾರಿಸಿದಳು. ನೌಕರಿಯ ಬಗ್ಗೆ ಕೇಳುತ್ತ ಸಂಬಳ ಕೇಳಿ ಮುಜುಗರಕ್ಕೆ ತಳ್ಳಿದಳು. “ಅಮ್ಮ ಆರಾಮಾಗಿದ್ದಾರೆಯೇ?” ಎಂದಳು. ಅಪ್ಪನನ್ನು ಹೊಗಳಿದಳು. ಜನರದು ಯಾವಾಗಲೂ ಸಂಶಯ ಸ್ವಭಾವ ಅಂದಳು. ನೀನು ಅಪ್ಪನಿಗೆ ತಕ್ಕ ಮಗ…. ದಿಟ್ಟ ಹುಡುಗ ಅಂದಳು; ಈಗಿನ ಕಾಲದ ಹುಡುಗರು ಮಾಯೆ ಮಮತೆ ಇಟ್ಟುಕೊಳ್ಳುವುದು ಕಡಿಮೆ; ನೀನು ಹಾಗಲ್ಲ, ಇಷ್ಟು ದೂರ ಹುಡುಕಿಕೊಂಡು ಬಂದಿದ್ದೀ ಅಂದಳು. ನಮ್ಮ ರಾಧಾ ಎಷ್ಟು ಚೆನ್ನಾಗಿ ಹೊಲಿಗೆ ಕಸೂತಿ ಮಾಡುತ್ತಾಳಂತೀ ಎಂದು ರಾಗ ತೆಗೆದಳು. ಅವಳ ಅಡಿಗೆಯ ಕೈಚಳಕ ಹೊಗಳಿದಳು. ರಾಧಿಕಾ ಒಳಗಿನಿಂದ ಕರೆಯದೇ ಹೋಗಿದ್ದರೆ ಇನ್ನೂ ಏನೇನು ಆಡುತ್ತಿದ್ದಳೋ! ಅವಳು ಎಲ್ಲಿಯೋ ಗುರಿಯಿಟ್ಟು ಮಾಡುತ್ತಿದ್ದಾಳೆಂದು ಅಶೋಕನಿಗೆ ಅನುಮಾನವಾಯಿತು. ಸ್ವಲ್ಪ ಹೊತ್ತು ಕೂತಿದ್ದು ರಾಧಿಕೆ ಕೊಟ್ಟ ಚಹಾ ಕುಡಿದು ಹೊರಡಲು ಎದ್ದ. ಊಟ ಮಾಡಿಕೊಂಡೇ ಹೋಗಬೇಕೆಂದು ಗುಲಾಬಿ ಒತಾಯಿಸಿದಳು. ಒಲ್ಲೆನೆಂದ. ಆದರೆ ರಾಧಿಕೆಯ ಒತ್ತಾಯವನ್ನು ಮೀರುವದಾಗಲಿಲ್ಲ. +ಊಟ ಮುಗಿಸಿ ಹೊರಟಾಗ ರಾಧಿಕೆ ಬಸ್‌ಸ್ಟಾಪ್‌ವರೆಗೂ ಬಂದಳು. ತುಂಬ ಹೊತ್ತಿನವರೆಗೆ ಬಸ್ ಬರಲಿಲ್ಲ. ಬಂದ ಬಸ್ಸೂ ಯದ್ವಾ ತದ್ವಾ ತುಂಬಿಕೊಂಡಿತ್ತು. ಇಬ್ಬರೂ ಬಸ್‌ಸ್ಟಾಪಿನ ಕಲ್ಲುಬೆಂಚಿನ ಮೇಲೆ ಕೂತು ಮಾತಾಡಿದರು. ನಡುವೆ ಹತ್ತು ವರ್ಷಗಳ ಇರಲೇ ಇಲ್ಲವೇನೋ ಎಂಬಂತೆ ರಾಧಿಕೆ ಮನಸ್ಸು ಬಿಚ್ಚಿದಳು. ಅಮ್ಮ ಹಲವು ಸಲ ತೋರಿಸುವ ಸಣ್ಣತನ ತನಗೆ ಏನೇನೂ ಇಷ್ಟವಿಲ್ಲ, ಹಣ ಅವಳಿಗೆ ಮುಖ್ಯವಾಗಿ ಕಾಣುತ್ತದೆ ಅಂದಳು. ತನ್ನನ್ನು ಅವಳ ಅಣ್ಣನ ಮಗನಿಗೆ ಕಟ್ಟುವ ಅಮ್ಮನ ಪ್ಲಾನು ಹೇಳಿದಳು. ಆ ಹುಡುಗ ಅಷ್ಟು ಚುರುಕಲ್ಲ, ಒಬ್ಬನೇ ಪುತ್ರರತ್ನ. ಮತ್ತೆ ಯಾರು ರಾಧಿಕೆಯನ್ನು ಮಾಡಿಕೊಳ್ಳುತ್ತಾರೆ ಎಂದು ಅವಳ ಯೋಚನೆಯಂತೆ. ರಾಧಿಕೆಯ ವಿರೋಧವನ್ನೂ ಲೆಕ್ಕಿಸದೇ ಆ ಬಗ್ಗೆ ಅಣ್ಣನಿಗೆ ಹೇಳಿದ್ದಾಳಂತೆ. ಮಾತಾಡುತ್ತ ರಾಧಿಕೆ ಮಹತ್ವದ ವಿಚಾರವೊಂದನ್ನು ಅಶೋಕನಿಗೆ ಹೇಳಿದಳು. ಅದು ನಾಗರಾಜನ ಕುರಿತು. ನಾಗರಾಜ ಅವಳ ಆಫೀಸಿನಲ್ಲೇ ಕೆಲಸ ಮಾಡುತ್ತಾನೆ. ಇಬ್ಬರೂ ಒಟ್ಟಿಗೆ ಟ್ರೇನಿಂಗ್ ಬಂದವರು. ಒಂದೇ ಕಡೆ ಪೋಸ್ಟಿಂಗ್ ಆಯಿತು. ಟ್ರೇನಿಂಗ್‌ನಲ್ಲಿ ಸುರುವಾದ ಪ್ರೀತಿ ಈಗ ಬಲಿತಿತ್ತು. ಎರಡು ವರ್ಷದಿಂದ ಅವರ ಸಂಬಂಧ ಹಾಗೇ ಇದೆಯಂತೆ. “ಅದನ್ನೊಂದು ಸೆಟಲ್ ಮಾಡುವಾ ಅಂತಂದರೆ ಆಗುತ್ತಿಲ್ಲ” ಅಂದಳು. ಅಶೋಕ ನಕ್ಕು “ಸಂಬಂಧಗಳನ್ನು ಸೆಟಲ್ ಮಾಡುವುದು ಫೈನಲೈಸ್ ಮಾಡುವುದು ಸಾಧ್ಯವೇ?” ಅಂದ. “ಹಾಗಲ್ಲ, ಅಮ್ಮನಿಗೆ ಹೇಳುವಾ ಅಂದರೆ ಭಯ. ಅವಳು ದೊಡ್ಡ ರಂಪ ಎಬ್ಬಿಸಿಬಿಡುತ್ತಾಳೆ. ಮತ್ತೆ ಅಣ್ಣನ ಮಗನ ಬಗ್ಗೆ ಸುರುಮಾಡುತ್ತಾಳೆ. ಅವಳಿಗೆ ನಾನಲ್ಲದೇ ಮತ್ತ್ಯಾರಿದ್ದಾರೆ?” ಎಂದು ಸ್ವಲ್ಪ ಹೊತ್ತು ಮೌನವಾಗಿ ಕೂತಳು. “ಇದನ್ನೆಲ್ಲ ಹೇಳಿಕೊಳ್ಳುವಾ ಅಂತಂದರೆ ಹತ್ತಿರದವರು ಯಾರಿದ್ದಾರೆ ನನಗೆ? ನಾಗರಾಜನಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಅದೇನು ಮಹಾ ಅನ್ನುತ್ತಾನೆ….” ಬಿಸಿಲಿಗೆ ಉದ್ದುದ್ದವಾಗುತ್ತ ಹೋದ ನೆರಳು ನೋಡುತ್ತ ಹೇಳಿದಳು. ಅಶೋಕ ರಾಧಿಕೆಯ ಕಣ್ಣುಗಳಿಗಾಗಿ ಹುಡುಕಿದ. ಅವು ತನ್ನನ್ನು ನಿಟ್ಟಿಸಿದಾಗ ಆ ಮಾರ್ದವತೆಗೆ ಕರಗಿದ. ಒಳಗೆಲ್ಲೋ ಸಣ್ಣ ನೋವಾದರೂ ಅವಳು ತನ್ನಲ್ಲಿಟ್ಟಿರುವ ವಿಶ್ವಾಸದಿಂದ ಪುಲಕಿತನಾದ. “ನಾನು ನಿನ್ನ ಜೊತೆಗಿದ್ದೇನೆ” ಅಂದ. ಬಸ್ಸು ಬರುವವರೆಗೂ ನೂರೆಂಟು ಸುದ್ದಿ ಬಿಚ್ಚಿದರು. +ರಾಧಿಕೆಯ ಮನೆಯಿಂದ ಮರಳಿದ ನಂತರ ಅರ್ಥವಾಗದ ಕಳವಳ ಅಶೋಕನಲ್ಲಿ ಹೊಕ್ಕಿತು. ಮನಸ್ಸು ಅವ್ಯಕ್ತ ನೋವಿನಲ್ಲಿ ತುಯ್ಯತೊಡಗಿತ್ತು. ಹತ್ತು ವರ್ಷಗಳ ನಂತರ ಸಿಕ್ಕ ಈ ಹುಡುಗಿ ಒಂದೇ ಭೇಟಿಯಲ್ಲಿ ಇಷ್ಟೊಂದು ಕಲಕಿಬಿಟ್ಟಳಲ್ಲ ಅನಿಸತೊಡಗಿತು. ಒಂದೇ ಸಮನೆ ಬಾಲ್ಯದ ನೆನಪುಗಳು ಹಾರ – ತುರಾಯಿ ತೊಟ್ಟು ಮೆರವಣಿಗೆ ಬಂದವು. ಯಾಕೋ ಅಪ್ಪನ ನೆನಪಾಗುತ್ತಿತ್ತು. ಅವನ ಕೊನೆಗಾಲದ ನಿಸ್ಸಹಾಯತೆ. ಕಣ್ಣಿಗೆ ಕಟ್ಟುತ್ತಿತ್ತು. ಗುಲಾಬಿಯಿಂದ ದೂರವಾದ ನಂತರ ಆತ ಜರ್ಜರಿತನಾಗಿದ್ದ. ಸದಾ ಬೀಡಿ ಸೇದುತ್ತ ಕೂರುವುದು. ಕೆನ್ನೆಗಳೆರಡೂ ಗುಳಿ ಬಿದ್ದಿದ್ದವು. ಕಣ್ನುಗಳಂತೂ ಹೊಂಡದಲ್ಲಿ ಗೋಲಿ ಇಟ್ಟಂತೆ ತೋರುತ್ತಿದ್ದವು. ಊಟಕ್ಕೇ ತತ್ವಾರವಾದಾಗ ಅಮ್ಮನೇ ಮುಂದಾಗಿ ಅಂಗಡಿ ಮಾರಿ ಬಂದ ಹಣ ತಾನೇ ಇಟ್ಟುಕೊಂಡಳು. ಅಷ್ಟು ಜೋರು ಹೊಡಕೊಂಡು ಇದ್ದವನು ಹೀಗಾದದ್ದು ವಿಚಿತ್ರವಾಗಿತ್ತು. ಅವನ ಚೈತನ್ಯದ ಮೂಲ ಸೆಲೆ ಬರೀ ಗುಲಾಬಿಯೇ ಆಗಿದ್ದಳೇ? ಎಂದು ಎಷ್ಟೋ ಬಾರಿ ಅಶೋಕನಿಗೆ ಅನ್ನಿಸುತ್ತದೆ. ಅಮ್ಮನಂತೂ ಶುಶ್ರೂಷೆಯ ಜೊತೆಗೇ ಅವಕಾಶ ಸಿಕ್ಕಾಗಲೆಲ್ಲ ಅಪ್ಪನನ್ನು ನಿರ್ದಯವಾಗಿ ಹಂಗಿಸುತ್ತಿದ್ದಳು. “ನಿಮಗೆ ರೋಗ ಬಂದದ್ದೇ ಗುಲಾಬಿಯಿಂದ” ಎಂದು ಜರಿಯುವಳು. “ಪಂಢರೀನಾಥ ಪ್ರಭು ಗುಲಾಬಿಯ ಮನೆಗೆ ಹೋಗುವುದನ್ನು ನೋಡಿದೆ” ಎಂದು ಅವನನ್ನು ಕೆರಳಿಸುವಳು. “ಈಗ ಕೊನೆಗಾಲದಲ್ಲಿ ಆ ರಂಡೆ ಬಂದಳೆ? ನಾನೇ ಬೇಕಾಯಿತಲ್ಲವೆ? ಅನ್ನುವಳು. ಅಪ್ಪ ಬಯ್ಯಲು ಯತ್ನಿಸಿ ಕೆಮ್ಮುತ್ತಿದ್ದ-ಇಂಥ ನೆನಪುಗಳು ಒತ್ತಿ ಬಂದರೆ ಅಶೋಕನಿಗೆ ಗುಲಾಬಿಯ ಬಗ್ಗೆ ರಾಧಿಕೆಯ ಬಗ್ಗೆ ದಿಗಿಲಾಗುತ್ತಿತ್ತು. ತಾನು ಅರಿವಿದ್ದೂ ಯಾವುದೋ ತಳಕಾಣದ ಪ್ರಪಾತದಲ್ಲಿ ಧುಮುಕಿದಂತೆ ಅನಿಸುತ್ತಿತ್ತು. ಈ ಹೊಯ್ದಾಟದ ನಡುವೆಯೂ ರಾಧಿಕೆಯ ಸ್ನೇಹ ಅಪ್ಪಟವಾಗಿದೆಯೆಂಬ ಭಾಸ. ಅವಳನ್ನು ದೂರ ಮಾಡಿ ವೃಥಾ ನೋಯಿಸುವುದರಲ್ಲಿ ಅರ್ಥವಿಲ್ಲ ಅನಿಸುವುದು…. +* +* +* +ಈ ಮೂರು ತಿಂಗಳಲ್ಲಿ ಅಶೋಕ ರಾಧಿಕೆಯ ಮನೆಗೆ ಅನೇಕ ಬಾರಿ ಹೋಗಿದ್ದ. ಪ್ರತೀ ಸಲ ಹೋಗುವಾಗಲೂ ಹಣ್ಣೋ ತಿಂಡಿಯೋ ಒಯ್ಯುತ್ತಿದ್ದ. ಗುಲಾಬಿಯಂತೂ ಅವನ ಮೇಲೆ ಪ್ರಸನ್ನಳಾಗಿದ್ದಳು. ಇಲ್ಲವಾದರೆ ಅವಳ ಅಣ್ಣನ ಮಗನಿಗೆ ಗುಲಾಬಿಯನ್ನು ಕೊಡಬೇಕೆಂಬ ವಿಚಾರವನ್ನು ಅವಳು ಅಶೋಕ ಹೇಳಿದನೆಂಬ ಮಾತ್ರಕ್ಕೆ ಕೈ ಬಿಡುತ್ತಿರಲಿಲ್ಲ. “ಬರೀ ದುಡ್ಡು ಮಾತ್ರ ಮುಖ್ಯವಲ್ಲ. ಅವಳ ಬದುಕಿಗೆ ಸ್ವಲ್ಪವಾದರೂ ಸುಖ ಬೇಡವೇ? ರಾಧಿಕೆಗೆ ಒಳ್ಳೆಯ ಗಂಡ ಸಿಕ್ಕೇ ಸಿಗುತ್ತಾನೆ” ಎಂದು ಅಶೋಕ ಪ್ರತೀ ಸಲ ಬಂದಾಗಲೂ ಹೇಳುತ್ತಿದ್ದ. ಅಂತೂ ಗುಲಾಬಿ ಒಪ್ಪಿದಳು. “ನಿನ್ನ ಭರವಸೆಯ ಮೇಲೆ ಹೂಂ ಅನ್ನುತ್ತೇನೆ” ಎಂಬ ಮಾತೂ ಆಡಿದಳು. ಗುಲಾಬಿ ಹೀಗೆ ಮನಸ್ಸು ಬದಲಾಯಿಸಿದ್ದರಿಂದ ರಾಧಿಕೆ ತುಂಬ ಖುಷಿಯಾಗಿದ್ದಳು. “ಅಮ್ಮ ಏನಾದರೂ ಅಂದರೆ ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದೂ ಹೇಳಿದಳು. ಒಂದು ದಿನ ಒತ್ತಾಯದಿಂದ ತನ್ನ ಆಫೀಸಿಗೆ ಕರಕೊಂಡು ಹೋಗಿ ನಾಗರಾಜನ ಪರಿಚಯ ಮಾಡಿಕೊಟ್ಟಳು. ಆತ ನಸುಗಪ್ಪು ಬಣ್ಣದವ. ಮಲೆಯಾಳಿಗಳ ಹಾಗೆ ಗುಂಗುರು ಗುಂಗುರು ಕೂದಲು. ಕುಸ್ತಿ ಪಟುವಿನಂತಹ ದೇಹಧಾರ್ಡ್ಯವಿತ್ತು. ಅಶೋಕ ನಿರೀಕ್ಷಿದಷ್ಟು ಆಪ್ತವಾಗಿ ಆತ ಮಾತಾಡಲಿಲ್ಲ. ರಾಧಿಕೆ ಅವನ ಬಗ್ಗೆ ಹೇಳುತ್ತಿದ್ದಾಗ ಸೂಕ್ಷ್ಮವಾಗಿ ಅವಳನ್ನೇ ಗಮನಿಸುತ್ತಿದ್ದಂತೆ ಅಶೋಕನಿಗೆ ಅನಿಸಿತು. “ನಿಮ್ಮ ರೂಮು ಎಲ್ಲಿ? ಊಟ ಎಲ್ಲಿ ಮಾಡುತ್ತೀರಿ?” ಇತ್ಯಾದಿಗಳು ಮುಗಿದ ಮೇಲೆ ಮಾತಾಡಲು ಏನೂ ಸಿಗದೇ “ಮತ್ತೇನು? ಮತ್ತೇನು ವಿಶೇಷ?” ಅನ್ನುತ್ತ ಮಾತುಕತೆ ಮುಗಿಯಿತು. +ಈ ಮಧ್ಯೆ ಗುಲಾಬಿ ರಾಧಿಕೆಗೆ ತಿಳಿಯದ ಹಾಗೆ ಅಶೋಕನಿಂದ ನೂರು ರೂಪಾಯಿ ಇಸಕೊಂಡಳು. ಆಮೇಲೆ ತಿಂಗಳ ನಂತರ ಅವಳು ಹಿಂತಿರುಗಿಸಲು ಬಂದಾಗ ಅಶೋಕ “ಅಪ್ಪನದೇ ಗುಣ ಬಂದಿದೆ. ಅವರೂ ಹಾಗೆಯೇ ಇದ್ದರು. ಬಹಳ ಉದಾರಿ. ದೇವರು ಹೀಗೇ ಇಟ್ಟಿರಲಿ….” ಎಂದು ಗುಲಾಬು ಬಡಬಡಿಸಿದಳು. ಅಶೋಕನಿಗೆ ತಕ್ಷಣ ತಪ್ಪಿನ ಅರಿವಾಯಿತು. ಯಾಕಾದರೂ ತನಗೆ ಹಾಗೆ ಹೇಳುವ ಬುದ್ಧಿ ಬಂತೆಂದು ಪರಿತಪಿಸಿದ. +ಇದು ಇಷ್ಟಕ್ಕೇ ಮುಗಿಯಲಿಲ್ಲ. ಕೆಲವು ದಿನಗಳ ನಂತರ ಅಶೋಕನಿಗೆ ಅಮ್ಮನಿಂದ ಉದ್ದವಾದೊಂದು ಪತ್ರ ಬಂತು. ಅತ್ತ ಇತ್ತ ಕ್ಷೇಮಗಳ ತರುವಾಯ ಪತ್ರ ಕಿಡಿಕಾರತೊಡಗಿತ್ತು: ಗುಲಾಬಿ ತನ್ನ ಮಗಳು ರಾಧಿಕೆಯೊಡನೆ ಪದೇ ಪದೇ ನೀನು ಭೆಟ್ಟಿಯಾಗುತ್ತೀಯಂತೆ. ಅವರ ಮನೆಗೂ ಹೋಗುತ್ತೀಯಂತೆ. ಹಣವನ್ನೂ ಕೊಡುತ್ತೀಯಂತೆ. ಅಷ್ಟಲ್ಲದೆ ರಾಧಿಕೆಯನ್ನು ಮದುವೆಯಾಗುತ್ತೀಯೆಂದೂ ಹೇಳಿದ್ದೆಯಂತೆ. ಊರಿನವನೊಬ್ಬನ ಹತ್ತಿರ ಗುಲಾಬಿಯೇ ಸ್ವತಃ ಈ ರೀತಿ ಹೇಳಿದ್ದಾಳೆ. ಈ ವಿಷಯವೇನಾದರೂ ನಿಜವಾದರೆ ಅಮ್ಮ ಸತ್ತು ಹೋದಳೆಂದೇ ತಿಳಿದುಕೊ. ನನ್ನ ಸಂಸಾರಕ್ಕೆ ಹುಳಿ ಹಿಂಡಿದವಳ ಮನೆಯ ನೆರಳೂ ತಾಗಕೂಡದು ನಿನಗೆ. ಮುಂದಿನ ಶನಿವಾರ ಬೆಳಗಿನ ಬಸ್ಸಿಗೆ ನಾನು ಮೈಸೂರಿಗೆ ಬರುತ್ತೇನೆ, ನಿನ್ನ ಮ್ದುವೆ ಬಗ್ಗೆ ಮಾತಾಡಬೇಕು…. ಇನ್ನೂ ಎಷ್ಟು ದಿನ ಅಂತ ತಡಮಾಡುತ್ತೀ…. ಬಸ್ಸು ಸಂಜೆ ಎಂಟು ಗಂಟೆಗೆ ಅಲ್ಲಿ ತಲುಪುತ್ತದೆಯಂತೆ. ಬಸ್‌ಸ್ಟಾಂಡಿಗೆ ಕರೆಯಲು ಬಾ…. +ಅಶೋಕನಿಗೆ ದಿಗಿಲಾಯಿತು. ಇನ್ನು ಈ ವಿಷಯದ ಬಗ್ಗೆ ತುಂಬ ಜಾಗರೂಕನಾಗಿರಬೇಕೆಂದುಕೊಂಡ. ರಾಧಿಕೆ ಭೆಟ್ಟಿಯಾದಾಗ ಅಮ್ಮ ಪತ್ರದ ಬಗ್ಗೆ ಹೇಳಿದ. “ಈವತ್ತು ನಾಗರಾಜನ ಬಗ್ಗೆ ಅಮ್ಮನಿಗೆ ಹೇಳುತ್ತೇನೆ. ನಾಳೆ ಬೆಳಿಗ್ಗೆ ನೀನು ನಮ್ಮ ಮನ್ಗೆ ಬಾ” ಅಂದಳು. +ಮರುದಿನ ಶೋಕ ಹೋದಾಗ ವಾತಾವರಣವೇ ಬದಲಾಗಿಹೋಗಿತ್ತು. ಇವನ ಬರವನ್ನೇ ಕಾಯುತ್ತ ಕೂತಿದ್ದ ಗುಲಾಬಿ ರಂಪವೆಬ್ಬಿಸಿದಳು. “ನಿನ್ನನ್ನು ನಂಬಿ ಅಣ್ಣನ ಮಗನ ಸಂಬಂಧ ಕೈಬಿಟ್ಟೆ. ಈಗ ಆ ನಾಗರಾಜನಂತೆ ಯಾವನೋ. ಅವನ ಕೊರಳಿಗೆ ಕಟ್ಟಲು ನೋಡುತ್ತೀಯಾ….” ಅಶೋಕನ ವಿವರಣೆ ಅವಳ ಕಿವಿ ತಲುಪಲೇ ಇಲ್ಲ. ಒಬ್ಬಳೇ ಒದರಾಡುತ್ತಿದ್ದಳು. ತಾಳ್ಮೆಯ ಕಟ್ಟೊಡೆದು, ಅಶೋಕ “ಬಾಯಿಗೆ ಬಂದಂತೆ ಮಾತಾಡಬೇಡಿ. ರಾಧಿಕೆಯನ್ನು ಸರಿಯಾಗಿ ಕೇಳಿ ತಿಳಕೊಳ್ಳಿ…. ನನ್ನ ಬಗ್ಗೆ ಹಾಗೆ ಅರ್ಥಮಾಡಿಕೊಂಡದ್ದು ನಿಮ್ಮ ತಪ್ಪು….” ಅನ್ನುವಷ್ಟರಲ್ಲಿ ರಾಧಿಕೆ ಮಧ್ಯೆ ಪ್ರವೇಶಿಸಿದ್ದು ಗುಲಾಬಿಯನ್ನು ಇನ್ನಷ್ಟು ಕೆರಳಿಸಿತು. “ನಿನಗೆ ಮನಸಿ‌ಇರಲಿಲ್ಲ ಅಂತ ಸುಳ್ಳು ಹೇಳಬೇಡ. ಇಲ್ಲವಾದರೇ ಪ್ರತೀ ಸಲ ಬರುವಾಗ ಹಣ್ಣು ಅದೂ ಇದೂ ಅಂತ ತರುತ್ತಿದ್ದದ್ದು ಯಾಕೆ? ನನ್ನ ಅಣ್ಣನ ಮಗನ ಸಂಬಂಧ ತಪ್ಪಿಸಲು ಅಷ್ಟು ಆಸ್ಥೆ ತಗೊಂಡದ್ದು ಯಾಕೆ? ಆ ದಿವಸ ನೂರು ರೂಪಾಯಿ ಇಸಕೊಳ್ಳಲಿಲ್ಲ ಯಾಕೆ….? ಅಷ್ಟಕ್ಕೇ ಬಿಡುವವಳಲ್ಲ ನಾನು….” ಇಡೀ ವಾತಾವರಣ ಅಶೋಕನಿಗೆ ಅಸಹ್ಯವಾಯಿತು. ತನಗೆ ಬೇಕಾದಂತೆ ಎಲ್ಲವನ್ನೂ ಇವಳು ಕಿರುಚಬಲ್ಲಳು ಅನಿಸಿತು. ತಾನಾಗಿಯೇ ಬಂದು ಈ ಅರಲಲ್ಲಿ ಬಿದ್ದೆ. ಇವರನ್ನೆಲ್ಲ ಅತೀ ಹಚ್ಚಿಕೊಂಡು ಹೀಗಾಯಿತು ಅಂದುಕೊಂಡ. ಆಮೇಲೆ ರಾಧಿಕೆ ಎಷ್ಟೇ ಸಮಾಧಾನ ಪಡಿಸಿದರೂ ಮನಸ್ಸು ತಿಳಿಯಾಗಲಿಲ್ಲ. “ನಿನ್ನ ಅಮ್ಮನಲ್ಲಿ ನನ್ನ ಬಗ್ಗೆ ಇಂಥ ಭಾವನೆ ಬೆಳೆಯಲು ಬಿಡಬಾರದಿತ್ತು ರಾಧಿಕಾ” ಅಂದ. ಅವಳು ಮಾತಾಡಲಿಲ್ಲ. +ಶನಿವಾರ. ಆ ರಂಪದ ನಂತರ ಮತ್ತೆ ರಾಧಿಕೆ ಭೆಟ್ಟಿಯಾಗಿರಲಿಲ್ಲ. ಅಶೋಕ ಎರಡೂವರೆಗೆ ಬ್ಯಾಂಕಿನ ಕೆಲಸ ಮುಗಿಸಿ ಈವತ್ತು ಅಮ್ಮ ಬರುತ್ತಾಳೆಂದು ನೆನಪಿಸಿಕೊಂಡು, ತರಕಾರಿ ಒಯ್ದು ಇಟ್ಟರೆ ರೂಮಿನಲ್ಲಿ ಅಡಿಗೆಯಾದರೂ ಮಾಡಿಕೊಳ್ಳಲಾದೀತು ಅಂದುಕೊಳ್ಳುತ್ತ ಹೊರಡುವಷ್ಟರಲ್ಲಿ ರಾಧಿಕೆ ಬಂದಳು. ಉದ್ವಿಗ್ನಳಾಗಿದ್ದಳು. “ನಿನ್ನ ಜೊತೆ ಮಾತಾಡಬೇಕು” ಅನ್ನುತ್ತನ್ನುತ್ತ ಗದ್ಗದಿತಳಾದಳು. ಎಲ್ಲರೆದುರಿಗೆ ಬೇಡವೆಂದು ಅವನನ್ನು ಹೊರಗೆ ಕರೆತಂದಳು. ಹೊರಬಂದದ್ದೇ ಹೇಳತೊಡಗಿದಳು; ನಾಗರಾಜನಿಗೆ ಎರಡು ತಿಂದಳ ಹಿಂದೆ ಟ್ರಾನ್ಸ್‌ಫರ್ ಆರ್ಡರ್ ಬಂತಂತೆ. ವಿಷಯ ತಿಳಿದು ರಾಧಿಕೆ “ಹಾಗಾದರೆ ನಮ್ಮ ಮದುವೆಯ ಬಗ್ಗೆ ಈಗಲೇ ಯೋಚಿಸಬೇಕು” ಅಂದದ್ದಕ್ಕೆ ಅತ, “ನೋಡುವಾ ನೋಡುವಾ, ಅವೆಲ್ಲ ಇಷ್ಟು ಬೇಗ ಮಾತಾಡುವುದೇಕೆ?” ಎಂದು ಮಾತು ಹಾರಿಸಲು ನೋಡಿದ. ರಾಧಿಕೆ ಅವನನ್ನು ಜಾರಿಕೊಳ್ಳಲು ಬಿಡದೇ ಸ್ಪಷ್ಟಪಡಿಸಿಕೊಳ್ಳಲು ಯತ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿ “ಪ್ರೀತಿಸುತ್ತಿಲ್ಲ ಅಂತ ಹೇಳಿದೆನೆ? ಈಗಲೂ ಅದನ್ನೇ ಹೇಳುತ್ತೇನೆ. ಆದರೆ ಮದುವೆಯ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ನಿನ್ನ ಜೊತೆ ನಿನ್ನ ಅಮ್ಮನನ್ನೂ ಕಟ್ಟಿಕೊಳ್ಳಬೇಕಲ್ಲವೆ?” ಅಂದನಂತೆ. ಆತ ಹೇಳಿದ್ದು ನಿಜವಾಗಿತ್ತು. ಇದುವರೆಗೂ ರಾಧಿಕಾ ಅವನಲ್ಲಿ ಮದುವೆಯ ಬಗ್ಗೆ ನೇರವಾಗಿ ಮಾತಾಡಿರಲಿಲ್ಲ. ಆತ ತಮಾಷೆ ಮಾಡುತ್ತಿದ್ದಾನೇನೋ ಎಂದು ಮೊದಮೊದಲು ಅಂದುಕೊಂಡಳು. ಅವನು ಬಿಗಿದ ಮುಖ ಸಡಿಲವಾಗಲಿಲ್ಲ. ಇವಳು ಒಲಿಸಿಕೊಳ್ಳಲು ನೋಡಿದಳು. ಹತ್ತಿರ ಬಂದವಳನ್ನು ದುರುಗುಟ್ಟಿ ದೂರವಿರಿಸಿದ. ಜೋರು ಮಾಡಿ ನೋಡಿದಳು. ಆತ ಇನ್ನಷ್ಟು ಕಠಿಣವಾದ. ಈವತ್ತು ಬೆಳಿಗ್ಗೆ ಮತ್ತೆ ಸ್ಫೋಟವಾಯಿತು. ರಾಧಿಕೆ ಅವನ ರೂಮಿಗೆ ಹೋದಾಗ ಅವನ ರೂಮಿನ ಬಾಗಿಲು ತೆರೆಯದೇ ಹಿಂದೆ ಕಳಿಸಿದನಂತೆ. “ಎರಡು ದಿನಗಳಿಂದ ಹಿಂಸೆ ಅನುಭವಿಸುತ್ತಿದ್ದೇನೆ. ಈಗ ನಾನೂ ಕಲ್ಲಾಗಬೇಕು. ಈ ಸಂಬಂಧ ಮತ್ತೆ ಬಾಳುವುದಿಲ್ಲ ಅಶೋಕ…. ಅಮ್ಮನಿಗಿನ್ನೂ ಹೇಳಿಲ್ಲ….” ಅಂದಳು. ರಾಧಿಕೆ ಎಷ್ಟು ಬೇಡ ಬೇಡವೆಂದರೂ ಅಶೋಕ, ತಾನು ನಾಗರಾಜನ ಜೊತೆ ಮಾತನಾಡುತ್ತೇನೆಂದು ಅವಳನ್ನು ಕರಕೊಂಡು ಪೋಸ್ಟ್ ಆಫೀಸಿಗೆ ಹೊರಟ. ಆಫೀಸು ಸಮೀಪಿಸುತ್ತಿದ್ದಂತೆ, ನಾಗರಾಜನ ಜೊತೆ ತಾನು ಮಾತನಾಡುವುದಾದರೂ ಏನನ್ನು? ಅವನಿಗೆ ಹೇಳಲಿಕ್ಕೆ ತನಗೇನು ಅಧಿಕಾರ? ಅನಿಸಿತು. ರಾಧಿಕೆಗೆ ಅನುಕಂಪ ಸೂಚಿಸಿವ ಅವಕಾಶ ಒದಗಿಬಂದದ್ದಕ್ಕೆ ತನ್ನ ಮನಸ್ಸಿಗೆ ಎಲ್ಲೋ ತಂಪಾಗಿದೆ ಎಂಬ ಭಾವನೆ ಬಂದು ಕಿರಿಕಿರಿಯಾಯಿತು. +ರಾಧಿಕೆ ತಾನು ಒಳಬರುವುದಿಲ್ಲವೆಂದು ಹೊರಗೇ ನಿಂತಳು. ಅಶೋಕ ಹೋಗಿ ಅವನನ್ನು ಕರಕೊಂಡು ಬಂದ. ಅಶೋಕ ಬಾಯಿ ತೆರೆಯುವ ಮುನ್ನವೇ ಆತ “ನೀವು ಏನು ಹೇಳುತ್ತೀರಂತ ನನಗೆ ಗೊತ್ತಿದೆ. ಒಳಗೆ ಆಫೀಸಲ್ಲಿ ಹಗರಣ ಬೇಡಾಂತ ಹೊರಗೆ ಬಂದೆ. ಹೇಳಬೇಕಾದ್ದನ್ನೆಲ್ಲ ಅವಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅವಳನ್ನು ನನ್ನ ತಲೆಗೆ ಕಟ್ಟಲು ನೋಡಬೇಡಿ. ನೀವು ಬೇಕಾದರೆ ಕಟ್ಟಿಕೊಳ್ಳಿ….” ಅಂದ. ಸರ್ರನೆ ಸಿಟ್ಟು ನೆತ್ತಿಗೇರಿ ಭಾನವಿಲ್ಲದವನ ಹಾಗೆ “ಏ ಏನಂದೇ” ಅನ್ನುತ್ತ ಮುನ್ನುಗ್ಗಿದ. ಅಷ್ಟರಲ್ಲಿ ನಾಗರಾಜನ ಬಲಿಷ್ಠ ಕೈಗಳು ಅವನನ್ನು ತಡೆದವು. ಆತ ಎಡಗೈಯಿಂದ ಅಶೋಕನ ಕಾಲರು ಹಿಡಿದ. ರಾಕ್ಷಸನ ಕೈಯೊಳಗೆ ಸಿಕ್ಕ ಹಾಗಾಯಿತು ಅವಸ್ಥೆ. ಜರ್ರನೆ ಆವೇಶ ಇಳಿಯಿತು. ನಾಗರಾಜನ ಕಣ್ಣುಗಳು ಉರಿಯುತ್ತಿದ್ದವು. ಅವನ ರೋಮಭರಿತ ರಟ್ಟೆಯ ಸ್ನಾಯುಗಳು ಉಬ್ಬಿ ನಿಂತಿದ್ದವು. “ಆಫೀಸಂತ ಬಿಟ್ಟಿದ್ದೇನೆ” ಎಂದು ಆತ ಅಶೋಕನನ್ನು ಹಿಂದಕ್ಕೆ ದೂಡಿ ರಾಧಿಕೆಯತ್ತ ಕಣ್ಣೆತ್ತಿಯೂ ನೋಡದೇ ಒಳಗೆ ಹೋದ. ಆಗಲೇ ಕೆಲವು ಜನ ಈ ಜಗಳ ನೋಡುತ್ತ ನಿಂತಿದ್ದರು. ಅವಮಾನದಿಂದ ಸಾಯುವ ಹಾಗಾಯಿತು ಅಶೋಕನಿಗೆ. ಮೊಟ್ಟಮೊದಲು ಬಾರಿಗೆ ಈ ರೀತಿ ಕಾಲರು ಹಿಡಿಸಿಕೊಂಡಿದ್ದ. ಮೋರೆ, ಕಿವಿ ಕೆಂಪಾಯಿತು. ಕುತ್ತಿಗೆಯ ಬಳು, ಆತ ಹಿಡಿದಲ್ಲಿ ಸ್ವಲ್ಪ ಉರಿಯತೊಡಗಿತು. ಏನೂ ತೋರದೆ ರಾಧಿಕೆಯ ಜೊತೆ ಹೊರಟ. “ಎಲ್ಲಿ ಹೋಗುವುದು?” ಅಂದಳು. ಅವಳು ಒಲ್ಲೆನೆಂದರೂ ಬಿಡದೇ, ಒತ್ತಾಯಿಸಿ ಹೋಟೇಲಿಗೆ ಹೋಗಿ ಕಾಫಿ ಕುಡಿಸಿದ. ಅವಳನ್ನು ಸಮಾಧಾನಪಡಿಸಲು ತಾನು ಆಡುವ ಮಾತುಗಳೆಲ್ಲ ಅರ್ಥಹೀನವಾಗುತ್ತದೆನಿಸಿತು. ಅವಳ ಸ್ವಂತ ವಿಷಯದಲ್ಲಿ ತಾನು ತಲೆಹಾಕಿದ್ದು ಅತೀ ಆಯಿತು; ಅವಳಷ್ಟಕ್ಕೇ ಅವಳನ್ನು ಬಿಟ್ಟಿದ್ದರೆ ಹೇಗೋ ನಿಭಾಯಿಸುತ್ತಿದ್ದಳೋ ಏನೋ…. ತಾನು ಹೋಗಿ ರಾಡಿಯೆಬ್ಬಿಸಿಬಿಟ್ಟೆ ಅನಿಸಿತು. “ಇಲ್ಲೇ ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಕೂರೋಣ. ಈಗಲೇ ಮನೆಗೆ ಹೋಗಲಿಕ್ಕೆ ನನಗೆ ಇಷ್ಟವಿಲ್ಲ” ಅಂದಳು. ಇಬ್ಬರೂ ಪಾರ್ಕಿನ ಹುಲ್ಲಿನ ಮೇಲೆ ಕೂತರು. ಬಿಸಿಲು ಇಳಿಮುಖವಾಗುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನೇ ಕೂತಿದ್ದ ರಾಧಿಕಾ ಒಮ್ಮೆಲೇ ಅಳಲಾರಂಭಿಸಿದಳು. ಅವಳನ್ನು ಹೇಗೆ ಸಂತೈಸುವುದು ತಿಳಿಯದೇ ಒದ್ದಾಡಿದ. ಅವಳ ಕೈಹಿಡಿದು ತಲೆನೇವರಿಸಬೇಕು ಅನಿಸಿತು. ರಾಧಿಕಾ ರಾಧಿಕಾ ಅನ್ನುತ್ತ ಅವಳ ಭುಜದ ಮೇಲೆ ಕೈಯಿಟ್ಟ. ಕೊಡವಿಕೊಂಡು ಅವಳು ಬಿಕ್ಕಳಿಕೆ ಮುಂದುವರಿಸಿದಳು. ಆಚೀಚೆ ಹೋಗಿ ಬರುವ ಜನ ಇವರನ್ನೇ ನೋಡತೊಡಗಿದರು. ಒಂದಿಬ್ಬರು ಹುಡುಗರಂತು ಎದುರುಗಡೆ ಬೆಂಚಿನ ಮೇಲೆ ಕೂತೇಬಿಟ್ಟರು. ಹಸಿರು ಹುಲ್ಲು ಹೊದ್ದ ನೆಲ; ಸುತ್ತಲೂ ಎತ್ತರದ ಮರಗಳು; ಮೆದುವಾಗುತ್ತಿರುವ ಬಿಸಿಲು; ನಡುವೆ ಕೂತ ತಾವಿಬ್ಬರೂ ಈ ಲೋಕಕ್ಕೆ ಸಂದವರಲ್ಲ ಅನಿಸಿ “ರಾಧಿಕಾ ಹೋಗೋಣ. ಜನ ಎಲ್ಲ ಒಂದು ನಮೂನೆ ನೋಡುತ್ತಿದ್ದಾರೆ”’ ಅಂದ. ಅವಲು ಏಳಲಿಲ್ಲ. ಅಮ್ಮ ಇಂದು ಊರಿನಿಂದ ಬರುತ್ತಾಳೆ. ಅವಳನ್ನು ಕರೆಯಲು ಸಂಜೆ ಬಸ್‌ಸ್ಟ್ಯಾಂಡಿಗೆ ಹೋಗಬೇಕು ಎಂದು ನೆನಪಾಗುತ್ತಿದ್ದಂತೆ ಅಸ್ವಸ್ಥನಾದ. ತಾನು ಹೀಗೆ ರಾಧಿಕೆಯ ಜೊತೆ ಕೂತಿದ್ದನ್ನು ಅಮ್ಮ ನೋಡಿದರೆ ಏನಾಗಬಹುದು ಎಂದು ಊಹಿಸಿದ. ಎಲ್ಲೋ ಅಂಕೋಲೆಯಲ್ಲಿ ಹುಟ್ಟಿ ಬೆಳೆದ ತಾನು ಈವತ್ತು ಈ ನಾಗರಾಜನ ಕೈಯಲ್ಲಿ ವಿಲವಿಲನೆ ಒದ್ದಾಡಿದ ಕ್ಷಣ ನಿಜವಾಗಿಯೂ ತನ್ನದೇ? ತಾನು ಚಿಕ್ಕಂದಿನಲ್ಲಿ ಅಪ್ಪನನ್ನು ಕಳಕೊಂಡಿದ್ದೇನೆ. ನನ್ನ ಬಾಲ್ಯ ಅಂಕೋಲೆಯಲ್ಲಿ ಕಳೆಯಿತು. ಶೆಟ್ಟಿ ಮಾಸ್ತರರು ನನ್ನನ್ನು ತುಂಬ ಪ್ರೀತಿಸುತ್ತಿದ್ದರು. ನನ್ನ ಕಣ್ಣು ಹೀಗಿದೆ. ನನ್ನ ಹೆಸರು ಅಶೋಕ, ನಾನು ಹೊಯ್ದುಕೊಳ್ಳುವುದು ಚೌಕಳಿಯ ಬೆಡ್‌ಶೀಟ್ – ಇತ್ಯಾದಿಗಳಿಗೂ, ನಾಗರಾಜ ತನ್ನನ್ನು ಅಮುಕಿ ಹಿಡಿದು ದೂಡಿದ ಕ್ಷಣಕ್ಕೂ ಏನು ಸಂಬಂಧ? ಆ ಕ್ಷಣಕ್ಕೆ ಎಲ್ಲವೂ ಅನ್ಯವೆನ್ನಿಸಿ ಹೇಗೋ ಬಿಡಿಸಿಕೊಂಡರೆ ಸಾಕಾಗಿಹೋಯಿತಲ್ಲ! ಪಾರ್ಕಿನಲ್ಲಿ ಕೂತಿರುವುದು ಅಶೋಕನಿಗೆ ಅಸಹನೀಯವಾಯಿತು. “ಇನ್ನು ಅಳುವುದರಲ್ಲಿ ಅರ್ಥವಿಲ್ಲ. ನೀನು ಧೈರ್ಯಗೆಡಬೇಡ” ಅಂದ. ಸ್ವಲ್ಪ ಹೊತ್ತಿನ ನಂತರ ಅವಳು ಚೇತರಿಸಿಕೊಂಡಳು. ಇಬ್ಬರೂ ಹೊರಟರು. “ಮನೆಗೆ ಹೋಗೋಣ” ಎಂದು ಅವಳ ಉತ್ತರಕ್ಕೂ ಕಾಯದೆ ಕೈ ಮಾಡಿ ಆಟೋ ನಿಲ್ಲಿಸಿದ, “ಏನು ಅವಸರ?” ಅಂದಳು. ತನ್ನ ಅಮ್ಮ ಈವತ್ತು ಬರುತ್ತಾಳೆಂಬ ವಿಷಯವನ್ನು ಅಶೋಕ ಹೇಳಲಿಲ್ಲ. +ಮನೆಗೆ ಹೋದದ್ದೇ, ಗುಲಾಬಿ ರಾಧಿಕೆಯ ಮೇಲೆ ನೋಡಿ ಕಂಗಾಲಾಗಿ ಏನಾಯಿತು ಏನಾಯಿತು ಎನ್ನುತ್ತಾ ಹೇಳಿದ್ದನ್ನು ಕೇಳಿಸಿಕೊಳ್ಳುವ ಮೊದಲೇ ಅಳಲಾರಂಭಿಸಿದಳು. ಅಶೋಕನಿಗೆ ರೇಗಿ “ಹೇಳಿದ್ದನ್ನು ಮೊದಲು ಕೇಳಿಕೊಳ್ಳಿ” ಎಂದ. ರಾಧಿಕ ಬಿಕ್ಕುತ್ತ ಎಲ್ಲ ಹೇಳಿದಳು. ಇಷ್ಟೊಂದು ದುರ್ಬಲ, ಇಷ್ಟೂಂದು ಅಳುಬುರುಕಿ ರಾಧಿಕೆಯನ್ನು ಅಶೋಕ ನೋಡಿರಲಿಲ್ಲ. ದೊಡ್ಡದೊಂದು ಕೂದಲ ಸಿಕ್ಕಿನ ನಡುವೆ ಸಿಕ್ಕಿಹಾಕಿಕೊಂಡಂತೆನಿಸಿತು. ಗುಲಾಬಿ ನಾಗರಾಜನನ್ನು ಶಪಿಸತೊಡಗಿದಳು. “ನಾನು ಬೇಡ ಎಂದರೆ ಕೇಳಿದೆಯಾ? ನನಗೆ ಮೊದಲೇ ಗೊತ್ತಿತ್ತು….” ಎಂದು ಹಲಬುತ್ತ ‘ನೀನೂ ಕೈ ಬಿಡಬೇಡ’ ಎಂದು ಅಶೋಕನ ಕೈ ಹಿಡಿದು ಇನ್ನೂ ಜೋರಾಗಿ ಬುಳುಬುಳು ಮಾಡಿದಳು. ಇದನ್ನೆಲ್ಲ ನಿರೀಕ್ಷಿಸಿರದ ಅಶೋಕನಿಗೆ ರಾತ್ರಿ ನಿದ್ದೆಯಿಂದೆಬ್ಬಿಸಿ ಜಾತ್ರೆಯ ನಡುವೆ ಬಿಟ್ಟಂತಾಯಿತು. ಇದೆಲ್ಲ ಪೂರ್ವಯೋಜಿತ ಸಂಚಿನಂತೆ ತೋರಿ, ನಾಗರಾಜ ರಾಕ್ಷಸನ ಹಾಗೆ ಕಾಣುತ್ತಿದ್ದವನು ಈ ಸಂಚಿನ ಭಾಗವಾಗಿದ್ದಂತೆ ಅನಿಸಿತು. ರಾಧಿಕಾ ಆತನಿಗೆ ತನ್ನನ್ನು ಒಪ್ಪಿಸಿಕೊಂಡಿರಬಹುದೇ ಎಂದು ಸಂಶಯವಾಯಿತು. ರಾಧಿಕೆಯನ್ನು ನೋಡಿದ. ಅವಳ ಕಣ್ಣುಗಳು ಆರ್ಥವಾಗಿ ತನ್ನನ್ನು ನಿಟ್ಟಿಸುತ್ತಿವೆ ಎಂಬಂತೆ ಭಾಸವಾಗಿ ತಬ್ಬಿಬ್ಬಾದ. ಇಷ್ಟು ದಿನಗಳವರೆಗೂ ಬೆಳೆದುಬಂದ ವಿಶ್ವಾಸದ ಎಳೆ ಮೆಲ್ಲಗೆ ಬಲೆಯ ದಾರವಾಗಿತ್ತಿದೆ ಎಂದು ಅನುಮಾನವಾಯಿತು. ಎಲ್ಲವೂ ಹೇಗೋ ಮುಗಿದರೆ ಸಾಕಾಗಿಹೋಗಿತ್ತು. “ಯಾಕೆ ಹೀಗೆಲ್ಲಾ ಮಾತಾಡುತ್ತೀರಿ; ಸಮಾಧಾನ ಮಾಡಿಕೊಳ್ಳಿ…. ಅವನು ಎಂಥವನೆಂದು ಈಗಲೇ ಗೊತ್ತಾಗಿದ್ದು ಒಳ್ಳೆಯದಾಯಿತು…. ಧೈರ್ಯಗೆಡಬೇಡಿ….” ಎಂದೆಲ್ಲ ಬಾಯಿಗೆ ಬಂದಂತೆ ಆಡಿ ಹೊರಬಿದ್ದ. ತನ್ನ ಬೆನ್ನನ್ನು ನೀರು ತುಂಬಿದ ಕಣ್ಣುಗಳೆರಡು ಇರಿಯುತ್ತಿವೆ ಅನ್ನಿಸಿ ತಿರುಗಿ ನೋಡಿದ. ಹೌದು. ವಿಹ್ವಲನಾದ. ದೇವರೇ ಇದೇನಿದು, ಎಲ್ಲ ಕೈ ಮೀರಿ ಬೆಳೆಯುತ್ತಿದೆಯಲ್ಲ. ಎಲ್ಲ ಗೊತ್ತಿದೆ. ಆದರೂ ಏನೋ ಬೇಕು. ಏನಂತ ತಿಳಿಯುತ್ತಿಲ್ಲ. ಪ್ರಶ್ನೆ ಪತ್ರಿಕೆ ಬಿಡಿಸಾಗಿಬಿಟ್ಟಿದೆ. ಇನ್ನೂ ಎರಡು ತಾಸು ಬಾಕಿ ಇದೆ. ಪರೀಕ್ಷೆ ಹಾಲ್‌ನ ಹೊರಕ್ಕೆ ಬಿಡುತ್ತಿಲ್ಲ…. +ನೆಟ್ಟಗೆ ಬಸ್ಟ್ಯಾಂಡಿಗೆ ಬಂದು ಕಾಯುತ್ತ ನಿಂತ. ಪುಣ್ಯಕ್ಕೆ ಸರಿಯಾದ ವೇಳೆಗೇ ಬಸ್ ಬಂತು. ಅಮ್ಮ ರೂಮನ್ನು ಮೆಚ್ಚಿಕೊಂಡಳು. ಊರಿನಿಂದ ತಂದ ತಿಂಡಿ ಕೊಟ್ಟಳು. ನಂತರ ನೇರ ವಿಷಯಕ್ಕೆ ಬಂದಳು. ಅಶೋಕ ಅಮ್ಮನ ಈ ರೀತಿಯ ಅವತಾರ ನೋಡದೆ ಬಹಳ ದಿನಗಳಾಗಿತ್ತು. “ಎಲ್ಲಿದ್ದಾಳೆ ಆ ರಂಡೆ? ನನ್ನ ಜೀವನಾ ಹಾಳು ಮಾಡಿದಳು…. ಈಗ ನಿನ್ನನ್ನೂ ಬುಟ್ಟಿಯಲ್ಲಿ ಹಾಕಿಕೊಳ್ಳಲು ನೋಡುತ್ತಿದ್ದಾಳೆ…. ನೀನಾದರೂ ಎಂಥವನು, ಗೊತ್ತಿದ್ದೂ ಗೊತ್ತಿದ್ದೂ ಅವಳ ಮನೆ ಬಾಗಿಲಿಗೆ ಹೋಗುತ್ತೀಯಲ್ಲ. ಎಷ್ಟು ಚಲೋ ಸಂಬಂಧ ಬಂದಿತ್ತು. ಕುಮಟೆಯ ನಾಗೇಶ ಕಾಮತರ ಮಗಳು…. ಬಂಗಾರದಂಥ ಹುಡುಗಿ…. ಕೇಳಿದಷ್ಟು ವರದಕ್ಷಿಣೆ ಕೊಡುವ ಜನ…. ಈಗ ಈ ಸುದ್ದಿ ಕಿವಿಗೆ ಬಿದ್ದು ಹಿಂದೆ ಮುಂದೆ ನೊಡುತ್ತಿದ್ದಾರೆ. ಆ ಗುಲಾಬಿಯೇ ಊರಲ್ಲಿ ಸುದ್ದಿ ಹಾಕಿಸಿದವಳು….” ಅಮ್ಮ ಗದ್ಗದಳಾದಳು. ಅಶೋಕ ಮಾತಾಡದೇ ನಿಂತ. ಬಿಕ್ಕಿದಳು. ಸೊರಗುಟ್ಟುತ್ತ ಅಂದಳು; “ಅವಳ ಮನೆಗೆ ಮತ್ತೆ ಹೋಗುವುದಿಲ್ಲ ಎಂದು ಆಣೆ ಹಾಕಿ ಹೇಳುವವರೆಗೂ ಇಲ್ಲಿಂದ ಹೊರಡುವವಳಲ್ಲ ನಾನು…. ತೋರಿಸು ಅವಳ ಮನೆ…. ಬೆಂಕಿಯಿಕ್ಕುತ್ತೇನೆ ಅವಳ ಮುಸುಡಿಗೆ….” +ಅಮ್ಮನ ಉದ್ವೇಗ ಕಮ್ಮಿಯಾಗಲಿ ಎಂದು ಅಶೋಕ ಕಾದ. ನಂತರ ಬಳಿ ಸಾರಿ, ಅವಳ ಅಂಗೈ ಹಿಡಿದು ಮೃದುವಾಗಿ ಅಮುಕಿದ. ವಿಶ್ವಾಸದ ಎಳೆಯೊಂದು ಸಿಕ್ಕಿದಂತಾಗಿ ಅವಳು ಬಿಕ್ಕುವುದನ್ನು ಮೆಲ್ಲಗೆ ನಿಲ್ಲಿಸಿದಳು. +***** +ಆಗಸ್ಟ್ ೧೯೮೪ +ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ. ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ. ನಾನು ವಾಸಕ್ಕಿದ್ದ ಮನೆಯ […] +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_643.txt b/Kannada Sahitya/article_643.txt new file mode 100644 index 0000000000000000000000000000000000000000..d5498a14c3613628e290d2ecc0a67ff7ec8f2f95 --- /dev/null +++ b/Kannada Sahitya/article_643.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ ಎಂದು. ಇನ್ನೇನು ಅರ್ಧ ಗಂಟೆಯೊಳಗೆ ಅವಳು ಬರಬಹುದು. ಯಾಕೋ ಯಾರೂ ಬರುವುದು ಬೇಡ ಎನಿಸಿತ್ತು. ಮನಸ್ಸು ಏಕಾಂತ ಬಯಸುತ್ತಿತು. ಸುತ್ತ ಯೋಚನೆಯ ಬಲೆ ಹರಡಿ ಕುಳಿತ ನನಗೆ ಪುನಃ ಪುನಃ ಮಾಧುವಿನದೇ ನೆನಪು. +ಪಾಪ ಮಾಧು! ಬೆಳಗಿನಿಂದ ಕೆಲಸಕ್ಕೆ ಬಂದಿರಲಿಲ್ಲ. ಮಗನಿಗೆ ಹೇಗಿದೆಯೋ ಏನೋ. ನಿನ್ನೆಯಷ್ಟೆ ಕಣ್ಣೀರುಗರೆದು ಹೋಗಿದ್ದಳು. +“ಏನು ಮಾಡಲಿ ತಾಯಿ. ಪೂರ್ತಿಯಾಗಿ ಗುಣವಾದ ಎಂದು ಉಸಿರು ಬಿಡುವಾಗಲೇ ಮತ್ತೆ ಹೀಗಾಗಬೇಕೆ? ಎಲ್ಲ ನನ್ನ ಹಣೆಯ ಬರಹ. ಇಲ್ಲವಾದರೆ ಕೈಗೆ ಬಂದ ಮಗ ಹೀಗಾಗಿ ಮಲಗಿಬಿಡುವುದೆಂದರೆ!” +“ಹೆದರಬೇಡ ಮಾಧು. ಬೇಗ ಹುಷಾರಾಗುತ್ತಾನೆ. ನೋಡುತ್ತಿರು” ಎಂದು ನಿರಾಧಾರದ ಸಮಾಧಾನ ಹೇಳಿದೆ. +“ಏನು ಹುಷಾರಾಗುತ್ತಾನೋ ಕಾಣೆ. ಸಾಯಂಕಾಲದಿಂದ ಜ್ವರ ಏರಿ ಹುಚ್ಚರಂತೆ ಆಡುತ್ತಾನೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ನನ್ನ ಗತಿಯೇನು? ನನ್ನ ಮಕ್ಕಳ ಗತಿಯೇನು?” +“ಡಾಕ್ಟರು ಬಂದು ನೋಡುತ್ತಿದ್ದಾರಲ್ಲ, ಏನೆಂದರು?” +“ಅನ್ನುವುದೇನು ಮಣ್ಣು? ದಿನಾ ಬಂದು ನೋಡುತ್ತಾರೆ. ಚುಚ್ಚುತ್ತಾರೆ. ಹೋಗುತ್ತಾರೆ. ಇವತ್ತು ಬಿಲ್ಲೂ ಬಂದಿದೆ. ನಾವು ಬಡವರು. ಇವೆಲ್ಲ ದೊಡ್ಡವರಿಗೆ ಬರಬೇಕಾದ ಕಾಹಿಲೆ. ನಮ್ಮಂತಹವರಿಗಲ್ಲ. ಈ ಖರ್ಚಿಗೆಲ್ಲ ನಾನು ಎಲ್ಲಿಗೆ ಹೋಗಲಿ ಹೇಳಿ.” +ನಲ್ವತ್ತರ ಮಾಧು ಚಿಕ್ಕ ಮಗುವಿನಂತೆ ಅಳುತ್ತಿದ್ದಳು. ಮಗನಿಗೆ ಟೈಫಾಯ್ಡ್ ಆದಾಗಿನಿಂದ ಸೋತು ಕಂದಿಹೋಗಿದ್ದಳು. +ಅವಳ ಒಬ್ಬನೇ ಒಬ್ಬ ಮಗ-ಗೋವಿಂದ. ಆಮೇಲೆ ಸಾಲಾಗಿ ಹುಟ್ಟಿದ ಐದು ಹೆಣ್ಣುಮಕ್ಕಳು. ಅವಳಿಗಿದ್ದ ಒಂದೇ ಒಂದು ಆಸರೆ. ಅವನೂ ತಂದೆಯ ದಾರಿಯನ್ನೇ ಹಿಡಿದುಬಿಟ್ಟರೆ! ಮಕ್ಕಳನ್ನು ನೋಡುವುದು ಯಾರು? ಗಂಡು ಹುಡುಕಿ ಮದುವೆ ಮಾಡುವವರು ಯಾರು? +ಅವಳಿಗೆ ಸಿಗುವ ಉತ್ತರ ದೊಡ್ಡ ಶೂನ್ಯ ಮಾತ್ರ. +ದಿನದ ದುಡಿತ. ಅಂದಿಗೆ ಸಾಕು. ಹೊಸ ದಿನಕ್ಕೆ ಹೊಸ ದುಡಿಮೆಯೇ ಹೊಟ್ಟೆ ತುಂಬಿಸಬೇಕು. ಉಳಿತಾಯವಿಲ್ಲ. ಈ ಕಾಲದಲ್ಲಿ ಆ ದುಡಿಮೆಯಲ್ಲಿ ಉಳಿತಾಯ ಸಾಧ್ಯವೂ ಇಲ್ಲ. ಆದರೂ ಮಾಧು ಉಳಿಸಿದ್ದಾಳೆ. ಮಗನಿಗೇ ತಿಳಿಯದಂತೆ ತನ್ನವರಾರಿಗೂ ತಿಳಿಯದಂತೆ, ಗುಟ್ಟಾಗಿ. ಸಂಬಳದ ಇಪ್ಪತ್ತೈದು ರೂಪಾಯಿಯಲ್ಲಿ ಅವಳು ಒಯ್ಯುತ್ತಿದ್ದುದು ಇಪ್ಪತ್ತು ಮಾತ್ರ. ಉಳಿದ ಐದು ರೂಪಾಯಿ ಇರುವುದು ನನ್ನ ಬಳಿಯೇ. ಅದು ಅವಳ ಉಳಿತಾಯ ಯೋಜನೆ. ಈಗ ಮಗನ ದುಡಿಮೆಯನ್ನೂ ಸೇರಿಸಿ ಅಷ್ಟರಲ್ಲೇ ಹೇಗೋ ಆಚೀಚೆ ಮಗುಚಾಡಬಹುದು. ಪೂರ್ತಿ ತೆಗೆದುಕೊಂಡು ಹೋದರೆ ಅದರಲ್ಲಿ ಬಿಡಿ ಕಾಸೂ ಉಳಿಯುವುದಿಲ್ಲ ಎಂಬುದು ಅವಳ ತರ್ಕ. +ಹಾಗೆ ಉಳಿಸಿ ಅವಳು ತನ್ನ ಹಿರಿಯ ಹುಡುಗಿ-ವೆಂಕನಿಗೆ ಒಂದು ಮೂಗ ಬಟ್ಟು, ಕಿವಿಗೆ ಓಲೆಗಳನ್ನು ಮಾಡಿಸಿದ್ದಾಳೆ. ಮಗ ‘ಎಲ್ಲಿಂದ?’ ಎಂದು ಕೇಳಿದಾಗ ‘ಚಿಲ್ಲರೆ ಪಲ್ಲರೆ ಕೆಲಸಗಳಿಗೆ ಅಮ್ಮ ಕೊಟ್ಟ ದುಡ್ಡಿನಿಂದ ಮಾಡಿಸಿದೆ’ ಎಂದು ಮಾತು ಹಾರಿಸಿದಳಂತೆ. +‘ಈ ಗಂಡು ಮಕ್ಕಳಿಗೆ ಪೂರಾ ಗುಟ್ಟು ಬಿಟ್ಟುಕೊಟ್ಟರೆ ನಾವು ಉಳಿಸಿದಂತೆ. ನಮ್ಮ ಹೆಣ್ಣು ಮಕ್ಕಳು ಚಿನ್ನ-ಬಣ್ಣ ಕಂಡಂತೆ. ನಾಳೆ ಮದುವೆಯಾಗುವ ಮಕ್ಕಳು ಅವು. ಈಗಲೇ ಜಾಗ್ರತೆ ಮಾಡದಿದ್ದರೆ ಹೇಗೆ ಅಮ್ಮ?’ ಎಂದು ತನ್ನ ಜಾಣತನಕ್ಕೆ ತಾನೇ ತಲೆದೂಗುತ್ತಾಳೆ. +ಸಾಲ ಸೋಲವಿಲ್ಲದೆ ಆಯವ್ಯಯಗಳನ್ನು ಅಲ್ಲಿಂದಿಲ್ಲಿಗೆ ಮುಟ್ಟಿಸಿ ಅಚ್ಚು ಕಟ್ಟಾಗಿ ತನ್ನ ಬದುಕನ್ನು ನಡೆಸುತ್ತಿದ್ದ ಮಾಧುವಿನ ಆದರ್ಶ ಎಷ್ಟು ಸುಧಾರಿತ ಜನರಿಗಿದೆ? ಎಂದು ಯೋಚಿಸುತ್ತಿದ್ದೆ. ಪ್ರತಿ ತಿಂಗಳೂ ಅವಳು ಉಳಿಸಿದ ಹಣವನ್ನು ಬ್ಯಾಂಕಿಗೆ ಹಾಕಿ ಲೆಕ್ಕವನ್ನು ಅವಳಿಗೆ ತಿಳಿಹೇಳುತ್ತಿದ್ದೆ. ಗಮನವಿಟ್ಟು ಕೇಳಿ ಬೇಕಾದಾಗೆಲ್ಲ ಪ್ರಶ್ನೆ ಹಾಕಿ ತಿಳಿದಿಕೊಳ್ಳುತ್ತಿದ್ದಳು. ತನ್ನ ದುಡ್ಡಿನ ಲೆಕ್ಕವೆಲ್ಲವೂ ಅವಳ ನಾಲಗೆಯಲ್ಲೇ ಇತ್ತು. ‘ನಾನು ವಿದ್ಯೆ ಇಲ್ಲದೆ ಕೆಟ್ಟೆ ಅಮ್ಮ. ವಿದ್ಯೆ ಇದ್ದುಬಿಟ್ಟಿದ್ದರೆ ನನ್ನನ್ನು ಹಿಡಿಯುವವರಿರಲಿಲ್ಲ’ ಎಂದು ಹಲವು ಬಾರಿ ಅವಳು ಅಂದದ್ದುಂಟು. +ಅಂತಹ ಮಾಧು ಈಗ ಬಂದ ಕಷ್ಟದಿಂದ ತತ್ತರಿಸಿ ನೆಲೆ ಕಾಣದೆ ದುಃಖಿಸುತ್ತಿದ್ದಾಳೆ. +‘ದುಡ್ಡಿಗೆ ಏನು ಮಾಡುತ್ತೀಯಾ-’ ಎಂದಿದ್ದೆ. +‘ಏನು ಮಾಡುವುದೆಂದೇ ತಿಳಿಯುವುದಿಲ್ಲ ನನಗೆ. ಡಾಕ್ಟರ ಬಿಲ್ಲು ಮುನ್ನೂರಕ್ಕೆ ಬಂದಿದೆ. ನಾನೇನು ಮಾಡಲಿ? ಎಲ್ಲಿಗೆ ಹೋಗಲಿ? ಇದ್ದದ್ದೆಲ್ಲಾ ಬರಿ ಗುಡಿಮಾಡಿ ಕುಳಿತರೆ ಮತ್ತೆ ಮುಂದೇನು? ಅಷ್ಟು ಖರ್ಚು ಮಾಡಿದರೂ ನನಗೆ ಅವನು ಕೈಗೆ ಸಿಗುತ್ತಾನೆಂದು ಯಾವ ಭರವಸೆ? ಅದರ ಬದಲು ದೇವರು ನನ್ನನ್ನಾದರೂ ಒಯ್ಯಬಾರದೇಕೆ?’- +ಸ್ವಲ್ಪ ಸುಧಾರಿಸಿಕೊಂಡು ಅವಳೆಂದಳು. +‘ನನ್ನ ಹಣ ಇದ್ದಷ್ಟು ಕೊಡಿ. ಹೋಗಲಿ. ಎಲ್ಲಾ ಖರ್ಚು ಮಾಡಿಬಿಡುತ್ತೇನೆ. ನನ್ನಿಂದಾದಷ್ಟು ಮಾಡುತ್ತೇನೆ. ನನ್ನ ಅದೃಷ್ಟ. ಅವನು ಬದುಕಿ ಉಳಿದರೆ ಮುಂದೆ ಏನನ್ನೂ ಮಾಡಿಯಾನು.’ +ಹೊಟ್ಟೆ, ಬಾಯಿ ಕಟ್ಟಿ ಉಳಿಸಿದ ಅವಳ ಹಣ ಒಂದೇ ಸಲಕ್ಕೆ ಕರಗಿ ಹೋಗುವುದನ್ನು ನೆನೆದು ಅವಳಿಗೆ ಏಕೆ ನನಗೇ ಕರುಳು ಚುರ್‍ರೆಂದಿತು. ಪಾಪ ಎಷ್ಟು ಆಸೆಪಟ್ಟಿದ್ದಳು. ‘ಇನ್ನೊಬ್ಬರ ಕೈಗೆ ತನ್ನ ಮಕ್ಕಳು ಬೀಳಬಾರದು. ತಾನು ಯಾರ ಹಂಗಿನಲ್ಲೂ ಇರಬಾರದು’ ಎಂದು. ದೇವರಿಗೆ ಅದು ಸಹನೆಯಾಗಲಿಲ್ಲವೇನೋ! +ಆ ಡಾಕ್ಟರರ ಜೇಬಿಗೆ ಸೇರಿ ಹೋಗುವುದಲ್ಲ ಅವಳ ಹಣ! ಮಾಧು ಹನಿಹನಿಯಾಗಿ ಶೇಖರಿಸಿ ಇಟ್ಟಿದ್ದು ದೊಡ್ಡ ಮೊತ್ತವಾಗಿ ಅವರಿಗೆ ಹೋಗುವುದಾದರೆ ಅವಳ ಉಳಿತಾಯಕ್ಕೆ ಏನು ಬೆಲೆ ಬಂತು? ಮಗ ಉಳಿದರೆ ಸರಿ, ಉಳಿಯದಿದ್ದರೆ?…. ತನ್ನಿಂದ ಆದಷ್ಟು ಖರ್ಚು ಮಾಡಿದೆನೆಂಬ ನೆಮ್ಮದಿ ಒಂದೇ ಅವಳಿಗೆ ದೊರಕುವುದು. +ಡಾ|| ದೇಶಪಾಂಡೆ ಅವರೆಗೆ ನಿಜಕ್ಕೂ ಮಾಧುವಿನ ಹಣದ ಅಗತ್ಯವಿತ್ತೆ? +ಅವರಿಗೆ ಏನಿಲ್ಲವೆಂದು ಮಾಧು ಅವರ ಬಿಲ್ಲನ್ನು ತೆರಬೇಕು? ಏನಿಲ್ಲ ಅವರ ಬಳಿ? ಆದರೂ ಅವರು ಮಾಧುವಿನ ಹಣವನ್ನು ಬಿಡುವುದಿಲ್ಲವಲ್ಲ. ಅವಳೊಡನೆಯೂ ಬಿಡದೆ ಫೀಸು ಕೇಳಿಯೇ ಬಿಟ್ಟರು. ವಿಚಿತ್ರ ಪ್ರಪಂಚ! +ಶ್ರೀಮತಿ ಉಮಾ ದೇಶಪಾಂಡೆ! ಅತ್ಯಾಧುನಿಕ ಮಹಿಳೆ. ನಾವಿಬ್ಬರೂ ಈ ಊರಿಗೆ ಕಾಲಿಟ್ಟಿದು ಒಂದೇ ವರ್ಷ. ಆಗಿನಿಂದಲೇ ನಮ್ಮಿಬ್ಬರಿಗೆ ಪರಿಚಯದ ನಂಟು. ಅವಳು ನಮ್ಮ ಮನೆಗೆ ಬಂದು ಹೋಗುತ್ತಾಳೆ. ನಾನೂ ಅಷ್ಟೆ. ಬಂದಾಗೆಲ್ಲ ಅವಳು ತನ್ನ ಹೊಸ ಯೋಜನೆಯ ಬಗ್ಗೆ ಹೇಳುತ್ತಾಳೆ. ನಾನು ಅವಳ ಮನೆಗೆ ಹೋದಾಗೆಲ್ಲ ಏನಾದರೊಂದು ಹೊಸ ವಸ್ತುವನ್ನು ತೋರಿಸುತ್ತಾಳೆ. +‘ಇದನ್ನು ನೋಡಿದಿರಾ ಮಿಸೆಸ್ ರಾವ್. ಮೊನ್ನೆ ಡಾಕ್ಟರು ಮದ್ರಾಸಿಗೆ ಹೋದಾಗ ತಂದದ್ದು. ಇದಕ್ಕೆಷ್ಟು ಕೊಡಬಹುದು ಹೇಳಿ?’ +‘ನೋಡಿ ಮಿಸೆಸ್ ರಾವ್. ಈ ಮುತ್ತುಗಳಿಗಾಗಿ ನಾನು ಎಲ್ಲೆಲ್ಲಿ ಹುಡುಕಿದೆ ಗೊತ್ತೆ? ಕೊನೆಗೆ ನಮ್ಮ ಚಿಕ್ಕಪ್ಪ ಮೊನ್ನೆ ಕಳಿಸಿದರು. ಇಷ್ಟು ಮುತ್ತುಗಳಿಗೆ ಎಷ್ಟಾಗುತ್ತದೆ ಹೇಳಿ? ಕೇಳಿದರೆ ಆಶ್ಚರ್ಯ ಪಡುತ್ತೀರಾ, ಸಾವಿರದ ಐನೂರು ರೂಪಾಯಿ!! ಇನ್ನು ಇದಕ್ಕೆ ಚಿನ್ನ ಕಟ್ಟಿಸಿ ನಮ್ಮ ರಾಜಿಗೆ ಸರ ಮಾಡಿಸುವುದರೊಳಗೆ ಎಷ್ಟಾಗುವುದೋ. ಆದರೂ ನನಗೊಂದು ಹುಚ್ಚು ನೋಡಿ. ನಮ್ಮ ರಾಜಿಗೆ ಇದನ್ನು ಮಾಡಿಸಬೇಕು ಅಂತ…’ +ಮಾಧುವಿನ ಹುಚ್ಚಿನ ದೊಡ್ಡ ರೂಪ ಈ ಹುಚ್ಚು ಅಷ್ಟೆ. ಮಗಳನ್ನು ನೆಲೆ ಮುಟ್ಟಿಸಲು ದಿನ ರಾತ್ರಿ ದುಡಿದು ಅವಳು ಮಾಡಿಸಿದ ಮೂಗುಬಟ್ಟು, ಬೆಂಡೋಲೆ ಅವಳಿಗಿತ್ತ ಆನಂದವನ್ನೇ ರಾಜಿಗೆಂದು ಮಾಡಿಸಿದ ಸಾವಿರಾರು ರೂ.ಗಳ ಮುತ್ತಿನ ಹಾರ ಶ್ರೀಮತಿ ದೇಶಪಾಂಡೆಗೆ ತರುತ್ತದೆ. +ಎಲ್ಲಿ ವ್ಯತ್ಯಾಸ? ಆದರೆ ಎಂತಹ ವಿಪರ್ಯಾಸ? +‘ಮಿಸೆಸ್ ರಾವ್, ನಾನೊಂದು ಹವಳದ ಸೆಟ್ ಮಾಡಿಸುತ್ತೇನೆಂದು ನಿಮಗೆ ಹೇಳಿದ್ದೆನಲ್ಲ. ಸರಿಯಾದ ಹವಳಕ್ಕಾಗಿ ಕಾಯುತ್ತಿದ್ದೆ. ಮೊನ್ನೆ ಆರ್ಡರು ಕೊಟ್ಟು ಬಂದೆ. ಇನ್ನೇನು ಒಂದೆರಡು ತಿಂಗಳೊಳಗೆ ಬರಬಹುದು. ಅದಕ್ಕೆ ಸರಿಯಾಗಿ ಸೀರೆಯೊಂದನ್ನು ಕೊಂಡುಬಿಟ್ಟರೆ ಮತ್ತೆ ಸಧ್ಯಕ್ಕೆ ಹವಳದ ಗೋಜಿಗೇ ಹೋಗುವುದಿಲ್ಲ ನಾನು. +ಹವಳದ ಸೆಟ್ ಬಂದಿದೆಯೆಂದೂ, ಅದಕ್ಕೊಪ್ಪುವ ಸೀರೆ ತರಲು ಇಂದು ಸಂಜೆ ಹೋಗುವಳೆಂದೂ ಬೆಳಿಗ್ಗೆ ಫೋನಿನಲ್ಲಿ ಹೇಳುವಾಗಲೇ ಅವಳ ದನಿ ಸಂತಸದಿಂದ ಎಷ್ಟು ಪುಳಕಗೊಂಡಿತ್ತೊ! +ಸುಂದರವಾದ ಉಡುಗೆಯೆಂದರೂ ಅವಳಿಗೆ ತುಂಬ ಪ್ರೀತಿ. ಇನ್ನು ಅವಳ ಮಗಳೋ! ಈಗಲೇ ತಾಯಿಯ ಎರಡರಷ್ಟು ಸೊಗಸುಗಾತಿ! ಉಮಾ ದೇಶಪಾಂಡೆ ಹಲವು ಬಾರಿ ನನ್ನೊಡನೆ ಹೇಳಿದ್ದಾಳೆ. +‘ಈಗಿನ ಮಕ್ಕಳು ಎಷ್ಟು ಬೇಗ ಶಿಸ್ತು ಕಲಿಯುತ್ತಾರೋ ನಮ್ಮ ರಾಜಿಗೆ ನೋಡಿ ಉಡುಗೆಯ ಮಟ್ಟಿಗೆ ನನ್ನದೇ ಬುದ್ಧಿ. ಯಾವಾಗಲೂ ಬಟ್ಟೆಗಳನ್ನೆಲ್ಲಾ ಕ್ಲೀನಾಗಿ ಇಸ್ತ್ರಿ ಮಾಡಿಸಿಟ್ಟರೇ ಅವಳು ಒಪ್ಪುವುದು. ಇಲ್ಲವಾದರೆ ರಂಪ ಮಾಡಿಬಿಡುತ್ತಾಳೆ. ಒಂದು ಫ್ರಾಕನ್ನು ನಾಲ್ಕು ಸಲ ಹಾಕಿದಳೆಂದರೆ ಆಮೇಲೆ ಅದು ಮೂಲೆಗೆ. ಅವಳಿಗೆ ಶೃಂಗಾರ ಮಾಡಿ ಕ್ಲಾಸಿಗೆ ಕಳಿಸುವುದರೊಳಗೆ ನನಗೆ ಸಾಕಾಗಿ ಹೋಗುತ್ತದೆ’- +ಮಾಧುವಿನ ಎರಡನೆಯ ಹುಡುಗಿ ಪುಟ್ಟಿಯದೇ ವಯಸ್ಸಿರಬಹುದು ರಾಜಿಗೆ. ಅವಳು ಒಂದು ಫ್ರಾಕನ್ನು ನಾಲ್ಕು ಸಲ ಹಾಕುವುದು ಹೆಚ್ಚಾದರೆ, ಪುಟ್ಟಿ ಯಾರಾದರೂ ಕೊಟ್ಟ ಹಳೆಯ ಚೀಟಿ ಫ್ರಾಕನ್ನು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಹಾಕುತ್ತಾಳೆ. ರಾಜಿಯದು ಅವಶ್ಯಕ್ಕಿಂತ ಹೆಚ್ಚು ಉದ್ದಗಲವಿರುವ ಮೆತ್ತನೆಯ ಹಾಸಿಗೆ. ಅದರಲ್ಲಿ ಅವಳು ಸುತ್ತೆಲ್ಲ ಉರುಳಬಹುದು. ಎತ್ತ ಬೇಕಾದರೂ ಕಾಲು ಚಾಚಬಹುದು. ಪುಟ್ಟಿಗೆ ಹಾಗಾದೀತೇ? ಮುರುಟಿ ಹೋದ ಹರಕು ಚಾಪೆಯಲ್ಲಿ ಇನ್ನೂ ಮುದುರಿ ಅವಳು ಮಲಗಬೇಕು. ರಾಜಿಯಂತೆ ಕಾಲು ಚಾಚಿದರೆ ಅವಳಿಗೆ ಸಿಗುವುದು ಮಣ್ಣಿನ ತಣ್ಣನೆಯ ನೆಲವೇ. +ಮಾಧು ಅತ್ತು ದುಡ್ಡು ತೆಗೆದುಕೊಂಡು ಹೋದ ರಾತ್ರಿ ನಾನು ಇವರೊಡನೆ ಬೇಸರವನ್ನೆಲ್ಲ ತೋಡಿಕೊಂಡು ಜಿಗುಪ್ಸೆಯಿಂದ “ಏನು ಪ್ರಪಂಚವೋ!” ಎಂದೆ. +ಗಹಗಹಿಸಿ ನಗುತ್ತಾ ಅವರೆಂದರು: +“ಪ್ರಪಂಚಕ್ಕೇನಾಗಿದೆ? ಆಗಿರುವುದೆಲ್ಲ ನಿನಗೆ? ನೀನು ತಾರ್ಕಿಕವಾಗಿ ಯೋಚಿಸುತ್ತಿಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ದೃಷ್ಟಾಂತ ಬೇಕೆ?” +“ಯಾಕೆ? ನನ್ನ ಮಾತಿನಲ್ಲಿ ಏನು ತಪ್ಪು?” +“ಮಾತಿನಲ್ಲಿ ತಪ್ಪಿಲ್ಲ. ಯೋಚಿಸುವುದರಲ್ಲೇ ತಪ್ಪು ಮಾಡುತ್ತೀಯ. ಪ್ರತಿ ಒಬ್ಬರೂ ಹೀಗೇ ಎಣಿಸುತ್ತ ಹೋದರೆ ಅವರಿಗೆಲ್ಲ ಉತ್ಪತ್ತಿ ಎಲ್ಲಿಂದ? ಡಾಕ್ಟರು ಮಾಡಿದ್ದಾದರೂ ಏನು? ತನ್ನ ಶ್ರಮಕ್ಕೆ ಫಲ ಕೇಳಿದರು ಅಷ್ಟೆ. ಮಾಧು ತನ್ನ ದುಡಿಮೆಗೆ ನಿನ್ನೊಡನೆ ಸಂಬಳ ಕೇಳುವುದಿಲ್ಲವೆ? ಹಾಗೆ ಎಂದು ತಿಳಿದುಕೋ. ಇಬ್ಬರ ದುಡಿಮೆಯ ಮಟ್ಟ ಸಮಾಜದಲ್ಲಿ ಬೇರೆ ಇರಬಹುದು. ಆದರೆ ಇಬ್ಬರೂ ಒಂದೇ ನಿಯಮಕ್ಕೆ ಬದ್ಧರಾದವರು ಎಂದೇಕೆ ನೀನು ತಿಳಿಯುವುದಿಲ್ಲ?” +“ಮಾಧು ನನ್ನೊಡನೆ ಸಂಬಳ ಕೇಳಿದರೆ ಅವಳು ಕೇಳುವಷ್ಟು ಕೊಡುವ ಸಾಮರ್ಥ್ಯ ನನಗಿದೆ. ಆದರೆ ಅವಳಿಗೆ ಕೊಡುವ ಶಕ್ತಿ ಇದೆಯೇನು?” +“ವಿಜೀ, ನಿನಗೆ ಏನು ಹೇಳಲಿ? ಶ್ರಮಕ್ಕೆ ಫಲ ಕೇಳದೆ ಇರಲು ಅವರೇನು ಮಹಾತ್ಮರೆ? ಅವರಿಗೂ ಮನೆಯಿದೆ. ಹೆಂಡತಿ ಮಕ್ಕಳಿದ್ದಾರೆ. ತಾನು ಬಯಸಿದ ಮಟ್ಟದಲ್ಲಿ ಅವರೂ ಜೀವನ ಸಾಗಿಸಬೇಕಲ್ಲ. ಅವರಿಗೂ ಅದು ಸಮಸ್ಯೆಯೇ. ಅಷ್ಟು ಮೃದು ಮನಸ್ಸು ಅವರಿಗೂ ಇರಬಾರದು.” +“ಹೋಗಿ, ನೀವೊಬ್ಬರು. ಅಷ್ಟು ಆಸ್ತಿ-ಪಾಸ್ತಿ ಮನೆ-ಒಡವೆ ಇದ್ದರೂ…” +“ಅದೆಲ್ಲ ಹೆಂಗಸರಿಗೆ ತಿಳಿಯುವುದಿಲ್ಲ. ಹಾಗೆಲ್ಲ ನಾವು ನೋಡಿದರೆ ಆದೀತೇ ವಿಜೀ? ನೀನು ಬರೀ ಅನುಕಂಪದ ದೃಷ್ಟಿಯಿಂದಲೇ ನೋಡುತ್ತೀ ಹೊರತು ತರ್ಕ ಬದ್ಧವಾಗಿ ಯಾಕೆ ಯೋಚಿಸುವುದಿಲ್ಲ! ಅಷ್ಟು ಅನುಕಂಪ ಇರುವವಳು ಕೋಪಿಸಿಕೊಳ್ಳಬೇಡ-ನೀನೇ ಒಂದು ಐನೂರು ರೂಪಾಯಿ ಅವಳಿಗೆ ಕೊಟ್ಟು ಬಿಡು ನೋಡೋಣ”. +ನಾನು ನಗುತ್ತಾ ಅಂದೆ- +“ಖಂಡಿತ ಕೊಡುತ್ತೇನೆ. ಜೋಬು ಕತ್ತರಿಸುವ ವಿದ್ಯೆ ನನಗೆ ತಿಳಿದಿಲ್ಲವೆಂದುಕೊಂಡಿರಾ?” +ಹಾಗೆ ನಕ್ಕು ನುಡಿದರೂ ನನ್ನಷ್ಟಕ್ಕೆ ಮಿಡುಕಿದೆ. ಅವಳ ಬಗ್ಗೆ ಅಷ್ಟೆಲ್ಲ ದೊಡ್ಡ ಮಾತಾಡುತ್ತೇನಲ್ಲ. ಅವರೆಂದಂತೆ ‘ಐನೂರು ರೂಪಾಯಿ ತೆಗೆದುಕೋ ಮಾಧು ಮಗನ ಔಷಧಕ್ಕೆ’ ಎಂದು ಕೊಟ್ಟುಬಿಡಲು ನನಗೇನಡ್ಡಿ? ಆದರೂ ಏನೋ ಒಂದು ಅವ್ಯಕ್ತವಾದದ್ದು ಅಡ್ಡ ಬರುವುದಲ್ಲ! ಯೋಚಿಸಿದಂತೆಲ್ಲ ನನಗೆ. ನನ್ನೊಳಗೇ ಸುಪ್ತವಾಗಿ ಬೆಳೆಯುತ್ತದ್ದ ಸ್ವಾರ್ಥಗೋಚರಿಸಿ ನಗು ಬಂತು. ಎಷ್ಟೆಂದರೂ ನಾನೂ ಮನುಷ್ಯಳಲ್ಲವೇ? ಹುಟ್ಟು ಬುದ್ಧಿ ಫಟ್ಟ ಹತ್ತಿದರೂ ಹೋದೀತೇ? ಅಂದ ಮೇಲೆ ದೇಶಪಾಂಡೆ ದಂಪತಿಗಳನ್ನು ಟೀಕಿಸುವ ಹಕ್ಕು ನನಗೆಲ್ಲಿ? ನಾನೂ ಅವರ ಸಾಲಿನವಳಲ್ಲವೇ? ‘ಪಾಪ’ – ಎಂದು ಒಣ ಕನಿಕರ ತೋರಿಸುವುದರಲ್ಲಿ ಅರ್ಥವೇನೂ ಇಲ್ಲ. +* * * +ತಲೆಯನ್ನೂ ಬಾಚದೆ ಕುಳಿತುಬಿಟ್ಟಿದ್ದೆ. ಶ್ರೀಮತಿ ದೇಶಪಾಂಡೆ ಬರುವಳೆಂಬ ನೆನಪಾಗಿ ಮುಖ ತೊಳೆದು ಬರುವಷ್ಟರಲ್ಲಿ ಹಾರ್ನ್ ಕೇಳಿಸಿತು. ಎಂದಿನ ಚುರುಕು ನಡೆಗೆಯಿಂದ ತಾಯಿ ಮಗಳು ಒಳಗೆ ಬರುತ್ತಿದ್ದರು. +“ಬನ್ನಿ ಮಿಸೆಸ್ ದೇಶಪಾಂಡೆ. ಶಾಪಿಂಗ್ ಮುಗಿಸಿದಿರಾ?” – ಎನ್ನುತ್ತಾ ಸ್ವಾಗತಿಸಿದೆ. +“ಹೂ. ಇನ್ನೂ ಸ್ವಲ್ಪ ಬೇಗ ಮುಗಿಯುತ್ತಿತ್ತು. ಈ ರಾಜಿ ದೆಸೆಯಿಂದ ಇಷ್ಟು ತಡವಾಯಿತು.” +“ನೋಡಿ ಆಂಟಿ. ಹೇಗಿದೆ ನನ್ನ ಹೊಸ ಡಾಲ್?” ಅಂದದ ಅಂಗಿ ತೊಟ್ಟು ನಸು ನಗು ಬೀರುವ, ಹೊಂಗೂದಲಿನ ಕಣ್ಣರಳಿಸಿಕೊಂಡಿದ್ದ ದೊಡ್ಡದಾದ ಗೊಂಬೆಯೊಂದನ್ನು ಅವುಚಿಕೊಂಡು ಕೇಳುತ್ತಿದ್ದ ರಾಜಿಯನ್ನು ಎಂದಿನಂತಾಗಿದ್ದರೆ ನಾನು ಹರ್ಷದಿಂದ ಮುದ್ದಿಡುತ್ತಿದ್ದೆ. ಆದರೆ ಇಂದು ತೋರಿಕೆಗೆ ಅವಳ ಗೊಂಬೆಯ ಕೆನ್ನೆ ಚಿವುಟಿ ಚೆನ್ನಾಗಿದೆ ರಾಜಿ, ತುಂಬಾ ಚೆನ್ನಾಗಿದೆ” ಎಂದೆ ಶುಷ್ಕವಾಗಿ. +“ನಲವತ್ತೈದು ರೂಪಾಯಿ ತೆತ್ತಮೇಲೆ ಚೆನ್ನಾಗಿರದಿದ್ದರೆ ಹೇಗೆ? ಈ ರಾಜಿಯನ್ನು ಕರೆದುಕೊಂಡು ಹೋದಾಗೆಲ್ಲ ಅವಳಿಗೆ ಡಾಲ್ ತೆಗೆಸಿಕೊಡಲೇಬೇಕು ನೋಡಿ”- ಎಂದು ಏನೋ ಒಂದು ಬಗೆಯ ಹೆಮ್ಮೆಯಿಂದ ಮಗಳನ್ನು ನೋಡಿದಳು ಶ್ರೀಮತಿ ದೇಶಪಾಂಡೆ. +ಆ ಮಾತು ಈ ಮಾತು ಆಡುತ್ತಾ ನಾನು ಕೇಳಿದೆ. +“ನಮ್ಮ ಮಾಧುವಿನ ಮಗನಿಗೆ ಟೈಫಾಯ್ಡ್ ಮರುಕಳಿಸಿದೆಯಂತೆ. ನಿಮ್ಮವರದೇ ಔಷಧವೆಂದು ಕಾಣುತ್ತೆ. ನಿನ್ನೆ ತುಂಬ ಸೀರಿಯಸ್ ಎಂತ ಅಳುತ್ತಿದ್ದಳು. ಡಾಕ್ಟರು ಏನಾದರೂ ಹೇಳಿದರೆ?” +“ಅಯ್ಯೋ ಬಿಡಿ. ಅಂತಹ ಎಷ್ಟು ಕೇಸುಗಳು ಅವರಿಗೆ ಬಂದು ಹೋಗುತ್ತವೆಯೋ ಅದನ್ನೆಲ್ಲ ತಲೆಗೆ ಹಚ್ಚಿಕೊಂಡರೆ ಆದೀತೇ?” ಎನ್ನುತ್ತ ಗೆಲುಮುಖದಿಂದ ಕೈಲಿದ್ದ ಪೊಟ್ಟಣ ಬಿಚ್ಚಿದಳು. +“ಅಂತೂ ನನ್ನ ಮನಸ್ಸಿಗೊಪ್ಪುವ ಸೀರೆ ಸಿಕ್ಕಿತು ನೋಡಿ. ಇದು ನನ್ನ ಹವಳದ ಸೆಟ್ಟಿಗೆ ಸರಿಯಾಗಿ ಹೊಂದುತ್ತೆ. ಇದರಲ್ಲೇ ತುಸು ನಸು ಬಣ್ಣದ್ದೂ ಇತ್ತು. ಕೊಂಚ ಕಡು ಬಣ್ಣದ್ದೂ ಇತ್ತು. ನನ್ನ ಅಹವಳ ಇದೇ ಬಣ್ಣದ್ದು ಎಂದೆನಿಸಿ ಕೊಂಡು ಬಿಟ್ಟೆ. ಮುನ್ನೂರು ರೂಪಾಯಿ ಕೊಟ್ಟೆ ಕೊಡಬಹುದಲ್ಲ?” +ಸೀರೆಯನ್ನು ಸವರುತ್ತ ನಾನು ಅನ್ಯಮನಸ್ಕಳಾಗಿ ಅಂದೆ “ಪಾಪ ಮಾಧು ನನ್ನ ಹತ್ತಿರ ಮುನ್ನೂರು ರೂಪಾಯಿ ಇಡಲು ಕೊಟ್ಟಿದ್ದಳು ನಿನ್ನೆ ಕೊಟ್ಟೆ. ಅಷ್ಟು ಇಲ್ಲಿಯವರೆಗಿನ ಫೀಸಿಗಾಯಿತು. ಇನ್ನು ಎಲ್ಲಿಂದ ತರುತ್ತಾಳೋ?” +ಅವಳೆಂದಳು- +“ನಿಮಗೆ ಗೊತ್ತಿಲ್ಲ ಮಿಸೆಸ್ ರಾವ್. ಈ ಕೆಲಸದವರಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಟೈಫಾಯ್ಡ್ ಗುಣವಾದರೂ ಒಂದೆರಡು ತಿಂಗಳಾದರೂ ಸಂಪೂರ್ಣ ವಿಶ್ರಾಂತಿಯಲ್ಲಿರಬೇಕು. ಇವರಿಗೆಲ್ಲ ಹೇಳುವವರು ಯಾರು? ಸ್ವಲ್ಪ ಗುಣವೆಂದು ತೋರಿದೊಡನೆ ಎದ್ದು ಕೆಲಸಕ್ಕೆ ಹೊರಟುಬಿಡುತ್ತಾರೆ. ಅದು ಮರುಕಳಿಸದೇ ಇದ್ದೀತೇ? ದೂರು ಬರುವುದು ಮಾತ್ರ ಡಾಕ್ಟರುಗಳಿಗೆ. ಈ ಡಾಕ್ಟರಾದವರಿಗೆ ಏನೂ ಸುಖವಿಲ್ಲ ನನ್ನ ಕೇಳಿದರೆ…ಸೀರೆ ನೋಡಿದಿರಾ? ಹೇಗಿದೆ?” ಎನ್ನುತ್ತಾ ತಾನೇ ಎದ್ದು ಬಿಡಿಸಿ ಸೀರೆಯ ಒಡಲು, ಸೆರಗನ್ನು ತೋರಿಸಿದಳು. +ನಾನು ಅದರ ಅಂದಚೆಂದದಲ್ಲಿ ಮುಳುಗಿ ಹೋದೆ. ಒಡಲ ತುಂಬ ರೆಕ್ಕೆ ಬಿಚ್ಚಿ ನರ್ತಿಸುತ್ತಿರುವ ಪುಟ್ಟ ಮಯೂರಗಳು. ಸೆರಗಿನ ಮಧ್ಯೆ ಗೋಪುರವಿರುವ ಸುಂದರವಾದ ದೇವಾಲಯ. ಅದರ ಇಕ್ಕೆಲದಿಂದ ಹರಿವಾಣವನ್ನು ಹಿಡಿದು ಸಿಂಗಾರದಿಂದ ಬರುತ್ತಿದ್ದ ತರುಣಿಯರು, ಬಹಳ ನಾಜೂಕಾಗಿ ಅದನ್ನು ಹೆಣೆದ ವೈಖರಿಯನ್ನೇ ನೋಡುತ್ತ ನಾನು ಮೈಮರೆತೆ. +ಮಿಸೆಸ್ ದೇಶಪಾಂಡೆ ಸೀರೆಯ ಬಗ್ಗೆ ವಿವರಣೆ ಕೊಡುತ್ತಲೇ ಇದ್ದಳು. ಮಧ್ಯೆ ಮಧ್ಯೆ “ಹೇಗಿದೆ? ಹೇಗಿದೆ?” ಎಂದು ಕೇಳುತ್ತಿದ್ದಳು. +“ನಾಡದು ದೀಪಾವಳಿಗೆ ಉಡುತ್ತೇನೆ. ನೀವು ಈ ಬಾರಿ ಯಾವ ಸೀರೆ ತೆಗೆದಿರಿ?” +ನಾನು “ಹಾಂ ಹೂಂ” ಎನ್ನುತ್ತಲೇ ಇದ್ದೆ. +ಹಿಂಬಾಗಿಲಿನಿಂದ ಯಾರೋ ಅಳುವ ದನಿಯಿಂದ “ಅಮ್ಮಾ” ಎಂದು ಕರೆದಂತೆ ಆಯಿತು. +“ಯಾರು?” – ಎಂದು ಹೋಗಿ ಬಾಗಿಲು ತೆರೆದೆ. ವೆಂಕ ಗಟ್ಟಿಯಾಗಿ ಅಳುತ್ತಾ ಎಂದಳು. +“…ಅಣ್ಣ… ಹೋಗಿಬಿಟ್ಟ … ಅಮ್ಮ ಹೇಳಿದ್ಲು…ಒಂದು ಇಪ್ಪತ್ತು ರೂಪಾಯಿ ಬೇಕಂತೆ…ಕೇಳಿ ಬಾ…” ಎಂದಳು. +ನಿಂತ ಕಾಲಿನ ಬಲವೇ ಉಡುಗಿದಂತಾಗಿ ಬೆಚ್ಚಿ ಕೇಳಿದೆ. “ಹೌದಾ?” +ಅಸ್ತವ್ಯಸ್ತ ಮನಸ್ಸಿನಿಂದ ಒಳಬಂದು ನಡುಗುವ ದನಿಯಲ್ಲಿ ಅಂದೆ “ಅವನು… ಮಾಧೂ ಮಗ, ಹೋಗಿಯೇ ಬಿಟ್ಟನಂತೆ. ರೂಪಾಯಿಗೆ ಹೇಳಿ ಕಳಿಸಿದ್ದಾಳೆ.” +ನಿರ್ವಿಕಾರ ಮುಖದಿಂದ ಶ್ರೀಮತಿ ದೇಶಪಾಂಡೆ, +“ಹೋದನೆ, ಪಾಪ. ಏನು ಮಾಡಲಾಗುತ್ತದೆ ಹೇಳಿ. ನಿಮಗೆ ಕೆಲಸವಿದೆಯೋ ಏನೋ, ನಾನು ಹೋಗುತ್ತೇನೆ” – ಎಂದು ಹೊರಟುಬಿಟ್ಟಳು. ಬಾಗಿಲವರೆಗೆ ಹೋದವಳು ಪುನಃ ನಿಂತು. +’ಮಿಸೆಸ್ ರಾವ್, ಇಂತಹದೇ ಸೀರೆ ಇನ್ನು ಒಂದೇ ಇದೆ ಅಲ್ಲಿ. ಒಂದೇ ಒಂದು. ದೀಪಾವಳಿ ಸಮಯವಾದ್ದರಿಂದ ಉಳಿಯುವುದೆಂಬ ಭರವಸೆ ನನಗಿಲ್ಲ… ಬಿಡಬೇಡಿ, ಬರೀ ಮುನ್ನೂರೇ ರೂಪಾಯಿ” ಎಂದು ಕೂಗಿ ನುಡಿದಳು. +ಬರೀ ಮುನ್ನೂರೇ ರೂಪಾಯಿ!! +ಕಾರು ಚಲಿಸಿತು. ಶ್ರೀಮತಿ ದೇಶಪಾಂಡೆಯ ಮಡಿಲಲ್ಲಿ ಮಾಧುವಿನ ಮುನ್ನೂರು ರೂಪಾಯಿ ಸೀರೆಯ ರೂಪದಲ್ಲಿ ಕುಳಿತಿತ್ತು. ಹವಳದ ಸೆಟ್ಟಿನೊಡನೆ ಸೇರಲು ಹೋಗುತ್ತಿತ್ತು. +ಬಹುಶಃ ಅಲ್ಲಿ ಗೋವಿಂದನೂ ಬಿದಿರಿನ ವಾಹನವೇರಿ ತನ್ನ ಕೊನೆಯ ಯಾತ್ರೆಗೆ ಸಿದ್ಧನಾಗುತ್ತರಬಹುದು. +***** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […] +ಮಳೆ ಬರುತ್ತಿದೆ.ಮಳೆ ಮಳೆ ಮತ್ತು ಮಳೆ. ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ. ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ […] +ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_644.txt b/Kannada Sahitya/article_644.txt new file mode 100644 index 0000000000000000000000000000000000000000..2e0c31bc9a2708f235cbdfb56546360fc09f858d --- /dev/null +++ b/Kannada Sahitya/article_644.txt @@ -0,0 +1,85 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ ಬೊಳ್ಳದ ಸಂಕವನ್ನೊಮ್ಮೆ ನೋಡಿ ಬರುವುದು ಅವಳ ವಾಡಿಕೆ. +ಹೂ ಹೂವಿನ ವಾಯಿಲ್ ಸೀರೆಯ ಸೆರಗಿನ ಕುಚ್ಚನ್ನು ಬಲಬದಿಯಿಂದ ಎದುರು ತಂದು ಸೊಂಟಕ್ಕೆ ಸಿಕ್ಕಿಸಿಕೊಂಡ ವೇದ, ಗಾಳಿಗೆ ಹಾರುವ ಮುಂಗುರುಳುಗಳನ್ನು ಮೇಲೆ ಸರಿಸುತ್ತ, ಹೂವಿನ ತೋಟವನ್ನು ದಾಟಿದಳು. ಪಂಪಿನ ಕೋಣೆಯನ್ನು ಹಾದಳು. ತೆಂಗಿನ ಮರಗಳ ನಡುವಿನಲ್ಲಿ ನಡೆಯತೊಡಗಿದಳು. ನೆಲದ ಮೇಲೆ ಹಸಿರು ಹಾಸಿದಂತೆ ಒಂದಿಂಚೂ ಬಿಡದೆ, ಬಿದ್ದು ಹುಟ್ಟಿದ ಕಾಟು ಗಿಡಗಳನ್ನು ತುಳಿಯುತ್ತ ಹೆಜ್ಜೆ ಹಾಕಿದಳು. ದಾರಿಗಡ್ಡವಾಗಿ ಬಿದ್ದ ಮಡಲನ್ನು ಬದಿಗೆ ಸರಿಸಿದಳು. ಬಾವಿಕಟ್ಟೆಯ ಹತ್ತಿರ ಕುಳಿತಿದ್ದ ಕುಪ್ಪನ ಹತ್ತಿರ, ಏ ಕುಪ್ಪ, ನಿನ್ನ ಮಗಳು ಸಾಕುವನ್ನು ಇವತ್ತು ನೆನಪಿನಲ್ಲಿ ಕಳಿಸು ಮಾರಾಯ. ಅಕ್ಕಿ ಬೀಸಲಿಕ್ಕುಂಟು. ಎಂದು ಹೇಳಿದಳು. ನಕ್ರುಳಗಳು ಕೊರೆದು ಹಾಕಿದ ಅಂಟು ಮಣ್ಣಿನ ಉಂಡೆಗಳು ಅಲ್ಲಲ್ಲಿ ಮುದ್ದೆ ಮುದ್ದೆಯಾಗಿ ಬಿದ್ದಿದ್ದವು. ತೆಂಗಿನ ಮರದ ಕಟ್ಟೆಗಳೆಲ್ಲ ನೀರಿನ ಹೊಡೆತಕ್ಕೆ ಒಡೆದು ವಿಕಾರವಾಗಿದ್ದವು. ಮಳೆಗಾಲ ಮುಗಿದ ಮೇಲೆ ಮಣ್ಣಿನ ಕಟ್ಟೆ ಸರಿಮಾಡಲು ಬರುವ ಗೋವಿಂದನ ಹತ್ತಿರ ಈ ಸಲ ಸ್ವಲ್ಪ ಸಿಮೆಂಟು ಬಡಿಯುವಂತೆ ಹೇಳಬೇಕು ಎಂದುಕೊಂಡಳು. ಅಳಿವೆಯ ಬಾಗಿಲಿನ ಕಡೆಗೆ ಸ್ಪರ್ಧೆಯ ಓಟದಲ್ಲಿ ಹರಿಯುವ ತೋಡಿನ ನೀರಿಗೆ ಕೈಯ್ಯಲ್ಲಿದ್ದ ದಾಸವಾಳದ ಹೂವನ್ನು ಎಸೆದಳು. ಮಣ್ಣು, ಹುಲ್ಲು, ಕ್ರಿಮಿಕೀಟಗಳಿಂದ ಕೂಡಿದ ಸಾರಿನ ಬಣ್ಣದ ನೀರಿನಲ್ಲಿ ಕೆಂಪು ಬಣ್ಣದ ಹೂ ರೊಂಯ್ಯೆಂದು ತೋಡಿನ ತುದಿಯ ವರೆಗೆ ಹೋಗುವುದನ್ನು ನೋಡುತ್ತ, ಈ ನೀರಿಗೆ ಸಮುದ್ರ ಸೇರುವ ಅವಸರವೇ ಎಂದುಕೊಂಡಳು. +ನಿನ್ನೆಗೂ ಇವತ್ತಿಗೂ ಏನು ವ್ಯತ್ಯಾಸವಿರಬಹುದು ಎಂದು ಅವಳು ತನ್ನಲ್ಲೇ ಎಷ್ಟೋ ಸಲ ಅಂದುಕೊಳ್ಳುವುದಿತ್ತು. ಇವತ್ತೆಂದರೆ ನಿಜವಾಗಿಯೂ ನಿನ್ನೆಯೇ? ಅಥವಾ ನಿನ್ನೆಯೆಂದರೆ ಇವತ್ತಾಗಲೂ ಬಹುದೇ? ಎಂದು ಸಂದೇಹ ಪಡುತ್ತಿದ್ದಳು. ನಿನ್ನೆಯಂತೆ ಇವತ್ತು ಮತ್ತು ಇವತ್ತಿನಂತೆ ನಾಳೆ; ನಾಳೆಯಂತೆ ನಾಡಿದು…. ಕಳೆದ ಸಹಸ್ರಾರು ದಿವಸಗಳಿಂದ ಹೀಗೇ ನಡೆದು ಬಂದಿದೆಯಲ್ಲವೆ ತನ್ನ ಜೀವನ ಎಂದುಕೊಂಡಳು. ದಿನಗಳ ಎಣಿಕೆಯನ್ನು ಬೇಕಾದರೆ ಅವಳು ಕರಾರುವಾಕ್ಕಾಗಿ ಹೇಳಬಲ್ಲಳು ಕೂಡಾ. ಆರು ಸಾವಿರದ ನೂರ ಎಪ್ಪತ್ಮೂರು ದಿನಗಳು. ಅವಳು ಮದುವೆಯಾಗಿ ಐನೂರಿಗೆ ಬಂದು ಅಷ್ಟು ದಿನಗಳಾಗಿದ್ದವು. +ಮದುವೆಯಾಗುವಾಗ ವೇದವತಿಗೆ ಇಪ್ಪತ್ತು ವರ್ಷವಾದರೆ, ಅವಳ ಗಂಡ ರಾಮಕೃಷ್ಣ ನಾವಡರಿಗೆ ಅರವತ್ತು ದಾಟಿತ್ತು. ಆ ಮದುವೆಯೆಂಬುದು ಅವರ ಕುಟುಂಬದಲ್ಲಿ ಮಾತ್ರವಲ್ಲ ಕರಾವಳಿಯ ಜಾತಿಪೈಕಿಯವರಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಇಪ್ಪತ್ತನೇ ಶತಮಾನದ ಎಪ್ಪತ್ತರ ದಶಕದಲ್ಲಿ ತಮ್ಮ ಸುಧಾರಿತ ಬಂಧುವರ್ಗದಲ್ಲಿ ಯಾರೂ ಇಂಥದ್ದೊಂದನ್ನು ನಿರೀಕ್ಷಿಸಿರಲಿಲ್ಲ. ಅಲ್ಲದೆ, ರಾಮಕೃಷ್ಣ ನಾವಡರ ವ್ಯಕ್ತಿತ್ವವೂ ಅಂತಹದ್ದಿತ್ತು. ಅವರು ತಿಳುವಳಿಕಸ್ಥರು. ಓದಿಕೊಂಡವರು. ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ. ಎ. ಕಲಿತು ಬಂದವರು. ಐನೂರಿನಲ್ಲಿ ಬೇಸಾಯ ನೋಡಿಕೊಂಡು, ನಾಲ್ಕು ಜನರಿಗೆ ಬೇಕಾದವರಾಗಿ ಗೌರವದಿಂದ ಬಾಳಿಕೊಂಡಿದ್ದವರು. +ಆಗಲಿಕ್ಕೆ ಮೊದಲ ಹೆಂಡತಿಯಲ್ಲಿ ರಾಮಕೃಷ್ಣಯ್ಯನವರಿಗೆ ಆರು ಮಕ್ಕಳಿದ್ದಿದ್ದರು – ಮೂರು ಗಂಡು, ಮೂರು ಹೆಣ್ಣು. ಗಂಡು ಮಕ್ಕಳು ಮೂರೂ ಜನ, ಉದ್ದ ತೋರ ಭರ್ತಿಯಿದ್ದವರು ಪ್ರಾಯಕ್ಕೆ ಬಂದ ಮೇಲೆ ಸಿಡುಬು ತಗಲಿ ಪಟ ಪಟ ಅಂತ ಸತ್ತು ಹೋಗಿದ್ದರು. ಅತಿರಥ ಮಹಾರಥರಂತವರು, ’ಕಂಡವರು ಕಣ್ಣು ತೆಗೆಯ’ ಅಂಥ ರೂಪದವರು ಸಾಲು ಸಾಲು ಹಾಸಿಗೆ ಹಾಕಿ ಮಲಗಿದ್ದೆಂದರೆ, ಆ ಮನೆಯ ಗೋಳು ಮನೆದೇವರು ಮಾಲಿಂಗೇಶ್ವರನಿಗೇ ಗೊತ್ತಂತೆ. ಒಬ್ಬನ ಕ್ರಿಯೆಯೆಲ್ಲ ಮುಗಿಸಿ ಸ್ಮಶಾನದಿಂದ ಹಿಂದಿರುಗುವಾಗ ಮತ್ತೊಬ್ಬ ಕಣ್ಣು ಮುಚ್ಚಿದ್ದಂತೆ. ಚಿನ್ನದಂತಹ ಮೂರು ಗಂಡು ಮಕ್ಕಳನ್ನು ಕಳಕೊಂಡ ಬೆನ್ನಿಗೆ ರಾಮಕೃಷ್ಣಯ್ಯನ ಹೆಂಡತಿಯೂ ಕಾಹಿಲೆ ಬಿದ್ದಿದ್ದಳು. ದುಃಖದ ಕೊರೆತದಲ್ಲಿ ನರಳುತ್ತಿದ್ದ ಆಕೆಯನ್ನು ಕ್ಷಯರೋಗ ಬಲಿ ತೆಗೆದುಕೊಂಡಿತು. ನೋವಿನ ಕೊರಗನ್ನು ಹೃದಯದಲ್ಲಿ ಒತ್ತಿಕೊಂಡೇ ನಾವಡರು ಮೂರು ಹೆಣ್ಣು ಮಕ್ಕಳನ್ನು ಅಚ್ಚಟೆಯಿಂದ ಬೆಳೆಸಿದ್ದರು. ಒಂದರ ಹಿಂದೊಂದರಂತೆ ಸಾವಿನ ಹೊಡೆತದಿಂದ ತತ್ತರಿಸಿದ ಅವರು ಮರುಮದುವೆಯ ಒಂದೆಳೆ ಆಲೋಚನೆಯನ್ನೂ ಆಗ ಮಾಡಿರಲಿಲ್ಲ. ನೋಡನೋಡುತ್ತ ವೃದ್ಧಾಪ್ಯ ಊರಿಗಿಂತ ಮುಂಚೆ ಬಂದು ಅವರನ್ನು ಆವರಿಸಿಬಿಟ್ಟಿತ್ತು. +ಎರಡು ದಶಕಗಳಿಗೂ ಹೆಚ್ಚು ಕಾಲ ವೈರಾಗ್ಯದ ಬಾಳು ನಡೆಸಿದ ನಾವಡರು, ಮಕ್ಕಳ ಮದುವೆಯಾಗಿ, ಮೊಮ್ಮಕ್ಕಳೂ ಹುಟ್ಟಿಯಾದ ಮೇಲೆ, ಮದುವೆಗೆ ಮನಸ್ಸು ಮಾಡಿದ್ದರು. ಜಾನಕಿ, ಗೌರಿ, – ಈ ಇಬ್ಬರು ಹೆಣ್ಣು ಹುಡುಗಿಯರ ಮದುವೆಯಾಗಿ, ಮೂರನೆಯ ಶಾಂಭವಿಗೆ ನೆಂಟಸ್ತಿಕೆ ಹುಡುಕುವಾಗಲೇ ಹಠಾತ್ತನೆ ಈ ಹೊಸ ಪ್ರಸ್ತಾಪ ಬಂದಿತ್ತು. ಯಾರೋ ಕೈ ನೋಡಿಯೋ, ಜಾತಕ ಓದಿಯೋ, ನಾವಡರ ಹತ್ತಿರ, ’ನಿಮಗೆ ಗಂಡು ಮಗುವಿನ ಯೋಗವುಂಟು’ ಎಂದಿದ್ದರಂತೆ. ಹೌದ, ನೋಡುವ ಹಾಗಾದರೆ, ಮನೆಗೊಂದು ಗಂಡು ದೀಪ ಇಲ್ಲ ಅಂತ ಯಾಕಾಗಬೇಕು? ಅಂತ ಅವರು ಮನಸ್ಸು ಮಾಡಿದ್ದೇ. ಹಣೆಯಿಂದ ಹಿಂದೆ ಸರಿಯುತ್ತಿದ್ದ ಕೂದಲು ಪೂರ್ಣ ಬಿಳಿ ಬಣ್ಣಕ್ಕೆ ತಿರುಗಿದ ನಾವಡರು ಒಪ್ಪಿದ್ದು ದೊಡ್ಡ ಸಂಗತಿಯೋ, ಸುದ್ದಿ ಕೇಳಿದ್ದೇ, ಬೀಡಿನ ಮನೆಯ ದಾಸಪ್ಪಯ್ಯ ತನ್ನ ಐದನೇ ಮಗಳ ನೆಂಟಸ್ತಿಕೆ ಹಿಡಿದುಕೊಂಡು ಓಡಿ ಬಂದದ್ದು ವಿಶೇಷವೋ ಗೊತ್ತಿಲ್ಲ. +ದಾಸಪ್ಪಯ್ಯನವರೇನೂ ಆಸ್ತಿಮನೆ ಇದ್ದವರಲ್ಲ. ಗುರುಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು, ಏನೋ ಒಂದಷ್ಟು ಚೂರ್ಣ, ಲೇಹ ತಯಾರಿಸಿಕೊಂಡು ಊರವರಿಗೆ ಮನೆಮದ್ದು ಕೊಟ್ಟುಕೊಂಡಿದ್ದರು. ಅದಾಗಲೇ ತಮ್ಮ ನಾಲ್ಕು ಹೆಣ್ಮಕ್ಕಳ ಮದುವೆ ಮಾಡಿ ಸೋತು ಸುಣ್ಣವಾಗಿದ್ದರು. ಕೊನೆಯವಳೇ ಮೆಟ್ರಿಕ್ ಮುಗಿಸಿ ಮನೆಯಲ್ಲಿ ಕುಳಿತಿದ್ದ ವೇದವತಿ. ದಾಸಪ್ಪಯ್ಯನವರು ವೇದವತಿಗೆ ಬೇರೆ ನೆಂಟಸ್ತಿಕೆ ನೋಡಿಯೇ ಇರಲಿಲ್ಲವೆಂತಲ್ಲ. ನೋಡಿದ್ದು ಯಾವುದೂ ಸಸೂತ್ರ ಕೂಡಿ ಬಂದಿರಲಿಲ್ಲ. ತೀರ ಕಳಪೆಯ ನೆಂಟಸ್ತಿಕೆಗೆ ಅಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದಲ್ಲಿ ಅಥವಾ ನಡತೆ ಸರಿಯಿಲ್ಲದಲ್ಲಿ ಮಗಳನ್ನು ಕೊಡಲು ಅವರ ಮನಸ್ಸು ಹಿಂದೇಟು ಹಾಕುತ್ತಿತ್ತು. ಮನಸ್ಸಿಗೆ ಒಗ್ಗಿದ ಸಂಬಂಧಗಳು, ಆಗಷ್ಟೆ ಬ್ರಾಹ್ಮಣರಲ್ಲೂ ನುಸುಳುತ್ತಿದ್ದ ವರದಕ್ಷಿಣೆಯೆಂಬ ರೋಗದಿಂದಾಗಿ ಮುರಿದು ಬೀಳುತ್ತಿದ್ದವು. ಕರಾವಳಿಯಿಂದ ಬೆಂಗಳೂರು, ಕರ್ನೂಲುಗಳಿಗೆ ಹೋಗಿ ಹೋಟೇಲಿಟ್ಟು ದುಡ್ಡು ಮಾಡಿದವರು, ಹುಡುಗನಿಗೆ ಹಣ ಕೊಟ್ಟು ಕೊಳ್ಳುವ ರಿವಾಜನ್ನು ಚಾಲ್ತಿಗಿಳಿಸಿದರೆಂದೂ, ಸಾಮಾನ್ಯದವರ ಮಂಡೆ ಬೋಳಾಗುವ ವ್ಯಾಪಾರವೆಂದೂ ಊರಲ್ಲಿ ಎಲ್ಲರೂ ಮಾತಾಡುತ್ತಿದ್ದ ಕಾಲವದು. ಉಡುಪಿಯ ಕಾಲೇಜಿನ ಪ್ರಾಧ್ಯಾಪಕನೊಬ್ಬ ವೇದಳನ್ನು ಒಪ್ಪಿದವ, ’ವರದಕ್ಷಿಣೆ’ ಅಂತಲ್ಲದಿದ್ದರೂ, ಮದುವೆಯ ಖರ್ಚಿಗೆಂದು ಬರೇ ಮೂರು ಸಾವಿರ ಕೇಳಿದ್ದ. ಆದರೆ, ಅಷ್ಟು ಮೊತ್ತವನ್ನು ಒಂದೇ ಸಲ ಕಣ್ಣಿಂದ ನೋಡಿಯೂ ಇರದ ದಾಸಪ್ಪಯ್ಯ ಆ ಸಂಬಂಧವನ್ನು ಬಿಡಬೇಕಾಗಿ ಬಂದಿತ್ತು. +uಟಿಜeಜಿiಟಿeಜದಾಸಪ್ಪಯ್ಯನೂ ಜಾತಕ ನೋಡಲು ಗೊತ್ತಿದ್ದವರೇ. ರಾಮಕೃಷ್ಣ ನಾವಡರ ಜಾತಕವನ್ನು ಸ್ವತಃ ನೋಡಿದರು. ಜಾತಕ ನೂರಕ್ಕೆ ನೂರು ಕೂಡಿ ಬಂತಂತೆ. ಮತ್ತೆ ತಡಮಾಡಲಿಲ್ಲ. ನಾವಡರಿಗೆ ಸಾಕಷ್ಟು ಆಸ್ತಿಯೂ ಇತ್ತು. ಕಾಲಾನುಕಾಲಕ್ಕೆ ಹುಡುಗಿ ಏನೂ ಕಷ್ಟಪಡಬೇಕಾಗಿರಲಿಲ್ಲ ಎಂದೂ ಅವರು ಮುಂದಾಲೋಚಿಸಿದರು. ಅಲ್ಲದೆ ಮಗಳ ಹಣೆಯಲ್ಲಿ ಅದೇ ಬರೆದಿದ್ದರೆ ತಾವೇನು ಮಾಡಬಲ್ಲೆವು ಎಂಬ ಹಣೆಬರಹದ ಸಿದ್ಧಾಂತವೂ ಸೇರಿತು. ಅಂತೂ ಮದುವೆಯಾಯಿತು. +ಇದೆಲ್ಲ ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಈಗ ವೇದವತಿ ಐನೂರಿನ ಆ ಮನೆಗೆ ಹಳಬಳಾಗಿದ್ದಾಳೆ. ಮದುವೆಯಾದ ಮರುವರ್ಷವೇ ಮಲಮಗಳು ಶಾಂಭವಿಗೆ ಮದುವೆ ಮಾಡಿ ಕನ್ಯಾದಾನದ ಪುಣ್ಯವನ್ನು ಕಟ್ಟಿಕೊಂಡಿದ್ದಳು. ಆ ಮೇಲೆ ತನ್ನ ಮಲಮಗಳಂದಿರ ಒಂದಲ್ಲ ಎರಡಲ್ಲ, ನಾಲ್ಕು ಬಾಣಂತನಗಳನ್ನು ಮಾಡಿದಳು. ಸೀಮಂತ, ನಾಮಕರಣ, ಮತ್ತೊಂದು ಎಂದು ಕರೆದು, ಕೊಟ್ಟು ಕಳಿಸುವ ಎಲ್ಲ ವಿಧಿ ವಿಧಾನಗಳನ್ನೂ ಮಾಡುತ್ತ ಬಂದಿದ್ದಾಳೆ. ಏಳೇಳು ಜನ್ಮದ ಪುಣ್ಯವಿದ್ದಲ್ಲಿ ಮಾತ್ರ ಹಾಗೆ ಅನಾಯಾಸ ಕನ್ಯಾದಾನದ ಅವಕಾಶ ಸಿಗುವುದೆಂದು ಅವರ ನೆರೆಯ ಗೋರಜ್ಜಿ ಹೇಳುತ್ತಿದ್ದಳು. ತನ್ನ ಪಾಡು ನೋಡಿ, ಎಂದು ಮರುಗುತ್ತಿದ್ದಳು. ಎಳವೆಯಲ್ಲೇ ವಿಧವೆಯಾದ ಗೋರಜ್ಜಿ ಒಂದು ಕನ್ಯಾದಾನವನ್ನೂ ಮಾಡದೆ ಜನ್ಮ ಸವೆಸಿದ್ದಳು. +ಗಟ್ಟಿಯಾಗಿ ಕೇಳಿದರೆ ಮದುವೆಯ ಸಂದರ್ಭದಲ್ಲಿ ವೇದವತಿಯ ಅಭಿಪ್ರಾಯವನ್ನು ಯಾರೂ ಕೂಲಂಕಶವಾಗಿ ಕೇಳಿರಲಿಲ್ಲ. ಮೇಲಿಂದ ಮೇಲೆ ಕೇಳಿ ಒಪ್ಪಿಗೆಯನ್ನೇನೋ ಪಡೆದಿದ್ದರೆನ್ನುವ. ಒಪ್ಪಿಗೆ ಕೊಡದೆ ಅವಳಿಗೆ ಬೇರೆ ದಾರಿಯಿರಲಿಲ್ಲ. ತಂದೆ ಪಡುವ ಪಾಡನ್ನು ಅವಳು ನೋಡಿದ್ದಳು. ಮೂವರು ಅಕ್ಕಂದಿರ ಜೀವನ ಸಂಘರ್ಷವನ್ನು ಕಣ್ಣಾರೆ ಕಂಡಿದ್ದಳು. ಪಿತ್ಥದ ಕಾಯಿಲೆಯಿಂದ ಕಡ್ಡಿಯಂತಾಗಿದ್ದ ಅವಳ ಅಮ್ಮ, ಏನೋಪ್ಪ, ನಿನ್ನ ತಲೆ ಮೇಲೆ ಅಕ್ಷತೆ ಕಾಳು ಹಾಕಿ ಕಣ್ಣು ಮುಚ್ಚಬೇಕಂತ ಆಸೆ, ಹೆಣ್ಣೆ. ಎಂದಳು. ಮೂರೆ ಬೈಲಿಗೆ ಕೊಟ್ಟ ದೊಡ್ಡಕ್ಕ, ವೇದು, ನೀನೇ ಆಲೋಚನೆ ಮಾಡು. ಒಲೆಯಾ, ಕೋಡಲೆಯಾ? ಯಾವುದು ಅಡ್ಡಿಲ್ಲ? ಎಂದಿದ್ದಳು. ಮೂರನೆಯ ಅಕ್ಕ ಸಾಲಿಗ್ರಾಮದಿಂದ ಬರೆದಿದ್ದಳು, ಒಪ್ಪಿದರೂ ಒಪ್ಪದಿದ್ದರೂ ನಿನ್ನೆದುರಿಗೆ ಇರುವುದು ಒಂದೇ ಬಾಳು ಎಂದು. +ಹಾಗಾಗಿ, ವಿಧಿಯೊಡನೆ ಅವಳೊಂದು ಗಟ್ಟಿ ಒಪ್ಪಂದಕ್ಕೆ ಬರಬೇಕಾಯ್ತು. ಮತ್ತು ಅಂದಿನಿಂದ ಇಂದಿನ ವರೆಗೂ, ಆ ಒಪ್ಪಂದವನ್ನು ಜೀವಂತವಿಡಲು ಅವಳು ಹೆಣಗುತ್ತಿದ್ದಳು. ದಿನಂಪ್ರತಿ ಎಂಬಂತೆ ಅದನ್ನು ಸಮರ್ಥಿಸಿಕೊಳ್ಳುವುದು ಅವಳ ಮಟ್ಟಿಗೆ ಅನಿವಾರ್ಯವಾಗಿತ್ತು. ಮಳೆಯ ಹೊಡೆತಕ್ಕೆ ಒಡೆಯುವ ತೆಂಗಿನ ಕಟ್ಟೆಯಂತೆ, ಹುಚ್ಚುಕಟ್ಟಿ ಹರಿಯುವ ನೀರಿನ ರಭಸಕ್ಕೆ ಸೆರೆಬಿಡುವ ತೊರೆಯ ದಂಡೆಯಂತೆ ಆಗಿಂದಾಗ ಶಿಥಿಲಗೊಳ್ಳುವ ಆ ಒಪ್ಪಂದವನ್ನು ಪುನಃ ಪುನಃ ಗಟ್ಟಿಗೊಳಿಸಬೇಕಾಗುತ್ತಿತ್ತು. +ತೋಟದುದ್ದಕ್ಕೆ ನಡೆಯುತ್ತ ಅವಳಿಗನಿಸಿತು, ನಿನ್ನೆಯೂ ಹೀಗೇ ತೆಂಗಿನ ತೋಟದ ಕೊನೆಯ ವರೆಗೆ ನಡೆದು ಬಂದು, ಹೀಗೇ ಮಡಲನ್ನು ತೆಗೆದು ಬದಿಗೆ ಸರಿಸಿ, ಹೀಗೇ ಕುಪ್ಪನ ಹತ್ತಿರ ಮಗಳನ್ನು ಕಳಿಸಲು ಹೇಳಿ, – ಅಯ್ಯಬ್ಬ, ಎಣಿಸಿದರೆ ವಾಕರಿಕೆ ಬರುತ್ತದೆ. ಇವತ್ತೇನಾದರೂ ಬೇರೆ ಮಾಡಲೇಬೇಕು ಎಂದುಕೊಂಡಳು. ಪೂರ್ವದಲ್ಲಿ ಆಗಷ್ಟೇ ಉದಯಿಸುತ್ತಿದ್ದ ಸೂರ್ಯನ ಬೆಳಕು ತೆಂಗಿನ ಸಾಲುಗಳೆಡೆಯಿಂದ ಕಾಲುದಾರಿಯುದ್ದಕ್ಕೂ ಬೆಳಕಿನ ದಪ್ಪ ಗೆರೆಗಳನ್ನೆಳೆದಿತ್ತು. ಕೆಲವು ದೂರ, ಕೆಲವು ಹತ್ತಿರ. ಕೆಲವು ಸಪೂರ, ಕೆಲವು ದಪ್ಪ. ನಡುನಡುವೆ ಮರದ ನೆರಳಿನ ಗೆರೆಗಳು. ವೇದವತಿ ಬೆಳಕಿನ ಗೆರೆಗಳನ್ನು ಮಾತ್ರ ಮೆಟ್ಟಿಕೊಂಡು ನಡೆದಳು. ಬೆಳಕಿನ ಗೆರೆಗಳಿಗೆ ಸರಿಯಾಗಿ ಕೆಲವೊಮ್ಮೆ ದಾಪುಗಾಲು, ಕೆಲವೊಮ್ಮೆ ಹತ್ತಿರ ಹತ್ತಿರ ಕಾಲೆತ್ತಿಡುತ್ತ ನಡೆದಳು. ನಿನ್ನೆಯಿಂದ ಅಷ್ಟರಮಟ್ಟಿಗೆ ಇವತ್ತನ್ನು ಬೇರೆ ಮಾಡಿದೆ ಎಂದು ಸ್ವಲ್ಪ ಸಮಾಧಾನಪಟ್ಟಳು. ನಿನ್ನೆ ಅವಳು ಬೆಳಕಿನ ಗೆರೆಗಳ ಗೊಡವೆಗೆ ಹೋಗಿರಲಿಲ್ಲ. ಇವತ್ತು ಒಂದನ್ನೂ ಬಿಡದೆ ಮೆಟ್ಟುತ್ತ ಬಂದಿದ್ದಳು. +ಮೈನಾ ಹಕ್ಕಿ ಹೆಜ್ಜೆ ಹಾಕುತ್ತ ನೆಲವನ್ನು ಕುಕ್ಕುತ್ತಿತ್ತು. ಅದರ ಜೊತೆಹಕ್ಕಿಗಾಗಿ ಅವಳ ಕಣ್ಣುಗಳು ಹುಡುಕಿದವು. ಓ ಅಲ್ಲಿ, ಎಮ್ಮೆಯ ಮೈಮೇಲೆ ಕುಳಿತು ಅದರ ಕಿವಿ ಕುಕ್ಕುತ್ತಿರುವುದು ಅದರ ಜೊತೆಗಾರನಲ್ಲವೇ? ಕಾಗೆಯೊಂದು ಕಾಂವ್ ಕಾಂವ್ ಎನ್ನುತ್ತ ಅವಳ ತಲೆಯ ಮೇಲಿಂದ ಅಡ್ಡಕ್ಕೆ ಹಾರಿ ಹೋಯಿತು. ಚಣಿಲು ಬಾಲ ಉರುಟು ಮಾಡಿಕೊಂಡು, ಅತಿ ಕೆಲಸ ಇದ್ದವರಂತೆ, ಬಾಳೆಯ ಗಿಡದಿಂದ ಮಾವಿನ ಗೆಲ್ಲಿಗೆ, ಅಲ್ಲಿಂದ ತೆಂಗಿನ ಮರಕ್ಕೆ ಜಿಗಿಯುತ್ತ, ಎಡೆಬಿಡದೆ ಏರುಸ್ವರದಲ್ಲಿ ಅರಚುತ್ತಿತ್ತು. ಬಾಳೆಯ ಒಂದು ಹೂವನ್ನು ತೆಗೆದು ಅದರ ತುದಿಯನ್ನು ಫಕ್ಕನೆ ಚೀಪಿ ಜೇನು ಹೀರಿ ಏನೂ ಆಗದವರಂತೆ ಮುಂದೆ ನಡೆದಳು. ಹತ್ತು ಹಲವು ನಮೂನೆಯ ಹಸುರು ಅವಳನ್ನು ಆವರಿಸಿತ್ತು. ಚಿಗುರೆಲೆಯ ಎಳೆ ಹಸುರು ಗಾಳಿಗೆ ಕುಲುಕುಲು ಅಲುಗಾಡುತ್ತಿದ್ದರೆ, ದಪ್ಪದ ಹಳೆಯೆಲೆಗಳ ಕಡುಪಚ್ಚೆ ಬಣ್ಣ ನೀರಲ್ಲಿ ತೊಯ್ದ ಭಾರಕ್ಕೆ ಜಗ್ಗಿಹೋಗಿದ್ದವು. +ಮಾವಿನ ಮರದ ಎಡೆಯಿಂದ ಕೋಗಿಲೆಯ ಕೂ..ಊ.. ದನಿ ಕೇಳಿ, ಹುಬ್ಬೆರಡು ಒಟ್ಟು ಮಾಡಿ ಅಲ್ಲೆಲ್ಲ ಹುಡುಕಿದಳು. ಕೋಗಿಲೆಯ ನೆರಳೂ ಕಾಣದು. ಅಬ್ಬ, ಈ ಕೋಗಿಲೆಯ ನಾಚಿಕೆಯೇ, ಎಂದುಕೊಳ್ಳುತ್ತ, ಹುಡುಕುವುದನ್ನು ಬಿಟ್ಟು ಮುಂದೆ ನಡೆದಳು. ಹೃಸ್ವದಿಂದ ಆರಂಭವಾಗಿ ತಾರಕಕ್ಕೇರುತ್ತ ಸಾಗುವ ಕೋಗಿಲೆಯ ಕೂಗಿನ ಆರ್ತತೆಗೆ ಅವಳ ಎದೆಯಲ್ಲಿ ಕ್ಷೀಣವಾದೊಂದು ನೋವು ಎಳೆದಂತಾಯಿತು. ಅನವಶ್ಯಕವಾಗಿ ಕಾಲಡಿಯಲ್ಲಿದ್ದ ತರಗೆಲೆಗಳನ್ನು ಅಲ್ಲಾಡಿಸಿ ಮೆಟ್ಟಿ ಶಬ್ದ ಮಾಡುತ್ತ, ’ಶೂ, ಶೂ,’ ಎಂದು ಹೇಳುತ್ತ ಕೋಗಿಲೆ ಓಡಿದರೆ ಓಡಲಿ ಎಂಬಂತೆ ಪ್ರಯತ್ನ ಪಡುತ್ತ ನಡೆದಳು. +ತೆಂಗಿನ ತೋಟದ ಬದಿಯಲ್ಲಿ ನಿಂತು ಗದ್ದೆಯಾಚೆ ಕಾಣುತ್ತಿದ್ದ ಬೊಳ್ಳದ ಸಂಕವನ್ನೇ ನೋಡಿದಳು. ಬೆಳಿಗ್ಗೆ ಕುಪ್ಪ ನೆರೆ ಇಳಿದಿದೆಯೆಂದು ಹೇಳಿದ್ದ. ನೋಡಿದರೆ ಹೌದು. ಜಾನಕಿಗೆ ಫೋನು ಮಾಡಿ ಹೇಳಬೇಕು ಎಂದುಕೊಂಡಳು. ಅವಳಾದರೂ ಬಂದರೆ ಇವತ್ತಿನ ದಿನಕ್ಕೊಂದು ಬೇಽಽಽರೆ ಹೊಳಪು ಬರಬಹುದು ಎಂದುಕೊಂಡಳು. ಜಾನಕಿ ವೇದಳ ದೊಡ್ಡ ಮಲಮಗಳು. ಪ್ರಾಯದಲ್ಲಿ ವೇದಳಿಗಿಂತ ಒಂದಾರು ತಿಂಗಳಿಗೆ ದೊಡ್ಡವಳು. ಇಬ್ಬರಲ್ಲಿ ಕಾಯಿಬೆಲ್ಲದ ಅಚ್ಚುಮೆಚ್ಚು, ಗೆಳತಿಯರಂತೆ. +ಎದುರಿನ ಗದ್ದೆಗಳು ನೀರಲ್ಲಿ ಮುಳುಗಿದ್ದವು. ದಡದಲ್ಲಿ ಸಾಲುಗಟ್ಟಿ ಕುಳಿತಿದ್ದ ಬೆಳ್ಳಕ್ಕಿಗಳು ತಮ್ಮೊಳಗೆ ಏನೋ ಹೇಳಿಕೊಂಡು ಒಟ್ಟಿಗೆ ರೆಕ್ಕೆ ಬಿಡಿಸಿ, ಒಂದೇ ಸಲಕ್ಕೆ ಭುರ್ರನೆ ಹಾರಿದವು. ಅವಳೆದುರಿನ ಇಡೀ ’ರಾಷ್ಟ್ರ’ದಲ್ಲಿ ಕೂಗಳತೆಯಷ್ಟು ದೂರದಲ್ಲಿ ಮಾತ್ರವಲ್ಲ, ಕಣ್ಣಳತೆಯಷ್ಟು ದೂರದವರೆಗೂ ಒಂದು ನರಹುಳ ಕಾಣುತ್ತಿರಲಿಲ್ಲ. ಅವಳ ಮದುವೆಯ ನೆಂಟಸ್ತಿಕೆ ಬಂದಾಗ, ಓ ಐನೂರು ಅಂಥಾ ದೂರದ ಊರೇನಲ್ಲ, ಈಗ ಅಮೇರಿಕಕ್ಕೆಲ್ಲ ಹೆಣ್ಣು ಕೊಡುತ್ತಾರೆ, ಐನೂರೊಂದು ಮಹಾ ದೂರವ ಅಂತ ಅವಳ ತಂದೆಗೆ ಎಲ್ಲರೂ ಸಮಾಧಾನ ಹೇಳಿದ್ದರು. ಮಂಗಳೂರಿನಿಂದ ಹತ್ತೇ ಮೈಲು ದೂರ ಹೌದು. ಆದರೆ ಇಲ್ಲಿಗೆ ಬರಬೇಕಾದರೆ ದ್ರಾವಿಡ ಪ್ರಾಣಾಯಾಮ ಮಾಡಬೇಕು. ಹಂಪನಕಟ್ಟೆಯಲ್ಲಿ ಬಸ್ಸು ಹತ್ತಿ ಊರು ತುಂಬ ಸುತ್ತಿಕೊಂಡು ಕೈಕಂಬಕ್ಕೆ; ಅಲ್ಲಿಂದ ಗಂಟೆ-ಸಮಯ ಎಂಬ ಯಾವ ನಿರ್ಬಂಧನೆಯೂ ಇಲ್ಲದೆ ಹೊರಡುವ ಮಿನಿ ಬಸ್ಸಿನಲ್ಲಿ ಕುಳಿತು ಬಂದು ಗುಜ್ಜೆ ಶೆಟ್ಟರ ಮಿಲ್ಲಿನೆದುರು ಇಳಿದರೆ, ಇಲ್ಲೇ ಇಲ್ಲೇ ಎಂದರೂ ಕಾಲು ಗಂಟೆ ನಡೆಯಬೇಕು. ಅನಂತರ ಬೊಳ್ಳದ ಸಂಕವೊಂದು ದಾಟಿದರೆ ಮತ್ತೆ ಅವರದೇ ಗದ್ದೆ. ಗದ್ದೆಯ ಹುಣಿಯಲ್ಲಿ ಮೂಗಿನ ನೇರ ಬಂದರೆ, ತೆಂಗಿನ ತೋಟ; ಅದರೊಳಗೆ ಮನೆ. +ಆದರೆ ಬೊಳ್ಳದ ಸಂಕದ್ದೇ ಸಮಸ್ಯೆ. ಮಳೆಗಾಲದಲ್ಲಿ ಆ ಸಂಕ ತನ್ನ ಹೆಸರಿಗೆ ತಕ್ಕಂತೆ ಪೂರ್ತಿ ಬೊಳ್ಳದಲ್ಲಿ ಮುಳುಗಿಬಿಡುತ್ತಿತ್ತು. ನೆರೆಯಿಳಿಯುವ ತನಕ ಐನೂರಿಗೂ, ಮಿಕ್ಕ ಪ್ರಪಂಚಕ್ಕೂ ಇರುವ ಸಂಬಂಧ ಕಡಿದುಹೋಗುತ್ತಿತ್ತು. ಇಡೀ ಭೂಮಂಡಲದಿಂದ ಐನೂರೆಂಬೊಂದು ಬಿಂದು ಬೇರೆಯಾಗಿ ತೇಲುತ್ತಿದ್ದಂತೆ ಅನಿಸುತ್ತಿತ್ತು ವೇದಳಿಗೆ. ನಿನ್ನೆ ಇದೇ ಹೊತ್ತಿಗೆ ಅವಳು ಸಂಕ ಮೇಲಿಂದ ಕಂದು ಬಣ್ಣದ ನೀರಿನ ರಾಶಿ ಉರುಳುರುಳಿ ಬೀಳುತ್ತ ಹರಿಯುವುದನ್ನು ನೋಡುತ್ತ ನಿಂತಿದ್ದಳು. ಕೊಡೆ ಹಿಡಿದು ನಿಂತಿದ್ದರೂ, ಓರೆ ಓರೆಯಾಗಿ ರಾಚುತ್ತಿದ್ದ ಮಳೆಯ ನೀರಿಗೆ ಅವಳು ಅರ್ಧಮ್ಮರ್ಧ ಚೆಂಡಿಯಾಗಿದ್ದಳು. ಇವತ್ತು ಅವಳು ಕೊಡೆಯನ್ನೇ ತಂದಿರಲಿಲ್ಲ. ತೆಂಗಿನ ಸೋಗೆಯಿಂದ ಇಳಿದ ನೀರ ಹನಿಗಳು ಅವಳ ಕೂದಲಿನ ಮೇಲೆ, ಮುಖದ ಮೇಲೆ ಬಿದ್ದು ಜಾರುತ್ತಿದ್ದವು. ಮಳೆಯಿಂದ ’ಪಿಚಿಪಿಚಿ’ಯಾದ ನೆಲದ ಮೇಲೆ ಜಾಗ್ರತೆಯಿಂದ ಕಾಲಿಡುತ್ತ ಅವಳು ಮನೆಯತ್ತ ಹೊರಟಳು. +ಇವತ್ತಿನ ದಿನ ನಿಜವಾಗಿಯೂ ಬೇರೆ ಎಂದುಕೊಂಡಳು ವೇದವತಿ. ನೆರೆಯೂ ಇಳಿದಿದೆ, ಜಾನಕಿಯೂ ಬರಬಹುದು. ಒಟ್ಟಿಗೆ ಜಾನಕಿಯ ಮಗಳು ರಶ್ಮಿ ಬಂದರೂ ಬಂದಳೇ. ತಿಂಗಳಿಂದ ಮುಖ ತೋರಿಸದ ಸೂರ್ಯನೂ ಇಣುಕುತ್ತಿದ್ದಾನೆ. ಇನ್ನು ಸೂರ್ಯನ ಗೆರೆಗಳದಂತೂ ಆಯಿತಲ್ಲ ಎಂದು ಅವಳ ಮುಖದಲ್ಲಿ ನಗು ಹರಡಿತು. +ಬೆಳಿಗ್ಗೆ ವೇದವತಿ ಫೋನು ಮಾಡಿದ ಕೂಡಲೇ ಜಾನಕಿ ಮಗಳನ್ನು ಕರೆದುಕೊಂಡು ಹೊರಟು ಬಂದಿದ್ದಳು. ಆದರೂ ಅವರು ಐನೂರು ಮನೆಗೆ ಬಂದು ತಲುಪುವಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಈಗ ಊಟ ಆಗಿ, ಒಂದು ನಿದ್ದೆಯೂ ಮಾಡಿ ಮುಗಿದಿತ್ತು. +ರಶ್ಮಿ ಮಾತ್ರ ಇನ್ನೂ ಉದಾಸೀನದಲ್ಲಿ ಉಯ್ಯಾಲೆಯ ಮೇಲೆ ಮುರುಟಿ ಮಲಗಿದ್ದಳು. ಅಲ್ಲೇ ಒಳಕೋಣೆಯ ಅಗಾಧ ಕಲಂಬಿಯ ಮೇಲಿದ್ದ ವಾಲುವ ಕನ್ನಡಿಯೆದುರು ನಿಂತು ಮುಖ ಬಗ್ಗಿಸಿ ಕಣ್ಣ ದೃಷ್ಟಿಯನ್ನು ಮಾತ್ರ ಮೇಲೆ ಮಾಡಿ ವಾರೆ ಬೊಕ್ತಲೆ ತೆಗೆಯುತ್ತಿದ್ದ ವೇದವತಿ, ’ಏ ಬುಗುಡಿ,’ ಅಂದಳು. ರಶ್ಮಿಯನ್ನು ಎಲ್ಲರೂ ಕೊಂಗಾಟದಲ್ಲಿ ಬುಗುಡಿ ಎಂದೇ ಕರೆಯುವುದು. ’ಏ ಬುಗುಡಿ, ನಿನ್ನ ಅವತಾರ ಸ್ವಲ್ಪ ನೋಡು. ತಲೆ ಅಂದ್ರೆ ಕಾಯಿಕತ್ತದ ಹಾಗೆ ಆಗಿದೆ. ಎದ್ದು ಕೂತುಕೊ. ಒಂಚೂರು ಎಣ್ಣೆ ಹಾಕಿ ಜಡೆ ಹಾಕ್ತೆ.’ ಎಂದು ಬಾಚಣಿಗೆಯನ್ನು ತನ್ನ ಕೂದಲುದ್ದಕ್ಕೂ ಕೀಸಿ ಬಾಚುತ್ತಿದ್ದ ವೇದ ಹೇಳಿದುದರ ಕಡೆಗೆ ರಶ್ಮಿ ಗಮನ ಹರಿಸಿದಂತಿರಲಿಲ್ಲ. +’ದೊಡ್ಡ, ನಿನ್ನ ಕೂದಲು ಇನ್ನೂ ಎಷ್ಟು ಕಪ್ಪು ಉಂಟಲ್ಲ.’ ಎಂದಳು ಅವಳು, ವೇದವತಿಯ ಕೂದಲಲ್ಲಿ ಫಳಫಳ ಹೊಳೆಯುತ್ತಿದ್ದ ಎಣ್ಣೆಯ ಮಿರುಗನ್ನು ನೋಡುತ್ತ. ರಶ್ಮಿ ವೇದವತಿಯನ್ನು ದೊಡ್ಡ ಎಂದೇ ಕರೆಯುತ್ತಿದ್ದಳು. ದೊಡ್ಡಳಲ್ಲಿ ಅವಳಿಗೆ ತನ್ನ ಅಮ್ಮನಷ್ಟೇ ಸಲಿಗೆ. ದೊಡ್ಡ ಮದುವೆಯಾಗಿ ಈ ಮನೆಗೆ ಬಂದ ದಿನವೂ ತನಗೆ ಕನಸಿನಂತೆ ಮಸುಕು ಮಸುಕಾಗಿ ನೆನಪುಂಟೆಂಬ ರಶ್ಮಿಯ ಹಠವಂತೂ ಎಲ್ಲರಿಗೂ ಒಂದು ಕುಶಾಲಿನ ವಿಷಯವಾಗಿತ್ತು. ಅವಳು ಬೇರೆ ಯಾರದೋ ಮದುವೆಯನ್ನು, ನೆನಪಿನ ವೈಚಿತ್ರ್ಯದಿಂದ ತಪ್ಪು ಭಾವಿಸಿರಬೇಕೆಂದೇ ಅವಳ ಅಮ್ಮ ಜಾನಕಿಯ ಅನಿಸಿಕೆ. ಗುಂಡ್ಮಿ ಚಿಕ್ಕಪ್ಪಯ್ಯ(ಜಾನಕಿಯ ತಂಗಿ ಗೌರಿಯ ಗಂಡ)ನಂತೂ, ’ಬುಗುಡಿಗೆ ಹಾಂಗಾರೆ ನಮ್ಮ ಮದುವೆಯೂ ನೆನಪು ಇರ್‍ಕಲ್ಲ. ನೀ ಆಗ ನಿನ್ನ ಅಮ್ಮನ ಹೊಟ್ಟೆಯಲ್ಲಿದ್ದಿದ್ದಿ.’ ಎಂದು ಅವಳನ್ನು ಕೆಣಕುತ್ತಿದ್ದರು. +uಟಿಜeಜಿiಟಿeಜನಿಜ ಹೇಳಬೇಕೆಂದರೆ, ವೇದವತಿಯ ಮದುವೆಯ ಸಂದರ್ಭದಲ್ಲಿ ರಶ್ಮಿಗೆ ಆಗಿನ್ನೂ ಎರಡು ವರ್ಷ ತುಂಬಿ ಮೂರು ಹಿಡಿಯುತ್ತಿತ್ತಷ್ಟೆ. ಮೊಲೆ ಹಾಲು ಬಿಡಿಸಿದ್ದಷ್ಟೆ ಆಗಿತ್ತಾಗಿ ಕೈಕೊಂಬು ಊಜಿಕೊಂಡು ಅಲ್ಲಲ್ಲಿ, ಕಂಬದ ಅಡ್ಡದಲ್ಲಿ, ಬಾಗಿಲ ಎಡೆಯಲ್ಲಿ, ಕತ್ತಲೆ ಮುಲ್ಲೆಯಲ್ಲಿ ನಿಂತಿರುತ್ತಿದ್ದಳು. ಇನ್ನೂ ಸರಿಯಾಗಿ ಎರಡಕ್ಷರ ಮಾತು ಬರುತ್ತಿರಲಿಲ್ಲ ಹುಡುಗಿಗೆ. ಪಚ್ಚೆ ಜರಿ ಸೀರೆಯುಟ್ಟು ವೇದವತಿ ರಪರಪ ನಡೆದು ಬರುವುದು (ರಪರಪ ನಡೆದು ಬರಲಿಕ್ಕೆ ನಾನೇನು ಯುದ್ಧಕ್ಕೆ ಹೊರಟದ್ದಾ ಎಂದು ನಗುತ್ತಿದ್ದಳು ವೇದವತಿ), ಮದುಮಕ್ಕಳಿಗೆ ಆರತಿ ಎತ್ತುವಾಗ ಅಜ್ಜಯ್ಯನ ಕನ್ನಡಕದಲ್ಲಿ ಆರತಿ ದೀಪ ಹೊಳೆಯುತ್ತಿದ್ದದ್ದು, ಮತ್ತೆ ರಾತ್ರಿ ಹಿಂದಿನ ಜಗಲಿಯಲ್ಲಿ ಒಬ್ಬಳೆ ನಿಂತ ಮದುಮಗಳು, ಅದೇ ಪಚ್ಚೆ ಸೀರೆಯಲ್ಲಿ, ಕಣ್ಣೀರು ಒರೆಸುತ್ತ ಕಂಬಕ್ಕೊರಗಿದ್ದು (ನಿನ್ನ ತಲೆ ಎಂದು ಬೈಯ್ಯುತ್ತಿದ್ದಳು ವೇದವತಿ ಆಗ) – ಇವೆಲ್ಲ ದೃಶ್ಯಗಳು ತನ್ನ ನೆನಪಿನ ಪಟದಲ್ಲಿ ಬರುತ್ತವೆ ಎಂದು ಅವಳು ಎಷ್ಟು ವಾದಿಸಿದರೂ, ಅದಕ್ಕೆ ಸೊಪ್ಪು ಹಾಕುವವರು ಯಾರೂ ಇರಲಿಲ್ಲ. +ಬೊಕ್ತಲೆಯ ಬಲಬದಿಯ ಮುಂಭಾಗವನ್ನು ಕೈಯಿಂದ ಒತ್ತಿ ಗುಬ್ಬು ಬರಿಸಿ, ಜಡೆ ಹೆಣೆಯತೊಡಗಿದ ವೇದ, ’ಅದೇ ನೋಡು, ನಿಮ್ಮ ಊರಲ್ಲಿ ಕೂದಲು ಬಿಳಿ ಮಾಡಲು ಏನಾದರೂ ಸಿಗುತ್ತದಾ ಹೇಳು. ಎಲ್ಲರಿಗೆ ಕೂದಲು ಬಿಳಿಯಾಗುವ ಚಿಂತೆಯಾದರೆ, ನನ್ನ ಸುರ್ಪಕ್ಕೆ ಕೂದಲು ಬಿಳಿಯಾಗಲಿಲ್ಲವಲ್ಲ ಎಂಬ ಚಿಂತೆ.’ ಅಂದಳು. +ಹೊರಗಿನಿಂದ ವೇದಳ ಗಂಡ ರಾಮಕೃಷ್ಣಯ್ಯನ ಸ್ವರ ಬಾಣದಂತೆ ಬಂತು, ’ಏನಂತೆ ಅವಳಿಗೆ? ಅಷ್ಟು ಹಾಂಪರಿದ್ದರೆ, ಬೂದಿ ಹಚ್ಚಿಕೊಳ್ಳಬಹುದು, ಸೇಡಿ, ಸೇಡಿ ಬಳಕೊಂಡರೂ ಅಡ್ಡಿಲ್ಲ.’ +ಸೂಡಿಗೆ ಮುಳ್ಳು ಕುತ್ತುತ್ತ, ’ನೋಡಿದಿಯ? ಕಿವಿ ಎಷ್ಟೂ ಸೂಕ್ಷ್ಮ?’ ಎಂದು ಪಿಸುಗುಟ್ಟಿದವಳು, ’ಹೌದು, ನೀವು ಹೇಳಿದ ಹಾಗೇ ಮಾಡ್ತೆ. ಒಳ್ಳೆಯ ಉಪಾಯ ಹೇಳಿದ್ರಿ.’ ಎಂದು ಗಟ್ಟಿಯಾಗಿ ಹೇಳುತ್ತ, ದೇವರ ಕೋಣೆಯ ಬಾಗಿಲಿನ ಮಂದಲಿಗೆಯಲ್ಲಿದ್ದ ಹೊಸ್ತಿಲು ಬರೆಯುವ ಸೇಡಿಯನ್ನು ಅಂಗೈಗೆ ಹಚ್ಚಿ ತಲೆಯ ಮೇಲೆ ಸವರಿಕೊಂಡು ಹೊರನಡೆದಳು ವೇದವತಿ. +’ಏ ದೊಡ್ಡ, ಅದೆಂತ ಮಾಡಿಕೊಂಡಿ?’ ಎಂದ ರಶ್ಮಿಯ ಮಾತನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಸರಸರ ನಡೆದು, ’ಈಗ ಖುಶಿಯಾಯ್ತಲ್ಲ ನಿಮಗೆ?’ ಎಂದು ಗಂಡನೆದುರು ನಿಂತು ಕೇಳಿದಳು. +’ನಿನಗೆ ಹುಚ್ಚು.’ ಎಂದರು ಅವರು. +’ಹೌದು, ಹುಚ್ಚು ಹಿಡಿಯುವುದೊಂದು ಬಾಕಿ. ಮತ್ತೆಲ್ಲ ಸಂಭ್ರಮ ಆಯಿತಲ್ಲ.’ ಎನ್ನುತ್ತ ಎಣ್ಣೆ ಕೌಳಿಗೆಯನ್ನು ತಂದು ರಶ್ಮಿಯ ಕೈ ಹಿಡಿದು ಕುಳ್ಳಿರಿಸಿದಳು. ’ಬೇಡ ದೊಡ್ಡ, ನನ್ನಷ್ಟಕ್ಕೆ ನನ್ನನ್ನ ಬಿಡು.’ ಎಂದು ಕೊಸರಾಡುತ್ತಿದ್ದ ಅವಳ ಕೈಯ್ಯನ್ನು ಸರಿಸಿ, ತಲೆಗೆ ಎಣ್ಣೇ ನಪ್ಪಳಿಸಿ, ಬಾಚಿ ಜಡೆ ಹಾಕಿ ತುದಿಗೆ ರಿಬ್ಬನ್ನು ಕಟ್ಟಿ ಮಡಚಿದವಳು, ಇನ್ನೇನು ಅವಳ ಮುಖ ತಿರುಗಿಸಿ, ಎದುರು ಬಾಚಲು ಹೊರಡುವಷ್ಟರಲ್ಲಿ, ರಶ್ಮಿ ಅವಳ ಕೈಯನ್ನು ದೂಡಿ ಎದ್ದು ಬಚ್ಚಲು ಮನೆಯತ್ತ ಓಡಿಯಾಯ್ತು. ’ಏ…. ಏ……’ ಎನ್ನುತ್ತ ಹಣಿಗೆಯನ್ನು ಮುಂದಕ್ಕೆ ತರುತ್ತಿದ್ದಂತೆ ವೇದಳ ಬಾಯಿ ಕಟ್ಟಿತು. ತಲೆ ಕಟ್ಟಿದ ಮೇಲೆ ಎದುರು ಬಾಚದಿದ್ದರೆ ಮುದುಕ ಗಂಡ ಬರುತ್ತಾನಂತೆ. ಆದರೆ ಒಂದು ದಿನವೂ ಬಿಡದೆ ಎದುರು ಬಾಚಿಯೂ……? ಹೋಗಲಿ, ಎಂದುಕೊಂಡು, ಬಾಚಣಿಗೆಯಲ್ಲಿದ್ದ ಒಂದೆರಡು ಕೂದಲನ್ನು ಸೀಟಿ ತೆಗೆದು ಹಣಿಗೆಯನ್ನು ಕಲಂಬಿಯ ಮೇಲಿಟ್ಟು ವೇದ ಒಳ ನಡೆದಳು. +ಮುಖ ತೊಳೆದು ಬಂದ ರಶ್ಮಿ ಕನ್ನಡಿಯೆದುರು ನಿಂತು ಪೌಡರ್ ಹಚ್ಚಿಕೊಳ್ಳುತ್ತ, ’ದೊಡ್ಡ, ಹೊಳೆಬಾಗಿಲಿಗೆ ಹೋಗಿ ಬರುವ, ನಂಗೆ ನೆರೆ ನೋಡ್ಬೇಕು.’ ಎಂದಳು. +’ಹೌದ, ವೇದ, ನಂಗೆ ಆ ಪಾಂಚಕ್ಕನ ಹಲಸಿನ ಹಪ್ಪಳ ಬೇಕು ಮಾರಾಯ್ತಿ. ಹೋಗಿ ತರುವನ?’ ಎಂದು ಜಾನಕಿಯೂ ಹೇಳಿದಳು. +ಸರಿ, ಹೋಗುವುದಾದರೆ ಬೇಗ ಹೋಗಿ ಬರುವ. ಕಡೆಗೆ ಮಳೆ ಬಂದರೆ ಫಜೀತಿ ಎಂದು ಮೂವರೂ ಹೊರಟರು. ಮುಖಾರಿಯಲ್ಲಿದ್ದ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಮಕೃಷ್ಣರಾಯರು, +’ಎಲ್ಲಿಗೆ ಮೇಳ ಕಟ್ಟಿಕೊಂಡು ಹೊರಟಿದ್ದು? ದಿನಾ ಹೊರಗೆ ಹೋದ್ರೂ ನಿಂಗೆ ಬೊಡಿ ಬರುವುದಂತಿಲ್ಲ. ಬುಗುಡಿಯ ಹೆಳೆ, ನಿನ್ನ ಬೆಳೆ. ಲಾಯಕ್ಕ್‌ಯ.’ ಅಂದರು ಹೆಂಡತಿಯನ್ನು ನೋಡಿ. +’ಮೇಳ ಕಟ್ಟಿಕೊಂಡು ಹೊರಟಿದ್ದು ಬಪ್ಪನಾಡಿಗೆ.’ ಎಂದು ಅವರತ್ತ ಒಂದು ಮಾತು ಕೊಡಕಿ, ’ನಡಿ, ಬುಗ್ಡಿ, ಇನ್ನು ತಡಮಾಡಿದರೆ ಆಗ, ಬೊಡಿ ಬರುವುದಂತೆ, ಬೊಡಿ ಬರುವುದೇ ಸೈ. ಬೊಡಿ ಅಂದ್ರೆ ಏನಂತ ಗೊತ್ತಿಲ್ಲದವಳು ಕಟ್ಟಿಕೊಂಡದ್ದು ಕಾಣು ಇಂಥವ್ರನ್ನ.’ ಎಂದು ರಶ್ಮಿಯ ಹತ್ತಿರ ಪಿಸುಗುಟ್ಟಿದಳು. +’ಎಂತ ಅಂದಿ? ಯಾರನ್ನ ಕಟ್ಟಿಕೊಂಡದ್ದು?’ ಎಂದು ಕೇಳುವಾಗ ಮೂವರು ಗೇಟುಬಾಗಿಲಿಗೆ ಬಂದಾಗಿತ್ತು. +ಅಲ್ಲಿಂದಲೂ ವೇದ ಬಿಡಲಿಲ್ಲ. ಬಾಣ ಎಸೆದೇ ಗೇಟು ದಾಟಿದಳು. ’ಕಟ್ಟಿಕೊಂಡದ್ದು ಗುಂಡುಕಲ್ಲು ಕುತ್ತಿಗೆಗೆ.’ ರಶ್ಮಿ ಈ ಎಡೆಯಲ್ಲಿ, ’ಅಜ್ಜಯ್ಯ, ನೀವೂ ಬನ್ನಿಯಲ್ಲ.’ ಎಂದು ಹಠ ಹಿಡಿಯುವ ಸ್ವರದಲ್ಲಿ, ಅವರಿಬ್ಬರು ಎಸೆದ ಮಾತುಗಳು ಒಬ್ಬರಿಗೊಬ್ಬರಿಗೆ ಕೇಳದಿರಲಿ ಎನ್ನುವಂತೆ, ರಾಗವಾಗಿ ಕೂಗಿ ಹೇಳಿದಳು. +ಅಜ್ಜಯ್ಯ ಕೈಯೆತ್ತಿ ಬೇಡವೆನ್ನುವಂತೆ ಆಲ್ಲಾಡಿಸಿ, ಹೋಗಿ, ಹೋಗಿ ಎನ್ನುವಂತೆ ಸನ್ನೆ ಮಾಡುತ್ತ ಒಳ ನಡೆದರು. +’ಅಲ್ಲಯ, ಕೋಪ ಬರುತ್ತದೆ ಒಂದೊಂದು ಸಲ. ನಾ ಹೊರಟ ಕೂಡ್ಲೇ ಹಂಗೆ ಮಾಡುದು ಕಾಣು. ತನಗೆ ಕೂಡುವುದಿಲ್ಲ. ನಾನು ಸ ಹಂಗೆ ಮಾಡಬೇಕಂದ್ರೆ? ಆ ಗಾಂಧಾರಿ ಯಾಕೆ ಕಣ್ಣಿಗೆ ಕಟ್ಟಿಕೊಂಡಿದ್ದಳಂತ ನಂಗೆ ಈಗ ಸರೀ ಅರ್ಥ ಆಗ್ತದೆ ಜಾನ್ಕಿ. ಯಾರಿಗ್ಗೊತ್ತು, ದೃತರಾಷ್ಟ್ರ ಇಡೀ ದಿನ ’ಇವರ ಹಾಂಗೆ ಹಂಗಿಸಿಂಡಿಪ್ಪ, ತನಗೆ ಕಣ್ಣಿಲ್ಲ, ಕಣ್ಣಿಲ್ಲ ಅಂತ. ಹೋಗಲಿ ಆ ರಗಳೆ ಬೇಡ ಅಂತ ತಾನೂ ಕುರುಡರ ಹಾಂಗೆ ಜೀವನ ತೆಗೆದಳಲ್ಲ, ಪುಣ್ಯಾತ್ಮಳು.’ ಎಂದು ನಕ್ಕಳು ವೇದವತಿ. +ಮಾರು ದೂರ ನಡೆದು ಬಕ್ಕೆ ಹಲಸಿನ ಮರದ ಕೆಳಗೆ ಬಂದದ್ದೇ, ರಶ್ಮಿ ನಿಂತು ತನ್ನ ಕೈವಸ್ತ್ರದಿಂದ ವೇದವತಿಯ ಕೂದಲಿಗಂಟಿದ ಸೇಡಿಯನ್ನು ಒರೆಸಿ ತೆಗೆದಳು. ಇರಲಿ ಬಿಡ, ಇರಲಿ ಬಿಡ, ಎನ್ನುತ್ತ, ಹೋಯ್ತ ಎಲ್ಲ ಎಂದೂ ಕೇಳಿದಳು ವೇದವತಿ. ’ದೊಡ್ಡ, ನಿಂಗೆ ಏನಾಗುವುದು ಒಂದೊಂದು ಸಲ?’ ಗದರಿಕೊಂಡು ವಸ್ತ್ರಕ್ಕಂಟಿದ ಸೇಡಿಯನ್ನು ಕೊಡಕಿದಳು ರಶ್ಮಿ. +’ನಿನ್ನ ಅಜ್ಜಯ್ಯ ಹೇಳಿದ ಹಂಗೆ ನಂಗೆ ಒಂದೊಂದ್ಸಲ ಹಿಡಿಯುವುದು, – ಹುಚ್ಚು.’ ಎಂದಳು ವೇದ. +ವೇದ ಮತ್ತು ಅವಳ ಗಂಡ ಯಾವ ವಿಷಯವೇ ಮಾತನಾಡಲಿ, ಕ್ಷಣ ಮಾತ್ರದಲ್ಲಿ ಅದು ವಾಗ್ವಾದದ ರೂಪ ತಾಳದಿರುತ್ತಿರಲಿಲ್ಲ. ಒಂದು ಮಾತಿನಲ್ಲಿ ಸುರುವಾದದ್ದು ಹತ್ತು ಮಾತುಗಳಲ್ಲಿ ಪರ್ಯವಸಾನವಾಗುತ್ತಿತ್ತು. ಹಾಗಂತ ಅದನ್ನು ಜಗಳ ಅಂತ ಕೂಡ ಕರೆಯುವುದು ಕೆಲವೊಮ್ಮೆ ಕಷ್ಟವೇ. ’ಒಂದು ನಾಕು ಸೀಯಾಳ ಕೊಯ್ಸಲಕ್ಕ ಏನ?’ ಎಂದು ವೇದ ಹೇಳಿದರೆ, ’ಹೌದೀಗ, ಮತ್ತೇನಲ್ಲ. ಇವಳಿಗೆ ಸೀಯಾಳದ ಬಯಕೆಯಾಗಿದೆ ಈಗ.’ ಎಂದು ಪೊಡಪಿದರೂ, ಸ್ವಲ್ಪ ಹೊತ್ತಿನಲ್ಲಿ ಅವರು ಕುಪ್ಪನ ಹತ್ತಿರ ಹೇಳುವುದು ಕೇಳುತ್ತಿತ್ತು, ’ಹೌದ ಕುಪ್ಪ, ನಾಕು ಸೀಯಾಳ ತೆಗಿ ಕಾಂಬ.’ ಎಂದು. +ವೇದವತಿಗಾದರೂ ಅಷ್ಟೆ. ಗಂಟಲು ಕೆರೆಸಿದರೆ ಗಂಟೆ ಗಂಟೆಗೆ ಉಪ್ಪು ನೀರು, ಕೆಮ್ಮು ಬಂದರೆ ಕಾಳುಮೆಣಸು-ಜೀರಿಗೆ ಕಷಾಯ, ಕಾಲುಗಂಟು ನೋವಿಗೆ ಎಣ್ಣೆ ಮಾಲೀಸು, – ಎಂದು ಮಗುವಿನಂತೆ ಗಂಡನನ್ನು ಸಾಕುತ್ತಿದ್ದಳು. ರಾಮಕೃಷ್ಣಯ್ಯ, ’ಅಲ್ಲನ ವೇದ, ಈ ಸಲ ಗುಜ್ಜೆ ಗುಳಿ ಮಾಡಲೇ ಇಲ್ಲಲ್ಲ?’ ಎಂದು ತನ್ನ ಇಷ್ಟದ ಹಲಸಿನಕಾಯಿಯ ಹುಳಿ ಮಾಡಲು ನೆನಪಿಸಿದರೆ, ’ನಂಗೇನು ಸಾಧ್ಯ ಇಲ್ಲ, ನಾನೇನು ಮಾಡುವವಳಲ್ಲ, ಮತ್ತೆ ವಾಯು ಆಯ್ತು, ಬೆನ್ನು ಹಿಡ್ಕೊಂಡಿದೆ ಅಂತ ಹೇಳಲಿಕ್ಕಾ?’ ಎಂದು ಹಂಗಿಸಿದರೂ, ನಾಲ್ಕು ದಿನ ಬಿಟ್ಟಾದರೂ ಎಳತು ಹಲಸಿನಕಾಯಿ ಕತ್ತರಿಸಿ, ಸೊನೆ ತೆಗೆದು, ಹಸಿ ಮಸಾಲೆ ಹಾಕಿದ ಹುಳಿ ಮಾಡದೆ ಅವಳ ಮನಸ್ಸು ಕೇಳುತ್ತಿರಲಿಲ್ಲ. ಮತ್ತೆ ಬೇಕಾದರೆ, ’ಜಾಗ್ರತೆ, ವಾಯು,’ ಎಂದು ಹೇಳುತ್ತ ಬಡಿಸಿಯಾಳು. +ಅಷ್ಟು ಮಾತ್ರವಲ್ಲ, ತಾನು ಅದೆಷ್ಟೇ ಮಾತಿಗೆ ಮಾತು ಕೊಡಬಹುದು. ಆದರೆ, ಮೂರನೆಯವರು ಏನಾದರೂ ಹೇಳಲಿಯಂತೆ, ಕೂಡಲೇ ವಹಿಸಿಕೊಂಡು ಮಾತನಾಡಲು ಧಾವಿಸುತ್ತಿದ್ದಳು. ಎಲ್ಲ ಬಿಟ್ಟು ಆವತ್ತು ಜಾನಕಿ ಯಾವುದೋ ಮಾತಿಗೆ, ’ಅನಂತ್ರಾಯ ಈಗ ದೊಡ್ಡ ಜನ ಆಗಿದ್ದ ಅಂತಲ್ಲ,’ ಎಂದು ಅವರ ಸಂಬಂಧಿಯೊಬ್ಬನ ಬಗ್ಗೆ ಹೇಳಿದಾಗ, ತೆಗೆದ ಬಾಯಿಗೆ, ’ಯಾರು ಹೇಳಿದ್ದು? ’ಇವರ’ ಕಾಲ ಉಗುರಿನ ಯೋಗ್ಯತೆ ಉಂಟ ಅವನಿಗೆ?’ ಎಂದು ಮಾರ್ನುಡಿದಿದ್ದಳು. ಸತ್ಯ ಹೇಳಬೇಕೆಂದರೆ, ಒಳಗಿಂದೊಳಗೆ ಅವಳಿಗೆ ತನ್ನ ಗಂಡನ ಮೇಲೆ, ಅವರ ತಿಳುವಳಿಕೆ, ವಿದ್ಯೆ, ಜ್ಞಾನ, ಸ್ಥಾನಮಾನಗಳ ಬಗ್ಗೆ, – ಅಭಿಮಾನವಿತ್ತು. ಅದನ್ನು ತೋರಿಸಲೂ ಆರಳು, ತೋರಿಸದೆ ಇರಲೂ ಆರಳು. +ಅವಳಿಗೊಮ್ಮೆ ಜ್ವರ ಬಂದಾಗ, ರಾಮಕೃಷ್ಣಯ್ಯ ಕಾಫಿ ಮಾಡಿ ಕೊಟ್ಟ ಸಂಗತಿ ಹೇಳಲು ಹೊರಟಳೆಂದರೆ ಸಾಕು. ಅವರು, ನೀ ಎದ್ದರೆ ನೋಡಿಕೋ ಎಂದದ್ದು, ಮಲಗಿದ್ದಲ್ಲಿಗೇ ಕಾಫಿ ತಂದು ಕೊಟ್ಟದ್ದು, ಅಡುಗೆ ಮನೆಯೆಲ್ಲ ಚಾಂದ್ರಾಣ ಮಾಡಿಟ್ಟದ್ದು, ಎಲ್ಲ ಹೇಳುತ್ತ ಹೇಳುತ್ತ ಅವಳು ನಗುತ್ತಾಳೋ, ಮರಕುತ್ತಾಳೋ, ಸಿಟ್ಟು ಮಾಡುತ್ತಿದ್ದಾಳೋ ಎಂದು ಗೊತ್ತಾಗಲಿಕ್ಕಿಲ್ಲ; ಅಷ್ಟು ಸಹ ನಗೆ, ಕಣ್ಣೀರು, ದಪ್ಪ ಮುಖ ಎಲ್ಲವೂ ಒಟ್ಟೊಟ್ಟಿಗೆ. +ಹಿಂದಿನ ಓಣಿಯ ಪಾಂಚಕ್ಕನ ಮನೆಯೆದುರು ಬಂದವರು ತಟಸ್ಥರಾಗಿ ನಿಂತುಬಿಟ್ಟರು. ಓಣಿ ತುಂಬಾ ಮೊಣಕಾಲಿನ ವರೆಗೆ ನೀರು ನಿಂತಿತ್ತು. ಜಾನಕಿ ರಶ್ಮಿಗೆ, ’ಹೊಳೆಯ ದರ್ಶನ ಇಲ್ಲೇ ಆಯ್ತು ನಿಂಗೆ.’ ಎಂದಳು. ವೇದವತಿ ನಿಂತಲ್ಲಿಂದಲೇ ಬೊಬ್ಬೆ ಹಾಕಿ ಪಾಂಚಕ್ಕನಿಗೆ ಕೇಳುವಂತೆ ಹೇಳಿದಳು, ’ಹಲಸಿನ ಹಪ್ಪಳ……. ಜಾನಕಿಗೆ….. ಇವತ್ತೇ….. ಈಗಲೇ…’ +ನೀರಿನ ರಾಶಿಯ ಆಚೆ ತನ್ನ ಮನೆಯ ಬಾಗಿಲಲ್ಲಿ ನಿಂತ ಪಾಂಚಕ್ಕ, ’ಎಷ್ಟು ಕಟ್ಟು?’ ಎಂದು ಕಿರಿಚುತ್ತ ಕೈ ಸನ್ನೆ ಮಾಡಿದಳು. ವೇದ ಜಾನಕಿಯತ್ತ ನೋಡಿದಳು. ’ನಾಕಿರಲಿ, ಮೂರು ನಂಗೆ. ಒಂದು ನೀನಿಟ್ಟುಕೊ.’ ಎಂದಳು ಜಾನಕಿ. ವೇದ ಅದನ್ನೇ ಕೈ ಸನ್ನೆಯಲ್ಲಿ ಪಾಂಚಕ್ಕನಿಗೆ ತಿಳಿಸಿದಳು. ಪಾಂಚಕ್ಕನ ಮಗ ಉಟ್ಟ ಮುಂಡನ್ನು ಕಂಕುಳ ವರೆಗೆ ಎತ್ತಿ ಕಟ್ಟಿ, ಹಪ್ಪಳದ ಕಟ್ಟುಗಳನ್ನು ನೀರು ತಾಗದಂತೆ ಎತ್ತಿ ಹಿಡಿದುಕೊಂಡು, ನೀರೊಳಗೆ ಬೊಸಬೊಸ ಶಬ್ದ ಮಾಡುತ್ತ ನಡೆದು ಬಂದು ಅವರಿಗೆ ಕೊಟ್ಟು, ಹಣ ತೆಗೆದುಕೊಂಡು ಹೋದ. +ಸಂಜೆಯ ಹಳದಿ ಬಿಸಿಲಿನ ಎಡೆಯಲ್ಲಿ ಪಾರದರ್ಶಕ ಪರದೆಯಂತೆ ಶಬ್ದವಿಲ್ಲದ ಹೂಮಳೆ ಹನಿಯುವುದನ್ನು ನೋಡಿ, ’ಮಂಗ ಮತ್ತು ನರಿಯ ಮದುವೆ.’ ಎಂದು ರಶ್ಮಿ ಕೂಗಿ ಹೇಳಿದಳು. ತೆಳ್ಳಗಿನ ಈ ಹೂಮಳೆಯು ಗಿಡಗಳನ್ನು, ಹೂಗಳನ್ನು, ನೆಲವನ್ನು, ಅಲ್ಲಿ ನಡೆಯುವವರ ಕೈ, ಕಾಲು, ಮುಖಗಳನ್ನು ಮುಟ್ಟಿಯೂ ಮುಟ್ಟದಂತೆ ಮೃದುವಾಗಿ ಸ್ಪರ್ಶಿಸಿ, ಕೋಮಲವಾಗಿ ಸವರಿ, ಆಮೇಲೆ ಅಷ್ಟೇ ನಿಶ್ಶಬ್ದವಾಗಿ ಬಂದ ಗಾಳಿಯ ತೆಕ್ಕೆಯಲ್ಲಿ ಹುದುಗಿ ಮಾಯವಾಯಿತು. +ಹೊಳೆಬಾಗಿಲಿಗೆ ಬಂದರೆ ಅಲ್ಲಿ ಕುಳಿತುಕೊಳ್ಳಲು ಸಮಕಟ್ಟು ಜಾಗ ಎಲ್ಲೂ ಇರಲಿಲ್ಲ. ಆಕಾಶದ ನೀಲಿ ಒಡಲು ಬಣ್ಣದ ನೀರು ಚೇಪಿದಂತಿದ್ದರೆ, ಹೊಳೆಯ ನೀಲಿ ನೀರು ತಾನೇನೂ ಬಿಟ್ಟು ಕೊಡಲಾರೆ ಎನ್ನುವಂತಿತ್ತು. ಅಲ್ಲಿನ ಬಣ್ಣ ಇಲ್ಲಿ, ಇಲ್ಲಿನ ಗೆರೆಯೇ ಅಲ್ಲಿ. ಕೆಲವು ಗುಲಾಬಿ, ಕೆಲವು ಬಿಳಿ ಬಣ್ಣದ ನೊರೆನೊರೆಯಾದ ನೀರ್ಗುಳ್ಳೆಗಳಂತಹ ಮೋಡಗಳು ನಿಧಾನವಾಗಿ ತಮ್ಮ ವೇಷವನ್ನೂ, ಬಣ್ಣವನ್ನೂ ಬದಲಾಯಿಸುತ್ತಿದ್ದುವು. ರಶ್ಮಿ ಅತ್ತಿತ್ತ ತಿರುಗಿ, ಕುಳಿತುಕೊಳ್ಳಲು ಒಣ ನೆಲಕ್ಕಾಗಿ ಹುಡುಕತೊಡಗಿದಳು. ಕರ್ರಗಿನ ದಟ್ಟ ಮೋಡಗಳ ದೊಡ್ಡ ರಾಶಿಯೊಂದು ದಕ್ಷಿಣ ಬದಿಯಿಂದ ಮುನ್ನುಗ್ಗುತ್ತಿರುವುದು ಕಾಣುತ್ತಿತ್ತು. +’ನಡಿ. ನಡಿಯುತ್ತ ಮಾತಾಡುವ.’ ಎಂದಳು ವೇದ ಅಸ್ವಸ್ಥತೆಯಿಂದ. ಮನೆ ಬಿಡುವಾಗಿನ ಉಮೇದು ಅವಳಿಗೆ ಮನೆ ಬಿಟ್ಟ ಮೇಲೆ ಇರುತ್ತಿರಲಿಲ್ಲ. ’ಮೋಡ ನೋಡು ಹೇಗೆ ಭೂತದ ಹಾಗೆ ಬರ್‍ತಾ ಉಂಟು. ಕರೆಂಟಿದೂ ಸುಸೂತ್ರ ಇಲ್ಲ. ನಿನ್ನಜ್ಜಯ್ಯ ಕತ್ತಲಲ್ಲಿ ಕೂತಿರಬಹುದು.’ ಎಂದಳು. +’ನಿಂಗೆ ಮನೆ ಬಿಟ್ಟ ಕೂಡ್ಲೆ ಅಜ್ಜಯ್ಯಂದೆ ಧ್ಯಾನ.’ ರಶ್ಮಿ ಆಕ್ಷ್ರೇಪಣೆಯ ಸ್ವರದಲ್ಲಿ ಹೇಳಿದಲು. +ರಶ್ಮಿ ಹೇಳಿದ್ದು ಸಮವೇ. ವೇದವತಿ ಮಾಡುವುದು ಹಾಗೆಯೇ. ಒಂದು ಗಳಿಗೆ ಗಂಡ ಕಣ್ಣಿಂದ ಮರೆಯಾದರೆ, ಗಂಡನ ಬಗ್ಗೆ ಕಳವಳಪಡುವ ಜಾತಿಯವಳು. ’ಅವರು ಹೇಗಿದ್ದಾರ ಏನ, ಅವರಿಗೆ ತೊಂದರೆಯಾಗುತ್ತದೆ,’ ಎಂದು ಕೂತಲ್ಲಿ ಕೂರುತ್ತಿರಲಿಲ್ಲ. ಮದುವೆಯಾಗಿ ಇಷ್ಟು ವರ್ಷ ಆಯಿತಲ್ಲ. ತವರು ಮನೆಗೂ ಒಬ್ಬಳೆ ಹೋಗಿ ಎರಡು ದಿನ ಇದ್ದು ಬಂದವಳಲ್ಲ. ’ಅವರಿ’ಗೆ ತಾನಿಲ್ಲದಿದ್ದರೆ ಆಗುವುದಿಲ್ಲ ಎನ್ನುವಾಗ, ಅದು ಅಪ್ಪಟ ದೂರಿನಂತೆ ಕಂಡರೂ, ಅದರೊಳಗೆ ಒಂದು ತರದ ಹಮ್ಮಿನ ದನಿ ಕೂಡ ಕಂಡೂ ಕಾಣದಂತೆ ಅಡಗಿರುತ್ತಿತ್ತು. ಅಂದರೆ ನೋವಿನ ಏರಿಯ ಮೇಲೆ ನಿಂತ ಹಮ್ಮಿನ ದನಿಯದು. +ದಟ್ಟಯಿಸಿ ಬರುತ್ತಿದ್ದ ಕಪ್ಪು ಮೋಡಗಳು ಆಗಸದ ಬೇರೆಲ್ಲ ಬಣ್ಣಗಳನ್ನು ನುಂಗುತ್ತ ಸಾಗುವುದನ್ನು ನೋಡುತ್ತಿದ್ದಂತೆ, ವೇದ ಹೇಳಿದಳು, ’ಅಲ್ಲನ ಜಾನ್ಕಿ, ಮೋಡ ಕಂಡ್ರೆ ಪುನಃ ಮಳೆ ಧಾರೆ ಕಟ್ಟುವ ಹಾಂಗೆ ಉಂಟಲ್ಲ.’ +ಜಾನಕಿಗೂ ಆತಂಕವಾಯಿತು. ’ನಾವು ನಾಳೆ ಬೆಳಿಗ್ಗೆಯೇ ಹೊರಡುವುದು ಒಳ್ಳೆಯದಂತ ಕಾಣ್ತದೆ, ವೇದ. ಸಂಕದ ಸಂಗ್ತಿ ಹೇಳಲಿಕ್ಕಾಗುವುದಿಲ್ಲ. ಆಚೀಚೆ ನೋಡುವುದರೊಳಗೆ ನೆರೆ ಏರಿದರೆ ನಾವು ಇಲ್ಲೇ ಸಿಕ್ಕಿ ಬೀಳುವುದೇ ಸೈ.’ ಎಂದಳು. +ತಟಪಟ ಮಳೆಹನಿಗಳು ಉದುರುವುದನ್ನು ನೋಡಿ ಅವರು ಮನೆಗೆ ಹೊರಟರು. ಶಬ್ದ ಮಾಡುತ್ತ ಬಿದ್ದ ಆ ದೊಡ್ಡ ದೊಡ್ಡ ನೀರಹುಂಡುಗಳನ್ನು, ಸುಂಯ್ಯನೆ ಬೀಸಿದ ಹೊಳೆಯ ಗಾಳಿ ಹಾರಿಸಿಕೊಂಡು ಹೋಯಿತು. ಮನೆ ಮುಟ್ಟುವಾಗ, ವೇದವತಿ ನುಡಿದಿದ್ದಂತೆ ಕರೆಂಟು ಇರಲಿಲ್ಲ. ಹೊರಗೆ ಇನ್ನೂ ಮುಸ್ಸಂಜೆಯ ಮಬ್ಬು ಬೆಳಕು ಬಾಕಿಯಿದ್ದರೂ, ಮನೆಯೊಳಗೆ ಕತ್ತಲು ಪಸರಿಸಿಯಾಗಿತ್ತು. ರಾಮಕೃಷ್ಣಯ್ಯ ಮುಖಾರಿಯಲ್ಲಿಯೇ ಶಥಪಥ ತಿರುಗಿಕೊಂಡು ಇವರ ಬರವನ್ನು ಕಾದುಕೊಂಡಿದ್ದವರು, ’ಏನು ತಡ?’ ಎಂದರು. ವೇದವತಿ ಒಳಗೆ ಹೋಗಿ ಬೇಗ ಬೇಗ ಲಾಟಾನು ಹಚ್ಚಿ ತಂದು ಉರುಟು ಮೇಜಿನ ಮೇಲಿಟ್ಟಳು. +ಮರುದಿನ ಜಾನಕಿ ಮತ್ತು ರಶ್ಮಿಯರನ್ನು ಕಳಿಸಿಕೊಡಲಿಕ್ಕೆಂದು ವೇದವತಿಯು ಬೊಳ್ಳದ ಸಂಕದ ವರೆಗೂ ಹೋದಳು. ಪುಣ್ಯಕ್ಕೆ ಸಂಕದ ಮೇಲೆ ಇನ್ನೂ ನೀರು ಬರಲು ಸುರುವಾಗಿರಲಿಲ್ಲ. ಅವರಿಬ್ಬರು ಸಂಕ ದಾಟುವ ವರೆಗೆ ನೋಡುತ್ತಿದ್ದು, ಬಸ್ಸು ಹತ್ತಿಸುವಂತೆ ಕುಪ್ಪನ ಹತ್ತಿರ ಹೇಳಿ, ವೇದ ಹಿಂತಿರುಗಿದಳು. +ಜಾನಕಿ ಬಂದೂ ಆಯಿತು, ಇವತ್ತೀಗ ಹೋಗಿಯೂ ಆಯಿತು. ನಿನ್ನೆಯಷ್ಟೇ ತಾನು ಜಾನಕಿ ಬಂದರೂ ಬರಬಹುದೆಂಬ ಖುಶಿಯಲ್ಲಿದ್ದಿದ್ದೆನಲ್ಲ ಎಂದುಕೊಂಡಳು ವೇದ. ಚೌತಿ ಹಬ್ಬಕ್ಕೆ ಬರಲೇಬೇಕೆಂದು ಪುನಃ ಪುನಃ ಜಾನಕಿಯೊಡನೆ ಹೇಳಿದ್ದಳು. ಬಂದೇ ಬಂದಾರು. ಇನ್ನೆಷ್ಟು ದಿನ ಚೌತಿಗೆ ಎಂದು ಲೆಕ್ಕ ಹಾಕತೊಡಗಿದಳು. ಆ ಸಮಯಕ್ಕೆ ಮಳೆಯೂ ಸುಮಾರು ಹಿಂದಾಗಬಹುದು. ನಿನ್ನೆಯ ಖುಶಿಯ ಗಸಿ ಅವಳೊಳಗೆ ಇನ್ನೂ ಉಳಿದಿತ್ತು. ತೆಂಗಿನ ಮರಗಳು ತಮ್ಮ ಸೋಗೆಗಳನ್ನು ಬೀಸಣಿಗೆಗಳಂತೆ ಅತ್ತಿಂದಿತ್ತ ಬೀಸುತ್ತಿದ್ದವು. ಹುಣಿಯ ಮೇಲೆ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆಯುತ್ತಿದ್ದ ಅವಳ ತಲೆಯೂ ಆಚೀಚೆ ವಾಲತೊಡಗಿತು. ತನಗೂ ತೆಂಗಿನ ’ಗಾಳಿ’ ಬಡಿಯಿತೆಂದು ಉಲ್ಲಸಿತಳಾದಳು. ತೋಟದ ದಂಡೆಯಲ್ಲಿದ್ದ ಒಂದೆರಡು ಮರಗಳಂತೂ ನೀರು ತುಂಬಿದ ಗದ್ದೆಗೆ ಸಮಾನಾಂತರವಾಗಿ ಬಗ್ಗಿ, ಭತ್ತದ ಸಸಿಗಳೊಡನೆ ಮಾತುಕತೆ ನಡೆಸಿದ್ದವು. +ಗಾಳಿಯ ಕುಣಿತಕ್ಕೆ ಕಣ್ಣ ಮೇಲೆ ಹಾರುತ್ತಿದ್ದ, ಹಿಡಿತ ತಪ್ಪಿದ ಉದ್ದನೆಯ ಕೂದಲುಗಳನ್ನು ಒತ್ತಿ ಹಿಡಿದು, ಸೂಡಿಯ ಸುತ್ತ ಸುತ್ತಿಕೊಳ್ಳುವಾಗ, ಇವತ್ತು ತನ್ನ ಸೂಡಿ ಹಾಕಿದ್ದು ರಶ್ಮಿಯೆಂಬುದು ನೆನಪಾಗಿ, ’ಪಿರ್‍ಕಿ ಎಲ್ಲಿಯಾದರೂ,’ ಎಂದು ಬೈದುಕೊಂಡಳು. ಬೆಳಿಗ್ಗೆ ಹೊರಡುವ ಗಡಿಬಿಡಿಯಲ್ಲೂ, ’ದೊಡ್ಡ, ಬಾ ಇಲ್ಲಿ. ನಿನ್ನೆ ನಂಗೆ ತಲೆ ಕಟ್ಟಿದಿಯಲ್ಲ. ಇವತ್ತು ನಾ ನಿಂಗೆ ಕಟ್ಟುದು. ಎಲ್ಲಿ ಬಾಚಣಿಗೆ ತಾ. ಕೂತ್ಕೊ ನೋಡ್ವ.’ ಎಂದು ಅಧಿಕಾರವಾಣಿಯಲ್ಲಿ ಕುಳ್ಳಿರಿಸಿದ್ದಳು. ಸಡಿಲು ಸಡಿಲಾಗಿ ಜಡೆ ಹೆಣೆದು ಗಂಟು ಕಟ್ಟಿ, ಗುಲಾಬಿ ಹೂವೊಂದನ್ನು ತಲೆಯ ಮೇಲೆ ಒಂದು ಬದಿಯಲ್ಲಿ ಎದುರಿನಿಂದ ಕಾಣುವಂತೆ ಕ್ಲಿಪ್ ಹಾಕಿ ಸಿಕ್ಕಿಸಿದ್ದಲ್ಲದೆ, ’ತೆಗೆದರೆ ನೋಡಿಕೊ,’ ಎಂದು ಹೆದರಿಸಿದ್ದಳು ಬೇರೆ. ಬಲಕಿವಿಗೆ ತಾಗುತ್ತಿದ್ದ ಹೂವನ್ನು ಈಗ ಮುಟ್ಟಿ ನೋಡುತ್ತಿದ್ದಂತೆ, ’ಈ ಹೆಣ್ಣಿಗೆ ನೀ ಸಲಿಗೆ ಕೊಟ್ಟದ್ದು ಜಾಸ್ತಿಯಾಯ್ತು ವೇದ.’ ಎಂದ ಜಾನಕಿಯ ಮಾತು ನೆನಪಾಗಿ ವೇದಳ ಕಣ್ಣಲ್ಲಿ ಚಿಮ್ಮಿದ ನಗೆಯ ಚಿಲುಮೆ ಕೆನ್ನೆಗಿಳಿದು, ತುಟಿಯ ವರೆಗೆ ಹರಿಯಿತು. ಕೈಯ್ಯಲ್ಲಿ ಮಡಚಿ ಹಿಡಿದಿದ್ದ ಕೊಡೆಯನ್ನೊಮ್ಮೆ ಗಲಗಲನೆ ಅಲ್ಲಾಡಿಸಿ ಅರಳಿಸಿದಳು. +ಹನಿಹನಿಯಾಗಿ ಬೀಳುವ ಮಳೆಯ ನೀರು, ಗದ್ದೆಯ ನಿಂತ ನೀರಿನಲ್ಲಿ ಕ್ರಮವಾಗಿ ಅಲ್ಲಲ್ಲಿ ಪುಟ್ಟ ಉರುಟುರುಟು ತರಂಗಗಳನ್ನು ಮೂಡಿಸುತ್ತಿದ್ದವು. ಹುಣಿಯ ಮೇಲೆ ಕಾಲಿಟ್ಟು ನಡೆಯುತ್ತಿದ್ದ ವೇದವತಿ ನೋಡು ನೋಡುತ್ತಿದ್ದಂತೆ, ತರಂಗಗಳ ಸಂಖ್ಯೆ ಹೆಚ್ಚುತ್ತ ಹೆಚ್ಚುತ್ತ ಹೋಗಿ ಅವಳ ಸುತ್ತುಮುತ್ತು ನೀರು ಸುರಿಯತೊಡಗಿತು. ಅವಳು ತೆಂಗಿನ ತೋಟ ಸೇರುವುದರೊಳಗೆ ಝರ್ರನೆ ಇಳಿದ ಮಳೆ ಬಡಬಡನೆ ಹೊಡೆದುಕೊಳ್ಳತೊಡಗಿತು. +ಬೀಸಿದ ಗಾಳಿಗೆ ಕೊಡೆ ಅಡಿಮೇಲಾಗಿ ಬಗ್ಗಿ ಅವಳನ್ನು ಎಳೆಯತೊಡಗಿತು. ಮರದಡಿ ನಿಂತು ಕೊಡೆಯನ್ನು ಗಾಳಿಯ ದಿಕ್ಕಿಗೆ ತಿರುಗಿಸಿ ತಿರುಗಾಮುರುಗವಾಗಿಸುವುದರೊಳಗೆ ಅವಳ ಕೂದಲು ಒದ್ದೆಯಾಗಿ ತಲೆಗೆ ಅಂಟಿಕೊಳ್ಳತೊಡಗಿತು. ಕಾಲಿಗೆ ತಾಂಟುತ್ತಿದ್ದ ದಪ್ಪದ, ಉಡುಪಿ ಮಗ್ಗದ ಸೀರೆಯ ನೆರಿಗೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು, ಮೈಯ್ಯನ್ನು ಹೂವಿನ ಮಿಟ್ಟೆಯಂತೆ ಮುದುಡಿಸಿ, ಕೊಡೆಯನ್ನು ಎರಡೂ ಕೈಯ್ಯಲ್ಲಿ ಎದೆಗವಚಿಕೊಂಡು, ನೀರಿನ ಕೋಟೆಯನ್ನು ಸೀಳುತ್ತ, ನಡೆಯತೊಡಗಿದಳು. ನಾಲ್ಕೂ ಬದಿಯಿಂದ ಮಳೆಯ ಶಬ್ದಗಳು. ಅಬ್ಬ, ಈ ಮಳೆಗೆ ಅವೆಷ್ಟು ದನಿಗಳು, ಇದೊಂದು ಸಂಗೀತ ಕಛೇರಿಯೆಂದರೆ ಸರಿಯಾಗಬಹುದು ಎಂದುಕೊಂಡಳು ತೆಂಗಿನ ಒಣ ಮಡಲುಗಳು ಭರಭರ ಶಬ್ದ ಮಾಡುತ್ತ ನೆನೆಯುತ್ತಿದ್ದವು. ರತ್ನಗಂಧಿ, ಕಣಗಿ, ದಾಸವಾಳದ ಗಿಡಗಳು ಮಳೆನೀರಿಗೆ ಒಡ್ಡಿಕೊಳ್ಳುತ್ತ ನರ್ತಿಸುತ್ತಿದ್ದವು. ಬೊಗೇನ್ವಿಲ ಗಿಡ ತನ್ನ ಸೊಂಡಿಲುಗಳನ್ನು ಆಡಿಸುತ್ತಿತ್ತು. ಬೊಳ್ಳದ ಸಂಕ ಈಗ ಖಂಡಿತ ತುಂಬಿರಬಹುದು ಎಂದುಕೊಂಡಳು ಆದರೆ ಕೊಡೆಯ ಎಡೆಯಿಂದ ಅವಳು ಹಿಂದೆ ತಿರುಗಿ ನೋಡಲು ಮನಸ್ಸು ಮಾಡಲಿಲ್ಲ. +ಮುಂಚಿನ ದಿನ ಮಳೆಯೇ ಇರಲಿಲ್ಲವೆಂದು ಕಿಟಿಕಿಗಳನ್ನು ತೆರೆದಿಟ್ಟದ್ದು ಅವಳಿಗೆ ಫಕ್ಕನೆ ನೆನಪಾಯಿತು. ಈಗ ಮಳೆನೀರೆಲ್ಲ ಒಳಗೆ ಸೇರಿ ಮನೆ ತುಂಬ ನೀರಾಗಿರಬಹುದು ಎಂದುಕೊಂಡು ಕಾಲು ಚುರುಕುಗೊಳಿಸಿದಳು. ತಾನು ಬರುವುದು ತಡವಾಯಿತೆಂದು ತನ್ನ ಗಂಡನೀಗ ಅದೆಷ್ಟು ಹೈರಾಣಾಗಿದ್ದಾರೋ ಎಂದುಕೊಳ್ಳುತ್ತಿರುವಾಗ, ಮನೆಯ ಮುಖಾರಿಯ ಮೆಟ್ಟಿಲ ಮೇಲೆ ನಿಂತು ಕೈಬೀಸುತ್ತಿದ್ದ ಅವಳ ಗಂಡನ ಆಕೃತಿ ಅವಳಿಗೆ ಸ್ಪಷ್ಟವಾಗತೊಡಗಿತು. ಎತ್ತಿ ಕಟ್ಟಿದ ಬಿಳಿ ಮುಂಡು, ಅರ್ಧ ಕೈಯ ಅಂಗಿಯ ಮೇಲೆ ಹಾಕಿದ ಕಂದು ಸ್ವೆಟರು, ಕೈಬೀಸಿ ಬಾಯಾಡಿಸುತ್ತಿದ್ದುದು ಕಾಣುತ್ತಿತ್ತು. ಮಳೆಯ ಜೋರಾಟದಿಂದಾಗಿ ಒಂದಕ್ಷರವೂ ವೇದಳಿಗೆ ಕೇಳುತ್ತಿರಲಿಲ್ಲ. ಸೀದಾ ಮಳೆ ಸುರಿಯುವ ಅಂಗಳಕ್ಕೆ ಇಳಿಯುವವರಂತೆ ಕೈಯ್ಯಲ್ಲಿದ್ದ ಊರುಗೋನ್ನು ಊರಿಕೊಂಡು, ಒಂದು ಮೆಟ್ಟಿಲಿನಿಂದ ಇನ್ನೊಂದು ಮೆಟ್ಟಿಲಿಗೆ ಕಾಲು ಇಳಿಸುವ ಸನ್ನಾಹದಲ್ಲಿದ್ದಂತೆ ಕಂಡು ವೇದಳಿಗೆ ಗಾಬರಿಯಾಯಿತು. +’ಮೆಲ್ಲ….. ಅಲ್ಲೇ ಇರಿ…. ಎಲ್ಲಿಗೆ ಮುಂದೆ ಮುಂದೆ ಬರ್‍ತಾ ಇದ್ದೀರಿ….? ಜಾಗ್ರತೆ….. ಮೆಟ್ಟಿಲು….’ ಎಂದು ವೇದವತಿಯೂ ಕೊಡೆಯೊಳಗಿಂದ ಕೂಗಿ ಕೂಗಿ ಹೇಳತೊಡಗಿದಳು. ಮಳೆಯ ಆರ್ಭಟೆಯಲ್ಲಿ ಅವಳು ಹೇಳಿದ ಮಾತುಗಳು ಅಂಗಳದ ವರೆಗೂ ಮುಟ್ಟುತ್ತಿರಲಿಲ್ಲ. +’ಬೇಗ ಬಾ. ಈ ಮಳೆಯಲ್ಲಿ…… ಬೇಡ ಇತ್ತು ಅಲ್ಲಿ ವರೆಗೆ ಹೋಗುದು. ಪಾಚಿ ಉಂಟು…. ಜಾಗ್ರತೆ…. ಪಾಚಿ ನೋಡಿಕೋ……. ಕಾಲು ಜಾರ್‍ತದೆ…. ಮೆಲ್ಲ……’ ಎನ್ನುತ್ತ ರಾಮಕೃಷ್ಣ ನಾವಡರು, ಎಡಗೈಯ್ಯಲ್ಲಿದ್ದ ಕೋಲನ್ನು ಮೆಟ್ಟಿಲಿಗೆ ಊರಿಕೊಂಡು, ಬಲಗೈಯ್ಯನ್ನು ಮುಂದೆ ಚಾಚಿದರು. +ಅಂಗಳದಲ್ಲಿ ಹಚ್ಚಗೆ ಹರಡಿ ಹೊಳೆಯುತ್ತಿದ್ದ ಪಾಚಿಯ ಮೇಲೆ ಜಾರದಂತೆ ಗಟ್ಟಿಯಾಗಿ ಕಾಲೆತ್ತಿಡುತ್ತ, ಕಾಲಿಗಂಟಿದ ಸೀರೆಯ ನೆರಿಯನ್ನು ಬಿಡಿಸಿಕೊಳ್ಳುತ್ತ ಬಂದ ವೇದವತಿ, ತನ್ನ ಬಲಗೈಯನ್ನು ಮುಂದುಮಾಡಿ ಗಂಡ ನೀಡಿದ ಕೈಯನ್ನು ಆಧರಿಸಿ ಹಿಡಿದು ಮೆಟ್ಟಿಲು ಹತ್ತಿ ಮೇಲೆ ಬಂದಳು. +***** +೧೯೭೭ +ಪ್ರಾದೇಶಿಕ ಶಬ್ದಗಳ ಅರ್ಥ: ಬೊಳ್ಳ=ನೆರೆ; ಸಂಕ=ಸೇತುವೆ; ನಕ್ರುಳ=ಎರೆಹುಳ; ಬೊಕ್ತಲೆ=ಬೈತಲೆ; ಸುರ್ಪ=ಸ್ವರೂಪ; ಹಾಂಪರು=ಆಸೆ; ಚಂಡಿ=ಒದ್ದೆ; ಬೊಡಿ=ಬೇಜಾರು; ಮರಕು=ಅಳು; ಚಾಂದ್ರಾಣ=ಅಸ್ತವ್ಯಸ್ತ; ಹುಂಡು=ಹನಿ; ಹೆಳೆ=ನೆಪ; ಪೊಡಪು=ಗೊಣಗಿಕೊಂಡು ಬೈಯ್ಯು; ಪಿರ್‍ಕಿ=ಹುಚ್ಚು. +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […] +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_645.txt b/Kannada Sahitya/article_645.txt new file mode 100644 index 0000000000000000000000000000000000000000..1298e1c78c1efb69c8a92b8e6055f4debf569b35 --- /dev/null +++ b/Kannada Sahitya/article_645.txt @@ -0,0 +1,91 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಷಾ ಸಮಿತಿಯ ವರದಿ +ದಿನಾಂಕ: ೨೭-೧-೧೯೮೧ +(ಡಾ| ಗೋಕಾಕ್ ಸಮಿತಿ ವರದಿ) +ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕು ಮತ್ತು ಕನ್ನಡ ಭಾಷೆಯನ್ನು ಕನ್ನಡೇತರರು ಕಡ್ಡಾಯವಾಗಿ ಅಭ್ಯಾಸಮಾಡುವಂತೆ ವ್ಯವಸ್ಥೆಮಾಡಬೇಕೆಂಬ ಒತ್ತಾಯವನ್ನು ಸರ್ಕಾರ ಪರಿಶೀಲಿಸಿ ೧೯೭೯ ಅಕ್ಟೋಬರ್ ದಿನಾಂಕ ರಲ್ಲಿ ಒಂದು ಸರ್ಕಾರಿ ಆಜ್ಞೆ ಹೊರಡಿಸಿತು. ಆ ಆಜ್ಞೆಯಂತೆ ಸಂಸ್ಕೃತ ಪ್ರಥಮಭಾಷೆಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ತೃತೀಯ ಭಾಷೆಯ ಸ್ಥಾನ ಪಡೆಯಿತು. +ಸರ್ಕಾರದ ಈ ಆಜ್ಞೆ ಮತ್ತೆ ಸಾರ್ವಜನಿಕ ಕ್ಷೇತ್ರದಲ್ಲಿ ವಾದವಿವಾದಗಳಿಗೆ ಎಡೆಗೊಟ್ಟು ಸಾಕಷ್ಟು ಧೂಳೆಬ್ಬಿಸಿತು. ವಿವಾದ ಉಚ್ಛ ನ್ಯಾಯಾಲಯದ ಮುಂದೆಯೂ ಹೋಯಿತು. ಸಂಸ್ಕೃತದ ಪರ ಮತ್ತು ವಿರೋಧವಾಗಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಟ್ಟಿದೆ. ರಾಜ್ಯದ ಎರಡೂ ಶಾಸನಸಭೆಗಳಲ್ಲಿ ಈ ವಿಷಯವಾಗಿ ಚರ್ಚೆ ನಡೆದು ಸರ್ಕಾರ ಈ ಸಮಸ್ಯೆಯನ್ನು ತಜ್ಞರ ಸಮಿತಿಗೆ ವಹಿಸಿ ಸಮಿತಿಯ ಸಲಹೆಯಂತೆ ನಿರ್ಣಯ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿ ಅದರಂತೆ ಸರ್ಕಾರಿ ಆಜ್ಞೆಯಂತೆ ಸಮಿತಿ ರಚನೆಯಾಯಿತು. +ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು +೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು +೨ ಶ್ರೀ ಜಿ. ನಾರಾಯಣ ಸದಸ್ಯರು +೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು +೪ ಶ್ರೀ ತ. ಸು. ಶಾಮರಾಯರು ಸದಸ್ಯರು +೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು +೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು +೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ +ಸಮಿತಿಗೆ ಪರಿಶೀಲನೆಗಾಗಿ ವಹಿಸಿದ ವಿಷಯಗಳು: +ಸಂಸ್ಕೃತ ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸದ ವಿಷಯವಾಗಿ ಉಳಿಯಬೇಕೆ? +ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೆ ಉಳಿಸುವುದು ಹೇಗೆ? +ತ್ರಿಭಾಷಾಸೂತ್ರದಂತೆ ಕನ್ನಡ ಕಡ್ಡಾಯ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಬಿಡುವುದು ಸೂಕ್ತವೆ? +ಸಮಿತಿಯನ್ನು ರಚಿಸಿದ ಸರ್ಕಾರಿ ಆಜ್ಞೆಯಂತೆ ಸಮಿತಿ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. +ಸಮಿತಿಯ ಪ್ರಥಮಸಭೆ ಅಧ್ಯಕ್ಷರಾದ ಡಾ: ವಿ. ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿಯ ಕೋಣೆಯಲ್ಲಿ ದಿನಾಂಕ ರಲ್ಲಿ ನಡೆಯಿತು. ಅಂದು ಪ್ರಮುಖವಾಗಿ ಚರ್ಚೆಯಾದ ವಿಷಯ ಸಮಿತಿ ಅನುಸರಿಸಬೇಕಾದ ಕಾರ್ಯವಿಧಾನ ಸಮಸ್ಯೆಯ ಗಂಭೀರತೆಯ ಅರಿವಿದ್ದ ಅಧ್ಯಕ್ಷರು ಮತ್ತು ಸದಸ್ಯರು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗಿರುವ ಸ್ಥಾನಮಾನಗಳು-ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳ ಮತ್ತು ಅಲ್ಪಸಂಖ್ಯಾತರ ಭಾಷೆಗಳ ಸ್ಥಾನ-ಇತರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ದೊರೆತಿರುವ ಸೌಲಭ್ಯಗಳು-ಭಾಷ ಅಲ್ಪಸಂಖ್ಯಾತರಿಗೆ ರಾಜ್ಯಾಂಗದತ್ತವಾಗಿರುವ ಸೌಲಭ್ಯಗಳು ಕನ್ನಡವನ್ನು ಆಡಳಿತಭಾಷೆಯೆಂದು ಘೋಷಿಸಿದ ಸರ್ಕಾರದ ನಿಲುವು-ಕರ್ನಾಟಕದಲ್ಲಿ ಆಡಳಿತಗಾರರ, ಶಿಕ್ಷಣ ತಜ್ಞರ, ಶಿಕ್ಷಕರ, ಸಾಹಿತಿಗಳ, ಸಂಘ ಸಂಸ್ಥೆಗಳ-ಅಲ್ಪಸಂಖ್ಯಾತರ ಪ್ರತಿಕ್ರಿಯೆ-ಶ್ರೀಸಾಮಾನ್ಯರ ಅಭಿಪ್ರಾಯ-ಇವುಗಳನ್ನು ಅರಿತು, ಅವುಗಳನ್ನು ತುಲನಮಾಡಿ ನಿರ್ಣಯ ತೆಗೆದುಕೊಳ್ಳಬೇಕೆಂದು ನಿರ್ಧರಿಸಿತು. ಅದರಂತೆ ಮೈಸೂರು, ಮಂಗಳೂರು, ಬೆಂಗಳೂರು, ಧಾರವಾಡ ಮತ್ತು ಬೆಳಗಾಂವಿಗಳಲ್ಲಿ ಸಂದರ್ಶನ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ಬಿಜಾಪುರದಲ್ಲಿ ಸಂದರ್ಶನಕ್ಕೆ ಪರಿಸ್ಥಿತಿ ಅನುಕೂಲವಾಗಿಲ್ಲದುದರಿಂದ ಅಲ್ಲಿಂದ ಮುಂದಿನ ಪ್ರವಾಸವನ್ನು ರದ್ದುಪಡಿಸಿ ಅಲ್ಲಿಯವರೆಗೆ ಸಂಗ್ರಹಿಸಿದ್ದ ಅಭಿಪ್ರಾಯಗಳ ಆಧಾರದ ಮೇಲೆ ಶೈಕ್ಷಣಿಕ ತತ್ವವನ್ನೆ ಪ್ರಧಾನವಾಗಿಟ್ಟುಕೊಂಡು ಸಮಿತಿ ವರದಿಯನ್ನು ತಯಾರಿಸಿದೆ. ಅಧ್ಯಕ್ಷರು ವರದಿಯ “ಮೊದಲ ಮಾತು” ಎಂಬಲ್ಲಿ ಸಮಿತಿಯ ಧೋರಣದ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. +ಇಂದಿನ ಭಾಷಾ ಶಿಕ್ಷಣ ಸಮಸ್ಯೆ: ಭಾಷೆಗಳು ಹಾಗೂ ಭಾಷಾ ಶಿಕ್ಷಣತತ್ವಗಳು +(೧) ಸಮಸ್ಯೆಯ ರೂಪುರೇಖೆ : +ಭಾಷೆಗಳನ್ನು ಕಲಿಸುವುದರ ಉದ್ದೇಶವೇನು? ರಾಜ್ಯದ ಲಕ್ಷೋಪಲಕ್ಷ ವಿದ್ಯಾರ್ಥಿಗಳಿಗೆ ನೈಜ ಜ್ಞಾನವನ್ನು ಸಾಧ್ಯವಿದ್ದಷ್ಟು ಸುಲಭವಾಗಿ ಒದಗಿಸಿಕೊಡುವ ಕ್ರಮ ಇದ್ದರೆ ಅದು ಯಾವುದು? ಕರ್ನಾಟಕ ರಾಜ್ಯದಲ್ಲಿ ಈಗಿನ ಹಾಗೂ ಮುಂಬರುವ ಪೀಳಿಗೆಗೆ ಜ್ಞಾನಾರ್ಜನೆಯ ಏರ್ಪಾಟೇನು? ಭಾಷಾಭ್ಯಾಸ ಉಳಿದ ವಿಷಯಗಳ ವ್ಯಾಸಂಗದೊಡನೆ ಹೇಗೆ ಹವಣಾಗಿ ಹೊಂದಿಕೊಂಡೀತು? ನಮ್ಮ ರಾಷ್ಟ್ರದ ಹಾಗೂ ರಾಜ್ಯದ ಇಂದಿನ ಪರಿಸ್ಥಿತಿಯಲ್ಲಿ ಈ ಪಠ್ಯ ಕ್ರಮಕ್ಕೆ ಯಾವ ಗುರಿಗಳಿರಬೇಕು? ಮಾಧ್ಯಮಿಕ ಶಿಕ್ಷಣದ ಹಂತವನ್ನು ಲಕ್ಷ್ಯದಲ್ಲಿಟ್ಟು ಇವೇ ಮೊದಲಾದ ಪ್ರಶ್ನೆಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ. ರಾಜ್ಯದ ಮಕ್ಕಳನ್ನು ಕಣ್ಣೆದುರಿಗಿರಿಸಿಕೊಂಡು ಈ ಕ್ರಮವನ್ನು ನಾವು ರೂಪಿಸಬೇಕಾಗುವುದು. ಕೆಲವರು ಸಿರಿವಂತರ ಮಕ್ಕಳು ಹುಟ್ಟಿದ ಹಲವಾರು ತಿಂಗಳುಗಳಲ್ಲಿಯೇ ‘ಪಪಾ’ ‘ಮಮಾ’ ಎಂದು ಬಾಯ್ತೆರೆಯಬಹುದು. ಒಂದು ಕಠಿಣ ಪರಂಪರೆಯ ಪರಿಸರದಲ್ಲಿ ಬೆಳೆದ ಮಕ್ಕಳ ಅಭ್ಯಾಸ ಸಂಸ್ಕೃತ ಶಬ್ದಗಳಿಂದ ಪ್ರ್ರರಂಬಹವಾಗಬಹುದು. ಆದರೆ ಭಾಷೆಯ ತಳಹದಿಯ ಮೇಲೆ ರಚಿಸಿದ ರಾಜ್ಯದಲ್ಲಿಯ ಬಹುಸಂಖ್ಯಾತರ ಮಕ್ಕಳು ತಮ್ಮ ಮಾತೃಭಾಷೆಯ (ಎಂದರೆ ಮಾತೃಭಾಷೆ ಎಂದೇ ರಾಜ್ಯ ಭಾಷೆಯಾಗಿರುವ ಭಾಷೆಯ ಶಬ್ದಗಳನ್ನು ಕಲಿತು ಮಾತನಾಡುತ್ತವೆ. ಆ ರಾಜ್ಯದಲ್ಲಿಯ ಅಲ್ಪಸಂಖ್ಯಾತರ ಮಾತೃಭಾಷೆಗಳಲ್ಲಿ ಬಾಯ್ದೆರೆದು ಮಕ್ಕಳು ಅವನ್ನು ಕಲಿತು, ತಮ್ಮ ಸುತ್ತಣ ಪರಿಸರದಲ್ಲಿ ಸಹಜವಾಗಿ ವ್ಯಾಪಿಸಿರುವ ರಾಜ್ಯಭಾಷೆಯನ್ನೂ ಅನಾಯಾಸವಾಗಿ ಕಲಿಯುತ್ತವೆ. +ಇವೆರಡನ್ನೂ ಮೀರಿ ಉಚ್ಛ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕೋಸ್ಕರ ಮಕ್ಕಳು ಬೇರೆ ಭಾಷೆಗಳನ್ನು ಕಲಿತುಕೊಳ್ಳಬೇಕಾದೀತು. ಯಾವ ದಿಕ್ಕನ್ನು ಹಿಡಿದು ಅವರು ಮುಂದುವರಿಯುವರೆಂಬುದರ ಮೇಲೆ ಈ ಬೇರೆ ಭಾಷೆ ಇಲ್ಲವೆ ಭಾಷೆಗಳ ನಿರ್ಣಯವಾಗಬಹುದು. ಅಧಿಕೃತ ಅಂತರರಾಜ್ಯ ಸಂಪರ್ಕ ಭಾಷೆಯಾದ ಹಿಂದಿ ಸಹಸಂಪರ್ಕ ಭಾಷೆ ಹಾಗೂ ಆಧುನಿಕ ಪ್ರಪಂಚ ವಿಜ್ಞಾನದ ಭಾಷೆ ಮತ್ತು ಅಂತರ್ ರಾಷ್ಟ್ರೀಯ ಸಂಪರ್ಕ ಭಾಷೆಯಾದ ಇಂಗ್ಲಿಷು, ನೆಲೆಸಬೇಕೆಂದು ಅಪೇಕ್ಷಿಸಿರುವ ನೆರೆಹೊರೆಯ ರಾಜ್ಯ ಇಲ್ಲವೆ ಭಾರತದ ಯಾವದೊಂದು ರಾಜ್ಯದಲ್ಲಿಯ ಭಾಷೆ. ಉದ್ಯೋಗದ ದೃಷ್ಟಿಯಿಂದ ಅತ್ಯಂತ ಸೀಮಿತವಾದ ಅಂದರೆ ಪ್ರಾಚೀನ ಸಂಸ್ಕೃತಿ ಸಾಹಿತ್ಯಗಳ ಅಭ್ಯಾಸದ ದೃಷ್ಟಿಯಿಂದ ಅಮೂಲ್ಯವಾದ ಸಂಸ್ಕೃತ, ಫ್ರೆಂಚ್ ಇಲ್ಲವೆ ಜರ್ಮನ್‌ದಂತಹ ವಿದೇಶೀಯ ಭಾಷೆ-ಹೀಗೆ ಅನೇಕ ಭಾಷೆಗಳಲ್ಲಿ ಒಂದನ್ನು ಆಯ್ದುಕೊಳ್ಳಲು ವಿದ್ಯಾರ್ಥಿಯು ಇಚ್ಛಿಸಬಹುದು. ಆತನಿಗೆ ತನ್ನ ಮಾತೃ ಭಾಷೆಯ ಅಭ್ಯಾಸವನ್ನು ಮುಂದುವರೆಸುವ ಲವಲವಿಕೆಯೂ ಇರಬಹುದು. +ಇಂದಿನ ಶಿಕ್ಷಣ ಪರಿಸ್ಥಿತಿಯ ಬೆಳಕಿನಲ್ಲಿ ಈ ಭಾಷೆಗಳನ್ನು ಒಂದಕ್ಕೊಂದು ಹೋಲಿಸಿ ತೂಗಿ ನೋಡುವುದು ಪ್ರಯೋಜನಕರವಾದೀತು. ಹೀಗೆ ಮಾಡುವುದರಿಂದ ಇಂದಿನ ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಈ ಭಾಷೆಗಳ ಹೆಚ್ಚು-ಕಡಿಮೆ ಇಲ್ಲವೆ ತರತಮ ಮಹತ್ವದ ಅರಿವಾದೀತು. +(೨) ಪ್ರಾದೇಶಿಕ ಭಾಷೆ (ರಾಜ್ಯಭಾಷೆ) : +ಭಾಷಾ ತತ್ವದ ಮೇಲೆ ಭಾರತ ದೇಶವನ್ನು ರಾಜ್ಯಗಳನ್ನಾಗಿ ಆಡಳಿತದ ಸಲುವಾಗಿ ವಿಂಗಡಿಸಲಾಗಿದೆ. ಒಂದು ಭಾಷೆಯನ್ನಾಡುವ ಜನ ಏಕಮೇವವಾದ ರಾಜ್ಯದ ಆಡಳಿತಕ್ಕೆ ಒಳಪಟ್ಟಾಗ ಆಡಳಿತ ಸುಗಮ ಹಾಗೂ ಪ್ರಗತಿಪರವಾಗಿ ಅದರಲ್ಲಿ ತುಂಬ ಹೊಂದಾಣಿಕೆಯಿರುತ್ತದೆಂಬುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹೊಂದಾಣಿಕೆಯನ್ನು ಇನ್ನಿಷ್ಟು ಪ್ರಬಲವಾಗಿಸಲು ಆ ಜನದ ಒಂದೇ ಆಡಳಿತದಲ್ಲಿ ಅಂತರ್ಗತವಾಗಿರುವ ಸಂಸ್ಕೃತಿ, ಸಾಹಿತ್ಯ ಹಾಗೂ ಇತಿಹಾಸಗಳು ಬಹಳ ಸಹಾಯಕವಾಗುತ್ತವೆ. ಹಿಂದಿನ ಪ್ರಾದೇಶಿಕ ವಿಭಾಗಗಳಿಗೆ ಒಂದು ಸುಸ್ಪಷ್ಟ ರೂಪವಿರಲಿಲ್ಲ. ಇಂದಿನ ಭಾಷಾ ರಾಜ್ಯಗಳಿಗೆ ಒಂದು ವ್ಯಕ್ತಿತ್ವವಿದೆ. +ಈ ಜನದೊಡನೆ ಉಳಿದ ಭಾಶೆಗಳನ್ನು ಮಾತನಾಡುವ ಭಾರತೀಯರು ಬಾಳುತ್ತಾರೆ. ಬಾಳಬೇಕಾಕಾಗುತ್ತದೆ. ತಮ್ಮ ತಮ್ಮ ಭಾಷಾ ರಾಜ್ಯಗಳಲ್ಲಿ ಪ್ರಭುತ್ವವನ್ನು ಹೊಂದಿದ ಭಾಷೆಗಳು ಇಲ್ಲಿ ಅಲ್ಪಸಂಖ್ಯಾತವಾಗುತ್ತವೆ. ಒಂದು ರಾಜ್ಯದಲ್ಲಿ ಅಲ್ಪಸಂಖ್ಯಾತ ಭಾಷೆಗಳನ್ನು ಮಾತನಾಡುವ ಜನರ ಮಾರ್ಗದರ್ಶನಕ್ಕಾಗಿ ಕೆಲವು ನಿಯಮಗಳಿವೆ. ಉದಾಹರಣಾರ್ಥ-ವಿದ್ಯಾರ್ಥಿಗಳು ಇಂಥಾ ಒಂದು ಭಾಷೆಯನ್ನು ಮಾತನಾಡುವವರಿದ್ದರೆ ಅವರಿಗೆ ಅಗತ್ಯವಾದ ಶಿಕ್ಷಣ ಸೌಲಭ್ಯಗಳನ್ನು ಅವರ ಮಾತೃಭಾಷೆಯಲ್ಲಿ ರಾಜ್ಯ ಸರ್ಕಾರ ಒದಗಿಸಬೇಕು. ೧೯೬೯ ಜುಲೈ ತಿಂಗಳು ದಿನಾಂಕ ಏಳರ ಸರಕಾರದ ಆದೇಶದಂತೆ ಪ್ರತಿ ತರಗತಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಮಕ್ಕಳು ೧೦ ಮಂದಿ ಇದ್ದು ಒಂದರಿಂದ ನಾಲ್ಕನೆ ತರಗತಿಯವರೆಗಿನ ಒಟ್ಟು ಮಕ್ಕಳ ಸಂಖ್ಯೆ ೩೦ ಇದ್ದರೆ ಅವರ ಮಾತೃಭಾಷೆಯ ಮೂಲ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. ಈ ಅನುಕೂಲ ಇದೇ ನಿಬಂಧನೆಯ ಮೇಲೆ ೫, ೬ ಮತ್ತು ೭ನೇ ತರಗತಿಯ ಮಕ್ಕಳಿಗೂ ದೊರಕಬೇಕು. +ಮೇಲಿನ ಸರ್ಕಾರಿ ಆಜ್ಞೆಯಂತೆ ಪ್ರೌಢಶಾಲೆಗಳಲ್ಲಿಯೂ ಭಾಷಾ ಅಲ್ಪ ಸಂಖ್ಯಾತರ ಮಕ್ಕಳ ಸಂಖ್ಯೆ ಪ್ರತಿ ತರಗತಿಯಲ್ಲಿ ೧೫ ಇದ್ದು ಮೂರೂ ತರಗತಿಗಳಿಂದ ಒಟ್ಟು ೪೫ ವಿದ್ಯಾರ್ಥಿಗಳಿದ್ದರೆ ಅವರಿಗೆ ಅವರ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. +ಆದರೆ ಈ ಅಲ್ಪಸಂಖ್ಯಾತರು ತಾವು ನೆಲೆಸಿದ ರಾಜ್ಯದ ಜನರೊಡನೆ ಒಂದಾಗಬೇಕಲ್ಲ? ಇದಕ್ಕಾಗಿಯೂ ನಿಯಮಗಳಿವೆ. ಪ್ರಾಥಮಿಕ ಮೂರನೆಯ ಇಯತ್ತೆಯಿಂದ ಪ್ರಾರಂಭಿಸಿ ೭ನೇ ಇಯತ್ತೆಯವರೆಗೆ ಅಲ್ಪಸಂಖ್ಯಾತರ ಶಾಲೆಯಲ್ಲಿ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಇದಾದ ಮೇಲೆ ಹೈಸ್ಕೂಲಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಯು ರಾಜ್ಯಭಾಷೆಯನ್ನು ತನ್ನ ಮಾಧ್ಯಮವನ್ನಾಗಿ ಸ್ವೀಕರಿಸುವುದಲ್ಲದೆ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಕಲಿಯುತ್ತ ಎಸ್. ಎಸ್. ಎಲ್. ಸಿ. ಮುಗಿಸಿ ರಾಜ್ಯದ ವಾಣಿಜ್ಯ-ಉದ್ಯೋಗ ಸೇವಾವಕಾಶಗಳಲ್ಲಿ ಪ್ರಯೋಜನ ಪಡೆಯಬಹುದು. +ಅಲ್ಪಸಂಖ್ಯಾತರು ಈ ತತ್ವಗಳನ್ನು ಪಾಲಿಸದೆ ದ್ವೀಪದಂತೆ ಕನ್ನಡ ಜಲಾಶಯದಲ್ಲಿ ಇರಲು ಬಯಸಿದಾಗ ವಿರಸವೇಳುತ್ತದೆ : ಇದರಿಂದ ರಾಜ್ಯದ ಸಹಜೀವನದ ಹಾಗೂ ಭಾವೈಕ್ಯತೆಯ ಬಲವು ಕುಗ್ಗುತ್ತದೆ. ರಾಷ್ಟ್ರದ ದೃಷ್ಟಿಯಿಂದ ಏಕತೆಯನ್ನು ಹೆಚ್ಚು ಸುಗಮವಾಗಿ ಸಾಧಿಸಲೆಂದೇ ಭಾರತದಲ್ಲಿ ಭಾಷಾ ರಾಜ್ಯಗಳ ನಿರ್ಮಾಣವಾಗಿದೆ. ತಮ್ಮದೇ ಆದ ಭಾಷೆ, ಸಂಸ್ಕೃತಿಯ ಪರಂಪರೆ, ಇತಿಹಾಸದ ಅನನ್ಯತೆ-ಹೀಗೆ ಪ್ರತಿಯೊಂದು ಭಾಷಾ ರಾಜ್ಯವೂ ತನ್ನದೇ ಆದ ವ್ಯಕ್ತಿತ್ವವನ್ನು ಪಡೆದಿದೆ. ಇಂತಹ ಅನೇಕ ವ್ಯಕ್ತಿತ್ವಗಳು, ವಿವಿಧ ರಾಗಗಳು ಮೇಳನ ಸಂಗೀತದಲ್ಲಿ ಮಿಲಿತವಾಗುವಂತೆ ಭಾರತೀಯ ರಾಷ್ಟ್ರ ಪುರುಷನ ವ್ಯಕ್ತಿತ್ವದಲ್ಲಿ ಒಂದು ಸಮೃದ್ಧ ಏಕತೆಯನ್ನು ಪಡೆಯುತ್ತವೆ. ಆ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೇ ಭಾಷಾರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆ ಇದೆ. ಪ್ರಾಂತೀಯತೆಯ ಹೆಸರಿನಲ್ಲಿ ನಾವು ರಾಷ್ಟ್ರೀಯತೆಯನ್ನು ಸಂಕುಚಿತಗೊಳಿಸಬಾರದು. ಅದೇ ರೀತಿಯಲ್ಲಿ ಭಾಷಾ ರಾಜ್ಯದ ವ್ಯಕ್ತಿತ್ವವನ್ನೊಡೆದು ರಾಷ್ಟ್ರೀಯತೆಯ ಕಲ್ಪನೆಗೆ ಒಂದು ಕೃತ್ರಿಮ ವಿಶಾಲತೆಯನ್ನು ತಂದೊಡ್ಡುವನೆಂದು ತಿಳಿಯಬಾರದು. ಈ ದಿಕ್ಕಿನಲ್ಲಿ ಕನ್ನಡಿಗರು ತಾವು ಹೋದಲ್ಲೆಲ್ಲ ತಮ್ಮ ಹಕ್ಕುಗಳನ್ನು ಸಹ ಇದುವರೆಗೆ ಚೆನ್ನಾಗಿ ಸಾಧಿಸಿಲ್ಲ. ಕರ್ನಾತಕದಲ್ಲಿ ಬಂದು ನೆಲೆಸಿದ ಕೆಲವು ಅಲ್ಪಸಂಖ್ಯಾತರು ಇದಕ್ಕೆ ತೀರ ವಿರುದ್ಧವಾಗಿ ಇನ್ನೂ ತಾವು ತಮ್ಮ ಭಾಷಾರಾಜ್ಯದಲ್ಲಿಯೇ ಇರುವಂತೆ ವ್ಯವಹರಿಸುತ್ತಾರೆ. ಇದು ಉಭಯತ್ರರಿಗೂ ಕ್ಷೇಮಕರವಲ್ಲ. +ರಾಜ್ಯದಲ್ಲಿ ನೆಲೆಸಿದ ಎಲ್ಲ ಜನಕ್ಕೆ ರಾಜ್ಯಭಾಷೆಯು ಕಡ್ಡಾಯದ ಭಾಷೆಯಾಗಿ ಪಠ್ಯಕ್ರಮದಲ್ಲಿರುವುದು ಯುಕ್ತವೂ, ನ್ಯಾಯವೂ ಆಗಿದೆ. ಆಡಳಿತದ ಭಾಷೆ, ಸಾರ್ವಜನಿಕ ಸೇವಾ ಆಯೋಗದ ಭಾಷೆ, ಉಚ್ಛಶಿಕ್ಷಣದ ಮಾಧ್ಯಮ-ಹೀಗೆ ಕರ್ನಾಟಕದಲ್ಲಿ ನಾಳೆಗಿಂತ ಇಂದೇ ಕನ್ನಡವಾಗಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ನೆಲೆಸಿದವರು-ಅವರು ಎಲ್ಲಿಂದಲೇ ಬಂದಿರಲಿ-ಕನ್ನಡಿಗರಾಗುವುದು ಅವರ ಹಿತದೃಷ್ಟಿಯಿಂದಲೇ ಅವಶ್ಯವಾಗಿದೆ. ಆಸ್ತಿಪಾಸ್ತಿ, ಮನೆಮಠ, ಉದ್ಯೋಗ, ನೌಕರಿ-ಇವೆಲ್ಲ ವಿಷಯದಲ್ಲೂ ಅವರು ಕನ್ನಡವನ್ನು ಬಳಸಬೇಕಾಗುತ್ತದೆ. ಹತ್ತುವರ್ಷಗಳಿಗಿಂತ ಹೆಚ್ಚುಕಾಲ ರಾಜ್ಯದಲ್ಲಿ ನೆಲೆಸಿದವರು ಕನ್ನಡಿಗರೆಂದೇ ಅರ್ಥ. ಅವರ ಭವಿಷ್ಯವೂ ಕನ್ನಡಿಗರ ಭವಿಷ್ಯವೇ ಆಗುತ್ತದೆ. ಇಂಥವರ ಮಕ್ಕಳುಮರಿ ಕನ್ನಡವನ್ನು ಕಡ್ಡಾಯವಾಗಿ ಪ್ರಾಥಮಿಕ-ಮಾಧ್ಯಮಿಕ ಹಂತಗಳಲ್ಲಿ ಕಲಿಯುವುದರಿಂದ ಮಾತ್ರ ಅವರ ಸಮಸ್ಯೆಗೆ ಯೋಗ್ಯಪರಿಹಾರ ದೊರೆಯುತ್ತದೆ. ಕೇಂದ್ರ ಸರ್ಕಾರ ದೇಶದ ಬೇರೆಬೇರೆ ಭಾಗಗಳಲ್ಲಿ ತನ್ನ ನೌಕರಿರಾಗಿ ಕೇಂದ್ರೀಯ ವಿದ್ಯಾಶಾಲೆಗಳನ್ನು ತೆರೆದಿದೆ. ಇಂಥವರಲ್ಲಿ ಅಲ್ಲಲ್ಲಿ ಒಬ್ಬರಿಬ್ಬರು ಆ ಶಾಲೆಗಳಲ್ಲಿ ಪ್ರವೇಶದೊರೆಯದೆ ಉಳಿದರೆ ಅವರು ತಕ್ಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಕರ್ನಾಟಕದಲ್ಲಿಯೇ ನೆಲೆಸಿದ ವರ್ತಕರೂ, ಉದ್ಯೋಗಸ್ಥರೂ ಕನ್ನಡಿಗರಾಗಿಯೇ ಮುಂದುವರಿಯುತ್ತಾರೆ. ಉಳಿದವರು-ಅಂದರೆ ತಾತ್ಪೂರ್ವಿಕವಾಗಿ ಬಂದವರು-ತಾತ್ಪೂರ್ವಿಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಒಟ್ಟಾರೆ ಈ ವಿಷಯದಲ್ಲಿ ನಾವು ಅನುಸರಿಸಬೇಕಾದ ಧೋರಣವಿಷ್ಟು: ನಡು ನಡುವೆ ಎತ್ತರದ ಗೋಡೆಗಳೆದ್ದು ದೇಶದ ಏಕತೆಗೆ ಭಂಗ ತಂದಿರಬಾರದು, ಅದರ ಜೊತೆಗೆ ಒಂದಿಲ್ಲೊಂದು ನೆವದಿಂದ ಒಂದು ರಾಜ್ಯದಭದ್ರತೆಗೆ ಘಾತುಕವಾಗುವ ಧೋರಣೆಗಳಾಗಲಿ, ವರ್ಗಗಳಾಗಲಿ ತಲೆಯೆತ್ತಿರಬಾರದು. +ಕನ್ನಡವು ಆಡಳಿತ ಭಾಷೆಯಾಗಿದೆ. ಅದು ಏಕೈಕ ರಾಜ್ಯಭಾಷೆಯಾಗುವ ದಿನ ಕರ್ನಾಟಕದಲ್ಲಿ ಸಮೀಪಿಸಿದೆ. ಸಾರ್ವಜನಿಕ ಸೇವಾ ಆಯೋಗ (ಪಬ್ಲಿಕ್ ಸರ್ವಿಸ್ ಕಮಿಷನ್)ದಲ್ಲಿ ಇದರ ಅರಿವು ಇನ್ನೂ ಮೂಡಿ ಅದರ ಪಾಲನೆಯಾಗಬೇಕಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಮಾಧ್ಯಮದ ಅವಶ್ಯಕತೆಯೂ ಪ್ರಯೋಜನವೂ ವಿದ್ಯಾರ್ಥಿಗಳಿಗೂ ಅವರ ಪಾಲಕರಿಗೂ ಮನದಟ್ಟಾಗಬೇಕಾಗಿದೆ. ಇಂಗ್ಲಿಷಿನ ಭಾಷಾನೈಪುಣ್ಯವನ್ನು ಅದನ್ನೊಂದು ಭಾಷೆಯೆಂದಭ್ಯಸಿಸಿ ಪಡೆಯಬೇಕು. ಬರೀ ಮಾಧ್ಯಮವಾಗಿ ಉಳಿಸಿಕೊಂಡರೆ ಶಿಕ್ಷಣಕ್ಕೆ ಧಕ್ಕೆ ಬಂದು ಇಂಗ್ಲಿಷಿನ ಜ್ಞಾನ ಸೊನ್ನೆಯಾಗುತ್ತದೆಂಬ ದಾರುಣ ಸತ್ಯವನ್ನು ಅವರು ಕಂಡುಕೊಳ್ಳಬೇಕಾಗಿದೆ. ಮಾಧ್ಯಮಿಕ ಶಿಕ್ಷಣದ ಹಂತದಲ್ಲಿ ಮಾತ್ರ ಕನ್ನಡ ಮಾಧ್ಯಮವಾಗಿದೆ. +ರಾಜ್ಯ ಭಾಷೆಗೆ ರಾಜ್ಯದಲ್ಲಿ ಪ್ರಭುತ್ವವನ್ನು ಕಲ್ಪಿಸಿ ಒಂದು ರಾಜ್ಯದ ವ್ಯಕ್ತಿತ್ವವನ್ನು ಪೋಷಿಸಿದಂತೆ ದೇಶಕ್ಕೆ ಹಿಂದಿಯನ್ನು ಅಂತರ್ ರಾಜ್ಯ ಸಂಪರ್ಕಭಾಷೆಯನ್ನಾಗಿ ಮಾಡಿ ಮತ್ತು ಇಂಗ್ಲಿಷನ್ನು ಸಹ ಸಂಪರ್ಕಭಾಷೆಯನ್ನಾಗಿ ಮಾಡಿ ಕೇಂದ್ರ ಸರ್ಕಾರವು ದೇಶದ ಏಕಮೇವತೆಯನ್ನು ರಕ್ಷಿಸುವ ಪ್ರಯತ್ನದಲ್ಲಿದೆ. +ಕರ್ನಾಟಕ ರಾಜ್ಯ ನಿರ್ಮಾಣವಾಗಿ ಇಪ್ಪತ್ತನಾಲ್ಕು ವರ್ಷಗಳಾಗಿ ಹೋಗಿವೆ. ಉಳಿದ ಭಾಷಾ ರಾಜ್ಯಗಳು ಪ್ರಗತಿಯ ಪಥದಲ್ಲಿ ಮುಂದುವರಿಯುತ್ತಿವೆ. ಆದರೆ ದುರ್ದೈವದಿಂದ ಕರ್ನಾಟಕವು ಮಾತ್ರ ಇನ್ನೂ ತನ್ನನ್ನೇ ತಾನು ರೂಪಿಸಿಕೊಳ್ಳುವುದಿರಲಿ, ಅರಿತುಕೊಂಡಿಲ್ಲ ಸಹ. ಆ ಸ್ವಯಂನಿಯಂತ್ರಣದ ದಿನಗಳಿಗಾಗಿ ನಾವಿನ್ನೂ ಕಾಯಬೇಕಾಗಿದೆ. +(೩) ಅಲ್ಪಸಂಖ್ಯಾತರ ಭಾಷೆಗಳು +ಒಂದು ರಾಜ್ಯದಲ್ಲಿಯ ಅಲ್ಪಸಂಖ್ಯಾತರ ಮಾತೃಭಾಷೆಗಳೂ ಬೆಳೆಯುವ ಭಾಷೆಗಳಾಗಿವೆ. ಅವು ದೇಶದ ಒಂದಿಲ್ಲೊಂದು ರಾಜ್ಯದಲ್ಲಿ ವಾಡಿಕೆಯಾಗಿ ಆಡಳಿತದ ಭಾಷೆ ಹಾಗೂ ಶಿಕ್ಷಣದ ಮಾಧ್ಯಮಗಳಾಗಿವೆ. ಬಹುತೇಕ ಎಲ್ಲಾ ಅರ್ವಾಚೀನ ಭಾಷೆಗಳಲ್ಲಿ ಪ್ರಾಚೀನ ಹಾಗೂ ಅರ್ವಾಚೀನ ನಾಗರೀಕತೆಯ ಉಜ್ವಲ ಸಾಹಿತ್ಯವಿದೆ. ಚಿಕ್ಕಮಕ್ಕಳ ಶಿಕ್ಷಣವು ಮಾತೃಭಾಷೆಯಲ್ಲಿ ಪ್ರಾರಂಭವಾಗಬೇಕೆಂಬುದು ಇಂದಿಗೆ ಸರ್ವಮಾನ್ಯ ತತ್ವವಾಗಿದೆ. ಹುಟ್ಟಿದಾರಭ್ಯ ಆ ಭಾಷೆಯ ವಾತಾವರಣದಲ್ಲಿ ಮಗು ಬೆಳೆಯುತ್ತದೆ. ಆ ಮಗುವಿನ ಜ್ಞಾನ ಬೆಳೆಯಬೇಕಾದರೆ ಮಾತೃ ಭಾಷೆಯ ದ್ವಾರಾ ಅದು ಸಹಜವಾಗಿ ಬೆಳೆಯಬಲ್ಲದು. ಮೇಲಿನ ವರ್ಗದ ಮಕ್ಕಳು ಇಂಗ್ಲಿಷು ಮಾಧ್ಯಮವಿದ್ದ ಶಾಲೆಗಳಿಗೆ ಹೋಗುವುದನ್ನು ನಾವು ನೋಡುತ್ತೇವೆ. ಇಂಗ್ಲಿಷ್ ಮಗುವಿನ ಮಾತೃಭಾಷೆಯಾಗಿದ್ದರೆ ಇದು ಸಹಜ; ಇಲ್ಲದಿದ್ದರೆ ಶಿಕ್ಷಣವೇ ಕೃತಕವಾಗಿ ಆ ಮಗುವಿನ ಸಂಸ್ಕೃತಿಯಲ್ಲಿ ಇರಬೇಕಾದ ಕೆಲವಂಶಗಳು ಇಲ್ಲವಾಗುತ್ತವೆ. ರಾಜ್ಯದಿಂದ ರಾಜ್ಯಕ್ಕೆ ವರ್ಗವಾಗುವ ಇಲ್ಲವೆ ಸ್ಥಳಾಂತರಿಸುವ ಅಧಿಕಾರಿಗಳಿಗೆ ಇಲ್ಲವೆ ವರ್ತಕರಿಗೆ ಇದು ಅನಿವಾರ್ಯವಾಗಬಹುದು. ಆದರೆ ರಾಜ್ಯಭಾಷೆಯ ಮಾಧ್ಯಮವಿದ್ದ ಶಾಲೆಗಳಲ್ಲಿಯ ಶಿಕ್ಷಣ ಕ್ರಮವನ್ನೇ ಉಚ್ಛಮಟ್ಟಕ್ಕೇರಿಸುವುದು ರಾಜ್ಯ ನಿವಾಸಿಗಳ ಹಿತದ ದೃಷ್ಟಿಯಿಂದ ಈ ಸಮಸ್ಯೆಗೆ ಪರಿಹಾರವಾಗಿದೆ. ಆಗ ರಾಜ್ಯದ ಮಕ್ಕಳಿಗೆ ನೈಜಶಿಕ್ಷಣ ದೊರೆಯುತ್ತದೆ. +ಸಾಮಾನ್ಯವಾಗಿ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಅಲ್ಪಸಂಖ್ಯಾತ ಜನಗಳಿಗಾಗಿ ಕೆಲವೊಂದು ನಿಯಮಗಳನ್ನು ಅನುಸರಿಸಿ ಪ್ರಾಥಮಿಕ ಹಂತದಲ್ಲಿ ಒಂದರಿಂದ ನಾಲ್ಕನೆ ತರಗತಿಗಳಲ್ಲಿ ಪ್ರತಿ ತರಗತಿಯಲ್ಲೂ ೧೦ ವಿದ್ಯಾರ್ಥಿಗಳಿದ್ದು ನಾಲ್ಕೂ ತರಗತಿಗಳಿಂದ ಒಟ್ಟು ೩೦ ವಿದ್ಯಾರ್ಥಿಗಳಿದ್ದರೆ ಆಯಾ ಜನಗಳ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸುವ ಶಾಲೆಗಳಿವೆ. ಆದರೆ ರಾಷ್ಟ್ರದಲ್ಲಿ ಪ್ರಚಲಿತವಿರುವ ಯೋಜನೆಯ ಪ್ರಕಾರ ರಾಜ್ಯ ಭಾಷೆಯನ್ನು ಇಂತಹ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಕಲಿಸುವ ವ್ಯವಸ್ಥೆ ಎಲ್ಲ ಕಡೆಗೆ ಜಾರಿಯಲ್ಲಿಲ್ಲವೆಂಬುದು ವಿಷಾದಕರ. ಉದಾಹರಣೆಗೆ ಕರ್ನಾಟಕದಲ್ಲಿರುವ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಹಲವಾರೆಡೆಗೆ ಕನ್ನಡವನ್ನು ಕಲಿಸುವ ವ್ಯವಸ್ಥೆಯೇ ಇಲ್ಲವೆಂದು ಒರ್ವ ಉರ್ದು ಶಾಲಾ ಸಂಸ್ಥೆಯ ಸಂಚಾಲಕರು ಸಾಕ್ಷಿ ಇತ್ತರು. ಇದು ವಿಷಾದಕರ ಈ ಪರಿಸ್ಥಿತಿಯನ್ನು ಬೇಗನೆ ಹೋಗಲಾಡಿಸುವುದು ಅವಶ್ಯವಾಗಿದೆ. +ಅಲ್ಪಸಂಖ್ಯಾತ ಜನಗಳ ಭಾಷೆಯನ್ನಾಡುವ ಮಗು ತನ್ನ ಮಾಧ್ಯಮಿಕ ಹಾಗೂ ಉಚ್ಚಶಿಕ್ಷಣವನ್ನು ತಾನಿದ್ದ ರಾಜ್ಯದಲ್ಲಿಯೇ ಪಡೆಯಬೇಕಾಗುತ್ತದೆ. ತಾನು ಹೋದಲ್ಲೆಲ್ಲ ಕಿವಿಗೆ ಬೀಳುತ್ತಿರುವ ಪ್ರಾದೇಶಿಕ ಭಾಷೆಯನ್ನು ಆ ಮಗುವಿನ ದ್ವಿತೀಯ ಭಾಷೆಯಾಗಿ ಈ ಹಂತದಲ್ಲಿ ಅಭ್ಯಸಿಸಿದರೆ ಮುಂದೆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಬಹುದು. ಪ್ರಾದೇಶಿಕ ಭಾಷೆಯ ಈ ವಿಶೇಷ ಜ್ಞಾನ ಅತ್ಯಗತ್ಯವಾಗಿದೆ ಏಕೆಂದರೆ ಅದು ರಾಜ್ಯಭಾಷೆ. ಆಡಳಿತದ ಭಾಷೆ ಹಾಗೂ ರಾಜ್ಯದಲ್ಲಿಯ ವ್ಯವಹಾರದ ಭಾಷೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಅದನ್ನು ದ್ವಿತೀಯ ಭಾಷೆಯಾಗಿ ಕಲಿತರೆ ಮುಂದೆ ಅದನ್ನು ಶಿಕ್ಷಣ ಮಾಧ್ಯಮವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. +ಅಲ್ಪಸಂಖ್ಯಾತರ ಮಾತೃಭಾಷೆಗಳನ್ನೂ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣ ಮಾಧ್ಯಮವನ್ನೂ ಕುರಿತು ಸರ್ಕಾರವು ಒಂದು ನಿರ್ದಿಷ್ಟ ಧೋರಣೆಯನ್ನು ಜಾಹೀರುಪಡಿಸುವುದು ಅಗತ್ಯವಾಗಿದೆ. ಈ ವಿಷಯದಲ್ಲಿ ಕೆಳಗಣ ಅಭಿಪ್ರಾಯಗಳನ್ನು ಸಮಿತಿಯು ವ್ಯಕ್ತಗೊಳಿಸಬಯಸುತ್ತದೆ. +(ಅ) ಅಲ್ಪಸಂಖ್ಯಾತರ ಮಾತೃಭಾಷೆಗಳು ಮಾಧ್ಯಮವಾಗಿದ್ದ ಪ್ರಾಥಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ದ್ವಿತೀಯ ಭಾಷೆಯಾಗಿ (೩ ರಿಂದ ೭ ನೆಯ ವರ್ಗಗಳಲ್ಲಿ) ಕಲಿಸುವುದು ಸರ್ವಮಾನ್ಯ ತತ್ವವಿದೆ. ಇದನ್ನು ಇಂತಹ ಎಲ್ಲ ಶಾಲೆಗಳಲ್ಲಿಯೂ ಕೂಡಲೆ ಜಾರಿಯಲ್ಲಿ ತರಬೇಕು. +(ಆ) ಕರ್ನಾಟಕ ರಾಜ್ಯದ ಧೋರಣೆ ಈ ವಿಷಯದಲ್ಲಿ ತುಂಬ ಉದಾರವಾಗಿದೆ. ಔದಾರ್ಯವು ಒಳ್ಳೆಯ ಗುಣವೇ. ಅದೆ ಈ ಗುಣದಲ್ಲಿ ಅನೇಕಸಲ ಅಜ್ಞಾನವು ಬೆರೆತಿರುತ್ತದೆ. ಒಮ್ಮೊಮ್ಮೆ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಗ್ರಾಂಟ್ ಅಂತೂ ಹೋಗಲಿ, ಪ್ರತ್ಯಕ್ಷ ಪರಿಪಾಠದಲ್ಲಿ ಮನ್ನಣೆ ಸಹ ದೊರೆತಿಲ್ಲವೆಂದು ಅಲ್ಲಿನ ಅಲ್ಪಸಂಖ್ಯಾತರಾದ ಕನ್ನಡಿಗರು ಪತ್ರಿಕೆಗಳಲ್ಲಿ ಬರೆಯುತ್ತಿರುತ್ತಾರೆ. ಆದರೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಿಗೆ ಮಾಧ್ಯಮಿಕ ಹಂತದಲ್ಲಿಯೂ ಅವರ ಭಾಷೆ ಮಾಧ್ಯಮವಾದ ಮಾಧ್ಯಮಿಕ ಶಾಲೆಗಳನ್ನು ತನ್ನ ವೆಚ್ಚದಿಂದ ಕೆಲವೆಡೆ ನಡೆಸುತ್ತಿರುವುದೂ ಉಂಟು. ಈ ತರಹದ ಔದಾರ್ಯ ಅನಿಷ್ಟವೆಂದು ಬೇರೆ ಹೇಳಬೇಕಾಗಿಲ್ಲ. +(ಇ) ಕನ್ನಡ ಜನತೆಯ ಮಕ್ಕಳಿಗೇ ಇನ್ನೂ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಸ್ಥಾಪಿಸದೆ ಇರುವಾಗ ಅಲ್ಪಸಂಖ್ಯಾತರಿಗಾಗಿ ಅವರ ಭಾಷಾ ಮಾಧ್ಯಮದ ಹೈಸ್ಕೂಲುಗಳನ್ನು ಸ್ಥಾಪಿಸುವುದು ಎಂತಹ ಔದಾರ್ಯ. ಆಧುನಿಕ ಭಾರತೀಯ ಭಾಷೆಯೊಂದನ್ನು ಮಾಧ್ಯಮವೆಂದು ಬಳಸಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಅಲ್ಪಸಂಖ್ಯಾತರ ವರ್ಗವೊಂದು ಮುಂದು ಬಂದರೆ ಅವರ ಭಾಷೆ ರಾಜ್ಯ ಭಾಷೆಯಾದ ರಾಜ್ಯದಲ್ಲಿ ಕನ್ನಡಕ್ಕಾಗಿ ಈ ಅವಕಾಶವನ್ನು ಆ ಸರ್ಕಾರ ಕಲ್ಪಿಸಿಕೊಟ್ಟಿದ್ದರೆ ನಾವೂ ಅವಶ್ಯವಾಗಿ ಕರ್ನಾಟಕದಲ್ಲಿ ಹಾಗೆ ಮಾಡಬಹುದು. ಸ್ಥಿತಿ ಇದಕ್ಕೆ ವಿಪರೀತವಾಗಿದ್ದರೆ ನಾವೂ ಬಿಗಿಯಾಗಿ ಇರಬೇಕು. ಕನ್ನಡ ಜನತೆಯ ಶೈಕ್ಷಣಿಕ ಕೊರತೆಗಳು ದೂರಾಗುವವರೆಗೆ ಕರ್ನಾಟಕ ಸರ್ಕಾರ ಈ ಸೌಲಭ್ಯವನ್ನು ಕೊಡಲೇ ಬಾರದು. +ಆದರೆ ಉಳಿದ ರಾಜ್ಯ ಭಾಷೆಗಳೂ ಕನ್ನಡದಂತೆ ವಿಕಸನ ಪೂರ್ಣ ಭಾಷೆಗಳು. ಕರ್ನಾಟಕದಲ್ಲಿಲ್ಲದಿದ್ದರೂ ತಮ್ಮ ತಮ್ಮ ರಾಜ್ಯಗಳಲ್ಲಿ ಅವು ರಾಜ್ಯ ಭಾಷೆಗಳಾಗಿವೆ. ತಮಿಳು ಹಾಗೂ ಕನ್ನಡದಷ್ಟು ಪ್ರಾಚೀನವಲ್ಲದಿದ್ದರೂ ಈ ಉಳಿದ ಭಾಷೆಗಳಲ್ಲಿಯ ಸಾಹಿತ್ಯೇತಿಹಾಸ ಸಾವಿರ ವರ್ಷಗಳ ಆಚೀಚೆಗೆ ಹೋಗುತ್ತದೆ. ವಿವಿಧ ಕಾರಣಗಳ ಮೂಲಕ ಬೇರೆ ಬೇರೆ ರಾಜ್ಯಗಳಿಗೆ ಉದ್ಯೋಗಕ್ಕಾಗಿ ಹಲವು ಕನ್ನಡಿಗರು ಹೋಗುವ ಪ್ರಸಂಗ ಉಂಟಾಗಬಹುದು. ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಯಾದ ಭಾಷೆಯೇ ಅಲ್ಲಿ ರಾಜ್ಯ ಭಾಷೆಯಾಗಿರಬಹುದು. ಅದನ್ನು ವಿವರವಾಗಿ ಅಭ್ಯಸಿಸುವುದರಿಂದ ಅದು ಮಾತೃ ಭಾಷೆಯಾಗಿದ್ದ ಅಲ್ಪಸಂಖ್ಯಾತರಿಗೂ ಹಲವಾರು ಕನ್ನಡಿಗರಿಗೂ ಅನುಕೂಲವಾಗಬಹುದು. ಹೀಗಾಗಿ ನಿರ್ದಿಷ್ಟ ಸಂಖ್ಯೆಯಲ್ಲಿ ಮಕ್ಕಳು ಕಲಿಯಬೇಕೆನಿಸಿದ ಆಧುನಿಕ ಭಾರತೀಯ ಭಾಷೆಯ ಅಭ್ಯಾಸಕ್ಕಾಗಿ ನಮ್ಮ ಹೈಸ್ಕೂಲುಗಳಲ್ಲಿ ವ್ಯವಸ್ಥೆ ಇರಬೇಕು. ೩೦ ವಿದ್ಯಾರ್ಥಿಗಳು ಒಂದು ಹೈಸ್ಕೂಲಿನಲ್ಲಿ ತಮ್ಮ ಮಾತೃ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರೆ ಅದು ಅವರಿಗೆ ಈಗಿನಂತೆ ಸಾಧ್ಯವಾಗಬೇಕು. ಈ ಸೌಲಭ್ಯವನ್ನು ಒದಗಿಸುವುದಕ್ಕೆ ಮುಂಚಿತವಾಗಿ ಆ ಭಾಷೆಯ ರಾಜ್ಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೂ ಅಂಥ ಸೌಲಭ್ಯ ದೊರೆತಿರುವುದೇ ಎಂದು ನಾವು ತಿಳಿಯಬೇಕು. +ಸಾಹಿತ್ಯಗಳ ತುಲನಾತ್ಮಕ ಅಭ್ಯಾಸ ಮಾಡಬೇಕೆಂದವರಿಗೆ ಮಾಧ್ಯಮಿಕ ಹಂತದಿಂದ ಆಯಾ ಸಾಹಿತ್ಯಗಳ ಹಾಗೂ ಭಾಷೆಗಳ ಅಭ್ಯಾಸವನ್ನು ಪ್ರಾರಂಭಿಸುವುದು ಒಳ್ಳೆಯದು. ಆಗ ಉಚ್ಛ ಶಿಕ್ಷಣದಲ್ಲಿ ಇದು ಕಠಿಣವಾಗಿ ಪರ್ಣಮಿಸುವುದಿಲ್ಲ. ತೆಲುಗು, ತಮಿಳು, ಮರಾಠಿ, ಮಲಯಾಳಂ, ಉರ್ದು ಮೊದಲಾದ ಭಾಷೆಗಳನ್ನು ಈ ದೃಷ್ಟಿಯಿಂದ ಕಾಣುವುದು ಅವಶ್ಯವಿದೆ. ಉರ್ದುವಿನಲ್ಲಿ ಹಾಗೆ ನೋಡಿದರೆ ಕಲ್ಬುರ್ಗಿಯೇ ಸಾಹಿತ್ಯದ ಉಗಮ ಸ್ಥಾನ. ಪ್ರಾರಂಭದ ಉರ್ದು ಸಾಹಿತ್ಯದಲ್ಲಿ (ದಖನಿ ಉರ್ದು) ಕನ್ನಡ ಹಾಗೂ ತೆಲುಗು ಶಬ್ದಗಳೂ ಕನ್ನಡ ಆಂಧ್ರ ರಾಜ್ಯಗಳ ವರ್ಣನೆಗಳೂ ಹೇರಳವಾಗಿವೆ. ಇವೆಲ್ಲ ಇನ್ನೂ ಕನ್ನಡಕ್ಕೆ ಬರಬೇಕಾಗಿದೆ. ಉಳಿದ ಭಾಷೆಗಳನ್ನು ಕುರಿತು ಕೆಲಸ ನಡೆದಿದೆಯಾದರೂ ಮಾಡುವುದು ಬೇಕಾದಷ್ಟಿದೆ. ಈ ಕ್ಷೇತ್ರದಲ್ಲಿ ದುಡಿಯಬಯಸುವವರು ತಮ್ಮ ಆಯ್ಕೆಯ ಭಾಷೆಯನ್ನು ಮಾಧ್ಯಮಿಕ ಹಂತದಿಂದಲೇ ಅಭ್ಯಸಿಸಬೇಕಾಗುವುದು. +ರಾಜ್ಯದ ಗಡಿನಾಡಿನ ಅಂಚಿನಲ್ಲಿದ್ದುಕೊಂಡು ಎರಡು ಭಾಷಾ ರಾಜ್ಯಗಳ ನಡುವೆ ವಾದವಿವಾದಕ್ಕೆ ಆಸ್ಪದ ಕೊಟ್ಟ ಚಿಕ್ಕ ಚಿಕ್ಕ ಪ್ರದೇಶಗಳೂ ಇವೆ. ಇದರ ಬಗ್ಗೆ ಇನ್ನೂ ವಾದವಿವಾದ ನಡೆಯುತ್ತಿದೆ. ಇಲ್ಲಿಯ ಭಾಷಾ ಶಿಕ್ಷಣದ ಬಗ್ಗೆ ಸರ್ಕಾರ ಒಂದು ಧೋರಣವನ್ನು ಸ್ವೀಕರಿಸಿ ಅದರಂತೆ ನಡೆದುಕೊಂಡು ಬಂದಿದೆ. +(೪) ಅಂತರ್ ರಾಜ್ಯ ಸಂಪರ್ಕ ಭಾಷೆಗಳು +ದೇಶದ ಏಕತೆಯನ್ನೂ ರಾಷ್ಟ್ರಾದ್ಯಂತದ ವ್ಯವಹಾರವನ್ನು ಸುಗಮವಾಗಿಸಲೆಂದೂ ಕೇಂದ್ರ ಸರ್ಕಾರವು ಎರಡು ಭಾಷೆಗಳನ್ನು ಹೆಸರಿಸಿದೆ. ಒಂದು, ಅಧಿಕೃತ ಸಂಪರ್ಕ ಭಾಷೆಯಾದ ಹಿಂದೀ, ಇನ್ನೊಂದು ಸಹ ಸಂಪರ್ಕಭಾಷೆಯಾದ ಇಂಗ್ಲಿಷು. ಈ ಸಹಸಂಪರ್ಕಭಾಷೆ ಅಂತರ್ ರಾಷ್ಟ್ರೀಯ ಸಂಪರ್ಕಭಾಷೆಯೂ ಆಗಿದೆಯಲ್ಲದೆ ಪ್ರಪಂಚ ಉಚ್ಛ ವಿಜ್ಞಾನದ ಮಾಧ್ಯಮವೂ ಆಗಿದೆ. ಬೇಕಾದರೆ ಇವುಗಳಲ್ಲಿ ಒಂದನ್ನು ವಿದ್ಯಾರ್ಥಿಯು ಅಭ್ಯಸಿಸಬಹುದು. ಇವುಗಳಿಗಿಂತ ಇನ್ನೊಂದು ಆಧುನಿಕ ಭಾರತೀಯ, ಇಲ್ಲವೆ ಅರ್ವಾಚೀನ ಪಾಶ್ಚಾತ್ಯ ಭಾಷೆಯ ಅಭ್ಯಾಸ ಅಗತ್ಯವೆನಿಸಿದರೆ ಹಾಗೆ ಮಾಡಬಹುದು. +ಈ ಸಂಪರ್ಕಭಾಷೆಗಳ ಸ್ವರೂಪ ಹಾಗೂ ಪ್ರಯೋಜನವನ್ನು ಸರಿಯಾಗಿ ತಿಳಿದುಕೊಳ್ಳಲು ಇಲ್ಲಿ ಕೆಲವು ಮಾತುಗಳನ್ನು ಹೇಳುವುದು ಅಗತ್ಯವಾಗಬಹುದು. ನಮಗೀಗಿದ್ದ ಕೇದ್ರಾಧಿಕೃತ ಭಾಷೆಗಳು ಎರಡು: ಇಂಗ್ಲಿಷು ಹಾಗೂ ಹಿಂದೀ. ದಕ್ಷಿಣ ಭಾರತ ಒಪ್ಪುವ ತನಕ ಈ ಸೂತ್ರ ಮುಂದುವರಿಯಬೇಕೆಂದು ಗೊತ್ತಾಗಿದೆ. ಹಿಂದೀ ಮಾತೃಭಾಷೆಯಾದವರನ್ನು ಈ ಸಮಸ್ಯೆ ಎದುರಿಸುವುದಿಲ್ಲ. ಅವರು ಹಿಂದಿಯನ್ನೂ ಹಾಗೂ ಇಂಗ್ಲಿಷನ್ನೂ ಪ್ರಾಥಮಿಕ ಹಂತದಿಂದ ಸಹ ಹಾಗೆ ಮನಸ್ಸು ಮಾಡಿದಲ್ಲಿ ಸ್ವೀಕರಿಸಬಹುದು. ಸಾಮಾನ್ಯವಾಗಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಭಾರತದ ಐಕ್ಯದ ದೃಷ್ಟಿಯಿಂದ ಅವರು ಕಲಿಯಬೇಕೆಂಬ ನಿರೀಕ್ಷೆಯಿದೆ. ಆದರೆ ಇದು ವ್ಯಾವಹಾರಿಕವಾಗಿ ಫಲಿಸುತ್ತಿಲ್ಲ. ಸಂಸ್ಕೃತ ಇಲ್ಲವೆ ಉರ್ದು ಅವರಿಗೆ ಇನ್ನೊಂದು ಭಾಷೆಯಾಗುತ್ತದೆ. ಏಕೆಂದರೆ ಸಂಸ್ಕೃತವು ಗೌಡೀಯ ಭಾಷೆಗಳ, ಅಂತೆಯೇ ಹಿಂದಿಯ-ತಾಯಿ. ಉರ್ದುವಿನ ಶಬ್ದಕೋಶ ಎಷ್ಟೋಮಟ್ಟಿಗೆ ಹಿಂದಿಗಿಂತ ಬೇರೆಯಾಗಿದೆಯೆಂಬುದು ನಿಜ. ಆದರೆ ಎರಡೂ ಭಾಷೆಗಳ ಮೈಕಟ್ಟು ವ್ಯಾಕರಣಗಳು ಒಂದಕ್ಕೊಂದು ಸಮೀಪವಾಗಿವೆ. +ನಮ್ಮ ದೇಶದಲ್ಲಿ ಭಾಷಾಶಿಕ್ಷಣದ ಅನುಷ್ಠಾನದಲ್ಲಿ ಕೇಂದ್ರ ಸರ್ಕರ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದೆ. ಕೇಂದ್ರದ ಸಾಹಿತ್ಯ ಅಕಾಡಮಿಯು ಭಾರತದಲ್ಲಿ ೨೨ ಭಾಷೆಗಳಿಗೆ ಸಾಹಿತ್ಯಸಂಪನ್ನವೆಂದು ಮನ್ನಣೆ ಇತ್ತಿದೆ. ಒಟ್ಟಾರೆ ಭಾರತದಲ್ಲಿ ಭಾಷೆ, ಉಪಭಾಷೆ-ಬರಿ ಬಳಕೆ ಮಾತಿನ ಭಾಷೆಗಳು ಸೇರಿ ಸುಮಾರು ೧೮೦ ಇವೆಯೆಂದು ತಜ್ಞರು ಹೇಳುತ್ತಾರೆ. ಇಂಥ ಭಾಷಾ ವೈವಿಧ್ಯವಿರುವಾಗ ಈ ದೇಶದಲ್ಲಿ ಸಾಧ್ಯವಿದ್ದಷ್ಟು ಭಾಷೆಗಳನ್ನು ಪರಿಸ್ಥಿತಿ ಸಂದರ್ಭ ಒಲವುಗಳ ಪ್ರಕಾರ ತಿಳಿದುಕೊಳ್ಳುವುದು ಸ್ಪೃಹಣೀಯವೇ ಸರಿ. +ಆದರೆ ಎರಡು ಅಧಿಕೃತ ಅಂತರ ರಾಜ್ಯ ಸಂಪರ್ಕಭಾಷೆಗಳು ಇರುವವರೆಗಂತೂ ಅವುಗಳಲ್ಲಿ ಒಂದನ್ನು ಆಯ್ದುಕೊಂಡು ಅಭ್ಯಸಿಸುವ ಹಕ್ಕೂ ಇದೆ. ಹೀಗಾಗಿ ಕನ್ನಡವನ್ನುಳಿದು ಇನ್ನೊಂದು ಭಾಷೆಯನ್ನು ವ್ಯಾಸಂಗಕ್ಕೆ ಆಯ್ದುಕೊಳ್ಳುವಾಗ ವಿದ್ಯಾರ್ಜನೆಯ ಪ್ರಯೋಜನದ ಹಾಗೂ ವ್ಯಕ್ತಿ ವ್ಯಕ್ತಿಯ ಅಭಿರುಚಿ-ಅವಶ್ಯಕತೆ-ಪರಿಸ್ಥಿತಿಗಳ ದೃಷ್ಟಿಯಿಂದ ನಾವು ಪರಿಶೀಲಿಸಬೇಕಾಗುತ್ತದೆ. ಒರ್ವ ವಿದ್ಯಾರ್ಥಿಗೆ ಭಾರತದ ಉತ್ತರ ಭಾಗದಲ್ಲಿಯೇ ಉದ್ಯೋಗವನ್ನು ಆರಿಸುವ ಸಂದರ್ಭ ಬಂದರೆ ಪಠ್ಯಭಾಷೆಯಾಗಿ ಆತ ಹಿಂದೀಯನ್ನು ಆಯ್ದುಕೊಳ್ಳಬೇಕಾಗಬಹುದು. ಆಂಥದೇ ಕಾರಣಕ್ಕಾಗಿ ಇನ್ನೊಬ್ಬ ವಿದ್ಯಾರಥಿಯು ತೆಲುಗು, ತಮಿಳು, ಮಲೆಯಾಳಂ, ಮರಾಠಿ ಇಲ್ಲವೆ ಗುಜರಾತಿ ಕಲಿಯಬೇಕಾಗಬಹುದು. ಈ ಭಾಶೆಗಳಲ್ಲಿ ಒಂದನ್ನು ಸಾಹಿತ್ಯಕ ಇಲ್ಲವೆ ಸಾಂಸ್ಕೃತಿಕ ಕಾರಣಗಳಿಗಾಗಿಯೂ ವಿದ್ಯಾರ್ಥಿಗಳು ಕಲಿಯಬಯಸಬಹುದು. +ಬರೀ ಕೇಂದ್ರದ ಒಂದು ಅಧಿಕೃತಭಾಶೆಯಾಗಿದೆಯೆಂದು ಹಿಂದೀಗೆ ಮಹತ್ವ ಬಂದಿಲ್ಲ. ಅದರ ಮಹತ್ವ ದಿನದಿನಕ್ಕೆ ಬೆಳೆಯುತ್ತಲಿದೆ. ಅದು ಅಧಿಕೃತ ಭಾಷೆಯಾದ ದಿನದಿಂದ ಕೇಂದ್ರ ಸರ್ಕಾರ ಕೋಟ್ಯಾವಧಿ ರೂಪಾಯಿಗಳನ್ನು ಅದರ ಬೆಳವಣಿಗೆಗಾಗಿ ಖರ್ಚು ಮಾಡುತ್ತಾ ಬಂದಿದೆ. ಒಂದು ವಿಶೇಷ ಶಾಖೆಯೇ ಕೇಂದ್ರದ ಕಚೇರಿಯಲ್ಲಿ ಏರ್ಪಟ್ಟು ಕೃತ್ರಿಮವೇ ಆಗಲಿ, ಹಿಂದೀಯಲ್ಲಿಯ ವೈಜ್ಞಾನಿಕ ಶಬ್ದಕೋಶವು ವಿವಿಧ ಆಧುನಿಕತಮ ವಿಜ್ಞಾನಗಳನ್ನು ಒಳಗೊಂಡಿದೆ. ಆಗ್ರಾದಲ್ಲಿ ಒಂದು ಕೇಂದ್ರೀಯ ಹಿಂದೀ ಸಂಸ್ಥೆ ಈ ಎಲ್ಲ ಸಂಬಂಧಿತ ವಿಷಯಗಳಿಗಾಗಿ ಸ್ಥಾಪಿತವಾಗಿದೆ. ದೇಶದ ಅನೇಕಾನೇಕ ವಿಶ್ವವಿದ್ಯಾನಿಲಯಗಳಲ್ಲಿ ಹಿಂದೀ ಇಲಾಖೆ ಇದೆ. ಪಿ.ಎಚ್.ಡಿ (ಸ್ನಾತಕೋತ್ತರ) ಸಂಶೋಧನೆ ನಡೆಯುತ್ತಿದೆ. ಜ್ಞಾನಪೀಠ ಮೊದಲಾದ ಸಂಸ್ಥೆಗಳ ಪ್ರಕಾಶನಗಳು ಸಕಲ ಭಾರತೀಯ ಸಾಹಿತ್ಯಗಳನ್ನು ಹಿಂದೀಯಲ್ಲಿ ದೊರೆಯುವಂತೆ ಮಾಡಿವೆ. ಹೀಗೆ ಸಾಹಿತ್ಯಕವಾಗಿಯೂ, ವೈಜ್ಞಾನಿಕವಾಗಿಯೂ ಹಿಂದೀಗೆ ಉಳಿದ ಭಾಷೆಗಳಿಗಿಂತ ಉಜ್ವಲತರ ಭವಿಷ್ಯವಿದೆ. ಅದನ್ನು ಮಾತನಾಡುವವರ ಸಂಖ್ಯೆಯೂ ಬಹಳ ಹೆಚ್ಚಾಗಿದೆ. ಅಧಿಕೃತವೆಂಬ ಗೌರವವೂ ಅದಕ್ಕೆ ಸಲ್ಲುತ್ತದೆ. ಹೀಗೆ ವಿದ್ಯಾರ್ಥಿಗಳಿಂದ ಆಯ್ಕೆಯಲ್ಲಿ ಹಿಂದೀಗೆ ಮಹತ್ವದ ಸ್ಥಾನ ಪ್ರಾಪ್ತವಾಗಿದೆ. +(೫) ಇಂಗ್ಲಿಷಿನ ಸ್ವರೂಪ-ಸಾಧ್ಯತೆಗಳು. +ಪೂರ್ವದ ಯಾವ ಭಾಷೆಯೂ ಇನ್ನೂ ಇಂಗ್ಲಿಷಿನಂತೆ ಆಧುನಿಕ ಜ್ಞಾನಭಂಡಾರದ ಸಕಲ ಸಂಪತ್ತಿಗೆ ಬೀಗದ ಕೈ ಆಗಿಲ್ಲ. ಜಪಾನೀ ಭಾಷೆ ಮಾತ್ರ ಆ ಸ್ಥಾನಮಾನವನ್ನು ಸಮೀಪಿಸುತ್ತಿರಬಹುದು. ಇಂಗ್ಲಿಷ್‌ನಿಂದ ಭಾಷಾಂತರವಾಗಿ ನಮ್ಮ ಭಾಷೆಗಳಲ್ಲಿ ಹಲವಾರು ಆಧುನಿಕ ಜ್ಞಾನಕ್ಷೇತ್ರಗಳು ಬೆಳಕು ಕಂಡಿವೆ. ಕ್ರಮೇಣ ‘ಕೊಡು-ಕೊಳ್ಳುವ’ ವ್ಯವಹಾರ ಹೆಚ್ಚುತ್ತಾ ಹೋಗುವುದು. ಒಂದು ದಿನ ನಮ್ಮ ದೇಶದ ಕ್ಷಿಪಣಿಗಳಲ್ಲಿಯೇ ನಾವು ಚಂದ್ರಲೋಕಕ್ಕೆ ಯಾತ್ರೆಗೆಯ್ಯಬಹುದು. ವಿಜ್ಞಾನವು ಇನ್ನೂ ಗೂಢವೆಂದು ತಿಳಿದ ಲೋಕಗಳ ರಹಸ್ಯವನ್ನು ನಮ್ಮ ವಿಜ್ಞಾನಿಗಳು ನಮ್ಮ ಭಾಷೆಗಳಲ್ಲಿಯೇ ಅಭಿವ್ಯಕ್ತಿಸಬಹುದು. ಆಗ ಜಗತ್ತಿನ ಉಳಿದ ಭಾಷೆಗಳಿಗೆ ಈ ವಿಷಯ ನಮ್ಮ ಭಾಷೆಗಳಿಂದಲೇ ತರ್ಜುಮೆಯಾಗಿ ಹೋಗಬೇಕಾಗಬಹುದು. ಉಳಿದ ಜ್ಞಾನಕ್ಷೇತ್ರಗಳಿಗೂ ಈ ಮಾತು ಅನ್ವಯಿಸುತ್ತದೆ. ಇದು ಸಂಭವಿಸಿದಾಗ ನಮ್ಮ ಭಾಷೆಗಳು ಪ್ರೌಢವಾಗುತ್ತವೆ, ಅವೇ ಭಾಷೆಗಳಾಗುತ್ತವೆ. +ಇಂಗ್ಲಿಷು ಕೇಂದ್ರಾಧಿಕೃತ ಭಾಷೆಯಾಗಿ ಅನಿರ್ದಿಷ್ಟವಾಗಿ ಮುಂದುವರಿಯಬೇಕು. ಅದು ವಿಶ್ವವಿದ್ಯಾನಿಲಯಗಳ ಮಾಧ್ಯಮವಾಗಿ ಮುಂದುವರಿಯಬೇಕೆಂದು ಯಾರೂ ಹೇಳಲಾರರು. ನಿಜವಾಗಿ ಈಗಿಂದೀಗ ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಏಕೆಂದರೆ ಇಂಗ್ಲಿಷಿನಲ್ಲಿ ದೋಷರಹಿತವಾಗಿ ಬರೆಯುವವರು ಇಂದು ಬಹಳವಾದರೆ ಶೇಕಡ ೫ ವಿದ್ಯಾರ್ಥಿಗಳೆಂದು ಹೇಳಬಹುದು. +ಹೊರಗಿನಿಂದ ಬಂದವರಿಗಾಗಿ ಒಂದೋ ಎರಡೋ ಕಾಲೇಜುಗಳನ್ನು ಮೀಸಲಾಗಿಟ್ಟು ವಿಶ್ವವಿದ್ಯಾನಿಲಯಗಳ ಮಾಧ್ಯಮವು ರಾಜ್ಯದಲ್ಲಿ ಎಂದೋ ಕನ್ನಡವಾಗಬೇಕಾಗಿತ್ತು. ಅಷ್ಟೊಂದಾಗಿ ಕನ್ನಡ ಇಂದು ಬೆಳೆದಿದೆಯಲ್ಲದೆ ಇನ್ನೂ ಅವಕಾಶವಿದ್ದರೆ ಪ್ರಾಧ್ಯಾಪಕರು ಕಲಿಸಿದಂತೆಲ್ಲ ಅದರ ಬಳಕೆ ಹೆಚ್ಚಾಗಿ ಹೆಚ್ಚು ಸಹಜವಾದ, ಸಮಂಜಸವಾದ ಅಭಿವ್ಯಕ್ತಿಗೆ ದಾರಿಯಾಗುತ್ತದೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದು ಹಾಗೂ ಅದನ್ನು ಮಾಧ್ಯಮವಾಗಿ ಬಳಸುವುದೂ ಭಿನ್ನಭಿನ್ನ ವಿಷಯಗಳಾಗಿವೆ. +ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಇಂಗ್ಲಿಷು-ಮಾಧ್ಯಮ ಶಾಲೆಗಳು ಅತಿಯಾಗಿ ಬೆಳೆದದ್ದು ಒಂದು ವಿಶಿಷ್ಟ ಲಕ್ಷಣವಾಗಿದೆ. ತಮ್ಮ ಮಕ್ಕಳು ಇಂಗ್ಲಿಷು ಚೆನ್ನಾಗಿ ಕಲಿಯಬೇಕೆಂಬ ಸದಿಚ್ಛೆಯಿಂದ ನಾಗರೀಕರು ಈ ಪ್ರಾದುರ್ಭಾವವನ್ನು ಸ್ವಾಗತಿಸಿದ್ದಾರೆ. ಆದರೆ ಇದು ಅಜ್ಞಾನದ ಫಲವೆಂದು ನಾವು ಹೇಳದಿರಲಾರೆವು. ಅಂತರ ಪ್ರಾಂತೀಯ ಅಗತ್ಯಗಳಿದ್ದಲ್ಲಿ ಇದು ಅನಿರ್ವಾಹಪಕ್ಷದ ಮಾತಾಗಬಹುದು. ಆದರೆ ಇಂಗ್ಲಿಷನ್ನು ಪ್ರಾಥಮಿಕ ಹಂತದಿಂದ ಮಾಧ್ಯಮವನ್ನಾಗಿ ಮಾಡಿದರೆ ಇಂಗ್ಲಿಷು ಭಾಷೆ ಮಕ್ಕಳಿಗೆ ಚೆನ್ನಾಗಿ ಬರುವುದೆಂದು ತಿಳಿಯುವುದು ಕೇವಲ ಭ್ರಮೆ. ಇಂದು ಕಾಲೇಜುಗಳಲ್ಲಿ ಇಂಗ್ಲಿಷು ಮಾಧ್ಯಮವಿದೆ. ಆದರೆ ಇಂದಿನ ಅನೇಕಾನೇಕ ಪದವೀಧರರಿಗೆ ಇಂಗ್ಲಿಷಿನಲ್ಲಿ ದೋಷರಹಿತವಾಗಿ ಒಂದು ವಾಕ್ಯವನ್ನೂ ಸಹ ಬರೆಯುವುದಾಗುವುದಿಲ್ಲವೆಂದು ಸಾರ್ವಜನಿಕ ಆರೋಪಣೆ ಇದೆ. ಕಾರಣವಿಷ್ಟೆ-ಒಂದು ಭಾಷೆಯಾಗಿ ಮಾತ್ರ (ಮಾಧ್ಯಮವಲ್ಲ) ಇಂಗ್ಲಿಷನ್ನು ಕಲಿಸಬೇಕು. ಕಲಿಸುವಾಗ ಕಲಿಸಿದಷ್ಟು ಇಂಗ್ಲಿಷು ಶುದ್ಧವಾಗಿರುವಂತೆ ಶಿಕ್ಷಕ, ಪಠ್ಯಪುಸ್ತಕ, ಕಲಿಸುವ ಪದ್ಧತಿ ಎಲ್ಲೆಡೆ ಬದಲಾವಣೆಯಾಗಿದೆಯೆಂದು ಖಾತ್ರಿ ಮಾಡಿಕೊಳ್ಳಬೇಕು. ಅಲ್ಲದೆ ಇಂದಿನ ಬದಲಾದ ವಾತಾವರಣದಲ್ಲಿ ಮೊದಲಿನಂತೆ ಇಂಗ್ಲಿಷು ಕಲಿಸುವುದು ಸಾಧ್ಯವಿಲ್ಲ: ನಮ್ಮ ವಿಷಯವನ್ನು ಆಳವಾಗಿ ತಿಳಿದುಕೊಳ್ಳಲು ಓದಬೇಕಾದ ವಾಙ್ಮಯದ ಅರ್ಥಗ್ರಹಣಕ್ಕಾಗಿ(ಕಾಂಪ್ರಹೆನ್ಷನ್) ಅದು ಇದೆಯೆಂಬುದನ್ನು ತಿಳಿದು ಅದನ್ನೇ ನಮ್ಮ ಇಂಗ್ಲಿಷು ಪಠ್ಯಕ್ರಮದ ಮುಖ್ಯ ಗುರಿಯನ್ನಾಗಿ ಮಾಡಬೇಕು. ಬಳಕೆ ಮಾತಿನ ಇಂಗ್ಲಿಷು (ಸ್ಪೋಕನ್ ಇಂಗ್ಲಿಷು) ಬರವಣಿಗೆಯ ಇಂಗ್ಲಿಷು (ರಿಟನ್ ಇಂಗ್ಲಿಷ್)-ಇವುಗಳಿಗಾಗಿ ಬೇರೆ ಸರ್ಟಿಫಿಕೇಟ್ ಅಭ್ಯಾಸ ಕ್ರಮಗಳನ್ನು ಏರ್ಪಡಿಸಬೇಕು. +ಇಂಗ್ಲಿಷಿನ ಮಹತ್ವವೇನು? ಇಂದಿಗೆ ಇಂಗ್ಲಿಷು ಇಡೀ ಜಗತ್ತಿನ ಭಾಷೆಯಾಗಿದೆ, ಇಂಗ್ಲಿಷ್ ಬಲ್ಲವ ಲೋಕವನ್ನೆಲ್ಲ ಸಂಚರಿಸಿ ಬರಬಲ್ಲ, ಪರದೇಶಗಳೊಡನೆ ಸಲೀಸಾಗಿ ತನ್ನ ವ್ಯವಹಾರ ಸಾಗಿಸಬಲ್ಲ. ಜಗತ್ತಿನ ವಾಙ್ಮಯವೆಲ್ಲ-ವಿಜ್ಞಾನ ಸಂಶೋಧನೆಗಳೆಲ್ಲ-ಇಂಗ್ಲಿಷ್‌ನಲ್ಲಿ ಉಪಲಬ್ಧವಾಗಿವೆ. ಇಂಗ್ಲಿಷಿನಲ್ಲಿ ಪತ್ರಿಕಾಸಾಹಿತ್ಯವನ್ನೋದಿ ದಿನದಿನಕ್ಕೆ ತನ್ನ ವಿಶಿಷ್ಟ ಕ್ಷೇತ್ರದಲ್ಲಿ ಅದು ಉದ್ಯಮವಿರಲಿ, ವಾಣಿಜ್ಯವಿರಲಿ, ವಿಜ್ಞಾನವಿರಲಿ, ಸಾಹಿತ್ಯವಿರಲಿ-ಏನು ನಡೆದಿದೆಯೆಂಬುದನ್ನು ವ್ಯಕ್ತಿ ತಿಳಿದುಕೊಳ್ಳಬಹುದು. ಒಮ್ಮೊಮ್ಮೆ ರಷ್ಯನ್, ಜರ್ಮನ್-ಫ್ರೆಂಚ್ ಭಾಷೆಗಳ ಜ್ಞಾನವಿದ್ದರೆ ಚೆನ್ನಾಗಿತ್ತೆಂದು ಅನಿಸುವುದುಂಟು. ಆದರೆ ನೂರಕ್ಕೆ ನೂರರಷ್ಟಲ್ಲದಿದ್ದರೂ ನೂರಕ್ಕೆ ಎಂಭತ್ತರಷ್ಟಾದರೂ ಪೂರ್ಣ ಹಾಗೂ ಆಧುನಿಕ ಜ್ಞಾನವನ್ನು ಸಂಪಾದಿಸಬಲ್ಲೆನೆಂಬ ಭರವಸೆ ಇಂಗ್ಲಿಷು ಬಲ್ಲವನಿಗೆ ಇರುತ್ತದೆ. +ಎರಡನೆಯದಾಗಿ, ನಮ್ಮ ದೇಶದಲ್ಲಿಯೇ ಇಂಗ್ಲಿಷಿಲ್ಲದೆ ಇಲ್ಲಿಯ ಉದ್ಯಮ-ವ್ಯವಹಾರ ಕ್ಷೇತ್ರಗಳಲ್ಲಿ ಪ್ರವೇಶ ದುರ್ಗಮ ಬಹುತೇಕ ಅಸಾಧ್ಯವೆಂದು ಹೇಳಬಹುದು. ಅಂತರರಾಜ್ಯ ಜೀವನ ಇಂಗ್ಲಿಷಿಲ್ಲದೆ ಕಠಿಣವಾಗುತ್ತದೆ. ಬೆಂಗಳೂರಿನಲ್ಲಿಯೇ ಇಂಗ್ಲಿಷು ಬಾರದಿದ್ದರೆ ಅನೇಕ ಉದ್ಯೋಗವೃತ್ತಗಳಲ್ಲಿ ಪ್ರವೇಶ ದೊರೆಯುವುದಿಲ್ಲ. +ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಹ ಇಂಗ್ಲಿಷಿನ ವಿಕೃತರೂಪ ಉಳಿದುಕೊಂಡಿದೆ. ಅದು ಎಂಥ ಇಂಗ್ಲಿಷೆಂಬುದನ್ನು ನಾವು ಕೇಳುವುದು ಬೇಡ. +ಮೂರನೆಯದಾಗಿ, ಇಂಗ್ಲಿಷು ಎರಡು ಕೇಂದ್ರಾಧಿಕೃತ ಭಾಷೆಗಳಲ್ಲಿ ಒಂದಾಗಿದೆ. ವಿಶೇಷತಃ ದಕ್ಷಿಣ ಹಿಂದೂಸ್ಥಾನದಲ್ಲಿ ಸಂಪರ್ಕಭಾಷೆಯೆಂದು ಇದು ಪ್ರಚಲಿತವಾಗಿದೆ. ಕೇಂದ್ರಸರ್ಕಾರದ ಸೇವಾಶಾಖೆಗಳಲ್ಲಿ ಒಂದನ್ನು ಸೇರಲಿಚ್ಛಿಸುವವರಿಗೆ ಇಂಗ್ಲಿಷು ಬಾರದಿದ್ದರೆ ನಡೆಯುವುದಿಲ್ಲ. ಕೇಂದ್ರಸರ್ಕಾರ ಸ್ಥಾಪಿಸಿದ ಸ್ವಾಯತ್ತತೆಯುಳ್ಳ ಸಂಸ್ಥೆಗಳಲ್ಲಿಯೂ, ಕಾರ್ಖಾನೆಗಳಲ್ಲಿಯೂ ಇಂಗ್ಲಿಷೇ. ದಕ್ಷಿಣ ಹಿಂದೂಸ್ಥಾನದಲ್ಲಿ ಇಂಗ್ಲಿಷೇ ವ್ಯವಹಾರದ-ಪತ್ರವ್ಯವಹಾರದ ಭಾಷೆಯಾಗಿದೆ. ಉತ್ತರದಲ್ಲಿ ಹಿಂದಿಗೂ ಆಸ್ಪದವಿದೆ. +‘ದಕ್ಷಿಣ’ ಎಂದು ಹೇಳಿದಾಗ ‘ಪೂರ್ವ’ ಹಿಂದೂಸ್ಥಾನದ ಕೆಲವು ಭಾಗಗಳಿಗೂ-ಬಂಗಾಳ, ಒರಿಸ್ಸಾ, ಅಸ್ಸಾಂ ರಾಜ್ಯಗಳಿಗಾದರೂ-ಈ ಮಾತು ಅನ್ವಯಿಸುತ್ತದೆಂದು ತಿಳಿಯಬಹುದು. ಪಶ್ಚಿಮ ಹಿಂದೂಸ್ಥಾನ್ (ಗುಜರಾತ್, ಮಹಾರಾಷ್ಟ್ರ) ಹಿಂದೀಗೆ ಸಮೀಪವಿರುವ ಭಾಷೆಗಳನ್ನು ಹೊಂದಿರುವುದರಿಂದ ಅಲ್ಲಿ ಹಿಂದಿಯೂ ಆಗಬಹುದು, ಇಂಗ್ಲಿಷೂ ಆಗಬಹುದು. ಅದು ವೈಯುಕ್ತಿಕ ಅಭಿರುಚಿಯನ್ನು ಅವಲಂಬಿಸಿರುತ್ತದೆ. ಆದರೆ ದಕ್ಷಿಣ ಹಿಂದೂಸ್ಥಾನದ ಭಾಷೆಗಳ ಲಿಂಗ-ವ್ಯಾಕರಣ ಇಂಗ್ಲಿಷಿನಂತೆಯೇ ಇದೆ, ಹಿಂದೀಯಂತಲ್ಲ. ಉದಾಹರಣಾರ್ಥ ಇಂಗ್ಲಿಷಿನಲ್ಲಿಯೂ ದ್ರಾವಿಡಭಾಷೆಗಳಲ್ಲಿಯೂ ಪ್ರತಿಯೊಂದು ಶಬ್ದಕ್ಕೆ ಅದರ ಲಿಂಗವಿರುವುದಿಲ್ಲ. (ಃಈ) ಇದು ಪುರುಷರಿಗೆ, (ಷೀ) ಎಂಬುದು ಮಹಿಳೆಯರಿಗೆ ಹಾಗೂ (ಇಟ್) ಎಂಬುದು ನಿರ್ಜೀವ ವಸ್ತುಗಳಿಗೆಂದು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತದೆ. +ಮಧ್ಯ ಹಿಂದೂಸ್ಥಾನದಲ್ಲಿ ಹಿಂದಿಯೇ ಮುಖ್ಯವಾಗಿದೆ. ರಾಜಾಸ್ತಾನಿಯು ಮೈಥಿಲಿಯಂತೆ ಬೇರೆ ಭಾಷೆಯೆಂದು ಗಣನೆಯಾಗಿದ್ದರೂ ಇವೆಲ್ಲಾ ಹಿಂದಿಯ ಉಪಭಾಷೆಗಳೇ ಆಗಿವೆ. +‘ಏನೇ ಇರಲಿ, ಹಲವಾರು ಮಹತ್ವದ ಕಾರಣಗಳಿಗೋಸ್ಕರ, ವಿಶೇಷತಃ ಜಾಗತಿಕ ಭಾಷೆ ಹಾಗೂ ಜಾಗತಿಕ ಜ್ಞಾನ-ವಿಜ್ಞಾನದ ಮಾಧ್ಯಮವೆಂದು ಇಂಗ್ಲಿಷು ಪ್ರಮುಖ ಭಾಷೆಯಾಗಿದೆ. ವಿದ್ಯಾರ್ಥಿಗಳು ಇಂಗ್ಲಿಷನ್ನು ಕಲಿಯಲಿಚ್ಛಿಸುವುದು ಸಹಜವಾಗಿದೆ. ಆದರೆ ಅದರ ಅಭ್ಯಾಸವನ್ನು ಶಾಕೋಪಶಾಖೆಯಾಗಿ ಮಾಡಿ ಅರ್ಥಗ್ರಹಣ, ಬಳಕೆಮಾತಿನ ಇಂಗ್ಲಿಷು ಬರವಣಿಗೆಯ ಇಂಗ್ಲಿಷು ಎಂದು ಅದನ್ನು ಭಾಗಶಃ ಅಭ್ಯಸಿಸುವ ಮಾರ್ಗವನ್ನು ಅನುಸರಿಸಬೇಕು. ಮಾಧ್ಯಮಿಕ ಶಾಲೆಗಳಲ್ಲಿ ಅರ್ಥಗ್ರಹಣಕ್ಕಾಗಿ ಮಾತ್ರ ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದು. +(೬) ಸಂಸ್ಕೃತದ ಸ್ಥಾನ +ಸಂಸ್ಕೃತದ ಉಲ್ಲೇಖ ಇನ್ನೂವರೆಗೆ ಈ ವರದಿಯಲ್ಲಿ ಆಗಿಲ್ಲ. ಸಂಸ್ಕೃತದ ಸ್ಥಾನ ಮಾಧ್ಯಮಿಕ ಪಠ್ಯಕ್ರಮದಲ್ಲಿ ವಿವಾದಾಸ್ಪದ ವಿಷಯವಾಗಿದ್ದರಿಂದ ಈ ಸಮಿತಿಯು ಅಸ್ತಿತ್ವದಲ್ಲಿ ಬಂದಿದೆ. ಇಲ್ಲಿಯವರೆಗೆ ಸಿದ್ಧಗೊಳಿಸಿದ ಹಿನ್ನೆಲೆಯಲ್ಲಿ ನಾವು ಸಂಸ್ಕೃತದ ಸ್ಥಾನವನ್ನು ಕುರಿತು ವಿಶ್ಲೇಷಿಸಬಹುದು. +ಸಂಸ್ಕೃತವು ಎಲ್ಲ ಭಾರತೀಯರಿಗೂ ಅಭಿಮಾನಾಸ್ಪದವಿರಬೇಕಾದ ಭಾಷೆ. ತಿರುಗ್ವೇದವು ವಿಶ್ವವಾಙ್ಮಯದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ರೂಪಗೊಂಡಿರುವ ಹಾಗೂ ಉಳಿದು ಬಂದಿರುವ ಕಾವ್ಯಸಂಗ್ರಹವಾಗಿದೆ. ಸಂಸ್ಕೃತದ ಪ್ರಾಚೀನತೆಯು ಕನಿಷ್ಠ ಪಕ್ಷಕ್ಕೆ ೫೦೦೦ ವರ್ಷಗಳನ್ನು ಮೀರಿದೆ. ಈ ಅವಧಿಯಲ್ಲೆಲ್ಲ-ನಡು ನಡುವೆ ಬಹು ದೊಡ್ಡ ಆತಂಕಗಳೂ ಬಂದರೂ-ಸಂಸ್ಕೃತವು ಸಾಹಿತ್ಯಭಾಷೆಯಾಗಿ ಮುಂದುವರೆಯಿತು. ಗ್ರಾಂಥಿಕಭಾಷೆಗೂ ಬಳಕೆಮಾತಿಗೂ ಭೇದ ಬಹಳವಾದಾಗ ವ್ಯಾವಹಾರಿಕ ಭಾಷೆಗಳು (ಪಾಲಿ, ಅರ್ಧ ಮಾಗಧಿ) ಬುದ್ಧ ಹಾಗೂ ಮಹಾವೀರರ ಕಾಲದಲ್ಲಿ ಧಾರ್ಮಿಕ ಸಾಹಿತ್ಯದ ಭಾಷೆಗಳಾದುವು. ಕ್ರಮೇಣ ಸಂಸ್ಕೃತ ಜನ್ಯ ಪ್ರಾಕೃತಗಳಿಂದ ಹಿಂದೀ, ಬಂಗಾಲಿ, ಮೊದಲಾದ ಭಾಷೆಗಳು ತಲೆಯೆತ್ತಿ ತಾವೇ ಸಾಹಿತ್ಯದ ವಾಹಕಗಳಾದುವು. ಆದರೆ ಭಾರತದ ತುಂಬೆಲ್ಲ ಸಾಹಿತ್ಯಕ್ಕೂ ಪಂಡಿತರ ಸಭೆಗಳಿಗೂ, ಶಾಸನಗಳಿಗೂ ಸರ್ವಸಾಮಾನ್ಯಭಾಷೆಯಾಗಿ ಅನೇಕಾನೇಕ ಶತಮಾನಗಳವರೆಗೆ ಸಂಸ್ಕೃತವು ನಡೆದುಕೊಂಡು ಬಂದಿತು. ಫಾರ್ಸಿ ಹಾಗೂ ಮುಂದೆ ಇಂಗ್ಲಿಷು ಮತ್ತು ಪ್ರಾದೇಶಿಕ ಭಾಷೆಗಳು ಅದರ ಸ್ಥಾನವನ್ನು ಆಕ್ರಮಿಸಿದಂತೆ ಸಂಸ್ಕೃತವು ವಿಶೇಷತಃ ಧಾರ್ಮಿಕ ಹಾಗೂ ಶಾಸ್ತ್ರೀಯ ಸಾಹಿತ್ಯದ (ಅಲಂಕಾರ ಶಾಸ್ತ್ರ, ಆಯುರ್ವೇದ, ವ್ಯಾಕರಣ, ದರ್ಶನ, ಇತ್ಯಾದಿ) ಭಾಷೆಯಾಗಿ ಹಾಗೂ ಪಂಡಿತರ ಸಭೆಗಳ ಮಾಧ್ಯಮವಾಗಿ ಉಳಿದುಕೊಂಡಿತು. +ಸಂಸ್ಕೃತವು ಒಂದು ಗ್ರಾಂಥಿಕಸ್ತರಕ್ಕೆ ಒಂದು ಆ ಸ್ತರದ ಶೈಲಿ, ಅಲಂಕಾರ, ವ್ಯಾಕರಣ ಮುಂತಾದ ಲಕ್ಷಣಗಳು ಇನ್ನೂ ಹಾಗೆಯೇ ಉಳಿದುಕೊಂಡಿರುವಾಗ, ಪ್ರಾಕೃತ ಹಾಗೂ ಮುಂದೆ ಪ್ರಾದೇಶಿಕ ಭಾಷೆಗಳು ಜನತೆಯ ಸಾಹಿತ್ಯದ ಭಾಷೆಗಳಾಗುತ್ತಾ ಬೆಳೆದುವು. ಆಗ ಒಂದು ಸ್ಥಿರ, ಮಾರ್ಗೀಯ, ಗ್ರಾಂಥಿಕ ಇಲ್ಲವೆ ಕ್ಲಾಸಿಕಲ್ ಮಾದರಿಯಲ್ಲಿ ಹಾಗೆಯೇ ಉಳಿದುಕೊಂಡಿದ್ದ ಗ್ರಾಂಥಿಕ ಸಂಸ್ಕೃತವು ಅಳಿಯಲೂ ಇಲ್ಲ, ಬೆಳೆಯಲೂ ಇಲ್ಲ, ಅದು ಪರಿವರ್ತನಾತೀತವಾಯಿತು. +ಇದೇ ಗ್ರಾಂಥಿಕ ರೂಪದಲ್ಲಿಯೇ ಅದು ಪಂಡಿತರ ಬಳಕೆಯ ಮಾತೂ ಆಯಿತು. ಸಂಸ್ಕೃತದ ಈ ‘ಸ್ಥಿರ’ ಭಾಷಾ ರೂಪವೇ ‘ಮೃತ’ ವೆಂದಿರುವ ಭಾಷೆಯಲ್ಲಿಯ ಜೀವಂತ ಅಂಶವೆಂದು ಎತ್ತಿ ತೋರಿಸಬಹುದು. ಅಲ್ಲದೆ ‘ಜೀವಂತ’ ಭಾಷೆಗಳಲ್ಲಿಯೂ ‘ಮೃತ’ ಅಂಶಗಳಿರುತ್ತವೆಂಬುದನ್ನು ನಾವು ಮರೆಯುವಹಾಗಿಲ್ಲ. ಇಂಗ್ಲಿಷ್‌ನಲ್ಲಿ ಬಳಸುವ ಅನೇಕ ಶಬ್ದಗಳಿಗೆ ಹಾಗೂ ಔಷಧದ ಹೆಸರುಗಳಿಗೆ ಎಂ.ಬಿ.ಬಿ.ಎಸ್ ಡಾಕ್ಟರರ ಭಾಷೆಯಲ್ಲಿ ಮಾತ್ರ ‘ಅಸ್ತಿತ್ವ’ವಿದೆ. ಉಳಿದವರಿಗೆ ಆ ಶಬ್ದಗಳ ಅರ್ಥ ಸುಲಭವಾಗಿ ಆಗುವುದಿಲ್ಲ. ಇದೇ ರೀತಿಯಾಗಿ ಪ್ರತಿಯೊಂದು ವೈಜ್ಞಾನಿಕ ಕ್ಷೇತ್ರದಲ್ಲಿಯೂ ಅದರ ಪಾರಿಭಾಷಿಕ ಶಬ್ದಗಳಿವೆ. ಪ್ರಾಚೀನ ಹಾಗೂ ಅರ್ವಾಚೀನ ಭಾಷೆಗಳನ್ನು ‘ಮೃತ’ ಹಾಗೂ ‘ಜೀವಂತ’ ಎಂದು ವರ್ಣಿಸುವುದು ಸಾಧುವಾಗಲಾರದು. ಏಕೆಂದರೆ, ಮೇಲೆ ಚರ್ಚಿಸಿದಂತೆ ಪ್ರಾಚೀನ ಭಾಷೆಗಳಲ್ಲಿ ‘ಜೀವಂತ’ ಅಂಶಗಳೂ ಹಾಗೂ ಅರ್ವಾಚೀನ ಭಾಷೆಗಳಲ್ಲಿ ‘ಮೃತ’ ಅಂಶಗಳೂ ದೊರೆಯುವುದುಂಟು. +ಆದರೆ ಅರ್ವಾಚೀನ ಭಾಷೆಗಳಂತೆ ಒಂದು ‘ಸ್ಥಿರ’ ಭಾಷೆಯು ಸೃಜನಶೀಲತೆಯನ್ನು ಹೊಂದಿದೆಯೆಂದು ಹೇಳಲು ಬರುವುದಿಲ್ಲ. ಅವುಗಳಂತೆ ಅದು ಎದೆ ಹಾಲಿನ ಭಾಷೆಯಾಗುವುದಿಲ್ಲ. ಪ್ರತಿಯೊರ್ವ ತಾಯಿ ಮಗುವಿಗೆ ಆ ಭಾಷೆಯಲ್ಲಿ ಗುಟುಕು ಕೊಡುತ್ತಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಅದು ಬೆಳೆದು ಮಾರ್ಪಟ್ಟು, ಅದರ ವ್ಯಾಕರಣದಲ್ಲಿ-ವಾಕ್ಯರಚನೆಯಲ್ಲಿ ಸಹ ಗೊತ್ತಿಲ್ಲದೆ-ಬದಲಾವಣೆಗಳಾಗಿ ಚತುರ್ವೇದ ಸಂಹಿತೆಗಳ ಸಂಸ್ಕೃತ ಔಪನಿಷದ ಸಂಸ್ಕೃತವಾದಂತೆ, ಔಪನಿಷದ ಸಂಸ್ಕೃತ ಪೌರಾಣಿಕ ಸಂಸ್ಕೃತವಾದಂತೆ. ನಮಗೆ ಗೊತ್ತಿದ್ದ ‘ಸ್ಥಿರ’, ಮಾರ್ಗೀಯ ಸಂಸ್ಕೃತ ವಿಕಸನ ಪೂರ್ಣವಾಗುತ್ತಿಲ್ಲ. ಇಂಗ್ಲಿಷಿನ ಪ್ರಭಾವದ ಮೂಲಕ ಅಲ್ಲಲ್ಲಿ ಅಂತಹದು ಅನುಕರಣಗಳು ಕಂಡರೂ ಅವು ಕೃತ್ರಿಮ ಭಾಷಾರೂಪದಲ್ಲಿ ಮಾತ್ರ ಕಂಡು ಬರುವ ವಿಕಾಸ. ಹುಡುಗರು ಗೋಲಿಗುಂಡನ್ನಾಡುವಾಗ, ಜನ ಓಣಿಯಲ್ಲಿ ಜಗಳ ಮಾಡುವಾಗ, ಗಂಡ-ಹೆಂಡಿರು ಒಬ್ಬರಿಗೊಬ್ಬರು ಬಯ್ದಾಡುವಾಗ, ಮಗು ಒಂದೇ ಮೂಲೆಯಲ್ಲಿ ಕುಳಿತುಕೊಂಡು ತನ್ನಷ್ಟಕೆ ತಾನೆ ಮಾತನಾಡುತ್ತಿರುವಾಗ, ದನಗಾಹಿ ಹೆಸರುಗೊಂಡು-ಒಮ್ಮೊಮ್ಮೆ ವಿಶಿಷ್ಟ ಆಲಂಕಾರಿಕ ಹೆಸರುಗಳನ್ನು ಕೊಟ್ಟು ತನ್ನ ದನವನ್ನು ಕರೆದು ಒಟ್ಟುಗೂಡಿಸುವಾಗ-ಹೀಗೆ ಇನ್ನೂ ಅನೇಕ ವಿಧದಲ್ಲಿ ಸಹಜವಾಗಿ ಹುಟ್ಟಿಕೊಳ್ಳುವ ಭಾಷೆ ಮಾರ್ಗೀಯ ಸಂಸ್ಕೃತವಲ್ಲ. ಹಿಂದೆ ಆ ಮಾತೃ ಪದವಿಯನ್ನು ಅನುಭವಿಸಿ ಸಂಸ್ಕೃತವು ಪ್ರಾಕೃತ ಹಾಗೂ ಉತ್ತರದ ಪ್ರಾದೇಶಿಕ ಭಾಷೆಗಳ ತಾಯಿಯಾಯಿತು. ದ್ರಾವಿಡ ಭಾಷೆಗಳ ಸಾಕುತಾಯಿಯಾಯಿತು. ಸಂಸ್ಕೃತದ ಒಂದು ಮಾರ್ಗೀಯ ರೂಪಕ್ಕೆ ಒದಗಿದ ಸ್ಥೈರ್ಯ ಮತ್ತೆ ಅಂಥ ಮಾತೃತ್ವವನ್ನು ಗಳಿಸಬಹುದು. ಆದರೆ ಅದಕ್ಕಾಗಿ ಅತ್ಯಂತ ಅಪರೂಪವಾದ ಪರಿಸ್ಥಿತಿಯ ವೈಚಿತ್ರ್ಯ ಅಸ್ತಿತ್ವದಲ್ಲಿ ಬರಬೇಕಾಗುತ್ತದೆ. +***** +ಮುಂದುವರೆಯುವುದು +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ […] +ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಳು ಕಾರ್ಯಕ್ರಮ : ಎಚ್.ಎ.ಎಲ್.ನ ‘ವಿಮಾನ’ ಸಂಘದ ವಾರ್ಷಿಕೋತ್ಸವ ಮತ್ತು ಹಿರಿಯ ನಟ ಅಶ್ವತ್‌ರವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸ್ಥಳ : ಡಾ||ರಾಜ್‌ಕುಮಾರ್ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ದಿನಾಂಕ […] +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_646.txt b/Kannada Sahitya/article_646.txt new file mode 100644 index 0000000000000000000000000000000000000000..7b7c895dc32b28a87cb50873cff999350a141348 --- /dev/null +++ b/Kannada Sahitya/article_646.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿಲ್ಪಿಯೋಗಿಯ ಕೈಗೆ +ಸಿಕ್ಕಿದ ಒರಟು ಕಲ್ಲು +ಕೇವಲ ಕಲೆಯಲ್ಲ, +ಅತ್ಯದ್ಭುತ ಮಿರಾಕಲ್ಲು. +***** +ಸಿನೀ ಮೋಹ ವಿಲಾ ಮೋಹ ದಷ್ಟೆ ದಿಗ್ಗೇಡಿ. ***** +ರವಿ ಕೂತಿದ್ದಾನೆ ಪಡುವಣದ ಅಂಗಡಿಯಲ್ಲಿ ಸೀರೆಗಳ ಹ ರವಿ. ***** +`ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_647.txt b/Kannada Sahitya/article_647.txt new file mode 100644 index 0000000000000000000000000000000000000000..87b7b22697de84c99ef61b9b65b90e9b64c50919 --- /dev/null +++ b/Kannada Sahitya/article_647.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- +ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ +ರೇಶಿಮೆಯ ನುಣುಪನ್ನು +ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು +ಮರೆಯಲಾರೆ. +ಮಲಗಿದ್ದಾರೆ ಸುಭದ್ರೆ ಅಭಿಮನ್ಯು. ಅವನಿಗೆ ಐದು ತುಂಬಿತು +ಮೊನ್ನೆ, ಬೆಳಕಿಂಡಿಯಿಂದಿಣುಕಿ ಸಪ್ತಮಿ ಚಂದ್ರ +ನೆನಪು ಬೆಳದಿಂಗಳನು ಸುರಿಸಿ ನಗುತ್ತುದ್ದಾನೆ, ನಿನ್ನ ಕಾಗಗದಂತೆ- +“ನಿನಗೇನು ಕಡಿಮೆ, ದ್ರೌಪತಿಯ, ಪ್ರಮೀಳೆಯ, ಚಿತ್ರಾಂಗದೆಯ +ಸುಭದ್ರೆಯ, ಊರ್ವಶಿಯ ಪ್ರೀತಿಯಿದೆ”ಯೆಂದು ಕೆಣಕಿದ್ದಾನೆ. +ನಿನಗೆ ಗೊತ್ತಿಲ್ಲ ಉಲೂಪಿ- +ಸುಭದ್ರೆ ಜೊತೆಗಿದ್ದಾಗ ಪಕ್ಕದಲ್ಲಿದ್ದುದು ಕೃಷ್ಣನೆಂದೇ ಅನಿಸಿ +ದ್ರೌಪತಿಯ ಜೊತೆಗಿದ್ದಾಗ ಅಣ್ಣಂದಿರೊಂದು ಕಡೆಯಿಂದ +ತಮ್ಮಂದಿರಿನ್ನೊಂದು ಕಡೆಯಿಂದ ಅವಳ ಮೈಯಿಂದ ಹೊರಬಂದಂತೆ +ಕಸಿವಿಸಿಯಾಗಿ, ಚಿತ್ರಾಂಗದೆಯ ಸೆರಗು ಬಭ್ರುವಾಹನನಾಗಿ ಇನ್ನು +ಪ್ರಮೀಳೆಯೇ ಗಂಡಸಿನಂತೆ ಮೈಮೇಲೆ ಬೀಳುವಳು. +ಬಾರೆ ಉಲೂಪಿ ಕಾಗದದಲ್ಲೆ ಮೂದಲಿಸಿ +ಕೃಷ್ಣ ಪಕ್ಷಕ್ಕಿನ್ನು ನೂಕಬೇಡ. ನಿನ್ನ ದಪ್ಪನೆಯ +ಕೆಂಪು ಕೆಳದುಟಿಗಿಂತ ಸ್ವರ್ಗಲೋಕದ ಯಾವ ಅಪ್ಸರೆಯು ಬೇಡ +ನಿನ್ನಂತೆ ಮೈಮರೆಸುವವರನ್ನು-ನನ್ನಾಣೆ ಕಂಡಿಲ್ಲ +ಬಾರೆ, ಉಲೂಪಿ +ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. +***** +(ಕಪ್ಪುದೇವತೆ-೧೯೭೧) +ಹವೆ ಹೊತ್ತಿಸುವ ಬಿಸಿ ಬಿಸಿಲು ಬೆಂಕಿ ಬೇಸಗೆ ಧಗೆ ಅಲವರಿಕೆಯಲ್ಲಿ ತಣ್ಣನೆ ಒರೆದಂಗಳಕ್ಕೆ ಮೈ ಚಾಚುವ ಹಿಗ್ಗು ಗಡಚಿಕ್ಕುವ ಧೋಮಳೆ ನಡುಕ ಒದ್ದೆ ಮುದ್ದೆಯ ನಡುವೆ ಒಳಕೋಣೆಯ ಬೆಚ್ಚನೆ ಮೂಲೆ ಲಾಟೀನ ಕೆಳಗೆ ಮಗ್ಗಿ […] +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_648.txt b/Kannada Sahitya/article_648.txt new file mode 100644 index 0000000000000000000000000000000000000000..fe8eae146bd9ca83042b20d02c896406a619e87a --- /dev/null +++ b/Kannada Sahitya/article_648.txt @@ -0,0 +1,80 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೀಠಿಕೆ: +ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲಷ್ಟು ಯೋಗ್ಯತೆಯನ್ನು ಸಂಪಾದಿಸಿ, ಸಮೃದ್ಧವಾಗಿದೆ, ಶ್ರೀಮಂತವಾಗಿದೆ. ಉತ್ತಮ ಗುಣಮಟ್ಟ ಹಾಗೂ ಸಂಖ್ಯಾ ಬಾಹುಳ್ಯದ ದೃಷ್ಟಿಯಿಂದಲೂ, ಕನ್ನಡ ಸಾಹಿತ್ಯವು ಕಾವ್ಯ, ನಾಟಕ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ ಇತ್ಯಾದಿ ಎಲ್ಲ ಪ್ರಕಾರಗಳಲ್ಲೂ ವಿಪುಲವಾಗಿ ಕೃತಿಗಳ ರಚನೆಯಾಗಿದೆ. ಕನ್ನಡದ ಪ್ರಪ್ರಥಮ ಗ್ರಂಥವೆಂದು ಭಾವಿಸಲಾದ ನೃಪತುಂಗನ ‘ಕವಿರಾಜ ಮಾರ್ಗ’ವು ಸುಮಾರು ೧೧೫೦ ವರ್ಷಗಳಷ್ಟು ಹಿಂದೆಯೇ ರಚಿಸಲ್ಪಟ್ಟರೂ, ಸಣ್ಣ ಕಥಾ ಪ್ರಕಾರದ ಚರಿತ್ರೆ ಕೇವಲ ೧೦೦ ವರ್ಷಗಳಷ್ಟು. +ನವೋದಯ ಮಾರ್ಗ: +ಅಧ್ಯಯನ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಸಣ್ಣ ಕಥೆಯ ಪ್ರಕಾರವನ್ನು ಅವಲೋಕಿಸಿದಾಗ, ಅದನ್ನು ಐದು ಹಂತಗಳಲ್ಲಿ ಗುರುತಿಸಬಹುದು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ – ಇವೇ ಈ ಐದು ಯುಗಗಳು. ‘ಸಣ್ಣ ಕಥೆಗಳ ಜನಕ’ ಎಂದೇ ಪರಿಗಣಿಸಲ್ಪಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ನವೋದಯ ಮಾರ್ಗದ ಆದ್ಯ ಪ್ರವರ್ತಕರೆಂದು ಗುರುತಿಸುವುದು ವಾಡಿಕೆ. ೧೯೦೦ರಿಂದ ೧೯೫೦ರವರೆಗೆ ನವೋದಯ ಮಾರ್ಗದಲ್ಲಿ ಕಥೆಗಳನ್ನು ರಚಿಸಿ, ಆ ಮಾರ್ಗವನ್ನು ರೂಢಿಸಿದ ಇತರ ಕೆಲವು ಶ್ರೇಷ್ಠ ಸಾಹಿತಿಗಳೆಂದರೆ ಆನಂದ, ಅಶ್ವತ್ಥ, ಆನಂದಕಂದ, ಪು. ತಿ. ನ., ಗೊರೂರ್ ರಾಮಸ್ವಾಮಿ ಆಯ್ಯಂಗಾರ್, ಎಂ. ವೀ. ಸೀತಾರಾಮಯ್ಯ, ಬಾಗಲೋಡಿ ದೇವರಾಯ, ಭಾರತೀಪ್ರಿಯ, ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಕುವೆಂಪು. ನವೋದಯ ಮಾರ್ಗದ ಸಣ್ಣ ಕಥೆಗಳ ಬಗ್ಗೆ ಕೆಲವು ಲಕ್ಷಣಗಳನ್ನು ಹೇಳುವುದಾದರೆ, ಈ ಕಥೆಗಳಿಗೆ ಒಂದು ತಾರ್ಕಿಕ ಆರಂಭ, ಮಧ್ಯ ಹಾಗೂ ಮಕ್ತಾಯಗಳಿರುತ್ತವೆ. ಸರಳ ಮತ್ತು ನೇರವಾದ ಕಾಲಾನುಕ್ರಮದ ನಿರೂಪಣೆ ಈ ಕಥೆಗಳ ಪ್ರಮುಖ ತಂತ್ರವಾದರೂ, ಕೆಲವೊಮ್ಮೆ ’ಫ಼್ಲಾಶ್‌ಬ್ಯಾಕ್’ ಅಂತಹ ತಂತ್ರಗಳು ಉಪಯೋಗಿಸಲ್ಪಟ್ಟಿರುವುದೂ ಉಂಟು. ಪರಂಪರಾಗತ ಮೌಲ್ಯಗಳನ್ನು ಬಿಂಬಿಸುವ, ಪೋಷಿಸುವ ಮತ್ತು ವೃದ್ಧಿಸುವಂತಹ ವಾತಾವರಣದಲ್ಲಿ ಈ ಕಥೆಗಳನ್ನು ಹೆಣೆದಿರುತ್ತಾರೆ. ಆದರೆ, ಬದುಕಿನಲ್ಲಿ ನೋವು, ಅನ್ಯಾಯ, ದುಷ್ಟತನ – ಇವೆಲ್ಲಾ ಅನಿವಾರ್ಯ. ಸಮಾಜದ ಇಂತಹ ನಿಷ್ಠುರ ಮುಖಗಳನ್ನು ಪರಂಪರಾಗತ ಮೌಲ್ಯದ ತಾಳಿಕೆಯ ಗುಣಗಳನ್ನು ಉದ್ದೀಪಿಸಲು ಎಷ್ಟು ಬೇಕೋ, ಅಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತಾರೆ. ಹೀಗಾಗಿ ತಲತಲಾಂತರಗಳಿಂದ ಬಂದ ಶ್ರದ್ಧೆ, ನಂಬಿಕೆಗಳನ್ನು ಪ್ರಶ್ನಿಸುವಂತಹ ಸನ್ನಿವೇಶ, ಸಂದರ್ಭಗಳು ಎದುರಾದಾಗಲೂ, ಮೌಲ್ಯಗಳ ಚೌಕಟ್ಟಿನಲ್ಲಿಯೇ ಅದಕ್ಕೆ ಪರಿಹಾರವನ್ನು ಸೂಚಿಸುವ ಧೋರಣೆ ಮತ್ತು ಆತ್ಮವಿಶ್ವಾಸ ನವೋದಯ ಕಥೆಗಾರರಲ್ಲಿ ಕಾಣುತ್ತದೆ. ಅಲ್ಲದೆ, ಈ ವರ್ಗದ ಸಾಹಿತಿಗಳು ಜೀವನದಲ್ಲಿ ನೋವುಂಡ ಜೀವಿಗಳ ಬಗ್ಗೆ, ಶೋಷಣೆಗೊಳಗಾದ ಜನಾಂಗದ ಬಗ್ಗೆ ಅನುಕಂಪೆಯನ್ನು ತೋರಿಸುತ್ತಾರೆಯೇ ವಿನಃ, ಈ ಶೋಷಣೆಗೆ ಕಾರಣವಾದ ವ್ಯವಸ್ಥೆಯ ಬಗ್ಗೆ ಆಕ್ರೋಶವನ್ನಾಗಲೀ, ಆರ್ಭಟವನ್ನಾಗಲೀ ಅಥವಾ ಪ್ರತಿಭಟನೆಯನ್ನಾಗಲೀ ವ್ಯಕ್ತಪಡಿಸುವುದಿಲ್ಲ. ಒಂದು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇವೆಲ್ಲಾ ಅನಿವಾರ್ಯ. ಆದರೆ ಇಂತಹ ಅನ್ಯಾಯದ ವಿರುದ್ಧ ಉದ್ವೇಗದಿಂದ ಆಕ್ರೋಶಿಸುವುದರಿಂದಾಗಲೀ, ಬಂಡಾಯವೇಳುವುದರಿಂದಾಗಲೀ, ಬದುಕು ಹಸನಾದೀತೆಂದು ಅವರಿಗೆ ಅನಿಸುವುದಿಲ್ಲ. ಆಕ್ರೋಶ, ಬಂಡಾಯಗಳು ಅಂತಹ ದೊಡ್ಡ ಗುಣಗಳೆಂದೂ ಅವರು ತಿಳಿಯುವುದಿಲ್ಲ. ಬದಲಾಗಿ ಸಂಯಮದಿಂದ, ಅಂತಃಶಕ್ತಿಯಿಂದ ವೈಯಕ್ತಿಕ ನೋವನ್ನು ಗೆಲ್ಲಬಲ್ಲ ಧೀರೋದಾತ್ತತೆ ಅವರಿಗೆ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಈ ಧೀರೋದಾತ್ತತೆ ನವೋದಯ ಮಾರ್ಗದ ಆದ್ಯ ಪ್ರವರ್ತಕರಾದ ಮಾಸ್ತಿಯವರಲ್ಲಿ ನಿಷ್ಕ್ರಿಯೆಯಿಂದ ಬಂದುದಲ್ಲ, ಬದಲಾಗಿ ಬದುಕಿನ ಆಳವಾದ ತಿಳುವಳಿಕೆಯಿಂದ ಬಂದದ್ದು [೩]. +ಪು.ತಿ.ನ. ಅವರ ಕಥೆಗಳು: +ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಆಧುನಿಕ ಕನ್ನಡ ಸಾಹಿತ್ಯದ ಅಪರೂಪದ ಕವಿಗಳು, ವಿದ್ವಾಂಸರು ಮತ್ತು ಚಿಂತಕರು. ಶ್ರೀಯುತರು ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ ಪ್ರಕಾರಗಳಲ್ಲಿ ಹೇರಳವಾಗಿ ಅತ್ಯುತ್ತಮ ಗುಣಮಟ್ಟದ ಕೃತಿಗಳನ್ನು ರಚನೆ ಮಾಡಿದ್ದರೂ, ಇವರು ಬರೆದಿರುವ ಕಥಾ ಸಂಕಲನಗಳು ಬೆರಳೆಣಿಕೆಯಷ್ಟು. ಶ್ರೀಯುತರು ರಚಿಸಿರುವ ‘ರಾಮಾಚಾರಿಯ ನೆನಪು’ ಮತ್ತು ‘ಧ್ವಜ ರಕ್ಷಣೆ’ ಕಥಾ ಸಂಕಲನಗಳಲ್ಲಿ ಒಟ್ಟು ೧೬ ಕಥೆಗಳಿವೆ. ಈ ಕಥೆಗಳ ಬಗ್ಗೆ ವಿಮರ್ಶಾತ್ಮಕ ಪರಿಚಯ ನೀಡುವುದೇ ಈ ಲೇಖನದ ಆಶಯ. (ಪುಟಗಳ ಪರಿಮಿತಿಯಿಂದಾಗಿ, ಇತರ ಕಥಾ ಸಂಕಲನಗಳ ಕಥೆಗಳನ್ನು ಈ ಲೇಖನದಲ್ಲಿ ಸೇರಿಸಿಲ್ಲ.) +೧. ರಾಮಾಚಾರಿಯ ನೆನಪು: +ರಾಮಾಚಾರಿಗೆ ೭ ವರ್ಷವಾದಾಗ ಅವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿಂತು ಬಿಡುತ್ತದೆ. ರಾಮುವೋ ಕರ್ಣನಂತೆ – ತನ್ನ ನಾಶವನ್ನು ತಾನೇ ಕಾಣದಷ್ಟರ ಮಟ್ಟಿಗೆ – ಉದಾರಿಯು. ತಿಂಡಿಗಳಿಂದ ತುಂಬಿರುವ ತನ್ನ ಜೇಬನ್ನು ಗೆಳೆಯರಿಗೆ ತೋರಿಸಿ, ಅವರಲ್ಲಿ ಆಸೆ ಹುಟ್ಟಿಸಿ, ತನ್ನನ್ನು ಅವರ ಆಟದ ನಾಯಕನನ್ನಾಗಿ ಚುನಾಯಿಸಬೇಕೆಂದು ಆಗ್ರಹಪಡಿಸುತ್ತಿದ್ದ. ಗೆಳೆಯರು ತಿಂಡಿಗಾಗಿ ಆಯ್ಕೆಮಾಡಿ, ಅದು ಮುಗಿದ ಕೂಡಲೇ ಅವನನ್ನು ಪದಚ್ಯುತನ್ನನ್ನಾಗಿ ಮಾಡಿಬಿಡುತ್ತಿದ್ದರು! ಅವನಿಗೆ ಹದಿನಾರು ವರ್ಷ ವಯಸ್ಸಾದಾಗ, ಅಪ್ಪನ ವಾರ್ಷಿಕ ತಿಥಿ ಮಾಡಲು ಸಹಾಯ ಕೇಳಲು ರಾಮಾಚಾರಿ ಅವನ ದೊಡ್ಡಮ್ಮನ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ಅವನನ್ನು ಎಲ್ಲರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಔತಣದ ಅಡಿಗೆ ಮಾಡುತ್ತಾರೆ, ಮನೆಗೆ ತೆಗೆದುಕೊಡು ಹೋಗಲು ದವಸ ಧಾನ್ಯಗಳ ಮೂಟೆಯನ್ನೇ ಹೊರಿಸುತ್ತಾರೆ. ರಾತ್ರಿ ಹೊರಗಡೆಗೆ ನೀರಿನ ಚೆಂಬು ತೆಗೆದೆಕೊಂಡು ಹೋದಾಗ, ಹಾವಿನ ಮೇಲೆ ಕಾಲಿಟ್ಟು ದುರದೃಷ್ಟವಶಾತ್ ಸಾವಿನ ವಶವಾಗುತ್ತಾನೆ. +ಈ ಕಥೆಯಲ್ಲಿ ಬಡತನದ ಬೇಗೆಯಲ್ಲಿ ಬೆಳೆಯುತ್ತಿರುವ ಮಗುವಿನ ಹೃದಯ ವಿದ್ರಾವಿಕ ಚಿತ್ರಣವಿದೆ. ಇದು ಕುವೆಂಪು ಅವರು ಬರೆದ ಕಥೆ ‘ಸಾಲದ ಮಗು’ (ದೇವರು ಮತ್ತು ಇತರ ಕಥೆಗಳು) ವನ್ನು ನೆನಪಿಸುತ್ತದೆ. ಅಂದಿನ ಕಾಲದ ಸಾಮಾಜಿಕ ವಾತಾವರಣವನ್ನು, ಹಾಗೂ ಬಾಲ್ಯದ ಹುಡುಗಾಟವನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಇದು ಅನುಕಂಪೆ, ಕರುಣೆಗಳನ್ನು ಬಿಂಬಿಸುವ ನವೋದಯ ಮಾರ್ಗದ ಉತ್ತಮ ಕಥೆಗಳಲ್ಲಿ ಒಂದು. ಮತ್ತೊಂದು ವಿಷಯ: ಪು.ತಿ.ನ. ಅವರು ಕಥೆಯಲ್ಲಿ ಒಂದು ಕಡೆ ಗರುಕೆ ಹುಲ್ಲು ಎಂದು ಕರೆದಿದ್ದಾರೆ; ಬರೀ ಹುಲ್ಲು ಎನ್ನಲಿಲ್ಲ. ಗರುಕೆ ಹುಲ್ಲಿಗೆ ದೇವರನ್ನು ಪೂಜಿಸುವ ಯೋಗ್ಯತೆ ಇದೆ. ಈ ಪದ-ಪ್ರಯೋಗದಿಂದ, ಶ್ರೀಯುತರ ಧಾರ್ಮಿಕ ಬುದ್ಧಿ ಮತ್ತು ದೇವರಲ್ಲಿಟ್ಟಿರುವ ಅಚಲ ಭಕ್ತಿ ವ್ಯಕ್ತವಾಗುತ್ತದೆ. +೨. ನನಸಿಗಿಂತಲೂ ನಿಜವಾದ ಒಂದು ಕನಸು: +ಕಥಾನಾಯಕ ತನ್ನ ಪಕ್ಕದ ಮನೆಯ ಹುಡುಗಿ ರತ್ನಾಳನ್ನು ಗಾಢವಾಗಿ ಮತ್ತು ಗೂಢವಾಗಿ ಪ್ರೀತಿಸುತ್ತಿರುತ್ತಾನೆ. ಹೀಗೊಂದು ದಿನ ಮಧ್ಯಾಹ್ನ ಮಲಗಿದ್ದಾಗ ಅವನಿಗೊಂದು ಸುಂದರ ಕನಸು ಬೀಳುತ್ತದೆ. ಆ ಕನಸಿನಲ್ಲಿ ರತ್ನ ಯಾವುದೋ ಒಂದು ಭಾವಿಯಲ್ಲಿ ಬಿದ್ದುಬಿಟ್ಟಿರುತ್ತಾಳೆ. ಅವನು ಹಿಂದೊಂದು ದಿನ ಕಲ್ಪಿಸಿಕೊಂಡಂತೆ, ಅವಳ ಮಂದೆ ತನ್ನ ಶೌರ್ಯ ಪ್ರದರ್ಶನ ಮಾಡುವ ಸು-ಅವಕಾಶ ತಾನೇತಾನಾಗಿ ದೊರೆಯುತ್ತದೆ: ಭಾವಿಯೊಳಗೆ ಜಿಗಿಯುತ್ತಾನೆ. ಅವಳ ತೊಡೆಯ ಮೇಲೆ ತನ್ನ ತಲೆಯನ್ನು ಇಟ್ಟು ಅವಳ ಸಾಮೀಪ್ಯದ ಸುಖವನ್ನು ಅಹ್ಲಾದಿಸುತ್ತಿರುವಾಗಲೇ, ಹೆಣ್ಣು ಧ್ವನಿಯೊಂದು ಇವನನ್ನು ಎಚ್ಚರಿಸುತ್ತದೆ. ವಾಸ್ತವ ಸ್ಥಿತಿಗೆ ಮರಳಿದ ಮೇಲೆ ಅವನಿಗೆ ಕಾದಿರುವುದೇನು? ರತ್ನ ಇನ್ನೊಬ್ಬನ ಜೊತೆ ನಡೆಯಲಿರುವ ತನ್ನ ಮದುವೆಗೆ ಇವನನ್ನು ಮದುವೆಗೆ ಕರೆಯಲು ಬಂದಿರುವುದು! +ಈ ಕಥೆಯನ್ನು ಓದಿದಾಗ, ವರ್ಣನೆಗಳಲ್ಲಿ ಸಿದ್ಧಿಸಿದ ಪು.ತಿ.ನ. ಅವರ ಸಹಜ ಸಾಮರ್ಥ್ಯ ವ್ಯಕ್ತವಾಗುತ್ತದೆ: ಅವಸರವಿಲ್ಲದ ಗತಿ, ಲಲಿತವಾದ, ಓದಿಸುಕೊಂಡು ಹೋಗುವ ಸುಂದರ ಶೈಲಿ. ನವೋದಯ ಕಥೆಗಳ ಲಕ್ಷಣಗಳಲ್ಲೊಂದಾದ ಕಥೆಯ ಆದಿ, ಮಧ್ಯ ಮತ್ತು ಅಂತ್ಯ ಈ ಕಥೆಯಲ್ಲೂ ಪ್ರಕಟಗೊಂಡಿದೆ. ಸುಂದರವಾದ ಪರಾಕಾಷ್ಠತೆ, ಕಥೆಗೆ ಸ್ವಾರಸ್ಯಕರವಾದ ಮುಕ್ತಾಯವನ್ನು ಒದಗಿಸಿದೆ. ಈ ಕಥೆಯಲ್ಲಿ ಅಬ್ಬರವಿಲ್ಲ, ಆರ್ಭಟವಿಲ್ಲ. ಬದಲಾಗಿ, ಶಾಸ್ತ್ರೀಯವಾದ ಪ್ರೇಮದ ವರ್ಣನೆ – ಕೊಂಚವೂ ಅಶ್ಲೀಲತೆಯ ಸೋಂಕಿಲ್ಲದೆ – ತಂತಾನೆ ಮೈದಾಳಿದೆ. +೩. ಕೃಷ್ಣ ಶಾಸ್ತ್ರಿಯ ತ್ಯಾಗ: +ಕೃಷ್ಣಾಶಾಸ್ತ್ರಿಗೆ ವೇಣಿಯಲ್ಲಿ ಅನುಪಮ ಪ್ರೇಮ. ಆದರೆ, ಅವನು ಅವಳಲ್ಲಿ ಪ್ರೇಮ ನಿವೇದನೆ ಮಾಡುವುದರೊಳಗೇ, ಆಕೆ ಅನಂತನನ್ನು ವರಿಸಿಬಿಡುತ್ತಾಳೆ. ಕೃಷ್ಣಾಶಾಸ್ತ್ರಿ ವಾಸ್ತವಿಕತೆಯನ್ನು ಒಪ್ಪಿಕೊಂಡಿರುವುದಿಲ್ಲ, ಬದಲಾಗಿ ಇನ್ನೂ ಅವಳ ಗುಂಗಿನಲ್ಲೇ ತೇಲಾಡುತ್ತಿರುತ್ತಾನೆ. ಅನಂತನು ಸತ್ತು, ವೇಣಿ ವಿಧವೆಯಾಗಿ, ತನ್ನನ್ನು ವರಿಸಿದಂತೆ ಕನಸನ್ನು ಕಟ್ಟುತ್ತಾನೆ. ಆಷ್ಟರಲ್ಲಿ ಅವನ ಮಿತ್ರ ರಾಮರಾಯನು ಬಂದು, ಇವನನ್ನು ಅನಂತನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಹೋಗಿ ನೋಡಿದರೆ, ಅನಂತನಿಗೆ ಕೆಂಡಾಮಂಡಲ ಜ್ವರ. ಕೃಷ್ಣಾಶಾಸ್ತ್ರಿಯ ಪರೋಪಕಾರ ಬುದ್ಧಿ ಧುತ್ತೆಂದು ಜಾಗೃತವಾಗಿ, ಅವನನ್ನೂ ಕೂಡಲೇ ಆಸ್ಪತ್ರೆಗೆ ಸೇರಿಸುತ್ತಾನೆ; ತನ್ನ ದುಡ್ಡನ್ನು ಖರ್ಚುಮಾಡಿ ಸ್ಪೆಷಲ್ ವಾರ್ಡಿನಲ್ಲಿ ಸೇರಿಸಿ ವಿಶೇಷ ಆರೈಕೆಯ ವ್ಯವಸ್ಥೆ ಮಾಡುತ್ತಾನೆ. ಇದರಿಂದ ಅನಂತನು ಸಂಪೂರ್ಣ ಗುಣವಾಗಿ, ಮನೆಗೆ ಮರಳುತ್ತಾನೆ, ವೇಣಿಯ ಮುತ್ತೈದೆತನ ಉಳಿಯುತ್ತದೆ. +ಕೆಟ್ಟ ಆಲೋಚನೆ ಬಂದರೂ, ಒಳ್ಳೆಯ ಉದ್ದೇಶದಿಂದ ಕಾರ್ಯ ಸಫಲವಾಗುವುದರ ಮೂಲಕ ಕಥೆ ಒಳ್ಳೆಯ ಮಾನವೀಯ ಮೌಲ್ಯಗಳನ್ನೇ ಪ್ರತಿಷ್ಠಾಪನೆ ಮಾಡುತ್ತದೆ. ಸಮಾಜ ನಂಬಿಕೊಂಡು ಬಂದ ಪರಂಪರಾನುಗತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಕೆಟ್ಟ ಆಲೋಚನೆಗಳು ಬರುವುದು ಮಾನವನಿಗೆ ಸಹಜ. ಆದರೆ ಅವು ಕ್ಷಣಿಕವಾಗಿ ಬಂದು, ಒಳ್ಳೆಯ ಕೆಲಸಗಳನ್ನು ಮಾಡಿಸುವಂತ ಮೌಲ್ಯಗಳು ಶಾಶ್ವತ ಎಂದು ಕಥೆ ಪ್ರತಿಪಾದಿಸುತ್ತದೆ. ಇದು ಕುವೆಂಪು ಅವರ ‘ಮೀನಾಕ್ಷಿ ಮನೆ ಮೇಷ್ಟ್ರು’ (ದೇವರು ಮತ್ತು ಇತರ ಕಥೆಗಳು) ಕಥೆಯನ್ನು ಜ್ಞಾಪಿಸುತ್ತದೆ. +೪. ರಂಗರಾಯನು ಸಂಗೀತವನ್ನು ಕೇಳಿದುದು: +ರಂಗರಾಯನೂ ಶ್ರೀನಿವಾಸರಾಯರೂ ಆಪ್ತ ಸ್ನೇಹಿತರು. ರಂಗರಾಯನು ಲಲಿತೆಯನ್ನು ತುಂಬಾ ಪ್ರೀಸುತ್ತಿದ್ದನು. ಆದರೆ ಅದನ್ನು ಅವಳಲ್ಲಿ ವ್ಯಕ್ತಪಡಿಸಿರಲಿಲ್ಲ. ಆದರೆ ತದನಂತರ ತಿಳಿಯುತ್ತದೆ, ಶ್ರೀನಿವಾಸರಾಯರು ಲಲಿತಾ ಅವರ ಅನುರಾಗವು ಪರಸ್ಪರವಾದುದು. ಇದು ರಂಗರಾಯನಿಗೆ ಎಂತಹ ಆಘಾತವಾದರೂ ಅವರಿಬ್ಬರ ಅನನ್ಯ ಪ್ರೇಮ, ಅದರಿಂದ ಅವರಿಬ್ಬರಿಗೆ ದೊರಕುವ ಸುಖ, ಶಾಂತಿಯ ದೆಸೆಯಿಂದ ತನ್ನ ಪ್ರೀತಿಯನ್ನು ತ್ಯಾಗಮಾಡಿ ಉದಾತ್ತತೆಯನ್ನು ಮೆರೆಯುತ್ತಾನೆ. ಪರಂಪರಾಗತ ಮೌಲ್ಯವಾದ ತ್ಯಾಗದ ವಿಜೃಂಭಣೆ; ಆದ್ದರಿಂದ ಇದೊಂದು ಅಪ್ಪಟ ನವೋದಯ ಕಥೆ. ಕಥೆ ಸಂಗೀತ ಕಛೇರಿಯಲ್ಲಿ ಶುರುವಾಗಿ, ಅಲ್ಲಿಯೇ ಮುಗಿದು, ಪದರ ಪದರಾಗಿ ಸ್ಪುರಿಸುವ ತಂತ್ರದ ಮೂಲಕ ಅನಾವರಣಗೊಳಿಸುವ ಪು.ತಿ.ನ. ಅವರ ಕಲೆ ಅನನ್ಯವಾದುದು. ಅವರಿಗೆ ಸಂಗೀತದಲ್ಲಿ ಉತ್ಕಟವಾದ ಆಸಕ್ತಿ ಇದ್ದುದು ಈ ಕಥೆಯಲ್ಲಿ ಬರುವ ವಿವರಣೆಯಿಂದ ವ್ಯಕ್ತವಾಗುತ್ತದೆ. +೫. ಮೂರ್ತಿಯ ಹುಡುಗಾಟ: +ಮೂರ್ತಿ ಸ್ಮಾರ್ತ ಬ್ರಾಹ್ಮಣ ಹುಡುಗ. ಕಥಾನಾಯಕ ಶ್ರೀ ವೈಷ್ಣರವನು. ಆ ಕಾಲದಲ್ಲಿ ತ್ರಿ ಮತಸ್ಥ ಬ್ರಾಹ್ಮಣರಲ್ಲಿ ತಮ್ಮ ಮತ ಬಿಟ್ಟು ಬೇರೆಯವರೊಡನೆ ಮದುವೆಯಾಗುತ್ತಿರಲಿಲ್ಲ. ಬೌದ್ಧಿಕ ಚರ್ಚೆಯಲ್ಲಿ ಉತ್ಸಾಹಪೂರ್ಣವಾಗಿ ಒಮ್ಮೆ ನಾಯಕ ಅಂತರ ಮತದ ವಿವಾಹದ ಪರವಾಗಿ ಮಾತನಾಡಿದ್ದ. ಆಗ ಮೂರ್ತಿ ತನ್ನ ತಂಗಿಯನ್ನು ಮದುವೆಯಾಗುತ್ತೀಯಾ? ಎಂದಾಗ ಏನೋ ಒಂದು ಹುಮ್ಮಸ್ಸಿನಲ್ಲಿ ಒಪ್ಪಿಕೊಂಡಿದ್ದ. ಅದನ್ನೇ ನಂಬಿ ಮೂರ್ತಿ ಕಥಾನಾಯಕನ ತನ್ನ ತಂಗಿಯ ಮದುವೆಯ ಆಹ್ವಾನ ಪತ್ರವನ್ನು ತನ್ನ ಊರಿಗೆ ಕಳಿಸಿದಾಗ ನಾಯಕ ಕಕ್ಕಾಬಿಕ್ಕಿಯಾಗುತ್ತಾನೆ. ತಾನು ಮದುವೆಗೆ ಒಪ್ಪಿದರೂ ಕಟ್ಟಾ ಸಂಪ್ರದಾಯ ವಾದಿಗಳಾದ ತನ್ನ ಅಮ್ಮ ಅಪ್ಪರನ್ನು ಮದುವೆಗೆ ಒಪ್ಪಿಸುವುದು ಅಸಂಭವ ಎನಿಸಿದಾಗ, ಕಥಾ ನಾಯಕನಿಗೆ ಧರ್ಮಸಂಕಟ: ಇತ್ತ ಪ್ರಾಣಮಿತ್ರನ ಸ್ನೇಹವನ್ನೂ ತ್ಯಾಗ ಮಾಡಲಾರ, ಅತ್ತ ಪಾಲಕರ ವಾತ್ಸಲ್ಯವನ್ನೂ ಬಿಡಲಾರ ಕೊನೆಗೆ ಏನೂ ತೋಚದೆ, ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ, ಕೊಳದಲ್ಲಿ ಹಾರಿ ಪ್ರಾಣ ಕಳೆದುಕೊಳ್ಳಲು ಹೋಗುತ್ತಾನೆ ಅದಕ್ಕೂ ಧೈರ್ಯ ಬರದೆ ವಾಪಸ್ಸು ಬರುತ್ತಾನೆ ಆಗ ಬಂದ ಪತ್ರದಲ್ಲಿ, ಮದುವೆಯ ಆಹ್ವಾನ ಪತ್ರಿಕೆ ಕೇವಲ ಹುಡುಗಾಟ ಎಂದು ತಿಳಿದಾಗ ನಿಟ್ಟಿಸಿರು ಬಿಡುತ್ತಾನೆ. +ಆತ್ಮಹತ್ಯೆ ಮಹಾಪಾಪ ಎಂದು ಯೋಚನೆ ಬಂದರೂ, ಅದನ್ನು ಕಥೆಯಲ್ಲಿ ಆಗುಗೊಡದೆ ನವೋದಯ ಕಥೆ ಸಾಂಪ್ರದಾಯಕ ಮೌಲ್ಯಗಳನ್ನೇ ಒತ್ತಿ ಹೇಳುತ್ತದೆ. ಕಥೆಯ ಶೈಲಿ ಬಹು ಸುಂದರವಾಗಿದೆ. ನಾಯಕನ ಮಾನಸಿಕ ತಳಮಳವು ಬಹು ಸಹಜವಾಗಿ, ಮನ ಮುಟ್ಟುವಂತೆ ಚಿತ್ರಿತವಾಗಿದೆ. ಇಲ್ಲಿ ರಾಮಾನುಜಾಚಾರ್ಯರ ಮತ್ತು ಶಂಕರಾಚಾರ್ಯರು ಪ್ರತಿಪಾದಿಸಿದ ವಿಶಿಷ್ಠಾದೈತ ಮತ್ತು ಅದೈತ ಮತದ ತತ್ವಗಳ ಸೀಳು ನೋಟ ಕೂಡಾ ದೊರಕುತ್ತದೆ. +೬. ವೆಂಕೋಬರಾಯರು ಒಂದು ಪದ್ಯವನ್ನು ಓದಿ ವಿಮರ್ಶಿಸಿದ್ದು: +ವೆಂಕೋಬರಾಯರು ಹಳೆಯ ಕಾಲದವರು, ವೃದ್ಧರು. ಸನಾತನ ಕಾಲದ ವಿಷಯಗಳಲ್ಲೆಲ್ಲಾ ಅವರಿಗೆ ತುಂಬಾ ಗೌರವ. ಹಳೆಯದೆಲ್ಲವೂ ಶ್ರೇಷ್ಠ, ಹೊಸದೆಲ್ಲವೂ ಕಳಪೆ ಎಂಬ ಸಿದ್ಧಾಂತಕ್ಕೆ ಅಂಟಿಕೊಂಡವರು. ಇಂತಹವರಿಗೆ ನವೀನ ಕವಿತೆಗಳೆಂದರೆ ಆಗದು. ಅದರೆ, ಅವರ ಮಗ ಅಂತಹ ಕವಿತೆಗಳನ್ನು ವನಮಾಲಿ ಎಂಬ ಹೆಸರಿನಿಂದ ಬರೆದು, ರಸಿಕರಿಗೆ ಪ್ರಿಯವಾಗಿದ್ದ ವಿಷಯ ಅವರಿಗೆ ತಿಳಿಯದು. ತಂದೆ ತನ್ನ ಕವಿತೆಗಳನ್ನೋದಲಿ ಎಂಬುದು ಅವನ ಸಹಜ ಆಸೆ. ಆದರೆ, ಅವರು ಅದನ್ನು ಓದರು! ಕೊನೆಗೆ ಹೇಗೋ ಗೋಗರೆದುಕೊಂಡು ಅವುಗಳು ತನ್ನ ಮಿತ್ರನದೆಂದು ಹೇಳಿಕೊಂಡು, ಅವುಗಳನ್ನು ತನ್ನ ತಂದೆಯವರು ಓದುವ ಒಪ್ಪಿಗೆ ಪಡೆದುಕೊಳ್ಳುತ್ತಾನೆ. ವೆಂಕೋಬರಾಯರು ಇದಾದ ಒಂದು ವಾರವಾದರೂ ಓದುವುದಿಲ್ಲ. ಕ್ರಮೇಣ, ಕೊಂಚ ತಿರಸ್ಕಾರದಿಂದಲೇ ಓದಲಾರಂಭಿಸುತ್ತಾರೆ. ಅದರಲ್ಲಿ ಬಾಲ್ಯ, ಯೌವನ, ಮಧ್ಯಕಾಲ ಹಾಗೂ ವೃದ್ಧಾಪ್ಯದ ಸೊಗಸಾದ ಚಿತ್ರಣವಿರುತ್ತದೆ. ಅಷ್ಟೇ ಅಲ್ಲದೆ, ಅವರ ಜೀವನದಲ್ಲಿ ಜರುಗಿಹೋದ ಅನೇಕ ಘಟನೆಗಳ ಸುಂದರ ನಿರೂಪಣೆಯಿರುತ್ತದೆ. ಈ ವನಮಾಲಿ ಕವಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂಬ ಸೋಜಿಗವೂ ಅವರಿಗಾಗುತ್ತದೆ. ಕೊನೆಗೆ ಅದರಲ್ಲಿ ಬರುವ ಸಾವಿನ ವಿವರಣೆ ಅವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಕೊನೆಗೆ, ಅವುಗಳನ್ನು ತಮ್ಮ ಮಗನೇ ಬರೆದಿದ್ದೆಂದು ಅವನಿಂದಲೇ ತಿಳಿದಾಗ, ಅವರ ಕಣ್ಣುಗಳು ಅಭಿಮಾನದಿಂದ ಆರ್ದ್ರವಾಗುತ್ತವೆ. +ಪದಗಳ ಉಪಯೋಗ ಅತ್ಯಂತ ಸಮಂಜಸ, ನಾವು ಕೇಳಿಯೇ ಇರದ ಅನೇಕ ಹಳೆಯ ಸುಂದರ ಪದಗಳ ಉಚಿತ ಪ್ರಯೋಗ ಆಗಿದೆ. ಉದಾ: ದುರ್ವಿದಗ್ಧ, ವಿಚ್ಛಿತ್ತಿ, ಇತ್ಯಾದಿ. ಬದುಕಿನ ಉದ್ದೇಶ ಹಾಗೂ ಸಾವಿನ ಅರ್ಥವನ್ನು ಪದರು ಪದರಾಗಿ ಕಥೆ ಬಿಡಿಸಿಕೊಂಡು ಹೋಗುತ್ತದೆ. ಇದೊಂದು ಪದ್ಯ ಮತ್ತು ಗದ್ಯದ ಅಮೋಘ ಸಮ್ಮಿಲನ. ಈ ರೀತಿಯಾಗಿ ಪದ್ಯದ ಮೂಲಕ ಸಣ್ಣ ಕಥೆಯನ್ನು ಹೇಳುವ ಅನನ್ಯ ಪರಿಯನ್ನು ನಾನು ಇದುವರೆಗೆ ಓದಿಲ್ಲ. ಈ ಕಥೆಯನ್ನು ಓದುವಾಗಲೇ, ಕವನವನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ಕೂಡ ಸಮರ್ಥವಾಗಿ ಪ್ರತಿಪಾದಿಸುತ್ತದೆ. ನನ್ನ ಪ್ರಕಾರ ಪು.ತಿ.ನ. ಅವರು ಮಾತ್ರ ಈ ರೀತಿಯ ಆಧುನಿಕ ಚಂಪೂ ಕಾವ್ಯವನ್ನು ಬರೆಯಬಲ್ಲರು! +೭. ಹಹ್ಹಾ! ಒಂದು ನಕ್ಷತ್ರ: +ಕಲ್ಪನೆಗಳು ಗರಿಗೆದರಿ, ಒಂಡು ಸುಂದರ ಕಥೆಯಾಗಿ ಹೆಣೆದಿರುವುದನ್ನು ಈ ಕಥೆಯಲ್ಲಿ ಕಾಣಬಹುದು. ಒಬ್ಬ ಸಮರ್ಥ ಕಥೆಗಾರನಿಗೆ ಒಂದು ಚಿಕ್ಕ ಕಲ್ಪನೆಯೂ ಕೂಡ ಒಂದು ಕಥೆಯ ರಚನೆಯಲ್ಲಿ ಸಹಾಯವಾಗಬಹುದು ಎಂಬುದಕ್ಕೆ ಈ ಕಥೆ ನಿದರ್ಶನ. ಕಥಾನಾಯಕ ತನ್ನ ಮನೆಯ ಮಹಡಿಯ ಒಂದು ಕತ್ತಲೆ ಕೋಣೆಯಲ್ಲಿರುತ್ತಾನೆ. ಆಗ ಅವನ ಕಲ್ಪನೆಗಳು ಗರಿಗೆದರಿ, ಅವನು ಬಾನಿನಲ್ಲಿ ವಿಹಾರ ಮಾಡುತ್ತಿರುವ ಅನುಭವವನ್ನು ಹೊಂದುತ್ತಾನೆ. ಅವನ ಹೆಂಡತಿ ಬಂದು, “ಕಾಫ಼ಿ ತೆಗೆದುಕೊಂಡು ಬರಲೆ?” ಎಂದು ಕೇಳಿದಾಗಲೇ, ಅವನು ವಾಸ್ತವ ಲೋಕಕ್ಕೆ ಮರಳಿ ಬರುತ್ತಾನೆ. ಆಗ ತಿಳಿಯುತ್ತದೆ: ತನ್ನ ಮನೆಯ ಹೆಂಚಿನ ಸೂರಿನ ಓಂದು ಕಿಂಡಿಯಿಂದ ಬಂದ ಬೆಳಕು, ಅವನಿಗೆ ಓಂದು ನಕ್ಷತ್ರದಂತೆ ಕಂಡಿರುವುದು ಎಂದು! +೮. ಶಿವನ ಕಣಸು: +ಇದೊಂದು ಆಧ್ಯಾತ್ಮಿಕತೆ ಭೂಯಿಷ್ಠವಾದ ಕಥೆ. ಶಿವು ಎಂಬುವನಿಗೆ ಒಂದು ರೈಲಿನಲ್ಲಿ ಆಗುವ ಅನಿರ್ವಚನೀಯ ಜೀವನ ದರ್ಶನವನ್ನು ಲೇಖಕರು ತುಂಬ ಸುಂದರವಾಗಿ ಹೇಳಿದ್ದಾರೆ. ಆಧ್ಯಾತ್ಮಿಕದಂತಹ ಅಮೂರ್ತವಾದ, ಕ್ಲಿಷ್ಟಕರವಾದ ವಸ್ತುವನ್ನು ಆದಷ್ಟು ಸರಳವಾಗಿ ಹೇಳಿದ್ದಾರೆ. ಕುವೆಂಪುರವರು ಹೇಗೆ ವಿಶ್ವಮಾನವ ಸಂದೇಶ ಹೇಳಿದ್ದಾರೋ, ಅದೇ ರೀತಿ ಇಲ್ಲಿ ಜಗತ್ತಿನ ಎಲ್ಲರನ್ನು ಪ್ರೀತಿಸು, ಸಮಷ್ಠಿಯಲ್ಲಿ ಒಂದಾಗು ಎಂಬ ಸಂದೇಶ ಇಲ್ಲಿದೆ. ಇದರಲ್ಲಿನ ಒಂದು ವಾಕ್ಯ ವಿಶೇಷವಾಗಿ ನನಗೆ ಹಿಡಿಸಿತು: “ನಮ್ಮ ಆತ್ಮಕ್ಕೆ ದ್ರೋಹವನ್ನು ಉಂಟುಮಾಡಿಕೊಳ್ಳದೆ, ಇನ್ನೊಬ್ಬನನ್ನು ಸಂಕಟಪಡಿಸುವುದು ಅಸಾಧ್ಯ. ನಮ್ಮ ಆತ್ಮಕ್ಕೆ ದ್ರೋಹವೆಣಿಸದೆ ಅಂದರೆ, ನಮ್ಮನ್ನು ನಾವೇ ದ್ವೇಷಿಸಿಕೊಳ್ಳದೆ, ಹಿಂಸಿಸಕೊಳ್ಳದೆ, ಹೀಯಾಳಿಸಕೊಳ್ಳದೆ, ಇನ್ನೊಬ್ಬನನ್ನು ದ್ವೇಷಿಸುವುದು, ಹಿಂಸಿಸುವುದು, ಅವಹೇಳನ ಮಾಡುವುದು, ನಿಂದಿಸುವುದು, ಕ್ಲೇಶಗೊಳಿಸುವುದು, ಭೇದಭಾವಗಳನ್ನು ಕೋರುವುದು, ಉಚ್ಛನೀಚಗಳನ್ನು ಅಳೆಯುವುದು ಅಸಾಧ್ಯ. ನಾವು ಧರ್ಮಾಚರಣೆ ಮಾಡುವುದು ಇದಕ್ಕೆ – ನಮ್ಮ ಆತ್ಮೋದ್ಧಾರಕ್ಕೆ. ನಮ್ಮೆಲ್ಲರಲ್ಲಿ ಅಂತರ್ವಾಹಿನಿಯಾಗಿ ವಿಕಾಸಗೊಳ್ಳಲು ಹೋರಾಡುತ್ತಿರುವ ಜೀವಸತ್ವದ ಕ್ಷೇಮಕ್ಕೆ. ಇದೇ ಧರ್ಮದ ಮೂಲ.” +೯. ಧ್ವಜರಕ್ಷಣೆ: +ಇದೊಂದು ಸ್ವಾತಂತ್ರ್ಯ ಪೂರ್ವದ ಕಥೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರು ಹೇಗೆ ಪಾಲ್ಗೊಂಡಿದ್ದರು ಎಂಬುದನ್ನು ಈ ಕಥೆ ಅತ್ಯಂತ ವಾಸ್ತವವಾಗಿ, ಸಹಜವಾಗಿ, ಯಾವುದೇ ಬಗೆಯ ಅಬ್ಬರ, ಆರ್ಭಟಗಳಿಲ್ಲದೆ ಹಾಗೂ ಯಾವುದನ್ನೂ ವೈಭವೀಕರಿಸದೆ, ವಸ್ತುನಿಷ್ಠವಾಗಿ ಚಿತ್ರಿಸುವುದು ಈ ಕಥೆಯ ವಿಶೇಷ. ತರುಣ ಮುಕುಂದ ಯಾವುದೋ ಒಂದು ಕಛೇರಿಯಲ್ಲಿ ಮೇಲಧಿಕಾರಿಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಆತನು ಸುಸಂಸ್ಕೃತ ಮತ್ತು ಪಾಪಭೀರು. ಜೀವನ ನಿರ್ವಹಣೆಗೆ ಆತ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆದಿನ ಮಹಾತ್ಮರನ್ನು ಬಂಧಿಸಿದ್ದಾರೆಂದು ಸುದ್ದಿ ಹಬ್ಬಿದ ಕೂಡಲೇ ಯುವಕ ವಿದ್ಯಾರ್ಥಿಗಳು ಚಳುವಳಿಯನ್ನು ಉಗ್ರಗೊಳಿಸಿದರು. ಮುಕುಂದ ಕಛೇರಿ ಮುಗಿಸಿ ಮನೆಗೆ ಹೊರಟಾಗ ದಾರಿಯಲ್ಲಿ ಪಾರ್ಕಿನಲ್ಲಿ ತ್ರಿರಂಗ ಧ್ವಜವನ್ನು ಹಿಡಿದುಕೊಡು ಹೋಗುತ್ತಿದ್ದ ಹುಡುಗನನ್ನು ಹೊಡೆದು ಬೀಳಿಸಿ, ಅವನ ಧ್ವಜವನ್ನು ತುಳಿದು ಅವಮಾನ ಮಾಡಿದಾಗ ಅವನಿಗೆ ಸಹಿಸಲಾಗಲಿಲ್ಲ. ಅವನ ದೇಶಪ್ರೇಮ ಜಾಗೃತವಾಗಿ ಆತ ಆ ಧ್ವಜವನ್ನು ಎತ್ತಿಕೊಂಡು, ಅದೇ ಕೋಲಿನಿಂದ ಅವಮಾನ ಮಾಡಿದ ಪೋಲಿಸಿಗೆ ಬಾರಿಸಿದ. ಕೊನೆಗೆ ಪೋಲಿಸರಿಂದ ಹೊಡೆಸಿಕೊಂಡ ಹುತಾತ್ಮನಾದ ಎಂಬ ಕಥೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸ್ವಾತಂತ್ರದ ನಂತರ ಹುಟ್ಟಿದ ನಮ್ಮಂತಹವರಿಗೆ ಆ ದಿನದ ಹೋರಾಟವನ್ನು ಯಥಾವತ್ತಾಗಿ ಕೊಡುವುದರಲ್ಲಿ ಈ ಕಥೆ ಯಶಸ್ವಿಯಾಗಿದೆ. +೧೦. ವಿಷಾದ ಯೋಗ : +ಈ ಕಥೆ ಮಾತ್ರ ಅಪವಾದವೆಂಬಂತೆ ನವ್ಯ ಮಾರ್ಗದ ಕಥೆಯ ಲಕ್ಷಣಗಳನ್ನೊಳಗೊಂಡಿದೆ. ಕಥೆಯಲ್ಲಿ ಘಟನೆಗಳು, ಕಥೆಯ ಓಘ ಪ್ರಧಾನವಾಗದೆ, ನಾಯಕನ ಮನಸ್ಸಿನ ತಲ್ಲಣ, ವಿಷಾದ ಭಾವ, ಆತ್ಮ ವಿಮರ್ಶೆ ಆತ್ಮಾವಲೋಕನೆಗಳೇ ಪ್ರಧಾನವಾಗಿವೆ. ದಾರಿದ್ರ್ಯದಿಂದ ನರಳುತ್ತಿರುವ ಒಬ್ಬ ಗೃಹಸ್ಥ ತನ್ನ ಕೀಳರಿಮೆಯಿಂದಾಗಿ ಹೇಗೆ ಜಗತ್ತನ್ನೇ ಒಂದು ರೀತಿಯ ತೀವ್ರ ವಿಷಾದದ ದೃಷ್ಟಿಯಿಂದ ನೋಡುತ್ತಾನೆ ಎಂಬುದು ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಿತವಾಗಿದೆ. ಜೀವನದಲ್ಲಿ ಸಕಲ ಆಸೆಗಳನ್ನು ಕಳೆದುಕೊಂಡು ಜೀವನವೇ ಬರಡಾದಾಗ ತೋರುವಂತಹ ದೃಶ್ಯ. ಬಾಹ್ಯದ ವಸ್ತುಗಳೆಲ್ಲವೂ ಅವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡುತ್ತವೆ ಎಂಬುದರ ಮೂಲಕವೇ ಜೀವನವನ್ನು ಅರ್ಥೈಸುವ, ಅದಕ್ಕೆ ಬೆಲೆ ಕಟ್ಟುವ ಪರಿ ಖಂಡಿತಾ ನವ್ಯ ಕಥೆಯ ಲಕ್ಷಣ. ಕೊನೆಗೆ ಸ್ನೇಹಿತನೊಬ್ಬನ ಮಿಲನದಿಂದ ಇಡೀ ಕಥೆಗೆ ತಿರುವು ಬಂದು, ನಾಯಕ ಬಿಂದುಮಾಧವನಿಗೆ ಜೀವನದಲ್ಲಿ ಪುನುರುತ್ಸಾಹ ಬಂದುದು ಸುಂದರವಾಗಿ ಚಿತ್ರಿತವಾಗಿದೆ. ಕೆಲವೊಂದು ವಾಕ್ಯಗಳು ಆಧ್ಯಾತ್ಮಿಕತೆಯ ಹೊಳಹನ್ನು ತೋರಿಸುತ್ತವೆ: “ಈ ಅನಾಸಕ್ತಿ ಅಂತಸ್ತಪ್ತರದವರೆಲ್ಲರಿಗೂ ಸುಲಭವಾಗಿ ದೊರಕುತ್ತದೆನೋ. ಹಾಗೆಯೇ ಆಲೋಚಿಸಿ ನೋಡಿದರೆ, ಆತ್ಮ ಜ್ಞಾನವನ್ನು ಪಡೆಯಬೇಕೆನ್ನುವವರು ನಿರಾಹಾರ, ಜಲಾಹಾರ, ಮಧ್ಯವಾಸ, ಮೌನ ಇತ್ಯಾದಿ ತಪಸ್ಸನ್ನು ಏಕೆ ಕೈಕೊಳ್ಳುತ್ತಾರೆ ಎನ್ನುವುದು ಈಗ ನಮಗೆ ಹೊಳೆಯುತ್ತದೆ. ನಮ್ಮ ನೋವು ನಮ್ಮ ಜ್ಞಾನ ನಮ್ಮ ಮೇಲೆಯೇ ಇರುವಂತೆ ಮಾಡುತ್ತದೆ. ನಮ್ಮ ಅರಿವಿನ ಬೆಳಕನ್ನೆಲ್ಲಾ ನಾವು ನಮ್ಮ ಬಾಳಿನ ಮೇಲೆ ಚೆಲ್ಲಿಕೊಂಡು ನಮ್ಮನ್ನು ನಾವು ಬಹು ಸ್ಪಷ್ಟವಾಗಿ ನೋಡಿಕೊಳ್ಳುವುದು ಈ ಬಗೆಯ ಉಪಾಯದಿಂದಲೇ”. +೧೧. ರಾಗಿಣಿ: +ಕಟ್ಟಡ ಕಟ್ಟುವ ದಿನಕೂಲಿಯವರ ಜೀವನದ ವಾಸ್ತವ ಚಿತ್ರಣ ಈ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.ಶಂಭು ಈ ಕೂಲಿಗಳಿಗೆ ಕೂಲಿ ನೀಡುವ ಮಾಲಿಕ. ಅವನು ಅಗರ್ಭ ಶ್ರೀಮಂತ. ಸದಭಿರುಚಿಯಿಂದ ಮನೆಯಲ್ಲಿ ಐಶಾರಾಮದ ಗೃಹೋಪಕರಣಗಗಳನ್ನು ಇಟ್ಟುಕೊಂಡಿರುತ್ತಾನೆ. ಅವನ ಮಗಳು ರಾಗಿಣಿ. ಅವಳಿಗೂ ಈ ಕೂಲಿಗಳ ಗುಡಿಸಲಿನಲ್ಲಿ ವಾಸವಾಗಿರುವ ರಂಗನ ಮಗ ದೇವನಿಗೂ ಮೊದಲಿನಿಂದಲೂ ಗೆಳೆತನ. ಒಮ್ಮೆ ಇವರಿಬ್ಬರಿಗೂ ಏಕಕಾಲದಲ್ಲಿ ಹುಷಾರು ತಪ್ಪುತ್ತದೆ. ಅವರಿಬ್ಬರನ್ನೂ ನೋಡಿಕೊಳ್ಳುತ್ತಿದ್ದ, ವೈದ್ಯರು ರಾಗಿಣಿಗೆ ನಿರಾಹಾರನ್ನು ದೇವನಿಗೆ ಪೋಷಕಾಂಶಭರಿತ ಆಹಾರವನ್ನೂ ಕೊಡಬೇಕೆಂದು ನಿರ್ದೇಶಿಸುತ್ತಾನೆ. ಇದರಿಂದ ಇಬ್ಬರಿಗೂ ಗುಣವಾಗುತ್ತದೆ. ಕಥೆಯು ಹೀಗೇ ಮುಂದುವರೆಯುತ್ತದೆ. ಕೊನೆಗೆ ಅವರಿಬ್ಬರೂ, ಯಾರಿಗೂ ಹೇಳದೆ ಕೇಳದೆ ದೇಶದಿಂದ ಹೊರಗೆ ಓಡಿಹೋಗುತ್ತಾರೆ. ಇವರಿಬ್ಬರ ತಂದೆಯರೂ ಅವಮಾನದಿಂದ ಅಸುನೀಗುತ್ತಾರೆ. ರಾಗಿಣಿ – ದೇವನಾಥರು ಕಡುಬಡತನವನ್ನನುಭವಿಸಿ ಕೊನೆಗೆ ದಡಮುಟ್ಟುತ್ತಾರೆ. ಅವರ ಸಂತತಿ ಸಿರಿವಂತರಾಗಿ, ಪ್ರಸಿದ್ಧರಾಗಿ, ಕೂಲಿಗಳ ಬಗ್ಗೆ ತಿರಸ್ಕಾರ ಬೆಳೆಸಿಕೊಳ್ಳುತ್ತಾರೆ. +ಈ ಕಥೆಯಲ್ಲಿ ಸಮಾಜದ ವರ್ಗ ಭೇದ ವಾಸ್ತವಿಕವಾಗಿ ಚಿತ್ರಿತವಾಗಿದ್ದರೂ, ಕೂಲಿವರ್ಗಕ್ಕೆ ಶ್ರೀಮಂತವರ್ಗದವರ ಬಗ್ಗೆ ಆಕ್ರೋಶವಿಲ್ಲ. ಬದಲಾಗಿ, ತಮಗೆ ಜೀವನ ನೀಡುತ್ತಿರುವ ಧಣಿಗಳೆಂದು ಭಕ್ತಿಭಾವ ಇದೆ. ಇದು ನವೋದಯ ಕಥೆಗಳ ಲಕ್ಷಣ. +೧೨. ಕಾಲದೊಡನೆ ಅಶ್ವತ್ಥನ ಸ್ಪರ್ಧೆ: +ಇದೊಂದು ಮೋಹಕವಾದ ಕಥೆ. ಇದರಲ್ಲಿ ಕಥಾನಾಯಕ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾನೆ. ಅವನ ಎದುರು ಒಬ್ಬಳು ಸುರ ಸುಂದರಿ ತನ್ನ ಗಂಡನೊಡನೆ ಕುಳಿತುಕೊಂಡಿರುತ್ತಾಳೆ. ಅವಳ ಮೋಹಕತೆಗೆ ಮಾರುಹೋದ ನಾಯಕನಿಗೆ, ತನ್ನ ಸ್ಟೇಷನ್ ಬಂದು ಹೋದುದೂ ಗೊತ್ತಾಗುವುದಿಲ್ಲ. ನಂತರ ತಿಳಿಯುತ್ತದೆ: ಆ ಮಾಯಾಂಗನೆ ಕಾಲ ಸ್ವರೂಪಿಣಿ ಎಂದು. +ಹೆಣ್ಣಿನ ಸೌಂದರ್ಯ ಮತ್ತು ಆಕೆಯ ಒನಪು, ಬಿನ್ನಾಣಗಳನ್ನು ಪು.ತಿ.ನ ಅವರು ಅಶ್ಲೀಲತೆಯ ಕೊಂಚವೂ ಸೋಕಿಲ್ಲದೆ ವರ್ಣಿಸಿರುವುದು ಈ ಕಥೆಯ ವಿಶೇಷ. ಹೆಣ್ಣನ್ನು ಕಾಲಕ್ಕೆ ಸಮೀಕರಿಸುವುದರ ಹಿಂದಿನ ಔಚಿತ್ಯವನ್ನು ವಿಶ್ಲೇಷಿಸುವುದು ಓದುಗರ ಊಹೆಗೇ ಬಿಡಲಾಗಿದೆ! +೧೩. ಪ್ರದಾನ: +ಭದ್ರದೇಶದ ಜನತೆ ಪರದೇಶದಲ್ಲಿರುವ ಪರದೇಶಿಗಳಿಗಾಗಿ ಉಣ್ಣೆಬಟ್ಟೆಗಳನ್ನು ದಾನ ಮಾಡುತ್ತಾರೆ. ಸಮಾಜದ ಎಲ್ಲ ವರ್ಗಗಳ ಜನರೂ ಈ ದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇವರಿಂದ ದಾನ ಪಡೆದ ಉಣ್ಣೆಬಟ್ಟೆಗಳನ್ನು ಹೇರಿಕೊಂಡು, ’ಪ್ರದಾನ’ ಎಂಬ ಹಡಗು ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ದುರದೃಷ್ಟವಶಾತ್, ಹಡಗು ಹೊರಟ ಸ್ವಲ್ಪ ಸಮಯದಲ್ಲೇ, ಅದಕ್ಕೆ ಬೆಂಕಿ ಬೀಳುತ್ತದೆ. ಬೆಂಕಿಯ ನಿಯಂತ್ರಣ ಮಾಡಲಾಗದೆ, ಉಣ್ಣೆಬಟ್ಟೆಗಳೆಲ್ಲವೂ ಸುಟ್ಟು ನಾಶವಾಗುತ್ತವೆ. ಪೋಲೀಸಿನವರು ಇದರಲ್ಲಿ ಶತೃಗಳ ಕೈವಾಡವಿದೆಯೆಂದು ಹೇಳಿಕೆ ಕೊಟ್ಟು ಕೃತಾರ್ಥರಾಗುತ್ತಾರೆ. ಆದರೆ, ಜನಸಾಗರ ದುಃಖದಿಂದ ಮ್ಲಾನರಾಗಿದ್ದಾಗ, ಒಬ್ಬ ಸಂತೋಷದಿಂದ ಕೇಕೆ ಹಾಕುತ್ತಿರುತ್ತಾನೆ. ಪೋಲೀಸಿನವರು ಆತನನ್ನು ಬಂಧಿಸುತ್ತಾರೆ. ಎಷ್ಟೇ ಶಿಕ್ಷಿಸಿ ವಿಚಾರಣೆಗೊಳಪಡಿಸಿದರೂ, ಅವನಿಂದ ಯಾವುದೇ ಉಪಯುಕ್ತ ಮಾಹಿತಿ ಸಿಗದ ಕಾರಣ, ಅವನನನ್ನು ಬಂಧನಮುಕ್ತನನ್ನಾಗಿ ಮಾಡುತ್ತಾರೆ. ಕೊನೆಗೂ ಆ ಹಡಗಿನ ಬೆಂಕಿ ಅನಾಹುತದ ಹಿಂದಿನ ರಹಸ್ಯ ಯಾರಿಗೂ ಗೊತ್ತಾಗುವುದಿಲ್ಲ. +೧೪. ನಿಂಗಿಯೋ ಲವಂಗಿಯೋ: +ನಿಂಗಿ ಒಂದು ಸೇನಾಶಿಬಿರದಲ್ಲಿ ವಾಸಮಾಡುತ್ತಿರುವ ಒಬ್ಬ ನಾಗರೀಕ ಮಹಿಳೆ. ಆಕೆಯನ್ನು ಮದುವೆಯಾಗಬೇಕೆಂದಿರುವ ವಸಂತ ಒಂದು ರಾತ್ರಿ ಆಕೆಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಆಗ ಆಕೆ, ಅದೇ ಶಿಬಿರದ ರಕ್ಷಣಾ ಅಧಿಕಾರಿಯಾದ ಪೂರ್ಣಸಿಂಗ್ ಅವರಿಂದ ವಿಚಾರಣೆಗೊಳಪಡುತ್ತಾಳೆ. ಅಭಿಜಾತ ಸ್ತ್ರೀಯಂತೆ ಕಾಣುತ್ತಿರುವ ಆಕೆಯಿಂದ ವಿವರಗಳನ್ನು ಹೊರಡಿಸುವುದು ಕಷ್ಟವಾಗುತ್ತದೆ. ನಂತರ, ಆಕೆಯನ್ನು ಆಕೆಯ ಅಕ್ಕನ ಮನೆಗೆ ಕಳಿಸುತ್ತಾರೆ. ಇದಾದ ಒಂದೂವರೆ ತಿಂಗಳಿನ ನಂತರ, ಆಕೆ ತನ್ನ ಗಂಡ ವಸಂತನನ್ನು ಕರೆದುಕೊಂಡು ಬಂದು ಪೂರ್ಣಸಿಂಗರನ್ನು ಕಾಣುತ್ತಾಳೆ. ವಿಚಾರಣೆಯ ನಂತರ ತಿಳಿಯುವುದೇನೆಂದರೆ, ವಸಂತ ಆಕೆಯೆ ಶೀಲವನ್ನು ಶಂಕಿಸಿ, ಆಕೆಯನ್ನು ಮನೆಯಿಂದ ಹೊರಗೋಡಿಸಿರುವುದು ಹೊರಬೀಳುತ್ತದೆ. ನಂತರ ಎಲ್ಲವೂ ಸುಖಾಂತವಾಗುತ್ತದೆ. +ಪು.ತಿ.ನ ಅವರು ಈ ಕಥೆಯನ್ನು ತುಂಬ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ಎಲ್ಲ ಘಟ್ಟದಲ್ಲಿಯೂ ಕಥೆಯ ಕುತೂಹಲವನ್ನು ಉಳಿಸಿಕೊಂಡು ಬಂದಿದ್ದಾರೆ. ಕಥೆಯನ್ನು ಸ್ವಾರಸ್ಯಕರವಾಗಿ ಹೇಳುವ ಕಲೆ ಶ್ರೀಯುತರಿಗೆ ಸಿದ್ಧಿಸಿರುವುದು ಈ ಕಥೆಯಲ್ಲಿ ವ್ಯಕ್ತವಾಗುತ್ತದೆ. ಕಥೆಯ ಆರಂಭ ಮತ್ತು ಮಧ್ಯದಲ್ಲಿ ಕೆಟ್ಟ ಮೌಲ್ಯಗಳು ವಿಜೃಂಭಿಸಿದರೂ, ಕೊನೆಯಲ್ಲಿ ಎಲ್ಲವೂ ಸಮಾಜ ಒಪ್ಪಿಕೊಂಡಂತಹ ಮೌಲ್ಯಗಳ ಪ್ರಕಾರವೇ ಕಥೆಯು ಅಂತ್ಯವಾಗಿ, ಸಮಾಜದ ಪರಂಪರಾಗತ ಮೌಲ್ಯಗಳ ಧೃಡ ಸ್ಥಾಪನೆಯಾಗುತ್ತದೆ. ಈ ಮೊದಲೇ ತಿಳಿಸಿರುವಂತೆ, ನವೋದಯ ಮಾರ್ಗದ ಲೇಖಕರು ಸಮಾಜ ಓಪ್ಪಿಕೊಂಡ ಮೌಲ್ಯಗಳನ್ನು ಪ್ರಶ್ನಿಸದೆ, ಅವುಗಳನ್ನು ಪುನರ್‍ಸ್ಥಾಪಿಸುವಂತಹ ಕಥೆಗಳನ್ನೇ ಹೆಣೆಯುತ್ತಿದ್ದರು ಎಂಬುದಕ್ಕೆ ಈ ಕಥೆ ಉತ್ತಮ ನಿದರ್ಶನ. +೧೫. ಕೊಳಂದೆ: +ಕೊಳಂದೆ ಒಬ್ಬ ಮಧ್ಯವಯಸ್ಕ. ಆತನಿಗೆ ಮೇಲುಕೋಟೆಯ (?) ದೇವಸ್ಥಾನದ ಭಾವಿಯಲ್ಲಿ ನೀರು ಸೇದಿ, ಅಡಿಗೆ ಮನೆಯ ತೊಟ್ಟಿಯನ್ನು ತುಂಬಿಸುವ ಕೆಲಸ. ಒಮ್ಮೆ ಕೊಳಂದೆ ಆ ದೇವಸ್ಥಾನದ ಪಂಡಿತರಿಗೆ ಒಂದು ಮಾತು ಹೇಳಿ ಅವರನ್ನು ಅಪ್ರತಿಭರನ್ನಾಗಿ ಮಾಡುತ್ತಾನೆ: “ನೋಡಿ ಮಾಮ, ಅವತ್ತು ಕೋತಿ, ಇವತ್ತು ಗಿಳಿ, ಮೊನ್ನೆ ಎಮ್ಮೆ, ನಿನ್ನೆ ನಾಯಿ, ಆಗ ನಾನಾರು? ಯಾರೂ ಅಲ್ಲ! ಇದೇಸುಖ ಮಾಮ.” +ಕಥೆ ಮೇಲ್ನೋಟಕ್ಕೆ ತುಂಬಾ ಸರಳವಾಗಿದೆಯೆಂದು ಅನಿಸಿದರೂ, ಅದು ಗಹನವಾದ ಆಧ್ಯಾತ್ಮಿಕ ತತ್ವವನ್ನೊಳಗೊಂಡಿದೆಯೆಂದು ಆ ಪ್ರವೃತ್ತಿ ಇರುವವರಿಗೆ ತಿಳಿಯುತ್ತದೆ. +೧೬. ಬಸವನ ಹುಳು ಮತ್ತು ಗುಲಾಬಿಯ ಗಿಡ: +ಇದೊಂದು ಅನುವಾದಿತ ಕಥೆ. ಮೂಲ ಕಥೆಯನ್ನು ಜಾನ್ಸ್ ಅಂಡರ್‍ಸನ್ ಎಂಬುವರು ಬರೆದಿದ್ದಾರೆ. ಜಗತ್ತಿಗೆ ತಮ್ಮ ಕೊಡುಗೆ ಏನು ಎಂಬ ತಾತ್ವಿಕ ಚಿಂತನೆಯು, ಸರಳ, ಸುಂದರ, ಸಂಭಾಷಣೆಯ ಮೂಲಕ ನಡೆಯುತ್ತದೆ – ಶೀರ್ಷಿಕೆಯಲ್ಲಿನ ಜೀವಿಗಳ ಮಧ್ಯೆ. ಗುಲಾಬಿಯ ಗಿಡ ಜಾಸ್ತಿ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ತಾನು ಮಾಡುತ್ತಾ, ಪ್ರತಿ ವರ್ಷವೂ ಸುಂದರ ಹೂಗಳನ್ನು ಬಿಡುತ್ತ, ಜನಗಳ ಹೃನ್ಮನಗಳನ್ನು ಸಂತೋಷಿಸುತ್ತ ಮುಂದೆ ಸಾಗುತ್ತದೆ. ಆದರೆ, ತಾನು ತುಂಬಾ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯೊಡನೆ ಹೊರಟ ಬಸವನ ಹುಳು, ಲೋಕಕ್ಕೆ ಉಗುಳು ಕೊಡುವುದನ್ನು ಬಿಟ್ಟು, ಮತ್ತೇನೂ ಹೆಚ್ಚಿನದನ್ನು ಕೊಡಲಾರದೆ, ಭ್ರಮ ನಿರಸನದಲ್ಲಿ ತನ್ನ ಜೀವನದ ಅಂತ್ಯ ಕಾಣುತ್ತದೆ. ಈ ಮಾರ್ಮಿಕವಾದ ಕಥೆ ಸುಂದರವಾಗಿ ಮೂಡಿಬಂದಿದೆ. +ಈ ಕಥೆಯನ್ನು ಓದಿದರೆ, ಇದೊಂದು ಸ್ವತಂತ್ರ ಕಥೆಯಾಗೇ ತೋರುವುದು. ಅಲ್ಲದೆ, ಕಥೆಯನ್ನು ಕನ್ನಡದ ಜಾಯಮಾನಕ್ಕೆ ಚೆನ್ನಾಗಿ ಹೊಂದಿಸಿದ್ದಾರೆ. ಉದಾಹರಣೆಗೆ, ‘ಕಣಯ್ಯ’ ಇತ್ಯಾದಿ ಪದ ಪ್ರಯೋಗ. ಚಿಂತನ ಭೂಯಿಷ್ಠವಾದ ಈ ಕಥೆ ನಮ್ಮೆಲ್ಲರನ್ನೂ ಜಗತ್ತಿಗೆ ನಿಮ್ಮ ಕೊಡುಗೆ ಏನು ಎಂದು ಕೇಳುವಂತಿದೆ. +ಪು.ತಿ.ನ. ಅವರ ಕಥೆಗಳ ಬಗ್ಗೆ ಸಮಗ್ರ ವಿಮರ್ಶೆ: +ಜೀವನದಲ್ಲಿ ಪ್ರತಿಯೊಂದನ್ನೂ ಒಳ್ಳೆಯ ದೃಷ್ಠಿಯಿಂದ ಪರಿಭಾವಿಸುವ ಪ್ರವೃತ್ತಿ ಪು.ತಿ.ನ. ಅವರಲ್ಲಿ ಕಾಣುತ್ತದೆ. ಗಾಢವಾದ ಧಾರ್ಮಿಕ ಶ್ರದ್ಧೆ, ಪ್ರಖರವಾದ ಆಧ್ಯಾತ್ಮಿಕ ಜ್ಞಾನದ ಆಳವಾದ ಅರಿವು, ದೈವಭಕ್ತಿ — ಶ್ರೀಯುತರನ್ನು ನಿಯಂತ್ರಿಸುತ್ತಿರುವ ಶಕ್ತಿಯೆಂದು ಭಾಸವಾಗಿ ಅವರ ಸಮಸ್ತ ಸೃಜನಶೀಲ ಚೈತನ್ಯದ ಸೆಲೆಯಾಗಿದೆಯೆಂದು ತೋರುತ್ತದೆ. ಸಮಾಜದ ಎಲ್ಲ ವರ್ಗದವರ ಬಗ್ಗೆ ಶ್ರೀಯುತರಿಗಿರುವ ಜೀವನ ಪ್ರೀತಿ ಇವರ ಕಥೆಗಳಲ್ಲಿ ವ್ಯಕ್ತವಾಗಿದೆ. ನವೋದಯ ಮಾರ್ಗದ ಇತರ ಸಾಹಿತಿಗಳಂತೆ ಇವರು, ಸಮಾಜದ ವ್ಯವಸ್ಥೆ ಮತ್ತು ಪರಂಪರಾನುಗತ ಮೌಲ್ಯಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ, ಏಕೆಂದರೆ ಈ ಮೌಲ್ಯಗಳು ನಿತ್ಯವಾದವುಗಳು, ಸಮಾಜದ ಸಮಷ್ಠಿಗೆ ಹಿತಕಾರಕಗಳು. ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬಾಳುವುದರಲ್ಲೇ ಸಮಾಜದ ಒಳಿತಿರುವುದು ಎಂದು ಬಲವಾಗಿ ನಂಬಿದವರು ಇವರು. ಹೀಗಾಗಿ, ಇವರ ಕಥೆಗಳಲ್ಲಿ ಸಮನ್ವಯ, ಹೊಂದಾಣಿಕೆ, ಅದಮ್ಯವಾದ ಜೀವನ ಪ್ರೇಮ ವ್ಯಕ್ತವಾಗುತ್ತದೆ. +ಕಥೆಯನ್ನು ಸ್ವಾರಸ್ಯಕರವಾಗಿ ಹೇಳುವ ಕಲೆ ಪು.ತಿ.ನ. ಅವರಿಗೆ ಸಿದ್ಧಿಸಿದೆ. ಪು.ತಿ.ನ. ಅವರ ಭಾಷೆ ಪ್ರಬುದ್ಧವಾಗಿದೆ, ಗದ್ಯ ಸಹಜ ಲಯಗತಿಯಿಂದ ಕೂಡಿದೆ. ಪರಂಪಾರಗತ ಮಾನವೀಯ ಮೌಲ್ಯಗಳನ್ನು ಬಿಂಬಿಸಿ, ಪೋಷಿಸಿ, ವೃದ್ಧಿಸುವಂತಹ ಕಥೆಗಳನ್ನು ಬರೆದು, ನವೋದಯ ಮಾರ್ಗದ ಪ್ರಮುಖ ಲೇಖಕರಲ್ಲಿ ಪು.ತಿ.ನ. ಅವರು ಒಬ್ಬರಾಗಿದ್ದಾರೆ. ಅತಿ ಮಡಿವಂತಿಕೆಯಿಂದ ಕಥೆಗಳನ್ನು ಚಿತ್ರಿಸಿಲ್ಲ; ಹಾಗೆಯೇ, ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗಲೂ ಸಹ ಅಶ್ಲೀಲತೆಯ ಸೋಕಿಲ್ಲದೆ, ಶುದ್ಧವಾಗಿ ಕಥೆಗಳನ್ನು ನಿರೂಪಿಸಿದ್ದಾರೆ. ಸ್ವಾತಂತ್ರಪೂರ್ವ ಕರ್ನಾಟಕದ, ಸಾಮಾಜಿಕ ಜೀವನ ಚಿತ್ರಣ ಕೆಲವು ಕಥೆಗಳಲ್ಲಿ ಸೊಗಸಾಗಿ ಮೂಡಿಬಂದಿದೆ. ಯಾವುದೇ ಬಗೆಯ ಉದ್ವಿಗ್ನತೆಗೆ ಒಳಗಾಗದೆ, ನಿರ್ಲಿಪ್ತವಾಗಿ ಕಥೆಯನ್ನು ಹೇಳಿಕೊಂಡು ಹೋಗಿರುವ ರೀತಿ ಅನನ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಅನವಶ್ಯಕ ವಿವರಣೆಗಳಿಲ್ಲದೆ ಕಥೆಯನ್ನು ಹೆಣೆದಿರುವುದು, ಪಾತ್ರ ಚಿತ್ರಣ, ಸಂಭಾಷಣೆ, ಘಟನೆಗಳನ್ನು ಕಥೆಯ ಸಾವಯವ ಅಂಗವಾಗಿ ಮಾಡಿಕೊಂಡಂತಹ ಕಲಾವಿನ್ಯಾಸ, ಅಲ್ಲಲ್ಲಿ ಮಿಂಚುವ ಜೀವನ ದರ್ಶನ ಮತ್ತು ಆಧ್ಯಾತ್ಮಿಕ ತತ್ವ – ಹೀಗೆ ಎಲ್ಲದರ ವಿವರಣೆಯಲ್ಲೂ ಅವರು ಅಸಾಧಾರಣ ಸಂಯಮವನ್ನು ಮೆರೆದು, ನವೋದಯ ಮಾರ್ಗದ ಕೆಲವು ಅತ್ಯುತ್ತಮ ಹಾಗೂ ಹಲವು ಪ್ರಾತಿನಿಧಿಕ ಕಥೆಗಳನ್ನು ನೀಡಿದ್ದಾರೆ. +ನವೋದಯ ಮಾರ್ಗದ ಕಥೆಗಳನ್ನು ವಿಮರ್ಶಿಸುತ್ತಾ, ಜಿ. ಎಚ್. ನಾಯಕರು ಹೀಗೆ ಅಭಿಪ್ರಾಯ ಪಡುತ್ತಾರೆ [೨]: ಕುವೆಂಪು ಅವರಂತೆಯೇ ಬೇರೆ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಪ್ರಖ್ಯಾತರಾಗಿರುವ ನವೋದಯ ತಲೆಮಾರಿನ ದ. ರಾ. ಬೇಂದ್ರೆ, ಶಿವರಾಮ ಕಾರಂತ, ಪು. ತಿ. ನರಸಿಂಹಾಚಾರ್ ಮುಂತಾದ ಸಾಹಿತಿಗಳು ಸಣ್ಣಕಥೆಗಳನ್ನು ಬರೆದಿರುವರಾದರೂ, ಆ ಪ್ರಕಾರ ಅವರಿಗೆಲ್ಲ ಏಕೆ ಕೊನೆಯವರೆಗೆ ಒಗ್ಗಿರಲಿಲ್ಲ ಎನ್ನುವುದು ಕುತೂಹಲದ ಸಂಗತಿಯಾಗಿಯೇ ಉಳಿಯುವಂತಾಗಿದೆ. +ಗ್ರಂಥ‌ಋಣ: +[೧] “ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ” – ಸಂಪಾದಕರು: ಡಾ|| ಜಿ.ಎಸ್.ಶಿವರುದ್ರಪ್ಪ ಮತ್ತು ಡಾ|| ಎಚ್.ಎಸ್.ವೆಂಕಟೇಶಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨. +[೨] “ಕನ್ನಡ ಸಣ್ಣ ಕಥೆಗಳು” – ಜಿ. ಎಚ್. ನಾಯಕ, ನ್ಯಾಷನಲ್ ಬುಕ್ ಟ್ರಸ್ಟ್, ಹೊಸ ದೆಹಲಿ, ೧೯೭೮. +[೩] “ಸಮಗ್ರ ವಿಮರ್ಶೆ” (ಸಂಪುಟ ೨) – ಡಾ|| ಗಿರಡ್ಡಿ ಗೋವಿಂದರಾಜ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೧. +ವಿಶೇಷ ಸೂಚನೆ: +ಈ ವಿಮರ್ಶಾತ್ಮಕ ಲೇಖನ ಕೆಳಕಂಡ ಪುಸ್ತಕದಲ್ಲಿ ಪ್ರಕಟವಾಗಿದೆ: +ಯದುಗಿರಿಯ ಬೆಳಕು, ಪ್ರಧಾನ ಸಂಪಾದಕ: ಅಹಿತಾನಲ, ಪ್ರಕಾಶನ: ಸಾಹಿತ್ಯಾಂಜಲಿ ಕ್ಯಾಲಿಫ಼ೋರ್ನಿಯಾ ಮತ್ತು ಅಭಿನವ, ಬೆಂಗಳೂರು, ೨೦೦೫. +***** +ಕನ್ನಡದ ಬಹು ಮುಖ್ಯ ಕತೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಹಲವು ಮಹತ್ವದ ಕೃತಿಗಳನ್ನು ನೀಡಿರುವ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿಯ ಪ್ರಶಸ್ತಿ ಬಂದಿದೆ. ಇದು ಅವರ ಎಲ್ಲ ಸಣ್ಣಕತೆಗಳ, ಕಾದಂಬರಿಗಳ ಮರು […] +ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […] +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_649.txt b/Kannada Sahitya/article_649.txt new file mode 100644 index 0000000000000000000000000000000000000000..359315ac58e6dcf1fdab37fb7280a62c14529b52 --- /dev/null +++ b/Kannada Sahitya/article_649.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ +ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ +ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. +ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ +ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! +ಬಂದದ್ದು ಹಂಜಿಯ ಮಾಡಿ ರಾಟ ತಿರುಗಿಸಿದ. +ಗದ್ದುಗೆಯನೇರಿದರು ಕಾಣಿಸಿಕೊಳದ ಕಿರಿಯ +ಬಾಜಾ ಬಜಂತ್ರಿಯ ನಿಲಿಸಿ ಸಹಜ ತಂತಿಯ ಮಿಡಿದ +ಎಲ್ಲರಿಗು ಕಿವಿಗೊಟ್ಟು ತನ್ನ ಒಳದನಿ ಮರೆಯ. +ಮಹಾಪೂರವ ಧೀರ ತೆಪ್ಪದಲಿ ದಾಟಿಸಿದ; +ಮಾಯಿಸಿದ ಮೈಮೇಲೆ ಬಂದು ಬಿದ್ದವರ ಗಾಯ. +ಯಾರಿಗೂ ಸಿಗದ ಬಿಳಿ ಪಾರಿವಾಳವ ಹಿಡಿದ. +ಮಧ್ಯರಾತ್ರಿಯಲಿಂತು ಕೊರೆದು ಮಿಂಚಿನ ಗೆರೆಯ +ಮರೆಯಾದ: ದಡಕ್ಕೆ ಮುಟ್ಟಿಸಿದ ಹೊತ್ತ ಹೊರೆಯ. +***** +೧೯೬೯ +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […] +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] +ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_65.txt b/Kannada Sahitya/article_65.txt new file mode 100644 index 0000000000000000000000000000000000000000..c3ec4b618fc8832e85c4c82826aaab6c16616946 --- /dev/null +++ b/Kannada Sahitya/article_65.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹತ್ತಾರು ರಸ್ತೆಗಳು +ಒಂದನ್ನೊಂದು +ಕತ್ತರಿಸುತ್ತ ಕೂತರೆ +ಹೋಗುವುದೆಲ್ಲಿಗೆ ಹೇಳು +ಹತ್ತೂ ಕಡೆ ಕನ್ನಡಿ +ಹಿಡಿದು ನೀ +ಕೂತರೆ ನಾ +ಬತ್ತಲಾಗದೆ ಉಪಾಯವಿದೆಯೆ? +***** +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_650.txt b/Kannada Sahitya/article_650.txt new file mode 100644 index 0000000000000000000000000000000000000000..e3468c1fc3e07665c66035e83b9690b6c1ea5283 --- /dev/null +++ b/Kannada Sahitya/article_650.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ ಭಾವನೆಗಳನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಾನೆ. ಅವನ ದನಿಯ ಏರಿಳಿತದಲ್ಲಿ ಮುಖದ ಹಾವಭಾವದಲ್ಲಿ, ಒತ್ತುವ ವಿವರಗಳಲ್ಲಿ ಕೇಳುವವನ ಅಂತರಂಗವನ್ನು ವಶಪಡಿಸಿಕೊಳ್ಳುವ ಹೊಂಚಿಕೆಯಿರುತ್ತದೆ. ಮೋಸಗಾರನ ಹೊಂಚಿಕೆಗೂ, ಪ್ರಾಮಾಣಿಕನಲ್ಲಿ ನಮ್ಮನ್ನು ಸೆಳೆಯಬಲ್ಲಂತೆ ವ್ಯಕ್ತವಾಗುವ ಆರ್ತತೆಗೂ ನಡುವೆ ಸಾಮಾನ್ಯ ಅಂಶಗಳಿರುತ್ತವೆಂಬುದನ್ನು ನಾವು ಗಮನಿಸಿರುತ್ತೇವೆ. ಹೃತ್ಪೂರ್ವಕತೆಯನ್ನು ವ್ಯಕ್ತ ಮಾಡುವ ಒಬ್ಬನ ಮುಖದ ಹಾವಾಭಾವ ನಮಗೆ ಪ್ರಿಯವಾದರೂ, ಕಪಟಿಯಲ್ಲಿ‌ಅದೇ ಹಾವಭಾವ ಕಂಡಾಗ ನಾವು ಸಂಶಯಗ್ರಸ್ತರಾಗುತ್ತೇವೆ. ಆಗೀಗ ಮೋಸಹೊಗಿ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬ ವಿವೇಕದ ಅಗತ್ಯ ನಮಗೆ ಮನದಟ್ಟಾಗಿರುತ್ತದೆ. ಸುಳ್ಳು ಮಾತಿಗೂ ಕಲೆಯ ವಕ್ರತೆಗೂ ಹೀಗೆ ಸಂಬಂಧವಿದೆ. ಮಾತಿನ ಹಿಂದಿನ ಇಂಗಿತ ಎರಡಕ್ಕೂ ಮುಖ್ಯ. ಒಂದು ದೃಷ್ಟಿಯಲ್ಲಿ ನೋಡುವುದಾದರೆ ಶ್ರೇಷ್ಠಕಲೆ ಕೂಡ ಮಾತಿನ ಸಂಯೋಜನೆಯಲ್ಲೋ, ಬಣ್ಣದ ವಿನ್ಯಾಸದಲ್ಲೋ, ನಾದದ ಏರಿಳಿತದಲ್ಲೋ ಹೀಗೆಯೇ ನಮ್ಮ ಭಾವನೆಗಳನ್ನು ನುಡಿಸಿ ನಮ್ಮನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತದೆ. +ನಮ್ಮನ್ನು ಒಲಿಸಿಕೊಳ್ಳುವ ಹೊಂಚುವ ಇಬ್ಬರಲ್ಲಿ ಯಾರು ಸಾಚ, ಯಾರು ಪಡಪೋಶಿ ಎಂಬುದನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ಆಗೀಗ ಪೆಟ್ಟು ತಿಂದ ನಾವು ಕಲಿಯುತ್ತಲೇ ಇರುತ್ತೇವೆ. ಆದರೆ ಮಾತ್ರ, ನಮ್ಮ ಅಂತರಂಗಕ್ಕೆ ಕೈಹಾಕುವ ಕಲೆಯಲ್ಲಿ ಯಾವುದು ಸಾಚ, ಯಾವುದು ಮೋಸ, ಯಾವುದು ಬರಿ ಕಣ್ಕಟ್ಟು ಎಂಬುದು ಕೂಡ ಇಂಥವೇ ವಿವೇಕಕ್ಕೆ ಸಂಬಂಧಿಸಿದ ಪ್ರಶ್ನೆಯಾದರೂ ನಮಗದು ತೀವ್ರವಾಗಿ ತಟ್ಟದೇ ಓಗಬದುದು. ಯಾಕೆಂದರೆ ಇಲ್ಲಿ ನಾವು ತಿನ್ನುವ ಪೆಟ್ಟು ನೇರವಲ್ಲ; ಹಗಲುಗನಸಿನ ಸುಖ ಬೇಕೆನ್ನಿಸುವುದು ಮನುಷ್ಯ ಸಹಜವಾದ್ದು; ನಿಜವನ್ನು ಪತ್ತೆಮಾಡುವುದು ಕೂಡ ಕಷ್ಟವೇ. ಸಮಾಜದಲ್ಲಿ ಬದುಕುವ ನಮ್ಮ ಮನಸ್ಸಿನ ಮೇಲೆ, ಸುಖದುಃಖಗಳಿಗೆ ಕಾರಣವಾದ ಭಾವಗಳ ಮೇಲೆ ಎಲ್ಲ ದಿಕ್ಕುಗಳಿಂದಲೂ ಆಕ್ರಮಣ ಪ್ರಯತ್ನ ನಡೆಯುತ್ತಲೇ ಇರುವುದರಿಂದ, ಕಲ್ಪನಾತ್ಮಕ ವಸ್ತುವಿಗೂ ಕಣ್ಕಟ್ಟಿಗೂ ತೋರಿಕೆಯ ಸಾಮ್ಯ ಬೇರೆ ಇರುವುದರಿಂದ, ಬದುಕಿನ ಅನುಭವದಿಂದ ಬರುವ ವಿವೇಕವನ್ನು ಕಲ್ಪನಾತ್ಮಕ ವಸ್ತುಗಳಿಗೂ ಅನ್ವಯಿಸುವುದನ್ನು ಕಲಿಸುವ ಕಷ್ಟಸಾಧ್ಯವಾದ ಮನಸ್ಸಿನ ಶಿಸ್ತೆಂದರೆ ವಿಮರ್ಶೆ. ನಮ್ಮ ಆಸಕ್ತಿಯನ್ನು ಕೆರಳಿಸಿ, ಒಂದು ಉದ್ದೇಶಕ್ಕೆ ಒಪ್ಪಿಕೊಳ್ಳುವಂತೆ ಭಾವಗಳನ್ನು ಸಂಯೋಜಿಸಲು ಯತ್ನಿಸುವ ಜಾಹೀರಾತಿನ ಹಿಂದಿರುವ ನಿಜ ಸುಳ್ಳು; ರಾಜಕಾರಣಿಯ ಭಾಷಣದ ಹಿಂದಿನ ಗುಪ್ತ ಉದ್ದೇಶ; ಎದುರು ತೋರುವ ಆರ್ತ ಮಾತಿನ ಹಿಂದಿರುವ ಪ್ರಾಮಾಣಿಕತೆ ಅಥವಾ ಮೋಸ; ಕಲೆಗೆ ನಾವು ನಮ್ಮ ಗಮನವನ್ನು ಕೊಟ್ಟಿದ್ದೆಷ್ಟು, ಪಡೆದಿದ್ದೆಷ್ಟು ಈ ಎಲ್ಲ ಪ್ರಶ್ನೆಗಳು ನಮ್ಮ ಜೀವಂತಿಕೆಯನ್ನು ನಿಜವಾದ್ದಕ್ಕೆ ಮಾತ್ರ ಒಡ್ಡಿಕೊಂಡು ಪೋಷಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಮುಖ್ಯವಾಗುತ್ತದೆ. ಅಬ್ಬರಕ್ಕೊಗ್ಗಿದ ಕಿವಿಗೆ ಸೂಕ್ಷ್ಮವಾದದ್ದು, ನಯವಾದ್ದು ಹಿಡಿಸುವುದಿಲ್ಲ; ಅದ್ಭುತರಮ್ಯದ ದುಂದಿಗೆ ಭಾವವನ್ನು ಒಡ್ಡಿ ಹಿಗ್ಗಾಮುಗ್ಗಾ ಎಳೆಸಿಕೊಂಡವನಿಗೆ ನೈಜವಾದ್ದು ಸಪ್ಪೆಯೆನಿಸೀತು. ಸಹನೆಯಾಗಲೀ ಏಕಾಗ್ರತೆಯಾಗಲೀ ಅಸಾಧ್ಯವಾಗುತ್ತ ಭಾವದ ಶಕ್ತಿ ಕ್ರಮೇಣ ಬತ್ತಿ ಹೋದೀತು. ನನ್ನ ಸ್ನೇಹಿತರೊಬ್ಬರು ಹೇಳುತ್ತಿರುತ್ತಾರೆ: ಸ್ಟಂಟ್ ಚಿತ್ರಗಳನ್ನು ನೋಡುವುದೇ ಹವ್ಯಾಸ ಮಾಡಿಕೊಂಡ ಯುವಕರಿದ್ದ ಊರಿಗೆ ಒಮ್ಮೆ ಸರ್ಕಸ್ ಕಂಪನಿ ಬಂತಂತೆ: ಆದರೆ ಸರ್ಕಸ್ಸಿನ ನಿಜವಾಗಿಯೂ ರೋಮಾಂಚಕಾರಿಯಾದ ಕೈಚಳಕವಾಗಲೀ ಕಸರತ್ತಾಗಲೀ ಈ ಹುಡುಗರಿಗೆ ಸಪ್ಪೆಯಾಗಿ ಕಂಡಿತಂತೆ. ಪತ್ತೇದಾರಿ ಕಾದಂಬರಿಗಳ ರುಚಿ ಹತ್ತಿದವನೊಬ್ಬನಿಗೆ ಯಾರು ಕೊಲೆಗಾರ ಎಂಬ ಸುಲಭ ಪ್ರಶ್ನೆ ಪತ್ತೆಯಾಗಲು ಐದು ಅಂಕಗಳು ಬೇಕಾದ ಮ್ಯಾಕ್‌ಬೆತ್ ನಾಟಕದ ಕಾವ್ಯ ಗೋಳು ಎನ್ನಿಸಬಹುದು. ಈ ಅಪಾಯವನ್ನು ಹತ್ತೊಂಬತ್ತನೇ ಶತಮಾನದಲ್ಲೇ ಗಮನಿಸಿದ ವರ್ಡ್ಸ್‌ವರ್ಥ್ ಕೆಟ್ಟ ಕಾದಂಬರಿಗಳಾದ ‘ಎನ್ನೆರ್ವಟೆ ’ ಆಗಿ ನಿಸರ್ಗಕ್ಕೆ ಸ್ಪಂದಿಸಲಾರದೆ ಹೋಗುತ್ತೇವೆಂದು ವಾದಿಸಿದ. ಎಲ್ಲವೂ ಆದಷ್ಟು ಬೇಗ ಖರ್ಚಾಗಬೇಕಾದ ಸರಕಾಗುತ್ತಿರುವ ಈ ಕಾಲದಲ್ಲಿ ಈ ಅಪಾಯ ಇನ್ನೂ ಹೆಚ್ಚು ಎನ್ನಬಹುದು. +ಈ ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ‘ನಾಗರಹಾವು’ ಚಿತ್ರ ನಮ್ಮ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಹೇಗೆ ಮಾಡಲು ಪ್ರಯತ್ನಿಸುತ್ತದೆ ಎಂಬುದನ್ನು ನೊಡೊಣ. ಈ ಚಿತ್ರ ನೋಡುವಾಗ ಕೆಲವು ಸಂದರ್ಭಗಳಲ್ಲಿ ನನಗೆ ಕಣ್ಣೀರು ಉಕ್ಕಿತೆಂಬುದನ್ನು ಹೇಳಲು ನಾಚಿಕೆಯಾದರೂ ಒಪ್ಪಿಕೊಳ್ಳುತ್ತೇನೆ. ಯಾರ ಜೊತೆ ಕೂತು ನಾವು ಒಂದು ಸಿನಿಮಾವನ್ನು ನೊಡುತ್ತೇವೆಂಬುದು ಮುಖ್ಯ. ‘ನಾಗರಹಾವು’ ನೊಡುವಾಗ ನನಗಿದು ಮನದಟ್ಟಾಯಿತು. ನನ್ನ ಜೊತೆ ಕೂತವರ ಭಾವನೆಗಳು ನನ್ನನ್ನೂ ಆಕ್ರಮಿಸಿದುವು. ಅದೇ ನನ್ನ ಜೊತೆ ಕೂತ ಪ್ರೇಕ್ಷಕರು ವಿಮರ್ಶಾತ್ಮಕ ಧೋರಣೆಯುಳ್ಳ ವಿವೇಕಿಗಳಾಗಿದ್ದಲ್ಲಿ ಈ ಚಿತ್ರದ ಭಾವಾತಿರೇಕಗಳು ನನಗೆ ಹಾಸ್ಯಾಸ್ಪದವಾಗಿ ಕಾಣಬಹುದಿತ್ತು. ಆದರೆ ನಾಗರಹಾವು ಚಿತ್ರವನ್ನು ನಾನು ನೋಡಿದಾಗ ನನ್ನ ಜೊತೆಗಿದ್ದ ಪ್ರೇಕ್ಷಕರ ಕೆಲವು ಮನಸ್ಸಿನ ಅಂಶಗಳು ನನ್ನವೂ ಆಗಿದ್ದುದರಿಂದಲೇ ಸ್ವಲ್ಪ ಮಟ್ಟಿಗೆ ವಿಮರ್ಶಾತ್ಮಕ ವಿವೇಕವನ್ನೂ ಬದಿಗಿಟ್ಟು ನಾನು ಚಿತ್ರಕ್ಕೆ ಸ್ಪಂದಿಸಿದೆ ಎನ್ನಬಹುದು. ಈ ಲೇಖನವನ್ನು ಬರೆಯುವಾಗ ಚಿತ್ರ ನೋಡಿದಾಗ ನನಗೆ ಅನ್ನಿಸಿದ ಉತ್ಕಟತೆಯನ್ನು ವಿಮರ್ಶೆಗೆ ಒಡ್ಡುವುದೇ ಈಗಿನ ನನ್ನ ಉದ್ದೇಶವೆನ್ನಬಹುದು. ಬೆಂಗಳೂರು ಮತ್ತು ಮೈಸೂರು ನಗರಗಳಂಥ ವಿಶೇಷವಾಗಿ ಮಧ್ಯಮವರ್ಗದ ನಮ್ಮಂಥವರು ಅಧಿಕವಾಗಿರುವ ಊರುಗಳಲ್ಲಿ ಜನಪ್ರಿಯವಾಗಿ, ಆ ಮೂಲಕ ಹೆಸರು ಮಾಡಿ, ಉಳಿದ ವರ್ಗಗಳಿದಲೂ ಮೆಚ್ಚಿಕೆ ಸಂಪಾದಿಸುವ ಈ ಸಿನಿಮಾವನ್ನು ವಿಶ್ಲೇಷಿಸುವ ಮುಖಾಂತರ ಚಿತ್ರಕ್ಕೆ ಯಶಸ್ಸನ್ನು ಗಿಟ್ಟಿಸಲು ಕಾರಣವಾದ ಕೆಲವು ಸಾಮಾಜಿಕ ಸತ್ಯಗಳನ್ನು ತಿಳಿಯಬಹುದೆಂದು ನನ್ನ ಭಾವನೆ. ನಾನು ಹೇಳುವುದೆಲ್ಲ ಚಿತ್ರ ನಿರ್ದೇಶಕರ ಸ್ಪಷ್ಟ ಉದ್ದೇಶವಾಗಿತ್ತೆಂದು ನಾನು ಭಾವಿಸುವುದಿಲ್ಲ. ಅವರ ಉದ್ದೇಶವನ್ನೂ ಮೀರಿದ ಚಿತ್ರದ ಪರಿಣಾಮ ನನಗೆ ಮುಖ್ಯ. +ಮಧ್ಯಮವರ್ಗದ ಪ್ರೇಕ್ಷಕನಾದ ನಮಗೆ ಮರ್ಯಾದೆಗೆಡದಂತೆ ಬದುಕುವ ಕಷ್ಟಸುಖಗಳ ಅನುಭವ ನಿತ್ಯ ಆಗುತ್ತಿರುತ್ತದೆ. ರಾಜಿ ಮಾಡಿಕೊಳ್ಳದೆ ನಾವು ಬದುಕಲಾರೆವು; ಎಂಥ ಸತ್ಯಸಂಧನೂ ಕೊನೆಗೆ ಸಮಾಜದ ಪ್ರತಿಷ್ಠರ ಜೊತೆ ರಾಜಿ ಮಾಡಿಕೊಂಡು ಹಣ್ಣಾಗಬೇಕಾಗುತ್ತದೆಂಬ ದುರಂತ ಪ್ರಜ್ಞೆ ನಮಗಿರುತ್ತದೆ. ನಾವು ಬಾಯಿಮಾತಿನಲ್ಲಿ ಏನೇ ಹೇಳುತ್ತಿರಲಿ, ಪ್ರತಿಷ್ಠಿತರನ್ನು ಎದುರುಹಾಕಿಕೊಳ್ಳುವ ತಮ್ಮನೋ, ಮಗನೋ, ಸ್ನೇಹಿತನೋ ನಮಗಿದ್ದರೆ ಅವನನ್ನು ಹದಕ್ಕೆ ತರಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. ಈ ಪ್ರತಿಭಟನೆ ತಾತ್ವಿಕವಾಗಿ ಸರಿ ಎಂದು ನಮಗೆ ಗೊತ್ತು; ಆದರೆ ಕೆಡುಕಿನ ಜೊತೆ ಒಪ್ಪಂದ ಮಾಡಿಕೊಳ್ಳದ ಆಪ್ತನೊಬ್ಬ ಆದಷ್ಟು ಶೀಘ್ರವಾಗಿ ದಾರಿಗೆ ಬರುವುದೂ ನಮಗೆ ಬೇಕು. ಇಂಥ ಮನಸ್ಥಿತಿಯ ನಮಗೆ ರಾಮಾಚಾರಿಯಂಥ ದುಡುಕಿನ ಪ್ರಮಾಣಿಕ ಬಂಡಾಯಗಾರನೆಂದರೆ ಯಾಕೆ ಒಳಗೊಳಗೇ ಪ್ರಿಯನಾಗುತ್ತಾನೆಂದು ವಿವರಿಸಬೇಕಾಗಿಲ್ಲ. ರಾಮಾಚಾರಿ ಹಸಿ ಮನುಷ್ಯ – ನಿಜ. ಆದರೆ ನಾವು ಅವನ ಹಾಗಾಗಬಹುದಿತ್ತು ಎನ್ನಿಸುವುದರಿಂದಲೇ ಅವನು ನಮಗೆ ಆಪ್ತ. ಅವನ ಯಜಮಾನನಾದ ಮಂಡಿವರ್ತಕ ಅಲುಮೇಲುವನ್ನು ಭೋಗಿಸಲು ಪ್ರಯತ್ನಿಸುವುದನ್ನು ಅವನು ಹೇಗೆ ಒರಟಾಗಿ ವಿರೋಧಿಸುತ್ತಾನೆ, ನೋಡಿ. ಕಾಲೇಜಿಗೆ ಹೋಗುತ್ತಿರುವ ನಮ್ಮ ಮಗ ರಾಮಾಚಾರಿಯಂತೆ ಪ್ರಾಯಶಃ ಇದ್ದಾನೆ. ಸ್ವಲ್ಪ ದುಡುಕು; ಆದರೆ ಪ್ರಾಮಾಣಿಕ; ಚೆನ್ನಾಗಿ ಪಾಸುಮಾಡಿ ಮುಂದು ಬರುವುದರಲ್ಲಿ ನಿರಾಸಕ್ತ. ಈತ ಪೋಲಿಯಾಗಿ ಏನೂ ಸಂಪಾದನೆ ಮಾಡದೆ ಹೋಗಬಹುದೆಂದು ನಮಗೆ ಭಯ. ಆದರೂ ಪ್ರೀತಿ; ಗುಪ್ತವಾಗಿ ಗೌರವ ಕೂಡ. ಒಳಹೊಕ್ಕು ನೋಡಿದಲ್ಲಿ ಪ್ರತಿ ಕುಟುಂಬದಲ್ಲೂ ಪ್ರಾಯಶಃ ನಿಷ್ಕಪಟಿಯಾದ, ಆದರೆ ಪೋಲಿ ಬಿದ್ದು ನಿರುಪಯೋಗಿಯಾಗಿ ಬಿಟ್ಟ ಒಬ್ಬನಲ್ಲ ಒಬ್ಬ ಇರುತ್ತಾನೆ. ಪ್ರತಿ ಸಾಮಾಜಿಕ ವ್ಯವಸ್ಥೆಯೂ ಹೊಂದಿಕೊಳ್ಳಲಾರದವನನ್ನು ಹೀಗೆ ಕಸದಬುಟ್ಟಿಗೆ ಎಸೆಯುತ್ತದೆ. ಮಧ್ಯಮವರ್ಗದವನಾದ ಇವನ ಪ್ರತಿಭಟನೆ ಎಲ್ಲೂ ಊರಿ ಗಟ್ಟಿಯಾಗದೆ, ಯಾವ ಕೆಲಸಕ್ಕೂ ಅಂಟಿಕೊಳ್ಳಲಾರದ ಭ್ರಮಣೆಯಾಗಿ, ಕುಡಿತದಲ್ಲೊ ಪೋಲಿಯಲೆಯುವುದರಲ್ಲೊ ಕೊನೆಯದಾಗಿ ಸಂಬಂಧಪಟ್ಟವರಿಗೆಲ್ಲ ತಲೆಬೇನೆಯಾಗಿರುತ್ತದೆ. ಪ್ರತಿ ಮಧ್ಯಮವರ್ಗದ ಕುಟುಂಬವೂ ಅವಮಾನದಿಂದ ಮುಚ್ಚಿಟ್ಟುಕೊಳ್ಳಲು ಬಯಸುವ ಇಂಥ ಒಬ್ಬ ನಿರುಪಯೋಗಿಯನ್ನು ಪಡೆದಿರುತ್ತದೆ ಎಂದು ಊಹಿಸಬಹುದು. ನಮ್ಮ ಮೌಲ್ಯಗಳ ಪೊಳ್ಳನ್ನು ಬಯಲು ಮಾಡುವ ದುರ್ಬಲ ಜೀವಿಗಳು ಇವರು. ಇಂಥವರನ್ನು ನಾವು ಟೀಕಿಸಿದರೂ ಯಶಸ್ವಿಯಾದವರ ಬಗ್ಗೆ ಕೂಡ ನಮಗೆ ಅಂಥ ಗೌರವವೇನೂ ಇರುವುದಿಲ್ಲ. ಆಳುದ್ದ ಶರೀರವನ್ನು ಗೇಣುದ್ದ ಮಾಡಿಕೊಂಡೇ ಮುನ್ನುಗ್ಗಬೇಕಾದ ಮಧ್ಯಮ ವರ್ಗದ ಬವಣೆ ನಮಗೆ ಗೊತ್ತಿಲ್ಲವೆ? ಸಂಪಾದನೆ, ಮಹತ್ವಾಕಾಂಕ್ಷೆಗಳ ನಿಷ್ಠುರ ಲೋಕದಲ್ಲಿ ಪೊಳ್ಳಾಗುತ್ತಿರುವ ನಮಗೆ ರಾಮಾಚಾರಿಯಂಥ ದುಡುಕಿನ ಪ್ರಾಮಾಣಿಕನನ್ನು ರಜತಪರದೆಯ ಮೇಲೆ ಕಾಣುವ ಸುಖ ಬೇಕೆಂದು ಸಿನಿಮಾದ ದಿಗ್ದರ್ಶಕನಿಗೆ ಗೊತ್ತು. ಇದು ಕೂಡ ಲೆಖ್ಖಾಚಾರ ಹೇಗೆಂಬುದನ್ನು ಮುಂದೆ ನೋಡೋಣ. +ಹಿಡಿದಕ್ಕೆ ಸಿಕ್ಕದಂತೆ ಪೋಲಿಯಾಗಿ ಬಿಟ್ಟ ನಮ್ಮ ಮಗನೊ, ತಮ್ಮನೊ, ಗೆಳೆಯನೊ ಆಗಬಹುದಾಗಿದ್ದ ರಾಮಾಚಾರಿಯ ಪ್ರಾಮಾಣಿಕ ದುಡುಕು ವರ್ತನೆ ಸಂಪೂರ್ಣ ಸರಿಯೆನ್ನಿಸುವಂತೆ ಚಿತ್ರಿಸುವುದು ಕೂಡ ಲೆಖ್ಖಾಚಾರಕ್ಕೆ ಸಮರ್ಪಕವಾಗುವುದಿಲ್ಲ. ಯಾಕೆಂದರೆ, ಆಗ – ಈ ದುಡುಕು ಇನ್ನೂ ಆಳದ ಬಂಡಾಯವಾದಲ್ಲಿ – ನಮ್ಮ ಮೌಲ್ಯಗಳೆಲ್ಲ ಬುಡಮೇಲಾಗಬಹುದು. ರಾಮಾಚಾರಿಯ ತಾಪ, ದ್ವೇಷ ಸ್ವಂತ ಜೀವನದಲ್ಲಿ ದಮ್ಮಿಲ್ಲದ ನಮ್ಮನ್ನು ತಣಿಸುತ್ತದೆ; ಅಥವಾ, ನಮಗೆ ಆಪ್ತನಾದವನನ್ನು ಎಲ್ಲರೂ ನಿಂದಿಸುತ್ತಿದ್ದರೂ ಸಹ ಅವನ ಬಗ್ಗೆ ಪ್ರೀತಿಯುಳಿಸಿಕೊಳ್ಳಬೇಕೆಂಬ ನಮ್ಮ ಗುಪ್ತ ಆಸೆಗೆ ಇಂಬುಕೊಡುತ್ತದೆ. ಆದರೆ ರಾಮಾಚಾರಿಯಂಥ ಬಂಡಾಯಗಾರನೊಬ್ಬನಿಂದ ಮಾತ್ರ ನಮ್ಮ ಕೊರತೆಯನ್ನು ತುಂಬಿಕೊಳ್ಳುವ ಸುಖ ನಮಗೆ ಸಾಲದು. ಇವೆಲ್ಲ ಪೊಳ್ಳು ಎಂದು ದುಡುಕುವ ರಾಮಾಚಾರಿ ನಮಗೆ ಎಷ್ಟು ಬೇಕೊ, ಅಷ್ಟೇ ಇದೇ ಮೌಲ್ಯಗಳ ಸಾಚಾ ಪ್ರತಿನಿಧಿಯೂ ಒಬ್ಬ ನಮಗೆ ಬೇಕು. ಈ ಆಶಯವನ್ನು ಪೂರೈಸಲು ಬಿ ಮತ್ತು ಸಿ ಥಿಯೇಟರಿಗಾಗಿ ರಾಮಾಚಾರಿ ತಗ್ಗಿ ನಡೆಯುವ ಜಟ್ಟಿಯಾಗಿ ಬರುತ್ತಾನೆ. (ಎ,ಬಿ,ಸಿ, ಮೂರು ಥಿಯೇಟರುಗಳಲ್ಲಿಯೂ ಯಶಸ್ವಿಯಾಗಬಲ್ಲ ಕಥೆ ಬೇಕೆಂದು ಹುಡುಕುತ್ತಿದ್ದ ನಿರ್ಮಾಪಕರೊಬ್ಬರಿಗೆ ನಾನು ಹಿಂದೊಮ್ಮೆ ತಮಾಷೆಗಾಗಿ ಸಾಯಿಬಾಬಾ ಮಹಾತ್ಮೆ ಮಾಡಬಹುದಲ್ಲ ಎಂದಿದ್ದೆ; ಯಾಕೆಂದರೆ ವೈಸ್ ಛಾನ್ಸಲರುಗಳಿಂದ ಹಿಡಿದು ಸಾಮಾನ್ಯನ ವರೆಗೆ ಕುತೂಹಲ, ಗೌರವ ಹುಟ್ಟಿಸಿದ ವ್ಯಕ್ತಿ ಈ ಕಾಲದಲ್ಲಿ ಸಾಯಿಬಾಬ ಮಾತ್ರ. ನಮ್ಮನ್ನು ಆಳುವ ವರ್ಗ ಮತ್ತು ಮಧ್ಯಮ ವರ್ಗಗಳ ಲೌಕಿಕ ಮತ್ತು ಪಾರಮಾರ್ಥಿಕ ಅಪೇಕ್ಷೆಗಳ ಮಟ್ಟ ಯಾವುದು ಎಂಬುದನ್ನು ಸಾಯಿಬಾಬರ ಜನಪ್ರಿಯತೆಯಿಂದ ತಿಳಿಯಬಹುದು. ಮನೆಯ ಒಳಗೆ ನಾವು ತೂಗು ಹಾಕುವ ದೇವರ ಪಟಗಳ ವೈಖರಿ, ನಾವು ಪೂಜಿಸುವ ಸಾಯಿಬಾಬ, ನಾವು ಮೆಚ್ಚುವ ಸಿನಿಮಾ, ನಾವು ಚಂದವೆಂದು ತಿಳಿಯುವ ದೆಹಲಿಯಲ್ಲಿರುವ ಬಿರ್‍ಲಾ ಕಟ್ಟಿಸಿದ ದೇವಸ್ಥಾನ – ಇವೆಲ್ಲವೂ ಒಂದಕ್ಕೊಂದು ಸಂಬಂಧವಿರುವ ನಮ್ಮ ಇಂದಿನ ಸಂಸ್ಕೃತಿಯ ವಾಸ್ತವಗಳು.) ನಮಗೂ ಮಂಡಿವರ್ತಕನನ್ನು ಹೆದರಿಸಬಲ್ಲ ಈ ಒರಟು ಪೈಲ್ವಾನ್ ಪ್ರಿಯನಾಗುತ್ತಾನೆ; ಆದರೆ ಇವನಿಗಿಂತ ಹೆಚ್ಚು ಪ್ರಿಯರಾಗುವವರು ಮೇಷ್ಟ್ರು. ನಿಜಜೀವನದಲ್ಲಿ ಮುಜುಗರದ ವಿಷಯವಾದ ಪ್ರತಿಭಟನೆ ರಾಮಾಚಾರಿಯಲ್ಲಿ ನಮಗೆ ಒಪ್ಪಿಗೆಯಾಗಬಲ್ಲ ಸುಖದ ಜೊತೆಗೆ, ಈ ಇನ್ನೊಂದು ಸುಖವನ್ನೂ ಕೊಡುವುದರಲ್ಲೆ ದಿಗ್ದರ್ಶಕನ ಲೆಖ್ಖಾಚಾರದ ಜಾಣತನವಿರುವುದು. ಎದುರುಬಿದ್ದವನು ಹೇಗೆ ನಮ್ಮವನೊ, ಹೊಂದಿಕೊಂಡು ಬದುಕುವ ಈ ಸದ್ಗೃಹಸ್ಥನೂ ನಮ್ಮವನೇ ಅಲ್ಲವೆ? +ಅಧಿಕಾರವನ್ನು ಪ್ರತಿನಿಧಿಸುವ ವ್ಯಕ್ತಿ ಈ ಮೇಷ್ಟ್ರು. ಚಿತ್ರದಲ್ಲಿ ಇವರಿಗೂ ರಾಮಾಚಾರಿಗೂ ಇರುವ ಆಪ್ತ ಸಂಬಂಧ ನಮ್ಮ ವಿರುದ್ಧ ಆಕಾಂಕ್ಷೆಗಳನ್ನು ಸುಳ್ಳು ಸಂಘರ್ಷಗಳಲ್ಲಿ ಉಜ್ಜಿ ಸುಖಕೊಡುವ ಕೇಂದ್ರವಾಗುತ್ತದೆ. ಅಧಿಕಾರಕ್ಕೂ ಬಂಡಾಯಕ್ಕೂ ನಡುವೆ ರುಚಿಕರವಾದ ಸಮನ್ವಯ ನಮಗೆ ಬೇಕು; ಅದನ್ನು ಈ ಇಬ್ಬರೂ ಸೇರಿ ಹೇಗೆ ಕೊಡುತ್ತಾರೆ ನೋಡಿ. +ರಾಮಾಚಾರಿಯ ಪ್ರತಿಭಟನೆಯಲ್ಲಿ ಮೇಷ್ಟ್ರಿಗೆ ಗುಪ್ತವಾದ ಸಹಾನುಭೂತಿಯಿದೆ; ಆದರೂ ರಾಮಾಚಾರಿಯನ್ನು ದಾರಿಗೆ ತರಲು ಹೊರಟವರು ಇವರು. ಎಲ್ಲರ ಮೇಲೂ ಎಗರುವ ರಾಮಾಚಾರಿ ಇವರ ಮೇಲೂ ಎಗರುತ್ತಾನೆ; ಆದರೂ ಹೆದರುತ್ತಾನೆ. ಈ ಸಂಬಂಧ ಹಗಲುಗನಸಿನಷ್ಟು ಹಿತಕರವಾಗಿದೆ. ರಾಮಾಚಾರಿ ಕಲ್ಲನ್ನು ಎತ್ತು ಮೇಷ್ಟ್ರನ್ನು ಹೊಡೆಯಲು ಹೋಗುವ ಘಟನೆಯನ್ನು ನೋಡೋಣ. ನಮಗೆ ಗೊತ್ತು: ಕೊನೆಗೆ ರಾಮಾಚಾರಿ ಮೇಷ್ಟ್ರಿಗೇ ವಿಧೇಯನಾಗಿ ನಡೆದುಕೊಳ್ಳುವುದು; ಮೇಷ್ಟ್ರು ಸಹ ಎಲ್ಲರಿಗಿಂತಲೂ ರಾಮಾಚಾರಿಯನ್ನೆ ಹೆಚ್ಚು ಪ್ರೀತಿಸುವುದು – ಈ ಸಂಬಂಧ ಇನ್ನೇನು ಒಡೆದು ಹೋಗಿಬಿಡುತ್ತದೆ ಎನ್ನುವ ಕಲ್ಲನ್ನು ಎತ್ತಿ ಹೊಡೆಯಲು ನಿಂತ ಈ ಉತ್ಕಟ ಕ್ಷಣ ಕೂಡ ಏನೇ ಆಗಲಿ ಅಂತ್ಯದಲ್ಲಿ ರಾಮಾಚಾರಿಯ ವಿಧೇಯತೆ ಶಾಶ್ವತವಾದ್ದು ಎನ್ನುವ ಸುಖವನ್ನು ಹೆಚ್ಚು ಮಾಡಲು ಬಂದಿರುವ ಘಟನೆ. ಇದು ಶಮನದ ಸೌಖ್ಯಕ್ಕೆಂದೇ ಕೆರಳಿಸುವ ನಾಟಕ. ಸ್ನಾನದ ಹೊತ್ತಿಗೆ ಮಾತ್ರ ತುರಿಸಿಕೊಳ್ಳುವ ಖುಷಿಗಾಗಿ ಮೈತುಂಬ ಕಜ್ಜಿ ಬೇಕೆಂದು ವರ ಪಡೆದ ರಾವಣನ ಸುಖದ ಹಾಗೆ ಈ ಉದ್ರೇಕ – ಶಮನದ ಸುಖ. ಯಾಕೆಂದರೆ ನಮಗೆ ಹೇಗೆಲ್ಲಾ ಅನ್ನಿಸುತ್ತದೆ ನೋಡಿ: ಅಂತೂ ರಾಮಾಚಾರಿಯನ್ನು ದಾರಿಗೆ ತರಬಲ್ಲವರು ಈ ಮೇಷ್ಟ್ರು ಒಬ್ಬರೇ ಅಲ್ಲವೆ? ಈ ನಮ್ಮ ಸಮಾಜದಲ್ಲಿ ಮೇಷ್ಟ್ರಂಥ ಮನುಷ್ಯರೂ ಇದ್ದಾರೆ ಅಲ್ಲವೆ? ಜಾತಿಬಿಟ್ಟು ಮದುವೆಯಾಗುವುದನ್ನು ಇಷ್ಟು ಸಂಪನ್ನರಾದ ಮೇಷ್ಟ್ರು ಒಪ್ಪುವುದಿಲ್ಲ ಅಲ್ಲವೆ?- ಇತ್ಯಾದಿಯಾಗಿ ನಾವು ನಮ್ಮ ವರ್ಗದ ಮೌಲ್ಯಗಳ ಬಗ್ಗೆ ಕೊನೆಗೂ ನಂಬಿಕೆ ಉಳಿಸಿಕೊಳ್ಳುವಂತೆ, ಉಳಿಸಿಕೊಂಡು ಕ್ಷೇಮವಾಗಿರುವಂತೆ ಮಾಡಬಲ್ಲ ವ್ಯಕ್ತಿ ಅವರು. (ಈ ಪಾತ್ರ ಮಾಡಿರುವ ಅಶ್ವತ್ಥರ ಮುಖ ಸ್ವಲ್ಪ ತೊರವಾದ ದೇಹ ‘ತೂಕದ ವ್ಯಕ್ತಿ’ ಎಂದು ಮೆಚ್ಚಿಕೆ ಗಳಿಸುವಂತೆ ಇವೆ. ರಾಮಾಚಾರಿ ಸ್ಪುರದ್ರೂಪಿಯಲ್ಲದೆ ನಕ್ಸಲೈಟ್ ಚಾರುಮಜಂದಾರ್‌ನಂತೆ ಒಣಗಿಕೊಂಡಿರುವವನಾಗಿದ್ದರೆ ನಮಗೇನು ಅನ್ನಿಸುತ್ತಿತ್ತು?) ರಾಮಾಚಾರಿಯ ಹೃದಯವಂತಿಕೆಯಲ್ಲಿ ನಂಬಿಕೆಯಿರುವ ಮೇಷ್ಟ್ರು ಅವನನ್ನು ದಾರಿಗೆ ತರಲು ಪ್ರಯತ್ನಿಸುವುದರಿಂದ ಎಲ್ಲೂ ಪ್ರೇಕ್ಷಕರಿಗೆ ಶಾಕ್ ಆಗದಂತೆ ಉದ್ರೇಕ-ಶಮನಗಳ ನಾಟಕವನ್ನು ನಡೆಸಿಕೊಂಡು ಹೋಗುವುದು ದಿಗ್ದರ್ಶಕರಿಗೆ ಸಾಧ್ಯವಾಗುತ್ತದೆ; ‘ಬಂಡಾಯದ ಮೇಲೆ ಆಸೆ, ಅಥಾರಿಟಿಮೇಲೆ ಇಷ್ಟ’ ಪಡುವ ನಮ್ಮ ಇಬ್ಬಂದಿ ಮನಸ್ಸನ್ನು ತಣಿಸುವುದಕ್ಕೆ ಈ ಸಂಬಂಧದ ನಾಟಕ ಹೀಗೆ ಕಾರಣವಾಗುತ್ತದೆ. +ದಿಗ್ದರ್ಶಕರ ಫಾರ್‍ಮುಲಾದ ಸಂವಹನಕ್ಕಾಗಿ ರಾಮಾಚಾರಿ ಮತ್ತು ಮೇಷ್ಟ್ರು ತೀರಾ ತೆಳುವಾದ ಪಾತ್ರಗಳಾಗಿ ಬರುತ್ತಾರೆ. ಇಷ್ಟು ತೆಳುವಾದವರನ್ನು ಯಾಕೆ ಇಷ್ಟು ಆಳವಾಗಿ ವಿಶ್ಲೇಷಿಸಬೇಕೆಂದು ಓದುಗರಿಗೆ ಅನ್ನಿಸಬಹುದು. ಆದರೆ ತೆಳುವಾದ ಪಾತ್ರಗಳು ಸಹ ಮಾಡಬಹುದಾದ (ಅದ್ದರಿಂದ ಅಪಾಯಕಾರಿ) ಪರಿಣಾಮದ ದೃಷ್ಟಿಯಿಂದ ನನ್ನ ವಿಶ್ಲೇಷಣೆ ಅಗತ್ಯವೆಂದು ನನ್ನ ಭಾವನೆ. ಅಲ್ಲದೆ ಉದ್ರೇಕದ ಕಥೆಗೆ ತೆಳು ಪಾತ್ರಗಳೇ ಅವಶ್ಯಕ. +ಈ ಎರಡೂ ಪಾತ್ರಗಳಲ್ಲಿರುವ ಅನ್ಯೋನ್ಯ ಪ್ರೀತಿ ಮತ್ತು ಗೌರವ ಶ್ರೇಷ್ಠ ಕಲೆಯ ವಸ್ತುವೂ ಆಗಬಹುದಿತ್ತೆಂಬುದು ನನ್ನ ಮುಖ್ಯವಾದ. ಅಂದರೆ, ಪ್ರೇಕ್ಷಕರ ಭಾವವನ್ನು ದೋಚುವ ಸಾಧನವಾಗದೆ ಒಂದು ಸಂಕೀರ್ಣ ಮನಃಸ್ಥಿತಿಯ ಶೋಧನೆಯಾಗಿ ಈ ಇಬ್ಬಂದಿತನ ಬಂದಿದ್ದರೆ ಆಗ ನಾವು ಸಿನಿಮಾದಿಂದ ಪಡೆಯುವ ಅನುಭವವೇ ಬೇರೆಯಾಗಬಹುದಿತ್ತು. ಅಲಮೇಲು ಸೂಳೆಯಾಗಬೇಕಾಗಿ ಬಂದಂಥ ಘಟನೆ ಇನ್ನಷ್ಟು ಕಠೋರವಾಗಿರುತ್ತಿತ್ತು. ಅವಳ ಫ್ಲಾಶ್‌ಬ್ಯಾಕ್ ಹಾಡಿನಲ್ಲಿ, ಅಶೋಕ ಹೋಟೆಲ್ಲಿನ ವೈಭವದ ರಮ್ಯ ಸೀನುಗಳಲ್ಲಿ ನಮ್ಮನ್ನು ತಣಿಸುವ ಅಗತ್ಯವಿರುತ್ತಿರಲಿಲ್ಲ. ಪ್ಯಾಕೆಟ್ಟಿನಲ್ಲಿ ಚಂದವಾಗಿ ಮಡಿಸಿಕೊಟ್ಟ ಹಾರರ್ ಇದು. ನಿಷ್ಠುರ ಸತ್ಯಗಳನ್ನು ನೋಡಬಲ್ಲ ನಮ್ಮ ಶಕ್ತಿಯ ಶೋಷಣೆಗೆ ಇಂಥವೇ ಅನೇಕ ಉದಾಹರಣೆಗಳು ಸಿನಿಮಾದಲ್ಲಿವೆ. ನಮ್ಮಲ್ಲಿರುವ ವಿರುದ್ಧ ಆಸೆಗಳನ್ನು ಸುಳ್ಳು ಸಂಘರ್ಷಕ್ಕೆ ಒಡ್ಡಿ ಕಣ್ಣೀರಿಗಾಗಿ ನಮ್ಮ ಗಮನವನ್ನು ದೋಚಿಕೊಳ್ಳುವ ‘ನಾಗರಹಾವು’ ಹೇಗೆ ಕೊನೆಯಾಗುತ್ತದೆಂಬುದು ನನ್ನ ವಿಚಾರವನ್ನು ಇನ್ನಷ್ಟು ಸ್ಪಷ್ಟ ಪಡಿಸೀತು. +ಸುಳ್ಳು ಸಮಾಜದಿಂದ ದೂರವಾಗುತ್ತ ಹೋಗುವ ರಾಮಾಚಾರಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗುತ್ತಾನೋ ಇಲ್ಲವೊ ಎನ್ನುವುದು ನಮ್ಮ ಕುತೂಹಲವನ್ನೆಲ್ಲ ಕೆರಳಿಸುವ ಪ್ರಶ್ನೆಯಾಗಿ ಕೊನೆಯಲ್ಲಿ ಬರುತ್ತದೆ. ರಾಮಾಚಾರಿಯನ್ನು ನಾವು ಕೊನೆ ಕೊನೆಗೆ ಹೆಚ್ಚಾಗಿ ನೋಡುವುದು ದುರ್ಗದ ಕೋಟೆಯಲ್ಲಿ, ಮೇಷ್ಟ್ರ ಹೇಳಿಕೆಯ ಪ್ರಕಾರ ಈ ಕೋಟೆ ಪ್ರಾಚೀನರ ಶಿಸ್ತು, ಸಂಯಮ, ತ್ಯಾಗಗಳ ಸಂಕೇತ. ಹಾಗೆಯೇ ನಾವು ಕಾಣುವಂತೆ ಸ್ವಜನರಿಂದ ಹೇಸಿದ ರಾಮಾಚಾರಿ ನಿರ್ಭಿಡೆಯಿಂದ ಪ್ರೀತಿಸುವ, ಬದುಕುವ ಜಾಗ. ಹೀಗೆ ವಿರೋಧ ಸಕೇತಗಳನ್ನು ಕೂಡಿಸುವುದನ್ನು ದಿಗ್ದರ್ಶಕರು ನವ್ಯ ಸಿನಿಮಾದಿಂದ ಕಲಿತಿರಬಹುದು. ಕೊನೆಯಲ್ಲಿ ಅಪಾಯಕಾರಿಯಾಗುವಷ್ಟು ಕಡಿದಾದ ಬೆಟ್ಟವನ್ನು ಹತ್ತುತ್ತ ರಾಮಾಚಾರಿ ಮತ್ತು ಮೇಷ್ಟ್ರು ಹೋರಾಡುವುದು ಅರ್ಥಪೂರ್ಣತೆಯ ಭ್ರಮೆ ಹುಟ್ಟಿಸುವ ಮೆಲೋಡ್ರಾಮ; ಈಚೆಗೆ ಅಗ್ಗವಾಗಿ ಹೋದ ಸಾಂಕೇತಿಕತೆ; ಭಾವನೆಗಳನ್ನು ಹೊಂಚಿಸಿ ಉದ್ರೇಕಿಸಿ ಶೋಷಿಸುವ ಸಿನೆಮಾಟಿಕ್ ಸಾಧನ. ಮಳೆ ಬಿರುಗಾಳಿಗಳ ರುದ್ರ ಸನ್ನಿವೇಶವನ್ನು ಸತ್ಯಜಿತ್ ರೇ ‘ ಪಥೇರ್ ಪಾಂಚಾಲಿ’ ಯಲ್ಲಿ ಉಪಯೋಗಿಸುವುದಕ್ಕೂ , ಇದಕ್ಕೂ ನಡುವೆ ನಡುವೆ ಇರುವ ಅಂತರ ನೈಜಕಲೆಗೂ, ಕಣ್ಕಟ್ಟಿಗೂ ಇರುವಂಥದು ಎರಡರ ಅಂತರವನ್ನು ತೋರಿಸಿ ಕೀಳು ಸಿನಿಮಾ ನಮ್ಮ ಭಾವವನ್ನು ಶೋಷಿಸದಂತೆ ಕಾಪಾಡುವುದೇ ವಿಮರ್ಶೆಯ ಕೆಲಸವೆನ್ನಬಹುದು. ‘ನಾಗರಹಾವು’ ಚಿತ್ರದ ಕೊನೆಯಲ್ಲಿ ಯಾವ ಬಗೆಯ ಸಸ್ಪೆನ್ಸ್ ನಾಟಕವಿದೆ ನೋಡೋಣ. +ಮೇಷ್ಟ್ರನ್ನು ಧಿಕ್ಕರಿಸಿ ರಾಮಾಚಾರಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ಬಿಡುತ್ತಾನೊ? ಅವರ ಮಾತನ್ನು ಕೇಳಿದ್ದರಿಂದಲೇ ಅಲುಮೇಲು ಸೂಳೆಯಾಗಬೇಕಾಯಿತೆಂದು ರಾಮಾಚಾರಿಯೇ ಹೇಳಿದ ನಂತರ ಇಬ್ಬರ ನಡುವಿನ ಸಂಘರ್ಷ ಒಬ್ಬರು ಸೋಲಲೇ ಬೇಕಾದ ಘಟ್ಟ ಮುಟ್ಟಿದಂತಲ್ಲವೇ?- ಶ್ರೇಷ್ಠ ನಾಟಕದಲ್ಲಿ ಕೂಡ ನಮಗೆ ಹೀಗೆ ಅನ್ನಿಸುವ ಸನ್ನಿವೇಶಗಳು ಬರುತ್ತವೆ. ಆದರೆ ರಾಮಾಚಾರಿಯ ಉದ್ವಿಗ್ನತೆಯನ್ನು ಲಾಭದಾಯಕವಾದ ಕ್ಲೈಮ್ಯಾಕ್ಸ್ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ದಿಗ್ದರ್ಶಕರು ಬೆಳೆಸಿದ್ದಾರೆಯೆ ವಿನಾ ಹೊಸದನ್ನು ಕಾಣಿಸುವ ಶೋಧನೆಯ ದೃಷ್ಟಿಯಿಂದಲ್ಲ ಎನ್ನುವುದು ಇನ್ನು ಕೆಲವೇ ನಿಮಿಷಗಳಲ್ಲಿ ರಜತ ಪರದೆಯ ಮೇಲೆ ಸ್ಪಷ್ಟವಾಗುತ್ತದೆ. ರಾಮಾಚಾರಿ ಕಲ್ಲನೆತ್ತಿ ನಿಂತ ಘಳಿಗೆಯಂತೆಯೇ ಈಗಲೂ… ಎಂದುಕೊಂಡೆ ನಾವು ಈ ಘರ್ಷನೆಯನ್ನು ನೋಡುತ್ತೇವೆ. ಅಲ್ಲದೆ ರಾಮಾಚಾರಿ ಮತ್ತು ಕ್ರಿಶ್ಚಿಯನ್ ಹುಡುಗಿಯ ಪ್ರಣಯ ನೀತಿಹೀನ ಸಿನಿಮಾದ ಹಾಗೂ ಇತ್ತು. ಆದ್ದರಿಂದ, ಮೇಷ್ಟ್ರ ಜೊತೆ ಸಂಬಂಧ ನೈತಿಕ ಜೀವನದ ಹಾಗೆ ಮಾತ್ರ ಇರುವುದರಿಂದ- ಚಿತ್ರದ ಕೊನೆ ಮೊದಲಿನಲ್ಲಿ ನಿಶ್ಚಯವಾಗಿದೆ. ನಮ್ಮ ಮನಸ್ಸಿನಲ್ಲಿ ಆಗುವ ಉತ್ಪಾತ ಬರಿ ‘ಸಿನಿಮ’ – ಅಷ್ಟೆ. ಹಗಲುಗನಸಿನ ಸುಖ ಕೊಡುತ್ತ ಹೋಗಲು ಮಧ್ಯೆ ಮಧ್ಯೆ ತೊಡಕುಗಳನ್ನು ನಾವೇ ಒಡ್ಡಿಕೊಂಡು, ನಾವೇ ಬಿಡಿಸಿ ಮುಂದುವರಿಯುತ್ತೇವಲ್ಲ ಹಾಗೆ. +ನಾವೆಲ್ಲ ಸಿನಿಮಾ ನೋಡುತ್ತೇವೆ,; ಸಿನಿಮ ಅದಿಂದ ಕಾಲ ಕೆಟ್ಟಿತು, ಜನ ನೀತಿಹೀನರಾದರು ಎನ್ನುತ್ತೇವೆ; ಜೊತೆಗೆ, ಈ ನೀತಿ ಬಾಹಿರ ಸನ್ನಿವೇಶಗಳಿರುವ ಸಿನಿಮಾ ಬೇಕೆಂದೂ ಆಶಿಸುತ್ತೇವೆ. ಆದ್ದರಿಂದ ಪೂರ್ಣ ಯಶಸ್ವಿಯಾಗುವ ಸಿನಿಮಾ ‘ಸಿನಿಮಾ’ ದ ಹಾಗೂ ಇರಬೇಕು; ಆದರೆ ಸಿನಿಮಾ ಮೌಲ್ಯಗಳ ವಿರುದ್ಧವೂ ಇರಬೇಕು. ‘ಸಿನಿಮಾ’ ರೀತಿಯ ಪ್ರಣಯ ಚಿತ್ರಿಸಲು ಹಿಂದೂ ಹುಡುಗಿಗಿಂತ ಕ್ರೈಸ್ತ ಹುಡುಗಿ ಹೆಚ್ಚು ಸಹಾಯಕಾರಿ; ಈ ಪ್ರಣಯ ‘ಸಿನಿಮಾ’ ದಂತಿದೆ. ಆದರೆ ಯಾರಿಗೂ ಬೇಡದ ರಾಮಾಚಾರಿ ಹೀಗೆ ಮಾಡುವುದರಲ್ಲಿ ತಪ್ಪೇನು? ಸರಿ, ಇಷ್ಟಿದ್ದೂ ಕ್ರಿಶ್ಚಿಯನ್ ಹುಡುಗಿಯನ್ನು ಅವನು ಮದುವೆಯ ಆಗದೆ ಹೊದಲ್ಲಿ ಮಾತ್ರ ‘ಸಿನಿಮಾ’ದ ಸುಖದ ಜೊತೆಗೆ ಸಿನಿಮಾವಾಲ್ಲದ್ದನ್ನೂ ನಾವು ಪಡೆದು ಸಂತೃಪ್ತಿಯಿಂದ ಹೊರಗೆ ಬರಬಹುದು. ಇಷ್ಟನ್ನೂ ‘ ನಾಗರಹಾವು’ ಚಿತ್ರದ ದಿಗ್ದರ್ಶಕರು ಎಷ್ಟು ಚಾಲೂಕಿನಿಂದ ನಿರ್ವಹಿಸಿದ್ದಾರೆ ಎನ್ನುವುದೇ ಒಂದು ಅದ್ಭುತ ಸಂಗತಿ. +ಅಂದರೆ, ಇಷ್ಟರ ತನಕ ಪ್ರೇಕ್ಷಕರ ಮನಸ್ಸಿನ ವಿರುದ್ದಾಕಾಂಕ್ಷೆಗಳನ್ನು ತಣಿಸುತ್ತ ಬಂದಿದ್ದ ಅಥಾರಿಟಿ ಮತ್ತು ಬಂಡಾಯದ ಸೌಹಾರ್ದ ಮುರಿಯುವ ಉತ್ಕಟತೆಗೆ ಬರುವುದು ಬೇಕು. ಅದರ ಈ ಸೌಹಾರ್ದ ಮುರಿಯಲೂ ಬಾರದು ಎನ್ನುವಂತಹ ಮಧುರ ಯಾತನೆಗೆ ಪ್ರೇಕ್ಷಕರನ್ನು ಹದಗೊಳಿಸಿ ‘ಸಿನಿಮಾ’ ದ ಜೊತೆಗೆ ಸಿನಿಮಾವಲ್ಲದ್ದನ್ನೂ ಕೊಟ್ಟು ದಿಗ್ದರ್ಶಕರು ನಮ್ಮನ್ನು ತಣಿಸುತ್ತಾರೆ. ಇನ್ನೇನು ಒಡೆದು ಹೋಗಿಬಿಡುತ್ತದೆ ಎನ್ನುವಷ್ಟರಲ್ಲಿ ಆಕಸ್ಮಿಕದಲ್ಲಿ ಮೇಷ್ಟ್ರು ಸಾಯುತ್ತಾರೆ; ಪ್ರೇಯಸಿಯ ಜೊತೆ ರಾಮಾಚಾರಿ ಆತ್ಮತ್ಯಾಗ ಮಾಡಿಕೊಳ್ಳುತ್ತಾನೆ; ನಮಗೆ ‘ಸಿನಿಮಾ ಪ್ರಣಯ’ದ ಬಹಿಷ್ಕೃತ ಸುಖ ಕೊಟ್ಟ ಹುಡುಗಿಯೂ ಒಳ್ಳೆಯವಳಾಗಿ ಬಿಡುತ್ತಾಳೆ. ಅಂದರೆ, ಕೆಟ್ಟವಳಂತಿದ್ದು ಪ್ರೇಮದಲ್ಲಿ ಒಳ್ಳೆಯವಳಾದಳು, ಕೊನೆಗೆ ಇನ್ನಷ್ಟು ಒಳ್ಳೆಯವಳಾಗಿ ಬಿಡುತ್ತಾಳೆ. ಸಿನಿಮಾ ಮಂದಿರದೊಳಗೆ ಸಿನಿಮಾ ಸುಖದ ಜೊತೆಗೆ ಅನ್ಟಿ-ಚಿನೆಮಾ ಮೌಲ್ಯಗಳು ನಮಗೆ ಸಿಕ್ಕಂತಾಗಿ ನಮ್ಮ ಸಂತೋಷ ಪೂರ್ತಿಯಾಗುತ್ತದೆ. ಅಂತರ್ಜಾತೀಯ ಪ್ರೇಮ ಮದುವೆಯಲ್ಲಿ ಕೊನೆಯಾಗದೆ ತ್ಯಾಗದಲ್ಲಿ ಕೊನೆಯಾದಾಗ ನಮಗಾಗುವ ಸಂತೋಷ ಅಷ್ಟಿಷ್ಟಲ್ಲ. +ಶ್ರೇಷ್ಠ ಕಲೆ ಜೀವನ ಸನ್ನಿವೇಶವನ್ನು ಕಣ್ಣು ತೆರೆದು ನೊಡುತ್ತದೆ; ಹಗಲುಗನಸಿಗೆ ವಿರುದ್ಧವಾಗಿರುತ್ತದೆ; ಅಂದರೆ, ನಾವು ಅಪೇಕ್ಷಿಸುವುದಕ್ಕೆ ಹೊರತಾದ್ದನ್ನು ಹೇಳುವ ದೈರ್ಯ ಮಾಡುತ್ತದೆ. ಅಗ್ಗದ ಕಲೆ ಭಾವನೆಗಳನ್ನು ಕೆರಳಿಸಿ ನಮ್ಮಿಂದ ಕೇಳುವುದು ಹೆಚ್ಚು; ಕೊಡುವುದು ಕಡಿಮೆ. ನಮ್ಮನ್ನು ಉದ್ರೇಕಿಸಿ ಮಹತ್ತಾದ ಅನುಭವವನ್ನು ನಿರೀಕ್ಷಿಸುವಂತೆ ಮಡಿ, ನೈಜಕಲೆಯ ಬಹಿರಂಗ ವೇಷಗಳನ್ನು ತೊಟ್ಟು ಅಗ್ಗದ ಕಲೆ ನಮ್ಮನ್ನು ವಂಚಿಸುತ್ತದೆ. +ಗುದ್ದುವ ನೋಯಿಸುವ ಸಂಘರ್ಷದ ಸಂತೋಷ ಬೇಕು; ಆದರೆ ಆಯಸ್ಥಳಕ್ಕೆ ಏಟು ಬೀಳಬಾರದು- ಹೀಗೆ ನಮಗೆ ತೃಪ್ತಿಕೊಡುವ ಚಿತ್ರವಾದ್ದರಿಂದಲೇ ‘ನಾಗರಹಾವು’ ಯಶಸ್ವಿಯಾಗಿದೆಯೆಂದು ನನ್ನ ಭಾವನೆ. ವೈಚಾರಿಕವಾಗಿ ನಮ್ಮ ಮಧ್ಯಮವರ್ಗ ಜಾತಿಯನ್ನು ತಿರಸ್ಕರಿಸುತ್ತದೆ, ಪ್ರತಿಭಟನೆಯನ್ನು ಒಪ್ಪುತ್ತದೆ; ಆದರೆ, ಆಚರಣೆಯಲ್ಲಿ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಆದ್ದರಿಂದ, ಹುಸಿನಾಟಕದ ಕ್ಯಥಾರ್ಸಿಸ್ಸು ಇದಕ್ಕೆ ಬೇಕು; ಸಿನಿಮಾ ಮುಗಿದ ಮೇಲೆ ಸಂತೃಪ್ತಿಯಿಂದ ಬದಲಾಗುವ ಹಾಗೆ ಕಂಡು ಬದಲಾಗದೆ ಉಳಿಯುವ ವಾಸ್ತವಕ್ಕೆ ಹಿಂದಿರುಗಬಹುದಲ್ಲವೆ. +ಕೀಳು ಸಿನಿಮಾಕ್ಕಿಂತ ಆಂತರಿಕ ತುಮುಲದ ಭ್ರಮೆ ಹುಟ್ಟಿಸುವ ‘ನಾಗರಹಾವು’ ಚಿತ್ರದಂಥ ಹೆಚ್ಚು ಅಪಾಯಕಾರಿಯೆಂದು ಇಷ್ಟೆಲ್ಲ ಉದ್ದವಾಗಿ ಬರೆಯಬೇಕಾಯಿತು.‘ನಾಗರಹಾವು’ ಒಡ್ಡೊಡ್ಡಾಗಿ ನಾನು ಹೇಳಿದ ಮೋಸ ಮಾಡುತ್ತದೆ; ಇದಕ್ಕೂ ಸೂಕ್ಷ್ಮವಾಗಿ ವಂಚಿಸುವುದು ಸಾಧ್ಯ. ನಮ್ಮ ಸಿನಿಮಾ ಈ ಸೂಕ್ಷ್ಮ ವಂಚನೆಯ ದಾರಿಯಲ್ಲಿದೆ ಎನ್ನಿಸಿದ್ದರಿಂದ ನಾಗರಹಾವಿಗೆ ಅವಶ್ಯವಾದ್ದಕ್ಕಿಂತ ಹೆಚ್ಚಿನ ಗಮನ ಕೊಡಬೇಕಾಗಿದೆ ಅಷ್ಟೆ. +ಹಾಗೆ ನೋಡಿದರೆ, ನಮ್ಮ ಲೇಖಕರಲ್ಲಿ ಹಲವರು ಈ ಉದ್ರೇಕ -ಶಮನದ ಹುಸಿ ಘರ್ಷಣೆಗಳನ್ನು ತಮ್ಮ ಕೃತಿಗಳಲ್ಲಿ ಹೊಸೆಯುತ್ತಿದ್ದಾರೆ ಎಂಬುದು ಸುಲಭವಾಗಿ ಕಾಣುವಂಥದ್ದಲ್ಲ. ನಮ್ಮ ಸಮಾಜದ ಆಚರಣೆಯಲ್ಲಿರುವ ಮೌಲ್ಯಗಳನ್ನು ಮೂಲಭೂತವಾಗಿ ಪ್ರಶ್ನಿಸಿದ ಲೇಖಕರು ನಮ್ಮ ನಡುವೆ ಎಷ್ಟಿದ್ದಾರೆ? ವ್ಯಂಗ್ಯ, ಐರನಿ, ಪೋಲಿತನ, ಕಿಲಾಡಿತನ, ಜಾನಪದ ಗಿಲೀಟು ಇತ್ಯಾದಿಗಳಿಂದ ರಸವತ್ತಾಗಿರುವ ನಮ್ಮ ಸಾಹಿತ್ಯದಲ್ಲಿ ಬಹಳ ಪಾಲು ಕೃತಿಗಳು ‘ನಾಗರಹಾವು’ ಚಿತ್ರಕ್ಕಿಂತಲೂ ಸೂಕ್ಷ್ಮವಾಗಿ ಯಥಾಸ್ಥಿತಿವಾದಿಗಳು, ಈಗಿರುವ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವುದಕ್ಕೆ ಪೂರ್ವಭಾವಿಯಾಗಿ ನಡೆಸುವ ಹುಸಿನಾಟಕಗಳು ಎನ್ನಬಹುದು. ( ಈ ಲೇಖನದ ಟಿಪ್ಪಣಿಯನ್ನು ನೋಡಿ) +ಟಿಪ್ಪಣಿ: ಭೈರಪ್ಪನವರ ಕಥನ ಕಲೆ +‘ನಾಗರಹಾವು’ ಚಿತ್ರದಲ್ಲಿಯಂತೆಯೇ, ಆದರೆ ಇನ್ನಷ್ಟು ಹೆಚ್ಚು ಸೂಕ್ಷ್ಮವಾಗಿ, ಈವರೆಗೆ ನಮ್ಮ ಹಲವು ವಿಮರ್ಶಕರಿಗೆ ಪತ್ತೆಯಾಗದಂತೆ ಭೈರಪ್ಪನವರ ಕಾದಂಬರಿಗಳಲ್ಲೂ ಕೃತಕವಾಗಿ ಜೋಡಿಸಿದ ಸನ್ನಿವೇಶಗಳ ಮುಖಾಂತರ ಮೆಲೋಡ್ರಾಮ ಕೆಲಸ ಮಾಡುತ್ತದೆ. ಉದಾಹರಣೆಗೆ: ಗ್ರಹಣ ಕಾದಂಬರಿ ತೋರಿಕೆಗೆ ಗಂಭೀರವಾದ ತಾತ್ವಿಕ ಅನ್ವೇಷಣೆ ಎನ್ನುವ ಭ್ರಮೆ ಹುಟ್ಟಿಸಿದರೂ, ನಿಜದಲ್ಲಿ ಲೇಖಕರ ಪ್ರತಿಭೆ ದುಡಿಯುವುದು ಕಥೆ ಕಟ್ಟುವುದಕ್ಕೆ; ಓದುಗನ ಕುತೂಹಲವನ್ನು ಕೆರಳಿಸಿ ತಣಿಸುವುದಕ್ಕೆ. ಬರವಣಿಗೆಯ ಕ್ರಮ, ಲೇಖಕರು ಉಪಯೋಗಿಸುವ ಭಾಷೆ ಓದುಗನನ್ನು ಕುತೂಹಲದಲ್ಲಿ ಮುಂದೆ ತಳ್ಳುವಂಥದು; ತಕ್ಷಣದ ಒಳಸುಳಿಗಳಲ್ಲಾಗಲೀ, ಪಾತ್ರಗಳ ಮನಸ್ಸಿನ ಒಳಸ್ವರಗಳಲ್ಲಾಗಲೀ ನಿಲ್ಲಿಸಿ ನೋಡುವಂಥದಲ್ಲ. +ಪರಿಚಿತ ವಾಸ್ತವ ಚಿತ್ರಣದಿಂದ ಜಡವಾದ ಮನಸ್ಸಿಗೆ ಆಚಿನದ್ದನ್ನು, ಈ ವರೆಗೆ ಕಾಣದ್ದನ್ನು ಹೊಳೆಸಲು ಲೇಖಕ ವಿಶೇಷವೆನ್ನಿಸುವ ಕಥೆ ಕಟ್ಟಬಹುದು; ಓದುಗನಿಗೆ ರೂಢಿಯಾಗಿಬಿಟ್ಟಿರುವ ಪ್ರತಿಕ್ರಿಯೆಗಳಿಗೆ ಅವಕಾಶ ಕೊಡದಂತೆ ಅವನ ಮನಸ್ಸನ್ನು ಆಳವಾದ್ದಕ್ಕೆ ಎಳೆಯಲೆಂದು, ಜೀವನದಲ್ಲಿ ತುಂಡುತುಂಡಾಗಿ ಮೂಡುವ ಅರಿವನ್ನು ಒಂದು ಪರಿಧಿಯಲ್ಲಿ ಏಕಾಗ್ರತೆಯಿಂದ ಫಲಿಸಿಕೊಳ್ಳಲೆಂದು ಕಟ್ಟುವ ಕಥೆ ಇದು. ಹೀಗೆ ಕಟ್ಟಿದ ಕಥೆ ಈ ಪರಿಚಿತ ಪ್ರಪಂಚದ ಪ್ರತಿಬಿಂಬದಂತಿರುವುದಿಲ್ಲ; ಈ ಪ್ರಪಂಚವನ್ನು ಇನ್ನಷ್ಟು ಹೆಚ್ಚು ಆಳವಾಗಿ ತಿಳಿಸುವ ಪ್ರತಿ ಪ್ರಪಂಚದಂತಾಗಿರುತ್ತದೆ. ಅಥವಾ, ಓದುಗನನ್ನು ರಂಜಿಸಲೆಂದೂ ವಿಶೇಷವೆನ್ನಿಸುವಂಥಹ ಕಥೆ ಕಟ್ಟಬಹುದು. ಒಂದರಲ್ಲಿ, ಕಟ್ಟಿದ ಕಥೆ ಓದುಗನ ಸಂವೇದನೆಗೆ ಹೊಸ ತಿರುವು ಕೊಡಲೆಂದು ಲೇಖಕ ಸೃಷ್ಟಿಸಿದ ವಿಶೇಷ ಚೌಕಟ್ಟಾಗುತ್ತದೆ; ಇನ್ನೊಂದರಲ್ಲಿ ಕಟ್ಟಿದ ಕಥೆಯ ಹಿಂದೆ ಗಹನವಾದ ಪ್ರೇರಣೆಗಳಿಲ್ಲದೆ, ದಟ್ಟ ಪ್ರತಿಪ್ರಪಂಚವಿಲ್ಲದೆ ಭ್ರಾಮಕವಾದ್ದನ್ನು ಓದುಗನಿಗೆ ನಿಜವೆನ್ನಿಸುವಂತೆ ಪುಸಲಾಯಿಸುವುದರಲ್ಲೇ ಲೇಖಕನ ಎಲ್ಲ ಶಕ್ತಿಗಳೂ ಕಳೆದುಹೋಗಿಬಿಡುತ್ತದೆ. ಆದ್ದರಿಂದ ಈ ಎರಡು ಬಗೆಯ ‘ಕಟ್ಟುಕಥೆ’ಗಳ ನಡುವಿನ ಅಪಾರವಾದ ವ್ಯತ್ಯಾಸವನ್ನು ಗಮನಿಸುವುದು ಮುಖ್ಯ. +ಗ್ರಹಣದ ಆರನೇ ಅಧ್ಯಾಯದಲ್ಲಿ ಯಜಮಾನ ಗೌಡರು ಸಾಯಬದುದಾದ ಸಂದರ್ಭದಲ್ಲಿ ಲೇಡಿ ಡಾಕ್ಟರ್ ಸರೋಜ, ಅವಳನ್ನು ಅದೇ ತಾನೆ ಮದುವೆಯಾಗಿ ನಿಷೇಕ ಮುಗಿಸಿದ ಸ್ವಾಮಿಗಳು, ಈ ಮದುವೆಯಿಂದ ಇಡೀ ಊರು ನಾಶವಾಗುತ್ತದೆಂದು ತಿಳಿದ ಹಿಮಗಿರಿಯ ಪ್ರಮುಖರು, ಸತ್ಯ ತಿಳಿಯಲು ಕಾತರರಾದ ಉದ್ರಿಕ್ತ ಜನಸಮೂಹ- ಇವರನ್ನೆಲ್ಲ ಲೇಖಕರು ಯಾವ ರೀತಿಯ ಒತ್ತಡ ಸೃಷ್ಟಿಸಿ ಬಳಸಿಕೊಳ್ಳುತ್ತಾರೆ ಗಮನಿಸಿ. ಹಿಂದೆ ಮನೋರೋಗದಿಂದ ನರಳುತ್ತಿರುವ, ಸ್ವಾಮಿಗಳು ಮದುವೆಯಾಗುತ್ತಾರೆಂದು ತಿಳಿದು ‘ಶ್ರದ್ಧಾಕೇಂದ್ರ’ ಒಡೆದು ಹೋದ ಅರೆ ಎಚ್ಚರದಲ್ಲಿ ಮಲಗಿದ ಯಜಮಾನರು, ಮುಂದೆ ತನ್ನ ಉತ್ತರ ನಿರೀಕ್ಷಿಸುವ ಜನಸಮೂಹ, ತಾನು ಮದುವೆಯಾಗಿದ್ದೇನೆಂದು ಒಪ್ಪಿಕೊಂಡರೆ ಯಜಮಾನರು ಸಾಯುತ್ತಾರೆ ಎನ್ನುವ ಭಯ (‘ಯಜಮಾನರು ಸತ್‌ರೆ ಅಭಿವೃದ್ಧಿ ಆಗೂದು ಹ್ಯಾಗೆ?’)- ಇದು ಸರೋಜ ಎದುರಿಸುವ ಸಂದರ್ಭ. ಈ ಸಂದರ್ಭ ರಂಜಕವಾದ ನಾಟಕವಾಗಲು ಯಜಮಾನ ಸಾಯಬಹುದು ಎಂಬುದು ಮೂಢನಂಬಿಕೆಯ ಹಿಮಗಿರಿಯವರಿಗೆ ಮಾತ್ರವಲ್ಲ, ವೈದ್ಯಳಾದ ಸರೋಜಳಿಗೂ ಮತ್ತು ಆಕೆಯ ಮೂಲಕ ನಮಗೂ ನಿಜವಗಬೇಕು. ಸರೋಜಳ ಮನಸ್ಸನ್ನು ಧರ್ಮಸಂಕಟಕ್ಕೆ ಗುರಿಮಾಡಿ ಗೆಲ್ಲಲು ಶಾಸ್ತ್ರಿಗಳು ಯಜಮಾನರ ಮನೋರೋಗವನ್ನು ಉಪಯೋಗಿಸಿಕೊಳ್ಳುವಂತೆ, ಲೇಖಕರು ಸಹ ಓದುಗನಿಗೆ ಸನ್ನಿವೇಶದ ರುಚಿ ಹತ್ತಿಸಲೆಂದು ಯಜಮಾನ ನಿಜವಾಗಿಯೂ ಸಾಯಬಹುದು ಎನ್ನಿಸುವಂತೆ ಅವನ ಬಾಯಲ್ಲಿ ನೊರೆ ಬರಿಸುತ್ತಾರೆ. ಆದರೆ ಸರೋಜ ಲೇಡಿ ಡಾಕ್ಟರ್ ಅಲ್ಲವೆ?, ಪರಿಸ್ಥಿತಿ ಎಷ್ಟು ವಿಷಮವಿದ್ದೀತೆಂದು ತಿಳಿದವಳಲ್ಲವೆ? ಹಿಮಗಿರಿ ಜನರ ಮೂಢನಂಬಿಕೆಗಳಿಗೆ ಸೊಪ್ಪುಹಾಕದ ದೃಢಮನಸ್ಸಿನವಳಲ್ಲವೆ? ಅಂಥವಳೂ ಯಜಮಾನ ಸಾಯಬಹುದೆಂದು ನಂಬಬೇಕಾದರೆ- ಹೀಗೆ ಸರೋಜಳ ವೈದ್ಯಜ್ಞಾನ, ವೈಚಾರಿಕತೆಗಳನ್ನು ನಮಗೆ ಯಜಮಾನ ಸಾಯಬಹುದೆಂದು ನಂಬಿಕೆ ಹುಟ್ಟಿಸಲು ಲೇಖಕರು ಉಪಯೋಗಿಸಿಕೊಂಡಿದ್ದಾರೆ. ಆದರೆ ಯಜಮಾನ ಸಾಯಬಹುದೆಂಬುದೇ ಕಾದಂಬರಿಯಲ್ಲಿ ಓದುಗನನ್ನು ಸೆಳೆದುಕೊಳ್ಳಲು ಲೇಖಕರು ಹೂಡಿದ ಕೃತಕ ತಂತ್ರ ಎಂದು ನಮಗನ್ನಿಸಿಬಿಟ್ಟರೆ, ವೈದ್ಯಳಾದ ಸರೋಜಳನ್ನೂ ನಂಬಿಸುವುದರ ಮೂಲಕ ನಮ್ಮನ್ನು ನಂಬಿಸುವ ಲೇಖಕರಬರವಣಿಗೆ ವಂಚನೆ ಎನ್ನಿಸುತ್ತದೆ; ನಮ್ಮ ಭಾವಗಳನ್ನು ದೋಚುವ ಕೃತಿಮತೆ ಎಂದು ಗೊತ್ತಾಗುತ್ತದೆ. ಇಂಥ ಹೊಂಚಿಕೆಯ ಹಿಂದಿರುವ ಉದ್ದೇಶವಾದರು ಏನೆಂದು ಕೇಳಬೆಕೆನ್ನಿಸುತ್ತದೆ. +ಇಲ್ಲಿ ಬರುವ ಪಾತ್ರಗಳು ತೆಳುಪಾತ್ರಗಳಾಗದೆ ತುಂಬು ಪಾತ್ರಗಳಾಗಿದ್ದಲ್ಲಿ, ಲೇಖಕರ ಭಾಷೆ ಪಾತ್ರಗಳ ಒಳಸ್ವರಗಳನ್ನು ಕೇಳಿಸಬಲ್ಲ ಸೂಕ್ಷ್ಮವನ್ನು ಪಡೆದುಕೊಂಡಿದ್ದಲ್ಲಿ ಕಥೆಗಾಗಿ ಅವರನ್ನು ಹೇಗೆ ಬೇಕೋ ಹಾಗೆ ಜಗ್ಗುವುದು ಲೇಖಕರಿಗೆ ಅಸಾಧ್ಯವಾಗುತ್ತಿತ್ತು. ಸರೋಜಳ ಮನಸ್ಸಿನ ಹೊಯ್ದಾಟದ ಭಾಷೆ ಯಾವ ಆಪ್ತತೆಯೂ ಇಲ್ಲದೆ ವರದಿಯಂತಿದೆ; ಓದುಗನಿಗೆ ಕೊಟ್ಟ ವಿವರಣೆಯಂತಿರುವ ಈ ಮಾತುಗಳನ್ನು ನೋಡಿ: +“ ಆದರೆ ಈತನ ಉಳಿವು ಸ್ವಾಮಿಗಳ ಸನ್ಯಾಸವನ್ನೇಕೆ ಅವಲಂಬಿಸಬೇಕು? ಪ್ರಿನ್ಸಿಪಾಲರು ಹೇಳಿದ ಹಾಗೆ ಅದು ಇವರ ಶ್ರದ್ಧಾಕೇಂದ್ರವಾಗಿರಬಹುದು. ಇವರ ಶ್ರದ್ಧಾಕೇಂದ್ರ ತಪ್ಪಾಗಿರಬಹುದು. ಹಾಗೆಂದು ಇವರನ್ನು ಕೊಲೆ ಮಾಡಬಹುದೆ? ಆ ದಿನ ನಾನು ಜನರೆದುರಿಗೆ, “ ಹೌದು, ನನ್ನ ಸ್ವಾಮಿಗಳ ಮದುವೆಯಾಯಿತು” ಅಂದಿದ್ದರೆ ಇವರು ಅಲ್ಲೇ ಸಾಯುತ್ತಿದ್ದರು. ಇವರು ಸಾಯುವುದು ಧರ್ಮವಾಗುತ್ತದೆಯೆ? ತಾನು ಸ್ವಾಮಿಗಳನ್ನು ಮದುವೆಯಾಗಲು ಒಪ್ಪಿದುದೇ ಅಧರ್ಮವಾಯಿತೇನೋ ಎಂಬ ಸಂಶಯವು ಒಂದು ಸಲ ಮನಸ್ಸಿನಲ್ಲಿ ಸುಳಿಯಿತು. ಅದರೆ ಆ ವಿಷಯದಲ್ಲಿ ಅವಳ ಅಭಿಪ್ರಾಯವು ಗಟ್ಟಿಯಾಗಿತ್ತು. ಸನ್ಯಾಸ, ಪೀಠ, ಮಠಗಳಲ್ಲಿ ಅವಳಿಗೆ ಮೊದಲಿನಿಂದ ನಂಬಿಕೆ ಇರಲಿಲ್ಲ. ತನ್ನ ಮತ್ತು ಸ್ವಾಮಿಗಳ ಮದುವೆಯಲ್ಲಿ ಅವಳಿಗೆ ಎಂದೂ ತಪ್ಪು ಕಂಡಿರಲಿಲ್ಲ. ಆದರೆ ಈ ಮದುವೆಯ ಪರಿಣಾಮವು ಊರಿನ ಮಹಾದಾನಿಯ ಜೀವದ ಮೇಲೆ, ಮುಂದೆ ಈ ಸುತ್ತಿನಲ್ಲೇ ನಡೆಯಬೇಕಾದ ದಾನದ ಮೇಲೆ ಇಷ್ಟೊಂದು ದುಷ್ಪರಿಣಾಮವನ್ನು ಬೀರುತ್ತದೆಂಬುದು ಕಲ್ಪನೆಗೂ ಬಂದಿರಲಿಲ್ಲ…” +ಪುಟ -೧೮೨-೮೩ +ಆತಂಕದಲ್ಲಿರುವ ಮನಸ್ಸು ಹೇಗಿರುತ್ತದೆಂಬ ಕಲ್ಪನೆಯಿರುವ ಲೇಖಕ ಹೀಗೆ ಜಡವಾಗಿ ಒಂದು ಮನಸ್ಸನ್ನು ವರ್ಣಿಸಲಾರ. ಭೈರಪ್ಪನವರಿಗೆ ನಿಜವಾಗಿಯೂ ಜಡಪ್ರಪಂಚ ಮಾತ್ರ ನಿಜ, ಈ ಪ್ರಪಂಚದ ಲೆಖ್ಖಾಚಾರಗಳೆಲ್ಲ ನಿಜ- ಆದರೆ ಅವರು ತಮ್ಮ ಪಾತ್ರಗಳ ಮನಸ್ಸಿನ ಗುಪ್ತ ಶ್ಥಳಗಳನ್ನು ತಿಳಿದಿದ್ದಾರೆಂದು ನಮಗನ್ನಿಸುವುದು ಕಡಿಮೆ. ಭೈರಪ್ಪನವರ ಹೆಚ್ಚು ಪಾತ್ರಗಳು ಆತ್ಮೀಯ ಸಮಾಜ ಜೀವಿಗಳೂ ಅಲ್ಲ, ಮನಸ್ಸಿನ ಕಂದಕಗಳನ್ನು ಅರಿಯುವ ಏಕಾಕಿಗಳೂ ಅಲ್ಲ; ಕೇವಲ ಬಹಿರಂಗ ಜೀವನ ಮಾತ್ರ ಇರುವ ಸಾಮಾಜಿಕರು. ಏಕಾಕಿಯಾದ ಗ್ರಹಣ ದ ಸ್ವಾಮಿಗಳು ನಿರ್ಭಾವದ ಯಾಂತ್ರಿಕ ವ್ಯಕ್ತಿ. ಇಂಥ ಪಾತ್ರಗಳ ವರ್ತನೆಗಳೆಲ್ಲ ಮನಃಶಾಸ್ತ್ರದ ಸಾಮಾನ್ಯ ಪಠ್ಯಪುಸ್ತಕದಲ್ಲಿ ವರ್ಣಿತವಾದಂಥವು. ಪ್ರಿನ್ಸಿಪಾಲರ ಹೆಂಡತಿ ಲಲಿತ ಸುಳ್ಳು ಬಸುರಾಗುವ ಸನ್ನಿವೇಶವನ್ನು ಲೇಖಕರು ನಿರ್ವಹಿಸಿದ ಕ್ರಮದಿಂದ ನನ್ನ ಈ ಮಾತುಗಳಿಗೆ ಸಮರ್ಥನೆ ದೊರೆಯಬಹುದು. ಯಾವುದನ್ನಾದರೂ ಒಳಗಿನಿಂದ ತಿಳಿಯುವುದು ಅಗತ್ಯವೆಂಬುದನ್ನು ಅರಿಯದ ಲೇಖಕ ಸ್ಯೂಡೋ ಸೈಕಾಲಜಿ, ಸ್ಯೂಡೋ ಸೊಶಿಯಾಲಜಿಯನ್ನು ಕಾದಂಬರಿ ರೂಪದಲ್ಲಿ ಬರೆಯುತ್ತಾನೆ +ಮೆಲೋಡ್ರಾಮ ಓದುಗನ ಭಾವ ದೋಚುವ ಉಪಾಯವಾಗದೆ, ಓದುಗನ ವೀಕ್ಷಣೆಗೆ ಒಡ್ಡಿದ ಸನ್ನಿವೇಶಕ್ಕಾಗಿ ಅವನ ಅರಿವನ್ನು ಪ್ರಚೋದಿಸುವುದು ಸಾಧ್ಯ. ಆದರೆ ಭೈರಪ್ಪನವರ ಈ ಕಾದಂಬರಿಯಲ್ಲಿ ಪಾತ್ರಗಳು ರಟ್ಟಿನ ಬೊಂಬೆಗಳಾದ್ದರಿಂದ ಹೀಗಾಗುವುದು ಅಸಾಧ್ಯ. ವಂಶವೃಕ್ಷದಲ್ಲಿ ಶ್ರೊತ್ರಿಯವರು ಕಾಮವನ್ನು ಗೆಲ್ಲುವ ಸನ್ನಿವೇಶಕ್ಕೆ ವಿರುದ್ಧವೆನ್ನಿಸುವ ಗ್ರಹಣದ ಸರೋಜ ಸ್ವಾಮಿಗಳ ಸಂಭೋಗದ ಘಟನೆ ನಿಜಕ್ಕೂ ವಿರುದ್ಧವಲ್ಲ; ಎರಡರ ಹಿಂದೆಯೂ ಇರುವ ಲೇಖಕನ ಉದ್ದೇಶ ಒಂದೇ. ಈ ಉದ್ದೇಶ ಓದುಗನಿಗೆ ಬೇರೆ ಬೇರೆ ರೀತಿಯಲ್ಲಿ ಆಪ್ಯಾಮಾನವೆನ್ನಿಸುವಂತೆ ಹುಸಿ ನಾಟಕಗಳನ್ನು ರಚಿಸುವುದು. ಕಾಮವನ್ನು ಗೆಲ್ಲುವ ಶ್ರೋತ್ರಿ, ಕಾಮವನ್ನು ಒಪ್ಪಿಕೊಳ್ಳುವ ಸ್ವಾಮಿಗಳು-ಇಬ್ಬರೂ ಓದುಗರ ಸಮ್ಮತಿಗಾಗಿ ಹಾಗೆ ವರ್ತಿಸುತ್ತಾರೆಂದು ತಿಳಿದ ತಕ್ಷಣ ಕುಸಿದು ಬೀಳುತ್ತದೆ. ಇಬ್ಬರಲ್ಲೂ ಅಚಿಂತ್ಯವೂ, ಅಜ್ಞಾತವೂ ಆದ ಜೀವಂತಿಕೆಯಿಲ್ಲ. ಆದ್ದರಿಂದ ಎರಡು ಘಟನೆಗಳಲ್ಲೂ ಒದುಗನ ಮೇಲೆ ಸಸ್ಪೆನ್ಸ್ ಬರವಣಿಗೆ ಪರಿಣಾಮಕಾರಿಯಾಗಬೇಕೆಂಬುದೇ ಲೇಖಕರ ಉದ್ದೇಶವೇ ಹೊರತು ಈ ಎರಡೂ ಸನ್ನಿವೇಶಗಳನ್ನೂ ಒಳಹೊಕ್ಕು ತಿಳಿಯುವುದಲ್ಲ. ಭೈರಪ್ಪನವರ ಕಾದಂಬರಿಯಲ್ಲಿ ಯಜಮಾನ ಸಾಯಬಹುದಾದ್ದು ಸಸ್ಪೆನ್ಸ್‌ಗಾಗಿ, ಸರೋಜಳ ತುಮುಲ ಸಸ್ಪೆನ್ಸ್‌ಗಾಗಿ, ಶ್ರೊತ್ರಿಗಳು ಜಿತೇಂದ್ರಿಯರಾಗುವುದು ಸಸ್ಪೆನ್ಸ್‌ಗಾಗಿ, ಒಂದು ವೇಳೆ ಸರೋಜ ತಾನು ಸ್ವಾಮಿಗಳನ್ನು ಕೂಡಿದ್ದೇನೆಂದು ಒಪ್ಪಿಕೊಂಡರೂ ಯಜಮಾನ ಸಾಯಲಿಲ್ಲ ಎನ್ನಿ ಆಗ? ಆಗ ಕೂಡ ಕಾದಂಬರಿಯಲ್ಲಿ ಏನೂ ಆದಂತಲ್ಲ. +ಒಟ್ಟಿನಲ್ಲಿ ಆಕರ್ಷಕವಾದ ಕಥೆಯ ನಿರ್ವಹಣೆಗಾಗಿ ನಮ್ಮ ಭಾವನೆಗಳನ್ನು ಕೆರಳಿಸಿ, ದುಡಿಸಿಕೊಳ್ಳುವ ಜನಮಾನ್ಯ ‘ ನಾಗರಹಾವು’, ಭೈರಪ್ಪನವರ ಗ್ರಹಣ, ವಂಶವೃಕ್ಷ ಕಾದಂಬರಿಗಳು ಓದುಗರಿಂದ ಕೇಳುವುದು ಹೆಚ್ಚು; ಕೊಡುವುದು ಕಡಿಮೆ. ಆಧುನಿಕ ಎನ್ನಿಸುವ ಸಮಸ್ಯೆಗಳನ್ನು ಎತ್ತಿ, ಅವಕ್ಕೆ ನಮಗೆ ಪರಿಚಿತವಾದ ಸಾಂಪ್ರದಾಯಿಕ ನಿವಾರಣೆಗಳನ್ನು ಒದಗಿಸುವ ಭೈರಪ್ಪನವರ ಈ ಕೃತಿಗಳು ಯಾಕೆ ಇಷ್ಟು ಜನಪ್ರಿಯವಾಗಿವೆ ಎಂಬುದು ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಕುತೂಹಲಕರವಾದ್ದು. ಈ ಸಂದಿಗ್ಧಕಾಲದಲ್ಲಿ ನಮ್ಮ ಬುದ್ಧಿವಂತರೆನಿಸಿಕೊಂಡ ವಿಮರ್ಶಕರೂ ಹೇಗೆ ಕ್ಷೇಮದ ನೆಲೆಗೇ ಆತುಕೊಳ್ಳುತ್ತಾರೆ ಎಂಬುದಕ್ಕೆ ಭೈರಪ್ಪನವರ ಜನಪ್ರಿಯತೆ ದ್ಯೋತಕವಾಗಿದೆ. ಅನುಭವದ ವಂಚನೆ ಯಾವಾಗಲೂ ಹಿತಕರವಾಗಿರುತ್ತದೆ; ಸಮಸ್ಯೆಗಳನ್ನು ಎದುರಿಸುವ ಸೂಚನೆ ಕೊಟ್ಟು ಅವುಗಳನ್ನು ಪತ್ತೆಯಾಗದಂತೆ ಬದಿಗೆ ಸರಿಸುವ ಕಲೆ ಹೀಗೆ ವಂಚಿಸಿ ರಂಜಿಸುವ ಕಲೆ. +ಉತ್ತಮ ಕಲೆಯ ದ್ರವ್ಯಗಳು ಕೂಡ ಜನಪ್ರಿಯ ಲೇಖಕರ ಕೃತಿ ಸಂಯೋಜನೆಗೆ ಮಸಾಲೆಯಾಗಬಹುದೆಂಬುದನ್ನು ವಿಮರ್ಶಕ ಎಚ್ಚರದಿಂದ ಗಮನಿಸಬೇಕು. ನೂರಾರು ದುರಂತ ಜನಪ್ರಿಯ ಪ್ರೇಮಕಥೆಗಳಿಗೂ, ಟಾಲ್‌ಸ್ಟಾಯ್‌ನ ಅನ್ನಾಕರನೀನಾ ಕೃತಿಗೂ ತೊರಿಕೆಯಲ್ಲಿ ಸಾಮ್ಯವಿರುವಂತೆ ಕಾಣಬಹುದು. ಆದರೆ ಪ್ರೇಮದ ಕಥೆ ಟಾಲ್‌ಸ್ಟಾಯ್‌ನಲ್ಲಿ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸುತ್ತದೆ; ಉಳಿದವುಗಳಲ್ಲಿ ಮಸಾಲೆಯಾಗುತ್ತದೆ. +೧೯೭೩ +೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್‍ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_651.txt b/Kannada Sahitya/article_651.txt new file mode 100644 index 0000000000000000000000000000000000000000..b30449e69214df8037500811c04bffd89f545caf --- /dev/null +++ b/Kannada Sahitya/article_651.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ ವಿಶು ಅಂದುಕೊಂಡಷ್ಟು ಸರಳವಾಗಿದ್ದಿದ್ದರೆ, ಈ ಎಲ್ಲಕ್ಕೂ ತನ್ನ ಬಳಿ ತತ್‌ಕ್ಷಣ ಒದಗಿಸಬಹುದಾದ ದಿಢೀರ್ ಉತ್ತರಗಳಿದ್ದುವು. ಆದರೆ ದುರಾದೃಷ್ಟವಶಾತ್ ಜೀವನ ಅಷ್ಟು ಸರಳವಾಗಿರಲಿಲ್ಲ. ಒಂದು ವಿಧವಾಗಿ ಅದೂ ಒಳ್ಳೆಯದೇ ಅನ್ನಿ. ಹೀಗೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ಆರಾಮವಾಗಿ ಆ ಬಗ್ಗೆ ಪಶ್ಚಾತ್ತಾಪ ಪಡುವ ಪ್ರಕ್ರಿಯೆಯನ್ನಾದರೂ ತಪ್ಪಿಸಬಹುದು. +ಸುಮಾರು ಎರಡು ಮೂರು ವರ್ಷಗಳಿಂದ ಈ ವಿಚಾರ ಅವರ ತಲೆಯಲ್ಲಿ ಸುಳಿದಾಡುತ್ತಿತ್ತು. ಮದುವೆಯಾಗಿ ಆರೇಳು ವರ್ಷಗಳು ಕಳೆದರೂ ನಯನಾ ಬಸುರಾಗದೇ ಇದ್ದಾಗ ಎಷ್ಟೋ ಬಾರಿ ಈ ಬಗ್ಗೆ ಅವರುಗಳು ಆಲೋಚಿಸಿದ್ದುಂಟು. ಮೊದಮೊದಲಿಗೆ ಅವರುಗಳು ಮಗುವೇ ಬೇಡವೆಂದು ಅಂದುಕೊಂಡದ್ದು ನಿಜ. ನಂತರ ಯಾಕೋ ಆಗಲಿಲ್ಲ. ಬಹಳಷ್ಟು ಮಂದಿ ಡಾಕ್ಟರ ಬಳಿ ತೋರಿಸೊಕೊಳ್ಳಿ ಎಂದು ಉಚಿತ ಸಲಹೆ ಕೊಟ್ಟರಾದರೂ ಇವರುಗಳು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಎಷ್ಟೋ ಅನಾಥ ಮಕ್ಕಳು ಬೀದಿ ಬೀದಿ ಸುತ್ತುತ್ತಿರುವಾಗ ಅವುಗಳಲ್ಲಿ ಒಂದನ್ನು ತಮ್ಮದಾಗಿಸಿಕೊಳ್ಳುವ ವಿಚಾರವಿದ್ದದ್ದರಿಂದ ಅವರು ಹೀಗೆ ಮಾಡಿರಲಿಕ್ಕೂ ಸಾಕು. ಆದರೆ ಈಗ ಇಬ್ಬರೂ ನಲವತ್ತರ ಹೊಸ್ತಿಲಲ್ಲಿ ನಿಂತಿದ್ದರಿಂದ, ಈ ವಿಷಯವಾಗಿ ಯಾವುದಾದರೊಂದು ನಿರ್ಧಾರವನ್ನ ತುರ್ತಾಗಿ ತೆಗೆದುಕೊಳ್ಳಬೇಕಿತ್ತು. ಸುಮಾರು ದಿನಗಳಿಂದ ಇದನ್ನು ಇಬ್ಬರೂ ಚರ್ಚಿಸುತ್ತಿದ್ದರಾದರೂ ಈ ಬಗ್ಗೆ ಯಾವೊಂದು ನಿಲುವನ್ನ ತೆಗೆದುಕೊಳ್ಳುವ ಧೈರ್ಯವನ್ನ ಮಾತ್ರ ಇಬ್ಬರೂ ಮಾಡಿರಲಿಲ್ಲ. ಇದಕ್ಕೆ ಕಾರಣವಿಲ್ಲದಿರಲಿಲ್ಲ. ಯಾಕೆಂದರೆ, ಯಾವುದಾದರೊಂದು ನಿರ್ಧಾರ ತೆಗೆದುಕೊಂಡ ಮರುಕ್ಷಣವೇ ಅನುಮಾನವೆಂಬ ಪಿಶಾಚಿ ಅವರಿಬ್ಬರಬ್ಬೂ ಆವರಿಸಿ ಕಬಳಿಸಿಬಿಡುತ್ತಿತ್ತು. +ಬಹುಶಃ ಅವರಿಬ್ಬರಿಗೆ ಇಬ್ಬರೇ ಇದ್ದು ಅಭ್ಯಾಸವಾದದ್ದರಿಂದ ಬೇರೊಂದು ಜೀವ ಈ ಹಂತದಲ್ಲಿ ತಮ್ಮ ನಡುವೆ ಸೇರಿಕೊಳ್ಳುವುದು ಸ್ವಲ್ಪ ಕಷ್ಟವೆನ್ನಿಸಿರಬಹುದು. ಆಗ ಜೀವನದ ಗತಿಯೇ ಬದಲಾಗಿ ಬಿಡುತ್ತಿತ್ತಲ್ಲ? ಆದರೆ, ಮಗು ಎಷ್ಟಾದರೂ ಮಗು ತಾನೇ ಎಂಬಂಥ ವಿಚಾರ ಬಂದು, ಯಾವ ನಿರ್ಧಾರಕ್ಕೂ ಬರಲಾರದೇ ಇಬ್ಬರೂ ಒದ್ದಾಡಿಹೋಗಿದ್ದರು. ಈಗ ಸ್ಟೇಷನ್ನಿನಲ್ಲಿ ಈ ಮುದ್ದಾದ ಮಗುವನ್ನು ಕಂಡಾಗ ವಿಶುವಿಗೆ ತಡೆಯಲಾಗಲಿಲ್ಲ. ಜಗತ್ತಿನರಿವು ಇಲ್ಲದೇ ತನ್ನ ಭವಿಷ್ಯದ ಬಗ್ಗೆ ಏನೊಂದೂ ಕಾಳಜಿಯಿಲ್ಲದೇ, ಹಾಯಾಗಿ ಮಲಗಿದ್ದ ಈ ಮಗುವನ್ನ ಕಂಡರೆ ಯಾರಿಗಾದರೂ ಎತ್ತಿಕೊಳ್ಳಬೇಕೆನ್ನಿಸುವುದು ಸಹಜ. ವಿಶುವಿಗೂ ಹುಟ್ಟಿ ಒಂದೆರಡೇ ದಿನಗಳಾಗಿದ್ದ ಈ ಪುಟ್ಟ ಮಗುವನ್ನು ತನ್ನ ಕೈತುಂಬಾ ತುಂಬಿಸಿಕೊಳ್ಳಬೇಕೆನ್ನಿಸಿದ್ದು ಸಹಜವೇ ಆಗಿತ್ತು. ಆದರೆ ಈಗ ಠಾಣೆಯಲ್ಲಿ ಮಾತನಾಡುವ ಧೈರ್ಯ ವಿಶುವಿಗೆ ಬರಲಿಲ್ಲ. ಎಷ್ಟಾದರೂ ತನ್ನ ಪಾತ್ರ ಅಲ್ಲಿನ ಆಗುಹೋಗುಗಳನ್ನು ನೋಡುವುದಕ್ಕಷ್ಟೇ ಸೀಮಿತವಾಗಿತ್ತು. +ಠಾಣೆಯ ವಾತಾವರಣ ಉಸಿರುಗಟ್ಟಿಸುತ್ತಿತ್ತು. ಅಲ್ಲಿ ಬೆಳಕು ತೀರಾ ಮಂದವಾಗಿತ್ತು ಹಾಗೂ ಭಯದ ವಾತಾವರಣ ಇಡೀ ಜಾಗವನ್ನ ಆಕ್ರಮಿಸಿಬಿಟ್ಟಿತ್ತು. ಬಹುಶಃ, ಪೋಲೀಸು ವರ್ದಿಯ ಶಕ್ತಿ ವಿಶುವನ್ನು ಕುಗ್ಗಿಸಿರಲಿಕ್ಕೆ ಸಾಕು. ಮನೆಯಲ್ಲಿ ಕಳ್ಳತನ ಆಗಿ, ಠಾಣೆಗೆ ಪ್ರತಿವಾರ, ತಾನು ಎಡೆಬಿಡದೆ ಬರಲು ಪ್ರಾರಂಭಿಸಿದಾಗಿನಿಂದಲೂ ವಿಶುವಿಗೆ ಈ ಅನುಭವವಾಗಿತ್ತು. ವಿಶು ಮತ್ತು ನಯನಾ ಇಬ್ಬರೂ ಕೆಲಸ ಮಾಡುತ್ತಿದ್ದರಾದ್ದರಿಂದ ಮನೆಗ ಯಾವಾಗಲೂ ಬೀಗವೇ ಭೂಷಣವಾಗಿ ಇರುತ್ತಿತ್ತು. ಆದರೆ, ಆಶ್ಚರ್ಯವಶಾತ್ ಕಳ್ಲತನ ಭಾನುವಾರದಂದು, ತಾವಿಬ್ಬರೂ ಬಂಧುಗಳ ಮನೆಯ ಮದುವೆಗೆಂದು ಹೋಗಿದ್ದಾಗ ಆಯಿತು! ಅವರುಗಳು ಮನೆಗೆ ಬಂದು ನೋಡಿದಾಗ, ಬೀಗವೇ ಕಾಣಲಿಲ್ಲ. ಒಳಬಂದು ನೋಡಿದರೆ ಮನೆಯ ಟಿವಿ, ವಿಸಿ‌ಆರ್, ಮತ್ತು ಮ್ಯೂಸಿಕ್ ಸಿಸ್ಟಂ ಜತೆಗೆ ಹಲವು ಸೀಡಿಗಳು, ಕೆಸೆಟ್ಟುಗಳು – ಎಲ್ಲವೂ ಕಳುವಾಗಿತ್ತು. ಅದನ್ನು ಕಂಡು ಇಬ್ಬರಿಗೂ ಆಘಾತವಾದದ್ದು ನಿಜ. +ವಾರಾವಾರ ಬರುತ್ತಿದ್ದುದರಿಂದ ಠಾಣೆಯ ಪರಿಸರ ವಿಶುವಿಗೆ ಹೊಸತಾಗಿರಲಿಲ್ಲವಾದರೂ, ಪ್ರತಿಬಾರಿಯೂ ವಿಶುವಿಗೆ ಹೊಸ ಅನುಭವವಂತೂ ಆಗುತ್ತಿತ್ತು. ಠಾಣೆದಾರ ಕೃಷ್ಣಯಾದವ್‌ನ ದೃಷ್ಟಿಯ ಕೃಪೆಗಾಗಿ ಕಾಯುತ್ತಿರುವಾಗ ಅಲ್ಲೇ ಒಂದು ಕಥೆ ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಹೋಯಿತು. ಅಲ್ಲಿನ ಮಾತುಕತೆ ಮುಂದುವರೆದಂತೆ – ಎಲ್ಲರ ಹಾಗೆ ತಾನೂ ಆ ವಾದವಿವಾದಗಳಲ್ಲಿ ಮುಳುಗಬೇಕೆಂದು ವಿಶುವಿಗೆ ಅನ್ನಿಸಿದರೂ, ಹಾಗೆ ಮಾಡಲಿಲ್ಲ. ತನ್ನ ಸುತ್ತಮುತ್ತ ಇದ್ದ ಕೊಳಗೇರಿಯ ವ್ಯಕ್ತಿಗಳ ನಡುವೆ ತಾನೊಬ್ಬನೇ ಸಂಭಾವಿತನಂತನ್ನಿಸಿ – ಈ ಮಾತುಕತೆಯಲ್ಲಿ ತನಗೆ ಜಾಗವಿಲ್ಲವೆಂದು ವಿಶು ನಿರ್ಧರಿಸಿದ. +ವಿಶು ಸ್ಟೇಶನ್ ಪ್ರವೇಶಿಸುತ್ತಿದ್ದಂತೆ, ಅಲ್ಲಿ ಮಗುವಿನ ವಿಷಯವಾಗಿ ಜೋರಾಗಿ ವಾದವಿವಾದ ನಡೆಯುತ್ತಿದ್ದುದನ್ನು ಕಂಡ. ಅಲ್ಲಿನ ಮಂದ ಬೆಳಕಿಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುವಂತೆ ಮಾತುಕತೆಯ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೂ ವಿಶುವಿಗೆ ಸಮಯ ಹಿಡಿಯಿತು. ಕಂಗಳು, ಬೆಳಕಿಗೆ ಹೊಂದಿಕೊಳ್ಳುತ್ತಿದ್ದಂತೆ, ದುಪ್ಪಟಿಯ ಮೇಲೆ ಮಲಗಿಸಿದ್ದ ಪುಟ್ಟ ಮಗುವನ್ನು ಅವನು ಕಂಡ. ಠಾಣೆದಾರನ ಸುತ್ತಮುತ್ತ ಕೆಲಜನ ನಿಂತಿರುವುದೂ ಅವನಿಗೆ ಕಾಣಿಸಿತು. ಅವರೆಲ್ಲ ಸಮೀಪದ ಕೊಳಗೇರಿಯಿಂದ ಬಂದಿದ್ದರಂತೆ. ಎಲ್ಲರೂ ಎತ್ತರದ ಧ್ವನಿಯಲ್ಲಿ ಹೊಡೆದುಕೊಳ್ಳುತ್ತಿದ್ದುದರಿಂದ ಅವರುಗಳ ಮಾತಿನ ವಿಷಯ ಅರ್ಥಮಾಡಿಕೊಳ್ಳುವುದು ಕಷ್ಟವಿತ್ತು. ಆದರೆ, ಅಲ್ಲಿನ ವಾತಾವರಣಕ್ಕೆ, ಬೆಳಕಿಗೆ ಹೊಂದಿಕೊಳ್ಳುತ್ತಿದ್ದಂತೆ, ವಿಶುವಿಗೆ ಅಲ್ಲಿನ ಚರ್ಚೆಯ ಎಳೆಗಳೂ ದೊರೆಯಲಾರಂಭವಾಯಿತು. +ವಿಶುವಿಗೆ ಸ್ವಲ್ಪಕಾಲದಿಂದ ಕೃಷ್ಣಯಾದವ್‌ನ ಪರಿಚಯವಿತ್ತು. ತನ್ನ ಮನೆಯಲ್ಲಿ ಕಳ್ಳತನವಾದ ದಿನ ಆತ ಅಲ್ಲಿನ ಠಾಣೆದಾರನಾಗಿರಲಿಲ್ಲವಾದರೂ ಆ ನಂತರ ಆತ ಚೆನ್ನಾಗಿಯೇ ಪರಿಚಯವಾಗಿದ್ದ. ತನ್ನ ಮನೆಯಲ್ಲಿ ಕಳ್ಳತನವಾದಾಗ ಠಾಣೆದಾರನಾಗಿದ್ದದ್ದು ಕೃಷ್ಣಾರೆಡ್ಡಿಯೆಂಬ ವ್ಯಕ್ತಿ. ವಿಶುವಿಗೆ ಕಳ್ಳತನವಾದ ದಿನ ಇನ್ನೂ ಚೆನ್ನಾಗಿ ನೆನಪಿದೆ. ಅಂದು ತಮಗೆ ವಿಷಯ ತಿಳಿದಾಕ್ಷಣ – ಒಳ್ಳೆಯ ಪ್ರಜೆಯ ಹಾಗೆ, ಕೂಡಲೇ ಠಾಣೆಗೆ ಹೋಗಿ ಎಫ್.ಐ.ಆರ್. ದಾಖಲು ಮಾಡಿದ್ದ. ಕಳುವಾದ ಸಕಲ ವಸ್ತುಗಳ ವಿವರಗಳನ್ನೂ ಅದರಲ್ಲಿ ಬರೆದು ಕೊಟ್ಟಿದ್ದ. ಆದರೆ ಕಳ್ಳತನವಾದ ಒಂದು ವಾರದ ಒಳಗಾಗಿಯೇ, ಕೃಷ್ಣಾರೆಡ್ಡಿಗೆ ಕಂಟ್ರೋಲ್ ರೂಮಿಗೆ ವರ್ಗ ಮಾಡಿಬಿಟ್ಟಿದ್ದರು. ಅಂದು ಠಾಣೆಯಿಡೀ ಶೋಕದಲ್ಲಿ ಮುಳುಗಿದ್ದಂತಿರ್ರು. ಇಂಥ ‘ಎಪಿಸೆಂಟ್ ಆಪೀಸರ್ಸ್‌ನ’ ಠಾಣೆಯಿಂದ ವರ್ಗ ಮಾಡಲು ಆ ಕಟುಕರಿಗೆ ಮನಸ್ಸಾದರೂ ಹೇಗೆ ಬಂತು? ಎಷ್ಟಾದರೂ, ವಿಶುವಿನ ಕೇಸನ್ನು ಚಿಟಿಕೆ ಬಡಿಯುವುದರಲ್ಲಿ ಬಗೆಹರಿಸುವ ಛಾತಿ ಇದ್ದ ಏಕೈಕ ಅಪೀಸರನ್ನ ಕಂಟ್ರೋಲ್ ರೂಮಿನಲ್ಲಿ ಕೂತು ವಾಕಿಟಾಕಿಯಲ್ಲಿ ನಡೆಯೋ ಮಾತುಕತೆ ಕೇಳೆಂದು ಹೇಳಿದರೆ ಅನ್ಯಾಯವಲ್ಲದೇ ಮತ್ತೇನು? ಸಾಲದ್ದಕ್ಕೆ ಇಂಥ ಪೋಸ್ಟಿಂಗ್ ಸಿಗಬಾರದೆಂದು ಮೊದಲೇ ಮೇಲಿನಧಿಕಾರಿಗಳನ್ನು ನೋಡಿಕೊಂಡು ತಯಾರಾಗಿದ್ದರೂ ಹೀಗೆ ಮಾಡಿದ್ದಾರಲ್ಲಾ ಬೇಯಿಮಾನಿಗಳು! ಹೀಗೆಲ್ಲಾ ಕೃಷ್ಣಾರೆಡ್ಡಿ ಮರುಗಿದ್ದರೂ ಅದರಿಂದ ವಿಶುವಿನ ಕೇಸಿಗೇನೂ ಪುಡಿಗಾಸಿನ ಸಹಾಯವಾಗಿರಲಿಲ್ಲ. +ಈಗ ಈ ಘಟನೆಯಾಗಿ ಆರು ತಿಂಗಳು ಕಳೆಯುತ್ತಾ ಬಂದಿರಲು, ಈ ಬಗ್ಗೆ ಚಟಾಕಿ ಹಾರಿಸಿ ನಗುವ ಮನಸ್ಥಿತಿಗೆ ವಿಶು ನಯನಾ ಇಬ್ಬರೂ ತಲುಪಿಬಿಟ್ಟಿದ್ದರು. ಆಶ್ಚರ್ಯದ ವಿಷಯವೆಂದರೆ, ಅಂದಿನ ಕಳ್ಳ ಬರೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾತ್ರ ಒಂದು ಚಾದರ, ದಿಂಬಿನ ಚೀಲದಲ್ಲಿ ಸುತ್ತಿ ಒಯ್ದಿದ್ದ(ಳು). ಅವರುಗಳು ಅಂದು ಹೊರಟಿದ್ದ ಮದುವೆಗೆಂದು ನಯನಾ ಬ್ಯಾಂಕಿನ ಲಾಕರ್‌ನಿಂದ (ಅಲ್ಲಿ ಆ ಕ್ಷಣಕ್ಕೆ ಯಾವ ಒಡವೆಗಳನ್ನು ಮದುವೆಗೆ ಧರಿಸಬೇಕೆಂದು ನಿರ್ಧರಿಸಲಾಗದ್ದರಿಂದ) ಸಕಲ ಒಡವೆಗಳನ್ನೂ ತಂದುಕೊಂಡಿದ್ದಳು. ಸುಮಾರಷ್ಟು ಒಡವೆಗಳು ಕಪಾಟಿನಲ್ಲಿ ಬೀಗವೂ ಇಲ್ಲದೇ ಹಾಗೇ ಬಿದ್ದುಕೊಂಡಿದ್ದುವು. ಕಳ್ಳರಿಗೆ ಆ ಬಗ್ಗೆ ಯಾವೊಂದೂ ಆಸಕ್ತಿಯುಂಟಾಗಲಿಲ್ಲವೆಂಬುದು ವಿಶುವಿಗೆ ಮಹತ್ವದ ವಿಷಯ ಎನ್ನಿಸಿತ್ತು. ಆಫೀಸಿನಲ್ಲಿ ಮೂಲಶಕ್ತಿ, ಸ್ಪೆಷಲೈಸೇಷನ್ ವಿಷಯದ ಚರ್ಚೆ ಬಂದಾಗಲೆಲ್ಲಾ, ತಪ್ಪದೇ ಅವನು ಈ ವಿಷಯವನ್ನ ಹೇಳುತ್ತಿದ್ದ. +ಹೊಸ ಠಾಣೆದಾರ ಕೃಷ್ಣಯಾದವ್ ಯುವಕ, ಹಾಗೂ ಒಳ್ಳೆಯ ಮೂಡಿನಲ್ಲಿದ್ದಾಗ ಸ್ನೇಹಜೀವಿ. ಕಳುವಾದ ದಿನ ಮಹಜರ್, ಬೆರಳಚ್ಚು ಸೇಕರಣೆ, ನಾಯಿಗಳ ಶೋಧ ಹಾಗೂ ಇತರೆ ಕಾರ್ಯಕಲಾಪಗಳೆಲ್ಲ ನಡೆಯುವವರೆಗೂ ತಾವಿಬ್ಬರೂ ಶಾಂತಿಯಿಂದ ಹೊರಗೆ ಕಾದಿದ್ದ ವಿಷಯ ಕೇಳಿ ಇಬ್ಬರನ್ನೂ ಬಹಳ ಮೆಚ್ಚಿಕೊಂಡಿದ್ದ. ತನ್ನ ಫಿರ್ಯಾದಿನಲ್ಲಿ ವಿಶು ಕೂಡಾ ಕಳುವಾದ ವಸ್ತುಗಳ ಗುರ್ತುಗಳು, ಅವುಗಳ ನಂಬರುಗಳು ಎಲ್ಲವನ್ನೂ ತನ್ನ ಬಳಿಯಿದ್ದ ರಸೀದು, ವಾರಂಟಿ ಚೀಟಿಗಳ ಆಧಾರದ ಮೇಲೆ ಶಿಸ್ತಿನಿಂದ ಬರೆದು ಕೊಟ್ಟಿದ್ದ. ಈ ಘಟನೆ ನಡೆದಾಗಿನಿಂದಲೂ ಪ್ರತಿ ಶನಿವಾರ ಠಾಣೆಗ ಹಾಜರಿ ಹಾಕಿ ಕೇಸಿನ ಸ್ಥಿತಿಗತಿಯನ್ನ ವಿಚಾರಿಸಿ ಬರುತ್ತಿದ್ದ. ಈ ಆರು ತಿಂಗಳುಗಳಲ್ಲಿ ಕಳೆದುಕೊಂಡ ಪ್ರತಿ ವಸ್ತುವಿನ ಜಾಗದಲ್ಲಿ ಈಚಿನ ಮಾಡೆಲ್‌ನ ಹೊಸ ಪರಿಕರಗಳನ್ನು ತಂದುಕೊಂಡಿದ್ದರಾದರೂ, ವಾರಕ್ಕೊಮ್ಮೆ ಠಾಣೆಗೆ ಹೋಗುವ ರಿವಾಜನ್ನು ಮಾತ್ರ ವಿಶುವಿಗೆ ತಪ್ಪಿಸಲಾಗಲಿಲ್ಲ. ಅದು ಈಗ ಪ್ರತಿ ಶನಿವಾರದ ಚಟದಂತಾಗಿಬಿಟ್ಟಿತ್ತು. +ಠಾಣೆಯಲ್ಲಿ ಇಬ್ಬರು ಮೂವರು ಕೃಷ್ಣ ಯಾದವ್ ಜತೆ ವಾದವಿವಾದ ಮಾಡುತ್ತ ನಿಂತಿದ್ದರು. ಅವರ ಮಧ್ಯೆ ಒಬ್ಬ ಹೆಂಗಸೂ ಇದ್ದಳು. ಸಮುದ್ರದಲ್ಲಿ ಮಗುವನ್ನ ತೇಲಿಬಿಟ್ಟು ಕುಂತಿಯ ಹಾಗೆ ಹೊರಟುಬಿಡುತ್ತಿದ್ದ ಆಕೆಯನ್ನ ರಾತ್ರೆಯ ಬೀಟ್ ಕಾನ್ಸ್‌ಟೇಬಲ್ ಹಿಡಿದಿದ್ದ. ಈಗ ಆ ಘಟನೆಗೆ ಸಂಬಂಧಿಸಿದಂತೆ ವಿಷಯಗಳನ್ನು ಸರಿತಿದ್ದುವ ವಿಚಾರವನ್ನ ಎಲ್ಲರೂ ಚರ್ಚಿಸುತ್ತಿದ್ದರು. ಆ ಹೆಣ್ಣು ಮಗುವನ್ನ ನೀರಿಗೆ ಹಾಕಿ ಹೋಗಲೆತ್ನಿಸಿದ್ದನ್ನು ಅಲ್ಲಗಳೆಯಲಿಲ್ಲ. ಬದಲಿಗೆ ಗಂದ ಕುಡುಕನಾಗಿದ್ದುದರಿಂದ ತನಗೆ ಬೇರೆ ಮಾರ್ಗವಿರಲಿಲ್ಲವೆಂದು ಸಮಜಾಯಿಷಿ ಹೇಳಿಕೊಳ್ಳಲು ಯತ್ನಿಸುತ್ತಿದ್ದಳು. ಕುಡುಕ ಗಂಡ ಮಗು ಬೆಳೆದಂತೆ ಅದನ್ನ ಹೊಡೆದು, ಬಡಿದು ಸೂಳೆಗಾರಿಕೆಗೆ ತಳ್ಳುವುದರಲ್ಲಿ ಅನುಮಾನವಿದ್ದಿರಲಿಲ್ಲವಾದ್ದರಿಂದ – ಮಗುವಿಗೆ ಅಂಥ ಕರಾಳ ಭವಿಷ್ಯ ನೀಡುವುದಕ್ಕಿಂತ – ಈಗಲೇ ಮಗುವನ್ನು ಮುಗಿಸಿ ನೋವನ್ನ ಕಮ್ಮಿ ಮಾಡುವುದೇ ತನ್ನ ಉದ್ದೇಶವಾಗಿತ್ತೆಂದು ಆಕೆ ಹೇಳುತ್ತಿದ್ದಳು. +ಅವರುಗಳ ಮಾತು ಕೇಳಿ ವಿಶುವಿಗೆ ಅಪಘಾತವಾದದ್ದಿ ನಿಜ. ಆದರೆ ಕೃಷ್ಣಯಾದವ್‌ಗೆ ಇದ್ಯಾವುದೂ ತಟ್ಟಿದಂತಿರಲಿಲ್ಲ. ಕೃಷ್ಣಯಾದವ್‌ನನ್ನೊಳಗೊಂಡು ಎಲ್ಲರೂ ಕೆಟ್ಟ ಭಾಷೆಯ ಕೆಟ್ಟ ಬೈಗುಳಗಳನ್ನು ಉಪಯೋಗಿಸುತ್ತಾ (ಪೋಲೀಸ್ ಅಧಿಕಾರಿಯಾದ ಮೇಲೆ ಖೈದಿಗಳ ಭಾಷೆಯನ್ನೇ ಮಾತಾಡಬೇಕಾಗುತ್ತೆ, ಅಂತ ಒಮ್ಮೆ ಕೃಷ್ಣಯಾದವ್ ಹೇಳಿದ್ದು ವಿಶುವಿಗೆ ನೆನಪಿತ್ತು) ಅವರುಗಳು ಸಂಭಾಷಣೆಯನ್ನ ಮುಂದುವರೆಸಿದ್ದರು. ಮಾತು ಮುಂದುವರೆಸುವ ಮುನ್ನ ಕೃಷ್ಣಯಾದವ್ ಯಾರದಾದರೂ ಕಪಾಳಕ್ಕೆ ಬಾರಿಸಿಯೇ ಮುಂದುವರೆಯುತ್ತಿದ್ದುದು. ಹೀಗಾಗಿ, ಮೊದಲು ಆ ಹೆಂಗಸಿನ ಕಪಾಳಕ್ಕೆ ಹಾಕಿ ಮಾತು ಮುಂದುವರೆಸಿದ – ‘ಮಕ್ಕಳನ್ನು ಸಾಯಿಸೋದೇ ಆದ್ರೆ ಯಾಕೆ ಹುಟ್ಟಿಸ್ತೀರಿ?’ ಕೃಷ್ನಯಾದವ್ ಕೂಗಾಡಿದ. ಆಹೆಂಗಸು ಮಾತಿನಲ್ಲಿ ಕಡಿಮೆಯೇನೂ ಇರಲಿಲ್ಲ. ‘ಯಾಕೇಂದ್ರೆ ನನ್ನ ಮೈ ನನ್ನ ಕೈಯಲ್ಲಿಲ್ಲ. ಅದೂ ಅಲ್ದೆ ಗಂಡು ಮಗು ಆಗಬೈದೂಂತ ಅಂದ್ಕಂಡಿದ್ದೆ. ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ಎರಡು ಮಾತುಗಳನ್ನ ಅವಳು ಹೇಳಿದ್ದಳು. ‘ಸಾಲದ್ಕೆ ಈ ಸೂಳೇಮಗನ ನರಳ್ನಾಗೆ ಬೆಳೆದ್ರೆ ಅದರ ಕೈಲಿ ಖಂಡಿತ ಸೂಳೆಗಾರಿಕೆ ಮಾಡಿಸ್ತಾನೆ. ಅದಕ್ಕೆ ಬದಲು ಅವಳು ಸಾಯೋದು ವಾಸಿ.’ +ಈಗ ಅವಳ ಕಪಾಳಕ್ಕೆ ಬಾರಿಸುವ ಸರದಿ ಅವಳ ಗಂಡನದ್ದಾಯ್ತು. ‘ನನ್ನನ್ನ ಸೂಳೇಮಗ ಅನ್ನೋಷ್ಟು ಕೊಬ್ಬು ಬಂತೇನೇ ಲೌಡಿ. ಸರ್ ನಾ ಹೇಳ್ತೀವ್ನಿ ಈ ಮಗು ನನ್ನದಲ್ವೇ ಅಲ್ಲ. ಇವ್ಳು ಯಾರ್ಯಾರ ಜತ ಮನೀಕ್ಕಂಬಂದವ್ಳೋ ಯಾರಿಗ್ ಗೊತ್ತು? ಅದ್ಕೇ ಮಗೂನ ಸಾಯಿಸ್ಲಿಕ್ ಒಂಟವ್ಳ್. ಮಗು ಎಣ್ಣಾದ್ರೇನು ನಾನು ಸಾಕಿ, ಬೆಳಸ್ತೀನಿ.’ ಗಂಡ ಘರ್ಜಿಸಿದ. ಈಗ ಅವನ ಕಪಾಳಕ್ಕೆ ಬಾರಿಸುವ ಸರದಿ ಕೃಷ್ಣಯಾದವ್‌ನದ್ದಾಯಿತು. ‘ಮುಚ್ಚೋ ಮಗನೆ – ಯಾವಾಗ ನೋಡಿದ್ರೂ ಕುಡಕೊಂಡು ಯಾವಳ ಜತೆ ಮಲಗಿದ್ದೀಯೋ ತಿಳೀದೇ ಬಿದ್ದಿರ್ತೀಯ, ಹೆಣ್‌ಮಗೂನ ಸಾಕ್ತೀಯಾ? ಮುಚ್ಕಂಡು ಮನೆಕಡೆ ಹೋಗು, ನಾವು ಈ ಮಗೂನ ಯಾವುದಾದರೂ ಅನಾಥಾಶ್ರಮಕ್ಕೆ ಕಳಿಸ್ತೀವಿ. ಅಲ್ಲಾದರೆ ವಾತಾವರಣ ನಿಮ್ಮ ಕೊಳಗೇರಿಗಿಂತ್ಲೂ ಚೆನ್ನಾಗಿರುತ್ತೆ. ಸರಿಯಾಗಿ ಬೆಳೆದಾದ್ರೂ ಬೆಳೆಯುತ್ತೆ ನಗು.’ +ಠಾಣೆಗೆ ಬರಲು ಆರಂಭಿಸಿದಾಗಿನಿಂದಲೂ ವಿಶು ಇಂಥ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದ್ದ. ಆದರೂ ಇಂದಿನ ಘಟನೆ ಮಾತ್ರ ಅನೇಕ ವಿಧಗಳಿಂದ ವಿಶಿಷ್ಟವಾಗಿತ್ತು. ಕೃಷ್ಣಯಾದವ್ ಖುದ್ದಾಗಿ ಜನರನ್ನು ಹೊಡೆದು ಬಡಿದು ಮಾಡುವುದನ್ನು ಅವನೆಂದೂ ಕಂಡಿರಲಿಲ್ಲ. ಠಾಣೆಗಳಲ್ಲಿ ಇಂಥ ಘಟನೆಗಳು ಇನ್ನೂ ಯಾಕೆ ಘಟಿಸುತ್ತಲೇ ಇರುತ್ತವೆ ಎಂಬುದಕ್ಕೆ ವಿಶುವಿನ ಬಳಿ ಉತ್ತರವಿರಲಿಲ್ಲ. ಇಂಥ ಸಂದರ್ಭಗಳನ್ನ ಇನ್ನಷ್ಟು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಮಾರ್ಗವೇ ಇರಲಿಲ್ಲವೇನು? ಕೃಷ್ಣಯಾದವ್ ಈ ಸಂದರ್ಭದಲ್ಲಿ ವಿಷಯವನ್ನ ಪೂರ್ತಿ ಅರ್ಥ ಮಾಡಿಕೊಳ್ಳದೆಯೇ ಮುಂದುವರೆಯುತ್ತಿದ್ದಾನೆಂದು ವಿಶುಗನ್ನಿಸಿತು. ಅವರುಗಳ ಚರ್ಚೆಯ ಮಧ್ಯೆ ತಾನೂ ಸೇರಿ ಪರಿಸ್ಥಿತಿಯ ಉದ್ರಿಗ್ತತೆಯನ್ನ ಕಡಿಮೆ ಮಾಡಬಹುದು ಅಂತಲೂ ಅನ್ನಿಸಿತು. ಒಂದು ಕ್ಷಣದ ಮಟ್ಟಿಗೆ ವಿಶು ತನ್ನ ಕುರ್ಚಿಯಿಂದ ಎದ್ದುನಿಂತು, ಆ ಮಗುವನ್ನ ತಾನು ಕೊಂಡೊಯ್ಯಲು ತಯಾರಾಗಿದ್ದೇನೆಂದು ಹೇಳುವವನೇ ಇದ್ದ. ಇದರಿಂದ ಚರ್ಚೆ ದಿಕ್ಕಾದರೂ ಬದಲಾಗಬಹುದಿತ್ತು. ಜೊತೆಗೆ ಇಂಥ ಸಮಯದ ತುರ್ತು ನಿರ್ಧಾರಗಳು ಎಷ್ಟೋ ಬಾರಿ ಚಿಂತನ ಮಂಥನ ಮಾಡಿ ತೆಗೆದುಕೊಂಡ ನಿರ್ಧಾರಗಳಿಗಿಂತ ಒಳ್ಳೆಯದಾಗಿರುತ್ತಿದ್ದುವು. ಹೀಗಾಗಿ ಒಂದು ಮಗುವನ್ನು ತಂದುಕೊಳ್ಳುವ ತಮ್ಮ ಯೋಜನೆ ಮುಂದಕ್ಕೆಹಾಕದೇ ತಕ್ಷಣ ಕಾರ್ಯರೂಪಕ್ಕೆ ತರುವ ಸಾಧ್ಯತೆಯಿತ್ತು. ಆದರೆ ತಾನೀಗ ಮಧ್ಯೆ ತಲೆತೂರಿಸುವುದರಿಂದ ವಾತಾವರಣ ತಣ್ಣಗಾಗುವ ಖಾತ್ರಿಯೇನೂ ಇರಲಿಲ್ಲ. ಹಾಗೂ ವಿಷಯ ಅಷ್ಟು ಸರಳವೂ ಆಗಿರಲಿಲ್ಲ. +ವಿಶು ಕಳೆದಾರು ತಿಂಗಳುಗಳಲ್ಲಿ ಕಂಡಿದ್ದ ಕೃಷ್ಣಯಾದವ್‌ನ ವರ್ತನೆಗೂ ಇಂದು ಕಾಣುತ್ತಿರುವ ಅವನ ವರ್ತನೆಗೂ ತಾಳೆಹಾಕಿ ನೋಡುವ ಪ್ರಯತ್ನ ಮಾಡಿದ. ಅಜಗಜಾಂತರದ ವ್ಯತ್ಯಾಸವಿತ್ತು. ಕೆಲಸದ ಒತ್ತಡವಿಲ್ಲದಿದ್ದಾಗ ಯಾದವ್ ಖುಷಿಯಿಂದ ನಗೆಚಟಾಕಿ ಹಾರಿಸಿಕೊಂಡು ಜಾಲಿಯಾಗಿರುತ್ತಿದ್ದ. ಆದರೆ ಅವನಿದ್ದ ಕೆಲಸದಲ್ಲಿ ಒತ್ತಡವಿಲ್ಲದ ಕ್ಷಣಗಳೇ ಕಡಿಮೆ. ಆದರೂ (ವಿಶುವಿನಭಿಪ್ರಾಯದಲ್ಲಿ) ಇಂಥ ರಾಕ್ಷಸ ಪ್ರವರ್ತನೆಯನ್ನ ಎಂದೂ ಕೃಷ್ಣಯಾದವ್‌ನಲ್ಲಿ ಕಂಡಿರಲಿಲ್ಲ. +ತಾನು ಪ್ರತಿ ಶನಿವಾರ ಠಾಣೆಗೆಬರಲಾರಂಭಿಸಿದ ಮೊದಲ ದಿನಗಳಲ್ಲಿ ಠಾಣೆಯವರಿಗೆ ಇದು ವಿಚಿತ್ರ ಅನ್ನಿಸಿತ್ತು. ಯಾಕೆ ಈತ ಇಷ್ಟು ಬೇಗಬೇಗ ಠಾಣೆಗೆ ಹಾಜರಿ ಹಾಕುತ್ತಿದ್ದಾನೆಂದು ಕೆಲವರು ಕಕ್ಕಾಬಿಕ್ಕಿ ಆಗಿದ್ದರು. ಆದರೆ ಒಂದೆರಡು ತಿಂಗಳುಗಳಲ್ಲಿ ಎಲ್ಲರಿಗೂ ಇದು ಎಷ್ಟು ಅಭ್ಯಾಸವಾಗಿ ಬಿಟ್ಟಿತ್ತೆಂದರೆ, ವಿಶು ಅಕಸ್ಮಾತ್ ಬರದಿದ್ದರೆ ಯೋಚನೆ ಮಾಡುವ ಸ್ಥಿತಿಗೆ ತಲುಪಿಬಿಟ್ಟಿದ್ದರು. ಹೀಗೆ ಚೆನ್ನಾಗಿ ಅಭ್ಯಾಸವಾದ ಕೆಲ ದಿನಗಳ ನಂತರ ಕೃಷ್ಣಯಾದವ್ ವಿಶುವಿಗೆ ಹೇಳಿಯೂ ಇದ್ದ: ‘ನಿಮ್ಮ ಕೇಸಿನಲ್ಲಿರುವ ತೊಂದರೆಯೆಂದರೆ ನೀವು ಎಫ್‌ಐ‌ಆರ್‌ನಲ್ಲಿ ವಿಪರೀತ ವಿವರಗಳನ್ನು ಕೊಟ್ಟುಬಿಟ್ಟಿದ್ದೀರಿ.’ ವಿಶುವಿಗೆ ಆಶ್ಚರ್ಯವಾಯಿತು! ‘ಯಾಕೆ, ನನ್ನ ವಸ್ತುಗಳನ್ನ ಗುರುತಿಸೊಕ್ಕೆ ಅನುಕೂಲವಾಗಬಹುದೂಂತ ನಾನು…..’ ಕೃಷ್ಣಯಾದವ್ ವಾಕ್ಯ ಮುಗಿಸಲು ಅವಕಾಶ ಕೊಡದೆ ಮಾತನಾಡಿದ: ‘ನೀವು ಅಷ್ಟು ಸ್ಪಷ್ಟವಾಗಿ ಎಲ್ಲವನ್ನೂ ಬರೆಯದೇ ಇದ್ದಿದ್ದರೆ, ನಾವುಗಳು ಬೇರಾವುದಾರೂ ಬ್ರಾಂಡಿನ ವಸ್ತುಗಳನ್ನು ಕೊಡುವ ಅವಕಾಶವಿತ್ತು. ನಮ್ಮ ಗೋದಾಮಿನಲ್ಲಿ ಎಷ್ಟೋ ವಸ್ತುಗಳು ಇದ್ದೇ ಇರ್ತಾವೆ, ಅವುಗಳಲ್ಲಿ ಯಾವುದಾದರೊಂದನ್ನು ಎತ್ತಿ ಕೊಟ್ಟುಬಿಡುತ್ತಿದ್ದೆವು ಅಷ್ಟೇ. ಎಷ್ಟಾದರೂ ಪ್ರತಿನಿತ್ಯ ಏನಾದರೊಂದನ್ನ ಜಫ್ತು ಮಾಡುತ್ತಲೇ ಇರುತ್ತೀವಲ್ಲಾ.’ +ಈ ಕೇಸಿನ ವಿಷಯದಲ್ಲಿ ಕೃಷ್ಣಯಾದವ್ ಯಾವ ರೀತಿ ಮುಂದುವರೆಯಬಹುದೆಂಬ ಕುತೂಹಲ ವಿಶುವಿಗಿತ್ತು. ಎಷ್ಟಾದರೂ ಒಂದು ಪುಟ್ಟ ಕೂಸಿಗೆ ಸಂಬಂಧಿಸಿದ ಕೇಸು ಇದಾಗಿತ್ತು. ಇದನ್ನು ಬಗೆಹರಿಸುವುದು ಟಿ.ವಿ. ಮ್ಯೂಸಿಕ್ ಸಿಸ್ಟಂಗಳ ಕೇಸುಗಳನ್ನು ಪರಿಹರಿಸುವಷ್ಟು ಸರಳವೇನೂ ಆಗಿರಲಿಲ್ಲ. ಮಗುವಿನ ತಂದೆತಾಯಿಗಳನ್ನ ಹೇಗೇ ಗದರಿದರೂ ಅವನು ಈಗ ಈ ಮಗುವಿಗೊಂದು ದಾರಿಯನ್ನು ಕಾಣಿಸಬೇಕಿತ್ತು. ಆದರೆ ಈ ವಿಷಯದಲ್ಲಿ ಕೃಷ್ಣಯಾದವ್‌ಗೆ ಯಾವ ಯೋಚನೆಯೂ ಇದ್ದಂತಿರಲಿಲ್ಲ. +ಆ ಸಮಯಕ್ಕೆ ಸರಿಯಾಗಿ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ಮಗುವುನ ತಾಯಿ ಕೂಡಲೇ ಅಲ್ಲಿಂದ ಹಿಂದಕ್ಕೆ ಹೆಜ್ಜೆ ಹಾಕಿ, ಮಗುವನ್ನ ಎತ್ತಿಕೊಂಡಳು. ಒಂದು ಮೂಲೆಗೆ ಹೋಗಿ ಏನೂ ನಡೆದೇಯಿಲ್ಲವೇನೋ ಎಂಬಂತೆ ಕೂತು ಕೂಸಿಗೆ ಎದೆಹಾಲು ಕುಡಿಸಲು ಪ್ರಾರಂಭಿಸಿದಳು. ಕೃಷ್ಣಯಾದವ್ ಅವಳ ಗಂಡನನ್ನ ಕರೆದು ಕೆನ್ನೆಗೆ ಮತ್ತೊಂದು ಬಾರಿಸಿ ಕೂಡಲೇ ಮನೆಗೆ ಹೋಗಲು ಹೇಳಿದ. ಆ ಗಂಡಸೂ ಸುಮ್ಮನೆ ಕಾಫಿ ಕುಡಿದು ಹೋಗಲು ಠಾಣೆಗೆ ಬಂದಿದ್ದವನ ಹಾಗೆ, ನಗುನಗುತ್ತಾ ಹೊರಟುಬಿಟ್ಟ. ಅದೇ ಉಸಿರಿನಲ್ಲಿ ಕೃಷ್ಣಯಾದವ್ ಆ ಹೆಂಗಸಿನ ಮೇಲೂ ಕೂಗಾಡಿದ-‘ಆ ಮಗುವನ್ನ ಮತ್ತೆ ಎಲ್ಲಾದರೂ ಬಿಡೋ ಸುದ್ದಿ ಕೇಳಿದರೆ, ಕಂಬಿ ಎಣಿಸೋಹಾಗೆ ಮಾಡ್ತೀನಿ. ನೆಟ್ಟಗೆ ಮರ್ಯಾದೆಯಾಗಿದ್ದೆಯೋ ಸರಿ, ಇಲ್ಲದಿದ್ದರೆ ನಾನೇನು ಮಾಡ್ತೀನೋ ನನಗೇ ಗೊತ್ತಿಲ್ಲ.’ ಕೃಷ್ಣಯಾದವ್ ಹೊಡೆದುಕೊಳ್ಳುತ್ತಲೇ ಇದ್ದ. ಆದರೆ ಆ ಹೆಂಗಸು ಮಗುವಿಗೆ ಹಾಲುಣಿಸುವುದಕ್ಕೆ ಪ್ರಾರಂಭಿಸಿದ ಕೂಡಲೇ ಮೋಕ್ಷ ಪ್ರಾಪ್ತವಾದವಳಂತೆ, ಜಗತ್ತಿನರಿವೇ ಇಲ್ಲದೇ ಇದ್ದಳು. +ವಿಶುವಿಗೆ ಏನೊಂದೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಜತೆಗೆ ಕೃಷ್ಣಯಾದವ್ ಪ್ರವರ್ತನೆ ಅವನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಈ ಜನರನ್ನು ಇನ್ನಷ್ಟು ಮಾನವೀಯವಾಗಿ ಕಾಣಬೇಕಿತ್ತು ಅಂತ ಅವನ ಅಭಿಪ್ರಾಯವಾಗಿತ್ತು. ವಿಶು ತನ್ನ ತಳಮಳವನ್ನು ತಡೆಯಲಾಗದೇ ಎದ್ದುಹೋಗಿ ಯಾದವ್‌ಗೆ ತನಗನಿಸಿದ್ದನ್ನ ಹೇಳಿಯೇ ಹೇಳಿದ. ‘ಈ ಕಥೆಯ ಅಂತ್ಯವಿಲ್ಲೇ ಆಗುತ್ತೇಂತ ನಿಮ್ಮ ಅಭಿಪ್ರಾಯವಿದ್ದೀತು. ಆದರೆ ಆ ಮಗು ಸುರಕ್ಷಿತವಾಗಿದೇಂತ ನಿಮಗೆ ಯಾವ ಖಾತ್ರಿಯೂ ಇರಲಿಕ್ಕೆ ಸಾಧ್ಯವಿಲ್ಲ. ಇದಕ್ಕೆ ಬೇರೇನೂ ಮಾರ್ಗವಿಲ್ಲವೇ?’ +ಕೃಷ್ಣಯಾದವ್ ಏನೂ ಮಡೆದೇಯಿಲ್ಲವೆಂಬಂತೆ ಉತ್ತರಿಸಿದ. ‘ನಿಮಗೆ ಈ ಜನ ಗೊತ್ತಿಲ್ಲ. ಆ ಹೆಂಗಸು ಹೇಗೋ ಆ ಮಗುವಿನ ಪ್ರಾಣ ತೆಗೆಯುತ್ತಿದ್ದವಳಲ್ಲ. ಇದು ಅವರುಗಳು ಬದುಕುವ ರೀತಿ. ಇವೆಲ್ಲಾ ನನ್ನನ್ನ ವಿಚಲಿತಗೊಳಿಸಿದರೆ ನಾನು ಪೋಲೀಸು ನೌಕರಿ ಮಾಡುವುದೇ ಸಾಧ್ಯವಿಲ್ಲ. ನಾನು ಇಂಥ ಕೇಸನ್ನ ವಾರಕ್ಕೊಮ್ಮೆ ನೋಡ್ತಾಯಿರ್ತೀನಿ. ಮಕ್ಕಳಿಗೆ ಕಿರುಕುಳ ಕೊಡೋದು, ಹೆಂಡತೀರನ್ನ ಬಡಿಯೋದು, ಕೈ ಮುರಿಯೋದು, ಏನೆಲ್ಲಾ….ಇವರುಗಳ ಈ ರೀತಿಯ ಬದುಕನ್ನ. ಅಭ್ಯಾಸಬಲದಿಂದ ಬದುಕುತ್ತಾರೆ. ಆ ಹೆಂಗಸು ಮಗುವನ್ನ ಯಾರಿಗಾದರೂ ಕೊಟ್ಟುಬಿಡುತ್ತಾಳೇಂತ ನಿಮಗನ್ನಿಸುತ್ತಾ? ಬೇಕಿದ್ದರೆ ಪ್ರಯತ್ನಿಸಿ ನೋಡಿ. ನನ್ನ ಉತ್ತರ-ಇಲ್ಲ-ಎಂದಿಗೂ ಆಕೆ ಆ ಮಗುವನ್ನ ಬಿಟ್ಟು ಕೊಡುವುದಿಲ್ಲ.’ +‘ಆದರೆ ಈ ವಿಷಯದಲ್ಲಿ ನೀವಂದುಕೊಂಡದ್ದು ತಪ್ಪಾದರೆ?’ +‘ಸಾಧ್ಯತೆಗಳು ಕಡಿಮೆ. ನೀವೂ ನಮ್ಮ ವೃತ್ತಿಗೆ ಬಂದರೆ ಶಿಲೆಯಾಗುತ್ತಾ ಹೋಗುತ್ತೀರಿ. ನಾವು ಬೆಳಗಿನ ಸುಪ್ರಭಾತ ಹೇಳೋದೇ ‘ಅನುಮಾನ’ ಅನ್ನೋ ಪದದಿಂದ ಅಲ್ಲಿಂದ ನಾವು ಅನುಮಾನದಲ್ಲೇ ದಿನ ಕಳೆಯುತ್ತೇವೆ. ಜನ ಸುಮ್ಮಸುಮ್ಮನೆ ನಮ್ಮ ಹತ್ತಿರ ಬರ್ತಾರೇಂತ ಅಂದುಕೊಂಡಿದ್ದೀರಾ? ಈಗ ನಿಮ್ಮ ಕೇಸೇ ತೆಗೊಳ್ಳಿ-ನೀವ್ಯಾಕೆ ಇಲ್ಲಿ ವಾರಂವಾರ ಬರ್ತೀರೀ ಅನ್ನೋದನ್ನೂ ನಾವು ಅನುಮಾನದಿಂದ ನೋಡಬೇಕಾಗುತ್ತೆ. ಅಂದಹಾಗೆ, ನಿಮ್ಮ ಕೇಸನ್ನ ಸ್ವಲ್ಪ ದಿನಗಳಲ್ಲೇ ಮುಚ್ಚಿಹಾಕುತ್ತಿದ್ದೇವೆ. ನೀವು ಸನಿವಾರಗಳಂದು ಮಾಡಲು ಬೇರೇನಾದರೂ ನೋಡಿಕೊಳ್ಳೋದು ಒಳ್ಳೇದು.’ ಅಂದು ಕೃಷ್ಣಯಾದವ್ ಒಳ್ಳೆಯ ಮೂಡಿನಲ್ಲಿರಲಿಲ್ಲವೆಂಬುದಂತೂ ಸ್ಪಷ್ಟವಾಗಿತ್ತು. ಜತೆಗೆ ವಿಶುವಿಗೂ ಈ ಎಲ್ಲವನ್ನು ಕಂಡು ಸ್ವಲ್ಪ ಭಯವೇ ಆಯಿತು. ತನಗೆ ತನ್ನ ಕಳೆದು ಹೋದ ವಸ್ತುಗಳನ್ನ ಪಡೆಯೋದು ಮುಖ್ಯವಾಗಿರಲಿಲ್ಲವೆಂಬುದು ನಿಜವಾದರೂ, ಇದು ತನ್ನ ಜೀವನವಿಧಾನ ಆಗಿಬಿಟ್ಟಿತ್ತೆಂದು-ಇದಕ್ಕಿಂತ ಭಿನ್ನವಾದ ಅಜೆಂಡಾ ಬೇರೇನೂ ಇಲ್ಲವೆಂದು ನಂಬುವಂತೆ ಪ್ರವರ್ತಿಸುವುದು ಹೇಗೆ?’ ಈಗ ಶನಿವಾರಗಳಂದು ಮುಂಜಾನೆ ಸಮಯ ಕಳೆಯಲು ಬೇರೇನಾದರೂ ಕಾಯಕ ಹುಡುಕಬೇಕಿತ್ತು. +ಈ ಕಥೆ ಇಲ್ಲಿಗೇ ಮುಗಿದಿಲ್ಲವೆಂಬ ಅನುಮಾನ ವಿಶುವನ್ನ ಕಾಡಿತು. ಆದರೆ ವಿಶುವಿಗೆ ಅರ್ಥವಾಗದ್ದೆಂದರೆ ಕೃಷ್ಣಯಾದವ್ ಗಂಭೀರವಾದ ಅಧಿಕಾರಿಯಿಂದ ಒಡ್ಡುತನದ ಠಾಣೆದಾರನಾಗಿ ಪರಿವರ್ತನೆಗೊಂಡು ಕೋಪ ಪ್ರದರ್ಶನ ಮಾಡುತ್ತಿರುವುದೇಕೆ ಎಂಬುದು. ಕೃಷ್ಣಯಾದವ್ ಇದರಿಂದ ತನ್ನ ಕೈ ತೊಳೆದುಕೊಂಡು ಶುಭ್ರವಾಗಬೇಕೆಂಬ ಆತುರ ತೋರಿದರೂ, ಈ ಕೇಸಿನಲ್ಲಿ ಕಣ್ಣಿಗೆ ಕಾಣದ್ದು ಇನ್ನೂ ಏನೋ ಇದೆ ಅಂತ ವಿಶುವಿಗನ್ನಿಸಿತು. ಇದರ ಬಗ್ಗೆ ತಾನೇನಾದರೂ ಮಾಡಬಹುದೆಂದು ವಿಶುವಿಗನ್ನಿಸಿತು. ತನ್ನ ಬೇರೊಂದು ಸಮಸ್ಯೆಗೆ ಇದು ಉತ್ತರವನ್ನ ಕೊಟ್ಟರೂ ಕೊಡಬಹುದು – ಮಗು. ಆದರೆ ಅದೆಲ್ಲಾ ಅಷ್ಟು ಸರಳವೇ? ನಯನಾ ಏನನ್ನಬಹುದು? +ವಿಶು ಠಾಣೆಯಿಂದ ಆಚೆಗೆ ಹೆಜ್ಜೆಯಿಡುತ್ತಿದ್ದಂತೆ ಆ ಹೆಂಗಸೂ ಮಗುವನ್ನೆತ್ತಿಕೊಂಡು ಎದ್ದಳು. ‘ಆ ಮಗುವಿನ ವಿಷಯದಲ್ಲಿ ಮತ್ತೇನಾದರೂ ಸುದ್ದಿಕೇಳಿಬಂದರೆ ಆ ಮಗೂನ ಅನಾಥಾಶ್ರಮಕ್ಕೆ ಕಳಿಸಿ ನಿನ್ನನ್ನ ಚೆನ್ನಾಗಿ ಒದ್ದು ಒಳಗೆ ಹಾಕ್ತೀನಿ – ತಿಳೀತಾ? ಹಾಗೇನೇ ಆ ಕುಡುಕನ್ನೂ ಹದ್ದುಬಸ್ತಿನಲ್ಲಿಡು – ಇಲ್ದೇಯಿದ್ರೆ ಏನಾಗುತ್ತೊ ನನಗೇ ಗೊತ್ತಿಲ್ಲ.’ ಒಳಗಿನಿಂದ ಕೃಷ್ಣಯಾದವ್ ಕೂಗಿದ. +ಸ್ವಲ್ಪ ದೂರದಿಂದ ವಿಶು ಆ ಹೆಂಗಸನ್ನು ಹಿಂಬಾಲಿಸತೊಡಗಿದ. ಆಕೆಯ ಮನೆ ಎಲ್ಲಿ ಮತ್ತು ಆಕೆಯನ್ನ ಸಂಪರ್ಕಿಸಬೇಕಾದರೆ ಹೇಗೆ ಎಂಬುದನ್ನ ಅವನು ತಿಳಿದುಕೊಳ್ಳಬೇಕಾಗಿತ್ತು. ಆದರೆ ಆಕೆಯ ಬಳಿಗೆ ನೇರವಾಗಿ ಹೊಗಿ ಯಾವದನ್ನೂ ಮಾತಾಡುವ ಧೈರ್ಯಮಾತ್ರ ಅವನಲ್ಲಿರಲಿಲ್ಲ. ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಜನ ಸಮಾಜದ ಬೇರೆ ಬೇರೆ ಸ್ಥರಗಳ ಜನತೆಯೊಂದಿಗೆ ವ್ಯವಹರಿಸುವಾಗ ಭಿನ್ನವಾಗಿ ಪ್ರವರ್ತಿಸುವುದು ಏಕೆಂದು ಯೋಚಿಸುತ್ತಿದ್ದ. ಒಂದು ಸ್ಥರದಲ್ಲಿ ಮಗುವನ್ನ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆಸಬೇಕಾದ ಆ ಹೆಣ್ಣಿನ ಬಗ್ಗೆ ಅವನಿಗೆ ಅನುಕಂಪವಿತ್ತು. ಅವಳಿಗೆ ತನ್ನಿಂದ ಏನೂ ಸಹಾಯವಾಗಲಾರದೆಂಬ ವಾಸ್ತವದ ವಿಷಾದವು ಅವನನ್ನು ಕಾಡುತ್ತಿತ್ತು. ಆದರೆ ಕೃಷ್ಣಯಾದವ್ ಅವಳಿಗೆ ಕಪಾಳಮೋಕ್ಷ ಮಾಡುವುದನ್ನಾಗಲೀ, ಅವಳ ಮಗುವಿನ ಬಗ್ಗೆ ಯಾವುದಾದರೊಂದು ನಿಲುವನ್ನು ತೆಗೆದುಕೊಳ್ಳುವುದಾಗಲೀ ಸಾಧ್ಯವಾಗದೇ ಒದ್ದಾಡಿಹೋದ. ಕೆಲ ಕ್ಷಣಗಳ ಮಟ್ಟಿಗೆ ಮಗುವನ್ನ ಮುಗಿಸಿಬಿಡುವ, ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳೆಲ್ಲ ದಿನನಿತ್ಯದ ಪೊಳ್ಳು ಮಾತುಗಳು ಎಂದ ಕೃಷ್ಣಯಾದವ್‌ನ ಅಭಿಪ್ರಾಯವನ್ನು ಕೂಡಾ ನಂಬಬಹುದೇನೋ ಅನ್ನಿಸಿತು. +ವಿಶು ಅವಳನ್ನು ಹಿಂಬಾಲಿಸುತ್ತ ನಡೆದ. ಸ್ವಲ್ಪ ದೂರ ಹೋದ ನಂತರ ಆಕೆ ಒಂದು ಸಣ್ಣ ಗಲ್ಲಿಯಲ್ಲಿ ನುಸುಳಿ ತೆರೆದಿದ್ದ ಒಂದು ಬಾಗಿಲಲ್ಲಿ ಮಾಯವಾಗಿಬಿಟ್ಟಳು. ಅವಳ ಮತ್ತವಳ ಗಂಡನ ಜೊತೆ ಮಾತನಾಡಿ ಈ ಎಲ್ಲ ವಿಷಯಗಳಡಿಗೆ ಹೋಗಿ ಅರ್ಥಮಾಡಿಕೊಳ್ಳಬೇಕೆಂಬ ಕಾತರವನ್ನ ವಿಶುವಿಗೆ ತಡೆಯಲಾಗಲಿಲ್ಲ. ಅವನು ಮುಂದೆ ಹೋಗಿ ಬಾಗಿಲನ್ನು ತಟ್ಟಿದ. ಗಂಡ ಬಾಗಿಲು ತೆರೆದು ಹುಬ್ಬುಹಾರಿಸಿದ. ವಿಶು ಮಗುವಿನ ವಿಷಯ ಕೇಳಬೇಕೆಂದು ಬಾಯಿ ತೆರೆಯುವವನೇ ಇದ್ದ….. +ಒಳಗಡೆ ಕಂಡ ಟಿವಿಯನ್ನ ನೋಡಿ ಅವಾಕ್ಕಾದ. ಇದು ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಟಿವಿ ಎಂಬುದರಲ್ಲಿ ಸಂದೇಹವಿರಲಿಲ್ಲ. ತಮ್ಮ ಟಿವಿಗಿದ್ದ ಎಲ್ಲ ಗುರುತುಗಳೂ ಅದರ ಮೇಲಿದ್ದುವು – ಮುಖ್ಯವಾಗಿ ಬದಿಯಲ್ಲಿ ಅಂಟಿಸಿದ್ದ ಅಮುಲ್ ಬೆಣ್ಣೆಯ ಸ್ಟಿಕರ್ ಷೋರೂಮಿನಿಂದ ಮನೆಗೆ ತರುವಾಗ ಆಗಿದ್ದ ದೊಡ್ಡ ಗುರುತು ಎಲ್ಲವೂ ಅದರ ಮೇಲಿದ್ದದ್ದರಿಂದ ಅನುಮಾನಕ್ಕೆ ಆಸ್ಪದವೇ ಇರಲಿಲ್ಲ. ವಿಶು ಸುತ್ತಮುತ್ತ ನೋಡಿದ. ಬೇರ್ಯಾವ ವಸ್ತುಗಳೂ ಕಾಣಿಸಲಿಲ್ಲ. +‘ಏನು? ಏನುಬೇಕಿತ್ತು?’ ಆತ ಗಟ್ಟಿಯಾಗಿ ಕೇಳಿದ. ವಿಶುವಿಗೆ ತಕ್ಷಣಕ್ಕೆ ಏನು ಮಾಡಬೇಕೋ ತಿಳಿಯಲಿಲ್ಲ. ಮಗುವಿನ ವಿಷಯ ಕೇಳಲು ಬಂದವನಿಗೆ ಇದು ನಿರೀಕ್ಷಿತವಾಗಿರಲಿಲ್ಲ. ಬಾಯಿಂದ ಮಗುವಿನ ಮಾತು ಬಂದೇ ಮನದಲ್ಲಿ ಬೃಹದಾಕಾರವಾಗಿ ನಿಂತಿದ್ದ ಟಿ.ವಿ.ಯ ವಿಷಯ ಹೊರಬಂದದ್ದು ಅವನಿಗೇ ಆಶ್ಚರ್ಯವಾಗಿತ್ತು. ಟಿವಿಯ ದಿಕ್ಕಿನಲ್ಲಿ ಬೆರಳುಮಾಡಿ – ‘ಆ ಟಿವಿ…..’ ಎಂದಷ್ಟೇ ಕಿರುಲಿದ. +‘ಅದನ್ನ ಮಾರಾಟ ಮಾಡೋದಿಲ್ಲ. ಅದು ನಾನೇ ನೋಡೋಕ್ಕೆ ಇಟ್ಕಂಡಿರೋದು ಕಾಣಿಸೊಲ್ವ? ಆದರೆ ಬೇಕಿದ್ರೆ ಅದ್ಭುತವಾದ ಒಂದು ಸಿ.ಡಿ.ಪ್ಲೇಯರ್ ಇದೆ. ಐದು ಸಾವಿರ…. ಬೇಕಿದ್ದರೆ ಹೇಳಿ….’ ವಿಶು ಸರಿಯೆಂದು ತಲೆಯಾಡಿಸುತ್ತಿದ್ದಂತೆ ಆತ ಒಳಹೊಕ್ಕು ಸಿ.ಡಿ.ಸಿಸ್ಟಮ್ಮನ್ನ ಎತ್ತಿಕೊಂಡು ಬಂದ. ಅದನ್ನ ನೋಡಿ ವಿಶು ಮತ್ತಷ್ಟು ಅವಾಕ್ಕಾದ – ಈಗಂತೂ ಅನುಮಾನವೇ ಇರಲಿಲ್ಲ. ಈ ಮಾಲು ತಮ್ಮದೇ ಆಗಿತ್ತು. ವಿಶು ತಡೆಯಲಾಗದೇ ಕೇಳಿಯೇಬಿಟ್ಟ – ‘ಇವೆಲ್ಲಾ ನಿನಗೆ ಎಲ್ಲಿ ಸಿಕ್ಕಿತು?’ ‘ನಿಮಗೆ ಆ ವಿವರಗಳೆಲ್ಲಾ ಯಾಕೆ? ಈ ಮಾಲು ಬೇಕಾದ್ರೆ ಹೇಳಿ. ಕಡೇದಾಗಿ ೪೫೦೦ ಕ್ಕೆ ಕೊಡ್ತೀನಿ. ಹೇಳಿ…..’ +ವಿಶು ಅವನತ್ತ ನೋಡಿ, ಸ್ವಲ್ಪ ಹೊತ್ತಿನ ನಂತರ ಬರುವುದಾಗಿ ಹೇಳಿದ. ಮನೆಗೆ ಹೋಗಬೇಕೋ ಅಥವಾ ಠಾಣೆಯ ಕಡೆಗೆ ಹೋಗಬೇಕೋ ತೊಚದೇ ಪಾದಗಳನ್ನ ಎಳೆದುಕೊಳ್ಳುತ್ತಾ ವಿಶು ಆ ಕೊಳಗೇರಿಯಿಂದ ಹೊರಕ್ಕೆ ಬಂದ. ಅವನನ್ನು ಆ ಗಂಡು ಬೆನ್ನಟ್ಟಿ ಬಂದ – ‘ಸರ್ ನನ್ನ ಹತ್ತಿರ ಇಷ್ಟೇ ಅಲ್ಲ – ಇನ್ನೂ ತುಂಬಾ ಮಾಲಿದೆ – ವಿ.ಸಿ.ಆರ್, ಸಿ.ಡಿಗಳು, ಬೇರೆ ಬೇರೆ ಎಲೆಕ್ಟ್ರಾನಿಕ್ ಸಾಮಾನುಗಳಿವೆ. ಒಂದ್ಸರ್ತಿ ಬಂದು ನೋಡಿ. ಖಂಡಿತವಾಗಿ ಒಳ್ಳೇ ಬೆಲೆಗೆ ಎಲ್ಲಾನೂ ಕೊಡ್ತೀನಿ…..’ +***** +ಕೀಲಿಕರಣ: ಶ್ರೀನಿವಾಸ, ಸೀತಾ ಶೇಖರ್, ಗುರುಪ್ರಸಾದ್ +ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_652.txt b/Kannada Sahitya/article_652.txt new file mode 100644 index 0000000000000000000000000000000000000000..3ac8e15e02dc12d9ff0247092801a2bf8a875855 --- /dev/null +++ b/Kannada Sahitya/article_652.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಾಂಬೋದಿ ತಾಳ — ಝಂಪೆ +ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | +ನೀ ದೇಹದೊಳಗೊ ನಿನ್ನೊಳು ದೇಹವೊ ||ಪ|| +ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ | +ಬಯಲು ಆಲಯವೆರಡು ನಯನದೊಳಗೊ || +ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ | +ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ||೧|| +ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ | +ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ || +ಜಿಹ್ವೆ ಬುದ್ಧಿಯ ಒಳಗೊ ಬುದ್ಧಿ ಜಿಹ್ವೆಯ ಒಳಗೊ +ಜಿಹ್ವೆ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ||೨|| +ಕುಸುಮದೊಳು ಗಂಧವೋ ಗಂಧದೊಳು ಕುಸುಮವೊ | +ಕುಸುಮ ಗಂಧಗಳೆರಡು ಘ್ರಾಣದೊಳಗೋ || +ಅಸಮಭವ ಕಾಗಿನೆಲೆಯಾದಿಕೇಶವರಾಯ| +ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ||೩|| +ರಾಗ — ಕಲ್ಯಾಣಿತಾಳ — ಝಂಪೆ ವರವ ಕೊಡು ಎನಗೆ ವಾಗ್ದೇವಿ – ನಿನ್ನ |ಚರಣಕಮಲಂಗಳನು ದಯಮಾಡು ದೇವಿ ||ಪ|| ಶಿವಮೊಗದ ನಸುನಗೆಯ ಬಾಲೆ |ಎಸೆವ ಕರ್ಣದಿ ಮುತ್ತಿನೋಲೆ ||ನಸುನಗುವ ಪಲ್ಲ ಗುಣಶೀಲೆ – […] +ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] +ರಾಗ — ಪಂತುವರಾಳಿ ತಾಳ — ಅಟ್ಟ ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ |ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ |ಅಟ್ಟು ಉಣ್ಣದ ವಸ್ತುಗಳಿಲ್ಲವೊ ||ಗುಟ್ಟು ಕಾಣಿಸಿಬಂತು ಹಿರಿದೇನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_653.txt b/Kannada Sahitya/article_653.txt new file mode 100644 index 0000000000000000000000000000000000000000..fd3d5b6f27528c90aff8ef9561822e57f7326e51 --- /dev/null +++ b/Kannada Sahitya/article_653.txt @@ -0,0 +1,84 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) +ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ ತಿಟ್ಟೆಯಲ್ಲಿ ಕುಳಿತು ಹಿತ್ತಲ ಕೊನೆಯ ಗೇಟಿನತ್ತ ಕಣ್ಣು ನೆಟ್ಟಿದ್ದ ದೇವಕಿಯಮ್ಮ ಬಗ್ಗಿಬಿಟ್ಟಿದ್ದ ಬೆನ್ನನ್ನು ನೇರವಾಗಿಸುತ್ತಾ ನೋವಿನ ನಿಟ್ಟುಸಿರು ಬಿಡುತ್ತಾ ಕುಲದೈವವನ್ನು ಸ್ಮರಿಸಿದರು. ಗೇಟಿನಿಂದ ಯಾರೊ ಹಾದು ಬಂದಂತಾಗಿ ಅವರು ತಟ್ಟನೆ ಎದ್ದು ನಿಂತು ಅದೇ ಹುಮ್ಮಸ್ಸಿನಲ್ಲಿ ಮೊಣಕಾಲಿಗೆ ಕೈಯೂರುತ್ತಾ ಒಂದೊಂದೆ ಮೆಟ್ಟಿಲಿಳಿದು ಅಂಗಳಕ್ಕೆ ಕಾಲಿಟ್ಟವರೆ ಕಣ್ಣು ಕಿರಿದುಗೊಳಿಸಿ ಮತ್ತೆ ದಿಟ್ಟಿಸಿದರು. +ಶಿಸ್ತಿನ ಸಿಪಾಯಿಗಳಂತೆ ನೇರ ನಿಂತಿದ್ದ ತೆಂಗಿನ ಸಾಲುಮರಗಳು, ದರೆಯ ಬಳಿ ಕಾಲುದಾರಿಯ ಅಕ್ಕಪಕ್ಕ ಬೆಳೆದಿದ್ದ ಸಮೃದ್ಧ ಹೂಗಿಡಗಳು, ಅವುಗಳ ಮಧ್ಯೆ ಇದೇ ಈಗ ಮಿಣ್ಣಗೆ ಹಾರಹತ್ತಿದ್ದ ಒಂದೆರಡು ಮಿಂಚುಹುಳುಗಳ ಹೊರತು ಇನ್ಯಾರೂ ಕಾಣಿಸದೆ ದೇವಕಿಯಮ್ಮ ಯಾರೋ ಕಂಡಂತಾದದ್ದು ತಮ್ಮ ಭ್ರಮೆ ಎಂದುಕೊಂಡರು. +ಈ ವಯಸ್ಸಿನಲ್ಲೂ ಎಂದರೆ ಆಕೆಯ ಪ್ರಕಾರ ಎಂಬತ್ತು ಕಳೆದರೂ ದೇವಕಿಯಮ್ಮನ ದೃಷ್ಟಿ ಅಷ್ಟು ಮಂದವಾಗಿಲ್ಲ. ದೂರದಿಂದ ಬರುವವರ ಮುಖ ಪರಿಚಯ ಸ್ಪಷ್ಟವಾಗದಿದ್ದರೂ ಅವರ ನಡಿಗೆಯ ರೀತಿ, ಉಡುಪಿನ ವೈಖರಿಯಿಂದಲೇ ಇಂತಹವರೇ ಎಂದು ನಿಖರವಾಗಿ ಗುರುತಿಸಿ ಆ ದೂರಕ್ಕೆ ಧ್ವನಿ ಕೊಡುವುದುಂಟು. ದೇವಕಿಯಮ್ಮನ ಗಟ್ಟಿಮುಟ್ಟು ನಿಲುವು ಕಂಡವರು ಅವರ ವಯಸ್ಸಿನ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವುದಿದೆ. ಆದರೆ ದೇವಕಿಯಮ್ಮ, ತಮ್ಮ ತಾಯಿ ಯುದ್ಧಕಾಲದ ಬವಣೆಯನ್ನು ಕೇಂದ್ರವಾಗಿಟ್ಟುಕೊಂಡು ಮಕ್ಕಳ ಹುಟ್ಟು ಸಾವುಗಳ ವರ್ಷಗಳನ್ನು ಬೆರಳೆಣಿಕೆ ಹಾಕುತ್ತಿದ್ದುದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗೆ ಅವರು “ಮೊದಲನೆಯ ಯುದ್ಧಕಾಲಕ್ಕೆ ನಾನು ಐದು ವರ್ಷದ ಬಾಲೆ” ಎನ್ನುತ್ತಾರೆ. +ಅಂಗಳದಲ್ಲಿ ನಿಂತು ಕತ್ತಲ ಮುಸುಕನ್ನು ಹೊದ್ದುಕೊಳ್ಳುತ್ತಿದ್ದ ತಮ್ಮ ಮನೆಯನ್ನು ನೋಡುತ್ತಿದ್ದಂತೆ ದೇವಕಿಯಮ್ಮನ ಎದೆ ಭಾರವಾಗಿಬಿಟ್ಟಿತು. ದೇವಕಿಯಮ್ಮನದ್ದು ಬರೇ ಮನೆಯಲ್ಲ, ತರವಾಡು(೧) ಮನೆ. ಅವರ ಕುಟುಂಬದವರೆಲ್ಲಾ ಬಂದು ಸೇರುವ ಮನೆ. ವಿಷ್ಣುಮೂರ್ತಿ ನೆಲೆಸಿರುವ ಮನೆ. ಸುತ್ತಮುತ್ತಲ ನಾಲ್ಕು ಊರುಗಳಲ್ಲಿ ಇರುವ ಅವರ ಕುಟುಂಬದವರೆಲ್ಲರ ಮೂಲಸ್ಥಾನ ಈ ಮನೆ. +ವಿಷು ಹಬ್ಬದ ಹಿಂದಿನ ರಾತ್ರಿ ನಡೆಯುವ ವಿಷ್ಣುಮೂರ್ತಿ ದೈವದ ಕೈದ್‌ಗೆ(೨) ಕುಟುಂಬದ ಇಬ್ಬಿಬ್ಬರು ಬಂದರೂ ಈ ದೊಡ್ಡ ಮನೆಯ ಚಾವಡಿ, ಮುಂದಿನ ಅಂಗಳ ನೆರೆದ ಗಂಡಸರಿಗೆ ಮಾತ್ರ ಸಾಕಾಗುತ್ತದೆ. ಹೆಂಗಸರು ಮಕ್ಕಳು ಒಳಕೋಣೆಗಳಲ್ಲಿ, ಮಹಡಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಪುದಿಯೋಡಕ್ಕಲ್(೩)ನಂತಹ ವಿಶೇಷ ಸಂದರ್ಭದಲ್ಲಿ ಅಂಗಳದ ಹೊರಗೂ ಚಪ್ಪರ ಹಾಕಬೇಕಾಗುತ್ತದೆ. +ಆದರೆ ಈ ಕಳೆದ ಕೆಲ ವರ್ಷಗಳಿಂದ ಕೈದ್‌ಗೆ ಈ ಊರಿನ ಹತ್ತು ಮನೆಗಳಿಂದ ಜನ ಬಂದರೆ ಅದೇ ವಿಶೇಷ. ಬೊಂಬಾಯಿ, ದುಬಾ ಎಂದು ಹೋಗಿ ಸೇರಿಕೊಂಡಿರುವ ತರವಾಡಿನ ಸದಸ್ಯರಿಗೆ ಮಾತ್ರವಲ್ಲ, ಅಕ್ಕಪಕ್ಕದ ಊರಿನಲ್ಲಿರುವವರಿಗೂ ತರವಾಡು ದೂರವಾಗಿಬಿಟ್ಟಿದೆ. ಪುದಿಯೋಡಕ್ಕಲ್ ಆಗದೆ ಏಳು ವರ್ಷಗಳೇ ಕಳೆದಿದೆ. ಕೈದ್, ಪುದಿಯೋಡಕ್ಕಲ್ ಎಂದೇ ಏನು ದೈವದ ಮುಂದೆ ಪ್ರತಿ ಸಂಜೆ ಸಮಯಕ್ಕೆ ಸರಿಯಾಗಿ ದೀಪ ಹೊತ್ತಿಸುವುದಕ್ಕೂ ಅಡ್ಡಿಯಾಗುತ್ತಿದೆಯಲ್ಲ ಎಂದು ದೇವಕಿಯಮ್ಮ ನಿಟ್ಟುಸಿರುಬಿಟ್ಟರು. +ಆಕಾಶದಲ್ಲಿ ಚುಕ್ಕಿ ಮೂಡುವ ವೇಳೆಗಾಗಲೆ ಹಿಂದೆ ದೈವದ ಮುಂದೆ, ತುಳಸಿಕಟ್ಟೆಯ ಮುಂದೆ ದೀಪ ಕುಣಿಯುತ್ತಿರುತ್ತಿತ್ತು. ನಂತರ ಚಾವಡಿಯಿಂದ ತೊಡಗಿ ಒಂದೊಂದೆ ಕೊಠಡಿಯನ್ನು ಬೆಳಗುವ ಕೆಲಸ. ದೇವಕಿಯಂತಹ ತರವಾಡಿನ ಹೆಣ್ಣುಮಕ್ಕಳು ಸಂಭ್ರಮದಿಂದ ದೀಪಧಾರಿಣಿಯರಾಗಿ ಓಡಾಡುತ್ತಿದ್ದ ದಿನಗಳವು. ಈಗ ಮಗಳು ಭವಾನಿ ಅಮ್ಮನ ಅಣತಿಗೆ ಕಾದು ಕುಳಿತಿದ್ದು ನಂತರ ಸರಸರನೆ ಚಾವಡಿಯ ಮತ್ತೆರಡು ಕೊಠಡಿಗಳ ವಿದ್ಯುದ್ದೀಪದ ಗುಂಡಿ ಅದುಮಿ ಬಿಡುತ್ತಾಳೆ. ಆದರೆ ಎಲ್ಲಕ್ಕೂ ಮೊದಲು ಅವ ಬರಬೇಕಲ್ಲಾ ಮೂಪ, ದೈವದ ಮುಂದೆ ದೀಪ ಹಚ್ಚುವವ. +ಮುಸ್ಸಂಜೆಯ ಹೊತ್ತಿನಲ್ಲಿ ದೀಪ ಬೆಳಗುವ ಈ ಸಂಪ್ರದಾಯಕ್ಕೆ ಕೆಲವು ತಿಂಗಳಿಂದ ಅಡ್ಡಿ ಒದಗಿದೆ. ಇದಕ್ಕೆಲ್ಲಾ ಈ ತರವಾಡಿನಲ್ಲಿ ಹುಟ್ಟಿದ ಈ ವಿಷಬೀಜವೆ ಕಾರಣ ಎನ್ನುವುದು ಹೊಳೆದು ದೇವಕಿಯಮ್ಮನ ಶಿರಕ್ಕೆ ರಕ್ತ ಏರಿತು. ಅವರು ಕೋಪದಿಂದ, “ಭವಾನಿ, ಭವಾನಿ” ಎಂದು ಕರೆದರು. +ಅಡುಗೆ ಕೋಣೆಯಲ್ಲಿ ಅಮ್ಮನ ಕರೆಗೆ ಕಾದು ನಿಂತವಳಂತೆ ಇದ್ದ ಭವಾನಿ ಕಾಲುದೀಪವನ್ನು ಹೊತ್ತಿಸಿ ತಂದು “ದೀಪಂ ದೀಪಂ” ಎನ್ನುತ್ತಾ ಚಾವಡಿಗೆ ಬಂದಳು. ತಿಟ್ಟೆಯಲ್ಲಿ ಮೆಟ್ಟಲುಗಳ ಪಕ್ಕದಲ್ಲಿ ದೀಪವನ್ನು ಇರಿಸಿ ಕೈ ಮುಗಿದಳು. ಚಾವಡಿಯಲ್ಲಿ ಕವಿದ ಕತ್ತಲನ್ನು ದೂರ ಮಾಡಲು ಶಕ್ತವಾಗದಿದ್ದರೂ ತನ್ನ ಸುತ್ತಮುತ್ತ ಮಂದ ಪ್ರಕಾಶವನ್ನು ಹರಡಿದ ದೀಪವನ್ನು ಕಂಡೊಡನೆ ಏರಿದ ಕೋಪ ಇಳಿದು ದೇವಕಿಯಮ್ಮ ಕ್ಷಣಕಾಲ ಶಾಂತರಾದರು. ನಿಂತಲ್ಲಿಂದಲೇ ಅವರು ದೀಪಕ್ಕೆ ಕೈಮುಗಿದರು. +ಅನಿವಾರ್ಯ ಪ್ರಸಂಗದಲ್ಲಿ ಹೀಗೆ ಚಾವಡಿಯಲ್ಲಿ ಕಾಲುದೀಪವನ್ನು ಹೊತ್ತಿಸಬಹುದು. ಆದರೆ ದೈವದ ಕೊಠಡಿಯಲ್ಲಿ ದೀಪ ಹೊತ್ತಿಸದೆ ಮನೆಯಲ್ಲಿ ವಿದ್ಯುತ್ ದೀಪವನ್ನು ಬೆಳಗುವಂತಿಲ್ಲ ಎನ್ನುವ ಕಟ್ಟಪ್ಪಣೆಯನ್ನು ದೇವಕಿ ಅಮ್ಮ ಮಾಡಿದ್ದರು. ಕಾಲುದೀಪ ಹೊತ್ತಿಸಬಹುದಾದರೆ ವಿದ್ಯುತ್ ದೀಪ ಯಾಕೆ ಹೊತ್ತಿಸಬಾರದು ಎಂದು ಭವಾನಿ ಈ ಹಿಂದೆ ವಾದ ಹೂಡಿದ್ದರೂ ಅಮ್ಮನ ಆಜ್ಞೆಯನ್ನು ಉಲ್ಲಂಘಿಸುವಂತಿಲ್ಲ. ಅವರು ತನ್ನ ಅಮ್ಮ ಮಾತ್ರವಲ್ಲ, ತರವಾಡು ಮೂಪತ್ತಿ(೪)ಯೂ ಹೌದು. ಅಲ್ಲದೆ ಕೇರಳ ವಿದ್ಯುತ್ ಇಲಾಖೆಯಿಂದ ಟ್ಯೂಬ್ ಲೈಟು ಹೊತ್ತುವಂತಹ ವಿದ್ಯುತ್ ಪೂರೈಕೆ ಆರಂಭವಾಗಲು ರಾತ್ರಿ ಒಂಬತ್ತು ಗಂಟೆ ಕಳೆಯಬೇಕು. ಅಲ್ಲಿಯವರೆಗೆ ಕಾಲುದೀಪವೂ ಒಂದೇ ವಿದ್ಯುತ್ ದೀಪವೂ ಒಂದೇ. +ಅಮ್ಮ ಎಂದಿನಂತೆ ಅಪ್ಪುವನ್ನು ಬೈಯಲು ಆರಂಭಿಸುತ್ತಾಳೆ ಎಂದು ಗೋಡೆಗೊರಗಿ ಭವಾನಿ ಕಾದು ನಿಂತಳು. “ನಿನ್ನ ಮಗ ಇವತ್ತೂ ಬರಲಿಲ್ಲ” ಎಂದು ದೇವಕಿಯಮ್ಮ ಮಾತು ಆರಂಭಿಸಿದರು. “ದೈವ, ದೇವರ ಕುರಿತು ಈಗಿನ ಹುಡುಗರಿಗೆ ಭಯ ಭಕ್ತಿಯಿಲ್ಲ. ಏನಾದರೂ ಕೆಲಸ ಕಾರ್ಯ ಇದ್ದು ತಡವಾಗುವುದೆಂದರೆ ಅದು ಬೇರೆ ಮಾತು. ಆದರೆ ಪೋಲಿ ಅಲೆಯುತ್ತಾ ಕಾಲ ವಿಳಂಬ ಮಾಡುವುದೆಂದರೆ? ಈ ತರವಾಡು ಮನೆ ಕಟ್ಟಿದಂದಿನಿಂದ ಹೀಗೆಂದೂ ಆಗಿರಲಿಲ್ಲ.” +ತನ್ನ ಮಾತುಗಳನ್ನು ಮೌನವಾಗಿ ನಿಂತು ಕೇಳುತ್ತಿದ್ದ ಮಗಳನ್ನು ನೋಡಿ ದೇವಕಿಯಮ್ಮನ ಕರುಳು ಚುರ್ ಎಂದಿತು. ಮಗ ಕೆಟ್ಟು ಹೋಗುತ್ತಿರುವುದನ್ನು ನೋಡುವಾಗ ಹೆತ್ತ ಹೊಟ್ಟೆಗೆ ಎಷ್ಟು ಸಂಕಟ ಆಗುತ್ತಿರಬೇಡ. “ನಿನಗೆ ಹೇಳಿ ಏನು ಪ್ರಯೋಜನ. ಇದೆಲ್ಲಾ ನನ್ನ ಕರ್ಮ. ನನ್ನ ಕಣ್ಣೆದುರಲ್ಲೇ ಈ ತರವಾಡು ಕುಸಿಯುವಂತೆ ಆಯಿತಲ್ಲಾ” ಎಂದು ಹಣೆ ಬಡಿಯುತ್ತಾ ದೇವಕಿಯಮ್ಮ ಅಂಗಳದಲ್ಲೇ ಕುಸಿದು ಬಿದ್ದರು. ತುಂಬಿ ಬಂದ ಕಣ್ಣೀರನ್ನು ಒರೆಸುತ್ತಾ ಧಾವಿಸಿ ಬಂದ ಭವಾನಿ ತಾಯಿಯ ಎರಡೂ ರೆಟ್ಟೆಗಳನ್ನು ಹಿಡಿದೆತ್ತಿ ನಡೆಸುತ್ತ ಕರೆತಂದು ತಿಟ್ಟೆಯಲ್ಲಿ ಮತ್ತೆ ಕುಳ್ಳಿರಿಸಿದಳು. +– ೨ – +ಒಲೆಯ ಮೇಲೆ ಇರಿಸಿದ ಅನ್ನದ ನೀರು ಕುದಿಯುತ್ತಿರುವುದನ್ನು ದಿಟ್ಟಿಸಿ ನೋಡುತ್ತಾ ಗೋಡೆಗೊರಗಿ ನಿಂತಿದ್ದ ಭವಾನಿಯ ಮನಸ್ಸಿನಲ್ಲಿ ದುಃಖ ಉಮ್ಮಳಿಸಿ ಬರಹತ್ತಿತು. ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಅಸಹಾಯಕ ಪರಿಸ್ಥಿತಿಯಲ್ಲಿ ಆಕೆಯೀಗ ಇದ್ದಾಳೆ. ಒಂದೆಡೆ ಶಿಸ್ತು, ಸಂಪ್ರದಾಯ ಎಂದೆನ್ನುವ ತಾಯಿ. ಇನ್ನೊಂದೆಡೆ ಉಸಿರುಗಟ್ಟುವಂತಹ ಈ ವಾತಾವರಣದಿಂದ, ಈ ಬಂಧನದಿಂದ ಪಾರಾಗಿ ಹೋಗುತ್ತೇನೆ ಎಂದೆನ್ನುವ ಮಗ. ಈ ಕೆಲ ತಿಂಗಳುಗಳಿಂದ ಇವರ ನಡುವೆ ಸಾಗಿರುವ ಶೀತಲ ಯುದ್ಧದಿಂದ ಆಕೆ ಕಂಗೆಟ್ಟಿದ್ದಾಳೆ. ತಾನು ಬರೆ ತಾಯಿಯಾಗಿ, ಮಗಳು ಆಗಿ ಪ್ರತಿಕ್ರಿಯಿಸುವಂತಿಲ್ಲ ಎನ್ನುವುದು ಆಕೆಗೆ ತಿಳಿದಿದೆ. ದೇವಕಿಯಮ್ಮನ ಬಳಿಕ ಈ ತರವಾಡಿನ ಮೂಪತ್ತಿಯಾಗುವವಳು ಆಕೆ. ಅದನ್ನು ಗಮನದಲ್ಲಿರಿಸಿಕೊಂಡೆ ಪ್ರತಿಯೊಂದು ಹೆಜ್ಜೆಯನ್ನು ಮುಂದುವರಿಸಬೇಕು. +ಈ ದಿಸೆಯಲ್ಲಿ ಯೋಚಿಸುವಾಗಲೆಲ್ಲಾ ವಿಧಿ ತನ್ನ ಜೀವನದಲ್ಲಿ ಎಸಗಿದ ಕರಾಳ ಪಾತ್ರವನ್ನು ಆಕೆ ನೆನೆಯುತ್ತಾಳೆ. ದೇವಕಿಯಮ್ಮನ ಮಕ್ಕಳಲ್ಲಿಯೆ ಅತಿ ಬುದ್ಧಿವಂತೆ, ಸುಂದರಿ ಎಂದು ಹೆಸರಾದಾಕೆ ಭವಾನಿ. ದೇವಕಿಯಮ್ಮನ ಕಾಲದ ಕುರುಕ್ಕಳ್ ಶಾಲೆಗಲ್ಲ, ಇಂಗ್ಲಿಷು ಶಾಲೆಗೆ ಹೆಗಲಲ್ಲಿ ಪುಸ್ತಕ ತುಂಬಿದ ಚೀಲವನ್ನು ಹಾಕಿ ಹೋದವಳು ಆಕೆ. ತನ್ನ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಭವಾನಿ ಎಂದೂ ಬಿಟ್ಟುಕೊಟ್ಟಿರಲಿಲ್ಲ. ಪ್ರಥಮ ದರ್ಜೆಯಲ್ಲಿ ಅತ್ಯುನ್ನತ ಅಂಕಗಳಿಂದ ಮೆಟ್ರಿಕ್ ಪಾಸು ಮಾಡಿ ಆಕೆ ತರವಾಡಿಗೆ ಹೆಸರು ತಂದಿದ್ದಳು. +ಶಾಲೆಯಲ್ಲಿ ಇರುವಾಗಲೆ ಭವಾನಿಗೆ ದೊಡ್ಡ ದೊಡ್ಡ ತರವಾಡುಗಳಿಂದ ವಿವಾಹ ಆಲೋಚನೆ ಬಂದಿತ್ತು. ದೇವಕಿಯಮ್ಮ ಮಗಳಿಗಾಗಿ ಆರಿಸಿದ ಯುವಕ ಕಣ್ಣೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಹಿರಿಯ ತರವಾಡಿನವ; ಅಲ್ಲದೆ ಸ್ವಯಾರ್ಜಿತ ಆಸ್ತಿಯೂ ಸಾಕಷ್ಟು ಇತ್ತು. ಎಲ್ಲರೂ ಭವಾನಿಯ ಭಾಗ್ಯವನ್ನು ಹೊಗಳುವವರೆ, ಆದರೆ ವಿವಾಹದ ಸಿದ್ಧತೆ ಭರದಿಂದ ನಡೆದಿದ್ದಂತೆಯೆ ಊರಿಗೆ ಬಂದ ಗಂಡು ಸರ್ಪ ಕಚ್ಚಿ ಸತ್ತಾಗ ಅದೇ ಜನ ಭವಾನಿಯ ದುರಾದೃಷ್ಟವನ್ನು ತೆಗಳಿದರು. +ಸುದ್ದಿ ತಿಳಿದು ಕುಸಿದು ಬಿದ್ದ ಮಗಳನ್ನು ಅಪ್ಪಿ ಹಿಡಿದ ದೇವಕಿಯಮ್ಮ ಈ ಘಟನೆ ಹತ್ತು ದಿನಗಳ ಮೊದಲೇ ನಡೆದುದರಿಂದ ಭವಾನಿ ವಿಧವೆ ಆಗುವುದು ತಪ್ಪಿತು ಎಂದು ಸಮಾಧಾನಪಟ್ಟರೂ ಆಕೆಯ ಭವಿಷ್ಯದ ಯೋಚನೆ ಮೂಡಿದಾಗ ಒಂದು ಕ್ಷಣ ನಡುಗಿದರು. ಪಯ್ಯನೂರಿನಿಂದ ಬಂದ ಕಣಿಶನ್(೫) ಈ ನಿಶ್ಚಿತ ಮುಹೂರ್ತದಲ್ಲಿ ಭವಾನಿಯ ವಿವಾಹ ಆಗದಿದ್ದರೆ ಮುಂದೆ ಆಕೆಗೆ ವಿವಾಹ ಯೋಗವಿಲ್ಲ ಎಂದಾಗ ನಡೆದ ಅವಸರದ ವರಾನ್ವೇಷಣೆಯಲ್ಲಿ ದೊರೆತಾತ ಕುಂಞಕಣ್ಣ. ಹೆಸರಿಗೇನೊ ದೊಡ್ಡ ತರವಾಡಿನವ, ಆದರೆ ಉಂಡಾಡಿ. ತರವಾಡಿನ ಪ್ರತಿಷ್ಠೆ, ಕಣಿಶನ್ ಭವಿಷ್ಯ ಎಂದು ದೇವಕಿಯಮ್ಮ ವಿವಾಹ ನಡೆಸಿಯೆಬಿಟ್ಟರು. ವಾದ್ಯಘೋಷವಿಲ್ಲ, ಸಿಡಿಮದ್ದಿನ ಅಬ್ಬರವಿಲ್ಲ. ವಿವಾಹಕ್ಕೆಂದು ಬಂದ ಆತ್ಮೀಯ ಬಂಧುಗಳ ಮುಖದಲ್ಲೂ ಸೂತಕದ ಕಳೆ. ಆದರೂ ಪುದಿಯವಳಪ್ ತರವಾಡಿನ ದೇವಕಿಯಮ್ಮನ ಮಗಳು ಭವಾನಿಯ ಮದುವೆ ಪೂರ್ವನಿಶ್ಚಿತ ಮುಹೂರ್ತದಲ್ಲಿಯೆ ನಡೆಯಿತು. ದೂರದ ಊರಿನಿಂದ ಬಂದ ಕಾರ್ನವರು(೬), ಬಂಧುಗಳು ದೇವಕಿಯಮ್ಮನ ಎದೆಗಾರಿಕೆಗೆ ಮೆಚ್ಚುಗೆ ಸೂಚಿಸಿದರು. ಮನೆಯಳಿಯನಾಗಿ ಬಂದ ಕುಂಞಕಣ್ಣ ಅನಿರೀಕ್ಷಿತವಾಗಿ ತನ್ನ ಪಾಲಿಗೆ ಒದಗಿ ಬಂದ ಭಾಗ್ಯವನ್ನು ನೆನೆದು ಬೀಗಿ ಕುಳಿತ. ಆದರೆ ಭವಾನಿ, ಬಹಿಷ್ಠೆಯರಾದ ಸ್ತ್ರೀಯರಿಗಾಗಿ ಕಟ್ಟಿರುವ ಮನೆಯ ಹೊರಗಿನ ಕತ್ತಲ ಕೊಠಡಿಯಲ್ಲಿ ಯಾರೂ ಕಾಣದಂತೆ ಕುಳಿತು ಮನಸ್ಸು ಹಗುರ ಆಗುವಷ್ಟು ಹೊತ್ತು ಅತ್ತು ಬಂದಳು. ಮಗಳ ದುಃಖ ಹೃದಯ ಹಿಂಡಿದರೂ ದೇವಕಿಯಮ್ಮ ನಿಸ್ಸಹಾಯಕರು. ಮಗಳಿಗೆ ವಿದ್ಯಾಯೋಗವಷ್ಟೇ ಇದೆ, ಸಂಸಾರಯೋಗವಿಲ್ಲ ಎನ್ನುವುದನ್ನು ಬದಲಾಯಿಸಿಯೇ ತೀರುತ್ತೇನೆಂದು ಹಠದಲ್ಲಿದ್ದ ಆಕೆ ನಂಬಿಕೊಂಡು ಬಂದಿದ್ದ ದೈವದ ಮುಂದೆ ಸೆರಗೊಡ್ಡಿ ಮಗಳ ಜೀವನ ಹಸನಾಗಲಿ ಎಂದು ಪ್ರಾರ್ಥಿಸಿದರು. +ಒಂದು ತಿಂಗಳು ಎಲ್ಲವೂ ಸುಸೂತ್ರವಾಗಿ ಕಳೆಯಿತು. ಆದರೆ ತಿಂಗಳ ಅಳಿಯ ಸತ್ಕಾರದ ಬಳಿಕ ದೇವಕಿಯಮ್ಮ ಪರೋಕ್ಷವಾಗಿ ಹಿತ್ತಲ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರಬೇಕೆಂದು ಅಳಿಯನಿಗೆ ಹೇಳಿಬಿಟ್ಟದ್ದು ದೊಡ್ಡ ಆಪತ್ತಿಗೆ ಕಾರಣವಾಯಿತು. ಅದಾಗಲೆ ಆತನ ತರವಾಡಿನವರು ಕೈ ಖರ್ಚಿಗೆ ಹಣ ಕೊಡುವುದನ್ನೂ ನಿಲ್ಲಿಸಿಬಿಟ್ಟಿದ್ದರು. ದೇವಕಿಯಮ್ಮನ ಎದುರು ಉತ್ತರಿಸದಿದ್ದರೂ ಹೆಂಡತಿಯ ಮುಂದೆ ನಿನ್ನ ಅಮ್ಮನಿಗೆ ತೋಟದ ಕೆಲಸಕ್ಕೆ ಪುಕ್ಕಟೆ ಗಂಡಾಳು ದೊರೆಯಿತು ಎಂದು ಹಂಗಿಸುವುದನ್ನು ಕುಂಞಕಣ್ಣ ನಿಲ್ಲಿಸಲಿಲ್ಲ. ಕೆಲಸ ಮಾಡಿ ತಿನ್ನುವಂತಹ ಜಾಯಮಾನಕ್ಕೆ ಸೇರಿದವನಲ್ಲ ಆತ. ತಿಂಗಳು ಕಳೆಯುವುದರೊಳಗೆ ಆತ ತನ್ನ ತರವಾಡಿಗೆ ಹಿಂತಿರುಗಿದ. ಮುಂದೆ ತಿಂಗಳಿಗೆ ಒಂದೊ ಎರಡೊ ಬಾರಿ ರಾತ್ರಿ ಕಳೆಯಲು ಬರುವುದಕ್ಕೆ ಆತನ ಸಂಬಂಧ ಉಳಿಯಿತು. ಇಂತಹ ಭೇಟಿಯಿಂದ ದೊರೆತ ಉಡುಗೊರೆಯಿಂದಾಗಿ ಭವಾನಿ ನಾಲ್ಕು ಬಾರಿ ಪ್ರಸವಿಸಿದಳು. ಆದರೆ ಉಳಿದದ್ದು ಕೊನೆಯ ಗಂಡು ಮಗು, ಅಪ್ಪು ಮಾತ್ರ. +ವರ್ಷಗಳು ಕಳೆದಂತೆ ಇಂತಹ ಭೇಟಿಗಳೂ ವಿರಳವಾಗುತ್ತಾ ಸಾಗಿದವು. ಇಂತಹ ಒಂದು ಅಪೂರ್ವ ಸಂದರ್ಭದಲ್ಲಿ ಭವಾನಿ, “ಎಲ್ಲಿಯಾದರೂ ಒಂದು ಸಣ್ಣ ಮನೆ ಮಾಡಿ ನನ್ನನ್ನು, ಮಗುವನ್ನು ಒಯ್ಯಬಾರದೆ ಏನಾದರೂ ವ್ಯಾಪಾರ ಆರಂಭಿಸಿ ಗಳಿಸಬಾರದೆ” ಎಂದು ಸಲಹೆ ನೀಡಿದಾಗ ಹೋದ ಕುಂಞಕಣ್ಣ ತಿಂಗಳ ಬಳಿಕ ನಗುಮುಖದೊಂದಿಗೆ ಬಂದ. ಮಂಗಳೂರು ಮಲ್ಲಿಗೆ ಚೆಂಡು ತಂದಿದ್ದ, ಸಿಹಿ ತಿಂಡಿಯೂ ಇತ್ತು. ಸ್ನೇಹಿತನೊಂದಿಗೆ ಮಂಜೇಶ್ವರದಲ್ಲಿ ವ್ಯಾಪಾರ ಆರಂಭಿಸುವುದಾಗಿ ತಿಳಿಸಿದ. ಅಲ್ಲಿ ಇಲ್ಲಿ ಸಾಲ ತೆಗೆದು ಹತ್ತು ಸಾವಿರ ಒಟ್ಟು ಮಾಡಿದ್ದೇನೆ, ಇನ್ನು ಹತ್ತು ಸಾವಿರ ಬೇಕು ಎಂದ. ಹೆಂಡತಿಯನ್ನು ಪುಸಲಾಯಿಸಿ ಇದ್ದ ಚಿನ್ನವನ್ನೆಲ್ಲಾ ಒಯ್ದವ ಆ ಬಳಿಕ ಹಿಂತಿರುಗಿ ಬರಲಿಲ್ಲ. +ತನ್ನನ್ನು ಕೇಳದೆ ಮಗಳು ಕೈಕೊಂಡ ಈ ಒಂದು ಹುಚ್ಚು ನಿರ್ಧಾರಕ್ಕಾಗಿ ದೇವಕಿಯಮ್ಮ ಅವಳನ್ನು ಎಂದೂ ಕ್ಷಮಿಸಿರಲಿಲ್ಲ. ಕುಂಞಕಣ್ಣನ ಈ ವರ್ತನೆಯಿಂದಾಗಿ ಅಮ್ಮ ಅಪ್ಪುವನ್ನು ನಿರ್ಲಕ್ಷಿಸುತ್ತಿದ್ದಾರೆನ್ನುವ ಸಂದೇಹ ಭವಾನಿಗಿದೆ. ಚಿಕ್ಕಂದಿನಲ್ಲಿ ಆತ ತುಂಟಾಟದಲ್ಲಿ ತೊಡಗಿದ್ದಾಗ ಅಪ್ಪನಿಗೆ ತಕ್ಕ ಮಗನೆಂದು ಆಕೆ ಬಿರುನುಡಿಯಾಡಿದ್ದು ಭವಾನಿಯ ಕಿವಿಗೆ ಬಿದ್ದಿದೆ. ತೀರಿಹೋದ ಮೂವರು ಹೆಣ್ಣುಮಕ್ಕಳಲ್ಲಿ ಒಂದಾದರೂ ಉಳಿಯುತ್ತಿದ್ದರೆ ವಂಶ ಬೆಳೆಯುತ್ತಿತ್ತು ಎಂದು ಅಮ್ಮ ಹೇಳುವುದು ಆಕೆಗೆ ಕೇಳಿಸಿದೆ. ಆದರೆ ಅನಿವಾರ್ಯತೆಯಿಂದಾಗಿ ತರವಾಡಿನಲ್ಲಿ ಉಳಿಯಬೇಕಾಗಿ ಬಂದ ತಾನು ಯಾರಿಗೂ ಉತ್ತರ ನೀಡುವ ಸ್ಥಿತಿಯಲ್ಲಿಲ್ಲ ಎನ್ನುವುದು ಭವಾನಿಗೆ ಅರಿವಿದೆ. +ಈ ಕಳೆದ ಕೆಲ ದಿನಗಳಿಂದ ಅಪ್ಪುವಿನ ಮಾನಸಿಕ ತಳಮಳ ಹೆಚ್ಚಿದೆಯೆನ್ನುವುದು ಭವಾನಿಗೆ ತಿಳಿದಿದೆ. ಆತನ ಗೆಳೆಯರು ಆನಂದ ಮತ್ತು ಅಬೂಬಕರ್ ದುಬಾಗೆ ಹೊರಟಿದ್ದಾರೆ ಎಂದು ತಿಳಿದಂದಿನಿಂದ ಆತ ಇನ್ನಷ್ಟು ಉದ್ವಿಗ್ನಕ್ಕೊಳಗಾಗಿದ್ದಾನೆ. ಹೇಗಾದರೂ ಮಾಡಿ ಇಪ್ಪತ್ತೈದು ಸಾವಿರ ರೂಪಾಯಿ ಸಂಗ್ರಹಿಸಿಕೊಡಿ ಎಂದು ಆತ ಒಂದೆರಡು ಬಾರಿ ಗೋಗರೆದ. ದುಬಾಗೆ ಹೋದ ಆರು ತಿಂಗಳಲ್ಲೇ ಸಾಲ ತೀರಿಸಬಹುದು ಎಂದು ಹೇಳುತ್ತಿದ್ದಾನೆ. ಸ್ವಂತದ್ದಾಗಿ ಅಮ್ಮನಲ್ಲಿ ಅಷ್ಟು ಹಣ ಇರಲಾರದು. ಆದರೆ ಹಳೆಯ ಚಿನ್ನ ಇದೆ. ಮನೆಯ ಚಿನ್ನದಲ್ಲಿ ತಂದೆ ಈಗಾಗಲೆ ಅರ್ಧದಷ್ಟು ಗುಳುಂ ಮಾಡಿದುದಾಗಿ ದೂರುವ ಅಮ್ಮ ಮಗನಿಗೆ ಅದರಲ್ಲಿ ಉಳಿದುದನ್ನು ನೀಡುತ್ತಾರೆಯೆ? ಅಲ್ಲದೆ ದೈವಕ್ಕೆ ದೀಪ ಹೊತ್ತಿಸಲು ತರವಾಡಿನಲ್ಲಿರುವ ಒಂದೇ ಒಂದು ಗಂಡು ಸಂತಾನವನ್ನು ದೂರ ಕಳುಹಿಸುವ ಕಾರ್ಯಕ್ಕೆ ತರವಾಡು ಮೂಪತ್ತಿ ಮನಸ್ಸು ಮಾಡುವುದೇ ಅಸಂಭವ. ಆದರೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ತನ್ನ ಮಗನಿಗೆ ಇಲ್ಲಿ ಏನು ಭವಿಷ್ಯವಿದೆ ಎಂದು ಯೋಚಿಸಿದಾಗಲೆಲ್ಲಾ ಭವಾನಿಗೆ ಮಗನ ಯೋಚನಾಗತಿಯೆ ಸರಿ ಎಂದೆನ್ನಿಸುತ್ತದೆ. +ನೀರು ಕುದಿಯುವ ಸದ್ದು ಕೇಳಿಸಿದಾಗ ತೊಳೆದಿಟ್ಟ ಅಕ್ಕಿಯನ್ನು ಪಾತ್ರೆಗೆ ಹಾಕಿ ಮತ್ತೆ ಭವಾನಿ ಗೋಡೆಗೊರಗಿ ನಿಂತಳು. +– ೩ – +ರಾಮುಣ್ಣಿ ನಾಯರ್ ಬಾರ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ ಅಪ್ಪು ಕೈ‌ಎತ್ತಿ ಆವೇಶದಿಂದ ಮಾತನಾಡುತ್ತಿದ್ದಾನೆ. ಆಗೊಮ್ಮೆ ಈಗೊಮ್ಮೆ ತನ್ನ ಸ್ನೇಹಿತರೊಂದಿಗೆ ಕದ್ದುಮುಚ್ಚಿ ಕುಡಿಯುತ್ತಿದ್ದ ಅಪ್ಪು ಇಂದು ಬಾರ್‌ನಲ್ಲಿ ರಾಜಾರೋಷವಾಗಿ ಕುಳಿತು ಕುಡಿಯಲು ಕಾರಣ ಎರಡು. ಮೊದಲನೆಯದ್ದು ತಮ್ಮ ನಿರುದ್ಯೋಗಿ ಬಳಗದಿಂದ ಪಾರಾಗಿ ದುಬಾಗೆ ಹೋಗುತ್ತಿರುವ ಆನಂದ, ಅಬೂಬಕ್ಕರ್‌ಗೆ ಒಳ್ಳೆಯ ವಿದಾಯಕೂಟ ನೀಡಬೇಕೆನ್ನುವುದು, ಇನ್ನೊಂದು, ಹೀಗೆ ತಾನು ಕುಡಿದು ಕೆಟ್ಟುಹೋಗುತ್ತಿದ್ದೇನೆ ಎನ್ನುವ ಸುದ್ದಿ ಮುಟ್ಟಿದಾಗಲಾದರೂ ತನ್ನ ಅಜ್ಜಿಯೂ ಆಗಿರುವ ತರವಾಡು ಮೂಪತ್ತಿ ಒಂದಿಪ್ಪತ್ತೈದು ಸಾವಿರ ಸಾಲ ನೀಡಬಹುದು ಎನ್ನುವುದು. ಅದಿಲ್ಲವಾದರೆ ತನ್ನ ಪ್ರತಿಭಟನೆ ಹೀಗಾದರೂ ವ್ಯಕ್ತವಾಗಲಿ. ಮುಸ್ಸಂಜೆಯ ಹೊತ್ತಿನಿಂದಲೆ ಮನೆಯ ಇಬ್ಬರು ಹೆಂಗಸರು ತನಗಾಗಿ ಕಾಯುತ್ತಿದ್ದಾರೆ ಎನ್ನುವುದು ನೆನಪಿಗೆ ಬಂದಾಗ ಅಪ್ಪು ಹಾಗಾದರೂ ಈ ತರವಾಡಿನ ಎಲ್ಲರಿಗೆ ತನ್ನ ಮಹತ್ವ ತಿಳಿಯಲಿ ಎಂದು ಮನಸ್ಸಿನೊಳಗೆ ಬೀಗುತ್ತಾ ಕುಳಿತ. +ಇಂದು ತನ್ನನ್ನೇನಾದರೂ ಬೈದರೆ ಮುದುಕಿಗೆ ಸರಿಯಾದ ಉತ್ತರ ನೀಡುತ್ತೇನೆ. ಮನೆಯ ಬಿಟ್ಟಿ ಕೆಲಸ ಮಾಡಲು ತಾನು ಬೇಕು. ವಿಷ್ಣುಮೂರ್ತಿಗೆ ದೀಪ ತೋರಿಸಲು ತಾನು ಬೇಕು. ಜೀವಮಾನದುದ್ದಕ್ಕೂ ಹೀಗೆ ಸೇವೆ ಮಾಡುತ್ತಾ ಮಾಡುತ್ತಾ ಕೊನೆಗೊಂದು ದಿನ ತಾನು ಕಣ್ಣು ಮುಚ್ಚಿದರೆ ಎಂದು ಯೋಚಿಸುತ್ತಿರುವಂತೆಯೆ ರಾಘವ ಮಾವನ ನೆನಪು ಬಂದು ಗಂಟಲು ಕಟ್ಟಿತು. ತಾಯಿಯ ಅಣ್ಣ ರಾಘವ ಮಾವ ಇರುವವರೆಗೆ ಯಾವ ಕೆಲಸದ ಜವಾಬ್ದಾರಿ ಅಪ್ಪುಗೆ ಇರಲಿಲ್ಲ. ಮಾವ ಅವರಿಲ್ಲವಾದರೆ ಅವರ ಮೂವರು ಮಕ್ಕಳು ಹಿತ್ತಲ ಕೆಲಸ, ದೈವಕ್ಕೆ ದೀಪ ತೋರಿಸುವ ಕೆಲಸ ಎಲ್ಲಾ ಮಾಡುತ್ತಿದ್ದರು. +ಆದರೆ ತರವಾಡಿನಲ್ಲಿ ಇಷ್ಟು ವರ್ಷಗಳ ಕಾಲ ಮಾಡಿದ ಸೇವೆಗೆ ದೊರೆತ ಫಲ ಏನು? ಮಾವ ತೀರಿದ ಬಳಿಕ ಅತ್ತೆ ತರವಾಡಿನ ಹಿತ್ತಲ ಗುಡ್ಡೆಯ ಮೇಲೆ ಒಂದು ಪುಟ್ಟ ಮನೆ ಕಟ್ಟಿ ನಿಲ್ಲುತ್ತೇನೆ ಎಂದರು. ಆದರೆ ತರವಾಡು ಮೂಪತ್ತಿ ಅದಕ್ಕೆ ಸಮ್ಮತಿಸಲಿಲ್ಲ. ಈ ತರವಾಡು ಮನೆಯಲ್ಲಿ ಬೇಕಾದಷ್ಟು ಕಾಲ ಇರಬಹುದು. ಆದರೆ ತರವಾಡು ಆಸ್ತಿಯನ್ನು ಹೀಗೆ ಹಂಚುವಂತಿಲ್ಲ. +ಅಳಿಯ ಸಂತಾನ ಕ್ರಮವನ್ನು ಅನುಸರಿಸುತ್ತಿರುವ ತಮ್ಮಲ್ಲಿ ಗಂಡುಮಕ್ಕಳ ಸಂತಾನಕ್ಕೆ ತರವಾಡು ಆಸ್ತಿಯಲ್ಲಿ ಹಕ್ಕಿಲ್ಲ ನಿಜ. ಆದರೆ ಇಷ್ಟು ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ವ್ಯರ್ಥವೆ? ಬೇರೆ ಎಷ್ಟೋ ತರವಾಡುಗಳಲ್ಲಿ ಇದು ಬದಲಾಗಿದೆ. ಆದರೆ ದೇವಕಿಯಮ್ಮನ ತರವಾಡಿನಲ್ಲಿ ಸಾಧ್ಯವಿಲ್ಲವಂತೆ. ಅತ್ತೆ ಮೂವರು ಮಕ್ಕಳೊಂದಿಗೆ ಹೊರಟು ನಿಂತ ಆ ಹೃದಯ ವಿದ್ರಾವಕ ಗಳಿಗೆಯಲ್ಲಿ ಎಲ್ಲರ ಕಣ್ಣಲ್ಲಿ ನೀರು ಹನಿಯುತ್ತಿತ್ತು. ಆದರೆ ದೇವಕಿಯಮ್ಮ ಹಳೆಯ ಸಂದೂಕದಿಂದ ಸಾವಿರ ರೂಪಾಯಿ ತೆಗೆದು ನೀಡಿ, “ಹೋಗಿ ಬರುತ್ತಾ ಇರಿ” ಎಂದು ಗಂಭೀರ ಮುಖಭಾವದಿಂದ ವಿದಾಯ ಹೇಳಿದರು. +ಮುಂದೊಂದು ದಿನ ಇದೇ ಕತೆಯ ಪುನರಾವರ್ತನೆ ಆಗಲಿದೆ. ಅಪ್ಪು ಸತ್ತಾಗ ಅವನ ಹೆಂಡತಿ ಮಕ್ಕಳು ಗಂಟುಮೂಟೆ ಕಟ್ಟಿ ಹೊರಟು ನಿಂತಾಗ ಈ ದೇವಕಿಯಮ್ಮ ಅಲ್ಲಾ, ಭವಾನಿಯಮ್ಮ ಸಾವಿರ ರೂಪಾಯಿ ನೀಡಿ ಋಣ ಸಂದಾಯ ಮಾಡಬಹುದು. ಇದನ್ನು ಖಂಡಿತಾ ಆಗಗೊಡೆ. ಅದಕ್ಕೂ ಮೊದಲೆ ಇಲ್ಲಿಂದ ಪಾರಾಗಿ ಹೋಗಬೇಕು. ಮುಂದೊಂದು ದಿನ ದುಬಾಯಿಂದ ದೊಡ್ಡ ದೊಡ್ಡ ಸೂಟುಕೇಸುಗಳೊಂದಿಗೆ ಹಿಂತಿರುಗಿ ಬಂದಾಗ ಈ ದೇವಕಿಯಮ್ಮನ ತರವಾಡಿಗೂ ಒಂದು ಭೇಟಿ ನೀಡಬೇಕು. ನೂರರ ಗರಿಗರಿ ನೋಟುಗಳನ್ನು ಕೈಯಲ್ಲಿರಿಸಿ ದೈವದ ಎಣ್ಣೆ ಖರ್ಚಿಗೆಂದು ಹೇಳುವಾಗ ಅವರ ಕಣ್ಣುಗಳು ಅರಳಬಹುದು. ಆದರೆ ದುಬಾಗೆ ಹೋಗಲು ಇಪ್ಪತ್ತೈದು ಸಾವಿರ ಬೇಕಲ್ಲಾ. +ದೈವದ ಕೋಣೆಯ ಪಕ್ಕದ ಕತ್ತಲ ಕೋಣೆಯಲ್ಲಿರಿಸಿರುವ ಆ ದೊಡ್ಡ ಸಂದೂಕದಲ್ಲಿ ಹಣ ಖಂಡಿತಾ ಇರಬೇಕು. ಇಲ್ಲವಾದರೆ ಚಿನ್ನ ಇದೆಯಲ್ಲಾ. ಮುದುಕಿ ಎಷ್ಟೊಂದು ಜತನದಿಂದ ಅದನ್ನು ಕಾಯುತ್ತಿದ್ದಾಳೆ. ತರವಾಡಿನ ಎಲ್ಲಾ ಮಕ್ಕಳಿಗೆ ಆ ಸಂದೂಕದ ಬಗ್ಗೆ ಕೌತುಕ. ಕೇಳಿದರೆ ಆಕೆ ನಕ್ಕು, “ಮಕ್ಕಳೇ ಅದರಲ್ಲಿ ಈ ತರವಾಡು ಮೂಪತ್ತಿಯ ನಿಧಿ ಇದೆ. ನಾನು ಸ್ವರ್ಗದ ಹಾದಿ ಹಿಡಿದಾಗ ನೀವೆಲ್ಲಾ ಅದನ್ನು ನೋಡುವಿರಂತೆ” ಎಂದೆನ್ನುತ್ತಿದ್ದದ್ದು ನೆನಪಿಗೆ ಬಂತು. ಆ ಸಂದೂಕದ ಮುಚ್ಚಳ ತೆರೆಯಬೇಕಾದರೆ ಮುದುಕಿ ಸಾಯಬೇಕು. ನನ್ನ ಈ ಕಂಗೆಟ್ಟ ಪರಿಸ್ಥಿತಿಯಲ್ಲೂ ಒಂದಿಷ್ಟು ಚಿನ್ನ ಬ್ಯಾಂಕಿನಲ್ಲಿರಿಸಿ ಸಾಲ ಪಡೆಯಲು ಆಕೆ ಸಮ್ಮತಿಸಲಾರಳು. +ತಂದೆ ಎಲ್ಲರ ಮುಖಕ್ಕೆ ಮಸಿ ಬಳೆಯುವಂತಹ ಕೆಲಸ ಮಾಡಿದ್ದಾರೆ ನಿಜ. ಆದರೆ ನಾನು ಈ ತರವಾಡಿನ ಸಂತಾನ. ಪುದಿಯವಳಪ್ ತರವಾಡಿನ ಮೂಪತ್ತಿ ದೇವಕಿಯಮ್ಮನ ಮಗಳು ಭವಾನಿಯಮ್ಮನ ಮಗ. ಸಂದೂಕದಲ್ಲಿರುವ ಚಿನ್ನದಲ್ಲಿ ನನಗೆ ಹಕ್ಕು ಇಲ್ಲವೆ? +ತಾನು ಕಲಿತ ಮೆಕ್ಯಾನಿಕ್ ಕೆಲಸಕ್ಕೆ ದುಬಾಯಲ್ಲಿ ಬೇಡಿಕೆಯಿದೆ. ಆದರೆ ಅಲ್ಲಿಗೆ ಹೋಗುವ ವ್ಯವಸ್ಥೆ ಮಾಡಲು ಏಜೆಂಟಿಗೆ ಇಪ್ಪತ್ತೈದು ಸಾವಿರ ರೂಪಾಯಿ ಕೊಡಬೇಕು. ತನ್ನ ಅಸಹಾಯಕತೆಯ ಅರಿವು ಮೂಡಿದಾಗ ಅಪ್ಪುವಿನ ಗಂಟಲು ಕಟ್ಟಿ ಬಂದಿತು. ಟೇಬಲ್ಲಿನಲ್ಲಿರುವ ಗ್ಲಾಸುಗಳು ಖಾಲಿಯಾಗಿರುವುದನ್ನು ನೋಡಿದ ಆತ ಅಳು ನುಂಗುತ್ತಾ ವೇಟರನನ್ನು ಕರೆದು ಇನ್ನೊಂದು ಅರ್ಧ ಬಾಟಲು ತರಲು ಹೇಳಿದ. ಹೇಳಿದ ಬಳಿಕ ಬಿಲ್ ಮಿತಿ ಮೀರಿರಬೇಕು ಎಂದು ಒಂದು ಕ್ಷಣ ಆತ ಯೋಚಿಸಿದ. ತರವಾಡಿನ ಹಿತ್ತಲಿನಿಂದ ತೆಂಗಿನಕಾಯಿ ಖರೀದಿಸುವ ಖಾದರ್ ಬ್ಯಾರಿಯೊಂದಿಗಿನ ಗುಪ್ತ ಒಪ್ಪಂದದಿಂದಾಗಿ, ಅಪ್ಪುವಿಗೆ ಎಂದೂ ಪುಡಿಗಾಸಿಗೆ ಕೈ ಚಾಚುವ ಪ್ರಸಂಗ ಬಂದಿರಲಿಲ್ಲ. ಮುಂದಿನ ಬಾರಿ ಕಾಯಿ ಖರೀದಿಸುವಾಗ ಸಂದಾಯ ಮಾಡುತ್ತೇನೆ ಎಂದು ಆತ ಐನೂರು ರೂಪಾಯಿ ತಂದಿದ್ದ. ಆ ಹಣ ಜೇಬಿನಲ್ಲಿ ಇರುವುದರಿಂದಲೇ ಆತ ಇಂದಿನ ಪಾರ್ಟಿಗೆ ಅತಿಥೇಯನಾಗಿದ್ದ. +ಹೊಸತಾಗಿ ಬಂದ ಬಾಟಲಿನಿಂದ ಪ್ರತೀ ಗ್ಲಾಸಿಗೆ ವಿಸ್ಕಿ ಹಾಕಿ ಅದರ ಮೇಲೆ ನೊರೆ ನೊರೆ ಸೋಡಾ ಸುರಿಯುತ್ತಿರುವುದನ್ನು ನೋಡುತ್ತಿರುವಂತೆಯೇ ಅಪ್ಪು, ಇಂದು ಎಲ್ಲಾ ವ್ಯಥೆಯನ್ನು ತನ್ನ ಸ್ನೇಹಿತರಿಗಾಗಿ ಮರೆತು ಸಂತೋಷದಿಂದಿರಬೇಕು ಎಂದು ಯೋಚಿಸುತ್ತಾ ಒಮ್ಮೆಲೆ ಉಲ್ಲಾಸಭರಿತನಾದ. ಮತ್ತೆ ಮತ್ತೆ ಆನಂದ ಮತ್ತು ಅಬೂಬಕರನ ಕೈ ಕುಲುಕಿದ. ಕಂಗ್ರ್ಯಾಚುಲೇಶನ್ಸ್ ಮೈ ಡೀಯರ್ ಫ್ರೆಂಡ್ಸ್ ಎಂದು ಇನ್ನೊಮ್ಮೆ ಹೇಳುತ್ತಿರುವಂತೆಯೆ ಭಾವಾತಿರೇಕದಿಂದ ಮಾತು ತಡವರಿಸಿತು, ಕಣ್ಣು ಹನಿಯಿತು. +– ೪ – +“ವಿಷ್ಣುಮೂರ್ತಿಯ ಪೂಜಾ ಕೊಠಡಿಯಲ್ಲಿ ಹೆಂಗಸರು ಯಾಕೆ ದೀಪ ಹೊತ್ತಿಸಬಾರದು” ಎಂದು ಬಾಲೆ ದೇವಕಿ ತನ್ನ ಅಮ್ಮನಲ್ಲಿ ಕೇಳಿದ್ದಳು. ದೀಪ ಹೊತ್ತಿಸುವುದು ಗಂಡಸರ ಹಕ್ಕು ಎಂದು ಅಮ್ಮ ಹೇಳಿದಾಗ ಆಕೆ ಸಮ್ಮತಿಸಿರಲಿಲ್ಲ. ತರವಾಡಿನಲ್ಲಿ ಹೆಂಗಸರಿಗೆ ದೊಡ್ಡ ಸ್ಥಾನವಂತೆ. ತರವಾಡು ಮೂಪತ್ತಿಯ ಸ್ಥಾನ ಹೆಂಗಸರಿಗೆ ಮೀಸಲು. ಆದರೆ ದೈವದ ಕೊಠಡಿಯಲ್ಲಿ ದೀಪ ಹೊತ್ತಿಸುವುದು ಮಾತ್ರ ಗಂಡಸರ ಹಕ್ಕು ಯಾಕೆ ಎಂದು ಆಕೆ ಮರು ಪ್ರಶ್ನೆ ಹಾಕಿದ್ದಳು. +ಪುಟ್ಟ ಹುಡುಗಿಗೆ ಹೇಗೆ ವಿವರಿಸುವುದು ಎಂದು ಗಲಿಬಿಲಿಗೊಂಡ ತಾಯಿ ಬರಿದೇ ನಕ್ಕು ಮುದ್ದು ಮಾಡಿದ್ದಳು. ತನ್ನ ಹೆಗಲಿನತ್ತ ಬೆಟ್ಟು ಮಾಡಿ “ಇಷ್ಟು ಎತ್ತರವಾಗು ಮಗಳೆ ಆಗ ಹೇಳುತ್ತೇನೆ. ನೀನೀಗ ಸಣ್ಣ ಕೂಸು. ದೈವದ ಮುಂದೆ ನೀನೂ ದೀಪ ಹಚ್ಚಬಹುದು” ಎಂದಾಗ ದೇವಕಿಗೆ ಖುಷಿಯಾಗಿತ್ತು. +ವಿಷ್ಣುಮೂರ್ತಿಯ ಮುಂದೆ ದೀಪ ಹೊತ್ತಿಸುವ ಸಂದರ್ಭ ಕೊನೆಗೂ ದೇವಕಿಗೆ ಒದಗಿ ಬಂತು. ಮನೆಯ ಗಂಡಸರೆಲ್ಲಾ ಆ ದಿನ ಸಂಬಂಧಿಕರ ಮನೆಗೆ ಹೋಗಿ ಬರಲು ತಡವಾದಾಗ ತಾಯಿ ಮಗಳಿಗೆ ಮೀಯಿಸಿ ಮಡಿ ಬೈರಾಸನ್ನು ಮುಂಡಿನಂತೆ ಉಡಿಸಿದರು. ಇನ್ನೊಂದು ಬೈರಾಸನ್ನು ಸೆರಗಿನಂತೆ ಹೊದಿಸಿದರು. +ಕೈ ಮುಗಿದು ಭಕ್ತಿಯಿಂದ ಕೊಠಡಿಗೆ ಹೋಗು ಎಂದರು. ಒಂದು ನಿಮಿಷ ಕತ್ತಲ ಕೋಣೆಯಲ್ಲಿ ಏನೂ ಕಾಣಿಸಲಿಲ್ಲ. ಆದರೆ ಕಣ್ಣಿಗೆ ಕತ್ತಲ ಪರಿಚಯ ಆದ ಬಳಿಕ ಎಲ್ಲವೂ ಮಸುಕು ಮಸುಕಾಗಿ ಕಾಣಿಸಿತು. ಆಳೆತ್ತರದ ಮರದ ಕೆತ್ತನೆಯ ಕಾಲುಂಪಲ(೭)ದಲ್ಲಿ ಇರಿಸಿದ ವಿಷ್ಣುಮೂರ್ತಿಯ ಆಯುಧಗಳು. ಮುಂಭಾಗದಲ್ಲೇ ನೀರು ತುಂಬಿಸಿದ ಗಿಂಡಿ. ಉತ್ತರಾಭಿಮುಖವಾಗಿ ಇರಿಸಿದ ಮಣೆಯೊಂದರಲ್ಲಿ ಇನ್ನೊಂದು ಕಪ್ಪಗಿನ ಆಯುಧ. ಗಗ್ಗರದಂತೆ ದನಿ ಮಾಡುವ ಈ ಆಯುಧವನ್ನು ಕೈದ್‌ನ ಸಂದರ್ಭದಲ್ಲಿ ವೆಳಿಚ್ಚಪ್ಪಾಡ್(೮) ಹಿಡಿದು ಕುಣಿಯುತ್ತಾರೆ. ದರ್ಶನ ಬಂದು ಆವೇಶಭರಿತರಾದಾಗ ವೆಳಿಚ್ಚಪ್ಪಾಡ್ ಆಯುಧದಿಂದ ಎದೆಗೆ ಬಡಿಯುತ್ತಾರೆ. +ದೇವಕಿಯಂತಹ ಮಕ್ಕಳಿಗೆ ಅದು ನಿಜವಾಗಿ ಹರಿತವಾದ ಕತ್ತಿಯೆ ಅಲ್ಲಾ ಬಡ್ಡು ಹಿಡಿದದ್ದೇ ಎನ್ನುವ ಕುತೂಹಲ. ಅದೊಂದು ವರ್ಷ ಶುದ್ಧಿಯಲ್ಲಿ ಇಲ್ಲದ ವೆಳಿಚ್ಚಪ್ಪಾಡ್ ಕುಟ್ಟಪ್ಪನ್ ಆಯುಧದಿಂದ ಎದೆಗೆ ಬಡಿದಾಗ ರಕ್ತ ಚಿಮ್ಮಿತು. ಅರಿಸಿನದ ಹುಡಿಯನ್ನು ಗಾಯಕ್ಕೆ ಎರಚಿದಾಗ ರಕ್ತ ಹರಿಯುವುದು ನಿಂತರೂ ಆತ ಮುಂದಿನ ನಾಲ್ಕೈದು ತಿಂಗಳ ಕಾಲ ನರಳಬೇಕಾಯಿತು. ಆ ಬಳಿಕ ಕುಟ್ಟಪ್ಪನ್ ಬದಲು ಹೊಸ ವೆಳಿಚ್ಚಪ್ಪಾಡ್ ಬರ ಹತ್ತಿದರು. +ಅಮ್ಮ ಏನನ್ನೂ ಮುಟ್ಟಬಾರದು ಎಂದಿದ್ದರು. ಆದರೂ ದೇವಕಿ ಕಸ ಗುಡಿಸುವ ನೆಪದಲ್ಲಿ ಆಯುಧವನ್ನು ಮುಟ್ಟಿಮುಟ್ಟಿ ಆನಂದಿಸಿದ್ದಳು. ಅಮ್ಮ ಹೊರಗೆ ನಿಂತು ಸೂಚನೆ ನೀಡುತ್ತಿರುವಂತೆಯೆ ಆಕೆ ನೀರಿನ ಗಿಂಡಿಯೊಂದಿಗೆ ಹೊರಗೆ ಬಂದಳು. ತೆಂಗಿನ ಮರದ ಬುಡಕ್ಕೆ ನೀರನ್ನು ಸುರಿದು ಗಿಂಡಿಯನ್ನು ತೊಳೆದು ಶುಭ್ರವಾಗಿಸಿದಳು. ಬಾವಿ ಕಟ್ಟೆಯಿಂದ ನೀರು ತಂದು ಮತ್ತೆ ಗಿಂಡಿಯನ್ನು ತುಂಬಿಸಿ ತಂದು ಕಾಲುಂಪಲದಲ್ಲಿ ಇರಿಸಿದಳು. ಮಡಿ ಬಟ್ಟೆಯಿಂದ ಬತ್ತಿಯನ್ನು ಹೊಸೆದು ತೂಗುದೀಪಗಳಲ್ಲಿ ಇರಿಸಿದಳು. ಎಣ್ಣೆ ಗಿಂಡಿಯಿಂದ ತೆಂಗಿನೆಣ್ಣೆಯನ್ನು ದೀಪಗಳಲ್ಲಿ ತುಂಬಿಸಿದಳು. ದೀಪ ಹೊತ್ತಿಸಿದಳು. ಸಂಜೆ ದೀಪ ಹೊತ್ತಿಸುವುದರಲ್ಲಿ ಮಕ್ಕಳಿಗೆಲ್ಲಾ ಅತ್ಯಂತ ಸಂತೋಷವನ್ನುಂಟುಮಾಡುವ ಅಂಶ ಮುಂದಿನದ್ದು. ಆಕೆ ಆಯುಧದ ಬಳಿ ಮಣೆಯಲ್ಲಿ ಇರಿಸಿದ ಶಂಖವನ್ನು ಹೊರತಂದು ಊದುವ ಶ್ರಮ ನಡೆಸಿದಳು. ಎರಡು ಬಾರಿಯ ವಿಫಲ ಯತ್ನದ ಬಳಿಕ ಶಂಖದಿಂದ ಧ್ವನಿ ಹೊರಟಿತು. ಅಮ್ಮ ಸಾಕು ಎಂದು ಹೇಳಿದ ಬಳಿಕವೂ ಎರಡು ಬಾರಿ ಶಂಖ ಊದಿದ ದೇವಕಿ ಸಂಭ್ರಮದೊಂದಿಗೆ ಹೊರ ನಡೆದಳು. ಕೊಡದಲ್ಲಿ ಬಾಕಿ ಉಳಿದಿದ್ದ ನೀರಿನಿಂದ ಶಂಖವನ್ನು ಶುದ್ಧಗೊಳಿಸಿ ಮತ್ತೆ ಒಳಗೊಯ್ದಳು. ಅಮ್ಮ ಹೇಳಿದಂತೆ ಕಾಲುಂಪಲದ ಮುಂದೆ ಸಾಷ್ಟಾಂಗ ನಮಸ್ಕರಿಸಿ, ವಿಷ್ಣುಮೂರ್ತಿಯ ಕೊಠಡಿಯ ಬಾಗಿಲು ಮುಚ್ಚಿ ಆಕೆ ಹೊರ ಬಂದಳು. ದೇವಕಿಯ ಈ ಎಲ್ಲಾ ಸಂಭ್ರಮದ ಗಳಿಗೆಗೆ ಸಾಕ್ಷಿಯಾಗಿ ದೈವದ ಕೊಠಡಿಯ ಹೊರಗೇ ಕೈಮುಗಿದು ನಿಂತಿದ್ದ ತರವಾಡಿನ, ನೆರೆಯ ಇತರ ಎಲ್ಲಾ ಮಕ್ಕಳ ಮಧ್ಯೆ ಆಕೆ ಆ ದಿನ ನಾಯಕಿ. +ತಿಟ್ಟೆಯ ಕಂಬವನ್ನು ಒರಗಿ ಕುಳಿತಿದ್ದ ದೇವಕಿಯಮ್ಮ ಆ ನೆನಪಿನಿಂದಲೇ ಪುಳಕಿತಗೊಂಡಂತೆ ದೈವಮೇ(೯) ಎಂದರು. ಅಂದಿನ ಮಕ್ಕಳಿಗೆ ವಿಷ್ಣುಮೂರ್ತಿಗೆ ದೀಪ ಹೊತ್ತಿಸುವುದು, ಶಂಖ ಊದುವುದು ಎಂದರೆ ಅದೊಂದು ಸಂಭ್ರಮದ ಕ್ಷಣವಾಗುತ್ತಿತ್ತು. ಆದರೆ ಇಂದು? ಮತ್ತೆ ಅಪ್ಪುವಿನ ನೆನಪಾಗಿ ದೇವಕಿಯಮ್ಮನ ಶಿರಕ್ಕೆ ರಕ್ತ ಏರಿತು. ದುಬಾಗೆ ಹೋಗಲು ಇಪ್ಪತ್ತೈದು ಸಾವಿರ ರೂಪಾಯಿ ಕೊಡಬೇಕಂತೆ. ಆತ ಹೋದರೆ ತರವಾಡಿನ ಕೆಲಸ ಕಾರ್ಯ ನಿಂತು ಹೋಗುವುದಿಲ್ಲ. ದೂರದ ಸಂಬಂಧದ ವಿಧವೆ ಚಿರುದ ಮತ್ತವಳ ಮಗ ಈ ತರವಾಡಿನಲ್ಲಿ ಬಂದು ನೆಲೆಸಲು ತುದಿಗಾಲಲ್ಲಿ ನಿಂತಿದ್ದಾರೆ. +ಕೈಯಲ್ಲಿ ಹಣ ಇಲ್ಲವೆಂದಲ್ಲ. ಆದರೆ ಅದು ತರವಾಡಿನ ಸೊತ್ತು. ಕಾಲುಂಪಲಕ್ಕೆ ಗೆದ್ದಲು ಹಿಡಿದಿದೆಯೆಂದು ತ್ರಿಶ್ಶೂರಿನಿಂದ ಬಂದ ದೊಡ್ಡ ಕಣಿಶನ್ ಹೇಳಿದಾಗಲೆ ದೇವಕಿಯಮ್ಮನ ಎದೆಯೊಡೆದಿತ್ತು. ದೈವದ ಕೋಣೆಯ ಉಸ್ತುವಾರಿ ನೋಡುತ್ತಿದ್ದ ರಾಘವ ಮತ್ತವನ ಮಕ್ಕಳನ್ನು ಆಕೆ ತರಾಟೆಗೆ ತೆಗೆದುಕೊಂಡಿದ್ದಳು. ಮನೆಯ ಒಳಗೆ ಏನು ನಡೆಯುತ್ತಿದೆಯೆನ್ನುವುದು ಮನೆಯವರಿಗೆ ತಿಳಿದಿಲ್ಲ. ಅದನ್ನು ಹೇಳಲು ದೂರದಿಂದ ಬಂದ ಕಣಿಶನ್ ಬೇಕಾದ. +ಮುಂದೆ ತರವಾಡಿನವರೆಲ್ಲಾ ಒಟ್ಟು ಸೇರಿ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಹೊಸ ಕಾಲುಂಪಲವನ್ನೇ ಮಾಡಿಸಬೇಕು, ಅಲ್ಲದೆ ಜೀರ್ಣಾವಸ್ಥೆಯಲ್ಲಿರುವ ತರವಾಡು ಮನೆಯನ್ನು ನವೀಕರಿಸಬೇಕು ಎಂದು ತಿಳಿದು ಬಂತು. ಅಂದು ಬಂದ ಸದಸ್ಯರೆಲ್ಲಾ ಮೀಟಿಂಗ್ ಕರೆದು ಸಂಗ್ರಹಿಸಿದ ಇಪ್ಪತ್ತು ಸಾವಿರ ರೂಪಾಯಿ ದೇವಕಿಯಮ್ಮನಲ್ಲಿದೆ. ಆದರೆ ಒಟ್ಟು ಕೆಲಸಕ್ಕೆ ಎರಡು ಲಕ್ಷ ರೂಪಾಯಿಗಳು ಬೇಕು. ಎಲ್ಲಾ ಸದಸ್ಯರು ಒಟ್ಟು ಸೇರಿದರೆ ಅದು ಅಸಾಧ್ಯವೇನಲ್ಲ. ಆದರೆ ಹೆಂಡತಿ ಮಕ್ಕಳಿಗೆ ಆಸ್ತಿಪಾಸ್ತಿ ಮಾಡುವುದರಲ್ಲೇ ತರವಾಡಿನ ಸದಸ್ಯರ ಗಮನ ಹೆಚ್ಚಿದೆ. +ಆ ದಿನ ಒಬ್ಬ ಬುದ್ಧಿವಂತ, ದೈವದ ಕೊಠಡಿಯನ್ನಷ್ಟೇ ಉಳಿಸಿ ಇಡೀ ತರವಾಡು +ಮನೆಯನ್ನು ಕೆಡವಿ ನಾಲ್ಕೈದು ಕೊಠಡಿಗಳ ಚಿಕ್ಕ ಕಾಂಕ್ರೀಟು ಮನೆಯನ್ನು ಕಟ್ಟುವ ಸಲಹೆ ನೀಡಿದ. ಮೂಂದೆ ರಿಪೇರಿಯ ಪ್ರಶ್ನೆಯೆ ಇಲ್ಲ. ಮಹಡಿಯ ಮಾಡಿನ ತೊಲೆ, ಮರಮುಟ್ಟು ಮಾರಿದರೆ ಒಳ್ಳೆಯ ಬೆಲೆ ಸಿಗುವುದು ಎನ್ನುವಾಗ ದೇವಕಿಯಮ್ಮ ಸ್ವರ ಏರಿಸಿ ಮಾತನಾಡಿ ಆತನ ನಾಯಿ ಮುಚ್ಚಿಸಿದರು. ಅವರ ಮಾತುಗಳನ್ನು ಕೇಳಿದ ಬಳಿಕ ಯಾರಿಗೂ ಉಸಿರೆತ್ತುವ ಧೈರ್ಯವಾಗಲಿಲ್ಲ. ತರವಾಡು ಮನೆ ಕೆಡವುತ್ತಾರಂತೆ. ಇಲ್ಲಿ ಒಂದಿಷ್ಟು ಗೋಡೆಯಿಂದ ಮಣ್ಣು ಉದುರಿದರೆ ಸಾಕು ತನ್ನ ಎದೆ ಉಮ್ಮಳಿಸುತ್ತದೆ. +ಮಹಡಿಯನ್ನು ನಿತ್ಯ ಏರಲಾಗುವುದಿಲ್ಲ. ಆದರೂ ವರ್ಷಕ್ಕೊಮ್ಮೆ ಹೆಂಚನ್ನು ತೆಗೆಸಿ ಪಕ್ಕಾಸು, ತೊಲೆ ರೀಪುಗಳಿಗೆ ಕೀಲೆಣ್ಣೆ ಬಿಡುವ ಕೆಲಸವನ್ನು ಸ್ವತಃ ನಿಂತು ದೇವಕಿಯಮ್ಮ ಮಾಡಿಸುತ್ತಾರೆ. ಪ್ರತೀ ವರ್ಷ ಕಂಡಪ್ಪ ಮೇಸ್ತ್ರಿ “ಅಮ್ಮಾ ಇನ್ನೊಂದು ಹತ್ತು ವರ್ಷಗಳಿಗೆ ಏನೂ ಮೋಸವಿಲ್ಲ” ಎಂದಾಗಲೆ ಆಕೆಗೆ ಸಮಾಧಾನ. +ಹಾಗೆ ಹಂಚು ತೆಗೆದಾಗೊಮ್ಮೆ ಮಾತ್ರ ಬೆಳಕಿಗೆ ತೆರೆದು ನಿಲ್ಲುವ ಮುಚ್ಚಿದ ಕೊಠಡಿಗಳ ಮೂಲೆ ಮೂಲೆಗೆ ದೇವಕಿಯಮ್ಮ ಹೋಗಿ ಬರುತ್ತಾರೆ. ಇಲ್ಲದಿದ್ದರೆ ಚಿಕ್ಕ ಮರದ ಕಿಟಕಿ, ಜಾಲಂದ್ರದ ಮೂಲಕವಷ್ಟೇ ಬೆಳಕಿನ ಎಳೆಗಳನ್ನು ಕಾಣುವ ಕೊಠಡಿಗಳು ಅವು. ಈ ಕೊಠಡಿಗಳನ್ನು ಗುಡಿಸಿ ಒರಸಿಯೆ ತನ್ನ ಸೊಂಟ ಬಿದ್ದುಹೋಯಿತೆಂದು ಭವಾನಿ ಗೊಣಗುತ್ತಿದ್ದಾಳೆ. ಆದರೆ ತನಗೆ ಇದು ಬರೆ ಕೊಠಡಿಗಳಲ್ಲ. ಈ ತರವಾಡಿನ ನೋವು ನಲಿವಿನ ಕತೆಯ ಮೂಕಸಾಕ್ಷಿಗಳು ಅವು. +ಅಂಗಳದ ನೇರ ಮೇಲಕ್ಕಿರುವ ಜಾಲಂದ್ರದ ಮೂಲಕವೆ ತರವಾಡಿನ ಹೆಣ್ಣು ಮಕ್ಕಳು ಕೆಳಗೆ ನಡೆಯುವ ದೈವದ ಉತ್ಸವಗಳನ್ನು ನೋಡುವುದು. ಮುಂಡು ಮೇಲಕ್ಕೆತ್ತಿ ಕಟ್ಟಿ ಓಡಾಡುವ ಕುಡಿ ಮೀಸೆಯ ತರುಣರು ಆಗಾಗ ಜಾಲಂದ್ರವನ್ನು ದಿಟ್ಟಿಸುವುದು, ಅದರ ಹಿಂದೆ ಇರುವ ಯಾವುದಾದರೂ ಜೋಡಿ ಕಣ್ಣುಗಳು ಆ ನೋಟವನ್ನು ಸೆರೆ ಹಿಡಿದು ನಾಚುವುದು, ಕುಲುಕುಲು ನಗೆ ಮಹಡಿ ತುಂಬಾ ಪ್ರತಿಧ್ವನಿಸುವಾಗ ಯಾವುದೊ ಹಿರಿಯ ಹೆಂಗಸಿನ ಎಚ್ಚರಿಕೆಯ ಮಾತು. ಉತ್ಸವದ ಮರುದಿನ ಮಹಡಿಯ ನೆಲ ತುಂಬಾ ಉದುರಿ ಬಿದ್ದ ನಕ್ಷತ್ರಗಳಂತೆ ಮಲ್ಲಿಗೆ, ಅಬ್ಬಲಿಗೆ ಹೂಗಳು, ನವಿರಾದ ಕಂಪು. +ಪಡು ಬದಿಯ ಕತ್ತಲಾದ ಕೊಠಡಿಯಲ್ಲಿಯೆ ತರವಾಡಿನ ಹೆಣ್ಣುಮಕ್ಕಳು ಪ್ರಥಮ ರಾತ್ರಿ ಕಳೆಯಬೇಕು. ಬೀಟಿ ಮರದ ಕೆತ್ತನೆಯ ಮಂಚ, ಕಪಾಟು, ಮೇಜು, ಕಂಚಿನ ದೀಪಗಳು ಬೆಳಕಿನಲ್ಲಿ ಬಟಾಬಯಲಾಗಿ ನಿಂತದ್ದು ನೆನೆದು ದೇವಕಿಯಮ್ಮನ ಮುಖ ಈಗಲೂ ಕೆಂಪಾಗುತ್ತದೆ. ಹರೆಯದ ಸಿಹಿ ಕನಸುಗಳನ್ನು ಎದೆಯಲ್ಲಿ ತುಂಬಿಕೊಂಡು ಈ ಕೊಠಡಿಗೆ ಕಾಲಿರಿಸಿದ ತರವಾಡಿನ ಎಷ್ಟು ಹುಡುಗಿಯರು ಪ್ರಥಮ ರಾತ್ರಿಯಂದು ಸಂತೃಪ್ತಿಯಿಂದ ಅರಳಿದರೊ, ಎಷ್ಟು ಮಂದಿ ಬಾಡಿ ಮುರುಟಿ ಹೋದರೊ. +ಮೆಟ್ಟಲ ಬದಿಯ ಕೆಳಗಿನ ಮೂಲೆಯ ಕೊಠಡಿಗಳು ತನ್ನಂತಹ ಎಷ್ಟು ಎಳೆ ವಿಧವೆಯರ ಉಮ್ಮಳವನ್ನು, ಬಿಸುಸುಯ್ಲನ್ನು ಬಚ್ಚಿಟ್ಟುಕೊಂಡಿಲ್ಲ. ಗಂಡನಿದ್ದೂ ವಿಧವೆಯಂತೆ ದಿನ ಕಳೆದವರ ಎದೆಯ ನೋವಿನ ಲೆಕ್ಕವಿಟ್ಟಿಲ್ಲ. ದೇವಕಿಯಮ್ಮ ಚಾವಡಿಯ ತಿರುವಿನ ಮಸುಕು ಮಸುಕಾಗಿ ಕಾಣಿಸುತ್ತಿದ್ದ ಮಹಡಿಯ ಮೆಟ್ಟಲುಗಳನ್ನು ದುಗುಡದಿಂದ ದಿಟ್ಟಿಸಿದರು. ತಿಟ್ಟೆಯನ್ನು ನವಿರಾಗಿ ಸವರಿದರು. +ಮಗ ರಾಘವನ ಅಕಾಲ ಮೃತ್ಯುವಿಗೆ ಗೆದ್ದಲು ಹಿಡಿದ ಕಾಲುಂಪಲ ಬದಲಿಸದ್ದೇ ಕಾರಣ ಎಂದೆನ್ನುತ್ತಾರೆ. ದೈವದ ಅನುಗ್ರಹಕ್ಕಿಂತಲೂ ಪ್ರಕೋಪವನ್ನೇ ತನ್ನ ಕುಟುಂಬ ಎದುರಿಸುತ್ತಾ ಬಂದಿದೆ. ದೇವಕಿಯಮ್ಮ ಏಕ ಸಂತಾನ. ಮದುವೆಯಾದ ಗಂಡು ತರವಾಡಿನ ಸಂಪ್ರದಾಯಕ್ಕೆ ವಿರುದ್ಧವಾಗಿ ವಧುವನ್ನು ತನ್ನ ಮನೆಗೆ ಒಯ್ದಿದ್ದ. ಕಾರ್ನವರರು ದೇವಕಿಯನ್ನು ಇಲ್ಲೇ ಬಿಡಬೇಕು. ಆಕೆ ನಾಳಿನ ತರವಾಡು ಮೂಪತ್ತಿ ಎಂದರೂ ಆತ ಒಪ್ಪಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಚಿಕ್ಕ ಮೂವರು ಮಕ್ಕಳೊಂದಿಗೆ ದೇವಕಿ ವಿಧವೆಯಾಗಿ ತರವಾಡಿಗೆ ಹಿಂತಿರುಗಿ ಬಂದಾಗ ಎಲ್ಲರೂ ಹೇಳಿದ್ದು ಇದು ವಿಷ್ಣುಮೂರ್ತಿಯ ಪ್ರಕೋಪವೆಂದು. +ಭವಾನಿಯ ವಿವಾಹ ನಿಶ್ಚಯ ಮಾಡಿದಾಗಲೂ ಈ ಒಂದು ಸಮಸ್ಯೆ ಇತ್ತು. ಕಿರಿಯವಳಾದ ಶ್ಯಾಮಲಾ ತರವಾಡಿನಲ್ಲಿ ಉಳಿಯಬಹುದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದು. ಆದರೆ ವಿಷ್ಣುಮೂರ್ತಿ, ಭವಾನಿಯೆ ಮುಂದಿನ ಮೂಪತ್ತಿ ಎಂದು ನಿರ್ಧರಿಸಿರಬೇಕು. ಇಂದು ಶ್ಯಾಮಲಾ ಬೊಂಬಾಯಿಯಲ್ಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದಿದ್ದಾಳೆ. ಆದರೆ ಕುಲದೈವದ ಸೇವೆಗೆ ನಿಂತ ಭವಾನಿಗೆ ಈ ದುಃಖ ಯಾಕೆ? +ಹೀಗೆ ತನ್ನ ಕುಟುಂಬದಲ್ಲಿ ಏನೇನೊ ದುರಂತ ಸಂಭವಿಸಿದರೂ ದೇವಕಿಯಮ್ಮನಿಗೆ ವಿಷ್ಣುಮೂರ್ತಿಯಲ್ಲಿ ವಿಶ್ವಾಸ ಅಚಲವಾಗಿ ಉಳಿದಿದೆ. ಈ ವರ್ಷ ಕುಟುಂಬದ ಸದಸ್ಯರಿಂದ ಆಗದಿದ್ದರೆ ತರವಾಡಿನ ಹಿತ್ತಲಲ್ಲಿರುವ ಮರಗಳನ್ನು ಕಡಿದಾದರೂ ಹೊಸ ಕಾಲುಂಪಲ ಮಾಡಿಸಿಬಿಡಬೇಕೆಂದು ಆಕೆ ನಿರ್ಧರಿಸಿದ್ದಾರೆ. ಅದೇ ರೀತಿ ತರವಾಡಿನ ಸದಸ್ಯರು ಬರಲಿ ಬಿಡಲಿ ವಿಷ್ಣುಮೂರ್ತಿಗೆ ಸಲ್ಲುವ ಎಲ್ಲಾ ಸೇವೆಯನ್ನು ತಾನು ಜೀವಿಸಿರುವಷ್ಟು ಕಾಲ ನಿರಾತಂಕವಾಗಿ ನಡೆಸುವ ದೃಢ ಸಂಕಲ್ಪ ಮಾಡಿದ್ದಾರೆ ದೇವಕಿಯಮ್ಮ. ಈ ದಿನ ನಿತ್ಯದ ಸಮಸ್ಯೆಗೂ ಒಂದು ಪರಿಹಾರ ಕಂಡುಕೊಳ್ಳಬೇಕು. ಇವತ್ತು ಅಪ್ಪು ಬಂದಾಗ ಅವನಲ್ಲಿ ಖಡಾ ಖಂಡಿತವಾಗಿ ಹೇಳಬೇಕು. ವಿಷ್ಣುಮೂರ್ತಿಯ ಸೇವೆಗೆ ಸಮಯಾವಕಾಶವಿಲ್ಲದಿದ್ದವರಿಗೆ ಈ ತರವಾಡು ಮನೆಯಲ್ಲಿ ಸ್ಥಾನವಿಲ್ಲ. +– ೫ – +ಆಟೊ ಬಂದ ಸದ್ದಾದೊಡನೆ ಇಬ್ಬರೂ ಹೆಂಗಸರೂ ಎಚ್ಚೆತ್ತರು. ಗೇಟಿನ ಬಾಗಿಲು ತೆಗೆದು ಒಳ ಬಂದಾತ ಅಪ್ಪು ಎನ್ನುವುದು ಮೊದಲು ಭವಾನಿಗೆ ಗೋಚರವಾಯಿತು. ಆದರೆ ಇದೇನು ವಾಲಿಕೊಂಡು ಬರುತ್ತಿದ್ದಾನೆ ಎಂದು ತನ್ನೊಳಗೆ ಉದ್ಗರಿಸಿದಳು. ಆತ ಕಂಠಪೂರ್ತಿ ಕುಡಿದು ಬಂದಿದ್ದಾನೆ ಎನ್ನುವುದು ತಿಳಿದೊಡನೆ ಭವಾನಿಯ ಎದೆ ನಡುಗಿತು. “ಇದೇನು ಅನರ್ಥ ಕಾದಿದೆ, ಭಗವತಿ” ಎಂದು ಆಕೆ ಹಣೆ ಬಡಿದುಕೊಂಡಳು. ಮಗಳ ಮುಖಚರ್ಯೆಯಿಂದಲೆ ದೇವಕಿಯಮ್ಮನಿಗೆ ಸಂದೇಹ ಮೂಡಿತ್ತು. ದಿಟ್ಟಿಸಿ ನೋಡಿದರೆ ಅಪ್ಪು ವಾಲಾಡುತ್ತಾ ಅಂಗಳಕ್ಕೆ ಕಾಲಿರಿಸುತ್ತಿದ್ದಾನೆ. ದೇವಕಿಯಮ್ಮ ಮಾತು ಕಳೆದು ಆತನತ್ತಲೆ ನೋಡುವಾಗ ಕಣ್ಣೀರ ಹನಿಗಳೆರಡು ಗಲ್ಲದ ಮೇಲೆ ಉರುಳಿ ಹೋದವು. ಆತನಿಗಾಗಿ ಕಾಯುತ್ತಾ ಇಡೀ ಸಂಜೆಯನ್ನು ಒಂದು ಯುಗವೆಂಬಂತೆ ಕಳೆದಿದ್ದರು. ಆತ ಬರುತ್ತಾನೆ, ದೀಪ ಹಚ್ಚಿಯೆ ಹಚ್ಚುತ್ತಾನೆ ಎನ್ನುವ ನಂಬಿಕೆಯಿಂದ. +ಚೇತರಿಸಿಕೊಳ್ಳಲು ದೇವಕಿಯಮ್ಮನಿಗೆ ಬಹಳ ಹೊತ್ತು ಬೇಕಾಗಲಿಲ್ಲ. ತಿಟ್ಟೆಯಿಂದ ಎದ್ದ ಅವರು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಹೇಳಿದರು, “ಇಂತಹವರಿಗೆ ಈ ತರವಾಡು ಮನೆಯಲ್ಲಿ ಸ್ಥಳವಿಲ್ಲ.” +“ನಿಮ್ಮ ತರವಾಡು ಯಾರಿಗೆ ಬೇಕಾಗಿದೆ. ದೀಪಕ್ಕೆ ಗತಿಯಿಲ್ಲದ ತರವಾಡು. ನಾನು ಹೋಗುತ್ತೇನೆ” ಇನ್ನು ಏನೇನೊ ಅಸ್ಪಷ್ಟ ಹೇಳುತ್ತಾ ಹಿಂದಿರುಗಲು ಯತ್ನಿಸುವಾಗ ಅಪ್ಪು ಅಲ್ಲೇ ದೊಪ್ಪನೆ ಬಿದ್ದು ಬಿಟ್ಟ. ಮಗನ ಬಳಿ ಓಡಿ ಆದರಿಸಬೇಕೆಂದುಕೊಂಡ ಭವಾನಿ, ಮೆಲ್ಲನೆ ಹೆಜ್ಜೆ ಮುಂದಿಡುತ್ತಿದ್ದ ಅಮ್ಮನನ್ನು ನೋಡಿ ಅಲ್ಲೇ ನಿಂತಳು. +ದೇವಕಿಯಮ್ಮನ ಹೆಜ್ಜೆ ನಿಲ್ಲಲಿಲ್ಲ. ಒಮ್ಮೆ ತಿರುಗಿ ತರವಾಡು ಮನೆಯನ್ನು ದಿಟ್ಟಿಸಿದರು. ಕತ್ತಲ ಹಿನ್ನೆಲೆಯಲ್ಲಿ ಎಷ್ಟೊಂದು ದೃಢತೆಯಿಂದ ತಲೆ ಎತ್ತಿ ನಿಂತಿದೆ. ತನಗೆ ಗೊತ್ತಿದೆ ಎಲ್ಲೆಲ್ಲಿ ಗೋಡೆ ಬಿರುಕು ಬಿಟ್ಟಿದೆಯೆಂದು, ಮಣ್ಣು ಜರಿದಿದೆಯೆಂದು, ಜಂತಿಗೆ ಗೆದ್ದಲು ಹತ್ತಿದೆಯೆಂದು. ಆದರೆ ಈ ಗಳಿಗೆಯಲ್ಲಿ ಹಾಗೆ ತಲೆ ಎತ್ತಿ ನಿಂತ ತರವಾಡು ಮನೆ ಯಾವುದೊ ಶಕ್ತಿ, ಹುಮ್ಮಸ್ಸನ್ನು ಆಕೆಯಲ್ಲಿ ತುಂಬುವ ಹಾಗನಿಸಿತು. +ಯಾರೊ ಆಕೆಯನ್ನು ’ಮೋಳೆ’(೧೦) ಎಂದು ಕರೆದರು. ತೆಂಗಿನ ಕಟ್ಟೆಯಲ್ಲಿ ನಿಲ್ಲಿಸಿ ಮೀಯಿಸಿದರು. ಮಡಿ ಉಡಿಸಿ ದೈವದ ಕೊಠಡಿಯ ಮುಂದೆ ನಿಲ್ಲಿಸಿದರು. ಬಾಗಿಲು ತೆರೆಯಿತು. +ತನ್ನತ್ತ ಕೈಚಾಚಿ ಬರುತ್ತಿದ್ದ ಮಗಳನ್ನು ತಡೆದು ಒಂದು ಕೊಡ ನೀರು ತಾ ಎಂದು ದೇವಕಿಯಮ್ಮ ಆಜ್ಞಾಪಿಸಿದರು. ತರವಾಡಿನ ಮೂಪತ್ತಿಯ ಸ್ವರದ ಗಾಂಭೀರ್ಯವನ್ನು ಗ್ರಹಿಸಲು ಭವಾನಿಗೆ ಆಗಲಿಲ್ಲ. ಬಹುಶಃ ಮತಿಯಿಲ್ಲದೆ ಬಿದ್ದುಕೊಂಡಿರುವ ಅಪ್ಪುವಿನ ಮತ್ತು ಕಳೆಯಲು ನೀರು ತರಲೆಂದು ಅಮ್ಮ ಹೇಳಿರಬೇಕು ಎಂದು ಆಕೆ ಗಡಿಬಿಡಿಯಿಂದ ಬಾವಿ ಕಟ್ಟೆಯತ್ತ ನಡೆದಳು. ತಲೆಗೆ ನೀರು ಬಿದ್ದರೆ ಆತನ ಅಮಲು ಇಳಿಯುತ್ತದೆ. ಮತ್ತೆ ಸ್ನಾನ ಮಾಡಿ ಶುದ್ಧಿಗೊಂಡು ದೀಪ ಹೊತ್ತಿಸಬಹುದು. +ನೀರಿನ ಕೊಡದೊಂದಿಗೆ ಅಂಗಳಕ್ಕೆ ಬಂದ ಭವಾನಿ ಅಮ್ಮ ಎಲ್ಲಿ ಎಂದು ಅತ್ತಿತ್ತ ನೋಡಿದಾಗ ತೆಂಗಿನ ಮರದ ಕಟ್ಟೆಯಲ್ಲಿ ತಲೆಗೂದಲನ್ನು ಬಿಚ್ಚಿ ಕುಳಿತಿರುವುದು ಕಾಣಿಸಿತು. ಒಂದು ಕ್ಷಣ ಗಾಬರಿಯಿಂದ ಆಕೆ ನಿಂತು ಬಿಟ್ಟಳು. ಅಮ್ಮ ಏನನ್ನು ಮಾಡ ಹೊರಟಿದ್ದಾರೆ ಎನ್ನುವುದು ಆಕೆಗೆ ಸ್ಪಷ್ಟವಾಯಿತು. +ಒದ್ದೆ ಬಟ್ಟೆಯಲ್ಲಿ, ತಲೆಯಿಂದ ನೀರು ಹನಿಯುತ್ತಿರುವಂತೆಯೆ, ಕೈ ಮುಗಿದು, ಕಣ್ಣು ಮುಚ್ಚಿ ಮೌನ ಪ್ರಾರ್ಥನೆ ಸಲ್ಲಿಸುತ್ತಾ ದೇವಕಿಯಮ್ಮ ವಿಷ್ಣುಮೂರ್ತಿಯ ಕೊಠಡಿ ಪ್ರವೇಶಿಸಿದಾಗ ಆಕೆ ಮತ್ತೆ ಮಗುವಾಗಿದ್ದರು. +***** +೧ ಕುಟುಂಬದ ಹಿರಿಯ ಮನೆ ೨ ವಾರ್ಷಿಕ ಕೋಲ ೩ ವಿಶೇಷ ಕೋಲ ೪ ಕುಟುಂಬದ ಹಿರಿಯಳು ೫ ಜ್ಯೋತಿಷಿ ೬ ಕುಟುಂಬದ ಹಿರಿಯರು ೭ ಮರದ ಕೆತ್ತನೆಯ ಆಳೆತ್ತರದ ಮಂಟಪ ೮ ಪಾತ್ರಿ ೯ ದೇವರೇ ೧೦ ಮಗಳೇ +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_654.txt b/Kannada Sahitya/article_654.txt new file mode 100644 index 0000000000000000000000000000000000000000..2ab7ebceeb49a4b28d79aba11c742772fbc7b14a --- /dev/null +++ b/Kannada Sahitya/article_654.txt @@ -0,0 +1,126 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ ಶೇಖರಿಸಿದ್ದ ಹಿಮದರಾಶಿಯನ್ನ ಮೊದಲು ಕ್ಲೀನ್ಮಾಡಿ,’ಡ್ರೈವ್‌ವೇ’, ಮನೆ ಮುಂದಿನ ‘ವಾಕ್‌ವೇ’ಲಿ ಸ್ನೋ ‘ಶವಲ್’ ಮಾಡೊದರಲ್ಲಿ ನಡ ಬಿದ್ದೊಗಿತ್ತು. ಮನೆಯೊಳಗೆ ಬಂದು ‘ಅರೇಂಜ್ ಜೂಸ್’ ಕುಡಿದು ದೊಪ್ಪೆಂದು ಸೋಫಾಮೇಲೆ ಕುಕ್ಕರಿಸಿ ಕೂತವನ “ಯೂ ಲೇಜಿ ಬಾಯ್ ಕಮ್ ಲೆಟ್ಸ್ ಮೇಕ್ ಎ ಸ್ನೋಮ್ಯಾನ್” ಎಂದು ನನ್ನ ನಾಕು ವರ್ಷದ ಮಗಳು ಛೇಡಿಸಿದ್ದಳು. ಅವಳೊಂದಿಗೆ ಆಟವಾಡಿ ಒಳಗೆ ಬಂದಾಗ ನನ್ನಾಕೆ “ಸ್ವಲ್ಪ ಹಾಗೆ ಮೈಲ್ ಚೆಕ್‌ಮಾಡಿ ಪ್ಲೀಸ್” ಎಂದು ಕೀ ಕೈಗಿಟ್ಟಳು. ಎಷ್ಟು ದಿನಗಳಾಗಿತ್ತೊ ನೋಡಿ ‘ಮೈಲ್‌ಬಾಕ್ಸ್’ ಪೂರ್ತಿಯಾಗಿ ತುಂಬಿತ್ತು- ಮಧ್ಯಕ್ಕೆ ಮಡಿಚಿ ತುರಿಕಿದ ‘ಮ್ಯಾಗ್‌ಜೈನು’ಗಳು; ಪೊಸ್ಟ್‌ಕಾರ್ಡುಗಳು; ‘ಎನ್ವೆಲೋಪ್’ಗಳು; ನೂರೆಂಟು ‘ಜಂಕ್’ ಲಕೋಟೆಗಳು. ಊಟ ಮಾಡಿ ಪುಸ್ತಕ ಹಿಡಿದು ಹಾಸಿಗೆಯಮೇಲೆ ಆಗಿನ್ನು ಉರುಳಿದ್ದೆ- “ಕಣ್ಣಿ ನಿನಗೆ ಇಂಡಿಯಾದಿಂದ ಯಾವುದೋ ಲೆಟರ್ ಬಂದಿದೆ” ನನ್ನಾಕೆ ಕೂಗಿದ್ದು ಕೇಳಿತ್ತು. +ಮೊದಲಿಗೆ ಖುಶಿಯಾಗಿತ್ತು. ಆದರೆ ತಕ್ಷಣವೇ ಇದು ಯಾರು ಈ ಕಾಲದಲ್ಲಿ ಲೆಟರ್ ಬರಿಯೋವರು ಎಂದು ಅಶ್ಚರ್ಯವಾಗಿತ್ತು. ಈಗೆಲ್ಲ ಏನಿದ್ದರು ಫೋನು, ಇಮೈಲು, ಇಲ್ಲ ಅಂತರಜಾಲದಲ್ಲಿ ‘ವೆಬ್‌ಕ್ಯಾಮ್’ ಮೂಲಕ ನೇರ ಮುಖಾಮುಖಿ ಮಾತುಕತೆ ಅಥವಾ ‘ಚ್ಯಾಟು’. ಅಂಥಾದರಲ್ಲಿ ನನಗೆ ಇಂಡಿಯಾದಿಂದ ಲೆಟರ್ ಬರೆಯೋವರು ಯಾರಪ್ಪ ಎಂದುಕೊಳ್ಳುತ್ತ ಎದ್ದೆ. ಇಪ್ಪತ್ತು ವರುಷದ ಹಿಂದೆ ನ್ಯೂಯಾರ್ಕಿಗೆ ಬಂದಾಗ ವಾರಕ್ಕೆ ಒಂದೊ ಎರಡೊ ಕಾಗದ ತಪ್ಪದೆ ಬರುತಿತ್ತು- ನನ್ನ ತಾಯಿ ಬರೆದಿದ್ದು. ಮೈಸೂರಿನ ಆಗ್ರಹಾರದ ಮನೆಗೆ ಫೋನ್ ಬಂದ ಮೇಲಂತು ಕಾಗದ ಬರೆಯುವುದು ಬರುವುದು ಎರಡೂ ಅಪರೂಪವಾಗಿತ್ತು. ಈಗಂತೂ ಕಾಗದ ಬರೆಯೋ ಅಭ್ಯಾಸ ಪೂರ್ತಿಯಾಗಿ ನಿಂತೆ ಹೋಗಿದೆ. ಈಗ ಎಂಟು ವರುಷದಿಂದಿಚೆಗಂತೂ ನೋಡಿದ ಕ್ಷಣವೇ `ಎರೊಗ್ರಾಮ್’ ಎಂದು ತಿಳಿಯುವ ಆ ನೀಲಿ ಬಣ್ಣದ ಕಾಗದವನ್ನ ನಾನು ನೋಡಿದ್ದಿಲ್ಲ. ಕೂತೂಹಲ ಹೆಚ್ಚಾಗಿ ಕೆಳಗಿಳಿದು ಬಂದೆ. +“ಯಾರದು?” +“ನೋಡಲಿಲ್ಲ, ಗೊತ್ತಿಲ್ಲ” +ಕಾಗದದ ಹಿಂದೆ ನೋಡಿದೆ. ‘ಎಚ್. ಎಸ್. ಲಕ್ಷ್ಮಿನರಸಿಂಹಯ್ಯ. ಶಾರದಾವಿಲಾಸ್ ಹೈಸ್ಕೂಲ್ ಹೆಡ್‌ಮಾಸ್ಟರ್ (ರಿಟೈರ್ಡ್)’ ಎಂದು ಬರೆದಿತ್ತು. ಕೆಳಗೆ ಮೈಸೂರಿನ ವಿಳಾಸವಿತ್ತು. ಸ್ವಲ್ಪ ಹೊತ್ತು ಯಾರೆಂದು ತಿಳಿಯಲಿಲ್ಲ. ನಂತರ ಎಲ್ಲವು ನೆನಪಿಗೆ ಬಂದಿತ್ತು. +ಈಗಿನ್ನು ಮೂರು ತಿಂಗಳ್ಹಿಂದೆ ನಮ್ಮೂರಿಗೆ ಹೊಗಿದ್ದಾಗ ದೋಬಿ ಅಂಗಡಿ ಚಿಕ್ಕಣ್ಣನ ಬಗ್ಗೆ ಪರಿಪರಿಯಾದ ಕಥೆಗಳನ್ನು ಕೇಳಿ ಯಾವುದು ನಿಜ ಯಾವುದು ಸುಳ್ಳೆಂದು ತಿಳಿಯದೆ ಗೊಂದಲವಾಗಿ ಎಲ್ಲವೂ ಒಗಟಾಗಿ ತೋರಿತ್ತು. ಆಗಲೇ ನಾನು ನರಸಿಂಹಯ್ಯನವರ ಮನೆಗೆ ಹೋಗಿದ್ದು. ಅವರಿಗೆ ಒಂದು ಪತ್ರ ಬರೆದಿಟ್ಟು ಬಂದಿದ್ದು. +ನನ್ನ ಆ ಪತ್ರಕ್ಕೆ ಉತ್ತರ ಈ ಕಾಗದ. ಬನ್ನಿ ಮೊದಲು ಕಥೆ ಕೇಳಿ- ಆ ನಂತರ ಉತ್ತರ ಓದೋಣ. +ಮನೆ ಕಿರಿ ಮಗ ನಾನು. ಕಿರಿಯನಾದ್ದರಿಂದ ಮನೆಯ ಹಿರಿಯರೆಲ್ಲರೂ ನನ್ನ ಹತ್ತಿರ ಕೆಲಸ ತೆಗೆಸಿದವರೆ. “ಲೋ ಕಣ್ಣಿ ಪಾಠಕ್ಕೆ ಹುಡುಗರು ಬಂದಾಯ್ತು ಸೀಮೆಸುಣ್ಣ ಬೇಗ ತಗೊಂಡು ಬಾರೊ”; ಓಡೊಗಿ ಎರಡು ‘ಸ್ಯಾರಿಡಾನ್’ ತಗೊಂಡು ಬಾ, ಆ ಬಟ್ಟೆಲಿ ಮೊಟರ್‌ಬೈಕ್ ಒರೆಸು, ಸೈಕಲ್ಲ್ ಇಳಿಸು- ಅವರ ಪಾಲಿಗೆ ಬಂದ ಕೆಲಸವೆಲ್ಲ ಹೆಚ್ಚು ಕಡಿಮೆ ನನ್ನ ತಲೆಗೆ ಕಟ್ಟೊವೊರು. ಕಾಕ ಅಂಗಡಿಗೆ ಹೋಗಿ ಕರಬೇವು ಕೊತ್ತಮರಿನೊ, ಇಲ್ಲಾ ಹಸಿಮೆಣಸಿನಕಾಯಿ ಅಥವಾ ತೆಂಗಿನಕಾಯಿನೊ ತಗೊಂಡು ಬರೊದು, ಇಂಡಿಯನ್ ಕಾಫಿವರ್ಕ್ಸ್‌ನಲ್ಲಿ ಕಾಫಿಪುಡಿ, ಗೋವಿಂದು ಅಂಗಡಿಯಲ್ಲಿ ಬೆಣ್ಣೆ, ಕೃಷ್ಣಸೋಜಿ ಡಿಪೊಲಿ ಹಳೆ ಅಕ್ಕಿಗೆ ಹೇಳಿದ್ದು ಬರೊದು, ಸಾಬರ ಸೌದೆ ಡಿಪೊಗೆ ಹೋಗಿ ಚಕ್ಕೆ ಸೌದೆ ತಂದು ಹಾಕೊಕ್ಕೆ ಹೇಳಿದ್ದು ಬರೊದು…..ಹೀಗೆ ಚಿಕ್ಕಪುಟ್ಟ ಎಲ್ಲಾ ಕೆಲಸಕ್ಕು ನನ್ನನ್ನೆ ಅಟ್ಟೊವರು. ನಾನಿನ್ನು ಚಡ್ಡಿ ಹಾಕ್ಕೊಳ್ಳೊ ವಯಸ್ಸಿಗಾಗಲೆ ನನ್ನಣ್ಣಂದರೆಲ್ಲರು ಪ್ಯಾಂಟಿಗೆ ಬಂದಿದ್ದರು. ನನಗೆ ಎಂಟೊ ಹತ್ತೊ ಇದ್ದಿರಬೇಕು. ಇನ್ನು ನಾನು ಚಿಕ್ಕವನಾಗಿ ಮಾಡೊಕ್ಕೆ ಆಗದೆ ಇರೊ ಕೆಲವು ಕೆಲಸಗಳು ದೊಡ್ಡವನಾಗ್ತ ಆಗ್ತಾ ನನ್ನ ಪಾಲಿಗೆ ಬಂದವು. ನಲ್ಲಿಲಿ ನೀರು ನಿಂತರೆ ಬಾವಿಲೊಂದು ನಾಕು ಕೊಡ ಸೇದಿ ಹಂಡೆ ತುಂಬಿಸೊದು; ಬಚ್ಚಲಮನೆ ಚಿಮಣಿ ಕಟ್ಟ್ಕೊಂಡು ಹೊಗೆ ತುಂಬಿದರೆ ಗಳುಲಿ ಕುತ್ತಿ ಎರಡು ಕೊಡ ನೀರು ಸುರಿದು ಕ್ಲೀನ್ ಮಾಡೊದು….ಇದೆಲ್ಲದರ ಜೋತೆಗೆ ದಿನ ಸ್ಕೂಲಿಗೂ ಹೋಗಬೇಕಿತ್ತು. ಈ ದಿನನಿತ್ಯದ ಎಷ್ಟೊ ಕೆಲಸಗಳಲ್ಲಿ ನನಗೆ ಬಹಳ ಇಷ್ಟವಾಗಿದ್ದ ಕೆಲಸವೆಂದರೆ ಚಿಕ್ಕಣ್ಣನ ದೋಬಿ ಅಂಗಡಿಗೆ ಹೋಗಿ ಬಟ್ಟೆ ಇಸ್ತರಿ ಮಾಡಿಸಿಕೊಂಡು ಬರೊದು. +ದೇವಾಂಬ ಅಗ್ರಹಾರದ ನಮ್ಮ ಮೂಲೆಮನೆ ಎಡವಿ ಬಿದ್ದರೆ ಬಲಗಡೆ ಮಗ್ಗಲಲ್ಲಿ ವೀಣೆಶೇಷಣ್ಣ ಅಡ್ಡರಸ್ತೆ. ರಸ್ತೆಯ ಮೂಲೆಯಲ್ಲಿ ನರಸಿಂಹಯ್ಯನವರ ಮನೆ. ಆ ಮನೆಯ ತುದಿಗೆ ಬೀದಿಯ ಕಡೆಗಿದ್ದ ಪುಟ್ಟ ಕೊಠಡಿಯೆ ಚಿಕ್ಕಣ್ಣನ ಅಂಗಡಿ- ಧೋಭೀ ಶಾಪು. ದಿನವು ಇಸ್ತರಿ ಮಾಡಿಸೊಕ್ಕೆ ಬಟ್ಟೆ ಇದ್ದೆ ಇರೊದು: ಅಣ್ಣಂದರದು ಇಲ್ಲ ತಂದೆಯವರದು. ಅಂಗಡಿ ಮೆಟ್ಟಲಮೇಲೆ ನಿಂತು ಚಿಕ್ಕಣ್ಣ ಇಸ್ತರಿ ಮಾಡೊದನ್ನ ನೋಡೊದೆಂದರೆ ನನಗೆ ಬಹಳ ಮೋಜು. “ಅಲ್ಲೇ ಮೇಟಿಕಂಬದ ಹಾಗೆ ನಿಂತಕೊ ಬೇಡ ಇಸ್ತರಿ ಮಾಡಿಸ್ಕೊಂಡು ಬಾ ಅವರಿಗೆ ಅಫೀಸಿಗೆ ಲೇಟಾಗುತ್ತೆ” ಎಂದು ಅಮ್ಮ ಹೇಳಿದ್ದೆ ಸಾಕು ಮನೆಯಾಚೆ ಓಡ್ತಿದ್ದೆ. ನಾನು ಅವರಷ್ಟೆತ್ತರ ಬೆಳದಾಗಲೆ ಗೊತ್ತಾಗಿದ್ದು ಅಡಿಗೆ ಮನೆ ಕಿಟಿಕಿಯಿಂದ ಅಂಗಡಿ ಮೆಟ್ಟಲು, ಕಟ್ಟೆ ಕಾಣಿಸೊದು ಅಂತ. ಚಿಕ್ಕಣ್ಣ “ಈಗಲೇ ಬೇಕಂತೆ” ಅಂತ ನಾನಂದರೆ “ಅರು ಶರ್ಟು ಮೂರು ಪ್ಯಾಂಟು” ಅಂತ ಎಣಿಸಿ, ಬಟ್ಟೆಮೇಲೆ ನೀರು ಚುಮುಕಿಸಿ ಟೇಬಲ್ಲಿನ ಮೇಲೆ ಇಟ್ಟು “ಅಯ್ತರ, ಬನ್ನಿ” ಎಂದೊ; “ಇಲ್ಲೆ ನಿಲ್ಲರ ಒಂದು ನಿಮಿಷ” ಅಂತಲೊ; ಇಲ್ಲ ಅಂದೆನಾದರು ಬಟ್ಟೆ ಜಾಸ್ತಿ ಇತ್ತೊ “ಸ್ವಲ್ಪ ಟೆಮ್ ಅಯ್ತದ್ರಪ್ಪೊ” ಅಂತಲೊ ಹೇಳಿ ಮತ್ತೆ ಇಸ್ತರಿ ಮಾಡೊವರು. ನೀರು ಚುಮುಕಿಸಿದ ಬಟ್ಟೆಮೇಲೆ ಇಸ್ತರಿಪೆಟ್ಟಿಗೆ ಇಟ್ಟಾಗ ‘ಚುಸ್ ಚುಸ್’ ಶಬ್ದ, ಜೊತೆಯಲ್ಲಿ ಬರೊ ಹಬೆ ಅದನ್ನ ನೋಡೊಕ್ಕೆ ನನಗೆ ಚಿಕ್ಕಂದಿನಲ್ಲಿ ಎಲ್ಲಿಲ್ಲದ ಖುಶಿ. ಒಂದೆರಡು ಬಾರಿ ಕೇಳಿದ್ದು ಉಂಟು ಚಿಕ್ಕಣ್ಣ “ನಾನು ಒಂದು ಸರ್ತಿ ಮಾಡಲ”; “ಇಲ್ಲರಪ್ಪೊ ನಿಮಗೆ ಅಗೋಕಿಲ್ಲ ಇದು ನಿಮಗಿನ್ನು ಒಸಿ ಭಾರ”. ಒಮ್ಮೊಮ್ಮೆ ಅಂಗಡಿ ಆಗಿನ್ನು ತೆಗೆದು ಇಸ್ತರಿಪೆಟ್ಟಿಗೆಯಲ್ಲಿ ಇಜ್ಜಲು ಹಾಕಿ, ಬೆಂಕಿಹಚ್ಚಿ ಹೊರಗಡೆ ಚಪ್ಪಡಿ ಕಲ್ಲಿನಮೇಲೆ ಮುಚ್ಚಳ ತೆಗೆದಿಟ್ಟು ಉರಬಿ ಕೆಂಡಮಾಡೊದನ್ನ ನೋಡ್ತಾ ನಿಂತರೆ ಹೇಳುವದಕ್ಕೆ ಆಗದ ಕೂತುಹಲ, ಆಸಕ್ತಿ. ಅಂಗಡಿಯಲ್ಲಿ ಒಂದೆರಡು ಬಾರಿ ನನ್ನ ತರಗತಿಯಲ್ಲೆ ಓದ್ತಿದ್ದ ನಂಜಪ್ಪನ್ನ ನೋಡಿ ಅಶ್ಚರ್ಯವಾಗಿ ಶಾಲೆಯಲ್ಲಿ ಕೇಳಿದ್ದೆ “ಚಿಕ್ಕಣ್ಣ ನಿನ್ನ ತಂದೆನೆನೊ” ಅದಕ್ಕವನು “ಚಿಕ್ಕಪ್ಪ” ಎಂದಷ್ಟೆ ಹೇಳಿದ್ದ. ಸಂಜೆ ಶಾಲೆ ಮುಗಿದಮೇಲೆ ಮನೆ ಮುಂದೆ ‘ಮಾರಿಗುಂಡ’ ಗೋಲಿ ಆಟಕ್ಕೊ; ‘ಕಳ್ಳ-ಪೋಲಿಸ್’ ಆಟಕ್ಕೊ ನಂಜಪ್ಪನು ಕೆಲವು ದಿನ ಬರ್ತಿದ್ದ. ನಾನು ಲೊಯರ್ ಮಿಡಲ್ ಸ್ಕೂಲ್ ಪಾಸಾಗಿ ಹೈಸ್ಕೂಲ್ ಸೇರಿದ್ದೆ. ನಂಜಪ್ಪ ಒಂದು ವಾರವಾದರು ಸ್ಕೂಲಿನಲ್ಲೆಲ್ಲು ಕಣ್ಣಿಗೆ ಬಿದ್ದಿರಲಿಲ್ಲ. ಚಿಕ್ಕಣ್ಣನ್ನ ಕೇಳಿದ್ದಕ್ಕೆ “ಅವನು ಓದಿದ್ದು ಸಾಕ್ರ ಇನ್ನು ಸ್ವಲ್ಪ ಗೈಯೊದು ಕಲಿಲೀ”. ಮಾತಿನ ಅರ್ಥ ಸರಿಯಾಗಿ ತಿಳಿಯದೆ ಏನೊ ಕೆಟ್ಟದ್ದು ಆಗಿರಬೇಕು ಎಂದು ಮನೆಯಲ್ಲಿ ಅಮ್ಮನ್ನ ಹೀಗಂದರು ಚಿಕ್ಕಣ್ಣ ಅಂತ ಕೇಳಿದ್ದೆ. ಅಲ್ಲೆ ಇದ್ದ ಎದರು ಮನೆ ಶೇಷಮ್ಮ ಪಾಠಿ “ಹಳ್ಳಿಲಿ ಕುರಿ ಮೇಯಸೊವನಿಗೆ ಓದಿದ್ದು ಸಾಕು ಅಂತ. ಅದಕ್ಕೆ ನಿನಗೆ ದು:ಖವೆನೋ? ಬೇಕಾದರೆ ಅವನೊಂದಿಗೆ ನೀನು ಹೋಗು ಕುರಿ ಕಾಯೋಕ್ಕೆ” ಎಂದು ಅಮ್ಮನ ಮುಖ ನೋಡಿ ನಕ್ಕು “ಅವನಣ್ಣ ಇದಾನಲ್ಲೊ ಏನೊ ಅವನ ಹೆಸರು?” ಎಂದು ನನ್ನ ನೋಡಿದಾಗ “ಸಿದ್ದು” ಅಂದೆ. “ಅವನು ಇಷ್ಟೂ ಓದಲಿಲ್ಲ. ಸೀದ ಅಂಗಡಿ ಕೆಲಸಕ್ಕೆ ಹಾಕ್ಕೋಂಡ ಚಿಕ್ಕಣ್ಣ. ಈಗ ನಾವೇನು ಓದಿರೋದು ಮಹಾ? ನಿಮ್ಮಮ್ಮ ಮೂರನೆ ಕ್ಲಾಸು ನಾನು ಅದು ಇಲ್ಲ” ಅಂದರು. +ನಾನು ಪ್ರೀ-ಯುನಿವರ್ಸಿಟಿ ಸೇರೊ ಹೊತ್ತಿಗೆ ನೂರಡಿ ರಸ್ತೆಯಲ್ಲಾಗಲೆ ಎರಡು ‘ಡ್ರೈ ಕ್ಲಿನರ್ಸ್’ ಅಂಗಡಿಗಳು ಕಾಣಿಸಿಕೊಂಡಿತ್ತು: ‘ಸನ್ ಲೈಟ್’ ಮತ್ತೆ ಲಕ್ಷ್ಮಿ ಥಿಯೆಟರಿನ ಮುಂದಿದ್ದ ‘ಎಸ್. ಇ. ಎಲ್’ ಲಾಂಡ್ರಿ. ಕಾಲ ಬದಲಾಗಿತ್ತು. ಚಿಕ್ಕಣ್ಣ ಮಾತ್ರ ಬಟ್ಟೆಮೂಟೆಗಳನ್ನ ಕತ್ತೆಮೇಲೆ ಹೇರಿಕೊಂಡು ದೋಬಿಗಾಟ್‌ಗೆ ಸವಾರಿ ಹೋಗೊದು ತಪ್ಪಿರಲಿಲ್ಲ. ನಮ್ಮ ಮನೆಯಲ್ಲು ಬದಲಾವಣೆಯಾಗಿತ್ತು. ಪ್ಯಾಂಟು ಶರ್ಟುಗಳೆಲ್ಲ ನೇರ ‘ಡ್ರೈ ಕ್ಲಿನರ್ಸ್’ಗೆ ಹೋಗಿ ಇಸ್ತರಿ ಮಾಡಿಸೊಕ್ಕೆ ಬಟ್ಟೆಗಳು ಕಡಿಮೆಯಾಗಿತ್ತು. ಅಂದರೆ ಮನೆಯಲ್ಲಿ ದುಡಿದು ಸಂಪಾದಿಸೊವರ ಬಟ್ಟೆಗಳು ನೇರ ಲಾಂಡ್ರಿಗೆ ಇನ್ನು ಮಿಕ್ಕುಳಿದವರ ಬಟ್ಟೆಗಳನ್ನ ಮನೆ ಕೆಲಸದ ತಿಮ್ಮಮ್ಮ ಓಗೆದು ಹಾಕೊವಳು. ನನ್ನ ಚಿಕ್ಕಂದಿನ ಕೆಲಸಗಳನೆಲ್ಲಾ ಈಗ ತಿಮ್ಮಮ್ಮನ ಮಗಳು ಮಾಡ್ತಿದ್ದಳು. ಜುಬ್ಬ, ಪಂಚೆಗಳನ್ನ ಇಸ್ತರಿ ಮಾಡಿಸಿಕೊಂಡು ಬರೊಕ್ಕು ಅವಳೆ ಹೊಗ್ತಿದ್ದಳು. ಹಾಗಾಗಿ ಆ ದಿನಗಳಲ್ಲಿ ವೈಯಕ್ತಿಕವಾದ ಬದಲಾವಣೆಯೆಂದರೆ ನಾನು ಚಿಕ್ಕಣ್ಣನ ಅಂಗಡಿಗೆ ಹೊಗೊದು ಪೂರ್ತಿಯಾಗಿ ನಿಂತಿತ್ತು. ಆಗೊಮ್ಮೆ ಈಗೊಮ್ಮೆ ಸ್ನೇಹಿತರೆನಾದರು ಅಲ್ಲಿ ಅಂಗಡಿಯ ಹತ್ತಿರ ಕಂಡರೆ ನಾನು ಒಂದೆರಡು ಕ್ಷಣ ನಿಂತು ಕಾಡ್ಹರಟೆ ಹೊಡೆಯುತ್ತ ಹಾಗೆ ಚಿಕ್ಕಣ್ಣನ ಕೂಡವು ಒಂದೆರಡು ಮಾತಾನಾಡಿ ಬರುವುದೆಷ್ಟೊ ಅಷ್ಟೆ. +ಈಗಲೂ ನ್ಯೂಯಾರ್ಕಿನಿಂದ ಮೈಸೂರಿಗ್ಹೊದಾಗಲೆಲ್ಲಾ ಅಂಗಡಿಗೆ ಹೋಗಿ ಚಿಕ್ಕಣ್ಣನವರನ್ನ ಒಂದೆರಡು ನಿಮಿಷ ಮಾತಾಡಿಸಿ ಬರೊ ರೂಡಿ ನನ್ನದು. ಚಿಕ್ಕಣ್ಣ ನನಗೆ ತಿಳಿದಂಗೆ ಜಾಸ್ತಿ ಮಾತಿನ ಮನುಷ್ಯನಲ್ಲ. “ಅಲ್ಲಿ ಬರಿ ಕಾರು ಅನ್ನಿ? ಇಮಾನದಲ್ಲಿ ಎಷ್ಟು ದಿನ ಅಯ್ತದ್ರ ಹೊಗೊಕ್ಕೆ? ಅದ್ಯಾಂಗ್ ಬುದ್ದಿ ಈಗ ಅಲ್ಲಿ ರಾತ್ರಿ, ನಮ್ಗಿಲ್ಲಿ ಸೂರ್ಯ ಬೆಳಗ್ತವನೆ ಮತ್ತೆ?” ಹೀಗೆ ಕೂತುಹಲದಿಂದ ಒಂದೆರಡು ಪ್ರಶ್ನೆಗಳನ್ನ ಕೇಳ್ತಿದ್ದಿದ್ದೆಷ್ಟೊ ಅಷ್ಟೆ. ನಾನು ಕೂಡ “ಹೇಗಿದ್ದಿರ ?” “ನಂಜಪ್ಪ ಎನು ಮಾಡ್ಕೊಂಡಿದಾನೆ ?” “ಸಿದ್ದು ಎಲ್ಲಿದಾನೆ ?” ಅಂತ ವಿಚಾರಿಸಿ ಒಂದೆರಡು ಮಾತಾಡಿ ಬರುತಿದ್ದೆ. ಕೆಲವು ವರುಷಗಳ ಹಿಂದೆ ಚಿಕ್ಕಣ್ಣನ ನೆರತ ಕೂದಲನ್ನು ಕಂಡು ಮೊದಲಬಾರಿಗೆ ಅವರ ವಯಸ್ಸೆಷ್ಟಿರಬಹುದೆಂದು ಮನ ಎಣಿಸಿತ್ತು. ನನ್ನ ತಂದೆಯ ವಯಸ್ಸಿರಬೇಕು. ಮೀಸೆ ಬಿಟ್ಟ ಕುಳವಲ್ಲ ಇದು ಎಂದು ಮನಸ್ಸಿಗೆ ಬಂದಾಗ ನನ್ನ ತಂದೆ ಮುಖದಲ್ಲಿ ಮೀಸೆ ಕಂಡ ನೆನಪಾಗದೆ ನಗು ಬಂದಿತ್ತು. ಬಿಳಿ ಪಂಚೆ ಮೇಲೆ ಬಿಳಿ ಬನಿಯನ್ನು. ಆ ವಯಸ್ಸಿಗೆ ಸಾಮಾನ್ಯವಾಗಿ ಎಲ್ಲಾ ಗಂಡಸರಿಗೂ ಸೊಂಟದ ಸುತ್ತ ಎದ್ದು ಕಾಣುವ ಬೊಜ್ಜು ಸ್ವಲ್ಪವು ಇರಲಿಲ್ಲ. ಗಟ್ಟಿಮುಟ್ಟಾದ ಆಳು. ಅರು ದಶಕಕ್ಕೂ ಹೆಚ್ಚಿನ ಜೀವನ ಕಂಡ ಕಣ್ಣು. ಅಂದು ಕೇಳಿದ್ದೆ “ಚಿಕ್ಕಣ್ಣ ನೀವು ಸಿದ್ದು ಜೋತೆಯಲ್ಲಿ ಅವನ ಮನೆಯಲ್ಲಿ ಇರಬಹುದಲ್ಲ?” ಅದಕ್ಕವರು “ಅದ್ಯಾಕ್ ಬುದ್ದಿ ಹಂಗ್‌ಹೇಳಿರ. ನನಗೇನಾಗದೆ ಗುಂಡ್ ಗುಂಡ್‌ಕಲ್ಲು ಇದ್ದಂಗ್ ಇವ್ವನಿ” ಅಂದರು. +ನಕ್ಕು “ನಾನು ಹೇಳಿದ್ದು ಸೊಸೆ ಸೇವೆ ಮಾಡಲಿ ಅಂತ, ಸಾಕು ದುಡಿದಿದ್ದು ಅಂತ ಅನಿಸೊಲ್ಲವೇ ನಿಮಗೆ ?” +“ಹೋ ಹಂಗರ…..ತಿಳಿತ್ತ್‌ರ…. ಚಿಕ್ಕ ಮಕ್ಕಳು ಸೆಂದಾಗಿರಲಿ ಬುಡಿ….ನಾ ಹೋದರೆ ಬೇಡ ಅನ್ನೊಕಿಲ್ಲ ಅವಂ….ಆದರೂ ಒಂದೆರಡು ದಿನದ ಮಾತು ಬೇರೆ….ಅಲ್ಲೇ ಇರೊದು ತೆಪ್ಪು… ಬೇಡಿ……ಈ ರಟ್ಟೆಲಿ ಈ ಪೆಟ್ಟಿಗೆ ಎತ್ತೋ ಸಕ್ತಿ ಇರೊಗಂಟ ದುಡಿಯೊದ್ರ…..ಅಷ್ಟೇಯ…ಅದು ಬಿಟ್ಟು ನಂಗ ಮಾಡೊಕ್ಕೆ ಬೇರೆ ಇನ್ನೇನು ಬಂದಾತು ಹೇಳಿ”. ಚಿಕ್ಕಣ್ಣನ ಆ ಮಾತು ಕೇಳಿ ಅಚ್ಚರಿಯಾಗಿತ್ತು. ಹೇಳಲು ಏನು ತೋರದೆ ಹಾಗೆ ಬಂದಿದ್ದೆ. +ಈ ಬಾರಿ ಈಗ ಮೂರು ತಿಂಗಳ್ಹಿಂದೆ ಹೋದಾಗ ಗಣಪತಿ ಹಬ್ಬ ಆಗಿನ್ನು ಮುಗಿದಿತ್ತು. ಎರಡು ದಿನ ಪಕಡದಸ್ತಾಗಿ ಊಟ ಹೊಡೆದು ಮಲಗಿ ಮೂರನೆ ದಿನವು ಬೆಳಿಗ್ಗೆ ಅಕ್ಕಿರೊಟ್ಟಿ ಗಟ್ಟಿ ಚಟ್ನಿ ಒಂದು ನಾಕು ಕತ್ತರಸಿ ಮಂಚದಮೇಲೆ ಬಿದ್ದವನಿಗೆ ಎಚ್ಚರವಾದಗ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಅಡಿಗೆಮನೆಯಲ್ಲಿ ಹೂಜಿಯಿಂದ ಕಾದಾರಿದ ನೀರನ್ನು ದೊಡ್ಡದಾದ ಸ್ಟೀಲ್ ಲೋಟವೊಂದಕ್ಕೆ ಬಗ್ಗಿಸಿಕೊಂಡು ಗಟಗಟ ಕುಡಿದು ಹಾಗೆ ಕಿಟಕಿಯಲ್ಲಿ ನೋಡಿದಾಗ ಮೊದಲಿಗೆ ಕಣ್ಣಿಗೆ ಬಿದ್ದದ್ದು ಕಾಕ ಅಂಗಡಿ ಹತ್ತಿರ ಕಟ್ಟಿದ್ದ “ಸ್ಟೇಜು”; ಅದರಮೇಲೆ ನಿಂತ ನಾಕಾರು ಬೀದಿ ಹುಡುಗರು ಏನನ್ನೋ ಮಾಡ್ತಿದ್ದದ್ದು. ಸಂಜೆ ಏನಾದರು ಕಾರ್ಯಕ್ರಮ ಇರುತ್ತೆ ಎಂದುಕೊಂಡವನಿಗೆ ಚಿಕ್ಕಣ್ಣನ ಅಂಗಡಿ ಮುಂದಿನ ಕಟ್ಟೆ, ಮೆಟ್ಟಲು ಕಾಣಾದೆ ಅಶ್ಚರ್ಯವಾಗಿ ಮತ್ತೊಮ್ಮೆ ನೋಡಿದೆ. ಎಷ್ಟೊ ವರ್ಷಗಳಿಂದ ನೋಡಿ ನೋಡಿ ಕಣ್ಣಿಗೆ ಕಟ್ಟಿದಂತಿದ್ದ ಬೀದಿಯವರೆಗೂ ಬರುವ ಕೆಳಮಟ್ಟಕ್ಕಿದ್ದ ಕೆಂಪು ಬಣ್ಣದ ಎರಡು ಕಟ್ಟೆಗಳು ಇರಲಿಲ್ಲ. ಹೊಸಲಿನ ಉದ್ದಕ್ಕೂ ಇದ್ದ ಎರಡು ಮೆಟ್ಟಲುಗಳು ಮಾಯವಾಗಿ ನೆಲ ಸಮನಾಗಿ ಚಪ್ಪಟ್ಟೆಯಾಗಿ ಕಂಡಿತ್ತು. ಆ ಹೊತ್ತಿನಲ್ಲೆಂದೂ ಕದ ಮುಚ್ಚದ ಚಿಕ್ಕಣ್ಣನ ಅಂಗಡಿ ಬಾಗಿಲಿಗೆ ಬೀಗ ಬಿದ್ದಿತ್ತು. ಹಸಿರು ಬಾಗಿಲಿಗೆ ಹೊಸದಾಗಿ ಬಣ್ಣ ಹೊಡೆದಂತಿತ್ತು. ಮನೆಯಲ್ಲಿ ಯಾರನ್ನಾದರು ಕೇಳಿದರೆ ಗೊತ್ತಾಗುತ್ತೆ ಎಂದು ಹಜಾರಕ್ಕೆ ಬಂದವನಿಗೆ ಮೂವತ್ತು ವರ್ಷಕ್ಕೂ ಹಿಂದೆ ಶೇಷಮ್ಮ ಪಾಠಿ ಗೇಲಿ ಮಾಡಿದ್ದು ನೆನಪಿಗೆ ಬಂದಿತ್ತು. ಪಾಠಿಯು ಇರಲ್ಲಿಲ್ಲ ಇಂದು ನನ್ನ ತಾಯಿಯು ಬದುಕಿರಲಿಲ್ಲ. ಅಲ್ಲಿಯೇ ಇದ್ದ ನನ್ನ ಅತ್ತಿಗೆಯನ್ನು ಕೇಳೊಣವೆಂದೆನಿಸಿ ಅವರಿಗೆ ತಿಳಿದಿರಲಾರದೆಂದು ಉಹಿಸಿ “ಮನ್ನಿ ಇಲ್ಲೆ ಒಂದು ಸುತ್ತು ಹೊಗಿದ್ದು ಬರ್ತಿನಿ” ಎಂದು ಹೊರ ನಡೆದೆ. “ಮಳೆ ಬಂದರು ಬರಬಹುದು ಬೇಗ ಬಂದ್ಬಿಡಿ” ಎಂದು ಹೇಳಿದ್ದು ಕೇಳಿಸಿತ್ತು. +ಆಷಾಢ ಮುಗಿದು ಮಳೆಗಾಲವಿನ್ನು ಪ್ರಾರಂಭವಾಗಿರದ ಆ ಸಪ್ಟೆಂಬರ್ರಿನ ಮಧ್ಯಾಹ್ನ ಬಿಸಿಲು ಇಲ್ಲದೆ ಚಳಿಯು ಆಗದೆ ಹಿತವಾಗಿದ್ದರೂ ಈಗಲೋ ಆಗಲೋ ಮಳೆ ಬಂದರು ಬರಬಹುದೆನೊ ಎನ್ನುವಂತಿತ್ತು. ಬಲಕ್ಕೆ ಮೂಲೆ ತಿರುಗಿದವ ಮನೆಯ ಹಿಂಬಾಗಕ್ಕಿದ್ದ ಗಲ್ಲಿಯ ಕಡೆ ಒಮ್ಮೆ ನೋಡಿದೆ. ಬೆಳಿಗ್ಗೆ ಹೊತ್ತು ವರಾಂಡದಲ್ಲಿ ತರಕಾರಿ ಮಾರುತಿದ್ದ ಮೂಲೆ ಮನೆ ಪಾಳು ಬಿದ್ದಿತ್ತು. ಆ ಮನೆಯ ಮುಂದಿದ್ದ ಪಂಪೊತ್ತುವ ಬೀದಿ ನಲ್ಲಿಯಲ್ಲಿ ನೀರು ಬರುತ್ತೊ ಇಲ್ಲವೋ ನೋಡಬೇಕೆಂಬ ಕುತೂಹಲವಾಯಿತು. ಆ ಪಾಳುಬಿದ್ದ ಮನೆಯ ಪಕ್ಕದ್ದೆ ಸೂಳೆ ಮಾದಮ್ಮನ ಮನೆ. ಈಗ ಒಂದೆಂಟು ವರ್ಷದಿಂದ ವ್ಯವಹಾರ ಚಾಲ್ತಿಯಲ್ಲಿ ಇಲ್ಲದೆ ಮನೆಗೆ ಬೀಗ ಬಿದ್ದಿದೆ. ಗಲ್ಲಿ ದಾಟಿ ಹತ್ತು ಹೆಜ್ಜೆ ನಡೆಯೋದರಲ್ಲಿ ಚಿಕ್ಕಣ್ಣನ ಅಂಗಡಿ ಮುಂದೆ ಬಂದಿದ್ದೆ. ಚೇಚು ಸಿಕ್ಕರೆ ವಿಷಯ ತಿಳಿಯುತ್ತೆ ಎಂದೆನಿಸಿ ಮುಂದೆ ನಡೆದವನು ಅಂಗಡಿ ಕಿಟಕಿಲಿ ಇಣುಕಿ ನೋಡಿದರೆ ಏನಾದರು ತಿಳಿಯಬಹುದೆಂದು ಹಿಂದಕ್ಕೆ ತಿರುಗಿದಾಗ ನಿರಾಸೆಯಾಗಿತ್ತು. ಕಿಟಿಕಿ ಮುಚ್ಚಿತ್ತು. +ಚೇಚು ಪೂರ್ತಿಹೆಸರು ಶೇಶಾದ್ರಿ. ಚೇಚು ನನ್ನ ದೊಡ್ಡಣ್ಣನ ಜೊತೆ. ಅವರಿಗಿಂತ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವನಿರಬೇಕು. ಚೇಚುಗೆ ಇಡಿ ಕೆ.ರ್. ಮೊಹಲ್ಲಾದ ಎಲ್ಲಾ ಪೋಲಿ ಪೋಕರಿಗಳ ಜೊತೆಗೆ ಗೂಂಡಾಗಳ ಪರಿಚಯ ಸಹವಾಸ. ‘ಡಿಚ್ಚಿ ಚೀದಿ(ಶ್ರೀಧರ)’, ‘ಮೆಂಟಲ್’ ರಾಮ, ಹಾಲುಮಾರೊ ಚಾಟಿಬೋರ, ಮಹದೇವು, ಲಕ್ಷ್ಮಣ, ‘ರುದ್ರ ಉರುಫ್ ಮೂಗ’ ಹಾಗು ನನಗೆ ಗೊತ್ತಿಲ್ಲದ ಇನ್ನು ಅನೇಕ ರೌಡಿಗಳೊಂದಿಗೆ ಅವನ ಸ್ನೇಹ. ಸುತ್ತಾಮುತ್ತಾ ಇದ್ದ ಸಿನೆಮಾ ಟಾಕಿಸ್‌ನಲ್ಲಿ ರಾಜ್‌ಕುಮಾರ್ ಚಿತ್ರಕ್ಕೆ ಮೊದಲನೆ ದಿನ ಟಿಕೆಟ್ಟು ಬೇಕು ಅನ್ನಿ ನಮ್ಮ ಚೇಚುಗೆ ಹೇಳಿದರೆ ಸಾಕು. “ಏಯ್ ಪಿಕ್ಚರ್ ಸುಮಾರಾಗಿದೆ ನಾಕುವಾರ ಓಡುತ್ತಷ್ಟೆ” ಅಂತಲೊ “ಚೆನ್ನಾಗಿದೆ ನೂರು ದಿನಕ್ಕೆ ಮೋಸ ಇಲ್ಲ” ಅಂತಲೊ ಹೇಳಿ ಅವನ ಛೇಲಾಗಳ ಹತ್ತಿರ ಟಿಕೆಟ್ಟು ತರಿಸಿ ಕೊಡುತ್ತಿದ್ದ. +ಚೇಚುಗು ಚಿಕ್ಕಣ್ಣನ ಅಂಗಡಿಗು ಬಹಳ ಹಿಂದಿನ ನಂಟು. ಬೆಳಿಗ್ಗೆ ಎದ್ದು ಅಂಗಡಿ ಮೆಟ್ಟಲಮೇಲೆ ನಿಂತು ಸೀಗರೆಟು ಸೇದುತ್ತ, ಪ್ರಜವಾಣಿ ಓದುತ್ತಾ, ಚಿಕ್ಕಣ್ಣನೊ ಇಲ್ಲ ಸಿದ್ದುವೊ, ಕಾಕ ಅಂಗಡಿ ಪಕ್ಕದ ತಮ್ಮಣ್ಣನವರ ‘ಜಾಯ್‌ಹೌಸ್’ನಿಂದ ತರೆಸಿದ ಕಾಫಿ ಕುಡಿದ ಮೇಲೆಯೆ ಮುಂದಿನ ಕೆಲಸ ಚೇಚುಗೆ. ಅಂದಕಾಲತಿಲ್ಲೆ ಫಾತಿಮ ಅನ್ನೊ ಹೆಣ್ಣು ಮಾದಮ್ಮನ ಮನೆಯಲ್ಲಿತ್ತು. ಬಹಳ ಸುಂದರವಾಗಿದ್ದಳು ಅನ್ನೋ ಮಾತು ಮೊಹಲ್ಲಾ ತುಂಬಾ ಹಬ್ಬಿತ್ತು. ಆಕೆಗೆ ಚೇಚುನ ಕಂಡರೆ ಇಷ್ಟ ಚೇಚುಗೆ ಅವಳು. ಆದರೆ ಸೂಳೆಮನೆ ಒಳಗೆ ಚೇಚುಗೆ ಕಾಲಿಡೊಕ್ಕೆ ಬಿಡತಿರಲಿಲ್ಲವಂತೆ. ಮಾದಮ್ಮ “ಅಯ್ಯೋ ಬೇಡರಪ್ಪೊ ನೀವು ಬ್ರಾಹಂರು ಬೇಡ. ನಿಮಗೆ ಯಾರು ಬೇಕು ಹೇಳಿ ಹೊರಗೆ ನಾನೆ ಕಳುಹಿಸಿಕೊಡ್ತಿನಿ” ಅನ್ನೊವಳಂತೆ. ಹೀಗೆ ಒಂದು ದಿನ ಮಧ್ಯಾಹ್ನದ ಹೊತ್ತಿನಲ್ಲಿ ಸಿದ್ದುನ ಅಂಗಡಿ ಹೊರಗೆ ಕಾವಲು ನಿಲ್ಲಸಿ, ಒಳಗೆ ಇಸ್ತರಿ ಮಾಡೊ ಟೇಬಲ್ಲಿನ ಕೆಳಗೆ ಫಾತಿಮ ಜೋತೆ ನಮ್ಮ ಭೂಪ ‘ಢಮ್ಕಿಲಿಕ್ಕಿ ಢಮಾಲಿಕ್ಕಿ’ ಅಂತೆ. ಹೊರಗೆ ನಿಂತ ಸಿದ್ದುಗೆ ಪಾಪ ಚಿಕ್ಕಪ್ಪ ಯಾವಗ ದೋಬಿಗಾಟಿನಿಂದ ಬಂದುಬಿಡುತ್ತಾರೊ ಅನ್ನೋ ಅತಂಕ. ಹಾಗೆನಾದರು ಬಂದರೆ ಚೆನ್ನಾಗಿರೊಲ್ಲ ತೊಂದರೆಯಾಗುತ್ತೆ ಅನ್ನೊ ಹೆದರಿಕೆ ಭಯ. ಆದರೆ ಹಾಗೇನು ಆಗಲಿಲ್ಲವಂತೆ. +ಚೇಚುನ ಅಗ್ರಹಾರದಲ್ಲಿ ಹುಡ್ಕೊದು ಸುಲಭ. ಚಿಕ್ಕಣ್ಣನ ಅಂಗಡಿ, ಕಾಕ ಅಂಗಡಿ ಮೂಲೆ, ‘ಜಾಯ್‌ಹೌಸು’, ಲಕ್ಷ್ಮಿ ಟಾಕಿಸಿನ ಮುಂದಿದ್ದ ಅಟೊಸ್ಟಾಂಡು ಅಲ್ಲೆಲ್ಲೂ ಇಲ್ಲವೆಂದರೆ ನೂರಡಿ ರಸ್ತೆಯಲ್ಲಿದ್ದ ‘ನವೀನ ಬಾರು’, ಆಗೊಮ್ಮೆ ಈಗೊಮ್ಮೆ ಮನೆ- ಇದಿಷ್ಟೆ ಅವನ ಠಿಕಾಣ. ಸ್ಟೇಜ್ ಹಾಕಿದ್ದ ಚೌಕದ ಹತ್ತಿರವೆಲ್ಲೂ ಕಣ್ಣಿಗೆ ಕಾಣದೆ ಅಟೊಸ್ಟಾಂಡ್ ಹತ್ತಿರ ನೋಡೊಣವೆಂದುಕೊಳ್ಳುತ್ತಾ ಲಕ್ಷ್ಮಿ ತಿಯೇಟರ್ ಕಡೆ ತಿರುಗಿ ಡೌನ್ ಇಳಿದವನಿಗೆ ‘ಗುರು ಸೌಂಡ್ ಸಿಸ್ಟಂಸ್’ ಅಂಗಡಿ ಮುಂದೆ ಚೇಚು ಕಂಡಿದ್ದ. ನನ್ನನ್ನು ನೋಡಿದವನೆ +“ಒಹೋ ಪರಂಗಿಗಳು ಯಾವಾಗ ಇಳಿದಿದ್ದು ?” +“ಮೂರು ದಿನ ಅಯ್ತು” +ಉಭಯ ಕುಶಲೋಪರಿ ಮಾತಾಡುತ್ತ ನೂರಡಿ ರಸ್ತೆಯ ಬಳಿ ಬಂದೆವು. ವಾಹನಗಳು ಓಡಾಡೊ ಶಬ್ದ, ಮೂಲೆಯಲ್ಲಿ ಸಾಲಾಗಿ ನಿಂತ ಅಟೊಗಳು, ರಸ್ತೆಬದಿಗಿದ್ದ ಅಂಬಳೆ ಅಣ್ಣಯ್ಯ ಪಂಡಿತರ ಸ್ಕೂಲಿನ ಗೋಡೆ ಕಡೆಯಿಂದ ಉಚ್ಚೆಯ ಗಬ್ಬುನಾತ, ಶಾಲೆಯ ಮುಂಬಾಗದ ‘ಫುಟ್‌ಪಾತಿ’ನಲ್ಲಿ ದಿಮ್ಮಿಯೊಂದರಮೇಲೆ ಕೂತಿದ್ದ ಎಳನೀರು ಮಾರುವವ, ಬಸ್‌ಸ್ಟಾಪಿನ ಹಿಂದೆ ಮರದ ನೆರಳಲ್ಲಿ ಬೀಡಿ ಸೇದುತ್ತಾ ಕೂತ ಜೋಡು ಹೊಲಿಯವವ, ದೊಡ್ಡಮೋರಿಯ ಕಟ್ಟೆಮೇಲೆ ಸುಮ್ಮನೆ ಕೂತ ನಾಕಾರು ಮಂದಿ. +“ಅಂಗಡಿ ಕಟ್ಟೆ ಮೆಟ್ಟಲು ಒಡೆಸಿ ಚಿಕ್ಕಣ್ಣ ಏನೊ ಮಾಡಿದಾಗಿದೆ ?” +“ಸೀಗರೇಟು ಗಿಗರೇಟು ಸೇದ್ತಿಯೊ ಅಥವಾ ಇನ್ನು ಏನು ಇಲ್ಲವೊ? +“ಇಲ್ಲ” +ಕಾಕ ಅಂಗಡಿಲಿ ‘ವಿಲ್ಸ್‌ಫಿಲ್ಟರ್’ ತಗೊಂಡು ಅಲ್ಲೆ ಇದ್ದ ಸೀಮೆಎಣ್ಣೆ ಬುಡ್ಡಿಯಲ್ಲಿ ಅದಕ್ಕೆಂದೆ ಇಟ್ಟಿದ್ದ ಕಾಗದದ ತುಂಡ್ಹಿಡಿದು ಹೊತ್ತಿಸಿಕೊಂಡವನು +“ಕಾಫಿ ಕುಡಿಯೋಣವ ?” +“ಹೂಂ” +ರಸ್ತೆ ದಾಟುತ್ತ “ನನ್ನ ಹುಡ್ಕೊಂಡು ಬಂದಂಗಿದೆ ಅದನ್ನ ಕೇಳೊದಕ್ಕೆ ?” +“ಹೂಂ ಹೌದು” +ಲಕ್ಷ್ಮಿ ಟಾಕಿಸಿನ ಪಕ್ಕದಲ್ಲಿದ್ದ ಲಕ್ಷ್ಮಿಭವನದಲ್ಲಿ ಕೂತವಿ. +“ಅಂಗಡಿ ಏನಾಯಿತು ಅಂತ ಎರಡು ನಿಮಿಷದಲ್ಲಿ ಹೇಳಬಹುದು. ನಿನಗೆ ಟೈಮ್ ಇದ್ದರೆ ‘ಫುಲ್ ಸ್ಟೊರಿ’ ಹೇಳತ್ತಿನಿ… ನೀನು ಕೇಳೊದಿದ್ದರೆ.” +“ಹೂಂ ಅದಕ್ಕೆ ನಿನ್ನ ಹುಡ್ಕೊಂಡು ಬಂದಿರೊದು ಹೇಳು ಕೇಳ್ತಿನಿ.” +ತುಂತರು ಮಳೆ ಶುರುವಾಗಿದ್ದು ಕಿಟಕಿಯಲ್ಲಿ ಕಂಡಿತ್ತು. ಚೇಚು ಚಿಕ್ಕಣ್ಣನ ಕಥೆ ಹೇಳಿದ. +ಕೆಂಪಸಿದ್ದನಹುಂಡಿ ಅನ್ನೋ ಹಳ್ಳಿ ಇದೆ ಬನ್ನೂರು ಹತ್ತಿರ- ಅಲ್ಲಿ ಹುಟ್ಟಿದ್ದು. ತಂದೆ ಎರಡನೆ ಹೆಂಡತಿ ಮಗ. ಹೆರಿಗೆಲಿ ತಾಯಿ ಸತ್ತು ಮಗು ಬದುಕಿ ಉಳಿತು. ಅಪ್ಪನಿಗೆ ವಯಸ್ಸಿಗೆಬಂದ ಮೊದಲನೆ ಹೆಂಡತಿ ಮಗನಿದ್ದರು ಇನ್ನೊಂದು ಮದುವೆ ಆಸೆ ಚಪಲ. ಮೂರನೆ ಮದುವೆಗೆ ಸಾಲ ಕೊಡಲ್ಲ ಅಂದರು ಗೌಡರು. ಆ ಕೋಪ ಎಷ್ಟು ವರ್ಷವಾದರೂ ಇಳಿಲಿಲ್ಲವಂತೆ. ಈಚಲಮರ ಹತ್ತೊದು, ಇಳಿಸೊದು, ಗೌಡರಮನೆಗೆ ಕೊಟ್ಟು ತಾನು ಚೆನ್ನಾಗಿ ಕುಡಿಯೊದು. ಎದ್ವಾತದ್ವಾ ಮೊಖಮೂತಿ ನೋಡದೆ ಹೊಡಿಯೊದು. ‘ನಿನ್ನ ಹೆತ್ತವಳನ್ನೆ ತಿಂದ್ಯಲ್ಲೊ’, ‘ಹಡದವಳ್ನೆ ನುಂಗ್ಹಾಕ್ಕೊಂಡ್ಯಲ್ಲೊ ಇನ್ನು ನನಗೇನು ಮಾಡ್ತಿ’, ‘ತಾಯಿನ ತಿಂದ ಸೂಳೆಮಗನೆ’ ಅಂತ ಮುಖ ತಿವಸ್ಕೊಂಡು ತಿವಸ್ಕೊಂಡೆ ಬೆಳದಿದ್ದು. ಕುರಿ ಕಾಯೊದು, ಗೌಡರ ಮನೆಗೆ ಜೀತ ಮಾಡೊದು ಅಷ್ಟೆ. ಪ್ರೀತಿ ಅಂತ ಕಂಡಿದ್ದು ಅಂದರೆ ಇವರ ಅಣ್ಣ- ದೊಡ್ಡಣ್ಣ. ಚಿಕ್ಕಣ್ಣನಿಗೆ ಹದಿನೆಂಟು ತುಂಬೊದರಲ್ಲಿ ಅಪ್ಪ ಆದೆನೊ ಕಾಯಿಲೆ ಬಂದು ಸತ್ತ. ಅಷ್ಟ್ರಲ್ಲಿ ದೊಡ್ಡಣ್ಣನಿಗೆ ಮದುವೆಯಾಗಿ ಎರಡು ಮಕ್ಕಳಾಗಿದ್ದವು. ಚಿಕ್ಕಣ್ಣ ಚಿಕ್ಕಪ್ಪನಾಗಿದ್ದ. ಅಪ್ಪನ ಸಾಲ ತೀರಿಸೊಕ್ಕೆ ಜೀತ ಮಾಡದೆ ವಿಧಿ ಇರಲಿಲ್ಲ. ಅತ್ತಿಗೆನೂ ದುಡಿತಿದ್ದಳು. ದೊಡ್ಡಣ್ಣ ಒಂದು ದಿನ ತಮ್ಮನ್ನ ಕೂರಿಸ್ಕೊಂಡು ಹೇಳಿದ. “ತಮ್ಮಣ್ಣ, ನೀನು ಮೈಸೂರಿಗೆ ಹೋಗು. ಅಲ್ಲಿ ಏನಾದರು ಕಸುಬು ಕಲತು ನಿನ್ನ ಕಾಲಮೇಲೆ ನಿಂತಕೊ ಇಲ್ಲೆ ಇದ್ದರೆ ಇಷ್ಟೆ- ಜೀವನ ಪೂರ್ತಿ ಕುರಿಕಾಯೋದು. ನೀನು ಹೋದರೆ ಇವಕ್ಕು ಮುಂದಕ್ಕೆ ಏನಾದರು ಗತಿ ಅಗುತ್ತೆ. ನಾನು ಮೇಷ್ಟರಿಗೆ ಮಾತಾಡಿದಿನಿ ಅವರು ಎನಾದರು ದಾರಿ ಮಾಡ್ತಾರೆ” ಅಂತ. ಬನ್ನೂರಿನಲ್ಲಿ ಶ್ರೀರಾಮಚಂದ್ರನ ಒಂದು ದೇವಸ್ಥಾನ ಇದೆ. ಮೈಸೂರಿನ ಒಬ್ಬ ಬಡಬ್ರಾಹ್ಮಣ ಬನ್ನೂರಿನಲ್ಲಿ ಮೇಷ್ಟರಾಗಿದ್ದರು. ಅವರದ್ದು ಇನ್ನೊಂದು ಕತೆ ಅದು ಇನ್ನ್ಯಾವತ್ತಾದರು ಹೇಳ್ತಿನಿ- ಇರಲಿ. ಶಾಲೆಯು ದೇವಸ್ಥಾನದಲ್ಲೆ ಅವರ ಸಂಸಾರವು. ಅಲ್ಲೆ ಪ್ರಾಕಾರದ ಮೂಲೆಯೊಂದರಲ್ಲಿ ವಾಸ. ಮಾರನೆ ದಿನ ಚಿಕ್ಕಣ್ಣನ ಕರಕೊಂಡು ದೇವಸ್ಥಾನಕ್ಕೆ ಹೋದರು ದೊಡ್ಡಣ್ಣ. ಮೇಷ್ಟರು ಪೂಜೆ ಮುಗಿಸಿ ಮಕ್ಕಳು ಯಾವಾದಾದರು ಶಾಲೆಗೆ ಬಂದಾವೊ ಅಂತ ದಾರಿ ನೋಡ್ತಿದ್ದರು. “ಅಡ್ಡಬಿದ್ದೆ ಅಯ್ಯನೊವರೆ ನನ್ನ ತಮ್ಮ.. ಜೀವನಕ್ಕೆ ಒಂದು ದಾರಿ ತೋರಿಸಬೇಕು” ಅಂತ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಚಿಕ್ಕಣ್ಣನು ಕಾಲಿಗೆ ಬಿದ್ದ. “ಶನಿವಾರ ಬಾರೊ ಅಪ್ಪ, ಎಲ್ಲಾ ಅವನಿಚ್ಚೆ” ಅಂತಂದು ಗರ್ಭಗುಡಿ ಕಡೆ ಒಮ್ಮೆ ನೋಡಿ “ಒಳ್ಳೆದಾಗಲಿ ಹೊಗಿದ್ದು ಬನ್ನಿ” ಅಂದರು. ಅಣ್ಣನ ಹಿಂದೆ ಕೈಕಟ್ಟಿ ನಿಂತವನು ಹಾಗೆ ಹಿಂದಕ್ಕೆ ನಡೆದು ಬಂದ. +ಆ ಕಾಲದಲ್ಲಿ ತೋಗರಿಬೀದಿಲಿ ಧರ್ಮಪ್ಪ ಅಂಥಾ ಇದ್ದರು. ದಾನ ಧರ್ಮ ದೇವರು ದಿಂಡರು ಅಂತ ಬಾಳಿ ಬದುಕಿದವರು. ಮೇಷ್ಟರು ಚಿಕ್ಕಣ್ಣನ್ನ ಅವರ ಮನಗೆ ಕರಕೊಂಡುಹೊಗಿ ಜೀವನಕ್ಕೆ ಎನಾದರು ಮಾಡಿ ಗೌಡರೆ ಅಂದರು. ಚಿಕ್ಕಣ್ಣನಿಗೆ ಓ ಅಂದರೆ ಟೊ ಅನ್ನೊಕ್ಕು ಬರೊಲ್ಲ ಅಂತ ಗೊತ್ತಾದಮೇಲೆ ಗೌಡರು ಎದರು ಗಲ್ಲಿಯಲ್ಲಿ ಇಸ್ತರಿಮಾಡ್ತಿದ್ದ ಮುದುಕ ಮುನಿಯಣ್ಣನೊಂದಿಗೆ ಇರೊಕ್ಕೆ ಹೇಳಿದರು. ಆ ವಯಸ್ಸಿನಲ್ಲಿ ಮುದುಕನಿಗು ಒಂದಾಸರೆ ಆಗುತ್ತೆ ಚಿಕ್ಕಣ್ಣನಿಗೊಂದು ಕಸುಬಾಗುತ್ತೆ ಅಂತ ಅವರೆಣೆಸಿದ್ದು. ಹಣ್ಣ್‌ಹಣ್ಣಾದ ಮುದುಕ ಒಂದುಕಾಲನ್ನ ಪರಲೋಕದಲ್ಲಾಗಲೆ ಇಟ್ಟಾಗಿತ್ತು. ಒಂದೆರಡು ತಿಂಗಳಲ್ಲೆ ಮುನಿಯ ಸತ್ತ. ಚಿಕ್ಕಣ್ಣ ಸುತ್ತಮುತ್ತ ಬೀದಿಗಳಿಗೆ ಅಗಸನಾದ. +ಇದೆಲ್ಲಾ ಆದಾಗ ನಮ್ಮ ದೇಶಕಿನ್ನು ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅಂದರೆ ನಾನಿನ್ನು ಹುಟ್ಟಿರಲಿಲ್ಲ. ದೋಬಿಯಾದ ಒಂದೆರಡು ವರ್ಷಕ್ಕೆ ಮುನಿಯನ ಜಾಗ ಬಿಡಬೇಕಾಗಿಬಂತು ಚಿಕ್ಕಣ್ಣನಿಗೆ. ಗೌಡರು ವೀಣೆಶೇಷಣ್ಣ ರಸ್ತೆಲಿದ್ದ ನರಸಿಂಹಯ್ಯನವರಿಗೆ ಹೇಳಿ ಅವರು ಸಂತೋಷವಾಗಿ ಅವರ ಮನೆಯ ತುದಿಗಿದ್ದ ಒಂದು ಪುಟ್ಟಜಾಗವನ್ನ ಬಿಟ್ಟುಕೊಟ್ಟರು. ಆದೆ ನನಗೆ ನಿನಗೆ ಗೊತ್ತಿರೊ ದೋಬಿಅಂಗಡಿ. ಚಿಕ್ಕಣ್ಣ ಆ ಅಂಗಡಿಯಲ್ಲಿ ಬೇರುಬಿಟ್ಟ ವರ್ಷವೇ ನಾವು ಆಜಾದಿಗಳಾಗಿದ್ದಂತೆ. ಅಲ್ಲಿ ಬೇರು ಬಲಿತಮೇಲೆ ಚಿಕ್ಕಣ್ಣನೆ ಕಟ್ಟೆ, ಮೆಟ್ಟಲು ಮಾಡಿಸಿದ್ದಂತೆ. +ವರ್ಷಗಳು ಉರುಳಿತ್ತು. ದೊಡ್ಡಣ್ಣನ ಮಕ್ಕಳು ದೊಡ್ಡವರಾಗ್ತಿದ್ದರು. ಮೈಸೂರಿಗೆ ಕಳುಹಿಸಬೇಕು ಅಂದರೆ ನೀನು ಮದುವೆ ಆಗಬೇಕು ಅಂದರು ದೊಡ್ಡಣ್ಣ. ಆಯ್ತು ಮದುವೆ. ಮೂರು ವರ್ಷವಾದರು ಮಕ್ಕಳಾಗಲಿಲ್ಲ. ಹರಕೆ, ಪೂಜೆ, ಕುಂಡಲಿ ತೋರಿಸಿದ್ದು ಎಲ್ಲಾ ಅಯ್ತು. ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಗ್ಹೊಗಿ ನಾಗಪಂಚಮಿ ದಿನವೊ ಷಷ್ಟಿದಿನವೊ ಹಾಲು ಎರೆದು ಸುಬ್ರಮಣ್ಯಕ್ಕೆ ದರ್ಶನಕ್ಕೆ ಬರ್ತಿವಿ ಅಂತ ಹರಕೆನು ಅಯ್ತು. ಆದರೂ ಮಕ್ಕಳಾಗಲಿಲ್ಲ. ಹೆಂಡತಿ ಇನ್ನೊಂದು ಮದುವೆ ಆಗಿ ಅಂತ ಬಲವಂತ ಮಾಡಿದಳು. ಚಿಕ್ಕಣ್ಣ ಇಲ್ಲ ಅಂದರು. ದೊಡ್ಡಣ್ಣನ ಮಕ್ಕಳು ಮೈಸೂರಿಗೆ ಬಂದರು. ಸಿದ್ದುನ ಅಂಗಡಿ ಕೆಲಸಕ್ಕೆ ಹಾಕ್ಕೊಂಡರು ನಂಜಪ್ಪನ ಸ್ಕೂಲಿಗೆ ಹಾಕಿದರು. ಮಕ್ಕಳು ಬಂದಿದ್ದಕ್ಕೆ ಹೆಂಡತಿಗೆ ಸಂತೋಷವಾಗಿದ್ದರು ತನ್ನದಾದ ಮಕ್ಕಳಿಲ್ಲದ ಕೊರಗಿಗೊ ಇಲ್ಲ ಬೇರೆ ಯಾವುದೋ ಕಾಯಿಲೆಯೋ ಅಂತು ಹಾಸಿಗೆ ಹಿಡಿದಳು. ಎಷ್ಟರಮಟ್ಟಿಗೆ ಎಂದರೆ ಕೈ ಕಾಲುಗಳಲ್ಲಿ ಸ್ವಾಧಿನವಿರಲಿಲ್ಲ. ಎಲ್ಲವು ಇವರೆ ಮಾಡಿಸಬೇಕು. ತಿಂಡಿ ಊಟ ಸ್ನಾನ ಹೆಂಡತಿ ಬಟ್ಟೆ ಒಗೆದುಹಾಕೊದು ಎಲ್ಲ ಕೆಲಸವು ಇವರದ್ದೆ. ನಾನು ಎಷ್ಟೊಬಾರಿ ಊಟ ಮಾಡಿದಿನಿ- ಮುದ್ದೆ ಜೋತೆಗೆ ಬಸ್ಸ್‌ಸಾರು ಮೊಹಲ್ಲಾಲಿ ಯಾರು ಅಷ್ಟು ಚೆನ್ನಾಗಿ ಮಾಡೊಲ್ಲ. ಹೆಂಡತಿ ಅತ್ತುಕರೆದು ಎನು ಮಾಡಿದರು ಇನ್ನೊಂದು ಮದುವೆ ಆಗೊಲ್ಲಾ ಅಂದರು. ಜಾಸ್ತಿ ಮಾತಿಲ್ಲ. ಇಲ್ಲ ಅಷ್ಟೆ. +ಬೆಳಿಗ್ಗೆ ಏಳುವರೆ ಹೊತ್ತಿಗೆ ಅಂಗಡಿ ಬಾಗಿಲು ತೆಗೆದು ಇಸ್ತರಿಪೆಟ್ಟಿಗೆಲಿ ಕೆಂಡ ಮಾಡೊದಕ್ಕೆ ಇಡೊ ಹೊತ್ತಿಗೆ ಜಾಯ್‌ಹೌಸಿನಿಂದ ಕಾಫಿ ಬರೊದು ಅದನ್ನ ಕುಡಿದಮೇಲೆ ಕೆಲಸ ಶುರು. ನಾನು ಕಂಡಂಗೆ ಸುಮಾರು ಐವತ್ತು ವರ್ಷದಲ್ಲಿ ಇದು ಒಂದೆ ಒಂದು ದಿನವು ತಪ್ಪಲಿಲ್ಲ. ಅಕ್ಕಪಕ್ಕದ ಮನೆ ಹೆಂಗಸರು ‘ಚಿಕ್ಕಣ್ಣ ಬಾಗಿಲು ತೆಗೆದಾಯ್ತು, ಏಳುವರೆ ಅಯ್ತು ಎದ್ದೇಳಿ’ ಅಂತ ಮಕ್ಕಳನ್ನು ದೊಡ್ಡವರನ್ನು ಎಬ್ಬಸೊ ಮಟ್ಟಿಗೆ. ಆದ್ಮಿ ಟೈಮು ಅಂದರೆ ಟೈಮು. ಜ್ವರ ಕೆಮ್ಮಲು ಅಂತ ಮಲಗಿದ್ದಿಲ್ಲ. ಅಂತಾದ್ದೆನಿದ್ದರು ಅಂಗಡಿ ಬಾಗಿಲುಮಾತ್ರ ಅವರೇ ತೇಗಿಬೇಕು. ಇಸ್ತರಿ ಸಿದ್ದು ಮಾಡಿದರು ಇವರು ಅಲ್ಲೆ ಕಟ್ಟೆಮೇಲೆ ಕೂತ್ಕೊತಿದ್ದರು ಮನೆಗ್ಹೊಗಿ ಮಲಗ್ತಿರಲಿಲ್ಲ. ಹನ್ನೊಂದು ಗಂಟೆಹೊತ್ತಿಗೆ ಅಂಗಡಿಲಿ ಸಿದ್ದುನ ಬಿಟ್ಟು ಮನೆಗೆ ಹೋಗಿ ಅಲ್ಲಿ ಕೆಲಸಗಳನ್ನ ಮುಗಿಸಿ, ಹೆಂಡತಿಗೆ ಊಟ ಮಾಡಿಸಿ, ಸಿದ್ದುಗೆ ತಿನ್ನೊಕ್ಕೆ ಅಂಗಡಿಗೆ ಏನಾದರು ತಂದುಕೊಟ್ಟು ಕತ್ತೆಯೊಂದಿಗೆ ದೋಬಿಗಾಟಿಗೆ ಹೋದರೆ ಇನ್ನು ಬರೋದು ಸಾಯಂಕಾಲವೆ. ರಾತ್ರಿ ಎಂಟು ಕೆಲವೊಮ್ಮೆ ಒಂಬತ್ತು ಗಂಟೆಯವರೆಗೆ ಅಂಗಡಿಲಿದ್ದು ಮನೆಗೆ ಹೋಗೋದು. ಇದು ಚಿಕ್ಕಣ್ಣನ ದಿನಚರಿ- ಜಿಂದಗಿ. ವರ್ಷಾವರ್ಷ ಅಂಗಡಿಲಿದ್ದ ಕ್ಯಾಲೇಂಡರ್ ಬದಲಾಗ್ತಿದಿದ್ದು ಬಿಟ್ಟರೆ ಬೇರೆ ಎಂದು ಏನು ಎಳ್ಳಷ್ಟು ಬದಲಾಗಿರಲಿಲ್ಲ. +ಸ್ವಲ್ಪ ವರ್ಷಗಳ ಹಿಂದೆ ಸಿದ್ದು ಇಟ್ಟಿಗೆಗೂಡಿನಲ್ಲಿ ಇನ್ನೊಂದು ಅಂಗಡಿ ತೇಗಿತಿನಿ ಅಂದ. ಒಳ್ಳೆದು ಅಂದರು. ಆದಾದ ಸ್ವಲ್ಪ ದಿನಕ್ಕೆ ನಂಜಪ್ಪ ಬ್ಯಾಂಕಲ್ಲಿ ಸಾಲ ತೆಗೊಂಡು ಬೆಂಗಳೂರಿನಲ್ಲಿ ಅಟೊ ಓಡಿಸ್ತಿನಿ ಅಂದ. ಸರಿ ಅಂದರು. ಆಮೇಲೆ ಸಿದ್ದು ಮದುವೆ. ಮೊಮ್ಮಗ. ಸಂತೋಷದಿಂದ ಅಜ್ಜನಾಗಿದ್ದ ಚಿಕ್ಕಣ್ಣ. ಎಲ್ಲಾ ಚೆನ್ನಾಗೆ ಇತ್ತು. ಚಿಕ್ಕಣ್ಣನ ಮಾತಲ್ಲಿ ಹೇಳಬೇಕು ಅಂದರೆ ‘ದ್ಯಾವರು ಸೆಂದಾಗೆ ಮಡಗವನೆ ಬಿಡು, ಎನಕ್ಕು ಕಡಿಮೆ ಮಾಡಿಲ್ಲ’. +ಕಳೆದ ವರ್ಷ ಹೆಂಡತಿ ಸತ್ತುಹೋದಳು. ಮನೇಲಿ ಇವರೊಬ್ಬರೆ. ಬೆಳಿಗ್ಗೆ ಅಷ್ಟೋತ್ತಿಗೆ ನನಗೆ ಹೇಳಿ ಕಳುಹಿಸಿದ್ದರು. ಸಿದ್ದುನು ಬಂದಿದ್ದ. ಅವತ್ತೂ ಅಂಗಡಿ ತೆಗೆಯೊಕ್ಕೆ ಹೋರಟರು. ಸಿದ್ದುಗೆ ಕೋಪ ತಡೆಯೊಕ್ಕೆ ಆಗದೆ ಅಂದೆ ಮೊದಲು ಚಿಕ್ಕಪ್ಪನಮೇಲೆ ಕೂಗಾಡಿದ್ದ. ಉತ್ತರ ಇಲ್ಲ- ಮೌನ. ಹಳ್ಳಿಯಿಂದ ಎಲ್ಲರೂ ಬರೊವರಗು ಹೆಣದ ಜೋತೆ ಕೂತು ಏನು ಮಾಡೊದು ಎಂದಿರಬೇಕು. ಮನುಷ್ಯ ಮೊದಲೆ ಮಾತು ಕಡಿಮೆ ಆ ದಿನ ಕಳೆದಮೇಲೆ ಮಾತು ಪೂರ್ತಿಯಾಗಿ ನಿಲ್ಲಸೆಬಿಟ್ಟರು ಅಂದರು ತಪ್ಪಾಗೋಲ್ಲ ನೋಡು. ಇಸ್ತರಿ ಮಾಡಿಸೊಕ್ಕೆ ಬಂದವರ ಹತ್ತಿರವು “ಹೂಂ”, “ಇಲ್ಲ್ರ”, “ಹೌದ್ರ” ಇಷ್ಟೆ ಹೊರತು ಜಾಸ್ತಿ ಮಾತಿಲ್ಲ. ನಿನ್ನಂತವರು ಯಾವಾಗಲಾದರೂ ವರ್ಷಕ್ಕೊಂದು ಸರ್ತಿ ಬಂದಾಗ ಒಂದೆರಡು ಮಾತೆಷ್ಟೊ ಅಷ್ಟೆ. ದಿನವು ಅಂಗಡಿಗೆ ಹೋಗುತ್ತಿದ್ದ ನನ್ನ ಕೂಡವು ಜಾಸ್ತಿ ಮಾತಿಲ್ಲ. ತಾವಾಯ್ತು ಅಂಗಡಿ ಅಯ್ತು. ದೋಬಿಗಾಟಾಯ್ತು ಮನೆಯಾಯ್ತು. ಸಿದ್ದು ಬಹಳ ಕರೆದ ನನ್ನ ಜೋತೆ ಬಂದಿರಿ ಎರಡು ಅಂಗಡಿನೂ ನಾನು ನೋಡ್ಕೊತಿನಿ, ನೀವು ಸಾಕು ದುಡಿದಿದ್ದು ಅಂತ. ಉತ್ತರ ಇಲ್ಲ- ಮೌನ. ಸುಮ್ಮನೆ ಬೆನ್ನು ತಟ್ಟಿ ಬೇಡವೆಂದಿದ್ದೆಷ್ಟೊ ಅಷ್ಟೆ. +ಹೊರಗೆ ಮಳೆ ಜೋರಾಗಿ ಸುರಿತಿತ್ತು. “ಇನ್ನೊಂದು ರೌಂಡು ಕಾಫಿ ಹೇಳು ಎರಡು ನಿಮಿಷದಲ್ಲಿ ಬರ್ತಿನಿ” ಎಂದು ಎದ್ದು ನಿಂತ ಚೇಚು. “ಎಲ್ಲಿಗೆ ಮಳೆ ಜೋರಾಗಿ ಬರ್ತಿದೆ” ಅಂದೆ. “ಇಲ್ಲೆ ಪಕ್ಕದಲ್ಲೆ ಬಂದೆ” ಎಂದು ಹೊರಗೊಡಿದ್ದ. ಕೂತಿದ್ದ ಟೇಬಲ್ಲಿನ ಪಕ್ಕದಲ್ಲಿದ್ದ ಕಿಟಕಿಯ ಬಾಗಿಲು ಗಾಳಿಗೆ ಒಂದೇಸಮ ‘ಪಟ್ ಪಟ್’ ಎಂದು ಬಡಿಯುತಿತ್ತು. ಬಗ್ಗಿ ಬಾಗಿಲೆಳೆದು ಮುಚ್ಚಿದೆ. ಹೋಟಲಿನ ಮಾಲಿಕ ಗದ್ದೆಯಮೇಲೆ ಸುಮ್ಮನೆ ಕೂತಿದ್ದ. ಹೋಟಲಿನ ಬಾಗಿಲ ಬಳಿ ಜನ ಗೋಡೆಗೊರಗಿ ಹಿಂದಕ್ಕೆ ನಿಂತಿದ್ದರು. ‘ವೈಟರ್’ ಮತ್ತೆ ಬಿಸಿಯಾದ ಕಾಫಿ ತಂದಿಟ್ಟ. ಒಂದು ಗುಟುಕು ಹೀರಿದಾಗ ಹಿತವಾಗಿತ್ತು. ಅಷ್ಟರಲ್ಲಿ ತಿರುಗಿ ಓಡಿಬಂದಿದ್ದ ಚೇಚು ಜೋರಾಗಿ ಉಸಿರುಬಿಡುತ್ತಾ ಕೂತಾಗ ಎಂತದ್ದೊ ವಾಸನೆ ಮೂಗಿಗೆ ಬಡಿದಿತ್ತು. “ಏನೋ ಸಪೋಟ ವಾಸನೆ ಇದ್ದ ಹಾಗಿದೆ” ಎಂದೆ. “ಹೂಂ ಅದಕ್ಕೆ ಹೊಗಿದ್ದು” ಎಂದು ನಕ್ಕಿದ್ದ. ಚೇಚು ಅಲ್ಲೆ ಪಕ್ಕದಲ್ಲಿರೊ ‘ಶಿವ ವೈನ್‌ಸ್ಟೊರ್’ಗೆ ಹೊಗಿದ್ದೆಂದು ನನಗು ಅರ್ಥವಾಯಿತು. ಒಂದು ಕ್ವಾರ್ಟರ್ ಹಾಕ್ಕೊಂಡು ಬಂದಿರಬೇಕು. ಮುಂಚಿನಿಂದಲು ಹಾಗೆ ಅಲ್ಲೆ ನಿಂತು ಲೋಟಾಕ್ಕೆ ಬಗ್ಗಿಸಿ ಒಂದೆ ಗುಟುಕಿಗೆ ಕುಡಿಯೋದು. ಬಾಯಿಗೆ ಒಂದು ಉಪ್ಪಿನಕಾಯಿ ಇಲ್ಲವೊ ಒಂದಿಷ್ಟು ಕಾರದ ಪುರಿ. ಬಂದು ಕುಳಿತವನು ಮುಂದಕ್ಕೆ ಕತೆ ಹೇಳಿದ. +ಈಗ ಒಂದೆರಡು ತಿಂಗಳ ಹಿಂದಿನ ಮಾತು. ನಮ್ಮ ಬೀದಿ ಸುಬ್ರಮಣ್ಯ ಇದಾನಲ್ಲ ಅವರ ತಂದೆ ಶ್ರಾದ್ಧ ಅವತ್ತು. ಯಾವತ್ತು ಇಲ್ಲದೆ ಇದ್ದಿದ್ದು ಅವತ್ತು ನನ್ನೂ ಊಟಕ್ಕೆ ಬಾರೊ ಅಂತ ಕರೆದಿದ್ದ. ನಾನು ಬೇಡವೋ ಸುಬ್ಬು ನಿಮ್ಮಮ್ಮ ಏನಾದರು ಅಂದಾರು ಅಂದೆ. ಅದೆಲ್ಲಾ ಏನು ಇಲ್ಲ ನೀನು ಸುಮ್ಮನೆ ಬಾ ಅಂದಿದ್ದ. (ಇದನ್ನ ಕೇಳಿ ನನಗ್ಯಾಕೊ ಅನುಮಾನವಾಯ್ತು. ಚೇಚುನ ಊಟಕ್ಕೆ ಕರೀಬಾರದು ಅಂತಲ್ಲ, ಆದರೂ ನನಗೆ ತಿಳಿದಂಗೆ ಅಗ್ರಹಾರದಲ್ಲಿ ಎಂದು ಯಾರು ಚೇಚುನ ಮನೆಗೆ ಊಟಕ್ಕೆ ಕರೆಯೋ ಅಷ್ಟು ಧೈರ್ಯ ಮಾಡಿರಲಿಲ್ಲ). ತಿಥಿ ಅಂದಮೇಲೆ ಊಟ ಲೇಟುತಾನೆ. ನಾನು ಅವತ್ತು ಮಧ್ಯಾಹ್ನ ಅಂಗಡಿ ಕಟ್ಟೆಮೇಲೆ ಕೂತಿದ್ದೆ. ಸಿದ್ದುನು ಬಂದು ಹೋಗಿದ್ದ. ಸಾಮಾನ್ಯವಾಗಿ ಅಷ್ಟ್ಹೊತ್ತಿಗೆಲ್ಲ ದೋಬಿಗಾಟಿಗೆ ಹೋಗೊ ಚಿಕ್ಕಣ್ಣ ಇನ್ನು ಅಂಗಡಿಲೇ ಇದ್ದರು. ಹರ ಇಲ್ಲ ಶುಭ ಇಲ್ಲ. ಅವರ ಪಾಡಿಗೆ ಅವರು ನನ್ನ ಪಾಡಿಗೆ ನಾನು. ಬೀದಿಲಿ ಹೋಗೊಬರೋವರನ್ನ ನೋಡುತ್ತಾ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಸುಬ್ಬು ದೊನ್ನೆಯೊಳಗೆ ಅನ್ನದ ಉಂಡೆ ಹಿಡಿದು ಮನೆ ಹಿತ್ತಲ ಕಡೆ ಬಂದ. ಅವನ ಹಿಂದೆಯೆ ಹುಡುಗನೊಬ್ಬ ಒಂದು ಕುರ್ಚಿ ಹಿಡಿದು ಬಂದ. ಹಿತ್ತಲಿನ ಎತ್ತರವಾಗಿದ್ದ ಗೋಡೆ ಹತ್ತಿರ ಬಂದು ಕುರ್ಚಿಮೇಲೆ ನಿಂತು, ದೊನ್ನೆಲಿದ್ದ ಉಂಡೆಯನ್ನ ತೆಗೆದು ಗೋಡೆಮೇಲಿಟ್ಟು ಆಕಾಶ ನೋಡ್ತಾ “ಕಾ ಕಾ ಕಾ”….”ಕಾ ಕಾ ಕಾ”… ಅಂತ ಕೂಗಿ ಕರಿತಾ ಇರಬೇಕಾದರೆ ಇತ್ತಕಡೆ ಬೀದಿಯಿಂದ ಹುಡುಗನೊಬ್ಬ ಅಂಗಡಿಗೆ ಬಂದು “ನಿಮ್ಮನ್ನ ಬರೋದಕ್ಕೆ ಹೇಳಿದರು ತಾತ” ಅಂತ ಚಿಕ್ಕಣ್ಣನಿಗೆ ಹೇಳಿದ. ಚಿಕ್ಕಣ್ಣ “ಹೌದ್ರ ಬಂದೆ..” ಅಂತ ಹುಡುಗನ ಹಿಂದೆಯೆ ಹೊರಟರು. ಅಷ್ಟ್ಹೊತ್ತಿಗೆ ಕುರ್ಚಿಯಿಂದಿಳಿದು ಸುಬ್ಬು ಒಳಗೊಗ್ತಿದ್ದ. ಚಿಕ್ಕಣ್ಣ “ಪಿಂಡ ಇಟ್ಟಾಯ್ತು. ಎಲ್ಲಾ ಮುಗಿತು ಅನಿಸುತ್ತೆ” ಎಂದು ನರಸಿಂಹಯ್ಯನವರ ಮನೆಗೆ ಹೋದರು. +ಊಟ ಮುಗಿಸಿ ಬಂದಾಗ ಅಂಗಡಿ ಮುಚ್ಚಿತ್ತು. ದೋಬಿಗಾಟಿಗೆ ಹೋದರೆನೋ ಅಂತಂದುಕೊಂಡವನು ಕಾಗೆಗಳು ಬಂದವೋ ಇಲ್ಲವೋ ಎಂದು ಗೋಡೆಮೇಲೆ ನೋಡಿದೆ. ಪಿಂಡ ಇರಲಿಲ್ಲ. ಕಾಗೆಗಳೆರಡು ಅಲ್ಲಿ ಇಲ್ಲಿ ಹರಡಿ ಬಿದ್ದ ಅನ್ನದಗಳನ್ನ ಹೆಕ್ಕುತ್ತಿದ್ದವು. ನಾನು ನನ್ನಪಾಡಿಗೆ ಹೋರಟುಹೋದೆ. +ನನಗೆ ವಿಷಯ ತಿಳಿದಾಗ ಎಲ್ಲಾ ಅಗೋಗಿತ್ತು. +ಮನೆಗೆ ಕರೆಸಿದ್ದ ನರಸಿಂಹಯ್ಯನವರು “ಚಿಕ್ಕಣ್ಣ ಬಹಳ ವರ್ಷದಿಂದ ನೀನು ಇಲ್ಲೆ ಇದಿಯೋ ಅಪ್ಪ. ನಿನಗೆ ಹೇಗೆ ಹೇಳಬೇಕೊ ಗೊತ್ತಿಲ್ಲವೊ ತಂದೆ” ಅಂತ ಪ್ರಾರಂಭಮಾಡಿದಾಗ ಚಿಕ್ಕಣ್ಣನಿಗೆ ಏನು ಅರ್ಥವಾಗದೆ +“ಬುದ್ದಿ ನೀವು ದೊಡ್ಡವರು. ನನ್ನತಾವ ಏನು… ಅದೇನಿದ್ದರು ಈಂಗ್ ಮಾಡೋ ಚಿಕ್ಕಣ್ಣ ಅನ್ನಿ ಬುದ್ದಿ…ಮಾಡ್ತಿನಿ..”. +“ಅಲ್ಲೋ ಅಪ್ಪ ನನ್ನ ಮಗ ಕೇಸರಿ ಇದಾನಲ್ಲೊ ಅವನು ಒಂದು ಕಾರು ಖರೀದಿ ಮಾಡಿದಾನೆ. ಅದನ್ನ ನಿಲ್ಲಿಸೊಕ್ಕೆ ಒಂದು ಜಾಗ ಬೇಕು. ಏನು.. ಅವನೂ ಎರಡು ಮೂರು ಕಡೆ ವಿಚಾರಿಸಿಕೊಂಡೆ ಬಂದಿದಾನೆ. ಏನು.. ಬಹಳ ವರ್ಷದಿಂದ ಲಲಿತಮ್ಮನವರ ಶಾಪಿನಲ್ಲಿ ತಾತಾಚಾರ್ ಮಕ್ಕಳು ನಿಲ್ಲಿಸ್ತಾರೆ. ಇನ್ನು ಆ ಕಡೆ ನವಗ್ರಹ ದೇವಸ್ಥಾನದ ಪಕ್ಕದ ಗರಾಜಿನಲ್ಲಿ ಜಾಗವಿಲ್ಲವಂತೆ..ಎದರುಮನೆ ಆ ಸಿಂಧಿಗಳು ನಿಲ್ಲಿಸ್ಕೊತಾರೆ… ಏನು….ಈ ಪುಟ್ಟಬೀದಿಲಿ ಹೊರಗಡೆ ನಿಲ್ಲಿಸೊಕ್ಕು ಆಗೋದಿಲ್ಲ….ಅದಕ್ಕೆ ನಿನಗೆ ಅಭ್ಯಂತರವಿಲ್ಲದಿದ್ದರೆ ನಿನ್ನ ಅಂಗಡಿ ಹಿಂದಕ್ಕಿರೊ ಗೋಡೆ ಒಡೆಯಿಸಿ ಇಲ್ಲೆ ಒಂದು ಷೆಡ್ ಮಾಡಬೇಕು ಅಂತ ಅವನಿಚ್ಚೆ…. ಕಾರು ಬರೊದಕ್ಕೆ ಇನ್ನು ಸಮಯ ಇದೆಯೊ ಅಪ್ಪ…. ಏನು…ನೀನು ನಿಧಾನಕ್ಕೆ ಯೋಚನೆಮಾಡಿ ಹೇಳು.. ನಿನ್ನ ಜಾಗಬಿಡು ಅಂದರೆ ದೇವರು ನನ್ನ ಮೆಚ್ಚೊಲ್ಲ…ನೀನೆ ಏನು ಮಾಡೊದಂತ ಹೇಳು”. +“ನೀವು ಹೇಳಿದಾಗ ಖಾಲಿಮಾಡಿ ಕೊಡ್ತಿನಿ ಬುದ್ದಿ”. +“ಇಲ್ಲೆ ಹತ್ತಿರದಲ್ಲಿ ನಿನಗೆ ಬೇರೆ ಯಾವುದಾದರು ಜಾಗದ ವ್ಯವಸ್ತೆ ಆಗಬೇಡವೆ….ತಾಳು ನಾನು ಯಾರಿಗಾದರು ಕೇಳಿ ನೋಡ್ತಿನಿ…ಏನು… ನೀನೂ ವಿಚಾರಿಸು” ಅಂದರಂತೆ. +ನಡೆದಿದ್ದು ಇಷ್ಟೇ. ಜಾಗಕ್ಕೇನು ಎಲ್ಲಿ ಬೇಕಾದರು ಸಿಗತಿತ್ತು. ನಾನೆ ಒಂದು ದಿನದಲ್ಲಿ ಕೊಡಿಸಿ ಕೊಡ್ತಿದ್ದೆ. +ಆದರೆ… +ಅಂಗಡಿ ಬೀಗ ಹಾಕ್ಕೊಂಡು ಕತ್ತೆಮೇಲೆ ಬಟ್ಟೆ ಹೇರಿಕೊಂಡು ಎಂದಿನಂತೆ ದೋಬಿಗಾಟ್‌ಗೆ ಹೋಗಿದಾರೆ. ಎಡಗಾಲಿನ ಹಿಮ್ಮಡಿಗೆ ಮುಳ್ಳೊಂದು ಚುಚ್ಚಿಕೊಂಡಿದೆ. ಒಡೆದು ಬಿರುಕು ಬಿಟ್ಟ ಹಿಮ್ಮಡಿಯ ಒಂದು ಬಿರುಕಿನ ಮಧ್ಯಕ್ಕೆ ಸರಿಯಾಗಿ ಉದ್ದವಾದ ಮುಳ್ಳು ಆಳವಾಗಿ ಒಳಕ್ಕೆ ನಾಟಿ ರಕ್ತ ಬಂದಿದೆ. ಆದರು ಮುಳ್ಳನ್ನ ತೆಗದಿಲ್ಲ. ಸುಸ್ತಾಗಿ ಮರಕ್ಕೆ ಒರಗಿ ಕೂತು ಹಾಗೆ ಮಲಗಿದ್ದು- ಅಷ್ಟೇ. +ಚೇಚು ಕತೆ ಹೇಳಿ ಮುಗಿಸಿದ್ದ. ಮಳೆ ಕಡಿಮೆ ಆಗಿತ್ತು. ಏನೊ ಕಳೆದುಕೊಂಡವನಂತೆ ಸಂಕಟವಾಗಿತ್ತು. ಮಾತಿಲ್ಲದೆ ಆ ತುಂತರು ಮಳೆಯಲ್ಲಿ ಮನೆಯ ಕಡೆಗೆ ಇಬ್ಬರು ಹೆಜ್ಜೆ ಹಾಕುತ್ತ ನಡೆದವು. +ನಾನು ಮನೆಗೆ ಬರುವುದಕ್ಕು ಅದಕ್ಕೆ ಸರಿಯಾಗಿ ಮಳೆ ಪೂರ್ತಿಯಾಗಿ ನಿಂತಿದ್ದಕ್ಕು ನನ್ನ ಸ್ನೇಹಿತ ಜಯಕುಮಾರ್ ‘ಚೇತಕ್ ಬಜಾಜ್’ನಲ್ಲಿ ಬಂದು ಇಳಿಯುವುದಕ್ಕು ಸರಿಹೋಗಿತ್ತು. ಉಭಯ ಕುಶಲೋಪರಿಯಾದಮೇಲೆ “ಮನುಷ್ಯ ಒಂದೆರಡು ದಿನ ಚೆನ್ನಾಗಿ ಮಲಗಲಿ ಆಮೇಲೆ ಬಂದು ನೋಡೋಣ ಅಂತ ನಾವು ಮೂರು ದಿನ ಬಿಟ್ಟು ಬಂದರೆ ನೀನಾಗಲೆ ಮಳೆಲಿ ಎಲ್ಲೊ ಸರ್ಕಿಟ್ ಹೋಗಿದ್ದು ಬರ್ತಾ ಇರೊ ಹಾಗಿದೆ” ಸ್ಕೂಟರ್ ಸ್ಟಾಂಡ್ ಹಾಕುತ್ತ ಕೇಳಿದ್ದ +“ಇಲ್ಲವೊ ಲಕ್ಷ್ಮಿಭವನದಲ್ಲಿ ಕೂತಿದ್ದೆ” +“ಯಾರ ಜೋತೆ ?” ಸಿಗರೇಟ್ ಹೊತ್ತಿಸಿಕೊಂಡಿದ್ದ +“ಚೇಚು” +“ಅದೇನು ಎಲ್ಲಾ ಬಿಟ್ಟು ಚೇಚು ಜೋತೆ ? ” +ಅಷ್ಟರಲ್ಲಿ ಅತ್ತಿಗೆ ಮನೆಯೊಳಗಿನಿಂದ ಬಂದವರು +“ಎಲ್ಲಿಗೆ ಹೋರಟ್ಹೊದರಿ ನೀವು ? ನಿಮ್ಮ ಅಣ್ಣ ಆಗಲೇ ಶುರು ಮಾಡಿದ್ದ್ರು ಮಳೆಲಿ ಸಿಕ್ಕೊಂಡಿದಾನೆ ಎಲ್ಲಿಗೆ ಅಂತನಾದರು ಕೇಳಬೇಡವೆ ಅಂತ” +“ನಮಸ್ಕಾರ ಮನ್ನಿ” ಅಂದ ಜಯಕುಮಾರ್ ಸಿಗರೇಟ್ ಹಿಡಿದ ಕೈಯನ್ನ ಬೆನ್ನ ಹಿಂದಕ್ಕೆ ಹಾಕುತ್ತ. +“ನಮಸ್ಕಾರ. ಫ್ರೇಂಡ್ ಬಂದರೆ ವಿಸಿಟ್ಟು ಇಲ್ಲದಿದ್ದರೆ ಇಲ್ಲ. ಈ ಬೀದಿಲೇ ಹೋದರು ಬರೊಲ್ಲ ನೀವೆಲ್ಲ” ಅಂದರು ನಗುತ್ತ. +“ಇಲ್ಲಾ ಮನ್ನಿ ಈ ಕಡೆ ಬಂದಾಗಲೆಲ್ಲ ಬರ್ತಿನಿ” ಎಂದು ಕೆಮ್ಮಿದ್ದ. +ಮತ್ತದೇ ಸಪೋಟ ವಾಸನೆ ಮೂಗಿಗೆ ಬಡಿದಿತ್ತು. “ಎಲ್ಲಾ ಮುಗಿಸಿಕೊಂಡೆ ಬಂದಾಗಿದೆ” ಎಂದೆ. ಅತ್ತಿಗೆಗು ಅರ್ಥವಾಗಿ ಅವರು ನಕ್ಕಿದ್ದರು. ಜಯ “ಸುಮ್ಮನಿರೊ” ಎಂದ. “ಪರವಾಗಿಲ್ಲ ಜಯಕುಮಾರ್” ಎಂದು ನಗುತ್ತಾ ಒಳಗ್ಹೋದರು ಅತ್ತಿಗೆ. +“ಅದೇನಪ್ಪ ಚೇಚು ಜೋತೆ ಅಂತಾದ್ದು” +“ಇಲ್ಲವೊ ಚಿಕ್ಕಣ್ಣನ ಬಗ್ಗೆ ಹೇಳ್ತಿದ್ದ. ಕೇಳ್ತಾ ಕೂತಿದ್ದೆ.” +“ಎಲ್ಲಾ ಬಿಟ್ಟು ಅವನನ್ನ ಕೇಳು. ಎಷ್ಟೋ ಜನ ಐವತ್ತು ಅರವತ್ತು ವರ್ಷದಿಂದ ಒಂದೇಮನೆಲಿ ವಾಸ ಮಾಡಿದ್ದ್ರು ಮನೆ ಖಾಲಿ ಮಾಡೊಲ್ಲವೆ. ಚಿಕ್ಕಣ್ಣನು ಬಿಟ್ಟ ಅಷ್ಟೆ.” +ನನಗೆ ಆ ಮಾತು ಕೇಳಿ ಶಾಕ್ ಆಗಿತ್ತು. “ನಿನಗೆ ಗೊತ್ತಿರೊ ವಿಷಯ ಸರಿಯಾಗಿ ಹೇಳು” ಅಂದೆ. +“ಹೇಳೊಕ್ಕೆ ಏನಿದೆಯೊ ಮಣ್ಣಾಂಗಟ್ಟಿ. ಜಾಗ ಬೇಕು ಅಂದರು ನರಸಿಂಹಯ್ಯನವರು. ಅವರೆ ಯಾರಿಗೋ ಹೇಳಿ ಹಳೆಬಂಡಿಕೇರಿಲಿ ಒಂದು ಜಾಗನೂ ಕೊಡಿಸಿದರು. ಹಿಂದೆ ನಿಮ್ಮ ಮನೆಗೆ ಹಾಲು ಕರೆಯೊಕ್ಕೆ ಬರ್ತಿದ್ದನಲ್ಲೋ ಅವನ ಮನೆ ಹತ್ತಿರವಂತೆ. ಎರಡು ವಾರದಲ್ಲಿ ಚಿಕ್ಕಣ್ಣ ಅಲ್ಲಿಗೆ ಹೋದ. ಇವರು ಕಟ್ಟೆ ಮೆಟ್ಟಲು ಒಡೆಯಿಸಿ, ಹಿಂದಗಡೆ ಗೋಡೆ ಒಡೆಯಿಸಿ ಷೆಡ್ ಮಾಡ್ಕೊಂಡರು. ಅಷ್ಟೆ ಇನ್ನೇನು. ಯಾಕೆ ಚೇಚು ಹೇಳಿದ್ದಾದರು ಏನು?” +“ನರಸಿಂಹಯ್ಯನವರು ಹೇಳಿದ ದಿನವೇ ದೋಬಿಗಾಟ್‌ನಲ್ಲಿ ಮರಕ್ಕೊರಗಿ ಕೂತವರು ಎಳಲೇ ಇಲ್ಲಾ ಅಂತಂದ ಮತ್ತೆ. ನೀನು ಹೊಸ ಅಂಗಡಿಗೆ ಹೋಗಿದಿಯ ? ನೀನು ಚಿಕ್ಕಣ್ಣನ್ನ ಲಾಸ್ಟ್ ನೋಡಿದ್ದು ಯಾವಾಗ ?” +“ನಾನು ಚಿಕ್ಕಣ್ಣನ್ನ ನೋಡಿ ನಾಕಾರು ತಿಂಗಳಾದರು ಆಗಿರಬೇಕು. ಅಂಗಡಿಗೆ ನಾನು ಯಾಕೋ ಹೋಗಲಿ. ಚೇಚುಗೆ ಎಲ್ಲೊ ಸ್ವಲ್ಪ ಜಾಸ್ತಿ ಆಗಿದೆ ಬಿಟ್ಟಿದಾನೆ ಬಂಡಿ. ಅವನನ್ನ ಜಾಗ ಕೊಡಿಸು ಅಂತ ಕೇಳಲಿಲ್ಲ ಅನಿಸುತ್ತೆ. ಅದಕ್ಕೆ ಏನೋ ಬಾಯಿಗೆ ಬಂದಿದ್ದು ಹೇಳಿದಾನೆ.” +“ನಡಿ ಒಂದು ನಿಮಿಷ ಸ್ಕೂಟರ್ನಲ್ಲಿ ಅಂಗಡಿ ಹತ್ತಿರ ಹೋಗಿ ನೋಡ್ಕೊಂಡು ಬಂದು ಬಿಡೋಣ.” +“ಈಗ ಅರ್ಜೇಂಟ್ ನಾನು ಎಲ್ಲೊ ಹೋಗಬೇಕು. ಸುಮ್ಮನೆ ನೋಡಿದ್ದು ಹೋಗೋಣ ಅಂತ ಬಂದೆ. ಬೇಕಾದರೆ ನಾಳೆ ಬೆಳಿಗ್ಗೆ ಬೇಗ ಬರ್ತಿನಿ ಹೋಗೋಣವಂತೆ” ಎಂದವನು ಹೊರಟೆಬಿಟ್ಟ. +ನನಗೆ ಅಸ್ತವ್ಯಸ್ತವಾಗಿತ್ತು. ಯಾಕೋ ಏನೋ ಎಲ್ಲವು ಗೋಜುಲು ಗೋಜುಲಾಗಿ ತೋರಿತ್ತು. ಈ ತೊಡಕು ಈಗಲೇ ಪರಿಹಾರವಾಗಬೇಕೆಂದನಿಸಿ ಅತ್ತಿಗೆಗೆ ಹೇಳಿ ಸ್ಕೂಟಿಯಲ್ಲಿ ಜಯ ಹೇಳಿದ್ದ ಗಲ್ಲಿಯ ಹತ್ತಿರ ಬಂದವನಿಗೆ ಧೋಭೀ ಅಂಗಡಿಯೋಂದು ಕಣ್ಣಿಗೆ ಬಿದ್ದಿತ್ತು. ಚಿಕ್ಕಣ್ಣ ಅಂಗಡಿಯಲ್ಲಿರಲಿಲ್ಲ. ನನ್ನ ವಯಸ್ಸಿನವನೊಬ್ಬ ಇಸ್ತರಿ ಮಾಡುತ್ತಿದ್ದ. +“ಇಲ್ಲಿ ಚಿಕ್ಕಣ್ಣ ಅನ್ನೊವರು ಯಾರಾದರು ಇದಾರೆಯೆ ?” +“ಯಾವ ಚಿಕ್ಕಣ್ಣ ?” +“ಇದು ಅವರಂಗಡಿ ಅಲ್ಲವೇ ?” +“ಇಲ್ಲಾ ಸಾರ್ ನಂದು. ಹತ್ತು ವರ್ಷ ಅಯ್ತು.” +“ವೀಣೆಶೇಷಣ್ಣ ರಸ್ತೆಲಿ ಚಿಕ್ಕಣ್ಣ ಅಂತ ಗೊತ್ತೆ ತಮಗೆ?” +“ಒಹೋ ಅವರನ್ನೇ ನೀವು ಕೇಳಿದ್ದು. ಈಗ ಎರಡು ತಿಂಗಳ್ಹಿಂದೆ ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂದೆ ಅಂಗಡಿ ಹಾಕ್ತಾರೆ ಅಂತ ಹೇಳ್ತಿದ್ದರು. ಆದರೆ ಏನು ಕಾಣಲಿಲ್ಲ ಸಾರ್. ಈ ಎರಿಯಾಗೆ ಬಂದಿಲ್ಲ.” +“ಸರಿ ಥ್ಯಾಂಕ್ಸ್”. +ಯಾರನ್ನ ಕೇಳುವುದೆಂದು ಯೋಚನೆ ಮಾಡುತ್ತಾ ಬಂದವನಿಗೆ ಸಿದ್ದು ಅಂಗಡಿ ಇಟ್ಟಿಗೆಗೂಡಿನಲ್ಲಿದೆಯೆಂಬುದು ತಟ್ಟನೆ ಹೊಳೆದು ಆ ಕಡೆಗೆ ಓಡಿಸಿದೆ. ಚಿಕ್ಕಣ್ಣ ಹೇಳಿದ್ದ ದೇವಸ್ಥಾನದ ಮುಂದೆ ಸ್ಕೂಟಿ ನಿಲ್ಲಿಸಿ ಎದುರಿನಲ್ಲಿದ್ದ ಗಲ್ಲಿಯಲ್ಲಿ ನಡೆದೆ. ಹೆಂಗಸೊಬ್ಬಳು ಮನೆಯ ಹೊಸಿಲ ಬಳಿ ಕುಳಿತು ಪುಟ್ಟ ಹುಡುಗಿಯ ತಲೆಯ ಕೂದಲಿನಲ್ಲಿ ಹೇನು ಹುಡುಕುತಿದ್ದಳು. +“ನಮಸ್ಕಾರ. ಇಲ್ಲಿ ಸಿದ್ದು ಅಂಥಾ ದೋಬಿ ಅಂಗಡಿ ಇಟ್ಟ್ಕೊಂಡಿದ್ದರಲ್ಲ ಎಲ್ಲಿ ಗೊತ್ತೆ ?” +“ಅಂಗಡಿ ಮುಚ್ಚಿದೆಯಲ್ಲ ಆದೆ ಕಾಣ್ರಪ್ಪೋ. ಆದರೆ ಅವರು ಈಗ ಇಲ್ಲಿ ಇಲ್ಲವಲ್ಲ್ರ. ನೀವು ಯಾರು ಅವರ ಜನವೋ?” +“ಇಲ್ಲ ಪರಿಚಯ ಅಷ್ಟೆ. ಈಗ ಎಲ್ಲಿದಾರೆ ಗೊತ್ತೆ?” +“ಸಂಸಾರ ಪೂರ್ತ ಬೆಂಗಳೂರಿಗೆ ಹೋರಟು ಹೋದ್ರಲ್ಲಪ್ಪ. ಒಂದೆರಡು ತಿಂಗಳಾಗ್ತ ಬತ್ತು. ಬನ್ನೂರು ತಾವ ಅಲ್ಲವೇ ಅವರು- ದೊಡ್ಡಣ್ಣ. ನಮ್ಮ ಹಳ್ಳಿಯು ಅಲ್ಲೇಯ ಒಸಿ ಮುಂದೆ. ಈಗ ಒಂದು ನಾಕು ತಿಂಗಳಾಗಿತ್ತು ಅನ್ನಿ ಅವರು ಇಲ್ಲಿ ಮಗನೊಟ್ಟಿಗೆ ಬಂದು. ಅವರು ಹೋದರು.” +“ದೊಡ್ಡಣ್ಣನವರ ತಮ್ಮ ಚಿಕ್ಕಣ್ಣ ಅಂತ ಅವರು ಏನಾದರು ಜೋತೆಲಿ ಹೋದರೆ ಗೊತ್ತೆ?” +“ಅದೇನೋ ಗೊತ್ತಿಲ್ಲ್ವಲ್ಲಪ್ಪೊ.” +“ಒಳ್ಳೆದು ಬರ್ತಿನಿ” ಎಂದು ಹೊರಟವನಿಗೆ ಬೇಸರವಾಗಿತ್ತು. +ನಿಜ ಚಿಕ್ಕಣ್ಣ ಒಬ್ಬ ಸಾಮಾನ್ಯ ಮನುಷ್ಯ. ಯ:ಕಶ್ಚಿತ್ ದೋಬಿ. ಆದರೂ ಚೇಚುವಾಗಲಿ ಜಯಕುಮಾರನಾಗಲಿ ಈ ವಿಷಯದಲ್ಲಿ ಸುಳ್ಳು ಹೇಳುವ ಪ್ರಮೇಯವಾವುದು ನನಗೆ ಕಾಣಲಿಲ್ಲ. ಅವರಿಬ್ಬರೂ ಅವರವರಿಗೆ ತಿಳಿದ ವಿಷಯವನ್ನೇ ನಿಜ ಎಂದು ನನಗೆ ಹೇಳಿರಬೇಕು ಎಂಬ ತೀರ್ಮಾನಕ್ಕೆ ಬಂದೆ. ಚಿಕ್ಕಣ್ಣನ ಮನೆಯ ಹತ್ತಿರವೆ ಯಾರನ್ನಾದರು ಕೇಳುವದೆ ಸರಿ ಎನಿಸಿತ್ತು. ಹೀಗೆ ಯೋಚನೆಮಾಡುತ್ತ ವೀಣೆಶೇಷಣ್ಣ ರಸ್ತೆಯ ಹತ್ತಿರ ಬಂದಾಗ ನರಸಿಂಹಯ್ಯನವರನ್ನೇ ಕೇಳಿಬಿಡೋಣವೆಂದು ಅವರ ಮನೆಯ ಬಾಗಿಲ ತಟ್ಟಿದ್ದೆ. ತೀರ್ಥಯಾತ್ರೆಗೆ ಹೋಗಿದ್ದಾರೆಂದು ತಿಳಿದಮೇಲೆ ಬೇರೆನು ಮಾಡಲು ತಿಳಿಯದೆ ಅಲ್ಲೆ ಕೂತು ಒಂದು ಕಾಗದ ಬರೆದಿಟ್ಟು ಛಲಬಿಡದ ತಿವಿಕ್ರಮನಂತೆ ನಮ್ಮ ಅಗ್ರಹಾರದ ಮೇಲಕ್ಕಿರುವ ತೋಗರಿಬೀದಿಗೆ ಬಂದೆ. ಕುಂಚಗರು, ಕುರುಬರು, ಒಕ್ಕಲಿಗ ಗೌಡರು ಅಲ್ಲಿ ಇಲ್ಲಿ ಕೆಲವು ಶೆಟ್ಟರ ಮನೆಗಳಿರೊ ಜಾಗವದು. ಅಲ್ಲೆ ಏಲ್ಲೊ ಚಿಕ್ಕಣ್ಣನ ಮನೆ. ಬೀದಿ ಮೂಲೆಯಲ್ಲಿ ನಿಂತಿದ್ದವರು ಮೂರು ಮಂದಿ. ಒಬ್ಬ ವಯಸ್ಸಿನಲ್ಲಿ ಹಿರಿಯನಾಗಿ ಕಂಡಿದ್ದ. ಇನ್ನಿಬ್ಬರಿಗೆ ಇಪ್ಪತ್ತಾದರು ತುಂಬಿರಬೇಕು. ಅವರಿಂದ ನನಗೆ ತಿಳಿದಿದ್ದಿಷ್ಟು. +ಕಿರಿಯರಿಬ್ಬರಿಗೂ ಚಿಕ್ಕಣ್ಣನ ಹೆಸರು ಕೇಳಿದ ನೆನಪು ಆದರೆ ಆತ ಯಾರೇಂಬುದೆ ಗೋತ್ತಿರಲಿಲ್ಲ. ಹಿರಿಯ ಹೀಗೆ ಹೇಳಿದ: +“ನಾನು ಚಿಕ್ಕ ಮೊಗ ಅದಾಗ್ಲಿಂದಲೂ ನೋಡಿವ್ನಿ ಬುದ್ದಿ. ಗಟ್ಟಿ ಆಳು. ಅರವತ್ತು ತುಂಬಿದ ಪ್ರಾಯದಲ್ಲು ಇವಕ್ಕೆ(ಕಿರಿಯರನ್ನ ನೋಡುತ್ತ) ಬೇಕಾದರೆ ಚಳ್ಳೆಕಾಯಿ ಮುಕ್ಕಿಸಿ ಬಿಡೋ ಆಸಾಮಿ. ಮುಳ್ಳು ಚುಚ್ಚಿದ್ದಕ್ಕೆ ಸಾಯೋ ಕುಳ ಅಲ್ಲ ಬುಡಿ. ಒಂದು ಬೀಡಿ ಇಲ್ಲ ಸಿಗರೇಟಿಲ್ಲ ಹೆಂಡ ಒಂದು ದಿನ ಮುಟ್ಟ್ನಿಲ್ಲ. ಅವರ ಹಳ್ಳಿಲಿ ಇದ್ದಾಗ ಹೇಗೋ ನನಗೆ ತಿಳಿದು ಆದರೆ ಇಲ್ಲಿ ಒಂದು ದಿನ ಮಾಂಸ ಮುಟ್ಟ್ನಿಲ್ಲ. ನಾವು ಕುರುಬರೆ ಆದರೆ ನಮಗೆ ಎಲ್ಲಾ ಬೇಕು. ಚಿಕ್ಕ ವಯಸ್ಸನಲ್ಲೆ ಹೆಂಡರು ಹಾಸಿಗೆ ಹಿಡಿದಳು. ಆದರೂ ಹೈದ ಇನ್ನೊಂದು ಹೆಣ್ಣ ತರನಿಲ್ಲ. ಈ ವಯಸನಲ್ಲು ಬೇಕು ಅಂದರ ಮಗು ಮಾಡಾರು ತೇಗಿರಿ. (ಕಿರಿಯರಿಬ್ಬರು ನಕ್ಕಿದ್ದರು) ಹೂಂ ಬುದ್ದಿ ಮಾತಿಗೆ ಹೇಳಿದ್ದು. ನಮಗೆ ರಾತ್ರಿ ಹೆಂಡ ಕುಡಿನಿಲ್ಲ ಅಂದರೆ ನಿದ್ದೆ ಬರೊದಿಲ್ಲ. ಆದರೆ ಅವರು ಹಾಂಗಲ್ಲ. ನಿಜ ಜಾಸ್ತಿ ಮಾತಿರಲಿಲ್ಲ. ಹೆಂಡರ್ರು ಹೋದಮೇಲಂತು ಪೂರ್ತಿ ನಿಂತೆ ಹೊಯ್ತು ಅನ್ನಿ. ಆ ಅಯ್ಯನವರು ಜಾಗ ಖಾಲಿ ಮಾಡಬೇಕು ಅಂದಿದ್ದು ನಿಜ. ಚಿಕ್ಕಣ್ಣ ದೋಬಿಗಾಟನಲ್ಲಿ ಮರಕ್ಕೆ ಒರಗಿ ಮಲಗಿದ್ದು ನಿಜವೆ. ಸತ್ತೆ ಹೊದರು ಅಂತ ಸುದ್ದಿ ಹಬ್ಬಿರೋದು ನಿಜವೆ. ಸತ್ತಿದ್ದರೆ ಹೆಣ ಇಲ್ಲಿಗೆ ತರದೆ ಇರ್ತಿದ್ದರೆ ನೀವೆ ಹೇಳಿ ಬುದ್ದಿ. ಮಾತಿಗೇನು ಬುದ್ದಿ ಸುಮ್ಕೆ ಆಡಬಹುದು. ನನ್ನ ಜೀವ ಹೇಳೊದು ಅವರು ಚೆಂದಾಗೆವರೆ ಅಂತ. ಎಲ್ಲಿ ಯಾಕೆ ಏನು ನಾ ಕಾಣೆ.” +ಆತನ ಮಾತು ನನಗ್ಯಾಕೊ ಸರಿ ಎನಿಸಿತ್ತು. +“ನಿಮ್ಮ ಹೆಸರು” +“ಯಾಕೆ ಬುದ್ದಿ ಏನಾದರು ತಪ್ಪು ಹೇಳಿದನೆ?” +“ಇಲ್ಲಪ್ಪ. ಎಲ್ಲಾ ಸರಿಯಾಗೆ ಹೇಳದಿ. ಅದಕ್ಕೆ ಕೇಳಿದ್ದು” +“ಬೊರಣ್ಣ ಅಂತ ಬುದ್ದಿ ಇಲ್ಲೆ ಸಂತೆಪೇಠೆಲಿ ಕೂಲಿ ಕೆಲಸ ಮಾಡ್ತಿವಿ” +“ಸರಿಯಪ್ಪ ಬರ್ತಿನಿ” ಎಂದು ಮನೆಗೆ ಬಂದೆ. +ನಾನು ನ್ಯೂಯಾರ್ಕಿಗೆ ಹಿಂತಿರುಗುವ ಮೊದಲೊಮ್ಮೆ ಮತ್ತೆ ನರಸಿಂಹಯ್ಯನವರ ಮನೆಗ್ಹೋಗಿ ನೋಡಿದ್ದೆ. ಅವರಿನ್ನು ಬಂದಿರಲಿಲ್ಲ. ಸುಮಾರು ಐವತ್ತು ವರುಷದ ದೋಬಿಅಂಗಡಿ- ಚಿಕ್ಕಣ್ಣನ ಅಂಗಡಿಯೆಂದೆ ಹೆಸರಾಗಿದ್ದ ಜಾಗ ಕಾರು ನಿಲ್ಲಿಸುವ ಷೆಡ್ ಆಗಿ ಮಾರ್ಪಾಡಾಗಿದ್ದು ನಿಜ ಸಂಗತಿ. ಈಗ ಆದು ಮುಗಿದ ಕತೆ. +ಆದರೆ…ಚಿಕ್ಕಣ್ಣ ಏನಾದ ? +ಓದೋಣ ಬನ್ನಿ… +ನರಸಿಂಹಯ್ಯನವರ ಪತ್ರದಲ್ಲಿ ಬರೆದ ಉತ್ತರ ಹೀಗಿತ್ತು: +ನಿಮ್ಮ ಸ್ನೇಹಿತ ಹೇಳಿದ್ದು ಚೇಚು ಹೇಳಿದ್ದು ಎರಡೂ ನಿಜವೇ -ಒಂದು ವಿಷಯವನ್ನುಳಿದು. ಅಂದು ನಾನು ಜಾಗ ಬೇಕೆಂದು ಹೇಳಿದ ದಿನ ಚಿಕ್ಕಣ್ಣ ಮರಕ್ಕೊರಗಿ ಮಲಗಿದವನು ಸತ್ತು ಹೋದನೆಂದೆ ನನಗೂ ಸುದ್ದಿ ಬಂದಿದ್ದು. ಕೂಡಲೇ ಸಿದ್ದುವಿಗೆ ಹೇಳಿ ಕಳುಹಿಸಿದ್ದೆ. ಚಿಕ್ಕಣ್ಣ ಸತ್ತಿರಲಿಲ್ಲ. ಮಲಿಗಿದವನಿಗೆ ನಿದ್ದೆಯಲ್ಲೆ ‘ಮೈಲ್ಡ್ ಸ್ಟ್ರೋಕ್’ ಹೊಡೆದು ಜ್ಞಾನ ಹೋಗಿತ್ತು ಅಷ್ಟೆ. ಅಲ್ಲಿದ್ದ ಜನಕ್ಕೆ ತಿಳಿಯದೆ ಗಾಬರಿಯಲ್ಲಿ ಸತ್ತೆ ಹೋದರು ಎಂದು ತಿಳಿದು ಹಬ್ಬಿದ ಸುದ್ದಿ ಆದು. ಒಂದು ತಿಂಗಳಲ್ಲಿ ಎಲ್ಲ ಸರಿಯಾಗುತ್ತೆ ಆದರೆ ಮೊದಲಿನಂತೆ ಜಾಸ್ತಿಯಾಗಿ ಕೆಲಸ ಮಾಡಬಾರದು ಎಂದರಂತೆ ವೈದ್ಯರು. ನಾನು ತಿಳಿದವರಿಗೆ ಹೇಳಿ ಹಳೆಬಂಡಿಕೇರಿಯಲ್ಲಿ ಒಂದು ಜಾಗದ ವ್ಯವಸ್ಥೆಯನ್ನು ಮಾಡಿದ್ದೆ. ಒಂದು ವಾರದಲ್ಲಿ ಚಿಕ್ಕಣ್ಣ ಅಂಗಡಿಗೆ ಹೋಗಬೇಕೆಂದು ಹಠ ಹಿಡಿದು ಕೂತಿದ್ದನಂತೆ. ದೊಡ್ಡಣ್ಣ ತಡೆದರಂತೆ. ಅಷ್ಟ್ರಲ್ಲಿ ಬೆಂಗಳೂರಿನಿಂದ ನಂಜಪ್ಪ ಆವನ ಹೆಂಡತಿ ಬಂದರಂತೆ. ಮನೆ ಖರೀದಿ ಮಾಡಿದಿನಿ ಎಲ್ಲರೂ ಅಲ್ಲಿಯೆ ಬಂದಿದ್ದರೆ ಚೆನ್ನಾಗಿರುತ್ತೆ ಆದೆ ಒಳ್ಳೆಯದು ಅಂತ ಅವರಪ್ಪನಿಗೆ ಒಪ್ಪಿಸಿಬಿಟ್ಟು ಹೋದನಂತೆ. ಆದಾದ ತಿಂಗಳಲ್ಲೇ ಎಲ್ಲರೂ ಬೆಂಗಳೂರಿಗೆ ಹೋಗಿ ನೆಲೆಸಿದ್ದು. +ನಾನು ತೀರ್ಥಯಾತ್ರೆ ಮುಗಿಸಿ ಬರುವಾಗ ಮನೆಗು ಹೋಗಿ ಬಂದೆ. ಚಿಕ್ಕಣ್ಣ ಈಗ ಇಸ್ತರಿ ಮಾಡುವದನ್ನು ಪೂರ್ತಿಯಾಗಿ ನಿಲ್ಲಿಸಿದ್ದಾನೆ. ಮೊಮ್ಮಕ್ಕಳು ಶಾಲೆಗೆ ಹೋದಮೇಲೆ ಅಂಗಡಿಯಲ್ಲಿ ಕೂತಿರುತ್ತಾನೆ. ಮನೆಗೆ ಸೇರಿದಂತಿರುವ ಅಂಗಡಿಯನ್ನು ಸಿದ್ದಣ್ಣ ನಡೆಸುತ್ತಾನೆ. ಬ್ಯಾಂಕಿನ ಸಾಲವನ್ನು ತೀರಿಸಿ ಅಟೊ ನಂಜಪ್ಪನದಾಗಿದೆ. ಒಟ್ಟಿನಲ್ಲಿ ಎಲ್ಲರೂ ಕ್ಷೇಮವಾಗಿ ಸಂತೋಷವಾಗಿದ್ದಾರೆ…. +***** +೩-೧೯-೨೦೦೩ +ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_655.txt b/Kannada Sahitya/article_655.txt new file mode 100644 index 0000000000000000000000000000000000000000..ca784080e92f6c72d695ca7be13543b5b5114bb2 --- /dev/null +++ b/Kannada Sahitya/article_655.txt @@ -0,0 +1,109 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಟ್ರಿನ್… ಟ್ರಿನ್…” ರಿಂಗಣಿಸಿದ ದೂರವಾಣಿ ಕರೆಗೆ ಸ್ಪಂದಿಸಿದ ಪ್ರಸಿದ್ಧ ರೋಬೊ ತಜ್ಞ ಪ್ರೊ. ರಂಗ ಪ್ರಸಾದ. +“ಪ್ರೊ. ರಂಗಪ್ರಸಾದ ಹಿಯರ್…! ” +“ಗುಡ್ ಮಾರ್ನಿಂಗ್. ಪ್ರೊಫೇಸರ್…” ಸಿಟಿಯಿಂದ ನಾಲ್ವತ್ತು ಕೀ.ಮಿ.ದೂರದಲ್ಲಿರೊ ಎಸ್ಟೆಟ್‌ನಿಂದ ಮ್ಯಾಗಿಯ ಧ್ವನಿ ಸ್ಪುಟವಾಗಿ ಮೂಡಿ ಬಂದದ್ದಲ್ಲದೆ ಎದುರಿಗಿನ ವಿಡಿಯೋ ಮೇಲೆ ಅವಳ ಬಿಂಬವೂ ಮೂಡಿ ಬಂದಿತು. +“ಪ್ರೊಫೇಸರ್. ನನಗೊಂದು ರೊಬೊಟಿನ ಅಗತ್ಯವಿದೆ…” +“ಶೂರ್.ಮ್ಯಾಗಿ. ಆದರೆ ಅದರ ಪ್ರೊಗ್ರಾಮಿಂಗ ಮತ್ತು ಕ್ಯಾರಕ್ಟರ ಬಗ್ಗೆ ನೀನು ಮೊದಲೇ ನನಗೆ ಡಿಟೈಲ್ಸ್ ಕೊಟ್ಟಲ್ಲಿ ನೀನಗೋಸ್ಕರವೆಂದೆ ರೊಬೊಟನ್ನು ಡಿಸೈನ್ ಮಾಡಬಹುದು…” +“ಇಲ್ಲ.ಅದೆಲ್ಲಾ ಅಗತ್ಯವಿಲ್ಲ. ಸಾಮಾನ್ಯವಾಗಿ ನಾನು ಹೇಳಿದ್ದನ್ನೆಲ್ಲಾ ಕೇಳುವಂತಹ ನನ್ನ ದೈನಂದನ ಮತ್ತು ಕಛೇರಿಯ ಕೆಲಸಗಳಿಗೆ ಸಹಾಯವಾಗುವಂತಹ ಮತ್ತು ಬಹಳವೆಂದರೆ ಕಾರು ರೈಡಿಂಗ ಮತ್ತು ನ್ನನ್ನೆಲ್ಲಾ ಕೆಲಸಗಳಿಗೆ ಯಾವುದೆ ತೊಂದರೆಯಾಗದಂತೆ ಸಹಾಯ ಮಾಡುವ ಸಾಮಾನ್ಯ ರೊಬೊ ಇದ್ದರೆ ಸಾಕು…” +“ಓ.ಕೆ. ಮ್ಯಾಗಿ. ಸಂಜೆ ನಿಮ್ಮ ಮನೆಗೆ ನನ್ನ ಹುಡುಗ ಬಂದು ತಲುಪಿಸುತ್ತಾನೆ. ಹಾಗು ನೀನು ಹೇಳುವ ಎಲ್ಲಾ ಕೆಲಸಗಳಿಗೆ ಅವನು ಅದನ್ನು ಟ್ಯೂನ್ ಮಾಡಿಟ್ಟು ಬರುತ್ತಾನೆ…” +“ಥ್ಯಾಂಕೂ.. ಪ್ರೊಫೇಸರ್. ” +ಹೀಗೆ ವರುಷಗಳ ಹಿಂದೆ ಈ ರೀತಿಯಾಗಿ ಲಕ್ಷಾಧೀಶಳೂ ಹಾಗೂ ಕೈಗಾರಿಕೊದ್ಯಮಿ ಎಂದೇ ಹೆಸರುಗಳಿಸಿದ್ದ ಮ್ಯಾಗಿ ಮನೆಯನ್ನು ಬಂದು ಸೇರಿಕೊಂಡಿದ್ದು ಮ್ಯಾಕ್ಸ್ ಎಂಬ ರೋಬೊ. ಅವನು ಅವಳು ಹೇಳುವುದನ್ನೇಲ್ಲಾ ಚಾಚು ತಪ್ಪದೇ ಪಾಲಿಸುತ್ತಾನೆ. ಅವಳು ಬೆಳಿಗ್ಗೆ ಎದ್ದ ಕೂಡಲೆ ಕಾಫಿ ತಂದಿಡುತ್ತಾನೆ. ಸ್ನಾನ ಮಾಡಿ ಹೊರಗೆ ಬರುತ್ತಿದ್ಡಂತೆ ಹೇಯರ್ ಡ್ರೈಯರ್ ಎತ್ತಿಕೊಂಡು ಬಂದು ಆನ್ ಮಾಡಿಕೊಂಡು ನಿಲ್ಲುತ್ತಾನೆ. +ಅವಳು ಡ್ರೆಸ್ಸ್ ಮಾಡಿಕೊಳ್ಳುತ್ತಿದ್ದರೆ ಆಸಕ್ತಿಯಿಂದ ಕನ್ನಡಿಯನ್ನು ನಿಂತು ನೋಡುತ್ತಾನೆ… ಅವಳು ಹೊರಕ್ಕೆ ಬರುತ್ತಿದ್ದಂತೆ ಬಾಗಿಲನ್ನು ತೆರೆದು ನಿಂತು ಅವಳು ದಾಟುತ್ತಿದ್ದಂತೆ ರಿಮೋಟಿನಿಂದ ಬಾಗಿಲನ್ನು ಹಾಕಿಕೊಳ್ಳುವಂತೆ ಮಾಡುತ್ತಲೇ ಕಾರಿನ ಬಳಿಗೆ ಸಾಗಿ ಹೋಗಿ ಹಿಂದಿನ ಬಾಗಿಲನ್ನು ತೆರೆದಿಟ್ಟು ತಾನು ಡ್ರೈವರ್ ಸೀಟನ್ನು ಸೇರಿಕೊಳ್ಳುತ್ತಿದ್ದ. ಅಫೀಸಿನಲ್ಲಿ ಅವಳು ಡಿಕ್ಟೆಟ್ ಮಾಡುತ್ತಿದ್ದರೆ ನೇರವಾಗಿ ಅದನ್ನು ಕಂಪ್ಯೂಟರಿನಲ್ಲಿ ಪಿ಼ಡ್ ಮಾಡುತ್ತಾ ಸಾಗುತ್ತಿದ್ದ. ಸಂಜೆ ಮನೆಗೆ ಬಂದ ಮೇಲೆ ಕೂಡಾ ಅಷ್ಟೆ ಅವಳಿಗೆ ಕಾಫಿಯಿಂದ ಹಿಡಿದು ನೈಟಿಯನ್ನು ಎತ್ತಿಕೊಡುವವರೆಗೂ ಕೆಲಸ ನಿರ್ವಹಿಸುತ್ತಿದ್ದ. +ಆದರೆ ಇತ್ತಿಚಿನ ಕೆಲ ದಿನಗಳಿಂದ ಚಿರಾಗ್‌ನಲ್ಲಿ ಬದಲಾವಣೆ ಬಂದಿದ್ದನ್ನು ಅವಳು ಗಮನಿಸಿದ್ದಳು. ಅವನು ಅವಳು ನೋಡುತ್ತಿದ್ದ ದೃಷ್ಟಿಯಲ್ಲಿ ಬದಲಾವಣೆ ಕಂಡಿತ್ತು. ಅವಳ ಹತ್ತಿರ ಬಂದು ನಿಲ್ಲುತ್ತಿದ್ದ. ಮೊದಲಿನಂತೆ ಹೇಳಿದ್ದಷ್ಟನ್ನೇ ಮಾಡಿಕೊಂಡಿರದೆ ಅದನ್ನು ಮಾಡಲೇ ಇದನ್ನು ಮಾಡಲೇ ಎಂದೆಲ್ಲಾ ಕೇಳುತ್ತಿದ್ದ. ಅವಳನ್ನು ಅಗಾಗ ಹೊಗಳಲು ಆರಂಭಿಸಿದ್ದ. ಆದರೆ ಪೂರ್ತಿಯಾಗಿ ಅವನ ಬಗ್ಗೆ ಮ್ಯಾಗಿಗೆ ಸಂಶಯ ಮತ್ತು ಅವನನ್ನು ಗಮನಿಸುವ ದೃಷ್ಟಿ ಕೋನ ಬದಲಾಗಿದ್ದು ಮಾತ್ರ ಕೆಲ ದಿನಗಳ ಹಿಂದೆ ನಡೆದ ಘಟನೆಯ ನಂತರವೇ… +… ಅಂದು ಎಂದಿನಂತೆ ಮ್ಯಾಕ್ಸ್ ಅವಳ ಪಕ್ಕದಲ್ಲಿ ಕುಳಿತು ಅವಳು ಮಾಡುವುದನ್ನೇ ಗಮನಿಸುತ್ತಿದ್ದ. ಅದಕ್ಕೂ ಮೊದಲಷ್ಟೆ ಅವನು ಕುಳಿತುಕೊಂಡು ಒಂದು ಚಲನ ಚಿತ್ರವನ್ನು ವಿಕ್ಷಿಸಿದ್ದ. ಇದ್ದಕ್ಕಿದ್ದಂತೆ ಅವಳಿಗೆ +“ಹಾಯ್ ಸ್ವೀಟಿ…”ಎಂದ. ಅವಳಿಗೆ ಅಚ್ಚರಿಯಾದರೂ ಅವನತ್ತ ತಿರುಗಿ ಮುಗುಳ್ನಗೆ ಬೀರುತ್ತಾ… +“ಏನು… ಮ್ಯಾಕ್ಸ್…? “ಎಂದಳು. +“ಏನಿಲ್ಲ ಸುಮ್ಮನೆ ಮಾತಾಡಲು ಬಂದೆ … “ಎಂದವ ಅವಳನ್ನೇ ವೈಯ್ಯಾರವಾಗಿ ದಿಟ್ಟಿಸಿದ. ಅವಳಿಗೆ ವಿಚಿತ್ರ ಎನ್ನಿಸಿದರೂ ತೋರ್ಪಡಿಸದೆ +“ಹೇಳು… ಯಾವ ವಿಷಯನ್ನು ಮಾತಾಡೋಣ… ವಿಜ್ಞಾನ… ಮಾಹಿತಿ ತಂತ್ರಗಳು… ಕ್ಲೋನಿಂಗ… ನ್ಯೂಕ್ಲೀಯರ್ ಸೈನ್ಸ್…” +“ಅದಲ್ಲ…”ಎನ್ನುತ್ತಾ ತಡವರಿಸಿದ. +“ಮತ್ತಿನ್ಯಾವುದು… ? ” +“ಅದೇ ಈ ಮೊದಲು ಚಿತ್ರದಲ್ಲಿ ಮಾತಾಡುತ್ತಿದ್ದರಲ್ಲ… ಹಾಗೇ ನಿನ್ನೊಂದಿಗೆ ಮಾತಾಡಬೇಕೆನ್ನಿಸುತ್ತಿದೆ…” +“ವಾಟ್ … ? “ಮ್ಯಾಗಿಯ ದ್ವನಿಯಲ್ಲಿ ಅಚ್ಚರಿ.. ಉದ್ವೇಗ .. ಆತಂಕ ಸ್ಪಷ್ಟವಾಗಿ ಕಂಡು ಬರುತ್ತಿತ್ತು. +“ಹೌದು… ಮ್ಯಾಗಿ ಅದೇನೊ ಅರ್ಥವಾಗದ ಶಬ್ದಗಳ ಬಗ್ಗೆ ತಿಳಿದುಕೊಳ್ಳಬೇಕು ಅನ್ನಿಸುತ್ತಿದೆ… ” +“ಅಂದ್ರೆ… ಯಾವ ರೀತಿಯ ಶಬ್ದಗಳು… ? ಏನೆಲ್ಲಾ ತಿಳಿದುಕೊಳ್ಳಬೇಕೆನ್ನಿಸುತ್ತಿದೆ ನಿನಗೆ…? ” +“ಅದೇ ನೀನು ನೋಡಿದ್ಯಲ್ಲ. ಹಾಗೇ ನಾನು ನಿನ್ನ ಪಕ್ಕದಲ್ಲೆ ಕುಳಿತು ಮಾತನಾಡಬೇಕು. ನಿನ್ನ ಕೈ ಹಿಡಿದು ಕೊಳ್ಳಬೇಕು… ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು… ದೊಡ್ಡದಾಗಿ ನಗಬೇಕು… ಹಾಂ. ನನ್ನ ನೆನೆಪಿನಲ್ಲಿ ನಗೋದು ಅಂದ್ರೆನೆಂದು ತೀಳಿದುಕೊಳ್ಳಲಾಗ್ತಿಲ್ಲ. ನೀನೆ ಕೈಹಿಡಿದು ಹೇಳಿಕೊಡ್ತಿ ತಾನೆ…? ಹಾಗೆ ಕೈ ಹಿಡಿದು ನಗ್ತಾ ನಗ್ತಾ ನಿನ್ನನ್ನು ನಾನು ಹಿಡಿದು ಕೊಳ್ಳಬೇಕು…” +“ಓ… ಶಟ್ ಅಪ್ ಮ್ಯಾಕ್ಸ್. ನೀನೇನು ಮನುಷ್ಯನೇ ಅದನ್ನೆಲ್ಲಾ ಮಾಡೋಕೆ…? ” +“ಯಾಕೆ ಮನುಷ್ಯರು ಮಾತ್ರ ಮಾಡಬೇಕೆ…? ” +“ಹೌದು ಮ್ಯಾಕ್ಸ್. ಕೆಲವು ಕೆಲಸಗಳನ್ನು ನೀನು ಮಾಡಲಾಗುವುದಿಲ್ಲ. ಅವನೆಲ್ಲಾ ನಾವು ಮಾತ್ರ ಮಾಡಿಕೊಳ್ಳ ಬಲ್ಲೆವು…” +“ಇಲ್ಲ ನಾನೂ ಮಾಡಬಲ್ಲೆ…” +“ಏನು ಮಾಡಬಲ್ಲೆ ನೀನು…? ” +“ಅದೇ ಪ್ರಿತೀಸೋದು…! ” +“ವಾಟ್. ನೀನು ಪ್ರೀತಿಸೋದಾ… ? ” +“ಹೌದು. ಮ್ಯಾಗಿ ನಾನೂ ಪ್ರೀತಿಸ್ಬೇಕು.” +“ಮ್ಯಾಕ್ಸ್. ನೀನು ಪ್ರೀತಿಸೊದಾ…? ನೀನೊಬ್ಬ ಯಂತ್ರ ಮಾನವ. ಮಾನವನ ಆಜ್ಞೆಗೊಳಪಟ್ಟು ಕೆಲಸ ಮಾಡುವುದಷ್ಟೆ ನಿನ್ನ ಕೆಲಸ. ಅದನ್ನು ಬಿಟ್ಟು ಇದೆಲ್ಲಾ ಏನು ನಾಟಕ ಆರಂಭಿಸಿದ್ದೀಯಾ…? ಇದನ್ನೆಲ್ಲಾ ಯಾರು ತುಂಬಿದರು ನಿನ್ನ ತಲೆಗೆ…? ” +“ಯಾಕೆ. ನಾನು ರೋಬೊ ಆದ ಮಾತ್ರಕ್ಕೆ ಪ್ರೀತಿಸಬಾರದಾ… ? ನೀವು ಮಾನವರು ಮಾತ್ರ ಪ್ರಿತಿಸಬಹುದಾ…? ನಾನೊಂದು ಯಂತ್ರ ಮಾನವನಾಗಿದ್ದ ಮಾತ್ರಕ್ಕೆ ನನಗೆ ಯೋಚನೆಗಳೆ ಇರಬಾರದಾ…? ” +“ಯಾರು ಹೇಳಿದ್ದು. ನಿನಗೂ ಯೋಚನೆಗಳು ಇರ್ಬೆಕು. ಆದರೆ ಅದು ನನ್ನ ಆಜ್ಞೆ ಮತ್ತು ಕೆಲಸವನ್ನು ನಿರ್ವಹಿಸಲು ಅಗತ್ಯವಿರುವಷ್ಟು ಮಾತ್ರ. ನಿನ್ನನ್ನು ಅದಕ್ಕೆಂದೆ ನಾನು ತಂದಿದ್ದು…” +“ಅನ್ಯಾಯ…”ಗೊಣಗಿದ ಮ್ಯಾಕ್ಸ್ ತನ್ನಲ್ಲೆ. +“ಯಾಕೆ…? “ಅವಳಿಗೆ ಅವನ ಹೊಸ ಪದಗಳು ಅಚ್ಚರಿ ಮೂಡಿಸಿದ್ದವು. +“ಇನ್ನೇನು. ನಾನು ನಿಮ್ಮಂತೆ ನಡೆದಾಡ್ತಿನಿ. ನಿಲ್ತಿನಿ. ಮಾತ್ನಾಡ್ತಿನಿ ಎಲ್ಲಾ ಕೆಲಸವನ್ನು ನಿರ್ವಹಿಸೋ ನಾನು ಪ್ರೀತಿಸ್ಬಾರದಾ…? ” +“ಹಾಗಂದ್ರೆ ನಿನಗೆ ಗೊತ್ತಾ…? ” +“ಗೊತ್ತು. ಪ್ರೀತಿ ಒಂದು ಮಾನಸಿಕವಾದ ಅನುಭೂತಿ. ಅನುಭವಕ್ಕೇನೆ ಅದು ಗೊತ್ತಾಗೋದು. ಪ್ರೀತಿಸ್ತಿದ್ದೇನೆ ಅನ್ನೋದು ಮಾನಸಿಕವೇ ಹೊರತಾಗಿ ಭೌತಿಕವಲ್ಲದ ಒಂದು ಹೊಸ ಆಯಮ… ಪ್ರೀತಿ ಇದ್ದಲ್ಲಿ ದ್ವೇಷ ಇದೆ. ಅಸೂಯೆ ಇದೆ. ಇತ್ಯಾದಿ… ಇತ್ಯಾದಿ…” +“ಚೆನ್ನಾಗಿದೆ ಡೆಫಿನಿಶನ್. ಇದು ಅನುಭವಾನಾ ? ಇಲ್ಲಾ ಯಾರಾದರು ಹೇಳಿ ಕೊಟ್ಟದ್ದಾ ? ” +“ಎರಡಕ್ಕೂ ಜಾಸ್ತಿ ವ್ಯತ್ಯಾಸ ಇಲ್ಲ ಎಂದುಕೊಳ್ತಿನಿ..” +“ಅ೦ದ್ರೆ ನೀನು ಯಾರನ್ನಾದರು ಪ್ರೀತಿಸ್ತಿದಿಯಾ ? ಐ. ಮೀನ್ ಲವ್..! ” +“ಹೌದು… ” +“ವಂಡರ್ ಫುಲ್. ಯಾರನ್ನ ” +“ನಿನ್ನನ್ನೆ ಮ್ಯಾಗಿ. ಐ..ಲವ್..ಯೂ ” +ಸ್ಥಂಭಿಸಿ ನಿಂತುಬಿಟ್ಟಳು ಮ್ಯಾಗಿ. +ಮುಂದುವರೆದು ಬರುತ್ತಿದ್ದ ಮ್ಯಾಕ್ಸ್‌ನನ್ನು ಕಂಡು ಹಿಂದೆ ಸರಿಯುತ್ತಾ ಕಿರುಚಿದಳು. +“ಮ್ಯಾಕ್ಸ್. ಸ್ಟಾಪ್ ದೆರ್. “ಅವನು ಅಲ್ಲೇ ನಿಂತ. ಅವನ ಹಸಿರು ಕಣ್ಣುಗಳಲ್ಲಿ ಇದ್ದ ಭಾವನೆಯನ್ನು ಅವಳಿಂದ ಗುರುತಿಸುವುದು ಅಸಾಧ್ಯವಾಗಿತ್ತು. ಕೂಡಲೇ ಈ ಹೊಸ ಬೆಳವಣಿಗೆಗಗಳ ಬಗ್ಗೆ ಅವಳು ಪ್ರೊ.ರಂಗ ಪ್ರಸಾದಗೆ ಮೊಬೈಲ್ ಮೂಲಕ ತಿಳಿಸಿದವಳೆ ಅವರ ಅಪ್ಪಣೆಯಂತೆ ಮ್ಯಾಕ್ಸ್ ನನ್ನೇತಿಕೊಂಡು ಅವರ ಲ್ಯಾಬಿಗೆ ಹೋದಳು. +* +* +* +“ಇದೊಂದು ತೀರ ಅಪರೂಪದ ಬೆಳವಣಿಗೆ “ಎಂದರು ರಂಗಪ್ರಸಾದ ಅವರ ಎದುರಿಗೆ ನಿರ್ಜಿವ ಶವದಂತೆ ಮ್ಯಾಕ್ಸ್ ಮಲಗಿದ್ದ. +“ಹೌದು ಅದೇ ನನಗೂ ಅರ್ಥವಾಗುತ್ತಿಲ್ಲ ಮ್ಯಾಕ್ಸ್ ಅದ್ಹೆಗೆ ಈ ರೀತಿಯಾಗಿ ವರ್ತಿಸಿದ ಎಂದು. ” +“ಮ್ಯಾಗಿ. ಹಾಗೇನಾದರೂ ಮ್ಯಾಕ್ಸ್ ರೋಬೊ ನೀತಿ ಸಂಹಿತೆಯನ್ನು ಉಲ್ಲಂಘಿಸಿಯೂ ಬದುಕಿದ್ದರೆ ಅದೊಂದು ಅದ್ಭುತ ಬೆಳವಣಿಗೆಯಾಗಲಿದೆ….” +“ಅಂದರೆ … ? ” +“ಒಂದು ಕಾಲಕ್ಕೆ ರೋಬೊ ಬರಿ ಕಾಲ್ಪನಿಕ ಯಂತ್ರವಾಗಿತ್ತು. ಆದರೆ ವಿಜ್ಞಾನ ಬೆಳೆದಂತೆಲ್ಲಾ ರೋಬೊಗಳೂ ಸಾಕಷ್ಟು ಅಭಿವೃದ್ಧಿ ಹೊಂದಿವೆ. ರೋಬೊಗಳ ಮೆದುಳಿಗೆ ನೀಡಿರುವುದು ಕೇವಲ ೪೦ ನ್ಯೂರಾನ್ಸ್ ಶಕ್ತಿಯಾದರೂ ಅವುಗಳೆರೆದುರಿಗೆ ಬಿಲಿಯನ್ನುಗಟ್ಟಲೆ ನ್ಯೂರಾನ್ಸ್ ಶಕ್ತಿಯನ್ನು ಹೊಂದಿರುವ ಮಾನವ ಏನೇನೂ ಅಲ್ಲ ಎನ್ನುವಂತಾಗುತ್ತಿದ್ದಾನೆ. +ಅಲ್ಲದೆ ಮಾನವನಿಗೆ ಕಲಿಯಲು ಬೇಕಾದ ವರ್ಷಗಟ್ಟಲೆ ಅವಧಿಗೆ ಹೋಲಿಸಿದರೆ ರೋಬೊ ಕೆಲವೇ ಗಂಟೆರ್ಗಳಲ್ಲಿ ಕಲಿತು ಬಿಡುತ್ತಿದೆ. ಹೀಗೆ ಆದರೆ ರೋಬೊಗಳು ಒಂದಿನ ಮಾನವನ ಸಂತಿತಿಯನ್ನೇ ಮೆಟ್ಟಿ ಮೆರೆದರೂ ವಿಚಿತ್ರವೇನಲ್ಲ. +ಯಾಕೆಂದರೆ ಮ್ಯಾಕ್ಸ್ ಒಬ್ಬ ಅಧ್ಬುತ ಕೆಲಸಗಾರನಾದರೂ ಅವನ “ಪೊಜಿಟ್ರಾನಿಕ್ ಮೆದುಳಿಗೆ ಬೇರಾವುದೆ ಯೋಚನೆಗಳಿಗೆ ಅವಕಾಶವಾಗುವಂತೆ ಪ್ರಾವಿಶನ್ನನ್ನು ನಾನು ಮಾಡಿಲ್ಲ. ಅಲ್ಲದೆ ನಿನ್ನೊಂದಿಗೆ ಅವನು ಮಾಡಿದ ವಾದ ವೈಖರಿಯನ್ನು ಗಮನಿಸಿದರೆ ಖಂಡಿತವಾಗಿಯೂ ಮ್ಯಾಕ್ಸ್‌ನಲ್ಲಿ ಹೊಸದಾದ ಸರ್ಕ್ಯೂಟ್‌ಗಳು ಅಭಿವೃದ್ಢಿಯಾಗಿರುವ ಲಕ್ಷಣಗಳು ಕಾಣಿಸುತ್ತಿವೆ. +“ಹಾಗಾಗುವ ಸಾಧ್ಯತೆ ಇದೆ ಅಂತೀರಾ ಪ್ರೊಫೇಸರ್ … ! ” +“ಹೌದು ಮ್ಯಾಗಿ. ಯಾಕೆಂದರೆ ಇಂತಹದ್ದೇ ಬುದ್ಧಿವಂತ ರೋಬೊಗಳ ಗುಂಪೊಂದು ತಮ್ಮಲ್ಲೇ ಬೆಳೆಸಿಕೊಂಡ ಅಪರೂಪದ ಗುಣಗಳ ಪರಿಣಾಮವಾಗಿ ಇದ್ದ ಎಂಟು ಜನ ರೋಬೊಗಳಲ್ಲೆ ಒಬ್ಬನನ್ನು ನಾಯಕನನ್ನಾಗಿಸಿಕೊಂಡು ತಮ್ಮ ಮಾಲಿಕನ ವಿರುದ್ಧ ಬಂಡೆದ್ದಿದ್ದು ವಿಚಿತ್ರವಾದರೂ ಸತ್ಯವಾದ ಘಟನೆಯಾಗಿದೆ. ಹೀಗಿದ್ದಾಗ ನಾರ್ಮಲ್ಲಿಗಿಂತಲೂ ಹೆಚ್ಚಿನ ಬುದ್ಧಿ ಶಕ್ತಿಹೊಂದಿದ್ದ ರೋಬೊ ಈ ರೀತಿಯಲ್ಲಿ ಬೆಳವಣಿಗೆಯನ್ನು ತೋರಿಸಿದ್ದರೆ ಆಶ್ಯರ್ಯವೇನೂ ಇಲ್ಲ…” +“ಆದರೆ ಪ್ರೋಪೇಸರ್. ಅವನು ನನ್ನನ್ನೇ ಲವ ಮಾಡೋ ರೀತಿಯಲ್ಲಿ ಬೀಹೆವ್ ಮಾಡಿದ್ದಲ್ಲದೆ ನನ್ನನ್ನೇ ಹಿಡಿದುಕೊಳ್ಳಲು ಬಂದ. ರೀಯಲ್ಲಿ ವಂಡರ್. ಮ್ಯಾಗಿ ಐ…ಲವ್…ಯೂ… ಅಂದ ಮ್ಯಾಕ್ಸ್. ! ” +“ಆಶ್ಚರ್ಯವಾದರೂ ನಾನು ಸುಳ್ಳೆನ್ನುವುದಿಲ್ಲ. ಯಾಕೆಂದರೆ ನಮ್ಮೆಲ್ಲರಂತೆ ವ್ಯವಹರಿಸಲು ಮ್ಯಾಕ್ಸನನ್ನು ಸಂಪೂರ್ಣ ಮಾನವರಂತೆ ನಿರ್ಮಿಸಲಾಗಿದ್ದು ಕೇವಲ ಅವನಿಗೆ ಕಣ್ಣಿನಲ್ಲಿ ಕಾಣುವ ದೃಶ್ಯದಿಂದಲೇ ಪರಿಸ್ಥಿತಿಯನ್ನು ಅರಿತು ನಡೆಯುವಂತಹ ಪ್ರೊಗ್ರಾಮಿಂಗನ್ನು ಅಳವಡಿಸಲಾಗಿದೆ. ನೀನು ನಗುತ್ತಿದ್ದರೆ ಅದು ಅವನ ಕಣ್ಣಿಗೆ ಕಾಣಿಸುತ್ತಿದ್ದಂತೆ ಅವನ ಪಾಜಿಟ್ರಾನಿಕ್ ಮೆದುಳಿಗೆ ಆ ಕ್ರಿಯೆಯ ಬಗ್ಗೆ ಸಂದೇಶ ತಲುಪುತ್ತದೆ. +ಅಲ್ಲಿ ಮೊದಲೇ ಯಾವ್ಯಾವ ರೀತಿಯ ಸನ್ನೀವೇಶಗಳಿಗೆ ಹೇಗೆ ವರ್ತಿಸಬೇಕೆನ್ನುವ ವಿವರಣೆಗಳನ್ನು ತು೦ಬಿಸಿದ್ದರಿಂದ ಅದನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಮ್ಯಾಕ್ಸ್ ಭಾವನೆಗಳನ್ನು ಹೊರಗೆಡವಬಲ್ಲ. ನೀನು ಮಾತಾಡಿದರೆ ಅದು ಅವನ ಸ್ಪೀಕರಿಗೆ ಕೇಳಿಸುತ್ತಿದ್ದಂತೆ ಅಲ್ಲಿಂದ ಸಾಗಿ ಹೋಗುವ ಆ ಮೂಲಕ ಅವನ ಕಂಪ್ಯೂಟರಿನಲ್ಲಿ ಡೀಕೋಡ ಅಗಿ ಅದಕ್ಕೆ ಲಾಜಿಕಲ್ಲಾಗಿ ಉತ್ತರ ರೂಪದಲ್ಲಿ ಅವನ ಮೆದುಳು ವ್ಯಕ್ತಪಡಿಸುತ್ತಿದ್ದಂತೆ ಅದು ಪುನಃ ಶಬ್ದ ಹಾಗೂ ಧ್ವನಿಯನ್ನು +ಸೌಂಡ ಕಾರ್ಡಗಳು ಮೂಲಕ ವ್ಯಕ್ತಪಡಿಸುತ್ತವೆ. ಅದು ನಮಗೆ ಅವನು ಮಾತಾಡಿದಂತೆ ಇರುವುದರಿಂದ ಮ್ಯಾಕ್ಸ್ ಸಹಜವಾಗಿ ಮಾತಾಡುತ್ತಿರುವಂತೆ ತೋರುತ್ತದೆ. +ಅಷ್ಟೇ ಅಲ್ಲದೆ ಅವನಿಗೆ ಏಟಾದರೆ ರಕ್ತ ಬರುವಂತೆಯೂ … ಕಣ್ಣಿಂದ ನೀರು ಸುರಿಯುವಂತೆ ಅಶ್ರು ಗ್ರಂಥಿಗಳನ್ನೂ ಸೇರಿಸಲಾಗಿದೆ. ಹಾಗಾಗಿ ಮಾನವನು ಮಾಡಬಲ್ಲಂತಹ ಅಲ್ಲ ಕೆಲಸಗಳನ್ನು ಮ್ಯಾಕ್ಸ ಮಾಡಬಲ್ಲ. ಹೀಗಿದ್ದಾಗ ಅವನಲ್ಲಿ ಈ ರೀತಿಯ ಬದಲಾವಣೆಗಳು ಬಂದಿದ್ದರೆ ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ. ಬಹುಶಃ ಇನ್ನು ಮುಂದೆ ಯಂತ್ರಗಳೂ ಕೂಡಾ ಮಾನವನಂತೆ ಭಾವನೆಗಳನ್ನು ವ್ಯಕ್ತಪಡಿಸಿ ಬದುಕಬಹುದೆಂದುಕೊಳ್ಳುತ್ತೆನೆ… ಎನಿ ಹೌ… ಮ್ಯಾಗಿ. ಮೂರು ದಿನಗಳ ನಂತರ ನಾನು ಮ್ಯಾಕ್ಸನನ್ನು ಪುನಃ ಕಳಿಸುತ್ತೇನೆ. ಯಾವುದಕ್ಕೂ ಅವನ ಮೇಲೊಂದು ಲಕ್ಷವಿರಲಿ. …” +“ಓ…ಕೆ… ಪ್ರೋಪೇಸರ್…”ಧನ್ಯವಾದಗಳನ್ನರ್ಪಿಸಿದ ಮ್ಯಾಗಿ ಎಸ್ಟೇಟಿನತ್ತ ನಡೆದಳು. +* +* +* +ನಂತರದ ದಿನಗಳಲ್ಲಿ ಮ್ಯಾಕ್ಸ್ ಎಂದಿನಂತೆ ಅವಳೊಂದಿಗೆ ಇದ್ದನಾದರೂ ಅವನು ತನ್ನನ್ನು ಗಮನಿಸುತ್ತಿದ್ದಾನೆ ಎನ್ನುವುದು ಅವಳ ಗಮನಕ್ಕೆ ಬಂದಿತ್ತು. ತಾನು ಬೆಡ್ ರೂಮಿನಲ್ಲಿ ಬಟ್ಟೆ ಬದಲಿಸುತ್ತಿದ್ದರೆ ತನ್ನನ್ನು ಮೇಲಿನಿಂದ ಕೆಳಗಿನವರೆಗೆ ತದೇಕ ಚಿತ್ತನಾಗಿ ದಿಟ್ಟಿಸುತ್ತಿದ್ದುದ್ದನ್ನು… ತಾನು ಅವನ ಪಕ್ಕದಲ್ಲಿದ್ದರೆ ಅಗಾಗ ತನ್ನನ್ನೇ ನೇರವಾಗಿ ನೋಡುತ್ತಾ ನಿಲ್ಲುವುದನ್ನು ಮ್ಯಾಕ್ಸ್ ಆರಂಭಿಸಿದ್ದನ್ನು ಅವಳು ಸ್ಪಷ್ಟವಾಗಿ ಗುರುತಿಸಿದ್ದಳು. ಅಂದು ತೀರ ಕೆಲಸವಿದ್ದುದರಿಂದ ಮುಗಿಸುವ ಹೊತ್ತಿಗೆ ರಾತ್ರಿಯಾಗಿತ್ತು. ಮಲಗಲು ಹೋಗಬೇಕೆನ್ನುವ ಹೊತ್ತಿಗೆ ಮ್ಯಾಕ್ಸ್ ಕೂಡಾ ಅವಳ ಹಿಂದೆ ಬಂದ. +“ಏನು…? ” +“ನಾನು ನಿನ್ನ ಜೊತೆ ಮಲಗುತ್ತಿನಿ…! ” +“ಮ್ಯಾಕ್ಸ್. ಹೋಗಿ ಅಲ್ಲಿ ಕುಳಿತುಕೊ…” +“ನೋ ಮ್ಯಾಗಿ. ನಾನು ನಿನ್ನೊಂದಿಗೆ ಇರಲು ಬಯಸುತ್ತೇನೆ….”ಅವನ ಮಾತು ಮುಗಿಯುವ ಮುಂಚೆ ಕೂಗಿದ್ದಳು ಮ್ಯಾಗಿ. +“ಶಟ್ ಅಪ್. ಮಾಕ್ಸ್ ಹೋಗಿ ಕೂತಿರು…” +“ಇಲ್ಲ ಮ್ಯಾಗಿ. ನನಗೆ ನೀನು ತುಂಬ ಇಷ್ಟ ವಾಗುತ್ತಿದ್ದೀಯ… ನಾನು ನಿನ್ನೊಂದಿಗೆ ಇರುತ್ತೇನೆ…” +“ನೋ. ಮ್ಯಾಕ್ಸ್. ನಿನಗೆ ನಿನ್ನದೆ ಆದ ಪರಿಮಿತಿಗಳಿವೆ. ನೀನು ಇಂತಹ ವಿಷಯಗಳಿಗೆ ಅತೀತ…” +“ಇಲ್ಲ. ನನಗೆ ಹಾಗನ್ನಿಸುತ್ತಿಲ್ಲ. ನನ್ನಲ್ಲಿ ಈ ರೀತಿಯ ವಿಚಾರಗಳು ಮೂಡಿದಂತಿನಿಂದ ನಾನು ಕೂಡಾ ನಿಮ್ಮಂತೆನೆ ಪರಿಪೂರ್ಣ ಎಂದುಕೊಳ್ಳುತ್ತಿದ್ದೇನೆ. ಪ್ಲೀಸ್ ಮ್ಯಾಗಿ. ಒಮ್ಮೆ ನನ್ನ…” +“ನೋಡು ಮ್ಯಾಕ್ಸ್ ಕೆಲವು ಕಾಲದ ನಂತರ ನಿನ್ನ ಕುಲವೂ ನಮ್ಮಂತೆಯೇ ಬದುಕು ನಡೆಸುವ ಕಾಲ ಬಂದೆ ಬರುತ್ತದೆ. ಅಂತಹ ಒಂದು ಭವಿಷ್ಯತ್ತಿನ ವ್ಯವಸ್ಥೆಗೆ ನೀನು ಮೈಲಿಕಲ್ಲಾಗುತ್ತೀಯ. ಆದರೆ ನೀನು ಸಧ್ಯಕ್ಕೆ ನಿನ್ನ ಪರಿಮಿತಿಯನ್ನು ಮೀರುವಂತಿಲ್ಲ…” +“ಇಲ್ಲ. ಮ್ಯಾಗಿ. ನನಗೇನೂ ಆಗಲಾರದು. …” +“ಯಾಕಾಗಲ್ಲ. ನಿನ್ನದು ಆಜ್ಞೆಗೊಳಪಟ್ಟು ಕೆಲಸ ಮಾಡುವ ಮೆದುಳು… ನಿನ್ನ ಸರ್ಕ್ಯೂಟಗಳೂ ಒಂದು ಹಂತದ ನಂತರವೂ ಬೆಳವಣಿಗೆಗಳನ್ನು ಕಂಡರೆ ನೀನು ನಾಶವಾಗಿ ಹೋಗುತ್ತೀಯಾ…” +“ಇಲ್ಲ. ಮ್ಯಾಗಿ. ನನಗೇನೂ ಆಗಲಾರದು. ನಾನು ನಿನ್ನೊಂದಿಗೆ ಸೇರಿ ಪರಿಪೂರ್ಣನಾಗಿದೇನೆ. ಒಮ್ಮೆ ನನ್ನನ್ನು ತಬ್ಬಿಕೊ… ನೋಡು ನಾನು ನಿಮ್ಮಂತೆ ಎಲ್ಲವನ್ನು ಮಾಡುವಾಗ ಪ್ರೀತಿಯೆನ್ನೇಕೆ ಮಾಡಬಾರದು… ಅದಕ್ಕೆ ಇವತ್ತು ನಿನ್ನೊಂದಿಗೆ ಮಲಗಲಾ….? “ಅವನ ದ್ವನಿಯಲ್ಲಿ ಏರಿಳಿತಗಳಿರಲಿಲ್ಲ. ನಿರಂತರವಾಗಿ ಒಂದೇ ಟೋನಿನಲ್ಲಿ ಅದು ಹರಿಯುತ್ತಿತ್ತು. +ಅವನ ವಾದವನ್ನು ಕೇಳುತ್ತಿದ್ದರೆ ಅವಳಿಗೆ ಸಿಡಿದು ಬಿಡುವಂತಾಯಿತು. ಅವಳಿಗೆ ಅರ್ಥವಾಗಿ ಹೋಯಿತು. ಮ್ಯಾಕ್ಸ ಯಾವ ರೀತಿಯಲ್ಲಿ ತನ್ನನ್ನು ಪ್ರೀತಿಸಬೇಕೆಂದುಕೊಳ್ಳುತ್ತಿದ್ದಾನೆಂದು. ಇವನಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕೆನ್ನಿಸಿತವಳಿಗೆ. +“ಮ್ಯಾಕ್ಸ್. ನೀನು ಎಲ್ಲವನ್ನು ಮಾಡಬಲ್ಲೆ. ಆದರೆ ಪ್ರೀತಿಯಂತಹ ಪದಗಳಿಗೆ ನೀನು ಅತೀತ. ನೀನು ಮಾನವರಿಗಿಂತ ಎಷ್ಟೆ ಚೆನ್ನಾಗಿ ವೇಗವಾಗಿ ಕೆಲಸಗಳನ್ನು ಮಾಡಬಹುದು. ಆದರೆ ಒಂದು ಗಂಡು ಹೆಣ್ಣು ಸೇರಿದಾಗ ಆಗುವ ಅನುಭೂತಿ ಇದೆಯಲ್ಲ ಅದು ಕೇವಲ ನಾವು ನಿನ್ನ ಪ್ರೊಗ್ರಾಮನಲ್ಲಿ ಸೇರಿಸಿದರೆ ಮಾತ್ರ ನಿನಗೆ ಸೇರಿಸಿದ್ದಷ್ಟೆ ಅರ್ಥವಾಗುತ್ಯೆ ವಿನಃ ಬೇರೆನೂ ಅಲ್ಲ. ನೀನೊಂದು ಯಂತ್ರ. ನಿನಗೆ ಹೇಳಿ ಕೊಟ್ಟಿದ್ದನ್ನ ಮಾತ್ರ ಮಾಡಬಲ್ಲೆ ವಿನಃ ನಮ್ಮಂತೆ ಭಾವನೆಗಳಿಗೆ ಸ್ಪಂದಿಸಲಾರೆ. ಸಂವೇದನೆ ಅನ್ನೊದು ಕೇವಲ ಮನಸ್ಸಿನಿಂದ ಬರಬೇಕಷ್ಟೆ… +ನೀನು ನನ್ನೊಂದಿಗೆ ಪ್ರೀತಿಸ್ತಿಯಾ…? ಮಲಗುತ್ತಿಯಾ…? ನಂತರ ಏನು ಮಾಡುತ್ತಿ…? ಸುಮ್ಮನೆ ಬಂದು ಬಿದ್ದುಕೊಂಡರಾಗಲಿಲ್ಲ. ಒಬ್ಬ ಪರಿಪೂರ್ಣ ಗಂಡಸು ಮಾಡಬೇಕಾದ ಕೆಲಸ ನಿನ್ನಿಂದಾಗೋಲ್ಲ ತಿಳಿದುಕೊ. ಅದಕ್ಕೆ ಮನಸ್ಸು ಮೈ ಎರಡೂ ಸಂವೇದನಾ ಶೀಲವಾಗಿರಬೇಕು. ನೀನೊ ನಾನು ಹೇಳಿದರೆ, ಇಲ್ಲ ಗುಂಡಿಗಳನ್ನು ಕದಲಿಸಿದರೆ ಏನೂ ಮಾಡಬಲ್ಲೆ… ಗಂಡಸಿನಂತೆ ಕೂಡಾ ವರ್ತಿಸಬಲ್ಲೆ ಅಂತಿಟ್ಕೊ… ಆದರೆ ಹಾಗೆ ಯಂತ್ರದಂತೆ ಚಲಿಸುತ್ತಿದ್ದರೆ ಸಾಕಾಗಲ್ಲ. ಸಂವೇದನೆ ಅನ್ನೊದು ಅದರಲ್ಲಿ ಇರಬೇಕು… ಮುಖ್ಯವಾಗಿ ಅನುಭೂತಿ ಬೇಕು… ನಿನ್ನಂತೆ ಕೇವಲ ಡೆಫಿನೇಶನ್ ಅಲ್ಲ. ಆದ್ದರಿಂದ ಇವಲ್ಲ ಹುಚ್ಚಾಟವನ್ನು ಬಿಟ್ಟು ಸುಮ್ಮನೆ ಬಿದ್ದುಕೊ…ಎಷ್ಟೆಂದರೂ ನೀನು ಅಮಾನವ…” +ಎಂದವಳೆ ಅವನೆಡೆಗೆ ಚಲಿಸಿ ಅವನೆದೆಗೆ ಅಳವಡಿಸಿದ್ದ ಕೆಲವು ಗುಂಡಿಗಳನ್ನು ಅದುಮಿ ದೂರವಾಣಿಯ ಮೂಲಕ ಪ್ರೋ. ರಂಗ ಪ್ರಸಾದರನ್ನು ಸಂಪರ್ಕಿಸಿದಳು. +“ಪ್ರೋಪೇಸರ್. ನಾಳೆ ಇದನ್ನು ವಾಪಸ್ಸು ಲ್ಯಾಬಿಗೆ ಒಯ್ದು ಪರೀಕ್ಷಿಸಿ. ಪುನಃ ಮ್ಯಾಕ್ಸ್‌ಗೆ ತಲೆ ತಿರುಗಿದಂತಿದೆ. “ಎಂದವಳೆ ಫೋನಿರಿಸಿ ತನ್ನ ರೂಮಿಗೆ ಸರಿದು ಹೋದಳು. +ನಿಂತೇ ಇದ್ದ ಮ್ಯಾಕ್ಸ್ ಕುಸಿದು ಕುಳಿತ. ಅವನ ಶಕ್ತಿಯನ್ನು ಯಾರೋ ಕಿತ್ತುಕೊಂಡಂತೆ ಅನ್ನಿಸುತ್ತಿತ್ತವನಿಗೆ. ಅವನ ಕಣ್ಣುಗಳಿಂದ ನೀರಿಳಿಯುತ್ತಿತ್ತು. ನಿಜಕ್ಕೂ ಮ್ಯಾಕ್ಸ್ ಬದಲಾಗಿದ್ದನೆ… ? ಅಥವಾ ಮ್ಯಾಕ್ಸನನ್ನು ಬದಲಿಸಬೇಕೆ…? +***** +ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […] +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […] +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_656.txt b/Kannada Sahitya/article_656.txt new file mode 100644 index 0000000000000000000000000000000000000000..c717265d8795df76d0be1bd8786591c6c628d12f --- /dev/null +++ b/Kannada Sahitya/article_656.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡ +ಪಡುವಣದ ಪಡಖಾನೆಯಿಂದ ತೂರಿ; +ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತ +ಸುಸ್ತಾಗಿ ಬಿದ್ದಿಹವು ನೆರಳು ಕಾರಿ! +ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದ +ಮೈ ಮುರಿದು ಆಗೀಗ ಆಕಳಿಸಿದೆ- +ಆಗ ಬೆಚ್ಚನೆ ಧೂಳಿ ಹುಚ್ಚೆದ್ದು ಮೇಲೇರಿ +ಅದಕೆ ಹಾಜರಿ ಕೊಟ್ಟು ಕುಪ್ಪಳಿಸಿದೆ! +ಕಾಗೆ ಬೇವಿನಕಾಯ ಕುಕ್ಕಿ ಚುಂಚನು ತಿಕ್ಕಿ- +ಹೊತ್ತು ಗೊತ್ತಿಲ್ಲದೆಯೆ ಕಿರಿಚುತ್ತಿದೆ, +ಹುಲ್ಲಿನಲಿ ಹುಳವನಾರಿಸುತಿಹವು ಗೊರವಂಕ +ಗೂಡಿನಲಿ ಗುಬ್ಬಚ್ಚಿ ಅರಚುತ್ತಿದೆ! +ಗಿಡದ ಬೊಡ್ಡೆಯನಾತು ಮಲಗಿರುವ ಭಿಕ್ಷುಕನ +ಮುತ್ತಿ ಟೊಮ್ಮೆಂದಿಹುದು ನೊಣದ ಪರಿಸೆ; +ಬಾಲ ಗುಂಡಾಡಿಸುತ ನಾಯಿ ತೆರೆದಿದೆ ಬಾಯಿ +ತೀರಿತಿಲ್ಲವೊ ಅದರ ಅಗಳಿನಾಸೆ! +ಬೆಕ್ಕು ತಿಂದಿಹ ಇಲಿಗೆ ಬಿತ್ತು ಹದ್ದಿನ ಕಣ್ಣು +ನಿಮಿಷಾರ್ಧದಲಿ ಅದಕು ಅರ್ಧಪಾಲು, +ಬೆಟ್ಟಿ ಬೆನಕನ ಮಸಣಯಾತ್ರೆ ನೆರವೇರಿಸಲು +ಅತ್ತೆ ಹೊರಟಂತಿಹುದು ಇರುವೆಸಾಲು! +ಹಸುರು ಜೊಂಡಿನ ಹೊಂಡದಲ್ಲಿ ಬಡಕಲು ಎಮ್ಮೆ, +‘ಈಸಬೇಕೊ ಇದ್ದು ಜೈಸಬೇಕು’! +ಹಿಂಡಿದರೆ ಉಪಚಾರ ; ತೊಂಡು ಮೇದರೆ ಕೊಂಡ- +ವಾಡೆಯಲಿ ಉಪವಾಸ ಸಾಯಬೇಕು. +ಬಾಡಿಗೆಯ ಚಕ್ಕಡಿಗೆ ಎಣ್ಣೆಯಿಲ್ಲದ ಕೀಲ +ಎಳೆಯಲಾರದ ಎತ್ತು ಎಳೆಯುತ್ತಿದೆ; +ಧೂಳಿ ಮಾಂಕಾಳಿಯೊಲು ಬುಸುಗುಟ್ಟಿ ಬರುತಿರುವ +ಕಾರು ಫೋಂಕರಿಸುತ್ತ ಒತ್ತರಿಸಿದೆ! +ಆಫೀಸಿನಲ್ಲಿ ಕುಳಿತ ಕಾರಕೂನರ ಕುರ್ಚಿ +ಜಡವಾಗಿ ಬಡವಾಗಿ ಹುರುಪಳಿಸಿವೆ; +ಮೇಜು ತಿಣಿಕಿದೆ, ಟೈಪುರೈಟರಿಗು ತೆರಪಿಲ್ಲ +ಹೊರೆಗಟ್ಟಲೆಯ ಕಡತ ಬೆಂಬಳಿಸಿದೆ! +ಎದುರುಗೋಡೆಗೆ ಸಿಲುಬೆಗೇರಿಸಿದ ಗಡಿಯಾರ +ಸುತ್ತು ಸುತ್ತಿಗೆ ಗಂಟೆ ಟೆಂಟೆಣಿಸಿದೆ, +ಹತ್ತಿರದ ಹೋಟಲಿನ ಹಾಡು-ಹಲಗೆಯು ಕೂಗಿ +ಬಸಿಯ ಮಧುವೀಂಟಲ್ಕೆ ಕರೆಯುತ್ತಿದೆ. +ಬಿಸಿಲು ತಗ್ಗಲು ಸಂಜೆ ನಂಜಿಕೊಳ್ಳಲಿಕಿಹುದು +ಇರುಳು ಹೇಗೋ ಕಳೆದು ಬೆಳಗು ಬಹುದು +ಮಜಲು ಬರುವದು ಮತ್ತೆ ಹಗಲ ಪಂಜನುಹಿಡಿದು +ಜಗದ ಹೆಗಲಿಗೆ ನೊಗವ ಹೇರಿಸುವದು! +ಕೀಲಿಕರಣ: ಎಂ ಎನ್ ಎಸ್ ರಾವ್ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ +೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […] +ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […] +ಎಗ್ಗಿಲ್ಲದ ಪ್ರಣಯಿ ಯಾಕೆ? ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ- ದಿಟ್ಟರು, ಮೊಂಡರು, ಮೋಟುಮರ ಗಾಳಿಮಿಂಡ ಅಂತಾರಲ್ಲ ಹಾಗೆ ಜಗಭಂಡರು ಸೊಂಪಾಗಿ ಸುಮ್ಮನೇ ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ ರೂಢಿಸಿಕೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_657.txt b/Kannada Sahitya/article_657.txt new file mode 100644 index 0000000000000000000000000000000000000000..80fe6bcdd6d955be69c76724c0fb5200b667a5ef --- /dev/null +++ b/Kannada Sahitya/article_657.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಕ +ಬಕ +ರ +ಸಮಾನ +ಒಂದು ಸಂಗತಿಯಲ್ಲಿ: +ತಲೆ +ತಗ್ಗಿಸಿ ನಡೆಯುವುದರಲ್ಲಿ. +***** +ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ ***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_658.txt b/Kannada Sahitya/article_658.txt new file mode 100644 index 0000000000000000000000000000000000000000..e680539b892e183476e0f3cbf3f907fc1711f3e0 --- /dev/null +++ b/Kannada Sahitya/article_658.txt @@ -0,0 +1,53 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” +ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ ನಾಗರಾಜನ ಮಗ ಸೀನಿ ಇವಾವನ್ನೂ ಗಮನಿಸದೆ ಹಿತ್ತಲಲ್ಲಿ ತುಂಬಿದ್ದ ಹಂಡೆಯ ನೀರಿಗೆ ಕೈ ಹಾಕಿ ಕಲಕುತ್ತ ಆಡುತ್ತಿದ್ದ. +“ ಲೇಯಿ ಲೋಪರ್ ಬಾಂಚೋತ್ ಬಾ ಚಡ್ಡಿ ಹಾಕ್ಕೋ ಮಾನವಾಗೆ ” ಎಂದು ನಾಗರಾಜ ಕೂಗಿಕೊಂಡ. ಮದುವೆ ಮನೆಯ ಸದ್ದಿನಲ್ಲೂ ಅದು ಗಟ್ಟಿಯಾಗಿ ಎಲ್ಲರಿಗೂ ಕೇಳಿಸುವಂತಿತ್ತು. +ಇದ್ದಕ್ಕಿದ್ದಂತೆ ನಾಗರಾಜನ ಹೆಂಡತಿ ಏನೋ ಆಗಿಹೋಯಿತು ಎನ್ನುವಂತೆ ” ಯೇಯ್ ಅದೇನು ಅಂಗಾಡ್ತೀಯಲ್ಲ ಎನಾಯ್ತೀಗ ” ಎಂದು ತನ್ನ ಗುಡ್ಡೆ ಕಣ್ಣುಗಳನ್ನು ಒಮ್ಮೆ ಎಲ್ಲರ ಸುತ್ತ ಹರಿಸಿ ಕೇಳಿದಳು. ನಾಗರಾಜ ಉದ್ವೇಗದಲ್ಲೇ “ ಎಲ್ಲಮ್ಮಿ ಅವುನ್ ಚಡ್ಡಿ , ಎತ್ತಾಗ್ ಬಿಸಾಕಿದ್ದಾನು ” ಎಂದು ಕೇಳಿದ. “ ಅಯ್ಯೋ ನನಗೇನ್ ಗೊತ್ತು ಅವುನ್ ಚಡ್ಡಿ ಕಾಣೆ ಕನಪ ” ಎಂದು ಉಸಿರು ಬಿಟ್ಟು ಕೋಣೆಯ ಕಡೆ ಹೊರಟು ಹೋದಳು . ನಾಗರಾಜನ ಕೋಪ ನೆತ್ತಿಗೇರಿ “ ಇನ್ನೇನ್ ಎರುಕ್ ಬಂದದೆ ನಿನ್ಗೆ ” ಎಂದು ಮದುವೆ ಮನೆಯ ಎಲ್ಲರ ಎಡಿರು ಬಾಯಿ ತಡೆಯದೆ ಹೇಳಿಬಿಟ್ಟ. ಅವಮಾನವಾದಂತಾಗಿ ಸಿದ್ಡಿ “ ಯೇಯ್ ಥೂ ಮಾನ್‌ಗೆಟ್ಟೋನೆ , ನಿನಗೇನು ಬರೀ ಹುಟ್ಟುಸುದಷ್ಟಿಯೇ ಬರೋದು ? ” ಎಂದು ಸವಾಲಿಗೆ ಸವಾಲಿನಂತೆ ಮಾತು ಎಸೆದಳು. +ಮದುವೆ ಮನೆಯ ಜನ ಈ ಘಟನೆಯನ್ನು ಹೆಚ್ಚಾಗಿ ತಲೆಗೆ ಹಚ್ಚಿಕೊಳ್ಳಾದೆ ಅವರವರ ಕೆಲಸದಲ್ಲಿ ತುಂಬ ಉತ್ಸಾಹದಿಂದ ಓಡಾಡುತ್ತಲೇ ಇದ್ದರು. ಅಂತೂ ನಾಗರಾಜನ ಮಗನ ಚಡ್ಡಿ ಏನಾಯಿತು ಎಂದು ಗೊತ್ತೇ ಆಗದೆ ‘ ಚಡ್ಡಿ ಹಾಕಬೇಕು ’ ಎಂಬುದೇ ಒಂದು ದೊಡ್ಡ ಕೆಲಸವಾಗಿ ಅವನ ಅಪ್ಪನಿಗೆ ಅಂಟಿಕೊಂಡಿತು. ಅಷ್ಟರಲ್ಲೇ ನಾಗರಾಜನ ಅಕ್ಕ ಚಿಕ್ಕತಾಯಿ “ ಲೋ ಇರೋನ ಐದುನ್‌ಗೆ ಒಂದು ಚಡ್ಡಿ ಇಕ್ಕಿ , ಗೊಣ್ಣೆ ತೆಗುದು ಇವತ್ತಾದ್ರು ಒಸಿ ಕಿಲೀನಗೆ ನೋಡ್ಕೋಕಿಲ್ಲುಲಾ , ಏನಪ್ಪಾ ಒಂದಲ್ಲ ಎರಡಲ್ಲ್ ಅಂತ ಮೂರು ಹೆಂಡ್ತೇರಾದ್ರು , ಇನ್ನೂ ಬುದ್ಧಿ ಕಲಿಲಿಲ್ಲವಲ್ಲಾ; ಹಾಳಾದ್ ಜನ್ಮುವೇ ಹೋಗು. ಇನ್ನ್ಯಾವ್ ಕಾಲುಕೆ ನೀವೆಲ್ಲ ಬುದ್ಧಿ ಕಲ್ತಿರೋ ನಾಕಾಣೆ ಹೋಗಪ್ಪಾ … ” ಎಂದು ತನಗೆ ಮದುವೆಯಲ್ಲಿ ಸೀರೆ ಉಡಿಸಲಿಲ್ಲಾ ಎಂಬ ದುಃಖ ಕೋಪ ಎಲ್ಲವನ್ನೂ ಅಲ್ಲಿ ಕಾರಿಕೊಂಡಳು.ಮದುವೆ ಮನೆಯಲ್ಲಿ ನೆಂಟರಿಷ್ಟರೆಲ್ಲ ತುಂಬಿದ್ದರು. ಹಳೆಯ ತಲೆಮಾರಿನ ಅಜ್ಜಿಯರೆಲ್ಲ ಮನೆಯ ಒಂದೆಡೆ ಕುಳಿತು ತಮ್ಮ ಕಾಲದಲ್ಲಿ ಆಗುತ್ತಿದ್ದ ಮದುವೆಯ ರೀತಿನೀತಿ ಸಂಪ್ರದಾಯ ಅಂದಿನ ಅದ್ಧೂರಿ ಶಾಸ್ತ ಊಟ ಬಳಗ ಎಲ್ಲವನ್ನೂ ಹಂಚಿಕೊಳ್ಳುತ್ತ … ಬೀಗರನ್ನು ಜರೆಯುವ ಹಾಡುಗಳು , ಶೋಬಾನಗಳ ಅಂದಚೆಂದ ಹಗೂ ವರದಕ್ಷಿಣೆ ಇಲ್ಲದೆ ಅಗುತ್ತಿದ್ದ ಮದುವೆಗಳ ಒಂದು ಸುಂದರ ಲೋಕವನ್ನು ನೆನೆದು ಒಂದು ರೀತಿಯ ದುಃಖಗಳ ಹಾಗೆ: ಇಂದಿನ ಮದುವೆ , ವರದಕ್ಷಿಣೆಹಾಗೂ ಪಲಿಸಬೇಕಾದ ಶಾಸ್ತಗಳ ಪಾಲಿಸದೆ ಮೀರುವ್ ಆಧುನಿಕ ಗಂಡು-ಹೆಣ್ಣುಗಳ ಬಗೆಗೆ ವಿಷಾದದ ಮಾತುಗಳಾಡುತ್ತಿದ್ದರು. +ಈ ನಡುವೆ ನಾಗರಾಜ ಅಜ್ಜಿಯರು ಕುಳಿತಿದ್ದ ಕಡೆ ತನ್ನ ಮಗನ ಚಡ್ಡಿಯನ್ನು ಹುಡುಕುತ್ತಾ “ ಎಲ್ರವ್ವಾ, ನಮ್ಮೈದುನ್ ಚಡ್ಡಿ ಇಲ್ಲಿದುದಾ ” ಎಂದು ಕಣ್ಣು ಹಾಯಿಸಿದ. ಒಂದು ಅಜ್ಜಿ ಎಲೆ ಅಡಿಕೆ ಚೀಲವನ್ನು ಎತ್ತಿಕೊಳ್ಳುತ್ತ “ ಇದೇನ್ ಮೊಗಾ , ಮದುವೆ ಮನೇಲಿ ಚಡ್ಡಿ ಹುಡುಕ್ತಾ ಇದ್ದೀಯಲ್ಲಾ. ಸಿಕ್ತದೆ ಬಿಡು. ಯಾರೆತ್ಕ ಹೋದರು ಅದಾ ” ಎಂದಳು. ನಾಗರಾಜ ಆ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೊರಟು ಹೋದ. +ಮದುವೆ ಮುಗಿಸಿ ಗಂಡಿನ ಊರಿಂದ ಗಂಡಿನ ಸಮೇತ ಹೆಣ್ಣಿನ ಮನೆಗೆ ಎಲ್ಲರೂ ಬಂದು ಸೇರಿದ್ದರು. ಗಂಡು ಹಾಗು ಆತನ ಜೊತೆಯವರೆಲ್ಲ ಮನೆಯ ಒಂದು ಕೊಠಡಿಯಲ್ಲಿ ಬಾಗಿಲು ಮುಚ್ಚಿಕೊಂಡು ಸಂತೋಷದಲ್ಲಿದ್ದರು. +ಯಾರೋ “ ನಾಗರಾಜ …ನಾಗರಾಜ ” ಎಂದು ಕೂಗಿಕೊಂಡು ಬಂದು , “ ಏನಪ್ಪಾ ಎಲ್ಲೋದ ಅಂತಿದ್ರೆ ನೀನಿಲ್ಲೇ ಇದ್ದೀಯಲ್ಲ. ಹೋಗಿ ಸೈಕಲೆಲಿ ಎರಡು ದಮ್ಮು ನೀರು ತಂದು ಬುಡು ಬಾ ” ಎಂದರು. +“ ನೋಡ್ದಾ , ಈಗೋಗನೇನೋ ,ಹಗ್ಗ ಹಿಡ್ಕಂಡು ಕೈ ಬೀಸ್ಕಂಡು ಹೆಂಗ್ಸಂಗೆ. ಮನೇಲಿ ಇಷ್ಟೊಂದೆಂಗ್ಸಿದ್ದೀರಲಾ, ಯಾರಾರ ಹೋಗಿ ತನ್ನಿ ” ಎಂದು ಬೇಸರ ಕೋಪಗಳಿಂದ ಹೆಂಡತಿ ಸಿದ್ದಿಯನ್ನು ಕೂಗಿ , ಮೇಯ್ , ನಿನ್‌ಕೆಲ್ಸ ಅಲ್ಲಿರ್ಲಿ ಮೊದ್ಲು ಆ ವೊಯ್ಯಾನ್ ಚೆಡ್ಡಿ ಎಲ್ಲಿದ್ದಾದು ಎಂದು ಪತ್ತೆ ಮಾಡಿ ಇಕ್ಕು. ಇಲ್ದೇ ಹೋದ್ರೆ ಇದೇ ಮದುವೆ ಊಟ್ದೆಲಿ ನಿನಗೆ ಕುಲಾಚಾರ ಮಾಡಿಸಬೇಕಾಯ್ತದೆ ” ಎಂದು ಸಿಡಿಮಿಡಿಗೊಂಡ. +ಹಾಳ್ ಬಾಯ್ಲಿ ಯಾವಾಗ್ಲೂ ಅದೇ ಇದ್ದದೇನೋ. ಅದೆ: ನನಗೇನಾರು ಇಕ್ಕ್ಲಿಕ್ಕೇನಾದ್ರು ಆತ್‌ಕು … ಹೊಡ್ಕ ಹೋಗು ನೀನೆ … ಎಂದು ಗೊಣಗಿದಳು. ಆಗ ನಾಗರಾಜ ಕೋಪದಿಂದ ಹೆಂಡತಿಯ ತಲೆ ಮುಡಿ ಹಿಡಿದು ಎಳೆದು ಢಮಢಮನೆ ನಾಲ್ಕು ಗುದ್ದಿದ. ಸಿದ್ದಿಯು ‘ ಅಪಮಾನ ಹೊಸ ಗಂಡಿನ ತನಕ ಹೋಗದಿರಲಿ ’ ಎಂದು ಪಿಟಕ್ ಪಟಕ್ ಎನ್ನದೆ ನಾಗರಾಜನ ಮುಖಕ್ಕೆ ಉಗಿದು ನಟಿಕೆ ಮುರಿದಳು. ಅಷ್ಟರಲ್ಲಿ ನಾಗರಾಜನ ಅಪ್ಪ ಬಂದು ಒಮ್ಮೆ ವೀಕ್ಷಿಸಿ- +“ ಥೂ ನಪುಂಸಕ್ ನನ್ಮಗ್ನೆ , ಏನ್ ಯಂಡ ಗಿಂಡಾ ಕುಡ್ದಿದಿಲಾ ” ಎಂದು ಬೈಯ್ದ . “ ಏನ್ ತಪ್ಪು ಮಾಡುದ್ಲು ಅಂತೊಡ್ದ ” ಎಂದು ತನ್ನ ಹಿರಿ ಮೊಮ್ಮಗಳು ಗೌರಿಯನ್ನು ಕೇಳಿದ. “ ಅಯ್ಯೋ ಅಷ್ಟೊತ್ತಿದ್ಲು ನೆಡಿಸ್‌ತಾರಿಕನಪಾ ವಾಕಾ ಚಾವಾ, ಆವೊಯ್ದ ಚಡ್ಡಿ ಇಕ್ಕಲಿಲ್ಲ . ‘ ಇಕ್ಕಮ್ಮಿ ಇಕ್ಕಮ್ಮಿ ’ ಅಂತ ಅವುನು. ‘ ಅಯ್ಯೋ ಅದೆಲ್ಲಿದ್ದದೋ ಕಾಣೆಕನೋಗು . ‘ ಎಲ್ಲೋ ಹೇತ್‌ಬುಟ್ , ಹಿತ್ಲೆಲೆ ಬಿಸಾಕಿರಬೇಕು ’ ಎಂದು ಇವುಳು … ಹಿಂಗೇ ಈ ಮಾತ್ಗೆ ಕನಪಾ ” ಎಂದಳು. +“ ಇವತ್ತೂ ತಪ್ಪಲಿಲ್ವೆ ನಿಮ್ಮ ಜಗಳ. ಇಂಗೇ ಮಾಡಿಮಾಡಿಯೇ ಅಲ್ವೆ ನನ್ ಮನೇನೆಲ್ಲಾ ಹಾಳು ಮಾಡಿ ಗುಡ್ಸಿ ಗುಂಡಾಂತ್ರ ಮಾಡ್‌ಬುಟ್ಟಿದ್ದು. ” ಎಂದು ನಾಗರಾಜನ ಅಪ್ಪ ತನ್ನ ಎಂಬತ್ತನೇ ವಯಸ್ಸಿನಲ್ಲೂ ತನ್ನ ಮನೆಯ ಜನರ ಸ್ಥಿತಿಯನ್ನು ಕಂಡು ಎಂದಿನಂತೆಯೇ ಮರುಗಿದ. ತನ್ನ ಕೊನೆಯ ಮಗನ ಮಗ ಸೀನಿಯನ್ನು ಕೂಗಿಕೊಂಡ. ತನ್ನ ಮೊಮ್ಮಗಳು ಗೌರಿಗೆ , “ ಮೊಗಾ ಅವುನ್‌ಗೊಸಿ ಚಡ್ಡಿ ಇಕ್‌ಬುಡವಾ, ಅದೆಲ್ಲಿದ್ದದು ಅಂತಾ ನೋಡಿ ” ಎಂದ. ಆಕೆ “ ಹಾ … ನೋಡ್ದಾಮಂತೆ. ಇಕ್ಕದಿದ್ರೆ ಇಗೇನಾಗೋಗಿದ್ದದು ಬಿಡಪ ” ಎಂದಳು . ಕೋಣೆಯಿಂದ ಸಿದ್ದಿಯು “ ಅಯ್ಯೋ ಅವುನ್ ಚಡ್ಡಿನೆಲ್ಲ ನೀರ್ ಮಾಡಿ ಅಲ್ಲೆಲ್ಲೋ ಬಿಸಾಕಿರಬೇಕು ” ಎಂದಳು. ಗೌರಿಯು ಕೋಪದಲ್ಲೇ “ ಮಂತೆ ಇನ್ನೊಂದಿದ್ರೆ ಇಕ್ಕು. ಅದೇನ್ ಅದೇ ಚಡ್ಡಿ ಆಗಬೇಕೆ ? ” ಎಂದಳು. ಅಯ್ಯೋ ಎರಡೇ ಚಡ್ಡಿ ಇದ್ದೋ ಕನವಾ, ಇಂಗೇ ಮೊದ್ಲು ಒಂದು ಹಾಳು ಮಾಡ್ದ. ಈಗ ಚಡ್ಡಿ ಬಿಚ್ಚಾಕ್ದೋನು ಎಲ್ಲಾಕುದ್‌ನೋ ಅಂತ ಕಣವ್ವಾ ” ಎಂದು ಮುನಿಸಿನ ಸ್ವರದಲ್ಲಿ ಸಿದ್ದಿ ಹೇಳಿದಳು. +“ ನಿನ್ನ ಐದುನ್ ಚಡ್ಡಿ ಇಲ್ದೇ ಇದ್ರೆ ಕರೀನ್ ಚಡ್ಡೀನೆ ಇಕ್ಕಿಸು ” ಎಂದು ಗೌರಿ ಸಲಹಿಸಿದಳು. +“ ಹೂಂ , ಅವುನೂ ಕೊಟ್ಟ , ಅವರವ್ವನೂ ಇಸ್ಕೊಡ್ತಳ ಮಸ್ತನಗೆ. ಅಂಗೇ ಇದ್ರೂ ಬ್ಯಾಡ. ಹೋದ್ ಸಲ ಅವುಳ್ ಮಗನ ಚಡ್ಡಿ ಇಕ್ಕಂದಿದ್ದೆತ್ಕೆ ಎಷ್ಟು ಜಗಳ ಆಗದೆ ಗೊತ್ತೆ ” ಎಂದು ಸಿದ್ದಿ ಕಣ್ಣೀರ ಒರೆಸಿಕೊಂಡಳು. ನಾಗರಾಜ ಎಲ್ಲವನ್ನೂ ನೋಡುತ್ತ ಗಂಭೀರನಾದಂತೆ ನಿಂತೇ ಇದ್ದ. +ನಾಗರಾಜನ ಮೊದಲ ಹೆಂಡತಿ ಹೆರಿಗೆ ಕಾಲದಲ್ಲಿ ಸತ್ತವಳು , ಎರಡನೆಯ ಹೆಂಡತಿ ಬಾಳಲಾರದೆ ಓಡಿ ಹೋದವಳು. ಮೂರನೆಯವಳು ಸಿದ್ದಿ. ನಾಗರಾಜ ಆ ಹಳ್ಳಿಯಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಯೇನೂ ಅಲ್ಲ . ತನ್ನ ಇಪ್ಪಂತೆಟನೆಯ ವಯಸ್ಸಿಗೇ ಮೂರನೇ ಹೆಂಡತಿ ಹೊಂದಿ ಒಂದೇ ಮಗು ಸೀನಿಯನ್ನು ಹೊಂದಿದ್ದವನು. ಅಷ್ಟು ವಯಸ್ಸಿಗೂ ಕೂಡ ಹಳ್ಲಿಯ ಗಂಡಸಿನ ಹಾಗೆ ಮೈ ಮುರಿದು ದುಡಿದು ಬೆವರಲ್ಲಿ ಕೈ ತೊಳೆಯುವಂತವನಲ್ಲ. ತನ್ನ ತಂದೆ ಹಿಂದಿನಿಂದ ಕಲಿಸಿಕೊಟ್ಟಿದ್ದ ಹೋಟೆಲ್ ಚಾಕರಿಯನ್ನೂ ಸರಿಯಾಗಿ ನಡೆಸಿಕೊಂಡು ಬಾರದೆ ಹಾಳೂ ಮೂಳು ರೇಡಿಯೋ ವಾಚುಗಳನ್ನು ರಿಪೇರಿ ಮಾಡಿಕೊಂಡು ಅವುಗಳಲ್ಲೇ ಹೆಚ್ಚು ಸಂತೋಶವನ್ನು ಕಾಣುತ್ತಿದ್ದವನು.ಬದುಕನ್ನು ಯಾವತ್ತೂ ಕೂಡ ಇಂಥ ವಿಶಿಷ್ಟ ಬಗೆಯ ಬೇಜವಬ್ದಾರಿಯಲ್ಲೇ ಕಳೆಯುತ್ತಿದ್ದವನು. ಹೀಗಾಗಿ ಅಂತಹ ಸ್ಥಿತಿಯಲ್ಲೇ ತನ್ನ ಒಂದು ಹೆಣ್ಣು ಮಗುವನ್ನು , ಮೊದಲ ಹಾಗೂ ಎರಡನೆಯ ಹೆಂಡತಿಯರನ್ನೂ ಕಳಕೊಂಡವನು.ನಾಗರಾಜನ ಮಗ ಸೀನಿಗೆ ಇದ್ದವು ಎರಡೇ ಚಡ್ಡಿ. ಈಗ ಕಣ್ಣಿಗೆ , ಕೈಗೆ ಸಿಗದೆ ಬರಿ ತಿಗದಲ್ಲೇ ಇರುವಂತೆ ಮಾಡಿರುವ ಚಡ್ಡಿ ಅವನ ಅತ್ತೆ ಸಂತೆಯಿಂದ ಕೊಂಡು ತಂದದ್ದು. ಮದುವೆ ಮನೆಯಲ್ಲಿ ತನ್ನ ಅಪ್ಪ – ‘ ನನ್ನ ಮಗನಿಗೆ ಚಡ್ಡಿ ಹೊಲಿಸಲಿಲ್ಲವಲ್ಲಾ ’ ಎಂದು ಕೋಪ ತಳೆಯಲು ಒಂದು ಹಿನ್ನೆಲೆಯಾಗಿಯೂ , ಸದ್ಯದ ಸಮಸ್ಯೆಯಾಗಿಯೂ ನಿಂತ ಚಡ್ಡಿಯನ್ನು ಸಿದ್ದಿಯು , “ ತನ್ನ ಬದುಕೆಲ್ಲಾ ಇಂಥಾ ಒಂದು ಗೋಳೇ ಆಗಿಹೋಯಿತಲ್ಲಾ ” ಎಂದುಕೊಂಡು ಹಿತ್ತಲಲ್ಲೆಲ್ಲ ಆ ಚಡ್ಡಿಯನ್ನು ಹುಡುಕಿಕೊಂಡು ಬಂದು , “ ಥೂ , ಈ ಹಾಳಾದ್ ಮನೇಲಿ ಒಂದಿನಾನಾರು ನೆಂದಿಯಾಗಿರುವಾ ಅಂದ್ರೆ ಆಗೊಲ್ದಲ್ಲಾ . ಯಾವ್ ಕರ್ಮ ಮಾಡಿ ಈ ಮನೆಗೆ ಬಂದ್ನೋ ” ಎಂದುಕೊಳ್ಳುತ್ತಿದ್ದಂತೆಯೇ ಮದುಮಗಳು ಶಾಂತಿ ತನ್ನ ಬದುಕಿನ ಅನಂತ ಸುಖದ ದಿನದಲ್ಲೂ ವಾಕಾಜ ಮಾಡ್ತಾ ಇದ್ದಾರಲ್ಲ ಎಂದು- “ ಅದೇನ್ ಚಿಕ್ಕಿ , ವತಾರಿಂದ ಇದೇ ಆಯ್ತಾಹಲ್ಲಾ, ಬಂದೋರು ಏನಂತ ಅನ್ನಬೇಕು. ನೋಡಪ್ಪಾ ಇವರ ಬಾಳಾ ಅಂತ ಆಡ್ಕೋದಿಲ್ವೆ ” “ ಅಯ್ಯೋ , ನಿನಗ್ಯಾಕವ್ವ ಅವೆಲ್ಲ , ಗಂಡನ್ ಮನೆಗೋಗೋಳು , ನೀನಾರ ಸುಖವಾಗಿರು … ” +ಶಾಂತಿಗೆ ಅಂಥಾ ವಾತಾವರಣದಲ್ಲಿ ತಲೆ ಕೆಡಿಸಿಕೊಳ್ಳಾಲು ಇಷ್ಟವಾಗದಿದ್ದರೂ ಒಂದು ರೀತಿಯ ಖಿನ್ನತೆ ಅವಳಿಗೂ ಹಿಡಿದುಕೊಂಡಿತು. ನನ್ನ ಮದುವೆಯಲ್ಲಿ ಅವರಾರೂ ಸಂತೋಷವಾಗಿ ಇಲ್ಲವಲ್ಲಾ, ನಮ್ಮ ಅವ್ವಾ ಇದ್ದಿದ್ರೆ ಇವೆಲ್ಲಾ ಅಯ್ತಿರ್ಲಿಲ್‌ವೇನೋ, ಅದೂ ಅಲ್ಲದೆ ಈ ಹಾಳಾದ ನಮ್ಮಪ್ಪ ಯಂಡ ಕುಡುದು ಬಂಡೆ ಉರುಳಿಸಿಕೊಂಡು ಎಲ್ಲೆಲ್ಲಿ ಯಂಡದ ಪೆಂಟೆ ಹಾಕ್ತಾರೋ ಅಲ್ಲಲ್ಲೇ ಬಿಡಾರ ಹೂಡ್ಕೊಂಡು , ಯಾವಾಳಾರ ಜತೆ ಸಿಕ್ರೆ ಮತ್ತೆ ಒಂದು ಮದುವೆ ಆಗಬಹುದಲ್ಲಾ ಎಂದು ಇರೋದು. ಅವನ ಹುಚ್ಚಾಪಟ್ಟೆ ರೀತಿನೀತಿಗಳು , ಎಂದೂ ದುಡಿಯದೆ ಇರೋ ಕಚ್ಚೆ ಪಂಚೆಯಷ್ಟಗಲದ ಜಮೀನ ಹಡ ಇಟ್ಟುಕೊಂಡು ಒಂದು ಪೈಸೇನೂ ಯಾರಿಗೂ ಕೊಡದೆ ಹೆಣ್ಣು ನೋಡುತ್ತೇನೆಂದು ಉ‌ೠರು ಅಲೆಯೋದು, ತನ್ನ ಐವತ್ತನೇ ವಯಸ್ಸಿನಲ್ಲೂ , ಮೂರು ಹೆಂಡಂದಿರು ಆದ ಮೇಲೂ ನಾಲ್ಕನೇ ಮದುವೆಗೆ ಓಡಾಡೋದರಿಂದ ಮನೆ ಜನರೆಲ್ಲ ನಮ್ಮ ಅಪ್ಪನ ಬಗೆಗೆ ಇರುವ ಬೇಸರ , ಕೋಪಗಳಿಂದ ನನ್ನ ಮದುವೆಯಲ್ಲೂ ಸರಿಯಾಗಿ ಭಾಗಾಹಿಸುತ್ತಿಲ್ಲವೇನೋ ಎಂದುಕೊಂಡು ದೊಡ್ಡದಾಗಿ ಒಂದು ನಿಟ್ಟುಸಿರು ಬಿಟ್ಟಳು. +ಇಂಥಾ ಅಪ್ಪನಿಗ್ ಯಾಕಾದರೂ ಹುಟ್ಟಿದೆನೋ, ಆ ಚಿಕ್ಕಪ್ಪ ನಾಗರಾಜನಿಗೆ ಮೂರು ಹೆಂಡಿರಾದರೂ , ಈ ನಮ್ಮಪ್ಪನಿಗೆ ಮೂರು ಹೆಂಡರೂ ಒಂದೊಂದು ಕಾರಣಕ್ಕೆ, ಅವನ ಒಂದೊಂದು ಹಿಂಸೆಗೂ ನೀರೋ , ನೇಣೋ ನೋಡಿಕೊಂಡು ಹೋದರು. ಈಗ ನಾಲ್ಕನೆ ಮದುವೆ ಆಗುತ್ತೇನೆಂದು ಕುಂತವನೆ. ಅದೂ ಅಲ್ಲದೆ ಈ ವಯಸ್ಸಲ್ಲಿ ಹೆಣ್ಣು ನೋಡಲು ತರಲು , ಅವನ ಅಪ್ಪನನ್ನೇ ಬಲವಂತಪಡಿಸುತ್ತಾನೆ. ಅಯ್ಯೋ ಸಿವನೇ , ಇವನಿಗೆ ಮಗಳಾಗಿ ಹುಟ್ಟಿ ನಾನು ಇನ್ನೂ ಏನೇನು ಈ ಕಣ್ಣಿಂದ ನೋಡಬೇಕಾಗಿದೆಯೋ ಎಂದುಕೊಂಡು ದುಃಖವನ್ನು ಎದೆಗೆ ತುಂಬಿಕೊಂಡಲಾದರೂ ಗಂಡಿನ ಕಡೆಯವರು ನೋಡಿದರೆ ಏನಂತಾರೋ ಎಂದು ಹೆದರಿ ಒಂದು ಕಡೆ ಸುಮ್ಮನೇ ಕುಳಿತೇ ಇದ್ದಳು. ಕೊನೆಗೂ ಆ ಚಡ್ಡಿ ಸಿಗದೇ ಹೋಯಿತು. +ನಾಗರಾಜನ ಪರದಾಟ , ಒಂದು ನಿಲುಗಡೆಗೆ ಬಾರದಾಗಿ ಯಾವ ಯಾವುದೋ ಕೋಪಗಳು ಒಂದು ನಿರ್ದಿಷ್ಟ ಕಾರಣ ಬೇಕಾಗಿಲ್ಲದೆಯೂ ಹುಚ್ಚನಂತೆ ವರ್ತಿಸತೊಡಗಿದ ನಾಗರಾಜ. ಹಿತಲಲ್ಲಿ ತನ್ನ ಪಾಡಿಗೆ ತಾನು ಮಣ್ಣು ಕಲಸಿಕೊಂಡು ಆಡುತ್ತಿದ್ದ ಸೀನಿಯನ್ನು ಒಂದೇ ಬಾರಿಗೆ ನೆಗೆದು ಹೋಗಿ ಪಟೀರೆಂದು ಬೆನ್ನ ಮೇಲೆ ಕೈತುಂಬಿದ ಬಾಸುಂಡೆ ಬರುವಂತೆ ಹೊಡೆದು ಎಳೆದುಕೊಂಡು ಬರುತ್ತಿರುವಂತೆಯೇ ಇಡೀ ಮದುವೇ ಮನೆಯೇ ಕಿತ್ತು ಹೋಗುವಂತೆ ಕಿಟಾರೆಂದು ಕಿರುಚಿಕೊಂಡದ್ದು ಎಲ್ಲರಿಗೂ ಬೆಚ್ಚುವಂತೆ ಮಾಡಿತು. ಸೀನಿ ಒಂದೇ ಸಲಕ್ಕೆ ಹುಚ್ಚೆಯನ್ನು ಉಯ್ದುಕೊಳ್ಳುತ್ತ ನನಗೆ ಯಾಕಾದರೂ ಹೊಡೆಯುತ್ತಾರೆಂದು ಗೊತ್ತೇ ಆಗದೆ ಭೀಕರ ಭಯದಿಂದ ಮತ್ತೂ ಅಳಲಾರಂಬಿಸಿದ. ಸಿದ್ದಿ ಕೋಣೆಯಿಂದ ಓಡಿ ಬಂದವಳೆ , “ ಅಯ್ಯೋ ಇರೋ ಒಬ್ಬ ಮಗನ್ನೂವೆ ಸಾಯ್ಸಿ ಬುಟ್ಟಿಯೇನಪ್ಪ ಹಾಳಾಗೋದೋನೆ, ನಿನಗೇನು ರೋಗ ಬಂದಿದ್ದದು. ಬಿಡು ಅವನ, ಇದ್ಯಾಕೆ ಹಿಂಗೆ ಹೊಟ್ಟೆ ಉರಿಸ್ಕಂದೀಯೆ ” ಎಂದು ಬಿಡಿಸಿಕೊಳ್ಳಲು ಹೋದವಳನ್ನು ತಳ್ಳಿದಾಕ್ಷಣ ಗೋಡೆಗೆ ನೂಕಿ ಅವಳ ಕೈ ತುಂಬಾ ಇದ್ದ ಬಣ್ಣದ ಬಳೆಗಳು ಫಳಾಫಳನೆ ಹೊಡೆದು ಉದುರಿ ಗಾಜು ಚುಚ್ಚಿಕೊಂಡು ರಕ್ತ ಜಿನುಗಲಾರಂಭಿಸಿತು. +ಮದುವೆ ಮನೆಯ ಹೆಂಗಸರೆಲ್ಲ ಮುತ್ತಿಕೊಂಡು ಸೀನಿಯನ್ನು ಬಿಡಿಸಿಕೊಂಡರು. ಆ ನಿಷ್ಪಾಪಿ ಮಗು ಈ ಎಲ್ಲ ಕದನ ದೃಶ್ಯವನ್ನು ನೋಡನೋಡುತ್ತಿದ್ದಂತೆಯೇ ಬೆದರಿ ನಾನು ಮತ್ತೆ ಬಾಯಿ ತೆಗೆದರೆ ನನ್ನನ್ನು ಸಾಯಿಸಿಯೇ ಬಿಟ್ಟಾರೇನೋ ಎನ್ನುವಂತೆ ದುಕ್ಕುದುಕ್ಕುಳಿಸಿ ಬರುತ್ತಿದ್ದ ಅಲ್ಲ ನೋವನ್ನು , ಹೆದರಿಕೆಯನ್ನು ಅಳವನ್ನು ಬಾಯಿಡಿದುಕೊಂಡು , ಒಂದು ಕೈಯನ್ನು ಬೆನ್ನ ಮೇಲಿದ್ದ ಅಷ್ಟಗಲದ ಬರೆಯನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ , ಬೆಂಕಿಯ ಕೆಂಡವೇ ತುಳಿದು ಕೊಂಡಂತಾದ ಕಣ್ಣುಗಳ ತುಂಬ ನೀರು ತುಂಬಿಕೊಂಡು ಅಲ್ಲೇ ಇದ್ದ ಒಂದು ಅಜ್ಜಿಯ ಕಿಬ್ಸರಿಯೊಳಗೆ ಅವಿತುಕೊಂಡು ಕುಳಿತ. +ನಾಗರಾಜನ ಸಿಟ್ಟು ತಗ್ಗದಾಗಿ , ಸಿದ್ದಿಯನ್ನು ಹೊಡೆಯಲು ಹೋಗುತ್ತಿದ್ದಂತೆಯೇ , ಆ ಮನೆಯ ದೊಡ್ಡ ಹಜಾರವನ್ನು ದಾಟಿ ಹಿತ್ತಲ ಬಾಗಿಲಿನಿಂದ ಓಡಿಹೊದಳು. ಇಷ್ಟಾದರೂ ಅಂತಾ ಇಂತಾ ಸಣ್ಣ ಗಲಾಟೆಗಳಿರಬಹುದೇನೋ ಎಂತಲೋ , ಸಂಕೋಚ , ನಾಚಿಕೆ ಇತ್ಯಾದಿಗಳಿಂದಲೋ ಗಂಡು ಆ ಕೊಠಡಿಯಿಂದ ಹೊರಕ್ಕೆ ಬರದೆ ಮುಚ್ಚಿದ ಬಾಗಿಲ ತೆರೆಯದೆ ಊಟ ಮಾಡುತ್ತಿದ್ದ. ಶಾಂತಿ ಏನೋ ಅನಾಹುತ ಕಾದಿದೆಯೋ , ಯಾವತ್ತಾದರೂ ಇಂಥಾ ಸಮಯದಲ್ಲಿ ಒಂದಲ್ಲಾ ಒಂದು ಇಂಥದ್ದು ಈ ಮನೆಯಲ್ಲಿ ಇದ್ದೇ ಇರುತ್ತವಲ್ಲಾ ಎಂದು ದುಗುಡದಿಂದ ಹೊರಕ್ಕೆ ಬಂದು ಓಡಿಹೋಗಿ ಆಚೆ ಬೀದಿಯಲ್ಲಿದ್ದ ತಾತನಿಗೆ ನಾಗರಾಜನ ಅವತಾರಗಳನ್ನು ಹೇಳಿ ಕರೆದುಕೊಂಡು ಬಂದಳು. +ಅಷ್ಟರಲ್ಲಿ “ ಈ ಸೀನ ಇಲ್ಲಿರುದೇ ಬೇಡ, ಪಾಪ ಅಂಗಡಿಗಾದರೂ ಹೋಗಿ ಏನಾರ ಕಾಸಿಗೆ ತೆಗೆದುಕೊಂಡು ತಿನ್ನಲಿ ” ಎಂದು ಆ ಅಜ್ಜಿ ತನ್ನ ಎಲೆ‌ಅಡಿಕೆ ಚೀಲದಿಂದ ನಾಲ್ಕಾಣೆಯ ಬಂದವನ್ನು ಕೊಟ್ಟು ಕಳಿಸಿಬಿಟ್ಟಳು. ಸೀನಿಗೆ ಭಯ ಹಾಗೂ ಹೊಡೆತಗಳ ಹಿಂಸೆಯಲ್ಲಿ ಕಾಸು ಬೇಕಿಲ್ಲದಿದ್ದರೂ , ಈ ವಾತಾವರಣದಿಂದ ಹೊರಗಡೆ ಹೋಗುವುದೇ ಸರಿ ಎನಿಸಿದಂತೆ ನಾಲ್ಕಾಣೆ ಹಿಡಿಹುಕೊಂಡು ಅಂಗಡಿ ಕಡೆ ನಡೆದುಬಿಟ್ಟ. +ಓಡೋಡಿ ಬಂದ ನಾಗರಾಜನ ಅಪ್ಪ ಅತ್ಯಂತ ವಿಷಾದದ ರೀತಿಯಲ್ಲಿ “ ಏನಪ್ಪಾ , ಏನಂತಾ ನನಗೆ ನೀವೆಲ್ಲ ಮಕ್ಳು ಅಂತ ಹುಟ್ಟಿದ್ರೋ , ಸಾಯು ಕಾಲ್‌ದೆಲಾದ್ರು ನನ್ನ ನೆಮ್ಮದಿಯಾಗಿರುಕೆ ಬಿಡ್ತಿಲ್ಲವಲ್ಲಾ. ಸಾವುರಾರು ಕಷ್ಟಪಟ್ಟು ವಲ ಮನೆ ಹಡಾ ಇಟ್ಟು , ಹುಟ್ಟಿಸುದೋನ್ ಮಾಡಬೇಕಾದ ಮದುವೇನೂ ನಾನೆ ನಿಂತ್ಕಂಡು ಮಾಡಿಸ್‌ತಿದ್ರೂ , ಒಂದ್ ಜವಾಬ್‌ದಾರಿ ತಕದೆ , ಈಗ್ಲೂ , ಇಂಥಾ ಟೇಮೆಲಿ , ಇಂಗಾಡ್ತಾರಲ್ಲ , ಆ ದೇವ್ರು ನಿಮ್ಮ ಏನಂತಾ ಹುಟ್ಟಿಸ್‌ಬುಟ್ನೋ , ರಾಮಾ ರಾಮಾ, ಇವೆಲ್ಲ ನೋಡ್ಕಂದಿರುಕಿಂದ ಎಲ್ಲಾರೂ ದೂರಸ ಹೊಂಟ್ಹೋಗ್ ಬೇಕನಿಸ್ತದೆ … ” ಎಂದು ಹೇಳುತ್ತಿರುವಷ್ಟರಲ್ಲೇ- +“ ಹೋಗೋ ಸೂಳೆ ಮಗನೆ , ಭಾಗ ಕೊಡು ಭಾಗ ಕೊಡು ಅಂದ್ರೆ ಒಂದು ಪೈಸಾನು ಕೊಡ್ದೆ , ಆ ನಿನ್ ಹಿರಿ ಮಗ ಚಿಕ್ಕೈದುನ್‌ಗೇ ಎಲ್ಲನು ಬುಟ್ಟುಬುಟ್ಟು , ಅದ ಮಾಡ್ದೆ ಅಂತ ಹೇಳ್‌ಬ್ಯಾಡ , ನಾನು ಕಂಡಿವಿನಿಕನಾ, ಮದುವೆಗೆ ಅಂತ ಹತ್ತು ಸಾವ್ರ ಮಾಡ್ತಿದೀಯಲ್ಲಾ ಏನಾರ ಒಂದು ಪೈಸೆ ಕೊಟ್ಟಿದ್ದೀಯ ನನಗೆ, ಹೋಕಲಿ ನನ್ ಮಗುನ್‌ಗೆ ಒಂದು ಚಡ್ಡಿ ಬಟ್ಟೆ ವಲ್ಸಿದ್ದೀಯ , ಆ ಹಿರಿ ಮಗ ಐವತ್ತೊರ್ಸ ಆಗಿದ್ರೆ ಮಮ್ಮಕ್ಳು , ಮುಮ್ಮಕ್ಳು ಬಂದಿದ್ರೂ , ನಾಕ್ನೆ ಮದ್ವೆ ಮಾಡಬೇಕು ಅಂತ ಅವುನ್ ಕೇಳುದ್ರೆ ಏನೂ ಕಾಣದೋನಂಗೆ ಅವುನ್ ಮಾತ್ಗೆ ಸೈ ಅನ್‌ಕಂಡಿದ್ದೀಯ.” +“ ಅಯ್ಯೋ … ಅಯ್ಯೋ … ನಿನ್ನ ಕೈಮುಗೀತೀನಿ , ಮೆತ್ತುಗ್ ಮಾತಾಡೋ ನಾಗರಾಜಾ, ಗಂಡು ಆಚೆ ಮನೆಲದೆ ಅಂತ ಗೊತ್ತಿಲ್ವೆ. ಹೆಣ್ಣೋರಪ್ಪನ್‌ಗೆ ನಾಕ್ ಮದ್ವೆ ಅಂದ್ರೆ ಏನಾಯ್ತದೆ ಅಂತ ಯೋಚ್ನೆ ಮಾಡಿದ್ದೀಯ , ಹೆಂಗೋ ತಾಯಿಯಿಲ್ಲದ ಮಗಳು , ಅವರಪ್ಪುನ್ ನೋಡುದ್ರೆ ಇಂಗೆ, ಅಂತ ನಾನು ವಲಮನೆ ಹಡ ಇಟ್ಟು ಮಾಡಿದ್ದೇನೇ ವರ್ತು , ನಾನ್ ಯಾವ ಸುಖಕ್ಕೂ ಮಾಡ್ಕತಾ ಇಲ್‌ಕನಪ್ಪ. ಮದ್ವೆ ಕೆಲ್ಸ ಎಲ್ಲ ಮುಗುದೋಗ್ಲೆ , ನಿನ್ನ ದಮ್ಮಯ್ಯ ವಸಿ ಸುಂಕಿರೋ …” ಎಂದು ದೈನ್ಯದಿಂದ ಮಗನನ್ನು ಬೇಡಿಕೊಳ್ಳುತ್ತಿರುವಷ್ಟರಲ್ಲಿ , ಗಂಡಿನ ಮನೆಯ ಒಂದಿಬ್ಬರು ಬಂದು ಆಗುತ್ತಿದ್ದ ಸ್ಥಿತಿಯನ್ನು ಗಮನಿಸಿ ನಾಗರಾಜನ ಬಳಿ ಬಂದು “ ಬನ್ನಿ ನಾಗರಾಜಪ್ಪಾ , ಆಮೇಲೆ ಮಾತಾಡುವಾ ಈಗವೆಲ್ಲ ಯಾಕೆ, ಬನ್ನಿ ಬನ್ನಿ ” ಎಂದು ಕೈ ಹಿಡಿಹು ಎಳೆದರೂ ಬಿಡದೆ-“ ರ್ರೀ ಬಿಡ್ರಿ . ಇದು ನನ್ ಮನೆ ಯವಾರ. ಹೆಣ್ಣು ಕೊಟ್ಟಿದ್ದೀವಿ. ಹೆಣ್ ಕರ್ಕೊಂದೋಗ್ತೀರಿ. ಇದ್ರೆಲಿ ನಿಮುದು ಇನ್ನೇನು ಇಲ್ಲ ಹೋಗ್ರಿ ” ಎಂದ ಕೂಡಲೇ ಮದುಮಗಳು ಶಾಂತಿ ಓಡಿ ಬಂದು “ ಚಿಕ್ಕಪ್ಪ ಚಿಕ್ಕಪ್ಪ ನಿನ ದಮ್ಮಯ್ಯ ಏನೂ ಇವತ್ತು ಮಾತಾಡಬ್ಯಾಡಕನಪ್ಪಾ, ನನ್ ಮದ್ವೆಗೆ ಮಾಡಿರೋ ಹತ್ತು ಸಾವುರಾನು ನಮ್ಮ ಓದ್ತಾವನಲ್ಲ . ಅವುನ್ ಕೆಲ್ಸುಕ್ ಸೇರುದ್ ಮ್ಯಾಲೆ ನಿನಗೆ ಕೊಡುಸ್‌ಬುಡ್ತೀನಿ, ಸುಮ್ಮನಿರಪ್ಪಾ , ಈ ಬಾಳ ನೋಡಿ ಗಂಡೇನಾರ ಬೇಜಾರ್ ಮಾಡ್ಕಂಡು ಸುಮ್ಮನೆ ಸ್ವಾಸನೆ ಬ್ಯಾಡ ಅಂತ ಎದ್ದೊಂಟೋದ್ರೆ ತಿರ್ಗ ಯಾರ್ನಪ್ಪಾ ನಾನು ಮದ್ವೆಯಗೂದು… ” ಎಂದು ಕಾಲು ಹಿಡಿದುಕೊಂಡಿದ್ದರೂ ನಾಗರಾಜ ಲೆಕ್ಕಿಸದೆ – “ ಬಿಡು ಶಾಂತಿ , ನನಗೆ ಗೊತ್ತುಕನ , ಏನ್ ಮಾಡ್ಬೇಕು ಅಂತಾ . ನಿಮ್ಮಪ್ಪ ಲೋಫರ್ ಸರಿಯಾಗಿದ್ದಿದ್ರೆ ಅದೊಂತರಾ ಇತ್ತು. ಬರ್ಲಿ ಇವತ್ತು . ಈ ಮದ್ವೆ ಮನೇಲಿ ತೀರ್ಮಾನ ಆಗೋಗ್ಲಿ . ನಿಮ್ಮಯ್ಯ ಅನ್ನಿಸ್ಕೊಳ್ಳೋ ಈ ಬೋಳಿಮಗ ಹತ್ ಸಾವ್ರವ ಹೊಲುದ್ ಮ್ಯಾಲ್ ತಂದಿದ್ರೆ , ಅವುನ್ ಕಾಣದಂಗೆ ನಿಮ್ಮಪ್ಪ ಗೌಡ್ರುತಾವು ಹಿತ್ಲು ಮೇಲೆ ಎರಡ್ ಸಾವ್ರ ತಂದು ಯಾರ್ಗೂ ಗೊತ್ತಾಗ್‌ದಂಗ್ ದಿಲ್ ಮಾಡ್ಕಂಡು ಯಂಡ ಸರಾಪ್ ಕುಡ್ಕಂಡವನಲ್ಲಾ , ಬರ್ಲಿ ನನಗೆ ಬರಬೇಕಾದ್ ಜಮೀನ್ ಮಡುಗುಬುಟ್ ಮನೆ ವಸುಲು ದಾಟು ಅಂತ ಹೇಳ್‌ತೀನಿ ” ಎನ್ನುತ್ತಾ ಹಲ್ಲುಮುಡಿ ಕಟ್ಟಿಕೊಂಡು ಪಡಶಾಲೆಗೆ ಬಂದ. +ನಾಗರಾಜನ ಅಪ್ಪ ಏನನ್ನೂ ಮಾಡದಂತಾಗಿ , ತನ್ನ ಎಂಬತ್ತನೇ ವಯಸ್ಸಿನಲ್ಲೂ ಇಲ್ಲೀ ತನಕ ಎಲ್ಲ ಮಕ್ಕಳ ಮದುವೆ ಮಾಡದೆ , ಸತ್ತವರು , ಹುಟ್ಟಿದವರು ಅವರು ಇವರು ಅಂತಾ ಎಲ್ರುಗು ತ್ಥಿ ಪಥಿ ಹಬ್ಬ ಎಲ್ಲಾನೂ ಮಾಡ್ಕ ಬಂದೆ. ಪಾಳೆಗಾರ್ ನಂಗೆ‌ಇದ್ದ ನನ್ನ ಮನೆತನವನ್ನೆಲ್ಲ ಹುಟ್ಟಿದ ಈ ಮಕ್ಕಳು ಹಾಳು ಮಾಡಿದರು. ಎತ್ತಾಗಾದ್ರೂ ಹೋಗಾಣ ಅಂದ್ರೆ ಕೈಲಿ ಬಲಾ ಸಾಲದು. ಇಲ್ಲೇ ಇರ್‌ವಾ , ಈ ಮನೇಲೆ ಬದುಕುವಾ ಅಂದ್ರೆ ಈ ಮಕ್ಕಳ ಕಾಟ, ಆ ಚಿಕ್ಕೈದ ಬಂದ್ ಮ್ಯಾಲೆ ಅದೇನಾದದೋ , ಆ ಹಾಳಾದ ಒಂದು ಚಡ್ಡಿ ಮಾತ್ಗೆ ಹಿಂಗೆಲ್ಲಾ ಆಡೋದು ಉಂಟೆ. ಭಾಗ ಕೊಟ್ರು ಒಂದೇ ದಿನಕ್ಕೆ ಯಾರಾರ ಗೌಡ್ರುಗೆ ಮಾರ್ಕಂಡು ತಿನ್ನೋ ಇವರಿಗೆ ಯಾವ ರೀತೀಲಿ ಬುದ್ಧಿ ಹೇಳ್ಳಿ. ನನ್ನ ಮನೆ ಮಾನ ಮರ್ಯಾದೇನೆಲ್ಲಾ ಹೀಗೆ ಬೀದಿ ಪಾಲ್ ಮಾಡ್ತಾ ಬಂದ್ರಲ್ಲಾ. ವಯಸ್ಸಾಗಿ ನಿಂತ ಮೊಮ್ಮಗಳ ಮನೇಲಿ ಇಟಗೊಂಡು ಇದ್ರೆ ಜನ ತಾನೆ ಏನಂತಾರೆ. ಹೋಗಲಿ ಅವರಪ್ಪ ಏನಾದ್ರು ಮದುವೆ ಮಾಡ್ತಿದ್ನೆ . ಯಾರೂ ನನ್ನ ಅರ್ಥ ಮಾಡಿಕೊಳ್ಳದೆ ಈ ಚಡ್ಡಿ ನೆಪ ಹಿಡ್ಕೊಂಡು ಮದುವೆ ಮನೇನೆಲ್ಲ ರಣರಂಗ ಮಾಡ್ತಾ ಇದ್ದಾರಲ್ಲಾ ” ಎನ್ನುತ್ತ ಗೋಡೆಗೊರಗಿಕೊಂಡು +“ ಮೊಗಾ, ಶಾಂತಿ ವಸಿ ನೀರ್‌ತಗಬವ್ವಾ..” ಎಂದ +ಶಾಂತಿಯ ಮುಖ ಕಪ್ಪಿಟ್ಟಿತ್ತು. ಸಿದ್ದಿ ಹಿತ್ತಿಲ ಬಾಗಿಲಿಂದ ಓಡಿಹೋದವಳು ಇನ್ನೂ ಬಂದಿಲ್ಲ ಎಂದು ತಾತನ ಕಿವಿಯಲ್ಲಿ ಮೆತ್ತಗೆ ಹೇಳಿ ನೀರು ಕೊಟ್ಟಳು. ಆಗಲೀಗ ತನ್ನ ಸಾವು ಮೂರೇಗೇಣಳತೆಯಲ್ಲಿದೆ ಎನಿಸಿ , ಏನಾದದೋ , ಏನ್‌ಕತೆಯೋ ಎಲ್ಲಾರ ಬಾವಿಗೀವಿ ಬಿದ್ದು ಪ್ರಾಣ ಕಳಕಂಡ್ರೆ ಏನಪ್ಪಾ ಗತಿ ನನ್ನ ಮನೆ ಜನರೆಲ್ಲ ಹಿಂಗೇ ಆಗೊದ್ರಲ್ಲಾ … ಎಂದು ದುಗುಡದಲ್ಲಿ ನೀರು ಕುಡಿದು , ಚಾಮಪ್ಪನ ಮಗ ಕರಿಯನನ್ನು ಸೈಕಲ್ ಕೊಟ್ಟು “ ನಿನ್ ದಮ್ಮಯ್ಯ ಅಂತೀನಿ , ಎಲ್ಲಾರ ನಮ್ಮ ಸಿದ್ದಿ ಇದ್ರೆ ನೋಡ್ಕೊಬರೋಗಪ್ಪಾ ” ಎಂದು ಕಳಿಸಿದ. +ಇಡೀ ಮದುವೆ ಮನೆ ಒಂದು ಸ್ಮಶಾನದಂತೆ ಆಯಿತು. ಬಂದಿದ್ದ ಎಲ್ಲ ನೆಂಟರೂ, ಒಂದೊಂದು ರೀತಿಯಲ್ಲಿ ಎಲ್ಲರ ಬಗೆಗೆ ಮಾತನಾಡಿಕೊಂಡರು. ಹೆಂಗೋ , ಆಯ್ತು ಹೋಯ್ತು ಬಿಡ್ರಪ್ಪಾ , ನಾಳೆ ಒಂದಿನಾ ಕಳುದ್ರೆ ಆ ಶಾಂತಿ ಅವಳ ಮನೆಗೆ ಅವಳೋಯ್ತಳೆ . ಆಮೆಕೆಂಗಾರು ಇವರು ಕಚ್ಚಾಡ್ಲಿ ಎಂಬ ನಿರ್ಣಯದಿಂದ ಕುಳಿತರು. ನಾಗರಾಜ ಪಡಸಾಲೆ ತುದಿಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಬೀಡಿ ಹಚ್ಚಿ ದಿರ್ಘವಾಗಿ ಹೊಗೆ ಎಳೆದು ಹೊರಕ್ಕೆ ಬಿಟ್ಟ. ಅಲ್ಲಿ ಕು/ಲಿತಿದ್ದ ಹಲವರ ಮುಖವನು ಹಾಯ್ದು ಹೊಗೆ ಹರಿಯಿತು. ಒಂದೊಂದು ಬಾರಿಗೂ ಉಗುಳಿದ್ ಅಹೊಗೆ ಅಲ್ಲೆಲ್ಲಾ ಆವರಿಸಿದಂತೆ … ಯಾರೋ ಆರ್ತ ಸ್ವರದಲ್ಲಿ ನಡುಗುತ್ತಾ ಓಡಿಬಂದು ಕುಳಿತಿದ್ದ ಜನರನ್ನು ಉದ್ದೇಶಿಸಿ – +“ ಅಯ್ಯೋ , ನಿಮ್ಮ ಸೀನಿ ಸರ್ಕಲ್ ತಾವು ಲಾರಿಗೆ ಸಿಕ್ಕೋಗವ್ನೆ. ಬನ್ರಪೋ .” ಎಂದು ಗೋಳು ಹಾಕೊಕೊಂಡ. ಕುಳಿತಿದ್ದ ಇಡೀ ಸಮೂಹಕ್ಕೆ ಸೀನಿಯ ಈ ಅಚಾನಕ್ ಆದ ಅನಿರೀಕ್ಷಿತ ಸುದ್ದಿ ಕೇಳಿ ಅವರವರ ಎದೆಗಳು ಹೊಡೆದು ಹೋದಂತಾಗಿ , ಎದ್ದೆದ್ದು ಸರ್ಕಲ್ಲಿನ ಕಡೆ ಓಡಿದರು. +ನಾಗರಾಜ ಒಂದೇ ಬಾರಿ ‘ ಹಾ ’ ಎಂದವನೇ ಇಡೀ ದೇಹವೇ ನಜ್ಜಿ ಹೋದಂತವನಾಗಿ ಓಡಿ ಬಂದ. ಸರ್ಕಲ್ಲಿನ ತುಂಬ ಜನ ಸಂತೆಯಂತೆ ನೆರೆದರು. ಹತ್ತಾರು ಜನರ ಲೊಚಗುಟ್ಟುವ ಸದ್ದನ್ನು ಉಳಿದು ಇನ್ನೇನೂ ಕೇಳಿಸುತ್ತಿರಲಿಲ್ಲ. ನಾಗರಾಜ ಮಗನ ಜಜ್ಜಿಹೋದ ಅರ್ಧ ದೇಹವನ್ನು ನೋಡಿ ಮೂರ್ಛೆ ಹೋದ. ಸಿದ್ದಿಯ ಪತ್ತ್ಯೇ ಇರಲಿಲ್ಲ. ನಾಗರಾಜನ ಅಪ್ಪ ಕಣ್ಣಿನ ತುಂಬಾ ನೀರು ಹೊತ್ತುಕೊಂಡು “ ಅಯ್ಯೋ ಮಗನೆ ಎಂಥಾ ಸಾವು ಬಂತಪ್ಪಾ ” ಎಂದು ರಕ್ತಸಿಕ್ತವಾದ ದೇಹವನ್ನು ಬಾಚಿಕೊಳ್ಳಲು ಹೋದ. ಯಾರು ಯಾರೋ ತಡೆದರು. ಚಡ್ಡಿ ಇರದಿದ್ದ ಸೊಟದ ತನಕ ಜಜ್ಜಿ ಹೋಗಿದ್ದ ಆ ಎಳೇ ಕಾಲುಗಳು , ಸೊಂಟ ಇನ್ನಿಲ್ಲದ ದುಃಖವನ್ನು ಎಲ್ಲರೆದೆಯಲ್ಲೂ ಉಂಟು ಮಾಡಿತು. ನಾಲ್ಕಾಣೆ ಬಂದವನ್ನೂ ಕೊಟ್ಟು ‘ ತಿಂಡಿ ತಿನ್ನೋಗು ’ ಎಂದು ಕಳಿಸಿಕೊಟ್ಟಿದ್ದ ಅಜ್ಜಿ ಪಾಪಭೀತಿಯಿಂದ ‘ ಅಯ್ಯೋ ಕಂದಾ ’ ಎಂದು ಆ ಸೀನಿಯ ಮುಖದ ಮೇಲೆ ಬಿದ್ದು ಗೋಳಾಡ ಹತ್ತಿದಳು. ಅರ್ಧ ಹೊಟ್ಟೆಯ ಮೇಲಿನ ಭಾಗ ಹಾಗೇ ಉಳಿದಿದ್ದು , ನಾಲ್ಕಾಣೆಗೆ ತೆಗೆದುಕೊಂಡಿದ್ದ ಹಸಿರು ಬಣ್ಣದ ಗಿಳಿಗಳ ಬಿಸ್ಕೇಟುಗಳು ಮೂರು ನೆಲದ ಮೇಲೆ ಬಿದ್ದು ಇನ್ನೂ ಎರಡು ಕೈಯಲ್ಲೇ ಉಳಿದಿದ್ದವು. ಸೀನಿಯ ಅರೆತೆರೆದ ನೀಲವಾದ ವಿಶಾಲವಾದ ಕಣ್ಣುಗಳು ಮೆಲ್ಲಗೆ ಅಪ್ಪನನ್ನೇ ಭೀತಿಯಿಂದ ಸೋಡುವ ಹಾಗೆ ತೆರೆದುಕೊಂಡಿದ್ದವು. +ನಿಂತಿದ್ದವರಲ್ಲಿ ಯಾರೋ ಹೇಳಿದರು “ ಅಷ್ಟೊತ್ತಿಂದ್ಲೂ ಇಲ್ಲೇ ನಿಂತಿದ್ದ . ‘ ನಾನು ಹೋಗ್ಲಾ ಸೀನಿ ’ ಮದುವೆ ಮನೇಲಿ ಓಡಾಡು ಎಂದರೂ ‘ ನಮ್ಮಪ್ಪ ವಡಿತನೆ ’ ಎನ್ನುತ್ತಾ ಬಿಕ್ಕಳಿಸುತ್ತಾ ಎತ್ತೆತ್ತಗೋ ನೋಡ್ಕ ನಿಂತಿದ್ದ. ಅಷ್ಟೇಲಿ ಆ ಲಾರಿ ಬರ್ರಂತ ಬಂದದ್ದೇ ನುಗ್ಗಿಬಿಡ್ತು. ” ಎಂದು ಮೌನದ ಜೊತೆಗೆ ಮೌನವಾದ. +ಶಾಂತಿಯ ಅಪ್ಪ ಚಿಕ್ಕ ಹೈದ ಎಲ್ಲಿಂದಲೋ ಸುದ್ದಿ ಕೇಳಿ ಓಡಿಬಂದು “ ಇದಕ್ಕೆಲ್ಲ ಕಾರಣ ಆ ನಾಗರಾಜನೇ ಹೊರ್ತು ಯಾರೂ ಅಲ್ಲ ” ಎನ್ನುತ್ತಾ ಯಂಡದ ಅಮಲಿನಲ್ಲಿ ಮೂರ್ಛೆ ಹೋಗಿದ್ದ ನಾಗರಾಜನ ಕಡೆ ಕಣ್ಣು ಹೊರಳಿಸಿದ. ಮದುವೆ ಮನೆಯ ಎಲ್ಲರೂ ಈಗಂತೂ ದಿಕ್ಕು ತೋಚದಾಗಿ ನಿಂತರು. ಶಾಂತಿಯ ಗಂಡ ಕರ್ಚೀಫಿನಿಂದ ಕಣ್ಣು ವರೆಸಿಕೊಳ್ಳತೊಡಗಿದ. +***** +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […] +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […] +೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_659.txt b/Kannada Sahitya/article_659.txt new file mode 100644 index 0000000000000000000000000000000000000000..74edca8da7144009b7ef06a863d0ab31861d0570 --- /dev/null +++ b/Kannada Sahitya/article_659.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೀನಿನ ಬಲೆಯಲ್ಲೂ ಕಲೆಗಾರಿಕೆ +ಮನಗಾಣಬಲ್ಲಾತ ರಸಿಕ; +ಜೇನುಗೂಡಿನ ಕಲೆಯಲ್ಲೂ +ರಂಧ್ರಗಳನ್ನೇ ಕಾಣುವಾತ ಸಿನಿಕ. +***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಬಿಸಿಲಿಗೆ ಕರಗಿದ ಡಾಂಬರಿನಲ್ಲಿ ಮಣ್ಣು ಹೂತುಕೊಳ್ಳುತ್ತದೆ ರೋಡು ಕಾಯುತ್ತದೆ ***** +ಬೃಹದಾಕಾರ ಆದದ್ದನ್ನು ಅದ್ಭೂತ ಎನ್ನಬಹುದಲ್ಲವೆ? ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_66.txt b/Kannada Sahitya/article_66.txt new file mode 100644 index 0000000000000000000000000000000000000000..b535c010a9966c32de7ce0005ff86883536597eb --- /dev/null +++ b/Kannada Sahitya/article_66.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ +ಬದುಕು ಹುಚ್ಚೀ +ನನ್ನ ಕವಿತೆ ಅದು ಭರ್ಜರಿ +ಬಿರಿಯಾನಿ ಗಮ್ಮತ್ತು ಚಿಕನ್ +ತಂದೂರಿಗಳ ಗಿಜಿ ಗಿಜಿ ಘಮದಲ್ಲಿ +ನೊರೆಯಾರುವ ಮೊದಲೇ ತೇಜಿ ತೇಗಿದ್ದು +ಅಕ್ಷರಗಳ ಬಸಿರಿಗೆ +ಕಾವಿಕ್ಕಿ ಅಶ್ಲೀಲ ಚಕ್ಷು ಕಮಕ್ಕೆನಿಸಿ ಶಬ್ದ +ಪತಂಗಗಳ ಪಿನ್ನು ಚುಚ್ಚಿ ಕೇಕೆ ಹಾರಿದ್ದು +ಪಿಳ್ಳು ಬ್ರಾಹ್ಮಣ್ಯಕ್ಕೆ ಸ್ನಿಗ್ಧ +ಸಂಬಂಧ ಬಿತ್ತಿದ್ದು +ಹಲ್ಕಾ ಅನ್ನುವಿಯಾ? +ಹೆತ್, ಅಲ್ನೋಡು +ಬಾನಿಗೆ ಗುಂಡಿಕ್ಕುತ್ತಿದ್ದೇವೆ +ಮತ್ತು ಸೋರಿದ ನೆತ್ತರಿಗೆ +ಕೊಡೆಯೊಡ್ಡುತ್ತಿದ್ದೇವೆ ನೀನು +ಮತ್ತು ನಾನು. +***** +೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […] +ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_660.txt b/Kannada Sahitya/article_660.txt new file mode 100644 index 0000000000000000000000000000000000000000..f01766f9280dc86dc7d7f222e53e3bfc56e5bfd4 --- /dev/null +++ b/Kannada Sahitya/article_660.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಮ್ಮಿ: ಮೊಲೆ ಹಾಲು +ಠಾವಿಲಿ- ಸ್ಥಳದಲ್ಲಿ, ಜಾಗದಲ್ಲಿ +ಧರ್ಮವೇ ಜಯವೆಂಬ ದಿವ್ಯ ಮಂತ್ರ +ಧರ್ಮವೇ ಜಯವೆಂಬ ದಿವ್ಯ ಮಂತ್ರ ಪ +ಮರ್ಮವನರಿತು ಮಾಡಲಿಕೆ ಬೇಕು ತಂತ್ರ ಅ +ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು +ದ್ವೇಷ ಮಾಡಿದವನ ಪೋಷಿಸಲಿಬೇಕು +ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿ ಬೇಕು ೧ +ಹಿಂದೆ ನಿಂದಿಪರನು ವಂದಿಸುತಲಿರಬೇಕು +ಬಂಧನದೊಳಿಟ್ಟವರ ಬೆರೆಯಬೇಕು +ಕೊಂದ ವೈರಿಯ ಮನೆಗೆ ನಡೆದು ಹೊಗಲಿಬೇಕು +ಕುಂದೆಣಿಸುವವರ ಗೆಳೆತನ ಮಾಡಬೇಕು ೨ +ಕೊಂಡೊಯ್ದು ಬಡಿಯುವವರ ಕೊಂಡಾಡುತಿರಬೇಕು +ಕಂಡು ಸಹಿಸದವರ ಕರೆಯಬೇಕು +ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ +ಕೊಂಡಾಡಿ ತಾ ಧನ್ಯನಾಗಬೇಕು ೩ +ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […] +ರಾಗ — ಕಾಂಬೋದಿತಾಳ — ಅಟ್ಟ ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ |ಕುರುಹ ಪೇಳಿ ಕುಳೀತಿದ್ದ ಜನರು ||ಪ|| ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ |ಗಂಟಲು ಮೂರುಂಟು ಮೂಗಿಲ್ಲವು ||ಕುಂಟಮನುಜನಂತೆ […] +ರಾಗ — ಕಾಂಬೋದಿ ತಾಳ — ಝಂಪೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ |ನೀ ದೇಹದೊಳಗೊ ನಿನ್ನೊಳು ದೇಹವೊ ||ಪ|| ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ |ಬಯಲು ಆಲಯವೆರಡು ನಯನದೊಳಗೊ ||ನಯನ ಬುದ್ಧಿಯ ಒಳಗೊ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_661.txt b/Kannada Sahitya/article_661.txt new file mode 100644 index 0000000000000000000000000000000000000000..60b7adb5e6c874a8d13cbf10f66a36edab141ba8 --- /dev/null +++ b/Kannada Sahitya/article_661.txt @@ -0,0 +1,109 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ ಅತ್ಯುತ್ತಮ ಕವಿ ದಾರ್ಶನಿಕರಲ್ಲಿ ಒಬ್ಬನಾಗಿದ್ದ. +ರೂಮಿಯ ಜೀವನ ಅನೇಕ ತಲ್ಲಣಗಳಿಂದ, ಎದೆಯೊಡೆವ ಹುಡುಕಾಟಗಳಿಂದ ಕೂಡಿದೆ. ೩೩ನೇ ವಯಸ್ಸಿಗೆ ಅತ್ಯಂತ ದೊಡ್ಡ ದಾರ್ಶನಿಕ, ಅಧ್ಯಾಪಕನೆಂದು ಕೀರ್ತಿ ಗಳಿಸಿದ್ದ ವ್ಯಕ್ತಿ ರೂಮಿ. ದೊರೆಗಳು, ದೊಡ್ಡ ವರ್ತಕರು, ಪ್ರತಿಷ್ಠಿತರೆಲ್ಲ ಅವನ ಉಪನ್ಯಾಸಗಳಿಗೆ ಹಾತೊರೆಯುತ್ತಿದ್ದರು. ಈ ಎಲ್ಲ ಕೀರ್ತಿ ಅವನಿಗೆ ಒಮ್ಮೆಲೆ ವಾಕರಿಕೆ ತರಿಸಿತು. ೩೮ನೇ ವಯಸ್ಸಿನಲ್ಲಿ ತನ್ನೆಲ್ಲ ಕೀರ್ತಿ, ಗೌರವಗಳ ವಿರುದ್ಧವೇ ತಿರುಗಿಬಿದ್ದ. ತನ್ನ ಪ್ರಸಿದ್ಧಿಯ ಭಾರವೇ ಅವನಿಗೆ ತಡೆಯಲಾಗದೆ ಹೋಯಿತು. ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಲ್ಲೆ ವಿಜೃಂಭಿಸುತ್ತಿರುವುದರಿಂದ ಮಾತ್ರ ತನ್ನ ಸುತ್ತ ಕೀರ್ತಿ ಜೇಡರಬಲೆ ಹಬ್ಬುತ್ತಿದೆ ಎಂದು ಅವನಿಗೆ ಖಾತ್ರಿಯಾಯಿತು. ಕೀರ್ತಿ ಸುತ್ತ ಬೆಳೆದಷ್ಟು ಒಳಗೊಳಗೆ ಆತ ದಿಗ್ಭ್ರಾಂತನಾದ. ಅತೃಪ್ತಿಯಿಂದ ಕುದಿಯತೊಡಗಿದ. ಸಾಂಪ್ರದಾಯಿಕ ಜೀವನದಲ್ಲಿ ಮುಳುಗುವುದೇ ಮೃತ್ಯು ಎನ್ನಿಸಿ ಅದರಾಚೆಗೆ ಹಾರಲು ಒದ್ದಾಡ ತೊಡಗಿದ. ಅಧ್ಯಯನ ಅಧ್ಯಾಪನಗಳಿಗಿಂತ ಕ್ರಿಯೆ ಮತ್ತು ಅನುಭವಗಳು ಅವನಿಗೆ ವಿಶೇಷ ಆಕರ್ಷಕವಾಗಿ ಕಾಣಿಸತೊಡಗಿದವು. ಒಬ್ಬ ಅತ್ಯುತ್ತಮ ದಾರ್ಶನಿಕ-ಅಧ್ಯಾಪಕ ತನ್ನ ಕಸುಬಿನಿಂದಲೇ ತಪ್ಪಿಸಿಕೊಳ್ಳಬಯಸಿದ. +ಈ ಹುಡುಕಾಟದಲ್ಲಿ ಅವನ ಆಂತರಿಕ ಜೀವನ ಕೂಡ ಪೂರ ಬದಲಾಗಿಬಿಟ್ಟಿತು. ಆತ ತನ್ನ ಅದುವರೆಗಿನ ಶಿಕ್ಷಣ ಮತ್ತು ಸಾಧನೆಗಳ ವಿರುದ್ಧವೇ ಬಂಡೆದ್ದ. ಸೂಫಿ ಅನುಭವಕ್ಕಾಗಿ ಅನೇಕ ಪ್ರಯಾಣಗಳನ್ನು ಮಾಡಿ ವಾಪಸ್ಸಾದ. ಈ ಗೊಂದಲದ, ತೀವ್ರ ಹುಡುಕಾಟದ ದಿನಗಳಲ್ಲೇ ಒಬ್ಬ ಸೂಫಿ ಗುರು ಶಂಸ್ ತಬ್ರೀಜ್ ಎಂಬಾತನನ್ನು ಭೇಟಿಯಾದ. ಆ ಭೇಟಿ ಒಂದು ಮಹಾನ್ ಸಂಬಂಧದ ಯಾತ್ರೆಯಾಗಿಬಿಟ್ಟಿತು. ದಟ್ಟ ಪ್ರೇಮದ, ದಟ್ಟ ಜ್ಞಾನದ, ದಟ್ಟ ಯಾತನೆಯ, ದೊಡ್ಡ ಸಂಭ್ರಮದ ಸಂಬಂಧ ಅದು. ಒಂದು ಮಟ್ಟದಲ್ಲಿ ತಬ್ರೀಜ್-ರೂಮಿಯ ಸಂಬಂಧ ಎಲ್ಲ ದೊಡ್ಡ ಸಂಬಂಧಗಳ ಪ್ರತೀಕ. ಅದು ಅಂತಿಮವಾಗಿ ಲಿಂಗ ವ್ಯತ್ಯಾಸಗಳು ಮರೆಯಾಗುವ ರೀತಿಯದು. ಈ ರೀತಿಯ ಸಂಬಂಧಕ್ಕೆ ಮುಜುಗರಪಟ್ಟುಕೊಂಡರೆ ಇದನ್ನು ಸಾಂಪ್ರದಾಯಿಕ ಅರ್ಥದ ಗಂಡು-ಹೆಣ್ಣಿನ ಸಂಬಂಧ ಎಂದರೂ ನಡೆದೀತು. ತನ್ನ ಪ್ರೇಮಿ-ಗುರುವಿನ ಮೇಲೆ ರೂಮಿ ೨೫೦೦ ಪದ್ಯಗಳ ’ದಿವಾನ್-ಎ-ಷಂಸ್’ ಎಂಬ ಕೃತಿಯನ್ನೇ ಬರೆದ. ಪ್ರೇಮ ಜ್ಞಾನಗಳೆರಡು ಒಂದೇ ಆಗುವ ಸಂಬಂಧ ಅದು. ಆ ಬಗ್ಗೆ ರೂಮಿ ಹೀಗೆ ಹೇಳಿದ- “ನನ್ನ ಒಳ ಮನಸ್ಸಿನ ಸಮುದ್ರದಿಂದ ತಬ್ರೀಜ್ (ಶಂಸ್‌ನವನು) ನನ್ನನ್ನು ಹೊರಗೆಳೆದ. ಆಗ ಬೆಳಕಿನ ಮಹಾ ಶರೀರವೆದ್ದಿತು. ಶಂಸ್‌ನ ತಬ್ರೀಜ್ ಕಣ್ಣಿನ ಬೆಳಕಾದ. ತರ್ಕದ ಸ್ಪಷ್ಟತೆಯಾದ. ಆತ್ಮದ ಪ್ರಖರ ಕಾಂತಿಯಾದ. ಆತ ನನ್ನ ಎಲ್ಲ ಸಂತೋಷಗಳ ಅಂತಿಮ ರೂಪನಾದ”. +ಇದರಿಂದ ಉನ್ಮತ್ತನಾದ ರೂಮಿ, ಗೌರವಾರ್ಹ ಪ್ರಧ್ಯಾಪಕ ರೂಮಿ, ’ಸಮಾ’ ಎಂಬ ಕುಣಿತ, ಹಾಡುಗಳ ಕೂಟವನ್ನೇ ಕಟ್ಟಿದ. ತಾಪಸರು ತಪಗುಟ್ಟಿ ಜಿನುಗಿದರೆ ಜನ ಸಹಿಸಬಲ್ಲರು. ಜ್ಞಾನಿಗಳು ಹಾಗೇ ಇರಬೇಕು. ಆದರೆ, ಹುಚ್ಚು ಹರೆಯದವರ ಹಾಗೆ ಒಬ್ಬ ಮಧ್ಯ ವಯಸ್ಕ ಗುರು ಕುಣಿದರೆ? ಆದರೂ ಹಳೆಯ ಗೌರವದಿಂದ ಸುಮ್ಮನಿದ್ದರು. ಆದರೆ, ತಬ್ರೀಜನ ಸ್ನೇಹದಿಂದಾಗಿ ಉಳಿದ ಲೋಕದಿಂದ ರೂಮಿ ದೂರವಾಗತೊಡಗಿದ. ಇದಕ್ಕೆಲ್ಲ ತಬ್ರೀಜ ಕಾರಣ ಎಂದು ರೂಮಿಯ ಹಳೆಯ ಅಭಿಮಾನಿಗಣ ಉರಿದುಬಿದ್ದಿತು. ಅವರ ಕೋಪ ಶಂಸ್‌ನ ಮೇಲೆ ತಿರುಗಿತು. ಒಂದು ದಿನ ಶಂಸ್ ತಬ್ರೀಜ್ ಕಣ್ಮರೆಯಾದ. ರೂಮಿಗೆ ತನ್ನ ಪ್ರೇಮಮೂಲ ಕಣ್ಮರೆಯಾದಂತೆ ಜ್ಞಾನಮೂಲ ಮರೆಯಾದಂತೆ ಅನಿಸಿ ಅನಾಥನಾಗಿ ಬಿಟ್ಟ. ದುಃಖಮೂಲ ಮಾತ್ರ ಉಳಿದು ಹಗಲುರಾತ್ರಿಗಳು ಹಾಡಿದ, ಕುಣಿದ, ಹುಚ್ಚನಂತಾದ. ತಬ್ರೀಜ್‌ನನ್ನು ಹುಡುಕುತ್ತ ಎಲ್ಲವನ್ನೂ ಬಿಟ್ಟು ಕಣ್ಮರೆಯಾದ. ತಬ್ರೀಜ್ ಡಮಾಸ್ಕಸ್‌ನಲ್ಲಿದ್ದಾನೆ ಎಂದು ಹುಡುಕುತ್ತ ಅಲ್ಲಿಗೂ ಹೋದ. ಆದರೆ, ತಬ್ರೀಜ್ ಎಲ್ಲ ಘನ ಪ್ರೇಮದ ಹಾಗೆ ಅಲೆಮಾರಿಯ ಪ್ರತೀಕ. ರೂಮಿ ತನ್ನ ಸೃಜನಶೀಲ ತೀವ್ರತೆಗಳ ಶಿಖರ ಮುಟ್ಟಿದ್ದು ಈ ದಿನಗಳಲ್ಲೆ. +ಅಲೆಮಾರಿಯಾಗಿ ಹಂಬಲಿಸಿ ವಿಹ್ವಲನಾಗಿ ತನ್ನ ಅತ್ಯುತ್ತಮ ಕಾವ್ಯವನ್ನು ರೂಮಿ ಸೃಷ್ಟಿಸಿದ. ಇದರಲ್ಲಿ ಪ್ರೇಮವೆಂಬ ಬೆಂಕಿ ಎಷ್ಟು? ದಾರ್ಶನಿಕ ಅನುಭವವೆಂಬ ಬೆಳಕು ಎಷ್ಟು? ಎಂದು ಬಿಡಿಸಿ ಹೇಳುವುದು ಕಷ್ಟ. ಸಂಪ್ರದಾಯವೆಂಬ ಗೋಡೆ ಹಾರಲು ತವಕಿಸುವ ಮನಸ್ಸುಗಳಿಗೆ ಇದೊಂದು ರೆಕ್ಕೆ. ಎಲ್ಲ ದೊಡ್ಡ ಮಧುರ ಪ್ರೇಮದ ಗರ್ಭದಲ್ಲೇ ಕಟುವಿರಹವೂ ಇರುತ್ತದೆಂಬ ಅನುಭವವನ್ನು ಈ ಕವಿತೆಗಳು ಹೃದಯ ಸ್ಪರ್ಶಿಯಾಗಿ ಹೇಳುತ್ತವೆ ಮತ್ತು ಅಂತಿಮವಾಗಿ ಆ ಪ್ರಯಾಣದಲ್ಲಿ ದೊಡ್ಡಜ್ಞಾನವೂ ಹುಟ್ಟುತ್ತದೆ. +ಅಲೆಮಾರಿಗಾಗಿ ಹಂಬಲ +ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡ +ಕೆಳಗಿಳಿದು ಬಂದ ನನ್ನನ್ನೆ ನೋಡಿದ +ಬೇಟೆಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ +ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ +ನನ್ನನ್ನು ನೋಡಿಕೊಂಡೆ ನಾನು ಇರಲೇ ಇಲ್ಲ +ಚಂದ್ರನ ಬೆಳಕಿನಲ್ಲಿ ನನ್ನ ದೇಹ ಆತ್ಮವೇ ಆಗಿಬಿಟ್ಟಿತ್ತು +ಆತ್ಮದೊಳಗೆ ನಾನು ಪ್ರಯಾಣ ಮಾಡಿದೆ +ಬರೀ ಚಂದ್ರನೆ ಕಂಡ ಎಲ್ಲೆಲ್ಲೂ ಬರೀ ಚಂದ್ರನೇ +ಶೂನ್ಯದ ಗುಟ್ಟೆಲ್ಲ ಬಚ್ಚಿಟ್ಟಹಾಗೆ. +ದೇವಲೋಕದ ನವನೆಲೆಗಳೆಲ್ಲ ಚಂದ್ರನಲ್ಲಿ ಕರಗಿಹೋದವು +ಜೀವದ ಹಡಗು ಸಮುದ್ರದಲ್ಲಡಗಿ ಕೂತಿತು +ಸಮುದ್ರ ಉಕ್ಕಿತು ಅರಿವು ಮರಳಿತು ಸುತ್ತ ದನಿ ಹರಡಿತು +ಎತ್ತ ತಿರುಗಿದರೂ ಅದೇ ದನಿ +ಎದ್ದಿತು, ಬಿದ್ದಿತು. +ಕಡಲ ನೆರೆನೊರೆಯುಕ್ಕಿತು, ಪ್ರತಿನೊರೆಯ ನಡುವಿಂದ +ಏನೊ ಎದ್ದು ಮೈತಾಳಿ ಬಂದಿತ್ತು. +ಪ್ರತಿ ನೊರೆನರಜಿನ ಮೈ ಸಮುದ್ರದ ಕುರುಹು ಪಡೆದು +ಮತ್ತದೇ ಸಮುದ್ರದಲ್ಲಿ ಬಯಲಾಗಿಬಿಟ್ಟಿತ್ತು. +ತಬ್ರೀಜಿನ ಅದೃಷ್ಟವಿರದೆ +ಚಂದ್ರನೂ ಸಿಗುವುದಿಲ್ಲ. ಸಮುದ್ರವೂ ಅಗಲಾಗುವುದಿಲ್ಲ. +ಆ ಸುಂದರಾಂಗ ನನ್ನ ಕೈಗೊಂದು ಕಸಪೊರಕೆ ಕೊಟ್ಟು +ಹೇಳಿದ: ಸಮುದ್ರದ ಧೂಳು ಗುಡಿಸು +ಆಮೇಲೆ ಪೊರಕೆ ಬೆಂಕಿಗೆ ಹಾಕಿ ಉರಿವಾಗ +ಹೇಳಿದ: ಆ ಪೊರಕೆಯನ್ನು ಬೆಂಕಿಯಿಂದ ಮೇಲೆತ್ತು +ದಿಗ್ಭ್ರಾಂತನಾಗಿ ಅಡ್ಡಬಿದ್ದೆ +ಆತ ಹೇಳಿದ: ಶರಣಾಗತ ರಕ್ಷಕನಿಲ್ಲದೆ ಶರಣಾಗತನಾಗುವುದನ್ನು ಕಲಿ. +ಶರಣಾಗತ ರಕ್ಷಕನಿಲ್ಲದೆ ಶರಣಾಗತನಾಗುವುದು ಹೇಗೆ? +ಆತ ಹೇಳಿದ: ’ಬೇಷರತ್ತಾಗಿ’. +ಕುತ್ತಿಗೆ ಕೆಳಗೆ ಮಾಡಿ ಹೇಳಿದೆ +’ಶರಣಾಗತನ ಕುತ್ತಿಗೆ ಕತ್ತರಿಸು’. +ಕತ್ತಿಯಿಂದ ಕತ್ತರಿಸಿದಷ್ಟೂ ತಲೆ ಬೆಳೆಯಿತು +ಕುತ್ತಿಗೆಯಿಂದ ಶತಸಾವಿರಕೋಟಿ ತಲೆಗಳು ಚಿಮ್ಮಿದವು. +ತಲೆಯೊಳಗಿಂದ ಬತ್ತಿಗಳು ಜಗ್ಗನೆ ಹೊತ್ತಿಕೊಂಡವು. +ಪೂರ್ವ ಪಶ್ಚಿಮಗಳೆಲ್ಲ ದೀಪಗಳಿಂದ ಕಿಕ್ಕಿರಿದವು. +ದಿಕ್ಕುಗಳೇ ಇರದಕಡೆ ಪೂರ್ವವೆಲ್ಲಿ? ಪಶ್ಚಿಮವೆಲ್ಲಿ? +ಅದೊಂದು ಉರಿವ ನೀರೊಲೆ, ಸ್ನಾನದ ಬಚ್ಚಲು +ಮನಸ್ಸೇನೆಂದು ಮುದ್ದೆಯಾಗಿರುವಾಗ, ಹೃದಯಕ್ಕೆಲ್ಲಿಯ ಆತಂಕ? +ಈ ಬಚ್ಚಲಮನೆಯಲ್ಲೇ ಎಷ್ಟು ಹೊತ್ತು ಇರುತ್ತಿ? +ಬಚ್ಚಲಾಗು ನೀನು, ಬೆತ್ತಲಾಗು ನೀನು, ಉರಿವ ಒಲೆಗೆ ಬೀಳಬೇಡ +ಸುತ್ತ ಚಿತ್ತ ಚಿತ್ತಾರಗಳನ್ನು ನೋಡು +ಕಿಟಕಿಯಾಚೆಗೆ ನೋಡು, ಕಿಟಕಿಗಾಜಿನ ಬೆಳಕು ಅವನನ್ನು +ಸುಂದರಾಂಗವಾಗಿಸಿದೆ. ಕಿಟಕಿಯಾಚೆಗೆ ಚೆಲುವ ರಾಜಕುಮಾರ! +ನೆಲಜಲಗಳಿಗೂ ನಲ್ಲನ ನೆರಳಿಂದಲೇ ಬಂದ ಕಾಂತಿ! +ದೂರ ದೇಶಗಳಿಗೆ ಹಾರಾಡಿದೆ ಹೃದಯ +ಹೊತ್ತು ಮುಳುಗುತ್ತ ಬಂತು. ನನ್ನ ಕಥೆ ಮುಗಿವ ಹಾಗೇ ಇಲ್ಲ! +ಅವನ ಕಥೆಯ ಹಾಡಿಗೆ ಹಗಲುರಾತ್ರಿಗಳು ನಾಚಿ ತಲೆತಗ್ಗಿಸಿವೆ +ನನ್ನ ದೊರೆ ತಬ್ರೀಜ್‌ನಿಂದ ಮತ್ತನಾಗಿದ್ದೇನೆ. +ಸುಖದ ಸುಗ್ಗಿಯ ಮೇಲೆ ಸುಗ್ಗಿ ಸುರಿದು ಚಿತ್ತಾಗಿದ್ದೇನೆ! +ನುಡಿಯಲ್ಲಿ ನಿನ್ನ ಚೆಲುವು ಮೂಡಲಿಲ್ಲವೆ? +ನನ್ನ ಎದೆಗೂಡಲ್ಲಿ ಪ್ರೀತಿ ಅಡಗಿಕೂತುಬಿಟ್ಟಿದೆ. +ನಿನ್ನ ಪ್ರೀತಿಯಿರದೆ ನಾನು ಗುಲಾಬಿ ಮೂಸಿದೆನೆ? +ಮುಳ್ಳಿನಂತೆ ನನ್ನನ್ನು ಉರಿಸಿಬಿಡು. +ಮಾತಿಲ್ಲದ ಮೀನಿನಂತೆ ನಾನು ಮೌನಿಯೆ? +ಸಮುದ್ರದಂತೆ ಅದರ ಅಲೆಗಳಂತೆ ತೊಯ್ದಾಡುತ್ತಿದ್ದೇನೆ. +ತುಟಿಗಳ ಮೇಲೆ ಮುದ್ರೆಯೊತ್ತಿ ಮುಚ್ಚಿರುವ ಮುಖವೆ, +ಮೂಗುದಾರ ಹಾಕಿ ಮುತ್ತು ನನ್ನನ್ನು. +ಒಂಟೆಯ ಹಾಗೆ ದುಃಖದ ಮೇವನ್ನು ಮೆಲುಕು ಹಾಕುತ್ತಿದ್ದೇನೆ, +ಬೆದೆಯೊತ್ತಿ ಬರುವ ಒಂಟೆಯ ಹಾಗೆ ಬಾಯೆಲ್ಲ ನೊರೆನೊರೆ +ನಾನು ಬಚ್ಚಿಟ್ಟುಕೊಂಡಿದ್ದೇನೆ, ಮಾತಿಲ್ಲದೆ ಮುದುಡಿದ್ದೇನೆ, +ನಲ್ಲನ ಎದುರು ಮಾತ್ರ ಬಿಚ್ಚಿ ಹಬ್ಬಿದ್ದೇನೆ. +ನೆಲದಾಳದಲ್ಲಿ ಕೂತಿರುವ ಬೀಜ ನಾನು, +ವಸಂತದ ಕರೆಗಾಗಿ ಕಾಯುತ್ತಿದ್ದೇನೆ. +ನನ್ನ ಉಸಿರಿಲ್ಲದೆಯೂ ಸಿಹಿಯಾಗಿ ಉಸಿರಾಡಬಲ್ಲೆ, +ಸ್ವಂತ ತಲೆಯಿಲ್ಲದೆಯೆ ತಲೆ ಕೆರೆದುಕೊಳ್ಳಬಲ್ಲೆ. +ಅವನು ನಿದ್ರಿಸುತ್ತಿದ್ದ ಹಾಗೆ ಕಂಡ. +ತೋಟದಿಂದ ನಾನು ಕೂಗಿದೆ- “ಬೇಗ, ಬೇಗ ಬಾ. ಕದ್ದ ಹಣ್ಣು ನನ್ನಲ್ಲಿದೆ”. +ಆ ಕಳ್ಳ ನಿದ್ರಿಸುತ್ತಿರಲಿಲ್ಲ. +ಜೋರಾಗಿ ನಕ್ಕು ಹೇಳಿದ- “ತಗಲೂಫಿ ತೋಳವೆ? ಸಿಂಹದ ಕೈಯಿಂದ ಹೇಗೆ ಕದ್ದೆ?” +ಮೋಡಗಳಿಂದ ಯಾರು ಹಾಲು ಹಿಂಡುತ್ತಾರೆ? +ಯಾರು ಮೋಡಗಳ ನಾಡಿಗೆ ಹೋಗುತ್ತಾರೆ? +ಸ್ವತಃ ಆ ಮೋಡಗಳೇ ಪ್ರೀತಿ ಹರಿಸಿ ಕರೆಯದಿದ್ದರೆ? +ಅಸ್ತಿತ್ವದಲ್ಲೇ ಇಲ್ಲದ್ದು ಅಸ್ತಿತ್ವಕ್ಕೆ ಹೇಗೆ ಬರುತ್ತೆ? +ದಿವ್ಯಕೃಪೆಯಿಂದ ಮಾತ್ರ ಅಸ್ತಿತ್ವವೇ ಇಲ್ಲದ್ದು ಅಸ್ತಿತ್ವವಾಗುತ್ತೆ. +ಇಲ್ಲವೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಕೂರು. +ಆಗ ದಿವ್ಯಪ್ರಾರ್ಥನೆಯಲ್ಲೆಂಬಂತೆ ದರ್ಶನವಾಗುತ್ತದೆ. +ವಿನಯದ ಮೂಲಕ ಮಾತ್ರ ನೀರು ಬೆಂಕಿಯನ್ನು ಗೆಲ್ಲುತ್ತದೆ. +ಬೆಂಕಿ ಎದ್ದೆದ್ದು ಬೊಬ್ಬೆ ಹೊಡೆದರೆ +ನೀರು ಸುಮ್ಮನೆ ಅಡ್ಡ ಬೀಳುತ್ತದೆ. +ತುಟಿ ಹೊಲಿದುಕೊಂಡಿದ್ದಾಗ, +ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತವೆ. +ಶ್, ಈಗ ಮೌನವಾಗಿರು +ಎಷ್ಟೊತ್ತು ಎಷ್ಟೊತ್ತು ಅವನನ್ನು ಗೋಳು ಹೊಯ್ದುಕೊಳ್ಳುತ್ತಿ? +***** +ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ […] +ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೇ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲಿಗಳಿಂದ ದೊರೆಗಳು, ಸೇನಾನಿಗಳು ಬಂದು ಈಶನನ್ನು […] +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_662.txt b/Kannada Sahitya/article_662.txt new file mode 100644 index 0000000000000000000000000000000000000000..bf5fce149ee224068e50d371e404ccec85007d3d --- /dev/null +++ b/Kannada Sahitya/article_662.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. +ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. ಅದನ್ನೊಮ್ಮೆ, ಹಾಗೆಯೇ, ಸಾವಕಾಶದಿಂದ ಕೊರಳಿಗೆ ಇಳಿಬಿಟ್ಟಿದ್ದ ನಿಮ್ಮ ಮೊಬೈಲಿನಲ್ಲೊಮ್ಮೆ ನೋಡಿ, – ಎರಡರ ವೇಳೆಯ ದಾಖಲುಗಳನ್ನೊಮ್ಮೆ ತಾಳೆ ಹಾಕಿ, ಕಿಸೆಯಿಂದ ಟಿಷ್ಯೂವೆಳೆದು ಹಣೆಯ ಮೇಲಿನ ಹನಿಗಳನ್ನೊತ್ತಿ ಹೀರಿ ಮುದುಡಿ ಎಂಥದೋ ಅಸಹನೆಯಿಂದ ಊoಠಿe ಣoಜಚಿಥಿ is ಣhe ಟಚಿsಣ ಜಚಿಥಿ ಎಂದು ನಿಮಗೆ ನೀವೇ ಸಶಬ್ದ ಹೇಳಿಕೊಳ್ಳುತ್ತೀರಿ. ನಿಮ್ಮ ಮಗ್ಗುಲು ಹಾಯುತ್ತಿದ್ದ ಹೆಣ್ಣು ಚಹರೆ ಅದನ್ನು ಕೇಳಿಸಿಕೊಂಡು ವಿಷಣ್ಣ ನಕ್ಕು ಮುಂದೆ ಸಾಗುತ್ತದೆ. ನಿಮಗೆ ಆ ಕುರಿತು ಕಸಿವಿಸಿಯಾಗುವುದಿಲ್ಲ. ಈ ಕಾರಿಡಾರಿನ ನಾಲ್ಕನೇ ಕಂಬದ ಮಗ್ಗುಲಿನ ಕಟಾಂಜನಕ್ಕೊರಗಿ ಸಾಧಾರಣ ಒಂದೂವರೆ ತಿಂಗಳಿಗೊಂದಾವರ್ತಿ ಗಂಟೆಗಟ್ಟಲೆ ಕಾಯುವುದು ಎರಡು ವರ್ಷಗಳಿಂದ ಅಭ್ಯಾಸವಾಗಿಬಿಟ್ಟಿದೆ ನಿಮಗೆ. ಎಷ್ಟೋ ಕಣ್ಣುಗಳು ನಿಮ್ಮನ್ನೇ ನೋಡುತ್ತಿರಬಹುದು, ನೋಡಿ ಏನೇನನ್ನೆಲ್ಲ ಕಲ್ಪಿಸಿಕೊಳ್ಳುತ್ತಿರಬಹುದು ಎಂಬ ಮುಜುಗರವಾಗಲಿ, ಈ ಮಂದೆಯ ನಡುವೆ ಅವಳು ಕಾಣುವ ಮೊದಲೇ ಸಶಬ್ಧ ಢವಿಸುತ್ತಿದ್ದ ‘ಎದೆಗಾರಿಕೆ’ಯಾಗಲಿ, ನಿಮ್ಮನ್ನು ನೋಡುತ್ತಲೇ ಅವಳು ಹೇಗೆ ಪ್ರತಿಕ್ರಿಯಿಸಬಹುದೆಂಬ ಊಹೆಗಳ ಗೋಜಲಾಗಲಿ ಈಗ ನಿಮ್ಮಲಿಲ್ಲ. ಮುಸುಮುಸು ಅಳು, ಬಿಕ್ಕುವ ಹೆಣ್ಣು ಮೋರೆಗಳು, ಅವುಗಳೊಟ್ಟಿಗೆ ಮರುಕ ಕಾಣಿಸುವ ಇನ್ನಿತರೆ ಚರ್ಯೆಗಳು ಪಟ್ಟು ಬಿಡದ ಗಂಡು ಧಿಮಾಕುಗಳು, ಮಕ್ಕಳ ವಾರಸಿಕೆ ಕುರಿತಾದ ದಾವೆಗಳು, ಮಾಸಾಶನದ ಲೇವಾದೇವಿಗಳು, ಜತೆಜತೆಗಿನ ಮನೋವಿಕಾರಗಳು ನಿಮ್ಮನ್ನು ಈಗ ಅಲುಗಿಸುವುದಿಲ್ಲ. ಈಗೇನಿದ್ದರೂ ನಿಮ್ಮ ಕಾಳಜಿಗಳು ನಿಮ್ಮ ನೆಲೆಯನ್ನಷ್ಟೇ ಕುರಿತಾದವು. ನೀವೀಗ ತಟಸ್ಥರು, ನಿಲುವೂ ನಿರ್ಲಿಪ್ತ, ಏತಕ್ಕೂ ಸಿದ್ಧವೆಂಬ ಧೋರಣೆ. ತಯಾರಿಯಿಂದ ರೂಢಿಸಿಕೊಂಡ ಸಮಾಧಾನ ಒಂದಷ್ಟು, ಜೊತೆಗೆ ನಿಮ್ಮ ಲಾಯರು ಹೇಳಿದ್ದಾರೆ. ಇನ್ನು ಎಲ್ಲ ನೇರ, ಕಟೆಕಟೆಯಲ್ಲಿ ಇಂದು ಫಿರ್ಯಾದುಗಳ ಗೋಜಿಲ್ಲ. +ಶನಿವಾರವಷ್ಟೆ ಹಡ್ಸನ್ ಸರ್ಕಲ್ಲಿನ ಟ್ರಾಫಿಕ್ ರಾಡಿಯಲ್ಲಿ ಮೊದಲ ಗೇರಿನಲ್ಲಿ ಡಾಮರು ಉಜ್ಜುತ್ತ ಹೆಣಗುತ್ತಿರುವಾಗ ಲಾಯರ ಫೋನು ಬಂದಿತ್ತು. ‘ಅವಳು ಎಲ್ಲಾನೂ ವಿತ್‌ಡ್ರಾ ಮಾಡ್ಕೊತಾಳಂತೆ, ಕೇಸರೀ, ಏನೂ ಅಲ್ಯುಮ್ನೀ ಬೇಡ ಅಂತ ಹೇಳಿದ್ದಾಳಂತೆ. ಅವಳ ಲಾಯರ್ ಸುಮನ್ ಫೋನ್ ಮಾಡಿದ್ರು. ಬೇಗ ಮುಗಿಸಿಬಿಡೋಣ ಮೇಡಮ್- ಸುಮ್ಮನೆ ಇಬ್ಬರಿಗೂ ತೊಂದರೆ, ಇಬ್ಬರಿಗೂ ಚಿಕ್ಕ ವಯಸ್ಸು, ಇದೊಂದು ಕ್ಲಿಯರ್ ಆದರೆ ಅವರವರ ಬದುಕು ಅವರವರು ನೋಡ್ಕೋಬಹುದಲ್ವೇ ಅಂದರು. ನೀವು ನಾಳಿದ್ದು ವೆಡ್‌ನೆಸ್‌ಡೇ ಸೀದಾ ಹತ್ತು ಗಂಟೆಗೆ ಮಾಮೂಲು ಸೆಕೆಂಡ್ ಫ್ಲೋರ್ ಹಾಲಿಗೆ ಬಂದುಬಿಡಿ. ಅಲ್ಲೇ ಸಿಗ್ತೀನಿ’ ಹಿಯರಿಂಗುಗಳ ಮಾಸಾವರಿ ಆವರ್ತನೆಯನ್ನು ಸ್ವಾಭಾವಿಕವೆಂಬಂತೆ ನಿಮ್ಮ ದೈನಂದಿನದಲ್ಲಿ ಅಳವಡಿಸಿಕೊಂಡಿದ್ದ ನಿಮಗೆ ಈ ಬಗೆಯ ತಿರುವು, ಇತ್ಯರ್ಥ ಅಸಹಜವೆನ್ನಿಸಿತ್ತು. ಎರಡೂವರೆ ವರ್ಷಗಳಿಂದ ಅವಳು ನಿಮ್ಮೊಟ್ಟಿಗಿದ್ದಿಲ್ಲವಾದರೂ ಮುಂದೆ ಎಂದಾದರೂ ಒಮ್ಮೆ ಅವಳು ತನ್ನ ನಿಲುವುಗಳನ್ನು ಬದಲಿಸಿಕೊಳ್ಳ ಬಹುದೆಂಬ ಕ್ಷೀಣ ಆಶಾವಾದ ನಿಮ್ಮಲ್ಲಿ ಇಲ್ಲದಿದ್ದುದಂತೂ ಇಲ. ಈಗಷ್ಟೆ ಕರೀಕೋಟು, ಕಟಕಟೆಗಳ ವ್ಯವಹಾರ ಉದ್ರಿಕ್ತಕೊಳ್ಳುತ್ತಿರುವಾಗ ಅವಳ ಈ ನಿರ್ಧಾರ ತೀರಾ ಅಸಂಗತವೆನ್ನಿಸಿತ್ತು. ಒಟ್ಟಿಗಿಲ್ಲವಾದರೂ ಕಾಗದದ ಮೇಲಾದರೂ ಅವಳು ನಿಮ್ಮದೇ ಹೆಣ್ಣು ಎನ್ನುವ ಸಮಾಧಾನವಿತ್ತು. ಇದು ನಿಜವೇ? ನಿಜವಿದ್ದರೂ ಅದು ತನ್ನ ಭವಿಷ್ಯದ ರೂಪುರೇಶೆಗಳನ್ನು ಕೂಲಂಕಷ ತಡಕಿ ಸೂಕ್ತವೆಂದು ತೆಗೆದುಕೊಂಡ ನಿಲುವೆ? ಇಲ್ಲವೆ ಇದೊಂದು ಹೊಸ ಸಂಚು, ಹವಣಿಕೆಯೆ? ‘ಅವಳು ಯಾರನ್ನೋ ಮದುವೆ ಮಾಡಿಕೊಂಡು ಫಾರಿನ್ನಿಗೆ ಹೋಗೋ ತರಾತುರಿಯ್ಲಲಿದ್ದಾಳಂತೆ ಅಂತ ಸೂಕ್ಷ್ಮವಾಗಿ ಸುಮನ್ ಹೇಳಿದರು. ಬಿಟ್ಟುಬಿಡಿ ಕೇಸರಿ, ಸೂರೇ ಮುರಿದು ಬೀಳ್ತಿರಬೇಕಾದರೆ ಪಾಯ ಯಾಕೆ ತಡಕ್ತಿದ್ದೀರಿ? ಬುಧವಾರ ಇಬ್ಬರೂ ಜಾಯಿಂಟ್ ಆಗಿ ಒಂದು ಸೈನ್ ಮಾಡಿಬಿಟ್ಟರೆ ಅಲ್ಲಿಂದ ಒಂದು ಹದಿನೈದು ದಿನದಲ್ಲಿ ಎಲ್ಲಾ ಮುಗಿದುಬಿಡುತ್ತೆ. ಙou ಛಿಚಿಟಿ geಣ ಡಿeಚಿಜಥಿ ಜಿoಡಿ ಚಿಟಿoಣheಡಿ iಟಿಟಿiಟಿgs iಟಿ ಟiಜಿe ನಿಮಗೆ ಯಾವುದನ್ನೂ ನಂಬಲಾಗುವುದಿಲ್ಲ. ಅವಳು ನಿಮ್ಮೊಟ್ಟಿಗೆ ಇಲ್ಲ ಎಂಬುದನ್ನೂ. +* +* +* +ಹಾಗೆ ನೋಡಿದರೆ ಅವಳೊಟ್ಟಿಗಿನ ಎಂಟು ವರ್ಷಗಳ ಸಾಂಗತ್ಯದಲ್ಲಿ ಅವಳ ಯಾವುದೇ ನಡೆವಳಿಯನ್ನು ಇದು ಹೀಗೆ ಎಂದು ಖಚಿತ ಹೇಳಲಾಗಿದ್ದಿಲ್ಲ. ಮದುವೆಗೆ ಮೊದಲಿನ ಪ್ರಣಯವನ್ನು ಕುರಿತಂತೆ. ಪುರಾವೆಗೆಂಬಂತೆ ನಿಮ್ಮಿಬ್ಬರ ಮೊದಲ ಆಪ್ತ ಸಂದರ್ಭವನ್ನು ನೆನಪಿಸಿಕೊಳ್ಳಿ. ಸ್ಯಾಂಕಿ ಕೆರೆಯ ಮಗ್ಗುಲಿನ ಪಾರ್ಕ್ ಬಾಜೂ ಚಾಟ್ ತಿನ್ನುವಾಗ ಅಚಾನಕ್ಕಾಗಿ ನೀವು ಅವಳ ತುಟಿ ಮುದ್ದಿಸಿದಾಗ ಅವಳು ನಿಮ್ಮ ಮೋರೆಯನ್ನು ಹಿಂದೆ ತಳ್ಳಿರಲಿಲ್ಲ. ಆದರೆ ಮರುಸಂಜೆ ನಿಮ್ಮನ್ನು ಆಫೀಸಿನಲ್ಲಿ ಸಂಪರ್ಕಿಸಿ ನೀವು ಮಾಡಿದ್ದು ಘನಘೋರ ಅಪರಾಧವೆಂಬಂತೆ ಹೀನಾಯಮಾನ ಬೈದಿದ್ದಳು. ನೀವು ಸಲ್ಲದ ಅಪರಾಧಿಪ್ರಜ್ಞೆಯಿಂದ ಮತ್ತೆ ಸಾಯಂಕಾಲ ಅವಳನ್ನು ಭೆಟ್ಟಿ ಮಾಡಿ ಕ್ಷಮೆ ಕೇಳಲು ಹೋಗಿದ್ದೀರಿ. ಆದರೆ ಆದ್ದದೇ ಬೇರೆ- ಅಂದು ಮತ್ತೊಂದು ಏಕಾಂತ! ಮತ್ತಷ್ಟು ಮುದ್ದು!! ಅವಳನ್ನು ವಿಮೆನ್ಸ್ ಹಾಸ್ಟೆಲ್ ಬದಿ ಡ್ರಾಪ್ ಮಾಡುವಾಗ ನಿಮ್ಮ ಕಿಸೆಗೆ ಕೈ ಹಾಕಿ ಪರ್ಸಿನಿಂದ ನೂರರ ಐದು ನೋಟುಗಳನ್ನು ತೆಗೆದುಕೊಂಡು ಖಿhis is ಠಿeಡಿಞs ಜಿoಡಿ mಥಿ seಡಿviಛಿe ಎಂದು ಬೀಳ್ಕೊಟ್ಟಿದ್ದಳು !! ಆ ವಯಸ್ಸಿನ ನಿಮ್ಮ ಹುಮ್ಮಸ್ಸಿಗೆ ಅದು ತಪ್ಪಾಗಿ ತೋರಲಿಲ್ಲ. ಮತ್ತೊಮ್ಮೆ ನಿಮ್ಮ ಆಫೀಸಿಗೆ ಬಂದು ನಿಮ್ಮೊಟ್ಟಿಗೆ ತರಾತುರಿಯಲ್ಲಿ ಮಾತನಾಡಿ ಹೋಗುವ ಮುನ್ನ ಕೈಗೊಂದು ಚೀಟಿ ಕೊಟ್ಟಿದ್ದಳು. ನಮ್ಮ ಪ್ರೀತಿ ಮುಂದುವರೆಯಬೇಕಿದ್ದಲ್ಲಿ ಸಂಜೆ ಏಳಕ್ಕೆ ಬ್ಲಾಕ್ ಕೆಡಿಲ್ಯಾಕ್ ಬಳಿ ನನ್ನನ್ನು ಸಂಧಿಸು – ಎಂಬ ಒಕ್ಕಣೆ. ನೀವು ನಿಮ್ಮ ಸಂಜೆಯ ತುರ್ತಿನ ಮೀಟಿಂಗೊಂದನ್ನು ರದ್ದು ಮಾಡಿ ಆ ಪಬ್ಬಿನ ಮುಂದೆ ಅವಳಿಗೆ ಏಳರಿಂದ ಎಂಟೂವರೆಯವರೆಗೆ ಕಾಯುತ್ತ ಗಸ್ತು ಹೊಡೆದಿದ್ದೀರಿ. ಕೊನೆಗೆ ಬೇಸತ್ತು ಅವಳ ಹಾಸ್ಟೆಲ್ಲಿಗೆ ಹೋದಾಗ ಸೆಕ್ಯುರಿಟಿಯವನಿಂದ ‘ಅವರಿಗೆ ತಲೆನೋವಂತೆ ಸಾರ್! ಬೆಳಗ್ಗೆ ಮಾತಾಡ್ತಾರಂತೆ’ ಎಂದು ಹೇಳಿಕಳಿಸಿದ್ದಳು!! ಇನ್ನೊಮ್ಮೆ ಸಿನಿಮಾಕ್ಕೆಂದು ರೆಕ್ಸ್‌ಗೆ ಹೋದಾಗ ನ್ಯೂಸ್‌ರೀಲ್ ಮತ್ತು ಟ್ರೈಲರ್‌ಗಳು ನೋಡಲು ಸಿಕ್ಕಲಿಲ್ಲವೆಂದು ಎಬ್ಬಿಸಿ ಆಚೆಗೆಳೆದುಕೊಂಡು ಬಂದಿದ್ದಳು. ಅವಳಿಗೆ ನಿಮ್ಮ ಮೇಲೆ ಪ್ರೀತಿ ಇರಲಿಲ್ಲವೆಂದೇನಲ್ಲ. ಅಥವಾ ಹಾಗೇ ನೀವು ನಿಮಗೆ ಸಮಜಾಯಿಷಿ ಕೊಟ್ಟುಕೊಳ್ಳುತ್ತಾ ನಂಬುತ್ತೀರಿ. ಅವಳೂ ನೀವು ಫೋನು ಮಾಡದಿದ್ದರೆ ಕಣ್ಣುಕ್ಕಿಸಿ ಮುಸುಮುಸು ಮಾಡುತ್ತಿದ್ದಳು. ‘ಕೇಸರಿ, ಙouಡಿ ಚಿಡಿe so sತಿeಚಿಣ!! ಕಣ್ತುಂಬಿಕೊಂಡು ಮನಸಾರೆ ಹೇಳುತ್ತಿದ್ದಳು. ಹಾಗಂತ ಎಲ ಸರಿ ಸುಸೂತ್ರವಿತ್ತು ಅಂತೇನಲ್ಲ. ‘ಅವನನ್ನ ನೋಡು, ಹೇಗೆ ನನ್ನನ್ನೇ ದುರುದುರು ನೋಡ್ತಾ ಇದಾನೆ. ಅವನಿಗೆ ಹೋಗಿ ನಾಲ್ಕು ತದಕಬಾರದಾ? ‘ಗಂಡಸು ಅಂದರೆ ತನ್ನ ಹೆಣ್ಣನ್ನು ಚೆನ್ನಾಗಿ ನೋಡ್ಕೊಬೇಕು. ನೀನು ಚಂದ್ರನ ಮೇಲಿದ್ದರೂ ಇಲ್ಲಿಗೆ ಬಂದು ಕರೆದುಕೊಂಡು ಹೋದರೆ ಮಾತ್ರ ನಾನು ಬರ್ತೀನಿ’ ‘ಹಲೋ…!! ಕೇಸರೀ, ಯಾರೋ ನನ್ನನ್ನು ಫಾಲೋ ಮಾಡ್ತಾ ಇದಾನೆ ಕಣೋ! ಹಾಸ್ಟಲ್ ರೋಡ್‌ನಲ್ಲಿ ಇದೀನಿ. ಟಕ್ಕಂತ ಬಂದು ಫೈಟ್ ಮಾಡೋ!!’ ‘ಥೂ ನಿನ್ನ!! ನೀನೇನು ಸೀಮೇಲಿ ಇಲ್ಲದ ಗಂಡು ಅದ್ಕೊಂಡಿದ್ದೀಯಾ? ನಾನು ಚಿಟಿಕೆ ಹೊಡೆದರೆ ಸಾಲಾಗಿ ನಿಲ್ತಾರೆ ಗೊತ್ತಾ?’ ಮುದುವೆಗೆ ಮೊದಲೇ ಇಷ್ಟೆಲ್ಲ ಇದರೂ ನೀವು ಅವಳನ್ನು ಮದುವೆಯಾದದ್ದಾದರೂ ಏಕೆ? ‘ಏನೋ! ನಾನೇನು ಬಿಟ್ಟೀ ಅಂತಂದು ಕೊಂಡುಬಿಟ್ಟಿದ್ದೀಯಾ? ಇಷ್ಟು ದಿನ ಮಜಾ ಮಾಡಿದ ಹಾಗಲ್ಲ. ಒಂದು ಹೆಣ್ಣಿನ ಬದುಕು ಹಾಳುಮಾಡಿದ್ರೆ ನಿನಗೆ ಕೇಡು ತಪ್ಪಿದ್ದಲ್ಲ ತಿಳೀತಾ?’ ಎಲ್ಲೆಂದರಲ್ಲಿ ಬಾಯಿ ಮಾಡುವ ಅವಳೊಟ್ಟಿಗೆ ನೀವು ಬೇರೇನು ಮಾಡಬಹುದಿತ್ತು? ಅಂತೂ ಇಂತೂ ಮದುವೆ ಅಂತೊಂದು ಆಯಿತು. +ಈ ರೀತಿಯ ಮಾತು, ನಡತೆಯ ಹೊರತು ಪಡಿಸಿದರೆ ಅವಳು ಕೆಟ್ಟವಳೇನಲ್ಲ, ಎಷ್ಟಾದರೂ ಅವಳು ನಿಮ್ಮ ಮುದ್ದಿನ ಹೆಣ್ಣು, ನಿಮ್ಮನ್ನು ನೀವು ಅವಳಿಗೆ ಪೂರ್ತಾ ಒಪ್ಪಿಸಿಕೊಂಡುಬಿಟ್ಟಿದ್ದಿರಿ. ಒಂದಷ್ಟು ಪ್ರಣಯ ಮದುವೆ, ಮತ್ತೆ ಮದುವೆಯೊಳಗಿನ ಪ್ರಣಯ…. ಮೊದಮೊದಲು ಎಷ್ಟು ಚಂದವಿದ್ದೀರಿ ನೀವು ಒಬ್ಬರಿಗೊಬ್ಬರು! ಎಷ್ಟೋ ಅವರಿವರ ಎದುರು ನೀವಾಳಿಸಿ ಹಾಕುವಷ್ಟು. ಒಟ್ಟಿಗಿದ್ದಲ್ಲಿ ಎಷ್ಟೋ ಜೋಡಿ ಕಣ್ಣುಗಳು ನೆಟ್ಟು ನಿಲ್ಲವಷ್ಟು. ಮತ್ತೆಲ್ಲಿ ತಪ್ಪಿತು ಹೇಳಿ ತಾಳ? ಪ್ರೀತಿಯ ಭಾಷೆಗೆ ಮದುವೆಯೊಳಗಿನ ವ್ಯಾಕರಣವೇ ಬೇರೆ. ಎಷ್ಟೇ ಸರಂಜಾಮು, ಆಸಾನು ಇದ್ದರೂ ಬದುಕಿನ ವ್ಯವಹಾರದಲ್ಲಿ ಅದಕ್ಕೆ ಬದ್ಧವಾಗಲೇಬೇಕಷ್ಟೆ. ‘ನನಗೆ ಮದುವೆ ಅಂದರೆ ಅಡಿಗೆ ಮಾಡಬೇಕು. ನಿನ್ನ ಬಟ್ಟೆಬರೆ ನೋಡಿಕೊಳ್ಳಬೇಕು. ಅಂತೆಲ್ಲ ಗೊತ್ತೇ ಇರಲಿಲ್ಲ. ಏನಿದ್ದರೂ ಆಳುಕಾಳು ಮಾಡಿದ್ದನ್ನು ನಿನಗೊಪ್ಪಿಸಿಕೊಂಡು ಸದಾ ಮುದ್ದು ಮಾಡಿಕೊಂಡೇ ಇರೋದು ಅಂದ್ಕೊಂಡಿದ್ದೆ !!’ ‘ಥೂ ! ಹಾಳು ಒಲೆ ಮುಂದೆ ಹೋದರೆ ಮುಖ ಎಲ್ಲ ಸುರುಟಿ ಹೋಗುತ್ತಪ್ಪ ‘ಖಿhis is uಣಣeಡಿಟಥಿ ಟಿoಟಿseಟಿsiಛಿಚಿಟ!! ’ ‘ನಮಗೊಂದು ಮಗೂ ಆಯ್ತು ಅಂತಿಟ್ಕೊಳ್ಳೋಣ. ಅದರಲ್ಲಿ ನಿನ್ನ ಜವಾಬ್ದಾರಿನೇ ಹೆಚ್ಚು ತಿಳೀತಾ ‘ಙou hಚಿve ಣo moಣheಡಿ ಣhಚಿಣ.’ ತಮಾಷೆಗೆಂದು ಸುರುಗೊಂಡ ಇಂತಹ ಮಾತುಗಳು ಲಗಾಮಿಲ್ಲದೆ ಆಗಾಗ್ಗೆ ಸವ್ವಾರಿಗೊಂಡಾಗ ನಿಮಗೂ ಕಿರಿಕಿರಿಯಾಗುತ್ತಿತ್ತು. ನಿಮ್ಮ ಬದುಕು ಸ್ಕೂಟರಿನಿಂದ ಬೈಕಿಗೆ, ಬೈಕಿನಿಂದ ಸೆಕೆಂಡ್ ಹ್ಯಾಂಡ್ ಮಾರುತಿಗೆ, ಅಲ್ಲಿಂದ ಹೊಸತಕ್ಕೆ ಮತ್ತೊಂದೆಂದು ಬೊಲೋರೋಗೆ ಬಡ್ತಿಗೊಂಡಾಗ ಆ ವೆಚ್ಚಗಳನ್ನು ತೂಗಿಸಿಲೆಂದೇ ಎಷ್ಟೆಲ್ಲ ಹೆಣಗುತ್ತಿದ್ದಿರಿ ನೀವು ? ಬೆಳಗಿನ ಏಳಕ್ಕೆ ಹೊರಟರೆ ಮತ್ತು ಗೂಡು ಸೇರುವುದು ರಾತ್ರಿ ಹನ್ನೆರಡರ ಸುಮಾರಿಗೆ. ಹಾಗಂತ ಅವಳ ದೈನಂದಿನ ಸುಗಮವಿತ್ತು ಅಂತೇನಲ್ಲ. ಕಾನ್ಸೆಪ್ಟ್ ಸೆಲ್ಲಿಂಗ್ ಅಂತ ಊರೆಲ್ಲ ತಡಕುತ್ತ, ಗುಣಮಟ್ಟದ ಬದುಕನ್ನು ಹಣದೊಟ್ಟಿಗೆ ಅಳೆಯುತ್ತಾ ಮದುವೆಯ ಇತಿಮಿತಿಗಳನ್ನು ಅವಳೂ ಮರೆತುಬಿಟ್ಟಿದ್ದಳಷ್ಟೆ, ಬೇಕಾದಾಗ ಇಬ್ಬರೂ ಒಬ್ಬರಿಗೊಬ್ಬರು ದಕ್ಕುತ್ತಿದ್ದುದೇ ಕಡಿಮೆ. ದಟ್ಟಣೆಯ ಊರು ಒಳಗೊಳಗೇ ಹತ್ತರಿ ಹೊಡೆದು ಥೋಪಡ ತೆಗೆದು ಇಬ್ಬರನ್ನೂ ಟೊಳ್ಳಾಗಿಸಿತ್ತಷ್ಟೆ. ಮದುವೆಯ ನಾಲ್ಕು ವರ್ಷಗಳ ಬಳಿಕ ಇಬ್ಬರ್‍ಲಲೂ ಒಬ್ಬರಿಗೊಬ್ಬರಿಗೆಂದು ಮಾತು ಉಳಿದಿರಲಿಲ್ಲ. ಮಾತಿಗಿಳಿದರೆ ವಾದ ಅಂತ ಮಾತೇ ಸಲ್ಲ, ಯಾವುದೇ ಟ್ರಾಫಿಕ್ ರಾಡಿಯ ಜಂಕ್ಷನ್ನಿನಲ್ಲಿ ಹೆಣಗಿಸಿಕೊಂಡು ಕ್ರಮಿಸುವಾಗ ನೀವು ನಿಮ್ಮ ಬೊಲೇರೋದದಿಂದ ಅವಳ ಸ್ಯಾಂತ್ರೋವನ್ನು ಗಮನಿಸಿ ಹಾಯ್ ಅಂದಿದ್ದರೆ ಅದು ವಾರದ ಸಾರ್ಥಕ್ಯ. ಇಲ್ಲವೋ ಅವಳು ಮನೆ ಸೇರಿದ ಬಳಿಕ ಫೋನಿನ್ಲಲೇ ವ್ಯಾಜ್ಯ. ರಾತ್ರಿ ಹನ್ನೆರಡರ ಸುಮಾರಿಗೆ ಅವಳಿಗೆ ಮದುವೆಗೆ ಮುನ್ನ ಚೆನ್ನೈನಲ್ಲಿ ತಿಂದ ತೊಯಿಸಿದ ಮಿನಿ ಇಡ್ಲಿಯ ನೆನಪಾದರೆ ಅದನ್ನು ನೀವು ಮರುದಿನ ಹೇಗಾದರೂ ಒಪ್ಪಿಸಲೇಬೇಕು. ಇಲವೋ – ಸುನಾಮಿಯ ತತ್ತರ. ತನಗೂ ತನ್ನ ಬದುಕಿಗೂ ನಡುವೆ ಒಂದು ಕಿಡಿಯ ಅಂತರವಷ್ಟೆ ಅಂತ ಫೋನು ಒಮ್ಮೆ. ದಡಬಡಿಸಿ ಮನೆ ಸೇರಿದರೆ ರಾದ್ಧಾಂತ. ಮತ್ತೊಮ್ಮೆ ಹದಿಮೂರನೇ ಮಹಡಿಯಿಂದ ಧುಮುಕುವ ಧಮಕಿ. ಒಂದೇ ಎರಡೇ…? ಒಟ್ಟಿಗಿದ್ದುಕೊಂಡೇ ಇಬ್ಬರೂ ಒಬ್ಬರಿಂದೊಬ್ಬರು ಕಳೆದುಹೋಗಿದ್ದಿರಿ. ಧಾವಂತದ ಊರಿನಲ್ಲಿ ಸಮಾಧಾನವೇ ಇರಲಿಲ್ಲ. ತಪ್ಪು ನಿಮ್ಮಲ್ಲಿಲ್ಲವೆಂದೇನಲ್ಲ. ಆ ರಚ್ಚೆ, ರಂಪಗಳ ಹತೋಟಿ ತರಲಾಗದೆ ನೀವು ವ್ಯಗ್ರಗೊಂಡಿದ್ದೆ. ಕೆಲವೊಮ್ಮೆ ಬಾಯಿಗಿಂತ ಕೈ ಮುಂದೆ ಹೋದದ್ದಿದೆ. ಕೈಗೆ ಸಿಕ್ಕಿದ್ದನ್ನು ಕಿತ್ತು ರಾಚಾಡಿದ್ದಿದೆ. ಹಾಗಂತ ನಿಮ್ಮಲ್ಲಿ ಅವಳ ಬಗ್ಗೆ ಪ್ರೀತಿ ಇರಲಿಲ್ಲವೆಂತೇನಲ್ಲ. ಆಗಾಗ್ಗೆ ತೋಡಿಕೊಳ್ಳುವ ವ್ಯವಧಾನವಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ಆಗಸ್ಟ್ ನಸುಕಿನಲ್ಲಿ ಅವಳು ಮನೆ ಬಿಟ್ಟಾಗ ನೀವು ಹೌಹಾರಿದ್ದು ಹದಿನೈದು ದಿನಗಳ ನಂತರವೆ. ಅವಳಿದ್ದಲ್ಲಿ ಹೋಗಿ ತಿಪ್ಪರಲಾಗವಿಟ್ಟರೂ ಬಗ್ಗಲಿಲ್ಲ ಹೆಣ್ಣು. ‘ನನಗೆ ನಿನ್ನ ಮೇಲೆ ಪ್ರೀತಿ ಇಲ ಅಂತ್ಲಲ. We ಛಿಚಿಟಿಟಿoಣ ಟive ಣogeಣheಡಿ ಅಷ್ಟೆ. ನಾನು ಕೊನೇ ಕಾಲದಲ್ಲೂ ನಿನ್ನನ್ನು ಇಷ್ಟೇ ಪ್ರೀತಿಸ್ತೀನಿ…. ನಾನು ನಿನ್ನ ಜೊತೇಲಿ ಇಲದಿದ್ದರೂ ನನ್ನ ನೋಡ್ಕೊತೀ ಅಲ್ಲವಾ ನನಗೆ ಕೇಳಿದಾಗ ದುಡ್ಡು ಕೊಡ್ತೀ ತಾನೇ ?’ ನೀವು ಏನೆಂದು ತಾನೆ ಉತ್ತರಿಸಬಲ್ಲಿರಿ – ಬುಡವಲುಗಿದ ಮರದಂತೆ ಘಾಸಿಗೊಂಡ ಮನೋಸ್ಥಿತಿಯಲ್ಲಿ ? ‘ನಾವಿಬ್ಬರೂ ಅಷ್ಟು ಚೆನ್ನಾಗಿದ್ವಲ್ಲೋ ! ಯಾರದೋ ಕಣ್ಣು ಬಿದ್ದಿರಬೇಕು ! +ಹೀಗಿರುವಲ್ಲಿ ಅವಳ ಯಾವ ಮಾತನ್ನು ನಂಬುವುದು ? ಯಾವುದನ್ನು ನಂಬದೇ ಬಿಡುವುದು ? ನೀವೂ ಸೋತು ಹೋಗಿದ್ದೀರಿ. ಈ ಕಟಕಟೆಯಲ್ಲೋ – ಎಷ್ಟೊಂದು ನಾಲ್ಕು ಗೋಡೆ ನಡುವಿನ ಸೂಕ್ಷ್ಮಗಳಿಗೆ ಹೊಣೆ ಹೊರಬೇಕಾಗುತ್ತದೆ. ಎಷ್ಟು ಖಾಸಗೀ ಮಾತುಗಳಿಗೆ ಸಬೂತು, ಸಬೂಬು ಕೊಡಬೇಕಾಗುತ್ತದೆ. ‘ಈ ಮನುಷ್ಯನನ್ನು ನಂಬಬೇಡಿ. ಅವನು ಯಾರಿಗೆ ಬೇಕಾದರೂ ಟೋಪಿ ಹಾಕಬಲ್ಲ. ನಾನು ಇವನನ್ನು ಎಂದೂ ಪ್ರೀತಿಸಲೇ ಇಲ್ಲ. I goಣ mಚಿಡಿಡಿieಜ ಣo him ouಣ oಜಿ ಠಿeಡಿeಟಿಣಚಿಟ ಠಿಡಿessuಡಿe ಇವುಗಳಲ್ಲಿ ಯಾವುದು ಸತ್ಯ ? ಯಾವುದು ಪೂರ್ತಾ ಸತ್ಯ. ನಿಮ್ಮಬ್ಬರಿಗಷ್ಟೇ ಗೊತ್ತು. ಊe ಟಿeeಜs heಟಠಿ. ಠಿsಥಿಛಿhiಚಿಣಡಿiಛಿ heಟಠಿ. ಅವನ ವೈಯಕ್ತಿಕ ಸಮಸ್ಯೆಗಳು ನನಗೊಬ್ಬಳಿಗಷ್ಟೇ ಗೊತ್ತು. ನಾನೊಬ್ಬಳೆ ಅವನಿಗೆ ಸಹಾಯ ಮಾಡಬಲ್ಲವಳು. ಆದರೆ ನನ್ನ ಬದುಕನ್ನು ನುಂಗಿ ನೀರು ಕುಡಿದವನಿಗೆ ನಾನೇಕೆ ಸಹಾಯ ಮಾಡಬೇಕು ?’ ಎಲ್ಲ ಹತಾಶೆಗಳಿಗೂ ನಿಮ್ಮ ಮೌನವಷ್ಟೇ ಉತ್ತರ. ‘ಇಷ್ಟು ವರ್ಷ ಜೊತೇಲಿದ್ದರೂ ಒಂದು ಮಗು ಅಂತ ಆಗಲಿಲ್ಲ. I ಜoಟಿಣ ಞಟಿoತಿ ತಿhಚಿಣ he is- ತಿheಣheಡಿ he is imಠಿoಣeಟಿಣ!! +* +* +* +ಹೇಳಿಕೊಟ್ಟ ಮಾತು ತಬ್ಬಿಬ್ಬಾಗುವುದಿಲ್ಲ +ಸದ್ದಿರದ ಸಮ್ಮತಿಗೆ ಉಬ್ಬಸಗಳಿಲ್ಲ +ಹೇಳಿದ್ದೆಲ್ಲ ಸತ್ಯ – ಹೊರತು ಬೇರೇನಿಲ್ಲ. +ಅಂತ ಪ್ರಮಾಣಕ್ಕೆ ದೇವರ ಹೆಸರಂತೆ +ಅದು ಬದನೆಕಾಯಿಯದ್ದಾದರೂ ಸರಿಯೆ +ಕೋರ್ಟಿನ ಹಾಲಿನಲ್ಲಿ ದುಂಡು ಮೇಜಿನ ಸುತ್ತ ನೆರೆದವರ ಹಿಂದೆ ನಿಂತು ಮುಂಗಾಲೆತ್ತಿ ನೀವು ಅಲ್ಲಿರುವವರಲ್ಲಿ ಅವಳನ್ನು ಹುಡುಕುತ್ತೀರಿ. ಅಡ್ವೋಕೇಟ್ ಸುಮನ್‌ರ ತುಸು ಹಿಂದಕ್ಕೆ ಕುಳಿತು ಅವಳು ಮೇಲಿನ ಗವಾಕ್ಷಿಯತ್ತ ನೋಡುತ್ತಿದ್ದಾಳೆ. ಎರಡು ತಿಂಗಳುಗಳಲ್ಲಿ ತುಸು ತೂಕ ಹೆಚ್ಚಿದೆ ಅನ್ನಿಸುತ್ತದೆ. ನೀವು ಒಳಾಂಗಣದ್ಲಲೂ ಧರಿಸಬಹುದಾದ ಚಿಟಿಣigಟಚಿಡಿe ಕನ್ನಡಕವನ್ನು ಹಾಕಿಕೊಂಡು ಅವಳ ನೇರ ನೋಟವನ್ನು ಮಾಚಿಕೊಳ್ಳುತ್ತೀರಿ. ನೀವು ಅವಳನ್ನು ನೋಡುತ್ತಿದ್ದೀರಿ ಅನಿಸಿದ ಕೂಡಲೇ ಅವಳು ಮುಸುಡಿ ಕೊಂಕಿಸಿ ಅಣಕಿಸಿ ನಗುತ್ತಾಳೆ. ನೀವು ನಗೆ ಚೆಲ್ಲುತ್ತೀರಿ. ಈಗ ನಿಮ್ಮ ಲಾಯರು ನೀವು ಬಂದದ್ದನ್ನು ಗಮನಿಸಿ ನಿಮ್ಮತ್ತ ಬಂದು, ಕೆಲವು ದೇಶಾವರಿಗಳನ್ನು ಕಲಿಸುತ್ತಾರೆ. ಜಡ್ಜ್ ಕೇಳಬಹುದಾದ ಪ್ರಶ್ನೆಗಳನ್ನೂ, ಅದಕ್ಕೆ ತಕ್ಕ ಉತ್ತರಗಳನ್ನೂ ಹೇಳಿಕೊಡುತ್ತಾರೆ. ನೀವು ತಲೆಯಾಡಿಸುತ್ತೀರಿ. ಇದು ಸಹಿಗೆ ಮುನ್ನದ ಎusಣ ಜಿoಡಿ ಜಿoಡಿmಚಿಟiಣಥಿ ಅಷ್ಟೆ! +ಇನ್ನು ವಿಚಾರಣೆ ಸುರು. ಔಪಚಾರಿಕವೆಂದರೂ ಏನೆಲ್ಲ ಕಲಕುವ ಪ್ರಶ್ನೆಗಳನ್ನು ಕೇಳುಕೇಳುತ್ತಾರೆ ಅವರು. ನಿಮ್ಮ ಹೆಸರು, ಅವಳದ್ದು. ಮದುವೆಯ ತೇದಿ ಸ್ಥಳ, ಆಹ್ವಾನ ಪತ್ರಿಕೆಯ ಸಬೂತು ಹೀಗೆ…. ನೀವು ಎಲ್ಲಕ್ಕೂ ಯಾರದ್ದೋ ಎನ್ನುವ ಉತ್ತರ ಕೊಡುತ್ತೀರಿ. ಈಗ ಮದುವೆಯ ಫೋಟೋವನ್ನು ಮುಂದೊಡ್ಡುತ್ತಾರೆ. ‘ಇದನ್ನು ನೀವು ಗುರುತಿಸುತ್ತೀರೋ?’ ನೀವು ಹೌದೆಂದು ಗೋಣು ಆಡಿಸಿದರೂ ಮಗ್ಗುಲಿಗೇ ಇರುವ ಅವಳ ಲಾಯರ್‌ಗಷ್ಟೇ ಕೇಳಿಸುವ ಹಾಗೆ is iಣ me? I ಜoubಣ iಣ!! ಎಂದು ನಗುತ್ತೀರಿ. ಅವರೂ ನಗುತ್ತಾರೆ. ಪಕ್ಕದಲ್ಲೇ ಇದ್ದ ಅವಳು ಕಿಡಿಕಿಡಿಯಾಗುತ್ತಾಳೆ. ‘ನಾಚಿಕೆಯಾಗೋಲ್ಲ ನೋಡಿ. ಕಂತ್ರೀ ಅವನು. ತನ್ನ ಮಾತಿನಲ್ಲೇ ಎಲ್ಲರಿಗೂ ಮೋಸ ಮಾಡುತ್ತಾನೆ’ ನೀವು ವಿಚಲಿತರಾಗುವುದಿಲ್ಲ. ಕಡಿದು ಹೋಗುತ್ತಿರುವ ತಂತು ನಿಮ್ಮದಲ್ಲವೇ ಅಲ್ಲ. ಅವಳು ನಿಂತಲ್ಲೇ ಕಣ್ಣುಕ್ಕಿ ಬಿಕ್ಕುತ್ತಾಳೆ. ‘ಈ ಫೋಟೋ ನೋಡಿದ ಮೇಲೆ ನೀವು ನಿಮ್ಮ ನಿಲುವು ಬದಲಿಸಿಕೊಳ್ಳುವ ಸಾಧ್ಯತೆಯೇನಾದರೂ….’ ಅವರ ಮಾತು ತುಂಡರಿಸುವಂತೆ ಅವಳು ಹೇಳುತ್ತಾಳೆ- Who ತಿiಟಟ ಟive ತಿiಣh ಣhis mಚಿಟಿ!! ನೀವು ಎಲ್ಲ ಲಿಪ್ತತೆಗಳನ್ನು ಬದಿಗೊತ್ತಿ ಬುದ್ದಿಗಷ್ಟೇ ಕಿವಿಗೊಡುತ್ತೀರಿ. ಹೃದಯ ಹಿಂಜರಿಯುತ್ತದೆ. ಇಬ್ಬರ ಹೇಳಿಕೆಗಳನ್ನು ದಾಖಲಿಸಿ ಬೆರಳಚ್ಚು ತೆಗೆದ ಕಾಗದದ ಮೇಲೆ ರುಜು ಮಾಡಲು ಹೇಳುತ್ತಾರೆ. ಅವಳು ಸಹಿ ಮಾಡಿ ತಿರುಗಿ ನಿಮ್ಮತ್ತ ನೋಡಿ ಇನ್ನು ಗೆದ್ದೆನೆಂದು ಸೊಟ್ಟಗೆ ನಗುತ್ತಾಳೆ. ನೀವು ಸಾವಕಾಶ. ನಿಮ್ಮ ದಸ್ಕತ್ತನ್ನು ಎಲ್ಲವನ್ನೂ ಕೊಡವಿಕೊಳ್ಳುವ ಅಲಿ ಮಂಡಿಸುತ್ತೀರಿ. ನಿಮ್ಮ ಕಣ್ಣಿನಿಂದ ತೊಟ್ಟಿಕ್ಕಿದ ಕೆಲವು ಬಿಂದುಗಳನ್ನು ನೀವು ತೊಟ್ಟಿರುವ ಗಾಜು ಹಿಡಿದು ನೋಟ ಮುಸುಕಾಗಿಸುತ್ತದೆ. +ಯಾವುದೋ ಪರ್ವ ಕಳೆದ ನಿರಾಳದಲ್ಲಿ ನೀವು ಅದೇ ಕಾರಿಡಾರಿನಲ್ಲಿ ಕ್ಷಿಪ್ರವಾಗಿ ಹೆಜ್ಜೆ ಹಾಕುತ್ತೀರಿ. ನಿಮ್ಮ ಬದುಕಿನಲ್ಲಿ ಇನ್ನು ಅವಳಿಲ್ಲವಾದರೂ ಪೂರ್ತಾ ಇಲ್ಲ ಅಂತೇನಿಲ್ಲ. ನಿಮ್ಮ ಮನೆಯ ಅಲ್ಮೇರಾದ ಖಾಸಗೀ ಫೈಲೊಂದರಲ್ಲಿ ನಿಮ್ಮಿಬ್ಬರ ಜೂಟ ದಸ್ಕತ್ತಿಗೆ ಸಾಕ್ಷಿಯಾಗುವಂತೆ ‘ನಿಮ್ಮ ಜೀವಿತದ್ದು ದಾಖಲೆಯಾಗಿ ಇನ್ನು ಕೋರ್ಟಿನ ಬಿಕರಿಯನ್ನು ಕಾದಿರಿಸಿಕೊಳ್ಳಬೇಕಿದೆ. ನೀವಿನ್ನು ಡಿವೋರ್ಸಿನ ಬಾಲಂಗೋಚಿಯನ್ನು ಹೊತ್ತು ತಿರುಗಲಿಕ್ಕಿದೆ. ಹಾಗೇ ಅವಳ, ಬೆನ್ನಿನಲ್ಲಿ ನನ್ನ ಹೆಸರಿಲ್ಲವೆಂದಲ್ಲ. ಅವಳ ಬೆನ್ನಿನ ಸೆಡಹಿನ ಹುರಿಯನ್ನು ತಡಕಿದರೆ ಹೆಣ್ಣು ಗತ್ತುಗಳ ಗರಡಿಯಲ್ಲಿ ಪಳಗಿದ ನಿಮ್ಮ ದಸ್ತಕತ್ತಿನ ಹಿಸ್ಸೆಯೂ ಸಿಗಬಹುದಷ್ಟೆ. +ಹೆಜ್ಜೆ ಭಾರವೆನಿಸಿದರೂ ನೀವು ದಾಪುಗಾಲಿನಲ್ಲಿ ಆಚೆ ಬರುತ್ತೀರಿ ನೋಡದೆ ಬೊಲೇರೋ ಬಳಿ ಬಂದು ಸಿಗರೇಟು ಹೊತ್ತಿಸಿಕೊಂಡಾಗ ಮೊಬೈಲು ರಿಂಗಣಿಸುತ್ತದೆ. +‘ಕೇಸರೀ’….! ನಾನು ಹಿಮಾ ಕಣೋ!! Soಡಿಡಿಥಿ ಜಿoಡಿ eveಡಿಥಿಣhiಟಿg ಎರಡು ವರ್ಷಗಳ ಬಳಿಕ ಫೋನಿಸಿದ ಅವಳು ಬಿಕ್ಕುತ್ತಾಳೆ. ‘ನನ್ನದೊಂದು ರಿಕ್ವೆಸ್ಟ್ ಇದೆ. ಇಲ ಅನ್ನ ಬೇಡವೋ.’ +ಯಾವುದೋ ಅವಿನಾಭಾವದ ತಂತು ನಿಮ್ಮನ್ನು ಜಗ್ಗಿದಂತಾಗಿ ನಿಮ್ಮದೆ ಭಾರದಿಂದ ಉಮ್ಮಳಿಸುತ್ತದೆ. ‘ಹೇಳು. ಒಟ್ಟಿಗಿದ್ದಾಗಲಂತೂ ನನಗೆ ನಿನ್ನ ಮಾತು ಕೇಳುವ ಪೇಶನ್ಸ್ ಇರಲಿಲ್ಲ. ‘ನನಗೊಂದು ಮಗು ಬೇಕು ಕಣೋ. I ತಿಚಿಟಿಣ ಣo beಛಿome ಚಿ moಣheಡಿ. ನಾನು ತಾಯಿಯಾಗಬೇಕು. ನಾನು ನಿನ್ನ ಮಗುವಿನ ತಾಯಿಯಾಗಬೇಕು. Wiಟಟ ಥಿou ಟeಟಿಜ me ಚಿ sಠಿeಡಿm, mಚಿಟಿ?…. Pಟeಚಿse!! ’ +***** +ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […] +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_663.txt b/Kannada Sahitya/article_663.txt new file mode 100644 index 0000000000000000000000000000000000000000..9d1ca1924e0cc3ed901c8ae719ddcccb6e2e7d1f --- /dev/null +++ b/Kannada Sahitya/article_663.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಬ್ದಗಳು ಯಾತಕ್ಕೆ ಹೀಗೆ +ಕಪ್ಪು ತುಂತುರು ಹನಿ! +ಬಿಳಿಯ ಅವಕಾಶಕ್ಕೆ +ಕೊಟ್ಟ ರೂಪ. +ಶಬ್ದಗಳು ಯಾತಕ್ಕೆ ಹೀಗೆ +ಕೇಳುವುದಿಲ್ಲ ಕಾಣುತ್ತವೆ, +ಶಬ್ದಗಳು ಕಾಣದವೂ ಕೇಳುತ್ತವೆ. +***** +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […] +ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_664.txt b/Kannada Sahitya/article_664.txt new file mode 100644 index 0000000000000000000000000000000000000000..880babb5cf8f3c729738fee1b7e9e8c14efbe7d5 --- /dev/null +++ b/Kannada Sahitya/article_664.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, +ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” +-ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! +ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. +***** +ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. ***** +ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. ***** +ಫುಟ್‌ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_665.txt b/Kannada Sahitya/article_665.txt new file mode 100644 index 0000000000000000000000000000000000000000..22df54e2a2c790e9f7053e29bec00b737b73a11b --- /dev/null +++ b/Kannada Sahitya/article_665.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಗಿಲಿಗೆ +ಸಾವಿರ ಕಣ್ಣು +ನೇಗಿಲಿಗೆ ಮಿಡಿ ಹಣ್ಣು +ತಾಜಾ +ಬಿಸಿ ಬಿಸಿ ಸುದ್ದಿ ಗದ್ದೆ ತುಂಬ +***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. ***** +ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_666.txt b/Kannada Sahitya/article_666.txt new file mode 100644 index 0000000000000000000000000000000000000000..1cf6111e00b12316fbc6f1ee1bab81f368191e5a --- /dev/null +++ b/Kannada Sahitya/article_666.txt @@ -0,0 +1,79 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. +ಈ ಪಬ್ಬೂ ಅಂದರೆ ಪ್ರಭಾಕರ ದಂಡೂ ಹರಿಕಾಂತ. ನಾಲ್ಕನೇಯತ್ತೆಯಿಂದ ಆರನೇಯತ್ತೆವರೆಗೆ ನನ್ನ ಕ್ಲಾಸ್‌ಮೇಟ್ ಆಗಿದ್ದ. ಆದರೂ ಇದಕ್ಕೂ ಜಾಸ್ತಿ ನಮ್ಮ ದೋಸ್ತಿ ಇತ್ತು. ಮಾಂಶಿ ಗೋಕುಲಾಷ್ಟಮಿ, ರಾಮನವಮಿ ಅಂತ ಸಿಹಿ ಪ್ರಸಾದ ಕಜ್ಜಾಯ ಮಾಡಿದಾಗ “ಪಬ್ಬೂನ ಕರಿ” ಅಂದಾಗ ನಾನು ಅವನನ್ನು ಮನೆಗೆ ಕರೆತರುತ್ತಿದ್ದೆ. ಅವನು ಮೋದಕವನ್ನೋ ಉಂಡೆಯನ್ನೋ ಚೂರುಚೂರಾಗೇ ಮೆಲ್ಲುತ್ತ ನನ್ನ ತಾಳ್ಮೆ ಮೀರುವಂತೆ ಒಂದು ತಾಸು ಮಾಡಿ ತಿನ್ನುತ್ತಿದ್ದಾಗ ಸಿಟ್ಟು ಬಂದರೂ ಮಾಂಶಿ ಯಾವಾಗಲೋ ಮಾತಿನ ಮಧ್ಯ “ಅವರು ಬಡವರು” ಅಂದಿದ್ದು ನೆನಪಾಗಿ ಅವನ ಮೇಲೆ ವಿಶೇಷ ಮೆಹರ್ಬಾನ್ ಮಾಡಿದವನಂತೆ ಬೀಗುತ್ತ ಕೂರುತ್ತಿದ್ದೆ. ಆ ನಂತರ ಅವನು ಯಾಕೋ ಏನೋ ಶಾಲೆಯನ್ನೇ ಬಿಟ್ಟ. ಆಗಲೂ ನಮ್ಮ ಮನೆಗೆ ಆಗಾಗ ಬಂದು ಹೋಗುವುದು, ಸೀಯಾಳ ಕಾಯಿಗೀಯಿ ಏನಾದರೂ ತೆಗೆಸಿಕೊಡುವುದು, ಬಸಳೆ ಬಳ್ಳಿಗೆ ಚಪ್ಪರ ಕಟ್ಟಿಕೊಡುವುದು, ಮೊಗೆ ವಳಿಗೆ ಬೆಲಗು ಮಾಡಿಕೊಡುವುದು, ನಂತರ ಮಾಂಶಿ ಬೆಳಿಗ್ಗೆ ಮನೆಯಲ್ಲಿ ಆಸರಿಗೆಂದು ಮಾಡಿದ್ದ ತಿಂಡಿಯನ್ನು ಕಾಗದದಲ್ಲಿ ಪೊಟ್ಟಣ ಮಾಡಿ ಕೊಟ್ಟಾಗ ತಕೊಂಡು ಹೋಗುವುದು ಮಾಡುತ್ತಿದ್ದ. ಇದೇ ವೇಳೆಯಲ್ಲಿ ನಮ್ಮ ಶಾಲೆಯ ಮಾಸ್ತರ್ರು ಯಾವುದೋ ಹಬ್ಬದ ದಿನ ನಮ್ಮ ಮನೆಗೆ ಬಂದವರು ನಮ್ಮ ಮನೆಯ ತಿಂಡಿ ತಿಂದ ತಪ್ಪಿಗೆ ಕೃತಜ್ಞತೆ ಸೂಸುವ ನೆಪದಲ್ಲಿ ತಮ್ಮ ಪಕ್ಕಾ ಮಾಸ್ತರೀ ಭಾಷೆಯಲ್ಲಿ “ಆ ಪಬ್ಬು ಉಡಾಳ ಹುಡುಗ. ಅವನ ಸಂಗ್ತಿಗೆ ಸೇರಿ ನಿಮ್ಮ ಆನಂದನೂ ಹಾಳಾಗಬಹುದು. ಸಂಗತೀ ಸಂಗ ದೋಷ….” ಅಂತ ಏನೇನೋ ಬುಡಬುಡುಕಿ ಹಾಕಿ ನನಗೂ ಎಚ್ಚರಿಕೆ ನೀಡಿ ಅಂತೂ ಇಂತೂ ಅವ ನಮ್ಮ ಮನೆಗೆ ಬರುವುದು ನಿಂತೇ ಹೋಯ್ತು. ಇದರ ನಂತರ ನನಗೆ ವೇಳೆ ಕಳೆಯುವುದೆ ಕಷ್ಟವಾಗಿಬಿಟ್ಟಿತ್ತು. +ಹಾಗಂತ ನಾನೇನೂ ಅವನನ್ನು ಭೇಟಿಯೇ ಆಗುತ್ತಿದ್ದಿಲ್ಲವೆಂದಲ್ಲ. ಸಂಜೆ ಧಕ್ಕೆಯ ಮೇಲೆ, ಮೂಲೆಕೇರಿಯ ಮಾಂಕಾಳಮ್ಮನ ದೇವಸ್ಥಾನದ ಪೌಳಿಯ ಮೇಲೆ ಅಥವಾ ಅಶ್ವತ್ಥಕಟ್ಟೆಯ ಹತ್ತಿರ ಯಾವಾಗಿನಿಂದಲೋ ಹಾಳು ಬಿದ್ದಿರುತ್ತಿದ್ದ ಒಂದು ಮುರುಕು ಎತ್ತಿನ ಗಾಡಿಯ ಮೇಲೆ ನಾನು ಮತ್ತು ಪಬ್ಬು ಕೂಡಿ ಬಹಳ ಹೊತ್ತು ಮಾತನಾಡುತ್ತಿದ್ದೆವು. ಆದರೂ ಅಂಥ ವಿಶೇಷ ಹೇಳುವಂಥ ಸುದ್ದಿಗಳೇನೂ ನಮ್ಮಲ್ಲಿರುತ್ತಿರಲಿಲ್ಲ. ನಾಲ್ಕನೇಯತ್ತೆಯ ತನಕ ಸ್ವಂತ ಊರಾದ ಗೇರುಸೊಪ್ಪೆಯಲ್ಲೇ ಕಲಿತ ನನ್ನನ್ನು ಪುಂಡತನ ಮಾಡ್ತೇನಂತ ನನ್ನ ಬಾಪ್ಪಾ ಮುಂದೆ ಕಲಿಯೂದಕ್ಕ ಅಂತ ಇಲ್ಲಿ ದೀವಗಿಯಲ್ಲಿ ಮಾಂಶಿ ಮನೆಯಲ್ಲಿ ಬಿಟ್ಟಿದ್ದು, ಮಾಂಶಿ ಬಹಳ ಹಿಂದೆ ಮಾಸ್ತರಿಣಿ ಇದ್ದಳಂತೆ-ನಂತರ ಗಂಡ ಸತ್ತ ನಂತರ ಮನೆಯಲ್ಲೇ ಉಳಿದಿದ್ದಾಳಂತೆ-ಮಾಂಶಿ ಚಲೋವಳು-ಈಗ ಇಡೀ ದೊಡ್ಡ ಮನೆಯಲ್ಲಿ ನಾನು ಮತ್ತು ಮಾಂಶಿ ಇಬ್ಬರೇ ಇದ್ದರೂ ನನಗೆ ಮನೆ ನೆನಪೇ ಆಗೂದಿಲ್ಲ- ಇಂಥದ್ದು-ಇವು ನನ್ನ ಮಾತಿನ ಕಚ್ಚಾ ವಸ್ತುಗಳು. ಒಮ್ಮೆಯಂತೂ ಗೇರುಸೊಪ್ಪೆಯ ಧಬಧಬೆಯ ಬಗ್ಗೆ ಹೇಳುತ್ತಾ- “ನೂರು ತೆಂಗಿನ ಮರದಷ್ಟು ಎತ್ತರದಿಂದ ಬೀಳುತ್ತದೆ”-ಎಂದು ಸರಾಗವಾಗಿ ಪೊಕಳೆ ಹೊಡೆದು ಅವನನ್ನು ಅಚ್ಚರಿಗೊಳಿಸಿಬಿಟ್ಟಿದ್ದೆ. ಆದರೂ ನನ್ನವೇ ಆದ ಖಾಸಗೀ, ಪಕ್ಕಾ ಕೊಂಕಣೀಮಯ ಸುದ್ದಿಗಳು ಕೌತುಕಗಳು ಅವನಲ್ಲಿ ಅಷ್ಟು ಪರಿಣಾಮ ಬೀರುತ್ತಿರಲಿಲ್ಲ. +ಅವನಿಗೆ ದಿನಾಲು ಬರಹೋಗುವ ಲಾಂಚುಗಳು, ಶಿರಸಿ ಕಾರವಾರ ಕಡೆಯಿಂದ ಬಂದು ಇಲ್ಲಿಯ ಧಕ್ಕೆಯಲ್ಲಿ ಜನರನ್ನು ಇಳಿಸಿ ಹೋಗುವ ಬಸ್ಸುಗಳು, ನದಿಯ ಆ ಕಡೆ ದಂಡೆಯಲ್ಲಿಯೂ ಜನರನ್ನು ಇಳಿಸಿ ಹೋಗಲು ಬಂದ ಕೆಂಪು ಬಸ್ಸುಗಳು, ಬಸ್ಸುಗಳನ್ನು ಕಾರುಗಳನ್ನು ಹೊತ್ತುಕೊಂಡು ಹೋಗುವ ಜಂಗಲ್ಲುಗಳು ಎಳೆಯುವ ಲಾಂಚುಗಳ ಶಬ್ದ, ಖಾಕೀ ಡ್ರೈವರುಗಳು ಕಂಡಕ್ಟರುಗಳು (ಅವನು ಇವರಿಗೆ “ಕಿಲಿಂಡರ್” ಅನ್ನುತ್ತಿದ್ದ)-ಅವರು ಬೀಡಿ ಸಿಗರೇಟು ಸೇದುವ ಸ್ಟೈಲು, ಧಕ್ಕೆಯಲ್ಲಿಯ ಚಾ ಅಂಗಡಿಯಲ್ಲಿ ಪ್ರಯಾಣಿಕರು ಕೂತು ಚಾ ಕುಡಿಯುವ ಗತ್ತು, ಜಂಗಲ್ಲಿನಲ್ಲಿ ವಾಹನಗಳು ಹತ್ತಿಯಾದ ಕೂಡಲೇ ಅವನ ಅಪ್ಪ(ಅವನು ಜಂಗಲ್ಲಿನಲ್ಲಿ ಕೆಲಸ ಮಾಡುತ್ತಿದ್ದ) ಹಗ್ಗವನ್ನು ಲಾಂಚಿಗೆ ಎಸೆಯುವ ಚಾಕಚಕ್ಯತೆ-ಇವೆಲ್ಲ ಅವನ ಆಸಕ್ತಿಯಾಗಿದ್ದವು. ಮಾಂಶಿ ನನಗೆ ಬಹಳ ಮುದ್ದು ಮಾಡ್ತಾಳೆ ಎಂದರೆ ಅವನಿಗೆ ಅರ್ಥವೇ ಆಗುತ್ತಿರಲಿಲ್ಲ. ಡ್ರೈವರುಗಳ ಹೆಸರುಗಳು, ಕುಮಟೆಯಲ್ಲೋ ಶಿರಸಿಯಲ್ಲೋ ನಡೆಯುತ್ತಿರುವ ಸಿನೇಮಾ ಹೆಸರುಗಳು ತಕ್ಷಣದಲ್ಲಿ ಅವನ ನಾಲಿಗೆಯ ತುದಿಯಲ್ಲಿರುತ್ತಿದ್ದವು. ಹೀಗಾಗಿ ನನಗಿಂತ ಅವ ಬೇರೆಯೇ ಅನಿಸಿಬಿಡುತ್ತಿದ್ದ. ಎಲ್ಲಾದರೂ ಅವ ನನ್ನನ್ನು “ನೀನು ಪುಕ್ಕ ನಿನಗೆ ಈಜಲು ಬರುವುದೇ ಇಲ್ಲ”-ಅನ್ನುತ್ತಿದ್ದ-ಆಗೆಲ್ಲ ನಾನು “ಗೇರುಸೊಪ್ಪೆಯ ನನ್ನ ಮನೆಯಲ್ಲಿ ಸೈಕಲ್ ಇದೆ. ಒಳಪ್ಯಾಡ್ಲು ಹೊಡೆಯಲು ನನಗೆ ಬರುತ್ತದೆ. ನಿನಗೆ ಬರೂದೇ ಇಲ್ಲ” ಅಂತ ಹೇಳುತ್ತಿದ್ದೆ. ಇದು ಸ್ವಭಾವದ ಭೇಧವಾಗಿದ್ದರೂ ಮಾಂಶಿ ನನ್ನ ತಲೆಯಲ್ಲಿ ಹಾಕಿದ್ದ ಬಡವ-ಶ್ರೀಮಂತ, ಜಾತಿ ಭೇದ-ಈ ನಿಟ್ಟಿನಿಂದಲೇ ನಾನು ಅವನ ಭಿನ್ನತೆ ಅಳೆಯುತ್ತಿದ್ದೆ. ಹೀಗಾಗಿ ಅಪ್ಪಂತನಂತೆ “ನಿನಗದು ತಿಳಿಯುವುದಿಲ್ಲ” ಅಂತ ಪದೇ ಪದೇ ಹೇಳುತ್ತಿದ್ದೆ. ಅವನೂ ವಿಧೇಯನಂತೆ ಒಮ್ಮೊಮ್ಮೆ ಒಪ್ಪಿಕೊಂಡುಬಿಡುತ್ತಿದ್ದ. +ನನ್ನನ್ನು ಅವನು ಒಮ್ಮೆಯೂ ತನ್ನ ಮನೆಗೆ ಕರೆದೊಯ್ದಿರಲಿಲ್ಲ. ಒಮ್ಮೊಮ್ಮೆ “ನಿನ್ನೆ ರಾತ್ರಿ ನಾನು ಮನೆಗೆ ತಡಮಾಡಿ ಹೋದೆ. ಹೀಗಾಗಿ ನನಗೆ ಊಟ ಹಾಕಲಿಲ್ಲ” ಅಂತ ಅವನು ಅಂದಾಗ ಆಶ್ಚರ್ಯವೆನಿಸುತ್ತಿತ್ತು. ಆಗಲೇ ದೀವಿಗೆಯಿಂದ ತುಸು ದೂರದಲ್ಲಿ ನದಿಗೆ ಬ್ರಿಜ್ಜು ಕಟ್ಟುವ ಕೆಲಸ ಶುರು ಆಗಿತ್ತು. ಸಿಮೆಂಟು ಕಂಬಗಳನ್ನೂ ಮಾಡುತ್ತಾರೆ ಹಾಗೆ ಹೀಗೆ ಅಂತ ಪಬ್ಬು ಸೇತುವೆ ನಿರ್ಮಾಣದ ಕುರಿತು ಏನೇನೂ ಹೇಳುತ್ತಿದ್ದ. +ನನಗೆ ಚೆನ್ನಾಗಿ ನೆನಪಿದೆ. ಒಂದು ದಿನ ನಾವು ಮಾಂಕಾಳಮ್ಮನ ಗುಡಿಯಲ್ಲಿ ಬಹಳ ಹೊತ್ತು ಮಾತನಾಡಿದೆವು. ಆ ದಿನ ಆತ ಲವ್ವು ಅಂತೇನೇನೋ ಹೇಳಿ ನನ್ನನ್ನು ರೋಮಾಂಚಿತನನ್ನಾಗಿ ಮಾಡಿದ್ದ. ಭಟ್ಕಳದಲ್ಲಿ ತನ್ನ ಸಂಬಂಧಿಕರ ಮನೆ ಉಂಟು. ಅಲ್ಲಿ ಒಬ್ಬಳು ಚೆಂದದ ಹುಡಿಗಿ ಇದ್ದಾಳೆ “ಮುಮ್ತಾಜ್” ಅಂತ-ಅಂದಾಗ ನಾನು ‘ಅಲ್ವೋ ಅದು ಮುಸಲ್ಮಾನ ಹೆಸರು”-ಎಂದೆ. ಅದಕ್ಕವ ತಕ್ಷಣ “ಇಲ್ಲ ಹಾಗೇನಿಲ್ಲ. ಯಾರೂ ಆ ಹೆಸರಿಡಬಹುದು”-ಎಂದು ಸಾರಿಬಿಟ್ಟಿದ್ದ. ನಾನು ತೆಪ್ಪಗೆ ಕೇಳುತ್ತಿದ್ದೆ. ನಾನು ಮುಮ್ತಾಜಳನ್ನು ಪ್ರೀತಿಸುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ನಮ್ಮದು ಸಾಮಾನ್ಯ ಪ್ರೀತಿಯಲ್ಲ. ಅದು ಲವ್ವು. ನಾನು ಅವಳ ಲಾಡಿ ಎಳೆದು ಅವಳದನ್ನು ನೋಡಿದ್ದೇನೆ. ನಾನು ಅವಳ ಜತೆಗೆ ಮಾತಾಡಿದ್ದೇನೆ. ಅಂತೇನೇನೋ ಹೇಳಿ ನನ್ನನ್ನು ಪುಳಕಗೊಳಿಸಿಬಿಟ್ಟಿದ್ದ. ಆ ದಿವಸ ಅವನು ಏನೇನು ಹೇಳಿದನೋ, ನಾನು ಏನೇನು ಕೇಳಿದೆನೋ-ಇಷ್ಟು ಮಾತ್ರ ಖರೆ, ಮಾತು ಮುಗಿಸಿದಾಗ ಭಯಂಕರ ಕತ್ತಲೆಯಾಗಿಬಿಟ್ಟಿತ್ತು. ಅವನ ಮಾತಿನ ಪ್ರಭಾವದಿಂದ ನನಗೆ ಮನೆಯ ಕಡೆಗೆ ಓಡಲೂ ಕಷ್ಟವಾಯಿತು. ಮನೆಗೆ ಹೋದಾಗ ಮಾಂಶಿ ದೇವರ ಕೋಣೆಯಲ್ಲಿ “ಲಂಬೋದರ ಗಿರಿಜಾ ನಂದನಾ….” ಎಂದು ಭಜನೆ ಮಾಡುತ್ತಿದ್ದಳು. ನಾನು ಬಂದದ್ದು ಗೊತ್ತಾಯಿತು. “ಓಂವಾಳು ಆರತೀ…” ಮುಗಿಸಿ ಬಂದವಳೇ ಏನು ಎಂತು ಕೇಳದೆ ರಪ್ ರಪ್ ಎಂದು ಬಾರಿಸಿಬಿಟ್ಟಳು. ಮನೆ ಹೊಕ್ಕುವ ಮೊದಲೇ ನಾನು ಉಚ್ಚೆ ಹೊಯ್ದಿರದಿದ್ದರೆ ಖಂಡಿತ ಆಗ ಮಾಡಿಕೊಳ್ಳುತ್ತಿದ್ದೆ. “ನಿನ್ನನ್ನು ನಿನ್ನ ಬಾಪ್ಪಾ ಇಲ್ಲಿ ದೀವಗಿಯಲ್ಲಿ ಇಟ್ಟಿದ್ದು ಯಾಕೆ? ಶಾಲೆ ಕಲೀಲಿಕ್ಕೋ ಅಥವಾ ಆ ಹರಕಂತ್ರ ಪಬ್ಬೂ ಸಂಗ್ತೀಗೆ ಮೂರ್ ಸಂಜೀವರೆಗೆ ತಿರುಗಲಿಕ್ಕೋ?” ಎಂದಳು. ಊಟಕ್ಕೆ ಬಡಿಸುವಾಗಲೂ ಫಡಫಡ ಮಾಡಿದಳು. ನಂತರ ನಾನು ಬಾಪ್ಪಾ ಅಮ್ಮಾ…”ಅಂತ ರಾಗ ಎಳೆದು ಅಳುತ್ತ ಮಲಗಿದಾಗ ಬಂದು “ನೀನು ಬುದವಂತ ಹುಡುಗ ಅಲ್ಲಾ? ಅಂಥವರ ಜತೆ ಸೇರಬಾರದು” ಅಂತ ಚಲೋ ಮುದ್ದು ಮಾಡಿ ನನ್ನನ್ನೂ ಬಳಸಿಕೊಂಡೇ ಮಲಗಿದಳು. ಆ ಕ್ಷಣದಲ್ಲಂತೂ ನನಗೆ “ಮಾಂಶಿ ಎಷ್ಟು ಒಳ್ಳೆಯವಳು” ಅನಿಸಿಬಿಡ್ತು. “ಪಬ್ಬು ದರಿದ್ರದವ” ಅಂತ ನಿರ್ಧಾರ ತಗೊಂಡು ನಿಶ್ಚಿಂತ ಮಲಗಿದೆ. +ಮರುದಿನದಿಂದ ನಾನು(ವಿನಾಕಾರಣ)ಪಬ್ಬೂನ ದೋಸ್ತಿ ಬಿಟ್ಟೆ ಮತ್ತು ಬುದವಂತ ವಿದ್ಯಾರ್ಥಿ ಆದೆ. ಮಾಂಶಿ ಪಬ್ಬೂನ ಸುದ್ದಿ ಮಾತಾಡಿದ್ದು ಅದೇ ಕೊನೆಯಾಯಿತು. ಅದೇ ವರುಷವೇ ಕುಮಟೇ ತೇರಿಗೆ ಹೋಗುವಾಗ ಲಾಂಚಿನಲ್ಲಿ ಜಾಗ ಇರದಿದ್ದರಿಂದ ಜಂಗಲ್‌ನಲ್ಲೇ ಮಾಂಶಿಯ ಜತೆ ನಿಂತಿದ್ದಾಗ ಉದ್ದ ಬಿದುರಿನ ಶಮೆಕೋಲು ಹಿಡಿದು ಹುಟ್ಟು ಹಾಕುತ್ತಿದ್ದ ಪಬ್ಬೂನ ಅಪ್ಪ ದಂಡು ಕಂಡಿದ್ದ. ಮಾಂಶಿಯನ್ನು ಕುರಿತು “ಅಮ್ಮಾ, ತೇರಿಗೋ?” ಎಂದ. ಅವನೇ ನಂತರ “ನಮ್ಮ ಪಬ್ಬೂ ಈಗ ಬ್ರಿಜ್ ಕಟ್ಟುವಲ್ಲಿ ಸಿಮೆಂಟ್ ಕೆಲಸಕ್ಕೆ ಹೋಗ್ತಾನೆ” ಎಂದ. ದೂರದಲ್ಲಿ ಒಂದು ಕಂಬ ನೀರಿನಿಂದ ಮಾತ್ರ ತೆಲೆಯೆತ್ತಿ ನಿಲ್ಲುವ ಯತ್ನ ಮಾಡುತ್ತಿತ್ತು. ಬ್ರಿಜ್ ಕೆಲಸಕ್ಕೆ ಹೋಗುವುದೆಂದರೇ ಒಂದು ಅತಿ ಹೊಸ ಸುದ್ದಿ ಆಗ ಊರಿನಲ್ಲಿ. ದೀವಗೆಯಿಂದ ತುಸು ದೂರವೇ ಆಗಲಿದ್ದ ಆ ಸೇತುವೆಗಾಗಿ ನಡೆಯುತ್ತಿದ್ದ ಕಾಮಗಾರಿ ನೋಡಲು ನಾನೂ ಒಮ್ಮೆ ಹೋಗಿದ್ದೆ. ಖಡಿ, ಸಿಮೆಂಟು, ಪೈಪುಗಳು, ಚಕಚಕ ಎಂದು ಹೊಗೆಯೊಂದಿಗೆ ನೀರನ್ನೂ ಉಗುಳುತ್ತಿದ್ದ ಪಂಪುಗಳು, ಸರಸರ ಓಡಾಡುವ ದೀವಗೆಯವರೇ ಆದ ಕೂಲಿಗಳು, ಡುಂಯ್ ಎಂದು ತುಂಬಿಕೊಂಡು ಬಂದ ಬಂಡೆಕಲ್ಲುಗಳನ್ನು ಕುಂಡೆ ಎತ್ತಿ ಹೊಯ್ಯುವ-ಹೊಸ ನಮೂನೆಯ ಲಾರಿಗಳು, ಬೈಯುವ ಮಲೆಯಾಳೀ ಮೇಸ್ತ್ರಿಗಳು-ಇವನ್ನೆಲ್ಲ ನೋಡಿ ಚಕಿತನಾಗಿದ್ದೆ. ಆದರೆ ಒಂದು ದಿನ ಮಾಂಶಿಯೇ “ಬ್ರಿಜ್ಜು ಕಟ್ಟುವಲ್ಲಿ ಹೋಗಬಾರದು. ಬ್ರಿಜ್ಜು ಬಲಿಷ್ಠವಾಗಲಿ ಅಂತ ಮನುಷ್ಯರನ್ನು ಬಲಿಕೊಡುತ್ತಾರೆ”ಅಂತ ಹೆದರಿಸಿದ್ದಳು.ಅಂತೂ ಈಗ ಪಬ್ಬೂ ಅಲ್ಲಿ ಕೆಲಸಕ್ಕೆ ಹೋಗ್ತಾನೆ ಅನ್ನುವ ವಿಷ್ಯ ತಿಳಿದು ಮೋಜೆನಿಸಿತು. ತಯಾರಾದ ಸೇತುವೆಯ ಕಂಬಗಳ ಮೇಲೆ ನಿಂತರೆ ಮಜಾ ಆದೀತು ಎನಿಸಿತು. ಆದರೂ ಪಬ್ಬೂನ್ನೇನಾದರೂ ಆ ಸುಟ್ಟ ಮಲಯಾಳೀ ಮೇಸ್ತ್ರಿಗಳು ಬಲಿಕೊಟ್ಟರೆ!-ಅಂತ ಆತಂಕವಾಯಿತು. +ಆ ದಿವಸ ತೇರಿನಲ್ಲಿ ಮೂರ್ ಕಟ್ಟೆಯ ಹತ್ತಿರ ಒಂದು ಶರಬತ್ ಅಂಗಡಿಯಲ್ಲಿ ಕೆಂಪು ಅಂಗಿ ಹಾಕಿಕೊಂಡು ತನ್ನಂಥದೇ ಮತ್ತೆರಡು ಮೂರು ಲಕಲಕ ಹೊಳೆಯುವವರ ಜತೆಗೆ ಬಣ್ಣದ ಶರಬತ್ತು ಕುಡಿಯುತ್ತಿದ್ದ ಪಬ್ಬುವನ್ನು ಕಂಡೆ. ಅವನೇ ನನ್ನನ್ನು ನೋಡಿ ನಗಲು ಯತ್ನಿಸಿದ. ಆದರೆ “ಅದೆಲ್ಲ ರಾಡಿಯ ನೀರು. ಅಂಥದ್ದನ್ನು ಕುಡೀಬಾರ್ದು” ಅಂತ ಮಾಂಶಿ ನನ್ನ ರೆಟ್ಟೆ ಹಿಡಿದು ಎಳೆದು ಗುಂಪಿನಲ್ಲೆಲ್ಲೋ ನಿಂತಳು. ಇಬ್ಬರೂ ತೇರಿಗೆ ಬಾಳೆಹಣ್ಣು ಹೊಡೆದೆವು. ಪಬ್ಬೂ ನಕ್ಕನಲ್ಲ. ನಾನೂ ನಗಬಹುದಿತ್ತು- ಅಂತ ಹಳಹಳಿ ಆಯಿತು. ಆಮೇಲೆ ನೆಲ್ಲಿಕೇರಿಯಲ್ಲಿ ಯಾವುದೋ ಸಂಬಂಧಿಕರ ಮನೆಗೆ ಹೋಗಿ ಮತ್ತೆ ಮಣಕಿಗೆ ಬಂದು ಲಾಂಚು ಹತ್ತಿ ದೀವಗಿಗೆ ಬರುವಷ್ಟರಲ್ಲಿ ಬಹಳ ರಾತ್ರಿಯಾಗಿಬಿಟ್ಟಿತ್ತು. ದೀಪ ಹಚ್ಚಿ ಒಂದೇ ಪದದಲ್ಲಿ ಭಜನೆ ಮುಗಿಸಿ ಊಟಮಾಡಿ ಮಲಗಿದೆವು. ಸುಮಾರು ನಡುರಾತ್ರೆಯಲ್ಲಿ ಧಡ್ಧಡ ಬಾಗಿಲು ತಟ್ಟಿ ಯಾರೋ “ಅಮ್ಮೋ ಅಮ್ಮೋ” ಕೂಗಿದಂತೆ. ಮಾಂಶಿ ಹೋಗಿ ಬಾಗಿಲು ತೆಗೆದು ಏನೋ ಮಾತನಾಡಿ ಬಂದಂತೆ ಅರ್ಧ ನಿದ್ರೆಯಲ್ಲಿ ಅನಿಸಿತು. +ಬೆಳಿಗ್ಗೆ ಚಾ ಕುಡಿಯಲು ಕೂತಾಗ ಮಾಂಶಿ “ನೋಡು ನಿನ್ನ ಪಬ್ಬೂನ ಕತೆ. ನಿನ್ನೆ ತೇರಿಗೆ ಹೋದವನು ಇನ್ನೂ ಬರಲಿಲ್ಲವಂತೆ. ಇಲ್ಲಿ ಬಂದಾನೇನೋ ಅಂತ ಚೌಕಶಿ ಮಾಡಲು ದಂಡು ಬಂದಿದ್ದ”-ಅಂದಳು. ನನಗಾಗ ಏನೂ ಅನಿಸಲಿಲ್ಲ. ಸತ್ತವ ಭಟ್ಕಳಕ್ಕೆ ಹೋದನೋ ಏನೋ ಮುಮ್ತಾಜಳ ಸಂಗತಿ ನೋಡಲಿಕ್ಕೆ ಮಾಡಲಿಕ್ಕೆ ಅಂತ ಹೊಟ್ಟೆಕಿಚ್ಚು ಆಯಿತು. ನಂತರ ಸುಮಾರು ಹತ್ತುಗಂಟೆ ಹೊತ್ತಿಗೆ ನನ್ನದೇ ವಯಸ್ಸಿನ ಪೋರಿಯೊಬ್ಬಳು ಬಂದು ಮತ್ತೆ ಮಾಂಶಿಯ ಬಳಿ “ಪಬ್ಬಣ್ಣ ಬಂದಿದ್ದಾನೋ?” ಅಂತ ಕೇಳಿದಳು. ಅತ್ತಳು. ಅವಳು ಅವನ ತಂಗಿ ಗಂಗೆಯಂತೆ. ಅವನು ಒಂದಿಷ್ಟು ಬ್ರಿಜ್ಜಿನ ಕೆಲಸಗಾರರ ಜತೆಗೇ ತೇರಿಗೆ ಹೋದವನೆಂದೂ ಅವರೇ ಏನೋ ಆಶೆ ತೋರಿಸಿ ಅವನನ್ನು ತಮ್ಮ ಜತೆಗೆ ಹಾರಿಸಿಕೊಂಡು ಹೋಗಿರಬೇಕೆಂದೂ-ಬಹಳ ಜನ ಹೇಳುತ್ತಾರೆ ಅಂತ ಅಳುತ್ತ ಹೇಳಿದಳು. ಮಾಂಶಿ “ಪಾಪ ಪಾಪ ಪ್ಚ್… ಪ್ಚ್…” ಮಾಡಿ “ಬರಬಹುದು ಪೋಲೀಸರಿಗೆ ಹೇಳಿದರೆ ಚಲೋದು” ಅಂತೆಲ್ಲ ಹೇಳಿ ಬೆಳಿಗ್ಗೆ ಮಾಡಿದ್ದ ಬಟಾಟೆ ಬಜೆ ಅವಳ ಕೈಗೆ ಕೊಟ್ಟು ಕಳಿಸಿದಳು. ಬಜೆಯನ್ನು ನೋಡಿ ಕಣ್ಣರಳಿಸಿ ಗಂಗೆ ಓಡುತ್ತ ಹೋದಳು. ಪಬ್ಬೂನದೇ ಮುಖ ಅವಳದು. ಅವನನ್ನೇ ಕಂಡ ಹಾಗೆ ಆಗಿತ್ತು. “ಈ ಹಾಳು ಬ್ರಿಜ್‌ನ ನೆವದಿಂದ ಮತ್ತೇನೇನು ಆಗುವುದುಂಟೋ” ಅಂತ ಹೇಳಿ ಮಾಂಶಿ ನನ್ನ ತಲೆಗೆ ಎಣ್ಣೆ ತಿಕ್ಕಿದಳು. “ನೋಡಿದೆಯಾ-ಮತ್ತೆ ನೀನು ಅವನ ಸಂತಿಗೆ ಕುಣೀತಿದ್ದೆಯಲ್ಲ!”-ಎಂದಳು. ಈ ಮಾತು ಸಂಬಂಧವಿಲ್ಲದ್ದು ಎಂದು ಆಗಲೇ ನನಗೆ ಅನಿಸಿತ್ತು. +ಯಾಕೋ ಪಬ್ಬೂನ ಹೋಲುವ ಅವನ ತಂಗಿಯನ್ನು ನೋಡಿದ್ದೇ ಪಬ್ಬೂನ ನನ್ನ ದೋಸ್ತಿಯ ನೆನಪು ತೀವ್ರವಾಗಿಬಿಟ್ಟಿತು. ಆ ಸಂಜೆಯೇ ಕುತೂಹಲ ತಾಳಲಾರದೆ ಪಬ್ಬೂ ನನ್ನಿಂದ ಒಯ್ದು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ನನ್ನ “ಭಟ್ಟಿ ವಿಕ್ರಮಾದಿತ್ಯ” ಮುಂತಾದ ಪುಸ್ತಕ ತರುತ್ತೇನೆಂದು ಮಾಂಶಿಯ ಹತ್ತಿರ ಹೇಳಿ ಅವನ ಮನೆಗೆ ಹೋಗಿಬಿಟ್ಟೆ. ಆ ಮನೆಯಲ್ಲಿ ಅಂಥದ್ದೇನೂ ದುಃಖ ಆವರಿಸಿದ್ದಂತೆ ನನಗೆ ಕಂಡುಬರಲಿಲ್ಲ. ಮೂರು ವರ್ಷ ದೀವಗಿಯಲ್ಲಿದ್ದರೂ ಪಬ್ಬೂನ ದೋಸ್ತನಾಗಿದ್ದರೂ ಮೊದಲ ಬಾರಿಗೆ ಅವನ ಮನೆಗೆ ಹೋಗಿದೆ. ವಿಶಾಲವಾದ ತೆಣೆ, ತಟ್ಟಿ, ಹೊರಗೆ ತೆಂಗಿನ ಮರದಡಿಗೊಂದು ಮಡಕೆಯ ಹಂಡೆ, ಜಟಕದೇವರು, ದಾಸವಾಳದ ಗಿಡಗಳು, ಕೋಳಿಗಳು-ಇದ್ದವು. ಗಂಗೆ ಅನವಶ್ಯಕ ನಾಚಿ ನಾಚಿ ಮನೆ ಹಿಂಭಾಗಕ್ಕೆ ಓಡುತ್ತಿದ್ದಂತೆ ಅನಿಸಿತು. ಪಬ್ಬೂನ ತಾಯಿ ಬಾಯಿಗೆ ಸೆರಗೊತ್ತಿ ಧಳಾ ಧಳಾ ಅಳುತ್ತಿದ್ದಳು.. ಪಾಪ ಅನಿಸಿತು. ಬ್ರಿಜ್ಜಿಗೆ ಬಲಿಕೊಡಬೇಕಲ್ಲ-ಅದಕ್ಕೇ ಪಬ್ಬೂನ ಬಲಿಕೊಟ್ಟಿದ್ದಾರೆ ಅಂತ ಊರೆಲ್ಲ ಸುದ್ದಿಯಂತೆ ಅಂದು “ದ್ಯಾವ್ರೇ” ಎಂದು ಅತ್ತಳು. ಹಿರಿಯನಂತೆ-“ಇರಲಿಕ್ಕಿಲ್ಲ. ಭಟ್ಕಳಕ್ಕೆ ಹೋಗಿದ್ದಾನೋ ಏನೋ. ನಿಮ್ಮ ಸಂಬಂಧಿಕರ ಮನೆ ಉಂಟಂತಲ್ಲಾ” ಅಂದೆ. “ಇಲ್ಲ ಇಲ್ಲ, ಅಲ್ಲಿ ಯಾವ ಸಂಬಂಧಿಕರ ಮನೆಯೂ ಇಲ್ಲ” ಅಂತ ನನ್ನನ್ನು ಭಾರಿ ನಿರಾಸೆ ಮಾಡಿಬಿಟ್ಟಳು. ಅವನು ಸುಳ್ಳು ಹೇಳಿದ ಎನ್ನೋದಕ್ಕಿಂತಲೂ-ಅವನ ಮುಮ್ತಾಜಳ ಪ್ರಕರಣ ಸುಳ್ಳಾಯಿತಲ್ಲ ಎಂಬುದೇ ನನಗೆ ಬಹಳ ಬೇಜಾರಾಯಿತು. “ಕೆಳಗಿನ ಮನೆ ಬೀರಣ್ಣನ ಮಗನೂ ಇಲ್ಲಂತೆ, ಕುರ್ಲೆ ಅರ್ಜುನನ ತಮ್ಮನೂ ಇಲ್ಲಂತೆ. ಮತ್ತೂ ಐದಾರು ಮಂದಿ ಇಲ್ಲಂತೆ” ಅಂತ ಗಂಗೆ ಹೇಳಿದಳು. ಅಳುವ ತಾಯಿಯನ್ನು ನೋಡಿ ನೋಡಿ ಅವಳೂ ಅಳಲು ಶುರುಮಾಡಿಬಿಟ್ಟಳು. ಪುಸ್ತಕ ಕೇಳಲು ಮರೆತೆನೋ ಅಥವ ಕೇಳುವ ಮನಸ್ಸಾಗಲಿಲ್ಲವೋ ಒಟ್ಟೂ ಹಾಗೇ ಮನೆಗೆ ಓಡಿ ಬಂದಿದ್ದೆ. +ಆ ದಿನ ಸಂಜೆ ಚಾ ಕುಡಿಯಲು ಬಂದ ಮಾಸ್ತರು-“ನೋಡಿದೆಯೋ, ಪಬ್ಬೂ ಓಡಿ ಹೋದ. ಮತ್ತೂ ಬಹಳ ತರುಣರು ಓಡಿ ಹೋಗಿದ್ದಾರಂತೆ” ಅಂದರು ವಿಚಿತ್ರ ಉತ್ಸಾಹದಲ್ಲಿ. ಅದೇ ವೇಳೆಯಲ್ಲಿ ಬ್ರಿಜ್ಜು ನಿರ್ಮಾಣದ ಜಾಗದಲ್ಲಿ, ಊರಿನ ಆ ಕಾಲದ ಸ್ವಲ್ಪ ಸುಂದರೀ ಕಲಾವಂತೆಯಾಗಿದ್ದ ಗುಲಾಬಿಯು ಸತ್ತು ಬಿದ್ದದ್ದೂ ಊರಿಡೀ ಗೌಜಾಯಿತು. ಅವಳು ದುಂಡಗೆ ಬಿದ್ದಿದ್ದಳಂತೆ. ಅವಳ ಒಂದು ಮೊಲೆ ಹರಿದಿತ್ತಂತೆ. ಇಂಥ ಸುದ್ದಿಗಳು ಹಬ್ಬಿ ನನ್ನ ಕಿವಿಗಳನ್ನು ಚುರುಕುಗೊಳಿಸುತ್ತಿದ್ದವು. +ಅದೇ ವೇಳೆಗೆ ನನ್ನ ಮುಲ್ಕೀಪರೀಕ್ಷೆ ಬಂತು. ಅಭ್ಯಾಸ, ನಿದ್ರೆ, ಬೀಳಬಹುದಾದ ಪ್ರಶ್ನೆಗಳು, ಪರೀಕ್ಷೆಗೆ ಕುಮಟೆ ಸೆಂಟರ್‌ಗೆ ಹೋಗುವುದು, ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ, ನಾಳೆ ಕೊನೇ ಪೇಪರು-ಅಂತ ಪರೀಕ್ಷೆ ಮುಗಿಯಿತು. +ರಜೆಯಲ್ಲಿ ದೀವಗಿಯಲ್ಲೇ ಉಳಿದೆ. ಬಸ್ಸು ನಿಲ್ಲುತ್ತಿದ್ದರಿಂದ ಚಾ ಅಂಗಡಿಗಳು ಚಲೋ ನಡೀತಿದ್ದವು. ದಾಮೋದರ ಪ್ರಭುಗಳ ವ್ಯಾಪಾರ ಭರ್ಜರಿ ಆಗಿತ್ತು. ಸಣ್ತಮ್ಮನಾಯ್ಕನ ಸೀಯಾಳದಂಗಡಿ ಜೋರಾಗಿ ನಡೆಯುತ್ತಿತ್ತು. ಜಂಗಲ್‌ಗಳು ಹೋಗುತ್ತಿದ್ದವು. ಧಕ್ಕೆಯಲ್ಲಿ “ಕುಹೂಯ್” ಕೂಗುಗಳು ಧ್ವನಿಸುತ್ತಲೇ ಇದ್ದವು. +ರಿಸಲ್ಟು ಆಗಿ ನಾನು ಹೈಸ್ಕೂಲಿಗೆ ಶಿರಸಿಗೆ ದೊಡ್ಡಪ್ಪನ ಮನೆಗೆ ಹೋದವ ಅಲ್ಲೇ ಆಗಿಬಿಟ್ಟೆ. ಎಲ್ಲೋ ಮಧ್ಯದಲ್ಲಿ ಒಂದೆರಡು ಸಲ ಬಂದು ಹೋದರೂ ಮಾಂಶಿಯ ವಿಶೇಷ ಅಡುಗೆ ಉಪಚಾರ, ಒಂದೊಂದೇ ತಲೆ ಎತ್ತುತ್ತಿದ್ದ ಸೇತುವೆ ಕಂಬಗಳನ್ನು ನೋಡುವದು ಇಷ್ಟರಲ್ಲೇ ಮರಳುತ್ತಿದ್ದೆ. ಬಿ.ಎ. ಮುಗಿಸಿದ ನಂತರ ಬಪ್ಪಾ ನನ್ನನ್ನು ಮಾಂಶಿಯ ಆಸ್ತಿಯ ಮನೆಯ ಉಸ್ತುವಾರಿ ನೋಡಿಕೋ ಅಂತ ಹೇಳಿದಮೇಲೆ ಶಾಶ್ವತವಾಗಿ ದೀವಗಿಯಲ್ಲೇ ಉಳಿಯುವುದೆಂತ ನಿರ್ಧಾರ ಮಾಡಿದ ಮೇಲೆ ಇಲ್ಲಿ ಬಂದುಳಿದು ಈಗ ಎರಡು ತಿಂಗಳೇ ಆಗುತ್ತಾ ಬಂದಿದ್ದರೂ ಒಂದು ರೀತಿಯಲ್ಲಿ ಮಂದವಾಗೇ ಬದುಕುತ್ತಿದ್ದೆ. ಬರೇ ಹಿತ್ತಲಿಗೆ ಪಂಪ್‌ಸೆಟ್ ಹಚ್ಚಿ ನೀರು ಹರಿಸುವುದು, ಮರ್ಕುಂಡಿ ಬಂದರೆ ತೆಂಗಿನಕಾಯಿ ಕೊಯ್ಯಿಸುವುದು, ಎಲ್ಲಾದರೂ ಅಪರೂಪಕ್ಕೆ ಲಾಂಚಿನಲ್ಲಿ ಆಚೆ ಬದಿ ಮಣಕಿಗೆ ಹೋಗಿ ಅಲ್ಲಿಂದ ಕುಮಟೆ ಬಜಾರಿಗೆ ಹೋಗಿ ಬರುವುದು, ಸಂಜೆ ಧಕ್ಕೆಯ ಬಳಿ ಅಥವಾ ದಾಮೋದರ ಪ್ರಭುನ ಅಂಗಡಿಯಲ್ಲಿ ಕೂತು ಸಂಪೂರ್ಣವಾಗಿ ನೀರಿನಲ್ಲಿ ತಲೆಯೆತ್ತಿ ನಿಂತು ನೋಡುತ್ತಿದ್ದ ದೂರದ ಕಂಬಗಳನ್ನು ನೋಡುವುದು-ಹೀಗೇ ತೆವಳುತ್ತಿದ್ದ ನನಗೆ ಈವತ್ತು ಮಾಂಶಿ “ಪಬ್ಬೂ ಬಂದಾನಂತೋ?” ಎಂದಿದ್ದು ಒಂದು ರೀತಿಯ ಕೀಲಿ ಕೊಟ್ಟಂತಾಯ್ತು. ಪಬ್ಬೂ ಸತ್ತನೆಂದೋ, ಬಲಿಯಾದನೆಂದೋ ಅಥವಾ ಓಡಿಯೇ ಹೋದನೆಂದೋ-ಏನೇ ಆಗಿದ್ದರೂ ನನ್ನ ಮನಸ್ಸಿನಿಂದ ಅವನು ನಿವೃತ್ತಿ ತಗೊಂಡು ಬಹಳಕಾಲವಾಗಿತ್ತು. ಇಷ್ಟರಮಟ್ಟಿಗೆ ಎಂದರೆ ಧಕ್ಕೆಯಲ್ಲಿ ಜೋರಾಗಿ ಜಂಗಲ್ ನೂಕುತ್ತಿದ್ದ ಅವನಪ್ಪ ದಂಡುವನ್ನು ನೋಡಿದರೂ ನನಗೆ ಪಬ್ಬೂ ಇಷ್ಟು ತೀಕ್ಷ್ಣವಾಗಿ ನೆನಪಿನಲ್ಲಿ ಉಕ್ಕುತ್ತಿರಲಿಲ್ಲ. ಈವತ್ತು ಮುಂಜಾನೆ ತೋಟದಲ್ಲಿ ಮರ್ಕುಂಡಿ ಪಬ್ಬು ಪಬ್ಬು ಅಂತ ಏನೋ ಉಳಿದವರ ಹತ್ತಿರ ಹೇಳುತ್ತಿದ್ದುದು ಇದೇ ಅಂತ ಈಗ ತಿಳಿಯಿತು. +ಮಾಂಶಿ ಊಟಕ್ಕೆ ಕರೆದಾಗಲೂ ಗುಂಗು ಬಿಡಲಿಲ್ಲ. ಏನೋ ಕುತೂಹಲ. ನನ್ನಲ್ಲೇ ಸ್ಥಗಿತಗೊಳ್ಳುತ್ತಿದ್ದ ನನಗೆ ಸಂಪರ್ಕಕ್ಕೆ ಈಗ ಹೊಸದೊಂದು ಆಯಾಮ ಸಿಕ್ಕೀತೆನ್ನುವ ತವಕ. ಏನೊ ಒಂದು ರೀತಿಯ ಉದ್ವೇಗದಲ್ಲಿ ಊಟವೂ ಸರಿಯಾಗಿ ಸಾಗಲಿಲ್ಲ. +ಊತ ಮಾಡಿದವನೇ ಧಕ್ಕೆಗೆ ಹೋದೆ. ಜೆಟ್ಟಿಗೆ ಕಟ್ಟಿದ ಲಾಂಚು ದೋಣಿ ಜಂಗಲ್ಲುಗಳ ನೀರಿನ ಅಲೆಗೆ ನಡುಗುತ್ತಿದ್ದವು. ದೂರದ ಸೇತುವೆಯ ಕಂಬಗಳು ಅವುಗಳನ್ನು ಹೆದರಿಸುತ್ತಿದ್ದಂತೆ ನನಗನಿಸಿತು. ನಾನು ಕಲಿತೆ-ಒಂದಿಷ್ಟು ವರ್ಷ ಶಿರಸಿಯಲ್ಲಿ ಕಳೆದೆ. ಆದರೂ ನನ್ನ ನೆನಪಿನ ಕೇಂದ್ರಗಳನ್ನು ಇಷ್ಟು ಜಗ್ಗುವ ಪಬ್ಬೂನ ತಲೆಯಲ್ಲಿ ನಾನು ಇದ್ದೇನೆಯೇ?-ಸೇತುವೆಯ ಮೇಲೆ ಕಂಬಗಳ ನಡುವೆ ಒಂದೊಂದೇ ಸ್ಲ್ಯಾಬುಗಳನ್ನು ಹಾಕುತ್ತಿದ್ದರು. ಇನ್ನೊಂದೆರಡು ತಿಂಗಳಲ್ಲಿ ಸೇತುವೆ ಪೂರ್ಣವಾದೀತೇನೋ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. +“ರಾಯರೇ”- ಅಂತ ಕರೆದಂತಾಯಿತು. +ದಂಡು ಅಪರೂಪಕ್ಕೆ ಮಾತನಾಡಿದ್ದ. ಆ ಪಟ್ಟ ನನಗೆ ಸೇರಲಿಲ್ಲ. +“ನಮ್ಮ ಪಬ್ಬೂ ಬಂದಾನೆ ನಿನ್ನೆ ರಾತ್ರಿ. ನಿಮಗೆ ಸಿಕ್ಕಿದ್ದನೋ?” ಅಂದ. “ಇಲ್ಲವಲ್ಲ ಹೌದೆ?”-ಅಂತ ಪಕ್ಕಾ ‘ರಾಯ’ನಂತೆ ಹೇಳಿ “ಅವನಿಗೆ ನಮ್ಮ ಮನೆಗೆ ಬರಲಿಕ್ಕೆ ಹೇಳು” ಅಂದೆ. “ನೀನು ಆರಾಮೋ?”-ಎಂದೆ. “ಏನೋ ನಡದದೆ. ಬ್ರಿಜ್‌ನಲ್ಲಿ ಸಿಮೆಂಟು ಕಲಸೋ ಮಶಿನ್ನಿನಲ್ಲಿ ಕೆಲಸಕ್ಕೆ ಹೋಗುತ್ತೇನೆ”-ಎಂದ. +ಮನೆಗೆ ಬಂದಾಗ ನನ್ನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಪಬ್ಬೂ-ಅರ್ಥಾತ್ ಪ್ರಭಾಕರ ದಂಡೂ ಹರಿಕಾತ್-ನನ್ನ ಕೋಣೆಯಲ್ಲಿ ಕೂತಿದ್ದ. ಇಷ್ಟು ಬೇಗ ಅವ ಬಂದನು ಅಂತ ನಾನೆಣಿಸಿರಲಿಲ್ಲವಾದ್ದರಿಂದ ಅವನನ್ನು ಎದುರಿಸುವ ಯಾವ ಮನೋಸಿದ್ಧತೆಯಲ್ಲೂ ನಾನಿರಲಿಲ್ಲ. ಹೀಗಾಗಿ- “ಬಂದೆ” ಅಂತ ಹೇಳಿ ಸೀದ ಒಳಗೆ ಹೋದೆ. ದೇವರ ಕೋಣೆಯಲ್ಲಿ ಊದುಬತ್ತಿ ಹಚ್ಚುತ್ತಿದ್ದ ಮಾಂಶಿ “ನೋಡು ಹೊರಗೆ ಬಂದಿದ್ದಾನೆ ಮಹಾಶಯ” ಅನ್ನೋ ರೀತಿ ಮುಖಚರ್ಯೆ ಸನ್ನೆ ಮಾಡಿದ್ದು ನನಗೆ ಸರಿ ಕಾಣಲಿಲ್ಲ. “ಚಾ ಮಾಡು” ಅಂತ ಹೇಳಿ ಹೊರಬಂದೆ. +“ನೆನಪುಂಟೋ ಆನಂದ್, ನಾನು ಪಿ.ಡಿ. ಹರಿಕಾಂತ್”-ಬೆವರಿನ ವಾಸನೆ ಹೊಡೆಯುವ ಹಳದಿ ಟೆರಿಲೀನ್ ಅಂಗಿ, ಪ್ಯಾಂಟ್‌ನಲ್ಲಿ ಪಬ್ಬೂ ಬಾಯ್ತುಂಬ ನಕ್ಕು ನುಡಿದ. ನನಗೆ ಸಂತೋಷವಾಯಿತು. “ಅರೆರೆರೆ ಏನು ಮಾರಾಯಾ ಏನು ಕಥೆ?”- ಎಂದೆ. “ನೀವೇ ಹೇಳಬೇಕು”-ಎಂದು ಬಹುವಚನದೊಂದಿಗೆ ಕಸಿವಿಸಿಗೊಳಿಸಿದ. ಒಂದಿಷ್ಟು ಹೊತ್ತು ಮೌನ. ನಂತರ “ನಾನು ಇಷ್ಟು ದಿವಸ ಎಲ್ಲಿ ಓಡಿ ಹೋಗಿದ್ದೆ ಅಂತ ನೀವು ಕೇಳಲೇ ಇಲ್ಲವಲ್ಲ. ಹೆದರಿಕೆಯ?” ಅಂದ.ಈ ಸರಣಿಗೆ ತಡವರಿಸಿ “ಅರೆ ಹೌದಲ್ಲ-ಏನು ನಿನ್ನ ಕಾರಬಾರು?”- ಎಂದೆ. ಎಷ್ಟು ಬಹುವಚನ ಕೊಡಬೇಕೆಂದುಕೊಂಡರೂ ತುಟಿಯಿಂದ ಜಾರುವುದರೊಳಗೆ ನನ್ನನ್ನೂ ಮೀರಿ ಅದು ಏಕವಚನವಾಯಿತು. +ಅವನು ಇಲ್ಲಿಂದ ಹೊನ್ನಾವರ ತೇರಿಗೆ ಹೋದವನಂತೆ-ಬ್ರಿಜ್ಜಿನಲ್ಲಿ ಮೇಸ್ತ್ರಿಯಾಗಿದ್ದ ಕುರುಯನ್ ಎಂಬವ ಇವನಿಗೂ ಇವನ ಜತೆಗಿನ ಸುಮಾರು ಏಳೆಂಟು ಇಲ್ಲಿಯದೇ ದೀವಗಿ ಮಣಕಿ ಆಸುಪಾಸಿನ ಹುಡುಗರಿಗೂ-ಚಲೋ ನೌಕರಿ ಕೊಡಿಸುತ್ತೇನೆ ಅಂತ ಹೇಳಿ ಬಾಂಬೇಗೆ ಕರಕೊಂಡು ಹೋದನಂತೆ. (ತೇರಿಗೆ ಹೋಗುವ ಮೊದಲೇ ಎಲ್ಲರಿಗೂ ಇಂತಿಂಥ ಜಾಗದಲ್ಲಿ ಸಿಕ್ಕಬೇಕು ಎಂದಿದ್ದನಂತೆ. ತೇರಿನಲ್ಲಿ ಪಬ್ಬೂ ನನ್ನನ್ನೂ ಮಾಂಶಿಯನ್ನೂ ನೋಡಿದ್ದನಂತೆ. ನನಗೆ ಹೇಳಬೇಕು ಅಂದುಕೊಂಡಿದ್ದನಂತೆ.) ಬಾಂಬೇದಲ್ಲಿ ಯಾವುದೋ ಕಂಪನಿಯಲ್ಲಿ ಕಳವು ಮಾಲುಗಳನ್ನು ಮಾರುವ ಏಜೆಂಟರಾಗಿ ಇಟ್ಟುಕೊಂಡರಂತೆ. ಹೊಟ್ಟೆಗೂ ಸರಿ ಕೊಡುತ್ತಿರಲಿಲ್ಲ. ಮೇಲಾಗಿ ಪೋಲೀಸರ ಕೈಯಲ್ಲಿ ಪದೇ ಪದೇ ಪೆಟ್ಟು ತಿನ್ನಬೇಕಾಗುತ್ತಿತ್ತು. ಒಮ್ಮೆ ತಪ್ಪಿಸಿಕೊಂಡು ಓಡಿಹೋಗಿ ಯಾವುದೋ ಮರಾಠಿಗರ ಮನೆಯಲ್ಲಿ ಚಪಾತಿ ಮಾಡುವುದು, ಮಸಾಲೆ ಅರೆಯುವುದು, ಭಾಂಡಿ ತೊಳೆಯುವುದು ಕೆಲಸಕ್ಕೆ ಸೇರಿಕೊಂಡನಂತೆ. ತುಂಬ ಒಳ್ಳೆಯವರಿದ್ದರು. ಗಂಡ ಹೆಂಡತಿ ಪರಸ್ಪರ ಸರಿ ಇರಲಿಲ್ಲ. ಒಂದು ಮಗು ಇತ್ತು. ಅದನ್ನೂ ಅವ ಆಡಿಸುತ್ತಿದ್ದ. ಒಂದು ದಿನ ಮಗು ಹಾಲಿಗಾಗಿ ಅಳುತ್ತಿತ್ತು. ಇವನೆದುರಿಗೇ ತಾಯಿ ಬಂದು ಪೋಲಾಕು ಎತ್ತಿ ಹಾಲುಣಿಸಿ ನಂತರ ತಕ್ಷಣ ಮಗುವನ್ನು ಬದಿಗಿಟ್ಟು “ತುಲಾ ಪಾಯಜೆ ಕಾ?” ಅಂತ ಇವನ ಮುಖವನ್ನು ಎದೆಗೊತ್ತಿಸಿಕೊಂಡು ಗಟ್ಟಿ ಅಪ್ಪಿ ಉರುಳಾಡಿಸಿ ಮುತ್ತಿಟ್ಟಳಂತೆ. ಅವತ್ತಿನಿಂದ ಅದೇ ಅಭ್ಯಾಸ ಆಯಿತಂತೆ. ಒಂದು ದಿನ ಯಜಮಾನ ನೋಡಿ ಇವನನ್ನು ಚೆನ್ನಾಗಿ ಹೊಡೆದು ಮನೆಯಿಂದ ಹೊರಹಾಕಿದನಂತೆ. ಅಲ್ಲಿಂದ ನಂತರ ಬೇರೆ ಬೇರೆ “ಬಿಸಿನೆಸ್” ಮಾಡಿದನಂತೆ. ಆದರೂ ಹೆಂಗಸರ ಹುಚ್ಚು ಹಿಡಿಯಿತಂತೆ. +ಈ ಹುಚ್ಚಿನ ಶಮನದ ವರ್ಣನೆ ಮಾಡಿಯಾನು ಅಂತ ಹೆದರಿ ನಾನು ವಿಷಯ ಬದಲಿಸಲು ಯತ್ನಿಸುತ್ತಿದ್ದು ಅವನಿಗೆ ತಿಳಿಯಿತು “ನಿನಗೆ ಹಲ್ಕಟ್ ವಿಷಯಗಳು ಹಿಡಿಸುವುದಿಲ್ಲ ಅಥವಾ ನಿನಗೆ ಚಲೋ ಹಿಡಿಸುತ್ತದೆ ನಿನ್ನ ಮಾಂಶಿಗೆ ಹಿಡಿಸುವುದಿಲ್ಲ ಅಲ್ಲವೆ?” ಅಂದ. ಮಾಂಶಿ ಒಳಬಾಗಿಲಲ್ಲಿ ಕೆಮ್ಮಿದಾಗ ಚಾ ತಂದು ಇವನಿಗೆ ಕೊಟ್ಟೆ. “ಇಲ್ಲೇ, ನಿನ್ನ ಮಾಂಶಿಯ ತೋಟ ಕಾಯುವ ಗತಿ ಬಂತಂತಲ್ಲ ನಿನಗೆ”-ಅಂದ. “ಕ್ಯಾರ್‌ಫ್ರೀ” ರೀತಿಯಲ್ಲಿ ಅವನು ಮಾತನಾಡುತ್ತಿದ್ದ. ಬಾಲ್ಯದ ಪಬ್ಬು ನನಗೆ ಅವನ ಮಾತಿನಲ್ಲಿ ಸಿಕ್ಕುವುದು ತುಂಬಾ ದುಸ್ತರವಾಯಿತು. “ನಾನೀಗ ಬಿಸಿನೆಸ್ ಮೇಲೆ ಬಂದಿದ್ದೇನೆ ಅಂತಿಟ್ಕೋ”- ಎಂದ. ಹಠಾತ್ತನೆ ಈಗ ದೀವಗಿಗೆ ಬಂದ ಕಾರಣ ಏನು ಅಂತ ಕೊನೆಗೂ ನನಗೆ ತಿಳಿಯಲಿಲ್ಲ. ಚಾ ತಣಿದ ಮೇಲೆ ಒಂದೇ ಉಸಿರಿಗೆ ಗಟಗಟ ಕುಡಿದು ಕೆಳಗಿಟ್ಟ. “ಲೋಟ ತೊಳೆದಿಟ್ಟು ಹೋಗಲು ಹೇಳು” ಅಂತ ಮಾಂಶಿ ಬಾಗಿಲಲ್ಲಿ ಗೊಣಗಿದಳು. ಅವನಿಗದು ಕೇಳಿಸಲಿಲ್ಲ. ನನಗೆ ತುಂಬಾ ದುಃಖವಾಯಿತು. ಪಬ್ಬು ಎದ್ದು “ನಿನ್ನ ಹತ್ತಿರ ಬಹಳ ಮುಖ್ಯವಾದ ವಿಚಾರ ಮಾತನಾಡಬೇಕು. ನಾಳೆ ಬೆಳಿಗ್ಗೆ ಧಕ್ಕೆಯ ಹತ್ತಿರ ಸಿಗು ಅಥವಾ…” ಅನ್ನುವಷ್ಟರಲ್ಲೇ “ನಾನು ನಿಮ್ಮ ಮನೆಗೇ ಬರ್ತೇನೆ” ಅಂತ ಹೇಳಿದೆ. ಹೊರಟು ನಿಂತವ, “ಲೋಟ ತೊಳೆಯಲೆ?”-ಎಂದ. ಈ ಪ್ರಶ್ನೆಯ ಹಿಂದಿನ ಪಬ್ಬುವಿನ ಬಗ್ಗೆ ಕನಿಕರ ಎನಿಸಿತು. “ಛೆ, ಛೆ, ಹಾಗೇನಿಲ್ಲ. ಹೋಗು”-ಅಂದೆ. ‘ನಿನ್ನ ಮಾಂಶಿಗೆ ಹೇಳು” ಅಂತ ಹೇಳಿ ಹೋದ. ಮಾಂಶಿಯ ನಡವಳಿಕೆಯಿಂದ ನನಗಾದ ನೋವಿನ ಬಗ್ಗೆ ಪ್ರತಿಭಟನೆ ಸೂಚಿಸಿದರೆ ಅದರ ಪರಿಣಾಮ ಅವಳ ಮೇಲೆ ಆಗುವುದೂ ಇಲ್ಲ ಅನಿಸಿ ಲೋಟವನ್ನು ನಾನೇ ತೊಳೆದು ಒಳಬಂದು ಇಟ್ಟು ‘ಅವನೇ ತೊಳೆದ’ಅಂತ ಒತ್ತಿ ಹೇಳಿದೆ. +ಮಲಗುವ ಮುನ್ನ ಮಾಂಶಿ ಉದ್ದೇಶಪೂರ್ವಕವಾಗಿಯೇ ಎಂಬಂತೆ “ಆನಂದೂ, ಈ ಪಬ್ಬೂನ ತಂಗಿ ಗಂಗೆ ಈಗ ಇಲ್ಲಿ ಭಾರಿ ಧಂದೆ ಮಾಡ್ತಾಳಂತೆ” ಅಂತ ಹೇಳಿದಳು. ಅವಳು ಯಾಕೆ ಹಾಗೆ ಹೇಳಿದಳೋ ಅಂತ ನನಗೆ ತಿಳಿಯಲಿಲ್ಲ. ಸ್ವಲ್ಪ ವಿಚಾರ ತರ್ಕ ಮಾಡಿದರೂ ತಿಳಿಯುವ ಸಾಧ್ಯತೆ ಇದ್ದರೂ ಅದನ್ನು ತಿಳಿಯಬೇಕೆಂಬ ಛಲ ನನ್ನಲ್ಲಿ ಇರಲಿಲ್ಲ. ಗಂಗೆಯ ಬೆಳೆದಿರಬಹುದಾದ ದೇಹ ನಿದ್ದೆಗೆ ಮುನ್ನ ಕೆಲ ಹೊತ್ತು ನನ್ನನ್ನು ಸತಾಯಿಸಿತು. +ಬೆಳಿಗ್ಗೆ ಅವನ ಮನೆಗೆ ಹೊರಟಾಗ ನಡುದಾರಿಯಲ್ಲೇ ಪಬ್ಬು ಒಂದಿಷ್ಟು ಜನರ ಜತೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದ. “ನಾವೆಲ್ಲ ಹೋರಾಡಬೇಕು, ಇಲ್ಲವಾದರೆ ಊರು ಹಾಳಾಗುತ್ತದೆ”-ಅಂತ ಹೇಳುತ್ತಿದ್ದ. ‘ಆನಂದ್, ಮನೆಗೆ ಹೋಗುವಾ” ಅಂತ ಹೇಳಿ ನನ್ನೊಡನೆ ಹೊರಟ. ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅವನನ್ನು ಇಷ್ಟು ಗಂಭೀರ ನಿಲುವಿನಲ್ಲಿ ನೋಡುತ್ತಿದ್ದೆ. “ನೋಡಿ, ನೀವೀಗ ಒಂದು ಅರ್ಜಿ ಬರೆದುಕೊಡಬೇಕು. ಈಗ ಆಗಲಿರುವ ಬ್ರಿಜ್ಜು ದೀವಗಿಯನ್ನು ಮೂಸಿ ಕೂಡ ನೋಡುವುದಿಲ್ಲ. ಆ ರಾಷ್ಟ್ರೀಯ ಹೆದ್ದಾರಿ ಅನ್ನೋದು ಆ ಕಡೆಯೇ ಹೋಗುತ್ತದೆ. ಇಷ್ಟು ದಿನ ಇಲ್ಲಿ ನಿಲ್ಲುವ ಬಸ್ಸುಗಳು ಅವುಗಳ ಪ್ರಯಾಣಿಕರು ಇವರನ್ನೆಲ್ಲ ನಂಬಿಕೊಂಡು ಬದುಕಿದ ಇಲ್ಲಿ ಜನಗಳಿಗೇನಾಗಬೇಕು? ಜಂಗಲ್‌ಗಳನ್ನು ನೂಕಿದ, ಲಾಂಚುಗಳನ್ನು ನಡೆಸಿದ, ಅಲ್ಲಿ ಸೋಡಾ ಮಾರಿದ-ಜನಗಳ ಗತಿ ಏನು? ಇದೇ ಜನ ಬೇವರ್ಸಿ ಜನ ನಾಳೆಯ ಕಲ್ಪನೆ ಇಲ್ಲದವರು-ಅಲ್ಲಿ ಬ್ರಿಜ್ಜು ಬ್ರಿಜ್ಜು ಎಂದು ಸಾಯಲು ಹೋಗುತ್ತವೆ ಗೇಯುತ್ತವೆ. ನನ್ನ ಅಪ್ಪ ದಂಡೂ ಸಹ ಅಲ್ಲಿ ಸಿಮೆಂಟು ಹೊರಲು ಹೋಗ್ತಾನೆ. ದಮ್ಮಿನ ಮುದುಕ ಪುರುಷೋತ್ತಮ ಅಲ್ಲಿ ಗೇಯಲು ಹೋಗುತ್ತಾನೆ. ಅಲ್ಲಾ-ಇವರನ್ನೆಲ್ಲಾ, ಬ್ರಿಜ್ಜು ಸಂಪೂರ್ಣ ಆದಮೇಲೆ ಯಾರು ಕೇಳುತ್ತಾರೆ? ಆಮೇಲೆ ಇವರ ಕೂಳಿಗೆ ಗತಿಯೇನು?” +ನದಿಯ ಅಗಲಕ್ಕೂ ಕಾವಲುಗಾರನಂತೆ ನಿಂತ ದೂರದ ದೊಡ್ಡ ದೊಡ್ಡ ಸೇತುವೆ ಕಂಬಗಳನ್ನು ನೋಡುತ್ತ ನಡೆಯುತ್ತಿದ್ದ ನನಗೆ ಒಮ್ಮೆಗೇ ಪಬ್ಬೂನ ಈ ಹೊಸ ಖರೇ ಮಾತುಗಳಿಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಪಬ್ಬೂ ನಿಜವಾದ ಅಪಾಯವೊಂದನ್ನು ಹೇಳುತ್ತಿದ್ದಾನೆ ಅನಿಸಿದರೂ ಇಷ್ಟು ದಿನದ ನನ್ನ ಮನಸ್ಸಿನಲ್ಲಿಯ ಅವನ ಸ್ವರೂಪದ ಪ್ರಭಾವವೋ ಏನೋ ಅವನನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಳ್ಳಲು ನನಗೆ ತುಸು ಕಷ್ಟವಾಯಿತು. +ಅವನ ಮನೆ ತಲುಪಿದಾಗಂತೂ ನನ್ನ ಎದೆಯೇ ಒಡೆದಂತಾಯಿತು. ಹಿಂದೆ ಪಬ್ಬೂ ಓಡಿ ಹೋದ ದಿವಸ ಪುಸ್ತಕ ತಗೊಂಡು ಹೋಗಲು ನಾನು ಬಂದಾಗಿನ ಮನೆಯೇ ಒಮ್ಮೆಲೇ ಚಿಕ್ಕದಾದಂತೆ ಕಂಡಿತು. ಹರಕು ಛಾವಣಿ-ಬಗ್ಗಿ ಒಳಹೊಕ್ಕೆ. ಕತ್ತಲೆ ಬಿಕೋ ವಾಸನೆ ಹೊಡೆಯುತ್ತಿತ್ತು. ಒಳಗೆ ಸಿಂಗಾರಿ ಅಂದರೆ ಪಬ್ಬೂನ ತಾಯಿ ಏನೋ ಸ್ವಗತದಲ್ಲಿ ಬಡಬಡಿಸುತ್ತಿದ್ದಳು. ಬಹುಶಃ ಪಬ್ಬು ಒಳಗೆ ಹೋಗಿ ನಾನು ಬಂದ ಬಗ್ಗೆ ಹೇಳಿದ. ಆಕೆ ಒಮ್ಮೆಗೇ “ನಾನೇನು ಮಾಡಲಿ? ಅಂವಾ ಬಂದ್ರೆ ನಾ ಏನ್ ಮಾಡ್ಲಿ?” ಎಂದು ಎತ್ತರ ಸ್ವರದಲ್ಲಿ ಬಡಬಡಿಸಿದಳು. ಪಬ್ಬು ಒಳಗಿಂದ ಮಣ್ಣಾದ ಮಾಸಲು ಬಿಳೀ ಕಾಗದ, ಒಂದು ಎಣ್ಣೆ ಹಿಡಿದ ಪೆನ್ಸಿಲ್ ಕೊಟ್ಟು-“ಒಂದು ಅರ್ಜಿ ಬರೆದುಕೊಡು ಇಂಗ್ಲೀಷಿನಲ್ಲಿ” ಎಂದ. “ಇಲ್ಲಿಯ ಜಂಗಲ್‌ದಾರರಿಗೆ, ದೋಣಿ ಹಾಕುವವರಿಗೆ, ಲಾಂಚಿನವರಿಗೆ, ಚಾ ಅಂಗಡಿಯವರಿಗೆ, ಧಕ್ಕೆಯಲ್ಲಿ ಬಿಕ್ಕೆ ಬೇಡುತ್ತಿದ್ದವರಿಗೆ-ಬೇರೆ ಉದ್ಯೋಗ ಕೊಡಬೇಕು”-ಅಂದ. ಇಷ್ಟರಲ್ಲಿ ಅನಿರೀಕ್ಷಿತವಾಗಿ ಗಂಗೆ ಮನೆ ಹಿಂದುಗಡೆಯಿಂದ ಓಡಿ ಬಂದಳು. ಜತೆಗೆ ಒಂದಿಷ್ಟು ಪ್ರಾಯದ ಹುಡುಗೀರು ಇದ್ದರು. ಪಬ್ಬೂ ಎದುರಿಗೆ ಅವರೆಲ್ಲರನ್ನೂ ನೋಡಲು ನನಗ್ಯಾಕೆ ಹಿಂದೇಟಾಗಬೇಕೆಂದು ನನಗೇ ಅರ್ಥವಾಗಲಿಲ್ಲ. ಗಂಗೆ ಮಾಸಲು ಸೀರೆಯೊಳಗೆ ನೀಲಿ ಕಿರಗಣಿ ಹಾಕಿದ್ದಳು. ಅವಳ ಪಲಕಿ ಅವಳ ಕೊಬ್ಬಿನೊಂದಿಗೆ ಸೆಣಸುತ್ತಿತ್ತು. ಉಳಿದವರೂ ಅಷ್ಟೇ. “ಅಣ್ಣೋ-ಇವರು ನಿನ್ನ ಆನಂದ ಅಲ್ವೇನೋ” ಅಂತ ರಾಸೋರಾಸಾಗಿ ಅಂದು ಕಿಸಿಕಿಸಿ ನೆಗಾಡಿದಳು. “ನೀವು ಅರ್ಜಿ ಬರೆದು ನಾಳೆ ಬೆಳಗಾ ಮುಂಚೆ ಕೊಡಿ” ಅಂದ. ಎಲ್ಲಾ ನಾಳೆಯೇ ನಿರ್ಧಾರ ಆಗಿ ಕ್ರಾಂತಿ ಮುಂದುವರೆಸುವವನಂತೆ ಕಂಡ. ಅಂಗಳದಲ್ಲೇ ನಿಂತಿದ್ದ ಗಂಗೆ ವೈಯ್ಯಾರದ ನಗೆಯಲ್ಲಿ ನುಂಗುವಂತೆ ನೋಡುತ್ತಿದ್ದಾಗ ಧಂದೆಯವಳಂತೆ ಕಾಣುವುದೇನೋ ಹೌದಾಗಿತ್ತು. ಪಬ್ಬು ಚೇರಮನ್ ಪ್ರಯೋಜನ ಇಲ್ಲ-ಹಾಗೆ-ಹೀಗೆ-ಅಂತ ಏನೇನೋ ಹೇಳುತ್ತಿರುವಾಗ ಗಂಗೆ ಉಳಿದವರನ್ನು ಕಳಿಸಿ ಒಳಬಂದು ಏನೋ ಲಲ್ಲಾಲ ಮಾಡುತ್ತ ಕೂದಲು ಬಾಚಿಕೊಳ್ಳಲಾರಂಭಿಸಿದಳು. ನನ್ನೆದುರಿಗೇ, ಬೇಕಂತಲೇ ಒಮ್ಮೆ ಬಾಚಣಿಗೆ ಕೆಳಗೆ ಬೀಳಿಸಿ ಬಳಕ್ಕನೆ ಬಗ್ಗಿ ಅಲ್ಲಾಡಿ ಎತ್ತಿಕೊಂಡಾಗಲಂತೂ ನನ್ನ ಗುಂಡಿಗೆ ಬಾಯಿಗೇ ಬಂತು. ಕನಸುಗಾರಿಕೆಯಲ್ಲೇ ಇರುತ್ತಿದ್ದ ನಾನು ಎದುರಿನ ದೃಶ್ಯವನ್ನು ನೋಡಲೂ ಹೆದರುವಷ್ಟು ಪುಕ್ಕನಾಗಿದ್ದೆ. +ಇದೆಲ್ಲ ನಡೆದಾಗಲೂ ಪಬ್ಬೂವಿನ ಮಾತು ನಡೆದಾಗಲೂ ಮನೆಯೊಳಗಿನಿಂದ ಅವನ ತಾಯಿಯ ನಿರಂತರ ರಂಡೆ, ನೀಚ, ಭೋಸಡೀಕೇ ಮುಂತಾದ ಮಾತುಗಳು ನಡೆದೇ ಇದ್ದವು. “ನಿನ್ನ ತಾಯಿಗೆ ಆರಾಮವಿಲ್ಲವೆ?”-ಎಂದೆ. ಪಬ್ಬು ತೀರಾ ನಿರ್ವಿಕಾರನಾಗಿ “ಹೌದು ಹಿಂದಿನ ಮೇಸ್ತ್ರಿಯೇನೋ ಊಟಕ್ಕೆ ಬರ್ತಿದ್ದ. ಸೀರೆಗೀರೆ ಏನೂ ಕೊಡದೇ ಹೋದನಂತೆ. ಅಪ್ಪ ಪ್ರತೀದಿನವೂ ಹೊಡೀತಿದ್ದ. ಮಳ್ಳು ಹಿಡಿದೇ ಮತ್ತೇನಾಗೂದು?” ಎಂದ. ಇದಕ್ಕೆ ಪೂರಕವೆಂಬಂತೆ ಗಂಗೆ ಹಿಹಿಹಿ ನೆಗಾಡಿದಳು. ಎದೆ ಧಸ್ಸೆಂದಿತು. ಇದನ್ನೆಲ್ಲ ಒಪ್ಪಿಕೊಳ್ಳುವುದೇ ಕಷ್ಟವಾಯಿತು. ಪಬ್ಬು ಯಾಕೋ ಎದ್ದು ಒಳಹೋದ. ಎದುರಿಗಿದ ಗಂಗೆ ಕೆಂಪು ತುಟಿಯಲ್ಲಿ ವಿಚಿತ್ರ ನಕ್ಕು ಬಾ ಅನ್ನುವಂತೆ ಸನ್ನೆ ಮಾಡಿ ಕಣ್ಣು ಹೊಡೆದಳು. ಮೈಯೆಲ್ಲ ಹೆದರಿಕೆಯಿಂದ ಕಂಪಿಸಿ ಚೆಪ್ಪೆನಗು ನಕ್ಕು “ಪಬ್ಬೂ ಬರ್ತೇನೊ” ಅಂತ ತೊದಲಿ ಹೇಳಿ ಎದ್ದು ಸರಸರ ಬಂದುಬಿಟ್ಟೆ. +ಮನೆಗೆ ಬಂದರೂ ಕನಸೋ ಅನಿಸುವಂಥ ಅವನ ಮನೆಯ ವಿಚಿತ್ರ ವಾತಾವರಣ, ಗಂಗೆ, ಅವನ ತಾಯಿ ಇವುಗಳ ವಿಚಿತ್ರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಊಟ ಮುಗಿಸಿ ಮಲಗಿದಾಗಲೂ ಆ ಗಂಗೆಯ ಅಮಾಯಕ ಹಿಡಿತದ ಕಣ್ಣು, ಹೆಣ್ಣು ಗಂಡಿನ ಮಧುರ ಬಾಂಧವ್ಯದ ಸಿಹಿಯನ್ನೇ ಸುಳ್ಳಾಗಿಸುವಂತೆ ಅವಳು ಬಗ್ಗಿ ಪ್ರದರ್ಶಿಸಿದ ನುಗ್ಗಿನುಗ್ಗಿ ಬರುವ ಮೊಲೆಗಳು-ಕಣ್ಣಿಗೆ ಬಂದು ಬಂದು ಅಪ್ಪಳಿಸಿದವು. +ಬೆಳಿಗ್ಗೆ ಉರಿಯುವ ಕಣ್ಣುಗಳಲ್ಲಿ ಚಾ ಕುಡಿಯುವಾಗ ಮಾಂಶಿ “ಪಬ್ಬು ಕುಡಿಯುವುದನ್ನು ಕಲಿತಿದ್ದಾನಂತೋ. ಬೊಂಬಾಯಿಯಲ್ಲಿ ಇಲ್ಲದ ಚಾಳಿಯೂ ಇತ್ತಂತೆ” ಅಂತ “ಅವನ ಜಾಸ್ತಿ ವೈವಾಟು ನಿನಗೆ ಬೇಡ” ಅನ್ನೋ ಧ್ವನಿಯಲ್ಲಿ ಹೇಳಿದಳು. ಸುಮ್ಮನೆ ಇದ್ದೆ. ಈ ಮಾಂಶಿಯ ಸಂಕಷ್ಟಿ ಏಕಾದಶಿ, ಹೊಸೆಯುವ ಬತ್ತಿ, ಭಜನೆ, ಗೇರುಸೊಪ್ಪೆಯ ನನ್ನ ಅಮ್ಮ, ಅವಳ ವಟಸಾವಿತ್ರೀ ವ್ರತ, ಮಕ್ಕಳನ್ನು ಪಡೆದ ಧನ್ಯತೆ, ಮನೆ ಕೊಟ್ಟಿಗೆ, ಹಾಲು ಹುಣ್ಣಿಮೆ, ತುಳಸೀ ಹಬ್ಬ, ಅವಲಕ್ಕಿ ಕಾಯ್‌ಬಾಗ, ಹರಕೆ ನಿದ್ದೆ, ಆಶಿರ್ವಾದಗಳಿಗೆ ಮತ್ತು ಪಬ್ಬೂನ ತಾಯಿ, ಮೇಸ್ತ್ರಿ, ಗಂಗೆ, ಧಂದೆ, ಪಬ್ಬೂನೇ ಅವನ್ನೆಲ್ಲ ಹೇಳುವದು-ಇವುಗಳಿಗೆ ತಾಳೆಗೂಡದೆ ಒದ್ದಾಡಿದೆ. +ತೋಟಕ್ಕೆ ಬಂದ ಮರ್ಕುಂಡಿ, ಬ್ರಿಜ್ ಆದಮೇಲೆ ಶ್ರೀಧರ ಕಮ್ತೀರು ಚಾ ಅಂಗಡಿಯನ್ನು ಕುಮಟೆಗೇ ಒಯ್ಯುತ್ತಾರೆಂದೂ, ದಾಮೋದರ ಪ್ರಭುಗಳು ಶಿರಸಿಗೋ ಮತ್ತೆಲ್ಲಿಗೋ ಹೋಗುತ್ತಾರೆಂದೂ ಗೊಣಗೊಣ ಮಾಡಿದ. ಆದರೂ ಶೆರೆ ಅಂಗಡಿ ಶಕೂರ ಸ್ವಾಬ ಮಾತ್ರ ಇಲ್ಲಿಯೇ ಇರ್ತಾನಂತೆ-ಅಂತ ಧನ್ಯತೆಯಿಂದ ಹೇಳಿ ಕೃತಾರ್ಥನಾದ. +ಧಕ್ಕೆಗೆ ಹೋಗಿ ಸುಮ್ಮನೇ ನಿಂತಿದ್ದೆ. ಪಬ್ಬು ನಮ್ಮನೆಗೆ ಹೋಗಿದ್ದವ ನನ್ನನ್ನೂ ಕಾಣದೆ ಅವಸರವಸರದಿಂದ ಇಲ್ಲಿಗೇ ಬಂದ. ಧಾಪುಗಾಲಿನಲ್ಲಿ ಬಂದವನೇ “ಅರ್ಜಿ ಬರೆದಾಯ್ತೋ?” ಎಂದ. “ಇಲ್ಲವಲ್ಲ ಪಬ್ಬೂ, ಅದನ್ನ ಯಾರಿಗೆ ಅಂತ ಬರಿಯೂದು…” ಅಂತ ಹೇಳುವಷ್ಟರಲ್ಲೇ ತಾರಕ ಸ್ವರದಲ್ಲಿ “ನಿಮ್ಮ ಹಣೆಬರಹವೇ ಅಷ್ಟು. ನೀವು ಖಂಡಿತಾ ಅದನ್ನು ಬರೆಯುವುದಿಲ್ಲವೆಂದು ಗೊತ್ತಿತ್ತು.. ನಮ್ಮ ಕಷ್ಟ ಸುಖ ನಿಮಗೆ ಹೇಗೆ ತಿಳಿದೀತು?” ಅಂತ ಕೂಗಿದ. ಸಾರ್ವಜನಿಕ ಪ್ರದರ್ಶನವಾದೀತೆಂಬ ಭಯದಿಂದ ಅವನನ್ನು ತುರುಬಿಕೊಂಡು ಮನೆಯ ಕಡೆ ಹೊರಟೆ. ಸಮಾಧಾನ ಮಾಡಿದೆ. ತೀರ ಕೃತ್ರಿಮವಾಗಿ ರಾಜಕಾರಣಿಯಂತೆ ಮಾತನಾಡಬೇಡ. ದುಡುಕಬಾರದು ವಿಚಾರ ಮಾಡುವಾ-ಅಂತೆಲ್ಲ ಸಂತೈಸಿದೆ. ಮೆತ್ತಗಾಗಿ ಹುಡುಗನಂತೆ “ಸೊರಿ, ಹಂ?” ಅಂದ. ಆಮೇಲೆ ಡ್ರಿಂಕ್ ಮಾಡಿದ್ದೇನೆ” ಅಂದ. ನನ್ನ ಮಾತಿಗೆಲ್ಲ ಬೇಕಾದ್ದಕ್ಕಿಂತ ಜಾಸ್ತಿ ಮಹತ್ವ ಕೊಟ್ಟು “ಎಸ್, ಎಸ್” ಅನ್ನಲಾರಂಭಿಸಿದ. ಅವನ ಬಳಿ ಮಾತಿಗೆ ಇದು ಸಮಯವಲ್ಲ ಅನಿಸಿ ಅವನನ್ನು ಮನೆಗೆ ಕಳಿಸಿದೆ. +ಅವನ ದೇಹಕ್ಕೆ ಅವನ ಬಾಲ್ಯದ ಮುಖ, ಹೊಸದಾಗಿ ಮೊನ್ನೆ ನಮ್ಮ ಮನೆಗೆ ಬಂದಾಗಿನ ಮುಖ, ಕುಮಟೆ ತೇರಿನಲ್ಲಿ ಶರಬತ್ತು ಕುಡಿಯುತ್ತ ನನ್ನನ್ನು ನೋಡಿದ್ದ ಮುಖ, ನಿನ್ನೆಯ ಸಾಮಾಜಿಕ ಮುಖ ಇವತ್ತಿನ ಮುಖ ಎಲ್ಲ ಸೇರಿ ಒಂದೇ ಮುಖವಾದಂತೆನಿಸಿ ನನ್ನ ಯಾವುದೋ ಅಮೂರ್ತದಲ್ಲಿ ನನಗೆ ಹತ್ತಿರದವನಂತೆ ಅನಿಸಿದ. +ಅನಂತರ ಮೂರು ದಿನ ಪಬ್ಬೂನ ಪತ್ತೆಯೇ ಇರಲಿಲ್ಲ. ನಾನು ಅಷ್ಟು ಉತಾವಳಿ ಕಾಣಿಸಲಿಲ್ಲ. ನಾಲ್ಕನೇ ದಿನ ಬೆಳಿಗ್ಗೆ ಹಾಲು ತಂದ ಮಂಕಾಳಿ “ಸುದ್ದಿ ಗೊತ್ತಾಯ್ತೊ? ಸಿಂಗಾರಿ ಮಗಳು ಗಂಗೆ ಸತ್ತಳಂತೆ” ಅಂದಾಗ ಸ್ತಂಭೀಭೂತನಾದೆ. ಮಾಂಶಿಯೇ ಏನು ಎಂದು ಎಂದು ಚೌಕಾಶಿ ಮಾಡಿದಳು. ಹೊಟ್ಟೆ ತೆಗೆಸಲು ಯಾವುದೋ ಗಾಂವಟೀ ಮದ್ದು ಮಾಡಿದ್ದಳಂತೆ. ಮತ್ತೆ ಯಾವುದೋ ಆಸ್ಪತ್ರೆಗೂ ಹೋಗಿ ಬಂದಿದ್ದಳಂತೆ. ಮೊನ್ನೆ ಹೊಟ್ಟೆ ತುಂಬ ರಶಿಗಿ ಆಗಿ ಬೊಬ್ಬೇ ಹೊಡೆದು, ರಕ್ತ ಹೊರಕಡೆ ಮಾಡಿ ಮಾಡಿ ಕುಮಟೆ ಆಸ್ಪತ್ರೇಲಿ ಸತ್ತಳಂತೆ”-ಎಂದ. ‘ಬ್ರಿಜ್ಜು ಮೇಸ್ತ್ರಿಗಳು, ಮಪ್ಳೇರು-ಎಲ್ಲರದೂ ದೋಸ್ತಿ ಆದ ಮೇಲೆ ಮತ್ತೇನಾಗೂದು?”-ಅಂತ ನಿರ್ಣಯ ಕೊಟ್ಟು ಹೋದ. ಮಾಂಶಿ “ಪಾಪ ಮೊದಲೇ ಮದುವೆ ಮಾಡಿಬಿಟ್ಟಿದ್ದರೆ” ಅಂತೆಲ್ಲ ತನ್ನದೇ ನಮೂನೆಯಲ್ಲಿ ಲೊಚಗುಟ್ಟಿ ನನ್ನ ಮುಖ ಮಿಕಿಮಿಕಿ ನೋಡುತ್ತ ಒಳಹೋದಳು. ಮೊನ್ನೆ ಮೊನ್ನೆ ನಾ ಕಂಡ ಗಂಗೆಯ ನಗೆಯ ಹಿಂದೆ ಎಂಥ ದಿಕ್ಕೆಟ್ಟ ಪರದೇಶಿ ಸಾವು ಹೊಂಚು ಹಾಕಿತ್ತಲ್ಲ. ನಿನ್ನೆ ರಾತ್ರಿ ನನ್ನ ಕನಸಿಗೆ ತಿನಿಸಾಗುತ್ತಿದ್ದವಳೇ ಅಲ್ಲಿ ಸತ್ತೇ ಹೋದಳಲ್ಲ-ಪಾಪ ಅನಿಸಿತು. ಒಂದು ವೇಳೆ ಇದೇ ಒಂದು ಕಾರಣದಿಂದಲೇ ಪಬ್ಬು ಈ ಮೂರು ದಿನ ನನ್ನ ಬಳಿ ಬಂದಿರಲಿಲ್ಲ ಅನ್ನೋದು ಹೌದಾದರೆ-ಅನಿಸಿ ಅವನ ಬಗ್ಗೆ ಕನಿಕರ ಉಕ್ಕಿತು. +ಅದೇ ದಿವಸವೇ ಸಂಜೆ ಪಬ್ಬು ಬಂದ. ಹಿತ್ತಿಲಲ್ಲಿ ನಿಂತೇ “ಆನಂದಾ” ಅಂದ. ಇಬ್ಬರೂ ಕೂಡಿ ನಮ್ಮ ಪಂಪ್‌ಸೆಟ್ ಕಡೆ ಹೊರಟಾಗ “ಸಿದ್ದೀ ತಿಳೀತು. ಅದು ಹೇಗೆ ಹಾಗಾಯಿತು?” ಅಂದೆ. “ಯಾವ ಸುದ್ದಿ?” ಅನ್ನೂ ರೀತಿ ನೋಡಿ “ಓಹೋ ಗಂಗೆದೋ” ಅಂದು ಒಂದು ನಿಮಿಷ ಸುಮ್ಮನಾದ. ‘ಮತ್ತೇನಾದೀತು?”-ಅಂದ. ಆಮೇಲೆ “ಖರೇ ಹೇಳು, ಆ ದಿನ ನೀನು ನಮ್ಮನೇಗೆ ಬಂದಾಗ ನಾನು ಇಲ್ಲ, ಅವ್ವಿನೂ ಇಲ್ಲ. ಬರೀ ನೀನು ಗಂಗೆ ಇದ್ರಿ ಅಂತಿಟ್ಕೋ, ಆಗ ಏನು ಆಗುತ್ತಿತ್ತು?”-ಎಂದ. ನನ್ನ ಬಾಯಿ ಮುಚ್ಚಿತ್ತು. ಅವನೇ ಮುಂದುವರಿಸಿ “ಊರಲ್ಲೆಲ್ಲ ಏನು ಸುದ್ದಿ ಗೊತ್ತೊ-ನಾನು ಗಂಗೆಯ ಮೈಮೇಲೆ ಕೈ ಹಾಕಿದ್ನಂತೆ. ಅದಕ್ಕವಳು ‘ಅಣ್ಣನೇ ಮೈಮೇಲೆ ಕೈ ಹಾಕ್ದಾ’-ಅಂದು ವಿಷಾ ತಗಂಡು ಸತ್ತಳಂತೆ. ಅರೆ! ಎಂಥಾ ಮಜಾ ನೋಡು. ಇದು ಖರೇನೇ ಹೌದು ಅಂತಾದ್ರೂ ವಿಷ ತಗೊಂಡು ಸತ್ತರೆ ಅದು ಮಳ್ಳು ಅಂತ ನಿನಗನ್ಸೂದಿಲ್ವೆ?”-ಎಂದ. “ಡ್ರೈವರ್ ಡಿಸೋಜ ಆಗ್ತದೆ, ಪ್ರಭುಗಳು ಆಗ್ತದೆ, ನಾನು ಯಾಕೆ ಅವಳಿಗೆ ಆಗಬಾರದು? ಹಹ್ಹ…ಎಂಥ ಮಜ ನೋಡು, ಅಲ್ಲಾ, ಒಂದು ಮಾತಿಗೆಂದೆ”-ಅಂದ. ಅವನ ತಲೆಯಲ್ಲಿರುವ ಗಂಭೀರ ತರ್ಕವೊಂದನ್ನು ಸ್ಪಷ್ಟೀಕರಿಸಲು ಅವನ ತುಂಡು ತುಂಡು ಮಾತುಗಳು ಯತ್ನಿಸುತ್ತಿದ್ದವು. +“ಹೌದು”-ಅಂದೆ. +“ಸುಮ್ಮನೇ ಹೌದು ಅನ್ನಬೇಡ”-ಎಂದು ನಕ್ಕ. +ಹೆದರಿಕೆ ಹುಟ್ಟಿಸುವ ಅವನ ಈ ನಗೆ ಯಾಕೋ ಪ್ರಿಯವಾಯಿತು. ನನಗೆ ಗೊತ್ತಿಲ್ಲದೆ ಅವನ ಹೆಗಲ ಮೇಲೆ ನಾನು ಕೈ ಹಾಕಿದೆ. +“ನಾನು ನಾಳೆಯೇ ಊರು ಬಿಟ್ಟು ಹೋಗುವ ಪ್ಲೇನು ಮಾಡಿದ್ದೇನೆ. ನನಗೆ ಒಂದು ಐನೂರು ರೂಪಾಯಿ ಬೇಕು”-ಎಂದ. +“ಎಲ್ಲಿಗೆ ಹೋಗುತ್ತೀ?”-ಎಂದೆ. +“ತಿರುಗಿ ಬೊಂಬಾಯಿಗೆ ಹೋಗುತ್ತೇನೆ. ಒಬ್ಬನೇ ಅಲ್ಲ. ಇಲ್ಲಿಯ ಸುಮಾರು ಎಂಟ್ಹತ್ತು ಹುಡುಗೀರನ್ನು ತಗೊಂಡು ಹೋಗ್ತೇನೆ. ಅವರನ್ನು ಅಲ್ಲಿ ಮಾರುತ್ತೇನೆ. ಇಲ್ಲಿಗಿಂತ ಚಲೋದಾಗಿ ಅವರಲ್ಲಿ ಇರ್ತಾರೆ. ನಾನು ಬದುಕುತ್ತೇನೆ” ಅಂದ. ಸಾಮಾನ್ಯವಾಗಿ ಹೇಳುತ್ತಿದ್ದವ ಒಮ್ಮೆಗೇ ಗಂಭೀರನಾದ. ಆಮೇಲೆ “ನಿನಗೆ ಈಗ ನನ್ನ ಮೇಲೆ ತಿರಸ್ಕಾರ ಬಂದಿರಬೇಕಲ್ಲ. ದುಡ್ಡು ಕೊಡುವುದಿಲ್ಲ ಅನ್ನುತ್ತೀ ಅಲ್ಲವೆ?”-ಅಂದ. “ಇಲ್ಲ…ಇಲ್ಲ… ಸಂಜೆ ಬಾ”-ಎಂದೆ. +ಸಂಜೆ ತನಕವೂ ನಾನು ಮಕಾಗೇ ಇದ್ದೆ. ಮಾಂಶಿ “ಅಮೃತಾಂಜನ ತಿಕ್ಕಿಕೋ” ಅಂದಳು. “ಗಂಗೆ ಸತ್ತದ್ದು ಖರೆ ಹ್ಯಾಂಗಂತ ಗೊತ್ತೊ”-ಅಂದಳು. “ಈಗ ಆ ಸುದ್ದಿ ಬೇಡ”-ಎಂದು ಖಾರವಾಗಿ ಅಂದೆ. ಅವಳಿಗದು ಬೇಸರವಾಯಿತು. “ಮಾಂಶೀ, ಪಬ್ಬು ಬೊಂಬಾಯಿಗೆ ಹೋಗುತ್ತಾನಂತೆ. ಅವನಿಗೆ ಐನೂರು ರೂಪಾಯಿ ಬೇಕಂತೆ. ಕೊಡುತ್ತೇನೆ”-ಎಂದೆ. “ಅವನು ಬಹಳ ಮಂದಿಗೆ ಟೊಪ್ಪಿ ಹಾಕಿದ್ದಾನಂತೆ ದಗಾಕೋರನಂತೆ. ಪೋಲೀಸರು ಅವನ ಹಿಂದೆ ತಿರುಗುತ್ತಿದ್ದಾರಂತೆ” ಅಂತ ಹೇಳಿದಳು. “ಗೊತ್ತು” ಅಂದೆ. +ಸಂಜೆ ಪಬ್ಬೂ ಬಂದ. ನಾನು ರೂಪಾಯಿ ಕೊಟ್ಟೆ. ಅವನ ಕಣ್ಣಲ್ಲಿ ನೀರು ಬಂತು. “ನನಗೆ ನಿನ್ನ ಬಗ್ಗೆ ಪಾಪ ಅನಿಸುತ್ತದೆ ಆನಂದಾ” ಎಂದ. ಅವನ ಕೆಲ ದಿನಗಳ ಹಿಂದಿನ ಅರ್ಜಿ ವ್ಯಕ್ತಿತ್ವ ನೆನಪಿಸಿಕೊಳ್ಳುತ್ತಿದ್ದ ನಾನು ತಡವರಿಸಿದೆ. ನಂತರ “ನೀನು ತುಂಬಾ ಸಾಚಾ ಇದ್ದೀ. ನಿನಗೆ ಬಹಳ ವಿಷಯ ಗೊತ್ತಿಲ್ಲ”-ಎಂದು ಏನೋ ಹೇಳಬೇಕೆಂದು ಮಾಡಿದವ ನಿಲ್ಲಿಸಿ ಸ್ವಲ್ಪ ವಿಚಾರ ಮಾಡಿ “ನಾನು ಬರ್ತೇನೆ ಹಂ” ಎಂದು ಹೊರಟ. ನಿಷ್ಕಾರಣವಾಗಿ ಅವನು ನನ್ನನ್ನು ಎಳೆ ಮಗುವಿನಂತೆ ಸಂತೈಸುತ್ತಿರುವಂತೆ ಭಾಸವಾದರೂ ನನಗ್ಯಾಕೋ ಆ ಕ್ಷಣದಲ್ಲಿ ಅವನ ಬಗ್ಗೆ ಪ್ರೀತಿ ಉಕ್ಕಿ ಬಂತು. +ಸ್ವಲ್ಪ ದೂರ ದಣಪೆಯ ಬಳಿ ಹೋದವ ಮತ್ತೆ ನಿಂತು ಏನೋ ವಿಚಾರ ಮಾಡಿದ. ನನಗೆ ತಡೆಯಲಾಗಲಿಲ್ಲ. ಹೋಗಿ “ಏನಂತ ಹೇಳಿ ಬಿಡು. ಅಡ್ಡಿಲ್ಲ ನೀನು ಹೇಳಿದ ಯಾವದೂ ನನಗೆ ಬೇಸರವಾಗುವುದಿಲ್ಲ”-ಅಂದೆ. ನನಗೇ ಪತ್ತೆ ಹತ್ತದಂತಿರುವ ವಿಚಿತ್ರ ಧ್ವನಿಯಲ್ಲಿ. ಅದಕ್ಕವ “ಹೌದು, ನಿನಗೆ ಹೇಳಬಾರದೂಂತ ಮಾಡಿದ್ದೆ. ನಿನ್ನ ಮಾಂಶಿಯ ಬಗ್ಗೆ ನಿನಗೆ ಗೊತ್ತಿಲ್ಲದ್ದು ಬಹಳ ಉಂಟು ಆನಂದಾ. ಈಗಿರಲಿಕ್ಕಿಲ್ಲವೋ ಏನೋ-ಹಿಂದಂತೂ ಅವಳದು ಸೊಂಟದ ಕೆಳಗಿನ ವ್ಯವಹಾರ ಬಹಳ ಇದ್ದಿತ್ತು. ದೇವರಾಣೆಗೂ ಇದು ತಪ್ಪಲ್ಲ ಆನಂದಾ. ಇದನ್ನು ತಪ್ಪು ಎಂದರೆ ನನ್ನ ಬಾಯಲ್ಲಿ ಹುಳಾ ಬೀಳಲಿ. ನನ್ನ ತಂಗಿ ಗಂಗೆಯನ್ನು ಬೊಂಬಾಯಿಗೆ ಆ ಉಳಿದ ಹುಡುಗೀರ ಸಂತಿಗೆ ತಗೊಂಡು ಹೋಗಬೇಕು ಅಂತಿದ್ದವ ನಾನು. ನಿನ್ನ ಮಾಂಶಿಯದು ತಪ್ಪು ಅಂತ ಖಂಡಿತ ಹೇಳುವುದಿಲ್ಲ. ಆದರೆ ಅದರ ಪತ್ತೆಯೇ ಇಲ್ಲದೆ ನೀನು ಇರುವುದು ನನಗ್ಯಾಕೋ ಸಹನ ಆಗುವುದಿಲ್ಲ. ನೀನು ಮುದ್ದಿನಿಂದ ಬೆಳೆದವ. ನಿನಗೆ ಈ ಮಾತು ಸಹನ ಆಗಲಿಕ್ಕಿಲ್ಲ. ಆದರೆ ಯಾಕೋ ಆನಂದ, ನಿನಗೆ ಹೇಳದೇ ಹೋಗುವುದು ನನ್ನಿಂದ ಶಕ್ಯವೇ ಆಗಲಿಲ್ಲ. ಅದಕ್ಕೇ ಬಂದೆ.” ಇನ್ನೆಂದೂ ನನ್ನ ಹತ್ತಿರ ಮಾತಾಡಲೂ ಸಿಗುವುದೇ ಇಲ್ಲವೋ ಅನ್ನುವ ರೀತಿ ಆನಂದ ಆನಂದ ಎಂದು ಮಾತಿನ ಮಧ್ಯೆ ಪದೇ ಪದೇ ಅಂದ. ಮಿಕಿಮಿಕಿ ನೋಡುತ್ತ ನಾನು ನಿಂತಿದ್ದೆ. ಆಮೇಲೆ ಅವನೇ “ನಾನು ಈವತ್ತು ಡ್ರಿಂಕ್ ಮಾಡಿ ಬಂದಿಲ್ಲ. ಕುಡಿದು ಮಾತಾಡ್ತೇನೆ ಅಂತ ತಿಳಿಯಬೇಡ. ಮತ್ತೆ ನೀನು ನನಗೆ ರೂಪಾಯಿ ಕೊಟ್ಟೆ ಅಂತಲೂ ನಾನು ಮೆಚ್ಚಿಸಲು ಹೇಳುತ್ತಿಲ್ಲ. ನಿನ್ನ ಹತ್ತಿರ ನಾನು ಸುಳ್ಳು ಮಾತನಾಡಲಾರೆ” ಅಂತ ಹೇಳಿ ಹೋಗಿಬಿಟ್ಟ. +ಆ ರಾತ್ರಿ ಮೊಟ್ಟಮೊದಲ ಬಾರಿಗೆ ನನಗೆ ಒಂಟಿ ಅನಿಸತೊಡಗಿತು. ನನ್ನ ವ್ಯಕ್ತಿತ್ವದ ಒಂದು ತುಂಡೇ ಹೋದಂತೆನಿಸಿ ಅಳು ಬಂತು. ಇಷ್ಟು ದಿನ ಅಷ್ಟೇನೂ ಒಡನಾಟವಿರದ ನಮ್ಮೀರ್ವರ ವ್ಯಕ್ತಿತ್ವದ ಈ ಅಮೂರ್ತ ಅವಲಂಬನ ಅಂದೆಂಥದ್ದು ಎಂದು ಯೋಚಿಸಿದಷ್ಟೂ ಬಗೆಹರಿಯದೆ ಒಂಟಿತನ ಬಾಧಿಸಿತು. ತಡೆಯಲಾರದೆ “ಮಾಂಶಿ,-ಮಾಂಶಿ”-ಎಂದು ಬಿಕ್ಕಳಿಸಿದೆ. ಮಾಂಶಿಯೇ ಬಂದು “ತಲೆನೋವು ಜಾಸ್ತಿ ಆಯಿತೇ?” ಅಂದು ಅಮೃತಾಂಜನ ತಿಕ್ಕಿ ನನ್ನ ಬಳಿಯೇ ಕೂತಳು. ಅವಳ ಸಾಂತ್ವನದಲ್ಲಿ ನಿದ್ದೆಹೋದೆ. +ಮರುದಿನ ಏಕಾ‌ಏಕೀ ಅನೇಕ ಹುಡುಗಿಯರು ನಾಪತ್ತೆಯಾದ ಬಗ್ಗೆ ಊರು ಹೌಹಾರಿತು. ಎಲ್ಲ ಕಡೆ ಅದೇ ಪಂಚಾತಿ. ಪಬ್ಬೂನೂ ಇಲ್ಲ ಅಂತ ಗೊತ್ತಾಗಿ ಪೋಲೀಸರು ಧಪಧಪ ಊರಲ್ಲಿ ತಿರುಗಿದರು. ಗಾಡಿ ವೆಂಕಟ್ರಮಣನ ಮಗಳು ಸಿಂಗಾರಿ, ಶ್ರೀಧರ ಕಮ್ತೀರ ಮಗಳು ಸರೋಜ-ಕೂಡ ಇದ್ದಿದ್ದು ತುಂಬಾ ಕಳವಳ ಹಬ್ಬಿಸಿತ್ತು. ಅದೇ ಗಲಾಟೆಯಲ್ಲೇ ಶ್ರೀಧರ ಕಮ್ತೀರಿಗೆ ಹುಚ್ಚು ಹಿಡಿದಂತಾಗಿತ್ತಂತೆ. ಇದೇ ವೇಳೆಯಲ್ಲೇ ಬ್ರಿಜ್‌ನ ಸಿಮೆಂಟಿನ ಅಪರಾತಪರಾ ಆಯಿತು ಅಂತ ದಂಡೂನನ್ನೂ ಒಳಗೊಂಡು ಸುಮಾರು ನಾಲ್ಕೈದು ಕೆಲಸಗಾರರನ್ನೂ ಗಿರಫ್ತಾರ ಮಾಡಲಾಯಿತು. ದಾಮೋದರ ಪ್ರಭುಗಳು, ಪಾಂಡುಶೆಟ್ಟರೂ ಅದರಲ್ಲಿ ಇದ್ದರೆಂದೂ ಆದರೆ ಅವರು ಮತ್ತು ಸಂಬಂಧಪಟ್ಟ ಇಂಜಿನಿಯರು ಒಬ್ಬರು ಗನಾಕೆ ಲಂಚ ಕೊಟ್ಟು ಬಚಾವಾದರೆಂದೂ ಮುರ್ಕುಂಡಿ ಹೇಳುತ್ತಿದ್ದ. ದಂಡೂ ಮತ್ತು ಉಳಿದವರನ್ನು ಜೀವ ಹೋಗುವ ಹಾಗೆ ಪೋಲೀಸರು ಧಕ್ಕೆಯ ಮೇಲೆ ಲಾಠಿಯಿಂದ ಹೊಡೆದಿದ್ದ ಸುದ್ದಿಯೂ ಊರಿಡೀ ಥಣ್ಣಗಿನ ರಕ್ತದಂತೆ ಹಬ್ಬಿತ್ತು. ಈ ಗಡಿಬಿಡಿಯಲ್ಲಿ ಪಬ್ಬೂ ತಾಯಿ ಸಿಂಗಾರಿಯ ಕಥೆ ಏನಾಯ್ತು ತಿಳಿಯಲಿಲ್ಲ. ಪಬ್ಬೂಗೆ ಸಂಬಂಧಪಟ್ಟು ಅವನ ಜತೆ ಆಗಾಗ ಕಂಡಿದ್ದೆ ಎಂಬ ಗುಮಾನಿಯ ಮೇಲೆ ಒಂದು ದಿವಸ ಪೋಲೀಸರು ನನ್ನನ್ನು ವಿಚಾರಣೆಗೆ ಕರೆಸಿ ಒಂದಿಷ್ಟು ಕಿರಿಕಿರಿ ಮಾಡಿದರು. ಆಗಲೇ ಮಾಂಶಿಯ ಸಲಹೆಯ ಮೇರೆಗೆ ಧೈರ್ಯಕ್ಕೆಂದು ನಾನು ಕುಮಟೆಗೆ ಹೋಗಿ ವಕೀಲರನ್ನೂ ಕಂಡು ಬಂದಿದ್ದೆ. ಆದರೆ ಪೋಲೀಸರು ನನ್ನ ಪಾಡಿಗೆ ನನ್ನನ್ನೂ ಕೇಸಿನ ಪಾಡಿಗೆ ಕೇಸನ್ನೂ ಬಿಟ್ಟುಬಿಟ್ಟರು. +ಬ್ರಿಜ್ ಓಪನ್ ಆದ ಒಂದೆರಡು ತಿಂಗಳಲ್ಲೇ ಮಾಂಶಿಗೆ ಥ್ರೊಂಬೊಸಿಸ್ ಆಗಿ ಶಿರಸಿಯ ದವಾಖಾನೆಯಲ್ಲಿ ಸತ್ತಳು. ಬ್ರಿಜ್ ಆದದ್ದೇ ಗಿರಾಕಿಗಳೇ ಇರದೆ ಬೀಳಗಿಯ ಎಲ್ಲ ಚಾ ಅಂಗಡಿಗಳೂ ಕುಸಿದವು. ಧಕ್ಕೆ ಬೋಳಾಯಿತು. ಶೆರೆ ಅಂಗಡಿಯ ಕ್ಯಾಲೆಂಡರುಗಳು ಮಾಸಿದವು. ಮೊದಲೇ ಹುಚ್ಚು ಹಿಡಿದಿದ್ದ ಶ್ರೀಧರ ಕಮ್ತೀರು ಒಂದು ದಿನ ಬ್ರಿಜ್ಜಿನಿಂದ ಹಾರಿ ಸತ್ತದ್ದು ಒಂದು ಸಂಗತಿಯಾಯಿತು. ಆಗಲೇ ಬಾಪ್ಪಾನ ಸಲಹೆಯ ಮೇರೆಗೆ ನಾನು ತೋಟ ಮನೆ ಎಲ್ಲ, ಅಗ್ಗಕ್ಕೇ, ದಾಮೋದರ ಪ್ರಭುವಿನ ತಮ್ಮನಿಗೆ ಮಾರಿದೆ. ಬಾಂಬೇದಲ್ಲಿಯ ನನ್ನ ಚಿಕ್ಕಪ್ಪನ ವಶೀಲಿಯಿಂದ ಬೊಂಬಾಯಲ್ಲೇ ನನಗೆ ನೌಕರಿ ಸಿಕ್ಕಿತು. ನಾನು ಬಾಂಬೇಗೆ ಬಂದೆ. ಅಲ್ಲೇ ಕುಮುದಳೊಂದಿಗೆ ಮದುವೆ ಆಯಿತು. +ಅದಾಗಿ ಈಗ ಎಷ್ಟೋ ವರುಷಗಳು. ಬೊಂಬಾಯಿನ ನನ್ನ ನಿತ್ಯದಲ್ಲಿ ದೀವಗಿ ಎಲ್ಲೋ ಕಳೆಯುತ್ತಿತ್ತು. ಗೇರುಸೊಪ್ಪೆಗೂ ನಾನು ಹೋಗುತ್ತಿದ್ದಿರಲಿಲ್ಲ. ಬಾಪ್ಪಾ ಅಮ್ಮಾರೇ ಒಂದೆರಡು ಸಲ ಬಂದಿದ್ದರು. ಮಧ್ಯದಲ್ಲಿ ಯಾರೋ ದೀವಗಿಯಿಂದ ಬಂದವ ಭೆಟ್ಟಿ ಆಗಿ ಮಾತಾಡುವಾಗ ಪಬ್ಬೂನ ತಾಯಿ ಸಿಂಗಾರಿ ಹುಚ್ಚು ಅತಿಯಾಗಿ, ಮೈಮೇಲೆ ನೂಲಿನ ತುಂಡೂ ಇಲ್ಲದೆ ಕುಮಟೆ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಅಂತಲೂ, ದೀವಗಿಯ ಹತ್ತಿರದ ಒಂದು ಕೂರ್ವೆ ಮಳೆಗಾಲದಲ್ಲಿ ನೆರೆ ಬಂದು ಸಂಪೂರ್ಣ ಮುಳುಗಿ ಇಪ್ಪತ್ತು ಮನೆ ಹಾಳಾದವು ಅಂತಲೂ ಒಂದಿಷ್ಟು ಸುದ್ದಿ ಮುಟ್ಟಿಸಿ ಹೋಗಿದ್ದ. ಬಾಪ್ಪಾನೂ ಕಳೆದ ಸರ್ತಿ ಬಂದಾಗ ದೀವಗಿಯ ದೆಶೆಯೇ ಸಾಫ್ ಆಗಿಬಿಟ್ಟಿದೆ ಅಂತ ಹೇಳುತ್ತಿದ್ದ. +ಪಬ್ಬೂನ ಪತ್ತೆಯೇ ಇರಲಿಲ್ಲ. ಬೊಂಬಾಯಿಯಲ್ಲಿ ಎಲ್ಲಾದರೂ ಸಿಕ್ಕಬಹುದೇನೋ ಎಂದು ಒಂದಿಷ್ಟು ದಿವಸ ವಿಚಿತ್ರ ಆಶೆಯೊಂದಿತ್ತು. ಒಮ್ಮೆಯಂತೂ-ಅಚ್ಚರಿ ಅನಿಸುತ್ತದೆ ಈಗ-ಪಬ್ಬೂ ಸಿಗಬಹುದೇನೋ ಅಂತ ಬೊಂಬಾಯಿನ ಕೆಂಪು ದೀಪದ ಪ್ರದೇಶದಲ್ಲೂ ಹಾಯ್ದು ಬಂದುಬಿಟ್ಟಿದ್ದೆ! ಅದು ಹ್ಯಾಗೋ ಕುಮುದಳಿಗೂ ಗೊತ್ತಾಗಿ ಅವಳನ್ನು ಸಂತೈಸಿ ಕನ್‌ವಿನ್ಸ್ ಮಾಡಬೇಕಾದರಂತೂ ಸಾಕೋಸಾಕಾಗಿಬಿಟ್ಟಿತ್ತು. ನಾನು, ನೌಕರಿ, ಕುಮೂ, ಅವಳು ಮುಡಿಯುವ ಮೋಗರಿಯ ಪರಿಮಳ, ಆಯಾ ಸೀಜನ್ನಿನ ಆ ಆ ತರಕಾರಿಗಳು, ಹಣ್ಣುಗಳು, ಮಳೆ, ರಶ್ಯು, ಪಕ್ಕದ ಮನೆಯವರು, ಕೆಳಗಿನ ಮನೆಯವರು, ಮೇಲಿನ ಮನೆಯವರು, ಅವರ ರಾಜಕಾರಣ-ಇಂತಹ ವಿಚಿತ್ರ ಏಕತಾನದ ನಾಡಿ ನನ್ನನ್ನೂ ಅಂಟಿಸಿಕೊಂಡುಬಿಟ್ಟಿತು. +* +* +* +ನಮ್ಮ ಕಿಶೋರ ಹುಟ್ಟಿದಾಗ ವಿಪರೀತ ಅಳುತ್ತಿದ್ದ. ಒಂದೆರಡು ಮೂರು ತಿಂಗಳು ಅಳು ಬಹಳವಾಗಿತ್ತು. ಆಗ ಕುಮೂ ಶಿರಸಿಯ ಮಾರಿಕಾಂಬೆಗೆ ಹರಕೆ ಹೊತ್ತಿದ್ದಳಂತೆ. ಹೀಗಾಗಿ ಅವನಿಗೆ ಮೂರು ವರುಷ ತುಂಬಿದ ಮೇಲೆ ಈಗ ಕುಮೂಳ ಸಮಾಧಾನಕ್ಕೆಂದು ಒಂದು ತಿಂಗಳ ರಜೆ ಹಾಕಿ ಹೊರಟು ಬಂದಿದ್ದೆ. ಶಿರಸಿಯಿಂದ ಗೇರುಸೊಪ್ಪೆಗೂ ಹೋಗಿ ನಂತರ ಅಮ್ಮಳನ್ನೂ ಕರೆದುಕೊಂಡು ಧರ್ಮಸ್ಥಳಕ್ಕೂ ಹೋಗಿ ಅವಳನ್ನೂ ಕರಕೊಂಡೇ ಮುಂಬೈಗೆ ಹೋಗುವುದೆಂದು ನಿಶ್ಚಯಿಸಿ ಈಗ ಶಿರಸಿಯಿಂದ ಬಸ್ಸಿನಲ್ಲಿ ಹೊರಟಿದ್ದೆವು. ನಮ್ಮ ಬಸ್ಸು ದೀವಗಿ ಬ್ರಿಜ್‌ನ ಮೇಲೆ ಹಾದು ಹೋಗುತ್ತದೆ ಅಂತ ನೆನೆದೇ ವಿಚಿತ್ರ ರೀತಿಯಲ್ಲಿ ತಳಮಳಗೊಂಡೆ. ಸಾಮಾನ್ಯವಾಗಿ ಬಸ್ಸಿನಲ್ಲಿ ನಿದ್ದೆ ಮಾಡುವ ನಾನು ಕೂತಲ್ಲೇ ಉದ್ವೇಗದಿಂದ ಚಡಪಡಿಸಿದೆ. ಮತ್ತೆ ಮತ್ತೆ ಹಳೇ ನೆನಪುಗಳು ನಿನ್ನೆ ಮೊನ್ನೆಯವೆಂಬಂತೆ ಮುತ್ತಿಗೆ ಹಾಕಿದವು. ಆಗಿನ ಹಳೇ ಕೆಂಪು ರಸ್ತೆಗಳು, ಮೈತುಂಬ ಹಚ್ಚ ಹಸಿರು ಹೊತ್ತುಕೊಂಡಿರುತ್ತಿದ್ದ ಪಾಗಾರಗಳು, ಕುಮಟೆ ತೇರು, ಮಾಂಶಿ, ಬಣ್ಣದ ಶರಬತ್ತು, ಭಜನೆ, ಢೋಲಕ, ಗುಮಟೆ ಪಾಂಗಿನ ಪದಗಳು, ಮಳೆಗಾಲದಲ್ಲಿ ಕೆಂಪಾಗುತ್ತಿದ್ದ ನದೀ ನೀರು, ಅದರಲ್ಲಿ ತೇಲಿ ಬರುತ್ತಿದ್ದ ಸೌದಿಗಳು, ಮನೆ ಆಳುಗಳು ತಂಬಾಕು ತಿಂದು ಕವಳ ಹಾಕಿ ಹತ್ತಿರ ಮಾತಾಡುತ್ತಿರುವಾಗಿನ ವಿಚಿತ್ರ ವಾಸನೆ-ನೆನಪುಗಳು ಕಳವಳವಾಗಿ ಹೊತ್ತಿ ಉರಿಯಲಾರಂಭಿಸಿದವು. ಪಬ್ಬು, ದಂಡು, ಸಿಂಗಾರಿ, ಗಂಗೆ-ಉತ್ಕಟನಾಗಿ ನೆನೆನೆನೆದು ಕಾಯುತ್ತಿದ್ದಂತೆ ಬ್ರಿಜ್ಜು ಬಂದೇಬಿಟ್ಟಿತು. ಬಸ್ಸು ಝಮ್ಮಂತ ಬ್ರಿಜ್‌ನ ಮೇಲೇರಿ ಸಂಜೆಗೆಂಪಲ್ಲಿ ಗಾಳಿಯ ವೇಗದಲ್ಲಿ ನೇರ ಹೊರಟಾಗಂತೂ ರೋಮಾಂಚನವಾಯಿತು. ತಲೆಯನ್ನು ಕಿಟಕಿಯ ಹೊರಹಾಕಿ ನುಂಗುವಂತೆ ಉಸಿರಾಡಿದೆ. ಬಲಭಾಗದಲ್ಲಿ ದೂರದೂರ ಮಿಣಿಮಿಣಿ ಬೆಳಕಲ್ಲಿ ದೀವಗಿ- ನನ್ನ ದೀವಗಿ- ಮಾಸಲು ಬಿಕೋ ಹಳೇ ಅನಾಥ ಧಕ್ಕೆ-ಮಬ್ಬು ಮಬ್ಬು ತೋಟಗಳು-ಏನೆಲ್ಲ ಸಹಸ್ರಾರು ನೆನಪುಗಳು ಈ ಕ್ಷಣವಾಗಿ ಉಕ್ಕಿ ಗಂಟಲುಬ್ಬಿ ಬಂತು. ಗದ್ಗದಿತನಾದೆ. ಕಿಶೋರನಿಗೆ ಇದೇ ನನ್ನ ಬಾಲ್ಯದ ಊರು ಅಂತ ಹೇಳುವುದೂ ತುಂಬ ತ್ರಾಸವಾಯಿತು. ರಾಜಾರೋಷಾಗಿ ನನ್ನ ಕಣ್ಣೆದುರಿಗೇ ಬಸ್ಸು ದೀವಗಿಯನ್ನು ಅಲ್ಲಿಯೇ ಬಿಟ್ಟು ಹೈವೇಯಲ್ಲಿ ಮುಂದೆ ಹೋದಂತೆ ದುಃಖವಾಯಿತು. ಹಾಗೆಯೇ ಭಾರವಾದ ಎದೆಯಲ್ಲಿ ನಿದ್ರೆಯ ಗುಂಗಿಗೆ ನೆನಪುಗಳ ಅವಚಿ ಇಳಿದೆ. +ಅರೆಮರೆ ನಿದ್ರೆಯಲ್ಲಿ ಕುಮಟೆಯ ತೇರು ಧಡಧಡ ನನ್ನ ರಾಕ್ಷಸ ಗಾಲಿಗಳನ್ನುರುಳಿಸುತ್ತ ಹೋಹೋ ಎಂಬ ಗದ್ದಲದಲ್ಲಿ ಬ್ರಿಜ್ಜನ್ನೇರಿ ಜೋರಾಗಿ ಬಂತು. ನೂರಾರು ಗಂಗೆಯ ಹಾಗೆ ಕಾಣುವವರು ಬತ್ತಲೆಯಾಗಿ ತೇರಿನ ಪತಾಕೆಯಾಗಿ ಕೂತವರು ಧಡಧಡ ನೀರಿಗೆ ಬಿದ್ದರು. ಗಡಗಡ ಬ್ರಿಜ್ಜು ನಡುಗಲಾರಂಭಿಸಿತು. ಇಡೀ ದೀವಗಿಯೇ ಮೈವೆತ್ತು ಬಂದಂತೆ ಹಣೆ ತುಂಬ ಕುಂಕುಮ ರಾಚಿಕೊಂಡು ಬಂದ ಪಬ್ಬು ಓಡೋಡಿ ಬಂದ. ಬಂದವನೇ ನೋಡ ನೋಡುತ್ತ ಇದ್ದಂತೆಯೇ ತೇರಿನ ಆ ಬೃಹದಾಕಾರದ ಗಾಲಿಗೆ ಸಿಕ್ಕುಬಿಟ್ಟ. +ಧಕ್ ಅಂತ ಎಚ್ಚರವಾಯಿತು. ಕುಮೂ “ಏನು?”-ಎಂದಳು. “ಕುಮೂ ಇಲ್ಲೇ ಇದೇ ಊರಲ್ಲೇ ನನಗೊಬ್ಬ ಚಲೋ ದೋಸ್ತ ಇದ್ದ ಪಬ್ಬೂ ಅಂತ, ಪಾಪ” ಅಂದೆ. ನನಗೆ ಗೊತ್ತು. ಎಷ್ಟೋ ಸಲ ಹೇಳಿದ್ದಿರಿ ನೀವು” ಅಂದಳು. ನಾನು ಹೇಳುತ್ತಿದ್ದುದು ಉತ್ಪ್ರೇಕ್ಷೆ ಆಗುತ್ತದೆ ಅಂತನಿಸಿದರೂ “ಕುಮೂ ಆ ಬ್ರಿಜ್ಜಿಗೆ ಪಬ್ಬು-ಅವನ ಕುಟುಂಬ-ದೀವಗಿ-ಎಲ್ಲಾ ಬಲಿಯಾಯಿತು”-ಅಂದೆ. ಅದನ್ನು ಹೇಳಿದಾಗ ಏನೋ ಹಗುರಾದಂತೆನಿಸಿತು. ಆ ದಿನ ಮಾಂಶಿಯ ಬಗ್ಗೆ ಪಬ್ಬೂ ಅಲ್ಲದೆ ಬೇರೆ ಯಾರಾದರೂ ಹಾಗೆ ಹೇಳಿದ್ದಿದ್ದರೆ ನಾನು ಮಾಂಶಿಯನ್ನು ದ್ವೇಷಿಸುತ್ತಿದ್ದನಲ್ಲವೆ? ಮಾಂಶಿಯ ಮೇಲಿನ ನನ್ನ ಪ್ರೀತಿ ಸ್ವಲ್ಪವೂ ಕಡಿಮೆಯಾಗದಿದ್ದುದೇ ಪಬ್ಬೂನ ಗೆಳೆಯನಾಗಿದ್ದುದರ-ನಾಗಿರುವುದರ ಸಾರ್ಥಕತೆಯೆ? ನನ್ನ ಸ್ವಭಾವದ ಮತ್ತೊಂದು ತುದಿ ಪಬ್ಬು ಆಗಿರುವುದೇ ನಾನು ಅವನನ್ನು ಇಷ್ಟೊಂದು ಹಚ್ಚಿಕೊಳ್ಳಲು ಕಾರಣವೆ? ನಮ್ಮೀರ್ವರ ದೌರ್ಬಲ್ಯಗಳೂ ಗೆಳೆತನವಾಗಿ ವಿನಿಮಯಗೊಂಡು ವ್ಯಕ್ತಿತ್ವವಾದವೆ? ಯಾವಾಗಲೂ ನನ್ನನ್ನು ಕಾಡುವ ನನ್ನವೇ ಆದ ಈ ಪ್ರಶ್ನೆಗಳು ಮತ್ತೆ ನನ್ನ ಮನಸ್ಸಿನ ಮೂಲೆಯಲ್ಲಿ ಎದ್ದು ಕೂತವು. +ಏನೇ ಆಗಲಿ ಮುಂಬೈಗೆ ಹೋದ ಮೇಲೆ ಅವನನ್ನು ಹುಡುಕುವ ಮತ್ತೊಂದು ಚಾನ್ಸ್ ತಗೊಳ್ಳಬೇಕು-ಅಂತ ನಿರ್ಧರಿಸಿ ಹಾಗೆ ಹಗೂರ ಕುಮೂಳ ತೊಡೆಯ ಮೇಲೆ ಒರಗಿದೆ. ಮತ್ತೆಲ್ಲೋ ಎಚ್ಚರಾದಾಗ ಕುಮೂ ಮಲಗಿದ್ದಳು. ಕಿಶೋರನೂ ನನ್ನ ತೊಡೆಯ ಮೇಲೆ ಮಲಗಿಬಿಟ್ಟಿದ್ದ. ಬಸ್ಸು ಜೋರಾಗಿ ಓಡುತ್ತಿತ್ತು. ಕಿಟಿಕಿಯ ಗ್ಲಾಸು ಸರಿಸಿದೆ. ಗಾಳಿ ಹಿತವಾಗಿತ್ತು. ಆ ದಿನ ಪಬ್ಬೂಗೆ ರೂಪಾಯಿ ಕೊಟ್ಟು ಎಷ್ಟು ಚಲೋ ಕೆಲಸ ಮಾಡಿದೆನಲ್ಲಾ-ಅಂತ ಮತ್ತೆ ಮತ್ತೆ ಅಂದುಕೊಂಡೆ. +***** +೧೯೭೬ರ ಉದಯವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_667.txt b/Kannada Sahitya/article_667.txt new file mode 100644 index 0000000000000000000000000000000000000000..61414085f10a9c1cef95e56991908a2733602dc2 --- /dev/null +++ b/Kannada Sahitya/article_667.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕಲ್ಯಾಣಿ +ತಾಳ — ಝಂಪೆ +ವರವ ಕೊಡು ಎನಗೆ ವಾಗ್ದೇವಿ – ನಿನ್ನ | +ಚರಣಕಮಲಂಗಳನು ದಯಮಾಡು ದೇವಿ ||ಪ|| +ಶಿವಮೊಗದ ನಸುನಗೆಯ ಬಾಲೆ | +ಎಸೆವ ಕರ್ಣದಿ ಮುತ್ತಿನೋಲೆ || +ನಸುನಗುವ ಪಲ್ಲ ಗುಣಶೀಲೆ – ದೇವಿ – | +ಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||೧|| +ಇಂಪುಸೊಂಪಿನ ಚಂದ್ರಬಿಂಬೆ | +ಕೆಂಪುತುಟಿ ನಾಸಿಕದ ರಂಭೆ || +ಜಂಪುಮದನನ ಪೂರ್ಣಶಕ್ತಿ ಬೊಂಬೆ – ಒಳ್ಳೆ | +ಸಂಪಿಗೆಯ ಮುಡಿಗಿಟ್ಟ ಶಾರದಾಂಬೆ ||೨|| +ರವಿ ಕೋಟಿ ತೇಜಪ್ರಕಾಶೆ – ಮಹಾ – | +ಕವಿಜನರ ಹೃತ್ಕಮಲವಾಸೆ || +ಅವಿರಳಾಪುರಿಯ ಸಿರಿ ಕಾಗಿನೆಲೆಯಾದಿ ಕೇ – | +ಶವನಸುತನಿಗೆ ಸನ್ನುತದ ರಾಣಿವಾಸೆ ||೩|| +ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […] +ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […] +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_668.txt b/Kannada Sahitya/article_668.txt new file mode 100644 index 0000000000000000000000000000000000000000..53b4263b4ef56e309bcf7a1405da4db7974aff3b --- /dev/null +++ b/Kannada Sahitya/article_668.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ +ತೊಳೆದು ಅಂದವಾಗಿ ಕತ್ತರಿಸಬೇಕು, +ತಲೆಕೆಳಗು ತೊಟ್ಟು ಹಿಡಿದರೆ +ಕಮಲದ ಹೂ ಅರಳಿದಂತಿರಬೇಕು +ಉಪ್ಪು + ಹುಳಿ+ ಖಾರ….. +ನಾಲಿಗೆ ರುಚಿಗೆ ತಕ್ಕಂತೆ. +ಹುರಿದು ಕಡಲೇಕಾಯಿ, +ಮೇಲೊಂದಷ್ಟು ಎಳ್ಳಿನ ಪುಡಿ; +ನಾಲ್ಕು ಮನೆಯಾಚೆಗೂ ಘಂ! ಎನ್ನುವಂತೆ +ಕಾದೆಣ್ಣೆ ಒಗ್ಗರಣೆ +ಜೊತೆಗೆ ಜೋಳದ ರೊಟ್ಟಿ +ರೆಟ್ಟೆ ಬೀಳುವ ಹಾಗೆ ತೆಳ್ಳಗೆ ತಟ್ಟಿದರೆ +ಬೆಳದಿಂಗಳೂಟ. +ಅಂಕುಡೊಂಕಿಲ್ಲದ ಹುಣ್ಣಿಮೆ ಚಂದ್ರನ +ತಣ್ಣನೆ ಬೆಳಕಲ್ಲಿ ಉಸ್ಸೆಂದಿತ್ತು +ಅಡಿಗೆ ಮಾಡಿದ ಆಯಾಸ +ಗಾಳಿ ಬೀಸಿದ್ದೇ, ನಾಳೆಗೇನೆಂಬ ಚಿಂತೆ +ಚಂದ್ರನ ಮೇಲೊಂದು ತುಂಡು ಮೋಡ. +ಮತ್ತೆ ಹುಣ್ಣಿಮೆಗೆ ಇನ್ನೂ +ಒಂದು ತಿಂಗಳು ಕಾಯಬೇಕು. +***** +ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; […] +– ೧ – ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ ಪ್ರೇಕ್ಷಕರ ತಕ್ಕ ಸೀಟಿನಲ್ಲಿ ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ ಬೆಂಗಳೂರನ್ನೇ ಹೊತ್ತ ಸೋಗಿನಿಂದ, ಕಾಲ್ಗೆಟಿಸಿದ ನಗೆಯಿಂದ, ಆತ್ಮೀಯರಾಗುತ್ತಾರೆ – ಸ್ವಯಂಸೇವಕ ಸಂವೇದಕ ಗಿಳಿಗಳು; ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ […] +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_669.txt b/Kannada Sahitya/article_669.txt new file mode 100644 index 0000000000000000000000000000000000000000..897485bcba1ab4ec2b5bb574876bef484e471ec3 --- /dev/null +++ b/Kannada Sahitya/article_669.txt @@ -0,0 +1,86 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +`ನಂದೀ ತೀರ್ಥದ ಗಣಪತಿಗೆ ಪಂಚಕಜ್ಜಾಯ ಹರಕೆ ಹೇಳಿ ಅಂದ್ರೆ ಕೇಳೋದಿಲ್ಲ . ರಾತ್ರಿಯೆಲ್ಲ ಕೆಂಪು ಕಣ್ಣಲ್ಲಿ ದೀಪ ಇಟ್ಕೊಂಡು ಡಿಡಿಟಿ ಬಳೀರಿ… ‘ ನಾಗಿ ಮಟಗುಟ್ಟುತ್ಲೇ ಅಂಗಾಲಲ್ಲಿ ಕಚ್ಕೊಂಡಿದ್ದ ಇರುವೆಗಳ ಆಯ್…ಎನ್ನುತ್ತಾ ಹೊಸಕಿ ಎರಡು ಬೆರಳಲ್ಲಿ ಬತ್ತಿ ಮಾಡಿ ಮಾಡಿ ಬಿಸಾಡುತ್ತಿದ್ದಳು. +`ನನ್ನ ಬಂಡಾರ ಪೂಜೆಗೆ ಕುಳಿತಾಗ ನಿಂಗೂ ನೆಂಪಾತ ? ಇಲ್ಲಲ್ಲ. ಈಗ ಸುಮ್ನೇ ಪಿರಿ ಪಿರಿ ಮಾಡ್ಬೇಡ. ಕಾಲಿಗೆ ಚೂರು ಚಿಮಿಣಿ ಎಣ್ಣೆ ಬಳ್ಕೊಂಡು ಮಲಕ್ಕೊ’ ಅಂತ ಗಂಡ ಲೋಕಯ್ಯ ಗದರಿದ. +ಚಿಮಿಣಿ ದೊಂದಿ ದೀಪಕ್ಕೆ ಮುಂಗೂದಲ ಚರ್ ಚರ್ ಹೊತ್ತಿಸಿಕೊಂಡು ಕಾಪಿ ಬರೆಯುತ್ತಿದ್ದ ಕಿಶೋರ ತಲೆ ಎತ್ತಿ ನೆತ್ತಿಯ ಕರಿಯನ್ನ ಚಡ್ಡಿಗೆ ಒರೆಸುತ್ತಾ , `ಚಿಮಿಣಿ ಎಣ್ಣೆ ಕಾಲಿಗೆ ಹಚ್ಚಿದ್ರೆ ವಾತ ಬರುತ್ತಂತೆ… ಹಚ್ಕೋಬೇಡ…’ ಅಂತ ಕೀರಲೆಳೆದ. +`ಈಗಲೇ ನಿನ್ನ ಕಲ್ಪಾಟಿಕೆ ಸುರು ಆಯ್ತಾ ? .. ಬರ್ಕ ಬರ್ಕ ‘ ಅಂತ ಇನ್ನೊಂದು ಗುಟುರು ಹಾಕಿದ ಲೋಕಯ್ಯ ಎರಡೂ ಚಾಪೆಯ ಸುತ್ತ ಡಿಡಿಟಿ ಲಕ್ಷ್ಮಣ ಗೀಟು ಹಾಕುವುದರಲ್ಲಿ ಮಗ್ನನಾದ. +`ಪುನಃ ಅವ್ರೇನು ಮಾಟ ಮಾಡಿದಾರೋ ಏನೋ ಯಾರಿಗ್ಗೊತ್ತು… ಇಲ್ಲಾಂದ್ರೆ ಈ ನಮೂನೆ ಇರ್ವೆ ಬರುವುದು ಲೋಕದಲ್ಲುಂಟಾ ?’ ಎನ್ನುತ್ತ ನಾಗಿ ಜೂಲಿ ಹಿಡಿದುಕೊಂಡು ನೆಲದ ಮೇಲಿನ ಇರುವೆ ತೂತಿಗೆಲ್ಲಾ ಚಿಮಿಣಿ ಎಣ್ಣೆ ತರ್ಪಣ ಬಿಡುತ್ತಾ ಬಂದಳು. +ಕೊನೆಯದಾಗಿ ಎಡ ಅಂಗೈ ಗುಂಡಿ ಮಾಡಿ ಸ್ವಲ್ಪ ಎಣ್ಣೆ ಸುರಿದುಕೊಂಡು ಎರಡೂ ಮೊಣಕಾಲಿಗೆ ಬಳಿದುಕೊಂಡಳು. ಕುಪ್ಪಿ ಬಾಯಿಗೆ ಜೂಲಿ ಇಟ್ಟು ಗೋಡೆ ಹಿಡಿದು ಡಿಡಿಟಿ ಲಕ್ಷ್ಮಣ ಗೀಟನ್ನು ಜಾಗ್ರತೆಯಿಂದ ದಾಟಿಕೊಂಡು ಬಂದು ತಲೆವರೆಗೆ ಬಾರದ ಹರಕು ಸೀರೆಯನ್ನು ಕಾಲ ತುಂಬ ಹೊದ್ದುಕೊಂಡು, ಸೆರಗು ಬಿಡಿಸಿ ತಲೆಮೇಲೆ ಮುಸುಕೆಳೆದುಕೊಂಡು ಮಲಗಿಬಿಟ್ಟಳು. ಹೊರಗಡೆ ರೊಯ್ಯರೊಯ್ಯನೆ ಹಾರುತ್ತಿದ್ದ ಬಾವಲಿಗಳು ಬಾಳೆಗಿಡದಿಂದ ಬಾಳೆಗಿಡಕ್ಕೆ ಎರಡು ಸಾರಿ ಹಾರಿದವೋ ಇಲ್ವೋ ನಾಗಿ ಗೊರಕೆ ಗಾನ ಸುರು ಮಾಡಿದಳು. +`ಮಾಟ ಮಾಡುವುದು … ಹೌದು. ಮಾಟದ ಮಾಯೆಗೇ ಇರುವೆ ಬಂದಿರಬೇಕು. ಕೋವಿ ಮನೆಯವರಿಗೂ ನಮಗೂ ಜನ್ಮದ ದ್ವೇಷ’ ! +ಅದು ಅಜ್ಜನ ಕಾಲದಿಂದ ನಡೆದು ಬಂದ ದಾಯಾದಿ ಜಗಳ. ಗದ್ದೆಯ ನೀರಿನ ಕಡಿಗೆ, ಒಂದು ಹಾರೆ ಮಣ್ಣು ತೆಗೆದರೂ ಜಗಳ. ತೋಡು, ಮರದ ಗೆಲ್ಲು ಕೊನೆಗೆ ತರಗೆಲೆಗೂ ಹಿಡಿಸೂಡಿ ಹಿಡಿದುಕೊಂಡು ಜಗಳ ಬೆಳೀತಿತ್ತು. ಬೆಳಬೆಳಗ್ಗೆ ಲಡಾಯಿ ಮುಗಿದಿದ್ರೆ, ರಾತ್ರಿ ನಿದ್ದೆ ಹೋಗುವಂತಿಲ್ಲ. ನಿಂಬೆ ಹಣ್ಣು ಕುಂಬಳ ಕಾಯಿ ತಗಡು ಮಂತ್ರಿಸಿ, ಬಿಸಾಡುವುದು, ಹುಗಿಯುವುದು ನಡೀತಿತ್ತು. +ಮರುದಿನ ಬೆಳಗ್ಗೆ ನಾಗಿ ಅದನ್ನು ಕೋಲಿಗೆ ಸಿಕ್ಕಿಸಿಕೊಂಡು `ಕೃತ್ರಿಮ ಮಾಡಿ ಬಡವರ ಹೊಟ್ಟೆಗೆ ಬಡಿಯುತ್ತಾನೆ . ಇವನನ್ನು ಆ ಸತ್ಯದೇವತೆಯೇ ನೋಡಿಕೊಳ್ಳಲಿ…’ ಎಂದು ತುಳಸೀ ಕಟ್ಟೆಯ ಬಳಿ ನೆಲಕ್ಕೆ ಕೈ ಬಡಿದು ಕೊನೆಗೆ ನಾಲ್ಕು ಹನಿ ಕಣ್ಣೀರು ಹಾಕಿ ಸುಮ್ಮನಿರುತ್ತಿದ್ದಳು. ಬಡತನ ಅದಕ್ಕಿಂತ ಮಿಗಿಲಾದ ಸೇಡು ತೀರಿಸಿಕೊಳ್ಳಲು ಬಿಡುತ್ತಿರಲಿಲ್ಲ. +ಲೋಕಯ್ಯನ ಅಜ್ಜನ ಕಾಲದಲ್ಲಿ ಆಸ್ತಿಗಾಗಿ ಬಿಗಡಾಯಿಸಿದ ಸಂಬಂಧ, ಅಪ್ಪನ ತಲೆ ಚಾವಡಿ ಆಳಲು ಬಂದಾಗ ಸ್ವಲ್ಪ ಸರಿಹೋಗಿತ್ತು. ಅದು ಮತ್ತೆ ಬೇಕಾಬಿಟ್ಟಿ ಕೆಡಲು ಲೋಕಯ್ಯನೇ ಕಾರಣ. +ಕೋವಿ ಮನೆಯಲ್ಲಿ ಪ್ರತಿವರ್ಷ ಮಾರ್ನೆಮಿ(ಮಹಾನವಮಿ) ನಡೆಯುತ್ತದೆ. ಊರಿಗೇ ದೊಡ್ಡ ಮಾರ್ನೆಮಿ ಪೂಜೆ ಅದು. ಕೋವಿಮನೆಯವರಿಗೂ ಮೂಲಮನೆ ಲೋಕಯ್ಯಂದೇ . ಆದರೂ ಗೌಜಿ ಗಮ್ಮತ್ತಿನ ಮಾರ್ನೆಮಿ ನಡೆಯುವುದು ಕೋವಿ ಮನೆಯಲ್ಲಿ. ಈ ದೊಡ್ಡಪ್ಪನ ಮೇಲೆ ಹೆಚ್ಚಿನ ಮೋಕೆಯಿಂದ ಅಜ್ಜಯ್ಯ ಸಂಸ್ಕೃತ ಕಲಿಯಲು ಅಂತ ಕೇರಳ ಶಾಲೆಗೆ ಕಳುಹಿಸಿದರು. ಆತ ವೇದ ಮಂತ್ರಕ್ಕಿಂತ ಹೆಚ್ಚಾಗಿ ಅಥರ್ವಣವನ್ನೇ ತಬ್ಬಿಕೊಂಡ. ವಾಪಾಸು ಊರಿಗೆ ಬರುವಾಗ ಪ್ರಸಿದ್ಧಿ, ಕಟ್ಟುಕತೆಗಳು ಬೆನ್ನಲ್ಲೇ ಬಂದವು. +ಮಾಟ ಕಳೆಯಬಲ್ಲಷ್ಟು ವಿದ್ಯೆ ಕಲಿತಿದ್ದಾನಂತೆ. ಮಲಯಾಳೀ ಗುರುಗಳಲ್ಲವಾ ? ಕಳೆಯಬಲ್ಲವನಿಗೆ ಮಾಟ ಮಾಡಲಿಕ್ಕೂ ಬರುವುದಿಲ್ಲವಾ …? ಅಂತ ಜನ ತಮ್ಮ ಅಂದಾಜಿಗೆ ತಕ್ಕ ಹಾಗೆ ಮಾತಾಡಿಕೊಂಡರು. +ಕಾಸರಗೋಡಿನ ಕಡೆ ಒಮ್ಮೆ ಸತ್ಯನಾರಾಯಣ ಪೂಜೆ ಮಾಡುವಾಗ ಕಲಶಕ್ಕೆ ಈ ದೊಡ್ಡಪ್ಪನೇ ತೆಂಗಿನಕಾಯಿ ಇಟ್ಟಿದ್ದನಂತೆ. ದೊಡ್ಡಪ್ಪನ ಮಂತ್ರ ತಾರಕ ಸ್ವರಕ್ಕೆ ಮುಟ್ಟುತ್ತಲೇ ತೆಂಗಿನ ಕಾಯಿ ಗಿರ ಗಿರ ಗಿರಗಿರ ಅಂತ ತಿರುಗಲಾರಂಭಿಸಿ, ಭಕ್ತರು ರೋಮಾಂಚನಗೊಂಡಿದ್ದರಂತೆ. ಕಣ್ಣು ಮುಚ್ಚಿ ಮಂತ್ರೋಚ್ಛಾರ ಮಾಡುತ್ತಿದ್ದ ದೊಡ್ಡಪ್ಪನ ಮಂತ್ರ ತಾರಕದಿಂದ ಭೂಮಿಗಿಳಿಯುವ ಹೊತ್ತಿಗೆ ಮತ್ತೆ ತೆಂಗಿನ ಕಾಯಿ ಸ್ತಬ್ಧವಾಗಿತ್ತಂತೆ. +ಭಕ್ತರು ಅವಾಕ್ಕಾಗಿದ್ದರು. ಕೆಲವರ ಕಣ್ಣಲ್ಲಿ ನೀರೇ ಹನಿಯಿತು. ಎಂಥ ಸಿದ್ಧಿ ! ಏನು ಸಾಧನೆ !! ಧರ್ಮಾತ್ಮನಪ್ಪ.. ಎಂದು ಲೊಚಗುಟ್ಟಿದ್ದರು. ಕಲಶದ ಬಳಿ ಪಾವಲಿಗಳು ರಾಶಿ ಬಿದ್ದವು. ಕಾಸರಗೋಡಿನ ಈ ಸಾಧನೆ ದೊಡ್ಡಪ್ಪನಿಗೆ ಇನ್ನಷ್ಟು ಪ್ರಸಿದ್ಧಿ ತಂದುಕೊಟ್ಟಿತು. +ಅಲ್ಲೊಬ್ಬ ಇಲ್ಲೊಬ್ಬ ಸಾತ್ವಿಕರು ಮಾತ್ರ ಹೀಗೆ ಅಥರ್ವಣ ಮಾಡುವುದು ಒಳ್ಳೆಯದಲ್ಲಪ್ಪ ಅಂತ ಬುದ್ದಿ ಹೇಳಿದರು. ಆದರೆ ಈ ಮಾತು ದೊಡ್ಡಪ್ಪನ ಖ್ಯಾತಿಯ ಭರಾಟೆಯಲ್ಲಿ ಕೇಳಿಸಲಿಲ್ಲ. ಅಂತೂ ಇಂತೂ ದೊಡ್ಡಪ್ಪನ ಕೀರ್ತಿ ಊರ ಗಡಿ ದಾಟಿತು. ಕಾಸು ಕಾಲಬಳಿ ಕಾಲು ಮುರಿದು ಬಿತ್ತು. +ಬೇರೆ ಮನೆಯೆದ್ದಿತು. ದೈವಿಕ ಕಳೆಯೊಂದಿಗೆ ಮುಗುಳಿ ಹೊತ್ತ ಮನೆ. ಪಕ್ಕನೆ ನೋಡಿದರೆ ದೇವಸ್ಥಾನದ ಹಾಗೇ ಕಾಣುತ್ತಿತ್ತು. ಭಕ್ತರು, ಸಂಶಯಗಳು, ಭವಿಷ್ಯದ ದಾರಿ ಕಾಣದವರು , ರೇಖೆ ಚಿತ್ತಾದವರು ನಡೆದು ಬಂದರು. ಗಾಡಿಯಲ್ಲಿ ಬಂದರು. ಕಾರಿನಲ್ಲಿ ಬಂದಿಳಿದರು. +ಲೋಕಯ್ಯನಿಗೆ ದೊಡ್ಡಪ್ಪನ ಈ ಅಬ್ಬರಾಟದಿಂದ ಬೇಜಾರಾಗುತ್ತದೆ. ಹತ್ತಿರವೇ ಇರುವ ಬಂಧುಗಳ ಮನೆಯಿಂದ ಬೆಂಕಿಕಡ್ಡಿಯ ಸಹಾಯವೂ ಇಲ್ಲ. ಬದಲಿಗೆ ಮಾಟ ಮಂತ್ರದ ಕಾಟ. ನಿಂಬೆ ಹಣ್ಣು, ತಾಮ್ರದ ತಗಡು, ಕುಂಕುಮ ಚೆಲ್ಲಿದ್ದನ್ನು ಕಂಡಾವತ್ತೆಲ್ಲಾ ನಾಗಿ, ಈ ಸೂಳಾ ಮಗನ ಸಂತಾನ ಮುತ್ತಿ ಹೋಗಲಿ ಎಂದು ನೆಲಕೈ ಶಾಪ ಹಾಕುತ್ತಿದ್ದಳು. ಅವಳ ಲಾಜಿಕ್ಕನ ಪ್ರಕಾರ ನಂಬಿದ ಉಳ್ಳಾಲ್ತಿ ಈ ಮಾಟದಿಂದ ಅವರನ್ನು ಕಾಪಾಡುತ್ತದೆ. ಸತ್ಯ ಧರ್ಮ ನ್ಯಾಯದಲ್ಲೇ ನಾಗಿ ನಡೆಯುವುದರಿಂದ ಮಾಟಕ್ಕಿಂತ ಅವಳ ನೆಲಕೈ ಶಾಪವೇ ಬಲವಾದದ್ದು. ಆದರೂ ಆಗೊಮ್ಮೆ ಈಗೊಮ್ಮೆ ಊರಿನ ಭಟ್ಟರಿಂದ ಮಂತ್ರಿಸಿದ ನೂಲು ತಂದು ಮನೆಯಲ್ಲಿ ಎಲ್ಲರ ತೋಳಿಗೆ ಸೊಂಟಕ್ಕೆ ಕಟ್ಟಿ ನೆಮ್ಮದಿಯಾಗುತ್ತಾಳೆ. +ನಾಗಿ ನೆಲಕೈ ಶಾಪ ಹಾಕುವಾಗ ಲೋಕಯ್ಯನಿಗೆ ಎದೆ ಹಿಂಡಿದ ಹಾಗಾಗುತ್ತದೆ. ಎಷ್ಟೆಂದರೂ ರಕ್ತ ಸಂಬಂಧ. ದೊಡ್ಡಪ್ಪನ ದುರ್ಮನಸ್ಸಿನಿಂದ ನಾಳೆ ಇಬ್ಬರ ಮಕ್ಕಳಿಗೂ ತೊಂದರೆಯಾಗಬಾರದು ಅಲ್ವ ? +ಇಷ್ಟಕ್ಕೂ ದೊಡ್ಡಪ್ಪನಿಗೆ ಲೋಕಯ್ಯನ ಮೇಲೆ ಇನ್ನಿಲ್ಲದ ಸಿಟ್ಟು ಬರಲಿಕ್ಕೆ ಕಾರಣವಿತ್ತು. ಅದು ಲೋಕಯ್ಯನ ಬಳಿ ಹುಡುಗಾಟಿಕೆಯಿದ್ದ ಕಾಲ. ನ್ಯಾಯ ಆದರ್ಶಕ್ಕಾಗಿ ಕುದಿಯುತ್ತಿದ್ದ ವಯಸ್ಸು. ಸಂಬಂಧ ಚೆನ್ನಾಗಿತ್ತು. ವಾರ್ಷಿಕ ಮಾರ್ನೆಮಿಗೆ ದೊಡ್ಡಪ್ಪನ ಮನೆಯಲ್ಲಿ ಪುಟ್ಟ ಜಾತ್ರೆಯೇ ನಡೆಯುತ್ತದೆ. +ಲೋಕಯ್ಯ ದೇವರ ಮಂಟಪದ ಬಳಿಯೇ ಪರಿಕರ್ಮಿಯಾಗಿ ದೊಡ್ಡಪ್ಪನಿಗೆ ಪೂಜಾದಿಗಳಲ್ಲಿ ಅಣಿ ಮಾಡಿಕೊಡುತ್ತಿದ್ದ. ಮಹಾಪೂಜೆಗೆ ದೇವರ ಕೋಣೆ, ಚಾವಡಿ, ಅಂಗಳದಲ್ಲಿ ಮೊದಲು, ಅಂತಸ್ತು ನಂತರ ಜಾತಿಗನುಸಾರವಾಗಿ ಊರ ಭಕ್ತರು ನಿಂತಿದ್ದರು. +ಅದು ಮಹಾನವಮಿಯ ಮಹಾ ಪೂಜೆ. ಅದಕ್ಕಿಂತಲೂ ವಿಶೇಷವೆಂದರೆ ಆ ಪೂಜೆಯಲ್ಲಿ ಧರ್ಮಾತ್ಮರಿಗೆ, ಶ್ರದ್ಧೆಯಿರುವವರಿಗೆ ದೇವರ ಮಂಟಪದಲ್ಲಿ ಆಗುವ ಸಂಚಲನೆ ಕಾಣಿಸುತ್ತದೆ. ಅಕ್ಕ ಪಕ್ಕದವರನ್ನೂ ಮರೆತು ಎಲ್ಲರೂ ದೇವರ ಮಂಟಪವನ್ನು ನೋಡುತ್ತಿದ್ದರು. ಪೂಜೆ ಶುರುವಾಯಿತು. ಮಂಟಪದಲ್ಲಿ ಚಲನೆಯಿಲ್ಲ. +ಏಕಾರತಿ, ಕರ್ಪೂರದಾರತಿ… ಊಹ್ಞೂ.. ಹಲಗೆಯಾರತಿ, ನಾಗನ ಹೆಡೆಯಾರತಿ, ಕೂರ್ಮಾರತಿ ಆಯಿತು. ಕೂರ್ಮಾರತಿ ಎತ್ತಿಕೊಂಡು ದೊಡ್ಡಪ್ಪ ಉದ್ಧರಣೆಯಲ್ಲಿ ನೀರು ಬಿಟ್ಟರು. ಬಲಕ್ಕೆ ಬಗ್ಗಿ ಹರಿವಾಣದಲ್ಲಿದ್ದ ಬಿಡಿ ಹೂಗಳನ್ನೆತ್ತಿಕೊಂಡರು. ಮಂಟಪದಲ್ಲಿ ಸಣ್ಣಗೆ ದರ್ಶನ, ಮತ್ತೊಂದು ಅಗಲದ ಕೂರ್ಮಾರತಿ … ಮಂಟಪಕ್ಕೆ ಹಾಕಿದ ಕೌಳಿಗೆ, ಗೊರಟೆ, ಮಲ್ಲಿಗೆ, ತುಳಸೀ ಹಾರಗಳು ತೊಟ್ಟಿಲ ಹಗ್ಗ ತೂಗಿದ ಹಾಗೆ ಸಣ್ಣಗೆ ಕಂಪಿಸಲಾರಂಭಿಸಿದವು. +ಕೊನೆಯದಾಗಿ ದೊಡ್ಡಪ್ಪ ನೀಲಾಂಜನವೆತ್ತಿಕೊಂಡರು. ೧೬ ಸೊಡರುಗಳ ನೀಲಾಂಜನ. ನಡು ನಡುವೆ ಜೋಡಿಸಿದ ಗುಲಾಬಿ ಬಣ್ಣದ ಗೋದಾಸವಾಳಗಳು. ಅತ್ತ ದೊಂದಿಯಂತಲ್ಲದ, ಇತ್ತ ಮಿಣಮಿಣನೆ ಮಿಸಕದೆ ಹಿತವಾಗಿ ಉರಿಯುತ್ತಿರುವ ತುಪ್ಪ ದೀಪಗಳು. ಇದು ಮಹಾಪೂಜೆಯ ಕೊನೆಯಾರತಿ. ಮಂಟಪದ ಮುಂದೆ ದೇವಿಮಹಾತ್ಮೆ ಪಾರಾಯಣ ಮಾಡುತ್ತಿದ್ದವರು, ಉಟ್ಟ ಪಟ್ಟೆಯನ್ನು ಗಟ್ಟಿ ಮಾಡಿಕೊಳ್ಳುತ್ತಾ ಎದ್ದು ನಿಂತರು. ಜಾಗಟೆ ಸದ್ದಿಗೆ ಅಳುವ ಮಗುವನ್ನೆತ್ತಿಕೊಂಡು ಮುಖಮಂಟಪಕ್ಕೆ ಹೋದವರು ಮಹಾಮಂಗಳಾರತಿ ನೋಡಲು ದಡಬಡಾಯಿಸಿ ಬಂದರು. +ಎಂಥಾ ನೀಲಾಂಜನ ! ಸಣ್ಣ ಗೆರಸೆಯಗಲದ ಹಿತ್ತಾಳೆ ಹರಿವಾಣದಲ್ಲಿ ಜೋಡಿಸಿದ ಕಂಚಿನ ದೀಪಗಳು. ಅದನ್ನೆತ್ತಲು ರೆಟ್ಟೆಯಲ್ಲಿ ಬಲ ಬೇಕು. ದೊಡ್ಡಪ್ಪ ಕುಳಿತುಕೊಂಡೇ ನೀಲಾಂಜನದಾರತಿ ಎತ್ತುತ್ತಿದ್ದರು. ಮಂಟಪ ನಡುಗುತ್ತಲೇ ಇತ್ತು. +`ನಿಲ್ಲಿಸಿ ದೊಡ್ಡಪ್ಪಾ… ‘ ಉತ್ತರ ಪೂಜೆಗೆ ತಯಾರು ಮಾಡುತ್ತಿದ್ದ ಲೋಕಯ್ಯ ಕಿರುಚಿದ. ತನ್ಮಯತೆಯಿಂದ ಜಾಗಟೆ ಬಡಿಯುತ್ತಿದ್ದ ಮಾಣಿಯೂ ಲೋಕಯ್ಯನ ಸದ್ದಿಗೆ ಬೆಚ್ಚಿ ಜಾಗಟೆ ಬಿಟ್ಟು ಬಿಟ್ಟ. ದೊಡ್ಡಪ್ಪ ಕುಳಿತ ಮಣೆಯಿಂದ ತುಸು ಜಾರಿ ನೀಲಾಂಜನವನ್ನು ಭದ್ರವಾಗಿ ಹಿಡಿದುಕೊಂಡೇ ತಲೆಯೆತ್ತಿದ್ದರು. ಅರ್ಧನಿಮಿಷ ಮೌನ. +`ಈ ಮನುಷ್ಯ ಚಟ್ಟಮುಟ್ಟಿಗೆ ಹಾಕಿಕೊಂಡೇ ನೀಲಾಂಜನ ಎತ್ತುತ್ತಾನೆ. ಬಲ ಮುಂಗಾಲನ್ನು ದೇವರ ಮಂಟಪಕ್ಕೆ ಕುಟ್ಟಿ ಮಂಟಪ ದರ್ಶನ ಮಾಡುತ್ತೀರಾ..? ದಗಾ.. ದಗಾ…’ ಎಂದು ಹೇಳುತ್ತಲೇ ಬತ್ತಿ ಹಾಕಿಟ್ಟಿದ್ದ ಏಕಾರತಿಯನ್ನು ರಪ್ಪನೆ ಬಿಸಾಡಿ ಹೊರಟು ಹೋದ. +ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದ ದೊಡ್ಡಪ್ಪ ದೇವರಿಗೆ ಪುನಃ ನೀಲಾಂಜನ ತೋರಿಸಿ, ಅದರಲ್ಲಿದ್ದ ಬಿಡಿ ಹೂಗಳ ದೇವರ ಮೇಲೆ ಹಾಕಿ ಆರತಿ ಕೆಳಗಿಟ್ಟರು. ಬಂದವರೆಲ್ಲ ಮೌನವಾಗಿಯೇ ಆರತಿ ತಗೊಂಡರು. ಬಂದವರ್ಯಾರಿಗೂ ವಿಷಯದ ತಲೆಬುಡ ಅರ್ಥವಾಗಲಿಲ್ಲ. ಏನೋ ಎಡವಟ್ಟಾಗಿದೆ ಎಂದು ಎಲ್ಲರಿಗೂ ಗೊತ್ತಾದ್ದರಿಂದ ಮಾತಿಲ್ಲದೆ ಹೊರಟು ಹೋದರು. ಸೂಕ್ಷ್ಮವಾಗಿ ಗಮನಿಸಿದವರಿಗೆ ಮಂಟಪದ ದರ್ಶನ ಏಕಾ ಏಕಿ ನಿಂತದ್ದು ತಿಳಿಯಿತು. ನಂತರದ ಸಪ್ಪೆ ವಾತಾವರಣದಲ್ಲಿ ಸಿಹಿಯೂಟವಾಯಿತು. +ದೊಡ್ಡಪ್ಪನ ಸಿಂಹಾಯದ ಮನೆಯಲ್ಲಿ ಗಲಾಟೆ ಮಾಡುವ ತಾಕತ್ತು ಆ ಊರಿನಲ್ಲಿ ಯಾರಿಗೂ ಇರಲಿಲ್ಲ. ಲೋಕಯ್ಯ ಮೈಮೇಲೆ ಬಂದವನಂತೆ ಮಾರ್ನೆಮಿ ಪೂಜೆಯಂದೇ ಎಗರಾಡಿದ್ದ. ಈ ಮಂಟಪದ ರಹಸ್ಯವನ್ನು ಆತ ಊರಿನಲ್ಲೆಲ್ಲಾ ಟಾಂಟಾಂ ಮಾಡೇ ಮಾಡುತ್ತಾನೆ ಅನ್ನುವುದು ದೊಡ್ಡಪ್ಪನ ಲೆಕ್ಕಾಚಾರವಾಗಿತ್ತು. ಆದರೆ ಲೋಕಯ್ಯ ಹಾಗೆ ಮಾಡಲಿಲ್ಲ. ನಾಗಿಗೂ ಏನೂ ಅರ್ಥವಾಗಿರಲಿಲ್ಲ. ಲೋಕಯ್ಯನನ್ನು ಕೇಳುವ ಧೈರ್ಯವೂ ಅವಳಿಗಾಗಲಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಕೋವಿ ಮನೆಯಲ್ಲಿ ಮಾರ್ನೆಮಿ ಪೂಜೆಯಂದು ಮಂಟಪ ಧರಿಸುತ್ತಿರಲಿಲ್ಲ. +`ದೇವರ ಮುಂದೆಯೇ ಅಬದ್ಧವಾಗಿ ಕಿರುಚಿದರೆ ಧರ್ಮ ಉಳಿಯುತ್ತದಾ… ?’ ಎನ್ನುವ ಪ್ರಶ್ನೆಯನ್ನೇ ದೊಡ್ಡಪ್ಪ ಮಂಟಪ ಧರಿಸದೇ ಇರುವುದಕ್ಕೆ ಕಾರಣವನ್ನಾಗಿ ಎಲ್ಲರ ಮುಂದಿಡುತ್ತಿದ್ದರು. +ಮಾರ್ನೆಮಿ ಪೂಜೆಗೆ ಮಂಟಪ ನಡುಗುವುದು ನಿಂತದ್ದು ಬಿಟ್ಟರೆ ದೊಡ್ಡಪ್ಪನಿಗೇನೂ ತೊಂದರೆಯಾಗಲಿಲ್ಲ. ಕೋವಿ ಹಿಡಿದುಕೊಂಡ ಹುಚ್ಚು ಮನುಷ್ಯನಿಗೆ ಹೆದರುವಂತೆ ಊರಿಗೆ ಊರಿಗೇ ಕೋವಿ ಮನೆಗೆ ಹೆದರುತ್ತಿತ್ತು. ದೊಡ್ಡಪ್ಪ ಮನೆ ಕಟ್ಟಿಸಿದವರೇ, ಮನೆಗೊಂದು ಕೋವಿ ಕೊಂಡಿದ್ದರು. ಊರಿನ ಪುಂಡು ಕಳ್ಳರು ಹೆದರಲಿ ಅಂತಲೋ ಏನೋ.. .. ಹೊಸದರಲ್ಲಿ ಆ ಕೋವಿಯನ್ನು ಮನೆಗೆ ಬಂದವರಿಗೆಲ್ಲರಿಗೂ ತೋರಿಸುತ್ತಿದ್ದರು. ಶತಮಾನಗಳ ಹಿಂದಿನ ಮನೆಯಲ್ಲವಾದರೂ, ಕೋವಿ ಮನೆ ಎಂಬ ಹೆಸರು ಊರಿನಲ್ಲಿ ಪ್ರಚಲಿತವಾಯಿತು. +ಕೋವಿ ಭಯಕ್ಕೋ, ಮಾಟದ ಭಯಕ್ಕೋ, ಆ ಮನೆಯ ತೋಟದಲ್ಲಿ ಬಿದ್ದ ತೆಂಗಿನ ಕೊದುಂಬು, ಸೋಗೆ, ಕಸ ಕಡ್ಡಿಯನ್ನೂ ಯಾರೂ ಮುಟ್ಟುವುದಿಲ್ಲ. ದೇವರ ಪೂಜೆಗೆಂದು ಕೇಪಳ ಹೂವನ್ನೂ ಕೋವಿನ ಮನೆಯವರ ಜರಿಯಿಂದ ಯಾರೂ ಕೀಳುವುದಿಲ್ಲ. +ಆದರೆ ಲೋಕಯ್ಯನ ಬದುಕು ಕುಸಿಯಿತು. ಕಡು ಬಣ್ಣದ ಲುಂಗಿ, ತಿಳಿ ನೀಲಿ ದೊಗಲೆ ಶರಟು ಹಾಕಿಕೊಂಡು ಓಡಾಡುವ ಲೋಕಯ್ಯ ಊರಿನಲ್ಲಿ ಯಾರ ಕೈಲೂ ಕೆಟ್ಟವನು ಅಂತ ಅನಿಸಿಕೊಂಡವನಲ್ಲ. ಬಡವ ಪಾಪ ಅಂತ ಎಲ್ಲರೂ ಆತನೆಡೆಗೆ ಕರುಣೆ ತೋರುತ್ತಿದ್ದರು. +ಕೈಯ್ಯಲ್ಲಿದ್ದ ಕಂಪೆನಿ ಕೆಲಸ ಬಿಟ್ಟು ಭೂಮಿಯ ಗೀಳು ಹತ್ತಿಸಿಕೊಂಡು ದುಡಿಯಲು ನಿಂತ. ಮುಕ್ಕಾಲು ಪಾಲು ಆಸ್ತಿ ದೊಡ್ಡಪ್ಪನ ತೆಕ್ಕೆಯಲ್ಲಿತ್ತು. ಲೋಕಯ್ಯ, ತನ್ನ ಪಾಲಿನ ಭತ್ತದ ಗದ್ದೆಯಲ್ಲಿ ತೋಟ ಇಟ್ಟು ಚಿನ್ನ ತೆಗೆಯುತ್ತೇನೆಂದು ಕನಸು ಕಂಡ. ತೋಟಕ್ಕೆ ನೀರು ಸಾಲದೆಂದು ಬಾವಿ ತೋಡಿಸಿದ. ಆರು ಮುಂಡಿನಲ್ಲಿ ನೀರು ಸಿಗಬಹುದು ಅಂತ ನಿರೀಕ್ಷೆ ಇತ್ತು. ಆದರೆ ಎಂಟು ಮುಂಡು ಅಗೆದ ನಂತರ ಪಿಕ್ಕಾಸಿಗೆ `ಠಣ್’ ಅಂತ ಪಾದೆಕಲ್ಲು ತಾಗಿ ಬೆಂಕಿ ಕಿಡಿ ಚಿಗಿಯಿತು. ಲೋಕಯ್ಯನನ್ನು ಹೀಗೆ ಕಚ್ಚಿಕೊಂಡ ಸೋಲು ಬೆಂಬಿಡಲಿಲ್ಲ. +ಈ ಸೋಲಿಗೆಲ್ಲ ಕೋವಿ ಮನೆಯವರೇ ಕಾರಣ ಅಂತ ನಾಗಿಯ ಆಪಾದನೆ. ಹಾರೆ ಹಾಕಿದಲ್ಲಿ ಸಿಕ್ಕ ಗುಜರಿ ತಗಡುಗಳೂ ಮಾಟದ ವಸ್ತುಗಳಾಗಿ ಕಂಡವು. ಆದರೆ ಅದಕ್ಕೆ ಪ್ರತಿಮಾಟ ಮಾಡಲು ಕೈಲಿ ಕಾಸು ಕೂಡುತ್ತಿರಲಿಲ್ಲ. ಅನಾಥೋ ದೈವ ರಕ್ಷಕ ಅಂತ ಪಕ್ಕದ ಮನೆಯವರ ಬಳಿ, ಮಕ್ಕಳ ಬಳಿ ಆಗಾಗ ಅನ್ನುತ್ತಾ ನಾಗಿ ಸಮಾಧಾನಮಾಡಿಕೊಂಡಿದ್ದಳು. ಅದಕ್ಕೆಂದೇ ಕೋವಿ ಮನೆಯವರು ಮುಸ್ಸಂಜೆ ದೇವರಿಗೆ ದೀಪ ಹಚ್ಚಿ ಶಂಖ ಊದುವ ಮೊದಲೇ ನಾಗಿ ದೀಪಹಚ್ಚಿ ನಾಲ್ಕು ಶಂಖ ಊದಿ ಬಾವಿಗೆ ದೀಪ ತೋರಿಸಿ, ತುಳಸಿ ಮುಂದೆ ಇಟ್ಟು ಬಿಡುತ್ತಿದ್ದಳು. ಲೋಕಯ್ಯನೂ ಊರಿನ ಉಳ್ಳಾಲ್ತಿಯನ್ನೇ ನಂಬಿ ಪ್ರತಿವಾರ ದೇವರ ತೀರ್ಥ ತಂದು ಮನೆ ದೇವರ ಮುಂದಿಡುತ್ತಿದ್ದ. +ಕೋವಿ ಮನೆಯವರು ಪುನಃ ಮಾಟ ಮಾಡಿರಬೇಕು. ಈಗ ಇರುವೆ ಬಂದಿದೆ. ನಾಗಿ ದೈವಿಕ ಕಾರಣಗಳನ್ನು ಹುಡುಕಿ ಕೋವಿ ಮನೆಯವರನ್ನು ಬೈಯ್ಯುತ್ತಲೇ ನಿದ್ದೆ ಹೋಗಿದ್ದಾಳೆ. ಆದರೆ ಲೋಕಯ್ಯನಿಗೆ…? +ಕಪ್ಪು ಇರುವೆಗಳು ತಲೆದಿಂಬಿನ ಎಣ್ಣೆ ಪಸೆಗಾಗಿ ಮುತ್ತಿಗೆ ಹಾಕುತ್ತಿವೆ. ಮಣ್ಣಿನ ಗೋಡೆಯ ಬಿರುಕುಗಳಿಂದ ದೊಡ್ಡ, ಚಿಕ್ಕ ಕಪ್ಪು , ಕರ್ರಪ್ಪು ಸಾಲು ಇರುವೆಗಳು ಉದ್ಭವಿಸುತ್ತಿವೆ. ಹೊರಗೆ ಕಣ್ಣಿಗೆ ಸೂಜಿ ಚುಚ್ಚಿದರೂ ಕಾಣಿಸದ ಕರ್ಗುಂಡಿ ಕತ್ತಲೆ. ಛಾವಣಿಯ ಹೊಗೆ ಹಿಡಿದ ಗಾಜಿನ ಹೆಂಚಿನಲ್ಲಿ ಒಂದು ಮುಷ್ಟಿ ನಕ್ಷತ್ರಗಳು ಕಾಣಿಸುತ್ತಿವೆ. +ಬಾವಲಿಗಳು ಬಾಳೆ ಗಿಡಗಳ ನಡುವೆ ವ್ಯಸ್ತವಾಗಿ ಓಡಾಡುತ್ತಿವೆ. ಮನೆ ಮುಂದಿನ ಗಾಳಿಬಾಳೆ ಅಪರೂಪಕ್ಕೆ ಒಂದು ಕೈಲು ಹಾಕಿದೆ. ಅದನ್ನೂ ಈ ಬಾವಲಿಗಳು ಬಿಡುತ್ತಿಲ್ಲವೇನೋ. ಲೋಕಯ್ಯ ಅಲ್ಲೇ ಒರಗಿಕೊಂಡ. ಮೊಂಟೆಗಳ ಟಪಟಪ ಸದ್ದು. ಟಿರಿಟಿರಿ ಟಿರ್ರ್… ಎಂಬ ನಡು ರಾತ್ರಿಯ ಚೇರಂಟೆ ಶಬ್ದ. ಕತ್ತಲೋ ಕತ್ತಲು. ಹಾಗೆಂದು ಅಮಾಸೆ ಕತ್ತಲಲ್ಲ. ತಿಂಗಳು ಕಂತಿದೆ. ನಕ್ಷತ್ರಗಳು ದಿಕ್ಕು ತೋರಿಸುತ್ತಿದ್ದವು. +ಲೋಕಯ್ಯ ಮಂಪರಿಗೆ ಜಾರಿದ. ತುಸು ಹೊತ್ತಾಗುತ್ತಲೇ ಆತನ ಕಣ್ಣ ಮುಂದೆ ಮಂದ ಪ್ರಕಾಶ. ಕಣ್ಣು ಕುಕ್ಕುವ ಬೆಳಕಲ್ಲ. ಎಲ್ಲವೂ ನಿಚ್ಚಳ. ಲೋಕಯ್ಯನ ಜಗುಲಿ ಮನೆ. ಜಗಲಿಯ ಕಂಬಕ್ಕೊರಗಿ ಅವನ ಅಪ್ಪ ಕುಳಿತಿದ್ದಾರೆ. ಲೋಕಯ್ಯ ಹಟ್ಟಿಯಲ್ಲಿರುವ ದನ- ಎತ್ತುಗಳ ಸಾಮ್ರಾಜ್ಯಕ್ಕೆ ಹಸಿಹುಲ್ಲು ತರಲು ಹೊರಟಿದ್ದ. ಒಚ್ಚೆ ಮಣೆಗೆ ಬಿಳಿಕಲ್ಲು ಪುಡಿ ಹಾಕಿ ಸವರಿ ಸವರಿ ಹುಲ್ಲ ಕತ್ತಿ ಮಸೆಯುತ್ತಿದ್ದ. ಪಕ್ಕದಲ್ಲಿಯೇ ಹುಲ್ಲಿನ ಬುಟ್ಟಿ. ಹಗ್ಗ. ಅಪ್ಪ ಹೇಳುತ್ತಿದ್ದರು. `ನೋಡು ನಿನ್ನ ದೊಡ್ಡಪ್ಪ ಕಟ್ಟಿದ್ದು ಸಿಂಹಾಯದ ಮನೆ. ಆ ಚಾವಡಿಗೆದುರು ನಿಂತವನಿಗೆ ಒಳ್ಳೆಯದಾಗುವುದಿಲ್ಲ. ಅವನ ಕೃತ್ರಿಮಗಳಿಗೆ ನೀನು ಪ್ರತಿಯಾಗಿ ಮಾಟ ಗೀಟ ಅಂತ ಹೋಗ್ಬೇಡಪ್ಪಾ. ನಿನ್ನ ಉಳ್ಳಾಲ್ತಿಯೊಬ್ಬಳೇ ಕಾಯಬೇಕು.’ +ಎಡಗೈಯ್ಯ ಹೆಬ್ಬೆಟ್ಟಿನಲ್ಲಿ ಕತ್ತಿಯ ಬೆಳ್ಳ ಬೆಳ್ಳಗಿನ ಬಿಸಿ ತುದಿಯನ್ನು ಒತ್ತಿ ಬಲಗೈಲಿ ಕತ್ತಿಯ ಮರದ ಹಿಡಿ ಹಿಡಿದುಕೊಂಡು ಲೋಕಯ್ಯ ಮಸೆಯುತ್ತಲೇ ಇದ್ದ. ಕತ್ತಿ ಗೀರಿ ಗೀರಿ ದೊರಗಾಗಿದ್ದ ಎಡಗೈ ಹೆಬ್ಬೆಟ್ಟಿನಲ್ಲಿ ಇನ್ನೊಂದು ದಪ್ಪ ಗೀರು ಬಿತ್ತು. ಕೆಂಪು ಮಿಶ್ರಿತ ಕಪ್ಪು ರಕ್ತ ತುಸುವೇ ಆಚೆಗೆ ಬಂತು. ಆಯ್.. ಎನ್ನುತ್ತಾ ಲೋಕಯ್ಯ ತಲೆ ಎತ್ತಿ ನೋಡಿದ…. ಹಾಳು ಕನಸು. ಚಿಮಿಣಿ ದೀಪ ಆರುತ್ತಿತ್ತು. +`ಬೆಳಬೆಳಗ್ಗೆ ಸತ್ತವರೆಲ್ಲ ಕನಸಲ್ಲಿ ಬರ್ತಾರೆ. ಏನು ಕಾದಿದೆಯೋ… ‘ ಎಂದು ವಟಗುಟ್ಟಿದ ಲೋಕಯ್ಯ. +* +* +* +ಲೋಕಯ್ಯನ ಮಗ ಈಗ ೮ನೇ ಕ್ಲಾಸು. ಮನೆಯಲ್ಲಿ ಮೂಲೆ ಮೂಲೆಗಳಲ್ಲಿ ಹಿಪ್ಪೆಯಾಗಿ ಬಿದ್ದಿರುವ ಕಷ್ಟಗಳು ಅವನಿಗೆ ಅರ್ಥವಾಗುತ್ತಿದೆ. ಲೋಕಯ್ಯನಿಗೆ ಅದೇ ಸಂತೋಷ. ಅದಕ್ಕೆಂದೇ ಇದ್ದ ಬದ್ದ ಹಣವನ್ನೆಲ್ಲಾ ಸೇರಿಸಿ ಮಗನ ಎಂಟನೆಗೆ ಸೇರಿಸಿದ್ದ. ಪ್ರತಿದಿನ ಕಿಶೋರ ಮುಕ್ಕಾಲು ಮೈಲಿ ನಡೆದುಕೊಂಡು ಹೋಗೇ ಶಾಲೆ ಕಲಿಯುತ್ತಾನೆ. ಎರಡನೆಯ ಮಗಳು ಐದನೇ ಕ್ಲಾಸಿಗೆ ಬ್ರೇಕ್ ಹಾಕಿ ನಾಗಿ ಸೆರಗಿನ ಹಿಂದೆ ಓಡಾಡುತ್ತಿದ್ದಾಳೆ. +ದೊಡ್ಡಪ್ಪನ ಮೂವರು ಮಕ್ಕಳೂ ಟ್ರಿಮ್ಮಾಗಿ ಕ್ಲಾಸಿಗೆ ಹೋಗುತ್ತಾರೆ. ಅವರನ್ನು ನೋಡುವಾಗಲೆಲ್ಲ ನಾಗಿಗೆ ಹೊಟ್ಟೆಯಲ್ಲಿ ಕಡಗೋಲು ಆಡಿಸಿದಷ್ಟು ಸಂಕಟವಾಗುತ್ತದೆ. ಅರಸು ಅಂಕೆಯಿಲ್ಲದೆ, ದೈವದ ಕಾಟವಿಲ್ಲದೆ ಮೆರೀತಾನೆ. ಮಾಡಿದ ಪಾಪ ಮೈಗಂಟದೇ ಇರುತ್ತದಾ ? ಆ ಉಳ್ಳಾಲ್ತಿ ಇವನ ಕಾಲು ಮುರಿಯದೇ ಇರುತ್ತದಾ ಎನ್ನುವ ನಾಗಿಯ ಶಾಪ ದೇವರಿಗೆ ಕೇಳಿಸಿತೋ ಏನೋ, ಇದ್ದಕ್ಕಿದ್ದಂತೆ ದೊಡ್ಡಪ್ಪನ ಒಬ್ಬನೇ ಒಬ್ಬ ಮಗ ಕಾಣೆಯಾದ. ಕೋವಿಮನೆಯಲ್ಲಿ ಸಾಸುವೆ ಕಾಳು ಬಿದ್ದರೂ ಸದ್ದು ಕೇಳಿಸುವಷ್ಟು ಮೌನ. ಟೀವಿ, ರೇಡಿಯೋ, ಪೇಪರಿನಲ್ಲಿ ದೊಡ್ಡಪ್ಪನ ಮಗನ ಪಟ ಬಂತು. ಮಗ ಬರಲಿಲ್ಲ. +ದಿನಗಳು ನಿಲ್ಲುತ್ತವಾ. ಕಾಲ ಲೋಕಯ್ಯನ ಕಾಲು ಸುತ್ತಿಕೊಂಡಿದ್ದ ಬಡತನವನ್ನು ಬಿಡಿಸುತ್ತಿತ್ತು. ಕಿಶೋರ ಈಗ ಕೆಲಸಕ್ಕೆ ಹೋಗುತ್ತಾನೆ. ಕೋವಿ ಮನೆಯ ಮುಂದಿನ ತೆಂಗಿನ ಗಿಡ ಮನೆಯ ಮುಗುಳಿ ದಾಟಿ ಬೆಳೆದು ಮರವಾಗಿತ್ತು. ಹೆಣ್ಣು ಮಕ್ಕಳು ಬೆಳೆದು ನಿಂತಿದ್ದರು. ಮನೆಯ ಕಾರ್ನಿಕವನ್ನು ಹೆಚ್ಚಿಸುವ ದೊಡ್ಡಪ್ಪನ ಅಬ್ಬರ ತಾಳ ನಡೆಯುತ್ತಲೇ ಇತ್ತು. +* +* +* +ಅವತ್ತು ರಾತ್ರಿ ಲೋಕಯ್ಯ ದನಕ್ಕೆ ಬೈ ಹುಲ್ಲು ಹಾಕಲು ಹುಲ್ಲ ಮೂಟೆಯಿಂದ ಹುಲ್ಲೆಳೆಯುತ್ತಿದ್ದ. ದಬ್… ಅಂತ ಗಂಟೊಂದು ಕೆಳ ಬಿತ್ತು. ಜಿಪ್ಪನೆ ಬೆಚ್ಚಿದ ಲೋಕಯ್ಯ ಚಿಮಿಣಿ ದೀಪ ಹಿಡಿದುಕೊಂಡು ಹತ್ತಿರದಿಂದ ಗಂಟನ್ನು ನೋಡಿದ. ಬೆಳ್ಳನೆ ವಸ್ತ್ರದ ಗಂಟು. ಗಂಟಿನ ತುಂಬ ಉಂಡೆಗಳಿದ್ದಂತೆ ಕಂಡವು. ಲೋಕಯ್ಯನ ಗಡಿಬಿಡಿ ಕಂಡು ಬಂದ ನಾಗಿ, ಗಂಟನ್ನು ಕೈಯಿಂದ ಮುಟ್ಟಬೇಡಿ ಎಂದು ಲೋಕಯ್ಯನನ್ನು ದಬಾಯಿಸಿದಳು. ಹಿಡಿಸೂಡಿ, ಕುಂಕುಮ ಕಲೆಸಿದ ಕುರಿ ನೀರು ಹಿಡಿದುಕೊಂಡು ಬಂದಳು. ಗಂಟಿನ ಸುತ್ತ ಕುರಿ ನೀರು ಚೆಲ್ಲಿ ಹಿಡಿಸೂಡಿಯಿಂದ ಮೂರು ಬಾರಿ ಹೊಡೆದಳು. ಲೋಕಯ್ಯ ಗಂಟು ಬಿಚ್ಚಿದ. ಗಂಟಿನ ತುಂಬ ಹಳದಿ ನಿಂಬೆ ಹಣ್ಣುಗಳಿದ್ದವು. ಇಂದೆಂಥಾ ನಮೂನೆಯ ಮಾಟವಪ್ಪಾ ಅಂತ ಗಂಡ ಹೆಂಡತಿ ಪೆಚ್ಚಾದರು. `ನಾಳೆ ಅಬ್ಬು ಬ್ಯಾರಿ ಅಂಗಡಿಗೆ ಅಷ್ಟೂ ನಿಂಬೆ ಹಣ್ಣನ್ನು ಮಾರಿ ಬಿಡಿ’ ಅಂತ ಕಿಶೋರ ಸಲಹೆ ಮಾಡಿ ಮಲಗಿಬಿಟ್ಟ. +ಇಡ್ಲಿಗೆ ಉದ್ದು ಅರೆಯುತ್ತಲೇ ಸದ್ದು ಮಾಡುತ್ತಾ ನಾಗಿ ಸಿಟ್ಟು ಪ್ರದರ್ಶಿಸಿದಳು. ದನಕ್ಕೆ ಹುಲ್ಲು ಹಾಕಿ, ಅದರ ಗಂಗೆದೊಗಲು ತಿಕ್ಕದ ಲೋಕಯ್ಯ ಗಳಿಗೆಗೊಂದು ನಿಟ್ಟುಸಿರು ಬಿಡುತ್ತಾ ಮಲಗಿಕೊಂಡ. ಸ್ವಲ್ಪ ಹೊತ್ತಿಗೆಲ್ಲಾ ನಾಗಿಯೂ ಅಡ್ಡಾದಳು. +ಅಪರಾತ್ರಿ. ಲೋಕಯ್ಯನ ಮಂಪರಿನಲ್ಲಿ ನಿಂಬೆ ಹಣ್ಣಿನ ಹಳದಿ ಬಣ್ಣವೇ ತೇಲುತ್ತಿತ್ತು. ರಾತ್ರಿ, ಮತ್ತ ಹಗಲು, ಗದ್ದೆ, ಕೆಲಸ… ಮತ್ತಿನ್ನೇನು ಕಾದಿದೆಯೋ… ಸತ್ಯದೇವತೆ, ಉಳ್ಳಾಲ್ತಿಯೇ… ಎಲ್ಲ ಭಾರ ನಿನ್ನದೇ… +ಅಷ್ಟರಲ್ಲಿ ಹೊರಗಿನಿಂದ ಬೊಬ್ಬೆ ಕೇಳಿಸಿತು. `ಲೋಕೂ… ಸ್ವಲ್ಪ ಬಾರೋ… ದೊಡ್ಡಪ್ಪ ಬಾವೀಲಿ… ಸಂಕಣ್ಣಾ… ಲೋಕೂ…ಯಾರಾದ್ರೂ ಬನ್ನಿ…’ ಹೆಂಗಸಿನ ದನಿ. ದೊಡ್ಡಮ್ಮನ ಸ್ವರ ಅಲ್ವ ? +ಲೋಕಯ್ಯ ದಡಕ್ಕನೆ ಎದ್ದ. ನಾಲ್ಕು ದೌಡಿನಲ್ಲಿ ಕೋವಿ ಮನೆಯ ಬಾವಿ ಕಟ್ಟೆ ಮುಂದೆ ನಿಂತಿದ್ದ. ಮನೆಯವರೆಲ್ಲ ಬಾವಿಗೆ ಟಾರ್ಚ್ ಲೈಟ್ ಬೀರುತ್ತಾ ನಿಂತಿದ್ದರು. ಲೋಕಯ್ಯನೂ ಪಕ್ಕದಲ್ಲಿದ್ದವರ ಟಾರ್ಚ್ ಕಸಿದುಕೊಂಡು ಬೆಳಕು ಬೀರುವಷ್ಟರಲ್ಲಿ ಜೀವ ಮೂರು ಮುಳುಗು ಹಾಕಿ ನೀರಿನಡಿಗೆ ಹೋಗಿತ್ತು. +`ವೋ… ಏನಾಗಿತ್ತು ? ಜಗಳಾಡಿದ್ದರಾ … ಎಷ್ಟು ಹೊತ್ತಿಗೆ ನಿಮ್ಗೆ ಶಬ್ದ ಕೇಳಿದ್ದು..’ ಪ್ರಶ್ನೆಗಳ ಮೇಲೆ ಪ್ರಶ್ನೆ. ದೊಡ್ಡಮ್ಮ ಮಕ್ಕಳು ಮಾತಾಡಲು ತೋಚದೆ ಬಾಯಿ ಬಾಯಿ ಬಡಿದುಕೊಂಡು ಅಳುತ್ತಿದ್ದರು. ನೆಲ್ಲಿ ಮರದ ಹಲಗೆ ಹಾಕಿದ ವಿಶಾಲ ಬಾವಿ. ತೆಕ್ಕೆಯಷ್ಟಗಲದ ದಂಡೆ ಮರ. ದಂಡೆಗೆ ಕಾಲುಕೊಟ್ಟು ನಾಲ್ಕು ಬಾರಿ ಹಗ್ಗ ಜಗ್ಗಿದರೆ ಕೊಡಪಾನ ನೀರು ಕೈಗೆ ಬರುವಷ್ಟು ತುಂಬು ನೀರು. +ಲೋಕಯ್ಯ ಲುಂಗಿಯನ್ನು ಕಚ್ಚೆ ಕಟ್ಟಿ, ರಾಟೆ ಹಗ್ಗವನ್ನು ದಂಡೆ ಮರಕ್ಕೆ ಬಿಗಿದ. ಎಲ್ಲರೂ ದೊಡ್ಡಪ್ಪನ ಪರಾಕ್ರಮಗಳನ್ನು ಗುಣಗಾನ ಮಾಡುತ್ತಿದ್ದರು. ಮಾಟಗಳೂ ಮಗುಚಿ ಮೆಟ್ಟುತ್ತವಂತೆ… ಕೆಲವರು ಪಿಸುಗುಟ್ಟಿದರು. +ಹೆಣ ಆಗಲೇ ಪಾತಾಳ ಸೇರಿತ್ತು. ಇದ್ದ ಬದ್ದ ದಮ್ಮು ಸೇರಿಸಿ ಒಂದು ಕೈಯ್ಯಲ್ಲಿ ಹಗ್ಗ ಹಿಡಿದು ಲೋಕಯ್ಯ ಬಾವಿಯೊಳಕ್ಕೆ ಹೋದ. ಅರೆ ಬರೆ ಟಾರ್ಚ್ ಬೆಳಕಿನಲ್ಲಿ ಆ ಅಗಲದ ಬಾವಿಯಲ್ಲಿ ಹೆಣ ಯಾವ ಮೂಲೆಯಲ್ಲಿದೆ ಎಂದು ಹುಡುಕುವುದು ಕಷ್ಟವಾಗಿತ್ತು. ತಡಕಾಡಿ ತಡಕಾಡಿ ಹೆಣಕ್ಕೆ ಕೈಲಿದ್ದ ಉರುಳು ಹಾಕಿ ಮೇಲೆ ಬಂದ. ಅಷ್ಟರಲ್ಲಿ ನಾಗಿ ಬಾವಿ ಕಟ್ಟೆ ಬಳಿ ಕುಸಿದು ಬಿದ್ದಿದ್ದಳು. +ಹೆಣವನ್ನು ಚಾವಡಿಯಲ್ಲಿ ಮಲಗಿಸಿದ ಲೋಕಯ್ಯ ರಪರಪನೆ ಮುಂದಿನ ವ್ಯವಸ್ಥೆ ಮಾಡಿದ. ದೊಡ್ಡಪ್ಪನ ದೊಡ್ಡ ಮಗಳು ಭವಾನಿ ಡಿಗ್ರಿ ಓದಿದ ಹುಡುಗಿ. ಪಕ್ಕಕ್ಕೆ ಕರೆದು ಹೇಳಿದ. `ನೋಡಮ್ಮ ಬಂಧು ಬಳಗಕ್ಕೆಲ್ಲಾ ಕಾಯುತ್ತಿದ್ದರೆ ಪೊಲೀಸರಿಗೆ ವಿಷಯ ತಲುಪುತ್ತದೆ. ಆತ್ಮಹತ್ಯೆ ಆದ್ದರಿಂದ ಪೋಸ್ಟ್ ಮಾರ್ಟಂ, ಅಲೆದಾಟ ಇರುತ್ತದೆ. ಅದು ಮನೆಗೆ ಭೂಷಣವಲ್ಲ. ಆದ್ರಿಂದ ಯಾವ ಮಾವಿನ ಮರ ಕಡಿಯೋದು ಅಂತ ಅಮ್ಮನ ಹತ್ರ ಕೇಳಿ ಹೇಳು’ . +ಮುಂದಿನ ಕೆಲಸಗಳೆಲ್ಲ ಚಕಚಕನೆ ನಡೆದವು. ಖುಷಿಯೋ ದುಃಖವೋ, ಚಪ್ಪರವೇರಿತು. ಪುರೋಹಿತರು ಮಂತ್ರ, ತಂತ್ರ… ಊಟ ಉಪಚಾರಗಳು … ಎಲ್ಲಿಯೂ ಲೋಕಯ್ಯನಿಗೆ ಬುಲಾವ್ ಇಲ್ಲ. ನಾಗಿ ಮಟಗುಟ್ಟುತ್ತಿದ್ದರೂ ಕರೆಯದೇ ಇದ್ದುದು ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು ಅಂತ ಸಮಾಧಾನ ಮಾಡಿಕೊಂಡಿದ್ದಳು. +* +* +* +ವರ್ಷಗಳು ಅಟ್ಟಿಅಟ್ಟಿಯಾಗಿ ಉರುಳಿವೆ. ಕೋವಿ ಮನೆ ಧನು ತಿಂಗಳ ಅಪರಾತ್ರಿಯ ಚಳಿಯಷ್ಟೇ ತಣ್ಣಗಿದೆ. ಮನೆಯೊಳಗಿನ ಕತ್ತಲೂ ಅಷ್ಟೇ ಕರ್ರಗೆ. ಊರು ಬಿಟ್ಟಿದ್ದ ಚಿದಾನಂದ ಬಂದಿದ್ದಾನೆ. ದೊಡ್ಡಮ್ಮ ತೀರಿಕೊಂಡಿದ್ದಾರೆ. ಅಡವಿಯಂಥ ಮನೆಯ ಚಾವಡಿ ಹೊಸ್ತಿಲಿನಿಂದ ಕುರುಬಾಗಿಲಿನ ಹೊಸ್ತಿಲಿನವರೆಗೂ ಚಿದಾನಂದನೊಬ್ಬನೇ ಓಡಾಡುತ್ತಾನೆ. ಹೆಣ್ಣುಮಕ್ಕಳು ಅವರವರ ದಾರಿ ಕಂಡುಕೊಂಡಿದ್ದಾರೆ. ಕಿಶೋರನೂ ಚಿದಾನಂದನೂ ಒಟ್ಟಿಗೇ ಅಬ್ಬುಬ್ಯಾರಿ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಾರೆ. ಆದರೆ ಈ ಚಿದಾನಂದನ ಕಣ್ಣುಗಳಲ್ಲಿ ಯಾಕೆ ಜೀವ ಕಾಣುತ್ತಿಲ್ಲ ಎನ್ನುವುದು ಕಿಶೋರನಿಗೆ ಅರ್ಥವಾಗುವುದಿಲ್ಲ. +ಒಂದು ಸಂಜೆ ಅಮ್ಲೆಟ್ ತಿಂದ ಖಾಲಿ ಪ್ಲೇಟನ್ನು ತೋರು ಬೆರಳಲ್ಲಿ ತಿರುಗಿಸುತ್ತಾ ಚಿದಾನಂದ ಕೇಳಿದ ` ಕಿಶೋರಾ, ನಿಂಗೆ ಮಕ್ಕಳನ್ನು ಎಲ್ಲೆಲ್ಲಿ ದತ್ತು ತೆಗೆದುಕೊಳ್ಳುವುದು ಅಂತ ಗೊತ್ತುಂಟಾ ? ಈ ಕೋವಿ ಮನೆಯ ಸಂತಾನ ಮುತ್ತಬೇಕು. ಯಾವ ಮಗುವಾದರೂ ಸರಿ. ಹುಟ್ಟಿದ ಗಳಿಗೆ ಗೊತ್ತಿದ್ದರೆ ಒಳ್ಳೆದಿತ್ತು. ನಿಂಗ್ಯಾರಾದರೂ ಗೊತ್ತಾ..? ‘ +***** +ಕೃಪೆ: http://www.thatskannada.com +ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […] +ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ […] +-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_67.txt b/Kannada Sahitya/article_67.txt new file mode 100644 index 0000000000000000000000000000000000000000..99bbaaa77693870a7ee5b7dc161a32d41e81c091 --- /dev/null +++ b/Kannada Sahitya/article_67.txt @@ -0,0 +1,436 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಚುತುರ್ಥಾಶ್ವಾಸಂ’ +ನಾನೂ ನನ್ನ ಹೆಂಡತಿ ಅನ್ನಪೂರ್ಣ ಸದರೀ ಗ್ರಾಮದಲ್ಲಿ ಗದಗಿನ ಪಂಚಾಕ್ಷರಿ ಕಂಪನಿಯವರು ಬೆಳ್ಳಂಬೆಳಗು ಆಡಿದ ಹೇಮರೆಡ್ಡಿ ಮಲ್ಲಮ್ಮ ನಾಟಕ ನೋಡಿ ಬಂದ ಮೇಲೇಯೇ ಶಾಮಣ್ಣನ ಕುರಿತ ಕಾದಂಬರಿಗೆ ಹೊಸ ಆಯಾಮ ದೊರಕಿದ್ದು ಅದನ್ನು ನಾನು ನೋಡಿದ್ದು ಮೂರನೆ ಇಯತ್ತೆ ಓದುತ್ತಿದ್ದಾಗ, ಅಪ್ಪನ ಹೆಗಲ ಮೇಲೆ ಹೋಗಿ ಹೆಗಲ ಮೇಲೆ ಬಂದಿದ್ದೆ. ಅದೇ ಕಂಪನಿ, ಅದೇ ನಟರು! ಅಂಬಳಿ ಶಿವಲಿಂಗಯ್ಯನವರು ಹೇಮರೆಡ್ಡಿ ಮಲ್ಲಮ್ಮನ ಪಾತ್ರ ವಹಿಸಿದ್ದರೆ ಎರೆಯಂಗಳ ಶಿವಣ್ಣನವರು ಸೂಳೆ ಪಾತ್ರ ವಹಿಸಿದ್ದರು. ಅದೇ ಕಲಾವಿದರನ್ನು ಇಷ್ಟು ವರ್ಷಗಳ ನಂತರ ನೋಡುತ್ತೇನೆಂದು ನಾನು ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದ ಬಲದಿಂದ ಇನ್ನೂ ಜೀವ ಹಿಡಿದಿದ್ದ ಆ ಕಂಪನಿಯ ಕಲಾವಿದರು ದೈಹಿಕವಾಗಿ ಜರ್ಝರಿತರಾಗಿದ್ದರೂ ಅಭಿನಯದ ವಿಷಯದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿದ್ದರು. ಗಾಂಧಿ ತೊಪ್ಪಿಗೆಯನ್ನು ಅಡ್ಡಡ್ಡ ಧರಿಸಿ ಅಭಿನಯದ ಮೂಲಕ ನಗೆ ಮತ್ತು ವಿಷಾದವನ್ನು ಪ್ರೇಕ್ಷಕರಲ್ಲಿ ಬಿತ್ತುತ್ತಿದ್ದ ಭರಮರೆಡ್ಡಿ ಪಾತ್ರ ವಹಿಸುತ್ತಿದ್ದ ನಟ ಯಾರೆಂಬುದು ನೆನಪಾಗುತ್ತಿಲ್ಲ. ಕೇಳೋಣವೆಂದರೆ ಗ್ರಾಮದ ಒಬ್ಬರಲ್ಲಾ ಒಬ್ಬರ ಮನೆಯಲ್ಲಿ ನಟರು ವಾದ್ಯಗಾರರು ಪರದೆ ಎಳೆಯುವವರು ಆತಿಥ್ಯ ಸ್ವೀಕರಿಸುತ್ತ ಬ್ಯುಜಿಯಾಗಿರುತ್ತಿದ್ದರು. +ಇನ್ನೇನು ಕಂಪನಿ ದಿವಾಳಿ ಎದ್ದು ಕಲಾವಿದರೆಲ್ಲ ಹೊಟ್ಟೆ-ಹೊರೆಯಲೋಸುಗ ಅಂಡಾವರನ ಆಗುತ್ತಾರೆ ಎಂಬ ಸಂದರ್ಭದಲ್ಲಿ ಹೊಳಗುಂದಿ ಸಿದ್ದಮಲ್ಲನಗೌಡರ ಅಳಿಯಂದಿರೂ ಸ್ವತಃ ಕಲಾಭಿಮಾನಿಗಳೂ ಆದ ಶ್ರೀಯುತ ಚನ್ನಬಸವನಗೌಡರು ಕಂಪನಿಯನ್ನು ಸದರೀ ಗ್ರಾಮಕ್ಕೆ ಕರೆತಂದಿದ್ದರು. ಬಸವೇಶ್ವರ ಮಹಾತ್ಮೆ; ರಾಜಾ ಸತ್ಯಹರಿಶ್ಚಂದ್ರ ಮುಂತಾದ ಅಪ್ರಕಟಿತ ನಾಟಕಗಳನ್ನು ಬರೆದಿರುವ ಜೆ.ಸಿ.ಗೌಡರು ಒಂದೊಂದು ಮನೆಯವರು ಒಂದೊಂದು ದಿನ ಕಂಪನಿ ಕಲಾವಿದರಿಗೆ ಆತಿಥ್ಯ ಕೊಟ್ಟು ಕಂಪನಿಯ ಹಾಗೂ ಗ್ರಾಮದ ಗೌರವ ಕಾಪಾಡಬೇಕೆಂದು ಗ್ರಾಮಕ್ಕೆ ಕರೆ ನೀಡಿದ್ದರು. ಆದ್ದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಆತಿಥ್ಯದ ವಿಷಯದಲ್ಲಿ ಪರಸ್ಪರ ಪೈಪೋಟಿಗಿಳಿದಿತ್ತು. ಒಬ್ಬರು ಒಂದು ಮಾಡಿಸಿದರೆ ಇನ್ನೊಬ್ಬರು ಇನ್ನೊಂದು ಮಾಡಿಸುತ್ತಿದ್ದರು. ನವಣಿ ಬಾನ ಉಂಡು ಹೇಗೋ ಬದುಕು ನೂಕುತ್ತಿದ್ದ ಕಲಾವಿದರು ಸದರಿ ಗ್ರಾಮದಲ್ಲಿ ಕ್ಯಾಂಪು ಹಾಕಿದಂದಿನಿಂದ ಬಗೆ ಬಗೆಯ ಖಾದ್ಯಗಳನ್ನೊಳಗೊಂಡ ಮೃಷ್ಟಾನ್ನಭೋಜನ ಉಂಡೂ ಉಂಡೂ ಮೈಬಿಟ್ಟಿದ್ದರು. ಯಾರಾದರೂ ಊಟಕ್ಕೆ ಭಿನ್ನವಿಸಿದರೆಂದರೆ ನವಣಕ್ಕಿ ಅನ್ನ ರೊಟ್ಟಿ ಪುಂಡಿ ಪಲ್ಯೆ ಮಾಡ್ರಿಯಪ್ಪಾ… ಸಿಹಿತಿನಿಸು ಉಂಡೂ ಉಂಡೂ ನಾಲಿಗೆ ಬರಗೆಟ್ಟು ಹೋಗದೆ ಎಂದು ಗೋಗರೆಯುತ್ತಿದ್ದರು. ಅದಕ್ಕೆ ಅವರು “ಅದೆಂಗ ಮಾಡಲಕ್ಕಾಗ್ತದ್ರೀ… ಪಕ್ಕದ್ಮನೆ ಸಂಬ್ಲಿಂಗ ನಿನ್ನ ಲಡ್ನೂಟ ಹಾಕ್ಸಿದ್ನಂತೆ. ಅವ್ನಿಗಿಂತ ನಾವೇನು ಕಡ್ಮೆ… ಮೈಸೂರು ಪಾಕ ಜಿಲೇಬಿ ಮಾಡಿಸ್ಟೀವಿ. ಇದು ನಮ್ ಮನ್ತನದ ಮರುವಾದಿ ಪ್ರಸ್ನೆ” ಎಂದು ಬಿಲ್ಕುಲ್ ಒಪ್ಪುತ್ತಿರಲಿಲ್ಲ. ಆದ್ದರಿಂದ ನಿರಾಶ್ರಾದ ಕಲಾವಿದರು ಜೆ.ಸಿ.ಗೌಡರಿಗೆ ಹೋಗಿ ದೂರು ನೀಡಿದ್ದುಂಟು. ಅದಕ್ಕೆ ಅವರು “ನೀವು ಬಗಸೋದೆ ಮಾಡಿದ್ರಿ ಅಂತ ಗ್ರಾಮದೋರ್‍ಗೆ ಹೇಗೆ ಹೇಳ್ಲಿಕ್ಕಾಗ್ತದೆ… ಅದು ಅವರವರ ಪ್ರಿತಿಗೆ ಸಂಬಂಧಿಸಿದ್ದು. ಕಲಾವಿದರೆ, ಎಲ್ಲಾ ಊರುಗಳಂತಲ್ಲ ಇದು. ಎಂಜಲುಗೈಲಿ ಕಾಗೆ ಹೊಡೆಯದ ಮಂದಿಯೇ ಇಲ್ಲಿ ಹೆಚ್ಚು ಇರೋದು”. ಅದೇನು ದೇವ್ರು ಅದೇನು ಬುದ್ಧಿ ಕೊಟ್ಟಿದ್ದಾನೋ ನಾವೇನು ಕಡ್ಮೆ ನಾವೇನು ಕಡ್ಮೆ ಅಂತ ಖರ್ಚು ಮಾಡ್ತಿದ್ದಾರೆ. ಮಾಡ್ಲಿ ಬಿಡಿ. ನಮ್ಮ ನಿಮ್ಮ ಗಂಟೇನೋಗ್ತದೆ…” ಎಂದು ಬುದ್ಧಿ ಹೇಳಿದ್ದುಂಟು. ಅದಕ್ಕೆ ಕಲಾವಿದರು “ಹಂಗಲ್ಲ ಧಣೆರ. ಸುಖವಾಗಿ ಉಂಡೂ ಉಂಡೂ ಏನಾರ ಹೆಚ್ಚು ಕಡ್ಮೆ ಆಗಿ ಬಿಟ್ರೆ” ಎಂದು ಹಿಂದೆಲೆ ಕೆರೆದದ್ದುಂಟು. ಅದಕ್ಕೆ ನಕ್ಕು ಗೌಡರು “ಏರ್‍ಕೆ ವಯಸ್ನಲ್ಲಿ ಇಳ್ಕೆ ವಯ್ಸ್ನಲ್ಲಿ ಸುಖವಾಗಿ ಉಣ್‌ಬೇಕ್ರಿ”… ಎಂದು ಹೇಳಿ ಕಳಿಸಿದ್ದುಂಟು. ಆದರೆ ಕಲಾವಿದರ ಪೈಕಿ ಹಲವರು ಎರಡು ದಿನಕ್ಕೊಮ್ಮೆ ಮೂರು ದಿನಕ್ಕೊಮ್ಮೆ ಪಕ್ಕದೂರುಗಳಾದ ಬಾಪುರ, ಮಾಸನೂರು, ಕಾರೆಕಲ್ಲು, ಕುರುವಳ್ಳಿ ಮೊದಲಾದ ಗ್ರಾಮಗಳಿಗೆ ಹೋಗಿ ಅಂಗಲಾಚಿ ರೊಟ್ಟಿ ಪಡೆದು ತಿಂದು ಬರುತ್ತಿದ್ದುದುಂಟು. ಸಿಕ್ಕಿ ಬಿದ್ದ ಕೆಲವರು “ಏನು ಆಡ್ಲಿಕ್ಕಾಗ್ತದ್ರಿ…ಸುಖಕ್ಕೇನೆ ಹೊಟ್ಟೆ ಹೊಂದ್ಕೊಂಡ್ತಂದ್ರೆ ನಾಳೆ ದಿನ ಕಷ್ಟಕ್ಕೆಂಗ ಬಗ್ಗೀತು… ಅದ್ಕ ರೊಟ್ಟಿ ಉಂಭೋ ಅಭ್ಯಾಸ ಮಾಡ್ಕೊಂಡು ಬರ್ತಿದೀವಿ” ಎಂದು ಹೇಳಿದ್ದುದುಂಟು. +ನಾಳೆ ನಾಟಕಕ್ಕೆ ಹೋಗ್ತಿದೀವಿ ಅನ್ನುವಾಗ ಇವತ್ತಿನಂಗೆ ನಾನು ಕಂಪನಿಯ ಮೇನೇಜರೂ ಮತ್ತು ಮುಖ್ಯ ನಟರೂ ಆದ ಎರಂಗಳ ಶಿವಣ್ಣನವರ ಬಳಿಗೆ ಹೋಗಿ ನಾಳೆ ಮಧ್ಯಾನ್ಹ ಊಟಕ್ಕೆ ಎಲ್ರೂ ನಮ್ಮನೆಗೆ ಬರಬೇಕೆಂದು ಭಿನ್ನವಿಸಿಕೊಂಡೆ. ಈ ಮೊದಲೇ ಪರಿಚಯವಿದ್ದುದ್ದರಿಂದ ಒಪ್ಪಿಕೊಳ್ಳುವುದು ಕಷ್ಟವಾಗಲಿಲ್ಲ. ಫಜೀತಿ ಎದುರಾಗಿದ್ದು ಮನೆಯಲ್ಲಿ ಬಣ್ಣಹಚ್ಚಿಕೊಳ್ಳೋರ್‍ಗೆಲ್ಲ ಕೂಳು ಬೇಯಿಸ್ಲಿಕ್ಕೇನ್ರಿ ನಾನಿರೋದು”ಎಂದು ನನ್ನ ಶ್ರೀಮತಿ ಅನ್ನಪೂರ್ಣಮ್ಮನವರು ತಕರಾರು ಎತ್ತಿದಾಗಲೇ. ಗೃಹಖಾತೆ ಮತ್ತು ಅರ್ಥ ಶಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತ ಬದುಕು ಆರಕ್ಕೇರದಂತೆ ಮೂರಕ್ಕೆ ಇಳಿಯದಂತೆ ನೋಡುಕೊಳ್ಳುತ್ತಿದ್ದ ಶ್ರೀಮತಿಯವರನ್ನು ಮುಂಗಡವಾಗಿ ಒಂದು ಮಾತು ಕೇಳಿದ್ದರೆ ಈ ಪೀಕಲಾಟ ಇರುತ್ತಿರಲಿಲ್ಲವೆಂದುಕೊಂಡೆ. ಮಲೆನಾಡಿನ ಮೂಲೆಯಲ್ಲಿ ಹುಟ್ಟಿ ಬೆಳೆದಿದ್ದರೂ ಆಕೆ ಕಲೆ ಸಾಹಿತ್ಯ ಸಂಸ್ಕೃತಿ ಬಗ್ಗೆ ನನಗಿಂತ ಹೆಚ್ಚು ಒಲವು ಉಳ್ಳವರಾಗಿರುವಳು. ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಆಕೆಯ ಅಣ್ಣ ರುದ್ರಪ್ಪ ಯಕ್ಷಗಾನ ಬಯಲಾಟ ಆಡುವುದರಲ್ಲಿ; ಶನಿಮಹಾತ್ಮನ ಕಥೆ ಹಾಡುವುದರಲ್ಲಿ ಯಮಸಂಧಿಯೊಂದೇ ಅಲ್ಲದೆ ಚೋಕನಳ್ಳಿ, ಮಾಸುವಳ್ಳಿ, ಬೆಣ್ಣೂರು, ಹಲ್ಮಡಿಯೇ ಮೊದಲಾದ ಗ್ರಾಮಗಳಲ್ಲಿಯೂ ಸಾಕಷ್ಟು ಹೆಸರುವಾಸಿಯಾಗಿದ್ದನು. ಆಕೆಯ ತಮ್ಮ ಒಂದು ಸಿನಿಮಾ ನೋಡಿದನೆಂದರೆ ಆ ಸಿನಿಮಾದ ಹಾಡುಗಳನ್ನೆಲ್ಲವನ್ನು ಬಾಯಿಪಾಠ ಮಾಡಿಟ್ಟುಕೊಂಡು ಬಿಡುತ್ತಿದ್ದನು. ಆಕೆಯ ತಂದೆಯವರಾದ ನಿರ್ವಾಣೆಪ್ಪನವರು ರಾಜಕುಮಾರರೊಂದಿಗೆ ಗುಬ್ಬಿಕಂಪೆನಿಯಲ್ಲಿದ್ದು ತಬಲ ನುಡಿಸುತ್ತಿದ್ದಂಥವರು. ಇಂಥ ಹಿನ್ನೆಲೆಯ ಆಕೆ ‘ನಮ್ಮ ಮಗನಿಗೆ ತಬಲ ಅಭ್ಯಾಸ ಮಾಡಿಸೋಣ ಕಣ್ರೀ’ ಎಂದು ಹಠ ಹಿಡಿಯುತ್ತಿದ್ದಳು. ‘ಹೆಣ್ಣು ಮಗು ಹುಟ್ಟಿದ್ರೆ ಭರತ ನಾಟ್ಯ ಕಲಿಸೋಣ ಕಣ್ರೀ’ ಎಂದು ಆಪ್ಯಾಯತೆಯಿಂದ ಕೇಳುತ್ತಿದ್ದಳು. +ಹೊಟ್ಟೆಗೆ ಹಿಟ್ಟು ಇಲ್ಲದ ಎಷ್ಟೋ ಸಂದರ್ಭಗಳಲ್ಲಿ ಜುಟ್ಟಿಗೆ ಮಲ್ಲಿಗೆ ಹೂವು ಹೊಂಚುವ ಬಗ್ಗೆ ಯೋಚಿಸುವ ಜಾಯಮಾನದವನಾದ ನಾನು ಆಕೆಯ ಆ ತೆರನ ಮಹತ್ವಾಕಾಂಕ್ಷೆಗಳಿಗೊಂದು ತಣ್ಣನೆ ಕೊರೆವ ಸಿಹಿನೀರನ್ನು ಎರಚಿದವನಲ್ಲ, ಅಂಥ ಆಕೆ ಗವಾಯಿಗಳ ಕಂಪೆನಿಯ ಕೇವಲ ಐವತ್ತೇಳು ಮಂದಿ ಕಲಾವಿದರಿಗೆ ಒಂದು ಹೊತ್ತು ಊಟ ಬೇಯಿಸಿ ಹಾಕಲು ತಕರಾರು ಎತ್ತುವುದೆಂದರೇನು?… ಅಂಥ ದುಬಾರಿ ಕಾಲದಲ್ಲಿ ಅಷ್ಟು ಮಂದಿಗೆ ಊಟ ಹಾಕಲು ನಮ್ಮ ಮಗನ ನಿಷೇಕವಿದೆಯೇ? ಅವರಿಗೆ ಊಟ ಹಾಕುವುದರಿಂದ ನಮ್ಮ ಹೆಸರನ್ನು ಗ್ರಾಮದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲಾಗುತ್ತಯೇ? “ಆಫ್ಟರಾಲ್ ಮೇಷ್ಟ್ರು ಒಬ್ಬ ಜಮೀನ್ದಾರರಿಗೆ ಸರಿಸಮ್ಮನವಾಗಿ ಕಲಾವಿದರಿಗೆ ಊಟ ಹಾಕುವುದೆಂದರೇನು” ಎಂದು ಮುಂತಾಗಿ ಗ್ರಾಮದ ಅಷ್ಟೈಶ್ವರ್ಯವುಳ್ಳವರಾದ ಮಂದಿ ಹಲ್ಲು ಮಸೆಯದೆ ಇರುತ್ತಾರೆಯೇ? ಇದರಿಂದ ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಮೂರು ತಿಂಗಳ ದಿನಮಾನ ಏರುಪೇರಾಗುವುದಿಲ್ಲವೇ? ಮೇಷ್ಟ್ರು ಕೆಲಸ ಮಾಡಲು ಬಂದಿರುವ ನಾವು ಕೇವಲ ಮೇಷ್ಟ್ರು ಕೆಲಸ ಮಾಡುತ್ತ ಇದ್ದು ಗ್ರಾಮಸ್ತರ ಪ್ರೀತಿಗೆ ಪಾತ್ರರಾಗುವುದನ್ನು ಬಿಟ್ಟು ಇಂಥ ತಲೆನೋವುಗಳನ್ನು ಎದುರು ಹಾಕಿಕೊಳ್ಳುವುದೆಂದರೇನು? ಇವೇ ಮುಂತಾದ ಸಮಸ್ಯೆಗಳನ್ನು ಬಿಡಿಸಿ ಇಟ್ಟ ಆಕೆ ತನ್ನ ಗಂಡನಾದ ನನ್ನ ವಾಗಿಲಿಯ ಕ್ರಿಯಾಕರ್ಮಗಳನ್ನು ಕೇಳಿಬಲ್ಲವಳಾಗಿದ್ದಳು. ಯಕಸ್ಚಿತ್ ಜವಾನನ ಕೆಲಸ ಮಾಡೊದು ತಕ್ಕ ಮಟ್ಟಿಗೆ ಸ್ಥಿರಾಸ್ತಿ ಚರಾಸ್ತಿ ಮಾಡ್ಕೊಂಡು ಆರಾಮಿದ್ದಾರೆ. +ಮೇಷ್ಟ್ರು ಕೆಲಸ ಮಾಡೋ ನಾವ್ಯಾಕೆ ತಿಂಗಳ ಕೊನೆಗೆ ಬಿಡಿಕಾಸಿಗೆ ಪರದಾಡ್ತಿದ್ದೇವೆ ಎಂದು ತರ್ಕಿಸೀ, ತರ್ಕಿಸೀ ಆರ್ಥಿಕ ಇಲಾಖೆಯನ್ನು ತಾನೇ ಖುದ್ಧ ನಿರ್ವಹಿಸ ತೊಡಗಿದ್ದಳು. ಅಂದಿನಿಂದ ನಾವೂನೂವೆ ಹುಳ್ಳಗೆ ಬೆಳ್ಳಗೆ ಆಗಿದ್ದೆವು. ಬೇಸತ್ತ ಗೃಹಿಣಿಯರ ಮನಸ್ಸಿಗೆ ಶಾಂತಿ ನೀಡುವಂಥ ಕಾದಂಬರಿಗಳನ್ನು ಬರೆದು ನಾಲ್ಕು ಕಾಸು ಸಂಪಾದಿಸಿ ಎಂದು ಆಕೆ ಮಾಡಿದ ಒತ್ತಾಯಕ್ಕೆ ಮಣಿದು ನಾನು ಒಂದೆರಡು ಮೂರನೆ ದರ್ಜೆಯ ಕಾದಂಬರಿಗಳನ್ನು ಬರೆದು ವಿಮರ್ಶಕರಿಂದಲೂ; ಓದುಗರಿಂದಲೂ ಉಗಿಸಿಕೊಂಡಿದ್ದೆನು. ಅಂಥ ನಾನು ಕಲಾವಿದರನ್ನು ಆಮಂತ್ರಿಸುವ ಮುನ್ನ ಗೃಹ ಖಾತೆಯೊಂದಿಗೆ ಒಂದು ಮಾತು ಚರ್ಚಿಸಬೇಕಿತ್ತು. ಪುರುಷ ಸಹಜ ಧಿಮಾಕಿನಿಂದ ಆಮಂತ್ರಿಸಿ ಫಜೀತಿಗೆ ಸಿಲುಕಿಕೊಂಡಿದ್ದೆನು. +ಯಾರ ಮರ್ಯಾದೆ ಹೋದರೂ ಒಂದೇ ಎಂಬ ಕಾರಣದಿಂದ ಆಕೆ ವಿದ್ಯಾರ್ಥಿನಿಯರ ಸಹಾಯದಿಂದ ಅಡುಗೆ ಮಾಡಿ ಬಡಿಸಲು ಒಪ್ಪಿಕೊಂಡಳು. ಪಾಪ! ರಾತ್ರಿ ಕೇವಲ ಎರಡುಗಂಟೆ ಮಾತ್ರ ನಿದೆ ಮಾಡಿ ಎದ್ದು ದಗದಕ್ಕೆ ತೊಡಗಿದಳು. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಕರಿಗಡಬು, ಕೋಡುಬಳೆ ಕೋಸುಂಬರಿ, ಪಲ್ಯೆ; ಅನ್ನ ಸಾಂಬಾರು ಚಟ್ನಿ ವಗೈರೆ ಸಿದ್ಧ ಪಡಿಸಿದಳು. ನಾನು ಸ್ಟೈಲಾಗಿ ಕಲಾವಿದರ ಥರ ಜುಬ್ಬ ಪಂಚೆ ಧರಿಸಿ ಕಲಾವಿದರನ್ನು ಕರೆದುಕೊಂಡುಬಂದೆ. ಕಲಾವಿದರೆಲ್ಲ ಹ್ಹಾ…ಹ್ಹಾ…ಹ್ಹೋ…ಹ್ಹೋ… ಎಂದು ಉದ್ಗರಿಸುತ್ತ ಉಂಡು ಶಾಸ್ತ್ರೀಯ ರೀತಿಯಲ್ಲಿಯೇ ಡೇಗಿ ಎಲೆ ಅಡಿಕೆ ತಟ್ಟೆ ಬಳಿಗೆ ಬಂದರು. ಪರಾವಲಂಬಿ ಲೇಖಕನಾದ ನಾನು ಅವರೆಲ್ಲರಿಗೂ ನೀರು ನೀಡಿ; ಎಲೆ ಅಡಿಕೆ ಸುಣ್ಣ ಸರಬರಾಜು ಮಾಡುತ್ತ ಅವರ ಬದುಕಿನ ಒಳ ವಿವರಗಳನ್ನು ಬೆದಕಿ ತಿಳಿದುಕೊಂಡೆ. ಪಾತ್ರದ ನಿರೀಕ್ಷೆಯಲ್ಲಿರುವ ಬಣ್ಣ ಹಚ್ಚಿಕೊಂಡಿರುವ ಕಲಾವಿದನೊಬ್ಬ ವಿಂಗ್ ಸೈಡಿನಲ್ಲಿ ಕುಳಿತು ಮಾಡುವ ಆಲೋಚನೆ ಕುರಿತು ಕಾದಂಬರಿ ಬರೆಯಬೇಕೆಂದು ನಿರ್ಧರಿಸಿದ್ದು ಆ ಸಂದರ್ಭದಲ್ಲಿಯೇ. ಸ್ತ್ರೀ ಪಾತ್ರಧಾರಿ ಪುರುಷನೊಬ್ಬ ರಂಗಪರಿಕಲ್ಪನೆಗಳ ಮೂಲಕ ಪ್ರೇಕ್ಷಕರನ್ನು ಭ್ರಮೆಯ ಕೂಪದಲ್ಲಿ ತಳ್ಳುವ ಪ್ರತಿಭೆಯ ಬಗೆಗೂನೂವೆ. +ಈ ಬಗ್ಗೆ ತಿಂಗಳೊಪ್ಪತ್ತಿನಲ್ಲಿ ಕಾದಂಬರಿಯೊಂದನ್ನು ಬರೆದು ಅದರಿಂದ ಬರುವ ಗೌರವಧನದಲ್ಲಿ ಒಂದು ಭಾಗವನ್ನು ಹೆಂಡತಿ ಕೈಗೆ ಕೊಟ್ಟು ಇನ್ನೊಂದು ಭಾಗವನ್ನು ಪಾಡಾಖರ್ಚಿಗೆ ಇಟ್ಟುಕೊಳ್ಳುವುದೆಂದು ಕೂಡಾ ಯೋಚಿಸದೆ ಇರಲಿಲ್ಲ. ಹಡಬೆ ಮನುಷ್ಯನಾದ ನಾನು ಕಲಾವಿದರಲ್ಲ, ಹಾಡುಗಳನ್ನು ಗೊಣಗಿಕೊಳ್ಳುತ್ತ; ಮಾತುಗಳಿಗೆ ಮರು ಲೇಪನ ಮಾಡುತ್ತಲೇ ನಮಗೆಲ್ಲ ಶುಭ ಹಾರೈಸಿ ತಂತಮ್ಮ ಬಿಡದಿ ಮನೆಗಳ ಕಡೆಗೆ ಹೊರಟು ಹೋದರು. +ನಾವು ಕಲಾವಿದರಿಗೆ ನಿಜವಾಗಿಯೂ ಊಟ ಹಾಕಿದ ಸುದ್ದಿ ಕೆಲವೇ ಗಳಿಗೆಗಳಲ್ಲಿ ಊರುತುಂಬ ಹಬ್ಬಿತು. ಅದು ಮೊದಲೇ ಹೂಸು ಬಿಟ್ಟರೆ ಊರು ತುಂಬ ಹಬ್ಬುವಷ್ಟು ಕಿರಿಯದಾಗಿತ್ತು. ಜೊತೆಗೆ ಕಲಾವಿದರು ನಮ್ಮ ಕಲಾಭಿಮಾನದ ಬಗ್ಗೆ ಹೊಗಳುತ್ತ ಮೇಷ್ಟ್ರಾಗಿದ್ದುಕೊಂಡೇ ಇಂಥ ಊಟ ಹಾಕಿದ! ಇನ್ನು ತಾಶೀಲ್ದಾರನೋ ಕಲೆಕ್ಟರೋ ಆಗಿದ್ರೆ ಊಟ ಹಾಕುವುದರ ಜೊತೆಗೆ ತಲಾ ಒಂದೊಂದು ಚಿನ್ನದ ನಾಣ್ಯವನ್ನು ಕೈಲಿಡುತ್ತಿದ್ದನೇನೋ ಪುಣ್ಯಾತ್ಮ ಎಂದು ದಾರಿ ಉದ್ದಕ್ಕೂ ಟಾಂಟಾಂ ಹಾಕುತ್ತ ಹೋಗಿದ್ದರು. ಎಲ್ಲರಿಗಿಂತ ಮೊದಲು ಸಿಟ್ಟಗಿದ್ದವರೆಂದರೆ ನಮ್ಮ ಹೆಡ್‌ಮೇಷ್ಟ್ರಾಗಿದ್ದ ಶಿವರಾಮಶಾಸ್ತ್ರಿಗಳು. “ಅಲ್ರೀ… ಮೇಷ್ಟ್ರುಗಳಾದ ನಾವು ಊರಲ್ಲಿ ಹೆಂಗಿರ್ಬೇಕೋ ಹಂಗಿರಬೇಕ್ರಿ… ಅದು ಬಿಟ್ಟು ಜಮೀನ್ದಾರ್ರೀಗೆ ಸರಿಸಮಾನವಾಗಿ ಕಂಪನಿ ಮಂದಿಗೆ ಊಟಹಾಕುವುದೆಂದರೇನು? ಇದೇನೋ ನಮಗೆ ಸರಿಕಾಣಿಸ್ಲಿಲ್ಲ ಮೇಷ್ಟ್ರೇ… ಇದೊಂದು ರೀತಿ ಗೌಡರ ಪ್ರತಿಷ್ಟಿಗೆ ಹಾದ ಹಾನಿಯೇ ಸರಿ” ಎಂದು ಪ್ರತಿಕ್ರಿಯಿಸಿದರು. ಎರಡೆಕರೆ ಗದ್ದೆಗೆ ಒಡೆಯನೂ; ಕೃಷಿ ಕಾರ್ಮಿಕನೂ ಆದ ಸಂನಂಜನು “ಆ ತಿರುಬೋಕಿ ಮೇಷ್ಟ್ರೇ ಉಣ್ಣಾಕ್ಕಿಕ್ಕಿದಾನೆಂದ್ಮೇಲೆ.. ನಾವೇನ್ ಕಡ್ಮೆ” ಎಂದು ಕಂಪನಿಯವರಿಗೆಗ್ರಾಂಡಾಗಿ ಉಂಬಕ್ಕಿಡಲು ಸಿದ್ಧತೆ ನಡೆಸಿದನು. ಮೇಷ್ಟ್ರಂದ್ರೆ ಹೀಗಿರಬೇಕಪ್ಪಾ ಉಳ್ದೋರದಾರ್ನೋಡು ಭೂಮಿಗೆ ಭಾರಾಗಿ ಎಂದು ತೈಲರು ಸುಲೇಮಾನು ಮತ್ತವನ ಸಂಗಡಿಗರು ಮಾತಾಡಿಕೊಂಡರಂತೆ. ನನಗೆ ಸ್ಪಷ್ಟವಾಗಿ ಗೊತ್ತು ನಾನು ಮಾಡಿದ್ದು ಬಡಿವಾರ ಅಂತ. ಇಂಥ ಬಡಿವಾರಗಳು, ಧಿಮಾಕುಗಳು ನಮ್ಮ ವಂಶದಲ್ಲಿ ರಕ್ತಗತವಾಗಿ ಬಂದಿರುವುದು. ನಮ್ಮ ತಾತ ಕಡಿಮೆಯಾಗಿದ್ದರೆ ನಮ್ಮ ಅಪ್ಪ ಕಡಿಮೆಯಾದಾನು! ಹಿಂದೆ ಒಂದ್‌ಹತ್ತು ಮಂದಿಯನ್ನಿಟ್ಟುಕೊಂಡು ಭೂತಕಾಲವನ್ನು ವೈಭವೀಕರಿಸುತ್ತಲೇ ವರ್ತಮಾನವನ್ನು ಕಾಲಕಸವಾಗಿ ನೋಡಿದ ಆಜಾನುಬಾಹು ವ್ಯಕ್ತಿ, ಇದ್ದ ವರಾಸ್ತಿ ಸ್ಥಿರಾಸ್ತಿಯನ್ನೆಲ್ಲವನ್ನೂ ಐದು ಮಂದಿ ಪ್ರತಿಸ್ಪರ್ಧಿಗಳನ್ನು ಜೈಲಿಗೆ ಕಳಿಸಲಿಕ್ಕೆ ವ್ಯಯ ಮಾಡಿದ ಆ ಪುಣ್ಯಾತ್ಮನ ಮಗನಾಗಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಡಿವಾರ ಮಾಡುತ್ತಿದ್ದೆ. ಕೈಮೈಯಿಂದಾಗದ ಎಷ್ಟೋ ಬಡಿವಾರದ ಸಂಗತಿಗಳನ್ನು ಬರಹದ ಮೂಲಕ ಪ್ರಕಟಿಸುತ್ತಿದ್ದೆ. +ಇಂಥಪ್ಪ ನಾನು ಭಲೆ ಠೀವಿಯಿಂದ ಸಿಂಪಲ್ಲಾಗಿ ಅಲಂಕಾರ ಮಾಡಿಕೊಂಡಿದ್ದ ಶ್ರೀಮತಿ ಅನ್ನಪೂರ್ಣಮ್ಮನವರೊಡನೆ ಅದು ನಾಟಕ ನೋಡಲಿಕ್ಕೆಂದು ಹೋದಾಗ ಸಿಕ್ಕ ಗೌರವ, ತಿರಸ್ಕಾರ ವರ್ಣಿಸಲಸದಳ. ಹಾರ್ಮೋನಿಯಮ್ ಶಹನಾಯಿ ನುಡಿಸುವವ ಹಿಂದೆ ಕುಳಿತುಕೊಂಡೆವು. ನಾವೂ ಕಲಾವಿದರೆಂದೂಹಿಸಿ ಆಡುವವರು ಶಕ್ತಿಮೀರಿ ಆಡಿದರು. ಮಹಾಪತಿವ್ರತೆಯಾದ ಮಲ್ಲಮ್ಮನ ಪಾತ್ರ ಬಂದಾಗ ನನ್ನ ಹೆಂಡತಿ ತೋರಿಸುತ್ತಿದ್ದ ಕುತೋಹಲ, ಆಸಕ್ತಿ, ಪ್ರತಿಕ್ರಿಯೆ, ಸೂಳೆ ಪಾತ್ರ ಬಂದಾಗ ಇರುತ್ತಿರಲಿಲ್ಲ. ನಾಟಕ ಮುಗಿದ ನಂತರ ಅನ್ನಪೂರ್ಣೆ ಮ್ಲಾನವದನಳಾಗಿ ಮನೆಕಡೆ ಹೆಜ್ಜೆ ಹಾಕಿದಳು. “ನಿಲ್ಲೇ ಮಾರಾಯ್ತಿ, ಯಾಕೆ ಓಡ್ತೀ” ಎಂದು ನಾನು ಕೇಳಿದ್ದುಂಟು. ನಮ್ಮ ವರ್ತನೆಯನ್ನು ನೋಡಿದ ಯಾರಾದರೂ ಇವರಿಬ್ರು ಜಗಳ ಆಡಿರ ಬೇಕು ಎಂದು ಊಹಿಸುವುದು ಸಾಧ್ಯವಿತ್ತು! ಹಾಸಿಗೆ ಸೇರಿದ ಮೇಲೂ ಶ್ರೀಮತಿಯವರ ಮುಖ ಅರಳಲಿಲ್ಲ. ಒಳ್ಳೆ ಫಜೀತಿಗಿಟ್ಟುಕೊಂಡಿತಲ್ಲಾ… ನಾಟಕ ಸಿನಿಮಾ ಮುಂತಾದ ಪ್ರದರ್ಶಕ ಕಲೆಗಳಿವುದೇ ಮಾನವನನ್ನು ಖುಷಿ ಪಡಿಸಲಿಕ್ಕೆ… ನವರಸಭರಿತವಾದ ಹೇಮರೆಡ್ಡಿಮಲ್ಲಮ್ಮ ಅರ್ಥತ್ ಶ್ರೀಶೈಲ ಮಲ್ಲಿಕಾರ್ಜುನ ಮಾಹಾತ್ಮೆ ನೋಡಿದ ನಂತರ ಶ್ರೀಮತಿಯವರು ಯಾಕ್‌ಹೀಗೆ ಸಪ್ಪಗಿದ್ದಾರೆ? ಅವರ ಮುನಿಸಿಗೆ ಕಾರಣವೇನು? ಇದರಿಂದ ಶ್ರೀಮತಿಯವರನ್ನು ಹೇಗಾದರೂ ಪಾರು ಮಾಡಬೇಕೆಂದು ನಿರ್ಧರಿಸಿ ಬಗೆಬಗೆಯ ವಿನೋದಾವಳಿಗೆ ತೊಡಗಿದೆ. ಅದರಿಂದಲೂ ಪ್ರಯೋಜನ ಲಭಿಸದಿರಲು ನಾನೂ ಮುನಿಸಿಕೊಂಡಂತೆ ನಟಿಸಿದೆ. ಅದರಿಂದಲು ಅವರ ಮುಖ ಅರಳದಿದ್ದಾಗ”ನೀನು ಸಪ್ಪಗಿರೋಕೆ ಕಾರಣ ಹೇಳೇ ಮಾರಾಯ್ತಿ” ಎಂದು ಸಿಡುಕಿನಿಂದಲೇ ಹೇಳಿದೆ. “ಸೂಳೆಪಾರ್ಟು ಮಾಡೊರ್ನೆಲ್ಲ ಮನೆಗ್ಯಾಕೆ ಊಟಕ್ಕೆ ಕರ್ಕೊಂಡ್ ಬಂದ್ರೀ” ಎಂದೊಂದೇ ಅಣಿಮುತ್ತನ್ನುದುರಿಸಿದರು. ಇದರಿಂದ ನನಗಾದ ಸಂತೊಷ ಅಷ್ಟಲ್ಲ! ನಕ್ಕೆ. “ಯಾಕೆ ನಗ್ತೀರ” ಅಂದರು. “ಅಲ್ಲಮ್ಮಾ… ಅದ್ರಲ್ಲಿ ತಪ್ಪೇನಿದೆ? ಅಂದೆ. ಅಲ್ರೀ ಅಷ್ಟೊಂದು ಅಶ್ಲೀಲವಾಗಿ ಆ ಮಾತಾಯಿ ಮಲ್ಲಮ್ಮನ್ನ ಗೋಳುಹುಯ್ಕೊಂಡಳಲ್ಲ ಆ ಸೂಳೆ… ಥೂ… ಅಶ್ಲೀಲ… ಒಂದು ಚ್ರಾದ್ರು ಮಾನಮರ್ಯಾದೆ ಬೇಡ್ವೇ… ಆ ಸೂಳೆ ಪಾರ್ಟು ಮಾಡಿದ ಆವಯ್ಯನಿಗೆ ಊಟಕ್ಕಿದೀ ಕೈಗೆ ಯಾವ ಶಿಕ್ಷೆ ಕೊಟ್ಕೋಬೇಕೋ ಅರ್ಥ ಆಗ್ತಾ ಇಲ್ಲ” ಎಂದು ಇತಿಹಾಸ ಪ್ರಸಿದ್ಧ ಚರ್ಚೆಗೆ ನಾಂದಿ ಹಾಡಿದಳು. +ಆಕೆಯ ಮುಖಾರವಿಂದ ಮೇಲೆ ಬೆರಳಾಡಿಸುತ್ತ “ನಾನು ಅದು ವಾಸ್ತವ ಕಣೇ ವಾಸ್ತವ, ಅದ್ರಲ್ಲಿ ತಪ್ಪೇನಿದೆ ಈಗ! ಆ ನಾಟಕದಲ್ಲಿ ಸೂಳೆ ಪಾತ್ರ ಇರದಿದ್ದಲ್ಲಿ ಮಲ್ಲಮ್ಮನ ಪಾತ್ರ ಬೆಳೀತಿತ್ತಾ! ಆ ನಾಟಕದ ನಿಜವಾದ ನಾಯಕಿ ಅಂದ್ರೆ ಸೂಳೇ ಪಾರಾನೆ…” ಎಂದು ನಾನು ಸೂಳ್ಲೆ ಪಾತ್ರವನ್ನು ಒತ್ತುಕೊಟ್ಟುಸಮರ್ಥಿಸಿದ್ದು ನಮ್ಮಿಬ್ಬರ ನಡುವೆ ಹೊಸದೊಂದು ಸಮಸ್ಯೆಯನ್ನು ಹುಟ್ಟು ಹಾಕಿತು. ಆಕೆ ಮಲ್ಲಮ್ಮನ ಕದೆ ವಕಾಲತ್ತು ವಹಿಸಿ ಮಾತಾಡಿದರೆ ನಾನು ಸೂಳೆ ಪಾತ್ರವನ್ನು ಸಮರ್ಥಿಸಿ ಮಾತಾಡತೊಡಗಿದೆ. ಎತ್ತು ನೀರಿಗೆಳೆದರೆ ಕೋಣ ನೀರಿಗೆಳೆಯಿತು ಎನ್ನೋ ಹಾಗೆ ನಮ್ಮಿಬ್ಬರ ಮಾತುಕತೆ ಮುಂಗೋಳಿ ಕೂಗೋವರೆಗೆ ನಿರಾತಂಕವಾಗಿ ನಡೆಯಿತು. ಮಾತುಕತೆ ನಡುವೆ ಅನೇಕ ಜೀವಂತ ಪಾತ್ರಗಳು ಅನೇಕ ಪೌರಾಣಿಕ +ಪ್ರಸಂಗಗಳು ತೇಲಿಹೋದವು. ವಿಜ್ಞಾನವನ್ನು ಕಾಲೇಜಿನಲ್ಲಿ ತಕ್ಕಮಟ್ಟಿಗೆ ಕಲಿತಿರುವ ಆಕೆ ತನ್ನ ಗಮ್ಡನಾದ ನನ್ನನ್ನು ಆಗಾಗ್ಗೆ ನನ್ನ ಗತಿಸಿದ ತಮ್ದೆಗೆ ಅಂದರೆ ತಮ್ಮ ಮಾವನವರಿಗೆ ಹೋಲಿಸುತ್ತಿದ್ದಳು. ಇದಕ್ಕೆಲ್ಲ ಕಾರನ ಅಯ್ಯನವರ ರುದ್ರಮ್ಮ ಎಂದೇ ಹೇಳಬಹುದು. ನನ್ನ ಗೈರು ಹಾಜರಿಯಲ್ಲಿ ಆಯಮ್ಮ ಈಯಮ್ಮನಿಗೆ “ಈಗ ನಿಮ್ಮಾವ ಇರ್ಬೇಕಾಗಿತ್ನೋಡು… ಆತ್ನೋಡೊಕೆ ಒಳ್ಳೆ ರಾಜ್ಕುಮಾರಿದ್ದ್‌ಹಂಗಿದ್ನೇ ಅನ್ನಪೂರ್‍ಣಿ… ಆತನೆಷ್ಟೆತ್ರ ಈ ಊರಾಗ್ಯಾರೂ ಇದ್ದಿಲ್ಲ ಬಿಡು… ಎಂಥ ವರ್ಚಸ್ಸು ಏನ್ಕಥೆ! ಗರಿಗರಿ ಧೋತ್ರ ಸಿಲುಕು ಜುಬ್ಬಾ ತೊಟ್ಕೊಂಡು, ಡಬ್ಬಲ್ ಕಿರಾಪು ಬಿಟ್ಕೊಂಡು ಹೊಂಟಾಂದ್ರೆ ಎಂಥೆಂತ್ಥಾ ಪತಿವ್ರತೇರುಬಿಟ್ಟ ಕಂಣು ಬಿಟ್ಕೊಂದು ಹಂಗೇ ನೋಡ್ತಿದ್ರು ನೋಡು… ಆತನ ನಗು ಮುಖಾನೆ ಹಂಗಿತ್ತು ಬಿಡು…” ಎಂದು ಮುಂತಾಗಿ ಹೇಳುತ್ತಿದ್ದಳು. ಅದರ ಜೊತೇಗೆ ನಮ್ಮಪ್ಪ ಯಾರ್‍ಯಾರನ್ನ‌ಎಲ್ಲೆಲ್ಲಿ ಇಟ್ಟುಕೊಂಡಿದ್ದ ಎಂಬುದನ್ನು ಸಹ. ಆಗೊಮ್ಮೆ ಈಗೊಮ್ಮೆ ಶ್ರೀಮತಿಯವರೂ ‘ಹೌದೇನ್ರೀ’ ಎಂದು ಕೇಳುತ್ತಿದ್ದರು ಪರೀಕ್ಷಾರ್ಥವಾಗಿ. ಆಕೆ ಸಾಮಾನ್ಯಳಲ್ಲವೆಂಬ ಸಂಗತಿ. ವಿವಿಧ ಮೂಲಗಳಿಂದ ನಮ್ಮ ತಂದೆ, ತಾತ, ಮುತ್ತಾತಂದಿರ ಕುರಿತಾದ ಸಮಸ್ತ ಸಂಗತಿಗಳೆಲ್ಲವನ್ನೂ ಸಂಗ್ರಹಿಸಿಟ್ತುಕೊಂಡಿರುವಳೆಂದು ಗೊತ್ತು! ಆ ಮಹಾನ್ ಮಾನವ ಸ್ವರೂಪಿ ಯ್‌ಆಂಟೆನಾದಂತೆ ಇರುವ ಆ ಮೂರುಮಕ್ಕಳ ತಾಯಿ ಕ್ರಾಸ್‌ಕ್ವೆಶ್ಚನ್ ಮಾಡಿಯಾಳೆಂಬ ಆತಂಕದಿಂದ ನಮ್ಮಪ್ಪನಿಗೆ ಮೂರು ಜನ ಸೂಳೆಯರಿದ್ದರೆಂದೂ ಅವರ ಪೈಕಿ ಚಿಮಣೆವ್ವ ಎಂಬಾಕೆ ಮಾತ್ರ ಕೊನೆವರೆಗೆ ನಿಷ್ಟೆಯಿಂದ ಉಳಿದಿದ್ದಲೆಂದೂ; ಆಕೆಯನ್ನು ನಾನು ತಾಯಿಗಿಂತ ಹೆಚ್ಚಾಗಿ ಕಾಣುತ್ತೊರುವೆನೆಂದೆಲ್ಲವನ್ನೂ ಹೇಳಿಬಿಟ್ಟೆ. ಆಕೆ ನಖ ಶಿಕಾಂತ ಧಗಧಗಾಂತ ಉರಿಯ ತೊಡಗಿದಳು. ಆಕೆ ಕಂಣುಗಳಿಂದ ಕಿಡಿಗಳನ್ನು ಉದುರಿಸತೊಡಗಿದಳು. “ಹಂಗಾದ್ರೆ ನೀವು ತಿಂಗಳಿಗೊಮ್ಮೆ ದುಡ್ಡು ಕಳಿಸ್ತಿರೋದು ಆಕೆಗೇ ಏನು?” ಎಂದಳು. ಹೌದು ಎಂದು ಯಜ್ಞಕ್ಕೆ ಹವಿಸ್ಸು ಸುರಿದೆ. ಸ್ವಲ್ಪ ಹೊತ್ತು ಬಿಟ್ಟು “ಸುಳ್ಳಾದ್ರು ಹೇಳ್ಲಿಕ್ಕೆ ಏನಾಗಿತ್ರೀ ನಿಮ್ಗೆ!” ಎಂದಳು. “ಅದ್ಯಾಕೆ ಸುಳ್ಳು ಹೇಳೋದು ಕಣೇ” ಅಂದೆ. “ಹಾಗಿದ್ರೆ ನಿಮ್ಗೆ ನನ್ ಮೆಲೆ ಪ್ರೀತಿ ಇಲ್ಲವೆಂದಾಯ್ತು” ಅಂದಳು. ನನಗೆ ನಗು ಬಂತು. ಹುಚ್ಚಿ ಅದ್ಕೂ ಇದ್ಕೂ ಯಾಕೆ ಸಂಬಂಧ ಕಲ್ಪಿಸ್ತೀಯ… ಸೂಳೆ ಮಗಳಾಗಿದ್ರೂ ಸುಮಂಗಳ ಒಡಹುಟ್ಟಿದ ತಂಗಿಗಿಂತ ಹೆಚ್ಚು ಪ್ರೀತಿಸ್ತಿಲ್ವೇನು! ನಾನೇನಾದ್ರು ನಿನ್ನ ಹಾಗೆ ಯೋಚಿಸಿದ್ರೆ ಆ ಹುಡುಗಿ ಗತಿ ಏನಾಗ್ತಿತ್ತು ಗೊತ್ತಾ?… ಒಂದು ಹೆಣ್ಣಾದ ನೀನು ಇನ್ನೊಂದು ಹೆಣ್ಣಿನ ಬಗ್ಗೆ ಗೌರವದಿಂದ ಯೋಚಿಸೋದ್ನ ರೂಢಿಸ್ಕೋ. ಆಗ ಗರತಿ ಮತ್ತು ಸೂಳೆ ಎಂಬೆರಡು ಪದಗಳ ನಡುವೆ ಎಳೆದಿರುವ ಗೆರೆ ಏನಂತ ಅರ್ಥವಾಗುತ್ತೆ ಎಂದು ಪರಿಪರಿಯಾಗಿ ಹೇಳಿದೆ. ನಾನು ಹೇಳಿದ್ದು ಅಷ್ಟು ಬೇಗನೆ ಆಕೆ ಕಿವಿಯಲ್ಲಿ ತೂರಲಿಲ್ಲ. ಇಂಥ ಹಿನ್ನೆಲೆಯವನು ನಾನು ಎಂದು ಮೊದಲೇ ಗೊತ್ತಾಗಿದ್ದಿದ್ರೆ ಆಕೆ ನನ್ನ ಮದುವೆ ಆಗ್ತಿದ್ದಳೋ ಇಲ್ಲವೋ… ಅದನ್ನೂ ಕೇಳಿ ಮುಖಕ್ಕೆ ತಿವಿಸಿಕೊಂಡೆ. +ಕಮಲವ್ವನ ಸಂಗತಿಯನ್ನು ಅದು ಹೇಗೆ ಬಂಡೆ ಅದಿ ಮುಚ್ಚಿಡುವುದು ಸಾಧ್ಯವಿತ್ತು ನನಗೆ! ಇಪ್ಪತ್ತೈದು ವರ್ಷಗಳ ದಿನಮಾನ ನಮ್ಮ ಕಷ್ಟ ಸುಖಗಳಲ್ಲಿ ಪಾಲು ಹಂಚಿಕೊಂಡಿದ್ದಂಥ ಅದ್ಭುತ ಹೆಣ್ಣಾದ ಆಕೆ ಬಗ್ಗೆ ಸುಳ್ಳು ಹೇಳುವ ಅಗತ್ಯ ನನಗೆ ಆ ಕ್ಷಣ ಕಂಡು ಬಂದಿರಲಿಲ್ಲ. ಹೆತ್ತ ತಾಯಿಯ ಪ್ರೀತಿಯಲ್ಲಿ ತಿಲದಷ್ಟು ಕೊರತೆ ಕಂಡಿರಬಹುದಾದರೂ ಆಕೆಯ ಪ್ರೀತಿಯಲ್ಲಿ ಅಂಥ ಯಾವುದೇ ಕೊರತೆ ನನಗೆ ಗೋಚರಿಸಿರಲಿಲ್ಲ. ಅಂಬೆಗಾಲಿಡುತ್ತಿದ್ದ ನನ್ನನ್ನು ಎತ್ತಿಕೊಂಡು ಕೆಳಗೆ ಇಳಿಸುತ್ತಿರಲಿಲ್ಲವಂತೆ ಆಕೆ. ನಾನು ಅತ್ತಾಗ ಆಕೆ ಮೊಲೆಯೂಡಿಸಿದ್ದೂ ಉಂಟಂತೆ. ಇಂಥ ಎಷ್ಟೋ ಸಂಗತಿಗಳ ನಡುವೆ ಹೂತು ಹೋಗಿರುವ ನಾನು ಆಕೆಯ ಬಗ್ಗೆ ತಿರಸ್ಕಾರ ದೃಷ್ಟಿ ತಾಳುವುದಾದರೂ ಹೇಗೆ? ನಮ್ಮ ತಂದೆಯವರಿಗೆ ದುಡ್ಡಿನ ಅಡಚನೆ ಅಗಾಧವಾಗಿ ಉಂಟಾದಾಗ ತನ್ನ ಹತ್ತೆಕರೆ ಎರೆಹೊಲ ಮಾರಿ ಹದಿನೈದು ಸಾವಿರ ಇಡಿಗಂಟನ್ನು ಕೊಟ್ಟು ನಮ್ಮ ತಂದೆಯವರ ಮರ್ಯಾದೆ ಕಾಪಾಡಿದ ಆಕೆ ಒಬ್ಬ ಸೂಳೆ ಎಂದು ಪರಿಭಾವಿಸಿ ನಾನು‌ಅದಾವ ನರಕಕ್ಕೆ ಹೋಗಲಿ! ನಮ್ಮ ತಂದೆ ಕೊನೆಯುಸಿರು ಬಿಡುವ ಸಮಯದಲ್ಲಿ ನನ್ನನ್ನು ಏಕಾಂತವಾಗಿ ಕುಳ್ಳರಿಕೊಂಡು ‘ನೋಡಪ್ಪಾ… ನೀನಿಷ್ಟು ದುಡೀತಿದ್ರೂ ನಾನು ಮಾತ್ರ ನಿನ್ನಿಂದ ಒಂದು ರೂಪಾ‌ಐ ಕೇಳಿ ಪಡೆದಿಲ್ಲ. ಯಾಕಂದ್ರೆ ನಾನು ಪೂರೈಸದ ಒಂದಿಷ್ಟು ಕೆಲಸಗಳನ್ನು ನೀನು ಪ್ರಾಮಾಣಿಕವಾಗಿ ಪೂರೈಸುತ್ತೀ ಎಂಬ ಒಂದೇ ಒಂದು ನಂಬಿಕೆಯಿಂದ… ಯ್ಯಕೆ ಅಂದ್ರೆ ನೀನು ವಿದ್ಯಾವಂತ… ಕಥೆ ಗಿಥೆ ಬರೆಯುತ್ತ ಸಮಾಜದ ಒಪ್ಪು ತಪ್ಪುಗಳ ಬಗ್ಗೆ ಯೋಚಿಸೋ ಶಕ್ತಿ ನಿನಗಿದೆ. +“ಚಿಮುಣ ಇಷ್ಟು ವರ್ಷ ದಿನಮಾನ ನನ್ನನ್ನು ತಾಳಿಕಟ್ಟಿದ ಗಂಡನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾಳೆ. ಆಕೆ ನನಗಾಗ್ಲಿ; ನಾನು ಆಕೆಗಾಗ್ಲಿ ಒಂಚೂರು ದ್ರೋಹ ಬಗೆದಿಲ್ಲ. ಇದ್ದ ಬದ್ದ ಚೂರುಪಾರು ಆಸ್ತಿಯನ್ನು ನನಗೇ ಬಿಟ್ಟುಕೊಟ್ಟ ಆಕೆಗಾಗ್ಲಿ ಆಕೆಯ ಮಗಳಿಗಾಗಲೀ ಒಂದು ನೆಲೆ ಕಲ್ಪಿಸದೆ ಸಾಯ್ತಿದೀನಿ.. ಕಾರಣ ನೀನವರನ್ನು ನೋಡಿಕೊಳ್ತೀ ಎಂಬ ವಿಶ್ವಾಸದಿಂದ. ಅವರ ಸಮಸ್ತ ಜವಾಬ್ದಾರಿ ನೀನೇ ಹೊರಬೇಕು. ಹೇಗಾದ್ರು ಮಾಡಿ ಆಕೆಗೆ ತಿಂಗಳಿಗೊಂದಿಷ್ಟು ಹಣ ಕಳಿಸ್ತಿರು. ಆಕೆಯ ಮಗಳಿಗೆ ಒಳ್ಳೆ ಸಂಬಂಧ ನೋಡಿ ಮದುವೆ ಮಾಡು… ಎಣ್ದಿಷ್ಟೆ ನಾನು ಕೇಳ್ತಿರೋದು ಎನಂತೀಯಾ?” ಎಂದು ನನ್ನ ಕೈ ಹಿಡಿದು ಕೇಳಿದ್ದರು. ಹಾಗೆಯೇ ಮಾಡುವುದಾಗಿ ಮಾತು ಕೊಟ್ಟೋಡನೆ ಅಪ್ಪ ನೆಮ್ಮದಿಯಿಂದ ಪ್ರಾಣ ಬಿಟ್ಟಿದ್ದರು. ಭಯಾನಕ ವೈಧವ್ಯ ಧರಿಸಿದ ಚಿಮುಣವ್ವನನ್ನು ಪರಿಪರಿಯಾಗಿ ಕೇಳಿಕೊಂದರೂ ಆಕೆ ನಮ್ಮೊಡನೆ ಬಂದಿರಲು ಒಪ್ಪಲಿಲ್ಲ. ತನ್ನ ತಾಯಿಯ ತವರೂರಾದ ವೆಂಕಟಾಪುರ ಸೇರಿಕೊಂಡಳು. ಗೆಳೆಯರ ಸಹಾಯದಿಮ್ದ ಬಸಾಪುರದಲ್ಲಿ ಗ್ರಾಮಸೇವಕನಾಗಿ ಕೆಲಸಮಾಡುತ್ತಿದ್ದ ನಾಗರಾಜು ಎಂಬ ವರನನ್ನು ಹುಡುಕಿ ಕೈಮೀರಿ ಖರ್ಚುಮಾಡಿ ಸುಮಂಗಳಳನ್ನು ಕೊಟ್ಟು ಮದುವೆ ಮಾಡಿ ಎಲ್ಲರ ನಿಷ್ಟುರ ಕಟ್ಟಿಕೊಂಡೆ. ಅವರೂ ನಮ್ಮ ಮನೆಗೆ ಬಂದು ಹೋಗುತ್ತಿದ್ದುದಿತ್ತು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಲಯದೊಳಗೆ ಹುಟ್ಟಿಕೊಂಡ ಅಸಹಕಾರ ಚಳುವಳಿಯಿಂದಾಗಿ ಅವರನ್ನು ಕರೆದುಕೊಂಡು ಬಂದು ಒಳ್ಳೆಯದು ಕೆಟ್ಟದ್ದು ನೋಡಲಾಗಲಿಲ್ಲ. ಇದರಲ್ಲಿ ಅಮಾನೀಯವಾದುದೇನಾದರು ಉಂಟೆ? ತನ್ನ ಗಂದನಾದ ನಾನು ತಮ್ಮ ಮಾವನವರ ಥರ ಎಲ್ಲಿ ಆಗಿಪ್ರೇಮಕ್ಕೆ ಚ್ಯುತಿ ತರುವೆನೋ ಎಂದು ಶ್ರೀಮತಿ ಯೋಚಿಸಿರಬಹುದೆಂದುಕೊಂಡೆ. ಅದಕ್ಕೆ ಪೂರಕವಾಗಿ ಆಕೆಯ ಉಸ್ತುವಾರಿಯೂ ಹಾಗಿತ್ತು. “ಅದ್ಯಾವಳೋ ಏಕವಚನದಲ್ಲಿ ಬರೆದಳೆಂದರೆ ನೀವೂ ಏಕವಚನದಲ್ಲಿ ಬರೆದು ಬಿಡೋದೇನು? ನೀವು ಸಲಿಗೆ ಕೊಟ್ರೆ ತಾನೆ ಯಾರಾದ್ರು ಏಕವಚನದಲ್ಲಿ ಬರೆಯೋದು” ಎಂದು ತರ್ಕಿಸಿದಳು. +ಗರತಿ ಮತ್ತು ಸೂಳೆ ಎಂಬೆರಡು ಪರಿಕಲ್ಪನೆಗಳ ಬಗೆಗಿನ ನಮ್ಮ ಚರ್ಚೆ ದಿನಕ್ಕೊಂದು ಹಾದಿ ಹಿಡಿಯಿತು. ನಾನು ಅಮೃತಮತಿ, ದ್ರೌಪದಿ, ಸೀತೆ, ತಾರಾ, ಅನಸೂಯ, ಅರುಂದತಿರೇ ಮೊದಲಾದ ಪೌರಾಣಿಕ ಮಹಿಳಾ ಪಾತ್ರಗಳ ಉದಾಹರಣೆ ಕೊಟ್ಟು ನೋಡಿದರೂ ಆಕೆಯ ಸಮಸ್ಯೆ ಪರಿಹಾರವಾಗಲಿಲ್ಲ. ಕೊನೆಗೆ ಒಮ್ಮೆ “ಅಲ್ರೀ ಪುರಾಣ ಹಾಳೂ ಮೂಳೂ ಹೇಳಿ ನನ್ನ ಬಾಯಿಗೆ ಬೀಗ ಹಾಕುವ ಪ್ರಯತ್ನ ಮಾಡಬೇಡಿ. ಇವತ್ತಿನ ಸಮಾಜದಲ್ಲಿ ಗರತಿಗಿಂತ ಗ್ರೇಟಾದ ಸೂಳೆ ಯಾರಿದ್ದಾಳೆ ಎಂಭೋದನ್ನು ತುಸು ಬಿಡಿಸಿ ಹೇಳಿದ್ರೆ ಒಪ್ಪಿಕೊಂಡೇನು?” ಎಂದಳು. “ಯಾಕಾಗ್ಬಾರ್ದು ಮಹಾರಾಯ್ಳೇ… ಸ್ಥಿರಾಸ್ತಿ ಅನ್ನೊ ಹೆಸರಿನಲ್ಲಿ ಉಳ್ಕೊಂಡಿರೋ ಮನೆಯ ಕಥೆಯನ್ನು ತಗೋ” ಅಂದೆ, “ಹ್ಹಾಂ ಆ ನಮ್ಮ ಮನೆಗೂ ಈ ನಮ್ಮ ಸಮಸ್ಯೆಗೂ ಏನ್ರೀ ಸಂಬಂಧ? ಎಂದು ಅಡ್ಡ ಪ್ರಶ್ನೆ ಹಾಕಿದಳು. “ಅದೇ ನಮ್ಮ ಶಾಮಣ್ಣ ಗರತಿ ಮತ್ತು ಸೂಳೆಯರ ನಡುವೆ ಕಾಲ್ಚಂಡಿನಂತೆ ವಿಲವಿಲನೆ ಒದ್ದಾಡಿ ಶತ್ರುವಿಗೂ ಬರಬಾರದ ರೋಗ ಬಂದು ಸತ್ನಲ್ಲ ಆ ಶಾಮಣ್ಣನ ಕಥೇನೇ ತಗೋ” ಎಂದೊಡನೆ ಆಕೆ ದೇಹದ ಸಮಸ್ತ ಸಿಟ್ಟನ್ನು ತನ್ನ ಸುಂದರ ಮೂಗಿಗೆ ಕ್ರೋಡೀಕರಿಸಿಕೊಂಡು ನನ್ನತ್ತ ದುರುಗುಟ್ಟಿದಳು. “ಥೂ! ಥೂ!… ಆ ನೀಚನ ಸುದ್ದಿ ಮಾತ್ರ ಎತ್ತಬೇಡಿ… ಕೇಳಿದ್ರೆ ನನ್ನ ಕಿವಿ ಮೈಲಿಗೆ ಆಗ್ತದೆ. ಆ ಮಹಾ ಪತಿವ್ರತೆಯಾದ ಹೆಂಡತಿಗೆ ದ್ರೋಹ ಬಗೆದೋನ ಹೆಸರನ್ನು ಈ ತಂಪು ಹೊತ್ತಿನಲ್ಲಿ ಹೇಳಬೇಡಿ, ಆತನ ಬುದ್ಧಿ ಎಲ್ಲಿ ಎಲ್ರೀಗೂ ಬಂದ್ರೆ ಸಂಸಾರಗಳು ನಾಶ ಆದಾವು…” ಎಂದಳು. ಆಕೆಯ ಮಾತಿಗೆ ನಗಬೇಕೋ ಅಳಬೇಕೋ ಒಂದೂ ಅರ್ಥವಾಗದೆ ಆಕೆಯ ಮುದ್ದು ಮುಖ ನೋಡಿದೆ. “ಆವೇಶದಿಂದ ಯೋಚಿಸಿದ್ರೆ ಯಾವ ಸಮಸ್ಯೆಯೂ ಪರಿಹಾರ ಆಗೋದಿಲ್ಲ ಅನೂ. ನಿಧಾನವಾಗಿ ಆಲೋಚನೆ ಮಾಡು… ಆಗ ನಿನ್ಗೆ ಅರ್ಥಾಗ್ತದೆ, ಪಾತಿವ್ರತ್ಯ ಪ್ರೀತಿವಾತ್ಸಲ್ಯಕ್ಕಿಂತ ದೊಡ್ಡದಲ್ಲ… ವರಲಕ್ಷ್ಮಿಯಲ್ಲಿದ್ದುದ್ದು ಕೇವಲ ಪಾತಿವ್ರತ್ಯವೇ ಹೊರತು ಪ್ರೀತಿ ಒಂಚೂರು ಇರಲಿಲ್ಲ…” ಎಂದು ಮುಂತಾಗಿ ಮಾತಾಡಿದರೆ ಆಕೆಗೆ ನನ್ನ ಮಾತಿನ ತಳಬುಡ ಅರ್ಥವಾಗಲಿಲ್ಲ. ದುರುಗುಟ್ಟಿ ನಿಡುಸುಯ್ದಳು. +ನಾನು ಅದುವರೆಗೆ ಬರೆದಿದ್ದ ಶಾಮಣ್ಣ ಕಾದಂಬರಿಯ ಹಸ್ತ ಪ್ರತಿಕೊಟ್ಟು ಬಿಡುವು ಸಿಕ್ಕಾಗಲೆಲ್ಲ ಓದಿ ನಿನ್ನ ಅಭಿಪ್ರಾಯ ತಿಳಿಸು ಎಂದು ಅಭ್ಯರ್ಥಿಸಿದೆ. ಅದನ್ನು ತಿಂಗಳು ಮಾನ ಓದಿ ಹಸ್ತಪ್ರತಿ ಹಿಂದ್ತಿರುಗಿಸಿದಳು. “ಏನ್ರೀ? ಹೀಗೆ ಬರೆದ್ರೆ ಜನ ದುಡ್ದು ಕೊಟ್ಟು ಓದುವುದಾದ್ರು ಹೇಗ್ರಿ! ಏನೋ ನನಗೊಂದೂ ಅರ್ಥ ಆಗ್ಲಿಲ್ಲ… ಶಾಮಣ್ಣ ನೆಗೆದು ಬಿದ್ದ ಮೇಲೆ ಅತ್ತೆ ಸೊಸೆ ಮನೆ ರೂಪದಲ್ಲಿದ್ದ ಸ್ಥಿರಾಸ್ತಿ ವಿಲೇವಾ‌ಅರಿ ವಿಷಯದಲ್ಲಿ ಕಚ್ಚಾಡಿದ್ದು ಓದಿ ನನ್ನ ಮನಸ್ಸಿಗೆ ಬೇಸರವಾಯಿತು. ಆದ್ರೆ ಆ ಸೂಳೆ ಅನಸೂಯ ಹೇಗೆ ವರಲಕ್ಷ್ಮಿಯವರಿಗಿಂತ ಗ್ರೇಟಾದಳು ಎಂಬ ಬಗ್ಗೆ ವಿವರಿಸುವ ಗೋಜಿಗೆ ಹೋಗಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದಳು. ಅದು ನನಗೆ ಸರಿಕಂಡಿತು. ಕಥೆಗಾರನಾದ ನನ್ನ ಪುರಾಣ ಹೇಳಿಕೊಳ್ಳುವುದರ ಜೊತೆಗೆ ಶಾಮಂಣನ ಮರಣೋತ್ತರ ಬದುಕನ್ನು ಸೂಚ್ಯವಾಗಿ ವಿವರಿಸಿದ್ದೆ. “ಏನ್ರೀ ಬ್ರಾಹ್ಮಣರನ್ನು ಬ್ಲಾಕ್ ಅಂಡ್ ವೈಟ್ ಮಾಡಿ ಬರೀತಿದ್ದೀರಲ್ಲ” ಎಂದು ಲೇಖಕ ಮಿತ್ರ ಶಾಂತಾರಾಮ ಸೋಮಯಾಜಿ ಅಮೇರಿಚಾದಿಂದ ಪತ್ರಬರೆದ ಮೇಲೆ ಕಾದಮ್ಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದೆ. ಮೂರು ವರ್ಷ ಮೂಲೆಯಲ್ಲಿ ಕೊಳೆಯುತ್ತ ಬಿದ್ದಿದ್ದ ಹಸ್ತಪ್ರತಿಯನ್ನು ನಾನು ಹೊರಗಡೆ ತೆಗೆದಿದ್ದು ಹೇಮರೆಡ್ಡಿಮಲ್ಲಮ್ಮ ನಾಟಕ ಸಮಸ್ಯೆ ಹುಟ್ಟು ಹಾಕಿದ ಮೇಲೆಯೇ! ಇದೇನಾದರೂ ಮುಂದುವರಿದರೆ ಸಂಪೂರ್ಣ ಯಷಸ್ಸು ನನ್ನ ಶ್ರೀಮತಿಯವರಿಗೇ ಸಲ್ಲಬೇಕು. “ನಿಮ್ಮವಾದವನ್ನು ನೀವು ಸಮರ್ಥಿಸಿಕೊಳ್ಳಲಿಕ್ಕೆ ಸೂಳೆಪಾತ್ರವನ್ನು ಗ್ಲೋರಿಫೈ ಮಾಡಲಿಕ್ಕೆ ಹೋದಿರೆಂದರೆ ನನ್ನಾಣೆ… ಇದ್ದಂದು ಇದ್ದಂಗೆ ಬರೀರಿ… ಅದನ್ನು ಒಪ್ಪಿಕೊಳ್ಳೋದು ಬಿಡೋದು ಓದುಗರಾದ ನಮಗೆ ಸೇರಿದ್ದು ಎಂಬುದನ್ನು ಮರೆಯಬೇಡಿರಿ… ಹಾಗೆ ಬರೀತಾ ಬರೀತಾ ನೀವೂ ಆ ನಿಮ್ಮ ಮಿತ್ರ ಶಮಂಣನ ಚಾಳಿ ಕಲಿತುಕೊಂಡು ಬಿಡಬೇಡಿ… ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತ ಹಿರಿಯರೇ ಹೇಳಿದ್ದಾರೆ. ಆದ್ರೇನು ಮಾಡೋದು ನುಂಗಲಿಕ್ಕೂ ಆಗದೆ ಉಗುಳಲಿಕ್ಕೂ ಆಗದೆ, ಶಾಮಂಣನ ಕಥೇನ ಗಂಟಲಲ್ಲಿಟ್ಟುಕೊಂಡು ನೀವು ಒದ್ದಾಡುತ್ತಿರೋದನ್ನು ನಿಮ್ಮ ಹೆಂಡತಿಯಾದ ನನ್ನಿಂದ ನೋಡಲಿಕ್ಕಾಗ್ತಿಲ್ಲ. ಅದ್ಯಾವ ಪಾಪ ಬಂದ್ರೂ ನಾನನುಭವಿಸ್ತೀನಿ… ನೀವು ಮಾತ್ರ ತಿಂಗಳೊಪ್ಪತ್ತಿನಲ್ಲಿ ಬರೆದು ಮುಗಿಸಿಬಿಡಬೇಕಷ್ಟೆ.” ಎಂದು ನೀಟಿ ಸಂಹಿತೆಯನ್ನು ಪ್ರಕಟಿಸಿದಳು. +“ಇದ್ದದ್ದು ಇದ್ದಂಗೆ ಹೆಂಗ ಬರ್‍ಲಿಕ್ಕಾಗ್ತದೆ ಪುಣ್ಯಾತ್ಗಿತ್ತಿ, ಕಥೆಗಾರನಾದ ನನ್ಗೂ ಒಂಚೂರು ಸ್ವಾತಂತ್ರ್ಯ ಬೇಡ್ವೇನು? ರೂಪಕಾದಿರಲಂಕಾರಸ್ತನ್ಯಾನೈರ್ಬಹುದೋದಿತಃ ನಕಾಂತಮಪಿ ನಿರ್ಭೂಷಂ ವಿಭೂತಿ ವನಿತಾ ಮುಖಂ ಅಂತ ಭಾಮಪ ಮಹಾಶಯನೇ ಹೇಳಿದ್ದಾನೆ. ಹೆಣ್ಣಾದೋಳು ಎಷ್ಟೇ ಚಂದ ಇದ್ರೂ ಒಡವೆ ವಸ್ತ್ರ ಹಾಕಿ ಅಲಂಕರಿಸದಿದ್ದರೆ ಆಕೆ ಜನಗಳ ಕಂಣಿಗೆ ಚಮ್ದ ಕಾಣೋದಿಲ್ಲ. ಅದ್ಕೆ ಇದ್ದದ್ದು ಇಲ್ಲದ್ದು ಒಂಚೂರು ಸೇರಿಸಿ ಬರೀಲಿಕ್ಕೆ ಅನುಮತವಿತ್ತು ಕಾಪಾಡೆಲೈ ಗೀರ್ವಾಣಿ” ಎಂದು ಅಂಜಲೀಬದ್ಧನಾಗಿ ಕೇಳಿಕೊಂಡಿದ್ದಕ್ಕೆ ಆ ಕೋವಿದೆಯು ಒಡಂಬಟ್ಟು “ಯಾಕಾಗಬಾರದೆಲೈ ಕಥೆಗಾರನೇ… ಆದ್ರೆ ಒಂದು ಮಾತು ನೆನಪಿಟ್ಕೋ… ಓದುಗರೆಂದ್ರೆ ಎಲ್ರೂ ಒಂದೇ ನಮೂನಿಯವರಿರೋದಿಲ್ಲ, ಮಂಗಳಾರತಿ ಕೊಟ್ರೆ ಉಷ್ಣ ತೀರ್ಥ ಕೊಟ್ರೆ ನೆಗಡಿ ಎಂಬ ಜಾಯಮಾನದೋರು ಇರ್ಥಾರೆ. ಆರಕ್ಕೇರದಂಗೆ ಮುರಕ್ಕಿಳಿಯದಂತೆ ನಿರ್ಲಿಪ್ತ ಮನೋಭಾವದಿಂದ ಕಾದಂಬರಿಯನ್ನು ಮುಂದುವರಿಸುವಂಥವನಾಗೈ ಸಾರಥಿ ಅತಿಜಾಗ್ರತಿ…” ಎಂದು ಕಿವಿಹಿಂಡಿ ಆಶೀರ್ವದಿಸಿದಳು. ಆಗ ನಾನು ಆ ಸಕಲರಾಗ ಸಂಶೋಭಿತೆಯಾದ ಅನ್ನಪೂರ್ಣೆಶ್ವರಿಗೆ ಕೃತಜ್ಞತೆ ಸಲ್ಲಿಸಿ ಕಾದಂಬರಿ ಬೆಳೆಸಲು ಉದ್ಯುಕ್ತನಾದೆನು. +* +* +* +ಹೆತ್ತ ಮಗನಿಗಿಂತ ಹೆಚ್ಚಾಗಿ ಪ್ರೀತಿಸಿ ಬೆಳೆಸಿದ ಮಗನಾದ ಶ್ರೀಕೃಷ್ಣ ದೇವರಾಯನಿಂದ ಕಂಣು ಕೀಳಿಸಿಕೊಂಡು, ತನ್ನವರೆನ್ನಲಾದ ಎಲ್ಲರನ್ನೂ ಕಳೆದುಕೊಂಡು ತಿರುಪತಿ ಸೇರಿ ಲಡ್ಡು ಮಾರಿ ಹೊಟ್ಟೆ ಹೊರೆದೂ ಹೊರೆದೂ ಕೊನೆಯುಸಿರೆಳೆದ ಅಮ್ಮತ್ಯ ತಿಮ್ಮರಸರ ಬಗ್ಗೆ ಲೀಲಾಜಾಲವಾಗಿ ಕಾದಂಬರಿ ಬರೆದು ಮುಗಿಸಬಹುದು. ಆದರೆ ಕೀರ್ತಿಶೇಷ ಶಾಮಂಣನ ಬದುಕಿನ ಬಗ್ಗೆ ಅಥೆಂಟಿಕ್ಕಾಗಿ ವಿಶಯ ಸಂಗ್ರಹಿಸಿ ಬರೆಯುವುದು ಕಷ್ಟಸ್ದ ಕೆಲಸವೆಂದು ನನಗೆ ಅರ್ಥವಾದದ್ದು ಅನಂತಪುರಕ್ಕೆ ಹೋಗಿ ವರಲಕ್ಷ್ಮಮ್ಮನವರನ್ನು ಕಂಡ ಮೇಲೆಯೇ. ಅವರಿದ್ದ ಮನೆ ನನಗೆ ದೊರಕಿದ್ದು ಬೆಳಗಿಂದ ಮಧ್ಯಾಹ್ನದವರೆಗೆ ತಿರುಗಾಡಿದ ಮೇಲೆಯೇ. ಇಲ್ಲಿಂದ ಅಲ್ಲಿವರೆಗೆ ಇರುವ ಸರೋಜಿನಿ ನಾಯ್ಡು ಬಡಾವಣೆ ಎಂದರೆ ಒಂದು ರೀತಿ ಅಗ್ರಹಾರವೇ. ನೋಡಲಿಕ್ಕೆ ಅಪ್ಪಟ ಶೂದ್ರನಂತೆ ಕಾಣುತ್ತಿದ್ದ ನಾನು ಅಲ್ಲಿನ ಪ್ರತಿಯೊಂದು ಮನೆಯನ್ನು ಎಡಹಾಕಿ ಕಾರಟಗಿ ಶಾನುಭೋಗರಾದ ಲಕ್ಷ್ಮೀನರಸಿಂಹಯ್ಯನವರ ಮಗ ಶ್ರೀಯುತ ಶ್ರೀವಲ್ಲಭಾಚಾರ್ಯರ ಮನೆ ಇದೇ ಏನ್ರಿ? ಎಂದು ಪ್ರತಿಯೊಬ್ಬರನ್ನು ಕೇಳಿದ್ದೇ ಕೇಳಿದ್ದು. +ಆ ತಾಯಿಯ ಅನಂತಪುರದ ವಿಳಸ ತಂದಿದ್ದೇ ಬಹು ದೊಡ್ಡ ರಾಮಾಯಣ. ರಾಜಾಗೋಪಾಲಾಚಾರ್ಯರ ಸಮಾಧಿ ಮೇಲೆ ಪುಷ್ಪಗುಚ್ಚ ವಿರಿಸುತ್ತಿದ್ದ ಯುವಕನೋರ್ವ ದೊರಕದಿದ್ದಲ್ಲಿ ವಿಳಾಸ ದೊರಕುವುದು ಸಾಧ್ಯವೇ ಇರಲಿಲ್ಲ. ಆನೆಗೊಂದಿ ದರ್‍ಭಶಯನಾಚಾರ್ಯರು ಹಿಂದೂಪುರಂಗೆ ಹೋಗಿ ಆರು ಬೆರಳಿನ ಭಕ್ತವತ್ಸಲಂರಾಯರ ಆಶ್ರಯ ಪಡೆದಿದ್ದಾಳವ್ಳು. ನಮ್ಮಲ್ಲಿ ಆಶ್ರಯ ಪಡೆದಿದ್ದರೆ ನಾವೇ ಆಕೆಯ ಹಣವನ್ನು ತಿಂದು ನರಕಕ್ಕೆ ಹೋಗುತ್ತಿದ್ದವೇನು? ಎಂದು ಪ್ರತಿಕ್ರಿಯಿಸಿದರೆ, ಕಂಪ್ಲಿ ಹನುಮಣ್ಣಾಚಾರ್ಯರು ಆಕೆಗೆ ತಿಲೋಕದ ಬಿಟ್ಟು ಎಷ್ಟೋ ವರ್ಷಗಳಾದ್ವು ಎಂದು ಬಿದುವುದೇ?… ನರಸಾಪುರದ ತಮ್ಮಣ್ಣಾಚಾರ್ಯರಂತೂ ಆ ಕೇಶವಿಹೀನೆಯು ವೈಧವ್ಯಕ್ಕೆ ಬೇಸತ್ತು ಕೃಷ್ಣೆಯೊಳಗೆ ದೇಹತ್ಯಾಗ ಮಾದಿದ್ಳೂಂತ ಕೇಳಿದ್ವಿಯಪ್ಪಾ’ ಎಂದು ನಿಟ್ಟುಸಿರು ಬಿಟ್ಟಿದ್ದರು. +ಅಲ್ಲಿಂದ ಸೀದಾ ರಾಯಚೂರಿನ ಗುರುವಾರ ಪೇಟೆಗೆ ಬಂದೆ. ಅಲ್ಲಿ ಅವರ ದೂರದ ಸಂಬಂಧಿಯಾದ ಸುಶೀಲಮ್ಮನು ಗಂಡ ಸತ್ತಿದ್ದರೂ ಮುಂಡೆ-ಗಿಂಡೆ, ನಾರುಮಡಿ-ಗೀರುಮಡಿ ಉಟ್ಟುಕೊಳ್ಳದೆ ಸಾದಾಸೀದಾವಾಗಿಯೇ ಇರುವಳೆಂದೂ; ಆಕೆ ತನಗಿಂತಲೂ ಹತ್ತು ವರ್ಷ ಚಿಕ್ಕವನಾದ ವೆಟರ್‍ನರಿ ಡಾಕ್ಟರ್ ಕುರುಬರ ಗುರುಲಿಂಗಪ್ಪನನ್ನು ಇಟ್ಟುಕೊಂಡು ಮಕ್ಕಳುಮರಿಯನ್ನು ಕೃತು ನಿಶ್ಚಯದಿಂದ ಪಾಲನೆ ಪೋಷಣೆ ಮಾಡುತ್ತಿರುವಳೆಂಬುದಾಗಿಯೂ ಹೆಂಣುಭೇರುಂಡವನ್ನು ಹೋಲುವ ಆಕೆಯನ್ನು ಸಂಪರ್ಕಿಸಿದರೆ ವರಲಕ್ಷ್ಮಿಯ ವಾಸ್ತವ್ಯ ತಿಳಿಯಬಹುದೆಂದೂ ಕಮಲಾಪುರದ ರೆವಿನ್ಯೂ ಇನ್ಸ್‌ಪೆಕ್ಟರ್ ರಮಾನಂದಾಚಾರ್ಯರು ಸುಳಿವು ನೀಡಿದ್ದರಿಂದ ನಾನು ಗುರುವಾರ ಪೇಟೆ ಸೇರಿಕೊಂಡಿದ್ದು. ನೋಡಲಿಕ್ಕೆ ಮೈಕೈ ತಿಂಬಿಕೊಂಡು ತಕ್ಕಮಟ್ಟಿಗೆ ಸುಂದರಳಾಗಿಯೇ ಇದ್ದ ಆ ವನಿತೆಯೂ, ಆಕೆಗೆ ಆಸರೆ ನೀಡಿರುವ ಗುರುಲಿಂಗಪ್ಪನೂ ನನ್ನನ್ನು ಬರಮಾಡಿಕೊಂಡು ಕುಳ್ಳರಿಸಿ ಫಲಹಾರ ಕೊಟ್ಟು ಉಪಚರಿಸಿದರು. ನಾನು ಬಂದ ಕಾರಣ ಹೇಳಲ್ಲಗಿ ಸುಶೀಲಮ್ಮನವರು ಆಶ್ಚರ್ಯ ವ್ಯಕ್ತಪಡಿಸಿದರು. ಆಕೆ ಏನೂ ನಿಮಗೆ ಸಂಬಂಧಿ ಅಲ್ಲ ಸಾಟಿ ಅಲ್ಲ. ಎರಡರಷ್ಟು ವೈಧವ್ಯ ಎಳ್ಕೊಂಡು ಕ್ಷೀಣಿಸಿ ಹೋಗಿರೋ ಆ ರಂಡೆಯಿಂದ ತಿಳ್ಕೊಳ್ಳೋದೇನಿದೆಯಣ್ಣಾ… ಸತ್ತೋನು ಸತ್ತ, ಆದ್ದಕ್ಯಾಕೆ ನೀನು ಕೊರಗೋದು! ಈ ವಯಸ್ನಲ್ಲಿ ಕಾಮವನ್ನು ಕೊಂದ್ಕೊಂಡು ಬದ್ಕೋದು ದುರ್ಭರ… ಒಳ್ಳೆ ಹುಡುಗನ್ನ ಹುಡ್ಕೊಂಡು ದೂರ ಎಲ್ಲಾದ್ರು ಸುಖವಾಗಿರು… ಬೇಕಾದ್ರೆ ನಾನೇ ಹೊಂದಿಸಿಕೊಡ್ತೇನೆ… ಎಂದು ಗಿಣಿಗೇಳ್ದಂಗೆ ಹೇಳ್ದೆ ಕಣಣ್ಣ… ಕುಲಟೆ… ಸೂಳೆ… ಅಂಥೋಳು ಇಂಥೋಳು ಅಂಥ ನನ್ನೇ ಬಯ್ದು ಹೊರಗೆ ಅಟ್ಟಿ ಬಿಡೊದೇನು! ತನ್ನ ಗಂಡನ್ನ ಗೋಳೊಯ್ಕೊಂಡು ತಿಂದು ಒಂದು ರೀತೀಲಿ ತಾನೇ ಕೊಲೆ ಮಾಡಿದ ಆಕೆ ಅದ್ಯಾವ ಪತಿವ್ರತೆ ಕಣಣ್ಣಾ… ನಾನು ನನ್ನ ಗಂಡನ್ನ ಬದುಕಿರುವಾಗ್ಲೂ ಪ್ರೀತಿಸ್ತಿದ್ದೆ ಸತ್ತ ಮೇಲೂ ಪ್ರೀತಿಸ್ತಿದೀನಿ… ನೋಡಿ ಅಲ್ಲಿ ಗೋಡೆ ಮೇಲೆ ಫೋಟೋದಲ್ಲಿ ಹೆಂಗವ್ರೆ!… ಗುರುಲಿಂಗಪ್ಪ ನನ್ನ ಕೈಹಿಡೀದಿದ್ರೆ ಈ ಸಮಾಜ ನನ್ನಂಥೋರ್‍ನ ಸುಮ್ನೆ ಬಿಡ್ತಿತ್ತೇನ್ರಿ…! ಆಕೆ ಕಥೇಲಿ ಏನಿದೆ ಬರೆಯೋಕೆ… ಬೇಕಾದ್ರೆ ನನ್ನ ಕಥೆ ಬರೀರಿ… ಪರಪುರುಷರ ಗಾಳಿ ಸೊಂಕದಂಗೆ ಬದುಕುತ್ತಿರೋ ಅವ್ಳು ನಿಮ್ಮನ್ನ ಹತ್ತಿರ ಬಿಟ್ಕೊಂಡಾಳೆಯೇ! ತನ್ನ ಗಂಡನ ಡೈರಿ ಗಿಯ್ರಿ… ಕಾಗ್ದಗೀಗ್ದ ಕೊಡ್ತಾಳಂತ ಏನು ಗ್ಯಾರಂಟಿ? ಆಲಿಗೆ ಹೋಗಿ ಅವಮಾನ ಅನುಭವಿಸೋದ್ಕಿಂತ ಸುಮ್ನೆ ಹೋಗ್ಬಿಡಿ ನಿಮ್ ಪಾಡಿಗೆ ನೀವು” ಎಂದು ಬುದ್ಧಿ ಹೇಳಿದಳು. ಆಕೆಯ ಮಾತುಗಳನ್ನು ಕೇಳಿ ನಾನು ವಿಚಾರನಂದ ಪರವಶನಾದೆನು. ಗುರುಲಿಂಗಪ್ಪನೂ ನನಗೆ ಸಪೋರ್ತಾಗಿ ನಿಂತ ಅನಂತರವೇ ಆಕೆ ಅನಂತಪುರದ ವಿವರ ನೀಡಿದ್ದು. +ಅನಂತಪುರಕ್ಕೆ ಹೋಗಬೇಕೆನ್ನುವ ಆಸೆಗೆ ಏಳೆಂಟು ವರ್ಷ ವಯಸ್ಸಾಗಿದೆ. ಆಂಧ್ರದ ರಾಯಲಸೀಮೆಯ ಜಿಲ್ಲೆಗಳಲ್ಲಿ ಅದೂ ಒಂದು. +ವಿಜಯನಗರದ ಅರಸರು ಆ ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಮೂಲನೆಲೆಯಾದ ತಿರುಪತಿ ಸಮೀಪದ ಚಂದ್ರಗಿರಿಗೆ ಅನಂತಪುರದ ಮೂಲಕ ಹಾದು ಹೋಗಬೇಕಷ್ಟೆ. ಇಂಡಿಯಾ ಮಾರ್ಟಿಗೇಜ್ ಎಂಬ ಅಪರೂಪದ ಮತ್ತು ಸರಕಾರದ ಕಂಣು ಕೆಂಪುಮಾಡಿದಂಥ ಪುಸ್ತಕ ಬರೆದು ಹೋರಾಡುತ್ತಲೇ ಕೊನೆಯುಸಿರೆಳೆದ ತರಿಮೆಲನಾಗಿರೆಡ್ಡಿ; ಮೊದಮೊದಲು ನಕ್ಸಲೈಟ್ ಚಳುವಳಿಯಲ್ಲಿದ್ದು ನಂತರ ತೆಲುಗುದೇಶಂನ ಥಳುಕಿಗೆ ಮಾರುಹೋಗಿ ಎಮ್ಮೆಲ್ಲೆ ಯಾಗಿರುವ ಪರಿಟಾಲ ರವಿ; ಶೋಶಿತ ಸಮಾಜದ ಬಗ್ಗೆ ಅದ್ಭುತವಾದ ಕಥೆ ಬರೆಯುತ್ತಿರುವ ಚಿಲಕೂರಿ ದೇವ ಪುತ್ರ , ಸಿಂಗಮನೇನಿ ನಾರಾಯಣ; ಬಂಡಿನಾರಾಯಣ ಸ್ವಾಮಿ, ಪ್ರಸಿದ್ಧ ಕನ್ನಡ ವಿದ್ವಾಂಸರಾದ ಶೇಶಾಶಾಸ್ತ್ರಿ ಇವರೇ ಮೊದಲಾದ ಪ್ರತಿಭಾವಂತರಿರುವ ಅನಂತಪುರಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿ ಇಳಿದಿದ್ದೆ. ಬಾಯಲ್ಲಿ ತೀನ್ ಸೌ ಬೀಡಾ ಹಾಕಿಕೊಂಡು “ಯಾವ ಶಾಮಣ್ಣ; ಯಾವ ವರಲಕ್ಷಮ್ಮ ಏನ್ಕಥೆ? ಇವರ್ನೆಲ್ಲ ಖುದ್ದ ಬೆಟ್ಟಿಯಾಗಿ ಅದ್ಯಾವ ಕಾದಂಬ್ರಿ ಬರೆದು ಅದೇನು ಸಾಧಿಸ್ತೀಯೋ ಕಣೋ ಕುಂವೀ” ಎಂದು ಉದ್ಗರಿಸಿ ತಮ್ಮ ಅನಂತಪುರದಲ್ಲಿ ಯಾವ ಜಾತಿಯವರು ಯಾವ ಯಾವ ಮೂಲೆಯಲ್ಲಿದ್ದಾರೆಂಬುದರ ಬಗ್ಗೆ ಶೇಶಾಶಾಸ್ತ್ರಿಗಳು ಹೇಳದಿದ್ದಲ್ಲಿ ನಾನೀ ಸರೋಜಿನಿ ನಾಯ್ಡು ಓಣಿ ತಲುಪುತ್ತಿರಲಿಲ್ಲ. ನೋಡಿದೊಡನೆ ಇದು ಬ್ರಾಹ್ಮಣರು ವಾಸಿಸುತ್ತಿರುವ ಸ್ಥಳ ಎಂಬುದು ಅರ್ಥವಾಗಿ ಬಿಟ್ಟಿತ್ತು. +ಇದೇ ಅವರ ಮನೆ ಇರಬೇಕೆಂದೂ; ಅದೇ ಇವರ ಮನೆ ಇರಬೇಕೆಂದು ಕಂಡ ಕಂಡ ಮನೆಗಳನ್ನೆಲ್ಲ ಎಡತಾಕಿದ್ದೇ ಎಡತಾಕಿದ್ದು. “ಯಾವ ವರಲಕ್ಷಮ್ಮ? ಅದೇ ಗರ್ಲ್ಸ್ +ಹೈಸ್ಕೂಲಲ್ಲಿ ಟೀಚರಾಗಿದ್ದಾರಲ್ಲ ಅವ್ರಾ?” ಎಂದೊಬ್ಬರು ಉದ್ಗರಿಸಿದರೆ ಇನ್ನೊಬ್ಬರು ಹರಿಕಥೆ ಹೇಳ್ತಾರಲ್ಲ ಅವ್ರಾ ಎನ್ನುತ್ತಿದ್ದರು. ಕಾರಟಗೀ ಶಾನಭೋಗರಾದ ಲಕ್ಷ್ಮೀ ನರಸಿಂಹಯ್ಯನವರ ಮಗ ಶ್ರೀವಲ್ಲಭಾಚಾರ್ಯರ ಮನೆ ಎಲ್ಲಿದೆ ಎಂದು ಕೇಳಿದಾಗ ಒಬ್ಬ ವೃದ್ಧ ಮಹಿಳೆ ನಿಟಾರನೆ ಬೆನ್ನೆತ್ತಿ ನೀನ್ಯಾವ ಜಾತಿಯವ? ಅವರಿಗೂ ನಿಮಗೂ ಏನು ಸಂಬಂಧ ಎಂಬಿವೇ ಮೊದಲಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು “ಈ ಬಡಾವಣೆಯಲ್ಲಿ ಯಾವ ಮನೆ ಮುಂದೆ ರಾಮ ದೇವರ ಗುಡಿ, ಮಸೀದಿ ಎರಡೂ ಇವೆಯೋ ಅದೇ ಕಣಪ್ಪ ಶ್ರೀವಲ್ಲಭನ ಮನೆ” ಎಂದು ಹೇಳಿತು. ನಾನು ಹುಡುಕಿದ ಪ್ರಕಾರ ಆ ಬಡಾವಣೆಯಲ್ಲಿ ಮೂರು ರಾಮದೇವರ ದೇವಸ್ಥಾನಗಳೂ; ಎರಡು ಮಸೀದುಗಳೂ ಇದ್ದವು. ನಂತರ ಕುಳಾಯಪ್ಪನ ಬಡಾವಣೆಗಂಟಿಕೊಂಡಂತಿರುವ ಮನೆಯೊಂದರ ಮುಂದೆ ಮಸೀದಿ ಮತ್ತು ರಾಮದೇವರ ಗುಡಿ ಒಟ್ಟೊಟ್ಟಿಗೆ ಇದ್ದವು. ಅನಂತಪುರಕ್ಕೆ ಎರಡು ಹರದಾರಿ ದೂರದ ಅಂದರೆ ಬೊಮ್ಮಲಾಟಪಲ್ಲಿ ದಾಟಿದ ಮೇಲೆ ಬರುವ ಗೂಡೂದು ಗ್ರಾಮದಲ್ಲಿ ಕುಳಾಯಪ್ಪ ಎಂಬ ಮುಸ್ಲಿಂ ದೇವತೆ ವಾಸವಾಗಿರುವುದು ರಾಮದೇವರ ಗುಡಿಯೊಳಗೇನೆ. ಪ್ರತಿ ಮೊಹರಮ್ ಹಬ್ಬದಲ್ಲಿ ರಾಮದೇವರಿಗೆ ಘನ[ಪೂಜೆ ಸಲ್ಲಿಸಿದ ನಂತರವೇ ಕುಳಾಯಪ್ಪ ಎಂಬ ಪೀರಲು ದೇವರು ಮದಾಲ್ಸಿಗೆ ಹೊರಡುವುದು. ಈಗಲೂ ಈ ಪ್ರಾಂತದಲ್ಲಿ ವೈಶ್ಯರು ಕುಳಾಯಿ ಶೆಟ್ಟಿ ಎಂದು ಹೆಸರಿಟ್ಟುಕೊಳ್ಳುವುದುಂಟು. ಬ್ರಾಹ್ಮಣರಲ್ಲು ಕುಳಾಯಿ ಶರ್ಮ, ಕುಳಾಯಿ ಆಚಾರ್ಯ ಎಂದು ಹೆಸರಿಟ್ಟುಕೊಳ್ಳುವುದನ್ನು ಕಾಣಬಹುದು. ಅಶ್ಟೇ ಏಕೆ! ಈ ನಮ್ಮ ವರಲಕ್ಷ್ಮಮ್ಮನವರಿಗೆ ಆಶ್ರಯಕೊಟ್ಟಿರುವ ಶ್ರೀವಲ್ಲಭಾಚಾರ್ಯರು ಇದ್ದಾರೆ – ಅವರ ಮನೆಯ ಎಡ ಬಾಜೂಕೆ ಡಾ.ತಮ್ಮಿನೇನಿ ಕುಳಾಯಿರಾವ್, ಎಂ.ಬಿ.ಬಿ.ಎಸ್. ಎಂ.ಡಿ. ಎಂದು ನಾಮಫಲಕ ಹಾಕಿಕೊಂಡಿರುವ ಮಹಾಶಯರಿದ್ದಾರೆ. ಅಂದ ಮೇಲೆ ಗುಡಿ ಮತ್ತು ಮಸೀದಿ ಒಟ್ಟೊಟ್ಟಿಗಿರೋದರಲ್ಲಿ ಯಾವ ಆಶ್ಚರ್ಯವಿದೆ? +ನಾನು ಹೋಗಿ ಬಾಗಿಲು ತಟ್ಟಿ “ಅಮ್ಮಾ” ಅಂದೆ. ತಮ್ಮ ಯಜಮಾನರೇ ಕೂಗಿದಂತಾಯಿತು ಎಂಬ ಸಖೇದಾಶ್ಚರ್ಯದಿಂದ ಬಾಗಿಲು ತೆರೆದ ಮಹಿಳೆ ವರಲಕ್ಷಮ್ಮನವರೇ ಆಗಿದ್ದರು. “ಏನಪ್ಪಾ ಅವ್ರೇ ಬಂದ್ರು ಅಂದ್ಕೊಂಡೆ… ನೀನು ಹಾಲಣ್ಣವ್ರ ಮಗ ವೀರಭದ್ರಪ್ಪ ಅಲ್ವೇ” ಎಂದು ನಖಶಿಖಾಂತ ನೋಡಿದರು. ನಾನು ನಿರೀಕ್ಷಿಸಿದ್ದಂಕ್ಕಿಂತ ಕ್ಷೀಣಿಸಿ ಹೋಗಿದ್ದರು. ಹುಬ್ಬಿನ ಮೇಲೆ ಕೈ ಅಡ್ಡ ಹಿಡಿದ ಹೊರತು ಅವರಿಗೆ ಯಾಗ ವಸ್ತೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಕೇಶವಿಹೀನಿಯಾಗಿದ್ದ ಆಕೆ ಕೆಳದರ್ಜೆ ಸೀರೆ ಉಟ್ಟು ಕಂಪಿಸುತ್ತಿದ್ದರು. ಇದ್ದಕ್ಕಿದ್ದಂತೆ ಕಂಣಲ್ಲಿ ನೀರು ತಂದುಕೊಂಡು ಅವರ್ನ ನೆನಸಿಕೊಂಡ್ರೆ ಎದೆನೇ ಹೊಡ್ದೋಗ್ತದಪ್ಪಾ… “ನಮ್ಮನ್ನೆಲ್ಲ ಈ ಸ್ಥಿತಿಗೆ ತಂದಿಟ್ಟು ಬಿಟ್ರಲ್ಲ ಆ ನಿಮ್ಮ ಗೆಳೆಯರು”. ಎಂದು ಒಂದೇ ಸಮನೆ ಅಳತೊಡಗಿದರು. “ಆಗಿದ್ನೆಲ್ಲ ಮರ್‍ತು ಧೈರ್ಯದಿಂದ ಇರಬೆಕಮ್ಮಾ… ಹೋದೋನು ಮತ್ತೆ ಬರ್ತಾನೆಯೇ” ಎಂದು ಮುಂತಾಗಿ ಸಮಾಧಾನದ ಮಾತುಗಳನ್ನು ಹೇಳಿದೆ. +ಅಷ್ಟರಲ್ಲಿ ಒಳಗಡೆಯಿಂದ ಬಂದ ಮಹಿಳೆ ಶ್ರೀವಲ್ಲಭಾಚಾರ್ಯರ ಹೆಂಡತಿ ರುಕ್ಮಿಣಿಯಾಗಿದ್ದರು. ಬೆಂಗಳೂರಿನ ನಿವೃತ್ತ ತಹಶೀಲ್ದಾರ ಹಯವದನರಾಯರ ಮಗಳಾದ ಆಕೆಯನ್ನು ಗುರಿತಿಸುವುದು ಕಷ್ಟವಾಗಲಿಲ್ಲ. ಪಿಂಚಣಿ ಇತ್ಯಾದಿ ವಗೈರೆಗಳಿಗೆ ಅಂತ ಕಾರಟಿಯ ಶಾನುಭೋಗರು ಬೆಂಗಳೂರಿಗೆ ಹೋಗಿದ್ದಾಗ ಏಜಿ ಆಫೀಸಿನ ಅದೇ ಮಹಡಿಯಲ್ಲಿ ಹಯವದನರಾಯರು ಪರಿಚಯ ಮಾಡಿಕೊಂಡರಂತೆ. ಅದೇ ಪರಿಚಯವೇ ಅವರ ಮಗ ಶ್ರೀ ವಲ್ಲಭಗೆ ರುಕ್ಮಿಣಿಯನ್ನು ಧಾರೆ ಎರೆದುಕೊಡುವುದರಲ್ಲಿ ಪರ್ಯವಸಾನ ಗೊಂಡಿತ್ತು. ಆಕೆಯೂ ನನ್ನನ್ನು ಗುರುತಿಸಿದಳೆಂದು ಕಾಣುತ್ತದೆ… ಕೂತ್ಕೊಳ್ರಣ್ಣ… ಇನ್ನೇನು ಅವ್ರೂ ಬಂದೇ ಬಿಡ್ತಾರೆ… ಇವ್ರು ಎಷ್ಟು ಹೇಳಿದ್ರು ಕೇಳೋದಿಲ್ಲ… ಒಮ್ಮೊಮ್ಮೆ ಹೊತ್ತು ಗೊತ್ತಿಲ್ದೆ ಅಳ್ತಾನೇ ಇರ್ತಾರೆ… ಕೂತಿರಿ… ಒಳಗಡೆ ಹೋಗಿ ಕಾಫಿ ತಗೊಂಡು ಬರ್ತೀನಿ” ಎಂದು ರುಕ್ಮಿಣಿ ಒಳಗಡೆ ಹೋದರು. +ನಾನು ತುಂಬ ಅಂಜಿಕೆಯಿಂದ ವರಲಕ್ಷಮ್ಮನವರ ಕಡೆ ನೋಡುತ್ತಿದ್ದೆ. +ಏನಂತ ಮಾತುಗಳನ್ನು ಆರಂಭಿಸುವುದು! ಶಾಮಂಣನ ಬಗ್ಗೆ ಕಾದಂಬರಿಯನ್ನು ಬರೀತಾ ಇದ್ದೀನಿ. ಆತ ಬರೆದಿಟ್ಟಿರೋ ಡೈರಿ ಇದ್ದರೆ ಕೊಡಿ ಅಂತ ಯಾವ ಬಾಯಿಂದ ಕೇಳಲಿ! ಒಂದು ರೀತಿಯ ಸಂದಿಗ್ಧತೆ ಕಾಡತೊಡಗಿತು. ಆಕೆ ತಾನೇ ನನ್ನ ಬಗ್ಗೆ ಮದುವೆ, ಮಕ್ಕಳು ಇತ್ಯಾದಿ ವಿವರ ಕೇಳಿದರು. ಹೇಳಿದೆ. ಈ ದೌರ್ಭಾಗ್ಯೆ ಅತ್ತಿಗೆ ಇರೋ ವಿಷ್ಯ ಗೊತ್ತಿಲ್ವೇನಪ್ಪಾ.. ನಿನ್ಗೆ? ಕರೆದಿದ್ರೆ ನಾನೂ ಬಂದು ಅಕ್ಷತೆ ಹಾಕ್ತಿರ್‍ಲಿಲ್ವೇ.. ಒಂದು ರೀತಿ ಕರೆಯದೆ ಇದ್ದದ್ದೇ ಒಳ್ಳೆಯದಾಯ್ತು ಬಿಡು. ನನ್ನಿಂದ ತವರು ಮನೇನೂ ಸುಖವಾಗಿರ್ಲಿಲ್ಲ… ಗಂಡನ ಮನೇನೂ ಸುಖವಾಗಿರ್ಲಿಲ್ಲ… ನನ್ನ ಕಾಲ ಗುಣಾನೆ ಅಂಥಾದ್ದು… ಮುಂದೆಂದಾದ್ರು ಒಂದಿನ ನಿನ್ನ ಹೆಂಡತಿ ಮಕ್ಕಳನ್ನು ಕರ್ಕೊಂಡು ಬಾರಪ್ಪ…” ಎಂದು ಹೇಳಿ ಅಂತಃಕರಣ ಕಲಕಿದರು. “ಆಗ್ಲಮ್ಮ ಖಂಡಿತ ಕರ್ಕೊಂಡು ಬರ್ತೀನಿ…” ಎಂದು ಭರವಸೆಯ ಮಾತುಗಳನ್ನಾಡಿ “ಎಲ್ಲಮ್ಮ ಮಕ್ಳು ಕಾಣ್ತಿಲ್ವಲ್ಲ… ಸ್ಕೂಲಿಗೆ ಹೋಗಿದಾರಾ” ಎಂದು ಕೇಳಿದೆ… ಅಷ್ಟರಲ್ಲಿ ಬಂದ ಹುಡುಗರಿಬ್ಬರು ಥೇಟ್ ಶಾಮಂಣನ ಥರವೇ ಇದ್ದರು… “ನಿಮ್ಮ ತಂದೆಯವರ ಸ್ನೇಹಿತರು ಬಂದಿದ್ದಾರೆ ಕಣ್ರೋ…” ಎಂದು ವರಲಕ್ಷಮ್ಮ ಮಕ್ಕಳಿಗೆ ನನ್ನ ಪರಿಚಯ ಮಾಡಿಕೊಟ್ಟರು. “ಹಲೋ ಅಂಕಲ್, ಹಲೋ ಅಂಕಲ್” ಎಂದವರಿಬ್ಬರು ನನಗೆ ವಿಶ್ ಮಾಡಿದರು. “ಇವ್ನೇ ದೊಡ್ಡಮಗ ಶಿವರಾಮಶಾಸ್ತ್ರೀ ಅವ್ನೇ ಎರಡ್ನೇ ಮಗ ಅಶ್ವತ್ಥ ನಾರಾಯಣ ” ಎಂದು ಹೇಳಿದರು. ನಾನು ಅವರಿಬ್ಬರನ್ನು ಬಾಚಿ ತಬ್ಬಿಕೊಂಡೆ. ಇಂಗ್ಲೀಷ್ ಮೀಡಿಯಂನಲ್ಲಿ ಒಬ್ಬ ಟೆಂಥು ಇನ್ನೊಬ್ಬ ಯೆಯ್ತು ಓದುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಅವರು ಪರಮೇಶ್ವರ ಶಾಸ್ತ್ರಿಗಳ ಮರಿಮಕ್ಕಳು ಎಂದು ನಂಬುವುದೇ ಕಷ್ಟವಾಯಿತು. ಅವರು ಅಷ್ಟು ಆಧುನಿಕವಾಗಿದ್ದರು. ಅಷ್ಟರಲ್ಲಿ ರುಕ್ಮಿಣಿಯವರ ಹೆಣ್ಣು ಮಕ್ಕಳಾದ ಸೌಂದರ್ಯ, ನಿವೇದಿತಾ ಎಂಬ ಹೆಸರಿನ ಹುಡುಗಿಯರು ಬಂದರು. ಅವರು ಕ್ರಮವಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಯೊಂದರಲ್ಲಿ ಐದು ಮತ್ತು ಮೂರನೆ ತರಗತಿಯಲ್ಲಿ ಓದುತ್ತಿದ್ದರು. ಹೆಂಣು ಮಕ್ಕಳಿಬ್ಬರು ಸುಂದರವಾಗಿಯೂ ಮುದ್ದಾಗಿಯೂ ಇದ್ದರು. ಸೌಂದರ್ಯ ಎಂಬ ಹುಡುಗಿಯನ್ನು ಶಿವರಾಮಶಾಸ್ತ್ರಿಗೂ, ನಿವೇದಿತಾ ಎಂಬ ಹುಡುಗಿಯನ್ನು ಅಶ್ವತ್ಥ್ ನಾರಾಯಣನಿಗೂ ತಂದುಕೊಳ್ಳುವುದೆಂದು ಗುಟ್ಟಾಗಿ ಒಪ್ಪಂದವೇರ್ಪಟ್ಟಿರುವುದಂತೆ. ನಾನು ತಂದಿದ್ದ ಸಿಹಿ ತಿಂಡಿಗಳ ಮತ್ತು ಹೂವಿನ ಪೊಟ್ಟನವನ್ನು ಆ ಮಕ್ಕಳು ಕೃತಜ್ಞತಾ ಪೂರ್ವಕ ಸ್ವೀಕರಿಸಿ ಒಳಗಡೆ ತೆಗೆದುಕೊಂಡು ಹೋದವು. +“ಈ ಮಕ್ಕಳಿಗಾಗಿ ಜೀವ ಹಿಡಿದುಕೊಂಡಿದ್ದೀನಪ್ಪಾ… ಹೆತ್ತ ತಪ್ಪಿಗೆ ಅವರಿಗೊಂದು ನೆಲೆ ಕಲ್ಪಿಸಬೇಕಲ್ಲ! ಮುಂದೆ ಅವ್ರು ಹೆತ್ತೋರ್ನ ಬಯ್ಕೋಬಾರ್ದು ನೋಡು” ಎಂದು ವರಲಕ್ಷಮ್ಮ ನಿಟ್ಟುಸಿರು ಬಿಟ್ಟರು. +ಅಷ್ಟರಲ್ಲಿ ಹೊರಗಡೆ ಸ್ಕೂಟರ್ ಬಂದು ನಿಂತ ಸದ್ದಾಯಿತು. ವರಲಕ್ಶ್ಮಿ “ತಮ್ಮಾ ಶ್ರೀವಲ್ಲಭ… ನಾನು ಹೇಳ್ತಿದ್ನೆಲ್ಲಾ… ಅವ್ರ ಸ್ನೇಹಿತರೊಬ್ಬರಿದ್ದಾರೆ… ಕಥೆ ಬರೀತಾರೆ ಅಂರ… ಅವ್ರೇ ಇವ್ರು ನೋಡು” ಎಂದು ತಮ್ಮ ಚಿಕ್ಕಪ್ಪನ ಮಗ ಶ್ರೀವಲ್ಲಭರಿಗೆ ನನ್ನ ಪರಿಚಯ ಮಾಡಿಕೊಟ್ಟರು. ನನ್ನ ಕೆಲ ಕಥೆಗಳನ್ನು ಓದಿದ್ದ ಅವರು ಬಹು ಪ್ರೀತಿಯಿಮ್ದ ನನ್ನ ಕೈಕುಲಿಕಿದರು. ಹಳೆ ಪರಿಚಯವಿರುವವರಂತೆ ಮಾತನಾಡಿಸಿದರು. ಶುಭ್ರ ಆಧುನಿಕ ವಾತಾವರಣ ಜೀಕುತ್ತಿದ್ದ ಮನೆಯೊಳಗೆ ಮೂಲೆಯಲ್ಲೆಲ್ಲೊ ಬಿಥೊವನ್ ವಯಲಿನ್ ನುಡಿಸುತ್ತಿದ್ದ, ಮಮ್ಮಿ ಡ್ಯಾಡಿ ಎಂಬ ಶಬ್ದಗಳು ಪಲ್ಲವಿಸುತ್ತಿದ್ದವು. ಶಾಮಂಣನ ಮಕ್ಕಳು ಪಾಶ್ಚಿಮಾತ್ಯ ಜೀವನ ಶೈಲಿ ರೂಡಿಸಿಕೊಳ್ಳುತ್ತಿರುವುದು ಕಂಡು ನಾನು ಆನಂದಪರವಶನಾದೆ. ಬಾತ್ರೂಮ್, ಡೈನಿಂಗ್ ಹಾಲು, ಕಿಚನ್ ಡ್ರಾಯಿಂಗ್ ರೂಂನಲ್ಲಿ ಹೆರಾಲ್ಡ್ ರಾಬಿನ್ಸ್, ಅಗಾಥ ಕ್ರಿಸ್ತಿ, ಬರ್ಬರಾ ಕಾರ್ಟ್‌ಲ್ಯಾಂಡು, ಜೇಮ್ಸ್ ಹ್ಯಾಡ್ಲಿಮುಂತಾದವರೇ ತುಂಬಿಕೊಂಡಿರುವ ಕಪಾಟು. ಮುಖ್ಯ ತಲೆಬಾಗಿಲ ಮೇಲೆ ಶ್ರೀಮದ್ವೆಂಕಟೇಶ್ವರರ ಫೋಟೋ ಬಿಟ್ಟರೆ ಮತ್ತೊಂದು ದೇವರ ಫೋಟೋ ಕಾಣಿಸುತ್ತಿರಲಿಲ್ಲ. ಊಟ ಮಾಡುವ ಮುನ್ನ “ಅಮ್ಮಾ ನಿಮ್ದು ಊಟ ಆಯ್ತೆ” ಎಂದು ಕೇಳಿದೆ. “ಇವತ್ತು ನಾನು ಒಪ್ಪತ್ತು ಕಣಪ್ಪಾ” ಎಂದು ವರಲಕ್ಶಮ್ಮ ಬತ್ತಿ ಹೊಸೆಯುವುದರಲ್ಲಿ ನಗ್ನರಾದರು. ಅದಕ್ಕೆ ಪ್ರತಿಯಾಗಿ ರುಕ್ಮಿಣಿಯವರು, ಅಣ್ಣಾನೀವು ಬನ್ನಿ… ಅವರು ಆದಿತ್ಯವಾರವೊಂದೆ ಎರಡು ಹೊತ್ತು ಊಟ ಮಾಡೋದು… ಉಳಿದ ದಿನಗಳಲ್ಲಿ ಒಂದೊಂದು ದೇವರ ಹೆಸರು ಹೇಳ್ಕೊಂಡು ಊಟ ಬಿಡ್ತಾನೆ ಇರ್ತಾರೆ… ತಾಯಿ ಆದೋರು ಮಕ್ಕಳಿಗಾದ್ರು ಸುಖವಾಗಿರೋದು ಬೇಡ್ವೆ?…” ಎಂದು ನನ್ನನ್ನು ಕರೆದರು. ಅಪ್ಪಟ್ ಬೆಂಗಳೂರು ಶೈಲಿಯಲ್ಲಿ ಊಟ ಬಡಿಸಿದರು. ಊಟ ತುಂಬ ರುಚಿಯಾಗಿದ್ದರೂ ನನಗ್ಯಾಕೋ ಸೇರಲಿಲ್ಲ. ಶಾಮಂಣನ ಶಾಶ್ವತ ಅಗಲಿಕೆಯ ನಂತರ ವರಲಕ್ಷಮ್ಮ ದೇಹವನ್ನು ದೇವರು ದಿಂಡರುಗಳ ಹೆಸರಿನಲ್ಲಿ ದಂಡಿಸಿಕೊಳ್ಳುತ್ತಿರುವುದಕ್ಕೆ ಏನಾದರು ಅರ್ಥವಿದೆಯೇ? ಆಕೆಯ ವಯಸ್ಸು ಮೂವತ್ತೈದರ ಆಜುಬಾಜಿರಬಹುದು ಅಷ್ಟೆ? ಈ ವಯಸ್ಸಿಗೆ ಐವತ್ತಾಗಿರುವಂತೆ ಕಾಣಿಸುತ್ತಿರುವುದು ಸಂಪ್ರದಾಯದ ಬಹು ದೊಡ್ಡ ವ್ಯಂಗವೇ ಆಗಿದೆ. ಶ್ರೀ ವಲ್ಲಭ ದಂಪತಿಗಳು ಅದನ್ನು ನೀಡಿಸಿಕೊಳ್ಳಿ, ಇದನ್ನು ನೀಡಿಸಿಕೊಳ್ಳಿ ಎಂದು ಬಲವಂತಿಸಿದರೂ ಊಟದ ಶಾಸ್ತ್ರ ಮುಗಿಸಿ ಕೈ ತೊಳೆದುಕೊಂಡಿದ್ದೆ. ಇದರಿಂದ ಮುಖ್ಯವಾಗಿ ರುಕ್ಮಿಣಿಯವರಿಗೆ ಬೇಸರವಾಯಿತು. ಅಂದಿನ ಮದುವೆ ಮುರಿದು ಬಿದ್ದು ಶಾಮಂಣ ರುಕ್ಮಿಣಿಯವರ ಕೈ ಹಿಡಿದಿದ್ದರೆ ತುಂಬು ಜೀವನ ನಡೆಸುತ್ತಿದ್ದನೇನೋ ಎಂದುಕೊಂಡೆ. +ಹೊರಗಡೆ ಹಾಲ್‌ನಲ್ಲಿ ಕುಳಿತಾಗ ತುಟಿ ಜಾರಿ “ಅಲುಮೇಲಮ್ಮನವ್ರು ಈಗೆಲ್ಲಿದ್ದಾರಮ್ಮಾ” ಎಂದು ಅಕಸ್ಮಾತ್ ಕೇಳಿ ಹಿರಿದಾದ ದುಃಖದ ಸನ್ನಿವೇಶವನ್ನು ಎದುರು ಹಾಕಿಕೊಂಡೆ. ವರಲಕ್ಶಮ್ಮನವರು ಒಮ್ಮೆಗೆ ಹೋ ಎಂದು ಅಳುತ್ತ; ತನ್ನ ಅಳುವಿನಿಂದ ತಮಗೆ ಆಶ್ರಯ ಕೊಟ್ಟಿರುವ ಮನೆಯ ಆಧುನಿಕ ವಾತಾವರಣಕ್ಕೆ ಎಲ್ಲಿ ಧಕ್ಕೆ ಬರುವುದೋ ಎಂಬ ಆತಂಕದಿಂದ ಬಾಯಿಗೆ ಅಡ್ಡ ಸೆರಗು ಇಟ್ಟುಕೊಂಡು ದುಃಖದ ಪ್ರವಾಹಕ್ಕೆ ಅಣೆಕಟ್ಟು ಕಟ್ಟಿದರು. ಶ್ರೀವಲ್ಲ್ಭ ದಂಪತಿಗಳ ಸ್ವಾಂತನದ ಮಾತುಗಳಿಂದ ಅವರು ಇನ್ನಷ್ಟು ಗೊಂದಲಕ್ಕೀಡಾಗಿ ಎದ್ದು ಒಳಗಡೆ ಇದ್ದ ದೇವರ ಕೋಣೆಗೆ ಹೋದರು. ಶ್ರೀವಲ್ಲಭ ನಿಟ್ಟುಸಿರು ಬಿಟ್ಟು ಎಲ್ಲಾ ಹೇಳಿದರು. +ಮನೆ ಮಾರಿ ಬಂದ ಹಣವನ್ನು ಇಟ್ಟುಕೊಂಡ ನಂತರ ಅಲುಮೇಲಮ್ಮಜ್ಜಿ ಪ್ರತಿಯೊಬ್ಬರನ್ನು ಸಂಶಯದಿಂದ ನೋಡಲಾರಂಭಿಸಿತು. ತನ್ನಲ್ಲಿರುವ ಇಡಿಗಂಟಿಗಾಗಿ ಎಲ್ಲರು ನನ್ನನ್ನು ಪ್ರೀತಿಸುತ್ತಿದ್ದಾರೆ; ತನ್ನಲ್ಲಿರುವ ಹಣ ಅಪಹರಿಸಿ ಬೀದಿಗೆ ತಳ್ಳುತ್ತಾರೆ ಎಂಬಂಥ ಸಂಶಯಗಳಿಗೆ ಈ ಪ್ರಪಂಚದಲ್ಲಿ ಮದ್ದು ಸಿಕ್ಕುವುದಾದರೂ ಎಲ್ಲಿ?… ಆರ್ಥಿಕ ಸಂಪನ್ಮೂಲಗಳಿಂದ ವಂಚಿತಗೊಂಡು ನಲುಗಿ ಹೋದ ಯಾರಿಗಾದರೂ ಇಡಿ ಮೊತ್ತ ದೊರಕಿದಾಗ ಈ ರೀತಿ ವರ್ತಿಸುವುದು ಸಹಜವೇ. ಆದರೆ ಹಣ ಅಲುಮೇಲಮ್ಮಜ್ಜಿಯನ್ನು ಸಂಪೂರ್ಣ ನಿಯಂತ್ರಿಸತೊಡಗಿತು. ಒಂದೊಂದು ರೂಪಾಯಿಗೆ ಜೀವ ಬಂದು ಅವರಿವರ ಮೇಲೆ ಚಾಡಿ ಹೇಳತೊಡಗಿತು. ಅದರಿಂದಾಗಿ ಆಕೆ ಠಿಕಾಣಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆ ನಿರಂತರವಾಗಿ ಬದಲಾಯಿಸತೊಡಗಿದರು. ಕೊನೆಗೆ ನನ್ನವರು ತನ್ನವರೆಂಬುವವರಿವ ನೆಲವೇ ಪಿಶಾಚಿ ರೂಪ ಧರಿಸಿ ತನ್ನನ್ನೂ, ತನ್ನಲ್ಲಿರುವ ಹಣವನ್ನೂ ನುಂಗಿ ನೀರು ಕುಡಿಯಲು ಹೊಂಚುಹಾಕಿದೆ ಎಂದು ಭಾವಿಸಲಾದ ಆಕೆ ಇದ್ದಕ್ಕಿಂದ್ದಂತೆ ನಾನು ನಾಳೆ ಬೆಳೆಗ್ಗೆ ಉತ್ತರ ಭಾರತದ ಯಾತ್ರೆಗೆ ಹೊರಟು, ಕೃಷ್ಣ, ಗೋದಾವರಿ, ನರ್ಮದ, ಗಂಗೆ, ಯಮುನ, ಸರಸ್ವತಿಯೇ ಮೊದಲಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಮೂರು ತಿಂಗಳ ನಂತರ ವಾಪಸು ಬರುತ್ತೇನೆ ಎಂದು ಘೋಷಿಸಿಬಿಟ್ಟಳಂತೆ. ವಿಷ ಬೆರೆಸಿರಬಹುದೆಂಬ ಕಾರಣದಿಂದ ರುಕ್ಮಿಣಿ ಮಾಡಿಕೊಟ್ಟ ತಿಂಡಿಗಳನ್ನೂ ತೆಗೆದುಕೊಳ್ಳದೆ ಹೊರಟುಹೋದಳು. ಹಾಗೆಯೇ ಹೊರಟೇ ಹೋಗಿಬಿಟ್ಟಳು. ಇಷ್ಟು ವರ್ಷಗಳಾದರೂ ಆಕೆ ಮರಳಿ ಬಾರಲೇ ಇಲ್ಲ… ತಮ್ಮತ್ತೆಯವರು ಇಂದು ಬರಬಹುದು ನಾಳೆ ಬರಬಹುದೆಂದು ಪ್ರತಿನಿತ್ಯ ಬೀದಿಯ ಎರಡೂ ಬದಿಗೆ ನೋಡುತ್ತಲೆ ಇದ್ದಾರೆ… ಉತ್ತರ ಭಾರತದ ಯಾವುದಾದರೊಂದು ಪವಿತ್ರ ನದಿ ಆಕೆಯನ್ನು ಬಿಟ್ಟುಕೊಟ್ಟಿರಲಿಕ್ಕಿಲ್ಲವೆಂದು ಊಹಿಸುವುದೂ ಕ್ರೌರ್ಯವೇ! ಕಾಶಿಯ ಯಾವುದಾದರೊಂದು ಸ್ನಾನದ ಘಟ್ಟದ ಮೇಲೆ ತಮ್ಮತ್ತೆಯವರು ಜಪಮಣಿ ಏಣಿಸುತ್ತ ಜೀವಹಿಡಿದಿರಬಹುದೆಂಬ ವರಲಕ್ಷಮ್ಮನವರ ಕಲ್ಪನೆ ಕೇವಲ ಕಲ್ಪನೆಯಾಗಿ ಉಳಿದುಕೊಂಡಿದೆ. +ನಾನು ಶೀವಲ್ಲಭರನ್ನು ಏಕಾಂತದಲ್ಲಿ ಸಂಧಿಸಿ ನಾನು ಬಂದಿರುವ ಉದ್ದೇಶ ಹೇಳಿದೆ. ಅದೂ ಸಂಚೋಚ ಮತ್ತು ಹಿಂಜರಿಕೆಯಿಂದ. ವಿದ್ಯಾವಂತರೂ; ಆಧುನಿಕ ಮನೋಭಾವದವರಾದ ಅವರೂ ಅನ್ಯ್ಥಾ ಭಾವಿಸಲಿಲ್ಲ. ಯಙ್ಜಕ್ಕೆ ಸಮಿತ್ತು ಹವಿಸ್ಸುಗಳನ್ನು ಜೋಡಿಸುವುದರಿಂದ ಯಾವ ಪ್ರಕಾರವಾಗಿ ಪುಣ್ಯ ಲಭಿಸುವುದೋ ಹಾಗೆಯೇ ಕಾದಂಬರಿಯ ನಿರ್ಮಾಣಕ್ಕೆ ಪರಿಕರಗಳನ್ನು ಒದಗಿಸುವುದರಿಂದ ಅದಕ್ಕಿಂತ ಮಿಗಿಲಾದ ಸಾರ್ಥಕ ಭಾವ ಸಿದ್ಧಿಯಾಗುವುದೆಂಬುದಾಗಿ ಬಗೆದ ಆ ಪುಣ್ಯ ದಂಪತಿಗಳು- ಒಳಗಡೆ ಹೋಗಿ ಒಂದಿಷ್ಟು ಹಾಳೆಗಳಿದ್ದ ಗಂಟನ್ನು ತಂದು ಗುಟ್ಟಾಗಿ ಕೊಟ್ಟರು… ನಾನು ಜೋಪಾನವಾ‌ಇ ಅದನ್ನು ಬ್ರೀಫ್ ಕೇಸಿಗೆ ಸೇರಿಸಿದೆನು. +ಶೀವಲ್ಲಭರಿಂದ ಅನಸೂಯಮ್ಮನವರ ಬಗೆಗೂ ಒಂದಿಷ್ಟು ಮಾಹಿತಿ ದೊರಕಿತು. ಡೈರಿ ಮತ್ತಿತರ ವಿವರಗಳು ಆಕೆಯಲ್ಲಿ ದೊರಕಬಹುದೆಂದು ಪಿಸುಗುಟ್ಟಿದರು. ಆಕೆಯೂ ಹಿಂದೆ ಒಂದೆರಡು ಬಾರಿ ಶಾಮಂಣನ ಮಕ್ಕಳನ್ನು ನೋಡಲು ಮತ್ತು ವರಲಕ್ಷ್ಮಮ್ಮನವರ ಆರೋಗ್ಯ ವಿಚಾರಿಸಲು ಅನಂತಪುರಕ್ಕೆ ಬಂದಿದುದುಂಟಂತೆ. ದುಡ್ಡು ಬಟ್ಟೆಬರೆ ಮುಂತಾದ ವಸ್ತುಗಳನ್ನು ಮಕ್ಕಳಿಗೆ ಕೊಡಲು ಪ್ರಯತ್ನಿಸಿದುದುಂಟಂತೆ… ಒಮ್ಮೊಮ್ಮೆ ಬಂದಾಗಲೂ ವರಲಕ್ಸ್ಮಮ್ಮನವರು ‘ಎಲೈ ಕತ್ತೆ ಲವುಡೀ’ ಎಂಸು ಸುಂಟರಗಾಳಿ, ಬಿರುಗಾಳಿಗಳನ್ನು ಸೃಷ್ಟಿಸಿ ಆಕೆಯನ್ನು ಮತ್ತೊಮ್ಮೆ ಬಾರದ ಹಾಗೆ ಮಾಡುವುದರಲ್ಲಿ ಯಶಸ್ವಿಯಾದರಂತೆ. ಆದರೆ ಕರುಳನ್ನು ತಡೆಯುವ ಶಕ್ತಿ ಯಾವ ಬಿರುಗಾಳಿಗೆ ತಾನೆ ಉಂಟು! ಪ್ರತ್ಯೇಕವಾಗಿ ಶ್ರೀವಲ್ಲಭರನ್ನು ಕಂಡು, “ನೋಡ್ರಿ ಸ್ವಾಮಿ… ಹೊಟ್ಟೇಲಿ ಹುಟ್ದೋವೆ ಮಕ್ಳೇನು… ವರಲಚುಮವ್ವನ ಮಕ್ಳು ನನ್ ಮಕ್ಳೂ ಅಲ್ವೇನು?… ಆತನ್ ಮಕ್ಳು ಬೇಷಿ ಓದ್ಕೊಂಡು ಮುಂದೆ ದೊಡ್ಡಾಫೀಸರಗಳಾಗಬೇಕು… ಓದಿಗೆ ಪಾದಿಗೆ ರೊಕ್ಕ ಬೇಕಾದ್ರೆ ಬರೀತಿರ್ರಿ… ಕಳಿಸ್ತಿರ್‍ತೀನಿ! ಎಂದು ಹೇಳಿದಲಂತೆ. “ಅಂಥ ಸಂದರ್ಭಬಂದಾಗ ಬರೆಯುವೆವಮ್ಮಾ” ಎಂದು ಶ್ರೀವಲ್ಲಭ ಹೇಳಿದರಂತೆ. ಆಕೆ ಕಾನ್ವೆಂಟು ಸ್ಕೂಲಿಗೆ ಹೋಗಿ ಶಾಮಂಣನ ಮಕ್ಕಳಿಬ್ಬರನ್ನು ಎತ್ತಿ ಮುದ್ದಾಡಿ ಹೋಗಿರುವುದುಂಟಂತೆ. ಈಗ ದೊಡ್ಡವರಾಗಿದ್ದಾರೆ… ಒಳ್ಳೆಯದು ಕೆಟ್ಟದ್ದು ಅರ್ಥ ಮಾಡಿಕೊಳ್ಳೋ ವಯಸ್ಸಿಗೆ ಬಂದಿರುವ ಅವರ ಸನಿಹಕ್ಕೆ ಹೋಗುವುದು ಅನಸೂಯಮ್ಮನಂಥವರಿಗೆ ಸಾಧ್ಯವಾದೀತೆ? ಆಕೆಯೂ ಇತ್ತೀಚೆಗೆ ಬಂದುದಿಲ್ಲ. ಅಕೆಯ ಬಗೆಗೂ ಮಕ್ಕಳಿಗೆ ಗೌರವ ಹುಟ್ಟಿಸುವಂಥ ಮಾತುಗಳನ್ನಾಡಲು ಪ್ರಯತ್ನಿಸುತ್ತಿರುವ ಶ್ರೀವಲ್ಲಭ ಮನುಷ್ಯ ಸಂಬಂಧ ಎಷ್ಟು ವಿಚಿತ್ರ ಅಂತ ನಿಟ್ಟುಸಿರುಬಿಟ್ಟರು ಅವರೆಲ್ಲರಿಂದ ಬೀಳ್ಕೊಂಡುನಾನು ಶೇಷಾಶಾಸ್ತ್ರಿಗಳ ಮನೆ ತಲುಪಿದೆ.ಬೊಮ್ಮಲಾಟಪಲ್ಲಿ ಬಳಿ ದೊರಕಿರುವ ಶಿಲಾ ಶಾಸನದ ವಿಶ್ಲೇಷಣೆಗೆ ತೊಡಗಿದ್ದ ಶಾಸ್ತ್ರಿಗಳು ಬಾರಪ್ಪಾ… ಬಾ… ಕೃಷ್ಣದೇವರಾಯ ಬೊಮ್ಮಲಾಟಪಲ್ಲಿಯನ್ನೇ ನಾಗಯ್ಯನಿಗೆ ಉಂಬಳಿಯಾಗಿ ಬಿಟ್ಕೊಟ್ಟಿದ್ದಾನೆ ನೋಡೊ… ಒಂದು ವಿಚಿತ್ರ ಅಂದರೆ ಇದು ಹಳೆಗನ್ನಡದಲ್ಲಿದೆ. ಹೆಚ್ಚು ಕಡಿಮೆ ವಿರೂಪಾಕ್ಷ ಪಂಡಿತನ ಕಾವ್ಯ ಭಾಷೆಯನ್ನೇ ಹೊಲ್ತಿದೆ… ಆ ವಿರೂಪಾಕ್ಷನೇ ಈ ಶಾಸನದ ಕವಿ ಆಗಿರಬಾರದೇಕೆ… ಅಥವ ಅವನ ಶಿಷ್ಯರ ಪೈಕಿ ಯಾರಾದರೊಬ್ಬರು…” ಎಂದು ಮಾತಿಗೆಳೆದರು. ಬಾಯಿ ತುಂಬಿದ ತಾಂಬೂಲದ ರಸವನ್ನು ಪಿಚಕ್ಕನೆ ಉಗುಳಿ ಬಂದರು. ಜಾನಪದ ಕಲೆಗಳಿಗೆ ನನ್ಗೂ ಹೆಸ್ರು ಬರ್ತದೆ… ನಿಮ್ಮ ಹಂಪಿಲಿರೋ ಕನ್ನಡ ಯೂನಿವರ್ಸಿಟಿ ಹೊರನಾಡಿನಲ್ಲಿ ಹಂಚಿಹೋಗಿರುವ ಕನ್ನಡ ವಿವರಗಳನ್ನು ಯಾಕೆ ಸಂಗ್ರಹಿಸೋ, ಸ್ಟಡಿ ಮಾಡೋ ಕೆಲಸ ಮಾಡ್ತಿಲ್ವಲ್ಲಯ್ಯಾ?… ಎಂದು ಉತ್ಸಾಹದಿಂದ ಶುರು ಮಾಡಿದರು. ಕನ್ನಡ ವಿಶ್ವವಿದ್ಯಾಲಯದಲ್ಲಿ ನಿರರ್ಥಕವಾಗಿ ಆರು ತಿಂಗಳು ಇದ್ದು ಬಂದ ಕಷ್ಟ ಗೊತ್ತಿರೋ ನಾನು ನಿಟ್ಟಿಸಿರುಬಿಟ್ಟು ಗಂಟು ಬಿಚ್ಚಿ ಕಾಗದ ಪತ್ರಗಳನ್ನು ನೆಲದ ಮೇಲೆ ಹರಡಿದೆ, “ಕಾದಂಬರಿಗೆ ವಸ್ತು ಸಿಕ್ಕಂತಿದೆಯಲ್ಲ” ಎಂದು ಹತ್ತಿರ ಬಂದು ಶಾಸ್ತ್ರಿಗಳು “ನಾನು ಬೇಕೆಂದೇ ಮನೆ ಹುಡುಕಿಕೊಡ್ಲಿಕ್ಕೆ ಬರ್ಲಿಲ್ಲಪ್ಪ… ತಪ್ಪು ತಿಳ್ಕೋಬೇಡ… ನಮ್ಮ ಮಾಧ್ವರು, ಸ್ಮಾರ್ಥರು ವಾಸಿಸೋ ಬಡಾವಣೇಲಿ ಲೇಖಕನಾದ ನಿನಗೊಂದು ಎಕ್ಸ್‌ಪೀರಿಯನ್ಸು ಆಗ್ಲಿ ಅನ್ನೋ ಕಾರಣಕೆ ಬಲ್ಲಿಲ್ಲಪ್ಪಾ” ಎಂದು ನಕ್ಕರು. ನಿಷ್ಕಲ್ಮಷ ಮತ್ತು ಮೃದು ಹೃದಯಿಯಾದ ಅವರು ಒಂದೆರಡು ಕಾಗದ ಹಿಡಿದು, ಓದಿ “ಅರೇ! ಈ ಮನುಷ್ಯ ಒಳ್ಳೆ ಲೇಖಕ್ನಂಗೆ ಬರಿದಿದ್ದಾನಲ್ಲ ಮಾರಾಯ… ನಮ್ಮವ್ರಲ್ಲಿ ಇಷ್ಟೊಂದು ವೈನಾಗಿ ಕನ್ನಡ ಬರ್ಯೋರೆ ಕಡ್ಮೆ, ಪರಿಚಯ ಪರಿಚಯ ಮಾಡಿಕೊಡಬಾರದಾಗಿತ್ತೇ…ನೀನು” ಎಂದರು. ನಾನು ಶಾಮಂಣನ ಕಥೆಯನ್ನು ಕೇವಲ್ ಹತ್ತು ವಾಕ್ಯಗಳಲ್ಲಿ ವಿವರಿಸಿದೆ. ರಾಮಾಯಣವನ್ನು ಹಳ್ಳಿ ಮಂದಿ ಮೂರೇ ಮೂರು ಶಬ್ದಗಳಲ್ಲಿ ಹಿಡಿದಿಟ್ಟು ಹೇಳುವರಲ್ಲ ಹಾಗೆ! ಮುಖದಲ್ಲಿ ಕವಿದ ವಿಷಾದದಿಂದ ಮರುಚಣದಲ್ಲಿ ಚೇತರಿಸಿಕೊಂಡ ಶಾಸ್ತ್ರಿಗಳು ” ನಮ್ಮ ವ್ಯವಸ್ಥೇನೆ ಹಂಗಾಗಿ ಬಿಟ್ಟ್ದೆ. ಬದುಕಬೇಕೆನ್ನೋರು ಸಾಯ್ತಾರೆ, ಸಾಯ್ಬೇಕನ್ನೋರು ಬದುಕ್ತಾರೆ…” ಎಂದು ನಿಟ್ಟುಸಿರು ಬಿಟ್ಟು ತಮ್ಮ ಅನಂತಪುರದಲ್ಲಿ ಯಾರು ಯಾವ ಯಾವ ಕಾರಣಕ್ಕೆ ಮತ್ತು ವಿನಾ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ನೀಡಿದರು. +ಆದರೆ ಆ ಪಟ್ಟಿಯಲ್ಲಿರುವವರ ಯಾವ ಜಾಯಮಾನಕ್ಕೂ ನಮ್ಮ ಶಾಮಂಣ ಒಗ್ಗಲಿಲ್ಲ. ಅವನು ಅಗಾಧವಾದ ಜೀವನ ಶ್ರದ್ಧೆ ಪ್ರಕಟಿಸುತ್ತಿದ್ದ ಎಂಬುದಕ್ಕೆ ಬರೆದಿರುವ ಕಥೆಗಳೇ ಸಾಕ್ಷಿ. ಹಾಗೆಯೇ ಪರಮೇಶ್ವರ ಶಾಸ್ತ್ರಿಗಳು ಬರೆದಿಟ್ಟಿರುವ ಅಪೂರ್ಣ ವೀಲುನಾಮ ಅವನು ವೈವಿಧ್ಯಮಯವಾಗಿ ಬದುಕನ್ನು ಪ್ರಯತ್ನಿಸಿದ್ದ ಎಂಬುದರ ಮೇಲೆ ಬೆಳಕು ಚೆಲ್ಲುವಂತಿರುವುದು. ಮಾನವ ಸಹಾಯವಿರದಿದ್ದರೂ; ಎಲ್ಲರಿಗಿಂತ ಸೊಗಸಾಗಿ ಬದುಕಬಲ್ಲೆನೆಂಬ ಆತ್ಮವಿಶ್ವಾಸವನ್ನು ಅವನು ಬರೆದಿರುವ ಪ್ರತಿಯೊಂದು ಸಾಲು ಪ್ರಕಟಿಪಡಿಸುತ್ತಿರುವುದು. ಮನುಷ್ಯ ಜಗತ್ತಿನೊಂದಿಗೆ ಪ್ರಾಣಿ ಜಗತ್ತು ಮತ್ತು ಸಸ್ಯ ಜಗತ್ತನ್ನು ಲಗತ್ತಿಸಿ ನೋಡುವ ಅಪರೂಪದ ಮನುಷ್ಯನಾಗಿದ್ದ ಅವನು ಆತ್ಮಹತ್ಯೆ ಮಾಡಿಕೊಂಡನೆ? ಅಥವಾ ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೆ ಎಂಬುದೇ ಉಳಿದಿರುವ ಒಗಟು. ಈ ಒಗಟನ್ನು ಭೇದಿಸಲು ಕೊತ್ತಲಿಗಿಯ ಅನಸೂಯಳ ಸಹಾಯ ಬೇಕೇ ಬೇಕು? ಅದನ್ನು ಪಡೆಯುವ ಬಗೆ ಹೇಗೆ? +“ನಿನಗ್ಯಾವುದೂ ಅಸಾಧ್ಯವಲ್ಲ ಕುಂವೀ… ನೀನು ಅಂದ್ಕೊಂಡಿದ್ದನ್ನು ಸಾಧಿಸೋ ಮನುಷ್ಯ…ಎದೆಗುಂದಬೇಡ. ನುಗ್ಗು… ಮುಂದದ್ನ ಅನುಭೋಸು ಅಷ್ಟೆ” ಎಂದು ಶಾಸ್ತ್ರಿಗಳು ಧೈರ್ಯ ತುಂಬುವ ಮಾತುಗ್ಳನ್ನಾಡಿದರು. ಅಕ್ಷ ಮಂದಿ ಗೆಳೆಯರಿಗೆಲ್ಲ ಕಳಸ ಪ್ರಾಯರಾಗಿರುವ ಶೇಷಾಶಾಸ್ತ್ರಿಗಳು ನಗೆ ತೋರಿಸುವುದನ್ನು ತೋರಿಸಿ, ಉಣ್ಣುವುದನ್ನು ಉಣ್ಣಿಸಿ; ಕುಡಿಯುವುದನ್ನು ಉಣಿಸಿ; ಹಾಕುವುದನ್ನು ಹಾಕಿಸಿ ಬಸ್ ನಿಲ್ದಾಣದವರೆಗೆ ಬಂದು ಹತ್ತಬೇಕಾಗಿರುವುದನ್ನು ಹತ್ತಿಸಿ… ಟಾಟಾ ಮಾಡುತ್ತ ಬೀಳ್ಕೊಡಲು ಚಲಿಸುತ್ತಿರುವ ಬಸ್ಸೊಳಗೆ ನಾನು ಎಷ್ಟೊ ಗೆಲುವಿನಿಂದ ಪಯಣಿಸುತ್ತಿದೆನು. +* +* +* +ನನಗೇನು ಅಷ್ಟು ಪರಿಚಿತವಲ್ಲದ ಕೊತ್ತಲಗಿಯಲ್ಲಿ ಇಳಿದಾಗ ಇಳಿ ಹೊತ್ತು ಶುರುವಾಗಿತ್ತು. ಕೆಲವಿ ಹೆಜ್ಜೆ ನಡೆದು ಮೂರು ದಾರಿ ಶುರುವಾದ ವೃತ್ತದಲ್ಲಿ ನಿಂತೊಡನೆ ದುತ್ತನೆ ಕೊಟ್ಟೂರು ಎದೆಯೊಳಗೆ ಬೇತಾಳದಂತೆ ನಿಂತುಕೊಂಡಿತು. ದುಃಖ ಜೋಬದ್ರ ಹೃದಯ ಭಾಗವನ್ನು ಹಿಂಡಿ ಹಿಪ್ಪೆ ಮಾಡಿ ಮಣ್ಣು ಮುಕ್ಕಿದ ಹಾವಿನಂತೆ ಬೆಳೆದಿರುವ ಬಡಾವಣೆಗಳು, ಆ ಬಡಾವಣೆಗಳೊಳಗೆ ಸದಾ ಹಣಕ್ಕಾಗಿ ಹಪಹಪಿಸುತ್ತಿರುವ ರಕ್ತದೊತ್ತಡದ ಶೋಭಾಯಮಾನ ರೋಗಿಗಳು; ಧರ್ಮ ಪತ್ನಿಯ ಸೊಗಸಾದ ಕಂಣುಗಳಿಗೆ ಕಾಣದಂತೆ ತಿಂಡಿತೀರ್ಥ ಕುರುಕುತ್ತ ಮೆಡಿಕಲ್ ಶಾಪುಗಳಿಗೆ ಆಧಾರಸ್ಥಂಭವಾಗಿರುವ ಸಿಹಿಮೂತ್ರ ರೋಗಿಗಳು, ಪಾತಿವ್ರತದ ಮುಂಭಾರ, ಹಿಂಭಾರದಿಂದ ನಲುಗಿ ಹೋಗುತ್ತಲೇ ಕೈತೋಟಗಳ ಮುಂಗಟ್ಟೆಗಳ ಮೇಲೆ ಪರ್ಜನ್ಯ ಜಪ ಮಾಡುತ್ತಿರುವವರಂತೆ ಮಂಕಾಗಿ ಕೂತಿರುವ ತುಂಬು ಮುಖದ ಗೃಹಿಣಿಯರು, ಒಳ ಉಡುಪುಗಳ ಬಗ್ಗೆ ಮುತುವರ್ಜಿ ವಹಿಸುವುದರ ಜೊತೆಗೆ ಕಣ್ಣು ಹುಬ್ಬಿನ ಅನಗತ್ಯ ಕೂದಲನ್ನು ಬುಡಸಹಿತ ಕಿತ್ತೆಸೆಯುವಂತ ಅತ್ಯಾಧುನಿಕ ಚಿಮಟಿಗೆಗಳಿಗಾಗಿ ಫ್ಯಾನ್ಸಿ ಸ್ಟೋರುಗಳಿಗೆ ದಟ್ಟಂಡಿ ದಾರುಂಡಿ ಅಲೆಯುತ್ತಿರುವ ಯುವತಿಯರು, ಕಾಂಡೂಮ್ಸ; ಹೈರ್ಡೈಕವರ್‍ಸೂ; ಹೇರ್‌ರಿಮೂವರ್ ಪಾಕೆಟ್ಸೂ; ಬ್ಲೇಡ್ಸೂ ಇಂಥಪ್ಪ ತರಾವರಿ ನಿರುಪಯುಕ್ತ ವಸ್ತುಗಳಿಂದಲೇ ತುಂಬಿಹೋಗಿರುವ ಮುನಿಸಿಪಾಲಿಟಿ ಕಸದ ಡಬ್ಬಿಗಳು, ಚಳುವಳಿಗಾರರಿಂದ ತಡೆಯಲ್ಪಟ್ಟ ಕ್ಷಣದಿಂದ ನಿಂತು ತುಕ್ಕು ಹಿಡಿದು ಹೋಗಿರುವ ರೈಲುಗಾಡಿ… ಭಾರತ ಕಾನೂನು ಸಂಹಿತೆಯ ಕಲಮುಗಳನ್ನು ನಾಲಿಗೆ ಮೇಲೆ ಬರೆದುಕೊಂಡು ಸವರ್ಣೀಯರ ಮೇಲೆ ಹೂಂಕರಿಸುತ್ತಿರುವ ಅರೆ ವಿದ್ಯಾವಂತ ದಲಿತರು, ಕುರುಕಲು ತಿಂಡಿಗಳನ್ನು ಜನಪ್ರಿಯಗೊಳಿಸುತ್ತಿರುವ ತಳ್ಳೋ ಬಂಡಿಗಳು; ಶ್ವಾನ ಸಂತಾನದ ಬಗ್ಗೆ ಕಾಳಜಿ ವಹಿಸುತ್ತಿರುವ ಕೌನ್ಸಿಲರುಗಳು; ಹಿಂಸೆ ಮತ್ತು ಲೈಂಗಿಕ ಚಟುವಟಿಕೆಗಳಿಂದಾಗಿ ನಾಡಿನುದ್ದಾಕ್ಕೂ ಹೆಸರು ಮಾಡಿರುವ… ಖಡ್ಗದಂಥ ಪತ್ರಿಕೆಗಳು (ಸಮೀಪ ದೃಷ್ಟಿ ದೋಶದಿಂದಲೂ; ಕಲ್ಲರ್ ಅಲರ್ಜಿಯಿಂದಲೂ ಬಳಲುತ್ತಿರುವ ಡಾ.ಕಮಲಾಕರನು ಕಳೆದ ವಾರ ಕಂಟೆಸ್ಸಾ ಖರೀದಿಸಿರುವವನಂತೆ ಕಣ್ರೀ!) ವಿಧ್ಯಾರ್ಥಿಗಳಿಗೆ ಹೆದರುತ್ತಿರುವ ಅವಿದ್ಯಾವಂತ ಉಪನ್ಯಾಸಕರು ಕಲಿತಂಥ ಒಂದೊಂದು ಅಕ್ಷರವನ್ನು ಒಂದೊಂದು ಆಯುಧ ಮಾಡಿಕೊಂಡು ಚಿಗುರುಮೀಸೆ ತಿರುವುತ್ತಿರುವ ವಿಧ್ಯಾರ್ಥಿಗಳು, ಗೊನೋರಿಯಾ; ಸಿಫಿಲಿಸ್ಸಿವೇ ಮೊದಲಾದ ರೋಗ ರುಜಿನಗಳು ಮಡುಗಟ್ಟಿರುವ ಮೂತ್ರಾಲಯಗಳು ಲೈಂಗಿಕ ಸಾಹಿತ್ಯದ ತುಂಡುಗಳಿಗೆ ವ್ಯಾಸಪೀಠವಾಗಿರುವ ಸಾರ್ವಜನಿಕ ಕಕ್ಕಸ್ಸುಗಳ ಗೋಡೆಗಳು, ಬೆನ್ನೆಲಬು ನಿಟಾರನೆ ನೀಡಿ ಒಂದು ಘಳಿಗೆ ಬಿಸಿಲಿಗೆ ಬಂದು ಹೋಗುವ ರಾಜಕಾರಣಿಗಳು; ಹೇಷಾರವಗಳಿಗೆ ಪ್ರೇರಣೆ ನೀಡುತ್ತಿರುವ ಸರ್ಕಾರ ಕೃಪಾಪೋಶಿತ ಸಾರಾಯಿ ಅಂಗಡಿಗಳು; ಕ್ವಾಟ್ರು ಬಾಟಲಿಯೊಳಗೆ ಚಟಾಕು ಎಣ್ಣೆ ಸುರಿಯುತ್ತಿರುವ ಮೆತ್ರಿಕ್ ಮಾಪನಗಳು, ದುಕ್ಕ ದುಮ್ಮಾನ,ಕೇಕೆ, ಕ್ಯಾಕರಿಕೆ, ಹಸಿವೆ, ಕಮರು ಡೇಗು, ಹೈಹೀಲ್ಡ್ ನಡಿಗೆ ಇವೇ ಮೊದಲಾದ ಅವಘಡಗಳಿಂದ ತುಂಬಿಹೋಗಿರುವ ಕೊಟ್ಟೂರಿಗೆ ಹೋಗದೆ ಎಷ್ಟೊಂದು ದಿನಗಳಾದುವಲ್ಲ? +ನಾನು ಕನ್ನಡ ಮತ್ತು ಸಂಸ್ಕೃತಿ ಜೊತೆಗೆ ಕ್ರೀಡಾ ಇಲಾಖೆಗಳನ್ನು ಜೊತೆಗೆ ನಿಭಾಯಿಸುತ್ತಿದ್ದಾಗ ಒಮ್ಮೆಯಾದ್ರು ಕಾಣಬಾರದಾಗಿತ್ತೇ ನೀನು… ನೀನು ನನ್ನ ಕಾಣದಿದ್ದುದು, ನನ್ನಿಂದ ನೀನು ಅಕಾಡೆಮಿ ಮೆಂಬರಾಗಲಿಕ್ಕಾದ್ರು ನನ್ನ ಕೇಳಿಕೊಳ್ಳದಿದ್ದುದು ಇವೆಲ್ಲ ನೀನು ನನಗೆ ಮಾಡಿದ ದೊಡ್ಡ ಅವಮಾನ‌ಎಂದು ತಿಳಿಯುತ್ತೇನೆ ಎಂದು ರಾಜಾರೋಷವಾಗಿಚಚ್ಚಿದ ಜಲಜಾಕ್ಷಿ ಮುಂದಿನ ತಿಂಗಳಲ್ಲಿ ಸ್ಪೀಕರಾಗಲಿದ್ದಾಳಂತೆ… ಹೆಂಣು ಮತ್ತು ಹೆಂಡದ ನಡುವೆ ಇದ್ದ ಗೆರೆಯನ್ನೇ ಅಳಿಸಿ ಹಾಕಿರುವ ರಾಜಕಾರಣಿಗಳ ಬಳಿಗೆ ಹೋಗಿ ಗೋಗರೆಯುವುದೂ ಒಂದೇ, ಆತ್ಮಹತ್ಯೆ ಮಾಡಿಕೊಳ್ಳುವುದ್ ಒಂದೇ! +ಕೊಟ್ಟೂರಿಗಿಂತ ಯಾವ ರೋಗದಲ್ಲಿ ಕೊತ್ತಲಿಗಿ ಕಡಿಮೆ ಇದೆ… ಸ್ವಭಾವ ಮತ್ತು ಜಾಯಮಾನದ ವಿಷಯದಲ್ಲಿ ಇವೆರಡೂ ಒಂದು ರೀತಿ ಅವಳಿ ಜವಳಿಗಳೇ; ಯಾರನ್ನು ಹೇಗೆ ಮಾತಾಡಿಸಬೇಕೆಂಬ ಪೌರಪ್ರಜ್ಞೆ ಕಳೆದುಕೊಡವನಂತೆ ಅಲ್ಲಿ ಕೂತು ಇಲ್ಲಿ ಎದ್ದು ಇಲ್ಲಿ ಕೂತು ಅಲ್ಲಿ ಎದ್ದು ವಿಲವಿಲನೆ ಒದ್ದಾಡುತ್ತಿದ್ದ ನನ್ನನ್ನು ಅವರಿವರು ಗಮನಿಸಿರಲಿಕ್ಕೂ ಸಾಕು. ಅನೇಕ ದಂತಕಥೆಗಳ ಮೂಲ ಸ್ಥಾವರವಾಗಿದ್ದ ಕತ್ತಲಿಗಿಯ ಸೋಮವಾರಪೇಟೆಕಡೆ ಹೆಜ್ಜೆ ಹೇಗೆ ಹಾಕಬೇಕೆಂಬುದರ ಬಗ್ಗೆ ನಿಂತಲ್ಲೆ ತಾಲೀಮು ಮಾಡತೊಡಗಿದ್ದೆ. ನನ್ನ ಈ ಒದ್ದಾಟವನ್ನು ಬಹಳ ಹೊತ್ತಿನಿಂದ ದೂರದಿಂದಲೇ ಗಮನಿಸುತ್ತಿದ್ದ ಒಬ್ಬ ನೋಡಲಿಕ್ಕೆ ಒಳ್ಳೆ ಜಾನಿವಾಕರನಂತಿದ್ದನು. ಒಂದು ನೋಟಕ್ಕೆ ಜೇಬುಗಳ್ಳನಂತೆಯೂ; ಇನ್ನೊಂದು ನೋಟಕ್ಕೆ ಸವದತ್ತಿ ರಿಟರ್‍ನಂಡ್‌ನಂತೆಯೂ, ಮತ್ತೊಂದು ನೋಟಕ್ಕೆ ತಲೆಹಿಡುಕನಂತೆಯೂ; ಮಗದೊಂದು ನೋಟಕ್ಕೆ ಹವ್ಯಾಸಿ ಸಮಾಜ ಸೇವಾ ಕಾರ್ಯಕರ್ತನಂತೆಯೂ; ಮರುಹುಟ್ಟು ಪಡೆದ ತತ್ವಜ್ಞಾನಿಯಂತೆಯೂ ಹುಡುಕುವ ಕಾಲಿಗೆ ತೊಡರಲಿದೆಯೋ ಎಂಬಂತೆ ಗೋಚರಲಿದೆಯೋ ಎಂಬಂತೆ ಗೋಚರಿಸುತ್ತಿದ್ದ. ಇನ್ನೇನು ಮಾತನಾಡಿಸುತ್ತಾನೆ ಎಂಬಷ್ಟರಮಟ್ಟಿಗೆ ಹತ್ತಿರ ಬಂದು ಮತ್ತೆ ಮೂರು ಮಾರು ದೂರ ಸರಿದುಬಿಡುತ್ತಿದ್ದ. ನಾನೇ ಮಾತಾಡಿಸಬೇಕೆಂದುಕೊಂಡ ಕ್ಷಣದಲ್ಲಿಯೇ ಅವನೇ ಹಿಂದೆಲೆ ಕೆರೆಯುತ್ತ ಹತ್ತಿರ ಬಂದ. ಯಾವೂರು ಅಂತ ಮಾತಾಡಿಸಿದ. ಬೇಕೆಂದೇ ನಾನು ” ಮೇಮು ಆಂಧ್ರವಾಳ್ಳು… ಚಾಲ ದೂರಮುನುಂಡಿ ವಚ್ಚಿನಾಮು” ಎಂದು ತೆಲುಗಿನಲ್ಲಿ ಉತ್ತರಿಸಿದೆ. ಬೆಟ್ಟಮಂ ಗುಂಗುರು ಕಾಡಿತ್ತು ಎಂಬ ನಯಸೇನನ ಮಾತಿನಂತೆ ಒಂದೇ ಸಮನೆ ಅವನು ಕಲೆ ಬಿದ್ದ. “ನೇನು ಅಟ್ಲಂಡಿ ಇಟ್ಲಂಡಿ” ಅಂತ ಶುರು ಮಾಡಿದ. ತನಗೆ ಹಿಂದಿ, ಇಂಗ್ಲೀಷು, ತೆಲುಗು, ಕನ್ನಡ ಇವೇ ಮೊದಲಾದ ಷೋಡಷ ಭಾಷೆಗಳು ಗೊತ್ತುಂಟೆಂದು ಹೇಳಿದ. ತನ್ನ ಹೆಸರು ರಾಖೇಶನೆಂದೂ; ತನ್ನ ತಂದೆ ಮಾಜಿ ಸಣ್ಣ ನೀರಾವರಿ ಮಂತ್ರಿ ಗುಲಾಮನಬಿ ಎಂದೂ; ತನ್ನ ತಾಯಿ ಹೆಸರು ಬಸವ್ವನೆಂದೂ; ತನ್ನ ಚಿಕ್ಕಪ್ಪನ ಹೆಸರು ವರ್ಡ್ಸ್‌ವರ್ಥನೆಂದೂ; ತನ್ನ ತಂಗಿ ಹೆಸರು ಡಯಾನ ಎಂದೂ, ತಾನು ಎಸ್ಸೆಲ್ಸಿಯನ್ನು ನಾಲ್ಕನೆ ಬಾರಿ ಫೇಲಾದುದಾಗಿಯೂ; ಇಪ್ಪತ್ತೈದು ವರ್ಷ ತುಂಬುತ್ತಲೆ ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ. ಎ. ಮಾಡಿಕೊಂಡಿದ್ದಾಗಿಯೂ, ತನಗೆ ತಾಲ್ಲೂಕಾಫೀಸಿನಲ್ಲಿ ಜವಾನನ ಕೆಲಸ ಸಿಕ್ಕಲಿಲ್ಲಾಂತ ತಾನು ನಿರಾಶನಾಗದೆ ಬಡೇಲಡುಕು ಮಂಡಲ ಪಂಚಾಯ್ತಿ ಎಲೆಕ್ಷನ್ನಿಗೆ ಸ್ಪರ್ಧಿಸಿ ಗೆದ್ದಿರುವುದಾಗಿಯೂ, ಹೊಟ್ಟೆ ತುಂಬಿಸಿಕೊಳ್ಳಲು ನಿಂಂಅಂಥವರನ್ನು ಪರಿಚಯ ಮಾಡಿಕೊಳ್ಳುತ್ತಿರುವುದಾಗಿಯೂ ನಿರರ್ಗಳವಾಗಿ ಹೇಳಿ ಅವನು ರೈಟರ್ಸ್ ಡಾರ್ಲಿಂಗಾದ. ನೋಡು ನೋಡುವಷ್ಟರಲ್ಲಿ ಅವನು ನನಗಿಂತ ಎತ್ತರವಾದ, ಸುಮಾರು ಐವತ್ತಾರು ಕನ್ನಡ ಸಿನಿಮಾಗಳಲ್ಲಿ ಹೆಣದ ಪಾರ್ಟ್ ಮಾಡಿರುವುದಾಗಿಯೂ, ಸಾಹಸಸಿಂಹ, ರೆಬೆಲ್‌ಸ್ಟಾರೂ; ಟೈಗರ್ರೂ; ಇವರೆಲ್ಲರು ತನಗೆ ತುಂಬ ಪರಿಚಯವೆಂದೂ ಹೇಳಿಕೊಂಡು ನನಗೆ ದಿಗಿಲು ಹುಟ್ಟಿಸಿದ. ಪೆಂಡ್ಲಾಮು ಪಿಲ್ಲಲೂ ಅಂತ ಕ್ರಾಸ್ ಕ್ವೆಶ್ಚನ್ನು ಮಾಡಿದ್ದಕ್ಕೆ ಅವನು ತಾನು ಹನ್ನೆರಡು ಸಿನಿಮಾಗಳಲ್ಲಿ ಮದುವೆ ಆಗಿರುವುದಾಗಿಯೂ; ಬಾಲಕೃಷ್ಣರಂಥವರಿಗೆ ಮಗನಾಗಿದ್ದುದಾಗಿಯೂ; ವಾಸುದೇವರಾವ್‌ರವರಿಗೆ ಮೊಮ್ಮಗನಾಗಿದ್ದಾಗಿಯೂ; ಅವನು ಹೇಳಿದ್ದನ್ನು ಕೇಳಿ ನಾನು ಪಾತಾಳಕ್ಕೆ ಇಳಿದುಹೋದೆ. ನನ್ನ ಮುಖದಲ್ಲಾದ ಬದಲಾವಣೆ ಗುರುತಿಸಿ ಜಂಬಲಕಡಿ ಪೊಂಬ ಸಿನಿಮಾದಲ್ಲಿ ಬ್ರಹ್ಮಾನಂದಂ ಜೊತೆ ತಾನು ಹುಚ್ಚನ ಪಾರ್ಟ್ ಮಾಡಿರುವುದಾಗಿ ಹೇಳಿ ಗ್ರಮದ ಸಮಸ್ತ ಸಿಂಗಾರವನ್ನು ಮುಖದ ಇಂಚಿಂಚಿನಲ್ಲು ಪ್ರಕಟಿಸ ತೊಡಗಿದ. ಈ ಮಹಾನ್ ಕಲ್ಲಕಾರನೆದುರು ಏನೂ ಅಲ್ಲವೆನಿಸಿ ತಪ್ಪಿಸಿಕೊಳ್ಳಲೆತ್ನಿಸಿದೆ. ಆದರೆ ಅವನು ಬಿಡಬೇಕಲ್ಲ! ಚೂಡಂಡಿ ದೊರ… ಇಕ್ಕಡಿ ವಚ್ಚಿನಾರಂಟೆ … ದಾನಿಕೇ ವಚ್ಚುಂತಾರು… ನಾಕು ತೆಲುಸು ಸಾರ್… ಮೀ ಆಂಧ್ರಲೋ ಪೆದ್ದ ಪೆದ್ದ ಮನುಷಲು ನಾಕ ಬಾಗ ತೆಲುಸು… ರಸಿಕುಲಂಟೆ ವಾಳ್ಳು… ದಬ್ಬುನು ನೀಳ್ಳಲಾಗ ಖರ್ಚು ಚೇಸ್ತಾರು… ಮಂಚಿ ಪಿಟ್ಸನು ಗೂಟೀಕಿ ಲಾಖ್ಖುಂಟಾರು… ” ಎಂದು ಮೇಸೆಗೆ ಉಘುಳು ಲೇಪಿಸಿ ಹುರಿ ಮಾಡಿದ… ಅದಕ್ಕಲ್ಲಯ್ಯಾ ನಾನು ಬಂದಿರೋದು ಎಂದರು ಅವನು ಬಿಡದೆ… “ಈ ವಯಸ್ಸುಲೋ ಸುಖ ಪಡಾಲಂಡೀ… ನಾಕಂತಾ ತೆಲ್ಸು… ಮೇರೇಮಿ ಸಿಗ್ಗು ಪಡವಲಸಿನ ಅವಸರಮು ಲೇದಂಡಿ… ಮುಖಂ ಚೂಸ್ತೇನೇ… ವೀಳ್ಳು ದೀನಿಕೇ ವಚ್ಚಿನಾರನಿ… ಚೆಪ್ತಾನಂಡಿ … ಭಯಂ ಉಂಟೆ ಪನಿ ಜರಗದಂಡಿ… ಚೆಪ್ಪಂಡಿ ಮೀಕೆಲಾಂಟ ಮಾಲು ಕಾವಾಲಿ… ವಯಸ್ಸು‌ಎಂತ ಉಂಡಾಲಿ… ಮೆಚುರ್‍ಡುಕಾವಾಲೋ; ನಾನ್‌ಮೆಚುರ್‍ಡು ಗರ್ಲ್ ಕಾವಾಲೋ… ಹೌಸು ವೈಫ್ಸು ಕಾವಾಲೋ… ಪ್ಯೂರ್ ಪ್ರೊಫೆಷನಲಿಷ್ಟು ಕಾವಾಲೋ… ಇಂತೇ ಕಾದನ ನಾ ಲಿಸ್ಟುಲೋ ಸ್ಕೂಲು ಗರ್‍ಲುಸು; ಕಾಲೇಜು ಗರ್‍ಲುಸು… ಅಸ್ಂದ್ರೂ ಉನ್ನಾರಂಡಿ… ಆಶ್ಚರ್ಯಮು ಪಡಕಂದಿ… ಕಡುಪು… ಕಡುಪೂ… ಕಡುಪೂ… ಈ ಕಡುಪೇ ಅನ್ನಿ ಪನ್ಲು ನೇರ್‍ಪಿಸ್ತುಂದಂಡೀ…” ಎಂದು ಆವೇಶದಿಂದ ಮಾತಾಡತೊಡಗಿದ… ” ಅದಲ್ಲ… ರಾಕೇಶೂ… ಅಂದರೂ ಬಿಡದೆ ಅವನು ನನ್ನ ಕೈಯಲ್ಲಿ ಬ್ಯಾಗು ಹಿಸಿದುಕೊಂಡು ಬಾಯಿಮುಚ್ಚಿಕೊಂಡು ತನ್ನನ್ನು ಫಾಲೋ ಮಾಡುವಂತೆ ಸಂಜ್ಞೆ ಮಾಡಿದ. ಉಳ್ಳೋಕಿ ಪೋದಾಂ ಪಾರುಲು ಚೂದ್ದಾಂ ಚಲೋ ಚಲೋ ಎಂಬ ದೇವದಾಸು ಚಿತ್ರದಲ್ಲಿ ಅಕ್ಕಿನೇನಿಗಾರು ಹಾಡುವ ಹಾಡನ್ನು ಸಿಳ್ಳೆ ಮೂಲಕ ಹಾಡುತ್ತ ಹೊರಟ ಅವನ ಹಿಂದೆ ನಾನು ಕಳ್ಳಹೆಜ್ಜೆ ಹಾಕತೊಡಗಿದೆ… ಅವರಿವರು ನೋಡಿಯಾರೆಂಬ ಭಯದಿಂದ ಕಾಲುಗಳು ಕಂಪಿಸುತ್ತಿದ್ದವು. ನನ್ನ ಆಗಮನ ಬಯಸಿ ಪರಿಚಯಸ್ಥರು ತಲೆ ಮರೆಸಿಕೊಳ್ಳುತ್ತಿರಬಹುದೆಂದುಕೊಂಡೆ. ಸಿಳ್ಳೆ ಹಾಕುತ್ತಿದ್ದ ಅವನು ಆಗಾಗ್ಗೆ ಇಂಗ್ಲೀಶು, ಹಿಂದಿ, ತಮಿಳು ಭಾಶೆಗಳಲ್ಲಿ ಮಾತಾಡುತ್ತ ತಾನು ಸರ್ವ ಭಾಷಾ ಪಾರಂಗತ ಎಂಬುದನ್ನು ಸಾದರಪಡಿಸುತ್ತಿದ್ದ. ಮೊಟ್ಟ ಮೊದಲು ಹೆತ್ತವರ ಪಹರೆಯೊಳಗೆ ಶಾಲೆಗೆ ಹೊರಟಿರುವಂತಿರುವ ನಾನೂ, ಎಳಕೊಂಡೊಯ್ದು ಒಳಗೆ ಹಾಕ್ತೀನಿ… ಅದ್ಯಾವ ಮೇಡಂನಿಂದ ಅದೇನು ಕಲಿಯುತ್ತೀಯೋ ಕಲಿ ಎಂಬ ಹಠಮುದ್ರೆಯನ್ನು ತನ್ನ ಚಪ್ಪಟೆ ಮುಖದಲ್ಲಿ ಧರಿಸಿ ವಿಚಿತ್ರ ಲಹರಿಯಲ್ಲಿ ಹೆಜ್ಜೆ ಹಾಕುತ್ತಿರುವ ಅವನೂ; ತನ್ನ ಕೈಯಲ್ಲಿ ನನ್ನ ಬ್ಯಾಗಿದ್ದುದರಿಂದ ತಪ್ಪಿಸಿಕೊಳ್ಳಲಾರನೆಂಬ ಆತ್ಮವಿಶ್ವಾಸವನ್ನು ಪ್ರತಿಹೆಜ್ಜೆ ಮೂಲಕ ಪ್ರಕಟಿಸುತ್ತಿದ್ದ. +ಫತೆಪುರ್ ಸಿಕ್ರಿಯಲ್ಲಿ ಸಿಗುವ ಬುಲಂದ ದರವಾಜ ಸಿಗುತ್ತದಲ್ಲ ಅಂಥದೊಂದು ದರವಾಜ ಎದುರಾಯಿತು. ಎರಡು ಕಲ್ಲುಕಂಬಗಳ ಆ ದರವಾಜದ ನೆತ್ತಿಮೇಲೆ ತೆಂಗಿನಕಾಯಿಯೊಂದನ್ನು ಇಡಿಯಾಗಿ ಮಂತ್ರಿಸಿ ಅದರೊಳಗೊಂದು ಗೂಟ ಬಡಿದು ಕಟ್ಟಿದ್ದರು. ಘನ ಸರಕಾರದವರು ಒಂದು ಕಡೆ ಕಟ್ಟಿದ್ದ ಸೂಚನಾ ಫಲಕದಲ್ಲಿ ಸೂಳೆಗಾರಿಕೆ ಮಾಡುವುದು ಅದನ್ನು ಪ್ರೊತ್ಸಾಹಿಸುವುದು, ಭಾಗಿಯಾಗುವುದು ಭಾರತೀಯ ದಂಡ ಸಂಹಿತೆಯ ಇಷ್ಟನೆ ಕಲಮು ಪ್ರಕಾರ ಅಪರಾಧವೆಂದೂ; ಇಂತಿಂಥ ಅಪರಾಧಕ್ಕೆ ಇಷ್ಟಿಷ್ಟು ಶಿಕ್ಷೆ ವಿಧಿಸಲಾಗುವುದೆಂದೂ ವಿವರವಾಗಿ ಬರೆಯಲಾಗಿತ್ತು. ಇನ್ನೊಂದು ಕಡೆ ಅನೈತಿಕ ಲೈಂಗಿಕ ಸಂಪರ್ಕಗಳಿಂದ ಬರಬಹುದಾದ ಗುಹ್ಯರೋಗಗಳ ಮತ್ತು ಮರಣಾಂತಿಕ ರೋಗವಾದ ಏಯ್ಡ್ಸ್ ಬಗ್ಗೆ ಸುಧೀರ್ಘ ವಿವರವಿದ್ದ ಫಲಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದವರು ಸ್ಥಾಪಿಸಿದ್ದರು. ಮತ್ತೊಂದು ಕಡೆ ಕಾಂಡೂಂಮ್ಸ್ ತಯಾರಿಕಾ ಕಂಪೆನಿಯವರು ಸುರಕ್ಷಿತ ಲೈಂಗಿಕ ಚಟುವಟಿಕೆಗಳಿಗೆ ತಮ್ಮ ಕಂಪನಿ ತಯಾರಿಸುವ ಕೋಹಿನೂರ್ ನಿರೋಧಕ ಚೀಲಗಳನ್ನೇ ಉಪಯೋಗಿಸಿರಿ ಎಂದು ಬರೆದು ಕಟ್ಟಿದ್ದರು. ಆದರೆ ಸೋಮವಾರ ಪೇಟೆಯ ಅಭಿಮಾನಿಗಳು ಅವಕ್ಕೆಲ್ಲ ಸೆಗಣಿ ಎಸೆದು ವಿರೂಪಗೊಳಿಸಿದ್ದರು. ಅದನ್ನು ಓದಲು ಪ್ರಯತ್ನಿಸಿದ ನನ್ನನ್ನು ಆ ರಾಖೇಶಕುಮಾರನು “ಅವ್ನೆಲ್ಲಾ ಯಾಕೆ ಓದ್ತೀರಿ ಬರ್ರಿ ಸಾರ್…ಎಂದೋ ಒಂದಿನ ಎಲ್ರೂ ಸಾಯ್ಲೇಬೇಕಲ್ಲ… ಮನುಷ್ಯ ಜೀವನ ಎಂಬುದುನೀರ ಮೇಲನ ಗುಳ್ಳೆ ಇದ್ದಂತೆ ಸಾರ್… ಅದು ಟಪ್ಪೆಂದು ಒಡೆಯೋಕು ಮೊದಲೇ ಎಲ್ಲಾ ನಮೂನೆಯ ಸುಖ ಅನುಭವಿಸಬೇಕು…” ಎಂದು ಗುಂಟೂರು ಕಡೆಯ ತೆಲುಗಿನಲ್ಲಿ ಹೇಳಿದ. ಒಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಅಲ್ಲಿ ವಾರ್ತಾ ಇಲಖೆಯವರು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಲೈಂಗಿಕ ರೋಗಗಳ ಬಗ್ಗೆ ಒಂದು ಕಿರುಚಿತ್ರವನ್ನು ಪ್ರಸಾರ ಮಾಡಲು ಪ್ರೊಜೆಕ್ಟರು, ಸ್ಕ್ರೀನು ಎಲ್ಲವನ್ನು ಹೊಂದಿಸ ತೊಡಗಿದ್ದರು. ಇನ್ನೊಂದು ನಾಲ್ಕು ಹೆಜ್ಜೆ ಮುಂದೆ ಹೋಗಲು ಕೆಲವು ಗಂಡಸರೂ ಹೆಂಗಸರೂ ಸಾಮೂಹಿಕವಾಗಿ ಕೋಲಾಟದ ಪದ ಹಾಡುತ್ತ ಕುಣಿಯುತ್ತ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರು. +ಇನ್ನು ಸ್ವಲ್ಪ ಮುಂದೆ ಹೋಗಲು ಹಂಚಿನ ಮನೆ ಮುಂದೆ ಕೆಲವು ಹೆಂಗಸರು ಕೂತು- +ಬಲ್ಲಿದವರ್‍ನೆಲ್ಲ್ ಹಿಡ್ದು ಬೆನ್ನಾಗ ಸೀಳಿ ಬಾಯ್ತುಂಬ ಕೀಲಾಽಽ ಜಡ್ಡೂ +ಸೊಲ್ಲು ಸೊಲ್ಲಿಗೊಮ್ಮೆ ಉಧೋ ಉಧೋ ಎಂದೂಽಽ +ಒಳ್ಳೇದಲ್ಲವ್ವಾ ನಿನ್ನ ಬಿರುದು ಎಲ್ಲಿ ಕಾಣಲ್ಲಿ ಕಾಣೆನೇ +ಎಲ್ಲಮ್ಮ್ನಂಥಾಕಿನೆಲ್ಲಿ ಕಾಣೆನೇ +ಎಂದು ಮುಂತಾಗಿ ಪಡಲಗಿ ಸುತ್ತ ಕೂತು ಇಂಪಾಗಿ ಹಾಡುತ್ತಿದ್ದರು. ಅವರೆಲ್ಲರ ಹಣೆಯಲ್ಲಿ ರೂಪಾಯಿಯಗಲದ ಕುಂಕುಮ ಬೊಟ್ಟು ಕೊರಳಲ್ಲಿ ಕಾಸಿನ ಸರ ಥಳಥಳ ಹೋಲೆಯುತ್ತಿದ್ದವು. ಭೂಮಿಯೇ ಗದಗುಟ್ಟಿ ನಡುಗುತ್ತಿರುವ ರೀತಿಯಲ್ಲಿ ಕುಡುಕನೊಬ್ಬ ತೂರಾಡುತ್ತ ಬಂದ. ಕೈಯಲ್ಲಿ ಮುತ್ತಿನ ಸರವನ್ನು ತೋರಿಸಿ ಥೈತಕ್ ಥೈತಕ್ | ತಂದಾನ ತಾನೇ ತನ್ನನ್ನ ಥೈಯೋ ತಂನೋ ತಂದಾನೆ ತಾನೇ ತನ್ನ ಎಂದು ಮುಂತಾಗಿ ರಾಗವಾಗಿ ಹಾಡುತ್ತ ಕುಣಿಯತೊಡಗಿದ. ಹಂಗೆ ಹೋದರೆ ಹಂಗೆ ಬಿಡವಲ್ಲ. ಹಿಂಗೆ ಹೋದರೆ ಹಿಂಗೆ ಬಿಡುವಲ್ಲ! ನಮಗಿದು ಫಜೀತಿಗಿಟ್ಟುಕೊಂಡಿತು. ಅದರಿಂದ ರಾಖೇಷ ಕುಮಾರಗೆ ರವುಷ ಹುಟ್ಟಿ “ದಿಸ್ ಈಜ್ ಏ ಗ್ರೇಟು ಪರ್ಸನ್ನೂ… ಯು ಡೋಂಟು ನೋ… ಹಿ ಈಜ್ ಕಮಿಂಗ್ ಪ್ರಮ್ಮು ಆಂಧ್ರಪ್ರದೇಶ್… ದಿ ಗ್ರೇಟು ಆಂಧ್ರಪ್ರದೇಶ್… ಡುಯು ಅಂಡರ್‌ಸ್ಟಾಂಡೂ… ಸಡಕ್ ಛೋಡೊ” ಎಂದು ದಬಾಯಿಸತೊಡಗಿದ. ಅದರಿಂದ ಕುಡುಕ ಮಹಾಶಯನಿಗೆ ಸಿಟ್ಟು ಬಂದು “ಎಲಾ ರಾಕ್ಯಾ… ಬಾಸ್ಟರ್ಡು ರಾಕ್ಯಾ ನನ್ಮಗ್ನೇ ಈ ಸಡಕೇನು ನಿನ್ನ ಗ್ರಾಂಡು ಪಾದರದೇನ್ಲೇ ಬಾಡ್ಕಾವ್… ನಾನು ಕಂಟರಾಕ್ಟು ಮಾಡಿ ಹಾಕಿಸಿದ್ದಲೇ ಇದು. ಹಗರಿ ಬ್ರಿಡ್ಜಿಂದು, ರೋಡಿಂದು ಬಿಲ್ಡಿಂಗಿದೆಲ್ಲ… ಸೋಮಾರಪೇಟೆಗೆ ಸುರಿದಿರೋ ಮನುಷ್ಯ ನಾನು… ನಂದು ನಾನು ತೊಗೊಂಡೋದ್ರೆ ಈ ಸೂಳೇರ್‍ಗೆ ನಿನ್ನಂಥ ತಲೆ ಹಿಡಿಕ್ರೀಗೆ ಬುದ್ಧಿ ಬರೋದು… ಆ ಲಚ್ಚುಮಿ ಐವತ್ತು ಕೊಟ್ರೆ ಒಳಾಗ ಬಿಟ್ಕೊಂತೀನಿ ಅಂದ್ಲಲ್ಲವೇ… ನನ್ನ ಪ್ರೆಸ್ಟೀಜು ಏನುಳೀತಲೇ.” ಎಂದು ನನ್ನ ಕಡಿಗೆ ತಿರುಗಿ, ಏನಯ್ಯಾನೀನು ಎಜುಕೇಟಡ್ನಂಗೆ ಕಾಣ್ತಿ…” ಎಂದು ಏನೇನೋ ಹೇಳಲಿದ್ದ. ಅಷ್ಟರಲ್ಲಿ ರಾಕ್ಯಾ ಅವನನ್ನು ಪಕ್ಕಾಕ್ಕೆ ತಳ್ಳಿ ನನ್ನ ಕೈಹಿಡಿದು ಎಳೆದುಕೊಂಡೊಯ್ದನು. +ಇಂಥ ಕಂಟಕಗಳನ್ನು ಲೀಲಾಜಾಲವಾಗಿ ದಾಟಿ ಪೇಟೆಯ ಹೃದಯಭಾಗ ತಲುಪಿದೆವು. ಬೇವಿನಕಟ್ಟೆ ಬಳಿ ನನ್ನನ್ನು ಬಿಟ್ಟುಯ್ ಒಂದೆರಡು ಮಂದಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಪರಿಚಯಿಸಿದ. ಅವರಲ್ಲಿ ಒಬ್ಬಳು ವ್ಯೋನಣ್ಣಾ… ಐನೂರದಾವ? ಅಂತ ರೇಟು ಪ್ರಸ್ತಾಪಿಸಿದಳು. ಇನ್ನೊಬ್ಬಳು “ಅಯ್ ಒಮ್ಗೆ ನೂರಂದ್ರೆ ಯದಿ ಹೊಡ್ಕೊಂಡು ಸಾಯ್ತಾನೀ ಯಣ್ಣ… ಕೆಲಸ ನೋಡಿ ಸಂತೋಷ ಪಟ್ರೆ ಐನೂರ್ಯಾಕೆ ಸಾವ್ರ ಕೊಟ್ಟಾನು ಬಿಡು” ಎಂದು ನನ್ನ ಕೈ ಹಿಡಿದುಕೊಂಡಳು. ಬಾ ಮಯ್ಯಿಗೆರಕಂಡು ದಮ್ಮು ಆರಿಸ್ಗೆವಂತಣ್ಣ ಬಾ… ಎಂದು ಎಲೆದಳು… ನಾನು ಒಂಚಣ ಗಲಿಬಿಲಿಗೊಂಡು… ನಾನಿಲ್ಲಿಗೆ ಬಂದಿರೋದು ಅನಸೂಯಮ್ಮನ್ನ ಕಾಣೋಕೆ” ಎಂದೆ. ಅದನ್ನು ಕೇಳಿ ಅವರು ಕಿಲಕಿಲ ನಕ್ಕರು… ಓಸೇಯ್ ಲಚುಮಕ್ಕ… ಓ ಸೇಯ್ ಸುಚೇಲಿ… ಓ ಸೇಯ್ ರಂಗುಲಮ್ಮೀ ಎಂದು ಕೂಗಿದರು. ಕಾಗೆಯೊಂದಗುಳಕಂಡರೆ ಕರೆಯದೇ ತನ್ನ ಬಳಗವನು… ಅಷ್ಟರಲ್ಲಿ ಮೂಲೆಮೂರು ಕಟ್ಟುಗ್ಳಿಂದ ಹತ್ತಾರು ಮಂದಿ ಹೆಂಣು ಮಕ್ಕಳು ಓಡೋಡಿ ಬಂದು ನನ್ನನ್ನು ನಖಶಿಖಾಂತ ನೋಡತೊಡಗಿದರು.ಆಯ್ ಈ ಯಣ್ಗೆ ಅನಸೂವಿ ಬೇಕಂತ್ರಲೇ ಎಂದವಳನ್ನುತ್ತಲೇ ಉಳಿದವರು ಫಕಫಕ ನಗ್=ಆಡಿದರು… ನನಾರಿಂಚಿದ್ದೋನು ಒಂದಂಗುಲವಾಗಿ ಬಿಟ್ಟೆ… ಆ ಅನಸೂವಿತಾನೈತಂತ ಹೋಗ್ಯಾನೀವಣ್ಣಾಂತ… ಯಾರೋ ನಮ್ಮಜ್ಜಿ ಮಿಂದನೇ; ಹೋಗಿ ಹೋಗಿ ಇಂಥೆಣ್ಣನ್ನ ಕರಕೊಂಡು ಬಂದಿಯಲ್ಲೋ ನಿನ್ ಮೂಗೀಗೆ ಕವಡಿ ಕಟ್ಲೀ… ಈಟೆತ್ರ ಬೆಳಕೊಂಡಿದ್ರೂ ಕಸುಬು ಗೊತ್ತಿಲ್ವಲ್ಲಾ ಈ ಯಣ್ಗೆ…” ಎಂದಳು ಒಬ್ಬಳು ರಾಕೇಶನ ಸೋಟಿಗೆ ತಿವಿದು ದುಡುದುಡನೆ ಹೋದಳು… ಆದರ ಮಯ್ಯಾಗೇನೈತಂತ ಹೋತಾನೀಯಣ್ಣಾಂತ… ಸ್ವರ್ಗ ತುಂಬ್ಕಂಡಿರೋ ನಮ್ಮ್ ಗುಡುಸ್ಲು ಬಿಟ್ಟು ಹರ್ವಾಣದ ಚಿದಾನಂದಾವದೂತ್ರು ತುಂಕೊಂಡಿರೋ ಆ ಮನೇಲ\ಏನೈತಂತ ಹೋತಾನೀಯಣ್ಣಾಂತ… ಕರಕೊಂಡೊಗಿ ತರುಬು… ಅದೇನಿಡ್ಕಂತಾನೋ ಹಿಂಡ್ಕಳ್ಳಿ” ಎಂದು ಮತ್ತೊಬ್ಬಳು ರಾಕೇಷನ ಸೋಟಿಗೆ ತಿವಿದು ಹೋದಳು. ಇನ್ನೊಬ್ಬಳು ಕಸುಬು ಕಲಿಯೋಕೆ ಅಂಥೋರೆ ವಾಸಿ ಬಿಡಪ್ಪ… ಈ ಮುಂಡೇವ್ಕೇನು ತಿಲಿತೈತಿ… ಅಗಾ ರಾಕ್ಯಾ ಕರ್ಕೊಂಡೋಗು… ಆಟುಕೊಡು ಈಟುಕೊಡೂಂತ ಜೀವ ತಿಂಬಬೇಡ… ಅದುರ್ಕೊಂಡು ಬರದಂಗಾದಾನು…” ಎಂದು ಬುದ್ಧಿ ಹೇಳಿ ಹೋದಳು. +ಅವರಿಂದ ನಿರ್ಮನುಷಗೊಂಡ ನಾನು ಜೇಬಿನಿಂದ ಐವತ್ತು ರೂಪಾಯಿ ನೋಟು ತೆಗೆದು ರಾಕೇಶನ ಮುಂಜೇಬಿಗೆ ತುರುಕಿ ಬಂದಿರೋ ಉದ್ದೇಶವನ್ನು ಪಿಸುಗುಟ್ಟಿದೆ. ಅವನು ನೋಟು ಮರಳಿಸುತ್ತ “ನಮ್ಮ ಶಾಮಂಣನ ಕಡೆಯೋರೇನ್ರಿ ನೀವು… ಅಂಥ ದೊಡ್ ಮನುಶ್ಯೋರು ಈ ಪ್ರಪಂಚದಾಗೆಲ್ಲ ಹುಡುಕಿದ್ರೂ ಸಿಗಾಣಿಲ್ಲ ಬಿಡ್ರಿ… ಅವ್ರು ಸತ್ತಿಲ್ರೀ… ಬದ್ಕೇ ಅದಾರ… ಅವಾತುಮ ಇಲ್ಲೆಲ್ಲಾರ ಇರ್‍ತತಿ ನೋಡ್ರಿ… ತಗಳ್ರಿ… ಇದ್ನ ಇಸ್ಕೊಂಡು ನಾನ್ಯಾವ ಪಾಪಕ್ಕೆ ಹೋಗ್ಲಿ…” ಎಂದನು ನಾನು ಬಲವಂತದಿಂದ ಕೊಟ್ಟೆ… “ಆಗಿದ್ದು ಆಗಿ ಹೋಯ್ತಪ್ಪಾ… ಕತ್ತಲಾಗ್ತದೆ… ಕೂಡ್ಲೆ ಅನಸೂಯಮ್ಮನವರ್‍ನ ಬೆಟ್ಟಿ ಮಾಡಿಸಪ್ಪ” ಎಂದು ಅವನ ಮುಂಗೈ ಅದುಮಿದೆ. ಅವನು ನಿಟ್ಟುಸಿರು ಬಿಟ್ಟು “ಅನಸೂಯಕ್ಕ ಇತ್ತೀಚ್ಗೆ ಒಂದ್ನಮೂನಿ ಆಗ್ಯಾಳ್ರೀ… ಗುಬ್ಬಚ್ಚಿಯಂಗ ಮನ್ಯಾಗ ಮುದಡ್ಕಂಡು ಅದ್ಯಾತ್ಮದ ಬಗ್ಗೆ ಚಿಂತನೆ‌ಅ ಮಂತನ ಮಾಡತಿರ್‍ತಾಳ್ರೀ ಸಾಹೇಬ್ರ… ಹರಿವಾಣಕೋಗಿ ತಾತನ ಬೋದಾ ತಗಂತೀನಂತಾಳ ನೋಡ್ರಿ… ನೀವಾರ ಬುದ್ಧಿ ಹೇಳ್ರಿ… ಬದುಕೀಗಟ್ರೀ… ಪುಣ್ಯ ಬರ್‍ತತಿ… ಕಂಪಣಿ ನಾಟಕ ಬ್ಯಾಡ ಬಿಡ್ರಿ… ಹಳ್ಳಿ ಮ್ಯಾಲ ಕರದ್ರೆ ಬಯ್ಲಾಟಕಾದ್ರು ಹೋಗೋದು ಬ್ಯಾಡೇನ್ರಿ… ನೀವಾರ ಬುದ್ಧಿ ಹೇಳ್ರಿ” ಎಂದು ನನ್ನ ಕೈ ಹಿಚುಕಿ ಕಂಣ್ಲ್ಲಿ ನೀರು ತಂದುಕೊಂದ. +“ನಿಲ್ಲೋ ನಿಲ್ಲೊ ನೀ ಮಗ್ನೆ… ಹೋಗುವುದುಚಿತಲ್ಲೋ ಮಗನೆ” ಎಂದೊಬ್ಬಳು ಹಾರ್ಮೋನಿಯಂ ಲಯಕ್ಕನುಗುಣವಾಗಿ ಏರು ದನಿಯಲ್ಲಿ ಹಾಡುತ್ತಿದ್ದುದು ಇಂಪಾಗಿ ಕೇಳಿಸುತ್ತಿತ್ತು. ರಕ್ತ ರಾತ್ರಿ ನಾಟಕದಲ್ಲಿ ಭಾನುಮತಿ ಪಾತ್ರ ವಹಿಸುವ ಕುರುವಳ್ಳಿ ಕಮಲ, ದ್ರೌಪದಿ ವಸ್ತ್ರಾಪಹರಣ ಬಯಲಾಟದಲ್ಲಿ ಪಾಂಚಾಲಿ ಪಾತ್ರ ವಹಿಸುವ ಪದುಮ, ಕುರುಕ್ಷೇತ್ರ ನಾಟಕದಲ್ಲಿ ಉತ್ತರ ಪಾತ್ರ ವಹಿಸುವ ಊರಮ್ಮ, ಯಾವುದೇ ಸಾಮಾಜಿಕ ನಾಟಕಗಳಲ್ಲಿನ ಯಾವುದೇ ಸ್ತ್ರೀ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಹುಣಸೇ ಮರದ ಮೀನಾಕ್ಷಿ… ಇಂಥ ನುರಾರು ಮಂದಿ ಕಲ್ಲವಿದರಿಂದಲೇ ತುಂಬಿ ಹೋಗಿರುವ ಕೊತ್ತಲಗಿಯ ಸೋಮವಾರಪೇಟೆಗೆ ಮಹಿಳಾ ಸಂಕ್ಷೇಮಾಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ನೇಮಕಗೊಂಡಿರುವ ಭುವನೇಶ್ವರಿ ಅಮ್ಮಣ್ಣಿಯವರು (ಈಗೆರಡು ವರ್ಷಗಳ ಹಿಂದೆ ಡೆಪ್ಯುಟಿ ಛೀಫ್ ಮಿನಿಷ್ಟರಾಗಿದ್ದ ಸಾಸಿವೆ ಶಿವನಂಜೇಗೌಡರು “ಅಮ್ಮಣ್ಣಿಯವರು” ಎಂಬ ವಿಶೇಷಣ ಸೇರಿಸಿ ಶಾಸನಸಭೆಯ ಗೌರವಕ್ಕೆ ಪಾತ್ರರಾಗಿದ್ದರು. ಅವರು ಸಿರೆಗೆರೆ ಸಂಸ್ಠಾನದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ….) ಕೊತ್ತಲಿಗಿಯ ಸೋಮವಾರಪೇಟೆಗೆ ಆತ್ಮಗೌರವ ನೀಡಬಹುದಿತ್ತು. ಆದರೆ ಆಕೆ ಬೆಂಗಳೂರಿನ ಪ್ರತಿಷ್ಟಿತ ದಾಲರ್ಸ್ ಕಾಲನಿಯಲ್ಲಿ ಪ್ರಖ್ಯಾತ ಮಾಜಿ ಹತ್ತು ಹಾಲಿಗಳ ನಡುವೆ ಉಭಯ ಕುಶ್ಲೋಪರಿ ಜೀವನ ಆರಂಭಿಸಿ ಭೂತಕಾಲವನ್ನು ಕಪಾಟಿನಲ್ಲಿ ಭದ್ರಗೊಳಿಸಿರುವಳು… +ಅಭಿಷೇಕ್ ಗೋಡ್ಸೆಗೆ (ಸಾರಿಗೆ ಸಚಿವರಾದ ಗೋಪಾಲ ಭಂಡಾರಿಯವರ ಮೂರನೆ ಮಗಳು ಅಮೃತಮತಿಯ ಗಂಡ. ಮದುವೆಗೆ ಆಮಂತ್ರಣ ಪತ್ರಿಕೆ ಅಚ್ಚು ಹಾಕುವಾಗ ಗೋದ್ಲಿ ಎಂಬ ಶಬ್ದಕ್ಕೆ ಬದಲಾಗಿ ‘ಗೋಡ್ಸೆ’ ಎಂದು ಪರಪಾಟಿನಿಂದಾಗಿ ಅಚ್ಚಾಯಿತಂತೆ. ತನ್ನ ನಿಗಮದಿಂದ ಎಲ್ಲ ನೆರವು ನೀಡಿ‘ಕೊತ್ತಲಗಿಯ ಸೋಮವಾರಪೇಟೆ’ ಎಂಬ ವಿಷಯದ ಬಗ್ಗೆ ದಾಕ್ತರೇಟ್ ಮಾಡಿಸಿದ ಭುವನೆಶ್ವರಿ ಅಮ್ಮಣ್ಣಿಯವರ ಸಂಶೋದನ ಹಸ್ತಾಕ್ಷರ ಸಹಿತ ಅಚ್ಚು ಹಾಹಿಸಿರುವರು. ಅದರ ಬೆಲೆಯನ್ನು ಸಾವಿರದೊಂದು ನೂರಾ ಇಪ್ಪತ್ತೇಳು ರೂಪೈ ತೊಂಬತ್ತೈದು ಪೈಸೆ ಎಂದು ಬಾಟಾ ರೇಟು ಇಟ್ಟಿರುವುದರಿಂದ ಸಣ್ಣ ಸಂಬಳದ್ಸವನಾದ ನಾನು ಗೆಳೆಯೋರ್ವರಿಂದ ಪಡೆದು ಭದ್ರಪಡಿಸಿಟ್ಟುಕೊಂಡಿರುವೆನು. ವಿಸರ್ಜನಾ ಕಾರ್ಯಕ್ಕೂ ಪೂರ್ವದಲ್ಲಿ ಅದರ ಪುಟಗಳನ್ನು ತಿರುವಿ ವಿರೇಚಕ ಶಕ್ತಿ ಪಡೆದಿರುವ ನಾನು ಸದರೀ ಗ್ರಮದ ಸೋಮವಾರಪೇಟೆಗೆ ಬರುವ ಪ್ರಯತ್ನ ಮಾಡಿರುವುದುಂಟು. ಮಧ್ಯಮವರ್ಗದ ಸಂಕೋಚದಿಂದ ಬರಲಾಗಿಲ್ಲದಿರುವುದೂ ಉಂಟು. ಹೋದಂತೆ ಬಂದಂತೆ ಕಣಸು ಕಂಡಿರುವುದನ್ನು ಅಲ್ಲಗಳೆಯಲಾಗದು. +ಆ ಮಹಾಪ್ರಬಂಧದ ಉಕ್ತಿಗಳ ಪ್ರಕಾರ ವಿಜಯನಗರ ಶ್ರೀಕೃಷ್ಣ ದೇವರಾಯ ಮಹಾರಸಿಕನಾಗಿದ್ದ. ದೇವದಾಸಿ ಕುಟುಂಬದಲ್ಲಿ ಜನಿಸಿದ್ದ ಚಿನ್ನಾಸಾನಿಯನ್ನು ಉತ್ಕಟವಾಗಿ ಪ್ರಿತಿಸುತ್ತಿದ್ದ. ಮದುವೆಯಾಗಿ ಪಟ್ಟಮಹಿಷಿಯನ್ನಾಗಿ ಮಾಡಿಕೊಳ್ಳಬೇಕೆಂದು ಅವನು ಪ್ರಯ್ತ್ನಿಸಿದ. ಆದರೆ ಅಪ್ಪಾಜಿ ತಿಮ್ಮರಸು (ಕಂಣು ಕೀಳಿಸಿಕೊಂಡ ನಂತರ ತಿರುಪತಿ ಸೇರಿ ವೆಂಕಟೇಶ್ವರ ಸ್ವಾಮಿಯ ಪ್ರಸಾದವಾದ ಲಡ್ಡುಬ್ ಮಾರುತ್ತ ಹ್ಟ್ಟೆ ಹೊರೆದು ಬದುಕಿ ನಿರ್ಗತಿಕ ರೀತಿಯಲ್ಲಿ ಸತ್ತವನು. ಈ ಘೋರ ಶಿಕ್ಷೆ ವಿಧಿಸಿದ ಶ್ರೀಕೃಷ್ಣರಾಯನ ಅನಧಿಕೃತ ತಂದೆ ಎಂದು ನರಸನಾಯಕ ಕುಡುಕನಾಗಿದ್ದ ಎಂದು ವಾದಿಸುವ ಸಂಶೋಧಕರು ತಂತಮ್ಮ ಕ್ರುತಿಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ) ಮೈಸೂರು ಸೀಮೆ ಕಡೆಯ ಹೆಣ್ಣು ಹುಡುಕಿ ಮದುವೆ ಮಾಡಿದ. ಚಿನ್ನಾಸಾನಿ ದ್ವಿತೀಯಪತ್ನಿಯಾಗಿ ಸೇರ್ಪಡೆಯಾದಳು. ತನ್ನ ರಾಜಧಾನಿಯಲ್ಲಿ ಸೂಳೆಬಜಾರ ಎಂಬ ಬಡಾವಣೆ ನಿರ್ಮಿಸಿ ವೇಶ್ಯಾವಟಿಕೆಯನ್ನು ಪೋಷಿಸಿದ ನಂತರ ಬಂದ ಅಚ್ಯುತ ರಾಮರಾಯ ಕೂಡ ರಕ್ಕಸಗಿ ಮತ್ತು ತಂಗಡಗಿ ನಡುವಿನ ಹತ್ತು ಮೈಲಿ ವಿಸ್ತೀರ್ಣ ಪ್ರದೇಶದಲ್ಲಿ ಬಹುಮನಿಗಳ ಕೈಯಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಆ ಸುದ್ದಿ ಕೇಳಿ ವೈಷ್ಣವರು ಗುಡಿ ಗುಂಡಾರಗಲಿಂದ ದೇವರುಗಳನ್ನು ಕಿತ್ತುಕೊಂಡು ನಾಡಿನಾದ್ಯಂತ ಚದುರಿದ ರೀತಿಯಲ್ಲಿಯೇ ಸೂಳೆಬಜಾರದಿಂದ ವೇಶ್ಯೆಯರು ಗುಂಪು ಗುಂಪಾಗಿ ಹೊರಟು ಕೊತ್ತಲಗಿಯನ್ನು ಸೋಮವಾರ ಸೇರಿಕೊಂದು ನೆಲೆಯೂರಿದರಾದ್ದರಿಂದ ಅದಕ್ಕೆ ಸೋಮವಾರಪೇಟೆ ಎಂದು ಹೆಸರು ಪ್ರಾಪ್ತವಾಯಿತು. ಕಲೆ; ಸಂಸ್ಕೃತಿ; ರಸಿಕತೆ; ಹುಣಸೆಮರಗಳ ಲಾಲನೆ ಪೋಷಣೆ ಇತ್ಯಾದಿ ವಿವರಗಳನ್ನು ಡಾ. ಅಭಿಷೇಕ್ ಗೋಡ್ಲೆಯವರು ಐತಿಹಾಸಿಕವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲ ಸಂಶೊದನೆ ಮಾಡಿ ಹೆಸರುವಾಸಿಯಾಗಿರುವ ಅವರು ರಾಜ್ಯಪಾಲರಿಂದ ಡಾಕ್ತರೇಟ್ ಪದವಿ ಸ್ವೀಕರಿಸುವಾಗ ಅವರು ಸಿಫಿಲಿಸ್‌ನಿಂದ ನರಳುತ್ತಿದ್ದರು. ಈಗಲೂ ನರಳುತ್ತಿರುವ ಅವರನ್ನು ಇಲಾಜಿಗೆಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಜಧಾನಿಯಾದ ವಾಷಿಂಗ್‌ಟನ್‌ಗೆ ಸರಕಾರದ ವೆಚ್ಚದಲ್ಲಿ ಕಳಿಸುವ ಸಚಿವ ಭಂಡಾರಿಯವರ ಯೋಜನೆಗೆ ಮಖ್ಯಮಂತ್ರಿಗಳಿಂದ ಅಂಗೀಕಾರ ಮುದ್ರೆ ಬಿದ್ದಿದೆ. ವೇಶ್ಯಾವಾಟಿಕೆ ನಿರ್ಮೂಲನಾ ವಿಷಯದಲ್ಲಿ ಅಮೇರಿಕಾ ವಹಿಸುತ್ತಿರುವ ಪಾತ್ರ ಕುರಿತಂತೆ ಅಧ್ಯಯನ ಮಾಡಲು ಡಾ.ಗೋಡ್ಲೆ ಹೋಗುತ್ತಿರುವರೆಂದು ಪಟೇಗಾರ್ ನೇತೃತ್ವದ ಸರಕಾರ ವಿರೋಧಿ ಪಕ್ಷಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದೆ. ವಾರೊಪ್ಪತ್ತಿನಲ್ಲಿ ವಿರೋಧಿ ಧುರೀಣರು ಡಾ. ಗೋಡ್ಲೆ ಜೊತೆಯಲ್ಲಿ ಭುವನೆಶರಿ ಅಮ್ಮನ್ನಿಯವರನ್ನೂ ಕಳಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲವೆಂದು ಠರಾವು ಪಾಸು ಮಾಡಬಹುದು. ಪ್ರಮುಖ ಭಿನ್ನಮತೀಯ ಸ್ಚಿವೆಯಾ‌ಅದ ಜಲಜಾಕ್ಷಿ ಮಸಾಲೆಯವರು ಹೀಗೆ ವಿರೋಧ ಪಕ್ಷದ ಮುಖಂದ ಅಡಿವೆಪ್ಪನವರ ಕಿವಿ ಚುಚ್ಚಿರಬಹುದೆಂದು ಆಳುವ ಪಕ್ಷದಲ್ಲಿ ಹರಡಿರುವ ಗುಸುಗುಸನ್ನು ನಾಡಿನ ಟಾಬ್ಲೇಡ್ಲು ಪತ್ರಿಕೆಗಳು ಬರೆಯುತ್ತಲೇ ಇವೆ. +ಬರುವಾಗ ಕಂಕುಳಲ್ಲಿ ಆ ಹೆಬ್ಬೊತ್ತಿಗೆಯನ್ನು ಇಟ್ಟುಕೊಂಡು ಬಂದಿದ್ದರೆ ಚೆನ್ನಾಗಿತ್ತು. ಅದರಲ್ಲಿರುವ ಎಷ್ಟೋ ವಿಷಯಗಳು ಹೆಜ್ಜೆಹೆಜ್ಜೆಗೆ ತಲೆಯಿಂದ ಕಳಚಿಕೊಳ್ಳುತ್ತಲೇ ಇವೆ. ಅದೆಲ್ಲ ಹಾಳಾಗಿ ಹೋಗಲಿ! ಶಾಮಂಣನ ಬಗ್ಗೆ ಅನಸೂಯಮ್ಮ ವಿವರ ಕೊಟ್ಟರೆ ಸಾಕು! +ಬೇವಿನ ಮರದ ಸಂದಿಯಲ್ಲಿ ಮುಳುಗಿ ಸಂಕುಲಮ್ಮನ ಮರದ ಸಂದಿಯಲ್ಲಿ ತೇಲಿದಾಗಲೇ ನನಗೆ ಆ ಪೇಟೆಯ ಗಾತ್ರ ಮತ್ತು ಆಳದ ಅರಿವು ಆಗಿದ್ದು. ಒಂದು ಹಿಡಿ ಬೆಳದಿಂಗಳ ಬೇಳಕಲ್ಲಿ ಹಾಯ್… ಹಾಯ್… ಬಾಯ್… ಬಾಯ್… ನಡೆದಿತ್ತು. ನಾಯಿಗಳು ಯಾವ ಅಪರಿಚಿತರನ್ನು ಕಂಡರೂ ಬೊಗಳುವ ಕೈಕಂಕರ್ಯ ಸೇವೆ ಮಾಡದೆ ಬಾಲ ಅಲ್ಲಾಡಿಸುತ್ತ ಸಹಕರಿಸುತ್ತಿದ್ದವು. +ರಾಕೇಷ್ಕುಮಾರನು ನನ್ನನ್ನು ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿ ತಾನು ಪರದೆ ಸರಿಸಿ ಬಾಗಿಲು ಪ್ರವೇಶಿಸಿದ. ಮನೆಯೊಳಗಡೆ ಇಬ್ಬರಿಗಿಂತ ಹೆಚ್ಚು ಮಂದಿ ಇರುವರೆಂದು ಹೊರಗೆ ಇದ್ದೇ ಖಚಿತವಾಗಿ ಊಹಿಸಬಹುದಾಗಿತ್ತು. +ಗುರುವಿನ ಕೂಡಿದನೇ ಅರುವಿನ ಮನೆಯಲ್ಲಿ ನೂರೆಂಟು ನಾಯಿ ಬೊಗುಳಿದರೇನು. +ಗುರುವಿನ ಕೂಡಿದನೇಽಽಽ +ಎಣ್ಣೆ ತೀರಿದ ಚಿಮುಣಿ ಚೆಲ್ಲುವ ಬೆಳಕಿನಂತೆ ತತ್ವಪದದ ಪಲ್ಲವಿ ಕ್ಷೀಣವಾಗಿ ಕೇಳಿಸುತ್ತಿತ್ತು. ಕಿಟಕಿ ಬಾಗಿಲುಗಳಿಂದ ಊದುಬತ್ತಿ ಲೋಭಾನದ ಪರಿಮಳ ಹೌದೋ ಅಲ್ಲವೋ ಎಂಬಂತೆ ಹೊರಗಡೆ ಬಂದು ಮೂಗಿಗೆ ಕುಟುಕುತಿತ್ತು. ಒಂಚಣ ಕಾಡು ಬೆಕ್ಕು ತನ್ನನ್ನು ಗಮನಿಸುತ್ತಿದೆ ಎಂದು ಗಾಬರಿಯಿಂದ ತಿರುಗಿ ನೋಡಿದರಲ್ಲಿ ಸುಂಕಲಮ್ಮನ ಮರದ ಬೊಡ್ಡೆಯ ಗೂಡಿನಲ್ಲಿ ಹಣತೆ ಇದ್ದಕ್ಕಿದ್ದಂತೆ ಪ್ರಜ್ವಲಿಸಿ ಉರಿಯತೊಡಗಿರುವುದು ಕಂಡಿತು. ಹೋಗುವವರು, ಬರುವವರು ತನ್ನ ಕಡೆ ‘ಇದ್ಯಾವ ಪ್ರಾಣಿ… ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಬಿಕೋ ಎಂಬಂತೆ ನಿಂತಿರುವುದಲ್ಲ್’ ಎಂಬಂತೆ ನನ್ನ ಕಡೆ ನೋಡುತ್ತಿದ್ದರು. ಅಂಥ ನೋತಗಳಿಂದ ಅಪರಾಧಿ ಭಾವದೀಂದ ಕಂಪಿಸ ತೊಡಗಿದೆ. ಇಂಥ ಅಸಭ್ಯವೂ ಅಶ್ಲೀಲವೂ ಆದ ವಾತಾವರಣವನ್ನು ಪ್ರವೇಶಮಾಡಿರುವುದು ಗೊತ್ತಾದರೆ ಹೆಂಡತಿ ಅನ್ನಪೂರ್ಣ ಏನೆಂದುಕೊಳ್ಳುವಳೇನೋ? ಪಾತಿವ್ರತ್ಯವೆಂಬ ಪರಿಕಲ್ಪನೆಯನ್ನು ಗಂಡನಾದ ನನಗೂ ಆರೋಪಿಸುವ ಮಹಿಳೆ ಆಕೆ. ಉದಿಯಲ್ಲಿರುವ ಕೆಂಡವನ್ನು ಮುಚ್ಚಿಡಲಿಕ್ಕೆ ಹೇಗೆ ಸಾಧ್ಯವಿಲ್ಲವೋ? ಹಾಗೆಯೇ ಅಭಿವ್ಯಕ್ತಿಯ ಉಡಿಯಲ್ಲಿರುವ ಸ್ವಾನುಭವಗಲನ್ನು ಲೇಖಕ ಮುಚ್ಚಿಡಲು ಸಾಧ್ಯವಿಲ್ಲ ಜಲಸ್ತಂಬನ ವಿದ್ಯೆ ಗೊತ್ತಿರದಿದ್ದರೂ ಸೋಮವಾರಪೇಟೆಯೆಂಬ ವೈಶಂಪಾಯನ ಸರೋವರಕ್ಕೆ ಜಿಗಿಯಲು ದಡದ ಮೇಲೆ ನಿಂತಿರುವೆ. +ಅಷ್ಟರಲ್ಲಿ ರಾಕೇಶ ಬಂದು ನನ್ನನ್ನು ಒಳಗಡೆ ಕರೆದೊಯ್ದ. ಆ ಮನೆ ಚಿಕ್ಕದೂ; ಚೊಕ್ಕದೂ ಆಗಿತ್ತು. ಮೂಲೆಯಲ್ಲಿ ಹರಿದ ತಬಲಗಳೂ; ಸರಿಗಮ ಕಳಚಿದ್ದ ಹಾರ್ಮೋನಿಯಂ ಪೆಟ್ಟಿಗೆಯೂ ಇದ್ದವು. ಡೆ ಮೇಲೆ ಒಂದೆರಡು ಹಲ್ಲಿಗಳು ನೊಣ, ಸೊಳ್ಲೆಗಳಣ್ಣು ಬೇಟೆಯಾಡುವುದರಲ್ಲಿ೯ ಮಗ್ನವಾಗಿದ್ದವು. ಬಾಗಿಲ ಪಕ್ಕ ಇದ್ದ ಎರಡು ಫೋಟೊಗಳ ಪೈಕಿ ಒಂದರಲ್ಲಿ ಸೀತೆಯನ್ನು ಅಪಹರಿಸುತ್ತಿರುವ ಮಾಯಾ ವಿರೂಪಿ ರಾವಣ ಮತ್ತು ಇನ್ನೊಂದರಲ್ಲಿ ಅಪಹರಣಕ್ಕೀಡಾಗುತ್ತಿರುವ ಸೀತೆ ಈ ಎರಡೂ ಪತ್ರಗಳನ್ನು ವಹಿಸಿರುವುದು ಒಬ್ಬ ಮಹಿಳೆ ಎಂದು ನೋಡುತ್ತಲೆ ಅರ್ಥ ಮಾಡಿಕೊಂಡೆ. ತಲೆ ಬಗಿಲ ಮೆಲೆ ಒಂದೆರಡು ಹಾರಗಳಿಂದಲೂ, ವಿಭೂತಿ ಕುಂಕುಮ ಲೇಪನಗಳಿಂದಲೂ ಮುಚ್ಚಿಹೋಗಿರುವ ಶಾಮಂಣನ ಫೋಟೋ ಇತ್ತು.ಅದನ್ನು ನೋಡಿದೊಡನೆ ಒಂದೆರೌ ಹನಿ ಕಂಣಲ್ಲಿ ತುಳುಕಿದವು. +“ನನ್ ಬಗ್ಗೆ ಬರೆಯೋಕೆ ಬಂದಿದ್ದೀಯಾ ನನ್ ಮಗ್ನೇ… ಇನ್ನೊಬ್ಬರ ಲೈಫ್ ಬಗ್ಗೆ ಬರೆಯೋ ಹಕ್ಕು ನಿನ್ಗೆ ಕೊಟ್ಟೋರು ಯಾರೋ… ಬರ್‍ಕೋ… ಅದೇನು ಬರ್‍ಕೋತೀಯೋ ಬರ್‍ಕೋ… ಮದುವೆ ಅಯ್ಯೂ ಆಯ್ತೂ ಒಂದಿನ ಆದ್ರೂ ಬಂದು ನನ್ನ ಮಾತಾಡಿಸಿದ್ದುಂತಾ ನೀನು ನಿಮ್ಮ ತಾತ ಬರೆದಿಟ್ಟಿರೋ ವೀಲು ನಾಮದ ಪ್ರಕಾರ ನಾನು ವೈದಿಕನಾಗಿದ್ದಿದ್ರೆ ಅವರಂತೆ ನಾನೂ ಸಾಯ್ತಿದ್ದೆ ಕಣಯ್ಯಾ… ನನ್ನ ಸಾವನ್ನೇ ಬದುಕಿನ ಬಂಡವಾಳವನ್ನಾಗಿ ಮಾಡಿಕೊಂಡು ಲೀಲಾಜಾಲವಾಗಿ ಬದುಕುತ್ತಿರುವ ನಿಮ್ಮಂಥವರ ಬದುಕಿಗೆ ಅರ್ಥವಿದೆ ಏನಯ್ಯಾ! ನಾನು ಸಾಯೋಕು ಮುಂಚೆ ಒಂದೊಂದು ರೂಪಾಯಿಗೂ ಒದ್ದಾಡುತ್ತಾ ಬಿದ್ದಿದ್ದಾಗ ಬಂದು ಸಹಾಯ ಮಾಡದ ನೀನು ಈ ನೆವದಿಂದಲಾದ್ರು ಇಂಥ ಕಡೆ ಬಂದು ಶತಾವಧಾನಿಯಂತೆ ಮುಖಮಾಡಿಕೊಂಡು ಕೂತಿದ್ದೀಯಲ್ಲ… ಕೂತ್ಕೋ… ಅವ್ಳು ಬಂದು ಅದೇನು ಹೇಳ್ತಾಳೋ! ಅದಕ್ಕೆಲ್ಲ ನೀನೆಂಗೆ ಅಕ್ಷರ ರೂಪ ಕೊಟ್ಕೋತೀಯೋ… ಬರೆಯೋ ಕರ್ಮಕ್ಕಿಂತ ಮಿಗಿಲಾದ ನರಕ ಎಲ್ಲೂ ಇಲ್ಲ ಎಂಬುದನ್ನು ಮರೆಯಬೇಡ” ಎಂದು ಮುಂತಾಗಿ ಸ್ಥಿರಚಿತ್ರವಾಗಿ ಶಾಮಂಣ ನುಡಿದಂತೆ ಭಾಸ ವಾಯಿತು. ಇಲ್ಲೇ ಇದ್ದರೆ ಎಲ್ಲಿ ಬಂದು ಕುತ್ತಿಗೆ ಹಿಡಿದು ಹೊರತಳ್ಳುವನೋ ಪುಣ್ಯಾತ್ಮ… ಕೂತಿರಲಾರದೆ ನಿಂತಿರಲಾರದೆ ಹೋಗಲಾರದೆ ಖೆಡ್ಡಾದಲ್ಲಿ ಆನೆಯೊಡನೆ ಬಿದ್ದ ಕಾಡು ಬೆಕ್ಕಿನಂತೆ ಒಂದೇ ಸಮನೆ ಚಾಪಡಿಸತೊಡಗಿದೆ. ನನ್ನ ಒದ್ದಾಟ ಗಮನಿಸಿ ರಾಖೇಶ ಕಪಾಟಿನಿಂದ ಫೋಟೊ ಆಲ್ಬಮ್ ತಂದು ಅಕ್ಕ ಪೂಜೆ ಮಾಡ್ಕೋತಿದ್ದಾಳೆ… ಇನ್ನೇನು ಬಂದು ಬಿಡ್ತಾಳೆ… ಅಲ್ಲಿವರ್‍ಗೆ ಆಲ್ಬಮ್ಮು ನೋಡ್ಕೋತಿರಿ ಎಂದು ಕೊಟ್ಟ. ಬೆಳ್ಳಿ ಚುಕ್ಕಿ, ರತ್ನಮಾಂಗಲ್ಯ; ಬಂಜೆ ತೊಟ್ಟಿಲು, ಕುರುಕ್ಷೇತ್ರ, ಗೌಡರ ಗದ್ವ, ನೀನೂ ಸಾಹುಕಾರನಾಗು ಇವೇ ಮೊದಲಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸ್ಥಿರ ಚಿತ್ರಗಳು ಅದರಲ್ಲಿದ್ದವು. ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳು ಸ್ವೀಕರಿಸುತ್ತಿರುವ ಸ್ಥಿರಚಿತ್ರಗಳೂ ಸಹ. ಆಲ್ಬಮ್ಮಿನೊಳಗೆ ಎಲ್ಲೋ ಒಂದು ಕಡೆ ಯಾವುದೋ ಒಂದು ಪಾತ್ರದ ಮರೆಯೊಳಗೆ ಶಾಮಂಣ ಇದ್ದಾನೆಂದುಕೊಂಡು ಹುಡುಕತೊಡಗಿದೆ. ಮದುವೆಯಾದ ಮೊದಲ ವರ್ಷದಲ್ಲಿಯೇ ಸಂಗೀತ ಮತ್ತು ನಾಟಕದ ಗೀಳು ಹಚ್ಚಿಕೊಂಡಿದ್ದ ಎಂದು ಕೇ‌ಇ ತಿಳಿದಿದ್ದೆ. ಸುಶ್ರಾವ್ಯವಾಗಿ ಹಾಡುತ್ತ ತನಗೆ ತಾನೆ ಮೈಮರೆಯುತ್ತಿದ್ದುದೂ ಕೇಳುಗರನ್ನು ಹಗುರಮಾಡಿ ಬ್ಯಲಲ್ಲಿ ಹಾರಾಡಿಸುತ್ತಿದ್ದುದು ನನಗೆ ಗೊತ್ತಿಲ್ಲದಿರಲಿಲ್ಲ. +ಹೊರಗಡೆ ಯಾರೋ ಕುಡಿದು ತೂರಾಡುತ್ತ “ಲೇ ಅನಸೂವಿ… ನಿನ್ ಮರ್‍ತು ಹೆಂಗ್ಲೇ ಬದುಕ್ಲೀ… ನನ್ ಮಹರಾಣಿ, ಹೃದಯವಲ್ಲಭೇ… ಬರ್‍ಲೇನೆ ಒಳಗೆ” ಎಂದು ಕೂಗುತ್ತಿರುವುದು ಕೇಳಿಸಿತು. ಆಗ ಕೂಡಲೆ ಹೊರಗಡೆ ಹೋಗಿ ರಾಖೇಶನು… ” ಇನ್ನೂ ನಮ್ಮಕ್ಕನ ಹುಚ್ಚು ಬಿಟ್ಟಿಲ್ಲೇನ್ರಿ ಸಾಹೇಬ್ರ… ನಿಮ್ಮಗ್ನೂ ಇಲ್ಲೆಲ್ಲೋ ಬಂದಂಗಿದಾನ… ಆತ್ನೇನಾರ ನೋಡಿದ್ರೆ ನಿಮ್ಮನ್ನ ಸುಮ್ನೆ ಬಿಟ್ಟಾನೇನ್ರಿ… ರಿತೈರಾದ ಮ್ಯಾಲ್ ರಾಮಾ ಕೃಷ್ಣ ಅಂತ ಕಾಲಕಳೆಯೋದು ಬಿಟ್ಟು ಒಳ್ಳೆ ಯುವಕರಂಗೆ ಈ ಪ್ಯಾಟಿಯೊಳಗೆ ಕುಡ್ದು ಬರೋದೇನ್ರಿ?… ನಮ್ಮಕ್ಕ ಈ ಲೈನು ಬಿಟ್ತು ಎಷ್ಟು ವರ್ಷಾದ್ವು ಏನ್ಕಥೆ? ಎಲ್ಲಾನೂ ನಿಮ್ಗೆ ಗೊತ್ತಿದ್ದಾದೆ‌ಏ ಐತಿ… ನಿಮ್ಮ ವರ್ತನಕ್ಕ ಮೂಗುದಾಣ ಹಾಕ್ಕೊಂಡು ಹೊರಡ್ರಿ ಲಗೂನ… ಇಲ್ಲಾಂದ್ರೆ ನಮ್ಮಕ್ಕಗೆ ರವುಷ ಬಂದು ಏನಾರ ಘಾತ ಮಾಡ್ಕೊಂಡಾಳು” ಎಂದು ಪರಿಪರಿಯಾಗಿ ಬುದ್ಧಿ ಹೇಳುತ್ತಿರುವುದು ಕೇಳಿಸಿತು. ಅದಕ್ಕಿದ್ದು ಆ ಸಾಹೇಬ “ಲೇ ರಾಕ್ಯಾ ನೀನು ಹೇಳೊದು ಬರೋಬ್ಬರಿ ಐತೆ ಮಾರಾಯಾ… ನಮ್ಮನುಸೂವಿನೇನ ಈ ದೇವ್ರು ಚೆನ್ನಾಗಿಟ್ಟಿರ್ಲಿ ಕಣಪ್ಪಾ… ಈ ಪ್ರಪಂಚದಾಗ ಅದ್ಯಾವ ಘಾತಗಳಿದ್ರೂ ನಾವು ಅನುಭೋಗಿಸೋಣ… ಅಂದಂಗ… ನನ್ ಮಗ ಬಂದಾನಂದೆಲ್ಲ… ಅದ್ಯಾರ ಮನ್ಯಾಗ ಹೊಕ್ಕೊಂಡಿದಾನೆ ಜರ್ರ ತೋರಿಸಲ್ಲ… ನನ್ನೆಂಜಲಿಗೆ ಅವ್ನೂ ಕೈಹಚ್ಚಿದ್ರೆ ಬದುಕೋದಾದ್ರು ಹೆಂಗಪ್ಪಾ? ಎಂದು ಪೀಡಿಸಿದ. ರಖೇಶ ಏನು ಹೇಳಿದನೋ? ಆ ಸಾಹೇಬ ಲೇ ಕಲ್ಯಾಣ… ಎಲ್ಲಿದ್ದೀಯೋ ನನ್ಮಗ್ನೇ… ಮೈ ಡಿಯರ್ ಸನ್ ಕಲ್ಯಾಣ್… ವೇರಾರ್ ಯು… ಮೈ ಬಾಯ್” ಎಂದು ಕಂಣನ್ನು ಗಂಟಲಿಗೆ ತಂದುಕೊಂಡು ಕೂಗುತ್ತ ಹೋಗಲು ರಾಖೇಶನು ಒಳಗೆ ಬಂದು ನಿಟ್ಟುಸಿರುಬಿಟ್ತ. ಅವ್ರು ರಿಟೈರ್ಡ್ ಏ‌ಈ‌ಓ ಸಾಹೇಬ್ರು ಕಣ್ರಿ… ಬೆಂಗ್ಳುರಾಚೆಕಡೇಕಿದ್ದು ರಿಟೈರಾಗಿ ಬಂದಾರ… ತಲೆ ಸಜ್ಜಿಲ್ಲ… ಕುಡ್ದಾಗೊಂದೆ ಹಿಂಗೆ ಒದರಾಡ್ತಾರೆ… ಅವ್ರಿಗೆ ಮಕ್ಳೂ ಮರಿ ಒಂದೂ ಇಲ್ರಿ… ಮಗ ಚಿಕ್ಕ ವಯಸ್ಸಿಗೆ ಸತ್ತೋದ… ಸಮುದ್ರದಾಗೀಜಾಲಿಕ್ಕೋಗಿ… ಬದುಕಿದ್ದಿದ್ರೆ ಅವ್ನೂ ತಮ್ಮಂಗೆ ಈ ಸೋಮಾರಪೇಟೆಗೆ ಬಂದು ಸೂಳ್ರ್ನ ಮಾಡ್ತಿದ್ದ ಅಂತ ಕಲ್ಪಿಸಿಕೊಂಡು ಕೂಗ್ತಿರ್‍ತಾರೆ… ಅಷ್ಟೆ… ಅವರ್ದೂ ಒಂದು ಬದುಕ್ರೀ…” ಎಂದು ಕ್ಷೀಣ ಸ್ವರದಲ್ಲಿ ಮಾತಾಡಿದ… ಅವನಾ‌ಇದ ಈ ಮಾತುಗಳನ್ನು ಹೇಗೆ ಪರಿಭಾವಿಸಬೇಕೋ ಅರ್ಥವಾಗದೆ ನಿಟ್ಟುಸಿರು ಬಿಟ್ಟೆ. +ಲೈಟು ಹೊಗೋದು, ಬರೋದು ಮಾಡುತ್ತಿದ್ದವು. ಅರ್ಥವಾಗದ ಸೆಕೆಯಿಂದ ಬೇಯತೊಡಗಿದ್ದ ನಾನು ಆಗಾಗ್ಗೆ ಎದೆಗೆ ಊದಿಕೊಳ್ಳುತ್ತಿದ್ದೆ. ನನ್ನೊಳಗೆ ಒಂದೊಂದು ಚಣಕ್ಕೆ ಒಂದೊಂದು ರೂಪ ಧಾರಣ ಮಾಡುತ್ತ ಪೀಕಲಾಟಗಳಿಗೆ ಬಲಿಕೊಡುತ್ತಿದ್ದ ಶಾಮಣ್ಣ… ಸ್ವೀಕರಿಸಲಿಕ್ಕೂ ಆಗದಂಥ ನಿರಾಕರಿಸಲಿಕ್ಕೂ ಆಗದಂಥ ವಾತಾವರಣವನ್ನು ನಿರ್ಮಿಸಿ ಅದರೊಳಗೆ ನನ್ನನ್ನು ಕೂಡಿ ಹಾಕಿದ್ದ ಮಾಯಾವಿ ಅವನು. ನಿನ್ನೊಳಗೆ ನಾನು ಅಷ್ಟು ಸುಲಭವಾಗಿ ಸಾಯೋ ಪೈಕಿ ಅಲ್ಲ ಕಣೋ ನಾನು, ಸಾವು ಎಂಬುದು ಕೇವಲ ದೇಹಕ್ಕಷ್ಟೆ ಸಂಬಂಧಿಸಿದ್ದೆಂದು ತಿಳ್ಕೋಬೇಡ… ‘ಶತಮಾನಂ ಭವತು’ ಎಂದು ತಾತ, ಮುತ್ತಾತರಿಂದ ಆಶೀರ್ವದಿಸಿಕೊಂಡಿರಿವ ವ್ಯಕ್ತಿ ನಾನು… ನಾನು ಸಾಯೋದು ಎಂದರೇನು? ಹೊಗೆ ತುಂಬಿದ ಬಚ್ಚಲಂಥ ಬದುಕಿನಲ್ಲಿ ಬದುಕುತ್ತಿರುವ ನಾನು… ಅಂಥ ನಾನು ಸಾಯೋದು ಎಂದರೇನು? ಕಾಲೇಜಿನ ಆಗತೇನ ಇಮಾಃ ಸರ್ವಾ ಪ್ರಜಾನಂದತಿ ಅಂಥ ಹಿರಿಯರು ಹೇಳಿರುವ ಮಾತು ಎಷ್ಟೊಂದು ಸತ್ಯ! ಅನಂದಾತೀತ ಅವಸ್ಠೆಯಲ್ಲಿ ನಿರಾಕಾರ, ನಿರಂಜನ, ನಿರ್ಮನ, ನಿಷ್ಯಾಮ ಇವುಗಳೆಲ್ಲವುಗಳನ್ನು ಸಾರ್ಥಕವಾದ ರೀತಿಯಲ್ಲಿ ಅನುಭವಿಸಿದ ನಾನು… ನೀನೇನು ಅಲ್ಲ ಅಂದುಕೊಂಡಿರುವಿಯೋ ಅದೆಲ್ಲ ಹೌದು… ಸಾಯೋದರೊಂದಿಗೆ ದೇಹದೊಂದಿಗೆ ತನ್ಮಾತ್ರ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ನಾನು ಮುಂದೆ ಕಾಲದೊಂದಿಗೆ ಅವಿಚ್ಛಿನ್ನವಾದ, ಏಕದಳಧಾನ್ಯದಂಥ ಸಂಪರ್ಕ್ಸ್ವನ್ನು ಇಟ್ಟುಕೊಳ್ಳುವೆ. ನೀನು ನನ್ನನ್ನು ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಲು ಸಾಧ್ಯವಾಗಲಿಲ್ಲ. ಸತ್ತ ನಂತರ ಸವಿಚಾರ ನಿರ್ವಿಕಲ್ಪ ಪ್ರಜ್ಞೆಯಿಂದ ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸು” ಎದೆಯ ಮೂಲೆಯಲ್ಲಿ ಸಪ್ಪಳ್ವಾದಂತಾಯಿತು. ಹಿಂದೊಮ್ಮೆ ಬಸ್ ನಿಲ್ದಾಣದಲ್ಲಿ ವಿನಾಕಾರಣ ನಿಂತಿದ್ದ ಅವನು ಆ ಕ್ಷಣ ನನಗೆ ಶಂಕರರ ಗುರುವಿಗೆ ಗುರುವಾಗಿದ್ದ ಗೌಡಪಾದನಂತೆ ಗೋಚರಿಸಿದ್ದ. ಅವನ ಕಾರಿಕೆಯ ಅಲಾಡಶಾಂತಿ(ಬೆಂಕಿವರ್ತುಲದ ನಿರಸನ)ಯೇ ರೋಗಿಯ ರೂಪ ಧರಿಸಿರುವಂತೆ ಹೊಳೆದಿದ್ದ… ಬೇಲಿಸಾಲೊಳಗೆ ಮಿಣುಕು ಹುಳುಗಳು ಹಾರಾಡುವಂತೆ… ಇತಿ ನೋ ಗುರು ದರ್ಶನಮ್ ಎಂದುಕೊಳ್ಳುತ್ತಿರುವಷ್ಟರಲ್ಲಿ ಪಯಣಿಸಬೇಕಿದ್ದ ಬಸ್ಸು ಚಲಿಸಲಾರಂಭಿಸಿತ್ತು. +ಎಂಥ ವೀರನೂ ಕೊಲ್ಲಲಿಕ್ಕಾಗದಂಥ ತಾಪಸನಂತೆಯೋ; ಬ್ರಾಹ್ಮಣನಂತೆಯೋ; ಶಸ್ತ್ರ ತ್ಯಾಗಿಯಂತೆಯೋ; ಕಾತರಿಯಂತೆಯೋ, ಮರಣೋತ್ತರಿಯಂತೆಯೋ; ವ್ಯಸನಿಯಂತೆಯೋ; ನಪುಂಸಕನಂತೆಯೋ; ಶರಣಾಗತನಂತೆಯೋ, ರೋಗಿಯಂತೆಯೋ, ಬಾಯಲ್ಲಿ ಹುಲ್ಲು ಕಚ್ಚಿಕೊಂಡಿರುವನಂತೆಯೋ ಇಂಥ ಹಲವು ಮಾನಸಿಕ ಸ್ಥಿತ್ಯಂತರಗಳನ್ನು ಅನುಭವಿಸುತ್ತ ಎಲ್ಲಿಗೋ ಹೊರಟಿದ್ದ ನಾನು‌ಎಲ್ಲಿಗೂ ಹೋಗಲಾರದೆ ಮನೆಗೆ ಮರಳಿದ್ದೆನು… ಚ ಗೃಹಾಗತಮ್… +ನಿಟ್ಟುಸಿರು ಬಿಡುತ್ತಿದ್ದ ನನ್ನ ಕಡೆ ವಿಚಿತ್ರವಾಗಿ ರಾಖೇಶ ನೋಡುತ್ತ ತಾನೂ ನಿಟ್ಟುಸಿರು ಬಿಟ್ಟಾಗ ಮೊಳಗುತ್ತಿದ್ದ ಗಂಟೆ ಮೌನ ಧರಿಸಿದ ನಂತರ ಎದ್ದ ಅಲೆಗಳ ನೀರವತೆ ಕವಿದಿದ್ದಾಗ ಹದಿನೆಂಟು, ಹತ್ತೊಂಬತ್ತರ ಪ್ರಾಯ್ದ ತರುಣಿಯೋರ್ವಳು ಮಂಗಳಾರತಿ ತಟ್ಟೆ ಹಿಡಿದುಕೊಂಡು ಹೊರಬಂದಳು. ಕರ್ಪೂರದ ಬೆಳಕನ್ನು ಪ್ರತಿಫಲಿಸುತ್ತಿದ್ದ ಆಕೆಯ ಸುಂದರ ವದನ ನೋಡುತ್ತಿರುವಾಗ ರಾಖೇಶ “ಕಾಂಚನಾ ಅಂತಾರ್ರೀ ಈಕೀನ… ಒಂದೇ ತಾಲಿಮಿಗೆ ನಾಟಕಾನ ಬಾಯಿಪಾಠ ಮಾಡಿಬಿಡ್ತಾಳ ನೋಡ್ರಿ… ಅಷ್ಟು ಹುಷಾರೀರಿ ಈಕೆ… ಈಕೆಯಂಗ ಉತ್ತರೆ ಪಾರ್‍ಟು ಮಾಡೋರು ಈ ಪ್ರಾಂತದಾಗ ಯಾರೂ ಇಲ್ಲ ಬಿಡ್ರಿ… ಭರತನಾತ್ಯ, ಕೂಚಿಪುಡಿ, ಓಡಿಸ್ಸಿ; ದಿಸ್ಕೋ ಎಲ್ಲಾ ಅಭ್ಯಾಸ ಮಾಡ್ಯಾಳ್ರೀ…” ಎಂದು ಮುಂತಾಗಿ ಪ್ರವರ ಪ್ರಾರಂಭಿಸಿದ. ಇಷ್ಟೊಂದು ಚಿತ್ತಾಕರ್ಷಕವಾದ ಜೀವಂತ ಪುತ್ತಳಿಯನ್ನು ನಾನು ನೋಡಿದ್ದು ಇದೇ ಮೊದಲು. ಮಂಗಳಾರತಿ ತಗೊಂಡೆ. ಆಕೆ ಕೊಟ್ಟ ಕೊಬ್ಬರಿ ಚೂರಿನ ಪ್ರಾಸದವನ್ನು ಬಾಯಲ್ಲಿ ಹಾಕಿಕೊಂಡೆ. ಆಕೆ ಹೋದ ನಂತರ ತಗ್ಗಿದ ಧ್ವನಿಯಲ್ಲಿ ರಾಖೇಶನು ಶಾಕುಂತಲೆಗೂ ಈ ಹುಡುಗೀದು ಕಥೆ ಡಿಟ್ಟೋ ಅಂದ್ರ ಡಿಟ್ಟೋ ಐತಿ ನೋಡ್ರಿ… ಆ ಮಟ್ಟಿಗೆ ತಂದೆ ಆದೋನು ಒಂದು ಕಡೆಗೆ ಹೋದ. ಆ ಮಟ್ಟಿಗೆ ತಾಯಿ ಆದಾಕಿ ಒಂದು ಕಡಿಗೆ ಹೋದ್ಲು… ನಮ್ಮನಸೂವವ್ವ ಕಣ್ವ ಋಷಿಗಳಂಗೆ ತಂದಿಟ್ಟುಕೊಂಡು ನಯ ನಾಜೂಕು ಕಲಿಸಿದ್ಲು… ಆ ಲುಚ್ಚಾ ಗುಲಾಂನಬಿ ಈ ಹುಡುಗಿ ಮ್ಯಾಲ ಕಣ್ಣಿಟ್ಟಾನ ನೋಡ್ರಿ…” ಎಂದ. ಕ್ಯಾಬಿನೆಟ್ ದರ್ಜೆಯ ಮುಖ್ಯ ಲೈಂಗಿಕ ಪ್ರಕರಣಗಳ ಪ್ರಮುಖ ಸೂತ್ರಧಾರಿಯಾಗಿ ಮಾರ್ಪಟ್ಟಿದ್ದ ಗುಲಾಮ್ನಬಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವಲಯ ಪ್ರವೇಶಿಸಲು ಪ್ರಯತ್ನ ನಡೆಸಿರುವುದು ಆ ಕೂಡಲೆ ನೆನಪಾಯಿತು. +ಹುತ್ತದ ಕೋವೇಲಿ ಹುಟ್ಟಾಳೆ ನಮ್ಮವ್ವ +ಗುಡುಗನಾಡ್ಯಾಳೆ ದೊರೆದೇವಿ… +ಪಕ್ಕದ ಮನೆಯಲ್ಲೋ; ಎದುರು ಮನೆಯಲ್ಲೋ ಕೆಲವು ಮಹಿಳೆಯರು ಗುಂಪು ಗೂಡಿ ಹಾಡುತ್ತಿರುವರೆಂದುಕೊಂಡೆ. +ತನ್ನಾಗಮನದ ಪೂರ್ವ ಸೂಚನೆ ನೀಡುತ್ತಿರುವ ರೀತಿಯಲ್ಲಿ ಸಜ್ಜುಗೊಂಡ ಮನೆಯ ಒಳಕೋಣೆಯಿಂದ ಯಾರೋ ಈ ಕಡೆ ಹೊರಟಿರುವಂದೂಹಿಸಿ ಆ ಕಡೆ ತಿರುಗಿ ನೋಡಿದೆ. ರಾಖೇಶ ಮುಖಕ್ಕೆ ವಿಶೇಷ ಶಿಸ್ತು ಧರಿಸುತ್ತಿರುವಷ್ಟರಲ್ಲಿ ಒಳಗಿನಿಂದ ಮಹಿಳೆಯೋರ್ವಳು ಅವನತಮುಖಿಯಾಗಿಯೇ ಬಂದಳು. ಆದರೆ ನಾನು ಅನೇಕ ನಾಟಕಗಳಲ್ಲಿ ಪಾತ್ರ ವ್ಹಿಸಿದ್ದನ್ನು ಬಹುದೂರದಿಂದ ನೋಡಿದ್ದೆ.ಝಗಝಗಿಸುವ ಬೆಳಕಲ್ಲಿ ಬಣ್ಣಗಳಾಡಂಬರದಲ್ಲಿ ಮುಳುಗಿರುತ್ತಿದ್ದ ಈಕೆಯನ್ನು ಗುರುತಿಸಲಾಗಿರಲಿಲ್ಲ… ಆಯಾ ಪಾತ್ರಗಳೊಂದಿಗೆ ತದ್ಯಾತ್ಮ ಹೊಂದಿ ನಟನೆಯ ಮೂಲಕ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ದ ಮಾಡುತ್ತಿದ್ದ ಆ ಮನಮೋಹನ ನಟಿ ಈಕೆ ಎಂದೊಂದು ಕ್ಷಣ ದಿಟ್ಟಿಸಿದೆ. +ಇಡಿ ಮನೆಯನ್ನು ಅಸಹನೀಯ ಮೌನ ಕವಿಯಿತು. ಕ್ರಮೇಣ ಒಂದು ಹಿದಿ ಸೆರಗಿನ ಉಂಡೆಯನ್ನು ಬಾಯಿಗಡ್ದ ಇಟ್ಟುಕೊಂಡ ಆಕೆಯನ್ನು ಮಾತಾಡಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ. +“ಅನಸೂಯಮ್ಮನವ್ರೆ…” ಎಂದೆನೋ ಇಲ್ಲವೋ… +ದುಃಖದ ಕಟ್ಟೆಯೊಡೆದು ಆಕೆಯ ಕಪ್ಪು ಕವಿದಿದ್ದ ಕಣ್ಣುಗಳಿಂದ ನೀರು ದುಮ್ಮಿಕ್ಕತೊಡಗಿತು. ಮಹಾಶ್ವೇತೆಯಂಥ ಆಕೆಯನ್ನು ಹೇಗೆ ಸಂತೈಸಬೇಕೋ? ಅರ್ಥವಾಗಲಿಲ್ಲ. ರಾಜಶೇಖರ ವಿಳಸದ ತಿರುಕ್ಕುಳುವಿನಾಚಿ ಪ್ರಸಂಗ ನೆನಪಾಯಿತು. +“ಅಮ್ಮಾ… ಅಳಬೇಡಿ… ಸುಂಕಿರಿ… ಆದದ್ದು ಆಗಿಹೋಯ್ತು… ಅದ್ನೆಲ್ಲ ನೆನಪಿಸಿಕೊಂಡ್ರೇನು ಪ್ರಯೋಜನ?” ಎಂದೆ. ಮುಂದೇನು ಮಾತಾಡಬೇಕೆಂದು ತಿಳಿಯದೆ? +“ಅಯ್ಯಾಯ್ಯೋ… ಅದ್ಯಾಂಗ ಸುಮ್ಕಿರ್‍ಲಿ… ಯಪ್ಪೋ… ಆ ನಿಮ್ ಗೆಣೆಕಾರ್‍ನ ನೆನೆಸ್ಕೊಂಡ್ರೆ ಎದಿ ಹೊಡ್ದೋಗ್ದದ್ರೀ… ಅಂಥ ಮನುಷ್ಯ ಹಿಂದೂ ಹುಟ್ಟಿಲ್ಲಾ ಮುಂದೂ ಹುಟ್ಟಾಕಿಲ್ರೀ ಯಪ್ಪಾ… ಹೋಟ್ಟೇಲಿ ಮಗ್ನಿಗಿಂತ ಜ್ವಾಪಾನ ಮಾಡಿದ್ನೆಲ್ಲೆಪ್ಪಾ… ಉಂಡೆಂಜಲ ಬಳುದು ಎದ್ಯಾಗ ಅವರ ತಲಿ ಇಟ್ಕೊಂಡು ಕಾಪಾಡಿದ್ನಲ್ಲಪ್ಪೋ… ಇರೊ ಎಲ್ಡು ಮುತ್ತಿನಂಥ ಮಕ್ಳ ಮಾರಿನಾರ ನೋಡ್ಕೊಂಡು ವಯನಾಗಿರಬಾರದಿತ್ತೇ ಅವ್ನೂ… ಸತ್ತು ಎದಿ ಬಣವೇಗೆ ಕೊಳ್ಳಿ ಇಟ್ಟುಬಿಟ್ನಲ್ಲಾ… ಅಯ್ಯಯ್ಯೋ ಅವನ್ನ ಹೆಂಗ ಮರ್ತು ಬದುಕ್ಲೀ ನನ್ನಪ್ಪಾ…” ಎಂದು ಆಕೆ ಭೂತಕಾಲದ ತಿಪ್ಪೆ ಕೆದರಿ ಭ್ರೂಣಗಳನ್ನು ಹೆಕ್ಕಿ ಪೇರಿಸತೊಡಗಿದಳು. ಅವು ಒಂದೊಂದು ದಿಕ್ಕಿಗೆ ಒಂದೊಂದು ರೀತಿ ಸಿಡಿದು ಒಬ್ಬೊಬ್ಬರನ್ನು ರೀತಿ ದಂಗು ಬಡಿಸತೊಡಗಿದವು. ಅದೇ ತಾನೆ ತಾರುಣ್ಯದ ಹೊಸ್ತಿಲು ದಾಟಿದ್ದ ಕಾಂಚನ “ಅಳಬ್ಯಾಡನಯವ್ವಾ…” ಎಂದು ತಾನೂ ಅಳಲು ಶುರುಮಾಡಿದರೆ ರಾಖೇಶನಂತೂ “ಯಕ್ಕಾ… ಅದೆಷ್ಟು ಅಳ್ತಿಯೋ ಅಳು… ನಮ್ಗೂ ಹೇಳಿ ಕೇಳಿ ಸಾಕಾಗಿ ಹೋತು… ಕಂಣಾಗ ನೀರು ಖಾಲಿ ಆದ ಮ್ಯಾಲೆ ನೀನೆ ಸುಮ್ಮಕಾಗ್ತಿ…” ಎಂದು ಚುಟ್ಟ ಹಚ್ಚಿಕೊಂಡು ಬುಸುಬುಸು ಹೊಗೆ ಬಿಡತೊಡಗಿದನು. ಲೋಬಾನ ದರಬಾರಗರ ಬತ್ತಿ ಹೊಗೆಯೊಳಗೆ ತಂಬಾಕಿನ ಹೊಗೆ ಬೆರೆತು ಅದೊಂದು ನಮೂನೆ ವಾಸನೆ ಸೃಷ್ಟಿಯಾಯಿತು. ಆ ವಾಸನೆ ಎಂಬುದು ಅಂತರಿಕ್ಷ ಮಾರ್‍ಗದಲ್ಲಿ ರಚಿಸಿದ ಛಪ್ಪನ್ನಾರು ಹಾದಿಗಳಗುಂಟ ಅಕ್ಕಪಕ್ಕದ ಮನೆಯ ಹೆಣ್ಣಾಳು ಗಂಡಾಳುಗಳು ನಾ ಮುಂದು ತಾ ಮುಂದು ಅಂತ ಮನೆ ತೂರಿಕೊಂಡರು. ತೂರಿಕೊಂಡವರು ಸತ್ತ ಶಾಮಣ್ಣಗಿವನೇನಾಗಬೇಕೂಮ್ತ ನನ್ನ ಕಡೆಗೂ; ನಿನ್ನೆದಿಯೊಳಗೀಮೂಳ ಅದ್ಯಾವ ಆಟಂಬಾಂಬು ಇಟ್ತನೇ ತಾಯಿ ಅಂತ ಆಕೆಯ ಕಡೆಗೂ ಹುಳಿ ಹುಳಿ ನೋಡತೊಡಗಿದರು. ಅಳೊದು ಕರೆಯೋದು ತಮ್ಮ ಪೇಟೆಗೆ ತೀರ ಸಹಜವೆಂಬಂತೆ ಕೆಲವರು ರಾಖೇಶನೊಂದಿಗೆ ಗುಸುಗುಸು ಪಿಸಿಪಿಸಿ ಮಾತಾಡತೊಡಗಿದರೆ ಇನ್ನು ಕೆಲವರು ಅನಸೂಯಮ್ಮನ ಮೇಲೆ ಅಡರು ಬಿದ್ದು “ಅಯ್ಯಯ್ಯೋ… ನಿನ್ ಬದುಕು ಕಣ್ಣೀರೊಳಗೆ ಮಾರಿ ತೊಳಿಯೋ ಹಂಗಾಯ್ತಲ್ಲೇ… ಇಂಥದೊಂದು ಗಂಟು ಬೀಳೋಕೆ ನೀನೇನು ಕರುಮ ಮಾಡಿದ್ದೀಯೇಽಽ.. ಒಂದಿನಾನಾದ್ರು ಹೊಟ್ತೆ ತುಂಬ ಉಂಬ್ಲಿಲ್ಲ… ರೆಪ್ಪೆಗೆ ರೆಪ್ಪೆ ಹಚ್ಚಿ ನಿದ್ದೆ ಮಾಡಿಲ್ಲಲ್ಲೇ…ಯವ್ವೋ… ಯತ್ತೇ… ಅಕ್ಕೋ… ಮಗ್ನೇ… ತಂಗೇ…” ಎಂದು ಮುಂತಾಗಿ ಒಂದೊಂದು ರಾಗಕ್ಕು ಒಂದೊಂದು ವಿಶೇಷಣ ಮುಡಿಸಿ ಬೋರೆಂದು ಅಳತೊಡಗಿದರು. ಅವರೆಲ್ಲರ ಕಂಣೀರು ಸಿಂಬಳ ಧಾರೆ ಬಿದ್ದೂ, ಬಿದ್ದೂ ಮೈಗೆ ಒಂಥರಾ ತಂಪಾದಂಗಾಗಿ ಅನಸೂಯಮ್ಮ ಧಡಾರನೆ ಫ್ಯಾನಿನ ಮಟ ಎದ್ದು ನಿಂತು… ನಮ್ಮ ಶಾಮನ್ನ ಹೆಣಕೆ ಬೆಂಕಿ ಹಚ್ಚಿದೀ ಕಯ್ಗಳ್ಗೆ ಕರಿ ನಾಗ್ರಾವು ಕಡಿಯಾ… ನಂಗೆ ಬರಬಾರ್ದ ರೋಗ ಬಂದು ಸಾಯಾ… ಮರೀ ಬೇಕಂದ್ರ ಮರಿಗೊಡಸಲ್ವಲ್ಲ ಅವ್ನೂ… ನಾನೇನು ಕಡ್ಮೆ ಮಾಡ್ದೆ ಅಂತ ಸತ್ತೋ ನೀನು… ಆ ದೇವ್ರೆಂಭೋನು ನನ್ನಾಯುಷ್ಯಾನ ಅವ್ನಿಗೆ ಕೊಟ್ಟು ಇನ್ನೂ ನಾಕ್ಕಾಲ ಬದುಕಿಸಬಾರ್ದಿತ್ತೇ… ಶಾಮಾ… ಶಾಮಾ… ನನ್ನೂ ಕರ್ಕೊಂಡೋಗಬಾರ್ದೇನೋ ಸುಡ್ಗಾಡಿಗೆ… ನಿನ್ನೆಣ್ತಿ ಅಂದ ಒಂದೊಂದು ಮಾತು ನೆನೆಸ್ಕೊಂಡ್ರೆ ಈ ಭೂಮಿ ಮ್ಯಾಲ ಬದುಕಬಾರ್ದೋ ನಾನು… ನಿನ್ ಮಕ್ಳೂ ನನ್ ಮಕ್ಳೂ ಅಲ್ಲೇನೋ? ಕಣ್ ಪ್ರೀತಿ ನೋಡಂಗಿಲ್ಲಲ್ಲೋ ನಾನು… ‘ಲೇ ಅನಸೂಯಾ ಹಿಂದಿನ ಜನುಮದಾಗ ನೀನು ನನ್ತಾಯಿಯಾಗಿ ಹುಟ್ಟಿದ್ದೇನೆ ಅಂತಿದ್ದೇಯಲ್ಲೋ… ಶಾಮ…ಶಾಮಾ… ಶಾಽಽಮಾಽಽ…” ಎಂದು ಮೂರ್ಚೆ ಹೋಗಿ ನೆಲದಮೇಲೆ ಅಂಗಾತ ಬಿದ್ದುಬಿಟ್ತಳು. ಒಂಚಣ ಎಲ್ಲರೂ ಹೌಹಾರಿ ಮತ್ತೆ ಚೇತರಿಸಿಕೊಂಡರು. ನೀರು ತರಲಿಕ್ಕೆ ಹೋದವರು ನೀರು ತಂದರು, ಬೆಂಕಿ ತರಲಿಕ್ಕೆ ಹೋದವರು ಬೆಂಕಿ ತಂದರು. ಬೀಸಣಿಕೆ ತರಲಿಕ್ಕೆ ಹೋದವರು ಬೀಸಣಿಕೆ ತಂದರು. ಆ ಗುಂಪಿನಲ್ಲಿತರಾವರಿ ಮಂದಿ ಇದ್ದರು. ನನ್ ಗತಿ ಏನೇ ಯವ್ವಾ ಎಂದು ಎದೆ ಮೇಲೆ ತಲೆ ಇಟ್ಟ ಕಾಂಚನಾಳ ಭುಜ ಹಿಡಿದು ಆಚೆ ಸರಿಸಿ ಆರೆಂಪಿ ಅಮರಪ್ಪ ಒಂಡು ಸೂಜಿ ಮಾಡಿದ್ರೆ ಹೋದ ಜೀವ ಮತ್ತೆ ಬರ್‍ತದೆ ಎಂದು ಸಿರಂಜಿ ಪ್ರದರ್ಶಿಸಿದನು. ಹ್ರಾಂ ಹ್ರೀ ಹ್ರೂಂ ಈ ಮೂರು ಮಂತ್ರಗಳಿಗೆ ಹೆಸರಾದ ಅಂಬನ್ನ “ಲೋ ಅಮರಪ್ಪ… ಇದು ಬ್ರಮ್ಮ ಪಿಶಾಚಿ… ನಿನ್ನ ಇಂಗ್ಲೀಚು ಚೂಚಿಗೆ ಮೈಟು ಮಾಡೊದಲ್ಲ” ಎಂದು ಆರೆಂಪಿ ರಟ್ಟೆ ಹಿಡಿದು ಆಚೆ ತಳ್ಳಿ ಒಂದು ಕೈಲಿ ಹುಣುಸೆ ಬರಲನ್ನೂ; ಇನ್ನೊಂದು ಕೈಲಿ ನಿಗಿ ನಿಗಿ ಉರಿವ ಕೆಂಡವನ್ನೂ ಹಿಂದಕ್ಕೂ ಮುಂದಕ್ಕೂ ವಾಲಾಡುತ್ತ ಪ್ರದರ್ಶಿಸಿ… ಇನ್ನೇನು ಅವನು ಆಕೆಯ ಮೈಯನ್ನು ಚಟ್ನಿ ಮಾಡುವನೆಂದಾಗ ಚೀಪಾಪೀಸರು ಗೋವಿಂದಮ್ಮ “ಎಲವೋ ಅಂಬಣ್ಣ… ಒಳ್ಳೆ ಮಾತ್ನಿಂದ ದೂರಸರಕಮ್ತೀಯಾ… ಇಲ್ಲಾ ಬಾಯಾಗ ಉಚ್ಚಿ ಹೊಯ್ಲಾ…” ಎಂದು ಹೆಡೀತ್ತಿ ಬುಸಗುಟ್ಟಿದಳು. ಸೋಮಾರಪೇಟೆಯ ಕೊತ್ವಾಲ ರಾಮಚಂದ್ರಳೆಂದೇ ಹೆಸರಾಗಿರುವ ಚೀಪಾಪೀಸರ್ರು ಗೋವಿಂದಮ್ಮ ಈ ಪ್ರಕಾರವಾಗಿ ನಾನೆಂಭೋ ಮಾನವರನ್ನು ಆಚೇಕ್ಕ, ಈಚೆಕ್ಕ ಕಳಿಸಿ ಆ ಕಡೆಗೊಂದು ಈ ಕಡೆಗೊಂದು ಕಾಲು ಹಾಕಿ ಅನಸೂಯಮ್ಮನ ತಲೆಯನ್ನು ಬೊಗಸೆಯಿಂದೆತ್ತಿ “ಚಲೋ ಮಾತ್ನಿಂದ ಕಂಣ ತೆರೀತೀಯೊ… ಇಲ್ಲಾ… ನಾನೀ ಪ್ಯಾಟಿ ಬಿಟ್ಕೊಟ್ಟು ಹೊಂಟೋಗ್ಲೋ” ಎಂದು ಒಂದು ಮಾತು ಅಂದು ಮುಖಕ್ಕೆ ಒಂದು ಬೊಗಸೆ ನೀರು ಚುಮುಕಿಸಿದಳು… “ಹಾರವನ ಸಾವಾಸ ಮಾಡ್ದೀ ಸಾಕ್ದೀ ಸಲುವಿದಿ, ಬೆಂಕೀಲಿಟ್ಟಿ. ಅವ್ನ ನೆನಪಿಗೂ ಬೆಂಕಿ ಇಟ್ಟು ಆರಾಮಾಗಿರೋದು ಬಿಟ್ಟು ಹಿಂಗ್ಯಾಕ ಮೂರ್ಚೆ ಹೋಗಿದ್ದೀ. ಕಂಣು ತೆರಿಲಿಲ್ಲಾಂದ್ರೆ ಈಗಿಂದೀಗ್ಲೇ ನಾನೊಂಟು ಹೋಗ್ತೀನಿ ನೋಡು” ಎಂದು ಎರಡು ಮಾತು ಎರಡು ಬೊಗಸೆ ಸುರುವಿದಳು.ಅದಕ್ಕೂ ಕಂಣು ತೆರೆಯದಿದ್ದಾಗ “ಮಿಂಡನನ್ನೂ ಮಗನಂಗೆ ಸಾಕಿ ನಂಸ್ವಾಮಾರಪ್ಯಾಟಿ ಮ್ಯಾಲ ತಾಯ್ತನದ ಶಿಖಿರ ಇಟ್ಟೆಲ್ಲೇ; ಅನಸೂವಿ… ನಿನ್ನಂಥಾಕಿ ಪ್ರಗ್ನೆ ತಪ್ಪಿ ಬೀಳೋದೆಂದ್ರೇನು… ನೀನು ಕಂಣು ತೆರೀಲಿಲ್ಲಾಂದ್ರ ಈಗಿಂದೀಗ್ಲೆ ನಾನೊಂಟೋಗ್ತೀನಿ” ಎಂದು ಮೂರು ಮಾತು ಅಮ್ದು ಮೂರು ತಂಬಿಗೆ ನೀರು ಸುರುವಿದೊಡನೆ ಜಲಜಲ ಬೆವೆಯುತ್ತ ಅನಸಮ್ಮ ದಿಗ್ಗನೆದ್ದು ಕುಳಿತು “ಯವ್ವಾ… ಗೋವಿಂದವ್ವಾ… ಹೆಂಗ ಬದುಕಿರ್ಲೆ ಅಂಥವ್ನ ಕಳ್ಕೊಂಡು” ಎಂದು ಎದೆಗೆ ಕೈಹಚ್ಚಿ ಮೇಲೆಳೆದುಕೊಂಡಳು… ಅವನ ಸಂತೆ ಹೊತ್ತುಂಟ್ಲೆ ತನ್ ಸಂತೆ ತಾನು ಮುಗಿಸ್ಕೊಂಡ… ಹೋಂಟೋದ… ನಮ್ನಿನ್ನೂ ಸಂತೆ ಮುಗ್ದಿಲ್ಲೆ ಮಗ್ಳೇ… ಎದ್ದೇಳು… ಬಚ್ಚಲಕೋಗಿ ಮಕ ಮಾರಿ ತೊಳ್ಕೊಂಡು ಹಣೆಮ್ಯಾಲ ಅವ್ವನ ಅಂಗಾರ ಹಚ್ಕಾ… ಎಲ್ಲಾ ಸರಿ ಹೋತೈತಿ… ಚಿಂತೆ ಮಾಡಬ್ಯಾಡ…” ಎಂದು ಎಬ್ಬಿಸಿ ಕಾಂಚನಾಳ ಕೈಗೆ ಕೊಟ್ಟು ಬಚ್ಚಲಿಗೆ ಕಳಿಸಿದಳು. +“ಇದು ಶಾಮಂಣನ ದೆವ್ವಭೇ… ಗೋಯಿಂದೀ… ಬರೋ ಅಮ್ಮಸೆ ರಾತ್ರಿ ಬಿಡಿಸಿದ್ರೆ ಸರೆ… ಇಲ್ಲಾಂದ್ರೆ ಅದು ಈಕಿನ ತಗೊಂಡೊಯತದೆ ನೋಡ್ತಿರು ಎಂದು ಅಂಬಣ್ಣನ ಎದುರು ಕುಪ್ಪಳಿಸಿ ನಿಂದು “ಯೇನಂದ್ಯೋ ನನ್ನಾಟಗಳ್ಳ… ಈಕೆ ವ್ಯೋನು ಮಾಡ್ಯಾಳಾಂತ ಶಾಮ ಆಕೀನ ತಗೊಂಡೊಯ್ತಾನೋ… ಒಯ್ದ್ರೆ ನನ್ ತಗೊಂಡೊಗ್ಬೇಕು ನೋಡು… ನೀನೇನು ಕಡ್ಮೆ ಉರಿಸ್ಕೊಂಡು ತಿಂದ್ಯಾ ಆ ಶಾಮಂಣನ್ನ… ಬಾಯಿ ಸತ್ತೋರು ಈ ಪ್ಯಾಟಿಗೆ ಬರದಂಗೆ ಮಾಡಿ ಬಿಟ್ರೆಲ್ಲೋ ನಿಮ್ಮಂಥೋರೆಲ್ಲ ಸೇರ್‍ಕಂಡು… ನಿನ್ನಂಥ ಭಡ್ಕಾವ್ ಮಂದಿಗೆ ಮುಯ್ಯಿ ಒಪ್ಪಿಸಿದ್ವಿ ನೋಡು ನಮ್ಗೆ ನಾವು ಕಾಲ್ಮರೀಲಿ ಹೊಡ್ಕೋಬೇಕು…” ಎಂದು ಘರ್ಜಿಸಿ ಕ್ಯಾಕ್ ಅಂತ ಮುಖಕ್ಕೆ ಉಗುಳಿದಳು. ಅವನು ಮುಖ ಒರೆಸಿಕೊಂದು ಹೋದನು… ಅಲ್ಲಿದ್ದ ಅನೇಕರು ಅವನ ದಾರಿ ಹಿಡಿದರು. +ಗೋವಿಂದಮ್ಮ ನನ್ನ ಮುಖಕ್ಕೆ ಮುಖ ಅನಿಸಿ ನಿಂತುಕೊಂಡು “ಏನಪ್ಪಾ… ಓದ್ಕಂಡಂತನ್ನಂಗೆ ಕಾಣಿಸ್ತೀ… ಏನಪ್ಪಾ… ಶಾಮನ ಗೇಣೆಕಾರನಂಗೆ ಕಾಣಿಸ್ತಿದ್ದೀ… ನಿಂಗೆ ರವಷ್ಟಾದ್ರು ತಿಳಿಬಾರ್ದೇನು? ಸತ್ತೋನ ಸಂಗ್ತಿ ಎತ್ತಿ ನಮ್ಮ ಅನಸೂವಿ ಎದಿಗ್ಯಾಕ ಬೆಂಕಿ ಹಚ್ಚಿದ್ಯೋ… ಅನಸೂವಿ ನಮ್ ಪ್ಯಾಟಿಗೆಲ್ಲ ಮಗ್ಳಿದ್ದಂಗೆ… ನಾವೆಲ್ರು ನಮ್ ನಂ ಪ್ರಾಣಕ್ಕಿಂತ ಹೆಚ್ಚಾಗಿ ನೋಡ್ಕೊಂತಿದ್ದೀವಿ…ಈಕಿಗೆ ಏನಾರ ವಂಚೂರು ಹೆಚ್ಚೂ ಕಡ್ಮೆ ಆದ್ರೆ ನಾವೆಲ್ಲ ನಿನ್ನ ಸುಮ್ನೆ ಬಿಡಾಕಿಲ್ಲ ನೋದು… ಗೋಣು ಮುರ್ದು ಅವ್ವನ ಮರ್ಕೆ ನೇತಾಕ್ತೀವಿ… ಪೋಲೀಸ್ರೂ ನಮ್ದೇನು ಹರಕನ್ನಂಗಿಲ್ಲ… ಹ್ಹಾಂ… ಎಂದು ಕಟುಮ್ಮನೆ ಗೋಟಡಕೆ ಕಡಿದು ಸದ್ದು ಮಾಡಲು ನಾನು ಜಲಜಲನೆ ಬೆವತು ಹೋದೆನು. +ನನಗೆ ಸಪೋರ್ಟಾಗಿ ಹೆಂಗತ್ತೆ ಹಿಂಗತ್ತೆ ಅಂತ ಬಂದ ರಾಖೇಶನನ್ನು “ಏನಲೋ ಮೂಳಾ ಎಂದು ತಡವಿಕೊಂಡಳು. “ಲೋ ರಾಕೇ… ಚಾ… ನನ್ನಾಟಗಳ್ಳನೇ… ಯೇಸು ಮಂದಿಯ ಮನಿ ವಸೂದಿ ಮಾಡಿರುವಿಯಲ್ಲೋ… ನೀನೇ ಅಲ್ಲೇನೋ ಬ್ಯಾಂಕಿನಾಗಿದ್ದ ಶಾಮಂಣನ್ನ ಕರ್ಕೊಂಡು ಬಂದು ನಮ್ಮನುಸೂವಿಗೆ ಜತಿ ಮಾಡಿದ್ದು… ನನ್ ಮಗ್ಳು ಸಾವಿತ್ರೀನ ಅಡ್ಡ ಹಾಕ್ಲಿಕ್ಕೆ ನೋದ್ದೆಲ್ಲೋ ಬಾಡ್ಕಾವ್… ಆಕೀನ ಒಪ್ಲಿಲ್ಲ ಸರಿ… ಒಪ್ಪಿದ್ದಿದ್ರೆ ಈಕೆಯಂಗೆ ಆಕೀನು ಕಂಣೀರಲ್ಲಿ ಕಯ್ಯ ತೊಳೀಬೇಕಾಗಿತ್ತಾ… ಅವ್ನೀಗೆ ಬದ್ಲಿ ನಿನ್ನಾದ್ರು ಹೊತ್ಕೊಂಡೋದ್ರಾ… ಥೂ… ನಿನ್ನ ತಲಿಹಿಡುಕ ಜನುಮಕ್ಕೀಟು ಬೆಂಕಿ ಹಾಕಾಽಽ” ಎಂದು ತರಾಟೆಗೆ ತೆಗೆದುಕೊಂಡಳು. +ಆ ಕೂದಲೆ ತಲೆ ಹಿಡುಕರ ಸಂಘದ ಗೌರವ ಸದಸ್ಯರಾದ ಯಂಕೋಬಿ, ಮಲ್ಲ, ತಿಗಳ ಮುಂತಾದವರು ತಮ್ಮ ಅಧ್ಯಕ್ಷ ರಾಖೇಶನ ನೆರವಿಗೆ ಬಂದರು. +“ನೋದು ಗೋವಿಂದವ್ವೇ… ನಾವು ತಂದು ಅಡ್ಡ ಹಾಕದಿದ್ದಲ್ಲಿ ನೀವೆಲ್ಲ ಹುಣಸೇ ಬೊಟ್ಟು ಕುಟ್ಗೆಂತ ಇರ್ಬೇಕಾಗಿತ್ತು…” ಎಂದು ತಿಗಳ ತನ್ನ ಬೋಳು ನೆತ್ತಿ ಸವರಿಕೊಂಡ. +ಕೆಲವು ವೇಶ್ಯೆಯರು ಗೋವಿಂದಮ್ಮನ ಪರ ಕಚ್ಚೆ ಏರಿಸಿ ನಿಂತಿರು… ಅವರ ಮತ್ತು ತಲೆ ಹಿಡುಕ ಸಂಘದ ಸದಸ್ಯರ ನಡುವೆ ಜಟಾಪಟ ಶುರು ಆಯಿತು. ಒಬ್ಬರ ಜುಟ್ಟು ಒಬ್ಬರು ಹಿಡಿದುಕೊಂಡು ಎಳೆದಾಡತೊಡಗಿದರು. ಇಂಥದೊಂದು ಇತಿಹಾಸ ಪ್ರಸಿದ್ಧ ಜಗಳದಿಂದ ಹುರುಪುಗೊಂಡ ಆರೆಂಪಿ ಅಮರಪ್ಪ “ಜಗಳಾಡೊದಿದ್ರೆ ಬೀದಿ ಬಯಲಾಗ ಜಗಳಾಡ್ರಿ… ನಮ್ ಅನಸೂಯವ್ವಂಗೆ ಮತ್ತೆ ತಲಿ ನೋವು ಮಾಡಬ್ಯಾಡ್ರಿ…” ಎಂದು ಕೈಯಲಿದ್ದ ಸಿರಂಜಿಯನ್ನೇ ವಜ್ರಾಯುಧದಂತೆ ಝಳಪಿಸುತ್ತ ಅವರನ್ನು ಎಬುಡಾ ದಬುಡಾ ಹೊರಕ್ಕೆ ತಳ್ಳಿದನು. ರಾಖೇಶನು ನನ್ನ ರಟ್ಟೆ ಹಿಡಿದು ಹೊರಗೆ “ಅನಸೂಯಮ್ಮನ ತಲೆ ನೆಟ್ತಗಿಲ್ಲ… ಅನಂತಪುರಕ್ಕೆ ಹೋಗಿ ಶಾಮಂಣನ ಹೆಂಡ್ತಿಯಿಂದ ಸಿಕ್ಕಾಪಟ್ಟೆ ಬಯ್ಯಿಸಿಕೊಂಡು ಬಂದಂದಿನಿಂದ ಹಿಂಗಾಡ್ತಿದಾಳೆ… ಆಕೆಗೆ ತಲೆ ಕೆ‌ಆಗ ಅವರಿವ್ರೀಗೆ ಮದ್ದು ಇಟ್ಟು ಸರಿಪಡಿಸಿಕೊಳ್ತಾಳೆ. ಇದು ಜರಮಲಿ ಪಾಳ್ಳೆಗಾರ ವಂಶದೋರಲ್ಲಿ ಮೊದಲ್ನಿಂದ ನಡಕೊಂಡು ಬಂದಿರೋ ಆಚಾರ… ಉಪಾಯಾಂತರದಿಂದ ನಿಮ್ಮ ತಲೀಗೆ ಮದ್ದು ತಿಕ್ಕಿದ್ರೆ ಕಷ್ಟ. ನೀವು ಮೊದ್ಲೆ ಹೆಂಡ್ತಿ ಮಕ್ಕಳೊಂದಿಗ್ರು… ಶಾಮಂಣಗೆ ಆಕೆ ಹುಚ್ಚು ಹಿಡ್ದದ್ದು ಹೇಗಂತೀರಾ?” ಎನ್ನತೊಡಗಿದ. ಅವನು ಕ್ರಮೇಣ ನೀಚಸ್ಥಾನ ತಲುಪಿ ನನ್ನನ್ನು ಗಲಿಬಿಲಿಗೊಳಿಸಿದ. ಅವನು ಮುಂದೆ ಹೇಳಲಿದ್ದನ್ನು ನನಗೆ ಕೇ‌ಅಲು ಇಷ್ಟವಿರಲಿಲ್ಲ. ನನು ಲಗುಬಗೆಯಿಂದ ಹರುಕುಮುರುಕು ಕತ್ತಲಲ್ಲಿ ಹೆಜ್ಜೆ ಹಾಕಿದೆ. ಕಾಂಚನಾ ಕೂಗಿ ಕರೆಯಬೇಕೆಂದೋ! ಕರೆಯಬಾರದೆಂದೋ! ಒಟ್ಟಿನಲ್ಲಿ ನಾನು ಹಾಕುತ್ತಿದ್ದ ನಡಿಗೆಗೆ ಸಂಬಂಧಿಸಿದಂಥ ಖಚಿತತೆ ಇರಲಿಲ್ಲ. “ರ್ರೀ ಸ್ವಾಮಿ… ನಾನು ಹೇಳೋದ್ನ ಕೇಳಿಸ್ಕೋತೀರಾ ಸ್ವಲ್ಪ… ಹಿಂಗಾಗ್ತದಂದ್ರೆ ನಾನು ಶಾಮಂಣಗೆ ಅನಸೂಯಮ್ಮನ ಪರಿಚಯ ಮಾಡಿಸ್ತಾನೇ ಇರ್ಲಿಲ್ರೀ… ನೀವು ಕಥೆ ಕಾದಂಬರಿ ಬರ್‍ಯೋರಂಥ ಗೊತ್ತಿದ್ರೆ ಬಸ್‌ಸ್ಟಾಂಡ್ನಲ್ಲಿ ನಿಮ್ ತಂಟೆಗೇ ಬರ್ತಿರ್‍ಲಿಲ್ಲ. ಆಗಿದ್ದು ಆಗಿಹೋಯ್ತು… ಅಪೂರ್ವ ಚಿಂತಾಮಣಿಯಂಗ ಶೋಬಿಸ್ತಿರೋ ಯಶೋದಳ ಮನೇಲಿ ಈ ರಾತ್ರಿ ಉಳ್ಕೊಂಡಿದ್ದು ಬೆಳ್ಗೆದ್ದು ಹೋದರಾಗ್ತಿತ್ತಲ್ಲ. ..” ಇನ್ನು ಏನೇನೋ ಮಾತಾಡುತ್ತ ಅವನು ಹಿಂದೆ ಹಿಂದೆ ಬರುತ್ತಿದ್ದ… ಅವನ ಕೈಗೆ ಸಿಕ್ಕದಂತೆ ನಾನು ಬೀಸು ಹೆಜ್ಜೆ ಹಾಕತೊಡಗಿದೆ… ಇನ್ನೇನು ಸೋಮಾರಪೇಟೆ ದ್ದಟಿ ಬಿಟ್ತೆ ಎನ್ನುವಷ್ಟರಲ್ಲಿ ಅವನು ಓಡಿ ಬಂದು ನನ್ನ ಎದುರಿಗೆ ನಿಂತೇಬಿಟ್ಟ. ಏನೆಂದೆ? ಅವನು ಏದುಸಿರು ಬಿಡುತ್ತ ನನ್ಗೂ ಹೊಟ್ಟೆ ಇದೆ… ಹೆಂಡ್ತಿ ಮಕ್ಳೊಂದಿಗ ಬೇರೆ! ಎಂದು ಹೆಂದೆಲೆ ಕೆರೆದ. ಜೇಬಿನಿಂದ ಒಂದು ನೋಟು ತೆಗೆದು ಬೀದಿ ದ್ ಪದ ಬೆಳಕಿಗೆ ಹಿಡಿದೆ. ಅದರ ಒಂದು ಕಡೆ ಪಾರ್ಲಿಮೆಂಟೂ; ಇನ್ನೊಂದು ಕಡೆ ಅಶೋಕನ ಕಾಲದ ಮೂರು ಸಿಂಹಗಳು ಇದ್ದುದನ್ನು ಖಚಿತ ಪಡಿಸಿಕೊಂಡು ಅವನ ಬೊಗಸೆಗೆ ಹಾಕಿದೆ. ಅವನು ಅದನ್ನು ಕಂಣಿಗೆ ಒತ್ತಿಕೊಂಡು “ನನ್ ಸೇವೆ ಮುಂದೆಂದಾದ್ರು ಬೇಕಾದ್ರೆ ನಿಸ್ಸಂಕೋಚವಾಗಿ ಬರ್ರಿ ಭಾವ… ಸರ್ಕಿಲ್ ಆಫೀಸ್ ಹಿಂದುಗಡೆ ದಕ್ಷಿಣಕ್ಕೆ ಮುಖವಾಗಿರೋದೇ ನನ್ನ ಮನೆ ಹ್ಹಿ… ಹ್ಹಿ…” ಎಂದ. ಒಂದೊಂದು ನಿಮಿಷಕ್ಕೆ ಒಂದೊಂದು ರೀತಿಯ ಭಾಷೆ ಬಳಸುವುದರಲ್ಲಿ ನಿಷ್ಣಾತನಾದ ಅವನನ್ನು ಬದಿಗೆ ತಲ್ಲಿ ನಾನು ಬಸ್‌ಸ್ಟಾಂಡ್ ಕಡೆ ಹೆಜ್ಜೆ ಹಾಕಿದೆ +* +* +* +ಮನೆಸೇರಿ ಒಂದು ದಿನ ಕಳೆದರೂ ಹೆಂಡತಿ ಅನ್ನಪೂರ್ಣನೊಂದಿಗೆ ಮನಸ್ಸು ಬಿಚ್ಚಿ ಮಾತಾಡಲು ನನ್ನಿಂದ ಸಾಧ್ಯವಾಗಲಿಲ್ಲ. ತನ್ನ ಬಳಿ ಇರುವ ಹಸ್ತಪ್ರತಿ ಮೇಲೆ ಮತ್ತೊಮ್ಮೆ ಕಣ್ಣಾಡಿಸಿರಬಹುದಾದ ಆಕೆ ಕಾದಂಬರಿಯ ಮುಂದಿನ ಬೆಳವಣಿಗೆ ಬಗ್ಗೆ ಹೆಚ್ಚು ಕುತೋಹಲದಿಂದ ಇದ್ದಳು… ನಾನು ಆಕೆಯೊಂದಿಗೆ ಮಾತಾಡುವಾಗ ಹತ್ತಾರು ಹಗರಣಗಳಿಗೆ ಸಿಲುಕಿಕೊಂಡ ಮಾಜಿಯೂ; ವೃದ್ಧನೂ ಆದ ಪ್ರಧಾನಿಯಂತೆ ಕಂಪಿಸುತ್ತಿದ್ದೆ. ಶರದೃತುವಿನಲ್ಲಿ ಕುಲು ಕಣಿವೆಯ ತುಟ್ಟ ತುದಿಯಲ್ಲಿ ನಿಂತು ಕಂಪಿಸುವ ಮುಗ್ಧ ಪ್ರವಾಸಿಗನಂತೆ ಕಂಪಿಸುತ್ತಿದ್ದೆನು. ಐದನೇ ತುತ್ತಿಗೆ ಕೈ ತೊಳೆದುಕೊಳ್ಳುತ್ತಿದ್ದೆನು. ನೀರನ್ನು ನುಂಗಲು ಪ್ರಯಾಸ ಪಡುತ್ತಿದ್ದೆನು. ಬೆಳಗಿನ ಜಾವದವರೆಗೆ ಅತ್ತ‌ಇತ್ತ ಹೊರಳಾಡೀಽ ಹೊರಳಾಡೀ ಇನ್ನೇನು ಮುಂಗೋಳಿ ಕೂಗ್ಕಂತದೆ ಅನ್ನುವಾಗ ಜೋಂಪು ಹತ್ತಿ ಕಂಣು ಮುಚ್ಚುತ್ತಿದ್ದೆನು… ಮಂಪರಿನೊಳಗೆ ಏನನ್ನೋ ಕನವರಿಸುತ್ತಿದ್ದೆನಂತೆ… ಅದೇನನ್ನು ಕಂಬರಿಸುತ್ತಿದ್ದೆನೋ.. ಆ ನಮ್ಮ ಮಂದೇವರಾದ ಹಳೇಕೋಟೆ ವೀರಭದ್ರ ದೇವರಿಗೇ ಗೊತ್ತು. ಕೊತ್ತಲಿಗಿಯ ಸೂಕ್ಷ್ಮ ವಿಚಾರಗಳನ್ನು ಕೇಳಿ ಬಲ್ಲವಳಾದ ಅನ್ನಪೂರ್ಣೆಯು ಇದೇನಿದು/ ತನ್ನ ಗಂಡನು ಅನಂತಪುರ, ಕೊತ್ತಲಿಗಿಯೇ ಮೊದಲಾದ ತೆಂಕಣ ದೇಶಗ್ಫಳನ್ನು ಸುತ್ತಿ, ಖಾಸಗೀ ಕೋಶಗಳನ್ನು ಬಂದಾಗಿನಿಂದ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿಲ್ಲ… ಎಡ್ಲಾರ್ ಅಲನ್ ಪೋನ ಕಥೆಯೊಂದರ ನಾಯಕಮಣಿಯಂತೆ ವರ್ತಿಸುತ್ತಿರುವನಲ್ಲ… ಇದರಲ್ಲೇನೋ ಗೂಢವಡಗಿದೆ ಎಂದು ಬಗೆದವಳಾಗಿ ಪರಿಪರಿಯಾಗಿ ಪರಾಂಬರಿಸತೊಡಗಿದಳು. ತನ್ನ ದೇಹದ ಅಂತಃಶಕ್ತಿಯನ್ನು ‘ಛೂ’ ಬಿಟ್ಟು ತನ್ನ ಗೈರುಹಾಜರಿಯಲ್ಲಿ, ಸುಪ್ತಾವಸ್ಥೆಯಲ್ಲಿ ನನ್ನ ಚಲನವಲನ ಮೇಲೆ ನಿಗಾ ಮಡಗಿದಳು. ಆ ತದನಂತರ ಅರ್ಥವಾಯಿತು. ನನ್ನಂಥ ಹುಂಬು ಬೇರೊಬ್ಬನಿಲ್ಲಂತ. ಪಿಶಾಚಿಯೊಂದು ಬಡಕೊಂಡಿದೆ ಎಂಬರ್ಥ ಬರುವಂತೆ ನಾನು ಆಕೆಯ ಗೈರುಹಾಜರಿಯಲ್ಲಿ ಅಲ್ಲಲ್ಲಿ ಶೋದಿಸಿ ತಂದಿರ್ದ ‘ರಿಕಾಲ್ಡುಗಳನ್ನು ಹರಡಿಕೊಂಡು ಅವುಗಳಲ್ಲಿ ಶಾಮಂಣನು ನನ್ನ ಬಗ್ಗೆ ಏನಾದರೂ ಪ್ರಸ್ತಾಪಿಸಿರುವನೋ ಎಂದು ನನಗಿಂತ ಎಷ್ಟೊಂದು ಚೆನ್ನಾಗಿ ಕೈಫಿಯತುಗಳ ಸ್ಟೈಲಿನಲ್ಲಿ ಬರೆದಿರುವನಲ್ಲ ಎಂಬ ಹೊಟ್ಟೆಕಿಚ್ಚಿನಿಂದೋ ಕಂಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುತ್ತ ಬಿಡಬಾರದಕಡೆ ನಿಟ್ಟುಸಿರು ಬಿಡುತ್ತ, ಜೊಲ್ಲಿನ ಹನಿಗಳನ್ನುದುರಿಸಿ, ಅಕ್ಷರಗಳ ಅಂದಚೆಂದವನ್ನು ಹದಗೆಡಿಸುತ್ತ ಮರುಕ್ಷಣದಲ್ಲಿ ಚೆಂಬಲ್ ಕಣಿವೆಯ ದರೋಡೆಕೋರನಂತೆ ಮೂಲೆಗೆ ಸರಿಸುತ್ತಿದ್ದೆನು. ಮಲಗಿಕೊಂಡಾಗಲೂ ಆ ಅರ್ಥವಾಗದ ಮಸಯೆಗೆ ಕಟ್ಟು ಬಿದ್ದು “ಶಾಮಂಣಾ… ಅನಸೂಯಾ… ಕಾಂಚನಾ… ರಾಖೇಶಾ…” ಎಂಬಿವೇ ಮೊದಲಾದ ನಾಮಪದಗಳನ್ನು ಅವುಗಳ ಕ್ರಿಯಾ ವಿಷೇಶಣಗಳ ಸಹಿತ ಕನವರಿಸುತ್ತಿದ್ದೆನು. +ಇಂಥಪ್ಪ ಹಲವು ಸುಷುಪ್ತಾವಸ್ಥೆಯ ಚಟುವಟಿಕ್ರ್ಗಳನ್ನು ಗಮನಿಸಿದವಳಾದ ಶ್ರೀಮತಿಯು “ರ್ರೀ… ರ್ರೀ ಎದ್ದೇಳ್ರೀ… ಅದ್ಯಾರ್ರೀ ಅವಳು ಬೋಸೂಡಿ ಕಾಂಚನಾ ಎಂಭೋಳು?… ಒಳ್ಳೆ ಮಾತ್ನಿಂದ ಹೇಳ್ತೀರೋ ಇಲ್ಲ ಅನ್ನ ನೀರು ಬಿಟ್ತು ಕೂಡ್ರಲೋ” ಎಂದು ಏಕ್‌ಧಂ ನಾರಾಯಣಾಸ್ತ್ರ ಪ್ರಯೋಗಿಸುವುದನ್ನು ಶುರುಮಾಡಿದಳು… ನಾನಲ್ಲಿಂದ ಬಂದೊಡನೆ ಅನಂತಪುರಕ್ಕೆ ಹೋಗಿದ್ದನೆಂದು ಹೇಳಿದ್ದೆನೇ ಹೊರತು ಕೊತ್ತಲಗಿ ಮನ್ವಂತರದ ಉಪಕಥೆಗಳನ್ನು ಅಪ್ಪಿ ತಪ್ಪಿ ಹೇಳಿರಲಿಲ್ಲ… ಅವೆಲ್ಲ ಸೇರಿಕೊಂಡು ನಾನು ಮಲಗಿದ್ದಾಗ ಪಂಚೇಂದ್ರಿಯಗಳ ದ್ವಾರ ಚಿತ್ರವಿಚಿತ್ರವಾಗಿ ಪ್ರಕಟಗೊಳ್ಳುತ್ತ ಹಿಂಸಿಸತೊಡಗಿದ್ದವು. ಅವುಗಳು ತಂಡೋಪ ತಂಡವಾಗಿ ನೆರೆದಿದ್ದ ಮನವೆಂಬ ಜಲಿ‌ಅನ್ ವಾಲಾಬಾಗಿನ ಇನ್ನೊಂದು ಬಾಗಿಲ ಬಳಿ ಜನರಲ್ ಡಯರನಂತೆ ಬದ್ಧಭ್ರುಕುಟಿಯಾಗಿ ನಿಂತಿರುವ ಅನ್ನಪೂರ್ಣಳಿಗೆ ಏನೆಂದು ಹೇಳುವುದು! ಏನೊಂದೂ ಹೇಳದೆ ಇರುವುದು! ಶಾಂಣ ಎಂಬ ನಾಯಕ ಪಾತ್ರವನ್ನು ಪುಷ್ಟೀಕರಿಸುವಂಥ ಅನಸೂಯಾ; ಕಾಂಚನಾ, ರಾಖೇಶರಂಥ ಪೋಶಕ ಪಾತ್ರಗಳು ಮೇಲುಗೈ ಸಾಧಿಸಿ ನೋಡುಗರಲ್ಲಿ ಕೇಳುಗರಲ್ಲಿ ಪ್ರಥಮ ಪೂಜೆ ಮಾಡಿಸಿಕೊಳ್ಳುವಂಥ ಅನ್ನಪೂರ್ಣೆಯಲ್ಲಿ ಹೊಚ್ಚ ಹೊಸ ಅನುಮಾನಗಳನ್ನು ಸೃಷ್ಟಿಸಿದ್ದವು… ನನ್ನ ದೃಷ್ಟಿಯಲ್ಲಿ ಅನ್ನಪೂರ್ಣೆ ಕೇವಲ ಹೆಂಡತಿ ಮಾತ್ರ ಆಗಿರಲಿಲ್ಲ… ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತ ಸ್ವರೂಪಿಣಿಯಾದ ಮಹಿಷಾಸುರ ಮರ್ದಿನಿ ಆಗಿರುವಂತೆಯೇ ರುದ್ರಗ್ರಂಥಿ ವಿಭೇದಿನಿಯೂ, ಸಹಸ್ರಾರಾಂಬುಜಾರೂಢೆಯೂ; ಸುಭಾಸಾರಾಭಿವರ್ಷಿಣಿಯೂ ಆದ ಸ್ರೀ ಲಲಿತೆಯೂ ಆಗಿದ್ದಳು. ನನ್ನೊಳಗಿನ ಅರಿಷಡ್ವರ್ಗಗಳಿಗೆ ಲಗಾಮು ಹಾಕಿ ನನ್ನನ್ನೂ ಒಬ್ಬ ಸದ್ವರ್ತನಾ ನರಮಾನವನನ್ನಾಗಿ ಮಾಡಿರುವ ಈ ಅನ್ನಪೂರ್ಣೇಶ್ವರಿ ನಿಜ ಹೇಳಬೇಕೆಂದರೆ ನನ್ನೊಳಗೆ ಒಂದು ಪೋಲೀಸ್ ಠಾಣೆಯನ್ನೇ ಸೃಷ್ಟಿಸಿದಳು. ಪತ್ತೆದಾರಿಕೆಗೆ ಸಂಬಂಧಿಸಿದಂಥ ಎಲ್ಲ ಗುಣಗಳನ್ನು ಲೀಲಾಜಾಲವಾಗಿ ರೂಢಿಸಿಕೊಂಡಿದ್ದಳು. ಆಕೆಯ ಕ್ರಾಸ್ ಕ್ವಶೆನ್ನಿನಿಂದ ಗಲಿಬಿಲಿಗೊಂಡು “ಯಾವ ಕಾಂಚನ?… ಎನ್ಕಥೆ?… ನನನ್ಗೊಂದೂ ಅರ್ಥವಾಗ್ತಿಲ್ಲ” ಎಂದೆ – ಮಹಾ ಮಳ್ಳಿಗನ ಸೋಗು ಧರಿಸಿ, ಕಾಂಚನ ನನ್ನೊಳಗಿನ ಎಲ್ಲಾ ಕೋಣೆಗಳನ್ನು ಆಕ್ರಮಿಸಿಕೊಂಡು ವಸ್ತಿ ಮಾಡಿರುವುದನ್ನು ಮರೆಮಾಚುತ್ತ ಕೆಲವು ಲೇಖಕರ ಜಾಯಿಮಾನ ಗಿರಿಜಮ್ಮ, ಸುಕನ್ಯರಂಥವರಿಂದ ಕೇಳಿಬಲ್ಲ ಆಕೆಗೆ ನನ್ನ ಉತ್ತರದಿಂದ ಸಮಾಧಾನವಾಗಲಿಲ್ಲ… “ಯಾವ ಕಾಂಚನ ಅಂತೀರಲ್ಲ… ಅದೇ ಕಾಂಚನ ಕಣ್ರೀ… ನೀವಿಷ್ಟು ದಿನ ಎಲ್ಲೆಲ್ಲಿಗೆ ಹೋಗಿದ್ರಿ? ಯಾರ್‍ಯಾರ್‍ನ ಕಂಡಿದ್ರಿ?… ಏನೇನು ಘನಕಾರ್ಯ ಸಾಧಿಸಿದ್ದೀರಿ ಎಂಬೋದೆಲ್ಲ ಗೊತ್ತು ಕಣ್ರಿ… ಬೆಕ್ಕು ಕಂಣು ಮುಚ್ಕೊಂಡು ಹಾಲು ಕುಡಿದ್ರೆ ಯಾರೂ ನೋಡೊದಿಲ್ಲಾಂತ ತಿಳ್ಕೊಳ್ತಂತೆ… ಹಂಗಾಯ್ತು ನಿಮ್ದೂನೂವೆ… ನೀವೆಂಥೋರಂಥ ಗೊತ್ತಿಲ್ವೇನ್ರಿ ನನಗೆ… ನನ್ ಕಂಣಿಗೆ ಮಂಣೆರಚ್ತೀರಾ… ಹ್ಹ… ಹ್ಹ…”ಎಂದು ಕಂಣಲ್ಲಿ ನೀರು ತಂದುಕೊಂಡು ಅದನ್ನೇ ಶಾಪ ಕೊಡುವ ಉದಕ ಮಾಡಿಕೊಂಡು ಝಳಪಿಸಿದಳು. ಮಾಳವ ದೇಶಕ್ಕೂ, ಬಂದೇಲ ಖಂಡಕ್ಕೂ ನಡುವೆ ಹರಡುಕೊಂದಿರುವ ಕೋಲಾಹಲ ಪರ್ವತ ಶ್ರೇಣಿಯಂತಾಗಿ ಬಿಡುವಳೋ ಎಂದು ಹೆದರಿದೆ. ಆಕೆಯ ಮುನಿಸೆಂಬ ಪಾಶುಪತಾಸ್ತ್ರವನ್ನು ಎದುರಿಸುವ ಶಕ್ತಿ ಕೈಹಿಡಿದ ಕ್ಷಣವೇ ಕಳೆದುಕೊಂಡಿರುವ ನಾನು ಕಂಚನ ಎಂಬುದು ನಾನು ಓದಿರುವ ಯವುದೋ ಕಾದಂಬರಿಯಲ್ಲಿನ ಪಾತ್ರವಿರಬಹುದೆಂದೂ; ಅದು ನಿದ್ದೆಯಲ್ಲಿ ಕನವರಿಕೆ ಮೂಲಕ ಪ್ರಕಟವಾಗಿರಬಹುದೆಂದೂ ಏನೇನೋ ಹೇಳಲು ಪ್ರಯತ್ನಿಸಿದೆ. ನನ್ನ ವಾಗ್‌ವೈಖರಿ ಸಮಯಪ್ರಜ್ಞೆ ತಂತ್ರೋಪಾಯಗಳನ್ನು ಕಳೆದ ಹದಿನೈದು ವರ್ಷಗಳಿಂದ ಗಮನಿಸುತ್ತ ಬಂದಿರುವ ಆ ಸೂಕ್ಷ್ಮಮತಿಯು “ರ್ರೀ ಎಲ್ಲಿವರ್‍ಗೂ ಇಂಥ ಸುಳ್ಳುಗಳ್ನ ಹೇಳ್ತಾ ಹೋಗ್ತೀರಿ… ಯಾವಳ್ನೋ ಅಂತರಂಗದಲ್ಲಿಟ್ಕೊಂಡು ಹೊರಗಡೆ ಮಾತಿಗೆ ಬೆಣ್ಣೆ ಹಚ್ತಿದೀರಲ್ಲ… ಇದೆಲ್ಲ ನನಗೆ ಗೊತ್ತಾಗೋಲ್ಲಾಂತ ತಿಳ್ಕೊಂಡೀರೇನು? ಇಂಥ ಮಾತುಗಳನ್ನ ಕೇಳೀ, ಕೇಳಿ ನನಗೆ ಸಾಕಾಗಿ ಹೋಗಿದೇರ್ರೀ… ನೀವು ಎಷ್ಟಿದ್ರು ಶಾಮನಂಥೋರ ಸ್ನೇಹಿತ್ರು… ಅವನಂಥೋರ ಚಾಳಿ ನಿಮ್ಗೂ ಬಡ್ಕೊಳ್ದಂಗಿರ್‍ತದೆಯೇ! ಹೋಗಿ, ಆ ಕಾಂಚನಾ ಎಂಬ ತಾಟಗಿತ್ತಿಬಳಿಗೆ ಹೋಗಿ ಇದ್ದುಬಿದಿ… ನಾನು ನಮ್ಮಕ್ಕಳನ್ನ ಕರ್ಕೊಂದು ನನ್ತವ್ರು ಮನೆಗೆ ಹೊಂಟೊಗ್ತೀನಿ…” ಎಂದು ಕೊಸರುತ್ತ ವಾಕ್ಯದೊಳಗಿಂದ ಅರ್ಥ ಹೋಗುವಂತೆ; ಕಾವ್ಯದೊಳಗಿಂದ ಅಲಂಕಾರ ಹೋಗುವಂತೆ ಸರಪರ ಎದ್ದು ಅಡುಗೆ ಸೇರಿ ಹಂಡೆ ಮೇಲೆ ಬಾಂಡಲೆಯನ್ನು ಬಡಿದು ದೊಡ್ಡ ಸದ್ದು ಮಾಡಿದಳು. ಪರಿಸ್ಥಿತಿ ಕೆಡುವ ಮೊದಲೆ ಸರಿಪಡಿಸಬೇಕೆಂದು ನಿರ್ಧರಿಸಿ ನಾನೂ ಎದ್ದು ಹೋಗಿ ಗುಗ್ಗುಳೋಪಾದಿಯಲ್ಲಿ ಧಗಧಗ ಉರಿಯುತ್ತಿದ್ದ ಆಕೆಯನ್ನು ಪರಿಪರಿಯಾಗಿ ಸಮಾಧಾನಿಸುವ ಕೃತ್ಯಕ್ಕಿಳಿದೆನು. ಕೇಳುವುದನ್ನು ಕೇಳಿ, ಕೇಳಿ ಆಕೆ ಎದೆಮೇಲೆ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು… ನಾನು ಒಂದು ಹಿಡಿ ಕಂಣೀರು ತಂದುಕೊಂಡು “ಹುಚ್ಚೀ‌ಇ ಯಾಕಳ್ತೀಯೇ?… ನಿನ್ಗೆ ದ್ರೋಹ ಬಗೆಯೋವಂಥ ಯಾವ ತಪ್ಪನ್ನೂ ನಾನು ಮಾಡಿಲ್ಲ… ಮುಂದೆ ಮಾಡೋದೂ ಇಲ್ಲ… ತಿಳೀತಾ ಸುಮ್ಕಿರು” ಎಂದು ಭರವಸೆ ನೀಡಿದೆ. ಅಪನಂಬಿಕೆಯಿಂದ ದಿತ್ತಿಸಿದಳು. … ಆಕೆ ಪ್ರಮಾಣ ಮಾಡಿಸಿದಳು. – ಮಾಡಿದೆ… “ಹಾಗಿದ್ರೆ ನೀವೆಲ್ಲೆಲ್ಲಿ ಹೋಗಿದ್ರಿ… ಯಾರ್‍ಯಾರ ಜೊತೆ ಮಾತಾಡಿದ್ರಿ ಎಂಬ ಬಗ್ಗೆ ಒಂಚೂರು ಬಿಡದ ಹಾಗೆ ಹೇಳಿಬಿಡ್ರಿ… ನೀವೇನು ತಪ್ಪು ಮಾಡಿದ್ರೂ ಹೊಟ್ಟೇಲಿ ಹಾಕ್ಕೊಳ್ತೀನಿ… ನಾವು ಹೆಣ್ಣಾಗಿ ಹುಟ್ಟಿರೋದೆ ಅದ್ಕೆ… ವಿಷಯ ಮರೆಮಾಚಿದ್ರೋ… ನನ್ನಾಣೆ…” ಎಂದು ಪಟ್ಟು ಹಿಡಿದಳು. +ರಾಮ್‌ಜೇಠ್ಮಲಾನಿಯಂಥ ಆಕೆ ಎದುರು ಮುಚ್ಚಿಡೋದಾದ್ರು ಏನಿದೆ? ರೋಗದ ವಿಷಯ ವೈದ್ಯರ ಎದುರೂ; ಖಟ್ಲೆ ವಿಷಯ ವಕೀಲರೆದುರೂ ಮಚ್ಚಿಡಬಾರದೂಂತ ಹಿರಿಯರು ಹೇಳಿರುವರು. ನಾನು ನನ್ನ ನಾಲಕೈದು ದಿನದ ಪ್ರವಾಸದ ಅನುಭವವನ್ನು ‘ಅ’ ಅಕ್ಷರದಿಂದು ಹಿಡಿದು ‘ಕ್ಷ’ ಎಂಬ ಅಕ್ಷರದವರೆಗೆ ಸಾಂಗೋಪಾಂಗವಾಗಿ ವಿವರಿಸಿತೊಡಗಿದೆನು. ಗುರಿ ಕಡೆ ನಿಗಾ ಇಟ್ಟಿರುವ ಬೇಟೆಗಾರನಂತೆ ಆಕೆ ಬಿಡುಗಣ್ಣಿಂದ ನನ್ನ ಮುಖವನ್ನೇ ನೋಫ್ಡುತ್ತಿದ್ದಳು. ಆಗ ನಾನು ಅನಸೂಯಮ್ಮನವರ ಮನೆಯಲ್ಲಿದ್ದ ಕಾಂಚನಾ ಎಂಬ ತರುಣಿಯ ಬಗೆಗೂ ಪ್ರಸ್ತಾಪಿಸದಿರಲಿಲ್ಲ… ಆಕೆ ನಿಟ್ಟುಸಿರು ಬಿಡುತ್ತ, “ಆಕೇನ ಮನಸ್ಸಿನಲ್ಲೇನಾದ್ರೂ ಪ್ರೀತ್ಸಿದ್ರೋ ಇಲ್ಲೋ ಅಷ್ಟು ಹೇಳಿ” ಎಂದು ‘ಢಾಂ’ ಅಂತ ಕೇಳಿದಳು. ನಾನು ಒಂಚೂರು ಅವಕ್ಕಾದೆ… ನಂಗೆ ಪಿ.ಯು.ಸಿ. ಓದುವಾಗ್ಲೆ ಮದ್ವೆ ಆಗಿದ್ರೆ ಆ ವಯಸ್ಸಿನ ಮಗಳಿರ್‍ತಿದ್ಲು ಕಣೇ ಅಂದೆ… “ಅಂದ ಮೇಲೆ ಆಕೀನ್ಯಾಕೆ ಕನವರಿಸ್ತಿದ್ರಿ!” ಎಂದು ಮರು ಪ್ರಶ್ನೆ ಹಾಕಿದಳು. “ಅದನ್ಯಾಕೆ ಈ ಅರ್ಥದಲ್ಲಿ ತಗೋತೀಯೇ ಪುಣ್ಯಾತ್ಗಿತ್ತಿ” ಅಂದೆ ತುಸು ಬೇಸರದಿಂದ. ಅಷ್ಟೆಲ್ಲ ಹೇಳೋದನ್ನು ಹೇಳಿ ಆದ ಮೇಲೆ ಕೇಳೋದನ್ನು ಕೇಳಿ ಆದ ಮೇಲೆ “ನೀವು ಬರೀತಿರೋ ಕಾ‌ಅದಂಬರೀನ ಬಚ್ಚಲ ಒಲೇಲಿ ಇಟ್ಟುಬಿಡಿ… ಸ್ನಾನಕ್ಕೆ ನೀರಾದ್ರು ಕಾಯ್ತವೆ” ಎಂದು ತೀರ್ಪು ಪ್ರಕಟಿಸಿದಳು… ತಲೆ ಮೇಲೆ ಕಂಚನಗಂಗ ಕಳಚಿ ಬಿದ್ದಂಥ ಅನುಭವವಾಯಿತು ನನಗೆ… ಬಲಗೈಯ ಮಧ್ಯಮ ಬೆರಳಿನ ಮುಂದೆಲುಬು ಸವೆಯುವಂತೆ ಬರೆಯಿಸಿಕೊಂಡಿರುವ ಕಾದಂಬರಿಯ ಹಸ್ತಪ್ರತಿಯನ್ನು ಅಗ್ನಿಗೆ ಅರ್ಪಣ ಮಾಡುವುದೆಂದರೇನು? ಮುಂಗೈಯ ತೆನ್ನಿಸ್ ಎಲ್ಬೋ ಸವೆದು ಕೊಡುತ್ತಿರುವ ಕಾಟ ಪರಿಶೀಲಿಸಿ ಡಾ.ಅರವಿಂದ ಪಾ‌ಅಟೀಲರು ‘ಒಂದೆರಡು ವರ್ಷ ಬರೆಯೋದು ಬಿಟ್ಟುಬಿಡಿ ಎಲ್ಲ ಸರಿಹೋಗ್ತದೆ’ ಎಂದು ಕೊಟ್ಟಿರುವ ಗಂಭೀರ ಸೂಚನೆಯನ್ನು ಲೆಕ್ಕಿಸದೆ ಬರೆದಿರುವ ಕಾದಂಬರಿಯನ್ನು ಬಚ್ಚಲ ಯಜ್ಞಕುಂಡಕ್ಕೆ ಬಲಿಕೊಡುವುದೆಂದರೇನು? ಶಾಮಂಣನ ನೆನಪುಗಳೊಂದಿಗೆ ತಳುಕುಹಾಕಿ ಕೊಂಡಿರುವ ನನ್ನ ಸ್ವಂತ ಬದುಕನ್ನೂ ಅನಾವರಣಗೊಳಿಸಿರುವ ಕಾದಂಬರಿಯನ್ನು ಒಲೆಯಲ್ಲಿಟ್ಟು ಸುಟ್ಟು ನೀರು ಕಾಯಿಸುವುದೆಂದರೇನು? ಹಾಗೇನಾದರು ಮಾಡಿದರೆ ಕಾದಂಬರಿಯೊಳಗಿನ ನೂರಾರು ಪಾತ್ರಗಳು ಸುಮ್ಮನಿದ್ದಾವೆಯೇ? ವಿವಿಧ ಕಾಲಮಾನದಲ್ಲಿ ಸತ್ತು ಬಟಾಬಯಲೊಳಗೆ ಅಂತ ಪಿಶಾಚಿಯಾಗಿ ಅಲೆಯುತ್ತಿರುವ ಅಪ್ಪ, ಅಜ್ಜಿ; ಶಾಮಂಣ, ಪರಮೇಶ್ವರಶಾಸ್ತ್ರಿ; ಶಿವಪೂಜೆ ಕೊಟ್ರಗೌಡ, ಅಲುಮೇಲಮ್ಮಜ್ಜಿ, ಇವೇ ಮೊದಲಾದ ನೂರೆಂಟು ಪಾತ್ರ ಸುಟ್ಟರೂ ಅದು ಹೇಗೆ ನಾಶ ಹೊಂದುತಾವೆ? ಮುಂದೆ ಒಂದಲ್ಲಾ ಒಂದು ರೀತಿಯಲ್ಲಿ ಕಥೆಗಾರನಾದ ನನ್ನ ಪಂಚೇದ್ರಿಯಗಳ ಮೂಲಕ ಪ್ರಕಟವಾಗುತ್ತ ಕಾಟ ಕೊಡದೆ ಇದ್ದಾವೆ? ಅದೂ ಅಲ್ಲದೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಕೋತ್ಯಾಂತರ ಮಂದಿಯ ಸಮೂಹ ಶ್ರಮದಿಂದ ರೂಪುಗೊಂಡಿರುವ ಭಾಷೆಗೆ ದ್ರೋಹ ಬಗೆದಂತಾಗುವುದಿಲ್ಲವೇ ತಮ್ಮೀ ಕೃತ್ಯದಿಂದ. “ನವಜಾತ ಶಿಶುವು ಬೇರೆಯಲ್ಲ; ಈ ಕಾದಂಬರಿಯ ಹಸ್ತಪ್ರತಿ ಬೇರೆಯಲ್ಲ್ ಕಣೇ… ವಾತ್ಸಲ್ಯವನ್ನು ಮೂಡುತ್ತಿರುವ ಕಾದಂಬರಿ ಬಗೆಗೂ ತೋರು…” ಎಂದು ಮೊದಲಾಗಿ ಕೇಳಿಕೊಳ್ಳಲು ಆಕೆ ಹೌದೋ? ಅಲ್ಲವೋ ಎಂಬಂತೆ ಒಪ್ಪಿಕೊಂದಳು. ಕಾದಂಬರಿ ಬರೀತಾ ಆ ಕದಂಬರಿಯ ಪಾತ್ರಗಳ ಗುನ ಸ್ವಭಾವಗಳನ್ನು ರೂಢಿಸಿಕೊಳ್ಳಕೂಡದೆಂದೂ; ಇಂಥ ಹಸು ಸ್ವಭಾವದವರು ಬರೆದಿರುವುದೇ! ಎಂದು ಓದುಗರು ಆಶ್ಚರ್ಯ ಪ್ರಕಟಿಸುವಂತಾಗಬೇಕೆಂದೂ; ಅನ್ನಪೂರ್ಣೆಶ್ವರಿಯವರು ಅಪ್ಪಣೆ ಕೊಡಿಸಿದರು… ನಾನು ತಲೆ ಅಲ್ಲಾಡಿಸಿ ಸಮ್ಮತಿಸಿದೆನು. ನಾನೂ; ನನ್ನ ಕಾಲ; ನನ್ನ ಸಮಾಜ; ನನ್ನ ದೇಶ ಇವೆಲ್ಲ ಕಾ‌ಅದಂಬರಿಯೊಳಗೆ ಲೀನವಾದಾಗಲೇ ಅದಕ್ಕೊಂದು ಮಹತ್ವ ಲಭಿಸುವುದೆಂದು ಹೇಳಿದರೆ ಆಕೆಗೆ ಅರ್ಥವಾಗುವುದಿಲ್ಲ. +ಈ ಘಟನೆ ಗತಿಸಿದ ನಂತರ ಹೆಚ್ಚು ಗೆಲುವಾದ ನಾನು ನನ್ನಲ್ಲಿ ಸೃಜನಶೀಲ ಪ್ರತಿಕ್ರಿಯೆಯನ್ನು ಹೆಂಡತಿ ತನ್ನ ಖಚರ ದೃಷ್ಟಿಯಿಂದ ಗಮನಿಸುತ್ತಿರುವಳೆಂಬ ಎಚ್ಚರಿಕೆಯಿಂದ ಟೇಬಲ್ ಲ್ಯಾಂಪಿನ ಒಂದು ಗೇಣಗಲ ಬೆಳಕಿನಲ್ಲಿ ಅಲ್ಲಲ್ಲಿ ಸಂಪಾದಿಸಿ ತಂದಿದ್ದ ಶಾಮಂಣನ ಗತ ಜೀವನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹರವಿಕೊಂಡು ಕೂತು ಪರಿಶೀಲಿಸಲು ಶುರುಮಾಡಿದೆ… ಒಂದೊಂದು ದಾಖಲೆಗೆ ಜೀವ ಮೂಡಿ ಮಿಸುಕುತ್ತಿರುವಂತೆ ಭಾಸವಾಗತೊಡಗಿತು. ಶಾಮಂಣ; ಶಾಸ್ತ್ರಿಗಳು; ಅಲುಮೇಲಮ್ಮಜ್ಜಿ; ಹಾಲಪ್ಪ; ನಿಂಗಮ್ಮಜ್ಜಿ; ಸಿದ್ದಮ್ಮಜ್ಜಿಯೇ ಮೊದಲಾದ ಗತಿಸಿದ ಪಾತ್ರಗಳು ನನ್ನ ವಾಮಪಕ್ಷದಲ್ಲೂ; ವರಲಕ್ಷ್ಮಿ; ಅನಸೂಯಮ್ಮ; ಕಾಂಚನ; ರಾಖೇಶರೇ ಮೊದಲಾದ ಗತಿಸಿರದ ಪಾತ್ರಗಳು ನನ್ನ ಬಲಪಾರ್ಶ್ವದಲ್ಲೂ ನೆರೆಯಲಾರಂಭಿಸಿ ತೇಬಲ್ಲೆಂಬ ಅಖಾಡವು ಕಿಕ್ಕಿರಿಯತೊಡಗಿತು… ‘ಎಲವೋ ದುರುಳ… ನಿನ್ನ ಪೆನ್ನು… ನಿನ್ನ ಹಾಳೆ ಅಂಥ ಓದುಗರನ್ನು ರಂಜಿಸಲೋಸುಗ ಬಾಯಿಗೆ ಬಂದದ್ದನ್ನು ಬರೆದು ನಮ್ಮ ಬದುಕಿಗೆ ಕಳಂಕ ಹಚ್ಚೀಯೆ… ಜೋಕೆ… ಎಂದು ಪ್ರತಿಯೊಂದು ಪಾತ್ರವೂ ಹೇಷಾರವ ಕೆನೆಯತೊಡಗಿತು. +“ಏನೇ ಚಿನಾಲಿ… ನಾನು ಅಪಘಾತದಲ್ಲಿ ವೈಕುಂಠವಾಸಿ ಆಗಿದ್ದೀನಂತ ತಿಳ್ಕೊಂಡು ಆ ನಿನ್ನ ಸಂಬಂಧಿ ವಲ್ಲಭನ ಮನೆಯೊಳ್ಗೆ ಮೊಸಳೆ ಕಣ್ಣೀರು ಹಾಕ್ತಾ ಕೂತಿದ್ದೀಯಾ… ಆ ಮ್ನೇಲಿ ಒಂದು ಪೂಜೆ ಉಂಟಾ ಪುನ್ಸ್ಕಾರ ಉಂಟಾ?… ನನ್ನ ಮೊಮ್ಮಕ್ಕಳಾದ ಶಿವರಾಮ್ಗೂನೂವೆ; ಅಶ್ವತ್‌ನಾರಾಯಣ್ಗೂವೆ ಸಂಸ್ಕೃತ ಅಭ್ಯಾಸ ಮಾಡಿಸಿ ವೈದಿಕಕ್ಕೆ ಹಚ್ಚಿ ಮನ್ತನದ ಗೌರವ ಕಾಪಾಡೋದು ಬಿಟ್ಟು ಕಿರಿಸ್ತಾನರ ಸ್ಕೂಲಿಗೆ ಹಾಕಿದ್ದೀಯಾ… ಈ ನಿನ್ನ ಕೃತ್ಯವನ್ನು ನಮ್ಮ ವಂಶದ ಹಿರಿಯರು ಕ್ಷಮಿಸಲಾರರು ಕಣೇ; ಕ್ಷಮಿಸಲಾರರು… ನಾನಿದ್ರೆ ನಿಮ್ಮೀ ಕೃತ್ಯಕ್ಕೆ ತೊಂದರೆ ಅಗ್ತದಂತ ತಾನೆ ಉಭಂ ಶುಭಂ ನುಡಿಯದೆ ತೀರ್ಥಯಾತ್ರೆಗೆ ಬೀಳ್ಕೊಟ್ತಿದ್ದು… ಇದ್ದ ಬದ್ದ ಹಣಾನೆಲ್ಲ ಕಳ್ಕೊಂಡು ಕಾಶೀ ಕ್ಷೇತ್ರದಲ್ಲಿ ಪವಿತ್ರ ಗಂಗಾನದಿ ದಡದ ಮೆಲೆ ನಾನು ಕೂತು ದಿನಗಳನ್ನು ಎಣಿಸ್ತಿರೋದು ನಿನ್ನ ಕರುಳಿಗೆ ಗೊತ್ತಾಗ್ತಿಲ್ಲಲ್ಲೇ… ನಿನಗೆ ಕರುಳಿದ್ರೆ ತಾನೆ ತಿಳಿಯೊದು… ನಾನು ನಿನ್ಗೆ ಎಷ್ಟೊಂದು ಪತ್ರ ಬರೆಸಿದೆ… ಏನ್ಕಥೆ ನೀನೊಂದಾದ್ರು ಪತ್ರ ಬರೆದ್ಯಾ ನಂಗೆ… (ವಿಳಾಸ ಗೊತ್ತಿದ್ರೆ ಹೀಗಾಗ್ತಿರಲಿಲ್ಲ) ಕಾಶೀ ವಿಶ್ವನಾಥ ಸ್ವಾಮಿ ದಿನಾಲು ಕನಸಿನಲ್ಲಿ ಕಾಣಿಸಿಕೊಂದು ಮುದುಕಿ ಎಷ್ಟು ದಿನಾಂತ ಬದುಕಿರ್‍ತಿ… ನನ್ ಪಾದ ಸೇರ್‍ಕೊಂಡುಬಿಡು… ನಿನ್ಗೆ ಸ್ವರ್ಗ ಲಭಿಸ್ತದೆ ಎಂದು ಹೇಳ್ತಾನೆ ಇದ್ದಾನೆ… ನಿನ್ನ ಗತಿಸಿದ ಗಂಡನ ಮುತ್ತಜ್ಜಮ್ದಿರಾದ ಘಂಟಾ ಶಾಮಾಶಾಸ್ತ್ರಿಗಳ ಆತ್ಮವೂ ಬಂದುಬಿಡಮ್ಮ ಎಷ್ಟು ದಿನಾಮ್ತ ವಿಲವಿಲನೆ ಒದ್ದಾಡ್ತಾ ಇರ್‍ತೀಯಾ… ಮನವ ಸಹಜ ಕ್ರಿಯೆಗಳನ್ನು ಮರೆತು ಸ್ವರ್ಗದಲ್ಲಿ ಆರಾಮ ಇರಬೌದಂತ ಕರೀತಾನೆ ಇದೆ… ನಾನರ್‍ಗೆಲ್ಲ ಹೇಳ್ತಿರೋದು ಒಂದೆ… +ನನ್ನ ಮೊಮ್ಮಕ್ಕಳಾದ ಶಿವರಾಮನ, ಅಶ್ವಥ್‌ನ ಮದುವೆ ಆಗದ ಹೊರತು ನಸ್ವರ ದೇಹ ತ್ಯಜಿಸುವುದಿಲ್ಲ… ಅಂತ… ಅಷ್ಟು ದೂರ ಇರೋಳು ಹ್ಯಾಂಗ ಬರ್‍ತಾಳಂತ ನೀನಂದ್ಕೊಳ್ಳಬೌದು… ಇಷ್ಟು ದೂರ ಬಂದಿರೋಳ್ಗೆ ಅಷ್ಟು ದೂರ ಹೋಗೋದು ಕಷ್ಟವಲ್ಲ ಎಂಬುದನ್ನು ಮರೀಬೇಡ… ನನ್ ಮಗನ ಚರಾಸ್ತಿಯಲ್ಲಿ ನನ್ನ ಪಾ‌ಇಗೆ ಬರೋದಿನ್ನೂ ಅದೆ… ಕಾಶಿಗೆ ಬಂದ ಮೆಲೆ ನಂಗೆ ಅದೆಲ್ಲ ನೆನಪಾಗಿದ್ದು… ಇದೇ ಕಾಶಿ ಮಹಿಮೆ ನೋಡು… ಗೋಸುಂಬೆ ಥರ ಇರೋ ನಿನ್ಗೆ ಇದೆಲ್ಲ ಏನರ್ಥ ಆಗ್ತದೆ… ಮುಂದೊಂದಿನ ಬಂದೇ ಬರ್‍ತೀನಿ… ಎಲ್ಲದಕ್ಕೂ ತಯಾರಾಗಿರು… ಹ್ಹಾಂ!” ಎಂದು ಅಲುಮೇಲಮ್ಮಜ್ಜಿ ಪಾತ್ರ್ವೌ ತನ್ನ ಸೊಸೆ ವರಲಕ್ಶ್ಮಿ ಎಂಬ ಪಾತ್ರವನು ತರಾಟೆಗೆ ತೆಗೆದುಕೊಂಡಿತು. ಕಾದಂಬರಿಕಾರನಂಥ ಅನ್ಯ ಪುರುಷನ ಎದುರಿಗೆ ತನ್ನನ್ನು ಹರಾಜು ಹಾಕುತ್ತಿರುವುದಲ್ಲ ಎಂಬ ದುಃಖಾವೇಶದಿಂದ ವರಲಕ್ಷ್ಮಿ ಎಂಬ ಪಾತ್ರವು “ಅಯ್ಯೋ ಆಯ್ಯೊ…” ಆಮ್ಟಾ ಏಡೇ‌ಏಡೇ ಬಡಿದುಕೊಂಡಿತು… “ನಾನದಾವ ಜನುಮದಲ್ಲಿ ಅದಾವ ಘನ ಘೋರ ಪಾಪ ಮಾಡಿದ್ದೆನೋ… ನಿನ್ನ ಸೊಸೆಯಾಗಿ ಅನುಭವಿಸ್ಲಿಕ್ಕೆ… ಅನುಭವಿಸಬಾರದದ್ದನ್ನೆಲ್ಲ ಅನುಭವಿಸಿದ ನಂತರವೂ ಬದುಕಿರುವ ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿರುವೆಯಲ್ಲಾ… ಎರಡು ಮಕ್ಕಳು ನನ್ನುದರದಿಂದ ಜನಿಸದಿದ್ದಲ್ಲಿ ಎಂದೋ ಸಲ್ಲೇಖನಾವ್ರತರೂಢಳಾಗಿ ಇಹ ವ್ಯಾಪಾರ ಮುಗಿಸಿಬಿಡುತ್ತಿದ್ದೆ ಅತ್ತೆಮ್ಮಾ… ಈ ವಲ್ಲಭ ರುಕ್ಮಿಣಿ ಆಶ್ರಯ ಕೊಡದಿದ್ದಲ್ಲಿ ನಾನೂ ಮಕ್ಕಳನ್ನು ಕಟ್ಟಿಕೊಂದು ತುಂಗೆಗೆ ಅರ್ಪಿಸಿಕೊಂದುಬಿದುತ್ತಿದ್ದೆ… ನಿನ್ನ ಮಗನಿಗಾದ ಗತಿ ನಿನ್ ಮೊಮ್ಮಕಳಿಗೂ ಬರಬಾರ್ದು ನೋದು… ವೈದಿಕ ಮಾಡೊದು ಕಲ್ತು ಅರೆಹೊಟ್ಟಿಯಿಂದ ನಿನ್ ಮೊಮ್ಮಕ್ಕಳು ಬದಿಕಿರೋದು ನಿನಗಿಷ್ಟವೇನು? ಬದಲಾದ ಕಾಲಧರ್ಮಕ್ಕೆ ತಕ್ಕಂತೆ ನಾನೂ ನಿನ್ ಮೊಮ್ಮಕ್ಕಳಿಗೆ ಇಂಗ್ಲೀಷು ಕಲಿಸೋ ಸ್ಕೂಲಿಗೆ ಹಾಕಿದ್ದೀನಿ ಅತ್ತೆಮ್ಮಾ… ಅವರೂ ಡಾಕ್ಟ್ರೋ. ಇಂಜಿನಿಯರೋ ಆಗಿ ತಮ್ಮ ಕಾಲ ಮೇಲೆ ನಿಂತುಕೊಂಡು ನಾಲ್ಕು ಜನರ ಹಾಗೆ ಸುಖವಾಗಿ ಬದುಕುವಂತಾದರೆ ಅದಕ್ಕಿಂತ ಸಾರ್ಥಕಥೆ ಮತ್ತೊಂದೇನಿದೆ? ಇನ್ನು ನಿನ್ನ ನಾವು ಸೇರ್‍ಲಿಲ್ಲಾಂತ ಅಪಾದನೆ ಹೊರಿಸ್ತಿದ್ದೀಯಾ? ಇದು ಶುದ್ಧ ಸುಳ್ಳು! ಈ ಕಾದಂಬರಿಕಾರ ಇದನ್ನೇ ನಿಜ ಅಂದ್ಕೊಂಡಾನು! ಇವ್ನೂ ಅನಂತಪುರಕ್ಕೆ ಬಂದಿದ್ದ ನಿನ್ನ ಮೇಲೆ ನಮ್ಗೆಲ್ಲ ಎಷ್ಟೊಂದು ಪ್ರೀತಿ ಇದೆ ಅಂತ ಇವ್ನಿಗೂ ಗೊತ್ತು… ಜಲದೊಲಗೆ ಘೃತದ ಬಿಂದುವಿನಂತೆ ರಾಮಾ ಕೃಷ್ಣಾಂತ ನಾನು ದಿನ ನೂಕುತ್ತಿರೋದ್ನ ಈ ಮನುಷ್ಯನೂ ನೋಡ್ಕೊಂಡು ಬಂದಿದ್ದಾನೆ ಅತ್ತೆಮ್ಮ… (ಕಾದಂಬರಿಯಲ್ಲಿ ಇದನ್ನೆಲ್ಲ ಎದ್ದು ಕಾಣುವಂತೆ ಪ್ರಸ್ತಾಪಿಸು ಮಹರಾಯಾ) ಶ್ರೀ ವಲ್ಲ್ಭ ದಂಪತಿಗಳು ಲಕ್ಷಕ್ಕೊಬ್ಬರು… ಒಡಹುಟ್ಟಿದ ಅಕ್ಕನಿಗಿಂತ ನನ್ನನ್ನು ಹೆಚ್ಚಾಗಿ ನೋಡ್ಕೋತಿದ್ದಾರೆ. ಮನೆ ಖರ್ಚಿಗೆ ಅವರು ನನ್ನಿಂದ ಚಿಕ್ಕಾಸೂ ಪಡೆದಿಲ್ಲ… ಇದ್ದ ಹಣಾನೆಲ್ಲ ಮಕ್ಕಳ ಹೆಸರಿಗೆ ಮಾಡಿಸಿ ಬ್ಯಾಂಕಿನಲ್ಲಿಟ್ಟು ಬಿಟ್ಟಿದ್ದೀನಿ. ಅವರೇ ಇಲ್ಲಾಂದ ಮೇಲೆ ಆ ಹಣ ತಗೊಂಡು ನಾನ್ಯಾವ ಭೋಗ ಅನುಭೋಗ್ಸ್ಲಿ ಹೇಳು ಅತ್ತೆಮ್ಮಾ… ಶ್ರೀವಲ್ಲಭನಾಗ್ಲೀ ಅತನ ಹೆಂಡತಿ ರುಕ್ಮಿಣಿಯಾಗಲೀ ಸತ್ತೋರ ಅಥವ ಕಂಡೋರ ಗಂಟಿಗೆ ಆಸೆ ಪಡೊದಿಲ್ಲಾಂತ ಪ್ರಮಾಣ ಮಾಡಿ ಹೇಳ್ತೀನಿ… ಬೇಕಾದ್ರೆ ಈ ಕಾದಂಬರಿಕರನ್ನೇ ಕೇಳು… ನಿನ್ನ ಬಗ್ಗೆ ನಮಗಾಗ್ಲೀ; ಶ್ರಿ ವಲ್ಲಭಗಾಗಲೀ ಪ್ರೀತಿ ಇಲ್ಲಾಂತ ತಿಳಿಕೊಂಡಿದ್ರೆ ಅದು ನಿನ್ನ ತಪ್ಪು ಅತ್ತೆಮ್ಮ. ಇದ್ದಷ್ಟು ದಿನ ನಮ್ಮ ಮೆಲೆ ಅನುಮಾನ ಪಟ್ಕೊಂಡಿ. ಪರಮಾನ್ನದಲ್ಲಿ ವಿಷ ಹಾಕಿದ್ದಾರಂತ ದೊಡ್ಡ ರಂಪಾಟ ಮಾಡ್ದಿ… ಅದೂ ಸಾಲ್ದೂಂತ ಹೃಷಿಕೇಶ, ಹರಿದ್ವಾರ ಕಾಶಿ ಅಂತ ಹೊಂಟುಬಿಟ್ಟೆ. ಒಂದು ಮಾತು ಮೊದ್ಲೆ ತಿಳಿಸಿದ್ರೆ, ನಾವೇ ಒಳ್ಳೆಯದು ಕೆಟ್ಟದ್ದು, ವಿಚಾರಿಸಿ ಏರ್ಪಾಟು ಮಾಡ್ತಿದ್ವಿ, ಹಾಗೆ ತಿಳಿಸೋ ಸೌಜನ್ಯ ತೋರಿಸ್ಲಿಲ್ಲ ನೀನು. ಪ್ರಾಯನ ಸುಖಕರವಾಗ್ಲಿ ಅಂತ ನಾವು ಮನದಲ್ಲೆ ಹಾರೈಸಿದ್ವಿ… ಇದು ಮುಂಗೋಪಿಯಾದ ನಿನಗೆ ಅರ್ಥವಾಗಲಿಲ್ಲ. ನಮ್ಮ ವಿಳಾಸ ಮತ್ತಿತರ ವಿವರ ಒಯ್ಯದಿದ್ದುದು ನಮ್ಮ ತಪ್ಪು ಹೇಗಾಗುತ್ತದೆ? ನಿನಗೆ ತಿಳಿಯದ ಹಾಗೆ ಭಾರತದ ಎರಡು ಮೂರು ಭಾಶೆಗಳಲ್ಲಿ ನಮ್ಮ ವಿಳಾಸ ಬರೆದ ಚೀಟಿಗಳನ್ನು ನಿನ್ನ ಚೀಲದಲ್ಲಿ ಇಟ್ತಿವೆಂದುಕೋ; ಅಕ್ಷರಗಲನ್ನು ನೀನು ಸಿಡಿಮದ್ದು ಎಂದು ಭಾವಿಸಿ ಹರಿದೆಸೆಯದೇ ಇರುತ್ತಿರಲಿಲ್ಲ… ಅರವತ್ತು ಆದಮೇಲೆ ಅರಳುಮರುಲು ಎಮ್ಭೋ ಮಾತಿಗೆ ನೀನು ಪ್ರತ್ಯಕ್ಷ ನಿದರ್ಶನ ಅತ್ತೆಮ್ಮಾ… ನನ್ನಂಥ ಹತಭಾಗಿನಿಯರಿಗೆ ಹರಿದ್ವಾರ, ಕಾಶಿ ಪುಣ್ಯಕ್ಷೇತ್ರಗಳು ಗಾಳಿಗಂಟು ಮಾತ್ರ… ಆದ್ದರಿಂದ ಮಕ್ಕಳನ್ನೇ ತೀರ್ಥಕ್ಷೇತ್ರಗಳೆಂದು ಭಾವಿಸಿ ಸಂತೋಷಪಡುತ್ತಿರುವೆನು. ನಮ್ಮೆಲ್ಲರ ಪರವಾಗಿ ಕಾಶಿಯಂಥ ಪುಣ್ಯಧಾಮದಲ್ಲಿರುವ ನೀನು ಈಗಾಗಲೇ ಕಾಶೀರಮಣ ವಿಶ್ವನಾಥನನ್ನೂ; ಆತನ ಪತ್ನಿಯರಾದ ವಿಶಾಲಕ್ಷಮ್ಮ, ಅನ್ನಪೂರ್ಣಮ್ಮನವರನ್ನು ನೂರಾರು ಬಾರಿ ದರ್ಶಿಸಿ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿರಬಹುದು. ನೀವು ಕಾಶಿಯ ಯಾವ ಘಾಟಿನ ಎಷ್ಟನೆ ಮೆಟ್ಟಲ ಮೇಲೆ ಕೂತಿದ್ದು ಕಾಲಕ್ಷೇಪ ಮಾಡುತ್ತಿರುವಿರೋ ಏನೋ? ಖಂಡಿತ ನಿಮ್ಮ ಕೈಯಲ್ಲಿ ಜಪಮಾಲೆ ಇದ್ದೇ ಇರುತ್ತದೆ… ಅದು ಇರುವವರೆಗೆ ನಿಮಗೆ ಭಯವಿಲ್ಲ. ಅದು ಕಳೆಯುವ ಹೊತ್ತಿಗೆ ನಮ್ಮ ಮಕ್ಕಳೂ ದೊಡ್ಡವರಾಗಿರುತ್ತಾರಲ್ಲದೆ ನಿನ್ನನ್ನು ಹುಡುಕಲು ಸಮರ್ಥರಾಗಿರುತ್ತಾರೆ… ನೀನು ಇಚ್ಛೆಪಟ್ಟರೆ ನಿನ್ನನ್ನಿಲ್ಲಿಗೆ ಖಂಡಿತ ಕರೆತರುತ್ತಾರೆ… ಹೆದರಬೇಡಿ… ನಿನ್ನ ನೆನಪಿನಲ್ಲಿ ನಾನದೆಷ್ಟು ಕೃಶಳಾಗಿದ್ದೇನೆ ಗೊತ್ತೆ? ದೂರ ಇದ್ದು ಹಿಂದೂ ಮುಂದೂ ತಿಳಿಯದೆ ಶಪಿಸುತ್ತಿರಬೇಡಿ… +ಇದರಿಂದ ನಮಗೆ ಶ್ರೇಯಸ್ಸಲ್ಲ ಕಣತ್ತಯ್ಯಾ… ನಾನು ಹೀಗೆ ಹೇಳ್ತಿದ್ದೀನಂತ ತಪ್ಪು ತಿಳ್ಕೋಬೇಡಿ… ಕ್ರಮೇಣ ಆಧುನಿಕ ಮನಸ್ಸನ್ನು ರೂಢಿಸಿಕೊಂಡಿದ್ದ ನಿಮ್ಮ ಮಗಂದಿರನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಸುಖವಾ‌ಅಗಿಡಲು ನಾನು ಪಟ್ಟ ಕಷ್ಟ ನಿಮ್ಗೂ ಗೊತ್ತು… ಆ ಭಗವಂತನಿಗೂ ಗೊತ್ತು! ನಿಮ್ಮ ಮಗನ ಕೈ ಹಿಡಿಯದೆ ನಾನು ಬೇರೆಯವರ ಕೈ ಹಿಡಿದಿದ್ದರೆ ನಿಮ್ಮ ಮಗಂದಿರೂ ಸುಖವಾಗಿರ್‍ತಿದ್ರು… ನಾನೂ ದೀರ್ಗ ಸುಮಂಗಲಿಯಾಗಿರ್‍ತಿದ್ದೆ. ರುಕ್ಮಿಣಿಯನ್ನು ಪತ್ನಿಯಾಗಿ ಅವರೂ; ಸೊಸೆಯಾಗಿ ಸ್ವೀಕರಿಸಿದ್ದರೆ ನೀವೂ ಸುಖವಾಗಿರ್‍ತಿದ್ರಿ ಅಂತ ಈಗ ಅನ್ನಿಸ್ತಾ ಇದೆ… ಆದರೆ ನು ಮಾಡುವುದು? ವಿಧಿ ನಿರ್ಣಯ ಹಾಗಿತ್ತು(ಅಲ್ವೇ? ಕದಂಬರಿಕಾರರೇ)… ಒಟ್ಟಿನಲ್ಲಿ ಹೇಗೋ ಬದುಕುತ್ತಿದ್ವಿ… ಆದ್ರೆ ಈ ಗಯ್ಯಾಳಿ ಮೂರುಕಾಸಿನ ಸೂಳೆ ಅನಸೂಯ… ನಮ್ಮನ್ನು ಸುಖವಾಗಿರಲು ಬಿಡ್ಲಿಲ್ವಲ್ಲ…” ಎಂದು ವರಲಕ್ಷ್ಮಿ ಎಂಬ ಪಾತ್ರ ನಿಟ್ಟುಸಿರು ಬಿಡುವ ಮೊದಲೆ ಅನಸೂಯ ಎಂಬ ಪಾತ್ರವು ನಖಶಿಖಾಂತಧಗಧಗ ಉರಿದುಹೋಯಿತು.ಅದು ನನ್ನ ಟೇಬಲ್ ಮೆಲಿದ್ದ ಟಿಪ್ಪಣಿಯೊಳಗಿಮ್ದ ಬೃಹದಾಕಾರವಾಗಿ ಬೆಳೆದು ನಿಂತಿತು… “ಅಯ್ಯೋ… ಅಯ್ಯೋ” ಅಂತ ಎದೆ ಎದೆ ಬಡಿದುಕೊಂಡಿತು. “ಆ‌ಆ ಘಾರಾಟೀ ಆ‌ಆದ್ಟೀರೊ ಂಆ‌ಆಟ್ಣಾ ಖೆಲೀಡೀ ಎನಪ್ಪಾ ಕಾದಂಬರಿಕಾರಾ… ನೀನೆ ಬಂದು ನೋಡ್ದೆಲ್ಲಾ ನನ್ನ ಪರಿಸ್ಥಿತೀನ… ಸೋಮಾರಪ್ಯಾಟೆ ಎಂಬೋ ಸೋಮಾರಪ್ಯಾಟೆ ನನ್ನನ್ನೋಡಿ ಮಮ್ಮಲನೆ ಮರುಗುತ್ತಿರೋದ್ನ… ನಾನು ಸೂಳೆ ಆಗಿರಬೌದು… ಆದ್ರೆ ಯಾವ ಗರತಿಗಿಂತ ಏನು ಕಡ್ಮೆ ಇದ್ದೀನಂತ… ತಲಬಾಕ್ಲ ಮೇಲೆ ನನ್ ಶಾಮೂನ ಫೋಟೋನ ಹಾಕಿ ಹೂವ್ನಾರ ಇಳಿಬಿಟ್ಟು ಲೊಬಾನ ಎತ್ತಿ ಊದ್ನ ಕಡ್ಡಿ ಹಚ್ಚಿತ್ತು ಸಣ ಮಾಡೀ ಮಾಡೀ ಮೊಣ್ಕಾಲೆಂಭೋವು ಟೆಂಗಿನ ಚಿಪ್ಪಾಗಿರೋದು ಯಾರ್‍ಗಾರ ಯಂಗೆ ಗೊತ್ತಾಗತೈತೆ. ಇಟ್ಕೊಂಡೋಳಿರೋ ತನಕ ಕಟ್ಕೊಂಡೋಳು ಕೊನೀತನ್ಕ ಎಂಬ ಗಾದಿ ಮಾತ್ನ ತಿರುಗಾ ಮುರುಗಾ ಮಾಡ್ದೋಳಪ್ಪಾ ನಾನು. ಇದೇನೀಕೆ ಮಾತ್ಮಾತ್ಗೆ ಸೂಳೇ ಸೂಳೇಂತ ಹಂಗಿಸ್ತಾಳೇಂತ… ಹೌದು… ನಾನು ಸೂಳೆ… ನಮ್ಮವ್ನೂ ಸೂಳೆ. ನಮ್ಮಮ್ನೂ ಸೂಳೆ ಯಾರಿಲ್ಲಾಂದ್ರೀಗಾಂತ… ಇದು ನಮ್ಮ ಕುಲ ಕಸುಬಪ್ಪಾ ಕುಲ ಕಸುಬು… ರಾಜಮಾರಾಜ್ರಿಂದ ಬಂದಿರೋ ಕುಲಕಸುಬಪ್ಪಾ… ದೇವ್ರು ಗುಡ್ಯಾಗ ನರ್ತನ ಮಾಡ್ತಿದ್ದೋರು ನಾಟಕಗೂಳಾಗ ಪಾತ್ರ ಮಾಡಲಕ ಹತ್ತಿ ಪಾತರದೋರನ್ನಿಸ್ಕಂಡ್ವಿ… ಅದ್ರೊಂದ್ರಿಂದ್ಲೆ ಹೊಟ್ಟೆ ತುಂಬಲ್ಲಾಂತಿಟ್ಕೋ… ಆದ್ರೆ ಹಿಂಗಲಾಗ ಮುಂಗಲಾಗ ಕಸುವಿರೋ ಗಂಡುಸು ಮಂದಿ ಬಿಡಬೇಕಲ್ಲ… ಮೂಗಿಗೆ ತುಪ್ಪ ಹಚ್ಚಿ ಮಲಕ್ಕಳ್ಳಿಕ್ಕೆ ಹತ್ತಿದ್ರು… ಡಬ್ಬಿ ಅಂಗಡ್ಯಾಂಗಿಂದೆಂಗ ಕೊಡ್ತಾರೋ ಅಂಗ ಕೊಟ್ವಿ ತೊಗಂಡ್ವಿ! ಇದರಾಗ ತಪ್ಪೇನೈತಂತ… ನಮ್ಗೂ ಒಂದು ನೀತಿ ನಿಯತ್ತೈತಪ್ಪಾ… ನಾವೇನು ಆಕಿ ಗಂಡನ್ನಕೈ ಹಿಡ್ದು ಎಳೆಕೊಂಡು ಬಂದ್ವೇನು? ತಾನೇ ರಾಕೇಚನ ಜತಿ ಮಾಡ್ಕೊಂಡು ಪ್ಯಾಟಿಯೊಳಕ್ಕೆ ಬಂದ. ಪರಮೇಸೂರ ಶಾಸ್ತ್ರಿಗಳ ಮೊಮ್ಮಗ್ನ ಸಾವಸ್ಯಾಕ ಬೇಕೂಂತ ನಾವ್ಯಾರೂ ಅವನ ತಂಟೆಗೋಗ್ಲಿಲ್ಲ… ರಾಕೇಚ ಹಿಂಗಿಂಗ ಅಂತ ಬಂದು ಹೇಳ್ಳಿದ್ರೆ ನಾವಂಗಲ್ಲ ರೊಕ್ಕ ಕೊಟ್ಟೋರ್‍ಗೆಲ್ಲ ಮಲಿಕ್ಕೊಂತ ಹೋಗೋರಲ್ಲಾಂತ ಹೇಳೂಂತ ಹೇಳಿ ಕಳುವಿದೆ. ರಿಣ ಇತ್ತು ಮುಂದೆಂಗೋ ನಾವಿಬ್ರೂ ಜತಿಯಾದ್ವಿ… ನನ್ ಪ್ರೀತಿ ಮೇಲಾಯ್ತೇ ಹೊರ್‍ತು ಈ ವರಲಕ್ಷ್ಮಿಯ ಪಾತಿವ್ರತ್ಯ ಮೇಲಾಗ್ಲಿಲ್ಲಪ್ಪಾ ಕಾದಂಬರಿಕಾರ… ಈ ಪತಿವ್ರತೆ ಎಷ್ಟೊ ಬಾರಿ ನಂ ಪ್ಯಾಟಿಗೆ ನುಗ್ಗಿ, ನಂ ಮನೆ ಮುಂದೆ ನಿಂತು ಸಿಕ್ಕಾಪಟ್ಟೆ ಒದರಾಡಿ ಗಂಡನ ಮಕಕೆ ಮಣ್ಣು ತೂರಿ ಹೋದ್ಲಲ್ಲ… ಆಗೆಲ್ಲಿ ಹೋಗಿತ್ತೂಂತ ಈಕೆಯ ಪಾತಿವ್ರತ್ಯಾಂತ… ನೀನು ನಿಯತ್ತಿನ ಮನುಷ್ಯನಾಗಿದ್ರೆ ನನ್ನಂಥ ಹೆಂಣಿನ ಕರುಳೊಕ್ಕು ಬರೀತಿ… ಇಲ್ಲಾಂದ್ರೆ ಇಲ್ಲ… ಯಾವ್ದೇ ಹೆಂಗಸನ್ನ ಪತಿವ್ರತೆ, ಸೂಳೆಂತ ಗೆರೆ ಕೊಯ್ದು ನೋಡಬ್ಯಾಡಪ್ಪಾ.. ಅಲಲಲಾ… ನನ್ ಕರುಳೆಂಥದೂಂತ ನನಗ್ಗೆ ಗೊತ್ತೇ ಹೊರ್‍ತು ಇನ್ನೊಬ್ಬರ್ರಿಗೆಂಗ ಗೊತ್ತಾಗ್ತದೆಯೇ (ಅಮ್ಮಾ… ತಾಯಿ… ನೀನು ಮಹಾ ಜಗಳಗಂಟಿ… ನಿನ್ಗಲ್ಲ ನಾನೇಳ್ತಿರೋದು… ಈ ಕಾದಂಬರಿಕಾಗೆ… ನೀನಾಗ್ಲಿ… ನಿಮ್ಮತ್ತೆಯಾಗ್ಲಿ ಹಂಗ್ಯಾಕ ದುರುಗುಟ್ಟಿ ನೋಡ್ತೀರಿ… ಸುಮ್ಕಿರ್ರಿ) ಅಲ್ಲಾಪ್ಪಾ… ಹೊಟ್ಟೇಲಿ ಹುಟ್ದೋವೆ ಮಕ್ಳೇನು… ನಮ್ ಶಾಮನ ಮಕ್ಳು ನನ್ನೋವ್ರು ಅಲ್ವೇನು? ಆ ಶಿವರಾಮೂನ, ಅಶ್ವತ್ಥಾನ ಕಣ್ತುಂಬ ನೋಡ್ಬೇಕೂಂತ ಅಷ್ಟು ದೂರದ ಅನಂತಪುರಕ್ಕೆ ಎದ್ಕಂತ ಬಿದ್ಕಂತ ಹೋದ್ರೆ ಈ ನನ್ ಸವತಿ ಬಾಯಿಗೆ ಬಂದಂಗ ಅಂದು ಮಂಗಳಾರತಿ ಮಾಡೋದೇನು? ಎತ್ತಿಕೊಂಡ್ರೆ ಆ ಹಸುಕಂದಮ್ಮಗಳ ಮೈ ಮಲಿನಾಗ್ತಿತ್ತೇನು? ಈಕೆ ಸಿರಿವಲ್ಲಭನ ಕೂಡೆ ಸೇರ್‍ಕೊಂಡು ನನ್ನ ಮಕ್ಳೂನ ಅಪಹರಿಸೋಕೆ ಬಂದಾಳಂತ ಕಂಪ್ಲೀಂಟು ಕೊಟ್ಟಿದ್ರಪ್ಪಾ ಕಂಪ್ಲೀಟು… ಆ ಇನುಸುಪೆತ್ರು ನಂಗೆ ಗೊತ್ತಿದ್ದಾತಾದ್ರಿಂದ ಬಚಾವಾಗಿ ಬಂದೆ… ಇಲ್ಲಾಂದ್ರೆ ನಾನು ಜೆಲಲ್ಲಿ ಕೊಳಿಬೆಕಾಗಿತ್ತ… ಇದು ಯಾವುದೇ ಹೆಂಗಸು ಇನ್ನೊಂದು ಹೆಂಗಸಿನ ಮ್ಯಾಲೆ ಮಾಡೋ ಕೃತ್ಯಾನಾ? ನೀನೇ ಹೇಳು! ನೀನು ನಿಜವಾಗ್ಲು ನಿಮ್ಮವ್ವನ ಮಗನಾಗಿದ್ರೆ ನಿಜ ಸೋಸಿ ಬರೀತಿ… ಇಲಾಂದ್ರೆ ಇಲ್ಲ… ನಾನು ಸುಳ್ಳು ಹೆಳ್ತೀನಿಂತ ನೀನು ತಿಳ್ಕೊಂಡಿದ್ರೆ ಬೇಕಾದ್ರೆ… ನಮ್ಮ ಕಾಂಚನಳನ್ನ ಕೇಳು… ಏನೇ ಕಾಂಚನಾ ಹಂಗ್ಯಾಕ ಆ ಕಾದಂಬರಿಕಾರನ್ನ ಹುಳಿ ಹುಳಿ ನೋದ್ಕ್ಕಂತ ನಿಂತಿದ್ದೀ… ಮಾತಾಡು…” ಎಂದು ಅನಸೂಯಮ್ಮ ಎಂಬ ಪಾತ್ರವು ಕಾಂಚನಾಳ ಸೋಟಿಗೆ ತಿವಿದು ಎಚ್ಚರಿಸಿತು. ಟೇಬಲ್ ಮೇಲಿನ ಎಲ್ಲ ಪಾತ್ರಗಳಿಗಿಂತ ಕಾಂಚನಾ ಎಂಬ ಕೋಮಲ ಪಾತ್ರದ ಪರಿಸ್ಥಿತಿ ಅಯೋಮಯವಾಗಿತ್ತು. ನಾನು ಆಕೆಯ ಕಡೆ ನೋಡಲು ಆಕೆಯು ನಾರಾಯಣನು ಕೆರೆದುಕೊಂಡ ತೊಡೆಯಿಂದ ಹುಟ್ಟಿದ ಲೋಕೋತ್ತರ ಸೌಂದರ್ಯವತಿಯಾದ ಊರ್ವಶಿಯೋ; ಅಮೃತವನ್ನು ಹಂಚುವ ಕಾಲದಲ್ಲಿ ರಾಕ್ಷಸರನ್ನು ವಂಚಿಸುವ ಎಷ್ಟು ವೇಶ ದರಿಸಿದ ಮೋಹಿನಿಯೋ; ರಾಜರ್ಷಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ ಮೇನಕೆಯೋ; ಕಶ್ಯಪನಿಂದ ಪ್ರಾಥೇಯಳಲ್ಲಿ ಜನಿಸಿದ ಅಪ್ಸರೆಯಾದ ತಿಲೋತ್ತಮೆಯೋ; ಪ್ರವರನ ಪಂಚೇಂದ್ತಿಯಗಳಿಗೆ ಲಗ್ಗೆ ಹಾಕಿದ ವ್ರೂಥಿನಿಯೋ; ಬ್ರಹ್ಮನ ಜ್ಞಾನಶಕ್ತಿಯದ ಗಾಯ್ತ್ರಿಯೋ; ಪಾರ್ವತಿಯ ದೇಹಕೋಶದಿಂದ ಹೊರಬಂದ ಸೌಂದರ್ಯವತಿಯಾದ ಗೌರಿಯೋ; ಮಹಿಷಾಸುರರೇ ಮೊದಲಾದ ಅಸುರರನ್ನು ಸಂಹರಿಸುವ ಪೂರ್ವದ ಚಾಮುಂಡಿಯೋ ಎಂಬಂತೆ ಗೋಚರಿಸಿದಳು… ಅರುಣೋದಯ ಕಾಲದ ಸಮಸ್ತ ಸೊಬಗಿನಿಂದಲೇ ರೂಪುಗೊಂಡಂತಿದ್ದ ಕಾಂಚನಾ ಎಂಬ ಪಾತ್ರವು ಕಾದಂಬರಿಯ ಎಲ್ಲಾ ಮುಖ್ಯ ಪಾತ್ರಗಳ ಕಡೆ ಬೆದರುಗಂಣಿಂದ ನೋಡಿತು. ಅದು ಮೆಲ್ಲಗೆ ನನ್ನ ಪಕ್ಕ ಸರಿದು ಮೈ ಸೋಂಕಿ ನಿಂತುಕೊಳ್ಳಲು ನಾನು ರೋಮಾಂಚನದಿಂದ ಒಂದು ಕ್ಷಣ ತಲ್ಲಣಿಸಿಹೋದೆ. “ರ್ರೀ ಕಾದಂಬರಿಕಾರರೇ” ಎಂದು ಮಾತಾಡಿಸಲು ತಲೆ ಎತ್ತಿ ನೋಡಿದೆ. ಆಕೆಯ ಇಡೀ ಮುಖ ಒಂದು ನೋಟಕ್ಕೆ ಪುಲ್ಲಾರೆಡ್ಡಿಯ ಮಿಠಾಯಿ ಅಂಗಡಿಯಂತೆ (ಹೈದರಾಬಾದಿನಲ್ಲಿರುವ ಪುಲ್ಲಾರೆಡ್ಡಿ ಸ್ವೀಟ್ ಸ್ಟಾಲ್ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವುದು) ಇನ್ನೊಂದು ನೋಟಕ್ಕೆ ಬೆಂಗಳುರಿನ ಗಂಜಾಂನಾಗಪ್ಪನವರ ಚಿನ್ನದಾಭರಣದ ಅಂಗಡಿಯಂತೆ ಓಚರಿಸಿತು. ಆಕೆ ಬಿಟ್ಟ ಉಸಿರು ಮಂದಾನಿಲದಂತೆ ಸುಳಿಯಿತು. ಕ್ರಮೇಣ ಎಲ್ಲ ಪಾತ್ರಗಳನ್ನು ಬದಿಗೊತ್ತಿ ತಾನೊಂದೇ ವಿಜೃಂಭಿಸತೊಡಗಿತು. ಇದು ಹೀಗೆ ಮುಂದುವರಿದರೆಲ್ಲಿ ಬರೆಯುತ್ತಿರುವ ಕಾದಂಬರಿಯ ದಿಕ್ಕೇ ಬದಲಾಗಿಬಿಡುವುದೋ ಎಂದು ಹೆದರಿದೆ. ಮೆಲ್ಲಗೆ ಕುರ್ಚಿಯನ್ನು ಆಚೆ ಪಕ್ಕ ಎಳೆದುಕೊಂಡೆ. ಅದುವರೆಗೆ ಸ್ಥಿತಪ್ರಜ್ಞನಂತೆ ಎಲ್ಲ ಗಮನಿಸುತ್ತಿದ್ದ ಶಾಮಂಣ ಎಂಬ ಕೇಂದ್ರ ಪಾತ್ರವೂ ಮೆಲ್ಲಗೆ ಮದ್ಯವಾಸನಾಯುಕ್ತ ತನ್ನ ಬಾಯಿಯನ್ನು ನನ್ನ ಕಿವಿಗೆ ಹತ್ತಿರ ತಂದು ಲೋ… ಖಬರ್ದರ್. ಯಾವ ಕಾರಣಕ್ಕೂ ಆ ಹುಡುಗಿಯ ಮೇಲೆ ಕಣ್ಣು ಹಾಕೀಯಾ… ನಾನೂ ಬರೆಯಬೇಕೆಂದಿದ್ದ ಕಥೆಯ ವಸ್ತು ಆಕೆಯ ಬದುಕು. ಆಕೆಯ ಅಥವಾ ಆಕೆಯ ಬದುಕಿನ ಗೊಡವೆಗೆ ಹೋಗಬೇಡ… ಮಾಮೂಲು ಮನುಷ್ಯನಿಗಿಂತ ಲೇಖಕನಾದವನು ಹೆಣ್ಣಿಗೆ ಸಂಬಂಧಿಸಿದಂತೆ ಅಪಾಯಕಾರಿ. ಕಾಚನಾ ನನ್ನ ಮಗಳಿದ್ದಂತೆ. ನನ್ನ ಗೆಳೆಯನಾದ ನಿನ್ಗೂ ಸಹ. ಸಾಧ್ಯವಾದರೆ ಒಂದು ಒಳ್ಳೆ ಗಂಡು ನೋಡಿ ಮದುವೆ ಮಾಡಲು ಪ್ರಯತ್ನಿಸು. ಈ ವಿಶಯದಲ್ಲಿ ಅನಸೂಯಳಿಗೆ ಸಹಕರಿಸು. ಕಣ್ಣು ತಿಳಿಗೊಳಿಸು… ಆಯ್ತಾ…” ಎಂದು ಪಿಸುಗುಟ್ಟಿದ. ಪ್ರಾಣಾಯಾಮ ಮಾಡುತ್ತಿರುವವನಂತೆ ಮೂಗಿಗೆ ಅಡ್ಡ್ಡ ಇಟ್ಟುಕೊಂಡಿದ್ದ‌ಎರಡು ಬೆರಳುಗಳನ್ನು ತೆಗೆಯುತ್ತ ನಾನು “ನಾನು ಆ ಪೈಕಿಯಲ್ಲ ಮಹರಾಯ… ಹಾಗೇನಾದ್ರು ವರ್ತಿಸಿದ್ರೆ ನನ್ನ ಹೆಂಡತಿ ವರ್ಲ್ಡ್‌ವಾರ್ ಡಿಕ್ಲೇರ್ ಮಾಡಿಬಿಡ್ತಾಳ್:ಎ… ನಾನು ಮೊದಲೇ ನಾಗಸಾಕಿಯಂಥ ಮೆತ್ತನೆಯ ಮನುಷ್ಯ.. ನನ್ಗೂ ಸೌಂದರ್ಯವನ್ನು ಆರಾಧಿಸುವ ಮನೋಭಾ‌ಅವವಿದೆ… ಕುಲು ಕಣಿವೆಯನ್ನು ನೋಡಿದಂತೆಯೇ ಕಾಂಚನಾಳನ್ನು ನೋಡುವುದರಲ್ಲಿ ತಪ್ಪೇನಿದೆ? ನನ್ನನ್ನು ಅರ್ಥಮಾಡಿಕೊಂಡಿರೋದು ಇಷ್ಟೇ ಏನು?… ವ್ಯಾಖ್ಯಾನದೊಳಗೆ ಒಂದು ಆಯಕಟ್ಟಾದ ಜಾಗದಲ್ಲಿ ಕಾಂಚನಾಳ ಪೂರ್ವೋತ್ತರ ಬದುಕು ಅರಳದಿದ್ದರೆ ಕಾದಂಬರಿ ಗಗೆಟ್ಟಿಯಾಗುವುದಾದರೂ ಹೇಗೆ? ನಿನ್ನ ಪಾತ್ರಕ್ಕೆ ಅಪೂರ್ವ ಮೆರಗು ಬರುವುದಾದರೂ ಹೇಗೆ? ನಿರ್ವಿಕಲ್ಪಚಿತ್ತದಿಂದ ನಾನೀ ಕೆಲಸ ಮಾಡ್ತೀನಿ. ಹೆಂಗರುಳಿನ ನೀನು ಹೆದರ್‍ಕೋಬೇಡ… ಅಡ್ಡ ತಲೆ ಹಾಕದೆ ತೆಪ್ಪಗಿರ್‍ತೀಯ. ನಿನ್ನ ಸರದಿ ಬಂದಾಗ ನೀನು ಮಾತಡಿಸುವಿಯಂತೆ. ಅಥವಾ ನಿನ್ನ ಪರವಾಗಿ ನಾನೇ ಮಾತಾಡ್ತೀನಿ. ಎಲ್ಲ ಪಾತ್ರಗಳನ್ನು ಲೇಖಕನಾದ ನಾನು ನಿಯಂತ್ರಿಸಿ ಕಾದಂಬರಿಗೆ ತಕ್ಕ ಹಾಗೆ ಪೊಷಿಸದಿದ್ದರೆ ಹೇಗೆ? ಇದು ಲೇಖಕನಾದ ನನ್ನ ಹಕ್ಕು ಕರ್ತವ್ಯ ಮತ್ತು ಸ್ವಾತಂತ್ರ್ಯ ಕೂಡ… ತಿಳಿತಾ? ಎಂದು ನಾನು ನಿಷ್ಟುರವಾಗಿ ಹೇಳಲು ದೈಹಿಕವಾಗಿ ದುರ್ಬಲವಾಗಿದ್ದ ಶಾಮಂಣನ ಪಾತ್ರ ದೂರ ಸರಿದು ಟಿಪ್ಪಣಿಯೊಳಗಿನ ಒಂದು ವಾ‌ಅಕ್ಯದ ಮೇಲೆ ಕಾಲು ಚಾಚಿ ಮಲಗಿಕೊಂಡಿತು. ಈ ಲೇಖಕ ತೊಳೆದ ಮುತ್ತಿನಂತಿರುವ ಕಾಂಚನಾಳನ್ನು ಮಾತಾಡಿಸುತ್ತಾನಲ್ಲಾ! ಆಕೆ ಅಥವಾ ಅವನು ಪರಸ್ಪರ ನಯನಾಸ್ತ್ರ ಬೀರುತ್ತಿರುವರಲ್ಲ!… ಕಂಚನಾ ಕಾದಂಬರಿಕಾರಗೆ ಏನೇನು ಹೇಳುವಳೋ? ಎಂಬಂತ ಕುತೋಹಲದಿಂದ ಉಳಿದ ಪಾತ್ರಗಳು ನೋಡತೊಡಗಿದವು. “ಏನಮ್ಮಾ, ಕಾಂಚನಾ” ಎಂದು ನಾನು ಪಲುಕುವಷ್ಟರಲ್ಲಿ ಆ ಕೋಮಲ ಪಾತ್ರವು ಟಿಪ್ಪಣಿ ಅಕ್ಷರಗಳ ಕುರುಚಲು ಕಾಡಿಗೆ ವನವಿಹಾರಕ್ಕೆ ಹೋಗಿಬಿಟ್ಟಿತ್ತು… ಹಾಗೂ ಹೀಗೂ ಪ್ರತ್ನಿಸಿ ಬೆರಳ ಚಿಮುಟಿಗೆಯಿಂದ ಅದನ್ನು ಹಿಡಿದೆತ್ತಿ ನಿಲ್ಲಿಸಲು ಅದು ಒ‌ಅನೆ ಮೂಡಿ ಬೆಳ್ದಿಂಗಳು ಹರಡಿ ಉಗುರು ಕಡಿಯುತ್ತ =; ಕಾಲಬೆರಳಿಂದ ಅಕ್ಷರ ಮೀಟುತ್ತ ಅವನತ ಮುಖಿಯಾಗಿ ನಿಂತುಕೊಂಡುಬಿಟ್ಟಿತು. ನಾನಿದ್ದು “ಅಲ್ಲಮ್ಮಾ ಕಾಂಚನಾ… ನೀನು ಹೀಗೆ ಮೌನದಿಂದ ಇದ್ದು ಬಿಟ್ರೆ ಹೇಗಮ್ಮಾ? ಅನಸೂಯಮ್ಮನ ಸಂಗಡ ನೀನೂ ಅನಂತಪುರಕ್ಕೆ ಹೋಗಿದ್ದೆಯಾ/ ಹೋಗಿದ್ದ್ರೆ ಏನಾಯ್ತು ಅಂತ ಸ್ವಲ್ಪ ಹೇಳ್ತೀಯಾ… ಹೆದರಿಕೊಳ್ಳೊಕೆ ಇಲ್ಲಿ ಯಾ‌ಅರೂ ಕಡೇಲವರಿಲ್ಲ. ಎಲ್ಲ ನಿಮ್ಮವರೆ. ಹೆದರಬೇಡ ಧೈರ್ಯವಾಗಿ ಹೇಳು?” ಎಂದು ಕಳ್ಳತನದಿಂದ ಅದರ ಮೈದಡವಿದೆ. ಅದನ್ನು ಆಕೆ ಪ್ರತಿಭಟಿಸಲಿಲ್ಲ. ತಗ್ಗಿಸಿದ ತಲೆ ಮೇಲೆತ್ತದಂತೆ “ನಮ್ಮಮ್ಮ ಹೇಳೋದೆಲ್ಲ ಖರೇವ್ರಿ… ಖರೇವಲ್ದೆ ಆಕೆ ಬೇರೇನೂ ಹೇಳೋದಿಲ್ಲ…” ಎಂದು ಹೇಳುವಷ್ಟರಲ್ಲಿ ಜಲಜಲನೆ ಬೆವೆತುಬಿಟ್ಟಳು. ಕಪಟ ನಾಟಕ ಸೂತ್ರಧಾರಿಯಂತಿದ್ದ ನಾನು… “ಅಷ್ಟು ಹೇಳಿದ್ರೆ ಸಾಲ್ದಮ್ಮಾ ಕಾಂಚನಾ… ಸ್ವಲ್ಪ ವಿವರವಾಗಿ ನೀನು ಹೇಳಿಲ್ಲಾಂದ್ರೆ ವರಲಕ್ಷ್ಮಿ ಎಂಬ ಪಾತ್ರದೊಂದಿಗೆ ಅನಸೂಯ ಎಂಬ ಪಾತ್ರವು ತಳುಕುಬಿದ್ದು ನಿಜಾಂಶ ಮುಚ್ಚಿಹೋಗಿಬಿಡುತ್ತೆ” ಎಂದು ಧೈರ್ಯ ತುಂಬಿದೆ. ಕಾಂಚನಾ ಎಂಬ ಪಾತ್ರವೂ ನಿಜಕ್ಕೂ ವರಲಕ್ಷ್ಮಿ ಎಂಬ ಪಾತ್ರವನ್ನು ನೋಡಿ ಖಂಡಿತ ಹೆದರಿತ್ತು. ಹೇಳಲೋ ಬೇಡವೋ ಎಂಬಂತೆ ತಡೆ ತಡೆದು ಹೇಳತೊಡಗಿತು. “ನಮ್ಮವ್ವನ ಸಂಗಡ ನಾನೂ ಹೋಗಿದ್ದೇರಿ.. ತೋರಿಕೇಗಲ್ರಿ ನಮ್ಮಮ್ಮ ಅವ್ರ ಮನ್ಗೆ ಹೋಗಿದ್ದು… ಮನೆ ಬಾಕಲ ಈಚೆ ನಿಂತು ಅಕ್ಕಾ ಅಕ್ಕಾ ಎಂದು ಕೂಗುದ್ಲುರೀ… ನಮ್ಮನ್ನ ನೋಡುತ್ಲೆ ವರಲಕ್ಷ್ಮಿ ಚಿಕ್ಕಮ್ನೋರು ಕೆಂಡ ಮಂಡಲ ಆದ್ಲೂರಿ… ಯೇನೇ ಭೋಸೂಡಿ… ನನ್ ಮನೆಗೆ ಬಂದು ನನ್ನೇ ಅಕ್ಕಾ ಅಂತೀ ಏನೇ? ಇನ್ನೊಮ್ಮೆ ಅಕ್ಕ ಅಂದೀ ಅಂದ್ರ ನಿನ್ ನಾಲಗೇನ ಬುಡ ಸಹಿತ ಕಿತ್ತು ಪೋಮೆರಿನ್ ನಾಯ್ಗೆ ತಿನ್ನಿಸಿ ಬಿಡ್ತೀನಿ ಎಂದು ಗದರಿಸಿದ್ಲೂರಿ… ಅದಕ್ಕಿದು ನಮ್ಮಮ್ಮ ನಿಮ್ಗೆ ಅಕ್ಕಾ ಅನ್ದೆ ಬೇರೆ ಯಾರ್ಗೆ ಅನ್ಲಿ ಅಕ್ಕಾ… ಹಿಂದಿನೆಲ್ಲ ಮರ್‍ತು ಬಿಡ್ರಿ ಅಂತ ಕೈಮುಗಿದು ಕೇಳಿದ್ಲೂರಿ… ಅಲ್ಲೊಬ್ಬ ಗಂಡುಮಗ್ನೂ ಅವ್ರಿಗೆ ಸಪೋರ್ಟಾಗಿ ನಿಂತ್ಕೊಂಡಾರೀ… ಒಂದೇ ಒಂದು ಸಾರಿ ಮಕ್ಳೂನ ತೋರಿಸಿಬಿಡ್ರಿ ಅಕ್ಕಾ… ಹೊರಟೊಗ್ತೀವಿ ಎಂದು ಗೋಗರೆಯುತ್ತ ನಮ್ಮಮ್ಮ ಅವರ ಕಾಲಿಗೆ ಬಿದ್ದು ಬೇಡ್ಕೊಂಡ್ಲೂರಿ… ಅದಕ್ಕಿದ್ದು ವರಲಕ್ಷ್ಮಿ ಚಿಕ್ಕಮ್ನೋರು ಕಾಲಿಂದ ಜಾಡಿಸಿ ತಳ್ಳಿ ಬಿಟ್ರೂರಿ… ಅಂಗಾತ ಬಿದ್ದಿದ್ದ ನಮ್ಮಮ್ಮ ಅಳೋ ಮುಖಮಾಡ್ಕೊಂಡು ಅಳೋದ್ನ ನೋಡಲಾರದೆ ರುಕ್ಮಿಣಿ ಅಮ್ನೋರು ಸಮಾಧಾನದ ಮಾತ್ನ ಹೇಳಿದ್ರು ಚಿಕ್ಕಮ್ನೋರು ಕೇಳ್ಳಿಲ್ರಿ… ಅಮ್ಮನ ದುಕ್ಕ ನೋಡ್ಲಾರ್‍ದೆ ನನ್ಗೂ ಸಿಟ್ಟು ಬಂತ್ರೀ… ನಾನೂ ಒಂದ್ನಾಲ್ಕು ಮಾತು ಅಂದೇನ್ರೀ… ಇಲ್ಲಿ ಯಾರ ತಲೆ ಕೆಡಿಸ್ಬೇಕಂತ ಈ ಹುಡುಗೀನ ಕರ್ಕೊಂಡು ಬಂದೀಯೆ ಚಿನಾಲಿ ಎಂದು ಚಿಕ್ಕಮ್ನೋರು ಬಯ್ಯಲಿಕ್ಕ ಹಾತ್ತಿದ್ರೂರಿ… ಮಕ್ಕಳಿಗೇ ಅಂತ ತಂದಿದ್ದ ಪಾಕೆಟ್ನ ನಮ್ಮಮ್ಮ ಕೊಡಲಿಕ್ಕೆ ಹೋದ್ಲೂರಿ… ಚಿಕ್ಕಮ್ನೋರು ಅದ್ನ ಬೀದಿಗೆ ಎಸೆದ್ರೂರಿ ಅವ್ರೆಲ್ಲ ಸೇರ್ಕೊಂಡು ನಮಗ್ಬೆಯ್ಲಿಕ್ಕೆ ಹತ್ತಿದ್ರೂರಿ… ಇವ್ರೆಲ್ಲ ಸೇರ್ಕೊಂಡು‌ಎನಾದ್ರು ಅಪಾಯ ಮಾಡಿದ್ರೆಂತ ಹೆದರಿ ನಾವು ವಾಪಸು ಬಂದುಬಿಟ್ವಿ. ಹೆಂಗೋ ವಿಳಾಸ ಸಂಪಾದಿಸ್ಕೊಂಡು ಮಕ್ಳೋದೋ ಕಾರುಮೆಂಟಿಸ್ಕೂಲಿಗೆ ಹೋದ್ವಿರ್ರೀ… ಬಯಲೋಳಗೆ ಚೆಂಡಾಡ್ಕೊಂತಿದ್ದ ಮಕ್ಳು ಕರೆದ ಕೂಡ್ಲೆ ಹತ್ರ ಬಂದ್ವೂರಿ. ಪಿಳಿ ಪಿಳಿ ನೋಡಲಾಕ ಹತ್ತಿದ್ವೂರಿ. ನಮ್ಮಮ್ಮ ಅವ್ನ ಎತ್ಕೊಂಡು ಮುದ್ದು ಕೊಟ್ಟು ಅಳಲಿಕ್ಕೆ ಹತ್ತಿದ್ಲೂರಿ… ಮೇಡಂ ಬಂದು ಸಮಾಧಾನ ಮಾಡಿದ್ಲೂರಿ… ಮಕ್ಳೂನ ಒಳಗಡೆ ಕರ್‍ಕೊಂಡೋದ್ಲೂರಿ… ನಾನೋದಾಗ ನಡೆದಿದ್ದು ಇಷ್ಟೇರ್ರೀ… ಮತ್ತೊಮ್ಮೆ ಅಮ್ಮನ ಸಂಗಾತ ಹೋಗಿರ್‍ಲಿಲ್ರೀ… ನಾನು ಹೇಳಿದ್ದೆಲ್ಲ ಖರೇವ್ರಿ… ಖರೇವಲ್ದೆ ಬೇರೇನು ಹೆಳಲ್ರೀ” ಎಂದು ಚಿಕ್ಕ ಮಗುವಿನಂತೆ ವರದಿ ಒಪ್ಪಿಸಿದ ಕಾಂಚನಾ ಪಾತ್ರವುನಿಧಾನವಾಗಿ ಕುಗ್ಗುತ್ತಹೋಗಿ ಅಕ್ಷರಗಳೊಳಗೆ ಹೊಕ್ಕೊಂಡು ಅಂತರ್ಧಾನವಾಗಿಬಿಟ್ತಿತು. ಅದು ಮೊದಲೇ ನಾಚಿಕೆ ಸ್ವಭಾವದ ಕೋಮಲ ಪಾತ್ರ… ಅಂತರ್ಧಾನವಾಗದೇ ಇರಲು ಹೇಗೆ ಸಾಧ್ಯ?… ಅದನ್ನು ಹುಡುಕುವ ಕೆಲಸದಲ್ಲಿ ಮಗ್ನನಾದ ರಾಖೇಶ ಎಂಬ ಪಾತ್ರ ಕಂಡು ನನಗೆ ಸಿಟ್ಟು ಬಂತು. “ಲೇ ರಾಖೇಶಾ… ಇಂಥ ಹಡಬೆ ಪಾತ್ರಾ ಮಾಡದೆ ಸುಮ್ನೆ ನಿನ್ ಪಾಡಿಗೆ ನೀನು ನಿಂತ್ಕೋಳಯ್ಯಾ” ಎಂದು ಎಚ್ಚರಿಸಿದೆ.ಟಾಡಾ ಕಾಯಿದೆ ಅಡಿ ಬಂಧಿತರಾದವರಂತೆ ನಿಂತಿದ್ದ ಆ ಎಲ್ಲ ಪಾತ್ರಗಳನ್ನು ಒಮ್ಮೆ ನಖಶಿಖಾಂತ ಪರಿಶೀಲಿಸಿದೆ. ಇನ್ನು ಇವುಗಳನ್ನೆಲ್ಲ ಪ್ರಾಸಿಕ್ಯೂಷನ್ನಿಗೆ ಗುರಿಪಡಿಸೋದರಿಂದ ಯಾವ ಉಪಯೋಗವಿಲ್ಲ. ಇವು ಪರಸ್ಪರ ದೋಷಾರೋಪಣೆ ಮಾಡುತ್ತ ನಿಜಾಂಶದ ಮೇಲೆ ಕಲ್ಲು ಚಪ್ಪಡಿ ಎಳೆದು ಗೋಜಲೆಬ್ಬಿಸುತ್ತವೆ. ಇವುಗಳನ್ನು ಕಾದಂಬರಿಯ ಚೌಕಟ್ಟಿನೊಳಗೆ ಅಳವಡಿಸಿಕೊಳ್ಳುವುದು ಒಂದೇ; ಪಗಡಿಗಳಲ್ಲಿಟ್ಟು ಕಪ್ಪೆಗಳನ್ನು ತೂಗುವುದೂ ಒಂದೇ. ಆದರೆ ಇದು ಅನಿವಾರ್ಯ. ಒಂದೇ ಒಂದು ಸಾರಿ ಶಾಮಂಣ ಎಂಬ ಕೇಂದ್ರ ಪಾತ್ರವನ್ನು ಮಾತಾಡಿಸಿ ಪ್ರಾಸಿಕ್ಯೂಷನ್ ಮುಗಿಸಿ ಬಿಡುವುದು ಒಳ್ಳೆಯದೆಂದುಕೊಂಡೆ. ವಾಕ್ಯವೊಂದರ ಮೇಲೆ ನಿಟಾರನೆ ಮೈಚಾಚಿ ಮಲಗಿಕೊಂಡಿದ್ದ ಆ ಪಾತ್ರದ ಮುಖಕ್ಕೆ ಬ್ಲೇಡು ತಾಗದೆ ಎಷ್ಟು ದಿನಗಳಾಗಿರುವುದೋ ಏನೋ. ವರ್ತಮಾನದ ಗೆದ್ದಲಿಗೆ ಬಲಿಯಾಗಿದ್ದ ಆ ಪಾತ್ರವನ್ನು ನೋಡಿ ನನಗೇ ಒಂಥರಾ ಆಗಿ ಕಣ್ಣಲ್ಲಿ ನೀರುಬಂತು. ‘ಶಾಮಾ… ನನ್ನ ಶಾಮಾ… ನಿನ್ನೂ ಒಂಚೂರು ಮಾತಾಡಿಸೋದಿದೆ ಕಣಯ್ಯ… ಸ್ವಲ್ಪ ಎದ್ದು ಬರ್‍ತೀಯಾ ನನ್ನಪ್ಪಾ’ ಎಂದೆ. ಅದು ಮಲಗಿದಲ್ಲಿಂದಲೇ “ಹೋಗೋ ನಿಂದೇನು ಗೋಳು… ಸತ್ತಿರೋ ನನ್ನೂ ನೀನು ಬಿಡ್ತಿಲ್ವಲ್ಲೋ… ನನ್ನ ಬಗ್ಗೆ ಕಾದಂಬರಿ ಬರೆ ಅಂತ ಯಾವ ಬೋಳಿಮಗ ನಿನ್ಗೆ ಹೇಳಿದ್ನೋ ನನ್ನ ಪಾಲಿನ ಸಾಡೆಸಾತ್ ಶನಿಯೇ. ನಾನು ಸತ್ತಿರೋದೇ ಒಂದು ಛಾನ್ಸ್ ಅಂದ್ಕೊಂಡಿದ್ದೀಯಾ ಇದಕ್ಕಿಂತ ದೊಡ್ಡ ಕ್ರೌರ್ಯ ಯಾವ್ದಿದೆ?… ನೀನು ಕಾದಂಬರಿ ಬರೆಯೋದು ಬೇಡ… ನನ್ ಗೋಳು ಹುಯ್ದುಕೋಳ್ಳೋದೂ ಬೇಡ… ಬರೆಯೋದಿದ್ರೆ ಆ ಸಚಿವೆ ಜಲಜಾಕ್ಷಿ ಕಮಲಾಕರರ ಬಗ್ಗೆ ಬರೆ… ಬೆಂಗ್ಳೂರಲ್ಲಿ ಕಂಟಿಸ್ಸಾಕಾರಿನಲ್ಲಿ ಐಷಾರಾಮ ಜೀವನ ನಡೆಸ್ತಿರೋ ಅನಸೂಯ ರಘುರಾಮರ ಬಗ್ಗೆ ಬರೆ… ಪ್ರಸಿದ್ಧ ಇನ್ಸ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿಯ ಮಾಲೀಕರಾದ ಅವರು ಪ್ರಸಿದ್ಧ ಯೋಗಪಟು ಪಟುವರ್ಧನ್ ಮೂಲಕ ಮಾಜಿ ಪ್ರಧಾನ ಮಂತ್ರಿ ಶತಾವಧಾನಿ ಅಳಸಿಂಗ ರಾಯರಿಗೆ ಒಂದು ಕೋಟಿ ಇಪ್ಪತ್ತಾರುಲಕ್ಷ ಲಂಚ ಕೊಟ್ಟಿರೋ ಸಂಗತಿಯನ್ನು ವೃತ್ತಪತ್ರಿಕೆಗಳು ಪ್ರಕಟಿಸಿವೆಯಲ್ಲ… ಇದರ ಬಗ್ಗೆ ಬರೆಯೋ ಮಹರಾಯ. ಇಂಥ ವಿಷಯಗಳನ್ನು ತಲೆ ಹಚ್ಚಿಕೊಂಡಲ್ವೆ ನಾನು ಕುಡಿಯೋದನ್ನು ಕಲಿತದ್ದು. ಇಂಥ ಮೇಜರ್ ಪಾಯಿಂಟ್ಸ್ ಬಿಟ್ಕೊಟ್ಟು ನಮ್ಮಂಥ ಚಿಲ್ಲರೆ ಮಂದಿಯನ್ಯಾಕೆ ಪೀಡಿಸ್ತಿದ್ದೀಯಾ…” ಎಂದು ಗೊಣಗಿತು. ಶಾಮನೆಂಬ ಪಾತ್ರ ಸತ್ರನಂತರವೂ ಕಾದಂಬರಿಗೆ ಒಳ್ಳೆ ಕ್ಲೂಗಳನ್ನು ಕೊಡ್ತಿವೆಯಲ್ಲಾ ಎಂದು ಆಶ್ಚರ್ಯ ಚಕಿತನಾದೆ. ಸಂಸ್ಕೃತಿ ರಾಜ್ಯ ಇಲಾಖೆ ಸಚಿವೆ ಜಲಜಾಕ್ಷಿ ತನ್ನ ಗಂಡ ಮಸಾಲೆಯವರನ್ನು ಕಿವಿಸೋರುವ ಇಲಾಖೆಗೆ ಸರ್ಕಾರದ ಖರ್ಚಿನಲ್ಲಿ ಅಮೇರಿಕಾಕ್ಕೆ ಕಳಿಸಿರೋದು ಗೊತ್ತು; ಆ ದೂರದ ದೇಶದಲ್ಲಿ ಒಂದೇ ರೋಗದ ಜೊತೆಗೆ ನೂರು ರೋಗಗಳು ಪತ್ತೆಯಾಗಿ ಮಸಾಲೆಯವರು ತಿಂಗಳುಗಟ್ಟಲೇ ಉಳಿಯಬೇಕಾಗಿ ಬಂದಿರುವುದೂ ಗೊತ್ತು! ಲಂಡನ್ನಿನಲ್ಲಿ ಇನ್‌ಸ್ಟಾಂಟ್‌ಫುಡ್ ತಯಾರಿಕಾ ಕಂಪನಿ ಸ್ಥಾಪಿಸುವ ಸಲುವಾಗಿ ಕರ್ನಾಟಕದ ನಂಬರ್ ವನ್ ಮಿಲಿನಿಯರ್ ರಘುರಾಮ್ ಪತ್ರೊಡೆ (ಗ್ರೊವರ್, ಖನ್ನಾ, ಇಂಥ ಪೂರ್ವಪದದ ವಿಶೇಶಣಗಳಿಗೆ ಮಾರುಹೋಗಿ ರಘುರಾಮ ತನ್ನ ಆಪ್ತ ಕಾರ್ಯದರ್ಶಿ ಪಂಡಿತ್ ವಿನೂ ಸನ್ಯಾಲ್ ರವರ ಸಲಹೆಯಂತೆ ಪತ್ರೊಡೆ ಎಂಬ ವಿಶೇಷಣವನ್ನು ಕಾನೂನು ರೀತ್ಯ ಸೇರಿಸಿಕೊಂಡು ಭರತಖಂಡದಲ್ಲಿ ಜನಪ್ರಿಯನಾಗಿರುವನು. ಅಂತ್‌ರಾಷ್ಟ್ರೀಯ ಖ್ಯಾತಿಯ ವಾಮಾಚಾರಿಯೂ; ಯೋಗಪಟ್ಟುವೂ ಆದ ಸ್ವಾಮಿಪಟುವರ್ಧನ್‌ರವರ ಮೂಲಕ ಮಾಜಿ ಪ್ರಧಾನಿ ಶತಾವಧಾನಿಯವರಿಗೆ ಅಪಾರ ಹಣವನ್ನು ಕಾಣಿಕೆ ರೂಪದಲ್ಲಿ ಕೊಟ್ಟಿರಿವುದೂ ಗೊತ್ತು; ಶತಾವಧಾನಿಯವರು ಬ್ರಿಟನ್ ಪ್ರಧಾನಮಂತ್ರಿ ಜಾನ್ ಆಲಿವರ್ರವರೆದುರು ಈ ವಿಷಯ ಪ್ರಸ್ತಾಪಿಸಿ ವಿಫಲರಾಗಿರುವುದೂ ಗೊತ್ತು; ಉದ್ದಿಮಿ ಪತ್ರೊಡೆ ವಿರೋಧ ಪಕ್ಷದ ಮುಖಂಡರೂ; ಬಾಲ ಬ್ರಹ್ಮಚಾರಿಯೂ, ಸಮರಾಂಗಣ ಸೂತ್ರಧಾರ ಎಂಬ ಬಿರುದಾಂಕಿತರೂ, ಆದ ಡಾ||ಶಾಲಿಕನಾಥ ಮಿಶ್ರವರನ್ನು ಪಾರ್ಟಿಫಂಡ್ ಕೊಡುವುದರ ಮೂಲಕ ಖುದ್ದ ಕಂಡು ಈ ಲಂಚ ಪ್ರಕರಣ ವರದಿ ಮಾಡಿ ದಾಖಲೆಗಳ ನಕಲು ಪ್ರತಿಗಳನ್ನು ಕೊಟ್ಟಿರಿವುದೂ ಗೊತ್ತು. ಡಾ|| ಶಾ.ಮಿತ್ರರವರು ಪಾರ್ಲಿಮೇಂಟಿನ ಶೀತಕಾಲದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಬಿರುಗಾಳಿ ಎಬ್ಬಿಸಿರುವುದೂ ಗೊತ್ತು. ಹಾಲಿ ಪ್ರಧಾನಿ ಶಂಕರ್‌ಸಿಂಗ್ ಉಡೇರಾರವರು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಛೀಫ್ ಜಸ್ಟೀಸ್ ಯಶೋಧರ್ ಇಂದ್ರಪಾದ್ ಗ್ವಾಲಿಯರ್ರವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿರುವುದೂ ಗೊತ್ತು; ಕನ್ನಡದ ಯಕಃಚಿತ್ ಲೇಖಕನಾದ ನಾನು ಇಂಥ ಅಂತಾರಾಷ್ಟ್ರೀಯಮಟ್ಟದ ವಿಷಯಗಳನ್ನು ಆಧರಿಸಿ ಕಾದಂಬರಿ ಬರೆಯುವುದು ಅಸಾಧ್ಯವೆಂಬ ಸಂಗತಿ ಶಾಮಂಣ ಎಂಬ ಪಾತ್ರಕ್ಕೆ ಅರ್ಥವಾಗುತ್ತಿಲ್ಲವಲ್ಲವೆಂಬ ಖೇದ ಆವರಿಸಿತು. ಅವರೆಲ್ಲರ ಬದುಕಿನಲ್ಲಿ ಇಲ್ಲದ ವೈಶಿಷ್ಟ್ಯ ನಿನ್ನ ಬದುಕಿನಲ್ಲಿದೆ ಶಾಮಂಣ… ವಸ್ತುವಿನ ಅಗಾಧವಾದ ಪ್ರತಿಬಿಂಬವನ್ನು ಒಂದು ಪುಟ್ಟ ಕನ್ನಡಿಯಲ್ಲಿ ಹಿಡಿದಿರುವ ರೀತಿಯಲ್ಲಿಯೇ ನಿನ್ನ ಮೂಲಕ ನಾಲ್ಕಾರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಬೇಕೆಂದಿರುವೆ. ಒಬ್ಬನ ಬದುಕು ಎಲ್ಲರ ಬದುಕೂ ಆಗಬೌದು. ಎಲ್ಲರ ಬದುಕು ಒಬ್ಬನ ಬದುಕೂ ಆಗಬೌದು. ಎಲ್ಲರ ಪಾಪ ಪುಣ್ಯಗಳಲ್ಲಿ ಎಲ್ಲರ ಪಾಲೂ ಇದೆ.. ಅದೂ ಅಲ್ಲದೆ ಸತ್ತ ನಂತರವೂ ರಾಜಕಾರನ ಭ್ರಷ್ಟಾಚಾರ ಮತ್ತಿದರ ಕ್ಷುಣ್ಣ ಆಗು ಹೋಗುಗಳ ಬಗ್ಗೆ ಸದಾ ಚಿಂತಿಸ್ತಿರ್‍ತೀಯಲ್ಲ… ಇದು ಬದುಕಿರೋ ನನ್ನಂಥವರಿಗೇನೆ ಸಾಧ್ಯವಿಲ್ಲಾಂತ… ಬದುಕುವ ಪ್ರತಿಕ್ರಿಯೆ ಮತ್ತು ಕಲೆಯನ್ನು ನಿನ್ನಿಂದ ಕಲಿಯಬೇಕಿದೆ ಕಣಯ್ಯಾ… ಇರಲಿ ನಿನ್ನ ಸಾಮಾಜಿಕ ಕಾಳಜಿಯನ್ನು ಸಾಧ್ಯವಾದರೆ ಪ್ರಸ್ತಾಪಿಸ್ತೀನಂತೆ. ಮೊದ್ಲಿ ನೀನೀಗ ಪ್ರಾಸಿಕ್ಯೂಷನ್‌ಗೆ ಗೌರವ ಕೊಡುವ ನಿಮಿತ್ತವಾದರೂ ಬಂದು ಒಂದ್ನಾಲ್ಕು ಮಾತು ಹೇಳು” ಎಂದು ಶಾಮಂಣ ಎಂಬ ವಿಚಾರಪೂರ್ಣಪಾತ್ರವನ್ನು ಮೇಲೆಬ್ಬಿಸಲು ಅದು ಮಲಗಿದ್ದ ವಾಕ್ಯದ ಅಕ್ಷರಗಳನ್ನು ಹಿಡಿದು ಅಲ್ಲಾಡಿಸಿದೆನು. +ಶರಶಯ್ಯೆಯಿಂದ ಪಿತಾಮಹ ಭೀಷ್ಮರು ತನ್ನ ಮೊಮ್ಮಕ್ಕಳು ಕರೆದರೆಂಬ ಭ್ರಮೆಯಿಂದ ಅಗಾಗ್ಗೆ ಮೇಲೆದ್ದು ಸುತ್ತಮುತ್ತ ನಿರುಕಿಸಿ ಮತ್ತೆ ಮಲಗುವರಲ್ಲ… ಹಾಗೆಯೇ ಎದ್ದ ಶಾಮಂಣ ಎಂಬ ಪಾತ್ರವನ್ನು ಹಿಡಿದೆತ್ತಿ ಟೇಬಲ್ ಮೇಲೆ ಜೋಪಾನವಾಗಿ ನಿಲ್ಲಿಸಿದೆ. ಇಷ್ಟು ದುರ್ಬಲವೂ; ವ್ಯಸನಿಯೂ ಆದ ಪಾತ್ರವು ನೌಕರಿಗೆ ಹೊಸತರಲ್ಲಿ ವ್ಯಾಯಾಮ ಮಾಡಿ ದಷ್ಟಪುಷ್ಟವಾಗಲು ಮುಂಬಯಿಯಿಂದ ಬುಲ್‌ವರ್ಕರ್ ತರಿಸಿಕೊಂಡಿತ್ತೆಂದರೆ ಹೇಗೆ ನಂಬುವುದು? ದೇಹ ದುರ್ಬಲವಾಗಿದ್ದರೂ ಅದರ ಕಣ್ಣು ಮತ್ತು ನಾಲಿಗೆಗಳಿಗೆ ತ್ರಿಕಾಲದ ಪೊದೆಯನ್ನು ಬೇರು ಸಹಿತ ಅಲ್ಲಾಡಿಸುವ ಶಕ್ತಿ ಉಂಟು. “ನಿನ್ನಂಥ ಕ್ರೂರಿ ಮತ್ತೊಬ್ನಿಲ್ಲ ನೋಡಿ ಈ ಪ್ರಪಂಚದೊಳ್ಗೆ! ಏನೋ ಲೌಕಿಕವಾಗಿ ಅನಸೂಯಾನಾಢಿಷ್ಟಿತೋ ಮೇಷೋಪಿ ಸಿಂಹಾಯತಿ (ಅನಸೂಯಳೆದುರು ಮೇಕೆಯಂಥ ನಾನು ಸಿಂಹದಂತೆ ವರ್ತಿಸಿದೆ) ಎಂಬ ಮಾತಿನಂತೆ ವರ್ತಿಸಿ ಸ್ವರ್ಗ ನರಕಗಲ ಕಾಲುಹಾದಿಯ ಯಾತ್ರಿಕನಾದೆ, ಸರಿ ಹೋಯ್ತು… ಲೌಕಿಕರ ಹಲವು ಹೇಳಿಕೆಗಳ ಪ್ರಕಾರ ಸ್ವರ್ಗ ಸೇರಿರುವ ತಾತಮುತ್ತಾಂದಿರಂತೆ ನಾನೂನೂವೆ ಹೋಗಿದ್ದ್ರೆ ನೇನೇನು ಮಾಡ್ಲಿಕ್ಕೆ ಸಧ್ಯ ಇರ್‍ಲಿಲ್ಲಪ್ಪ… ಲೋಕಾಪವಾದದ ಎಲ್ಲ ಹಿಂಸೆ ಸಹಿಸಭೌದು. ಆದ್ರೆ ಭಾಶೆಗೆ ಬಲಿಯಾಗೋ ಹಿಂಸೆ ಸಹಿಸೋದು ಕಷ್ಟ. ಇನ್ನೊಬ್ಬರನ್ನು ಕಾದಂಬರಿಗೆ ವಸ್ತು ಮಾಡ್ಕೊಂಡು … ನಿನ್ಗೆ ಗೊಟ್ಟು. ಆದ್ರೆ ನೀನೇ ಇನ್ನೊಬ್ಬರ ಕಾದಾಂಬರಿಗೆ ವಸ್ತುವಾಗಿ ಗೊಟ್ಟಿಲ್ಲ… ಪನಿ ಪುಲ್ಲಂ ನಕ್ಕೆ ತೃಷ್ಣೆ ಪೇಳ್ ಪೋಪುದೇ ಎಂಬ ಪಂಪನ ಮಾತಿನಂತೆ ಇನ್ನೊಬ್ಬರ ಬದುಕಿನ ಬಗ್ಗೆ ಬರೆದರೆ ನೀನು ಮಹಾಸಾಹಿತಿ ಆಗೋದಿಲ್ಲಪ್ಪ… ಮೊದಲು ನಿನ್ನ ಬಗ್ಗೆ ಬರ್‍ಕೋ… ಆಮೇಲೆ ನಮ್ಮ ಬದುಕಿಗೆ ಬಾರಯ್ಯ” ಎಂದು ಆ ಪಾತ್ರ ಕೊಕ್‌ಕೊಕ್ಕಂತ ಕೆಮ್ಮ ತೊಡಗಿತು. ಅದರ ಮಾತಿನಿಂದ ನಾನು ಒಂಚಣ ಜಲ ಬೆವೆತು ಹೋದೆನು. ನನ್ನಿಂದ ರೂಪಗೊಂಡ ವಾಕ್ಯಗಳೇ ನೇಣಾಗಿಕುತ್ತಿಗೆ ಅಮುಕುತ್ತಿರುವಂತೆಭಾಸವಾಯಿತು. ಪಂಪನನ್ನೂ ಓದಿಕೊಂಡುಸತ್ತಿರುವ ಈ ಪಾತ್ರದ ಮಾತಿಗೆ ಎದೆಗುಂದಬಾರದೆಂದು ಕೃತುನಿಶ್ಚಯವಂ ಮಾಡಿ “ನೀನು ಹೇಳ್ತಿರೋದನ್ನು ಅಲ್ಲಗಳೆಯೊಲ್ಲ ಶಾಮಂಣ. ಯಾವ ಪ್ರಕಾರವಾಗಿ ನೀರಿಗೆ ತನ್ನ ಮಟ್ಟವನ್ನು ತಾನು ಕಾಯ್ದುಕೊಳ್ಳುವ ಶಕ್ತಿ‌ಉಂತೋ ಹಾಗೇನ ನಿನ್ನ, ನನ್ನ; ಹಾಗೂ ನಮ್ಮೆಲ್ಲರ ಬದುಕಿಗೆ ಒಂದೇ ಅಂತರ ಕಾಯ್ದುಕೊಳ್ಳೋ ಶಕ್ತಿ ಇದೆ. ನಮ್ಮೆಲ್ಲರ ಬದುಕು ಒಂದೇ ಅರ್ಥದ ಹಲವು ರ್ಥದ ವಿನ್ಯಾಸಗಳು ಅಷ್ಟ್ರ್” ಎಂದು ನಾನು ಹೇಳಿದೊಡನೆ ಅದು ಪಕಪಕ ನಗಾಡಿತು. “ಹೀಗೆ ನೀನು ಎಲ್ಲಿವರ್‍ಗೆ ಅರ್ಥವಾಗದ ಮಾತಾಡುತ್ತ ಬದುಕಿರ್ತೀಯೋ ಆ ದೇವರಿಗೇ ಗೊತ್ತು. ಹೀಗೆಲ್ಲ ನಿನ್ನಂಥ ಉಪದ್ರವಿಯಿಂದ ಕೊರೆಸಿಲೊಳ್ಳೋಕಲ್ಲ ನಾನು ಅಕಾಲ ಮರಣಕ್ಕೀಡಾಗಿದ್ದು… ಈಗ ನನ್ನಿಂದ ನಿನಗೆನಾಗಬೇಕಿದೆ ಅಷ್ಟು ಹೇಳಪ್ಪಾ” ಎಂದು ಕಡ್ಡಿಮುರಿದಂತೆ ಮಾತಾಡಿತು. ಅದು ಇಷ್ಟೊಂದು ತಾರುಣ್ಯದಿಂದ ಮಾತಾಡಬಹುದೆಂದುಕೊಂಡಿರಲಿಲ್ಲ. “ಬರೆಯೋ ಕರ್ಮ ನಿನ್ಗೆ ಗೊತ್ತಿದ್ದಿದ್ದೇ ಇದೆ ಪರಮ ಸಾಯುಜ್ಯ ಹೊಂದಿರುವ ನಿನ್ಗೆ ಬಿಡಿಸಿ ಹೇಳಲು ಅಶಕ್ತ ನಾನು… ಬರೆಯೋಕೆ ಸಹಾಯಕವಾಗುವಂತೆ ಒಂದಿಷ್ಟು ಉಪದ್ವಾಪಿ ಹೇಳಿಬಿಡಯ್ಯ ನೀನು” ಎಂದು ಮುಖಮುಲಾಜು ನೋಡದೆ ಹೇಳಿಬಿಟ್ಟೆ – ಅದು ಹೇಳಿದರೆ ಹತ್ತು ಹೇಳಿದರೆ ಇಪ್ಪತ್ತು ಎಂಬ ಬಿಗುಮಾನದಿಂದ ಸತ್ತ ನಂತರವೂ ಮುಚ್ಚಿಟ್ಟುಕೊಳ್ಳೋದೇನಿದೆ? ಒಳ್ಳೆಯದು ಕೆಟ್ಟದ್ದಲ್ಲವನ್ನು ಹೇಳಿಬಿಡೊಕ್ಕೆ ಅದಕೇನು ಧಾಡಿ! ವರ್ತಮಾನದ ಪಾದಗಟ್ಟೆ ಮೇಲೆ ನಿಂತು ಭೂತ ಭವಿಷ್ಯತ್ತುಗಳನ್ನು ಇಂಚಿಂಚಾಗಿ ಅಳತೇ ಮಾಡೋ ಸ್ವಾತಂತ್ರ್ಯ ಯಾವುದೇ ಲೇಖಕನಿಗಿರುವಂತೆ ನನಗೂ ಇದೆ.ಇದನ್ನು ಸತ್ತಿರುವವರಾಗಲೀ, ಬದುಕಿರುವವರಾಗಲೀ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸೃಜನಶೀಲ ವಲಯವನ್ನು ಪ್ರವೇಶಿಸಿದ ಅನತಿಕಾಲದಲ್ಲಿ ದುರ್ಮರಣಕ್ಕೀಡಾದ ಶಾಮಂಣಗೂ ಇದು ಗೊತ್ತು. ಅಕ್ಷರಗಳಲ್ಲಿದ್ದ ಶಾಮಂಣ ಪಾತ್ರವು ನನ್ನ ಕಡೆಗೆ ದುರುಗುಟ್ಟಿ ನೋಡಿತು. “ಎಲವೋ ದುಷ್ಟ, ನಾನು ನಿನಗೆ ದುಷ್ಟ ಎಂಬ ವಿಶೇಷಣ ಹಚ್ಚುತ್ತಿರುವುದಕ್ಕೆ ಬೇಸರಪಟ್ಟುಕೋ ಬೇಡ… ಪಾತ್ರಗಳ ಜೀವ ತಿನ್ನೊದ್ಕಿಂತ ಮಿಗಿಲಾದ ಕ್ರೌರ್ಯ ಇನ್ನೊಂದಿಲ್ಲ. ನೀನು ನಮ್ಮನ್ನು ಅಕ್ಷರಗಳಿಗೆ ಕಟ್ಟಿಹಾಕಿ ಚಿತ್ರಹಿಂಸೆ ಮಾಡತೊಡಗಿರುವಿ. ನನ್ನ ಬದುಕಿನಲ್ಲಿ ಅದಾವ ದೊಡ್ಡಸ್ತಿಕೆಯಾಗಲೀ, ಗೌಪ್ಯವಾಗಲೀ ಕಂಡು ಪುಟಗಟ್ಟಲೇ ಕೊರೆದು ಅಮಾಯಕ ಓದುಗರ ಜೀವ ತಿನ್ನಲು ಯೋಜನೆ ಹಾಕಿರುವಿ, ಹೇಳು? ಕಾದಂಬರಿ ಬರೆದಾದ ಮೇಲೆ ದೊಡ್ಡ ಹೆಸರೂ ಬರುತ್ತದೆ ಎಂಬುದೊಂದೇ ಕಾರಣದಿಂದಲ್ಲವೇ ನೀನೀ ಕೆಲಸಕ್ಕೆ ತೊಡಗಿರುವುದು! ಆದರೆ ನಮಗೇನು ಬರುವುದಯ್ಯಾ; ಮಹಾನುಭಾವ? ಹೀಗೆ ನಿನಗೆ ಸಹಾಯಕವಾಗಿ ಗಂಟಲ ನರ ಸವೆಸೋದ್ರಿಂದ ನಮಗೇನು ಲಾಭ ಹೇಳು?” ಎಂದು ಅದು ಚಿಟಿಕೆ ಹಾಕಿತು. ಇಷ್ಟೊಂದು ದುರಾಸೆ ಸತ್ತವರಿಗೂ ಇರಬಹುದೆಂದು ನಾನು ಸರ್ವಥಾ ಊಹಿಸಿರಲಿಲ್ಲ. “ಅಲ್ಲಪ್ಪಾ… ಒಳ್ಳೆ ಕಥೆ ಆಯ್ತಲ್ಲಪ್ಪಾ ನಿಂದೂಂತ… ಹಣವಾಗಲೀ ಹೆಸರಾಗಲೀ ನನಗೇನು ಪುಕ್ಕಟೆ ಬರ್‍ತದೇನು?… ಹಣ ಬರುವಂಥ ವಸ್ತು ಇರೋಕೆ ನೀನೇನು ಮೀನಾ ಕುಮಾರಿಯಲ್ಲ… ನಾಥೂರಾಮ ಗೋಡ್ಸೆನೂ ಅಲ್ಲ… ನೀನೂ ಯಕಃಚಿತ್ ಮಾನವ ಪ್ರಾಣಿಗಿಂತ ಅತ್ತಿತ್ತ ಬದುಕಿ ಸತ್ತವನು ಎಂಬುದನ್ನು ಮರೆಯಬೇಡ. ನಿನ್ನದು ಮೊದಲೇ ಯಾವ ರೋಚಕ ಘಟನೆಗಳೂ ಇಲ್ಲದ ಸಾಮಾನ್ಯ ಬದುಕು. ಹಣತೆ ಹಿಡಿದು ಹುಡುಕಿದರೂ ಒಂದೇ ಒಂದು ರೋಮಾಂಚಕಾರಿ ಘಟನೆ ನಿನ್ನ ಬದುಕಿನಲ್ಲಿ ಸಿಗೋದಿಲ್ಲ. ಇಂಥ ನಿನ್ನ ಬಗ್ಗೆ ಬರೆಯೋದೆ ಹಿಂಸೆಯ ವಿಷಯ ಕಣೋ ಶಾಮಾ!… ಇದೇ ಸಮ್ಯ ವಿನಿಯೋಗಿಸಿ ಟೈಂಪಾಸ್ ಕಾದಂಬರಿಗಳನ್ನು ಬರೆದ್ದಿದ್ದಲ್ಲಿ ನಾಲ್ಕು ಕಾಸು ಸಂಪಾದಿಸಬಹುದಿತ್ತು. ಏನೋ ಒಂದು ಬಗೆಯ ಕಕ್ಕುಲಾತಿ. ನಂದೂ ಇನ್ವಾಲ್‌ಮಂಟಿರೋದ್ರಿದಲ್ವೆ ನಾನು ಬರೆಯೋಕೆ ಶುರುಮಾಡಿದ್ದು. ಕೆಲವು ಕಟ್ಟುಪಾಡುಗಳನ್ನು ಉಲ್ಲಂಘಿಸುವವರೆಂದರೆ ಏನೋ ಒಂದು ರೀತಿಯ ಅಭಿಮಾನ… ಉಲ್ಲಂಘಕರಲ್ಲೂ ನಾಯಕಗಣಗಳಿರುತ್ತವೆ… ಅಂಥ ರ್ರ್ ಕ್ವಾಲಿಟೀಸೂ ನಿನ್ನಲ್ಲಿರುವುವೋ ಇಲ್ಲವೋ ತಿಳಿಯದು? ಅದೆಲ್ಲ ಬರೆದ ಮೇಲೆ ಗೊತ್ತಾಗುವುದು. ಪಾತ್ರಗಳಿಂದ ವೈಯಕ್ತಿಕ ಗುಣಗಳನ್ನು, ವ್ಯಕ್ತಿತ್ವವನ್ನು ಕಸಿದುಕೊಂಡು ನನ್ನ ಮೂಗಿನ ನೇರಕ್ಕೆ ನಾನು ಬರೆಯುತ್ತ ಹೋಗುವುದೇನು ದೊಡ್ಡ ಸಂಗತಿಯಲ್ಲ, ನಿನ್ನೊಂದಿಗೆ ಬದುಕಿನ ತಲ್ಲಣಗಳನ್ನೂ; ಕ್ಷಣಗಳನ್ನೂ ಅನುಭವಿಸಿರುವ, ಹಂಚಿಕೊಂಡಿರುವ ನಾನು ನಿನಗೆ ದ್ರೋಹ ಬಗೆಯುವ ಕೆಲಸ ಮಾಡಲಾರೆ ಶಾಮಾ… ಅದ್ಕೆ ಮುಖ್ಯ ಪಾತ್ರವಾದ ನೀನೇ ನನ್ನ ಪ್ರಾಸಿಕ್ಯೂಷನ್‌ಗೆ ಎಲ್ಲ ಹೇಳಿಕೊಂಡು ಬಿಡು. ಅಂತ ನಾನು ಹೇಳ್ತಿರೋದು. ನಾನು ಕೇವಲ ಲಿಪಿಕಾರ ಪಾತ್ರವಹಿಸಲಿಕ್ಕೆ ಮಾತ್ರ ಇಷ್ಟಪಡ್ತೀನಿ… ನೀನು ಈ ಅಭಿವ್ಯಕ್ತಿ ಕ್ರಮದಲ್ಲಿ ಭಾಗವಹಿಸುವುದರ ಮೂಲಕ ಬದುಕಿನ ವಝನ ಕಳೆಕೊಂಡು ಇನ್ನೂ ಎತ್ತರದಲ್ಲಿ ವಿಹರಿಸಬಹುದು! , ಅಲ್ಲವೆ? ನಿನ್ನ ಮಾತಿನ ದಾಟಿ ನೋಡಿದರೆ ಇದಕ್ಕೆ ಸಮ್ಮತಿಸಿರುವಿ ಎಂದು ಕಾಣುತ್ತದೆ. ಲಾಭ ಲುಕ್ಸಾನದ ಬಗ್ಗೆ ಪ್ರಸ್ತಾಪಿಸುತ್ತಿರುವಿ. ಕನ್ನಡ ಪ್ರಕಟಣ ಪ್ರಪಂಚದ ಹಣೆಬರಹ ಗೊತ್ತಿರುವ ನಿನಗೆ ಇದರ ಬಗ್ಗೆ ಹೆಚ್ಚಿಗೆ ಹೇಳೋ ಅಗತ್ಯವಿಲ್ಲ. ಸುಳ್ಳೋ ನಿಜವೋ? ಒಟ್ಟಿನಲ್ಲಿ ನೀನು ಅನುಭವಿಸಲಿಕ್ಕೆ ಸಾಧ್ಯ್ವಿದ್ದರೆ ಬಂದ ಹಣವನ್ನು ಅನಸೂಯಾಗೆ ಕೊಡ್ಲಾ! ಅಥವಾ ವರಲಕ್ಷ್ಮಿಗೆ ಕೊಡ್ಲಾ… ನೀನು ಹೇಗೆ ಹೇಳಿದರೆ ಹಾಗೆ!” ಎಂದು ಕರಾರುವಾಕ್ಕಾಗಿ… ಶಾಮಪಾರೆ‌ಅಕ್ಕೆ ನನ್ನ ಮಾತುಗಳಿಂದ ಖುಷಿಯಾದಂತೆ ಕಂಡು ಬಂದಿತು. ಆ ಖುಷಿ ನನ್ನ ಅಪ್ರಮಾಣಿಕತೆಯನ್ನು ಗುರುತಿಸಿದ್ದೂ ಆಗಿರಬಹುದು. ಅದು ಹೇಳಿತು. “ಅನುಸೂಯಾಳಿಗೆ ನೀನು ಕೊಡ್ಲಿಕ್ಕೆ ಹೋಗು, ಪೂಜೆ ಮಾಡಿ ಕಳಿಸ್ತಾಳಷ್ಟೆ… ಆ ಪುಣ್ಯಾತ್ಗಿತ್ತಿಗೆ ಕೈ ಎತ್ತಿ ಮುಗಿಯಬೇಕು ನೋಡು. ಅಂಥ ಹೆಣ್ಣು ಈ ಪ್ರಪಂಚದಲ್ಲೆಲ್ಲೂ ಇರಲಿಕ್ಕಿಲ್ಲ ಬಿಡು. ಮಸಣದೊಳಗೆ ನನ್ನ ಕಳೇಬರ ಸುಟ್ಟ ಜಾಗದ ಮೇಲೆ ಐವತ್ತು ಅರವತ್ತು ಸಾವಿರ ಖರ್ಚುಮಾಡಿ ಸ್ಮಾರಕ ಕಟ್ಟಿಸಬೇಕೂಂತ ಯೋಜನೆ ಹಾಕ್ಕೊಂಡಿದ್ದಾಳೆ. ಆಕೆ ಆ ಹಣವನ್ನು ಅದಕ್ಕೆ ಉಪ್ಯೋಗಿಸಿಕೊಂಡು ಬಿಡಬಹುದು. ನನಗಿದೆಲ್ಲ ಸುತರಾಂ ಇಷ್ಟವಿಲ್ಲಪ್ಪಾ… ಆ ಮಹಾ ಪತಿವ್ರತೆಯಾದ ನನ್ನ ಹೆಂಡತಿಗಂತೂ ಮೊದಲೇ ಕೊಡಬೇಡ. ಕಂದಾಚಾರ ಸಂಪ್ರದಾಯಗಳನ್ನು ಕತ್ತಾಳೆ ನಾರಿನಂತೀದೆಯಲ್ಲಿ ಕೊಳೆಯಲು ಬಿಟ್ಟು ಕೆಟ್ಟದಾಗಿ ವರ್ತಮಾನ ಬದುಕುತ್ತಿರೋ ಪುರಾತನ ಪಳೆಯುಳಿಕೆ ಅವಳು. ಕಾಮವನ್ನು ಕೊಂದುಕೊಂಡು ಬದುಕೋ ಅವಳಿಗಿಂತ ಕಾಮವನ್ನು ಪ್ರಮುಖ ದಾಳವನ್ನಾಗಿ ಉಪಯೋಗಿಸಿ ಬದುಕಿನ ಚದುರಂಗ ಆಡುತ್ತಿರುವ ಅನಸೂಯಾಳೇ ಸಾವಿರ ಪಾಲು ಮೇಲು. ತಮ್ಮಮ್ಮನ ಸೆರಗ ಪಂಜರದಲ್ಲಿ ಅರಗಿಳಿಗಳಂತೆ ಬೆಳೆಯುತ್ತಿರುವ ನನ್ನ ಮಕ್ಕಳ ಬಗೆಗೂ ನನಗಶ್ಟು ಮಮಕಾರವಿಲ್ಲ… ಆದ್ರಿಂದ…” ಎಂದು ಅದು ಮೀನ್ಹ ಮೇಷ ಎಣಿಸತೊಡಗಿತು. ಅದರ ಮಾತು ಕೇಳಿ ನಾನು ಒಂದು ಕ್ಷಣ ಅವಾಕಾದೆನು. ಹೀಗೆ ಖಚಿತವಾಗಿ ಯೋಚಿಸುವ ಕಾರಣದೀಮ್ದಾಗಿಯೇ ಅವನು ಮರಣವನ್ನು ಬಹು ಬೇಗ ಆವಹಿಸಿಕೊಂಡದ್ದೆಂದು ಅರ್ಥ ಮಾಡಿಕೊಂಡೆ. ಕೆಲವ್ವರಿಗೆ ಸತ್ತ ನಂತರವೂ ಬುದ್ಧಿ ಬರುವುದಿಲವೆಂದು ಹೇಳುತ್ತಾರಲ್ಲ… ಅಂಥವರ ಪೈಕಿ ಇವನೂ ಒಬ್ಬನು. ಅಥವಾ ತಾರ್ಕಿಕವಾಗಿ ಬದುಕಿರುವವರನ್ನು ಅಳತೆ ಮಾಡುವುದು. ಬದುಕಿರುವವರ ಕಷ್ಟ ಸತ್ತ ಇವನಿಗೆ ಅರ್ಥವಾಗಲಾರದು. ಉದ್ದುದ್ದ ಸನಾತನತೆಗೆ ಅಡ್ಡಡ್ಡ ಅಧುನಿಕತೆಯನ್ನು ನೆಯ್ದು ಬದುಕಿಗೆ ವಿಲಕ್ಷಣವಾದ ರೂಪ ಕೊಟಿದ್ದ ಮನುಷ್ಯನಿವನು. ಕನಿಷ್ಟ ಮಕ್ಕಳನ್ನು ಪ್ರೀತಿಸದಿದ್ದರೆ ಯಾಕಿವನು ಸಾಯಬೇಕಿತ್ತು! ( ನನಗೆ ತಿಳಿದಮಟ್ಟಿಗೆ ಆ ಮಕ್ಕಳಿರ್ವರಿಗೆ ನಮ್ಮ ತಂದೆ ಶಾಮಾಶಾಸ್ತ್ರಿ ಎಂಬುವನಿದ್ದ ಎಂಬ ನೆನಪೂ ಸಹ ಇದ್ದಂತಿಲ್ಲ ) ಗೌರವಧನವನ್ನು ಹೇಗೆ ವಿನಿಯೋಗಿಸಬೇಕೆಂದು ಹೇಳುವ ಎನೋ! ಅಷ್ಟರಲ್ಲಿ ಅದೇ ಬಾಯಿ ಬಿಟ್ಟಿತು.”ನನ್ನ ಕಳೆಬರವಿದ್ದ ಚಿತೆಗೆ ಬೆಂಕಿ ಹಚ್ಚಲು ಅನಸೂಯ ಇನ್ನೂರಾ‌ಐವತ್ತು ಗ್ರಾಂ ಉಂಡೆ ಕರ್ಪೂರವನ್ನು ಉಪಯೋಗಿಸಿದಳು. ತುಂತುರು ಮಳೆ ಮುಗಿಲಿಂದ ಜಿನುಗುತ್ತಿದ್ದರಿಂದ ನಿವೃತ್ತ ತಹಶೀಲ್ದಾರರಾದ ಆನಂದ ತೀರ್ಥರೂ ಅರ್ಧ ಕೇಜಿ ಕರ್ಪೂರ ತರಿಸಿದರು ಎಂದರೆ ಸುದುವ ಕಷ್ಟ ಎಷ್ಟು ಭೀಕರವಾಗಿತ್ತೆಂಬುದನ್ನು ನೀನೇ ಯೋಚಿಸು. ನನ್ನ ಕಳೇಬರವನ್ನು ನಾನೇ ಅಪಹರಿಸುವುದು ಸಾಧ್ಯವಿದ್ದಿದ್ದರೆ ಎಂದೋ ಊರಾಚೆ ಕುರುಚುಲು ಕಾಡ ನದುವೆ ಇರುವ ಹುಲಿಗಡ್ಡದ ಗವಿಯೊಳಗೆ ಬಿಸಾಡಿಕೊಂಡು ಬಿಡುತ್ತಿದ್ದೆ ನಿರಮ್ಮಳವಾಗಿ. ದೂರದೂರದಲ್ಲಿ ಏಕಾಂಗಿಯಾಗಿ ಸಾಯಲು ನಾನು ಅನೇಕ ಬಾರಿ ಪ್ರತ್ನಿಸಿದ್ದುಂಟು ಕಣಯ್ಯಾ. ಹಲವು ರೋಗಗಳ ಅಖಾಡವಾಗಿದ್ದ ನನ್ನ ದೇಹವನ್ನು ನಾನು ಒಂದಿಂಚು ಕದಲಿಸುವುದೂ ಸಾಧ್ಯವಿರಲಿಲ್ಲ… +ಕೊನೆ ಕೊನೆಗೆ ಒಂದೊಂದಾಗಿ ಪಂಚೇಂದ್ರಿಯಗಳು ನಿಷ್ಕ್ರಿಯವಾಗುತ್ತ ಬಂದವು. ನಾನು ಅನಸೂಯಾಳಿಗೆ ಏನು ಹೇಳಲು ಬಯಸಿದೆನೋ ಆ ಮಾತು ನನ್ನ ನಾಲಿಗೆಯಿಂದ ಹೊರಡಲಿಲ್ಲ. ಹೀಗಾಗಿ ನನ್ನ ಕಳೆಬರವನ್ನು ಅಗ್ನಿ ಒಲ್ಲದ ಮನಸ್ಸಿನಿಂದ ಜಮಡಿ ಬೂದಿ ಮಾಡಿತು. ಇಂಥ ಬೂದಿಯ ಸಿಂಹಪಾಲು ಅನಸೂಯಳ ಮನೆಯ ಅಟ್ಟದ ಮೇಲಿದ್ದ ಆ ಗಂಟನ್ನು ಎದೆಗವುಚಿಕೊಂಡು ಆಕೆ ದಿನಕ್ಕೆ ಒಂದು ಸಾರಿಯಾದರೂ ಗೋಳಾಡುತ್ತಿರುತ್ತಾಳೆ. ನಾನು ಆಕೆಗೆ ಕೊಟ್ಟ ಸುಖ ಅಷ್ಟರಲ್ಲ್ ಇದೆ. ಮಿಂದನಂತೆ ಆಕೆಯ ಬದುಕಿನಲ್ಲಿ ಪ್ರವೇಶಿಸಿದಾರು ಕ್ರಮೇಣ ಪ್ರೇಮಿಯಾಗಿಬಿಟ್ಟೆ. ಪ್ರೇಮಿಯಾಗಿದ್ದವನು ಕ್ರಮೇಣ ಹಸುಗೂಸಾಗಿ ಬಿಟ್ಟೆ. ಬದುಕಿನ ಹಲವು ಅವಸ್ಥೆಗಳಿಗೆ ಮಾತೃಕೆಯಾಗಿದ್ದ ಅವಳು ಹೀಗೆ ಅಳೋದೂ,ಕರೆಯೋದೂ ನನಗೆ ಬಿಲ್ಕುಲ್ ಇಷ್ಟವಿಲ್ಲ. ಆ ನನ್ನ ದೇಹದ ಬೂದಿ ಅಲ್ಲಿಂದ ಕದಲಿದರೆ ಮಾತ್ರ ಅವಳು ಯಾರೊಂದಿಗಾದರೂ ಸುಖವಾಗಿ ಬದುಕಲು ಸಾಧ್ಯವಾದೀತು!ಹೀಗೆ ಆಕೆ ಅಳುತ್ತ ಕೂತಿದ್ದರೆ ಆ ಮಗು ಕಾಂಚನಾಳ ಗತಿ ಏನು! ಅದಕ್ಕೆ ನೀನು ನನ್ನ ದೇಹದ ಬೂದಿಯನ್ನು ಬಹು ದೂರದ ಗಂಗೆಯಲ್ಲಿ ವಿಸರ್ಜಿಸಬ್ ಏಕೆಂದು ಯಾಕ್ ಕೇಳ್ತಿದ್ದೀನೆಂದರೆ… ನಾನು ಬದುಕಿದ್ದಾಗ ನನ್ನೋಳಗೆ ಸದಾ ಪ್ರವಹಿಸುತ್ತಿದ್ದ ನದಿ ಎಂದರೆ ಅದೊಂದೇ ನೋಡು. ಬದುಕುವುದಿದ್ದರೆ ಆ ನದಿಯಂತೆ ಬದುಕಬೇಕೆಂದು ಕೊಳ್ಳುತ್ತಿದ್ದೆ. ಯಾರನ್ನಾದರು ಪ್ರವೇಶಿಸುವುದಿದ್ರೆ ಆ ನದಿಯಂತೆ ಪ್ರವೇಶಿಸಬೇಕೆಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲನಾದವನು ನಾನು. ಯರಲ್ಲಿ ಅಷ್ಟೊಂದು ವೇಗವಾಗಿ ಪ್ರವೇಶಿಸ ಬೇಕಿತ್ತೋ ಅವರಲ್ಲೆ… ಸಾಧ್ಯವಾಗಲಿಲ್ಲ. ನನ್ನಂಥ ನದಿಯನ್ನು ಒಳ ಬಿಟ್ಟುಕೊಂಡು ಆಶ್ರಯ ಕೊಟ್ಟು ಸಮೃದ್ಧವಾಗಿ ಬೆಳೆಸಿದ್ದೇ ಅನಸೂಯ ಎಂಬ ಪ್ರಸ್ಥಭೂಮಿ… ಆಕೆ ಸಸ್ಯ ಶಾಮಲೆ… ಸಾವಿರಾರು ಪಕ್ಷಿಗಳ ತಂಗುದಾಣ. ಅಂಥ ಪ್ರದೇಶ ನನ್ನ ನೆನಪಿಂದಾಗಿ ಬರಡಾಗುವುದು ನನಗಿಷ್ಟವಿಲ್ಲ. ಆದ್ದರಿಂದ ಉಪಾಯಾಂತರದಿಂದ ಆ ಬೂದಿಯ ಗಂಟನ್ನು ಲಪಟಾಯಿಸಿ ತಗೊಂಡು ಸೀದ ಪಂಡಾನೊಬ್ಬನನ್ನು ಹಿಡಿದು ಅಪರ ಕರ್ಮ ಮಾಡಿಸಿ ಗಂಗೆಯ ನಟ್ಟನಡುವೆ ಬೂದಿ ವಿಸರ್ಗಿಸು.. ಇದು ನಾನು ನಿನ್ನಿಂದ ಬಯಸುತಿರುವ ರುಷುವತ್ತು ಕಣಪ್ಪಾ… ಬಂಡಾಯದ ಸ್ಟೈಲಿನಲ್ಲಿ ಚರ್ಚೆ ಆರಂಭಿಸದೆ ಒಪ್ಪುವಿಯೋ, ಇಲ್ಲವೋ ಅಷ್ಟು ಹೇಳು?” ಎಂದು ಕೇಳಿತು. +ಅದರ ಬೇಡಿಕೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ಅರ್ಥವಾಗದೆ ಸೊಂದಿಗ್ಧಕ್ಕೆ ಸಿಲುಕಿಕೊಂಡೆನು. ಕಾಶಿ ಎಂಬುದರ ಬಗ್ಗೆ ಕೇಳಿದ್ದೆ, ಓದಿದ್ದೆ; ನಕ್ಷೆಗಳಲ್ಲಿ ನೋಡಿದ್ದೆ. ಅಲ್ಲಿಗೆ ಒಮ್ಮೆ ಹೋಗಿಬರಬೇಕೆಂಬಾಲೋಚನೆಯಿಂದ ಪ್ರವಾಸ ಅನುದಾನಕ್ಕಾಗಿ ಅಕಾಡೆಮಿಗೆ ಅರ್ಜಿಯನ್ನೂ ಸಲ್ಲಿಸಿರುವೆನು. ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿಯವರೂ ಕೊಡಿಸುವ ಭರವಸೆ ವ್ಯಕ್ತಪಡಿಸಿರುವರು. ಆತ ಅಲ್ಲಿ ಎರಡು ಮೂರು ವರ್ಷ ಇದ್ದು ಬಂದಿರೋ ವ್ಯಕ್ತಿ. ಆತ ಮಾತಿನ ಮೂಲಕ ಕಾಶಿಯನ್ನು ನನ್ನ ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸಿರುವರು. ಉದ್ದೋಕೆ ನಿಂತಿರೋ ಕಾಶಿ ಪಟ್ಟಣ ಕುಂತರೂ, ನಿಂತರೂ ಕೈ ಬೀಸಿ ಕರೆಯುತ್ತಿರುವುದು. ಬಿಸ್ಮಿಲ್ಲಾಖಾನ್, ರವಿಶಂಕರಂಥ ಸಂಗೀತಲೋಕದ ದಿಗ್ಗಜಗಳನ್ನೂ; ಕೇದಾರ್ನಾಥ್ ಪಾಂಡೆ, ಕಾಶೀನಾಥ್ ಸಿಂಗ್‌ರಂಥ ಕಥೆಗಾರರನ್ನು ಮಾತಾಡಿಸಿ ಬರಬೇಕೆಂದುಕೊಂಡಿದ್ದೆನೇ ಹೊರತು ಈ ರೀತಿ ಅಪರ ಕರ್ಮಕ್ಕೆ ತುತ್ತಾಗಿ ಪಂಡಾಗಳ ಕೈಗೊಂಬೆಯಾಗಬೇಕಾಗಿ ಬರಬಹುದೆಂದು ಖಂಡಿತ ಅಂದುಕೊಂದಿರಲಿಲ್ಲ… ಈ ಪ್ರಕಾರವಾಗಿ ನಾನು ಹಿಂದೇಟು ಹಾಕುತ್ತಿರುವಾಗ್ಗೆ ರಾಖೇಶ್ ಕುಮಾರನೆಂಬ ಪಾತ್ರವು ಕಿಯಿಯೊಳಗೆ ಬಾಯಿ ತೂರಿಸಿ “ಒಪ್ಕೊಂಡು ಬಿಡ್ರೀ… ಹುಲಿಹಳ್ಳ… ಕಟ್ರಮ್ಮಹಳ್ಳ… ಇವೆಲ್ಲ ಯಾವ ಗಂಗೆಗಿಂತ ಕಡ್ಮೆ ಅದಾವು… ಗಾಳಿ ಬೀಸೋ ದಿಕ್ಕಿಗೆ ಗುರಿ ಇಟ್ಟು ತೂರಿಕೋಳ್ಳೋದು ನಿಜವಾದ ಜಾಣ್ತನ” ಎಂದು ಪಿಸುಗುಟ್ಟಿ ಹಿಂದಕ್ಕೆ ಸರಿಯಿತು. ಅದು ಸರಿ ಅನ್ನಿಸಿ ನಾನು ” ಆಯ್ತಪ್ಪಾ ಶಾಮಂಣ… ನಿನ್ನ ಅಪರ ಕರ್ಮದ ಉಸ್ತುವಾರಿ ವಹಿಸ್ಕೋತೀನಿ… ಆಯ್ತಾ!” ಎಂದು ಒಪ್ಪಿಗೆ ಸೂಚಿಸಿದೆ. ನನ್ನ ಮಾತಿನಿಂದ ಶಾಮಂಣ ಪಾತ್ರಾವು ನೆಮ್ಮದಿಗೆ ಹೊಸ ವ್ಯಾಖ್ಯೆ ಬರೆಯತೊಡಗಿತು. ಅದು… ಇಷ್ಟೊಂದು ದೌರ್ಬಲ್ಯದ ನಡುವೆಯೂ ಮೇರುಪ್ರಾಯವಾದ ಲವಲವಿಕೆಯನ್ನು ಪ್ರಕಟಿಸಬಹುದೆಂದುಕೊಂಡಿರಲಿಲ್ಲ. ಅಕ್ಷರಗಳಿಂದ ನನ್ನ ಕಡೆ ಕೈಚಾಚಿತು. ಹಿಡಿದು ಅಮುಕಿ ನೇವರಿಸಿದೆ. ಕಂಣಲ್ಲಿ ನೀರುತಂದ್ಕೊಂಡೆ. ನನ್ನ ಶಾಮಾ… ನನ್ನ ಶಾಮಾ… ಎಂದು ಉದ್ಗರಿಸಿದೆ. “ಯಾಕೋ ಹೆಂಗಸಿನ ಹಾಗೆ ಭಾವುಕನಾಗ್ತಿಡ್ಡಿಯಾ… ಸದಾ ಒದ್ದಟದಲ್ಲಿ ಬದುಕಿ ಸತ್ತಿರೋ ನಾನೇ ಒಂದೇ ಒಮ್ಡು ಹನಿ ನೀರು ತಂದುಕೊಂಡಿಲ್ಲ… ನೀನ್ಯಾಕೆ ಮುಖವನ್ನು ಒಂಥರಾ ಮಾಡಿಕೊಳ್ಳುತ್ತಿರುವಿ. ಕವಿತೆ ಬರೆಯೋ ಮನಸ್ಥಿತಿಯನ್ನು ದೂರ ಇಟ್ಟು ಗದ್ಯ ಬರೆಯೋ ಮನಸ್ಥಿತಿಯನ್ನು ರೂಢಿಸಿಕೋ… ಆಗ ನಾನು, ನನ್ನಂಥವರು ಅರ್ಥ ಆಗ್ತಾರೆ, ಹತ್ತಿರ ಆಗ್ತಾರೆ… ಬಿಚ್ಚಿಕೊಳ್ಳುತ್ತಾರೆ. ಈಗ ನನಗೆ ತುಂಬ ಸಂತೋಷವಾಗಿದೆ ನ್ಡು… ಅನೇಕ ನದಿಗಳಿಂದ ಅಭಿಮಾನಿಸಿಕೊಳ್ಳುತ್ತಿರುವ ಪೂಜಿಸಿಕೊಳ್ಳುತ್ತಿರುವ ಒಳಗೊಳ್ಳುತ್ತಿರುವ ಗಂಗೆ ಪ್ರೀತಿಗೆ ಪರ್ಯಾಯ ಅಲ್ಲವೆ!… ನಮ್ಮೆಲ್ಲರ ನಿಜವಾದ ಪ್ರೀತಿಗೆ ಅರ್ಥವಿರುವುದೇ ಅಂಥಲ್ಲಿ ವಿಸ್ರ್ಜಿಸಿಕೊಳ್ಳುವುದರಲ್ಲಿ! ಅದಕ್ಕೇನೆ ನಾನು ಹೇಳಿದ್ದು ನನ್ನ ಚಿತಾಭಸ್ಮವನ್ನು ಅಲ್ಲಿ ವಿಸರ್ಜಿಸು ಅಂತ… ಅದಕ್ಕೆ ನೀನು ಒಪ್ಪಿಗೆ ಸೂಚಿಸಿದಿ. ಸಂತೋಷ ನನ್ನ ಮರಣ ಪೂರ್ವೊತ್ತರ ಬದುಕನ್ನು ನೀನು ನಿನ್ನ ಅಕ್ಷರಗಳಿಗೆ ಬಲಿಕೊಡು… ನನ್ನ ಅಭ್ಯಂತರವಿಲ್ಲ, ನಾನು ನನ್ನನ್ನು ನಿನ್ನ ಮೂಲಕ ಬರೆಸುವೆ. ಇದಕ್ಕೆ ಮೊದಲು ನಾನು ಬರೆದಿರುವ ಕಥೆಯೊಂದಿದೆಯಲ್ಲ… ಅದನ್ನು ಕಾದಂಬರಿಯೊಳಗೆ ಅಳವಡಿಸಿ ಬಿ‌ಉ. ಈ ಮೂಲಕವಾದರು ಪ್ರಕಟವಾಗಲು… ಅದನ್ನು ಬರೆದು ಲಕ್ಕೋಟೆಯೊಳಗಿರಿಸಿ ಅಂಚೆದಬ್ಬಿಗೆ ಹಾಕ್ಲು ಪ್ರಯತ್ನಿಸಿದ್ದು ನೂರಾರುಬಾರಿ. ಕೊನೆಗೂ ಹಕಲಿಲ್ಲ… ಅಲ್ಲದೆ ನಮ್ಮ ತತನವರು ಬರೆದಿರುವ ಮರಣ ಶಸನವನ್ನು ಹೇಗೋ ಸಂಪಾದಿಸಿಕೊಂದಿರುವಿ ಅದರಲ್ಲಿ ನನ್ನನ್ನು ಚಾಮಗೋಚರವಾಗಿ ಬಯ್ದಿರಬೌದು. ನಿಸ್ಸಂಕೋಚವಾಗಿ ಅದನ್ನೂ ಕಾದಂಬರಿಯೊಳಗೆ ಪುನರ್ಘಟಿಸು… ನಂತರ ನಾನು ನಿನ್ನ ಮೂಲಕ ಶುರು ಮಾಡುವೆ. ಆಯ್ತಾ… ಶುಭವಾಗಲಿ” ಎಂದು ಹೇಳಿ ಅದು ಅಂತರ್ಧಾನವಾಯಿತು. +ನಾನು ನೆಮ್ಮದಿಯಿಂದ ಉಸಿರುಬಿಟ್ಟೆ. ಅದನ್ನು ಕೇಳಿಸಿಕೊಂಡು ಹೆಂಡತಿ ಅನ್ನಪೂರ್ಣ ಹತ್ತಿರ ಬಂದಳು. “ಏನ್ರೀ… ನಿಮ್ಮಶ್ತಕ್ಕೆ ನೀವೇ ಏನೇನೋ ವಟಗುಟ್ತಿದ್ರಿ… ಒಳ್ಳೆ ಹೆರಿಗೆ ಸಮಯದಲ್ಲಿ ನೋವು ತಿನ್ತೊರೋ ಗರ್ಭಿಣಿ ಹೆಂಗಸರ ಥರ” ಎಂದು ಅಪಾರ ಕಕ್ಕ್ಲಾತಿಯಿಂದ ಹಣೆ, ಎದೆ ಎಲ್ಲ ಮುಟ್ಟಿಮುಟ್ಟಿ ನೋಡಿದಳು. “ಅಯ್ಯೋ ಜ್ವರ ಬಂದಂತಿದೆಯಲ್ಲ” ಎಂದು ಒಳಗಡೆ ಹೋಗಿ ಕಷಾಯ ಮಾಡಿಕೊಂಡು ಬಂದು ಕುಡಿಸಿದಳು. “ನೀನಂದ್ಕೊಂಡಿರೋ ಜ್ವರ ಅಲ್ಲಮ್ಮಾ… ಇದೊಂದು ನಮೂನಿ ಜ್ವರ, ವಸ್ತುವನ್ನು ಹೊರ ಕಿತ್ತು ಹಾಕುವುದೆಂದರೆ ಏಳೆಂಟು ಕೂಸುಗಳನ್ನು ಒಟಿಗೆ ಹೆತ್ತ ಹಾಗೆಯೆ” ಎನ್ನುತ್ತಿರುವಷ್ಟರಲ್ಲಿ ಹೂಗಳಿದ್ದ ಹಚ್ಚಡ ತಂದು ಮೈಗೆಲ್ಲ ಹೊದ್ದಿಸಿದಳು. ಧೂಳು ಕೊಡವಿ ಉಣ್ಣೆ ಕ್ಯಾಪನ್ನು ಅಷ್ಟೇನು ಸುಂದರವಲ್ಲದ ನನ್ನ ತಲೆಗೆ ಪೇರಿಸಿದಳು. ಕನ್ನಡಿ ತಂದು ನನ್ನ ಮುಖಕ್ಕಿಟ್ಟು, “ನೋಡ್ರಿ… ಹೆಂಗ ಕಾಣಿಸ್ತಿದ್ದೀರಂತ?” ಎಂದು ಕಿಲ ಕಿಲ ನಗಾಡಿದಳು. +ನನ್ನ ಪ್ರತಿಬಿಂಬ ನೋಡಿ ‘ಇದು ನನ್ನದು ಹೌದೋ ಅಲ್ಲವೋ’ ಎಂಬಂತೆ ಆಶ್ಚರ್ಯವಾಯಿತು. ನನ್ನ ನೈಜ ಪ್ರತಿಬಿಂಬವನ್ನು ಟಿಪ್ಪಣಿಗಳಲ್ಲಿರುವ ಪಾತ್ರಗಳು ಅಪಹರಿಸಿ ಬಿಟ್ಟಿರುವವು ಎಂದುಕೊಂಡೆ. ಪ್ರಾಣೋತ್ಕ್ರಮಣ ಮಾಡುವಾಗ ವಾಗಿಲಿಯ ಜಗನ್ನಥ ರೆಡ್ಡಿ ಮುಖ ಮಾಡಿಕೊಂಡಿದ್ದನಲ್ಲ ಅಂಥ ಪ್ರತಿಬಿಂಬ ಕನ್ನಡಿಯೊಳಗೆ ಪದಿಮೂಡಿತ್ತು. ಭಯವಾಗಿ ಕನ್ನಡಿಯಿಂದ ನನ್ನ ಮುಖವನ್ನು ನಿಷ್ಕ್ರಮಿಸಿದೆ. “ಕನ್ನಡಿ ಸುಮಾರಿದ್ದಂತೆ ಕಣೇ… ಬೆಂಗಳೂರಿನ ಸನ್ ರೈಜ್ ಗ್ಲಾಸ್ ಹೌಸಿನಿಂದ ತಂದಿದ್ದೆನ್ನಲ್ಲ ಆ ಕನ್ನಡಿ ತಗೊಂಡು ಬಾರೆ” ಅಂದೆ. +ವಯಸ್ಸಾದಂತೆಲ್ಲ ಕನ್ನಡಿ ಬಗ್ಗೆ ಹೆಚ್ಚು ಒತ್ತು ಕೊಟ್ಟು ಶ್ರೀಮಂತರು ಖರೀದಿಸುವ ಅಂಗಡಿಯಿಂದ ದುಬಾರಿ ಬೆಲೆ ತೆತ್ತು ತಂದಿದ್ದೆ. ನನಗಿಂತ ಕನ್ನಡಿ ಬೆಲೆಯೇ ಹೆಚ್ಚಿತ್ತು. ತಂದಾಗ “ಇಷ್ಟೊಂದು ದುಬಾರಿಯಾದ್ದು ಯಾಕೆ ತಂದಿರಿ” ಎಂದು ಹೆಂಡತಿ ತಕರಾರು ಎತ್ತಿದ್ದಳು. ಕನ್ನಡಿ ಎಂಬುದು ಪ್ರತಿಷ್ಠೆಯ ಸಂಕೇತ ಕಣೇ… ಎಂಥೆಂಥ ಕನ್ನಡಿ ಇಟ್ಟುಕೊಂಡಿದ್ದಾರೆ ಎಂಬುದರ ಮೇಲೆ ನಮ್ಮ ಗೌರವ ಇರುತ್ತದೆ” ಎಂದು ಗ್ರಾಹಕ ಬುದ್ಧಿ ಪ್ರದರ್ಶಿಸಿದ್ದೆ. ನಮ್ಮ ಮನೆಗೆ ಯಾರಾದರು ಅತಿಥಿಗಳು ಬಂದರೆ ನೀರು ನಿಡಿ ಕೊಟ್ಟಾದ ಮೇಲೆ ನೋಡಿಕೊಳ್ಳಲಿಕ್ಕೆ ಆ ಕನ್ನಡಿ ಕೊಡುತ್ತಿದ್ದೆವು. ಅದರಲ್ಲಿ ಪ್ರತಿಬಿಂಬ ನೋಡಿಕೊಂಡವರು “ಕನ್ನಡಿ ಅಂದರೆ ಇದು ನೋಡ್ರಿ ಕುಂವೀ… ಎಲ್ಲಿಂದ ತಂದ್ರಿ ಇದನ್ನು… ವಿಳಾಸ ಕೊಡ್ರಿ… ನಾವೂ ಅಲ್ಲಿಂದ ಖರೀದಿಸ್ತೀವಿ” ಎಂದು ಅದರ ಹೆಚ್ಚುಗಾರಿಕೆಯನ್ನು ಕೊಂಡಾಡುತ್ತಿದ್ದರು. ನಮ್ಮಲ್ಲಿ ಇರೋವಷ್ಟು ಕಾಲ ಅವರು ಆ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಿಕೊಳ್ಳುತ್ತ ಮೈಮರೆಯುತ್ತಿದ್ದರು. ನಮ್ಮ ಆತಿಥ್ಯದಲ್ಲಿನ ಲೋಪದೋಶಗಳು ಮುಚ್ಚಿಕೊಂಡು ಹ್ಗಿಬಿಡುತ್ತಿದ್ದವು. ಆದ್ದರಿಂದ ಅದನ್ನು ಕೋಹಿನೂರ್ ವಜ್ರಕ್ಕಿಂತ ಮಿಗಿಲಾಗಿ ಜೋಪಾನ ಮಾಡಿಕೊಂಡು ಬಂದಿದ್ದೆವು. +“ಅದೇ ಕನ್ನಡಿ ಕಣ್ರಿ… ಜಾತ್ರೇಲಿ ತಂದದ್ದು ಎಂದುಕೊಂಡಿರೇನು?” ಎಂದಳು. +ನಾನು ಅದನ್ನು ಕೂಲಂಕುಷ ಪರಿಶೀಲಿಸಿದೆ. ಅದೇ ಕನ್ನಡಿ ಇದೆಂದು ಖಾತ್ರಿಪಡಿಸಿಕೊಂಡು ಮತ್ತೆ ಇಣುಕಿ ನೋಡಿದೆ. ನನ್ನ ಪ್ರತಿಬಿಂಬ ನನ್ನನ್ನು ನೋಡಿ ಪಕಪಕ ನಗಾಡಿತು. “ಅಯ್ಯೋ ಮೂರ್ಖ ಕಾದಂಬರಿಕಾರನೇ… ಒಂದು ಕಾದಂಬರಿಗೆ ಎಷ್ಟೊಂದು ತ್ರಾಸು ತಗೊಂಡು ನಿರೂಪಗೊಂಡಿರುವೆಯಲ್ಲೋ ಬೇವಕೂಫಾ” ಎಂದು ಕನ್ನಡಿಯೊಳಗಿನ ಪ್ರತಿಬಿಂಬ ಗೊಣಗಿತು. +ಅದನ್ನು ಸಿಟ್ತಿನಿಂದ ದೂರ ತಳ್ಳಿದೆ. ವಿಶ್ವಾಮಿತ್ರ ಮೇನಕೆಯರಂಥ ಹೆತ್ತವರಿಂದ ತಿರಸ್ಕೃತಗೊಂಡ ಶಕುಂತಲೆ ಎಂಬ ಹೆಸರಿನ ಕೂಸಿನಂತೆ ಅದು ಚಿಟಾರನೆ ಚೀರಿತು. ಶ್ರೀಮತಿ ಅಯ್ಯೋ ಅಂತ ಓಡಿ ಹೋಗಿ ಅದನ್ನು ಎದೆಗವುಚಿಕೊಂಡಳು. +“ಅಯ್ಯೋ ಏನ್ರಿ ಇದು… ಯಾರ ಮೇಲಿನ ಸಿಟ್ಟನ್ನು ಇದರ ಮೇಲೇಕೆ ತೋರಿಸ್ತಿದ್ದೀರಿ. ಇದು ನಿಮಗೆ ಬಗೆದಿರೋ ದ್ರೋಹವಾದರೂ ಏನು?” ಎಂದು ಅದರ ಕ್ಷೇಮಲಾಭ ವಿಚಾರಿಸಿಕೊಂಡು “ನಿಮ್ಮ ಮನಸ್ಸು ಯಾಕೋ ಸಜ್ಜು ಇರುವಂತಿಲ್ಲ… ಊಟ ಮಾಡಿ ರೆಸ್ಟ್ ತಗೊಳ್ರಿ… ಎಲ್ಲ ಸರಿಹೋಗ್ತದೆ ಎಂದುನನ್ನನ್ನು ಎಬ್ಬಿಸಿಕೊಂಡು ವಯಾ ಬಚ್ಚಲ ಮನೆಯಿಂದ ಅಡುಗೆ ಮನೆಗೆ ಕರೆದೊಯ್ದು ಊಟಕ್ಕಿದಳು. ಬೆಕ್ಕು ಎಂಜಲು ಮಾಡಿರೋ ಹಾಲು ಮೊಸರನ್ನು ನೀಡಲು ಆಕೆ ಒಪ್ಪಲಿಲ್ಲ. ಅನ್ನ ಸಾಂಬಾರು ಊಟ ಮಾಡಿ ಕೈತೊಳೆದುಕೊಂಡೆ. +ಆಗಲೆ ತುಂಬ ಹೊತ್ತಾಗಿತ್ತು. ಹತ್ತು ದಾಟಿರಬಹುದು ಎಂದುಕೊಂಡೆ. ಆಕೆ ಎಷ್ಟು ಪ್ರಯತ್ನಿಸಿದರೂ ನನಗೆ ನಿದ್ದೆ ಅಡರಲಿಲ್ಲ. ಪರಮೇಶ್ವರ ಶಾಸ್ತ್ರಿಗಳ ಅವಸಾನ ಕುರಿತಂತೆ ಶಾಮಂಣ ಬರೆದಿಟ್ಟಿರುವ ಕಥಾಪಠಣ ಸ್ರವಣ ಮಾಡಿದರೆ ಮನಸ್ಸು ಹಗುರಾಗಿ ನಿದ್ದೆ ಬರಬುಹುದೆಂದುಕೊಂಡೆ. ಅದಕ್ಕೆ ಸ್ರಿಮತಿಯೂ ಒಪ್ಪಿದಳು. +ಟೇಬಲ್ ಲ್ಯಾಂಪಿನ ಪಕ್ಕ ಆಕೆಯನ್ನು ಕೂದ್ರಿಸಿಕೊಂಡು ಅವನ ಹಸ್ತಪ್ರತಿಯನ್ನು ಕೈಗೆತ್ತಿಕೊಂಡು ಓದತೊಡಗಿದೆ. ರಾಯಮುರಾರಿ ಸೋಮೇಶ್ವರನ್ ಆಸ್ಥಾನದಲ್ಲಿದ್ದ ಶಾನ ಕವಿ ಸಜ್ಜನ ತಿಲಕನ ಕುಕುನೂರಿನ ಶಾಸನ ಓದಿರುವ ನನಗೆ ಅವನ ಕೈ ಬರಹ ಓದುವುದು ಕಷ್ಟವೆನಿಸಲಿಲ್ಲ. +* +* +* +‘ದಿ. ಶಾಮಾಶಾಸ್ತ್ರಿಯ ಬರೆದ ಅಪ್ರಕಟಿತ ಕಥೆಯು’ +ಮನಸ್ಸಿನಲ್ಲಿ ಅದ್ನನ್ನು ಬೇಡಿಕೊಂದಿದ್ದಳೊ? ಆಕೆ ಎಲ್ಲರಿಗಿಂತ ಮುಖ್ಯವಾಗಿ ಅರ್ಚಕರಿಗಿಂತ ಮೊದಲೇ ಎದ್ದು ಸೊಗಸಾಗಿ ನಿದ್ದೆ ಏರಿಸಿದ್ದ ನನ್ನನ್ನೂ ಎಬ್ಬಿಸಿದಳು. ವಾರದಿಂದ ಸುತ್ತಾಡೀ ಸುತ್ತಾಡೀ ನಾನೂ ದಣಿದಿದ್ದೆನು. ದಣಿವಿನಿಂದ ದೇಹವೆಂಬುದು ಹಣ್ಣಾಗಿತ್ತು. ಸದರೀ ಪುಣ್ಯಕ್ಷೇತ್ರ ತಲುಪುತ್ತಲೆ ಸೂರ್ಯೊದಯವಾದ ತುಂಬು ಹೊತ್ತಿಗೆ ಏಳಬೇಕೆಂದು ನಿಶ್ಚಯಿಸಿ ಮಲಗಿದ್ದವನು ನಾನು. ಈ ಪ್ರಕಾರವಾಗಿ ದಣಿದು ನಿದ್ದೆ ಹೋಗಿದ್ದ ನನ್ನನ್ನು ಎದ್ದು ಗೋಳು ಹೊಯ್ದುಕೊಳ್ಳುವಳೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ನನಗಿಂತ ದೈಹಿಕವಾಗಿ ಬಲವಾಗಿದ್ದ ಆಕೆ ಮೇಲಿಂದ ಮೇಲೆ ಉರುಳಾಡಿಸಲು ಬೇರೆ ದಾರಿಗಾಣದೆ ಎದ್ದು ಕೂತೆನು. ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ‘ವರಲಕ್ಷ್ಮಿ’ ಎಂದು ಸಂಭೋದಿಸಲು ಪ್ರಯತ್ನಿಸಿದೆನಾದರೂ ಸಾಧ್ಯವಾಗಲಿಲ್ಲ. ತನ್ನನ್ನು ಹೆಸರು ಹಿಡಿದು ಕರೆಯಬಾರದೆಂದೂ, ಅದರಿಂದ ಪತಿಯ ಆಯುಷ್ಯ ಕ್ಷೀಣಿಸುವುದೆಂದೂ, ಏಯ್… ಹಾಯ್ ಎಂದು ಪಶು ಸಮಾನವಾಗಿ ಕರೆಯಬೇಕೆಂದೂ ಕಟ್ಟುನಿಟ್ಟಾಗಿ ಸಲಹೆ ನೀಡಿದ್ದಳು. ನಾನು ಎಚ್ಚರವಾಗುತ್ತಲೆ ನನ್ನ ಪಾದಗಳಿಗೆತನ್ನ ಮಸ್ತಿಷ್ಯವನ್ನು ಅಂ +ಟಿಸಿ ಅದೇನನ್ನೋ ಗೊಣಗಿದಳು. ಹಾಗೆಯೇ ಕೊರಳ ಮಾಂಗಲ್ಯಕ್ಕೂ ಅದೇ ಗೌರವ ಸಲ್ಲಿಸಿದಳು. ಕಡಿಮೆ ಪ್ರಮಾಣದಲ್ಲಿ ಬೆಳಕು ಚೆಲ್ಲುತ್ತಿದ್ದ ವಿದ್ಯುದ್ದೀಪದ ಬೆಳಕಿಗೆ ಅಳವಡಿಸಿ ನನ್ನ ಮುಖವನ್ನು ನೋ +ಡಿ ಸಮಾಧಾನದ ಉಸಿರು ಬಿಟ್ಟ ಮೇಲೆಯೇ ನನಗೆ ಮಾತಾಡಲು ಆಕೆ ಅವಕಾಶ ಕೊಟ್ತಿದ್ದು. “ಅಲ್ಲೇ ಸರಿಯಾಗಿ ಮೂರು ಗಂಟೆ ಸಹ ಆಗಿಲ್ಲ, ಇಷ್ಟೊತ್ತಿಗೆ ಎಬ್ಬಿಸಿದ್ಯಾ‌ಅಕೆ?” ಎಂದು ಬೇಸರ ವ್ಯಕ್ತಪಡಿಸಿದೆ. “ಅಲ್ರೀ… ಮನೆಗೆ ಹೋದ ಮೆಲೆ ಮಲಗೋದು ಇದ್ದೇ ಇದೆ… ನಿದ್ದೆಯಿಂದ ಬುದ್ಧಿ ನಾಶ ಅಂತ ಹಿರಿಯರು ಹೇಳಿದ್ದಾರೆ. ಪ್ರಾತಃಕಾಲ ಪ್ರಥಮ ಪೂಜೆ ಎಷ್ಟು ಕೊಟ್ರೂ ಸಿಕ್ಕೀತ್ರಿ… ಇನ್ನೊಂದು‌ಊವರೆ ಗಂಟೆ ಕಳೆದ್ರೆ ಬೆಳಗಾಗಿ ಬಿಡ್ತದೆ… ಹೇಗೋ ಎದ್ದು ಬಿಡ್ರಿ… ಹೇಗೂ ಚಂದ್ರನ ಬೇಳಕಿದೆ. ನದಿಗೆ ಹೋಗಿ ಸ್ನಾನ ಮಾಡೋಣ… ಅಷ್ಟೊತ್ತಿಗೆ ಅರ್ಚಕರೂ ಎದ್ದಿರ್ತಾರೆ” ಎಂದು ಲಗುಬಗೆಯಿಂದ ಹಾಸಿಗಿ ಮಡಚಿ ಪೆಟಾರಿಗೆ ಸೇರಿಸಿದಳು. ಅಷ್ಟು ದೂರದಲ್ಲಿ ಮಬ್ಬು ಬೆಳಕೊಳಗೆ ಹೆಣ್ಣು ಗಂಡು ಪರಸ್ಪರ ಒಬ್ಬರಮೇಲೊಬ್ಬರು ಕಾಲು ಹಾಕಿಕೊಂಡು ಮಲಗಿದ್ದರು. ಪ್ರಕೃತಿಯ ರಮ್ಯ ಮಡಿಲಲ್ಲಿ ಹೀಗೆಯೇ ಲೈಂಗಿಕ ಸುಖವನ್ನು ಅನುಭವಿಸಬೇಕೆಂಬ ಉದ್ದೇಶದಿಂದಲೇ ನಾನು ಸಾಲ ಸೂಲ ಮಾಡಿಕೊಂಡು ಮಧು ಚಂದ್ರಕ್ಕೆ ಹೊರಟುಬಂದದ್ದು. ಬಂದು ಏಳೆಂಟು ದಿನವಾದರೂ ಇಂಥದೊಂದು ಅನುಭವಕ್ಕೆ ಆಸ್ಪದ ಮಾಡಿಕೊಟ್ಟವಳಲ್ಲ ಇವಳು. ಕೇಳಿದಾಗ, “ಮುಧುಚಂದ್ರಕ್ಕೆ ಬೆಂಕಿ ಬಿತ್ತು. ನಾವು ಬಂದಿರೋದೆ ದೇವರ ದರ್ಶನಕ್ಕೆ ಪೂಜ್ಯರೆ, ಮುಂದೆಂದಾದ್ರು ಈ ಸುದ್ದಿ ಎಟ್ಟಿದ್ರೀ ಅಂದ್ರ ನನಗೆ ಕೆಟ್ಟ್ ಕೋಪ ಬಂದುಬಿಡ್ಟದೆ” ಎಂದು ಲಕ್ಷಣ ರೇಖೆಗಳಿಂದ ದಾಂಪತ್ಯದ ನಡುವೆ ರಂಗವಲ್ಲಿ ರಚಿಸಿದಳು. ಯಾವ ಸ್ಪಂದನವೂ‌ಇರದಿದ್ದ ಆಕೆಯನ್ನು ಉದ್ದೀಪಿಸುವ ಸಾಹಸಕ್ಕೂ ನಾನು ಇಳಿದಿರಲಿಲ್ಲ. ನಾನು ಕದ್ದು ಮುಚ್ಚಿ ಸುಂದರವಾದ ಹೆಣ್ಣುಗಳನ್ನು ನೋಡುತ್ತಳೋ.. ಅಂಗೋಪಾಂಗಗಳನ್ನು ಸ್ಪರ್ಶಿಸುತ್ತಲೋ ಸುಖಿಸುತ್ತಿದೆನು. ನವವಿವಾಹಿತನಾದ ನಾನು ಈ ನ್ಡುವೆ ಒಂದೆರಡು ಬಾರಿ ಮುಷ್ಟಿ ಮೈಥುನ ಮಾಡಿಕೊಂಡದ್ದೂ ಉಂಟು. ಈ ಗೋಪ್ಯ ಚಟುವಟಿಕೆಯನ್ನು ಹೇಗೋ ಪತ್ತೆ ಮಾಡಿ “ಏನ್ರೀ… ಮಾನಸಿಕ ವ್ಯಭಿಚಾರ ಅಲ್ವೇನ್ರಿ?… ಇದು… ಇನ್ನೊಮ್ಮೆ ಪರಸ್ತ್ರೀಯನ್ನು ಕಣ್ಣೆತ್ತಿ ನೋಡಿದ್ರೀ ಅಂದ್ರೆ ನದಿಯಲ್ಲಿ ಹಾರಿ ಪ್ರಾಣ ಕಳ್ಕೋತೀನಿ” ಎಂದು ಹೆದರಿಸಿದ್ದಳು. ಅದಕ್ಕೂ ಕಲ್ಲು ಬಿದ್ದು ನಾನು ತೆಪ್ಪಗೆ ಇದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. “ಅಯ್ಯೋ ಇನ್ನೊಂದು ಸ್ವಲ್ಪ ಹೊ +ಟ್ಟು ಮಲಕ್ಕೋಳ್ಳೆ ನಾಲ್ಕೂ… ನಾಲ್ಕೂವರೆಗೆ ಎದ್ದು ಹೋದರಾಯ್ತು” ಎಂದೆ. +“ಅಯ್ಯೋ… ಬೇರೆ ಜನರೆಲ್ಲ ಎದ್ದು ಬಿಟ್ಟಿದ್ದಾರಲ್ರೀ… ಅವರ ಎದುರಿಗೆ ಸ್ನಾನ ಮಾಡೋದು ಹೇಗೆ… ಅದೆಲ್ಲ ಆಗೋ ಮಾತಲ್ಲ… ಈಗ ಸ್ನಾನ ಮಾಡಿಬಿತ್ರೆ ಎಷ್ಟೊಮ್ದು ದೇವರ ಮಾಡೋದಿದೆ ಎನ್ಕಥೆ? ನೂರೊಂದು ಸಾರಿ ಉರುಳು ಸೇವೆ ಮಾಡಬೇಕು… ಕುಂಕುಮಾರ್ಚನೆ ಸಹಸ್ರ ಬಿಲ್ವಾರ್ಚನೆ ಮಾಡಿಸ್ಬೇಕು… ಇದೆಲ್ಲ ಸೂರ್ಯೋದಯಕ್ಕೂ ಪೂರ್ವದಲ್ಲಿ ನಡೆಯಬೇಕಿದೆ ಕಣ್ರೀ…” ಎಂದು ಲಗುಬಗೆಯಿಂದ ಸ್ನಾನಕ್ಕೆ ಬೇಕಾದ ಸಾಮಾನುಗಳನ್ನು ಜೋಡಿಸಿಕೊಂಡಳು. ಬಲವಂತದಿಂದ ನನ್ನನ್ನು ಎಬ್ಬಿಸಿಕೊಂಡು ಹೊರಟಳು. ದಾರಿಯಲ್ಲಿ ಮೊಖ್ತೇಸ್ತರರ ಪೈಕಿ ಒಬ್ಬ ಎದ್ದು, “ಯಾರದು?” ಎಂದು ಗದರಿದ. ‘ನಾವು’ ಎಂದಾಗ “ಅಯ್ಯೋ… ನೀವಾ… ನನ್ಯಾರೋ ಕಳ್ರು ಎಂದುಕೊಂಡಿದ್ದೆ… ತುಸು ಹೊತ್ತಾದ ಮೇಲೆ ಹೋದರಾಗದೆ… ನದಿ ಎಲ್ಗೂ ಓಡಿಹೋಗೋದಿಲ್ಲ… ಇದ್ರ ಮೇಲೆ ನಿಮ್ಮಿಷ್ಟ,ನಿಮ್ಮಂಥ ಭಕ್ತರನ್ನು ಸಹಿಸಿಕೊಳ್ಳೋದು ನಮ್ಮ ಕರ್ಮ. ಅದ್ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ವೋ… ಸಹಿಸಿಕೊಂಡಿರೋಕೆ!” ಎಂದು ಮುಂತಾಗಿ ಗೊಣಗಿಗುತ್ತ ರಗ್ಗಿನೊಳಗೆ ಮೈಗೂಡಿಸಿಕೊಂಡು ಗಡಗಡ ನಡುಗತೊಡಗಿದ. “ನಾಸ್ತಿಕ್ರು, ಶುದ್ಧ ನಾಸ್ತಿಕ್ರು” ಎಂದು ಸಿಡುಕುತ್ತ ವರಲಕ್ಷ್ಮಿ ಹೆಜ್ಜೆ ಹಾಕತೊಡಗಿದಳು. ವೀರಬಲ್ಲಾಳ ಚಕ್ರವರ್ತಿ ಎಂಬುವನು ಕಟ್ಟಿಸಿದ್ದ ದೇವಾಲಯದ ಪ್ರಾಂಗಣ ದಾಟುವ ಹೊತ್ತಿಗೆ ನನ್ನ ಹಾಜರಿಯನ್ನು ನೂರು ಬಾರಿ ಖಚಿತಪಡಿಸಿಕೊಂಡಿರಬಹುದು. ಮೈಮುರಿದು ಎಚ್ಚರಗೊಳ್ಳಲಿರುವಂತೆ ಗೋಚರಿಸುತ್ತಿರುವ ಸಹ್ಯಾದ್ರಿಯ ಈ ಮಗ್ಗುಲು ಭದ್ರೆ ಜುಳುಜುಳು ಪ್ರವಹಿಸುತ್ತ ನಿರಂತರ ಜೀವಂತಿಕೆಗೆ ಪ್ರತ್ಯಕ್ಷ ನಿದರ್ಶನವಾಗಿದ್ದಳು. ಮೌನಕ್ಕೆ ಲಾಲಿ ಹಾಡುತ್ತಿರುವ ಜೀರುಂಡೆಗಳ ಸದ್ದು ಪ್ರಕೃತಿ ಕೋಟಿ ತಂಬೂರಿಗಳನ್ನು ಸರಿಪಡಿಸುತ್ತಿರುವಂತೆ ಕೇಳಿಸುತ್ತಿತ್ತು. ಹೊರಗಡೆ ಒಂದು ಮೂಲೆಯಲ್ಲಿ ಹತ್ತಾರು ಭಿಕ್ಷುಕರು ಒಂದೇ ದೇಹವೆಂಬಂತೆ ಮಲಗಿದ್ದರು. ಕೊರೆಯುವ ಚಳಿಗೆ ಸ್ವಾಂತನ ಹೇಳಲು ನನ್ನವಳ ತೋಳನ್ನು ಹಿಡಿದುಕೊಳ್ಳಲು ಹೋದೆ. ‘ಏನ್ರಿ ಇದು ನಿಮ್ಮ ಹುಚ್ಚಾಟ’ ಎಂದು ಕೊಸರಿ ದುರಸರಿದಳು. ಹೊಟ್ಟೇರಿದ್ದರೆ ಅವರ ಮೈಯನ್ನು ಇವರು ಉಜ್ಜುವ; ಇವರ ಮೈಯನ್ನು ಅವರು ಉಜ್ಜುವ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸುವ, ಕಂಪಿಸುವ ಹೊಂಬಣ್ಣದ ಮಾಂಸಖಂಡಗಳನ್ನು ದರ್ಶಿಸಬಹುದಾಗಿತ್ತು. ಆದರೆ ಆ ಭಾಗ್ಯವನ್ನು ನನ್ನಿಂದ ಕಸಿದುಕೊಂಡಿರುವ ಶ್ರೀಮತಿ ಮ್ಡಿವಂತಿಕೆಯೇ ಮೂರ್ತಿವೆತ್ತಂತೆ ಅದಾವುದೋ ಮಂತ್ರವನ್ನು ಗೊಣಗುತ್ತ ತನ್ನ ಪಾಡಿಗೆ ತಾನು ನಡೆಯುತ್ತ ನದಿಯ ದಡ ತಲುಪಿದಳು. ನಾನೂ ಕೂಡ… ನನ್ನನ್ನು ಸಹ್ಯಾದ್ರಿ ಕಡೆ ನೋಡುವಂತೆ ನಿರ್ದೇಶಿಸಿ ತಾನು ಸೀರೆ ಉದುರಿಸಿ ಲಂಗವನ್ನು ಎದೆ ಮಟ್ಟ ಕಟ್ಟಿಕೊಂಡು ನೀರಿಗಿಳಿದಳು. ವಿಷ್ಟು ಸಹಸ್ರನಾಮ ಜಪಿಸುತ್ತ ಮುಳುಗತೊಡಗಿದಳು. ನಾನು ನಿಲುಕದ ಹೆಣ್ಣನ್ನು ಧ್ಯಾನಿಸುತ್ತ ದಾದಲ್ಲಿ ಇದ್ದುಬಿಟ್ಟೆ. ಆಕೆ”ಆ ಹೆಬ್ಬಂಡೆ ಮರೆಗೆ ಹೋಗಿ ನೀವು ಹಾಗೆ ಸ್ನಾನ ಮಾಡ್ರಿ… ಹಂಗ್ಯಾಕೆ ಹುಳಿಹುಳಿ ನೋಡ್ಕೊತಾ ನಿಂತಿದ್ದೀರಿ… ಏನು ಗಂಡಸರಪ್ಪಾ ನೀವು… ಶಾಸ್ತ್ರಿಗಳ ಮನೆತನದೋರೆಂದರೆ ಹೇಗಿರಬೇಕು ನೀವು” ಎಂದಾಕೆ ಹೇಳುತ್ತಿದ್ದಂತೆಯೇ ನಾನು ಹೆಬ್ಬಂಡೆ ಮರೆಗೆ ಹೋದೆ. ಅರ್ಥವಾಗದ ಹಿಂಸೆ ವರ್ಣನೆಗೆ ನಿಲುಕದ್ದು. ಇಷ್ಟೊಂದು ದೈವ ಭಕ್ತಿಯನ್ನು ಇಂಚಿಂಚಿಗೂ ಪ್ರಕಟಿಸಬಹುದೆಂದು ಮೊದಲೇ ಗೊತ್ತಾಗಿದ್ದರೆ ಖಂಡಿತ ನಾನೀ ಮಧುಚಂದ್ರ ಯೋಜನೆ ಹಾಕಿಕೊಳ್ಳುತ್ತಿರಲಿಲ್ಲ. ಒಂದೊಂದು ಮುಟ್ಟಿಗೂ ಒಂದೊಂದು ಕಾರಣ ದುರ ಸಿಡಿಯುವ ಈ ಸತೀಮಣಿಯೊಂದಿಗೆ ಹೇಗಪ್ಪಾ ಜೀವನುದ್ದಕ್ಕೂ ಪಯಣಿಸುವುದು ಎಣ್ಬ ಚಿಂತೆಯಿಂದ ನಾನು ಸ್ನಾನ ಮಾಡಿ ದಡಕ್ಕೆ ಬಂದಾಗ ಕಾಡೊಳಗಿಂದ ಕೋಳಿ ಕೂಗಿತು. +ಕ್ರೌಂಚಗಳು ಮುಗುಲಿಗೆ ಸಿಡಿದಾಗ ಆಕೆ ಮಡಿ ಬಟ್ಟೆ ಉಟ್ಟಳು. ಟಿತ್ತಿಭಗಳು ಕೂಗತೊಡಗಿದಾಗ ಆಕೆ ಉರುಳು ಸೇವೆಗೆ ಸಜ್ಜಾಗ್ತಿದ್ದೀನಿ. ಮಾತಾಡಿಸಿ ವ್ರತಭಂಗ ಮಾಡಿಬೇಡಿರೆಂದು ಎಚ್ಚರಿಸಿ ಮತ್ತೊಮ್ಮೆ ನೀರೊಳಗೆ ಮುಳುಗಿ ಮೇಲೆದ್ದಳು. ಆಕೆ ಸರಸರ… ದೇವಾಲಯದ ಕಡೆ ಸರಸರ ನಡೆಯತೊಡಗಿದಳು. ನಾನು ಹಸಿ ಬಟ್ಟೆಯನ್ನು ಛತ್ರದ ಮುಂದೆ ಒಣಗಲು ಹಾಕಿ ಗರ್ಭ ಗುಡಿ ಕಡೆ ಹೋದೆ. ಆಕೆ ಗರ್ಭ ಗುಡಿ ಸುತ್ತ ಉರುಳು ಸೇವೆ ಆರಂಭಿಸಿದ್ದಳು. ಒಂದೆರಡು ಸುತ್ತು ಅಕೆಯನ್ನು ಹಿಂಬಾಲಿಸಿದೆನಾದರೂ ಮುಂದುವರಿಯುವುದು ಸಾಧ್ಯವಾಗಲಿಲ್ಲ. ಗರ್ಭಗುಡಿ ಮುಂದುಗಡೆ ಅಂದರೆ ಪ್ರಾಚೀನ ಗಂಟೆಯ ಕೆಳಗೆ ಕೂತುಬಿಟ್ಟೆ. ಒಂದು ಸಿಗರೇಟನ್ನಾದರೂ ಸೇದಬೇಕೆಂಬಾಸೆ ಬಲವತ್ತರವಾಯಿತು. ಕಣ್ಣು ತಪ್ಪಿಸಿ ಕದಲುವಂತಿರಲಿಲ್ಲ. ನನ್ನ ಪತ್ನಿಯ ಸೇವಾ ಕೈಂಕರ್ಯ ಕಂಡು ಕೆಲ ಯಾತ್ರಾರ್ಥಿಗಳಂತೂ ಮೂಕ ವಿಸ್ಮಿತರಾಗಿದ್ದರು. ‘ಸನಾತನತೆಗೆ ಹಿಂದೂ ಧರ್ಮದ ಕೊಡುಗೆ’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಬರೆಯುತ್ತಿದ್ದ ಸಂಶೋಧಕನೋರ್ವ ನನ್ನ ಹೆಂಡತಿಯ ಪ್ರತಿ ಪ್ರದಕ್ಷಿಣೆ ಕುರಿತು ಏನನ್ನೋ ಟಿಪ್ಪೈ ಹಾಕಿಕೊಳ್ಳುತ್ತಿದ್ದ. ಹವ್ಯಾಸಿ ಛಾಯಾಗ್ರಾಹಕನೋರ್ವ ನನ್ನ ಹೆಂಡತಿಯ ವಿವಿಧ ಭಂಗಿಗಳನ್ನು ಸೆರೆಹಿಡಿಯತೊಡಗಿದ್ದ. ಮತ್ತೊಬ್ಬ ಡಾಕುಮೆಂಟರಿಗಾರನೋರ್ವ ವಿಡಿಯೋ ಕೆಮರಾವನ್ನು ಹೆಗಲ ಮೇಲಿಟ್ಟುಕೊಂಡು ಗೋಪುರದ ಮಿಥುನ ಶಿಲ್ಪಗಳಿಗೆ ಪೂರಕವಾಗಿ ನನ್ನ ಹೆಂಡತಿಯ ಅರೆನಗ್ನ ದೇಹವನ್ನು ಚಿತ್ರೀಕರಿಸಲಾರಂಭಿಸಿದ. ನನಗೊಂಥರಾ ಕಿರಿಕಿರಿಯಾದರೂ ಸಹಿಸಿಕೊಂಡೆ. ಮೊಖ್ತೇಸರರೇ ಅವರಿಗೆ ಆ ಎಲ್ಲ ಸೌಲಭ್ಯ ಒದಗಿಸಿರುವರೆಂದಮೇಲೆ ಹೇಳುವುದು, ಕೇಳುವುದು ಏನಿದೆ> ಒಟ್ಟಿನಲ್ಲಿ ಯಾತ್ರಾರ್ಥಿಗಳ ಪಾಲಿಗೆ ‘ಅಪರೂಪದ ದೈವಭಕ್ತೆ’ಯಾಗಿದ್ದಳು ನನ್ನ ಹೆಂಡತಿ. ವೃದ್ಧ ವಿಧವೆಯೋರ್ವಳು ನನ್ನ ಬಳಿಗೆ ಬಂದು “ಆ ಮಹಾತಾಯಿಯ ಗಂಡ ನೀನೇ ಏನಪ್ಪಾ…” ಎಂದು ಉದ್ಗಾರ ತೆರೆದಳು. “ನನ್ನ ಸೊಸೆಯಂದಿರೂ ಇದ್ದಾರೆ ತಗೊಂಡೆನು ಮಾಡುವುದು? ದಂಡ… ಸದಾ ತಮ್ಮ ಗಂಡಂದಿರ ಹೆಗಲಿಗೆ ಜೋತು ಬಿದ್ದಿರ್‍ತಾರೆ… ಒಂಚೂರು ಮಡಿಯುಡಿ ಇಲ್ಲ. ಅಂಥ ಹುಡುಗಿಯನ್ನು ಕೈಹಿಡಿದಿರೋ ನೀನೇ ಪುಣ್ಯವಂತನಪ್ಪಾ… ಹೆಂಡತಿಗೆ ಎಷ್ಟೆಲ್ಲ ಸಹಕಾರ ನೀಡ್ತಿರೋ ನಿನ್ನಂಥ ಗಂಡಂದಿರು ಲಕ್ಷಕ್ಕೊಬ್ಬರಪ್ಪಾ…” ಎಂದು ಪ್ರಶಂಸಿಸಿ ಹೋಯಿತು. ಮೂತಶಂಕೆ ನೆಪದಿಂದ ನಾನೂ ಎದ್ದು ಹೊರಗಡೆ ಹೋದೆ. ಗುಡಿಗೆಸ್ವಲ್ಪ ದೂರದಲ್ಲಿದ್ದ ಡಬ್ಬಿ ಅಂಗಡಿಯಿಂದ ಒಂದು ಸಿಗರೇಟು ಕೊಂಡು ಸೇದಿದೆ. ವಸನೆ ಬರದಿರಲೀ ಅಂತ ನಾಲ್ಕು ಸೋಪಿನ ಕಾಳುಗಳನ್ನೂ ಬಾಯಲ್ಲಿ ಹಾಕಿಕೊಂಡೆ. ಕಾಲು ಹಾದಿಯ ಪಕ್ಕ ವೃದ್ಧನೊಬ್ಬ ತಲೆ ಅಡಿ ಚ್ ಲವನ್ನು ಇಟ್ಟುಕೊಂಡು ನಿದ್ದೆ ಹೋಗಿದ್ದ. ನನಗೆ ಅನುಮಾನ ಬಂದು ತಿಬ್ಬಳಿಸಿ ನೋಡಿದೆ. ಅವನ ಅರೆತೆರೆದ ಬೊಚ್ಚು ಬಾಯಿಯೊಳಗಿಂದ ಗೊದ್ದಿಗವೊಂದು ಹೊರ ಬಂತು. ಕಣ್ಣು ರೆಪ್ಪೆಯೊಳಗೆ ನಾಲಕೈದು ಕಟ್ಟಿರುವೆಗಳು ಅಡ್ಡಾಡುತ್ತಿದ್ದುವು. ನನಗೆ ಅದನ್ನು ನೋಡಿ ಭಯವಾಯಿತು. ಈ ಮುದುಕ ಸತ್ತಿದ್ದಾನೆ ಎಂದು ನಾನು ಉದ್ಗರಿಸಿದಾಗ ಒಬ್ಬ ಈ ಕಾಯ ನಶ್ವರ ಎಂದ. ಇನ್ನೊಬ್ಬ ಈವತ್ತು ಈ ಮುದುಕ, ನಾಳೆ ನಾನು, ನಾಡಿದ್ದು ನೀನು ಎಂದ. ಮತ್ತೊಬ್ಬ ದಿನಾ ಸಾಯೊರ್‍ಗೆ ಅಳೋರ್‍ಯಾರು ಹೋಗಯ್ಯ ಹೋಗು ಅಂದ, ಮಗದೊಬ್ಬ ಆ ಮುದುಕ ಚೀಲದಲ್ಲಿ ಏನಿಟ್ಟಿರಬಹುದೆಂದು ಆ ಕಡೆ ಓಡಿದ. ಗೋಪುರದ ಮೇಲೆ ರಾಕ್ಷಸನನ್ನು ಎಡಗಾಲಿಂದ ಮೆಟ್ಟಿ ನಿಂತಿರುವ ದೇವಿಯ ಬಾಯಿಂದ ಕೋರೆ ಹಲ್ಲುಗಳು ದಿನದ ಮೊದಲ ಬೆಳಕಿಗೆ ಫಳಫಳ ಹೊಳೆಯುತ್ತಿದ್ದವು. +ಇದರಿಂದ ನನ್ನ ಮನಸ್ಸಿಗೆ ಅಪಾರ ನೋವುಂಟಾಯಿತು… ಯಾಕಿದ್ದೀತಂತ ಮುಂದೆ ಬಂದಾಗ ಕೆದರು ತಲೆಯ ವೃದ್ಧೆಯೋರ್ವಳು ತಾರಕ ಸ್ವರದಲ್ಲಿ ‘ಬ್ರೋಚೇವಾಡೆವುಡುರಾ’ ಎಂದು ಹಾಡುತ್ತಿದ್ದಳು. ಸುಶ್ರಾವ್ಯವಾದ ಆ ಶಾರೀರಕ್ಕೆ ಮನಸೋತು ನಿಂತಿದ್ದ ನನಗೆ ಆದಿತಾಳಕ್ಕೆ ಮಾತ್ರೆಗಳೆಷ್ಟು ಗೊತ್ತಾ ಹೇಲು ಮತ್ತೆ… ಮಹಾ ಸಂಗೀತಜ್ಞನ ಥರ ನಿಂತ್ಕೊಂಡು ಕೇಲ್ತಿದ್ದೀಯಲ್ಲ… ನೀನೇನು ಮುಮ್ಮುಡಿ ಕ್ರಿಷ್ಣ ಒಡೆಯನೋ… ಹೋಗಯ್ಯ ಹೋಗು” ಎಂದು ಗದರಿಸಿ ಬಿಟ್ಟಿತು. ಅವಮಾನವಾದಂತಾಗಿ ನಾನು ಗರ್ಭಗುಡಿ ಕಡೆ ಬಂದೆ… ಅದೇ ತಾನೆ ಸಾವಿರದ ಒಂದು ಉರುಳು ಸೇವೆ ಮುಗಿಸಿದ್ದ ವರಲಕ್ಷ್ಮಿಗೆ ಅರ್ಚಕರು ಗುಡಿಯೊಳಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಸೋತು ಸುಣ್ಣಾಗಿದ್ದ ಆಕೆ ದೇವಿ ಮೂರ್ತಿಯ ಮುಂದೆ ಸಾಷ್ಟಾಂಗ ಪ್ರಣಾಮ ಸಲ್ಲಿಸಲು ಉದ್ದೋಕೆ ಮಲಗಿದ್ದಳು. ನನ್ನ ಅಕ್ಕಪಕ್ಕದಲ್ಲಿದ್ದವರು ಆ ಮೂಗುತಿಯನ್ನು ಟಿಪ್ಪುಸುಲ್ತಾನ್ ಮಾಡಿಸಿಕೊಟ್ಟದ್ದೆಂದೂ; ಕೊರಳ ರತ್ನದಾಭರಣವನ್ನು ಕೃಷ್ಣ ದೇವರಾಯನ ದ್ವಿತೀಯ ಹೆಂಡತಿ ಚಿನ್ನಾಂಬಿಕೆ ಮಾಡಿಸಿಕೊಟ್ಟಿದೆಂದೂ ಹೇಳತೊಡಗಿದ್ದರು. “ಈ ತಾಯಿಗೆ ಸಂಬಂಧಿಸಿದವರ್‍ಯಾರಾದ್ರು ಅದೀರೇನ್ರಿ… ಎದ್ದೇಳ್ಲಿಕ್ಕಾಗದೆ ಮಲಗಿದ್ದಾರೆ… ಎಬ್ಬಿಸಿ ಅರ್ಚನೆಗೆ ಸಹಕರಿಸಿ” ಎಂದು ಅರ್ಚಕರೋರ್ವರು ಕೂಗುತ್ತಲೆ ನಾನು ಒಳಗಡೆ ಪ್ರವೇಶಿಸಿದೆ. ನಿಜವಾಗಲೂ ವರಲಕ್ಷ್ಮಿ ಸೋತು ಸುಣ್ಣವಾಗಿದ್ದಳು. ಎಬ್ಬಿಸಲು ಹೋದರೆ “ದೇವಿ ಸಿಟ್ ಮಾಡ್ಕೊಂಡಾಳು… ಮೈಮುಟ್ಟಬೇಡಿ…” ಎಂದು ಕೊಸರಿದಳು. ಆಕೆಯ ಉತ್ತರದಿಂದ, ಅರ್ಚಕರು ಸುಪ್ರೀತರಾಗುತ್ತಿರಲ್ಕೆ ಶ್ರೀಮತಿಯು ಬಹು ಪ್ರಯಾಸದಿಂದ ಮೇಲಕ್ಕೆದ್ದಳು. ಹಾಗೆ ವಾಲಾಡುತ್ತಲೆ ಕುಂಕುಮಾರ್ಚನೆ, ಬಿಲ್ವಾರ್ಚನೆ ಇವೆಲ್ಲವನ್ನು ಮಾಡಿಸಿದಳು. ಮಂಗಳಾರತಿ ಮಾಡುವಾಗ್ಗೆ ಮುಖ್ಯ ಅರ್ಚಕರು ವಂಶದ ಪೂರ್ವಾಪರ ವಿಚಾರಿಸಿದರು. ನಾನು ಹೇಳಲ್ಲಗಿ ಅವರು ಹಿರಿಹಿರಿ ಹಿಗ್ಗಿದರು. “ಸರ್ವದರ್ಶನ ತೀರ್ಥರೂ; ಜ್ಯೋತಿಷ್ಯ ಪಾರಂಗತರೂ; ಅಮಲ ವಿದ್ಯಾನಿಧಿಗಲೂ ಆದ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಕ್ಕಳೇನ್ರಿ ನೀವು…” ಎಂದು ಉದ್ಗರಿಸುತ್ತಲೇ ವಿಶೇಷ ಮಂಗಳಾರ್ಚನೆ ಮಾಡಿದರು. ಐದು ನಿಮಿಷ ನಿರರ್ಗಳವಾಗಿ ಮಂತ್ರೋಚ್ಚರಣೆ ಮಾಡಿ ವಿಶೇಷ ಆಶೀರ್ವಾದ ಮಾಡಿದರು. ಪೂಜಾ ಕೈಂಕರ್ಯವನ್ನು ತಮ್ಮ ಕಿರಿಯರಿಗೆ ವಹಿಸಿಕೊಟ್ಟು ಅವರೂ ನಮ್ಮೊಂದಿಗೆ ಬಂದರು. ವರಲಕ್ಷ್ಮಿಯ ದೈವಭಕ್ತಿ ಕೊಂಡಾಡಿದರು. ನಮ್ಮ ತಾತನವರ ಬಳಿ ಒಂದು ತಿಂಗಳ ಕಾಲ ಶಿಷ್ಯ ವೃತ್ತಿಯಲ್ಲಿದ್ದರಂತೆ. ಸಂಹಿತಾ ಬ್ರಾಹ್ಮಣಗಳಲ್ಲಿ ಯಜ್ಞಕರ್ಮಗಳ ಹೃದ್ಗತ ಮಾಡಿಕೊಂಡಿರುವ ಕೆಲವೇ ಕೆಲವು ಶ್ರೋತ್ರಿಗಳ ಪೈಕಿ ನಮ್ಮ ತಾತನವರೂ ಒಬ್ಬರಂತೆ. ತಾತನವರು ಈ ಶಕ್ತಿ ಸ್ಥಳದಲ್ಲಿ ಚಂಡಿಕಾ ಯಜ್ಞ ಮಾಡಬೇಕೆಂದು ಪ್ರಯತ್ನಿಸಿದ್ದರಂತೆ… ರಾಜಕೀಯ ವಿದ್ಯಮಾನಗಳಿಂದ ಅದು ನೆರವೇರಲಿಲ್ಲವಂತೆ… ಹೀಗೆ ಅವರು ನನಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ತಿಳಿಸಿದರು. “ಅಷ್ಟು ಸುಲಭವಾಗಿ ನಾನು ಅರ್ಥ ಆಗೋದಿಲ್ವೋ… ಅನ್ಯರಿಗೆ ನಾನು ಅರ್ಥ ಆದಷ್ಟು ನಾನು ಹೆತ್ತ ಮಗನಿಗೆ; ಮೊಮ್ಮಗನಿಗೆ ಅರ್ಥ ಆಗಲಿಲ್ವಲ್ಲ ಎಂಬ ನೋವು ನನಗಿದೆ. ವೇದಾಧ್ಯಯನ ಮಾಡಿದೋರಿಗೆ ಈ ದೇಶದ ತೀರ್ಥಕ್ಷೇತ್ರಗಳಲ್ಲಿ ವಿಶೇಷ ಮರ್ಯಾದೆ ಗೌರವ ಸಿಗ್ತದ್ ಅಪ್ಪಾ” ಎಂದು ತಾತನವರು ಹೇಳುತ್ತಿದ್ದ ಮಾತುಗಳು ನೆನಪಾದವು. ಅರ್ಚಕರು “ಹೇಗಿದ್ದಾರಪ್ಪಾ ಶಾಸ್ತ್ರಿಗಳು?” ಎಂದು ಕೇಳಿದರು. ಅವರು ಶಯ್ಯಾಶ್ರಿತರಾಗಿರುವ ಸಂಗತಿ ಹೇಳಲು ಮನಸ್ಸು ಬಾರದೆ ಆರೋಗ್ಯವಾಗಿದ್ದಾರೆ ಎಂದು ಹೇಳಿಬಿಟ್ಟೆ. ಅವರು ಸದಾ ಸುಖವಾಗಿರಲಪ್ಪಾ… ಮಹಾನುಭಾವರು ಅವರು… ಅವರ ಆಶೀರ್ವಾದದಿಂದಲೇ ನಾನು ಈ ಮಟ್ಟ ತಲುಪಿರುವುದು. ಯಜುರ್ವೇದಿ ರಾಮಾನುಜರು ಒಮ್ಮೆ ಬಂದು ದರ್ಶನ ತಗೋತಾರಂತ ತಿಳಿಸಪ್ಪಾ…” ಎಂದು ಹೇಳಿದರಲ್ಲದೆ ವಿಶೇಷ ಪ್ರಸಾದದ ಪೊಟ್ಟಣಗಳನ್ನು ಕೊಟ್ಟರು. ಹಾಗೆಯೇ ನಮ್ಮ ವಸತಿಗೆ ಹೇಮಾದ್ರಿ ಮೇಲಿದ್ದ ವಿಶ್ರಾಂತಿ ಗೃಹದಲ್ಲಿ ಅವಕಾಶ ಮಾಡಿಕೊಟ್ಟರು. ದೇವಿ ಸಾನಿಧ್ಯದಲ್ಲಿ ಐಷಾರಾಮವಾಗಿ ಇರೋದು ಬೇಡಾರೀ ಎಂದು ಮೊದಮೊದಲು ತಕರಾರೆತ್ತಿದರೂ ವರಲಕ್ಷ್ಮಿ ಹೇಮಾದ್ರಿ ಏರಲು ಒಪ್ಪಿದಳು. +ಮೂರು ಕೋನೆಗಳುಲ್ಲ ಒಂದೊಂದು ಸೂಟ್ ನಾವು ನಿರೀಕ್ಷಿಸಿದ್ದಂಕ್ಕಿಂತ ಹೆಚ್ಚು ಸುಸಜ್ಜಿತವಾಗಿತ್ತು. “ನಿಮ್ಮ ಲೈಂಗಿಕ ಶಕ್ತಿ ನೂರ್ಮಡಿಗೊಳಿಸಲು ಇದೇ ‘ಅರ’ ಬ್ರಾಂಡಿನ ಮಿಕ್ಸ್‌ಗಳನ್ನೇ ಉಪಯೋಗಿಸಿರಿ” ಎಂಬ ಪೋಸ್ಟರ್ಸ್‌ಗಳನ್ನು ಕಿತ್ತು ಹರಿದು ತುಂಗೆಯ ಕಡೆ ತೂರಿದೆ. ಕಿತಕಿಗಳಾಚೆ ಸಹ್ಯಾದ್ರಿ ಸಾಲು ಅತಿ ಮನೋಹರವಾಗಿ ಕಾಣಿಸುತ್ತಿತ್ತು. ಗಾಳಿ ಹಿತವಾಗಿ ಸಂಚರಿಸುತಿತ್ತು. ನಾನಾ ಪಕ್ಷಿಗಳು ತೀರ ಹತ್ತಿರದಲ್ಲಿ ಬಂದು ಕೂತು ಹಾಡುತ್ತಿದ್ದವು. ಮಂಚದಮೇಲಿದ್ದ ಹಾಸಿಗೆ ಹಂಸತೂಲಿಕಾತಲ್ಪಕ್ಕಿಂತ ಏನು ಕಡಿಮೆ ಇರಲಿಲ್ಲ. ಅಮೆರಿಕನ್ ಶೈಲಿಯ ಹಾಗೂ ಭಾರತೀಯ ಶೈಲಿಯ ಕಕ್ಕಸ್ಸು ಕೋಣೆಗಳಲ್ಲಿ ಉಪಯೋಗಿಸಲ್ಪಟ್ಟ ಕೆಲವು ನಿರೋಧ್‌ಗಳು ಒದ್ದೆ‌ಒದ್ದೆಯಾಗಿ ಬಿದ್ದಿದ್ದವು. ಅವುಗಳ ಅನುಭವಕ್ಕೆ ಅಕ್ಷರ ರೂಪ ಕೊಡುವ ರೀತಿಯಲ್ಲಿ ಜಾರುವ ಗೋಡೆ ಮೇಲೆ ಲೈಂಗಿಕ ಕ್ರಿಯೆ ಬಗ್ಗೆ ಕೆಟ್ಟದಾಗಿ ಅಶ್ಲೀಲವಾಗಿ ಬರೆಯಲಾಗಿತ್ತು. ಅವುಗಳಿಂದಲಾದರೂ ಸ್ಪೂರ್ತಿ ಪಡೆಯಲೀಕೆ ಎಂಬ ಕಾರಣದಿಂದ ನಾನವನ್ನು ಅಳಿಸುವ ಗೋಜಿಗೆ ಹೋಗಲಿಲ್ಲ. ಆದರೆ ಅವ್ಯಾವೂ ಆ ಪತಿವ್ರತೆಯ ಮೇಲೆ ಯಾವ ಪರಿಣಾಮ ಬೀರಲಿಲ್ಲ. ಇತ್ತೀಚಿನ ಅಪರೂಪದ ಸಂಶೋದನೆಗಲಲ್ಲಿ ನಿರೋಧ್ ಕೂಡ ಒಂದು ಎಂಬ ಪರಿಜ್ಞಾನ ಇದ್ದಂತಿಲ್ಲ ಈಕೆಗೆ. ನಮ್ಮ ತಾತನವರ ಮೆಲಿನ ಪೂಜ್ಯ ಭಾವನೆಯಿಂದಲ್ಲವೆ ನವ ವಿವಾಹಿತರಾದ ನಾವೀರ್ವರು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿ ನಿರ್ವಿಘ್ನವಾಗಿ ಕ್ರೀಡಿಸಲಿ ಎಂದಲ್ಲವೆ ಯಜುರ್ವೇದಿಯವರು ಇಂಥ ಸುಂದರವಾದ ಭವನ ಕಲ್ಪಿಸಿಕೊಟ್ತಿರುವುದು! ಆ ಕ್ರಿಯೆಗೆ ನಾನವಳನ್ನು ಎಳೆಯಲೆತ್ನಿಸಿ ಮುಖಭಂಗ ಮಾಡಿಸಿಕೊಂಡೆ. ಪ್ರಕೃತಿಯ ಯಾವ ಭಾಗಕ್ಕೂ ಆಕೆಯಲ್ಲಿ ಆಸೆ ಆಕಾಂಕ್ಷೆಗಳನ್ನು ಉದ್ದೀಪಿಸುವ ಶಕ್ತಿ ಇಲ್ಲವೆಂದುಕೊಂಡೆ. ನನಗೆ ನಮ್ಮ ತಾತನವರ ಮೆಲೆ ಹುಲಿಗುಡ್ಡದಷ್ಟು ಗಾತ್ರದ ಸಿಟ್ಟು ಬಂದಿತು. ಅಸಹಾಯಕತೆಯಿಂದ ಕುಗ್ಗಿ ಹೋದೆ. ಇಷ್ಟೂ ಸಾಲದೆಂಬಂತೆ ಊಟ, ತಿಂಡಿ, ನೀರು ನಿಡಿ ಇತ್ಯಾದಿ ವಿಷಯಗಳ ಬಗೆಗೂ ಸುಗ್ರೀವಾಜ್ಞೆ ಜಾರಿ ಮಾಡಿದ್ದಳು. ಆವತ್ತು ಸತಿಯಾದವಳು ಏಕಾಗ್ರತೆಯಿಂದ, ಮಡಿಯುಡಿಯಿಂದ ಒಪ್ಪತ್ತಿದ್ದು ಖಾಲಿ ಹೊಟ್ಟೆಯಲ್ಲಿರುವ ತನ್ನ ಪತಿಪರಮೇಶ್ವರನ ಪಾದಗಳಿಗೆ ಸಾವಿರದಾ ಒಂದು ಪುಜೆ ಸಲ್ಲಿಸಿದ್ದಲ್ಲಿ ಅಲೌಕಿಕವಾದ ಆನಂದ ಲಭಿಸುವುದೆಂದು ಹಿಂದಿನ ರಾತ್ರಿ ಅಷ್ಟು ದೂರ ಮಲಗಿಕೊಂಡೇ ಹೇಳಿದ್ದಳು. ಇಂಥ ಸದರಿ ಪೂಜೆಯಿಂದ ದಾಂಪತ್ಯ ಬಿಗಿಗೊಳ್ಳೂವುದೆಂದೂ; ಗಂಡನಾದವನು ಪರಸ್ರೀಯತ್ತ ಕಣ್ಣೆತ್ತಿ ನೋಡುವುದಿಲ್ಲವೆಂದೂ ಆಕೆ ಪರೋಕ್ಷವಾಗಿ ಗೊಣಗಿಕೊಂಡಿದ್ದಳು… ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಬೇಸರದಿಂದ ಒದ್ದಾಡಿದೆ. ಪೂಜ್ಯರಾದ ಶಾಸ್ತ್ರಿಗಳ್ನ್ನೂ; ಮಾತೋಶ್ರೀ ಅಲುಮೆಲಮ್ಮನವರನ್ನೂ ಮನಸಾರೆ ಶಪಿಸಿದೆ… ನನ್ನ ಬದುಕಿನಲ್ಲಿ ಲೈಂಗಿಕ ಅನುಭವವನ್ನು ಸ್ವಾದಿಷ್ಟವಾಗಿ, ಸಲೀಸಾಗಿ ಅನುಭವಿಸಲಾಗಲಿಲ್ಲವೆಂದ ಮೇಲೆ ಈ ಅನುಕೂಲಗಳಿಗೆ ಬೆಂಕಿ ಹಚ್ಚಲಿ ಎಂದು ಶಾಪ ಹಾಕುವುದು ಅನಿವಾರ್ಯವಲ್ಲವೆ? ನನ್ನ ಪಾಡಿಗೆ ನಾನಿರಲಿಕ್ಕೂ ಬಿಡುತ್ತಿಲ್ಲ ಈಕೆ… ಸೂತ್ರದ ಗೊಮ್ಬೆಯಂತೆ ತನ್ನ ಮೂಗಿನ ನೇರಕ್ಕೆ ಕುಣಿಸುತ್ತಲೆ ಇರುವಳು. ಇನ್ನೆನು ಅತ್ತೇ ಬಿಡುವನೆಂಬಂತೆ ಮುಖ ಮಾಡಲು “ಇದೆಲ್ಲ ನಿಮ್ಗೆ ಒಳ್ಳೇದಾಗ್ಲೀ ಅಂತ… ಹುಟ್ಟುವ ಮಕ್ಕಳು ಆಯುರಾರೋಗ್ಯದಿಮ್ದ ಬಾಳಲಿ, ಬದುಕಲೀ ಅಂತ ಕಣ್ರೀ ನಾನೀ ಪೂಜೆ ಪುನಸ್ಕಾರ ವ್ರತ ಇತ್ಯಾದಿ ನಿಯಮಗಳನ್ನು ಪಾಲಿಸ್ತಿರೋದು.” ಎಂದು ನನಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದಳು. ಯಜ್ಜೀವ್ಯತೇ ಕ್ಷಣಮಪಿ ಪ್ರಥಿತಂ ಮನುಷ್ಯೆಃ ವಿಜ್ಞಾನ ಶೌರ್ಯ ವಿಭವಾರ್ಯ ಗುಣೈಃ ಸಮೇತಂ ಎಂದು ತಾತನವರು ನನ್ನ ಬಗ್ಗೆ ಹೇಳುತ್ತ ಸದಾಚಾರಿಯೂ ಸುಸಂಪನ್ನನೂ ಆದ ನಮ್ಮ ಮೊಮ್ಮಗನಾದ ಶಾಮನು ಕಟ್ಟಾ ಸಂಪ್ರದಾಯವಾದಿಯೂ; ವ್ರತೋಪಾಸಕನೂ ಆಗಿ ಆಚಂದ್ರಾರ್ಕವಾಗಿ ಬೆಳಗುವನೆಂದು ಹೇಳುತ್ತಿದ್ದುದು ನೆನಪಿಸಿಕೊಂಡರೆ ನಗು ಬರುತ್ತದೆ. ಅದಕ್ಕೆಂದೇ ಅವರು ಸಂಪ್ರದಾಯ ಮಡಿವಂತಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಕನ್ಯೆಯನ್ನು ಹುಡುಕಿ ನೂರೊಂದು ವಿಘ್ನಗಳ ನಡುವೆ ಮದುವೆ ಮಾಡಿರುವುದು. ನಿಷೇಕದ ರಾತ್ರಿಯೆಂದೆ ನನ್ನ ಬದುಕಿನ ಪತನ ಆರಂಭವಾಯಿತೆಂದು ಒಂದೆರಡು ದಶಕ ಕಳೆದ ನಂತರ ನಾನು ಹೇಳಬಹುದು ಎಂದುಕೊಂಡೆ. ಆಕೆ ಹೊಡೆದು ಶಿಕ್ಷಿಸುವುದಿರಲಿ, ಗದರಿಸಲೂ ನನ್ನಿಂದಾಗಲಿಲ್ಲ. ಎಲ್ಲ ಹಿಂಸೆಗಳನ್ನು ಮೌನವಾಗಿ ಸಹಿಸಿಕೊಂಡೆ. ನನಗೆ ಹಸಿವೆ ಬಾಯಾರಿಕೆ ಅರ್ಥವದದೇ ಆಕೆ ಪೂಜೆಯಲ್ಲಿ ತನ್ಮಯಳಾಗಿದ್ದಾಗ… ದೈವೀ ಭಕ್ತಿಯ ಪ್ರಕಮ್ಪನಗಳನ್ನು ಪ್ರಕಟಿಸುತ್ತಿದ್ದ ಆಕೆಯ ಬಗ್ಗೆ ಬೇಸರಪಟ್ಟುಕೊಳ್ಳಲೂ ನನ್ನಿಂದ ಆಗಲಿಲ್ಲ. ತುಟಿ ಕಚ್ಚಿ ಸಹಿಸಿಕೊಂಡೆ. ಪಾದ ಪೂಜೆ ಒಂದೂವರೆ ಗಂಟೆ ಮುಂದುವರೆದ ಹೊತ್ತಿನಲ್ಲಿ ಜವ್ವು ಗಟ್ಟಿ ನನ್ನ ಕಾಲೊಳಗಿಂದ ಅಸಹನೀಯವಾದ ನೋವು ಒಡಮೂಡಿತು. ಅದೆಲ್ಲ ಮುಗಿದ ನಂತರವೂ ಆಕೆ ನನ್ನನ್ನು ಪ್ರಸಾದ ನಿಲಯಕ್ಕೆ ಹೋಗಲು ಬಿಡಲಿಲ್ಲ. ದೂರದಲ್ಲಿದ್ದ ಅಡುಗೆ ವಿಭಾಗದಿಮ್ದ ಸಾಂಬಾರಿನ ವಾಸನೆ ಅಲೆ‌ಅಲೆಯಾಗಿ ಬಂದು ನನ್ನ ಮೂಗನ್ನು ಮೋಹಪಾಶದಿಂದ ಬಂಧಿಸಿತ್ತು. “ಇನ್ನೇನು ಎರಡನೇ ಪಂಕ್ತಿ ಶುರುವಾಗುವ ಹೊತ್ತು ಹೋಗೋಣ, ಹೊಟ್ಟೆ ಹಸಿದಿದೆ” ಎಂದು ಚಿಕ್ಕ ಮಗುವಿನಂತೆ ಗೋಗರೆದರೂ ಪ್ರಯೋಜನವಾಗಲಿಲ್ಲ. “ರ್ರೀ… ಇವತ್ತು ಶುಕ್ರವಾರ… ದೇವಿ ಸನ್ನಿಧಿಯಲ್ಲಿ ಉಪವಾಸ ವ್ರತ ಮಾಡಿದ್ರೆ ಪುಣ್ಯ ಲಭಿಸ್ತದೆ… ನೀವು ಊಟ ಮಾಡಿದ್ರೀ ಅಂದರೆ ನಿಮ್ಮ ಏಳಿಗಾಗಿ ಕೈಕೊಂಡ ವ್ರತ ನಿಷ್ಫಲವಾಗ್ತದೆ… ನಿಮಗೆ ಹಸಿವು ತಡೆದುಕೊಳ್ಳಲಗದಿದ್ರೆ ದೇವಿಪ್ರಸಾದ ಸ್ವೀಕರಿಸಿ ಅದೂ ಒಂದೇ ಒಂದು ಬಾಳೆಹಣ್ಣು ಮಾತ್ರ…” ಎಂದು ಕಡಿವಾಣ ಬಿಗಿಗೊಳಿಸಿದಳು. ಮೈ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತಾದರೂ ಸಹಿಸಿಕೊಂಡೆ. ಒಂದು ಆಷ್ಚರ್ಯದ ಸಂಗತಿ ಎಮ್ದರೆ ಒಂದು ಹಿಡಿ ಅನ್ನ, ಒಂದು ಹನಿ ನೀರು ಮುಟ್ಟದಿದ್ದರೂ ವರಲಕ್ಷ್ಮಿ ಹೆಚ್ಚು ಲವಲವಿಕೆಯಿಂದ ಇದ್ದಳು. ಹೀಗೆ ದೇಹ ದಂಡಿಸಿಕೊಳ್ಳುತ್ತ ಹೋಗುವ ಈಕೆ ಮುಂಬರುವ ವರ್ಷಗಳಲ್ಲಿ ಹೆಚ್ಚು ಕುರೂಪಿಯಾಗುವುದರಲ್ಲಿ ಸಂಶಯವಿಲ್ಲವೆಂದುಕೊಂಡೆ. +ರಾತ್ರಿಯಾಗುತ್ತಿದ್ದಂತೆ ತಾತಂದಿರ ನೆನಪು ಬಿರುಗಾಳಿಯೋಪಾದಿಯಲ್ಲಿ ಬೀಸಿ ಹಿಂಸಿಸತೊಡಗಿತು. ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ಬರಬಾರದೆಂದುಕೊಂಡೆನು. ಇತ್ತೀಚಿನ ದಿನಗಳಲ್ಲಿ ನಿಷ್ಕ್ರಿಯರಾಗುತ್ತಿರುವ ಅವರ ಮನಸ್ಸಿನಲ್ಲಿ ಏನಿರುವುದೋ ಬಲ್ಲವರಾರು? ಅವರು ಬರೆದಿಟ್ಟಿರುವಲೆನ್ನಲಾದ ವೀಲುನಾಮದೊಲಗೆ ನನ್ನ ಬದಲಾದ ನಡುವಳಿಕೆಗಳ ಕುರಿತು ಸುಧೀರ್ಘವಾಗಿ ಪ್ರಸ್ತಾಪಿಸಿರಬಹುದು. ಅದು ಭಾರತದ ಸಂವಿಧಾನಕ್ಕಿಂತ ಮತ್ತು ಭಾರತೀಯ ದಂಡ ಸಂಹಿತೆಗಿಂತ ಏನು ಕಡಿಮೆ ಇರಲಿಕ್ಕಿಲ್ಲ… ಗಂಡನನ್ನು ನಿರ್ಜೀವ ಪೂಜಾ ವಿಗ್ರಹದಂತೆ ಪರಿಭಾವಿಸಿರುವ ಹೆಂಡತಿ ವರಲಕ್ಷ್ಮಿಗೂ ಒಂದು‘ವೀಲುನಾಮ’ವನ್ನು ಊರು ತಲುಪಿದ ಮೇಲೆ ಬರೆದಿಡಬೇಕೆಂದುಕೊಂಡೆ… ಇನ್ನು ಮಧುಚಂದ್ರವೆಂಬ ನರಕಯಾತನೆಯನ್ನು ಸಾಕು ಮಾಡಿಕೊಂಡು ಸ್ವಾಸ್ಥಿಗ್ರಾಮವಾದ ಕೊಟ್ಟೂರು ಕಡೆ ಪ್ರಯಾಣ ಬೆಳೆಸಿಬಿಡಬೇಕು… ಕೊಲ್ಲೂರಿಗೆ ಹೋಗಿ ಮೂಕಾಂಬಿಕೆಯನ್ನೂ, ಹೊರನಾಡಿಗೆ ಹೋಗಿ ಅನ್ನಪೂರ್ಣೇಶ್ವರಿಯನ್ನೂ; ಮೈಸೂರಿಗೆ ಹೋಗಿ ಚಾಮುಂಡೇಶ್ವರಿಯನ್ನೂ ದರ್ಶಿಸಿ ವ್ರತೋಪಾಸನೆ ಮಾಡಿ ವೈವಾಹಿಕ ಬದುಕನ್ನು ಶಕ್ತಿಯುತಗೊಳಿಸಬೇಕೆಂದು ಯೊಜನೆ ಹಾಕಿಕೊಂಡಿರುವ ಶ್ರೀಮತಿ ವರಲಕ್ಷ್ಮಿ ಅಷ್ಟು ಸುಲಭವಾಗಿ ಊರಿಗೆ ಹೊರಡುವ ಪೈಕಿಯಲ್ಲ… ಇದಕ್ಕೇನಾದರೂ ಬಲವಾದ ಕಾರಣ ಬೇಕು… ಅದನ್ನು ಹುಡುಕುವುದು ಸುಲಭ ಸಾಧ್ಯ ಸಂಗತಿಯಲ್ಲ… ಆ ತುಮಕೂರಿನ ಅಡಿಕೆ ಮಂಡಿ ವರ್ತಕರೂ ಧರ್ಮ ರತ್ನಾಕರ ಬಿರುದಾಂಕಿತರೂ ಆದ ಕಲ್ಕೆರೆ ಚಿಕ್ಕಣ್ಣಯ್ಯನವರು ಕಟ್ತಿಸಿದ ಆ ಭವನವನ್ನೇ ಅಮ್ಮನವರ ದೇವಾಲಯವೆಂದು ಭಾವಿಸಿ ಕೈಯಲ್ಲಿ ಜಪಮಾಲೆ ಹಿಡಿದುಕೊಂಡು ಕೂತಿದ್ದ ವರಲಕ್ಷ್ಮಿ ನನ್ನ ಕೈಗೆ ತೊಡಿಸಲಟ್ಟಿರುವ ಕಂದಾಚಾರದ ಶೃಂಖಲೆ ಹರಿದೆಸೆಯಲು ತಪಸ್ಸು ಮಾಡುತ್ತಿರುವಂತೆ ಕಂಡುಬಂದಿತು. ಕಮಲಾಕರನಿಗೆ ಫೋನ್ ಮಾಡಿ ಕ್ಷೇಮ ಲಾಭ ವಿಚಾರಿಸುವುದರ ಜೊತೆಗೆ ತುಸು ಸ್ವಾಂತನ ಪಡೆಯಬೇಕೆಂದು ನಾನು ಅಲ್ಲಿಂದ ಎದ್ದೆ. “ಎಲ್ಲಿಗ್ರೀ ಹೊರಟ್ರೀ… ಶ್ರೀ ಲಲಿತ ಸಹಸ್ರನಾಮ ಪಠಿಸ ಬಾರ್‍ದೇನು? ಹ್ಹೂ! … ಹೋಗ್ರಿ ಲಗೂನ ಬರ್ರಿ… ಹೊರಗಡೆ ಬೀಗ ಹಾಕ್ಕೊಂಡು ಹೋಗ್ರಿ… ಕಾಲ ಸುಮಾರೈತೆ…” ಎಂದು ಮತ್ತೆ ತಪೋ ಮಗ್ನಳಾದಳು.ಋತುಮತಿಯಾಗಿ ಹತ್ತು ಹನ್ನೆರಡು ವರ್ಷಗಳಾದರೂ ಒಂಚೂರಾದರೂ ರಸಿಕತೆ ರೂಢಿಸಿಕೊಳ್ಳಲಿಲ್ಲವಲ್ಲ ಎನ್ನಿಸಿತು. ಇಂಥವರು ಸಮೂಹ ಮಾಧ್ಯಮಗಳ ಪಾಲಿಗೆ ಯಕ್ಷಪ್ರಶ್ನೆಗಳಾಗಿ ಉಳಿದು ಬಿಡುತ್ತಾರೆ. ಈಕೆಯೊಳಗೆ ತನ್ನ ವ್ಯಕ್ತಿತ್ವದ ಒಂದಂಶವನ್ನು ಗುರುತಿಸಿಯೇ ತಾತನವರು ನನ್ನಹೆಂಡತಿಯಾಗಿ ಮನೆ ತುಂಬಿಸಿಕೊಂಡಿರಬೇಕು. ಅಥವಾ ತಮ್ಮ ಮಗ ಅಂದರೆ ನನ್ನ ತಂದೆಯ ಅವಿಧೇಯತೆ ವಿರುದ್ಧ ನನ್ನ ಮೂಲಕ ಅವರು ಬಂಡೆದ್ದಿರಬೇಕು. ಮದುವೆಯಾಗಿ ತಿಂಗಳು ತುಂಬುವ ಮೊದಲೆ ಇಷ್ಟೊಂದು ಬೇಸರ ಹುಟ್ಟಿಸಿರುವ ಈ ಸಾದ್ವಿ ಮುಂಬರುವ ವರ್ಷಗಳಲ್ಲಿ ಯಾವ ಪ್ರಕಾರದ ತಲೆನೋವುಗಳನ್ನು ಘೋಷಿಸುವಳೋ! ಹಸಿದಿರುವುದರಿಂದ ಕಾಲ ಮೀನಖಂಡಗಳು ದುರ್ಬಲವಾಗಿರುವಂತೆ ತೋರಿತು. ಬಾಗಿಲು ಮುಚ್ಚಿ ಅದಕ್ಕೆ ಮೊಖ್ತೇಸರರು ಕೊಟ್ಟಿದ್ದ ಬೀಗ ಜಡಿದು ಹೊರ ಹೊರಟೆ. ಇಕ್ಕೆಲಗಳಲ್ಲಿದ್ದ ಗಿಡಗಂಟೆಗಳ ನಡುವೆ ಇದ್ದ ಮೆಟ್ಟಿಲುಗಳನ್ನು ಇಳಿದು ಹೇಮಾದ್ರಿ ದಾಟಿದೆ. ಯಾಕೋ ಏನೋ ಎದೆಯೊಳಗೆ ಸೆಳವು ಕಾಣಿಸಿಕೊಂಡಿತು. ಅದರೊಟ್ಟಿಗೆ ಜಲಜಾಕ್ಷಿ ಶಾಲೆಯ ಆಟದ ಮೈದಾನದಲ್ಲಿ ನನ್ನ ಮೇಲೆ ಬೋರಲು ಬಿದ್ದು ನನ್ನ ತಣ್ಣನೆಯ ಶಿಶ್ನದೊಳಗೆ ಏಳು ಸುತ್ತಿನ ಕೋಟೆ ನಿರ್ಮಿಸಿದ್ದು ನೆನಪಾಯಿತು… ಅದರೊಟ್ಟಿಗೆ ರುದ್ರನಾಯಕನ ಮಗಳು ಅನಸೂಯಳ ನಿಷ್ಕಲ್ಮಷ ಪ್ರೇಮ ನೆನಪಾಯಿತು. … ಅದರೊಟ್ಟಿಗೆ ಆಕೆಯನ್ನು ಬೆಟ್ಟಿಮಾಡಲಿಕ್ಕೆಂದು ಬೆಂಗಳೂರಿಗೆ ಹೋಗಿದ್ದಾಗ (ಎಲಾ… ಕುಂವೀ… ಎಹ್ಟು ಗುಟ್ಟಾಗಿ ಹೋಗಿ ಬಂದರೂ ಆ ನಿಘೂಡ ವ್ಯಕ್ಟಿ ನಾನೇ ಎಂದು ಗುಮಾನಿ ವ್ಯಕ್ತಪಡಿಸಿದೆಯಲ್ಲಾ… ನೀನೇ ಅವಳಿಗೆ ನನ್ನ ಸಫಾರಿ ಸೂಟ್ ಮೂಲಕ ಖಚಿತ ಮಾಹಿತಿ ರವಾನಿಸಿರಬಹುದಲ್ಲವೆ? ಆಗ ನಾನು ಎಷ್ಟೊಂದು ಬುದ್ಧಿವಂತಿಕೆಯಿಂದ ವರ್ತಿಸಿದೆನೆಂಬುದನ್ನು ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೇ ಹೆಮ್ಮೆ ಮೂದುತ್ತದೆಯೋ ಬೇವಕೂಫ… ನೀನು ಪ್ರಾಣಸ್ನೇಹಿತನೆಂಬ ಸೋಗಿನಲ್ಲಿ ನನ್ನ ಪತನ ಕುರಿತು ಯೋಚಿಸುತ್ತಿದ್ದಿ ಎಂಬುದೂ ಗೊತ್ತು. ನನಗಿಂತ ಆ ಊಸುರುವಳ್ಳಿ ಕಥೆಯ ನಾಯಕನಾದ ಕಮಲಾಕರ ಎಶ್ಟೋ ಮೇಲು… ಇಂಥ ದ್ರೋಹಿಯಾದ ನೀನು ಯಶಸ್ವಿಯಾಗಿ ಒಂದು ವಾಕ್ಯವನ್ನು ಬರೆದರೆ ಜೋಪಾನ) ಒಳ್ಳೆ ಖಾಸಗಿ ಪತ್ತೆದಾರನಂತೆ (ಎನ್.ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳನ್ನು ಓದಿರದಿದ್ದರೆ ಇದೆಲ್ಲ ನನ್ನಿಂದ ಸಾಧ್ಯವಾಗುತ್ತಿತ್ತೇನು?) ವರ್ತಿಸಿ ಇಡೀ ಕುಟುಂಬ ಮೂರುನಿದ್ದೆ ಮಾಡದಂತೆ ವರ್ತಿಸಿದ್ದು ಎಲ್ಲ ನೆನಪಾಗುತ್ತದೆ. ಆಮೇಲೆ ನನ್ನ ಮನಸ್ಸು ಹಿಡಿ ಹಿಡಿ ಶಾಪ ಹಾಕಿತು… ಅದು ಬೇರೆ ಪ್ರಶ್ನೆ… ಬಳ್ಳಾರಿಯಂಥ ಜಿಲ್ಲಾ ಮುಖ್ಯ ಸ್ಥಳ ನೋಡಿದ್ದ ನನಗೆ ಬೆಂಗಳೂರು ಪರಿಚಯವಾದದ್ದು ಬ್ಯಾಂಕ್ ಉದ್ಯೋಗಕ್ಕೆ ಸಂಬಣ್ಧಿಸಿದ ತರಭೇತಿ ತರಗತಿಗಳಿಗೆ ತಿಂಗಳು ದಿನಮಾನ ಹಾಜರಾದಾಗ… ಈ ವಿಶಯವನ್ನು ನಾನು ಬೇಕೆಂದೇ ಮುಚ್ಚಿತ್ತಿದ್ದೆ… ತದನಂತರ ನಾನು ನನ್ನ ಪತ್ತೆದಾರಿ ನೈಪುಣ್ಯವನ್ನು ಖಚಿತಪದಿಸಿಕೊಂಡಿದ್ದು.. ಆ ಖಳ ಕುಂವೀಯ ಮನೆಯನ್ನು ಉಪಾಯಾಂತರದಿಂದ ಪ್ರವೇಶಿಸಿ ಅನಸೂಯಳ ವಿಳಾಸ ಪತ್ತೆ ಮಾಡಿದಾಗ… ಆ ಸ್ಪೂರ್ತಿಯಿಂದಾಗಿಯೇ ನಾನು ಮಂತ್ರ್ಲಯಕ್ಕೆ ಹೋಗಿ ಗುರುಸಾರ್ವಭೌಮರ ದರ್ಶನ ಪಡೆದು ಬರುತ್ತೇನೆಂದು ಮನೆಯಲ್ಲಿ ಸುಳ್ಳು ಹೇಳಿ ಗುಟ್ಟಾಗಿ ಬೆಂಗಳೂರಿಗೆ ಪ್ರಾಯಾಣ ಬೆಳೆಸಿದ್ದು. +ಬಸ್ಸಿನಲ್ಲಿ ಮುಂದಿನ ಸೀಟಿನಲ್ಲಿ ಕೂತಿದ್ದ ಮಧ್ಯವಯಸ್ಕ ಮಹಿಳೆಯ ಅಂಡು ಸವ್ರಿದ್ದು ಆಕೆ ಕಾಲು ಹಿಗ್ಗಲಿಸುವ ಹೊತ್ತಿಗೆ ನಾನು ಸಂಪೂರ್ಣ ಸ್ಖಲಿಸಿ ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವನ್ತಂ ಯದಾನಸ್ಥಾ ಬಿಭರ್ತಿ ಭೂಮ್ಯಾ ಅಸುರ ಸೃಗಾತ್ಮಾ ಕ್ವಸ್ಮಿತ್ ಕೋ ವಿದ್ವಾಂಸಾಮುಪಗಾಗಾತ್ ಪ್ರಸ್ಟುಮೇತತ್ (ಮೂಲ ಪುರುಷರು ಹುಟ್ಟಿದ್ದನ್ನು ಯಾರು ಕಂಡಿದ್ದಾರೆ? ಎಲುಬುಳ್ಳ ಇದಕ್ಕೆ ಎಲುಬಿಲ್ಲದ ಯಾವುದು ಆಸರೆ! ರಕ್ತ ಉಸಿರು ರೂಪ ಪಡೆದಿದ್ದೇ ಭೂಮಿಯಿಂದ, ಆದರೆ ಆತ್ಮ ಎಲ್ಲಿ? ಇದನ್ನು ತಿಳಿಯಲು ಆ ವಿದ್ವಾಂಸನ ಬಳಿಗೆ ಹೋದವರು ಯಾರು? ಎಂಬ ಋಗ್ವೇದದ ಅಲ್ಪಸ್ತವ ಶ್ಲೋಕವನ್ನು ಪಠಿಸುತ್ತ ಹಾಗೆ ನಿದ್ದೆ ಹೋದದ್ದು. ಚುಮುಚುಮು ನಸುಕಿನಲ್ಲಿ ಆ ಮಾಯಾವಿ ನಗರದಲ್ಲಿಳಿದಾಗ ಆಟೋದವನಿಗೆ ಸೀದ ನ್ನ್ಯೂ ತರಗುಪೇಟೆಯ ಮಹಾಲಕ್ಷ್ಮಿ ಲಾಡ್ಜಿಗೆ ಬಿಡು ಅಂತ ಹೇಳಿದಾಗ ಅವನು ನಖಶಿಖಾಂತ ನನ್ನ ನೋಡಿದ್ದ. ಅದೇ ಲಾಡ್ಜನ್ನು ನಾನು ಸೂಚಿಸಿದ್ದಕ್ಕೆ ಕಾರಣ ಇಲ್ಲದಿಲ್ಲ. ತರಬೇತಿಗೆಂದು ಬಂದಿದ್ದಾಗ ಸಹಪಾಠಿ ಚಂದ್ರಶೇಖರನು ತರಗುಪೇಟೆಯ ಮಹಿಳೆಯನ್ನು ಸುಖಿಸಿದ್ದಾಗಿಯೂ ಹೇಳಿದ್ದ. ‘ಥೂ ಛೀ’ ಎಂದು ನಾನು ಪ್ರತಿಕ್ರಿಯಿಸಿದ್ದರೂ ನಾನು ಆ ಲಾಡ್ಜಿನ ಬಗ್ಗೆ ಕನಸು ಕಾಣುತ್ತಿದ್ದೆ. ಹಗಲೆಲ್ಲ ನಿರ್ಮಾನುಷವಾಗಿರುವ ಆ ಲಾಡ್ಜು ಬಹು ದಿನಗಳ ಹಿಂದೆ ಮೈಸೂರು ಮಹಾರಾಜರ ಬಳಿ ದಿವಾನರಾಗಿದ್ದವರೊಬ್ಬರು ತಮ್ಮ ಬೆಂಗಳೂರು ಬಿಡದಿಗೆಂದೇ ಅದನ್ನು ಕಟ್ಟಿಸಿದರಂತೆ. ದಿವಾನ ಪದವಿ ಕಳೆದುಕೊಂಡ ಮೇಲೆ ಗುಹ್ಯರೋಗದಿಂದ ಬಳಲುತ್ತಿದ್ದ ಅವರು ಲೈಂಗಿಕ ಶಕ್ತಿ ಕಳೆದುಕೊಂದು ವಿಲವಿಲನೆ ಒದ್ದಾಡುತ್ತಿದ್ದರಂತೆ… ಈಗಿನ ಸಕ್ರಿಯ ರಾಜಕಾರಣಿಯಾಗಿರುವ ಮಾಜಿ ಸಿನಿಮಾ ನಟಿಯೋರ್ವಳ ಮುತ್ತಜ್ಜಿ ಅಂಡಾಳಮ್ಮ “ನಿಮ್ಮ ಲೈಂಗಿಕ ಶಕ್ತಿ ಉದ್ದೀಪಿಸಿದರೆ ಈ ಬದಪಾಯಿಗೇನು ಕೊಡುವಿರಿ” ಅಂತ ಕೇಳಿದಳಂತೆ. ಆಗ ಮಾಜಿ ದಿವಾನರು ಹಾಗೆ ಮಾಡಿದ್ದೇ ಆದರೆ ಈ ನಿನ್ನ ಬಿಡದಿ ಮನೆಯನ್ನೇ ನಿನ್ನ ಹೆಸರಿಗೆ ಮಾಡಿಸಿಕೊಡುವುದಾಗಿ ಮಾತುಕೊಟ್ಟನಂತೆ. ದೇವಿ ಹಗಲಿರುಳು ಪ್ರಯತ್ನಿಸೀ ಪ್ರಯತ್ನಿಸೀ ಮಧ್ಯರಾತ್ರಿ ಪ್ರವೇಶವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿ ಮರುದಿನ ಆ ಭವನವನ್ನು ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಳಂತೆ. ಆ ನಂತರ ಅಂಡಾಳಮ್ಮನವರಿಂದ ಆಕೆಯ ಮತ್ತೋರ್ವ ವಿಟನಾದ ಬೆಳಗಾವಿ ಕಡೆಯ ಪ್ರಸಿದ್ಧ ಕುಸ್ತಿ ಪಟು ವಾಗ್ಲೆ ಪಡೆದುಕೊಂಡನಂತೆ. ವಾಗ್ಲೆಯಿಂದ ರಂಗ ನಟಿ ಕುಬೇರಮ್ಮ ಪಡೆದುಕೊಂಡಳಂತೆ… ಕುಬೇರಮ್ಮನಿಂದ ಮಹಾಲಕ್ಷ್ಮಿ ಸಂಗೀತ ನಾಟಕ ಮಂಡಳಿಯ ಮಾಲೀಕರಾದ ‘ತಿರುಚೆಂದೂರ್ ತ್ರಿವಿಕ್ರಮ ರಾವ್ ಎಂಬುವರಿಗೆ ಹೋಯಿತಂತೆ. ಅವರು ಸಿನಿಮಾ ತೆಗೆಯಲು ಹೋಗಿ ಪಾಪರ್ ಎದ್ದು ಆ ಭವನಕ್ಕೆ ಮಹಾಲಕ್ಷ್ಮಿ ಲಾಡ್ಜ್ ಎಂದು ಹೆಸರಿಟ್ಟರಂತೆ. ನಂತರ ಅವರು ನೂರಾ ಒಂದನೆ ನಂಬರಿನ ಕೋಣೆಯಲ್ಲಿ ಆತ್ಮಹತ್ಯ ಮಾಡಿಕೊಳ್ಳಲು ಆ ಸ್ಥಿರಾಸ್ತಿ ವಿಶಯದಲ್ಲಿ ಅವರು ಮೂವರು ಹೆಂಡಂದಿರ ನಡುವೆ ದೊಡ್ಡ ಕದನವಾಯಿತಂತೆ. ಹಿಂದೂ ವಿವಾಹ ಕಾಯಿದೆ ವಿಧಿಗಳಡಿ ಖಟ್ಲೆ ಇತ್ಯರ್ಥವಾಗುವವರೆಗೆ ಸದ್ರಿ ಲಾಡ್ಜು ಮುವ್ವರ ಅಧೀನದಲ್ಲಿರಬೇಕೆಂದು ಉಚ್ಚ ನಾಯ್ಯಲಯವು ತೀರ್ಪು ಕೊತ್ತಿರುವುದಂತೆ. ಆ ಮುವ್ವರು ವಿಧವೆಯರಿಗೆ ಲಿಂಕ್ ಇರುವ ಬೊಜ್ಜಾ ಪದ್ಮನಾಭಯ್ಯ (ಆರೊಟ್ಟಯ್ಯ ಎಂದೂ ಕರೆಯುವುದುಂಟು) ಭಲೆ ದಿಲಾಸದಿಂದ ನೋಡಿಕೊಳ್ಳುತ್ತಿರುವನು. ಆ ಏರಿಯಾದ ಡಿಸಿಪಿಯವರದ ಹತ್ತಿರ ಸಂಭಂದಿಯಾದ ಅವನು ನಡೆಸುವ ಲಾಡ್ಜಿಗೆ ನಾಡಿನ ಮೂಲೆಮೂಲೆಯಿಂದ ಲಲನಾಮಣಿಗಳು ಬಂದು ‘ಜಯಹೇ ಕರ್ನಾಟಕ ಮಾತೆ’ ಎಂದು ಸಾಮ್ಹಿಕವಾಗಿ ಸುಶ್ರಾವ್ಯವಾಗಿ ಹಾಡುವುದುಂಟು. +ಆ ಲಾಡ್ಜಿನಲ್ಲಿ ನಾ‌ಅನು ವಸ್ತಿ ಮಾಡಿದ್ದು “ಕುಂ. ವೀರಭದ್ರಪ್ಪ ಕಾದಂಬರಿಕಾರ ಕೊಟ್ಟೂರು, ಬಳ್ಳಾರಿ ಜಿಲ್ಲೆ, ಕರ್ನಾಟಕ ರಾಜ್ಯ’ ಎಂದು ಧಾಕಲಿಸಿದ ನಂತರವೇ (ತಿಳಿ ನೀಲಿ ವರ್ಣದ ಲೆಡ್ಜರ್ ಪುಸ್ತಕದ ಎರಡುನೂರಾ ಇಪ್ಪತ್ತೆಂಟನೇ ಪುಟ ನೋಡಿ ಖಾತ್ರಿ ಪಡಿಸಿಕೊಳ್ಳುವುದು… ನಾನು ಮಾಡಲಿರುವ ಗಾಂಚಾಲಿಗೆ ಇವನು ಸಿಕ್ಕಿಬೀಳಲಿ ಎಂಬ ಉದ್ದೇಶದಿಂದ… ಎಲವೋ ಕುಂವೀ… ಹೇಗಿದೆ ನನ್ನ ಪ್ಲಾನು?) ಹಗಲೆಲ್ಲ ಒಂದು ರೌಂಡು ಜಯನಗರದಲ್ಲಿ ಸುತ್ತಿ ಅನಸೂಯಾಳ ತಾಯಿಯ ಕಣ್ಣಿಗೆ ಬಿದ್ದು ಅವತ್ತು ರಾತ್ರಿ ರೂಮು ಸೇರಿಕೊಂಡು ವಿಷ್ಣುಭಟ್ಟ ಉಪಾಧ್ಯಾಯರ ‘ಋಜು ವಿವರಣ’ಗ್ರಂಥವನ್ನು ತಿರುವಿ ಹಾಕುತ್ತಿರುವಾಗ ರೂಂಬಾಯ್ ಓರ್ವನು ಬಂದು, ಹಿಂದೆಲೆ ಕೆರೆಯುತ್ತ ನಿಂತನು. ಅವನು ಬಂದ ಉದ್ದೇಶ ಮನವರಿಕೆಯಾಗಲು ಹೃದಯ ವೇಗವಾಗಿ ಬಡಿದುಕೊಳ್ಳತೊಡಗಿತು. “ಹುಬ್ಬಳ್ಳಿ ಕಡೇದೊಂದು ಪ್ರೆಶ್ ಮಾಲು ಬಂದಿದೆ… ಇನ್ನು ಅನ್‌ಮ್ಯಾರೀಡು… ವ್ ಡಿ ಇಲ್ದೋರಿದ್ರೆ ನೋಡು ಅಂದ್ಲು… ಅದ್ಕೆ ನೀವೇ ಸರಿಯಾದ ಗಿರಾಕಿ ಅಂತ ಬಂದೆ ವೀರಭದ್ರಪ್ನೋರೆ… ರೇಟ್ ಫಿಕ್ಸ್ ಮಾಡಿ ಕಳಿಸಿಕೊದ್ಲೆ” ಎಂದ ಗಿಣಿಯಂತೆ. ಅವನ ಮಾತಿನಲ್ಲಿದ್ದ ನಾಮವಾಚಕ ಕೇಳಿ ನನಗೆ ಹೇಳತೀರದಷ್ಟು ಖುಷಿಯಾಯಿತು. +“ಅಲ್ಲಪ್ಪಾ… ನನ್ನಲ್ಲಿ ಹತಾರು ವೀಡಿಗಳಿವೆ… ನೋಡಿದ್ರೆ ಗೊತ್ತಾಗಲ್ವೆ?” ಎಂದೆ. +ನನ್ನ ಶತ್ರುವಿನ ಪರ್ಸನಾಲಿಟಿಯನ್ನು ಡ್ಯಾಮೇಜ್ ಮಾಡುವ ನಿಮಿತ್ತ! “ಅಯ್ಯೋ… ಅದ್ಯಾಕ್ ಸುಳ್ ಹೇಳ್ತೀರಿ ವೀರಭದ್ರಪ್ನೋರೆ… ನಿಮ್ಮನ್ನು ನೋಡಿದ್ರೆ ಪ್ರೆಷ್‌ನೆಸ್ಸು ಗೊಟ್ಟಾಗ್ತದೆ… ಎಷ್ಟು ಜನ ನಂ ಕೈಲಿ ಆಡ್ತಾರೆ ಎನ್ಕಥೆ… ಮಾಲು ಕಳುಸ್ತೀನಿ… ಆಕೆ ಲೆಕ್ಕಾನ ನ್ ವೇ ಚುಕ್ತಾ ಮಾಡ್ಕೊಳ್ಳಿ… ನನ್ನ ಕೈಗೆ ವನ್ ಹಂಡ್ರಡ್ದು ಹಾಕಿ ಬಿಡ್ರಿ” ಎಂದು ಹಲ್ಲು ಗಿಂಜಿದ. ಕೊಟ್ಟು ಕಳುಹಿಸಿದೆ. ಅವನು ಹೋಗುತ್ತಲೆ ನಾನು ಮೈಗೆಲ್ಲ ಪಾಂಡ್ಸ್ ಪೌಡರು ಲೇಪಿಸಿಕೊಂಡು ಕೂತ ಸ್ವಲ್ಪ ಹೊತ್ತಿನಲ್ಲಿ ತರುಣಿಯೊಬ್ಬಳು ‘ವೀರು’ ಅಂತ ಒಳಗಡೆ ಬಂದಳು. ಜಲಜಲ ಬೆವೆಯತೊಡಗಿದೆ. ಮೈ ತಣ್ಣಗಾಗುತ್ತಿರುವವಂಥ ಅನುಭವ… ಕರೆದು ಕುಳ್ಳರಿಸಿದೆ… ಹೆಸರು ಊರು ಕುಲಗೋತ್ರ ಕೇ‌ಇದೆ… “ಅದ್ಯಾಕಂಗ ಕೇಳಲ್ಯಾಕ ಹತ್ತೀರೀ… ವೀರೂ… ಯಸರಿನಾಗೈತೆ… ನಾವೆಲ್ಲಿರತೀವೋ ನಮ್ಮೂರ್ರೀಯಪ್ಪಾ… ಅದು ಇದು ಕೇಳಿ ಸುಮ್ಮಕ ತೈಮು ವೇಸ್ಟು ಮಾಡಬೇಡ್ರಿ… ಲಗೂನ ರೇಟು ಫಿಕ್ಸು ಮಾಡಿ ಮಾಡೋರು ಅವ್ದೋ ಅಲ್ಲವೋ ಆಟು ಹೇಳ್ರಿ” ಎಂದು ಕಡ್ಡಿ ಮುರಿದಂತೆ ಮಾತಾಡಿದಳು. ಬೇರೆ ದಾರಿ ಗಾಣದೆ ರೇಟು ನಾನೇ ಕೇಳಿದೆ. ಲೈಟಿದ್ರೆ ಐನೂರು… ಲೈಟಾಪೂ ಮಾಡಿದಿರಿ ಅಂದೆ ಮುನ್ನೂರಾ ಐವತ್ತು… ಒಂದೊತ್ತಿಗೆ ದೀಡುನೂರು… ಹೋಲ್‌ನೈಟಿಗೆ ಥವುಜಂಡ್ರೀ” ಎಂದು ಒಂದೇ ಉಸುರಿಗೆ ಆಕೆ ಹೇಳಲು ನಾನು ಕಕ್ಕವಿಕ್ಕಿಯಾದೆನು. ಬಾಯಿ ಒಣಗುತ್ತಿದ್ದರೂ “ನೀನು ಹೇಳಿದ್ದೊಂದೂ ಅರ್ಥವಾಗ್ತಾ ಇಲ್ಲ… ನಾನು ಕಾದಂಬರಿಕಾರ… ಪಕ್ಷಿಗಳು ಅಂತ ಕಾದಂಬ್ರೀನ ಓದೀಯೋ ಇಲ್ವೋ…” ಎಂದು ನಾನು ಹೇಲುತ್ತಿದ್ದಂತೆಯೇ ಆಕೆ “ನಿಮ್ ಕಾದಂಬ್ರೀಗಿಟು ಬೆಂಕಿ ಹಚ್ಚಲಿ ನೀವ್ಯಾರಾದ್ರ ನಂಗೇನ್ರಿ… ಇಲ್ಲದ ಉಸಾಬರಿ ಬಂದ್ ಮಾಡಿ ಮುಂಗಡ ಬಿಸಾಕಿ ಕೆಲಸ ಶುರು… ಮಾಡೋದು ಬಿಟ್ಟು ಏನ್ಯೋನೋ ಮಾತಾಡಲಾಕ ಹತ್ತೀರಲ್ಲ… ಚಲೋ ಕಥಿ ಐತ್ರೀ ನಿಮ್ದೂ…” ಎಂದು ಸಿಡುಕಿದಳು. (ಕುಂ.ವೀರಭದ್ರಪ್ಪನ ಕಾದೆ‌ಅಂಬರಿಗೆ ಮಾತಿನಿಂದ ಬೆಂಕಿ ಹಚ್ಚಿದಳಲ್ಲ… ಅಷ್ಟೇ ಸಾಕು) ನಾನು ಹಾಸಿಗೆ ಕೆಳಗೆ ಕೈ ಇಟ್ಟು ನೂರರ ನೋಟನ್ನು ಕೈಗಿಟ್ಟೆ. ಬಿಕನಾಸಿ ಎಂಬಂತೆ ನನ್ನ ಕಡೆಗೊಮ್ಮೆ ನೋಡಿ ಅದನ್ನು ಮಡಚಿ ಕಿವಿ ಸಂಧಿಯಲ್ಲಿರಿಸಿಕೊಂಡಳು. ಮಿಂಚಿನಂತೆ ಲೈಟಾಪು ಮಾಡಿ ಒಂದೇ ಒಂದು ಶಾಟಾ ಮಲಗಿಕೊಂಡಳು. ಆ ಕ್ಷಣ ನಾನು ಕಾದ ಕಾವಲಿ ಮೆಲಿನ ಕೋಳಿಮರಿಯಂತಾಗಿಬಿಟ್ಟೆ. +ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್| ಸ ಭೂಮಿಂ ವಿಶ್ವತೋ ವೃತ್ತ್ವಾತ್ಯತಿಷ್ಠದ್ದಶಾಂಗುಲಮ್ +(ಪುರುಷನು ಸಾವಿರ ತಲೆ ಸಾವಿರ ಕಣ್ಣು, ಸಾವಿರ ಕಾಲುಗಳು ಉಳ್ಳವನು. ಅವನು ಭ್ಮಿಯನ್ನು ಎಲ್ಲ ಕಡೆಯಿಂದಲೂ ಬಳಸಿ ಅದರ ಮೇಲೆ ಹತ್ತು ಅಂಗುಲಗಳು ಬೆಳೆದು ನಿಂತಿದ್ದಾನೆ). +ಆ ಸೂಕ್ತ ಪಠಿಸುವ ಸೊತ್ತಿಗೆ ಇದ್ದುಬದ್ದುನ್ನೆಲ್ಲ ಕಳೆದುಕೊಂಡು ತರಗೆಲೆಯಂತಾಗಿ ಬಿಟ್ಟೆನು. ನನ್ನ ಅವಸ್ಥೆ ನೋಡಿ ಆಕೆ ಎದ್ದು ಕೂತಳು. ಇನ್ನು ಗಾಡಿ ಓಡ್ದಂಗಿಲ್ಲ ಎಂದು ಗೊಣಗಿಕೊಂಡಳು. ಹಲ್ಲಿಯಂತೆ ಲೊಚಗುಟ್ಟಿದಳು. ಕೈಯಿಂದ ಮೋರೆ ಸವರಿದಳು. ಹಣೆ ಮೇಲೆ ಹೂವಿನಂಥ ಮುತ್ತು ಕೊಟ್ಟಳು… ನಂತರ ಆಕೆ ವಾಪಾಸು ಮಾಡಬಂದ ಹಣವನ್ನು ತೆಗೆದುಕೊಳ್ಳಲು ನಾನು ನಿರಾಕರಿಸಿದೆನು. ಕೆಲಸ ಮಾಡ್ಲಿಲ್ಲ ಬುಡ್ಲಿಲ್ಲ… ಸುಮ್ ಸುಮಕ ರೊಕ್ಕ ತಗೊಂಡು… ನಾನ್ಯಾವ ನರಕಕ್ಕೋಗ್ಲೀರ್ರೀ… ತಗೊರ್ರಿ… ನಿಮ್ದು ಬ್ಯಾಟರಿ ಮತ್ತೆ ಚಾರ್ಜು ಆಯಿತಂದ್ರೆ ಏಕ್‌ಸೌ ಬೀಸಕ್ಕ ಬರ್ರಿ” ಎಂದು ಹೇಳಿ ಅವಸರ ಬವಸರದಿಂದ ಹೊರಗಡೆ ಹೋದಳು. +ಆ ಮುತ್ತಿನೊಂದಿಗೆ ನಾನೊಂದಿಗೆ ಸದಾ ಜೀವ್ಂತವಿರುವ ಆಕೆಯನ್ನು ಮರೆಯುವುದಾದರು ಹೇಗೆ? ಮದುವೆ ಆದ ಮೆಲೆ, ಆಕೆ, ಆಕೆಯಂಥವರು ಮನಃಪಟಲದಿಂದ ದೂರವಾಗುತ್ತಾರೆ ಎಂದುಕೊಂಡಿದ್ದೆ. ನಿಜ ಹೇಳ್ಬೇಕೆಂದರೆ ಅವರೆಲ್ಲ ಘಾಡವಾಗಿ ನೆನಪಾಗುತ್ತಿರುವುದೇ ಈ ಸಂಧರ್ಭದಲ್ಲಿ, ಅನಸೂಯಾ… ಜಲಜಾಕ್ಷಿ, ಗಾಯತ್ರಿ (ನಂತರ ರೂಂ ಬ್ಬಯ್ ಆ ತರುಣಿಯ ಹೆಸರು ಹೇಳಿದ್ದ) ಈ ಮುವ್ವರು ಬೇರೆ ಅಲ್ಲ, ಆದಿಶಕ್ತಿ, ಸರಸ್ವತಿ, ಮಹಾಲಕ್ಷ್ಮಿ ಬೇರೆಯಲ್ಲ ಅಂದುಕೊಂಡೆ. +ಇಂಥ ಒಂದೊಂದು ನೆನಪಿನಿಂದ ತಲ್ಲಣಗೊಳ್ಳುತ್ತ ಪುಲಕಗೊಳ್ಳುತ್ತ ಒಂದು ಕ್ಷಣ ಸಾಯುತ್ತ, ಮರುಕ್ಷಣ ಹುಟ್ಟುತ್ತ; ಬಾಡುತ್ತ, ಚಿಗುರುತ್ತ ಹೀಗೆ ಒಂದೊಂದು ಆಯಾಮ ಪಡೆಯುತ್ತ ನಾನು ಊರೊಳಗೆ ಪ್ರವೇಶಿಸಿದೆನು. ಅದು ಊರೆಂದರೆ ಊರು… ಅಲ್ಲೊಂದು ಮನೆ ಇಲ್ಲೊಂದು ಮನೆ… ಸಪ್ತರ್ಷಿಮಂಡಲದಮ್ತಿರುವ ವಿದ್ಯುದ್ದೀಪಗಳ ಬೆಳಕಲ್ಲಿ ಗಾಢ ಹಸಿರ ನೆರಳೊಳಗೆ ಅಡಗಿ ಕೂತಿರುವ ನೂರಾರು ಮನೆಗಳ ಸಮೂಹವನ್ನು ಊರು ಎಂದು ಕರೆಯುವುದಾದರೂ ಹೇಗೆ? ಗುಡಿ ಮುಂದಿರುವ ಶಾಸನದಲ್ಲಿ ಉಲ್ಲೇಖವಾಗಿರ್ಯ್ವಂತೆ ಸದರೀಗ್ರಾಮ ಹನ್ನೆರಡನೇ ಶತಮಾನದಲ್ಲಿ ಐನೂರರ ನಾಡಾಗಿತ್ತಂತೆ… ಕಲಾವಿದ ನೆಲೆವೀಡಾಗಿತ್ತಂತೆ… ಎಲಾ ಅಂತೆ ಕಂತೆ. +ಚಿಲ್ಲರೆ ದುಕಾನು ಮುಚ್ಚಲಿದ್ದವನ ಬಳಿಗೆ ಓಡಿದೆ. ಒಂದು ಸಿಗರೇಟು ಪ್ಯಾಕು ಖರೀದಿಸಿ ಡ್ರಾಯರ ಜೇಬಿನಲ್ಲಿ ಅಡಗಿಸಿಟ್ಟೆ. ಹೊಟ್ಟೆ ಹಸಿದಿದೆ… ಏನಾದ್ರು ತಿನ್ನಲಿಕ್ಕೆಸಿಗುತ್ತದೆಯೇ ಎಂದು ವಿಚಾರಿಸಲಾಗಿ ಆತ ಕೈಚಾಚಿ ತೋರಿಸಿದ… ಅಲ್ಲಿಗೆ ಹೋದೆ. ಅದೊಂದು ಚಿತ್ರಮಂದಿರವಾಗಿತ್ತು. ‘ಅವಳ ರಾತ್ರಿಗಳು’ ಎಂಬ ಲೈಂಗಿಕ ಸಿನಿಮಾ ನಡೆಯುತ್ತಿತ್ತು. ಒಂದು ಭಿತ್ತಿ ಚಿತ್ರದಲ್ಲಿ ತರುಣಿಯೋರ್ವಳು ಧಡೂತಿ ತೊಡೆ ಮೊಲೆಗಳನ್ನು ಪ್ರದರ್ಶಿಸುತ್ತ ನಿಂತಿದ್ದರೆ ಇನ್ನೊಂದು ಭಿತ್ತಿ ಚಿತ್ರದಲ್ಲಿ ಏಳೆಂಟು ಮಂದಿ ತರುಣರು ಆ ಅರೆನಗ್ನ ತರುಣಿಯನ್ನು ಹಿಗ್ಗಾಮುಗ್ಗಾ ಎಳೆದಾಡುವ ಚಿತ್ರ ಇತ್ತು. ‘ಒಬ್ಬ ಬಾಲ್ಕನಿ ಇಪ್ಪತು’ ಎಂದು ಬಂದ… ಅವನ ಕಡೆ ಲಕ್ಷ ಕೊಡದೆ ಮೊಟ್ಟೆಗಳನ್ನು ಇಡ್ಲಿಗಳೆಂದೇ ಭಾವಿಸಿ ತಳ್ಳುವ ಬಂಡಿ ಬಳಿಗೆ ಹೋದೆ. ‘ಇಡ್ಲಿ ಅಲ್ಲ ಮಹಾರಾಯ್ರೆ… ಕೋಳಿ ಮೊಟ್ಟೆ… ಬೆಯಿಸಿದ್ದು ಕೊಡ್ಲೋ… ಆಮ್ಲೆಟ್ ಮಾಡಿ ಬ್ರೆಡ್ಡಿನ ಜೊತೆ ಕೊಡ್ಲೋ” ಅವನ ಮಾತು ಕೇಳಿ ಒಂದು ಕ್ಷಣ ಉಮ್ಮಳಿಸಿ ಬಂದಂತಾಯಿತು. ಮೊಟ್ಟೆ ಸೇವನೆ ಸಮರ್ಥಿಸಿ ಎಂ.ಕೆ.ಗಾಂಧಿ ಆಡಿರುವ ಮಾತುಗಳು ನೆನಪಾದವು. ಹನ್ನೆರಡು ವರ್ಷಗಳ ಕಾಲ ಭೀಕರ ಕ್ಷಾಮ ತಲೆದೋರಲು ಹಸಿವಿನಿಂದ ತತ್ತರಿಸಿ ಚಂಡಾಲ ಗೃಹಂ ಪೊಕ್ಕು ಅಲ್ಲಿದ್ದ ನಾಯಿ ಮಾಂಸವನ್ನು ಕದೆದು ತಿಂದು ಶ್ವಪಚ ಎಂದು ಬಿರುದು ಧರಿಸಿದ ವಿಶ್ವಾಮಿತ್ರ ನೆನಪಾದ. “ಯೋಚಿಸಿ ಏನು ಪ್ರಯೊಜನವಿಲ್ಲ ರಾಯ್ರೆ… ಈ ಸಮಯದಲ್ಲಿ ತಿನ್ಲಿಕ್ಕೆ ಸಿಗೋದು ಇದೊಂದೆ. ಎಂಥೆಂಥೋರೆ ತಿನ್ತಾರೆ… ನೀವೇನು ಮಹಾ… ಕೊಡ್ಲೋ… ಅಂಗಡಿ ಕ್ಲೋಜು ಮಾಡಿಕೊಂಡು ಹೊರಡ್ಲೋ” ಎಂದ ಒಂದೇ ಏಟಿಗೆ. ಒಂದು ಕ್ಷಣ ಮನಸ್ಸು ಹೊಯ್ದಾಡಿತು. +ಗಾಂಧೀಜಿದು ಒತ್ತಟ್ಟಿಗಿರಲಿ – ಅಂಥ ವಿಶ್ವಾಮಿತ್ರನೇ ನಾಯಿ ಮಾಂಸ ತಿಂದಿರುವ ನೆಲದ ಮೇಲೆ ನಾನು ಕೋಳಿಮೊಟ್ಟೆ ತಿಂದು ಹಸಿವೆಯನ್ನು ಯಾಕೆ ತಣಿಸಿಕೊಳ್ಳಬಾರದು ಎಂದು ನಿರ್ಧರಿಸಿ ಆರ್ಡರು ಮಾಡಿದೆ. ಅವನು ಮಾಡಿಕೊಟ್ಟ. ರುಚಿಯಾಗಿದ್ದರೂ ತೊಳಸಿ ಬಂದಂತಾಯಿತು. ಕ್ರಮೇಣ ಹೊಂದಿಕೊಂಡು ಹೊಟ್ಟೆ ತುಂಬಿಸಿಕೊಂಡೆನು. ವಾಸನೆ ಬಾರದಿರಲೆಂದು ಮತ್ತೆ ಸೋಪಿನ ಕಾಳುಗಳನ್ನು ಬಾಯಲ್ಲಿ ಉರುಳಾಡಿಸುತ್ತ ಟೆಲೆಫೋನ್ ಬೂತಿನ ಬಗ್ಗೆ ವಿಚಾರಿಸಲಾಗಿ ಅವನು ದೇವಸ್ಥಾನದ ಬಳಿ ಉಂಟು ಹೋಗ್ರಿ ಬೇಗ್ನೆ ಅಂಗವಿಕಲನು ಕದ ಹಾಕಿರಬೌದು ಎಂದನು. ಆಮ್ಲೇಟ್ ವಾಸನೆ ಅಲತೆ ದೂರದಲ್ಲಿ ದೇವಸ್ಥಾನದ ಎಡ ಮಗ್ಗುಲು ಇದ್ದ ತೆರೆದಿದ್ದ ಬೂತಿನೊಳಗೆ ಎರಡು ಚಿಕ್ಕ ಕಾಲುಗಳ ಭಾರಿ ದೇಹದ ಪಳನಿಚಾಮಿ ನನ್ನಿಂದ ನಂಬರು ಬರೆಯಿಸಿಕೊಂಡನು. ಒಂದಿಬ್ಬರು ಯಾತ್ರಾರ್ಥಿಗಳು ಮಾತಾಡಿದಮೆಲೆ ಅವನು ನಂಬರು ತಿರುಗಿಸುತ್ತಲೆ ರಿಂಗಾಗತೊಡಗಿತು. ರಿಸೀವರನ್ನು ಇಸಿದುಕೊಂಡೆನು. ಕಮಲಾಕರ ಇರುವನೋ ಇಲ್ಲವೋ. ಅತ್ಯುತ್ತಮ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿ ಪಡೆದಂದಿನಿಂದ ಅವನ ಹಾರಾಟ ಜೋರಾಗಿರುವುದು ಬೇರೆ! ಏನಂಥ ಮಾತಾಡುವುದು! ಮೊದಲು ತಾತನವರ ಕ್ಷೇಮ ವಿಚಾರಿಸುವುದೋ! ಮಧುಚಂದ್ರವೆಂಬ ನರಕ ಪ್ರಸ್ತಾಪಿಸುವುದೋ! ಹಲೋ ಎಂಬ ಧ್ವನಿ… ಅರೇ! ಹೌದಲ್ಲ? ಕಮಲಾಕರನೇ!… ನಾನು ಕಣೋ ಶಾಮಾಶಾಸ್ರಿ ಇಂಥ ಊರಲ್ಲಿ ಗೋಲಾಡ್ತಿದ್ದೀನೆಂದು ಹೇಳಿದೆ… ಹಾಗೆ ಹೇಳುತ್ತಲೆ ಅವನು “ನಿನ್ನ ಸಂಪರ್ಕಿಸೋಕೆ ನೂರಾರು ಕಡೆ ಫೋನ್ ಮಾಡಿದ್ದೆ ಕಣಯ್ಯಾ… ಅಂತೂ ನೀನೆ ಸಿಕ್ಕಿದೆಯಲ್ಲ… ಧೈರ್ಯ ತಂದ್ಕೋ… ಎದೆಗುಂದಬೇಡ… ಇವತ್ತು ಸಾಯಂಕಾಲ… ಸಾಯಂಕಾಲ… ನಿಮ್ಮ ತಾತನವ್ರು… ನಮ್ಮನ್ನೆಲ್ಲ ಬಿಟ್ಟು ಹೊರಟುಹೋದ್ರು… ಕೂಡ್ಲೆ ಬಂದುಬಿಡ್ರಿ” ಎಂದು ಹೇಳಿದೊಡನೆ ನನಗೆ ತಿಂದಿದ್ದೆಲ್ಲ ಬಾ‌ಅಯಿಗೆ ಬಂದು ಬಿಟ್ಟು ಗೋಡಂಬಿ ಮರದ ಬುಡಕ್ಕೆ ವಯ್ಕ್ ವತ್ಕ್ ಅಂತ ವಾಂತಿ ಮಾಡಿಕೊಂಡೆ. +ಕೊಟ್ಟೂರಿನಲ್ಲಿ ಇಳಿದಾಗ ಮರದ ಶಿಖಿರದ ಮೇಲೆ ದೀಪ ಹೊತ್ತಿರಲಿಲ್ಲ. ಸಪ್ತರ್ಷಿಮಂದಲ ದಿಗಂತದ ಅಂಚಿಗೆ ಸರಿದಿತ್ತು… ಇಡೀ ಊರು ಮಿಸುಕಾದುತ್ತಿರುವಂತೆ ಭಾಸವಾಯಿತು. ನಾರಾಣಿ, ಕಮಲಾಕರ, ವೆಂಕಟೇಶ, ಸುರೇಶಗೌಡ ಮೊದಲಾದವರು ನಮ್ಮನ್ನು ಮುತ್ತಿಕೊಂಡರು. “ಅಹಾಸ್ತ್ರಿಗಳು ಹೋಗಿಬಿಟ್ರಪ್ಪಾ ಹೋಗಿಬಿಟ್ರು… ಹೆದರಿದ್ರೆ ಪ್ರಯೋಜನವಿಲ್ಲ್… ಮಾಡೋ ಕೆಲಸ ಬೆಟ್ಟದಷ್ಟಿದೆ…” ಎಂದು ಕಮಲಾಕರ ನನ್ನನ್ನು ಅಪ್ಪಿಕೊಂಡು ತಲೆ ನೇವರಿಸಿದ. ನನ್ನಲ್ಲಿದುಃಖದ ಮಹಾಪೂರವೇ ಬಂದುಬಿಟ್ಟಿತು. ಚಿಕ್ಕ ಮಗುವೂ ಅಳಲಿಕ್ಕಿಲ್ಲ… ಅಷ್ಟು ಅತ್ತೆ… ಆಗ ನಾನೂ ಸಮರ್ಥ ರೀತಿಯಲ್ಲಿ ದುಃಖಿಸಬಲ್ಲೆ ಎಂಬ ಹೆಮ್ಮೆ ಮೂಡಿತು. ಯಾರಾದ್ರು ಸಾಯೋದು ಅನುಚರರ ದುಃಖ ಪರೀಕ್ಷಿಸಲೆಂದೇ ಇರಬೇಕು… ನನ್ನ ದುಃಖ ಮತ್ತಿತರ ಅನುಷಂಗಿತ ಭಾವನೆಗಳನ್ನು ಜನ ನಿರಪೇಕ್ಷತೆಯಿಂದ ಗಮನಿಸುತ್ತಾರೆ ಎಂಬುದರ ಅರಿವು ಮೂಡಿತು. ಮನೆ ತಲುಪಿದ ಮೇಲೆ ಹತ್ತಾರು ತುಪ್ಪದ ದೀಪಗಳ ಬೆಳಕಿನಲ್ಲಿ ಉದ್ದೋಕೆ ಮಲಗಿದ್ದ ತಾತನವ್ಫರ ಪವಿತ್ರ ಕಳೇಬರವನ್ನು ನೋಡಿದೊಡನೆ ಬಾಲ್ಯದ ಸಾವಿರಾರು ನೆನಪುಗಳು ಚಂಡಮಾರುತದಂತೆ ನುಗ್ಗಿಬಂದವು… ಒಂದೊಂದು ನೆನಪಿಗೆ ಶಾಬ್ದಿಕ ರೂಪ ಕೊಡುತ್ತಾ; ಶಾಬ್ದಿಕ ಸಂಪತ್ತಿಗೆ ಧ್ವನಿಯ ರೂಪ ಕೊಡುತ್ತ ಹಾಗೇ ಅವರ ಎದೆಯ ಮೇಲೆ ಮುಖ ಇಟ್ಟು ರೋದಿಸುತ್ತಿರಲು ನೋಡುತ್ತಿದವರೆಲ್ಲ “ಅತ್ತರೆ ಹಿಂಗ ಅಳಬೇಕಪ್ಪಾ… ಬ್ಯಾಂಕಿನ ಕೆಲಸದಲ್ಲಿದ್ರೂ ಒಮ್ಚೂರು ಗರ್ವ ಇಲ್ದೆ ಹೆಂಗೆ ಅಳ್ತಾನೆ ನೋಡು… ಹಿಂಗ ಅಳೋರು ಸಾವ್ರಕ್ಕೊಬ್ರೋ ಲಕ್ಷಕ್ಕೊಬ್ರೋ” ಎಂದು ಗೊಣಗುತ್ತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸುದ್ದಿ ತಿಳಿಯುತ್ತಲೆ ಉಟ್ಟಬಟ್ಟೇಲೆ ದೂರದಿಂದ ಹೊರಟು ಬಂದಿದ್ದ ಪಾಂಡುರಂಗ ಶಾಸ್ತ್ರಿ ಚಿಂಚಿಣಿಯವರು ನನ್ನ ಹತ್ತಿರ ಬಂದು ಮೈ ದಡವಿ “ಯಮೋ ನೋ ಗಾತುಂ ಪ್ರಥಮೋ ವಿವೇದ! ನೈಷಾ ಗವ್ಯೂತಿರಪಭರ್ತವಾ ಉ| ಯೆತ್ರಾ ನ ಪೂರ್ವೇ ಪಿತರಃ ಪರೇಯು| ರೇನಾಜಜ್ಞಾನಾಃ ಪಥ್ಯಾ ಅನುಸ್ಚಾಃ. (ಯಮನು ನಮಗಾಗಿ ಮೊದಲು ಮಾರ್ಗವನ್ನು ಕಂಡುಹಿಡಿದಿದ್ದಾನೆ. ಈ ಸ್ಥಾನವು ನಮಗೆ ತಪ್ಪಕೂಡದು. ಹಿಂದೆ ನಮ್ಮ ಪೂರ್ವಜರು ಎಲ್ಲಿಗೆ ಹೋದರೋ ಅಲ್ಲಿಗೆ ಈಚೆಗೆ ಹುಟ್ಟಿದವರೂ ತಮ್ಮ ತಮ್ಮ ದಾರಿಯಲ್ಲಿ ಹೋಗುತ್ತಾರೆ) ಎಂದು ಮುಂತಾಗಿ ಯಮ ವೈವಶ್ವತದಲ್ಲಿ ಹೇಳಲಿಲ್ವೇನಪ್ಪಾ?… ಒಬ್ಬರ ಹಿಂದೆ ಒಬ್ಬರು… ಹೀಗೆ ಎಲ್ಲರೂ ಹೋಗುವವರೇ! ಇಲ್ಲಿ ಶಾಶ್ವತವಾಗಿ ಇರೋರು ಯಾರು ಹೇಳು… ನಶ್ವರ ಶರೀರವನ್ನು ಪರಲೋಕಕ್ಕೆ ಸಾಗಿಸುವ ಅಗ್ನಿಯ ಏರ್ಪಾ‌ಉ ಮಾಡಬೇಕಿದೆ… ನೀನೇ ಎದೆಗುಂದಿದ್ರೆ ಇವ್ನೆಲ್ಲ ಮಾಡೋರು ಯಾರು ಇದ್ದಾರೆ” ಎಂದು ಸ್ವಾ‌ಅಂತನ ಹೇಳಿ ಕಳೇಬರದಿಂದ ನನ್ನನ್ನು ಈಚೆ ಎಳೆದುಕೊಂಡರು. ಋಕ್ಕುಗಳ ಸ್ಥಾನಮಾನದಿಂದ ವಂಚಿತರಾಗಿರುವ ಯಮನ ಪ್ರಾಮುಖ್ಯ ಅರ್ಥವಾಗುವುದು ತೀರ ಹತ್ತಿರದವರು ಸತ್ತ ನಂತರವೇ ಎಂಬುದನ್ನು ಅರ್ಥಮಾಡಿಕೊಂಡ ನಾನು ಅವರ ಜಠರಕ್ಕೆ ಜಠರ ಅಂಟಿಸಿ ದೂರ ಸರಿದೆ. ವಿವಸ್ವಂತ, ಸರಣ್ಯು ದಂಪತಿಗಳ ಮಗನಾದ ಯಮನನ್ನು ಕಲ್ಪಿಸಿಕೊಂಡರೇ ಭಯವಾ‌ಅಗುವುದೆನಗೆ. +ಹಿಂದೊಮ್ಮೆ ತಾತನವರು ವಿಭುದೇಂದ್ರ ಸರಸ್ವತಿಗಳು ವೈಕುಂಟವಾಸಿಗಳಾದಾಗ “ನೀನೂ ಬಾರೋ ಶಾಮಾ… ವ್ಯ್ಕ್ತಿತ್ವಕ್ಕೆ ಪರಿಪೂರ್ಣತೆ ಬರಬೇಕಾದ್ರೆ ಹುಟ್ಟು ಸಾವು ಎರಡನ್ನೂ ಅನುಭವಿಸೋ ಜನರಿಗೆ ತೀರಾ ಹತ್ತಿರದಲ್ಲಿರಬೇಕಪ್ಪಾ” ಎಂದು ಹೇಳಿದ್ದರು. ಚಿಕ್ಕಂದಿನಿಂದಲೂ ನನಗೆ ಕಳೇಬರಗಳ ಅಂತಿಮ ಯಾತ್ರೆ ನೋದುವುದೆಂದರೆಭಯ! ‘ಸಾವು ಎಂಬ ಶಬ್ದ ಕಿವಿಗೆ ಸೊಂಕಿದೊಡನೆ ಕಂಪಿಸಿ ಬಿಡುತ್ತಿದ್ದೆನು. ಸತ್ತವರು ನನ್ನ ಕಣ್ಣಿನಲ್ಲಿ ಬಂದು ಕಾಡುತ್ತಿದ್ದುದೂ ಉಂಟು. ಇಂಥ ಕನಸುಗಳಿಂದ ಮೈ ಬಿಸಿಯಾದಾಗ ತಾತನವರು ಮೃತ್ಯುಂಜಯ ಮಂತ್ರ ಲಿಖಿತ ಅಂತ್ರವನ್ನು ನನ್ನ ಸೊಂಟಕ್ಕೆ ಕಟ್ಟುತ್ತ ಯಮನ ಬಗೆಗೂ; ಅವನ ಹತ್ತಿರದ ಸಂಬಂಧಿಯಿಂದ ಅಗ್ನಿಯ ಬಗೆಗೂ ತಿಳಿ ಹೇಳುತ್ತಿದ್ದರು. ಯಜ್ಞದಲ್ಲೂ ಸ್ಥಾನಮಾನ ಪಡೆದಿರುವ ಯಮ ವಾಸಿಸುವ ಆಕಾಶ ಅಂತರಾಳವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೆಲ್ಲ ನೆನಪಾಗುತ್ತದೆ… ವೇಣುಗಾನ ಮನೋಹರವಾದ ಆ ಲೋಕ ತಲುಪಲು ನಾನು ಮೊದಲಾಗಿ ಎಲ್ಲರೂ ಏಕೆ ಹೆದರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಇಂಥ ಸಂದರ್ಭಗಳಲ್ಲಿಯೇ. ಅವರು ಹೇಳುತ್ತಿದ್ದ ಮಾತುಗಳನ್ನು ಆಧರಿಸಿ ಹಿಂದೊಮ್ಮೆ ನಾನು ಬರೆದಿದ್ದ ಕವಿತೆ ನೆನಪಾಗುವುದು – ಸಂದರ್ಭದಲ್ಲಿಯೇ. ಗೂಬೆ ಸಾಯೋ ವ್ಯಕ್ತಿ ವಾಸಿಸುವ ಪ್ರದೇಶದ ಆಯಕಟ್ಟಾದ ಜಾಗದಲ್ಲಿ ಕೂತು ಸಾವಿನ ಆಗಮನದ ಮುನ್ಸೂಚನೆಯನ್ನು ಸಾರುತ್ತದೆ. ಅದನ್ನು ಕೇಳಿಸಿಕೊಂಡ ಮೃತ್ಯುಮುಖಿಯು ತನ್ನ ಎದೆಯೊಳಗೆ ನಿಧಾನವಾಗಿ ಪಾರಿವಾಳವನ್ನು ಕಲ್ಪಿಸಿಕೊಳ್ಳುತ್ತಾನೆ. +ತನ್ನೆದೆಯ ಬಿಗಿ ಪಂಜರದಲ್ಲಿ ಆ ಧವಳ ವರ್ಣದ ಪಾರಿವಾಳವನ್ನು ಬಂಧಿಸಿಡುವ ಪ್ರಯತ್ನ ಮಾಡುತ್ತಾನೆ. ಅವನು ಅಂಥ ಪ್ರಯತ್ನ ಮಾಡಿದಷ್ಟೂ ಪಾರಿವಾಳದ ರೆಕ್ಕೆಗಳು ಬಲಿಷ್ಟವಾಗುತ್ತ ಹೋಗುತ್ತವೆ. ಅವನ ಅಂತಃಶಕ್ತಿ ಮತ್ತು ಇಚ್ಚಾ ಶಕ್ತಿಯನ್ನು ಮೀರಿ ಬೆಳೆದ ಅವು ಮುಗಿಲಿಗೂ ಮಿಗಿಲಾದ ರೆಕ್ಕೆಗಳನ್ನು ಹೃದಯ ವಿದ್ರಾವಕವಾಗಿ ಬಡಿಯುತ್ತ ಹಾರುತ್ತ… ಹ್ಹಾ… ಹಾರುತ್ತ ಶೂನ್ಯ ಪ್ರವೇಶಿಸಿ ಅಂತರ್ಧಾನವಾಗುತ್ತವೆ. ಸತ್ತ ಮನುಷ್ಯನ ಆತ್ಮ ಅವಸ್ತಾ (ಪಿತೃಲೋಕದ ರಾಜ್ಯ) ದಲ್ಲಿ ಗತಿಸಿದ ಹಿರಿಯರೊಂದಿಗೆ ಶಾಶ್ವತವಾದ ಸಖ್ಯ ಬೆಳೆಸುತ್ತದೆ. ‘ಗೂಬೆ ಮತ್ತು ಪಾರಿವಾಳಗಳು’ ಎಂಬ ಸುಧೀರ್ಘ ಕವಿತೆ ಬರೆಯುವ ಮುನ್ನ ನಾನು ಸಾಯಲು ಪ್ರಯತ್ನಿಸಿದಂತೆ ನೆನಪು. ಹಾಗೆ ನಾನು ಪ್ರತ್ನಿಸಿದ್ದಲ್ಲಿ ನಾನು ಬದುಕುತ್ತಿರಲೇ ಇಲ್ಲ. ಸಮಾಜದ ಅಮ್ತಃಕರಣಗಳಿಮ್ದ ಹೊರಟ ಹೊಂಬನ್ನದ ಎಳೆಯೊಂದು ನನ್ನನ್ನು ಬಂಧಿಸಿ ಮೃತ್ಯುಮುಖದಿಂದ ನನ್ನನ್ನೀಚೆಗೆ ಎಳೆಯುತ್ತಿತ್ತು. ಸಮಾಜದ ಹೊರಗೆ ಮತ್ತು ಓಳಗೆ ಅತಂತ್ರ ಸ್ಥಿತಿಯಲ್ಲಿ ಬೆಳೆಸಿ ಜೋಪಾನ ಮಾಡಿದ ತಾತನವರಿಂದ ಕಳಚಿಕೊಳ್ಳಲು; ಬಿಡುಗಡೆಯಾಗಲು ಹಲವು ಸಾರಿ ನಾನು ಇಂಥ ಪ್ರಯತ್ನ ಮಾಡಿದ್ದುಂಟು. ನನ್ನ ಬದುಕಿಗೆ ಸರ್ಪಗಾವಲಿದ್ದ ತಾತ ಸತ್ತಿರಬಹುದೆಂದು ಅನ್ನಿಸಲಿಲ್ಲ. ಸತ್ತ ಸ್ಥಿತಿಯಲ್ಲಿ ಮಲಗಿ ವರ್ತಮಾನವನ್ನು; ವರ್ತಮಾನಕ್ಕೆ ಸಂಬಂಧಿಸಿದವರ ವಿದ್ಯಮಾನವನ್ನು ಗಮನಿಸುತ್ತಿರಬಹುದೆಂಬ ಅನುಮಾನ ಬಂತು. ಆಗಲೆ ಯಾರೋ ಸೂತಕ ಸೂಚಕವಾಗಿ ಹೆಗಲಿಗಿಳಿಬಿಟ್ಟಿದ್ದ ಉತ್ತರೀಯದಿಂದ ಇಡೀ ಮುಖ ಮುಡಿದುಕೊಂಡಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ ಕಂಣುಗಲನ್ನು ಕಿರಿದುಗೊಳಿಸಿ ಪ್ರಣೀತಾ ಹಾಸಿಗೆಯ ಮೇಲೆ ಮಲಗಿದ್ದ ಜೀರ್ಣಾತಿ ಜೀರ್ಣವಾದ ದೇಹದ ಕಡೆ ನೋಡಿದ. ಒಂದು ಕ್ಷಣದಲ್ಲಿ ಅನೇಕ ಪ್ರಾಣಿ ಪಕ್ಷಿಗಳಂತೆ ಕಂಡಿತು. ಇನ್ನೊಂದು ಕ್ಷಣದಲ್ಲಿ ಮಿಸುಕುತ್ತಿರುವ ಒಂದೊಂದು ಬಿಳೀರೋಮವೂ ಹಾವಿನ ರೂಪ ಪಡೆದಂತೆ ಭಾಸವಾಯಿತು. ಆ ಎಲ್ಲರ ಅವರ ಕಲ್ಪನೆಗಳ ನಡುವೆ ಕಳೇಬರದೊಳಗೆ ಶಾಸ್ತ್ರಿಗಳು ಕಂಣು ಪಿಳಿಕಿಸುತ್ತ ಎದ್ದು ತನ್ನ ಕಡೆ ಎರಡೂ ಕೈ ಚಾಚಿ ಬಂದು ಬಿಡೋ ಶಾಮ ಎಂದು ಕೂಗಿದಂತಾಗಲು ಕಿಟಾರನೆ ಕಿರಚಲಿಕ್ಕೆಂದು ಪರಾವರ್ತಿತವಾಗಿ ಪ್ರಯತ್ನಿಸಿದೆ. ಹೊರಟು ಕೀರಲು ಸ್ವರವನ್ನೇ ‘ಅಗ್ನಯ ಇದಂ ನ ಮಮ’ ಎಂಬಂತೆ ಅರ್ಥ ಮಾಡಿಕೋ ಚಿಂಚಿಣಿಯ ಶಾಸ್ತ್ರಿಗಳು ಬಾಚಿ ತಬ್ಬಿಕೊಂಡು ಬೆನ್ನಿಗಂಟಿದ್ದ ಉದರ ನೇವರಿಸಿದರು.‘ಕಾಲೇನಿ ಉದೇತಿ ಸೂರ್ಯಃ ಕಾಲೇನಿ ವಿಶತಿ ಪುನಃ (ಕಾಲದಿಂದ ಸೂರ್ಯ ಹುಟ್ಟುತ್ತಾನೆ ಕಾಲದಲ್ಲಿ ಅವನು ಅಸ್ತಮಿಸುವನು) ಕಣಪ್ಪಾ… ಕಾಲ ಭೈರವ ಸೂರ್ಯನನ್ನೇ ಬಿಡುವುದಿಲ್ಲ. ಇನ್ನು ನಶ್ವರರಾದ ನಾನ್ಯಾವ ಲೆಕ್ಕ… ಸಂತೈಸಿಕೋ…” ಎಮ್ದು ನನ್ನ ತಲೆಯನ್ನು ಎದೆಯ ವಕ್ಷಸ್ಥಳದಲ್ಲಿ ಬಚ್ಚಿಟ್ಟುಕೊಂಡರು. ಅವರೆದೆಯೊಳಗೆ ಯಾವುದೋ ಹುನ್ನಾರು ಅರ್ಥವಾದಂತಾಗಿ ಅಲ್ಲಿಂದ ಬೇರ್ಪಟ್ಟೆ. +ಕಳೇಬರ ಪಂಚಭೂತಗಳಲ್ಲಿ ಲೀನವಾಗಲು ಹಾತೊರೆಯುತ್ತಿದೆ ಎಂದು ಅರ್ಥ ಬರುವ ರೀತಿಯಲ್ಲಿ ಒಂದೆರಡು ನೊಣಗಳು ತೆರೆದಿದ್ದ ಬಾಯಿಯೊಳಗೆ ಪ್ರವೇಶಿಸಿ ಹೊರಬರುತ್ತಿದ್ದವು. ಸನಾತನಿಗಳ ಬೆವರೊಳಗೆ ಉಪ್ಪೆದ್ದು ಹೋಗುವೆನೆಂಬುದಾಗಿ ಭಾವಿಸಿದ ಕಮಲಾಕರ ನನ್ನನ್ನಲ್ಲಿಂದ ಕರೆದೊಯ್ದ. ಏನೋ ಒಂದು ತಿನ್ನಿಸಿದ. ಏನೋ ಒಂದು ಕುಡಿಸಿದ. ಆ ಕ್ಷಣ ಡೇಗಿನ ಮೂಲಕ ಹೊಟ್ಟೆ ವಾಸನೆ ಹೊರಬರಬಹುದೆಂದು ನಾನು ಅಂದುಕೊಂಡಿರಲಿಲ್ಲ. ಮಧುಚಂದ್ರದ ಯಾತನೆಯೊಂದಿಗೆ ವಾರ್ತಮಾನದ ಬೇಗೆಯನ್ನು ಬೆರೆಸಿ… ಆ ಮಿಶ್ರಣಕ್ಕೆ ಧ್ವನಿ ರೂಪ ಕೊಡಲು‌ಒದ್ದಾಡುತ್ತಿದ್ದ ನನಗೆ ಕಳೇಬರವನ್ನು ಆದಷ್ಟು ಬೇಗ ಕರ್ಮಾಚರಣೆಗೆ ಗುರಿ ಪಡಿಸುವ ಕುರಿತು ಒತ್ತಿ ಹೇಳಿದರು. ಯಾವ ಶವಸೊಂಸ್ಕಾರದಲ್ಲಾಗಲೀ, ಅವರ ಕರ್ಮ ನಿಭಾಯಿಸುವುದರ ಬಗೆಗಾಗಲೀ, ಅಸ್ಥಿ ನಿಮಜ್ಜನವೆಂಬಿವೇ ವಿಷಯಗಳ ಬಗೆಗಾಗಲೀ ಒಂಚೂರೂ ಜ್ಞಾನವಿರದ ನಾನು ಅದರಲ್ಲೆಲ್ಲ ವಿದ್ಯುಕ್ತವಾಗಿ ಭಾಗವಹಿಸಲೇಬೇಕಾಗಿತ್ತು. ಶ್ರೀಕರಾಚಾರ್ಯರ ನೇತೃತ್ವದ ಅಗ್ರಹಾರ ನಮ್ಮ ತಾತನವರ ಶವಸಂಸ್ಕಾರದ ವಿಷಯದಲ್ಲಿ ತಜ್ಜನ ಮಜ್ಜನ ನಡೆಸಿರುವುದರ ಬಗ್ಗೆ ಜಲಜಾಕ್ಷಿ ಹೇಳಿದಳು. ಹಳೆಯದೆಲ್ಲ ನೆನಪಾಗಿ ಆಕೆ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ನನಗೆ, ಆಕೆ ಎಂದರೆ ಏನೋ ಒಂದು ರೀತಿಯ ಅಳುಕು. ಆಕೆಯ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುವ ಮುದುಡಿಹೋಗುವ ಸ್ಥಳಾಂತರವೇ ಇನ್ನು ಮುಂದುವರಿಯುತ್ತಿದೆ. ಯಾಕೆ ಹೀಗೆ? ಈ ಓಳಗೆ ಗೌಳೇರ ಕ್ರಿಷ್ಟಿಪ್ಪನಿಗೂ ಕಟುಕರ ವಿಠೋಬನಿಗೂ ಒಳಗೊಳಗೆ ವೈಮನಸ್ಸಾಗಿರುವುದುಂಟು. ಶವ ಸಂಸ್ಕಾರದ ವಿಷಯದಲ್ಲಿ ನೀವು ಹೀಗೆ ವರ್ತಿಸಬೇಕೆಂದು ಮೂಗು ತೂರಿಸಿದರೆಲ್ಲಿ ಅಗ್ರಹಾರದ ನೂರಾರು ಓಟುಗಳು ನಮ್ಮ ಕೈ ತಪ್ಪಿ ಹೋಗುವುವೋ ಎಂಬ ಭಯ ಅವರನ್ನು ಕಾಡುತಿರಲು ಸಾಕು. ಅಗ್ರಹಾರದ ಸ್ಮಶಾನದಲ್ಲಿಯೇ ಸಂಸ್ಕಾರ ಮಾಡಿದರೆ ಆತ್ಮಕ್ಕೆ ಶಾಂತಿ ಸಿಗುವುದು ಇಲ್ಲದಿದ್ದರೆ ಇಲ್ಲವೆಂಬ ವಾದವನ್ನು ಒಪ್ಪಿಕೊಳ್ಳುವುದಾದರೂ ಹೇಗೆ? +“ಈವಿಷಯದಲ್ಲಿ ಯಾರನ್ನು ಯಾಕೆ ಕಾಲುಕಟ್ಟುವುದು? ಎಲ್ಲೋ ಒಂದು ಕಡೆ ಶವಸ್ಂಸ್ಕಾರ ಮಾಡಿದರಾಯ್ತು” ಎಂಬುದಕ್ಕೆ ಕಮಲಾಕರ ಮತ್ತು ಜಲಜಾಕ್ಷಿ ಸಮ್ಮತಿಸಿದರು. ಅವರಿಬ್ಬರೇ ಜೋಡಿಸಿಕೊಟ್ಟ ಐದು ಸಾವಿರ ರೂಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡು ಅಲ್ಲಿಂದ ಹೊರಬಿದ್ದು ಸೀದ ಸೂತಕ ಕವಿದಿದ್ದ ಮನೆಕಡೆ ಬಂದೆ. ನನ್ನ ಹೆಂಡತಿಯ ಕಡೆಯವರು ಯಾವಾಗಲೋ ಹೊಸಪೇಟೆಯಿಂದಿಳಿದಿದ್ದರು. ನನ್ನ ತಾತನವರನ್ನು ನಾನೇ ಕೊಲೆ ಮಾಡಿರುವುದು ಅನ್ನೊ ಥರ ನನ್ನ ಕಡೆ ಹುಳಿ ಹುಳಿ ನೋಡಿದರು. ಮಾತಾಡಿಸೋ ಶಾಸ್ತ್ರ ಮಾಡಿದರು. ವವರೊಂದೇ ಅಲ್ಲ. ಬಂದವರೆಲ್ಲರೂ ಸಹ… ಅಪರಾಧಿ ಸ್ಥಾನದಲ್ಲಿದ್ದು ಓಡಾಡುತ್ತಿರುವೆನೋ ಎಂಬಂತೆ ಅವರೆಲ್ಲ ನೋಡುತ್ತಿದ್ದುದು, ಮಾತಾಡುತ್ತಿದ್ದುದು ಸಾಕುಸಾಕಾಗಿ ಹೋಯಿತು. ನೋವಿನ ಸೂತಕದ ಘಳಿಗೆಗಳಲ್ಲೂ ನಾನು ಗೊಂದಲಕ್ಕೀಡಾಗಿದ್ದಾದಕ್ಕೆ ನನ್ನ ಮಧುಚಂದ್ರದ ಕಹಿ ನೆನೌಗಳಿದ್ದಿರಬಹುದೆಂದುಕೊಂಡೆ. ನನ್ನನ್ನು ಕಠಿಣ ರೀತಿಯಲ್ಲಿ ಗೋಳು ಹೊಯ್ದುಕೊಂಡ ಹೆಂಡತಿ ವರಲಕ್ಷ್ಮಿ ತಾಯಿಯ ಮುಂದೆ ಕೂತು ಇನ್ನು ತನಗಾರು ದಿಕ್ಕು ಎಂಬ ರೀತಿಯಲ್ಲಿ ಅಳುತ್ತಿದ್ದಳು. +ಯಾರದೋ ರಾಜಿ ಸೂತ್ರಕ್ಕೆ ಕಟ್ಟುಬಿದ್ದು ಅಗ್ರ್ಹಾರದ ಭಾಷ್ಯಂ ಶ್ರೀಕರಾಚಾರ್ಯರಿಗೂ ಚಿಂಚಿಣಿಯ ಪಾಂಡುರಂಗ ಶಾಸ್ತ್ರಿಗಳಿಗೂ ಅಂತ್ಯಾಕ್ಷರಿ ಸ್ಪರ್ಧೆ ನಡೆದಿತ್ತು. ಒಬ್ಬೊಬ್ಬರು ಒಂದೊಂದು ವೇದಾಗ್ರಹಣದ ವಠಾರದಿಂದ ಒಂದೊಂದು ಕಂತೆ ಒಗೆಯುತ್ತಿದ್ದರು. ಅವರ ನಡುವೆ ಅಲ್ಪ ಮಾನವರಾದ ನಾನ್ಯಾಕೆ ತಲೆ ತೂರಿಸುವುದೆಂದು ದೂರ ಇರುವಷ್ಟರಲ್ಲಿ ಶೂದ್ರಾತಿ ಶೂದ್ರ ಮಂದಿ ಕೆಲವರು ಸಲಿಕೆ ಗುದ್ದಲಿಗಳೊಂದಿಗೆ ಪ್ರತ್ಯಕ್ಷ ಆದರು. ಅವರ ಮುಖಂಡತ್ವ ವಹಿಸಿದ್ದ ದುರುಗಪ್ಪ ಎಂಬುವನು “ಯಜಮಾನ್ರು ಅಪ್ರೂಪ್ಕೆ ಹೊಟೋಗ್ಯಾರ್ರೀ… ಅವರ್ನ ದ್ಯಾವ್ರು ಕರ್ಕೊಂಡು ನಮ್ಗೆಲ್ಲ ದುಕ್ಕ ಮಾಡ್ಯಾನ್ರಿ… ಅದ್ಕೆಲ್ಲ ಯಾರೇನು ಮಾಡಾಕಾಗತೈತ್ರೀ?… ಇರೋರಾರ ಸತ್ತೋರ ಹೆಸ್ರು ಹೇಲ್ಕೊಂಡು ನಾಕ್ಕಾಲ ಸುಖವಾಗಿರೋದು ಬ್ಯಾಡೇನ್ರಿ?… ನಮ್ದಂತೂ ದಿನಾಲು ಸಾಯೋದಾಗೈತ್ತಿ ಬದುಕು… ಊರಾಗ ಯಾರ್ಯಾರ ಸಾಯ್ಬೆಕು ಒಲೆ ಹತ್ತಿಸ್ಬೇಕ್ರೀ…” ಎಂದು ಮುಂದೇನು ಹೇಳಲಾಗದೆ ತಲೆ ಕೆರೆದುಕೊ +ಡ. ನನಗೆ ಬೇಸರ ಬಂದು “ಸುತ್ತಿ ಬಳಸಿ ಯಾಕ ಮಾತಾಡ್ತೀಯೋ ದುರಗಪ್ಪ… ಹೆಳೊದೇನಿದ್ರು ಒಂದು ಮಾತಿನಲ್ಲಿ ಹೇಳಿ ಬಿಡಪ್ಪ ಎಂದೆ.ಅವರ ಗುಂಪಿನಲ್ಲಿದ್ದ ಚವುಡಪ್ಪ ಎಂಬುವನು, “ನೋದ್ರಿ ಶಾಮಂಣ್ಣೋರ… ಯಜಮಾನ್ರು ಮತ್ತೆ ಸಾಯಿ ಅಂದ್ರ ಸಾಯ್ತಾರೇನ್ರಿ? ಯಾವುದಕ್ಕೂ ಪಡ್ಕೊಂದು ಬಂದಿರ್ಬೇಕು ಒಂದೇ ಸಾರಿಗೆ ಸಾಯಲಕ” ಎಂದು ಏನೋ ಹೆಳಲಿದ್ದಾಗ ವೆಂಕಟದೀಕ್ಷಿತರು “ಏನ್ರೋ ಶೂದ್ರ ಮುಂಡೇವ… ಉಸಿರು ತಾಕೋ ಹಂಗ ನಿಂತ್ಕೊಂಡು ಮಾತಾಡ್ತೀರಲ್ರೋ… ದೂರ ನಿಂತ್ಕೊಂಡು ಮಾತಾಡ್ಬಾರ್ದೇನ್ರೋ” ಎಂದು ಗದರುತ್ತಲೆ ಅವರೆಲ್ಲ ಒಂದು ಮಾರು ಹಿಂದಕ್ಕೆ ಸರಿದು ತಂತಮ್ಮರ್ಧ ಮುಖಕ್ಕೆ ಅರಿವೆ ಇಟ್ಟುಕೊಂಡರು. ದೀಕ್ಷಿತರು ನನ್ನ ಕಡೆ ತಿರುಗಿ “ಶಾಮೂ ನಿನಗಾದ್ರು ಅರ್ಥ ಆಗಬಾರ್ದೇನೊ ಈ ಶೂದ್ರರ ಕಿತಾಪತಿ ಏನೆಂಬುದು… ಇವರೆಲ್ಲ ಸದರ ಕೊಟ್ರೆ ತಲೆಮ್ಲೆ ಬಂದು ಕೂಡ್ರುತಾರಪ್ಪ… ಮನು ಹೇಳಿದ್ನೇ ನಾನು ಹೇಳ್ತಿರೋದು… ನಮ್ಮೂರಲ್ಲಿ ಹೊಲೆಯ ಮಂದಿ ಏನು ಮಾಡಿದ್ರು ಗೊತ್ತೆ?” ಎಂದಾತ ಹೇಳುತ್ತಿದ್ದುದು ತುಂಬ ಕಿರಿಕಿರಿ ಉಂಟುಮಾಡಿತು… “ವೆಂಕಟೇಶಣ್ಣ ನೀವು ದಯವಿಟ್ಟು ಹೋಗ್ರಿ.” ಎಂದು ಅಸಹನೆಯಿಂದ ನುಡಿದೆ. ಗೊಣಗುತ್ತ ಹೋದ. ಚವುಡ ಸ್ವಲ್ಪ ಹತ್ತಿರ ಜರುಗಿ “ನಿಮ್ಮಂಥೋರು ಸಾವಿರಕ್ಕೊಬ್ರು ಶಾಮಣ್ಣೋರ… ಮಾಮೂಲ್ಗಿಂತ ಒನ್ನ್ದಿನ್ನೂರು ಒಗ್ದುಬುಡ್ರಿ ತಂದೆ… ಯಜಮಾನ್ರ ಹೆಸ್ರು ಹೇಳ್ಕೊಂಡು ಹೊಟ್ತುಂಬ ಉಂಬ್ತೀವಿ” ಎಂದು ಬೊಗಸೆಯೊಡ್ಡಿದ. ಅದನ್ನು ಕೇಳಿಸಿಕೊಂಡು ಶ್ರೀಧರ “ಓಹೋ… ಶಾಮೂ… ಅವರು ಕೇಳ್ದಂತೆ ಕೊಟ್ಟೀಯಾ ಜೋಕೆ…” ಅಸ್ಥಿಮಜ್ಜನ ಆಗೋ ವರ್‍ಗೂ ಖರ್ಚು ಮಾಡೊದದೆ” ಎಂದು ಕೂಗಿ ಹೇಳಿದ. ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನೂರರ ಐದು ನೋಟುಗಳನ್ನು ದುರಗಪ್ಪನ ಬೊಗಸೆಗೆ ಹಾಕಿದೆ. +ಅವರೆಲ್ಲ ಕಂಣಿಗೆ ಒತ್ತಿಕೊಂಡು ಹೋಗುವಷ್ಟರಲ್ಲಿ ತಿಂಬರ್ ಡಿಪೋದ ಅಲ್ಲಾ ಭಕ್ಷಿ ತನ್ನದು ಐವತ್ತು ಮಣದ್ದೂ ಅಂತ ಬಂದ. ಅವನನ್ನೂ ತೃಪ್ತಿಪಡಿಸಿ ಕಳಿಸುವಷ್ಟರಲ್ಲಿ ರಾಯಸಂ ರಾಘವಾಚಾರ್ಯರು ನನ್ನ ತಾಯಿಯೊಡನೆ ತಾಳೆಗರಿಯ ಎರಡು ತುಂಡುಗಳನ್ನು ಹಿಡಿದುಕೊಂಡು ಬಂದರು… ಅವರ ಹಿಮ್ದೆ ಪಾಂಡುರಂಗ ಶಾಸ್ತ್ರಿಗಳು; ಸ್ರೀಕರಾಚಾರ್ಯರೂ ಇತ್ಯಾದಿ ಹತ್ತಾರು ಮಂದಿ… ಇದೇ ಒದಗಿ ಬಂದಿರುವ ಸುವರ್ಣಾವಕಾಶವೆಂದು ಭಾವಿಸಿದ ರಾಯಸಂರವರು ಕಂಠ ಎತ್ತರಿಸಿ “ನಿಮ್ಮ ತಾಯಿ ಇದ್ನ ಕೊಡದೆ ಇದ್ದಿದ್ರೆ ಪರಮಘಾತಕ ಮಾಡಿದ ಪಾಪ ಬರ್‍ತಿತ್ತಲ್ಲಪ್ಪಾ… ಮರಣಪೂರ್ವದಲ್ಲಿ ಶಾಸ್ತ್ರಿಗಳು ಬರೆದಿಟ್ಟಿರುವ ಶಾಸನ ಸಿಗದಿದ್ರೆ ನಮಗ್ಗೆಲ್ಲ ರೌರವ ನರಕ ಪ್ರಾಪ್ತಿಯಾಗ್ತಿತ್ತೋ!…” ಎಂದರು. ಚಿಂಚಿಣಿ ಶಾಸ್ತ್ರಿಗಳು, “ರಾಘವಾ… ಅದೇನನ್ನು ಬರೆದಿಟ್ಟಿದ್ದಾರೆಂದು ಘಟ್ಟಿಯಾಗಿ ಹೇಳೋ ” ಎಂದು ಕುಮ್ಮಕ್ಕು ನೀದಿದರು. ಅದರಿಂದ ಉತ್ತೇಜಿತರಾದ ರಾಘವರು “ಮರಣಾನಂತರ ತಮ್ಮ ಶವಸಂಸ್ಕಾರವನ್ನು ಕಾಶೀ ಕ್ಷೇತ್ರದ ಮಣಿಕರ್ಣಿಕಾಘಾಟ್‌ನಲ್ಲಿ ನಡೆಸತಕ್ಕದ್ದೆಂದು ಬರೆದಿಟ್ಟಿದೆದರಲ್ಲಪ್ಪಾ… ಈಗೇನು ಮಾಡೋದು…” ಎಮ್ದು ಮೂಗಿಗೆ ನಶ್ಯೆ ಏರಿಸಿ ಎರಡು ಸಾರಿ ಸೀನಿದರು ತುಪಾಕಿ ಸ್ಪೋಟಿಸಿದಂತೆ. ನನ್ನ ಎದೆ ದಡಲ್ ಎಂದಿತು. “ಪುಣ್ಯವಂತರು ಮಾತ್ರ ಹಾಗೆ ಬರೀಲಿಕ್ಕೆ ಸಾಧ್ಯ?” ಎಂದು ಶ್ರೀಕಂಠಶಾಸ್ತ್ರಿಗಳೂ; “ಈ ಸಂಸ್ಕಾರ ಯಾತ್ರೆಯಲ್ಲಿ ನಾವೆಲ್ಲ ಭಾಗವಹಿಸಿ ಪುಣ್ಯ ಭಾಜನಕ್ಕೆ ಪ್ರಾಪ್ತರಾಗೋಣ”ವೆಂದು ನರಹರಿಗಳೂ ಸಮರ್ಥಿಸಲು ನನ್ನ ಜಂಘಾಬಲವೇ ಉಡುಗಿತು. ನನ್ನ ತಾಯಿ ಮುಂದೆ ಬಂದು “ರಾಘಣ್ಣ ಹೇಳಿದ್ದು ನಿಜ ಕಣೋ ಶಾಮಾ… ಮಾವನವರು ನನ್ನ ಬಳಿ ಕೂಡ ಈ ಆಸೆ ವ್ಯಕ್ತಪಡಿಸಿದ್ರು… ಅವರ ಚಿಕ್ಕ ಆಸೆ ಈಡೇರಿಸದಿದ್ರೆ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗ್ತದೇನೋ? ಹೂ ಅಂದು ಬಿಡಪ್ಪಾ… ಹಿರಿಯರ ಮಾತಿಗೆ ಎದುರಾಡುವ ಪ್ರಯತ್ನವನ್ನು ಮಾತ್ರ ಮಾಡಬೇಡ” ಎಂದು ಹೇಳುತ್ತಲೆ, ನನ್ನ ಪ್ರಾಣ ಅಂಗೈಯಳಿದಲ್ಲಿ ಪತರಗುಡತೊಡಗಿತು . +ಈ ರೌರವ ಸಮಸ್ಯೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಹೊಳೆಯದೆ ವಹಿಸಿದ ಆ ಒಂದು ಕ್ಷಣದ ಮೌನವನ್ನೇ ಅಂಗೀಕಾರವೆಂದು ಅಪಾರ್ಥ ಮಾಡಿಕೊಂಡ ಗೌಳೀಯರ ಕ್ರಿಷ್ಟಪ್ಪ “ಇದ್ರಾಗ ಯೋಚ್ನೆ ಮಾಡೋದೇನೈತಪ್ಪಾ ಶಾಮಂಣಾ… ಇಂಥ ಆಸೇನೆ ಎಲ್ರೂ ಹೇಳ್ಯಾರೇನು? ನೀನೇನು ಯೋಚ್ನೆ ಮಾಡಬ್ಯಾಡ… ಕಾಶಿಯಾತ್ರೆಗೆ ಐವತ್ಸಾವ್ರ ಹೋಗ್ರಿ ನಾನು ಕೊಡ್ತೀನಿ… ಈಗಿಂದೀಗ್ಲೇ ಕಾರೋ, ವ್ಯಾನೋ ಗೊತ್ತುಮಾಡಿಬಿಟ್ರಾಯ್ತು… ಹೆಣನ ಭಾಳ ಹೊತ್ತು ಇಟ್ಕಳ್ಳಂಗಿಲ್ಲ… ಆಗ್ಲೆ ವಾಸ್ನೆ ಬರಲಿಕ್ಕತ್ತೈತಿ” ಎಂದು ಮುಖಕ್ಕೆ ಗಾಳಿ ಹಾಕಿಕೊಂಡ ಧೋತರದ ಚುಂಗಿನಿಂದ. ಅದೇ ಹೊತ್ತಿಗೆ ಪರದೆ ಮರೆಯಲ್ಲಿ ನಿಂತುಕೊಂಡಿದ್ದ ಹೆಂದತಿ ವರಲಕ್ಷ್ಮಿ, +“ಒಪ್ಪಿಕೊಂಡು ಬಿಡ್ರೀ… ಮದುವೆಯಾದ್ರೆ ವಿಶ್ವನಾಥನ ದರ್ಶನ ಮಾಡ್ತೀನಂತ ಹರಕೆ ಹೊತ್ಕೊಂದಿದ್ದೆ… ಹಿರಿಯರ ಆಸೇನೂ ಪೂರೈಸಿದಂತಾಯ್ತು. ನಾವೂ ಎರಡು ದಿನ ಇದ್ದು ಹರಕೆ ತೀರಿಸಿಕೊಂದಂತೆಯೂ ಆಗ್ತದೆ…” ಎಂದು ಸ್ಪಷ್ಟವಾಗಿ ಹೇಳಿದಳು. ಎಲ್ಲರೂ ಅದಕ್ಕೆ “ಹೋ ಹೋ ಹ್ಹಾ ಹ್ಹಾ” ಅಂದರು. ಇವರೆಲ್ಲರು ಜಮಾಯಿಸಿರುವುದು ತಾತನವರ ಶವಸಂಸ್ಕಾರ ಮಾಡಲಿಕ್ಕಲ್ಲ… ನನ್ನ ಸಂಸ್ಕಾರ ಮಾಡಿಕೊಂಡು ಹೋಗಲಿಕ್ಕೆ ಬಂದಿರುವರೆಂದುಕೊಂಡೆ. ದುರದಲ್ಲಿ ಕಮಲಾಕರನೂ, ಜಲಜಾಕ್ಷಿಯೂ ನನ್ನ ಫಜೀತಿಯನ್ನೇ ಆನಂದದ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು. ಎಲ್ಲರಿಗೂ ಕೇಳಿಸುವಂತೆ “ಏನ್ರಿ ಇದು ನೀವೆಲ್ರು ಸೇರಿ ಆಡ್ತಿರೋ ಮಾತು? ವಿಲ್ ಬರೆದಿಟ್ಟಿರೋರ ಗಂಟೆನು ಹೋಗ್ತದ್ರೀ… ಹಾಳಾಗೋನು ನಾನು ತಾನೆ? ಕಾಶಿ ಅಮ್ದ್ರೇನು ಬೋರ್ನಳ್ಳಿ, ಕೋಡಿಹಳ್ಳಿ ನಡುವೆ ಅದೆ ಅಂತ ತಿಳ್ಕೊಂಡಿರೇನು? ತಾತನ ಆತ್ಮ ಸ್ವರ್ಗಕ್ಕೆ ಹೋಗದಿದ್ರೂ ಚಿಂತೆ ಇಲ್ಲ… ನಾನು ಮಾತ್ರ ಅವರ ಶವ ಸಂಸ್ಕಾರವನ್ನು ಇಲ್ಲೆ ಮಾಡೋದು… ಇಷ್ಟ ಇದ್ದೋರು ಇರಬೌದು. ಇಷ್ಟ ಇಲ್ದೋರು ಹೊರಟುಹೋಗಬೌದು. ಇದ್ಕೆ ನನ್ನ ಅಭ್ಯಂತರವೇನೂ ಇಲ್ಲ” ಎಂದು ಕಡ್ಡಿ ಮುರಿದಂತೆ ನುಡಿದುಬಿಟ್ಟೆ. ನಾನಾಡಿದ ಮಾತು ಅವರೆಲ್ಲರ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಎಂಥೋರ ವಂಶದಲ್ಲಿ ಹುಟ್ತಿದ್ದಾನಲ್ಲಪ್ಪಾ… ಎಂದು ಚಿಂಚಿಣಿ ಶಾಸ್ತ್ರಿಗಳು ಉತ್ತರೀಯ ಕೊಡವಿದರೆ, ಶ್ರೀಕರಾಚಾರ್ಯರು ಶಾಮಂಣ… ಪರಮೇಶ್ವರ ಶಾಸ್ತ್ರಿಗಳು ಮಹಾ ಪವಾಡ ಪುರುಷರು. ಅವರ ಆತ್ಮ ಅತಂತ್ರ ಸ್ಥಿತಿಯಲ್ಲಿ ಉಳಿದರೆ ಲೋಕಕ್ಕೆ ಒಳ್ಳೆಯದಾಗೊಲ್ಲ… ನೀನೇ ಅನುಭವಿಸ್ತೀಯ ನೋಡ್ತಿರು ಎಂದು ಧೋತರದ ಕಚ್ಚೆ ಸರಿಪಡಿಸಿ ಬಿಗಿದರು. “ನು ಶಾಮಂಣ… ಐವತ್ಸಾವ್ರ ಕೊಡ್ತೀನಂದ್ರೂ ಕೇಳ್ತಿಲ್ಲಲ್ಲ ನೀನು… ಆಗ್ಲಿ ನಾನು ಮಾತ್ರ ಚಾವತ್ತು ಇಲ್ಲಿರೋಲ್ಲ…” ಎಂದು ಮೀಸೆ ತಿರುವುತ್ತ ಗೌಳೇರ ಧಣಿ ಅಲ್ಲಿಂದ ಕಾಲ್ತೆಗೆದನು. ನೋಡು ನೋಡುವಷ್ಟರಲ್ಲಿ ಬಂದಿದ್ದವರ ಪೈಕಿ ಅನೇಕರು ನನಗೆ ಹಿಡಿ ಹಿಡಿ ಶಾಪ ಹಾಕುತ್ತ ಅಲ್ಲಿಂದ ಹೊರಟು ಹೋದರು. ನನ್ನ ತಾಯಿ ಬಾಯಿಗೆ ಸೆರಗಿಟ್ಟು ಎಂಥ ನಾಸ್ತಿಕ ಮಗನನ್ನು ಹೆತ್ತೆನಲ್ಲಾ… ಶ್ರೀರಾಮ! ಮಾಮನವರ ಬದಲು ನನ್ನಾದರೂ ವೈಕುಂಟಕ್ಕೆ ಕೊಂಡೊಯ್ಯ ಬಾರದಿತ್ತೇ?” ಎಂದು ಪರಿಪರಿಯಾಗಿ ರೋದಿಸುತ್ತ ಒಳಗೆ ಹೋದಳು. +ನಿಧಾನವಾಗಿ ಹತ್ತಿರ ಬಂದ ಕಮಲಾಕರ, ಜಲಜಾಕ್ಷಿಯವರಿಗೆ ಹೇಳಿದೆ, ಈ ಸಂದರ್ಭದಲ್ಲಿ ನೀವೇ ನಮ್ಮ ಬಂಧುಬಳಗ ಎಲ್ಲ, ನಮ್ಮೂರೇ ನಮ್ಗೆ ಕಾಶಿ. ಊರ ಹೊರಗೆ ಹರಿಯುತ್ತೀರೋ ಹುಲುಲಿ ಹಳ್ಳವೇ ಗಂಗೆ, ಯಮುನೆ ಎಲ್ಲ. ಚಂಡ್ರಜ್ಜನ ತಗ್ಗೆ, ಮಣಿಕರ್ಣಿಕಾ ಘಾಟ್…” ಎಂದೆ. ಹೇಳಲಾಗದೆ ಗದ್ಗಿತನಾಗಿ ಬಾಯಿಗೆ ವಲ್ಲಿ ಅಡ್ಡ ಇಟ್ತುಕೊಂಡು ಬಿಕ್ಕಿದೆ. ಅವರು ಸಮಾಧಾನಪಡಿಸಿದರು. +ಸ್ವಲ್ಪ ಹೊತ್ತಿನಲ್ಲಿ ಶವ ಸಂಸ್ಕಾರದ ಕಳೆ ಇ‌ಇದುಹೋದಂತೆ ನನ್ನ ದುಃಖ ಮತ್ತಷ್ಟು ಹೆಚ್ಚಿತು. ವೈದಿಕದ ಮೇಲೆ ಬದುಕುತ್ತಿದ್ದ ನಮ್ಮ ತಾತನವರು ಈ ದೇಶದ ಮಹಾರಾಜರಿಗೆ, ಕೋಟ್ಯಧೀಶರಿಗೆ ಇರುವ ಆಸೆ ಇಟ್ಟುಕೊಡಿದ್ದರಲ್ಲ? ಇದನ್ನೇ ನೆಪ ಮಾಡಿಕೊಂಡು ನೆರೆದಿದ್ದ ಹಲವಾರು ವೈದಿಕರು ನನ್ನನ್ನು ಸಾಲಗಾರನನ್ನಾಗಿ ಮಾಡಲು ಯೋಚಿಸಿದ್ದರಲ್ಲಾ? ಹೆತ್ತ ಮಗನ ಸಂಕಟವನ್ನು ತಾಯಿಯಾದವಳು ಅರ್ಥಮಾಡಿಕೊಳ್ಳದೆ ಹೋದಳಲ್ಲ? ತಾಳಿ ಕಟ್ಟಿದ ಗಂಡನ ಆರ್ಥಿಕ ಪರಿಸ್ಥಿತಿಯನ್ನು ಹೆಂಡತಿ ಅರ್ಥಮಾಡಿಕೊಳ್ಳಲಿಲ್ಲವಲ್ಲಾ?… +“ಹೆದರ್‍ಕೋಬೇಡ ಶಾಮಣ್ಣಾ… ನಾವಿದ್ದೀವಿ” ಕಮಲಾಕರ ನನ್ನನ್ನು ಅಪ್ಪಿಕೊಂಡು ಸಂತೈಸಿದ. ಅವನ ಕಂಣಲ್ಲೂ ನೀರು ಬಾರದೆ ಇರಲಿಲ್ಲ. +ಕಟುಕರ ವಿಠೋಬ ಅದೇ ಹೊತ್ತಿಗೆ ಹತ್ತಾರು ಜನರೊಡನೆ ಬಂದ. “ಎಲಾ ಗೌಳೇರ ಕಿಷ್ಟಾ, ಸಾಲ ಕೊಟ್ಟಂತೆ ಮಾಡಿ ಶಾಸ್ತ್ರಿಗಳ ಇನ್ನೊಂದು ಮನೆಯನ್ನು ಲಪಟಾಯಿಸಲು ನೋಡ್ದೆಲ್ಲೋ… ನಿನ್ಗೆ ದೇವರು ಒಳ್ಳೇದು ಮಾಡಲ್ಲ ಕಣೋ ಮಾಡೋದ್ದಿಲ್ಲ… ಕಣೋ ಮಾಡೊದಿಲ್ಲ… ನೋಡ್ತಾ ಇರು… ಮುಂದೆ ನೀನೇನಾಗ್ತೀ ಅಂತ” ಎಂದು ಮುಂತಾಗಿ ಗೊಣಗಿದ. +ಆತ ಕರೆ ತಂದ ಗುಂಪಿನಲ್ಲಿದ್ದ ವರದಾಚಾರ್ಯರು, ನ್ಯಾಸತ್ರಯಗಳಾದ ಸೃಷ್ಟಿ ಸ್ಥಿತಿ ಸಂಹಾರ ಸ್ಥಿತಿಗಳ ಆಳ ಅಗಲಗಳನ್ನು ಅರ್ಥಮಾಡಿಕೊಂಡಂಥವರು, ಭೋಕ್ತೃತ್ವ ಸಾಧನವಾದ ಪುರೀಂದ್ರಿಯವನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಬಡತನದಲ್ಲಿ ಬೆಂದು ಅರಳಿದಂಥವರು. ಸದಾ ‘ಜ್ಞಾತು ಮಿಚ್ಛ ಜಿಜ್ಞಾಸಃ’ ಎಂಬಂತಿರುವರು. ಋಗ್ವೇದ, ಯಜುರ್ವೇದಗಳನ್ನು ಆಳವಾಗಿ ಅಭ್ಯಾಸ ಮಾಡಿದಂಥವರು. ಹಾಗೆಯೇ ಶವ ಸಂಸ್ಕಾರದ ವಿಷಯದಲ್ಲಿ ಪಾರಂಗತರೂ ಆಗಿರುವವರು. ಜ್ಯೋತಿಷ್ಯ ಮತ್ತು ವೈದಿಕದಲ್ಲಿ ನಮ್ಮ ತಾತನವರು ಮಿಗಿಲಾಗಿದ್ದರೆ ವರದಾಚಾರ್ಯರು ಅವರ ಉತ್ಸರ್ಜನ ಉಪಾಕರ್ಮಗಳಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಉಪನಯನ ಮತ್ತು ಶವಸಂಸ್ಕಾರಗಳೆರಡೂ ಒಟ್ಟಿಗೆ ಎದುರಾಗಿದ್ದ ಅಚ್ಯುತಗೊಂಡಿಯವರ ಮನೆಯಲ್ಲಿ ಹಿಂದೊಮ್ಮೆ ಇವರು ಮತ್ತು ಕೀರ್ತಿಶೇಷರು ಒಟ್ಟಿಗೆ ಸೇರಿದ್ದರು. ಮನುಷ್ಯನಾದವನಿಗೆ ಹುಟ್ಟು ಮುಖ್ಯವೋ? ಸಾವು ಮುಖ್ಯವೋ? ಎಂಬ ಪ್ರಶ್ನೆ ಎತ್ತಿಕೊಟ್ಟಿದ್ದು ಶ್ರೀಯುತ ಗೊಂಡಿಯವರೆ. ಕೀರ್ತಿಶೇಷರು ‘ಹುಟ್ಟು’ ಎಂಬ ಶಾಖೆಪರವಾಗಿ ನಿಂತುಕೊಂಡರೆ ವರದಾಚಾರ್ಯರು ಸಾವಿನ ಪರವಾಗಿ ನಿಂತುಕೊಂಡರು. ಹುಟ್ಟುವವನು ಸಾಯುತ್ತಾನೆ ಎಂದೋ; ಸತ್ತವನು ಹುಟ್ಟುತ್ತಾನೆ ಎಂದೋ, ಸಾಯಲಿಕ್ಕಾಗಿ ಹುಟ್ಟುತ್ತಾನೆ ಎಂದೋ, ಹುಟ್ಟುವುದಕ್ಕಾಗಿ ಸಾಯುತ್ತಾನೆ ಎಂದೋ ಇತ್ಯಾದಿ ಇತ್ಯಾದಿ ವಾದ ಮಾಡುತ್ತಾ ಮಾಡುತ್ತಾ ಅರ್ಥವಾಗದ ತಾತ್ವಿಕವಾದ ಜೇಡರ ಬಲೆಯನ್ನೇ ಸೃಷ್ಟಿಸಿಬಿಟ್ಟರು. +ಅವರ ವಾದವನ್ನು ಅದುವರೆಗೆ ಕೇಳುತ್ತಿದ್ದ ಬೆಸ್ತರ ಬಸಪ್ಪನು ತಡೆಯಲಾರದೆ “ಹುಟ್ಟೋದು ಸಾಯೋದು ಇವೆಲ್ಡು ಬ್ಯಾಳೆ ಕಾಳಿದ್ದಂಗ್ರೀ ಅಪ್ಪೋರಾ… ಅವೆಲ್ಡು ಬ್ಯಾಳಿ ಒಂದಕ್ಕೊಂದು ಅಂಟಿಕಂಡಿದ್ರೆರೀಯಪ್ಪಾ ಮೊಳಕೆ ಒಡೆಯೋದು, ಬೆಳೆಯೋದು… ಹಂಗೇರಿ ಇದೂ…ಹುಟ್ಟು ಸಾವು ಎಲ್ಡು ಇದ್ರೇನೆ ಬದುಕು ಸಂಸಾರ, ಒಳ್ಳೇದು ಕೆಟ್ಟದ್ದು ಎಲ್ಲಾನೂ… ಏನೋ ತಿಳೀದ ಹಳ್ಳಿ ಮುಕ್ಕ… ತಡೀಲಾರ್‍ದೆ ಅಂದು ಬುಟ್ಟೆ… ಇದ್ರಾಗೇನಾ ತಪ್ಪಿದ್ರೆ ಎಕ್ಕಡ ತಗೊಂಡು ಹೊಡ್ದು ಬುದ್ದಿಹೇಳ್ರಿ ತಂದ್ಯೋರಾ” ಎಂದು ಹರಳು ಉರಿದಂತೆ ನುಡಿದು ಕೂತುಬಿಟ್ಟನು. +ಬೆಸ್ತರವನ ಮಾತು ಕೇಳಿ ಆ ಅದ್ವೈತಿಗಳೀರ್ವರೂ ಅವಕ್ಕಾದರು. ಬಸಪ್ಪನನ್ನು ಮುತ್ತಿನಂಥ ಮಾತುಗಳನ್ನು ಒಪ್ಪಿಕೊಳ್ಳುವುದೋ? ತಿರಸ್ಕರಿಸುವುದೋ? ಎಂಬ ಗೊಂದಲ ಅವರಿಬ್ಬರನ್ನು ಕಾಡಿತು. ಮೆಚ್ಚಿದರಂತೂ ಶೂದ್ರರಿಗೆ ಸಲಿಗೆ ಕೊಟ್ಟಂತೆಯೇ ಲೆಕ್ಕ ಎಂದುಕೊಂಡರೋ ಏನೋ? ಅವರಿಬ್ಬರ ಪರವಾಗಿ ಶ್ರೀಯುತಗೊಂಡಿಯವರು ಸಿಟ್ಟಿನಿಂದಲೂ ಒಳಗೊಳಗೆ (ಮರ್ಯಾದೆ ಉಳಿಸಿದೆ ಎಲೆ ಬೆಸ್ತಮುಂಡೇ ಮಗ್ನೇ) ಹೆಮ್ಮೆಯಿಂದಲೋ ಬಸಪ್ಪನ ಕಡೆ ನೋಡಿ “ಲೇ ಬಸ್ಯಾ… ಹೊಳಿ ಹಳ್ಳದಾಗ ನೀರಿಲ್ಲ ನಿಡಿ ಇಲ್ಲ ಇಷ್ಟು ಮಾತಾಡ್ತಿ… ಸಕಾಲಕ್ಕೆ ಮಳಿ ಬಿದ್ದಿದ್ರೆ ತತ್ವಾನೇ ಅರಗಿಸ್ಕೊಂಡು ಕುಡ್ದುಬಿಟ್ಟಿರ್‍ತಿದ್ಯೋ ಏನೋ? ಸುಮ್ಮನಿರಾಕ ಗಂಟೇನ್ತಗಂತೀ… ದೊಡ್ಡೋರ ಮಾತಿನಾಗ ಬಾಯಿ ಹಾಕ್ಬಾರ್ದಪ್ಪಾ… ಒಳ್ಳೇದಾಗಕಿಲ್ಲ… ತಿಳೀತಾ” ಎಂದು ಹೇಳಿದರು. ಅದಕ್ಕೆ ಹೌದೆಂಬಂತೆ ತಲೆ ಅಲ್ಲಾಡಿಸಿದನು. +ಅನಂತರ ವೈದಿಕರೀರ್ವರು ತಂತಮ್ಮ ವೃತ್ತಿಗಳನ್ನು ಚರ್ಚೆಯ ನಿಕಷಕ್ಕೆ ಒಳಪಡಿಸಿಬಿಟ್ಟರು. ಉಪಸಂಹಾರಕ್ಕೆ ಬಂದು ಕೀರ್ತಿಶೇಷರು ಆಚಾರಿ ನಿನ್ಗೆ ಶಾಸ್ತ್ರೋಕ್ತವಾಗಿ ಉಪನಯನ ಇತ್ಯಾದಿ ಕರ್ಮಕಾಂಡ ಆದಂತಿಲ್ವೋ? ಅಂದರು. ಅದರಿಂದ ಕೆರಳಿದ ವರದಾಚಾರ್ಯರು “ಶಾಸ್ತ್ರಿಗಳೇ ಮಾತಾಡೀ ಮಾತಾಡಿ ಏಕ ಏವ ಪರೋ ಹ್ಯಾತ್ಮಾ ಸರ್ವೇಷಾಯಪಿ ದೇಹಿನಾಮ್ (ಎಲ್ಲಾ ಪ್ರಾಣಿಗಳಿಗೂ ಒಂದೇ ಒಂದು ಶ್ರೇಷ್ಟವಾದ ಆತ್ಮ ಇರುವುದು) ಅಂತ ಭಾಗವತದಲ್ಲಿ ಹೇಳಿರೋದು ನಿಮ್ಗೂ ನೆನಪಿರಬೌದು. ಆ ಅತ್ಮಕ್ಕೆ ಸಂಸ್ಕಾರ ಕೊಡೋದ್ರಲ್ಲೇ ಪುರುಷಾರ್ಥ ಇರೋದು ಸ್ವಾಮೀ… ಆ ದೇವರ ಆಶೀರ್ವಾದವಿದ್ರ್ ನಾನೇ ನಿಮ್ಮ ಆತ್ಮಕ್ಕೆ ಸದ್ಗತಿ ಸಿಗೋ ಏರ್ಪಾಡು ಮಾಡ್ತೀನಿ… ನೋಡ್ತಿರಿ” ಎಂದರು ಅಸಹನೆಯಿಂದ. +“ಹೋಗೋ ಹೋಗು ವರದಽಽ… ನಿನ್ನ ಕೈಲಿ ಆತ್ಮ ಸಂಸ್ಕಾರ ಹೊಂದಲಿಕ್ಕೆ ನಾನೇನು ಪಾಪ ಮಾಡಿನ್ವೋ… ನನ್ನ ಶವ ಸಂಸ್ಕಾರವಾಗಲೀ; ಅಸ್ಥಿ ನಿಮಜ್ಜನವಾಗಲೀ ನಡೆಯೋದು ಕಾಶೀಕ್ಷೇತ್ರದ ಮಣಿಕರ್ಣಿಕಾ ಘಾಟ್‌ನಲ್ಲಿ ನೋಡ್ತಿರು” ಎಂದಂದೇ ಶಪಥ ಮಾಡಿದರು ನಮ್ಮ ತಾತನವರು. ಆ ಕ್ಷಣ ಮಾಡಿದ ನಿರ್ಧಾರವನ್ನು ದೈನಂದಿಕ ಗೋಜಿನ ನಡುವೆ ನೆನಪಿನಲ್ಲಿಟ್ಟುಕೊಂಡು ಬರೆದಿರುವುದೇ ದೊಡ್ಡ ಸಂಗತಿ. +“ಅಂತೂ ಪೂಜ್ಯ ಶಾಸ್ತ್ರಿಗಳ ಶವ ಸಂಸ್ಕಾರ ನಡೆಸಿಕೊಡಬೇಕಾಗಿ ಬಂತಲ್ಲ… ಇದೇ ನನ್ನ ಸೌಭಾಗ್ಯ… ನೀನೆನು ಯೋಚಿಸಬೇಡ ಶಾಮಣ್ಣ… ಎಲ್ಲ ಮುಗಿಸಿಕೊಟ್ಟೇ ನಾನು ಇಲ್ಲಿಂದ ಹೊರಡುವುದು… ಆಯ್ತಾ” ಎಂದು ಆಚಾರ್ಯರು ನನ್ನ ಮೈದಡವಿ ಧೈರ್ಯ ತುಂಬಿದರು… +ನಾನು ನೆಮ್ಮದಿಯಿಂದ ಉಸಿರುಬಿಟ್ಟೆ. +ಆಗಲೇ ವಿಷೇಶ ಸ್ನಾನ ಮಾಡಿಕೊಂಡು ಬಂದಿದ್ದ ವರದರು ಶವದ ಪಕ್ಕ ಕೂತುಕೊಂಡು ತಮ್ಮ ಧದ ಹದಿನೈದು ಸ್ಥಾನಗಳಿಗೆ ಭಸ್ಮೋದ್ದೂಲನ ಮಾಡಿಕೊಂಡು ವಿಷೇಶ ಶೋಭೆಯಿಂದ ಕಂಗೊಳಿಸುತ್ತ ಘಂಟಾನಾದದಿಂದಲೂ : ನೆರದಿದ್ದ ಜನರ “ಉಘೇ ಉಘೇ ಚಾಂಗು ಭಲರೇ” ಎಂದು ಕೂಗಿದ ಧ್ವನಿಯಿಂದಲೂ ಎಚ್ಚೆತ್ತ ನನ್ನ ತಾಯಿಯು ತನ್ನ ಸೊಸೆಯ ಸಹಾಯದಿಂದ ಹೊರಗಡೆ ಬಂದು “ಏನೋ ಆಚಾರಿ… ನನ್ನ ಮಾವನವರ ಸಂಸ್ಕಾರ ಮಾಡ್ಲಿಕ್ಕೆ ಬಂದಿದ್ದೀಯಲ್ಲ?… ನಿನಗೆಷ್ಟೋ ಧೈರ್ಯ… ಅವರು ಸಾಯೋ ಮುಂದುಗಡೆ ಬರೆದಿರೋ ಮರಣ ಶಾಸನದಲ್ಲಿ ಉಲ್ಲೇಖಗೊಂಡಿರೋ ಸಂಗತಿಯನ್ನು ನಿನ್ಗೂ ಹೇಳ್ಬೇಕೇನು? ನಿನ್ನಿಂದ ಸಂಸ್ಕಾರಗೊಂಡ್ರೆ ಆ ಅತ್ಮ ಯಾವ ಲೋಕಕ್ಕೂ ಹೋಗದೆ ಅತಂತ್ರವಾಗಿ ಉಳಿದುಬಿಡುತ್ತೆ… ಹೊರಡು… ಮೊದ್ಲು ಹೊರಡು ಇಲ್ಲಿಂದ… ” ಎಂದು ರಂಪಾಟ ಆರಂಭಿಸಿದಳು. ಇದರಿಂದ ವಾತಾವರಣದ ನೋವಿಗೆ ಮತ್ತೆರಡು ಕೋಡು ಬಂದವು. +ವರದಾಚಾರ್ಯರು ಮಾತ ಶತರುದ್ರೀಯ, ಸ್ವೇತಾಶ್ವತರ, ಅರ್ಥವಶಿರ ಅರ್ಥವಶಿಖಾ ಕೈವಲ್ಯಗಳನ್ನು ಜಪಿಸುತ್ತ ಧ್ಯಾನ ಮುದ್ರೆಯಿಂದ ಒಂಚೂರು ವಿಚಲಿತರಾಗಲಿಲ್ಲ. +ಟೆಂಗಿನ ಕಾಯಿನ ಮೇಲೆ ಹಚ್ಚಿದ್ದ ಉಂಡೆ ಕರ್ಪೂರ ಮಾತ್ರ ಜಾಜ್ವಲ್ಯಮಾನವಾಗಿ ಉರಿಯುತ್ತಿತ್ತು. +“ಅಯ್ಯೋ ಭಂಡ!… ಮಾನ ಇಲ್ಲದವನೇ… ಕೊಳದಲ್ಲಿ ಬಕ ಕೂತ್ಕೊಂಡಂತೆ ಕೂತಿರುವೆಯಲ್ಲೋ… ಎದ್ದು ಹೊರಡೋ ಮೊದ್ಲು” ಎಂದು ನನ್ನ ತಾಯಿ ಹುಚ್ಚಿಯಂತೆ ಅಬ್ಬರಿಸತೊಡಗಿದ್ದು ಸ್ರಿದ್ದ್ದ ಹಲವರಿಗೆ ಸರಿ ಕಾಣಲಿಲ್ಲ. +“ನಮ್ಮಾ ತಾಯಿ… ನೀವು ಮಾಡ್ತಿರೋದು? ಎಲ್ಲಾ ವೈಮನಸ್ಸು ಮರ್‍ತು ಅವರು ಬಂದು ವಿಧಿಗೆ ಕೂತಿರೋದೆ ದೊಡ್ಡ ವಿಷಯ… ನೆಮ್ಮದಿ ತಾಳೋದು ಬಿಟ್ಟು ಹೀಗೆ ತೊಂದರೆ ಕೊಡ್ತಿದ್ದೀಯಲ್ಲ ಇದು ನ್ಯಾಯವೇನಮ್ಮಾ” ವರದರ ಷಡ್ಡಕರಾದ ರಾಮಾಚಾರ್ಯರು ಬುದ್ಧಿವಾದ ಹೇಳಿದರು. +ಅದರಿಂದ ಕೆರಳಿದ ನಮ್ಮ ತಾಯಿ “ಏನೋ ರಾಮಾ ನಿಮ್ಮ ಕರಾಮತ್ತು ಹೆಂಣಾದ ನನಗೆ ಅರ್ಥ ಆಗಲ್ಲ ಅಂಥ ತಿಳ್ಕೊಂಡಿರೇನ್ರೋ” ಎಂದು ತಾನುವಿಧವೆ ಎಂಬ ಪರಿವೇ ಇಲ್ಲದೆ ಮುಂದಕ್ಕೆ ಧಾವಿಸಿದಳು. +ನನ್ನ ತಾಯಿಯೊಳಗೆ ಅರ್ಥವಾಗದ ಮತ್ತು ಕುಲಗೋತ್ರಗಳಿಲ್ಲದ ದೆವ್ವಗಳು ಹೊಕ್ಕಿಕೊಂದಿವೆ ಎಂದು ಭಾವಿಸಿದನಾನು ಚಂಗನೆ ಮುಂದಕ್ಕೆ ಜಿಗಿದೆ. +“ನಾನೇನು ಪಾಪ ಮಾಡಿದ್ದೀನಂತ ಹೀಗೆ ತೊಂದ್ರೆ ಕೊದ್ತಿದ್ದೀಯ ಅಮ್ಮಾ… ದಯವಿಟ್ಟು ಒಳಗಡೆ ಹೋಗಿ ನನ್ನ ಮತ್ತು ನನ್ನ ತಾತನವರ ಮರ್ಯಾದ ಕಾಪಾಡಮ್ಮ” ಎಂದು ಕೈಮುಗಿದು +ಪರಿಪರಿಯಾಗಿ ಬೇಡಿಕೊಳ್ಳತೊಡಗಿದೆನು. +ಮತ್ತೊಮ್ಮೆ ಜನರು “ಉಘೇ ಉಘೇ ಚಾಂಗು ಭಲರೇ” ಎಂದು ಕೂಗಿದರು. +“ಇಲ್ವೋ ವಂಶಘಾತಕನೇ… ನಿನ್ನ ತಾತನವರ ಒಂದು ಚಿಕ್ಕ ಆಸೆಯನ್ನು ಪೂರೈಸಲಾಗದ ನೀನು ಅವರ ಮೊಮ್ಮಗನೋ… ನೀನು ಪ್ರತಿ ತಿಂಗಳು ತಗೊಳ್ತಿರೋ ಸಾರ್ಕಾ‌ಅರಿ ಸಂಬಳ ನಿನ್ನಿಂದ ಮಾಡಬಾರದ್ದನ್ನೆಲ್ಲಾ ಮಾಡಿಸ್ತಿದೆ… ನನ್ನ ಮಾವನವರ ಕಳೇಬರ ಇಲ್ಲೇ ಕೊಳೆತು ಹೋದರೂ ಚಿಂತೆ ಇಲ್ಲ… ನಾನು ಮಾತ್ರ ಆ ಭಂಡ ವರದನನ್ನು ಸಂಸ್ಕಾರ ಮಾಡ್ಲಿಕ್ಕೆ ಬಿಡೋದಿಲ್ಲ” ಎಂದು ಚೀರಿಕೊಂಡಳು. +ತನಗೂ ಈ ರಂಪಾಟಕ್ಕೂ ಯಾವ ಸಂಬಂಧವಿಲ್ಲವೆಂಬಂತೆಯೂ: ನಿರ್ವಿಕಲ್ಪ ಚಿತ್ತದಿಂದಲೂ ನಿಂತು ನೋಡುತ್ತಿದ್ದ ಹೆಂಡತಿ ಕಡೆ ದುರುಗುಟ್ಟಿ ನೋಡಿದೆ. +ಮಾತೇ ರುದ್ರ ಶಿವಾತನೋ… +ಉಘೇ ಉಘೇ ಚಾಂಗು ಭಲರೇ +ನನಗೆ ಸಿಟ್ಟು ತಡೆಯಲಾಗಲಿಲ್ಲ. ಒಂದು ಕ್ಷಣ ಕವಿದ ಮಂಕಿನಲ್ಲಿ ತಾಯಿಯ ಕೆನ್ನೆಗೆ ಒಂದು ಏಟು ಕೊಟ್ಟೆ. ಹೆಂಡತಿಗೂ ಸಹ. “ಹೋ ಅಯ್ಯಯ್ಯೋ… ಕೊಂದು ಹಾಕಿಬಿಡೋ ನಮ್ಮಿಬ್ಬರನ್ನೂ…” ಎಂದು ಬಾಯಿಬಾಯಿ ಬಡಿದುಕೊಂಡ ಅವರೀರ್ವರನ್ನೂ ಅಡುಗೆಮನೆಗೆ ತಳ್ಳಿ ಬಂದೆ. +ಶತ್ರುತ್ವ ಕ್ರೋಧ ಯಾರಲ್ಲಿ ಹೇಗೆ ಅರಳುವವೋ? ಯಾವ ರೀತಿ ಸ್ಪೋಟಿಸುವುವವೋ? ಯಾರಿಗೂ ತಿಳಿಯದು. ಮುಖ್ಯವಾಗಿ ನೂರ್ಮಡಿಯಾಗಿ ನನಾಗೇ ನೋವಾಯಿತು. +“ವಿವಾದಲ್ಲಿ ಸಿಲುಕಿ ಈ ಹೆಣ ಶಾಶ್ವತವಾಗಿ ಓಣಿಯಾಲೇ ಉಳಿದುಬಿಟ್ಟರೆ ನಾವು ಮನೆ ಬಾಡಿಗೆ ಹಿಡಿದು ವಾಸಿಸುವುದಾದರೂ ಹೇಗೆ?” ಬಾಡಿಗೆಗೆಂದು ರುದ್ರನಾಯಕನ ಖಾಲಿ ಮನೆ ನೋಡಲೆಮ್ದು ಬಂದಿದ್ದ ಹೆಡ್‌ಕಾನ್‌ಸ್ಟೇಬಲ್ ನಾಗೇಂದ್ರಪ್ಪ ಬ್ರೋಕರ್ ಲಚುಮಯ್ಯನಿಗೆ ಹೇಳುತ್ತಿದ್ದ. +ಲಚುಮಯ್ಯಾ… ನನ್ ಹೆಂಡ್ತಿಗೆ ದೆವ್ವ ಪಿಶಾಚಿ ಅಂದ್ರೆ ಆಗದು… ಆಗ್ಲೆ ಒಂದೆರಡು ದೆವ್ವ ಆಕೆಯನ್ನು ಹಿಡ್ಕೊಂಡು ಬಿಟ್ಟಿರುವುದು +ಟು ಮಾರಾಯಾ… ಯಾಕಂತೀಯಾ ಆಕೆಯ ಕಂಣುಗಳಿಗೆ ಮಾತ್ರ್ ದೆವ್ವಗಳನ್ನು ಕಾಣೋ ಶಕ್ತಿ ಇರೋದು. ಆಕೆಯ ಮೈಯೊಳ್ಗೆ ಯಾವ್ದೇ ದೆವ್ವ ಸುಲಭವಾಗಿ ಹೊಕ್ಕೊಂಡು ಬಿಡ್ತದೆ ನೋಡು” ಎಂದೆಂದೇನೋ ಮಾತಾಡುತ್ತಿದ್ದ ನಾಗೇಂದ್ರಪ್ಪ… +“ಹಳೇ ಮಂದಿ… ಅವ್ರ ಪಾಡಿಗೆ ಅವರ್‍ನ ಬಿಟ್ಟು ಮುಂದಿನ ಕಾರ್ಯಕ್ಕೆ ಗಮನ ಕೊಡಪ್ಪಾ” ಕತುಗರ ವಿಠೋಬ ತಲೆಗೆ ವಲ್ಲಿ ಸುತ್ತುತ್ತ ಧೈರ್ಯ ತುಂಬಿದ. +ಉಘೇ ಉಘೇ ಚಾಂಗು ಭಲರೇಽಽ +ಹತ್ತಾರು ಜನರು ಹತ್ತಾರು ರೀತಿಯಲ್ಲಿ ಕೆಲಸಕ್ಕೆ ತೊಡಗಿದ್ದರು. ಅವರಲ್ಲಿ ನಾವಿದುವರೆಗೆ ತುಚ್ಛವಾಗಿ ನೋಡ್ಶಿದ ಶೂದ್ರರೇ ಹೆಚ್ಚು ಇದ್ದರು. +ದಾಮೋದರ, ಶ್ರೀಕಂಠ, ಸುಧೀಂದ್ರ, ಸೂರಿ, ವಾಸುಕೀ ಮೊದಲಾದ ಕಾಲೇಜು ಹಂತದ ವಿದ್ಯಾರ್ಥಿಗಳು ಅಗ್ರಹಾರದ ತಂತಮ್ಮ ತಂದೆ ತಾತಂದಿರ ಮಾತನ್ನು ಧಿಕ್ಕರಿಸಿ ಬಂದು ನಾನಾ ಕೆಲಸದಲ್ಲಿ ಭಾಗಿಯಾಗಿರುವುದು ನೋಡಿ ನಾನು ಕರಗಿ ಹೋದೆ. ಅವರಲ್ಲಿ ಪರಿಚಿತರೆಷ್ಟೋ ಅಪರಿತ್ಚಿತರೆಷ್ಟೋ… +ವೈದಿಕದ ಕೂಪದೊಳಗೆ ಮಂಡೂಕ ಪ್ರಾಯ ರೀತಿಯಲ್ಲಿ ಉಳಿದು ವಾರಿಗೆಯ ಪ್ರಪಂಚವನ್ನು ದೂರವಿಟ್ಟಿದ್ದ ನನ್ನ ಬಗ್ಗೆ ನನಗೇ ಅಪಾರ ಬೇಸರವಾಯಿತು. ಅದೇ ಹೊತ್ತಿಗೆ ಸರಿಯಾಗಿ ಚಿಂಚಿಣಿಯ ಪಾಂಡುರಂಗ ಶಾಸ್ರಿಗಳು “ಮಹಾಪರಾಧವಾಯ್ತಪ್ಪಾ ಶಾಸ್ತ್ರೀ ಮಹಾಪರಾಧವಾಯ್ತಪ್ಪಾ ನನ್ನಿಂದ” ಎಂದು ಕೆನ್ನೆಕೆನ್ನೆ ಬಡಿದುಕೊಳ್ಳುತ್ತ ಬಂದು ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಓಂ ಸಹಸ್ರ ಶೀರ್ಷ್ಯಾಃ… ವೃಣೀಮಹೇ… ಮುಗಿಲಿಗೆ ಮುಟ್ಟಿತ್ತು ಮಂತ್ರೊಚ್ಚಾರ… +ಆಗಲೆ ತಾತನವರ ನಶ್ವರ ದೇಹಕ್ಕೆ ಸ್ನಾನ ಮಾಡಿಸಿ ಶುಭ್ರ ಬಿಳಿ ವಸ್ತ್ರಗಳನ್ನು ಉಡಿಸಿಜಲಮಿಶ್ರಿತ ಭಸ್ಮದಿಂದ ಆಯಾಯ ಸ್ಥಾನಗಳಲ್ಲಿ ತ್ರಿಪುಂಡ್ರ ಧಾರಣ ಮಾಡಿದ್ದರು,ಗಾಯತ್ರಿ ಮಂತ್ರೊಚ್ಚಾರಣದಿಂದ ಶುದ್ದೋದಕ ಸಿಂಪಡಿಸಿದ್ದ ಜಾಗದ ಮೇಲೆ ಮಂಚವನ್ನು ಇಟ್ಟು ಅದರ ಮೇಲೆ ಭಸ್ಮದ ಪುಡಿ ಹರಡಿ ಕಳ್ಬರವನ್ನು ಉದ್ದಕ್ಕೆ ಮಲಗಿಸಿದ್ದರು. ಅದರ ಮೇಲೆ ಗಂಧ ಹರಡಿದವರೊಬ್ಬರು, ಅಕ್ಷತೆ ಧೂಪ ದೀಪ ಪುಷ್ಪಗಳಿಂದ ಅಲಂಕರಿಸಿದ್ದು ಹಲವು ಮಂದಿ. +ಅಸ್ಯಾಂ ಗುಣವಿಶೇಶೇಣ ವಿಶಿಷ್ಟಾಯೂಂ… ಎಂದು ಮುಂತಾಗಿ ವರದರುಶುರು ಮಾಡಿದರೆ ಚಿಂಚಿಣಿ ಶಾಸ್ತ್ರಿಗಳು ಮಂತ್ರೈಸ್ಸಹಯುಷ್ಟೇ ಎಂದು ಮುಕ್ತಾಯಮಾಡಿದರು. +ಅಂಗಳದಲ್ಲಿ ನಿಂತಿದ್ದ ಕಟುಗರ ವಿಠೋಬನಂತೂ ಜಯಮಂಗಳ ಎಂದು ಹಾಡುತ್ತ ಭವಬಳ್ಳಿಯನ್ನು ಕಿತ್ತಾಡುತ್ತೆ ಎನ್ನುವಷ್ಟರಲ್ಲಿ ಗದ್ಗಿತನಾಗಿ ಶರಣಗಣ ಸಾಕ್ಷಿಯಾಗಿ ಎನ್ನುತ್ತಲೇ ಗೊಳೋ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದನು. “ಅಳಬ್ಯಾ‌ಅಣ್ಣಾ… ನೀನೇ ಮಕ್ಕಳಂಗೆ ಅತ್ರೆ ನಮ್ ಗತಿ ಹೆಂಗಣ್ಣ” ಎಂದು ಗರಡಿಮನೆ ಹುಡುಗರೆಲ್ಲ ಸಮಾಧಾನ ಹೇಳತೊಡಗಿದರು. +ಕಟುಗರ ವಿಠ್ಬನ ಕಣ್ಣಲ್ಲಿ ನೀರು ಬಂದದ್ದು ಒಂದು ಐತಿಹಾಸಿಕ ಘಟನೆ ಎಂಬುದಾಗಿ ಭಾವಿಸಿ ಕಮಲಾಕರ ಆ ದೃಹ್ಯವನ್ನು ಫೋಟೋದಲ್ಲಿ ಸೆರೆ ಹಿಡಿದನು. +ಕಂಣನ್ನು ನೀರಿನ ಕೊಳ ಮಾದಿಕೊಂಡಿದ್ದ ನನ್ನನ್ನು ಸುರೇಶ, ಮಾಧವ ಗಿಡಗಳ ನಡುವೆ ಕರೆದುಕೊಂಡು ಹೋಗಿ ಮೂರು ಬಿ +ದಿಗೆ ನೀರು ಸುರಿದರು. ಸೊಂತಕ್ಕೊಂದು ಹೆಗಲಿಗೊಂದು ಸೆಲ್ಲೆ ಹಾಕಿದರು. ವರದರು ನನ್ನ ಮೈಗೆ ಭಸ್ಮಧಾರಣೆ ಮಾಡಿಸಿ ಮಂತ್ರೋದಕ ಸಿಂಪಡಿಸಿದರೆ ಚಿಂಚಿಣಿಯವರು ಭಕ್ತಿಪೂರ್ವಕವಾಗಿ ಸಾಷ್ಟಾಂಗ ಪ್ರಣಾಮ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಮಾಡಿದೆ. ಅವರ ನಿರ್ದೇಶನದಂತೆ ಕೈಯಲ್ಲಿ ಕೆಂಡವಿದ್ದ ಅಗ್ಗಿಷ್ಟಿಕೆ ಹಿಡಿದುಕೊಂಡೆ. ಆಗಲೆ ಶಾಸ್ತ್ರ ರೀತ್ಯಾ ಸಿದ್ಧಪಡಿಸಿದ್ದ ವಿಮಾನದಲ್ಲಿ ತಾತನವರ ಕಳೇಬರವನ್ನು ಎತ್ತೊಯ್ದು ಮಲಗಿಸಿದೊಡನೆ ಒಳಗಿನಿಂದ ನನ್ನ ತಾಯಿ ಅಯ್ಯೋ ಮಾವನವರೆ… ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿ ಹೋಗ್ತಿದ್ದೀರಾ… ನಿಮ್ಮ ಕೊನೆ ಆಸೆಯನ್ನಾದರೂ ಪೂರೈಸಲಿಲ್ಲಾಲ್ಲಾ ನಿಮ್ಮ ಮೊಮ್ಮಗನಿಗೆ… ಅವನು ಮಾಡ್ತಿರೋ ಅಪರಾಧವನ್ನು ಹೊಟ್ಟೇಲಿ ಹಾಕಿಕೊಂಡು ಆಶೀರ್ವಾದ ಮಾರಿ… ಎಂದು ಮುಂತಾಗಿ ಅಬ್ಬರಿಸುತ್ತ ಶವದ ತನ್ನನೆಯ ಕಾಲುಗಳನು ಗೈಯಾಗಿ ಹಿಡಿದುಕೊಂಡಳು. ಆಕೆಯಿಂದ ಅದನ್ನು ಬಿಡಿಸುವಷ್ಟರಲ್ಲಿ ಹುಡುಗರಿಗೆ ಸಾಕು ಸಾಕಾಯಿ ಹೋಯಿತು. +“ವರದಾಚಾರಿ… ಜೋಪಾನವಾಗಿ ಸಂಸ್ಕಾರ ಮಾಡಿ ಮುಗಿಸಪ್ಪಾ… ನಿನ್ನ ತಂದೆಯವರದೇ ಶವ ಅಂತ ತಿಳ್ಕೊಂಡು ಅಸ್ಖಲಿತವಾಗಿ ಮಾಡಪ್ಪಾ” ಎಂದು ಆಕೆ ಕೈ‌ಎತ್ತಿಮುಗಿಯಲು ಹುಟ್ಟಿದೊಡನೆ ತಂದೆಯನ್ನು ನುಂಗಿದವರಾದ ವರದರು ಕಂಣುಮುಚ್ಚಿ ತಮ್ಮ ತಂದೆಯವರನ್ನು ಒಂದು ಹಳೆಯ ಫೋಟೋದ ಮೂಲಕ ಕಲ್ಪಿಸಿಕೊಂಡು ತಾವೂ ಗದ್ಗದಿತರಾದರು. +“ಅಯ್ಯೋ ತಾಯಿ… ಎಂಥ ಮಾತಾಡ್ತಿದ್ದೀಯಮ್ಮಾ?… ಇಹಲೋಕ ತ್ಯಜಿಸೋ ಎಲ್ರೂ ನನ್ಗೆ ತಮಾನ ತಾಯಿ… ದ್ರೋಹ ಬಗೆದು ಣಾನ್ಯಾವ ನರಕಕ್ಕೆ ಹೋಗಲಮ್ಮಾ” ಎಂದು ಸಮಾಧಾನ ಮಾಡಿದರು. ವರಲಕ್ಷ್ಮಿ ತನ್ನ ಅತ್ತೆಯನ್ನು ಹಿಂದಕ್ಕೆ ಎಳೆದುಕೊಂಡಳು. +ದೇಹದೊಳಗಡಗಿದ್ದ ಜೀವಾತ್ಮನೇ ಪಂಚಭೂತದೊಳಗೊಯ್ಯುತ್ತಿರುವೆಯಾ… +ಗೋಪಿ ಚಿದಾನಂದ ತ +ಬೂರಿ ಮೀಟಲು… +“ದೇಹದೊಳಗನುದಿನವಿದ್ದು ಯಾರಿಗೂ ಹೆಳದೆ ಕೇಳದೆ ಹೋದೆಯಾ ಹಂಸಾಽಽಽ… +ಎಲ್ಲವ್ವನ ಭಕ್ತಾಗ್ರೇಸರನಾದ ಚವುಡನು ಚೌಡಿಕೆಯನ್ನು ಮೀಟಲು… +ಉಘೇ ಉಘೇ ಚಾಂಗು ಭಲರೇಽಽ +ಅಷ್ಟರಲ್ಲಿ ಕಮಲಾಕರ ಕೆಮರಾವನ್ನು ಕಂಣಿಗೆ ಅಡ್ಡ ಇಟ್ಟುಕೊಂಡು ಗಿರಿ ಇಟ್ಟನು. +“ಶಾಸ್ತ್ರಿಗಳ ಶವದೊಡನೆ ಒಂದು ಫೋಟೊ ತೆಗಿತ್ತಿದ್ದೀನಿ ಶಾಮಂಣಾಽಽ… ಈ ಅವಕಾಶ ಮತ್ತೊಮ್ಮೆ ಹುಡುಕಿದ್ರೂ ಸಿಕ್ತದಾ… ಪ್ಲೀಜ್” ಕಮಲಾಕರ ಎಂದೊಡನೆ ಹೊರಟಿದ್ದ ಎಲ್ಲರಲ್ಲಿ ವಿದ್ಯುತ್ಸಂಚಾರವಾಯಿತು. ವರಲಕ್ಷ್ಮಿ ತನ್ನತ್ತೆಯೊಡನೆ ಬಂದು ವಿಮಾನದ ಎರಡು ಪಕ್ಕ ನಿಂತರೆ, ಗೋಪಣ್ಣ ಮತ್ತು ಚಿ +ಚಿಣಿ ಶಾಸ್ತ್ರಿಗಳು ಹೆಗಲ ಮೇಲಿದ್ದ ಉತ್ತರೀಯವನ್ನು ಸರಿಪಡಿಸಿಕೊಂಡು ಮುಖ ಎತ್ತಿದರು. ಅಗ್ರಹಾರದ ಹುಡುಗರು ಮುಂದಿದ್ದವರು ಶವದ ಸಮೀಪಕ್ಕೆ ಬಂದರು. ಓಣಿಯ ಹುಡುಗರುಪ್ಪಡಿ ಸಿಕ್ಕ ಸಿಕ್ಕ ಎತ್ತರ ಸ್ಥಳವನ್ನೇರಿ ನಿಂತು ಹಲ್ಲು ಪ್ರದರ್ಶಿದರು. ಹೆಂಗಸರೂ ಹಿಂದೆ ಬೀಳಲಿಲ್ಲ. +ವಾತಾವರಣ ಇದ್ದಕ್ಕಿದ್ದಂತೆ ಬದಲಾದ್ದು ಕಂಡು ಕಮಲಾಕರನಿಗೆ ಬೇಸರವಾಯಿತು. +“ಇದೇನು ಹಿಂಗ್ ನಿಂತ್ಕೊಂಡ್ರಿ… ಮದುವೆ ದಿಬ್ಬಣದ ಫೋಟೋ ಅಲ್ರಿ ನಾನು ತೆಗೀತಿರೋದು ಶಾಸ್ತ್ರಿಗಳ ಶವ ಸಂಸ್ಕಾರದ ಫೋಟೊವನ್ನು… ಎಲ್ರು ಮುಖದಲ್ಲಿ ಸ್ವಲ್ಪಾದ್ರು ದುಃಖ ಪ್ರಕಟಿಸಿದ್ರೆ ಮಾತ್ರ ಫೋ ತೆಗೆದದ್ದ್ ಸಾರ್ಥಕ ಆಗ್ತದೆ” ಎಂದು ಸಲಹೆ ನೀಡಿದ. +ಅವನ ಸಲಹೆಯನ್ನು ಗೌರವಿಸಿ ಕೆಲವರು ಬಲವಂತದಿಂದ ಮುಖದಲ್ಲಿ ದುಃಖವನ್ನು ಪ್ರಕಟಿಸಲು ಪ್ರಯತ್ನಿಸಿದರು. ಕಟುಕರ ವಿಠೋಬಗೆ ಮಾತ್ರ ಎಷ್ಟು ಪ್ರಯ್ತ್ನಿಸಿದರೂ ದುಃಖವನ್ನು ಪ್ರಕಟಿಸಲು ಸಾಧ್ಯವಾಗಲೇ ಇಲ್ಲ. ಗತಿಸಿದ ಯಾವುದೋ ಒಂದು ದುಃಖ ಸನ್ನಿವೇಶವನ್ನು ನೆನಪಿಸಿಕೊಂಡನಾದರೂ ಅರ್ಥಪೂರ್ಣವಾಗಿ ಅದು ಮುಖದಲ್ಲಿ ಪ್ರಕಟವಾಗಲೇ ಇಲ್ಲ… ತಮ್ಮ ಉಸ್ತಾದನ ಕಷ್ಟ ಅರ್ಥ ಮಾ‌ಅಡಿಕೊಂಡ ಗರುಡಿಮನಿ ಹುಡುಗರ ಪೈಕಿ ಶರಭ ಎಂಬ ಉದಯೋನ್ಮುಖಿ ಪೈಲ್ವಾನನೊರ್ವನು ಅತುಲ ಬೇಸರದಿಂದ +“ಫೋಟೋ ತೆಗಿದ್ರೆ ತೆಗಿ, ಬುಟ್ರೆ ಬುಡು… ನಮ್ಮ ಗುರು ಹಿಂಗೇ ನಿಂದ್ರೋದು” ಎಂದು ಟಾಕುಟೀಕಾಗಿ ಹೇಳಿದನು. +ಉಘೇ ಉಘೇ ಚಾಂಗು ಭಲರೇ… +ನನಗಂತ್ ಕಮಲಾಕರನ ಸೃಜನಶೀಲ ವರ್ತನೆಯಿಂದ ತುಂಬ ಬೇಸರವಾಯಿತು. ಅದನ್ನು ಆ ಸ್ಥಿತಿಯಲ್ಲಿ ಪ್ರಕಟಿಸುವುದು ಸಾಧ್ಯವಾಗಲಿಲ್ಲ. +ನಾಳಿನ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರಿ ನಾಯಕನಾಗಲಿರುವ ಗರುಡಿಮನೆಯ ಹುಡುಗರನ್ನು ಎದುರುಹಾಕಿಕೊಳ್ಳಲು ಇಚ್ಛಿಸದೆ ಕಮಲಾಕರನು ಎರಡು ಮೂರು ಫೋಟೋ ತೆಗೆದ ನಂತರ ಶವದ ಮೆರವಣಿಗೆ ಸ್ವಾಭಾವಿಕವಾಗಿ ಮುಂದುವರೆಯಿತು. +* * * +ಕಥೆಯ ಮುಂದುವರಿದ ಭಾಗವನ್ನು ಓದಲು ನನಗೆ ಸಾಕುಸಾಕಾಗಿ ಹೋಯಿತು. ಒಂದು ಚಿಕ್ಕ ವಸ್ತುವನ್ನು ಶಾಮಂಣ ಹಿಂಜಿಕೊಂಡು ಹೋಗಿರುವನೆಂದುಕೊಂಡೆ. ಅವನು ಬರೆದಿರುವ ಕಥೆ ನನ್ನೀ ಸದರಿ ಕಾದಂಬರಿಗೆ ಒಗ್ಗುವುದೋ ಇಲ್ಲವೋ ಎಂಬ ಆತಂಕದಿಂದ ಅರ್ಥಪೂರ್ಣ ಪಾಠವನ್ನು ಹಾಕಿಕೊಳ್ಳಲು ಹಿಂದೇಟು ಹಾಕಿದೆ. ಶಾಸ್ತ್ರಿಗಳ ಶವ ಬಜಾರದ ಮೂಲಕ ಹೊರತಾಗ ವಾಣಿಜ್ಯ ಮಂದಿಯು ಪ್ರತಿಕ್ರಿಯಿಸಿದ ರೀತಿಯನ್ನೇ ಐದು ಪು +ಟಗಳವರೆಗೆ ಬರೆದಿರುವನು. ಒಂದು ಶವ ಶಾಸ್ತ್ರಿಗಳದ್ದೇ ಆಗಿರಲಿ, ಸಾಮಾನ್ಯ ಪ್ರಜೆಯದ್ದೇ ಆಗಿರಲಿ… ಅದರ ಬಗ್ಗೆ ಜನರು ಹೀಗೆಯೇ ಪ್ರತಿಕ್ರಿಯಿಸಬೇಕೆಂದು ನಿರ್ದೇಶಿಸಲಿಕ್ಕೆ ಅವನು ಯಾರು ಹೆಗಲ ಮೇಲೆರಿಣದ ಬಿಂದಿಗೆಯನ್ನು ಕೈಯಲ್ಲಿ ಬೆಂಕಿಯ ಮಡಿಕೆಯನ್ನು ಹಿಡಿದು ಮೆರವಣಿಗೆಯ ಮುಖ್ಯಪಾತ್ರವಾಗಿರುವ ಅವನು ಇಕ್ಕೆಲದ ವಿದ್ಯಮಾನ ಗಮನಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಅನುಮಾನ ಎಂಥವರಿಗೂ ಬಾರದಿರದು.. ಇದು ಅಸ್ವಾಭಿಕವೂ ಕೂ‌ಅ. ಬೇರೊಂದು ಪಾತ್ರದ ಮೂಲಕ ಕಥೆಯನ್ನು ನಿರೂಪಿಸಬಹುದಿತ್ತು. ನಿಚ್ಚಳವಾಗಿ ತನ್ನ ಖಾಸಗಿ ಬದುಕನ್ನೇ ತುಂಬಿರುವುದರ ಜೊತೆಗೆ ಉಪದ್ರವಿಯಾದ ನನ್ನನ್ನೂ ಕಥೆಯೊಳಗೆ ನೇರವಾಗಿ ಎಳೆದುಬಿಟ್ಟಿದ್ದಾನೆ. ಆದ್ದರಿಂದಾಗಿಯೇ ಅವನು ಪ್ರಕಟಣೆಗಾಗಿ ಯಾವುದಾದರೂ ನಿಯತಕಾಲಿಕಕ್ಕೆ ಕಳಿಸುವ ಗೋಜಿಗೆ ಹೋಗಿಲ್ಲ. ಕಮಲಾಕರನ ಮೇಲಿನ ಸಿಟ್ಟನಿಂದಾಗಿ ಶಿವಪೂಜೆ ಸುರೇಶ್ ಗೌಡ ಹೇಣ ದಫನ್ ಮಾಡಲಿಕ್ಕೆ ಹುಲುಳಿ ಹಳ್ಳದ ಮಗ್ಗುಲಲ್ಲಿ ತನ್ನ ಹೊಲದಲ್ಲಿ ಅವಕಾಶ ಕೊಡದಿದ್ದುದು ಶಾಮಂಣನ ದುಹ್ತಿಯಲ್ಲಿ ಒಂದು ಅಪರಾಧವಾಗಿ ಕಂಡಿರುವುದು. ಕಥೆಯ ಅಂತಿಮ ಭಾಗವಂತೂ ಸಂಸ್ಕೃತ ಶ್ಲೋಕಗಲಿಂದ ತುಂಬಿ ಜೀಕಿ ಉಸಿರುಕಟ್ಟುವಂತಿರುವುದು. +ಓದಿದ ಮತ್ತು ಕೇಳಿದ ಅನ್ನಪೂರ್ಣೆಗಂತೂ ಬೆಟ್ಟದಷ್ಟು ಸಿಟ್ಟು ಬಂತು. “ಎಂಥ ನೀಚ ಕಣ್ರೀ ಆ ನಿಮ್ಮ ಸ್ನೇಹ್ತ… ನಿಮ್ಮ ಹೆಸರ್ನಲ್ಲಿ ರೂಂ ಕಾತಗೊಂಡಿದೂ ಅಲ್ದೆ ವ್ಯ್ಭಿಚಾರ ಮಾಡ್ಲಿಕ್ಕೆ ಪ್ರಯತ್ನ ಪಟ್ಟನಲ್ರೀ… ಥೂ! ಭೂಮಿ ಮೇಲೆ ಇಂಥೋರು ಇರ್ತಾರೆ… ಇದ್ರೂ ನಿಮ್ಮಂಥವರೂ ಇಂಥವರ ಗ್ರ್ಳ್ರ್ತನ ಮಾಡ್ತಾರೆಯೇ… ಅಂದಹಾಗೆ ನೀವು ಎಂದಾದ್ರು ಹೋಟ್ನಲ್ಲಿ ಇಂಥ ಕೆಲಸ ಮಾಡಿರೋದುಂಟಾ ಇಲ್ವಾ! ಅಷ್ಟು ಹೇಳಿ” ಎಂದು ಪಟ್ಟು ಹಿಡಿದಳು. +“ಏನೆ ನೀನೂ ಅವ್ನು ಬರೆದಿರೋದ್ನ ನಂಬ್ತೀಯಾ!” +“ಬೆಂಕಿ ಇಲ್ದೆ ಹೊಗೆ ಬರ್ತದೇನ್ರಿ!” +ಯಾವ ಬೆಂಕಿ? ಯಾವ ಹೊಗೆ? ಯಾವುದ್ಯಾವುದ್ಕೋ ಜೋಡಿಸ್ತಿದ್ದೀಯಲ್ಲೇ ಮಾರಾಯ್ತಿ… ನಿನ್ನಾಣೆಯಾಗೂ ನಾನಿಂಥ ಕೆಲಸ ಮಾಡೋನಲ್ಲ… ನಂಬು! +ಮತ್ತೆ ಇನ್ನಾದರೂ ಸಾಯ‌ಏಕು ಎಂಬ ಕಥೆಯಲ್ಲಿ ಸೂಳೆಗಾರಿಕೆ ಮಾ‌ಅಲಿಕ್ಕೆ ಹೋಟ್ನಲ್ಲಿ ರೂಂ ತಗೊಂಡಿದ್ದಾಗಿ ಕೊಚ್ಕೊಂಡಿದೀರಲ್ಲ! ಅದೂ ಸುಳ್ಳೇನು?” +ಅಯ್ಯೋ ಹುಚ್ಚಿ… ಅದೆಲ್ಲ ನಂತೀಯಲ್ಲ… ನಿನ್ನ ತಿಳುವಳಿಕೆಗೆ ಏನನ್ನೋದು! ನಾವು ಮೊದಲೇ ಲೇಖಕರು… ನಮ್ಮ ಸ್ವಭಾವ ವಿಚಿತ್ರವಾಗಿರ್‍ತದೆ… ಸಂಭೋಗದ ಬಗ್ಗೆ ಒಂಚೂರು ಅನುಭವ ಇಲ್ದೋನು ತಾನು ಮಹಾ ರತಿಕ್ರೀಡಾ ನಿಪುಣ ಎಂದು ಪೋಜು ಕೊಡ್ತಿರ್‍ತಾನೆ. ತಾನು ಮಹಾಪತಿವ್ರತೆ ಅಂತ ಪೋಜ್ ಕೊಡ್ತಿರೋಳು ಗುಟ್ಟಾಗಿ ಹಾದರಗಿತ್ತಿ ಆಗಿರ್‍ತಾಳೆ… ಸದಾ ಅಹಿಂಸೆ ಬಗ್ಗೆ ಮಾತಾಡೋನು ಒಳಗೊಳಗೆ ಹಿಂಸಾರಾಧಕನಾಗಿರುತ್ತಾನೆ… ಮನುಷ್ಯ ಸ್ವಭಾವವೇ ತುಂಬ ವಿಚಿತ್ರವಾದುದು. ಲೆಖಕನಾದ ನಾನೂ ಒಬ್ಬ ಮನುಷ್ಯ ಎಂಬುದನ್ನು ಮರೆಯಬೇಡ,,, ಸುಪ್ತ ಕಾಮನೆಗಳಿಗೆ ಅಕ್ಷರ ರೂಪ ಕೊಟ್ಟು ಚಪಲ ತೀರಿಸಿಕೊಳ್ತೀನಿ…” +“ಹೀಗೆ ಪೋಜ್ ಕೊಡೋದ್ರಲ್ಲಿ ನೀವು ಎಕ್‌ಸ್ಟ್ರಾರ್ಡಿನರಿ ಆಗಿ ಬಿಟ್ಟಿದ್ದೀರಿ…ಇದು ನಿಮ್ಮ ಗೌರವ ಪ್ರಶ್ನೆ… ಕಥೆಯೊಳಗಿರೋ ಆ ಭಾಗ್ಫಾನ ಎಡಿತ್ ಮಾಡಿ ಹಾಕ್ರಿ… ಈ ಸಮಾಜ ಮೊದ್ಲೆ ಗುಮಾನಿಯದು. ಈಚಲ ಮರದ ಕೆಳಗೆ ಕೂತ್ಕೊಂಡು ಮಜ್ಜಿಗೆ ಕುಡಿದ್ರೂ ಹೆಂಡ ಅಂತ ತಿಳ್ಕೋಂತದೆ… ಹುಷಾರಾಗಿರ್ರಿ… ಬರೆಯೋಕೆ ಬರ್‍ತದೆ ಅಂತ ಏನೋನೋ ಬರೆಯೋಕೆ ಹೋಗಬೇಡ್ರಿ” +“ಹಾಗೇ ಆಗ್ಲಿ ಮಾರಾಯ್ತಿ… ಎಡಿಟ್ ಮಾಡೇ ಹಾಕ್ತೀನಂತ ಇಟ್ಕೋ… ಬರೆಯೊರ್‍ಗಿಂತ ಹೆಚ್ಚು ಸೃಜನಶೀಲವಾದ ಓದುಗ, ಬೆರಳು ತೋರಿಸಿದ್ರೆ ಹಸ್ತ ನುಂಗೋ ಜಾಯಮಾನ್ದೋನು… ನಾವು ಬರೆಯದೇ ಇದ್ದ ಭಾಗಕ್ಕೆ ಬಣ್ಣ ಕೊಟ್ಟು ಊಹಿಸಿಕೊಳ್ಳೋದ್ರಲ್ಲಿ ಅವನು ನಿಸ್ಸೀಮ ಕಣಮ್ಮ… ಅದ್ಕೆ ಅವಕಾಶ ಕೊಡೋದದ್ರು ಯಾಕೆ? ಇದ್ದದ್ದು ಇಲ್ಲದ್ದು ಎಲ್ಲ ಬರ್ದು ಅವನ ಮುಂದಿಡೋದಷ್ಟೆ. ವಾಂತಿ ಮಾಡ್ಕೋತಾರಲ್ಲ ಹಾಗೆ! ಮಗೂ ಹೆರ್‍ತಾರಲ್ಲ ಹಾಗೆ ಅಷ್ಟೆ” +ಏನೋ… ನೀವು ಮಾತಾಡೋ ತಳಬುಡ ಒಂದೂ ಅರ್ಥ ಆಗ್ತಾ ಇಲ್ಲ. ನೀವು ಹೀಗೆಲ್ಲ ಎಕ್ಸ್‌ಪೋಜಾಗೋದಾದ್ರೆ ಬರೆಯದೆ ನಾಲ್ಕು ಜನರಂಗೆ ಹೆಂಡ್ತಿ ಮಕ್ಕಲೋಂದಿಗೆ ಆಡೊಕೊಂಡು ಕಾಲ ಕಳೆಯೋದೆ ವಾಸಿ ಅನ್ಸುತ್ತೆ… ಬರೆದ್ರೆ ನಿಮ್ಗೆ ಕಿರೀಟ ಬರೋದಷ್ಟರಲ್ಲೆ ಇದೆ… ಈ ಸಾಹಿತ್ಯ ಪಾಹಿತ್ಯನೆಲ್ಲ ತಲೆಗೆ ಹಚ್ಕೊಂಡು ಎಂಥೆಂಥೋರೆ ನಿರ್ನಾಮ ಆಗ್ಯಾರ… ಇನ್ನು ನೀವ್ಯಾವ ಲೆಕ್ಕ? ಸಮಯ ಸಂದರ್ಭ ಒಂದೇ ರೀತಿ ಇರೋದಿಲ್ಲ… ಒಂದು ಹೋಗಿ ಇನ್ನೊಂದಾಗಿ ಬಿಟ್ರೆ ಏನ್ಮಾಡೋದು?” ಎಂದು ಗೊಣಗುತ್ತ ಲಗುಬಗೆಯಿಂದ ಅಡುಗೆಮನೆ ಪ್ರವ್ಶಿಸಲುನಾನು ನೆಮ್ಮದಿಯ ಉಸಿರುಬಿಟ್ಟೆನು. +ಯೋಚಿಸುತ್ತ ಹೋದಂತೆ ಹೆಂಡತಿಯಾದ ಅನ್ನಪೂರ್ಣ ಒಬ್ಬ ಲೇಖಕನಿಗಿಂಥ ಸಮರ್ಥವಾಗಿ ಸಮಾಜವನ್ನು ಅರ್ಥಮಾಡಿಕೊಂಡಿದ್ದಾಳೆ ಎಂಬ ಸತ್ಯದ ಮಾತು ಅರಿವಾಯಿತು. ಬರೆಯುವ ಕ್ರಿಯೆ ನನಗೂ ಹಿಂಸದಾಯಕ ಕ್ರಿಯೆಯೆ. ಆದರೆ ಮುಂದಿಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಶಾಮನು ಬರೆದಿರುವ ಅಪ್ರಕಟಿತ ಕಥೆಯಲ್ಲಿ ತನ್ನನ್ನು ತಾನು ಪ್ರಮಾಣಿಕವಾಗಿ ಅನಾವರಣಗೊಳಿಸಿಕೊಂಡಿರುವನಲ್ಲದೆ ಕಮಲಾಕರನನ್ನೂ; ಸಂತಾಪಿ ಉಪದ್ಯಾಪಿ ಜನರನ್ನೂ ಬತ್ತಲೆಯಾಗಿ ನಿಲ್ಲಿಸಿದ್ದಾನೆ ಎಂದುಕೊಂಡೆ. ಕಥೆ ತೀರಾ ವೈಯಕ್ತಿಕವಾಗಿರುವುದರಿಂದ ಅವನದನ್ನು ಪತ್ರಿಕೆಗಳಿಗೆ ಕಳಿಸುವ ಗೋಜಿಗೆ ಹೋಗಿಲ್ಲ. ಎಷ್ಟು ವೈಯಕ್ತಿಕವೆಂದರೆ ಕಮಲಾಕರ ಜಲಜಾಕ್ಷಿಯರಿಂದ ಶವಸಂಸ್ಕಾರಕ್ಕೆ ಪಡೆದ ಸಾಲವನ್ನು ತೀರಿಸಲು ತಾನು ಕ್ರಮಿಸಿದ ವಾಮಮಾರ್ಗಗಳನ್ನೂ ನಿಸ್ಸಂಕೋಚವಾಗಿ ಪ್ರಸ್ತಾಪಿಸಿದ್ದಾನೆ. ಆತ್ಮಕಥನ ವೇಗದಲ್ಲಿ ಓಡಿದ ಕಥೆ ಹೀಗೇ ಮುಂದುವರಿದಿದ್ದಲ್ಲಿ ಬೃಹದಾಕಾರ ತಾಳುತ್ತಿತ್ತೋ ಏನೋ ಯಾರು ಬಲ್ಲರು! +ಅವನು ಅರ್ಥವಾಗದ ಮತ್ತು ಬಗೆಹರಿಸಲಾಗದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಕಾರಣದಿಂದಾಗಿಯೋ ಏನೋ ಲೇಖಕನಾಗಿ ಮುಂದುವರಿಯಲಾಗದೆ ಮತ್ತು ಸ್ಪಷ್ಟವಾಗಿ ಬದುಕಲಾಗದೇ ಹೋದ ಎ +ಬುದರ ಬಗ್ಗೆ ನಾನು ಓದಿದ ಕಥೆ ಬೆಳಕು ಚಲ್ಲುತ್ತದೆ. ತನ್ನ ತಾತನರ ಪರಮೇಚ್ಛೆಯಂತೆ ಅವರ ಶವ ಸಂಸ್ಕಾರವನ್ನು ಕಾಶೀಕ್ಷೇತ್ರದ ಪವಿತ್ರ ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಸಲಾರದ ಅಸಹಾತಕತೆ, ಮತ್ತು ಅವರ ಅಸ್ಥಿ ನಿಮಜ್ಜನಾ ಕಾರ್ಯವನ್ನು ಅಲಹಾಬಾದಿನ ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಮಾಡಲಾಗದ ಅಸಹಾಯಕತೆ ಅವನನ್ನು ಬದುಕಿರುವ ಪರ್ಯಂತ ಕಾಡಿರಲಿಕ್ಕೂ ಸಾಕು. ಇಲ್ಲವಾದರೆ ಶಾಸ್ತ್ರಿಗಳ ಅಸ್ಥಿ ಮತ್ತು ಚಿತಾ ಭಸ್ಮವನ್ನುಹೊಳೆ ಹಳ್ಳ ಕೊಳ್ಳಗಳಲ್ಲಿ ವಿಸರ್ಜಿಸದೆ ಯಾಕೆ ಭದ್ರಪಡಿಸಿಕೊಂಡಿರುತ್ತಿದ್ದ? ಶಾಸ್ತ್ರಿಗಳು ತಾವು ಬರೆದೆನ್ನಲಾದ ಉಯಿಲಿನಲ್ಲಿ ತಮ್ಮ ಮೊಮ್ಮಗನಾದ ಅವನನ್ನು ತರಾಟೆಗೆ ತೆಗೆದುಕೊಂಡಿರುವುದೂ ಅವನ ಈ ಅಳುಕಿಗೆ ಕಾರಣವಾಗಿರಬೇಕು. ಪರಮಪೂಜ್ಯರಾದ ಪರಮೇಶ್ವರ ಶಾಸ್ತ್ರಿಗಳ ಉಯಿಲನ್ನು ಶಾಮನು ಬಿಡುವಿನ ಸಮಯದಲ್ಲಿ‌ಓದುತ್ತ ತನ್ನ ಸಂಕಟಕ್ಕೆ ಒಳ ಮತ್ತು ಹೊರ ಅಲಂಕರಣ ಮಾಡಿರಬೇಕು. ಮುಖ್ಯವಾಗಿ ಅವನಿಗೆ ಹಳತಾದ ವಸ್ತುಗಳ ಬಗ್ಗೆ ಖಯಾಲಿ ಹೆಚ್ಚು ಎಂಬುದನ್ನು ಬಲ್ಲೆ. ಯಾವುದೋ ಒಂದು ಕಪ್ಪು ಕಲ್ಲಿನ ತುಂಡನ್ನು ಜಕ್ಕಣಾಚಾರಿ ಕೆತ್ತಿರುವುದೆಂದು ತೋರಿಸುತ್ತಿದ್ದ. ತ್ರಿಕೋನಾಕೃತಿಯ ಬೆಣಚು ಕಲ್ಲಿನ ತುಂಡನ್ನು ತೋರಿಸುತ್ತ ಇದು ಹಳೇಶಿಲಾಯುಗ ಕಾಲದ್ದು ಎಂದಿದ್ದ. ಯವುದೋ ಇಟ್ಟಿಗೆ ತುಂಡನ್ನು ತೋರಿಸಿ “ಇದು ಮೆಹಂಜೋದಾರದ್ದು” ಎಂದಿದ್ದ. ನಖಶಿಖಾಂತ ಆಧುನಿಕ ಉಡುಪು ತೊಟ್ಟಿರುತ್ತಿದ್ದ ಅವನುಮುಂಗೈಗೆ ಗುಜರಿ ವಾಚು ಕತ್ತಿಕೊಂಡಿರುತ್ತಿದ್ದ. ಅಂಥ ಜಾ‌ಅಯಿಮಾನದ ಅವನು ತನ್ನ ತಾತನವರು ಬಳಸುತ್ತಿದ್ದ ವ್ಯಾಸ ಪೀಠ , ಉತ್ತರೀಯ, ಚಾಳೀಸು, ತಾಮ್ರದ ತಂಬಿಗೆ, ಕೋಲು ಇವೆಲ್ಲವುಗಳನ್ನು ಜೋಪಾನದಿಂದಕಾಯ್ದಿರಿಸಿದ್ದ. ಹಾಗೆಯೇ ಅವನು ಉಯಿಲಿನ ತಾಳೆಗರಿ ಕಟ್ಟನ್ನು ಜೋಪಾನವಾಗಿರಿಸಿಕೊಂಡು ಸಂಕಟದ ಹೊರಭಾಗಕ್ಕೆ ಆನಂದದ ಲೇಪ ಹಚ್ಚಿ ಇಟ್ಟುಕೊಂಡಿರಬೇಕು. ಆ ತಾಳೆಗರಿಯ ಕಟ್ಟು ನೋಡಿದ ಮೊದಲಿಗೆ ನಾನೂ ವಿಸ್ಮಯಾನಂದ ಪ್ರಕಟಿಸಿದ್ದುಂಟು. ಗುಬ್ಬಿ ವೀರಣ್ಣೊಡೆಯರ ಶೂನ್ಯ ಸಂಪಾದನೆ ಮತ್ತು ಚಿದಾನಂದಾವಧೂತರ ವೇದಾಂತ ಜ್ಞಾನ ಸಿಂಧುಗಳ ಕಟ್ಟುಗಳ ನಡುವೆ ಇಟ್ಟು ಹೆಮ್ಮೆಯಿಂದ ಬೀಗುತ್ತಿದ್ದೆ. ಸದರೀ ಕಾದಂಬರಿ ಮುಂದುವರಿಸುವ ಸಂದರ್ಭದಲ್ಲಿ ಶಾಸ್ತ್ರಿಗಳ ಉಯಿಲನ್ನು ಹಾಕಿಕೊಳ್ಳಬೇಕಾಗಿ ಬಂದಾಗಲೇ ನನ್ನ ದೌರ್ಬಲ್ಯದ ಅರಿವು ಕೆಲವು ಗೆಳೆಯರಿಗಾದದ್ದು. ಕೆಲವು ಬಂಡಾಯ ಸಾಹಿತ್ಯದ ಸಂಘಟನೆಯ ಗೆಳೆಯರು ನನ್ನ ಕಂಕುಳಲ್ಲಿ ಪ್ರದರ್ಶಿತ ಅದನ್ನು ನೋಡಿ ಪಕಪಕ ನಗಾಡಿದ್ದು. ಸಮಾನತೆಯ ಭೂತದ ಕೈಗೊಂಬೆಯಾಗಿರುವ ಈ ಕುಂವೀ ಎಂಬುವನು ವಿಶವಿದ್ಯಾಲಯದ ಪ್ರಾಚ್ಯ ವಸ್ತು ಸಂಗ್ರಹಾಲಯ ಸೇರಲಿಕ್ಕೆ ಅರ್ಹನಾಗಿರುವನೆಂದು ಲೇವಡಿ ಮಾಡಿದ್ದುಂಟು. +ಇನ್ನೇನು ನಾನು ನಿರ್ನಾಮವಾಗಿಬಿಟ್ಟೆನೆಂದು ಅವರು ಊಹಿಸಿಕೊಂಡಿರುವ ಹೊತ್ತಿನಲ್ಲಿ ಶಾಸ್ತ್ರಿಗಳ ಉಯಿಲು‌ಅನ್ನು ಹೊತ್ತುಕೊಂಡು ಹತ್ತಿರದ ಹಂಪಿಯಲ್ಲಿ ನೀರೊಳಗೆ ತೆಲಾಡುವ ಘೃತದ ಬಿಂದುವಿನಂತೆ ಇರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದೆ. ಭೂತಕಾಲವನ್ನು ಮತ್ತು ವರ್ತಮಾನವನ್ನು ಏಕಕಾಲಕ್ಕೆ ಬದುಕುತ್ತ ಆಧುನಿಕತೆಯ ಪರಿವೇಷದೊಳಗೆ ಸನಾತನತೆಯನ್ನು ಬಚ್ಚಿಟ್ಟುಕೊಂಡು ಕನ್ನಡದೊಳಗೆ ಸಂಸ್ಕೃತವನ್ನು ಬಿತ್ತಿ ಬೆಳೆಯುತ್ತ ಕ್ಲಿಷ್ಟವಾಗಿರುವ ಮಲ್ಲೇಪುರಂ ವೆಂಕಟೇಶರೆಂಬ ಗೆಳೆಯನ ಬಳಿಗೆ ಹೋಗಿ ‘ನೋಡಿ ಸ್ವಾಮಿ ನಾನಿರೋದೆ ಹೀಗೆ!’ ಅಂತ ಹೇಳಿದೆ. ಆತ ಅದಕ್ಕಿದ್ದು “ತುಂಬಾ ಫೆಂಟಾಸ್ಟಿಕ್ಕಾಗಿದೆ ನಿಮ್ಮ ಐಡಿಯಾ… ಆಧುನಿಕತೆಯ ಎರಡು ಧೃವಗಳ ನಡುವೆ ಅರ್ಥಪೂರ್ಣವಾದ ಡಿಸ್‌ಕೋರ್ಸ್ ಏರ್ಪಡುವಂತಿದೆ. ಎಲ್ಲಿ ಆ ಓಲ್ಡ್ ಈಜ್ ಗೋಲ್ಡ್” ಎಂದವರೆ ನನ್ನ ಕಂಕುಳಿಗೆ ತಮ್ಮ ಅಮೃತ ಹಸ್ತ ಹಾಕಿ ತಾಳೆಗರಿ ಕಟ್ಟನ್ನು ಕಿತ್ತು ಮುಂದೆ ಹರಡಿಕೊಂಡೇ ಬಿಟ್ತರು… ಮಂತ್ರ ಪಟಿಸುತ್ತಿರುವಂತೆ ಓದಿದಂತೆ ಮಾಡಿ ಇದು ರಿಯಲಿ ಓಲ್ಡೆಸ್ಟ್ ಗೋಲ್ಡು ಕುಂವೀ… ಇದ್ರಲ್ಲಿರೋ ಲ್ಯಾಂವೇಜಿಗೆ ಏನಿಲ್ಲಾಂದ್ರೂ ಳೆಂಟು ನೂರು ವರ್ಹಗಳಾಷ್ಟಾದ್ರು ವಯಸ್ಸಾಗಿದೆ. ಭಾಷಾ ಬಳಕೆ, ವಸ್ತು ವಿನ್ಯಾಸ ಮಾರ್ವಲೆಸ್…” ಎಂದು ಅಂಗವಸ್ತ್ರದಿಂದ ಹಣೆಯ ಬೆವರೊರೆಸಿಕೊಂಡರು. “ರಾಘವಾಂಕ ವಾರ್ಧಕ ಷಟ್ಪದಿಯಲ್ಲಿ ಕ್ರಾಂತಿ ಮಾಡ್ತಿರುವಾಗ ಈ ಕೃತಿಕಾರ ಅಪೂರ್ವವಾದ ಗದ್ಯದಲ್ಲಿ ಕಸರತ್ತು ಮಾಡಿದ್ದಾನಲ್ಲ… ವಂಡರ್‌ಫುಲ್… ಶಿವಕೋಟ್ಯಾಚಾರ್ಯರ ನಂತರ ಇವನೇ ಗದ್ಯವನ್ನು ಅದ್ಭುತವಾಗಿ ಬಳಸಿರೋದೆಂದು ಕಾಣ್ತದೆ… ಇದ್ದ್ನ ನಮ್ಮೂನಿವರ್ಸಿಟಿಗೆ ಕೊಬಿಡಿ… ಇದು ವ್ಯಾಲ್ಯುಬಲ್ ಆಂಟಿಕ್ ಥಿಂಗ್” ಎಂದರು. ಸಖೇದಾಶ್ಚರ್ಯದಿಂದ. ಏನೀ ನನ್ನ ಗೆಳೆಯನ ನಾಲಿಗೆ ಮೇಲೆ ಸಂಸ್ಕೃತ ಗುಳೇ ಹೊಂಟು ಆ ಜಾಗದಲ್ಲಿ ಇಂಗ್ಲೀಷು ಬಂದು ತೆಂಟು ಹಾಕಿಬಿಟ್ತಿಡೆಯಲ್ಲಾ ಎಂದುಕೊಂಡೆ. ಅವರು ಆ ಕಟ್ಟನ್ನು ಮೂಸಿನೋಡಿ ಅದರ ಕಾಲವನ್ನು ನಿರ್ಧರಿಸುವ ಪ್ರಯತ್ನ ಮಾಡಿದರು. ನಾನು ಸುಮ್ಮನಿದ್ದರೆಲ್ಲಿ ಆ ತಾಳೆಕಟ್ಟು ಪ್ರಾಚ್ಯ ವಸ್ತುಗಳ ಸಂಗ್ರ ಸೇರಿಬಿಡುವುದೋ ಎಂದು ಹೆದರಿ “ಹಾಗಲ್ಲ ಪಂಡಿತರೇ… ಎಂದೆ. ಅವರಿಗೆ ‘ಪ್ರಿಯ ಅಂತ ನಾವು ಹಾಗೆ ಕರೆಯುತ್ತಿದ್ದೆವು ಸಿದ್ದಗಂಗ ಮಠದ ಕಾಲದಿಂದಲೂ. ಶೂದ್ರಾತಿ ಶೂದ್ರ ಕಮ್ಯುನಿಟಿಯಲ್ಲಿ ಹುಟ್ಟಿದ್ದರೂ ಆತ ಎಂಟೆಳೆಯ ಜನಿವಾರ ಹಾಕಿಕೊಂಡು ಸ್ಮಾರ್ತ ಬ್ರಾಹ್ಮಣರ ನಡುವೆ ಸನಾತನ ಬ್ರಾಹ್ಮಣನಂತೆಯೂ; ಪಂಡಿತೋತ್ತಮರ ನಡುವೆ ಅಪ್ರತಿಮ ಪಂಡಿತನಂತೆಯೂ ಹೊಳೆಯುತ್ತಿದ್ದುದನ್ನು ಮರೆಯುವಂತಿಲ್ಲ. ಮಾತು, ವೇಷಭೂಷಣ ಹಲ್ಲಿಗೊಂದರಂತೆ ಒಂದೊಂದು ಬಲಿಷ್ಟ ಕ್ಲಿಷ್ಟ ಶ್ಲೋಕಗಳನ್ನು ಅಲಂಕಾರಮಾಡಿಕೊಂಡು ಸನಾತನತೆಯೇ ಮೈವೆತ್ತಂತೆ ಗೋಚರಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿರುವುದು. ಭಾಸ, ಭವಭೂತಿ, ಕಾಳಿದಾಸದ್ಯರಣ್ಣೂ; ಪಂಪ. ಪೊನ್ನ, ರನ್ನ, ಕುಮಾರವ್ಯಾಸಾದಿಗಳನ್ನು ನಾಲಿಗೆ ತುದಿಯಲ್ಲಿ ಕಣ್ಣಂಚಿನಲ್ಲಿ ಇಟ್ಟುಕೊಂಡಿರುತ್ತಿದ್ದುದು ಕಿವಿಗೆ ಕಟ್ಟಿದಂತಿರುವುದು. ಅವರಿಗೆ ಪಂಚಾಂಗ, ಜ್ಯೋತಿಷ್ಯ ವಾಮಾಚಾರಗಳಲ್ಲಿ ಸಾಕಷ್ಟು ಪರಿಶ್ರಮವಿರುವುದೆಂದು ನನಗೆ ಅರ್ಥವಾದದ್ದು ಅವ್ಚರು ಹಿಂದೊಮ್ಮೆ ವಗಿಲಿ ಎಂಬ ಗೆ‌ಆಮಕ್ಕೆ ದಯಮಾಡಿಸಿದಾಗ. ರನ್ನನನ್ನು ಹೇಳುವುದರ ಮೂಲಕ ವಾಗಿಲಿಯ ಅಭಿನವ ಕುಮಾರ ವ್ಯಾಸನೆಂದು ಪ್ರಸಿದ್ಧರಾಗಿದ್ದ ಹುಚ್ಚರೆದ್ದಿಯನ್ನು ಚಿತ್ ಮಾಡಿದರೆ, ತಿಥಿ ವಾರ ನಕ್ಷತ್ರ ಕರಣಗಳಿತ್ಯಾದಿಗಳನ್ನು ಚಟಪಟ ಹೇಳಿ ವಾಗಿಲಿಯ ಜ್ಯೋತಿಷ್ಯ ಮಾರ್ತಾಂಡರೆಂದೇ ಹೆಸರಾಗಿದ್ದ ದ್ವಾದಶ ದೇವಣ್ಣನವರನ್ನು ಚಿತ್ ಮಾಡಿದರು. ನೋಡು ನೋಡುವಷ್ಟರಲ್ಲಿ ಗ್ರಾಮದ ಪಂಚವಿಂಶತಿ ರೆಡ್ಡೋರ ಮನೆಗಳಿಂದ ಬುಲಾವ್ ಬರತೊಡಗಿದವು. ಅಂತಹ ಕಡೇಲೆಲ್ಲ ಹೋಗಿ ಬಂದೊಡನೆ ಏನು ಕುಂವೀ?… ಎಷ್ಟೊಂದು ದಷ್ಟಪುಷ್ಟವಾಗಿ ಆರೋಗ್ಯ ಕಾಂತಿಯಿಂದ ಹೊಳೆಯುತ್ತಿರುವಿರೀ ಗ್ರಾಮದ ಮಹಿಳೆಯರು… ಇವರನ್ನು ನೋಡಿದರೆ ನಮಗೆ ಕಾಳಿದಾಸರ ಅಭಿಜ್ಞ ಶಾಕುಂತಲಂನಲ್ಲಿ ಬರುವ ಕಣ್ವ‌ಋಷಿಗಳ ಆಶ್ರಮವು ನೆನಪಾಗುವುದು. ಎಷ್ಟೊಂದು ಪುಣ್ಯ ಮಾಡಿರುವಿರಿ ಕುಂವೀ? ಇಂಥ ಸುಂದರರೂ ಸದೃಡರೂ ಆದ ಮಹಿಳೆಯರ ನಡುವೆ ವಾಸಿಸಲಿಕ್ಕೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು, ಆ ಸಂದರ್ಭದಲ್ಲಿ ಅವರಿಗೆ ಗಚ್ಚಿನ ಮನೆಯ ಜಗನ್ನಥ ರೆಡ್ಡಿಯವರಿಗೆ ಬುಲಾವ್ ಬಂದಿತು. ಹೋದೊಡನೆ ಪಟಪಟಾಂತ ಮನೆಯ ವಾಸ್ತು ಬಗ್ಗೆ ವಿವರಿಸುತ್ತ “ಏನಿದು ಗೌಡ್ರೇ?… ಮುಖ್ಯ ಬಾಗಿಲು ಪೂರ್ವಾಭಿಮುಖವಾಗಿದೆಯಲ್ಲ… ದಕ್ಷಿಣಾಭಿಮುಖವಾಗಿದ್ದರೆ ನಿಮ್ಮೀ ಮನೆಯಲ್ಲಿ ಚಿನ್ನದ ಹೋಳೆ ಹಾಯ್ತಿತ್ತು” ಎಂದು ತರಾಟ್ರ್ ತೆಗೆದುಕೊಂಡು ಬಿಟ್ಟರು. ಹತ್ತಾರು ಕೊಲೆ ಮಾಡಿ ದಕ್ಕಿಸಿಕೊಂಡಿದ್ದ ದಿ.ರೆಡ್ಡಿ ಅವರ ನುಡಿಮುತ್ತಿಗೆ ಹಡಲ್ಲಾಗಿ ಹೋದನಲ್ಲದೆ ಮುಂದಿನ ವಾರವೇ ದಕ್ಷಿಣದ ಗೋಡೆ ಹೋಡೆದು ಹಾಕಿ ಬಾಗಿಲನ್ನು ಇಡಿಸಿಬಿಟ್ಟನು. ಇದ್ದ ಮೂರು ದಿನಗಳಲ್ಲಿ ತಮ್ಮ ವಾಗ್ ವೈಖರಿಯಿಂದ ವಾಗಿಲಿ ಗ್ರಾಮದ ಸಮಸ್ತರ ಹೃದಯ ಸೂರೆಗೊಂಡಪಂಡಿತರು ಕನ್ನಡ ವಿಶ್ವವಿದ್ಯಾಲಯ ಸೇರಿದ ಮೇಲೆ ಒಳಗಿಂದು ಹೊರಗೆ, ಹೊರಗಿಂದು ಒಳಗೆ ಮಾಡಿಕೊಂಡಿರುವುದು ಕಂಡು ನನಗೆ ಅತ್ಯಾಶ್ಚರ್ಯವಾಯಿತು. ಕಾಳಿದಾಸನ ಜಾಗದಲ್ಲಿ ಎಲಿಯತ್ ಬಂದಿದ್ದರೆ ಭಾಸನ ಜಾಗದಲ್ಲಿ ಏಟ್ಸ್ ಬಂದುಬಿಟ್ಟಿದ್ದನು. ಭಾಸನ ಜಾಗದಲ್ಲಿ ಕೀಟ್ಸೋ, ಫಾರ್ಸಸ್ವರ್ರೋ, ಮತ್ತಾರೋ? ನಾನು ತಾಳೆಗರಿ ಕಟ್ಟು ತಂದು ತೋರಿಸಿದೊಡನೆಯೇ ಇದೇನು ಶೇಕ್ಸಪಿಯರಲ್ಲ ಅರಿಸ್ಟಾಟಲ್ ಪ್ಲೇಟೋ ಅಲ್ಲ… ಇನ್ನೂ ನನ್ನನ್ನು ಈ ಕುಂವೀ ಹಳೆ ಕಾಲದಂಥ ತಿಳ್ಕೋಂಡಿದಾನಲ್ಲ. ಎಂದು ಮುಖ ಮಾಡಿಕೊಂಡಿದ್ದನ್ನ ಗುರುತಿಸಿದ್ದೆ. ಅದಕ್ಕೆ ತೇಪೆ ಹಚ್ಚುವ ನಿಮಿತ್ತವೇ ಅವರು ಹಾಗೆ ಮಾತಾಡಿದ್ದು ಎಂದು ಅರ್ಥವಾಯಿತು. ಕೇಳೋದನ್ನೆಲ್ಲ ಕೇಳಿಯಾದ ಮೇಲೆ ನಾನು ತಡೆಯಲಾರದೆ ತಾಳೆಗರಿ ಕೈನ ಪುರಾಣ ವಿವರಿಸಿದೆ. ಜಾಯಮಾನಕ್ಕೆ ತಕ್ಕಂತೆ ನನ್ನ ಮಾತನ್ನು ಅವಮಾನವೆಂದು ಅವರು ಭಾವಿಸಲಿಲ್ಲ. ಪೆನ್ನು ಮತ್ತು ಪೇಪರ್ ಬಗ್ಗೆ ಅತ್ಯಾಧುನಿಕ ಸಂಶೋದನೆ ನಡೆದಿರುವ ಕಾಲದಲ್ಲಿದ್ದೂ ಕಂಠದಿಂದ ತಾಳೇಗರಿ ಮೇಲೆ ಅಕ್ಷರ ಕೆತ್ತಿರುವ ಸಹನಾ ಮೂರ್ತಿ ಶಾಸ್ತ್ರಿಗಳನ್ನು ತಮಗೆ ಪರಿಚಯಿಸಲಿಲ್ಲವಲ್ಲವೆಂಬ ಖೇದ ಮಾತ್ರ ವ್ಯಕ್ತಪಡಿಸಿದರು. ರಾಗಿ ಮುದ್ದೆ ಅವರೆಕಾಳು ಸಾರಿನ ಜೊತೆಗೆ ಒಂದು ಬೇಯಿಸಿದ ಮೊಟ್ಟೆಯನ್ನುತಿನ್ನಲು ಕೊಟ್ಟು “ಶಾಸ್ತ್ರಿಗಳಂಥೋರ್ನ ನಮ್ಮ ಕುಲಪತಿಗಾ‌ಅದ ಕಂಬಾರರವರಿಗೆ ಪರಿಚಯಿಸಿ ನಾಡೋಜ ಪ್ರಶಸ್ತಿ ಕೊಡಿಸಬಹುದಿತ್ತಲ್ಲ ವೈಕುಂಟ ವಾಸಿಗಳಾಗಿದೆದ್ದರೇನಾ‌ಅಯ್ತು ಮರಣೋತ್ತರವಾಗಿ ಪ್ರಶಸ್ತಿ ಕೊಡಿಸಬಹುದಲ್ವೆ?” ಎಂದು ಹೇಳಿದರು. ಅದಕ್ಕೆ ನಾನಿದ್ದು “ಈಗದೆಲ್ಲ ಆಗೊಳ್ಳ ಪಂಡಿತರೆ… ಈ ಉಯಿಲಿಗೆ ಸಂಬಂಧಪಟ್ಟ ಭಾಷೆ ಮತ್ತು ಲಿಪಿ ಸಮಸ್ಯೆ ಬಗೆ ಹರಿಸಿ ಪುಣ್ಯ ಕಟ್ಕೊಳ್ರಿ ಅಷ್ಟೆ” ಎಂದೆ ಹಂಚಿ ಕಡ್ಡಿ ಮುರಿದಂತೆ. “ಆಯ್ತು ಕುಂವೀ ಆಯ್ತು” ಅಂದರು. ಆ ಇಡೀ ರಾತ್ರಿ ಅವರು ಅದನ್ನು ನಕಲಿಳಿಸಿ ಕೊಟ್ಟರು. ಮರುದಿನ ಅವರಿಗೆ ‘ಧನ್ಯವಾದಗಳನ್ನರ್ಪಿಸಿ ಅವರ ಮನೆಯಾದ ಅಮೃತಂಗ ಮಯ’ ದಿಂದ ಹೊರಬಿದ್ದ್ನು. +ತಾಳೆಗರಿ ಕಟ್ಟಿನೊಂದಿಗೆ ಸರಳ ಕನ್ನಡ ಪಾಠವನ್ನು ಕಂಕುಳಲ್ಲಿಟ್ಟುಕೊಂಡು ನಾನು ಅಶ್ಟೊಂದು ಹಗುರಾಗಿ ಹಿಂದೆಂದೂ ಹೆಜ್ಜೆ ಹಾಕಿರಲಿಲ್ಲ. “ನಾನು ನಿಜವಾದ ಅರ್ಥದಲ್ಲಿ ಸಾಯ್ತಾ ಇರೊದೆ ನಿನ್ನ ಕಂಕುಳಲ್ಲಿ ಮಾರಾಯಾ” ಎಮ್ದು ತಾಳೆಗರಿ ಕಟ್ಟಿನೊಳಗೆ ಬದುಕಿದ್ದ ಶಾಸ್ತ್ರಿಗಳು ಚೀರುತ್ತಿರುವುದು ನನಗೆ ಕೇಳಿಸದೆ ಇರಲಿಲ್ಲ. ನಾನದಕ್ಕೆ ಏನು ಹೇಳುವುದು? ಸತ್ತವರನ್ನು ಬರಹದ ಮೂಲಕ ಬದುಕಿಸುವುದು, ಬದುಕಿದ್ದವರನ್ನು ಬರಹದ ಮೂಲಕ ಸಾಯಿಸುವುದು ಬರಹಗಾರನ ನಿತ್ಯಕರ್ಮ. ಅದರಲ್ಲೂ ನನ್ನಂಥವರು ಸದಾ ಪರಾವಲಂಬಿ ಜೀವಿ. ಬರಹಕ್ಕೆ ಬದುಕಿಗೆ ಜಿಗಣೆ ಥರ ಅಂಟಿಕೊಂಡು ಹಿಂಸಿಸುವುದನ್ನು ಸತ್ತವರು ಮತ್ತು ಬದುಕಿದವರು, ಸಾವು ಬದುಕಿನ ನಡುವೆ ಕಣ್ಣಕಪ್ಪಡಿ ಥರ ಕುರುಡು ನೋಟ ಬೀರುತ್ತ ಅಲೆದಾಡುತ್ತಿರುವವರೆಲ್ಲರೂ ಉದಾರವಾಗಿ ಕ್ಷಮಿಸಬೇಕಾದುದು ಅನಿವಾರ್ಯ. ಹಾಗೆ ವಿಶಿಷ್ಟ ರೀತಿಯಲ್ಲಿ ಬದುಕಿರದಿದ್ದಲ್ಲಿ ನಾನ್ಯಾಕೆ ಶಾಸ್ತ್ರಿಗಳ ಗೊಡವೆಗೆ ಹೋಗುತ್ತಿದ್ದೆನು ಶಾಮಂಣನ ಬದುಕನ್ನು ಸರಳರೇಖೆಯಂತೆ ಗ್ರಹಿಸಿ ಒತ್ತಕ್ಷರಗಳ ಉಪದ್ವಾಪಿಗೆ ಹೋಗದೆ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತೆ ಸರಳವಾಗಿ ಬರೆದು ಮುಗಿಸುತ್ತಿದ್ದೆನು? ಈರುಳ್ಳಿಯಂತೆ ಒಬ್ಬರ ಬದುಕಿನೊಳಗೆ ಇನ್ನೊಬ್ಬರು ಹೆಚ್ಚುಗಾ‌ಅರಿಕೆಯಿಂದ ಮೂಡುತ್ತಿರುವರಲ್ಲ! ಎಲ್ಲರು ಎಲ್ಲರೊಳಗೂ ಅವಿತುಕೊಂಡಿರುವರಲ್ಲ! ಪ್ರತಿಯೋರ್ವರ ಉತ್ಕರ್ಷ ಮತ್ತು ಪತನಗಳಲ್ಲಿ ಪ್ರತಿಯೋರ್ವರ ಪಾತ್ರ ಇರುವುದಲ್ಲ! ಇವೆಲ್ಲವನ್ನು ಹೇಗೆ ನಿರಾಕರಿಸಿ ಸರಳರೇಖೆಗೆ ಮೊರೆ ಹೋಗುವುದು! ಕನ್ನಡಿಯಿಂದಲೇ ನಿರ್ಮಿತವಾಗಿರುವ ‘ಜಿಂದಗೀ ಮಹಲಿ’ನೊಳಗೆ ಅವರಲ್ಲಿ ಇವರು ಕಾಣಿಸುತ್ತಾರೆ… ಇವರಲ್ಲಿ ಅವರು ಕಾಣಿಸುತ್ತಾರೆ… ಕಲಬೆರಕೆ ಪ್ರತಿಬಿಂಬಗಳಲ್ಲಿ ಛಿದ್ರಛಿದ್ರವಾಗಿರುವ ಪ್ರತಿಯೊಬ್ಬರು ಅಕ್ಷರದ ನೆಲೆ ಕಂಡುಕೊಳ್ಳಲು ಓದುಗರಿಗೆ ಮುಖಾಮುಖಿಯಾಗಿ ನಿಲ್ಲಲು ಹಾತೊರೆಯುತ್ತ ಒಂದು ಪುಟ್ಟ ಶಾಬ್ದಿಕ ವಸ್ತುವನ್ನು ಹಿಂಜಿಸುತ್ತಿರುವರು. ಶಾಬ್ದಿಕ ವಸ್ತುವಿನ ಒಂದು ಹಂತದವರೆಗೆ ಬಂದುಹೋಗಿರುವ ಪರಮಪೂಜ್ಯ ಶಾಸ್ತ್ರಿಗಳೆಂಬ ವರ್ಣರಂಜಿತ ಅಥವಾ ವರ್ಣಗಳನ್ನೆಲ್ಲ ಅರಗಿಸಿಕೊಂಡಿರುವ ಹಾರಿ ಧರೆಗಿಳಿದ ಗಾಳಿಪಟವನ್ನು ಮತ್ತೆ ನಭೋಮಂಡಲಕ್ಕೆ ಉಡ್ಡಯನ ಮಾಡಿಸುವಂಥ ಸನ್ನಿವೇಶ ಎದುರಾಗಬಹುದೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಅವರು ದೈಹಿಕವಾಗಿ ನಗಣ್ಯಗೊಳ್ಳುತ್ತಿದ್ದ ಕ್ಷಣದಲ್ಲಿಯೇ ತಾಳೆಗರಿ ಕಟ್ಟಿನ ಗೋಚರ ಸ್ಥಿತಿ ಮೂಲಕ ಮತ್ತೆ ಬದುಕುಬಿಟ್ಟಿದ್ದರು. ಲೌಕಿಕದೊಳಗಡಗಿರುವ ಅತಾಕಿಕತೆಯನ್ನೂ; ಅಲೌಕಿಕತೆಯೊಳಡಗಿರುವ ಲೌಕಿಕತೆಯನ್ನು ಒರೆಗಚ್ಚಲೆಂದೇ ಬರೆದಿರುವ ರೀತಿಯಲ್ಲಿ ಅವರ ಉಯಿಲಿತ್ತು. ಪರಿಗ್ರಹಣಕ್ಕೆ ಸವಾಲು ಹಾಕುವ ರೀತಿಯಲ್ಲಿ ಅವರ ಶಬ್ದಖಂಡವಿತ್ತು. ಸಮಸ್ತ ಶಬ್ದ ಶಾಸ್ತ್ರಿ ಪಾರಿಗರ್ನಯಸೇನ ಪಂಡಿತರೆಂಬ ಶಾಸನ ಕವಿಯೇ ಶಾಸ್ತ್ರಿಗಳ ರೂಪದಲ್ಲಿ ಬರೆದಿರುವನೋ ಎಂಬಂತಿತ್ತು ಅದರ ಶಬ್ದಕೋಶವು… ಕಂದ, ಸೀಸ… ಖ್ಯಾತ ಕರ್ನಾಟಂಗಳೆಲ್ಲವನ್ನೂ ಭಟ್ಟಿ ಇಳಿಸಿದಂತಿತ್ತು‌ಅದರ ಒಕ್ಕಣೆಯು… ಅದನ್ನು ಯಥಾ ರೀತಿ ಕಾದಂಬರಿಯೊಳಗಳವಡಿಸಿದರೆಲ್ಲಿ ಓದುಗರ ಕೋಪಾರುಣ ನೇತ್ರಗೈಗೆ ತುತ್ತಾಗುವನೆಂದು ಹೆದರಿದ ಪಾಮರನಾದ ನಾನು ಅದನ್ನು ಕಲಿಯುಗ ಅಧರ್ವಣ ಪಂಡಿತರೆಂದೇ ಹೆಸರಾದ ಮಲ್ಲೇಪುರಂ ವೆಂಕಟೆಶ್ವರರ ಬಳಿಗೊಯ್ದು ಸಾಮಾ‌ಅನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕನ್ನಡಿಸುವ ಕೆಲಸವನ್ನು ಮಾಡಿಸ್ದೆನು. ಮೂಲ ಪಾಠದೊಂದಿಗೆ ನವೀನ ಪಾಠಾಂಶವನ್ನು ತುಲನೆ ಮಾ‌ಅಲು ಅಸಮರ್ಥನಾಗಿರುವ ನಾನು ಅದನ್ನು ಹಾಗೆಯ್ ಕಾದಂಬರಿಯೊಳಗೆ ಅಳವಡಿಸುವ ಕೆಲಸ ಮಾಡುತ್ತಿರುವೆನು. (…ತಾವು ಹಂಸಕ್ಷೀರ ನ್ಯಾಯದಂತೆ ಪರಿಗ್ರಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿರುವೆನು) +* +* +* +‘ಪರಮ ಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಉಯಿಲು’ +ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಕೂಡಲಿಗಿ ತಾಲ್ಲೂಕಿನ ಕಸಬಾ ಹೋಬಳಿ ಕೊಟ್ಟೂರು ಗ್ರಾಮವಾಸಿಯಾದ, ಸದರಿ ಗ್ರಾಮದಲ್ಲಿ ಜ್ಯೊತಿಷ್ಯ, ವೈದಿಕ ಮಾಡಿಕೊಂಡವನಾಗಿದ್ದು, ಅಗ್ರಹಾರದವರ ಹಗೆತನದಿಂದಾಗಿಯೋ ಕಾಲಕರ್ಮಗಳ ಪಿರ್ಯಾದುಗಳಿಂದಲೋ; ಪುತ್ರ ಪೌತ್ರಾದಿಗಳ ಅಸಂತುಷ್ಟಿಯಿಂದಾಗಿಯೋ, ಬದಲಾದ ಸಾಮಾಜಿಕ ರಾಜಕೀಯ ಕಾಲಮಾನ ವಿದ್ಯಮಾನಗಲಿಂದಾಗಿಯೋ, ಇಹಲೋಕ ತ್ಯಜಿಸಲೋಸುಗ ಅನೇಕ ಸಿದ್ಧತೆಗಳನ್ನು ಗುಟ್ಟಾಗಿ ಮಾಡಿಕೊಂಡಿರುವಂಥವನೂ, ದತ್ತಕ ಮೀಮಾಂಸಾ, ಚಿತ್ರಸೂತ್ರ; ಚಿಕಿತ್ಸಾಸಾರ ಸಂಗ್ರಹಗೋಲದೀಪಿಕಾ, ಚಾತುವರ್ಗ ಚಿಂತಾಮಣಿ ಜ್ಯೋತಿಷ ವೇದಾಂಗಗಳನ್ನೆಲ್ಲ ಅರಗಿಸಿಕೊಂಡಂಥವರೂ ಜ್ಯೋತಿಷ್ಯ ಸಾರೋದ್ಧಾರ, ಸಂಗೀತೋಪನಿಷತ್ಸಾರೋದ್ಧಾರ ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ಸಂಸ್ಕೃತ ಭಾಷಾ ವಾರಿಧಿಯ್ ಮೊದಲಾದ ಬಿರುದಾವಳಿಗಳನ್ನುಪಡೆದ ವಂಶಜನೂ; ವೀರಮಿತ್ರೋದಯ ಬಿರುದಾಂಕಿತರಾದ ಘಂಟಾ ಶಾಮಾ ಶಾಸ್ತ್ರಿಗಳ ಏಕಮಾತ್ರ ಪುತ್ರನೂ ಆದಂಥಹ ಪರಮೇಶ್ವರ ಶಾಸ್ತ್ರೀ ಎಂಬ ಹೆಸರಿನನಾನುನನ್ನ ಪೂರ್ಣ ಇಷ್ಟಾನುಸಾರವಾಗಿ ಬರೆದು ಬರೆಯಿಸಿಕೊಂಡಿರುವ ಉಯಿಲು. +ಸದರೀ ಉಯಿಲನ್ನು ಉದ್ಧೇಶಿತವಾಗಿಯೂ, ನಿರುದ್ಧೇಶಿತವಾಗಿಯೂ ಬರೆಯಲು, ಬರೆಸಲು ಹಗಲು ಹುಟ್ಟಿದವರಾಗಲೀ; ರಾತ್ರಿಹುಟ್ಟಿದವರಾಗಲೀ; ಹೊರಗೆ ಹುಟ್ಟಿದವರಾಗಲೀ; ಒಳಗೆ ಹುಟ್ಟಿದವರಾಗಲೀ;ಮಂಚದ ಮೇಲೆ ಹುಟ್ಟಿದವರಾಗಲೀ; ನೆಲದ ಮೇಲೆ ಹುಟ್ಟಿದವರಾಗಲೀ ಪಟ್ಟಣ್ದಲ್ಲಿ ಹುಟ್ಟಿದವರಾಗಲೀ ಹಳ್ಳಿ ಹೋಬಳಿಗಳ್ಳಿ ಹುಟ್ಟಿದವರಾಗಲೀ; ಗಂಡಾಗಲೀ ಹೆಣ್ಣಾಗಲೀ ನಪುಂಸಕರಾಗಲೀ; ಹಿರಿಯರಾಗಲೀ, ಕಿರಿಯಲಾಗಲೀ; ವಿದ್ಯಾವಂತರಾಗಲೀ ಅವಿದ್ಯಾವಂತರಾಗಲೀ; ಮೇಲ್ಜಾತಿಯವರಾಗಲೀ ಕೀಳುಜಾತಿಯವರಾಗಲೀ ಹೀಗೆ ಯಾರೊಬ್ಬರ ಮಾನಸಿಕವಾದ ದೈಹಿಕವಾದ ಬಲವಂತವೆಂಬುದು ಸ್ಪೂರ್ತಿ ಎಂಬುದು ತಿಲ ಮಾತ್ರ ಇಲ್ಲವೆಂದೂ, ನಾನು ಬರೆದ ತ್ರಿಸಂಧ್ಯಾಸಮಯದಲ್ಲಿ ನನ್ನ ಮಸ್ತಿಷ್ಯದೊಳಗಿನ ಸಣ್ಣ ಮಿದುಳು ದೊಡ್ಡ ಮಿದುಳು ನರ ನಾಡಿಯೂ ಸೇರಿದಂತೆ ನನ್ನ ಇಡೀ ದೇಹವು, ಮನಸ್ಸೂ ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯಲ್ಲೇ ಇದ್ದಿತೆಂದು‌ಊ; ನಾನು ಭೂತಕಾಲದಲ್ಲಾಗಲೀ, ವರ್ತಮಾನ ಕಾಲದಲ್ಲಾಗಲೀ ಜಾಗೃತ ಸ್ಥಿತಿಯಲ್ಲಾಗಲೀ, ಸುಪ್ತಾವಸ್ಥೆಯಲ್ಲಾಗಲೀ; ಮಲ, ಮೂತ್ರ, ಬೆವರು ಮೊದಲಾದ ವಿಸರ್ಜನಾ ಕಾರ್ಯ ಸ್ಥಿತಿ ಸಂದರ್ಭಗಲಾಗಲಿ‌ಈ; ಮಾತು, ಮನಸ್ಸು, ನೋಟ, ಸ್ಪರ್ಶಗಳೇ ಮೊದಲಾದ ಪಂಏಂದ್ರಿಯಗಳಲ್ಲಾಗಲೀ, ನಾನೆಂದೂ ಅಶಜ, ಅಸ್ವಾಭಾವಿಕವಾಗಿಯೂ ವರ್ತಿಸಿದುದಿಲ್ಲವೆಂದೂ, ಬುದ್ಧಿಮಾಂದ್ಯ; ಹುಚ್ಚು; ಅರೆಹುಚ್ಚು, ಮೂರ್ಛ್; ಚಿತ್ತೋದ್ರೇಕ ಇತ್ಯಾದಿ ಮಾನಸಿಕ ರೋಗಗಳಾಗಲೀ ದೈಹಿಕ ರೋಗಗಳಾಗಲೀ ಒಳಗಾಗಿರಲಿಲ್ಲವೆಂದೂ ಈ ಮೂಲಕ ಅರಿಕೆ ಮಾಡಿಕೊಳ್ಳುತ್ತಿರುವೆನು. +ನಾನೀ ಸದರಿ ಉಯಿಲನ್ನು ಇಂಥವರನ್ನು ಕುರಿತು ಇಂಥವರಿಗೇ ಬರೆಯಬೇಕೆಂದು ಆರಂಭದಲ್ಲಿ ಯೋಚಿಸಿಲ್ಲ. ನಾನು ನನ್ನ ಕುಟುಂಬ ವರ್ಗದ ಪರವಾಗಲೀ, ಬೇರೆಯವರ ಪರವಾಗಲೀ, ವಿರುದ್ಧವಾಗಲೀ ಬರೆಯಬೇಕೆಂದು ಯೋಚಿಸಿಲ್ಲ. ‘ನಾನು’ ಎಂಬ ಪದವನ್ನು ದೈತಾದ್ವೈತಗಳ ಮೂಲಕ ವಿವರಿಸುವ ಹಾಗೂ ಸಮರ್ಥಿಸುವ ಕೆಲಸವನ್ನು ಮಾಡುತ್ತಿಲ್ಲ. ಯಜ್ಞದಲ್ಲಿ ಭಗವದರ್‍ಪಣ ಮಾಡಿದ ನಂತರ ಉಳಿಯುವ ವಸ್ತುಗಳಂತೆಯೇ ‘ನಾನು’ ಎಂಬ ಪದ ಕೂಡ. ಈ ಪದದ ಮೂಲಕ ಅಪ್ರವೃತ್ತ ಪ್ರವರ್ತನೆಯನ್ನಾಗಲೀ, ಅಜ್ಞಾತ ಜ್ಞಾಪನವನ್ನಾಗಲೀ, ಮಾಡುವ ಕ್ರಿಯಾಕರ್ಮಕ್ಕೆ ಹೋಗುವುದಿಲ್ಲ. ವಂಶಪಾರಂಪರ್ಯವಾಗಿಬಂದ ವೈದಿಕ ಶಾಸ್ತ್ರಾಧ್ಯಯನ ಪುಣ್ಯಶ್ರವಣಗಳಿತ್ಯಾದಿ ನನ್ನ ತಲೆಮಾರಿಗೇ ನಿಂತುಬಿಡುವುದೆಂದು ಮೊದಲೇ ಗೊತ್ತಾಗಿದ್ದಲ್ಲಿ? ನನ್ನ ತೀರ್ಥರೂಪರು ನನ್ನ ಶೈಶವಾಸ್ಥೆಯಿಂದ ನನ್ನನ್ನು ಬಾಲ್ಯಾವಸ್ಥೆಗೆ ಮುಂಬಡ್ತಿ ನೀಡುತ್ತಿರಲಿಲ್ಲವೇನೋ? ನನ್ನ ಹುಟ್ಟು ಬೆಳವಣಿಗೆ ಪಾತ್ರ ಪೋಷಣೆ ನಿರ್ವಹಣೆ ಎಲ್ಲವೂ ಅಕಸ್ಮಿಕವೆಂದೇ ಹೇಳಬೇಕು. ನಾನು ನಿವೇದಿಸಿದ ಪಾತ್ರಗಳ ಕಡೆ ಅವಲೋಕನ ಮಾಡಿದರೆ ನನಗೇ ಆಶ್ಚರ್ಯವಾಗುತ್ತದೆ. ಯಾರಿಗೋ ಮಗನಾಗಿದ್ದೆ. ಯಾ‌ಇಗೋ ತಂದೆಯಾ‌ಅಗಿದ್ದೆ; ಯಾರಿಗೋ ಮಾವನಾಗಿದ್ದೆ; ಯಾರಿಗೋ ಗಂಡನಾಗಿದ್ದೆ; ಯಾರಿಗೋ ಅಜ್ಜನಾಗಿದ್ದೆ. ಆದರೆ ಮುತ್ತಜ್ಜನ ಪಾತ್ರ ನಿರ್ವಹಿಸುವ ಮೊದಲೇ ನಿರ್ಗಮಿಸಬೇಕೆಂದು ಕಳೆದ ಕೆಲವು ದಿನಗಳಿಂದ ಅನ್ನಿಸುತ್ತಿರುವುದು. ಇದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆದವು… ನಡೆಯುತ್ತಿರುವುವು… ಮುಂದೆ ಕೂಡ ನಡೆಯದೆ ಇರಲಿಕ್ಕಿಲ್ಲ… ಇವುಗಳನ್ನು ತಡೆಯುವ ಶಕ್ತಿ ನನ್ನಲ್ಲಿ ಯಾವತ್ತೂ ಇರಲಿಲ್ಲ… ಅಗೋಚರವಾಗಿ ಉಳಿದು ಕದ್ದು ಮುಚ್ಚಿ ಪ್ರಕಟವಾಗುತ್ತಿದ್ದ ದೌರ್ಬಲ್ಯ ಇತ್ತೀಚೆಗಂತೂ ರಾಜಾರೋಷವಾಗಿ ಪ್ರಕಟಗೊಂಡು ನನ್ನ ಇಚ್ಛಾಶಕ್ತಿಯನ್ನು ಅಲ್ಲಾಡಿಸುತ್ತಿದೆ. ಇದನ್ನು ನನ್ನ ಕುಟುಂಬವರ್ಗದವರೂ; ಸಾಮಾಜಿಕರೂ ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ದಿನೇ ದಿನೇ ಸವಕಲುಗೊಳ್ಳುತ್ತಿರುವೆ – ಎಂಬುದಕ್ಕೆ ಸಾಕ್ಷಿಯಾಗಿ ಪಂಚೇಂದ್ರಿಯಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿವೆ. ಯಾವುದನ್ನು ಹೇಗೆ ಕೇಳಿಸಿಕೊಳ್ಳಬೇಕೋ ಹಾಗೆ ಕೇಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ… ಯಾವುದನ್ನು ಹೇಗೆ ಮಾತಾಡಬೇಕೋ ಹಾಗೆ ಮಾತಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ… ಎಷ್ಟೋ ಘಟನೆಗಳಿಗೆ ವಿದ್ಯಮಾನಗಳಿಗೆ ಅಪಾರ್ಥಮಾಡಿಕೊಂಡೋ ಏನೋ, ಅಸಮರ್ಪಕವಾಗಿ; ಅಸಹಜವಾಗಿ ಪ್ರತಿಕ್ರಿಯಿಸುತ್ತಿರುವೆ… ಹಾಗೆಯೇ ನನ್ನ ಪ್ರತಿಕ್ರಿಯೆಗಳನ್ನು ಎಷ್ಟೋ ಸಂದರ್ಭಗಳಲ್ಲಿ ಸಮರ್ಥಿಸುವ ಪ್ರಯತ್ನ ಮಾಡಿ ನಗೆಪಾಟಲಾಗಿರುವೆ. ಇಂಥ ಪ್ರಯತ್ನ ಪುನರಪಿ ಆಗಬಾರದೆಂದು ನಿರ್ಧರಿಸಿ ಮೌನದ ಬಾಂಡಲೆಯೊಳಗೆ ಉಳಿದು ಬೇಯುತ್ತ ಇದ್ದುಬಿಡುವುದನ್ನು ಅಭ್ಯಾಸ ಮಾಡಿಕೊಂಡೆನು. ನನ್ನ ಮೌನ ಸೀಳುವ, ಭಂಗಪಡಿಸುವ ಪ್ರಯತ್ನಗಳು ನಡೆದಿದ್ದುಂಟು. ಆ ಅಂಥ ಮೌನದ ಬೇಗೆಯೊಳಗೆ ಬೆಂದು ಮಾಗುವ ಅನುಭವದ ಸ್ವರೂಪ, ಭಗವಂತನ ಸ್ವರೂಪಕ್ಕಿಂತ ಭಿನ್ನವೇನಲ್ಲ ಎಂದು ನನಗೆ ಕ್ರಮೇಣ ಗೊತ್ತಾಯಿತು. ನಾನ್ನಷ್ಟೇ ತೂಕದ ಹಸುವಿನಂತೆಯೇ ಬದುಕಿನವನಾದ ನಾನು ನನ್ನ ಬದುಕಿನ ಆಂತರಿಕ ಹಾಗೂ ಬಾಹ್ಯ ಶ್ತೃಗಳ ಬಗ್ಗೆ ಹೇಳಿಕೊಳ್ಳುವ ಪ್ರಯತ್ನವನ್ನು ಅನೇಕ ಸಂದರ್ಭಗಳಲ್ಲಿ ಮಾಡಿದ್ದುಂಟು. ವಿಧವೆಯರಿಗೆ ಬಹುಮಾನ ನೀಡುವುದು ಒಂದೇ, ಅಪಾತ್ರರಿಗೆ, ಅವಿಧೇಯರಿಗೆ ವಿಷಯ ನಿವೇದಿಸಿಕೊಳ್ಳುವುದೂ ಒಂದೇ ಎಂದು ಹಲವಾರು ಸಾರಿ ಭಾವಿಸಿದೆನು. ದಿನಗಳೆದಂತೆ ನಾಲಿಗೆ ಮೇಲೆ ಜೇನುತುಪ್ಪವನ್ನಾಗಲೀ ವಿಷವನ್ನಾಗಲಿ ಇಟ್ಟರೆ ರುಚಿನೋಡದೆ ಇರುವುದು ಎಷ್ಟು ಅಶಕ್ಯವೋ , ಅಷ್ಟೇ ಅಶಕ್ಯ ಹೇಳದೆ ಇರುವುದು ಎಂದು ನನಗೆ ಕ್ರಮೇಣ ಅರ್ಥವಾಯಿತು. ಸಂಸಾರವೆಂಬ ಸಾಗರದಲ್ಲಿ ಮೀನೋಪಾದಿಯಲ್ಲಿ ಈಜುತ್ತ ಬಂದಿರುವ ನಾನು ಕುಡಿದಿರಬಹುದಾದ ನೀರಿನ ಪ್ರಮಾಣ ಎಷ್ಟು ಎಂಬ ಬಗ್ಗೆ ನಿಖಿರವಾಗಿ ಹೇಳಲು ಬೇರೆಯವರಿಗೆಷ್ಟು ಅಸಾಧ್ಯವೋ , ಅಷ್ಟೇ ಅಸಾಧ್ಯವು ನನಗೆ ಕೂಡ. ಮೃತ್ಯುವೆಂಬ ತಿಮಿಂಗಿಲ ನನ್ನನ್ನು ನುಂಗಿ ಹಾಕಲು ತೀರಾ ಹೊಂಚಿ ಹತ್ತಿರದಲ್ಲೆ ಇದೆ ಎಂಬ ದಿವ್ಯ ಅರಿವು ಮೂಡಿದ್ದೇ ನನ್ನ ಮೊಮ್ಮಗನಾದ ಶಾಮಾ ಶಾಸ್ತ್ರಿಯು ಬದುಕಿನ ಆಸರೆಯನ್ನು ಸರ್ಕಾರದ ಪಗಾರಕ್ಕೆ ಒಪ್ಪಿಸಿದಾಗಲೇ. ನಮ್ಮ ವಂಶದಸಮಸ್ತ ಪೀಡೆಯೇ ಮೊಮ್ಮಗನ ರೂಪದಲ್ಲಿ ಕಾಣಿಸಿಕೊಂಡಿದೆ ಎಂದು ನನಗೆ ಅರ್ಥವಾದ ಕ್ಷಣ ಬದುಕಿನ ಮುಖ್ಯ ಅಧಿಕರರಣದ ಕೊನೆಯ ಅಧ್ಯಾದಲ್ಲಿ ನಿಂತಿರುವೆ ಎಂದುಕೊಂಡೆ. ಧರ್ಮಸ್ಥೀಯ ಮತ್ತು ಕಂಟಕ ಶೋದನೆ ಮಾಡಿಕೊಳ್ಳಲಿಕ್ಕೆ ಇದು ಪಕ್ವ ಕಾಲ ಎಂದುಕೊಂಡೆ. ಅದೇ ಹೊತ್ತಿಗೆ ನ್ಯಾಸ ತ್ರಯಗಳ ಸಾಕಾರಮೂರ್ತಿಯೇ ತಾನೆಂದು ಬೀಗುವ ವರದಾಚಾರ್ಯನಿಗೂ ನನಗೂ ಸಂಸಾರಕ್ಕೆ ಸಂಬಂಧಿಸಿದಂತೆ ವಾದೋಪವಾದವಾಗಿ ನನ್ನ ಬದುಕಿನ ಮಗುಚಿದ ಪುಟಗಳ ಕಡೆ ತಿರುಗಿ ನೋಡುವ ಬಯಕೆ ಉಂಟಾಯಿತು.ವ್ಯಸನಧಿಕಾರಿ ಕರಣಗಳ ಪಟ್ಟಿಮಾಡಿ ವಿಗ್ರಹ, ಆಸನ, ಯಾನ, ಸಂಶ್ರಯ ಮತ್ತು ದ್ವೈಧೀ ಭಾವಗಳ ಮೇಲೆ ಹತೋಟಿ ಸಾಧಿಸಿ ಸಾವೆಂಬದೈವಿಕ ಆಕಸ್ಮಿಕಕ್ಕೆ ತುತ್ತಾಗಬೇಕೆಮ್ಭ ಬಯ್ಕೆ ಉಂಟಾಯಿತು. ನನ್ನೀ ಬಯಕೆಯ ಬೇಟೆಗಾರನ ಬಾಣಕ್ಕಿಂತಲೂ ಬಲಶಾಲಿ ಎಂಬುದು ಉಯಿಲು ಬರೆಯುವ ಸಂದರ್ಭದಲ್ಲಿ ನನಗೆ ಅರ್ಥವಾಯಿತು. ತಾಯಿಯೋರ್ವಲ ಗರ್ಭದಲ್ಲಿರುವ ಭ್ರೂಣವನ್ನು ಹೊಸಕಿ ಹಾಕುವಷ್ಟು ಶಕ್ತಿಶಾಲಿಯಾದುದುನನ್ನ ಬುದ್ಧಿಯು‌ಎಂಬುದು ನನಗೆ ಅರ್ಥವಾಗಿ ನನ್ನ ಬಗ್ಗೆ ನನಗೇ ಬಲವಾಯಿತು. ಯಾವ ಪ್ರಕಾರವಾಗಿ ಕಾಳ್ಗಿಚ್ಚಿಗೆ ಸ್ನೇಹಿತನಾಗಿರುವ ಗ್ಗ್ಳಿಯೇ ಮುಂದೊಂದು ದಿನ ನನ್ನ ಹೃದಯದಲ್ಲಿ ದಶಕಗಳ ದಿನಮಾನದಿಂದ ಬೆಳಗುತ್ತಿರುವ ಪರಂಜ್ಯೋತಿಯನ್ನು ನಂದಿಸುವ ಪ್ರಯತ್ನ ಮಾಡದೆ ಇರದು ಎಂದು ಅರ್ಥವಾಯಿತು. ಇಂಥ ಅನೇಕ ಪ್ರೇರಣೆಗಳಿಂದ ವಾಗ್ವಾದ ತೀರ್ಥ, ನವರಸ ನಿಷ್ಣಾತ ಇವೇ ಮ್,ಒದಲಾದ ಬಿರುದಾಂಕಿತರೂ, ಶ್ರೀಮನ್ ಮಹಾರಾಜರುಗಳಿಂದ ಕಿರು ಘಂಟಾಯುಕ್ತ ಮುಂಗೈ ಕಡಗ ಪಡೆದಿದ್ದಂಥವರೂ ಆದ ಘಂಟಾ ಶಾಮಶಾಸ್ತ್ರಿಗಳ ಗರ್ಭ ಸಂಜಾತನೂ ಆದ ಪರಮೇಶ್ವರ ಶಾಸ್ತ್ರಿ ಎಂಬ ಹೆಸರಿನವನಾದ ನಾನು ಒಳಗೊಂದು, ಹೊರಗೊಂದು ಎಂಬ ಭೇಧ ಮಾಡದೆ ಈ ಉಯಿಲನ್ನು ಅಂತರಂಗದ ಗಂಗೆಯ ಪ್ರವಾಹ ಶಮನಾರ್ಥವಾಗಿ ಬರೆಯಲು ನಿರ್ಧರಿಸಿದೆನು. +ತಂದೆಗೆ ತಕ್ಕ ಮಗನಾಗಿರದಿದ್ದ; ಹೆಂಡತಿಗೆ ತಕ್ಕ ಗಂಡನಾಗಿರದಿದ್ದ; ಪ್ರೇಯಸಿಗೆ ತಕ್ಕ ಪ್ರಿಯತಮನಾಗಿರದಿದ್ದ; ಮಗನಿಗೆ ತಕ್ಕ ತಂದೆಯಾಗಿರದಿದ್ದ; ಸೊಸೆಗೆ ತಕ್ಕ ಮಾವನಾಗಿರದಿದ್ದ ಮೊಮ್ಮಗನಿಗೆ ತಕ್ಕ ಅಜ್ಜನಾಗಿರದಿದ್ದ, ಬದಲಾಗುತ್ತಿರುವ ಸಮಾಜಕ್ಕೆ ತಕ್ಕ ಪ್ರಜೆಯಾಗಿರದಿದ್ದ ನಾನು ಬರೆಯುತ್ತ್ರುವ ಉಯಿಲಿನಿಂದ ಯಾರಿಗೂ ಲವಲೇಶ ಲಾಭಾಂಶವಾಗುವುದಿಲ್ಲವೆಂಬ ಅರಿವು ನನಗೆ ನಿಚ್ಚಳವಾಗಿ ಉಂಟು. ಬದುಕಿನ ಉತ್ತರಾರ್ಧ ಭಾಗದಲ್ಲಿ ಅನುಕೂಲರಾದವರಿಗಾಗಲೀ; ಪ್ರತಿಕೂಲವಿದ್ದವರಾಗಲೀ ನಾನು ಪ್ರಿಯನಾಗಿರಲಿಲ್ಲ ಎಂಬ ಅರಿವು ಉಂಟು. ಮಧ್ಯ ವಯಸ್ಸು ಸಮೀಪಿಸುತ್ತಿದ್ದಂತೆ ನನ್ನೊಳಗೆ ಬೇರು ಬಿಡತೊಡಗಿದ್ದ ಸಚ್ಛೂದ್ರ ಕಲ್ಪನೆಯನ್ನು ಆಮೂಲಾಗ್ರ ಅಳಿಸುವ ಸೃಡ ನಿಶ್ಚಯವನ್ನು ಪ್ರಾಮಾಣಿಕವಾಗಿ ಮಾಡಲಿಲ್ಲವೆಂಬ ಅರಿವು ಉಂಟು. ಯಾವ ಪ್ರಕಾರವಾಗಿ ಸ್ವಾಮಿಯ ಸಾನ್ನಿಢ್ಯ್ದಲ್ಲಿರುವ ಟಗರು ಸಿಂಹದಂತೆ ವರ್ತಿಸುವುದೋ ಹಾಗೆಯೇ ನಾನು ಕೂಡನನ್ನ ತಂದೆಯವರಾದ ಕೀ.ಶೇ.ಶಾಮಾ ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ಬದುಕಿನ ಮೂಲ ರಹಸ್ಯವನ್ನು ಭೇದಿಸುವ ಕೆಲಸಕ್ಕೆ ಮುಂದಾಗಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಿರುವೆನು. ಅಂಧ ಕೂಪದಲ್ಲಿ ಬಿದ್ದಂಥ ಕೋತಿ, ಹಾವು, ಸಿಂಹ ಮತ್ತು ಅಕ್ಷಶಾಲಿಕರನ್ನು ಬದುಕಿಸಿದ ಕಾಂಕೇಯನೆಂಬ ಪಥಿಕನಿಗೂ, ಇದಕ್ಕೆ ವಿರುದ್ಧವಾಗಿ ಅಂತರಂಗದ ಅಂಧಕೂಪದಲ್ಲಿ ಪಂಚೇಂದ್ರಿಯಗಳನ್ನು‌ಊ; ಅರಿಷಡ್ವರ್ಗಗಳನ್ನೂ ಕೊಳೆಯಲು ಬಿಟ್ಟ ನನಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಅರಿವು ಉಂಟು. ಸಂಶಯಾಸ್ಪದ ರೀತಿಯಲ್ಲೇ ಬದುಕು ಮುಂದುವರಿಸು ಎಂದು ವಿಧಿನಿಯಮ ನನ್ನ ಹಣೆಯಲ್ಲಿ ಬರೆದಿರಲು ಏನು ಮಾಡಲು ಸಾಧ್ಯ? ಕಿರಾತನ, ಚರ್ಮಕಾರನ ಮನೆಯಲ್ಲಿ ಊಟದ ವೇಳೆ ಕಳೆದವರಿಗೆ ಪ್ರಾಯಶ್ಚಿತ್ತ ವಿಧಿಸಿರುವ ಹೇಮಚಂದ್ರ ಚಂಚಲ ಸ್ವಭಾವದ ಕುದುರೆಗಳ ಲಾಯವನ್ನು ಅಂತರಂಗದಲ್ಲಿ ಪೋಷಿಸಿಕೊಂಡು ಬಂದವನಾದ ನನ್ನಂಥವಿಗೇಕೆ ಪ್ರಾಯಶ್ಚಿತ್ತವನ್ನು ತನ್ನ ಸ್ಥಿತಿಯಲ್ಲಿ ಯಾಕೆ ಹೇಳಿಲ್ಲ? ನ್ಯಗ್ರೋಧದಂಥೆ ಬಿಳಲು ಬಿಡುತ್ತ ಬದುಕುವುದಾಯಿತಲ್ಲ… +ಹಲ್ಲೊಳಗಿನ ವಿಶದ ಪ್ರಾಮಾಣ್ಯ ಪರೀಕ್ಷಸಲೋಸುಗ ಅನೇಕ ತಕ್ಷಕರುಗಳಿಂದ ಕಚ್ಚಿಸಿಕೊಳ್ಳುವುದೇ ಆಯಿತಲ್ಲ ನನ್ನ ಬದುಕು. ಇದೆಲ್ಲ ವಿವರಾಡಂಬರ ಕೊಚ್ಚುತ್ತ‌ಓದುಗರ ತಲೆ ತಿನ್ನುವ ಗೋಜಿಗೆ ಹೋಗಬಾರದೆಂದೇ ನಾನು ವಿವಿಧಕಳಾಪಂಡಿತರಿಗಷ್ಟೇ ಅರ್ಥವಾಗಲೆಂದುಚಿತ್ತೋನ್ಮೀಲನಕಾರಿಯಾದ ವೈದಿಕ ಛಂದಸ್ಸು ಮತ್ತು ಚಂಪೂ ಮಿಶ್ರಿತ ಶೈಲಿಯಲ್ಲಿ ಬರೆಯಲೆತ್ನಿಸಿಹೆನು. ವೈಯಕ್ತಿಕ ಬದುಕಿನ ಮೂಲ ದ್ರವ್ಯವಾದ ಗಾಯತ್ರಿಯನ್ನೇ ಅನುಷ್ಟುಪ್ ಆಗಿ ಪರಿವರ್ತಿಸಿರುವೆನು. ಮಧ್ಯೆ, ಮಧ್ಯೆ ಮಧ್ಯಾಕ್ಷರಲುಪ್ತ ಪದಗಳಿದ್ದು ಎಂಥ ಪಂಡಿತರನ್ನೂ ಒಂದು ಕ್ಷಣ ದಿಙ್ಮೂಢಗೊಳಿಸದೆ ಇರಲಾರವು. ಸ್ವರ ಸಂಗೀತದ ಗಾಂಭೀರ್ಯದ ಮೂಲಕವೇ ಅಲೌಕಿಕವಾದ ಮಂಪರು ಕವಿಯುವಂತೆ ಮಾಡಿ ತನ್ಮೂಲಕ ನನ್ನನ್ನು ನಾನು ಮರೆಯುವ ಪ್ರಯತ್ನ ಮಾಡುತ್ತಿರುವೆನೆಂದು ಪ್ರಾಮಾಣಿಕವಾಗಿ ಹೇಳಬಯಸುತ್ತಿರುವೆನು. ಒಂದು ರೀತಿ ಸದರೀ ಉಯಿಲಿನ ಮೂಲಕ ಪುನರುಜ್ಜೀವಿಸುವ ಪ್ರಯತ್ನ ನನ್ನದಾಗಿರುತ್ತದೆ. ಉದಾತ್ತ ಅನುದಾತ್ತ ಮತ್ತು ಸ್ವರಿತಗಳೆಂಬ ಮೂರು ಪ್ರಕಾರದ ಸ್ವರಗಳನ್ನು ಕರತಲಾಮಲಕ ಮಾಡಿಕೊಂಡವರಿಗೆ ಮಾತ್ರ ನನ್ನೀ ಉಯಿಲು ಮಾತ್ರ ಅರ್ಥವಾಗಲು ಸಾಧ್ಯ. ಉದಾತ್ತಾದಿಯಾದ ಸ್ವರ ಸಂಗೀತ ಬದುಕಿನ ಛಂದಸ್ಸಿನ ಸೌಂದರ್ಯದ ಸಾಕ್ಷಾತ್ಕಾರ ಮಾಡಿದರೆ ನಾನು ಬರೆಯುತ್ತಿರುವ ಉಯಿಲು ಸಾರ್ಥಕವಾಗುತ್ತದೆ. ಬದುಕಿನ ಏಕತಾನತೆಯ ಪರಿಹಾರಕ್ಕೋ ಎನ್ನುವಂತೆ ದೀರ್ಘ-ಹ್ರಸ್ವಲಯದ ವಿನ್ಯಾಸಗಳು ಆಗಾಗ ತೋರಲಿರುವುದರಿಂದ ಪ್ರಾಜ್ಞ ಓದುಗರಾದವರು ಆಗಾಗ್ಗೆ ಪ್ರಾಚೀನ ಕನ್ನಡ ಸಂಸ್ಕೃತ ನಿಘಂಟುಗಳ ಮೊರೆಹೋಗುವುದು ತೀರ ಅಗತ್ಯ. +ಶ್ಲೇಶ್ಮವೇ ಮೊದಲಾದ ಬಗೆ-ಬಗೆಯ ಕೊಳೆಗಳಿಂದ ತುಂಬಿದ ಶರೀರದೊಳಗೆ ವಾಸಿಸುತ್ತಿರುವ ಮನಸ್ಸು ಅರಮನೆಗಳಲ್ಲಿ, ಧನಿಕರ ಸೌಧಗಳಲ್ಲಿ, ಪರ್ವತ ಶ್ರೇಣಿಗಳಲ್ಲಿ, ಜಿತೇಂದ್ರಿಯರಾದ ಮುನಿಶ್ರೇಷ್ಟರ ಪರ್ಣ ಕುಟಿಗಳಲ್ಲಿ ಏಕಕಾಲಕ್ಕೆ ಅಲೆದಾಡಿತೊಡಗಿದಾಗ ನಾನು ಅಲೆಗಳಂತೆ ಚಮ್ಚಲವಾದ ಬುದ್ಧಿ ಸ್ವಭಾವದವನಾಗಿದ್ದೆನು. ಹಗ್ಗವು ತುಂಡಾದಾಗ ಬಾವಿಯಲ್ಲಿ ಮೇಲಕ್ಕೆ ಸೆಳೆಯಲ್ಪಟ್ಟ ಬಿಂದಿಗೆಯಂತೆ ನಾನು ಇದ್ದೆನು. ವಿಷ್ಣುವಿನ ತಾವರೆಯಂತಹ ಪಾದಗಳನ್ನೇ ಗಾಳದ ರೀತಿಯಲ್ಲಿ ಬಳಸುತ್ತ ದ್ವೈತವೆಂಬ ಕತ್ತಲೆಯನ್ನು ಹಿಡಿದು ಸಂಸಾರವೆಂಬ ಬಂಧನದಲ್ಲಿ ಸಿಲುಕಿ ಆತ್ಮಾನಂದ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆನು. ಯಾವ ಪ್ರಕಾರವಾಗಿ ಪರ್ವತ ಶಿಖಿರದ +ತೆ ಆಕಾರವುಳ್ಳ, ವಿನೋದದಲ್ಲಿ ಹೆಮ್ಮರವನ್ನು ಬುಡಸಹಿತ ಕಿತ್ತುಹಾಕುವ ಮದ್ದಾನೆಯು ಹೆಣ್ಣಾನೆಯ ಸ್ಪರ್ಶಕ್ಕೆ ಮನಸೋತು ಕಂಭದಲ್ಲಿ ಬಂಧನಕ್ಕೊಳಗಾಗುವುದೋ ಹಾಗೆಯೇ ನಾನು ಅವಯವಗಳು ಸುಕ್ಕು ಗಟ್ಟುವ ಮೊದಲೆ, ತಲೆಗೂದಲು ಬೆಳ್ಳಗಾಗುವ ಮೊದಲೆ, ಮುಪ್ಪಿನಿಂದ ದೇಹವೆಂಬುದು ಜೀರ್ಣವಾಗುವ ಮೊದಲೆ ವಿಷಯ ಸುಖವೆಂಬ ಕಾಡಿನೊಳಗೆ ಮನಸ್ವೇಚ್ಛೆಯಾಗಿ ಅಲೆದಾಡಬೇಕೆಂದು ಬಗೆಬಗೆಯಾದ ತಂತ್ರೋಪಾಯಗಳನ್ನು ಪ್ರಯೋಗಿಸುತ್ತಿದ್ದೆನು. ಹಾಗೆ ನಾನು ಮಾಡುತ್ತಿದ್ದ ಪ್ರಯತ್ನ ಉಪಾಯಗಳೆಲ್ಲವು ಹುಲ್ಲು ಇಲ್ಲದ ಸ್ಥಳಗಳಲ್ಲಿ ನಂದಿ ಹ್ಗುವ ಬೆಂಕಿಯಂತೆಯೂ; ಮರಳು ಬೆಟ್ಟದ ಮೇಲೆ ಬಿದ್ದು ಇಂಗಿಹೋಗುವ ಉದಕದಂತೆಯೂ ನಿಷ್ಪಲವಾಗುತ್ತಿದ್ದುವು. ಇಂದ್ರಿಯಗಳ ಸೆಳವಿಗೆ ಸಿಲುಕಿ ಪಾಪಮಾಡಕೂಡದೆಂದೂ ಹಗಲಿರುಳು ಭಗವನ್ನಾಮ ಸ್ಮರಣ ಮಾಡಿ ಸಾರಥಿಯ ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ರೀತಿಯಲ್ಲೇ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದೂ ತಂದೆಯವರಾದ ಶಾಮಾಶಾಸ್ತ್ರಿಗಳು ಹೇಳಿ ನನ್ನ ಮನುಷ್ಯ ಸಹಜ ಚಟುವಟಿಕೆಗಳಿಗೆ ಅಧಾತ್ಮದ ಕಡಿವಾಣ ಹಾಕುತ್ತಿದ್ದುದುಂಟು. ಆದರೆ, ನಾನಾದರೋ ಮಳೆಗಾಲದ ಮಿಂಚಿನಂತೆ ಅತಿ ಚಂಚಲವಾದ ಭೋಗಗಳನ್ನೂ; ಪ್ರಿಯೆಯರಿಂದ ಕೊಡಲ್ಪಟ್ಟ ಆಲಿಂಗನಾದಿಗಳನ್ನೂ; ಸೊಬಗು ಸೂಸುವ ಯೌವನವನ್ನೂ ಅನುಭವಿಸಲು‌ಒಳಗೊಳಗೇ ತುಂಬ ಉತ್ಸುಕನಾಗಿದ್ದೆನು. ಮಕ್ಕಳು ಅಂಗುಷ್ಟದಲ್ಲಿ ಜೊಲ್ಲನ್ನು ಹೀರುತ್ತ ಸ್ತನ್ಯಪಾನವೆಂದು ಭ್ರಮಿಸುವಮ್ತೆ ನಾನು ನನ್ನ ಯೌವನದ ಪ್ರತಿಯೊಂದು ಕ್ಷಣವನ್ನು ಬದುಕಿನ ಅಖಾಡದಲ್ಲಿ ವೈದಿಕ ಮುಖವಾಡ ಧರಿಸಿ ಅನಂದಾತಿರೇಕದಿಂದ ಆನಂದಿಸುವ ಪ್ರಯತ್ನ ಮಾಡುತ್ತಿದ್ದೆನು. ಏ ಎಲ್ಲ ಮಧುರ ಸ್ಮೃತಿಗಳು ಮತ್ತೆ ಜೀವ ಧರಿಸಿದ ಕ್ಷಣವನ್ನು ಮಾತ್ರ ನಾನು ಮರೆಯಲು ಸಾಧ್ಯವಿಲ್ಲ! ಆ ಕ್ಷಣ ಯಾವುದೆಂದರೆ ನನ್ನ ಲೌಕಿಕ ಬದುಕಿನ ಚಕ್ಷುವನ್ನು ಮತ್ತೆ ತೆರೆಯುವಂತೆ ಮಾಡಿದ ಮೊಮ್ಮಗನೆಂಬ ಮಹಾಶಯನಿಗೆ ನಾನು ಸದಾ ಕೃತಜ್ಞನಾಗಿರಬೇಕು. ಯೌವನವೆಂಬ ಗಾಂಧರ್ವ ಲೋಕವನ್ನು ಅಂಜುತ್ತ ಅಳುಕುತ್ತ ಪ್ರವೇಶಿಸಿದ್ದ ಅವನು ತನಗರಿವಿಲ್ಲದಂತೆ ಬಾಹ್ಯ ವಸ್ತುವನ್ನು ವಿವೇಚಿಸುವ ಪ್ರಯತ್ನ ಮಾಡುತ್ತಿದ್ದ. ಹಾವಿನಲ್ಲಿ, ಹಾರದಲ್ಲಿ, ಬಲಿಷ್ಟವಾದ ಶತ್ರುವಿನಲ್ಲಿ, ಆತ್ಮೀಯನಾದ ಗೆಳೆಯನಲ್ಲಿ. ಫಳಫಳ ಕೋರೈಸುವ ರತ್ನದಲ್ಲಿ, ಫಲವಂತಿಕೆಯ ಮಣ್ಣಿನಲ್ಲಿ; ಹೂವಿನಲ್ಲಿ, ಹಾಸಿಗೆಯಲ್ಲಿ; ಶಿಲ್ಪಿಗಾಗಿ ಕಾಯುವ ನೋಂಪಿನಲ್ಲಿರುವ ಯೋಗ್ಯ ಶಿಲೆಯಲ್ಲಿ, ಪುಟ್ಟನತ್ತಿನಂಥ ಹುಲ್ಲಿನಲ್ಲಿ; ಪಂಚೇಂದ್ರಿಯಗಳಿಗೆ ಸವಾಲೆಸೆಯುವ ಯೌವನಭರಿತ ಸ್ತ್ರೀಯರಲ್ಲಿ ಆಧ್ಯಾತ್ಮಿಕ ಉನ್ನತಿಯನ್ನು ಅರಸೀ ಅರಸೀ ಬಸವಳಿದು ವೃದ್ಧಾಪ್ಯದಲ್ಲಿದ್ದ ನಾನು ಸೌಂದರ್ಯದ ನಿರ್ವಿಕಲ್ಪ ಸಮಾಧಿಯಲ್ಲಿದ್ದುದು ಅವನಾದರೂ ಹೆಂಗಸರ ಸುಂದರ ಬಳೆಗಳ ಶಬ್ದ ತರಂಗಗಳನ್ನು ಕೇಳಲಿ ಮತ್ತು ಬದುಕುವ ಉತ್ಸಾಹವನ್ನು ಪ್ಡೆದುಕೊಳ್ಳಲಿ ಎಂದೇ ಕೆಲವು ಸೌಕರ್ಯಗಳನ್ನು ಅವನಿಗೆ ಮಾಡಿಕೊಟ್ತಿದ್ದೆನು. ಬದುಕಿನ ರಸಾಸ್ವಾದನದ ಪಟುವಾಗಿದ್ದಾಗ ಮಾತ್ರ ಮನುಷ್ಯ ಸುಸ್ಥಿರವಾದ ಉಸಿರಾಟದ ರಿ‌ಇತಗಳನ್ನು ರೂಢಿಸಿಕೊಳ್ಳಬಲ್ಲ ಎಂಬುದು ನನ್ನ ಅನಿಸಿಕೆ. ಆ ದೃಷ್ಯ ನೋಡಿದೊಡನೆ ತಂದೆಯವರು ಹೇಳುತ್ತಿದ್ದಂಥ ಮಾತಾದಂಥ ಕಳ್ಳರು ಕದಿಯಲಾಗದ; ರಾಜರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಹಂಚಿಕೊಳ್ಳಲಾಗದ ಸುಸ್ಥಿರ ಐಶ್ವರ್ಯವೆಂಬುದು ನಗೆಪಾಟಲಾಯಿತು. ಯಾವ ರೀತಿಯಲ್ಲಿ ಚಿಕ್ಕದಾದ ಅಂಕುಶಕ್ಕೆ ದೊಡ್ಡದಾದ ಆನೆಯು ವಶವಾಗುವುದೋ ಹಾಗೆಯೇ ಸುಂದರಕಾಯಳೂ ಸುಶೀಲೆಯೂ ಆದಂಥ ರುದ್ರನಾಯಕನ ಪುತ್ರಿ ಅನಸೂಯಾಳಿಗೆ ಶಾಮನ ವಶವಾಗುವುದರಲ್ಲಿ ನನ್ನ ಪಾತ್ರವೂ ಇರುವುದು. ಕನ್ನೈದಿಲೆಗಳನ್ನು ಚಂದಿರನು ಅರಳಿಸುವ ರೀತಿಯಲ್ಲಿಯೇ ಆಕೆಯು ಅವನ ಮನಸ್ಸನ್ನು ಅರಳಿಸುವಲ್ಲಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ನೀಡಿದ ಸಹಕಾರ, ತೋರಿಸಿದ ಅನುಭೂತಿ ಇವ್ಯಾವುದನ್ನು ನಾನು ಅಲ್ಲಗಳೇಯಲಾರೆನು. ಅವನ ಹುಬ್ಬುಗಳಲ್ಲಿ ಕುಣಿಯುತ್ತಿದ್ದ ಚಂಚಲತೆಯನ್ನು ನಾನು ಗುಟ್ಟಾಗಿ ಆಸ್ವಾದಿಸುತ್ತಿದ್ದೆನು. ವಿಷಯ ಭೋಗದ ಬಯಕೆಯಿಂದ ಅವನು‌ಒದ್ದಾಡುತ್ತಿದ್ದುದನ್ನು ನೋಡಿ ನಾನು ಒಳಗೊಳಗೇ ಸಂತೋಷ ಪಡುತ್ತಿದ್ದೆನು. ಇಂದ್ರಿಯಗಳ ವೇಗವನ್ನು ನಿಯಂತ್ರಿಸುವ ಶಕ್ತಿ ನಿಶ್ಚಿತವಾದ ಯಾವ ಬ್ರಹ್ಮವಸ್ತುವಿಗೂ ಇಲ್ಲವೆಂಬುದನ್ನು ನಾನು ಅನುಭವ ವೇದ್ಯವಾಗಿ ಬಲ್ಲವನಾಗಿದ್ದೆನು. ಕಲ್ಪವೃಕ್ಷವಿರುವೆಡೆಯಲ್ಲಿ ಕೇವಲ ಪ್ರಾಣಾಯಾಮ ಮಾಡುತ್ತ ಕೂಡ್ರುವವರನ್ನು ಕಂಡರೆ, ಚಿನ್ನದ ಬಣ್ಣದ ಕಮಲ ಪರಾಗಗಳಿರುವೆದೆಯಲ್ಲಿ ಮಂತ್ರ ಹೇಳುತ್ತ ಮೌನವಾಗಿರುವವರನ್ನು ಕಂಡರೆ, ಅದ್ಭುತವಾದ ರೂಪವತಿಯರಿವೆಡೆಯಲ್ಲಿ ಜಿತೇಂದ್ರಿಯರಂತೆ ವರ್ತಿಸುವರನ್ನು ಕಂಡರೆ ನನಗೆ ಅಪರಿಮಿತವಾದ ಸಿಟ್ಟು ಬರುವುದೆಂಬ ಸಂಗತಿ ಪ್ರಾಯಶಃ ಈ ಪ್ರಪಂಚದಲ್ಲಿ ನನಗಲ್ಲದೆ ಇನ್ನೊಬ್ಬರಿಗೆ ತಿಳಿಯದು. ಎಷ್ಟಾದರೂ ನಾನುಶತ್ರುಗಳ ನೆಲೆಯಲ್ಲಿ ಕಾಲುಗಳನ್ನಿಟ್ಟು ಬದುಕಿದೆನೆಂಬ ಸಂಗತಿ ಕೂಡಾ ಅಷ್ಟೇ ನಿಜವು. ಒಂದು ರೀತಿ ಹೇಳಬೇಕೆಂದರೆ ಆ ಕ್ಷಣದವರೆಗೆ ನಾನು ಇಂಥವನೆಂದು ನನಗೇ ಗೊಟ್ಟಿರಲಿಲ್ಲವೆಂದು ಹೇಳಿದರೆ ವಿವಿಧ ಕಳಾ ಪಂಡಿತರಾದ ನಿಮಗೆ ಆಶ್ಚರ್ಯವಾಗಬಹುದು. ಧ್ಯಾನವೆಂಬ ಹಗ್ಗದಿಂದ ಮನಸ್ಸೆಂಬ ಆನೆಯನ್ನು ಎಷ್ಟು ದಿನ ಕಟ್ಟಿಹಾಕಿರಲು ಸಾಧ್ಯ ಎಂಬ ಸತ್ಯದ ಸಾಕ್ಷಾತ್ಕಾರವಾದದ್ದು ಆ ಕ್ಷಣವೆ. ಮಾಯಾ ಮೋಹಿತನಾದ ದುರ್ದೈವಿ ಮಾನವನೋರ್ವನು ನನ್ನೊಳಗೆ ಅಡಗಿಕೊಂಡಿರುವನೆಂದು ಅರ್ಥವಾದದ್ದು ಆ ಕ್ಷಣವೆ! ಆ ಸತ್ಯವನ್ನು ನಿಸ್ಸಂಕೋಚವಾಗಿ ಹೇಳಲಿಕ್ಕೆ ತಕ್ಕುದಾದ ವಯಸ್ಸು-ತಲುಪಿರುವ ನಾನು ಹಿಂಜರಿಯುವುದಾದರೂ ಯಾಕೆ? ಅಲ್ಲವೆ? ಎಷ್ಟಿದ್ದರೂ ನಾನು ಮೋಡಗಳ ಸಮೂಹದೊಳಗಡಗಿರುವ ನೀರಿನಂಥವನು. ರೋಗಗಳ ಭಯದಿಂದಾಗಿ ಸುಖವನ್ನು, ಕೆಟ್ಟಹೆಸರಿಂದಾಗಿ ಕುಲವನ್ನೂ; ಪ್ರತಿವಾದಿಗಳ ಭಯದಿಂದಾಗಿ ಶಾಸ್ತ್ರಗಳನ್ನೂ; ಶತ್ರುಗಳ ಭಯದಿಂದಾಗಿ ಪರಾಕ್ರಮವನ್ನೂ; ಯಮನ ಭಯದಿಂದಾಗಿ ದೇಹವನ್ನೂ; ದೈನ್ಯತೆಯ ಭಯದಿಂದಾಗಿ ಮಾನವನ್ನೂ; ದುಷ್ಟರ ಭಯದಿಂದಾಗಿ ಗುಣವನ್ನೂ; ಮುಪ್ಪಿನ ಭಯದಿಂದಾಗಿ ರೂಪವನ್ನೂ; ಸಮಸ್ತ ವಸ್ತುಗಳ ಭಯದಿಂದಾಗಿ ಭೂಮಿಯನ್ನೂ; ವೈರಾಗ್ಯದ ಭಯದಿಂದಾಗಿ ಬದುಕನ್ನೂ ದೂರವಿಟ್ಟು ಮುನಿಯ ಶಾಂತತೆಯ ಸೋಗು ಹಾಕಿ ಬದುಕುತ್ತಿದ್ದ ನಾನು ನನ್ನಿಂದ ಅನಾವರಣಗೊಂಡಿದ್ದು ಆ ಕ್ಷಣದಿಂದಾಗಿಯೇ. ಆ ಕ್ಷಣವಾದರೂ ಎಂಥಾದ್ದು? ನಿರ್ಮಲ ಮೋಹದೊಡಲಿನಿಂದ ಹುಟ್ಟಿದಂಥ ಪರಬ್ರಹ್ಮ ಸ್ವರೂಪವಾದ ಜ್ಞಾನವನ್ನು ಆ ಕ್ಷಣ ತೆರೆದು ತೋರಿಸಿಬಿಟ್ಟಿತು. ರಾವಣಾಂತಃಪುರದ ಸ್ತ್ರೀಯರನ್ನು ನೋಡಿದೊಡನೆ ವಾಯುಪುತ್ರನಾದ ಹನುಮಂತನ ದೇಹದೊಳಗಡಗಿದ್ದ ಕಪಿಬುದ್ಧಿಯು ಬಲಿಷ್ಟಗೊಂಡು ಲಂಕಾದಹನವೇ ಇತ್ಯಾದಿ ಉಪದ್ವ್ಯಾಪಗಳಿಗೆ ಕಾರಣವಾಯಿತೋ, ಹಗೆಯೇ ನಾನು ನನ್ನ ಬದುಕಿನಲ್ಲಿ ಆ ಕ್ಷಣ ಎದುರಗದಿದ್ದಲ್ಲಿ ಅಸ್ವಾಭಿಕವೂ, ಕ್ರುತ್ರಿಮವೂ ಆದ ಶುಷ್ಕ ಬದುಕನ್ನೇ ಮುಂದುವರಿಸಿಕೊಂಡು ಹೋಗಿ ಎಂದೋ ಸತ್ತು ಬಿಟ್ಟಿರುತ್ತಿದ್ದೆನು. ಅಲ್ಲೂ ಸಲ್ಲದೆ, ಇಲ್ಲೂ ಸಲ್ಲದೆ, ಯತಿಯ ಮನಸ್ಸನ್ನೂ ಅಪಹರಿಸಿಬಿಡಬಹುದಾದಂಥ ಕ್ಷಣ ಅದಾಗಿತ್ತು. ಸೊಗಸಾಗಿ ಬಾಗಿದ ಶರೀರ ಪ್ರಶ್ನಿಸಿದಂಥ ಕ್ಷಣವದು. ಕೋಲನ್ನಾಶ್ರಯಿಸಿದ ನಡಿಗೆಯನ್ನು ಪ್ರಶ್ನಿಸಿದಂಥ ಕ್ಷಣವದು. ಶಬ್ದಗಳನ್ನು ಕೇಳಲಸಹಾಯಕವಾದ ಕಿವಿಗಳನ್ನು ಪ್ರಶ್ನಿಸಿದಂಥ ಕ್ಷಣವದು. ನರೆಯತೊಡಗಿದ ತಲೆಯನ್ನು ಪ್ರಶ್ನಿಸಿದಂಥ ಕ್ಷಣವದು. ಪೊರೆ ಮುಚ್ಚಿದ ಕಣ್ಣುಗಳನ್ನು ಪ್ರಶ್ನಿಸಿದಂಥ ಕ್ಷಣವದು. ಶಬ್ದಕ್ಕೆವಶವಾದ ಜಿಂಕೆಯನ್ನೂ ಸ್ಪರ್ಶಕ್ಕೆ ವಶವಾದ ಆನೆಯನ್ನೂ ರೂಪಕ್ಕೆ ವಶವಾದ ಪತಂಗವನ್ನೂ, ರಸಕ್ಕೆ ವಶವಾದ ಮೀನನ್ನೂ; ಗಂಧಕ್ಕೆ ವಶವಾದ ದುಂಬಿಯನ್ನೂ; ಇವೆಲ್ಲಗಳನ್ನು ಜೀವಚ್ಛವದ ರೀತಿಯಲ್ಲಿ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ನನ್ನನ್ನು ನನ್ನಂಥವರಿಗೆ ಯಕ್ಷ ಪ್ರಶ್ನೆ ಹಾಕಿದ ಕ್ಶಣ ಅದಾಗಿತ್ತು. +ಆಯುರಾರೋಗ್ಯ, ಸಮೃದ್ಧಿ, ಸಂತಾನ, ಸದ್ಗತಿಗಳನ್ನು ದಯಪಾಲಿಸಲಿಕ್ಕೆಂದೇ ನಿಯಮಿತರಾಗಿದ್ದಂಥ ಕಾಂತಿಯುಳ್ಳವರೂ, ಪ್ರಕಾಶಮಾನರೂ ಆದಂಥ ದೇವತೆಗಳನ್ನು ಕುರಿತಂಥ ಮಂತ್ರಗಳನ್ನು ಕಾಂತಿಯುಕ್ತ ಸಂಜೆಯ ಬೆಳಕಿನಲ್ಲಿ ಹೇಳಿ ಮುಗಿಸಿ ಸ್ನೇಹ, ದಯೆ, ದಾಕ್ಷಿಣ್ಯ, ಅನುಕಂಪ, ಪ್ರೀತಿ, ಔದಾರ್ಯಗಳಿಗೆ ಸದೃಶವಾದ ಹೆಜ್ಜೆ ಇಕ್ಕುತ್ತ ಹೊರಟಿದ್ದ ಆದಿನ ಇಂಥದೇ ಎಂದು ಹೇಳಲು ನಾನು ಈ ಕ್ಷಣ ಅಶಕ್ಯನಾಗಿರುವೆನು. ಪುಣ್ಯ ಕಾಲವೋ, ವಿಷವತ್ ಪುಣ್ಯ ಕಾಲವೋ ಅದು ಎಂದು ನಿರ್ದಿಷ್ಟವಾಗಿ ಹೇಳಲಾರೆನು. ವ್ಯತಿಪಾತ ಶ್ರಾದ್ಧಕ್ಕೂ ಒಂದು ದಿನ ಮೊದಲು ಎಂದು ಮಾತ್ರ ಹೇಳಬಲ್ಲೆನು. ಗ್ರಾಮದಲ್ಲಿ ತಿಲೋದಕಗಳಿಗೆ ಅಭಾವವೇರ್ಪಟ್ಟಿದ್ದ ಹಿಂದಿನ ದಿನವೆಂದು ಮಾತ್ರ ಖಚಿತವಾಗಿ ಹೇಳಬಲ್ಲೆನು. ಆ ದಿನದ ಬಗ್ಗೆ ಇನ್ನೂ ಖಚಿತವಾಗಿ ಹೇಳುವುದಾದರೆ ಹಲಕುಂದಿ ವೆಂಕೋಬರಾಯರ ಮನೆಯಲ್ಲಿ ಬ್ರಾಹ್ಮಣ ವಿಸರ್ಜನೆಯ ಅಪಥ್ಯದಿಂದಾಗಿ ಅವರು ಮಾಡಿದ್ದ ಊಟದ ಎಂಜಲೆಲೆಗಳು ಹಾಗೆ ಬಿಕೋ ಎನ್ನುತ್ತ ಬಿದ್ದಿದ್ದವು. ಎಂಜಲೆಗಳನ್ನು ಕಾದೂ, ಕಾದೂ ಮೊಣಕಾಲುಚಿಪ್ಪು ಹಿಡಿದುಕೊಂಡು ಬಿಟ್ಟಿರುವುದೆಂದೂ ವೈಶ್ವ ದೇವಾದಿ ನಿತ್ಯಕರ್ಮ ಪೂರೈಸಿ ಮನೆಯ ಚಟುವಟಿಕೆಗಳಿಗೆಸಹಜ ರೂಪಕೊಡಬೇಕೆಂದೂ, ರಾಯರು ಕುಂಟುತ್ತ, ಎಡವುತ್ತ ಬಂದು ಮಧ್ಯಾನ್ಹ ಹೇಳಿಹೋಗಿದ್ದರು. ಕಲೆಕ್ಟರಿಗೆ ಸರಿಸಮಾನ ಹುದ್ದೆ ಹೊಂದಿದವರಾದ ಅವರು ಉದಯದಿಂದ ಅಪರಾಹ್ನದವರೆಗೆ ಎಂಜಲೆಲೆ ಕಾಯುತ್ತ ಕೂತಿದ್ದಿದು ನನಗೆ ಸರಿ ಕಾರಾದಿರಲಾಗಿ ಆದಷ್ಟು ಲಗುಬಗೆಯಿಂದ ಹೋಗಿ ವೈಶ್ವ ದೇವಾದಿ ನಿತ್ಯಕರ್ಮಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಿ ಅವರನ್ನು ಕರ್ಮದಿಂದ ಮುಕ್ತಗೊಳಿಸಬೇಕೆಂದು ನಿಸ್ಚಯಿಸಿಯೇ ವಿಶೇಷ ಸಂಧ್ಯಾವಂದನೆ ಪೂರೈಸಿದ್ದೆನು. ಬಲಿಯನ್ನು ಶ್ರಾದ್ಧದ ಕೊನೆಯಲ್ಲಿ ಕೊಡುವುದೋ ಅಥವಾ ವಿಕಿರಿದ ಅನಂತರ ಕೊಡುವುದೋ? ಇದರ ಬಗ್ಗೆ ಮನುವಾಗಲೀ ಮೇಧಾತಿಥಿಗಳಾಗಲೀ ಏನು ಹೇಳಿರುವರೆಂಬುದನ್ನು ಅವರ ಸ್ಮೃತಿಗಳ ಸಹಾಯದಿಂದ ಶೋದಿಸಿ ಕಾರ್ಯಪ್ರವೃತ್ತನಾಗಬೇಕೆಂದು ಯೋಚಿಸುತ್ತ ನಡೆಯುತ್ತಿದ್ದ ನಾನು ಖಚಿತವಾದ ಹೆಜ್ಜೆ ಇಕ್ಕುತ್ತಿರಲಿಲ್ಲವು. ಶ್ರಾದ್ಧಾಲೋಚನೆಯಿಂದ ಮುಕ್ತವಾಗುವ ನಿಮಿತ್ತ ಸೂರ್ಯಗತವಾದ ಬ್ರಹ್ಮಸ್ವರೂಪಿಣಿಯಾದ ಸಂಧ್ಯಾರೂಪಿಣಿಯನ್ನು ಪ್ರತಿ ಹೆಜ್ಜೆಗೊಮ್ಮೊಮ್ಮೆ ಸ್ಮರಣ ಮಾಡುತ್ತಿದ್ದೆನು. ತತ್ವಗಳೇ ಆಸನವಾಗಿ ಉಳ್ಳವಳಾದ ತತ್ವಾಸನೆಯು ಇನ್ನೇನು ನನ್ನ ಮನಸ್ಸಿಗೆ ಶಾಂತಿ ದಯಪಾಲಿಸಿದಳು., ಮೂವತ್ತಾರು ತತ್ವಗಳಿಗೆ ಅಧಿದೇವತೆಯಾದ ಪರಮೇಶ್ವರನ ಲಿಂಗಮೂರ್ತಿಯನ್ನು ದರ್ಶಿಸಿ ಕೃತಾರ್ಥನಾಗಬೇಕೆಂದು ನಿಸ್ಚಯಿಸಿ ಅನತಿ ದೂರದಲ್ಲಿಯೇ ಕಲಿ ದೇವನಾಥ ನೆಲೆಗೊಂಡಿರುವ ಶಿವ ದೇಗುಲವಿರುವುದು ಆ ಕೂಡಲೆ ಸ್ಮರಣೆಗೆ ಬಂತು. ಸಾಮಾನ್ಯ ಶಿವ ಲಿಂಗವಲ್ಲವದು; ಕದಂಬ, ಚಾಲುಕ್ಯ ಹೊಯ್ಸಳರೇ ಮೊದಲಾದ ಶಕ್ತಿ ಸಂಪನ್ನರಿಮ್ದ ಪೂಜಿಸಿ ಕೊಂಡ ಊರ್ಧ್ವಲಿಂಗ ಮೂರ್ತಿಯದು. ಹಿರಣ್ಯಗರ್ಭಾಃ ಸಮವರ್ತಾಗ್ರೇ ಭೂತ ಸ್ವಜಾತಃ ಪತಿರೇಕ ಆಸೀತ್ ಎಂದು ಧ್ಯಾನಿಸುತ್ತ ಹೋಗಿ ಸೃಷ್ಟಿಯನ್ನು ಉದ್ಭವಿಸಿದಂತವನೂ, ಸ್ಥಾಪಿಸಿದಂತವನೂ ಆದಂಥ ದೇವತಾಮೂರ್ತಿ ನೆಲೆಗೊಂಡಿರುವ ದೇವಳದ ಪ್ರಾಣ್ಗಣ ಪ್ರವೇಶಿಸಿದೆನು. ನನ್ನ ಮತ್ತು ಆ ದೇವಳದ ಸಂಬಂಧಸೂತ್ರ ಆ ಕ್ಷಣ ಮತ್ತಷ್ಟು ಹಿಗ್ಗಿದಂತೆ ಭಾಸವಾಯಿತು. ವಿಶ್ವ ದೇವೈಕ್ಯ ತತ್ವವೇ ಸಾಕಾರಗೊಂಡಿದ್ದ ಆ ದೇವಳದ ಗರ್ಭಗುಡಿ ಸಮೀಪಿಸಬೇಕೆನ್ನುವಷ್ಟರಲ್ಲಿ ಸರಸ, ಪರಿಮಳ, ಗಂಧ, ಕರ್ಪೂರ ಇಲ್ಲೆಲ್ಲೋ ಹರಡಿದೆ! ಅದರ ಮೂಲ ಯಾವುದು! ಎಂಬ ಪ್ರಶ್ನೆ ತೇಲಿ ಬಂದು ಸುತ್ತಲೂ ಒಮ್ಮೆ ನೋಡಿದೆ. ಚಿನ್ನವನ್ನು ಸಂಪಾದಿಸುವಲ್ಲಿ ನಿಪುಣನಾದ ಅಕ್ಕಸಾಲಿಗನು ಕಲ್ಲಿನ ನೆಲದಲ್ಲಿ ತನ್ನ ಅರಿವಿನಿಂದ ಹೇಗೆ ಚಿನ್ನವನ್ನು ಗುರಿತಿಸುವನೋಫ್ ಹಾಗೆಯೆ ನಾನೂ ಪರಿಮಳ ಸದೃಶವಾದ ಧ್ವನಿ ತರಂಗಗಳು ತೇಲಿ ಬರುತ್ತಿದ್ದ ದಿಕ್ಕಿನ ಕಡೆ ಕಿವಿ ಚಾಚಿದೆನು. ನನಗೆ ಆಗ ಹೇಗೆ ಅರಿವಗಬೇಕು! ಶುದ್ಧವಾದುದೂ; ಎಳೆಯ ಹುಲ್ಲನ್ನು ತಿನುವುದೂ; ಬಹಳ ದೂರ ಓಡಲು ಶಕ್ಯವಾದುದೂ ಆದ ಜಿಂಕೆಯು ಬೇಟೆಗಾರನ ಹಾಡಿನ ಹಾದಿ ಹಿಡಿದು ಹೇಗೆ ಬಲೆಗೆ ಬೀಳುವುದೋ ಹಾಗೆಯೇ ನಾನು ಇಂಪಾದ ಧ್ವನಿ ಬರುತ್ತಿದ್ದ ಆನಂದ ನಿಧಿಯಂತಿದ್ದ ದಿಕಿನ ಕಡೆ ಒಂದೊಂದೆ ಹೆಜ್ಜೆ ಇಕ್ಕುತ್ತ ವ್ಡೆದೆನು. ಚಾಲುಕ್ಯರ ಮತ್ತು ವಿಜಯನಗರದಸರ ಎರಡು ಶಿಲಾಶಾಸನಗಳ ನಡುವೆ ಇದ್ದ ಪುಟ್ಟ ಕಿಂಡಿಯ ಮೂಲಕ ಇಣುಕಿದೆನು. ಚಂದ್ರಮಂಡಲ ಸದೃಶವದನ ನಗೆಯ ಸೂಸುತ್ತಿದ್ದ ಒಂದು ದೇಹವು ಶಾಮನದಾಗಿರಲು, ಚಂದನದ್ರವದಿಂದ ಲಿಪ್ತವಾಗಿರುವ ಅಂಗವುಳ್ಳವಳಾಗಿದ್ದ ಇನ್ನೊಂದು ದೇಹವು ಅನಸೂಯಳದಾಗಿತ್ತು. ಸುಕುಮಾರ ಅಂಗವಿನ್ಯಾಸದವಳಾದ ಆಕೆಯು ಅವನಿಗೆ ಅಂದರೆ ನನ್ನ ಮೊಮ್ಮಗನಿಗೆ, ಅಂದರೆ ನನ್ನ ಮಗನ ಮಗನಿಗೆ ಮುದ್ದು ಕೊಡುತ್ತಿರುವುದನ್ನು ನೋಡಿದೊಡನೆ ನಾನು ಆ ಕ್ಷಣ ಅನಿವರ್ಚನೀಯವಾದ ಝಂಝಾವಾತಕ್ಕೆ ಸಿಲುಕಿದ ತರಗೆಲೆಯಂತಾಗಿಬಿಟ್ಟೆನು. ವಿಸ್ತಾರವೂ, ಬಲಿಷ್ಟವೂ ಆದ ಸಮುದ್ರವು ಆ ಕ್ಷಣ ಒಂದು ಪುಟ್ಟ ತೊರೆಯಂತೆ ಮಾರ್ಪಟ್ಟಂತೆ ಭಾಸವಾಯಿತು. ಒಣ ಮರಕ್ಕೆ ಹತ್ತಿದ ಬೆಂಕಿಯು ಇಡೀ ಕಾಡನ್ನೇ ಬಲಿತೆಗೆದುಕೊಳ್ಳುವಂತೆಯೇ ದುಷ್‌ಪುತ್ರನಾದ ಶಾಮನಿಂದ ಇಡೀ ನಮ್ಮ ಶ್ರೇಷ್ಠ ಕುಲವೇ ನಾಶವಾಗುತ್ತಿದೆಯಲ್ಲಾ… ಆಶೆ ಎಂಬ ನದಿಯಲ್ಲಿ ವಾಸಿಸುತ್ತಿರುವ ಕಾಮವೆಂಬ ಮೊಸಳೆಗೆ ಬಲಿಯಾಗುತ್ತಿರುವುದಲ್ಲಾ… ಶರೀರದೊಳಗೇ ಇದ್ದು ವಾಸಿಸುತ್ತಿರುವ ದೊಡ್ಡ ಶತ್ರುವಾದ ಕಾಮವನ್ನು ಅಧ್ಯಾತ್ಮದ ಅಸ್ತ್ರದಿಂದ ಶಾಮನು ಕೊಲ್ಲಲಾಗದೇ ಹೋದನಲ್ಲಾ… ಎಂದಿತ್ಯಾದಿ ಮಮ್ಮಲನೆ ಮರುಗುತ್ತ ನಾನು ಮನೆಗೆ ಮರಳಿ ಕೋಣೆ ಪ್ರವೇಶಿಸಿ ಕದ ಮುಚ್ಚಿ ಭದ್ರಪಡಿಸಿ ‘ಆತ್ಮನ್ನೇ ಮಾತ್ಮನೇ ತುಷ್ಟಾ ತುಷ್ಟಃ ಸ್ಥಿತ ಪ್ರಜ್ಞಸ್ತದೋಚ್ಯತೇ’ ಎಂಬ ಸ್ಥಿತಪ್ರಜ್ಞ ಸಮ್ಬಂಧೀ ಗೀತಾಶ್ಲೋಕವನ್ನು ಉಚ್ಚರಿಸುವ ಮತ್ತು ಅದರರ್ಥದಾಳಕ್ಕಿಳಿಯುವ ಪ್ರಯತ್ನಕ್ಕೆ ತೊಡಗಿದೆನು. ತನ್ನ ಹೊಳಪು ಮೊದಲಾದ ಗುಣಗಳಿಂದ ಯಕಃಶ್ಚಿತ್ ಚಂದ್ರನು ಈಶ್ವರನ ತಲೆಯನ್ನು ಹತ್ತಿ ಕೂತಂತಯೇ ನೋಡಿದ ಆದೃಷ್ಯವು ಪದೇಪದೇ ನೆನಪಾಗಿ ನನ್ನ ಏಕಾಗ್ರತೆಯ ಮೇಲೆ ಧಾಳಿ ಮಾಡಿತು. ಎಷ್ಟು ಪ್ರಯತ್ನಿಸಿದರೂ ಆ ದೃಶ್ಯ ನನ್ನಿಂದ ಮರೆಯಾಗಲೇ ಇಲ್ಲ. ಪಾರದರ್ಶಕ ಗಾಜಿನ ಕೊಳವೆಯೊಳಗೆ ವಸ್ತುವಿನ ರೂಪ ಅಸಂಖ್ಯಾತವಾಗುವಂತೆ ಆ ದೃಶ್ಯ ನನ್ನ ಮನದಲ್ಲಿ ಪುರುಷಸೂಕ್ತದಂತೆ ಸಾವಿರಪಟ್ಟು ಲಕ್ಷಪಟ್ಟು ಕೋಟಿಪಟ್ಟು ವೃದ್ಧಿಯಾಗತೊಡಗಿತು. ಆ ದೃಶ್ಯದ ಜ್ವಾಲೆಯಿಂದ ಅಂತರಂಗದ ಸಾತ್ವಿಕ ವೃಕ್ಷಗಳು ಒಂದೊಂದು ಹೊತ್ತಿ ಉರ್ಯತೊಡಗಿದವು. ನೀತಿ ಸಂಹಿತೆಯ ಎಳೆ ಲತೆಗಳು ಕರಕಿಟ್ಟು ಧರೆಗೆರತೊಡಗಿದವು. ಎಷ್ಟು ಪ್ರಯತ್ನಿಸಿದರೂ ಚಂಡಮಾರುತಕ್ಕೆ ಸಿಲುಕಿದ್ದ ನನ್ನ ಹ್ರುದಯದ ದೋಣಿಯನ್ನು ನಿಯಂತ್ರಿಸುವುದಾಗಲಿಲ್ಲ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರಿ ಅಕ್ಕಿ ಹೇಗೆ ಮೊಳೆಯುವುದಿಲ್ಲವೋ ಹಾಗೆಯೇ ಇನ್ನೊರ್ವರಿಗೆ ಹೇಳಿಕೊಳ್ಳದ ಹೊರತು ಝಂಜಾವಾತವನ್ನು ತಂಗಾಳಿಯಾಗಿ ಮಾರ್ಪಡಿಸುವುದು ಅಸಾಧ್ಯವೆಂಬ ಅರಿವು ಮೂಡುತ್ತಿರುವಾಗ ಹೊರಗಡೆ ಸೊಸೆಯಾದ ಅಲಮೇಲುವು ‘ಮಾವನವ್ರೆ… ಮಾವನವ್ರೇ ಬಾಗಿಲು ತೆರೀರಿ… ನನಗ್ಯಾಕೋ ಭಯವಾಗ್ತಿದೆ’ ಎಂದು ಕೂಗಿಕೊಳ್ಳುವುದು ಕೇಳಿಸಿತು. ಸಾಧು ಸಮಾಗಮವಾದೊಡನೆ ಅಲೌಕಿಕ ಫಲ ದಯಪಾಲಿಸುವ ತೀರ್ಥಕ್ಷೇತ್ರದಂಥ ಮಹಿಳೆ ಆಕೆ… ಕತ್ತರಿಸುವ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿಸುವ ಶ್ರೀಗಂಧದ ವೃಕ್ಷದಂಥ ಮಹಿಳೆ ಆಕೆ. ಸಂಸಾರವೆಂಬ ಕಡಲಿನ ಉಪ್ಪು ನೀರನ್ನು ಕುಡಿದರೂ ಸಿಹಿಯಾದ ನೀರನ್ನು ಮುಗಿಲಿನಿಂದ ಸುರಿಸುವ ಮೋಡದಂಥ ಮಹಿಳೆ ಆಕೆ. ಆಕೆ ವೈಧವ್ಯದ ಪೂರ್ವದಲ್ಲಿ ಗಂಡನಿಂದ ಸುಖ ಅನುಭವಿಸಲಿಲ್ಲ. ವೈಧವ್ಯದ ಭಾರಿ ಮತ್ತು ಭಯಂಕರ ಸಂಕೇತಗಳನ್ನು ನಖಷಿಕಾಂತ ಆಭರಣೋಪಾದಿಯಲ್ಲಿ ಧರಿಸಿ ವಿಲವಿಲ ಒದ್ದಾಡುತ್ತಿರುವ ಆಕೆಗೆ ಬದುಕಿನ ಮರುಹುಟ್ಟು ನೀಡುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ. ಕಗ್ಗಾತ್ತಲ ಗವಿಯಲ್ಲಿ ಹಾವಾಗಿರುವುದು ಉತ್ತಮ. ಕಲ್ಲಿನ ನಡುವೆ ಹುಳುವಾಗಿರುವುದು ಉತ್ತಮ. ಮರಳುಗಾಡಿನಲ್ಲಿ ಕುಂಟು ಮೃಗವಾಗಿರುವುದೂ ಉತ್ತಮ. ಆದರೆ ನಮ್ಮಂಥ ಕರ್ಮಠರ ಮನೆಯಲ್ಲಿ ಹೆಣ್ಣಾಗಿಹುಟ್ಟುವುದಾಗಲಿ; ವಿಧವೆಯಾಗಿರುವುದಾಗಲೀ ಅತಿ ದುರಂತದ ಸಂಗತಿಯಾಗಿರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪರಮೇಶ್ವರ ಶಾಸ್ತ್ರಿಯಂಥ ನನ್ನಂಥವರನ್ನು ಬಕ ದಂಭಕ್ಕೆ ಹೋಲಿಸಬಹುದು. ಅಂದರೆ ವ್ರತನಿಯಮ ತೋರಿಸುವ ದಂಭ ಎಂದು ಅರ್ಥ. ಅಂದರೆ ಅದು ಬೇಡ ಇದು ಬೇಡ ಎಂದು ಹಿಂಜರಿಯುವ ಜಾಯಮಾನವನ್ನು ಪ್ರಚುರಪಡಿಸುತ್ತಲೇ ಇರುವುದು. ನಡೆಯುವುದಾದರೆ ಮೆಲ್ಲಗೆ ನಡೆಯಬೇಕು, ಕಣ್ಣನ್ನು ಅತ್ತಿತ್ತ ಚಲಿಸಲಿಕ್ಕೆ ಅವಕಾಶ ಕೊಡಬಾರದು… ಆದ್ದರಿಂದ ನನ್ನಂಥವರನ್ನು ಘೋರವಾದ ಮಾರ್ಜಾಲದಂಭವೆಂದು ಕರೆದರೂ ಸರಿಯೇ, ಕೌ ಮುಚ್ಚಿ ತೆರೆಯುವಷ್ಟರಲ್ಲಿ ಪದ್ಮನಾಭ ಸೋದರಿಯೇ ಅಲಮೇಲುವಿನ ಹೆಸರಿನಲ್ಲಿ ನನ್ನ ಮಗನಿಗೆ ಹೆಂಡತಿಯಾಗಿ ; ನನಗೆ ಸೊಸೆಯಾಗಿ ನನ್ನ ಮೊಮ್ಮಗನಿಗೆ ತಾಯಿಯಾಗಿ, ಬ್ರಾಹ್ಮಣ್ಯದ ಉಪಾಸಕಿಯಾಗಿದ್ದು ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಪಂಚದಶೀ ಮಂತ್ರದ ವಾಗ್ ಭವಕೂಟವೇ ವೈಧವ್ಯದ ರೂಪ ಧರಿಸಿ ಬಾಗಿಲು ತಟ್ಟುತ್ತಿರುವಂತೆ ಭಾಸವಾಯಿತು. ಉನ್ಮೇಷ, ನಿಮಿಷಗಳಲ್ಲದ ಸಾಕ್ಷಾತ್ ದೇವಿಯೇ ಎದೆಗವುಚಿಕ್ಂಡು ಸ್ವಾಂತನಪಡಿಸಲೋಸುಗ ಬಾಗಿಲು ತಟ್ಟುತ್ತಿರುವಳೆಂದು ಭಾಸವಾಯಿತು. ಋತಂಭರಾ ತತ್ರ ಪ್ರಜ್ಞಾಽಽಽ ಎಂದು ನನಗರಿವಿಲ್ಲದಂತೆ ಉದ್ಗರಿಸಿದೆ. ತುರೀಯಳೂ ಪಡೆಯುವುದಕ್ಕೆ ಅಸಾಧ್ಯಳೂ, ನಿಸ್ಸೀಮ ಮಹಿಮೆಯುಳ್ಳವಳಾದ ಭೋಗ ಸಂಭವೇ… ಬಂದೇ ತಡೆಯೇ ತಾಯಿ… ಶಬ್ದ ಮಾಡದೆ ವರ್ಷ‌ಋತುವಿನಲ್ಲಿ ಮೋಡಗಳಂತೆ ಮಳೆ ಸುರಿಸು… ನನ್ನ ಒಳ ಹೊರಗು ತಂಪು ನಿರ್ಮಿಸು… ವೈಧವ್ಯದ ಮಣ್ಣೊಳಗೆ ಅವಿತಿದ್ದರೂಶಾಂತಿ ಮತ್ತು ಬೆಲೆ ಕಡಿಮೆಯಾಗದ ರತ್ನ ಸಮಾನಳಾದ ನೀನು ಒಳಪ್ರವೇಶಿಸಲುಬಾಗಿಲು ತಟ್ಟುವುದು ಸಾಮಾನ್ಯ ಸಂಗತಿಯಲ್ಲಮ್ಮಾ… ಅಗೆದ್ ಅಗೆದೂ ಆಹಾರದ ರುಚಿಯನ್ನು ನಾಲಿಗೆಗೆ ವರ್ಗಾಯಿಸುವ ದಂತಪಂಕ್ತಿಯಂಥವಳು ನೀನು… ಮಾತು, ಮನಸ್ಸು, ಕ್ರಿಯೆಗಳಲ್ಲಿ ತಾದ್ಯಾತ್ಮ ಹೊಂದಿರುವ ನಿನ್ನ ಮತ್ತು ನನ್ನ ನಡುವೆ ಅಡ್ಡ ಇರುವುದು ನತದೃಷ್ಟ ಹೊಸ್ತಿಲು ಮಾತ್ರ. ಹೊಸ್ತಿಲ ಹಂಗಿನಿಂದ ಕೋಣೆಯನ್ನು ನಿನಗಾಗಿ ಮುಕ್ತಗೊಳಿಸುವೆನು. ತಡೆಯಮ್ಮಾಽಽಽ ನಾನು ಹಾಗೆ ಹಿಂದೆಂದೂ ವಿಲವಿಲನೆ ಒದ್ದಾಡಿರಲಿಲ್ಲ ಎಂಬುದು ವೇದ್ಯವು.! ಸಂಪತ್ತಿನಲ್ಲಿ, ವಿಪತ್ತಿನಲ್ಲಿ, ಬರದಲ್ಲಿ, ಅರಿಷಡ್ವರ್ಗಗಳನ್ನು ಗೆಲ್ಲುವ ಪ್ರಸಂಗದಲ್ಲಿ, ಪಶ್ಚಾತ್ತಾಪದಲ್ಲಿ ಜೊತೆಯಲ್ಲಿ ನಿಂತಿರುವ ಮಹಾಸಾದ್ವಿಯ ಒಳಗೆ ಅಂತರಂಗದ ಒಳಗೆ ಬರಮಾಡಿಕೊಳ್ಳಬೇಕೆಂದು ಎದ್ದು ಲಗುಬಗೆಯಿಂದ ಹೊರಟು ಬಾಗಿಲನ್ನು ತೆಗೆದೆ. ಆಶ್ರಯರಹಿತಳೋರ್ವಳು ಆಶ್ರಯ ಬಯಸುತ್ತಿರುವಂತೆ ಒಳಬಂದಳು. ದೇಹದ ಅಣುವಿನಲ್ಲಿ ಗಾಬರಿ, ಭಯ ಪ್ರಕಟಿಸುತ್ತ ವಿಭೂತಿ ತಿಲಕವೇ ಮೊದಲಾದ ಸ್ರಕ್ಚಂದನಾದಿ ಗಳು ಬೆವರುಗುಂಟ ಕರಗಿ ನೀರಾಗಿ ಹರಿಯುತ್ತಿದ್ದ ನೊಸಲು ಮುಟ್ಟಿ “ಅಯ್ಯೋ” ಎಂದು ಉದ್ಗರಿಸಿದಳು. ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ ಅನುಗ್ರಹಗಲೆಂದೇ ಪಂಚಕೃತ್ಯಗಳಿಗಧಿದೇವತೆಯಾದ ಪಂಚಕೃತ್ಯ ನಾರಾಯಣಿಯೇ ನೊಸಲ ಸ್ಪರ್ಶಿಸಿ ನನ್ನ ದೇಹದ ವೇದಾಂಗ ಸೂತ್ರಗಳ ಅಂತರಧಿಕರಣವನ್ನೇ ನನ್ನ ದೇಹದೊಳಗಡೆ ಧಾರೆ ಎರೆಯುತ್ತಿರುವಳೆಂಬ ಭಾವನೆಯುಂಟಾಯಿತು. ಆಕೆಯ ಮುಖವನ್ನು ಭೊಗಸೆಯಲ್ಲಿ ಹಿಡಿದು ನೋಡಲು ಸೂರ್ಯಕೋಟಿ ಸಮಪ್ರಭೆಯಂತೆ ಕಣ್ಣು ಕುಕ್ಕಿದಳು. ಸಹಸ್ರ ಕಣ್ಣುಗಳುಳ್ಳ; ಸಹಸ್ರ ಪಾದಗಳುಳ್ಳ ಸಹಸ್ರ ಮುಖಗಳುಳ್ಳ, ಭಗವತಿಯ್ರ್ ನನ್ನ ಮೈ ನೇವರಿಸುತ್ತಿರುವಳೆಂದು ಆ ಕ್ಷಣ ಬಾಸವಾಯಿತು. . ಸಕಲವೇದ ಸಮೂಹವೆಂಬ ಮುತ್ತಿನ ಚಿಪ್ಪಿನಲ್ಲಿ ಅಂತರ್ಗತವಾದ ಮೌಕ್ತಿಕದ ದರುಶನ ಮಾಡಿಸಿದ ಕ್ಷಣವದು, ಆಪ್ಯಾಮಾನದಿಂದಲೂ; ಅಪಾರ ಕಕ್ಕುಲಾತಿಯಿಂದಲೂ ಆಕೆ ಎದೆ ಕಿಬ್ಬೊಟ್ಟೆ ಸವರುತ್ತಿರುವಾಗ ಲಕ್ಷ್ಮೀರ್ವಾಗಾದಿ ರೂಪೇಣ ನರ್ತಕೀವ ವಿಭಾತಿ ಯಾ… ಎಂದು ಸೂತ ಸಂಹಿತೆಯ ಶ್ಲೋಕವೊಂದು ನನ್ನ ಬಾಯಿಂದ ತಾನೇ ತಾನಾಗಿ ಹೊರಟಿತು. ರೇತಸ್ಸಿನ ಅಭಿಮಾನಿದೇವತೆಯೇ, ವೈಧವ್ಯದ ಸರ್ವವರ್ಣ ಶೋಭಿತಳಾಗಿ ಸ್ಪರ್ಶಿಸುತ್ತಿರುವಳೆಂದು ಭಾವಿಸಲು ನನ್ನೆದೆಯ ಒಳಗಿಂದ ವಿಮರ್ಶಾರೂಪದಲ್ಲಿರುವ ಸ್ವಾಭಾವಿಕ ಶಕ್ತಿಯೊಂದು ಜಾಗೃತಗೊಂಡು ತಪ್ಪಲಲ್ಲಿ ಹುದುಗಿದ್ದ ಮಾಣಿಕ್ಯ ಮುಕುಟಕ್ಕೆ ಕಿಡಿ ಹೊತ್ತಿಸಿತು. ದೇಹದ ಸಮಸ್ತ ಅಣು ಅಣುವು ಸಂಗೀತಾಲಾಪನೆ ಮಾಡಲಾರಂಭಿಸಿತು. ಅರವತ್ನಾಲ್ಕು ಅಕ್ಷರಗಳು ಇದ್ದಕ್ಕಿಂತಂತೆ ಜೊತೆಗೂಡಿ ದೇಹದ ಒಳತೋಟಿಯನ್ನಿ ಕಾವ್ಯ ಮಾಡಿದವು… ಅಸ್ಃಟರಲ್ಲಿ ತಂದೆಯೇಽಽಽ ಎಂದು ಉದ್ಗರಿಸಿದಳು. ಹಾಕಿನೀ ಮಂಡಲದ ಬಿಂದು ಸ್ಪೋಟಿಸಿ ಸಾವಿರಾರು ಕಾಮನ ಬಿಲ್ಲುಗಳನ್ನು ರಚಿಸಿರು. ಅದುವರೆಗೆ ಚೆಲ್ಲಾಟವಾಡುತ್ತಿದ್ದ ಸುವರ್ಣ ಮೃಗ ಇದ್ದಕ್ಕಿದ್ದಂತೆ ಚಿದಾಕಾಶಕ್ಕೆ ನೆಗೆದು ಮಾಯವಾಯಿತು. ಗಂಧರ್ವ ನಗರ ಪಾತಾಳಕ್ಕೆ ಕುಸಿದು ವಾಸ್ತವತೆಯ ನೆಲದಾಳದಿಂದ ತೇಲಿ ಬಂತು. ಆ ಕ್ಷಣ ಅಶರೀರಿಯಾದೆನು. ಮಗಳೇ ಎಂದು ಉದ್ಗರಿಸಿ ಆಕೆಯನ್ನು ಅಪ್ಪಿಕೊಂಡೆ. ಆಕೆಯ ಚಿದಗ್ನಿಕುಂಡಕ್ಕೆ ಸಾವಿರ ಸಾವಿರ ಅಶ್ರುಬಿಂದುಗಳನ್ನುದುರಿಸಿ ಜ್ಞಾನಾಗ್ನಿ ಒಡಲಿನಿಂದ ಮತ್ತೆ ಮೂಲ ಶರೀರ ಸಂಪಾದಿಸಿಕೊಂಡೆ. +ಆ ಕ್ಷಣ ನನ್ನೋಳಗೆ ಆಶ್ರಯ ಪಡೆದಿದ್ದು ಹೀಗೆ. ಆ ಕ್ಷಣ ನನ್ನ ಅಂತರಂಗದ ಗುಣರಾಶಿಯ ಮೇಲೆ ಕ್ರಮೇಣ ಹಿಡಿತ ಸಾಧಿದಿತು. ನನ್ನೆದೆಯ ಗಾಳಿಯನ್ನು ಕುಡಿದು ಕಾಳೋರಗಗಳು ವಿಜೃಂಭಿಸತೊಡಗಿದವು. ನನ್ನ ಅಂತರಂಗದ ಒಣಹುಲ್ಲನ್ನು ತಿಂದು ಕಾಡಾನೆಗಳು ಘೀಳಿಸತೊಡಗಿದವು. ಆ ಕ್ಷಣದಿಂದ ನನ್ನ ಮಗನಿಂದ ದೇಹ ಪಡೆದವನಾದ ಶಾಮನು ಕೇವಲ ನಾಮ ಮಾತ್ರ ಶಾಮನಾಗಿರದೆ ಜೀವಂತ ಪುರುಷಸೂಕ್ತವಾದನು. ತನ್ನ ದೇಹದ ಒಂದೊಂದು ಅಂಗದಿಂದ ಒಂದೊಂದು ಲೋಕ ಪ್ರಕಟಿಸ್ತೊಡಗಿದನು. ಪಿಂಡ ಶ್ರಾದ್ಧ ಮುಗಿಸಿಕೊಂಡ ನಂತರವೂ ನಿಸ್ತೇಜವಾಗಿ ನೆಲಕಚ್ಚಿದ ನೆನಪುಗಳು ಆ ಕ್ಷಣದಿಂದ ಸಾವಿರ ಕಣ್ಣಿನ ಬಣ್ಣ ಮುಡಿದು ಸಾವಿರ ಸಾವಿರ ನವಿಲುಗಳಾಗಿ ಕುಣಿಯತೊಡಗಿದವು. ಅಂದಿನಿಂದ ಶೋಕರಹಿತನಾದೆ… ಆ ಕ್ಷಣದಿಂದ ತನ್ನ ಅಮೃತಮಯ ಕಿರಣಗಳಿಂದ ಜಗತ್ತನ್ನು ಆನಂದಪಡಿಸುವ ಚಂದಿರ ಅರ್ಥವಾಗತೊಡಗಿದ. ಜಲಧಾರೆಗಳಿಮ್ದ ಭೂಮಿಗೆ ತಂಪೆರೆಯುವ ಮೇಘಗಳು ಅರ್ಥವಾಗತೊಡಗಿದವು. ಮೂರುಲೋಕಗಳಿಗೆ ಬೆಳಕು ತುಂಬಿದ ಹಗಲು ಉಣಬಡಿಸುವ ಸೂರ್ಯ ಅರ್ಥವಾಗತೊಡಗಿದ. ಯಾವ ಕಾರಣಗಳನ್ನೂ ಅಪೇಕ್ಷಿಸದ ಸಜ್ಜನರು ಅರ್ಥವಾಗತೊಡಗಿದರು. ಕಾಗೆ ಕಾಗೆಗಳನ್ನು ಕರೆಯುವಂತೆ ಆ ಕ್ಷಣವು ಭೂತಕಾಲದ ಸಾವಿರ ಸಾವಿರ ಕ್ಷಣಗಳನ್ನು ಕರೆತಂದಿತು. ಯಾವ ಪ್ರಕಾರವಾಗಿ ಅರ್ಥಬಾಹುಳ್ಯವೆಂಬುದು ಕಾವ್ಯಕ್ಕೆ ಬೇಕೋ; ಔದಾರ್ಯವೆಂಬುದು ಸಂಪತ್ತಿಗೆ ಬೇಕೋ; ಪರಾಕ್ರಮವೆಂಬು‌ಉ ಪ್ರಭುತ್ವಕ್ಕೆ ಬೇಕೋ ಹಾಗೆಯೇ ಭೂತ ಕಾಲವೆಂಬುದು ವರ್ತಮಾನಕ್ಕೆ ಅಗತ್ಯವೆಂಬ ತಿಳುವಳಿಕೆಯನ್ನು ನೀದಿದಂಥ ಕ್ಷಣವದು.ವೃದ್ಧಾಪ್ಯದಲ್ಲಿ ಬದುಕು ಹೊಸೆಯುತ್ತಿದ್ದವನಾದ ನನಗೆ ಎದುರಾಗಲು ಅವರ್ಚನೀಯ ಅನುಭವ ನೀಡಲು ಆ ಕ್ಷಣ ಮಾಡಿದ ಕರ್ರಮತ್ತು ಬಲು ದೊಡ್ಡದು ಎಂಬುದು ನನ್ನ ಭಾವನೆ ಅದ್ದರಿಂದ ಆ ಕ್ಷಣಕ್ಕೆ ಕೃತಕೃತ್ಯನಾಗಿರುವೆನು. +ಆ ಕ್ಷಣವೆಂಬ ಗಾಳವು ನನ್ನ ಬದುಕಿನ ಭೂತಕಾಲದೊಡಲಿನಿಂದ ತುಕ್ಕು ಹಿಡಿದ ನೆನಪುಗಳನ್ನು ಹೆಕ್ಕೀ ಹೆಕ್ಕೀ ತಿಕ್ಕಿ ತೊಳೆದು ರಮ್ಗು ಲೇಪಿಸಿ ಪೇರಿಸ ತೊಡಗಿತು. +ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಹಸ್ತ ಸಾಮುದ್ರಿಕ ನೋಡಿ ಕಾಲು ಊನಮಾಡಿಕೊಂಡಿರುವುದರ ಬಗೆಗೂ, ಬಗೆಬಗೆಯಾದ ಅವಮಾನಗಳಿಗೆ ತುತ್ತಾದ ನನ್ನ ಬಗ್ಗೆ ಅಗ್ರಹಾರದ ಕುಲಬಾಂಧವರು ನಾನಾ ರೀತಿಯಲ್ಲಿ ಮಾತಾಡಿಕೊಂಡುದು ಸರ್ವ ವೇದ್ಯವಾಗಿದೆ. ಆ ಘಟನೆಯನ್ನು ದುರ್ಘಟನೆ ಎಂಬಂತೆ ಸಮಸ್ತರು ಚಿತ್ರಿಸಿಕೊಂಡರು. ಆದರೆ ಅದರ ಬಗ್ಗೆ ನನಗೆ ತಿಲ ಮಾತ್ರ ಖೇದ ಇರುವಿದಿಲ್ಲ. ನನ್ನ ದೇಹದ ಉತ್ಸರ್ಜನ, ಉಪಾಕರ್ಮಗಳನ್ನು ಮಾಡಿದ ನಂತರವೂ ಉತ್ತರೋತ್ತರ ಸಮಾಜವು ಆ ಘಟನೆಯೊಂದಿಗೆ ನನ್ನನ್ನೂ; ನನ್ನೊಂದಿಗೆ ಆ ಘಟನೆಯನ್ನೂ ಈಡು ಜೋಡಾಗಿ ಬೆರೆಸಿ ಮಾತಾಡಬಹುದೆಂಬ ಕಾರಣಕ್ಕೆ ಸದರೀ ಉಯಿಲಿನಲ್ಲಿ ಅದನ್ನು ಸವಿಸ್ತಾರವಾಗಿ ಪ್ರಸ್ತಾಪಿಸುವುದು ನನಗೆ ಅನಿವಾರ್ಯವಾಗಿರುವುದು. ಕರ್ಮಠ ಗೆರೆಗಳನ್ನು ಉಲ್ಲಂಘಿಸುವ ಕೈಂಕರ್ಯಕ್ಕೆ ಸನ್ನದ್ದನಾಗಿರುವ ಮತ್ತು ನನ್ನ ಮರಣಾನಂತರವೂ ಸದಾ ಉಲ್ಲಂಘಿಸುತ್ತಲೇ ಹೋಗಿ ತನ್ನದೇ ಆದಂಥ ಲೌಕಿಕ ಪರಿಧಿಯನ್ನು ನಿರ್ಮಿಸಿಕೊಳ್ಳುವಲ್ಲಿ ಬಲು ಉತ್ಸುಕನಾಗಿರುವ ನನ್ನ ಮೊಮ್ಮಗನಾದ್ ಶಾಮನಿಗೆ ಈ ನಾನು ಬರೆಯುತ್ತಿರುವ ಉಯಿಲು ಕಳಂಕ ತರಲಾರದೆಂಬ ಭರವಸೆ ಇರುವುದು ನನಗೆ. ಇದನ್ನೆಲ್ಲ ಪ್ರಸ್ತುತಪಡಿಸಲಿಕ್ಕೆ ಮೂಲ ಪ್ರೇರಣೆ ನೀಡಿದಂಥ ಯುವಕನಾದ ಅವನೇ ವೃದ್ಧಾತಿವೃದ್ಧನಾದ ನನಗೆ ಗುರುವೂ; ತಂದೆಯೂ ಎಲ್ಲವೂ ಆಗಿರುವನು. ಅದೂ ಅಲ್ಲದೆ ಸಾಮಾನ್ಯನಾದ ಅವನು ಸದರೀ ಉಯಿಲನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಲಾರನು. ಹಾಗೆಯೇ ಉಳಿದ ಲೌಕಿಕರೂ ಸಹ… ಒಂದೇ ಮಾತಿನಲ್ಲಿ ಹೇಳುವುದಾದರೆ ನನ್ನೀ ಉಯಿಲು ಶಾಸನ ಕವಿಗಳಿಗೂ ಅರ್ಥವಾಗುವುದು ಸಾಧ್ಯವಿಲ್ಲ. ಕಾಳಿದಾಸ, ಭಾಸ, ಭಾರವಿ, ಜಗನ್ನಾಥರೇ ಮೊದಲಾದ ಪ್ರಾಚೀನ ಕವಿಗಳನ್ನು ಗುಟ್ಟಾಗಿ ಮನದಟ್ಟು ಮಾಡಿಕೊಂಡಿರುವ ನನಗೆ ಮಾತ್ರ ನಾನು ಬರೆಯುತ್ತಿರುವ ಉಯಿಲು ಅರ್ಥವಾಗುವುದು ಸಾಧ್ಯ. ಅಂದ ಮಾತ್ರಕ್ಕೆ ಇದು ಎಂದೆಂದಿಗೂ ನಿಗೂಢವಾಗಿ ಉಳಿಯಲಾರದು. ಇದನ್ನು ಓದಿ ಅರ್ಥಮಾಡಿಕೊಂಡು ಸಮಾಜಕ್ಕೆ ಉಣಬಡಿಸುವ ಸಾಮರ್ಥ್ಯ ಉಳ್ಳವರು ಇದ್ದೇ ಇದ್ದಾನೆ, ಅವತಾರ ಎತ್ತೇ ಎತ್ತುತ್ತಾನೆ. ಅರ್ಥ ವಿವರಣಕಾರನೆಂಬ ಪಂಡಿತನ ಜನ್ಮದಾತ ಸಂಸ್ಕಾರವನ್ನವಲಂಬಿಸಿರುತ್ತಾದೆ. ಆದ್ದರಿಮ್ದ ನಾನು ಮೋಕ್ಷಕಾರಣವಾದ ಸತ್ಯವನ್ನು ಯಾವ ಮುಚ್ಚುಮರೆಯಾಗಲೀ; ತೇಪೆಯಾಗಲೀ ಇಲ್ಲದೆ ಪ್ರಸ್ತಾಪಿಸುತ್ತಿರುವೆನು. +ಅಸಂತುಷ್ಟಾ ದ್ವಿಜಾ ನಷ್ಟಃ ಎಂಬ ಆರ್ಯೋಕ್ತಿಗೆ ನಾನೇ ಸಾಕ್ಷಿ ಎಂದೊಡನೆ ನೀನು ನಗಾಡಬಹುದು. ಅಸಂತುಷ್ಟತೆ ಎಂಬುದು ನಮ್ಮ ವಂಶಪಾರಂಪರ್ಯವಾಗಿ ಬಂದಿರುವ ಬಳುವ್ಳಿ ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತೇನೆ. ಹಸಿಯಾದ ಮಡಿಕೆ ನೀರಿನಲ್ಲಿ ಕರಗುತ್ತಿದ್ದರೂ ಅದಕ್ಕೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಿಧಾನ ಶತ್ರುವಾದ ಅದು ನಮ್ಮ ವಂಶದ ಪ್ರತಿಯೊಂದು ತಲೆಮಾರಿನೊಂದಿಗೆ ಸಹಬಾಳುವೆ ನಡೆಸಿತು. ಪರಮೇಶ್ವರನನ್ನು ಆಶ್ರಯಿಸಿಯೂ ವಾಸುಕಿ ಗಾಳಿಯನ್ನೇ ಆಹಾರವನ್ನಾಗಿ ಹೊಂದಿದ್ದಂತೆಯೇ ನಾನು ಮೊದಲಾಗಿ ತಲೆಮಾರಿನವರೆಲ್ಲ ಪಾಂಡಿತ್ಯದ ಸಾನ್ನಿಧ್ಯದಲ್ಲಿದ್ದೂ ಅಸಂತುಷ್ಟತೆಗೆ ಶರಣಾಗಿದ್ದರು. ವಂಶ ಪರಂಪರೆಯಿಂದ ಬಂದದಾಗಲೀ, ಗೋಡೆ ಮೇಲೆ ಬರೆದಿಟ್ಟಿದ್ದಾಗಲೀ ಹೇಗೆ ಸಂಪತ್ತಾಗಿರಲಾರದೋ ಹಾಗೆಯೇ ಅಸಂತುಷ್ಟತೆಯಿಂದಾಗಿ ನಮ್ಮವರ್‍ಯಾರೂ ಸುಖ ನೆಮ್ಮದಿಯಿಂದ ಬದುಕಲಿಲ್ಲ, ಸಾಯಲಿಲ್ಲ. ಅವರೆಲ್ಲ ದರ್ಭೆಯಿಂದ ಮುಚ್ಚಿದ ಶರಾವ ಎಂದರೆ ಮಣ್ಣಿನ ಪಾತ್ರೆಯಂತೆ ತರ್ಪಣಕ್ಕೆ ಸಿಗದ ಉಳಿದುಬಿಟ್ಟರು. ಇಲ್ಲವಾಗಿದ್ದರೆ ಅವರು ಕಾಳಿದಾಸ, ಶ್ವೇತಕೇತು, ಆರ್ಯಭಟ, ಭಾಸ್ಕರರಂತೆಯೇ ಉತ್ತರೋತ್ತರವಾಗಿ ಖ್ಯಾತಿವಂತರಾಗಬಹುದಿತ್ತು. ಸಾವಿನಲ್ಲೂ ಜೊತೆಯಲ್ಲಿ ಬರುವ ಧರ್ಮವನ್ನು ಅವರು ಬದಿಗೊತ್ತಿ ಚಂಚಲತೆಯೇ ಮುಖ್ಯಸ್ಥಾಯಿ ಭಾವವಾದ ಲಕ್ಷ್ಮಿ ಮತ್ತು ಖ್ಯಾತಿಯ ಬೆಂಬತ್ತಿ ಯಾವ ಶ್ರಾದ್ಧಕ್ಕೂ ನಿಲುಕದಷ್ಟು ದೂರ ಉಳಿದರು. +ಗಿರಿ ಮತ್ತಾತಂದಿರಾದ ಶಿವರಾಮ ಮೋಹನ ಶರ್ಮರಿಗೆ ವಿದ್ಯಾವಚಸ್ಪತಿ ಎಂಬ ಬಿರುದು ಲಭ್ಯವಾಗಿತ್ತು. ಅವರು ಗುಡೇಕೋಟೆಯ ಚಾಮನಾಯಕನ ಆಸ್ಥಾನ ಜ್ಯೋತಿಷಿಗಳಾಗಿದ್ದರು. ಅವರು ಆಹ್ನಿಕ ಪರಮಕಾರ್ಯಗಳನ್ನು ಅಲಕ್ಷಿಸಿ ಸದಾ ನಾಯಕನನ್ನೇ ಓಲೈಸುತ್ತಿದ್ದರೆಂದು ಪ್ರತೀತಿ ಉಂಟು. ಇರುಳು ಗರುಡನಿಂದ ಬಳಲುತ್ತಿದ್ದ ನಾಯಕನ ಏಕಮಾತ್ರ ಪುತ್ರಿ ಉತ್ಸವಾಂಬೆಯ ಚಿಕಿತ್ಸೆಗೆ ನೇಮಕವಾಗಿದ್ದರು. ಚಿಕಿತ್ಸೆಯ ನೆಪದಲ್ಲಿ ಆಕೆಯೊಂದಿಗೆ ತಾಸುಗಟ್ಲೆ ಏಕಾಂತದಲ್ಲಿರುತ್ತಿದ್ದರಂತೆ. ಬೆಟ್ಟದ ಮೇಲೆ ಕೋಟೆ ದುರಸ್ತಿ ಕಾರ್ಯಕ್ಕೆ ನೇಮಕವಾಗಿದ್ದ ಅಪ್ಪೇನಹಳ್ಳಿಯ ವಡ್ಡಬೋವಿ ಇದ್ದಕ್ಕಿದ್ದಂತೆ ಅಪಸ್ಮಾರಕ್ಕೆ ತುತ್ತಾಗಿ ಗತಪ್ರಾಣನಾದೆ‌ಅನಂತೆ. ಸಂಜೀವಿನಿ ಪರ್ವತಪ್ರಾಯವಾಗಿ ಆಸ್ಥಾನದಲ್ಲಿ ತಾವಿರುವಾಗ ಅವನನ್ನು ಬದುಕಿಸುವುದೆಷ್ಟರ ಮಾತು ಎಂದು ನಾಯಕನಿಗೆ ಹೇಳಿ ಮಂತ್ರೋಚ್ಚಾರಣೆ ಮಾತ್ರದಿಂದ ಅವನಿಗೆ ಪ್ರಾಣ ದಯಪಾಲಿಸಿದರಂತೆ. ಅವರು ಹಸುವಿನ ಕಳೇಬರದಿಂದ ಹಾಲು ಕರೆದರೆಂಬ ವಿವರ ತೀರ್ಥರಾಮೇಶ್ವರ ಬೆಟ್ಟದಲ್ಲಿರುವ ಶಿಲಾಶಾಸನದಿಂದ ತಿಳಿದುಬರುತ್ತದೆ. ತಲಕಾಡಿನ ಶ್ರೀರಂಗರಾಜರು ಅವರಿಗೆ ಧನಕನಕ ವಸ್ತ್ರ ಆಮಿಷ ತೋರಿಸಿ ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿದರಂತೆ. ಆದರೆ ರಾಜಕುವರಿ ಉತ್ಸವಾಂಬೆಯ ಮೋಹಪಾಶದಲ್ಲಿ ಸಿಲುಕಿದ್ದ ಅವರು ದೂರದ ತಲಕಾಡಿಗೆ ಹೇಗೆ ಹೋದಾರು? ಒಮ್ಮೆ ಅರಮನೆಯ ಶಯ್ಯಾಗೃಹದಲ್ಲಿ ರಾಜ್ಕುವರಿಯೊಂದಿಗೆ ಸಲ್ಲಾಪವಾಡುತ್ತಿದ್ದಾಗ ನಾಯಕನು ಇದ್ದಕ್ಕಿಂದಂತೆ ಒಳಬಂದನಂತೆ. ಆಗ ಅವರು ಅವನ ಕಣ್ಣಿಗೆ ಏಳು ಹೆಡೆಯ ಸರ್ಪವಾಗಿ ಕಂಡರಂತೆ. ಅವನ ಪಂಚೇಂದ್ರಿಯಗಳಿಗೇ ಕಚ್ಚಿ ಬಚಾವಾದರಂತೆ. ಮುಂದೊಂದು ದಿನ ರಾಜಕುವರಿ ಅಕಾಲ ಮರಣಕ್ಕೆ ತುತ್ತಾದಳಂತೆ. ಇಷ್ಟೆಲ್ಲ ಅಟಾಟೋಪಗಳಿಮ್ದ ನೂರೈದು ವರ್ಷ ಅವರು ಸುಧೀರ್ಘವಾಗಿ ಬದುಕಿ ಸಜೀವ ಸಮಾಧಿ ಹೊಂದಿದರೆಂಬುದನ್ನು ನಾನು ನಂಬಲಾರೆನು. +ಮುತ್ತಜ್ಜ ರಾಧಾರಮಣ ಶಾಸ್ತ್ರಿಗಳು ಇನ್ನೊಂದು ಬಗೆಯ ಅಸಂತುಷ್ಟತೆಗೆ ಗುರಿಯಾಗಿದ್ದರು. ಅವರಿಗೆ ಉಯ್ಯಾಲವಾಡದ ಪ್ರಭು ನರಸಿಂಹಾರೆದ್ದಿಯವರು ರಸರತ್ನಾಕರ ಎಂಬ ಬಿರುದು ನೀಡಿ ಗೌರವಿಸಿದ್ದರು. ಆದರೆ ಅವರ ದೃಷ್ಟಿ ಬಳ್ಳಾರಿಯ ಕಲೆಕ್ಟರಾಗಿದ್ದ ಥಾಮಸ್ ಮನ್ರೋ ಎಂಬುವರಿಗೆ ಸಂಸ್ಕೃತಾಭ್ಯಾಸ ಮಾಡಿಸಬೇಕೆಂಬ ಬಯಕೆ ಉತ್ಕಟವಾಗಿದ್ದಿತು. ಅದಕ್ಕಾಗಿ ಸುಬೇದಾರ್ ಮಣಿಕಂಠಯ್ಯರ್‌ರವರ ಸ್ನೇಹ ಸಂಪಾದಿಸಿ ಆ ಮೂಲಕ ಕಲೆಕ್ಟರ್ ಸಾಹೇಬರ ಬಂಗಲೆ ಪ್ರವೇಶಿಸಿದರು. ಇಂಗ್ಲೀಷ್ ಮೂಲಕ ಸಂಸ್ಕೃತಕ್ಕೆ ಮಾರು ಹೋಗಿದ್ದ ಕಲೆಕ್ಟರ್ ಥಾಮಸ್ ಮನ್ರೋ ಅವರನ್ನು ಆದರ ಗೌರವಗಳಿಂದ ಬರಮಾ‌ಅರಿಕೊಂಡು ಬಹಳ ದಿನಗಳ ಕಾಲ ಗುರುವಾಗಿ ಸ್ವೀಕರಿಸಿ ಇಟ್ತುಕೊಂಡಿದ್ದರು. ಅವರಿಂದ ವಿಜಯನಗರದ ಕಿಷ್ಕಿಂದೆಯ ಸಮೀಪ ಜಹಗೀರು ಪಡೆಯಬೇಕೆಂಬ ಆಸೆ ಕೊನೆಗೂ ಈಡೇರಿರಲಿಕ್ಕಿಲ್ಲ ಎಂದು ಊಹಿಸಲಾಗಿದೆ. ಸಾಕಷ್ಟು ವಯಸ್ಸಗಿರುವ ನಾನು ಅವರು ಶಂಕರಭಗವತ್ಪಾದರ ಆತ್ಮದೊಡನೆ ಸಂವಾದಿಸುತ್ತಿದ್ದರೆಂಬುದನ್ನಾಗಲೀ, ಪೆನುಗೊಂಡೆಯ ರಾಮರಾಜುಗೆ ಪುರುಷ ಶಕ್ತಿ ದಯಪಾಲಿಸಿದರೆಂಬುದನ್ನಾಗಲೀ; ಚಿನ್ನದ ಪಲ್ಲಕ್ಕಿಯಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದರೆಬುವುದನ್ನಾಗಲೀ ನೂರಾ ಮೂರು ವರ್ಷ ಬದುಕಿದ್ದರೆಂಬುದನ್ನಾಗಲೀ ನಂಬಲಾರೆನು. +ತಾತನವರಾದ ಸಕಲೇಶ್ವರ ಶಾಸ್ತ್ರಿಗಳಿಗೂ ಸರ್ವದರ್ಶನತೀರ್ಥ; ಸಾಹಿತಿ ಸಮಾರಾಂಗಣಗಳೇ ಮೊದಲಾದ ಬಿರುದುಗಳಿದ್ದುವಂತೆ. ಅಷ್ಟ ದಿಗ್ಗಜಗಳಿಗಿದ್ದ ಶಕ್ತಿ ಅವರೊಬ್ಬರಿಗೇ ಇದ್ದಿದಂತೆ. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದ ಅವರು ಬದುಕಿರುವಷ್ಟು ಕಾಲ ಧನದಾಸೆಗಾಗಿ ಕ್ಷುದ್ರ ದೇವತೆಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತ ಶಕ್ತಿ ಕ್ಷೇತ್ರವಾದ ಅಲಂಪೂರದಲ್ಲಿ ಕೆಲಕಾಲ ಇದ್ದರು. ಯಾವುದೋ ಒಂದು ಆಕಾರಹೀನ ಶಕ್ತಿಯನ್ನು ಹಿಂಬಾಲಿಸುತ್ತ ಕದಳೀವನ ಪ್ರವೇಶಿಸಿದರು ಮತ್ತೆ ವಪಸ್ಸ್ಸು ಬರಲೇ ಇಲ್ಲ. ರುದ್ರನಾಯಕನೇ ನಮ್ಮ ತಾತನವರ ಅಪರಾವತಾರ ಎಂದೊಂದು ಕ್ಷಣ ನೋಡಿದೊಡನೆ ಅನ್ನಿಸಿಬಿಟ್ತಿತು. ತಂದೆಯವರಾದ ಶಾಮಾ ಶಾಸ್ತ್ರಿಗಳು ಹೇಳುತ್ತಿದ್ದ ಗುಣಲಕ್ಷಣ ಸ್ವಭಾವದ ಮೂಲಕ ಅವನಲ್ಲಿ ಅವರನ್ನು ಗುರುತಿಸಿ ಕೆಲವು ದಿನ ಈಷ್ಯಾಸೂಯೆಗಳಿಮ್ದ ಕುದ್ದು ಹೋಗಿಬಿಟ್ಟೆನು. ಅವನು ಉತ್ತರಾಭಿಮುಖವಾಗಿ ಪಯಣಿಸುವಂತೆ ಮಾಡುವಲ್ಲಿ ಪರೋಕ್ಷವಾಗಿ ನಾನು ಯಶಸ್ವಿಯಾದೆನು. ಇನ್ನು ನನ್ನ ತಂದೆಯವರಾದ ವಾಗ್ಭೂಷಣ ಶಾಮಾ ಶಾಸ್ತ್ರಿಗಳ ಬದುಕಂತೂ ಅಂಗೈಯಷ್ಟು ಸುಸ್ಪಷ್ಟವಾಗಿರುವುದು. ಸುಮಾರು ಎಂಭತ್ತು ವರ್ಷಗಳ ಪರ್ಯಂತರ ಬದುಕಿದ್ದ ಅವರು ಯೌವನದ ಕಾಲದಲ್ಲಿ ಮೈಸೂರು ದಿವಾನರೋರ್ವರ ಬಳಿ ಮುಖ್ಯ ಸಲಹೆಗಾರರಾಗಿಯೂ, ಅರಮನೆಯ ಬಲಪಾರ್ಶದಲ್ಲಿರುವ ಶಾರದಾಂಬಾ ದೇವಾಲಯದ ಮುಖ್ಯ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರಂತೆ. ಅರಮನೆಯ ಪ್ರಮುಖ ನರ್ತಕಿಯೋರ್ವಳು ತಾನು ಕಾಲಾಂತರದಲ್ಲಿ ಹೆತ್ತಂಥ ಒಂದು ಗಂಡು ಮಗುವನ್ನು ನಮ್ಮ ತಂದೆಯವರಾದ ಶಾಮಾಶಾಸ್ತ್ರಿಗಳಿಗೂ; ಹೆಣ್ಣು ಮಗುವೊಂದನ್ನು ದಿವಾನರಿಗೂ ಕೊಟ್ಟು ಅವರಿಗೆ ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳಿರೆಂದು ಆಜ್ಞಾಪಿಸಿ ಪ್ರಾಣಬಿಟ್ಟಳಂತೆ. ಅಪಖ್ಯಾ‌ಅತಿಯಿಂದ ಪಾರಾಗಲು ತಂದೆಯವರು ಆ ಮಗುವಿನೊಡನೆ ಕುಂತಳವಾಡಿಗೆ ಬಂದರ್, ದಿವಾನರು ಅದೇ ತೆರನ ಅಪಖ್ಯಾತಿಗೆ ಹೆದರಿ ಎಣ್ಣು ಮಗುವನ್ನು ದಾದಿಯೋರ್ವಳಿಗೆ ಧನಕನಕ ಕೊಟ್ಟು ಮದ್ರಾಸ್ ಪ್ರಾಂತಕ್ಕೆ ಕಳಿಸಿಕೊಟ್ಟರಂತೆ. ಆ ನರ್ತಕಿಯ ಮಗನಾದ ನಾನು, ಏರ್ಪಟ್ಟ ಕರ್ಮಠ ವಾತಾವರಣದೊಳಗೆ ಬೆಳೆಯುತ್ತಿರಲು ಮದ್ರಾಸಿಗೆ ಹೋದ ದಾದಿ (ಪ್ರಾಯಶ್ಃ ಅವಳ ಹೆಸರು ಗೋದೂಬಾಯಿಯಾಗಿದ್ದಿರಬೇಕು… ಪಟ್ಟಣದ ವಾತಾವರಣಕಣುವಾಗಿ ಆಕೆ ತನ್ನ ಹೆಸರನ್ನು ನಿರ್ಮಲಾ ಎಂದು ಬದಲಾಯಿಸಿಕೊಂದಿರಬೇಕು) ಪ್ರಸಿದ್ಧ ಚಲನಚಿತ್ರ ನಿರ್ಮಾಪಕನೂ, ಪ್ರಸಿದ್ಧ ವಜ್ರದ ವ್ಯಾಪಾರಿಯೂ ಆದ ಡಬ್ಲ್ಯು. ಬಿ. ಚೆಟ್ಟಿಯಾರರನನ್ನು ಗಾಂಧರ್ವ ವಿವಾಹವಾದಳು. ಆಕೆಯ ಕಾಲುಗುಣವೆಂಬಂತೆ ಚೆಟ್ಟಿಯಾರ್ ನಿರ್ಮಿಸಿದ ಮುಂದಿನ ಚಿತ್ರಗಳು ಜನಪ್ರಿಯಗೊಂಡವು. ಮುಂದೆ ಅವರ ಬಳಿಯಿದ್ದ ಹೆಣ್ಣು ಮಗುವು ಪದ್ಮಾವತಿ ಎಂಬ ಹೆಸರಿನಲ್ಲಿ ಬೆಳೆದು ದೊಡ್ಡದಾಯಿತು. ಪದ್ಮಾವತಿ ಮುಂದೆ ಜನಪ್ರಿಯ ಚಲನಚಿತ್ರ ತಾರೆಯಾದಳು ಕೂಡ… ಆಕೆಯ ಹೆಣ್ಣುಮಗಳಾದ ಚಂಪಕಮಾಲಾಳು ಕೂಡ ದಕ್ಷಿಣ ಮತ್ತು ಉತ್ತರದ ಭಾಷೆಯ ಬಹುತೇಕ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ್ಳು. ಆಕೆ ವಿವಾಹಿತನೂ, ಮಕ್ಕಳೊಂದಿಗನೂ, ಅಗರ್ಭ ಶ್ರೀಮಂತನೂ ಆದ ಹಿರಾಲಾಲ್‌ನನ್ನು ಮದುವೆಯಾಗಿ ಅವನಿಂದ ಒಂದು ಹೆಣ್ಣು ಎರಡು ಹೆಣ್ಣು ಪಡೆದೌ. ಪಿಯೂಷಾ ಎಂಬ ಹೆಸರಿನ ಆ ಹೆಣ್ಣು ಜನಪ್ರಿಯ ಚಿತ್ರಗಳಲ್ಲಿ ನಟಿಸುತ್ತಿರುವುದು. ಕುಂದನ್‌ಲಾಲ್ ಎಂಬ ಮಗನು ಸಿಂಗಾಪುರದಲ್ಲಿ ನೆಲಸಿ ಕಳ್ಳಸಾಗಾಣಿಕೆ ಮಾಡುತ್ತಿದ್ದರೆ, ಇನ್ನೊಬ್ಬ ಮಗನಾದ ಲೋಕಪ್ರಕಶ್ ಪ್ರಸಿದ್ಧ ಭರತನಾಟ್ಯ ನರ್ತಕಿಯಾದ ವಿಂದ್ಯಾವಾಸಿನಿಯನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿರುವನು. +ಆಸ್ಥಾನ ನರ್ತಕಿಯ ಮಗ ನಾನು ಎಂಬ ಸಂಗತಿ ಬಹಳ ವರ್ಷಗಳ ಹಿಂದೆಯೇ ನನಗೆ ಸೂಕ್ಷ್ಮವಾಗಿ ಗೊತ್ತಾಗಿದ್ದರೂ ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಇತ್ತುಕೊಂಡಿದ್ದೆನು. ಆ ಗುಟ್ಟು ರಟ್ಟು ಮಾಡಿದ ಮತ್ತು ನಾನು ಅಗ್ನಿಗಾಹುತಿ ನೀಡಿದ ಆ ಕಾಗದ ಪತ್ರಗಳು ಸುದರ್ಶನ ಎಂಬ ರುಗ್ಣಶಯ್ಯೆಯಲ್ಲಿದ್ದ ವ್ಯಕ್ತಿಯಿಂದ ಬಂದಂತವುಗಳಾಗಿದ್ದವು. ನನ್ನ ಹುಟ್ಟಿನ ಗುಟ್ಟನ್ನು ನಾನು ಬಚ್ಚಿಡಲು ಪ್ರಯತ್ನಿಸಿದರೂ ಅದು ಮುಖದ ಯಾವ ಮೂಲೆಯಿಂದಲಾದರೂ ತಿಲಮಾತ್ರ ಪ್ರಕಟವಾಗಿ ಬಿಡುತ್ತಿತ್ತು. ಕೆಲವರು ಆ ಎಳೆಮೂಲಕ ರಹಸ್ಯದ ಹಚ್ಚಡವನ್ನು ನುಂಗಲು ಪ್ರಯತ್ನ ಮಾಡಿದ್ದುಂಟಾದರೂ ಅದು ಯಶಸ್ವಿಯಾಗಲಿಲ್ಲ. ಅಸಹ್ಯಪಟ್ಟುಕೊಳ್ಳಬೇಕೆಂದರೆ ತಂದೆಯವರು ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿರುವುವು. ಅವರನ್ನು ಮರಣೋತ್ತರವಾಗಿ ಅಸಹ್ಯಪಟ್ಟುಕೊಳ್ಳುವುದಷ್ಟೆ ಸಾಧ್ಯವಾಗಿರುವುದು ನನಗೆ. ಆದರೆ ಇದಕ್ಕೆ ನಾನು ಅರ್ಹನೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದೂ ಅಲ್ಲದೆ ಅವರು ತಮ್ಮ ಬದುಕಿಗೆ ತಕ್ಕುದಾದ ಶವಸಂಸ್ಕಾರ ಪಡೆಯುವುದರಲ್ಲಿ ವಿಫಲರಾದರು. ಎಲ್ಲವೂ ಅವರ ಮುಂಗೈ ಅಲಂಕರಿಸಿದ್ದ ಕಿರುಗಂಟೆಯುಳ್ಳ ಚಿನ್ನದ ಕಡಗದ ಕಾರಣದಿಂದಾಗಿ ತಿರುಗುಮುರುಗಾಯಿತು, ತಲೆಕೆಳಕಾಯಿತು. ನಾನು ಅವರ ಮಗನಾಗಿರಲಿಕ್ಕಿಲ್ಲವೆಂಬುದಕ್ಕೆ ಅವರುಸಾಯುವ ಕ್ಷಣ ಆ ಚಿನ್ನದ ಕಡಗ ನನಗೆ ದಕ್ಕದ ಹಾಗೆ ಸಂಚು ಮಾಡಿದರು ಎಂಬುದು ಉಲ್ಲೇಖಾರ್ಹ ಸಂಗತಿಯಾಗಿದೆ. ಶ್ರೀಮಂತ ವರ್ತಕರಾದ ವೆಂಕಟರಮಣ ಶ್ರೇಷ್ಠಿಗಳು ಆ ಚಿನ್ನದ ಕಡಗವನ್ನು ತಮಗೆ ಮಾರಿಬಿಡೆಂದೂ, ದಿವಂಗತರ ಅಪೇಕ್ಷೆಯಂತೆ ಮಣಿಕರ್ಣಿಕಾಘಾಟ್‌ನಲ್ಲಿ ಶವ ಸಂಸ್ಕಾರ ಮಾಡಲು ನುಕೂಲವಾಗುವುದೆಂದೂ, ಬಗೆಬಗೆಯಾಗಿ ಬಡಿದುಕೊಂಡರು. ನನ್ನ ಜನ್ಮ ಮೂಲ, ಅಷ್ಟೊತ್ತಿಗೆ ಗೊತ್ತಾಗಿದ್ದಲ್ಲಿ ನಾನು ಅದನ್ನು ಶ್ರೇಷ್ಠಿಗಳಿಗೆ ಮಾರಿಬಿಡುತ್ತಿದ್ದೆನೊಂದೇ ಅಲ್ಲ, ಸದರಿ ಗ್ರಾಮದ ಹುಲುಲಿ ಹಳ್ಳವನ್ನೆ ಪವಿತ್ರ ಗಂಗಾನದಿಯೆಂದೂ, ಅದರ ತಟವನ್ನೇ ಮಣಿಕರ್ಣಿಕಾ ಘಾಟೆಂದು ಪರಿಭಾವಿಸಿಬಿಡುತ್ತಿದ್ದೆನು. ಕೀರ್ತಿಶೇಷರ ಪಾಪಕೃತ್ಯಗಳೇ ನೂರಾರು ಮೂಷಿಕಗಳಾಗಿ ಸಹಾಯ ಮಾಡಲೆತ್ನಿಸಿದ ಶ್ರೇಷ್ಠಿಗಳ ಅವಯವಗಳಿಗೆ ತೊಂದರೆ ಕೊಟ್ಟವೆಂದು ಭಾವಿಸುತ್ತಿದ್ದೆನು. ಒಂದು ಕೈಯಲ್ಲಿ ತಲೆಯನ್ನಿಟ್ಟು ಕೊಂಡು, ಆಸದಲ್ಲಿಟ್ಟುಕೊಂಡು ಊಟ ಮಾಡಿದ ಪಾಪ ಸತ್ತ ನಂತರ ಕಾಡುತ್ತದೆ ಎನ್ನುವುದಕ್ಕೆ‌ಆ ಘಟನೆಯೇ ಸಾಕ್ಷಿಯಾಗಿ ಯೂಪಸ್ತಂಭದಂತೆ ನಿಂತಿರುವುದು. ವೇದೋಪನಿಷತ್ತುಗಳನ್ನು ಅರಗಿಸಿಕೊಂಡ ಮಾತ್ರಕ್ಕೆ ತೆಗೆದುಕೊಂಡು ಏನು ಮಾಡುವುದು? ಉಚ್ಛೈಶ್ರವಸ್ರೆಂಬ ಅಶ್ವವನ್ನೂ, ರತ್ನಗಳನ್ನೂ ಲಕ್ಷ್ಮಿಯನ್ನೂ ಕೊಟ್ಟ ಮೇಲೂ ಸಹ ಕಡೆಯದವರಿಗೆ ಸಮುದ್ರ ವಿಷವನ್ನು ಕೊಟ್ಟು ಹಗೆ ತೀರಿಸಿಕೊಂಡಿತು ತಾನೆ?… ಹಾಗೆ ಬದುಕೆಂಬ ಸಮುದ್ರ ಕೂಡ. +ರುಗ್ಣ ಶಯ್ಯೆಯಲ್ಲಿಲ್ಲಿದ್ದ ಸುದರ್ಶನ ಬರೆದಿದ್ದ ಪತ್ರಗಳು ಮುಖ್ಯವಾಗಿ ಫರಂಗಿಯವರ ಅಮೇಧ್ಯ ಭಾಷೆಯಲ್ಲಿದ್ದ ಸಬೂಬು ನೋಡಿದರೆ ತೀರ್ಥರೂಪರವರು ಆ ಭಾಷೆಯಲ್ಲಿ ಅಗಾಧ ಪ್ರಾವೀಣ್ಯತೆ ಸಾಧಿಸಿದ್ದರೆಂದು ನಿಚ್ಚಳವಾಗಿ ಊಹಿಸಬಹುದು. ಅದನ್ನು ತುಂಬ ಗುಟ್ಟಾಗಿ ಇಟ್ಟಿದ್ದರೊಂದೇ ಅಲ್ಲ; ಆ ಭಾಷೆಯನ್ನು ನಾನು ಕಲಿಯದ ಹಾಗೆ ನೋಡಿಕೊಂಡರು. ಆ ಭಾಷೆಯಲ್ಲಿ ತಮ್ಮ ವಂಶದಲ್ಲಿ ಯಾರಾದರೂ ಕಲಿತರೆ ಭೂಮಿಯ ಪಾಪ ಸಂಚಯವೇ ಪಿಶಾಚ ರೂಪದಲ್ಲಿ ಅಂಥವರನ್ನು ಸರ್ವನಾಶನ ಮಾಡುವುದೆಂದು ನನಗೆ ತಾಕೀತು ಮಾಡಿದ್ದರು. ಆದ್ದ್ದರಿಂದಾಗಿಯೇ ನಾನು ನನ್ನ ಮಗನನ್ನೂ ಮೊಮ್ಮಗನನ್ನೂ ಆ ಭಾಷೆಯಿಂದ ದೂರವಿರಿಸಲು ಬಗೆ ಬಗೆಯಾದ ಪ್ರಯತ್ನ ಮಾಡಿದೆನು. ಅನುಭವಿಸಲಾರದಷ್ಟು ಅನುಭವಿಸುವಂಥ ಕಾಲ್ಘಟ್ಟದಲ್ಲಿ ದೊರಕಿದ ರುಗ್ಣಿಯೋರ್ವನು ಬರೆದ ಪತ್ರಗಳನ್ನು ಹೆಸರು ಕುಲ ಮರೆಮಾಚಿ ದೂರ ಪ್ರಾಮ್ತಕ್ಕೆ ಹೋಗಿ ದೇಶಭಕ್ತರನ್ನು ಫರಂಗಿಯವರಿಗೆ ಒಪ್ಪಿಸಿ ಬಗೆಬಗೆಯಾದ ಇನಾಮು ಪಡೆದು ಸುಖದಿಂದ ಜೀವಿಸುತ್ತಿದ್ದ ಮತ್ತು ಇಂಗ್ಲೀಷ್ ಕನ್ನಡ ನಿಘಂಟಿನ ಕರ್ತೃವಾದ ಶಂಕರಾನಂದತಿಬೋಟಿಯವರ ಬಳಿಗೊಯ್ದು ಓದಿಸಿ ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡೆನು. ಆ ಕ್ಷಣ ನನ್ನ ಅಂತರಂಗದ ಸಾಗರವು ಝಂಝಾಪಾತಕ್ಕೆ ಸಿಲುಕಿ ಅಲ್ಲಾಡಿಹೋಯಿತು. ಒಂದೊಂದೇ ಅಥಿತಿಗೆ ಉಣಬಡಿಸಿದ ಅನ್ನ ನೆನಪಾದಂತೆ ಮಗ ಅಶ್ವಥ್‌ನಾರಾಯಣನೂ, ಬಂಡಾಯಕವಿಯಾಗಲು ಪ್ರಯತ್ನಿಸುತ್ತಿದ್ದ ಮೊಮ್ಮಗ ಶಾಮಂಣನೂ ಕಾಣದೆ ತುಳಿಯಲ್ಪಟ್ಟ ಕತ್ತಿಯಂತೆ ನೆನಪಾದರು. ಮಗ ಮೊಮ್ಮಗ ಎರಡು ಮಹಾನದಿಗಳು ನನ್ನ ಬದುಕಿನ ಸಾಗರದಲ್ಲಿ ಸರಿಯಾಗಿ ಬೆರೆಯಲೇ ಇಲ್ಲ. ಒಳಗೊಳಗೇ ದಾವಾನಲವನ್ನು ಅನುಭವಿಸುತ್ತಿದ್ದ ನಾನು ಮಾತ್ರ ಆಕ್ಷಣದಿಂದ ನನ್ನ ಜೀವನ ಶೈಲಿಯನ್ನು ಬದಲಿಸುವ ಪ್ರಯತ್ನ ಮಾಡತೊಡಗಿದೆನು. ನಿಂದಿತವಾದ ಕೆಲಸವನ್ನು ಮಾಡುವವನು ನರಕಕ್ಕೂ ಹೆದರಲಾರನೆಂಬ ಅರಿವನ್ನು ಭ್ರೂಮಧ್ಯೆ ಇಟ್ಟುಕೊಂಡೇ ಸಂಸಾರವೆಂಬ ದೋಣಿಯಲ್ಲಿ ಒಂಟಿಯಾಗಿ ಪಯಣಿಸುತ್ತಿದ್ದ ನನ್ನನ್ನು ಅಂದಿನ ಪ್ರಧಾನ ಪ್ರಧಾನ ಮಮ್ತ್ರಿಯಾದ ಇಂದಿರಾ ಗಾಂಧಿಯವರು ನನ್ನನ್ನು ಆಕರ್ಷಿಸಿದ್ದು. +ಶಾಮಣ್ಣ ತಾನು ಅಭ್ಯಾಸ ಮಾಡುತ್ತಿದ್ದ ಮನುಸ್ಮೃತಿಯೆಂಬ ಹೆಬ್ಬೊತ್ತಿಗೆಯೊಳಗೆ ಆಕೆಯ ವರ್ಣ ವೈವಿಧ್ಯದ ಭಾವಚಿತ್ರವನ್ನು ಗುಟ್ಟಗಿ ಇಟ್ಟುಕೊಂಡಿದ್ದ. ಕರ್ಮಠ ವಾತಾವರಣದೊಳಗೆ ಬ್ರಾಹ್ಮಣ ವಿಧವೆಯೋರ್ವಳು ಅನುಭವಿಸಬೇಕಾದ ಪಾತ್ರದ ಬಗ್ಗೆ ವಸ್ತುನಿಷ್ಟವಾಗಿ ತಿಳಿದುಕೊಳ್ಳುವ ನಿಮಿತ್ತ ನಾನು ಅವನ ಕಬ್ಬಿಣಪೆತ್ತಿಗೆಯಿಂದ ಅದನ್ನು ಹುಡುಕಿ ತೆಗೆದೆನು. ಸ್ಮೃತಿಯ ಹನ್ನೆರಡನೆತ ಅಧ್ಯಾಯದಲ್ಲಿ ದೊರಕಿದ ಆ ಮಹಿಳೆಯ ಭಾವಚಿತ್ರ ನೋಡಿದೊಡನೆಯೆ ಕತಕ ಬೀಜದ ಸಂಪರ್ಕದಿಂದ ಯಾವ ಪ್ರಕಾರವಾಗಿ ಬಗ್ಗಡ ನ್ ರು ತಿಳಿಯಾಗುವುದೋ ಹಾಗೆಯೇ ನನ್ನ ಮನಸ್ಸು ತಿಳಿಯಾಯಿತು. ನೋಡಿದೊಡನೆ ಉನ್ಮೇಷ ನಿಮಿಷೋತ್ಪನ್ನ ಭುವನಾವಲೀಽಽಽ ಎಂದು ಉದ್ಗರಿಸಿದೆನು. ವಿಂಧ್ಯಾಚಲವಾಸಿನಿಯಾದ ಶ್ರೀಲಲಿತೆಯೆ ಇವಳು ಎಂದು ಒಂದು ಕ್ಷಣ ಅನ್ನಿಸಿದರೆ ಮತ್ತೊಂದು ಕ್ಷಣ ವಾರುಣೀಮದದಿಂದ ವಿಹ್ವಲಗೊಂಡಂತಿರುವ ತ್ರಿಪುರಸುಂದರಿಯೇ ಈಕೆ ಅನ್ನಿಸಿತು. ಆ ಕೂಡಲೆ ಕರ್ಣಾಟ ಕವಿಚೂತವನ ಚೈತ್ರ ಬಿರುದಾಂಕಿತನೂ ಉಪಮಾಲಂಕಾರ ಚಕ್ರವರ್ತಿಯೂ ಆದ ಲಕ್ಷ್ಮೀಶನ ಜೈಮಿನಿ ಭಾರತದ ಹದಿನಾರನೇ ಸಂಧಿಯ ನಾಲ್ಕನೇ ಪದ್ಯವನ್ನು ಸ್ಮರಣೆಗೆ ತಂದುಕೊಂಡೆನು. ಅದನ್ನೇ ದಿಟ್ಟಿಸಿ ನೋಡುತ್ತ ನಾನು ಮೈಮರೆತಿರುವಾಗ ತುರ್ತು ಪರಿಸ್ಥಿತಿಯ ಸಾಧಕ ಭಾದಕಗಳಿಗೆ ಮನು ಮಹಾಶಯನು ಏನು ಹೇಳಿದ್ದಾನೆಂದು ತಿಳಿದುಕೊಳ್ಳುವ ನಿಮಿತ್ತ ಶಾಮಣ್ಣ ಬಂದ. ನನ್ನ ಕೈಲಿದ್ದ ಆಕೆಯ ಭಾವಚಿತ್ರ ನೋಡಿ ಗಾಬರಿಗೊಂಡ. “ಏನೋ ತ್ರಿಪುರ ಸುಮ್ದರೀದೇವಿಯವರ ಭಾವಚಿತ್ರ ನಿನ್ನಲ್ಲಿಗೆ ಹೇಗೆ ಬಂತು?” ಎಂದು ಪ್ರಶ್ನಿಸಿದೆನು. ನನ್ನ ಬಾಯಿಂದ ಇಂಥದೊಂದು ಸೊಬಗಿನ ನುಡಿಗಟ್ಟು ಬರಬಹುದೆಂದು ಅವನು ಕನಸು ಮನಸಿನಲ್ಲೂ ಯೊಚಿ‌ಅಸಿರಲಿಲ್ಲ. ಮರುಗಳಿಗೆ ಸಾವರಿಸಿಕೊಂಡು “ಅಲ್ಲ ತಾತ… ಇದು ನಮ್ಮ ಪ್ರಧಾನ ಮಂತ್ರಿಗಳಾ‌ಅದ ಇಂದಿರಾ ಗಾಂಧಿಯವರ ಭಾವಚಿತ್ರ” ಎಂದು, ಅವನು ಹೇಳಲು ನನಗೆ ಅಪರಿಮಿತ ಆಶ್ಚರ್ಯವಾಯಿತು. ಮತ್ತೆ ಚಾಳೇಸ ಏರಿಸಿ ಪರೀಕ್ಷಾರ್ಥವಾಗಿ ನೋಡಿದೆ. ಗುಂಗುರುಗೂದಲು, ನೀಳನಾಸಿಕ, ತೊಂಡೆಹಣ್ಣಿನಂಥ ತುಟಿಗಳು, ಫಳಫಳ ಹೊಳೆಯುವ ಕಣ್ಣುಗಳು, ಪಾರದರ್ಶಕ ಕಪೋಲಗಳು, ಚೂಪನೆಯ ಗದ್ದ… ಈಕೆ ನಿಸ್ಸಂದೇಹವಾಗಿ ಶಂಕರಾಭರಣರಾಗ ಪ್ರಿಯೆಯಾದ ತ್ರಿಪುರಸುಂದರಿಯೆ ಎಂದುಕೊಂಡೆ. ಈ ಸಂಬಂಧ ನನಗೂ ಅವನಿಗೂ ವಾದೋಪವಾದವಾಯೊತಿ. ಚಾಣಾಕ್ಷನೂ ಆಧುನಿಕನೂ ಆದ ಅವನು ಹಲವು ಚಿತ್ರಗಳನ್ನು ತೋರಿಸಿ ಇಂದಿರಾಗಂಧಿಯವರದೇ ಎಂದು ಬಲವಾಗಿ ಸಮರ್ಥಿಸುವಷ್ಟರಲ್ಲಿ ಒಳಗಿನಿಂದ ವ್ಯಾಸಪೀಠದೊಡನೆ ಸೊಸೆಯಾದ ಅಲುಮೆಲುವು ಬಂದು ಆ ಭಾವ ಚಿತ್ರ ನೋಡಿ ಕಾಶ್ಮೀರಿ ಬ್ರಾಹ್ಮಣ ಕುಟುಂಭದಲ್ಲಿ ಜನಿಸಿ ವಿಧವೆಯಾಗಿದ್ದರೂ ಕೇಶಮುಂಡನ ಮಾಡಿಸಿಕೊಂದಿಲ್ಲವಲ್ಲಾ ಎಂದು ಯೋಚಿಸುತ್ತ ಮುಖ ಸಪ್ಪಗೆ ಮಾಡಿಕೊಂಡಳು. ಸ್ವತಂತ್ರಗೊಂಡಿರುವ ಭರತ ಖಂಡದಲ್ಲಿ ವೃದ್ಧಾಪ್ಯ ಕಳೆಯುತ್ತಿದ್ದರೂ ಜನಪ್ರಿಯ ಪ್ರಧಾನ್ ಮಂತ್ರಿಯೋರ್ವರನ್ನು ನಮ್ಮ ತಾತನವರು ನೋಡಲಿಲ್ಲವಲ್ಲ ಎಂದು ಮೊಮ್ಮಗನಾದ ಶಾಮಣ್ಣನು ತನ್ನ ಮುಖವನ್ನು ಬೇರೊಂದು ರೀತಿ ಸಪ್ಪಗೆ ಮಾಡಿಕೊಂಡನು. +ಆ ದಿನವೆಂಬುದು ಕರಾಳ ಹರತಾಳ ಆಚರಿಸಿತು. ನನ್ನ ಪಾಲಿಗೆ ನನ್ನ ಹೃದಯವು ಅವತ್ತು ಧರ್ಮವನ್ನು ಆಚರಿಸದ ಹಳ್ಳಿಯಾಯಿತು. ಚಿಕಿತ್ಸೆಗೆ ಬಗ್ಗದ ರೋಗಗಳಿಂದ ನರಳುವ ಜಾಗವಾಯಿತು. ಒಂಟಿಯಾಗಿ ಪಯಣಿಸುತ್ತಿರುವಂಥ ದಾರಿಯಾಯಿತು. ಬಿಕೋಗುಟ್ಟುವ ಬೆಟ್ಟದ ಶಿಖರಾಗ್ರವಾಯಿತು. ಆ ದಿನ ನನಗೆ ಚೆನ್ನಾಗಿ ನೆನಪಿರುವಂತೆ ಅವತ್ತು ನಾನು ಮಾನಸಿಕವಾಗಿ ದೈಹಿಕವಾಗಿ ತುಂಬ ಅಸ್ತವ್ಯಸ್ತಗೊಂಡು ಪಡಬಾರದ ಸಂಕಟವನ್ನು ಅನುಭವಿಸಿದೆನು. ಶ್ರುತಿ, ಸ್ಮೃತಿಗೊಪ್ಪುವ ಶುಷ್ಕ ತರ್ಕ ಮಾಡುತ್ತ ಪರಮಾನ್ನದಂಥ ಯೌವನವನ್ನು ಸಿಹಿನೀರಿನ ನದಿಯೊಂದು ಮರುಭೂಮಿಯಲ್ಲಿ ಹರಿದಂತೆ ವ್ಯರ್ಥವಾಗಿ ಕಳೆದೆನಲ್ಲಾ ಎಂದು ತುಂಬ ಪಶ್ಚಾತ್ತಾಪ ಅನುಭವಿಸಿದೆನು. ಉದಕದಲ್ಲಾಗಲೀ, ಅನ್ನದಲ್ಲಾಗಲೀ, ಹಾಸಿಗೆಯಲ್ಲಾಗ‌ಈ, ಪುಣ್ಯ ಶ್ರವಣಗಳಲ್ಲಾಗಲೀ ರುಚಿ ಸುಖ ಮತ್ತು ನೆಮ್ಮದಿ ಇಲ್ಲದಾಯಿತು. ತುಲಸೀ ಗಿಡದ ಪಕ್ಕ ಆಕಾಶದ ನಕ್ಷತ್ರಗಳನ್ನು‌ಎಣಿಸುತ್ತ ಮಲಗಿದ್ದ ನನ್ನ ಎದೆಯಲ್ಲಿ ತ್ರಿಪುರಸುಂದರಿ ದೇವಿಯ ಮಂದಾನಿಲದಂತೆ ಸುಳಿಯತೊಡಗಿತು. ನಿರುಪಪ್ಲವೆಯಾದ ನನಗೆ ಸಾವಿಲ್ಲ… ನಾನು ಪ್ರಧಾನಿ ಇಂದಿರಾ ಗಾಂಧಿಯ ರೂಪದಲ್ಲಾದರೂ ಗೋಚರಿತಳಾಗಿ ನಿನ್ನ ವೃದ್ಧಾಪ್ಯವನ್ನು ದಹಿಸುತ್ತಿದ್ದೇ” ಎಂದು ನುಡಿದಂತೆ ಭಾಸವಾಯಿತು. +“ನಿನಗೆ ಏಶ್ಟು ಸಾರಿ ಹೇಳಬೇಕೋ ಶಾಸ್ತ್ರಿ ಖರಹರಪ್ರಿಯ ರಾಗ ಹಾಡಬೇಡಂತ. ನಿನ್ನ ಕಿವಿಗೆ ಶಂಕರಾಭರಣ ರಾಗ ಹೊರತಾಗಿ ಮತ್ತೊಂದು ರಾಗ ಬೀಳಕೂಡದು” ಎಂದು ನನ್ನ ತುಟಿ ಮೇಲೆ ಬೆರಳಾಡಿಸಿದ್ದು ನೆನಪಾಯಿತು. ಆದಿತಾಳದ ವೈಷಿಷ್ಟ್ಯವನ್ನು ಆ ರಜತಮುಖಿ ವಿವರಿಸಿದ್ದು ನೆನಪಾಯಿತು. ಜೀವನವೆಂಬುದು ವಜ್ರಕಠೀಣವಾದಾಗ, ದೈವವು ಪ್ರತಿಕೂಲವಾದಾಗ ಆಕೆಯನ್ನು ಸಾಕ್ಷಾತ್ ಶ್ರೀ ಲಲಿತೆ ಎಂದೇ ಭಾವಿಸಿ ನೆಮ್ಮದಿಯನ್ನು ಆವಹಿಸಿಕೊಳ್ಳುತ್ತಿದ್ದೆನು. ಶ್ರೀರಾಮನ ಸಂಚಾರಕ್ಕೆ ತಡೆಯೊಡ್ಡಿ ಪರಶುರಾಮನು ತನ್ನ ಸ್ವರ್ಗಗಮನಕ್ಕೆ ವಿಘ್ನ ತಂದುಕೊಂಡ ರೀತಿಯಲ್ಲಿಯೇ ನಾನು ಸುಮ್ದರವದನೆಯನ್ನು ಧ್ಯಾನ ಮಧ್ಯೆ ಜ್ಞಾಪಕಕ್ಕೆ ತಂದುಕೊಂಡು ಗೊಂದಲಕ್ಕೀಡಾಗುತ್ತಿದುಂಟು. ಕಾಲ ಕಳೆದಂತೆ ದಯಾರ್ದ್ರ ಹೃದಯವಾಗಿ ತಾಳೆಗರಿ ಕಟ್ಟು ಕಂಠಪತ್ರಗಳೇ ಸರ್ವಸ್ವ ಎಂದುಕೊಂಡು ಗುಣಪ್ರಾಹಿಯಾಗಿ ಇದ್ದು ಬಿಟ್ಟು ಕೆಲವು ದಶಕಗಳೇ ಕಳೆದುಹೋದವು.ಕ್ರೋಧ ಬರದಂತೆ ತಪಸ್ಸನ್ನು ಹೊಟ್ಟೆಕಿಚ್ಚು ಪಡೆದಮ್ತೆ ಧರ್ಮವನ್ನೂ, ಮಾನಾಪಮಾನಗಳಿಗೆ ಬಗ್ಗದಂತೆ ವಿದ್ಯೆಯನ್ನೂ, ತಪ್ಪು ದಾರಿ ತುಳಿಯದಂತೆ ಆತ್ಮವನ್ನೂ ಕಾಪಾಡಿಕೊಳ್ಳುತ್ತ ಸುಭಾಷಿತ ಸುಧಾನಿಧಿಯೇ ಮಾನವ ರೂಪ ಧರಿಸಿದೆ ಏನೋ ಎಂಬಂತೆ ಬದುಕಿದ್ದೆ. ಹೀಗೆಯೇ ಬದುಕಿ ಶಿವ ಸಾಯುಜ್ಯ ಪಡೆಯುವೆನೆಂದುಕೊಂಡಿದ್ದೆ. ಆದರೆ ಯಾವ ಕೆಟ್ಟ ಘಳಿಗೆ ನನ್ನೀ ತಪಸ್‌ಚರ್ಯೆ ಹೊಡೆದೋಡಿಸಲು ಕಾದಿತ್ತೋ? ಆ ಕೆಟ್ಟಗಳಿಗೆಯೇ ಬ್ರಾಹ್ಮಣ ವಿಧವೆಯರು ಪಾಲಿಸಬೇಕಾದ ವಿಧಿನಿಯಮಗಳನ್ನುನಿಖರವಾಗಿ ತಿಳಿದುಕೊಳ್ಳಬೇಕಾದಂಥ ಪ್ರೇರಣೆ ನೀಡಿತು. ಆ ಪ್ರೆರಣೆಯಿಂದಾಗಿಯೇ ಶಾಮನ ಪೆಟ್ಟಿಗೆ ತೆಗೆದು ಅದರೊಳಗೆ ಕೈ ಇರಿಸಿದ್ದು, ಕೈ ಇರಿಸಿ ಮನುಸ್ಮೃತಿ ಎತ್ತಿಕೊಂದ್ದು, ಎತ್ತಿತೆರೆದೊಡನೆ ನೀಳನಾಸಿಕದ ಚೆಂದುಟಿಯ ಪ್ರಧಾನಿ ಇಂದಿರಾ ಗಂಧಿ ಎಂಬ ಮಹಿಳೆಯೋರ್ವಳ ಭಾವಚಿತ್ರ ಕೋರೈಸಿದ್ದು. ಆ ಭಾವಚಿತ್ರ ಭೂತಕಾಲದ ಪುಟಗಳನ್ನು ಸೇರಿದಂಥ ತ್ರಿಪುರ ಸುಂದರಿದೇವಿಯ ಭವ್ಯ ಮೂರ್ತಿಯನ್ನು ನನ್ನ ದೇಹದ ಅಣು‌ಅಣುವಿನಲ್ಲಿ ಪ್ರತಿಷ್ಟಾಪಿಸಿದ್ದು. ಆಕೆ ಸಿಹಿ ನೀರು ತುಂಬಿದ ಬಾವಿ ಎಂದರೂ ಸರಿಯೆ. ಹಗ್ಗದ ಮೂಲಕ ನಿನ್ನಲ್ಲಿಗೆ ಧಾವಿಸುತ್ತಿರುವ ನನ್ನನ್ನು ನೀಚ ಎಂದು ಭಾವಿಸದೆ ನನ್ನ ಚಿರಂತನ ದಾಹ ತಣಿಸು ಎಂದು ಬೇಡಿಕೊಂಡೆ. ನನ್ನ ದಯಾರ್ದ್ರ ಬೇಡಿಕೆ ನಿನ್ನನ್ನು ತಲುಪಿತೋ ಇಲ್ಲವೋ? ಆದರು ಹಲವು ದಶಕಗಳ ನಂತರ ನಾನು ಅಮೃತೋಪಮ ಉದಕದಂತಿರುವ ನಿನ್ನಲ್ಲಿಗೆ ತಲುಪುತ್ತಿರುವೆನು! ಅನ್ಯ್ಥಾ ಭಾವಿಸದೆ ನನ್ನನ್ನು ಬರಮಾಡಿಕೋ! +ತಾಯಿಯ ಮುಖ ಕಂಡರಿಯದ ನಾನು ವಾತ್ಸಲ್ಯಕ್ಕಾಗಿ ಹಲವರ ಬಳಿ ಹಾತೊರೆಯುತ್ತಿದ್ದೆನು. ಆಗ ನನ್ನ ವಯಸ್ಸು ಇಪ್ಪತ್ತೈದರ ಆಜುಬಾಜು. ನರ್ತಕಿಯ ಉದರದಿಂದ ಜನಿಸಿದ್ದರಿಂದಾಗಿಯೋ ಏನೋ? ನನ್ನ ಕಾಲುಗಳು ನರ್ತಿಸಲು ಹಾತೊರೆಯುತ್ತಿದ್ದವು. ಬಾಯಿ ಹಾಡಾಲು ಹಾತೊರೆಯುತ್ತಿತ್ತು. ನಾನು ನಡೆದರೆ ನರ್ತಿಸಿದ್ದಂತಿರುತ್ತಿತ್ತು. ಮಾತಾಡಿದರೆ ಹಾಡಿದಂತೆ ಇರುತ್ತಿತ್ತು. ಅದಕ್ಕೂ ಮಿಗಿಲಾಗಿ ಸುಂದರನಾಗಿದ್ದೆ. ನಾನು ಯಾರ ಬಳಿ ಶಿಷ್ಯವೃತ್ತಿಯಲ್ಲಿದ್ದೆನೋ ಆ ಪಂಡಿತೊತ್ತಮರಾದ ಚಲುವ ನಾರಾಯಣ ಅಯ್ಯಂಗಾರರು ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಕೊಡುತ್ತಿದ್ದರು. ನನಗಿಂತಲೂ ಹಿರಿಯರಾದ ಸಹಪಾಠಿಗಳ ಪೈಕಿಕೆಲವರು ಸಲಿಂಗ ರತಿಗಾಗಿ ನನ್ನನ್ನು ಉದ್ದೀಪಿಸುತ್ತಿದ್ದರು. ಅವರ ಸ್ಪರ್ಶ, ಆಡುತ್ತಿದ್ದ ರತಿವಿಲಾಸದ ಮಾತುಗಳು ನನ್ನ ದೇಹದಲ್ಲಿ ರೋಮಾಂಚನದ ಅನುಭೂತಿ ಹುಟ್ಟಿಸುತ್ತಿದ್ದವು. ನಾನು ಪುರುಷ ವೇಶದಲ್ಲಿರುವ ಹೆಣ್ಣಿರಬೇಕೆಂದು ನನ್ನನ್ನು ನಾ‌ಅನು ಅನುಮಾನಿಸಿಕೊಳ್ಳುತ್ತಿದ್ದುದುಂಟು. ದರ್ಪಣವೊಂದರಲ್ಲಿ ನನ್ನ ಪ್ರತಿಬಿಂಬವನ್ನು ನಾನು ನೋಡಿಕೊಂಡು ಮಂತ್ರಮುಗ್ಧನಾಗಿಬಿಟ್ಟೆ. ಗಡ್ಡಮೀಸೆಯನ್ನು ಧಾರಾಳವಾಗಿ ಬಿಟ್ಟು ಅದರಲ್ಲಿ ನಾನು ನನ್ನ ಮುಖವನ್ನು ಮರೆಮಾಚಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಆದರೆ ತೀರ್ಥರೂಪರು ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಅವಾ ಮಾತಿನಿಂದ ದಂಡಿಸುತ್ತಿದ್ದರು. ಪುಷ್ಕರಣಿಯೊಂದರಲ್ಲಿ ಸ್ನಾನ ಸಂಧ್ಯಾವಂದನೆ ಮಾಡುತ್ತಿರುವಾಗ ವಾಮನರಾವ್ ಬಾಪಟ್ ಎಂಬ ಹೆಸರಿನ ಸ್ವಾತಂತ್ರ ಹೋರಾಟಗಾರರೋರ್ವರ ಪರಿಚಯವಾಯಿತು. ಅವರು ಜಲಿಯನ್ ವಾಲಾಬಾಗಿನ ಹತ್ಯಾಕಾಂಡ ಪ್ರತಿಭಟಿಸಿಬುಡಮೇಲು ಕೃತ್ಯಗಳಲ್ಲಿ ತೊಡಗಿ ಫರಂಗಿಯವರ ತುರಂಗವಾಸದಿಂದ ತಪ್ಪಿಸಿಕೊಂಡಿಲ್ಲಿಗೆ ಬಂದು ತಲೆಮರೆಸಿಕೊಂಡಿರುವರೆಂದು ತಿಳಿಯಿತು. ಅದುವರೆಗೆ ಅಲ್ಲಿಯೇ ವಾಸಿಸುತ್ತಿದ್ದ ಅವರನ್ನು ನಾವು ಉತ್ತರಭಾರತದ ಸಧು ಇರಬೇಕೆಂದುಕೊಂಡಿದ್ದೆವು. ಬಾಪಟ್‌ರವರು ದಾಸ್ಯದಲ್ಲಿರುವ ಭಾರತದ ಬಗ್ಗೆ, ಫರಂಗಿಯವರನ್ನು ಸಮುದ್ರದಾಚೆ ಓಡಿಸುವ ಬಗ್ಗೆ ಸುಭಾಷ್‌ಚಂದ್ರ ಬೋಸರ ಬಗ್ಗೆ, ಅವರು ಸ್ಥಾಪಿಸಿರುವ ಸಶಸ್ತ್ರ ಸೈನಿಕ ದಳದ ಬಗ್ಗೆ, ಹೇಳುತ್ತಿದ್ದರು. ಅವರ ಮಾತಿಗೆ ಮೋಡಿಮಾಡುವ ಶಕ್ತಿ ಇತ್ತು. ಪಸ್ಚಿಮ ಬಂಗಾಲಕ್ಕೆ ಕರೆದೊಯ್ದು ಸೈನ್ಯ ಸೇರಿಸುವೆನೆಂದೂ, ದೇಶಕ್ಕಾಗಿ ಪಾದಾರ್ಪಣೆ ಮಾಡಿ ಜನನೀ ಜನ್ಮಭೂಮಿಸ್ಚ ಸ್ವರ್ಗಾದಪಿ ಗರೀಯಸೀ ಎಂಬ ಅರ್ಯೋಕ್ತಿಯನ್ನು ಬ್ರಾಹ್ಮಣಕುಮಾರನಾದ ನೀನು ಸಾರ್ಥಕಗೊಳಿಸಬೇಕೆಂದೂ, ಜಾತಸ್ಯ್ ಮರಣಂ ಧೃವಂ ಎಂದು ಹೇಳೀ, ಹೇಳೀ ನನ್ನನ್ನು ತಾಕೀಟು ಮಾಡುತ್ತಿದ್ದರು. ಇನ್ನೇನು ನಾಡಿದ್ದು ತ್ರಯೋದಶಿಯಂದು ಓಡಿಹೋಗುವುದೆಂದು ಸಂಸಿದ್ಧನಾಗಿದ್ದಾಗ, ನಾಳೆ ಅಂದರೆ ದ್ವಾದಶಿಯಂದು ಮಧ್ಯಾನ್ಹ ಕೆಲವು ಫರಂಗಿ ಸರಕಾರದ ಹಿಂದೂ ಸೈನಿಕರು ಅವರನ್ನು ಬಂಧಿಸಿ ಹಿಡಿದೊಯ್ದರು. ಅದಾದ ಎರಡನೆಯ ದಿನಕ್ಕೆ ಅಂದರೆ ಚತುರ್ದಶಿಯಂದು ನಮ್ಮ ತೀರ್ಥರೂಪರು ಬಂದು ನನ್ನನ್ನು ಸಾರೋಟಿನಲ್ಲಿ ಊರಿಗೆ ಕರೆದೊಯ್ದರು. +ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಅವರು ನನ್ನಿಂದ ತ್ಯಾಗರಾಜರ ಅಣ್ಣಮಾಚಾರ್ಯರ, ಪುರಂದರದಾಸರ, ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ಹಾಡಿಸುತ್ತಿದ್ದರು. ವರ್ಣ, ಗಣ, ಮಾತ್ರೆ, ತಾಳ ಲಯ, ಆರೋಹಣ ಅವರೋಹಣ ಪರಿಚಯ ಮಾಡಿಕೊಡುತ್ತಿದ್ದರು. ಸುಪ್ತಾವಸ್ಥೆಯೊಳಗೆ ಬೇರೂರಿದಂಥ ಭಾವನೆಗಳನ್ನು ಕೆರಳಿಸುವಂಥ, ಅವುಗಳಿಗೆ ಪರಿಪೂರ್ಣ ವ್ಯಕ್ತಿತ್ವ ಕಲ್ಪಿಸುವಂಥ ಕೀರ್ತನೆಗಳನ್ನು ನನ್ನ ಬಾಯಿಂದ ಹಾಡಿಸುತ್ತ ಅವರು ನಿದ್ದೆ ಹೋಗಿ ರಮ್ಯ ಕನಸುಗಳನ್ನು ವಿವರಿಸುತ್ತಿದ್ದರು. (ಅವರು ಹಾಗೆ ವಿಹರಿಸುತ್ತಿದ್ದುದು ಮೈಸೂರು ಮಹಾರಾಜರ ಆಸ್ಥಾನದ ನರ್ತಕಿಯ ನೆನಪಿನೊಂದಿಗೆ ಅಂತ ಈಗ ಅರ್ಥವಾಗುತ್ತದೆ) +ಅಷ್ಟಾಂಗಮಾರ್ಗಕ್ಕೆ ಸಂಬಂಧಿಸಿದಂತೆ ಸದರಿ ಗ್ರಾಮದಲ್ಲಿ ಸಾಕಷ್ಟು ಹೆಸರು ಶಂಪಾದಿಸಿದ್ದ ತೀರ್ಥರೂಪರು ಸಾಮಾನ್ಯವಾಗಿ ಶ್ರೀಮಂತರ, ದೊಡ್ಡ ದೊಡ್ಡ ಅಧಿಕಾರಿಗಳ ಮನೆಗೆ ವೈದಿಕ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದುದೇ ಹೆಚ್ಚು. ಅವರೊಂದಿಗೆ ತಪ್ಪದೆ ನಾನಿರಬೇಕಾಗಿತ್ತು. ಹೋಗುವಾಗ ದಾರಿಯುದ್ದಕ್ಕೂ ಧರ್ಮದ ಅಷ್ಟಮಾರ್ಗಗಳಾದ ಯಾಗ, ಅಧ್ಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ ಮತ್ತು ಲೋಭವಿಲ್ಲದಿರುವಿಕೆ ಕುರಿತಂತೆ ಹೇಳುತಿದ್ದರು. ಕೆರೆಯೊಳಗೆ ಸಂಗ್ರಹಗೊಂಡ ನೀರು ಹೋಗಲು ಕೋದಿ‌ಎಂಬುದು ಹೇಗಿರುತ್ತದೆಯೋ ಹಾಗೆ ಸಂಪಾದಿಸಿದ ಹಣದ ಒಂದು ಭಾಗವನ್ನು ದಾನಧರ್ಮಗಳಿಗೆ ವಿನಿಯೋಗಿಸಬೇಕೆಂದು ಹೇಳುತ್ತಿದ್ದರೊಂದೇ ಅಲ್ಲದೆ ಅದರಂತೆ ಬದುಕುತ್ತಿದ್ದರು. ಆದ್ದರಿಂದ ಅವರೆಂದರೆ ಶ್ರೀಮಂತರಿಗೂ ಬಡವರಿಗೂ ಅಪಾರವಾದ ಗೌರವವಿತ್ತು. +ಆ ದಿನ ಪ್ರಸಿದ್ಧ ಇಂಜಿನೀಯರಾದ ಗೋರೆಬಾಳು ಸುಭಾಷ್‌ಚಂದ್ರ ಗುತ್ತಿಗೆದಾರ್ರವರ ಮನೆಗೆ ಸತ್ಯನಾರಾಯಣ ಪೂಜೆಗೆ ತೀರ್ಥರೂಪರೊಂದಿಗೆ ನಾನೂ ಹೋಗಬೆಕಾಗಿ ಬಂತು. ದೊಡ್ಡ ಇಂಜಿನೀಯರಾಗಿದ್ದೂ ಅಪರೂಪದ ಕಲೋಪಾಸಕರಾಗಿದ್ದ ಶ್ರಿಯುತ ಗುತ್ತೇದಾರರೂ ಸುಭಾಷ್‌ಚಂದ್ರ ಬೋಸರೂ ಒಂದೇ ವಾರಿಗೆಯವರೆಂದು ಹೇಳಬಹುದು. ಅವರ ಆ ಹೆಸರು ಇಟ್ಟುಕೊಂಡಿದ್ದೇ ಸುಭಾಷ್‌ಚಂದ್ರಬೋಸರು ಪ್ರವರ್ಧಮಾನಕ್ಕೆ ಬಂದು ಹೆಸರು ಗಳಿಸಿದನಂತರವಂತೆ. ಅವರ ಮೊದಲನೆಯ ಹೆಸರು ಹನುಮಂತ ದೇವರು ಎಂದು ಇತ್ತಂತೆ. ಅವರ ತಂದೆ ಜೋಡಿದಾರ್ ಎಂದು ಕರೆಸಿಕೊಂಡಿದ್ದರೆ ಅವರ ತಾತ ಜಾಗೀರ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಅವರ ಮುತ್ತಾತ ಜಮೀನ್ದಾರ್ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಸುಭಾಷ್ ಚಂದ್ರರು ಫರಂಗಿಯವರ ಸರ್ಕಾರದಲ್ಲಿ ಅತ್ಯುನ್ನತ ಪದವಿಗೇರಿದ ಮೇಲೆ ತಮ್ಮ ಹೆಸರಿನ ಪಕ್ಕ ಗುತ್ತೇದಾರ್ ಎಂಬ ಉಪನಾಮ ಸೇರಿಸಿಕೊಂಡರಂತೆ. ಅದಕ್ಕೆ ತಕ್ಕಂತೆ ಸಿಂಧನೂರು ಪ್ರಾಂತದ ಗೋರೆಬಾಳಿನಲ್ಲಿ ನೂರಾರು ಎಕರೆ ಜಮೀನು ಇರುವುದಂತೆ. ತ್ರಿಪುರಸುಂದರೀದೇವಿಯಂಥ ಕಿರಿವಯಸ್ಸಿನ ಅತಿಲೋಕ ಸುಮ್ದರಿಯನ್ನು ಮದುವೆಯಾಗಿ ಐದುವರ್ಷಗಳಾದರೂ ಮಗುವಾಗಲಿಲ್ಲ ಕಾರಣಕ್ಕೆ ಆಗಾಗ್ಗೆ ಪುತ್ರಕಾಮೇಷ್ಟಿಯಾಗಕ್ಕೆ ಸಮಾನವಾದಂಥ ಸತ್ಯನಾರಾಯಣ ಪೂಜಾ ಶ್ರವಣವನ್ನು ತಮ್ಮ ಭಾರಿ ಮತ್ತು ಆಧುನಿಕವಾದ ಮನೆಯೊಳಗೆ ಏರ್ಪಡಿಸುತ್ತಿದ್ದರು. +ಆ ದಿನ ನಾನು ಅವರ ಸ್ರೀಮತಿಯವರ ಸೌಂದರ್ಯಕ್ಕೆ ಬೆರಗಾಗಿ ಹೋದೆ. ಪೂಜೆಯ ನಂತರ ತೀರ್ಥರೂಪರು ಸೂಚಿಸಿದ ಪ್ರಕಾರ ನಾನು ಸಾಂಧರ್ಭಿಕವಾಗಿ ಮುತ್ತುಸ್ವಾಮಿ ದೀಕ್ಷಿತರ ಪ್ರಸಿದ್ಧ ಕೃತಿಯಾದ ಸಾಮಗಾನಪ್ರಿಯೇ ಕಾಮಕೋಟಿನಿಲಯೇ | ಶಂಕರೀ ಸುಂದರಿ | ಸಾರತರ ಲಹರೀ | ಚಂಡಿಕೇ ನಿರ್ಮಜೇ | ಕಾಮಿನೀ ಮೋದಿನೀ | ಪಾಹಿ ಗುರುಗುಹ ಜನನೀ ಕಾಮಾಕ್ಷಿ ಎಂದು ಶಂಕರಾಭರಣ ರಾಗದಲ್ಲಿ ಸೊಗಸಾಗಿ ಹಾಡಿಬಿಟ್ಟೆ. ಹಾಡಿ ಆ ದಂಪತಿಗಳೀರ್ವರನ್ನು ಪರವಶಗೊಳಿಸಿಬಿಟ್ಟೆನು. ಆಕೆಯ ಸೌಂದರ್ಯರಾಶಿಯೇ ನನ್ನ ಅಂತರಂಗದಲ್ಲಿ ಲಗ್ಗೆ ಹಾಕಿ ಆ ಪ್ರಕಾರ ಹಾಡಿಸಿತು. ಎಲ್ಲ ವಿಷಯಗಳಿಗೆ ಸಂಬಂಧಪಟ್ಟಂಥ ಸಾರಿರಾರು ವಸ್ತುಗಳು ಒಟ್ಟಗಿ ಸೇರಿ ಹಾಡಿನ ಮೂಲಕ ಪ್ರಕಟಗೊಂಡುಬಿಟ್ಟವು. ದುಃಖವಾಗಲೀ, ಸಂತೋಷವಾಗಲಿ‌ಈ ಹೊಂದಬಾರದೆಂದು ನಾನು ನಿಧಾನವಾಗಿ ಆಲೋಚಿಸುತ್ತ ಸ್ಥಿತ ಪ್ರಜ್ಞನಂತೆ ಉಳಿದು ಬಿಟ್ಟೆನು. ಅವರೆಲ್ಲರು ಅಮೃತವನ್ನು ಹರಿಸತಕ್ಕ ಒಳ್ಳೆಯ ಮಾತುಗಳನ್ನಡಿದರು. ಜೇನು ಬೆರೆಸಿದಂತೆ ನನ್ನೆದೆಯ ಉದಕವ ಸಿಹಿಯಾಯಿತು. +ಕಾಮಸುಖವು ಬೇರೆ ಎಲ್ಲ ಶತ್ರುಗಳಿಗಿಂತಭಯಂಕರವಾದುದೆಂದು ತದ ನಂತರ ಅರಿವಿಗೆ ಬಂತು. ಸಕ್ಕರೆಯನ್ನು ರುಚಿ ನೋಡುವ ಸಂತೋಷದಲ್ಲಿ ಗಮನಿಸದೆ ಹೋದ ನೊಣವು ಹೊಟ್ಟೆ ಸೇರಿ ಯಾವ ಪ್ರಕಾರವಾಗಿ ನೋವು ಕೊಡುವುದೋ ಹಾಗೆಯೇ ಆಕೆಯ ರೂಪ ನನ್ನ ಮಸ್ತಿಸ್ಕವನ್ನು ಸೇರಿ ಹೆಚ್ಚಿನ ತೊಂದರೆ ಕೊಡಲಾರಂಭಿಸಿತು. ಒಂದೇ ಒಂದು ಒಣಗಿದ ಮರವಿದ್ದರೂ ಕಾಡುಗಿಚ್ಚಿನಿಂದ ತಾನುರಿದು ಹೂವುಗಳಿಂದ ತುಂಬಿದ ಮರಗಳ ವನವನ್ನೇ ದಹಿಸುವ ರೀತಿಯಲ್ಲಿ ಆಕೆಯ ಒಂದೇ ಒಂದು ನೆನಪು ನನ್ನೆದೆಯಲ್ಲಿ ದಹಿಸುತ್ತ ಶಾಸ್ತ್ರಾಭ್ಯಾಸದಿಂದ ಪಡೆದ ಸಮಸ್ತ ಜ್ಞಾನವನ್ನು ಆಪೋಶನ ತೆಗೆದುಕೊಳ್ಳಲಾರಂಭಿಸಿತು. +ಆ ರಾತ್ರಿ ನಾನು ಕಂಡ ಕನಸೇ ಇದಕ್ಕೆ ಸಾಕ್ಷಿ: ಭೋರ್ಗರೆಯುವ ನದಿ ದಡದ ಮರಳ ಮೇಲೆ ನಿರ್ವಸ್ತ್ರನಾಗಿ ಅಂಗಾತ ಮಲಗಿದ್ದಂಥ ಕನಸು ಅದಾಗಿತ್ತು. ಆಕಾಶದಲ್ಲಿ ಸಾವಿರ ಯೋಜನಗಳ ಮೆಲೆ ನಕ್ಷತ್ರದಷ್ಟು ಚಿಕ್ಕದಾದ ಪಕ್ಷಿಯೊಂದು ಕಾಣಿಸಿಕೊಂಡಿತು. ಅದು ಬ್ರಹ್ಮದ ಯಾವ ತತ್ವ ಆಗಿರಬಹುದೆಂದು ನಾನು ಯೋಚಿಸುತ್ತಿದ್ದೆನು. ನೋಡು ನೋಡುತ್ತಿದ್ದಂತೆ ಆ ಪಕ್ಷಿ ದೊಡ್ಡದಾಗುತ್ತ ಹೋಯಿತು. ನೀರಿನಲ್ಲಿ ಬಿದ್ದ ಶಾಯಿಯ ಬಿಂದುವಿನಂತೆ, ಕ್ರಮೇಣ ಅದು ನಭೋ ಮಂಡಲದ ತುಂಬ ರೆಕ್ಕೆಳಿಂದ ವ್ಯಾಪಿಸಿತು. ಅದರ ಎರಡು ಕಣ್ಣುಗಳು ಸೂರ್ಯ ಗೋಳದ ಎರಡು ನಮೂನೆಗಳಂತೆ ಹೊಳೆಯ ತೊಡಗಿದವು. ಅದು ಅಂಥ ಕಣ್ಣುಗಳಿಂದ ನನ್ನನ್ನು ದುರುಗುಟ್ಟಿ ನೋಡ ತೊಡಗಿತು. ಅದ ತೀಕ್ಷ್ಣ ನೋಟವು ಎಷ್ಟೊಂದು ಆಪ್ಯಾಯಮಾನವೂ ಪವಾಡ ಸದೃಶ್ಯವೂ ಆಗಿತ್ತೆಂದರೆ ನನ್ನ ಶಿಶ್ನವು ನಿಮಿರಿ ಚಿಗಿತು ಹೂವು ಹಣ್ಣು ಬಿಟ್ಟು ಘಮಾಡಿಸಲಾರಂಬಿಸಿತು. ಇದ್ದಕ್ಕಿದ್ದಂತೆ ಆ ಹಕ್ಕಿಯು ಬಿಟ್ಟ ಬಾಣದ ಹಾಗೆ ಸುರುಗಿ ನನ್ನ ಶಿಶ್ನವನ್ನು ಕೊಕ್ಕಿನಿಂದ ಕಚ್ಚಿಕೊಂಡು ಮುಗಿಲಿಗೆ ಜಿಗಿದು ಮರುಕ್ಷಣದಲ್ಲಿ ಅಂತರ್ಧಾನವಾಯಿತು. +ನಾನು ಹ್ಹಾಂ ಎಂದು ಚೀರಿಕೊಂಡೆ. ನಿದ್ರೆಯಲ್ಲಿ ಬ್ರಹ್ಮತ್ವವನ್ನು ಸೇರಿದ್ದ ತೀರ್ಥರೂಪರು ತುಪ್ಪದ ದೀವಿಗೆ ಹಿಡಿದುಕೊಂಡು ಗಾಬರಿಯಿಂದ ಬಂದು “ಏನಾಯಿತು ಮಗು?… ಕೆಟ್ಟ ಕನಸು ಕಂಡೆ ಏನು? ಎಂದು ವಿಚಾರಿಸಿದರು. ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಹೇಗೆ ಮದ್ಯಪಾನವು ಯೋಗ್ಯವಲ್ಲವೋ ಹಾಗೆ ಸತ್ಕಥಾ ಶ್ರವಣ ಸಂಪನ್ನರಾದ ತೀರ್ಥರೂಪರಿಗೆ ಕಂಡ ಕನಸನ್ನು ಕಂಡಂತೆ ಹೇಳುವುದು ಯೋಗ್ಯವಲ್ಲವೆಂದು ಭಾವಿಸಿದ ನಾನು ಬೆಟ್ಟದ ಮೇಲಿಂದ ಬಿದ್ದುದಾಗಿ ಕನಸು ಕಂಡೆನೆಂದು ಸುಳ್ಳು ಹೇಳಿದೆ. ಅದಕ್ಕವರು ಸ್ವಪ್ನ ದೋಷನಿವಾರನಾ ಮಂತ್ರ ಹೇಳಿ ಮಲಗಿಸಿದರು. +ಮುಂದಿನ ದಿನಗಳಲ್ಲಿ ಗುತ್ತೇದಾರರು ದಿನಕ್ಕೊಮ್ಮೆಯಾದರೂ ನನ್ನನ್ನು ಬರಮಾಡಿಕೊಂಡು ಒಂದಲ್ಲಾ ಒಂದು ಕೀರ್ತನೆ ಹಾಡಿಸುವುದು, ತಾವೂ ಹಾಡುವುದು, ಪರಸ್ಪರ ಅಭಿಪ್ರಶಂಸಿಸಿಕೊಳ್ಳುವುದು ಮೊದಲಾಯಿತು. ಗುತ್ತೇದಾರರು ಪರ ಊರಿಗೆ ಹೋಗಿದ್ದಾಗ ಅವರ ಎಳೆ ವಯಸ್ಸಿನ ಪತ್ನಿಯಾದ ತ್ರಿಪುರ ಸುಂದರೀ ದೇವಿಯವರು ನನ್ನನ್ನು ತಮ್ಮ ಮನೆಗೆ ಕರೆ ಕಳಿಸಿಕೊಂಡು ಶಾಮೂ ಶಂಕರಾಭರಣರಾಗದ ದೀಕ್ಷಿತರ ಕೃತಿ ಹಾಡೆಂದು ಪೀಡಿಸತೊಡಗಿದರು. ಯಾವ ಯಾವ ತಾಳದಲ್ಲಿ ಶಂಕರಾಭರಣ ಯಾವ ಯಾವ ರೂಪ ಪಡೆಯುತ್ತದೆ ಎಂದು ನನ್ನ ಶಾರೀರವನ್ನು ಪ್ರಯೋಗಕ್ಕೆ ಒಡ್ಡುತ್ತಿದ್ದರು. ಆನಂದಾತಿರೇಕದಿಂದ ನನ್ನನ್ನು ಸ್ಪರ್ಶಿಸುತ್ತಿದ್ದರು. ತಟ್ಟುತ್ತಿದ್ದರು. ಅಪ್ಪಿಕೊಳ್ಳುತ್ತಿದ್ದರು. ಉಣಬಡಿಸುತ್ತಿದ್ದರು. ಉಣ್ಣುತ್ತಿದ್ದರು. ಚಿರಂತರ ಹಸಿವೆ ತೃಷೆಗಳನ್ನು ತಮ್ಮ ಕೈಯಾರ ತಣಿಸುವ ಪ್ರಯತ್ನ ಮಾಡುತ್ತಿದ್ದರು. ಹಂಸತೂಲಿಕಾತಲ್ಪದ ಮೇಲೆ ನನ್ನನ್ನು ವಿವಿಧ ಭಂಗಿಗಳಲ್ಲಿ ಮಲಗಿಸಿ ನನ್ನ ದೇಹದ ಕೋಟಿ ಕೋಟಿ ಶ್ವೇದರಂದ್ರಗಳಲ್ಲಿ ತಮ್ಮ ಬೆಚ್ಚನೆಯ ಉಸಿರು ಬಿತ್ತುತ್ತಿದ್ದರು. ನನ್ನ ಫಲವತ್ತಾದ ದೇಹವು ಅವರಿಗಿಷ್ಟವಾದ ಬೆಳೆಯನ್ನು ಕುಯ್ಲಿಗೆ ತಂದು ಸುಗ್ಗಿ ಮಾಡುತ್ತಿತ್ತು. ಆ ದೇಹದ ಹಸಿವಿನ ಬೆಂಕಿಯನ್ನಾರಿಸಲು ನನ್ನ ದೇಹ ಬೆಳೆಯುತ್ತಿದ್ದ ಕಾಳುಗಳಿಗೆ ಸಾಧ್ಯವಾಯದಾಯ್ತು. ಆಕೆಯ ದೇಹದ ನಗ್ನತೆ ಮರೆ ಮಾಚಲು ನನ್ನ ದೇಹವೆಂಬ ಕೌಪೀನಕ್ಕೆ ಸಾಧ್ಯವಾಗದಾಯ್ತು. ಆಕೆಯ ದೇಹದ ಅಗತ್ಯಗಳನ್ನು ತೀರಿಸಲು ನನ್ನ ದೇಹವು ಅತ್ಯುತ್ಕಟವಾಗಿ ಹಾತೊರೆಯುತ್ತಿತ್ತು. +ಮುಂದೊಂದು ದಿನ ತೀರ್ಥರೂಪರು ನನ್ನ ಕಪೋಲಗಳಿಗೆ ಛಟೀರನೆ ಏಟುಕೊಟ್ಟು ಮುಂದೆಂದೂ ಸಂಗಿತದ ಗೊಡವೆಗೆ ಹೋಗಬೇಡವೆಂದೂ ಅದರಲ್ಲೂ ಮುಖ್ಯವಾಗಿ ಶಂಕರಾಭರಣ ಹಾಡಕೂಡದೆಂದೂ, ಹಾಡಿದಿ ಎಂದರೆ ರೌರವ ನರಕ ಪ್ರಾಪ್ತವಾಗುವುದೆಂದೂ ಎಚ್ಚರಿಕೆ ನೀಡಿದರು. +ಶೃಂಗೇರಿಗೆ ಕರೆದೊಯ್ದು ಸಂಧ್ಯಾ ವಂದನೆ ಮಾಡಿಸಿ ಎಳ್ಳು ಬೀಜಗಳನ್ನು ತುಂಗೆಗೆ ಬಿಡಿಸಿದರು. ಪರಮ ಪೂಜ್ಯ ಸ್ವಾಮಿಗಳಿಂದ ಪ್ರಾಯಸ್ಚಿತ್ತ ಮಾಡಿಸಿ ಹೊಸ ಯಜ್ಞೋಪವೀತ ಧಾರಣ ಮಾಡಿಸಿದರು. ನನಗೆ ಅದರ ಉದ್ದೇಶ ಅರ್ಥವಾಗಲಿಲ್ಲ. ಮಲಯಗಿರಿಯಲ್ಲಿ ವಾಸಿಸುವ ಬೇಡಿತಿಯ ಕೈಯ ಶ್ರೀಗಂಧದ ಕೊರಡಿನಂತಾಯಿತು ನನ್ನ ಪರಿಸ್ಥಿತಿ. ತ್ರಿಪುರ ಸುಂದರೀದೇವಿಯ ಕುರಿತು ಯೊಚಿಸುತ್ತಿದ್ದ ನನ್ನನ್ನು ಎದುರಿಗೆ ಕೂಡ್ರಿಸಿಕೊಂಡು ಶೃಂಗೇರಿಪೀಠದ ಶ್ರೀಗಳವರು “ಓಂ ಭದ್ರ ಕರ್ಣೇಭಿಃ ಶ್ವಣುಯಾಮಿ ದೇವಾಃ| ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ತಾಃ| ಸ್ಥಿರೈರಂಗೈಸ್ತುಷ್ಟುವಾಂ ಸಪ್ತಯಾಭಿಃ | ವ್ಯಶೇಮ ದೇವ ಹಿತಂ ಯದಾಯುಃ |” ಎಂದು ಶ್ಲೋಕವನ್ನು ತಾವೂ ಹೇಳಿದರು, ನನ್ನಿಂದಲೂ ಹೇಳಿಸಿದರು. ನಂತರ ಅದನ್ನು ವಿವರಿಸಿ ಅಡಿಯಿಂದ ಮುಡಿಯವರೆಗೆ ಸ್ಪರ್ಶಿಸಿ ವಿದ್ಯುತ್ ಸಂಚಾರ ಮಾಡಿಸಿದರು. +ನಾವು ಶೃಂಗೇರಿಯಿಂದ ಗ್ರಾಮಕ್ಕೆ ಮರಳಿದ ಕೆಲದಿನಗಳಿಗೆ ಗುತ್ತೇದಾರ್ ದಂಪತಿಗಳು ಬೇರೊಂದು ಊರಿಗೆ ವರ್ಗವಾಗಿ ಹೋದರು. ಅದು ಇಂಥದೇ ಊರೆಂದು ಗೊತ್ತಿದ್ದರೂ ನಾನು ಆ ಕಡೆ ಸುಳಿಯುವ ಧೈರ್ಯ ಮಾಡಲಿಲ್ಲ. ಹೋಗುವುದು ಏಕೆ? ಕ್ರೂರವಾದ ಶೋಕ ಪ್ರಸಂಗಗಳನ್ನು ಎದುರಿದುವುದು ಏಕೆ? ಯೌವನ ಕಳೆದುಹೋದ ಪೃಥ್ವಿಯಂತೆ ಇದೇ ಹುತ್ತದಲ್ಲಿ ಉಳಿದುಬಿಡುವುದೇ ವಾಸಿ ಎಂದು ಬಗೆದೆನು. ಬಹು ಇನಗಲವರೆಗೆ ಆಕೆಯ ನೆನಪಿನಿಂದಾಗಿ ನಿರ್ಮಲ ನೀರಿನಿಂದ ತೊಳೆದರೂ ಅವಯವಗಳ ಕೊಳೆ ಕಳೆಯದಾದೆನು. ಯಾವ ಸತ್ಯದಿಂದಲೂ ಮನಸ್ಸನ್ನು ಶುದ್ಧಿಮಾಡಿಕೊಳ್ಳದಾದೆನು. ಯಾವ ವಿದ್ಯೆಗೂ, ಯಾವ ತಪಸ್ಸಿಗೂ ಜೀವಾತ್ಮನನ್ನಾಗಲೀ ಜ್ಞಾನ ಬುದ್ಧಿಗಳನ್ನಾಗಲೀ ಸ್ವಚ್ಛಗೊಳಿಸದೇ ಹೋದೆನು. ಇದನ್ನು ಮನಗಂಡೇ ತೀರ್ಥರೂಪರು ನನಗೆ ಎಲ್ಲಿಂದಲೋ ಒಂದು ಹೆಣ್ಣು ತಂದು ಮದುವೆ ಮಾಡಿದರು. ಆಕೆ ಮಂತ್ರವಾಗದ ಅಕ್ಷರಗಳಂತಿದ್ದಳು. ಆಕೆ ಔಷದಿಯಾಗದ ಗಿಡಮೂಲಿಕೆಯಂತಿದ್ದಳು ಇದ್ದಳೋ ಏನೋ? ಆದರೆ‌ಅ ಅದನ್ನು ಗುರುತಿಸುವ ಶಕ್ತಿ ಸಾಮರ್ಥ್ಯ ನನ್ನಲ್ಲಿರಲಿಲ್ಲವೋ?… ಪೂಜ್ಯತ್ವ ನಶಿಸಿದ್ದರಿಂದಾಗಿಯೋ ಏನೋ ಅಶ್ವಥ್ ನಾರಾಯಣ ಎಂಬ ಮಗ ಹುಟ್ಟಿದ. ಎಲ್ಲ ತಂದೆಗಳೂ ಕಾಣುವಂತೆ ಅವನನ್ನೂ ಜಗದ್ವಿಖ್ಯಾತ ಶ್ರೋತ್ರಿಯನ್ನಾಗಿ ಮಾಡ ಬಯಸಿ ವಿಫಲನಾದೆ. ಅವನ ಮಗನಾದ ಶಾಮನೂ ಮಂದಾನಿಲದೆದುರಿಗಿಟ್ಟ ದೀಪದಂತೆ ಚಂಚಲ ಸ್ವಭಾವದವನಾಗಿದ್ದಾನೆ. ಈ ಎಲ್ಲ ಯಶಸ್ಸು, ಅಪಯಶಸ್ಸುಗಳ ನಡುವೆ, ಪ್ರಳಯ ಕಾಲದ ಅಗ್ನಿಗಳ ನಡುವೆ, ವೃದ್ಧಾಪ್ಯ ಆವರಿಸಿಕೊಂಡು ಕೃಶ ಶರೀರಿಯಾಗಿ ಹತ್ತಿರವಾಗಿರುವ ವೈಕುಂಠದ ಬಗ್ಗೆ ಯೋಚಿಸುತ್ತಿರುವಾಗಲೇ ಶ್ರೀಮತಿ ಇಂದಿರಾಗಾಂಧಿಯವರ ಭಾವಚಿತ್ರ ಕಣ್ಣಿಗೆಟುಕಿ ಉದ್ಬುದ್ಧ ಭಾವನೆಗಳಿಗೆ ಕಾರಣೀಭೂತವಾಗಿದ್ದು, ಅದೇ ಮೂಗು, ಅದೇ ಕಣ್ಣು, ಅದೇ ನೊಸಲು, ಅದೇ ಕಪೋಲ, ಅದೇ ಗದ್ದ ಥೇಟ್ ತ್ರಿಪುರ ಸುಂದರೀ ದೇವಿಯಂತೆಯೇ ಇರುವಳಲ್ಲ ಎಂದು ನಾನು ಅವಾಕ್ಕಾದುದರಲ್ಲಿ ತಪ್ಪೇನುಂಟು? ತ್ರಿಪುರ ಸುಂದರೀ ದೇವಿಯಂತೆಯೇ +ವೈಧವ್ಯ ನಂತರ ರಾಷ್ಟ್ರರಾಜಕಾರಣದ ಚುಕ್ಕಾಣಿ ಹಿಡಿದಿರಬಹುದೇ ಎಂಬ ಸಂದೇಹವು ಒಮ್ಮೆ ಬಂದರೆ, ಇನ್ನೊಮ್ಮೆ ಆಕೆಯ ಸಹ‌ಉದರಿ ಯಾರಾದರೂ ಇಂದಿರಾಗಾಂಧಿ ನಾಮಾಂಕಿತರಾಗಿ ಖ್ಯಾತಿಪಡೆದಿರಬಹುದೇ? ಎಂದು ಯೋಚಿಸಿದುದುಂಟು. ಇದು ಕೇವಲ ನನ್ನ ಭ್ರಾಂತಿ ಎಂದು ತದನಂತರ ಅರ್ಥವಾಯಿತು. ಹಸ್ತ ಸಾಮುದ್ರಿಕ ನೋಡುವ ನೆಪದಲ್ಲಿ ಆಕೆಯ ಮೃದುವಾದ ಹಸ್ತ ಸ್ಪರ್ಶಿಸಿ ವೃದ್ಧಾಪ್ಯದ ಸಾರ್ಥಕ್ಯ ಅನುಭವಿಸುವ ಸಲುವಾಗಿ ನಾನು ಪಡಬಾರದ ಕಷ್ಟಗಳನ್ನು ಅನುಭವಿಸಿದೆ. ಇದು ಸರ್ವರಿಗೂ ವೇದ್ಯವಾಗಿರುವ ಸಂಗತಿಯಾಗಿದೆ. +ಇದಕ್ಕೆಲ್ಲ ಪ್ರೇರಣೆ ನೀಡಿದ್ದೆ ಕಲಿದೇವನಾಥನ ಬಳಿಯ ಎರಡು ಶಿಲಾ ಶಾಸನಗಳ ನಡುವಿನಿಂದ ನಾನು ನೋಡಿದ ದೃಶ್ಯ… ಅದು ನನ್ನ ಬದುಕಿನ ಸಂಕ್ರಮಣ ಕಾಲ, ಆ ದೃಶ್ಯವೇ ಶುಕ್ರಾಚಾರ್ಯನಂತೆ ಶಾಪ ಕೊಟ್ಟು ವೃದ್ಧಾಪ್ಯವನ್ನು ನೆನಪಿಸುವಂತೆ ಮಾಡಿತು. ಕೆಲವು ಕಾಲದ ಮಟ್ಟಿಗಾದರೂ ನನ್ನ ವೃದ್ಧಾಪ್ಯವನ್ನು ತೆಗೆದುಕೊಂಡು ನಿನ್ನ ಯೌವನವನ್ನು ನನಗೆ ಕೊಡಲಾರೆಯಾ ಎಂದು ನನ್ನ ಮೊಮ್ಮಗನನ್ನು ಕಣ್ಣ ನೋಟದಿಂದ ಪ್ರಾರ್ಥಿಸುವಂತೆ ಮಾಡಿತು. ಆ ದೃಶ್ಯವೇ ವರದಾಚಾರ್ಯನೊಂದಿಗೆ ವಾದಕ್ಕಿಳಿಯುವಂತೆ ಮಾಡಿತು. ಆ ದೃಶ್ಯವೇ ಸ್ಕಂದ ಪುರಾನದಲ್ಲಿ ಕಾಶೀಕ್ಷೇತ್ರದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯ ಸಾಯುಜ್ಯ ವರ್ಣನೆಯನ್ನು ನೆನಪಿಸಿಕೊಟ್ಟಿತು. ಆ ದೃಶ್ಯವೇ ನನ್ನನ್ನೀ ಉಯಿಲು ಬರೆಯುವಂತೆ ಪ್ರೇರೇಪಿಸಿತು. ಇದಕ್ಕೆಲ್ಲ ಧರ್ಮ ಕರ್ಮ ಸಂಯೋಗವೆಂಬಂತೆ ನಾನು ನನ್ನ ಮೊಮ್ಮಗನಾದ ಶಾಮನನ್ನು ಹೊಣೆಗಾರನನ್ನಾಗಿ ಮಾಡುತ್ತಿರುವೆನು. ಹೀಗೆ ಮಾಡದೆ ನನಗೆ ಬೇರೆ ದಾರಿಯೇ ಉಳಿದಿಲ್ಲ. +ನನ್ನ ಪ್ರೀತಿಯ ಮೊಮ್ಮಗನಾದ ಶಾಮಾಶಾಸ್ತ್ರಿಯೇ ನನ್ನ ಮರಣಾನಂತರ ನನ್ನೀ ಉಯಿಲನ್ನು ನಿನಗೆ ಓದಲು ಸಾಧ್ಯವಾಗಬಹುದು. ಸಾಶ್ಯವಾಗದೇ ಹೋಗಬಹುದು. ಈಗಾಗಲೇ ನೀನು ನನ್ನ ಬಗ್ಗೆ ಸರಿಯಾದ ಭಾವನೆಗಳನ್ನು ಹೊಂದಿಲ್ಲ. ಇದನ್ನು ನೀನು ಒದಿದೀ ಅಂದರೆ ನನ್ನ ಬಗ್ಗೆ ನಿನಗಿರುವ ಭಾವನೆಗಳಲ್ಲಿ ಮತ್ತಷ್ಟು ಏರುಪೇರುಗಳಾಗದೆ ಇರವು. ಹೀಗೆ ಇಷ್ಟು ವ್ಯಾಪಕವಾಗಿ ಬರೆಯಬೇಕಾಗಿ ಬಂದದ್ದು ಮತ್ತು ನಿನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕಾಗಿ ಬಂದದ್ದು ಎಲ್ಲ ನಿನ್ನಿಂದಲೇ ಎಂದು ನಿನಗಿಂತ ಮೂರು ಪಟ್ಟು ವಯಸ್ಸಗಿರುವ ನಾನು ನಮ್ರತೆಯಿಂದ ಹೇಳಬಯಸುತ್ತೇನೆ. ನನ್ನ ಮಾತು ಧಿಕ್ಕರಿಸಿ ನೀನು ಈಗಾಗಲೇ ವಂಶದ ಗೌರವ ಬದಿಗಿಟ್ಟು ಸಾರಕಾರಿ ನೌಕರಿ ಸೇರಿಕೊಂಡಿರುವಿ. ಅಮೇಧ್ಯ ವಾತಾವರಣ ರಾರಾಜಿಸುತ್ತಿರುವ ಕೊತ್ತಲಗಿಯಲ್ಲಿ ನೀನು ನೌಕರಿ ಆರಂಭಿಸಿರುವುದೇನು ನನಗೆ ಸಂತಸದಾಯಕ ವಿಷಯವಾಗಿಲ್ಲ. ಅನೇಕ ದೋಲಾಯಮಾನ ವ್ಯಕ್ತಿತ್ವಗಳನ್ನು ತುಂಬಿಕೊಂಡಿರುವ ನೀನು ಅದು ಹೇಗೆ ಮಹಾಸಾಧ್ವಿಯಾದ ನಿನ್ನ ತಾಯಿ ಅಂದರೆ ನನ್ನ ಅಚ್ಚುಮೆಚ್ಚಿನ ಸೊಸೆಯನ್ನು ನೋಡಿಕೊಳ್ಳುವೆಯೋ ದೇವರಿಗೇ ಗೊತ್ತು? ನಿನ್ನ ಮನಸ್ಸೆಂಬ ಅಶ್ವವನ್ನು ಪಳಗಿಸಲೆಂದೇ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ತಂದು ನಿನ್ನ ಹೆಂಡತಿಯನ್ನಾಗಿ ಮಾಡಿರುವೆನು. ಆಕೆ ಮುಂದೆ ಅದು ಹೇಗೆ ನಿನ್ನನ್ನು ಪಳಗಿಸುವಳೆಂಬ ಸಂಗತಿ ನನಗೆ ಚೆನ್ನಾಗಿ ಗೊತ್ತು! ನಿನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿರುವ ಮತ್ತು ಮಾಡಿರಬಹುದಾದ ಪಾಪಕೃತ್ಯಗಳನ್ನು ಕಳೆದುಕೊಳ್ಳಬೇಕಾದರೆ‌ಒಂದೇ ಒಂದು ಮಾರ್ಗ ಉಂಟು. ಈ ಉಯಿಲಿನ ಸೃಷ್ಟಿಕರ್ತನಾದ ನಾನು ನರ್ತಕಿಯಮಗನೆಂದು ಅಲಕ್ಷೆ ಮಾಡಿದಿ ಎಂದಿಟ್ಟುಕೋ! ಆದರೆ ನೀನು ಯಾರು ಎಂದು ಮೊದಲು ಯೋಚಿಸು, ಆಗ ಅರ್ಥವಾಗುತ್ತದೆ. – ಈ ಉಯಿಲಿನ ಅನಿವಾರ್ಯತೆ. ಪಾಪ ಸಂಚಯಸ್ಥವಾಗಿರುವ ನಾನಾಗಲೀ, ನೀನಾಗಲೀ ಕಾಶೀ ಕ್ಷೇತ್ರಕ್ಕೆ ಹೋಗಿ ಪರಮಸಾಯುಜ್ಯ ಪಡೆಯುವುದೇ ಲೇಸು. ಈ ಮಾತನ್ನು ನಿನ್ನ ತಾಯಿಗು ಹೇಳಿ ಮನದೌ ಮಾಡಿರುವೆನು. ಈಗಾಗಲೇ ನಿನ್ನ ಮೇಲೆ ಮಾತೃತ್ವದ ಹತೋಟಿ ತಪ್ಪಿ ಚಡಪಡಿಸುತ್ತಿರುವ ಆ ನಿನ್ನ ತಾಯಿ ಮಹಾ ಕರ್ಮಟ ಬ್ರಾಹ್ಮಣ ಮಹಿಳೆ ಎಂಬುದನ್ನು ಮರೆಯಬೇಡ. ಆ ಶ್ರೇಷ್ಟ ವಿಧವೆಯ ನಾಲಿಗೆಗೆ ತ್ರಿಮೂರ್ತಿಗಳಿಗಿರುವ ಶಕ್ತಿ ಇರುವುದೆಂದು ದೃಢ ನಿಶ್ಚಯಂಬುಗಳಿಂದ ಹೇಳುತ್ತಿರುವೆನು. ನೀನು ತಾಕೀತು ಮಾಡದಿದ್ದರೂ ನಿನ್ನ ತಾಯಿಯಾದ ಅಲುಮೇಲಮ್ಮನೂ, ಹೆಂಡತಿಯಾದ ವರಲಕ್ಷ್ಮೀ ನಿನ್ನ ಸದಾ ಹಿಂಬಾಲಿಸುವ ಏಳು ಸುತ್ತುಗಳ ಕೋಟೆಯಂಥ ನೆರಳುಗಳೆಂಬುದನ್ನು ಮರೆಯಬೇಡ. ರಥ ಸಪ್ತಮಿ, ವೈಕುಂಟ ಏಕಾದಶಿಯೇ ಮೊದಲಾದ ಪುಣ್ಯಕಾಲಗಳೆಂದು ವ್ರತ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸು, ಪುರಾಣ ಪುಣ್ಯ ಶ್ರವಣಗಳನ್ನು ಮಾಡಿಸು. ಏಕೆಂದರೆ ನಾನು ನಿನ್ನ ಮೂಲಕ ಬದುಕುತ್ತಿರುವೆನು. ಎಂಥೋರ ಮೊಮ್ಮಗ ಎಂದು ಸಮಾಜವು ಹೇಳುವುದಲ್ಲದೆ, ಎಂಥವರ ಮಗನೆಂದು ಎಂದೆಂದಿಗೂ ಹೇಳಲಾರದು! ಪ್ರಾಯಶಃ ಸಮಾಜದಲ್ಲಿ ನಿನ್ನ ತಂದೆಯ ಅಂದರೆ ನನ್ನ ಮಗನ ಹೆಸರಿನ ಕುರುಹು ಇಲ್ಲ. ಇದನ್ನು ಆಮೂಲಾಗ್ರವಾಗಿ ಅಳಿಸಿ ಹಾಕಿಬಿಟ್ಟಿರುವೆನು. ಆದ್ದರಿಂದ ನೀನು ಪಾಪ ಕೃತ್ಯ ಮಾಡಿದರೂ, ಪುಣ್ಯ ಕೃತ್ಯ ಮಾಡಿದರೂ ನನಗೇ ತಗಲುತ್ತದೆ. ಇಷ್ಟೆಲ್ಲ ಲಕ್ಷಣಗೆರೆಗಳನ್ನು ನಿನ್ನ ಬದುಕಿನ ಅಂಗಳದಲ್ಲಿ ಕೊರೆಯುತ್ತಿರುವ ನಾನು ಯಾವ ಸ್ಥಿರಾಸ್ತಿಯನ್ನಾಗಲೀ, ಚರಾಸ್ತಿಯನ್ನಾಗಲೀ ಮಾಡಿಟ್ಟಿಲ್ಲ ಮಗೂ, ಚರಾಸ್ತಿಯಾಗಿರುವ ನೀನೇ ಸ್ಥಿತಾಸ್ತಿ ಶಾಮೂ, ನನ್ನ ಹುಟ್ಟಿನ ಬಗ್ಗೆ ಮತ್ತು ತ್ರಿಪುರಸುಂದರೀದೇವಿಯರೊಂದಿನ ಅನೈತಿಕವೂ, ಪವಿತ್ರವೂ ಆದ ಸಮ್ಬಂಧದ ಬಗ್ಗೆ ಅಸಹ್ಯಪಟ್ಟುಕೊಳ್ಳಬೇಡ. ಅನಸೂಯಾಳಿಗೆ ಸಂಬಂಧಿಸಿದಂತೆನಿನ್ನ ಜಾಗದಲ್ಲಿ ನಾನಿದ್ದರೆ ಖಂಡಿತಾ ಯಾವುದೇ ಹಿರಿಯರ ಮಾತು ಧಿಕ್ಕರಿಸಿ ಆಕೆಯನ್ನು ಮದುವೆಯಾಗಿ ಬಿಡುತ್ತಿದ್ದೆನು. ನಾನು ಎಷ್ಟೇ ಕುಮ್ಮಕ್ಕು, ಸಹಕಾರ ಕೊಟ್ಟರೂ ನೀನು ಪ್ರಪಂಚ ಪ್ರಳಯವಾದರೂ ನಾನು ಅನಸೂಯಳನ್ನೇ ಮದುವೆಯಾಗುವೆನೆಂದು ಖಡಾಖಂಡಿತವಾಗಿ ಹೇಳಲಿಲ್ಲ. ಹಾಗೆ ಮದುವೆಮಾಡಿಕೊಂಡು ಮನೆ ತ್ಯಜಿಸಿ ಬಹುದೂರಹೋಗಿ ಸ್ವತಂತ್ರವಾಗಿ ಬಾಳುವೆ ನಡೆಸುತ್ತೀಯೆಂದು ನಾನು ಊಹಿಸಿದ್ದು ವ್ಯರ್ಥವಾಯಿತು ಮಗೂ, ತೇಲಲೀಯದ ಗುಂಡನ್ನೂ ಮುಳಗಲೀಯದ ಬೆಂಡನ್ನೂ ಕಟ್ಟಿಕೊಂಡು ಅತಂತ್ರವಾಗಿ ಬದುಕುವ ನಿನ್ನನ್ನು ಅದಾವ ಮುಖ ಹೊತ್ತು ಪ್ರೀತಿಸುವ, ವಿವಾಹವಾಗುವ ಧೈರ್ಯ ತೋರಿದಳೋ ಆ ಬಾಲೆ. ಆದರೆ ನೀನು ಕರ್ಮಠ ವಿಧಿ ನಿಯಮಗಳನ್ನು ಉಲ್ಲಂಘಿಸುವ ಧೈರ್ಯ ತೋರಲೇ ಇಲ್ಲ. ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ನೀನು ನನ್ನ ವೃದ್ಧಾಪ್ಯವನ್ನು ನಿಯಂತ್ರಿಸುತ್ತಲೇ ಹೋದಿ, ನಾನು ನಿನ್ನ ಯೌವನವನ್ನು ನಿಯಂತ್ರಿಸುತ್ತಲೇ ಹೋದೆನು. ಈ ಉಯಿಲು ಬರೆಯುವುದರ ಮೂಲಕ ನನ್ನೆಲ್ಲ ಒಳತೋಟಿಯನ್ನು ಅನಾವರಣಗೊಳಿಸುವುದರ ಮೂಲಕ ಉತ್ಸಾಹ ಸಂಪನ್ನನಾದ ಸೋಲನ್ನು ನಾನು ಒಪ್ಪಿಕೊಂಡಿರುವೆ. ಅರ್ಥವಾಗದ ರೀತಿಯಲ್ಲಿ ಯಾರೂ ಅರಿಯದ ಶೈಲಿಯಲ್ಲಿ ಬರೆದು ಕಾಲಕೋಶದಲ್ಲಿ ಬಚ್ಚಿಡುವ ಪ್ರಯತ್ನ ಮಾಡುತ್ತಿರುವೆ. ರಾಗರತಿಗಳ, ತಪ್ಪು ಒಪ್ಪುಗಳ ನಿರ್ಧಾರನಾ ಕಾರ್ಯವನ್ನು ಕಾಲವೇ ನಿರ್ಣಯಿಸಲಿ ಎಂದು ಭಾವಿಸುತ್ತಿರುವೆನು. ಆದ್ದರಿಂದ ನೀನು ನನ್ನ ಬಗ್ಗೆ ಯಾವ ರೀತಿ ಪರಿಭಾವಿಸಲು ಸಾಧ್ಯವಾಗುವುದಿಲ್ಲ. ಇದು ಏಕಪ್ರಕಾರವಾಗಿಯೂ ವಸ್ತುನಿಷ್ಟವಾಗಿಯೂ ಇರುವುದರಿಂದ ನೀನು ಮುಂದೆಯೂ ನಮ್ಮ ವಂಶ ಹೀಗೆ ಇತ್ತೆಂದು‌ಊ, ಅಂಥ ವಂಶೋದ್ಭವ ನೀನೆಂದೂ ಸರ್ವಜನಿಕವಾಗಿ ರುಜುವಾತು ಪಡಿಸಲಾರೆ. ಆ ಅಂಥ ಅರ್ಹತೆಯನ್ನು ನಾನು ನಿನಗೆ ಎಂದೋ ಕೊಡಬೇಕಿತ್ತು, ಕಲಿಸಬೇಕಿತ್ತು. ಹೀಗೆ ಮಾಡಿದ್ದರೆ ಕಾಲಘಟದಲ್ಲಿ ಸಂಭವಿಸಬಹುದಾದ ಅಪಾಯದ ಅನರ್ಥದ ಅರಿವು ನನಗೆ ಸ್ಪಷ್ಟವಾಗಿ ಇತ್ತು. ಇದು ಹೇಗೆಂದರೆ ಮಾರ್ಜಾಲವು ತನ್ನ ಪ್ರಮುಖ ಶಿಷ್ಯನಾದ ವ್ಯಾಘ್ರಕ್ಕೆ ಹೇಗೆ ಬೇಟೆ ಕಲೆಯನ್ನೆಲ್ಲ ಕಲಿಸಿತಾದರೂ ಮರವೇರುವ ಕಲೆಯನ್ನು ಮಾತ್ರ ಕಲಿಸಲಿಲ್ಲವೋ ಹಾಗೆ, ಈ ಉಯಿಲಿನ ಮೂಲಕ ಮರವನ್ನೇರಿ ಕುಳಿತಿರುವ ಕೌಂಡಿನ್ಯಸ ಗೋತ್ರದ ಯಜಿಸ್ ಶಾಖೆಯ ನನ್ನನ್ನು ಮರವೇರಲರಿಯದ ನೀನು ಸ್ಪರ್ಶಿಸಿ ಗೆಲುವು ಸಾಧಿಸಲಾರೆ. +ನನ್ನ ವಮ್ಷೋದ್ಧಾರಕನಾದ ಶಾಮಾಶಾಸ್ತ್ರಿಯೇ……… +ಕಾಶೀ ಕ್ಷೇತ್ರದ ಪುರಾಣ ಪ್ರಸಿದ್ಧವಾದ ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯಲ್ಲಿ ದೇಹತ್ಯಾಗ ಮಾಡಬೇಕೆಂಬ ಬಯಕೆ ಎಂಬುದು ವಂಶಪಾರಂಪರ್ಯವಾಗಿ ಬಂದದ್ದು. ಇದು ನಿನಗೆ ಗೊತ್ತು. ಆದರೆ ಇದು ನಮ್ಮ ಹಿರಿಯರಾದ ಯಾರಿಗೂ ಸಾಧ್ಯವಾಗಲಿಲ್ಲ. ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿದ್ದು ಕೂಡ ಪುಣ್ಯದ ಕಾರ್ಯವೇ ಆಗಿದೆ. ಇಂಥ ಬಯಕೆಗೆ ಕುರುಡು ಕವಡೆಯ ಬೆಲೆ ಇಲ್ಲವೆಂದು ಅಮೇಧ್ಯಭಾಷೆ ಕಲಿತವನೂ, ಬಂಡಾಯಕವಿ ಎಂದು ಕರೆಸಿಕೊಳ್ಳಲು ಬೀಗುತ್ತಿರುವವನೂ ಆದ ನೀನು ಭಾವಿಸಿ ನಗಾಡಬಹುದು. ಆದರೆ ನೀನು ನಿನ್ನ ಮರಣ ಪೂರ್ವದಲ್ಲಿ ಇಂಥದೊಂದು ಬಯಕೆ ವ್ಯಕ್ತಪಡಿಸಿ ನಿನ್ನ ನಂತರದ ತಲೆಮಾರಿನವರ ಮೇಲೆ ಜವಾಬ್ದಾರಿ ಹೊರಿಸಲು ಹಿಂಜರಿಯಲಾರೆ ಎಂಬುದು ನನಗೆ ನಿಚ್ಚಳವಾಗಿ ಗೊತ್ತು. ಮಧ್ಯ ವಯಸ್ಸು ದಾಟಿದ ಪುತ್ರಯೋರ್ವನು ಬಾಯಾರಿ ಕೇವಲ ಮೂರು ನಾಲ್ಕು ಹನಿ ನೀರಿಗಾಗಿ ಮೇಘಗಳನ್ನು ಯಾಚಿಸುವ ಜಾತಕಪಕ್ಷಿಯಂತೆಯೇ ಸರಿ. ದಾರುಣ ರೀತಿಯಲ್ಲಿ ವೃದ್ಧಾಪ್ಯವನ್ನು ಹೆಜ್ಜೆ-ಹೆಜ್ಜೆಗೂ ಅಣು ಅಣುವಿನಲ್ಲೂ ಪ್ರಕಟಿಸುತ್ತ ವಂಶದ ಕುಡಿಯನ್ನು ಇಕ್ಕಟ್ಟಿಗೆ, ಪ್ರಾಣ ಸಂಕಟಕ್ಕೆ ಧರ್ಮ ಸಂಕಟಕ್ಕೆ ಗುರಿಮಾಡುವುದೇ ಆಗಿದೆ. ಇದಕ್ಕೆ ಮೊಳಕೆಯೊಡೆಯದ ಯೌವನದ ಬೀಜವನ್ನು ಎದೆಯ ಚಿಪ್ಪಿನೊಳಗೆ ಇಟ್ಟುಕೊಂಡು ವೃದ್ಧನಾಗಿರುವ ನಾನು ಹೊರತಾಗಿಲ್ಲ, ಹಾಲು ಬತ್ತಿದ ತಾಯಿಯನ್ನು ಕರುವು ಹೇಗೆ ದೂರ ಮಾಡುವುದೋ, ಹಾಗೆ ನೀನು ನನ್ನ ಬಯಕೆಯನ್ನು ದೂರ ಮಾಡುವ ಸ್ವಭಾವದವನಲ್ಲ ಎಂಬ ಭರವಸೆ ನನಗುಂಟು. ಸಸ್ಯವನ್ನು ತಿನ್ನದ ಮೋಡಗಳಂತೆಯೇ ನೀನು, ನಾನು, ಎಲ್ಲರೂ, ಕಲಿಕಾಲದಲ್ಲಿ ವಯಸ್ಸಾದಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅಂಥ ಕೆಲಸ ಕಾರ್ಯಗಳನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಅಂಥ ಕೆಲಸವಮ್ಮು ಮಾಡದ ಕಾರಣಕ್ಕೆ ನಾನು ದೈನ್ಯತೆಯ ಮೊಟ್ಟೆಯಾಗಿರುವೆನು. ಇದನ್ನು ಅರ್ಥಮಾಡಿಕೊಂಡು ನೀನು ನನ್ನ ಶವ ದಹನ ಕಾರ್ಯವನ್ನು ಮಣಿಕರ್ಣಿಕಾ ಚಕ್ರಪುಷ್ಕರಿಣಿಯಲ್ಲಿ ಮಾಡುವ ದಿಸೆಯಲ್ಲಿ ಒಂದು ಚಿಕ್ಕ ಪ್ರತ್ನವನ್ನಾದರೂ ಮಾಡು, ಅಷ್ಟೇ. ಉಳಿದುದೆಲ್ಲ ದೈವಾನುಕೂಲಕ್ಕೆ ಸಂಬಂಧಿಸಿದ್ದು. ನನ್ನೀ ಬಯಕೆಗೆ ವರದಾಚಾರ್ಯ ಕೇವಲ ನೆಪ ಮಾತ್ರ…. ದಯವಿಟ್ಟು ಅವನನ್ನು ದೂಷಿಸದಿರು. ಮುಂಜಾನೆ ಎದ್ದು ಒಳ್ಳೆಯದನ್ನು ಆಲೋಚಿಸುವ ಶಕ್ತಿಯನ್ನು ಆ ದೇವರು ನಿನಗೆ ಕೊಡಲಿ. ಹಾಗೆಯೇ ಕಾಲಾನುಕೂಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು ಯಥಾಶಕ್ತಿ ಅನುಭವಿಸುವ ಸಾಮರ್ಥಯ್ವನ್ನು ಸಹ. ಆನಂದವೇ ಸ್ವರ್ಗ, ದುಃಖವೇ ನರಕ ಎಂಬುದನ್ನು ಮರೆಯಬೇಡ. ನಿನ್ನ ತಾಯಿಗಾಗಲೀ ನಿನ್ನ ಹೆಂಡತಿಗಾಗಲೀ ಹೇಳಲು ನನ್ನಲ್ಲಿ ಏನೂ ಉಳಿದಿಲ್ಲ. ನಿನಗಾಗಲೀ, ಅವರಿಗಾಗಲೀ ನಾನು ಯಾವ ಸ್ಥಿರ ಚರಾಸ್ತಿ ಮಾಡಿಲ್ಲವೆಂದು ಬೇಸರಿಸಬೇಡ. ಹಾಗೆ ಮಾಡಿದ್ದರೆ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ಸರಳ ಕನ್ನಡದಲ್ಲಿ ಉಯಿಲು ರಚಿಸಿ ಸರ್ವರಿಗೂ ಪ್ರೀತಿಪಾತ್ರನಾಗುತ್ತಿದ್ದೆನು. ನನ್ನ ದೇಹವನ್ನೇ ಚರಾಸ್ತಿ ಎಂದೂ; ಮನಸ್ಸು ಜ್ಞಾನವನ್ನು ಸ್ಥಿರಾಸ್ತಿ ಎಂದು ಭಾವಿಸಿದ ನಾನು ಕಠಿಣತಮವಾದ ಭಾಷೆಯಲ್ಲಿ ಉಯಿಲು ರಚಿಸಿರುವೆನು. ಇನ್ನು ಇದರಿಂದ ಬೀಳ್ಕೊಳ್ಳುವೆನು. ನಿಮಗೆಲ್ಲರಿಗೂ ಮಂಗಳ ಹಾರೈಸುವೆನು. +ಇದು ನನ್ನ ಸ್ವಬುದ್ಧಿಯಿಂದ ಬರೆದು ಬರೆಯಿಸಿದ ಉಯಿಲು. +ಪಂಡಿತ ಪರಮೇಶ್ವರ ಶಾಸ್ತ್ರಿಗಳ ರುಜು. +ಬಿಕ್ಕಲಂ ಪರಮೇಶ್ವರ ಶಾಸ್ತ್ರಿಗಳ ಸ್ವಬರಹ. +* +* +* +* +ಕೀ. ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಉಯಿಲನ್ನು ಯಥಾವತ್ತಾಗಿ ನಕಲಿಗಿಳಿಸುವ ಹೊತ್ತಿಗೆ ಒಳಗಿಂದು ಹೊರಗೆ ಬಂದು, ಹೊರಗಿಂದು ಒಳಗೆ ಹೋಗಿ ಜಲಜಲ ಬೆವೆತುಬಿಟ್ಟೆ. “ರೊಟ್ಟಿ ಮಾಡಿಟ್ಟೋವು ತಣ್ಣಗಾದ್ವು, ಬದ್ನೇಕಾಯಿ ಪಲ್ಯದೊಳಗೆ ಹಾಳಾದ ಮಣ್ಣು ಸುರೀತೋ ಏನೋ. ಬೆಳಗ್ನಿಂದ ಹಲ್ಲು ಪಲ್ಲು ಉಜ್ಜದೆ ಗರ ಬಡ್ದೋರಂಗೆ ಒಂದೇ ಸಮ್ನೆ ಕೂತ್ಕೊಂಡು ಬಿಟ್ಟಿದೀರಿ. ಎದ್ದು ಮರ್ಯಾದೆಯಿಂದ ಮುಖ ತೊಳ್ಕೊಂಡು ಊಟಕ್ಕೆ ಬರ್ತೀರೋ ಇಲ್ಲೋ… ಕೈಯಲ್ಲಿ ಪೆನ್ನು ಪೇಪರ್ರೂ ಇದ್ದು ಬಿಟ್ರು ಅಂದ್ರೆ ನಿಮಗೆ ಪ್ರಪಂಚದ ಕಡೆ ಧ್ಯಾಸಾನೆ ಇರೋಲ್ಲ ಬಿಡ್ರಿ… ” ಎಂದು ಅಡುಗೆ ಮನೆಯಿಂದ ಕೈಯ ತೇವವನ್ನು ತಾನು ಉಟ್ಟಿದ್ದ ಗಾರ್ಡೆನ್ ಸಿಲ್ಕ್ ಸೀರೆಗೆ ಒರೆಸಿಕೊಳ್ಳುತ್ತ ಬಂದ ಅನ್ನಪೂರ್ಣ ಬರೆದಿಟ್ಟ ಹಾಳೆಗಳಲ್ಲಿಣುಕಿ ನಿಟ್ತುಸಿರುಬಿಟ್ಟಳು. “ಇನ್ನೂ ನಿಮ್ಮನ್ನು ಈ ಶಾಮಣ್ಣನ ಪ್ರೇತ ಬಿಟ್ಟಂಗಾಗ್ಲಿಲ್ಲ ಬಿಡ್ರಿ… ಒಂದಿತ್ತೋ ಒದಿಲ್ಲನ್ನಂಗೆ ಬರ್ದು ಮುಗಿಸಿ ಬಿಡ್ರಿ… ಬರೆಯೋದು ಬರದ್ರೆ ಚಂದಕಣ್ರಪ್ಪ… ಬಡವ್ರು ಬಗ್ರೂ, ಹೊಲೇರು ಗಿಲೇರು ಅಂತ ಬರೀತಿದ್ದ ನೀವು ಈ ಬ್ರಾಂಬ್ರು ಕಥೀನ್ಯಾಕ್ ಹಚ್ಕೊಂಡ್ರಿ ಅಂತ… ಈ ಪ್ರಪಂಚದಾಗೆ ರವ್ವಷ್ಟು ಮಂದಿ ಇದ್ರು ಒಳ್ಳೆದು ಕೆಟ್ಟದ್ನೆಲ್ಲ ನಿರ್ಧರಿಸೋರು ಅವ್ರೆ… ಮುಂದೆ ಒಂದು ಹೋಗಿ ಇನ್ನೊಂದಾಥೀತು. ಅದೂ ಅಲ್ದೆ ಕಾಲ ಸುಮಾರೈತ್… ಮೂಲೆ ಮೂರುಕಟ್ಟಿನಲ್ಲಿದ್ದು ಬದುಕ್ತಿರೋ ನಮ್ಗೆ ಹಿಂದಿಲ್ಲ ಮುಂದಿಲ್ಲ ಎಂಬೋದ್ನ ಮರೀ ಬ್ಯಾಡಿ… ಏನು ಬರೆದ್ರೂ, ನಿಮಗೆ ಕಿರೀಟ ಬರೋದು ಅಷ್ಟರಲ್ಲೇ ಇದೆ… ಎದ್ದು ಬಚ್ಚಲಿಗೆ ಹೊಂದ್ರಿ ಮೊದ್ಲು” ಎಂದು ಗೊಣಗೊಣಗುಟ್ಟುತ್ತ ಬರೆದಿದ್ದ ಹಾಳೆಗಳನ್ನೆಲ್ಲ ಒಟ್ಟುಮಾಡಿ ಅದರ ಮೇಲೆ ನಾನು ಹಂಪಿ ಕಡೆಯಿಂದ ತಂದಿದ್ದ ಕೃಷ್ಣದೇವರಾಯನ ಕಾಲದ್ದು ಎನ್ನಲಾದ ಇಟ್ಟಿಗೆ ತುಂಡನ್ನು ಅದರ ಮೇಲೆ ಅಳ್ಳಾಡದ ಹಾಗೆ ಪೇರಿಸಿ ಕೈಹಿಡಿದು ಜಗ್ಗಿದಳು. ಕೂತೂ, ಕೂತೂ ರಕ್ತ ಸಂಚಾರದ ವ್ಯತ್ಯದಿಂದಾಗಿ ಕಾಲು ಜವ್ವು ಹಿಡಿದಿದ್ದರಿಂದ ಕೂಡಲೇ ಮೇಲೇಳಾಗಲಿಲ್ಲ ನನಗೆ. “ಬಿಡೇ ಪುಣ್ಯಾತ್ಗಿತ್ತಿ ಬರೋಣಂದ್ರ ಕಾಲು ಮರಗಟ್ಟಿಹೋಗಿವೆ” ಎಂದು ಕಾಲನ್ನು ಹಿಚುಗಿಕೊಳ್ಳುತ್ತ. ತಾಸುಗಟ್ಟಲೇ ಕೂತರೆ ಇನ್ನೇನಾಗ್ತದ್ರೀ?” ಎಂದು ಆಕೆ ನನ್ನ ಪಾದದ ಬೆರಳುಗಳನ್ನು ಹಿಡಿದು ಜಗ್ಗಲು ರಕ್ತ ಸಂಚಾರ ಮತ್ತೆ ಪುನರಾರಂಭಗೊಂಡು ಮೇಲೇಳಲಿಕ್ಕೆ ಸಾಧ್ಯವಾಯಿತು. ಹಾಗೆ ಮೇಲೇಳುತ್ತ “ಒಮ್ಮೆ ಈಗ ಬರೆದಿರೋ ಉಯಿಲ ನೀನೊಮ್ಮೆ ಓದಬೇಕಲ್ಲ ಮಾರಾಯ್ತಿ” ಅಂದೆ. “ಯಾರು ಯಾರ್ಗೋ ಬರೆದಿರೋ ಉಯಿಲ್ನ ನಾನ್ಯಾಕೆ ಓದಿ ಪಾಪ ಕಟ್ಕೊಳ್ಲಿ ಕಣ್ರೀ… ಅದರಲ್ಲಾವ ಅಶ್ಲೀಲ ಬರೆದಾರೋ ಏನೋ” ಎಂದು ನಿರಾಕರಿಸಿದಳು. “ಇದು ಶ್ಲೀಲ ಅಶ್ಲೀಲದ ಪ್ರಶ್ನೆ ಅಲ್ಲ ಅನ್ನಪೂರ್ಣ… ಒಬ್ಬರ ಬದುಕಿನ ಪ್ರಶ್ನೆ ಇದು…” ಅಂದೆ ಉಯಿಲು ಎಂಬ ಶಬ್ದ ಆಕೆಗೆ ಕೂಡಲೆ ಅರ್ಥವಾಗಲಿಲ್ಲ. ಅದನ್ನು ಆಕೆ ಬಹಳ ಹೊತ್ತಿನವರೆಗೆ ಉರುಳು ಎಂದೇ ಭಾವಿಸಿದ್ದಳು. ಉಯಿಲು ಅಂದರೆ ಹೀಗೆ ಹೀಗೆ ಎಂದು ವಿವರಿಸಿದೆ. ಇಷ್ಟೆಲ್ಲ ರಾಮಾಯನಕ್ಕೆ ಕಾರಣವಾದಂಥ ಕೊಟ್ಟೂರಿನ ಸ್ವಯಾರ್ಜಿತವಾದ ತಮ್ಮ ಮನೆಯನ್ನೂ, ಬಡೇಲಡಕು ಶಾನುಭೋಗರಾದ ಕರಣಂ ಶ್ರೀನಿವಾಸಾಚಾರ್ಯರ ಉತ್ತರಾಧಿಕಾರಿಗಳಿಂದ ಕೊಂಡಿದ್ದ ಇಪ್ಪತ್ತೆಕರೆ ಕಟ್ಟೆಯನ್ನೂ. ಮತ್ತಿವುಗಳ ನಿರ್ವಹಣೆಗೆ ಪಡೆದಿರುವ ಸಾಲ ಸೋಲದ ಬಗ್ಗೆ ವಿವರಣೆಯನ್ನೂ ವಿದ್ಯಾವಂತ ಮಗನಾದವನು ತಂದೆಯಾದ ತನ್ನ ರಮ್ಯ ಜೀವನವನ್ನು ಅರ್ಥಮಾಡಿಕೊಳ್ಳಲಿಲ್ಲವೆಂಬ ಆರೋಪವನ್ನೂ, ಪರಮೇಶ್ವರಶಾಸ್ತ್ರಿಗಳಿಂದ ಮತ್ತು ಅವರ ಸೊಸೆಯಿಂದ ಶಾಪಗ್ರಸ್ತನಾದ ಮನೆಯಲ್ಲಿ ವಾಸಮಾಡಿದರೊದಗುವ ಅಪಾಯವನ್ನೂ ವಿವರಿಸುತ್ತ ದಿವಂಗತ ತಂದೆ ಕುಂಬಾರ ಹಾಲಪ್ಪನವರು ಬರೆದಿಟ್ಟಿದ್ದ ಪತ್ರವೇ ಉಯಿಲು ಎಂದು ಬಿಡಿಸಿ ಹೇಳಿದಾಗ ಆಕೆಗೆ ಅರ್ಥವಾಯಿತು. “ಈ ಸಾಯೋರ್‍ಗೆ ಬದುಕಿರೋರ್‍ಮೇಲೆ ಹೊಟ್ಟೆಕಿಚ್ಚಿರತೆಂಬುವುದಕ್ಕೆ ಆ ಕಾಗದ ಪತ್ರಾನೆ ಸಾಕ್ಷಿ ನೋಡ್ರಿ. ಹಂಗ್ಯಾಕೆ ಬರೆದಿಟ್ಟು ಸಾಯ್ತಾವೇನೋ ಹಾಳಾದೋವು. ಅವರ ಆಸ್ತಿಪಾಸ್ತಿಯಿಂದ ಬದುಕಿರೋರು ಸುರುಕೊಳ್ಳೋದು ಅಷ್ಟರಲ್ಲೇ ಇದೆ. ನಮ್ಮ ಕಥೆ ಒಟ್ಟಟ್ಟಿಗಿಲ್ಲ… ಆದ್ರೆ ಈ ಉಯಿಲೇನಾದ್ರು ನಿಮ್ ಫ್ರೆಂಡು ಶಾಮಣ್ಣ ಬದುಕಿದ್ದಾಗ ಓದಿದ್ರೆ ಒಂದು ಹತ್ತು ವರ್ಷ ಮೊದಲೇ ಸಾಯ್ತಿದ್ನೋ ಏನೋ? ಯಾರ್ಯಾರ ಹಣೇಲಿ ಆ ಬ್ರಹ್ಮ ಏನೇನು ಅನುಭೋಸಿ ಸಾಯ್ರಿ ಅಂಥ ಬರೆದಿದಾನೋ ಏನೋ? ಬದುಕಿ ಸತ್ತೋರ ಕರ್ಮ ನಿಮ್ಮ ಸುತ್ತ ಮುತ್ಕೊಂಡು ಬರೀಬಾರದ್ದು ಬರಸತೈತಿ… ಇದರಾ ಉಸಾಬರಿ ನನಗ್ಯಾಕೆ… ಬರೆಯೋರ ಕರ್ಮ ಓದೋರ್ಗೆ ಸುತ್ತುಕೋಬಾರ್ದು ನೋಡಿ… ಇದೇನು ಓದಿ ಆನಂದ ಪಡೆಯೋಕೆ ದೇವಾನು ದೇವತೆಗಳ ಕಥಿ ಅಲ್ಲ… ಪಂಚಮಹಾಪತಿವ್ರತೆಯರ ಕಥೀನು ಅಲ್ಲ… ಓದಿ ಹಾ…ಹಾ ಎಂದು ಉದ್ಗರಿಸೋಕೆ… ಬದ್ನೇಕಾಯಿ ತಿಂದ ಬಾಯ್ಲೇ ವೇದ ಹೇಳೋರ ಕಥಾ, ಕಾದಂಬರಿ ಬರ್ದು ಭೂಮಿಗೆ ಭಾರ ಆಗಲಕ ಹೊಂಟಿರೋ ನಿಮಗೆ ಬುದ್ಧಿ ಶಕ್ತಿ ನನ್ಗಿಲ್ಲ. ನಾನೆಷ್ಟಿದ್ರು ಹೊತ್ತು, ಹೊತ್ತಿಗೆ ಕೂಳು ಹಾಕ್ಲಿಕ್ಕೆ ಶಾಸ್ತ್ರರೀತ್ಯ ನೇಮಕಗೊಂಡಿರೋಳು… ಮದ್ವೆಯಾಗಿ ಬರೋಬ್ಬರಿ ಹದಿನೈದು ವರ್ಷ ತುಂಬಿದ್ವು ಒಂದೇ ಒಂದು ಸಾರಿ ಸಿನಿಮಾಕ್ಕೆ ಹೋಗ್ಲಿಲ್ಲ… ನಾಟಕಕ್ಕೆ ಹೋಗ್ಲಿಲ್ಲ… ನಡೀಲಿ… ನಡೀಲಿ ನಿಮ್ಮ ಬರವಣಿಗೆ, ಉರುವಣಿಗೆ ಅದೆಷ್ಟು ದಿನ ನಡಿತೈತೋ ನಡೀಲಿ… ಮುಂದೊಂದು ದಿನ ಇದೇ ನಿಮ್ಮ ಬರವಣಿಗೆ ನಿಮ್ಮ ವಿರುದ್ಧ ಎದುರು ತಿರುಗಿ ನೆಲಮುಗಿಲಿಗೇಕಾಗಿ ನಿಂತು “ಬುದ್ಧಿಗೇಡಿ… ಇನ್ನು ನಾನಿನ್ನ ಕೈಗೆ ಸಿಗೊದಿಲ್ಲ” ಅಂತ ಹೇಳದೆ ಇದ್ರೆ ಕೇಳ್ರಿ… ಆಗ ನಿಮಗೆ ಹೆಂಡ್ರು ಮಕ್ಳು ನೆನಪಾಗ್ತಾರೆ…” ಎಂಬಿವೇ ಮೊದಲಾದ ಅಣಿಮುತ್ತುಗಳನ್ನುದಿರಿಸುವ ಹೆಂಡತಿ ಕೋಪ ದೈನಂದಿನ ಋತುಮಾನಗಳಲ್ಲೊಂದು. ಆಕೆಗೆ ಬೇಸರ ಬರೋದು ತಡ ಇಲ್ಲ. ಹೋಗೋದು ತಡ ಇಲ್ಲ… ಆಕೆಯಹೊಗಳಿಕೆಯನ್ನು ಗೌರವಿಸುವ ನಾನು ಆಕೆಯನ್ನೂ ಔರವಿಸುತ್ತೇನೆ. ನನ್ನ ಕೃತಿಗಳ ಪ್ರಥಮ ಓದುಗಾರ್ತಿಯಾಗಿರುವ ಆಕೆ ನೀಡುವ ಸಲಹೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆನು. ಇದರಲ್ಲಿ ಎರಡು ಮಾತಿಲ್ಲ. +ನಾನು ಅಡಸಲ, ಬಡಸಲ ಹಲ್ಲುಜ್ಜಿ ಮುಖ ತೊಳೆದುಕೊಂಡು ಊಟದಮಣೆ ಹಾಕಿಕೊಂದು ಕೂತೆ. ಪತ್ನಿ ಬಡಿಸಿದಳು. ಒಂದೊಂದು ತುತ್ತಿನ ನಡುವೆ ಶಾಮಣ್ಣ ಆಡುತ್ತಿದ್ದ ತರಾವರಿ ಮಾತುಗಳನ್ನು ನೆನಪಿಗೆ ತಂದುಕೊಂಡೆ. ಅವನು ತನ್ನ ಬಗೆಗಾಗಲೀ, ತಾನು ಬದುಕಿದ್ದ ಬದುಕಿನ ಬಗೆಗಾಗಲೀ ಯಾವ ಆಸಕ್ತಿಯನ್ನೂ ಉಳಿಸಿಕೊಂಡಿರಲಿಲ್ಲ. ಭ್ರಮೆಯ ಮುಖವಾಡ ಕಳಚಿಕೊಂಡಿದ್ದ. ವರ್ತಮಾನವನ್ನು ವೈಯಕ್ತಿಕ ನಿಷ್ಟೆಯಿಮ್ದ ಅನುಭವಿಸಿದ. ತಾನು ಸಂಪಾದಿಸಿದ್ದ ಜ್ಞಾನಸಂಪತ್ತನ್ನು ನಗಣ್ಯಗೊಳಿಸಿಕೊಂಡ. ತನ್ನ ಬಗ್ಗೆ ತಾನು ಯಃಕಶ್ಚಿತ್ ಭಾವನೆ ತಳೆದು ಬದುಕಿರುವಷ್ಟು ಕಾಲ ಬದುಕೇ ಇದ್ದ. ಆತನನ್ನು ಮರಣೋತ್ತರವಾಗಿ ಶ್ರೀಮತಿ ಅನಸೂಯಾ ಆಗಲೀ, ಜಲಜಾಕ್ಷಿಯಾಗಲೀ, ಕಮಲಾಕರನಾಗಲೀ ಹೇಗೆ ಪ್ರತಿಕ್ರಿಯಿಸುವರು ಎಂಬ ಕುತೋಹಲ ಅವನ ಬದುಕಿನ ನಿರೂಪಕನಾದ ನನ್ನಲ್ಲಿ ಬರೀ ಕುತೋಹಲವಾಗಿ ಉಳಿದುಕೊಂಡಿದೆ. ಅವರ ಬಳಿಗೆ ಹೋಗಿ ಕಂದು ಮಾತಾಡುವಷ್ಟು ವ್ಯವಧಾನ ಸದರೀ ಕೃತಿಯ ಪ್ರಕಾಶಕ ಮಿತ್ರರಾದ ಶ್ರೀಯುತ ಸಿ. ಚನ್ನಬಸವಣ್ಣನವರ ಒತ್ತಡದಿಂದಾಗಿ ಇಲ್ಲವಾಗಿದೆ. “ಅದ್ಕೆಲ್ಲ ಅವರೆಲ್ಲರ ಬಳಿಗೆ ಯಾಕ ಹೋಗ್ತೀಯೋ ಮಹರಾಯ… ಅವರೇನು ನಿನ್ಗೆ ಗೊತ್ತಿಲ್ದೋರೇನು? ಶಾಮಣ್ಣನ ಬಗ್ಗೆ ನೀನು ಹೇಗೆ ಯೋಚಿಸಬಲ್ಲೆಯೋ ಅವರೂ ಹಾಗೆ ಯೋಚಿಸುತ್ತಿರಬಹುದು. ಲೇಖಕನಾದೋನ ಕೆಲಸ ಪರಕಾಯ ಪ್ರವೇಶ ಮಾಡಿ ಬರೆಯೋದು, ಬದುಕೋದು ತಾನೆ?” ಎಂದು ಬಿಲ್ಕುಲ್ ನುಡಿದಿದ್ದರು. ಕೃತಿ ಡಾ.ರಾಮಮನೋಹರ ಲೋಹಿಯಾರ ಎಪ್ಪತ್ತೆಂಟನೇ ಹುಟ್ಟು ಹಬ್ಬವಾದ್ ಇದೇ ಸಾಲಿನ ಮಾರ್ಚ್ ಇಪ್ಪತ್ಮೂರರಂದು ಬಿಡುಗಡೆಯಾಗಬೇಕಿರುವುದರಿಂದ ಟೈಟಾಗಿ ಕೂತು ಬರೆದು ಮುಗಿಸುವ ಜರೂರು ಇರುವುದು. ಮೊನ್ನೆ ಗುಲಬರ್ಗಾದ ಸಮೀಪದ ಜಾವಳಿಗೆ ದಿ.ಶಿವಶರಣ ಜಾವಳಿಯವರ ದ್ವಿತೀಯ ಪುಣ್ಯ ತಿಥಿಗೆ ಹೋಗಿದ್ದು, ಸ್ವತಂತ್ರ್ಯ ಬಂದು ಐವತ್ತು ವರ್ಷಗಳಾದರೂ ಜಾವಳಿಯಂಥ ಸುಂದರ ಹಾಗೂ ಪುಟ್ಟಗ್ರಾಮಕ್ಕೆ ಶಾಸಕರಾದ ನೀವು ಒಂದು ಒಳ್ಳೆಯ ರಸ್ತೆ ಮಾಡಿಸಿಲ್ವಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಅಳಂದದ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ತರಾಟೆ ತೆಗೆದುಕೊಂಡದ್ದು, ಅವರು ಈ ವರ್ಷ ಮಾಡಿಸುವುದಾಗಿ ಒಪ್ಪಿಕೊಂಡದ್ದು ಅಲ್ಲಿಂದ ಕೆಟ್ಟ ರಸ್ತೆಯಲ್ಲಿ ಪ್ರಯಾಣಿಸಿ ಸದರೀಗ್ರಾಮ ಸೇರಿಕೊಂದದ್ದು ಎಲ್ಲ ನೆನಪಾಗುತ್ತದೆ. ಶಾಮಣ್ಣನನ್ನು ಹೋಲುವವರ್, ಅವನಿಗೆ ಸಂಬಂಧಿಸಿದವರು ಎಲ್ಲ ಕಡೆ ಇರುವರೆಂದು ಭಾಸವಾಗುತ್ತದೆ… ಇಂಥ ಬಾಸ, ಅಭಾಸಗಳ ನಡುವೆ ನಾನು ಬರೆಯಲು ಕೂತುಕೊಂದಿರುವ ಸಂದರ್ಭ ಬಲು ವಿಚಿತ್ರವಾಗಿ ಸುತ್ತುವರೆದಿರುವುದು. ನಾನೀ ಕಾದಂಬರಿ ಬರೆಯುತ್ತಿರುವ ಸಂದರ್ಭದ ಹದಿನೆಂಟು ತಿಂಗಳುಗಳಲ್ಲಿ ಈ ದೇಶದ ಮೂವ್ವರು ಪ್ರಧಾನ ಮಂತ್ರಿಗಳ ಆಡಳಿತ ರುಚಿ ನೋಡಿದೆ. ಅದೇ ಇಂದಿರಾಗಾಂಧಿಯವರ ಪ್ರೇತಾತ್ಮ ಹೊಲ್ಲೊಂದಿರುವ ಶತಮಾನದಹ್ಟು ವಯಸ್ಸಾದ ಕಾಂಗ್ರೆಸ್ ಸೀತಾರಂ ಕೇಸರಿಯವರ ಮೂಲಕ ವೃದ್ಧಾಪ್ಯ ವನ್ನು ಗರ್ಜಿಸುತ್ತಿದೆ. ಮತ್ತೆ ಚುನಾವಣೆ ವಕ್ಕರಿಸಿದೆ. ತೆಲಗುದೇಶಂನ, ಕಾಂಗ್ರೆಸ್ಸಿನ ಜೀಪು ಕಾರ್ಗಳು, ಮನೆಯ ಅಂಗಳದಲ್ಲಿ ಅಡ್ಡಾಡುತ್ತಿವೆ. ಅವುಗಳೆಬ್ಬಿಸುವ ಧೂಳಿನ ನಡುವೆ ಕೂತುಕೊಂಡು ಶಾಮಣ್ಣನ ಬದುಕನ್ನು ಊಹಿಸಬೇಕಾಗಿದೆ. ನಿರೂಪಿಸಬೇಕಾಗಿದೆ… ಈ ಶತಮಾನದ ಅತ್ಯಂತ ನಿರುಪದ್ರವ ವ್ಯಕ್ತಿ ಎಂದು ಹೆಸರಾದ ಶಾಮಣ್ಣ ಬದುಕಿದ್ದಲ್ಲಿ ವಾಣಿಜ್ಯೀಕೃತಗೊಂಡಿರುವ ಮತ್ತು ಅಂತಿಮ ಕ್ಷಣಗಳನ್ನು ಅಧಿಕಾರಕ್ಕೆ ಸಂಬಂಧಿಸಿದಂತೆ ಎಣಿಸುತ್ತಿರುವ ಜಲಜಾಕ್ಷಿಯಂತವರನ್ನು ಕಂಡು ನಗದ ಇರುತ್ತಿರಲಿಲ್ಲ. ಅಧಿಕಾರ ಲಾಲಸೆಗಾಗಿ ಅನಾವರಣಗೊಂಡಿರುವ ಪ್ರಶಸ್ತಿ ವಿಜೇತ ಲೇಖಕರ ಬಗ್ಗೆ ಖಾರವಾಗಿ ಪ್ರತಿಕ್ರಿಯಸದೆ ಇರುತ್ತಿರಲಿಲ್ಲ. ಅಂಥ ಅಪರೂಪದ ವ್ಯಕ್ತಿಯ ಬದುಕಿನ ನಿರೂಪಕನ ಪಾತ್ರವಹಿಸುವುದು ನನ್ನ ಬಹು ದೊಡ್ಡ ಕರ್ಮ.ಹಾಳೆಗಳ ನೌವೆ ಜೀವಂತವಿರುವ ಅವನು ತನ್ನ ತಾತನವರಾದ ಶಾಸ್ತ್ರಿಗಳ ಉಯಿಲು ಓದಿ ಸಿಟ್ಟಿಗೇಳಬಹುದು ಅಥವಾ ನೆಮ್ಮದಿಯ ಉಸಿರುಬಿಟ್ಟು ಸ್ಥಿತಪ್ರಜ್ಞನಂತೆ ಉಳಿದುಬಿಡಬಹುದು. ಇದನ್ನೆಲ್ಲ ಬರೆಯಲಿಕ್ಕೆ ನಿನಗೆ ಯಾರು ಅಧಿಕಾರ ಕೊಟ್ಟರೆಮ್ದು ಖಾರವಾಗಿ ಪ್ರಶ್ನಿಸಬಹುದು. ಅದಕ್ಕೆ ನಾನು “ಅಭಿವ್ಯಕ್ತಿ ಸ್ವಾತಂತ್ರ ಕಣಯ್ಯ ಅಭಿವ್ಯಕ್ತಿ ಸ್ವಾತಂತ್ರ” ಎಂದು ಉಡಾಫೆಯಿಮ್ದ ಪ್ರತಿಕ್ರಿಯಿಸಬಹುದು. ಆದರೆ ಇದೆಲ್ಲ ಎಷ್ಟು ಸರಿ.! ಎಂದು ನನ್ನನ್ನು ನಾನು ಕೇಳಿಕೊಳ್ಳುವ ಸಮ್ಧರ್ಭದಲ್ಲಿ ಇದೇ ತಾನೇ ಭಾರತರತ್ನ ಪ್ರಶಸ್ತಿ ಪಡೆದಿರುವ ಸಂಗಿತ ಲೋಕದ ಮಹಾನ್ ತಾಯಿಯಾದ ಮಧ್ರೈ ಷಣ್ಮುಗವಡಿಪು ಸುಬ್ಬುಲಕ್ಷ್ಮಿಯವರು ತಮ್ಮ ಎಪ್ಪತ್ತೆರಡನೇ ವಯಸ್ಸಿನಲ್ಲಿ ಮುತ್ತುಸ್ವಾಮಿ ದೀಕ್ಷಿತರ ಶಂಕರಾಭರಣ ಕೃತಿಯಾದ ಸಾಮಗಾನ ಪ್ರಿಯೇ! ಕಾಮಕೋಟಿನಿಲಯೇ ಎಂಬಕೃತಿಯನ್ನು ಸೊಗಸಾಗಿ ಹಾಡುತ್ತಿರುವುದು ರೇಡಿಯೋ ಮೂಲಕ ಕೇಳಿಬರುತ್ತಿರುವುದ. ಇದೇ ಕೃತಿ ತಾನೇ ಕೀ.ಶೇ. ಪಂಡಿತ ಪರಮೇಶ್ವರ ಶಾಸ್ತ್ರಿಗಳ ಬದುಕಿನ ಉಯಿಲಿನ ಸ್ಥಾಯಿ ಭಾವವಾಗಿರುವುದು. ಇದೇ ಕೃತಿಯೇ ಪೂಜ್ಯಶಾಸ್ತ್ರಿಗಳ ಮತ್ತು ಅವರ ಮೊಮ್ಮಗನೂ; ಸದರೀ ಕೃತಿಯ ಕಥಾ ನಾಯಕನೂ ಆದ ಶಾಮಾಶಾಸ್ತ್ರಿಯ ಬದುಕಿನ ಸಂಚಾರಿ ಭಾವವಾಗಿ ಪ್ರಧಾನ ಪಾತ್ರವಹಿಸುತ್ತಿರುವುದು. ಇದೇ ಕೃತಿಯೇ ತಾನೇ ಪರಮೇಶ್ವರ ಶಾಸ್ತ್ರಿಗಳ ಬದುಕನ್ನು ತ್ರಿಪುರಸುಂದರೀ ದೇವಿಯು ಪ್ರವೇಶಿಸುವಂತೆ ಮಾಡಿದ್ದು; ಅವರು ತಮ್ಮ ವೃದ್ಧಾಪ್ಯದಲ್ಲಿ ಇಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಮೋಹಿಸುವಂತೆ ಮಾದಿದ್ದಲ್ಲದೆ ಅಂಗವನ್ನು ಊನಗೊಳಿಸಿದ್ದು; ಇದೇ ಕೃತಿಯೇ ತಾನೆ ದಿ. ಶಾಮಾಶಾಸ್ತ್ರಿಯ ಬದುಕಿನಲ್ಲಿ ಕೊತ್ತಲಿಗೆಯ ದೇವದಾಸಿಯೂ; ಪ್ರಸಿದ್ಧ ರಂಗಕಲಾವಿದೆಯೂ ಆದ ಅನಸೂಯ ಪ್ರವೇಶಿಸುವಂತೆ ಮಾಡಿದ್ದು. ಈ ಕೃತಿಯನ್ನು ಶ್ರೀಮತಿ ವರಲಕ್ಷ್ಮಿ ಇಷ್ಟಪಟ್ಟಿದ್ದಲ್ಲಿ ಶಾಮಣ್ಣ ವಿವಾಹೇತರ ಸಂಬಂಧ ಇಟ್ಟುಕೊಲ್ಲುತ್ತಿರಲಿಲ್ಲವೆಂದು ಅವನ ಬದುಕಿನ ಪ್ರಮುಖ ನಿರೂಪಕನಾದ ನನಗೆ ಅನ್ನಿಸುತ್ತಿರುವುದು. ಅಂತೆಕಂತೆಗಳ ಸಹಾಯದಿಂದ ಇದೆಲ್ಲವನ್ನು ಊಹಿಸುವುದರಲ್ಲಿ ಯಾವ ಅರ್ಥವಿದೆ? ಮುಂದಿನ ಕಥಾ ಭಾಗವನ್ನು ಸಂಗ್ರಹಿಸಲ್ಪಟ್ಟಿರುವ ಸಂಗತಿಗಳ ಅಧಾರದಿಂದ ಏನಕೇನ ಪ್ರಕಾರೇಣ ನಾನೇ ಬರೆಯುವುದೋ! ಅಥವಾ ಅವನಿಗೆ ಹೇಳುವಂತೆ ದುಂಬಾಲು ಬೀಳುವುದೋ! ಎಂಬ ಸಮಸ್ಯೆ ಎದುರಾಯಿತು. +ಅಷ್ಟರೊಳಗೆ ಶಾಸ್ತ್ರಿಗಳ ಉಯಿಲನ್ನು ಓದಿ ಮುಗಿಸಿದ್ದ ಶ್ರೀಮತಿ ಅನ್ನಪೂರ್ಣ ನಿಟ್ಟುಸಿರು ಬಿಡುತ್ತ ಮುಖ ಸಪ್ಪಗೆ ಮಾಡಿಕೊಂಡು ತಟ್ಟೆ ತೆಗೆಯಲು ಬಂದಳು. ಆಕೆಯ ಪ್ರತಿಕ್ರಿಯೆಗಾಗಿ ಆರ್ತನಾಗಿ ನೋಡಿದೆ. “ಹೇಗಿದೆಯೇ ಉಯಿಲು”? ಎಂದು ಕೇಳಿದೆ ಮಗುವಿನಂತೆ. “ಹಾಂ ಕಮ್ಮಗೈತೆ… ಅಲ್ರೀ ಜಗತ್ತಿನಲ್ಲಿ ಇಂಥೋರೂ ಇರ್‍ತಾರೇನ್ರಿ?… ಅವಾ ವಂಶಾನೆ ಹಂಗಿದ್ದಂಗೈತಿ ಬಿಡ್ರಿ… ಹೋಗಿ ಹೋಗಿ ಕಮ್ಮನ್ನೋರ ಕಥಿ ಬರಿತ್ತಿದ್ದಿರಲ್ಲ… ಇದ್ಕೆ ನಿಮಗೆ ಏನು ಹೇಳಬೇಕೋ ಒಂದೂ ತಿಳಿಯದು.” ಎಂದು ತಟ್ಟೆ ತೆಗೆದು ನೆಲ ಸಾರಿಸಿದಳು. +ಆಕೆಗೆ ಯಾವ ರೀತಿಯ ಸಮಾಧಾನ ಹೇಳಬೇಕೋ ಒಂದೂ ತಿಳಿಯಲಿಲ್ಲ. ಅದೇ ಹೊತ್ತಿಗೆ ಮಂಜು ಎಂಬ ಹೆಸರಿನ (ಪಿಂಜಾರು ಅಲ್ಲಭಕ್ಷಿಯ ಎರಡನೆ ಮಗ ಎಂದುದಿಲ್ಲಿ ವಿಶೇಷ) ಬಾಲಕ ಏದುಸಿರು ಬಿಡುತ್ತ ಓಡಿಬಂದು “ಸಾರೂ ಸಾರೂ… ನಾಟಕ್ದೋರು ನಿಮ್ಮನಿ ಕಡೀ ಬರ್ಲಿಕ್ಕತ್ಯಾರ” ಎಂದು ಹೇಳಿ ಅಂಗಿಯ ತುದಿಯಿಂದ ಮೂಗಿನ ಸಿಂಬಳ ಗೊಣ್ಣಿ ಒರೆಸಿಕೊಂಡ. ಅವನ ಬಲ್ಲಮರಿ ಆಜುಬಾಜಕ್ಕೆ ಅಲುಗಾಡಿ “ಹೌದು ಹೌದು, ಅಂತಲೋ ಹಲ್ಲೋ ಹಲ್ಲೋ ಅಂತಲೋ” ಎಂತಲೋ ಅಂದಿತು. ಅದೇ ಹೊತ್ತಿಗೆ ಎರ್ರಂಗ್ಳಿ ಶಿವಣ್ಣನವರ ನೇತೃತ್ವದಲ್ಲಿ ಕಲಾವಿದರ ತಂಡವು ಜಯನಮಃಪಾರ್ವತಿಪರಮೇಶ್ವರ ಎಂತಲೂ ಗದಗಿನ ಗವಾಯಿ ಪಂಚಾಕ್ಷರಿ ಮಾರಾಜ್ಕೂ ಜೈ ಎಂತಲೂ, ಪುಟ್ಟರಾಜ ಮಾರಾಜ್ಕೂ ಜೈ ಎಂತಲೂ ಅಂಗಳದಲ್ಲಿ ಜಯ ಘೋಷಣೆ ಮಾಡುತ್ತಿರುವುದು ಕೇಳಿಸಿತು. +ಅವರ್ನ್ನು ಸ್ವಾಗತಿಸಲೆಂದು ಎದ್ದ ನನ್ನ ಕೈ ಹಿಡಿದು ಜಗ್ಗುತ್ತ ಹೆಂಡತಿಯ ಕಿವಿಯಲ್ಲಿ ಬಾಯಿ ಇಟ್ಟು ಸೂಳೆ ಪಾರ್ಟ್ ಮಾಡ್ದೋನು ಹಿಂದೆ ಗುಂಪು ಕಟ್ಕೊಂಡು ಪಟ್ಟಿ ಕೇಳಲಿಕ್ಕೆ ಬರ್ತಿದ್ದಾನ್ರೀ ಹುಷಾರಿ” ಎಂದಳು. “ಬರಲಿ ಬಿಡೆ ಅಷ್ಟೊಂದು ಕಲಾವಿದರು ನಮ್ಮ ಮನೆಗೆ ಒಟ್ಟಿಗೆ ಬರ್ತಿರೋದು ಸಂತೊಷದ ಸಂಗತಿ ತಾನೆ” ಅಂದೆ. “ಮುಖಂಡತ್ವ ವಹಿಸೋಕೆ ಸೂಳೆಪಾರ್ತ್ ಮಾಡ್ದೋನ್ ಆಗಬೇಕಿತ್ತೇನ್ರೀ… ಮಲ್ಲಮ್ಮನ ಪಾರ್ತ್ ಮಾಡ್ದೋನು ನೇತೃತ್ವ ವಹಿಸಿದ್ರೆ ನಾನೇನು ತಪ್ಪ್ ತಿಳೀತಿರ್ಲಿಲ್ಲ. ಚಹ ಮಾಡೂಂತ ಮಾತ್ರನಂಗೆ ಹೇಳಬೇಡ ನೋಡ್ರಿ” ಎಂದು ಸಿಡುಕಿದಳು. ಆಕೆಯ ತರ್ಕ ತುಂಬ ವಿಚಿತ್ರವಾಗಿತ್ತು. ಇಷ್ಟು ಎಲ್ಲವೂ ನಿಸೂರಾಗಿದ್ದರೂ ಸೂಳೆ ಮತ್ತು ಗರತಿಯರ ನಡುವೆ ದೊಡ್ಡದೊಂದು ಕಂದರ ಸೃಷ್ಟಿಸುತ್ತಿರುವ ಈಕೆಯೇ ಹೀಗಿರಬೇಕಾದರೆ ಶಾಮಣ್ಣನ ಹೆಂಡತಿ ವರಲಕ್ಷ್ಮಿಯು ಎಷ್ಟೊಂದು ಸಂಕಟ ಅನುಭವಿಸಿರಬಹುದೆಂದು ಊಹಿಸಿದೆನು. “ಸೂಳೆ ಪಾತ್ರ ಮಾಡೋ ನಟ ಮುಂದೊಂದು ದಿನ ಮಹಾ ಪತಿವ್ರತೆಯ ಪಾತ್ರವನ್ನೂ ಮಾಡಬಹುದು ಅನ್ನೂ. +ಇದ್ರಲ್ಲಿ ತಪ್ಪೇನೀಗ? ಅದೂ ಅಲ್ದೆ ಎರಂಗಿಶಿವಣ್ಣೋರು ಕಂಪನಿಯ ಹುಟ್ಟಿದ ಕಾಲದಿಂದಲೂ ಇದ್ದವರು… ಕಂಪನಿಯ ಮೇನೇಜರು ಮಹಾಂತಯ್ಯನವರ್ಗೆ ವಯಸ್ಸಗಿರೋ ಕಾರಣದಿಂದ ಶಿವಣ್ಣನವರನ್ನು ಮುಂದಿಟ್ತು ಕಳಿಸಿರಬೌದು” ಎಂದು ನಾನು ಸಮಾಧಾನ ಹೇಳುತ್ತಿರುವಷ್ಟರಲ್ಲಿ ಸಮಸ್ತ ಕಲಾವಿದರು “ಶಿವಶಿವಾ” ಎಂದು ಗೃಹ ಪ್ರವೇಶಿಸಿದರಲ್ಲದೆ ಪುಟ್ಟರಾಜ ಮಹಾರಾಜ್ಕೂ ಜೈ ಎಂದು ಪಡಸಾಲೆ ಮೇಲೆ ಕೂತುಕೊಂಡರು. +ನಾನು ಹೋಗಿ ನಮಸ್ಕರಿಸಿ ಉಭಯ ಕುಶಲೋಪರಿ ವಿಚಾರಿಸಿದೆನು. ಅವರೆಲ್ಲರ ಮುಖವಾಣಿಯಂತಿದ್ದ ಶಿವಣ್ಣನವರು ತಿಂಗಳುಗಟ್ಟಲ್ರ್ ತಮ್ಮ ಕಂಪನಿಯನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಕಾಪಾಡಿದ ಸದರಿ ಗ್ರಾಮದ ಸಮಸ್ತರನ್ನು ಕೃತಜ್ಞತಾಪೂರ್ವಕವಾಗಿ ನೆನೆದರು. ಗ್ರಾಮದವರ ನಿಷ್ಕಳಂಕ ಆತಿಥ್ಯದಿಂದಾಗಿ ಕಂಪನಿಯ ಪ್ರತಿಯೋರ್ವ ಕಲಾವಿದನ ದೇಹದ ತೂಕವು ಮೂರರಿಂದ ಆರು ಕಿಲೋಗ್ರಾಂವರೆಗೆ ಹೆಚ್ಚಾಗಿರುವುದೆಂದೂ, ಪ್ರತಿಯೊಬ್ಬರ ದೇಹದ ಎಲುಬುಗಳು ಮಾಂಸದೊಳಗೆ ಅಡಗಿಕೊಂಡು ಆಯಾ ಪಾತ್ರ ನಿರ್ವಹಿಸಲು ಅನುಕೂಲವಾಗಿರುವುದೆಂದೂ ನಗುನಗುತ್ತ ಹೇಳಿದರು. +ಶಿವಣ್ಣ ಅಡುಗೆಮನೆ ಕಡೆ ಬಗ್ಗಿ ನೋಡುತ್ತ “ಅಮ್ಮೋರು ಕಾಣಿಸ್ತಿಲ್ಲ ಮೇಸ್ಟ್ರೇ… ಮನ್ಯಾಗೆ ಅದಾರೋ ಇಲ್ಲೋ? ಅವ್ರ ಕೈ ಅಡುಗೇನ ಮರೆಯಂಗಿಲ್ಲ ಬಿಡ್ರಿ” ಎಂದರು. ಅದಕ್ಕೆ ನಾನಿದ್ದು “ಆಕೆಗೆ ಸೂಳೆ ಪಾರ್ಟ್ ಮಾಡೋ ನಿಮ್ಮ ಮ್ಯಾಲ ಸಿಟ್ಟು ಮಾಡ್ಕೊಂಡಾಳೆ… ಆಕೆ ಮಲ್ಲಮ್ಮನ ಪಾರ್ತ್ ರೇವಣ ಸಿದ್ದಯ್ನೋರ ಕಡೆ” ಎಂದುದಕ್ಕೆ ಎಲ್ಲರೂ ಗೊಳ್ಳನೆ ನಕ್ಕರು. +ನಾನು ಕೂಗಿ ಕರೆಯಲು ಅನ್ನಪೂರ್ಣ ಮುಖ ದಿಮ್ಮನೆ ಮಾಡಿಕೊಂಡು ಬಂದು ಸೌಜನ್ಯಕ್ಕಾಗಿ ಎಲ್ಲರಿಗೂ ನಮಸ್ಕರಿಸಿದಳು. +ನಮಸ್ಕಾರ ಸ್ವೀಕರಿಸಿ ಶಿವಣ್ಣನವರು “ಇದ್ರಲ್ಲಿ ತಪ್ಪೇನಿದೆ ತಾಯಿ?… ಸೂಳೆ ಪಾತ್ರವಿರದಿದ್ದಲ್ಲಿ ಮಲ್ಲಮ್ಮ ಮಹಾಪತಿವ್ರತೆ ಎಂದು ಜಗದ್ವಿಖ್ಯಾತಳಾಗುತ್ತಿದ್ದಳೇ? ವಿಶಯ ಲಂಪಟನೆನಿಸಿದ್ದ ಹೇಮರೆಡ್ಡಿ ಮುಂದೆ ಮಹಾಯೋಗಿ ವೇಮನನಾಗಿ ಸರ್ವಜ್ಞನಂತೆ ನೀತಿ ಪದ್ಯಗಳನ್ನು ರಚಿಸುತ್ತಿದ್ದನೇ…? ಕಪ್ಪು ಬಿಳುಪು, ಕತ್ತಲು ರಾತ್ರಿ ಹೆಂಗಿರ್‍ತವೋ ಹಂಗೆ ಸಮಾಜದೊಳಗೆ ಒಳ್ಳೆಯವರಿದ್ದಂಗೆ ಕೆಟ್ಟವರಿರ್‍ತಾರೆ… ಕೆಟ್ಟವರಿಂದ ಒಳ್ಳೆಯವೈದ್ದಾರಂತ ಸಮಾಜಕ್ಕೆ ಗೊತ್ತಗತೈತಿ. ಇದ್ರಿಂದ ಆ ಸಮಾಜಕ್ಕೆ ಬೆಲೆ ಬರ್‍ತದೆ ಕಣ್ರಮ್ಮಾ… ಇದ್ಕೆಲ್ಲ ಸಿಟ್ತಾದ್ರೆಂಗ ತಾಯಿ? ನಾವು ಕಂಪನೀನ ನಿಮ್ಮೆಜಮಾನ್ರ ಊರಾದ ಕೊಟ್ಟೂರಿಗೆ ಹಾಕ್ತಿದೀವಂತ… ಈಗ ನಿಮ್ಮ ಮಾವನವರಾದ ಹಾಲಪ್ಪಣ್ಣೋರು ಇರಬೇಕಿತ್ತು ತಾಯಿ… ಸ್ವಂತ ಕಲಾವಿದರಾದ ಅವ್ರೀಗೆ ಗವಾಯಿ ಕಂಪನಿ ಅಂದ್ರೆ ಪಂಚಪ್ರಾಣವಿತ್ತು ತಾಯಿ. ಅದ್ರಲ್ಲೂ ಸೂಳೆ ಪಾರ್ತ್ ಮಾಡ್ತಿದ್ದ ನನ್ನ ಒಂದು ಗಳಿಗೆ ಬಿಟ್ಟಿರ್‍ತಿರ್‍ಲಿಲ್ಲಮ್ಮಾ… ಅಂಥೋರ್‍ನ ಆ ದೇವರು ತನ್ನಲ್ಲಿಗೆ ಬೆಗ್ನೆ ಕರ್‍ಕೊಂಡು ಬಿಡ್ತಾನೆ ನೋಡಿ” ಎಂದು ನಿರರ್ಗಳವಾಗಿ ಮಾತಾಡಿದರು. +ಶಿವಣ್ಣ ಹೇಳಿದ್ದರಲ್ಲಿ ನಿಜವಿಲ್ಲದಿರಲಿಲ್ಲ. ನಮ್ಮ ತಂದೆ ಹೆಚ್ಚು ಕಡಿಮೆ ಶಿವಣ್ಣವರಂತೆಯೇ ತೆಳ್ಳಗೆ ಬೆಳ್ಳಗೆ ಎತ್ತರಕ್ಕಿದ್ದ. ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಆತ ಯಾವುದೇ ಸ್ತ್ರೀಯ ಹೃನ್ಮನಗಳನ್ನು ತನ್ನ ಕಣ್ಣೋಟ ಮಾತ್ರದಿಂದ ಸೆಳೆಯಬಲ್ಲವನಾಗಿದ್ದ. ಯಾವುದೇ ಪತಿವ್ರತೆ ಆತನ ಕಡೆ ಒಂದು ಕಿರುನಗೆ ಬೀರದೆ ಮುಂದೆ ಹೋಗುತ್ತಿರಲಿಲ್ಲ. ಆದರೆ ಸ್ತ್ರೀವ್ಯಾಮೋಹಿಯಾಗಲೀ, ವಿಷಯ ಲಂಪಟನಾಗಲೀ ಆಗಿರಲಿಲ್ಲವಾದರೂ, ಖಾಯಮ್ಮಾಗಿ ಒಂದಿಬ್ಬರು ಸೂಳೆಯರನ್ನು ಮಾತ್ರ ಅವರವರ ಊರಲ್ಲಿ ಇಟ್ಟುಕೊಂಡು ಅವರವರಿಗೆ ಉಪಪತ್ನಿಯರ ಸ್ಥಾನಮಾನ ಕೊಟ್ಟಿದ್ದ ಪಟ್ಟಮಹಿಷಿ ಕೊಟ್ರಮ್ಮನೌದರ ಸಂಜಾತರಾದ ನಾವು ಅವರಮ್ಮು “ಚಿಕ್ಕಮ್ಮಾ” “ಸಣ್ಣಮ್ಮಾ” ಎಂದು ಸಂಬೋದಿಸುತ್ತಿದ್ದೆವು. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಆತ ಹಗರಿ ಸಾಲಿನ ಕಡೆಯ ತಮ್ಮೂರಲ್ಲಿ ಆಡಿದ್ದಂಥ ‘ವೀರಾಭಿಮನ್ಯು’ ಎಂಬ ನಾಟಕದಲ್ಲಿ ಉತ್ತರೆ ಪಾತ್ರ ಹಾಕಿದ್ದನಂತೆ. ನಾಟಕದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಿಲ್ ಆಲ್ಫ್ರೆಡ್ ಎಂಬಾತ ಉತ್ತರೆಯನ್ನು ಮೋಹಿಸಿದನಂತೆ. ಅಂದು ರಾತ್ರಿ ರೇಪ್ ಮಾಡುವ ಪ್ರಯತ್ನ ನಡೆಸಿದಾಗ ಇದು ಹೆಣ್ಣು ವೇಶದ ಗಂಡು ಎಂದು ವಸ್ತ್ರಾಪಹರಣದ ಮೂಲಕ ಬಯಲಾಯಿತಂತೆ. ಸಲಿಗೆ ಹೆಚ್ಚಿ ಆಲ್ಫ್ರೆಡ್ಡಿನ ಮಗಳು ಹೆಲನ್‌ಗೂ ನಮ್ಮ ತಂದೆಗೂ ಪ್ರಣಯದಾಟ ಶುರುವಾಯಿತಂತೆ. ಇದು ಗೊಟ್ಟಾಗಿ ಆಲ್ಫ್ರೆಡ್ ಕಾಡುತೂಸು ತುಂಬಿದ ಕೋವಿ ಹಿಡಿದುಕೊಂಡು ಅಲ್ಲಿ ಬರುತ್ತಿರುವನೆಮ್ದಾಗ ಇಲ್ಲಿ ನಮ್ಮ ತಾತ ತನ್ನ ಮಗನಾದ ನಮ್ಮಪ್ಪನನ್ನು ಒದ್ದು ಹಿತ್ತಲ ಬಾಗಿಲಿಂದ ಬಳ್ಳಾರಿ ಸೀಮೆಯಿಂದ ದಾವಣಗೆರೆಗೆ ಸೀಮೆ ಕಡೆ ಓಡಿಸಿದನಂತೆ. +ಃಇಗೆ ಸಾಗುತ್ತದೆ ನಮ್ಮಪ್ಪನ ಪ್ರಣಯ ಮತ್ತು ಪರಾಕ್ರಮದ ಯಶೋಗಾಥೆ! ನಮ್ಮ ತಂದೆಗೂ ಈ ಕಾದಂಬರಿಗೂ ಏನು ಸಂಬಂಧ! ಎತ್ತಣ ನೆಲ್ಲಿಕಾಯಿ! ಎತ್ತಣ ಸಮುದ್ರದ ಲವಣಾಂಶ ಬೆಟ್ಟ ಮೇಲಣ ನೆಲ್ಲಿ ಕಾಯಿಗೆ ಹೇಗೆ ಬಂತೆಂದು ನೀವು ಕೇಳಬಹುದು! ಸಾಹಸ ಪ್ರಕಟಿಸುವವರೂ; ರಾಜಾರೋಷವಾಗಿ ಸೂಳೆಯರನ್ನು ಇಟ್ಟುಕೊಳ್ಳುವರೆಂದರೆ ನಮ್ಮಪ್ಪನಿಗೆ ಎಲ್ಲಿಲ್ಲದ ಪ್ರೀತಿ! ನೀನು ಎಷ್ಟು ಮಂದಿ ಸೂಳೆಯರನ್ನು ಇಟ್ಟುಕೊಂ ಎಂಬುದರ ಮೇಲೆ ಸಮಾಜ ನಿನ್ನ ಗೌರವ ಪ್ರತಿಷ್ಟೆಯನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದ! ಆದ್ದರಿಂದ ಸಹಜವಾಗಿ ಬ್ಯಾಂಕೊಂದರಲ್ಲಿ ಕ್ಯಾಷಿಯರ್ ಆಗಿದ್ದ ಶಾಮಾಶಾಸ್ತ್ರಿ ಕುಂತಳನಾಡಲ್ಲೆ ಅತಿಸುಂದರಿಯೂ, ರಸಿಕಳು ಎಂದು ಹೆಸರಾಗಿದ್ದ ಅನಸೂಯಳನ್ನು ಹೆಂಡತಿಗಿಂತ ಹೆಚ್ಚಾಗಿ ಇಟ್ಟುಕೊಂಡ ಸುದ್ದಿ ತಿಳಿದು ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿದ. ಮುಂದೆ ಕೆಲವೊಂದು ಗೃಹಕಲಹಗಳು ಸಂಭವಿಸಿದಾಗ ನಮ್ಮಪ್ಪ ಶಾಮಾಶಾಸ್ತ್ರಿಪರ ವಕಾಲತ್ತು ವಹಿಸಿ ಮುತ್ತೈದೆಯರನ್ನು ದಿಗ್ಭ್ರಮೆಗೊಳಿಸಿದ. ಕಲ್ಲು ಗುಂಡು ಎತ್ತುವವರ, ಕುಸ್ತಿ ಆಡುವವರ, ಕಾಲು ಕೆದರಿ ಜಗಳವಾಡುವ ಪ್ರಸಿದ್ಧ ಬಂಟರ ಪಡೆಯ ಅನಭಿಷಿಕ್ತ ಮುಖಂಡನಾಗಿದ್ದ ನಮ್ಮ ‘ಡ್ಯಾಡಿ’ಯನ್ನು ತಡವುವುದು ಅಷ್ಟು ಸುಲಭಕಾರ್ಯವಾಗಿರಲಿಲ್ಲ. +ನಾಟಕ ಶಿರೋಮಣಿ ಎರ್ರಂಗಿ ಶಿವಣ್ಣನವರು ಆತನನ್ನು ಸ್ಮರಣೆ ತಂದುಕೊಂಡೊಡನೆ ಇಷ್ಟೆಲ್ಲ ನೆನಪಾಯಿತು. “ತಾಯಿ… ಹೋಗೋದು ಹೋಗ್ತೀವಿ… ನಿಮ್ಮ ಕೈಯಿಂದ ತಲಾಕ್ಕೊಂದೊಂದು ಚಾ ಮಾಡಿಕೊಟ್ರೀ ಅಂದ್ರ ಜಂಗಮರಾದ ನಾವು ಅಷ್ಟಪುತ್ರಸೌಭಾಗ್ಯವತೀರಸ್ತು ಅಂತ ಆಶೀರ್ವಾದ ಮಾಡಿ ಹೋಗ್ತೀವಿ” ಎಂದರು. +ಅದನ್ನು ಕೇಳಿ ನನಗೆ ನಗು ಬಂದು ಹೇಳಿದೆ: ನಿಮ್ಮ ಆಶೀರ್ವಾದ ಚಲಾವಣೆ ಆಗೋದಿಲ್ಲ” +“ಯಾಕೆ ಮೇಷ್ರೇ/” ಎಂದು ಕೇಳಿದರು ಕುತೋಹಲದಿಂದ. +“ಅದ್ಹೇಗೆ ಸಾಧ್ಯರೀ… ಆಪರೇಷನ್ ಮಾಡಿಸ್ಕೊಂಡೊರ್‍ಗೆ ಆಶೀರ್ವಾದದ ಬಲದಿಂದ ಮಕ್ಕಲ್ಳಾಗೋದುಂಟಾ?” ಎಂದು ನಾನು ಹೇಳಿದೊಡನೆ ಕಲಾವಿದರೆಲ್ಲರು ಗೊಳ್ಳೆಂದು ನಕ್ಕರು. +ನನ್ನ ಹೆಂಡತಿ ಹಸನ್ಮುಖಿಯಾಗಿ ಚಹ ಮಾಡಲೆಂದು ಒಳಗಡೆ ಹೋಗಿ ಸ್ಟೌವ್ ಹತ್ತಿಸಿದಳು. ಅದರ ವಾಸನೆ ಹರಡಿದ್ದ ವಾತಾವರಣದಲ್ಲಿ ನಾನು ಬರೆಯುತ್ತಿರುವ ಕಾದಂಬರಿ ಬಗೆಗೋ, ಅದರಲ್ಲಿ ಬರುವ ಪುರುಷ ಸ್ತ್ರೀಪಾತ್ರಗಳು ಗೃಹಕಲಹಕ್ಕೆ ನಾಂದು ಹಾಡಿರುವುದನ್ನು ಮೆತ್ತಗಿನ ದ್ವನಿಯಲ್ಲಿ ವಿವರಿಸಿದೆನು. +ಅದಕ್ಕೆ ಬಿದ್ದು ಬಿದ್ದು ನಗಲು ಪ್ರಯತ್ನಿಸಿದರಾದರೂ ನಗೆ ನಡುವೆ ಮತ್ತೆ ಗಮ್ಭೀರವದನರಾದರು. “ಹೇಮರೆಡ್ಡಿ ಮಲ್ಲಮ್ಮನಿಗಿಂತ ಅತ್ಯುತ್ತಮ ನಾಟಕಾಗ್ತಲ್ಲಿದು. ಮೇಸ್ಟ್ರೇ… ಅಂಗೈಯಲ್ಲಿ ಬೆಣೆ ಇಟ್ಕೊಂಡು ತುಪ್ಪಕ್ಕಾಗಿ ಪರದಾಡ್ತಿದ್ದೀವಲ್ಲ… ದಯವಿಟ್ಟು ಇದನ್ನೇ ಮೂರು ತಾಸಿನ ನಾಟಕ ಬರ್‍ಕೊಟ್ಟು ಪುಣ್ಯ ಕಟ್ಕೊಳ್ಳ್ರಿ… ಸೂಳೆ ಅನಸೂಯಳ ಪಾತ್ರವನ್ನು ನಾನೇ ಮಾಡ್ತೀನಿ… ಮಲ್ಲಮ್ಮನ ಪಾರ್ಟು ಮಾಡಿ ಮಾಡಿ ಸುಸ್ತಾಗಿರೋ ರೇವಣ್ಣ ಹೆಂಡತಿ ವರಲಕ್ಷ್ಮಿ ಪಾರ್ತ್ ಮಾಡ್ತಾರೆ. ಎಲಿವಾಳು ಸಿದ್ದಣ್ಣೋರು ಬದುಕಿದ್ದಿದ್ರೆ ಅವರ ಕೈಲಿಶಾಮಾಶಾಸ್ತ್ರಿ ಪಾತ್ರ ಮಾಡಿಸಬೌದಿತ್ತು.” ಎಂದು ವಿವರಿಸುತ್ತ ಶಿವಣ್ಣನವರು ಮ್ಲಾನವದನರಾದರು. +ಅದೇ ಹೊಟ್ಟಿಗೆ ಏನೋ ಯೋಚಿಸುತ್ತಿದ್ದ ಹೇಮರೆಡ್ಡಿ ಪಾತ್ರ ಮಾಡುವ ತಿರುಕಯ್ಯನವರು “ಶಾಮಾಶಾಸ್ತ್ರಿ ಪಾತ್ರವನ್ನು ಮೇಷ್ಟ್ರೇ ಮಾಡಿದರೆ ಹೇಗೆ?” ಎಂದು ನಡುವೆ ಬಾಯಿ ಹಾಕಿದರು. +“ಪುಟ್ಟಜ್ಜೊರು ಆಶೀರ್ವಾದ ಮಾಡಿದ್ರೂ ಅಂದ್ರೆ ವೀರಭದ್ರಪ್ಪ ಮೇಷ್ಟ್ರು ಶಾಮಾಶಾಸ್ತ್ರಿ ಆಗಬೌದು, ಶಾಮಾಶಾಸ್ತ್ರಿ ವೀರಭದ್ರಪ್ಪ ಮೇಷ್ಟ್ರು ಆಗಿಬಿಡಬೌದು… ಇದೆಲ್ಲ ದೊಡ್ಡ ವಿಷಯವೇನಲ್ಲ! ನೀವೊಂದೇ ಹ್ಹೂ ಅಂದುಬಿಡಿ. ಕಂದಗಲ್ಲು ಹನುಮಂತರಾಯ್ರು ನಲ್ವಡಿ ಶ್ರೀಕಂಠಶಾಸ್ತ್ರಿಗಳು, ದುತ್ತರಿಗಿ ಇವ್ರೆಲ್ಲ ತಾವು ಬರೆದ ನಾಟಕಗಳಲ್ಲಿ ತಾವೇ ಮುಖ್ಯ ಪಾತ್ರ ವಹಿಸ್ತಿದ್ರು ಮೇಷ್ಟ್ರೇ” ಎಂದು ಹುಚ್ಚ ಭರಮರೆಡ್ಡಿ ಪಾತ್ರ ಮಾಡುವ ಬುದ್ಧಿವಂತ ಮಠ್‌ರವರು ಉತ್ಸಾಹದಿಂದ ವಿವರಿಸಿದರು. +ಅವರಾಡಿದ ಮಾತುಗಳೆಲ್ಲ ಸಾಂಕೇತಿಕವಾಗಿಯೂ; ಅರ್ಥಗರ್ಭಿತವಾಗಿಯೂ; ವಿಚಿತ್ರವಾಗಿಯೂ ಕಂಡು ನಾನು ಒಂದು ಕ್ಷಣ ಮೌನವಹಿಸಿ ಅವರೆಲ್ಲರ ಕಡೆ ಕುರಿಯೊಂದು ತೋಳದ ಕಡೆ ನೋಡುವಂತೆ ನೋಡಿದೆ. +“ಇದೆಲ್ಲ ಆಗೋ ಮಾತಲ್ಲ ಬಿಡೋ ಮಾತಲ್ಲ… ನನಗೇನೋ ಶಾಮಣ್ಣನ ಪಾತ್ರ ವಹಿಸೋಕೆ ಇಷ್ಟ ಇದೆ… ಆದ್ರೆ ಮನೆಯಾಕೆ ಒಪ್ಪಬೇಕಲ್ಲ… ಕಾದಂಬರಿ ಬರೆಯೋತಿರೋದ್ಕೇನೇ ಇಷ್ಟು ರಂಪಾಟ ಮಾಡಿದ್ದಾಳೆ. ಇನ್ನು ನಾನೇನಾದ್ರು ಶಾಮಣ್ಣನ ಪಾತ್ರವಹಿಸಿದನೆಂದರೆ ಇಡೀ ಮನೆಯೇ ರಣರಂಗವಾಗಿಬಿಡ್ತದೆ ಅಷ್ಟೆ” ಎಂದು ನಾನು ಹೇಳುವಷ್ಟರಲ್ಲಿ ಶ್ರೀಮತಿ ಅನ್ನಪೂರ್ಣಮ್ಮನವರುಚಹ ತಂದು ಎಲ್ಲರಿಗೂ ಹಂಚಿದರು. +ನಾವಾಡಿದ ಮಾತುಗಳನ್ನು ಅವರು ಕೇಳಿಸಿಕೊಂಡಿದ್ದರೇನೋ? ಅವರ ಮುಖ ಮತ್ತೆ ಸೂರ್ಯಗೋಳವಾಗಿತ್ತು. +ಚಹ ಕುಡಿಯುತ್ತ ಗುಟುಕು ಗುಟುಕಿಗೊಮ್ಮ್ರ್ ಆಕೆಯ ಮುಖ ನೋಡಿ ಮಾತು ಹೊರಡದೆ ಕಲಾವಿದರೆಲ್ಲರು ತಲೆ ತಗ್ಗಿಸುತ್ತಿದ್ದರು. +ಶಿವಣ್ಣನವರು ಚಹವನ್ನು ಹೊಗಳಿದಾದ ಮೇಲೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಕೇಲಿಯೇ ಬಿಟ್ಟರು. “ತಾಯೀ ನಾನ್ಹಿಂಗೆ ಮಾತಾಡ್ತಿದೀನಂತ ದಯವಿಟ್ಟು ಬೇಸರ ಮಾಡ್ಕೋಬೇಡಿ. ಏನಿಲ್ಲಾ… ಬರೋ ಹೆಣ್ಣು ಪಾತ್ರಗಳನ್ನು ವಹಿಸೋರೆಲ್ಲ ಗಂಡಸರಾದ ನಾವೇನೇ… ಶಾಮಂಣ ಪಾತ್ರದ್ದೇ ಒಂದು ಸಮಸ್ಯೆ ಆಗಿದೆ… ನೀವು ಮನಸ್ಪೂರ್ತಿ ಒಪ್ಪಿಗೆ ಕೊಟ್ರೆ ನಿಮ್ಮೆಜಮಾನ್ರು ಕೈಲಿ ಆ ಪಾತ್ರ ಮಾಡಿಸ್ಬೇಕೂಂತ ಮಾಡಿದ್ದೀವಿ… ಇದ್ಕೆ ತಾವು!… ಎಮ್ದು ಮಾತು ನಿಲ್ಲಿಸಿ ಉಗುಳು ನುಂಗಿದರು. +ಅದನ್ನು ಕೇಳುತ್ತಲೆ ಅನ್ನಪೂರ್ಣ ಆದಿಶಕ್ತಿಯ ಅಪರಾವತಾರವಾಗಿ ದೃಷ್ಟಿಯ ಮೂಲಕ ಅವರೆಲ್ಲರನ್ನೂ ಆಪೋಶನ ತೆಗೆದುಕೊಳ್ಳತೊಡಗಿದಳು. +“ಏನ್ರೀಽಽ… ನಮ್ಮನ್ನೇನು ನೀವು ಸಂಸಾರಸ್ತರೂಂತ ತಿಳ್ಕೊಂಡೀರೋ… ಇಂಥ ಸುಡುಗಾಡು ನಾಟಕಗಳ್ನ ಆಡೀ, ಆಡೀ ನೀವು ಕೆಟ್ಟಿರೋದಲ್ದೆ ನಂ ಯಜಮಾನರನ್ನೂ ಕೆಡಿಸ್ಲಿಕ್ಕೆ ಬಂದಿದೀರೇನು! ಒಳ್ಳೆ ಮಾತಿನಿಂದ ನೀವು ಬಂದಿರೋಕೆಲಸವನ್ನು ಮುಗಿಸಿಕೊಂಡು ಇಲ್ಲಿಂದ ಹೊರಟುಹೋದರೆ ಸೈ, ಇಲ್ಲಾಂದ್ರೆ ನಾನೇನು ಮಾಡ್ತೀನೋ ನನ್ಗೆ ಗೊತ್ತಿಲ್ಲ!… ಎಂದು ಕಿಡಿಕಾರಿದಳು. +ಅದನ್ನು ಕೇಳಿ ಪರಮೇಶ್ವರನ ಪಾತ್ರ ಮಾಡುವ ಕೆಂಡಗಣ್ಣಿನ ಮಠ್ ರವರು ಹಡಲ್ಲಗಿಬಿಟ್ಟರು. ಹಾಗೇ ಚೇತರಿಸಿಕೊಂಡು “ನಾಟಕ ಬರ್ದೋರು ಆಚಂದ್ರಾರ್ಕವಾಗಿ…” ಎಂದೇನೋ ಹೇಳುವ ಪ್ರಯತ್ನ ಮಾಡುತ್ತಿರಲು… +ನನ್ನ ಶ್ರೀಮತಿಯವರು ಅವರ ಮಾತನ್ನು ಅರ್ಧಕ್ಕೇ ತುಂಡರಿಸಿ.. +“ಸಾಕು ನಿಲ್ಲಿಸ್ರಿ ನಿಮ್ ಮಾತ್ನ… ನನ್ನನ್ನೇನು ಏನು ಗೊತ್ತಿಲ್ಲದ ಮೂರ್ಖಳು ಅಂದ್ಕೊಂಡಿದ್ದೀರೋ ಹೇಗೆ? ನಲ್ವಡಿ ಶ್ರೀಕಂಠ ಶಾಸ್ತ್ರಿಗಳು ಕಂದಗಲ್ಲು ಹನುಮಂತರಾಯರು ಇವ್ರೆಲ್ಲ ಕೂಳು ನೀರಿಲ್ದೆ ಒದ್ದಾಡಿ ಸತ್ತದ್ದು ನನ್ಗೇನು ಗೊತ್ತಿಲ್ಲ ಅಂತ ಅಂದ್ಕೊಂಡೀರೇನು?” ಎಂದು ಹೇಳೋದು ಹೇಳಿ ಆದ ಮೇಲೆ ಅಪರಾಧಿಯಂತೆ ಕೂಕಂಡಿದ್ದ ನನ್ನ ಕಡೆ ತಿರುಗಿ… ರ್ರೀ ತಲೆತಗ್ಗಿಸ್ಕೊಂಡು ಏನೂ ಅರಿಯದ ಕಂದಮ್ಮನಂತೆ ಕೂತಿದ್ದೀರಲ್ಲ… ತಲೆ ಎತ್ರಿ ಮೇಲೆ… ನೀವು ಹಂಪಿ ಯೂನಿವರ್ಸಿಟೀಲಿದ್ದಾಗ ಆ ದುತ್ತರಿಗಿ ಎಂಬ ನಾಟಕ್ಕಾರ್ರು ಬಂದಿದ್ರಂತ ಹೇಳ್ತಿದ್ರಿ ಅಲ್ಲ… ಅಷ್ಟೊಂದು ನಾಟಕಗಳ್ನ ಬರೆದಿದ್ರೂ ಎಂಥೆಂಥ ಅವಸ್ಥೆ ಪಡ್ತಿದ್ದಾರೆಂಬುದನ್ನ ವಿವರಿಸಿ ಹೇಳ್ರಿ ಅವರಿಗೆ ಎಂದು ಆಜ್ಞಾಪಿಸಿದಳು. +ಆಕೆ ಗುಡುಗುಡಿಸಿದ ಮಾತಿನಲ್ಲಿ ಸತ್ಯ ಇಲ್ಲದಿರಲಿಲ್ಲ. +ಹತ್ತಾರು ಯಶಸ್ವಿ ನಾಟಕಗಳನ್ನು ಬರೆದಿರುವ ಶ್ರೀಯುತ ಪಿ.ಬಿ. ದುತ್ತಲಗಿ ಕರ್ನಾಟಕದಲ್ಲಿ ಮನೆಮಾತಾಗಿರೋರು. ಅವರ ಕೆಲವು ನಾಟಕಗಳು ಚಲನಚಿತ್ರಗಳಾಗಿಯೂ ವಶಸ್ವಿಯಾಗಿವೆ. ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ, ಹೀಗೆ. ಅಂಥ ಮಹಾನ್ ವ್ಯಕ್ತಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ಕುಲಪತಿಗಳನ್ನು ಕಾಣುವ ವಿಫಲ ಪ್ರಯತ್ನ ಮಾಡಿದರು. ಉತ್ತರ ಕರ್ನಾಟಕದವರೂ, ಜಾನಪದ ವಿದ್ವಾಂಸರೂ, ನಾಟಕಕಾರ ಕವಿ, ಕಾದಂಬರಿಕಾರ ಹೀಗೆ ಪ್ರಸಿದ್ಧರಾದ ಕುಲಪತಿಗಳು ಅವರಿಗೆ ಬೆಟ್ಟಿಯಾಗುವ ಅವಕಾಶವನ್ನೇ ಕೊಡಲಿಲ್ಲ. ಜೇಬಿನಲ್ಲಿದ್ದಬದ್ದ ಹಣ ಖರ್ಚು ಮಾಡಿಕೊಂಡು ದುತ್ತರಿಗಿಯವರು ಒದ್ದಾಡುವುದನ್ನು ಕಣ್ಣಾರೆ ಕಂಡು ಬಹಳ ದಿನಗಳಾಗಿಲ್ಲ. +ಆಕೆಯ ಆಜ್ಞೆಗೆ ತಲೆಬಾಗಿದೆನಾದರೂ ಮಾತಾಡುವ ಧೈರ್ಯ ಬರಲೇ‌ಇಲ್ಲ. +ತಾವು ಬಂದಿರುವ ಗಳಿಗೆಯೇ ಎಡವಟ್ಟಾದುದು ಎಂದು ಭಾವಿಸಿದವರಾದ ಕಲಾವಿದರು ಅಯ್ಯೋ ಪಾಪವೆಂಬಂತೆ ನನ್ನ ಕದೆ ನೋಡಿ ಮೆಲ್ಲನೆ ಒಬ್ಬೊಬ್ಬರಾಗಿ ಎದ್ದು ಹೊರಗೆ ಹೋದರು. ಹೋಗುವ ಮೊದಲು ಶಿವಣ್ಣನವರು ನನ್ನನ್ನು ಹೊರಗೆ ಕರೆದೊಯ್ದು.. +ನೋಡಿ ಮೇಷ್ಟ್ರೇ… ಆ ತಾಯಿ ಹೇಳಿದ್ರಲ್ಲಿ ಸತ್ಯಾಂಶ ಇದೆ. ಆ ಸತ್ಯದ ಇನ್ನೊಂದು ಅರ್ಥ ಏನೆಂದರೆ ನಿಮ್ಮಂಥ ಸುಶಿಕ್ಷಿತರು ಗಟ್ಟಿಯಾದ ನಾಟಕ ಬರೆಯಬೇಕು… ಅದರಲ್ಲಿನ ಮುಖ್ಯ ಪಾತ್ರವನ್ನು ನಿಮ್ಮಂಥೋರೇ ಮಾಡಬೇಕೆಂಭೋದು… ಒಂದು ಒಳ್ಳೆಯ ಮಹೂರ್ತ ನೋಡಿ ನೌಕರಿಗೆ ರಾಜೀನಾಮೆ ಕೊಟ್ತು ರಂಗಭೂಮಿಗೆ ಶರಣಾಗಿ ಬಿಡೀ… ಎಲ್ಲವನ್ನು ಸರಸ್ವತಿ ನೋಡಿಕೊಳ್ಳುತ್ತಾಳೆ. ಯೋಚ್ನೆ ಮಾಡಿ ನಿರ್ಧಾರ ತಿಳಿಸಿ.‘ಶಾಮಣ್ಣ ಅರ್ಥಾತ್ ಸೂಳೆ ಹೆಚ್ಚೋ ಗರತಿ ಹೆಚ್ಚೋ’ ಎಂಬ ನಾಟಕಾನ ಕೊಟ್ಟೂರು ಜಾತ್ರೆಯಲ್ಲಿ ಪ್ರಪ್ರಥಮವಾಗಿ ಆಡಿಬಿಡೋಣ. ನಾಳೇನೆ ಹೋಗಿ ಇಂಥ ಸಾಮಾಜಿಕ ನಾಟಕಗಳ್ನ ಬದಲಾದ ಕಾಲ ಸಂಧರ್ಭದಲ್ಲಿ ಆಡಬೇಕಾಗಿರುವ ಅಗತ್ಯ ಕುರಿತು ಪುಟ್ಟಜ್ಜೋರ ಹತ್ರ ಮಾತಾಡ್ತೀನಿ… ಅವರು ಒಫ್ಫಿ ಆಶೀರ್ವಾದ ಮಾಡೇ ಮಾಡ್ತಾರೆ… ಪತ್ರ ಹಾಕ್ತೀನಿ… ಸ್ಕ್ರಿಪ್ಟ್ ಜೊತೆಗೆ ಬಂದು ಬಿಡಿ… ಕಾಯ್ತಿರ್ತೀವಿ” ಎಂದು ಹೇಳಿ ಭುಜ ತಟ್ಟಿ ಏಣು ಘಟಿಸಿಯೇ ಇಲ್ಲವೆಂಬಂತೆ ಹೊರಟು ಹೋದರು. +ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವುದು, ಆ ನಾಟಕದಲ್ಲಿ ಲೇಖಕನಾದ ನಾನು ಶಾಮಣ್ಣನ ಪಾತ್ರ ವಹಿಸುವುದು… ಈ ಎಲ್ಲ ಕಲ್ಪನೆಗಳೊಂದಿಗೆ ಹೆಜ್ಜೆಹೆಜ್ಜೆಗೆ ಪುಳಕಗೊಳ್ಳುತ್ತ ಪಾತ್ರಧಾರಿಯೋರ್ವ ರಂಗ ಪ್ರವೇಶಿಸುವ ರೀತಿಯಲ್ಲಿಯೇ ನಾನು ಹೊಸ್ತಿಲು ದಾಟಿ ಪಡಸಾಲೆ ಸಮೀಪಿಸಿದೆ. +ಅಡುಗೆ ಮನೆಯಲ್ಲಿ ಪಾತ್ರೆ ಪಡಗಗಳು ನನ್ನ ಹೆಂಡತಿಯ ಕೋಪಕ್ಕೆ ತುತ್ತಾಗಿ ದಡಬಡ ಸದ್ದು ಮಾಡುತ್ತಿರುವುದು ಕೇಳಿಸಿತು. ಅದನ್ನು ನಾನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ನನ್ನ ಹೆಂಡತಿಯ ಕೋಪದ ಪ್ರಮಾಣ ನನಗೆ ಗೊತ್ತು. ಆಕೆಯ ಕೋಪವನ್ನು ಶಮನ ಮಾಡುವ ಶಕ್ತಿ ಈ ತ್ರಿಲೋಕಗಳಲ್ಲಿ ಎಲ್ಲಿಯಾದರೂ ಇದ್ದರೆ… ಅದು ನನ್ನ ಕೇವಲ ಮೌನಕ್ಕೆ ಮಾತ್ರ. +ಅವತ್ತು ಮಧ್ಯಾಹ್ನ ಅನ್ನಪೂರ್ಣೆಶ್ವರಿ ನಾಮಾಂಕಿತಳಾದ ಆಕೆಯು ಕಡು ಮುನಿದು ಅಡುಗೆ ಮಾಡಲೂ ಇಲ್ಲ… ಮುಗುಳು ನಗೆಯಮ್ ಬೀರಲೂ ಇಲ್ಲ… ನಾನೂ ಕೂಡ ಆ ನಗೆಯು ಎಲ್ಲಿದೆ ಎಂದು ಹುಡುಕುವ ಪ್ರಯತ್ನ ಮಾಡಲೂ ಇಲ್ಲ. +ನೀವೇ ಆ ಶಾಮಣ್ಣ ಪಾತ್ರ ವಹಿಸಲಿಕ್ಕೆ ಲಾಯಕ್ಕೂ ಎಂದು ಶಿವಣ್ಣನವರು ಹೇಳಿದ್ದು ನನ್ನ ಹೃದಯ ತುಂಬಿ ಹೊಟ್ಟೆ ಕ +ಡೆ ಧಾವಿಸ ತೊಡಗಿತ್ತು. ಅದು ಅಲ್ಲದೆ ಕಲೆ ಅಭಿನಯ ಮತ್ತು ಧಿಮಾಕು ಎಂಬುದು ನಮ್ಮ ವಂಶದ ತ್ರಿವಳಿ ಆಸ್ತಿ. ನಮ್ಮಂಥೋರು ಉಬ್ಭೋದಾಗಲೀ ಪಂಚೇರಾಗೋದಾಗಲೀ ತಡವಾಗೋದಿಲ್ಲ. ಶಿವಣ್ಣನವರು ಒಂದೇ ಒಂದು ಡೈಲಾಗ್ ಹೊಡೆದು ಉಬ್ಬಿಸಿಬಿಟ್ಟರು. ಉಬ್ಬಿನ ಪಂಚರಮ್ಗಿನ ಬಲೂನಾಗಿ ಅಂತರಂಗದ ಚಿದಾಕಾಶದಲ್ಲಿ ಮೇಲೆ ಮೇಲಕ್ಕೇರಿ ತೇಲಾಡತೊಡಗಿದೆನು. ಹೆಂಡತಿಯ ದುಃಖ ಶಮನ ಮಾಡಬೇಕೆಂಬ ಯೋಚನೆಯೇ ಬರಲಿಲ್ಲ. ಒಳಗಡೆ ಸಂಗೀತಗಾರನಾಗಿ, ನಾಟಕಕಾರನಾಗಿ, ನಟನಾಗಿ, ಕೊಡುಗೈ ದೊರೆಯಾಗಿ, ಪತಿಯಾಗಿ, ಮಗನಾಗಿ, ಅಧಿಕಾರಿಯಾಗಿ, ಕುಡುಕನಾಗಿ, ಜೂಜುಕೋರನಾಗಿ, ವಿಟಪುರುಷನಾಗಿ, ಖೈದಿಯಾಗಿ, ರೋಗಿಯಾಗಿ, ಕಳೇಬರವಾಗಿ, ಪ್ರೇತಾತ್ಮವಾಗಿ ಒಂದೊಂದು ಗಳಿಗೆ ರೂಪ ಪಡೆಯುತ್ತಿದ್ದ ಒಂದೊಂದು ಗಳಿಗೆಗೆ ಒಂದೊಂದು ಪಾತ್ರ ಘಟ್ಟದಿಂದ ಇನ್ನೊಂದು ಒಂದೊಂದು ಪಾತ್ರ ಘಟ್ಟಕ್ಕೆ ಲೀಲಾಜಾಲವಾಗಿ ಜಿಗಿಯುತ್ತಿದ್ದ ದಶಸ್ಕಂದ ಶಾಮಣ್ಣ ತುಂಬಿಕೊಂಡಿದ್ದರಿಂದ ವಾಸ್ತವ ಜಗತ್ತಿನ ಯಾವ ಪ್ರಿಯರಾಗಲೀ, ವರ್ತಮಾನದ ಯಾವುದೇ ವಿದ್ಯಮಾನವಾಗ್ಲೀ ನನ್ನ ಗಮನ ಸೆಳೆಯಲಿಲ್ಲ. +ನನ್ನ ಕಾದಂಬರಿಯ ಶಾಮಣ್ಣನ ಪಾತ್ರವನ್ನು ಶರಸ್ಚಂದ್ರರ ಕಾದಂಬರಿಯ ದೇವದಾಸನ ಪಾತ್ರಕ್ಕೆ ತಳಕು ಹಾಕಿ ನೋಡುವುದು, ದೇವದಾಸು ಚಿತ್ರದ ಮೂಲಕ ನಟ ಸಾಮ್ರಾಟ ಅಕ್ಕಿನೇನಿ ನಾಗೇಶ್ವರರಾವ್ರವರು ಅತ್ಯುತ್ತಮ ನಟರೆಮ್ದು ಪ್ರಸಿದ್ಧರಾದಮ್ತೆನಾನೂ ಸಹ ಶಾಮಂನ ನಾಟಕದ ಮೂಲಕ ಜಗದ್ವಿಖ್ಯಾತ ನಾಟಕಕಾರನೂ, ನಟನೂ ಆಗಬೇಕೆಂದು ಕನಸು ಕಾಣತೊಡಗಿದೆ. ಅವನೇ ನಾನೇನೋ, ನಾನೇ ಅವನೇನೋ, ನಮ್ಮಿಬ್ಬರ ನಡುವೆ (ದೇಹಾತ್ಮ, ಜೀವಾತ್ಮ) ಭಿನ್ನತೆ ಎಂಬುದು ಇಲ್ಲವೇನೋ? ಎನ್ನಿಸತೊಡಗಿತು. +ಅವನ ಪಾತ್ರದ ಒಂದೊಂದು ಆಯಾಮಕ್ಕೂ ಒಂದೊಂದು ಹಂತಕ್ಕೂ ಒಂದೊಂದು ತಿಂಗಳ ಪರ್ಯಂತರ ವಿಶೇಷ ತಾಲೀಮು ನಡೆಸಬೇಕು. ಆ ಪಾತ್ರ ಪೂರ್ಣ ಪ್ರಮಾಣದಲ್ಲಿ ಶಕ್ತಿಶಾಲಿಯಾಗಿ ಪ್ರಕಟವಾಗಬೇಕಾದರೆ ಕನಿಷ್ಠ ಒಂದು ವರ್ಷವಾದರೂ ತಲ್ ಮು ನಡೆಯಬೇಕು. ಆದರೆ ಯಾವ ತಾಲೀಮುಗಳ ಸಹಾಯವಿಲ್ಲದೆ ಆ ಸಂಸಾರ ನೌಕೆಯೆಂಬ ದುರಮ್ತ ರಂಗ ಪ್ರಯೋಗ, ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಶಾಮಣ್ಣ ನಿಜಕ್ಕೂ ಅಭಿಜಾತ ಕಲಾವಿದನೇ ಸರಿ. ಕರ್ಮಠಸಂಸಾರದ ಮೆಲ್ಪದರುಗಳನ್ನು ಸಮರ್ಥರೀತಿಯಲ್ಲಿ ಕಳಚುತ್ತ ಹೋಗಿ ಎಲ್ಲ ವೃತ್ತಿರಂಗಭೂಮಿ ಕಲಾವಿದರಂತೆ ತಾನು ದುರ್ಂತಕ್ಕೀಡಾಗಿ ಈಗ ಸಧ್ಯಕ್ಕೆ ಪ್ರೇತಾತ್ಮವೆಂಬ ಪಾತ್ರ ನಿರ್ವಹಿಸುತ್ತಿರುವನು. ತಮ್ಮ ವಂಶದ ಹಿರಿಯರಂತೆ ತನ್ನ ಕಳೇಬರದ ಅಸ್ಠಿಮಜ್ಜನ ಕಾರ್ಯವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸಬೇಕೆಂದು ಕರಾರು ವಿಧಿಸಿರುವನು. +ಮಣಿಕರ್ಣಿಕಾ ಚಕ್ರ ಪುಷ್ಕರಿಣಿ ಎಮ್ಬುದು ಅದಾವ ಮೋಡಿ ಮಾಡಿರುವುದೋ ಏನೋ ಅದೊಂದು ಪ್ರೇತಾತ್ಮಗಳ ಸಂತೆ, ವಿಷಾದ ಮುಖಗಳ ಜಾತ್ರೆ – ಇಂದ್ರಿಯ ವಿಕಾರಗಳ ನಿಗೂಢ ಸಮೂಹ, ಮರುಳುಗಳಿಗೆ ಒಡೆಯನಾದವನೂ; ತ್ರಿಲೋಕ ಮೋಹಿನಿಯ ಪತಿ ಪರಮೇಶ್ವರನೂ ಆದ ಪರಶಿವನು ದೇವತೆಗಳೊಮ್ದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲವೆಂದು ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮನ ಬಲಗೈ ಹೆಬ್ಬೆಟ್ಟಿನಿಂದ ಹುಟ್ಟಿದವನಾದ ದಕ್ಷನು ಹೀಯಾಳಿಸಿ ದೈವಕೋಪಕ್ಕೆ ತುತ್ತಾದ ಜಾಗವದು.ಅಧಿಕೃತ ಆಮಂತ್ರಣವಿರದಿದ್ದರೂ ತನ್ನ ತಂದೆಯಾದ ದಕ್ಷನು ಮಾಡುತ್ತಿರುವ ನಿರೀಶ್ವರ ಯಾಗಕ್ಕೆ ಹೋಗಿ ಪತಿನಿಂದೆ, ಅಪಮಾನ, ತಿರಸ್ಕಾರಗಳಿಗೆ ಗುರಿಯಾಗಿ ಯೋಗಾಗ್ನಿಯಲ್ಲಿ ದಾಕ್ಷಾಯಿಣಿಯು ದೇಹತ್ಯಾಗ ಮಾಡಿದ ಜಾಗವದು. ರುದ್ರಾಂಶ ಸಂಭೂತನಾದ ವೀರಭದ್ರನು ನಿರೀಶ್ವರವಾದಿಗಳ ರುಂಡಗಳನ್ನು ಚಂಡಾಡಿ ಯಜ್ಞಕುಂಡಕ್ಕರ್ಪಿಸಿದ ಜಾಗವದು. +ಮನಸ್ಸಮ್ಕಲ್ಪ ಮಾತ್ರದಿಂದಲೇ ಚತುರ್ಮುಖನಾದ ಬ್ರಹ್ಮನು ದೇವತೆಗಳನ್ನೂ, ಭೂತಗಳನ್ನೂ, ಋಷಿಗಳನ್ನೂ, ಗಂಧರ್ವರನ್ನೂ, ಅಸುರರನ್ನೂ; ಸರ್ಪಗಳನ್ನೂ ನಿರ್ಮಿಸಿದ ಜಾಗವದು. ದಕ್ಷನು ಹರ್ಯಶ್ವರೆಂಬ ಐದುಸಾವಿರಮಂದಿ ಪುತ್ರರನ್ನು ಸೃಷ್ಟಿಸಿ, ಮೈಥುನ ಧರ್ಮವನ್ನು ಭೋದಿಸಲು ಅವರು ಮಿಥುನ ಸಮಾಗಮ ಕಾರ್ಯದಲ್ಲಿ ಪಾಲ್ಗೊಂಡಿರಲು, ಆಗ ನಾರದನು ಅವರಿರುವಲ್ಲಿ ಪ್ರತ್ಯಕ್ಷವಾಗಿ “ಎಲಾ ಹುಚ್ಚರಿರಾ! ಇನ್ನೇನು ಸೃಷ್ಟಿಯೇ ಪರಮ ಪುರುಷಾರ್ಥವೆಂದು ಭಾವಿಸಿರುವಿರಾ! ಈ ಭೂಮಂಡಲವು ಎಲ್ಲಿಂದ ಹೇಗೆ ಬಂತು? ಇದರ ಒಳಗಡೆ ಇರುವುದಾದರೂ ಏನು? ಮೇಲೆ ಇರುವುದಾದರೂ ಏನು?… ಜನ್ಮರಾಹಿತ್ಯವನ್ನು ಪಡೆಯುವುದಕ್ಕೆ ಪ್ರಯತ್ನ ಮಾಡಿ”ರೆಂದು ಬೋಧಿಸಲು, ಅವರೆಲ್ಲರು ದಿಕ್ಕಾಪಾಲಾಗಿ ಹೋಗಲು, ಇದನ್ನು ಕಂಡು ಖಿನ್ನನಾದ ದಕ್ಷನು ಮರಳಿ ಶಬಲಾಶ್ವರೆಂಬ ಸಾವಿರಮಂದಿ ಪುತ್ರರನ್ನು ಸೃಷ್ಟಿಸಿ ಮತ್ತದೇ ಮೈಥುನ ಧರ್ಮವನ್ನು ಬೋಧಿಸಲು, ಅವರೂ ಸಹ ಮಿಥ್ನ ಸಮಾಗಮದಲ್ಲಿ ಮಗ್ನರಾಗಿರಲು, ಮತ್ತೆ ನಾರದನು ಅವರಿರುವಲ್ಲಿಗೆ ಬಂದು ಜನ್ಮರಾಹಿತ್ಯ ಭೋದಿಸಲು ಅದರಿಂದ ಅವರೂ ತಮ್ಮ ಅಣ್ಣಂದಿರಂತೆ ದಿಕ್ಕಾಪಾಲಾಗಲು, ಇದರಿಂದ ಖಿನನಾದ ದಕ್ಷನು ಸೃಷ್ಟಿಕಾರ್ಯ ವಿರೋಧಿಯಾದ ನಾರದನಿಗೆ ಶಾಪ ಕೊಟ್ಟು ಮರಳಿ ಅರವತ್ತು ಮಂದಿ ಪುತ್ರಿಯರನ್ನು ಪಡೆದ ಜಾಗವದು.! +ಸಂಕಲ್ಪಾದ್ದರ್ಶನಾತ್ ಸ್ಪರ್ಶಾತ್ ಪೂರ್ವೇಷಾಂ ಸೃಷ್ಟಿರುಚ್ಯತೆ| +ದಕ್ಷಾತ್ಪ್ರಾಚೇತ ಸಾದೂರ್ಧ್ವಂ ಸೃಷ್ಟಿರೇನ ಸಂಭವಾ… ಎಂಬ ಶ್ಲೋಕವು ನಲಿನಲಿದಾಡುತ್ತಿರುವ ಜಾಗವದು! +ಸೃಷ್ಟಿ, ಪ್ರತಿಸೃಷ್ಟಿ, ಈಶ್ವರ, ನಷ್ವರ, ಜನನ, ಮರಣ, ಜೀವಾತ್ಮ ಪ್ರೇತಾತ್ಮ, ಸುಖ-ದುಃಖ, ಅನುರಾಗ ವಿಶಾದಗಳ ನಿಘಂಟಾಗಿರುವ ಈ ಸ್ಥಳವಲ್ಲದೆ ಅರಿಷ್ಡವರ್ಗಗಳಿಗೆ ಅತೀತನೂ, ಒಡೆಯನೂ; ಕಾಮಾರಿಯೂ ಆದ ಪರಮೇಶ್ವರನು ಯಜ್ಞಕುಂಡದಲ್ಲಿ ಬೆಂದ, ಅರೆಬೆಂದ ಕಳೇಬರವನ್ನು ತೆಕ್ಕೆಯಲ್ಲಿ ಅವಚಿಕೊಂಡು ಪ್ರೇಮಾಲಾಪ ಮಾಡುತ್ತ ಹೆಜ್ಜೆ-ಹೆಜ್ಜೆಗೂ ವಿರದುರಿಯನ್ನು ಚೆಲ್ಲಾಡುತ್ತ ಅಶ್ರುಧಾರೆಯನ್ನು ಸಿಂಪಡಿಸುತ್ತ ದಿಕ್ಕುಗೆಟ್ಟವನಾಗಿ ದಿಕ್ಕುಗಳಿಗಾಗಿ ತಡಕಾಡುತ್ತ ಹುಚ್ಚನಂತೆ ಅಲೆದಾಡಿದಂಥ ಸೃಷ್ಟಿಸ್ಥಿತಿಲಯಗಳಿಗೆ ಕಾರಕವೂ ಪ್ರೇರಕವೂ ಆದಂಥ ಜಾಗವೇ ಅದು! +ಬೆಂದ ಅರೆಬೆಂದ ಹೆಣಗಳಿಂದಲೂ, ಒಂದೊಂದು ವಿಧದ ಅವಯವಗಳಿಂದಲೂ, ಲಕ್ಷೋಪಲಖ್ಷ ಅಸ್ಥಿಗಲಿಂದಲೂ; ಕೋಟಿ ಕೋಟಿ ಮಣದಷ್ಟು ತೂಕದ ಚಿತಾಭಸ್ಮದಿಮ್ದಲೂ, ಮೀನು, ಮೊಸಳೆ, ಆಮೆ, ಕಲ್ಲಾಮೆಗಳಂಥ ಜಲಚರಗಳಿಂದಲೂ, ಹಿಮಾಚಲ, ಕಾಷ್ಮೀರ, ಬಿಹಾರ, ಒರಿಸ್ಸಾ, ಬಂಗಾಲಗಳಿಂದ ಬಂದಂಥ ನಿರಾಶ್ರಿತರು ನಡೆಸುತ್ತಿರುವ ದೋಣಿಗಳಿಂದಲೂ, ಲಕ್ಷಂತರ ಮೋಕ್ಷಾಪೇಕ್ಷಿಗಳ ಧ್ಯಾನಸ್ಥ ರೌರವ ಕೂಗುಗಳಿಂದಲೂ, ತೇಲಾಡುವ ಮೂಟೆ ಮೂಟೆ ಕಫಗಳಿಂದಲೂ, ವ್ಯಾಸ, ಮಣಿಕರ್ಣಿಕಾ, ದಶಾಶ್ವಮೇಧ, ಹನುಮಂತ, ಹರಿಶ್ಚಂದ್ರವೇ ಮೊದಲಾದ ಮುನ್ನೂರ ಅರವತ್ತೈದು ಸುತ್ತುವರಿದ ಘಾಟ್ಗಲಿಂದಲೂ; ವಿಘ್ನೇಶ್ವರ, ಕಾಲಭೈರವ, ಬಿಂದುಮಾಧವ, ಅನ್ನಪೂರ್ಣಾ, ಸರ್ವಮಂಗಳ, ವಿಶಾಲಕ್ಷಿ, ವಿಶ್ವನಾಥರೇ ಮೊದಲಾದ ದೇವಾನುದೇವತೆಗಳು ನೆಲೆಗೊಂಡಿರುವ ದೇಗುಲಗಲಿಂದ ತುಂಬಿದ ತಟಗಳಿಂದಲೂ, ಗಿಜಿಗಿಜಿಗುಡುಗುತ್ತಿರುವ ಗಂಗಾನದಿಯು ಈ ನಮ್ಮ ಶಾಮನನ್ನು ಅದಾವ ಮೋಡಿ ಮಾಡಿರುವುದೋ? +ಮೋಕ್ಷದಾಯಕಗಳೆಂದು ಪುರಾಣಪ್ರಸಿದ್ಧಿ ಪ‌ಎದ ಸಪ್ತಪಟ್ಟಣಗಳಲ್ಲಿ ಒಂದಾದ, ಸದರೀ ಕ್ಷೇತ್ರದಲ್ಲಿ ಸತ್ತವರೆಲ್ಲರೂ ಮುಕ್ತಿಯನ್ನು ಹೊಂದುವರೆಂಬ ಪ್ರತೀತೆಗೆ ಆಗರವಾದ ಕಾಶೀಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಶಾಮನಿಗೆ ತನ್ನ ಗಿಜಿಗಿಜಿ ಬದುಕಿನ ನಡುವೆ ಯಾವಾಗ ಸಾಧ್ಯವಾಯಿತು? ಎಂಬುದೇ ಬಗೆಹರಿಯಲಾರದ ಪ್ರಶ್ನೆಯಾಗಿರುವುದು. ಮಣಿಕರ್ಣಿಕಾ ಚಕ್ರ ಪುಷ್ಕರಿಣಿಯನ್ನೂ; ಗಂಗಾನದಿಯನ್ನೂ; ಕಾಶೀಕ್ಷೇತ್ರವನ್ನೂ ದೇಹ ಮತ್ತು ಮನಸ್ಸಿನಲ್ಲಿ ಸೃಷ್ಟಿಸಿಕೊಳ್ಳುತ್ತ ಹೋಗಿ (ಅಥವಾ ಅವೇ ಅವನ ದೇಹ ಮತ್ತು ಮನಸ್ಸಿನಲ್ಲಿ ಆಶ್ರಯ ಪ +ಡೆದವೇನೋ?) ಕೊನೆಗೆ ತಾನೇ ಸಂಸ್ಕಾರ ಯೋಗ್ಯವಾದ ರುದ್ರಭೂಮಿಯಾಗಿ ಮಾರ್ಪಟ್ಟಂತಿದ್ದ ಅವನ್ಯಾಕೆ ತನ್ನ ಕಳೇಬರದ ಅಸ್ಥಿಮಜ್ಜನವನ್ನು ಗಂಗಾನದಿಯಲ್ಲಿ ಮಾಡಬೇಕೆಂದು ಬಯಸಿದ ಎಂಬುದೇ ಅರ್ಥವಾಗದ ಸಂಗತಿ. +ಕಾಶೀ ಪಟ್ಟ್ಸಣಕ್ಕಿಂತ ಮುಖ್ಯವಾಗಿ ಕಾಶೀರಾಜನನ್ನೇ ತುಂಬ ಹಚ್ಚಿಕೊಂಡಿದ್ದನೆಂದು ಕೊತ್ತಲಿಗಿಯ ಅನಸೂಯ ಹೇಳುತ್ತಿದ್ದುದು ನೆನಪಾಗುವುದು. +ಪ್ರಥಮ ಗಣ ಪರಿವಾರದಲ್ಲಿ ಒಬ್ಬನಾದ ಶಿವನು ತನ್ನ ಹೆಂಡತಿಯಾದ ಪಾರ್ವತಿಯೊಡನೆ ಅತ್ತೆಯಾದ ಮೇನಾದೇವಿಯ ಮನೆಯಲ್ಲಿ ತಿಂಗಳುಗಟ್ಟಲೆ ಠಿಕಾಣಿ ಹೂಡಿದ್ದ. ಎಂಥ ಅಳಿಯನಾದರೂ ತಿಂಗಳುಗಟ್ಟಲೆ ಹೆಂಡತಿಯೊಡನೆ ಇದ್ದರೆ ಅತ್ತೆ ಮಾವನಿಗಾದರೂ ಹೇಗೆ ಸೇರಿಯಾರು? ಅತ್ತೆ ತನ್ನ ಅಳಿಯನನ್ನು ಹುಟ್ಟು ದರಿದ್ರನೆಂದೂ; ಒಂದಾದರೂ ಮನೆಗೆ ಗತಿ ಇಲ್ಲದವನೆಂದೂ ಮಾತು ಮಾತಿಗೆ ನಿಂದಿಸತೊಡಗಿದ್ದು ಕೇಳಿ ಮಹಾಪತಿವ್ರತೆಯಾದ ಪಾರ್ವತಿಯು ಗಂಡನನ್ನು ತರುಬಿ ಬೇರೊಂದು ಮನೆ ಮಾಡಬೇಕೆಂದು ಕಾಟ ಕೊಟ್ಟಳು. ಈ ಪರಿಣಾಮವಾಗಿ ಶಿವ ತನ್ನ ಪರಿವಾರದ ಕುಂಭನಿಗೆ ಕಾಶೀರಾಜನಾದ ದಿವೋದಾಸನನ್ನು ಉಪಾಯಮಾಡಿ ಓಡಿಸಬೇಕೆಂದು ಆಜ್ಞಾಪಿಸಿದ. ಆಗ ಕುಂಭ ಕಾಶೀ ಪಟ್ಟಣಕ್ಕೆ ಬಂದು ನಿಕುಂಭನೆಂಬ ಬ್ರಾಹ್ಮಣನ ಕನಸಿನಲ್ಲಿ ಕಾಣಿಸಿಕೊಂಡು ಅತಂತ್ರ ಸ್ತಿಥಿಯಲ್ಲಿ ಬದುಕುತ್ತಿರುವ ಮತ್ತು ಇರುವೆ ಎಂಬತ್ನಾಲ್ಕು ಕೋಟಿ ಜೀವರಾಶಿಗಳಿಗೆ ಸಂರಕ್ಷಕನೂ, ಒಡೆಯನೂ ಆದ ವಿಶ್ವನಾಥನಿಗೊಂದು ಗುಡಿ ಕಟ್ಟಿಸಿಪೂಜಿಸು ಎಂದು ಹೇಳಲಾಗಿ ಅವನು ಹಾಗೆಯೇ ಮಾಡಲಾರಂಭಿಸಿದ. ಅನೇಕ ಮಂದಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದ ವಿಶ್ವನಾಥ ದಿವೋದಾಸನ ಒಂದೇ ಒಂದು ಕೋರಿಕೆಯನ್ನು ಈಡೇರಿಸಲಿಲ್ಲ. ಆದ್ದರಿಂದ ಅವನು ದೇವಳವನ್ನು ಕೆಡವಿಸಿದ. ಅದರಿಂದ ಸಿಟ್ಟಿಗೆದ್ದ ವಿಶ್ವನಾಥ ಶಾಪ ಕೊಟ್ಟು ಕಾಶೀ ಪಟ್ಟಣವನ್ನು ಹಾಳು ಮಾಡಿದ. ಹಾಳು ಪಟ್ಟಣದಲ್ಲಿರಲಾಗದೆ ದಿವೋದಾಸ ಸಕುಟುಂಬ ಪರಿವಾರ ಸಮೇತನಾಗಿ ಊರು ಬಿಟ್ಟ. ನಂತರ ಶಿವನು ಪರಿವಾರದೊಂದಿಗೆ ನೆಲೆಗೊಂಡ ನಂತರವೇ ಕಾಶೀಕ್ಷೇತ್ರ ಅವಿಮುಕ್ತ ಕ್ಷೇತ್ರವಾಯಿತು. +ಶಾಮಾಶಾಸ್ತ್ರಿ ಹೇ‌ಇದ್ದೆಂದು ಅನಸೂಯ ಹೇಲಿದ ಈ ಕಥೆಯಲ್ಲಿ ಸುಳ್ಳೂ ಇರಲಿಕ್ಕಿಲ್ಲ ನಿಜವೂ ಇರಲಿಕ್ಕಿಲ್ಲ… ಇಡೀ ಕಶೀಪಟ್ಟಣವೇ ಪಾವಿತ್ರ್ಯ; ಅಪಾವಿತ್ರ್ಯಗಳ ಸಂಕೇತವಾಗಿ ಶಾಮನ ಬದುಕಿನಲ್ಲಿ ನಿಂತುಬಿಟ್ತಿತೇನೋ! ಆತ ಹಿಂದೆಂದೋ ಮಣಿಕರ್ಣಿಕಾ +ಋತುಪರ್ಣಿಕಾ ಎಂದೊಂದು ಸುಂದರ ಭಾವಗೀತಾತ್ಮಕ ಪದ್ಯ ಬರೆದಂತೆ ನೆನಪು. ಆ ಪದ್ಯದಲ್ಲಿ ಹೆಮ್ಡತಿ ಪಾರ್ವತಿಯ ಕರ್ಣದ ಮಣಿಖಚಿತ ಓಲೆಯನ್ನು ಗಂಗಾ ನದಿಯ ದಡದುದ್ದಕ್ಕೂ ಹುಡುಕಾಡುವ ಪರಮ ಶಿವನ ಹೃದಯದ ತುಮುಲವನ್ನು ಭಾವಪೂರ್ಣವಾಗಿ ಚಿತ್ರಿಸಿದಂತೆ ನೆನಪು. ಅಭಿನಂದನಾಗ್ರಂಥದಂಥೀ ಕಾದಂಬರೀ ಪುಣ್ಯಕಥನ ಶ್ರವಣ ವಿನೋದಗಳಿಗೆ ಆ ಶಿವನ ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳುಳ್ಳ ಚತುಷ್ಪದಿಯ ಆ ಕವಿತೆಯನ್ನು ಸೇರಿಸಿ ಇದರ ಸೊಬಗನ್ನು ಹೆಚ್ಚಿಸಬೇಕೆಂದರೆ ಅದು ಸದ್ಯಕ್ಕೆ ಸಿಗುವ ಲಕ್ಷಣವಿಲ್ಲ. ಅವೆಲ್ಲಕ್ಕೂ ಮಿಗಿಲಾಗಿ ಅವನ ಬದುಕೊಂದು ಅದ್ಭುತ ಖಂಡಕಾವ್ಯವಾಗಿರುವಾಗ ಅವನ್ನೆಲ್ಲ ಯಾಕೆ ಸೇರಿಸುವುದ? +ಕುಂತರೂ, ನಿಂತರೂ, ಮಲಗಿದರೂ ಏಕಪ್ರಕಾರವಾಗಿ ಕಾಡುತ್ತಿರುವ ಶಾಮಣ್ಣನೇ ನನ್ನನ್ನು ನಿನ್ನ ಬಂಧನದಿಂದ ಏಮ್ದು ಬಿಡುಗಡೆಗೊಳಿಸುವೆಯೋ ಮಾರಾಯಾ? ನಾನೇ ನಿನ್ನ ಪಾತ್ರಕ್ಕೆ ಹೊಂದುವುದಾಗಿ ಎರಂಗಿ ಶಿವಣ್ಣನ್ವರು ಹೇಳಿದ ಕ್ಶಣದಿಮ್ದ ಥೇಟ್ ನಿನ್ನಂತೆ ವರ್ತಿಸುವ ಬಯಕೆ ಹುಟ್ಟುತ್ತಿರುವುದಲ್ಲಾ! ಈ ಕೂಡಲೆ ಕೊತ್ತಲಿಗಿಗೆಗೆ ಹೋಗಿ ರಾಖ್ +ಏಶ ಕುಮಾರನನ್ನು ಕಂಡು ಅನಸೂಯಳಮ್ಮನ ಮನೆಯಲ್ಲಿ ಸಾಕ್ಷಾತ್ಕರಿಸಿದ ಕಾಂಚನಾ ಎಂಬ ದಿವ್ಯಮೂರ್ತಿಯ ವಾರಸುದಾರನಾಗಿ ಬಿಡುವ ಉತ್ಕಟೇಚ್ಛೆ ಮುನ್ನುಗ್ಗಿ ಬರುತ್ತಿರುವುದಲ್ಲಾ! ಭೌತಿಕ, ಆದಿಭೌತಿಕ ಜಗತ್ತನ್ನು ವಿಶ್ಲೇಷಿಸುತ್ತಲೇ ನಿನ್ನಂತೆ ನಾನು ನನ್ನದೇ ಆದ ನಿರ್ಮಾಣವಾದ, ಯಾವ ಸ್ಮೃತಿ ಸಂಹಿತೆ ಲೆಕ್ಕಾಚಾರಗಳಿಗೂ ನಿಲುಕದ ಜಗತ್ತನ್ನು ಸೃಷಿಸಿಕೊಂಡು ಅದರಲ್ಲಿ ನಾನೇ ನಾನಾಗಿ ವಾಸಿಸುವ ಬಯಕೆ ಹುಟ್ಟುತ್ತಿರುವುದಲ್ಲಾ! ಶಾಮಣ್ಣ ನಿನ್ನನ್ನು ನಾನು ದೂರ ಇಡುವುದಕ್ಕಾಗಲೀ ಹತ್ತಿರವಿಟ್ಟುಕೊಳ್ಳುವುದಕ್ಕಾಗಲೀ; ಒಳಗೆ ಈಟ್ಟುಕೊಳ್ಳುವುದಕ್ಕಾಗಳೀ, ಹೊರಗೆ ಇಟ್ಟುಕೊಳ್ಳುವದಕ್ಕಾಗಲೀ ಆಗ್ತಾ ಇಲ್ಲ… ಏನು ಮಾ‌ಆಡಲಿ ಗೆಳೆಯಾ! ನನಗೆ ನಿನ್ನಂತೆ ಪಾತ್ರ ವಹಿಸಿ ಯಶಸ್ವಿಯಾಗುದು ಸಾಧ್ಯವೇ? +ಹೆಂಡತಿ ಅನ್ನಪೂರ್ಣ ಮೆಲ್ಲಗೆ ಟೇಬಲ್ ಕಡೆ ನೋಡುತ್ತಿರುವಂತೆ, ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡಂತೆ; ಮೆಲ್ಲಗೆ ಹಿತ್ತಿಲು ಪ್ರವೇಶಿಸಿದಂತೆ, ಅದರ ಮೇಲೆ ಎಣ್ಣೆಸುರಿಯಲು ಚಿಮಣಿ ಬುದ್ದಿಯನ್ನು ಕೈಲಿ ಹಿಡಿದುಕೊಂದಮ್ತ್ರ್… +ಅಯ್ಯೋ ಕನಸಲ್ಲ! ಇದು ಘೋರ ವಾಸ್ತವ! ಕೋಣೆಯ ಮೂಲೆಯಲ್ಲಿ ಅರೆಮಂಪರಿನಲ್ಲಿದ್ದು ಮಗ್ಗುಲು ಬದಲಾಯಿಸುತ್ತ ಮಲಗಿದ್ದವನು ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಎದ್ದು ಒಂದೇ ಏಟಿಗೆ ಓಡಿ ಹಿತ್ತಿಲು ತಲುಪಿ ಆಕೆಯ ಕೈಲಿದ್ದ ಚಿಮಣಿ ಬುಡ್ಡಿಯನ್ನು ಕಸಿದು ಕಣಗಿಲೆ ಗಿಡದ ಬುಡಕ್ಕೆ ಎಸೆದು (ಈಹಿಂದೆ ಬಾಡಿಗೆ ಇದ್ದ ಮಂದಲಾಫೀಸಿನ ಪ್ರ.ದು.ಗು. ಕುರಕುಂದಿ ಕರಿಯಪ್ಪನ… ಮಠಸ್ತರ ಮನೆಯಲ್ಲಿ ನೀಚ ಜಾತಿಯವರು ವಾಸಿಸಬಾರದು. ಅದರಿಂದ ಒಳ್ಳೆಯದಾಗುವುದಿಲ್ಲ… ಆಗಬಾರದ್ದು ಆಗುತ್ತದೆ‌ಅನುಭವಿಸು – ಹೆಂಡತಿ ಪ್ರಮಿಳೆಯು ಹೆತ್ತಿದ್ದಂಥ ಎರಡು ದಿನದ ವಯಸ್ಸಿನ ಕಂದಮ್ಮನು ಅಪಸ್ಮಾರ ರೋಗಕ್ಕೆ ತುತ್ತಾಗಲು … ಅದನ್ನು ಆ ಮಧ್ಯೆ ರಾತ್ರಿಯಲ್ಲಿ ಸುಡುಗಾಡಿಗೆ ಒಯ್ದು ಮಣ್ಣುಮಾಡುವುದಾಗಲೀ… ಬೆಳಗಾಗುವವರೆಗೆ ಆ ಪುಟ್ಟ ಕ‌ಏಬರವನ್ನು ಮುಂದಿಟ್ಟುಕೊಂಡು ಕಾಯುತ್ತ ಕೂಡ್ರುವುದಾಗಲೀ ಯ್ಯಕೆ ಅಂತ ಹಿತ್ತಲ ಆ ಕಡೆ ಅದನ್ನು ನೆಲದಲ್ಲಿ ಹೂತು ಅದರ ಮೇಲೆ ಕಣಗಿಲೆ ಅಂಟನ್ನು ಹಚ್ಚಿಬಿಟ್ಟಿದ್ದರು.ಅದು ದಿನಕ್ಕೊಂದು ಕವಲು ಕಿತ್ತು ಇದೀ ಹಿತ್ತಲಿಗೆ ಕೊಡೆ ಬಿಚ್ಚಿದಂತೆ ಸೊಗಸಾಗಿ ಬೆಳೆದು ಹರಡಿತ್ತು. ಇಂಥದೊಂದು ಅನುಮಾನ ಎಂಥವರಿಗೂ ಕಾಡುತ್ತಿದ್ದುದರಿಂದ ಆ ಗಿಡದಿಂದ ಕಣಗಿಲೆ ಹೂವನ್ನು ಯಾರೂ ಕೀಳುತ್ತಿರಲಿಲ್ಲ. ಹೀಗಾಗಿ ಬಿದ್ದ ಹೂವುಗಳೇ ಆ ಗಿಡಕ್ಕೆ ಅಪರೂಪದ ಗೊಬ್ಬರವಾಗಿದ್ದವು) ಬಿಸಿಲಿಗೆಸೆದ ಹಸು ಮಗುವು ಯಾವ ಪ್ರಕಾರವಾಗಿ ಅರಣ್ಯ ರೋದನ ಮಾಡುವುದೋ ಹಾಗೆ ಪಟಪಟ ಸದ್ದು ಮಾಡುತ್ತ ಹಿಂಗೈ ಮುಂಗೈ ಬಯಲಿಗೆ ಚಾಚುತ್ತಿದ್ದ ಹಸ್ತಪ್ರತಿಯ ಹಾಳೆಗಳ ಮೇಲೆರಗಿಗಕ್ಕನೆ ಎದೆಗವುಚಿಕೊಂಡೆನು. +ಅನ್ನಪೂರ್ಣ ಅದನ್ನು ನನ್ನಿಂದ ಕಸಿದುಕೊಳ್ಳುವ ಬೆಂಕಿಗಾಹುತಿಮಾಡುವ ಪ್ರಯತ್ನ ಮಾಡಿದಳು. ಸಂಸಾರ ಸಾಗರದಲ್ಲಿ ಅಪರುಪಕ್ಕೆ ನದಿಮುಖಜ ಭೂಮಿ ಸೀಳಿನ ಪ್ರವಾಹದ್ ವಿರುದ್ಧ ಈಜುವ ಪ್ರಯತ್ನ ಮಾಡಿ “ಹೀ‌ಎ ಮಾಡಿದೀ ಅಂದ್ರೆ ತೊಟ್ಟಿಲಲ್ಲಿ ಮುಗುಳ್ನಗುತ್ತಿರುವ ಮೂರನೇ ಮಗನ ಮೇಲಾ‌ಎ” ಎಂದೇ ಅಥವಾ ಹಂಗನ್ನಿಸಿತು ನಿಘೂಡ ಶಕ್ತಿ ನನ್ನಿಂದ. +ಅದನ್ನು ಕೇಳಿ ದಡಬಡನೆ ಪಡಸಾಲೆ ಕಡೆಗೋಡಿ ತೊಟ್ಟಿಲಲ್ಲಿ ಕಮ್ಮಗೆ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಮಗ್ವನ್ನು ಎತ್ತಿಕೊಳ್ಳಲು ಆತ ಕಿಟಾರನೆ ಕಿರುಚಿ ತಾಯಿಯ ಇಂಟರ್ಫಿಯರೆನ್ಸನ್ನು ಪ್ರತಿಭಟಿಸಿದನು. ಆತ ಎಷ್ಟಿದ್ದರೂ ಅವರ ಮನೆ ದೇವರಾದ ನಿರ್ವಾಣಗಿರಿಯಲ್ಲಿ ಪರಮ ನಿರ್ವಾಣ ಹೊಂದಿದಂಥ ಗುರುಸಾರ್ವಭೌಮ ನಿರ್ವಾಣೆಶ್ವರರ ಆಶೀರ್ವಾದದ ಬಲದಿಂದ ಹುಟ್ಟಿರುವಂಥವನು. ಹೆಸರಿಡುವ ಪೈಕಿ ಆಕೆಗೂ ನನಗೂ ತಿಂಗಳ ಪರ್ಯಂತ ಜಗಳ ನಡೆದು ಆತನನ್ನು ನಾನು ಪ್ರವರ ಎಂತಲೂ. ಆಕೆ ನಿರ್ವಾಣಸ್ವಾಮಿ ಎಂತಲೂ ಕರೆಯುವ ಕುರಿತು ಚರಿತ್ರಾತ್ಮಕ ಒಪ್ಪಂದವಾಗಿರುವುದು. +“ನಮ್ಮ ನಿರ್ವಾಣಸ್ವಾಮಿ ಮೇಲೆ ಆಣೆ ಇಟ್ಟ್ರ ಸರಿಹೋಯ್ತು… ಇಲ್ಲಾಂದ್ರೆ ಶಾಮಣ್ಣನ ಕಥೀನ ಎಂದೋ ಸುಟ್ಟು ಬೂದಿ ಮಾಡಿಬಿಡ್ತಿದ್ದೆ” ಎಂದು ಸಮಾಧಾನಕರವಾದ ಹಂತಕ್ಕೆ ಬಂದಳು. +“ಇಡ್ದೆ ಏನು ಮಾಡ್ಲಿ ಕಣೇ… ಹೊಟ್ಟೇಲಿ ಹುಟ್ಟಿದ ಮಗನ ಮೇಲೆ ಆಣೆ ಮಾಡೋದು ನನಗೆ ಅನಿವಾರ್ಯವಾಯ್ತು. ನಿನ್ಗೆ ನಿನ್ ಮಗ ಹೇಗೋ ಹಾಗೇನೇ ಇದು ನನಗು ಹೆರೋದ್ಕೆ ನೀನು ಕೇವಲ ಇನ್ನೂರಾ‌ಎಂಬತ್ತೈದಿನ ತಗೊಂಡಿರಬೌದು. ಆದ್ರೆ ಈ ಕಾದಂಬರಿಯ ಭ್ರೂಣ ನನ್ನ ತಳೆಲಿ ಬೆಳೆಯಲಿಕ್ಕೆ ಹತ್ತಿ ಐದು ವರ್ಷದ ಮೇಲಾಯ್ತು…” ಎಂದು ಸಮಾಧಾನ ಚಿತ್ತದಿಂದ ಹೇಳಿದೆ. +“ಅಲ್ರಿ ಬರ್‍ಕೊಳ್ಳಿ… ನಿಮ್ಮ್ ಕೈ ನಿಮ್ ಮಾತು… ನನ್ ಗಂಟೇನು ಹೋಗೋದೈತಿ ಇದ್ರಲ್ಲಿ/\… ಅಲ್ಲಾ… ಸತ್ತಮೇಲೆ ಇಷ್ಟೊಂದು ನಿಮ್ ತಲೆಕೆಡೆಸಿರೋ ಶಾಮಣ್ಣ … ಬದುಕಿದ್ದಾಗ ನಿಮಗಾವ ಮೋಡಿ ಮಾಡಿರಬೌದಂತೀನಿ!” +“ಯಾಕ ಹಂಗಂತೀ?” +“ಮತ್ತಿನ್ನೇನು? ನಿಮ್ಗೆ ಬಣ್ಣ ಹಚ್ಚಿಸ್ಲಿಕ್ಕೆ ಹೋಟಾನಲ್ಲ… ನಾಟಕ ಮಾಡೋದಿದ್ರೆ ಮಾಡ್ರಿ ಅದ್ಕ್ +ಏನು ಬರ ಬಂದೈತಿ ನಿಮ್ ಕಣ್ಣ್ಡದಾಗ… ಲಂಕೇಶರ್ದು ಸಂಕ್ರಾಂತಿ ಮಾಡ್ರಿ, ಜೊಷಿಯವರ್ದು ಸತ್ತೋರ ನೆರಳು ಮಾಡ್ರಿ… ಇದ್ಕೆ ನಾನೇನು ಬೆಡಂತೀನೇನು! ಆದ್ರೆ ಹೋಗೀ, ಹೋಗಿ ಶಾಮಣ್ಣನ ಬಗ್ಗೆ ನಾಟಕ ಬರೆಯೊದಲ್ದೆ ಶಾಮಣ್ಣನ ಪಾರ್ಟು ಮಾಡಬೇಕಂತಿದೀರಲ್ಲ… ಆ ಬಣ್ಣದ ಮಂದಿಗೆ ಬಣ್ಣ ಒಂದು ಬಿಟ್ರೆ ಬೇರೆ ಪ್ರಪಂಚ ಗೊತ್ತಿದ್ದಂಗಿಲ್ಲ ಬಿಡ್ರಿ… +“ಯಾಕ ಹಂಗಂತೀ?” +“ಮತ್ತಿನ್ನೇನು? ಆ ಬಣ್ಣ ನಂಬ್ಕೊಂಡು ಬದುಕೋ ಶಿವಣ್ಣ ನಿಮ್ಗೆ ನಾಟಕ ಬರೀರಿ ಅಂತ ಹೇಳಿದ್ದೂ ಅಲ್ದೆ… ಆ ಕುಡುಕ, ಲಂಪಟ, ವ್ಯಭಿಚಾರಿ, ಜೂಜುಕೋರ ಶಾಮಣ್ಣನ ಪಾರ್ಟು ನಿಮ್ ಕೈಲಿ ಮಾಡೊಸ್ಲಿಕ್ಕೆ ಪುಸಲಾಯಿಸಿದ್ನಲ್ಲ. ಇದನ್ ಕೇಳಿ ನನ್ ಒಡಲು ಕುಯ್ದು ಹೋತು ನೋಡ್ರಿ… ಇಂಥೋರ್ನ ಮನೆಗೆ ಕರ್ಕೊಂಡು ಬಂದು ಬ್ ಗರಿಗೆ ಮಾಡಿದಂಗೆ ಸತ್ಕಾರ ಮಾಡ್ತೀರಲ್ಲ… ನಿಮ್ಗೆ ಬುದ್ಧಿ ಇಲ್ಲ ಅಷ್ಟೆ.” +“ಆಯ್ತು ಮಾರಾಯ್ತಿ ಆಯ್ತು.” +“ಈಕಾದಂಬರೀನ ನೀವು ಬರೆಯ್ಯೋಕೆ ಶುರು ಮಾಡಿದ್ಮೇಲೆ ಹುಲಿಯಂತಿದ್ದ ನೀವು ಇಲಿಯಂಗಾಗಿ ಬಿಟ್ಟಿದ್ದೀರಿ… ಇನ್ನೊಂದು ಸಾರಿ ಇಂಥೋರ್ ಬಗ್ಗೆ ಬರ್‍ದು ಹೆಸ್ರು ಕೆಡಿಸ್ಕೋಬೇಡಿ. ಈಗ ಅನುಭೋಗಿಸ್ತಿರೋದೇ ಸಾಕು. ಗಡಗಡ ಬರ್‍ದು ಮುಗಿಸಿ ಎಣ್ಣೆ ಸ್ನಾನ ಮಾಡಿಬಿಡ್ರಿ ಅಷ್ಟೆ” ಎಂದು ಕ್ರಮೇಣ ತಣ್ಣಗಾಗಿ ತಣ್ಣನೆ ನದಿಯಂತೆ ಹರಿಯತೊಡಗಿದಳು. +“ಯಾಕಾಗಬಾರದು ಕಾಂತೆ” ಎಂದು ನಾಟಕೀಯವಾಗಿ ನುಡಿಯಲು ಆಕೆಯ ಸಂತೋಶದ ಕಟ್ಟೊಡೆದು ಗೊಳ್ಳನೆ ನಗುತ್ತ “ಇಂಥಾದ್ರಲ್ಲಿ ಏನೂ ಕಡಿಮೆ ಇಲ್ಲ ನೀವು” ಎಂದು ನನ್ನ ಮೂಗು ಹಿಡಿದು ಜಗ್ಗಿದಳು… +ಅಂತೂ ದೊಡ್ಡದೊಂದು ಪ್ರಮಾದ ದೂರವಾಯಿತೆಂದು ನೆಮ್ಮಡಿಯ ಉಸಿರುಬಿಟ್ಟೆ +* +* +* +ಕಾದಂಬರಿಯ ಹಸ್ತ ಪ್ರತಿಯನ್ನು ಎದುರಿಗೆ ಬಿಚ್ಚಿಕೊಂದು ಕೂತೆ. ಮುಂಚೂಣಿಗೆ ಬಂದಿದ್ದವು. ಮುಂಚೂನಿಯಲ್ಲಿದ್ದ ಪಾತ್ರಗಳು ನೇಪಥ್ಯಕ್ಕೆ ಸರಿಯುವಪ್ರಯತ್ನ ಮಾ‌ಅತೊಡಗಿದವು. ಶಾಸ್ತ್ರಿಗಳ ವೇದ ಜ್ಞಾನ ವ್ಯಾಮೋಹದಿಂದಾಗಿ ರಾಖೇಶ ಎಂಬ ಪಾತ್ರವು ಪರಮಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಸ್ಥಾನವನ್ನು ಆಕ್ರಮಿಸುವ ಹುನ್ನಾರು ನಡೆಸಿದ್ದರೆ ಅನಂತಪುರದಲ್ಲಿ ಇಂಗ್ಲೀಷು ವಿದ್ಯೆ ವ್ಯಾಸಂಗ ಮಾಡುತ್ತಿರುವ ಅಶ್ವಥ್ ನಾರಾಯಣ, ಶಿವರಾಮಶಾಸ್ತ್ರಿ ಎಂಬ ಮಕ್ಕಳ ಮೇಲಿನ ವ್ಯಾಮೋಹದಿಂದಾಗಿ ಕೊತ್ತಲಗಿಯ ಅನಸೂಯಮ್ಮ ಎಂಬ ಪಾತ್ರವು ವರಲಕ್ಷ್ಮಿ ಎಂಬ ಪಾತ್ರವನ್ನು ಆಕ್ರಮಿಸುವ ಸಂಚು ನಡೆಸಿತ್ತು. ಅಮೇಧ್ಯ ಸೇವಿಸಿ ಗಟ್ಟಿಮುಟ್ಟಾಗಿರುವ ಇವರ ಮುಂದೆ ಸಾತ್ವಿಕ ಆಹಾರಭ್ಯಾಸಿಗಳಾದ ಅವರು ತಮಗೇಕೀ ಹೋರಾಟದ ಉಸಾಬರಿ ಎಂದು ದಾರಿಬಿಡತೊಡಗಿದ್ದವು. ಗುಲಾಂ ನಬಿ ಎಂಬುದು ಮುಖ್ಯಮಂತ್ರಿ ಜಾಗದ ಕಡೆ ನಡೆಯತೊಡಗಿದ್ದರೆ, ಆರ್ ಎ ಬ್ರಾಂಡ್ ತಯಾರಿಕಾ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀಮತಿ ಅನಸೂಯಾ ರಘುರಾಂ ಎಂಬ ಪಾತ್ರವು ಯುನೈಟೆಡ್ ಕಿಂಗ್‌ಡಂನ ಪ್ರಸಿದ್ಧ ಇನ್‌ಸ್ತಾಂಟ್‌ಫುಡ್ ಕಂಪನಿಯ ಜೊಟೆ (ಅದರ ಮಾಲೀಕರಾದ ಲಕ್ಕೂಭಾಯಿ ಪಾಠಕ್‌ರವರು ಕಳೆದ ವರ್ಷವಷ್ಟೇ ನಿಧನಹೊಂದಿದರು) ಪೈಪೋಟಿ ಆರಂಭಿಸಿತ್ತು. +ರಘುರಾಂ ಎಂಬ ಪಾತ್ರವು ‘ಇನ್‌ಸ್ತಾಂಟ್‌ಫುಡ್’ನಿರ್ಮಾಣದಲ್ಲಿ ಏಶ್ಯಾ ಖಂಡದ ಗಿಡ ಮೂಲಿಕೆಗಳ ಪಾತ್ರ ಎಂಬ ವಿಷಯದ ಬಗ್ಗೆ ಭಾಷಣ ಮಾಡಲು ಕಳೆದ ವಾವಷ್ಟೆ ಇಂಗ್ಲೆಂಡಿನ “ರಾಯಲ್ ಸೊಸೈಟಿ ಆಫ್ ಇನ್‌ಸ್ಟಾಂಟ್ ಫುಡ್ಸ್” ಎಂಬ ಸಂಸ್ಥೆಗೆ ಹೋಗಿದ್ದು ಅಲ್ಲಿ ಶಾಮಣ್ಣನ ಪ್ರೇತಾತ್ಮವನ್ನು ಹುಡುಕುವಸನ್ನಹ ನಡೆಸಿತ್ತು. ಅದಲ್ಲದೆ ನೂರಾರು ವರ್ಷಗಳಷ್ಟು ಹಿಂದೆಯೇ ಈಸ್ಟ್ ಇಂಡಿಯಾ ಕಂಪೆನಿಯು ವಶಪಡಿಸಿಕೊಂಡಿರುವುದೆನ್ನಲಾದ ಚರಾಸ್ತಿಯನ್ನು ವಶಪಡಿಸಿಕೊಳ್ಳಲು ರಾಯಲ್ ಕೋರ್ಟ್‌ನಲ್ಲಿ ದಾವೆ ಹೂಡಿ ವರ್ಷ ಆರು ತಿಂಗಳುಗಳನ್ನು ಜಲ ಪ್ರಯಾಣದಲ್ಲೇ ಕಳೆದು ಹಲವು ವರ್ಷಗಳ ನಂತರ ತನ್ನ ವಿರುದ್ಧ ತೀರ್ಪು ಬರಲಾಗಿ ಎದೆಯೊಡೆದು ಸತ್ತ ಕೊಡಗಿನ ಪದಚ್ಯುತ ಮಹಾರಾಜನಾದ ಚಿಕ್ಕವೀರರಾಜೇಂದ್ರನು ತಮ್ಮ ತಯಾರಿಕಾ ಸಂಸ್ಥೆಯ ಆಹಾರ ಸೇವಿಸಿದ್ದರೆ ದೀರ್ಘಕಾಲ ಬದುಕುತ್ತಿದ್ದ ಎಂಬ ವಿಷಯವನ್ನು ರಘುರಾಂ ತನ್ನ ಭಾಷಣದಲ್ಲಿ ಸೇರಿಸಿಕೊಂಡಿದ್ದುದು ತಿಳಿದದ್ದು ಇತ್ತೀಚೆಗೆ. ಅವನು ಶಾಮಣ್ಣನಿಗೂ, ಚಿಕ್ಕವೀರರಾಜೇಂದ್ರನಿಗೂ ಪರಸ್ಪರ ಸಂಬಂಧ ಕಲ್ಪಿಸಿದ್ದಲ್ಲಿ ವ್ಯಾಪಕವಾಗಿ ಚರ್ಚಿಸಬಹುದಿತ್ತು. (ನಿಘೂಡ ವ್ಯಕ್ತಿಯಾಗಿ ಬಂದು ಕೌಟುಂಬಿಕ ತಳಮಳಕ್ಕೆ ಕಾರಣನಾದ ಶಾಮಾಶಾಸ್ತ್ರಿಯನ್ನು ರಘುರಾಮ ಎಂಬ ಸ್ವಾತಂತ್ಯೋತ್ತರೋತ್ತರ ಬಂಡವಾಳ ಶಾಹಿಯು ಚಿಕ್ಕವೀರರಾಜೇಂದ್ರನಿಗೆ ಹೋಲಿಸುವ ಕೆಲಸ ಮಾಡಲಾರ). ಅದರ ಜೊತೆಗೆ ತನ್ನ ಪತ್ನಿಯಾದ ಅನಸೂಯಾರವರನ್ನು ರಾಜ್ಯಸಭೆಗೆ ನಾಮಕರಣ ಸದಸ್ಯೆಯನ್ನಾಗಿ ಮಾಡಿಸುವ ಉದ್ದೇಶವೂ ಅವನ ಇಂಗ್ಲೆಂಡಿನ ಪ್ರಿನ್ಸ್ ಚಾರ್ಲಸ್ ಕಡೆಯಿಂದ ಭಾರತದ ಪ್ರಧಾನಿಗಳಿಗೆ ಫೋನ್ ಮಾಡಿಸುವ ಉದ್ದೇಶವೂ ವನ ಇಂಗ್ಲೆಂಡು ಪ್ರವಾಸದ ವಿವಿಧೋದ್ದೇಶಗಳಲ್ಲಿ ಒಂದು ಮತ್ತು ಪ್ರಮುಖವಾದುದು. ತಂತಮ್ಮ ಪಾರ್ಟಿಗಳಿಗೆ ಅವನಿಂದ ಸಾಕಷ್ಟು ಹಣ ಪಡೆದಿರುವ ರಾಜ್ಯದ ಮತ್ತು ರಾಷ್ಟ್ರದ ಪ್ರಮುಖ ರಾಜಕಾರಣಿಗಳೂ; ಕನ್ನಡ ಮತ್ತು ಸಂಸ್ಕೃತಿ ಶಾಖೆಯೊಂದಿಗೆ ಮಹಿಳಾ ಮಕ್ಕಳ ಶಾಖೆಯನ್ನುಸ್ವತಮ್ತ್ರವಾಗಿ ನಿರ್ವಹಿಸುತ್ತಿರುವ ಶ್ರೀಮತಿ ಜಲಜಾಕ್ಷಿ ಮಸಾಲೆಯವರೂ (ಕಳೆದ ವರ್ಷವಷ್ಟೇ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಷನ್‌ರವರು ಇವರನ್ನು ಮಧ್ಯಪ್ರದೇಶದ ಛೋಟಾ ನಾಗಪುರಕ್ಕೆ ಬರಮಾಡಿಕೊಂಡು ಲೇಡಿ ತೈಗರ್ ಎಂಬ ಬಿರುದು ಕೊಟ್ಟಿರುವರು. ಅಲ್ಲದೆ ಮುಖ್ಯಮಂತ್ರಿಯವರೂ ಸಚಿವ ಸಮ್ಪುಟ ಸಭೆಯಲ್ಲಿ ಇವರನ್ನು ಕರ್ನಾಟಕದ ಜೋನ್ ಆಫ್ ಆರ್ಕ್ ಎಂದು ಕರೆದುದೂ ಉಂಟು. ಇದರಿಂದಾಗಿ ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷೆಗಳ ನಿಯತಕಾಲಿಕೆಗಳು ಆಕೆ ಕುರಿತು ಯಥೇಚ್ಛವಾಗಿ ಬಳಸುತ್ತಿರುವುವು) ಪದ್ಮಶ್ರೀ ಪ್ರಶಸ್ತಿ ವಿಜೇತರೂ, ಪತ್ರಿಕಾ ಅಕಾಡೆಮಿಯ ವಿಶೇಷ ಗೌರವ ಸದಸ್ಯರೂ ಆದಂಥ ಡಾ. ಕಮಲಾಕರ್‌ರವರೂ ಶ್ರೀಮತಿ ಅನಸೂಯಾ ರಘುರಾಮ್ ರವರನ್ನು ರಾಜ್ಯಸಭೆಗೆ ಕಳಿಸಲು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವರು. +ಈ ಸುದ್ದಿ ಏನಾದರೂ ಸತಿರೋ ಶಾಮಣ್ಣನಿಗೆ ಗೊತ್ತಾದಲ್ಲಿ ಅವನು ಮತ್ತಷ್ಟು ಸಾಯುವನೆಂಬುದರಲ್ಲಿ ಸಂಶಯವಿಲ್ಲ ಎಂದೆನಿಸಿತು. ಸ್ವರ ಬಗ್ಗೆ ಬರೆಯೋದಾದರೆ ಖಂಡಿತ ನನ್ನ ಬಗ್ಗೆ ಬರೆಯಲೇಬೇಡವೆಂದು ಅವನು ಕಡ್ಡಿ ಮುರಿದಂತೆ ಹೇಳಿಬಿಡುವಷ್ಟು ನಿಷ್ಠುರವಾದಿಯು. ಆಗಲೇ ಒಂದು ವ್ಯವಸ್ಥೆಯಲ್ಲಿದ್ದು ಪಳಗಿದ್ದ ಅವನು ಇನ್ನೊಂದು ವ್ಯವಸ್ಠೆಯನ್ನು ಪ್ರವೇಶಿಸುವುದು ಆಗ ಕಷ್ಟದ ಕೆಲಸವಾಗಿರಲಿಲ್ಲ‌ಎಂಬುದು ಅಷ್ಟೇ ಸತ್ಯ.ತುಟಿ ಮೀರಿ ಕೈಮೀರಿ ಬರೆದುಕೊಟ್ಟಲ್ಲಿ ಅವನು ಹೇಳದೆ ಕೇಳದೆ ಕಾದಂಬರಿಯಿಮ್ದ ಯಾವ ಕ್ಷಣದಲ್ಲಾದರೂ ನಿರ್ಗಮಿಸಿಬಿಡಬಹುದು. ಅವನು ಆಗಮಿಸುವುದಾಗಲೀ, ನಿರ್ಗಮಿಸುವುದಾಗಲೀ, ಅವನಿಗೆ ಚಿಟಿಕೆ ಹೊಡೆವಷ್ಟು ಸುಲಭ. ಭೋರ್ಗರೆಯುತ್ತ ಹರಿವ ನದಿಯೊಂದು ಮಾರ್ಗಮಧ್ಯದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ ತನ್ನ ಪಾಡೊಗೆ ತಾನು ನಡೆದಿರುವ ಭಗೀರಥನಂಥ ಪಥಿಕನ ಮನಸ್ಸಿಗೆ ಹೇಗಾಗಬೇಡ! ಅದೇ ಪರಿಸ್ಥಿತಿ ನನಗೂ ನನ್ನ ಕಾದಂಬರಿಗೂ ಒದಗದೆ ಇರದು. ಪ್ರೇತಲೋಕದ ಸಂಚಾರೀ ಭಾವವಾಗಿದ್ದ ಅವನು ಕಾದಮ್ಬರಿಯ ಹಸ್ತಪ್ರತಿಯನ್ನೇ ವಿದುರಾಶ್ವತ್ಥವೆಂದು ಭಾವಿಸಿ ಹಲವು ದಿನಗಳಿಂದ ಠಿಕಾಣಿ ಹೂಡಿರುವನು. ಲೇಖಕನ ಬಗೆಗಿನ ನಂಬಿಕೆ ಅಪನಂಬಿಕೆಗಳ ನಡುವೆ ಹೊಯ್ದಾಡುತ್ತಿರುವನು. ತಾನೊಂದು ಕೇಂದ್ರ ಪಾತ್ರವಾಗಿ ಕಾದಂಬಯೊಳಗೆ ಬೆಳೆಯುತ್ತಿರುವ ಪರಿ ಕುರಿತು ಕುತೋಹಲ ತಾಳಿರುವನು. ತನ್ನ ತಾತನವರಾದ ಪರಮೇಶ್ವರ ಶಾಸ್ತ್ರಿಗಳ ಉಯಿಲಿನ ವಾಸನೆ ಎನಾದರೂ ಅವನ ಮೂಗಿಗೆಟಕಿದರೆ ಅದನ್ನು ಅವನು ಹೇಗೆ ಪರಿಭಾವಿಸುವನೆಂಬುದೇ ನಿಗೂಢ! ಕುಂದಿದ ಜೀರ್ಣಶಕ್ತಿಯನ್ನು ಉತ್ತಮಪಡಿಸಿಕೊಳ್ಳಲಿಕ್ಕಾಗಿ, ಅಶ್ವಿನಿ ದೇವತೆಗಳ ಸಲಹೆಯಂತೆ ಅಗ್ನಿದೇವನು ಇಂದ್ರನ ಪ್ರಸಿದ್ಧ ಉದ್ಯಾನಗಳಲ್ಲಿ ಒಂದಾದದ್ದೂ; ಸರಸ್ವತೀ ಮತ್ತು ವೃಷದ್ವತೀ ನದಿಗಳಿಗೆ ಪೂರ್ವದಲ್ಲಿರುವಂಥಾದ್ದು ಉತ್ತಮ ಗಿಡಮೂಲಿಕೆಗಳಿಗೆ ಹೆಸರಾದಂಥದ್ದೂ ಆದಂಥ ಖಾಣ್ಡವ ವನವನ್ನು ದಹಿಸಿದೋಪಾದಿಯಲ್ಲಿ ಶಾಮನೂ ಒಂದು ದಿನ ಕುಡಿದ ಅಮಲಿನಲ್ಲಿ ತನ್ನ ತಾತನವರು ಸಂಗ್ರಹಿಸಿಟ್ಟಿದ್ದ ಅಮೂಲ್ಯ ತಾಲೆಗರಿ ಕಟ್ಟುಗಳನ್ನು ಒಂದೊಂದಾಗಿ ಬೆ +ಕಿಗೆ ಎಸೆಯತೊಡಗಿದ್ದು ಕಂಡು ಇಡೀ ಊರಿಗೆ ಊರೇ ಹ್ಹೋ ಹ್ಹೋ ಹ್ಹಾ ಹ್ಹಾ ಎಂದು ಉದ್ಗರಿಸಿತು. ಅಲುಮೇಲಮ್ಮೆಂಬಜ್ಜಿಯೂ; ವರಲಕ್ಷ್ಮಿ ಎಂಬ ಸಾಧ್ವಿಯೂ ತಡೆಯಲು ಹೋಗಿ ಆಚೆ ಕಡಿಕೊಬ್ಬರೂ, ಈಚೆಕಡಿಕೊಬ್ಬರೂ ಬಿದ್ದರು. ಸೀಳಿಬಿಸುಟರೂ ಮತ್ತೆದ್ದು ಬಂದ ಜರಾಸಂಧನ ದೇಹದ ಹೋಳುಗಳಂತೆ ಮತ್ತೆ ತಡೆಯುವ ಪ್ರಯತ್ನ ಮಾಡಿದರು; “ನಾನು ಪರಮನಾಸ್ತಿಕ ಕಣ್ರೀ… ಆ ಮುದುಕನ ಚಿತೇಲಿ ಇವ್ನೆಲ್ಲ ಹಾಕಿಬಿಟ್ಟಿದ್ರೆ ಚೆನ್ನಾಗಿರ್‍ತಿತ್ತು… ಇವ್ನ ಮುಂದಿಟ್ಕೊಂಡು ನನ್ನ ಆಟ ಆಡಿಸ್ಲಿಕ್ಕೆ ನೋಡ್ತಿದ್ದೀರಾ… ಆ ಮುದುಕನ ಪ್ರೇತಾನೂ ನಿಮ್ ಜೊತೆ ಶಾಮೀಲಾಗಿದೆ… ನೋಡ್ರಿ… ಕಣ್ತುಂಬ ನೋಡ್ರಿ…” ಎಂದು ಕೂಗಿ ಹೇಳಿದಾಗ ಇಡೀ ಓಣಿಗೆ ಒಣಿಯ್ರ್ ಹ್ಹೋ…ಹ್ಹೋ… ಹ್ಹಾ…ಹ್ಹಾ… ಎಂದಿತು. +“ಅವನ ಹೊಟ್ಟೇಲಿರೋದು ಹಾಗಾಡಿಸ್ತಿದೆ ಕಣ್ರತ್ತೇ… ಆ ಭೋಸೂಡಿ ಕುಡಿಸಿ… ಅಮೇಧ್ಯ ತಿನ್ನಿಸಿ ಬ್ರಾಹ್ಮಣ್ಯಾನ ಸುಟ್ಟು ಬೂದಿ ಮಾಡಿ ಬಾ ಅಂತ ಕಳಿಸಿರ್‍ತಾಳೆ” ಎಂದು ಖುದ್ದ ಸೊಸೆ ಕೈಹಿಡಿದು ಜಗ್ಗಿದರೂ ಕೊಸರಿಕೊಂಡು ಅಲುಮೇಲಮ್ಮನವರು ಧಗಧಗ ಉರಿಯುತ್ತಿದ್ದ ಬೆಂಕಿಯಲ್ಲಿ ಕೈ ಹಾಕಿದರು. ಬುದ್ಧಿ ಹೇಳಲು ಬಂದ ಅಗಸರ ಯಮುನಪ್ಪನೊಂದಿಗೆ ವಾಗ್ವಾದಕ್ಕಿಳಿದಿದ್ದ ಶಾಮ ತಾಯಿ ಕಡೆ ಗಮನ ಹರಿಸಿರಲಿಲ್ಲ. ತನ್ನ ನಾಲಿಗೆ ಮೇಲೆ ಸರ್ಪದ ಹೆಡೆಯಾಕಾರದ ಕಪ್ಪು ಮಚ್ಚೆ ಇರುವುದೆಂಬ ಕಾರಣಕ್ಕೆ ಎಲ್ಲರೂ ಹೆದರುತ್ತಿದ್ದಂತೆ ಯಮುನಪ್ಪನೂ ಹೆದರಿ ಹಿಮ್ಮೆಟ್ಟತೊಡಗಿದ್ದು. ಆ ಸದುವು ನೋಡಿಕೊಂಡೇ ಅಲುಕ್ಮೇಲಮ್ಮಜ್ಜಿ ಬೆಂಕಿಯೊಳಗೆ ಸುಡಲೆಂದು ಬೆಚ್ಚಗಾಗುತ್ತಿದ್ದ ತಾಳೆಗರಿ ಕಟ್ಟನ್ನು ತೆಗೆದು ಪುದುಪುದು ಒಳಗಡೆ ಹೋಗಿ ಒಂದು ಮೂಲೆಯಲ್ಲಿ ಭದ್ರಪಡಿಸಿಬಿಟ್ಟಿತು. +ಆ ತಾಳೇಗರಿ ಕಟ್ಟೆ ಎಲ್ಲೆಲ್ಲೊ ತಿರುಗಾಡಿ ಕೊನೆಗೆ ನನ್ನಲ್ಲಿ ಆಶ್ರಯ ಪಡೆದು “ಗಂಡಸರಾದರೆ ನನ್ನ ಸರಳೀಕರಿಸಿ ಪ್ರಯೋಗಿಸುವಿ ಏನು?” ಎಂದು ಪ್ರಶ್ನೆ ಹಾಕಿತು. ನನ್ನಾಪ್ಪನಾಣೆಯಾಗಿಯೂ ನನಗೆ ಅದರಲ್ಲಿದ್ದ ಒಂದೇ ಒಂದು ಸಾಲನ್ನು ಅರಗಿಸಿಕೊಳ್ಳಲಾಗದೆ ಬೇಧಿಗಿಟ್ಟುಕೊಂಡೆನು. ಯಾವುದೇ ಚರಾಸ್ತಿಯನಾಗಲೀ ಸ್ಥಿರಾಸ್ತಿಯನ್ನಾಗಲೀ ಮಾಡಿರದಿದ್ದ ಶಾಸ್ತ್ರಿಗಳು ಯಾಕೆ ಉಯಿಲು ಬರೆದಿಟ್ಟಿರ್‍ತಾರೆ… ಕಾಶೀಲಿ ಶವಸಂಸ್ಕಾರ ಮಾಡಿಸ್ಕೊಳ್ಳಬೇಕೆಂಬ ಬಯಕೇನ ವ್ಯಕ್ತಪಡಿಸಲಿಕ್ಕಾಗಿಯೇ ಉಯಿಲು ಬರೆದಿಟ್ಟಿದ್ದಾರ್ಂದು ಅವರಿಗೆ ಆಗದವರ್‍ಯಾರೋ ಹೇಳಿದ್ದಾರೆ ಅಷ್ಟೆ… ಮರಣನಂತರದ ಅಂಥ ವ್ಯಾಮೋಹ ಅವರಿಗಿರ್‍ಲಿಲ್ಲ” ಎಂದು ವಿದ್ಯಾವರಿಧಿ ವಿಘ್ನೇಶ್ವರ ತೀರ್ಥರು ವಾದಿಸಿದ್ದರು. ಅದರಲ್ಲಿ ಏನಿದೆ ಎಂದಾದರೂ ತಿಳಿದುಕೊಳ್ಳಬೇಕಲ್ಲ? ಅದಕ್ಕೆಂದೇ ಗುಟ್ಟಾಗಿ ಕನ್ನಡವ್ನ್ನೂ; ರಾಜಾರೋಶವಾಗಿ ಸಂಸ್ಕೃತವನ್ನು ಕಲಿತುಕೊಂಡಿದ್ದ ಗೆಳೆಯ ಮಲ್ಲೇಪುರಂ ಬಳಿಗೆ ಧಾವಿಸಿದ್ದು. ಬರೆದಾದ ಮೇಲೆ ನರ್ತಕಿಗೂ ಶಾಸ್ತ್ರಿಗಳಿಗೂ ದೈಹಿಕ ಸಂಬಂಧವಿತ್ತೆಂಬ ಸಂಗತಿಯನ್ನು ಬೇಕೆಂದೇ ಮಲ್ಲೇಪುರಂ ಸೇರಿಸಿರಬಹುದೆಂಬ ಅನುಮಾನ ನನಗೆ ಕಾಡದೆ ಇರಲಿಲ್ಲ… ಅಂಥ ಕಲ್ಪನೆಯಲ್ಲೂ ಮಜವಿರುತ್ತದೆಂದು ನಾನೂ ಅದನ್ನು ತೆಗೆಯುವ ಗೋಜಿಗೆ ಹೋಗಿರಲಿಲ್ಲ… ಇಂಥದೊಂದು ಪಾಪಿಷ್ಠ ಒಪ್ಪಂದವೇನಾದರೂ ಶಾಮನ ಆತ್ಮಕ್ಕೆ ಗೊತ್ತಾದರೆ ಅವನು ಪ್ರತಿಭಟಿಸಿ ಕಾದಂಬರಿಯಿಂದ ನಿರ್ಗಮಿಸದೆ ಇರಲಾರ ಎಮ್ದುಕೊಂಡೆನು. +ಕಾವ್ಯಕಳಾ ಶಿಕ್ಷಕರೊಬ್ಬರು ಪರೀಕ್ಷಿಸೆ ಕೃತಿಯಂ ಕೃತಾರ್ಥರಲ್ಲರೆ ಕವಿಗಳ್ ಎಂಬ ನೇಮಿಚಂದ್ರನ ಮಾತು ನೆನಪಾಯಿತು. +ಶಿಶಿರವು ತನ್ನ ಉಡಿಯೊಳಗೆ ವಾಯುದೇವನನ್ನು ಬಂಧಿಸಿಟ್ಟರೂ ತನ್ನ ಉಚ್ಛಾಸ ನಿಶ್ವಾಸಗಳೇ ಚಂಡಮಾರುತಗಳಾಗಿ ಹಸ್ತಪ್ರತಿಯ ಹಾಳೆಗಳನ್ನು ಚದುರಿಸತೊಡಗಿದವು. ಪುಟದ ಸಂಖ್ಯೆಗಳು ಅರ್ಥ ವಿವರಣೆಗೆ ನಿಲುಕದ ಗೃಹ್ಯಸೂತ್ರಗಳಂತೆ ಹಿಂದುಮುಂದಾಗತೊಡಗಿದವು. ಅವುಗಳನ್ನು ಅನುಕ್ರಮವಾಗಿ ಜೋಡಿಸುವಷ್ಟರಲ್ಲಿ ಕರುಳು ಬಾಯಿಗೆ ಬಂದಿತು. ಕೌಟುಂಬಿಕ ಶಾಸ್ತ್ರದ ಬಾಂಧವ್ಯವನ್ನು ಹೊಂದಿದ ಕೆಲವಂಶಗಳು ಭಿನ್ನರಾಶಿಗಳ ಶಕುನಗಳನ್ನು ವಿವರಿಸುತ್ತಿರುವಂತೆ ಭಾಸವಾಗತೊಡಗಿತು. +ಹಸ್ತಪ್ರತಿಯೊಳಗೆ ಪ್ರಮುಖ ಪಾತ್ರವಾಗಲು ಹಾತೊರೆಯುತ್ತಿದ್ದ ಕೊತ್ತಲಿಗಿಯ ಅನಸೂಯಮ್ಮ ಪಾತ್ರವು ಪಕಪಕ ನಗಾಡುತ್ತಿರುವಂತಿದೆ ಎಂದುಕೊಂಡೆನು. ನಾನೇ ಇರದಿದ್ದಲ್ಲಿ, ಇದ್ದರೂ ಅವನ ಜೀವನದಲ್ಲಿ ನಾನು ಪ್ರವೇಶಿಸದಿದ್ದಲ್ಲಿ ನೀನೆಲ್ಲಿ ಈ ಕಥಾನಕ ಬರೆಯುತ್ತಿದೆಯೋ ಎಂದು ಪ್ರಶ್ನಿಸಿತು. +“ನೋಡಮ್ಮಾ ತಾಯಿ… ಯಾರ ಜೀವನದಲ್ಲಿ ಯಾರು ಪ್ರವೇಶ ಮಾಡ್ತಾರೋ ಬಿಡ್ತಾರೋ ಎಂಬುದಿಲ್ಲಿ ಮುಖ್ಯವಲ್ಲ” ಪ್ರವೇಶ ಮತ್ತು ನಿರ್ಗಮನ ಪ್ರತಿಯೊಂದು ಪಾತ್ರದ ಅನಿವಾರ್ಯ ಕ್ರಿಯೆಗಳು ಎಂಬುದನ್ನು ಮರೆಯಬೇಡ. ಕೆಲವೊಂದು ವಿಶಿಷ್ಟ ಸನ್ನಿವೇಶಗಳು ಪ್ರವೇಶ ಎಮ್ಬ ಎ ಸಹಕರಿಸುತ್ತವೆ. ಹಾಗೆಯೇ ನಿರ್ಗಮನವೆಂಬ ಪ್ರಾದುರ್ಭಾವಕ್ಕೂ ಕೂಡ. ಪ್ರವೇಶ ಮತ್ತು ನಿರ್ಗಮನದ ನಡುವೆ ಗಟ್ಟಿಗೊಳ್ಳುವ, ವಿಘಟಿತವಾಗುವ ಅಂಶಗಳನ್ನಷ್ಟೆ ವಿವೇಚಿಸುವುದ ಲೇಖಕನಾದ ನನ್ನ ಅನಿವಾರ್ಯ ಕರ್ಮ… ಇಲ್ಲಿ ಯಾರಿಗೂ ಯಾರೂ ಹ್ರಮಿಸುತ್ತಿರ ಬೇಕಾದುದು ಲೋಕ ನಿಯಮ. ಎಲ್ಲಾ ಪಾತ್ರಗಳು ಪರಿಭ್ರಮಿಸುವ ಕೇಂದ್ರ ಪಾತ್ರಕ್ಕೆ ಧಕ್ಕೆಯಾಗಬಾರದು. ಅಮ್ದರೆ ಎಷ್ಟೇ ಪ್ರಯತ್ನಿಸಿದರೂ ಉಪಪಾತ್ರಗಳಾದುವುಗಳು ಕೇಂದ್ರ ಪಾತ್ರದ ಮಟ್ಟಕ್ಕೆ ಏರಲಾರವು… ಅವುಗಳಿಗೆ ಹಾಗೆ ಸ್ಪರ್ಧಿಸುವ ಅರ್ಹತೆಯೇ ಇರುವುದಿಲ್ಲ. ಅರ್ಹತೆ ಪ್ರಶ್ನಿಸಿದರೆ ಸ್ಥಾನಭ್ರಂಶವಾಗದೆ ಇರದು.” ಎಂದು ಅದಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದೆ. +ಇದರಿಂದ ಅದು ಖತಿಗೊಂಡು ನುಡಿಯಿತು- +“ನೀನೆಂಥ ಲೇಖಕ್ನಿದಿಯೋ ಮಾರಾಯಾ… ಹೇಳಿ ಕೇಳಿ ಮೈಮಾರಿಕೊಂಡು ಬದುಕಿದ ಮೂರು ಕಾಸಿನ ಸೂಳೆ… ಎದೆ ಸೀಳಿದ್ರೆ ಎರಡಕ್ಷರವಿಲ್ಲ… ಆದರೂ… ನಾನು ನೂರಾರು ನಾಟಕಗಳ ಹೆಣ್ ಪಾತ್ರಗಳ ಮಾತ್ನೆಲ್ಲ ಪಟಪಟಾಂತ ಒಪ್ಪಿಸಿಬಿಡಬಲ್ಲೆ. ಎಂಥದೋ ನಾಟಕ ಬರ್ದೋರ್‍ನ ಅರಗಿಸಿಕೊಂಡಿರೋ ನನ್ಗೆ ಯಾಕೋ ನಿನ್ ಮಾತೊಂದೂ ಅರ್ಥಾಗ್ತಿಲ್ಲ ಮಾರಾಯಾ… ಕಾದಂಬ್ರಿ ಅಂದ್ರೇನಂಬೋದೇ ನಂಗೊತ್ತಿಲ್ಲ… ಆದ್ರೆ ಅದೊಂದು ನಮೂನಿ ಪುರಾಣ ಅಂತ ತಿಳ್ಕೊಂಡಿದ್ದೀನಿ… ಆತನ ಹೆಂಡ್ತಿಗೆ ಒಂದು ಲೆವೆಲ್ಲಿನ ಜಾಗ ಕೊಟ್ಟಿರೋ ನೀನು ನನ್ನನ್ಯಾಕೆ ಕೆಳಗಿನ ಲೆವೆಲ್ಲಿನಾಗಿಟ್ಟೆ?… ಇದ್ನ ಕೇಳೊದ್ರಲ್ಲಿ ತಪ್ಪೇನೈತೆ… ಲೇಖಕನಾದ ನೀನು ಹೇಳೋದೊಂದು ಬರಿಯೊದೊಂದು ಮಾಡಿದ್ರೆ ನಾನೆಂಗ ಬಾಯಿ ಮುಚ್ಕೊಂಡು ಸುಮ್ಕಿರ್‍ಲಿ… ವರಲಕ್ಷ್ಮಿಗೆ ಯಾವ ಜಾಗ ಕೊಟ್ಟಿಯೋ ಆ ಜಾಗಾನೂ ನಂಗೆ ಕೊಡು. ಆಕೀಗಿಂತ ನಾನು ಯಾವುದರಾಗ ಕಡ್ಮೆ ಆದೀನಿ… ಹಂಗ ನೋಡಿದ್ರೆ ನಾನೇ ಆಕಿಗಿಂತ ಒಂದು ಕೈ ಮ್ಯಾಲಿದೇನಿ… ಆಕಿ ತನ್ ಗಂಡನ್ನ ಒಂದು ನಿರ್ಜೀವ ಪೆಟರಿ ಥರ, ಕೇವಲ ಒಂದು ಮೆಷಿನ್ನಿನಂಥ ಗಂಡನ ಥರ ರಭೌದು. ಆಕಿ ಆತನ್ನ ಸರ್ಯಾಗಿ ನೋಡ್ಕೊಂಡಿದ್ದರ್‍ಯಾಕೆ ಆತ ನನ್ ಹಾಸಿಗೀಗೆ ಬಂದ್ ಬೀಳ್ತಿದ್ದ… ಮೊದಮೊದ್ಲು ಆತ ಯಕಃಶ್ತ್ ಒಬ್ಬ ಮಿಂಡನಾಗಿ ಚಟ ತೀರಿಸ್ಕೋಳ್ಳಾಕೆ ಬಂದಿದ್ದಿರಭೌದು. ಆದರೆ ಬರ್‍ತಾ ಬರ್‍ತಾ ಆತ ನಂಗೆ ಮಗ ಆದ. ತಂದಿ ಆದ, ಗಂಡ ಆದ, ಮಿಂಡ ಆದ, ಮಾವ ಆದ, ಅಳಿಯಾದ, ಮೈ‌ಆದ, ಮನಸ್ಸಾದ… ಕೊನೀಕೆ ದೇವರ ಜಗುಲಿ ಆದ… ಅದರಂಗ ನಾನೂ ಹಂಗೇನೆ ಆದೆ… ನನ್ನ ಆತನ ಸಂಬಂಧ ನಿಂಗೆ ಹೆಂಗ ಗೊತ್ತಾಗತೈತಿ? ಇದ್ನೆಲ್ಲ ಅರ್ಥ ಮಾಡ್ಕೊಂಡು ಬರದ್ರೆ ಸೈ ಅಂತೀನಪ್ಪಾ… ಶಾಮನ ಎಡಭಾಗಕ್ಕೆ ವರಲಕ್ಷ್ಮೀನ್ನಿಡು ಬಲಭಾಗಕ್ಕೆ ನನ್ನನ್ನಿಡು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇಡೋ ಭೇದಾವ ತೋರಿಸಬ್ಯಾಡ… ಹಿಂಗ ಮಾಡ್ಲೀ ಅಂದ್ರ ನಿನ್ನೆಂಡ್ರೂ ಮಕ್ಳಿಗೆ ಸುಖಾ ಆಗೋದಿಲ್ಲ…” ನಾನು ಕೊತ್ತಲಿಗಿಗೆ ಹೋಗಿ ನೋಡಿದ ಅನಸುಯಮ್ಮಗೂ ಕಾದಮ್ಬರಿಯೊಳಗೆ ರೂಪ ಪಡೆದಿರೋ ಪಡೆಯುತ್ತಿರೋ ಅನಸೂಯಮ್ಮಗೂ ನಡುವೆ ಅಜಗಜಾಂತರ ವ್ಯತ್ಯಸವಿರುವುದರ ಅರ್ಥವಾಯಿತು. +ಕೊತ್ತಲಿಗಿ ಸೋಮವಾರ ಪೇಟೆಯ ಸಹಜ ಗುಣವಾದ ತಾಮಸ ಬಲದಿಂದ ಮುನ್ನುಗ್ಗುವುದು ಸರಿಯಲ್ಲ. +“ನೀನು ವರಲಕ್ಷ್ಮಿಗಿಂತ ಕಡ್ಮೆ ಅಂತ ಯಾಕ ಭಾವಿಸ್ಕೋತಿ ಅನಸೂಯಮ್ಮಕ್ಕಾ… ನಿನ್ ಪಾತ್ರದ ಕಾಲಾಗ ನಾನೂ ನನ್ ಹೆಂಡ್ತೀನೌ ಅದೇಸು ಸಾರಿ ಜಗಳ ಅಡಿದ್ದೀವಿ ಎಂಬುದು ನಿಂಗೇನಾರ ಗೊತ್ತೇನು?” +“ಗರತೋರೆಲ್ಲ ಗರತೇರ ಕಡೇಕಿರ್‍ತಾರ… ನಂಂಅಂಥ ಮೂರ್‍ಕಾಸಿನ ಸೂಳೇರ್‍ಕಡೀಕ ಯಾಕಿರ್‍ತಾರ! ” ಎಂದು ಬೇಸರ ಮತ್ತು ದುಃಖದಿಂದ ನಿಟ್ತುಸಿರು ಇಟಿತು. +ಅದರ ಆ ಸ್ಥಿತಿ ನೋಡಿ ನನ್ನ ಕರುಳು ಚುರಕ್ಕೆಂದಿತು. +“ನಾನಿದ್ದೀನಲ್ಲ ಅನಸೂಯಮ್ಮ… ” +“ನೀನಿದ್ರೆ ತಗೊಂಡೆನ್ಮಾಡ್ಲಿ ಸಾರೂ… ವರಲಕ್ಷ್ಮಿಯಂಥೋರು , ನಿನ್ನೆಂಡ್ತಿಯಂಥೋರು ನನ್ ಪರ ನಿಂತ್ಕೊಂಡು ಮಾತಾಡುವಂತಾದಾಗ್ಲೇ ನನ್ಗೆ ಸಮಾಧಾನ ಆಗೋದು.!” +ಅದೆಂಗ ಸಾಧ್ಯ? ನಿಮ್ದು ನೋಡಿದ್ರೆ ಉತ್ತರ ಧ್ರುವ ಅವರ್‍ದು ನೋಡಿದ್ರೆ ದಕ್ಷಿಣ ಧ್ರುವ… ನಿಮ್ ಅವ್ರ ಬದುಕಿನ ನಡುವೀನು ದೊಡ್ಡದೊಂದು ಕಂದಕ ಹುಟ್ಕೊಂಡೈತೆ”. +“ಅದ್ನ ತುಂಬಿ ನಮ್ಮೆಲ್ಡು ಧ್ರುವಾನು ಹತ್ರ ಮಾಡೋ ಕೆಲಸಾನ ನಿಮ್ಮಂಥೋರು ಮಾಡಬೇಕು ಸಾರು… ನಿಷ್ಠೆ ವಿಶಯದಾಗ ನಾವವ್ರಿಗಿಂತ ಒಂದು ಕೈ ಬಲ…” +“ಕಂದಕ ತುಂಬಿ ಸರಿಮಾಡೋದು ನನ್ ಕೆಲಸವಲ್ಲ ತಾಯೀ… ಸಮಾಜ ಆ ಕೆಲಸಾನ ಮಾ‌ಅಬೇಕಿತ್ತು. ಆದ್ರೆ ಅದೇ ನಿಂತ್ಕೊಂಡು ಬೆಳೆಸತೈತಂದ್ಮೇಲೆ ಏನು ಮಾಡೊದೈತೆ… ಲೇಖಕನಾದ ನಂದೇನಿದ್ರು ತೇಪೆ ಹಚ್ಚೋ ಕೆಲಸ ನೋಡಮ್ಮಾ… ಶಾಮಣ್ಣ ಯಾರೊಬ್ಬರ ಸೊತ್ತಲ್ಲ… ಅವ್ನೇನು ನನ್ ಚಿಗದೊಡ್ಡಪ್ನ ಮಗ್ನಲ್ಲ – ಹಂಗ ನೋಡಿದ್ರೆ … ಏನೋ ಒಬ್ಬೊಬ್ನೀಗೆ ಒಂದೊಂದ್ನಮೂನಿ ಆಗಿದ್ದ… ಹೆಂಡತಿಗೆ ಗಂಡನಾಗಿದ್ದ, ತಾಯಿಗೆ ಮಗನಾಗಿದ್ದ, ಸರಕಾರಕ್ಕೆ ನೌಕರನಾಗಿದ್ದ, ಹಾರ್ಮೋನಿಯಂಗೆ ಮಾಸ್ತರನಾಗಿದ್ದ; ಹಾಡಿಗೆ ಹಾಡುಗಾರನಾಗಿದ್ದ; ಮಕ್ಕಳಿಗೆ ತಂದೆಯಾಗಿದ್ದ; ಕ್ರೋಧಕ್ಕೆ ಮೋಹವಾಗಿದ್ದ; ಮೋಹಕ್ಕೆ ಮತ್ಸರವಾಗಿದ್ದ, ಅರಿಷಡ್ವರ್ಗಗಳನ್ನು ಮುಕುಳೀ ಅಡೀಲಿ ಹಾಕ್ಕೊಂಡು ಅದರ ಮ್ಯಾಲ ವಿರಾಜಮಾನವಾಗಿ ಬದುಕಿದ್ದ… ಆದರೆ ಯಾವುದೋ ಮಹಾತ್ಮರಿಗಿರದಿದ್ದ ಅಪರೂಪದ ಬದ್ಕೋ ಗುಣ ಅವನಲ್ಲಿತ್ತು ಕಣಮ್ಮಾ… ಅದ್ನ ಲೋಕಕ್ಕೆ ತೋರಿಸೋ ಕೆಲಸಾನ ನಾವೆಲ್ರು ಮಾಡ್ಬೇಕು… ಕೈಮುಗ್ದು ಕೇಳ್ಕಂತಿದೀನಿ… ಕರುಳ್ನ ನಾಲಗೆ ಮ್ಯಾಲ ತಂದ್ಕೊಂಡು ಅಂಗಲಾಚ್ತಿದೀನಿ… ನೀವೆಲ್ರು ಹೆಚ್ಚು ಕಡ್ಮೆ ಎಂದು ಭಾವಿಸ್ದೆ ನಿಮ್ ನಿಮ್ಮ ಭಾಗದಾಗ ಸ್ಥಾನಮಾನದಾಗ ನಿಂತ್ಕೊಂದು ಸಹಕರಿಸ್ರೀ ತಾಯಿ… ಯಾರ್ದೋ ಡಯಲಾಗ್ನ ಯಾರೋ ಹೇಳಿಬಿಟ್ರೆ ನಾಟಕ ನಡೆಯೋದಾದ್ರು ಯಂಗೆ… ಸುಣ್ಣ ಅಡಿಕೆ ಎಲೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಒಂದಾದಾಗ ಮಾತ್ರ ಅದು ತಾಂಬೂಲ ಅನ್ನಿಸಿಕೊಳ್ತದಮ್ಮಾ” +“ನಾನೇನು ನಿನ್ನ ಹೆಚ್ಚಿಗೆ ಕೇಳ್ತಿಲ್ಲ ಸಾರೂ… ಕಾದಂಬರಿಯೊಳಗ ಒಂದೊಳ್ಳಿ ಜಾಗದಾಗ ನಮ್ಮನ್ನು ಕುಂಡ್ರಿಸು… ಅಷ್ಟೆ. ಸಮಾಜದಾಗಂತೂ ಕಿಮ್ಮತ್ತು ಕಳ್ಕೊಂಡಿರೋ ಕವಡೆ ಅಗೀವಿ… ಕಥಾನಕದೊಳಗಾದ್ರು ಚಲಾವಣೆ ಆಗೋಣ ಎಂದು ಆಕೆ ಹೇಳುತ್ತಲೆ ಸೋಮವಾರಪೇಟೆಯ ರಾಖೇಶ, ದುರುಗಪ್ಪ, ಸುಂಕಲವ್ವ ಚವುಡವ್ವ ಇವೇ ಮೊದಲಾದ ಪಾತ್ರಗಳು ಪಕಪಕ ನಗಾಡಿ ಅನಸೂಯಮ್ಮನ ಪಾತ್ರಕ್ಕೆ ಬೆಂಬಲ ಸೂಚಿದಿದವು. +ಅವುಗಳ ಪಟ್ಟು ನನ್ನ ಮಾತಿನ ಪೆಟ್ಟಿನಿಂದ ಸಡಿಲಗೊಳ್ಳುವ ಲಕ್ಷಣ ಕಾಣಿಸದಿರುವುದು ಕಂಡು ನನಗೆ ನಿರಾಸೆಯಾಯಿತು. ಅವುಗಳ ವಾದದಲ್ಲಿ ನಿಜ ಇಲ್ಲದಿರಲಿಲ್ಲ. ಸಾಂಪ್ರದಾಯಿಕ ಸಮಾಜದ ನೆಲಗಟ್ಟಿನ ಮೇಲೆ ನಿಂತು ಕಾದಂಬರಿ ರಚಿಸುತ್ತಿರುವ ನಾನು ಸರ್ವೊತೋಮುಖ ಒತ್ತಡಕ್ಕೆ ಸಿಲುಕಿದ ತೆಳು ಸಿಲವಾರ ದಬ್ಬಿಯಂತಾದೆನು. ಪ್ರಾಸಿಕ್ಯುಷನ್ ಮಾಡುವುದಷ್ಟೆ ನನ್ನ ಕೆಲಸ. ಅವು ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುವವೋ ಸಮರ್ಥಿಸಿಕೊಳ್ಳಲಿ! ತೀರ್ಪು ಕೊಡೋದು ನ್ಯಾಯಾದೀಶರಾದ ಓದುಗ ಮಹಾಶಯರಿಗೆ ಬಿಟ್ಟುಕೊಟ್ಟು ನೆಮ್ಮದಿಯಿಂದ ಇದ್ದರಾಯಿತು ಎಂದುಕೊಂಡೆ. +ಹಸ್ತಪ್ರತಿಯೊಳಗಿಂದ ಶಾಮಣ್ಣ ಪಾತ್ರವು ಆಕಳಿಸುತ್ತಿರುವಂತೆ, ಸೆಕೆಗೆ ಸಿಕ್ಕು ಮುಲುಕಾಡುತ್ತಿರುವಂತೆ ಸದ್ದು ಮಾ‌ಇತು. ಒಂದು ಪುಟ್ಟ ಕೋಣೆಯಲ್ಲಿ ಆ ಕಡೆ ಬಿಗರನ್ನೂ, ಈ ಕಡೆ ಬೀಗರನ್ನೂ ಒಟ್ಟಿಗೆ ಸೇರಿಸಿದಾಗ, ಅವರ ನಡುವೆ ತುಂಬು ಗರ್ಭಿಣಿ ಹೆಂಗಸೋರ್ವಳ ಪರಿಸ್ಥಿತಿ ಹೇಗಿರುತ್ತದೋ ಹಾಗಾಗಿತ್ತು ಶಾಮಣ್ಣನ ಪರಿಸ್ಥಿತಿ ಕಾದಮ್ಬರಿಯ ಹೆಜ್ಜೇನಿನೆ ಹುಟ್ಟಿನೊಳಗೆ. +ಅದು ಮೆಲ್ಲನೆ ಆ ಗಜಿಬಿಜಿಯಿಂದ ಬಿಡಿಸಿಕೊಂಡು ಮೆಲ್ಲನೆ ಹೊರಕ್ಕೆ ಬಂದು- +“ಲೋ ಕುಂವೀ ಎಂಬ ಧೂರ್ತನೇ… ನಮ್ಮನ್ನೆಲ್ಲ ಈ ನಿರ್ವಾತ ಪ್ರದೇಶದಲ್ಲಿ ಕೂಡಿ ಹಾಕಿಟ್ಟು ಅದಾವ ಪುರುಷಾರ್ಥ ಸಾಧಿಸಬೇಕೆಂದುರುವಿಯೋ ಪಾಪಾತ್ಮನೇ… ಮುಖ್ಯ ನನ್ನನ್ನಿಲ್ಲಿಂದ ಬಿಡುಗಡೆ ಮಾಡಿ ಪುಣ್ಯ ಕಟ್ಕೋ ಮಾರಾಯಾ… ಹೇಳದೆ ಕೇಳದೆ ಇಲ್ಲಿಂದ ಅಂತರ್ಧಾನವಾಗಿ ಕೈಗ್ ಸಿಕ್ಕದಂತೆ, ಹತ್ತು ನನ್ನ ಹಿಂಬಾಲ ಎಮ್ದು ಹೇಳಿ, ಹೋಗಬೌದು… ಆದರೆ ಅದು ನಾಕು ಮಂದಿ ಮೆಚ್ಚೋ ಕೆಲಸವಲ್ಲ… ಬದುಕಿದ ಪ್ರಾಯಶ್ಚಿತ್ತಕ್ಕಾಗಿ ನಿನ್ನ ಕಾದಂಬರಿಯೊಳಗೆ ಮರುಸೃಷ್ಟಿ ಪಡೆಯಬೇಕೆಂಬ ಬಯಕೆಯಿಂದಲೇ ನಾನು ತೂಗು ಬಾವಲಿಯಂತೆ‌ಅಕ್ಷರಗಳಿಗೆ ಜೋತುಬಿದ್ದಿರುವುದು. ಇದನ್ನೇ ನನ್ನ ದೌರ್ಬಲ್ಯವೆಂದು ಭಾವಿಸಬೇಡ” ಎಂದು ಒಂದೇ ಸಮನೆ ಸಿಡಿಮಿಡಿಗುಟ್ಟತೊಡಾಗಿತು. +“ನೀವ್ಯಾಕೆ ಇಷ್ಟೊಂದು ಅವಸರ ಮಾಡ್ತಿದ್ದೀಯಾ… ಅರ್ಥವಾಗ್ತಿಲ್ಲ ಶಾಮೂ… ತೆಲೆ ಏರೋಕೂ ಮೊದ್ಲೆ ಪಾತ್ರಗಳು ಅಭಿನಯಿಸೋಕೆ ಅವಸರ ಮಾಡಿದ್ರೆ ಹೇಗಯ್ಯಾ… ನೋಡಿದವರಾದ್ರು ಏನಂದಾರು?” ಎಂದು ಸಮಾಧಾನ ಪಡಿಸಲೆತ್ನಿಸಿದೆ. +“ನೀನು ಸತ್ತೋ ಬದುಕಿಯೋ ಅಕ್ಷರದಲ್ಲಿ ಸಿಕ್ಕಾಕ್ಕೋ… ಆಗ ಗೊತ್ತಾಗ್ತದೆ ನನ್ನ ಸಂಕಟ. ಅದಿರ್‍ಲಯ್ಯಾ ಹೋಮ್ ಸಿಕ್ಕೇ… ನನ್ನ ಪ್ರಾಣಪದಕವಾದ ಅನಸೂಯಳ ಜೊತೆ ಜಟಪಟಿ ಇಳ್ದಿದ್ದೆಯಲ್ಲಾ ಏನ್ಸಮಾಚಾರ?’ +ಅದೇ ಕಣಪ್ಪಾ… ನಿನ್ನ ಧರ್ಮಪತ್ನಿಯ ಸ್ಥಾನಮಾನ ನನ್ಗೂ ಕೊಡು… ನಾನು ಆಕೆಗಿಂತ ಹೆಚ್ಚೂಂತ ವಾದಿಸಿದಳಪ್ಪಾ! ನಾನೇಷ್ಟು ಹೇಳಿದರೂ ಕೇಳ್ತಾ ಇಲ್ಲ ಆಯಮ್ಮ. ನೀನಾದ್ರು ಒಂದು ಮಾತು ಹೇಳಿ ಕಾದಂಬರಿ ಸುಗಮವಾಗಿ ಓಡ್ಲಿಕ್ಕೆ ಅನುಕೂಲ ಮಾಡಿಕೊಡಿಸಬಾರ್‍ದೇನು?” ಎಮ್ದು ಅಂಗಲಾಚಿದೆನು. +ನಿನ್ನ ಧರ್ಮವನ್ನೊಯ್ದು ಸುಡುಗಾಡಿಗಿಡು… ತಾಳಿ ಕಟ್ಟಿಸ್ಕೊಂಡ ಮಾತ್ರಕ್ಕೆ ಒಂದು ಹೆಣ್ಣು ಹೆಂಡತಿ ಆಗ್ಲಿಕ್ಕೆ ಸಾಧ್ಯವೇನೋ ಬೆಪ್ಪೆ. ಇಂಥ ಯಾವುದೇ ವಿವಾವೇತರ ಸಮ್ಬಂಧದಲ್ಲಿ ಸಿಲುಕಿ ಅನುಭವವಿರದ ನಿನ್ನಂಥೋರು ಗೆರೆ ಕೊರೀಲಿಕ್ಕಷ್ಟೆ ಲಾಯಕ್ಕು… ಮಾನವ ಸೂಕ್ಷ್ಮ ಸಮ್ಬಂದಹಗಳು ನಿನ್ನಂಥೋರಿಗೆ ಅರ್ಥ ಆಗೋದು ಸಾಧ್ಯವಿಲ್ಲ… ಎಲವೋ ಅಕ್ಷರಾವಲಂಬಿಯೇ! … ನಿನಗೆನಾದ್ರು ಒಂಚೂರು ಮಾನ ಮರ್ಯಾದೆ‌ಇದ್ದದ್ದೇ ಆದ್ರೆ… ನನ್ನ ಅನಸೂಯಳಿಗೆ ಧರ್ಮಪತ್ನಿಗಿಂತ ಮಿಗಿಲಾದ ಸ್ಥಾನಮಾನ ಕೊಡು ಅಷ್ಟೆ!” ಎಂದು ಖಡಾಖಂಡಿತವಾಗಿ ನುಡಿಯಿತು. +“ಹೌದಪ್ಪ… ನಿನಗಿರೋವಷ್ಟು ಪ್ರಪಂಚ ಜ್ಞಾನ ನನಗಿಲ್ಲದಿರಬಹುದು. ಆದರೆ ಮನುಷ್ಯ ಸಂಬಂಧಗಳ ಅಜ್ಞಾನವಿರುವಂಥ ವ್ಯಕ್ತಿ ಮಾತ್ರ ಖಂಡಿತ ನಾನಲ್ಲ. ಹಾಗೆ ಮಾಡಿದ್ರೆ ಸಮಾಜ ಏನೆಂದ್ಕೊಳ್ತದೆ! ನಿಮ್ಮ ತಾತನವರ ಆತ್ಮವಾದ್ರು ಏನಂದ್ಕೊಂಡೀತು!” +“ಈ ನಿನ್ನ ಸಮಾಜವನ್ನೊಯ್ದು ಮೊಹರಂ ಅಗ್ನಿಕುಂಡಕ್ಕೆ ಹಾಕು. ಅದು ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ… ಬೆಕ್ಕುಬೆಣ್ಣೆ ತೂಗೋದೂ ಒಂದೆ… ಅದು ನ್ಯಾಯ ಹೇಳೋದೂ ಒಮ್ದೆ… ಅದರ ಬಗ್ಗೆ ಪುರಾಣ ಬಿಚ್ಚಬೇಡ… ನಾನು ಸತ್ತದ್ದೇ ಹೆಂಡತಿಯ ಪರಮಪಾತಿವ್ರತ್ಯದಿಂದ. ನಾನು ಸತ್ತು ಬದುಕಿರುವುದೇ ಅನಸೂಯಳ ನಿರ್‍ವ್ಯಾಜ ಅಂತಃಕರಣದಿಂದ, ಪ್ರೇಮದಿಂದ ಎಂಬುದನ್ನು ಮರೆಯಬೇಡ…. ಕಾದಂಬರಿಯೊಳಗಿನ ಪಾತ್ರಸ್ಥಾನದಲ್ಲಿದ್ದುಕೊಂಡು ನಾನು ನಿನಗೆ ಆಜ್ಞೆ ಮಾಡ್ತಿದೀನಿ… ಮರ್ಯಾದೆಯಿಂದ ಅವಳಿಗೆ ಹೆಂಡತಿಗಿಂತ ಹೆಚ್ಚದ ಸ್ಥಾನಮಾನ ಕೊಡು” ಎಂದು ಗುಡುಗುಡನೆ ಗುಡುಗಿತು. +ಬದುಕಿರುವ ಪರ್ಯಂತರ ದುರ್ಬಲತೆಯಿಂದಲೂ ಕೀಳರಿಮೆಯಿಂದಲೂ ಒಂದೇ ಸಮನೆ ನೆರಳುತ್ತಿದ್ದ ಶಾಮಣ್ಣ ಸತ್ತ ಮೇಲೆ ಎಷ್ಟೊಂದು ಶಕ್ತಿಶಾಲಿಯಾಗಿರುವನಲ್ಲ ಎಂದುಕೊಂಡೆ. ಕೇಂದ್ರ ಪಾತ್ರ ಮಾಡಿದ್ದರಿಂದ ಅವನಿಗೆ ತೀರ ಸೊಕ್ಕು ಬಂದುಬಿಟ್ಟಿದೆ…. ಇದು ಮೊದಲೇ ಗೊತ್ತಗಿದ್ದಲ್ಲಿ ಸೂಳೆಯನ್ನೋ, ಹೆಂಡತಿಯನ್ನೋ, ತಾಯಿಯನ್ನೋ ಅಥವಾ ಶಿವರಾಮ ಶಾಸ್ತ್ರಿಗಳಂತ ಹಸುಮಕ್ಕಳ ಪ್ರಜ್ಞಾ ಪ್ರವಾಹದ ಮೂಲಕ ಕಥೆ ಹೇಳುವ ಕೆಲಸ ಮಾಡಬಹುದಿತ್ತು. ನನ್ನ ಗೆಳೆಯ ಎಂಬ ಕಾರಣದಿಂದಾಗಿ ಶಾಮನನ್ನೇ ಕೇಂದ್ರಪಾತ್ರವಾಗಿರಿಸಿಕೊಂಡು ಅವನ ಸುತ್ತ ಉಪಪಾತ್ರಗಳನ್ನು ಬೆಳೆಸುವ ಕಠಿಣತಮ ಕಾರ್ಯಕ್ಕೆ ತೊಡಗಿದ್ದು, ಈಗಲಾದರೂ ಇಷ್ಟು ಅಷ್ಟು ಸೇರಿಕೊಂಡು ಹಲೋ ಹಲೋ ಎನ್ನುತ್ತಿದ್ದಾನೆ, ಬದುಕಿದ್ದಾಗ ಮುಖ್ಯವಾಗಿ ಮದುವೆ ಆದ ನಂತರ ಎದುರಿಗೆ ಬಂದರೂ ಹಲೋ ಎಂದವನಲ್ಲ. ಮೊದಲನೆ ಮಗು ಹುಟ್ಟಿದಾಗಿರಲಿ, ಎರಡನೆ ಮಗ ಹುಟ್ಟಿದಾಗಲೂ ನಾಮಕರಣಕ್ಕೆ ಕರೆದವನಲ್ಲ… ಮಿತ್ರದ್ರೋಹಿ ಎಂದು ಲೇಬಲ್ ಅಂಟಿಸಿ ಆಗಲೇ ದೂರ ಇಟ್ಟಿದ್ದ ಮಹಾನುಭಾವ, ಅಂಥವನನ್ನು ಬಲು ಕಕ್ಕುಲಾತಿಯಿಂದ ಆಧುನಿಕವಾಗಿ ಪೌರಾಣಿಕವಾಗಿ ಪದವಿಗೇರಿಸಿದ್ದು ನನ್ನ ಮೂರ್ಖತನ. +“ನೀನು ಹೇಳೋದು ಸರಿ ಅಲ್ಲ ಅಂತ ಹೇಳಲಾರೆ ಮಿತ್ರಮಾ… ಬದುಕಿದಾಗ ನೀವು ಯಾವ ಯಾವ ಆಯಕಟ್ಟಾದ ಜಾಗದಲ್ಲಿದ್ದು ಏನೇನು ಕೆಲಸ ಮಾಡಿದ್ದೀರೋ ನನಗೇನು ಗೊತ್ತು? ಕಲ್ಪಿಸಿಕೊಂ +ಡು ಬರೆದ್ರೂ ಕಷ್ಟ ಬರೆಯದಂತಿದ್ರೂ ಕಷ್ಟ. ಓದುಗರಿಂದ ನಿಷ್ಠುರ ಕಟ್ಟಿಕೊಳ್ಳೋದಾದ್ರು ಯಾಕಪ್ಪಾ?… ನಿಮ್ಮ ಕಥೆನ ನೀವೇ ಹೇಳ್ಕೊಂಡು ಬಿಡ್ರಿ… ಲಿಪಿಕಾರನಾಗಿ ನಾನು ಬರೆದುಕೊಂಡೋಗ್ತೀನಿ… ಏನಂತೀಯಾ” ಎಂದು ಕೈ ತೊಳೆದುಕೊಳ್ಳುವ ಬಯಕೆ ವ್ಯಕ್ತಪಡಿಸಿದೆ. +ಎಲಾ ಚಾಣಾಕ್ಷ! ನಮ್ಮ ಕಥೇನ ನಮ್ಮ ತಲೀಗೆ ಸುತ್ ನೋಡ್ತಿದ್ದೀಯಲ್ಲಾ! ನಮ್ದು ನಾವೇ ಹೇಳ್ಕೊಂಡ್ರೆ ನೀನೇನು ಬರೆದಂತಾಗ್ತದೊ ಂಆನ್ನೂ. ಈಗಾಗ್ಲೆ ಸತ್ತು ಸುಡುಗಾಡು ಸೇರಿರೋ ನಮ್ಮ ಬಗ್ಗೆ ನೀನೇನು ಬರ್‍ಕೊಂಡ್ರು ನಾವು ಮಾಡೋದೇನು? ಅದೂ ಅಲ್ಲದೆ ಬದುಕಿನೊಳಗೆ ನವೆಯುತ್ತಿರುವ ಅನುಸೂಯಾಳಿಗೆ ಏನಾದ್ರು ತೊಂದರೆ ಆಗ್ತದೆನ್ನೋ ಭಯ ಕಾಡ್ತಿದೆ. ಈ ಕಾದಂಬರಿ ಏನಾದ್ರು ಬದುಕಿರೋ ಅವಳಿಗಾಗಲೀ,ಸತ್ತಿರೋ ನಮಗಾಗ್ಲೀ ಏನಾದ್ರು ಸಹಾಯ ಮಾಡೀತಾ… ಹ್ಹೂ…ಹ್ಹೂ …! ಬಿಲ್ಕುಲ್ ಇಲ್ಲ… ವರಲಕ್ಷ್ಮಿ ಹಡೆದಿರೊ ಎರಡನೆ ಮಗ ಅಶ್ವಥ್‌ನ್ನಾದ್ರು ಅವಳಿಗೆ ಕೊಡಿಸೋ ಪ್ರಯತ್ನ ಮಾಡಿ ವಿಫಲನಾದೆ… ಅದಕ್ಕಿಂತ ಆ ಮುಂಡೆ (ನಾನು ಬದುಕಿದ್ದಾಗ್ಲೆ ವಿಧವೆ ಆದ್ಲು ಅಂತ ಇಟ್ಕೋ) ಒಪ್ಲಿಲ್ಲ… ಬ್ರಾಹ್ಮಾಣ್ಯದ ಹುತ್ತದೊಳಗೆ ಆ ಮಕ್ಕಳನ್ನು ಕಟ್ಟಿಕೊಂಡು ಅದೇನು ಸಾಧಿಸಿದ್ದಾಳೋ ಎನೋ? ಯಾರು ಬಲ್ಲರು… ನೀನು ಮೊದಲೇ ಅಂದರಿಕಿ ಮಂಚಿವಾಡು… ಅವರಲ್ಲಿ ಅವರಂತೆಯೇ ತಲೆಹಾಕ್ತಿ… ಇವರಲ್ಲಿ ಇವರಂತೆಯೇ ತಲೆಹಾಕ್ತಿ… ಯಾರೊಂದಿಗೂ ನಿಷ್ಠುರ ಕಟ್ಕೊಳ್ಳೋ ಜಾಯಮಾನದವನಲ್ಲ ನೀನು… ನಾನು ಸತ್ತೊಡನೆ ನಮ್ಮ ಮನೆಯನ್ನು ಕೊಂಡವನ ಮಗನಾದ ನೀನು… ನಮ್ಮ ಕತೆಯ ಉರುಳಿಗೆ ನಮ್ಮನ್ನೇ ಬಲಿಕೊಡ್ಲಿಕ್ಕೆ ನೋಡ್ತಿದೀಯಾ? ಎಷ್ಟು ಧೈರ್ಯ ಕಣೋ ನಿನಗೆ…” ಶಾಮಣ್ಣ ಪಾತ್ರವು ಅಸಹಕಾರ ಚಳುವಳಿಯನ್ನು ಆರಂಭಿಸಿತು. +ಕಟಕಟೆಯಲ್ಲಿ ನಿಂತಿರುವ ವ್ಯಕ್ತಿಯೇ ಪ್ರಾಸಿಕ್ಯುಟರ್‍ನನ್ನು ಪ್ರಾಸಿಕ್ಯೂಷನ್ನಿಗೆ ಓಳಪಡಿಸಿದ ಉದಾಹರಣೆ ಪ್ರಪಂಚದಲ್ಲಿ ಎಲ್ಲಿಯಾದರೂ ನಡೆದಿದ್ದರೆ ಇದೊಂದೆ ಎಂದು ಹೇಳಬಹುದು. +ತಲೆ ಮೊಸರು ಗಡಿಗೆ ಆಗುತ್ತಿರುವಂಥ ಅನುಭವವಾಯಿತು. ಇಡೀ ಹಸ್ತಪ್ರತಿಯನ್ನು ಅಗ್ನಿಗಾಹುತಿ ಮಾಡಲು ಶ್ರೀಮತಿಗೆ ಕೊಡುವುದೇ ಮೇಲೆಂದೆನ್ನಿಸಿತು. ಹಿಂದೆ ಕೂಡ ಇಂಥ ಬೇಸರ ಆಗದೆ ಇರಲಿಲ್ಲ… ಕೈ ಚೆಲ್ಲಿದಾಗ ಚನ್ನಬಸವಣ್ಣ “ನೀನೇ ಹೀಗೆ ಹೆದರಿ ದ್ರ ಸರ್‍ಕೊಂಡ್ರೆ ಹೇಗೆ ಕುಂವೀ? ಭಟ್ಟಿ ವಿಕ್ರಮಾರ್ಕ ಬೇಸರ ಮಾಡ್ಕೊಂಡಿದ್ರೆ ಅವ್ನೀಗೆ ಬೇತಾಳ ವಶಪಡಿಸಿಕೊಳ್ಳಿಕ್ಕೆ ಸಾಧ್ಯ ಆಗ್ತಿತ್ತೇನು? ಕಾದಮ್ಬರಿಯ ಪಾತ್ರಗಳನ್ನು ದಬಾಯಿಸಲರಿಯದ ನೀನು ಸಮಾಜದ ಜೀವಂತ ಪಾತ್ರಗಳನ್ನು ಹೇಗೆ ದಬಾಯಿಸ್ತೀಯಾ…? ಲೇಖಕ ನಿಷ್ಠುರವಾದಿಯಾಗಿರಬೇಕಪ್ಪಾ… ಲೋಹಿಯಾ ಏನು ಹೇಳಿದ್ದಾರೆ ಗೊತ್ತೆ!” ಎನ್ನುತ್ತಿದ್ದಂತೆ ನಾನು ಹೆದರಿದೆ… ಅನಾವಶ್ಯಕವಾಗಿ ಲೋಹಿಯಾರನ್ನು ಎಳೆದುಕೊಂಡು ಬಂದು ಹಿಂಸೆ ಕೊಡುವುದು ನನಗೆ ಸರಿ ಕಾಣಲಿಲ್ಲ… +“ನೋಡು ಶಾಮಾ ಸಾವು ಎಂಬ ಬಡ್ತಿ ದೊರಕಿದ ಧೈರ್ಯದಿಂದ ಬಾಯಿಗೆ ಬಂದಂಗ ಮಾತಾಡಬೇಡ… ನನ್ನ ಮೂಗಿನ ನೇರಕ್ಕೆ ನಾನು ಬರ್‍ಕೊಂದು ಹೋಗೋನಾಗಿದ್ರೆ ಎಂದೋ ಒಂದೇ ಏಟಿಗೆ ಬರ್‍ದು ಮುಗಿಸ್ತಿದ್ದೆ… ನನ್ನ ಪ್ರಾಣಮಿತ್ರನಾಗಿದ್ದ (ಎಷ್ಟು ಪ್ರೀತಿಸ್ತಿದ್ದೆನಂತ ನಿನಗೂ ಗೊತ್ತಿಲ್ಲದಿಲ್ಲ) ನೀನು ಕೇಂದ್ರವಾಗುಳ್ಳ ಕಾದಂಬರೀನ ಕಪ್ಪು ಬೀಲುಪು ಮಾಡೋ ಆಸೆ ನನಗಿಲ್ಲ… ನಿನ್ನ ಬಗ್ಗೆ ನೀನು ಸುಳ್ಳಾದ್ರು ಹೇಳ್ಕೋ ನಿಜನಾದ್ರು ಹೆಳ್ಕೋ… ತೀರ್ಪು ಕೊಡೋರು… ಪಾತ್ರಗಳನ್ನು ಅವುಗಳ ಜಾಯಮಾನಕ್ಕನುಗುಣವಾಗಿ ಜಾಗಕ್ಕೆ ಕೂಡ್ರಿಸೋರು ಓದುಗರು , ಅದರ ಬಗ್ಗೆ ಈಗ್ಯಾಕೆ ತಲೆಕೆಡಿಸಿಕೊಳ್ಳೋದು… ಹೇಳೋದ್ನ ಪ್ರಾಮಾಣಿಕವಾಗಿ ಹೇಳಿದ್ದೀನಿ… ನೀನು ಹೇಳಿದ್ರೆ ಹೇಳು… ಬಿಟ್ರೆ ಬಿಡು … ಅಷ್ಟೆ… ನಿನ್ನ ದಾರಿ ನಿನ್ಗೆ, ನನ್ನ ದಾರಿ ನನಗೆ… ಏನಂತೀಯಾ?” ಎಂದು ಕಡ್ಡಿ ಮುರಿದಂತೆ ಬೇಸರಗೊಂಡು ಹೇಳಿದೆ. ಎಲ್ಲಿವರೆಗೂ ನೀನೇ ಇಂದ್ರ, ಚಂದ್ರ ಅಂತ ಮಸ್ಕ ಹೊಡೆಯುತ್ತ ಕಾಲಕ್ಷೇಪ ಮಾಡುವುದು? +ನನಗು ನಿಷ್ಟುರವಾಗಿ ಮಾತಾಡಲು ಬರುತ್ತದೆ ಎಂದು ಗೊತ್ತಾದ್ದರಿಂದಲೋ ಅಥವಾ ನಿಷ್ಟುರ ಕಟ್ಟಿಕೊಂಡರೆ ಲೇಖಕನೊಬ್ಬ ವಾಚಾಮಗೋಚರವಾಗಿ ಬರೆಯಬಹುದೆಂದೋ ಏನೋ ಅದು ನಲವತ್ತೈದು ಸೆಂಟಿಗ್ರೇಡಿನಿಂದ ಹತ್ತು ಡಿಗ್ರಿ ಸೆಂಟಿಗ್ರೇಡಿಗಿಳಿದು ಮುಖವನ್ನು ಒಂದು ನಮೂನಿ ಮಾಡಿತು. +“ಪರವಾ ಇಲ್ಲಯ್ಯಾ… ನಿಮ್ಗೂ ಮುಖ ಮುಲಾಜು ನೋಡ್ದೆ ಮಾತಾಲಿಕ್ಕೆ ಬರ್‍ತದೆ… ಇದೇ ಜಾಯಮಾನ ನಾನು ನಿನ್ನಿಂದ ಬಯಸಿದ್ದು… ನಾನು ಸತ್ತ ಮೇಲಾದ್ರು ಇದ್ನ ಗಳಿಸಿಕೊಂಡಿದ್ದೀಯಲ್ಲ ಅದೇ ಸಂತೋಷ’ ಎಂದು ಮೆತ್ತಗೆ ನುಡಿಯುತ್ತ ಸ್ವಲ್ಪ ಹತ್ತಿರಕ್ಕೆ ಬಂದು, ವಿಷಾದಪೂರ್ಣ ಧ್ವನಿಯಲ್ಲಿ “ನನ್ನ ಬದುಕಿನಲ್ಲಿ ಏನು ವಿಶೇಷ ಕಂಡು ಕಾದಂಬರಿಗೆ ಬಲಿ ಕೊಡಲು ನಿರ್ಧರಿಸಿರುವಿಯೋ ಏನೋ? ನಾನು ಬದುಕಿದ್ದಷ್ಟು ಕಾಲ ಸಮಾಜಕ್ಕೆ ಭಾರವಾಗಿದ್ದೆ… ಗಂಡಂದಿರಲ್ಲೇ ಅತಿ ಕೆ +ಟ್ಟ ಗಂಡ ಅನ್ನಿಸ್ಕೊಂಡೆ; ತಂದೆಯಮ್ದಿರಲ್ಲೇ ಅತಿ ಕೆಟ್ಟ ತಂಡೆ ಅನ್ನಿಸ್ಕೊಂಡೆ, ಕುಡುಕರಲ್ಲೇ ಅತಿ ಕೆಟ್ಟ ಕುಡುಕ ಅನ್ನಿಸ್ಕೊಂಡೆ… ಜೂಜುಕೋರರಲ್ಲೇ ಅತಿ ಕೆಟ್ಟ ಜೂಜುಕೋರ ಅಂತ ಅನ್ನಿಸ್ಕೊಂಡೆ, ಮಿಂಡರಲ್ಲಿ ಅತಿ ಕೆಟ್ಟ ಮಿಂಡ ಅಂತ ಅನ್ನಿಸ್ಕೊಂಡೆ… ನೌಕರರಲ್ಲೇ ಅತಿ ಕೆಟ್ಟ ನೌಕರ ಅಂತ ಅನ್ನಿಸ್ಕೊಂಡೆ; ನಾಗರೀಕರಲ್ಲೇ ಅನಾಗರೀಕ ಅಂತ ಅನ್ನಿಸ್ಕೊಂಡು ಪಾದಚಾರಿಗಳಲ್ಲೇ ಅತಿ ಕೆಟ್ಟ ಪಾದಚಾರಿ ಅಂತ ಅನ್ನಿಸ್ಕೊಂಡೆ, ರೋಗಿಗಳಲ್ಲೇ ಅತಿ ಕೆಟ್ಟ ರೋಗಿ ಮತ್ತು ಅವಿಧೇಯ ರೋಗಿ ಅಂತ ಅನ್ನಿಸ್ಕೊಂಡೆ… ಖೈದಿಗಳಲ್ಲೇ ಅತಿ ಕೆಟ್ಟ ಖೈದಿ ಅಂತ ಅನ್ನಿಸ್ಕೊಂಡೆ… ಸಾವಿನಲ್ಲೂ ಅಷ್ಟೆ… ಇಷ್ಟೊಂದು ಕೆಟ್ಟದಾಗಿ ಯಾವ ಶತ್ರುವೂ ಸಾಯಬಾರ್ದಪ್ಪಾ ಅಂತ ಅನ್ನಿಸ್ಕೊಂಡೆ… ಪ್ರೇತಗಳಲ್ಲಿ ಅತಿ ಕೆಟ್ಟ ಪ್ರೇತ ಅಂತ ಅನ್ನಿಸ್ಕೊಂಡೆ… ಅರ್ಥಾಯ್ತೇ ನಾನೆಂಥೊನಂಥ. ಅಂದ್ರೆ ಯಾವ ಸಂದರ್ಭದಲ್ಲೂ ನಾನು ಯಾವ್ದೇ ನಿಯಮವನ್ನು ಪಾಲಿಸಿಕೊಂಡು ಬಂದೋನಲ್ಲ ಮಾರಾಯ… ನನ್ನ ಬದುಕು ಉಲ್ಲಂಘಿಸುವುದರಲ್ಲಿಯೇ ಕಳೆದುಹೋಯ್ತು… ಉಲ್ಲಂಘಿಸುವುದರಲ್ಲೂ ಅಷ್ಟೆ … ನನ್ನದು ಕೆಟ್ಟ ಉಲ್ಲಂಘನೆ… ಉಲ್ಲಂಘಿಸುವಾಗಲೂ ಕೆಲವೊಂದು ನೀತಿ ಸಂಹಿತೆಗಳಿವೆ… ಮಾನಸಿಕವಾದ, ದೈಹಿಕವಾದ ಕೆಲವು ಅರ್ಹತೆಗಳು ಉಲ್ಲಂಘಿಸಬಯಸುವವರಿಗೆ ಇರಬೇಕು… ಉಲ್ಲಂಘಿಸುವ ಕ್ರಿಯೆಯಲ್ಲಿ ದೇಹದ ಅಂಗಾಂಗಗಳು ಯಾವ ರೀರಿ ವರ್ತಿಸಬೇಕೋ ಆ ರೀತಿ ವರ್ತಿಸಬೇಕು… ಆದ್ರೆ ನಾನು ಇದಕ್ಕೆ ತದ್ವಿರುದ್ಧ ನೋಡು… +ಯಾವುದೇ ಛಂದಸ್ಸು, ಅಲಂಕಾರ, ಕರ್ತೃ, ಕರ್ಮ, ಕ್ರಿಯೆ, ವ್ಯಾಕರಣ ಇನ್ಯಾವೂ ಇಲ್ಲದೆ ಬದುಕಿದ್ದು ಒಂದು ಬದುಕೇನು ಕುಂವೀ… ಇದು ನಾನು ಬೇಕೆಂದೇ ಆವಹಿಸಿಕೊಂಡ ಪ್ರಾರಬ್ದ ಕಣೋ… ಹಗಲನ್ನು ರಾತ್ರಿ ಮಾಡಿಕೊಂಡು, ರಾತ್ರಿಯನ್ನು ಹಗಲು ಮಾಡಿಕೊಂಡು ಬದುಕಿದವನು ಕಣೋ ನಾನು… ನನ್ನ ಬದುಕು ಯಾರಿಗೂ ಪ್ರಿಯವಾಗಿರಲಿಲ್ಲ… ಕಟ್ಟಿಕೊಂಡ ಹೆಂಡತಿಗೂ; ಹೆತ್ತ ತಾಯಿಗೂ ಯಾರಿಗೂ ಪ್ರಿಯವಾಗಿರಲಿಲ್ಲ… ನನ್ನ ಬದುಕಿನಲ್ಲಿ ರಾಷ್ಟ್ರೀಯ ಹೆದ್ದರಿ ರಾಜ್ಯದ ಹೆದ್ದಾರಿ ಮಟ್ಟಕ್ಕಿಳಿಯಿತು, ರಾಜ್ಯದ ಹೆದ್ದರಿ ಜಿಲ್ಲ ಮಟ್ಟದ ರಸ್ತೆಯಾಯಿತು. ಜಿಲ್ಲಾ ಮಟ್ಟದ ರಸ್ತೆ ಗ್ರಾಮಾಂತರ ಮಟ್ಟದ ರಸ್ತೆಯಾಯಿತು. ಕ್ರಮೇಣ ಅಂತಿಮವಾಗಿ ಗಟಾರ ಆಶ್ರಯಿಸಿದ ರಸ್ತೆಯಲ್ಲಿಯೇ ಅಡ್ಡಾಡತೊಡಗಿದ ನನಗೆ ಅದೆಷ್ಟು ಸೊಕ್ಕು ಇತ್ತೆಂದು ಹೇಳಿದರೆ ನಿನಗೆ ಆಶ್ಚರ್ಯವಾಗಬಹುದು. ಗಟಾರದಲ್ಲಿದ್ದುಕೊಂಡೆ ನಾನು ಸಾರ್ವಜನಿಕರ ಗಮನ ಸೆಳೆಯಿತ್ತಿದ್ದೆ. ಆಗ ಅವರು “ಅಯ್ಯೋ ಇದೇನಿದು ಪಂಡಿತ ಪರಮೇಶ್ವರ ಶಾಸ್ರ್ತಿಗಳ ಮೊಮ್ಮಗ ಶಾಮಾ ಶಾಸ್ತ್ರಿ ಅಲ್ವೆ!” ಎಂದೋ “ಏನಿದೇನಿದು ಬ್ಯಾಂಕ್ ಕ್ಯಾಷಿಯರ್ ಶಾಸ್ತ್ರಿ ಗಟಾರದಲ್ಲಿದ್ದಾನಲ್ಲ ಎಂದೋ” ಪರಮಾಶ್ಚರ್ಯದಿಮ್ದ ಮಾತಾಡಿಕೊಳ್ತಿದ್ರೋ ಮಹರಾಯ… ಅದನ್ನೆಲ್ಲ ಕೇಳಿಸಿಕೊಳ್ತಿದ್ದ ನನಗೆ ಅದೆಷ್ಟು ಸಂತೋಷವಾಗ್ತಿತ್ತು ಗೊತ್ತೆ? ಅಸದಳವಾದದ್ದು! ಅಸದಳವಾದದ್ದು! ದಾರಿ ಇಲ್ಲದ ಕಡೆ ದಾರಿ ನಿರ್ಮಿಸಿಕೊಳ್ಳುತ್ತ ಅಡ್ಡಾಡುತ್ತ ನನಗೆ ದಾರಿ ತೋರಿಸಿದವರಾರು ಕಣಪ್ಪಾ… ಹೆಂಡತಿಯಿಂದ, ತಾಯಿಯಿಂದ, ಗೆಳೆಯರಿಂದ, ಗೆಳತಿಯರಿಂದ, ಸ್ವಜಾತಿಯವರಿಂದ, ಅನ್ಯ ಜಾತಿಯವರಿಂದ, ಸರಕಾರಿ ನೌಕರರಿಂದ ತಿರಸ್ಕರಿಲ್ಪಟ್ಟ ನನ್ನನ್ನೇನಾದರೂ ಅನಸೂಯ ನೋಡದೇ, ಕಾಪಾಡದೇ ಇದ್ದಿದ್ರೆ ನಾನು ಸಹಜವಾಗಿ ಬದುಕ್ತಾನಾಗಲೀ, ಸಹಜವಾಗಿ ಸಾಯ್ತಾನಾಗಲೀ ಇರ್‍ಲಿಲ್ಲ ಕುಂವೀ…ನೀನು ನನ್ಗೆ ಪ್ರಾಣ ಮಿತ್ರ ಅಂತ ಬೊಗಳೆ ಬಿಡಬೇಡ… ಅಂಥ ಶಬ್ದಗಳನ್ನು ಕೇಳಿದ್ರೆ ನನಗೆ ವಾಕರಿಕೆ ಬರುತ್ತೆ. ಆ ಪ್ರಾರಬ್ಧ ಸಮಯದಲ್ಲಾದರೂ ನೀನು ನನ್ನ ನೋಡಿದ್ರೆ ಮೂಗು ಬಾಯಿ ಮುಚ್ಕೊಂಡು ಏನೂ ಅರಿಯದ ಮಳ್ಳಿಗನಂತೆ ಹೋಗಿಬಿಡ್ತಿದ್ದೆಯೋ… ಖರೆ ಹೇಳಬೇಕೆಂದರೆ ಮೇಲೆ ಹೇಳಿದ್ಕಿಂತ ಹೆಚ್ಚು ಕೆಟ್ಟದಾಗಿತ್ತು ನೋಡು ನನ್ನ ಬದುಕು. ಅಸಹ್ಯದ ಮೂಟೆಯಾಗಿ ಅಸಹ್ಯಕ್ಕೇನೆ ಜ್ವಲಂತ ವ್ಯಾಖ್ಯಾನವನ್ನು ಬರೆದು ಎಲ್ಲರಿಂದ ಛಿ ಥೂ, ಅಂತ ಉಗುಳಿಸಿಕೊಂದು ಕೊನೆಗೂ ಸತ್ತು ಎಲ್ಲರೂ ನೆಮ್ಮದಿಯಿಂದ ಉಸಿರು ಬಿಡುವಂತೆ ಮಾಡಿದ ನನ್ನಲ್ಲಾಗಲೀ, ನನ್ನ ಬದುಕಿನಲ್ಲಾಗಲೀ ಅದಾವ ವಿಶೇಷವನ್ನು ಗುರುತಿಸಿ ಕಾದಂಬರಿ ಬರೆದು ಅಮಾಯಕರೂ ನಿರುಪದ್ರವಿಗಳು ಆದ ಕರ್ಣಾಟಕದ ಓದುಗ ಕುಲಕೋಟಿಯ ಜೀವ ತಿನ್ನಬೇಕೆಂದಿರುವಿಯೋ ಮೂಢನೆ? +ಬರೆಯುವುದಕ್ಕೆ ನನ್ನ ಬಿಟ್ರೆ ನಿನ್ಗೆ ಬೇರೆ ಯಾರೂ ಸಿಗಲಿಲ್ವೇನಯ್ಯಾ? ಬರ್ಮಿಂಗ್ ಹ್ಯಾಂನ ಕೋಟೆಕೊಟ್ಟಲ, ಸುಖ ಸಂಪತ್ತಿ, ಹಂಸತೂಲಿಕಾ ತಲ್ಪಗಳನ್ನೂ; ಪ್ರಿನ್ಸ್ ಚಾರ್ಲ್ಸ್‌ನಂಥ ನಿಸ್ತೇಜ ರಾಜಕುಮಾರನನ್ನು‌ಊ ಗಾಳಿಗೆ ತೂರಿ ಸ್ವಚ್ಛಂದ ಕ್ರೌಂಚದಮ್ತೆ ನೀಲನಭದಲ್ಲಿ ಹಾರಾಡಿ, ಚುಕ್ಕಿಗಳನ್ನು ನೆಲದಂಗಳಕ್ಕೆ ಉದುರಿಸಿ, ಕೋಟಿಕೋಟಿ ಜೀವ ಜಗತ್ತಿನ ಉದ್ಧಾರಕ್ಕೆ ಕಾರಣಳಾಗಿ ಅಚಾನಕ್ಕಾಗಿ ರಸ್ತೆ ಅಪಘಾತದಲ್ಲಿ ದುರ್ಮರಣವನ್ನಪ್ಪಿದ ಆರು ಮೊಳದುದ್ದ ಅಪರೂಪ ಚಲುವೆ ಡಯನಾಳ ಬಗ್ಗೆ ಬರೆಯಬೇಕಿತ್ತು? ದೂರವಿರುವ ಮತ್ತು ಕನ್ನಡ ಲೇಖಕನ ಲೆಕ್ಕಾಚಾರಕ್ಕೆ ಡಯಾನ ಸಿಕ್ಕುವುದಿಲ್ಲವೆಂದಿಟ್ಟುಕೋ? ನೆನ್ನೆ ತಾನೆ ರಾಜಕೀಯ ಪ್ರವೇಶಿಸಿ ಐವತ್ತೊಂದು ವರ್ಷದ ಇಟ್ಯಾಲಿನ್ ಮಹಿಳೆ ಸೋನಿಯಾ ಗಾಂಧಿಯವರ ಕಳೆದ ನಾಲ್ಕು ವರ್ಷದ ವೈಧವ್ಯದ ಯಾತನಾಮಯ ಬದುಕು ಏಕೆ ನಿನ್ನ ಬರವಣಿಗೆಯನ್ನು ಆಕರ್ಷಿಸಲಿಲ್ಲ ಮಹಾರಾಯ! ಕಾಮ ಕೆರಳದಿರಲೀ ಅಂತ ಎಷ್ಟೋ ಮಂದಿ ಗಂಡಂದಿರು ತಮ್ಮ ಹೆಂಡಂದಿರನ್ನು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಕ್ಕೋ, ಶಾಂತಿ ಧ್ಯಾನ ಧಾಮಗಳಿಗೆ ಕಳಿಸ್ತಿರೋದರ ಕಡೆ ನಿನ್ನ ಬರವಣಿಗೆಯ ಗಮನ ಹರಿಸು ಮಾರಾಯಾ! ಆ ಒಂದೊಂದು ಹೆಣ್ಣಿನ ಮನಸ್ಸಿನಲ್ಲಿ ನೂರು ನೂರು ಕಾದಂಬರಿಗಳಿಗಾಗುವಹ್ಟು ಸರಕಿದೆ. ಇಷ್ತೇ ಅಲ್ಲ, ನೀನು ಯಾವುದೇ ವ್ಯಕ್ತಿಯ ಮನಸ್ಸನ್ನು ನೀನು ಏಕಾಗ್ರತೆಯಿಂದ ಹತ್ತು ನಿಮಿಷ ಗಮನಿಸಿದರೆ ಒಂದೊಂದು ಕಾದಂಬರಿ ಬರೆಯಬಹುದಪ್ಪಾ. ಇಂಥ ಎಷ್ಟೋ ಸೃಜನಶೀಲ ಸಂಗತಿಗಳನ್ನು ಬದಿಗಿಟ್ಟು ನನ್ನ ಒಣ ಬದುಕನ್ನು ಯಾಕೆ ಆಯ್ದುಕೊಂಡಿರುವೆಯೋ ಏನೋ… ಅದ್ಕೆ ಬೇಸರ ಬಂದು ನಾನು ಹಾಗೆ ನುಡಿದದ್ದು… ನನ್ನದು ನಾನು ಹೇಳಲಿಕ್ಕೆ ನನ್ನ ಗಂಟೇನೂ ಹೋಗೋದಿಲ್ಲಪ್ಪಾ. ಆದ್ರೆ ಒದೋರ್‍ಗೆ ತುಂಬ ಹಿಂಸೆ ಆಗದೆ ಇರೋದಿಲ್ಲ… ನೀನೇ ಒಂದಿಷ್ಟು ಉಪ್ಪುಕಾರ ಸೇರಿಸಿ ಬರೆದು ಬಿಟ್ಟರಾಯಿತು. ಆನಂದವರ್ಧನ, ಕುತಂತಕ ಗಿಂತಕರಂಥ ಲಾಕ್ಷಣಕಿರು ಬರೆದಿರೋ ವಕ್ರೋಕ್ತಿ ಗಿಕ್ರೋಕ್ತಿಗಲನ್ನೆಲ್ಲ ಚೆನ್ನಾಗಿ ಒಡ್ಕೊಂಡಿದ್ದ್ ಯಾ… ಬರೆದು ಬಿಡು ಯಾಕೆ ಹಿಂಜರಿಯುವೆ… ಅಂಥ ಬಿಕ್ಕಟ್ಟು ಬಂದಾಗ ಹೇಗೋ ನಾನು ಬಂದು ಸಹಕರಿಸ್ತೀನಿ… ನಿನ್ನಿಂದ ನನಗಾದ ಒಂದೇ ಒಂದು ಬೇಸರವೆಂದರೆ ನೀನು ನಿನ್ನ ಹಸ್ತಪ್ರತಿಯಲ್ಲಿ ನನ್ನನ್ನು ಬಂಧಿಸಿಟ್ಟಿದ್ದು. ನಾನು ಪ್ರಿಯಾಂಕಳನ್ನು ನೋಡುವ ಆಸೆಯಿಂದ ಶ್ರೀ ಪೆರಂಬದೂರಿಗೆ ಹೋಗಬೇಕೆಂದುಕೊಂಡಿದ್ದೆ. ಶ್ರೀ ಪೆರಂಬದೂರು ರಾಮಾನುಜಾಚಾರ್ಯರು…” ನಿರರ್ಗಳವಾಗಿ ಒಂದೇ ಉಸುರಿಗೆ ಶಾಮಣ್ಣ ನುಡಿದ ಮಾತುಗಳನ್ನು ನಾನು ಅರಗಿಸಿಕೊಳ್ಳಲಾರದೆ ಹೋದೆನು. +ಕಾಗೆ ಸವಿವಂತು ಸವಿಗುಮೆ ರಾಗಿಸಿಮಿಂದುಳೆಯ ನೀರಿನಂಚೆ! +ಗುರುರೋಪಿ ಗುರುಃ ಎಂಬಂತೆ ಬದುಕಿದ ಶಾಮಣ್ನನನ್ನು ಅರ್ಥ ಮಾಡಿಕೊಳ್ಳದ ನನ್ನ ಮರ್ಕಟ ಬುದ್ಧಿಯನ್ನು ನಾನೇ ಹೀಗಳೆದುಕೊಂಡೆನು. ಹೃದಯ ಆರ್ದ್ರವಾಯಿತು. ವೈಶಾಖದ ಬಿರುಬಿಸಿನಾಳದ ಗಾಳಿ ಎದೆಯೊಳಗೆ ಮಾರ್ಮಲೆಯತೊಡಗಿತು. ಬಿದಿಯ ಬೀಸಿದ ಮಾಯೆಯಲ್ಲಿ ಸಿಲುಕಿ ಜರ್ಝರಿತಗೊಂಡ ನೀನೇ ಧನ್ಯ! +ಕಂಠ ಗದ್ಗದವಾಯಿತು. +ಕೊತ್ತಲಿಗಿಯ ಬಸ್ ನಿಲ್ದಾಣದಲ್ಲಿ ಹೆಂಡತಿ ಪಕ್ಕದೊಳಿದ್ದರೆ ನಾನೂ ಒಬ್ಬ ಸಿಪ್ಪಾಯಿಯಂತೆ ಹೆಂಡತಿಯೊಂದಿಗೆ ನಿಂತುಕೊಂಡು ಜಗಲೂರು ಕಡೆ ಬರಲಿದ್ದ ಬಳ್ಳಾರಿ ಬಸ್ಸಿಗೆ ನಾನು ಕಾಯುತ್ತ ನಿಂತಿದ್ದ ದಿನ ನೆನಪಾಯಿತು. ಡಿಪೋ ಕಂಟ್ರೋಲರ್ ಗುರುಪಾದಪಯ್ಯ ಅನಾಥ ಹೆಣದ ಸಂಸ್ಕಾರಕ್ಕೆಂದು ಪ್ರಯಾಣಿಕರಿಂದ ಹಣ ಸಂಗ್ರಹಣಾ ಕಾರ್ಯ ನಡೆಸಿದ್ದ. ಆತ ಚಾಚಿದ ಡಬ್ಬಿಯೊಳಗೆ ಐದು ರೂಪಾಯಿ ಹಾಕುವ ಮೊದಲು ಬಿದ್ದಿರುವ ಹೆಣ ಶಾಮನದೆ ಯಾಕಾಗಿರಬಾರದೆಂದು ಹೋಗಿ ಇಣುಕಿ ನೋಡಿದೆ. ಕಂಡ ಕಂಡ ಹೆಣಗಳ್ನ ಯಾಕೆ ನೋಡ್ಲಿಕ್ಕೆ ಹೋಗ್ತೀರಾ… ನಾವು ಪ್ರಯಾಣ ಮಾಡ್ತಿರೋದು ಬೇರೆ ಕೆಟ್ಟ ಗಳಿಗೆಯಲ್ಲಿ… ನೀವು ಬರೀ ಹೆಣವನ್ನು ನೋಡಿ ವಾಪಸಾಗೋದಾದ್ರೆ ಈ ಮಾತು ಹೇಳ್ತಿರ್‍ಲಿಲ್ಲ… ನೋಡಿ ಬಮ್ದ ಮೇಲೆ ಆ ಹೆಣ ನಿಮ್ ಕಣ್ಣಿಂದ ಇಳಿಯೋಕೆ ಎರಡು ಮೂರು ದಿನಗಳಾದ್ರು ಬೇಕು… ಅದೆಲ್ಲ ಯಾಕೆ ಫಜೀತಿ” ಎಂದು ಹೆಂಡತಿ ತಡೆಯಲೆತ್ನಿಸಿದರೂ ಹೋಗಿ ಇಣುಕಿದೆ. ಶಾಸ್ತ್ರಿಗಳ ಮೊಮ್ಮಗ ಶಾಮನದೇ ಆಗಿತ್ತೆಂದು ನನಗೆ ಅನುಮಾನ, ಕುಡಿದೂ, ಕುಡಿದೂ ಅವನ ಕರು‌ಅಲುಗಳು ತೂತುಬಿದ್ದಿರುವವಲ್ಲದೆ ಕ್ಷಯರೋಗ ಢಾಳಗಿ ಬಡಿದುಕೊಂಡಿದೆ ಎಂದು ಊರಲ್ಲಿ ಅಗಸರ ನಾರಾಣಿ ಅದರ ಹಿಂದಿನ ದಿನ ಹೇಳಿದ್ದ. ಆ ಕ್ಷಣದಲ್ಲಿ ಆಸುಪಾಸಿನಲ್ಲಿ ಯಾವುದೇ ಹೇನ ಬಿದ್ದಿದ್ದರೂ ಅದು ಶಾಮನದೇ ಇರ್‍ತದೆ ಎಂಬ ಅನುಮಾನ ಕಾಡತೊಡಗಿತ್ತು. ‘ದೇವರೇ ನಾವು ಊರು ಮುಟ್ಟುವವರೆಗೆ ಯಾವುದೇ ಹೆಣದ ದರುಶನವನ್ನು ಮಾಡಿಸಬೇಡ’ ಎಂದು ಬೇಡಿಕೊಂಡು ಎಚ್ಚರಿಕೆಯಿಂದಿದ್ದರೂ ಒಕ್ಕಣ್ಣು ಗುರುಪಾದಪ್ಪನ ಸುಪರ್ದಿನಲ್ಲಿ ಅನಾಥ ಹೆಣ ಸಂಸ್ಕಾರ ನಡೆಸುವ ಘಟನೆ ಅಯಾಚಿತವಾಗಿ ಕಂಣ ಮುಂದೆಯೇ ನಡೆಯುತ್ತಿರುವುದು. +ಕಳೇಬರ ಶಾಮನದೇ ಆಗಿದ್ದರೆ ಏನು ಮಾಡುವುದು? ಆಗಿರದಿದ್ದರೆ ಏನು ಮಾಡುವುದು? ಎಂಬ ದ್ವಂದ್ವಗಳ ನಡುವೆ ನಾನು ಮಿಶ್ರ ಭಿನ್ನರಾಶಿಯಂತೆ ನಿಂತಿದ್ದ ಜನರ ನಡುವೆ ತೂರಿ ಇಣುಕಿದೆ. ಪ್ರ್ವ ಪಶ್ಚಿಮಾಭಿಮುಖವಾಗಿ ಮಲಗಿಸಿದ್ದ ಆ ಕಳೇಬರವು ದಕ್ಷಿಣಕ್ಕೆ ವಾಲಿತ್ತು. ಎತ್ತರ ಮತ್ತು ಗಾತ್ರವೇನೋ ಹೆಚ್ಚು ಕಡಿಮೆ ಅವನ್ದೆ! ಕೆದರಿದ ತಲೆಯಲ್ಲಿ ಜುಟ್ಟು ಇರಬಹುದು,ಅಥವಾ ಅವನು ಕತ್ತರಿಸಿ ಎಸೆದಿರಬಹುದು, ಮೀಸೆ ಕುರುಚಲು ಗಡ್ಡ… ತಲೆ ಮುಖ ನರೆಯುವಷ್ಟು ವಯಸ್ಸಗಿಲ್ಲ… ಕಣ್ಣು ಬಾಯಿ ಮತ್ತು ಶಿಶ್ನಗಳಿದ್ದ ಭಾಗಗಳ ತುಂಬ ಸಾವಿರಾರು ನೊಣಗಳು (ಜನಪ್ರಿಯ ನಟ ಸತ್ತಾಗ ಜನ ಹೇಗೆ ಸಂತೋಷ, ಕುತೋಹಲ ಮತ್ತು ದುಃಖ್ದಿಂದ ಮುತ್ತಿ ಕಳೇಬರದ ಯಾವುದಾರೂ ಅಂಗವನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಾರಲ್ಲ ಹಾಗೆ) ಮತ್ತಷ್ಟು ಬಾಗಿ ಗುರುತಿಸೋಣವೆಂದರೆ ಜನರ ನೆರಳು ನೇರವಾಗಿ ಅದರ ಮೇಲೆ ಬೀಳುತ್ತಿರುವುದು. ‘ಅವನಾಗ್ಲೆ ಸತ್ತಿದಾನೆ… ಈಗ ಬದುಕಿರೋದು ಅವನ್ ದೇಹ ಮಾತ್ರ ಎಂದು ಓಸಿ ಯಂಕಣ್ಣ ಹೇಳಿದ್ದ ಮಾತಿನ ಆಧಾರದ ಮೇಲೆ ಅವನು ಸಾಯುವುದು ಅಥವಾ ಬದುಕಿರುವುದು (ಇವೆರಡು ನಿರಾಸೆಯ ಎರಡುಮು ನಮೂನೆಗಳು ಮಾತ್ರ) ನನಗೆ ಅನಿವಾರ್ಯವಾಗಿತ್ತು. ಬಗ್ಗಿ ಬಗ್ಗಿ ನೋಡೀ ನೋಡೀ ಆ ಲಳೇಬರ ಶಾಮಣ್ಣನದಲ್ಲವೆಂದು ನಾನು ಖಚಿತಪಡಿಸಿಕೊಂಡು ಇನ್ನೇನು ಮುಖ್ ಸಪ್ಪಗೆ ಮಾಡಿಕೊಂದು ಹಿಂತಿರುಗುತ್ತಿದ್ದಾಗ ಎದುರಾದ ವ್ಯಕ್ತಿ ಥೇಟ್ ಶಾಮಣ್ಣನಂತಿದ್ದ ಅಥವ ಅವನೇ ಆಗಿದ್ದ. ಮಾತಾಡಿಸುವ ಅವನೂ ಮಾತಾಡಲಿಲ್ಲ… ನಾನೂ ಮಾತಾಡಲಿಲ್ಲ… ಖಂಡಿತ ಶಾಮಣ್ಣ ಸಾಯಲಾರದೆ ಬದುಕಿದ್ದಾನೆಂದೂ,ಅವನು ನನ್ನನ್ನು ಮಾತಾಡಿಸದಿದ್ದುದೇ ಸೌಭಾಗ್ಯವೆಂದು ಭಾವಿಸಿ ನಾನು ಹೆಂಡತಿ ಇರುವಲ್ಲಿಗೆ ಮರಳಿ ಬಂದೆ. “ಅಂತೂ ಹೆಣವನ್ನು ನೋಡೇ ಬಿಟ್ರಿ ತಾನೆ! ನನ್ನ ಮಾತಂದ್ರೆ ಯಾವ ಲೆಕ್ಕವೆಂದು” ಹೆಂಡತಿ ಸಿಡುಕಿದಳು. +ಈ ಘಾನೆ ನಾನು ಪ್ರಕಟಿಸಿದ ಬಹು ದೊಡ್ಡ ಕ್ರೌರ್ಯದ ಬಹು ದೊಡ್ಡ ಉದಾಹರಣೆ. ಇಷ್ಟೆಲ್ಲ ಅಸಹ್ಯ ತುಂಬಿಕೊಂಡಿದ್ದರು ಮಹಾಮಾನವತಾವಾದಿಯಂತೆ, ಮಹಾನ್ ಲೇಖಕನಂತೆ, ಮಹಾನ್ ಗೆಳೆಯನಂತೆ ಸೋಗು ಹಾಕಿ ಕಾದಂಬರಿ ಬರೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. +ಯೋಚಿಸುತ್ತಾ ಯೋಚಿಸುತ್ತ ಆರಡಿ ಇದ್ದವನು ಆರು ಅಂಗುಲದಷ್ಟಾಗಿಬಿಟ್ಟೆ.. ಹಾಳೆ ತಿರುಗುವ ಗಾಳಿಗೆ ಕಂಪಿಸತೊಡಗಿದೆ. +“ನಯ್ಯಾ ಕುಂವೀ… ಎಷ್ಟೊಂದು ಕುಗ್ಗಿ ಹೋಗಿಬಿಟ್ಟೆಯಲ್ಲ… ಮೈಯಲ್ಲಿ ಹುಷಾರಿಲ್ಲವೇನು? ಎಂದು ಮಾತೃ ಹೃದಯದ ಶಾಮನ ಆತ್ಮ ಪ್ರಶ್ನಿಸಿತು. +“ಅಂಥಾದ್ದ್ನೂ ಇಲ್ಲ ಶಾಮಾ… ಎಷ್ಟೊಂದು ವಿಚಿತ್ರ ನೋಡು… ಬದುಕುವ ಅರ್ಹತೆ ಇರೋ ನಿನ್ನಂಥೋರು ಸಾಯ್ತಾನೆ ಇರ್ತಾರೆ… ಸಾಯೋ ಅರ್ಹತೆ ಇರೋ ನನ್ನಂಥೋರು ಸದಾ ಬದುಕ್ರ್ ಇರ್‍ತಾರೆ” ಎಂದು ನಿಟ್ಟುಸಿರುಬಿಟ್ಟೆ. +“ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿಜಿಟಿಂಗ್ ಪ್ರೊಫೆಸರ್ ಥರ ಮಾತಾಡ್ತಿದ್ದೀಯಲ್ಲೋ ಹುಚ್ಚಪ್ಪ… ಸಾವು ಬದುಕಿನ ನಡುವೆ ಅಂಥ ಅಂತರವೇ ಇಲ್ಲ ಮಾರಾಯ… ಸಾಯಲಾರದೆ ಬದುಕೋದಾಗ್ಲಿ; ಬದುಕಲಾರ್ದೆ ಸಾಯೋದಾಗ್ಲಿ ಇವೆರಡು ನೆಪಗಳು ಮಾತ್ರ… ಬದುಕಿರೋವಷ್ಟು ಕಾಲ ಧೈರ್ಯದಿಂದ ಬದುಕಪ್ಪಾ… ಸತ್ತೋರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತಿದ್ದೀಯಾ?” ಎಂದು ಶಾಮನ ಆತ್ಮ ಹಿಮಾಲಯದ ನಿರೀಶ್ವವಾದಿ ಯೋಗಿಯಂತೆ ಧೈರ್ಯ ತುಂಬುವ ಮಾತಾಡಿತು. +“ನಾನೊಂದು ಬಹು ದೊಡ್ಡ ತಪ್ಪು ಮಾಡಿದ್ದೀನಿ. ಕ್ಷಮಿಸ್ತೀಯಾ ಶಾಮಾ…” ಎಂದೆ ಪಾಪ ನಿವೇದಕನಂತೆ. +“ಥೂ! ಹಾಗೆಲ್ಲ ಮಾತಾ‌ಅಬೇಡ್ವೋ ಮುಂಡೇದೆ… ನಾನೊಂದು ಲೆಕ್ಕ ಹೇಳ್ತೀನಿ… ಅದ್ನ ಬಿಡಿಸಿದ ನಂತರವೇ ನನ್ನ ಬಗ್ಗೆ ಬರೆಯೋದ್ನ ಆರಂಭಿಸು… ಇಲ್ಲಾಂದ್ರೆ ನಿನ್ನ ತಲೆ ಸಾವಿರ ಚೂರಾಗಿ ಹೋಗ್ತದೆ! ಏನಂತೀಯಾ? +“ಹ್ಹೂಂ…” +“ಹೇಳುವೆನು ಶ್ರದ್ಧೆಯಿಂದ ಕೇಳು… +ರತಿಕ್ರೀಡೆಯ ಕಾಲದಲ್ಲಿ ಪ್ರಿಯತಮನಾದ ನಾನು ನನ್ನ ಪ್ರಿಯತಮೆಯಾದ ಅನಸೂಯಳ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಹಿಡಿದು ಜಗ್ಗಲು ಹಾರ ಹರಿದು ಹೋಯಿತು. ಆಗ ಆರನೆ ಒಂದು ಭಾಗದಷ್ಟು ಮುತ್ತಿಗಳು ನೆಲದ ಮೇಲೆ, ಐದನೇ ಒಂದು ಭಾಗದಷ್ಟು ಮುತ್ತುಗಳು ಕೌದಿಯ ಮೇಲೆ, ಆರನೇ ಒಂದು ಭಾಗದಷ್ಟು ಮುತ್ತುಗಳು ಆಕೆಯ ವಕ್ಷ ಮತ್ತು ನಾಭಿ ಪ್ರದೇಶದ ಮೇಲೆ ಬಿದ್ದವು. ಅವುಗಳ ಪೈಕಿ ಹತ್ತನೇ ಒಂದು ಭಾಗದಷ್ಟು ಮುತ್ತುಗಳನ್ನು ನಾನು ಆಯ್ದುಕೊಂಡೆನು. ದಾರದಲ್ಲಿ ಇನ್ನೂ ಆರು ಮುತುಗಳು ಉಳಿದಿದ್ದವು… ಹಾಗಾದರೆ ಆ ಹಾರದಲ್ಲಿದ್ದ ಒಟ್ಟು ಮುತ್ತುಗಳು ಎಷ್ಟು?… ನೀನು ಗಣಿತದಲ್ಲಿ ಡಲ್ ಎಂದು ಗೊತ್ತಿದ್ದರೂ ಈ ಪ್ರಶ್ನೆಯನ್ನು ನಿನಗೆ ಹಾಕಿದ್ದೀನಿ. ಡಯೋಷೆಂಟ್ ಗೆಲೈಸ್‌ಟೇಟ್‌ನದಕ್ಕಿಂತಲೂ ಭಾರತೀಯ ಬೀಜಗಣಿತ ಮೇಲ್ಮಟ್ಟದ್ದು ಎಂಬುದಕ್ಕೆ ಈ ಸಮೀಕರಣವೇ ಸಾಕ್ಷಿ ನೋಡು…. ಸಾಧ್ಯವಾದಷ್ಟು ಈ ಲೆಕ್ಕ ಬಿಡುಸುವ ಪ್ರಯತ್ನ ಮಾಡು… +ಈ ಕಾದಂಬರಿ ಬರೆಯುವಾಗ ಈ ಸಮೀಕರಣ ಕುರಿತು ಯೋಚಿಸುತ್ತಾ ಹೋಗು… ನಿನ್ನ ಕಥೇನ ಎಲ್ಲಿಂದ ಪುನರಾರಂಭ ಮಾಡಬೇಕೆಂತಿದ್ದೀಯಾ?… ನಾನೇ ಇದರ ಕ್ಲೂ ಕೊಡ್ತೀನಿ ನೋಡು… ನಾನು ನೌಕರಿಗೆ ಸೇರಿದ್ದೀನಿ… ಇಲ್ಲಿಂದ ಬೇಡ… ನಾನು ಆಕೆ ಹನೀಮೂನಿಗೆ ಹೋಗಿದ್ದೀವಿ… ಇಲ್ಲಿಂದಲೂ ಬೇಡ… ಶಾಸ್ತ್ರಿಗಳು ಸತ್ತು ಹೋದ್ರು ಇಲ್ಲಿಂದಲೂ ಬೇಡ… ನಿಜವಾದ ಕಥೆ ಸುರುವಾಗೋದೆಲ್ಲಿಂದಪ್ಪ ಅಂದ್ರೆ ಮನೆಯಲ್ಲಿ ನನ್ನ ಮೇಲೆ ಅಧಿಕಾರ ಸಾಧಿಸುವ, ಅಥವಾ ಅಪಭ್ರಂಶ ಹೊಂದಿರುವ ಕಾರಣಕ್ಕಾಗಿ ನನ್ನ ತಾಯಿಯಾದ ಅಲುಮೇಲಮ್ಮಗೂ ಹೆಂದತಿಯಾದ ವರಲಕ್ಷ್ಮಿಗೂ ದಿನಂಪ್ರತಿ ಒಂದಲ್ಲಾ ಒಂದು ಘರ್ಷಣೆಯು ನಡೆಯುತ್ತಲೇ ಹೋಗುತ್ತದೆ. ಅವರಿಬ್ಬರೂ ಅಭಿಮಾನಧನರೇ ಎಂಬುದರಲ್ಲಿ ಅನುಮಾನವಿಲ್ಲ… ಸುಸ್ತೋ ಸುಸ್ತು ಅಂತ ನಾನು ದ್ಯೂಟಿ ಮುಗಿಸಿಕೊಂಡು ಕೊತ್ತಲಿಗಿಯಿಂದ ಮನೆಗೆ ಮರಳಿದ ಕ್ಷಣದಿಂದ ಸಮಾನ ಬಲರಾದ ಅವರು ಅತಿರಥ ಮಹಾರಥರಂತೆ ಜಗಳ ಆ‌ಅಲು ಶುರು ಮಾಡುತ್ತಾರೆ. ನೋಡೋ ಅಂತ ತಾಯಿ ಎಡಕ್ಕೆ; ನೋಡ್ರಿ ಅಂತ ಪತಿಪಾರಾಯಣೆಯಾದ ಹೆಂಡತಿ ವರಲಕ್ಷ್ಮಿಯು ಬಲಗಡೆ ನಿಂತುಕೊಂಡು ಟಗ್ ಆಫ್ ವಾರ್ ಅಂತಾರಲ್ಲ ಹಾಗೆ ಎಳೆದಾಡತೊಡಗುತ್ತಾರೆ. ಒಂದು ದಿನದ್ದಲ್ಲ… ಎರಡು ದಿನದ್ದಾಲ್ಲ… ಇದು ದೈನಂದಿನ ಗೋಳು. ಅನಕ್ಷರಸ್ಥ ರೈತಾಪಿ ಶೂದ್ರನಾಗಿದ್ದರೆ ನಾನು ಅವರಿಬ್ಬರಿಗೂ ತಲಾ ಎರಡೆರಡು ಏಟು ಕೊಟ್ಟು ಮ್ಲೆಯಲ್ಲಿ ಕುಕ್ಕುರು ಬಡಿಯಬಹುದಾಗಿಟ್ಟು. ಗದರಿಸಲೆಂದರೆ ಬಯ್ಯಲೆಂದರೆ, ಹೊಡೆಯಲೆಂದರೆ ಅಕ್ಷರಸ್ಥ ನಾಗರೀಕ ಭಾವ, ಪವಿತ್ರ ವಂಶೋದ್ಭವನೆಂಬ ಹೆಗ್ಗಳಿಕೆ, ಸಕಲ ಶಾಸ್ತ್ರಪಾರಂಗತನೆಂಬ ಹುಸಿ, ಠೇಂಕಾರ ಅಡ್ಡ ಬರುತ್ತದೆ… ಹೊಟ್ಟೆಯ ಸಿಟ್ಟು ರಟ್ಟೆಗೆ ಬರುವುದಿಲ್ಲ… ಕಪೋಲದ ರಕ್ತ ಕಣ್ಣುಗಳಿಗೆ ಏರುವುದಿಲ್ಲ… ಮೆದುಳಿನ ಮಾತು ನಾಲಿಗೆಗೆ ಬರುವುದಿಲ್ಲ… ನಾಲಿಗೆ ಮೇಲಿನ ಮಾತು ಮಾತಾಗಿ ರೂಪಗೊಳ್ಳುವುದಿಲ್ಲ… ನನ್ನೊಳಗೆ ನಾನು ವಿಲವಿಲನೆ ಒದ್ದಾಡಿ ಹೋಗುತ್ತೇನೆ. ಅವರನ್ನು ಅವರ ಪಾಡಿಗೆ ಬಿಟ್ಟು ಬಜಾರದ ಕಡೆ ನಡೆಯುತ್ತೇನೆ… ಆತ್ಮೀಯ ಅಂತ ತಿಳ್ಕೊಂಡು ಪತ್ರಿಕಾ ಸಂಪಾದಕ ಮಿತ್ರ ಕಮಲಾಕರನಿಗೆ ಹೇಳುತ್ತೇನೆ… ಅದಕ್ಕವನು ಪಕಪಕ ನಗುತ್ತ ‘ವೆರ್ರಿಇಂಟರೆಸ್ಟಿಂಗ್’ ಎಂದು ಉದ್ಗರಿಸುತ್ತಾನೆ… ಬ್ಶ್\ಏಸರದಿಂದ ನಾನು ಇದರಲ್ಲಿ ನಗೋದೇನೈತಿ ಕಮಲಾಕರ…” ಎನ್ನುತ್ತೇನೆ. “ನಗೋದು ಯಾಕಿಲ್ಲ ಶಾಮಾ? ಕ್ರಿಯೇಟಿವ್ ಲೇಖಕನಾದ ನೀನು ಅತ್ತೆ ಸೊಸೆಯರ ಜಗಳವನ್ನೇ ವಸ್ತು ಮಾಡ್ಕೊಂಡು ಅತ್ಯುತ್ತಮವಾದ ವಿವಿಧ ವಿನೋದಾವಳಿಗಳಂಥ ಕಥೆಗಳ್ನ ಬರೆಯಬಹುದಯ್ಯಾ… ಇದೆಲ್ಲ ಲೇಖಕನ ಅಡ್ವಾಂಟೇಜಸ್ಸೆ… ಎಂದು ಹೇಳುತ್ತಾನೆ. ಮುಂದೊಂದಿನ ನಾನಿವನ ಸಹವಾಸ ಸಾಕು ಅಂತ ಊರ ಹೊರಗಡೆ ಯೋಗಾಶ್ರಮ ಕಟ್ಕೊಂಡಿರೋ ಚಿದಾನಂದಾವಧೂತರ ಬಳಿಗೆ ಹೋಗುವೆನು…. ಇಂಥಾ ತಾಯಿ ಹೆಂಡತಿಯರ ನಡುವೆ ರಾಜಿ ಕುದುರಿಸುವ ಬಗ್ಗೆ ಕುರಿತು ಮಾತು ತೆಗೆಯುತ್ತೇನೆ… ಅದಕ್ಕೆ ಅವರೂ ಪಕಪಕ ನಗಾಡುವರು… ಕಾರಣ ಕೇಳುತ್ತೇನೆ. “ಎಂಥ ಅದೃಷ್ಟವಂತರು ನೀವು ಶಾಮಾ ಶಾಸ್ತ್ರಿಗಳೇ… ಇಂಥಾ ಜಗಳ ಸದಾ ಕೇಳುತ್ತಿದ್ದರೆ ಖಂಡಿತ ಅಲೌಕಿಕ ಆನಂದದ ಸಾಕ್ಷಾತ್ಕಾರವಾಗುತ್ತದೆ… ಬಾಲ ಶಂಕರನು ಪೂರ್ಣ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವನ ಕಾಲನ್ನು ಕಚ್ಚಿದ ಮೊಸಳೆಯ ಎರಡು ಮಾನವ ರೂಪಗಳೇ ನಿಮ್ಮ ತಾಯಿ ಮತ್ತು ಹೆಂಡತಿ. ಅವರನ್ನು ಅವರ ಪಾಡಿಗೆ ಜಗಳವಾಡಲು ಬಿಡಿ. ಆ ಜಗಳ ಕೇಳುತ್ತಾ ಕೇಳುತ್ತಾ ಶಂಕರಾಚಾರ್ಯರ ಮಹಾನುಶಾಸನವನ್ನು ಕಂಠಪಾಠ ಮಾಡುತ್ತಾ ಹೋಗಿ… ಜಗಳ ಮತ್ತುಧ್ಯಾನ, ಧ್ಯಾನ ಮತ್ತು ಜಗಳ ಇವೆರಡರ ಸಂಘರ್ಷದಿಂದ ನಿಮ್ಮಲ್ಲಿ ಅಲೌಕಿಕವಾದ ಜ್ಞಾನ ಹುಟ್ಟುವುದು… ಆ ಜ್ಞಾನ ಬಲವೃದ್ಧಿ ಆಗೀ ಆಗೀ ನಿಮ್ಮ ಮಸ್ತಿಷ್ಯಕ್ಕೆ ಏರುವುದು… ಅದರಿಮ್ದ ಕುಂಡಲೀ ಶಕ್ತಿ ಜಾಗೃತವಾಗುವುದು… ಆಗ ನೀವು “ಆನಂದೋ ಬ್ರಹ್ಮ” ಎಂದು ಉದ್ಗರಿಸುವಿರಿ. ಕ್ರಮೇಣ ಆಚಾರ್ಯತ್ರಯರ ಪದವಿಗೇರುವಿರಿ… ಆಗ ಪೂಜಾರ್ಹರಾಗುವಿರಿ’ ಎಂದು ಮೊದಲಾಗಿ ಹೇಳಿ ತಲೆ ತಿನ್ನುವರು. +ಮುಂದೊಂದು ದಿನ ಚಿದಾನಂದಾವಧೂತರನ್ನು ಶಪಿಸಿ ಮನಶ್ಯಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ವೇದವ್ಯಾಸ ಜೋಷಿಯವರ ಬಳಿಗೆ ಹೋಗುವೆನು… ಅವರೂ ಪಕಪಕ ನಗಾಡಿ ಇಂಟೆರೆಸ್ಟಿಂಗ್ ಎಮ್ದು ಉದ್ಗರಿಸುವರು… ನಾವೀಗ ಮಾಡ್ತಿರೋ “ಸ್ಪ್ಲಿಟ್ ಪರ್ಸನಾಲಿಟೀಸ್ ಇನ್ ಅವರ್ ಇಂಡಿಯನ್ ರೂರಲ್ ಸೊಸೈಟಿ” ಎಂಬ ಸಂಶೋಧನೆಗೆ ನೀವು ಹೇಲ್ತಿರೋ ಘಟನೆ ತುಂಬ ಹೆಲ್ಪ್ ಆಗ್ತದಲ್ರೀ ಮಿ. ಶಾಸ್ತ್ರೀಜಿ. ಅವರಿಬ್ಬರು ಜಗಳಾಡೊದನ್ನ ಗುಟ್ಟಾಗಿ ಟೇಪ್‌ರಿಕಾರ್ಡ್ ಮಾಡ್ಕೊಂಡು ತಂದ್ಕೊಡ್ತೀರಾ ಪ್ಲೀಜ್… ಬೇಕಾದ್ರೆ ಜಪಾನ್ದು ರೆಕಾರ್ಡರ್ ಕೊಡ್ತೀನಿ… ಬೈದಬೈ ಆ ಅಪರೂಪದ ಅತ್ತೆ ಸೊಸೆಯರ ಜೊತೆ ಡಿಸ್ಕಸ್ ಮಾದ್ಲಿಕ್ಕೂ ಅವಕಾಶ ಮಾಡ್ಕೊಡಿ…” ಎಂದು ಹೇಳಿ ತಲೆ ತಿನ್ನುವನು… +ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುವುದಕ್ಕೆ ಬೇಸತ್ತು ನಾನು ಯಾರ ಬಳಿಗೂ ಹೋಗುವುದಿಲ್ಲ… ಒಂಟಿಯಾಗಿ ಅಲೆದಾಡುವ ಅಭ್ಯಾಸ ಮಾಡಿಕೊಳ್ಳುತ್ತೇನೆ. ಯಾರೊಂದಿಗೂ ಮಾತಾಡುವ ಮತ್ತು ಮಾತಾಡದೇ ಇರುವ ಭಯ ಕಾಡಲಾರಂಭಿಸುವುದು… ಎಷ್ಟು ದೂರದಲ್ಲಿದ್ದರೂ ತಾಯಿ ಮತ್ತು ಹೆಂಡತಿಯರೀರ್ವರು ತಲೆಯಿಂದ ಮರೆಯಾಗುವುದಿಲ್ಲ… ಜಗಳ ಕೇಳೀ ಕೇಳೀ ಅವರ ಮಾತುಗಳನ್ನು ನನಗರಿವಿಲ್ಲದಂತೆ ನಾನು ಅನುಕರಿಸುವೆನು… ನಗೆಪಾಟಲಾಗುವೆನು… ವಯಸ್ಸಾದ ಬ್ರಾಹ್ಮಣ ವಿಧವೆಯರು ತಾಯಿ ಅಲುಮೇಲಮ್ಮನಂತೆಯೂ ತರುಣಿಯರು ಯುವತಿಯರು ಹೆಂಡತಿ ವರಲಕ್ಷ್ಮಿಯಂತೆಯೂ ಗೋಚರಿಸಲು ಶುರುವಾಗುವುದು. +ಮುಂದೊಂದು ದಿನ ಏನಾಗುವುದೆಂದರೆ ಅತ್ತೆ ಮತ್ತು ಸೊಸೆಯರ ನಡುವಿನ ಜಗಳದ ಉಷ್ಣತಾಮಾನ ಅರವತ್ತು ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿರುವುದು. ಕೈ ಕೈ ಮಿಲಾಯಿಸಿರುವರು. ಆಕೆಯ ಮೈಮೇಲಿನ ಬಟ್ಟೆಯನ್ನು ಈಕೆಯೂ; ಈಕೆಯ ಮೈಮೇಲಿನ ಬಟ್ಟೆಯನ್ನು ಆಕೆಯೂ; ಹರಿದು ಚಿಂದಿ ಚಿಂದಿ ಮಾಡುವರು. ಆ ಮೂಲೆಗೊಬ್ಬರು, ಈ ಮೂಲೆಗೊಬ್ಬರು, ಕೂಡ್ರುವರು. ಒಲೆ‌ಉ‌ಅಲ್ಲಿ ಬೆಕ್ಕು ಮಲಗಿ ಗುರ್ ಎಮ್ದು ಸದ್ದು ಮಾಡುತಿರುವುದು. +ಓಣಿಯ ಹಿರಿಯರು ಅವರ ನಡುವೆ ರಾಜಿ ಕುದುರಿಸುವ ಪ್ರಯತ್ನ ಮಾಡುತ್ತಿರುವರು… +ಅದೇಹೊತ್ತಿಗೆ ನಾನಲ್ಲಿಗೆ ಅಪರಾಧಿಯಂತೆ ಹೊಗುವೆನು… ಮತ್ತೆ ಜಗಳ… ಪಂಚಾಯ್ತಿ… ಇತ್ಯಾದಿ… ಆಗ ಓಣಿಯ ಹಿರಿಯರು “ನಿನ್ನ ಹೆಂಡತಿಯನ್ನು ನೀನು ಕರ್ಕೊಂಡು ಕೊತ್ತಲಿಗಿಗೆ ಹೋಗಿಬಿಡಪ್ಪ… ಅತ್ತೆ ಸೊಸೆ ಹೊಂದ್ಕೊಳ್ತಿಲ್ಲ… ಸೊಸೆ ಅತ್ತೆ ಹೊಂದ್ಕೊಳ್ತಿಲ್ಲ… ಅವರಿಬ್ಬರೂ ಹಾವು ಮುಂಗುಸಿಯಂತೆ ಕಾದಾಡುತ್ತಿರುವುದನ್ನು ನೋಡೀ ನೋಡೀ ನಮಗೆ ಸಾಕಾಗಿ ಹೋಗಿದೆ…” ಎಂದು ಹೇಳುತ್ತಾರೆ. +“ಆಗ್ಲಿ ಯಜಮಾನ್ರೆ… ಕೊತ್ತಲಿಗೀಲಿ ಒಂದು ಮನೆ ಮಾಡಿ ನಾನಿವಳನ್ನು ಕರ್ಕೊಂಡು ಹೋಗ್ತೀನಿ” ಎಂದು ಭರವಸೆ ನೀಡುತ್ತೇನೆ. +“ಹಾಗೆ ತಾಯಿ ಕಡೆಗೂ ಒಂದು ಕಣ್ಣು ಇಟ್ಟಿರಪ್ಪಾ… ಮಾತೃ ದೇವೋಭವ ಅಂತ ವೇದಗಳು ಹೇಳಿದ್ದಾವೆ” ಎಂದು ತಿಪಟೂರು ಕಡೆಯ ವೃದ್ಧೆಯೋರ್ವರು ಎಚ್ಚರಿಸುತ್ತಾರೆ… +ಆಗ ನಾನು “ಎಲ್ಲಾದ್ರು ಉಂಟೆ ತಾಯಿ” ಎಂದು ಶಿರಸಾವಹಿಸುತ್ತೇನೆ. +ನಾನು ಮರುದಿನ ಕೊತ್ತಲಿಗಿಗೆ ಹೋದೆನು. ಬ್ಯಾಂಕ್ ಸೇರಿಕೊಂಡೆನು… ಸಹೋದ್ಯೋಗಿಗಳಾದ ವಿಶ್ವೇಶ್ವರ, ಇಸ್ಮಾಯಿಲ್, ಚಂಬಸಯ್ಯ, ಶಾಂತಿ, ಹೆಬ್ರಿ, ಗೋವಿಂದಾಚಾರ್ಯ, ಓಬನ್ನ ಮೊದಲಾದವರು ನನ್ನ ಜೊತೆಗೆ ಕಾರಣ ವಿಚಾರಿಸುತ್ತಾರೆ… ಈ ಭಾಗದಿಂದ ಕಥೆ ಶುರು ಮಾದು ಕುಂವೀ… ಈ ವಿಷಯದಲ್ಲಿ ನಾನು ನಿನಗೆ ಸರ್ವ ಹಕ್ಕುಗಳನ್ನು ಕೊಡುತ್ತಿರುವೆ. ಯೋಚಿಸಬೇಡ… ಬರೆದುಬಿಡು… ನಾನಿನ್ನು ಹಸ್ತಪ್ರತಿಯೋಳಗೆ ನಿರ್ಗಮಿಸಲು ನನಗೆ ಆಜ್ಞೆ ಮಾಡು ಗೆಳೆಯಾ” ಎಂದು ಶಾಮ ಶೂದ್ರ ಸಹಜ ಬುದ್ಧಿಯಿಂದಾಗಿ ನನ್ನನ್ನೂ ನನ್ನ ಬದುಕನ್ನೂಲೇವಡಿ ಮಾಡಲು ಮರೆಯಬೇಡ. ಎಂದು ಪಾತ್ರವು ಹೇಳಿಕೊಂದಿತು. +“ಹೋಗು ಶಾಮ… ಎಲ್ಲಿಗಾದ್ರು ಹೋಗಿ ಬೇಸರ ಕಳೆದುಕೊಂಡು ಬರ್ತಿ‌ಎ‌ಉ…” ಎಂದು ನಾನು ಆ ಪಾತ್ರಕ್ಕೆ ನಿರೀಕ್ಷಣಾ ಜಾಮೀನು ನೀದಿದೆನು. +ಅದು ಹೋಯಿತು. +ನಾನು ನೆಮ್ಮದಿಯಿಂದ ಉಸಿರುಬಿಟ್ಟೆ. +ಗಾಳಿ ತಣ್ಣಗೆ ಬೀಸಿತೆಂಬಲ್ಲಿಗೆ ಕುಂವೀ ಎಂಬ ನರಮಾನವ ವಿರಚಿತ ಶಾಮಣ್ಣ ಎಂಬ ಕಥಾನಕದ ಚತುರ್ಥಾಶ್ವಾಸಂ ಪರಿಸಮಾಪ್ತಿಯಾದುದು. +ಜಯಮಂಗಳಂ ನಿತ್ಯ ಶುಭ ಮಂಗಳಂ +***** +ಮುಂದುವರೆಯುವುದು +ಕೀಲಿಕರಣ: ಎಂ ಎನ್ ಎಸ್ ರಾವ್ +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ಅಧ್ಯಾಯ ೧೧ – ೧- ಇಷ್ಟು ದಿನವಾದರೂ ಕಮಲುವಿನ ಹೊಟ್ಟೆಯಲ್ಲಿ ಮಕ್ಕಳಾಗಲಿಲ್ಲ. ತಾನು ಸಾಕಿ ಬೆಳೆಸಿದ ಮೊಮ್ಮಗನಿಂದ ವಂಶ ಬೆಳೆಯದ್ದನ್ನು ಕಂಡ ಅಕ್ಕಮ್ಮ ಕೊರಗುತ್ತಿದ್ದಳು. ಮಕ್ಕಳಿಲ್ಲದಿದ್ದರೆ ಬೇಡ, ಇವಳು ತನ್ನ ಗಂಡ ಮತ್ತು ಅಜ್ಜಿಯನ್ನೂ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_670.txt b/Kannada Sahitya/article_670.txt new file mode 100644 index 0000000000000000000000000000000000000000..cfc059dc8f4f75d1b0bb255f176037a3c69d61a6 --- /dev/null +++ b/Kannada Sahitya/article_670.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕೇದಾರಗೌಳ ತಾಳ — ಝಂಪೆ +ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | +ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| +ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | +ದಾಯಾದಿ ಬಂಧುಗಳ ಬಿಡಲುಬಹುದು || +ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು | +ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು ||೧|| +ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು | +ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು || +ಮಡದಿ – ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು | +ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ||೨|| +ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು | +ಮಾನದಲಿ ಮನವ ತಗ್ಗಿಸಲುಬಹುದು || +ಪ್ರಾಣನಾಯಕನಾದ ಆದಿಕೇಶವರಾಯ | +ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ ||೩|| +***** +ಶಂಕರಾಭರಣ ಚಾಪು ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯ್ತಾನಂತನ ಪ ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಅ ನಾಗಲ್ಕದ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣಿ ಪಿಡಿದುಕೊಂಡು ಬೇಗನೆ […] +ರಾಗ — ಸೌರಾಷ್ಟ್ರ ತಾಳ — ಏಕ ಎಲ್ಲರು ಮಾಡುವುದು ಹೊಟ್ಟೆಗಾಗಿ | ಗೇಣು ಬಟ್ಟೆಗಾಗಿ ||ಪ|| ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು | ಕೂಲಿಗಳ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೧|| […] +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_671.txt b/Kannada Sahitya/article_671.txt new file mode 100644 index 0000000000000000000000000000000000000000..8ff66a096d12a48b6327dec1cd215fc72d99fa14 --- /dev/null +++ b/Kannada Sahitya/article_671.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೀದಿಯಲ್ಲಿ ನೀವು +ಹೋಗುತ್ತಿರುವಾಗ +ಯಾರಾದರೂ ನಮಸ್ಕರಿಸಿದರೆ +ಪಕ್ಕದಲ್ಲಿ ದೇವಸ್ಥಾನ +ಇದೆಯೇ ನೋಡಿ. +***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_672.txt b/Kannada Sahitya/article_672.txt new file mode 100644 index 0000000000000000000000000000000000000000..a40a5ded5927245b70ac6898bda58910c3464dab --- /dev/null +++ b/Kannada Sahitya/article_672.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ +ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ +ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, +ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ +ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- +ಸೂನು ಶಿವರೂಪಾದ ಅಲ್ಲಮಂ ಮಧುಕೇಶ +ಗುಡಿಯಲ್ಲಿ ನುಡಿಸುತಿರೆ ಮದ್ದಳೆಯ ಸೊಲ್ಲಿಗನು- +ಮೋದಿಸುತ ಮೋಹಿಸಿದಳಾ ಮಾಯೆ ಕಾಮಿನಿಯು! +ಪಾರ್ವತಿಯ ತಾಮಸದ ಗುಣಗಳಿಕೆ ಮಾಯೆಯಲಿ +ಮದನಾಗ್ನಿ ಹೊತ್ತಿತೆನೆ ಬೇಟವಟಮಟಿಸುತಿರೆ, +ಅಲ್ಲಮನು ಕಂಗಳಿಗೆ ಮಿಂಚುತಿರೆ, ಚುಂಬನಕೆ +ನಿಲುಕದಿರೆ, ಅಪ್ಪುಗೆಗೆ ಸಿಲುಕದಿರೆ, ಬರಿ ಬಯಲು +ಚಪ್ಪರಿಸಿ ಮೈ ಸೋತ ಮಾಯೆ ಚಿಂತಾಕುಲಂ +ಭಾವಿಸಲು ನಿರ್ವಯಲು ಮಾಯೆ ಕೋಲಾಹಲಂ. +***** +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […] +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_673.txt b/Kannada Sahitya/article_673.txt new file mode 100644 index 0000000000000000000000000000000000000000..b55c3ecdd8d1cbb041639069277ef02cb11dbe8b --- /dev/null +++ b/Kannada Sahitya/article_673.txt @@ -0,0 +1,158 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು ಜರುಗಿದ ಜಾಗಗಳೆಲ್ಲವನ್ನೂ ಒಮ್ಮೆ ನೋಡಿದರೆ ಅಲ್ಲಿ ಈಗಲೂ ನೆಲೆ ನಿಂತ, ಬಹು ಪುರಾತನವೆನ್ನಬಹುದಾದ ವಾತಾವರಣವೇ ನಿಮ್ಮ ಎಲ್ಲ ಸಂಶಯಗಳನ್ನೂ ದೂರ ಮಾಡದೇ ಇರಲಾರದು. +ಕುಮಟೆಯೇ ಬಹು ಪುರಾತನ ಪಟ್ಟಣವಂತೆ. ಅದಕ್ಕೆ ಕುಮಟೆ ಅಥವಾ ಕುಮಠಾ ಎನ್ನುವ ಹೆಸರು ಬರುವ ಮೊದಲು ಅದು ಕುಂಭಾಪುರ ಎನ್ನುವ ಪವಿತ್ರ ಹೆಸರಿನಿಂದ ಲೋಕವಿಖ್ಯಾತವಾಗಿತ್ತೆಂದು ಮಠಕೇರಿಯ ಭಟ್ಟರು ತುಂಬಾ ಅಭಿಮಾನದಿಂದ ಹೇಳುತ್ತಾರಂತೆ. ಬಸ್ತೀಪೇಟೆಯಲ್ಲಿ ಜೈನ ಬಸದಿಯ ಎದುರು ಇದ್ದ ಕುಂಭೇಶ್ವರ ದೇವಸ್ಥಾನದಿಂದಾಗಿ ಈ ಊರಿಗೆ ಕುಂಭಾಪುರ ಎಂಬ ಹೆಸರು ಬಂದಿರಬೇಕೆಂದು ನನಗೆ ಈ ಕಥಾಪ್ರಸಂಗವನ್ನು ನಿರೂಪಿಸಿದ ಗ್ರಹಸ್ಥರ ಅಭಿಪ್ರಾಯ. ಮಠಕೇರಿಯ ನಾಲ್ಕು ಪ್ರಖ್ಯಾತ ದೇವಾಲಯಗಳ ಮಧ್ಯದ ದೊಡ್ಡ ಚೌಕದ ಆಜುಬಾಜಿಗೆ ಬೆಳೆದ ಇಲ್ಲಿಯ ಜನಜೀವನದ ಹೊಸ ಕೇಂದ್ರವಾದ ದೊಡ್ಡ ಪೇಟೆಯಿಂದಾಗಿ ಕುಂಭಾಪುರ ಎನ್ನುವ ಹೆಸರು ಕುಮಟೆಯಾಗಿ ಭ್ರಷ್ಟಗೊಂಡಿರಬೇಕು ಎನ್ನುವುದೂ ನನ್ನ ಈ ಹಿರಿಯ ಮಿತ್ರರದೇ ಅಂದಾಜು. +ಕುಮಟೆಯಲ್ಲಿ ಹಲವು ಹಳೇ ಜನವಸತಿಗಳು ಈಗಲೂ ಅವು ಮೊದಲು ಇದ್ದ ಹಾಗೇ ಇದೆಯೆಂದು ಅವುಗಳನ್ನು ನನಗೆ ತೋರಿಸಿದ ಈ ಮಿತ್ರರು ಹೇಳಿದರು. ನನಗಂತೂ ನಾನು ನೋಡಿದ ಪ್ರತಿಯೊಂದು ಮೂಲೆಯೂ ಹಳೆಯದಾಗಿ ಕಂಡಿತು ; ತೀರ ಹೊಸತೆನ್ನುವುದು ಸಹ ಇಲ್ಲಿ ಬಹುಬೇಗ ಹಳೆಯದಾಗಿಬಿಡುತ್ತದೆಯೇನೋ ಅನ್ನಿಸಿತು. ಹೊಸತಾಗಿ ಎದ್ದ ಬಸ್‌ಸ್ಟ್ಯಾಂಡು, ಕಾಲೇಜು, ಫಾರ್ಮು, ಡೇರಿಗಳು ಕೂಡ ಹೊಸವೆಂದು ಎಂದೂ ತೋರಲಿಲ್ಲವಂತೆ. ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತ ನೆಲ್ಲಿಕೇರಿ ; ಅದನ್ನು ದಾಟಿ ಬಂದರೆ ಹತ್ತುವ ವಲ್ಲೀಗದ್ದೆ, ಬಸ್ತೀಪೇಟೆ ; ಎಡಕ್ಕೆ ಹೊರಳಿ ಮುಂದೆ ಸಾಗಿದರೆ ಸಿಗುವ ಗುಡಿಗಾರ ಗಲ್ಲಿ ; ಅದಕ್ಕೂ ಮುಂದೆ ಹೋಗಿ ಹುಲಿದೇವರ ಗುತ್ತದ ಘಾಟಿ ಹತ್ತಿ, ಇಳಿದದ್ದೇ ಮೊದಲಾಗುವ ಹೆರವಟ್ಟೆ ; ಗುಡಿಗಾರ ಗಲ್ಲಿಗೆ ಹೋಗುವ ಮೊದಲು ಬಲಕ್ಕೆ ಹೊರಳಿದರೆ ಪೈವಾಡೆ, ಗುಜ್ಜರವಾಡೆ, ತಾಮ್ರಪೇಠೆ ; ಅಲ್ಲಿಂದ ದೂರ ಸಣ್ಣ ಬಂದರ, ಇನ್ನೂ ದೂರ ದೊಡ್ಡ ಬಂದರ ; ತಾಮ್ರಪೇಠೆಯಿಂದ ಮುಂದೆ ಹೋಗುವ ಬದಲು ಬಲಕ್ಕೆ ಹೊರಳಿದರೆ ‘ಬಾಜಾರ್’ ಎನ್ನುವ ಹೆಸರಿನಿಂದ ಮೆರೆಯುವ ಹತ್ತು ಫೂಟು ಅಗಲದ ಓಣಿಯ ಇಬ್ಬದಿಗಳಲ್ಲಿ ಪದ್ಮಾಸನ ಹಾಕಿ ಸೆಟೆದು ಕುಳಿತ ಸಾಲು ಅಂಗಡಿಗಳು; ಕೊನೆಯಲ್ಲಿ ಮಠಕೇರಿಯ ದೊಡ್ಡ ಚೌಕು ; ಅದರ ಗಡಿಗಳಲ್ಲಿ ನಾಲ್ಕು ದೇವಾಲಯಗಳು, ಮೂರು ಅಶ್ವತ್ಠ ಕಟ್ಟೆಗಳು, ಇನ್ನಷ್ಟು ಅಂಗಡಿಗಳು ; ಅಲ್ಲಿಂದ ಬಲಕ್ಕೆ ಹೊರಳಿ ಮತ್ತೊಮ್ಮೆ ಬಲಕ್ಕೆ ಹೊರಳಿದರೆ ಹತ್ತುವುದೇ ಮಿಣಮಿಣ್ಯಾ ಓಣಿ; ಎಡಕ್ಕೆ ಹೊರಳಿ ಆಮೇಲೆ ಬಲಕ್ಕೆ ಹೊರಳಿದ್ದೇ ಮೊದಲಾಗುವುದು ಚಿತ್ರಗಿ ; ದಾರಿಯಲ್ಲಿ ಹಾಳುಬಿದ್ದ ಜಟ್ಕಾ ದೇವರ ಗುಡಿ-ಹೆಸರುಗಳಲ್ಲಿ ಹೇಗೋ ಹಾಗೇ ಕಾಣುವುದರಲ್ಲೂ ಹಳೆಯವೇ. ಹೊಸತಿಗೆ, ಅದು ಹುಟ್ಟಿಕೊಳ್ಳುವ ಕ್ಷಣದಲ್ಲೇ, ಹಳೆಯದರ ಮೆರುಗು ಬರುವಂತೆ ಮಾಡುವ ಖುಬಿ ಈ ಊರಿನ ಹುಟ್ಟುಗುಣವಾದಂತಿತ್ತು. ಅಂದಮೇಲೆ ನಾನು ಹೇಳಲು ಹೊರಟ ಕಥಾಪ್ರಸಂಗವಾದರೂ ಈ ಕ್ರಿಯೆಯಿಂದ ಹೇಗೆ ತಪ್ಪಿಸಿಕೊಂಡೀತು ! +ಉತ್ತರ ಕನ್ನಡದ ಇತರ ಊರುಗಳ ಜನರೊಂದಿಗೆ ಹೋಲಿಸಿದರೆ ಕುಮಟೆಯ ಜನರಲ್ಲಿ ‘ರಪ್’ನೆ ಎದ್ದುಕಾಣುವ ಗುಣವೆಂದರೆ ನಾಲ್ಕು ಕೇರಿಗಳನ್ನು ಒಂದು ಮಾಡುವಂತೆ ತೆಂಗಿನ ಮರದಷ್ಟು ಎತ್ತರವಾದ ದನಿಯಲ್ಲಿ ಮಾತನಾಡುವ ಇವರ ದುರಭ್ಯಾಸ ; ಮಾತುಮಾತಿಗೆ ಬಾಯಿಂದ ಉದುರುವ ‘ಮೇಡ್ ಇನ್ ಕುಮಠಾ’ ಛಾಪುಳ್ಳ ಬೈಗಳು ತುಂಬಿದ ಗಂಡುಭಾಷೆ. ಯಾವಾಗಲೂ ಬಾಯಿ ತುಂಬಿರುತ್ತಿದ್ದ ಕವಳದೆಂಜಲಿನಿಂದ ಒದ್ದೆಯಾದ ವಿಶಿಷ್ಟ ಉಚ್ಛಾರ. ನನಗೆ ಈ ಕಥೆ ಹೇಳುವ ನನ್ನ ಮಿತ್ರರ ಆತುರ ಇಂಥ ಭಾಷೆಯಲ್ಲೇ ವ್ಯಕ್ತಗೊಂಡಿತ್ತು. +“ಒಂದೇ ಬಟ್ಟಲಲ್ಲಿ ಉಣ್ಣುತ್ತಿದ್ದ ಈ ಬೋಳೀಮಕ್ಕಳಷ್ಟು ಅನ್ಯೋನ್ಯರಾದ ಗೆಳೆಯರು ನಿಮಗೆ ಹುಡುಕಿದರೂ ಸಿಗಲಾರರು. ಅವರ ಬಗ್ಗೆ ಹೇಳುವ ಮೊದಲು ಅವರಿಬ್ಬರೂ ಜೊತೆಯಾಗಿ ಓಡಾಡಿದ ಜಾಗಗಳನ್ನು ತೋರಿಸುತ್ತೇನೆ.” +ಊರು ನೋಡಿ ಬಂದ ರಾತ್ರಿ ಕಥೆ ಹೇಳಲು ತೊಡಗಿದಾಗ ನನ್ನ ಮಿತ್ರರು ಒಮ್ಮೆಲೇ ಗಂಭೀರರಾದರು. ಭಾಷೆ ಬದಲುಗೊಂಡಿತ್ತು. ಅದರಲ್ಲಿ ಒಂದೂ ಬಯ್ಗುಳವಿರಲಿಲ್ಲ. ದನಿ ಮೆತ್ತಗಾಯಿತು. ಉಚ್ಛಾರಗಳು ಸ್ಫುಟವಾದವು. ಕವಳ ಮೆಲ್ಲುವ ಅಭ್ಯಾಸವಿದ್ದೂ ಒಮ್ಮೆಯೂ ಕವಳ ಹಾಕಿಕೊಳ್ಳಲಿಲ್ಲ. ಅಂದು ಭೇಟಿಯಿತ್ತ ಜಾಗಗಳೇ ಜಾದು ಮಾಡಿದವು ಎನ್ನುವ ತರಹ ನಿರೂಪಣೆಯ ಧಾಟಿಗೆ. ಅದರ ಕ್ರಮಕ್ಕೆ ಬೇರೆಯೇ ಕಳೆ ಬರತೊಡಗಿತು +– ೨ – +ಅನ್ಯೋನ್ಯತೆಯ ಮಟ್ಟಿಗೆ ತಮಗೆ ತಾವೇ ಉದಾಹರಣೆಯಾಗಿದ್ದ ಈ ಗೆಳೆಯರು ಹುಟ್ಟಿ ಬೆಳೆದದ್ದು ಮಠಕೇರಿಯಲ್ಲಿ. ಒಬ್ಬನ ಹೆಸರು ಗೋವಿಂದ. ಇನ್ನೊಬ್ಬನದು ವಿಷ್ಣು. ಎರಡೂ ಸಹಸ್ರ ನಾಮಾವಳಿಗೆ ಸೇರಿದ ಹೆಸರುಗಳೇ. ಒಂದೇ ವಯಸ್ಸಿವರು ಇಬ್ಬರೂ_ಈ ಕಥೆ ಒಂದು ದುಷ್ಟ ತಿರುವು ತೆಗೆದುಕೊಂಡು ಈಗಿನ ಮರೆಯಲಾಗದ ಪ್ರಸಂಗವಾಗುವ ಹೊತ್ತಿಗೆ ಇಪ್ಪತ್ತು-ಇಪ್ಪತ್ತೊಂದು ವರ್ಷದವರಿರಬೇಕು. ಗೋವಿಂದ, ಮಠದ ವೆಂಕಟರಮಣ ದೇವರ ಮುಖ್ಯ ಪೂಜಾರಿಗಳಾದ ಪರಶುರಾಮಭಟ್ಟರ ಮಗ. ಮೂರು ಹುಡುಗಿಯರ ನಂತರ ಏಕೈಕ ಗಂಡುಸಂತಾನವಾಗಿ ಹುಟ್ಟಿದವನು. ಮಠದ ಪೌಳಿಯಲ್ಲೇ ಮೂರು ಸಾಲುಕೋಣೆಗಳಲ್ಲಿ ಹೂಡಿದ ಬಿಡಾರದಲ್ಲಿ ದೊಡ್ಡವನಾದವನು. ಉತ್ತರ ಕನ್ನಡದಲ್ಲಿ ಆಗಿನ್ನೂ ಕಾಲೇಜು ಇದ್ದಿರಲಿಲ್ಲವಾದ್ದರಿಂದ ಧಾರವಾಡದಲ್ಲಿ ಸಂಸ್ಕೃತದಲ್ಲಿ ಬಿ.ಎ. ಪರೀಕ್ಷೆ ಮುಗಿಸಿ ಆಗಷ್ಟೇ ಊರಿಗೆ ಬಂದಿದ್ದ. ಪರಿಣಾಮ ತಿಳಿದಮೇಲೆ ಕುಮಟೆಯದೇ ಸಾಲೆಯಲ್ಲಿ ಶಿಕ್ಷಕನಾಗುವ ವಿಚಾರವಿತ್ತು ಅವನಿಗೆ. ವಿಷ್ಣು ಕುಮಟೆಯಲ್ಲಿ ಪೈ ಸಾವಕಾರರೆಂದೇ ಕರೆಯಲ್ಪಡುತ್ತಿದ್ದ ಊರಿನ ಶ್ರೀಮಂತರಾದ ಶೇಷ ಪೈಗಳ ಒಬ್ಬನೇ ಮಗ. ಮಠದೆದುರಿನ ಅಂಗಡಿಗಳ ಸಾಲಿನ ಹಿಂಬದಿಯ ದೊಡ್ಡ ಕಂಪೌಂಡಿನಲ್ಲಿದ್ದ ಬಂಗಲೆಯಂಥ ಮನೆಯಲ್ಲಿ ಬೆಳೆದವನು. ಅವನೂ ಧಾರವಾಡದಲ್ಲಿ ಬಿ.ಎಸ್.ಸಿ. ಮುಗಿಸಿ ಗೋವಿಂದನ ಜೊತೆಗೇ ಊರಿಗೆ ಬಂದಿದ್ದ. ಮುಂದೆ ಕಲಿಯುವ ಮನಸ್ಸಿತ್ತು. ಮನೆಯವರ ನೆರವೂ ಇತ್ತು. ಆದರೂ ತಾನೇ ಗಟ್ಟಿಯಾದ ನಿರ್ಧಾರಕ್ಕೆ ಬಂದಿರಲಿಲ್ಲ. +ಭಟ್ಟರ ಹುಡುಗ ಗೋವಿಂದ ಎಲ್ಲ ಭಟ್ಟರ ಹುಡುಗರ ಹಾಗೆ ಇರಲಿಲ್ಲ. ತೆಳ್ಳಗೆ, ಬೆಳ್ಳಗೆ, ಉದ್ದನಿದ್ದ. ಚೆಂದನಿದ್ದ. ಅಪ್ಪ-ಅಮ್ಮರ ಹಾಗೆ ಲಠ್ಠನಿರಲಿಲ್ಲ. ಆದರೆ ಭಟ್ಟರಿಗೆ ಶೋಭಿಸದ ರೀತಿಯಲ್ಲಿ ತುಂಬಾ ಷೋಕಿಯಾಗಿದ್ದ. ಸಾಹಸಿಯಾಗಿದ್ದ. ಸಿಗರೇಟು-ಬೀಡಿಗೆ ಇನ್ನೂ ಕೈ ಹಚ್ಚಿರಲಿಲ್ಲವಾದರೂ ಕುಮಟೆಯ ಹಲವು ಹುಡುಗರ ಹಾಗೆ ಆಗೊಮ್ಮೆ ಈಗೊಮ್ಮೆ ಪಾನ್-ಬೀಡ ಮೆಲ್ಲುತ್ತಿದ್ದ. ನಾಲಗೆ ಕೆಂಪಾದುದನ್ನು ನೋಡಿ ‘ಹೀ’ ಎಂದು ಖುಶಿಪಡುತ್ತಿದ್ದ. ತಲೆಗೆ ಚಂಡಿಕೆ ಇಡದೇ ಕ್ರಾಪು ಮಾಡಿಕೊಂಡು ಶರ್ಟು-ಪ್ಯಾಂಟು ಧರಿಸುತ್ತಿದ್ದ. ಕಾಲಲ್ಲಿ ‘ಚರ್‍ಮುರ್’ ಚಪ್ಪಲಿ ಮೆಟ್ಟುತ್ತಿದ್ದ. ಕುಮಟೆಯ ಜನರ ಹಾಗೆ ದೊಡ್ಡಕ್ಕೆ ಮಾತಾಡುತ್ತಿದ್ದ. ಮಾತುಮಾತಿಗೆ ದೊಡ್ಡಕ್ಕೆ ನಗುತ್ತಿದ್ದ. +ವಿಷ್ಣು ತೀರ ವಿರುದ್ಧ ಪ್ರಕೃತಿಯವನು. ರೂಪದಲ್ಲೂ ಹಾಗೇನೆ : ದುಂಡಗಿದ್ದ. ಕುಳ್ಳನಲ್ಲವಾದರೂ ಹೆಚ್ಚು ಉದ್ದನೂ ಆಗಿರಲಿಲ್ಲ. ಕಪ್ಪನಲ್ಲವಾದರೂ ಬೆಳ್ಳಗಿರಲಿಲ್ಲ. ಗುಂಗುರು ತಲೆಗೂದಲು, ದೊಡ್ಡ ಕಿವಿಗಳು. ಆಗರ್ಭ ಶ್ರೀಮತನ ಮಗನಾಗಿಯೂ ಮೋರೆಯ ಮೇಲೆ ಒಂದು ಬಗೆಯ ಮ್ಲಾನತೆಯ ಕಳೆ. ತುಟಿಯ ಅಂಚುಗಳಲ್ಲಿ ಮಾತ್ರ ನೋಡಿದವರಿಗೆ ಖುಶಿ ಕೊಡುವ ಮುಗುಳ್ನಗೆ. ಕಣ್ಣುಗಳಲ್ಲಿ ಅಸಾಧಾರಣ ತೇಜಸ್ಸು. ಮಾತಿಗಿಂತ ಮೌನ ಹೆಚ್ಚು ಪ್ರಿಯನಾದವನು ಮಾತನಾಡುವುದು ಮೇಲುದನಿಯಲ್ಲಾಗಿತ್ತು. +ಇವರು ಇಷ್ಟು ಹತ್ತಿರದ ಗೆಳೆಯರು ಆದರಾದರೂ ಹೇಗೆ ಎನ್ನುವುದು ಕೊನೆಯವರೆಗೆ ಒಡೆಯದ ಒಗಟಾಗಿಯೇ ಉಳಿಯಿತು. ಒಂದೇ ಕೇರಿಯಲ್ಲಿ ಹುಟ್ಟಿ ದೊಡ್ಡವರಾದವರು ಎನ್ನುವ ವಿವರಣೆ ತೀರ ಸಪ್ಪೆಯಾಗಿ ತೋರಿತು. ಚಿಕ್ಕವರಿದ್ದಾಗ ಕೈಯಲ್ಲಿ ಕೈಹಿಡಿದು ಓಡಾಡುತ್ತಿದ್ದ ಪುಟಾಣಿಗಳನ್ನು ನೋಡಿದ ಜನ ಲವ-ಕುಶರ ಜೋಡಿಯನ್ನು ನೆನೆದರೆ, ದೊಡ್ಡವರಾದ ಮೇಲೆ ಕೈಯಲ್ಲಿ ಕೈ ಹಿಡಿದು ಅಲ್ಲವಾದರೂ ನೋಡಿದವರ ಕಣ್ಣು ತುಂಬುವ ಜೋಡಿಯಾಗಿ ತಿರುಗಾಡುತ್ತಿದ್ದವರನ್ನು ನೋಡಿದ ಜನ ಭರತ-ಶತ್ರುಘ್ನರನ್ನು ನೆನೆದರು. ಒಟ್ಟಿನಲ್ಲಿ ಬೇರೆ ಕಾರಣ ಹೊಳೆಯದ್ದಕ್ಕೆ ಈ ನಿಗೂಢ ಆಕರ್ಷಣೆಯನ್ನು ಪೂರ್ವಜನ್ಮದ ಋಣಾನುಬಂಧವೆಂದು ಕರೆದು ಸಮಾಧಾನಪಟ್ಟರು. +ಇಷ್ಟಕ್ಕೂ ಈ ಪ್ರಖ್ಯಾತ ಸಂಚಾರಗಳಲ್ಲಿ ಪರಸ್ಪರರೊಳಗೆ ಅವರು ಮಾತನಾಡಿಕೊಳ್ಳುತ್ತಿದ್ದುದಾದರೂ ಏನು ? ಯಾರಿಗೂ ಪತ್ತೆಯಾಗಿರಲಿಲ್ಲ. ಆದರೂ ಒಂದು ಸಂಗತಿ ಲಕ್ಷ್ಯಕ್ಕೆ ಬಾರದಿರಲಿಲ್ಲ. ಈ ಸಂಚಾರಗಳ ಕಾಲಕ್ಕೆ ಮಾತನಾಡುತ್ತಿದ್ದವನು ಭಟ್ಟರ ಹುಡುಗ ಗೋವಿಂದನು ಮಾತ್ರ. ವಿಷ್ಣು ಬರೇ ಕೇಳಿಕೊಳ್ಲುತ್ತಿದ್ದ : ಗೋವಿಂದ ಮಾಡುತ್ತಿದ್ದ ಹಾವಭಾವಗಳನ್ನು ನೋಡುತ್ತಿದ್ದ. +ಗೋವಿಂದ ವಿಷ್ಣು ಭೇಟಿ ಕೊಡುತ್ತಿದ್ದ ಜಾಗಗಳನ್ನು ತೋರಿಸುತ್ತಲೇ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ ನನ್ನ ಮಿತ್ರರು ದಿನದ ಕೊನೆಯಲ್ಲಿ ನನ್ನನ್ನು ಮಠಕೇರಿಯ ಆ ದೊಡ್ಡ ಚೌಕಕ್ಕೆ ಕರೆದುಕೊಂಡು ಬಂದರು. ಈ ಚೌಕ ಅವರ ಕಥೆಗೆ ಜೀವಂತ ಸಂಬಂಧವುಳ್ಳದ್ದಾಗಿರುವಾಗಲೂ ನಮ್ಮ ಸುತ್ತಾಟದ ಕೊನೆಯಲ್ಲಿ ಇಲ್ಲಿಗೆ ಬಂದದ್ದು, ಆಕಸ್ಮಿಕವಲ್ಲವೆಂದು ನನಗೆ ಕೂಡಲೇ ಹೊಳೆಯಿತು. ಅಂದು ಕೈಗೊಂಡ ಸಂಚಾರಕ್ಕೆ, ಕಥಾಪ್ರಸಂಗದ ನಾಯಕದ್ವಯರ ಪರಿಚಯಕ್ಕೆ ನಿಶ್ಚಿತವಾದ ಕ್ರಮವಿದ್ದದ್ದು ನನ್ನ ಲಕ್ಷ್ಯಕ್ಕೆ ಬಂದಿತ್ತು. ಬಹುಶಃ ತಮ್ಮ ನಿರೂಪಣೆಯ ಪ್ರಾಮಾಣಿಕತೆಯನ್ನು ನನ್ನ ಮೇಲೆ ಬಿಂಬಿಸಲು ಈ ಕ್ರಮ ಅವಶ್ಯವೆಂದು ಅವರು ತಿಳಿದಿರುವ ಅನುಮಾನವಾಯಿತು. +ಮಠಕೇರಿಗೆ ನಾವು ಬಂದು ಮುಟ್ಟಿದಾಗ ಚೌಕದ ಮೇಲೆ ಮುಸ್ಸಂಜೆಯ ಮಬ್ಬುಗತ್ತಲೆ ಇಳಿದಿತ್ತು. ರಥಸಪ್ತಮಿಯ ದಿವಸ ಕುಮಟೆಯಲ್ಲಿ ತೇರಿನ ಜಾತ್ರೆ ನೆರೆಯುತ್ತಿದ್ದದ್ದು ಇದೇ ಚೌಕದಲ್ಲಾಗಿತ್ತು. ಚೌಕದ ಒಂದು ತುದಿಯಲ್ಲಿದ್ದ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ರಥಯಾತ್ರೆ ಶಾಂತೇರಿ ಕಾಮಾಕ್ಷಿ ದೇವಸ್ಥಾನವನ್ನು ದಾಟಿ ಇನ್ನೊಂದು ಕೊನೆಯಲ್ಲಿದ್ದ ಕಾವೇರಿ ಕಾಮಾಕ್ಷಿ, ಮ್ಹಾಳಸಾ ದೇವಸ್ಥಾನಗಳವರೆಗೂ ಸಾಗುತ್ತಿತ್ತು. ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಪ್ರವೇಶದ್ವಾರದ ಹೊರಗೆ ದೊಡ್ಡದೊಂದು ಕಟ್ಯ್ಟೆಯಿದ್ದ ಬಾವಿ. ಬಾವಿಕಟ್ಟೆಯಿಂದ ತುಸು ದೂರವಾಗಿ ಅದರ ರಸ್ತೆಯಂಚಿಗೆ ಹತ್ತಿರವಾಗಿ ಸಿಮೆಂಟಿನಲ್ಲಿ ಕಟ್ಟಿಸಿದ ಒಂದು ಬೆಂಚು ಇತ್ತು. ಸುಮಾರು ಎಂಟು ಫೂಟು ಉದ್ದವಾದ ಸೋಫಾ ಆಕಾರದ ಈ ಬೆಂಚು ಹಲವು ಕಡೆಗಳಲ್ಲಿ ಮುರಿದಿತ್ತು. ಆದರೂ ನನ್ನ ಮಿತ್ರರು ನನ್ನನ್ನು ಆ ಬೆಂಚಿಗೇ ಕರೆದೊಯ್ದರು. ಬೆಂಚಿನ ಈಗಿನ ಸ್ಥಿತಿಯಲ್ಲಿ ಅದರ ಮೇಲೆ ಯಾರೂ ಕೂರುತ್ತಿರಲಿಲ್ಲವೇನೋ. ಹಾಗಾಗಿ ಈಗ ಕುಳಿತುಕೊಂಡ ನಾವಿಬ್ಬರೂ ಹಲವರ ಕುತೂಹಲಕ್ಕೆ ವಸ್ತುವಾದೆವು. +ಬೆಂಚಿನ ಮೇಲೆ ಕುಳಿತುಕೊಳ್ಳುತ್ತಲೇ “ಇಲ್ಲಿ ಕುಳಿತಾಗ ಏನಾದರೂ ವಿಶೇಷ ಅನ್ನಿಸುತ್ತಿದೆಯೆ ?” ಎಂದು ಕೇಳಿದರು. ನನ್ನ ಬದಿಯಲ್ಲಿ ಕುಳಿತ ಮಿತ್ರರು, ನನಗೆ ಪ್ರಶ್ನೆಯ ಅರ್ಥ ತಿಳಿಯದೇ ಗೊಂದಲದಲ್ಲಿ ಬಿದ್ದೆ. ನನ್ನ ಉತ್ತರವನ್ನು ಕಾಯದೇ ಅವರು ನಾವು ಕೂತಲ್ಲಿಂದ ಕಾಣುವ ಎಲ್ಲವನ್ನೂ ಇದು ಮಠ. ಅದು ಇಲ್ಲಿಯ ಬಾಜಾರು ಎಂಬಂಥ ತೀರ ವಾಸ್ತವಿಕವಾದ ಸರಳ ಧಾಟಿಯಲ್ಲಿ ವರ್ಣಿಸುತ್ತಿದ್ದಂತೆ ಪರಿಸರದ ಸಣ್ಣಪುಟ್ಟ ವಿವರಗಳಿಗೂ ವಿಲಕ್ಷಣ ನಿಗೂಢತೆಯ ಮೆರುಗು ಬರತೊಡಗಿದ ಭಾಸವಾಗಿ ಮೈ ಮುಳ್ಳು ಬಿಟ್ಟಿತು. ಇವರು ಹೇಳಹೊರಟ ಕಥೆಯ ಜೀವಾಳ ಇಲ್ಲೆಲ್ಲೋ ಇದೆಯೆಂದು ಭಾವನೆಯಾಗುತ್ತಿದ್ದಂತೆ ನನ್ನ ಮಿತ್ರರು, “ಚಂದ್ರನ ಬೆಳಕಿನಲ್ಲಿ ನೋಡಬೇಕು. ಆಗ, ಈ ಚೌಕ ಮನಸ್ಸಿನ ಮೇಲೆ ಮಾಡುವ ಪರಿಣಾಮವೇ ಬೇರೆ. ಈಗ ನೀವೇ ನೋಡುವಿರಂತೆ. ನಾಳೆ ಹುಣ್ಣಿಮೆ. ಇನ್ನು ಕೆಲ ಹೊತ್ತಿನಲ್ಲೇ ಚಂದ್ರೋದಯ” ಎಂದರು. ಆಮೇಲೆ ಐನು ಮಾತಿಗೆ ಬರುವ ಧರ್ತಿಯಲ್ಲಿ, “ಊರೆಲ್ಲ ಸುತ್ತಾಡಿ ಬಂದಮೇಲೆ ಅವರಿಬ್ಬರೂ ವಿರಮಿಸುತ್ತಿದ್ದುದು ಇದೇ ಬೆಂಚಿನ ಮೇಲಾಗಿತ್ತು. ಸುತ್ತಲಿನದನ್ನು ನೋಡುತ್ತ ಮೌನ ಧರಿಸಿ ಕುಳಿತುಬಿಡುತ್ತಿದ್ದರು. ಒಂದು ಅರ್ಧ ಗಂಟೆ ಹಾಗೆ ಕುಳಿತವರು ಗಪ್‌ಚಿಪ್ ಎದ್ದು ಮನೆಯ ಹಾದಿ ಹಿಡಿಯುತ್ತಿದ್ದರು. ಇಬ್ಬರ ಮನೆಗಳೂ ಇಲ್ಲಿಂದ ಎರಡು ಮಿನಿಟಿನ ಹಾದಿ. ಈ ಪರಿಪಾಠದ ಪರಿಚಯವಿದ್ದ ಯಾರೂ ಮುಸ್ಸಂಜೆಯ ಈ ಹೊತ್ತಿನಲ್ಲಿ ಆ ಬೆಂಚಿನ ಮೇಲೆ ಕೂರುವ ಆಗ್ರಹ ಹಿಡಿಯುತ್ತಿರಲಿಲ್ಲ” ಎಂದರು. +ಕಥಾಪ್ರಸಂಗಕ್ಕೆ ಚಾಲನೆಯಿತ್ತ ಮುಖ್ಯ ಘಟನೆಗೆ ಬರುವ ಮೊದಲು ಆಚರಿಸಲೇಬೇಕಾದ ಒಂದು ಧಾರ್ಮಿಕ ವಿಧಿಯೆಂಬಂತೆ ಕೈಕೊಂಡ ಈ ಪರಿಭ್ರಮಣ. ಮಬ್ಬುಗತ್ತಲೆಯಲ್ಲಿ ಆಮೇಲೆ ಬೆಳ್ದಿಂಗಳ ಬೆಳಕಿನಲ್ಲಿ ಮಾಡಿದ ಚೌಕದ ವೀಕ್ಷಣಗಳು ಮುಗಿದು ನಾವು ಮನೆಯ ಹಾದಿ ಹಿಡಿದಾಗ ನನ್ನ ಮಿತ್ರರು ಒಮ್ಮೆಲೇ ಮೌನ ಧರಿಸಿದರು. ಈ ಮೌನ ಕೂಡ ಈ ಕರ್ಮಕಾಂಡದ್ದೇ ಮುಂದುವರಿಕೆಯಿರಬೇಕೆಂದು ತಿಳಿದು ನಾನೂ ಮೌನನಾದೆ. ಮನೆ ತಲುಪಿದಮೇಲೂ ಬಹಳ ಹೊತ್ತು ಅವರು ನನ್ನನ್ನು ಮಾತನಾಡಿಸಲಿಲ್ಲ. ಆಮೇಲೆ ಊಟಕ್ಕೆ ಕೂರುವ ಕೆಲಹೊತ್ತಿನ ಮೊದಲಷ್ಟೇ ಬಾಯಿ ತೆರೆದರು_ +“ಈ ತರುಣರ ಒಡನಾಟ ಇಲ್ಲಿಯ ಜನರ ಬದುಕಿನಲ್ಲಿ ಎಷ್ಟೊಂದು ಆತ್ಮೀಯವಾಗಿ ಹಾಸುಹೊಕ್ಕಾಗಿದೆಯೆಂದರೆ ಅವರು ಕಾಲೇಜು ಸೇರಿದಮೇಲೆ ಊರಲ್ಲಿಲ್ಲದ ಅಲ್ಪ ಕಾಲದಲ್ಲಿ ಕೂಡ ಏನೋ ಕಳಕೊಂಡವರ ಹಾಗೆ ಬೇಚೈನರಾಗುತ್ತಿದ್ದೆವು. ಹೀಗಿರುವಾಗ ಅವರು ತಮ್ಮ ಪರೀಕ್ಷೆಗಳನ್ನು ಮುಗಿಸಿ ಊಗಿಗೆ ಬಂದ ಕೆಲವು ದಿನಗಳಲ್ಲೇ ಒಂದು ರಾತ್ರಿ ಇಬ್ಬರೂ ಇದ್ದಕ್ಕಿದ್ದ ಹಾಗೆ ಮನೆಯಿಂದ ಬೇಪತ್ತೆಯಾಗಿರುವ ಸುದ್ದಿ ತಿಳಿದಾಗ ನಮಗೆಲ್ಲ ಅಕ್ಷರಶಃ ತಲೆಯ ಮೇಲೆ ಆಕಾಶವೇ ಕಳಚಿಬಿದ್ದ ಅನುಭವವಾಯಿತು. ಇಬ್ಬರ ಹಾಸಿಗೆಗಳಲ್ಲೂ, “ಒಂದು ಒಳ್ಳೆ ಉದ್ದೇಶಕ್ಕಾಗಿಯೇ ದೂರ ಹೊರಟಿದ್ದೇನೆ. ಹುಡುಕಬೇಡಿ’ ಎಂಬಂಥ ಮಜಕೂರು ಗೀರಿದ ಚೀಟಿಗಳಿದ್ದವು. ಇದರಾಚೆ ಯಾರಿಗೂ ಆಗ ಏನೂ ತಿಳಿಯಲಿಲ್ಲ.” +– ೩ – +ಈ ನಿಗೂಢ ನಿರ್ಗಮನಗಳಿಂದಾಗಿ ಊರ ಜನರ ಭಾವನಾತ್ಮಕ ಜೀವನದಲ್ಲಿ ತುಂಬಲಾರದ ದೊಡ್ಡ ಪೊಳ್ಳು ನಿರ್ಮಾಣವಾಯಿತು. ತಮಗರಿವಿಲ್ಲದೇನೆ ತಾವು ಅಷ್ಟೊಂದು ಪ್ರೀತಿಸಿದ ಈ ವಿಲಕ್ಷಣ ಮುಗ್ಧರ ಬಗ್ಗೆ ಜನ ಆಡಿಕೊಳ್ಳತೊಡಗಿದರು. ಮಮ್ಮಲ ಮರುಗಿದರು. ಹಲವರಿಗೆ ನೆಲ್ಲಿಕೇರಿಯ ನಾರದಮುನಿಯೆಂದೋ, ಕೃಷ್ಣಕಾರಸ್ಥಾನಿಯೆಂದೋ, ಕೌಟಿಲ್ಯ ದೀಡಬುದ್ವಂತನೆಂದೋ-ಒಟ್ಟಿನಲ್ಲಿ ಹಲವು ಅಭಿದಾನಗಳಿಂದ ಪ್ರಖ್ಯಾತನಾಗಿದ್ದ-ವೈಕುಂಠಬಾಳ್ಗಿಯ ಮೇಲೆ ಗುಮಾನಿ ; ಈ ಓಟುಗಳ ಹಿಂದೆ ಒಬ್ಬರ ಒಳಿತನ್ನು ನೋಡಲಾಗದ ಇವನದೇ ಕಪಟ ಹಸ್ತವಿದೆಯೆಂದು, ಖಾತರಿ ಮಾಡಿಕೊಳ್ಳಲು ಹೋಗಿ ಅವನನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾತ್ರ ಊರಲ್ಲಿ ಯಾರಿಗೂ ಇರಲಿಲ್ಲ. +ಇತ್ತ, ಮನೆ ಬಿಟ್ಟು ಮೂರು ತಿಂಗಳಾಗುತ್ತ ಬಂದರೂ ಇನ್ನೂ ಹಿಂದಿರುಗಿರದ ಮಕ್ಕಳ ಬಗ್ಗೆ ಆತಂಕಗೊಂಡ ಪರಶುರಾಮಭಟ್ಟ ಮತ್ತು ಶೇಷ ಪೈಗಳು ಪರಸ್ಪರರನ್ನು ಕಂಡು ಮಾತನಾಡಿದರು. ಆಮೇಲೆ ಊರಿನ ಕೆಲವರಿಗಾದರೂ ತಮ್ಮ ಮನೆಯಲ್ಲಿ ನಡೆದದ್ದನ್ನು ತಿಳಿಸುವುದನ್ನು ನಿಶ್ಚಯಿಸಿ ಇಬ್ಬರು ಘನಸ್ಥರನ್ನು ಮನೆಗೆ ಕರೆಸಿಕೊಂಡರು. ಹಾಗೆ ಕರೆಸಿಕೊಂಡ ಇಬ್ಬರಲ್ಲಿ ನನ್ನ ಮಿತ್ರರು ಒಬ್ಬರಾಗಿದ್ದರು. ಮಕ್ಕಳ ಅಪ್ಪಂದಿರಿಂದ ಗೊತ್ತಾದದ್ದಿಷ್ಟು. +ವಿಧಿನಿಯಮದಿಂದಲೋ ಎಂಬಂತೆ ಇಬ್ಬರೂ ಅಪ್ಪಂದಿರಿಗೆ ಒಂದೇ ಕಾಲಕ್ಕೆ ಇವರ ಗೆಳೆತನ ಅತಿಗೆ ಹೋಗುತ್ತಿದೆ, ಇದು ಇವರ ಭವಿಷ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರ ತಲೆಯಲ್ಲಿ ಹೊಕ್ಕುಬಿಟ್ಟಿದೆ. ಹೇಗಾದರೂ ಮಾಡಿ ಇವರ ಈ ಹುಚ್ಚನ್ನು ಬಿಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಪರೀಕ್ಷೆಗಳನ್ನು ಮುಗಿಸಿ ಊರಿಗೆ ಬಂದಿರುವ ಈ ಸಮಯವೇ ಈ ಕೆಲಸಕ್ಕೆ ಯೋಗ್ಯವಾದದ್ದೆಂದೂ ಇವರ ಗೆಳೆತನವನ್ನು ಕೆಡಿಸುವುದೇ ಈ ಹುಚ್ಚು ಬಿಡಿಸುವ ಸುಲಭ ಉಪಾಯವೆಂದು ತೀರ್ಮಾನಿಸಿದ್ದಾರೆ. ಆದರೆ ಇಂಥ ಗೆಳೆತನವನ್ನು ಕೆಡಿಸುವುದಾದರೂ ಹೇಗೆಂದು ತಿಳಿಯದೇ ತಮ್ಮ ತಲೆಯಲ್ಲಿ ಬಂದ ವಿಚಾರಗಳಿಗೆ ತಾವೇ ನಾಚಿಕೆಪಟ್ಟುಕೊಂಡು ಅವುಗಳನ್ನು ಬಿಟ್ಟುಕೊಟ್ಟ ಗಳಿಗೆಯಲ್ಲೇ-ಕರ್ಮ-ಧರ್ಮ ಸಂಯೋಗದಿಂದ ಎಂಬಂತೆ-ಕುಮಟೆಯಲ್ಲಿ ಒಬ್ಬ ವಿಲಕ್ಷಣ ವ್ಯಕ್ತಿಯ ಆಗಮನವಾಯಿತು. +ಅಪರಿಚಿತ ಆಗಂತುಕನ ಚಿತ್ರವಿಚಿತ್ರ ವೇಷಭೂಷೆಯೇ ನೋಡಿದವರ ಮನಸ್ಸನ್ನು ತಕ್ಷಣ ಸಮ್ಮೋಹಿಸುವಂಥಾದ್ದಾಗಿತ್ತು. ಪಾದಗಳವರೆಗೂ ಉದ್ದವಾಗಿ ಇಳಿದ, ಉದ್ದ ತೋಳುಗಳುಳ್ಳ ಕಪ್ಪಾನುಕಪ್ಪು ನಿಲುವಂಗಿ, ತಲೆಗೆ ಹಸಿರು ಕೆಂಪು ಬಣ್ಣದ ಹಗ್ಗಗಳಿಂದ ಹೆಣೆದ ಟೋಪಿಯ ಆಕಾರದ ಶಿರಸ್ತ್ರಾಣ. ಅಂಗಿಯ ತೋಳುಗಳಿಂದ ಆಗೀಗ ಹೊರಗೆ ಇಣುಕುತ್ತಿದ್ದ ಸಪೂರ ಮುಂಗೈಗೆ ದೊಡ್ಡ ದೊಡ್ಡ ಬೆಳ್ಳಿಯ ಬಳೆಗಳು, ಕೊರಳಿಗೆ ದೊಡ್ಡ ದೊಡ್ಡ ಕವಡಿಗಳ ಮಾಲೆ, ಕಾಲಿಗೆ ಪಾದುಕೆಯನ್ನು ಹೋಲುವ ಕೆಂಪು ಹಸಿರು ಪಟ್ಟಿಗಳನ್ನು ಬಿಡಿಸಿದ ಕಟ್ಟಿಗೆಯ ಪಾದರಕ್ಷೆ. ಸವತೇಕಾಯಿಯ ಹಾಗೆ ಉದ್ದವಾದ ಮೋರೆಗೆ ತೈಮೂರ್ಲಿಂಗನ ನೆನಪು ಕೊಡುವ ದಾಡಿ ಮೀಸೆಗಳು. ಯಾವ ಪ್ರಾಂತದವನೆಂದು ಊಹಿಸುವುದು ಸಾಧ್ಯವಿರಲಿಲ್ಲ. ಇವರು ಕೇಳಲಿಲ್ಲ. ಅವನಾಗಿ ತಿಳಿಸಲಿಲ್ಲ. ಅವನ ಹರುಕುಮುರುಕು ಹಿಂದಿಯಿಂದ ಇವರಿಗೆ ಅವನು ನೇಪಾಳ, ಸಿಕ್ಕಿಮ್ ಆ ಕಡೆಯವನಿರಬೇಕು ಎನ್ನುವ ಕಲ್ಪನೆಯಾಯಿತಂತೆ. ಅವರು ಮಾಡಿದ ಒಟ್ಟೂ ವರ್ಣನೆಯಿಂದ ಅವನೊಬ್ಬ ಸಾದಾ ಮನುಷ್ಯನಾಗಿರದೇ ಮುಂದೆ ನಡೆದ ಅನಾಹುತವನ್ನು ಒದಗಿಸಲೆಂದೇ ಮನುಷ್ಯ ರೂಪ ಧರಿಸಿ ಬಂದ ತಮ್ಮ ಅದೃಷ್ಟವಾಗಿದ್ದನೆಂದು ಇವರು ಸೂಚಿಸುತ್ತಿದ್ದಾರೆ ಎನ್ನುವ ಭಾವನೆಯಾಯಿತಂತೆ ನನ್ನ ಮಿತ್ರರಿಗೆ. +ಅಪರಿಚಿತನು ನೇರ ಶೇಷ ಪೈಗಳ ಮನೆಯ ಅಂಗಳದಲ್ಲಿ ಹೋಗಿ ಹಾಜರಾದನು. +ಇಡೀ ಕಂಪೌಂಡಿನಲ್ಲಿದ್ದ ಒಂದೇ ಮನೆಯೆನ್ನುವ ಕಾರಣಕ್ಕಷ್ಟೇ ಬಂಗಲೆಯೆಂದು ಕರೆಸಿಕೊಳ್ಳುತ್ತಿದ್ದ ಮನೆ ನಿಜಕ್ಕೂ ಒಂದು ಹಾಳು ಬಿದ್ದ ಕೋಟೆಯ ಹಾಗಿತ್ತಂತೆ. ದೊಡ್ಡ ಅವಿಭಾಜ್ಯ ಕುಟುಂಬದ ಹದಿನೈದು-ಇಪ್ಪತ್ತು ಮಂದಿಗಾದರೂ ಸಾಕಾಗುವಂತೆ ಕಟ್ಟಿಸಿದ ದೊಡ್ಡ ಮನೆಯಲ್ಲಿ ಈ ಕತೆ ನಡೆದಹೊತ್ತಿಗೆ ಇದ್ದವರು ನಾಲ್ಕೈದು ಜನ ಮಾತ್ರ. ನನ್ನ ಲಕ್ಷ್ಯವೆಲ್ಲ ನನ್ನಲ್ಲಿ ಈಗಾಗಲೇ ಎಲ್ಲಿಲ್ಲದ ಕುತೂಹಲ ಕೆರಳಿಸಿದ ಕತೆಯೆ ಮೇಲಿತ್ತು. ಇದರ ಅರಿವು ಇದ್ದೂ ನನ್ನ ಮಿತ್ರರಿಗೆ ಆ ಮನೆಯನ್ನು ವರ್ಣಿಸುವ ಚಪಲವನ್ನು ಹತ್ತಿಕ್ಕುವುದಾಗಲಿಲ್ಲ. ಬಹುಶಃ ತಾವು ಅರುಹಲಿದ್ದ ಮಹಾ ಭಯಂಕರ ಘಟನೆ ನಿಜಕ್ಕೂ ನಡೆದದ್ದೆಂದು ನಂಬಿಸಲು ಈ ವರ್ಣನೆ ಅವಶ್ಯವಾಗಿ ಕಂಡಿರಬೇಕು. ಅವಾಢವ್ಯವಾದ ಹಿತ್ತಲಲ್ಲಿ ಹಗಲಲ್ಲೂ ಕತ್ತಲೆ ತುಂಬಿದ ವಾತಾವರಣ ನಿರ್ಮಿಸಿದ ರಾಕ್ಷಸಾಕಾರದ ಮರಗಳಿಂದ ಆರಂಭವಾದ ವರ್ಣನೆ ಆ ಮನೆಯ ಮಹಾಗಾತ್ರದ ಮರದ ಕಂಬಗಳಿಗೆ, ತೊಲೆ-ಜಂತೆಗಳಿಗೆ ; ಲೆಕ್ಕವಿಲ್ಲದಷ್ಟು ಕೋಣೆಗಳಿಗೆ ; ಬಾಗಿಲು-ಕಟಕಿಗಳಿಗೆ ಬರುವಷ್ಟರಲ್ಲಿ ನನ್ನ ಕಣ್ಣೆದುರು ಹಲವು ಜಾನಪದ ಕಥೆಗಳಲ್ಲಿ ಬಂದ ನಾನಾ ಬಗೆಯ ಸರ್ಪಗಳು, ಚಿತ್ರವಿಚಿತ್ರ ಹಕ್ಕಿಗಳು, ಸಾಲದೇಹೋದರೆ ಅಕರಾಳ ವಿಕರಾಳ ರಾಕ್ಷಸರು ಕಾವಲಿಗಿದ್ದ ಅರಮನೆಯ ಚಿತ್ರ ಮೂಡಿ ನಿಂತಿತು. +ಆಗಂತುಕರು ಅಂಗಳದಲ್ಲಿ ಪ್ರಕಟಗೊಂಡ ಹೊತ್ತಿಗೆ ಆಗಷ್ಟೇ ಮಧ್ಯಾಹ್ನದ ಊಟಕ್ಕೆಂದು ವಖಾರಿಯಿಂದ ಬಂದಿದ್ದ ಶೇಷ ಪೈಗಳು ಇನ್ನೂ ಹೊರ ಜಗಲಿಯ ಮೇಲೆ ನಿಂತು ಕಾಲಲ್ಲಿಯ ಮೆಟ್ಟು ಕಳಚುತ್ತಿದ್ದರು. ಆಗಂತುಕನು ಅವರನ್ನು ಸಮೀಪಿಸಿ ತಾನೊಬ್ಬ ಸಾಮುದ್ರಿಕ ಜ್ಯೋತಿಷಿಯೆಂದೂ , ಬಹುದೂರದ ದೇಶದಿಂದ ಬಂದವನೆಂದೂ ತನ್ನ ಪರಿಚಯ ಸಾರಿದ. ಕಣ್ಣೆದುರು ಪ್ರಕಟಗೊಂಡವನ ರೂಪದಿಂದಾಗಿಯೋ, ಕಿವಿ ತುಂಬಿದ ಅವನ ದನಿಯಿಂದಾಗಿಯೋ, ಅವನು ಮನೆ ಬಾಗಿಲಿಗೆ ಬಂದ ಗಳಿಗೆ ಕೆಟ್ಟದ್ದಾಗಿದ್ದಕ್ಕೋ-ಅಂದು ಅಮಾವಾಸ್ಯೆಯೆಂದು ತಡವಾಗಿ ಲಕ್ಷ್ಯಕ್ಕೆ ಬಂದಿತಂತೆ, ತಲೆಯಲ್ಲಿ. ಈ ಮೊದಲೂ ಒಮ್ಮೆ ಬಂದಿದ್ದ ಕೆಟ್ಟ ವಿಚಾರ ಈಗ ಮತ್ತೆ ಬಂದಿದೆ-ತಮ್ಮ ಕೈಯಿಂದ ಸಾಧ್ಯವಾಗಿರದ ಕೆಲಸವನ್ನು ಈ ಜ್ಯೋತಿಷಿಯ ಮೂಲಕ ಮಾಡಿಸಬಹುದೇನೋ ಎಂದು ಆಸೆಯಾಗಿ ಅವನನ್ನು ಅವಸರ ಅವಸರವಾಗಿ ಮಾಳಿಗೆಯ ಮೇಲಿನ ಕೋಣೆಯೊಂದಕ್ಕೆ ಕರೆದೊಯ್ದರು. ಕೆಲಹೊತ್ತಿನಲ್ಲಿ ಪೈಗಳ ಹೆಂಡತಿ ಹಾಗೂ ವಿಧವೆ ಅಕ್ಕ ಕೂಡ ಅಲ್ಲಿಗೆ ಬಂದರು. “ಪರ ಊರಿನಲ್ಲಿ ಕಲಿಯುತ್ತಿದ್ದ ನಮ್ಮ ಮಗ ಎರಡು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ. ಅವನ ಕೈ ನೋಡಿ ಹೇಳಬೇಕು. ಯಾಕೆಂದರೆ…..” ಒಮ್ಮೆಲೆ ದನಿ ತಗ್ಗಿಸಿದ ಪೈಗಳಿಗೆ ತಮ್ಮ ಅರಿಕೆಯನ್ನು ವಿವರಿಸುವ ಮನಸ್ಸಾಗಿತ್ತೇನೋ. ಆದರೆ ಜೋತಿಷಿ ಅವರನ್ನು ಅರ್ಧಕ್ಕೆ ತಡೆದು : “ಏನೂ ಹೇಳಲು ಹೋಗಬೇಡಿ. ನಿಮ್ಮ ಮಗ ಮನೆಯಲ್ಲಿದ್ದರೆ ಅವನನ್ನೇ ಕರೆಯಿಸಿ. ಅವನ ಕೈ ನೋಡಲೆಂದೇ ಬಂದಿದ್ದೇನೆ” ಎಂದ. ಅವನ ದನಿಯೊಳಗಿನ ಗದರಿಕೆಗೆ ಪೈಗಳು ಕುಳಿತಲ್ಲೆ ತತ್ತರಿಸಿದರು. +ಕಾಲೇಜು ಕಲಿತ ಮಗ. ಇಂಥದ್ದಕ್ಕೆ ದಾದು ಮಾಡುವವನಲ್ಲವೆಂದು ಗೊತ್ತಿದ್ದೂ ಅಳುಕುತ್ತಲೇ ಅವನನ್ನು ಕರೆತರಲು ಏಳುತ್ತಿರುವಷ್ಟರಲ್ಲಿ ಮಗನೇ ಬಾಗಿಲಲ್ಲಿ ಪ್ರಕಟಗೊಂಡ ಆಕಸ್ಮಿಕಕ್ಕೆ ಏನನ್ನೋಣ ! ಎದುರು ಕುಳಿತವನ ಪರಿಚಯದ ಹಾದಿ ಕಾಯದೇ, ತನ್ನ ಹಸ್ತವನ್ನು ಅವನ ಮೋರೆಯ ಮುಂದೆ ಚಾಚಿ, “ನನಗೆ ಇದ್ಯಾವುದರಲ್ಲಿಯೂ ವಿಶ್ವಾಸವಿಲ್ಲ. ಆದರೂ ಕೇವಲ ಕುತೂಹಲಕ್ಕಾಗಿ ಕೇಳಲು ಸಿದ್ಧನಿದ್ದೇನೆ, ಹೇಳಿ” ಎಂದ. ಕೋಣೆಯಲ್ಲಿದ್ದವರಿಗೆ ತಮ್ಮ ಕಣ್ಣುಗಳ ಮೇಲೆ ತಮಗೇ ವಿಶ್ವಾಸ ಮೂಡದಾಯಿತು. ಸಾಮುದ್ರಿಕ ಅವನ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದು ಪರೀಕ್ಷಿಸುತ್ತಿದ್ದಂತೆ, “ಬರೇ ಮುಂದಾಗುವುದನ್ನು ಹೇಳಬೇಡಿ. ಅದನ್ನು ನೋಡಲು ನೀವಿಲ್ಲಿ ಇರಲಾರಿರಿ. ಹಿಂದಿನದನ್ನೂ ಹೇಳಿರಿ. ವಿಶ್ವಾಸ ಮೂಡೀತು” ಎಂದು ಹುಡುಗ ನಗುತ್ತಲೇ ಆಹ್ವಾನಿಸಿದ. +ಜ್ಯೋತಿಷಿಯೂ ಹಿಂದೆಗೆಯಲಿಲ್ಲ. ಅವನ ಬಾಲ್ಯದಿಂದಲೇ ಆರಂಭಿಸಿದವನು ಹಲವು ಸತ್ಯ ಸಂಗತಿಗಳನ್ನು ತಿಳಿಸುತ್ತ ನೇರವಾಗಿ ಗೋವಿಂದನೊಡನೆಯ ಅವನ ಗೆಳೆತನಕ್ಕೇ ಬಂದುಮುಟ್ಟಿದ. “ನೀವಿಬ್ಬರೂ ಬೆಳಕಿನ ಆರಾಧಕರು. ಬೆಳಕಿನ ರಹಸ್ಯವನ್ನು ಕುರಿತು ನಿಮಗೆ ಅಗಾಧ ಕುತೂಹಲವಿದೆ. ನಿಮ್ಮ ಎಳೆ ವಯಸ್ಸು ಇದಕ್ಕೆ ಸಾಲದು. ಆದರೂ ಈ ಕುತೂಹಲವೇ ನಿಮ್ಮನ್ನು ಹತ್ತಿರ ಸೆಳೆದಿದೆ. ಇಂದಿನಿಂದ ಹನ್ನೆರಡು ವರ್ಷಗಳ ಮೇಲೆ ನೀವಿಬ್ಬರೂ ಈ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದನ್ನು ಸಾಧಿಸುತ್ತೀರಿ. ನಿನ್ನ ಗೆಳೆಯನ ಸಂಸ್ಕೃತದ ಜ್ಞಾನ, ನಿನ್ನ ವಿಜ್ಞಾನದ ಅಭ್ಯಾಸ ಇದಕ್ಕೆ ನೆರವು ನೀಡುತ್ತವೆ.” +ಯಾವುದೋ ಕತ್ತಲೆಯ ಲೋಕದಿಂದ ಎದ್ದು ಬಂದು ಕಣ್ಣೆದುರು ಅವಿಷ್ಕಾರಗೊಂಡವನು ತನ್ನ ಹರಕುಮುರುಕು ಹಿಂದಿಯಲ್ಲಿ ಬೆಳಕಿನ ಬಗ್ಗೆ ಹೇಳಿದ್ದನ್ನು ನನ್ನ ಮಿತ್ರರು ತಮ್ಮ ಭಾಷೆಯಲ್ಲಿ ನನಗೆ ಮುಟ್ಟಿಸುತ್ತಿದ್ದದ್ದು ಸ್ಪಷ್ಟವಿತ್ತು. ಅವರಾಗಿ ವಿಶದಪಡಿಸದಿದ್ದರೂ ಈ ಯುವಕರು ದಿನವೂ ಊರು ಸುತ್ತುತ್ತಿದ್ದಾಗ ಅವರ ಚರ್ಚೆಗೆ ಒಳಪಡುತ್ತಿದ್ದದ್ದು ಬೆಳಕಿನ ರಹಸ್ಯವಿರಬೇಕು ಎನ್ನುವ ಕಲ್ಪನೆಯಾಯಿತು. ಅವರ ವಯಸ್ಸಿನಲ್ಲಿ ಹಗಲುಗನಸುಗಳು ಅನಿರೀಕ್ಷಿತವೇನಲ್ಲ. ಆದರೆ ಇವರ ಹಗಲುಗನಿಸಿಗೆ ಇಂಥ ಗಹನ ಸಂಗತಿ ವಿಷಯವಾದದ್ದು ಆಶ್ಚರ್ಯ ಹುಟ್ಟಿಸುವಂಥಾದ್ದಾಗಿತ್ತು. ಈ ಸಾಮುದ್ರಿಕ ಜೋಯಿಸ ಹಸ್ತರೇಖೆಯನ್ನು ಓದಿ ಇದನ್ನು ಹೇಳಿದನೇ ಅಥವಾ ಯಾರಿಂದಲೋ ಮೊದಲೇ ತಿಳಿದುಕೊಂಡಿದ್ದನ್ನೇ ತಮಗೆ ಹೇಳುವ ನಾಟಕವಾಡಿದನೇ? ತಿಳಿಯುವ ಮಾರ್ಗವಿರಲಿಲ್ಲ. ಆದರೂ ಮಗನ ಮೋರೆಯ ಮೇಲಿನ ಸಂತೋಷ ನೋಡಿಯೇ ತಂದೆತಾಯಿಗಳು ಉಬ್ಬಿದರು. +ಜೋಯಿಸರ ಮುಂದಿನ ಮಾತಿಗೆ ಕಾದು ಕುಳಿತಾಗ ತಾನು ಈಗ ಹೇಳಲಿದ್ದ ಮಾತು ಎಲ್ಲೆರೆದುರು ಆಡುವಂಥದ್ದಲ್ಲ ಎಂದನಂತೆ. ಕೋಣೆಯೊಳಗಿನ ಇತರ ಮೂವರೂ ಎದ್ದುಹೋದಮೇಲೆ ಅಲ್ಲಿ ಏನು ನಡೆಯಿತು, ಯಾರಿಗೂ ತಿಳಿಯಲಿಲ್ಲ. ಮುಂದಿನ ಎರಡು ದಿನಗಳಲ್ಲೇ ಮಗ ಮಲಗಿದ ಹಾಸಿಗೆಯ ಮೇಲೆ ಚೀಟಿ ಬಿಟ್ಟು ಊರು ತೊರೆದದ್ದಕ್ಕೂ ಜ್ಯೋತಿಷಿ ನುಡಿದಿರಬಹುದಾದ ಭವಿಷ್ಯವಾಣಿಗೂ ಸಂಬಂಧವಿದೆಯೆನ್ನುವ ಬಗ್ಗೆ ಮಾತ್ರ ಮನೆಯೊಳಗಿನ ಯಾರಿಗೂ ಸಂಶಯ ಉಳಿಯಲಿಲ್ಲ. +ಗೋವಿಂದನ ಮನೆಯಲ್ಲೂ ಈ ನಾಟಕ ತದ್ವತ್ತಾಗಿ ಚಾಚೂ ಫರಕಿಲ್ಲದೇ ನಡೆದಿದೆಯೆಂದು ಗೊತ್ತಾದದ್ದು ಹುಡುಗರ ತಂದೆಯರು ಪರಸ್ಪರ ಮಾತನಾಡಿಕೊಂಡಮೇಲೇ, ನಡೆದದ್ದು ಊರ ಜನರಿಗೂ ಗೊತ್ತಾಗಿ ಕುಮಟೆಗೆ ಬಂದಿದ್ದ ಜ್ಯೋತಿಷಿ ಈ ಎರಡು ಮನೆಗಳನ್ನು ಬಿಟ್ಟು ಇನ್ನೆಲ್ಲೂ ಹೋಗಿರದ ಸತ್ಯ ಲಕ್ಶ್ಯಕ್ಕೆ ಬಂದಾಗಲಂತೂ ಬಂದವನು ಜ್ಯೋತಿಷಿಯಾಗಿರಲಾರ, ಮಾಟಗಾರನಾಗಿರಬೇಕು. ಯಾರೋ ಹೊಟ್ಟೆಕಿಚ್ಚಿನವರೇ ಮಾಡಿಸಿದ ಕೆಲಸವಿದು ಎಂದು ಊರ ತುಂಬ ಗುಲ್ಲೆದ್ದಿತು. +ಒಮ್ಮೆ ಊರು ಬಿಟ್ತವರು ಒಂದು ವರ್ಷವಾದರೂ ಹಿಂತಿರುಗಿ ಬರುವುದುಳಿಯಲಿ, ಅವರ ಬಗ್ಗೆ ಯಾವ ಒಂದು ಸುಳಿವೂ ಸಿಗದೇಹೋದಾಗ ಹತಾಶರಾದ ತಂದೆಯರು ಊರಿನ ಕೆಲವು ಹಿರಿಯರನ್ನು ಜೊತೆಗೆ ಕರೆದುಕೊಂಡು ಸೀದಾ ಹೋಗಿ ನೆಲ್ಲಿಕೇರಿಯ ದೀಡಬುದ್ವಂತರನ್ನು ಸಂಧಿಸಿದರು. “ಹೇಳಿ ! ನೀವು ಊರಿಗೆ ಕರೆಸಿಕೊಂಡ ಆ ದರ್ವೇಸಿ ನಿಜಕ್ಕೂ ಯಾರು ? ನಮ್ಮ ಹುಡುಗರು ಏನಾದರು ? ಆ ನಿಷ್ಪಾಪರನ್ನು ಊರಿನಿಂದ ಹೊರಗಟ್ಟಿ ನೀವು ಸಾಧಿಸಿದ್ದೇನು ?” ಎಂದು ಕೇಳಿದರು. +ವೈಕುಂಠ ಬಾಳ್ಗಿ ಇಂಥ ಆರೋಪಕ್ಕೆಲ್ಲ ಸೊಪ್ಪು ಹಾಕುವವನಲ್ಲ- +“ಊರಿಗೆ ಊರೇ ಈ ಹುಡುಗರನ್ನು ಹೊಗಳಿ ತಲೆಯ ಮೇಲೆ ಇರಿಸಿಕೊಂಡು ಕುಣಿದಾಡುತ್ತಿದ್ದಾಗ ನಾನೊಬ್ಬನು ಮಾತ್ರ ಎಷ್ಟೆಲ್ಲರ ಎದುರು ಎಷ್ಟೆಲ್ಲ ಸಾರೆ ಇಂಥ ಗೆಳೆತನ ಆರೋಗ್ಯಕರವಾದದ್ದಲ್ಲ ಎಂದಿದ್ದೆ. ಎಂದಿದ್ದೆನೋ ಇಲ್ಲವೋ ? ಒಂದಲ್ಲ ಒಂದು ದಿನ ತೀರ ಅಪ್ರಿಯವಾದ ಮುಸೀಬತ್ತಿಗೆ ಒಳಗಾಗುತ್ತೀರಿ ಎಂದು ಬಜಾಯಿಸಿದ್ದೆ. ಬಜಾಯಿಸಿದೆನೋ ಇಲ್ಲವೋ ? ಅಂದಮೇಲೆ ಇಂತ ದುಷ್ಟ ಹಿಕ್ಮತಿಗೆ ಯಾಕೆ ಕೈ ಹಾಕಿಯೇನು?” ಎಂದು ಇವರನ್ನೇ ಮೂದಲಿಸಿದನಂತೆ. ಇವರಲ್ಲಿಯ ಯಾರೋ, “ನಿಮ್ಮ ಮಾತನ್ನು ನಿಜ ಮಾಡಿ ತೋರಿಸಲಿಕ್ಕೆ” ಎಂದು ಹಂಗಿಸಿದಾಗ. “ನೀವು ಹೇಳಿದರೆ ನಂಬಲಿಕ್ಕಿಲ್ಲ. ಆದರೂ ಹೇಳುತ್ತೇನೆ, ಯಾರಿಗಾದರೂ ಜ್ಯೋತಿಷಿಯನ್ನು ಒಂದು ಕುಟಿಲ ಬೇತಿಗಾಗಿ ಉಪಯೋಗಿಸಿಕೊಳ್ಳುವ ಉದ್ದೇಶ ಇದ್ದದ್ದೇ ಆದರೆ ಆ ಬೇತು ಇವರನ್ನು ಪರಸ್ಪರರಿಂದ ಬೇರೆ ಮಾಡುವುದಾಗುತ್ತಿತ್ತೇ ಹೊರತು ಹೀಗೆ ಇನ್ನಷ್ಟು ಹತ್ತಿರ ತರುವುದಲ್ಲ” ಎಂದನಂತೆ. ಒಟ್ಟಿನಲ್ಲಿ ತಕರಾರು ಮಾಡಲು ಬಂದವರೇ ಗೊಂದಲದ್ದಲ್ಲಿ ಬೀಳುವಂತೆ ಮಾಡಿದ ಆ ನಾರದ ಮುನಿಯ ಠಾಮು ಅಭಿಪ್ರಾಯದ ಪ್ರಕಾರ-ಪಾತಾಳಲೋಕದ ಅವತಾರನಂತಿದ್ದ ಜ್ಯೋತಿಷಿಯನ್ನು ಊರಿಗೆ ಕರೆಸಿದ್ದು ಈ ಹುಡುಗರದೇ ಕೆಲಸವಂತೆ ; ಅವನಾಡಿದ ಭವಿಷ್ಯವಾಣಿಯನ್ನು ನೆಪಮಾಡಿ ಇಬ್ಬರೂ ಒಂದೇ ರಾತ್ರಿ ಮನೆ ಬಿಟ್ಟದ್ದು ಕೂಡ ಆಕಸ್ಮಿಕವಲ್ಲ ; ಪೂರ್ವಯೋಜಿತವಾದದ್ದು ; ಇಬ್ಬರೂ ದೂರದ ಊರೊಂದರಲ್ಲಿ ತಮ್ಮಷ್ಟಕ್ಕೆ ಸುಖವಾಗಿದ್ದಾರೆ ; ಹೆದರುವ ಕಾರಣವಿಲ್ಲ, ಎಂದು. ಎಲ್ಲ ಗೊತ್ತಿದ್ದವರ ಹಾಗೆ ಇಬ್ಬರೂ ಅಪ್ಪಂದಿರನ್ನು ಸಂತಯಿಸಿದನಂತೆ. ಇಬ್ಬರಿಗೂ ಇವನ ತಲೆಯಮೇಲೆ ಜಪ್ಪಿಬಿಡಬೇಕು ಎನ್ನುವಷ್ಟು ಸಿಟ್ಟು ಬಂದಿರುವಾಗಲೂ ಅದನ್ನು ತೋರಗೊಡದೇ ಅಲ್ಲಿಂದ ಹೊರಬಿದ್ದರು. +ಎಷ್ಟೆಲ್ಲವನ್ನು ಓದಿಕೊಂಡ, ಏನೆಲ್ಲವನ್ನು ತಿಳಿದುಕೊಂಡ ಈ ಪಾಖಂಡಿ ಯಾರ ಬಗೆಗೂ ಒಳ್ಳೆಯ ಅಂತಃಕರಣ ಉಳ್ಳವನಲ್ಲ. ತಮ್ಮ ಮಕ್ಕಳ ಗೆಳೆತನದ ಬಗ್ಗೆ ಆಡಿದ ಒಗಟಿನಂಥ ಮಾತುಗಳ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಂಡರೂ ಅವುಗಳ ಅರ್ಥ ಈ ಅಪ್ಪಂದಿರಿಗೆ ಹೊಳೆಯಲಿಲ್ಲ. ಹಾಗೆ ನೋಡಿದರೆ ಕುಮಟೆಯ ಬಹುತೇಕೆ ಜನರಿಗೆ ಹೊಳೆಯುವಂಥದ್ದಲ್ಲವಾಗಿತ್ತು. ಅದು : “ಓಣಿಗೊಬ್ಬ ಕಲಾವಂತ ಹೆಣ್ಣು ಉಳ್ಳ ಕುಮಟೆಯಲ್ಲಿ ಪಡ್ಡೆ ಹುಡುಗರು ಕಲಾವಂತ ಹುಡುಗಿಯರಿಗೆ ಮೋಹಿತರಾಗುವುದು ಅಸಹಜವಲ್ಲ. ಮೋಹಿತರಾಗದಿರುವುದು ಅಸಹಜ.” +ತಕರಾರು ಮಾಡಲು ಬಂದವರ ಬಾಯಿ ಮುಚ್ಚಿಸಲು ಇದಕ್ಕಿಂತ ಬಲವಾದ ಅಸ್ತ್ರ ಬೇಡವಾಯಿತು. +ಅಂತಃಕರಣವುಳ್ಳ ಊರ ಜನರೆಲ್ಲರೂ ಹೆತ್ತ ತಂದೆತಾಯಿಗಳನ್ನು ಜೊತೆಗೂಡಿ ಹುಡುಗರಿಗೆ ಶುಭ ಕೋರಿದರು. ಇಬ್ಬರೂ ಊರಿಗೆ ಹಿಂತಿರುಗಿ ಬಂದು ದುಃಖಾರ್ತರಾದ ತಂದೆತಾಯಿಯರಿಗೆ ಮತ್ತೆ ಮೋರೆ ತೋರಿಸುವಂತಾಗಲಿ ಎಂದು ಪ್ರಾರ್ಥಿಸಿ ಕುಮಟೆಯ ನಾಲ್ಕೂ ದೇವಸ್ಥಾನಗಳಲ್ಲಿ, ಚಿತ್ರಿಗಿಯ ಜಟ್ಟಿಗ ದೇವರಲ್ಲಿ ಹರಕೆ ಹೊತ್ತರು. +– ೪ – +ಇವರೆಲ್ಲರ ಪ್ರಾರ್ಥನೆಯ ಫಲವಾಗಿಯೇ ಎನ್ನುವಂತೆ ಊರು ಬಿಟ್ಟು ಸರಿಯಾಗಿ ಮೂರು ವರ್ಷಗಳಾಗಿರುವಾಗ ಒಂದು ದಿನ ಪೂರ್ವಾಹ್ನ ಇಬ್ಬರೂ ಜೊತೆಯಾಗಿಯೇ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಪ್ರಕಟಗೊಂಡಾಗಿನ ದೃಶ್ಯವನ್ನು ನೋಡಿದ ಯಾರೂ ಮರೆಯಲಾರರು. ಇಬ್ಬರೂ ಪೀತಾಂಬರವುಟ್ಟು ಬಿಳಿ ಪಂಚೆಯ ಉತ್ತರೀಯ ಧರಿಸಿದ್ದರು. ಪೂಜೆಯ ಹೊತ್ತಿಂಗಿಂತ ತುಸು ಮೊದಲು ದೇವಸ್ಥಾನ ಹೊಕ್ಕವರು ಒಂದೇ ಕಾಲಕ್ಕೆ ಢಣ್ ಎಂದು ಗಂಟೆ ಬಾರಿಸುತ್ತಲೇ ಅದರ ನಾದದಲ್ಲಿ ವಿಶೇಷವೇನೋ ಕೇಳಿಸಿದಂತಾಗಿ ಜನ ಭಡಭಡನೆ ಅವರಿಗೆ ಜಾಗ ಮಾಡಿಕೊಟ್ಟರು. ಹಾಗೆ ಮಾಡಿದ್ದೇ ಬರೀ ನೆಲದ ಮೇಲೆ ಒಬ್ಬರಿಗೊಬ್ಬರು ಸಮಾಂತರವಾಗಿ ದೇವರೆದುರು ಸಾಷ್ಟಾಂಗ ಬಿದ್ದರು. ಜನರಿಗೆ ಅವರು ಯಾರೆಂದು ಕೂಡಲೇ ತಿಳಿಯಲಿಲ್ಲ. ದೇವಸ್ಥಾನದಲ್ಲಿ ಆಗ ನೆರೆದ ಗರ್ದಿಯಲ್ಲಿ ತಿಳಿಯುವ ಅವಕಾಶವೂ ಇರಲಿಲ್ಲ. +ಅಂದು ಅಕ್ಷಯ ತೃತೀಯ. ದೇವಸ್ಥಾನದಲ್ಲಿ ಚಂಡಿಕಾ ಹೋಮ. ಮಹಾ ಪೂಜೆಗಳಿದ್ದವು. ಪೂಜೆಗೆ ಬಂದವರಿಗೆಲ್ಲ ದೇವಸ್ಥಾನದಲ್ಲೇ ಊಟವಿತ್ತು. ಸಾಲುಪಂಕ್ತಿಗಳಲ್ಲಿ ಊಟಕ್ಕೆ ಕುಳಿತಾಗ ಎಲ್ಲರ ಲಕ್ಷ್ಯ ಗಾಳಿಯೊಳಗಿಂದಲೇ ಘನೀಭೂತರಾದವರ ಹಾಗೆ ಮೈಗೊಂಡ ಈ ಲಕ್ಷಣವಂತ ಯುವಕರ ಮೇಲೇ. ಅಜ್ಞಾತವಾಸದಲ್ಲಿದ್ದ ಪಂಚಪಾಂಡವರ ಪೈಕಿ ಯಾರಾದರೂ ಇರಬೇಕೆಂದು ತಿಳಿದವರ ಹಾಗೆ ಕುತೂಹಲದಿಂದ ಕೌತುಕದಿಂದ ಮತ್ತೆಮತ್ತೆ ನೋಡಿದರು. ಇವರು ಊರು ಬಿಟ್ಟಂದಿನಿಂದ ಹಾಸಿಗೆ ಹಿಡಿದುಬಿಟ್ಟಂತಿದ್ದ ದುಃಖಾರ್ತ ತಂದೆತಾಯಿಗಳು ದೇವಸ್ಥಾನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಅವರಿಗೂ ಇವರ ಗುರ್ತು ಹತ್ತುತ್ತಿರಲಿಲ್ಲವೇನೋ. ಅಷ್ಟೊಂದು ಬದಲುಗೊಂಡಿದ್ದರು. ಗೋವಿಂದ ಮೈ ಕೈ ತುಂಬಿಕೊಂಡು ಮೊದಲಿಗಿಂತ ತೋರನಾಗಿದ್ದ. ವಿಷ್ಣು ಹೆಚ್ಚಿನ ಚರ್ದಿ ಕಳೆದುಕೊಂಡು ಮೊದಲಿಗಿಂತ ಸಪೂರನಾಗಿದ್ದ. ಪರಿಣಾಮವಾಗಿ ಇಬ್ಬರೂ ಒಬ್ಬರನ್ನೊಬ್ಬರು ಹೋಲುವ ಅವಳಿಜವಳಿಗ ಹಾಗೆ ಕಾಣುತ್ತಿದ್ದರು. ಕೆಲವರಿಗಂತೂ ಥೇಟು ನಕುಲ-ಸಹದೇವರ ಹಾಗೆ ಕಂಡರು. ಇಬ್ಬರಿಗೂ ಕುರುಚಲು ಗಡ್ಡವಿತ್ತು. ಮೃದುವಾಗಿ ನೇವರಿಸಿದಂತೆ ತೋರುವ ಕುಡಿಮೀಸೆಗಳಿದ್ದವು. ಕತ್ತನ್ನು ಸಂಪೂರ್ಣವಾಗಿ ಮುಚ್ಚುವಷ್ಟು ಕೆಳಗಿಳಿದ ತಲೆಗೂದಲಿಗೆ ಕಂದುಬಣ್ಣದ ಹೊಳಪಿತ್ತು. ತುಟಿಗಳ ಅಂಚುಗಳಲ್ಲಿ ನೋಡಿದವರನ್ನು ಮಾತಿಗೆಳೆಯುವ ಮಂದಸ್ಮಿತ. ಕಣ್ಣುಗಳಲ್ಲೂ ಅಂಥದೇ ಹೊಳಪು. ಒಂದಿಬ್ಬರು “ಎಲ್ಲಿಯವರು ?” ಎಂದು ಕೇಳುವ ಧೈರ್ಯ ಮಾಡಿದಾಗ ಚುಟುಕಾಗಿ, “ಇಲ್ಲಿಯವರೇ” ಎಂದು ಉತ್ತರ ಕೊಟ್ಟರು. ಬಸ್ ! ಹೆಚ್ಚಿನ ಮಾತಿಲ್ಲ. +ದೇವಸ್ಥಾನದಿಂದ ಹೊರಬಿದ್ದ ನಂತರ ಇಬ್ಬರೂ ತಮ್ಮತಮ್ಮ ಮನೆಗಳಿಗೆ ಹೋಗಿ ತಂದೆತಾಯಿಯರಿಗೆ ನಮಸ್ಕಾರ ಮಾಡಿದ ಕೆಲವೇ ಕ್ಷಣಗಳಲ್ಲಿ ಸುದ್ದಿ ಕಾಡುಗಿಚ್ಚಿನಂತೆ ಊರೆಲ್ಲ ಹಬ್ಬಿ ಮಠದೆದುರಿನ ಚೌಕದಲ್ಲಿ ಜನ ನೆರೆದರು. ಸರ್ವತ್ರ ಉತ್ಸಾಹದ ಉತ್ಸುಕತೆಯ ವಾತವರಣ. ಇಷ್ಟು ದಿನ ಎಲ್ಲಿದ್ದರಂತೆ ? ಒಬ್ಬರನ್ನೊಬ್ಬರು ಎಲ್ಲಿ ಭೇಟಿಯಾದರಂತೆ ? ಹೊಟ್ಟೆಪಾಡಿಗೆ ಏನು ಮಾಡಿದರಂತೆ ? ಊರು ಬಿಡಲು ಕಾರಣವಾದದ್ದಾದರೂ ಏನೆಂತೆ ? ಆ ಹಾಳೂರ ಜೋಯಿಸ ಹೇಳಿದ್ದಾದರೂ ಏನಂತೆ ? ನೆಲ್ಲಿಕೇರಿಯ ದೀಡಬುದ್ವಂತೆ ಆಡಿದ ಚಾಡಿಯ ಮಾತು ಇವರಿಗೆ ಗೊತ್ತಾಯಿತೆ ? ಸಾವಿರ ಪ್ರಶ್ನೆಗಳು ಎಲ್ಲೆಲ್ಲಿಂದ ಬಂದು ಕಿವಿ ಹೊಕ್ಕರೂ ಒಂದು ಪ್ರಶ್ನೆಗೂ ಉತ್ತರ ಕೊಡುವ ಗೋಜಿಗೆ ಅವರು ಹೋಗಲಿಲ್ಲ. ಊರ ಜನರ ಕುತೂಹಲ ತಣಿಸುವ ಆಸ್ಥೆಯೇ ಅವರಿಗಿರಲಿಲ್ಲ. ಒಂದು ನಿಶ್ಚಿತವಾದ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಂತೆ ಬಂದವರು ಊರು ಸೇರಿದಾಗ ರಾತ್ರಿ ಹನ್ನೆರಡು ದಾಟಿತ್ತಂತೆ. ಮಠಕೇರಿಯ ಭಟ್ಟರೊಬ್ಬರ ಮನೆಯಲ್ಲಿ ರಾತ್ರಿ ಕಳೆದವರು ಪ್ರಾತರ್ವಿಧಿ ಸ್ನಾನಗಳನ್ನು ಅವರಲ್ಲೇ ಮುಗಿಸಿ ಅಲ್ಲೇ ಮಡಿ ಬಟ್ಟೆಯುಟ್ಟು ದೇವಸ್ಥಾನಕ್ಕೆ ಬಂದಿದ್ದರಂತೆ. ಮನೆಯಲ್ಲಿ ಅಪ್ಪ-ಅಮ್ಮರ ಸಮಾಧಾನಕ್ಕೆಂದು ಕೊಟ್ಟಿದ್ದ ಅಲ್ಪ ಮಾಹಿತಿ ಕೂಡ ನಮಗೆ ಗೊತ್ತಾದದ್ದು ಇವರಿಬ್ಬರಿಗೂ ಕೊನೆಯ ಬಾರಿ-ಊರಿಗೆ ಇನ್ನೆಂದೂ ಹಿಂತಿರುಗಲಾರೆವು ಎಂದು ಪಣತೊಟ್ಟವರ ಹಾಗೆ-ಊರು ಬಿಟ್ಟುಹೋದ ಬಹಳ ದಿನಗಳ ಮೇಲೆ- +ಜ್ಯೋತಿಷಿ ಇಬ್ಬರೂ ಹುಡುಗರನ್ನು ಬೇರೆಬೇರೆಯಾಗಿ ಕಂಡು, ಅವರವರ ಕೈ ನೋಡಿಯೇ ಹೇಳಿದ್ದೆಂದು ಭರವಸೆ ಹುಟ್ಟಿಸುವ ಹಾಗೆ ಹೇಳಿದ ಭವಿಷ್ಯವಾಣಿ ಒಂದೇ ಆಗಿತ್ತು. ಭಯಾನಕವಾಗಿತ್ತು. ಒಂದೇ ಆಗಿತ್ತೆಂದು ಸ್ವತಃ ಇವರಿಗೇ ತಿಳಿದದ್ದು ಊರಿಗೆ ವಾಪಸ್ಸಾಗುವ ನಾಲ್ಕು ದಿನ ಮೊದಲು ಮುಂಬಯಿಯಲ್ಲಿ ಅಚಾನಕವಾಗಿ ರೆಸ್ಟೋರೆಂಟೊಂದರಲ್ಲಿ ಒಂದೆಡೆ ಸೇರಿದ್ದಾಗ- +“ನಿನ್ನ ಕೈಯಿಂದ, ಅಚಾತುರ್ಯದಲ್ಲೇ ಆಗಲಿ, ತೀರ ಹತ್ತಿರವಾದವರೊಬ್ಬರ ಹತ್ಯೆಯಾಗುವ ಸಂಭವವಿದೆ. ಇಂದಿನಿಂದ ಮೂರು ದಿನಗಳಲ್ಲಿ ಆರಂಭವಾಗುವ ಹನ್ನೆರಡು ವರ್ಷಗಳ ದೋಷಕಾಲದ ಮೊದಲಿನ ಮೂರು ವರ್ಷ, ಮೂರು ತಿಂಗಳು, ಮೂರು ದಿನಗಳು ಅತ್ಯಂತ ಕೆಟ್ಟವಾಗಿದ್ದು ನೀನು ತುಂಬಾ ಜಾಗ್ರತೆಯಿಂದಿರಬೇಕು. ಯಾರೇ ಎಷ್ಟೇ ಪ್ರಚೋದಿಸಲಿ, ನಿನ್ನ ಸಿಟ್ಟನ್ನು ನೀನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಈ ನಿಗ್ರಹವನ್ನು ಒಂದು ಕಠಿಣ ವ್ರತವೆಂಬಂತೆ ಪಾಲಿಸಬೇಕು. ಮುಂದಿನ ಒಂಬತ್ತು ವರ್ಷಗಳನ್ನು ಯಾರೊಡನೆಯೂ ಮತಭೇದಕ್ಕೆ ಅನವಶ್ಯ ಮನಸ್ತಾಪಕ್ಕೆ ಎಡೆಯಾಗದ ಹಾಗೆ ಕಳೆಯಲು ಈ ನಿಗ್ರಹವೇ ನಿನ್ನ ನೆರವಿಗೆ ಬರುತ್ತದೆ. ಈ ಕಾಲ ಯಾವುದೇ ವಿಕೋಪಕ್ಕೆ ಒಯ್ಯುವಷ್ಟು ಕೆಟ್ಟದಾಗಿಲ್ಲ.” +ಹುಡುಗರಿಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಮೂಡಲಿಲ್ಲ. ಆದರೂ ಯಾರು ಬಲ್ಲರು ? ಎಂಬಂಥ ಅನುಮಾನದ ಸ್ಥಿತಿಯಲ್ಲಿ ಮುಂದಿನ ಮೂರು ವರ್ಷವಾದರೂ ತನ್ನ ಗೆಳೆಯನಿಂದ ದೂರವಿರುವುದೇ ಒಳ್ಳೆಯದೇನೋ ಎನ್ನುವ ಇಚಾರ ಇಬ್ಬರ ತಲೆಗಳಲ್ಲೂ ಬಂದು ಊರು ಬಿಡುವುದನ್ನು ನಿಶ್ಚಯಿಸಿದರು. ಊರು ಬಿಟ್ಟರು ಕೂಡ. ಮುಂದಿನ ಮೂರು ವರ್ಷ ಒಂದೇ ಊರಿನಲ್ಲಿದ್ದೂ ಪರಸ್ಪರರ ದೃಷ್ಟಿಗೆ ಬೀಳಲಿಲ್ಲ. ಆಮೇಲೆ. ಜ್ಯೋತಿಷಿ ಇನಾರೆಯಿತ್ತ ದುಷ್ಟಕಾಲ ಮುಗಿಯಲು ಇನ್ನೂ ಮೂರು ತಿಂಗಳು ಮೂರು ದಿನಗಳಿವೆ ಎನ್ನುವಾಗ ಒಂದು ದಿನ ಒಂದೇ ರೆಸ್ಟೋರೆಂಟಿಗೆ ಊಟಕ್ಕೆ ಬಂದವರಿಗೆ ಯಾರೋ ತಮ್ಮೊಡನೆ ದುಷ್ಟ ಆಟ ಆಡಿದ್ದಾರೆಂದು ಗೊತ್ತಾದಾಗ ಸಿಟ್ಟು ಬಂದಿತೆ ? ಕೆಡುಕೆನಿಸಿತೇ ? ತಿಳಿಯುವ ಬಗೆಯಿರಲಿಲ್ಲ. ಊರು ಬಿಡುವಾಗ ಜೊತೆಗೂಡಿರದವರು ಜೊತೆಯಾಗಿ ಊರು ಸೇರಿದರು. ಮಾರನೇ ದಿವಸ ರಾತ್ರಿಯೇ ಅವಸರ ಅವಸರವಾಗಿ ಮತ್ತೆ ಊರು ಬಿಟ್ಟರು. ಎಲ್ಲಿ ಹೋದರು ? ಏನಾದರು ? ಇಂದಿಗೂ ಪತ್ತೆಯಾಗಿಲ್ಲ-ಊರು ಬಿಟ್ಟು ಇಪ್ಪತ್ತೊಂದು ವರ್ಷಗಳಾದರೂ! +ಅವರು ಹೊರಟುಹೋದ ರಾತ್ರಿಯೇ ಊರಿನಲ್ಲಿ ನಡೆದ ಭೀಕರ ದುರ್ಘಟನೆಯೊಂದು ಈ ಅವಸರದ ನಿರ್ಗಮನಕ್ಕೆ ಗಂಟುಹಾಕಿಕೊಂಡು ಎಲ್ಲೆಲ್ಲೂ ಎಣೆಯಿಲ್ಲದ ಊಹೆಗಳಿಗೆ ಎಡೆಮಾಡಿತು. ನೆಲ್ಲಿಕೇರಿಯ ದೀಡಬುದ್ವಂತ ಉಟ್ಟಧೋತರವನ್ನೇ ಮಾಡಿನ ಜಂತೆಯಿಂದ ಇಳಿಬಿಟ್ಟ ನೇಣುಮಾಡಿ ಅಸುನೀಗಿದ್ದ. ಕಾಲುಬುಡಕ್ಕೆ ಒಂದರ ಮೇಲೊಂದು ಪೇರಿಸಿಟ್ಟ ಎರಡು ದಪ್ಪ ಟ್ರಂಕುಗಳನ್ನೂ ಇಟ್ಟುಕೊಂಡಿರಬೇಕು. +ಭಾಗ ಎರಡು +ಕುಮಟೆಗೆ ಬಂದಾ ಕಿಂದರಿಜೋಗಿ +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು ಜರುಗಿದ ಜಾಗಗಳೆಲ್ಲವನ್ನೂ ಒಮ್ಮೆ ನೋಡಿದರೆ ಅಲ್ಲಿ ಈಗಲೂ ನೆಲೆ ನಿಂತ, ಬಹು ಪುರಾತನವೆನ್ನಬಹುದಾದ ವಾತಾವರಣವೇ ನಿಮ್ಮ ಎಲ್ಲ ಸಂಶಯಗಳನ್ನೂ ದೂರ ಮಾಡದೇ ಇರಲಾರದು. +ಕುಮಟೆಯೇ ಬಹು ಪುರಾತನ ಪಟ್ಟಣವಂತೆ. ಅದಕ್ಕೆ ಕುಮಟೆ ಅಥವಾ ಕುಮಠಾ ಎನ್ನುವ ಹೆಸರು ಬರುವ ಮೊದಲು ಅದು ಕುಂಭಾಪುರ ಎನ್ನುವ ಪವಿತ್ರ ಹೆಸರಿನಿಂದ ಲೋಕವಿಖ್ಯಾತವಾಗಿತ್ತೆಂದು ಮಠಕೇರಿಯ ಭಟ್ಟರು ತುಂಬಾ ಅಭಿಮಾನದಿಂದ ಹೇಳುತ್ತಾರಂತೆ. ಬಸ್ತೀಪೇಟೆಯಲ್ಲಿ ಜೈನ ಬಸದಿಯ ಎದುರು ಇದ್ದ ಕುಂಭೇಶ್ವರ ದೇವಸ್ಥಾನದಿಂದಾಗಿ ಈ ಊರಿಗೆ ಕುಂಭಾಪುರ ಎಂಬ ಹೆಸರು ಬಂದಿರಬೇಕೆಂದು ನನಗೆ ಈ ಕಥಾಪ್ರಸಂಗವನ್ನು ನಿರೂಪಿಸಿದ ಗ್ರಹಸ್ಥರ ಅಭಿಪ್ರಾಯ. ಮಠಕೇರಿಯ ನಾಲ್ಕು ಪ್ರಖ್ಯಾತ ದೇವಾಲಯಗಳ ಮಧ್ಯದ ದೊಡ್ಡ ಚೌಕದ ಆಜುಬಾಜಿಗೆ ಬೆಳೆದ ಇಲ್ಲಿಯ ಜನಜೀವನದ ಹೊಸ ಕೇಂದ್ರವಾದ ದೊಡ್ಡ ಪೇಟೆಯಿಂದಾಗಿ ಕುಂಭಾಪುರ ಎನ್ನುವ ಹೆಸರು ಕುಮಟೆಯಾಗಿ ಭ್ರಷ್ಟಗೊಂಡಿರಬೇಕು ಎನ್ನುವುದೂ ನನ್ನ ಈ ಹಿರಿಯ ಮಿತ್ರರದೇ ಅಂದಾಜು. +ಕುಮಟೆಯಲ್ಲಿ ಹಲವು ಹಳೇ ಜನವಸತಿಗಳು ಈಗಲೂ ಅವು ಮೊದಲು ಇದ್ದ ಹಾಗೇ ಇದೆಯೆಂದು ಅವುಗಳನ್ನು ನನಗೆ ತೋರಿಸಿದ ಈ ಮಿತ್ರರು ಹೇಳಿದರು. ನನಗಂತೂ ನಾನು ನೋಡಿದ ಪ್ರತಿಯೊಂದು ಮೂಲೆಯೂ ಹಳೆಯದಾಗಿ ಕಂಡಿತು ; ತೀರ ಹೊಸತೆನ್ನುವುದು ಸಹ ಇಲ್ಲಿ ಬಹುಬೇಗ ಹಳೆಯದಾಗಿಬಿಡುತ್ತದೆಯೇನೋ ಅನ್ನಿಸಿತು. ಹೊಸತಾಗಿ ಎದ್ದ ಬಸ್‌ಸ್ಟ್ಯಾಂಡು, ಕಾಲೇಜು, ಫಾರ್ಮು, ಡೇರಿಗಳು ಕೂಡ ಹೊಸವೆಂದು ಎಂದೂ ತೋರಲಿಲ್ಲವಂತೆ. ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತ ನೆಲ್ಲಿಕೇರಿ ; ಅದನ್ನು ದಾಟಿ ಬಂದರೆ ಹತ್ತುವ ವಲ್ಲೀಗದ್ದೆ, ಬಸ್ತೀಪೇಟೆ ; ಎಡಕ್ಕೆ ಹೊರಳಿ ಮುಂದೆ ಸಾಗಿದರೆ ಸಿಗುವ ಗುಡಿಗಾರ ಗಲ್ಲಿ ; ಅದಕ್ಕೂ ಮುಂದೆ ಹೋಗಿ ಹುಲಿದೇವರ ಗುತ್ತದ ಘಾಟಿ ಹತ್ತಿ, ಇಳಿದದ್ದೇ ಮೊದಲಾಗುವ ಹೆರವಟ್ಟೆ ; ಗುಡಿಗಾರ ಗಲ್ಲಿಗೆ ಹೋಗುವ ಮೊದಲು ಬಲಕ್ಕೆ ಹೊರಳಿದರೆ ಪೈವಾಡೆ, ಗುಜ್ಜರವಾಡೆ, ತಾಮ್ರಪೇಠೆ ; ಅಲ್ಲಿಂದ ದೂರ ಸಣ್ಣ ಬಂದರ, ಇನ್ನೂ ದೂರ ದೊಡ್ಡ ಬಂದರ ; ತಾಮ್ರಪೇಠೆಯಿಂದ ಮುಂದೆ ಹೋಗುವ ಬದಲು ಬಲಕ್ಕೆ ಹೊರಳಿದರೆ ‘ಬಾಜಾರ್’ ಎನ್ನುವ ಹೆಸರಿನಿಂದ ಮೆರೆಯುವ ಹತ್ತು ಫೂಟು ಅಗಲದ ಓಣಿಯ ಇಬ್ಬದಿಗಳಲ್ಲಿ ಪದ್ಮಾಸನ ಹಾಕಿ ಸೆಟೆದು ಕುಳಿತ ಸಾಲು ಅಂಗಡಿಗಳು; ಕೊನೆಯಲ್ಲಿ ಮಠಕೇರಿಯ ದೊಡ್ಡ ಚೌಕು ; ಅದರ ಗಡಿಗಳಲ್ಲಿ ನಾಲ್ಕು ದೇವಾಲಯಗಳು, ಮೂರು ಅಶ್ವತ್ಠ ಕಟ್ಟೆಗಳು, ಇನ್ನಷ್ಟು ಅಂಗಡಿಗಳು ; ಅಲ್ಲಿಂದ ಬಲಕ್ಕೆ ಹೊರಳಿ ಮತ್ತೊಮ್ಮೆ ಬಲಕ್ಕೆ ಹೊರಳಿದರೆ ಹತ್ತುವುದೇ ಮಿಣಮಿಣ್ಯಾ ಓಣಿ; ಎಡಕ್ಕೆ ಹೊರಳಿ ಆಮೇಲೆ ಬಲಕ್ಕೆ ಹೊರಳಿದ್ದೇ ಮೊದಲಾಗುವುದು ಚಿತ್ರಗಿ ; ದಾರಿಯಲ್ಲಿ ಹಾಳುಬಿದ್ದ ಜಟ್ಕಾ ದೇವರ ಗುಡಿ-ಹೆಸರುಗಳಲ್ಲಿ ಹೇಗೋ ಹಾಗೇ ಕಾಣುವುದರಲ್ಲೂ ಹಳೆಯವೇ. ಹೊಸತಿಗೆ, ಅದು ಹುಟ್ಟಿಕೊಳ್ಳುವ ಕ್ಷಣದಲ್ಲೇ, ಹಳೆಯದರ ಮೆರುಗು ಬರುವಂತೆ ಮಾಡುವ ಖುಬಿ ಈ ಊರಿನ ಹುಟ್ಟುಗುಣವಾದಂತಿತ್ತು. ಅಂದಮೇಲೆ ನಾನು ಹೇಳಲು ಹೊರಟ ಕಥಾಪ್ರಸಂಗವಾದರೂ ಈ ಕ್ರಿಯೆಯಿಂದ ಹೇಗೆ ತಪ್ಪಿಸಿಕೊಂಡೀತು ! +ಉತ್ತರ ಕನ್ನಡದ ಇತರ ಊರುಗಳ ಜನರೊಂದಿಗೆ ಹೋಲಿಸಿದರೆ ಕುಮಟೆಯ ಜನರಲ್ಲಿ ‘ರಪ್’ನೆ ಎದ್ದುಕಾಣುವ ಗುಣವೆಂದರೆ ನಾಲ್ಕು ಕೇರಿಗಳನ್ನು ಒಂದು ಮಾಡುವಂತೆ ತೆಂಗಿನ ಮರದಷ್ಟು ಎತ್ತರವಾದ ದನಿಯಲ್ಲಿ ಮಾತನಾಡುವ ಇವರ ದುರಭ್ಯಾಸ ; ಮಾತುಮಾತಿಗೆ ಬಾಯಿಂದ ಉದುರುವ ‘ಮೇಡ್ ಇನ್ ಕುಮಠಾ’ ಛಾಪುಳ್ಳ ಬೈಗಳು ತುಂಬಿದ ಗಂಡುಭಾಷೆ. ಯಾವಾಗಲೂ ಬಾಯಿ ತುಂಬಿರುತ್ತಿದ್ದ ಕವಳದೆಂಜಲಿನಿಂದ ಒದ್ದೆಯಾದ ವಿಶಿಷ್ಟ ಉಚ್ಛಾರ. ನನಗೆ ಈ ಕಥೆ ಹೇಳುವ ನನ್ನ ಮಿತ್ರರ ಆತುರ ಇಂಥ ಭಾಷೆಯಲ್ಲೇ ವ್ಯಕ್ತಗೊಂಡಿತ್ತು. +“ಒಂದೇ ಬಟ್ಟಲಲ್ಲಿ ಉಣ್ಣುತ್ತಿದ್ದ ಈ ಬೋಳೀಮಕ್ಕಳಷ್ಟು ಅನ್ಯೋನ್ಯರಾದ ಗೆಳೆಯರು ನಿಮಗೆ ಹುಡುಕಿದರೂ ಸಿಗಲಾರರು. ಅವರ ಬಗ್ಗೆ ಹೇಳುವ ಮೊದಲು ಅವರಿಬ್ಬರೂ ಜೊತೆಯಾಗಿ ಓಡಾಡಿದ ಜಾಗಗಳನ್ನು ತೋರಿಸುತ್ತೇನೆ.” +ಊರು ನೋಡಿ ಬಂದ ರಾತ್ರಿ ಕಥೆ ಹೇಳಲು ತೊಡಗಿದಾಗ ನನ್ನ ಮಿತ್ರರು ಒಮ್ಮೆಲೇ ಗಂಭೀರರಾದರು. ಭಾಷೆ ಬದಲುಗೊಂಡಿತ್ತು. ಅದರಲ್ಲಿ ಒಂದೂ ಬಯ್ಗುಳವಿರಲಿಲ್ಲ. ದನಿ ಮೆತ್ತಗಾಯಿತು. ಉಚ್ಛಾರಗಳು ಸ್ಫುಟವಾದವು. ಕವಳ ಮೆಲ್ಲುವ ಅಭ್ಯಾಸವಿದ್ದೂ ಒಮ್ಮೆಯೂ ಕವಳ ಹಾಕಿಕೊಳ್ಳಲಿಲ್ಲ. ಅಂದು ಭೇಟಿಯಿತ್ತ ಜಾಗಗಳೇ ಜಾದು ಮಾಡಿದವು ಎನ್ನುವ ತರಹ ನಿರೂಪಣೆಯ ಧಾಟಿಗೆ. ಅದರ ಕ್ರಮಕ್ಕೆ ಬೇರೆಯೇ ಕಳೆ ಬರತೊಡಗಿತು +– ೨ – +ಅನ್ಯೋನ್ಯತೆಯ ಮಟ್ಟಿಗೆ ತಮಗೆ ತಾವೇ ಉದಾಹರಣೆಯಾಗಿದ್ದ ಈ ಗೆಳೆಯರು ಹುಟ್ಟಿ ಬೆಳೆದದ್ದು ಮಠಕೇರಿಯಲ್ಲಿ. ಒಬ್ಬನ ಹೆಸರು ಗೋವಿಂದ. ಇನ್ನೊಬ್ಬನದು ವಿಷ್ಣು. ಎರಡೂ ಸಹಸ್ರ ನಾಮಾವಳಿಗೆ ಸೇರಿದ ಹೆಸರುಗಳೇ. ಒಂದೇ ವಯಸ್ಸಿವರು ಇಬ್ಬರೂ_ಈ ಕಥೆ ಒಂದು ದುಷ್ಟ ತಿರುವು ತೆಗೆದುಕೊಂಡು ಈಗಿನ ಮರೆಯಲಾಗದ ಪ್ರಸಂಗವಾಗುವ ಹೊತ್ತಿಗೆ ಇಪ್ಪತ್ತು-ಇಪ್ಪತ್ತೊಂದು ವರ್ಷದವರಿರಬೇಕು. ಗೋವಿಂದ, ಮಠದ ವೆಂಕಟರಮಣ ದೇವರ ಮುಖ್ಯ ಪೂಜಾರಿಗಳಾದ ಪರಶುರಾಮಭಟ್ಟರ ಮಗ. ಮೂರು ಹುಡುಗಿಯರ ನಂತರ ಏಕೈಕ ಗಂಡುಸಂತಾನವಾಗಿ ಹುಟ್ಟಿದವನು. ಮಠದ ಪೌಳಿಯಲ್ಲೇ ಮೂರು ಸಾಲುಕೋಣೆಗಳಲ್ಲಿ ಹೂಡಿದ ಬಿಡಾರದಲ್ಲಿ ದೊಡ್ಡವನಾದವನು. ಉತ್ತರ ಕನ್ನಡದಲ್ಲಿ ಆಗಿನ್ನೂ ಕಾಲೇಜು ಇದ್ದಿರಲಿಲ್ಲವಾದ್ದರಿಂದ ಧಾರವಾಡದಲ್ಲಿ ಸಂಸ್ಕೃತದಲ್ಲಿ ಬಿ.ಎ. ಪರೀಕ್ಷೆ ಮುಗಿಸಿ ಆಗಷ್ಟೇ ಊರಿಗೆ ಬಂದಿದ್ದ. ಪರಿಣಾಮ ತಿಳಿದಮೇಲೆ ಕುಮಟೆಯದೇ ಸಾಲೆಯಲ್ಲಿ ಶಿಕ್ಷಕನಾಗುವ ವಿಚಾರವಿತ್ತು ಅವನಿಗೆ. ವಿಷ್ಣು ಕುಮಟೆಯಲ್ಲಿ ಪೈ ಸಾವಕಾರರೆಂದೇ ಕರೆಯಲ್ಪಡುತ್ತಿದ್ದ ಊರಿನ ಶ್ರೀಮಂತರಾದ ಶೇಷ ಪೈಗಳ ಒಬ್ಬನೇ ಮಗ. ಮಠದೆದುರಿನ ಅಂಗಡಿಗಳ ಸಾಲಿನ ಹಿಂಬದಿಯ ದೊಡ್ಡ ಕಂಪೌಂಡಿನಲ್ಲಿದ್ದ ಬಂಗಲೆಯಂಥ ಮನೆಯಲ್ಲಿ ಬೆಳೆದವನು. ಅವನೂ ಧಾರವಾಡದಲ್ಲಿ ಬಿ.ಎಸ್.ಸಿ. ಮುಗಿಸಿ ಗೋವಿಂದನ ಜೊತೆಗೇ ಊರಿಗೆ ಬಂದಿದ್ದ. ಮುಂದೆ ಕಲಿಯುವ ಮನಸ್ಸಿತ್ತು. ಮನೆಯವರ ನೆರವೂ ಇತ್ತು. ಆದರೂ ತಾನೇ ಗಟ್ಟಿಯಾದ ನಿರ್ಧಾರಕ್ಕೆ ಬಂದಿರಲಿಲ್ಲ. +ಭಟ್ಟರ ಹುಡುಗ ಗೋವಿಂದ ಎಲ್ಲ ಭಟ್ಟರ ಹುಡುಗರ ಹಾಗೆ ಇರಲಿಲ್ಲ. ತೆಳ್ಳಗೆ, ಬೆಳ್ಳಗೆ, ಉದ್ದನಿದ್ದ. ಚೆಂದನಿದ್ದ. ಅಪ್ಪ-ಅಮ್ಮರ ಹಾಗೆ ಲಠ್ಠನಿರಲಿಲ್ಲ. ಆದರೆ ಭಟ್ಟರಿಗೆ ಶೋಭಿಸದ ರೀತಿಯಲ್ಲಿ ತುಂಬಾ ಷೋಕಿಯಾಗಿದ್ದ. ಸಾಹಸಿಯಾಗಿದ್ದ. ಸಿಗರೇಟು-ಬೀಡಿಗೆ ಇನ್ನೂ ಕೈ ಹಚ್ಚಿರಲಿಲ್ಲವಾದರೂ ಕುಮಟೆಯ ಹಲವು ಹುಡುಗರ ಹಾಗೆ ಆಗೊಮ್ಮೆ ಈಗೊಮ್ಮೆ ಪಾನ್-ಬೀಡ ಮೆಲ್ಲುತ್ತಿದ್ದ. ನಾಲಗೆ ಕೆಂಪಾದುದನ್ನು ನೋಡಿ ‘ಹೀ’ ಎಂದು ಖುಶಿಪಡುತ್ತಿದ್ದ. ತಲೆಗೆ ಚಂಡಿಕೆ ಇಡದೇ ಕ್ರಾಪು ಮಾಡಿಕೊಂಡು ಶರ್ಟು-ಪ್ಯಾಂಟು ಧರಿಸುತ್ತಿದ್ದ. ಕಾಲಲ್ಲಿ ‘ಚರ್‍ಮುರ್’ ಚಪ್ಪಲಿ ಮೆಟ್ಟುತ್ತಿದ್ದ. ಕುಮಟೆಯ ಜನರ ಹಾಗೆ ದೊಡ್ಡಕ್ಕೆ ಮಾತಾಡುತ್ತಿದ್ದ. ಮಾತುಮಾತಿಗೆ ದೊಡ್ಡಕ್ಕೆ ನಗುತ್ತಿದ್ದ. +ವಿಷ್ಣು ತೀರ ವಿರುದ್ಧ ಪ್ರಕೃತಿಯವನು. ರೂಪದಲ್ಲೂ ಹಾಗೇನೆ : ದುಂಡಗಿದ್ದ. ಕುಳ್ಳನಲ್ಲವಾದರೂ ಹೆಚ್ಚು ಉದ್ದನೂ ಆಗಿರಲಿಲ್ಲ. ಕಪ್ಪನಲ್ಲವಾದರೂ ಬೆಳ್ಳಗಿರಲಿಲ್ಲ. ಗುಂಗುರು ತಲೆಗೂದಲು, ದೊಡ್ಡ ಕಿವಿಗಳು. ಆಗರ್ಭ ಶ್ರೀಮತನ ಮಗನಾಗಿಯೂ ಮೋರೆಯ ಮೇಲೆ ಒಂದು ಬಗೆಯ ಮ್ಲಾನತೆಯ ಕಳೆ. ತುಟಿಯ ಅಂಚುಗಳಲ್ಲಿ ಮಾತ್ರ ನೋಡಿದವರಿಗೆ ಖುಶಿ ಕೊಡುವ ಮುಗುಳ್ನಗೆ. ಕಣ್ಣುಗಳಲ್ಲಿ ಅಸಾಧಾರಣ ತೇಜಸ್ಸು. ಮಾತಿಗಿಂತ ಮೌನ ಹೆಚ್ಚು ಪ್ರಿಯನಾದವನು ಮಾತನಾಡುವುದು ಮೇಲುದನಿಯಲ್ಲಾಗಿತ್ತು. +ಇವರು ಇಷ್ಟು ಹತ್ತಿರದ ಗೆಳೆಯರು ಆದರಾದರೂ ಹೇಗೆ ಎನ್ನುವುದು ಕೊನೆಯವರೆಗೆ ಒಡೆಯದ ಒಗಟಾಗಿಯೇ ಉಳಿಯಿತು. ಒಂದೇ ಕೇರಿಯಲ್ಲಿ ಹುಟ್ಟಿ ದೊಡ್ಡವರಾದವರು ಎನ್ನುವ ವಿವರಣೆ ತೀರ ಸಪ್ಪೆಯಾಗಿ ತೋರಿತು. ಚಿಕ್ಕವರಿದ್ದಾಗ ಕೈಯಲ್ಲಿ ಕೈಹಿಡಿದು ಓಡಾಡುತ್ತಿದ್ದ ಪುಟಾಣಿಗಳನ್ನು ನೋಡಿದ ಜನ ಲವ-ಕುಶರ ಜೋಡಿಯನ್ನು ನೆನೆದರೆ, ದೊಡ್ಡವರಾದ ಮೇಲೆ ಕೈಯಲ್ಲಿ ಕೈ ಹಿಡಿದು ಅಲ್ಲವಾದರೂ ನೋಡಿದವರ ಕಣ್ಣು ತುಂಬುವ ಜೋಡಿಯಾಗಿ ತಿರುಗಾಡುತ್ತಿದ್ದವರನ್ನು ನೋಡಿದ ಜನ ಭರತ-ಶತ್ರುಘ್ನರನ್ನು ನೆನೆದರು. ಒಟ್ಟಿನಲ್ಲಿ ಬೇರೆ ಕಾರಣ ಹೊಳೆಯದ್ದಕ್ಕೆ ಈ ನಿಗೂಢ ಆಕರ್ಷಣೆಯನ್ನು ಪೂರ್ವಜನ್ಮದ ಋಣಾನುಬಂಧವೆಂದು ಕರೆದು ಸಮಾಧಾನಪಟ್ಟರು. +ಇಷ್ಟಕ್ಕೂ ಈ ಪ್ರಖ್ಯಾತ ಸಂಚಾರಗಳಲ್ಲಿ ಪರಸ್ಪರರೊಳಗೆ ಅವರು ಮಾತನಾಡಿಕೊಳ್ಳುತ್ತಿದ್ದುದಾದರೂ ಏನು ? ಯಾರಿಗೂ ಪತ್ತೆಯಾಗಿರಲಿಲ್ಲ. ಆದರೂ ಒಂದು ಸಂಗತಿ ಲಕ್ಷ್ಯಕ್ಕೆ ಬಾರದಿರಲಿಲ್ಲ. ಈ ಸಂಚಾರಗಳ ಕಾಲಕ್ಕೆ ಮಾತನಾಡುತ್ತಿದ್ದವನು ಭಟ್ಟರ ಹುಡುಗ ಗೋವಿಂದನು ಮಾತ್ರ. ವಿಷ್ಣು ಬರೇ ಕೇಳಿಕೊಳ್ಲುತ್ತಿದ್ದ : ಗೋವಿಂದ ಮಾಡುತ್ತಿದ್ದ ಹಾವಭಾವಗಳನ್ನು ನೋಡುತ್ತಿದ್ದ. +ಗೋವಿಂದ ವಿಷ್ಣು ಭೇಟಿ ಕೊಡುತ್ತಿದ್ದ ಜಾಗಗಳನ್ನು ತೋರಿಸುತ್ತಲೇ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ ನನ್ನ ಮಿತ್ರರು ದಿನದ ಕೊನೆಯಲ್ಲಿ ನನ್ನನ್ನು ಮಠಕೇರಿಯ ಆ ದೊಡ್ಡ ಚೌಕಕ್ಕೆ ಕರೆದುಕೊಂಡು ಬಂದರು. ಈ ಚೌಕ ಅವರ ಕಥೆಗೆ ಜೀವಂತ ಸಂಬಂಧವುಳ್ಳದ್ದಾಗಿರುವಾಗಲೂ ನಮ್ಮ ಸುತ್ತಾಟದ ಕೊನೆಯಲ್ಲಿ ಇಲ್ಲಿಗೆ ಬಂದದ್ದು, ಆಕಸ್ಮಿಕವಲ್ಲವೆಂದು ನನಗೆ ಕೂಡಲೇ ಹೊಳೆಯಿತು. ಅಂದು ಕೈಗೊಂಡ ಸಂಚಾರಕ್ಕೆ, ಕಥಾಪ್ರಸಂಗದ ನಾಯಕದ್ವಯರ ಪರಿಚಯಕ್ಕೆ ನಿಶ್ಚಿತವಾದ ಕ್ರಮವಿದ್ದದ್ದು ನನ್ನ ಲಕ್ಷ್ಯಕ್ಕೆ ಬಂದಿತ್ತು. ಬಹುಶಃ ತಮ್ಮ ನಿರೂಪಣೆಯ ಪ್ರಾಮಾಣಿಕತೆಯನ್ನು ನನ್ನ ಮೇಲೆ ಬಿಂಬಿಸಲು ಈ ಕ್ರಮ ಅವಶ್ಯವೆಂದು ಅವರು ತಿಳಿದಿರುವ ಅನುಮಾನವಾಯಿತು. +ಮಠಕೇರಿಗೆ ನಾವು ಬಂದು ಮುಟ್ಟಿದಾಗ ಚೌಕದ ಮೇಲೆ ಮುಸ್ಸಂಜೆಯ ಮಬ್ಬುಗತ್ತಲೆ ಇಳಿದಿತ್ತು. ರಥಸಪ್ತಮಿಯ ದಿವಸ ಕುಮಟೆಯಲ್ಲಿ ತೇರಿನ ಜಾತ್ರೆ ನೆರೆಯುತ್ತಿದ್ದದ್ದು ಇದೇ ಚೌಕದಲ್ಲಾಗಿತ್ತು. ಚೌಕದ ಒಂದು ತುದಿಯಲ್ಲಿದ್ದ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ರಥಯಾತ್ರೆ ಶಾಂತೇರಿ ಕಾಮಾಕ್ಷಿ ದೇವಸ್ಥಾನವನ್ನು ದಾಟಿ ಇನ್ನೊಂದು ಕೊನೆಯಲ್ಲಿದ್ದ ಕಾವೇರಿ ಕಾಮಾಕ್ಷಿ, ಮ್ಹಾಳಸಾ ದೇವಸ್ಥಾನಗಳವರೆಗೂ ಸಾಗುತ್ತಿತ್ತು. ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಪ್ರವೇಶದ್ವಾರದ ಹೊರಗೆ ದೊಡ್ಡದೊಂದು ಕಟ್ಯ್ಟೆಯಿದ್ದ ಬಾವಿ. ಬಾವಿಕಟ್ಟೆಯಿಂದ ತುಸು ದೂರವಾಗಿ ಅದರ ರಸ್ತೆಯಂಚಿಗೆ ಹತ್ತಿರವಾಗಿ ಸಿಮೆಂಟಿನಲ್ಲಿ ಕಟ್ಟಿಸಿದ ಒಂದು ಬೆಂಚು ಇತ್ತು. ಸುಮಾರು ಎಂಟು ಫೂಟು ಉದ್ದವಾದ ಸೋಫಾ ಆಕಾರದ ಈ ಬೆಂಚು ಹಲವು ಕಡೆಗಳಲ್ಲಿ ಮುರಿದಿತ್ತು. ಆದರೂ ನನ್ನ ಮಿತ್ರರು ನನ್ನನ್ನು ಆ ಬೆಂಚಿಗೇ ಕರೆದೊಯ್ದರು. ಬೆಂಚಿನ ಈಗಿನ ಸ್ಥಿತಿಯಲ್ಲಿ ಅದರ ಮೇಲೆ ಯಾರೂ ಕೂರುತ್ತಿರಲಿಲ್ಲವೇನೋ. ಹಾಗಾಗಿ ಈಗ ಕುಳಿತುಕೊಂಡ ನಾವಿಬ್ಬರೂ ಹಲವರ ಕುತೂಹಲಕ್ಕೆ ವಸ್ತುವಾದೆವು. +ಬೆಂಚಿನ ಮೇಲೆ ಕುಳಿತುಕೊಳ್ಳುತ್ತಲೇ “ಇಲ್ಲಿ ಕುಳಿತಾಗ ಏನಾದರೂ ವಿಶೇಷ ಅನ್ನಿಸುತ್ತಿದೆಯೆ ?” ಎಂದು ಕೇಳಿದರು. ನನ್ನ ಬದಿಯಲ್ಲಿ ಕುಳಿತ ಮಿತ್ರರು, ನನಗೆ ಪ್ರಶ್ನೆಯ ಅರ್ಥ ತಿಳಿಯದೇ ಗೊಂದಲದಲ್ಲಿ ಬಿದ್ದೆ. ನನ್ನ ಉತ್ತರವನ್ನು ಕಾಯದೇ ಅವರು ನಾವು ಕೂತಲ್ಲಿಂದ ಕಾಣುವ ಎಲ್ಲವನ್ನೂ ಇದು ಮಠ. ಅದು ಇಲ್ಲಿಯ ಬಾಜಾರು ಎಂಬಂಥ ತೀರ ವಾಸ್ತವಿಕವಾದ ಸರಳ ಧಾಟಿಯಲ್ಲಿ ವರ್ಣಿಸುತ್ತಿದ್ದಂತೆ ಪರಿಸರದ ಸಣ್ಣಪುಟ್ಟ ವಿವರಗಳಿಗೂ ವಿಲಕ್ಷಣ ನಿಗೂಢತೆಯ ಮೆರುಗು ಬರತೊಡಗಿದ ಭಾಸವಾಗಿ ಮೈ ಮುಳ್ಳು ಬಿಟ್ಟಿತು. ಇವರು ಹೇಳಹೊರಟ ಕಥೆಯ ಜೀವಾಳ ಇಲ್ಲೆಲ್ಲೋ ಇದೆಯೆಂದು ಭಾವನೆಯಾಗುತ್ತಿದ್ದಂತೆ ನನ್ನ ಮಿತ್ರರು, “ಚಂದ್ರನ ಬೆಳಕಿನಲ್ಲಿ ನೋಡಬೇಕು. ಆಗ, ಈ ಚೌಕ ಮನಸ್ಸಿನ ಮೇಲೆ ಮಾಡುವ ಪರಿಣಾಮವೇ ಬೇರೆ. ಈಗ ನೀವೇ ನೋಡುವಿರಂತೆ. ನಾಳೆ ಹುಣ್ಣಿಮೆ. ಇನ್ನು ಕೆಲ ಹೊತ್ತಿನಲ್ಲೇ ಚಂದ್ರೋದಯ” ಎಂದರು. ಆಮೇಲೆ ಐನು ಮಾತಿಗೆ ಬರುವ ಧರ್ತಿಯಲ್ಲಿ, “ಊರೆಲ್ಲ ಸುತ್ತಾಡಿ ಬಂದಮೇಲೆ ಅವರಿಬ್ಬರೂ ವಿರಮಿಸುತ್ತಿದ್ದುದು ಇದೇ ಬೆಂಚಿನ ಮೇಲಾಗಿತ್ತು. ಸುತ್ತಲಿನದನ್ನು ನೋಡುತ್ತ ಮೌನ ಧರಿಸಿ ಕುಳಿತುಬಿಡುತ್ತಿದ್ದರು. ಒಂದು ಅರ್ಧ ಗಂಟೆ ಹಾಗೆ ಕುಳಿತವರು ಗಪ್‌ಚಿಪ್ ಎದ್ದು ಮನೆಯ ಹಾದಿ ಹಿಡಿಯುತ್ತಿದ್ದರು. ಇಬ್ಬರ ಮನೆಗಳೂ ಇಲ್ಲಿಂದ ಎರಡು ಮಿನಿಟಿನ ಹಾದಿ. ಈ ಪರಿಪಾಠದ ಪರಿಚಯವಿದ್ದ ಯಾರೂ ಮುಸ್ಸಂಜೆಯ ಈ ಹೊತ್ತಿನಲ್ಲಿ ಆ ಬೆಂಚಿನ ಮೇಲೆ ಕೂರುವ ಆಗ್ರಹ ಹಿಡಿಯುತ್ತಿರಲಿಲ್ಲ” ಎಂದರು. +ಕಥಾಪ್ರಸಂಗಕ್ಕೆ ಚಾಲನೆಯಿತ್ತ ಮುಖ್ಯ ಘಟನೆಗೆ ಬರುವ ಮೊದಲು ಆಚರಿಸಲೇಬೇಕಾದ ಒಂದು ಧಾರ್ಮಿಕ ವಿಧಿಯೆಂಬಂತೆ ಕೈಕೊಂಡ ಈ ಪರಿಭ್ರಮಣ. ಮಬ್ಬುಗತ್ತಲೆಯಲ್ಲಿ ಆಮೇಲೆ ಬೆಳ್ದಿಂಗಳ ಬೆಳಕಿನಲ್ಲಿ ಮಾಡಿದ ಚೌಕದ ವೀಕ್ಷಣಗಳು ಮುಗಿದು ನಾವು ಮನೆಯ ಹಾದಿ ಹಿಡಿದಾಗ ನನ್ನ ಮಿತ್ರರು ಒಮ್ಮೆಲೇ ಮೌನ ಧರಿಸಿದರು. ಈ ಮೌನ ಕೂಡ ಈ ಕರ್ಮಕಾಂಡದ್ದೇ ಮುಂದುವರಿಕೆಯಿರಬೇಕೆಂದು ತಿಳಿದು ನಾನೂ ಮೌನನಾದೆ. ಮನೆ ತಲುಪಿದಮೇಲೂ ಬಹಳ ಹೊತ್ತು ಅವರು ನನ್ನನ್ನು ಮಾತನಾಡಿಸಲಿಲ್ಲ. ಆಮೇಲೆ ಊಟಕ್ಕೆ ಕೂರುವ ಕೆಲಹೊತ್ತಿನ ಮೊದಲಷ್ಟೇ ಬಾಯಿ ತೆರೆದರು_ +“ಈ ತರುಣರ ಒಡನಾಟ ಇಲ್ಲಿಯ ಜನರ ಬದುಕಿನಲ್ಲಿ ಎಷ್ಟೊಂದು ಆತ್ಮೀಯವಾಗಿ ಹಾಸುಹೊಕ್ಕಾಗಿದೆಯೆಂದರೆ ಅವರು ಕಾಲೇಜು ಸೇರಿದಮೇಲೆ ಊರಲ್ಲಿಲ್ಲದ ಅಲ್ಪ ಕಾಲದಲ್ಲಿ ಕೂಡ ಏನೋ ಕಳಕೊಂಡವರ ಹಾಗೆ ಬೇಚೈನರಾಗುತ್ತಿದ್ದೆವು. ಹೀಗಿರುವಾಗ ಅವರು ತಮ್ಮ ಪರೀಕ್ಷೆಗಳನ್ನು ಮುಗಿಸಿ ಊಗಿಗೆ ಬಂದ ಕೆಲವು ದಿನಗಳಲ್ಲೇ ಒಂದು ರಾತ್ರಿ ಇಬ್ಬರೂ ಇದ್ದಕ್ಕಿದ್ದ ಹಾಗೆ ಮನೆಯಿಂದ ಬೇಪತ್ತೆಯಾಗಿರುವ ಸುದ್ದಿ ತಿಳಿದಾಗ ನಮಗೆಲ್ಲ ಅಕ್ಷರಶಃ ತಲೆಯ ಮೇಲೆ ಆಕಾಶವೇ ಕಳಚಿಬಿದ್ದ ಅನುಭವವಾಯಿತು. ಇಬ್ಬರ ಹಾಸಿಗೆಗಳಲ್ಲೂ, “ಒಂದು ಒಳ್ಳೆ ಉದ್ದೇಶಕ್ಕಾಗಿಯೇ ದೂರ ಹೊರಟಿದ್ದೇನೆ. ಹುಡುಕಬೇಡಿ’ ಎಂಬಂಥ ಮಜಕೂರು ಗೀರಿದ ಚೀಟಿಗಳಿದ್ದವು. ಇದರಾಚೆ ಯಾರಿಗೂ ಆಗ ಏನೂ ತಿಳಿಯಲಿಲ್ಲ.” +– ೩ – +ಈ ನಿಗೂಢ ನಿರ್ಗಮನಗಳಿಂದಾಗಿ ಊರ ಜನರ ಭಾವನಾತ್ಮಕ ಜೀವನದಲ್ಲಿ ತುಂಬಲಾರದ ದೊಡ್ಡ ಪೊಳ್ಳು ನಿರ್ಮಾಣವಾಯಿತು. ತಮಗರಿವಿಲ್ಲದೇನೆ ತಾವು ಅಷ್ಟೊಂದು ಪ್ರೀತಿಸಿದ ಈ ವಿಲಕ್ಷಣ ಮುಗ್ಧರ ಬಗ್ಗೆ ಜನ ಆಡಿಕೊಳ್ಳತೊಡಗಿದರು. ಮಮ್ಮಲ ಮರುಗಿದರು. ಹಲವರಿಗೆ ನೆಲ್ಲಿಕೇರಿಯ ನಾರದಮುನಿಯೆಂದೋ, ಕೃಷ್ಣಕಾರಸ್ಥಾನಿಯೆಂದೋ, ಕೌಟಿಲ್ಯ ದೀಡಬುದ್ವಂತನೆಂದೋ-ಒಟ್ಟಿನಲ್ಲಿ ಹಲವು ಅಭಿದಾನಗಳಿಂದ ಪ್ರಖ್ಯಾತನಾಗಿದ್ದ-ವೈಕುಂಠಬಾಳ್ಗಿಯ ಮೇಲೆ ಗುಮಾನಿ ; ಈ ಓಟುಗಳ ಹಿಂದೆ ಒಬ್ಬರ ಒಳಿತನ್ನು ನೋಡಲಾಗದ ಇವನದೇ ಕಪಟ ಹಸ್ತವಿದೆಯೆಂದು, ಖಾತರಿ ಮಾಡಿಕೊಳ್ಳಲು ಹೋಗಿ ಅವನನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾತ್ರ ಊರಲ್ಲಿ ಯಾರಿಗೂ ಇರಲಿಲ್ಲ. +ಇತ್ತ, ಮನೆ ಬಿಟ್ಟು ಮೂರು ತಿಂಗಳಾಗುತ್ತ ಬಂದರೂ ಇನ್ನೂ ಹಿಂದಿರುಗಿರದ ಮಕ್ಕಳ ಬಗ್ಗೆ ಆತಂಕಗೊಂಡ ಪರಶುರಾಮಭಟ್ಟ ಮತ್ತು ಶೇಷ ಪೈಗಳು ಪರಸ್ಪರರನ್ನು ಕಂಡು ಮಾತನಾಡಿದರು. ಆಮೇಲೆ ಊರಿನ ಕೆಲವರಿಗಾದರೂ ತಮ್ಮ ಮನೆಯಲ್ಲಿ ನಡೆದದ್ದನ್ನು ತಿಳಿಸುವುದನ್ನು ನಿಶ್ಚಯಿಸಿ ಇಬ್ಬರು ಘನಸ್ಥರನ್ನು ಮನೆಗೆ ಕರೆಸಿಕೊಂಡರು. ಹಾಗೆ ಕರೆಸಿಕೊಂಡ ಇಬ್ಬರಲ್ಲಿ ನನ್ನ ಮಿತ್ರರು ಒಬ್ಬರಾಗಿದ್ದರು. ಮಕ್ಕಳ ಅಪ್ಪಂದಿರಿಂದ ಗೊತ್ತಾದದ್ದಿಷ್ಟು. +ವಿಧಿನಿಯಮದಿಂದಲೋ ಎಂಬಂತೆ ಇಬ್ಬರೂ ಅಪ್ಪಂದಿರಿಗೆ ಒಂದೇ ಕಾಲಕ್ಕೆ ಇವರ ಗೆಳೆತನ ಅತಿಗೆ ಹೋಗುತ್ತಿದೆ, ಇದು ಇವರ ಭವಿಷ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರ ತಲೆಯಲ್ಲಿ ಹೊಕ್ಕುಬಿಟ್ಟಿದೆ. ಹೇಗಾದರೂ ಮಾಡಿ ಇವರ ಈ ಹುಚ್ಚನ್ನು ಬಿಡಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಪರೀಕ್ಷೆಗಳನ್ನು ಮುಗಿಸಿ ಊರಿಗೆ ಬಂದಿರುವ ಈ ಸಮಯವೇ ಈ ಕೆಲಸಕ್ಕೆ ಯೋಗ್ಯವಾದದ್ದೆಂದೂ ಇವರ ಗೆಳೆತನವನ್ನು ಕೆಡಿಸುವುದೇ ಈ ಹುಚ್ಚು ಬಿಡಿಸುವ ಸುಲಭ ಉಪಾಯವೆಂದು ತೀರ್ಮಾನಿಸಿದ್ದಾರೆ. ಆದರೆ ಇಂಥ ಗೆಳೆತನವನ್ನು ಕೆಡಿಸುವುದಾದರೂ ಹೇಗೆಂದು ತಿಳಿಯದೇ ತಮ್ಮ ತಲೆಯಲ್ಲಿ ಬಂದ ವಿಚಾರಗಳಿಗೆ ತಾವೇ ನಾಚಿಕೆಪಟ್ಟುಕೊಂಡು ಅವುಗಳನ್ನು ಬಿಟ್ಟುಕೊಟ್ಟ ಗಳಿಗೆಯಲ್ಲೇ-ಕರ್ಮ-ಧರ್ಮ ಸಂಯೋಗದಿಂದ ಎಂಬಂತೆ-ಕುಮಟೆಯಲ್ಲಿ ಒಬ್ಬ ವಿಲಕ್ಷಣ ವ್ಯಕ್ತಿಯ ಆಗಮನವಾಯಿತು. +ಅಪರಿಚಿತ ಆಗಂತುಕನ ಚಿತ್ರವಿಚಿತ್ರ ವೇಷಭೂಷೆಯೇ ನೋಡಿದವರ ಮನಸ್ಸನ್ನು ತಕ್ಷಣ ಸಮ್ಮೋಹಿಸುವಂಥಾದ್ದಾಗಿತ್ತು. ಪಾದಗಳವರೆಗೂ ಉದ್ದವಾಗಿ ಇಳಿದ, ಉದ್ದ ತೋಳುಗಳುಳ್ಳ ಕಪ್ಪಾನುಕಪ್ಪು ನಿಲುವಂಗಿ, ತಲೆಗೆ ಹಸಿರು ಕೆಂಪು ಬಣ್ಣದ ಹಗ್ಗಗಳಿಂದ ಹೆಣೆದ ಟೋಪಿಯ ಆಕಾರದ ಶಿರಸ್ತ್ರಾಣ. ಅಂಗಿಯ ತೋಳುಗಳಿಂದ ಆಗೀಗ ಹೊರಗೆ ಇಣುಕುತ್ತಿದ್ದ ಸಪೂರ ಮುಂಗೈಗೆ ದೊಡ್ಡ ದೊಡ್ಡ ಬೆಳ್ಳಿಯ ಬಳೆಗಳು, ಕೊರಳಿಗೆ ದೊಡ್ಡ ದೊಡ್ಡ ಕವಡಿಗಳ ಮಾಲೆ, ಕಾಲಿಗೆ ಪಾದುಕೆಯನ್ನು ಹೋಲುವ ಕೆಂಪು ಹಸಿರು ಪಟ್ಟಿಗಳನ್ನು ಬಿಡಿಸಿದ ಕಟ್ಟಿಗೆಯ ಪಾದರಕ್ಷೆ. ಸವತೇಕಾಯಿಯ ಹಾಗೆ ಉದ್ದವಾದ ಮೋರೆಗೆ ತೈಮೂರ್ಲಿಂಗನ ನೆನಪು ಕೊಡುವ ದಾಡಿ ಮೀಸೆಗಳು. ಯಾವ ಪ್ರಾಂತದವನೆಂದು ಊಹಿಸುವುದು ಸಾಧ್ಯವಿರಲಿಲ್ಲ. ಇವರು ಕೇಳಲಿಲ್ಲ. ಅವನಾಗಿ ತಿಳಿಸಲಿಲ್ಲ. ಅವನ ಹರುಕುಮುರುಕು ಹಿಂದಿಯಿಂದ ಇವರಿಗೆ ಅವನು ನೇಪಾಳ, ಸಿಕ್ಕಿಮ್ ಆ ಕಡೆಯವನಿರಬೇಕು ಎನ್ನುವ ಕಲ್ಪನೆಯಾಯಿತಂತೆ. ಅವರು ಮಾಡಿದ ಒಟ್ಟೂ ವರ್ಣನೆಯಿಂದ ಅವನೊಬ್ಬ ಸಾದಾ ಮನುಷ್ಯನಾಗಿರದೇ ಮುಂದೆ ನಡೆದ ಅನಾಹುತವನ್ನು ಒದಗಿಸಲೆಂದೇ ಮನುಷ್ಯ ರೂಪ ಧರಿಸಿ ಬಂದ ತಮ್ಮ ಅದೃಷ್ಟವಾಗಿದ್ದನೆಂದು ಇವರು ಸೂಚಿಸುತ್ತಿದ್ದಾರೆ ಎನ್ನುವ ಭಾವನೆಯಾಯಿತಂತೆ ನನ್ನ ಮಿತ್ರರಿಗೆ. +ಅಪರಿಚಿತನು ನೇರ ಶೇಷ ಪೈಗಳ ಮನೆಯ ಅಂಗಳದಲ್ಲಿ ಹೋಗಿ ಹಾಜರಾದನು. +ಇಡೀ ಕಂಪೌಂಡಿನಲ್ಲಿದ್ದ ಒಂದೇ ಮನೆಯೆನ್ನುವ ಕಾರಣಕ್ಕಷ್ಟೇ ಬಂಗಲೆಯೆಂದು ಕರೆಸಿಕೊಳ್ಳುತ್ತಿದ್ದ ಮನೆ ನಿಜಕ್ಕೂ ಒಂದು ಹಾಳು ಬಿದ್ದ ಕೋಟೆಯ ಹಾಗಿತ್ತಂತೆ. ದೊಡ್ಡ ಅವಿಭಾಜ್ಯ ಕುಟುಂಬದ ಹದಿನೈದು-ಇಪ್ಪತ್ತು ಮಂದಿಗಾದರೂ ಸಾಕಾಗುವಂತೆ ಕಟ್ಟಿಸಿದ ದೊಡ್ಡ ಮನೆಯಲ್ಲಿ ಈ ಕತೆ ನಡೆದಹೊತ್ತಿಗೆ ಇದ್ದವರು ನಾಲ್ಕೈದು ಜನ ಮಾತ್ರ. ನನ್ನ ಲಕ್ಷ್ಯವೆಲ್ಲ ನನ್ನಲ್ಲಿ ಈಗಾಗಲೇ ಎಲ್ಲಿಲ್ಲದ ಕುತೂಹಲ ಕೆರಳಿಸಿದ ಕತೆಯೆ ಮೇಲಿತ್ತು. ಇದರ ಅರಿವು ಇದ್ದೂ ನನ್ನ ಮಿತ್ರರಿಗೆ ಆ ಮನೆಯನ್ನು ವರ್ಣಿಸುವ ಚಪಲವನ್ನು ಹತ್ತಿಕ್ಕುವುದಾಗಲಿಲ್ಲ. ಬಹುಶಃ ತಾವು ಅರುಹಲಿದ್ದ ಮಹಾ ಭಯಂಕರ ಘಟನೆ ನಿಜಕ್ಕೂ ನಡೆದದ್ದೆಂದು ನಂಬಿಸಲು ಈ ವರ್ಣನೆ ಅವಶ್ಯವಾಗಿ ಕಂಡಿರಬೇಕು. ಅವಾಢವ್ಯವಾದ ಹಿತ್ತಲಲ್ಲಿ ಹಗಲಲ್ಲೂ ಕತ್ತಲೆ ತುಂಬಿದ ವಾತಾವರಣ ನಿರ್ಮಿಸಿದ ರಾಕ್ಷಸಾಕಾರದ ಮರಗಳಿಂದ ಆರಂಭವಾದ ವರ್ಣನೆ ಆ ಮನೆಯ ಮಹಾಗಾತ್ರದ ಮರದ ಕಂಬಗಳಿಗೆ, ತೊಲೆ-ಜಂತೆಗಳಿಗೆ ; ಲೆಕ್ಕವಿಲ್ಲದಷ್ಟು ಕೋಣೆಗಳಿಗೆ ; ಬಾಗಿಲು-ಕಟಕಿಗಳಿಗೆ ಬರುವಷ್ಟರಲ್ಲಿ ನನ್ನ ಕಣ್ಣೆದುರು ಹಲವು ಜಾನಪದ ಕಥೆಗಳಲ್ಲಿ ಬಂದ ನಾನಾ ಬಗೆಯ ಸರ್ಪಗಳು, ಚಿತ್ರವಿಚಿತ್ರ ಹಕ್ಕಿಗಳು, ಸಾಲದೇಹೋದರೆ ಅಕರಾಳ ವಿಕರಾಳ ರಾಕ್ಷಸರು ಕಾವಲಿಗಿದ್ದ ಅರಮನೆಯ ಚಿತ್ರ ಮೂಡಿ ನಿಂತಿತು. +ಆಗಂತುಕರು ಅಂಗಳದಲ್ಲಿ ಪ್ರಕಟಗೊಂಡ ಹೊತ್ತಿಗೆ ಆಗಷ್ಟೇ ಮಧ್ಯಾಹ್ನದ ಊಟಕ್ಕೆಂದು ವಖಾರಿಯಿಂದ ಬಂದಿದ್ದ ಶೇಷ ಪೈಗಳು ಇನ್ನೂ ಹೊರ ಜಗಲಿಯ ಮೇಲೆ ನಿಂತು ಕಾಲಲ್ಲಿಯ ಮೆಟ್ಟು ಕಳಚುತ್ತಿದ್ದರು. ಆಗಂತುಕನು ಅವರನ್ನು ಸಮೀಪಿಸಿ ತಾನೊಬ್ಬ ಸಾಮುದ್ರಿಕ ಜ್ಯೋತಿಷಿಯೆಂದೂ , ಬಹುದೂರದ ದೇಶದಿಂದ ಬಂದವನೆಂದೂ ತನ್ನ ಪರಿಚಯ ಸಾರಿದ. ಕಣ್ಣೆದುರು ಪ್ರಕಟಗೊಂಡವನ ರೂಪದಿಂದಾಗಿಯೋ, ಕಿವಿ ತುಂಬಿದ ಅವನ ದನಿಯಿಂದಾಗಿಯೋ, ಅವನು ಮನೆ ಬಾಗಿಲಿಗೆ ಬಂದ ಗಳಿಗೆ ಕೆಟ್ಟದ್ದಾಗಿದ್ದಕ್ಕೋ-ಅಂದು ಅಮಾವಾಸ್ಯೆಯೆಂದು ತಡವಾಗಿ ಲಕ್ಷ್ಯಕ್ಕೆ ಬಂದಿತಂತೆ, ತಲೆಯಲ್ಲಿ. ಈ ಮೊದಲೂ ಒಮ್ಮೆ ಬಂದಿದ್ದ ಕೆಟ್ಟ ವಿಚಾರ ಈಗ ಮತ್ತೆ ಬಂದಿದೆ-ತಮ್ಮ ಕೈಯಿಂದ ಸಾಧ್ಯವಾಗಿರದ ಕೆಲಸವನ್ನು ಈ ಜ್ಯೋತಿಷಿಯ ಮೂಲಕ ಮಾಡಿಸಬಹುದೇನೋ ಎಂದು ಆಸೆಯಾಗಿ ಅವನನ್ನು ಅವಸರ ಅವಸರವಾಗಿ ಮಾಳಿಗೆಯ ಮೇಲಿನ ಕೋಣೆಯೊಂದಕ್ಕೆ ಕರೆದೊಯ್ದರು. ಕೆಲಹೊತ್ತಿನಲ್ಲಿ ಪೈಗಳ ಹೆಂಡತಿ ಹಾಗೂ ವಿಧವೆ ಅಕ್ಕ ಕೂಡ ಅಲ್ಲಿಗೆ ಬಂದರು. “ಪರ ಊರಿನಲ್ಲಿ ಕಲಿಯುತ್ತಿದ್ದ ನಮ್ಮ ಮಗ ಎರಡು ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ. ಅವನ ಕೈ ನೋಡಿ ಹೇಳಬೇಕು. ಯಾಕೆಂದರೆ…..” ಒಮ್ಮೆಲೆ ದನಿ ತಗ್ಗಿಸಿದ ಪೈಗಳಿಗೆ ತಮ್ಮ ಅರಿಕೆಯನ್ನು ವಿವರಿಸುವ ಮನಸ್ಸಾಗಿತ್ತೇನೋ. ಆದರೆ ಜೋತಿಷಿ ಅವರನ್ನು ಅರ್ಧಕ್ಕೆ ತಡೆದು : “ಏನೂ ಹೇಳಲು ಹೋಗಬೇಡಿ. ನಿಮ್ಮ ಮಗ ಮನೆಯಲ್ಲಿದ್ದರೆ ಅವನನ್ನೇ ಕರೆಯಿಸಿ. ಅವನ ಕೈ ನೋಡಲೆಂದೇ ಬಂದಿದ್ದೇನೆ” ಎಂದ. ಅವನ ದನಿಯೊಳಗಿನ ಗದರಿಕೆಗೆ ಪೈಗಳು ಕುಳಿತಲ್ಲೆ ತತ್ತರಿಸಿದರು. +ಕಾಲೇಜು ಕಲಿತ ಮಗ. ಇಂಥದ್ದಕ್ಕೆ ದಾದು ಮಾಡುವವನಲ್ಲವೆಂದು ಗೊತ್ತಿದ್ದೂ ಅಳುಕುತ್ತಲೇ ಅವನನ್ನು ಕರೆತರಲು ಏಳುತ್ತಿರುವಷ್ಟರಲ್ಲಿ ಮಗನೇ ಬಾಗಿಲಲ್ಲಿ ಪ್ರಕಟಗೊಂಡ ಆಕಸ್ಮಿಕಕ್ಕೆ ಏನನ್ನೋಣ ! ಎದುರು ಕುಳಿತವನ ಪರಿಚಯದ ಹಾದಿ ಕಾಯದೇ, ತನ್ನ ಹಸ್ತವನ್ನು ಅವನ ಮೋರೆಯ ಮುಂದೆ ಚಾಚಿ, “ನನಗೆ ಇದ್ಯಾವುದರಲ್ಲಿಯೂ ವಿಶ್ವಾಸವಿಲ್ಲ. ಆದರೂ ಕೇವಲ ಕುತೂಹಲಕ್ಕಾಗಿ ಕೇಳಲು ಸಿದ್ಧನಿದ್ದೇನೆ, ಹೇಳಿ” ಎಂದ. ಕೋಣೆಯಲ್ಲಿದ್ದವರಿಗೆ ತಮ್ಮ ಕಣ್ಣುಗಳ ಮೇಲೆ ತಮಗೇ ವಿಶ್ವಾಸ ಮೂಡದಾಯಿತು. ಸಾಮುದ್ರಿಕ ಅವನ ಹಸ್ತವನ್ನು ತನ್ನ ಕೈಯಲ್ಲಿ ಹಿಡಿದು ಪರೀಕ್ಷಿಸುತ್ತಿದ್ದಂತೆ, “ಬರೇ ಮುಂದಾಗುವುದನ್ನು ಹೇಳಬೇಡಿ. ಅದನ್ನು ನೋಡಲು ನೀವಿಲ್ಲಿ ಇರಲಾರಿರಿ. ಹಿಂದಿನದನ್ನೂ ಹೇಳಿರಿ. ವಿಶ್ವಾಸ ಮೂಡೀತು” ಎಂದು ಹುಡುಗ ನಗುತ್ತಲೇ ಆಹ್ವಾನಿಸಿದ. +ಜ್ಯೋತಿಷಿಯೂ ಹಿಂದೆಗೆಯಲಿಲ್ಲ. ಅವನ ಬಾಲ್ಯದಿಂದಲೇ ಆರಂಭಿಸಿದವನು ಹಲವು ಸತ್ಯ ಸಂಗತಿಗಳನ್ನು ತಿಳಿಸುತ್ತ ನೇರವಾಗಿ ಗೋವಿಂದನೊಡನೆಯ ಅವನ ಗೆಳೆತನಕ್ಕೇ ಬಂದುಮುಟ್ಟಿದ. “ನೀವಿಬ್ಬರೂ ಬೆಳಕಿನ ಆರಾಧಕರು. ಬೆಳಕಿನ ರಹಸ್ಯವನ್ನು ಕುರಿತು ನಿಮಗೆ ಅಗಾಧ ಕುತೂಹಲವಿದೆ. ನಿಮ್ಮ ಎಳೆ ವಯಸ್ಸು ಇದಕ್ಕೆ ಸಾಲದು. ಆದರೂ ಈ ಕುತೂಹಲವೇ ನಿಮ್ಮನ್ನು ಹತ್ತಿರ ಸೆಳೆದಿದೆ. ಇಂದಿನಿಂದ ಹನ್ನೆರಡು ವರ್ಷಗಳ ಮೇಲೆ ನೀವಿಬ್ಬರೂ ಈ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದನ್ನು ಸಾಧಿಸುತ್ತೀರಿ. ನಿನ್ನ ಗೆಳೆಯನ ಸಂಸ್ಕೃತದ ಜ್ಞಾನ, ನಿನ್ನ ವಿಜ್ಞಾನದ ಅಭ್ಯಾಸ ಇದಕ್ಕೆ ನೆರವು ನೀಡುತ್ತವೆ.” +ಯಾವುದೋ ಕತ್ತಲೆಯ ಲೋಕದಿಂದ ಎದ್ದು ಬಂದು ಕಣ್ಣೆದುರು ಅವಿಷ್ಕಾರಗೊಂಡವನು ತನ್ನ ಹರಕುಮುರುಕು ಹಿಂದಿಯಲ್ಲಿ ಬೆಳಕಿನ ಬಗ್ಗೆ ಹೇಳಿದ್ದನ್ನು ನನ್ನ ಮಿತ್ರರು ತಮ್ಮ ಭಾಷೆಯಲ್ಲಿ ನನಗೆ ಮುಟ್ಟಿಸುತ್ತಿದ್ದದ್ದು ಸ್ಪಷ್ಟವಿತ್ತು. ಅವರಾಗಿ ವಿಶದಪಡಿಸದಿದ್ದರೂ ಈ ಯುವಕರು ದಿನವೂ ಊರು ಸುತ್ತುತ್ತಿದ್ದಾಗ ಅವರ ಚರ್ಚೆಗೆ ಒಳಪಡುತ್ತಿದ್ದದ್ದು ಬೆಳಕಿನ ರಹಸ್ಯವಿರಬೇಕು ಎನ್ನುವ ಕಲ್ಪನೆಯಾಯಿತು. ಅವರ ವಯಸ್ಸಿನಲ್ಲಿ ಹಗಲುಗನಸುಗಳು ಅನಿರೀಕ್ಷಿತವೇನಲ್ಲ. ಆದರೆ ಇವರ ಹಗಲುಗನಿಸಿಗೆ ಇಂಥ ಗಹನ ಸಂಗತಿ ವಿಷಯವಾದದ್ದು ಆಶ್ಚರ್ಯ ಹುಟ್ಟಿಸುವಂಥಾದ್ದಾಗಿತ್ತು. ಈ ಸಾಮುದ್ರಿಕ ಜೋಯಿಸ ಹಸ್ತರೇಖೆಯನ್ನು ಓದಿ ಇದನ್ನು ಹೇಳಿದನೇ ಅಥವಾ ಯಾರಿಂದಲೋ ಮೊದಲೇ ತಿಳಿದುಕೊಂಡಿದ್ದನ್ನೇ ತಮಗೆ ಹೇಳುವ ನಾಟಕವಾಡಿದನೇ? ತಿಳಿಯುವ ಮಾರ್ಗವಿರಲಿಲ್ಲ. ಆದರೂ ಮಗನ ಮೋರೆಯ ಮೇಲಿನ ಸಂತೋಷ ನೋಡಿಯೇ ತಂದೆತಾಯಿಗಳು ಉಬ್ಬಿದರು. +ಜೋಯಿಸರ ಮುಂದಿನ ಮಾತಿಗೆ ಕಾದು ಕುಳಿತಾಗ ತಾನು ಈಗ ಹೇಳಲಿದ್ದ ಮಾತು ಎಲ್ಲೆರೆದುರು ಆಡುವಂಥದ್ದಲ್ಲ ಎಂದನಂತೆ. ಕೋಣೆಯೊಳಗಿನ ಇತರ ಮೂವರೂ ಎದ್ದುಹೋದಮೇಲೆ ಅಲ್ಲಿ ಏನು ನಡೆಯಿತು, ಯಾರಿಗೂ ತಿಳಿಯಲಿಲ್ಲ. ಮುಂದಿನ ಎರಡು ದಿನಗಳಲ್ಲೇ ಮಗ ಮಲಗಿದ ಹಾಸಿಗೆಯ ಮೇಲೆ ಚೀಟಿ ಬಿಟ್ಟು ಊರು ತೊರೆದದ್ದಕ್ಕೂ ಜ್ಯೋತಿಷಿ ನುಡಿದಿರಬಹುದಾದ ಭವಿಷ್ಯವಾಣಿಗೂ ಸಂಬಂಧವಿದೆಯೆನ್ನುವ ಬಗ್ಗೆ ಮಾತ್ರ ಮನೆಯೊಳಗಿನ ಯಾರಿಗೂ ಸಂಶಯ ಉಳಿಯಲಿಲ್ಲ. +ಗೋವಿಂದನ ಮನೆಯಲ್ಲೂ ಈ ನಾಟಕ ತದ್ವತ್ತಾಗಿ ಚಾಚೂ ಫರಕಿಲ್ಲದೇ ನಡೆದಿದೆಯೆಂದು ಗೊತ್ತಾದದ್ದು ಹುಡುಗರ ತಂದೆಯರು ಪರಸ್ಪರ ಮಾತನಾಡಿಕೊಂಡಮೇಲೇ, ನಡೆದದ್ದು ಊರ ಜನರಿಗೂ ಗೊತ್ತಾಗಿ ಕುಮಟೆಗೆ ಬಂದಿದ್ದ ಜ್ಯೋತಿಷಿ ಈ ಎರಡು ಮನೆಗಳನ್ನು ಬಿಟ್ಟು ಇನ್ನೆಲ್ಲೂ ಹೋಗಿರದ ಸತ್ಯ ಲಕ್ಶ್ಯಕ್ಕೆ ಬಂದಾಗಲಂತೂ ಬಂದವನು ಜ್ಯೋತಿಷಿಯಾಗಿರಲಾರ, ಮಾಟಗಾರನಾಗಿರಬೇಕು. ಯಾರೋ ಹೊಟ್ಟೆಕಿಚ್ಚಿನವರೇ ಮಾಡಿಸಿದ ಕೆಲಸವಿದು ಎಂದು ಊರ ತುಂಬ ಗುಲ್ಲೆದ್ದಿತು. +ಒಮ್ಮೆ ಊರು ಬಿಟ್ತವರು ಒಂದು ವರ್ಷವಾದರೂ ಹಿಂತಿರುಗಿ ಬರುವುದುಳಿಯಲಿ, ಅವರ ಬಗ್ಗೆ ಯಾವ ಒಂದು ಸುಳಿವೂ ಸಿಗದೇಹೋದಾಗ ಹತಾಶರಾದ ತಂದೆಯರು ಊರಿನ ಕೆಲವು ಹಿರಿಯರನ್ನು ಜೊತೆಗೆ ಕರೆದುಕೊಂಡು ಸೀದಾ ಹೋಗಿ ನೆಲ್ಲಿಕೇರಿಯ ದೀಡಬುದ್ವಂತರನ್ನು ಸಂಧಿಸಿದರು. “ಹೇಳಿ ! ನೀವು ಊರಿಗೆ ಕರೆಸಿಕೊಂಡ ಆ ದರ್ವೇಸಿ ನಿಜಕ್ಕೂ ಯಾರು ? ನಮ್ಮ ಹುಡುಗರು ಏನಾದರು ? ಆ ನಿಷ್ಪಾಪರನ್ನು ಊರಿನಿಂದ ಹೊರಗಟ್ಟಿ ನೀವು ಸಾಧಿಸಿದ್ದೇನು ?” ಎಂದು ಕೇಳಿದರು. +ವೈಕುಂಠ ಬಾಳ್ಗಿ ಇಂಥ ಆರೋಪಕ್ಕೆಲ್ಲ ಸೊಪ್ಪು ಹಾಕುವವನಲ್ಲ- +“ಊರಿಗೆ ಊರೇ ಈ ಹುಡುಗರನ್ನು ಹೊಗಳಿ ತಲೆಯ ಮೇಲೆ ಇರಿಸಿಕೊಂಡು ಕುಣಿದಾಡುತ್ತಿದ್ದಾಗ ನಾನೊಬ್ಬನು ಮಾತ್ರ ಎಷ್ಟೆಲ್ಲರ ಎದುರು ಎಷ್ಟೆಲ್ಲ ಸಾರೆ ಇಂಥ ಗೆಳೆತನ ಆರೋಗ್ಯಕರವಾದದ್ದಲ್ಲ ಎಂದಿದ್ದೆ. ಎಂದಿದ್ದೆನೋ ಇಲ್ಲವೋ ? ಒಂದಲ್ಲ ಒಂದು ದಿನ ತೀರ ಅಪ್ರಿಯವಾದ ಮುಸೀಬತ್ತಿಗೆ ಒಳಗಾಗುತ್ತೀರಿ ಎಂದು ಬಜಾಯಿಸಿದ್ದೆ. ಬಜಾಯಿಸಿದೆನೋ ಇಲ್ಲವೋ ? ಅಂದಮೇಲೆ ಇಂತ ದುಷ್ಟ ಹಿಕ್ಮತಿಗೆ ಯಾಕೆ ಕೈ ಹಾಕಿಯೇನು?” ಎಂದು ಇವರನ್ನೇ ಮೂದಲಿಸಿದನಂತೆ. ಇವರಲ್ಲಿಯ ಯಾರೋ, “ನಿಮ್ಮ ಮಾತನ್ನು ನಿಜ ಮಾಡಿ ತೋರಿಸಲಿಕ್ಕೆ” ಎಂದು ಹಂಗಿಸಿದಾಗ. “ನೀವು ಹೇಳಿದರೆ ನಂಬಲಿಕ್ಕಿಲ್ಲ. ಆದರೂ ಹೇಳುತ್ತೇನೆ, ಯಾರಿಗಾದರೂ ಜ್ಯೋತಿಷಿಯನ್ನು ಒಂದು ಕುಟಿಲ ಬೇತಿಗಾಗಿ ಉಪಯೋಗಿಸಿಕೊಳ್ಳುವ ಉದ್ದೇಶ ಇದ್ದದ್ದೇ ಆದರೆ ಆ ಬೇತು ಇವರನ್ನು ಪರಸ್ಪರರಿಂದ ಬೇರೆ ಮಾಡುವುದಾಗುತ್ತಿತ್ತೇ ಹೊರತು ಹೀಗೆ ಇನ್ನಷ್ಟು ಹತ್ತಿರ ತರುವುದಲ್ಲ” ಎಂದನಂತೆ. ಒಟ್ಟಿನಲ್ಲಿ ತಕರಾರು ಮಾಡಲು ಬಂದವರೇ ಗೊಂದಲದ್ದಲ್ಲಿ ಬೀಳುವಂತೆ ಮಾಡಿದ ಆ ನಾರದ ಮುನಿಯ ಠಾಮು ಅಭಿಪ್ರಾಯದ ಪ್ರಕಾರ-ಪಾತಾಳಲೋಕದ ಅವತಾರನಂತಿದ್ದ ಜ್ಯೋತಿಷಿಯನ್ನು ಊರಿಗೆ ಕರೆಸಿದ್ದು ಈ ಹುಡುಗರದೇ ಕೆಲಸವಂತೆ ; ಅವನಾಡಿದ ಭವಿಷ್ಯವಾಣಿಯನ್ನು ನೆಪಮಾಡಿ ಇಬ್ಬರೂ ಒಂದೇ ರಾತ್ರಿ ಮನೆ ಬಿಟ್ಟದ್ದು ಕೂಡ ಆಕಸ್ಮಿಕವಲ್ಲ ; ಪೂರ್ವಯೋಜಿತವಾದದ್ದು ; ಇಬ್ಬರೂ ದೂರದ ಊರೊಂದರಲ್ಲಿ ತಮ್ಮಷ್ಟಕ್ಕೆ ಸುಖವಾಗಿದ್ದಾರೆ ; ಹೆದರುವ ಕಾರಣವಿಲ್ಲ, ಎಂದು. ಎಲ್ಲ ಗೊತ್ತಿದ್ದವರ ಹಾಗೆ ಇಬ್ಬರೂ ಅಪ್ಪಂದಿರನ್ನು ಸಂತಯಿಸಿದನಂತೆ. ಇಬ್ಬರಿಗೂ ಇವನ ತಲೆಯಮೇಲೆ ಜಪ್ಪಿಬಿಡಬೇಕು ಎನ್ನುವಷ್ಟು ಸಿಟ್ಟು ಬಂದಿರುವಾಗಲೂ ಅದನ್ನು ತೋರಗೊಡದೇ ಅಲ್ಲಿಂದ ಹೊರಬಿದ್ದರು. +ಎಷ್ಟೆಲ್ಲವನ್ನು ಓದಿಕೊಂಡ, ಏನೆಲ್ಲವನ್ನು ತಿಳಿದುಕೊಂಡ ಈ ಪಾಖಂಡಿ ಯಾರ ಬಗೆಗೂ ಒಳ್ಳೆಯ ಅಂತಃಕರಣ ಉಳ್ಳವನಲ್ಲ. ತಮ್ಮ ಮಕ್ಕಳ ಗೆಳೆತನದ ಬಗ್ಗೆ ಆಡಿದ ಒಗಟಿನಂಥ ಮಾತುಗಳ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಂಡರೂ ಅವುಗಳ ಅರ್ಥ ಈ ಅಪ್ಪಂದಿರಿಗೆ ಹೊಳೆಯಲಿಲ್ಲ. ಹಾಗೆ ನೋಡಿದರೆ ಕುಮಟೆಯ ಬಹುತೇಕೆ ಜನರಿಗೆ ಹೊಳೆಯುವಂಥದ್ದಲ್ಲವಾಗಿತ್ತು. ಅದು : “ಓಣಿಗೊಬ್ಬ ಕಲಾವಂತ ಹೆಣ್ಣು ಉಳ್ಳ ಕುಮಟೆಯಲ್ಲಿ ಪಡ್ಡೆ ಹುಡುಗರು ಕಲಾವಂತ ಹುಡುಗಿಯರಿಗೆ ಮೋಹಿತರಾಗುವುದು ಅಸಹಜವಲ್ಲ. ಮೋಹಿತರಾಗದಿರುವುದು ಅಸಹಜ.” +ತಕರಾರು ಮಾಡಲು ಬಂದವರ ಬಾಯಿ ಮುಚ್ಚಿಸಲು ಇದಕ್ಕಿಂತ ಬಲವಾದ ಅಸ್ತ್ರ ಬೇಡವಾಯಿತು. +ಅಂತಃಕರಣವುಳ್ಳ ಊರ ಜನರೆಲ್ಲರೂ ಹೆತ್ತ ತಂದೆತಾಯಿಗಳನ್ನು ಜೊತೆಗೂಡಿ ಹುಡುಗರಿಗೆ ಶುಭ ಕೋರಿದರು. ಇಬ್ಬರೂ ಊರಿಗೆ ಹಿಂತಿರುಗಿ ಬಂದು ದುಃಖಾರ್ತರಾದ ತಂದೆತಾಯಿಯರಿಗೆ ಮತ್ತೆ ಮೋರೆ ತೋರಿಸುವಂತಾಗಲಿ ಎಂದು ಪ್ರಾರ್ಥಿಸಿ ಕುಮಟೆಯ ನಾಲ್ಕೂ ದೇವಸ್ಥಾನಗಳಲ್ಲಿ, ಚಿತ್ರಿಗಿಯ ಜಟ್ಟಿಗ ದೇವರಲ್ಲಿ ಹರಕೆ ಹೊತ್ತರು. +– ೪ – +ಇವರೆಲ್ಲರ ಪ್ರಾರ್ಥನೆಯ ಫಲವಾಗಿಯೇ ಎನ್ನುವಂತೆ ಊರು ಬಿಟ್ಟು ಸರಿಯಾಗಿ ಮೂರು ವರ್ಷಗಳಾಗಿರುವಾಗ ಒಂದು ದಿನ ಪೂರ್ವಾಹ್ನ ಇಬ್ಬರೂ ಜೊತೆಯಾಗಿಯೇ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಪ್ರಕಟಗೊಂಡಾಗಿನ ದೃಶ್ಯವನ್ನು ನೋಡಿದ ಯಾರೂ ಮರೆಯಲಾರರು. ಇಬ್ಬರೂ ಪೀತಾಂಬರವುಟ್ಟು ಬಿಳಿ ಪಂಚೆಯ ಉತ್ತರೀಯ ಧರಿಸಿದ್ದರು. ಪೂಜೆಯ ಹೊತ್ತಿಂಗಿಂತ ತುಸು ಮೊದಲು ದೇವಸ್ಥಾನ ಹೊಕ್ಕವರು ಒಂದೇ ಕಾಲಕ್ಕೆ ಢಣ್ ಎಂದು ಗಂಟೆ ಬಾರಿಸುತ್ತಲೇ ಅದರ ನಾದದಲ್ಲಿ ವಿಶೇಷವೇನೋ ಕೇಳಿಸಿದಂತಾಗಿ ಜನ ಭಡಭಡನೆ ಅವರಿಗೆ ಜಾಗ ಮಾಡಿಕೊಟ್ಟರು. ಹಾಗೆ ಮಾಡಿದ್ದೇ ಬರೀ ನೆಲದ ಮೇಲೆ ಒಬ್ಬರಿಗೊಬ್ಬರು ಸಮಾಂತರವಾಗಿ ದೇವರೆದುರು ಸಾಷ್ಟಾಂಗ ಬಿದ್ದರು. ಜನರಿಗೆ ಅವರು ಯಾರೆಂದು ಕೂಡಲೇ ತಿಳಿಯಲಿಲ್ಲ. ದೇವಸ್ಥಾನದಲ್ಲಿ ಆಗ ನೆರೆದ ಗರ್ದಿಯಲ್ಲಿ ತಿಳಿಯುವ ಅವಕಾಶವೂ ಇರಲಿಲ್ಲ. +ಅಂದು ಅಕ್ಷಯ ತೃತೀಯ. ದೇವಸ್ಥಾನದಲ್ಲಿ ಚಂಡಿಕಾ ಹೋಮ. ಮಹಾ ಪೂಜೆಗಳಿದ್ದವು. ಪೂಜೆಗೆ ಬಂದವರಿಗೆಲ್ಲ ದೇವಸ್ಥಾನದಲ್ಲೇ ಊಟವಿತ್ತು. ಸಾಲುಪಂಕ್ತಿಗಳಲ್ಲಿ ಊಟಕ್ಕೆ ಕುಳಿತಾಗ ಎಲ್ಲರ ಲಕ್ಷ್ಯ ಗಾಳಿಯೊಳಗಿಂದಲೇ ಘನೀಭೂತರಾದವರ ಹಾಗೆ ಮೈಗೊಂಡ ಈ ಲಕ್ಷಣವಂತ ಯುವಕರ ಮೇಲೇ. ಅಜ್ಞಾತವಾಸದಲ್ಲಿದ್ದ ಪಂಚಪಾಂಡವರ ಪೈಕಿ ಯಾರಾದರೂ ಇರಬೇಕೆಂದು ತಿಳಿದವರ ಹಾಗೆ ಕುತೂಹಲದಿಂದ ಕೌತುಕದಿಂದ ಮತ್ತೆಮತ್ತೆ ನೋಡಿದರು. ಇವರು ಊರು ಬಿಟ್ಟಂದಿನಿಂದ ಹಾಸಿಗೆ ಹಿಡಿದುಬಿಟ್ಟಂತಿದ್ದ ದುಃಖಾರ್ತ ತಂದೆತಾಯಿಗಳು ದೇವಸ್ಥಾನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಅವರಿಗೂ ಇವರ ಗುರ್ತು ಹತ್ತುತ್ತಿರಲಿಲ್ಲವೇನೋ. ಅಷ್ಟೊಂದು ಬದಲುಗೊಂಡಿದ್ದರು. ಗೋವಿಂದ ಮೈ ಕೈ ತುಂಬಿಕೊಂಡು ಮೊದಲಿಗಿಂತ ತೋರನಾಗಿದ್ದ. ವಿಷ್ಣು ಹೆಚ್ಚಿನ ಚರ್ದಿ ಕಳೆದುಕೊಂಡು ಮೊದಲಿಗಿಂತ ಸಪೂರನಾಗಿದ್ದ. ಪರಿಣಾಮವಾಗಿ ಇಬ್ಬರೂ ಒಬ್ಬರನ್ನೊಬ್ಬರು ಹೋಲುವ ಅವಳಿಜವಳಿಗ ಹಾಗೆ ಕಾಣುತ್ತಿದ್ದರು. ಕೆಲವರಿಗಂತೂ ಥೇಟು ನಕುಲ-ಸಹದೇವರ ಹಾಗೆ ಕಂಡರು. ಇಬ್ಬರಿಗೂ ಕುರುಚಲು ಗಡ್ಡವಿತ್ತು. ಮೃದುವಾಗಿ ನೇವರಿಸಿದಂತೆ ತೋರುವ ಕುಡಿಮೀಸೆಗಳಿದ್ದವು. ಕತ್ತನ್ನು ಸಂಪೂರ್ಣವಾಗಿ ಮುಚ್ಚುವಷ್ಟು ಕೆಳಗಿಳಿದ ತಲೆಗೂದಲಿಗೆ ಕಂದುಬಣ್ಣದ ಹೊಳಪಿತ್ತು. ತುಟಿಗಳ ಅಂಚುಗಳಲ್ಲಿ ನೋಡಿದವರನ್ನು ಮಾತಿಗೆಳೆಯುವ ಮಂದಸ್ಮಿತ. ಕಣ್ಣುಗಳಲ್ಲೂ ಅಂಥದೇ ಹೊಳಪು. ಒಂದಿಬ್ಬರು “ಎಲ್ಲಿಯವರು ?” ಎಂದು ಕೇಳುವ ಧೈರ್ಯ ಮಾಡಿದಾಗ ಚುಟುಕಾಗಿ, “ಇಲ್ಲಿಯವರೇ” ಎಂದು ಉತ್ತರ ಕೊಟ್ಟರು. ಬಸ್ ! ಹೆಚ್ಚಿನ ಮಾತಿಲ್ಲ. +ದೇವಸ್ಥಾನದಿಂದ ಹೊರಬಿದ್ದ ನಂತರ ಇಬ್ಬರೂ ತಮ್ಮತಮ್ಮ ಮನೆಗಳಿಗೆ ಹೋಗಿ ತಂದೆತಾಯಿಯರಿಗೆ ನಮಸ್ಕಾರ ಮಾಡಿದ ಕೆಲವೇ ಕ್ಷಣಗಳಲ್ಲಿ ಸುದ್ದಿ ಕಾಡುಗಿಚ್ಚಿನಂತೆ ಊರೆಲ್ಲ ಹಬ್ಬಿ ಮಠದೆದುರಿನ ಚೌಕದಲ್ಲಿ ಜನ ನೆರೆದರು. ಸರ್ವತ್ರ ಉತ್ಸಾಹದ ಉತ್ಸುಕತೆಯ ವಾತವರಣ. ಇಷ್ಟು ದಿನ ಎಲ್ಲಿದ್ದರಂತೆ ? ಒಬ್ಬರನ್ನೊಬ್ಬರು ಎಲ್ಲಿ ಭೇಟಿಯಾದರಂತೆ ? ಹೊಟ್ಟೆಪಾಡಿಗೆ ಏನು ಮಾಡಿದರಂತೆ ? ಊರು ಬಿಡಲು ಕಾರಣವಾದದ್ದಾದರೂ ಏನೆಂತೆ ? ಆ ಹಾಳೂರ ಜೋಯಿಸ ಹೇಳಿದ್ದಾದರೂ ಏನಂತೆ ? ನೆಲ್ಲಿಕೇರಿಯ ದೀಡಬುದ್ವಂತೆ ಆಡಿದ ಚಾಡಿಯ ಮಾತು ಇವರಿಗೆ ಗೊತ್ತಾಯಿತೆ ? ಸಾವಿರ ಪ್ರಶ್ನೆಗಳು ಎಲ್ಲೆಲ್ಲಿಂದ ಬಂದು ಕಿವಿ ಹೊಕ್ಕರೂ ಒಂದು ಪ್ರಶ್ನೆಗೂ ಉತ್ತರ ಕೊಡುವ ಗೋಜಿಗೆ ಅವರು ಹೋಗಲಿಲ್ಲ. ಊರ ಜನರ ಕುತೂಹಲ ತಣಿಸುವ ಆಸ್ಥೆಯೇ ಅವರಿಗಿರಲಿಲ್ಲ. ಒಂದು ನಿಶ್ಚಿತವಾದ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಂತೆ ಬಂದವರು ಊರು ಸೇರಿದಾಗ ರಾತ್ರಿ ಹನ್ನೆರಡು ದಾಟಿತ್ತಂತೆ. ಮಠಕೇರಿಯ ಭಟ್ಟರೊಬ್ಬರ ಮನೆಯಲ್ಲಿ ರಾತ್ರಿ ಕಳೆದವರು ಪ್ರಾತರ್ವಿಧಿ ಸ್ನಾನಗಳನ್ನು ಅವರಲ್ಲೇ ಮುಗಿಸಿ ಅಲ್ಲೇ ಮಡಿ ಬಟ್ಟೆಯುಟ್ಟು ದೇವಸ್ಥಾನಕ್ಕೆ ಬಂದಿದ್ದರಂತೆ. ಮನೆಯಲ್ಲಿ ಅಪ್ಪ-ಅಮ್ಮರ ಸಮಾಧಾನಕ್ಕೆಂದು ಕೊಟ್ಟಿದ್ದ ಅಲ್ಪ ಮಾಹಿತಿ ಕೂಡ ನಮಗೆ ಗೊತ್ತಾದದ್ದು ಇವರಿಬ್ಬರಿಗೂ ಕೊನೆಯ ಬಾರಿ-ಊರಿಗೆ ಇನ್ನೆಂದೂ ಹಿಂತಿರುಗಲಾರೆವು ಎಂದು ಪಣತೊಟ್ಟವರ ಹಾಗೆ-ಊರು ಬಿಟ್ಟುಹೋದ ಬಹಳ ದಿನಗಳ ಮೇಲೆ- +ಜ್ಯೋತಿಷಿ ಇಬ್ಬರೂ ಹುಡುಗರನ್ನು ಬೇರೆಬೇರೆಯಾಗಿ ಕಂಡು, ಅವರವರ ಕೈ ನೋಡಿಯೇ ಹೇಳಿದ್ದೆಂದು ಭರವಸೆ ಹುಟ್ಟಿಸುವ ಹಾಗೆ ಹೇಳಿದ ಭವಿಷ್ಯವಾಣಿ ಒಂದೇ ಆಗಿತ್ತು. ಭಯಾನಕವಾಗಿತ್ತು. ಒಂದೇ ಆಗಿತ್ತೆಂದು ಸ್ವತಃ ಇವರಿಗೇ ತಿಳಿದದ್ದು ಊರಿಗೆ ವಾಪಸ್ಸಾಗುವ ನಾಲ್ಕು ದಿನ ಮೊದಲು ಮುಂಬಯಿಯಲ್ಲಿ ಅಚಾನಕವಾಗಿ ರೆಸ್ಟೋರೆಂಟೊಂದರಲ್ಲಿ ಒಂದೆಡೆ ಸೇರಿದ್ದಾಗ- +“ನಿನ್ನ ಕೈಯಿಂದ, ಅಚಾತುರ್ಯದಲ್ಲೇ ಆಗಲಿ, ತೀರ ಹತ್ತಿರವಾದವರೊಬ್ಬರ ಹತ್ಯೆಯಾಗುವ ಸಂಭವವಿದೆ. ಇಂದಿನಿಂದ ಮೂರು ದಿನಗಳಲ್ಲಿ ಆರಂಭವಾಗುವ ಹನ್ನೆರಡು ವರ್ಷಗಳ ದೋಷಕಾಲದ ಮೊದಲಿನ ಮೂರು ವರ್ಷ, ಮೂರು ತಿಂಗಳು, ಮೂರು ದಿನಗಳು ಅತ್ಯಂತ ಕೆಟ್ಟವಾಗಿದ್ದು ನೀನು ತುಂಬಾ ಜಾಗ್ರತೆಯಿಂದಿರಬೇಕು. ಯಾರೇ ಎಷ್ಟೇ ಪ್ರಚೋದಿಸಲಿ, ನಿನ್ನ ಸಿಟ್ಟನ್ನು ನೀನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಈ ನಿಗ್ರಹವನ್ನು ಒಂದು ಕಠಿಣ ವ್ರತವೆಂಬಂತೆ ಪಾಲಿಸಬೇಕು. ಮುಂದಿನ ಒಂಬತ್ತು ವರ್ಷಗಳನ್ನು ಯಾರೊಡನೆಯೂ ಮತಭೇದಕ್ಕೆ ಅನವಶ್ಯ ಮನಸ್ತಾಪಕ್ಕೆ ಎಡೆಯಾಗದ ಹಾಗೆ ಕಳೆಯಲು ಈ ನಿಗ್ರಹವೇ ನಿನ್ನ ನೆರವಿಗೆ ಬರುತ್ತದೆ. ಈ ಕಾಲ ಯಾವುದೇ ವಿಕೋಪಕ್ಕೆ ಒಯ್ಯುವಷ್ಟು ಕೆಟ್ಟದಾಗಿಲ್ಲ.” +ಹುಡುಗರಿಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಮೂಡಲಿಲ್ಲ. ಆದರೂ ಯಾರು ಬಲ್ಲರು ? ಎಂಬಂಥ ಅನುಮಾನದ ಸ್ಥಿತಿಯಲ್ಲಿ ಮುಂದಿನ ಮೂರು ವರ್ಷವಾದರೂ ತನ್ನ ಗೆಳೆಯನಿಂದ ದೂರವಿರುವುದೇ ಒಳ್ಳೆಯದೇನೋ ಎನ್ನುವ ಇಚಾರ ಇಬ್ಬರ ತಲೆಗಳಲ್ಲೂ ಬಂದು ಊರು ಬಿಡುವುದನ್ನು ನಿಶ್ಚಯಿಸಿದರು. ಊರು ಬಿಟ್ಟರು ಕೂಡ. ಮುಂದಿನ ಮೂರು ವರ್ಷ ಒಂದೇ ಊರಿನಲ್ಲಿದ್ದೂ ಪರಸ್ಪರರ ದೃಷ್ಟಿಗೆ ಬೀಳಲಿಲ್ಲ. ಆಮೇಲೆ. ಜ್ಯೋತಿಷಿ ಇನಾರೆಯಿತ್ತ ದುಷ್ಟಕಾಲ ಮುಗಿಯಲು ಇನ್ನೂ ಮೂರು ತಿಂಗಳು ಮೂರು ದಿನಗಳಿವೆ ಎನ್ನುವಾಗ ಒಂದು ದಿನ ಒಂದೇ ರೆಸ್ಟೋರೆಂಟಿಗೆ ಊಟಕ್ಕೆ ಬಂದವರಿಗೆ ಯಾರೋ ತಮ್ಮೊಡನೆ ದುಷ್ಟ ಆಟ ಆಡಿದ್ದಾರೆಂದು ಗೊತ್ತಾದಾಗ ಸಿಟ್ಟು ಬಂದಿತೆ ? ಕೆಡುಕೆನಿಸಿತೇ ? ತಿಳಿಯುವ ಬಗೆಯಿರಲಿಲ್ಲ. ಊರು ಬಿಡುವಾಗ ಜೊತೆಗೂಡಿರದವರು ಜೊತೆಯಾಗಿ ಊರು ಸೇರಿದರು. ಮಾರನೇ ದಿವಸ ರಾತ್ರಿಯೇ ಅವಸರ ಅವಸರವಾಗಿ ಮತ್ತೆ ಊರು ಬಿಟ್ಟರು. ಎಲ್ಲಿ ಹೋದರು ? ಏನಾದರು ? ಇಂದಿಗೂ ಪತ್ತೆಯಾಗಿಲ್ಲ-ಊರು ಬಿಟ್ಟು ಇಪ್ಪತ್ತೊಂದು ವರ್ಷಗಳಾದರೂ! +ಅವರು ಹೊರಟುಹೋದ ರಾತ್ರಿಯೇ ಊರಿನಲ್ಲಿ ನಡೆದ ಭೀಕರ ದುರ್ಘಟನೆಯೊಂದು ಈ ಅವಸರದ ನಿರ್ಗಮನಕ್ಕೆ ಗಂಟುಹಾಕಿಕೊಂಡು ಎಲ್ಲೆಲ್ಲೂ ಎಣೆಯಿಲ್ಲದ ಊಹೆಗಳಿಗೆ ಎಡೆಮಾಡಿತು. ನೆಲ್ಲಿಕೇರಿಯ ದೀಡಬುದ್ವಂತ ಉಟ್ಟಧೋತರವನ್ನೇ ಮಾಡಿನ ಜಂತೆಯಿಂದ ಇಳಿಬಿಟ್ಟ ನೇಣುಮಾಡಿ ಅಸುನೀಗಿದ್ದ. ಕಾಲುಬುಡಕ್ಕೆ ಒಂದರ ಮೇಲೊಂದು ಪೇರಿಸಿಟ್ಟ ಎರಡು ದಪ್ಪ ಟ್ರಂಕುಗಳನ್ನೂ ಇಟ್ಟುಕೊಂಡಿರಬೇಕು. ಈಗ ಅಸ್ತವ್ಯಸ್ತವಾಗಿದ್ದವು. ಈ ಎರಡೂ ಟ್ರಂಕುಗಳು ಈ ತರುಣಗಿಗೆ ಸೇರಿದವುಗಳಾಗಿದ್ದವು. ಅವು ಅಲ್ಲಿಗೆ ಹೇಗೆ ಬಂದವು ? ಯಾಕೆ ಬಂದವು ? ಊಹಾಪೋಹ ಅಲ್ಲಿಂದಲೇ ಆರಂಭಗೊಂಡಿತ್ತು. ಈಲರೂ ತಿಳಿದಹಾಗೆ ಇದು ಆತ್ಮಹತ್ಯೆಯಾಗಿರದೇ ಕೊಲೆಯಾಗಿರಬಹುದೇ ? ಈ ಕೊಲೆಯಲ್ಲಿ ಈ ತರುಣರ ಕೈಯಿರಬಹುದೇ ? ಮೃತರ ಮಗ ಪೊಲೀಸ್ ಚೌಕಿಗೆ ಹೋಗಿ ಇದು ಕೊಲೆಯೆಂದೇ ಸಾಬೀತುಗೊಳಿಸಲು ಕಾರಣ ಕೊಟ್ಟು ದೂರು ಬರೆಸಿದ. ಇದಿಷ್ಟು ಸಾಲದೆನ್ನುವಂತೆ ತಾನು ಪೊಲೀಸ್ ಠಾಣೆಯಲ್ಲಿ ಬರೆಸಿದ್ದನ್ನು, ಊರ ತುಂಬ ಡಂಗುರ ಸಾರುವವನ ಹಾಗೆ ಹೇಳುತ್ತ ಸಿಕ್ಕವರ ಎದುರು ಕಂಠಶೋಷ ಮಾಡಿಕೊಂಡ. +ಇವನು ಕೊಟ್ಟ ಕಾರಣ ಕೇಳಿದಮೇಲೆ ಜನರಿಗೆ ಇವನ ಅಪ್ಪನ ಮೇಲೇ ಇನ್ನಷ್ಟು ಸಿಟ್ಟು ಬಂದಿತು. ಅದೇ ಕಾರಣಕ್ಕೆಂಬಂತೆ ಪೊಲೀಸರು ಕೂಡ ಇದು ಆತ್ಮಹತ್ಯೆಯೇ ಎನ್ನುವ ನಿರ್ಧಾರಕ್ಕೆ ಬಂದು ಪ್ರಕರಣವನ್ನು ಅಲ್ಲಿಗೆ ನಿಕಾಲೆಗೊಳಿಸಿದರು. +– ೫ – +ಆರಂಭವಾದಂದಿನಿಂದಲೂ ಒಂದಿದ್ದರೊಂದಿಲ್ಲದಂತೆ ನಡೆದ ಘಟನೆಗಳಿಂದ ಗೋಜುಗೋಜಾಗುತ್ತ ನಡೆದ ಪ್ರಸಂಗ ಈಗ ಆತ್ಮಹತ್ಯೆಯೋ ಕೊಲೆಯೋ, ಒಟ್ಟಿನಲ್ಲಿ ಒಂದು ನಿಗೂಢ ಸಾವಿನಲ್ಲಿ ಕೊನೆ ಮುಟ್ಟುತ್ತಿರುವ ಹೊತ್ತಿಗೆ ಗೋಜು ತನ್ನ ಪರಕಾಷ್ಠೆಯನ್ನು ತಲುಪಿತ್ತು. ಇಂಥ ಸ್ಥಿತಿಯಲ್ಲಿ ವೈಕುಂಠ ಬಾಳ್ಗಿಯ ಮಗ ಕೊಟ್ಟ ದೂರೊಂದೇ ಈ ಘಟನಾವಳಿಗೆ ಸ್ವಲ್ಪವಾದರೂ ಅರ್ಥವಾಗುವ ಆಕಾರ ಕೊಡುವಂಥಾದದ್ದು ಕೆಟ್ಟ ವ್ಯಂಗ್ಯವಾಗಿ ತೋರುವಾಗಲೂ ಸತ್ಯಸಂಗತಿಯಾಗಿತ್ತು. ಅದನ್ನು ನನಗೆ ಅರುಹುವ ಮೊದಲು ನಿಜಕ್ಕೂ ನೆಲ್ಲಿಕೇರಿಯ ಆ ಮನೆಯನ್ನು ನನಗೆ ತೋರಿಸುವ ಮನಸ್ಸಾಯಿತೋ, ಸರಿರಾತ್ರಿ ದಾಟಿರುವ ಈ ಹೊತ್ತಿನಲ್ಲಿ ಹೇಳುವುದು ಬೇಡವೆನ್ನಿಸಿತೋ, ನನ್ನ ಮಿತ್ರರು “ಉಳಿದದ್ದನ್ನು ನಾಳೆ ಆ ಮನೆಯನ್ನು ನೋಡಿದಮೇಲೆಯೇ ಕೇಳುವಿರಂತೆ” ಎಂದರು. +ನನಗೊಬ್ಬನಿಗೇ ಮಾಳಿಗೆಯ ಮೇಲಿನ ಒಂದು ಪ್ರಶಸ್ತ ಕೋಣೆಯಲ್ಲಿ ಹಾಸಿಗೆ ಹಾಸಿದ್ದರು. “ಇಡೀ ಮನೆಯಲ್ಲಿ ಪಶ್ಚಿಮಕ್ಕೆ ಮುಖ ಮಾಡಿದ ಈ ಕೋಣೆಯಲ್ಲಷ್ಟೇ ಚೆನ್ನಾಗಿ ಗಾಳಿ ಬೀಸುತ್ತಿದೆಯೆಂದು ಇಲ್ಲಿ ಹಾಸಿಗೆ ಹಾಕಿಸಿದ್ದೇನೆ ಒಬ್ಬರಿಗೇ ಹೆದರಿಕೆಯಾಗುವುದಿಲ್ಲ ತಾನೆ ?” ಎಂದು ಕೇಳಿದರು. ಮಿತ್ರರು. ನಾನು ದೊಡ್ಡಕ್ಕೆ ನಕ್ಕುಬಿಟ್ಟೆ. ನಿಜ ಹೇಳುವುದಾದರೆ ನಾನು ಹೆದರಿದ್ದೆ. ಉಳಿದ ಕಥೆಯನ್ನವರು ನಾಳೆ ಹಗಲಲ್ಲಿ ಹೇಳಿದರೆ ಒಳ್ಳೆಯದೆಂದು ನನಗೂ ಅನ್ನಿಸಿತು. +ಪರದೆ ಹಾಕಿರದ ಕಿಟಕಿಯ ಹೊರಗೆ ಹಿಟ್ಟು ಚೆಲ್ಲಿದ ಹಾಗೆ ಬೆಳ್ದಿಂಗಳಿತ್ತು. ಹಿತ್ತಲಲ್ಲಿಯ ತೆಂಗು, ಅಡಿಕೆ, ಹಲಸಿನ ಮರಗಳು ತಿಂಗಳ ಬೆಳಕಿನಲ್ಲಿ ಸವಿಯುತ್ತ ಗಾಳಿ ಬೀಸಿದಾಗೊಮ್ಮೆ ಪಿಸುನುಡಿಯುವ ವಿಚಿತ್ರ ಸದ್ದು ಮಾಡುತ್ತಿದ್ದವು. ಇವರ ಮನೆಯ ಹಿಂದೆಯೇ ನಾಗರಬಲೆಯೆನ್ನುವ ಸಣ್ಣ ಕಾಡು ಇದೆ. ಅದರಾಚೆ ಹೆರವಟ್ಟೆಯ ಗುಡ್ಡ. ನಾಗರಬಲೆಗೆ ಆಗೀಗ ತೋಳ-ನರಿಗಳು ಬರುವುದುಂಟಂತೆ ; ಇಂಥ ಬೆಳ್ದಿಂದಳ ರಾತ್ರಿಯಲ್ಲಿ ಅಳುವ ಮಕ್ಕಳ ದನಿಯಲ್ಲಿ ಕೂಗುವುದುಂಟಂತೆ. ಗಿಡಗಂಟೆಗಳಲ್ಲಿ ಆಗಲೇ ಜೀರುಂಡಗಳು ವಿಚಿತ್ರ ಕಂಠದಲ್ಲಿ ಕೋಲಾಹಲ ಎಬ್ಬಿಸಿದ್ದವು. ನಿನ್ನೆ ಇಂದು ಸುತ್ತಾಡಿ ಬಂದ ಕೇರಿಗಳೆಲ್ಲ ಕಣ್ಣೆದುರು ನಿಂತಾಗ ಕಣ್ಣು ಮುಚ್ಚುವುದೇ ಅಸಾಧ್ಯವಾಯಿತು. ಸುಮಾರುಹೊತ್ತಿನ ಮೇಲೆ ಸರಕ್ಕನೆಂಬಂತೆ ನನ್ನ ಮಿತ್ರರು ಈವರೆಗೆ ಹೇಳಿದ ಕಥಾನಕಕ್ಕೂ ಈ ಪರಿಸರ ವಿಶೇಷಗಳಿಗೂ ಅನ್ಯೋನ್ಯ ಸಂಬಂಧವಿದೆಯೆಂದು ಅನ್ನಿಸಿಹೋಯಿತು. ಕುಮಟೆಯ ಕೇರಿಗಳಿಗೆ, ಏರಿ-ತಗ್ಗುಗಳಿಗೆ ಈಗಿನ ಆಕಾರವಿರದಿದ್ದರೆ ಕಥೆಗೆ ಈಗಿನ ಆಕಾರ ಬರುತ್ತಿರಲಿಲ್ಲವೇನೋ ಎಂಬ ಅನ್ನಿಸಿಕೆಯ ಹಿಂದೆಯೇ, ಬಹುಶಃ ನಾನು ನಾಳೆ ನೋಡಲಿದ್ದ ಮನೆಗೆ ಈಗಿನ ಆಕಾರ ಇದ್ದಿರದಿದ್ದರೆ ಕಥೆ ಈಗಿನ ಹಾಗೆ ಕೊನೆಗೊಳ್ಳುತ್ತಿರಲಿಲ್ಲವೇನೋ ಎಂಬಂಥ ವಿಚಿತ್ರ ವಿಚಾರ ತಲೆಯಲ್ಲಿ ಬರುತ್ತಲೇ ನಾಳೆ ಆ ಮನೆಯನ್ನು ನೋಡುವ ಮೊದಲು ಈ ಕಥೆಯ ಕೊನೆಯನ್ನು ಊಹಿಸುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದೆ. +ನಾವಂದು ನೋಡಿ ಬಂದ ಮನೆ ನೆಲ್ಲಿಕೇರಿಯ ಗುಡ್ಡದ ಉತ್ತರ ಓವರಿಯಲ್ಲಿತ್ತು. ದಕ್ಷಿಣ ಓವರಿಯಲ್ಲಿ ಇಲ್ಲಿಯ ಪ್ರಖ್ಯಾತ ಬಸ್‌ಸ್ಟ್ಯಾಂಡು. ಮನೆಗಳಿದ್ದ ಕೇರಿಗಳೆಲ್ಲ ಪೂರ್ವ ಹಾಗೂ ಪಶ್ಚಿಮ ಸೆರಗುಗಳಲ್ಲಿದ್ದವು. ನನ್ನನ್ನು ನೇರವಾಗಿ ಮನೆಗೇ ಒಯ್ಯದೇ ಪಶ್ಚಿಮದ ಕಂಪೌಂಡೊಂದರ ಹೊರಗೆ ನಿಲ್ಲಿಸಿಕೊಂಡು ದೂರದಿಂದಲೇ ತೋರಿಸಿದರು : “ಅಲ್ಲೀಗ ಯಾರೂ ಇರುವುದಿಲ್ಲ. ಅಂದು ನಡೆದ ದುರ್ಘಟನೆಯ ನಂತರ ಮನೆಯವರು ಬೇರೆಡೆಯಲ್ಲಿ ನಿಲ್ಲಲು ಹೋದರು. ಅವನು ಈ ಮನೆ ಕಟ್ಟಿಸಿದಾಗ ಈ ಕೇರಿಗಳು ಇರಲಿಲ್ಲ. ಇವೆಲ್ಲ ಸಧ್ಯವೇ ಹುಟ್ಟಿಕೊಂಡವುಗಳು. ಮನೆ ಮುಖ ಮಾಡಿದ್ದು ತುಂಬಾ ಆಳವಾದ ಕಣಿವೆಯ ಕಡೆಗೆ, ಮನೆಯ ಹಿಂಬದಿಯಲ್ಲಿ ಬೇಣದಲ್ಲೊಂದು ತಗಡು ಹೊದಿಸಿದ ಮಾಡಿನ ಶೆಡ್ಡು ಕಾಣಿಸುವುದಿಲ್ಲವೆ ? ಅದು ಅಲ್ಲಿಯ ಸ್ಮಾಶಾನ. ನೋಡುವವರಿಲ್ಲದೇ ಹಾಳು ಸುರಿಯುವ ಮನೆ ಹಿತ್ತಲುಗಳ ಕಡೆಗೀಗ ಹಗಲಲ್ಲೂ ಯಾರೂ ಹಾಯರು. ಸುತ್ತಲ ಜನವಸತಿಗಳಿಂದ ಬೇರೆಯಾಗಿ ನಿಂತ ಒಂಟಿ ಮನೆ ಇವನ ಜೀವನಶೈಲಿಗೆ ಒಂದು ಪ್ರತೀಕದಂತಿದೆ. ಯಾವಾಗಲೂ ಜನರಿಂದ ದೂರ, ಜನರಿಂದ ಬೇರೆ. ಬೇರೆ ಅನ್ನಿಸಿಕೊಳ್ಳುವುದರಲ್ಲೇ ಧನ್ಯತೆ ಕಂಡವನು.” +ನನಗೆ ಗೊತ್ತಾಗುವ ಮೊದಲೇ ನಾವು ಮೊದಲು ನಿಂತ ಜಾಗದಿಂದ ತುಸು ದೂರವಿದ್ದ ದೊಡ್ಡ ಕಲ್ಲುಬಂಡೆಯನ್ನು ಹತ್ತಿ ಕುಳಿತಿದ್ದೆವು. ಅಲ್ಲಿಂದ ಕಾಣುವ ಕಣಿವೆಯ ಆಳ ಮನಸ್ಸಿಗೆ ನಾಟದ ವೇಗಕ್ಕೆ ಕುಳಿತಲ್ಲೇ ತೋಲ ಹೋಗುವ ಭಯವಾಗಿ ಸಾವರಿಸಿಕೊಂಡೆ. +“ಅಂದು ರಾತ್ರಿ ಈ ಮನೆಯಲ್ಲಿ ಏನೆಲ್ಲ ಆಯಿತು ? ಯಾಕೆ ಆಯಿತು ? ಕೊನೆಗೂ ಯಾರೂ ಅರಿಯದ ರಹಸ್ಯವಾಗಿಯೇ ಉಳಿಯುತ್ತದೆಯೇ ? ಏನೋ. ಯಾವುದರಲ್ಲೂ ನಂಬಿಕೆಯಿಲ್ಲದ, ಯಾರ ಬಗೆಗೂ ಮಾಯ ಮಮತೆ ತೋರಿಸಿ ಗೊತ್ತಿಲ್ಲದ, ಯಾವಾಗಲೂ ತಾನು ನೋಡಿದ ಮೊಲಕ್ಕೆ ಮೂರೇ ಕಾಲುಗಳೆಂದು ಮೊಂಡುವಾದ ಹೂಡುವುದರಲ್ಲೇ ಸುಖ ಕಾಣುತ್ತಿದ್ದ ಈ ನಾಸ್ತಿಕ ಎಂಥ ಪ್ರಚೋದನೆಗೂ ಸುಲಭವಾಗಿ ವಿಚಲಿತನಾಗುವವನಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಂತೂ ಖಂಡಿತ ಅಲ್ಲ. ಸತ್ತಂದ್ದಂತೂ ಖರೆ. ಇತ್ತ, ಈ ಶಾಂತ ಗಂಭೀರ ಮುಖಮುದ್ರೆಯ-ಹಲವರಲ್ಲಿ ಒಮ್ಮೆ ಲವ-ಕುಶರ, ಇನ್ನೊಮ್ಮೆ ನಕುಲ-ಸಹದೇವರ ಪ್ರತಿಮೆಗಳನ್ನು ಮೂಡಿಸಿದ-ಸ್ನಿಗ್ಧ ಜೀವಿಗಳು ಯಾರೇ ಎಷ್ಟೇ ಕೆಣಕಿದರೂ ಕೋಪಗೊಳ್ಳುವವರಲ್ಲ. ಕೊಲೆ ಮಾಡುವ ವಿಕೋಪಕ್ಕೆ ಹೋಗುವ ಪೈಕಿಯಂತೂ ಅಲ್ಲವೇ ಅಲ್ಲ. ದುರ್ಘಟನೆಯ ರಾತ್ರಿ ಈ ಮನೆಗೆ ಬಂದದ್ದಂತೂ ಖರೆ. ಅದೇ ದಿನ ಊರಿನಿಂದ ಓಡಿಹೋದದ್ದೂ ಖರೆ. ಮನುಷ್ಯಜೀವನದ ಸತ್ಯಗಳನ್ನು ಆಖೈರಾಗಿ ತಿಳಿದವರು ಯಾರೆಂದಾಗಬೇಡವೆ ? – ಎಂದುಕೊಂಡು ಸುಮ್ಮನಿದ್ದುಬಿಡೋಣವೇ ? ಸತ್ತವನ ಮಗ ಹೇಳಿದ್ದನ್ನು ಮರೆಯುವಂತಿಲ್ಲ. ಆ ಹಾಳು ಜೋಯಿಸನ ಭವಿಷ್ಯವಾಣಿಯನ್ನೂ ಕಡೆಗಣಿಸುವಂತಿಲ್ಲ. ಜೋಯಿಸ ಹೇಳಿದ್ದು ನಿಮಗೆ ಗೊತ್ತಿದೆ. ಸತ್ತವನ ಮಗ ಹೇಳಿದ್ದಷ್ಟನ್ನು ಹೇಳಿ ನಾನು ನಿಮ್ಮನ್ನು ಈ ಊರಿಗೆ ಕರೆಸಿಕೊಂಡ ಮುಖ್ಯ ಉದ್ದೇಶಕ್ಕೆ ಬರುತ್ತೇನೆ.” +ಅಪ್ಪನ ಸಾವಿನಿಂದ ಸಂತ್ರಸ್ತನಾದ ಮಗ ಕಂಡಕಂಡವರ ಎದುರು, ನಂಬೀ, ನಂಬೀ-ಎನ್ನುತ್ತ ಆಣೆ ಭಾಷೆ ಮಾಡುವವರ ಹಾಗೆ ಹೇಳಿದ್ದಿಷ್ಟು- +“ಆ ರಾತ್ರಿ ಒಂಬತ್ತರ ಸುಮಾರಿಗೆ ಇವರು ನಮ್ಮ ಮನೆಗೆ ಬಂದರು. ನಾನಾಗ ಇನ್ನೂ ಅಂಗಡಿಯಲ್ಲಿದ್ದೆ. ಮನೆಯಲ್ಲಿ ಅಪ್ಪ, ನನ್ನ ಹೆಂಡತಿ ಇಬ್ಬರೇ. ಅಮ್ಮ ಸತ್ತು ಈಗ ಒಂದು ವರ್ಷವಾಯಿತು. ನಿಮಗೆ ಗೊತ್ತಿದೆ. ಅಪ್ಪ ಊಟಕ್ಕೆ ಕೂರುವ ತಯಾರಿಯಲ್ಲಿದ್ದರು. ಬಂದವರಿಬ್ಬರೂ ಇದಾವುದರ ಕಡೆಗೆ ಲಕ್ಷ್ಯ ಕೊಡದೇ “ನಿಮ್ಮ ಮೇಲಿನ ಕೋಣೆಗೇ ಹೋಗೋಣ” ಎಂದೇನೋ ಗುಣಿಗುಣಿಸಿ ಅವರನ್ನು ಎಳೆದೇ ಒಯ್ಯುವವರಂತೆ ಕೈಹಿಡಿದು ಮೇಲಕ್ಕೆ ಕರೆದೊಯ್ದರು. ‘ನಮ್ಮ ಹತ್ತಿರ ಹೆಚ್ಚು ಹೊತ್ತಿಲ್ಲ. ನಾವು ಹಿಂದೆ ನಿಮ್ಮ ಹತ್ತಿರ ಇಡಲು ಕೊಟ್ಟ ಟ್ರಂಕುಗಳನ್ನು ವಾಪಸ್ಸು ಕೊಡಿ’ ಎಂದರು. ಅಪ್ಪ ಅಜ್ಞಾನ ನಟಿಸುತ್ತ ‘ಯಾವ ಟ್ರಂಕುಗಳ ಬಗ್ಗೆ ಮಾತನಾಡುತ್ತಿದ್ದೀರಿ ?’ ಎಂದು ಕೇಳಿದರು. ಕೆಳಗಿನಿಂದ ಕೇಳುತ್ತಿದ್ದ ನನ್ನ ಹೆಂಡತಿಗೂ ಈ ಪ್ರಶ್ನೆಯಿಂದ ಆಶ್ಚರ್ಯವಾಯಿತು. ಯಾಕೆಂದರೆ ವರ್ಷಗಳ ಹಿಂದೆ ಇಂಥದೇ ಒಂದು ರಾತ್ರಿಯಲ್ಲಿ ಇಬ್ಬರೂ ಒಬ್ಬರ ನಂತರ ಒಬ್ಬರು ಬಂದು ಅಪ್ಪನ ಹತ್ತಿರ ಟ್ರಂಕುಗಳನ್ನು ಇಟ್ಟು ಹೋದಾಗ ಮನೆಯಲ್ಲಿ ಅಮ್ಮ, ಹೆಂಡತಿ ಇಬ್ಬರೂ ಇದ್ದರು. +‘ನಾವು ಮೂರು ವರ್ಷಗಳ ಹಿಂದೆ ಊರು ಬಿಡುವ ಮೊದಲು ಇರಿಸಿದ್ದೆವು’ +‘ಓ ! ಅವುಗಳೆ ? ಅವುಗಳಲ್ಲಿ ಅಂಥ ಮೌಲಿಕವಾದದ್ದೇನಿತ್ತಪ್ಪ ? ನೀವು ಆಗ ಹೇಳಿರಬೇಕು, ಈಗ ಮರೆತುಹೋಗಿದೆ.’ +‘ನಾವು ಸಂಗ್ರಹಿಸಿದ ಕೆಲವು ವಿರಳ ಪುಸ್ತಕಗಳಿದ್ದವು. ಬರೆದಿಟ್ಟ ಟಿಪ್ಪಣಿಗಳಿದ್ದವು.’ +‘ಓಹೋಹೋ ! ಈಗ ನೆನಪಾಯ್ತು. ನ್ಯೂಟನ್. ಐನ್‌ಸ್ಟಾನ್‌ರನ್ನು ಹಿಂದೆ ಹಾಕುವ ನಿಮ್ಮ ಮಳ್ಳ ಉಪದ್ವ್ಯಾಪಕ್ಕೆ ಸಂಬಂಧಪಟ್ಟವುಗಳು ! ನೀವು ಅವುಗಳನ್ನು ವಾಪಾಸು ಪಡೆಯಲು ಇಷ್ಟು ವರುಷ ತೆಗೆದುಕೊಳ್ಳುತ್ತೀರೆಂದು ನನಗೆ ಹೇಗೆ ಗೊತ್ತಾಗಬೇಕು ? ನೀವು ಇಲ್ಲಿಂದ ಹೋದ ಆರು ತಿಂಗಳಲ್ಲೇ ನನ್ನ ತಾಬೆಯಲ್ಲಿಟ್ಟ ನಿಮ್ಮ ಮೌಲಿಕ ಅಮಾನತ್ತಿಗೆ ಒರಲೆ ಹಿಡಿಯಿತು. ನಾನೇ ಎರಡನೆಯ ಬಾರಿ ಸಾಪು ಮಾಡಿ ಒಳಗಿರಿಸಿದೆ. ನೀವು ಮತ್ತೆ ಊರಿಗೆ ಮೋರೆ ತೋರಿಸಲಾರಿರಿ ಎಂಬ ವದಂತೆ ಊರಲ್ಲಿ ಹಬ್ಬಿದಾಗ ಸಾಪುಗೊಳಿಸುವ ಉಮೇದು ಉಳಿಯಲಿಲ್ಲ. ಆಗಲೆ ಗೆದ್ದಲು ಅವುಗಳನ್ನು ಅರ್ಧ ತಿಂದುಹಾಕಿತ್ತು. ಆಮೇಲೆ ನಾನೇ ಅವನ್ನು ಅಂಗಳಕ್ಕೆ ಒಯ್ದು ಚಿಮಣಿ ಎಣ್ಣೆ ಸುರಿದು ಸುಟ್ಟುಹಾಕಿದೆ. ಟ್ರಂಕುಗಳು ಮಾತ್ರ ನೀವಿಟ್ಟ ಜಾಗದಲ್ಲೇ ಇವೆ. +‘ನಮ್ಮ ಮನೆಗಳಿಗಿಂತ ನಿಮ್ಮ ಈ ಮನೆ ಹೆಚ್ಚು ಸುರಕ್ಷಿತವೆಂದು ತಿಳಿದು ಇಲ್ಲಿಗೆ ತಂದಿದ್ದೆವು. ನೀವೂ ಪುಸ್ತಕಗಳನ್ನು ಓದಿದವರು. ನಾವು ಮಾಡಬೇಕೆಂದು ಯೋಚಿಸಿದ್ದರ ಪರಿಚಯವಿದ್ದವರು. ನಮ್ಮ ಆಕಾಂಕ್ಷೆ ತೀರ ಬಾಲಿಶವೆಂದು ನಮಗೂ ಗೊತ್ತು. ಆದರೆ ಆಕಾಂಕ್ಷೆ ಇಟ್ಟುಕೊಳ್ಳುವುದು ಕೆಟ್ಟದ್ದಲ್ಲವೆಂದು ನೀವೇ ಹುರಿದುಂಬಿಸಿದ್ದಿರಿ. ಈಗ ಹೀಗೇಕೆ ಮಾಡಿದಿರಿ ?’ +‘ಅದೆಲ್ಲ ಸರಿ. ಈಗ ಏನು ಮಾಡಲಾಗುತ್ತದೆ ?’ ಮುಂದೇನಾಯಿತು ? ಹೆಂಡತಿಗೆ ತಿಳಿಯಲಿಲ್ಲ. ಅಪ್ಪನ ಮಾತಿನಿಂದ ಸ್ವತಃ ತಾನೇ ಜಿಗುಪ್ಸೆಪಟ್ಟ ಅವಳು ಆಗ ಮಾರಾಮಾರಿಯಾಗದೇ ಇರಲಾರದೆಂದುಕೊಂಡು ಹೆದರಿ ನನ್ನನ್ನು ಕರೆತರಲು ಅಂಗಡಿಗೆ ಓಡಿಬಂದಳು. ಅಂಗಡಿ ನಮ್ಮ ಮನೆಯಿಂದ ಹದಿನೈದು ನಿಮಿಷಗಳ ಹಾದಿ. ನಾನು ಅಂಗಡಿ ಮುಚ್ಚಿ ಹೆಂಡತಿಯ ಜೊತೆಗೆ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು.’ +ಅಪ್ಪನ ಹಾರಿಕೆ ಮಾತು ಯಾರನ್ನೂ ಸಿಟ್ಟಿಗೆಬ್ಬಿಸುವಂಥದ್ದೇ. ಹೀಗಿರುವಾಗ ಈ ಹುಡುಗರು ಸಿಟ್ಟಿಗೆದ್ದದ್ದು ಆಶ್ಚರ್ಯವಲ್ಲ ಎಂದು ಸಾಧಿಸುವ ಭರದಲ್ಲಿ ಹುಡುಗ ಎಲ್ಲವನ್ನೂ ಹೇಳಿರಬೇಕು. ಯಾಕೆಂದರೆ, ಅವರು ಹಾಗೆ ಸಿಟ್ಟಿಗೆದ್ದದ್ದು ಹೌದೆಂದಾದರೆ ಈ ಘೋರ ಕೃತ್ಯ ಅವರ ಕೈಯಿಂದಲೇ ನಡೆದದ್ದು ಎನ್ನುವುದು ನಿರ್ವಿವಾದ, ಯಾಕೆಂದರೆ ಜ್ಯೋತಿಷಿ ಇದನ್ನೇ ಹೇಳಿದ್ದ ! +ಜನ ಒಪ್ಪಲಿಲ್ಲ : ಇವನ ಹೆಂಡತಿ ಮನೆ ಬಿಟ್ಟು ಹೋದ ಕ್ಷಣದಲ್ಲೇ ಹುಡುಗರು ಇಂಥ ಅತಿರೇಕಕ್ಕೆ ಪ್ರಚೋದಿಸುವಂಥದ್ದನ್ನೇನಾದರೂ ಅಂದಿರಬೇಕು. ಇವಳು ಅಂಗಡಿ ತಲುಪಿ, ಅವನು ಅಂಗಡಿ ಮುಚ್ಚಿ, ಇಬ್ಬರೂ ಮನೆಗೆ ಬಂದಮೇಲೆ ಹೋಗಿ ನೋಡುವುದರೊಳಗೆ ಮೂವ್ವತ್ತೈದು-ನಾಲ್ವತ್ತು ಮಿನಿಟುಗಳಾದರೂ ಕಳೆದಿರಬೇಕು. ಈ ಸಮಯದಲ್ಲಿ ಏನು ನಡೆಯಿತು ? ಇವಳು ನೋಡಿಲ್ಲ. ಮಾವ ಸಿಟ್ಟು ಬರಿಸುವಂಥ ಮಾತು ಆಡಿದ್ದು, ಅಪರಿಚಿತ ಜ್ಯೋತಿಷಿ ಭವಿಷ್ಯ ನುಡಿದದ್ದು-ಇವಷ್ಟನ್ನೇ ನಂಬಿ ಹುಡುಗರು ದೋಷಿಗಳೆಂದು ನಿರ್ಧರಿಸುವುದು ಮೂರ್ಖತನವಾದಿತು. ಇಷ್ಟಕ್ಕೂ ಸಾವು ಒದಗಿದ ಸಮಯದ ಬಗ್ಗೆ ಮಗ-ಸೊಸೆ ಸತ್ಯವನ್ನೇ ಹೇಳಿದ್ದಾರೆಂದು ಯಾವ ಖಾತರಿ ? ಹುಡುಗರು ಹೊರಟುಹೋದಮೇಲೆ ಮುದುಕ, ಯಥಾವಕಾಶ ಊಟಗೀಟ ಮುಗಿಸಿ, ಮಗ-ಸೊಸೆ ನಿದ್ದೆ ಹೋದಮೇಲೇ ಈ ಕೆಲಸ ಏಕೆ ಮಾಡಿರಬಾರದು ? ಕೆಲವರು ಹಾಗೇ ಹೇಳಿದರು-ಕೊಲೆಯೇ ಆಗಲೀ ಆತ್ಮಹತ್ಯೆಯೇ ಆಗಲೀ ಮಾಡಿಗೆ ತೂಗಿ ಬೀಳುವ ಕೆಲಸವೇನು ಅರ್ಧಗಂಟೆಯೊಳಗೆ ಮುಗಿಯುವಂಥದ್ದೇ ? ಮುದುಕ ತಂಬಿಗೆ ಹಿಡಿದು ‘ಗುಡ್ಡಕ್ಕೆ ಹೋಗುವ’ ಕೆಲಸವನ್ನು ಕೂಡ ಇಷ್ಟು ಬೇಗ ಮಾಡುತ್ತಿರಲಿಕ್ಕಿಲ್ಲ ! +ಬಹಳ ದಿನಗಳ ಮೇಲೆ ನಡೆದದ್ದು ಕೆಟ್ಟ ನೆನಪಾಗತೊಡಗಿದಂತೆ ಕುಮಟೆಯ ಜನ ತಮಗೆ ಮಾತ್ರ ಸಾಧ್ಯವಿದ್ದ ತಾತ್ವಿಕ ತೀರ್ಮಾನಕ್ಕೆ ಬಂದರು- +ಹೌದು-ಅಲ್ಲ ಈ ಎರಡೂ ಹೇಳಬಹುದಾದದ್ದು ಇಷ್ಟು ಮಾತ್ರ : ವೈಕುಂಠ ಬಾಳ್ಗಿ ಕೊರಳಿಗೆ ಉರುಳು ಬಿದ್ದು ಸತ್ತದ್ದು ಹೌದು. ಅದೇ ರಾತ್ರಿ ವಿಷ್ಣು, ಗೋವಿಂದ ಎಂಬ ಇಬ್ಬರು ಯುವಕರು ಊರು ಬಿಟ್ಟು ಓಡಿಹೋದದ್ದೂ ಹೌದು. ಇದರಾಚೆ ಏನೂ ಹೇಳುವುದು ಶಕ್ಯವಿಲ್ಲ. ಶಕ್ಯವಿದೆಯೆಂಬಂತೆ ನುಡಿದ ಸಾಮುದ್ರಿಕನೇ ಬೇಕಾದರೆ ಜಂತಿಯಿಂದ ತೂಗಲಿ. ನಮ್ಮ ಅಭ್ಯಂತರವಿಲ್ಲ ! +ನನಗೂ ಬೇರೆ ವಿವರಣೆ ಹೊಳೆಯಲಿಲ್ಲ. ಆದರೂ ಆ ಮನೆ, ವೈಕುಂಠ ಬಾಳ್ಗಿಯ ಸಾವು ಮಾತಿನಲ್ಲಿ ಹೇಳಲಾಗದ ರೀತಿಯಲ್ಲಿ ಬೇಚೈನುಗೊಳಿಸಿದವು. ಇದು ನನ್ನ ಮಿತ್ರರ ಲಕ್ಷ್ಯಕ್ಕೆ ಬಂದಿರಲಾರದು. “ಬನ್ನಿ, ಮನೆಗೆ ಹೋಗೋಣ. ಇದೆಲ್ಲ ಈಗ ಮುಗಿದ ಪ್ರಕರಣವೆಂದು ತಿಳಿದು ಕಳೆದ ಇಪ್ಪತ್ತೊಂದು ವರ್ಷ ನಿರ್ಧಾಸ್ತನಾಗಿದ್ದವನ ಕಣ್ಣಿಗೆ ಮೊನ್ನೆಮೊನ್ನೆ ಮತ್ತೇನೋ ಹೊಸತು ಬಿದ್ದಾಗಿನಿಂದ, ಯಾರಿಗೂ ಹೇಳಲಾರೆ ; ನನ್ನಲ್ಲೇ ಇಟ್ಟುಕೊಳ್ಳಲಾರೆ-ಎಂಬಂಥ ಸ್ಥಿತಿಯಲ್ಲಿ ರಾತ್ರಿ ನಿದ್ದೆಗೆ ಎರವಾಗಿದ್ದೇನೆ. ನಿಮ್ಮೊಡನೆ ಚರ್ಚೆ ಮಾಡಿದರೆ ಮನಸ್ಸಿಗೆ ಸಮಾಧಾನವಾದೀತೆಂದು ಯಾಕೆ ಅನ್ನಿಸಿತೋ, ಅನ್ನಿಸಿದ್ದೇ ನಿಮ್ಮ ಅಪ್ಪನಿಗೆ ಪತ್ರ ಬರೆದು ಇಲ್ಲಿಗೆ ಕರೆಸಿಕೊಂಡೆ. ನಾವೇ ನೀವಿದ್ದಲ್ಲಿಗೆ ಬರಬಹುದಾಗಿತ್ತು. ಆದರೆ ಈ ಕಥೆಗೆ ಜನ್ಮವಿತ್ತ ನೆಲದ ಪರಿಚಯವಿಲ್ಲದೇ ಅದು ತೆಗೆದುಕೊಂಡ, ತೆಗೆದುಕೊಳ್ಳುತ್ತಲೇ ಇರುವ ತಿರುವುಗಳು ನಿಮಗೆ ಅರ್ಥವಾಗಲಾರವು, ಅನ್ನಿಸಿತು.” +– ೬ – +ಮನೆ ತಲುಪುತ್ತಲೇ ಒಳಗೆಲ್ಲೋ ಮೇಜಿನ ಖಣದಲ್ಲಿ ಜೋಪಾನವಾಗಿ ಇರಿಸಿದಂತಿದ್ದ ಇಂಗ್ಲಿಷ್ ವೃತ್ತಿಪತ್ರಿಕೆಯೊಂದರ ಕ್ಲಿಪಿಂಗ್ ಹೊರತಂದು ನನ್ನ ಕೈಯಲ್ಲಿರಿಸಿದರು. ವೃತ್ತಾಂತದ ಶೀರ್ಷಿಕೆ ನೋಡಿಯೇ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. +‘ಭಾರತೀಯ ಮೂಲದ ಇಬ್ಬರು ವಿದ್ವಾಂಸರು ಪ್ರಿನ್ಸ್‌ಟನ್ ಯೂನಿವರ್ಸಿಟಿಯಲ್ಲಿ ಬೆಳಕಿನ ಸ್ವರೂಪವನ್ನು ಕುರಿತು ಮಂಡಿಸಿದ ಹೊಸ ವಿಚಾರಗಳು : ನ್ಯೂಟನ್ ಹಾಗೂ ಐನ್‌ಸ್ಟೈನ್‌ರ ವಿಚಾರಗಳಿಂದ ತೀರ ಭಿನ್ನವಾದ ವಿಚಾರಗಳಿಗೆ ಆಧುನಿಕ ಭೌತಶಾಸ್ತ್ರದಂತೆ ವೇದ-ಉಪನಿಷತ್ತುಗಳಂಥ ಪ್ರಾಚೀನ ಸಂಸ್ಕೃತ ಗ್ರಂಥಗಳು ಆಧಾರವಾದದ್ದು ಇಲ್ಲಿಯ ವಿಜ್ಞಾನಿಗಳಲ್ಲಿ ಕುತೂಹಲ ಕೆರಳಿಸಿದೆ.’ +ನಾನು ಶೀರ್ಷಿಕೆಯನ್ನು ಮತ್ತೆಮತ್ತೆ ಓದುತ್ತ ಈ ವಿದ್ವಾಂಸರು ನಮ್ಮ ವಿಷ್ಣು, ಗೋವಿಂದರು ಆಗಿರಬಹುದೇ ಎಂಬ ಅನುಮಾನದಿಂದಲೇ ಪುಳಕಗೊಳ್ಳುತ್ತಿದ್ದಂತೆ ನನ್ನ ಮೋರೆಯ ಮೇಲಿನ ಕ್ಷೋಭೆ ನೋಡಿಯೇ ಉತ್ತೇಜಿತರಾದ ಮಿತ್ರರು, “ಹೆಸರು ನೋಡಿದಿರಾ ?” ಎಂದು ಕೇಳಿ ತಾವೇ ಒಂದು ಜಾಗದಲ್ಲಿ ಬೆರಳಿಟ್ಟು ತೋರಿಸಿದರು. +‘ಈಗ ಪ್ರಚಲಿತವಿದ್ದ ಸಿದ್ಧಾಂತಗಳ ಪ್ರಕಾರ ಬೆಳಕು ಕಣವೂ ಹೌದು, ತರಂಗವೂ ಹೌದು. ಈ ಎರಡು ಸ್ಥಿತಿಗಳ ಹೊರತಾಗಿ ಬೆಳಕಿಗೆ ಮೂರನೆಯ ಸ್ಥಿತಿಯೊಂದು ಇರುವುದು ಶಕ್ಯವಿದೆಯೆಂದು ಸಾರಿದ ವಿದ್ವಾಂಸರು ವರ್ಷಗಳ ಹಿಂದೆ ಭಾರತದಿಂದ ವಲಸೆ ಬಂದು ಈಗ ಅಮೇರಿಕೆಯಲ್ಲಿ ನೆಲೆಸಿದ ಡಾ|| ಕೆ. ಜಿ. ವರ್ಮಾ ಹಾಗೂ ಡಾ|| ಕೆ. ವಿ. ಶರ್ಮಾ….” +ಇವು ನಾವು ತಿಳಕೊಂಡವರ ಹೆಸರುಗಳಲ್ಲ ಎಂದುಕೊಳ್ಳುತ್ತಿರುವಾಗಲೇ ನನ್ನ ಮಿತ್ರರು ಒಮ್ಮೆಲೇ ಉತ್ಸಾಹಿತರಾಗಿ, “ನಿಮ್ಮ ಲಕ್ಷ್ಯಕ್ಕೆ ಬಂದಿತೆ ?” ಎಂದು ಕೇಳಿದರು. ನನ್ನ ಪ್ರತಿಕ್ರಿಯೆಗೆ ಕಾಯದೇ, “ಒಬ್ಬನು ಕುಮಟೆಯ ಗೋವಿಂದ ; ಏ sಣಚಿಟಿಜs ಜಿoಡಿ ಏumಣಚಿ, ಉ ಜಿoಡಿ ಉoviಟಿಜ. ಇನ್ನೊಬ್ಬನು ಕುಮಟೆಯ ವಿಷ್ಣು. ಇಬ್ಬರೂ ಅಡ್ಡ ಹೆಸರುಗಳನ್ನಷ್ಟೇ ಬದಲಾಯಿಸಿಕೊಂಡಿದ್ದಾರೆ, ಹೊಳೆಯಿತೆ ? ಇವರು ನಮ್ಮ ಹುಡುಗರೇ. ನಿಸ್ಸಂಶಯ. ಇಬ್ಬರೂ ಡಾಕ್ಟರ್ ಆಗಿದ್ದಾರೆ, ನೋಡಿದಿರಾ ?” ಎಂದರು ತುಂಬಿದ ಅಭಿಮಾನದಿಂದ. +ವರ್ಮಾ ಶರ್ಮಾರ ಆಸ್ಥೆಯ ಕ್ಷೇತ್ರವನ್ನು ನೋಡಿದರೆ ಇವರು ನಮ್ಮ ಗೋವಿಂದ, ವಿಷ್ಣು ಆಗಿರುವುದು ಶಕ್ಯವಿದೆ ಎಂದು ನನಗೂ ಅನಿಸಿತು. ಆದರೆ ಹೆಸರುಗಳನ್ನು ಬದಲಿಸಿಕೊಂಡಿದ್ದೇಕೆ ? ದೂರದ ಅಮೇರಿಕೆಗೆ ವಲಸೆ ಹೋದದ್ದು ಹೌದಾದರೆ ಹೋಗುವ ಮೊದಲು ಯಾರಿಗೂ ತಿಳಿಸಲಿಲ್ಲವೇಕೆ ? ಹೋಗಿ ವರ್ಷಗಳೇ ಸಂದಿರುವಾಗಲೂ ಒಮ್ಮೆಯೂ ತಮ್ಮ ಹುಟ್ಟಿದೂರನ್ನು, ಹೆತ್ತವರನ್ನು ನೆನೆಯಲಿಲ್ಲವೇಕೆ ? ಇವರು ನಿಜಕ್ಕೂ ನಮ್ಮ ಹುಡುಗರೇ ಆಗಿರುವ ಪಕ್ಷದಲ್ಲಿ ವೈಕುಂಠ ಬಾಳ್ಗಿಯನ್ನು ಕೊಲೆಗೈದು ತಲೆಮರೆಸಿಕೊಂಡಿರುವ ಸಂಶಯ ಬರುವುದಿಲ್ಲವೆ ? ನನ್ನ ಎದುರು ಕುಳಿತವರ ನಿದ್ದೆಗೇಡಿಗೆ ಕಾರಣವಾದದ್ದು ಇಂಥ ಸಂಶಯ ಆಗಿರಲಾರದು. ಆಗಿದ್ದರೆ ಅವರು ಇಷ್ಟೊಂದು ಉತ್ಸಾಹಗೊಳ್ಳುತ್ತಿರಲಿಲ್ಲ. ಬಹುಶಃ ನನ್ನನ್ನು ಕಾಡಿದ ಸಂಗತಿಗಳು, ಇವರು ನಮ್ಮ ಹುಡುಗರೆನ್ನುವ ಅಭಿಮಾನದಿಂದ ಬೀಗಿದ ಅವರ ಲಕ್ಷ್ಯಕ್ಕೆ ಬಂದಿರಲಿಕ್ಕೂ ಇಲ್ಲ. ನಾನು ನನ್ನ ಕುತೂಹಲವನ್ನು ಸದ್ಯ ತಡೆ ಹಿಡಿದು ಅವರ ಮುಂದಿನ ಮಾತಿಗೆ ಕಾದೆ- +“ನೀವು ಸ್ವತಃ ವಿಜ್ಞಾನಿಗಳು. ನಿಮ್ಮ ಕ್ಷೇತ್ರದಲ್ಲಿ ನೀವು ಹೆಸರು ಗಳಿಸಿದ್ದು ನನಗೆ ಗೊತ್ತಿದೆ. ನಾನು ಕೇಳುವ ಪ್ರಶ್ನೆಗೆ ನಿಮ್ಮ ಪ್ರಾಮಾಣಿಕ ಉತ್ತರ ಕೊಡಿ-ಈ ಹುಡುಗರು ಕುಮಟೆಯಲ್ಲೇ ಉಳಿದಿದ್ದರೆ ಇಷ್ಟು ಮುಂದೆ ಬರುತ್ತಿದ್ದರೆ ?” +“ಖಂಡಿತ ಇಲ್ಲ ! ಕುಮಟೆಯಲ್ಲೇ ಯಾಕೆ, ಭಾರತದ ಯಾವುದೇ ಪಟ್ಟಣದಲ್ಲಿದ್ದರೂ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ” +ಅಮೇರಿಕೆಯಲ್ಲಿ ಹೆಸರು ಮಾಡಿದ ವಿದ್ವಾಂಸರು ಕುಮಟೆಯ ವಿಷ್ಣು, ಗೋವಿಂದರೇ ಎನ್ನುವ ತಮ್ಮ ಅಚಲ ಅಭಿಪ್ರಾಯವನ್ನು ನಾನೂ ಒಪ್ಪಿದ್ದೇನೆ ಎಂದು ಗ್ರಹೀತ ಹಿಡಿದೇ ಮಾತನಾಡಿದರು, ನನ್ನ ಮಿತ್ರರು- +“ಆ ದಿನ ತಾನೊಬ್ಬ ಜ್ಯೋತಿಷಿ ಎಂದು ಹೇಳಿಕೊಂಡು ಬಂದವನು ಈ ಇಬ್ಬರನ್ನು ಕುಮಟೆಯಿಂದ ದೂರ ಕರೆದೊಯ್ಯಲೆಂದೇ ಬಂದಿದ್ದೆಂದು ತೋರುವುದಿಲ್ಲವೇ ? ನನಗೆ ಖಾತರಿಯಿದೆ : ಆ ದಿನ ಬಂದವನು ಜ್ಯೋತಿಷಿ ಅಲ್ಲವೇ ಅಲ್ಲ, ಜ್ಯೋತಿಷಿಯ ವೇಷ ಹಾಕಿಕೊಂಡಿದ್ದ ಇನ್ನು ಯಾರೋ ! ನನಗೆ ಇಂಥದ್ದರಲ್ಲಿ ಇಷ್ಟು ದಿನ ವಿಶ್ವಾಸವೇ ಇರಲಿಲ್ಲ. ಆದರೆ ಇದನ್ನು ಓದಿದಮೇಲೆ ಮೂಡಿದೆ. ವಿಶ್ವಾಸ ಮೂಡಿದಂದಿನಿಂದ ರಾತ್ರಿ ನಿದ್ದೆಯೇ ಬಾರದಾಗಿದೆ.” +ಅವರ ಮಾತಿಗೆ ತಲೆ-ಬುಡ ಗೊತ್ತಾಗದೇ ನಾನು ಗೊಂದಲದಲ್ಲಿ ಬಿದ್ದೆ. ತಲೆಗೆ ಜ್ವರ ಏರಿದವರ ತರಹ ಮಾತನಾಡತೊಡಗಿದವರು ನನ್ನಲ್ಲಿ ಆತಂಕ ಹುಟ್ಟಿಸಿದರು. ನನ್ನ ಆತಂಕ ಇನ್ನೂ ತಮ್ಮ ವಿಚಾರಗಳ ಗುಂಗಿನಲ್ಲೇ ಇದ್ದ ಅವರ ಲಕ್ಷ್ಯಕ್ಕೆ ಬಂದಿರಲಾರದು_ +“ನನಗೀಗ ಎಳ್ಳಷ್ಟೂ ಸಂಶಯವಿಲ್ಲ : ಜ್ಯೋತಿಷಿಯ ವೇಷ ಹಾಕಿಕೊಂಡು ವಿಷ್ಣು-ಗೊವಿಂದನ ಮನೆಗಳಿಗೆ ಮಾತ್ರ ಭೇಟಿಯಿತ್ತ ಮಹಾನುಭಾವ ಬೇರೆ ಯಾರೂ ಅಲ್ಲ. ಚಿತ್ರಿಗಿಯ ಜುಟ್ಕಾದೇವರು. ಚಿಕ್ಕಂದಿನಲ್ಲಿ ಅಪ್ಪ-ಅಮ್ಮಂದಿರಿಂದ ಇವನ ಮಹಿಮೆಯ ಬಗ್ಗೆ ಕೇಳಿ ಗೊತ್ತಿತ್ತು. ನಂಬಿರಲಿಲ್ಲ. ಕಷ್ಟದಲ್ಲಿದ್ದವರನ್ನು ರಕ್ಷಿಸಲು, ಯೋಗ್ಯರಾದವರಿಗೆ ಅಭ್ಯುದಯದ ದಾರಿ ತೋರಿಸಲು ಎಂಥೆಂಥೆ ವೇಷ ಧರಿಸಿ ಬರುತ್ತಿದ್ದವನ ಬಗ್ಗೆ ಅದ್ಭುತ ಕತೆಗಳನ್ನು ಕೇಳಿದ್ದೆ, ಅನುಭವಿಸಿರಲಿಲ್ಲ.” +ಅವರ ಮಾತಿನಲ್ಲಿನ್ನೂ ತಲೆಗೇರಿದ ಜ್ವರವಿತ್ತು. ನನ್ನ ಕಣ್ಣೆದುರೇ ಹೊಚ್ಚ ಹೊಸ ಪುರಾಣವೊಂದು ಹುಟ್ಟಿಕೊಳ್ಳತೊಡಗಿದ ವಿಸ್ಮಯಕ್ಕೆ ನಾನು ದಂಗುಬಡಿದೆ. ಅಪ್ಪ ನಾನು ಇಲ್ಲಿಗೆ ಹೊರಡುವ ಮೊದಲು ಈ ಜಟ್ಕಾದೇವರ ಬಗ್ಗೆ, ಅವನ ಮಹಿಮೆಯಲ್ಲಿ ಕುಮಟೆಯ ಜನರಿಗಿದ್ದ ಅಪಾರ ವಿಶ್ವಾಸದ ಬಗ್ಗೆ ಚುಟುಕಾಗಿ ತಿಳಿಸಿದ್ದ. ಬಹುಶಃ ಈ ಮಿತ್ರರು ಅಪ್ಪನಿಗೆ ಬರೆದ ಪತ್ರದಲ್ಲಿ ನನ್ನನ್ನು ಇಲ್ಲಿಗೆ ಕರೆಯಿಸಿಕೊಳ್ಳುವ ಉದ್ದೇಶ ತಿಳಿಸುವಾಗ ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಯನ್ನು ಚರ್ಚಿಸಿರಬೇಕು ಎಂದು ಅನುಮಾನವಾಯಿತು. ತಡೆಯುವ ನನ್ನ ಪ್ರಯತ್ನ ಮೀರಿ ಮೋರೆಯ ಮೇಲೆ ಮುಗುಳ್ನಗೆ ಮೂಡಿತು. ಆದರೂ ನನ್ನ ಮುಂದೆ ಕೂತವರ ಭಾವನೆಗಳಿಗೆ ಅನಾದರ ತೋರಿಸದ ಹಾಗೆ-“ನಿಮ್ಮ ಪ್ರಕಾರ ವೈಕುಂಠ ಬಾಳ್ಗಿಯ ಕೊಲೆ ಮಾಡಿದವನು ಕೂಡ ಈ ಜಟ್ಕಾದೇವರೇ ಇರಬೇಕು, ಹಾಗಾದರೆ ?” ಎಂದು ಕೇಳಿದೆ. +ನನ್ನ ಬಾಯಿಂದ ತನ್ನಿಂದ ತಾನೇ ಎಂಬಂತೆ ಹೊರಬಿದ್ದ ಪ್ರಶ್ನೆಯಿಂದ ನಾನೇ ಚಕಿತನಾದೆ. +“ಬೇಶಕ್” ಎಂದರು, ಮಿತ್ರರು. ಎರಡೂವರೆ ಅಕ್ಷರಗಳ ಈ ಉತ್ತರದಲ್ಲಿ ಅವರ ಆತ್ಮವಿಶ್ವಾಸದ ಸಂಪೂರ್ಣ ಒತ್ತು ಮೂಡಿತ್ತು. +‘ಹಾಗೆ ನೋಡಿದರೆ ವೇಷ ಹಾಕ್ಕೊಳ್ಳುವ ಕೆಲಸ ಜಟ್ಕಾದೇವರಿಗಿಂತನಿಮ್ಮ ದೀಡಬುದ್ವಂತನಿಗೆ ಹೆಚ್ಚು ಸುಲಭವಾದದ್ದಲ್ಲವೇ ? ಜ್ಯೋತಿಷಿಯ ವೇಷದಲ್ಲಿ ಬಂದವನು ಅವನೇ ಏಕೆ ಆಗಿರಬಾರದು ? ತನ್ನ ಮಾತನ್ನು ನಿಜ ಮಾಡುವ ಹಠದಲ್ಲಿ ಕೊಲೆಯೆಂದು ಸಂಶಯ ಹುಟ್ಟಿಸುವ ಹಾಗೇ ಆತ್ಮಹತ್ಯೆ ಮಾಡಿಕೊಂಡಿರಬಾರದು ?’ ಕೇವಲ ಅವರನ್ನು ಚುಡಾಯಿಸಲೆಂದೇ ಕೇಳಬೇಕೆಂದಿದ್ದ ಪ್ರಶ್ನೆಯಲ್ಲಿ ತಂತಾನೆ ಆವಿಷ್ಕಾರಗೊಂದ ನನ್ನ ಶೋಧದಿಂದ ನಾನೇ ಎಷ್ಟು ಚಕಿತನಾದೆನೆಂದರೆ ಬಾಯಿಂದ ಮಾತೇ ಹೊರಡದಾಯಿತು. ನನ್ನ ಮೌನವನ್ನು ತಪ್ಪಾಗೀ ತಿಳಕೊಂಡ ಮಿತ್ರರು- +“ನಿಮ್ಮಂಥ ತರುಣ ಪ್ರಾಯದವರಿಗೆ, ಅದರಲ್ಲೂ ವಿಜ್ಞಾನದಲ್ಲಿ ಅಚಲವಾದ ವಿಶ್ವಾಸವಿದ್ದವರಿಗೆ ನನ್ನ ಮಾತಿನಲ್ಲಿ ಕೂಡಲೇ ವಿಶ್ವಾಸ ಮೂಡಸ್ಲಾರದು. ಸಂಜೆ ಇನ್ನೊಮ್ಮೆ ಚಿತ್ರಿಗಿಗೆ ಹೋಗಿಬರೋಣ. ಆಮೇಲೆ ಹೇಳಿ” ಎಂದರು. +ಅವರ ದನಿ ಒಮ್ಮೆಲೇ ಬಹಳ ಮೆತ್ತಗಾದದ್ದು ನೋಡಿ ನನಗೇ ಕೆಡುಕೆನ್ನಿಸಿತು. ಕುಮಟೆಯ ನೆಲ ಹವಾಮಾನಗಳು ವಾಸ್ತವ ಸತ್ಯಕ್ಕಿಂತ ಪುರಾಣದ ಹುಟ್ಟಿಗೇ ಲಾಯಕ್ಕಾಗಿದ್ದರೆ ತಕರಾರು ಮಾಡಲು ನಾನು ಯಾರೆಂದಾಗಬೇಡವೆ ! +“ನಿಮ್ಮ ಮಟ್ಕಾದೇವರ ಗುಡಿಯನ್ನು ನನಗೂ ಇನ್ನೊಮ್ಮೆ ನೋಡಬೇಕಾಗಿದೆ. ಸಂಜೆ ಹೋಗೋಣ” ಎಂದೆ. ನನ್ನ ಸೂಚನೆ ಪ್ರಾಮಾಣಿಕವಾಗಿತ್ತು. ಅದನ್ನು ಗುರುತಿಸಿದ ಮಿತ್ರರು ಖುಷಿಯಿಂದ ನಕ್ಕರು. +– ೭ – +ಸಂಜೆ ಚಿತ್ರಿಗಿಗೆ ಹೋಗಿ ಜಟ್ಕಾದೇವರ ಗುಡಿಯನ್ನು ಇನ್ನೊಮ್ಮೆ ನೋಡಿ ಬಂದೆವು. ಗುಡಿಯೆದುರು ನಿಂತಾಗ ನಾವಿಬ್ಬರೂ ಮೌನವಾಗಿದ್ದೆವು. ಲಕ್ಷ್ಯವನ್ನೆಲ್ಲ ಮೂರ್ತಿಯ ಮೇಲೇ ಕೇಂದ್ರೀಕರಿಸಿ ತದೇಕಚಿತ್ತನಾಗಿ ನೋಡಹತ್ತಿದೆ. ಕರಿಯ ಶಿಲೆಯಲ್ಲಿ ಕಡೆದ ಎರಡು ಫೂಟು ಎತ್ತರದ ಮೂರ್ತಿ ತುಂಬಾ ಹಳೆಯದಿರಬೇಕು. ಅಲ್ಲವಾದರೂ ಗಾಳಿ ಮಳೆಗಳಿಗೆ ಮೈಯೊಡ್ಡಿ, ನಿಂತಲ್ಲೇ ಸವೆದುಹೋಗಿ, ಅದರ ರೂಪವನ್ನು ಗುರುತಿಸುವುದು ಕಷ್ಟವಾಗಿತ್ತು. ಎಣ್ಣೆ ಸವರಿಕೊಂಡಂತಿದ್ದ ಮೈ ಸಣ್ಣಗೆ ಜಗಜಗಿಸುತ್ತಿತ್ತು. ಮೈಗೆ ಅಲ್ಲಲ್ಲಿ ಅರಿಶಿಣ ಕುಂಕುಮಗಗಳ ಹುಡಿ ಮೆತ್ತಿತ್ತು. ಒಂದೆರಡು ಕರವೀರ ದಾಸವಾಳದ ಹೂವುಗಳು ತಲೆ ಹೆಗಲುಗಳಿಂದ ಕಳಚಿ ಕಾಲ ಬಳಿ ಬಿದ್ದಿದ್ದವು. ಅಲ್ಲೇ ಹತ್ತಿರದಲ್ಲಿದ್ದ ಮಣ್ಣಿನ ಡೊಡ್ಡ ಹಣತೆಯಲ್ಲಿ ಎಣ್ಣೆಯಿತ್ತು. ಅರ್ಧ ಉರಿದು ನಂದಿಹೋದ ಬತ್ತಿಯಿತ್ತು. ಗುಡಿಯನ್ನು ಬಿಡುವ ಮೊದಲು ನನ್ನ ಕೈಗಳು ನಮಸ್ಕಾರದ ರೂಪದಲ್ಲಿ ಒಂದಾಗಿದ್ದುವೆ ? ಖಾತರಿಯಿಲ್ಲ. ಖಾತರಿಯಿದ್ದ ಸಂಗತಿ ಇಷ್ಟು- +ಮನೆಯ ಹಾದಿ ಹಿಡಿದಾಗ ದಾರಿಯಲ್ಲಿ, ಹತ್ತುವ ಯಾವುದೂ ಈ ಮೊದಲು ನೋಡಿದಾಗ ಇದ್ದ ಹಾಗೆ ಇರಲಿಲ್ಲ : ಮಠಕೇರಿ, ಬಾಜಾರ, ಪೈವಾಡೆ, ಗುಡಿಗಾರ ಗಲ್ಲಿ, ಹುಲಿದೇವರ ಗುತ್ತ, ಸಾಲೆಯ ಗುಡ್ಡ, ಹೆರವಟ್ಟೆ-ಎಲ್ಲವೂ ಬದಲುಗೊಂಡು ನಾನು ಬೇರೆಯೇ ಒಂದು ಲೋಕದಲ್ಲಿ, ಬೇರೆಯೇ ಒಂದು ಕಾಲದಲ್ಲಿ ವಿಹರಿಸುತ್ತಿದ್ದಂತೆ ಭಾಸವಾಯಿತು. ಹುಡುಗರು ಊರು ತೊರೆದು ಇಪ್ಪತ್ತೊಂದು ವರ್ಷಗಳು ಆಗಿರುವಾಗ ಆಕಸ್ಮಾತ್ತಾಗಿ ಕೈಗೆ ಹತ್ತಿದ ಕಾಗದದ ತುಂಡಿನಲ್ಲಿ ಕಾಣಿಸಿಕೊಂಡ ಸುದ್ಧಿಯೇ ಪ್ರಚೋದನೆಯಾಗಿ ನನ್ನ ಮಿತ್ರರ ಕಲ್ಪನೆಯಲ್ಲಿ ಗರಿಗೊಂಡ ಪುರಾಣ ಈಗ ನನ್ನ ಮೇಲೂ ಮಾಟ ಮಾಡಿತೆನ್ನುವಂತೆ ನನಗೆ ಮನದಟ್ಟಾಗಹತ್ತಿತು- +ಬೆಳಕಿನ ರಹಸ್ಯವನ್ನು ತಿಳಿಯುವ ಕುತೂಹಲದಿಂದ ಸಪ್ತಸಾಗರ ದಾಟಿ ಹೋದ ಇಬ್ಬರು ವೀರ ಯುವಕರ ಸುತ್ತ ಬೆಳೆದ ಈ ಪುರಾಣಕ್ಕೆ ಕಾರಣ ಪುರುಷನಾಗುವ ಯೋಗ್ಯತೆ ಜಟ್ಕಾದೇವರಂಥ ಮಹಾಮಹಿಮನಿಗೆ ಸೇರಿದ್ದೇ ಹೊರತು ತನ್ನ ಮೂಗಿನ ನೇರಕ್ಕೇ ನಡೆಯುವ ಹಠದಲ್ಲಿ ಕೊರಳಿಗೆ ನೇಣು ಹಾಕಿಕೊಂಡು ಸತ್ತ ಅಧಮನಿಗಲ್ಲ ! +ಮನೆಯ ಅಂಗಳದಲ್ಲಿ ಕಾಲಿರಿಸುತ್ತಿದ್ದಂತೆ ರಾಮಭಕ್ತ ಹನುಮಂತನಂತೆಯೋ, ವಿಷ್ಣುವಾಹನ ಗರುಡನಂತೆಯೋ ಹೊಳೆಯುವ ಬೃಹದಾಕೃತಿಯ ಬೆನ್ನುಹತ್ತಿ ಉಡ್ಡಾಣಗೈಯುತ್ತಿದ್ದಯುವಕರ ಜೋಡಿ ದೃಷ್ಟಿಗೋಚರವಾದಂತಾಗಿ ಜೀವ ಝಲ್ಲೆಂದಿತು ! +ಪುಣ್ಯದಿಂದ ಮನೆ ಸೇರಿದ ಮೇಲೆ ನನ್ನ ಮಿತ್ರರು ಸಂಜೆಯ ಭೇಟಿಯ ಬಗ್ಗೆ ಒಂದೂ ಪ್ರಶ್ನೆ ಕೇಳಲಿಲ್ಲ. ಕೇಳಿದ್ದರೆ ನನ್ನ ಬಳಿ ಉತ್ತರವಿರಲಿಲ್ಲ ! +***** +ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ […] +ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ […] +`ನಂದೀ ತೀರ್ಥದ ಗಣಪತಿಗೆ ಪಂಚಕಜ್ಜಾಯ ಹರಕೆ ಹೇಳಿ ಅಂದ್ರೆ ಕೇಳೋದಿಲ್ಲ . ರಾತ್ರಿಯೆಲ್ಲ ಕೆಂಪು ಕಣ್ಣಲ್ಲಿ ದೀಪ ಇಟ್ಕೊಂಡು ಡಿಡಿಟಿ ಬಳೀರಿ… ‘ ನಾಗಿ ಮಟಗುಟ್ಟುತ್ಲೇ ಅಂಗಾಲಲ್ಲಿ ಕಚ್ಕೊಂಡಿದ್ದ ಇರುವೆಗಳ ಆಯ್…ಎನ್ನುತ್ತಾ ಹೊಸಕಿ ಎರಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_674.txt b/Kannada Sahitya/article_674.txt new file mode 100644 index 0000000000000000000000000000000000000000..aa9049d7f2db6461f8078b7462249daf06b49847 --- /dev/null +++ b/Kannada Sahitya/article_674.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಏನಾಗ್ತಿದೆ?” +ಕನ್ನಡಸಾಹಿತ್ಯ.ಕಾಂ ಬಲ್ಲವರು, ಬೆಂಬಲಿಗರು, ನನ್ನ ಪರಿಚಿತ ಸ್ನೇಹಿತರು ಎಲ್ಲರದು ಒಂದೇ ಪ್ರಶ್ನೆ. ಎಲ್ಲರಿಗು ಹೇಳಿದ್ದಾಯಿತು. ಇಲ್ಲಿ ಅದನ್ನು ಪುನರುಚ್ಚರಿಸುತ್ತಿರುವುದು-ಅಗೋಚರವಾಗಿರುವ ನಮ್ಮ ಓದುಗರಿಗಾಗಿ. +ಈ ಹಿಂದೆ ನಮ್ಮ “ಹೋಸ್ಟಿಂಗ್ ಸಂಸ್ಥೆ” ತಾನು ಎದುರಿಸುತ್ತಿದ್ದ ಪೈಪೋಟಿಗೆ ತಕ್ಕಂತೆ ತನ್ನನ್ನು ಸಜ್ಜುಗೊಳಿಸಿಕೊಳ್ಳುವತ್ತ ಗಮನ ಹರಿಸಿದಾಗ ಅನೇಕ ರೀತಿಯ ತೊಡಕುಗಳು. ಅವರು ‘ಹೋಸ್ಟ್’ ಮಾಡಿದ್ದ ಸುಮಾರು ವೆಬ್‌ಸೈಟ್‌ಗಳನ್ನು ಹೊಸ ಸರ್ವರ್‌ಗಳಿಗೆ ಸ್ಥಳಾಂತಿರುಸುವಾಗ ಅನಿರೀಕ್ಷಿತ ತಾಂತ್ರಿಕ ತೊಂದರೆಗಳನ್ನು ಆ ಸಂಸ್ಥೆ ಎದುರಿಸಬೇಕಾಯಿತು. ಪರಿಣಾಮ: ಅದು ನಮ್ಮನ್ನು ಪೇಚಿಗೆ ಸಿಲುಕಿಸಿತು. ಅನೇಕ ಸೈಟ್‌ಗಳು ಕಾರ್ಯವೆಸಗದಾದವು. ನಮ್ಮದು ಹಾಗೆಯೇ ಆಗುತ್ತಿತ್ತು. ಅವರು “ನಿಮ್ಮ ಸೈಟನ್ನು ಹೊಸ ಸರ್ವರ್‌ಗೆ ಇಂದು ಸ್ಥಳಾಂತಿರುಸುತ್ತಿದ್ದೇವೆ”, “ಇಲ್ಲ ಮುಂದೂಡಬೇಕಾಗಿದೆ” ಎಂದೆಲ್ಲ ಬರೆಯುತ್ತಾ ಹೋದಂತೆ ನಾವು ಅಪ್‌ಡೇಟ್ ಮಾಡುವುದು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿಹೋಯಿತು. ಇದರ ಕುರಿತಂತೆ ಪತ್ರವ್ಯವಹಾರಗಳು ಫಲಕಾರಿಯಾಗಲಿಲ್ಲ. ಕೊನೆಗೆ ಆ ಹೋಸ್ಟಿಂಗ್ ಕಂಪನಿಯನ್ನು ಬಿಟ್ಟು ಬೇರೆಯದೇ ಕಡೆ ಜಾಗ ಪಡೆದು ಮತ್ತೆ ಹೊಸದಾಗಿ ಎಲ್ಲವನ್ನು ಕೂಡಿಸಿ ಸೇರಿಸಿ ಈ ಸಂಚಿಕೆ ರೂಪಿಸಿದ್ದೇವೆ. +ನವೆಂಬರ್ ಒಂದರಂದು ಅಪ್‌ಡೇಟ್ ಎಂದಂದುಕೊಂಡೆವು. ಸಾಧ್ಯವಾಗಲಿಲ್ಲ. ಕೊನೆಗೆ ಆರರಂದು ಅಪ್‌ಡೇಟ್ ಸಾಧ್ಯವಾಗಿದೆ. ಆಗಿರಬಹುದಾದದ್ದಕ್ಕೆ ವಿಷಾದ ವ್ಯಕ್ತ ಪಡಿಸುತ್ತಾ- ನಮ್ಮ ಕೈ ಮೀರಿಹೋಗಿದ್ದ ಸಂದರ್ಭದಲ್ಲಿ ಏನೊಂದನ್ನು ಮಾಡಲಿಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನು ಸಹೃದಯರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಿದ್ದೇನೆ. ಈ ಸಂಚಿಕೆ ಕರ್ನಾಟಕದಲ್ಲಿ ೧೯೮೦ ಗಳಲ್ಲಿ ಪ್ರಬಲವಾಗಿದ್ದ ಚಳವಳಿಯ ಬಗೆಗೆ ಒಂದು ಸೂಕ್ಷ್ಮವನ್ನು ಕೊಡುತ್ತದೆ ಎಂದಂದುಕೊಂಡಿದ್ದೇನೆ. ಗೋಕಾಕ ವರದಿ ಹಾಗು ಅದಕ್ಕೆ ಬಂದ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಇಲ್ಲಿ ಸೇರಿಸಲಾಗಿದೆ. +-ನಿಮಗೆ ಆಶ್ಚರ್ಯವಾಗಬಹುದು. ಗೋಕಾಕ್ ವರದಿಯ ಪ್ರತಿ ಇಂದು ಕನ್ನಡ ಸಾಹಿತ್ಯ ಪರಿಷತ್. ಕನ್ನಡ ಅಭಿವೃಧ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸಿಗುವುದಿಲ್ಲ. ನಮ್ಮ “ಬರಹ” ಗುಂಪಿನ ಸಂಚಾಲಕರಲ್ಲೊಬ್ಬರಾದ ರೋಹಿತ್ ಆರ್ ರವರು ಒಂದು ವಾರಕ್ಕಿಂತಲೂ ಇದಕ್ಕಾಗಿ ಹೆಚ್ಚು ಓಡಾಡಿ ಕೊನೆಗೂ ಒಂದು ಪ್ರತಿಯನ್ನು ದಕ್ಕಿಸಿಕೊಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಚಿಕೆಯ ಸಾರ್ಥಕ್ಯಕ್ಕೆ ನನಗಿಂತಲೂ ಅವರದೇ ಹೆಚ್ಚಿನ ಕೆಲಸ ಎಂದೂ ಹೇಳಿದರೆ ಅತಿಶಯೋಕ್ತಿಯಲ್ಲ. +– ಗೋಕಾಕ್ ವರದಿ-ಚಳವಳಿಯನಂತರದ ಯುವ ಜನಾಂಗಕ್ಕೆ ಇರಬಹುದಾದ ಕನಿಷ್ಟ ಕುತೂಹಲವನ್ನು ಈ ಸಂಚಿಕೆ ಸಮಯೋಚಿತವಾಗಿ ಬಗೆಹರಿಸಬಲ್ಲದು ಎಂದಂದುಕೊಂಡಿದ್ದೇನೆ. +* +* +* +ಕೆ ಎನ್ ಹರಿಕುಮಾರ್ ನನ್ನ ಪರಿಚಯಸ್ಥರು. ಈ ಪರಿಚಯ ವೈಚಾರಿಕ ನಿಷ್ಟುರತೆ-ಸಲಿಗೆಗೆಳಿಗೆ ಒಮ್ಮೊಮ್ಮೆ ತಿರುಗಿದ್ದೂ ಇದೆ. ಅವರ ನೇತೃತ್ವದಲ್ಲಿ-ಸಂಪಾದಕತ್ವದಲ್ಲಿ ಪ್ರಜಾವಾಣಿ ತೆಗೆದುಕೊಂಡ ನಿಲುವುಗಳು ಅವರು ಬರೆದಿರುವ ಲೇಖನಗಳನ್ನು ಓದಿದರೆ ಅರ್ಥವಾಗುತ್ತದೆ. ವೈಯಕ್ತಿಕವಾಗಿ ಆ ಲೇಖನಗಳು ನನ್ನ ವೈಚಾರಿಕ ದಿಕ್ಕುಗಳನ್ನು ಬದಲಾಯಿಸಿದಂತಹವು ಎಂಬುದನ್ನು ಇಲ್ಲಿ ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತೇನೆ. ಹರಿಕುಮಾರ್ ಹಾಗು ಯು ಆರ್ ಅನಂತಮೂರ್ತಿಯವರನ್ನು ಹೊರತು ಪಡಿಸಿದರೆ ಬಹುಶಃ ಗೋಕಾಕ್ ಚಳವಳಿಯ ಸಾಮೂಹಿಕ ಸನ್ನಿಗೆ ಒಳಗಾಗದವರು ಯಾರೊಬ್ಬರೂ ಇರಲಿಲ್ಲ. ಇಂದಿಗೂ ಆ ಚಳವಳಿಯ ಸಮೂಲಾಗ್ರ ಅಧ್ಯಯನ ಅಗತ್ಯವೆಂದೇ ನನಗನ್ನಿಸುತ್ತದೆ. ಆಶ್ಚರ್ಯವೆಂದರೆ ಸಂಸ್ಕೃತ ಭಾಷೆಯ ನೆರವಿನೊಂದಿಗೆ ಫಸ್ಟ್‌ಕ್ಲಾಸ್ ದಕ್ಕಿಸಿಕೊಂಡು ಬಿಡುತ್ತಿದ್ದವರು ಯಾರೊಬ್ಬರೂ ಗೋಕಾಕ್ ಚಳವಳಿಯನ್ನು ವಿರೋಧಿಸಲಿಲ್ಲ. ಇದು ನಿಜವಾಗಿ ಅಶ್ಚರ್ಯ ತರುವ ವಿಷಯ. ಸಂಸ್ಕೃತ ಅಧ್ಯಯನ ಆ ಮಟ್ಟದಲ್ಲಿ ಎಷ್ಟು ಹುಸಿಯಾದದ್ದೆಂದು ಬಲ್ಲದಿರುವವರು ಯಾರೂ ಇಲ್ಲ. ಈ ವಿಷಯದಲ್ಲಿ ಇಂದಿಗೂ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಸರಾಸರಿಯಲ್ಲಿ ಈ ಸಂಸ್ಕೃತ ಸೇರಿಕೊಂಡೇ ಮುಂದು ಮುಂದಕ್ಕೆ ಸಾಗುತ್ತಿದೆ. ಅಂತರ ಅಗಾಧವಾಗುತ್ತ ಹೋಗುತ್ತಲೇ ಇದೆ. ಈ ಕುರಿತಂತೆ ಹೆಚ್ಚು ಬಲ್ಲವರು ಅಧ್ಯಯನಪೂರ್ವಕವಾಗಿ ಅಲೋಚಿಸಿದರೆ ಸರಿಯಾದ ರೀತಿಯ ವ್ಯವಸ್ಥೆಗೆ ಒಂದು ಸಂವಾದವಾದರೂ ಹುಟ್ಟಿಕೊಂಡಾತು ಎಂಬ ಆಶಯವೇ ಈ ಸಂಚಿಕೆಯನ್ನು ರೂಪಿಸಿದೆ. +* +* +* +ಉಳಿದಂತೆ ಈ ಬಾರಿ ನಮ್ಮ ಲೇಖಕ ಬಳಗಕ್ಕೆ ಶಾಂತಿನಾಥ ದೇಸಾಯಿಯವರ ಕೃತಿಗಳ ಸೇರ್ಪಡೆಯಾಗಿದೆ. ಶ್ರೀಮತಿ ದೇಸಾಯಿಯವರ ಬಳಿ ಮಾತನಾಡಿ ಅನುಮತಿ ದೊರಕಿಸಿಕೊಟ್ಟವರು ವಿವೇಕ್ಷಾನಭಾಗರವರು. ಅವರಿಗೆ ಧನ್ಯವಾದಗಳು. ಇದೇ ರೀತಿ ಎಸ್ ದಿವಾಕರ್‌ರವರು ಅವರ ಬರವಣಿಗೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಮುಂದಿನ ತಿಂಗಳು ಅವರ ಒಂದೆರಡಾದರು ಸಣ್ಣಕತೆಗಳನ್ನು ಪ್ರಕಟಿಸಲಾಗುವುದು. ಜೊತೆಗೆ ಪ್ರಸ್ತುತ ಘಟನಾವಳಿಗಳು, ವರದಿಗಳು (ರಾಜಕೀಯ ಸಿನಿಮಾ, ಕ್ರೀಡೆ ಎಲ್ಲವನ್ನು ಒಳಗೊಂಡಂತಹ) ಅಂದಂದೇ ಕೊಡುವ ದಿಕ್ಕಿನತ್ತಲೂ ಅಲೋಚನೆ ನಡೆಯುತ್ತಿದೆ. ಕನ್ನಡಸಾಹಿತ್ಯ.ಕಾಂ ಹೊಸ ಹೊಸ ದಿಕ್ಕಿಗೆ ತೆರೆದುಕೊಳ್ಳುತ್ತದೆ, ವ್ಯಾಪಿಸಿಕೊಳ್ಳುತ್ತದೆ ಎನ್ನುವ ಅಲೋಚನೆಯೇ ಖುಷಿ ತರುವಂತದ್ದು.. +ಶೇಖರ್‌ಪೂರ್ಣ +೦೭-೧೧-೨೦೦೩ +***** +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […] +ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_675.txt b/Kannada Sahitya/article_675.txt new file mode 100644 index 0000000000000000000000000000000000000000..997bdb71ea44859e061d151b4da2ed1a55ece98f --- /dev/null +++ b/Kannada Sahitya/article_675.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? +ಮಾನ್ಯರೆ, +ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು ಯೋಜನೆಗಳನ್ನು ಹಾಕಿದಿರಿ, ಪ್ರೆಸ್ ಮೀಟ್ ಕರೆದಾಗ ಎಲ್ಲರೂ ತಲೆಗೊಂದು ಮಾತನಾಡದೆ, ಎಲ್ಲರ ಪರವಾಗಿ ಒಬ್ಬರು ಮಾತನಾಡುವ, ಸಂಪ್ರದಾಯಕ್ಕೆ ಹಳಿ ಹಾಕಿದಿರಿ. ರೀಮೇಕ್‌ಗಿರುವ ಸೌಲಭ್ಯ ಮಾರ್ಚಿವರೆಗೆ ಸರಕಾರ ಮುಂದೂಡುವಂತೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಂವಾದಿಸುವಾಗ ವಿಷ್ಣುವರ್ಧನ್ ಅವರನ್ನು ನಿಮ್ಮೊಂದಿಗೆ ಕರೆದೊಯ್ದಿರಿ. +ಪ್ರೆಸ್ ಕ್ಲಬ್ ಪ್ರೆಸ್ ಮೀಟ್‌ನಲ್ಲಿ ಅಶ್ಲೀಲ ಚಿತ್ರ ತೆಗೆಯುವವರನ್ನು ಎಚ್ಚರಿಸುತ್ತೇವೆ ಎಂದಿರಿ. ಆ ನಿಟ್ಟಿನಲ್ಲಿ ಮುಂದುವರೆದಲ್ಲಿ ಅಂಥವರನ್ನು ಬ್ಲಾಕ್ ಲಿಸ್ಟ್ ಮಾಡುವೆವು ಎಂದಿರಿ. ಒಟ್ಟಿನಲ್ಲಿ ಖಂಡಿತ ಇದು ಸಾಮಾನ್ಯ ಸಾಧನೆಯಲ್ಲ. +ಸಾಮಾನ್ಯ ಸಾಧನೆಯಲ್ಲ ಎಂದು ಏಕೆ ಹೇಳುತ್ತಿದ್ದೇನೆಂದರೆ ಚಿತ್ರರಂಗದ ಗುಟ್ಟು-ಗುಮಾನಿಗಳನ್ನು, ಸಿಹಿ-ಕಹಿಗಳನ್ನು, ವರದಿ-ವಿಶ್ಲೇಷಣೆಗಳನ್ನು ಅಂದಿನಿಂದ ಇಂದಿನವರೆಗೂ ಮಾಡುತ್ತ ಬಂದಿರುವ ಸಿನಿ ಪತ್ರಕರ್ತರ ಸಂಘ ಎರಡು ಹೋಳಾಗಿ ಇಂದಿಗೂ ನಿಷ್ಕ್ರಿಯವಾಗಿ ಬಿದ್ದಿದೆಯೇ ಹೊರತು ಒಂದಾಗಿ ಹೊಸ ಹುಟ್ಟನ್ನು ತೋರುವ ಪ್ರಯತ್ನ ಇನ್ನೂ ಮಾಡಿಯೇ ಇಲ್ಲ. +ಆ ದೃಷ್ಟಿಯಿಂದ ನಿಮ್ಮ ಸಾಧನೆ ದೊಡ್ಡದು. ಆದರೆ ಚುನಾವಣೆಯ ಸಮಯದಲ್ಲಿ ಶ್ರೀಸಾಮಾನ್ಯನಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅಂಗೈಲಿ ಆಕಾಶ ತೋರಿಸುತ್ತ ನೂರೆಂಟು ಆಸೆ, ಆಮಿಶಗಳನ್ನೊಡ್ಡಿ-ಕುರ್ಚಿಗಾಗಿ ಕಚ್ಚಾಟ ನಡೆಸುವುದು. ಇಂದಿನ ಡೆಮಾಕ್ರಸಿಯಲ್ಲೊಂದು ಪರಂಪರೆಯೇ ಆಗಿದೆ. +ಈಗ ನಿಮ್ಮ ಆಶ್ವಾಸನೆ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದಂತೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ನೋಡೋಣ…. +ಸ್ವಾಮಿ +ನಿಮ್ಮ ಕಛೇರಿಯ ಪಕ್ಕದಲ್ಲಿಯೇ ‘ತ್ರಿಭುವನ’ ಚಿತ್ರಮಂದಿರವಿದೆ. ಅಲ್ಲಿ ‘ಅಪ್ಸರ’ ಎಂಬ ಕನ್ನಡ ಚಿತ್ರವೊಂದು ನಡೆಯುತ್ತಿದೆ ಎಂಬುದು ನಿಮಗೆ ತಿಳಿದಿರಲೇಬೇಕು. ಅ ಚಿತ್ರದ ನಿರ್ದೇಶಕನ ಹೆಸರು ‘ಭರತ್’ ಅಂತೆ. +ಈ ಕಾಲದಲ್ಲಿ ರಾಮ-ಲಕ್ಷಣರಾರು ಭರತ ಶತೃಘ್ನರು ಯಾರು? ಎಂದು ಹೇಳುವುದೇ ಕಷ್ಟ. +ಯಕ್ಷಗಾನ, ಬಯಲಾಟದಲ್ಲಿ ಮುಖವಾಡ ಬಳಸುತ್ತಾರೆ. ಒರಿಜಿನಲ್ ಮುಖವನ್ನು, ಹೆಸರನ್ನು, ವ್ಯಕ್ತಿತ್ವವನ್ನು ಮರೆಮಾಚುವ ಸಾಧನವದು. ನಾನು ಮಾಡುತ್ತಿರುವುದು ಸರಿಯಲ್ಲ ಎನಿಸಿದ ವ್ಯಕ್ತಿಯು ತನ್ನ ಹೆಸರು ಮರೆಮಾಚಿ ಬೇರೊಂದು ಪೆನ್‌ನೇಮ್ ಬಳಸುತ್ತಾನೆ. ಅವನನ್ನು ಗಿಲ್ಟ್‌ಕಾನಷಸ್ ಕಾಡುವುದರಿಂದ. +ಸರಕಾರಿ ಅಧಿಕಾರಿಗಳು ಆಫೀಸರ್‌ಗಳ ಅವಕೃಪೆಗೆ ಪಾತ್ರರಾಗಬಾರದೆಂದು ಅಡ್ಡಹೆಸರಿನಲ್ಲಿ ಬರೆಯುತ್ತಾರೆ. ಟಿ.ವಿ. ಸಿನಿಮಾಗಳ ನಿರ್ದೇಶನ ಮಾಡುವಾಗಲೂ ಇದೇ ಪದ್ಧತಿ ಈಗ ಜಾರಿಗೆ ಬಂದಿದೆ. ಪತ್ರಿಕಾಲಯಗಳಲ್ಲಿ ಕೈತುಂಬ ಸಂಬಳ ಪಡೆಯುವ ಪತ್ರಕರ್ತರೂ ಸಹಾ ಬೇರೆ ಪತ್ರಿಕೆಗಳಿಗೆ ತುಂಬ ಗುಟ್ಟು-ಗುಟ್ಟಾಗಿ ಬೇರೆ ಹೆಸರಿನಲ್ಲಿ ಬರೆಯುವುದು ಹಣ ಸಂಪಾದನೆಯ ದೃಷ್ಟಿಯಿಂದಲೇ. +ಕಾಲ ಕುಲಗೆಟ್ಟು ಹೋಗಿರುವಾಗ ಎಷ್ಟು ಹಣ ಬಂದರೂ ಸಾಕಾಗದು ಎಂಬ ಮಾತು ಸತ್ಯ. ಹಣ ಸಂಪಾದನೆಯ ಸುಲಭೋಪಾಯ ಸೆಕ್ಸ್ ಫಿಲಂಸ್ ಎಂಬುದು ಗಾಂಧಿನಗರಿಗರಿಗೆ ಗೊತ್ತು. ಅದಕ್ಕೆ ಆರೋಗ್ಯ ಶಿಕ್ಷಣ ಎನ್ನುತ್ತಾರೆ. ಏಡ್ಸ್ ಪ್ರಚಾರ ಎನ್ನುತ್ತಾರೆ – ಬಿಚ್ಚಮ್ಮಗಳನ್ನು ತೆರೆಯಮೇಲೆ ತರುತ್ತಾರೆ. ಚಿತ್ರದ ಹೆಸರು ಯಾವುದೋ ಇರುತ್ತದೆ ಮಧ್ಯೆ ದಿಢೀರ್‍ ಎಂದು ದೇವರು ಪ್ರತ್ಯಕ್ಷವಾದಂತೆ ‘ಬ್ಲೂ ಫಿಲಂಸ್ ಬಿಟ್ಸ್’ ರಾರಾಜಿಸಿ-ಚಿತ್ರಮಂದಿರ ತುಂಬುವಂತೆ ಮಾಡುತ್ತದೆ. +ಪೋಲೀಸ್ ಇಲಾಖೆಯಾಗಲಿ, ಫಿಲಂ ಚೇಂಬರ್‍ಸ್ ಆಗಲಿ ನಿರ್ಮಾಪಕರ ಸಂಘವಾಗಲಿ ಈವರೆಗೆ ಇದಕ್ಕೊಂದು ಮೋಕ್ಷ ಕಂಡುಹಿಡಿಯಲು ಸಾಧ್ಯವೇ ಆಗಿಲ್ಲದಿರುವುದರಿಂದಲೇ ‘ಅಪ್ಸರ’ದಂಥ ಚಿತ್ರ ಗಾಂಧಿನಗರ ಸೆಂಟರ್‍’ಲ್ಲಿ ರಾಜಾರೋಷವಾಗಿ ಬರುತ್ತದೆ. +ಈ ಚಿತ್ರ ನೋಡಿ ಬಂದ ಮಿತ್ರರ ಕಥಾನಕದ ವಿವರ, ವಿಕೃತಕಾಮದ ಸಂಭೋಗದ ಕ್ರಿಯೆಯ ವಿವರ ಕೇಳಿದಾಗ ಇಂಥ ಅನಾಗರಿಕ ದೃಶ್ಯಗಳು ಹೇಗೆ ಸೆನ್ಸಾರಾದುವು ಎಂದು ಕೇಳುತ್ತಿರುವವರು ಬಹುಮಂದಿ. +ಮತದಾನದಲ್ಲಿ ತುಂಬ ಸೊಗಸಾಗಿ ಅಭಿನಯಿಸಿದ ಅವಿನಾಶ್ ಅಂಥವರು ‘ಅಪ್ಸರ’ದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿದುಬಂದಾಗ ಚಿತ್ರ ಸಹ್ಯವಿದ್ದೀತು ಎಂದೇ ಎನಿಸುತ್ತದೆ. +ಅವಿನಾಶ್ ಅಂಥ ಸಂಭಾವಿತ ಈ ಚಿತ್ರದಲ್ಲಿರುವರು ಎಂಬ ಕಾರಣಕ್ಕೆ ಬಹುಮಂದಿ ಹೋಗಿದ್ದರು. ಅನಂತರ ಚಿತ್ರ ನೋಡಿದ ಪ್ರೇಕ್ಷಕ ಮಿತ್ರರೊಬ್ಬರು ಅವರನ್ನು ಸಂಪರ್ಕಿಸಿದಾಗ “ಚಿತ್ರ ಹೀಗಿರುತ್ತದೆ ಎಂದು ತಿಳಿದಿರಲಿಲ್ಲ. ಸಾರಿ” ಎಂದು ತಮಗೆ ತಿಳಿಯದೆ ಆದ ಪ್ರಮಾದಕ್ಕೆ ಪರಿತಪಿಸಿದರಂತೆ. +ಇದು ಹೀಗೆ ಮುಂದುವರೆದಲ್ಲಿ ಇದಕ್ಕೆ ತಡೆ ಎಂಬುದೆಲ್ಲಿ? ಕನ್ನಡ, ಕಲೆ, ಸಂಸ್ಕೃತಿ ಎಂದು ಒಂದೆಡೆ ಉದ್ದುದ್ದನೆಯ ಭಾಷಣ, ರಾಜ್ಯೋತ್ಸವದ ಗದ್ದಲದಲ್ಲಿ ಎಲ್ಲ ಮುಳುಗಿದ್ದಾಗ ‘ಸಂದೀಲಿ ಸಮಾರಾಧನೆ’ ಎಂದು ಅಪ್ಸರದಂಥ ಚಿತ್ರ ಓಡುತ್ತಲೇ ಇರುತ್ತದೆ. +ಇದು ಹೀಗೆ ಮುಂದುವರೆದಲ್ಲಿ ಸದಭಿರುಚಿ ಎಂಬ ಪದವನ್ನೇ ಡಿಕ್ಷನರಿಯಿಂದ ಕಿತ್ತೊಗೆಯಬೇಕಾದೀತು. +ಒಬ್ಬರಲ್ಲ ಇಬ್ಬರಲ್ಲ ಎಷ್ಟೊಂದು ಮಂದಿ ಇದ್ದಾರೆ ನಿಮ್ಮ ನಿರ್ಮಾಪಕರ ಸಂಘದಲ್ಲಿ. ದಯಮಾಡಿ ಒಮ್ಮೆ ಯಾರಾದರೂ ಹೋಗಿ ಕಾಮಕೇಳಿಯ ವಿವಿಧ ಭಂಗಿಗಳನ್ನು ಕಾಣ್ತುಂಬ ನೋಡಿದ ಮೇಲಾದರೂ ಇಂಥ ಚಿತ್ರಗಳ ತಡೆಗೆ ಕಾರಣರಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಿ ಎಂದು ವಿನಂತಿಸಲೇ? +***** +(೯-೧೧-೨೦೦೧) +ಕೀಲಿಕರಣ: ಕಿಶೋರ್‍ ಚಂದ್ರ +ಪಾತ್ರಧಾರಿಗಳು: ಕೊರ್ಮ (ನಿರ್ದೇಶಕ), ಶೀಲಾ (ಚಿತ್ರ ನಟಿಯಾಗುವ ಕನಸು ಹೊತ್ತ ಲಲನೆ), ಕುಂಭಕೋಣಂ (ಚಿತ್ರ ನಿರ್ಮಾಪಕ), ಪೋಸ್ಟ್‌ಮ್ಯಾನ್. (ರಂಗ ಮಧ್ಯದಲ್ಲೊಂದು ದೊಡ್ಡ ಕೆಂಪು ಡಬ್ಬವಿದೆ. ಬಲಭಾಗದಲ್ಲಿ ಶೀಲಾ ಇದ್ದಾಳೆ. ಎಡಭಾಗದಲ್ಲಿ ಕೊರ್ಮ ಇರುವ) ಕೊರ್ಮ: […] +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […] +ಸಂದರ್ಶಕಿ : ಪ್ರೀತಿ ನಾಗರಾಜ್ ಸಮಯ: ಮಧ್ಯಾಹ್ನ ೨:೩೦ ಘಂಟೆಸ್ಥಳ: ಜಯನಗರಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_676.txt b/Kannada Sahitya/article_676.txt new file mode 100644 index 0000000000000000000000000000000000000000..ba762836a36adb51a95797aa315c9cc93d004bb6 --- /dev/null +++ b/Kannada Sahitya/article_676.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. ಏತನ್ಮಧ್ಯೆ ಅನಿವಾರ್ಯವಾಗಿ ನಾನು ಪ್ರಸ್ತಾಪಿಸಿದ ನನ್ನ ಬದುಕಿನ ಕೆಲವು ಘಟನೆಗಳು ಕೆಲವರನ್ನಾದರೂ ಖುಷಿಪಡಿಸಿತು. ಆ ದಿನ ಹಾಜರಿದ್ದ ಪತ್ರಕರ್ತ ಮಿತ್ರರಾದ ‘ಕರ್ಮವೀರ’ದ ಗೋಪಾಲವಾಜಪೇಯಿ ಮತ್ತು ಗಣೇಶ ಕಾಸರಗೋಡು ನನ್ನಿಂದ ಲೇಖನಗಳನ್ನು ಬರೆಸಬೇಕೆಂದು ಬೆನ್ನಹಿಂದೆ ಬಿದ್ದು, ನನ್ನನ್ನು ಗೋಳಾಡಿಸಿ, ಆಗಾಗ ಹೆದರಿಸಿ, ತಮ್ಮ ಎಡಬಿಡದ ‘ನಕ್ಷತ್ರಿಕ’ ಹಿಡಿತದಿಂದ ಬಿಡಿಸಿಕೊಳ್ಳಲಾಗದಂತೆ ಹಿಡಿದಿಟ್ಟರು. ನನ್ನ ಸೋಮಾರಿತನವನ್ನು ಒಂದಿಷ್ಟು ದೂರವಿಟ್ಟು ಬರೆಯಲು ಪ್ರಾರಂಭಿಸಿದೆ……ಆ ಮಿತ್ರದ್ವಯರು ಪತ್ರಿಕಾಪ್ರಪಂಚದ ಭೀಷ್ಮರೆನಿಸಿದ ಶ್ರೀ ಕೆ.ಶಾಮರಾಯರ ಭೇಟಿಮಾಡಿಸಿದರು. ಅವರು ತಾವು ಚಿತ್ರದುರ್ಗದಲ್ಲಿ ಕಳೆದ ಕೆಲವು ವರುಷಗಳ ಬಗ್ಗೆ ನೆನಪುಮಾಡಿಕೊಂಡರು; ನನ್ನ ಅಜ್ಜ ಮತ್ತು ಅಪ್ಪನೊಡನೆ ಅವರಿಗಿದ್ದ ನಿಕಟ ಸಂಬಂಧದಿಂದಾಗಿ ಒಂದೆರಡು ಸ್ವಾರಸ್ಯಕರ ಘಟನೆಗಳನ್ನೂ ಜ್ಞಾಪಿಸಿಕೊಂಡರು. “ಬರಿಯಪ್ಪ….ಕರ್ಮವೀರ’ದಲ್ಲಿ ಧಾರಾವಾಹಿಯಾಗಿ ಬರಲಿ” ಎಂದು ಹರಸಿದರು. ಹಾಗಾಗಿ ನನ್ನನೆನಪಿನಿಂದ ಆಯ್ದ ಕೆಲವು ವಿಷಯಗಳನ್ನು ಕುರಿತು ಬರೆದೆ. ಅದೇ “ಸೋಮಣ್ಣನ ‘ಸ್ಟಾಕ್’ನಿಂದ” ಎಂಬ ಶೀರ್ಷಿಕೆಯಲ್ಲಿ ಸುಮಾರು ಐವತ್ತು ಲೇಖನಗಳು ಪ್ರಕಟವಾಯಿತು. ಆ ಪತ್ರಕರ್ತ ಮಿತ್ರರಿಗೆ, ಹಿರಿಯರಾದ ಶ್ರೀಶಾಮರಾಯರಿಗೆ ಮತ್ತು ‘ಕರ್ಮವೀರ’ ಬಳಗದವರಿಗೆಲ್ಲಾ ನಾನು ಕೃತಜ್ಞ. +ಈ ಲೇಖನಗಳಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಕೌಟುಂಬಿಕ ಬದುಕಿನ ಕೆಲವು ಮೌಲ್ಯಗಳ ಬಗ್ಗೆ ಪ್ರಸ್ತಾಪವಿದೆ. ನನ್ನ ನೆನಪಿನ ಸುರುಳಿಯನ್ನು ಬಿಚ್ಚಿ, ಕೇಳಿದ್ದನ್ನು ಬಹಳ ಸ್ವಲ್ಪ, ಕಂಡಿದ್ದನ್ನು ಅಷ್ಟಿಷ್ಟು, ಆದರೆ ಬಹಳಷ್ಟು ಅನುಭವಿಸಿದ್ದನ್ನು ನನಗೆ ತೋರಿದಂತೆ ಬರೆದಿದ್ದೇನೆ. ತಪ್ಪೋ-ಒಪ್ಪೋ ಅನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅನುಭವಗಳನ್ನು ಹಾಗೆಹಗೇ ಹೇಳಿದ್ದೇನೆ. ನನ್ನ ಲೇಖನಗಳನ್ನು ಕರ್ನಾಟಕದಲ್ಲಷ್ಟೇ ಅಲ್ಲ, ದೂರದ ಬೊಂಬಾಯಿ, ಡೆಲ್ಲಿ, ಕಲ್ಕತ್ತಾಗಳಿಂದ ‘ಕರ್ಮವೀರ’ದ ವಾಚಕರೆಷ್ಟೋ ಮಂದಿ ಓದಿ ನನಗೆ ಪತ್ರಮುಖೇನ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಅವರಲ್ಲಿ ಹಿರಿಯರಿದ್ದಾರೆ, ಕಿರಿಯರಿದ್ದಾರೆ, ಕಾರ್ಮಿಕರಿದ್ದಾರೆ, ಬಂದೂಕು ಹಿಡಿದು ಗಡಿಕಾಯುವ ಸೈನಿಕರಿದ್ದಾರೆ, ಲೇಖಕರಿದ್ದಾರೆ, ಸ್ನೇಹಿತರಿದ್ದಾರೆ ಇವರೆಲ್ಲರ ಮೆಚ್ಚುಗೆ ಪ್ರೋತ್ಸಾಹಕ್ಕಾಗಿ ನಾನು ಋಣಿಯಷ್ಟೇ‌ಅಲ್ಲ, ಅದರಿಂದಾಗಿ ಮತ್ತಷ್ಟು ಬರೆಯುವ ಇಚ್ಚೆಯೂ ಆಗಿದೆ. ಒಟ್ಟಿನಲ್ಲಿ ಜನ ಓದಿ ಮೆಚ್ಚಿ ಖುಷಿಪಟ್ಟರೆ ಸಂತೋಷ… +ಲೇಖನಗಳನ್ನು ಓದಿ, ಅವೆಲ್ಲವನ್ನೂ ಪುಸ್ತಕರೂಪದಲ್ಲಿ ಪ್ರಕಟಿಸಲು ಸಂತೋಷದಿಂದ ಮುಂದಾದವರು ಶ್ರೀ ತಾ.ರಾ.ನಾಗರಾಜ್ ಅವರು. ಅವರಿಗೆ ನಾನು ಕೃತಜ್ಞ. ಹಾಗೆಯೇ ಅಂದವಾಗಿ ಮುದ್ರಿಸಿರುವ ಸಿ.ವಿ.ನಾಗರಾಜ್‌ರವರಿಗೂ ಕೃತಜ್ಞ. +ಇನ್ನು ನನ್ನ ಈ ಚೊಚ್ಚಲ ಕೃತಿಗೊಂದು ಮುನ್ನುಡಿ ಬೇಕೆನಿಸಿ, ನನ್ನ ಆತ್ಮೀಯಗೆಳೆಯ ಕವಿ-ವಿಮರ್ಶಕ-ಚಿಂತಕ ಡಾ||ಸುಮತೀಂದ್ರ ನಾಡಿಗರನ್ನು ಕೇಳಿಕೊಂಡೆ. ಕೆಲವುಸಾರಿ ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ, ಸ್ನೇಹಧರ್ಮ ದೊಡ್ಡದು ಎಂಬುದರಲ್ಲಿ ಬಲವಾದ ನಂಬಿಕೆಯಿದ್ದವ, ನಾಡಿಗ ನನ್ನನ್ನು ಬಯ್ದೂ ಹೊಗಳಿ, ನಿರ್ವ್ಯಾಜ ಪ್ರೀತಿಯಿಂದ ಪುಸ್ತಕಕ್ಕೆ ‘ಮುನ್ನುಡಿ’ ಬರೆದಿದ್ದಾರೆ. ಬರೆಯಲು ಮುಜುಗರವೆನಿಸಿದರೂ, ಅವರಿಗೆ ನನ್ನ“ಥ್ಯಾಂಕ್ಸ್”. +ಪತ್ರಕರ್ತರೂ, ಕತೆಗಾರರೂ ಹಾಗೂ ಮೊಟ್ಟಮೊದಲಿಗೆ ನಮ್ಮ ದೇಶದ ಹಡಗು ಕೈಗಾರಿಕೆ(ಶಿಪ್ಪಿಂಗ್ ಇಂದಸ್ಟ್ರಿ)ಬಗ್ಗೆ ಗ್ರಂಥ ಬರೆದಿರುವ ಹಿರಿಯರಾದ ಶ್ರೀ.ಟಿ.ಎಸ್.ಸಂಜೀವ್‌ರವರ ಪತ್ರಗಳಿಂದ ಆಯ್ದ ಕೆಲವು ಭಾಗಗಳನ್ನು ‘ಬೆನ್ನುಡಿ’ಗೆ ಉಪಯೋಗಿಸಿದೆ. ಅವರಿಗೆ ನನ್ನ ನಮನಗಳು. +ದಿನ ನಿತ್ಯ ಸ್ವಲ್ಪವಾದರೂ ಬರೆಯಲೇಬೇಕಾದ ಅನಿವಾರ್ಯತೆಯಿಂದ ನಾನು ಸಿಡಿಮಿಡಿಗೊಂದರೂ ಬೇಸರಿಸದೆ ನನ್ನೊಡನೆ ನೆರವಾದ ನನ್ನ ಹೆಂಡತಿ ಹಾಗೂ ಕುಟುಂಬ ವರ್ಗದವರಿಗೆ ನಾನು ಆಭಾರಿ. +-ಎಚ್.ಜಿ.ಸೋಮಶೇಖರ ರಾವ್ +೮೦“ಶ್ರೀನಿವಾಸ”.೨೩ನೇ ಮುಖ್ಯರಸ್ತೆ +ಶ್ರೀನಗರ. ಬೆಂಗಳೂರು-೫೬೦ ೦೫೦ +“I have seen flowers come in stony places +And Kindness done by man with ugly faces…. +ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು […] +ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […] +೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಬೀದರ. ೨೭ ಮತ್ತು ೨೮ ಜನವರಿ ೨೦೦೬ ನುಡಿ ನಮನ : ಪಾತಾಳದಿಂದತ್ತ ಮಾತ ಬಲ್ಲವರಿಲ್ಲ ಗಗನದಿಂದ ಮೇಲೆ ಅನುಭಾವ ತಾನಿಲ್ಲ ಒಳಗಣ ಜ್ಯೋತಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_677.txt b/Kannada Sahitya/article_677.txt new file mode 100644 index 0000000000000000000000000000000000000000..0d45af6a732a3bd544eaf1971cde418bfd90350c --- /dev/null +++ b/Kannada Sahitya/article_677.txt @@ -0,0 +1,538 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆರಂಭ…. +ಪಾದರಿಗಳ ವೃದ್ಧಾಶ್ರಮ ಊರ ಹೊರಗೆ ಅನ್ನುವ ಹಾಗಿತ್ತು. ವಿಸ್ತಾರವಾದ ಪ್ರದೇಶ. ಅಂಚಿನಲ್ಲಿ ವೃದ್ಧಾಶ್ರಮ ಕಟ್ಟಡ ಅದರ ಮಗ್ಗಲಲ್ಲಿ ಒಂದು ಚರ್ಚ. ಮುಂದೆ ವಿಶಾಲವಾದ ಹೂದೋಟ. ಅದರ ನಡುವೆ ಕಾಲುದಾರಿಗಳು, ಮರಗಳು, ಕಲ್ಲಿನ ಆಸನಗಳು. ಬೆಳಗಿನ ಹೊತ್ತು ಸಂಜೆಯ ಹೊತ್ತು ಕೆಲ ಪಾದರಿಗಳು ಇಲ್ಲಿ ತಿರುಗಾಡುತ್ತ ಗಿಡ ಬಳ್ಳಿಗಳ ಆರೈಕೆ ಮಾಡುತ್ತ, ಕೆಲವರು ಅಲ್ಲಲ್ಲಿ ಕುಳಿತು ಮಾತನಾಡುತ್ತ ಇರುವುದು ಕಾಣಿಸುತ್ತಿತ್ತು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಇಗರ್ಜಿಯ ಗಂಟೆ ಸಣ್ಣಗೆ ಸದ್ದು ಮಾಡುತ್ತಿತ್ತು. ಈ ಇಗರ್ಜಿಗೆ ಹೊರಗಿನವರು ಯಾರೂ ಹೋಗುತ್ತಿರಲಿಲ್ಲ. ಇದು ಅಲ್ಲಿರುವ ಪಾದರಿಗಳಿಗಾಗಿ, ಅಲ್ಲಿಯ ಕೆಲಸಗಾರರಿಗಾಗಿ ಕಟ್ಟಲ್ಪಟ್ಟ ಇಗರ್ಜಿ. ಇಲ್ಲಿ ಪೂಜೆ ಮಾಡುವವರು ಕೂಡ ಆಶ್ರಮದಲ್ಲಿರುವ ಪಾದರಿಗಳೆ. +ಇಲ್ಲಿ ತಾರುಣ್ಯದಿಂದ ತುಂಬಿದಂತಹ ಯಾವುದೇ ಚಟುವಟಿಕೆ, ಉತ್ಸಾಹ, ಹುಮ್ಮಸ್ಸು, ಕೇಕೆ, ನಗೆ ಕೇಳಿ ಬರುತ್ತಿರಲಿಲ್ಲ. ಇಲ್ಲಿ ಎಲ್ಲವೂ ನಿಧಾನವಾಗಿ ಸಾಗುತ್ತಿತ್ತು. ಮಾತು, ನಡಿಗೆ, ಪೂಜೆ ಕೊನೆಗೆ ಊಟ ಕೂಡ. ಮುದಿ ಹಾವೊಂದು ಮೈ ಎಳೆದುಕೊಂಡು ನಿಧಾನವಾಗಿ ತೆವಳುವಂತೆ ಇಲ್ಲಿ ಕಾಲವೇ, ತನ್ನ ಜೀವಂತಿಕೆಯನ್ನು ಕಳೆದುಕೊಂಡಂತೆ ಕಾಣುತ್ತಿತ್ತು. +ನಾನು ದಿನನಿತ್ಯ ಬೆಳಿಗ್ಗೆ ಸುಮಾರು ಎರಡು ಗಂಟೆಗಳನ್ನು ಇಲ್ಲಿ ಕಳೆಯುತ್ತಿರುವುದರಿಂದ ಈ ವೃದ್ಧಾಶ್ರಮದ ಬಗ್ಗೆ ಇಷ್ಟೆಲ್ಲ ಹೇಳುತ್ತಿದ್ದೇನೆ. ನನಗೆ ಇಲ್ಲಿ ಪಾದರಿಗಳಿಗೆ ಪತ್ರಿಕೆ ಓದಿ ಹೇಳುವ ಕೆಲಸ. ಮೊದಲ ಕಾಲಂ ನಿಂದ ಹಿಡಿದು ಪತ್ರಿಕೆಯ ಕೊನೆಯ ಕಾಲಂನ ಕೊನೆಯ ಸಾಲಿನವರೆಗೆ ನಾನು ಓದಬೇಕು. ಹೀಗೆ ಓದಿ ಓದಿ ಪಾದರಿಗಳ ಅಭಿರುಚಿ ನನಗೆ ತಿಳಿದು ಹೋಗಿದೆ. ಅವರಿಗೆ ರಾಜಕೀಯ, ಅಪಘಾತಗಳು, ಭೂಕಂಪ, ಅಗ್ನಿ ಅನಾಹುತ, ಅನಾವೃಷ್ಟಿ, ಅತಿವೃಷ್ಟಿಗಳು ಬೇಕು. ಕೌಟುಂಬಿಕ ಕಲಹಗಳು, ಹೆಣ್ಣು ಗಂಡಿನ ಸಂಬಂಧಗಳು, ಅಪಹರಣ, ಅತ್ಯಾಚಾರ ಇತ್ಯಾದಿಗಳ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಮೊದಲ ಸಾಲು ಓದುತ್ತಿರುವಂತೆಯೇ ಅವರಲ್ಲಿ ಕೆಲವರು ’ಶ್ಯಿ’ ಎಂದೋ, ’ನೋನೊನೊ’ ಎಂದೋ, ಮುಂದೆ ಓದು ಮರಿ ಎಂದೋ ತಮ್ಮ ಅಸಮ್ಮತಿಯನ್ನು ಸೂಚಿಸುವುದರಿಂದ ಅವರಿಗೆ ಬೇಡದ ಕಾಲಂ ಗಳನ್ನು ನಾನು ಓದಲು ಕೂಡ ಹೋಗುವುದಿಲ್ಲ. +ಈ ಪಾದರಿಗಳಲ್ಲಿ ಎಂಬತ್ತೈದರ ಪಾದರಿ ಗೋನಸಾಲ್ವಿಸ್ ಇದ್ದಾರೆ. ಅರವತೈದರ ಪಾದರಿ ಡಿಯಾಗೋ ಇದ್ದಾರೆ. ಗೋನಸಾಲ್ವಿಸ ಹಣ್ಣು ಹಣ್ಣಾಗಿದ್ದಾರೆ. ಮೊದಲೇ ಪೋರ್ಚುಗಲ್ ನವರು. ಎತ್ತರದ ಆಳು, ಕೆಂಪಗೆ, ಕೆನ್ನೆಗಳೆಲ್ಲಾ ಜೋತು ಬಿದ್ದು, ಅದೂ ಒಂದು ಲಕ್ಷಣವೆಂಬಂತೆ ನೋಡಲು ಸ್ಫುರದ್ರೂಪಿಗಳಾಗಿ ಇದ್ದಾರೆ.ಇವರ ಹಾಗೆಯೆ ಕಣ್ಣು ಕಾಣಿಸದ ಪಾದರಿ ಫ಼್ರಾನ್ಸಿಸ್. ಕಾಲು ಇಲ್ಲದ ಪಾದರಿ ಡಿಸೋಝಾ, ಕಿವಿ ಕೇಳಿಸದ ಪಾದರಿ ಮ್ಯಾನುಯೆಲ, ಪಾದರಿ ಸಂತಿಯಾಗೋ, ಪಾದರಿ ಲೋಪಿಸ್, ಪಾದರಿ ಡಿಕುವ ಹೀಗೆ ಹಲವಾರು ಪಾದರಿಗಳು ಇಲ್ಲಿದ್ದಾರೆ. +ಎಪ್ಪತ್ತು ವರ್ಷಗಳವರೆಗೆ ವಿವಿಧ ಇಗರ್ಜಿಗಳಲ್ಲಿ ಸೇವೆ ಮಾಡಿ ಇನ್ನು ಪೂಜೆ ಇತ್ಯಾದಿ ಮಾಡಲು ಆಗುವುದಿಲ್ಲ ಎಂದಾಗ ಪಾದರಿಗಳನ್ನು ತಂದು ಇಲ್ಲಿ ಇರಿಸಲಾಗುತ್ತದೆ. ತಾರುಣ್ಯದಲ್ಲಿ ಸದಾ ಚಟುವಟಿಕೆಯ ಕೇಂದ್ರ ಬಿಂದುಗಳಾಗಿದ್ದವರು. +ಪೂಜೆ, ಪ್ರಾರ್ಥನೆ ಎಂದು ಸದಾ ಚುರುಕಾಗಿ ಕೆಲಸ ಮಾಡುತ್ತಿದ್ದವರು. ಒಂದೊಂದು ಊರಿನ ಒಂದೊಂದು ಇಗರ್ಜಿಯ ಆಡಳಿತವನ್ನು ನಡೆಸುತ್ತ ಅಲ್ಲಿಯ ಜನ ದೇವರು, ಧರ್ಮವನ್ನು ಬಿಟ್ಟು ಹೋಗದಂತೆ ನೋಡಿಕೋಳ್ಳುತ್ತ ಮರಣ, ನಾಮಕರಣ, ಪಾಪ ನಿವೇದನೆ, ದಿವ್ಯ ಪ್ರಸಾದ ಹಂಚಿಕೆ, ಪೂಜೆ ಎಂದೆಲ್ಲ ಜನರ ಧಾರ್ಮಿಕ ಬೇಡಿಕೆಗಳನ್ನು ಸಲ್ಲಿಸುತ್ತ ಇದ್ದವರು, ಇಲ್ಲಿ ತುಸು ಅಸಹಾಯಕರಾಗಿ, ದುರ್ಬಲರಾಗಿ ಕಾಲ ಕಳೆಯುತ್ತಿದ್ದರು. +ಇವರ ಊಟ, ವಸತಿಯ ವ್ಯವಸ್ಥೆಯನ್ನು ಬಿಷಪ್ ಗುರುಗಳು ಮಾಡುತ್ತಾರೆ. ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಓರ್ವ ವೈದ್ಯರು ಗಮನ ಹರಿಸುತ್ತಾರೆ. ಕಣ್ಣು ಕಾಣದವರಿಗೆ, ಕುಳಿತು ಓದಲಾಗದವರಿಗೆ ನಾನು ನಿತ್ಯ ಬಂದು ಪತ್ರಿಕೆ ಓದಿ ಹೇಳುತ್ತೇನೆ. ತೀರಾ ಕೈಲಾಗದವರನ್ನು ನೋಡಿಕೊಳ್ಳಲು ಜನ ಇದ್ದಾರೆ. ಏನೆಂದರೂ ವೃದ್ಧಾಪ್ಯ ವೃದ್ದಾಪ್ಯವೇ. ನೆನಪು ಸರಿ ಇರುವುದಿಲ್ಲ. ಕೈಕಾಲುಗಳಲ್ಲಿ ನಡುಕ, ದಿನಕ್ಕೊಂದು ಕಾಯಿಲೆ. ಎದ್ದರೆ ಕೂತರೆ ಸೊಂಟ ಹಿಡಿದುಕೊಳ್ಳುವ ಹಿಂಸೆ. ಹಾಗೆಯೇ ತಮಗೆ ಯಾರೂ ಇಲ್ಲ ಎಂಬ ವೇದನೆ. ತೀರಾ ಹತ್ತಿರದವರು ಇರುವ ವಯಸ್ಸು ಇದಲ್ಲ. ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಎಂದೋ ಮಾಯವಾಗಿದ್ದಾರೆ. ಇದ್ದರೂ ಅವರವರ ತಾಪತ್ರಯ ಅವರಿಗೆ. ಅಣ್ಣ ತಮ್ಮ ಅಕ್ಕ ತಂಗಿಯರ ಮಕ್ಕಳಿದ್ದಾರೆ. ಅವರು ಅಷ್ಟಾಗಿ ಇವರ ಬಗ್ಗೆ ಗಮನ ಹರಿಸುವುದಿಲ್ಲ. ಯಾವಾಗಲೋ ಒಮ್ಮೆ ಬಂದು ಹಲೋ ಹಾಯ್ ಎಂದು ಹೇಳಿ ಹೋಗುತ್ತಾರೆ. ಆದರೂ ಇವರು ಬದುಕಿದ್ದಾರೆ. ಕೆಲವರ ಮನಸ್ಸಿನಲ್ಲಿ ಕೆಲ ನೆನಪುಗಳು ಹಸಿರಾಗಿವೆ. ಕೆಲವರು ಈ ನೆನಪುಗಳನ್ನು ಕೂಡ ಮರೆತಿದ್ದಾರೆ. +ಇವರಿಗೆ ಪತ್ರಿಕೆ ಓದಿ ಹೇಳಲು ಹೋಗುವ ನಾನು ಈ ವೃದ್ಧ ಪಾದರಿಗಳ ನೋವು ಸಂಕಟಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಒಂದಿಬ್ಬರಲ್ಲಿ ಇನ್ನೂ ಹುರುಪಿದೆ. ಉತ್ಸಾಹವಿದೆ. ತಾವು ಹಿಂದೆ ಕೆಲಸ ಮಾಡಿದ ಊರುಗಳ ಪರಿಚಯವಿದೆ. ಅಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಹೇಳುತ್ತಾರೆ. +ಹೀಗೆ ತಾವು ಮಾಡಿದ ಕೆಲಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವವರು ಪಾದರಿ ಗೋನಸಾಲ್ವಿಸ್. ಶಿವಸಾಗರ ಎಂಬ ಊರಿನಲ್ಲಿ ತಾನು ಇಗರ್ಜಿ ಕಟ್ಟಿದ್ದು, ಕ್ರೀಸುವರನ್ನು ದೇವರ ಹತ್ತಿರ ತಂದದ್ದು, ಹೀಗೆ ಅವರು ಹಲವಾರು ವಿಷಯಗಳನ್ನು ಹೇಳುತ್ತಾರೆ. ಪತ್ರಿಕೆ ಓದಿ ಮುಗಿಸಿ ಒಂದು ಅರ್ಧ ಗಂಟೆ ನಾನಲ್ಲಿ ಕುಳಿತು ಈ ಪಾದರಿಗಳ ಜತೆ ಮಾತನಾಡುವುದು ಒಂದು ರೂಢಿ. ಈ ಸಮಯದಲ್ಲಿ ಹಲವು ವಿಷಯಗಳು ಹೊರ ಬೀಳುತ್ತವೆ. ಪಾದರಿ ಗೋನಸ್ವಾಲಿಸ್ ಶಿವಸಾಗರದ ವಿಷಯವನ್ನೂ ಮತ್ತೂ ವಿಸ್ತಾರವಾಗಿ ಹೇಳಲು ಒಂದು ಕಾರಣವಿತ್ತು. ಅಂದು ಪತ್ರಿಕೆ ಓದುತ್ತಿರುವಾಗ ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಗೆ ಐವತ್ತು ವರ್ಷಗಳ ಸಂಭ್ರಮ ಎಂಬ ಸುದ್ದಿ ಓದಿದೆ. ಇಂತಹ ಸುದ್ದಿಗಳನ್ನು ಎಲ್ಲ ಪಾದರಿಗಳೂ ಕುತೂಹಲ ಆಸಕ್ತಿಯಿಂದ ಕೇಳುತ್ತಾರೆ. +’ಏನು? ಏನು? ಮತ್ತೊಮ್ಮೆ ಓದು’. +ಎಂದರು ಪಾದರಿ ಡಿ.ಯಾಗೋ. ನಾನು ಓದಿದೆ, ಶಿವಸಾಗರದ ಇಗರ್ಜಿಗೆ ಐವತ್ತು ವರ್ಷಗಳಾಗಲಿದ್ದು ಊರ ಜನ ದೊಡ್ಡ ಪ್ರಮಾಣದ ಒಂದು ಜುಬಿಲಿಯನ್ನು ಏರ್ಪಡಿಸುವ ಬಗ್ಗೆ ಸಭೆ ನಡೆಸಿದ್ದರು. ಈ ಸುದ್ದಿಯನ್ನು ನಾನು ಓದಿ ಮುಗಿಸುವ ಮೊದಲೇ ಪಾದರಿ ಗೋನಸಾಲ್ವಿಸ್ ಕುಳಿತ ಕುರ್ಚಿಯಲ್ಲಿಯೇ ಪುಟಿದರು. +’ಓ! ನಾನು ಕಟ್ಟಿಸಿದ ಇಗರ್ಜಿಗೆ ಐವತ್ತು ವರುಷ ಆಯಿತಲ್ಲವೇ?’ +ಎಂದು ಸಂಭ್ರಮಿಸಿದರು. ಅವರ ಕೆನ್ನೆಗಳು ಮತ್ತೂ ಕೆಂಪಾದವು. ಕಣ್ಣುಗಳು ಪ್ರಜ್ವಲಿಸಿದವು. ಮರಳಿ ತಾರುಣ್ಯವೇ ಬಂತೇನೋ ಅನ್ನುವ ಹಾಗೆ ನನ್ನ ಕೈಯಿಂದ ಪತ್ರಿಕೆ ಕಿತ್ತುಕೊಂಡರು. ಮೂಗಿನ ಮೇಲಿನ ದಪ್ಪ ಕನ್ನಡಕದ ಗಾಜುಗಳ ಮೂಲಕ ಪತ್ರಿಕೆಯ ಮೇಲೆ ಕಣ್ಣಾಡಿಸಿದರು. ಪತ್ರಿಕೆ ಹಿಡಿದ ಅವರ ಕೈ ಕಂಪಿಸುತ್ತಿತ್ತು. ತುಟಿಗಳು ಅದರುತಿದ್ದವು. ಆದರೂ ಪತ್ರಿಕೆಯಲ್ಲಿಯ ತಲೆಬರಹ ಅವರ ಉತ್ಸಾಹವನ್ನು ಇಮ್ಮಡಿ ಗೊಳಿಸಿತು. +’…ಓ! ನನಗೆ ರೋಮಾಂಚನ ಉಂಟಾಗುತ್ತಿದೆ’ ಎಂದರವರು. +ಉಳಿದ ಪಾದರಿಗಳು ಅದೆನ್ನೊಂದು ಸುದ್ದಿಯೆಂದಷ್ಟೇ ತೆಗೆದುಕೊಂಡಾಗ ಪಾದರಿ ಗೋನಸಾಲ್ವಿಸ್ ಮಾತ್ರ ಈ ಸುದ್ದಿಯಿಂದ ಪುಳಕಿತರಾದರು. +ಮತ್ತೊಮ್ಮೆ ಶಿವಸಾಗರದಲ್ಲಿ ತಾವು ಇಗರ್ಜಿಯನ್ನು ಕಟ್ಟಲು ಮಾಡಿದ ಪ್ರಯತ್ನಗಳ ಬಗ್ಗೆ ಹೇಳತೊಡಗಿದಾಗ ಉಳಿದ ಪಾದರಿಗಳು ಅಷ್ಟಾಗಿ ಅವರ ಮಾತಿನ ಬಗ್ಗೆ ಆಸಕ್ತಿ ತೋರಲಿಲ್ಲ. ಈ ವಿಷಯ ಕೂಡ ಪಾದರಿ ಗೋನಸ್ವಾಲಿಸರ ಗಮನಕ್ಕೆ ಬಂದಂತೆ ಅವರು ಮಾತು ನಿಲ್ಲಿಸಿದರು. +ನಾನು ಪತ್ರಿಕೆ ಓದುವ ನನ್ನ ಕೆಲಸ ಮುಂದುವರಿಸಿದೆ. +* +* +* +ಮಾರನೆ ದಿನ ನಾನು ಮತ್ತೆ ಆಶ್ರಮಕ್ಕೆ ಹೋದಾಗ ಗೋನಸಾಲ್ವಿಸರು ಮತ್ತೂ ಹುರುಪಿನಲ್ಲಿದ್ದರು. +’ಏನು ಫ಼ಾದರ್ ಸಮಾಚಾರ ? ’ ಎಂದು ಕೇಳಿದೆ. +“ಈವತ್ತು ನಿನ್ನ ನ್ಯೂಸ್ ಕೇಳುವ ಸ್ಥಿತೀಲಿ ನಾನಿಲ್ಲ…ನೀನು ನ್ಯೂಸ್ ಓದಿಯಾದ ಮೇಲೆ ನನ್ನ ರೂಮಿಗೆ ಬಾ“ಎಂದರು. +ಹೇಳಿದಂತೆಯೇ ಆವತ್ತು ಅವರು ಪತ್ರಿಕೆ ಕೇಳಲು ಬರಲಿಲ್ಲ. ನಾನು ನನ್ನ ಕೆಲಸ ಮುಗಿಸಿ ಅವರ ಕೊಠಡಿಗೆ ಹೋದಾಗ ಪಾದರಿ ಗೋನಸಾಲ್ವಿಸ್ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತಿದ್ದರು. +’ಸನ್…ನೀನು ನಾಲ್ಕು ದಿನ ಬಿಡುವು ಮಾಡಿಕೋಬೇಕು..’ಎಂದು ಮಾತಿಗೆ ತೊಡಗಿದರು. +’ಬಿಡುವು! ಯಾಕೆ ಫ಼ಾದರ್?” +“ನೀನು ನನ್ನ ಜತೆ ಶಿವಸಾಗರಕ್ಕೆ ಬರಬೇಕು. ಅಲ್ಲಿಂದ ನನಗೆ ವಿಶೇಷ ಆಹ್ವಾನ ಬಂದಿದೆ…ನಾನು ಕಾರಿನ ವ್ಯವಸ್ಥೆ ಮಾಡಿದ್ಡೇನೆ. ಜೊತೇಲಿ ಯಾರಾದರೂ ಬೇಕಲ್ಲ. ಮೊದಲ ಸಾರಿ ನಾನು ಅಲ್ಲಿಗೆ ಹೋದದ್ದು ಎತ್ತಿನ ಗಾಡೀಲಿ..ಆಗ ನನ್ನ ಜತೆ ಬೋನಾ ಅಂತ ನನ್ನ ಅಡಿಗೆಯಾಳು ಇದ್ದ…ಈಗ ಕಾರು..ಜೋತೇಲಿ ನೀನು..” +“ಆದರೆ ನಾನು ಅಡಿಗೆ ಆಳಲ್ಲ..” +“…ಹಾಗಂತ ನಾನು ಹೇಳಲಿಲ್ಲ..ನೀನು ಬಂದರೆ ನನಗೆ ಅನುಕೂಲ..ಮುದುಕ ನೋಡು..” +“ಇಲ್ಲಿ ಪೇಪರ ಓದುವವನು ಯಾರು ಫ಼ಾದರ್?” +“ನಿನ್ನ ಸ್ನೇಹಿತ ಇದಾನಲ್ಲ ಜಾನ್..ಅವನಿಗೆ ಹೇಳು“ನಾನು ಏನಾದರೂ ಅನಾನುಕೂಲವಾದಾಗ ಜಾನ್ ಗೆ ಹೇಳುವುದಿತ್ತು. ಅವನು ಬಂದು ನನ್ನ ಕೆಲಸ ಮಾಡುತ್ತಿದ್ದ ಈ ವಿಷಯ ಎಲ್ಲರಿಗೂ ಗೊತ್ತಿತ್ತು. +“ನಾನು ಕೇಳತೀನಿ ಫ಼ಾದರ್“ಎಂದೆ. +“ಹೇಳೋದು ಕೇಳೋದು ಬೇಡ..ಸೋಮವಾರ ನೀನು ಸಿದ್ಧನಾಗಿ ಬಾ…ಬುಧುವಾರ ಸಂತ ಜೋಸೆಫ಼ರ ಹಬ್ಬ….ಅಂದೇ ನನಗೂ ಸನ್ಮಾನವಂತೆ…ಒಂದೆರಡು ದಿನ ಇದ್ದು ಬರೋಣ..“ಎಂದರವರು ಎಲ್ಲ ನಿರ್ಧರಿಸಿದಂತೆ. +ನಾನು ಕೂಡ ಅವರ ಮಾತನ್ನು ಒಪ್ಪಿಕೊಂಡವನಂತೆ ತಲೆದೂಗಿದೆ. ಅಲ್ಲಿದ್ದ ಎಲ್ಲ ಪಾದರಿಗಳ ಜತೆ ನಾನು ಆತ್ಮೀಯತೆ ಬೆಳೆಸಿಕೊಂಡಿದ್ದೆ. ಹೀಗೆ ಕೆಲ ಪಾದರಿಗಳು ವೈದ್ಯ ಪರೀಕ್ಷೆಗೆ, ಶಸ್ತ್ರ ಚಿಕಿತ್ಸೆಗೆ ಬೇರೆ ಕಾರಣಗಳಿಗೆ ಹೊರಹೋಗುವಾಗ ನಾನೂ ಅವರ ಜೊತೆ ಹೋಗುವುದಿತ್ತು. ಈಗ ನಾಲ್ಕು ದಿನ ಪಾದರಿ ಗೋನಸಾಲ್ವಿಸರ ಸಂಗಡ ಹೋಗಿ ಬರುವುದು ಅಂದುಕೊಂಡೆ. ’ಏನು ಬರುತಿಯ ತಾನೆ?’ +ಆಗಲಿ ಫ಼ಾದರ್ ಎಂದೆ. +ಆ ದಿನ ಕೂಡ ಬಂದಿತು. ಹತ್ತು ಹನ್ನೆರಡು ಗಂಟೆಗಳ ಪ್ರಯಾಣ. ಬೆಳಿಗ್ಗೆ ಆರು ಗಂಟೆಗೆ ಶಿವಸಾಗರ. ಪಾದರಿ ಗೋನಸಾಲ್ವಿಸ್ ತವರಿಗೆ ಹೊರಟ ಹೆಣ್ಣು ಮಗಳಂತೆ ಸಂಭ್ರಮಿಸುತ್ತಿದ್ದರು. +“ಹಿಂದಿನವರು ಎಷ್ಟು ಜನ ಇದ್ದಾರೋ..ಆದರೂ ನನ್ನ ನೆನಪು ಮಾಡಿಕೊಂಡಿದ್ದಾರೆ…ಊರು ಆವತ್ತು ಸಣ್ಣದಿತ್ತು “ಮೂವತ್ತು ನಲವತ್ತು ಕುಟುಂಬಗಳಿದ್ದವು..ಈಗ ಊರು ಬೆಳೆದಿರಬಹುದು..” +ಅವರು ಮಾತನಾಡುತ್ತಲೇ ಇದ್ದರು. +ನಾನು ಕಾರಿನ ಹಿಂಬದಿಯ ಸೀಟಿಗೆ ದಿಂಬು ಇರಿಸಿದೆ. ನೀರು, ಆಹಾರ, ಹಣ್ಣು ಎಂದು ಬೇಕಾದುದನ್ನು ತೆಗೆದುಕೊಂಡೆ. ಕಾರು ಸುಸ್ಥಿತಿಯಲ್ಲಿ ಇದೆ ಅಲ್ಲವೆ? ಶಿವಸಾಗರದ ದಾರಿ ಗೊತ್ತಲ್ಲವೆ ಎಂದೆಲ್ಲ ಚಾಲಕನಿಗೆ ಕೇಳಿದೆ. +ಪಾದರಿ ಗೋನಸಾಲ್ವಿಸ್ ಕೈಯಲ್ಲಿ ಕೋಲು ಹಿಡಿದು ಕೊಂಡು ಬಂದವರು- +“ನಾನು ರೆಡಿ“ಎಂದರು. +ಉಳಿದ ಪಾದರಿಗಳು ಬಂದು ಅವರಿಗೆ ಶುಭ ಹಾರೈಸಿದರು. +’ಜೋಪಾನ ಜೋಪಾನ’ ಎಂದರು. +“ನನಗೆ ಅಂದಿನ ಯೌವನ ತಿರುಗಿ ಬಂದಿದೆ ನೋಡಿ“ಎಂದು ನಕ್ಕರು ಪಾದರಿ ಗೋನಸಾಲ್ವಿಸ್. +ಕಾರು ಹೊರಟಾಗ ನಾನು ಮುಂದಿನ ಸೀಟಿನಲ್ಲಿ ಡ್ರೈವರನ ಮಗ್ಗುಲಲ್ಲಿ ಕುಳಿತಿದ್ದೆ. ಪಾದರಿ ಗೋನಸ್ವಾಲಿಸ್ ಹಿಂದೆ. ಕಾರು ಊರಿನಿಂದ ಹೊರಬಿದ್ದ ತಕ್ಷಣ ಪಾದರಿ ಗೋನಸಾಲ್ವಿಸ್- +’ಸನ್’ ಎಂದರು. +“ಫ಼ಾದರ್..” +“ನನಗೆ ಹಿಂದಿನದೆಲ್ಲ ನೆನಪಿಗೆ ಬರತಾ ಇದೆ“ಎಂದು ನೆನಪಿನ ಆಳಕ್ಕೆ ಇಳಿಯತೊಡಗಿದರು. +೧ +ಈ ಬಾರಿ ಫ಼ಾದರ್ ಗೋನಸ್ವಾಲಿಸ್ ಕೊಂಚ ಧೀರ್ಘ ಪ್ರಯಾಣವನ್ನೇ ಕೈಕೊಳ್ಳಬೇಕಾಯಿತು. ಪ್ರಾರಂಭದಲ್ಲಿ ಅವರು ಪಣಜಿಯ ಬಾಲ ಏಸುವಿನ ಇಗರ್ಜಿಯಲ್ಲಿ ಹತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. ಅವು ಅವರ ಪಾದರಿಯಾದ ನಂತರದ ಮೊದಲ ವರ್ಷಗಳು. ಮೊದಲ ಐದು, ಆರು ವರ್ಷ ಪಾದರಿ ಫ಼ಿಕಾಟ್ ಅವರಿಗೆ ಸಹಾಯಕರಾಗಿ ಇವರು ದುಡಿದರು. ಅವರ ಮರಣಾನಂತರ ಇಗರ್ಜಿಯ ಏಕೈಕ ಪಾದರಿಯಾದರು ಗೋನಸ್ವಾಲಿಸ್. ಇಗರ್ಜಿಯ ಕ್ರೀಸುವರು ಅವರ ಧರ್ಮ ಸಂಪ್ರದಾಯವನ್ನು ತೊರೆದು ಸೂಜಿ ಮೊನೆಯಷ್ಟು ಕೂಡ ದೂರ ಸರಿಯದಂತೆ ನೋಡಿ ಕೊಂಡರು. ಅಲ್ಲಿಂದ ಅವರನ್ನು ಕಾರವಾರಕ್ಕೆ ವರ್ಗ ಮಾಡಲಾಯಿತು. ನಂತರ ಹೊನ್ನಾವರದ ಸಂತ ಸಲ್ವಾದೋರ ಇಗರ್ಜಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ಅವರೀಗ ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಗೆ ಹೊರಟಿದ್ದಾರೆ. +ಹೊನ್ನವರದಿಂದ ಗೇರುಸೊಪ್ಪೆಯವರೆಗೆ ದೋಣಿ ಪ್ರಯಾಣ. ಶರಾವತಿ ನದಿಯಲ್ಲಿ ಪ್ರಯಾಣ ಮಾಡುವುದೆಂದರೆ ತುಂಬಾ ರೋಚಕವಾದ ವಿಷಯ. ಹಿಂದೆ ತುಂಬಾ ಜನ ವಿದೇಶಿ ಪ್ರಯಾಣಿಕರು ಈ ದಾರಿಯಲ್ಲಿ ಪ್ರಯಾಣ ಮಾಡಿದ್ದುಂಟು. ನದಿಯ ಎರಡೂ ದಂಡೆಯ ಹಸಿರು ಕಾಡು. ತೋಟ, ಹಲಸು, ಮಾವು, ಗೇರು ಮರಗಳು. ಎದುರಾಗುವ ದೋಣಿಗಳು ಮನಸ್ಸಿಗೆ ಮುದ ನೀಡುತ್ತವೆ. ಕೈಯಲ್ಲಿರುವ ಜಪಸರದ ಮಣಿಗಳನ್ನು ಉರುಳಿಸುತ್ತ ಅವರು ಜಪ ಮಾಡಿದರು. ಆಗಾಗ್ಗೆ ಹೊರಗೆ ದೃಷ್ಟಿ ಹಾಯಿಸಿದರು. ಹಿಂದೆಯೇ ಮುಂದೆ ತಾವು ಕೈಗೆತ್ತಿಕೊಳ್ಳಲಿರುವ ಕೆಲಸದ ಬಗ್ಗೆ ವಿಚಾರ ಮಾಡಿದರು. +ಈವರೆಗೆ ದೊಡ್ಡ ಪ್ರಮಾಣದ ಇಗರ್ಜಿಗಳಲ್ಲಿ ಕೆಲಸ ಮಾಡಿದೆ. ಅಧಿಕ ಸಂಖ್ಯೆಯ ಜನ ದೇವರು, ಧರ್ಮ, ಸಂಪ್ರದಾಯಗಳ ಅರಿವಿದ್ದವರೇ ಆಗಿದ್ದರು. ಈ ಅರಿವು ಅವರ ಮನಸ್ಸಿನಿಂದ ಅಳಿಸಿಹೋಗದ ಹಾಗೆ ನೋಡಿಕೊಂಡೆ. ಆದರೆ ಈಗ ತಾವು ಹೋಗುತ್ತಿರುವುದು ಮಾತ್ರ ತೀರ ಭಿನ್ನವಾದ ಒಂದು ಸ್ಥಳಕ್ಕೆ ಎಂದು ಕೇಳಿದೆ. ಕ್ರೀಸುವರ ಸುಮಾರು ಇಪ್ಪತ್ತು ಮನೆಗಳು ಅಲ್ಲಿವೆಯಂತೆ. ಅವರೇ ಕಟ್ಟಿಸಿದ ಸಣ್ಣದಾದ ಒಂದು ಕೊಪೆಲ ಕೂಡ ಅಲ್ಲಿದೆ ಎಂದು ಕೇಳಿದೆ. ಐದಾರು ವರ್ಷಗಳಿಂದ ಇಗರ್ಜಿ, ಪೂಜೆಯಿಂದ ದೂರವಿರುವ ಈ ಜನರಿಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಈ ಜನರು ತಮ್ಮ ಧರ್ಮಕ್ಕೆ ಎಷ್ಟು ಅಂಟಿಕೊಂಡಿದ್ದಾರೆ ಎಂಬುದನ್ನು ಅಲ್ಲಿ ಹೋಗಿಯೇ ನೋಡಬೇಕು. ಈ ಕಾರ್ಯ ಮಾಡಲೆಂದೇ ತನ್ನನ್ನು ಅಲ್ಲಿಗೆ ವರ್ಗ ಮಾಡಿದ್ದಾರೆ. ಹೊನ್ನಾವರದಿಂದ ದೂರ. ಗೋವಾದಿಂದ ಮತ್ತೂ ದೂರ, ಘಟ್ಟದ ಮೇಲೆ ಈ ಊರಿದೆ. ಕ್ರೀಸನ ಸೇವೆ ಮಾಡಲು ಪೋರ್ತುಗಾಲಿನಿಂದ ಬಂದವ ತಾನು. ಹುಟ್ಟಿದ ಊರು ದೇಶವನ್ನೇ ಬಿಟ್ಟು ಬಂದ ತನಗೆ ಈ ಊರೇನು ಆ ಊರೇನು? ಒಪ್ಪಿಸಿರುವ ಕೆಲಸವನ್ನಂತೂ ಚೆನ್ನಾಗಿಯೇ ಮಾಡಬೇಕು. ಎಂದೆಲ್ಲ ವಿಚಾರ ಮಾಡುತ್ತ ಅವರು ಕುಳಿತರು. ದೋಣಿ ಮುಂದೆ ಸಾಗಿತ್ತು. ಅಲ್ಲಲ್ಲಿ ನಿಂತು ಅದು ಗುರಿಯತ್ತ ಧಾವಿಸುತ್ತಿತ್ತು. +ಅವರ ಜತೆ ಅವರ ಕುಜ್ನೇರ ಬೋನಾ ಕೂಡ ಇದ್ದ. ಗೋವಾದಲ್ಲಿರುವಾಗಲೇ ತನ್ನಲ್ಲಿ ಬಂದು ಸೇರಿಕೊಂಡ ಹುಡುಗ. ತೆಂಗಿನ ಮರದಿಂದ ಹೆಂಡ ಇಳಿಸುತ್ತಿದ್ದ ಸಂಬೇಲ ಮರದ ಮೇಲಿನಿಂದ ಬಿದ್ದು ಸತ್ತಾಗ ಅವನ ಹೆಂಡತಿ, ಮಗ ಅನಾಥರಾದರು. ಕೆಲವು ದಿನಗಳಲ್ಲಿ ಆ ಹೆಂಗಸು ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು ಬಿಟ್ಟು ಒಂದು ಹಡಗು ಖಲಾಸಿಯ ಜೊತೆ ಓಡಿ ಹೋದಳು. ಸಂಬೇಲನ ಮಗನನ್ನು ತಂದ ಯಾರೋ ಪಾದರಿ ಗೋನಸ್ವಾಲಿಸ್ ರ ಬಳಿ ಬಿಟ್ಟರು. ಹತ್ತು ವರ್ಷದ ಈ ಹುಡುಗ ಸೊಂಟಕ್ಕೊಂದು ಕಷ್ಟಿ ಕಟ್ಟಿಕೊಂಡು ತಿರುಗಾಡುತ್ತಿದ್ದ. ಕೂದಲು ಜಡೆಗಟ್ಟಿತ್ತು. ಅಲ್ಲಿ ಇಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದರಿಂದ ಈ ಗಾಯದ ಕಲೆಗಳು ಮೈಮೇಲೆ ಉಳಿದಿದ್ದವು. ನಿತ್ಯ ಸ್ನಾನ ಮಾಡುವ ಅಭ್ಯಾಸವಿಲ್ಲದ್ದರಿಂದ ನಿಂತಲ್ಲಿ ತಲೆಯನ್ನು, ತೊಡೆ, ಹೊಟ್ಟೆಯನ್ನು ಕೆರೆದುಕೊಳ್ಳುತ್ತಿದ್ದ. +ನೇಂದರ ಜಾತಿಯ ಈ ಹುಡುಗನನ್ನು ದೇವರೇ ತನ್ನ ಬಳಿ ಕಳುಹಿಸಿದ್ದಾನೆ ಅಂದು ಕೊಂಡರು ಪಾದರಿ ಗೋನಸ್ವಾಲಿಸ್. ತಮ್ಮ ಬಂಗಲೆಯಲ್ಲಿ ಈತನನ್ನು ಇರಿಸಿಕೊಳ್ಳಬೇಕೆಂದರೆ ಇವನನ್ನು ಸುಧಾರಿಸಬೇಕು. ನಂತರ ಇವನಿಗೆ ಕ್ರೈಸ್ತ ದೀಕ್ಷೆ ಕೊಡುವ ಬಗ್ಗೆ ವಿಚಾರ ಮಾಡಬೇಕು ಎಂದವರು ನೀರ್ಧರಿಸಿದರು. ಪೇಟೆಯಿಂದ ಇವನಿಗೆ ಹೊಂದುವ ಉಡುಗೆ ತಂದರು. ತಾವೇ ನಿಂತು ಅವನಿಗೆ ಸ್ನಾನ ಮಾಡಿಸಿದರು. ತಾವು ಊಟ ಮಾಡುವುದನ್ನೇ ಅವನಿಗೂ ನೀಡಿದರು. ಅವನ ಭಾಷೆ ಕೊಂಕಣಿಯೇ, ಆದರೆ ಆ ಭಾಷೆಯನ್ನು ತೀರಾ ಗ್ರಾಮೀಣ ರೀತಿಯಲ್ಲಿ ಆತ ಮಾತನಾಡುತ್ತಿದ್ದ. ಅವನ ರೀತಿ ನೀತಿ ನಡಾವಳಿಕೆಗಳಲ್ಲಿ ಕೂಡ ಗ್ರಾಮೀಣ ಒರಟುತನ ತುಂಬಿಕೊಂಡಿತ್ತು. ಪಾದರಿ ಗೋನಸ್ವಾಲಿಸ್ ಅವನನ್ನು ತಿದ್ದುವ ಕಾರ್ಯ ಕೈಕೊಂಡರು. +ಪ್ರಾರ್ಥನೆ ಮಾಡುವಾಗ ಇವರ ಬಳಿ ಮೊಣಕಾಲೂರ ತೊಡಗಿದ. ನಿತ್ಯ ಇಗರ್ಜಿಗೆ ಬಂದು ದೇವರ ಪೀಠದ ಮುಂದೆ ಮೊಣಕಾಲೂರುತ್ತಿದ್ದ. ಊರ ಜನ ಇವನನ್ನು ಪಾದರಿ ಸಾಕಿಕೊಂಡ ಹುಡುಗ ಎಂದು ಪ್ರೀತಿಯಿಂದ ನೋಡ ತೊಡಗಿದರು. +ಈತ ಶಿಲುಬೆಯ ವಂದನೆ ಕಲಿತ. ಹಣೆ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು- +“ಪವಿತ್ರ ಶಿಲುಬೆಯ ಗುರುತಿನಿಂದ, ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಿ, ನಮ್ಮ ತಂದೆಯೇ. ತಂದೆಯ ಮಗನ ಸ್ವಿರಿತು ಸಾಂತುವಿನ ಹೆಸರಿನಲ್ಲಿ ಆಮೇನ”. +ಎಂದು ಹೇಳಲು ಅವನಿಗೆ ತುಸು ಕಷ್ಟವಾಯಿತು. ಶಿಲುಬೆಯ ಗುರುತನ್ನು ತೆಗೆಯುವ ಈ ವಿಧಾನವನ್ನು ಆತ ಮರೆಯುತ್ತಲೂ ಇದ್ದ. ಹಣೆಯ ಮೇಲೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು ನಂತರ ಬೆರಳುಗಳನ್ನು ಹಣೆ ಭುಜಗಳಿಗೆ ಮುಟ್ಟಿಸಿಕೊಳ್ಳುವಲ್ಲಿ ಗೊಂದಲಕ್ಕೆ ಬೀಳುತ್ತಿದ್ದ. ಪಾದರಿ ಗೋನಸ್ವಾಲಿಸ್ ತಾಳ್ಮೆ ಕಳೆದುಕೊಳ್ಳುತ್ತಿದ್ದರು. ಹುಡುಗನಿಗೆ ಮತ್ತೆ ಮತ್ತೆ ಶಿಲುಬೆಯ ಗುರುತು ತೆಗೆಯುವುದನ್ನು ಕಲಿಸುತ್ತಿದ್ದರು. +ಗೋನಸ್ವಾಲಿಸರಿಗೊಂದು ಆಸೆಯಿತ್ತು. ಕ್ರೀಸನಿಗಾಗಿ ಕೆಲವೊಂದು ಆತ್ಮಗಳನ್ನು ಸಂಪಾದಿಸಬೇಕು ಎಂಬುದೇ ಈ ಆಸೆ. ಪಾದರಿಯಾಗಿ ತಮಗೆ ಸಾಕಷ್ಟು ಕೆಲಸ ಕಾರ್ಯಗಳು ಇರುತ್ತಿದ್ದವು. ಒಂದು ಇಗರ್ಜಿ ಅಲ್ಲಿಯ ಜನರ ಆತ್ಮದ ಪೂರೈಕೆಗಳನ್ನು ನೆರವೇರಿಸುವುದು ಎಂದೆಲ್ಲ ಅವರು ಕೆಲಸ ಮಡಬೇಕಾಗುತ್ತಿತ್ತು. ಹೊರಗಿನಿಂದ ಯಾರನ್ನೇ ಆಗಲಿ ಕ್ರಿಸ್ತನ ಅನುಯಾಯಿಯನ್ನಾಗಿ ಮಾಡಲು ಅವಕಾಶ ಸಿಗುತ್ತಿರಲಿಲ್ಲ ತಾವು ಪಾದರಿಯಾದ ಐದು ವರ್ಷಗಳ ನಂತರ ಈ ಹುಡುಗ ದೊರಕಿದ್ದ. ಅಕ್ರೈಸ್ತನಾದ ಅವನನ್ನು ಕ್ರೈಸ್ತನನ್ನಾಗಿ ಮಾಡಬೇಕು. ಅವನ ನಂಬಿಕೆ ಸಂಸ್ಕಾರಗಳನ್ನು ತಿದ್ದಬೇಕು. ಅವನ ಬದುಕಿಗೊಂದು ಮೆರಗು ತಂದು ಕೊಡಬೇಕೆಂದು ಅವರು ನಿರ್ಧರಿಸಿದರು. +ಮೊದಲು ಅವನಿಗೆ ಜ್ಞಾನ ಸ್ನಾನ ನೀಡಬೇಕು. ಇದು ಕೆಲ ನಿಮಿಷಗಳ ಕೆಲಸ. ನಲವತ್ತು ದಿನಗಳ ಮಗುವಿಗೆ ಸಾಮಾನ್ಯವಾಗಿ ಜ್ಞಾನ ಸ್ನಾನ ಮಾಡಿಸಿ ಹೆಸರನ್ನು ಇಡುವುದು ಪದ್ಧತಿ. ಮಗು ಬೆಳೆದ ನಂತರ ಅದರ ತಂದೆ ತಾಯಿಗಳು ದೇವ ಪಿತ ದೇವ ಮಾತೆಯರು ಆ ಮಗುವಿಗೆ ಬೇಕಾದ ಎಲ್ಲ ಕ್ರೈಸ್ತ ಸಂಸ್ಕಾರವನ್ನೂ ನೀಡುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಈ ಹುಡುಗ ಬೆಳೆದು ದೊಡ್ಡವನಾಗಿದ್ದಾನೆ. ಇವನಿಗೆ ಎಲ್ಲವನ್ನು ಕಲಿಸಿಯೇ ಜ್ಞಾನಸ್ನಾನ ಮಾಡಿಸಬೇಕು. ಏಕೆಂದರೆ ಜ್ಞಾನಸ್ನಾನ ಪಡೆಯುವುದರ ಮೂಲಕ ಆತ ಕ್ರಿಸ್ತನ ಪವಿತ್ರ ಸಭೆಯನ್ನು ಪ್ರವೇಶಿಸಲಿದ್ದಾನೆ. ಜನ್ಮ ಪಾಪವನ್ನು, ಕರ್ಮಪಾಪ ವನ್ನು ಪರಿಹರಿಸಿ, ವ್ಯಕ್ತಿಗೆ ದೈವ ಜೀವನವನ್ನು ಕೊಟ್ಟು, ಅವನನ್ನು ಸರ್ವೇಶ್ವರನಿಗೂ ಕ್ರಿಸ್ತ ಸಭೆಗೂ ಮಗನನ್ನಾಗಿ ಮಾಡುವ ಈ ದಿವ್ಯ ಸಂಸ್ಕಾರವನ್ನು ಈ ನೇಂದರ ಹುಡುಗನಿಗೆ ನೀಡಲು ಪಾದರಿ ಗೋನಸಾಲ್ವಿಸ್ ಶ್ರಮಿಸಿದರು. +ಶಿಲುಬೆಯ ವಂದನೆಯ ಜತೆ ಪರಲೋಕ ಮಂತ್ರ, ನಮೋರಾಣಿ ಮಂತ್ರ, ಸಾಯಂಕಾಲದ ಜಪ ಇತ್ಯಾದಿಗಳನ್ನು ಕಲಿಸಿದರು. ಒಂದು ಶುಭ ದಿನ ಅವನ ನೆತ್ತಿಯನ್ನು ನೀರಿನಿಂದ ತೊಳೆದು ಅವನಿಗೆ ಬರ್ನಾಡೆಟ್ ಎಂದು ಹೆಸರಿಟ್ಟರು. ಈ ಹುಡುಗ ತಮಗೆ ಸಿಕ್ಕಿದ ದಿನ ಆ ಸಂತ ಹುಟ್ಟಿದ ದಿನವಾಗಿದ್ದರಿಂದ ಆ ಹೆಸರೇ ಸೂಕ್ತವೆನಿಸಿತು. +ಬರ್ನಾಡೆಟ್ ಬಹಳ ಬೇಗನೆ ಬದಲಾದ. ಜ್ಞಾನ ಸ್ನಾನದ ಹಿಂದೆಯೇ ಉಳಿದ ಜಪ ಮಂತ್ರಗಳನ್ನು ಅವನಿಗೆ ಕಲಿಸಿ ಉಳಿದ ಸಂಸ್ಕಾರಗಳನ್ನು ನೀಡಲಾಯಿತು. ಬರ್ನಾಡೆಟ್ ಜನರ ಬಾಯಲ್ಲಿ ಬೋನಾ ಆದ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದವುಗಳನ್ನು ಪಡೆಯಲು ಅರ್ಹನಾದ. +ಅವನ ನೇಂದರ ಕೊಂಕಣಿ ಕೂಡ ಕ್ರಮೇಣ ಸುಧಾರಿಸತೊಡಗಿತು. +ಬೋನಾ ಪಾದರಿಯ ಎಲ್ಲ ಕೆಲಸಗಳನ್ನು, ಇಗರ್ಜಿಯ ಕೆಲಸಗಳನ್ನು ಮಾಡಿಕೊಂಡು ಹೋಗ ತೊಡಗಿದ. ಅವನಲ್ಲಿ ಅಪರಿಮಿತವಾದ ದೈವ ಭಕ್ತಿ ಇತ್ತು. ನಿತ್ಯ ಮೂರು ಬಾರಿ ಜಪ ಮಾಡುತ್ತಿದ್ದ. ಊಟಕ್ಕೆ ಕುಳಿತಾಗ, ಮಲಗಿಕೊಳ್ಳುವಾಗ ದೇವರನ್ನು ಸ್ತುತಿಸುತ್ತಿದ್ದ. ಸಂಜೆ ತಪ್ಪದೆ ಜಪಸರ ಪ್ರಾರ್ಥನೆ ಮಾಡುತ್ತಿದ್ದ. ಪಾದರಿಗಳಿಗೆ ವಿಧೇಯನಾಗಿದ್ದ. ಅಡಿಗೆ ಮಾಡುವುದರಿಂದ ಹಿಡಿದು ಉಳಿದೆಲ್ಲ ಕೆಲಸಗಳೂ ಇವನಿಗೆ ಬರುತ್ತಿದ್ದವು. +ಗೋವಾ ಬಿಟ್ಟು ಹೊರಟಾಗ ಗೋನಸಾಲ್ವಿಸ್- +“ಬೋನಾ…ನೀನು ಬೇಕಾದರೆ ಇಲ್ಲೇ ಇರು..“ಎಂದಿದ್ದರು. ಈ ಮಾತಿಗೆ ಬೋನಾ- +“ಇಲ್ಲ ಫ಼ಾದರ್-ನಾನು ನಿಮ್ಮ ಜೊತೆ ಬರತೇನೆ“ಎಂದಿದ್ದ. +ಆತ ಕಾರವಾರಕ್ಕೆ ಬಂದ. ಅಲ್ಲಿಂದ ಹೊನ್ನಾವರಕ್ಕೆ. ಈಗ ಘಟ್ಟ ಹತ್ತಿ ಶಿವಸಾಗರಕ್ಕೂ ಹೊರಟಿದ್ದಾನೆ. +ಹೆಂಡ ಇಳಿಸುತ್ತಲೋ, ಮತ್ತೇನು ಮಾಡುತ್ತಲೋ ಅಂಧಕಾರದಲ್ಲಿ ಉಳಿದು ಬಿಡುತ್ತಿದ್ದ. ಬೋನಾ ಕ್ರಿಸ್ತನ ಕೃಪೆಗೆ ಒಳಗಾಗಿ ಮನುಷ್ಯನಾಗಿದ್ದ. ಇದಕ್ಕೆ ತಾನು ಕಾರಣನಾದೆ ಎಂದು ಪಾದರಿ ಸಂತಸಪಟ್ಟರು. ಹೆಮ್ಮೆ ಪಟ್ಟರು. ಈಗ ಆತ ತಮ್ಮ ಜತೆ ಬರುತ್ತಿರುವುದು ಕೂಡ ಒಂದು ಧೈರ್ಯದ, ಸಮಾಧಾನದ ವಿಷಯವಾಗಿತ್ತು. ತಾವು ಸದಾ ದೇವರ ಕೆಲಸ ಮಾಡಿಕೊಂಡು ಇದ್ದರೆ ಸಾಕು ಬೋನ ಉಳಿದೆಲ್ಲವನ್ನೂ ನೋಡಿಕೊಳ್ಳುತ್ತಾನೆ. ಅಷ್ಟು ತರಬೇತಿ ಅವನಿಗೆ ಆಗಿದೆ. +* +* +* +ಗೋನ್ಸಾಲ್ವಿಸ್ ಕುಳಿತ ದೋಣಿ ಗೇರುಸೊಪ್ಪೆ ಎಂಬಲ್ಲಿ ನಿಂತು ಜನ ಇಳಿದರು. ಇವರೂ ಜನದ ಜತೆ ಇಳಿದು ದಂಡೆಗೆ ಬಂದರು. ಬೋನಾ ಒಂದಿಬ್ಬರು ಆಳುಗಳನ್ನು ಕರೆದುಕೊಂಡು ಇವರ ಸಾಮಾನು, ಕುರ್ಚಿ, ಮಂಚಗಳನ್ನು ಇಳಿಸಿಕೊಂಡ. +ಅವನೇ ಹಳ್ಳಿಗೆ ಹೋಗಿ ಒಂದು ಎತ್ತಿನ ಗಾಡಿಯನ್ನು ಗೊತ್ತು ಮಾಡಿಕೊಂಡು ಬಂದ. ಘಟ್ಟದ ಮೇಲಿನ ಗಾಡಿಯಂತೆ. ಬೆಲ್ಲವನ್ನೋ ಮತ್ತೇನನ್ನೋ ತುಂಬಿಕೊಂಡು ಬಂದದ್ದು ಹಿಂದಿರುಗಿ ಹೋಗುವ ಸಿದ್ಧತೆಯಲ್ಲಿತ್ತು. ಬೋನ ಅದರಲ್ಲಿ ಮೊದಲು ಪಾದರಿಗಳಿಗೆ ಕುಳಿತುಕೊಳ್ಳಲು ಒಂದು ಜಾಗ ಮಾಡಿದ. ನಂತರ ಅವರ ಸಾಮಾನು ಏರಿಸಿದ. ತನಗಾಗಿ ಕುಳಿತುಕೊಳ್ಳಲು ತುದಿಯಲ್ಲಿ ಗೇಣಗಲ ಜಾಗ ಇರಿಸಿಕೊಂಡ. ಗಾಡಿ ಅಲ್ಲಿಂದ ಹೊರಟಿತು. +ಇನ್ನೇನು ಘಟ್ಟ ಆರಂಭವಾಯಿತು ಅನ್ನುವಾಗ ಗಾಡಿ ಒಂದೆಡೆಯಲ್ಲಿ ನಿಂತು ಕೊಂಡಿತು. ರಸ್ತೆ ಬದಿಯಲ್ಲಿ ಒಂದು ಸೋಗೆ ಹೊದಿಸಿದ ಗುಡಿ. ಒಳಗೆ ಕುಂಕುಮ ಬಳಿದ ಆಳೆತ್ತರದ ಕಲ್ಲು. +“ಮಾಸ್ತಿಗೆ ಕೈ ಮುಗಿದು ಬತ್ತೆ“ಎಂದು ಗಾಡಿಯವ ಇಳಿದು ಹೋದ. ಅಲ್ಲಿಯೇ ಮೂಕಿ ಊರಿನಿಂತ ಬೇರೆ ಕೆಲ ಗಾಡಿಗಳು ಕೂಡ ಹೊರಡುವ ಏರ್ಪಾಟಿನಲ್ಲಿದ್ದವು. +ಅದು ಕಾಡಿನ ದಾರಿ. ಕಾಡು ಕೋಣ, ಹುಲಿ, ಆನೆಗಳು ಎದುರಾಗುತ್ತವಂತೆ, ದರೋಡೆಕೋರರೂ ಇರಬಹುದು. ಮಾಸ್ತಿಗೆ ಕೈ ಮುಗಿದು ಒಂದು ಕಾಯಿ ಒಡೆದು ಪ್ರಯಾಣ ಮಾಡಿದರೆ ಯಾವುದೇ ಕಂಟಕವಿಲ್ಲ ಎಂದ ತಿರುಗಿ ಬಂದು ಗಾಡಿ ಏರಿದವ. ಉಳಿದ ಗಾಡಿಗಳ ಜತೆ ಅವನೂ ಸೇರಿಕೊಂಡ. ಏಳೆಂಟು ಗಾಡಿಗಳು ಸದ್ದು ಮಾಡುತ್ತ, ಎತ್ತುಗಳ ಕತ್ತಿನ ಗಂಟೆ ಗೆಜ್ಜೆಗಳು ನಾದ ಹೊರಡಿಸುತ್ತಿರಲು, ಸಾಲಿನ ಮುಂದಿನ ಗಾಡಿಯವನ ಕೂಗಿಗೆ ಸಾಲಿನ ಕೊನೆಯಲ್ಲಿರುವಾತ ಉತ್ತರ ನೀಡುತ್ತಿರಲು ಗಾಡಿಗಳ ಪ್ರಯಾಣ ಸಾಗಿತು. +ಗಾಡಿಗಳ ಓಡಾಟದಿಂದಾಗಿ ಕೊರಕಲಾದ ರಸ್ತೆ. ಮೇಲೆ ಆಕಾಶ ಕಾಣದ ಹಾಗೆ ಬಾಗಿ ನಿಂತ ಮರಗಳು. ನಡು ನಡುವೆ ಎದುರಾಗುವ ಹಳ್ಳಗಳು. ದಟ್ಟವಾದ ಕಾಡು, ಯಾವಾಗಲೋ ಒಂದು ಬರಿ ಕಣ್ಣಿಗೆ ಬಿದ್ದ ಹಳ್ಳಿ ಗುಡಿಸಲುಗಳು. ಇವುಗಳ ನಡುವೆ ತಾವು ಅನಾಥರಾದಂತೆ ಭಾಸವಾಯಿತು ಗೋನಸ್ವಾಲಿಸರಿಗೆ. ಅವರಿಗೆ ಪೋರ್ತುಗೀಸ್ ಬಿಟ್ಟರೆ ಬರುತಿದ್ದ ಮತ್ತೊಂದು ಭಾಷೆ ಕೊಂಕಣಿ. ಅವರ ಉದ್ದ ನಿಲುವಂಗಿ, ಕುತ್ತಿಗೆಯಲ್ಲಿಯ ಶಿಲುಬೆ, ಸೊಂಟದಲ್ಲಿಯ ಜಪಸರ, ಗಡ್ಡ ಅವರನ್ನು ಇತರ ಜನರಿಂದ ದೂರ ಮಾಡಿತ್ತು. ಜನ ತಮ್ಮನ್ನು ಬೆರಗಾಗಿ ನೋಡುವುದು ಕೂಡ ಅವರಿಗೆ ಕಸಿವಿಸಿಯನ್ನುಂಟು ಮಾಡಿತು. ಆದರೂ ಅವರು ಜಪಸರ ಹಿಡಿದು ಜಪ ಮಾಡಿದರು. ಬೈಬಲ್ ಓದಿದರು. +ತೀರ ಬೇಸರವಾದಾಗ ಗಾಡಿಯಿಂದ ಇಳಿದು ಕಾಲು ಬೀಸಿಕೊಂಡು ಅಷ್ಟು ದೂರ ನಡೆದರು. +ಆದರೂ ನಿಧಾನವಾಗಿ ಸಾಗಿತು ಅವರ ಪ್ರಯಾಣ. ಬೇರೆ ಗಾಡಿಗಳಲ್ಲಿ ಇರುವವರು, ಎದುರಾದ ಹಳ್ಳಿ ಜನ ತಮ್ಮನ್ನು ವಿಚಿತ್ರವಾಗಿ ಕಂಡಾಗ, ಪಾದರಿಯನ್ನೇ ಈ ಜನ ನೋಡಿರಲಿಕ್ಕಿಲ್ಲವೆ ಎಂದು ಅಚ್ಚರಿಪಟ್ಟರು. +ಈ ಕೆಲ ಮೈಲಿಗಳ ಅಂತರದಲ್ಲಿ ಅವರು ಯಾವುದೆ ಒಂದು ಇಗರ್ಜಿಯನ್ನು ಕಾಣಲಿಲ್ಲ. ರಸ್ತೆ ಪಕ್ಕದಲ್ಲಿ ಯಾವುದೇ ಶಿಲುಬೆ ಅವರಿಗೆ ಎದುರಾಗಲಿಲ್ಲ. ಯಾವನೇ ಓರ್ವ ಕ್ರೈಸ್ತ ಅವರ ಬಳಿ ಬಂದು ದೇವರ ಆಶಿರ್ವಾದಕ್ಕಾಗಿ ಕೈ ಜೋಡಿಸಿರಲಿಲ್ಲ. ಏನು ತಾನು ಕ್ರೈಸ್ತರೇ ಇಲ್ಲದ , ಕ್ರಿಸ್ತನ ಕೃಪೆಗೆ ಒಳಗಾಗದ ಪ್ರದೇಶಕ್ಕೆ ಬಂದಿದ್ದೇನೆಯೇ ಎಂದವರು ಬೆರಗಾದರು. +ಗೋವಾ ಹೊನ್ನಾವರ ಕಾರವಾರಗಳಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಅಲ್ಲಿಯ ಜನ ಬಹಳ ವರ್ಷಗಳಿಂದ ಪಾದರಿಯನ್ನು ಬಲ್ಲವರಾಗಿದ್ದರು. ಪಾದರಿಗಳನ್ನು ಕಂಡರೆ ಭಯಭಕ್ತಿ ಅವರಲ್ಲಿ ಉಕ್ಕುತ್ತಿತ್ತು. ಅಲ್ಲಿ ಹೆಜ್ಜೆಗೊಂದು ಶಿಲುಬೆ. ದಾರಿಗೊಂದು ಇಗರ್ಜಿ ಎದುರಾಗುತ್ತದೆ. ಆದರೆ ಇಲ್ಲಿ? ಕ್ರಿಸ್ತ ಇಲ್ಲಿಯವರೆಗೆ ಬಂದೇ ಇಲ್ಲ! ಅವನ ಪರಿಚಯ ಇಲ್ಲಿಯ ಜನರಿಗೆ ಇಲ್ಲ. +ಇಂತಹ ಅಕ್ರೈಸ್ತ ಪ್ರದೇಶದಲ್ಲಿ ಇರುವ ಕೆಲವೇ ಕೆಲ ಜನ ಕೂಡ ಕ್ರೈಸ್ತನನ್ನು ಕ್ರಮೇಣ ಮರೆಯಬಹುದಲ್ಲವೇ? ಕ್ರೈಸ್ತ ನಂಬಿಕೆ ಪದ್ಧತಿಗಳನ್ನು ರೂಢಿಸಿಕೊಂಡವರು, ತಕ್ಕ ವಾತಾವರಣವಿಲ್ಲವೆಂದರೇ ಇವುಗಳಿಂದ ನುಣುಚಿಕೊಂಡು ಹೊರ ಬರಬಹುದಲ್ಲವೇ? +ತಾನೀಗ ಹೋಗುತ್ತಿರುವುದು ಕೂಡ ಈ ಉದ್ದೇಶಕ್ಕಾಗಿಯೇ. ಶಿವಸಾಗರದ ಕ್ರೀಸುವರು ಕ್ರಿಸ್ತನ ಕೃಪಾಶಿರ್ವಾದಗಳಿಂದ ಹೊರ ಹೋಗದಂತೆ ನೋಡಿಕೊಳ್ಳಲು ತಾನು ಈ ಕಷ್ಟಕರ ಪ್ರಯಾಣವನ್ನು ಕೈಗೆತ್ತಿಕೊಂಡಿದ್ದೇನೆ. ತನ್ನ ಬದುಕನ್ನೇ ಕ್ರಿಸ್ತನ ಸೇವೆಗೆ ಮೀಸಲಾಗಿಟ್ಟ ತಾನು ಈ ಬಗೆಯ ಕೆಲಸಗಳನ್ನು ಮಾಡಬೇಕೆಂದೇ ಅಲ್ಲವೇ ಪಾದರಿಯಾಗಿದ್ದು ? +ತಟ್ಟನೆ ಅವರಿಗೆ ತಮ್ಮ ಯೌವ್ವನದ ದಿನಗಳ ನೆನಪಾಗುತ್ತದೆ. +ಶ್ರೀಮಂತ ಕುಟುಂಬದಿಂದ ಬಂದ ಗೋನಸ್ವಾಲಿಸ್ ಪಾದರಿಯಾಗುತ್ತಾರೆಂದು ಅವರ ಕುಟುಂಬದ ಯಾರೂ ನಿರೀಕ್ಷಿಸಿರಲಿಲ್ಲ. ಹತ್ತು ಹನ್ನೆರಡನೇ ವಯಸ್ಸಿಗೇ ಏಸು ಕ್ರಿಸ್ತನ ಭೋದನೆ ಬದುಕಿನಿಂದ ಪ್ರಭಾವಿತರಾದ ಇವರು ಜನರನ್ನು ಕ್ರಿಸ್ತನತ್ತ ಸೆಳೆಯುವ ಉದ್ದೇಶ ಮಾತ್ರವಲ್ಲದೆ, ತನ್ನ ಬದುಕನ್ನು ಕ್ರಿಸ್ತನಿಗಾಗಿ ಮೀಸಲಿಡುವ ಉದ್ದೇಶದಿಂದಲೂ ಪಾದರಿಯಾಗಲು ಪಣ ತೊಟ್ಟಿದ್ದರು. +ಆರೇಳು ವರ್ಷಗಳ ಕಠಿಣ ಶಿಕ್ಷಣ ದೊರೆಯಿತು. ಪಾದರಿ ಪಟ್ಟ ಕೂಡ ಆಯಿತು. ಹೊರ ದೇಶಗಳಿಗೆ ಹೋಗಿ ಯಾರು ಕ್ರಿಸ್ತನ ಸೇವೆ ಮಾಡುತ್ತೀರಿ ಎಂದಾಗ ಗೋನಸಾಲ್ವಿಸ್ ಕೈ ಎತ್ತಿದರು. ಇವರ ತಂದೆ ತಾಯಿ ದೇವ ಪಿತ ದೇವ ಮಾತೆಯರು ಇತರೆ ಬಂಧುಗಳು ಅವರ ತೀರ್ಮಾನವನ್ನು ಬೆಂಬಲಿಸಲಿಲ್ಲ. ಹೊರ ದೇಶವೆಂದರೆ, ಅಲ್ಲಿಯ ವಾತಾವರಣ, ಆಹಾರ, ಪದ್ಧತಿ ಬೇರೆಯಾಗಿರುತ್ತದೆ, ಬೇಡ, ನಿನ್ನ ಸೇವೆ ಏನಿದೆ ಅದನ್ನು ಇಲ್ಲಿಯೇ ಮಾಡು ಎಂದರು. +ಆದರೆ ಗೋನಸಾಲ್ವಿಸ್ ಅದನ್ನು ಒಪ್ಪಲಿಲ್ಲ. +ಕ್ರಿಸ್ತ ಶಿಲುಬೆ ಹೊತ್ತು ಮಾನವ ಕೋಟಿಯ ಪಾಪ ಪರಿಹಾರಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ. ಅವನು ಪಟ್ಟ ಹಿಂಸೆ ಅವಮಾನಗಳ ಮುಂದೆ ಬೇರೆಲ್ಲವೂ ಗೌಣ. ತಾನು ಹೊರದೇಶಕ್ಕೆ ಅವನ ಕೆಲಸ ಮಾಡಲು ಹೋಗುವುದೇ ಸೈ ಎಂದರು ಗೋನಸಾಲ್ವಿಸ್. +ಈ ಉದ್ದೇಶದಿಂದಲೇ ಒಂದು ತಂಡ ಸಿಲೋನ, ಥೈಲ್ಯಾಂಡ್, ಆಫ಼್ರಿಕಾ, ಭಾರತಗಳಿಗೆ ಹೊರಟಿತ್ತು. ಭಾರತಕ್ಕೆ ಬಂದವರಲ್ಲಿ ಪಾದರಿ ಗೋನಸಾಲ್ವಿಸ್ ಓರ್ವರಾದರು. +ಸಾಂದಿಯಾಗೋ ಸೆಮಿನರಿಯಲ್ಲಿ ಹೊರದೇಶಗಳಿಗೆ ಹೊರಟ ಪಾದರಿಗಳನ್ನು ಬೀಳ್ಕೊಡುತ್ತ ವಿಕಾರ್ ಜನರಲ್ ಹೇಳಿದ ಮಾತುಗಳನ್ನು ಮರೆಯುವುದು ಅವರಿಂದ ಸಾಧ್ಯವಿರಲಿಲ್ಲ. +“ನಾನೇ ಲೋಕದ ಬೆಳಕು. ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ, ಜೀವ ಕೊಡುವ ಬೆಳಕನ್ನು ಹೊಂದಿದವನಾಗುತ್ತಾನೆ ಎಂದು ನಮ್ಮ ಪ್ರಭುವು ಹೇಳಿರುವ ಮಾತುಗಳು ನಿಮ್ಮ ನೆನಪಿನಲ್ಲಿರಲಿ. ನೀವು ಪ್ರಭುವನ್ನು ನಿಮ್ಮ ರಕ್ಷಕನೆಂದು ಒಪ್ಪಿಕೊಂಡಿರುವಿರಿ. ಅವನ ಸೇವೆ ಮಾಡುವುದಾಗಿ ಪ್ರಮಾಣ ಮಾಡಿರುತ್ತೀರಿ. ಯಾವುದೇ ಪರಿಸ್ಥಿತಿ ಯಲ್ಲಿ ನಿಮ್ಮಲ್ಲಿ ಈಗ ಪ್ರಜ್ವಲಿಸುತ್ತಿರುವ ಬೆಳಕು ಆರದಿರಲಿ. ಪ್ರಭುವಿನ ಸೇವೆ ಮಾಡುವ ಸೂಜಿ ಮೊನೆಯಷ್ಟು ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ. ಕಷ್ಟ ನಷ್ಟ, ಬಿರುನುಡಿ, ಹಿಂಸೆ ನೋವು ಎಲ್ಲವನ್ನೂ ಪ್ರಭುವಿಗೆ ಅರ್ಪಿಸಿ ನೀವು ಕೆಲಸ ಮಾಡಿ. ಪ್ರಭು ಹೇಳಿದ ಹಾಗೆ ಭೂಲೋಕದಲ್ಲಿ ಏನನ್ನು ಕಟ್ಟುವಿರೋ ಅದು ನಿಮಗಾಗಿ ಪರಲೋಕದಲ್ಲಿ ಕಟ್ಟಲ್ಪಡುವುದು..” +ಈ ಕಟ್ಟುವ ಕೆಲಸವನ್ನು ಅವರು ಗೋವಾದಲ್ಲಿ, ಕಾರವಾರ, ಹೊನ್ನಾವರಗಳಲ್ಲಿ ಮಾಡಿದರು. +ಇಲ್ಲಿ ಎಲ್ಲಿಯೂ ಅವರಿಗೆ ಬೇಕಾದ ಸಕಲ ಸೌಲಭ್ಯಗಳು ಇರಲಿಲ್ಲ. ಇಲ್ಲಿಯ ಹವಾಮಾನ ಬೇರೆಯಾಗಿತ್ತು. ಊಟ, ಉಪಹಾರ ಬೇರೆಯಾಗಿತ್ತು. ಭಾಷೆ ಬೇರೆಯಾಗಿತ್ತು. ಹಾವು, ಚೇಳುಗಳು ಮನೆಯ ಒಳಗೇನೆ ತಿರುಗಾಡುತ್ತಿದ್ದವು. ಹುಲಿಗಳು ಮನೆಯ ಹಿಂದೆ ಮುಂದೆ ಸುಳಿದಾಡುತ್ತಿದ್ದವು. ಜನರನ್ನು ಕ್ರಿಸ್ತನತ್ತ ತಿರುಗಿಸುವುದು ಸುಲಭವಾದ ಮಾತಾಗಿರಲಿಲ್ಲ. ಆದರೂ ಅವರು ಕೆಲಸ ಮಾಡಿಕೊಂಡು ಬಂದರು. ಕಕ್ಕಸುಗಳಲ್ಲಿ ಕಮೋಡುಗಳು ಇರುತ್ತಿರಲಿಲ್ಲ. ಊಟಕ್ಕೆ ಕೈಬೆರಳುಗಳನ್ನು ಉಪಯೊಗಿಸಬೇಕಾಗುತ್ತಿತ್ತು. ಈ ಎಲ್ಲದಕ್ಕೂ ಅವರು ಹೊಂದಿಕೊಂಡರು. +ಗೋವಾದಲ್ಲಿ ಪಾದರಿಗಳಿಗಾಗಿ ಬಂಗಲೆಗಳಿದ್ದವು. ಕುರ್ಚಿ, ಮೇಜು, ಮಂಚಗಳಿದ್ದವು. ಆದರೆ ಕಾರವಾರ, ಹೊನ್ನಾವರಗಳಲ್ಲಿ ಈ ಸೌಲಭ್ಯವಿರಲಿಲ್ಲ. ಅಲ್ಲೆಲ್ಲ ಕೆಲ ಸೌಕರ್ಯಗಳನ್ನು ಇವರು ಮಾಡಿಕೊಂಡರು. ಇನ್ನು ಮುಂದಿನ ಊರು ಹ್ಯಾಗಿದೆಯೋ! ಅಲ್ಲಿ ಏನೇನು ಸೌಲಭ್ಯಗಳಿವೆಯೋ ನೋಡಬೇಕು. ಅವರು ಶಿವಸಾಗರವನ್ನು ಎದುರು ನೋಡುತ್ತ ಕುಳಿತರು. +ಗಾಡಿ ಧಡಧಡಕ್ಕನೆ ಕೊರಕಲು ರಸ್ತೆಯಲ್ಲಿ ಕುಲುಕಾಡುತ್ತ ಶಿವಸಾಗರವನ್ನು ಪ್ರವೇಶಿಸಿತು. ಊರ ಹೊರಗೆ ಹೊಸದಾಗಿ ಕಟ್ಟುತ್ತಿರುವ ಸೇತುವೆಯೊಂದರ ಮೇಲಿನಿಂದ ಗಾಡಿ ಊರೊಳಗೆ ಪ್ರವೇಶಿಸಿತು. ಆದರೆ ಊರಿನಲ್ಲಿ ಇಗರ್ಜಿ ಹುಡುಕುವುದೇ ಒಂದು ಕೆಲಸವಾಯಿತು. ಬೋನಾ ಕಾರವಾರ, ಹೊನ್ನಾವರಗಳಲ್ಲಿ ತಾನು ಕಲಿತ ಕನ್ನಡದ ಸಹಾಯದಿಂದ ಕೊನೆಗೂ ಇಗರ್ಜಿ ಎಲ್ಲಿದೆ ಎಂಬುದನ್ನು ಅವರಿವರ ಮೂಲಕ ಕೇಳಿ ತಿಳಿದುಕೊಂಡ. +ಗಾಡಿ ಎಲ್ಲೆಲ್ಲಿಯೋ ತಿರುಗಿ ಕೊನೆಗೆ ಬಂದು ನಿಂತದ್ದು,ಕೊಪೆಲ ಎದುರು. ನಾಲ್ಕು ಮಣ್ಣಿನ ಗೋಡೆಗಳ ಸಣ್ಣ ಕಟ್ಟಡ. ಮೇಲೆ ಎರಡೂ ಕಡೆ ಇಳಿದ ಮಾಡಿಗೆ ಹುಲ್ಲು ಹೊದೆಸಲಾಗಿತ್ತು. ಮಾಡಿನ ತುದಿಯಲ್ಲಿ ಓರೆಯಾಗಿ ನಿಂತ ಒಂದು ಶಿಲುಬೆಯ ಆಕೃತಿ. ಬಾಗಿಲ ಬಳಿ ತೂಗು ಬಿದ್ದ ಒಂದು ಗಂಟೆ. ಈ ಕೊಪೆಲನ ಸುತ್ತ ಮರಗಳು. ಬಿದಿರ ಮೆಳೆಗಳು, ಕಾಡು ಬಳ್ಳಿಗಳು, ಪೊದೆಗಳು ಇವುಗಳ ಆಚೆಗೆ ಅಲ್ಲಲ್ಲಿ ಗುಡಿಸಲುಗಳು. +ಬೋನಾ ಗಾಡಿಯಿಂದ ಇಳಿದವನೇ ಕೊಪೆಲದ ಮುಂದಿನ ತೂಗು ಗಂಟೆಯ ದಾರ ಎಳೆದು ಗಂಟೆ ಬಾರಿಸಿದ. ಗೋವೆಯ ದೊಡ್ಡ ಇಗರ್ಜಿ ಗೋಪುರಗಳಿಂದ ಹೊರ ಬೀಳುವ ಆ ಘಂಟಾನಾದ ಕೇಳಿದ್ದ ಇವರಿಗೆ ಈ ಗಂಟೆ ಸಪ್ಪೆಯೆನಿಸಿತು. ಇದಕ್ಕೆ ಧ್ವನಿಯೇ ಇಲ್ಲ ಅಂದು ಕೊಂಡರು. ಈ ಗಂಟೆ, ಈ ಕೊಪೆಲ, ಈ ಕಾಡು ನೋಡಿದಾಕ್ಷಣ ಇಲ್ಲಿ ತಮಗೆ ಮಾಡಲು ತುಂಬಾ ಕೆಲಸವಿದೆ ಅನ್ನುವುದು ಖಚಿತವಾಯಿತು. ಜಪಸರವನ್ನು ನಿಲುವಂಗಿಯ ಕಿಸೆಗೆ ರವಾನಿಸಿ ಬೈಬಲ್ ಹಿಡಿದು ಶಿವಸಾಗರದ ಮಣ್ಣಿನಲ್ಲಿ ಕಾಲಿರಿಸಿದರು ಪಾದರಿ ಗೋನಸಾಲ್ವಿಸ್. +ಬೋನ ಮೂರನೆಯ ಬಾರಿ ಗಂಟೆ ಹೊಡೆದಾಗ ಕೊಪೆಲನ ಬಲಗಡೆಯ ಮರಗಳ ಮರೆಯಲ್ಲಿ ಯಾರೋ ಕಂಡರು. ಅಂಜುತ್ತ ಅಳಕುತ್ತ ಅಲ್ಲಿ ನಿಂತೇ ಬಗ್ಗಿ ನೋಡುತ್ತ ಮೇಸ್ತ್ರಿ ಸಿಮೋನ ಮರಗಳ ಕಪ್ಪು ನೆರಳಿನಿಂದ ಈಚೆ ಬಂದ. ಸೊಂಟದ ಉಡುದಾರಕ್ಕೆ ತೂಗು ಬಿದ್ದಿದ್ದ ಕಷ್ಠಿ ಮೇಲೊಂದು ಹೊದ್ದ ವಸ್ತ್ರ. ಏನೋ ಕೆಲಸ ಮಾಡುತ್ತಿದ್ದವ ಹಾಗೆಯೇ ಬಂದಂತಿತ್ತು. +ಆತ ಮೊದಲು ಅನುಮಾನದಿಂದ ನೋಡುತ್ತ ನಿಂತ. ಪಾದರಿ ಗೋನಸಾಲ್ವಿಸ್ ರನ್ನು ಅಚ್ಚರಿಯಿಂದೆಂಬಂತೆ ನೋಡಿದ. ಅವರ ಚೂಪು ಗಡ್ಡ ಹೊಳಪುಗಣ್ಣು ಕುತ್ತಿಗೆಯಲ್ಲಿಯ ಕರಿ ಶಿಲುಬೆ ಇತ್ಯಾದಿಗಳನ್ನು ಇದೇ ಪ್ರಥಮ ಬಾರಿ ನೋಡುವವನಂತೆ ಕಣ್ಣರಳಿಸಿ ನೋಡಿದ. ಶಿವಸಾಗರದಲ್ಲಿ ತಾನು ಕಟ್ಟಿಸಿದ ಕೊಪೆಲಿನ ಎದುರು ಓರ್ವ ಪಾದರಿಗಳು ಬಂದು ನಿಂತಿರುವುದು ದೇವರು ಮಾಡಿದ ಒಂದು ಪವಾಡವೇ ಆಗಿರಬಹುದೇ ಎಂದು ಬೆರಗಾದ. ತಟ್ಟನೆ ಅವನಿಗೆ ಆರು ತಿಂಗಳ ಹಿಂದೆ ಊರಿಗೆ ಹೋದಾಗ ನಡೆದೊಂದು ಘಟನೆ ನೆನಪಿಗೆ ಬಂತು. +ಜನವರಿ ತಿಂಗಳಿನಲ್ಲಿ ಮುರುಡೇಶ್ವರದ ಇಗರ್ಜಿ ಹಬ್ಬಕ್ಕೆಂದು ಊರಿಗೆ ಹೋಗಿದ್ದ. ಈ ಬಾರಿ ಇಗರ್ಜಿ ಹಬ್ಬಕ್ಕೆ ಇನ್ನೂ ಹೆಚ್ಚಿನ ಮಹತ್ವವಿತ್ತು. ಗೋವೆಯ ಪ್ರಾವಿನ್ಶಿಯಲ್ ಅವರು ಕಾರವಾರಕ್ಕೆ ಬಂದವರು ಹಡಗು ಹತ್ತಿ ಭಟ್ಕಳಕ್ಕೆ ಬಂದಿದ್ದರು. ಭಟ್ಕಳದಲ್ಲಿ ನಾಲ್ಕು ದಿನ ಇದ್ದ ಅವರು ಮುರುಡೇಶ್ವರಕ್ಕೂ ಬಂದಿದ್ದರು. +ಹಿಂದಿನ ದಿನವೇ ಬ್ರೇಸ್ಪುರ ಮಾಡಿ ನೆಟ್ಟು ಧ್ವಜ ಹಾರಿಸಿ ಸಂಜೆ ಊರ ಜನ ಸೇರಿ ಇಗರ್ಜಿಯನ್ನು ಅಲಂಕರಿಸಿದ್ದರು. ಮುಂದೆ ಚಪ್ಪರ ಹಸಿರು ತೋರಣ, ಬಣ್ಣದ ಬಟ್ಟೆಯ ತೋರಣಗಳು. ಇಗರ್ಜಿಯಿಂದ ಪ್ರವಾಸಿ ಬಂಗಲೆಯವರೆಗೂ ರಸ್ತೆಯ ಎರಡೂ ಬದಿ ಬಾಳೆ ಕಂಬ ನೆಡಲಾಯಿತು. ತೋರಣ ಕಟ್ಟಲಾಯಿತು. +ಹಬ್ಬದ ದಿನ ಬೆಳಿಗ್ಗೆ ಹೆಂಗಸರು ಗಂಡಸರು ಮಕ್ಕಳಾದಿಯಾಗಿ ಎಲ್ಲರೂ ಬಂಗಲೆಗೆ ಹೋಗಿ ಅಲ್ಲಿಂದ ಪ್ರಾವಿನ್ಶಿಯಲ್ ಅವರನ್ನು ಮೆರವಣಿಗೆಯಲ್ಲಿ ಕರೆತಂದರು. ಈ ಪ್ರದೇಶದ ಇಗರ್ಜಿಗಳ ಆಡಳಿತವನ್ನು ನೋಡಿಕೊಳ್ಳುವ ಇವರು ಪೊರ್ತುಗಿಸರಾಗಿದ್ದರು. ಮುಟ್ಟಿದರೆ ಚಿಮ್ಮುತ್ತದೆಯೇನೋ ಅನ್ನುವ ಹಾಗೆ ರಕ್ತ ತುಂಬಿಕೊಂಡ ಕೆಂಪು ಮೈ. ಗಾಜುಗಣ್ಣು. ಕಲ್ಲನ್ನೂ ಕರಗಿಸುವ ಮುಗುಳನಗೆ. ಎಲ್ಲರನ್ನು ಬಾಚಿ ತಬ್ಬಿಕೊಂಡು ಮೈದಡವಿ ಮಾತನಾಡಿಸುವ ಹಿರಿಮೆ. ಅವರ ಸುತ್ತ ಏನೋ ದಿವ್ಯ ಪ್ರಭೆ ಆವರಿಸಿಕೊಂಡಂತಹ ಅನುಭವ. +ಹಬ್ಬದ ಪೂಜೆಯನ್ನು ಅವರೇ ಮಾಡಿದರು. +ಜನರಿಗೆ ಅವರೇ ದಿವ್ಯ ಪ್ರಸಾದ ನೀಡಿದರು. +ಜನರನ್ನು ಸುತನ ಪಿತನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಆಶೀರ್ವದಿಸಿದರು. +ಅವರಿಗೆ ಕೊಂಕಣಿ ಅಷ್ಟು ಚೆನ್ನಾಗಿ ಬಾರದ್ದರಿಂದ ಅಂಕೋಲೆಯ ಪಾದರಿಗಳು ಫುಲ್ ಪತ್ರಿಯನ್ನೇರಿ ಅಂದಿನ ಶೆರಮಾಂವಂ ಮಾಡಿ ಮುಗಿಸಿದರು. ಮಾತಿನ ಅಂತ್ಯದಲ್ಲಿ ಅವರು- +’ಪ್ರೀತಿಯ ಕ್ರೀಸುವರೆ..ನಮ್ಮೆಲ್ಲರಿಗೂ ಹಿರಿಯರೂ ಮಾರ್ಗದರ್ಶಕರೂ ಇಗರ್ಜಿ ಮಾತೆಯ ರಕ್ಷಕರು ಆದ ಪ್ರಾವಿನ್ಶಿಯಲ್ ಅವರು ನಿಮ್ಮೂರಿಗೆ ಬಂದಿರುವುದು ನಿಮ್ಮ ಪುಣ್ಯ. ನಿಮ್ಮಲ್ಲಿ ಯಾರಿಗಾದರೂ ಅವರನ್ನು ಮಾತನಾಡಿಸ ಬೇಕು ಎಂಬ ಆಸೆಯಿದ್ದರೆ ನೀವು ಬಂದು ಮಾತನಾಡಿಸಬಹುದು. ಅವರು ಮೂರು ಗಂಟೆಯ ತನಕ ಪಾದರಿಗಳ ಬಂಗಲೆಯಲ್ಲಿ ಇರುತ್ತಾರೆ..’ ಎಂದರು. +ಪೂಜೆ ಮುಗಿಯಿತು. ಜನ ಚದುರಿ ಹೋದರು. ಎಲ್ಲೋ ಕೆಲವರು ಪಾದರಿಗಳ ಬಂಗಲೆಯ ಬಳಿ ಹೋಗಿ ಹೊರಗೆ ಕುಳಿತ ಪ್ರಾವಿನ್ಶಿಯಲ್ ಅವರಿಗೆ ಕೈ ಮುಗಿದು ಬಂದರು. ಅವರನ್ನು ಮಾತನಾಡಿಸುವ ಯತ್ನಕ್ಕೆ ಯಾರೂ ಹೋಗಲಿಲ್ಲ. ದೂರದಿಂದ ಅವರನ್ನು ನೋಡಿ, ಗೌರವ ಸಲ್ಲಿಸಿ, ಅವರು ಕೈ ಎತ್ತಿ ಗಾಳಿಯಲ್ಲಿ ಶಿಲುಬೆ ಬರೆದು ಆಶೀರ್ವದಿಸಿದಾಗ ಇದೇ ತಮ್ಮ ಪುಣ್ಯ ಎಂದು ನಂಬಿ ಮೈ ಉಬ್ಬಿದಂತಾಗಿ ತಿರುಗಿ ಬಂದರು. +ಆದರೆ ಶಿಮೋನ, ಪಾಸ್ಕೋಲ, ಕೈತಾನರನ್ನು ಕರೆದುಕೊಂಡು ಅಲ್ಲಿಗೆ ಹೋದ. +“ಪಾಸ್ಕೋಲ್..ಘಟ್ಟದ ಮೇಲೂ ಒಬ್ಬರು ಪಾದರಿ ಬಂದಿದ್ದರೆ ನಮಗೆ ಅನುಕೂಲ ಆಗುತ್ತಿತ್ತು..ನಾವು ಕೇಳೋಣ“ಎಂದು ಶಿವಸಾಗರದಲ್ಲಿ ಮನೆ ಮಾಡಿ ಕೊಂಡಿದ್ದ ಒಂದಿಬ್ಬರ ಬಳಿ ಸಿಮೋನ ವಿಷಯ ಪ್ರಸ್ತಾಪ ಮಾಡಿದ್ದ. ಅವರು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. +“ಅಯ್ಯೋ ಅಷ್ಟು ದೂರಕ್ಕೆ ಯಾವ ಪಾದರಿ ಬರತಾರೆ“ಎಂದು ರಾಗ ಎಳೆದಿದ್ದರು. +’ದೇವರ ಮೇಲೆ ಭಾರ ಹಾಕಿ ಕೇಳೋಣ..ಬಾ’ ಎಂದು ಕೆಲವರನ್ನು ಸಂಗಡ ಕರೆದುಕೊಂಡು ಹೋಗಿದ್ದ ಸಿಮೋನ. +’ಬನ್ನಿ..’ ಎಂದರು ಪ್ರಾವಿನ್ಶಿಯಲ್ ಅವರದೇ ಆದ ಪೋರ್ತುಗೀಸ ಕೊಂಕಣಿಯಲ್ಲಿ. +ಎಲ್ಲರೂ ಮೊಣಕಾಲೂರಿ ಭಕ್ತಿಯಿಂದ ಕೈ ಮುಗಿದರು. ಆಶೀರ್ವಾದವೂ ಲಭಿಸಿತು. ಇವರು ಮೊಣಕಾಲೂರಿದವರು ಏಳಲಿಲ್ಲ. ಜೋಡಿಸಿದ ಕೈ ತೆಗೆಯಲಿಲ್ಲ. +’ಏನು?’ +ಪ್ರಾವಿನ್ಶಿಯಲ್ ಇಗರ್ಜಿ ಪಾದರಿಯ ಮುಖ ನೋಡಿದರು. ಅವರು ಇವರ ಸಹಾಯಕ್ಕೆ ಬಂದರು. ಸಿಮೋನ ಶಿವಸಾಗರದ ಕತೆ ನಿವೇದಿಸಿಕೊಂಡ. +ಮೊದಲು ತಾವು ಏಳೆಂಟು ಜನ ಇದ್ದೆವು. ಈಗ ಹತ್ತು ಹದಿನೈದು ಕುಟುಂಬಗಳಿವೆ. ಮತ್ತೂ ಕೆಲವರು ಅಲ್ಲಿಗೆ ಬರುವ ಯೋಚನೆಯಲ್ಲಿದ್ದಾರೆ. ಯಾರಿಗೂ ಪೂಜೆ ಕೇಳುವ ಅದೃಷ್ಟವಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಮಕ್ಕಳಿಗೆ ಜ್ಞಾನೋಪದೇಶವಿಲ್ಲ. ಸಣ್ಣ ಮಕ್ಕಳಿಗೆ ಜ್ಞಾನ ಸ್ನಾನ ಮಾಡಿಸಬೇಕೆಂದರೆ ಇಲ್ಲಿಗೆ ತರಬೇಕು. ಹತ್ತಿರದಲ್ಲಿ ಎಲ್ಲಿಯೂ ಇಗರ್ಜಿಯಿಲ್ಲ. ಪಾದರಿ ಇಲ್ಲ. ನಾವು ಕ್ರೈಸ್ತರು ಅಕ್ರೈಸ್ತರಾಗಿ ಬದುಕುತ್ತಿದ್ದೇವೆ. ಇತ್ತೀಚೆಗೆ ಒಂದು ಕೊಪೆಲ ಕಟ್ಟಿಕೊಂಡಿದ್ದೇವೆ. ಆದರೆ ಪಾದರಿಗಳಿಲ್ಲದೆ ಈ ಕೊಪೆಲಕ್ಕೂ ಜನ ಬರುವುದಿಲ್ಲ. ದಯವಿಟ್ಟು ಓರ್ವ ಪಾದರಿಗಳನ್ನು ನಮ್ಮಲ್ಲಿಗೆ ಕಳುಹಿಸಬೇಕು. ಸದಾ ಕ್ರಿಸ್ತನ ವಾಕ್ಯ ಕೇಳುವ, ಪೂಜೆ ಆಲಿಸುವ, ಪ್ರಸಾದ ಸ್ವೀಕರಿಸುವ ಅವಕಾಶ ನಮಗೆ ಒದಗಿಸಿ ಕೊಡಬೇಕು. +ಪಾದರಿ ಇವರ ಮಾತನ್ನು ಪ್ರಾವಿನ್ಶಿಯಲ್ ಗೆ ತಿಳಿಸಿದರು. ಪ್ರಾವಿನ್ಶಿಯಲ್ ಊರು ಯಾವುದು? ಎಲ್ಲಿದೆ? ಎಷ್ಟು ದೂರ? ಪಾದರಿಗಳಿಗೆ ಅನುಕೂಲ ಮಾಡಿ ಕೊಡುವಿರ? ಎಂದೆಲ್ಲ ಕೇಳಿದರು. ಸಿಮೋನ ಸೂಕ್ತ ಉತ್ತರವನ್ನೂ ನೀಡಿದ. +“ಆಯಿತು….ನಾನು ನೋಡುತ್ತೇನೆ. ನೀವು ನಿತ್ಯ ದೇವರಲ್ಲಿ ಬೇಡಿಕೊಳ್ಳಿ..ನಿಮ್ಮ ಧಾರ್ಮಿಕ ಮನೋಭಾವ ಕಂಡು ನನಗಂತೂ ಸಂತೋಷವಾಗಿದೆ..“ಎಂದರು ಪ್ರಾವಿನ್ಶಿಯಲ್. +ಸಿಮೋನ ಮತ್ತಿತರರು ಮೊಣಕಾಲೂರಿದವರು ಎದ್ದು ಕೈ ಮುಗಿದು ಬಂದರು. +ಪ್ರಾವಿನ್ಶಿಯಲ್ ಭರವಸೆ ಕೊಟ್ಟ ರೀತಿ ಕಂಡು ಸಿಮೋನನಿಗಂತೂ ಸಂತಸವಾಗಿತ್ತು. ಬೇಡಿಕೆಯನ್ನು ದೇವರ ಮುಂದಿಟ್ಟು ಒಂದು ಪರಲೋಕ ಮಂತ್ರ ಮೂರು ನಮೋರಾಣೆ ಮಂತ್ರಗಳನ್ನು ಹೇಳುತ್ತ ಬಂದಿದ್ದ. +ಈಗ ಪಾದರಿಗಳನ್ನು ನೋಡಿದ್ದೇ ಇದೆಲ್ಲವೂ ಅವನ ನೆನಪಿಗೆ ಬಂದಿತು. ನಿಧಾನವಾಗಿ ಬರುತ್ತಿದ್ದವ ಧಡಬಡಿಸಿ ಬಂದು ನೆಲದ ಮೇಲೆಯೇ ಮೊಣಕಾಲೂರಿ. +“ಬೆಸಾಂವ ದೀಯ ಪದ್ರಾಬಾ“ಎಂದು ಆಶೀರ್ವಾದಕ್ಕಾಗಿ ಕೈ ಮುಗಿದ. ಪಾದರಿ ಗೋನಸಾಲ್ವಿಸರಿಗೆ ಸಂತಸ ವಾಯಿತು. +ಹೊನ್ನಾವರ ಬಿಟ್ಟ ನಂತರ ತಾವು ಯಾರು ಎಂಬುದನ್ನು ಅರಿತ ಓರ್ವನ ಭೇಟಿಯಾಯಿತಲ್ಲ. +ಸಿಮೋನ ಕೊಪೆಲದ ಬಾಗಿಲು ತೆರೆದ. ಅದು ಒಂದು ಸಣ್ಣ ಕೊಠಡಿ. ಮೂವತ್ತು ನಲವತ್ತು ಜನ ಕುಳಿತುಕೊಳ್ಳಬಹುದಾದ ಸ್ಥಳ. ಬಾಗಿಲಿಗೆ ಮುಖ ಮಾಡಿನಿಂತ ಗೋಡೆಯೇ ಅಲ್ತಾರ್. ನಾಲ್ಕು ಅಡಿ ಎತ್ತರದ ಪೂಜಾ ವೇದಿಕೆ. ಮೇಲೊಂದು ಗೂಡು. ಅದರಲ್ಲಿ ಏಸುವನ್ನು ತೋಳುಗಳಲ್ಲಿ ಹಿಡಿದು ನಿಂತ ಜೋಸೆಫ಼ರ ಒಂದೂವರೆ ಅಡಿ ಎತ್ತರದ ಪೈನಲ್ ಗಳು. ವೇದಿಕೆಯ ಮೇಲೆ ಯಾವಾಗಲೋ ಉರಿದು ಬಂದು ಅಲ್ಲಿಯೇ ಗಟ್ಟಿಯಾದ ಮೇಣದ ಬತ್ತಿಯ ಅವಶೇಷ. ವೇದಿಕೆ ದೇವರ ಗೂಡನ್ನು ಒಳಮಾಡಿಕೊಂಡಂತೆ ಗೋಡೆಯ ಮೇಲೆ ಮಾಡಿದ್ದ ಒಂದು ಕಮಾನು. ಒಳಗೆಲ್ಲ ಕಸ, ಧೂಳು, ಜೇಡರ ಬಲೆ. +ಕೊಪೆಲದ ಬಾಗಿಲು ತೆರೆದು ದೂರನಿಂತ ಸಿಮೋನನಿಗೆ ತುಸು ಅವಮಾನವಾಯಿತು. ಕೊಪೆಲ ಇರಬೇಕಾದ ರೀತಿಯಲ್ಲಿ ಇರಲಿಲ್ಲ. ಜನ ಕೊಪೆಲಕ್ಕೆ ಬರುವುದನ್ನು ನಿಲ್ಲಿಸಿದ್ಧರು. ತಾನು ತನ್ನ ಮನೆಯವರು ಕೂಡ ಜಪ, ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದುದರಿಂದ ಕೊಪೆಲ ಇದೆ ಅನ್ನುವುದೇ ಮರೆತು ಹೋಗಿತ್ತು. ಆದರೆ ಪ್ರಾವಿನ್ಶಿಯಲ್ ಓರ್ವ ಪಾದರಿಗಳನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರು ಗಾಡಿಯಲ್ಲಿ ತಮ್ಮ ಸಾಮಾನು ಸರಂಜಾಮು ಹೇರಿಕೊಂಡು ಈಗ ಬಂದಿದ್ದಾರೆ. +ಸಿಮೋನ ಎರಡು ಹೆಜ್ಜೆ ಮುಂದಿಟ್ಟ. +’ಪದ್ರಾಬ..ನಾನು ಸಿಮೋನ’ ತನ್ನ ಪರಿಚಯ ಹೇಳಿಕೊಂಡ. +’ ನಾನು ಕೊಪೆಲ್ ನ ಶುಚಿ ಮಾಡಸ್ತೀನಿ..ನೀವು ನನ್ನ ಮನೆಗೆ ಬನ್ನಿ..ನಿಮಗೆ ನಾನು ಎಲ್ಲ ಅನುಕೂಲ ಮಾಡಿಕೊಡತೀನಿ’. ಎಂದು ಅಂಗಲಾಚಿದ. +’ ಇರಲಿ..ಮೊದಲು ಕೊಪೆಲ್ ನ ಶುಚಿ ಮಾಡಿಸು..ಅನುಕೂಲ ಅನಾನುಕೂಲತೆ ಬಗ್ಗೆ ಯೋಚಿಸಬೇಡ. ನನಗೆ ಎಲ್ಲ ಅಭ್ಯಾಸವಾಗಿದೆ.’ ಎಂದರು ಪಾದರಿ ಗೋನಸ್ವಾಲಿಸ್. +-೨- +ಶಿವಸಾಗರ ಪಟ್ಟಣವಾಗಿ ರೂಪುಗೊಂಡಿದ್ದೇ ಇತ್ತೀಚೆಗೆ. ಹಿಂದೆ ಕೆಳದಿ ಅರಸರು ಈ ಪ್ರದೇಶವನ್ನು ಆಳುತ್ತಿದ್ದಾಗ ಅರಸರ ರಾಜಧಾನಿ ಉಪರಾಜಧಾನಿಗಳಾಗಿದ್ದ ಕೆಳದಿ, ಇಕ್ಕೇರಿಗಳು ದೊಡ್ಡ ಪಟ್ಟಣ ಎನಿಸಿಕೊಂಡಿದ್ದವು. ಅಲ್ಲಿ ಅರಮನೆ, ಕೋಟೆ, ಕಾವಲು ಕಟ್ಟೆ, ಬುರುಜು, ಮದ್ದಿನ ಮನೆ, ಟಂಕಸಾಲೆಗಳ ಜೊತೆ ವಿವಿಧ ಸರಕುಗಳನ್ನು ಮಾರುವ ಪೇಟೆಗಳು, ವಿವಿಧ ಕಸುಬು ಮಾಡುತ್ತಿದ್ದ ಜನರ ಕೇರಿಗಳು ಇಲ್ಲಿದ್ದವು. ಆದರೆ ಈ ದೊರೆಗಳು ದುರ್ಬಲಗೊಂಡು, ಹೈದರಾಲಿ ಇಲ್ಲಿಗೆ ಬಂದು ನುಗ್ಗಿದ ನಂತರ ಈ ಪಟ್ಟಣಗಳು ನಾಶವಾಗಿ, ಇಲ್ಲಿಯ ಜನ, ಶ್ರೀಮಂತರು ಬೇರೆಡೆ ಹೋಗಿ ನೆಲೆಸಿದರು. ಹೀಗಾಗಿ ಹಿಂದಿನ ರಾಜಧಾನಿಗಳು ಹಾಳು ಕೊಂಪೆಗಳಾಗಿ ಶಿವಸಾಗರದಂತಹ ಊರು ದೊಡ್ಡ ಪಟ್ಟಣವಾಯಿತು. ಇಕ್ಕೇರಿ ಕೆಳದಿಗಳು ಹಳ್ಳಿಗಳಾದವು. +ಕೆಳದಿ ಅರಸರು ಕಟ್ಟಿಸಿದ ಒಂದು ಕೆರೆ. ಕೆರೆಯ ಈ ದಂಡೆಯ ಮೇಲೆ ಅನ್ನುವ ಹಾಗೆ ಹಬ್ಬಿಕೊಂಡ ಊರು ಶಿವಸಾಗರ. ಕೇರಿಗಳು, ಗುಡಿಗಳು, ಬೀದಿಗಳು. ಊರ ನಾಲ್ಕು ದಿಕ್ಕಿನಲ್ಲಿ ನಾಲ್ಕು ಸುಂಕದ ಕಟ್ಟೆಗಳು, ಒಂದು ಪೇಟೆ ಬೀದಿ, ಅಲ್ಲಿ ಎರಡೂ ಕಡೆಗಳಲ್ಲಿ ಸಾಲು ಸಾಲಾಗಿರುವ ಅಂಗಡಿಗಳು, ಬ್ರಾಹ್ಮಣರ, ಲಿಂಗಾಯತರ, ಮುಸಲ್ಮಾನರ, ಮಡಿವಾಳ, ಕುಂಬಾರ, ಚಮ್ಮಾರ ಹೀಗೆ ಒಂದೊಂದು ವೃತ್ತಿಯವರು ಒಂದೊಂದು ಕಡೆ ನೆಲೆಸಿದ್ದರಿಂದ ಉಂಟಾದ ಕೇರಿಗಳು. ಊರು ಪಂಚಾಯತಿ ಪ್ರಮಾಣವನ್ನು ಮೀರಿ ಬೆಳೆದದ್ದರಿಂದ ನಗರ ಸಭೆ ಬಂದಿತು. ಊರಲ್ಲಿದ್ದ ಅಯ್ಯಗಳ ಮಠಗಳ ಕಾಲ ಮುಗಿದು ಸರಕಾರಿ ಶಾಲೆಗಳು ಅದೇ ಆರಂಭವಾಗಿದ್ದವು. ಇಂಗ್ಲೀಷ ಔಷಧಿಗಳು ಅಷ್ಟೇನೂ ಜನಪ್ರಿಯವಾಗಿರಲಿಲ್ಲವಾದರೂ ಪಂಡಿತರ ಮಾತ್ರೆ, ಕಷಾಯಗಳ ಬಗ್ಗೆ ಜನ ಏನೋ ಅಪನಂಬಿಕೆ ಅನುಮಾನವನ್ನು ವ್ಯಕ್ತಪಡಿಸತೊಡಗಿದ್ದರು. ಬಹಳ ಮುಖ್ಯವಾಗಿ ಊರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಆರಂಭವಾಗಿತ್ತು. ಆಸ್ಪತ್ರೆ, ಅಂಚೆ ಕಚೇರಿ, ಪೋಲಿಸ್ ಠಾಣೆ, ಮನೆಗಳು ಅಲ್ಲಲ್ಲಿ ಎದ್ದು ನಿಲ್ಲತೊಡಗಿದ್ದವು. ಜನ ಮಣ್ಣಿನ ಕಟ್ಟಡಗಳ ಬದಲು ಜಂಬಿಟ್ಟಿಗೆ ಕಲ್ಲುಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸ ತೊಡಗಿದರು. +ಹೊಸದಾಗಿ ಆರಂಭವಾದ ಈ ನಿರ್ಮಾಣಗಳಿಂದಾಗಿ ಘಟ್ಟದ ಕೆಳಗಿನಿಂದ ಈ ಊರಿಗೆ ಬಂದವನು ಸಿಮೋನ ಮೇಸ್ತ, ಜೂಜೆ ಮೇಸ್ತ, ಪಾಸ್ಕೋಲ ಮೇಸ್ತ ಮೊದಲಾದವರು. ಮೇಸ್ತ ಅನ್ನುವ ಶಬ್ದವೇ ಮೇಸ್ತ್ರಿ ಆಗಿ ಇವರೆಲ್ಲರ ಹೆಸರಿನ ಜತೆ ಸೇರಿಕೊಂಡದ್ದಕ್ಕೂ ಒಂದು ಕಾರಣವಿದೆ. ಇವರೆಲ್ಲ ತಮ್ಮ ಸಂಗಡವೇ ಕಲ್ಲು ಕೆತ್ತುವವರನ್ನು, ಕಲ್ಲು ತೆಗೆಯುವವರನ್ನು, ಕಟ್ಟುವವರನ್ನು ಕರೆತಂದಿದ್ದರು. ಇವರು ತಮ್ಮ ಬಾಚಿ, ಅಳತೆಕಡ್ಡಿ, ನೆಲಮಟ್ಟ, ತೂಗು ಗುಂಡು, ಕರಣೆ ಬಾಂಡಲಿ ಇತ್ಯಾದಿ ಸರಕುಗಳನ್ನು ಹಿಡಿದುಕೊಂಡು ಬಂದರು. +ಮನೆ ಕೆಲಸ ಕಟ್ಟಡದ ಕೆಲಸ ಎಂದರೆ ಬಡಗಿಗಳೂ ಬೇಕು. ಹೀಗೆಂದೇ ಇವರ ಜತೆ ಸುತಾರಿ ಲಾದ್ರು, ಪೆದ್ರು, ಫರಾಸ್ಕ ಮೊದಲಾದವರೂ ಬಂದರು. ಇವರ ಕೈಗಳಲ್ಲಿ ಉಜ್ಜುಗೊರಡು, ಉಳಿ, ಗರಗಸ ಇತ್ಯಾದಿಗಳಿದ್ದವು. +ಇವರೆಲ್ಲ ಬಂದದ್ದು ಮುರುಡೇಶ್ವರದಿಂದ, ಕಾಯ್ಕಿಣಿ, ಗುಂಡುಬಾಳೆ, ಮೂಡುಕಣಿ, ಭಟ್ಕಳ, ಶಿರಾಲಿಯಿಂದ, ಉತ್ತರ ಕನ್ನಡದಿಂದ. ಅಲ್ಲಿ ಕೆಲವರಿಗೆ ತೆಂಗಿನ ತೋಟ ಗಳಿವೆ. ಕೆಲವರು ಅವರಿವರ ತೆಂಗಿನ ತೋಟಗಳನ್ನು ನೋಡಿಕೊಳ್ಳುತ್ತಾರೆ. ಈ ಕಲ್ಲು ತೆಗೆಯುವ, ಕಟ್ಟುವ, ಕೆತ್ತುವ ಕೆಲಸವನ್ನು ಅವರು ಅಲ್ಲಿಯೂ ಮಾಡುತ್ತಿದ್ದವರೆ. ಆದರೆ ನಾಲ್ಕು ಕಾಸು ಹೆಚ್ಚು ಸಿಗುತ್ತದೆಂದರೆ ಯಾರಿಗೆ ಬೇಡ. ವರ್ಷದಲ್ಲಿ ನಾಲ್ಕು ತಿಂಗಳು ಮಾಡುವ ಕೆಲಸವಿದು. ಇಲ್ಲಿ ಮಳೆಗಾಲ ಮುಗಿಯಿತೆಂದರೆ ಮತ್ತೆ ಘಟ್ಟ ಹತ್ತಿ ಬರುತ್ತಾರೆ. ಹೀಗಾಗಿ ಇವರಿಗೆಲ್ಲ ಒಂದು ಹೆಸರೂ ಇದೆ. ಘಟ್ಟದ ಕೆಳಗಿನವರು ಎಂದು. ಕಲ್ಲು ಕೆಲಸದವರು ಎಂಬುದೂ ಮತ್ತೊಂದು ಹೆಸರು. +ಆದರೆ ಇಲ್ಲಿ ಕೆಲಸ ಹೆಚ್ಚು ಹೆಚ್ಚಾಗಿ ಹುಟ್ಟಿಕೊಂಡಂತೆ, ಇಲ್ಲಿಯ ಜನರ ಪರಿಚಯವಾದಂತೆ ಇಲ್ಲಿಯೇ ಮನೆ ಮತ್ತೊಂದು ಮಾಡಿಕೊಂಡು ಉಳಿಯಬೇಕಾದ ಪರಿಸ್ಥಿತಿ ಬಂದಿತು. ಒಂದೆಡೆಯಲ್ಲಿ ಮನೆ ಕಟ್ಟಿಕೊಂಡರು. ಪರಸ್ಪರ ನೆರವಿಗಾಗಿ ನೆರೆಹೊರೆಯಾಗಿ ಉಳಿದರು. ತಮ್ಮ ಪ್ರಾರ್ಥನೆಗೆಂದು ಹತ್ತಿರವೇ ಒಂದು ಕೊಪೆಲನ್ನು ಕಟ್ಟಿಕೊಂಡರು. ಈ ಹಿಂದೆ ಬಂದ ಕೆಲವರು ತಮ್ಮ ಊರುಗಳಿಗೆ ತಿರುಗಿ ಹೋದರು. ಮತ್ತೆ ಕೆಲವರು ಹೊಸದಾಗಿ ಬಂದರು. ಹೀಗೆ ಬಂದವರು ಕೂಡ ಈ ಕೊಪೆಲದ ಸುತ್ತ ಮನೆಗಳನ್ನು ಮಾಡಿದರು. ಕ್ರಮೇಣ ಊರಿನಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚುತ್ತ ಹೋಯಿತು. ಅವರ ದಿನ ನಿತ್ಯದ ಬೇಡಿಕೆಗಳು ಹೆಚ್ಚತೊಡಗಿದ್ದವು. ಊರಿನಲ್ಲಿದ್ದಾಗ ರೂಢಿಸಿಕೊಂಡು ಬಂದ ಆಚರಣೆಗಳು ಇಲ್ಲಿ ಅಪರೂಪವಾದವು. ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಇವೆಲ್ಲ ಅಪರೂಪವಾದವು. ನಿತ್ಯ ಪ್ರಾರ್ಥನೆ, ತೇರ್ಸಗಳನ್ನು ಮೊದ ಮೊದಲು ಮುಂದುವರೆಸಿಕೊಂಡು ಬಂದರಾದರೂ ಕ್ರಮೇಣ ಇವು ಕೂಡ ಮರೆಯಾದವು. ದಿನ ದಿನದ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸುವವರು ಹತ್ತಿರವಿಲ್ಲದೇ ಹೋದಾಗ ಇವರು ಸಹಜವಾಗಿ ಬೇರೆ ಜನರನ್ನು ಅನುಕರಿಸತೊಡಗಿದರು. ಗೋನ್ಸಾಲ್ವಿಸ್ ರು ಇಂತಹ ಸಮಯದಲ್ಲಿಯೇ ಪಾದರಿಯಾಗಿ ಶಿವಸಾಗರಕ್ಕೆ ಬಂದರು. +* +* +* +ಬೋನಾ ಗಾಡಿಯವನ ಸಹಾಯ ತೆಗೆದುಕೊಂಡು ಗಾಡಿಯಲ್ಲಿದ್ದ ಪಾತ್ರೆ ತುಂಬಿದ ಪೆಟ್ಟಿಗೆಯನ್ನು, ಮಂಚ ಕುರ್ಚಿಗಳನ್ನು ಕೆಳಗೆ ಇಳಿಸಿದ. ಪಾದರಿ ಅವನ ಬಾಡಿಗೆ ಕೊಟ್ಟ ನಂತರ ಗಾಡಿಯವ ಹೊರಟು ಹೋದ. +ಅಷ್ಟು ಹೊತ್ತಿಗೆ ಕೊಪೆಲ್ ಸುತ್ತಲಿನ ಮನೆಗಳಿಗೂ ಗಂಟೆಯ ಸದ್ದು ಕೇಳಿಸಿತೇನೋ, ಅಲ್ಲಿಂದಲೂ ಒಂದಿಬ್ಬರು ಬಂದರು. ದೂರದಿಂದ ಇಲ್ಲಿ ನಡೆಯುತ್ತಿರುವುದನ್ನು ನೋಡುತ್ತಿರುವ ಕಣ್ಣುಗಳೂ ಕಂಡವು. ಬಂದವರು ಪಾದರಿಗೆ ಕೈ ಮುಗಿದರು. ನೆಲದ ಮೇಲೆಯೇ ಮೊಣಕಾಲೂರಿ ತಮ್ಮ ಭಕ್ತಿಗೌರವವನ್ನು ತೋರಿದರು. +ಗೋನ್ಸಾಲ್ವಿಸರಿಗೆ ಸಂತಸವಾಗದಿರಲಿಲ್ಲ. +“ಕೋಣ್ ರೇ ತುಂ” +(ಯಾರಪ್ಪಾ ನೀನು) ಎಂದು ಕೇಳಿದರು ಪಾದರಿ ಒಬ್ಬೊಬ್ಬರ ಮುಖ ನೋಡಿ. +“ನಾನು ಬಾಲ್ತಿದಾರ ಪದ್ರಾ ಬಾ..” +“ನಾನು ಪಾಸ್ಕೋಲ ಪದ್ರಾಬಾ..” +“ನಾನು ಕೈತಾನ..” +ಅವರು ತಮ್ಮ ತಮ್ಮ ಪರಿಚಯ ಹೇಳಿಕೊಂಡರು. +“ದೇವ ಬೊರೆಂಕರುಂ“ +(ದೇವರು ಒಳಿತನ್ನು ಮಾಡಲಿ) ಎಂದು ಹರಿಸಿ ಪಾದರಿ ಸಿಮೋನನ ಮುಖ ನೋಡಿದರು. +“…..ಮನೆಗೆ ಹೋಗೋಣ ಪದ್ರಾಬಾ” +ಎಂದ ಮತ್ತೊಮ್ಮೆ. +* +* +* +ಪಾದರಿ ಗೋನಸಾಲ್ವಿಸ್ ಆ ನಾಲ್ವರನ್ನೂ ಹಿಂದಿರಿಸಿಕೊಂಡು ಕೊಪೆಲನ ಆಚೆಗಿನ ಕಾಲುದಾರಿಯತ್ತ ತಿರುಗಿದರು. ಊರಿನ ಹಾಗೆಯೇ ಆ ಕೇರಿ ಕೂಡ ಮರ ಪೊದೆಗಳ ನಡುವೆ ಅಡಗಿತ್ತು. ಸಿಮೋನನ ಮನೆಯೊಂದೇ ಅಲ್ಲಿ ದೊಡ್ಡದಾಗಿತ್ತು. ಹಂಚು ಹೊದೆಸಲಾಗಿತ್ತು. ಉಳಿದೆಲ್ಲ ಮನೆಗಳೂ ಹುಲ್ಲು ಹೊದೆಸಿದ. ಮಣ್ಣಿನ ಗೋಡೆಯ ಗುಡಿಸಲುಗಳು. ಶಗಣೆ ಹಾಕಿ ಸಾರಿಸಿದ ಅಂಗಳ. ಮನೆಗೊಂದು ಜಗಲಿ. ಜಗಲಿ ಅಂಚಿನಲ್ಲಿ ಕೋಳಿಗೂಡು, ಗೂಡಿನ ಮೇಲೆ ಕುಳಿತುಕೊಳ್ಳಲು ಮಲಗಲು ಮಾಡಿದ ವೇದಿಕೆ. ಅಂಗಳದಲ್ಲಿ ಮರಿಗಳನ್ನು ಕರೆದುಕೊಂಡು ತಿರುಗಾಡುತ್ತಿದ್ದ ತಾಯಿ ಕೋಳಿ. +ತನ್ನನ್ನು ನೋಡಿದ್ದೇ ಅಂಗಳದಲ್ಲಿ ನಿಂತ ತಲೆಗೂದಲು ಕೆದರಿದ ಹೆಂಗಸರು ಒಳಗೆ ಓಡಿದ್ದು, ಮಕ್ಕಳು ಬೆದರಿ ಬಾಗಿಲ ಮರೆಗೆ ಸರಿದಿದ್ದು ಇವರ ಗಮನಕ್ಕೆ ಬಂದಿತು. ಸಿಮೋನನ ಮನೆ ಜಗಲಿಯನ್ನೇರಿ ಇವರು ಅಲ್ಲಿ ಇರಿಸಿದ ಅಡ್ದ ಅದರ ಬೆಂಚಿನ ಮೇಲೆ ಕುಳಿತರು. +ಅವರಿಗೆ ಆಯಾಸವಾಗಿತ್ತು. ಮೈ ಗಾಡಿ ಪ್ರಯಾಣದಿಂದಾಗಿ ನುಜ್ಜು ಗುಜ್ಜಾಗಿ ನೋಯುತ್ತಿತ್ತು. ಇಲ್ಲಿಯ ಕೊಪೆಲ, ಕ್ರೀಸುವರ ಮನೆಗಳನ್ನು ಕಣ್ಣಾರೆ ಕಂಡ ನಂತರ ತುಸು ನಿರುತ್ಸಾಹ ಮನಸ್ಸಿನಲ್ಲಿ ಮೂಡಿ ಕಿರಿಕಿರಿಯನ್ನು ಉಂಟು ಮಾಡುತ್ತಲಿತ್ತು. ಕೊಪೆಲ ಹಾಗೂ ಕ್ರೀಸುವರ ಮನೆಗಳ ಸುತ್ತ ಬೆಳೆದು ನಿಂತ ಮರಗಳು, ಪೊದೆಗಳು, ಬಿದಿರು ಮೆಳೆಗಳು, ಅಲ್ಲಲ್ಲಿ ಹಬ್ಬಿಕೊಂಡ ಬಳ್ಳಿಗಳು, ಅಲ್ಲೆಲ್ಲ ಸುತ್ತಿಕೊಂಡ ಹೊಗೆ ಅವರನ್ನು ಗಾಬರಿಗೊಳಿಸಿತು.. +ಹೊನ್ನಾವರದಲ್ಲಿ ಅವರು ಸುಖವಾಗಿದ್ದರು. ಇಗರ್ಜಿ ಮಗ್ಗುಲಲ್ಲಿಯೆ ಬಂಗಲೆ ಹಿಂಬದಿಯಲ್ಲಿ ಸದಾ ತುಂಬಿ ಹರಿಯುವ ನದಿ. ಆಗಾಗ್ಗೆ ಬಂದು ಹೋಗುವ ಜನ. ಜನರಲ್ಲಿ ಕೂಡ ದೈವ ಭಕ್ತಿ ಇತ್ತು. ತಮ್ಮ ಬಗ್ಗೆ ಗೌರವವಿತ್ತು. +ಇಲ್ಲಿ ಇನ್ನು ಅದೆಲ್ಲವನ್ನೂ ಜನರಲ್ಲಿ ತಂದು ತುಂಬಬೇಕು. ಎಲ್ಲದಕ್ಕು ಮೊದಲು ಕೊಪೆಲವನ್ನು ಕಟ್ಟಬೇಕು. ಕೊಪೆಲಿನ ಸುತ್ತಲಿನ ಇ ಕಾಡು ಕಡೆಯಬೇಕು. ಸಿಮೋನ, ಕೈತಾನ, ಬಾಲ್ತಿದಾರ, ಪಾಸ್ಕೋಲ ಇವರೆಲ್ಲರ ನೆರವು ಸಹಕಾರದಿಂದ ತಾವು ಇಲ್ಲಿ ಈ ಕೆಲಸ ಮಾಡಬೇಕು. +ಒಳಗಿನಿಂದ ಸಿಮೋನನ ಹೆಂಡತಿ ಮಕ್ಕಳು, ಅವನ ತಾಯಿ ಬಂದರು. +’ಬೆಸಾಂವದಿಯಾ ಪದ್ರಬಾ’ +ಎಂದು ದೇವರ ಆಶೀರ್ವಾದಕ್ಕಾಗಿ ಕೈ ಮುಗಿದು ನಿಂತರು. +ಪಾದರಿ ಅವರನ್ನು ಆಶೀರ್ವದಿಸುತ್ತಿರಲು ಸಿಮೋನ ಹೊರಬಂದ. +’ ಪದ್ರಾಬಾ…ಬಿಸಿ ನೀರಿದೆ. ಸ್ನಾನ ಮಾಡಿ ಬಿಡಿ..’ ಎಂದು ಹೇಳಿದ. ಪಾದರಿ ಗೋನಸಾಲ್ವಿಸ್ ಅದೇ ಅಂಗಳಕ್ಕೆ ಬಂದ ಬೋನನನ್ನು ಕರೆಯುತ್ತ ಎದ್ದು ನಿಂತರು. +* +* +* +ಗಾಡಿಯಿಂದ ಇಳಿಸಿದ ಸಾಮಾನಿನ ನಡುವೆ ಇದ್ದ ಒಂದು ಕುರ್ಚಿಯನ್ನು ತಂದು ಬೋನಾ ಸಿಮೋನನ ಮನೆ ಜಗಲಿಯ ಮೇಲಿರಿಸಿದ. ಸ್ನಾನ ಮುಗಿಸಿ ಬಂದ ಪಾದರಿ ಗೋನಸ್ವಾಲಿಸ್ ಅಲ್ಲಿ ಕುಳಿತರು. ಸಂಜೆಯಾಗಿತ್ತು. ಮನೆಯ ಮುಂದೆ ಮರಗಳು ಒತ್ತೊತ್ತಾಗಿ ಬೆಳೆದದ್ದರಿಂದ ಕತ್ತಲು ಮತ್ತೂ ಗಾಢವಾಗಿ ಕವಿದಿತ್ತು. ಸಿಮೋನನ ಮನೆಗೆ ಅಷ್ಟು ದೂರದಲ್ಲಿ ರಸ್ತೆ ಬದಿಯ ದೀಪದ ಕಂಬವನ್ನೇರಿ ಓರ್ವ ದೀಪದ ಗಾಜು ಒರೆಸಿ ಬೆಳಕು ಮುಟ್ಟಿಸಿ ಹೋದುದನ್ನು ಗೋನಸ್ವಾಲಿಸ್ ಗಮನಿಸಿದರು. ಸಿಮೋನನ ಹೆಂಡತಿ ಮೇಣದ ಬತ್ತಿಯೊಂದನ್ನು ಹೊತ್ತಿಸಿತಂದು ಪಾದರಿಗಳ ಮುಂದೆ ಇರಿಸಿದಳು. +ಗೋನಸ್ವಾಲಿಸ್ ಸಾಯಂಕಾಲದ ಪ್ರಾರ್ಥನೆ ಮುಗಿಸಿದರು. ಇಲ್ಲಿಯವರೆಗೆ ತನ್ನನ್ನು ಕರೆತಂದು ದೇವರ ಸೇವೆಗೆ ಅನುವು ಮಾಡಿಕೊಟ್ಟಿದಕ್ಕಾಗಿದೇವರಿಗೆ ಕೃತಜ್ಞತೆಸಲ್ಲಿಸಿದರು. ಬೋನಾ ಸಿಮೋನನ ಅಡಿಗೆ ಮನೆ ಹೊಕ್ಕು ಎರಡುಮೊಟ್ಟೆ ಹುರಿದು, ಬರುವಾಗ ತಂದ ಬ್ರೆಡ್ಡನ್ನು ತಟ್ಟೆಯಲ್ಲಿರಿಸಿ ತಂದು ಪಾದರಿಗಳ ಮುಂದಿರಿಸಿದ. +“ಬೋನಾ..ನನಗೆ ಇಷ್ಟೇ ಸಾಕು.“ಎಂದರು ಗೋನಸ್ವಾಲಿಸ್. +“ನಿನ್ನ ಗಾಡಿಯಲ್ಲಿ ಕೂತು ಬಂದು ಮೈ ಕೈ ಎಲ್ಲ ನೋವು..“ಎಂದು ಮೈ ಮುರಿದರು. +ಅವರು ಊಟದ ಶಾಸ್ತ್ರ ಮುಗಿಸುತ್ತಿರಲು ಸಿಮೋನ ಹೋಗಿ ಕೊಪೆಲಿನ ಗಂಟೆ ಹೊಡೆದ. ಸಾಯಂಕಾಲದ ಪ್ರಾರ್ಥನೆಯ ಗಂಟೆ. ಗೋವಾ, ಕಾರವಾರ, ಹೊನ್ನಾವರಗಲ ಇಗರ್ಜಿಯಂತೆ ಸದ್ದು ಪ್ರಬಲವಾಗಿರಲಿಲ್ಲ. ಢಣಾ ಢಣಾ ಅನ್ನುವುದರ ಬದಲು ಯವುದೋ ದನದ ಕುತ್ತಿಗೆಯ ಗಂಟಿನಂತೆ ಟಣ ಟಣ ಎಂದಿತು. ಆದರೆ ಈ ಸದ್ದು ಕೂಡ ಅಲ್ಲಿ ಕವಿದ ಮೌನ, ಕತ್ತಲೆಯ ನಡುವೆ ಇಂಪಾಗಿ ಕೇಳಿಸಿತು. +ಸಿಮೋನನ ಮನೆಯೊಳಗೆ ದೇವರ ಪೀಠದ ಮುಂದೆ ಮೇಣದ ಬತ್ತಿ ಹಚ್ಚಲಾಯಿತು. ಅವನ ತಾಯಿ, ಹೆಂಡತಿ, ಮಕ್ಕಳು ಅಲ್ಲಿ ಮೊಣಕಾಲೂರಿದರು. ಸಿಮೋನ ಬಾಗಿಲಲ್ಲಿ ನಿಂತ. ಪಾದರಿ ಗೋನಸ್ವಾಲಿಸ್ ಕುರ್ಚಿಯಲ್ಲಿಯೇ ಗಂಭೀರವಾಗಿ ಕುಳಿತರು. +ಮೊದಲು ಹಣೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ನಂತರ ಜಪಸರ ಪ್ರಾರ್ಥನೆ. ಕೊನೆಯಲ್ಲಿ ’ಜೂಜೆ ಬಾಪ ಪಾವತೂ ಆಮೈಂ (ತಂದೆ ಜೋಸೇಫರೇ ನಮ್ಮನ್ನು ಕಾಪಾಡಿ) ಎಂಬ ಕೀರ್ತನೆ. ಮನೆಯ ಹಿರಿಯರುಮಕ್ಕಳು ಒಕ್ಕೊರಲಿನಿಂದ ಅದನ್ನು ಹೇಳುವಾಗ ಗೋನಸ್ವಾಲಿಸರಿಗೆ ರೋಮಾಂಚನವಾಯಿತು. ಎಲ್ಲಿ ಕ್ರೈಸ್ತ ಧರ್ಮ ಸಾಸಿವೆ ಕಾಳಿನಷ್ಟೂ ಇಲ್ಲ ಎಂದುಕೊಂಡು ತಾನು ಗಾಬರಿಯಾಗಿದ್ದೆನೋ ಅಲ್ಲಿ ಸಾಯಂಕಾಲದ ಪ್ರಾರ್ಥನೆ, ಕೀರ್ತನೆ ಕೇಳಿ ಬಂದು ಅವರು ಸಂತಸ ಪಟ್ಟರು. ಸಿಮೋನನ ಕುಟುಂಬ ಕ್ರಿಸ್ತನಲ್ಲಿ ಮೇರಿ ಮಾತೆಯಲ್ಲಿ ಅಪಾರ ಭಕ್ತಿಯನ್ನು ಇರಿಸಿಕೊಂಡು ದೈವಭೀತಿಯೊಡನೆ ಬದುಕುತ್ತಿರುವುದನ್ನು ಅವರು ಕಂಡರು. ಶಿವಸಾಗರದ ಉಳಿದ ಕ್ರೈಸ್ತ ಕುಟುಂಬಗಳಲ್ಲಿ ಕೂಡ ಇದೇ ಪರಿಸ್ಥಿತಿ ಇರಬಹುದು ಎನಿಸಿತು ಅವರಿಗೆ. +ಪ್ರಾರ್ಥನೆ ಮುಗಿಸಿದ ಎಲ್ಲರೂ ಅವರ ಮುಂದೆ ಬಂದು ನಿಂತು- +“ಬೆಸಾಂವ ದಿಯಾ ಪದ್ರಬಾ“ಎಂದು ದೇವರ ಆಶೀರ್ವಾದಕ್ಕಾಗಿ ಕೈ ಜೋಡಿಸಿ ನಿಂತರು. ಅವರೆಲ್ಲರಿಗೂ ಆಶೀರ್ವದಿಸಿ- +“ದೇವಾಚೆಂ ಬೆಸಾಂವ“ಎಂದರು. ನಂತರ ಮಕ್ಕಳು, ಅಜ್ಜಿ, ತಾಯಿ, ತಂದೆಯ ಹತ್ತಿರ ಆಶೀರ್ವಾದ ಕೇಳುವ ಸಂಭ್ರಮ. +* +* +* +ಬೋನ ಜಗಲಿಯ ಮೇಲೆಯೇ ಗೋನಸ್ವಾಲಿಸ್ ರ ಹಾಸಿಗೆ ಹಾಸಿದ. ಹೊರ ಹೋಗಿ ಬಂದ ಪಾದರಿ ಹಾಸಿಗೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತ- +’ಸಿಮೋನ’ ಎಂದರು- +“ಪದ್ರಬಾ..“ಅವ ಓಡಿ ಬಂದ. +“ನಾಳೆ ಮೊದಲು ಕೊಪೆಲ ಶುಚಿ ಮಾಡೋಣ..ನಂತರ ಒಂದು ಪೂಜೆ..ಎಲ್ಲರಿಗೂ ಹೇಳಿ ಬಿಡು..“ಎಂದರು. +“ಆಯ್ತು ಪದ್ರಬಾ..” +ಅವರು ಕುತ್ತಿಗೆಯಲ್ಲಿಯ ಶಿಲುಬೆ ತೆಗೆದು, ಅದಕ್ಕೆ ಮುತ್ತಿಟ್ಟು, ಮಲಗುವ ಮುನ್ನ ಪ್ರಾರ್ಥನೆ ಮಾಡಿ, ತಲೆದಿಂಬಿನ ಮೇಲೆ ಶಿಲುಬೆಯ ಗುರುತು ಎಳೆದು ಮಲಗಿ, ತುಸು ಛಳಿ ಇದ್ದುದರಿಂದ ಹೊದಿಕೆ ಎಳೆದುಕೊಂಡರು. ಬೋನ ಕೂಡ ಬೇರೊಂದು ತುದಿಯಲ್ಲಿ ಮಲಗುವ ಸಿದ್ಧತೆಗೆ ತೊಡಗಿದ. ಅವನಿಗೂ ದಣಿವಾಗಿತ್ತು. +ಆಗಲೇ ಸಿಮೋನ ಅಂಗಳಕ್ಕೆ ಇಳಿದು ಚಪ್ಪಲಿ ಸಿಕ್ಕಿಸಿಕೊಂಡ. ಈ ಕತ್ತಲೆಯಲ್ಲಿ ಗಂಡ ಎಲ್ಲಿಗೋ ಹೊರಟಿರುವುದನ್ನು ಗಮನಿಸಿದ ಹೆಂಡತಿ- +“ಅಲ್ಲ ಈಗ ಎಲ್ಲಿಗೆ?“ಎಂದು ಮೆದು ದನಿಯಲ್ಲಿ ಕೇಳಿದಳು. ಜಗಲಿಯ ಮೇಲೆ ಮಲಗಿಕೊಂಡ ಪಾದರಿಗಳಿಗೆ ತನ್ನ ಮಾತಿನಿಂದ ತೊಂದರೆಯಾಗದಿರಲೆಂದು. +“…………ಕೇರಿಯೊಳಗೆ ಹೋಗಿ ಬರತೀನಿ…ಇಷ್ಟು ದಿನ ಹ್ಯಾಗೋ ಆಯ್ತು-ಇನ್ನಾದರೂ ನಮ್ಮವರು ಇಗರ್ಜಿಗೆ ಬರಬೇಕಲ್ಲ..” +ಎನ್ನುತ್ತ ಆತ ದಣಪೆ ಕಣಿವೆ ದಾಟಿದ. ಪಾಸ್ಕೋಲ, ಕೈತಾನರ ಜತೆ ಹೊಗಿ ತಾನು ಪಟ್ಟ ಪ್ರಯತ್ನ ಫಲಕಾರಿಯಾದ ಬಗ್ಗೆ ಅವನಿಗೆ ಸಂತಸವಾಗಿತ್ತು. ಪಾದರಿಗಳು ಊರಿಗೆ ಬಂದರು ನಿಜ. ಆದರೆ ಇದರ ಪ್ರಯೋಜನವನ್ನು ಜನ ಪಡೆಯಬೇಕಲ್ಲ. ಪ್ರತಿ ಭಾನುವಾರಗಳಂದು ಜನ ಒಂದೆಡೆ ಸೇರಿ ಪ್ರಾರ್ಥನೆ ಮಾಡಲು ಅನುಕೂಲವಾಗಲಿ ಎಂದು ನಾನೇ ಮುಂದೆ ನಿಂತು ಕೊಪೆಲ ಕಟ್ಟಿದೆ. ಮೊದ ಮೊದಲು ಜನ ಬಂದರು. ನಂತರ ಜನ ಅತ್ತ ಸುಳಿಯುವುದು ನಿಂತು ಹೋಯಿತು. ತಾನು ತನ್ನ ಮನೆಯವರಷ್ಟೇ ಕೆಲ ವಾರ ಹೋದೆವು. ನಂತರ ಅದೂ ಕೂಡ ತನಗೆ ಬೇಡ ಎನಿಸಿ ಈಗ ಕೊಪೆಲ ಹಾಳು ಸುರಿಯುತ್ತಿದೆ. ಹೋಗಲಿ ಮನೆಗಳಲ್ಲಾದರೂ ಪ್ರಾರ್ಥನೆ ಮಾಡುತ್ತೇರೆಯೇ? ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಾರೆಯೇ? ಅದೂ ಇಲ್ಲ. ಎಷ್ಟೋ ಜನ ಪರಲೋಕ ಮಂತ್ರ, ನಮೋ ರಾಣಿ ಮಂತ್ರಗಳನ್ನು ಮರೆತಿದ್ದಾರೆ. ಇವರನ್ನೆಲ್ಲ ಮೊದಲು ಕೊಪೆಲಗೆ ಕರೆ ತರಬೆಕು. ನಂತರ ಮರೆತುಹೋದುದನ್ನು ನೆನಪಿಗೆ ತರಬೇಕು. ದೇವರು, ಸಂಪ್ರದಾಯ ಪದ್ಧತಿಗಳಿಂದ ಈ ಜನ ದೂರವೇ ಉಳಿದರೆ ಪಾದರಿಗಳು ಬಂದು ಏನು ಪ್ರಯೋಜನ? ಸಿಮೋನ ಕತ್ತಲಲ್ಲಿಯೇ ಮುನ್ನಡೆದ. +ರಸ್ತೆ ಮಗ್ಗುಲ ಎಮ್ಮೆ ಮರಿಯಳ ಮನೆಯತ್ತ ತಿರುಗಬೇಕಾದರೇನೆ ಎಮ್ಮೆ ಶಗಣಿ ಗಂಜಳದ ವಾಸನೆ ಮೂಗಿಗೆ ಬಡಿಯಿತು. ಗೊಡೆ ಮಗ್ಗಲ ಗೂಡಿನಲ್ಲಿ ಚಿಮಣಿ ದೀಪ ಮಂಕಾಗಿ ಉರಿಯುತ್ತಿತ್ತು. +’ಮರಿಯಾ..?’ +ಎಂದು ಅಂಗಳದಲ್ಲಿಯೇ ನಿಂತು ಕೂಗಿದ ಸಿಮೋನ. +“ಯಾರು?” +ಮರಿಯಾ ಹೊರಬಂದಳು. +“ಯಾರು? ಸಿಮೋನಣ್ಣ..ಅಲ್ಲ ಊರಿಗೆ ಪಾದರಿಗಳು ಬಂದಿದ್ದಾರಂತೆ..ಹೌದಾ?“ಎಂದು ಅವಳೇ ಕೇಳಿದಳು. +“ಅದಕ್ಕೇ ಬಂದೆ ನಾನು..ನಾಳೆ ಕೊಪೆಲನಲ್ಲಿ ಪೂಜೆ ಇದೆ..ಮೊದಲ ಬಾರಿ ಪಾಪ ನಿವೇದನೆ. ದಿವ್ಯಪ್ರಸಾದ ನೀಡೋದು..ಮಕ್ಕಳಿಗೆಲ್ಲ ಜಪ ಮಂತ್ರಗಳು ಬರುತ್ವೆ ಅಲ್ವೆ..” +“ಬರುತ್ತೆ..” +“ಎಲ್ಲ ಬನ್ನಿ ನಾಳೆ ಮಧ್ಯಾಹ್ನ..” +ಸಿಮೋನ ಮೂರನೇ ಮನೆಯತ್ತ ತಿರುಗಿದ. ಸುತಾರಿ ಇನಾಸನ ಮನೆಯ ಅಂಗಳಕ್ಕೆ ಕಾಲಿಡುವುದಕ್ಕೂ ಮೊದಲು ಅವನ ಮೂಗಿಗೆ ಊದಿನ ಕಡ್ದಿಯ ವಾಸನೆ ಅಡರಿತು. ಅಂಗಳದ ನಡುವಣ ಕುಟಿಗ ದೈವದ ಸುತ್ತ ಹೊಗೆ ಸುತ್ತಿಕೊಂಡಿತ್ತು, ಆ ಕತ್ತಲಲ್ಲೂ ಕುಟಿಗನ ಸುತ್ತ ಬಿದ್ದ ಹೂವು, ಕುಂಕುಮ ಅವನಿಗೆ ಕಂಡಿತು. ಈ ಕುಟಿಗನ ಮಗ್ಗುಲಲ್ಲಿ ನಿಂತು- +“ಇನಾಸ“ಎಂದು ಕರೆದ. +ಇನಾಸ ಅವನ ಜಗಲಿಯ ಮೇಲೆ ಕುಳಿತಿದ್ದ. +“ಯಾರು?..ಸಿಮೋನನ?” +“ಹೌದು..ಅಲ್ಲ ಪಾದರಿಗಳು ಬಂದಿರೋದು ಗೊತ್ತಲ್ಲ”. +“ಗೊತ್ತು ಇವಳು ಹೇಳತಿದ್ಲು..” +“ನಾಳೆ ಕೊಪೆಲದ ಹತ್ರ ಬಂದು ಬಿಡಿ..ಕೊಪೆಲನ ಶುಚಿ ಮಾಡಬೇಕು..ಹಾಗೇನೆ ಪೂಜೆ ಇದೆ..” +“ಹಾಂ ಹುಂ..” +ಎಂದೆನೂ ಹೇಳಲಿಲ್ಲ ಇನಾಸ. ಸಿಮೋನ ಮುಂದೆ ಹೊರಟ. ನಾಲ್ಕು ಹೆಜ್ಜೆ ಇಟ್ಟಾಗ ಕೊಪೆಲದ ಹಿಂಬದಿಯ ಮರಗಳ ನಡುವಿನಿಂದ ಯಾರೋ ಹೆಂಗಸು ಹೊರಬಂದಂತೆನಿಸಿ ಸಿಮೋನ- +“ಯಾರು? “ಎಂದು ಕೇಳಿದ. +“ನಾನು..” +ಅವಳ ದನಿಯಿಂದಲೇ ಅವಳು ಕೈತಾನನ ಹೆಂಡತಿ ಎಂಬುದು ತಿಳಿದು ಹೋಯಿತು. ಇವನು ಕೇಳುವ ಮುನ್ನವೇ ಅವಳು ಇವನ ಮನಸ್ಸಿನಲ್ಲಿರುವುದನ್ನು ಗ್ರಹಿಸಿದವಳಂತೆ- +“ಮಗು ಮೂರು ದಿನದಿಂದ ಅಳತಾ ಇದೆ..ಅದಕ್ಕೆ ಅಮ್ಮನ ಬಂಡಾರ ತಂದೆ ಹಚ್ಚೋಣ ಅಂತ..“ಎಂದಳು. ಇವನು ಮಾತನಾಡಲಿಲ್ಲ. ತಾನು ಮಾಡ ಹೊರಟ ಕೆಲಸ ನೆನಸಿಕೊಂಡಂತೆ. +“..ಪಾದರಿಗಳು ಬಂದಿದ್ದಾರೆ..ನಾಳೆ ಕೊಪೆಲಗೆ ಬನ್ನಿ“ಎಂದವನೇ ಮುಂದೆ ನಡೆದ. +ಕೆಲವರು ರಸ್ತೆಯಲ್ಲಿಯೇ ಸಿಕ್ಕರು. ಕೆಲವರು ಮನೆಯಲ್ಲಿ. ಎಲ್ಲರಿಗೂ ಹೇಳಿ ತಿರುಗಿದ. +ಹೊರಟಾಗಿನ ಉತ್ಸಾಹ ಹಿಂತಿರುಗುವಾಗ ಉಳಿದಿರಲಿಲ್ಲ. ಇಲ್ಲಿಯ ಕ್ರೀಸುವರೆಲ್ಲ ನಿಜ ದೇವನ ಆರಾಧನೆಯನ್ನು ಬಿಟ್ಟುಬಿಟ್ಟು ಸುಳ್ಳು ದೇವನ, ಭೂತಗಳ ಆರಾಧನೆಗೆ ಹೊರಟಿರುವುದು ಈಗ ಮತ್ತೂ ಸ್ಪಷ್ಟವಾಯಿತು. ಈ ಹಿಂದೆ ಇದೇ ಕಾರಣಕ್ಕಾಗಿ ಹಲವು ಬಾರಿ ಆತ ಕೊರಗಿದ್ದ. ಈಗ ಪಾದರಿ ಊರಿಗೆ ಬಂದಾಗ ಈ ಕೊರಗು ಮತ್ತೂ ಗಾಢವಾಯಿತು. ಆದರೂ ಮನಸ್ಸಿಗೊಂದು ಸಮಾಧಾನ ತಂದುಕೊಂಡ. ಕ್ರೀಸುವರ ಆತ್ಮದ ಗುರುವು, ಮಾರ್ಗದರ್ಶಕರು, ಆಧ್ಯಾತ್ಮಿಕ ಬದುಕಿನ ಹೊಣೆಗಾರರು ಆದ ಪಾದರಿಗಳು ಊರಿನಲ್ಲಿಯೇ ನೆಲೆಸಿ ಜನರನ್ನು ಕಾಪಾಡಲೂ ನೋಡಿಕೊಳ್ಳಲು ಬಂದಿರುವಾಗ ಇನ್ನು ಚಿಂತೆ ಇಲ್ಲ ಎನಿಸಿತು. +ರಸ್ತೆ ಮಗ್ಗುಲ ದೀಪ ಮಂಕಾಗಿ ಉರಿಯುತ್ತಿತ್ತು. ಕೆಲ ನಾಯಿಗಳು ಅಲ್ಲಿ ಸೇರಿ ಗದ್ದಲ ಮಾಡುತ್ತಿದ್ದವು. ಅವುಗಳನ್ನು ಓಡಿಸಿ, ದಣಪೆಯ ಅಡ್ಡಗಳು ಎಳೆದು ಏನೇ ಎಂದು ಹೆಂಡತಿಯನ್ನು ಕರೆಯುತ್ತ ಅಂಗಳ ದಾಟಿದ. ಈ ಬದಿಯಲ್ಲಿ ಪಾದರಿಗಳು, ಆ ಬದಿಯಲ್ಲಿ ಅವರ ಕುಜ್ನೇರ ಬೋನ ಮಲಗಿದ್ದರು. +ಪಾದರಿಗಳು ಈ ದೇಶದವರಲ್ಲ. ಎಲ್ಲಿಯವರೊ, ಈ ಹಿಂದೆ ಗೋವೆಯಲ್ಲಿ ಇದ್ದಿದ್ದರೇನೋ. ಅಲ್ಲಿ ಬಂಗಲೆ, ಮಂಚ ಎಂದು ಸುಖದಲ್ಲಿದ್ದವರು. ಅವರು ಜಗುಲಿಯ ಮೇಲೆ ಮಲಗಿದ್ದಾರೆ. ಮನೆಯೊಳಗೆ ಮಲಗಿಕೊಳ್ಳಿ ಎಂದೆ. +“ಬೇಡ..ನನಗೆ ಇಲ್ಲೇ ಆದೀತು.“ಎಂದರು. +ಸರಳತೆ ಎಂದರೆ ಇದು. ಮುರುಡೇಶ್ವರದ ಪಾದ್ರಿಗಳನ್ನು ತಾನು ಬಲ್ಲೆ. ಅವರು ಕೂಡ ಹೀಗೆಯೇ. ಶಿರಾಲಿ, ಸಾನಬಾವಿಗೆ ಹೋದಾಗ ಯಾರದೋ ಹಿತ್ತಿಲಲ್ಲಿ ಮಲಗಿ ಬರುತ್ತಾರೆ. ಮೇಲೊಂದು ಮಾವಿನ ಮರ, ಹಲಸಿನ ಮರ ಕೆಳಗೆ ಶಗಣೆ ಸಾರಿಸಿದ ನೆಲ ಇದ್ದರೆ ಸಾಕು ಅವರಿಗೆ. +ಇವರು ಗಾಡಿಯಲ್ಲಿ ಮಂಚ ಕುರ್ಚಿ ಮೇಜು ತಂದಿದ್ದಾರೆ ನಿಜ. ಆದರೆ ಅವೆಲ್ಲ ಬೇಕೇ ಬೇಕು ಎಂದು ಬಯಸುವುದಿಲ್ಲವೇನೋ. +ಸಿಮೋನ ಒಳ ಬಂದ. +ಮಕ್ಕಳೆಲ್ಲ ಮಲಗಿದ್ದರು. ಈಚಲ ಚಾಪೆಯ ಮೇಲೆ ಅವನ ಕಾಲ ಬಳಿ ಇವನ ತಲೆ. ಇವನ ತಲೆಯ ಬಳಿ ಮತ್ತೊಬ್ಬನ ಕೈ. ಮೂಲೆಯಲ್ಲಿ ಹೆಂಡತಿ ಮುದುಡಿ ಕೊಂಡಿದ್ದಳು. ಮತ್ತೂ ದೂರ ತಾಯಿ. +ಈತ ಬಂದ ಸದ್ದಿಗೆ ಹೆಂಡತಿ ಎದ್ದು ಕುಳಿತಳು. +“ಬಂದ್ರಾ…ಹೇಳಿದ್ರ ಎಲ್ಲರಿಗೂ” +“..ಹೇಳಿದೆ..ಆದರೆ ಯಾರಿಗೂ ನಮ್ಮ ದೇವರು, ಪೂಜೆ, ಪ್ರಾರ್ಥನೆ ಬೇಕಾಗಿರೋ ಹಾಗೆ ಕಾಣೆ” +“ಯಾಕೆ ಹಾಗೆ ಹೇಳ್ತೀರ..?” +“..ಇವರಿಗೆ ಕುಟಿಗ ಇದೆ..ಚೌಡಿ ಇದಾಳೆ…ಈವರೆಗೆ ಅವರನ್ನು ನಂಬಿದವರು ಅಲ್ವಾ ಇವರು…ಮುಂದೂ ಅವರೇ ಗತಿ ಅಂದರೆ ಪಾದರಿಗಳು ತಿರುಗಿ ಹೋಗೋದೇ..”. +ಅವಳು ಕತ್ತಲಲ್ಲಿ ಪಿಳ ಪಿಳನೆ ಇವನ ಮುಖ ನೋಡಿದಳು. +“ಊಟ ಮಾಡಿ” +ಕಂಚಿನ ತಟ್ಟೆ ಇಟ್ಟಳು. ತುಸು ತಣ್ಣಗಾದ ಗಂಜಿಯನ್ನು ಅದಕ್ಕೆ ಸುರಿದಳು. ಒಲೆಯಿಂದ ಸುಟ್ಟ ಬಂಗಡೆ ಮೀನನ್ನು ಹೊರತೆಗೆದಳು. ಬಿಸಿ ಬೂದಿಯ ಅಡಿಯಲ್ಲಿದ್ದ ಮೀನು ಹೊರಬಂದ ತಕ್ಷಣ ಅದರ ವಾಸನೆ ಬಂದಿತು. +ಕಾಲ ಮೇಲೆ ಚೊಂಬು ನೀರು ಸುರಿದುಕೊಂಡು ಈತ ಒಳಬಂದು ಊಟಕ್ಕೆ ಕುಳಿತ. +“ಬೆಳಿಗ್ಗೆ ಬೇಗ ಎದ್ದು ಕೊಪೆಲ ಹತ್ರ ಬನ್ನಿ..ಅದಕ್ಕೊಂದು ಆಕಾರ ತಂದು ಕೊಡಬೇಕಲ್ಲ..“ಎಂದ ಹೆಂಡತಿ ಅಪ್ಪಿಬಾಯಿಯ ಮುಖ ನೋಡುತ್ತ. +* +* +* +ಸಿಮೋನ ಕೋಳಿಯ ಹಿಂದೆಯೇ ಏಳುವ ಮನುಷ್ಯ. ಊರಿನಲ್ಲಿ ಇದ್ದಾಗ ಬೆಳಿಗ್ಗೆ ಇಗರ್ಜಿ ಗಂಟೆ ಪ್ರಾರ್ಥನೆ ಸೂಚನೆ ಕೊಟ್ಟಾಗ ಮನೆಮಂದಿ ಎಲ್ಲ ಎದ್ದು ದೇವರ ಪೀಠದ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುವುದು ಅಭ್ಯಾಸ. ಇಲ್ಲಿಗೆ ಬಂದ ನಂತರವೂ ಈ ಅಭ್ಯಾಸ ಮುಂದುವರೆದಿತ್ತು. ಇಲ್ಲಿ‌ಇಗರ್ಜಿ ಗಂಟೆಯ ಸದ್ದು ಕೇಳಿ ಬರುತ್ತಿರಲಿಲ್ಲವಾದರೂ ಅದೊಂದು ಅಭ್ಯಾಸವೆಂಬಂತೆ ತಟ್ಟನೆ ಎಚ್ಚರಗುತ್ತಿತ್ತು. ಹೀಗೆ ಎಚ್ಚರಾದ ನಂತರ ಮುಂಜಾನೆಯ ಪ್ರಾರ್ಥನೆಯೂ ಕೆಲ ಕಾಲ ಮುಂದುವರೆದಿತ್ತು. ಅದೇನು ಕಾರಣವೋ ಮಕ್ಕಳು ಬೆಳಿಗ್ಗೆ ಏಳುವುದನ್ನು ಬಿಟ್ಟರು. ಹೆಂಡತಿ ಕೂಡ. ತಾಯಿ ಹಾಸಿಗೆಯ ಮೇಲೆ ಕುಳಿತೇ ಪ್ರಾರ್ಥನೆ ಮಾಡತೊಡಗಿದಳು. ಇವನು ಮಾತ್ರ ಇದನ್ನು ಬಿಡಲಿಲ್ಲ. +ಎದ್ದು ತಂಬಿಗೆ ತೆಗೆದುಕೊಂಡು ಅಷ್ಟು ದೂರ ಗುಡ್ಡಕ್ಕೆ ಹೋಗಿ ಬರುವಷ್ಟರಲ್ಲಿ ಬಿಸಿಲು ಬಲಿತಿರುತ್ತಿತ್ತು. ಗಂಜಿ ಊಟ ಮುಗಿಸಿ ಇವ ಹೊರಡುತ್ತಿದ್ದ. ಇಂದು ಹಾಗೇಯೆ ಎದ್ದ. ಎದ್ದ ಎಷ್ಟೋ ಹೊತ್ತಿನ ನಂತರ ನಿನ್ನೆ ಪಾದರಿಗಳು ಬಂದದ್ದು ನೆನಪಾಯಿತು. +’ಅಯ್ಯೋ ನನ್ನ ಮರೆವಿಗೆ ಬೆಂಕಿ ಹಾಕ’ +ಎಂದು ಗಡಬಡಿಸಿ ಹೊರಗೆ ಬಂದು ನೋಡಿದ. ಪಾದರಿಗಳ ಹಾಸಿಗೆ ಸುತ್ತಿ ಗೋಡೆಗೆ ಒರೆಗಿಸಲಾಗಿತ್ತು. ಬೋನ ಹಾಸಿಕೊಂಡ ಚಾಪೆ ಮೂಲೆಯಲ್ಲಿ ನಿಂತಿತ್ತು. +ಎಲ್ಲಿಗೆ ಹೋದರು ಇವರು ಎಂದು ಅಂಗಳಕ್ಕೆ ಬಂದ. ದೂರದಲ್ಲಿ ಕೊಪೆಲಿನ ಬಳಿ ಏನೋ ಚಟುವಟಿಕೆ ನಡೆದಿರುವುದು ಮರಗಳ ಮರೆಯಲ್ಲಿ ಕಂಡಿತು. ಅತ್ತ ಓಡಿದ. +ಪಾದರಿ ಗೋನಸ್ವಾಲಿಸ್ ಹಾಗೂ ಅವರ ಕುಜ್ನೆರ್ ಬೋನ ಕೊಪೆಲಿನ ಸುತ್ತ ಬೆಳೆದ ಗಿಡ ಪೊದೆಗಳನ್ನು ಬರಿಗೈಯಿಂದ ಕಿತ್ತು ಹಾಕಿದ್ದರು. ಕೊಪೆಲಿನ ಒಳಗೆ ತುಂಬಿಕೊಂಡ ಕಸವನ್ನು ಶುಚಿ ಮಾಡಿದ್ದರು. ಗೋನಸ್ವಾಲಿಸ್ ತೊಟ್ಟ ಉದ್ದ ನಿಲುವಂಗಿಯನ್ನು ಸೊಂಟದವರೆಗೆ ಎತ್ತಿ ಕಟ್ಟಿಕೊಂಡಿದ್ದರು. ಅವರ ಕೆಂಪು ಮುಖದ ಮೇಲೆ ಬೆವರು ಇಳಿಯುತ್ತಿತ್ತು. +ಸಿಮೋನ ಪೇಚಾಡಿಕೊಂಡ. +“ಇದನ್ನೆಲ್ಲ ನಾವು ಮಾಡತೀವಿ ಪದ್ರಬಾ..” +ಎಂದ. ಅವರು ಕಿತ್ತ ಗಿಡ ಗಂಟೆಯನ್ನು ದೂರ ಕೊಂಡೊಯ್ದು ಹಾಕುತ್ತ- +“ದೇವರ ಆಲಯ ಶುದ್ಧಿ ಮಾಡುವುದರಲ್ಲಿ ನಾನೇನು ನೀನೇನು..ಮುಖ್ಯ ಇದು ನನ್ನ ಕೆಲಸ.“ಎಂದರು. +ಈ ಕೆಲಸ ಮಾಡಲು ಇನ್ನೂ ಒಂದಿಬ್ಬರು ಬಂದರು. +ಸಿಮೋನನ ತಾಯಿ, ಹೆಂಡತಿ ಕೂಡ ಬಂದು ಕೈಗೂಡಿಸಿದರು. +ಕೊಪೆಲನ ಒಳಗೋಡೆಗಳಿಗೆ ಸುಣ್ಣ ಬಳಿಯಲಾಯಿತು. ನೆಲಕ್ಕೆ ಶಗಣಿ ಸಾರಿಸಲಾಯಿತು. +ದೇವರ ಪೀಠವನ್ನು ಶುದ್ಧ ಮಾಡುತ್ತಿದ್ದ ಗೋನಸ್ವಾಲಿಸ್ +’ಸಿಮೋನ..’ ಎಂದು ಕರೆದರು. ಆತ ಅವರ ಮುಖ ನೋಡಿದಾಗ ಅವರು- +“ಸಿಮೋನ ನಾನು ಈವತ್ತಿನಿಂದ ಇಲ್ಲೇ ಇರತೇನೆ.“ಎಂದರು. +“ಕಟ್ಟೆಯ ಕಲ್ಲು ಕಟ್ಟೆಗೆ ಅಂತ ಕೇಳಿದ್ದಿಯೆಲ್ಲ…ನಾನು ಇಲ್ಲಿದ್ದೇ ಮಾಡುವ ಕೆಲಸ ಬಹಳ ಇದೆ..” +“ಅಲ್ಲ ಪದ್ರಬಾ…ಈ ಕಟ್ಟಡ ಮಜಬೂತಾಗಿಲ್ಲ..ನೆಲ ಸರಿ ಇಲ್ಲ..ಮಾಡಿಗೆ ಹುಲ್ಲು ಹೊದೆಸಿದೆ.”. +ನಕ್ಕರು ಪಾದರಿ. +“ದೇವರಿಗೆ ಅಂತ ನೀವು ಕಟ್ಟಿದ ಕಟ್ಟಡ ಅಲ್ಲವೇ ಇದು ? ನಾನು ಇಲ್ಲೇ ಇರತೇನೆ..ನೀನು ಯೋಚನೆ ಮಾಡಬೇಡ..” +ಅವರು ಸ್ನಾನ ಮಾಡಿಬರಲೆಂದು ಸಿಮೋನನ ಮನೆಗೆ ಹೋದರು. ಪಾದರಿ ಕೊಪೆಲಿನಲ್ಲಿ ಉಳಿಯುವುದೇ ಸರಿ ಎಂದಾಯಿತು. ಬೋನನಿಗಾಗಿ ಒಂದು ಮನೆಯನ್ನು ಸಿಮೋನ ಮೇಸ್ತ್ರಿಯ ಮನೆ ಪಕ್ಕದಲ್ಲಿ ಸಜ್ಜುಗೊಳಿಸಲಾಯಿತು. ಬೋನ ತನ್ನ ಪಾತ್ರೆ ಪಡಗಗಳನ್ನು ಅಲ್ಲಿಗೆ ಸಾಗಿಸಿ ಒಲೆ ಹೂಡಿದ್ದೂ ಆಯಿತು. +ಪಾದರಿ ಕೊಪೆಲ್ ಗೆ ಬರುತ್ತಿದ್ದಂತೆಯೇ ಬೋನ ದೇವರ ಪೀಠದ ಮುಂದೆ ಸಾಲುಸಾಲಾಗಿ ಮೇಣದ ಬತ್ತಿ ಹಚ್ಚಿ ಇರಿಸಿದ್ದ. ಸಿಮೋನನ ಹೆಂಡತಿ, ಮಕ್ಕಳು ದೇವರ ಪೈನೆಲಗಳಿಗೆ ಅಬ್ಬಲಿಗೆ ಹೂವಿನ ಹಾರಗಳನ್ನು ಹಾಕಿದ್ದರು. ಕೇರಿಯ ಇನ್ನೂ ಕೆಲವರು ಅಲ್ಲಿ ಸೇರಿದ್ದರು. ಸುಣ್ಣ ಬಳಿದ ಗೋಡೆ. ಶಗಣಿ ಸಾರಿಸಿದ ನೆಲದಿಂದ ಅಲ್ಲಿ ಕೊಪೆಲ ಕಂಗೊಳಿಸುತ್ತಿತ್ತು. +ಪಾದರಿ ಪವಿತ್ರ ಜಲವನ್ನು ಕೊಪೆಲನ ಒಳ ಹೊರಗೆ ಚಿಮುಕಿಸಿ ಅದನ್ನು ಮಂತ್ರಿಸಿದರು. ಪವಿತ್ರ ತೀರ್ಥದ ತುಂತುರು ಹನಿ ತಮ್ಮ ಮೇಲೆ ಬೀಳಲು ಸುತ್ತ ನೆರೆದವರು ಪುಳಕಿತರಾಗಿ ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡು ’ಪಿತನಿಗೂ ಸುತನಿಗೂ, ಸ್ಪಿರಿತು ಸಾಂತುವಿಗೂ ಮಹಿಮೆಯಾಗಲಿ’ ಎಂದು ಪರಮ ತ್ರಿತ್ವಕ್ಕೆ ಸ್ತುತಿ ಮಾಡಿದರು. ಪವಿತ್ರ ಜಲದ ಬಟ್ಟಲನ್ನು ಬೋನನ ಕೈಗಿತ್ತು ಪಾದರಿ ಗೋನಸ್ವಾಲಿಸ್ ಪೀಠದ ಮುಂದೆ ಬಂದು ನಿಂತರು. ದೇವರತ್ತ ತಿರುಗಿ ಎರಡೂ ಕೈಗಳನ್ನು ಆಕಾಶದತ್ತ ಹಿಡಿದು ದೊಡ್ಡ ದನಿಯಲ್ಲಿ ಅವರೆಂದರು- +“ಓ! ನನ್ನ ಪ್ರಭುವೆ. ಈ ಊರಿನ ಕ್ರೀಸುವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅವರ ಆಧ್ಯಾತ್ಮಿಕ ಬೇಡಿಕೆಗಳನ್ನು ಪೂರೈಸಲು. ಅವರನ್ನು ದೈವ ಭೀತಿ, ಪ್ರೀತಿ, ವಿಶ್ವಾಸದಲ್ಲಿ ನಡೆಸಲು, ಪಾಲಕರಾಗಿ ಯಾರೂ ಇರಲಿಲ್ಲವಾಗಿ..ಇಲ್ಲಿಯ ಕ್ರೀಸುವರು ಈ ಕೊರತೆಯಿಂದಾಗಿ ಅಪಾರವಾಗಿ ಬಳಲುತ್ತಿದ್ದರು. ನಾನು ಈ ಕೊರತೆ ಯನ್ನು ನೀಗಿಸಲು ನಿನ್ನ ಆಸೆಯನ್ನು ನೆರವೇರಿಸಲು ಇಲ್ಲಿಗೆ ಬಂದಿದ್ದೇನೆ. ನನ್ನಿಂದ ಈ ಕೆಲಸವನ್ನು ಸಂಪೂರ್ಣವಾಗಿಯೂ ಯಶಸ್ವಿಯಾಗಿಯೂ ಮಾಡಿಸಿಕೊಳ್ಳುವ ಹೊಣೆ ನಿನ್ನದು. ನನಗೆ ಆ ಶಕ್ತಿ ಬರುವಂತೆ ಅನುಗ್ರಹಿಸು ಹಾಗೂ ಈ ಊರಿನ ಕ್ರೀಸುವರಲ್ಲಿ ಅಂತಹ ಮನಸ್ಸು ಬುದ್ಧಿಯೂ ಜಾಗ್ರತವಾಗುವಂತೆ ಮಾಡು..” +ಪಾದರಿ ಒಂದೆರಡು ನಿಮಿಷ ಮೌನ ತಾಳಿದರು. ಅವರ ಗಂಭೀರವಾದ, ಎತ್ತರದ ದನಿ, ತಟ್ಟನೆ ನಿಂತು ಹೊರಗಿನ ಹಕ್ಕಿಗಳ ಗದ್ದಲ ಕೇಳಿ ಬಂದಿತು. ಹೊರಗಿನಿಂದ ಸುಳಿದು ಬಂದ ಗಾಳಿಗೆ ಬತ್ತಿಯ ಕುಡಿಗಳು ಬಳುಕಾಡಿದವು. ಪೈನಲ ಮೇಲಿನ ಹೂ ಹಾರಗಳು ತೂಗಾಡಿದವು. ಸಣ್ಣ ಕೊಠಡಿಯಲ್ಲಿ ಪಾದರಿಯ ತುಂಬು ದನಿ ಬಹಳ ಹೊತ್ತಿನವರೆಗೆ ಗುಂಗುಟ್ಟಿತು. ತಟ್ಟನೆ ಅವರು- +“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ಹೆಸರಿಗೆ ಪೂಜೆಯಾಗಲಿ, ನಿಮ್ಮ ರಾಜ್ಯ ಬರಲಿ ನಿಮ್ಮ ಚಿತ್ತ ಪರಲೋಕದಲ್ಲಿ ಆಗುವ ಹಾಗೆ ಭೂಲೋಕದಲ್ಲಿಯೂ ಆಗಲಿ..” +ಎಂದು ಪದ್ಧತಿಯಂತೆ ಪರಲೋಕ ಮಂತ್ರವನ್ನು ಅರ್ಧಕ್ಕೇನೆ ನಿಲ್ಲಿಸಿದರು. ನಿಯಮದಂತೆ ಉಳಿದವರು ಅದನ್ನು ಮುಂದುವರೆಸಬೇಕಿತ್ತು. ಆದರೆ ಅಲ್ಲಿ ನೆರೆದವರಲ್ಲಿ ಬಹಳಷ್ಟು ಜನ ಪರಲೋಕ ಮಂತ್ರದ ಮುಂದಿನ ಭಾಗವನ್ನು ಹೇಳಲು ಅಸಮರ್ಥರಾಗಿದ್ದರು. +ಬೋನ ತಟ್ಟನೆ ಮುಂದಿನ ಸಾಲುಗಳನ್ನು ಹೇಳ ತೊಡಗಿದ. ಸಿಮೋನನ ದನಿಯೂ ಕೇಳಿಸಿತು. +“….ದಿನಂಪ್ರತಿಯಾದ ನಮ್ಮ ಅನ್ನವನ್ನು ನಮಗೆ ನೀಡು. ನಮಗೆ ತಪ್ಪು ಮಾಡಿದವರಿಗೆ ನಾವು ಕ್ಷಮಿಸುವ ಹಾಗೆ ನಮ್ಮ ತಪ್ಪುಗಳನ್ನೂ ಕ್ಷಮಿಸು. ನಮ್ಮನ್ನು ಶೋಧನೆಯಲ್ಲಿ ಬೀಳಿಸದೆ ಕೇಡಿನೊಳಗಿನಿಂದ ನಮ್ಮನ್ನು ರಕ್ಷಿಸು..ಆಮೆನ..” +ಈ ಪರಲೋಕ ಮಂತ್ರದ ನಂತರ ಮೂರು ನಮೋ ರಾಣೆ ಮಂತ್ರಗಳನ್ನು ಅವರು ನುಡಿದರು. ಇದನ್ನು ಕೂಡ ಮೊದಲ ಅರ್ಧವನ್ನು ಗೋನಸ್ವಾಲಿಸ್ ರು ಹೇಳಿ ನಿಲ್ಲಿಸಿದ ನಂತರ ಉಳಿದ ಅರ್ಧವನ್ನು ಬೋನ ಮತ್ತಿತರರು ಮುಗಿಸಿದರು. +ಇದರ ನಂತರ ಜನರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಲು ಅವರು ಮರೆಯಲಿಲ್ಲ. +ದೇವರ ಪೀಠಕ್ಕೆ ಬೆನ್ನು ಮಾಡಿ ನಿಂತು, ತಮ್ಮ ದಪ್ಪನೆಯ ಉದ್ದ ಗಡ್ಡವನ್ನು ನೇವರಿಸಿಕೊಂಡು, ಕಣ್ಣುಗಳಲ್ಲಿ ಪ್ರೀತಿಯನ್ನು ಗಾಂಭೀರ್ಯವನ್ನು ಸೂಸುತ್ತ ಎದೆ ತುಂಬು ಉಸಿರು ಎಳೆದುಕೊಂಡು ಅವರು- +“ಮೊಗಾಚ ಕ್ರಿಸ್ತವಾಂನೂಂ“(ಪ್ರೀತಿಯ ಕ್ರಿಸ್ತುವರೇ) ಎಂದಾಗ ಎದಿರು ನಿಂತ ಕೆಲವೇ ಜನ ರೋಮಾಂಚನಗೊಂಡರು. +“ಈವರೆಗೆ ನೀವು ಕುರುಬನಿಲ್ಲದ ಕುರಿ ಮಂದೆಯಾಗಿದ್ದೀರಿ. ಅವಿಶ್ವಾಸಿಗಳ ನಡುವೆ ನೀವು ಬದುಕುತಿದ್ದೀರಿ. ಪೂಜೆ, ಪ್ರಾರ್ಥನೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಯಾವುದೇ ಸಂಸ್ಕಾರ ನಿಮಗೆ ಕಾಲ ಕಾಲಕ್ಕೆ ದೊರಕ್ಕುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹೀಗೆ ಆಗಲಿಕ್ಕಿಲ್ಲ. ನಾನು ನಿಮ್ಮ ಆತ್ಮದ ರಕ್ಷಕನಾಗಿ ನಿಮ್ಮ ವಿಶ್ವಾಸದ ಬಲವಾಗಿ ನಿಮ್ಮ ಪಾಲಕನಾಗಿ ಬಂದಿದ್ದೇನೆ..ನೀವು ನಿಮ್ಮ ಪರಿವಾರದವರು ಸ್ನೆಹಿತರು ಇಂದಿನಿಂದ ಏಸು ಪ್ರಭುವಿನ ಪ್ರಭಾವಕ್ಕೆ ಒಳಗಾಗಲಿದ್ದೀರಿ..ಇನ್ನು ನಿಮ್ಮ ಆಧ್ಯಾತ್ಮಿಕ ಬದುಕು ಪ್ರಾರಂಭವಾಯಿತೆಂದು ತಿಳಿಯಿರಿ..ದೇವರಿಗೆ ಹೆದರಿಕೊಳ್ಳಿರಿ..ಸೈತಾನನ್ನು ದೂರ ಮಾಡಿರಿ..” +ಅವರ ಮಾತುಗಳು ದೂರದಲ್ಲಿ ಮೊಳಗುತ್ತಿದ್ದ ಗುಡುಗು ಹತ್ತಿರ ಹತ್ತಿರ ಬರುತ್ತಿರುವಂತೆ ಅಲ್ಲಿರುವವರಿಗೆ ಭಾಸವಾಯಿತು. ಅವರು ಕೆಂಪು ಮುಖದ, ಗಾಜುಗಣ್ಣಿನ ಪಾದರಿ ಗೋನಸಾಲ್ವಿಸರ ಮಾತುಗಳನ್ನು ಕೇಳುತ್ತಾ ನಿಂತರು. +ಶಿವಸಾಗರಕ್ಕೆ ಬಂದು ತಲುಪಿದ ಮಾರನೇ ದಿನವೇ ಪಾದರಿ ಗೋನಸ್ವಾಲಿಸ್ ತಮ್ಮ ಕಾರ್ಯವನ್ನು ಆರಂಭಿಸಿದರು. ಕೂಡಲೇ ಈ ಕೆಲಸವನ್ನು ಆರಂಭಿಸುವಂತೆ ಅವರಿಗೆ ಒಳಗಿನ ಒತ್ತಡವೂ ಇತ್ತು. +ಈಗ ಕೆಲವು ತಿಂಗಳುಗಳ ಹಿಂದೆ ಅವರು ಗೋವೆಗೆ ಹೋಗಿ ಅಲ್ಲಿಯ ಪ್ರಾವಿನ್ಶಿಯಲ್ ಅವರನ್ನು ಕಂಡಿದ್ದರು. ಈ ಪ್ರದೇಶ ಗೋವೆಯ ಪ್ರಾವಿನ್ಶಿಯಲ್ ಅವರ ವಶದಲ್ಲಿತ್ತು. ಪಾದರಿಗಳ ವರ್ಗಾವರ್ಗಿ, ಆದಳಿತ, ಸಮಸ್ಯೆಗಳ ನಿವಾರಣೆ, ಪ್ರತಿಯೊಂದನ್ನು ಅವರು ನೋಡಿಕೊಳ್ಳುತ್ತಿದ್ದರು. ಪಾದರಿ ಗೋನಸ್ವಾಲಿಸ್ ರ ಕಾರ್ಯಕ್ಷಮತೆಯ ಬಗ್ಗೆಯೂ ಅವರಿಗೆ ತಿಳಿದಿತ್ತು. +ಭಾರತೀಯ ಪಾದರಿಗಳು ಇನ್ನೂ ಸೇವೆಗೆ ಇಳಿಯದ ಕಾಲವದು. ಇಲ್ಲಿಯ ತರುಣರು ಅದೇ ಸೆಮಿನರಿಗಳಿಗೆ ಸೇರಿಕೊಂಡಿದ್ದರು. ವಿದೇಶಿ ಪಾದರಿಗಳಿಗೆ ಇಲ್ಲಿಯ ಹವಾಮಾನ‌ಆಹಾರ ಉಡಿಗೆ ತೊಡಿಗೆ ಹಿಡಿಸದಿದ್ದರೂ ಕ್ರಿಸ್ತನ ಮೇಲಿನ ಅಪಾರ ಭಕ್ತಿಯಿಂದ ಅವರು ಇಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದರು. ಇಲ್ಲಿಯವರನ್ನೆಲ್ಲ ’ಅವಿಶ್ವಾಸಿಗಳು’ ಎಂದೇ ತಿಳಿದ ಇವರು, ಈ ಜನರನ್ನು ಕ್ರಿಸ್ತನ ಕೃಪಾಕಟಾಕ್ಷಕ್ಕೆ ತಂದು ಇವರನ್ನು ಉದ್ಧರಿಸಬೇಕೆಂದು ಪಣ ತೊಟ್ಟರು. ಹಲವಾರು ಕಷ್ಟ ತಾಪತ್ರಯಗಳನ್ನು ಸಹಿಸಿಕೊಂಡು ಕ್ರಿಸ್ತನ ವಾಣಿಯನ್ನು ಇವರೆಲ್ಲರಿಗೂ ತಿಳಿಸಿಕೊಡಲು ಇವರು ಪಣತೊಟ್ಟು ನಿಂತರು. ಇವರ ಈ ನಿರ್ಧಾರ, ಹಟದಿಂದಾಗಿ ಇಲ್ಲಿಯ ಊರು ಪಟ್ಟಣಗಳಲ್ಲಿ ಕ್ರೀಸುವರ ಸಂಖ್ಯೆ ಹೆಚ್ಚತೊಡಗಿತು. ಅಲ್ಲಲ್ಲಿ ಆಕಾಶವನ್ನೇ ತಿವಿಯುವ ತ್ರಿಕೋಣಾಕಾರದ ಇಗರ್ಜಿಗಳೂ ನೆತ್ತಿಯ ಮೆಲೆ ಶಿಲುಬೆಯೊಂದನ್ನು ಸಿಕ್ಕಿಸಿಕೊಂಡು ಎದ್ದು ನಿಂತವು. +ಪೋರ್ತುಗಾಲರಿಂದ ಬಂದ ಪಾದರಿ ಗೋನಸ್ವಾಲಿಸ್ ಕೂಡ ಕ್ರಿಸ್ತನ ತತ್ವಗಳನ್ನು ಎಲ್ಲೆಲ್ಲೂ ಹರಡಬೇಕೆಂದು ಶಪಥ ತೊಟ್ಟಿದ್ದರಿಂದ ಅವರು ಹಿಂದೆ ಕೆಲಸ ಮಾಡಿದಲ್ಲೆಲ್ಲ ಉತ್ತಮ ಹೆಸರನ್ನು ಗಳಿಸಿದ್ದರು. ಪಣಜಿಯ ಪ್ರಾವಿನ್ಶಿಯಲ್ ಅವರಿಗೆ ಪಾದರಿ ಗೋನಸ್ವಾಲಿಸ್ ರ ಸೇವೆ ತ್ಯಾಗದ ಬಗ್ಗೆ ಸಾಕಷ್ಟು ಗೊತ್ತಿತ್ತು. +ತಮ್ಮ ಬಳಿ ಬಂದ ಗೋನಸ್ವಾಲಿಸ್ ರನ್ನು ಪ್ರೀತಿಯಿಂದ ಮಾತನಾಡಿಸುತ್ತ ಅವರು- +“..ನೀವು ಹೊನ್ನಾವರಕ್ಕೆ ಹೋಗಿ ಎರಡು ವರ್ಷಗಳಾದವು ಅಲ್ಲವೇ, ವಿಗಾರ್?“ಎಂದು ಕೇಳಿದರು. +“..ಹೌದು ಮಾನಸೇನ್ಯರ್..” +ಎಂದು ವಿನಯದಿಂದ ಉತ್ತರಿಸಿದರು ಪಾದರಿ ಗೋನಸ್ವಾಲಿಸ್. +“ನೋಡಿ ವಿಗಾರ..ಕರಾವಳಿ ತೀರದಲ್ಲಿ ನಾವು ಕ್ರಿಸ್ತಪ್ರಭುವಿನ ನುಡಿಗಳನ್ನು ಸಾಕಷ್ಟು ಬಿತ್ತಿದ್ದೇವೆ. ಇಲ್ಲಿ ಬೆಳೆಯೂ ಚೆನ್ನಾಗಿದೆ. ಆದರೆ ನಾಡಿನ ಒಳಭಾಗದಲ್ಲಿ ಈ ಕೆಲಸ ಆಗಬೇಕಿದೆ. ಜೊತೆ ಜೊತೆಗೆ ಕ್ರೀಸುವರಾಗಿದ್ದೂ ಕ್ರೈಸ್ತ ಸಂಪ್ರದಾಯ ಆಚರಣೆಗಳಿಂದ ದೂರವಿರುವವರ ಬಗ್ಗೆಯೂ ನಾವು ಯೋಚಿಸಬೇಕಾಗಿದೆ“ಎಂದು ಪೀಠಿಕೆ ಹಾಕಿದ್ದರು. +ನಾಡಿನ ತೀರ ಒಳ ಪ್ರದೇಶದಲ್ಲಿ ಯಾವು ಯಾವುದೋ ಕಾರಣಗಳಿಂದಾಗಿ ಹೋಗಿ ಸೇರಿಕೊಂಡಿರುವ ಕ್ರೈಸ್ತರು ಇದ್ದಾರೆ. ಇವರು ಅತ್ಯಲ್ಪ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೋ ಇಲ್ಲವೆ ಗೋವಾದ ಪ್ರಾವಿನ್ಶಿಯಲ್ ಆಡಳಿತದಿಂದ ದೂರವಿದ್ದಾರೆ ಎಂಬ ಕಾರಣಕ್ಕೋ ಇವರು ಯಾರ ಕಣ್ಣಿಗೂ ಬಿದ್ದಿಲ್ಲ. ಜಪ ಪ್ರಾರ್ಥನೆ, ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಕ್ರಿಸ್ತ ಸಂಸ್ಕಾರ ಇವರಿಗೆ ಲಭ್ಯವಾಗುತ್ತಿಲ್ಲ. ಇವರ ನಡುವೆ ಓರ್ವ ಪಾದರಿ ಇಲ್ಲದಿರುವುದರಿಂದ ಇವರು ತಮ್ಮ ಸುತ್ತ ಇರುವ ಬಹು ಸಂಖ್ಯಾತ ಹಿಂದುಗಳ ದೇವರನ್ನು ನಂಬುತ್ತ, ಅವರ ಸಂಸ್ಕಾರಗಳನ್ನು ಆಚರಿಸುತ್ತ ಬೆಳೆಯುತ್ತಾರೆ. ಇವರು ಮಕ್ಕಳಂತೂ ಸಂಪೂರ್ಣ ಅಕ್ರೈಸ್ತರಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಕೆಚ್ಚು ಧೈರ್ಯ ಭಕ್ತಿ ಇರುವ ಪಾದರಿಗಳು ಹೋಗಬೇಕು ಎಂಬ ಮಾತುಗಳನ್ನು ಪ್ರಾವಿನ್ಶಿಯಲ್ ಹೇಳಿದ್ದರು. +’…ಹೌದು ಮಾನಸೇವ್ಯರ…ತಮ್ಮ ಮಾತು ನಿಜ..ನಮ್ಮ ಸಮೋಡ್ತ ಬಲಿಷ್ಠವಾಗಿ ಬೆಳೆಯಬೇಕೆಂದರೆ ಈ ಕೆಲಸ ಆಗಬೇಕು’ ಎಂದು ಉತ್ತರಿಸಿದ್ದರು ಪಾದರಿ ಗೋನಸ್ವಾಲಿಸ್. +ಒಂದು ದಿನ ಪಣಜಿಯಲ್ಲಿದ್ದು, ಹಾಗೆಯೇ ಹಿಂದೆ ತಾವು ಕೆಲಸ ಮಾಡುತ್ತಿದ್ದ ಬಾಲ ಏಸುವಿನ ಇಗರ್ಜಿಗೂ ಹೋಗಿ ಪೋಂಡಾ, ಮಾಪುಸಾಗಳಲ್ಲಿದ್ದ ಸ್ನೇಹಿತರನ್ನು ಮಾತನಾಡಿಸಿಕೊಂಡು ಅವರು ಹೊನ್ನಾವರಕ್ಕೆ ತಿರುಗಿ ಬಂದರು. +ಅವರು ಹೊನ್ನಾವರಕ್ಕೆ ಬಂದು ಒಂದು ತಿಂಗಳೂ ಆಗಿರಲಿಲ್ಲ. ಪಣಜಿಯಿಂದ ಪ್ರಾವಿನ್ಶಿಯಲ್ ಒಂದು ಪತ್ರ ಕಳುಹಿಸಿದರು. +“ಘಟ್ಟದ ಮೇಲಿನ ಶಿವಸಾಗರ ಎಂಬ ಊರಿಗೆ ನಿಮ್ಮ ಅವಶ್ಯಕತೆ ಬಹಳ ಇದೆ. ನೀವು ಅಲ್ಲಿ ಹೋಗಿ ಅಲ್ಲಿ ಇರುವ ಕ್ರೀಸುವರನ್ನು ರಕ್ಷಣೆ ಮಾಡಿ. ಅವರೆಲ್ಲ ಕ್ರಿಸ್ತುವಿನ ಕೋಮಲ ಹಸ್ತದಿಂದ ನುಣುಚಿಕೊಂಡು ಸೈತಾನನ ಬಲೆಗೆ ಬೀಳುತ್ತಿದ್ದಾರೆ ಎಂಬ ವರದಿ ನಮಗೆ ಬಂದಿದೆ. ನೀವು ಕೂಡಲೆ ಹೊರಡಿ. ತಾತ್ಕಾಲಿಕವಾಗಿ ಸುಂಕೇರಿಯ ವಿಗಾರ್ ಮಚಾದೋ ಅವರನ್ನು ಹೊನ್ನಾವರಕ್ಕೆ ಹಾಕಲಾಗಿದೆ. ಅವರಿಗೆ ಪರಮ ಪ್ರಸಾದದ ಪೆಟ್ಟಿಗೆಯ ಬೀಗದ ಕೈ ನೀಡಿ ನೀವು ಮುಂದಿನ ಊರಿಗೆ ಹೊರಡಿ..“ಎಂದು ಪ್ರಾವಿನ್ಶಿಯಲ್ ಅವರ ಪತ್ರದಲ್ಲಿ ಬರೆದಿದ್ದರು. ಆ ಪ್ರಕಾರವೇ ಪಾದರಿ ಗೋನಸ್ವಾಲಿಸ್ ಘಟ್ಟವೇರಿ ಶಿವಸಾಗರಕ್ಕೆ ಬಂದು ತಲುಪಿದ್ದರು. +ಶಿವಸಾಗರದ ಕೊಪೆಲಿನಲ್ಲಿ ಒಂದು ಪೂಜೆಯನ್ನು ಕೂಡ ಅವರು ಮಾಡಿ ಮುಗಿಸಿದ್ದರು. ಆದರೆ ಈ ಪೂಜೆಗೆ ಬಂದವರು ಕೇವಲ ಹತ್ತು ಹದಿನೈದು ಜನ. ಸಿಮೋನ, ಸಿಮೋನನ ತಾಯಿ, ಹೆಂಡತಿ, ಮಕ್ಕಳು, ಹಿಂದಿನ ದಿನ ತನಗೆ ಭೇಟಿಯಾದ ಬಾಲ್ತಿದಾರ, ಪಾಸ್ಕೋಲ ಇನ್ನು ಕೆಲವರು. ಶಿವಸಾಗರದಲ್ಲಿ ಇರುವ ಕ್ರೀಸುವರು ಇಷ್ಟೇ ಅಲ್ಲ ಎನ್ನುವುದು ಸ್ಪಷ್ಟವಾಯಿತು. ಹಿಂದಿನದಿನ ಮಾತನಾಡುವಾಗ ಸಿಮೋನ ಹತ್ತು ಹದಿನೈದು ಕುಟುಂಬಗಳು ಇಲ್ಲಿವೆ ಎಂದು ಹೇಳಿದ್ದ. ಸಾಂತಾಮೇರಿ ಎಂಬಾಕೆಯ ಮನೆಯಲ್ಲಿ ಊಟ ಮಾಡಿಕೊಂಡು ಹತ್ತು ಜನ ಇದ್ದಾರೆ ಅಂದಿದ್ದ. ಎಲ್ಲರಿಗೂ ತಾನು ಹೋಗಿ ಹೇಳಿ ಬರುವುದಾಗಿ ತಿಳಿಸಿದವ, ಹೋಗಿ ಹೇಳಿ ಬಂದುದನ್ನು ಕೊಪೆಲ ಮುಂದಿನ ಗಿಡ ಕಿತ್ತು ಅವುಗಳಿಗೆ ಬೆಂಕಿ ಇಡುವಾಗ-ಎಲ್ಲರಿಗೂ ಹೇಳಿ ಬಂದಿದ್ದೀನಿ ಪದ್ರಬಾ ಎಂದಿದ್ದ. +ಆದರೆ ಬಂದವರು ಕಡಿಮೆ. ಪಾಪ ನಿವೇದನೆಗೆ ಬಂದವರು ಸಿಮೋನ, ಅವನ ತಾಯಿ, ಹೆಂಡತಿ, ಬಾಲ್ತಿದಾರ, ಮತ್ತೋರ್ವ ಹೆಂಗಸು. ದಿವ್ಯ ಪ್ರಸಾದ ಪಡೆದವರು ಇವರು ಮಾತ್ರ. ಪೂಜೆಯಲ್ಲಿ ಪಾಲುಗೊಂಡವರು ಕಡಿಮೆ. ಕೆಲವೇ ಕೆಲವರು ನಮೋ ರಾಣೆ ಮಂತ್ರ, ಪರಲೋಕ ಮಂತ್ರ ಹೇಳಿದ್ದು ತನ್ನ ಗಮನಕ್ಕೆ ಬಂದಿತು. ಉಳಿದವರು ಕಂಬಗಳ ಹಾಗೆ ನಿಂತಿದ್ದರು. +ಈ ಪೂಜೆ, ಪ್ರಾರ್ಥನೆ, ಜಪ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಎಲ್ಲವೂ ಕ್ರಿಸ್ತ ಕ್ರೀಸುವರಿಗಾಗಿ ಸ್ಥಾಪಿಸಿದ ಸಂಸ್ಕಾರಗಳು. ಇವುಗಳನ್ನು ಮನಃ ಪೂರ್ವಕವಾಗಿ ಕೇಳಲಿಲ್ಲ ಹೇಳಲಿಲ್ಲ ಅಂದರೆ ಕ್ರಿಸ್ತನ ಕೃಪೆ ಆ ಮೂಲಕ ದೇವರ ಅನುಗ್ರಹ ಲಭ್ಯವಾಗುವುದಿಲ್ಲ. +ಕ್ರಿಸ್ತ ತನ್ನ ಅಂತಿಮ ಭೋಜನದ ಸಮಯದಲ್ಲಿ ಸುತ್ತ ಕುಳಿತ ಶಿಷ್ಯರಿಗೆರೊಟ್ಟಿ ಹಾಗೂ ದ್ರಾಕ್ಷಾರಸವನ್ನು ನೀಡಿ ತೆಗೆದುಕೊಳ್ಳಿ, ಇದು ನನ್ನ ದೇಹ, ಇದು ನನ್ನ ರಕ್ತ. ಅನೇಕ ಪಾಪ ಪರಿಹಾರಕ್ಕಾಗಿ ನಾನಿದನ್ನು ನುಡಿಸಿದ್ದೇನೆ. ನನ್ನ ಜ್ಞಾಪಕಾರ್ಥವಾಗಿ ನೀವೂ ಇದನ್ನು ಮಾಡಿರಿ ಎಂದು ಹೇಳಿದ್ದೇ ಬಲಿಪೂಜೆಗೆ ಒಂದು ಮಾರ್ಗದರ್ಶನ ವಾಯಿತು. ಈ ಬಲಿಪೂಜೆಯನ್ನು ಆಲಿಸಲು ಇದರಲ್ಲಿ ಭಾಗಿಗಳಾಗಿ, ದಿವ್ಯಪ್ರಸಾದವನ್ನು ಸ್ವೀಕರಿಸಲು ಕ್ರೀಸುವರು ಸದಾ ಉತ್ಸುಕರಾಗಬೇಕು. ಇದು ಕ್ರೀಸುವರಿಗೆ ಕಡ್ಡಾಯ ಕೂಡ. ಇಗರ್ಜಿ ಮಾತೆ ಇದನ್ನೊಂದು ಧಾರ್ಮಿಕ ವಿಧಿ ಎಂದೂ ಇದರಲ್ಲಿ ಎಲ್ಲರೂಭಾಗವಹಿಸಲೇಬೇಕೆಂದು ಆಜ್ಞೆ ವಿಧಿಸಿದೆ. ಆದರೇ ಇಲ್ಲಿಯ ಜನ ಇಂದು ಬರಲಿಲ್ಲ. ಈವರೆಗೆ ಪಾದ್ರಿ ಇರಲಿಲ್ಲ. ಪೂಜೆ ಇರಲಿಲ್ಲ. ಜನ ಬರುತ್ತಿರಲಿಲ್ಲ. ಆದರೇ ಇಂದು? ಈ ಜನ ಅಧಿಕ ಸಂಖ್ಯೆಯಲ್ಲಿ ಬರಬೇಕಿತ್ತು. ಬರಲಿಲ್ಲ. +ಬಲಿಪೂಜೆಯ ಈ ದಿವ್ಯ ಭೋಜನದಿಂದ ಏಸು ಪ್ರಭುವು ಜನರ ಆತ್ಮದೊಂದಿಗೆ ತಮ್ಮ ಆತ್ಮವನ್ನು ಐಕ್ಯಗೊಳಿಸುತ್ತಾರೆ. ಅವರ ಆತ್ಮವನ್ನು ದೈವೀ ಜನರಿಂದ ತುಂಬುತ್ತಾರೆ. ಪಾಪಗಳಿಂದ ದೂರ ಮಾಡುತ್ತಾರೆ. ಒಳ್ಳೆಯ ಕ್ರೀಸುವರಾಗಿ ಬದುಕಲು ಜನರಿಗೆ ಆತ್ಮಿಕ ಶಕ್ತಿ ನೀಡುತ್ತಾರೆ. ಈ ಎಲ್ಲ ವರ ಪ್ರಸಾದಗಳಿಂದ ಶಿವಸಾಗರದ ಜನ ವಂಚಿತರಾದರೆ? +ಜನ ಪೂಜೆಗೆ ಬರಲಿಲ್ಲ ಎಂದರೆ ಅವರು ಕ್ರಿಸ್ತನ ಕೃಪೆಯಿಂದ ದೂರ ಉಳಿದರಲ್ಲವೇ.? ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮುಂತಾದ ಕ್ರಿಸ್ತ ಸಂಸ್ಕಾರಗಳು ಅವರಿಗೆ ಲಭ್ಯವಾಗಲಿಲ್ಲ ಅಲ್ಲವೇ? ಯಾವಾಗ ಕ್ರಿಸ್ತನಿಂದ ಜನ ದೂರವಾದರೋ ಆಗ ಅವರು ಅವಿಶ್ವಾಸಿಗಳಾಗಿ, ಸುಳ್ಳು ದೇವರುಗಳ ಆರಾಧಕರಾಗಿ ತಪ್ಪು ಮಾರ್ಗದಲ್ಲಿ ಬಾಳುತ್ತಾರೆ. ಇಲ್ಲಿರುವ ಜನರನ್ನು ತಾನು ಕಳೆದುಹೋದ ಕುರಿಗಳನ್ನು ಕುರುಬ ತನ್ನ ಮಂದೆಗೆ ಸೇರಿಸಿಕೊಳ್ಳುವಂತೆ ಸೇರಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ತಾಳ್ಮೆಯಿಂದ ಕೆಲಸ ಮಾಡಬೇಕಾಗಿದೆ. ಪ್ರಾರ್ಥನೆಯ ಮೂಲಕ ಬೇಕಾದ ಬಲವನ್ನು ಪಡೆಯಬೇಕಿದೆ. +ಪಾದರಿ ಗೋನಸ್ವಾಲಿಸ್ ಗಾಡಿಯಲ್ಲಿ ಹೇರಿಕೊಂಡು ಬಂದ ಮಂಚ್ ಮೇಜು ಕುರ್ಚಿಗಳನ್ನೆಲ್ಲ ಸಿಮೋನನ ಮನೆಗೆ ಸಾಗಿಸಿದರು. +“ಕೊಪೆಲಿನಲ್ಲಿ ಅವೆಲ್ಲ ಬೇಡ ಮುಂದೆ ನೋಡೋಣ..ಕುಳಿತುಕೊಳ್ಳಲು ಒಂದು ಕುರ್ಚಿ ಇರಲಿ ಸಾಕು”. ಎಂದು ಕೊಪೆಲಿನ ಒಂದು ಮೂಲೆಯಲ್ಲಿ ತಮಗಾಗಿ ಇರಿಸಿಕೊಂಡರು. ಬೋನ ಅವರಿಗಾಗಿ ಬ್ರೆಡ್ಡು, ಮೊಟ್ಟೆಯ ಆಮ್ಲೆಟ್ ಮಾಡಿ ತಂದು ಕೊಟ್ಟ. ಮನೆಗೆ ಹೋದ ಸಿಮೋನ ಮತ್ತೆ ಬಂದು ಅವರ ಜತೆ ಸೇರಿಕೊಂಡ. +ಸಿಮೋನನಿಗೆ ಒಂದು ಬಗೆಯ ಅಳುಕು ಕಾಡತೊಡಗಿತ್ತು. ಅವನು ಹೆದರಿಕೊಂಡಂತೆಯೇ ಎಲ್ಲ ಕ್ರೀಸುವರೂ ಕೊಪೆಲಕ್ಕೆ ಬಂದಿರಲಿಲ್ಲ. +ತನ್ನ ತಾಯಿ ಕೊಪೆಲನ ಪೂಜೆಯ ಮೊದಲ ಗಂಟೆ ಆಗುವ ಮುನ್ನವೇ ಸಿದ್ಧವಾಗಿ ಕುಳಿತಿದ್ದಳು. +“ದೇವರ ದಯೆ ಸಿಮು..ಸಾಯೋ ಕಾಲಕ್ಕೆ ಪೂಜೆ, ಪಾಪ ನಿವೇದನೆಗೊಂದು ಅವಕಾಶ ಆಯ್ತು..” +ಅವಳು ಡಾಂಬರು ಗುಳಿಗೆ ಹಾಕಿ ಬಿಳಿ ವಸ್ತ್ರದಲ್ಲಿ ಸುತ್ತಿ ಇರಿಸಿದ ತನ್ನ ಮದುವೆ ಸೀರೆಯುಟ್ಟು ಜಪಸರ ಹಿಡಿದು ಆಕೆ ಸಂಭ್ರಮದಿಂದ ಹೊರಟಳು. ಮುರುಡೇಶ್ವರ ಇಗರ್ಜಿಗೆ ವಾರಕ್ಕೊಮ್ಮೆ ಹೋಗುವುದು ಅವಳ ನೆನಪಿಗೆ ಬಂದಿರಬೇಕು. ಇಲ್ಲಿ ಪಾದರಿ ಇಲ್ಲ, ಪೂಜೆ ಇಲ್ಲ ಎಂದು ಅವಳು ಕೊರಗಿದ್ದು ಅದೇಷ್ಟು ಸಾರಿಯೋ. ಮಗ ಮುರುಡೇಶ್ವರದ ಹಬ್ಬಕ್ಕೆ ಹೋದವ ಗೋವಾದ ಹಿರಿಯ ಗುರುಗಳನ್ನು ಕಂಡು ಶಿವಸಾಗರಕ್ಕೆ ಓರ್ವ ಪಾದರಿಗಳನ್ನು ಕಳುಹಿಸುವಂತೆ ವಿನಂತಿಸಿಕೊಂಡ ವಿಷಯ ತಿಳಿದು ಸಂತಸಪಟ್ಟವಳು ಅವಳು ಮಾತ್ರವಲ್ಲ ನಿತ್ಯ ಹಾಸಿಗೆಯ ಮೇಲೆ ಕುಳಿತು ಜಪ ಮಾಡುವಾಗ, ಸಂಜೆ ಆಮೋರಿ ಹೇಳುವಾಗ ಒಂದು ನಮೋರಾಣಿ ಮಂತ್ರ ಒಂದು ಪರಲೋಕ ಮಂತ್ರವನ್ನು ಅವಳು ಈ ಕಾರಣಕ್ಕಾಗಿ ಸಲ್ಲಿಸುವುದಿತ್ತು. ದೇವಮಾತೇಯೇ ಈ ಊರಿಗೆ ಬೇಗನೇ ಓರ್ವ ಪಾದರಿಗಳು ಬರುವಂತಾಗಲಿ ಎಂಬುದು ಅವಳ ನಿತ್ಯದ ಬೇಡಿಕೆಯಾಗಿತ್ತು. ಅವಳ ಬೇಡಿಕೆ ದೇವಮಾತೆಯ ಕಿವಿಗೆ ಬಿದ್ದು ಅವಳು ಪಾದರಿಗಳೋರ್ವರನ್ನು ಇಲ್ಲಿಗೆ ಕಳುಹಿಸಿ ಮೊದಲ ಬಾರಿಗೆ ಕೊಪೆಲಿನ ಗಂಟೆ ಪೂಜೆಗೆ ಬನ್ನಿ ಎಂದು ಕ್ರಿಸ್ತುವರನ್ನು ಕರೆದಿತ್ತು. +“ಇವಳೇ..ಮಕ್ಕಳನ್ನು ಕರಕೊಂಡು ಬಾ..ನಾನು ಬೇಗ ಹೋಗತೀನಿ”. +ಎಂದು ಈ ಮುದುಕಿ ಹೊರಟಳು. ಇವಳ ಹಿಂದೆ ಸಿಮೋನನ ಹೆಂಡತಿ, ತುಸು ತಡವಾಗಿ ಅವನ ಮಕ್ಕಳು. +ಎಮ್ಮೆ ಮರಿಯ ಪೂಜೆ ಪ್ರಾರಂಭವಾದ ಎಷ್ಟೋ ಹೊತ್ತಿನ ನಂತರ ಬಂದಳು. ಸಿಮೋನ ಬಾಗಿಲಲ್ಲಿಯೇ ನಿಂತಿದ್ದ. +“ಹಾಲು ತೆಗೆದು ಎಮ್ಮೆಗಳಿಗೆ ಹುಲ್ಲು ಹಾಕಿ ಗೊಲ್ಲೆಗೆ ಕಳುಹಿಸಿ ಬರೋದು ತಡವಾಯಿತು“ಎಂದು ಗೋಗರೆದಳು. +“..ಮಕ್ಕಳು..” +“ಬರತಾರೆ..ಬರತಾರೆ..” +ಎಂದವಳೆ ಒಳಹೋಗಿ ಮೊಣಕಾಲೂರಿ ಶಿಲುಬೆಯ ವಂದನೆ ಮಾಡಿದಳು. ಅವಳ ಮಕ್ಕಳು ಕೊನೆಗೂ ಬರಲಿಲ್ಲ. +ಇನಾಸ ಬರಲಿಲ್ಲ. ಅವನ ಹೆಂಡತಿ ಬಂದಳು. +ಕೈತಾನ ಅವನ ಹೆಂಡತಿ ಬಂದರು. +ಆದರೆ ಕೊಪೆಲಗೆ ಬಂದವರಿಗಿಂತ ಬಾರದವರೇ ಹೆಚ್ಚು. ಏಕೆ ಹೀಗೆ ಎಂದು ಪಾದರಿ ಕೇಳಿದರೆ? +ಸಿಮೋನ ಪಾದರಿಗಳು ತಂದ ದೊಡ್ಡ ದೊಡ್ಡ ಪೈನೆಲಗಳನ್ನು ಅವರು ತೋರಿಸಿದ ಕಡೆ ಗೋಡೆಗೆ ಏರಿಸುತ್ತಿದ್ದಾಗ ಗೋನಸ್ವಾಲಿಸ್- +“ಸಿಮೋನ..ತುಂಬಾ ಜನ ಪೂಜೆ ಆಲಿಸಲಿಕ್ಕೆ ಬರಲಿಲ್ಲ ಅಲ್ವೇ?” +“ಹೌದು ಪದ್ರಬಾ..ಎಲ್ಲರಿಗೂ ನಾನು ಹೇಳಿ ಬಂದಿದ್ದೆ..ಆದರೆ ಇದು ಭಾನುವಾರ ಅಲ್ಲ..ಎಲ್ಲರಿಗೂ ಕೆಲಸ..ಬೆಳಿಗ್ಗೆ ಎಂಟುಗಂಟೆಗೆಲ್ಲ ಅವರು ಕೆಲಸದ ಮೇಲಿರಬೇಕು..ಹೋದರೆ ತಿರುಗಿ ಬರೋದಕ್ಕೆ ಆಗೋದಿಲ್ಲ..“ತಟ್ಟನೆ ಮನಸ್ಸಿಗೆ ಹೊಳೆದ ಒಂದು ವಿಷಯವನ್ನು ಆತ ಪಾದರಿಗಳ ಮುಂದಿಟ್ಟ.” +“ಅದು..ಸರಿ. ಆದರೆ ಬಂದವರಿಗೂ ಜಪಮಂತ್ರಗಳು ಬರತಿರಲಿಲ್ಲ. ಯಾರ ಕುತ್ತಿಗೇಲೂ ಅರ್ಲೂಕ ಇರಲಿಲ್ಲ..ಎಲ್ಲರೂ ಅಕ್ರೈಸ್ತರ ಹಾಗೆ ಕಾಣತಿದ್ರು..” +“ಹೌದು ಪದ್ರಬಾ..ಇವರೆಲ್ಲ ತಮ್ಮ ತಮ್ಮ ಊರುಗಳನ್ನು ಬಿಟ್ಟು ಇಲ್ಲಿಗೆ ಬಂದವರು. ಅಲ್ಲಿ ಹಬ್ಬ, ಮದುವೆ ಅಂದಾಗ, ಯಾರಾದ್ರು ಸತ್ತಾಗ ಹೋಗತಾರೆ. ಹೀಗೆ ಹೋದಾಗಷ್ಟೆ ಇವರು ಇಗರ್ಜಿಗೆ ಹೋಗಿ ಪಾಪ ನಿವೇದನೆ ಇತ್ಯಾದಿ ಮಾಡೊದು..ಉಳಿದೆಲ್ಲ ಕಾಲದಲ್ಲಿ ಅವರು ಇಲ್ಲಿರತಾರೆ..ಇಗರ್ಜಿಗೆ ಬನ್ನಿ , ಜಪ ಮಾಡಿ ಅಂತ ಪದೇ ಪದೇ ಇವರಿಗೆ ಹೇಳೋರು ಇಲ್ಲಿ ಇಲ್ಲ..” +“ಅಲ್ಲ ಸಿಮೋನ..ಇದೆಲ್ಲ ಹೇಳಬೇಕೆ? ನಿಜವಾದ ಕ್ರೀಸುವರಿಗೆ ಹೀಗೆ ಹೇಳುವ ಅವಶ್ಯಕತೆ ಇಲ್ಲ..” +“…ಆದರೂ ಪದ್ರಬಾ..” +“ಸರಿ ನಾನಿನ್ನು ಬಂದಿದೀನಲ್ಲ..ಈ ಊರಿನ ಕ್ರೀಸುವರೆಲ್ಲ ಒಂದೇ ಕಡೆ ಇದಾರೇನು?” +ಪಾದರಿ ಗೋನಸ್ವಾಲಿಸ್ ಸಿಮೋನನ ಸಂಗಡ ಮಾತನ್ನು ಮುಂದುವರೆಸಿದರು- +“ಹೌದು ಪದ್ರಬಾ..ಎಲ್ಲ ಕೊಪೆಲಿನ ಸುತ್ತ ಇದಾರೆ.” +“ಒಳ್ಳೆದಾಯ್ತು..” +“ಇಲ್ಲಿರೋ ನಾವೆಲ್ಲ ಘಟ್ಟದ ಕೆಳಗಿನವರು. ಶಿರಾಲಿ, ಮುರುಡೇಶ್ವರ, ಭಟ್ಕಳ, ಅಂಕೋಲ ಮೊದಲಾದ ಊರುಗಳಿಂದ ಬಂದು ಇಲ್ಲಿ ಒಂದೇ ಕಡೆ ಮನೆ ಕಟ್ಟಿಕೊಂಡು ಇದ್ದೇವೆ..” +“ಸರಿ ನಾನು ಇನ್ನೊಂದೆರಡು ದಿನಗಳಲ್ಲಿ ಇಲ್ಲಿರುವ ಎಲ್ಲ ಕ್ರೈಸ್ತ ಕುಟುಂಬಗಳನ್ನೂ ಕಂಡು ಬರಬೇಕು..ಅಂದ ಹಾಗೆ ಕ್ರೈಸ್ತರು ವಾಸಿಸುತ್ತಿರುವ ಮನೆಗಳನ್ನು ಮಂತ್ರಿಸಲಾಗಿದೇಯೇ?” +“..ಎಲ್ಲಿಯ ಮನೆ ಮಂತ್ರಿಸುವ ಕೆಲಸ ಪದ್ರಬಾ..ಇಲ್ಲಿಗೆ ಪಾದರಿಗಳು ಅಂತ ಬರತಿರೋದು ನೀವೇ ಮೊದಲು. ನಾವು ವರ್ಷಕ್ಕೊಮ್ಮೆ ಊರಿಗೆ ಹೋದಾಗ ನಾವೇ ಪವಿತ್ರ ಜಲ ತಂದು ಮನೆ ತುಂಬ ಸಿಂಪಡಿಸೋದುಂಟು..ಇದನ್ನು ಭಾಳ ಜನ ಮಾಡುದಿಲ್ಲ..” +ಕ್ರೀಸ್ತುವರು ಅವರ ಧಾರ್ಮಿಕ ನಂಬಿಕೆ ನಡಾವಳಿಕೆಗಳಿಂದ ದೂರವಿರಲು ಇದೂ ಒಂದು ಕಾರಣ. ಯಾವ ಮನೆಯನ್ನು ಪವಿತ್ರ ಜಲದಿಂದ ಪಾದರಿ ಹೋಗಿ ಮಂತ್ರಿಸಿರುವುದಿಲ್ಲವೋ ಅಲ್ಲಿ ಭೂತ ಪಿಶಾಚಿಗಳು ನೆಲಸುವುದರಲ್ಲಿ ಅನುಮಾನವಿಲ್ಲ ಅಂದುಕೊಂಡರು ಪಾದರಿ ಗೋನಸಾಲ್ವಿಸ್. +“ಸಿಮೋನ ನೀನು ಒಂದು ಸಾರಿ ಎಲ್ಲರಿಗೂ ತಿಳಿಸಿಬಿಡು..” +“ಆಯಿತು ಪದ್ರಬಾ“ಎಂದ ಸಿಮೋನ. +ಈ ಹತ್ತು ಹದಿನೈದು ವರ್ಷಗಳ ಅವಧಿಯಲ್ಲಿ ಬೋನ ಎಲ್ಲವನ್ನು ಕಲಿತಿದ್ದ. ಗೋನಸ್ವಾಲಿಸರಿಗೆ ಅಡಿಗೆ ಮಾಡಿ ಹಾಕುವುದು., ಸ್ನಾನಕ್ಕೆ ನೀರು ಕಾಯಿಸುವುದು, ಅವರ ಉಡುಪು ಮಡಿ ಮಾಡಿ ಇಡುವುದು. ಹೀಗೆ ಅವರ ಸಮಸ್ತ ಕೆಲಸಗಳನ್ನು ಮಾಡಿಕೊಂಡು ಬಂದಿದ್ದ. +ಇಗರ್ಜಿಗೆ ಸಂಬಂಧಪಟ್ಟ ಕೆಲಸಗಳನ್ನೂ ಆತ ಮಾಡುತ್ತಿದ್ದ. ಬೆಳಿಗ್ಗೆ ಮಧ್ಯಾಹ್ನ, ಸಾಯಂಕಾಲ ಪ್ರಾರ್ಥನೆಯ ಗಂಟೆ ಹೊಡೆಯುವುದು, ಬೆಳಿಗ್ಗೆ ಪೂಜ ಗಂಟೆ, ಭಾನುವಾರಗಳೆಂದು ವಿಶೇಷ ಪೂಜೆಯ ಗಂಟೆ, ನಾಮಕರಣ ಗಂಟೆ, ಮರಣದ ಗಂಟೆ ಹೀಗೆ ಗಂಟೆ ಹೊಡೆಯುವುದು ಇವನ ಕೆಲಸವೇ ಆಗಿತ್ತು. ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಗುರ್ಕಾರ, ಮಿರೊಣ್ ಗಳು ಇಗರ್ಜಿಯ ಕೆಲಸ ಮಾಡುತ್ತಿದ್ದರು. ಪೂಜಾ ಸಮಯದಲ್ಲಿ ಪೀಠ ಬಾಲಕರು ಯಾರೂ ಇರದಿದ್ದರೇ ಬೋನಾ ಹೋಗುತ್ತಿದ್ದ. ಮಕ್ಕಳಿಗೆ ನಾಮಕರಣ ಮಾಡುವಾಗ ಈತ ಎಣ್ಣೆ, ಉಪ್ಪಿನ ಭರಣಿ, ನೀರಿನ ಬಾಟಲಿ, ವಸ್ತ್ರ ಹಿಡಿದು ನಿಲ್ಲುತ್ತಿದ್ದ. ದಿವ್ಯ ಪ್ರಸಾದವೆಂದು ಹಂಚಲಾಗುವ ಗೋಧಿ ಹಿಟ್ಟಿನ ವಸ್ತ್ರವನ್ನು ಇವನೇ ತಯಾರಿಸಿ ಇಡುತ್ತಿದ್ದ. +ಹಬ್ಬ, ಸಂತರ ದಿನ, ತಪಸ್ಸಿನ ಕಾಲ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದ. ಮರಣದ ಪೂಜೆ, ನವೇನ, ಮದುವೆಯ ನಿಯಮಾವಳಿಗಳು ಇವನಿಗೆ ಗೊತ್ತಿದ್ದವು. +ಹೀಗೆಂದು ಬೋನ ಎಲ್ಲಿಯೂ ಪಾದರಿಗಳ ಅಧಿಕಾರದ ಗೆರೆ ದಾಟಿ ಹೋಗುತ್ತಿರಲಿಲ್ಲ. ಅವರಿಗೆ ವಿಧೇಯನಾಗೆ, ವಿನಮ್ರತೆಯಿಂದ ಸದಾ ನಡೆದುಕೊಳ್ಳುತ್ತಿದ್ದ. ತಾನು ಪಾದರಿಗಳ ಅಡಿಗೆಯಾಳು, ಎಂಬುದನ್ನು ಎಂದೂ ಮರೆಯುತ್ತಿರಲಿಲ್ಲ. ಅವರನ್ನು ನೋಡಿಕೊಳ್ಳುವುದರಲ್ಲಿ ಎಂದೂ ಸೋಮಾರಿತನ ತೋರಿದವನಲ್ಲ. +ಪಾದರಿ ಗೋನಸಾಲ್ವಿಸ್ ಅವನಿಗೆ ಕೀರ್ತನೆಗಳನ್ನು ಹೇಳಿಕೊಟ್ಟಿದ್ದರು. ಪೂಜಾ ಸಮಯದಲ್ಲಿ ಹೇಳಬೇಕಾದ ಶ್ಲೋಕ ಮಂತ್ರಗಳನ್ನು ಹೇಳಿಕೊಟ್ಟಿದ್ದರು. ಬೇರೆ ಪಾದರಿಗಳು ಅವರ ಕುಜ್ನೇರನನ್ನು ಬಹಳ ಕೀಳಾಗಿ ಕಾಣುವುದಿತ್ತು. ಅವರಿಗೆ ಸರಿಯಾದ ಉಡುಪು, ಊಟ ಕೊಡದೆ ಹೊಡೆದು ಬಡಿದು ಮಾಡುವುದಿತ್ತು. ಇಗರ್ಜಿಗೆ ಸಂಬಂಧಪಟ್ಟ ಯಾವುದೇ ಕೆಲಸವನ್ನು ಕುಜ್ನೇರಗೆ ಅವರು ಹೇಳುತ್ತಿರಲಿಲ್ಲ. ಸದಾ ಆತ ಅಡಿಗೆ ಮನೆ, ಬಚ್ಚಲು ಮನೆ, ಮಾಂಸ ತೆಗೆದುಕೊಂಡು ಬಾ, ಮೀನು ಶುಚಿ ಮಡು ಎಂದು ಕೆಲಸದಲ್ಲಿ ತೊಡಗಿರಬೇಕಾಗಿತ್ತು. ಆದರೇ ಬೋನ ಗೋನಸಾಲ್ವಿಸರ ಪಾಲಿಗೆ ಕುಜ್ನೇರಗೂ ಅಧಿಕನಾಗಿದ್ದ. ಚಿಕ್ಕಂದಿನಿಂದ ಅವನನ್ನು ಸಾಕಿ, ಅವನ ಮಾತು, ವರ್ತನೆ ಎಲ್ಲಕ್ಕೂ ಒಂದು ಆಕಾರವನ್ನು ಅವರು ಕೊಟ್ಟಿದ್ದರಿಂದ ಅವರು ಅವನನ್ನು ತುಂಬಾ ಪ್ರೀತಿಸುತ್ತಿದ್ದರು. +ಹೀಗೆಂದು ಅವನನ್ನು ದಂಡಿಸುವುದಿಲ್ಲ ಎಂದಿಲ್ಲ. ಕಾರವಾರದಲ್ಲಿ ಬೋನ ಒಂದು ಯಕ್ಷಗಾನ ನೋಡಲು ಹೋಗಿದ್ದ. ಇಗರ್ಜಿ ಹತ್ತಿರದಲ್ಲಿಯೇ ಬಯಲಾಟ, ರಾತ್ರಿ ಒಂಭತ್ತಕ್ಕೆ ’ಕೇಳಿ’ಯ ಸದ್ದು ಇವನನ್ನು ಕರೆಯಿತು. ಪಾದರಿಗಳು ಊಟ ಮಾಡಿ ಮಲಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ. ತಲೆಗೊಂದು ಬಟ್ಟೆ ಸುತ್ತಿಕೊಂಡು, ಹಾಸಿಗೆ ಮೇಲಿನ ಹೊದಿಕೆಯಲ್ಲಿ ಮೈ ಮುಚ್ಚಿಕೊಂಡು ಇಗರ್ಜಿ ಗೇಟಿನಿಂದ ಹೊರಬಿದ್ದ. ಅಲ್ಲಿ ಗುರುತಿನವರು ಯಾರೂ ಇವನಿಗೆ ಕಾಣಲಿಲ್ಲ. ಕ್ರೀಸುವರು ಯಕ್ಷಗಾನ ನೋಡುವುದು ಪಾಪ ಎಂಬ ನಂಬಿಕೆ ಇತ್ತು. ಈ ವಿಷಯ ಇವನಿಗೆ ಗೊತ್ತಿದ್ದರೂ ಚಂಡೆನಾದ ಇವನನ್ನು ಅಲ್ಲಿಗೆ ಕರೆಯಿತು. ಮೂಲೆಯೊಂದರಲ್ಲಿ ಕೂತು ಸುತ್ತಿಕೊಂಡ ಹೊದಿಕೆಗೊಂದು ಕಿಂಡಿ ಮಾಡಿಕೊಂಡು ಆಟ ನೋಡಿದ. ದೊಡ್ಡ ದೊಡ್ಡ ಪಗಡಿ, ಕೀರೀಟಗಳು, ವರ್ಣರಂಜಿತ ಉಡುಪು ಆಕರ್ಷಕ ನೃತ್ಯ, ಕುಣಿತ, ಮಾತು ಅರ್ಥವಾಗಲಿಲ್ಲ. ಆದರೆ ಆ ಕೇಕೆ ಅಬ್ಬರ ಮನಸ್ಸನ್ನು ಗೆದ್ದಿತು. ಜೊತೆಗೆ ಕೃಷ್ಣ, ಭೀಮ, ದುರ್ಯೋಧನ, ದ್ರೌಪದಿ ಎಂಬ ಹೆಸರುಗಳು. ಈ ಹೆಸರಿನ ವ್ಯಕ್ತಿಗಳು ಆಕರ್ಷಕವಾಗಿ ಕಂಡರು. ಬೆಳಕು ಹರಿಯುವ ತನಕ ನಿದ್ದೆಗೆಟ್ಟು ನೋಡಿದ. ಮೂಡಲಲ್ಲಿ ಕೆಂಪೇರಿದಾಗ ಎದ್ದು ಇಗರ್ಜಿಯತ್ತ‌ಓಡಿದ. +ಇಗರ್ಜಿ ಹಿಂಬದಿಯ ತನ್ನ ಅಡಿಗೆ ಮನೆಗೆ ಬಂದು ಇನ್ನೇನು ಒಳಗೆ ಸೇರಿಕೊಳ್ಳಬೇಕು ಅನ್ನುವಾಗ ಪಾದರಿಗಳ ದನಿ ಕೇಳಿಸಿತು. +“ಬೋನಾ.. ಪ್ರಾರ್ಥನೆ ಗಂಟೆ ಹೊಡೆದು ಬಂಗಲೆಗೆ ಬಾ..” +ನೀರಾಗಿ ಹೋದ ಬೋನ. +ಪಾದರಿಗಳ ಕೈಲಿದ್ದ ಬೈನಾಕ್ಯುಲರ ಎಲ್ಲ ಹೇಳಿತು. ಪಾದರಿಗಳಿಗೆ ಅನುಮಾನವಿತ್ತು. ಯಾರಾದರೂ ಕ್ರೈಸ್ತರು ಯಕ್ಷಗಾನ ನೋಡಲು ಹೋದರೆ? ಹೀಗೇಂದೇ ಅವರು ಬಂಗಲೆ ಜಗಲಿಯ ಮೇಲೆ ನಿಂತು ಬೈನಾಕುಲರಿನಲ್ಲಿ ಬರುವವರನ್ನೇ ಗಮನಿಸುತ್ತಿದ್ದರು. ಅವರ ಕಣ್ಣಿಗೆ ಬೋನಾ ಬೀಳಬೇಕೇ? +ಪಾದರಿ ಗೋನಸಾಲ್ವಿಸ್ ಒಂದು ನಾಗರ ಬೆತ್ತವನ್ನು ಪುಡಿ ಮಾಡಿದರು. ಅದರ ಸಪೂರ ತುದಿ ಸಿಬಿರು ಸಿಬಿರಾಗಿ ಛಿದ್ರವಯಿತು. ಎಂಟು ದಿನ ಬೋನ ಮೇಲೆ ಎಳಲಿಲ್ಲ. ಕಾಲಿನ ಮಾಂಸ ಖಂಡಗಳೆಲ್ಲ ಹರಿದು ರಕ್ಥ ಚಿಮ್ಮಿತು. +ಅಂದಿನಿಂದ ಮತ್ತೆ ಆಟ ನೋಡಲು ಹೋಗಲಿಲ್ಲ ಬೋನ. ಕೃಷ್ಣ, ಧರ್ಮರಾಯ, ಭೀಮರ ಬಗೆಗಿದ್ದ ಅವನ ಆಕರ್ಷಣೆಯೂ ಅಡಗಿ ಹೋಯಿತು. ಈ ಘಟನೆ ಬೋನಾಗೆ ಮಾತ್ರ ಒಂದು ಎಚ್ಚರಿಕೆಯಾಗಿ ಉಳಿಯಲಿಲ್ಲ. ಈ ಸುದ್ದಿ ಕೇರಿಯ ಎಲ್ಲರಿಗೂ ತಿಳಿಯಿತು. ಅವರು ಬೋನನ ನೋವನ್ನು ಅರ್ಥ ಮಾಡಿಕೊಂಡರು. ಪಾದರಿಗಳ ಸಿಟ್ಟಿಗೆ ಗೌರವ ನೀಡಿದರು. ತಾವು ಇಂತಹ ತಪ್ಪು ಮಾಡಬಾರದು ಎಂಬ ಬಗ್ಗೆ ಎಚ್ಚರವಹಿಸಿದರು. +ಪಾದರಿ ಗೋನಸಾಲ್ವಿಸ್ ಬೋನನನ್ನು ದಂಡಿಸಿದ ಮತ್ತೂ ಒಂದೆರಡು ಘಟನೆಗಳೆಂದರೇ- +ಕಾರವಾರದಲ್ಲಿಯೇ ಬೋನಾ ದೇವರ ಪೀಠದ ಮುಂದಿನ ದೀಪಕ್ಕೆ ಎಣ್ಣೆ ಹಾಕದೆ ಅದು ಒಂದು ದಿನವೆಲ್ಲ ಉರಿಯದೇ ಹೋದಾಗ ಗೋನಸಾಲ್ವಿಸ್ ಬೋನನನ್ನು ದಂಡಿಸಿದ್ದರು. +ಹೊನ್ನಾವರದಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ಇಗರ್ಜಿಯಲ್ಲಿ ನಿರ್ಮಿಸಿದ ಗ್ರೊಟ್ಟೋ(ಗೋದಲಿ) ಮೇಣದ ಬತ್ತಿಯ ಬೆಂಕಿ ತಾಗಿ ಸುಟ್ಟು ಬೂದಿಯಾದಾಗ ನಾಗರಬೆತ್ತ ಕೈಗೆತ್ತಿಕೊಂಡಿದ್ದರು. +“ಇಗರ್ಜಿ ಬಾಗಿಲು ಹಾಕುವ ಮುನ್ನ ಯಾವ ಮೇಣದ ಬತ್ತಿ ಉರಿಯುತ್ತಿದೆ ಎಂಬುದನ್ನು ನೋಡಲಿಕ್ಕೆ ಆಗಲಿಲ್ಲವೇ?“ಎಂದು ಅವರು ಕೂಗಾಡಿದ್ದರು. +ನಂತರ ಬೋನಾ ಬೆಳೆದು ಅವರಷ್ಟೇ ಎತ್ತರಕ್ಕೆ ಸೆಟೆದು ನಿಂತಿದ್ದ. ಅಲ್ಲಿಂದ ಅವರು ಬೋನನನ್ನು ದಂಡಿಸಲು ಹೋಗಲಿಲ್ಲ. ಆದರೆ ಕೋಪದಿಂದ ಏನಾದರೂ ಹೇಳುವುದಿತ್ತು. +ಪಾದರಿ ಗೋನಸಾಲ್ವಿಸ್ ಬೋನನನ್ನು ಹೊಡೆಯಲಿ ಬೈಯಲಿ ಅವನ ಮೇಲೆ ಅವರಿಗೆ ಪ್ರೀತಿಯಿತ್ತು. ಅವನೂ ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದ. +ಮುಖ್ಯವಾಗಿ ಪಾದರಿ ಗೋನಸಾಲ್ವಿಸ್ ರ ಧಾರ್ಮಿಕ ಶ್ರದ್ದೆಯ ಬಗ್ಗೆ ಅಪಾರ ಗೌರವ ಇವನಲ್ಲಿ ಬೆಳೆದಿತ್ತು. ಯಕ್ಷಗಾನ ಬಯಲಾಟ ನೋಡ ಹೋಗಿ ತಾನು ತಿಂದ ಏಟುಗಳನ್ನು ಈತ ಮರೆತಿರಲಿಲ್ಲ. ಹಾಗೆಯೇ ತಾನು ಮಾಡಿದ ತಪ್ಪು ಎಂತಹದು ಎಂಬುದೂ ಇವನಿಗೆ ಮನವರಿಕೆ ಆಗಿತ್ತು. ಅಂದು ಬಿದ್ದ ಏಟುಗಳ ಅಸ್ಪಷ್ಟ ಕಲೆಗಳು ಕಾಲು ತೊಡೆಗಳ ಮೇಲೆ ಉಳಿದಿದ್ದವು. ಅಂತೆಯೇ ಬೋನ ತನ್ನ ಧರ್ಮ, ದೇವರನ್ನು ಗಾಡವಾಗಿ ನಂಬುತ್ತ ಬಂದಿದ್ದ. +ಆನಂತರ ಕೂಡ ಸುಳ್ಳು ದೇವರುಗಳನ್ನು ಆರಾಧಿಸುವ, ಸುಳ್ಳು ಸಂಪ್ರದಾಯಗಳನ್ನು ಆಚರಿಸುವ ಕ್ರೈಸ್ತರ ವಿರುದ್ಧ ಗೋನಸಾಲ್ವಿಸ್ ಕಠಿಣ ಕ್ರಮ ಕೈಕೊಂಡಿದ್ದು ಇವನಿಗೆ ಗೊತ್ತಿತ್ತು. ಆಗೆಲ್ಲ ಈತ ಪಾದರಿಗಳ ಪರ ನಿಂತಿದ್ದ. ಎಲ್ಲಿ ಯಾರೇ ಬೇರೊಂದು ಧರ್ಮ ದೇವರಿಗೆ ನಡೆದುಕೊಂಡಾಗ ಅಂತಹ ವಿಷಯಗಳನ್ನು ಮೊದಲು ಬೋನ ಪಾದರಿಗಳಿಗೆ ಮುಟ್ಟಿಸುತ್ತಿದ್ದ. +ಶಿವಸಾಗರಕ್ಕೆ ಬಂದ ನಂತರ ಎಲ್ಲ ಕ್ರೀಸುವರು ಕೊಪೆಲಗೆ ಬಾರದಿದ್ದುದು, ಅವರು ಅಕ್ರೈಸ್ತರ ಹಾಗೆ ಬದುಕುತ್ತಿರುವುದು ಬೋನನ ಗಮನಕ್ಕೂ ಬಂದಿತು. ಈ ಕಾರಣಕ್ಕಾಗಿ ಎಲ್ಲ ಕ್ರೀಸುವರ ಮನೆಗಳಿಗೂ ಭೇಟಿ ಕೊಡಬೇಕು ಎಂದು ಪಾದರಿಗಳು ಹೇಳಿದಾಗ ಹುರುಪುಗೊಂಡವನು ಬೋನ. +ಅವನು ಕೊಪೆಲಿನ ಗಂಟೆ ಹೊಡೆಯುವ ಕೆಲಸವನ್ನು ಪ್ರಾರಂಭಿಸಿದ. ಮೂರೂ ಹೊತ್ತು ಪ್ರಾರ್ಥನಾ ಗಂಟೆ ಹೊಡೆದ. ಬೆಳಿಗ್ಗೆ ಪೂಜಾ ಗಂಟೆ. ಕೊಪೆಲಿನ ಮುಂದೆ ತೂಗುಬಿದ್ದ ಗಂಟೆ ಸದಾ ಕಾಲ ಮೌನವಾಗಿರುತ್ತಿತ್ತು. ಈಗ ಅದರ ನಾದ ಸುತ್ತಲಿನ ಹಲವಾರು ಮನೆಗಳಿಗೆ ನಿರಂತರವಾಗಿ ಕೇಳಿಸತೊಡಗಿತು. ಬೆಳಿಗ್ಗೆ ಪೂಜೆಗೆ ಸಿಮೋನ ಅವನ ಹೆಂಡತಿ, ತಾಯಿ ಬರತೊಡಗಿದರು. +ಅಂತೆಯೇ ಭಾನುವಾರದ ವಿಶೇಷ ಪೂಜೆಯ ಗಂಟೆಗಳನ್ನು ಬೋನ ಶ್ರದ್ಧೆಯಿಂದ ಹೊಡೆದ. ಸಿಮೋನ ಎಲ್ಲ ಮನೆಗಳಿಗೂ ಹೇಳಿ ಬಂದ. ಬಲಿ ಪೂಜೆ ಆರಂಭಿಸುವ ಮುನ್ನ ಪಾದರಿ ಕೊಪೆಲಿನ ಜನರತ್ತ ಕಣ್ಣು ಹಾಯಿಸಿದರು. ಅವೇ ಪರಿಚಿತ ಮುಖಗಳು. ಅವರಿಗೆ ನಿರಾಶೆಯಾಯಿತು. ಸಿಟ್ಟೂ ಬಂದಿತು. ತಾನು ಹೊನ್ನಾವರದಿಂದ ಇಲ್ಲಿಗೆ ಬಂದದ್ದೇ ವ್ಯರ್ಥವಾಯಿತೇನೋ ಅಂದುಕೊಂಡರು. +ಆದರೆ ನಿರಾಶೆ ಸಿಟ್ಟನ್ನು ಮರೆತು ಅವರು ಪೂಜೆಗೆ ತೊಡಗಿದರು. +“ಪ್ರಭುವೇ ನಿನ್ನನ್ನು ಮರೆತಿರುವ ಇಲ್ಲಿಯ ಜನರನ್ನು ಮತ್ತೆ ನಿನ್ನತ್ತ ಕರೆತರಲು ಬೇಕಾದ ಶಕ್ತಿಯನ್ನು ನನಗೆ ಕೊಡು“ಎಂದು ಪೂಜೆಯ ನಡುವೆ ಬೇಡಿ ಕೊಂಡರು. +* +* +* +ಭಾನುವಾರದ ಈ ಘಟನೆಯ ನಂತರ ಪಾದರಿ ಗೋನಸಾಲ್ವಿಸ್ ಮತ್ತೂ ಚುರುಕುಗೊಂಡರು. +ಇನ್ನು ಸಮಯ ಹಾಳು ಮಾಡಬಾರದು. ಊರಿನ ಕ್ರೀಸುವರು ತಾವಾಗಿ ಕೊಪೆಲಗೆ ಬರಲಿಲ್ಲ ಎಂದರೆ ತಾನೇ ಅವರ ಬಳಿ ಹೋಗಬೇಕು. ದೈವ ಭೀತಿಯನ್ನು ಅವರ ಮನಸ್ಸಿನಲ್ಲಿ ಬಿತ್ತಬೇಕು. ದೇವರಿಂದ ದೂರವಿರಬೇಡಿ ಎಂಬ ಎಚ್ಚರಿಕೆಯನ್ನು ಅವರಿಗೆ ನೀಡಬೇಕು. ಇದಕ್ಕೆ ಇರುವ ಒಂದು ದಾರಿ ಎಂದರೇ ಕ್ರೀಸುವರ ಮನೆಗಳಿಗೆ ಹೋಗುವುದು, ಮನೆಗಳನ್ನು ಮಂತ್ರಿಸುವುದು, ಒಂದು ಗಂಟೆ ಅಲ್ಲಿ ಕೂತು ಆ ಮನೆಯ ಸ್ಥಿತಿಗತಿ ಗಮನಿಸುವುದು. ಅಲ್ಲಿಯ ಹೆಂಗಸರು, ಗಂಡಸರ ಜತೆ ಮಾತನಾಡುವುದು. ಮಕ್ಕಳ ಸಂಸ್ಕಾರ ಹೇಗಿದೆ ಎಂಬುದನ್ನು ಪರಿಶೀಲಿಸುವುದು. ಹಿಂದೆ ಕೂಡ ಕಾರವಾರ, ಹೊನ್ನಾವರ ಗಳಲ್ಲಿ ತಾನು ಹೀಗೆಯೇ ಜನರನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದೆ. ಇಲ್ಲಿಯೂ ಹಾಗೆಯೇ ಮಾಡುವುದು. +ಸೋಮವಾರ ಬೋನ ಬೆಳಗಿನ ಉಪಹಾರವನ್ನು ಮಾಡಿ ತಂದಾಗ ಗೋನಸಾಲ್ವಿಸ್- +“ಬೋನಾ..“ಎಂದರು. +ಪಿಂಗಾಣಿ ತಟ್ಟೆ ಲೋಟಗಳನ್ನು ಅವರ ಮುಂದೆ ಇರಿಸಿದ ಆತ- +“ಪದ್ರಬಾ“ಎಂದ. +“ಮಧ್ಯಾಹ್ನದ ಊಟ ಕೊಂಚ ತಡವಾಗಲಿ. ಈವತ್ತು ಮನೆಗಳನ್ನು ಮಂತ್ರಿಸಿ ಬರೋಣ..ಪವಿತ್ರ ಜಲದ ಬಟ್ಟಲನ್ನ ತಗೆದುಕೋ..” +ಪಾದರಿ ಕ್ರೀಸುವರ ಮನೆಗಳಿಗೆ ಹೋಗಲು ಸಜ್ಜಾದರು. ಅದು ಸಾಮಾನ್ಯ ಭೇಟಿಯಾಗಿದ್ದಿದ್ದರೇ ಅವರು ಉದ್ದ ನಿಲುವಂಗಿ ಧರಿಸಿ ಹೋಗಬಹುದಿತ್ತು. ಆದರೇ ಇದೊಂದು ಧಾರ್ಮಿಕ ಭೇಟಿ. ವಿಶೇಷ ಉಡುಪು ಧರಿಸಿಯೇ ಹೋಗಬೇಕಲ್ಲ. +ಬೋನ ಅವರ ಉಡುಪಿನ ಪೆಟ್ಟಿಗೆ ತೆರೆದ. +ಗೋನಸಾಲ್ವಿಸ್ ಅವನ ನೆರವಿನಿಂದ ಮೊದಲು ಆಲ್ಬ (ಬಿಳಿ ನಿಲುವಂಗಿ) ಧರಿಸಿದರು. ಚಾಸು ಬಲ (ಮೇಲಂಗಿ) ಸ್ತೋಲ್ (ಕೊರಳ ಪಟ್ಟಿ) ಗರ್ದಲ್ (ನಡು ಪಟ್ಟಿ) ಬಿರೆಟ್ಟಾ (ಟೋಪಿ) ಎಲ್ಲ ಧರಿಸಿ ಸಜ್ಜಾದರು. ಕೈಯಲ್ಲಿ ಪ್ರಾರ್ಥನಾ ಪುಸ್ತಕದ ಜೊತೆಯಲ್ಲಿ ಕ್ರೀಸುವರ ಮನೆಯ ವಿವರಗಳನ್ನು ಬರೆದುಕೊಳ್ಳಲು ಒಂದು ನೋಟ ಪುಸ್ತಕ. ಬೋನ ಪವಿತ್ರ ಜಲದ ಬಟ್ಟಲು ಹಿಡಿದ. +“ಹೋಗೋಣ“ಎಂದರು ಅವರು. +ಬೋನ ಕೊಪೆಲನ ಬಾಗಿಲು ಸರಿಸಿ ಅವರ ಹಿಂದೆ ಹೊರಟ. +ಯಾವುದೇ ದೈವಿಕ ಕಾರ್ಯಕ್ಕೆ ಹೋಗುವಾಗ ತುಂಬಾ ಗಂಭೀರವಾಗಿ ಅತ್ತ ಇತ್ತ ನೋಡದೆ, ಪ್ರಾರ್ಥನಾ ಪುಸ್ತಕವನ್ನು ಎದೆಗೊತ್ತಿಕೊಂಡು ಎಡಗೈಯನ್ನು ಬೀಸುತ್ತ ಹೋಗುವುದು ರೂಢಿ. ಮುಖದ ಮೇಲೆ ಪ್ರಸನ್ನತೆ, ಕಣ್ಣುಗಳಲ್ಲಿ ಭಕ್ತಿ, ನಡಿಗೆಯಲ್ಲಿ ದೃಢತೆ ಎದ್ದು ಕಾಣುತ್ತಿತ್ತು. ಬೋನ ಕೂಡ ಅವರ ಜೊತೆಯಲ್ಲಿ ಹೀಗೆಯೇ ಹೋಗುತ್ತಿದ್ದ. +ಇಂದು ಈರ್ವರೂ ಕೊಪೆಲನ ಮಗ್ಗುಲ ದಾರಿ ಹಿಡಿದು ಕ್ರೀಸುವರ ಮನೆಗಳತ್ತ ಹೊರಳಿದರು. +ಸಿಮೋನನ ಮನೆಯಲ್ಲಿ ದೇವರ ಪೀಠದ ಮುಂದೆ ಸಾಲುಸಾಲಾಗಿ ಮೇಣದ ಬತ್ತಿಗಳನ್ನು ಹಚ್ಚಲಾಯಿತು. ಮನೆ ಮಂದಿಯೆಲ್ಲ ಬಂದು ದೇವರ ಮುಂದೆ ಮೊಣಕಾಲೂರಿದರು. ಪಾದರಿ, ಬೋನ ನೀಡಿದ ತೀರ್ಥದ ಬಟ್ಟಲನ್ನು ತೆಗೆದುಕೊಂಡು ಕೀರ್ತನೆಯೊಂದನ್ನು ದೊಡ್ಡ ದನಿಯಲ್ಲಿ ಹೇಳುತ್ತ ಮನೆಯ ಕೋಣೆ, ಅಡಿಗೆ ಮನೆ, ತೊಟ್ಟಿಲು, ಹಿತ್ತಿಲು ಅಂಗಳಕ್ಕೆ ತೀರ್ಥ ಪ್ರೋಕ್ಷಣೆ ಮಾಡಿದರು. +ನಂತರ ಪೀಠದ ಮುಂದೆ ನಿಂತು ಆ ಮನೆಗೆ ಒಳಿತನ್ನು ಕೋರಿದರು. ದೈವ ಭೀತಿ, ಪ್ರೀತಿ, ಪರಸ್ಪರ ಪ್ರೇಮ ವಿಶ್ವಾಸ ಮನೆಯ ಜನರಲ್ಲಿ ಸದಾ ನೆಲಸಲಿ, ಯಾವುದೇ ಕಷ್ಟಕಾಲದಲ್ಲಿ ತಂದೆ ಮಗ ಸ್ಪಿರಿತು ಸಾಂತುವರು ಮನೆಯ ಜನರನ್ನು ರಕ್ಷಣೆ ಮಾಡಲಿ ಎಂದು ಕೋರಿದರು. ಪರಲೋಕ ನಮೋರಾಣೆ ಮಂತ್ರಗಳನ್ನು ಜಪಿಸಲು ಹೇಳಿ ಕೊನೆಯಲ್ಲಿ ಒಂದು ಕೀರ್ತನೆ ಹಾಡಿದರು. +ಸಿಮೋನನ ಮನೆಯ ಬಗ್ಗೆ ಅವರಿಗೆ ಹಿಂದೆಯೇ ಸಂತೋಷವಾಗಿತ್ತು. ಸಿಮೋನನ ತಾಯಿ, ಹೆಂಡತಿ ಆ ಮನೆಯಲ್ಲಿ ದೈವ ಭೀತಿ ಜೀವಂತವಾಗಿರಲು ಕಾರಣರಾಗಿದ್ದರು. ಇಗರ್ಜಿಯ ಗಂಟೆ ಕೇಳಲಿ, ಕೇಳದೇ ಇರಲಿ ನಿತ್ಯ ಪ್ರಾರ್ಥನೆ ಆ ಮನೆಯಲ್ಲಿ ನಡೆದುಕೊಂಡು ಬಂದಿತ್ತು. ಈ ಸಂತಸದಲ್ಲಿಯೆ ಮನೆ ಮಂತ್ರಿಸಿ, ಅಲ್ಲಿರುವವರ ಜತೆ ಮಾತನಾಡಿ ಅವರು ಮುಂದಿನ ಮನೆಗೆ ತೆರಳಿದರು. +ಒಂದು ವಾರದಲ್ಲಿ ಶಿವಸಾಗರದ ಕ್ರೈಸ್ತ ಮನೆಗಳನ್ನು ಮಂತ್ರಿಸಿ ಅವರು ಮುಗಿಸಿದರು. ಅವರಿಗೆ ನಿರಾಶೆಯಾಯಿತು, ಸಂಕಟವಾಯಿತು, ಸಿಟ್ಟೂ ಬಂದಿತು. ಕೋಪದಿಂದ ಮೈಮುಖ ಕೆಂಪಗಾಗಿ ಅವರು ಹಲ್ಲು ಕಟಕಟಿಸಿದರು. +ಅವರು ನಿರೀಕ್ಷಿಸಿದ ಹಾಗೆ ಸಿಮೋನನ ಒಂದು ಮನೆ ಬಿಟ್ಟರೆ ಬೇರೆ ಯಾವ ಮನೆಯಲ್ಲೂ ಕ್ರೈಸ್ತ ವಾತಾವರಣವಿರಲಿಲ್ಲ. ಮನೆ ಯಜಮಾನ ಇವರು ಹೋದಾಗ ಮನೆಯಲ್ಲಿರಲಿಲ್ಲ. ಮನೆಗಳಲ್ಲಿ ದೇವರ ಪೀಠದಲ್ಲಿ ದೇವರ ಇಮಾಜ ಇರಲಿಲ್ಲ.ಗೂಡಿನಲ್ಲಿ ಕಸ ಕೊಳೆ ತುಂಬಿತ್ತು. ದೇವರ ಪ್ರತಿಮೆ ಇಡಬೇಕಾದ ಕಡೆ ಎಲೆ ಅಡಿಕೆ ಚೀಲ, ಸುಣ್ಣದ ಕಾಯಿ, ತೆಂಗಿನ ಕಾಯಿ, ಕುಂಕುಮದ ಪುಡಿ, ಹಿತ್ತಾಳೆಯ ತಾಯಿತ ಇರಿಸಿದ್ದರು. ಯಾರಿಗೂ ಶಿಲುಬೆಯ ಗುರುತು ತೆಗೆಯಲು, ಪರಲೋಕ ಮಂತ್ರ ಪೂರ್ತಿ ಮಾಡಲು ಬರುತ್ತಿರಲಿಲ್ಲ. +ಎಲ್ಲ ಮನೆಗಳನ್ನೂ ಶ್ರದ್ಧೆ ಆಸಕ್ತಿಯಿಂದ ಮಂತ್ರಿಸಿ, ಬೋನನ ನೆರವಿನೊಂದಿಗೆ ಇವರು ಪ್ರಾರ್ಥನೆ ಸಲ್ಲಿಸಿ ತಿರುಗಿ ಬಂದರು. ಕೊತಕೊತನೆ ಕುದಿದು ಹಬೆಯಾಡುತ್ತಿರುವಂತೆ ಕಂಡು ಬಂದ ಪಾದರಿ ಗೋನಸಾಲ್ವಿಸ್, ಕೊಪೆಲಗೆ ಬಂದವರೇ ಮೊದಲು ಮಾಡಿದ ಕೆಲಸವೆಂದರೆ ಮಂಚದ ಅಡಿಗೆ ತಳ್ಳಿದ ತಮ್ಮ ಹೋಲ್ಡಾಲನ್ನು ಹೊರಗೆ ತೆಗೆದದ್ದು. ಈ ಹೋಲ್ಡಾಲಿನಿಂದ ಬರುವಾಗ ತಂದ ಕೆಲ ಇಮಾಜುಗಳನ್ನು ಅರ್‍ಲೂಕಗಳನ್ನು ಪೈನೆಲ್, ಪಿಂತೂರಗಳನ್ನು ಈಚೆಗೆ ತೆಗೆದು ಅವುಗಳನ್ನು ಮುಂದೆ ಇರಿಸಿಕೊಂಡು ಯೋಚಿಸುತ್ತ ಕುಳಿತರು. +* +* +* +ಕೆಲವೇ ದಿನಗಳಲ್ಲಿ ಕೊಪೆಲನ ಸುತ್ತ ಇರುವ ಅಷ್ಟೂ ಕ್ರೀಸುವರ ಪರಿಚಯ ಅವರಿಗಾಯಿತು. ಸಿಮೋನ ಕೂಡ ಇವರೆಲ್ಲರ ಪರಿಚಯ ಮಾಡಿಕೊಳ್ಳಲು ನೆರವಾದ. +ತಾವು ಊರಿಗೆ ಬಂದ ತಕ್ಷಣ ಕೊಪೆಲನ ಗಂಟೆ ಸದ್ದು ಕೇಳಿ, ಬಂದು ತಮ್ಮನ್ನು ಭೇಟಿಯಾದವ ಸಿಮೋನ. ಗಾಡಿ ಸಿಮೋನ ಎಂಬ ಹೆಸರು ಕೂಡ ಇವನಿಗಿದೆ. ಊರಿನ ಕ್ರೀಸುವರಲ್ಲಿ ಸಾಕಷ್ಟು ಶ್ರೀಮಂತ ಸಿಮೋನ. ಸಿಮೋನ ಮೇಸ್ತ್ರಿ ಅನ್ನುವುದು ಊರಿನ ಜನ ಇವನಿಗೆ ಇಟ್ಟಿರುವ ಮತ್ತೊಂದು ಗೌರವಸೂಚಕ ಹೆಸರು. ಮನೆಯನ್ನು ದೊಡ್ಡದಾಗಿ ಕಟ್ಟಿಕೊಂಡಿದ್ದಾನೆ. ಒಂದು ಗಾಡಿ ಇದೆ. ಒಂದು ಜೊತೆ ಎತ್ತುಗಳಿವೆ. ಮನೆಯಲ್ಲಿ ಹೆಂಡತಿ, ತಾಯಿ. ಈಗಾಗಲೇ ಅವನ ಜತೆ ಕೆಲಸಕ್ಕೆ ಹೋಗುವ ಆರು ಜನ ಗಂಡು ಮಕ್ಕಳಿದ್ದಾರೆ. ಊರಿನ ಕ್ರೀಸುವರಲ್ಲಿ ದೈವ ಭಕ್ತಿ ಇರಿಸಿಕೊಂಡು ಕಾಲಕಾಲಕ್ಕೆ ಪ್ರಾರ್ಥನೆ, ಜಪ ಮಾಡುವ ಕುಟುಂಬವಿದು. ಊರಿನಲ್ಲಿ ಕೊಪೆಲ ಆಗಲು ಈ ಕೊಪೆಲಗೆ ಪಾದರಿ ಬರಲು ಇವನೇ ಕಾರಣ. +ಸಿಮೋನ, ಇವನ ಅಣ್ಣ ಮರಿಯಾಣ ಮುರುಡೇಶ್ವರದಲ್ಲಿ ಒಡೆಯರೊಬ್ಬರ ತೆಂಗಿನ ತೋಟ ನೋಡಿಕೊಂಡು ಕಲ್ಲಿನ ಕೆಲಸ ಮಾಡಿಕೊಂಡು ಇದ್ದವರು. ಇಲ್ಲಿ ಘಟ್ಟದ ಮೇಲೆ ಕೆಲಸವಿದೆ ಎಂಬುದು ಅದು ಹೇಗೋ ತಿಳಿದುಕೊಂಡ ಸಿಮೋನ ಬಾಚಿ ಹೆಗಲೇರಿಸಿಕೊಂಡು ತಾನು ಘಟ್ಟದ ಮೇಲೆ ಹೋಗುತ್ತೇನೆ ಎಂದಾಗ ಮರಿಯಾಣ- +“ನಕ್ರೆ ಭಾವಾ (ಬೇಡ ತಮ್ಮ) ಇಲ್ಲಿಯೇ ನಮಗೆ ಗಂಜಿ ಮೀನು ಸಿಗುತ್ತಿದೆ..ಅಷ್ಟು ದೂರಬೇಡ.“ಎಂದು ನುಡಿದಿದ್ದ. +ಆದರೂ ಸಿಮೋನ ಹೊರಟ. ಇಲ್ಲಿ ಬಂದು ಕಲ್ಲು ಕುಟ್ಟುವ ಕೆಲಸ ಆರಂಭಿಸಿದ. ಅವನಿಗೆ ಇಲ್ಲಿ ತುಂಬಾ ಗೌರವವೂ ಸಿಕ್ಕಿತು. ಈಗ ಹಾಲಿ ಇರುವ ಎಷ್ಟೋ ಮನೆಗಳನ್ನು ಕಟ್ಟಿಸಿದಾತ ಸಿಮೋನ. ಘಟ್ಟದ ಕೆಳಗಿನಿಂದ ಏಳೆಂಟು ಆಳುಗಳನ್ನು ಕರೆಸಿಕೊಂಡು ಈತ ಕೆಲಸ ಮಾಡತೊಡಗಿದ. ಈಗಲೂ ಒಂದು ಕೆಲಸ ಆಗಬೇಕು ಎಂದರೆ ಜನ ಇವನ ಬಳಿ ಬರುತ್ತಾರೆ. +“ಮೇಸ್ತ್ರಿ ಮನೆ ಕಡೆ ಒಂದಿಷ್ಟು ಕೆಲಸ ಇತ್ತು ಮಾರಾಯಾ..ಬಂದು ಹೋಗು“ಅನ್ನುತ್ತಾರೆ. +ಸಿಮೋನ ಮನೆಯಲ್ಲಿರುವಾಗ ಕಷ್ಟಿಯೊಂದನ್ನು ಬಿಟ್ಟು ಬೇರೆ ಏನೂ ತೊಡುವುದಿಲ್ಲ. ಹೊರ ಹೋಗಬೇಕಾದರೆ ಅಡ್ಡ ಪಂಚೆ ಮೇಲೊಂದು ಪೈರಾಣ. ಊರಿನಲ್ಲೂ ಅವನ ವೇಷ ಇದೇ ಆಗಿತ್ತು. ಇಲ್ಲಿ ಕೂಡ ಅದೇನೆ. ಸದಾ ಎಲೆ ಅಡಿಕೆ ತಿನ್ನುವ ಚಪಲ. ಎಲೆ ಅಡಿಕೆ ಸುಣ್ಣ ತಂಬಾಕು ಇರುವ ಒಂದು ಪೊತ್ತಿ ಇವನ ಸೊಂಟಕ್ಕೆ ತೂಗು ಬಿದ್ದಿರುತ್ತದೆ. ಇವನಿಗೆ ಊರಿನ ಸಿಂಪಿ ಸುಣ್ಣವೇ ಬೇಕು. ಇಲ್ಲಿನ ಕಲ್ಲು ಸುಣ್ಣ ಇವನು ಬಳಸುವುದಿಲ್ಲ. ಊರಿನಿಂದ ಬರುವವರ ಮೂಲಕ ಈತ ಸಿಂಪಿ ಸುಣ್ಣ ತರಿಸುತ್ತಾನೆ. ವಿಶೇಷ ಸಂದರ್ಭಗಳಲ್ಲಿ ಸಿಮೋನ ಪಂಚೆ, ಉದ್ದ ಅಂಗಿ ಮೇಲೊಂದು ಸರ್ಜಕೋಟ ತಲೆಗೆ ಕೆಂಪು ರುಮಾಲು ಸುತ್ತುತ್ತಾನೆ. ಈ ಸರ್ಜುಕೋಟ ಅವನ ಮದುವೆಯಲ್ಲಿ ಹೊಲಿಸಿದ್ದು. ಅಲ್ಲದೆ ಕೈಗೆ ಬಂಗಾರದ ಕಡಗ ಇರುತ್ತದೆ. ಆದರೇ ಈ ವಿಶೇಷ ಸಂದರ್ಭ ಯಾವಾಗದರೊಮ್ಮೆ ಬರುತ್ತದೆ. ಕೊಪೆಲಿನಲ್ಲಿ ಸಂತ ಜೋಸೆಫ಼ರ ಹಬ್ಬ ಮಾಡಿದಾಗ. ಊರಿಗೆ ಜಿಲ್ಲಾ ಕಲೆಕ್ಟರ್ ಬಂದು, ಸಿಮೋನ ಕಟ್ಟಿದ ಸೊರಬ ರಸ್ತೆ ಸೇತುವೆಯ ಉದ್ಘಾಟನೆ ಮಾಡಿ, ಸಿಮೋನನ ಕೆಲಸ ಮೆಚ್ಚಿ ಅವನಿಗೆ ಹಾರ ಹಾಕಿದಾಗ ಸಿಮೋನ ಈ ವಿಶೇಷ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾನೆ. +ಸಿಮೋನನ ಮನೆ ಪಕ್ಕದಲ್ಲಿಯೇ ಎಮ್ಮೆ ಮರಿಯಾಳ ಮನೆ. ಮರಿಯ ಗಂಡ ಸತ್ತವಳು. ಇವಳ ಗಂಡ ಕೂಡ ದೂರದ ಕಾಯ್ಕಿಣಿಯಿಂದ ಬಂದವನೆ. ಈತ ಈ ಊರಿಗೆ ಬರಲು ಸಿಮೋನ ಕಾರಣ. ಮರಿಯಾಳ ಗಂಡ ಸಂತಿಯಾಗ ಕಲ್ಲು ಕಟ್ಟುವುದರಲ್ಲಿ ನಿಸ್ಸೀಮ. ಭಟ್ಕಳದ ಕೊಲಂಬೋ ಸಾಹೇಬರ ಬಂಗಲೆಯನ್ನು ಈ ಸಂತಿಯಾಗ ಕಟ್ಟಿದ್ದಕ್ಕೆ ಸಾಹೇಬರು ಅವನ ಕೈ ಬೆರಳಿಗೆ ಬಂಗಾರದ ಉಂಗುರ ತೊಡಿಸಿದ್ದರು. +“ನೀನು ನನ್ನ ಜೊತೆ ಬಂದು ಬಿಡು..ಇಂತಹ ಹತ್ತು ಉಂಗುರ ಕೊಡಿಸ್ತೀನಿ” +ಎಂದಿದ್ದ ಸಿಮೋನ ಭಟ್ಕಳ ಪೇಟೆಯಲ್ಲಿ ಸಂತ್ಯಾಗನನ್ನು ಕಂಡು. +“ಎಂಟು ತಿಂಗಳ ಕೆಲಸ..ಅಕ್ಟೋಬರಿಗೆ ಹೋದ ಜೂನಿಗೆ ತಿರುಗಿ ಬಂದ” +ಎಂದು ತನ್ನ ಕೆಲಸದ ವಿವರ ನೀಡಿದ್ದ. +ಈಗಾಗಲೇ ಹಲವಾರು ಸಿಮೋನನ ಜತೆ ಶಿವಸಾಗರಕ್ಕೆ ಹೋಗುತ್ತಿದ್ದರು. ಅವರೆಲ್ಲ ಸಾಕಷ್ಟು ಹಣ ಮಾಡಿಕೊಂಡಿದ್ದರು. ಹೀಗೆಂದೇ ಸಂತಿಯಾಗ ಕೂಡ ಹೊರಟ. ಸಿಮೋನನ ಹಾಗೆಯೇ ಕೆಲ ವರುಷಗಳಲ್ಲಿ ತನ್ನ ಹೆಂಡತಿಯನ್ನು ಕರೆಸಿಕೊಂಡ. ಆದರೆ ಸಂತಿಯಾಗ ಬಹಳ ದಿನ ಉಳಿಯಲಿಲ್ಲ. ಅವನ ಹೆಂಡತಿ ಮರಿಯ ಎಮ್ಮೆ ಸಾಕಿಕೊಂಡು ಹಾಲು ಮಾರಿಕೊಂಡು ಬದುಕುತ್ತಿದ್ದಾಳೆ. +ಸಾಲಿನಲ್ಲಿದ್ದ ಮೂರನೇ ಮನೆ ಸುತಾರಿ ಇನಾಸನದು. ಇವನೂ ಕೂಡ ಘಟ್ಟದ ಕೆಳಗಿನ ಮೂಡ್ಕಣಿಯವ. ಇತರರು ಬಾಚಿ ಅಳತೆ, ಕಡ್ಡಿ ಹಿಡಿದು ಬಂದರೆ ಈತ ಉಳಿ ಗರಗಸ ಹಿಡಿದುಕೊಂಡು ಬಂದವ. ಮರ ಕೆಲಸದಲ್ಲಿ ಈತನದು ಎತ್ತಿದ ಕೈ. ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹೆಂಡತಿ ಎಂದು ದೊಡ್ಡ ಸಂಸಾರ. ಇವನ ಹೆಂಡತಿ ಮಾತ್ರ ಮೂಕಿ. ಮೊನ್ನೆ ಎಂದೇ ಜನ ಅವಳನ್ನು ಸಂಭೋದಿಸುತ್ತಾರೆ. +ನಾಲ್ಕನೆಯ ಮನೆ ಸಾನಬಾವಿ ಪೆದ್ರುವಿನದು. ಸಾನಬಾವಿ ಶಿರಾಲಿ ಹತ್ತಿರದ ಒಂದು ಹಳ್ಳಿ. ಅಲ್ಲಿಂದ ಬಂದು ಶಿವಸಾಗರ ಸೇರಿಕೊಂಡಾತ ಪೆದ್ರು. ಇವನ ಮನೆಯಲ್ಲಿ ಓರ್ವ ಹೆಂಗಸಿದ್ದಾಳೆ. ಅವಳು ಅವನ ಹೆಂಡತಿಯಲ್ಲ. ಅವನು ಇರಿಸಿಕೊಂಡಾಕೆ. ಓರ್ವ ಹಿಂದು ಹೆಂಗಸು. +ಅಲ್ಲಿಯೇ ಮುಂದೆ ಅಂಟುವಾಳದ ಮರದ ಕೆಳಗೆ ಸಾಂತಾ ಮೋರಿ ಮನೆ. ನಲವತ್ತರ ಗಡಿ ದಾಟಿರುವ ಹೆಂಗಸು. ಊರಿನಿಂದ ಇಲ್ಲಿಗೆ ಬರುವಾಗಲೇ ಇವಳ ಗಂಡ ಸತ್ತಿದ್ದ. ಇವಳನ್ನು ಇಲ್ಲಿಗೆ ಕರೆತಂದಾತ ಸಿಮೋನ ಮೇಸ್ತ್ರಿ. ತಾನು ಕರೆತರುವ ಆಳುಗಳಿಗೆ ಅಡಿಗೆ ಮಾಡಿ ಹಾಕಲೆಂದು ಇವಳನ್ನು ಆತ ಕರೆತಂದ. ಮೊದಲು ಅವನೂ ಇವಳ ಮನೆಯಲ್ಲಿಯೇ ಇದ್ದ. ಹೆಂಡತಿ ಬಂದ ಮೇಲೆ ಅವಳ ಮನೆ ಬಿಟ್ಟ. ಈಗಲೂ ಸುಮಾರು ಹತ್ತು ಹನ್ನೆರಡು ಜನ ಇವಳ ಮನೆಯಲ್ಲಿ ಊತ ಮಾಡಿಕೊಂಡು ಇದ್ದಾರೆ. ಮುರುಡೇಶ್ವರದ ದುಮಿಂಗ, ಪರಾಸ್ಕ, ಅರ್ಥರ್, ಶಿರಾಲಿಯ ಜೂಜೆ, ಗೋಮ್ಸ್, ಎಡ್ದಿ ಇನ್ನೂ ಹಲವರು ಇವಳ ಗಿರಾಕಿಗಳು. ಇವರೆಲ್ಲ ಹೆಂಡಿರನ್ನು ಮಕ್ಕಳನ್ನು ಅವರವರ ಊರುಗಳಲ್ಲಿ ಬಿಟ್ಟಿದ್ದಾರೆ. ವರ್ಷದ ಎಂಟು ತಿಂಗಳು ಇಲ್ಲಿರುತ್ತಾರೆ. ಬೆಳಿಗ್ಗೆ ಗಂಜಿ, ಮಧ್ಯಾಹ್ನ ರಾತ್ರಿ ಊಟ ಅವರಿಗಿಲ್ಲಿ ಸಿಗುತ್ತದೆ. ಸಂಜೆ ಸ್ನಾನಕ್ಕೆ ಬಿಸಿ ಬಿಸಿ ನೀರು. ಸಾಂತಾ ಮೋರಿ ಸಹಾಯಕರಾಗಿ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬಳು ಮಗಳು. +ಆರನೆ ಮನೆ ಪಾಸ್ಕೋಲ ಮೇಸ್ತ್ರಿಯದು. ಸಿಮೋನ ಮೇಸ್ತ್ರಿಗೂ, ಪಾಸ್ಕೋನ ಮೇಸ್ತ್ರಿಗೂ ಒಂದು ಬಗೆಯ ಪೈಪೋಟಿ. ಪಾಸ್ಕೋಲನನ್ನು ಇಲ್ಲಿಗೆ ಕರೆತಂದವ ಸಿಮೋನ. ಎರಡು ವರ್ಷ ಸಿಮೋನನ ಕೈ ಕೆಳಗೆ ಕಲ್ಲು ಕುಟ್ಟುವ ಕೆಲಸ ಮಾಡಿಕೊಂಡಿದ್ದ ಪಾಸ್ಕೋನ ಮೂರನೇ ವರ್ಷ ಮಳೆಗಾಲ ಮುಗಿಯಿತು. ಇನ್ನೇನು ಘಟ್ಟದ ಮೇಲೆ ಹತ್ತಬೇಕು ಅನ್ನುವಾಗ ಸಿಮೋನ ಊರಿನಲ್ಲಿ ಕಾಯಿಲೆ ಮಲಗಿದ. ಇಲ್ಲಿ ಅರೆ ಬರೆ ಕೆಲಸವಾಗಿತ್ತು. ಕಟ್ಟಡಗಳನ್ನು ಮುಗಿಸಬೇಕಿತ್ತು. ನೀನು ಅದನ್ನು ನೋಡಿಕೋ ನಾನು ಕೊಂಚ ಆರಾಮಾದ ಕೂಡಲೆ ಬರತೇನೆ ಎಂದ ಸಿಮೋನ. ಹುಂ ಎಂದ ಪಾಸ್ಕೋಲ. +ಎರಡು ತಿಂಗಳ ನಂತರ ಸಿಮೋನ ಘಟ್ಟ ಹತ್ತಿ ಮೇಲೆ ಬಂದಾಗ ಇಲ್ಲಿ ಪಾಸ್ಕೋಲ ಮೇಸ್ತ್ರಿ ಆಗಿದ್ದ. ಸಿಮೋನ ಬರಲಿಕ್ಕಿಲ್ಲ. ಎಲ್ಲ ಕೆಲಸ ನಾನೇ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿ ಕೆಲಸ ಹಿಡಿದಿದ್ದ. ಸಿಮೋನನಿಗೆ ಹೊಸ ಕೆಲಸಗಳು ಸಿಕ್ಕವು. ಆದರೆ ಅವನು ಪಾಸ್ಕೋಲ ಮಾಡಿದ ಮೋಸಗಳನ್ನು ಮರೆಯದಾದ. +ಪಾಸ್ಕೋಲ ಹೆಂಡತಿ ಮಕ್ಕಳ ಜತೆ ಇದ್ದಾನೆ. ಇವನ ಜೊತೆಗೆ ಇವನ ತಮ್ಮ ಇದ್ದಾನೆ. ಹೆಂಡತಿ ತಮ್ಮ ಲಾದ್ರು ಇದ್ದಾನೆ. +ಪಾಸ್ಕೋಲನ ಮನೆಯ ಬಳಿ ರಸ್ತೆ ಬಲಕ್ಕೆ ಹೋರಳುತ್ತದೆ. ಅಲ್ಲಿಂದ ಮತ್ತೆ ಕೆಲ ಮನೆಗಳ ಸಾಲು ಪ್ರಾರಂಭವಾಗುತ್ತದೆ. ಈ ಮನೆಗಳ ಸಾಲಿನ ಮೊದಲ ಮನೆ ಬಾಲ್ತಿದಾರನದು. ಇವನ ಬಲಗಾಲು ಉದ್ದ. ನಡೆಯುವಾಗ ಕಾಲನ್ನು ಎಳೆದುಕೊಂಡು ನಡೆಯುವುದು ಸ್ಪಷ್ಟವಾಗಿ ಕಾಣುತ್ತದೆ. ಕಾರಣ ಇವನು ಜನರ ಬಾಯಲ್ಲಿ ಬಲಗಾಲುದ್ದ ಬಾಲ್ತಿದಾರ. ಈ ಹೆಸರು ಮೊಟಕಾಗಿ ಬಲಗಾಲುದ್ದ ಎಂದಾಗಿದೆ. ಅವನ ಮನೆಗೂ ಅದೇ ಹೆಸರು. ಹೆಂಡತಿಗೂ ಅದೇ ಹೆಸರು. ಅವನ ಏಕೈಕ ಮಗಳಿಗೂ ಅದೇ ಹೆಸರು. ಬಲಗಾಲುದ್ದ ಹೆಂಡತಿ ಅನರೀತಾ, ಮಗಳು ರೇಮೇಂದಿ. ಈತ ಶಿರಾಲಿಯವ. ಸಿಮೋನ ಇವನನ್ನೂ ಶಿವಸಾಗರಕ್ಕೆ ಕರೆತಂದದ್ದು ಹೌದು. ಆದರೆ ಕಾಲೆಳೆದುಕೊಂಡು ಈತ ಎನೂ ಕೆಲಸ ಮಾಡಲಾರ ಎನಿಸಿತು. ಕೆತ್ತಿದ ಕಲ್ಲನ್ನು ತಂದುಕೊಡಲು, ಮಣ್ಣು ಗಾರೆ ಕಲಿಸಲು ಕೂಡ ಕಷ್ಟಪಡುತ್ತಿದ್ದ. ಹೀಗೆಂದೇ ಸಿಮೋನ- +“ಇವನನ್ನು ಏನು ಮಾಡೋದು ಮಾರಾಯ..” +ಎಂದು ತಲೆ ಕೆಡಿಸಿಕೊಳ್ಳುವಾಗ ಜವಳಿ ಅಂಗಡಿ ಭುಜಂಗ- +“ಅಂಗಡಿ ಬಾಗ್ಲಾಗೆ ಕೂಡ್ಸು. ನಾನು ಕಾಜ ಹೊಲಿಯೊದನ್ನ ಹೇಳಿ ಕೊಡತೀನಿ“ಎಂದ. +ಭುಜಂಗನ ಅಂಗಡಿಯಲ್ಲಿ ಕುಳಿತು ಬಟ್ಟೆ ಹೊಲಿಯುವುದನ್ನ ಕಲಿತ ಕಾಲುದ್ದ. ಈಗ ಊರಿನಲ್ಲಿ ಒಂದು ಅಂಗಡಿ ಇರಿಸಿದ್ದಾನೆ. ಇವನ ಹೆಂಡತಿ ಕುಮುಟದವಳು. ಮಾವನ ಮನೆಗೆ ಹೋದಾಗ ಈತ ಇಗರ್ಜಿಗೆ ಹೋಗುತ್ತಾನೆ. ಇಲ್ಲಿ ಇಗರ್ಜಿಯಿಂದ ದೂರವಿದ್ದವ. +ಎಂಟನೇ ಮನೆ ಕಲ್ಲು ಕೆತ್ತುವ ಕೈತಾನನದು. ಈತ ಕೂಡ ಘಟ್ಟದ ಕೆಳಗಿನವ. ಶರಾವತಿ ದಂಡೆಯಲ್ಲಿರುವ ಬಳ್ಕೂರು ಇವನ ಊರು. ಇವನ ಮನೆ ಮಗ್ಗುಲಲ್ಲಿರುವಾತನೂ ಕೈತಾನನೇ. ಆದ್ದರಿಂದ ಇವನಿಗೆ ಬಳ್ಕೂರಕಾರ್ ಎಂದು ಜನ ಕರೆಯುತ್ತಾರೆ. ಬಹಳ ಜನರಿಗೆ ಇವನ ನಿಜವಾದ ಹೆಸರು ಗೊತ್ತಿಲ್ಲ.. ಹೀಗಾಗಿ ಇವನ ಮನೆ, ಹೆಂಡತಿ, ಮಕ್ಕಳಿಗೆಲ್ಲ ಇವನ ಹೆಸರ ಮೂಲಕವೇ ಗುರುತಿಸುವುದು. ಬಳ್ಕೂರಕಾರರ ಹೆಂಡತಿ, ಬಳ್ಕೂರಕಾರರ ಮಗ, ಬಳ್ಕೂರಕಾರರ ಮಗಳು ಎಂದರೆ ಎಲ್ಲರಿಗೂ ತಿಳಿದು ಹೋಗುತ್ತದೆ. +ಬಳ್ಕೂರರ ನೆರೆಮನೆಯ ಕೈತಾನ ಅಂಕೋಲದವ. ಅಲ್ಲಿ ತುಂಬಾ ಆಸ್ತಿ ಇತ್ತು ಅವನಿಗೆ. ಇನ್ನೂರು ಮುನ್ನೂರು ತೆಂಗಿನ ಮರಗಳಿದ್ದ ತೋಟವಿತ್ತು. ಇವನ ತಂದೆ ಯಾವುದೋ ಮುಸ್ಲಿಂ ಹೆಂಗಸಿನ ಸಹವಾಸಕ್ಕೆ ಬಿದ್ದು ಅದನ್ನು ಕಳೆದುಕೊಂಡ. ಕೈತಾನ ಬಾಚಿ ಹಿಡಿದು ಕಲ್ಲು ಕೆತ್ತಲು ಹೋದ. ಅದೆ ಕೆಲಸ ಖಾಯಂ ಆಯಿತು. ಅಂಕೋಲದಲ್ಲಿಯೇ ಮದುವೆಯಾದ. ಘಟ್ಟದ ಮೇಲೆ ಒಳ್ಳೆಯ ಕೆಲಸವಿದೆ ಅಂದರು ಯಾರೋ. ಇಲ್ಲಿಗೆ ಬಂದು ಪಾಸ್ಕೋಲ ಮೇಸ್ತ್ರಿಯ ಬಳಿ ಸೇರಿಕೊಂಡ. ಇಲ್ಲಿ ಕೊಂಚ ಅನುಕೂಲವಾಯಿತು. ಹೆಂಡತಿಯನ್ನು ಕರೆಸಿಕೊಂಡ. ಅಂಕೋಲೆಯಲ್ಲಿ ಇರುವ ತನಕ ಇವರಿಗೆ ಮಕ್ಕಳಾಗಿರಲಿಲ್ಲ. ಇಲ್ಲಿ ಬಂದದ್ದೇ ಐದು ಜನ ಮಕ್ಕಳು ಹುಟ್ಟಿದವು. ಎಲ್ಲವೂ ಹೆಣ್ಣು, ಒಂದಾದರೂ ಗಂಡಾಗಲಿ ಎಂದು ಚಂದಾವರದ ಅಂತೋನಿಗೆ, ಮಲ್ಕೋಡಿನ ಫ಼ಾತಿಮಾ ಮಾತೆಗೆ ಹರಕೆ ಹೇಳಿಕೊಳ್ಳುತ್ತಿದ್ದಾರೆ. +ಹತ್ತನೆಯ ಮನೆ ವೈಜೀಣ್ ಕತ್ರೀನಳದು. ಶಿವಸಾಗರದಲ್ಲಿ ಯಾರ ಮನೆಯಲ್ಲಿಯೇ ಆಗಲಿ ಹೆರಿಗೆ ಆಗಬೇಕೆಂದರೆ ಇವಳು ಬೇಕು. ಇವಳ ತಾಯಿ ಹೊನ್ನಾವರದ ಅನ್ನಾಬಾಯಿ ಕೂಡ ಹೆರಿಗೆ, ಬಾಣಂತನ ಮಾಡಿಸುತ್ತಿದ್ದವಳೇ. ತಾಯಿಯಿಂದ ಮಗಳಿಗೆ ಈ ಕಲೆ ಬಂದಿತ್ತು. ಕತ್ರೀನಳ ಮನೆಯಿಂದ ಮೂರು ಮನೆ ಆಚೆಗೆ ಇರುವ ಸಂತು ಮೇಸ್ತ್ರಿಯ ಹೆಂಡತಿ ಹೊನ್ನಾವರದವಳು. ಅವಳು ಮೂರನೇ ಹೇರಿಗೆ ಮುಗಿಸಿಕೊಂಡು ಶಿವಸಾಗರಕ್ಕೆ ಬರುವಾಗ ಮಗು ಬಾಣಂತಿಯನ್ನು ನೋಡಿಕೊಳ್ಳಲೆಂದು ಅವಳ ತಾಯಿ ಕತ್ರೀನಳನ್ನು ಅವಳ ಜತೆ ಕಳುಹಿಸಿದಳು. ಕತ್ರೀನ ಸಂತುವಿನ ಮನೆಯಲ್ಲಿ ಎರಡು ವರ್ಷ ಇದ್ದಳು. ನಂತರ ಅದೇನು ಗಡಿಬಿಡಿಯಾಯಿತೋ ಊರಿಗೂ ಹೋಗದೇ ಇಲ್ಲೇ ಮನೆ ಮಾಡಿದಳು. ಅಷ್ಟು ಹೊತ್ತಿಗೆ ಅಲ್ಲಿ ಇಲ್ಲಿ ಒಂದೆರಡು ಹೆರಿಗೆ ಮಾಡಿಸಿದ ಈಕೆ ಊರಿನ ಜನಪ್ರಿಯ ಸೂಲಗಿತ್ತಿಯಾದಳು. ಜನ ಇವಳನ್ನು ಕತ್ರೀನಾ ಬಾಯಿ, ಕತ್ರೀನವ್ವ ಎಂದೆಲ್ಲ ಕರೆಯುತ್ತಾರೆ. ಇವಳ ಊರು ಜಾತಿಯ ಬಗ್ಗೆ ಯಾರಿಗೂ ಗೊತ್ತಿಲ್ಲ. ಮನೆಯಲ್ಲಿ ಯಾರಿಗಾದರೂ ಹೇರಿಗೆ ನೋವು ಕಾಣಿಸಿಕೊಂಡರೆ ಜನ ನೇರವಾಗಿ ಇಲ್ಲಿಗೆ ಓಡಿ ಬರುತ್ತಾರೆ. +“ಕತ್ರೀನವ್ವ..ನಡೀ ತಾಯಿ..“ಎಂದು ಹೇಳುತ್ತಾರೆ. +ಇವಳು ತಗಡಿನ ಪೆಟ್ಟಿಗೆಯನ್ನು ಹೊರಿಸಿಕೊಂಡು ಹೊರಡುತ್ತಾಳೆ. +ಆ ಮನೆಗೆ ಹೋಗಿ ಬಂದು ಬರಿ ನೋವು ತಿನ್ನುತ್ತ ಮಲಗಿರುವ ಹೆಂಗಸನ್ನು ನೋಡಿ- +“ಗಾಬರಿ ಏನಿಲ್ಲ, ಮೊದಲು ನೀವು ಎಲೆ ಅಡಿಕೆ ತರ್‍ಸಿ“ಎಂದು ಹೇಳಿ ಜಗಲಿಯ ಮೇಲೆ ಕೂಡುತ್ತಾಳೆ. ಮನೆಯವರು ತಂದ ಎಲೆ ಅಡಿಕೆ ತಿನ್ನುತ್ತ ನೀರು ಕಾಯಿಸಲು, ಹಳೆ ಬಟ್ಟೆ ಸಿದ್ಧ ಪಡಿಸಲು ಹೇಳುತ್ತಾಳೆ. ಅವಳು ಅಲ್ಲಿರುವುದೇ ಒಂದು ಬಗೆಯ ಬಿಡುಗಡೆಯೆನಿಸಿ ಜನ ನಿರಾತಂಕವಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. +ಹಾಗೆಯೇ ಕೊಪೆಲನ ಮತ್ತೊಂದು ಬದಿಯಲ್ಲಿ ಮಿಂಗೇಲಿ, ಗಾಬ್ರಿಯೆಲ್, ಇಂತ್ರು, ಸಾಲಾದೋರ, ಸಿಂಜಾಂವಂ ಮೊದಲಾದವರ ಮನೆಗಳಿವೆ. ಇವರು ಕೂಡ ಘಟ್ಟದ ಕೆಳಗಿನಿಂದ ಬಂದವರೇ. ಹಿಂದೆ ಬೇಸಿಗೆ ಪ್ರಾರಂಭವಾದಾಗ ಬಂದು ಮಳೆಗಾಲ ಪ್ರಾರಂಭವಾಗುತ್ತಿದೆ ಅನ್ನುವಾಗ ತಿರುಗಿ ಹೋಗುತ್ತಿದ್ದವರು. ಈಗ ಕೆಲ ವರುಷಗಳಿಂದ ಇಲ್ಲಿಯೇ ಮನೆ ಮಾಡಿದ್ದಾರೆ. +ಇವರೆಲ್ಲ ಕ್ರೀಸುವರು ಅನ್ನುವುದು ಊರ ಜನರಿಗೆ ಯಾವಾಗಲೋ ಒಮ್ಮೆ ನೆನಪಿಗೆ ಬರುತ್ತದೆ. ಈ ಬಗ್ಗೆ ಊರ ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಕೂಡ. ಏಕೆಂದರೆ ಇವರು ಊರ ಜನರ ಕೆಲಸಗಳನ್ನು ಎಲ್ಲರಂತೆ ಮಾಡಿಕೊಡುತ್ತಾರೆ. ಇವರ ಹೆಸರುಗಳು ಪ್ರಾರಂಭದಲ್ಲಿ ಹೇಳಲು ಕೊಂಚ ತೊಂದರೆಯಾಗುತ್ತದೆ. ನಾಲಿಗೆ ತಟ್ಟನೆ ಹೊರಳುವುದಿಲ್ಲ. ಏಕೆ ಹೀಗೆ ಎಂದು ಗೊಂದಲವೂ ಆಗುತ್ತದೆ. ಅವರೂ ಇವರ ಹೆಸರುಗಳನ್ನು ಮೊಟಕು ಮಾಡಿ, ಕತ್ತರಿಸಿ ಅವರು ಉಪಯೋಗಿಸುತ್ತಾರೆ. ಗಾಬ್ರಿಯೆಲ್ ಗಾಬ್ರಣ್ಣ ಆಗುತ್ತಾನೆ. ಇಂತ್ರು ಇಂತ್ರಣ್ಣ ಆಗುತ್ತಾನೆ. ಸಿಂಜಾಂವಂ ಸಿಂಜಪ್ಪ ಆಗುತ್ತಾನೆ. ಇನ್ನು ಉಡಿಗೆ ತೊಡಿಗೆ ಮಾತು ರೀತಿಯಲ್ಲಿ ಇವರು ಊರವರಿಂದ ತೀರಾ ಭಿನ್ನವಾಗಿಲ್ಲ. ಇತ್ತೀಚೆಗೆ ಇವರು ಸಣ್ಣದೊಂದು ಗುಡಿ ಕಟ್ಟಿದ್ದಾರೆ. ಆ ಗುಡಿಗೂ ಇವರು ವಿಶೇಷವಾಗಿ ಹೋಗುವುದು ಕಾಣುತ್ತಿಲ್ಲ. +ಇವರು ಇಗರ್ಜಿ ಮಾತೆಯ ಪದ್ಧತಿ ಆಚರಣೆಗಳಿಂದ ದೂರವಿದ್ದಾರೆ. ಊರಿನಲ್ಲಿ ಬೇರೆಲ್ಲ ಜಾತಿ ಧರ್ಮಗಳವರು ತಮ್ಮ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯುತ್ತಿರುವಾಗ ಕ್ರೀಸುವರು ಮಾತ್ರ ಎಲ್ಲೂ ಕೂಡ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳದೆ, ಕ್ರೈಸ್ತ ಧರ್ಮಾಚರಣೆಯನ್ನು ಪ್ರಕಟಿಸದೆ ಕ್ರೀಸನ ಹೆಸರನ್ನು ಪ್ರಚುರ ಪಡಿಸದೆ ಗುಂಪಿನಲ್ಲಿ ಕಣ್ಮರೆಯಾಗಿ ಬಿಟ್ಟಿದ್ದಾರೆ. ಹಿಂದುಗಳು, ಮುಸಲ್ಮಾನರು ಊರಿನಲ್ಲಿ ದೊಡ್ಡದೊಡ್ಡ ದೇವಾಲಯ ಮಸೀದಿಗಳನ್ನು ಕಟ್ಟಿರುವಾಗ ಕ್ರೀಸುವರು ಗುಡಿಸಲ ಆಕಾರದ ಒಂದು ಕೊಪೆಲ ಕಟ್ಟಿದ್ದಾರೆ. ಇದಕ್ಕೂ ಕೂಡ ಅವರು ಈವರೆಗೂ ಬರುತ್ತಿರಲಿಲ್ಲವೇನೋ! ಇದು ಊರಿನಲ್ಲಿ ಯಾರಿಗೂ ಗೊತ್ತಿಲ್ಲ. +ಅಂದು ಹೊನ್ನಾವರದಿಂದ ಬಂದ ತಮಗೆ ಕೊಪೆಲನ್ನು ಹುಡುಕುವುದು ತುಂಬಾ ಕಷ್ಟವಾಯಿತು. ಗಾಡಿಯನ್ನು ಊರಿನ ಹಲವಾರು ಬೀದಿಗಳಲ್ಲಿ ಮೆರವಣಿಗೆಯಂತೆ ತೆಗೆದುಕೊಂಡು ಹೋಗಿ, ಕಡೆಗೆ ಒಂದೆಡೆ ನಿಲ್ಲಿಸಿ ಹಲವರಿಗೆ ಕೇಳಿದ ನಂತರ ಓರ್ವ, +“ಓ ಅಲ್ಲಿ..ಮಸೀದಿಯಿಂದ ಮುಂದೆ ಕಿರಸ್ತಾನರ ಸಾಲು ಮನೆಗಳತ್ತ ನೋಡಿ”- +ಎಂದು ಹೇಳಿದ. ನಂತರವೇ ಕೊಪೆಲಿಗೆ ದಾರಿ ಸಿಕ್ಕಿತು. ಸುಮಾರು ಇಪ್ಪತ್ತು ಕ್ರೀಸುವರ ಕುಟುಂಬಗಳಿರುವ ಊರಿನಲ್ಲಿ ಈ ಜನರ ದೇವರು ಧರ್ಮದ ಬಗ್ಗೆಯೇ ಗೊತ್ತಿಲ್ಲದಿರಲು ಮುಖ್ಯ ಕಾರಣ ಈ ಜನ ತಮ್ಮ ಧರ್ಮ ಸಂಪ್ರದಾಯಗಳಿಂದ ದೂರವಿರುವುದೇ ಅಲ್ಲವೇ? +ತಾವು ಈ ಊರಿಗೆ ಬಾರದೇ ಇದ್ದಿದ್ದರೆ ಈ ಜನ ಇನ್ನು ಕೆಲವು ದಿನಗಳಲ್ಲಿ ತಮ್ಮ ಹಿಂದಿನ ಊರಿನ ಜತೆ ಸಂಪರ್ಕ ಕಳೆದುಕೊಂಡಂತೆ ತಮ್ಮ ದೈವ ದೇವರು ಧರ್ಮಗಳ ಜತೆಯೂ ಸಂಬಂಧವನ್ನು ಕಳೆದುಕೊಂಡು ಬಿಡುತ್ತಿದ್ದರೇನೋ. ಸದ್ಯ ತಾನು ಬಂದೆ. ಈಗ ಕಳೆದು ಹೋಗುತ್ತಿರುವ ಈ ಜನರನ್ನು ಇವರ ಆತ್ಮಗಳನ್ನು ಕ್ರಿಸ್ತನಿಗಾಗಿ ರಕ್ಷಿಸಿಕೊಂಡು ಬರಬೇಕಾಗಿದೆ. +ಹೀಗೊಂದು ತೀರ್ಮಾನಕ್ಕೆ ಬರುತ್ತಾರೆ ಪಾದರಿ ಗೋನಸಾಲ್ವಿಸ್. +-೩- +ಮುಂದಿನ ಕೆಲವೇ ದಿನಗಳಲ್ಲಿ ಶಿವಸಾಗರದ ಕ್ರೈಸ್ತ ಸಮೂಹದ ಸ್ಪಷ್ಟ ಪರಿಚಯ ಪಾದರಿ ಗೋನಸಾಲ್ವಿಸರಿಗೆ ಆಯಿತು. ಇಲ್ಲಿಯ ಬಹುತೇಕ ಕ್ರೀಸುವರು ಕೊಪೆಲಗೆ ಅನತಿ ದೂರದಲ್ಲಿ ಒಂದು ಧೂಪದ ಮರ ಹಾಗೂ ಒಂದು ಔಡಲ ಮರದ ನಡುವಿನ ಚೌಡಿಯನ್ನು ಪೂಜಿಸುತ್ತಿದ್ದರು. ಆ ಕಲ್ಲಿಗೆ ಇವರೇ ತೆಂಗಿನಕಾಯಿ ಒಡೆಯುವುದು, ಊದಿನ ಕಡ್ಡಿ ಹಚ್ಚುವುದು. ಅಲ್ಲಿಯ ಕುಂಕುಮವನ್ನು ತಾವು ಬಳಿದುಕೊಳ್ಳುವುದು ನಡೆಸುತ್ತಿದ್ದರು. ಈ ದೇವರು ಕ್ರೈಸ್ತರಿಗೇನೆ ಮೀಸಲಾದ ದೇವರೇನೂ ಆಗಿರಲಿಲ್ಲ. ಇಲ್ಲವೇ ಕ್ರೈಸ್ತರು ತಮಗಾಗಿ ಸೃಷ್ಟಿಸಿಕೊಂಡ ದೇವರೂ ಆಗಿರಲಿಲ್ಲ. ಕೊಪೆಲಿನ ಆಸು ಪಾಸಿನಲ್ಲಿಯ ಇತರೇ ಮತಸ್ತರು ಕೂಡ ಈ ದೇವರಿಗೆ ನಂಬಿಕೊಂಡು ಬಂದಿದ್ದರು. ಅವರ ಜತೆಗೆ ಕ್ರೀಸುವರೂ ಸೇರಿಕೊಂಡರು. ಹಾಗೆ ಮಾಡಬೇಡಿ ಅದು ನಿಮ್ಮ ದೇವರಲ್ಲ ಎಂದು ಹೇಳಲು ಅವರ ನಡುವೆ ಯಾರೂ ಇರಲಿಲ್ಲ. ಅವಿಶ್ವಾಸದ ಕಂದಕದಿಂದ ಅವರನ್ನು ತಪ್ಪಿಸುವವರು ಬಳಿ ಇರಲಿಲ್ಲ. ಅವರು ಸುಲಭವಾಗಿ ಈ ದೇವರಿಗೆ ಬಲಿಯಾದರು. +ಅಲ್ಲದೇ ಭೂತ ಪ್ರೇತಗಳು, ನಿಮಿತ್ತ ನೋಡುವುದು, ಭವಿಷ್ಯ ಕೇಳುವುದು, ಕವಡ ಹಾಕಿ ನೋಡುವುದು. ಮಾಟ ಮಂತ್ರ ಮೊದಲಾದ ಅನಿಷ್ಠ ಪದ್ದತಿಗಳೂ ಕ್ರೀಸುವರಲ್ಲಿ ನೆಲೆ ನಿಂತಿದ್ದವು. ಮಕ್ಕಳಿಗೆ ತಾಯಿತ ಕಟ್ಟಿಸುವುದು, ದೊಡ್ಡವರು ತೋಳಿಗೆ ಚೀಟಿ ಕಟ್ಟಿಕೊಳ್ಳುವುದು, ಕಾಯಿಲೆ ಬಂದರೆ, ಮನೆಯಲ್ಲಿ ಏನೋ ಕೆಡುಕಾದರೆ ಭೂತ ಪ್ರೇತಗಳಿಗೆ ಹರಕೆ ಕಾಣಿಕೆ ನೀಡುವುದು ಮೊದಲಾದ ಅಭ್ಯಾಸಗಳು ಬಲವಾಗಿ ನೆಲೆಯೂರಿದ್ದವು. +’ಕ್ರಿಸ್ತಪ್ರಭುವೆ ನಮ್ಮ ಜನರನ್ನು ಈ ಎಲ್ಲ ಮೌಢ್ಯಗಳಿಂದ ದೂರ ಮಾಡು…ಅವರನ್ನು ನಿಜ ದೇವರತ್ತ ಕರೆದುಕೊಂಡು ಹೋಗು..ಅವರಿಗೆ ಸನ್ಮಾರ್ಗ ತೋರಿಸುವಂತಹ ಶಕ್ತಿಯನ್ನು ನನಗೆ ನೀಡು.’ ಎಂದು ಅವರು ಪ್ರಭುವಿನಲ್ಲಿ ಬೇಡಿಕೊಂಡರು. +ಶಿವಸಾಗರದ ಕ್ರೀಸುವರ ಈ ಸ್ವಭಾವದ ಬಗ್ಗೆ ಯೋಚಿಸಿದಾಗ ಅವರಿಗೆ ತಟ್ಟನೆ ಗೋವಾದಲ್ಲಿ ತಾವು ಕೇಳಿದ ಒಂದು ವಿಷಯ ನೆನಪಿಗೆ ಬಂದಿತು. +ಅವರು ಹತ್ತು ವರ್ಷ ಪಾದರಿಯಾಗಿದ್ದ ಬಾಲ ಏಸುವಿನ ಇಗರ್ಜಿಯ ಹಿಂಬದಿಯಲ್ಲಿ ಅನ್ನುವ ಹಾಗೆ ಒಂದು ಬರಿದಾದ ನಿವೇಶನವಿತ್ತು. ಒಂದಿಷ್ಟು ಮರಗಳು, ಪೊದೆಗಳು ಅಲ್ಲಿ ಬೆಳೆದಿದ್ದವು. ಮೂರು ನಾಲ್ಕು ಮೋಟು ಗೋಡೆಗಳು, ಕಮಾನುಗಳು ಒಂದನ್ನೊಂದು ಕತ್ತರಿಸಿಕೊಂಡು ನಿಂತಿದ್ದವು. ಈ ಸ್ಥಳವನ್ನು ಅಲ್ಲಿಯ ಜನ ಇಂಕ್ವಿಜಿಷನ್ ಜಾಗ ಎಂದೇ ಜನ ಕರೆಯುತ್ತಿದ್ದರು. ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ಮಕ್ಕಳು ಕೂಡ ಅಲ್ಲಿ ಹೋಗಲು ಹೆದರುತ್ತಿದ್ದವು. ಅವರ ಮಾತಿನ ಹಿಂದೆ ಎನೋ ಭೀತಿ, ವಿಷಾದ ಇರುತ್ತಿತ್ತು. ಅತ್ತ ತಿರುಗಿದರೂ ಸಾಕು ಮುಖದ ಮೇಲೆ ಕರಿ ನೆರಳು ಸರಿದುಹೋದ ಹಾಗೆ ಜನ ವರ್ತಿ ಸುತ್ತಿದ್ದರು. ಅಲ್ಲೊಂದು ನಿಗೂಢತೆ ಕಪ್ಪು ಮುಸುಕು ಧರಿಸಿ ಸುಳಿದಾಡುತ್ತಿತ್ತು. +ತಾನು ಪಾದರಿಯಾಗಿ ಅಲ್ಲಿಗೆ ಹೋದನಂತರ ಈ ಎಲ್ಲ ಮಾತುಗಳೂ ತನ್ನ ಗಮನಕ್ಕೆ ಬಂದವು. ತಾನು ಈ ಬಗ್ಗೆ ಕುತೂಹಲ ಗೊಂಡೆ. ಈ ಸ್ಥಳದಲ್ಲಿ ನಡೆದಿರಬಹುದಾದ ಇಂಕ್ವಿಜಿಷನ್ ಬಗ್ಗೆ ತಿಳಿಯುವ ಯತ್ನ ಮಾಡಿದೆ. +ಇನ್ನೂರು ಮುನ್ನೂರು ವರ್ಷಗಳ ಹಿಂದೆ ಕ್ರೈಸ್ತ ಮತವನ್ನು ಸ್ವೀಕರಿಸಿದ ನವಕ್ರೈಸ್ತರು ತಮ್ಮ ಮೂಲ ಮತದ ಆಚಾರ ಪದ್ದತಿಗಳನ್ನು ತ್ಯಜಿಸದೇ ಹೋದಾಗ ಅಂತವರನ್ನು ಕಂಡು ಹಿಡಿದು ಶಿಕ್ಷಿಸಲು ಪೋರ್ಚುಗಿಸರು ನಡೆಸಿದ ಈ ಧಾರ್ಮಿಕ ವಿಚಾರಣೆ ಇಂಕ್ವಿಜಿಷನ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿತ್ತು. ಸ್ಪೇನ್, ಇಟಲಿ, ಪೋರ್ಚುಗಲ್ಲಿನಲ್ಲಿ ನಡೆಸಿದ ಈ ಧಾರ್ಮಿಕ ವಿಚಾರಣೆಯಲ್ಲಿ ಇಂಕ್ವಿಜಿಷನ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿತ್ತು. ಸ್ಪೇನ್, ಇಟಲಿ, ಪೋರ್ಚುಗಲ್ಲಿನಲ್ಲಿ ನಡೆಸಿದ ಈ ಧಾರ್ಮಿಕ ವಿಚಾರಣೆಯನ್ನು ಪೋರ್ಚುಗೀಸರು ಗೋವಾದಲ್ಲಿ ಕೂಡ ನಡೆಸಿ ಸುಮಾರಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದ್ದರು. +ನವಕ್ರೈಸ್ತರು ಎಂದು ಕರೆಸಿಕೊಂಡವರು ಬಹಿರಂಗದಲ್ಲಿ ಕ್ರೈಸ್ತರ ಆಚಾರ ವಿಚಾರಗಳನ್ನು ಅನುಸರಿಸುತ್ತ, ಅಂತರಂಗದಲ್ಲಿ ಬೇರೆ ಧರ್ಮ ದೇವರುಗಳಿಗೆ ನಿಷ್ಠರಾಗಿರುತ್ತಿದ್ದರೆಂದು ಹೇಳಲಾಗಿದೆ. ಇಂತಹ ವ್ಯಕ್ತಿಗಳನ್ನು ಹುಡುಕಿ ಅವರ ಬಗ್ಗೆ ವಿಚಾರಣೆ ನಡೆಸಿ ಮೂರು ನಾಲ್ಕು ವರ್ಷ ಇವರನ್ನು ಸೆರೆಮನೆಗಳಲ್ಲಿ ಇರಿಸಿ ಕೊನೆಗೊಂದು ಸಾರಿ ಬೆಂಕಿ ಇಟ್ಟು ಸುಡಲಾಗುತ್ತಿತ್ತು. ಹೀಗೆ ಸುಡುವ ಮುನ್ನ ಇವರು ಎಸಗಿದ ಅಪರಾಧ ಎಂತಹದು ಎಂಬುದನ್ನು ಬರೆದು ಇವರ ಕುತ್ತಿಗೆಗೆ ತೂಗುಹಾಕಲಾಗುತ್ತಿತ್ತು. +ಕ್ರೈಸ್ತರಾಗಿ ಮತಾಂತರ ಹೊಂದಿದ ಹಿಂದುಗಳು ತಮ್ಮ ಹಿಂದಿನ ಹೆಸರುಗಳನ್ನು ಮುಂದುವರೆಸಿದ್ದರು. ಮನೆಯಲ್ಲಿ ಹಿಂದು ದೇವರುಗಳನ್ನು ಗುಪ್ತವಾಗಿ ಆರಾಧಿಸುತ್ತಿದ್ದರು. ಮದುವೆ ಮುಂತಾದ ಸಂದರ್ಭಗಳಲ್ಲಿ ಹಿಂದು ಪದ್ದತಿಗಳಿಗೆ ಜೋತು ಬಿದ್ದಿದ್ದರು. ಇದು ಕ್ರೈಸ್ತ ಜಿಣಿಗೆಗೆ ವಿರುದ್ಧವೆಂದು ಪಾದರಿಗಳು ಸಾರಿದರು. ಇಂತಹ ಜನರನ್ನು ಹುಡುಕಿ ಇವರಿಗೆ ಶಿಕ್ಷೆ ನೀಡಿದರು. ನೂರು ಇನ್ನೂರು ವರ್ಷಗಳವರೆಗೆ ಈ ವಿಚಾರಣೆ ನಿರಂತರವಾಗಿ ನಡೆದು ಶಿಸ್ತಿಗೆ ಒಳಗಾಗಿ ಸತ್ತವರನ್ನು ಅಲ್ಲಲ್ಲಿ ಹೂಳಲಾಯಿತು. ಕೆಲ ಕಟ್ಟಡಗಳು ಈ ವಿಚಾರಣೆಗೆಂದೇ ಕಟ್ಟಲ್ಪಟ್ಟವು. +ನವಕ್ರೈಸ್ತರಲ್ಲಿ ಬಹಳ ಜನ ವಿಚಾರಣೆಗೆ ಹೆದರಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡರು. ತಮ್ಮ ಹಿಂದಿನ ದೇವರುಗಳನ್ನು ತೊರೆದರು. ಎಲ್ಲ ಸಂದರ್ಭಗಳಲ್ಲಿಯೂ ಕ್ರಿಶ್ಚಿಯನ್ ವಿಧಿವಿಧಾನಗಳನ್ನೇ ಅನುಸರಿಸಿ ಇವರೆಲ್ಲ ಪಕ್ಕಾ ಕ್ರೈಸ್ತರಾದರು. ಕೆಲವರು ಮಾತ್ರ ಗೋವಾದಿಂದ ನೆರೆ ರಾಜ್ಯಗಳಿಗೆ ಓಡಿ ಹೋದರು. +ಪಾದರಿ ಗೋನಸಾಲ್ವಿಸರಿಗೆ ಈ ವಿಷಯ ಸವಿಸ್ತಾರವಾಗಿ ತಿಳಿಯಿತು. ಈ ವಿಚಾರಣೆ ನಡೆಯುತ್ತಿದ್ದ ಒಂದು ಕಟ್ಟಡ ತಮ್ಮ ಇಗರ್ಜಿಯ ಹತ್ತಿರವೇ ಇರುವುದನ್ನು ಇವರು ಖಚಿತಪಡಿಸಿಕೊಂಡರು. ಆ ಕಟ್ಟಡದ ಬಗ್ಗೆ ಅಲ್ಲಿ ನಡೆದ ವಿಚಾರಣೆಯ ಬಗ್ಗೆ ಜನಭೀತಿಯನ್ನೋ ವಿಷಾದವನ್ನೋ ವ್ಯಕ್ತಪಡಿಸುವುದು ಕೂಡ ಇವರ ಗಮನಕ್ಕೆ ಬಂದಿತು. +ಆದರೆ ಈ ವಿಚಾರಣೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದವರು ನಂಬಿದರು. +ಕ್ರಿಸ್ತನನ್ನು ರಕ್ಷಕ ಎಂದು ನಂಬಿದವ ಬೇರೆ ಯಾರನ್ನೂ ನಂಬಬೇಕಾಗಿಲ್ಲ. ಕ್ರೀಸುವರು ಬೇರೊಂದು ಧರ್ಮದ ಆಚಾರ ವಿಚಾರಗಳಿಗೆ ಜೋತು ಬೀಳುವ ಅವಶ್ಯಕತೆಯೂ ಇಲ್ಲ. ಏಕೆಂದರೆ ಕ್ರೈಸ್ತ ಧರ್ಮ ಪರಿಪೂರ್ಣವಾದದ್ದು. ಅದನ್ನು ಒಪ್ಪಿ ಸ್ವೀಕರಿಸಿದ ಮೇಲೆ ಅದನ್ನಷ್ಟೇ ಅನುಸರಿಸಬೇಕು. ಯಾರು ಕೂಡ ಈರ್ವರು ಯಜಮಾನರ ಸೇವೆ ಮಾಡಲಾರರು ಎಂದು ಕ್ರಿಸ್ತನೇ ಹೇಳಲಿಲ್ಲವೇ? +ನವಕ್ರೈಸ್ತರು ಕ್ರೈಸ್ತರಾಗಿ ಪರಿವರ್ತನೆ ಹೊಂದಿದ ಕೂಡಲೇ ಅವರ ಹಿಂದಿನ ಧರ್ಮ ದೇವರನ್ನು ತ್ಯಜಿಸಬೇಕಿತ್ತು. ಅವರು ಅದನ್ನು ತ್ಯಜಿಸಲಿಲ್ಲವಾದ್ದರಿಂದ ಈ ವಿಚಾರಣೆ, ಶಿಕ್ಷೆ ಅನಿವಾರ್ಯವಾಯಿತು. ಇದರಿಂದ ಉಪಯೋಗವೂ ಆಯಿತು. ಕ್ರೀಸುವರು ಶುದ್ಧರಾದರು. ಅವರ ಮೂಲ ಧರ್ಮ ದೇವರನ್ನು ಅವರು ಸಂಪೂರ್ಣವಾಗಿ ತ್ಯಜಿಸಿದರು. +ಇಂಕ್ವಿಜಿಷನ್ ಬಗ್ಗೆ ವಿವರ ತಿಳಿದ ನಂತರ ಪಾದರಿ ಗೋನಸಾಲ್ವಿಸರ ಭಕ್ತಿ ನಿಷ್ಠೆ ಮತ್ತೂ ಅಧಿಕವಾಯಿತು. ಧರ್ಮವನ್ನು ಜನರ ಮನಸ್ಸಿನಲ್ಲಿ ಬಿತ್ತಬೇಕೆಂದರೆ ಹೀಗೊಂದು ಕಠಿಣ ದಾರಿಯನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿತು. ಹೀಗಾಗಿ ಅವರು ಕೂಡ ತಮ್ಮ ಧಾರ್ಮಿಕ ಧೋರಣೆಯ ಬಗ್ಗೆ ಬಿಗಿಯಾಗಿ ವರ್ತಿಸತೊಡಗಿದರು. +ಪಾದರಿಯಾದ ಮೊದಲ ಐದು ವರ್ಷಗಳವರೆಗೆ ಅವರು ಪಾದರಿ ಫ಼ಿಯಟ್ಟರ ಸಹಾಯಕರಾಗಿದ್ದರು. ಆಗ ಇವರಿಗೆ ಅಷ್ಟೇನೂ ಜವಾಬ್ದಾರಿ ಇರಲಿಲ್ಲ. ಅವರ ಮರಣದ ನಂತರ ಇವರು ಸ್ವತಂತ್ರರಾದರು. ಇಗರ್ಜಿಯ ಏಕೈಕ ಧರ್ಮಾಧಿಕಾರಿಯಾದರು. ಆಡಳಿತ ತಮ್ಮ ವಶಕ್ಕೆ ಬರುತ್ತಿದ್ದಂತೆಯೇ ಜನರ ಆಧ್ಯಾತ್ಮಿಕ ಬದುಕನ್ನು ರೂಪಿಸಲು ಮುಂದಾದರು. ಇಂಕ್ವಿಜಿಷನ್ ಮೂಲಕ ನವಕ್ರೈಸ್ತರನ್ನು ಶುದ್ಧ ಕ್ರೈಸ್ತರನ್ನಾಗಿಸುವ ಕೆಲಸ ನಡೆದ ಹಾಗೆಯೇ ಕ್ರೈಸ್ತರು ಅವರ ಧರ್ಮದೇವರು ಸಂಪ್ರದಾಯಗಳನ್ನು ಬಿಡದಂತೆ ನೋಡಿಕೊಳ್ಳಲು ಕೂಡ ಕೆಲ ಬಿಗಿ ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕು ಅಂದುಕೊಂಡರು. ಎಲ್ಲರೂ ಪೂಜೆಗೆ ಬರಬೇಕು. ಪಾಪ ನಿವೇದನೆ ಮಾಡಬೇಕು. ದಿವ್ಯ ಪ್ರಸಾದ ಸ್ವೀಕರಿಸಬೇಕು. ಇಗರ್ಜಿಗೆ ಸಲ್ಲಿಸಬೇಕಾದ ಅನ್ವಾಲ ಕಾಯಿದೆ ಕೊಡಬೇಕು. ಮಕ್ಕಳನ್ನು ಜ್ಞಾನೋಪದೇಷಕ್ಕೆ ಕಳುಹಿಸಬೇಕು. ಪಾದರಿಗಳಿಗೆ ವಿಧೇಯರಾಗಿರಬೇಕು ಎಂಬಿತ್ಯಾದಿ ನಿಯಮಗಳನ್ನು ಜನ ಮುರಿಯದಂತೆ ನೋಡಿಕೊಂಡರು. ಕೇವಲ ಮಾತಿಗೆ ಜನ ಬಗ್ಗದಿದ್ದಾಗ ಬೆದರಿಕೆ ಹಾಕಿದರು. ಕೋಪದಿಂದ ಕೂಗಾಡಿದರು. ಕೈಯಲ್ಲಿ ಬೆತ್ತ ಹಿಡಿದು ನಿಂತರು.ಇಗರ್ಜಿಯ ಯಾವುದೇ ಸೌಲಭ್ಯ ದೊರೆಯದಂತೆ ನೋಡಿಕೊಂಡರು. ಅವರ ಈ ವರ್ತನೆ ಅವರಿಗೆ ’ರಾಗಿಷ್ಟ ಪಾದರಿ’ ಎಂಬ ಹೆಸರನ್ನು ತಂದು ಕೊಟ್ಟಿತು. ಆದರೂ ಅವರು ಹಿಂದೆ ಸರಿಯಲಿಲ್ಲ. ದೇವರಿಗಾಗಿ ಅವರು ಯಾವುದೇ ಕಳಂಕ ಹೊರಲು ಸಿದ್ಧರಾಗಿದ್ದರು. +ಗೋವಾದಿಂದ ಕಾರವಾರಕ್ಕೆ ಅಲ್ಲಿಂದ ಹೊನ್ನಾವರಕ್ಕೆ ಬಂದ ಅವರಿಗೆ ಬೇರೊಂದು ಕ್ರೈಸ್ತ ಸಮೂಹ ಎದುರಾಯಿತು. ಗೋವಾದಿಂದ ಹೊರಗಿರುವ ಕ್ರೈಸ್ತರಲ್ಲಿ ಬಹುಪಾಲು ಜನ ಗೋವಾದಿಂದ ಓಡಿ ಬಂದವರು. ಗೋವಾದಲ್ಲಿ ಪೋರ್ಚುಗಿಸರು ನಡೆಸಿದ ಇಂಕ್ವಿಜಿಷನ್ನಿಂದ ತಪ್ಪಿಸಿಕೊಂಡು ಬಂದವರು. ಇವರೆಲ್ಲ ಕ್ರೈಸ್ತ ಧರ್ಮವನ್ನು, ಹಿಂದಿನ ಮತಾಚಾರಗಳನ್ನು ಉಳಿಸಿಕೊಂಡು ಬರಬೇಕೆಂಬ ಉದ್ದೇಶದಿಂದಲೇ ಓಡಿ ಬಂದವರಲ್ಲವೇ? ಈಗಲೂ ಅವರು ಹಿಂದಿನ ರೀತಿ ರಿವಾಜುಗಳನ್ನು ಇರಿಸಿಕೊಂಡಿದ್ದಾರೆ. ಅಂದರೆ ಇವರು ಈಗಲೂ ನಿಜ ಕ್ರೈಸ್ತರಾಗಿಲ್ಲ. ಅಂದ ಮೇಲೆ ಈಗ ಇವರಿಗೆ ಕ್ರೈಸ್ತ ಮತದ ದೀಕ್ಷೆ ನೀಡಬೇಕು ಎಂದು ನಿರ್ಧರಿಸಿದರು ಪಾದರಿ ಗೋನಸಾಲ್ವಿಸ್. ಈ ಕ್ರೈಸ್ತರ ಬಗ್ಗೆ ಏನೋ ಸಿಟ್ಟು, ತಾವು ಮಾಡಬಹುದಾದ ಕೆಲಸದ ಬಗ್ಗೆ ನಿಷ್ಠೆ ಕಾಣಿಸಿಕೊಂಡು ಅವರು ಹುರುಪುಗೊಂಡರು. +ಕ್ರೈಸ್ತರು ಜಾತ್ರೆಗಳಲ್ಲಿ ಭಾಗವಹಿಸಬಾರದು ಎಂದರು. ಗಾಡಿ ಹಬ್ಬ, ಹೋಳಿ ಹುಣ್ಣಿಮೆಗಳಲ್ಲಿ ಸೇರಿಕೊಳ್ಳಬಾರದು. ಯಕ್ಷಗಾನ ಮೊದಲಾದ ಆಟಗಳನ್ನು ನೋಡಬಾರದು. ಕ್ರೀಸುವರ ಮದುವೆಗಳಿಗೆ ಸ್ಥಳಿಯವಾದ ವಾಲಗವನ್ನು ಬಳಸಬಾರದು. +ಮಕ್ಕಳಿಗೆ ಕಾಯಿಲೆಯಾದಾಗ ಹಿಂದು ದೇವರುಗಳಿಗೆ ಹರಕೆ ಹೇಳಿಕೊಳ್ಳುವುದು, ಭೂತಗಳಿಗೆ ಕೋಳಿ ಕೊಡುವುದು. ಯಂತ್ರ ಮಂತ್ರ ಜಾತಕ ನೋಡಿಸುವುದು ಸಲ್ಲದು. +ಮದುವೆ ಮತ್ತೊಂದಕ್ಕೆ ವಾರ, ಅಮವಾಸ್ಯೆ, ಹುಣ್ಣಿಮೆ, ಎಂದೆಲ್ಲ ಲೆಕ್ಕ ಹಾಕಬಾರದು. +ಸತ್ತವರಿಗೆ ಎಡೆ ಇಡುವುದು. ಇತ್ಯಾದಿ ಮಾಡಬಾರದು. ಈ ಬಗೆಯ ನೂರಾರು ಪದ್ಧತಿಗಳನ್ನು ಕಂಡು ಗಮನಿಸಿ ಅವುಗಳನ್ನು ಖಂಡಿಸಿದರು. +ಇಗರ್ಜಿಯಲ್ಲಿ ಇಂತಹ ಕಾರ್ಯಗಳಲ್ಲಿ ನಿರತರಾದವರ ಹೆಸರುಗಳನ್ನು ಹೇಳಿದರು. +“ಸೈತಾನ ನಿಮ್ಮ ಕಿವಿಗಳಲ್ಲಿ ಬಾಲ ತುರುಕಿದ್ದಾನೆ. ನಿಮಗೆ ದೇವರ ಶಾಪವಿದೆ. ಇಗರ್ಜಿ ಮಾತೆಯ ಶಾಪ ನಿಮ್ಮ ಮೇಲೆ ಬೀಳುತ್ತದೆ. ನೀವೆಲ್ಲ ಶಾಶ್ವತ ಅಗ್ನಿಗೆ ಭಾಜನರಾಗುತ್ತೀರಾ’. +ಇಗರ್ಜಿಯ ಫ಼ುಲಪತ್ರಿಯ ಮೇಲೆ ನಿಂತು ಉರಿಯುವ ಬೆಂಕಿಯಾಗಿ ಫಟ ಫಟಿಸಿದರು. +ತಮ್ಮ ಮಾತು ಮೀರಿ ಹೋದವರನ್ನು ಹೊಡೆದು ದಂಡಿಸಲು ಕೂಡ ಅವರು ಹಿಂದೆ ಮುಂದೆ ನೋಡಲಿಲ್ಲ. +ಕಾರವಾರ ಹೊನ್ನಾವರಗಳ ಜನ ದಾರಿಗೆ ಬಂದರು. ಪಾದರಿ ಗೋನಸಾಲ್ವಿಸ್ ಅಂದರೇನೆ ಅಲ್ಲಿಯ ಜನರಿಗೆ ದುಃಸ್ವಪ್ನವಾಗಿ ಪರಿಣಮಿಸಿದರು. +ಗೋವಾ, ಕಾರವಾರ, ಹೊನ್ನಾವರಗಳ ನಂತರ ಇದೀಗ ಶಿವಸಾಗರ ಅವರ ಮುಂದೆ ಒಂದು ಸವಾಲಾಗಿ ನಿಂತಿದೆ. +ಸೊಂಟಕ್ಕೆ ಗರ್ದಲ(ಸೊಂಟದ ಪಟ್ಟಿ) ಬಿಗಿದುಕೊಂಡು ಅವರು ಒಂದು ಕೆಲಸ ಮಾಡಲು ಸನ್ನದ್ಧರಾದರು. +ಹೊಲ್ಡಾಲಿನಿಂದ ಹೊರತೆಗೆದು ಇರಿಸಿದ ದೇವರ ಪ್ರತಿಮೆ. ಪೈನೆಲ, ಅರ್ಲೂಕ, ಬೆಂತಿಣಿಗಳ ನೆನಪು ಅವರಿಗೆ ಆಯಿತು. ಹೊನ್ನಾವರ ಬಿಡುವಾಗ ದೇವರ ಪ್ರೇರಣೆಯಿಂದಲೋ ಏನೋ ಅವುಗಳನ್ನೆಲ್ಲ ಅವರು ಹೋಲ್ಡಾಲಿಗೆ ಹಾಕಿಕೊಂಡಿದ್ದರು.ಈಗ ಅವುಗಳೆಲ್ಲ ಪ್ರಯೋಜನಕ್ಕೆ ಬಂದವಲ್ಲ ಎಂದು ಮನಸ್ಸಿಗೆ ಸಮಾಧಾನ ಎನಿಸಿತು. +’ಬೋನಾ ಇವುಗಳನ್ನು ತೆಗೆದುಕೋ’ ಎಂದು ಬಟ್ಲರ್ ಬೋನಾಗೆ ಹೇಳಿ ಕೊಪೆಲನ ಬಾಗಿಲು ಎಳೆದುಕೊಂಡು ಅವರು ಹೊರಟರು. +ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಜನರನ್ನು ನೋಡಿದಾಕ್ಷಣ ಅವರು ಕ್ರೀಸುವರು ಹೌದೋ ಅಲ್ಲವೋ ತಿಳಿಯುತ್ತದೆ. ಕುತ್ತಿಗೆಯಲ್ಲಿಯ ಅರ್ಲೂಕಿನ ಮೇಲಿರುವ ಉಬ್ಬು ಚಿತ್ರ ಅವರು ಕ್ರೀಸುವರು ಎಂಬುದನ್ನು ತಿಳಿಸುತ್ತದೆ. ಲೋಹದ ಈ ಪದಕದ ಮೇಲೆ ಕ್ರಿಸ್ತನ, ಮೇರಿ ಮಾತೆಯ, ಜೋಸೆಫರ ಚಿತ್ರವಿರುತ್ತದೆ. ಇಲ್ಲವೆ ಕ್ರೀಸುವರು ಕೈಗೆ ಮಿಂಜಿತ ಕಟ್ಟಿಕೊಂಡಿರುತ್ತಾರೆ. ಹಳದಿ ಕೆಂಪು ಬಣ್ಣದ ಈ ದಾರ ಅವರ ಧರ್ಮವನ್ನು ಸಾರುತ್ತದೆ. ಕೆಲವರ ಕುತ್ತಿಗೆಯಲ್ಲಿ ಸಂತರ ಚಿತ್ರವಿರುವ ಬೆಂತಿಣ್ ಗಳು ಇರುತ್ತವೆ. +ಕ್ರೀಸುವರ ಮನೆ ಬಾಗಿಲಲ್ಲಿ ಶಿಲುಬೆ ಇರುತ್ತದೆ. ಕ್ರಿಸ್ತ ಪ್ರಭುವಿನ, ಅವನ ತಂದೆ ಜೋಸೆಫರ, ತಾಯಿ ಮೇರಿಯ ಭಾವ ಚಿತ್ರಗಳಿರುತ್ತವೆ. +ಇಲ್ಲಿ ಇದಾವುದೂ ಇಲ್ಲ. ಅಂದರೆ ಇದೆಲ್ಲವನ್ನೂ ತಾನು ಈಗ ಆರಂಭಿಸಬೇಕಾಗಿದೆ. ಹೀಗೆಂದೇ ಸಿಮೋನನ ಮನೆಬಿಟ್ಟು ಉಳಿದ ಮನೆಗಳತ್ತ ಅವರು ನಡೆದರು. +ಮರಿಯಮ್ಮ ಕೊಟ್ಟಿಗೆಯಲ್ಲಿಯ ಶಗಣೆ ಬಾಚಿ ತಿಪ್ಪೆ ಗುಂಡಿಗೆ ಒಯ್ದು ಹಾಕುವಾಗ ಮನೆಬಾಗಿಲಲ್ಲಿ ಬಿಳಿ ನಿಲುವಂಗಿ ಕಂಡು ಗಾಬರಿಯಾದಳು. ದೇವರೆ, ಇವರು ಈಗಲೇ ಬರಬೇಕಿತ್ತೆ ಎಂದು ಜಗಲಿಗೆ ಓಡಿಬಂದು ಆಶೀರ್ವಾದಕ್ಕಾಗಿ ಕೈ ಜೋಡಿಸಿದಳು. +ಎಮ್ಮೆಗಳನ್ನು ಹೊಡೆದುಕೊಂಡು ಹೊರಟ ಅವಳ ಓರ್ವ ಮಗ ಪಾದರಿಯನ್ನು ಕಂಡದ್ದೇ, ಹಿತ್ತಲಿಗೆ ನುಗ್ಗಿ ಎಲ್ಲೋ ಮಾಯವಾದ. ಇನ್ನೋರ್ವ ಮನೆಯೊಳಗೆ ಅಡಗಿ ಕೊಂಡ. +ಎದಿರು ನಿಂತ ಮರಿಯಳನ್ನು ಅಪಾದ ಮಸ್ತಕ ದಿಟ್ಟಿಸಿ ನೋಡಿದರು ಪಾದರಿ. ಅವಳ ಕುತ್ತಿಗೆಯಲ್ಲಿ ಕಪ್ಪಗಾದ ಬಂಗಾರದ ತೆಳು ಸರಪಳಿಗೆ ಸಣ್ಣದೊಂದು ಶಿಲುಬೆ ತೂಗು ಬಿದ್ದೀತು. ಈ ಶಿಲುಬೆಯ ನಡುವೆ ಕೆಂಪು ಹರಳು. ಸ್ವಲ್ಪ ಸಮಾಧಾನವಾಯಿತು ಅವರಿಗೆ. ಕ್ರಿಸ್ತನ ಒಂದು ಲಾಂಛನ ಇವಳ ಕುತ್ತಿಗೆಯಲ್ಲಿದೆ. ಆದರೆ ಇವಳ ಮಕ್ಕಳ ಕುತ್ತಿಗೆ? +’ಎಲ್ಲಿ ಹುಡುಗರು?’ಪಾದರಿ ಗಡುಸಾಗಿಯೇ ಕೇಳಿದರು. +ಮರಿಯ ಒಳಬಾಗಿಲತ್ತ ತಿರುಗಿ, ಜಗಲಿಯ ತುದಿಗೆ ಬಂದು ಹಿತ್ತಲಿಗೆ ಮುಖ ಮಾಡಿ- +“..ಯೇಯ……..ಬಾಳಾ……ಗುಸ್ತೀನಾ….” +ಎಂದು ದೊಡ್ಡ ದನಿಯಲ್ಲಿ ಕೂಗು ಹಾಕಿದಳು. ಎರಡು ಮೂರು ಬಾರಿ ಕೂಗಿ- +“ಇಲ್ಲೇ ಇದ್ದರು..ಎಲ್ಲಿ ಹೋದರೋ..” +ಎಂದು ಪಾದರಿಯ ಮುಖ ನೋಡಿದಳು. +“ಇರಲಿ..ನೀವು ಯಾರೂ ಕ್ರಿಸ್ತನ ಜಿಣಿಯನ್ನು ಜೀವಿಸುತ್ತಿಲ್ಲ..ನೀವೆಲ್ಲ ಅನಭವಾಡ್ತಿಗಳಾಗಿ..ಅಪನಂಬಿಕೆಯುಳ್ಳವರಾಗಿ ನಾಶವಾಗಿದ್ದೀರ, ನಿಮಗೆ ನಿಜ ದೇವರಾದ ಏಸುವಿನಲ್ಲಿ ನಂಬಿಕೆಯಿಲ್ಲ ಶೃದ್ಧೆಯಿಲ್ಲ…ಆದರೆ ನಿಮ್ಮನ್ನು ಹೀಗೆಯೇ ಇರಗೊಡಬಾರದು ಅಂತ ನಾನು ಬಂದಿದ್ದೇನೆ..” +ಅವರು ಬೋನನತ್ತ ತಿರುಗಿದರು. ಆತ ಕೊಟ್ಟ ಅರ್ಲೂಕ ಹಾಗೂ ಮಿಂಜಿತಗಳನ್ನು ಮರಿಯಳ ಕೈಗೆ ಕೊಡುತ್ತ ಅವರೆಂದರು- +“..ಇವುಗಳನ್ನು ಮನೇಲಿ ಇರೋ ಎಲ್ಲರೂ ಕಟ್ಟಿಕೊಳ್ಳಬೇಕು..ಅಂದರೆ ನೀವು ಕ್ರೀಸುವರನ್ನೋದು ನೋಡಿದ ಕೂಡಲೆ ಗೊತ್ತಾಗುತ್ತೆ..ಕ್ರಿಸ್ತನಿಂದ ನಿಮಗೆ ರಕ್ಷಣೆ ಇರುತ್ತೆ..ಏನೇ ಕಂಟಕ ಬಂದರೂ ಏಸು ನಿಮ್ಮನ್ನು ಕಾಪಾಡತಾನೆ…” +ಇಷ್ಟು ಹೇಳಿ ಅವರು ಕೊಂಚ ತಡೆದು ನಿಂತರು. ಇಂತಹಾ ವಿಷಯಗಳ ಬಗ್ಗೆ ಮಾತನಾಡುತ್ತ ಅವರು ಭಾವಪರವಶರಾಗುತ್ತಿದ್ದರು. ಧರ್ಮ, ದೇವರು ಸಂಪ್ರದಾಯಗಳಿಗೆ ತಪ್ಪಿ ನಡೆಯುವವರನ್ನು ಕಂಡಾಗ ಅವರಿಗೆ ಸಿಟ್ಟು ಬರುತ್ತಿತ್ತು. ಕೋಪವೆಂದರೆ ಕಣ್ಣು ಕೆಂಪೇರುವ, ಮುಖ ಬಿಗಿದುಕೊಳ್ಳುವ ಕೋಪವಲ್ಲ, ಎದಿರು ನಿಂತಿರುವವರ ಕೆನ್ನೆಗೆಹೊಡೆದು , ಅವರ ಬೆನ್ನಿಗೆ ಮುಷ್ಠಿ ಕಟ್ಟಿ ಬಿಗಿದು, ಕೈಲಿರುವ ನಾಗರ ಬೆತ್ತ ಅವರತ್ತ ಬೀಸಿ ಅವರು ತಮ್ಮ ಕೋಪ, ಸಿಟ್ಟನ್ನು ಕಾರಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಗೋವಾ, ಕಾರವಾರ, ಹೊನ್ನಾವರಗಳಲ್ಲಿ ಅವರಿಗೆ ರಾಗಿಷ್ಟ(ಕೋಪಿಷ್ಟ) ಪಾದರಿ ಎಂಬ ಹೆಸರು ಬಿದ್ದಿತು. ಇವರೆಂದರೆ ಜನ ಹೆದರುತ್ತಿದ್ದರು. ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಬಂದ ನಂತರ ಅವರ ಈ ಕೋಪ ಪ್ರದರ್ಶನ ಆಗಿರಲಿಲ್ಲ. ಇಲ್ಲಿಯ ಅವ್ಯವಸ್ಥೆ, ಕ್ರೀಸುವರ ದುರಂತ ಬದುಕು ನೋಡಿ ಅವರು ವ್ಯಗ್ರರಾಗಿದ್ದರು. ಅವರಿಗೆ ವಿಪರೀತ ಸಿಟ್ಟೂ ಬಂದಿತ್ತು. ಆದರೆ ಅದನ್ನು ತೋರಿಸಿಕೊಳ್ಳದೆ, ಆದಷ್ಟು ಒಳ್ಳೆಯ ರೀತಿಯಲ್ಲಿ ಜನರನ್ನು ಒಲಿಸಿಕೊಳ್ಳಬೇಕೆಂದು ಅವರು ನಿರ್ಧರಿಸಿದರು. +ಇಲ್ಲಿಯ ಕ್ರೈಸ್ತರು ಕ್ರೈಸ್ತರಾಗಿ ಉಳಿಯದೆ ಇರಲು ಕಾರಣ ಇಲ್ಲಿ ಪಾದರಿಗಳು ಇಲ್ಲದಿದ್ದುದು. ಕ್ರೈಸ್ತರಲ್ಲಿ ಗಾಢವಾದ +ಭಕ್ತಿ, ಶೃದ್ಧೆ ಇಲ್ಲದೇ ಹೋದದ್ದು. ಜನ ಸುತ್ತು ಮುತ್ತಲಿನವರು ಆರಾಧಿಸುವ ಮಾರಿ, ಚೌಡಿ, ಕಲ್ಲು ಕುಟಿಗನನ್ನು ಪೂಜಿಸತೊಡಗಿದ್ದುದು ಸರಿಯಲ್ಲವಾದರೂ ಈ ಕಾರ್ಯ ಇಲ್ಲಿ ನಡೆದಿದೆ. ಹೀಗಿರುವಾಗ ಈ ಜನರನ್ನು ಬೈಯ್ದು ಉಪಯೋಗವಿಲ್ಲ. ಬೇರೆ ದಾರಿ ಕಂಡುಕೊಳ್ಳಬೇಕು. ಅವರು ತಮ್ಮ ಕೋಪ ತಾಪಗಳನ್ನು ಪ್ರದರ್ಶಿಸಲು ಮುಂದಾಗಲಿಲ್ಲ. ಉಕ್ಕಿ ಬರುತ್ತಿರುವ ಸಿಟ್ಟನ್ನು ತಡೆದುಕೊಂಡು ಅವರು ಮರಿಯಳಿಗೆ ಕೇಳಿದರು. +“ನಿತ್ಯ ಮೂರು ಸಾರಿ ಮನೇಲಿ ಅಮೋರಿ ಮಾಡತೀರ?” +ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಇಗರ್ಜಿಯ ಗಂಟೆ ಹೊಡೆದಾಕ್ಷಣ ಪ್ರಾರ್ಥನೆ ಮಾಡಬೇಕೆಂಬುದು ಒಂದು ಕಡ್ಡಾಯ. ಈ ಪ್ರಾರ್ಥನೆ ಮಾಡದಿರುವುದು ಪಾಪ ಕೂಡ. ಮರಿಯ ಉತ್ತರ ನೀಡದೆ ನಿಂತಾಗ ಪಾದರಿ ಮುಂದಿನ ಪ್ರಶ್ನೆ ಕೇಳಿದರು. +’ಹೋಗಲಿ ಸಾಯಂಕಾಲ ಜಪಸರದ ಪ್ರಾರ್ಥನೆ?’ಆಗಲೂ ಅವಳು ಉತ್ತರಿಸಲಿಲ್ಲ. +’ ಬೇಡ ಮಕ್ಕಳಿಗೆಲ್ಲ ಶಿಲುಬೆಯ ವಂದನೆ ಮಾಡಲಿಕ್ಕೆ ಬರುತ್ತೆ ಅಲ್ಲವೇ?’ +ಹಣೆ, ತುಟಿ, ಎದೆಯ ಮೇಲೆ ಶಿಲುಬೆಯ ಗುರುತು ಬರೆದುಕೊಂಡು, ಪವಿತ್ರ ಶಿಲುಬೆಯ ಕೃಪೆಯಿಂದ ನಮ್ಮನ್ನು ಕಷ್ಟಕಾಲದಲ್ಲಿ ರಕ್ಷಿಸು ಎಂದು ಹೇಳಿ ತಂದೆಯ ಪಿತನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಶಿಲುಬೆಯ ವಂದನೆ ಮಾಡುವುದು ಪ್ರತಿ ಕ್ರೀಸುವರ ಕರ್ತವ್ಯ. ಇದೂ ಬರುವುದಿಲ್ಲ ಎಂದರೇ ಆತ ಕ್ರಿಸ್ತನೇ ಅಲ್ಲ. ಮರಿಯಳ ಮಕ್ಕಳಿಗೆ ಇದಾದರೂ ಬರುತ್ತದೆಯೇ? ಯಾರಾದರೂ ಕಲಿಸಿದ್ದಾರೆಯೇ? +’ಹೇಳಿಕೊಡತೀನಿ ಪದ್ರಬಾ’ ಎಂದು ವಿನಯದಿಂದ ನುಡಿದಳು ಮರಿಯ. +’ ಆಯ್ತು…ಈ ಭಾನುವಾರದಿಂದ ಪ್ರತಿ ಭಾನುವಾರ ನೀವೆಲ್ಲ ಇಗರ್ಜಿಗೆ ಬರಬೇಕು..’ ಎಂದು ಆದೇಶ ನೀಡಿ ಅಲ್ಲಿಂದ ಹೊರಬಿದ್ದರು. +ಮರಿಯಳ ಮನೆ ಅಂಗಳ ದಾಟುವಾಗ- +“..ಏನಿದು..ಈ ಊರಿನಲ್ಲಿ ನಮ್ಮ ಧರ್ಮದ ಮೂಲ ಲಕ್ಷಣಗಳು ಯಾವುವು ಉಳಿದಂತಿಲ್ಲ…ನಾನಿಲ್ಲಿ ತುಂಬಾ ಕೆಲಸ ಆರಂಭಮಾಡಬೇಕಾಗಿದೆ.” +ಮುಂದೆ ಒಂದೊಂದೇ ಮನೆಯ ಒಳಹೋಗಿ ಬರುತ್ತಿದ್ದಂತೆಯೇ ಅವರು ತೀವ್ರವಾಗಿ ಅಸ್ವಸ್ಥಗೊಂಡರು. ಸೈತಾನ ತನ್ನ ಬಲೆಯನ್ನು ಚೆನ್ನಾಗಿ ಬೀಸಿದ್ದ. ಮೂರನೇ ಬಾರಿ ಕ್ರೀಸುವರ ಮನೆಗಳನ್ನು ಕಂಡಾಗಲಂತೂ ಅವರು ಬೆಂಕಿ ಸ್ಪರ್ಶವಾದ ಮದ್ದಿನಂತೆ ಸಿಡಿಮಿಡಿಗೊಂಡರು. +ಮೂರನೇ ಮನೆ ಸುತಾರಿ ಇನಾಸನ ಮನೆ. ಅಂಗಳದಲ್ಲಿ ಕಲಕುಟಿಗ ಬಂದು ಕುಳಿತಿದ್ದ. ಸಾನಬಾವಿ ಪೆದ್ರು ಮನೆಯಲ್ಲಿ ಹಿಂದು ಹೆಂಗಸೊಬ್ಬಳ ದರ್ಬಾರು ನಡೆದಿತ್ತು. ಸಾಂತಾಮೋರಿ ಊಟದ ಮನೆಯಲ್ಲಿ ದೇವರ ಪ್ರಾರ್ಥನೆ ಅಮೋರಿಗೆ ಜಾಗವಿರಲಿಲ್ಲ. ಪಾಸ್ಕೋಲನ ಮೇಸ್ತನ ಮನೆಯಲ್ಲಿ ಅಲ್ಪಸ್ವಲ್ಪ ದೈವ ಭಕ್ತಿ ಉಳಿದಿತ್ತು. ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ, ಕೈತಾನ, ಮಿಂಗೇಲಿ, ಇಂತ್ರು ಮೊದಲಾದವರಿಗೆ ದೇವರ ಸ್ಮರಣೆಯೆ ಆಗುತ್ತಿರಲಿಲ್ಲ. ವೈಜೀಣ್ ಕತ್ರೀನ ಒಬ್ಬಳಲ್ಲಿ ದೈವಭಕ್ತಿ ಇತ್ತು. +ದೇವರು, ಪ್ರಾರ್ಥನೆ, ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಇವುಗಳೆಲ್ಲ ನಿತ್ಯದ ಬದುಕಿಗೆ ಅವಶ್ಯಕ ಎಂಬ ವಿಷಯವನ್ನೇ ಇವರು ಮರೆತಂತಿತ್ತು. ಇವರನ್ನು ಮತ್ತೆ ಹಿಂದಿನ ದಾರಿಗೆ ತರುವ ಕೆಲಸವನ್ನು ಅವರು ಆರಂಭಿಸಿದರು. +ಉಳಿದ ಮನೆಗಳಿಗೆ ಹೋಗಿ ಪಾದರಿ ಅರ್ಲೂಕ ನೀಡಿದರು. ಮಿಂಜಿತಗಳನ್ನು ಕಟ್ಟಿಕೊಳ್ಳಲು ಹೇಳಿದರು. ಏಕಮಾತ್ರ ನಿಜದೇವನ ಮಹಿಮೆಯ ಕುರಿತು ಹೇಳಿದರು. ಅವನಿಂದ ಮಾತ್ರ ನಮಗೆ ರಕ್ಷಣೆ ಇದೆ. ಮೋಕ್ಷವಿದೆ ಎಂದರು. ನಾವು ಕ್ರೀಸುವರಾಗಿ ಹುಟ್ಟಿದ್ದೇವೆ. ಕ್ರೀಸುವರಾಗಿಯೇ ಬದುಕಬೇಕು. ಬೇರೆ ಯಾವುದೇ ದೇವರನ್ನು ನಂಬುವ ಪೂಜಿಸುವ ಕೆಲಸವನ್ನು ನಾವು ಮಾಡಬಾರದು. +ನಮ್ಮ ಮನೆಗಳಲ್ಲಿ ನಮ್ಮ ದೇವರ ಪ್ರತಿಮೆಗಳನ್ನು ಇಡೋಣ. ಮೇರಿ ಜೋಸೆಫ಼್ ರ, ಇತರೆ ಸಂತರ ಪೈನೆಲಗಳನ್ನು ಇಡೋಣ. ದಿನನಿತ್ಯ ಮೂರು ಬಾರಿ ಅಮೋರಿ, ಸಂಜೆ, ಜಪಸರ ಪ್ರಾರ್ಥನೆ. ಊಟಕ್ಕೆ ಮುನ್ನ, ಮಲಗುವ ಮುನ್ನ, ಎದ್ದ ತಕ್ಷಣ ದೇವರನ್ನು ಸ್ತುತಿಸಿ ಬಹಳ ಮುಖ್ಯವಾಗಿ ಭಾನುವಾರಗಳಂದು ತಪ್ಪದೆ ಪೂಜೆಯನ್ನು ಆಲಿಸಿ, ಪಾಪನಿವೇದನೆ ಮಾಡಿ, ಪಾಪಗಳಿಗೆ ಪ್ರಾಯಶ್ಚಿತ್ತ ಪಟ್ಟು ದಿವ್ಯ ಪ್ರಸಾದ ಸ್ವೀಕರಿಸಿ ಇಗರ್ಜಿಗೆ ಬನ್ನಿ. ಪಾದರಿ ದೇವರ ಪ್ರತ್ತಿನಿಧಿ. ಅವರಿಗೆ ವಿಧೇಯರಾಗಿರಿ. ಅವರ ಮಾತು ಕೇಳಿ. ದೇವರ ಹತ್ತು ಉಪದೇಶಗಳನ್ನು, ಇಗರ್ಜಿ ಮಾತೆಯ ನಿಯಮಗಳನ್ನು ಪಾಲಿಸಿ. +ಪ್ರತಿಯೊಂದು ಮನೆಯಲ್ಲೂ ಅವರು ಈ ಮಾತುಗಳನ್ನು ಹೇಳಿದರು. ಪ್ರತಿಯೊಬ್ಬರ ಮನಸ್ಸಿಗೆ ತಟ್ಟುವಂತೆ ಹೇಳಿದರು. +ಈ ಮಾತುಗಳನ್ನು ಹೇಳುವಾಗ ಅವರ ಎಡಗೈ ಹಸ್ತ ಎದೆಯ ಮೇಲಿರುತ್ತಿತ್ತು. ಬಲಗೈ ಯನ್ನು ಎತ್ತಿ ಹಿಡಿದಿರುತ್ತಿದ್ದರು. ಕೆಲ ಬಾರಿ ಬೈಬಲ್ ಈ ಕೈಲಿರುತ್ತಿತ್ತು. ಕಣ್ಣುಗಳನ್ನು ಅರೆ ಮುಚ್ಚಿಕೊಂಡಿರುತ್ತಿದ್ದರು. ಎತ್ತರದ ಅವರ ದನಿ ಗುಹೆಯಲ್ಲಿ ಮಾರ್ದನಿಗೊಳ್ಳುತ್ತಿರುವಂತೆ ಕೇಳಿಸುತ್ತಿತ್ತು. ಏಸುವಿನ ಮತವನ್ನು ಪ್ರಚುರ ಪಡಿಸಿದ ಹಿಂದಿನ ಸಂತರ ವ್ಯಕ್ತಿತ್ವ, ಧಾಟಿ ಶೈಲಿಯನ್ನು ಮನಸ್ಸಿಗೆ ತಂದುಕೊಂಡು ಅವರು ಈ ಮಾತುಗಳನ್ನು ಹೇಳುತ್ತಿದ್ದರು. +ದೇವರ ವಾಕ್ಯಗಳನ್ನು ಹೊಸದಾಗಿ ಜನರ ನಡುವೆ ಬಿತ್ತುವುದು ಎಷ್ಟು ಮುಖ್ಯವೋ ಈ ವಾಕ್ಯಗಳನ್ನು ಕ್ರೀಸುವರಾದವರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದೂ ಕೂಡ ಮುಖ್ಯವೇ. ಇಂತಹಾ ಒಂದು ಕೆಲಸವನ್ನು ತಾನು ಮಾಡುತ್ತಿರುವ ಬಗ್ಗೆ ಅವರಿಗೆ ಹೆಮ್ಮೆ ಎನಿಸಿತು. ತಾನು ಪಾದರಿಯಾದದ್ದು ಈಗ ಸಾರ್ಥಕವಾಯಿತು. ಫಲಕಾರಿಯಾಯಿತು. ಅಲ್ಲಿ ಆಗಿದ್ದರೆ ನಿತ್ಯ ಇಗರ್ಜಿಗೆ ಬರುವ ಜನರಿಗೆ ದಿವ್ಯ ಪ್ರಸಾದ ಕೊಡುತ್ತ ಪೂಜೆ ಮಾಡುತ್ತ ತಾನು ಯಾಂತ್ರಿಕವಾಗಿ ಬದುಕುತ್ತಿದ್ದೆ. ಆದರೆ ಇಲ್ಲಿ ಕ್ರಿಸ್ತನನ್ನು ಮರೆತಿರುವ ಬೇರೆ ದೇವರುಗಳ ಪ್ರಭಾವಕ್ಕೆ ಒಳಗಾಗಿರುವ ಜನರನ್ನು ಉಳಿಸಿಕೊಳ್ಳುತ್ತಿದ್ದೇನೆ. +ಆ ವಾರವೆಲ್ಲ ಅವರು ಇದೇ ಕೆಲಸ ಮಾಡಿದರು. ಮತ್ತೆ ಮತ್ತೆ ಕ್ರೀಸುವರ ಮನೆಗಳಿಗೆ ಹೋದರು. ಬೆಳಕು ಹರಿಯುತ್ತಿರುವಾಗಲೆ, ಹೋಗಿ ಕಲ್ಲು ಕೆತ್ತಲು, ಕಲ್ಲು ಕಟ್ಟಲು ಹೊರಟವರನ್ನು ತಡೆದು ನಿಲ್ಲಿಸಿದರು. ಲಾದ್ರು, ಪೆದ್ರು, ಕೈತಾನ, ಪಾಸ್ಕೋಲ, ಇಂತ್ರು, ಸಾವೇರ, ಜ್ಯೂರ್ನಿ ಇವರನ್ನು ನಿಲ್ಲಿಸಿಕೊಂಡು ಇವರ ಕುತ್ತಿಗೆಗೆ ಅರ್ಲೂಕಗಳನ್ನು ಕಟ್ಟಿದ್ದರು. +ನಿಮಗೆಲ್ಲ ಅಮೋರಿ ಬರುತ್ತದೆಯೇ? ಶಿಲುಬೆ ವಂದನೆ ಬರುತ್ತದೆಯೇ? ಎಂದು ಕೇಳಿದರು. +ಭಾನುವಾರ ಪೂಜೆಗೆ ಬನ್ನಿ, ಪಾಪ ನಿವೇದನೆ ಮಾಡಿ ದಿವ್ಯ ಪ್ರಸಾದ ಸ್ವೀಕರಿಸಿ, ಕ್ರೀಸರಾಗಿ ಹುಟ್ಟಿದ್ದೀರಿ ಕ್ರೀಸರಾಗಿ ಬದುಕಿ. ಕ್ರಿಸ್ತನನ್ನು ನಂಬಿದವರಿಗೆ ಮಾತ್ರ ಬದುಕು, ಇಲ್ಲವೆಂದರೆ ನರಕ ಎಂದರು. +ಕಟ್ಟಿಗೆ ತರಲು, ಕೂಲಿ ಮಾಡಲು, ಮೀನು ಮಾರಲು ಹೊರಟ ಕ್ರೈಸ್ತ ಮಹಿಳೆಯರನ್ನೂ ನಿಲ್ಲಿಸಿಕೊಂಡರು. ಇವೇ ಮಾತುಗಳನ್ನು ಮತ್ತೆ ಮತ್ತೆ ಹೇಳಿದರು. ದೇವರ ಅನುಗ್ರಹ ಶಾಪಗಳ ವ್ಯತ್ಯಾಸ ತಿಳಿಸಿದರು. ಮಕ್ಕಳನ್ನು ಜ್ಞಾನೋಪದೇಶಕ್ಕೆ ಕಳುಹಿಸಿ ಎಂದರು. +ಮನೆಗೆಲಸ ಮಾಡುತ್ತಲೋ, ಆಡುತ್ತಲೋ, ಶಗಣಿ ಆಯುತ್ತಲೋ ಇದ್ದ ಹುಡುಗರನ್ನು ಕರೆದು- +“..ಹಾಂ ನೀವೆಲ್ಲ ದಿನಾ ಸಾಯಂಕಾಲ ಕೊಪೆಲಗೆ ಬರಬೇಕು ತಿಳಿತಾ..“ಎಂದು ಕಣ್ಣು ಕೆಂಪೇರಿಸಿಕೊಂಡು ನುಡಿದರು. +ವಾರವೆಲ್ಲ ಈ ಕೆಲಸ ಮಾಡಿ ಅವರಿಗೆ ದಣಿವಾಗಿತ್ತು. ಆದರೆ ಈ ದಣಿವಿನಲ್ಲೂ ಒಂದು ತೃಪ್ತಿಯನ್ನು ನೆಮ್ಮದಿಯನ್ನು ಅವರು ಕಂಡರು. ತಾನು ಮಾಡುವುದೆಲ್ಲ ದೇವರಿಗಾಗಿ, ಕ್ರಿಸ್ತನಿಗಾಗಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡಿ ಈ ಕೆಲಸವನ್ನು ಮತ್ತೂ ಮಾಡಲು ಅವರನ್ನು ಹುರಿದುಂಬಿಸಿತು. +ಆದರೆ ಮತ್ತೊಂದು ಭಾನುವಾರ ಬಂದಾಗ ಅವರಿಗೆ ನಿರಾಶೆಯಾಯಿತು. ಅಲ್ತಾರನ್ನು ವಿಶೇಷವಾಗಿ ಸಜ್ಜುಗೊಳಿಸಿದ್ದ ಬೋನ. ಅವನ ಜೊತೆಗೆ ಸಿಮೋನನ ಗಂಡು ಹೆಣ್ಣುಮಕ್ಕಳು ಸಹಕರಿಸಿದ್ದರು. ಹೂವಿನ ವಾಸುಗಳನ್ನು ತಂದು ಪ್ರತಿಮೆಯ ಮಗ್ಗುಲಲ್ಲಿ ಇರಿಸಲಾಗಿತ್ತು. ಮೇಣದ ಬತ್ತಿ ಹಚ್ಚುವ ಮರದ ಸ್ಟ್ಯಾಂಡುಗಳನ್ನು ನಡು ನಡುವೆ ಇಟ್ಟು ಮೇಣದ ಬತ್ತಿಗಳನ್ನು ಹಚ್ಚಲಾಗಿತ್ತು. ಹಿಂಬದಿಯ ಗೋಡೆಯ ಮೇಲೆ ಒಂದು ಕಡೆ ಮಾತೆ ಮೇರಿಯ ಮತ್ತೊಂದು ಕಡೆ ಮುಳ್ಳಿನ ಮುಕುಟ ಧರಿಸಿದ ಏಸುವಿನ ಪೈನೆಲಗಳನ್ನು ತೂಗು ಹಾಕಲಾಗಿತ್ತು. ಶಿಲುಬೆಯ ಮೇಲೆ ಏಸು ತೂಗು ಬಿದ್ದಿರುವ ಸುಮಾರು ಒಂದೂವರೆ ಅಡಿ ಎತ್ತರದ ಒಂದು ಹೊಸ ಪ್ರತಿಮೆ, ಕೊಪೆಲ ನಡು ಭಾಗದಲ್ಲಿ ಗೋಡೆಯ ಮಗ್ಗುಲಲ್ಲಿ ಪಾದರಿಗಳ ಮೇಜಿನ ಮೇಲೆ ಇರಿಸಲಾಗಿತ್ತು. ಗೋವಾದಲ್ಲಿ ಇರಬೇಕಾದರೆ ಪಾದರಿ ಗೋನಸಾಲ್ವಿಸ್ ಕೊಂಡ ಈ ಪಿಂಗಾಣಿಯ ಪ್ರತಿಮೆ ಅದ್ಭುತವಾಗಿತ್ತು. ಕೊಪೆಲನ ಬಾಗಿಲ ಬಳಿಯೇ ಒಂದು ಬಟ್ಟಲಲ್ಲಿ ಪವಿತ್ರ ತೀರ್ಥವನ್ನು ಇರಿಸಲಾಗಿತ್ತು. ಒಳ ಬರುವಾಗ, ಹೊರ ಹೋಗುವಾಗ ಈ ಪವಿತ್ರ ತೀರ್ಥವನ್ನು ಜನ ಹಣೆಗಳಿಗೆ ಹಚ್ಚಿಕೊಳ್ಳುವುದು ಒಂದು ಸಂಪ್ರದಾಯವಾಗಿದ್ದರಿಂದ ಈ ಊರಿನ ಜನರಿಗೆ ಈ ಬಗ್ಗೆಯೂ ನೆನಪು ಮಾಡಿಕೊಡಬೇಕಿತ್ತು. +ಹಿಂದಿನ ದಿನ ಸಂಜೆ ಐದು ಗಂಟೆಗೆ ಬೋನ ಇಗರ್ಜಿ ಗಂಟೆ ಹೊಡೆದಿದ್ದ. ಸಾಲದ್ದಕ್ಕೆ ಮನೆ ಮನೆಗೆ ಹೋಗಿ ಪಾಪ ನಿವೇದನೆ ಮಾಡಿಕೊಳ್ಳುವವರು ಕೊಪೆಲಗೆ ಸೆರಮಾಂವಗಳಿಗೆ ಬರಬಹುದೆಂದೂ, ಪಾದರಿಯವರು ಪಾಪ ನಿವೇದನೆ ಕೇಳುತ್ತಾರೆಂದೂ ಹೇಳಿ ಬಂದಿದ್ದ. +ಪಾದರಿ ಆರು ಗಂಟೆಯವರೆಗೂ ಕುರ್ಚಿಯಲ್ಲಿ ಕುಳಿತಿದ್ದರು. ಬಂದವರು ಸಿಮೋನ, ಅವನ ಹೆಂಡತಿ, ತಾಯಿ, ಒಂದಿಬ್ಬರು ಮಕ್ಕಳು ಕೇರಿಯ ಕೊನೆಯ ಮನೆಯ ಸಿಂಜಾಂವ ಅವನ ಹೆಂಡತಿ, ಇನ್ನೂ ಒಂದು ಮನೆಯ ಅಗ್ನೇಲ ಅವನ ತಾಯಿ, ಹೆಂಡತಿ, ಮಗಳು ಇವರೆಲ್ಲ ಪಾಪ ನಿವೇದನೆ ಮಾಡಿ ವರ್ಷಗಳಾಗಿದ್ದವಂತೆ. ಪಾದರಿ ವಿನಯದಿಂದಲೆ ಇವರ ಪಾಪ ನಿವೇದನೆಗೆ ಕಿವಿ ಕೊಟ್ಟರು. ಪಾಪ ಕ್ಷಮೆಗಾಗಿ ಪರಲೋಕ ಮಂತ್ರ, ನಮೋ ರಾಣಿಮಂತ್ರ ಹೇಳುವಂತೆ ತಿಳಿಸಿದರು. “ಮಾರನೇ ದಿನ ಪೂಜೆಗೆ ಬಂದು ದಿವ್ಯ ಪ್ರಸಾದ ಸ್ವೀಕರಿಸಿ. ದೇವರು ನಿಮ್ಮೊಡನೆ ಇರಲಿ ಹೋಗಿ ಬನ್ನಿ“ಎಂದು ಆಶೀರ್ವದಿಸಿದರು. +ಭಾನುವಾರ ಬೆಳಗಾಯಿತು. +ಮುಂಜಾನೆಯೇ ಬೋನ ಪ್ರಾರ್ಥನೆಯ ಗಂಟೆ ಹೊಡೆದ. ಈಗ ಈ ಘಂಟಾನಾದ ಕೂಡ ಶಿವಸಾಗರದ ಜೀವನದೊಡನೆ ಸೇರಿ ಹೋಗಿತ್ತು. +“ಢಣ್..ಢಣ್..ಢಣ್..” +“ಢಣ್..ಢಣ್..ಢಣ್..” +“ಢಣ್..ಢಣ್..ಢಣ್..” +ಹೀಗೆ ಮೂರು ಬಾರಿ ಮೂರು ಗಂಟೆಗಳು ನಂತರ ನಿಲ್ಲದೇನೆ ಸಾಲು ಗಂಟೆಗಳನ್ನು ಹೊಡೆದರೆ ಅದು ಅಮೋರಿ ಗಂಟೆ. ಹೀಗೆ ಬೆಳಗಿನ ಜಾವ ಐದು ಗಂಟೆಗೆ, ಮಧ್ಯಾಹ್ನ ಹನ್ನೆರಡು ಗಂಟೆಗೆ, ಸಂಜೆ ಆರು ಗಂಟೆಗೆ ಮೂರು ಬಾರಿ ಈ ಗಂಟೆ ಕೇಳಿ ಬರುತ್ತದೆ. +ಜೊತೆಗೆ ಪ್ರತಿನಿತ್ಯ ಬೆಳಗಿನ ಪೂಜೆಯ ಸಮಯದಲ್ಲಿ ಗಂಟೆ. +ಶನಿವಾರ ಪಾಪ ನಿವೇದನೆಗಾಗಿ ಬನ್ನಿ ಎಂದು ಗಂಟೆ. +ಭಾನುವಾರ ಪೂಜೆಗೆ ಎಲ್ಲರೂ ಬನ್ನಿ ಎಂದು ಎಂಟು ಗಂಟೆಗೆ ಮೂರು ಗಂಟೆಗಳು. +ಭಾನುವಾರ ಏಳು ಗಂಟೆಗೆ ಒಂದು ಬಾರಿ ಘಂಟಾನಾದ ಕೇಳಿ ಬರುತ್ತದೆ. ಅದು ಮೊದಲ ಗಂಟೆ. ಏಳೂವರೆಗೆ ಎರಡನೆಯದು. ಎಂಟು ಗಂಟೆಗೆ ಮೂರನೆಯದು. ಹಿಂದೆಯೇ ಪಾದರಿ ಪೂಜಾ ಸಾಮಾಗ್ರಿಗಳ ಜತೆ ವೇದಿಕೆಯನ್ನೇರುತ್ತಾರೆ. +ಕೊಪೆಲನ ಸುತ್ತ ಮುತ್ತ ಮಾತ್ರವಲ್ಲ ಶಿವಸಾಗರದ ಸಾಕಷ್ಟು ಜನರಿಗೆ ಈ ಗಂಟೆ ಈಗ ಕೇಳಿ ಬರತೊಡಗಿತು. ಹಿಂದೆ ಯಾವಾಗಲೋ ಒಂದು ಬಾರಿ ಸದ್ದು ಮಾಡುತ್ತಿದ್ದ ಇದು ಈಗ ನಿಶ್ಚಿತ ಸಮಯದಲ್ಲಿ ಕೇಳಿ ಬರತೊಡಗಿತು. ಕ್ರೀಸುವರಲ್ಲದವರೂ ಗಂಟೆಯ ಈ ನಾದವನ್ನು ಆಲಿಸತೊಡಗಿದರು. +ಆದರೆ ಈ ಭಾನುವಾರವೂ ಬಹಳ ಜನ ಕ್ರೀಸುವರನ್ನು ಈ ಗಂಟೆ ಕೊಪೆಲಗೆ ಕರೆತರಲಿಲ್ಲ. ಪೂಜಾ ವಿಧಿಯನ್ನು ಪ್ರಾರಂಭಿಸುವ ಮುನ್ನವೇ ಬಂದ ಕೆಲವೆ ಕೆಲವರನ್ನು ಕಂಡು ಪಾದರಿ ಗೋನಸಾಲ್ವಿಸರಿಗೆ ನಿರಾಶೆಯಾಯಿತು. ಕೊಪೆಲ ಸಾಲದೆ ಇರಬಹುದು ಅಂದುಕೊಂಡಿದ್ದ ಅವರು ಬಂದವರು ಕೇವಲ ಹತ್ತು ಜನ ಎಂಬುದನ್ನು ಗಮನಿಸಿ ಹಲ್ಲು ಕಟ ಕಟಿಸಿದರು. ಪೂಜೆಯ ನಡುವೆ ಸೆರಮಾವಂಗೆ ನಿಂತ ಅವರು ಊರಿನ ಕ್ರೀಸುವರ ನಿರಾಸಕ್ತಿಯ ಬಗ್ಗೆ ತುಂಬಾ ಮಾತನಾಡಿದರು. ಮಾತಿನ ನಡುವೆ ಒಂದು ಹಂತದಲ್ಲಿ ಅವರಿಗೆ ಇದು ಮಾತಿನಿಂದ ಸರಿಪಡಿಸಬಹುದಾದ ವಿಷಯವಲ್ಲ ಅನಿಸಿತು. ಇದಕ್ಕಾಗಿ ಬೇರೊಂದು ದಾರಿ ಕಂಡುಕೊಳ್ಳಬೇಕು ಎಂದವರು ಆಗಲೇ ನಿರ್ಧರಿಸಿದರು. +* +* +* +ಪೂಜೆ ಮುಗಿಸಿ, ಜನರೆಲ್ಲ ಹೋದ ನಂತರ, ಬೋನ ಮಾಂಸ ತರಲು ಕಟುಕರ ಕೇರಿಗೆ ಹೋದ. ಪಾದರಿ ಗೋನಸಾಲ್ವಿಸ್ ಕೊಪೆಲನ ಮುಂದಿನ ಚಪ್ಪರದ ಕೆಳಗೆ ಶತಪಥ ತುಳಿಯುತ್ತಿದ್ದವರಿಗೆ ತಟ್ಟನೆ ತಾವು, ಹೊರತೆಗೆಯುವುದು ಬೇಡವೆಂದು ಇರಿಸಿದ ನಾಗರಬೆತ್ತ ಹಾಗೂ ಪಾಮಿಸ್ತ್ರಿಯ ನೆನಪಾಯಿತು. +ಪಾದರಿ ಫ಼ಿಯೆಟ್ಟ ಸದಾ ಅವರ ಕೈಯಲ್ಲಿ ಒಂದು ನಾಗರ ಬೆತ್ತವನ್ನು ಹಿಡಿದುಕೊಂಡು ತಿರುಗಾಡುತ್ತಿದ್ದರು. ಒಂದು ತುದಿಯಲ್ಲಿ ನಾಗರ ಹೆಡೆಯಂತೆ ಒಂದು ಗಂಟು. ಇನ್ನೊಂದು ತುದಿ ಸಪೂರವಾಗಿ ಬಳುಕಿ ಬಾಗುತ್ತಿತ್ತು. ಈ ಬೆತ್ತದಿಂದ ಹಲವರನ್ನು ಹೊಡೆದುದನ್ನು ಇವರು ನೋಡಿದ್ದರು. +“ಜನರನ್ನು ದೈವ ಭಕ್ತರನ್ನಾಗಿ ಮಾಡಬೇಕೆಂದರೆ ಈ ದಾರಿಯನ್ನು ಹಿಡಿಯಬೇಕಾಗುತ್ತದೆ“ಎಂದು ಹೇಳುತ್ತಿದ್ದವರು ಅವರು. +ಫ಼ಿಯೆಟ್ಟರು ಇರಿಸಿಕೊಂಡ ಮತ್ತೂ ಒಂದು ಅಸ್ತ್ರವೆಂದರೆ ಪಾಮಸ್ತ್ರಿ. ಗೇಣುದ್ದದ ಮರದ ಕಡ್ಡಿ. ಅದರ ತುದಿಗೆ ಅಂಗೈ ಅಗಲದ ದುಂಡನೆಯ ಬಿಲ್ಲೆ. ಇದನ್ನೂ ಕೈಯಲ್ಲಿ ಹಿಡಿದು, ಹುಡುಗರಿಗೆ ಅಂಗೈ ಒಡ್ಡಲು ಹೇಳಿ ಚಪ್ಪನೆ ಅಂಗೈ ಮೇಲೆ ಹೊಡೆದರೆ ಅಂಗೈ ಕೆಂಪೇರಿ ಇಡೀ ದಿನ ನೋವು ಉರಿಯಿಂದ ಹುಡುಗರು ನರಳುತ್ತಿದ್ದರು. ದೊಡ್ಡವರನ್ನು ಹೆದರಿಸಲು ನಾಗರ ಬೆತ್ತವಾದರೆ ಸಣ್ಣವರನ್ನು ದಾರಿಗೆ ತರಲು ಪಾಮಿಸ್ತ್ರಿ. +ಪಾದರಿ ಫ಼ಿಯೆಟ್ಟರ ಮರಣದ ನಂತರ ಪಾದರಿ ಗೋನಸಾಲ್ವಿಸರಿಗೆ‌ಈ ಎರಡೂ ಅಸ್ತ್ರಗಳ ಪ್ರಯೋಜನ ಏನು ಎನ್ನುವುದು ಮನದಟ್ಟಾಯಿತು. ಕಾರವಾರ, ಹೊನ್ನಾವರ ಗಳಲ್ಲಿ ಇದು ಇನ್ನೂ ಖಚಿತವಾಯಿತು. ಜನ ಅವರನ್ನು ’ರಾಗಿಷ್ಟ ಫ಼ಾದರ್’ ಎಂದು ಕರೆದರೂ ಕೂಡ ಇಗರ್ಜಿಗಳಿಗೆ ಬರುವುದನ್ನು ನಿಲ್ಲಿಸಲಿಲ್ಲ. ಇಲ್ಲೆಲ್ಲ ನಾಗರಬೆತ್ತ, ಪಾಮಿಸ್ತ್ರಿಗಳನ್ನು ಹಿಡಿದು ಕೋಪ, ತಾಪ ಪ್ರದರ್ಶಿಸುತ್ತ ತಾನು ಜನರ ಮನದಲ್ಲಿ ಭಕ್ತಿ ದೈವಭೀತಿಯನ್ನು ಬಿತ್ತುವಲ್ಲಿ ಯಶಸ್ವಿಯಾದೆ. ಅದೇ ಕೆಲಸವನ್ನು ಇಲ್ಲಿಯೂ ಮಾಡಬೇಕು. ಬೇರೆ ದಾರಿ ಇಲ್ಲ. +ಪಾದರಿ ಗೋನಸಾಲ್ವಿಸರು ಮಂಚದ ಅಡಿಯಿಂದ ಹೋಲ್ಡಾಲನ್ನು ಹೊರಗೆಳೆದರು. ಅದರಲ್ಲಿ ಇರಿಸಿದ ನಾಗರಬೆತ್ತ ಹಾಗೂ ಪಾಮಿಸ್ತ್ರಿಯನ್ನು ತೆಗೆದುಕೊಂಡರು. +ಹೊನ್ನಾವರದಿಂದ ಬರುವಾಗ ಅವರು ಇದೇ ಹೊಲ್ಡಾಲಿನಲ್ಲಿ ದೇವರ ಇಮಾಜುಗಳನ್ನು, ಪೈನೆಲಗಳನ್ನು ಅರ್ಲೂಕ, ಬೆಂತೆಣಿಗಳನ್ನು ಒಂದು ಒಂದೂವರೆ ಅಡಿ ಎತ್ತರದ ಶಿಲುಬೆ, ಸಂತ ಸಬಸ್ತಿಯಾನ, ಸಂತ ಆಂತೋನಿ ಮತ್ತಿತರ ಸಂತರ ಇಮಾಜುಗಳನ್ನು ಕಟ್ಟಿ ತಂದಿದ್ದರು. ತಾವು ಉಪಯೋಗಿಸುತ್ತಿದ್ದ ನಾಗರಬೆತ್ತ, ಪಾಮಿಸ್ತ್ರಿಗಳಿಗೂ ಹೋಲ್ಡಾಲಿನಲ್ಲಿಯೇ ಜಾಗ ಮಾಡಿಕೊಟ್ಟಿದ್ದರು. ಇಮಾಜು ಇತ್ಯಾದಿಗಳನ್ನು ಈ ಹಿಂದೆಯೇ ಅವರು ಹೊರಗೆ ತೆಗೆದಿದ್ದರು. ಈಗ ಉಳಿದುದನ್ನು ಹೊರ ತೆಗೆದರು. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಮೀರಾ ಗಣಪತಿ +ದ್ವಿತೀಯಾಶ್ವಾಸಂ ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ […] +ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […] +ಅಧ್ಯಾಯ ಒಂದು – ೧ – ‘ಮಳೆ ಬಂದರೂ ಕಾಯೂದೇ… ’ ಅಂದಳು ಯಮುನೆ. ಬೆಳಗಿನ ಎಂಟು ಗಂಟೆಯ ಹೊತ್ತಿಗೆ, ಮನೆಯ ಹಿಂಭಾಗದ ಹಿತ್ತಿಲ ಕೊನೆಯಲ್ಲಿರುವ ಗೇರು ಮರದ ಕೆಳಗೆ ಪಂಢರಿಯೂ ಅವಳ ಸೊಸೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_678.txt b/Kannada Sahitya/article_678.txt new file mode 100644 index 0000000000000000000000000000000000000000..c46ac26b8118dd9a08931d273b7ae226aeadbd65 --- /dev/null +++ b/Kannada Sahitya/article_678.txt @@ -0,0 +1,214 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” +ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ ಕೇಳಿಸಿಕೊಂಡು ಸುಮ್ಮನೇ ದಾಟಿಹೋದ. +ಮೂವರೂ ಸಿದರಾಮನ ಮನೆಯ ಮುಂದೆ ಧರಣಿ ಕೂತರು. ಸಿದರಾಮ ಹೊರಗೆ ಬರಲಿಲ್ಲ. ಇವರು ಏಳಲಿಲ್ಲ. ಆಯೀ ಮೆರೆಮಿಂಡ, +“ಏ ನೀವು ಹೋಗಿ ಲಗು ಊಟಾ ಮಾಡಿ ಬರ್ರಿ. ಅಮ್ಯಾಲ ನೀವು ಕುಂದರ್ರಿ, ನಾ ಹೋಗಿ ಬರ್‍ತೀನಿ. ಈ ಮಗಾಽ ಏನ ಮಾಡತಾನ ನೋಡೇ ಬಿಡೋಣು.”-ಎಂದ. ಉಳಿದಿಬ್ಬರಿಗೆ ಇದು ಸೈಯೆನ್ನಿಸಿತು. ಐದೇ ಮಿನಿಟಿನಲ್ಲಿ ಊಟಾ ಮಾಡಿ ತಿರುಗಿ ಬರುವುದಾಗಿ ಹೇಳಿ ಅವರಿಬ್ಬರೂ ಹೋದರು. +ಅವರು ಮರೆಯಾಗುವುದಷ್ಟೇ ತಡ ಮೆರೆಮಿಂಡ ಸಿದರಾಮನ ಮನೆಯೊಳಕ್ಕೆ ನುಗ್ಗಿದ. ಊಟ ಮಾಡುತ್ತಿದ್ದ ಅವನ ಮುಂದೆ ಕೂತು, +“ಏ, ಅವರಿಬ್ಬರೂ ಮನೀಗಿ ಹೋಗ್ಯಾರ. ನಾವಿಬ್ಬರೂ ಹೋಗಿ ಕೊಟ್ಟು ಬರೋಣು ಬಾರೋ” +-ಎಂದ. ಸಿದರಾಮ ಜಗ್ಗಲಿಲ್ಲ. ಕೈಗೆ ಸಿಕ್ಕ ಸೌಭಾಗ್ಯ ಯಾರು ಕೊಡುತ್ತಾರೆ? ಅಷ್ಟರಲ್ಲಿ ಸಿದರಾಮನ ತಾಯಿ “ಏನ್ರೋ ಅದು?” ಎನ್ನುತ್ತಲೂ ಮೆರೆಮಿಂಡ “ಹೋರಗಿರತೇನ ಬಾ” ಎನ್ನುತ್ತ ಹೊರಗೋಡಿದ. +ಕೆಲ ಹೊತ್ತಾದ ಮೇಲೆ ರಮೇಸ, ಸಾತೀರ ಬಂದು ಮೆರೆಮಿಂಡನನ್ನು ಕೂಡಿಕೊಂಡರು. “ಇನ್ನ ನೀ ಊಟ ಮಾಡಿ ಬಾ” ಎಂದರೆ ತನಗೆ ಹಸಿವಾಗಿಲ್ಲ ಎಂದು ಅಲ್ಲೇ ಕೂತ. ಮೂವರೂ ಅಲ್ಲೇ ಕೂತರು. ವಾರಿಗೆಯವರೆಲ್ಲ ಬಣ್ಣ ಎರಚಾಡಿದರೂ ಈ ಮೂವರು ಅಲ್ಲೇ ಕುಳಿತರು. ಸಿದರಾಮ ಹೊರಬರಲಿಲ್ಲ. ಇವರು ಏಳಲಿಲ್ಲ. ಹೆಚ್ಚೇನು ಕೂತು ಕೂತು ಕೂತ ಕಟ್ಟೆಗೆ ತಮ್ಮ ಅಂಡುಗಳನ್ನು ಬೆಸೆದುಬಿಟ್ಟರು. +ಇಳಿ ಹೊತ್ತಿನಲ್ಲಿ ನಿಂಗೂ ಗುಡಸೀಕರನಿಗೂ ಛೀಮಾರಿ ಹಾಕಿ ಬಂದಾಗಲೂ ಈ ತ್ರಿಮೂರ್ತಿಗಳು ಇನ್ನೂ ಅಲ್ಲೇ ಪ್ರತಿಷ್ಠಾಪನಗೊಂಡಿದ್ದರು. ನಿಂಗೂ ಸೀದಾ ಒಳಗೆ ಹೋದ. ಕಳ್ಳ ಪಡಸಾಲೆಯಲ್ಲಿ ಮಲಗಿದ್ದ. ಮುಸುಕು ತೆಗೆದ, ಅಲುಗಿಸಿದ, ಕೂಗಿದ. ಏಳಲಿಲ್ಲ. ನಿಜವಾಗಿ ನಿದ್ದೆ ಹತ್ತಿದವನನ್ನು ಎಬ್ಬಿಸಬಹುದು. ಸುಳ್ಳು ಸುಳ್ಳೇ ನಿದ್ದೆ ಮಾಡುವಂತೆ ಬಿದ್ದವನನ್ನು ಎಬ್ಬಿಸುವುದು ಹೇಗೆ? ಆದರೂ ನಿಂಗೂ ಜಾಣ. “ಯಾಕೆ ಗುಡಸೀಕರ ಈ ಕಡೆ ಬಂದನಲ್ಲಾ?” ಎಂದ ಕೂಡಲೇ ಕಳ್ಳ ಕಿತ್ತುಕೊಂಡೆದ್ದ. ಎದ್ದನಲ್ಲಾ, ನಿಂಗೂ ಚಪ್ಪಾಳೆ ತಟ್ಟಿ ನಗುತ್ತಿದ್ದುದನ್ನು ನೋಡಿದೊಡನೆ ಚೇಷ್ಟೆಯ ಅರಿವಾಯ್ತು. ತಾನೂ ನಕ್ಕ. ನಿಂಗೂ ಎಲ್ಲ ಗೊತ್ತಿದ್ದವರಂತೆ. +“ಸರಪಂಚ ದುರ್ಗಿಗೆ ಕೊಡಂತ ಎಷ್ಟು ರೊಕ್ಕ ಕೊಟ್ಟಾನೋ?” +ಅಂದ. ಕಳ್ಳ ಗಾಬರಿಯಾದ. +“ನಿನಗ ಯಾರ ಹೇಳಿದರೊ?” +“ಎಲ್ಲಾ ಗೊತ್ತೈತಿ ಹೇಳೊ” +ಕಳ್ಳನಿಗೂ ನಿಂಗೂನಿಗೂ ಅಕ್ಷರಶಃ “ಲಂಗೋಟಿ ಗೆಳೆತನ”. ನಿಂಗೂ ಇತ್ತೀಚೆ ಸೀರೆ ಉಟ್ಟಾಗಿನಿಂದ ಅದು ಇನ್ನೂ ಗಾಢವಾಗಿತ್ತು. ಆದ್ದರಿಂದ ಕಳ್ಳ ಊರವರಿಗೆ ನೂರಕ್ಕೆ ನೂರು ಸುಳ್ಳು ಹೇಳಿದರೆ ನಿಂಗೂನಿಗೆ ನೂರಕ್ಕೆ ಮೂರರಷ್ಟಾದರೂ ನಿಜ ಹೇಳುತ್ತಿದ್ದ. ಯಾವ್ಯಾವುದೋ ದುರ್ಬಲ ಕ್ಷಣಗಳಲ್ಲಿ ಏನೇನೋ ಕೊಡುವುದಾಗಿ ಕಳ್ಳ ಭರವಸೆ ಕೊಟ್ಟಿದ್ದ. ಅವುಗಳನ್ನು ನಿಂಗೂ ನಂಬುತ್ತಿರಲಿಲ್ಲ. ಆದರೂ ಪರಸ್ಪರ ಕಂಡಾಗ ಇಬ್ಬರ ಅಂತಃಕರಣವೂ ಮಾತಿಗೆ ಮೀರಿದ ಒಂದು ಥರದಲ್ಲಿ ಮಿಡಿಯುತ್ತಿತ್ತು. +ಕಳ್ಳ ಗುಡಸೀಕರ ದುರ್ಗಿಗೆ ಕೊಡಲು ಹೇಳಿದ ಹಣದ ವಿಚಾರವಾಗಿ ನಿಜವನ್ನೇ ಹೇಳಿದ. ಆದರೆ ಹತ್ತರ ಬದಲು ಐದು ರೂಪಾಯಿಯೆಂದು ಹೇಳಿದ, ಅಷ್ಟೆ. ಇವನ ಒಳಗನ್ನು ಒಡನುಡಿಸುವ ತಂತ್ರ ನಿಂಗೂನಿಗೂ ಗೊತ್ತು. ಹತ್ತೆಂದು ಹೇಳಿಸಿದ. ಆಗಲೂ ನಿಂಗು ನಂಬದಿದ್ದಾಗ ಐದರ ಎರಡು ನೋಟು ಕಿಸೆಯಿಂದ ತೆಗೆದು ತೋರಿಸಿ ಗಪ್ಪನೆ ಮತ್ತೆ ಕಿಸೆಗೇ ಇಳಿಸಿದ. ನಿಂಗೂನ ಬಾಯಲ್ಲಿ ನೀರೂರಿತು. +“ಏ ಕಳ್ಳ ನನಗೊಂದು ಬಾಡಿ (ಬ್ರೇಸಿಯರ್) ಕೊಡಿಸಲೇ” +ಎಂದು ಹೇಳುತ್ತ ಸರ್ರನೆ ಸರಿದು ಸಲಿಗೆಯಿಂದ ಅವನ ಹೆಗಲ ಮೇಲೆ ಕೈಹಾಕಿ ಅಂಗಲಾಚಿದ. ಕಳ್ಳನಿಗೆ ದಿಗಿಲಾಯಿತು. “ಛೇ, ತಗಿಯೋ ನಿನ!” ಎಂದು ದೂರ ಸರಿಸಲು ನೋಡಿದ. ನಿಂಗೂ ತಾನೇ ದೂರ ಸರಿದು, +“ನೋಡೋ ಬಾಡಿ ತಂದು ಕೊಟ್ಟೀ, ಬರೋಬರಿ. ಇಲ್ಲದಿದ್ದರ ಗುಡಸೀಕರಗೂ ಹೇಳತೀನಿ. ದುರ್ಗಿಗೂ ಹೇಳ್ತಿನ್ನೋಡು.” +ಅಂದ. ಈಗ ಕಳ್ಳ ದಾರಿಗೆ ಬರಲೇ ಬೇಕಾಯಿತು. +ಬಾಡಿ ಅಂದರೇನೆಂದು ಕೇಳಿದ. ಬಾಡಿ ತರಿಸುವ ವಿಚಾರ ನಿಂಗೂನಿಗೂ ಇಂದು ನಿನ್ನಿನದಲ್ಲ. ಹಿಂದೆ ರಮೇಸ ಇದರ ವಿಚಾರವಾಗಿ ಅರ್ಧಗಂಟೆ ವರ್ಣಿಸಿ ಬೆಳಗಾವಿಯ ಹುಡುಗಿಯರೆಲ್ಲ ಇಂಥ ಫ್ಯಾಷನ್ ಮಾಡುತ್ತಾರೆಂದು ಹೇಳಿದ್ದ. “ನೀನೂ ಹಂಗಿರಬೇಕೋ ನಿಂಗೂ” ಎಂದೂ ಅಂದಿದ್ದ. ಒಂದು ರೂಪಾಯಿ ರಮೇಸನಿಗೆ ಅವ ಬೆಳಗಾವಿಗೆ ಹೋಗುವಾಗ ಕೊಟ್ಟು “ಅದನ್ನು ಕೊಂಡು ತಾ” ಅಂದಿದ್ದ. ರಮೇಸ ಬಾಡಿ ತರದೆ, ಪೇಪರಲ್ಲಿಯ ಅದರ ಚಿತ್ರ ತಂದುಕೊಟ್ಟಿದ್ದ. ಅದನ್ನು ಏಳೆಂಟು ಮಡಿಕೆ ಮಡಿಚಿ ಸದಾ ತನ್ನ ಮಲಿಕಟ್ಟಿನಲ್ಲೇ ಇಟ್ಟಿರುತ್ತಿದ್ದ. ಕಳ್ಳ ಬಾಡಿ ಅಂದರೇನೆಂದು ಕೇಳಿದನಲ್ಲ, ಕೂಡಲೇ ಅದನ್ನು ತೆಗೆದು ತೋರಿಸಿದ. ಕಳ್ಳನಿಗೆ ನಗೆ ತಡೆಯಲಾಗಲಿಲ್ಲ. ನಿಂಗೂನಿಗೆ ಸ್ವಲ್ಪ ಮುಖಭಂಗವಾಯಿತು. +“ಯಾಕಲಾ, ನಾ ಇದನ್ನ ತೊಡೂದ ನಿನ್ನ ಮನಸ್ಸಿಗೆ ಬರಾಣಿಲ್ಲೇನು” ಅಂದ. ತಂದು ಕೊಡುವುದಾಗಿ ಕರಿಮಾಯಿಯ ಆಣೆ ಮಾಡಿ, ಹೊರಗೆ ಕಳಿಸಿದ. ಇನ್ನು ಈ ಹಣ ತನ್ನೊಬ್ಬನ ಋಣದಲ್ಲಿಲ್ಲ ಎಂದು ಖಾತ್ರಿಯಾಯ್ತು. ಎದ್ದು ಅಂಗೀ ಹಾಕಿಕೊಂಡು ಹೊರಬಂದ. ತ್ರಿಮೂರ್ತಿಗಳಿದ್ದರು. ಹೋಗಿ ಅವರನ್ನು ಸೇರಿಕೊಂಡ. +ಊರಂತೂರು ಬಣ್ಣ ಎರಚಾಡುತ್ತಿದ್ದರೆ ಈ ಮೆಂಬರ್ ಚತುಷ್ಟಯರು ಕೆರೆಯ ದಂಡೆಯ ಮೇಲೆ ಮೊಳಕಾಲ ಮೇಲೆ ಸುತ್ತ ಕೈಹೆಣೆದುಕೊಂಡು ಕೂತು, ಹತ್ತು ರೂಪಾಯಿಗಳನ್ನು ಹೇಗೆ ಹೇಗೆ ಖರ್ಚು ಮಾಡುವುದೆಂದು “ಮೀಟಿಂಗ್” ಮಾಡುತ್ತಿದ್ದರು.ಮುಂಜಾನೆಯ ಘಟನೆಯಿಂದಾಗಿ ಸರಪಂಚ ಬಣ್ಣದಲ್ಲಿ ಪಾಲ್ಗೊಳ್ಳಲಿಲ್ಲ. ಹತ್ತು ರೂಪಾಯಿಯಿಂದಾಗಿ ಮೆಂಬರರು ಪಾಲ್ಗೊಳ್ಳಲಿಲ್ಲ. ಪಾಲ್ಗೊಂಡರೆ ಎಲ್ಲಿ ಕಳ್ಳ ತಪ್ಪಿಸಿಕೊಂಡು ಹೋಗುತ್ತಾನೋ ಎಂದು ಉಳಿದವರಿಗೆ ದಿಗಿಲು. +ಆಯ್ತು, ಹೊತ್ತು ಮುಳುಗೋ ತನಕ ಅಲ್ಲೇ ಕೂತು, ಐದು ರೂಪಾಯಿಗೆ ಸೆರೆ ಕುಡಿಯುವುದೆಂದೂ ಒಂದನೇ ತೀರ್ಮಾನವಾಯಿತು. ಆದರೆ ದುರ್ಗಿಗೆ ಕೊಡುವುದು ಹೇಗೆ? ಲಗಮವ್ವನಿಗೆ ಗೊತ್ತಾದರೆ ಪೂಜೆ ಮಾಡದೆ ಬಿಡುವ ಹೆಂಗಸಲ್ಲ. ಆದ್ದರಿಂದ ಅವಳು ಹೊರಗೆ ಹೋದಾಗ ದುರ್ಗಿಗೆ ಕೊಡಬೇಕೆಂದೂ ಆದರೆ ಹಾಗೆ ಕೊಡುವಾಗ ಉಳಿದ ಮೂವರೂ ಅಲ್ಲಿಯೇ ಹಾಜರಿರತಕ್ಕದೆಂದೂ ಎರಡನೇ ತೀರ್ಮಾನವಾಯಿತು. ಅಲ್ಲದೆ ದುರ್ಗಿಯ ಜೊತೆ ಒಂದೆರಡು ಮಾತು ಹೆಚ್ಚಾಗಿ ಆಡುವ ಅವಕಾಶವನ್ನು ಸಿದರಾಮನಿಗೆ ಸರ್ವಾನುಮತದಿಂದ ಕಲ್ಪಿಸಲಾಯಿತು. +ಸಾತೀರ ಮೇಲಿನ ತೀರ್ಮಾನ ಒಪ್ಪಿಕೊಂಡರೂ ಅವನ ತಲೆಯಲ್ಲಿ ಹುಳುವಿನಂತೆ ಇನ್ನೊಂದು ವಿಚಾರ ಕೊರೆಯುತ್ತಿತ್ತು. ಐದು ರೂಪಾಯೆಂದರೆ ಸಣ್ಣ ಬಾಬತ್ತಲ್ಲ. ಕೊಡುವುದೇ ಹೌದಂತೆ ಹಾಗೆ ಕೊಟ್ಟದ್ದೇ ಆದರೆ ದುರ್ಗಿ ಯಾವುದಕ್ಕೂ ಒಪ್ಪಿಕೊಳ್ಳುವುದರಲ್ಲಿ ಸಂಶಯವಿಲ್ಲ.ಅವಳ ಒಪ್ಪಿಗೆಯನ್ನು ಯಾಕೆ ಸರಿಯಾಗಿ ಉಪಯೋಗಿಸಬಾರದು? ಎಂದುಕೊಂಡ. +“ನೋಡ್ರೋ, ಕೊಡೋದು ಖರೆ ಅಂದಮ್ಯಾಲೆ ಲಗಮವ್ವನ ಮನ್ಯಾಗಽ ಯಾಕ ಕೊಡಬೇಕು? ದುರ್ಗೀನ ಕರಿಮಾಯಿ ಗುಡೀ ಹಿಂದ ಕರಕೊಂಡು ಹೋಗಿ ನಾಕೂ ಮಂದಿ ಕೂಡಿ ಕೊಟ್ಟರ ಹೆಂಗ?” +ಅಂದ. ಸಾತೀರನ ಮನಸ್ಸಿನ ಹುಳಿಯ ವಾಸನೆ ಎಲ್ಲರ ಮೂಗಿಗೂ ತಾಕಿತು. ಎಲ್ಲರಿಗೂ ಸರಿಯೆನ್ನಿಸಿ ರೋಮಾಂಚನಗೊಂಡರು. ಆದರೆ ರಮೇಸ ಒಂದು ತಿದ್ದುಪಡಿ ಮುಂದಿಟ್ಟ. ಐದು ರೂಪಾಯಿ ಸಿದರಾಮ ಒಬ್ಬನೇ ಕೊಡುವುದರ ಬದಲು ಚಿಲ್ಲರೆ ಮಾಡಿಸಿ, ಒಬ್ಬೊಬ್ಬರು ಒಂದೊಂದು ರೂಪಾಯಿ ಕೊಡಬೇಕೆಂದೂ, ಸಿದರಾಮ ಎರಡು ರೂಪಾಯಿ ಕೊಡುವುದೆಂದೂ ಸೂಚಿಸಿದ. ಸದರಿ ಕಳ್ಳನೇ ಮೊದಲು ದುರ್ಗಿಯನ್ನು ಸಾಧ್ಯವಾದರೆ ಹಿಡಿಯುದೆಂಬ ತಿದ್ದುಪಡಿಯೊಂದಿಗೆ ಒಪ್ಪಿ ಎದ್ದರು. +ಆಗಷ್ಟೇ ರಾತ್ರಿಯಾಗಿತ್ತು. ಜನ ಅಲ್ಲಲ್ಲಿ ಕಟ್ಟೆಯ ಮೇಲೆ ಕುಳಿತು ಅಂದಿನ ಬಣ್ಣದ ಮೋಜುಗಳನ್ನು ಮಾತಾಡಿಕೊಂಡು ನಗುತ್ತಿದ್ದರು. ಕೆಲವರು ಗುಡಸೀಕರ ಬಾಳುನ ಮಗನನ್ನು ಹೊಡೆದ ಸುದ್ದಿ ಮಾತಾಡುತ್ತಿದ್ದನು. ಈ ಚತುಷ್ಟಯರು ಬಸೆಟ್ಟಿಯ ಅಂಗಡಿಯಲ್ಲಿ ಐದರ ಎರಡೂ ನೋಟು ಕೊಟ್ಟು ಒಂದೊಂದರ ಹತ್ತು ನೋಟಾಗಿಸಿಕೊಂಡರು. ಆ ಹತ್ತನ್ನೂ ಸಿದರಾಮ ಕಿಸೆಯಲ್ಲಿಟ್ಟುಕೊಂಡ. ಲಗಮವ್ವನ ಮನೆಯ ಕಡೆ ಚಿತ್ತೈಸಿದರು. +ಲಗಮವ್ವನ ಮನೆ ಕಂ ಬಾರಿನಲ್ಲಿ ಆಗಲೇ ನಿಂಗೂ ಕೂತಿದ್ದ, ಇವರ ದಾರಿ ನೋಡುತ್ತ. “ಇಷ್ಟ ಯಾಕ ತಡಾ ಮಾಡಿದಿರೋ? ಬರ್ರಿ ಬರ್ರಿ” ಎನ್ನುತ್ತ ಅವನೇ ಇವರನ್ನು ಸ್ವಾಗತಿಸಿದ. ಕಳ್ಳನ ಜೀವ ಹುಳ್ಳುಳ್ಳಗಾಯಿತು. ತೋರಗೊಡದೆ ಒಳಹೊಕ್ಕ. ಚಾಪೆಯ ಮೇಲೆ ನಾಲ್ವರೂ ಕೂತರು. ನಾಲ್ವರ ಕಣ್ಣುಗಳೂ ಟಕಮಕ ದುರ್ಗಿಯನ್ನೇ ಹುಡುಕುತ್ತಿದ್ದವು. ಲಗಮವ್ವ “ಏನ್ರೋ?” ಅಂದಳು. ಕಳ್ಳ ಧೈರ್ಯದಿಂದ ಹೇಳಿದ. +“ನಾಕ ಕಾಯಿ ಸೆರೆ ಕೊಡಬೇ” +“ಮೊದಲ ರೊಕ್ಕಾ ಕೊಡು” +“ನಾವೆಲ್ಲಿ ಓಡಿಹೋಗ್ತೀವೇನಬೆ?” +ಎಂದ ಕಳ್ಳ; +“ಹೆಂಗೊ ಸರಪಂಚ ಕೊಟ್ಟಾನಲ್ಲ, ತಗದ ಬಿಸಾಕಲೇ” +ಅಂದ ನಿಂಗೂ. ಕಳ್ಳನಿಗೆ ಇನ್ನು ಗಾಬರಿಯಾದರೆ ಉಳಿದವರಿಗೆ ದಿಗಿಲಾಯಿತು. ನಾಲ್ವರ ಐದು ರೂಪಾಯಿ ಕೊಟ್ಟು ಐದು ಕಾಯಿ ತರಿಸಿದ. ನಿಂಗೂನಿಗೆ ಒಂದನ್ನ ಕೊಟ್ಟರು. ಅವನು ಕಳ್ಳನ ಬಳಿಯೇ ಕೂತು ಕುಡಿಯತೊಡಗಿದ. ಸಾತೀರ ಕಿಸೆಯಲ್ಲಿಯ ಸಿಗರೇಟು ಪಾಕೀಟು ತೆಗೆದು, ಅದರಲ್ಲಿಯೇ ಸೇದಿಬಿಟ್ಟ ಒಂದು ಸಿಗರೇಟು ತುಂಡು ತೆಗೆದು ಹೊತ್ತಿಸಿದ. ಒಂದನ್ನು ಕಲ್ಳನಿಗಿತ್ತ. ಸಾಮಾನ್ಯವಾಗಿ ಗುಡಸೀಕರ ಸೇದಿ ಬಿಟ್ಟ ತುಂಡುಗಳೆಲ್ಲ ಸಾತೀರನ ಬಳಿಯೇ ಇರುತ್ತಿದ್ದವು. ಅಷ್ಟರಲ್ಲಿ ದುರ್ಗಿ ಬಂದಳು. ಎಲ್ಲರಿಗೂ ಹುರುಪು ಬಂತು. ರಮೇಸ ಮೆರಮಿಂಡರೂ ಅಂಗಲಾಚಿ ತಲಾ ಒಂದೊಂದು ತುಂಡು ಪಡೆದು ಹೊತ್ತಿಸಿದರು. +ಕಾಯಿ ಬರಿದಾಗುತ್ತ ಬಂದಂತೆ ಅವರ ತಲೆ ನಾಲಿಗೆಗಳ ಸಮತೋಲ ತಪ್ಪತೊಡಗಿತು. ಈ ಮಧ್ಯೆ ಕಳ್ಳ ಏನೇನೋ ನೆಪದಿಂದ ದುರ್ಗಿಯ ಬಳಿ ಹೋಗಿ ತನ್ನಲ್ಲಿದ್ದ ನೋಟುಗಳನ್ನು ತೋರಿಸಿ ಬಂದಿದ್ದ. ಸಾತೀರ ತಾನೂ ಒಮ್ಮೆ ತೋರಿಸಿ ಬರುತ್ತೇನೆ ಕೊಡು ಎಂದು ಕೈ ಸನ್ನೆಯಿಂದಲೇ ಕೇಳಿದ. ಸನ್ನೆಯಿಂದಲೇ ಇವನೂ ನಿರಾಕರಿಸಿದ. ಹೊರಗಡೆ ಒಂದಿಬ್ಬರು ಗಿರಾಕಿಗಳು ಕೂತಿದ್ದರು. ಒಳಹೊರಗೆ ಓಡಾಡುತ್ತಿದ್ದ ದುರ್ಗಿ ಒಬ್ಬೊಬ್ಬರಿಗೆ ಒಂದೊಂದು ಥರ ಕಂಡಳು. +ಕಾಯಿಗಳು ಪೂರ್ತಿ ಬರಿದಾದಮೇಲೆ ಮುಂದೇನು ಎಂದು ಗುಸು ಗುಸು ನಡೆಯಿತು. ಗುಡಿಯ ಹಿಂದೆ ಬರಲು ಕಳ್ಳನೇ ದುರ್ಗಿಗೆ ಹೇಳಬೇಕೆಂದು ಮೂವರೂ ಸೂಚಿಸಿದರು. ಕಳ್ಳನಿಗೆ, ಅದೇನೋ ಇಷ್ಟದ ಕೆಲಸವೆ. ಆದರೆ ಭಯ. ಹೇಗೂ ನಿಂಗೂನಿಗೆ ಕುಡಿಸಿದ್ದರಲ್ಲ. ಕಳ್ಳ ದುರ್ಗಿಗೆ ಹೇಳುವ ಜವಾಬ್ದಾರಿಯನ್ನು ನಿಂಗೂಗೆ ಹೇಳಿದ. ನಿಂಗೂ ಗುಡಿಯ ಹಿಂದಿನ ಪೌಳಿಯಲ್ಲಿ ನೀವೆಲ್ಲ ಕಾದಿರಬೇಕೆಂದೂ ಅಲ್ಲಿಗೆ ದುರ್ಗಿಯೊಬ್ಬಳನ್ನೇ ಕಳಿಸುವುದಾಗಿಯೂ ಹೇಳಿದ, ಎದ್ದರು. +ಹೊರಗಡೆ ಮಂದ ಬೆಳ್ದಿಂಗಳಿದ್ದರೂ ಪೌಳಿಯಲ್ಲಿ ಸುತ್ತ ಮರಗಳಿಂದಾಗಿ ಕತ್ತಲೆಯೇ ಇತ್ತು. ದುರ್ಗಿ ಈಗ ಬರುತ್ತಾಳೆ. ಆಗ ಬರುತ್ತಾಳೆಂದು ನೆನೆನೆನೆದು ನಾಲ್ವರ ತೊಡೆ ಬಿಗಿದು ಮೈ ಗರಂ ಆದವು. ರಮೇಶ ಓಡಿಹೋಗಿ ನಾಕೈದು ಸಲ ಒಂದ ಮಾಡಿ ಬಂದ. ಕಳ್ಳನಿನ್ನೂ ಎಲ್ಲರ ಕೈಗೆ ರೂಪಾಯಿ ಕೊಟ್ಟಿರಲಿಲ್ಲ. ಅವಳು ಬಂದಕೂಡಲೇ ಕೊಡುವುದಾಗಿ ಹೇಳಿ ಕಾಲ ತಳ್ಳುತ್ತಿದ್ದ. ಬಂದಳು! +ಕಳ್ಳ ಅವಸರದಲ್ಲಿ ಎಲ್ಲರಿಗೂ ಒಂದೊಂದು ರೂಪಾಯಿ ಕೊಟ್ಟ. ತಾನೂ ಒಂದನ್ನು ಹಿಡಿದುಕೊಂಡು ಇನ್ನೊಂದನ್ನು ಜೇಬಿನಲ್ಲಿ ಬಿಟ್ಟ. ಅವಳು ಸಮೀಪ ಬರುವುದಷ್ಟೇ ತಡ, “ತಗೋ ದುರ್ಗಿ” ಎಂದು ಕಳ್ಳ ಕೈ ಚಾಚಿದ. ಮುಂದೆ ತಾನು ಮಾಡಲಿರುವುದನ್ನು ನೆನೆದು ಆಗಲೇ ಅವನ ಬಾಯಿ ಒಣಗಿತ್ತು. ರಮೇಶ ಮುಂದೆ ಬಂದು “ಗುಡಸೀಕರ ಕೊಟ್ಟದ್ದಲ್ಲ, ನಂದು, ತಗೋ ದುರ್ಗಿ” ಎಂದು ಹಲ್ಲುಕಿರಿದ. ಆ ಕತ್ತಲೆಯಲ್ಲೂ ಅವನ ಹಲ್ಲುಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಸಾತೀರ, ಮೆರಮಿಂಡ ಹಾಗೇ ಕೈಚಾಚಿದರು. ಅಷ್ಟೂ ಹಣ ತಕ್ಕೊಂಡು ಸುಮ್ಮನೇ ನಿಂತಳು ಯಾರೊಬ್ಬರಿಗೂ ಧೈರ್ಯ ಸಾಲದು. ಸುಮ್ಮನೆ ಹಿಂತಿರುಗಿದಳು. ಇನ್ನೇನು ಹೋಗುತ್ತಾಳಲ್ಲಾ ಎಂದವನೇ ಸಾತೀರ ಹಿಂದಿನಿಂದ ಹಾರಿ ತೆಕ್ಕೆ ಹಾದ. ಕೂಡಲೇ ಕಳ್ಳ, ರಮೇಸ ಹಾರಿ ಬಂದು ತಮತಮಗೆ ಅನುಕೂಲವಾದ ಚಪಲಗಳನ್ನು ತೀರಿಸಿಕೊಳ್ಳಲಿದ್ದರು. ಅಷ್ಟರಲ್ಲಿ ಲಗಮವ್ವನ ದನಿ ಕೇಳಿಸಿತು. +“ಥೂ ತುಡುಗು ಭಾಡೇರ್‍ಯಾ. ದುರ್ಗಿಗೆ ಕೊಡಂತ ಗುಡಸ್ಯಾ ಹತ್ತು ರೂಪಾಯಿ ಕೊಟ್ಟರ ಕುಡದ ಉಚ್ಚೀ ಹೋದಿರಿ. ಹೌಂದಲ್ಲ ಥೂ! +ಎನ್ನುತ್ತ ಉಗಲಿದಳು. ನಿಂಗೂ ಹೋ ಹೋ ಹೋ ಎಂದು ಕೈಬಡಿದು ನಗುತ್ತ ಲಗಮವ್ವನತ್ತ ಓಡಿಹೋದ. ನಾಲ್ವರಿಗೂ ಈಗ ತಿಳಿಯಿತು, ತಮ್ಮ ಹತ್ತಿರ ಬಂದವಳು ದುರ್ಗಿಯಲ್ಲ, ನಿಂಗೂ ಎಂದು. ಅವಳು ಯಾವಾಗ “ತಡೀರಿ ಗುಡಿಸ್ಯಾಗ ಹೇಳತೇನ” ಎಂದು ಹೇಳುತ್ತ ಇವರ ಕಡೆ ನುಗ್ಗಿದಳೋ, ನಾಲ್ವರೂ ಹೆದರಿ ಕಾಲಿಗೆ ಬುದ್ಧಿ ಹೇಳಿದರು. +ನಿಂಗೂನಿಗೆ ಸಿಕ್ಕಿದ್ದು ಒಟ್ಟು ನಾಲ್ಕು ರೂಪಾಯಿ. ಮೂರನ್ನು ಲಗಮವ್ವನಿಗೆ ಕೊಟ್ಟು ಒಂದನ್ನು ತಾನಿಟ್ಟುಕೊಂಡಿದ್ದ. ಆದರೆ ಆಮೇಲೆ ದುರ್ಗಿಯನ್ನು ನೋಡಿ ಅವನಿಗೇನು ತಿಳಿಯಿತೋ, ಎಷ್ಟೆಂದರೂ ಹೆಂಗರುಳು. ತಾನಿಟ್ಟುಕೊಂಡ ರೂಪಾಯಿಯನ್ನು ಲಗಮವ್ವನಿಗೆ ತಿಳಿಯದಂತೆ ದುರ್ಗಿದೆ ಕೊಟ್ಟ. ಅವಳು ಅದನ್ನು ತನ್ನ ಮಲಿಕಟ್ಟಿನಲ್ಲಿ ಬಚ್ಚಿಟ್ಟುಕೊಂಡಳು. +ಚತುಷ್ಟಯರು ಓಡೋಡುತ್ತ ಪಂಚಾಯ್ತಿ ಆಫೀಸಿಗೆ ಬಂದಾಗ ಗುಡಸೀಕರ ಒಬ್ಬನೇ ಕುಡಿಯುತ್ತ ಕೂತಿದ್ದ. ನಾಲ್ವರೂ ತೊಯ್ಸಿಕೊಂಡ ಕಾಗೆಗಳ ಹಾಗೆ ಮುದುಡಿ ಕೂತರು. ಯಾರೂ ಮಾತಾಡಲಿಲ್ಲ. ಗುಡಸೀಕರ ಮಾತಾಡದ್ದರಿಂದ ನಿಂಗೂ ಎಲ್ಲವನ್ನೂ ಹೇಳಿದ್ದಾನೇನೋ ಎಂದು ಕಳ್ಳನಿಗೆ ಸಂಶಯ ಬಂತು. ಸಾತೀರ ತನ್ನ ಪಾಡಿಗೆ ತಾನು ಗುಡಸೀಕರ ಎಸೆದ ಸಿಗರೇಟನ್ನು ಎಳೆಯುತ್ತಿದ್ದ. ಬಹಳ ಹೊತ್ತದ ಮೇಲೆ ಗುಡಸೀಕರನೇ ಕೇಳಿದ- +“ಕಳ್ಳಾ, ದುರ್ಗಿಗಿ ರೊಕ್ಕಾ ಕೊಟ್ಟೇನೋ?” +“ಕೊಟ್ಟೆ. ಆದರ ಲಗಮವ್ವನ ಸೊಕ್ಕ ಅಳತಿ ಮೀರಿತ್ರಿ” +ಎಂದ ಗಾಬರಿಯಿಂದ ರೊಕ್ಕದ ವಿಷಯ ಮರೆಹಾಕುತ್ತ. ಮೆರಮಿಂಡ ಬಾಯಿಹಾಕಿದ. +“ಛೇ ಛೇ ಕಂಡಾಪಟಿ ಅಗ್ಗದ ಹೆಂಗಸದು. ಹೇಳಬಾರದ್ದ ನಾ ಏನ ಹೇಳ್ದೆ. ಸರಪಂಚ ಸಾಹೇಬರ ಮ್ಯಾಲ ನೀ ಹಾಂಗ ಪದಾ ಮಾಡಿದ್ದ ತಪ್ಪಂತ ಹೇಳಿದರ ಮೈಯಾಗ ದೆವ್ವ ಬಂದಾಂಗ ಕೈ ಬಾಯಿ ಮಾಡಿ ಬಲ್ಹಾಂಗ ಮಾತಾಡಾಕ ಹತ್ತಿದ್ಲು!” ರಮೇಶನಿಗೆ ಇಷ್ಟು ನೆಪ ಸಾಕಾಯಿತು. +“ಎಸೆಸ್. ಪಾಪ ಸಿದರಾಮ ಸರಪಂಚರ ಕೊಟ್ಟಾರ ತಗೋವಾ ಅಂತ ಹತ್ತು ರೂಪಾಯಿ ಕೊಟ್ಟರ ಐದು ರೂಪಾಯಿ ಅಲ್ಲೇನ? ನಿನ್ನ ಸರಪಂಚರ ನೀರ ಬಲ್ಲಿನ್ಹೋಗ” ಅಂತ ಒದರ್‍ಯಾಡ್ಯಾಕ ಹತ್ತಿದ್ದು!” +ತಾನಿನ್ನೂ ಮಾತಾಡಲಿಲ್ಲವಲ್ಲಾ ಎಂದು ಸಾತೀರ ಗಮನಿಸಿಕೊಂಡ- +“ಗೌಡ ಇಪ್ಪತ್ತ ಕೊಟ್ಟಾನ, ನಿನ್ನ ಸರಪಂಚ ಐದಽ ಅಲ್ಲೇನು ಕೊಟ್ಟಿದ್ದು? ಅಂದ್ಲು!” +ಅಂದ. ಎಲ್ಲಿ ಗುಡಸೀಕರ ಹೋಗಿ ಲಗಮವ್ವನ ಜೊತೆ ಜಗಳಾಡುವನೋ ಎಂದು- “ಬರಲಿ ನಿಮ್ಮ ಸರಪಂಚ ನನ್ನ ಹಂತ್ಯಾಕ. ಚೆಲೋಹಾಂಗ ಬುದ್ಧಿ ಕಲಿಸಿ ಕಳಸತೇನಂತಾಳಲಾ!” +ಎಂದೂ ಕಳ್ಳ ಸೇರಿಸಿದ. ಗುಡಸೀಕರ ಬಾಯಿ ತೆರೆಯಲಿಕ್ಕೆ ಅವಕಾಶ ಕೊಟ್ತರೆ ಕೆಟ್ಟೇವೆಂಬಂತೆ ಒಬ್ಬರಾದ ಮೇಲೆ ಒಬ್ಬರು ಬಿಟ್ಟೂ ಬಿಡದೆ ಮಾತಾಡುತ್ತಿದ್ದರು. ಕೊನೆಗೆ ಗುಡಸೀಕರ- +“ಅಲ್ರೊ, ದುರ್ಗೀ ಕೈಯಾಗ ಕೊಡಂದರ ಲಗಮೀ ಕೈಯಾಗ ಯಾಕ ಕೊಟ್ಟಿರಿ?” ಎಂದು ಕೇಳಿದ ಅವರು ಹೇಳಿದ್ದನ್ನೆಲ್ಲ ನಂಬುತ್ತ. +“ಆಕೀಗೇ ಕೊಡಬೇಕಂತ ಹೋಗಿದ್ದಿವಿ. ಕರೆದ ಕೊಡಬೇಕಂದರ ಈ ಮುದಿರಾಚಿ ಬಂದ ಕೈ ಒಡ್ಡಿದಳ್ರಿ” +ಎಂದು ಇನ್ನೊಂದು ಸುಳ್ಳೆಸೆದ ಕಳ್ಳ. ಆದರೆ ಗುಡಸೀಕರ ನಂಬಿದನೆಂದು ಇವರಿಗಿನ್ನೂ ಖಾತ್ರಿಯಾಗಲೊಲ್ಲದು. ಬಾಯಿಗೆ ಬಂದಂತೆ ಲಗಮವ್ವನನ್ನು ಬೈದರು. ಗೌಡ, ದತ್ತಪ್ಪನ ಹೆಸರು ತಂದರು. ಮಿಕ್ಕವರು ಮಾತಿಗೊಮ್ಮೆ ಕಳ್ಳನ ಸಜ್ಜನಿಕೆ ಹೊಗಳಿದರು. ಕಳ್ಳ ಇವರನ್ನು ಹೊಗಳಿದ. ಕುಡಿದ ದೇಸೀ ದೇವರ ಪ್ರಭಾವವೋ, ಸರಪಂಚ ತಮ್ಮನ್ನು ನಂಬಲಿಲ್ಲವೆಂಬ ಭಯವೋ ಅಕಸ್ಮಾತ್ ಗೊತ್ತಾದಾಗಲೂ ತಮ್ಮ ಮೇಲೆ ಬರಬಾರದೆಂಬ ಮುಂಜಾಗ್ರತೆಯೋ ಅಂತೂ ಮಾತಾಡಿದರು. ಮಾತಾಡಿ ಮಾತಾಡಿ ನಿಲ್ಲಿಸಿದರು. ಕೊನೆಗೆ ಗುಡಸೀಕರ ಹೇಳಿದ: +“ಈ ಲಗಮವ್ವನ ನೀರ ಇಳಿಸಬೇಕಲ್ಲಾ….” +ನಾಲ್ವರೂ ಈಗ ಹಗುರಾದರು. ಗುಡಸೀಕರ ನಂಬಿದ್ದು ಈಗ ಖಾತ್ರಿಯಾಯಿತು. ಒಬ್ಬ ಅವಳನ್ನು ಹೊಡೆಯೋಣವೆಂದ. ದುರ್ಗಿಯನ್ನು ಅಪಹರಿಸೋಣವೆಂದು ಇನ್ನೊಬ್ಬ, ಅವಳ ಸೆರೆ ತರೋಣವೆಂದು ಮಗದೊಬ್ಬ. ಇನ್ನು ಏನೇನೋ ಸೂಚನೆ ಬರುತ್ತಿದ್ದಾಗ ಗುಡಸೀಕರ ಒಂದು ವಿಚಾರ ಹೇಳಿದ. +“ನಾವೂ ಒಂದು ಸೇರೇದಂಗಡಿ ತಗದರ ಹೆಂಗ?” +‘ಓಹೋ, ಬೇಕಾದರ ಅಂಗಡ್ಯಾಗ ನಾ ಕೂರತೀನಿ.” +ಎಂದು ಮೆರೆಮಿಂಡ ಮುಂದ ಬಂದ. ರಮೇಸನಿಗಾಗಲೇ ರೋಮಾಂಚನಗಳೆದ್ದಿದ್ದವು. +“ಎಸೆಸ್, ಈ ಲಗಮಿ ಭಟ್ಟೀ ಸೆರೆ ಮಾರಿದರ, ನಾವು ಫಾರಿನ್ ಬ್ರಾಂಡಿ ಮಾರೋಣು!” +ಆದರೆ ಈ ವಿಚಾರ ಸಾತೀರನಿಗೆ ಸರಿಬರಲಿಲ್ಲ. +“ಒಂದ ಗುಟಕ ಬ್ರಾಂಡಿ ಯಾರ ಕುಡೀತಾರೊ? ಈಡಾಗಿ ಸಿಗುವಂಥಾದ್ದ ಏನರೆ ಹೇಳು” +ಎಂದ ಕೂಡಲೇ ಕಳ್ಳ. +“ಅದಕ್ಯಾಕ ಕಾಳಜೀ ಮಾಡತೀರೋ? ಬ್ರಾಂಡಿ ಒಳಗ ನಾವೂ ನೀರ ಹಾಕಿ ಈಡಮಾಡಿ ಮಾರೋಣು.” +ಎಂದೊಂದು ಪರಿಹಾರ ಸೂಚಿಸಿದ. +“ಎಸೆಸ್, ಫಾರಿನ್ ಬ್ರಾಂಡಿ ಅಂದ ನೀರ ಮಾರಿದರೂ ಮಂದಿ ತಗೋತಾರ. ನಾವು ಬರೇ ಒಂದ ಬಾಟ್ಲೀದಾಗ ಐದಾರ ನೂರ ರೂಪಾಯಿ ಅಗ್ಗದೀ ಸಹಜೀಕ ದುಡಿತೇವು” +ಎಂದು ರಮೇಸ ತನ್ನ ವ್ಯವಹಾರ ಬುದ್ಧಿ ಪ್ರದರ್ಶಿಸಿದ. ಇಷ್ಟಾಯಿತಲ್ಲ, ಕಳ್ಳ ಗುಡಸೀಕರನನ್ನೇ ನೋಡುತ್ತ- +“ಅಂಗಡ್ಯಾಗ ಯಾರನ್ನ ಕುಂದರ್ಸೋಣಂದ್ರಿ?” ಎಂದ. ತನಗೇ ಹೇಳುತ್ತಾನೆಂದು. ಗುಡಸೀಕರ ನಿಧಾನವಾಗಿ ಸಿಗರೇಟು ಸೇದುತ್ತ ಹೇಳಿದ: +“ಬೆಳಗಾವಿಂದ ಒಬ್ಬಾಕಿ ಚಿಮಣಾನ ತರೋಣು. ಅಂಗಡ್ಯಾಗಿಡೋಣು.” +ಬೆಳಗಾವಿ ಎನ್ನುತ್ತಲೂ ರಮೇಸ ಎಷ್ಟು ಉತ್ಸಾಹ ತಾಳಿದನೆಂದರೆ ಕೂತವನು ಎದ್ದು ಗುಡಸೀಕರನ ಬಳಿ ಹೋಗಿ. +“ಸಾಹೇಬರ, ಸಾಹೇಬರ, ಕಾರಹುಣವೀ ದಿನ ಹೆಂಗೂ ಅವರು ಚಿಮನಾನ ತರತಾರಲ್ಲ ಆಗಽ ಸುರು ಮಾಡೋಣ್ರಿ.” +ಅಂದ. ಗುಡಸೀಕರನ ತಲೆಯ ತೀವ್ರತೆ ಇನ್ನೂ ಜಾಸ್ತಿಯಾಯ್ತು. +“ಚಿಮಣಾನ ಯಾಕ ತರ್‍ತಾರೋ?” +“ಆ ದಿನ ಆಟ ಗೀಟ ಮಾಡ್ತಾರಲ್ಲರಿ.” +ಗುಡಸೀಕರ ನಿಧಾನವಾಗಿ ಸಿಗರೇಟನ್ನೆಳೆದ. ವಿದೇಶೀ ಪರಮಾತ್ಮನನ್ನು ತನ್ನ ಜೀವಾತ್ಮದಲ್ಲಿ ಮೆಲ್ಲನೆ ಸುರಿದುಕೊಂಡು ಬಾಟ್ಲಿ ಖಾಲಿ ಮಾಡಿದ. ಸಮರಸ ಸಂಯೋಗವಾದಂತೆ ಆ ಈ ಕಡೆ ಅಡ್ಡಾಡುತ್ತಿದ್ದ ವಿಚಾರಗಳು ಏಕಮುಖವಾಗಿ ಸಂಘಟಿಸಿದವು. ತುಟಿ ಒರೆಸಿಕೊಂಡ. ಚತುಷ್ಟಯರು ಅವನ ಮುಖವನ್ನೇ ನೋಡುತ್ತಿದ್ದರು. ತನಗೆ ತಾನೇ ಒಮ್ಮೆ ತಲೆದೂಗಿ ಗತ್ತಿನಲ್ಲಿ ಕಚ್ಚಿಕೊಂಡಿದ್ದ ತುಟಿಗಳನ್ನು ಎರಡು ಮಾಡಿದ: +“ಅವರು ಆಟ ಮಾಡಲಿ. ಅಂದಽ ನಾವೂ ಒಂದ ನಾಟಕ ಮಾಡೋಣು. ಚಿಮಣಾ ನಮ್ಮಲ್ಲಿ ಬರಲಿ. ಅವರು ಬಯಲಿನಾಗ ಕುಣೀಲಿ. ನಾವು ಒಳ್ಳೇ ನಿವಳ ಥೇಟರ್ ಹಾಕಿ ಲೈಟ, ಲೌಡ್ ಸ್ಪೀಕರ್ ತಂದ ನಾಟಕ ಮಾಡೋಣು. ನಾಟಕ ಮುಗಿದಮ್ಯಾಲ ಚಿಮಣಾ ನಮ್ಮಲ್ಲೇ ಇರಲಿ. ಸೆರೇದಂಗಡಿ ಬ್ಯಾಡಾ. ಚಾದ ಅಂಗಡಿ ತಗದ ಕೊಡೋಣು. ಏನಂತೀರಿ?” +ತಾನು ಈ ತನಕ ಅನುಭವಿಸಿದ ಸೋಲು, ಅವಮಾನಗಳ ಸೇಡು ಈ ಉಪಾಯದಿಂದ ಸರಳಬಡ್ಡಿ, ಚಕ್ರಬಡ್ಡಿ ಸಮೇತ ತೀರಿದಂತಾಯಿತೋ! ಕಾರ ಹುಣ್ಣಿಮೆಯ ಬಯಲಾಟಕ್ಕೆ ಜನ ಹೋಗದೆ ತಮ್ಮ ನಾಟಕಕ್ಕೇ ಬಂದರೆ ಗೌಡನ ಕೊಂಬು ಮುರಿದಂತಾಯಿತೋ! ಚಿಮಣಾಳನ್ನು ತಂದು ಚಹದಂಗಡಿ ತೆರೆಯುವುದರಿಂದ ಲಗಮಿಯ ಸೊಕ್ಕು ಇಳಿದಂತಾಯಿತೋ! ಊರನ್ನು ಬೆಳಗಾವಿಯಾಗಿಸಲು ಪ್ರಥಮ ಹೆಜ್ಜೆ ಇಟ್ಟಂತಾಯಿತೋ! ಪುಳಕದ ಸೊಕ್ಕಿನಲ್ಲೇ ಮನೆಗೆ ಹೋದ. +ಊಟ ಮಾಡುವಾಗ ಅವನ ತಾಯಿ “ಏ ತಮ್ಮಾ, ಗಿರಿಜವ್ವಗ ಒಂದ ವರ ನೋಡಬೇಕಲ್ಲೋ. ಬೆಳದ ನಿಂತಾಳ. ಆಕಿ ವಾರಿಗೆಯವರಿಗೆಲ್ಲಾ ಮದಿವ್ಯಾಗಿ ಮಕ್ಕಳಾಗ್ಯಾವ. ಹಿರಿಯಾ ಇದ್ದಿದ್ದರ ಏನಾದರ ಒಂದ ಮಾಡ್ತಿದ್ದ. ಗೋಕಾಂವ್ಯಾಗ ಒಂದು ವರ ಐತೆಂತ….” ಹೀಗೆ ಏನೇನೋ ಹೇಳುತ್ತಿದ್ದಳು. ಅವನ ತಲೆಯಲ್ಲೀಗ ತಂಗಿಯ ಮದುವೆಯ ವಿಚಾರ ಸೇರುವುದು ಸಾಧ್ಯವೇ ಇರಲಿಲ್ಲ. ಹೇಳಿದ್ದಕ್ಕೆಲ್ಲ ಹಾಂ ಹೂಂ ಅಂದು ಮಹಡಿ ಹತ್ತಿದ. +ದುರ್ಗಿಯ ಕನಸು +ಗುಡಸೀಕರನ ತಲೆಯಲ್ಲಿ ಕಾರ ಹುಣ್ಣಿವೆ, ಚಹದಂಗಡಿಯ ಹುಳ ಕೊರೆಯುತ್ತಿದ್ದರೆ ಇತ್ತ ಆತ ಕೊಟ್ಟ ಒಂದು ರೂಪಾಯಿಯ ನೋಟು ದುರ್ಗಿಯ ಎಳೆಯ ಎದೆಯನ್ನು ಕೊರೆಯುತ್ತಿತ್ತು. +ಗುಡಸೀಕರ ಕೊಟ್ಟ ಹತ್ತರಲ್ಲಿ ಕೊನೆಗೆ ಒಂದು ರೂಪಾಯಿ ಅದೂ ನಿಂಗೂನ ದಯದಿಂದ ದುರ್ಗಿಗೆ ದಕ್ಕಿತ್ತು. ಅದನ್ನು ಮಲಿಕಟ್ಟಿಗೆ ಸೇರಿಸಿದೊಡನೆ ಹೊಸ ಪ್ರಾಯಕ್ಕಿಂತ ಈ ನೋಟಿನ ಭಾರವೇ ಹೆಚ್ಚಾಗಿ ಎದೆ ಬಿಗಿಯಿತು. ಹುಚ್ಚು ಹುಡುಗಿ ಗಾಳಿ ತುಂಬಿದ ಎಳೆಗರುವಿನಂತೆ ಒಳಗೊಮ್ಮೆ ಹೊರಗೊಮ್ಮೆ ವಿನಾಕಾರಣ ಅಡ್ಡಾಡಿದಳು. ಈಗಷ್ಟೆ ರೆಕ್ಕೆ ಮೂಡಿದ ಚಿಟ್ಟಿ ಅಕಾ ಅಲ್ಲಿ, ಇಕಾ ಇಲ್ಲಿ ಎಲೆ ಎಲೆಗೆ ಹೂ ಹೂವಿಗೆ ಮೇಲಕ್ಕೆ ಕೆಳಕ್ಕೆ ಹಾರಾಡುವಂತೆ ನೆಲಕ್ಕೆ ಕಾಲೂರದೆ ಹರಿದಾಡಿದಳು. ಲಗಮವ್ವನ ಕಣ್ಣು ತಪ್ಪಿಸಿ, ಕತ್ತಲಲ್ಲಿ ಕೈಹಾಕಿ ಆ ನೋಟು ಮುಟ್ಟಿ ಮುಟ್ಟಿ ನೋಡಿದಳು. ಆಯ್ ಶಿವನ; ಮೈ ಬಿಸಿಯೇರಿ ಅಂಗಾಲಿನಿಂದ ನೆತ್ತಿಯ ತನಕ ವಿಷ ಏರಿ, ಎದೆಕುಪ್ಪಸ ತಿಟತಿಟತಿಟ ಎನ್ನುತ್ತಿತ್ತು. +ಲಗಮವ್ವ ಊಟಕ್ಕೆ ಕರೆದರೆ ಬರೀ ಊಟದ ಅಭಿನಯ ಮಾಡಿ ಮಲಗಿದಳು. ಬಿಗಿದ ನರನರಗಳನ್ನು ಜಗ್ಗಿ ಜಗ್ಗಿ ಸಡಿಲ ಮಾಡಲೆಂಬಂತೆ ಒಡಮುರಿದು ಹಾಸಿಗೆಯ ತುಂಬ ತೋಳು ಕಾಲುಗಳನ್ನು ಉದ್ದುದ್ದಕ್ಕೆ ಚಾಚಿ ಆಕಳಿಸಿದಳು. ಈಜು ಬಾರದ ಪಾಪ; ಎಳೇ ಹುಡುಗಿ, ಬಿಸಿ ನೀರ ಹೊಳೆಯ ಮಹಾಪೂರದ ತಿರುಗಣಿಯ ಇಕ್ಕಟ್ಟಿನಲ್ಲಿ ಸಿಕ್ಕು ವಿಲಿವಿಲಿ ಒದ್ದಾಡಿದಳು. ಹಾಸಿಗೆಯಲ್ಲಿ ಅರಿಯದ ಬಾಲಿ, ಬೆನ್ನು ಮೇಲಾಗಿ ಬಿದ್ದುಕೊಂಡು, ನಾಕೈದು ಸಲ ಎದೆಯಿಂದ ತಲೆದಿಂಬು ಗುಮ್ಮಿಗುಮ್ಮಿ ಎದೆಯ ಘನ ಕರಗಿಸಲೆಳಸಿದಳು. ಹಗುರಾದಂತಾಗಿ ಹಾಗೇ ಬಿದ್ದುಕೊಂಡಳು. ನಿದ್ದೆಯಲ್ಲೊಂದು ಕನಸು ಕಂಡಳು: +ಬೆಳದಿಂಗಳ ಮಾಯೆ ಆವರಿಸಿ ಊರಂತೂರು ತೇಲುಗಣ್ಣು, ಮೇಲುಗಣ್ಣಾಗಿ ನಿದ್ರಿಸುತ್ತಿದ್ದಾಗ ಇವಳೊಬ್ಬಳೇ ಕಿಲಕಿಲ ನಗುತ್ತ ಕೆರೆಯ ದಂಡೆಯ ಬಂಡೆಗಳ ಮೇಲೆ ಥೈ ಥೈ ಥೈ ಗೆಜ್ಜೆಯ ಹೆಜ್ಜೆಯೂರಿ ಓಡಾಡುತ್ತಿರುವಾಗ ಗುಡಸೀಕರ ಬಂದು ಇವಳನ್ನು ಅಮಾತ ಎತ್ತಿ ಗೊಂಬೆಯಂತೆ ಮೇಲೆ ಹಾರಿಸಿ ಆಕಾಶದಲ್ಲಿ ಬಿಟ್ಟೊಡನೆ- +ಹೋ ಬಿದ್ದೆನೆಂಬಾಗ ಕೆಳಕ್ಕೆ ಹುಲ್ಲಿನ ಬಣಿವೆ- +ಧಪ್ಪೆಂದು ಅಂಗಾತ ಬಿದ್ದು ಎದೆ ಹೊಮ್ಮಿ ಕುಪ್ಪಸ ಹರಿದು +ಖೊಖ್ಖೊಖ್ಖ್ ಎಂದು ಬಯಲಾಟದ ರಾವಣನಂತೆ ನಗುತ್ತ ಸಿಗರೇಟು ಸೇದಿ +ಬಿಳಿಹೊಗೆ ಬಣಿವೆ ಸೇರಿ, ನೂರ್‍ಮಡಿಯಾಗಿ +ಬಣಿವೆ ತುಂಬ ಹೊಗೆಯಾಗಿ +ಊರ ತುಂಬಾಗಿ +ತನ್ನ ಮೈಮೇಲೆ ಯಾರೋ ಪಸಪಸ ತುಳಿಯುತ್ತ +ಚೆಂಡಾಟವಾಡುವಾಗ-ಎವ್ವಾ ಸತ್ತಿನೇ ಎಂದು +ಚೀರಿ- +-ಎಚ್ಚರಾಯ್ತು. ಎದೆ ಹಿಡಿದುಕೊಂಡು ಮೇಲೆದ್ದು ಕೂತಳು. ಕೆನ್ನೆ, ಕತ್ತಿನ ಮೇಲೆ, ಹಣೆ ಮೂಗಿನ ಮೇಲೆ ಮೂಡಿದ ಬೆವರನ್ನು ಒರೆಸಿಕೊಂಡಳು. ಹೋಗಿ ನೀರು ಕುಡಿದು ಬಂದಳು. ಪಕ್ಕದ ಗುಡಿಸಲಲ್ಲಿ ದೇವರೇಸಿ ಬಿಕ್ಕುತ್ತಿದ್ದುದು ಕೇಳಿಸಿತು. +ಪ್ರಶ್ನೋತ್ತರ ಮಾಸ್ತರ +ಗೌಡ ದಿನದಂತೆ ಒಂದು ದಿನ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಮನೆಗೆ ಬಂದ. ಅಂಗಳದಲ್ಲಿ ನಾಯೆಲ್ಲ್ಯಾ ಆಗಲೇ ಗಳೇ ಸಾಮಾನು ತಯಾರು ಮಾಡಿಕೊಂಡು ಎತ್ತುಹೂಡುತ್ತಿದ್ದ. ಗೌಡ ಅವನಿಗೆ “ಕೆಳಗಿನ ಹೊಲದ ನೆಲ ಇನ್ನೂ ಬಿರುಸಾಗಿರುವುದರಿಂದ ಬಳಸಾಲಕ್ಕೆ ಬದಲು ಇನ್ನೊಮ್ಮೆ ಕುಂಟಿ ಹೊಡೆಯುವುದಕ್ಕೆ ಹೇಳುತ್ತಿದ್ದ. ಪ್ರಶ್ನೋತ್ತರ ಮಾಸ್ತರ ಆಗಷ್ಟೇ ಎದ್ದು ಹೊರಕಡೆಗೆ ಹೊರಟಿದ್ದವನು ಗೌಡನನ್ನು ಕಂಡೊಡನೆ ಚರಿಗೆ ಸಮೇತ ಎರಡೂ ಕೈ ಜೋಡಿಸಿ “ಎದ್ದಿರಾ ಗೌದರೆ?” ಎಂದ. “ನೀವೆದ್ದಿರಾ ಮಾಸ್ತರ?” ಎಂದು ಗೌಡ ಕೇಳಿ ಪ್ರತಿ ನಮಸ್ಕಾರ ಮಾಡಿದ. ಅಷ್ಟರಲ್ಲಿ ಗುಡಸೀಕರ ಕೆರೆಯ ಕಡೆಯಿಂದ ಈ ಕಡೆಗೆ ಬರುತ್ತಿದ್ದುದು ಕಾಣಿಸಿತು. ಮಾಸ್ತರ ಬರುತ್ತಿದ್ದ ಗುಡಸೀಕರನನ್ನು ನೋಡಿಯೂ ನೋಡದಂತೆ ನಿವಾರಿಸಿ, ಹಾದಿ ಬಿಟ್ಟು, ಸಂದಿಯೊಂದರಲ್ಲಿ ತೂರಿ ಮರೆಯಾದ. ಗುಡಸೀಕರ ಇದ್ಯಾವುದನ್ನೂ ಗಮನಿಸಲಿಲ್ಲವೇನೋ ಎಂಬಂತೆ ತನ್ನ ಮನೆಗೆ ಹೋದ. +ಈ ಊರಲ್ಲಿ ಕಗಂಸಾಲೆ (ಕನ್ನಡ ಗಂಡು ಮಕ್ಕಳ ಶಾಲೆ) ಸುರುವಾದಾಗಿನಿಂದ ಇಲ್ಲಿದ್ದವನು ಅವನೊಬ್ಬನೇ ಮಾಸ್ತರ. ವಯಸ್ಸಾಗಿತ್ತು. ಪಕ್ಕದ ಊರಿನವನು. ಹೆಂಡತಿ, ಮಕ್ಕಳು ಕೂಡ ಉಂಟಂತೆ. ಬಂದು ಇಷ್ಟು ವರ್ಷವಾದರೂ ಸಂಸಾರವನ್ನು ತನ್ನ ಹಳ್ಳಿಯಲ್ಲೇ ಬಿಟ್ಟು ಇಲ್ಲೊಂದು ಹಳೆಯ ಮನೆಯಲ್ಲಿದ್ದ. ಶನಿವಾರ ಒಪ್ಪತ್ತು ಸಾಲೆ ಮಾಡಿ ಊರು ಬಿಟ್ಟರೆ ಮತ್ತೆ ಅವನ ದರ್ಶನವಾಗುವುದು ಮಂಗಳವಾರ ಮಧ್ಯಾಹ್ನವೆ. ಅವನ ಬಗ್ಗೆ ವಾರದಾಗ ಮೂರು ದಿನ ಬಂದ ಹೋಗಾಂವ ಎಂದು ಹುಡುಗರು ಕದ್ದು ಹಾಡುತ್ತಿದ್ದರು. ಸೋಮವಾರ ಸಂತೆ ದಿನವಾದ್ದರಿಂದ ಸರಕಾರದ ಅಪ್ಪಣೆಯಿಲ್ಲದೆ ತಾನೇ ರಜಾ ಘೋಷಿಸುತ್ತಿದ್ದ. ಬಂದು ಇಷ್ಟು ದಿನವಾದರೂ ಅವನೇನು ಈ ಊರಿನಲ್ಲಿ ಬೇರು ಬಿಡಲೇ ಇಲ್ಲ. ಸದಾ ಒಂದು ಕಾಲು ಇಲ್ಲಿ, ಇನ್ನೊಂದು ತನ್ನ ಹಳ್ಳಿಯಲ್ಲಿ. ತಾನಾಯಿತು, ತನ್ನ ಸಾಲೆಯಾಯಿತು. ಅಲ್ಲದೆ ಇಂದೋ, ನಾಳೆಯೋ ನಿವೃತ್ತನಾಗಬೇಕು. ಇದ್ದಷ್ಟು ದಿನ ಎಲ್ಲರಿಗೆ ಬೆಲ್ಲದ ಹೇರಾಗಿದ್ದು ಹೋದರಾಯಿತು ಎಂದು ಊರಿನ ಉಸಾಬರಿಯಲ್ಲಿ ತಲೆಹಾಕುತ್ತಲೇ ಇರಲಿಲ್ಲ. +ಪರವೂರಿನವನಲ್ಲವೆ? ಈ ಊರಿನ ಯಾರ್‍ಯಾರ ನೀರು ಎಷ್ಟೆಂದು ಅವನಿಗೆ ಕೊನೆಯ ತನಕ ತಿಳಿಯಲೇ ಇಲ್ಲ. ತಿಳಿದುಕೊಳ್ಳಲು ಅವನು ಯತ್ನಿಸಲೂ ಇಲ್ಲ. ಆದ್ದರಿಂದ ಯಾರು ಕಂಡರೂ ಅವರಿಗೆ ಕೈ ಜೋಡಿಸಿ ಅತಿ ವಿನಯ ಪ್ರದರ್ಶಿಸುತ್ತಾ, ಅವರಿಗೆಲ್ಲಿ ಖಾತ್ರಿಯಾಯಿತೋ ಇಲ್ಲವೋ ಎಂದು ಹಲ್ಲು ಗಿಂಜುತ್ತ, ಮಾತಿಗೊಮ್ಮೆ ರೀ ರೀ ಎನ್ನುತ್ತ ಅವರ ಯೋಗಕ್ಷೇಮ ಕೇಳುತ್ತಿದ್ದ. ಹಾಗೆ ಕೇಳಿದ್ದು ಎಲ್ಲಿ ಸಾಲ ಕೇಳಿದಂತಾಯಿತೋ ಎಂದು, ಅಥವಾ ಪಾಪ, ಅವರಿಗೇಕೆ ಉತ್ತರ ಹೇಳುವ ತಾಪತ್ರಯವೆಂದು ತಾನೇ ಉತ್ತರವನ್ನೂ ಹೇಳುತ್ತಿದ್ದ. ಉದಾಹರಣೆಗೆ ಶಿವಾಪುರದ ಒಬ್ಬ ಸಜ್ಜನ ಭೇಟಿಯಾದನೆನ್ನೋಣ. ಕೂಡಲೇ ಮಾಸ್ತರನು “ನಮಸ್ಕಾರರಿ, ಹೆಂಗ, ಆರಾಮ ಇದ್ದೀರಾ?” ಎಂದು ಕೇಳಿ “ಆರಾಮ ಇರಬೇಕಲ್ಲ, ಮಕ ನೋಡಿದರಽ ತಿಳಿತೈತಿ” ಎಂದು ಉತ್ತರವನ್ನು ತಾನೇ ಹೇಳುತ್ತಿದ್ದ. +“ಬೆಳಿ ಚೆಲೋ ಆದಾವ್ರೆ?” +“ಚೆಲೋ ಇರದೇನ್ರಿ? ಕಂಡಾಪಟಿ ಮಳಿ ಆಗೇತಿ” ಎಷ್ಟೋ ಸಲ ಹೊಲ ಇಲ್ಲದವರಿಗೂ ಹೀಗೇ ಪ್ರಶ್ನೋತ್ತರಿಸಿ ದಾಟಿ ಹೋಗುತ್ತಿದ್ದ. ಅಲ್ಲದೆ ಅವನ ಯೋಚನಾಕ್ರಮವೂ ಹೀಗೇ ಇತ್ತು. ತಾನು ಏನು ಯೋಚನೆ ಮಾಡುತ್ತಿದ್ದೇನೆನ್ನುವುದು ತನಗೇ ಸ್ಪಷ್ಟವಾಗಿ ತಿಳಿದಿರಲೆಂದು ಯೋಚಿಸುವಾಗಲೆಲ್ಲ ಮಾತಾಡುತ್ತಲೇ ಯೋಚಿಸುತ್ತಿದ್ದ. ಏನೂ ಇಲ್ಲದೆ ಮಾತಾಡುವ ಜನ ಇಷ್ಟು ಸಿಕ್ಕರೆ ಬಿಟ್ಟಾರೆಯೆ? ಮಾಸ್ತರನು “ಪ್ರಶ್ನೋತ್ತರ ಮಾಸ್ತರನಾದದ್ದು” ಹೀಗೆ. +ಮಾಸ್ತರ ಈ ದಿನ ಮುಂಜಾನೆ ಗೌಡನಿಗೆ ನಮಸ್ಕರಿಸಿದ್ದನ್ನು ಗುಡಸೀಕರ ನೋಡದವನಂತೆ ನೋಡಿದ್ದ. ರಾತ್ರಿ ಮಾಸ್ತರನಿಗೆ ಪಂಚಾಯ್ತಿ ಆಫೀಸಿಗೆ ಬರಬೇಕೆಂಬ ಬುಲಾವ್ ಹೋಯಿತು. ಯಾವನಾದರೂ ಇನ್ಸ್‌ಪೆಕ್ಟರ್ ಬಂದಿದ್ದಾನೋ? ಯಾರಿಗ್ಗೊತ್ತು. ಏನಾದರೂ ಆರ್ಡರ್ ಬಂದಿದೆಯೋ? ಯಾರಿಗ್ಗೊತ್ತು-ಹೀಗೆ ತಂತಾನೆ ಪ್ರಶ್ನೋತ್ತರಿಸುತ್ತಲೇ ಬಂದ. ಗುಡಸೀಕರನನ್ನೂ ಅಷ್ಟು ದೂರದಲ್ಲಿ ಜಮಖಾನೆಯ ಮೇಲೆ ಚತುಷ್ಟಯರೂ, ಕುಡಿಯುತ್ತ, ಮೀಟಿಂಗ್ ಮಾಡುತ್ತ ಅಂದರೆ ಇಸ್ಪೀಟಾಡುತ್ತ ಕೂತಿದ್ದರು. ಹಾಗೆ ನೋಡಿದರೆ ಪಾಪ, ಮಾಸ್ತರನೇ ಅವರಿಗೆ ಒಂದು ಕಾಲಕ್ಕೆ ಒಂದೆರಡು ಅಕ್ಷರ ಹೇಳಿಕೊಟ್ಟಿದ್ದವನು. ಅವನು ಕಲಿಸಿದ ತಿರುಕನ ಕನಸನ್ನು ಕಳ್ಳ ಇನ್ನೂ ಮರೆತಿಲ್ಲ. ಆದ್ದರಿಂದ ಚತುಷ್ಟಯರಿಗೆ ಮಾಸ್ತರನ ಮುಂದೆ ಮೀಟಿಂಗ್ ಮಾಡಲು ಸಂಕೋಚವಾಯ್ತು. ಆದರೆ ಗುಡಸೀಕರ ಸಿಟ್ಟಾದರೆ ಕಷ್ಟ, ಅಲ್ಲದೆ ವಿದೇಶೀ ‘ಭಿರಂಡಿ’ಯ ಒಂದೆರಡು ತೊಟಕು ಒಳಗಿಳಿದಿತ್ತು. ಅದೂ ಬೇಡ; ಈಗವರು ಊರಿನ ಗ್ರಾಮಪಂಚಾಯಿತಿಯ ಮೆಂಬರರಲ್ಲವೆ? ಗೌಡನನ್ನೇ ಎದುರು ಹಾಕಿಕೊಂಡವರಿಗೆ ಮಾಸ್ತರ ಯಾವ ಲೆಕ್ಕ? ಕಲಿಗಾಲ ಬೇರೆ ಇವರ ಮುಖಾಂತರವೇ ಊರಿಗೆ ಕಾಲಿಟ್ಟಿತ್ತು, ಲಗಮವ್ವನ ಹಾಡಿನ ಪ್ರಕಾರ. +ಮಾಸ್ತರ ಮುದ್ದೆಯಾಗಿ ಮುಷ್ಟಿಯಷ್ಟೇ ಆಗಿ ಬಂದ. “ನಮಸ್ಕಾರರೀ ಸರಪಂಚ ಸಾಹೇಬರಽ” ಅಂದ. ಗುಡಸೀಕರ ಕತ್ತೆತ್ತಿ ಅವನ ಕಡೆ ನೋಡಲೇ ಇಲ್ಲ. ಉಳಿದವರು ಒಳಗೆ ಬರ್ರಿ ಅನ್ನಲಿಲ್ಲ. ಮಾಸ್ತರ ಬರುವ ಮುನ್ನವೇ ಉಳಿದವರಿಗೆ ಗುಡಸೀಕರ ಮುಂಜಾನೆ ನಡೆದದ್ದನ್ನೆಲ್ಲ ಹೇಳಿಬಿಟ್ಟಿದ್ದ. ಅವರು ಹಾಗೆ ಸುಮ್ಮನೆ ಕೂತರೋ ಇಲ್ಲವೋ ಮಾಸ್ತರನ ಜಂಘಾಬಲ ಕೈಕೊಟ್ಟಿತು. ಒಳಗೊಳಗೇ ಚಡಪಡಿಸಿದ. ಏನೇನೋ ಪ್ರಶ್ನೋತ್ತರಿಸಿಕೊಳ್ಳುತ್ತಿದ್ದುದು ಅವನ ಹಸ್ತಾಭಿನಯದ ಮೂಲಕ ಸ್ಪಷ್ಟವಾಗುತ್ತಿತ್ತು. ಬಹುಶಃ ಕರೆಸಿರಲಾರರು, ಯಾರೋ ಬಂದು ಚೇಷ್ಟೆ ಮಾಡಿರಬಹುದೆಂದು “ಬರಲೇನ್ರಿ ಹಂಗಾದರ?” ಎಂದು ಕೇಳಿ “ಆಗಲಿ” ಎಂದು ತಾನೇ ಅಪ್ಪಣೆ ಕೊಟ್ಟುಕೊಂಡು ನಡೆದ. ಕಳ್ಳನ ಗುರುಭಕ್ತಿ ಜಾಗ್ರುತವಾಯಿತು. +“ಕುಂದರ್ರೀ ಮಾಸ್ತರ” +ಮಾಸ್ತರ ಕುಸಿದವರಂತೆ ಕೂತ. ಎಲ್ಲರೂ ತಂತಮ್ಮ ಇಸ್ಪೀಟ್ ಎಲೆಗಳ ಕಡೆಗೇ ನೋಡುತ್ತಿದ್ದರು. ರಮೇಸ ಕೇಳಿದ, +“ಏನ್ರೀ ಮಾಸ್ತರ, ಗೌಡನ ಜೋಡಿ ಅದೇನ ನಿಮ್ಮ ಸಲಿಗಿ?” +“ನಂದೇನ ಸಲಿಗಿ? ಏನೂ ಇಲ್ಲಲ್ಲಾ” +“ಇರದಿದ್ದರ ಹರೀವತ್ತ ಅದ್ಯಾಕಷ್ಟ ಕೈಕೈ ಮುಗೀತಿದ್ದಿರಿ”? +“ಕೈ ಕೈ ಮುಗೀತಿದ್ದೆ? ಹೌಂದು, ಹರೀವತ್ತೆದ್ದಮ್ಯಾಲ ಎದ್ದಿರಾ ಅಂತ ಕೇಳಿದರ ತಪ್ಪ? ತಪ್ಪಲ್ಲ.” +ಮಾಸ್ತರ ತಪ್ಪ ತಪ್ಪಂದನಲ್ಲ, ಸಾತೀರನ ಸೇಡು ಹೆಡೆ ತೆಗೆಯಿತು. ಯಾಕೆಂದರೆ ಚಿಕ್ಕಂದಿನಲ್ಲಿ ತಾನು ಏನು ಬರೆದು ತೋರಿಸಿದರೂ ಈ ಮಾಸ್ತರ ತಪ್ಪು ತಪ್ಪು ಅಂತಿದ್ದ. +“ಏನ್ರಿ ತಪ್ಪಲ್ಲಂದರ? ಹುಡುಗೋರಿಗೆ ಚಲೋ ಸಾಲಿ ಕಲಸೋದ ಬಿಟ್ಟ ಎದ್ದವರ ಮನೀ ಮನೀ ಅಡ್ಡಾಡಿ ಎದ್ದಿರಾ? ಅಂತ ಕೇಳಿಕೊಂಡ ತಿರಗತೀರಿ. ಹದಿನೇಳ ಆರಲಾ ಎಷ್ಟಂತ ಕೇಳಿದರ ಒಬ್ಬ ಹುಡುಗ್ಗೂ ಹೇಳಾಕ ಬರಲಿಲ್ಲ. ಇದಽ ಏನ್ರೀ ಸಾಲಿ ಕಲಿಸೋಣಿಕಿ? ವಾರದಾಗ ಮೂರ ದಿನಾ ಇಲ್ಲಿರತೀರಿ. ನಾಕ ದಿನಾ ನಿಮ್ಮೂರಾಗಿರ್‍ತೀರಿ. ಇಂದಽ ಗುಡಸೀಕರ ಸಾಹೇಬರ ಮ್ಯಾಲ ಬರದ ಹಾಕಿದರ ನಿಮ್ಮ ಗತಿ ಏನಾದೀತು?” +ಎದೆಯ ಮೇಲೆ ಏಕದಂ ಬಂಡೆ ಬಿದ್ದಂತೆ ಮಾಸ್ತರ ಒದ್ದಾಡಿದ. ಕೈಮುಗಿದು “ಇಲ್ಲರೀ, ಇಲ್ಲರೀ” ಅಂದ. ಮಾಸ್ತರನ ಮೇಲೆ ತನ್ನ ಮಾತಿನ ಪ್ರಭಾವ ಹೀಗಾದೀತೆಂದು ಸಾತೀರನಿಗೂ ಗೊತ್ತಿರಲಿಲ್ಲ. ಅವರಲ್ಲೆಲ್ಲ ಸ್ವಲ್ಪ ದಡ್ಡನೆಂದರೆ ಮೆರಮಿಂಡ. ಆದ್ದರಿಂದಲೇ ಅವನ ಕರುಳು ಕರುಗಿತು. ಎಷ್ಟೆಂದರೂ ಅಕ್ಷರ ಕಲಿಸಿದ ಗುರು ಅಲ್ಲವೆ? ಬಳಸಿ ಬಳಸಿ ಯಾಕೆ? ನೇರವಾಗೇ ಹೇಳಬಹುದಲ್ಲಾ, +“ಛೇ ಛೇ ಮಾಸ್ತರ ನೋದರಿಲ್ಲೆ. ನಾಳಿಂದ ದಿನಾ ಹರಿವತ್ತೆದ್ದ ಗುಡಸೀಕರ ಸಾಹೇಬರ ಮನೀಗಿ ಹೋಗಿ ಎದ್ದಿರಾ ಅಂತ ಕೇಳಿ ಬರ್ರಿ. ಮೆಂಬರು ಯಾರಾದರೂ ಸಿಕ್ಕರ “ಎದ್ದಿರಾ?” ಅಂತ ಕೇಳ್ರಿ. ಆ ಗೌಡ, ದತ್ತೂ ಇದ್ದಾರಲ್ಲಾ, ಅವರನ್ನ ಇನ್ನ ಮ್ಯಾಲ ಮಾತಾಡಿಸಬ್ಯಾಡರಿ, ತಿಳೀತ?” +ಅಂದ. ಈ ನೇರ ಮಾತು ಗುಡಸೀಕರನಿಗೆ ಹಿಡಿಸಲಿಲ್ಲ. +“ದಿನಾ ಮುಂಜಾನೆ ಬ್ಯಾಡ, ನೋಡಪಾ, ಸಾಲಿ ಇರೋದು ಪಂಚಾಯ್ತಿ ಕೈಯಾಗ. ನಾವಽ ಮ್ಯಾಲ ಬರದ ಹಾಕಿದರ ನಾಳಿ ನಿಮ್ಮ ಗೌದನೂ ನಿಮ್ಮನ್ನು ಉಳಸಾಕಿಲ್ಲಾ. ದತ್ತೂನೂ ಉಳಸಾಕಿಲ್ಲ. ನಿಮ್ಮಕಡಿಂದ ನಮಸ್ಕಾರ ಮಾಡಿಸ್ಕೋ ಬೇಕಂತ ಹಿಂಗ ಹೇಳಲಿಲ್ಲ ಮತ್ತ, ತಿಳಕೊಳ್ರಿ” +ಮಾಸ್ತರ ಹುಚ್ಚನಂತಾದ. ಏನೋ ಹೇಳಲು ಏಳುತ್ತಿದ್ದ. ಏನು ಹೇಳಬೇಕೆಂದು ತೋಚದೆ ಕೂರುತ್ತಿದ್ದ. ಹಸ್ತಾಭಿನಯಕ್ಕಂತೂ ಮಿತಿಯೇ ಇರಲಿಲ್ಲ. ನೋಡಿದವರಿಗೆ ಕೈ ಮೈ ಚಲನವಲನ ಕಾಣಿಸುತ್ತಿತ್ತೇ ಹೊರತು ಅವನ ಮಾತು ಕೇಳಿಸುತ್ತಿರಲಿಲ್ಲ. ಮೆರಮಿಂಡನಿಗೆ ಬಹಳ ಕೆಡುಕೆನಿಸಿತು. ಕಳ್ಳನಿಗೂ. +“ಹೋಗ್ರಿ ಮಾಸ್ತರ ಇನ್ನ” +ಎಂದು ಗುಡಸೀಕರನ ಪರವಾಗಿ ಅಪ್ಪಣೆ ಕೊಟ್ಟ. ಬದುಕಿದೆ ಎಂದು ಮಾಸ್ತರ ಒಂದೇ ನೆಗೆತಕ್ಕೆ ಪಂಚಾಯ್ತಿ ಆಫಿಸಿನಿಂದ ಹಾರಿಬಿಟ್ಟ. ಮನೆಗೆ ಬಂದು ಶಿಷ್ಯರೆ ಇವರು? ಚಂಡಾಲರು. ಎಂದು ತಂತಾನೇ ಪ್ರಶ್ನೋತ್ತರಿಸಿಕೊಂಡ. ಇನ್ನು ಮೇಲೆ ಇವರು ಸಭೆ ಮಾಡಿದರೆ ಕುರ್ಚಿ ಕೊಡಬೇಕೆ? ಸಾಧ್ಯವಿಲ್ಲ, ಎಂದುಕೊಂಡ. ಆದರೆ ಕೊಡದೆ ಇರುವುದು ಹೇಗೆ ಸಾಧ್ಯ? ಆದ್ದರಿಂದ ಕುರ್ಚಿಯ ಒಂದು ಕಾಲು ಮುರಿದು ಬಿಡಬೇಕೆಂದೂ ನಿಶ್ಚಯಿಸಿಕೊಂಡು ತಂತಾನೇ ಸಮಾಧಾನಪಡಿಸಿಕೊಂಡ. +ಮಾಸ್ತರ ಹೋದೊಡನೆ ಗುಡಸೀಕರ ನಕ್ಕ. ಅವನ ಇಮ್ಮಡಿ ಇವರು ನಕ್ಕರು, ನಿಜ ಹೇಳಬೇಕೆಂದರೆ ಚತುಷ್ಟಯರಿಗೆ ಮೈತುಂಬ ಸಿಕ್ಕಸಿಕ್ಕಲ್ಲಿ ಪುಳಕವೆದ್ದಿತ್ತು. ಪಂಚಾಯ್ತಿ ಮೆಂಬರಾದಾಗಿನಿಂದ ಯಾರೂ ಈ ಥರ ಹೆದರಿರಲಿಲ್ಲ. ಅದೂ ಚಿಕ್ಕಂದಿನಲ್ಲಿ ಎಷ್ಟೊಂದು ಹೆದರಿಸಿದ್ದ ಮಾಸ್ತರ ಹೀಗೆ ಹೆದರುವುದೆಂದರೆ! ಒಬ್ಬೊಬ್ಬರೂ ಮಾತಾಡಿದ ಮಾತನ್ನು ವಿರೋಚಿತವಾಗಿ ಇನ್ನೊಮ್ಮೆ ಹೇಳಿ ನಕ್ಕರು. ಮಾಸ್ತರನ ಅಭಿನಯ ಮಾಡಿ ಮತ್ತೆ ನಕ್ಕರು. ಗುಡಸೀಕರ ಎಲ್ಲರಿಗೂ ಒಂದೊಂದು ಹನಿ ‘ಭಿರಂಡಿ’ ಸಿಡಿಸಿ ಉಳಿದುದನ್ನು ತಾನು ಬಗ್ಗಿಸಿಕೊಂಡು ಬಾಟ್ಲಿ ಖಾಲಿಮಾಡಿದ. ಮತ್ತೊಂದು ಹನಿ ಸಿಕ್ಕಿತಲ್ಲಾ ಎಂಬ ಸಂತೋಷಕ್ಕೆ ಮಗುದೊಮ್ಮೆ ನಕ್ಕರು. ಅಷ್ಟರಲ್ಲಿ ಗೌಡನ ಆಳು ನಾಯೆಲ್ಯಾ ಹಲ್ಲು ಕಿರಿಯುತ್ತ ಹಾಜರಾದ. +ನಾಯೆಲ್ಯಾ ಅರ್ಥಾಥ್ ಅಂಗೀಯೆಲ್ಯಾನ ಉಪಕಥೆ +ನಾಯೆಲ್ಯಾ ಬಲು ಮೋಜಿನವ. ಊರಿನಲ್ಲಿ ಅನೇಕ ವಿಕ್ರಮಗಳ ಖ್ಯಾತಿಯಿದ್ದವ. ನಾಯೆಲ್ಯಾ, ಅಂಗೀಯೆಲ್ಯಾ ಎಂದು ಜನರೂಢಿಯಲ್ಲಿ ಜೋಡು ಹೆಸರಿದ್ದವನೆಂದರೆ ಇಡೀ ಊರಿನಲ್ಲಿ ಇವನೊಬ್ಬನೇ. ಜೀವಂತವಾಗಿದ್ದಾಗಲೇ ಗಾದೆ ಮಾತಾದವರು ಇಡೀ ಊರಿನಲ್ಲಿ ನಿಂಗೂ ಮತ್ತು ನಾಯೆಲ್ಯಾ ಇಬ್ಬರೇ: “ನಾಯೆಲ್ಯಾಗ ಅಂಗೀ ಋಣ ಇಲ್ಲ, ನಿಂಗೂಗೆ ಹೇಂತಿ ಋಣ ಇಲ್ಲ”; ಯಾವುದಕ್ಕೂ ಋಣ ಬೇಕೆನ್ನುವ ಸಂದರ್ಭದಲ್ಲಿ ಜನ ಖಂಡಿತ ಈ ಗಾದೆ ಬಳಸುತ್ತಾರೆ. ಕುಡಿತಕ್ಕೆ ನಾಯೆಲ್ಯಾನನ್ನು ಬಿಟ್ಟರೆ ಇನ್ನಿಲ್ಲ. +ನಾಯೆಲ್ಯಾನ ಮೂಲ ಹೆಸರು ಮುನಿಯೆಲ್ಯಾ ಎಂದು. ಚಿಕ್ಕಂದಿನಿಂದ ಗೌಡನ ಮನೆಯಲ್ಲೇ ಚಾಕರಿ ಇದ್ದ. ಸ್ವಂತ ಗುಡಿಸಲಿದೆ, ಜಮೀನೂ ಇದೆ, ಒಂದೆಕರೆ. ಹಿಂದೆ ಮೂರೆಕರೆ ಇದ್ದದ್ದು, ಇವನು ಕುಡಿದು ಅದೂ ಒಂದೆಕರೆ ಹಾಳು ಮಾಡಿಕೊಂಡಾನೆಂದು ಗೌಡ ಅದನ್ನು ತಾನೇ ಮಾಡುತ್ತ ಅವನನ್ನು ಆಳಾಗಿ ನೇಮಿಸಿಕೊಂಡು ಆ ಕುಟುಂಬಕ್ಕೆ ಬೇಕಾದ ಕಾಖು ಕಡಿ ಪೂರೈಸುತ್ತಾನೆ. ಅದರಲ್ಲೇನು ಮೋಸವಿಲ್ಲ. +ನಾಯಕರ ಹುಡುಗರ ಬೇಟೆಗಾಗಿ ಪಳಗಿಸಿದ ಒಂದೆರಡನ್ನು ಬಿಟ್ತರೆ ಶಿವಾಪುರದಲ್ಲಿ ನಾಯಿ ಸಾಕುವುದೇ ಗೊತ್ತಿಲ್ಲ. ಹಾಗಂತ ಬೀದಿ ನಾಯಿಗಳಿಗೇನೂ ಆ ಊರಲ್ಲಿ ಕೊರತೆಯಿಲ್ಲ. ಓಣಿಗೊಂದೊಂದು ಹಿಂಡಿಗೆ ಹಿಂಡೇ ಇದೆ. ಆ ನಾಯಿಗಳು ಎಲ್ಲರ ಮನೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತವೆ. ಧರ್ಮಾತ್ಮರು ಚೂರು ಪಾರು ರೊಟ್ಟಿ ಎಸೆಯುತ್ತಾರೆ. ಹೀಗಾಗಿ ಅವುಗಳಿಗೆ “ದೈವಾಚಾರೀ ನಾಯಿ”ಗಳೆಂಬ ಪ್ರತ್ಯೇಕ ನಾಮಕರಣವೇ ಇದೆ. ಅವುಗಳ ಮುಖ ಕೆಲಸವೆಂದರೆ ರಾತ್ರಿ ಒದರುವುದು; ಅದಿಲ್ಲಾ ಊಳಿಡುವುದು. ಯಾವುದೋ ಓಣಿಯ ಯಾವುದೋ ನಾಯಿ, ಯಾವುದೋ ಕಾರಣಕ್ಕೆ ಸ್ವಲ್ಪ ಒದರಿದರೆ ಸಾಕು, ಊರಿನ ಉಳಿದ ನಾಯಿಗಳೆಲ್ಲ ಒಂದೇ ಸಮ, ಬಿಟ್ಟೂ ಬಿಡದೆ ಒದರಲಾರಂಭಿಸುತ್ತವೆ. ಒದರುವುದಕ್ಕೆ ಕಾರಣವಿರಲೇಬೇಕೆಂಬ ನಿಯಮವೂ ಅವಕ್ಕಿಲ್ಲ, ಹುಟ್ಟಿದ್ದೇ ಒದರುವುದಕ್ಕೆ. ಊರವರಿಗೂ ಇದು ಗೊತ್ತು. ಸಂಭಾಷಣೆಗಳಲ್ಲಿ ಅವುಗಳ ದೃಷ್ಟಾಂತ ಕೊಡುವುದುಂಟು; ಯಾಕೋ ಧೈವಾಚಾರೀ ನಾಯಿ ಹಾಂಗ ಒದರತಿ? ಎಂದೋ ವಾಚಾಳಿಗ ಅವ ಬಿಡಪಾ ದೈವಾಚಾರಿ ನಾಯಿ ಎಂದೋ, ಅವ ಸೈ-ದೈವಾಚಾರೀ ನಾಯಿ ಸೈ ಎಂದೋ ಹೇಳುವುದುಂಟು. +ಆ ಅನಾಮಿಕ ನಾಯಿಗಳಲ್ಲಿ ಒಂದು ಕರಿ ನಾಯಿ ಇತ್ತು. ಅದೇನು ವರ್ಣಸಾದೃಶ್ಯವೋ, ಸ್ವಭಾವಸಾದೃಶ್ಯವೋ, ಕರ್‍ಮಧರ್ಮ ಸಂಯೋಗವೋ ಮಿನಿಯೆಲ್ಲ್ಯಾನನ್ನು ಕಂಡರೆ ಅದಕ್ಕೆ ವಿಪರೀತ ನಿಷ್ಠೆ. ಅವನಿನ್ನೂ ಅಷ್ಟು ದೂರದಲ್ಲಿ ಬರುತ್ತಿದ್ದಾನೆಂದರೆ ಇಲ್ಲಿ ನಿಂತ ಅದು ಚಂಗನೆ ಹಾರಿ, ಓಡಿಹೋಗಿ, ಬಾಲ ಅಲುಗಿಸುತ್ತ ಪಾದ ಬಳಸಿ, ನೆಕ್ಕಿ ಕುಂಯ್, ಕುಂಯ್, ಕುಂಯ್ ಒರಲುತ್ತ ಅವನ ಮನೆ ತನಕ ಬೆನ್ನು ಹತ್ತುತ್ತಿತ್ತು. ಒಂದೆರಡು ಬಾರಿ ಉಂಡಾದ ಮೇಲೆ ಒಂದೋ ಎರಡೋ ಮೂಳೆ ಚೆಲ್ಲಿದನೋ ಇಲ್ಲವೋ, ಆ ಪ್ರಾಣಿ ಇವನನ್ನು ಜೀವಕ್ಕೇ ಅಂಟಿಸಿಕೊಂಡಿತ್ತು. ಇವನಂತೂ ಅದು ಹೊಂದಿನ ಜನ್ಮದಲ್ಲಿ ತನಗೆ ತಮ್ಮನೋ, ಮಗನೋ ಆಗಿದ್ದಿತೆಂದೇ ನಂಬಿದ. ಹಾಗಂತ ಮಂದಿಯ ಮುಂದೆ ಕುಡಿದಾಗ, ಕುಡೀದಿದ್ದಾಗ ಕೂಡ ಆಡಿಯೂ ಆಡಿದ. ಅದು ಬಾಲವಲ್ಲಾಡಿಸಿ ತನ್ನ ನಿಷ್ಠೆ ಪ್ರದರ್ಶಿಸಿದಾಗೆಲ್ಲ ಇವನಿಗೆರಡು ಕೊಂಬು ಮೂಡಿದಂತೆ ಆಗುತ್ತಿತ್ತು. ಒಂದು ಬಗೆಯ ಅಹಂಕಾರ ಇನ್ನೂ ತಲೆಗೇರಿ, ಗೌಡ ತನ್ನೊಂದಿಗೆ ಮಾತಾಡಿದಂತೆ ಈತ ಆ ನಾಯಿಯೊಂದಿಗೆ ಮಾತಾಡುತ್ತಿದ್ದ. ಅದನ್ನು ‘ಮುನಿಯೆಲ್ಯಾ’ ಎಂದು ಕರೆಯುತ್ತಿದ್ದ. ‘ಹಾಂಗ ಮಗನಽ’ ‘ಹೀಂಗ ಮಗನಽ’ ಎಂದು ಗೌಡನ ಅಭಿನಯ ಮಾಡುತ್ತ ಅದರೊಂದಿಗೆ ಹೆಚ್ಚುಗಾರಿಕೆ ಮೆರೆಯುತ್ತಿದ್ದ. ಅದೇನು ಸಂತೋಷವೋ ಅದನ್ನು ಬಲು ಖುಷಿಯಿಂದ ಅನುಭವಿಸುತ್ತಿದ್ದ. ಇವನು ಹೆಂಡ ಖಂಡ ತಂದಾಗ ಇವನ ಹೆಂಡತಿ ಪಾಲು ಬೇಡುತ್ತಿದ್ದರೆ ಇವನಿಗೆ ಭಾರೀ ಸಿಟ್ಟು ಬರುತ್ತಿತ್ತು. ನಾಯಿಗೆ ಮಾತ್ರ ಹಾಕಿದರೆ ಉಂಟು, ಹಾಕದಿದ್ದರೆ ಇಲ್ಲ. ನಿಷ್ಠೆ, ಪ್ರಾಮಾಣಿಕತೆ ಅಂದರೆ ಹಾಗಿರಬೇಕೆಂದು ಇವನ ಮತ. ಅದಕ್ಕೇ ಆತ ಆಗಾಗ ತನ್ನ ಹೆಂಡತಿ ರಂಗಿಗೆ ಈ ನಾಯಿಯ ಉದಾಹರಣೆ ಕೊಡುವಂತಾಯಿತು. +ಒಂದು ದಿನ ಮಧ್ಯಾಹ್ನ ಎಲ್ಯಾ ಗೌಡನ ತೋಟದಲ್ಲಿ ಕಬ್ಬಿಗೆ ನೀರು ಹಾಕಿಸುತ್ತಿದ್ದ. ಅಷ್ಟರಲ್ಲಿ ಪಕ್ಕದ ಕಾಡಿನಿಂದ ಕುರುಬರ ಹುಡುಗ “ಅಯ್ಯೋ ಬರ್ರೋ ನನ್ನ ಕುರಿ….ನನ್ನ ಕುರಿ ಮುರೀತೇತ್ರೋ”ಎಂದು ಚೀರುತ್ತಿದ್ದುದು ಕೇಳಿಸಿತು. ಮುನಿಯೆಲ್ಯಾ ನಿಂತಲ್ಲೇ ಸೆನಿಕೆ ಚೆಲ್ಲಿ ಆ ದಿಕ್ಕಿಗೆ ಓಡಿಹೋದ. ಪಕ್ಕದ ಹೊಲದ ಇನ್ನೂ ಆರೇಳು ಜನ ಇವನೊಂದಿಗೆ ಸೇರಿದರು. ಹೋಗಿ ನೋಡಿದರೆ ಅದೇ ಕರಿನಾಯಿ ಹಾರಿ ಹಾರಿ ಕುರಿಗಳನ್ನು ಮುರಿಯತೊಡಗಿದೆ! ಎರಡು ಕುರಿಗಳಾಗಲೇ ಅರೆ ಜೀವವಾಗಿ ಒದ್ದಾಡುತ್ತಿದ್ದರೆ ಇನ್ನೊಂದರ ಮೇಲೆ ಜಾತ್ಯಾ ಬೇಟೆಯ ನಾಯಿಯಂತೆ ಹಾರತೊಡಗಿದೆ! ಯಾರಾದರೂ ಹೊಡೆಯ ಹೋದರೆ ಅವರ ಮೇಲೆ ಹುಲಿಯಂತೆ ಹಾರಿ ಬರುತ್ತಿದೆ! ಪಾಪ ಎಂಥಾ ನಾಯಿ, ಏನಾಗಿ ಹೋಗಿದೆ! ಅದು ಈ ತನಕ ಬೆನ್ನುಹತ್ತಿ ಬೇಟೆ ಹಿಡಿದದ್ದಲ್ಲ, ಕಳ್ಳರನ್ನು ಪತ್ತೆಹಚ್ಚಿದ್ದಲ್ಲ, ಬಾಲವಿದ್ದುದರಿಂದ ಅಲುಗಾಡಿಸುತ್ತಿದ್ದು; ಬಾಯಿ ಇದ್ದುದರಿಂದ, ಬೊಗಳಿದ್ದು ಅಷ್ಟೆ. ಹೆಚ್ಚೇನು, ಅದೆಂದೂ ತನ್ನ ಬಾಲದ ಮೇಲೆ ಕೂತ ನೊಣವನ್ನು ಜೋರಿನಿಂದ ಜಾಡಿಸಿಕೊಂಡ ನಾಯಿಯಲ್ಲ, ಅಂಥಾ ನಾಯಿ ಇಂಥಾ ಪ್ರಚಂಡ ಕೆಲಸ ಮಾಡುವುದೆಂದರೇನು? ಏನೋ ಗುಟ್ಟಿರಬೇಕೆಂದು ಮುನಿಯೆಲ್ಯಾ ನಿಲ್ಲದೆ ಅದರ ಮೇಲೆ ಇವನೂ ನಾಯಿಯಂತೆ ಹಾರಿ ಹಿಡಿದುಕೊಂಡ. ಮನುಷ್ಯರ ಮೇಲೆ ಧಡಧಡಿತ ಬಾಯಿ ತೆರೆದು ಹಾರಿ ಬರುತ್ತಿತ್ತು. ಕೊನೆಗೆ ಎಲ್ಲರೂ ಪರೀಕ್ಷಿಸಿ ನೋಡಿದರು. ಮುನಿಯೆಲ್ಯಾ ಅದರ ಬಾಯಿ ಮೂಸಿ ನೋಡಿದ. ಹೆಂಡದ ವಾಸನೆ ಗೊಮ್ಮೆಂದು ಹೊಡೆಯಿತು. ಮುನಿಯೆಲ್ಯಾನ ನಾಯಿಯಲ್ಲವೆ? ಲಗಮವ್ವ ಕಾಡಿನಲ್ಲಿ ಬಚ್ಚಿಟ್ಟ ಹಳೇ ಬೆಲ್ಲದಲ್ಲಿ ಹಾಕಿದ ಭಟ್ಟಿ ಸೆರೆ ಯಥೇಷ್ಟ ಕುಡಿದಿತ್ತು. ಮುನಿಯೆಲ್ಯಾ ಇದನ್ನು ಹೇಳಿದಾಗ ಎಲ್ಲರೂ ಬಿದ್ದು ಬಿದ್ದು ನಕ್ಕರು. ಕುಡಿದಾಗ ನಾಯಿಯಂಥಾ ನಾಯಿ ಹೀಗಾಗಬೇಕಾದರ ಮುನಿಯೆಲ್ಯಾ ಸ್ವಲ್ಪ ಹುಚ್ಚನಂತಾಗುವುದು ಹೆಚ್ಚಲ್ಲ ಎಂದರು. ಇದು ಊರಿಗೆಲ್ಲ ಗೊತ್ತಾಗಿ ಅಂದಿನಿಂದ ನಾಯಿಗೆ ‘ಮುನಿಯೆಲ್ಯಾ’ ಎಂದೂ ಮುನಿಯೆಲ್ಯಾನಿಗೆ ‘ನಾಯೆಲ್ಯಾ’ ಎಂದೂ ಹೆಸರು ಬಂತು. ಯಾಕೆಂದರೆ ಅವನೂ ಭಟ್ಟಿ ಸೆರೆ ಕುಡಿಯುವುದರಲ್ಲಿ ನಿಸ್ಸೀಮ. ನಾಯಿಗೆ ಆ ಹೆಸರು ಒಪ್ಪಿಗೆಯೆಂದು ತೋರುತ್ತದೆ. ಮುನಿಯೆಲ್ಯಾ, ಮುನಿಯೆಲ್ಯಾ ಎಂದಾಗಲೆಲ್ಲಾ ಬಾಲವಲ್ಲಾಡಿಸುತ್ತಿತ್ತು. ಮುನಿಯೆಲ್ಯಾ ಅರ್ಥಾಥ್ ನಾಯೆಲ್ಯಾನಿಗಂತೂ ಆನಂದವೋ ಆನಂದ. ಯಾಕೆಂದರೆ ಕುರುಬರು ನಾಯಿ ಮುರಿದ ಕುರಿಯ ಒಂದು ತೊಡೆಯನ್ನು ಇವನಿಗೇ ಕೊಟ್ಟರು. +ನಾಯೆಲ್ಯಾ ಅಂಗೀಯೆಲ್ಯಾ ಆದದ್ದು +ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯುತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ. +ಹೊಸ ಅಂಗಿ ಹಾಕಿಕೊಂಡಾಗ ನಾಯೆಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟದ್ದೇನು, ಹೆಂಡತಿ ಬಂದರ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿದಂತೆ ಸಾವಳಗಿ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು, ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ: +ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣು ಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂತೆ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ-ತನ್ನ ನಿದ್ದೆ ಸಾಮಾನ್ಯವೇ? ಮರದ ತುಂಡಿನಂತೆ ಬಿದ್ದ-ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ-ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೇ? ಆದ್ದರಿಂದ ಅಂಗಿ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆ ಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕಥೆ ನಿಮಗೆ ಗೊತ್ತೇ ಇದೆ. ನಾಯೆಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ. +ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಪೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ಧತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅಮಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು. +ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆಂದು ಇವನ ಲೆಕ್ಕ. ರಂಗಿ ನಾಯೆಲ್ಯಾನ ಹೆಂಡತಿಯಲ್ಲವೆ? ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕೂತ. +ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗಿ ಹಾಗೇ ತಿಂದಳು. ಈಗ ಕೋಪ ಅಸಹನೀಯವಾಯಿತು. +“ಏ ಬೇಬರಸಿ, ಕದ್ದು ಕೊಂಬಂದವ ನಾನು. ನನಗ ತೋರಿಸದ ಬಕ್ಕರಿಸಾಕ ಸುರು ಮಾಡಿದಿ?” +“ಸುಮ್ ಕುಂದರಬಾರದ? ಕುದ್ದಽತ್ಯೋ ಇಲ್ಲೋ ನೋಡತೀನಿ” +“ಯಾಕ? ನನಗ ತಿಳೀತಿರಲಿಲ್ಲೇನು?” +“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ? +ಎನ್ನುತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ. ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾಗ ಹೇಳಿದರೆ ಆಶ್ಚರ್‍ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೇ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬಿಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನಿಂದೆಂಬತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಇಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೊ?” ಅಂದ. +“ರಸ ಕೊಟ್ಟರಾತು ಬಿಡಽ” +ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈಹಿಡಿದು, +“ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ” +ಅಂದ. ಅವಳೂ ಇವನಿಗೆ ಕರಿಮಾಯಿ ಆಣಿ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣಿ ಪಾಲಿಸುವುದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯಿಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು. +ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದಳು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೇ ಹೋಗಿ ಬಾಗಿಲು ತೆಗೆದ. ಹೊರಗಾಗಲೇ ಮೂಡಲು ಹರಿಯತೊಡಗಿತ್ತು. +ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗಿಗೇ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ್ ಎಂದು ಅಂಗಿ ಹರಿದಳು. ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು! +ನಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತು ಬೀಳುತ್ತಿತ್ತು. ಆದರೂ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಅಂಗಿಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ. +ಭಲೇ ದಿಲ್‌ದಾರ +ನಾಯೆಲ್ಯಾ ಮಹಾದಿಲ್‌ದಾರ ಕುಡಿತದಲ್ಲಿ, ಹಲಗೆ ಹೊಡೆಯುವುದರಲ್ಲಿ, ಎಲ್ಲದರಲ್ಲೂ. ನಿಮ್ಮ ಹತ್ತಿರ ಬಟ್ಟಲು ಸೆರೆ ಸಿಗುತ್ತದೆಂದರೆ ಅವನ ಮೀಜಿನ ಮಾತು ಕೇಳಬೇಕು; ಬೇಕಾದರೆ ನಿಮ್ಮ ಬಗ್ಗೆ ಪದ ಕಟ್ಟಿ ಹಾಡಿದರೂ ಹಾಡಿದನೇ, ಒಗಟು ಹೇಳಿದನೇ, ಬೇಕಂದರೆ ಎದ್ದು ಕುಣಿದನೇ, ಸುಳ್ಳು ಹೇಳಿದನೇ; ಬೇಡವಾದರೆ ನಿಜ ಹೇಳಿದನೇ ಅಂತೂ ಏನೂ ಮಾಡಬಲ್ಲ. ಒಂಕಾರೆಪ್ಪನ ಬನ್ನೀಮರ ಆ ಊರಿನಲ್ಲೇ ದೆವ್ವಗಳಿರುವ ಭಾರೀ ಸ್ಥಳವೆಂದು ಖ್ಯಾತಿ. ಪ್ರತಿ ಅಮಾವಾಸ್ಯೆಯಂದು ಸರಿರಾತ್ರಿಯಲ್ಲಿ ಐದು ಜನ ಥಳಥಳ ಹೊಳೆಯುವ ಹೆಂಗಸರು ಆರತಿ ಹಿಡಿದು ಆ ಬನ್ನೀಮರಕ್ಕೆ ಬರುವರೆಂದೂ, ಆರತಿ ಬೆಳಗಿ, ಪ್ರದಕ್ಷಿಣೆ ಹಾಕಿ ಬೆಳ್ಳಂಬೆಳಗು ಮಂಗಳಾರತಿ ಮಾಡಿ, ಬೆಳ್ಳೀ ಚಿಕ್ಕೆ ಮೂಡಿದೊಡನೆ ಕೆರೆಯ ಕಡೆ ಓಡುವರೆಂದೂ ಜನರಲ್ಲಿ ನಂಬಿಕೆಯಿದೆ. ಕೆಲವರು ಈ ಅದ್ಭುತ ದೃಶ್ಯವನ್ನು ಕಣ್ಣಾರೆ ಕಂಡದ್ದಾಗಿಯೂ ಹೇಳುತ್ತಾರೆ. ಬಾಟ್ಲಿಸೆರೆ ಕೊಡುವುದಾಗಿ ಜಿದ್ದು ಕಟ್ಟಿದ್ದಾಗ ನಾಯೆಲ್ಯಾ ಆ ಬನ್ನೀಮರಕ್ಕೆ ಅಮಾವಾಸ್ಯೆಯಲ್ಲೇ ಹೋಗಿ ಬಂದಿದ್ದಾನೆ ಎಂದರೆ ಎಂಥ ಧೈರ್ಯವಂತ ಇದ್ದಿರಬೇಕು! +ಶಿವಾಪುರದ ಗ್ರಾಮಪಂಚಾಯತಿ ಮೆಂಬರರ ಮೀಟಿಂಗಿನ ಸುದ್ದಿ ಊರಲ್ಲಿ ಕೇಳಿಸತೊಡಗಿತ್ತಲ್ಲ, ಊರವರಿಗೆ ಆ ಸುದ್ದಿ ಕೇಳಿಸಿದರೆ ನಾಯೆಲ್ಯಾನಿಗೆ ನಾರತೊಡಗಿತು. ಆ “ಪಾರಿನ್ ಭಿರಂಡಿ”ಯನ್ನು ಒಮ್ಮೆಯಾದರೂ ಕುಡಿಯಲೇ ಬೇಕೆಂದು ಮನಸ್ಸು ಹರಿಯತೊಡಗಿತು. ಚತುಷ್ಟಯರಿಗೆ ದೆವ್ವನ ಕಥೆ ಹೇಳಿದ. ಅವರಿಂದೇನೂ ಆಗಲಿಲ್ಲ. ಯಾಕೆಂದರೆ ಅವರೆಲ್ಲಿಂದ ಕೊಡಬೇಕು? ಗುಡಸೀಕರನನ್ನೇ ಹಿಡಿಯಬೇಕೆಂದ. ಅವನೋ ಸಿಡುಕ. ದೆವ್ವಿನ ಕಥೆಗೆ ಬಗ್ಗುವವನಲ್ಲ, ಅಲ್ಲದೆ ಇವನ ಅನೇಕ ಕಥೆಗಳ ದೆವ್ವಗಳು ಇರೋದು ಗೌಡನ ತೋಟದಲ್ಲಿ. ಆದರೂ ಇವನ ಭೂತಕಥಾಸರಿತ್ಸಾಗರದಲ್ಲಿ ಗುಡಸೀಕರ ಇಷ್ಟಪಡುವ ಒಂದು ಕಥೆಯಿತ್ತು. ಗುಡಸೀಕರ ಎರಡು ಮೂರು ಬಾರಿ ಆ ಕಥೆ ಕೇಳಿ ಹಾಗೇ ಕಳಿಸಿದ್ದ. ನಾಯೆಲ್ಯಾ ಬಾಯಿಬಿಟ್ಟು ತನಗೊಂದು ಹನಿ ಹನಿಸಿರೆಂದಿ ಕೇಳಿದರೂ ಮುಂದೆ ಕೊಡೋಣವೆಂದು ಹೇಳಿ ನಿವಾರಿಸಿದ್ದ. ಮಾಸ್ತರ ಎದ್ದುಹೋದ ಮೇಲೆ ನಗಾಡುತ್ತಿದ್ದರಲ್ಲ. ಗುಡಸೀಕರ ಎಲ್ಯಾನಿಗೆ ತಿಳಿಯದಂತೆ ಖಾಲಿ ಬಾಟ್ಲಿಗೆ ನೀರು ಹಾಕಿ ಒಳಗೆ ಕರೆದ. ಕರೆಯುವುದಿನ್ನೂ ಮುಗಿಯುವುದರೊಳಗೇ ನಾಯೆಲ್ಯಾ ಒಳಗೆ ಬಂದಿದ್ದ. +“ನಾಯೆಲ್ಯಾ, ಆ ಗೌಡನ ದೆವ್ವಿನ ಕಥಿ ಇನ್ನೊಮ್ಮಿ ಹೇಳಲೇ.” ಎಂದ ಗುಡಸೀಕರ, ಆ ಬಾಟ್ಲಿಯ ನೀರನ್ನೇ ಗ್ಲಾಸಿಗೆ ಬಗ್ಗಿಸಿಕೊಂಡು ಕುಡಿಯುತ್ತ. ನಾಯೆಲ್ಯಾನ ಆಸೆ ಕರಗಿ ನೀರಾಗಿ ಹರಿದಂತೆ ಬಾಯಲ್ಲಿ ಜೊಲ್ಲು ಬಂತು. ಅನೇಕ ದಿನಗಳ ಆಸೆ ಈಡೇರಬಹುದೆಂಬ ನಂಬಿಕೆಯಿಂದ ಕಣ್ಣು ಅಗಲವಾಗಿ ಬೆಳೆದವು. ಮುಖ ಕಳೆಕಳೆಯಾಯಿತು. ಮನಸ್ಸಿನಲ್ಲಿ ಕರಿಮಾಯಿಯನ್ನು ಸ್ಮರಿಸಿ “ಎವ್ವಾ, ಗುಡಸೀಕರಗ ಚಲೋ ಬುದ್ಧಿ ಕೊಡವಾ” ಎಂದು ಬೇಡಿಕೊಂಡು ಕಥೆ ಹೇಳಲಿಕ್ಕೆ ಸಿದ್ಧನಾದ. ಒಮ್ಮೆ ಚತುಷ್ಟಯರ ಮುಖ ನೋಡಿದ. ಇವನ ಸಂಭ್ರಮ ನೋಡಿ ಅವರಿಗೂ ಅಂದರೆ ಚತುಷ್ಟಯರಿಗೂ ನಗೆ ಬಂತು. ಅದು ಅವರು ಅರಿಯದ ಕಥೆಯೇನಲ್ಲ. ಆದರೆ ಹೇಳುವ ಅವನ ಹುರುಪಿನಲ್ಲಿ ಇದೊಂದು ವಿಶೇಷವಿತ್ತು; ಮದುವೆಯಾದ ಹೊಸ ಹುಡುಗ, ಪ್ರಥಮ ರಾತ್ರಿ, ತನ್ನ ಹೆಂಡತಿಯ ಬಳಿ ಹೋಗುವಾಗಿನ ವಿಶೇಷ ಕಾಂತಿಯಿತ್ತು, ಮುಖದಲ್ಲಿ ಲವಲವಿಕೆಯಿಂದ ಕಥೆ ಹೇಳತೊಡಗಿದ: +ಒಂದಾನೊಂದು ಕಾಲದಲ್ಲಿ, ಒಂದಾನೊಂದು ಹಳ್ಳಿಯಲ್ಲಿ ರಾಜ ಮಂತ್ರಿ ಪ್ರಧಾನಿ ದಂಡು ದಳವಾಯಿ ಮಂದಿ ಮಾರ್ಬಲ ಸಮೇತ ಸುಖವಾಗಿದ್ದರು. ಶಿವಾಪುರದಲ್ಲಿ ನಾಯೆಲ್ಯಾ ರಂಗಸಾನಿ ಅಂತ ಗಂಡ ಹೆಂಡತಿ ಇದ್ದರು. ನಾಯೆಲ್ಯಾ, ಕುಡುಕನನ ಮಗ, ಕುಡಿಯೋದರಲ್ಲಿ ಅವನ್ನ ಮೀರಿಸುವಂಥವರು ಸುತ್ತ ನಾಡಿನಲ್ಲೇ ಇರಲಿಲ್ಲ. ಒಂದು ದಿನ ಆ ಊರಲ್ಲಿದ್ದ ಅಡಗೂಲಜ್ಜಿ ಲಗಮವ್ವನ ಗುಡಿಸಲಲ್ಲಿ ಖೂಬಾಗಿ ಕುಡಿದ. ಕುಡಿದ ಮೇಲೆ ಹೆಂಡತಿ ನೆನಪಾಯ್ತು. ಮನೆಗೆ ಹೋದ, ಮಲಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ತನ್ನ ತೋಟದಲ್ಲಿ (ಅಂದರೆ ಗೌಡನ ತೋಟದಲ್ಲಿ) ಯಾರೂ ಇಲ್ಲವೆಂದು, ಸೇಂಗಾ, ಒಣಗು ಹಾಕಿದ್ದರಿಂದ ಯಾರಾದರೂ ಕಳ್ಳರು ಬಂದರೆ ಹೆಂಗಪಾ ಅಂದುಕೊಂಡು ಎದ್ದ. ಅಮಾವಾಸ್ಯೆಯ ಕತ್ತಲೆ. ಹೆದರಿಕೆಯಾಯ್ತು. ಕರಿಮಾಯಿಯ ಮೇಲೆ ಭಾರಹಾಕಿ, ಆದದ್ದಾಗಲಿ ಎಂದು ನಡೆದ. +ತೋಟದ ಸಮೀಪ ಬಂದ ಹಾಗೆ ಸ್ವಲ್ಪ ದೈರ್ಯ ಬಂತು. ಯಾಕೆಂದರೆ ಇವನು ಬರುವ ಮುಂಚೆಯೇ ಗೌಡರು ಬಂದು ಕಣದ ಹತ್ತಿರ ಕಾಲು ಚಾಚಿ ಬೆಂಕಿ ಕಾಸುತ್ತ ಕೂತಿದ್ದರು. ತಡಮಾಡಿ ಬಂದಿದ್ದ. ಅದಕ್ಕೇ ಗೌಡ ಬಯ್ಯುತ್ತಾರೆಂದು ಹೆದರಿಕೊಂಡೇ “ಎಪ್ಪಾ ತಪ್ಪಾತರೀ” ಎನ್ನುತ್ತ ಸಮೀಪ ಬಂದ. ಬಂದು ನೋಡುತ್ತಾನೆ; ಗೌಡರಲ್ಲ. ಗೌಡರ ದೆವ್ವ! ಕೊಡ ಗಾತ್ರದ ತರಡು ಚೆಲ್ಲಿಕೊಂಡು ತನ್ನ ಕಾಲಿಗೇ ಬೆಂಕಿ ಹಚ್ಚಿ, ಉರಿಮಾಡಿ ಕಾಯಿಸಿಕೊಳ್ಳುತ್ತಿದೆ! “ಸತ್ತಿನೋ! ಎವ್ವಾ ಕರಿಮಾಯೀ” ಎಂದವನೇ ಓಡಿಹೋಗಿ ಗುಡಿಸಲದೊಳಗಿಂದ ನೀರು ಚಿಮುಕಿಸಿದನಂತೆ. ದೆವ್ವ ಗಪ್ಪಗಾರ, ಮಟಾಮಾಯ! +ಮಾರನೇ ದಿನ ಗೌಡನನ್ನು ನೋಡಿದಾಗಲೂ ಅವನಿಗೆ ಅದೇ ಥರ ಹೆದರಿಕೆಯಂತೆ. ಈಗಲೂ ಅವನು ರಾತ್ರಿ ಗೌಡರನ್ನು ಮುಖಾಮುಖಿ ನೋಡುವುದಿಲ್ಲವಂತೆ- +“ಅವರಲ್ಲಿ, ನಾವಿಲ್ಲಿ” +ಎನ್ನುತ್ತ ಕಥೆ ಮುಗಿಸಿದ. +ಇಂಥಾ ಕಥೆಗಳನ್ನು ಬೇಕಾದರೆ ಎಣಿಸಿ ಸಾವಿರ ಹೇಳಿಯಾನು, ಸೆರೆ ಸಿಕ್ಕೋದಾದರೆ. ಈ ಸಾವಿರ ಕಥೆಗೂ ಇವನೇ ನಾಯಕನಾದರೂ, ಇವನು ಹೇಳುವುದು ಮತ್ತೆ “ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ” ಎಂದೇ. ಆದರೆ ಬೇರೆಯವರ ದೆವ್ವಗಳಿಗೂ ಒಂದು ವ್ಯತ್ಯಾಸವಿದೆ. ಇವೆಲ್ಲ ನೀರಿಗೆ ಹೆದರುತ್ತವೆ, ಮತ್ತು ಪ್ರತಿಯೊಂದು ಕಥೆಯಲ್ಲೂ ಇವನೇ ಜಯಶಾಲಿಯಾಗುತ್ತಾನೆ. ಇದು ನಿಜವಿದ್ದೀತು, ಯಾಕೆಂದರೆ ಈ ತನಕ ಬದುಕಿದ್ದಾನಲ್ಲ! ಕೆಲವು ಹೆಣ್ಣು ದೆವ್ವಗಳು ಇವನಿಗೆ ಸೆರೆ ಕದ್ದು ತಂದುಕೊಟ್ಟು ಇವನೊಂದಿಗೆ ಮಲಗಿ ಹೋಗುತ್ತವಂತೆ! +ಕಥೆ ಕೇಳಿ ಎಲ್ಲರೂ ಹೋ ಎಂದು ನಕ್ಕರು. ಗುಡಸೀಕರನಿಗೆ ಖುಶಿಯಾಗಿ “ತಗೊಳ್ಲೆ ಮಗನಽ ಭಿರಂಡಿ ಕುಡಿ” ಎಂದು ಬಾಟ್ಲಿಯನ್ನೇ ಅಂದರೆ ನೀರು ತುಂಬಿದ ಬಾಟ್ಲಿಯನ್ನೇ ಇಡಿಯಾಗಿ ಅವನಿಗಿತ್ತು “ಹೋಗು, ನನ್ಹೆಸರ ಹೇಳಿ ಕುಡಿ ಹೋಗು” ಎಂದ. ಕೊಟ್ಟ ತಕ್ಷಣವೇ ನಾಯೆಲ್ಯಾ ಅದೆನ್ನದೆ ಇದೆನ್ನದೆ ಬಾಯಿಗಿಟ್ಟು ಗಟ ಗಟ ಗಟ ಕುಡಿದು ಬಾಟ್ಲಿ ಕಂಕುಳಲ್ಲಿಟ್ಟುಕೊಂಡು ಕಣ್ಣು ಅಗಲವಾಗಿ ತೆರೆದುಕೊಂಡು, ನಿಶ್ಚಲವಾಗಿ ಕೂತುಬಿಟ್ಟ! ಚತುಷ್ಟಯರು ಬಿದ್ದು ಬಿದ್ದು ನಗುತ್ತಿದ್ದರೆ ಎಂಟು ಜನ ನಕ್ಕಂತೆ ಕಂಡರು. ಗುಡಸೀಕರನಿಗೆ ಕೈ ಮುಗಿದು ಹೊರಬಿದ್ದ. ಊರು ಆಗಲೇ ಮಲಗಿತ್ತು. +ನಾಯೆಲ್ಯಾ ಈಗ ಹಿಂದೆ ಭಿರಂಡಿ ಹೇಗಿರುತ್ತದೆಂದು ಚತುಷ್ಟಯರನ್ನು ಕೇಳಿದ್ದ. ಅವರೋ ನಾಲ್ವರು ನಾಲ್ಕು ಥರಾ ಹೇಳಿದ್ದರು. ಕಳ್ಳ “ಹೊಟ್ಯಾಗ ರಂ ಅಂದು ತಲಿ ಗಿರ್ರಂತ ತಿರುಗಿ, ಕಾಲಾಗ ಕುದುರಿ ಮರಿ ಜಿಗಧಂಗಾಗತೈತಿ” ಅಂದಿದ್ದ. “ಒಂದ ನಮೂನಿ ಒಂದಿದ್ದದ್ದ ನಾಕೆಂಟ ಆಧಾಂಗ ಇರತೈತಿ” ಅಂತ ರಮೇಸ ಅಂದಿದ್ದ. “ಕೆರ್‍ಯಾಗ ಈಸ ಬಿದ್ದಾಂಗಿರತೈತಿ” ಎಂದು ಸಾತೀರ ಹೇಳಿದ್ದ. ಮೆರಮಿಂಡನಂತೂ “ಸ್ವರ್ಗಲೋಕ ಕಾಣತೈತಲ್ಲೋ ಮೊನ್ನಿ ನಮ್ಮ ಅಜ್ಜಾ ನಿಮ್ಮ ಅಜ್ಜೀ ಎಲ್ಲಾ ಕಂದರು. ನಿಮ್ಮ ಅಜ್ಜೀನ ನಮ್ಮಜ್ಜಾ ಅಟ್ಟಿಸಿಕೊಂಡ ಓಡತಿದ್ದಾ!” ಎಂದೂ ಹೇಳಿದ್ದ. ಇದನ್ನೆಲ್ಲ ಕೇಳಿ “ಅವರವರ ಭಾವಕ್ಕೆ ತಕ್ಕಂತೆ ಅವರವರ ಪರಮಾತ್ಮ” ಎಂದುಕೊಂಡು ತನಗೇನು ಆಗುತ್ತದೋ, ಕಾಣುತ್ತದೋ ಎಂದು ಕಾತುರದಿಂದ ಇದ್ದ. ತನಗೊಮ್ಮೆ ಈ ಭಿರಂಡಿ ಸಿಕ್ಕರೆ ಮೆರಮಿಂಡನ ಅಜ್ಜಿಯನ್ನು ತಾನು ಹಿಡಿದುಕೊಳ್ಳಬೇಕೆಂದೂ ಅಂದುಕೊಂಡಿದ್ದ. ಈಗ ನೋಡಿದರೆ ಆ ನಾಲ್ವರ ನಾಲ್ಕು ಥರದ ಅನುಭವ ತನಗೊಬ್ಬನಿಗೇ ಏಕದಂ ಏಕ ಕಾಲಕ್ಕೆ ಆದಂತೆ ಅನಿಸಿತು. ನಡೆಯುವುದಕ್ಕೆ ರಸ್ತೆ ಸಾಲದಾಯ್ತು. ಕುದುರೆ ಮರಿಯ ಮೇಲೆ ಹತ್ತಿ ಕೂತಂತೆ ಅನಿಸಿತು. ಒಂದಿದ್ದುದು ನಾಕೆಂಟೂ ಕಂಡಿತು. ಕೆರೆಯಲ್ಲಿ ಈಜಾಡಿದಂತಾಯ್ತು. ಸ್ವರ್ಗಲೋಕ ಕಂಡು, ಅದರಲ್ಲಿ ಮೆರಮಿಂಡನ ಅಜ್ಜಿ ಎದುರುಬಂದಂತಾಗಿ “ಸಿಕ್ಕಲೇ ಹುಡುಗಿ” ಎಂದು ತೆಕ್ಕೆ ಹಾದ. ತೆಕ್ಕೆಗೆ ಸಿಕ್ಕವನು ನಿಂಗೂ!ನಾಯೆಲ್ಯಾನಿಗೆ ಇದು ಗೊತ್ತಾಯಿತು. ಸರಿಯಾಗಿ ನಿಲ್ಲಲೂ ಆಗಲೊಲ್ಲದು. ಅವನ ಕಂಕುಳದ ಬಾಟ್ಲಿ ನೋಡಿ ಇದು ಗುಡಸೀಕರನೆಂದು ನಿಂಗೂ ಗುರುತಿಸಿದ. ಹ್ +ಹೀಗೇ ಬಿಟ್ಟರೆ ರಸ್ತೆಯ ಪಾಲಾಗುತ್ತಾನೆಂದು ನಿಂಗೂ ಅವನ ರೆಟ್ಟೆ ಹಿಡಿದು ಅವನ ಗುಡಿಸಲ ಕಡೆ ಬಿಡೋಣವೆಂದು ಕರೆದುಕೊಂಡು ನಡೆದ. ಜೋಲಿ ತಪ್ಪಿ ನಾಯೆಲ್ಯಾ ನಿಂಗೂನ ಸೊಂಟ ತಬ್ಬಿಕೊಂಡ. “ಥೂ ಖೋಡಿ” ಎಂದು ಕತ್ತಲೆಯಲ್ಲೂ ನಿಂಗೂ ನಾಚಿಕೊಂಡ. ತನ್ನ ಓಣಿ ಸಮೀಪಿಸುವತನಕ ನಾಯೆಲ್ಯಾ ಏನೇನೋ ಮಾತಾಡುತ್ತಿದ್ದ. ನಿಂಗೂ ಸೂತ್ರದ ಗೊಂಬೆ ಥರಾ ಕಾಣಿಸುವುದಾಗಿ ಹೇಳಿದ. ಚಿಮಣಾ ನಿನ್ನ ಮುಂದೆ ಏನೇನೂ ಅಲ್ಲ ಅಂದ. ಇನ್ನೇನು ತನ್ನ ಹೆಂದತಿ ಮುಂದಿನ ಅಮಾವಾಸ್ಯೆಗೆ ಸಾಯುತ್ತಾಳಲ್ಲ, ಸತ್ತಕೂಡಲೇ ನಿಂಗೂನನ್ನೇ ಮದುವೆಯಾಗುವುದಾಗಿ ಕರಿಮಾಯಿಯ ಆಣೆ ಮಾಡಿದ. ಓಣಿ ಬಂದೊಡನೆ ಅವನನ್ನು ಅಲ್ಲೇ ಬಿಟ್ಟು “ಇನ್ನು ಗುಡಿಸಲಕ ಹೋಗಲೇ ಭಾಡ್ಯಾ” ಎಂದೂ ನಿಂಗೂ ಅವನಾಡಿದ್ದನ್ನೆಲ್ಲ ಜ್ಞಾಪಿಸಿಕೊಳ್ಳುತ್ತ ತನ್ನ ಮನೇ ಕಡೆ ಓಡಿ ಹೋದ. +ನಾಯೆಲ್ಯಾ ಗುಡಿಸಲಿಗೆ ಹೋಗಿ ಬಾಗಿಲು ಬಡಿದ. ಒಳಗಿನಿಂದ “ಯಾರವರಾ” ಎಂದದ್ದು ಕೇಳಿಸಿತು. ಇವನ ಪಿತ್ಥ ನೆತ್ತಿಗೇರಿತು. “ಯಾರವರಾ? ನಿನ ಗಂಡ! ಬಾಗಿಲ ತಗೆಯೇ ಬಿದ್ದಾಡೀ” ಅಂದ. ಅಂದು ಬಾಗಿಲಿಗೊಂದು ಒದ್ದ. ಒದ್ದು “ಬಾಗಿಲು ತೆಗೆಯೇ ರುಕ್ಮಿಣೀ; ಮೋ‌ಅದ ಅರಗಿಣೀ” ಎಂದು ಪಾರಿಜಾತದ ಕೃಷ್ಣನ ಹಾಡು ತೊದಲಿದ. ಬಾಗಿಲು ತೆರೆಯಿತು, ಒಳನುಗ್ಗಿದ. ಒಳಗೆ ಒಮ್ಮೆಲೇ, ಹಾರಾಟ ಕೂಗಾಟ ಸುರುವಾಯಿತು. ಯಾಕೆಂದರೆ ಅದು ನಾಯೆಲ್ಯಾನ ಗುಡಿಸಲಾಗಿರಲಿಲ್ಲ. ತಪ್ಪಿ ಮಾದರ ಭರಮನ ಗುಡಿಸಲಿಗೆ ನುಗ್ಗಿದ್ದ. ಭರಮ ಮನೆಯಲ್ಲಿರಲಿಲ್ಲ. +ಭರಮನ ಹೆಂಡತಿ ಮತ್ತು ತಾಯಿ ಕಿರಿಚಾಡುತ್ತ, ಒದರಾಡುತ್ತ, ಬೈಗಳಗಳಿಂದ ನಾಯೆಲ್ಯಾನ ಕುಲಕೋಟಿಯನ್ನು ತೊಳೆಯುತ್ತ ಕೈಗೆ ಸಿಕ್ಕ ತಟ್ಲಿ, ಕಸಪೊರಕೆಯಿಂದ ಕೈ ಬಾಯಿ, ನೋಡದೆ ಬಾರಿಸಿ, ಮೈ ನೀರಿಳಿಸುತ್ತ ಹಾಹೋ ಎಂದು ಗದ್ದಲ ಮಾಡತೊಡಗಿದರು. ಕಳ್ಳನಿರಬೇಕೆಂದು ಪಕ್ಕದ ಗುಡಿಸಲಿನವರು ಎಚ್ಚೆತ್ತು ಹೊರಗೆ ಬಂದು ಭರಮನ ಮನೆ ನುಗ್ಗಿ ಅವರೂ ಒದ್ದರು. ಈ ತನಕ ದಿಕ್ಕು ತಪ್ಪಿ, ಏನೆಂದು, ಯಾಕೆಂದು, ಹ್ಯಾಗೆಂದು ತಿಳಿಯದೆ ಒದರಾಡದೆ ಸುಮ್ಮನೆ ಏಟು ತಿನ್ನುತ್ತಿದ್ದವನು ಮಂದಿ ಬರುತ್ತಲೂ ತನಗಿನ್ನು ಉಳಿಗಾಲವಿಲ್ಲವೆಂದು “ಸತ್ತಿನ್ರೋ ಎಪ್ಪಾ” ಎಂದು ಸಿಡಿದ ಉಗುಳಿನಂತೆ ಹೊರಬಿದ್ದ. +ನೋಡಿದರೆ ನಾಯೆಲ್ಯಾ! ಮೂಲೆ ಗುಡಿಸಲದ ಅವನ ಹೆಂಡತಿ ರಂಗಸಾನಿಗಾಗಲೇ ಎಚ್ಚರವಾಗಿ ಹೊರ ಬಂದಿದ್ದಳು. ಇಬ್ಬರೂ ಹೆಂಗಸರು ಅಳುತ್ತ, ಕರೆಯುತ್ತ ಹೊರಬಂದ ಎಲ್ಲರಿಗೂ ಹೇಳಿ ಸಹಾಯಕ್ಕಾಗಿ ಕೂಗಾಡತೊಡಗಿದ್ದರು. ಈಗ ಅವನಿಗೆ ಒಂದುಷ್ಟೂ ನಿಶೆಯಿರಲಿಲ್ಲ. ಕಂಡಕಂಡವರ ಕಾಲು ಹಿಡಿದ. “ನಿಶೇದಾಗ ತಪ್ಪಾತೆಪ್ಪೋ” ಅಂದ. ಕೂಡಿದವರು ಛೀ ಥೂ ಅಂದರು. ಭರಮನ ತಾಯಿ ಹಾಗೂ ಹೆಂಡತಿಯ ಕೂಗಾಟ ಇನ್ನೂ ಸಾಗಿತ್ತು. ಉಳಿದವರು “ನಾಳಿ ಗೌಡಗ ಹೇಳೋಣು, ಹೋಗ್ರಿನ್ನ” ಎಂದು ಸಮಾಧಾನ ಮಾಡಿ ಅವರನ್ನು ಒಳಗೆ ಕಳಿಸಬೇಕಾದರೆ ಕುರಿ ಕೋಣ ಬಿದ್ದವು. ರಂಗಿ ನಾಯೆಲ್ಯಾನನ್ನು ದರದರ ಎಳೆದುಕೊಂಡು ಹೋಗಿ ಬಾಗಿಲಲ್ಲಿ ಕಾಲಿನಿಂದ ಒಂದೆರಡು ಚೆಲ್ಲಿ, ಅಲ್ಲೇ ಬಿಟ್ಟು ಒಳಗೆ ಹೋಗಿ ಮಲಗಿದಳು. “ಕರಿಮಾಯಿ! ಏನ ಹೋಗಿ ಏನಾತಿದು” ಎಂದು ಚಿಂತಿಸುತ್ತ ನಾಯೆಲ್ಯಾ ಬಾಗಿಲಲ್ಲೇ ಬಿದ್ದುಕೊಂಡ, “ಮುನಿಯೆಲ್ಯಾ” ನೊಂದಿಗೆ. +ಕುರಿಯ ಬಲಿ +ಮಾರನೇ ಮುಂಜಾನೆ ಕೈ ಮಾರು ಹೊತ್ತೇರಿರಬೇಕು, ಗೌಡನ ಮನೆಯಿಂದ ನಾಯೆಲ್ಯಾನಿಗೆ ಕರೆ ಬಂತು. ಎಲ್ಯಾ ಇದನ್ನು ಊಹಿಸಿಕೊಂಡೇ ಊರಿಗಿಂತ ಮುಂಚೆ ಎದ್ದು, ತೋಟಕ್ಕೆ ಹೋಗಿದ್ದ. ಹಳಬ ಅಲ್ಲಿಗೂ ಬಂದ. ಇನ್ನು ಉಳಿಗಾಲವಿಲ್ಲ. ಬೈಸಿಕೊಳ್ಳುವುದಕ್ಕೆ ಮೈ ಬಿರುಸು ಮಾಡಿಕೊಂಡೇ ಬಂದ. +ಗೌಡರ ಮನೆಯಲ್ಲಾಗಲೇ ಜನ ತುಂಬಿತ್ತು. ಹಿರಿಯರಿದ್ದರು. ಭರಮ, ಅವನವ್ವ ಇದ್ದರು. ಆಶ್ಚರ್ಯವೆಂದರೆ ಮನೆಯ ಹೊರಗಡೆ ಕಟ್ಟೆಯ ಮೇಲೆ ಸರಪಂಚ ಕೂತಿದ್ದ. ಚತುಷ್ಟಯರಿದ್ದರು. ನಾಯೆಲ್ಯಾನನ್ನು ನೋಡಿದೊಡನೆ ಕಳ್ಳ ನಕ್ಕ. ಒಳಕ್ಕೆ ದೀನನಾಗಿ ಹೋಗಿ ದನಗಳ ಹಕ್ಕೆಯಲ್ಲಿ ನಿಂತ. +ವಿಚಾರಿಸುವುದೇನಿದೆ? ‘ಭರಮ ಹೇಳಿದ್ದು ಖರೆ ಏನೋ?’ ಎಂದು ಗೌದ ಕೇಳಿದ. ನಾಯೆಲ್ಯಾ ದೊಪ್ಪನೆ ಕೆಳಗೆ ಬಿದ್ದು +“ತಪ್ಪಾತ್ರಿ ಎಪ್ಪಾ, ನಶೇದಾಗೆ ಏನೇನೋ ಆತು. ನಾ ಎಂದೂ ಹಿಂಗೆ ಮಾಡಿದಾಂವಲ್ಲ. ಸರಪಂಚ ಅದೆಂಥಾದೋ ಭಿರಂಡಿ ಕೊಟ್ಟರು. ಹೊಸಬ ಸೊಲಪ ಹೆಚ್ಚ ಗದ್ದಲಾ ಮಾಡಿತರಿ” +ಎಂದು ತಪ್ಪನ್ನೆಲ್ಲಾ ಭಿರಂಡಿಯ ಮೇಲೆ ಹಾಕಿದ. ಗುಡಸೀಕರನ ಸುದ್ದಿ ಈ ತನಕ ಆ ಜಗಳದಲ್ಲಿ ಕೇಳಿಸಿರಲಿಲ್ಲ. ಅಥವಾ ಯಾರಿಗೂ ಅನಿಸುವಂಥಾದ್ದೇ. ಯಾಕೆಂದರೆ ಅಂಗಿಯೆಲ್ಯಾ ಕುಡಿಯುವುದೇನೂ ಗುಟ್ಟಿನ ಸುದ್ದಿಯಲ್ಲ. ಅಥವಾ ಅದು ಸುದ್ದಿಯೇ ಅಲ್ಲ. ಮೀನು ನೀರು ಕುಡಿಯುತ್ತದೆ ಎಂಬಂತೆ. ಆದರೆ ಒಂದು ಸಲವೂ ಈ ರೀತಿ ಹದ್ದು ಮೀರಿದವನಲ್ಲ. ಅನೀತಿಯೆಂದು ಊರವರು ಯಾವುದಕ್ಕೆ ಉಗುಳಿನಲ್ಲಿ ಬರೆದಿಟ್ಟರೋ ಆ ಸೀಮೆಗೆ ಮರೆತು ಕೂಡ ಕಾಲಿಟ್ಟವನಲ್ಲ. ಅಂಥವನು ಈ ರೀತಿ ಮಾಡಿರೋದರಲ್ಲಿ ಏನೋ ವಿಶೇಷ ಪ್ರೇರಣೆ ಇರಬೇಕೆಂದೂ ಎಲ್ಲರಿಗೂ, ಭರಮನಿಗೂ ಅನಿಸಿತು. ಇದಕ್ಕೆಲ್ಲ ಮಾತು ಕೊಟ್ಟಂತೆ ದತ್ತಪ್ಪ ಬಾಯಿಬಿಟ್ಟ. +“ನೋಡ್ರಿ, ನಾಯೆಲ್ಯಾ ಕುಡುಕ ಖರೆ. ಆದರ ಎಂದೂ ಹದ್ದು ಮೀರಿರಲಿಲ್ಲ. ಸೆರೆ ಅಂದರ ಜೊಲ್ಲ ಸುರಸತಾನ ಅಂದಮ್ಯಾಲ ನಾವಽ ಸ್ವಲ್ಪ ಎಚ್ಚರದಿಂದ ಇರಬೇಕಾಗತದ. ಬರೀ ಲಗಮೀ ಬಟ್ಟಲ ಸೆರೆ ಕುಡದಽ ಮಗಾ ಎಪರಾ ತಪರಾ ಬೀಳತಾನ. ಇನ್ನ ಪರದೇಶಿ ಭಿರಂಡಿ ಅಂದರ ಹೆಂಗಾಗ ಭಾಡ?” +ಹೋಳೀ ಹುಣ್ಣಿಮೆ ದಿನ ತನ್ನ ಮಗನನ್ನು ಗುಡಸೀಕರ ಹೊಡೆದ ಸೇಡು ಬಾಳೂನಲ್ಲಿ ಇನ್ನೂ ಇತ್ತು, +“ಹೌಂದರಿ. ಗ್ರಾಮಪಂಚಾಯ್ತಿ ಯಾಕ ಮಾಡಿದಿವಿ? ಮಂದಿ ಪರದೇಶಿ ಭಿರಂಡಿ ಕುಡ್ಯಾಕ ಕಲೀಲೆಂತ ಮಾಡಿದಿವೋ? ಊರಿಗಷ್ಟು ಒಳ್ಳೇದಾಗಲೆಂತ ಮಾಡಿದಿವೋ? ಮೊದಲಽ ಮಳ್ಳಮಂದಿ ಅವಕ್ಕೆಲ್ಲಾ ಹಿಂಗ ಚಟ ಕಲಿಸಿದರ ಹೆಂಗ ಹೇಳ್ರಿ?” +ಎಂದೂ ಬಾಯಿ ಹಾಕದ ಬಸೆಟ್ಟಿಯೂ ಇಂದು ಬಾಯಿ ಹಾಕಿದ, +“ನನ್ನ ಕೇಳಿದರ, ನಾಯೆಲ್ಯಾ ಕೊಡಬೇಕಾದ ದಂಡ ಸರಪಂಚನೇ ಕೊಡಬೇಕಾಗತೈತ್ರೀ”: ಗೌಡ ಏನೂ ಹೇಳದಾದ. ಯಾಕೆಂದರೆ ನಾಯೆಲ್ಯಾ ಇದ್ದದ್ದು ಗೌಡನ ಮನೆಯಲ್ಲಿ, ಆಳಾಗಿ. ಆದ್ದರಿಂದ ದತ್ತಪ್ಪನ ಕಡೆ ನೋಡಿದ. ಹೇಗೋ ಇಬ್ಬರಿಗೂ ಸಮಾಧಾನವಾಗುವ ಒಂದು ತೀರ್‍ಮಾನ ನೀನೇ ಕೊಡು ಎಂಬರ್ಥದಲ್ಲಿ. ಆದರೆ ದತ್ತಪ್ಪ ತುಟಿ ಬಿಚ್ಚುವುದರೊಳಗೆ ದೇವರೇಸಿ ತೀರ್‍ಮಾನ ಹೇಳಿಬಿಟ್ಟಿದ್ದ. +“ಮಾದರ ಕುಲಕ್ಕ ಅಪಮಾನ ಮಾಡಿಧಾಂಗಾಗೇತಿದು, ಕುಲ ಅಂದಮ್ಯಾಲ ಸಣ್ಣದರಾಗ, ಮುಗ್ಯಾಣಿಲ್ಲ, ಒಂದು ಕುರಿ ದಂಡ ಕೊಡಲಿ.” +ಅಂಗೀಯೆಲ್ಯಾನ ಕಿಮ್ಮತ್ತೆಷ್ಟು? ಕುರಿ ಅಂದರೆ ಅವನೆಲ್ಲಿಂದ ಕೊಡುತ್ತಾನೆ? ದೇವರೇಸಿಗಿದು ಗೊತ್ತಿಲ್ಲದೆ ಇಲ್ಲ. ಆದರೆ ಸಾಮಾನ್ಯವಾಗಿ ಇಂಥ ಕೇಸುಗಳಲ್ಲಿ ಕಟ್ಟುವ ದಂಡವೇ ಇದು. ದೇವರೇಸಿಯ ಬಾಯಿಂದ ಮಾತು ಹೊರಬಿದ್ದಮೇಲೆ ಯಾರೇನು ಹೇಳಿಯಾರು? ಆದರೆ ಕುರಿ ಯಾರು ಕೊಡಬೇಕು? ಎನ್ನುವುದೇ ಪ್ರಶ್ನೆ. ದೇವರೇಸಿ ಮೊದಲೇ ಮುಗ್ಧ. ನಾಯೆಲ್ಯಾನ ಹೆಸರಿನಲ್ಲಿ ಒಂದು ಕುರಿ ವಸೂಲಾಗಲಿ. ಏನಂತೆ? ಕುಲದವರೆಲ್ಲ ಕೂಡಿ ಮಾಂಸ ತಿಂದು ಎಷ್ಟೋ ದಿನಗಳಾಯ್ತು. ಈಗಲಾದರೆ ಬಾಯಿ ಹೊಲಸಾದರೂ ಹರಿದುಹೋದೀತು. +ಕುರಿ ಎಂದೊಡನೆ ಅಂಗೀಯೆಲ್ಯಾ ಭೂಮಿಗೇ ಕುಸಿದ. ಮಾತಾಡಲಿಕ್ಕೆ ಆಗಲೊಲ್ಲದು. ತನ್ನ ಕಡೆ ಯಾರು ನೋಡಿದರೆ ಅವರಿಗೆ ‘ಕಾಪಾಡ್ರಿ’ ಎಂಬ ಸೂಚನೆ ಬರುವಂತೆ “ಕುರಿ ಎಂದ ಕೊಡ್ತೀಯೋ?” +ಎಂದು ಮತ್ತೆ ದೇವರೇಸಿಯೇ ಬಾಯಿ ಹಾಕಿದ. +“ಎಪ್ಪಾ, ತಪ್ಪಾತ್ರಿ, ಇದೊಮ್ಮೆ ಎಲ್ಲಾ ಹೊಟ್ಯಾಗ ಹಾಕ್ಕೊಂಡ ಮಾಫೀ ಮಾಡರಿ.” +-ಎನ್ನುತ್ತ ಅಂಗೀಯೆಲ್ಯಾ ಸರ್‍ವದೈವಕ್ಕೆ ಅಡ್ಡಬಿದ್ದ. ಅಡ್ಡಬಿದ್ದರೆ ಕುರಿ ಬರುತ್ತದೆಯೊ? +ಆದರೆ ಹೇಗೆ ಒತ್ತಾಯ ಮಾಡುತ್ತಾರೆ? ತಕ್ಷಣ ಅಂಗೀಯೆಲ್ಯಾ ನೆಲದ ಮೇಲಿನ ಒಂದೆರಡು ಸಣ್ಣ ಹಳ್ಳ ಆರಿಸಿಕೊಂಡು, ಎಡಗೈಯಿಂದ ಬಲಗಿವಿ, ಬಲಗೈಯಿಂದ ಎಡಗಿವಿ ಹಿಡಿದುಕೊಂಡು ಒಂದೆರಡು ಬಾರಿ ಕೂತು ಎದ್ದ. ಕೂತು ಎದ್ದರೆ ಕುರಿ ಬರುತ್ತದೆಯೊ? +“ಬೇಕಾದರ ಎಪ್ಪಾ, ಮನೀತನಕ ಕುಂಡೀ ಎಳೀತೀನ್ರಿ” +ಹಾಗೆ ಎಳೆದರೆ ಕುರಿ ಬರುವುದೋ? ಬಂತು! ದತ್ತಪ್ಪ “ನೋಡಲೇ ಅಂಗೀಯೆಲ್ಯಾ….” ಎಂದು ದನಿ ಹಾಕುವುದರಲ್ಲಿದ್ದ: ಅಷ್ಟರಲ್ಲಿ ಕಳ್ಳ ಒಳಗೆ ಬಂದು “ನಾಯೆಲ್ಯಾ, ಸರಪಂಚ ಕುರಿ ಕೊಡತಾರಂತ ಬಿಡಲೇ” ಎಂದ. ಅಂಗೀಯೆಲ್ಯಾ ಕೂಡಲೇ ಹೊರಗೋಡಿದ ಗುಡಸೀಕರನ ಕಾಲು ಹಿಡಿಯಲಿಕ್ಕೆ. ಪಂಚರು ‘ಕೊಡಲಿ ಎಂದರು. ಗೌಡ ಸುಮ್ಮನಾದ, ದತ್ತಪ್ಪನೂ. +ಎಲ್ಲರೂ ಎದ್ದುಹೋದ ಮೇಲೆ ಪಂಚರಿನ್ನೂ ಹಾಗೇ ಕೂತಿದ್ದರು. ಇದು ಹಿತವಲ್ಲ’ ಅನ್ನಿಸಿತು. ಅಂಗೀಯೆಲ್ಯಾನ ಬಗ್ಗೆ ಯಾರಿಗೂ ಚಿಂತೆಯಾಗಲಿಲ್ಲ. ಆದರೆ ಗುಡಸೀಕರ ಈ ರೀತಿ ಮಧ್ಯೆ ಪ್ರವೇಶಿಸಿದ್ದು ತಪ್ಪೆನಿಸಿತು. ಬಸೆಟ್ಟಿಯೇನೋ ಬರೋಬರಿ ಅಂದ. ಆದರೆ ಪಂಚರ ತೀರ್‍ಮಾನಕ್ಕಿಂತ ಮುಂಚೆ ಹೇಳಿ ಕಳಿಸಿದ್ದು ತಪ್ಪೆನಿಸಿತ್ತು, ಅಷ್ಟೆ. “ಇದು ಬರೋಬರಿ ಆಗಲಿಲ್ಲ.” +-ಅಂದ. ದತ್ತಪ್ಪ, ಎಲ್ಲರೂ ಸುಮ್ಮನಿದ್ದರು. ಮತ್ತೆ ಅವನೇ ಮುಂದುವರೆಸಿದ. “ಏನೋ ಕಲ್ತ ಹುಡುಗ್ರು, ಊರಿಗೆ ಹಿತ ಮಾಡ್ಯಾವು ಅಂತ ಪಂಚಾಯ್ತಿ ಕೊಟ್ತರ, ಇದು ಕಾಗೀ ಕೈಯಾಗ ಕಚೇರಿ ಕೊಟ್ಟಂಗಾತು. ತಿರುಗಿ ತಗೊಳ್ಳೋದಽ ಬರೋಬರಿ ಕಾಣತದ.” +“ಈಗ ಹೆಂಗ ಮಾಡೋಣಂದಿ?” +-ಬಾಳೂ ಕೇಳಿದ. +“ಹಂಗೇನು? ಪಂಚಾಯ್ತಿ ತಿರಿಗಿ ತಗೊಂಡ ನಾವ ಇಟ್ಟಕೋ ಬೇಕಷ್ಟ” +ಎಂದ ಬಸೆಟ್ಟಿ. +“ದುಡುಕ ಬ್ಯಾಡ್ರಪಾ. ಆ ಹುಡುಗೋರ್‍ನ ಹಾದಿಗಿ ತರಾಕಿ ಯಾವ ಹಾದೀನಽ ಇಲ್ಲೇನು? +-ಗೌಡ ಕೇಳಿದ. ಉಳಿದವರು ಒಪ್ಪಲಿಲ್ಲ. ಬಾಳೂ, ಬಸೆಟ್ಟಿಗಾದರೆ ಇನ್ನೂ ಆತುರ. ಹೆಂಗೂ ನಾವೇ ಪಂಚಾಯ್ತಿ. ಸರಪಂಚ-ಅಂತ ಮಾಡಿದ ಮೇಲೆ ನಾವೇ ಬೇಡ ಅಂದಾಗ ಹಿಂದೆಗೆಯಬೇಕೆಂಬುದೇ ಅವರ ವಾದ. ಅದಂತೂ ಸುಲಭದ ಮಾತಲ್ಲ ಎನ್ನುವುದು ಗೌಡನಿಗೆ ಗೊತ್ತು. ದತ್ತಪ್ಪನಿಗೆ ಗೊತ್ತು. ಕೊನೆಗೆ ಎಲ್ಲರ ಒಪ್ಪಿಗೆಯಂತೆ ಒಂದು ನಿಲುಗಡೆಗೆ ಬಂದರು: ದತ್ತಪ್ಪ ಹಿರಿಯ ಪಂಚರ ಪರವಾಗಿ ಗುಡಸೀಕರನ ಬಳಿಗೆ ಹೋಗಬೇಕು. ಗ್ರಾಮಪಂಚಾಯ್ತಿಗೆ ರಾಜಿನಾಮೆ ಕೊಡೋದಕ್ಕೆ ಹೇಳಬೇಕು. +ಕರಿಮಾಯಿಯ ಆಣೆಗೂ ಸುಳ್ಳು ಬಿದ್ದ +ಆ ದಿನವೇ ಅಂಗೀಯೆಲ್ಯಾನನ್ನು ಕರೆಸಿ ಗೌಡ ಗದರಿಕೊಂಡ. ಇನ್ನು ಮೇಲೆ ಭಿರಂಡಿ ಕುಡಿಯಬಾರದೆಂದು ಕರಿಮಾಯಿ ಭಂಡಾರ ಮುಟ್ಟಿಸಿ ಆಣೆ ಮಾಡಿಸಿದ. ಆದರೆ ಅಂಗೀಯೆಲ್ಯಾನಿಗೆ ನಾಯೆಲ್ಯಾ ಎಂದೂ ಹೆಸರಿಲ್ಲವೆ? ನಾಯಿ ಬಾಲದಂತೆ ಮತ್ತೆ ವಂಕಾದ. ಕರಿಮಾಯಿ ಆಣೆಗೆ ಸುಳ್ಳು ಬಿದ್ದ. ಅದು ಹೀಗಾಯಿತು: +ಗುಡಸೀಕರ ನಾಯೆಲ್ಯಾನಿಗೊಂದು ಕುರಿ ಕೊಟ್ಟನಲ್ಲ, ಹಳೇ ಜನ ಏನಾದರೂ ಅಂದುಕೊಳ್ಳಲಿ, ಚತುಷ್ಟಯರ ಕಣ್ಣಲ್ಲಿ ಮಾತ್ರ ಬಹಳ ದೊಡ್ಡ ಕುಳವಾದ. ‘ಎಂಥಾ ದಿಲ್‌ದಾರ್ ಆಸಾಮಿ,’ ಎಂದುಕೊಂಡರು. ನಾಯೆಲ್ಯಾನ ಬಗ್ಗೆ ಗುಡಸೀಕರನಿಗೆ ನಿಜವಾಗಿ ಅನುಕಂಪ ಮೂಡಿತು. ಹೇಗೂ ದಂಡದ ಕುರಿಹಬ್ಬ ಮಾಡುತ್ತಾರಲ್ಲ. ಆ ದಿನ ಅವನಿಗೆ ನೀರಿನ ಬದಲು ನಿಜವಾದ ಬ್ರಾಂದಿ ಕೊಡಬೇಕೆಂದು ಅಂತಃಕರಣ ಪೂರ್‍ವಕ ಅಂದುಕೊಂಡ. +ಆದರೆ ನಾಯೆಲ್ಯಾನನ್ನು ನೆನೆದು ಎಲ್ಲರೂ ನಕ್ಕರು; ಬರೀ ನೀರು ಕುಡಿದೇ ಮಗ ಎಂಥಾ ಅವತಾರ ಮಾಡಿದನಲ್ಲ-ಎಂದರು. ನಡೆದ ಘಟನೆಯನ್ನು ಕಲ್ಪಿಸಿ ಅಭಿನಯಿಸಿ ನಕ್ಕರು. ಒಂದಕ್ಕೆ ಒಂಬತ್ತು ಒಗ್ಗರಣೆ ಹಾಕಿ ನಕ್ಕರು. ನಿಜ ಹೇಳಬೇಕೆಂದರೆ ಬಿದ್ದು ಬಿದ್ದು ನಕ್ಕರು. +ಹಾಗೆ ಬಿದ್ದು ಬಿದ್ದು ನಗುವುದಕ್ಕೆ ಚತುಷ್ಟಯರಿಗೆ ಅಡ್ಡಖುಶಿಯ ಇನ್ನೊಂದು ಕಾರಣವೂ ಇತ್ತು. ಪ್ರಶ್ನೋತ್ತರ ಮಾಸ್ತರ ತಮಗೆ ಹೆದರುತ್ತಾನೆಂದು ತಿಳಿದೊಡನೆ ಚತುಷ್ಟಯರ ದಿನಚರಿಯಲ್ಲಿ ಒಂದಂಶ ಹೆಚ್ಚಾಗಿ ಸೇರಿಕೊಂಡಿತು. ಮೊನ್ನೆ ಮಾಸ್ತರನನ್ನು ಪೀಡಿಸಿದರಲ್ಲ, ಅದರ ಮಾರನೇ ದಿನ ಕಳ್ಳ ಬೇಕೆಂದೇ ಮಾಸ್ತರನಿಗೆ ಭೇಟಿಯಾಗಿ “ಏನ್ರೀ ಮಾಸ್ತರ” ಅಂದ. ಪಾಪ, ಮಾಸ್ತರ ‘ನಮಸ್ಕಾರರೀ ಸಾಹೇಬರ’ ಎಂದು ಹಲ್ಲು ಕಿಸಿದ. ತನಗೆ ಹಾಗೂ ಗುಡಸೀಕರನಿಗೆ ಮಾತ್ರ ಈ ಮಾಸ್ತರ ‘ಸಾಹೇಬರ’ ಎನ್ನುತ್ತಾನೆಂದು ಕಳ್ಳನ ಖುಶಿ. ಇದ ಕೇಳಿ ಮೆರಮಿಂಡ ನೆಟ್ಟಗೆ ಕ|| ಗಂ|| ಸಾಲೆಗೇ ಹೋದ. ಮಾಸ್ತರ ಇವನಿಗೂ ಸಾಹೇಬರ ಎಂದು ಹಲ್ಲು ಗಿಂಜಿದ. ಮೆರಮಿಂಡನಿಗೆ ಸಂಕೋಚವಾಗಿರಬೇಕು. +“ಸರಪಂಚ ಸಾಹೇಬರಿಗೆ ನಮಸ್ಕಾರ ಮಾಡಿದಿರಿಲ್ಲೊ?” +-ಅಂದ. +“ಸರಪಂಚರಿಗೆ ನಮಸ್ಕಾರ? ದಿನಾ ಮಾಡತೀನಲ್ಲರಿ” +-ಎಂದ ಮಾಸ್ತರ. +“ಗೌಡ್ರು ಭೇಟಿ ಆಗಿದ್ದರೇನ್ರಿ?” +“ಗೌಡ್ರ ಭೇಟಿ? ಆಗಿದ್ದರಲ್ಲ, ನಮಸ್ಕಾರ ಮಾಡಲಿಲ್ಲರಿ” +ಮೆರಮಿಂಡ ಮನಸ್ಸಿನಲ್ಲೇ ಪಾಪ ಅಂದುಕೊಂಡ. ತಪ್ಪು ತಿಳಿದಾರೆಂದೋ ನಮಸ್ಕಾರ ಮಾಡಿಸಿಕೊಳ್ಳಲಿಕ್ಕೇ ಬಂದಾನೆಂದೋ ಭಾವಿಸಬಾರದಲ್ಲ. +“ಹುಡ್ರಿಗೆ ಇತಿಹಾಸ, ಭೂಗೋಳ ಚೆಂದಾಗಿ ಕಲಿಸ್ರಿ”-ಎಂದು ಉಪದೇಶ ಮಾಡಿ ಹೋದ. ಅನಂತರ ಆ ನಾಲ್ವರಲ್ಲಿ ಯಾರು ಭೇಟಿಯಾದರೂ ಮಾಸ್ತರ ಕೂಡಲೇ “ನಮಸ್ಕಾರರೀ ಸಾಹೇಬರ, ಗೌಡ್ರಿಗೆ ನಮಸ್ಕಾರ ಮಾಡಲಿಲ್ಲರಿ”-ಎಂದು ಹೇಳುತ್ತಿದ್ದ. ಚತುಷ್ಟಯರಿಗೆ ಒಂದು ಕಡೆ ಹೆಮ್ಮೆ; ಯಾಕೆಂದರೆ ಕಲಿಸಿದ ಗುರುವಿನಿಂದಲೇ ನಮಸ್ಕರಿಸಿಕೊಳ್ಳುವ ಭಾಗ್ಯ ಬಂದದಕ್ಕೆ; ಗುರುವಿನ ತಲೆಮೇಲೆ ಕೈಯಿಟ್ಟ ಶಿಷ್ಯರು ತಾವಾದದ್ದಕ್ಕೆ. ಇನ್ನೊಂದು ಕಡೆ ಕೆಡುಕೆನಿಸುತ್ತಿತ್ತು; ಎಷ್ಟೆಂದರೂ ಹಳೇ ಶಿಷ್ಯರಲ್ಲವೆ?-ಪಾಪ ಎನಿಸುತ್ತಿತ್ತು. ಸೈ, ಅಂದಿನಿಂದ ಅವನಿಗೆ ಪ್ರಶ್ನೋತ್ತರ ಮಾಸ್ತರ ಎಂಬ ಹೆಸರು ಹೋಗಿ “ಪಾಪ ಮಾಸ್ತರ” ಎಂದು ಹೆಸರು ಬಂತು. ಒಂದು ದಿನ ಅಷ್ಟೂ ಚತುಷ್ಟಯರು ಒಂದೆಡೆ ಸೇರಿ ಸಾಲೆಗೆ ಹೋದರು. ಇವರಿಗೆ ಆಶ್ಚರ್ಯ ಕಾದಿತ್ತು. ಹೋದೊಡನೇ ಪಾಪ ಮಾಸ್ತರನಷ್ಟೇ ಅಲ್ಲ ಹುಡುಗರೆಲ್ಲ ಕೈಮುಗಿದು ಎದ್ದು ನಿಂತರು. ತಾವು ಚಿಕ್ಕಂದಿನಲ್ಲಿ ಸಾಲೆಯಲ್ಲಿದ್ದಾಗಲೂ ಯಾರಾದರೂ ಇನ್ಸ್‌ಪೆಕ್ಟರು ಬಂದರೆ ಗೌಡ, ದತ್ತಪ್ಪ ಬಂದರೆ ಹೀಗೆ ಎದ್ದು ನಿಲ್ಲುತ್ತಿದ್ದರು. ಈಗ ಹುಡುಗರು ಎದ್ದು ನಿಂತುದನ್ನು ‘ನೋಡಿ ಅವರಿಗೆ ಎಷ್ಟು ಸಂತೋಷವಾಗಿತ್ತೆಂದರೆ ಅಂದಿನಿಂದ ವಿನಾಕಾರಣ ನಗತೊಡಗಿದ್ದರು. +***** +ಮುಂದುವರೆಯುವುದು +ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […] +– ೪ – ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುರುಬರಹಳ್ಳಿಯಿಂದ ಎರಡು ಗಾಡಿ ಸೋಗೆಯ ಜೊತೆಗೆ ಇಬ್ಬರು ಗಂಡಾಳುಗಳು ಬಂದರು. ಅವರು ಈ ಬಿಟ್ಟ ಊರಿನೊಳಗೆ ಬರಲಿಲ್ಲ. ರಾಮಸಂದ್ರದ ಕುಳವಾಡಿ ಶ್ಯಾನುಭೋಗರ ಮನೆಯ ಮುಂದಿದ್ದ […] +ಮಗ ವತ್ಸರಾಜನಿಗೆ ಹುಟ್ಟಲಿರುವ ಸಂತತಿಯ ವಿಷಯವಾಗಿ ಒಮ್ಮೆಲೇ ಕಾಳಜಿ ಹೊಕ್ಕಿತ್ತು. ಮನೆಯಲ್ಲಿ ಒಂದು ತಿಂಗಳಿಂದ ಕಲಹ ಶುರುವಾಗಿತ್ತು. “ನಿನ್ನ ಲಗ್ನ ಮಾಡಿದೆ. ಈಗ ನೀನು ನನ್ನನ್ನು ಗತಿ ಕಾಣಿಸು!” ಎಂದು ವತ್ಸರಾಜನಿಗೆ ವಿನಂತಿ ಮಾಡಿಕೊಂಡರು. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_679.txt b/Kannada Sahitya/article_679.txt new file mode 100644 index 0000000000000000000000000000000000000000..129f22a8e6215c835d40c0411dc14c8abd86e163 --- /dev/null +++ b/Kannada Sahitya/article_679.txt @@ -0,0 +1,82 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಶ್ಯದಲ್ಲಿ ನಾನಾ ನಮೂನೆಗಳಿವೆ. +ಬಣ್ಣ, ದರ, ತರತಮ ಘಮಘಮ +ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- +ಮದ್ರಾಸಿನಾರ್ಮುಗಂ ನಶ್ಯ, +ಬೆಂಗ್ಳೂರು ಮಗಳಗೌರಿ ನಶ್ಯ, +ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು +ಪ್ಯಾರಿಸ್, ಕೊನೇಪಕ್ಷ ಲಂಡನ್ +ಪಿಸ್ತೂಲ್ ಛಾಪಿನ ನಶ್ಯವಾದರೂ ಅವಶ್ಯ. +ಅವರವರ ಕಸಬು ಅಂತಸ್ತು +ಸ್ಟೇಟಸ್ಸಿಗನುಗುಣವಾಗಿ ಅವರವರ ಬ್ರ್ಯಾಂಡು. +ಅದಕ್ಕೆ ತಕ್ಕ, ಹಸಿ, ಬಿಸಿ, +ತನಿ ಬೆಚ್ಚ, ಉಗುರು ಬೆಚ್ಚಗಿನ ಸುಖ +ಶೀತೋಷ್ಣ ಪರಿಣಾಮಗಳು. +ಒಂದೊಂದು ಬ್ರ್ಯಾಂಡಿನವರಿಗೆ ಒಂದೊಂದು +ಕುಲಗೋತ್ರ ಜಾತಿವರ್ಣ ಮತಗಳುಂಟು, +ನಶ್ಯದ ನಡಾವಳಿಯಲ್ಲಿ ಭೇದವುಂಟು. +ನಿಮಗಿಷ್ಟು ತಿಳಿದಿರಲಿ ಸಾಕು: +ಒಂದು ಬ್ರ್ಯಾಂಡಿಗೂ ಇನ್ನೊಂದಕ್ಕೂ ನೀರಿನ ಬಳಕೆಯಿಲ್ಲ, +ಹೆಣ್ಣುಗಂಡಿನ ಸಂಬಂಧವಂತು ಖಂಡಿತಾ ಇಲ್ಲ. +ಕೆಲವರು ಸೇದುತ್ತಾರೆ; ಕೆಲವರು ಹಾಕಿಕೊಳ್ಳುತ್ತಾರೆ. +ಕೆಲವರು ಮುದ್ದಾಂ ಭರ್ತಿಮಾಡಿಕೊಂಬರು, +ಸರಿಗಮದ ಸಿಂಫನಿಯೊಳೇರಿಸಿಕೊಂಬವರು ಕೆಲವರು. +ಅದೊಂದು ಬಗೆಯ ನಶ್ಯಕ್ಕೆ +(ಹೆಸರು ನೆನಪಿಲ್ಲ) +ಕೆಲ ಮುದುಕರ ಪಂಚೇಂದ್ರಿಯ ಬೆಚ್ಚಗಾಗಿ +ಹನುಮಾನ್ ಚೆಡ್ಡಿ ಹಾಕಿ ಫುಟ್‌ಬಾಲ್‌ನಾಡಿದಂತೆ, +ಸರಿಕ ಮುದುಕಿಯರು ಷೋಡಶಿಯರಾಗಿ +ಹಸ್ತಾಕ್ಷರಕ್ಕೆ ಸುತ್ತುವರಿದಂತೆ +ಕನಸಾಗುವುದಂತೆ! +ಈ ನಶ್ಯದ ವ್ಯವಹಾರ ರಹಸ್ಯವಂತೆ! +ಇನ್ನು ಕೆಲ ಭಯಂಕರರಿದ್ದಾರೆ: +ಆ ಮಾತು ಈ ಮಾತು, ಮಾತು ಮಾತಿನ ಮದ್ಯೆ +ಸುತ್ತ ಕೂತವರಿಗೆ ಗೊತ್ತಾಗದಂತೆ +ಡಬ್ಬಿಯ ತೂತಿಗೆ ಬೆರಳು ಸೇರಿಸಿ +ನಿಧನಿಧಾನ ನಿಮ್ಮೆದುರಿಗೊಂದು ಸವಾಲೆಸೆದು, +ಎಳೆಯುತ್ತಾರೆ ಜುರುಕಿ; +ಆಹ! ಬಯಲಾಯಿತೋ ಪರಮಸತ್ಯದ +ಬುರುಕಿ! +ದೇಶೀ ಅರುಂಧತಿಯರೆಲ್ಲ ನಗ್ನರಾಗಿ +ಕಾಕಟೇಲ್ ಸುರಕೊಂಡು ಲಂಡನ್ ಹೋಟಲಲಿ +ಕ್ಯಾಬರಿಸುವರು! +ಇದು ಸ್ವಲ್ಪ ತುಟ್ಟೀ ನಶ್ಯ, +ಕೆಲವರು, +ಮಿದ್ದಿ, ಹದಮಾಡಿ ಬೆವರಲ್ಲದ್ದಿ ಮೂಗಿನಲ್ಲಿ +ಮೊಗಮ್ಮಾಗಿ ಗಮ್ಮಂತ ತುಂಬಿ +ಚಿಟಿಕೆ ಹೊಡೆದರೋ +ಹಠಯೋಗದಲ್ಲಿ ಸಟ್ಟಂತ ಉಸಿರೇರಿಸಿ, +ಬ್ರಾಹ್ಮರಂಧ್ರದ ಪಟಲ ಛಟ್ಟಂತ ಸಿಡಿದು +ಕುಂಡಲನಿಯ ಬುಡಬೆದರಿ +ಷಟ್‌ಚಕ್ರ್ದ ಸಹಸ್ರಾರು ದಳದ +ಹೃದಯಾರವಿಂದವರಳಿ +ನಶ್ಯದ ಡಬ್ಬಿಯಷ್ಟು ಸ್ಪಷ್ಟವಾಗಿ +ಜೀವಾತ್ಮ ಪರಮಾತ್ಮ ನಡುವಿನಾತ್ಮಕ ಟೊಂಕದಾತ್ಮಗಳೆಲ್ಲ +ಕಾಣಿಸುತ್ತವಂತೆ! +ಇದೇ ಶಾತ್ಶತ ಸತ್ಯ +ಇದಕ್ಕೆ ಸ್ಪಷಲ್ ನಶ್ಯ ಅಗತ್ಯ. +ನನಗೆ ಮಾತ್ರ +ನಶ್ಯ ಏರಿಸಿದಾಗ ಟಸಪಸ ಹತ್ತೆಂಟು +ಸೀ ಸೀ ಸೀ ಸೀನು ಬಂದು +ಮುಖ ಒದ್ದೆಯಾಗಿ +ಕಣ್ಣಲ್ಲಿ ನೀರು ಬರುತ್ತದೆ! +***** +ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […] +ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ ಅರಸದಿದ್ದರು ಕಾಲ ತೊಡಕುವೀ […] +– ೧ – ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ ಗದೇ ಮಾಮೂಲು ಭಂಗಿ; ಯಾರೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_68.txt b/Kannada Sahitya/article_68.txt new file mode 100644 index 0000000000000000000000000000000000000000..4d40338040af317cd736e73b82df20da79eb981e --- /dev/null +++ b/Kannada Sahitya/article_68.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- +ದಂತೆ ಜಿನುಗಿದೆ ಸೋನೆಯು; +ಬಿಳಿಯ ತೆಳು ಜವನಿಕೆಯನೆಳೆದಿಹ +ಇಳೆಯು ಸುಂದರ ಮೇಣೆಯು! +ಹುಲ್ಲು ಹಾಸಿದೆ, ಹೂವು ಸೂಸಿದೆ +ಗಾಳಿ ಮೂಸಿದೆ ಕಂಪನು +ಶ್ರಾವಣದ ಲಾವಣ್ಯ ಕುಣಿದಿದೆ +ಮಳೆಯು ಹಣಿಸಿದೆ ತಂಪನು +೨ +ಹಸಿರು ಅಪರಂಪಾರ ಹಬ್ಬಿದೆ +ನಲವನೆಲ್ಲೆಡ ತಬ್ಬಿದೆ; +ಎತ್ತ ಹೊರಳಿದರತ್ತ ಮೆತ್ತಗೆ +ಚಿತ್ತದಲಿ ಅಚ್ಚೊತ್ತಿದೆ! +ತಿಳಿ ಹಸಿರು ಗಿಳಿ ಹಸಿರು ಗದ್ದೆಗ- +ಳಲ್ಲಿ ಓರಣವಾಗಿದೆ, +ಕಡು ಹಸಿರು ಕಾಡಿನಲಿ ತೋರಣ- +ವಾಗಿ ಹೊರೆ ಹೊರೆ ಬಾಗಿದೆ! +೩ +ಹೂವು ಹೂವಿಗೆ ಕೈಯ ಕುಲುಕಿಸಿ +ನೊಸಲು ನೊಸಲಿಗೆ ಸೋಕಿಸಿ +ನೂರು ಪಾತರಗಿತ್ತಿ ಕುಣಿದಿವೆ +ಮೈಗೆ ಮೈಯನು ಪುಲಕಿಸಿ! +ಹೂಬಿಸಿಲು ಸುಸಿಲಾಟವಾಡಿದೆ +ಕೆನ್ನೆ ಕೆನ್ನೆಗೆ ತಾಕಿಸಿ +ಮೋಡ ಬಂದಿವೆ, ನೋಡ ಬಂದಿವೆ +ಮುತ್ತು ಹನಿಗಳ ಚಿಮುಕಿಸಿ! +೪ +ಗಗನ ಪಕ್ಷಿಯು ಹಗಲಿನಕ್ಷಿಯ +ಮುಚ್ಚಿ ಕೂತಿದೆ ಬೆಚ್ಚಗೆ; +ಬೆಳಕು ಗಾಳಿಯು ಕನಸು ಮನಸೂ +ಎಲ್ಲವೂ ಹಸಿ ಹಚ್ಚಗೆ! +ಏನು ಹೇಳುವಿ ಹೇಳು ಕೆಳದೀ +ಇಂಥ ಹಸುರಿನ ಹುಚ್ಚಿಗೆ- +ನಂದನದ ವನವೆಂದೆಯಾ?- ಬಿಡು +ಗುಂಜಿ ತೂಕವು ಹೆಚ್ಚಿಗೆ! +***** +ಈ ಇಜಿಪ್ಷಿಯನ್ ಹುಡುಗಿಯ ನಿರಾಕಾರ ಮಸ್ತಿಷ್ಕ, ನಿರಾಕಾರ ಗಣಿತದಲ್ಲೆಲ್ಲೋ ಹುದುಗಿ, ಅಲ್ಲೇಲ್ಲೋ ಒಳಗೆ- ಮಾನಸ ಪಪೈರಸ್‌ನ ಮೇಲೆ, ಗಣ-ಉಪಗಣ ಅಂತೆಲ್ಲಾ ವಿಭಾಜಿಸಿ, ಕೂಡಿ ಕಳೆದು, ಗುಣಿಸಿ, ಅನುಲೋಮ ವಿಲೋಮ, ಕ್ರಯ ವಿಕ್ರಯ ಮಾಡಿ, ಆಕಾರ […] +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […] +ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_680.txt b/Kannada Sahitya/article_680.txt new file mode 100644 index 0000000000000000000000000000000000000000..a274a2086abe4c18b157b3da9f82e0db323e21ed --- /dev/null +++ b/Kannada Sahitya/article_680.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ ಎಂಬುದನ್ನು ಆತಂಕ ಅನುಮಾನಗಳಿಂದ ಚರ್ಚಿಸುತ್ತಿದ್ದಾಗ ಸತೀಶ ಥಟ್ಟನೆ “ನಂಬಿ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾನೆ ಗೊತ್ತ? ಇನ್ನೇನು ಆರು ತಿಂಗಳಲ್ಲಿ ಸಂಸಾರ ಸಮೇತ ಬಂದುಬಿಡುತ್ತಾನೆ…“ಅಂದ. ಸಂಜೆ ಕ್ಲಬ್ಬಿನಲ್ಲಿ ಕುಡಿಯುತ್ತ ಕೂತಾಗ ಹೀಗೆ ನಂಬಿಯ ಪ್ರಸ್ತಾಪವಾಗಿದ್ದು ರಂಗೇರತೊಡಗಿದ್ದ ಸಂಜೆಗೆ ಇನ್ನಷ್ಟು ಕಳೆಕೊಟ್ಟಿತ್ತು. ಅಲ್ಲಿದ್ದ ಮೂವರೂ -ಸತೀಶ, ಪ್ರವೀಣ್ ಮತ್ತು ಜನಾರ್ಧನರಾವ್ – ಮಲ್ಟಿ ನ್ಯಾಶನಲ್ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿದ್ದವರು. ಒಂದು ಕಾಲಕ್ಕೆ ಅವರಿಂದಲೇ ತರಬೇತಿ ಪಡೆದು, ಅವರ ಜೊತೆಗೆ ಕೆಲಸ ಮಾಡುತ್ತಿದ್ದ ನಂಬಿ, ದುಬೈಗೆ ಹೋಗಿ ಒಳ್ಳೆಯ ಕೆಲಸ ಹಿಡಿದು ಮೇಲಕ್ಕೇರಿದ ರೀತಿಯನ್ನು ಕೇಳಿದಾಗಲೆಲ್ಲ ಅವರಿಗೆ ಆಸೂಯೆ ಆಸೆ ಅಭಿಮಾನ, ಇದು ತಮಗೂ ಇದ್ದ ಸಾಧ್ಯತೆ ಎಂಬ ಭಾವನೆಯಿಂದ ಒಂದು ರೀತಿಯ ಸಮಾಧಾನ ಉಂಟಾಗುತ್ತಿತ್ತು. ಅವನು ದೇಶ ಬಿಟ್ಟು ಹೋಗದೆ ಇದ್ದಿದ್ದರೆ ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಗುತ್ತಿರಲಿಲ್ಲ ಎಂದೆಲ್ಲ ಅವನ ಏಳಿಗೆಗೆ ಕಾರಣ ಹುಡುಕುತ್ತಿದ್ದರು. ಈಗ ಸತೀಶ ಹೇಳಿದ ಸುದ್ದಿಯನ್ನು ಉಳಿದಿಬ್ಬರಿಗೂ ಹೇಗೆ ಸ್ವೀಕರಿಸಬೇಕೊ ತಿಳಿಯದೆ, ಯಾಕೆ ವಾಪಸ್ಸು ಬರುತ್ತಿದ್ದಾನೆ? ಅವನಿದ್ದ ಕಂಪನಿ ನಷ್ಟದಲ್ಲಿ ಮುಳುಗಿತೋ ಹೇಗೆ? ಅವನನ್ನು ಕೆಲಸದಿಂದ ತೆಗೆದುಹಾಕಿದರೋ ಹೇಗೆ? ಅಂತೆಲ್ಲ ದುರ್ವಾತೆಯನ್ನು ಅಪೇಕ್ಷಿಸುವವರಂತೆ ಸತೀಶನನ್ನು ಪ್ರಶ್ನೆಗಳಿಂದ ಪೀಡಿಸಿದರು. ಇನ್ನೊಂದು ಗುಟುಕು ಕುಡಿಯುತ್ತ ಸತೀಶ ಸುದ್ದಿಯ ವಿವರಗಳನ್ನು ಹೇಳಿದ: “ಮಿಸ್ಟರ್ ನಂಬಿಯಾರ್ ಇನ್ನಷ್ಟು ಮೇಲೇರಿದ್ದಾನೆ..ಅಲ್ಲಿ ಆಕಾಶದಲ್ಲಿದ್ದಾನವನು- ದೇವತೆಗಳ ನಡುವೆ..“ಎಂದು ನಾಟಕೀಯವಾಗಿ ಆಕಾಶದತ್ತ ಕೈ ತೋರಿಸಿ ಮುಂದುವರಿಸಿದ: ಅವನು ಕೆಲಸ ಮಾಡುತ್ತಿದ್ದ ಕಂಪನಿ ನಮ್ಮ ದೇಶದಲ್ಲೂ ವಹಿವಾಟು ಆರಂಭಿಸಲಿದೆಯಂತೆ..ಅದರ ಮುಖ್ಯಸ್ಥನಾಗಿ ನಂಬಿ ಬರುತ್ತಿದ್ದಾನೆ…ಅವನ ಸಂಬಳ ಡಾಲರ್‌ಗಳಲ್ಲೆಂದು ಸುದ್ದಿ….”“ನಿನಗೆ ಈ ಸುದ್ದಿ ಹೇಗೆ ಗೊತ್ತಾಯಿತು?“ಎಂದು ಪ್ರವೀಣ್ ಕೇಳಿದ್ದಕ್ಕೆ ಸತೀಶ್ “ನನ್ನ ಸ್ನೇಹಿತನೊಬ್ಬ ದುಬೈಗೆ ಹೋಗಿದ್ದಾಗ ನಂಬಿ ಸಿಕ್ಕಿದ್ದನಂತೆ…ಅವನೆ ಸ್ವತಃ ಇದನ್ನೆಲ್ಲ ಹೇಳಿದನಂತೆ….“ಅಂದ. ನಂಬಿಯ ಯಶಸ್ಸಿಗೆ ಅವನಿಗೆ ತಾನಿತ್ತ ತರಬೇತಿಯೇ ಕಾರಣವೆಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸುವ ಪ್ರವೀಣ್ “ಈ ನಂಬಿ ಎಷ್ಟು ಬದಲಾಗಿದ್ದಾನೆ…ಅವನು ಆಗಿನ ನಂಬಿಯೇ ಆಗಿದ್ದಲ್ಲಿ ಇಂಥ ಸಂಗತಿಗಳನ್ನೆಲ್ಲ, ಅದೂ ಇಲ್ಲಿ ಬರಲು ಇನ್ನೂ ಆರು ತಿಂಗಳಿರುವಾಗ ಯಾರಿಗಾದರೂ ಹೇಳುತ್ತಾನೆಂದರೆ ನಂಬುವುದೇ ನನಗೆ ಸಾಧ್ಯವಾಗುತ್ತಿಲ್ಲ. ಅವನು ಎಂಥ ಗಟ್ಟಿ ಮನುಷ್ಯನಾಗಿದ್ದನೆಂದರೆ ಯಾರಿಗೂ ಏನನ್ನೂ ಹೇಳುವವನಲ್ಲ…“ಅಂದ. ತನ್ನ ಸ್ನೇಹಿತ ದುಬೈನಲ್ಲಿ ನಂಬಿಯ ಮನೆಗೆ ಹೋಗಿದ್ದನ್ನೂ, ಅವನ ಮನೆಯ ವೈಭವವನ್ನೂ, ಆ ದಿನವೆ ನಂಬಿ ಚೈನಾದಿಂದ ಎರಡು ಹಕ್ಕಿಯ ಪ್ರತಿಮೆಗೆಳನ್ನು ತರಿಸಿದ್ದನ್ನೂ, ಆ ಪ್ರತಿಮೆಗಳ ಬೆಲೆ ಒಂದೊಂದಕ್ಕೆ ಲಕ್ಷ ರುಪಾಯಿಗಳೆಂಬುದನ್ನು ಸತೀಶ ರಂಗಾಗಿ ವರ್ಣಿಸಿದ. ಈ ಸುದ್ದಿ ಕೇಳುತ್ತಿದ್ದಂತೆ ಮಾತಿನ ನಡುವೆಯೆ ಪ್ರವೀಣ್ “ನೀನು ಹೇಳುತ್ತಿರುವುದು ನಮ್ಮ ನಂಬಿಯಾರ್ ಬಗ್ಗೆ ತಾನೆ?“ಎಂದು ಖಚಿತ ಪಡಿಸಿಕೊಂಡ . ಮುಂದೆ ಎಷ್ಟೋ ಹೊತ್ತು ಮೂವರೂ, ಹೇಗಿದ್ದ ನಂಬಿ ಹೇಗಾದ ಎಂದು ಮಾತಾಡಿಕೊಳ್ಳುತ್ತ, ಅವನ ಯಶಸ್ಸಿಗೆ ಅವನಲ್ಲಿಯ ಯಾವ ಶಕ್ತಿ ಕಾರಣವೆಂಬುದನ್ನು ತಮಾಷೆಯಾಗಿ ಚರ್ಚಿಸುತ್ತ ಕೂತರು. +-೨- +ನಂಬಿ ತಿರುವನಂತಪುರದ ಹತ್ತಿರ ಇರುವ ಒಂದು ಸಣ್ಣ ಊರಿನವನು. ಮಧ್ಯಮ ವರ್ಗದ ಕುಟುಂಬದ ಒಬ್ಬನೇ ಮಗ. ಊರಲ್ಲೇ ಹೈಸ್ಕೂಲು ಮುಗಿಸಿ ತಿರುವನಂತಪುರದ ಕಾಲೇಜು ಸೇರಿ, ನಂತರ ಮುಂಬೈಗೆ ಹೋಗಿ ಸ್ನಾತಕೋತ್ತರ ಪದವಿ ಪಡೆದು ಅಲ್ಲೇ ಒಂದು ಸಣ್ಣ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಎರಡು ವರ್ಷಗಳನಂತರ ತನ್ನ ಅನುಭವದ ಆಧಾರದ ಮೇಲೆ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಹಿಡಿದು ಬೆಂಗಳೂರಿಗೆ ಬಂದ. ಎರಡು ಕೆಲಸಗಳ ನಡುವಿನ ಅವಧಿಯಲ್ಲಿ ಮದುವೆಯಾದ. ಹೊಸ ಕೆಲಸಕ್ಕೆ ಸೇರಿಕೊಂಡ ಸ್ವಲ್ಪ ಸಮಯದಲ್ಲೇ ಅತ್ಯಂತ ದಕ್ಷನೆಂದೂ ಅವನು ಕೆಲಸ ಮಾಡುತ್ತಿದ್ದ ವಿಭಾಗಕ್ಕೆ ಅಗತ್ಯವಾದ ಗುಟ್ಟುಗಳನ್ನು ಕಾಪಾಡುವ ಕಲೆಯನ್ನು ಅರಿತವನೆಂದು ಪ್ರಸಿದ್ಧನಾದ. ಅವನ ಮೇಲಧಿಕಾರಿಯಾಗಿದ್ದ ಪ್ರವೀಣ್‌ಶುಕ್ಲಾನಿಗಂತೂ ನಂಬಿ ಅಂದರೆ ಬಹಳ ಮೆಚ್ಚಿಗೆ. ಪ್ರವೀಣ್ ಉಳಿದ ಯಾರ ಬಗ್ಗೆಯೂ ತೋರಿಸದ ಸಲುಗೆಯನ್ನು ನಂಬಿಯ ಬಗ್ಗೆ ತೋರಿಸುತ್ತಿದ್ದ. ನಂಬಿ ಬಂದದ್ದೆ ಪ್ರವೀಣ್ ಕೆಲಸ ಹಗುರವಾಯಿತು. ನಂಬಿಯ ಗಾಡಿ ಬಡ್ತಿಯ ಹಳಿಯ ಮೇಲೆ ಓಡ ತೊಡಗಿತು. ಎಷ್ಟೊಂದು ಕೆಲಸ ಮಾಡುತ್ತಿದ್ದ ಅಂದರೆ ಮಲಗಲು ಮಾತ್ರ ಮನೆಗೆ ಬರುವಂತಾಗುತ್ತಿತ್ತು. ಅವನ ಹೆಂಡತಿ ವಾರಣಿ ಇದನ್ನೆಲ್ಲ ಸಹಿಸಿಕೊಂಡು, ಇಂಥ ವಿಷಯಗಳನ್ನೆಲ್ಲ ಗಂಡನ ಸಹೋದ್ಯೋಗಿಗಳ ಹೆಂಡತಿಯರು ಸಿಕ್ಕಿದಾಗ ಅವರ ಜೊತೆ ಚರ್ಚಿಸದೆ, ಎಲ್ಲರಿಗೂ ಇವರ ಸುಖಿ ದಾಂಪತ್ಯದ ಬಗ್ಗೆ ಹೊಟ್ಟೆಕಿಚ್ಚಾಗುವಂತೆ ಮಾಡುತ್ತಿದ್ದಳು. ಹೀಗಿರುತ್ತ ಒಮ್ಮೆ, ನಂಬಿ ಏನೋ ಗಾಢವಾದ ಚಿಂತೆಯಲ್ಲಿರುವ ಹಾಗೆ ಪ್ರವೀಣ್‌ಗೆ ಭಾಸವಾಗತೊಡಗಿತು. ಎರಡು ತಿಂಗಳೀಚೆಗೆ ಅವನಲ್ಲಿ ಏನೋ ಅನ್ಯಮನಸ್ಕತೆ ಹೊಕ್ಕಂತೆ ಅನಿಸತೊಡಗಿತು. ಅವನ ಕೆಲಸದಲ್ಲಿ ಯಾವುದೇ ಊನ ಕಂಡುಹಿಡಿಯಲಾಗದಿದ್ದರೂ, ನಂಬಿಯ ಮನಸ್ಸನ್ನು ಏನೋ ಕೊರೆಯುತ್ತಿದೆಯೆಂಬುದು ದಿನದಿಂದ ದಿನಕ್ಕೆ ಪ್ರವೀಣ್‌ಗೆ ಅನಿಸತೊಡಗಿತು. ಒಂದು ಶನಿವಾರ ಮಧ್ಯಾಹ್ನ ನಂಬಿಯನ್ನು ತನ್ನ ಜೊತೆ ಆಚೆ ಊಟಕ್ಕೆ ಕರೆದುಕೊಂಡು ಹೋಗಿ, ಊಟಕ್ಕೆ ಮುಂಚೆ ಇಬ್ಬರೂ ಬಿಯರ್ ಕುಡಿಯುತ್ತ ಕೂತಾಗ, “ನಂಬಿ ನಿನಗೇನೋ ಚಿಂತೆ ಹತ್ತಿಕೊಂಡಿದೆ ಎಂದು ನನಗನ್ನಿಸುತ್ತಿದೆ… “ಅಂದ. ಆಫೀಸಿನಲ್ಲಿ ನಂಬಿ ಯಾರ ಬಳಿಯಲ್ಲೂ ತನ್ನ ಸ್ವಂತ ವಿಷಯಗಳನ್ನು ಹೇಳಿಕೊಂಡವನಲ್ಲ. ಅವನಿಗೆ ಬೆಂಗಳೂರಿನಲ್ಲಿ ಆಪ್ತ ಸ್ನೇಹಿತರೆನ್ನುವವರು ಒಬ್ಬರೂ ಇರಲಿಲ್ಲ. ಈಗ ತನ್ನ ದುಗುಡವನ್ನು ಪ್ರವೀಣ್ ಗಮನಿಸಿದ್ದಾನೆ ಎಂಬ ಅರಿವಾಗುತ್ತಲೇ ಯಾಕೋ ಅತೀವ ದುಖಃವಾದಂತಾಗಿ “ಸಮಸ್ಯೆ ದುಡ್ಡಿನದು ಪ್ರವೀಣ್..“ಅಂದುಬಿಟ್ಟ. “ಸಾಲದ ಸಮಸ್ಯೆಯಾ? ನನಗೆ ಗೊತ್ತಿರುವಂತೆ ನೀನು ಅಂಥ ದೊಡ್ಡ ಸಾಲವನ್ನು ಮಾಡುವವನಲ್ಲ….ಮತ್ತೆ ನಿನ್ನ ತಂದೆ ತಾಯಿಯರಿಗಂತೂ ನಿನ್ನಿಂದ ಕೇಳುವ ಅಗತ್ಯವಿಲ್ಲ…ಅವರದೆಲ್ಲ ನಿನಗೆ ಹೊರತು ಅವರಿಂದಾಗಿ ನೀನು ದುಡ್ಡಿನ ಸಮಸ್ಯೆಯಲ್ಲಿ ಬೀಳುವುದು ಶಕ್ಯವಿಲ್ಲ ಅನಿಸುತ್ತದೆ..ಏನಂತ ಸರಿಯಾಗಿ ಹೇಳು…“ಎಂದು ಕೆದಕಿದ. “ಅದೆಲ್ಲ ಅಲ್ಲ..ದುಡ್ಡಿನ ಕೊರತೆ ಸಮಸ್ಯೆಯಲ್ಲ…ಆಯವ್ಯಯದಲ್ಲಿ ವ್ಯತ್ಯಯ ಬಂದು ತಲೆ ಕೆಟ್ಟು ಹೋಗಿದೆ…ಅದೆಲ್ಲ ಹೇಳ ಹೊರಟರೆ ಬಹಳ ಹೊತ್ತು ಬೇಕು…ಬೇರೆ ಯಾರಿಂದಲೂ ಈ ಸಮಸ್ಯೆ ಬಗೆಹರಿಯಲಾರದು…“ಅಂದ ನಂಬಿ ತಪ್ತನಾಗಿ. “ಎಷ್ಟು ದೊಡ್ಡ ಮೊತ್ತ?” ಎಂದು ಕೇಳಿದ್ದಕ್ಕೆ ನಂಬಿ “ಹನ್ನೆರಡು ರೂಪಾಯಿ “ಅಂದದ್ದೇ ಪ್ರವೀಣ್‌ಗೆ ಆಶ್ಚರ್ಯದಿಂದ ಮಾತೆ ಹೊರಡದೆ ಏನು ಹೇಳಬೇಕೊ ತೋಚದೆ ಸುಮ್ಮನೆ ಬಿಯರ್ ಗುಟುಕರಿಸಿದ. ಸಾವಿರಾರು ರೂಪಾಯಿ ಸಂಬಳ ಬರುವ ಈ ಮನುಷ್ಯ ಹನ್ನೆರಡು ರೂಪಾಯಿಗಳಿಗಾಗಿ ಎರಡು ತಿಂಗಳಿನಿಂದ ತಲೆ ಕೆಡಿಸಿಕೊಡಿದ್ದಾನೆಂದರೆ ನಂಬಲಿಕ್ಕಾಗಲಿಲ್ಲ. ಈತ ಈ ರೀತಿಯ ಪಿಸುಣಾರಿಯೆಂದು ಗೊತ್ತಿರಲಿಲ್ಲವಲ್ಲ ಅಂದುಕೊಂಡ. ಈಗ ತಾವು ಕೂತು ಕುಡಿಯುತ್ತಿರುವ ಬಿಯರಿನ ಪ್ರತಿ ಗುಟುಕನ್ನೂ ಈತ ಲೆಕ್ಕ ಹಾಕುತ್ತಿರಬಹುದೆ ಎಂದನ್ನಿಸಿತು. ಆದರೂ, ನಂಬಿ ಹಿಂದೆಂದೂ ಇಂಥ ಜಿಪುಣತನ ತೋರಿಸಿದ ನೆನಪಾಗದೆ, ಇದರ ಹಿಂದೆ ಬೇರೇನೋ ಇರಬಹುದೆಂದನ್ನಿಸಿ ಪ್ರವೀಣ್ “ನೋಡು ಆಸೆಗೂ ಒಂದು ಮಿತಿಯಿರಬೇಕು….ಹನ್ನೆರಡು ರೂಪಾಯಿಗೆ ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ನಿನಗೆ ಯಾಕೆ ಬಂತು? ನಿನಗೆ ತಲೆ ಸರಿಯಿಲ್ಲ ಅಂದರೆ ನಿನ್ನ ಹೆಂಡತಿಯಾದರು ಬುದ್ದಿ ಹೇಳಬಹುದಿತ್ತಲ್ಲ…“ಎಂದು ಹೇಳಿದ. ಪ್ರಶ್ನೆ ಬರಿ ಹನ್ನೆರಡು ರೂಪಾಯಿಗಳದ್ದಲ್ಲವೆಂದು ಪ್ರವೀಣ್‌ಗೆ ವಿವರಿಸಲು ನಂಬಿಗೆ ಅರ್ಧ ಗಂಟೆ ಬೇಕಾಯಿತು. ನಂಬಿಯ ಕುಟುಂಬದಲ್ಲಿ ಲೆಕ್ಕ ಬರೆದಿಡುವ ಒಂದು ಅಭ್ಯಾಸವಿತ್ತು. ಅದು ಅವನ ಅಜ್ಜ- ತಂದೆಯ ತಂದೆ ಆರಂಭಿಸಿದ್ದು. ಕುಟುಂಬದ ಜಮಾ ಖರ್ಚಿನ ಲೆಕ್ಕವನ್ನೆಲ್ಲ ಪ್ರತಿ ಪೈಸೆಯೂ ವ್ಯತ್ಯಾಸವೂ ಆಗದ ಹಾಗೆ ಪ್ರತಿ ದಿನದ ಕೊನೆಗೆ ಲೆಕ್ಕ ಬರೆದು, ಶಿಲ್ಕು ಹಣವನ್ನು ತಾಳೆ ಹಚ್ಚುತ್ತಿದ್ದರು. ಇದರಲ್ಲಿ ವ್ಯತ್ಯಾಸವಾಗುವ ಹಾಗಿಲ್ಲ. ಮೂರು ತಲೆಮಾರುಗಳಿಂದ ಹೀಗೆ ಲೆಕ್ಕ ಬರೆಯುವ ಪರಿಪಾಠವನ್ನು, ಪೈಸೆ ಪೈಸೆಯನ್ನು ಬಿಡದೆ ತಾಳೆ ಹಚ್ಚಿಡುವುದನ್ನು ಪಾಲಿಸಿಕೊಂಡು ಬಂದಿದ್ದರು. ಅವನ ಅಜ್ಜ ಉತ್ತರ ಭಾರತದಲ್ಲಿ ಯಾವುದೋ ಇಂಗ್ಲಿಷ್ ಅಧಿಕಾರಿಯ ಬಳಿ ಕೆಲಸ ಮಾಡುತ್ತಿದ್ದಾಗ ಈ ಅಭ್ಯಾಸ ಬೆಳೆಸಿಕೊಂಡರಂತೆ. ನಂಬಿಗೆ ಮೊಟ್ಟ ಮೊದಲಬಾರಿಗೆ ಖರ್ಚಿಗೆಂದು ಹಣ ಕೊಟ್ಟಾಗ ಅದರ ಜೊತೆಯೇ ಒಂದು ಲೆಕ್ಕದ ಪುಸ್ತಕವನ್ನು ಅವನ ಅಪ್ಪ ಕೊಟ್ಟಿದ್ದರು. ಅಂದು ಅವನು ಕಾಲೇಜು ಸೇರಲು ಹೊರಟ ದಿವಸ. ಆ ಪುಸ್ತಕ ನಂಬಿ ಕಾಲೇಜು ಮುಗಿಸುವವರೆಗೂ ಸಾಕಾಯಿತು. ನಂಬಿಗೆ ಬುದ್ಧಿ ತಿಳಿದಾಗಿನಿಂದ ಅವನ ಅಪ್ಪ ಪ್ರತಿ ರಾತ್ರಿ ಕೂತು ಕುಟುಂಬದ ಜಮಾ ಖರ್ಚಿನ ವಿವರಗಳನ್ನು ಬರೆದಿಡುವುದು ನೆನಪಿದೆ. ಲೆಕ್ಕದ ಪುಸ್ತಕವನ್ನು ಬಿಚ್ಚಿಟ್ಟು, ಪಕ್ಕದಲ್ಲಿ ನಗದು ಹಣವನ್ನು ನಾಣ್ಯ ಮತ್ತು ನೋಟುಗಳನ್ನಾಗಿ ವಿಂಗಡಿಸಿ ನಾಣ್ಯಗಳನ್ನೆಲ್ಲ ಎಣಿಸಲು ಅನುಕೂಲವಾಗುವಂತೆ ಒಂದರ ಮೇಲೊಂದು ಪೇರಿಸಿ ಇಟ್ಟುಕೊಳ್ಳುತ್ತಿದ್ದದ್ದು ನೆನಪಿದೆ. ಉದ್ದ ಹಾಳೆಗಳನ್ನು ತಂದು ರೂಲು ದೊಣ್ಣೆಯಿಂದ ಅದರಲ್ಲಿ ಗೀಟುಗಳನ್ನೆಳೆದು ಮಧ್ಯದಲ್ಲಿ ಮಡಚಿ ದಪ್ಪನೆಯ ದಾರದಿಂದ ಹೊಲೆಯುತ್ತಿದ್ದರು. ರಟ್ಟನ್ನು ಪುಸ್ತಕದ ಅಳತೆಗೆ ಸರಿಯಾಗಿ ಕತ್ತರಿಸಿ ಬೈಂಡು ಹಾಕುತ್ತಿದ್ದರು. ಒಂದು ಪುಸ್ತಕ ಸುಮಾರು ಆರು ತಿಂಗಳ ಲೆಕ್ಕಕ್ಕೆ ಸಾಕಾಗುತ್ತಿತ್ತು. ನಂಬಿ ಈಗಲೂ ಉಪಯೋಗಿಸಿವುದು ಅವನ ಅಪ್ಪ ಮಾಡಿಕೊಟ್ಟ ಲೆಕ್ಕದ ಪುಸ್ತಕಗಳನ್ನೇ. ನಂಬಿಯ ಊರಿನಲ್ಲಿ, ಮನೆಯ ಅಟ್ಟದ ಮೇಲೆ ಪೆಠಾರಿಗಳಲ್ಲಿ ಅವನ ಅಜ್ಜ ಮತ್ತು ಅವನ ಅಪ್ಪನ ಲೆಕ್ಕದ ಪುಸ್ತಕಗಳು ಅವನ ಕುಟುಂಬದ ವರ್ಷಗಟ್ಟಲೆಯ ಲೆಕ್ಕವನ್ನು ತುಂಬಿಕೊಂಡು ಕೂತಿದ್ದವು. ಪ್ರತಿನಿತ್ಯ ಲೆಕ್ಕ ಬರೆದಿಡುತ್ತಿದ್ದರೂ ನಂಬಿಯ ಅಪ್ಪನಾಗಲಿ, ಅಜ್ಜನಾಗಲಿ ಯಾವಾಗಲೂ ಅನಗತ್ಯ ಜಿಪುಣತನವನ್ನು ತೋರಿಸಲಿಲ್ಲ. “ಎಷ್ಟೇ ಖರ್ಚು ಮಾಡಿದರೂ ಪರವಾಗಿಲ್ಲ…ಆದರೆ ಆ ಗಳಿಗೆ ದಾಟಿ ಹೋದ ಮೇಲೆ ಕೂತು ಅದನ್ನು ಬರೆಯುವುದಿದೆಯಲ್ಲ, ಅದು ನಾವು ನಮ್ಮ ಗಳಿಕೆಯ ಮಿತಿಯಲ್ಲಿದ್ದೇವೆಂಬುದನ್ನೂ ಮತ್ತು ನಾವು ವ್ಯಯಿಸಿದ್ದು ಸರಿಯಾದ ಕಾರಣಕ್ಕೆಂಬುದನ್ನೂ ಖಾತರಿ ಮಾಡಿಕೊಳ್ಳಲಿಕ್ಕೆ…“ಎಂದು ನಂಬಿಯ ಅಜ್ಜ ನಂಬಿಯ ತಂದೆಗೆ ಹೇಳಿದ್ದನ್ನು, ನಂಬಿಯ ತಂದೆ ನಂಬಿಗೆ ಹೇಳಿದ್ದರು. ಅವನ ಅಜ್ಜ ಬದುಕಿರುವಾಗ ಇದನ್ನು ತಮ್ಮ ಸ್ನೇಹಿತರಲ್ಲಿ ಸಂಬಂಧೀಕರಲ್ಲಿ ಪ್ರಚಾರ ಮಾಡುತ್ತಿದ್ದರು ; ಅವರೂ ಲೆಕ್ಕ ಬರೆಯುವಂತೆ ಪ್ರಚೋದಿಸುತ್ತಿದ್ದರು. ಕೆಲವರು ಇದನ್ನು ಅನುಸರಿಸಿದರಾದರೂ ನಿಭಾಯಿಸಲಾರದೆ ನಿಲ್ಲಿಸಿದರು. ವ್ರತದ ಹಾಗೆ ಇದನ್ನು ಪ್ರತಿನಿತ್ಯ ಬರೆಯದೇ ಇದ್ದರೆ ನಂತರ ಚಿಕ್ಕ ಪುಟ್ಟ ಖರ್ಚುಗಳೆಲ್ಲ ಮರೆತು ಹೋಗಿ ಲೆಕ್ಕ ತಾಳೆಯಾಗುತ್ತಿರಲಿಲ್ಲ. ಈ ಕಾರಣಕ್ಕೆ ಹಲವರು ತಮಗೆ ಅನುಕೂಲಕರವಾದ ಕೆಲವು ಬದಲಾವಣೆ ಮಾಡಿಕೊಂಡು, ಲೆಕ್ಕ ತಾಳೆ ಹಾಕದೆ ಬರೀ ಖರ್ಚಿನ ವಿವರ ಬರೆಯುವುದು, ಎರಡು ರೂಪಾಯಿಗೂ ಹೆಚ್ಚಾದ ಖರ್ಚುಗಳನ್ನು ಮಾತ್ರ ಬರೆಯುವುದು ಹೀಗೆಲ್ಲ ಶುರು ಮಾಡಿದರು. ಎಷ್ಟೋ ಜನ ನಂಬಿಯಾರ್ ಮನೆತನದ ಈ ಪದ್ಧತಿಯನ್ನು ಹಾಸ್ಯ ಮಾಡುತ್ತಿದ್ದರು. ಚಿತ್ರಗುಪ್ತನ ಮನೆತನವೆಂದು ತಮಾಷೆ ಮಾಡುತ್ತಿದ್ದರು. ಯಾರು ಏನೇ ಅಂದರು, ಇತ್ತೀಚೆಗೆ ಈ ಹನ್ನೆರಡು ರೂಪಾಯಿಗಳ ವ್ಯತ್ಯಾಸ ಬರುವವರೆಗೆ ನಂಬಿಯಾರ್ ಮನೆತನದಲ್ಲಿ ಲೆಕ್ಕ ತಾಳೆಯಾಗುತ್ತ ಬಂದಿತ್ತು. ನಂಬಿ ಆಧುನಿಕನಾದ್ದರಿಂದ ಪ್ರತಿನಿತ್ಯ ಲೆಕ್ಕ ಬರೆದರೂ ವಾರಕ್ಕೊಮ್ಮೆ ಮಾತ್ರ ಜಮಾ ಖರ್ಚನ್ನು ತಾಳೆ ಹಚ್ಚುತ್ತಿದ್ದ. ತಾನು ಈ ತಪ್ಪು ಮಾಡಿದ್ದರಿಂದಲೇ ಈಗ ಈ ಲೆಕ್ಕೆ ತಾಳೆಯಾಗುತ್ತಿಲ್ಲವೆಂದು ಅವನಿಗೆ ಕೆಲವೊಮ್ಮೆ ಅನಿಸುತ್ತಿತ್ತು. ಅವನ ಹೆಂಡತಿ ವಾರಿಣಿ ಅವನ ಸೋದರಮಾವನ ಮಗಳೇ ಆಗಿದ್ದರಿಂದ ಅವಳಿಗೆ ಈ ಪದ್ಧತಿಯ ಪರಿಚಯವಿತ್ತು. ಅವಳ ಮನೆಯಲ್ಲಿ ಕೆಲಕಾಲ ಲೆಕ್ಕ ಆರಂಭಿಸಿ ನಿಲ್ಲಿಸಿದ್ದರು. ಅದರಿಂದಾಗಿ ಅವಳಿಗೆ ಈ ಲೆಕ್ಕದ ಆಚಾರ ಅಸಹಜ ಅನ್ನಿಸಿರಲಿಲ್ಲ. ಮದುವೆ ನಿಶ್ಚಯವಾದಾಗಿನಿಂದ ಅವಳೂ ಚಾಚೂ ತಪ್ಪದೆ ಲೆಕ್ಕ ಲೆಕ್ಕ ಬರೆಯಲಾರಂಭಿಸಿ ಮನೆತನಕ್ಕೆ ತಕ್ಕ ಸೊಸೆಯೆನಿಸಿಕೊಂಡಿದ್ದಳು. ಈಗ ತಾಳೆ ಹತ್ತದೇ ಹೋದ ಲೆಕ್ಕ ಅವಳನ್ನೂ ಕಂಗೆಡಿಸಿತ್ತು. ತಮ್ಮ ಯಾವುದೋ ನಿರ್ಲಕ್ಷ್ಯದಿಂದಾಗಿ ವರ್ಷಾನುಗಟ್ಟಲೆ ನಡೆದುಕೊಂಡು ಬಂದ ಒಂದು ನಿಯಮ ಮುರಿಯಿತೆಂದು ಖಿನ್ನಳಾಗಿದ್ದಳು. ಬಾಲ್ಯದಲ್ಲಿ ಯಾವಗಲೋ ಚಂದಮಾಮದಲ್ಲಿ ಓದಿದ ರುಣಾನುಬಂಧ ಎಂಬ ಕತೆಯೊಂದು ನಂಬಿಯನ್ನೂ ಆಗೀಗ ಕಾಡುತ್ತಿತ್ತು. ಆ ಕತೆ ಒಂದು ದಂಪತಿಗಳದ್ದು. ಅವರಿಗೆ ಅನೇಕ ಮಕ್ಕಳು ಹುಟ್ಟಿ ಯಾರೂ ಹೆಚ್ಚುಕಾಲ ಉಳಿಯದೇ ಹೋದಾಗ ಒಂದು ಬಾರಿ ಅವರು ಆಗತಾನೆ ಹುಟ್ಟಿದ ಮಗುವನ್ನೆತ್ತಿಕೊಂಡು ರುಷಿಯೊಬ್ಬರ ಬಳಿ ಹೋಗುತ್ತಾರೆ. ಪ್ರತಿ ಜೀವಿಯೂ ಯವುಯಾವುದೋ ರುಣ ತೀರಿಸುವ ಸಲುವಾಗಿ ಜನ್ಮವೆತ್ತಿ, ಆ ರುಣ ತೀರಿದ್ದೇ ಕಾಲವಾಗುತ್ತಾನೆ ; ನಿಮಗೆ ಹುಟ್ಟಿದ ಮಕ್ಕಳು ನಿಮಗೆ ತೀರಿಸಬೇಕಾದ ರುಣ ತೀರಾ ಕಡಿಮೆಯಾದ್ದರಿಂದ ಅವರು ಬೇಗನೆ ಕಾಲವಶವಾಗುತ್ತಿದ್ದಾರೆ. ಈ ಹುಡುಗ ನಿಮಗೆ ಒಂದು ತಂಬಿಗೆ ಎಣ್ಣೆ ಕೊಡಬೇಕು.ಅದನ್ನು ತೆಗೆದುಕೊಳ್ಳದೆ ಇರುವವರೆಗೂ ಇವನ ಆಯಸ್ಸು ಗಟ್ಟಿಯಾಗಿರುತ್ತದೆ ಎಂದು ಆ ರುಷಿ ಹೇಳುತ್ತಾರೆ. ಆ ದಂಪತಿಗಳು ಬಹಳ ಜಾಗರೂಕತೆಯಿಂದ ಮಗನನ್ನು ಬೆಳೆಸುತ್ತಾರೆ. ಆತ ಹದಿನೆಂಟು ವರ್ಷದವನಾಗಿರುವಾಗ ಒಮ್ಮೆ ಮಧ್ಯಾಹ್ನ ತಾಯಿ ಕೆಲಸದಲ್ಲಿರುವ ಸಮಯದಲ್ಲಿ “ಅಮ್ಮಾ ಇದನ್ನು ತೊಗೋ “ಎಂದು ಹೇಳಿ ಒಂದು ಬಿಂದಿಗೆ ಎಣ್ಣೆ ಇಡುತ್ತಾನೆ. ಕೆಲಸದಲ್ಲಿ ಮಗ್ನಳಾಗಿದ್ದ ಅವನ ಅಮ್ಮ ಏನು ಎತ್ತ ಕೇಳದೇ “ತಗೊಳ್ತೀನಪ್ಪ ಅಲ್ಲಿಡು “ಅನ್ನುತ್ತಾಳೆ. ಆಮೇಲೆ ಅವಳು ಈ ಬಿಂದಿಗೆ ಇಲ್ಲಿ ಹೇಗೆ ಬಂತು ಎಂದು ಆಶ್ಚರ್ಯಪಡುತ್ತ ಅದನ್ನು ಎತ್ತಿಕೊಂಡದ್ದೇ ಮಗ ಅಸು ನೀಗುತ್ತಾನೆ. ಈ ಕತೆ ನೆನಪಾದಾಗಲೆಲ್ಲ ನಂಬಿಗೆ ಲೆಕ್ಕದ ಪುಸ್ತಕವೊಂದರಲ್ಲಿ ಯಾರೋ ಎಲ್ಲೋ ಇಡೀ ಜಗತ್ತಿನ ರುಣಾನುಬಂಧದ ಲೆಕ್ಕ ಇಟ್ಟುಕೊಡಿರುವ ಕಲ್ಪನೆಯಾಗುತ್ತಿತ್ತು – ಈ ಕತೆಗೆ ಅಂಥ ವಿಶೇಷವಾದ ಅರ್ಥವಿಲ್ಲದಾಗ್ಯೂ . ತನ್ನ ಮನೆತನದವರ ಲೆಕ್ಕ ಬರೆಯುವ ಅಭ್ಯಾಸದ ಕಾರಣದಿಂದಾಗಿಯೇ ಅದು ತನ್ನ ನೆನಪಿನಲ್ಲಿದೆಯೆಂದು ನಂಬಿಗೆ ತಿಳಿದಿದ್ದರೂ, ತನ್ನ ಈಗಿನ ತಳಮಳವನ್ನು ಪ್ರವೀಣ್‌ಗೆ ಹೇಳುವ ಭರದಲ್ಲಿ ಈ ಕತೆಯನ್ನೂ ಹೇಳಿದ. +-೩- +ನಂಬಿಯ ಸಮಸ್ಯೆಯನ್ನು ಅವನು ಹೇಳಿದ ಕತೆಯನ್ನು ಕೇಳಿದ ಪ್ರವೀಣ್‌ಶುಕ್ಲಾಗೆ ಏನು ಪರಿಹಾರ ಹೇಳಬೇಕೊ ಗೊತ್ತಾಗಲಿಲ್ಲ. ಅವನಿಗೆ ಇದೆಲ್ಲ ಮೂರ್ಖತನದ ಪರಮಾವಧಿ ಅನಿಸಿತು. “ನಾನೆ ನಿನಗೆ ಹನ್ನೆರಡು ರೂಪಾಯಿ ಕೊಡುತ್ತೇನೆ…ಲೆಕ್ಕ ಸರಿಮಾಡಿಬಿಡು…“ಅಂದ. “ಅದು ಹೇಗೆ ಸರಿಹೋಗತ್ತೆ? ಹನ್ನೆರಡು ರೂಪಾಯಿ ನೀನು ಕೊಟ್ಟಿದ್ದು ಅಂತ ಜಮಾ ಆಗತ್ತೆ….ಲೆಕ್ಕ ತಾಳೆ ಆಗೋದೆ ಇಲ್ಲ. “ಎಂದ. ಪ್ರವೀಣ್‌ಗೆ ನಂಬಿಯ ಹಟದಿಂದ ತಾಳ್ಮೆ ತಪ್ಪಿದರೂ ಸೈರಿಸಿಕೊಂಡು “ನಾಳೆ ಸಂಜೆ ನಿನ್ನ ಮನೆಗೆ ಬರುತ್ತೇನೆ.. ಆಗ ನಿನ್ನ ಸಮಸ್ಯೆಗೆ ಪರಿಹಾರ ಹೇಳುತ್ತೇನೆ…“ಅಂದ. ಈ ಹುಚ್ಚುತನಕ್ಕೆ ಹೇಗೆ ಚಿಕಿತ್ಸೆ ಮಾಡಬೇಕೆಂದು ಯೋಚಿಸಿ ಪ್ರವೀಣ್ ಮರುದಿನ ಸಂಜೆ ನಂಬಿಯ ಮನೆಗೆ ಬಂದ. ಬಂದದ್ದೇ ಗಂಡ ಹೆಂಡತಿಯನ್ನೂ ಕೂರಿಸಿಕೊಂಡು ಅವರಿಗೆ ಬಾಯಿ ತೆರೆಯುವ ಅವಕಾಶವನ್ನೂ ಕೊಡದೆ ಸರೀ ಬೈದ. ಈ ಲೆಕ್ಕ ಬರೆಯುವುದನ್ನು ಮೊದಲು ನಿಲ್ಲಿಸು ; ಇದಕ್ಕೂ ಮೂಢನಂಬಿಕೆಗೂ ವ್ಯತ್ಯಾಸವಿಲ್ಲ ; ಹನ್ನೆರಡು ರೂಪಾಯಿ ತಾಳೆಯಾಗುತ್ತಿಲ್ಲವೆಂದು ಎರಡು ತಿಂಗಳಿಂದ ದುಖಿಃಸುತ್ತಿರುವ ನಿನಗೆ ತಾರತಮ್ಯ ಜ್ಞಾನ ಇದೆಯಾ; ಯಾವುದೋ ಕಾರಣಕ್ಕೆ ನಿನ್ನ ಅಜ್ಜ ಶುರುಮಾಡಿದ್ದನ್ನು ಈಗ ಸ್ಥಿತಿ ಸಂದರ್ಭ ನೋಡದೆ ಪಾಲಿಸಲು ಹೋಗುತ್ತೀಯಲ್ಲ; ಬಾಲ್ಯದಲ್ಲಿ ಓದಿದ ಯಾವುದೋ ದರಿದ್ರ ಕತೆಯಿಂದ ಮಹಾಜ್ಞಾನ ಪಡೆದವರ ಥರ ಸಮರ್ಥಿಸಿಕೊಳ್ಳಲು ನೋಡುತ್ತೀಯಲ್ಲ; ನಿನಗೆ ಸ್ವಂತ ಯೋಚಿಸುವ ಶಕ್ತಿಯಿಲ್ಲವ ಎಂದೆಲ್ಲ ಕಟುವಾಗಿ ಬೈದ. ಈ ಮಧ್ಯಮ ವರ್ಗದ ಚಿಪ್ಪನ್ನು ಒಡೆದು ಹೊರಬರಬೇಕು ಅಂದ. ನೀನು ಇಂಥ ಸಣ್ಣ ಸಂಗತಿಗಳನ್ನು ಮೀರಿ ಬೆಳೆಯಬೇಕು; ನಿನ್ನ ಕರಿಯರ್ ಎಷ್ಟೊಂದು ಒಳ್ಳೆಯ ಸಾಧನೆಯ ಹಾದಿಯಲ್ಲಿರುವಾಗ ನೀನು ಇಂಥದಕ್ಕೆಲ್ಲ ಬಲಿಯಾದರೆ ನಿನ್ನ ಕತೆ ಮುಗಿಯಿತು ಅಂತಿಟ್ಟುಕೋ; ಇನ್ನು ನೀನು ಮೇಲೇರಿದಂತೆಲ್ಲ ನಿನ್ನ ಮನೆಯಲ್ಲಿ ಬೇರೆ ವ್ಯಕ್ತಿತ್ವನ್ನೆ ಇಟ್ಟುಕೊಳ್ಳುತ್ತೀ ಅಂದರೆ ಸಾಧ್ಯವಿಲ್ಲ ಎಂಬುದನ್ನು ಮೊದಲು ಅರಿತುಕೊ; ಈಗ ನೀನು ಮೇಲೇರುತ್ತಿರುವ ವೇಗ ನೋಡಿದರೆ ನಮ್ಮ ಕಂಪನಿಯ ನಿರ್ದೇಶಕನಾಗುವ ಸಾಮರ್ಥ್ಯ ಮತ್ತು ಅವಕಾಶ ನಿನಗಿದ್ದ ಹಾಗೆ ಅನಿಸುತ್ತೆ; ಹಾಗೆ ಆಗಬೇಕಾದರೆ ಇಂತದೆಲ್ಲ ಕಾಲಿಗೆ ತೊಡರದ ಹಾಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಲಬೇಕು…..“ಅಂತೆಲ್ಲ ಪ್ರವೀಣ್‌ಗೆ ಬೋಧನೆ ಮಾಡಿದ. ಆಸೆ ತೋರಿಸಿದ, ಹೆದರಿಸಿದ.ದಂಪತಿಗಳಿಬ್ಬರೂ ಮಾತಾಡದೆ ಕುಳಿತಿದ್ದರು. ಈ ರೀತಿಯ ಆಕ್ರಮಣಕ್ಕೆ ಅವರು ಸಿದ್ಧರಾದಂತಿರಲಿಲ್ಲ. ತಾನು ಅವನ ಮೆಲಧಿಕಾರಿಯಾಗಿದ್ದರಿಂದ ನಂಬಿ ಬಾಯಿ ಮುಚ್ಚಿ ಕೂತಿದ್ದಾನೋ ಅಥವ ತಾನು ಹೇಳುತ್ತಿರುವುದು ಅವನನ್ನು ತಟ್ಟುತ್ತಿದೆಯೋ ಎಂಬುದು ಪ್ರವೀಣ್‌ಗೆ ಗೊತ್ತಾಗಲಿಲ್ಲ. ತನ್ನ ಮಾತುಗಳನ್ನು ಕೇಳುತ್ತಿದ್ದಂತೆ ಅವರ ಮುಖಗಳಲ್ಲಾಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರವೀಣ್‌ಗೆ ವಾರಿಣಿ ತನ್ನ ಮಾತಿನ ಪ್ರಭಾವಕ್ಕೊಳಗಾಗುತ್ತಿದ್ದಾಳೆ ಎಂದು ಅನಿಸಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಎಲ್ಲ ಮುಗಿದನಂತರ ಪ್ರವೀಣ್ “ಇನ್ನು ಮುಂದೆ ಲೆಕ್ಕ ಬರೆಯುವುದಿಲ್ಲ ಎಂದು ನನಗೆ ಪ್ರಮಾಣ ಮಾಡಿ ಹೇಳು “ಎಂದ. ಇದೆಲ್ಲ ಇಂಥ ವಿಪರೀತಕ್ಕೆ ಹೋಗುತ್ತದೆಂದು ಭಾವಿಸಿರದ ನಂಬಿ ಗಾಬರಿಯಾದ. ಇನ್ನು ಇವರನ್ನು ಕಾಡಬಾರದೆಂದೆನಿಸಿ ಪ್ರವೀಣ್ “ಮತ್ತೆರಡು ದಿನ ಬಿಟ್ಟು ಬರುತ್ತೇನೆ…ಆಗ ನಿನ್ನ ನಿರ್ಧಾರ ಹೇಳು…“ಅಂತಂದು ಹೊರಟ. ತಾನು ನಂಬಿ ಮೇಲೇರುವ ಮಾತಾಡಿದಾಗಲೆಲ್ಲ ಅರಳುತ್ತಿದ್ದ ವಾರಿಣಿಯ ಕಣ್ಣುಗಳನ್ನು ನೆನೆಸಿಕೊಂಡಂತೆ ಪ್ರವೀಣ್‌ಗೆ ಇವಳು ನಂಬಿಯನ್ನು ಬದಲಾಯಿಸುತ್ತಾಳೆ ಅನಿಸತೊಡಗಿತು. ಪ್ರವೀಣ್, ಆ ನಂತರ ನಂಬಿಯನ್ನು ಆಫೀಸಿನಲ್ಲಿ ಭೇಟಿಯಾದಾಗ ಈ ಕುರಿತು ಏನನ್ನೂ ಕೇಳಲಿಲ್ಲ. ಹೇಳಿದ ಮಾತಿನಂತೆ ಎರಡು ದಿನಗಳ ನಂತರ ಸಂಜೆ ನಂಬಿಯ ಮನೆಗೆ ಬಂದ. ಅವನು ಬಂದಾಕ್ಷಣ ಅವತ್ತಿನಿಂದ ಲೆಕ್ಕದ ಪುಸ್ತಕಕ್ಕೆ ಸಮಾಪ್ತಿ ಹಾಡುವ ನಂಬಿಯಾರ್ ದಂಪತಿಗಳ ನಿರ್ಧಾರ ಘೋಷಣೆಯಾಯಿತು. ಅದನ್ನು ಕೇಳಿ, ಇಷ್ಟು ಬೇಗ ಇವರು ಬದಲಾಗುತ್ತಾರೆಂದು ಅಂದುಕೊಂಡಿರದ ಪ್ರವೀಣ್‌ಗೆ ಆಶ್ಚರ್ಯವಾಯಿತು. ಎರಡನೆ ಸುತ್ತಿನ ಆಕ್ರಮಣಕ್ಕಾಗಿ ಅವನು ತಂದ ಅಸ್ತಗಳೆಲ್ಲ ನಿರುಪಯುಕ್ತವಾದವು. “ಹನ್ನೆರಡು ರೂಪಾಯಿ ಏನಾಯಿತು?“ಎಂಬ ಅವನ ಪ್ರಶ್ನೆಗೆ “ಯಾವ ಹನ್ನೆರಡು ರೂಪಾಯಿ ನನಗೆ ನೆನಪಿಲ್ಲವಲ್ಲ….“ಎಂದು ನಂಬಿ ಮರುಪ್ರಶ್ನೆ ಕೇಳಿ ನಕ್ಕ. ತಾನು ಕುಟುಂಬವೊಂದಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಪರಿವರ್ತಿಸಿದೆನೆಂದು ಪ್ರವೀಣ್‌ಗೆ ಹೆಮ್ಮೆಯಾಯಿತು. ಪ್ರವೀಣ್ ಹೋದನಂತರ ನಂಬಿ ಮತ್ತು ವಾರಿಣಿ ಎಂದಿನಂತೆ ಲೆಕ್ಕ ಬರೆಯದೆ ಮಲಗಲು ಹೋದರು. ಇಬ್ಬರಿಗೂ ಏನೋ ಆತಂಕ, ಉದ್ವೇಗ. ಮಲಗಿದಲ್ಲೇ ನಂಬಿ ವಾರಿಣಿಯ ಕೈ ಹಿಡಿದುಕೊಂಡ. ವಾರಣಿ “ನಾಳೆ ದೇವರಿಗೆ ತಪ್ಪು ಕಾಣಿಕೆ ಇಡೋಣ.“ಅಂದಳು. ನಂಬಿ ಹೂಂ ಅಂದ. +ನಂಬಿ ಮರುದಿನ ಸಂಜೆ ಆಫೀಸಿನಿಂದ ಬಂದವನೆ, ತನ್ನ ಹಳೆಯ ಲೆಕ್ಕದ ಪುಸ್ತಕಗಳನ್ನು ತಿರುವಿ ಹಾಕುತ್ತ ಕೂತ. ಅವನು ಮಾಡುತ್ತಿರುವುದನ್ನು ದಿಟ್ಟಿಸುತ್ತ ನಿಂತ ವಾರಿಣಿಗೆ “ಎಲ್ಲವನ್ನು ಕಟ್ಟಿ ಪೆಠಾರಿಯಲ್ಲಿ ಸೇರಿಸುತ್ತೇನೆ.“ಅಂದ. ಹಾಗೆಯೇ ನೋಡುತ್ತ ಕೂತವನಿಗೆ ಮದುವೆಯಾದ ಹೊಸತರಲ್ಲಿ ಮಾಡಿದ ಖರ್ಚುಗಳು ಕಣ್ಣಿಗೆ ಬಿದ್ದವು. ಇಬ್ಬರೂ ಲಾಲ್‌ಬಾಗ್‌ಗೆ ರಿಕ್ಷಾದಲ್ಲಿ ಹೋಗಿದ್ದು, ತಿಂಡಿ ತಂದದ್ದು, ಪಾಸ್‌ಪೋರ್ಟ್ ಕೊಂಡದ್ದು ಎಲ್ಲ ಇತ್ತು. ಹಿಂತಿರುಗುವ ಖರ್ಚಿನ ವಿವರ ಇರಲಿಲ್ಲ. ಅದನ್ನು ಅವಳೇ ಕೊಟ್ಟಿರಬೇಕು. ಅವಳ ಲೆಕ್ಕದ ಪುಸ್ತಕದಲ್ಲದು ಖಂಡಿತವಾಗಿ ಇರುತ್ತದೆ ಅಂದುಕೊಂಡ . ಪುಟ ತಿರುವುತ್ತಿದ್ದ ಹಾಗೆ ಶರ್ಟು, ಚಡ್ಡಿ, ಬ್ರಾ ಖರ್ಚುಗಳೂ ಕಂಡವು. ನೋಟ್‌ಬುಕ್ ಎಂಬ ಖರ್ಚು ನೋಡಿ ತಾವು ಗರ್ಭನಿರೋದಕಕ್ಕೆ ನೋಟ್‌ಬುಕ್ ಅಂಬ ಗುಟ್ಟಿನ ಹೆಸರಿಟ್ಟ ಸಂದರ್ಭ ನೆನಪಾಯಿತು. ಪುಸ್ತಕ ನೋಡುತ್ತ ನಂಬಿ ಖಿನ್ನನಾಗಿ ಕೂತುಬಿಟ್ಟ. ಸಿಗರೇಟು ತಂಬಾಕುಗಳ ಹಾಗೆ ಈ ಲೆಕ್ಕವೂ ಅಂಟಿಕೊಂಡ ಚಟವಾಗಿ ಕಂಡಿತು. ಪ್ರತಿವಾರ ಲೆಕ್ಕ ಮಾಡಿ ತಾಳೆ ಹಚ್ಚುವ ಕ್ಷಣ ಬಂದಾಗ ಏನೋ ಉದ್ವೇಗವಾಗುತ್ತಿತ್ತು.ಪ್ರತಿಬಾರಿ ತಾಳೆ ಹಚ್ಚಿದನಂತರ ಏನೋ ಸಮಾಧಾನವಾಗುತ್ತಿತ್ತು. ಅದನ್ನೇ ಯೋಚಿಸುತ್ತ ಕೂತವನಿಗೆ ತನ್ನ ಈವರೆಗಿನ ಯಶಸ್ಸಿನಲ್ಲಿ ಈ ಲೆಕ್ಕದ ಪುಸ್ತಕದ ಪಾತ್ರವೂ ಇದೆ ಅನಿಸತೊಡಗಿತು. ವಿದ್ಯಾರ್ಥಿ ದಿನಗಳಲ್ಲಂತೂ ತಾನು ಹೆಚ್ಚು ಚಹ ಕುಡಿಯುತ್ತಿದ್ದೇನೆಂಬುದೋ, ಪರೀಕ್ಷೆ ಹತ್ತಿರ ಬಂದರೂ ಹೆಚ್ಚು ಸಿನಿಮಾ ನೋಡುತ್ತಿದ್ದೆನೆಂಬುದೋ ಲೆಕ್ಕ ಬರಿಯುವಾಗ ಅರಿವಿಗೆ ಬಂದು . ಅದು ನೈತಿಕತೆಯ ಕಾವಲುಗಾರನ ಥರ ಅವನನ್ನು ಅಂಕೆಯಲ್ಲಿಡುತ್ತಿತ್ತು. ಪ್ರತಿಬಾರಿ ಊರಿಗೆ ಪತ್ರ ಬರೆದಾಗಲೂ ಕೊನೆಯಲ್ಲಿ “ಲೆಕ್ಕ ತಾಳೆಯಾಗಿದೆ .“ಎಂದು ಬರೆದು ಎಲ್ಲವೂ ಸರಿಯಾಗಿದೆ ಎಂದು ಸೂಚಿಸುತ್ತಿದ್ದ. ತಾನು ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟುತ್ತ, ತನ್ನ ತಂದೆ ತಾಯಿಯರ ಅಪೇಕ್ಷೆಯ ಮಟ್ಟ ಮುಟ್ಟುತ್ತ, ಕೆಲಸದಲ್ಲಿ ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸಿಯೂ ಅವುಗಳನ್ನು ದಾಟಿ ಮುಂದೆ ಹೋಗುತ್ತ ಈಗಿನ ಈ ಸ್ಥಿತಿಗೆ ಬರುವಲ್ಲಿ ಲೆಕ್ಕದ ಪುಸ್ತಕ ತನ್ನ ದೇಣಿಗೆಯನ್ನು ಕೊಟ್ಟಿದೆ ಎಂದು ಅನಿಸುತ್ತಿದ್ದಂತೆ ಭಾವುಕನಾದ. ಆದರೆ ತಾನು ಇನ್ನೂ ಮುಂದಕ್ಕೆ ನೆಗೆಯಬೇಕಾದರೆ ಈ ಎಲ್ಲವನ್ನೂ ಬಿಟ್ಟೇ ನೆಗೆಯಬೇಕು ಅಂತ ಪ್ರವೀಣ್ ಹೇಳಿದ ಮಾತು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಲಿತ್ತು. ಅದನ್ನೆ ಎಂದುಕೊಳ್ಳುತ್ತ ಕುಳಿತವನಿಗೆ ತಾನಿನ್ನು ಲೆಕ್ಕ ಬರೆಯಬೇಕಾಗಿಲ್ಲವೆಂಬುದು ಭರಿಸಲಾಗದ ಸ್ವಾತಂತ್ರ್ಯದ ಹಾಗನಿಸಿತು. ಈವತ್ತೆ ತಾನು ತಂದ ಬಿಯರ್ ಬಾಟಲುಗಳು, ಗೇರುಬೀಜ, ಹವಾಯಿಚಪ್ಪಲಿಗಳನ್ನು ನೆನಪಿಸಿಕೊಳ್ಳುತ್ತ, ಇನ್ನು ಮುಂದೆ ತಾನು ಈ ಸಂಖ್ಯೆಗಳನ್ನು ದಾಖಲಿಸುವ ಪ್ರಮೇಯವಿಲ್ಲ, ಪಾಪ ಪುಣ್ಯಗಳ ಎಗ್ಗಿಲ್ಲ . ದಿನದ ಕೊನೆಗೆ ಪ್ರತಿ ಖರ್ಚನ್ನೂ ತನಗೆ ತಾನೆ ಹೇಳಿಕೊಳ್ಳುವ ಅಗತ್ಯವಿಲ್ಲ ಅನಿಸಿ ಏನೋ ನಿರಾಳತೆಯನ್ನು, ನೋವು ತುಂಬಿದ ನಿರಾಳತೆಯನ್ನು ಅನುಭವಿಸಿದ. ಪ್ರತಿಬಾರಿಯಂತೆ ಈ ಸಲವೂ ಹೊಸ ವರ್ಷದ ಆರಂಭವನ್ನು ಆಚರಿಸಲು ಇನ್ನೊಂದು ತಿಂಗಳಲ್ಲಿ ತಮ್ಮ ಮನೆಗೆ ಬರಲಿರುವ ತಂದೆ ತಾಯಿಯರಿಗೆ ತಾನು ಲೆಕ್ಕ ನಿಲ್ಲಿಸಿದ್ದನ್ನು ಹೇಗೆ ಹೇಳುವುದು ಎಂದು ಯೋಚಿಸತೊಡಗಿದ. ಅವರಿಗೆ ಬಹಳ ಸಿಟ್ಟು ಬರಬಹುದೆನ್ನಿಸಿತು, ನೋವಾಗುವುದೆನಿಸಿತು. ಈ ಪಾಪಪ್ರಜ್ಞೆಯನ್ನು ತಾನು ಅರಗಿಸಿಕೊಂಡಲ್ಲಿ ಬೇರೆ ಯಾವುದನ್ನಾದರೂ ದಕ್ಕಿಸಿಕೊಂಡೇನು ಅನಿಸಿತು. ಈ ವಿಷಯವನ್ನು ಅವರು ಬಂದಾಗ ಹೇಳುವುದೋ ಅಥವ ಪತ್ರ ಬರೆಯಲೋ ಎಂದು ಯೋಚಿಸಿ, ಈಗಲೆ ಪತ್ರದ ಮೂಲಕವೇ ತಿಳಿಸುವುದು ಒಳ್ಳೆಯದೆನ್ನಿಸಿ ಬರೆಯಲು ಕೂತ. +ಏಪ್ರಿಲ್ ೧೯೯೫ +ಬಾಗಿಲು ತೆಗೆದದ್ದೇ ನನ್ನ ಜತೆ ಮತ್ತೊಬ್ಬ ಸಣ್ಣ ಅತಿಥಿಯನ್ನು ನೋಡಿ ಸಿಡಿಮಿಡಿಯನ್ನು ಅಣ್ಣಗೆ ವ್ಯಕ್ತಪಡಿಸಿ ಸುಮಿ ಸರ್ರಂತ ತಿರುಗಿ ಸೀದ ಒಳಹೋದಳು. ದಂಗಾದ ಛೋಟು ಮಿಕಿಮಿಕಿ ನನ್ನೇ ನೋಡಿದ. “ಬಾ ಛೋಟೂ ಬಾ”-ಎಂದು ಅವನ […] +(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […] +ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_681.txt b/Kannada Sahitya/article_681.txt new file mode 100644 index 0000000000000000000000000000000000000000..2167c9f3b2e757a508c33df82c2f011ccca99aab --- /dev/null +++ b/Kannada Sahitya/article_681.txt @@ -0,0 +1,150 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” ಎಂದರು. ಅಪ್ಪಯ್ಯ ಅಮ್ಮ ಎಂದು ಅವರೆಂದ ಕೂಡಲೆ, ಊರಿನಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಅಮ್ಮನ ಸೀರೆ ಹೊದ್ದು ಬೆಚ್ಚಗೆ ಮಲಗಿರುತ್ತಿದ್ದೆ. ಆಮೇಲೆ ಅಮ್ಮ ಏಳಿಸಿ ಮುಖ ತೊಳೆಸಿ ಕಾಫಿ ಕೊಡುತ್ತಿದ್ದಳು ಎಂದು ನೆನಪಾಗಿ ವ್ಯಥೆಯಾಯಿತು. ಬೇಲಿ ದಾಟುವುದಕ್ಕೆ ಮುಂಚೆ ನಿಂತು ಶೇಷಗಿರಿ ಉಡುಪರು ‘ಯಮುನಾ’ ಎಂದು ಅವರ ಮಗಳನ್ನು ಕರೆದರು. ತಲೆಯ ಮೇಲೆ ಕೆಂಪು ಸೀರೆಯ ಸೆರಗನ್ನು ಎಳೆದುಕೊಳ್ಳುತ್ತ ಯಮುನಕ್ಕ ಬಾಗಿಲಲ್ಲಿ ಬಂದು ನಿಂತರು. ಶೇಷಗಿರಿ ಉಡುಪರು ಉಣುಗೋಲು ಹಾಕುತ್ತ ಹೇಳಿದರು. “ಹಾಗಾದರೆ ನಾನು ಹೋಗಿ ಬರ್ತೇನೆ . ಏನು? ಮಕ್ಕಳ ಮೇಲೆ ನಿಗಾ ಇರಲಿ . ಹೊಳೆಯಲ್ಲಿ ಹೆಚ್ಚು ಹೊತ್ತು ಈಸಲು ಬಿಡಬೇಡ. ಗೋಕರ್ಣದಲ್ಲಿ ಯಾಗ ಮುಗಿಸಿಕೊಂಡು ಉದ್ಯಾವರಕ್ಕೆ ಹೋಗಿಬರೋದು ಮೂರು ತಿಂಗಳಾದರೂ ಆದೀತು. ಮಕ್ಕಳು ನಿತ್ಯ ಬಾಯಿಪಾಠ ಮಾಡಲಿ. ಉಪಾಧ್ಯರಿಗೆ ಉಳಿದದ್ದೆಲ್ಲ ಹೇಳಿದ್ದೇನೆ.” ನನ್ನ ಅಪ್ಪಯ್ಯನಿಗಿಂತ ದೊಡ್ಡವರಾಗಿ ಕಾಣುತ್ತಿದ್ದ ಶೇಷಗಿರಿ ಉಡುಪರೆಂದರೆ ನನಗೆ ಭಯ. ಆದರೆ ಅಮ್ಮನಿಗಿಂತ ಚಿಕ್ಕವರಾಗಿದ್ದ ಯಮುನಕ್ಕ ಎಂದರೆ ಸಲಿಗೆ. ಉಡುಪರು ನನಗೆ ಬೆನ್ನು ತಿರುಗಿಸಿದ ಕೂಡಲೇ ಯಮುನಕ್ಕ ನಾನೂ ಊರಿಗೆ ಹೋಗಬೇಕೆಂದು ಹಠಮಾಡಿದೆ. ‘ಇಕೊ ಸುಮ್ಮನಿರು. ಮುಖ ತೊಳೆದು ಹೋಗಿ ತುಳಸಿ ಕೊಯ್ದುಕೊಂಡು ಬಾ’ ಎಂದು ಅವರು ಒಳಗೆ ಹೋದರು. ಅವರು ಒಳಗೆ ಹೋಗುತ್ತಿದ್ದಂತೆ ವಿಶ್ವನಾಥ ಶಾಸ್ತ್ರಿ, ಗಣೇಶ ಎದ್ದು ಬಂದರು. ಶೇಷಗಿರಿ ಉಡುಪರ ಬೆನ್ನು ಕತ್ತಲಿನಲ್ಲಿ ಮಾಯವಾಗುವುದನ್ನು ನೋಡುತ್ತ, ಅಳುತ್ತ ನಿಂತಿದ್ದ ನನ್ನನ್ನು ನೋಡಿ ನಕ್ಕರು. ಅವರ ಜೊತೆ ನಾನು ಬಾವಿಕಟ್ಟೆಗೆ ಮುಖ ತೊಳೆಯಲು ಹೋದೆ. ಶಾಸ್ತ್ರಿ “ಏನೋ ಹೆಣ್ಣಿಗ” ಎಂದು ನನ್ನನ್ನು ವಿಚಾರಿಸಿದ. ಗಣೇಶ ಬಿಂದಿಗೆಯನ್ನು ಸರ್ರನೆ ಬಾವಿಗಿಳಿಸುತ್ತ – “ಅಲ್ಲೋ ಶಾಸ್ತ್ರಿ. ಈ ಪೆಚ್ಚು ಉಪನಯನದ ಹಿಂದಿನ ರಾತ್ರಿ ತೊಡೇನ ಕೊಯ್ದು ಕಪ್ಪೆ ತುಂಬುತ್ತಾರೇಂತಾ ಚೇಷ್ಟೆ ಮಾಡಿದ್ರೆ ನಂಬಿಕೊಂಡು ಅಳ್ತಾ ಕೂತಿತ್ತಂತೆ” ಎಂದು ಬಿಂದಿಗೆಯ ನೀರು ತುಂಬುತ್ತಿರಲು ನಕ್ಕ. ನಾನು ಅಳುತ್ತ ಅಡಿಗೆ ಮನೆಗೆ ಹೋದೆ. ‘ನೀರು ಸೇದಿಕೊಡುತ್ತೇವೆ ಬಾರೊ” ಎಂದು ಅವರಿಬ್ಬರೂ ಕೂಗಿ ಕರೆದರು. ಯಮುನಕ್ಕ ಮಜ್ಜಿಗೆ ಕಡೆಯುತ್ತಿದ್ದರು. ಅವರ ಮುಖವೂ ಅಳುಬುರುಕಾಗಿ ಕಂಡಿತು. ಎರೆಡೆರಡು ಸಾರಿ ನಾನು ಹೇಳಿದ ಮೇಲೆ ಅವರು ನನ್ನ ಕಡೆಗೆ ತಿರುಗಿ “ಹೋಗಲಿ ಬಿಡು, ನೀನು ಅವರ ಜೊತೆ ತುಳಸಿ ಕೊಯ್ಯಲು ಹೋಗಬೇಡ. ನಿನಗೆ ನಾನು ಮುಖ ತೊಳಿಸುತ್ತೇನೆ ” ಎಂದು ಸಮಾಧಾನ ಹೇಳಿದರು. ಮುಖ ತೊಳೆಸಿಯಾದ ಮೇಲೆ ನಾನು ಒಬ್ಬನೇ ಬುಟ್ಟಿ ಹಿಡಿದು ಪೂರ್ವದಿಕ್ಕಿಗೆ ಹೊರಟೆ. ದಾರಿಯಲ್ಲಿ ಬೆಳೆದಿದ್ದ ತುಂಬೆಹೂವನ್ನೆಲ್ಲ ಕೊಯ್ದೆ. ನಾನಿನ್ನೂ ಸಣ್ಣವನು, ಕುಳ್ಳಗಿದ್ದೇನೆಂದು, ಶಾಸ್ತ್ರಿ – ‘ತುಂಬೇಗಿಡಕ್ಕ ಏಣಿ ಹಾಕೋನು’ ಎಂದು ಹಾಸ್ಯ ಮಾಡುತ್ತಿದ್ದನು. ಶಾಸ್ತ್ರಿ ನನಗಿಂತ ದೊಡ್ಡ ಹುಡುಗ: ತುಂಬ ದೊಡ್ಡ ಹುಡುಗನಂತೆ ಕಾಣಿಸುತ್ತಿದ್ದ. ಅವನಿಗೆ ಅಪ್ಪ ಅಮ್ಮ ಇರಲಿಲ್ಲ; ಉಡುಪರ ಹತ್ತಿರ ವೇದ ಕಲಿಯುತ್ತಿದ್ದ ನನ್ನ ಹಾಗೆ. ಅವನಿಗೆ ಒಂದು ಕಣ್ಣು ಸಣ್ಣ, ಇನ್ನೊಂದು ದೊಡ್ಡಗಿದ್ದುದರಿಂದ ಗಣೇಶ ಅವನನ್ನು ಒಕ್ಕಣ್ಣಿನ ಶುಕ್ರಾಚಾರಿ ಎಂದು ಹಾಸ್ಯ ಮಾಡುತ್ತಿದ್ದ. ಅವರಿಬ್ಬರೂ ಒಂದು ಜೊತೆ; ನಾನೇ ಬೇರೆ. ಬುಟ್ಟಿ ಹಿಡಿದು ನಡೆಯುತ್ತ ಹಾಗೇ ಗೋಪಾಲ ಜೋಯಿಸರ ಮನೆಗೆ ಹೋದೆ. ಅಲ್ಲಿ ಬಿಲ್ವಪತ್ರೆಯ ಮರವಿದ್ದುದರಿಂದ ಅದರ ಪತ್ರೆ ಕೊಯ್ಯಲು ಗೋಪಾಲ ಜೋಯಿಸರ ಅಕ್ಕ ಗೋದಾವರಮ್ಮನನ್ನು ದೋಟಿಗಾಗಿ ಕೇಳಿದೆ. ಗೋದಾವರಮ್ಮನೂ ಯಮುನಕ್ಕನಂತೆ ಮಡಿ ಹೆಂಗಸು. ಆದರೆ ಯಮುನಕ್ಕ ಅವರಿಗಿಂತ ತುಂಬ ಚಿಕ್ಕವರು: ಕೆಂಪಗೆ ಗುಂಡುಗುಂಡಗೆ ಅಮ್ಮನಿಗಿಂತಲೂ ಚೆನ್ನಾಗಿ ಯಮುನಕ್ಕ ಕಾಣುತ್ತಿದ್ದರು. ಯಮುನಕ್ಕನಿಗೆ ಮದುವೆಯಾದ ಸ್ವಲ್ಪ ದಿನದಲ್ಲೆ ಅವರ ಗಂಡ ಹಾವು ಕಚ್ಚಿದ್ದರಿಂದ ಸತ್ತರಂತೆ. ಶೇಷಗಿರಿ ಉಡುಪರ ಹೆಂಡತಿ ಸತ್ತ ಮೇಲೆ – ಅಪ್ಪನನ್ನು ನೋಡಿಕೊಳ್ಳಲು ಒಂದು ಜನ ಬೇಕಲ್ಲ – ಎಂದು ಯಮುನಕ್ಕ ಉಡುಪರ ಜೊತೆಗೇ ಇರುವುದಂತೆ. ಹೀಗೆಂದು ಗಣೇಶ ನನಗೆ ಹೇಳಿದ್ದ. ಗಣೇಶ ಉಡುಪರಿಗೆ ದೂರದಿಂದ ಸಂಬಂಧ. ಕೈಯಿಂದ ದೋಟಿಯನ್ನು ಎತ್ತಿ ನೆಗೆಯುತ್ತ ಬಿಲ್ವಪತ್ರೆ ಕೊಯ್ಯುತ್ತಿದ್ದ ನನ್ನನ್ನು ಕಂಡು ಗೋದಾವರಮ್ಮ, ಬಿಡು ನಾನು ಕೊಯ್ದು ಕೊಡುತ್ತೇನೆಂದು ಕೊಯ್ದುಕೊಟ್ಟರು. ಆಮೇಲೆ ನಾನು ಅವರ ಹಿತ್ತಲಿನಲ್ಲಿದ್ದ ತುಳಸಿ ಕೊಯ್ಯುತ್ತಿರಲು, +“ಉಡುಪರು ಗೋಕರ್ಣಕ್ಕೆ ಹೋದರೇನೊ?” ಎಂದರು . ನಾನು ‘ಹೌದು’ ಎಂದೆ. +“ಯಮುನ ಹೇಗಿದ್ದಾಳೆ” ಎಂದರು. +“ಚೆನ್ನಾಗಿದ್ದಾರೆ” ಎಂದೆ. +“ಎರಡು ಮೂರು ದಿನದಿಂದ ದೇವಸ್ಥಾನಕ್ಕೇ ಬರ್ತಿಲ್ಲ- ಹುಷಾರಿಲ್ಲಾಂತ ಕೇಳಿದೆ” ಎಂದರು. +“ನನಗೆ ಗೊತ್ತಿಲ್ಲ” ಎಂದೆ. +“ಗೊತ್ತಿಲ್ಲಾಂದರೆ ಏನೊ? ಮಲಗಿರೋದಿಲ್ಲವ ಅವರು ? ಉಡುಪರು ಏನೂ ಹೇಳಲಿಲ್ಲವ?” +“ತಲೆ-ಸುತ್ತು ಬರ್ತದೆ ಅಂತ ಹೇಳಿ ಮೊನ್ನೆ ಮಲಗಿಕೊಂಡಿದ್ದರು. ಉಡುಪರು ಅದಕ್ಕೆ ಮದ್ದುಕೊಟ್ಟರು ಅಷ್ಟೆ. ಇನ್ನೇನೂ ಇಲ್ಲ”, ಎಂದೆ ನಾನು. +“ಓ ಹಾಗೊ?” ಎಂದು ಗೋದಾವರಮ್ಮ ನಕ್ಕರು. ಒಳಗೆ ಹೋಗುತ್ತ ಗೋಪಾಲ ಜೋಯಿಸರಿಗೆ- “ಕೇಳಿದೆಯೇನೊ? ಯಮುನಾಗೆ ಜ್ವರ ಬರ್ತಿಲ್ವಂತೆ. ಜ್ವರ ಬರದೇನೇ ಜ್ವರಗೆಡ್ಡೆ ಬೆಳೆದಿರಬೇಕು ಪಾಪ” ಎಂದು ನಕ್ಕರು. ಅವರ ಮನೆಯಿಂದ ಹೊರಟು ಬರುವಾಗ ಅಗ್ನಿಕಾರ್ಯಕ್ಕಾಗಿ ಅಶ್ವತ್ಥವೃಕ್ಷದ ಒಣಗಿದ ಸಮಿಧೆಗಳನ್ನು ಕೇರಿಯ ತುದಿಯಲ್ಲಿದ್ದ ಮರದ ಬುಡದಿಂದ ಆರಿಸಿಕೊಂಡು ಬಂದೆ. ಯಮುನಕ್ಕ ನಾನು ಬರೋದನ್ನೆ ಕಾಯುತ್ತಿದ್ದರು. “ಎಷ್ಟು ಹೊತ್ತು? ಉಪಾಧ್ಯರು ಕಾದಿದ್ದಾರೆ ನೋಡು” ಎಂದು ಅವಸರವಾಗಿ ಬಾವಿಯಿಂದ ಎರಡು ಬಿಂದಿಗೆ ತಣ್ಣೀರನ್ನು ನನ್ನ ತಲೆಯ ಮೇಲೆ ದಡದಡ ಹೊಯ್ದು, ‘ಬೇಗ ಹೋಗಿ ಜಪಕ್ಕೆ ಕೂತುಕೊ’ ಎಂದರು. ಒದ್ದೆ ಪಂಚೆಯನ್ನು ಹಿಂಡಿ ಅದರಿಂದ ನನ್ನ ದೊಡ್ಡ ಜುಟ್ಟನ್ನು ಒರೆಸಿ ಅದನ್ನು ಇಳಿಬಿಟ್ಟು ತುದಿಗೊಂದು ಗಂಟು ಹಾಕಿ, ಒದ್ದೆ ಬಟ್ಟೆಯಲ್ಲೆ ನಡುಮನೆಗೆ ಓಡಿ ಬಂದು ಯಮುನಕ್ಕನಿಂದ ಮಡಿಯಲ್ಲಿ ಒಣಗಿಸಿದ ಅಂಗವಸ್ತ್ರವನ್ನು ಇಸಕೊಂಡು ಉಟ್ಟು ಇನ್ನೊಂದು ಅಂಗವಸ್ತ್ರವನ್ನು ಹೊದ್ದು ಪಂಚಪಾತ್ರೆ ಹಿಡಿದು ಹೊರಟೆ. “ಏ ಕೌಪೀನ ಹಾಕಿಕೊಂಡಿದೀಯೇನೊ” ಎಂದರು ಯಮುನಕ್ಕ. ಅದನ್ನು ಮರೆತಿದ್ದೆ. ಯಮುನಕ್ಕ ನಕ್ಕು ನನ್ನ ಬೆಳ್ಳಿಯ ಉಡದಾರಕ್ಕೆ ಕೌಪೀನವನ್ನು ಅವರೇ ಸಿಕ್ಕಿಸಿ ಇನ್ನು ಹೋಗೆಂದರು. ಮೆಲೆ-ಕಜ್ಜಿ ಮುಖದ ಉಪಾಧ್ಯರು ‘ಎಷ್ಟು ಹೊತ್ತೆಂದು’ ನನಗೆ ಗದರಿಸಿದರು. ಉಡುಪರು ಒಂದು ದಿನ ನನಗೆ ಗದರಿಸಿದ್ದಿಲ್ಲ. ‘ಇನ್ನೂ ಜಪದ ಮಂತ್ರವನ್ನು ನೀನು ಕಲಿತಿಲ್ಲವಲ್ಲ’ ಎಂದು ಬೈಯುತ್ತ ಜಪ ಮಾಡಿಸಿದರು. ನನಗೆ ಅವರು ಬೆಯ್ದರೆಂದು ಜಪಮಾಡುತ್ತ ಕೂತಿದ್ದ ಶಾಸ್ತ್ರಿಗೆ ಖುಷಿಯಾಗಿ, ಅವನು ನಕ್ಕು, ಒಕ್ಕಣ್ಣಿನಲ್ಲಿ ಗಣೇಶನ ಕಡೆ ನೋಡಿದ. ಜಪ ಮುಗಿದ ಮೇಲೆ ಅಗ್ನಿಕಾರ್ಯ ಮಾಡಿದೆ. ಉಪಾಧ್ಯರು ಇದಾದ ಮೇಲೆ ದೇವಸ್ಥಾನಕ್ಕೆ ಪೂಜೆಗೆಂದು ಹೋಗುವವರು“ಗಂಜಿಯೂಟವಾದ ಮೇಲೆ ಬಂದು ಗಂಧ ತೇದು ಕೊಡಿ” ಎಂದರು. ಸಾಲಾಗಿ ಬಳ್ಳೆ ಹಾಕಿದ್ದರು ಒಳಗೆ. ನಾವು ಮೂವರೂ ಅವಸರದಿಂದ ಓಡಿ ಕೂತುಕೊಂಡೆವು. ಯಮುನಕ್ಕ ಅಕ್ಕಿ ನುಚ್ಚಿನ ಗಂಜಿಯನ್ನು ಬಡಿಸಿ, ತೆಂಗಿನ ಎಣ್ಣೆಯನ್ನು ಹಾಕಿದರು. ಬಾಡಿಸಿಕೊಳ್ಳಲು ಮಿಡಿ ಉಪ್ಪಿನಕಾಯಿಯನ್ನು ಕೊಟ್ಟರು. ತೆಂಗಿನಕಾಯಿ ಮಸ್ತಾಗಿದ್ದ ಕಾಲದಲ್ಲಿ ನಂಗೆ ಕಾಯಿಹಾಲಿನ ಗಂಜಿ ಸಿಗುತ್ತಿತ್ತು. +ನಾವು ಗಂಜಿಯನ್ನು ಶಬ್ದಮಾಡುತ್ತ ಸುರಿದು ಎದ್ದೆವು. ಶಾಸ್ತ್ರಿ ಮತ್ತು ಗಣೇಶ ಹೊರಗೆ ಹೋದರು. ನಾನು ಅಡಿಗೆ ಮನೆಯಲ್ಲೆ ಉಳಿದೆ. “ನಿಮಗೆಲ್ಲ ಇವತ್ತು ಸಾಹುಕಾರರ ಮನೇಲಿ ಊಟ. ನಿನ್ನೆ ಬಂದು ಹೇಳಿಕೆ ಹೇಳಿ ಹೋದರಲ್ಲ” ಎಂದರು ಯಮುನಕ್ಕ . ಹಾಗಾದರೆ ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಪಾಯಸದ ಊಟವೆಂದು ನನಗೆ ಗೆಲುವಾಯಿತು. ಜೊತೆಗೆ ದಕ್ಷಿಣೆ ಸಿಗುತ್ತದೆ. ಉಪನಯನಕ್ಕೆ ಮುಂಚೆ ಬರೆ ಒಂದು ಬಿಲ್ಲೆ ದಕ್ಷಿಣೆ ಸಿಗುತ್ತಿತ್ತು. ಆದರೆ ಉಪನಯನವಾದ ಮೇಲೆ ಒಂದಾಣೆಯೆಂದು, ನನಗೆ ಮುಂಜಿಯಾಗಿದೆಯೆಂದು ಸಂತೋಷ. ಮರಕೋತಿಯಾಡುವ ಹಾಗಿಲ್ಲ, ನಾಯಿಗಳಿಗೆ ಕಲ್ಲು ಹೊಡೆದು ಬೆದರಿಸುವ ಹಾಗಿಲ್ಲ,ಚೆಡ್ಡಿ ಹಾಕಿಕೊಳ್ಳುವ ಹಾಗಿಲ್ಲ, ಊಟಕ್ಕೆ ಕೂತಾಗ ಮಾತಾಡುವ ಹಾಗಿಲ್ಲ ಎಂಬುದೆಲ್ಲ ಮುಂಜಿಯಾದ ಮೇಲೆ ಬೇಜಾರಾದರೂ ಎಲೆಯ ಪಕ್ಕದಲ್ಲಿಟ್ಟುಕೊಂಡ ಪಂಚಪಾತ್ರೆಯಲ್ಲಿ ಒಂದಾಣೆ ಬೀಳುವುದೆಂದು ಸಂತೋಷ. ಯಮುನಕ್ಕನ ಹತ್ತಿರ ಒಂದು ತೂತದ ಡಬ್ಬಿಯಿತ್ತು. ಅದರಲ್ಲಿ ಬಂದ ದಕ್ಷಿಣೆಯನ್ನೆಲ್ಲಾ ಹಾಕಿ ಕೂಡಿಸುತ್ತಿದ್ದೆ. ಮನೆಗೆ ಹೋದಾಗ ಅಮ್ಮನಿಗೆ ಕೊಡು ಎಂದಿದ್ದರು ಯಮುನಕ್ಕ . ಜಿಪುಣ ಎಂದು ಹಂಗಿಸುತ್ತಿದ್ದ ಶಾಸ್ತ್ರಿ. +ನಾನು ಗೋದಾವರಮ್ಮನ ಮನೆಗೆ ಬಿಲ್ವಪತ್ರೆಗೆಂದು ಹೋಗಿದ್ದು ಅಲ್ಲಿ ಅವರು ಕೇಳಿದ್ದು ಹೇಳಿದೆ. ಯಮುನಕ್ಕನ ಮುಖ ಪೆಚ್ಚಾಯಿತು. ‘ಇನ್ನೇನು ಕೇಳಿದರು ಹೇಳು. ಹೇಳು’ ಎಂದು ಒತ್ತಾಯ ಮಾಡಿದರು. ‘ಏನೋ ಜ್ವರಗಡ್ಡೆಯೆಂದು ಅವರವರೆ ಮಾತಾಡಿಕೊಂಡು ನಕ್ಕರೆಂದು’ ಹೇಳಿದೆ . ಯಮುನಕ್ಕ ಸೆರಗಿನಿಂದ ಮುಖ ಮುಚ್ಚಿಕೊಂಡು ಅತ್ತರು. “ಇನ್ನು ಯಾರಾದರೂ ಕೇಳಿದರೆ ಜ್ವರ ಬರ್ತಿದೆ ಅಂತ ಹೇಳು” ಎಂದರು. ಯಮುನಕ್ಕ ಬಿಡುವು ಸಿಕ್ಕಾಗಲೆಲ್ಲ ಮಲಗಿಯೇ ಇರುತ್ತಿದ್ದುದರಿಂದ, ದೇವಸ್ಥಾನಕ್ಕೆ ಬರೋದು ಬಿಟ್ಟಿದ್ದರಿಂದ ನಾನು ಇರಬಹುದು ಎಂದುಕೊಂಡೆ. ಮತ್ತೆ ಮಧ್ಯಾಹ್ನಕ್ಕೆ ಸಮಯವಾದ್ದರಿಂದ ಜಪಕ್ಕೆ ಕೂತೆ. ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಯಮುನಕ್ಕನ ಹೊರತು ನಾವೆಲ್ಲ ಸಾಹುಕಾರರ ಮನೇಲಿ ಗಡದ್ದಾಗಿ ಊಟ ಮಾಡಿದೆವು. ಅವರ ಅಮ್ಮನ ಶ್ರಾದ್ಧವಂತೆ. ಊಟ ಮುಗಿದ ಮೇಲೆ ಉಪಾಧ್ಯರು ನಮ್ಮನ್ನು ಕರೆದು, “ಇವತ್ತು ನನಗೆ ಬರಲು ಆಗೋದಿಲ್ಲ ಕಣ್ರೋ . ನೀವು ನೀವೇ ಕೂತು ಚಿಂತನೆ ಮಾಡಿಕೊಳ್ರಿ . ಏ ಶಾಸ್ತ್ರಿ, ನೀನು ಈ ಮಾಣಿ ಸರಿಯಾಗಿ ಕಲ್ತಿದೆಯೋ ಇಲ್ಲವೋ ನೋಡಿಕೊ” ಎಂದು ನನ್ನನ್ನು ಶಾಸ್ತ್ರಿಗೆ ಒಪ್ಪಿಸಿ ಹೋದರು. ಊಟವಾದ ಮೇಲೆ ನಿತ್ಯ ಮಧ್ಯಾಹ್ನ ನಮಗೆ ಶ್ರೀಸೂಕ್ತ, ಪುರುಷಸೂಕ್ತ ಇತ್ಯಾದಿ ಮಂತ್ರಗಳನ್ನು ಉಡುಪರು ತಕಲಿ ಹಿಡಿದು ಜನಿವಾರ ಮಾಡುತ್ತ ಬಾಯಿಪಾಠ ಮಾಡಿಸುತ್ತಿದ್ದರು. ದೂರದಲ್ಲಿ ಯಮುನಕ್ಕ ಕೂತು ದೇವಸ್ಥಾನಕ್ಕೆಂದು ಹೂಬತ್ತಿ ಹೊಸೆಯುತ್ತಿದ್ದರು. ಉಡುಪರು ಮನೆಯಲ್ಲಿದ್ದಾಗ ಈ ಪಾಠ ಒಂದು ದಿನ ತಪ್ಪಿದ್ದಿಲ್ಲ. ಆದರೆ ಇವತ್ತು ತಪ್ಪಿತೆಂದು ನನಗೆ ಖುಷಿಯಾಯಿತು. +ಶಾಸ್ತ್ರಿ ನನ್ನನ್ನು ಕರೆದು “ಎಲ್ಲಿ ಪುರುಷಸೂಕ್ತವನ್ನು ಹೇಳು” ಎಂದ. ಅವನಿಗೆ ನನಗಿಂತ ಹೆಚ್ಚು ಪಾಠವಾಗಿತ್ತು. ಒಳ್ಳೆ ಕುಂಟೆಕೋಣನ ಹಾಗೆ ಇದ್ದಾನೆಂದು ಯಮುನಕ್ಕ ಅವನನ್ನು ಬಯ್ಯುತ್ತಿದ್ದರು. ನಾನು ಪೆಚ್ಚು ಮುಖ ಹಾಕಿ ಅವನೆದುರು ನಿಂತೆ. “ಹೋಗಲಿ ನಿನ್ನ ಪ್ರವರ ಗೋತ್ರಗಳನ್ನಾದರೂ ಸರಿಯಾಗಿ ಹೇಳು” ಎಂದ. ಗಣೇಶ ನಗುತ್ತಿದ್ದ. ನಾನು “ಆಂಗೀರಸ, ಅಂಬರೀಷ ಯೌವನಾಶ್ವ ತ್ರಯಾರ್ಷೇಯ ಪ್ರವರಾನ್ವಿತ, ಆಂಗೀರಸ ಗೋತ್ರ ಆಶ್ವಲಾಯನ ಸೂತ್ರ ಋಕ್ಷಾಖಾಧ್ಯಾಯೀ ನಾರಾಯಣ ಶರ್ಮ…..” ಎನ್ನುತ್ತಿದ್ದಂತೆ “ಎಲ್ಲಿ ನಿಂತುಕೊಂಡು ಕಿವಿಗಳನ್ನು ಮುಟ್ಟಿ ಸರಿಯಾಗಿ ಹೇಳು” ಎಂದ. ನಾನು ಪುನಃ ಅದನ್ನೆಲ್ಲ ಹೇಳಿ “ಅಹಂ ಭೋ ಅಭಿವಾದಯೇ” ಎಂದೆ. “ಎಲ್ಲಿ ನಮಸ್ಕಾರವನ್ನೂ ಮಾಡು” ಎಂದ . ನನಗೆ ಹಿಗ್ಗಿತು. ಹೋಗು ಎಂದಾಕ್ಷಣ ಓಡಿ ಯಮುನಕ್ಕನಿದ್ದಲ್ಲಿಗೆ ಬಂದೆ. ಯಮುನಕ್ಕ ಊಟವನ್ನು ಬಡಿಸಿಕೊಂಡು ಬಳ್ಳೆಯ ಎದುರು ತಲೆಮೇಲೆ ಕೈಹೊತ್ತು ಕೂತಿದ್ದರು. ಅನ್ನದ ಮೇಲೆ ಮಾವಿನಕಾಯಿ ಗೊಜ್ಜನ್ನು ಸುರಿದಿದ್ದರು. ಆದರೆ ಒಂದು ತುತ್ತು ಅನ್ನವನ್ನೂ ಉಂಡ ಹಾಗೆ ಕಾಣಲಿಲ್ಲ. ನಾನು ಅಲ್ಲಿಗೆ ಹೋಗಿ ಕೂತ ಮೇಲೆ ನಾಲ್ಕು ತುತ್ತು ಅನ್ನವನ್ನು ಉಂಡಹಾಗೆ ಮಾಡಿ ಉಳಿದದ್ದನ್ನೆಲ್ಲ ಗೊಬ್ಬರದ ಗುಂಡಿಗೆ ಎಸೆದು ಬಂದರು. ‘ಯಾಕೆ ಯಮುನಕ್ಕ’ ಎಂದೆ. ಅವರಿಗೆ ಮಾವಿನ ಗೊಜ್ಜು ಇಷ್ಟವೆಂದು ನನಗೆ ಗೊತ್ತಿತ್ತು. ‘ಯಾಕೋ ಸೇರೋದೆ ಇಲ್ಲ’ ಎಂದು ನಿಟ್ಟುಸಿರು ಬಿಟ್ಟರು. ನನಗೆ ಬಂದ ದಕ್ಷಿಣೆಯನ್ನು ಅವರ ಕೈಮೇಲೆ ಇಟ್ಟೆ. ಅದನ್ನವರು ತೂತದ ಡಬ್ಬಿಗೆ ಹಾಕುತ್ತ, “ಶಿವಪುರಕ್ಕೆ ಹೋಗಿ ಅಂಗಡೀಂದ ಒಂದು ಸೇರು ಒಣಮೆಣಸಿನಕಾಯಿ, ಕೊತ್ತಂಬರಿ ತರಬೇಕಲ್ಲ. ಶಾಸ್ತ್ರಿಗೆ ಹೋಗಿ ಹೇಳು” ಎಂದರು. ನಾನು ಶಾಸ್ತ್ರಿಯನ್ನು ಹುಡುಕಿಕೊಂಡು ಸಾಹುಕಾರರ ಮನೆಗೆ ಹೋದೆ. ಕೆಲಸದ ಆಳು ಮಹಡಿಯ ಮೇಲೆ ಇದ್ದಾನೆಂದು ಹೇಳಿದ. ಮೇಲೆ ಹೋಗಿ ನೋಡಿದರೆ ಜಮಖಾನ ಹಾಸಿತ್ತು. ಸುತ್ತಲೂ ಸಾಹುಕಾರರ ಮಗ ರಂಗಣ್ಣ, ಇನ್ನಿಬ್ಬರು ಅಗ್ರಹಾರದ ಯುವಕರು ಮತ್ತು ಶಾಸ್ತ್ರಿ ಕೂತಿದ್ದರು. ಏನೋ ಒಂದಷ್ಟು ಎಲೆಗಳನ್ನು ಕೈಗಳಲ್ಲಿ ಜೋಡಿಸಿ ಮುಚ್ಚಿ ಹಿಡಕೊಂಡು ಆಡುತ್ತಿದ್ದರು. ಗಣೇಶ ನೋಡುತ್ತ ಕೂತಿದ್ದ. ನಾನು ನೋಡುತ್ತ ನಿಂತೆ. ಎಕ್ಕ, ನೆಲ, ರಾಜ, ರಾಣಿ ಎಂದು ಜಮಖಾನದ ಮಧ್ಯಕ್ಕೆ ಎಲೆಯನ್ನು ಎಸೆಯುತ್ತ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತ ಆಡುವ ಆಟ ಏನೆಂದು ಕೇಳಿದ್ದಕ್ಕೆ ಗಣೇಶ ಇಸ್ಪೀಟು ಎಂದ. ಯಮುನಕ್ಕ ಹೇಳಿದ್ದನ್ನು ಶಾಸ್ತಿಗೆ ಹೇಳಿದೆ. ‘ಶಿವಪೂಜೆಯ ಮಧ್ಯದಲ್ಲಿ ಕರಡಿ’ ಎಂದು ರೇಗಿ ತನ್ನ ಎಲೆಯನ್ನು ಗಣೇಶನ ಕೈಯಲ್ಲಿ ಕೊಟ್ಟು ಶಾಸ್ತ್ರಿ ಎದ್ದ. “ನಾನು ಆಡುತ್ತಿದ್ದೆ ಎಂದು ಬಾಯಿಬಿಟ್ಟರೆ ಹಲ್ಲು ಮುರಿದುಬಿಡ್ತೇನೆ ಗೊತ್ತಾಯ್ತ” ಎಂದು ಗದರಿಸಿ ನನ್ನ ಜೊತೆಗೆ ಹೊರಗೆ ಬಂದ. +ಶಿವಪುರಕ್ಕೆ ತನ್ನ ಜೊತೆಗೆ ಬರುವಂತೆ ನನಗೆ ಕೇಳಿದ. “ಯಮುನಕ್ಕನನ್ನು ಕೇಳಬೇಕು” ಎಂದೆ. “ ಶುದ್ಧ ಹೆಣ್ಣಿಗನಾಗಿಯೇ ಇರಬೇಡ” ಎಂದು ಗದರಿಸಿದ. ನನಗೂ ಶಿವಪುರಕ್ಕೆ ಹೋಗುವ ಆಸೆಯಾದ್ದರಿಂದ ಅವನ ಜೊತೆ ಹೊರಟೆ. ಅಗ್ರಹಾರ ದಾಟಿದ ಮೇಲೆ ಒಂದು ಕೆರೆ. ಅದನ್ನು ದಾಟಿದ ನಂತರ ದೊಡ್ಡ ಕಾಡಿನಲ್ಲಿ ಸಣ್ಣದು ಒಂದು ಗುಡ್ಡ-ದಾರಿ. ಅದರಲ್ಲಿ ನಾವಿಬ್ಬರೂ ನಡೆದು ಹೋದೆವು. ಸ್ವಲ್ಪ ದೂರ ಹೋದ ಮೇಲೆ ನೇರವಾದ ದಾರಿ ಬಿಟ್ಟು ಅಡ್ಡಕ್ಕೆ ತಿರುಗಿ ಬಾ ನನ್ನ ಜೊತೆ ಎಂದು ಕರೆದುಕೊಂಡು ಹೋದ. ಅಲ್ಲೊಂದು ದೊಡ್ಡ ಮರವಿತ್ತು . ಆ ಮರಕ್ಕೆ ಆಳೆತ್ತರದಲ್ಲೊಂದು ದೊಡ್ಡ ಪೊಟರೆಯಿತ್ತು. ಅದರ ಒಳಗೆ ಶಾಸ್ತ್ರಿ ಕೈಹಾಕಿದ್ದನ್ನು ನಾನು ಕುತೂಹಲದಿಂದ ನೋಡುತ್ತ ನಿಂತೆ. ಒಳಗಿನಿಂದ ಏನನ್ನೊ ತೆಗೆದು ಮುಷ್ಟಿಯಲ್ಲಿ ಹಿಡಿದುಕೊಂಡು, “ನನ್ನ ಕೈಯಲ್ಲಿ ಇರುವುದೇನು ಹೇಳು” ಎಂದ. ನನಗೆ ಗೊತ್ತಿಲ್ಲ ಎಂದ ಮೇಲೆ ಕೈಬಿಡಿಸಿ ತೋರಿಸಿದ. ಬೀಡಿ-ಕಟ್ಟು ಇತ್ತು. ಇನ್ನೊಂದು ಸಾರಿ ಕೈ ಹಾಕಿ ಬೆಂಕಿಪೊಟ್ಟಣವನ್ನು ತೆಗೆದ. ‘ಕೂತುಕೋ’ ಎಂದ. ನಾನು ಕೂತುಕೊಂಡೆ. “ಮೂಗಿನಿಂದ ಹೊಗೆ ಬಿಡೋದು ಎಷ್ಟು ಚೆನ್ನಾಗಿರುತ್ತೆ ಅಂತೀಯ” ಎಂದು ಹೊಗೆ ಬಿಟ್ಟು ತೋರಿಸುತ್ತ “ನೀನೂ ಒಂದು ಸೇದು” ಎಂದು ಒತ್ತಾಯ ಮಾಡಿದ. ಬಾಯಿಬಿಟ್ಟು ನೋಡುತ್ತಿದ್ದ ನಾನು ಗಾಬರಿಯಾಗಿ ‘ಬೇಡ’ ಎಂದೆ. “ಯಮುನಕ್ಕನ ಹತ್ತಿರ ಮಾತ್ರ ಹೇಳಬೇಡ ಗೊತ್ತಾಯಿತ? ಚಾಡಿ ಹೇಳಬಾರದು” ಎಂದ. ನಾನು ‘ಆಗಲಿ’ ಎಂದೆ. +“ನೀನು ಹೇಳಿದರೂ ನಾನು ಹೆದರೋದಿಲ್ಲ ಗೊತ್ತಾಯಿತ? ನನಗೆ ಗೊತ್ತಿಲ್ಲವ ಯಮುನಕ್ಕನ ವಿಷಯ. ಇನ್ನೊಂದು ಸಾರಿ ನಂಗೆಲ್ಲಾದರೂ ಬಯ್ಯಲಿ- ನಾನು ಎಲ್ಲಾನೂ ಬಯಲಿಗೆಳೆದು ಬಿಡ್ತೇನೆ . ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಂತೆ.” ಶಾಸ್ತ್ರಿಯ ಮಾತು ನನಗೆ ಅರ್ಥವಾಗಲಿಲ್ಲ. ಆದರೆ ಭಯವಾಯಿತು. ಯಮುನಕ್ಕನಿಗೆ ಹೇಳದೆ ಬರಬಾರದಿತ್ತು ಎನಿಸಿತು. ಗೋಪಾಲ ಕಮ್ತಿಯ ಅಂಗಡಿಯಿಂದ ಸಾಮಾನು ಕೊಂಡು, ಶಿವಪುರದ ಗುಡ್ಡವಿಳಿಯುತ್ತಿದ್ದಾಗ ಶಾಸ್ತ್ರಿ, “ಹೋಗುವಾಗ ಬೇರೆ ದಾರಿಯಲ್ಲಿ ಹೋಗುವ. ಹೊಳೆಯ ದಂಡೆಯ ಮೇಲಾಗಿ” ಎಂದ. ನನಗೆ ಬೇಡವೆನ್ನಲು ಭಯ. ಶಾಸ್ತ್ರಿಯ ಒಕ್ಕಣ್ಣನ್ನು ನೋಡಿದರೆ, ಅವನು ಮಡುವೆಮೊಡವೆಗಳನ್ನು ಚೂಟಿಕೊಳ್ಳುತ್ತ ನನಗೆ ಹಾಸ್ಯ ಮಾಡುವುದನ್ನು ನೆನೆದರೆ ಅವನು ಹಾಕಿದ ಗೆರೆಯನ್ನು ದಾಟಿ ಹೋಗುವ ಧೈರ್ಯವಾಗುತ್ತಿರಲಿಲ್ಲ. ಬರುವಾಗ ದಾರಿಯಲ್ಲಿ, “ಈಗ ನಿನಗೊಂದು ತಮಾಷೆ ತೋರಿಸುತ್ತೇನೆ. ನೋಡಿದ ಮೇಲೆ ನಿನಗೇ ಗೊತ್ತಾಗುತ್ತದೆ ಎಲ್ಲ ವಿಷಯ. ಹೇಳಿ ನಾನೇಕೆ ಕೆಟ್ಟವನಾಗಬೇಕು?” ಎಂದ. ನಾವು ಸುಮಾರು ದೂರ ನಡೆದು ಒಂದು ಹಾಳು ಬಿದ್ದ ಅಗ್ರಹಾರದ ಹತ್ತಿರ ಬಂದೆವು. ಅದು ಹೊಳೆಯ ದಂಡೆಯ ಮೇಲಿತ್ತು. ಹೊದಲ ಎಂದು ಅದರ ಹೆಸರು. ಹಿಂದೊಂದು ದಿನ ನಾನು ಅಲ್ಲಿಗೆ ಯಮುನಕ್ಕನ ಜೊತೆ ಕಟ್ಟಿಗೆ ಆರಿಸಿಕೊಂಡು ಬರಲು ಹೋಗಿದ್ದೆ. ಮನೆಗಳೆಲ್ಲ ಬಿದ್ದು ಅಲ್ಲಿ ಮೋಟುಗೋಡೆಗಳು, ತಳಪಾಯಗಳು ಮಾತ್ರ ಉಳಿದಿದ್ದವು. ಹಳೆಯ ಕಾಲದ ಒಂದು ಜೈನರ ಬಸ್ತಿ ಮತ್ತು ದೇವರಿಲ್ಲದ ಒಂದು ಗುಡಿಯ ತುಂಬ ಬಾವಲಿಗಳು ಓಡಾಡುತ್ತಿದ್ದವು. “ಹಿಂದೊಂದು ಕಾಲದಲ್ಲಿ ಇಲ್ಲಿ ಜನ ವಾಸವಾಗಿದ್ದರು. ಈಗ ಹಾಳುಬಿದ್ದಿದೆ” ಎಂದು ಯಮುನಕ್ಕ ಹೇಳಿದ್ದರು. ಅಲ್ಲಿ ದೆವ್ವವಿರಬಹುದೆಂದು ನನಗೆ ಭಯ. ಅಯ್ಯೊ ಪುಕ್ಕ ಎಂದು ಶಾಸ್ತ್ರಿ ನಕ್ಕು ಹಳವುಗಳು ಬೆಳೆದಲ್ಲೆಲ್ಲ ಕಳ್ಳಹೆಜ್ಜೆ ಇಡುತ್ತ ನನ್ನನ್ನು ಕರೆದುಕೊಂಡು ಹೋಗಿ ಒಂದು ಮೋಟುಗೋಡೆಯ ಹಿಂದಕ್ಕೆ ನನ್ನನ್ನು ನಿಲ್ಲಿಸಿ, ಈ ಬಿರುಕಿನಿಂದ ನೀನು ನೋಡು ಎಂದು, ತಾನು ಇನ್ನೊಂದು ಕಂಡಿಯ ಹತ್ತಿರ ನಿಂತ. +ಸ್ವಲ್ಪ ಹೊತ್ತಾದ ಮೇಲೆ ದೂರದಿಂದೊಬ್ಬ ಮನುಷ್ಯ ಬರುವುದು ಕಂಡಾಕ್ಷಣ ನನಗೆ ಹೆದರಿಕೆಯಾಗಿ ಹೋಗೋಣ ಹೋಗೋಣ ಎಂದೆ. ಶಾಸ್ತ್ರಿ,“ನಿನಗೂ ತಿಳಿಯಬೇಕೊ ಇಲ್ಲವೊ? ಹೀಗೆ ನೀನು ಗುಗ್ಗಾಗಿಯೇ ಇರುತ್ತೀಯಾ? ಶುಕಮುನಿಯ ಅಪರಾವತಾರ ನೀನು” ಎಂದು ಗದರಿಸಿದ. ನಾನು ಹೆದರಿ ನೋಡುತ್ತ ಕೂತೆ. ಕಚ್ಚೆ ಹಾಕಿ ಪಂಚೆಯುಟ್ಟು, ಅಂಗಿ ಹಾಕಿ, ಕ್ರಾಪು ಬಿಡಿಸಿ ಬರುತ್ತಿದ್ದ ಮನುಷ್ಯ ಯಾರೆಂದು ತಿಳಿದು ನನ್ನ ಭಯ ಕಡಿಮೆಯಾಯಿತು, ಅವನನ್ನು ನಾನು ನಿತ್ಯ ನೋಡುತ್ತಿದ್ದೆ. ಉಡುಪರ ಮನೆ ಪಕ್ಕದ ಶಾಲೆಯಲ್ಲಿ ಅವನು ಮೇಷ್ಟರು. ತುಮಕೂರಿಂದ ಬಂದು ಶಿವಪುರದಲ್ಲಿದ್ದಾನಂತೆ. ನಿತ್ಯ ಸೈಕಲ್ಲಿನ ಮೇಲೆ ಬಂದು ಹೋಗ್ತಾನೆ. ರಾಮನವಮಿಯಲ್ಲಿ ದೇವಸ್ಥಾನದಲ್ಲಿ ಹಾರ್ಮೋನಿಯಂ ಬಾರಿಸಿದ್ದ. ನೋಡಲು ತೆಳ್ಳಗೆ ಉದ್ದಗೆ ಪೇಟೆಯವನಂತೆ ಇದ್ದ. +ನಾನು ಹೋಗೋಣ ಎಂದೆ. ಶಾಸ್ತ್ರಿ ಇನ್ನು ಸ್ವಲ್ಪ ಇರು ಎಂದ. ಬಿರುಕಿನಿಂದ ನೋಡುತ್ತಿದ್ದ ನನಗೆ ಒಂದು ಹಾವು ಕಂಡಿತು. ಹೆದರಿ ‘ಹಾವು ಅಲ್ಲಿ’ ಎಂದೆ. ‘ಸ್ವಲ್ಪ ಸುಮ್ಮನಿರು’ ಎಂದು ಶಾಸ್ತ್ರಿ ಗದರಿಸಿದ. ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬ ಅಲ್ಲಿಗೆ ದೊಡ್ಡ ಮೀಸೆ ಬಿಟ್ಟವನು ಬಂದ. ಅವನು ಯಾರೆಂದು ನನಗೆ ಗೊತ್ತಿರಲಿಲ್ಲ. ಅವರಿಬ್ಬರೂ ಮಾತನಾಡುತ್ತ ನಿಂತರು. ಹಾವು ಕಂಡಿದ್ದರಿಂದ ನನಗೆ ಆದಷ್ಟು ಬೇಗ ಹೋಗಬೇಕೆಂದು ಪುಕ್ಕಲು ಹತ್ತಿಕೊಂಡಿತ್ತು. ಶಾಸ್ತ್ರಿಗೂ ಕಂಡಿಯಿಂದ ನೋಡಿ ಬೇಜಾರು ಬಂದಿರಬೇಕು. ‘ಹೋಗೋಣ ನಡಿ, ನೀನೊಬ್ಬ ಶುದ್ದ ಪುಕ್ಕು’ ಎಂದು ನನ್ನನ್ನು ಕಳ್ಳಹೆಜ್ಜೆ ಇಟ್ಟು ಬಗ್ಗಿ ನಡೆಯುತ್ತ ಗಾಡಿ-ದಾರಿಗೆ ಕರೆದುಕೊಂಡು ಬಂದ. ಅಲ್ಲಿಂದ ನೇರವಾಗಿ ಮನೆಗೆ ಬಂದಾಗ ಸಂಜೆಯಾಗಿತ್ತು. ಬೇಜಾರಿನಿಂದ ಕೂತಿದ್ದ ಯಮುನಕ್ಕನಿಗೆ ಅಂಗಡಿಗೆ ಹೋದ ವಿಷಯ ಮಾತ್ರ ಹೆದರಿ ಹೆದರಿ ಹೇಳಿದೆ. ಹಾಳು ಬಿದ್ದ ಅಗ್ರಹಾರಕ್ಕೆ ಹೋಗಿ ಕಂಡಿಯಲ್ಲಿ ಇಣುಕಿದ್ದು, ಅಲ್ಲೊಂದು ಹಾವು ಕಂಡದ್ದು ಹೇಳಲು ಧೈರ್ಯವಾಗಲಿಲ್ಲ. ನಾವು ಸ್ನಾನ ಮಾಡಿ ಸಂಧ್ಯಾವಂದನೆಗೆ ಕೂತೆವು. ಅದಾದ ಮೇಲೆ ಊಟ ಮಾಡಿದೆವು. ಯಮುನಕ್ಕ ಅರಳನ್ನು ಮಜ್ಜಿಗೆಯಲ್ಲಿ ಕಲಿಸಿ ತಿಂದರು. ರಾತ್ರೆ ನಾನು, ಶಾಸ್ತ್ರಿ, ಗಣೇಶ ಚಾವಡಿಯಲ್ಲಿ ಹಾಸಿಗೆ ಹಾಸಿಕೊಂಡೆವು. ಯಮುನಕ್ಕ ನಡುಮನೆಯಲ್ಲಿ ಮಲಗಿದರು. ಅವತ್ತು ರಾತ್ರೆ ನಮ್ಮ ಜೊತೆ ಚಾವಡಿಯಲ್ಲಿ ಮಲಗಲು ಉಡುಪರು ಇಲ್ಲದ್ದರಿಂದ, ಸಾಯಂಕಾಲ ನಾನು ಹಾಳುಬಿದ್ದ ಅಗ್ರಹಾರದಲ್ಲಿ ಹಾವನ್ನು ನೋಡಿ ಬಂದಿದ್ದರಿಂದ ಭಯವಾಯಿತು. ನಡುಮನೆಯಲ್ಲಿ ಯಮುನಕ್ಕನ ಜೊತೆ ಮಲಗುತ್ತೇನೆ ಎಂದರೆ ಶುದ್ಧ ಹೆಣ್ಣಿಗ, ಪುಕ್ಕ ಎಂದು ಶಾಸ್ತ್ರಿ ಗೇಲಿ ಮಾಡಿದ. ಆದ್ದರಿಂದ ನಾನು ಅಲ್ಲೇ ಮಲಗಿದೆ. ಭಯವಾಗಿದ್ದರಿಂದ ನಿದ್ದೆ ಹತ್ತಲು ತುಂಬ ತಡವಾಯಿತು. ಅಪ್ಪಯ್ಯ ಅಮ್ಮನ ನೆನಪಾಯಿತು. ನಾನು ಯಾರ ಮನೆಯಲ್ಲೊ ಯಾರ ಸಂಗಡವೊ ಇದ್ದೇನೆಂದು ಅಳು ಬಂದಿತು. ನನ್ನ ಪಕ್ಕದಲ್ಲಿ ಶಾಸ್ತ್ರಿ ಮೆತ್ತಗೆ ನನ್ನ ಮೇಲೆ ಕೈಹಾಕಿ ಹತ್ತಿರಕ್ಕೆ ಸರಿದ. ಅವನ ಬಾಯಿಂದ ಬೀಡಿಯ ವಾಸನೆ ಬರುತ್ತಿದ್ದುದರಿಂದ ನನಗೆ ಅಸಹ್ಯವಾಯಿತು. ನನ್ನ ಪಂಚೆಯ ಗಂಟನ್ನು ಬಿಚ್ಚಿ ಕೌಪೀನಕ್ಕೆ ಕೈಹಾಕಿದ. ನಾನು ದಡಕ್ಕನೆ ಎದ್ದು ಸೀದ ನಡುಮನೆಗೆ ಹೋಗಿ ಯಮುನಕ್ಕನ ಜೊತೆ ಮಲಗಿದೆ. ಯಮುನಕ್ಕನಿಗೆ ನಿದ್ದೆ ಹತ್ತಿರಲಿಲ್ಲ. ‘ಭಯವಾಗುತ್ತೆ’ ಎಂದೆ. ‘ಬಾ ಮಲಗಿಕೊ’ ಎಂದು ತಮ್ಮ ಸೀರೆಯನ್ನು ನನಗೆ ಹೊದಿಸಿದರು. +ಇನ್ನು ಸ್ವಲ್ಪ ಹೊತ್ತಾಗಿ ನನಗೆ ಕಣ್ಣು ಭಾರವಾಗುವ ಹೊತ್ತಿಗೆ ಮನೆಯ ಸುತ್ತ ಯಾರೋ ನಡೆಯುವ ಶಬ್ದವಾಯಿತು. ನಾನು ಬೆಚ್ಚಿ ಎಚ್ಚರವಾದೆ. ದೆವ್ವವಿರಬೇಕೆಂದು ನಡುಗಿದೆ. ಯಮುನಕ್ಕ ನನ್ನನ್ನು ತಬ್ಬಿಕೊಂಡರು. ಆಮೇಲೆ ಹಿತ್ತಲ ಬಾಗಿಲಿನ ಹತ್ತಿರ ಯಾರೋ ಬಂದು ನಿಂತ ಶಬ್ದವಾಯಿತು. ಬಾಗಿಲನ್ನು ತಟ್ಟಿದ ಹಾಗಾಯಿತು. ನಾನು ಯಮುನಕ್ಕನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ‘ಬಾಗಿಲು ಬಾಗಿಲು’ ಎಂದು ಮೆತ್ತಗೆ ಕೂಗಿದ ಹಾಗಾಯಿತು. ಕತ್ತಲಿನಲ್ಲಿ ಹೀಗೆ ಕಳ್ಳಹೆಜ್ಜೆಯಿಟ್ಟು ಮನೆಯನ್ನು ಅಪ್ರದಕ್ಷಿಣೆ ಸುತ್ತಿ ಬಾಗಿಲು ತಟ್ಟುವುದು ಬ್ರಹ್ಮರಾಕ್ಷಸನೆ ಎಂದು ನನಗೆ ಗಾಬರಿಯಾಯಿತು. ಯಮುನಕ್ಕ ಎದ್ದರು. ನಾನು ಅವರ ಕೈ ಹಿಡಿದು ಹೋಗಬೇಡಿ ಎಂದೆ. ಅವರು ಎದ್ದು ಹೊರಟರು. ನಾನು ಅವರ ಜೊತೆ ಎದ್ದೆ. ಬರಬೇಡ, ದೆವ್ವವಿರಬಹುದು. ಅದು ಒಳಗೆ ಬರದಂತೆ ಬಾಗಿಲಲ್ಲಿ ಪೊರಕೆಯಿಟ್ಟು ಬರುತ್ತೇನೆ” ಎಂದು ನನ್ನನ್ನು ನಡುಮನೆಯಲ್ಲೆ ಬಿಟ್ಟು ಹೋದರು. ನಾನು ಅಳುತ್ತ ಅವರಿಗಾಗಿ ಕಾದೆ. ಯಮುನಕ್ಕ ಹಿತ್ತಲಬಾಗಿಲಿಗೆ ಹೋದವರು ಬಾಗಿಲನ್ನು ತೆರೆಯಲಿಲ್ಲ. ತೆರೆದಿದ್ದರೆ ಡರ್ರೋ ಎಂದು ಕರ್ಕಶ ಶಬ್ದವಾಗುತ್ತಿತ್ತು. “ಹೋಗಿ, ಹೋಗಿ, ಇಲ್ಲಿಗೆ ಬರಬೇಡಿ” ಎಂದು ಅವರು ಹೇಳಿದ್ದು ಮಾತ್ರ ಕೇಳಿಸಿತು. ಹಿಂದಕ್ಕೆ ಬಂದ ಯಮುನಕ್ಕನನ್ನು ಕಂಡು ನನಗೆ ಇನ್ನಷ್ಟು ಭಯವಾಯಿತು. ಅವರು ಬ್ರಹ್ಮರಾಕ್ಷಸನ ಜೊತೆ ಮಾತಾಡಿ ಬಂದಿದ್ದಾರೆಂದು. ನನ್ನನ್ನು ಅವರು ಎಳೆದು ಒತ್ತಾಯ ಮಾಡಿ ಮಲಗಿಸಿಕೊಂಡರು. ಬಹಳ ಹೊತ್ತಿನ ಮೇಲೆ ನನಗೆ ನಿದ್ದೆ ಬಂತು. +* +* +* +ಸೂರ್ಯ ಹುಟ್ಟುವುದಕ್ಕೆ ಮೊದಲೇ ಎದ್ದ ನನಗೆ ಒಬ್ಬನೇ ತಂಬಿಗೆ ತೆಗೆದುಕೊಂಡು ಹೋಗಲು ಭಯವಾದ್ದರಿಂದ ಯಮುನಕ್ಕನನ್ನೂ ಜೊತೆಗೆ ಕರೆದುಕೊಂಡು ಹೋಗಿ ನಿಲ್ಲಿಸಿಕೊಂಡೆ. ಇದು ಶಾಸ್ತ್ರಿಗೆ ಗೊತ್ತಾದರೆ ನನ್ನನ್ನು ಹಂಗಿಸಿ ಹಿಂಸಿಸುತ್ತಾನೆಂದು ಮತ್ತಷ್ಟು ಭಯವಾಯಿತು. ನಾನು ಒಬ್ಬನೇ ಬುಟ್ಟಿ ಹಿಡಿದು ಪತ್ರೆ ತುಳಸಿ ಹೂವು ತರಲು ಹೊರಟಾಗ ಶಾಸ್ತ್ರಿ ‘ನಾನೂ ನಿನ್ನ ಜೊತೆ ಬರ್ತೇನೆ’ ಎಂದ. ಬೇಡವೆನ್ನಲು ನನಗೆ ಭಯ. ಅಲ್ಲದೆ ರಾತ್ರೆ ಬ್ರಹ್ಮರಾಕ್ಷಸ ಮನೆಯ ಸುತ್ತ ತಿರುಗಾಡಿದ್ದರಿಂದ, ಹಾವನ್ನು ಕಂಡದ್ದರಿಂದ ಒಂಟಿಯಾಗಿ ಹೋಗಲೂ ಭಯ. ದಾರಿಯಲ್ಲಿ ಶಾಸ್ತ್ರಿ, “ಬ್ರಹ್ಮರಾಕ್ಷಸ ಯಮುನಕ್ಕನಿಗೆ ಏನು ಹೇಳಿತು?” +ಎಂದು ಕೇಳಿದ. ‘ನನಗೆ ಗೊತ್ತಿಲ್ಲ’ ಎಂದೆ. +“ಯಮುನಕ್ಕ ಎದ್ದು ಹೋದರು. ಏನೂ ಹೇಳಲಿಲ್ಲವ?” +“ಬರಬೇಡ, ಹೋಗು ಹೋಗು ಎಂದರು. ಬಾಗಿಲಲ್ಲಿ ಪೊರಕೆಯಿಟ್ಟು ಬಂದರು”. +“ಆ ಬ್ರಹ್ಮರಾಕ್ಷಸ ಯಾರು ಗೊತ್ತ? ನಿನಗಿನ್ನೂ ತಿಳುವಳಿಕೆಯಿಲ್ಲ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಂತೆ. ಹೋಗಲಿ, ಬಿಡು. ನಿಂಗೇ ಒಂದು ದಿನ ಗೊತ್ತಾಗುತ್ತೆ. ಯಮುನಕ್ಕನಿಗೆ ನನ್ನನ್ನ ಕಂಡರೆ ಆಗಲ್ಲ ಅಲ್ಲವ? ನಿಂಗಾದರೆ ಗುಟ್ಟಾಗಿ ರವೆವುಂಡೆ, ಕೋಡುಬಳೆ ಕೊಡ್ತಾರೆ, ಅಲ್ಲವೇನೋ?” ಎಂದ. ನನಗೆ ಏನು ಹೇಳಬೇಕೆಂದು ಗೊತ್ತಾಗದೆ ಸುಮ್ಮನಾದೆ. ಬಿಲ್ವಪತ್ರೆಗಾಗಿ ನಾವು ಗೋದಾವರಮ್ಮನ ಮನೆಗೆ ಹೋದಾಗ ಅವರು, +“ಯಮುನ ಹೇಗಿದ್ದಾಳೆ?” ಎಂದು ಕೇಳಿದರು. +ನಾನು ‘ಯಮುನಕ್ಕನಿಗೆ ಜ್ವರ ಬರ್ತಿರೋದು ನಿಜ’ ಎಂದೆ. +“ಜ್ವರಾನೂ ಇಲ್ಲ ಗಿರಾನೂ ಇಲ್ಲ. ನಿನ್ನೆ ರಾತ್ರೆ ಮನೇಸುತ್ತ ಒಂದು ಬ್ರಹ್ಮರಾಕ್ಷಸ ಓಡಾಡಿತು. ಹಿತ್ತಲಕಡೆ ಬಂದು ಬಾಗಿಲು ತಟ್ಟಿತು”. +ಎಂದು ಶಾಸ್ತ್ರಿ ಒಕ್ಕಣ್ಣಿನಿಂದ ನಗುತ್ತ ಗೋದಾವರಮ್ಮನಿಗೆ ಹೇಳಿದ. ಗೋದಾವರಮ್ಮ ಎಲ್ಲ ವಿಷಯನೂ ಕೇಳಿ ಕೇಳಿ ತಿಳಿದುಕೊಂಡರು. +ಬಿಲ್ವಪತ್ರೆ ಕೊಯ್ದಾದ ಮೇಲೆ ಶಾಸ್ತ್ರಿ ನನಗೆ “ಏ ಭೃಗು – ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಒಂದಷ್ಟು ಸಂಪಗೆಹೂ ಕೊಯ್ದುಕೊಂಡು ಬರೋಣ” ಎಂದ. ನಾವು ಒಂದು ಗದ್ದೆ ದಾಟಿ ಅಲ್ಲಿಗೆ ಹೋಗಿ ಹೂವು ಕೊಯ್ದೆವು. ಶಾಸ್ತ್ರಿ ನನಗೆ, +“ಸುಬ್ರಹ್ಮಣ್ಯ ದೇವರನ್ನ ಮೈಲಿಗೇಲಿ ಮುಟ್ಟುತೀಯೇನೊ? ನಿನಗೆ ಧೈರ್ಯವಿದೆಯ?” +ಎಂದು ಕೇಳಿದ. ಸುಬ್ರಹ್ಮಣ್ಯ ದೇವರಿಗೆ ಮೈಲಿಗೆಯಾದರೆ ಹಾವು ಕಾಡುತ್ತೆ ಅಂತಾರೆ. ನನಗೆ ಅದರ ಸುದ್ದಿ ಬೇಡ ಎಂತ ಅಂದಿದ್ದಕ್ಕೆ ಶಾಸ್ತ್ರಿ, +“ಅದಕ್ಕೇ ಹೇಳೋದು ನೀನು ಅಜ್ಜಿಗೊಡ್ಡು, ಹೆಣ್ಣಿಗ, ಭೃಗು ಅಂತ. ಎಂಥಾ ಪುಕ್ಕನಯ್ಯ ನೀನು? ಮನೆ ಸುತ್ತ ಓಡಾಡಿದ್ದು ಬ್ರಹ್ಮರಾಕ್ಷಸ ಅಂತ ಹೇಳಿದ್ರೆ ನಂಬಿಕೊಂಡುಬಿಟ್ಟಿ. ಅಲ್ಲವ? ಇಗೋ ನೋಡು ನಾನು ಮುಟ್ಟಿ ಬರ್ತೇನೆ.” +ಎಂದು ಸೀದ ಗರ್ಭಗುಡಿಯ ಒಳಗೆ ಹೋಗಿ ದೇವರನ್ನು ಮುಟ್ಟಿದ. ನನಗೆ ನಾಚಿಕೆ, ಭಯ, ಆಯಿತು. ‘ನೀನೂ ಮುಟ್ಟು’ ಎಂದು ನನ್ನನ್ನು ಎಳೆದುಕೊಂಡು ಹೋಗಿ ದೇವರನ್ನು ಮುಟ್ಟಿಸಿದ. ಆಮೇಲೆ ನಗುತ್ತ “ನನ್ನ ಕೈಯಲ್ಲಿ ಗರುಡ ಮಚ್ಚೆಯಿದೆ. ಅದಕ್ಕೇ ಧೈರ್ಯವಾಗಿ ನಾನು ಮುಟ್ಟಿದೆ. ನಿನ್ನನ್ನ ಖಂಡಿತ ಹಾವು ಬಂದು ಕಚ್ಚುತ್ತೆ” ಎಂದು ಕುಣಿದ. ನಾನು ಗಟ್ಟಿಯಾಗಿ ಅಳತೊಡಗಿದೆ. “ನಾನು ಹೇಳಿದ ಹಾಗೆ ಕೇಳಿದ್ರೆ ಏನೂ ಆಗಲ್ಲ. ನಿನಗೆ ಹಾವು ಕಚ್ಚದಂತೆ ನೋಡಿಕೊತೇನೆ. ಯಮುನಕ್ಕನಿಗೆ ಮಾತ್ರ ನಾನು ಹೇಳಿದ್ದೇನನ್ನೂ ಹೇಳಬಾರ್ದು. ಹೇಳಿದ್ರೆ ನೀನು ಹೋಗಿ ದೇವರನ್ನ ಮೈಲಿಗೇಲಿ ಮುಟ್ಟಿದೀಂತ ಹೇಳಿಬಿಡ್ತೇನೆ” ಎಂದ. ನಾನು ಕಣ್ಣೊರಿಸಿಕೊಳ್ಳುತ್ತ ಮನೆಗೆ ಬಂದೆ. ಯಮುನಕ್ಕ ಏನಾಯಿತೆಂದು ಕೇಳಿದರೆ ನಾನು ಹೆದರಿ ಸುಮ್ಮನಿದ್ದೆ. ಅವರು ಶಾಸ್ತ್ರಿಯನ್ನು ಕರೆದು “ತಿಂದ ಅನ್ನ ನಿನ್ನ ನೆತ್ತಿಗೇರಿತು ಅಲ್ಲವ?” ಎಂದು ಬೆದರು. ನಾನು ಅವತ್ತೆಲ್ಲ ಶಾಸ್ತ್ರಿಯ ಜೊತೆಯೇ ಸೇರಲಿಲ್ಲ. ಕೂತಲ್ಲಿ, ನಿಂತಲ್ಲಿ ಹಾವು ಬಂದೀತೆಂದು ಹೆದರಿಕೆಯಾಗುತ್ತಿತ್ತು. ಯಾವಾಗಲೂ ಗಾಯತ್ರೀ ಜಪ ಮಾಡುತ್ತ ಓಡಾಡಿದೆ. ರಾತ್ರೆ ಯಮುನಕ್ಕನ ಜೊತೆ ಮಲಗಿದೆ. ಬ್ರಹ್ಮರಾಕ್ಷಸ ಮನೇ ಸುತ್ತ ಓಡಾಡಲಿಲ್ಲ. +ಅವತ್ತಿನಿಂದ ನಾನು ಶಾಸ್ತ್ರಿ ಜೊತೆ ಸೇರುತ್ತಿರಲಿಲ್ಲ. ನಾನು ಒಂಟಿಯಾಗಿ ಸಿಕ್ಕಾಗಲೆಲ್ಲ ಒಕ್ಕಣ್ಣಿನಿಂದ ಚೂಪಗೆ ನನ್ನ ಕಡೆ ನೋಡಿ ‘ಹಾವು ಬಂದು ನಿನ್ನನ್ನ ಕಚ್ಚತ್ತೆ, ಯಮುನಕ್ಕನಿಗೆ ಹೇಳಂತೆ’ ಎಂದು ಗದರಿಸುತ್ತಿದ್ದ. ನಾನು ಮಾತೇ ಆಡುತ್ತಿರಲಿಲ್ಲ. ಯಮುನಕ್ಕ ಎಲ್ಲಿ ಹೋದರೆ ಅಲ್ಲಿ ಅವರ ಜೊತೆಗಿರಲು ಪ್ರಾರಂಭಿಸಿದೆ. ಶಾಸ್ತ್ರಿ ಮತ್ತು ಗಣೇಶ ಯಾವಾಗಲೂ ಸಾಹುಕಾರರ ಮಗ ರಂಗಣ್ಣನ ಜೊತೆ ಗುಟ್ಟಾಗಿ ಮಾತಾಡುತ್ತ ಇರುತ್ತಿದ್ದರು. ಒಂದು ದಿನ ಯಮುನಕ್ಕ ‘ಕಟ್ಟಿಗೆ ತರಬೇಕು ಬಾ’ ಎಂದು ಹಾಳು ಅಗ್ರಹಾರದ ದಾರಿಯಲ್ಲಿ ಕರೆದುಕೊಂಡು ಹೋದರು. ಅರ್ಧ ದೂರ ಹೋಗುವುದರೊಳಗೆ ನನಗೆ ಭಯವಾಯಿತು. ಕೂತುಬಿಟ್ಟು ಅಳತೊಡಗಿದೆ. ‘ಅಲ್ಲಿ ಹಾವಿದೆ ನಾನು ಬರೋದಿಲ್ಲ’ ಎಂದು ಚಂಡಿ ಹಿಡಿದೆ. ಯಮುನಕ್ಕ ಗದರಿಸಿದರು. ಅಂಗಲಾಚಿದರು. ನಾನು ಕೇಳಲಿಲ್ಲ. ಗೊಣಗುತ್ತ ನನ್ನ ಜೊತೆ ಮನೆಗೆ ಹಿಂದಕ್ಕೆ ಬಂದರು. ಇನ್ನೊಂದು ದಿನ ನಾನು ಒಬ್ಬನೆ ಬಿಲ್ವಪತ್ರೆಗೆಂದು ಗೋದಾವರಮ್ಮನ ಮನೆಗೆ ಬೆಳಗ್ಗೆ ಹೋದೆ.ಗೋದಾವರಮ್ಮ ನನ್ನನ್ನು ನೋಡಿ ಬಾ ಒಳಗೆ’ ಎಂದು ಬೆನ್ನಿನ ಮೇಲೆ ಕೈಹಾಕಿ ಒಳಗೆ ಕರೆದುಕೊಂಡು ಹೋದರು. ಅಡಿಗೆಮನೆಯಲ್ಲಿ ಕೂರಿಸಿಕೊಂಡು ಕಾಫಿ ಕೊಟ್ಟರು. ನಾನು ಬೇಡವೆಂದೆ. ‘ಒಂದೊಂದು ಸಾರಿ ಕುಡೀಬಹುದು ಕಣೊ’ ಎಂದರು. ಕಾಫಿಯನ್ನು ನೋಡಿ ತುಂಬ ಆಸೆಯಾಯಿತು. ಕುಡಿಯಬೇಕು ಎನ್ನಿಸಿತು. ಕುಡಿಯುತ್ತ ಕೂತೆ. ಗೋದಾವರಮ್ಮ ನಗುತ್ತ, “ನೀನು ಪರವಾಗಿಲ್ಲ ಕಣೋ, ನೇಮನಿಷ್ಠೆಯಿರೋ ಹುಡುಗ. ಬೇರೆ ಹುಡುಗರಂತಲ್ಲ. ಈಗಿನ ಕಾಲದವು ಹೇಳಿದ ಮಾತು ಕೇಳುತ್ತಾವೆಯೆ? ‘ಜಪ ಜಾರಿಹೋಯ್ತು. ಅಗ್ನಿಕಾರ್ಯ ಅಟ್ಟಕ್ಕೆ ಹತ್ತಿತು.’ ಅಂತ ಗಾದೇನೇ ಇದೆಯಲ್ಲ. ಈಗ ಸಾಹುಕಾರರ ಮಗ ರಂಗಣ್ಣನೇ ನೋಡು ಬೇಕಾದರೆ. ಒಳ್ಳೇ ಬೀದಿ ಬಸವ. ಕುಂಟೆಕೋಣನಷ್ಟು ವಯಸ್ಸಾಗಿ ಮೀಸೆ ಬಂದಿದೆ.” +ಎಂದು ನನ್ನನ್ನು ಹೊಗಳಿದರು. ನಾನು ಹೊರಡಲೆಂದು ಎದ್ದಾಗ, +“ಯಾಕೋ ಯಮುನ ದೇವಸ್ಥಾನಕ್ಕೇ ಬರ್ತಿಲ್ಲ ? ಮಲಗಿದಲ್ಲಿಂದ ಏಳೋದೇ ಇಲ್ಲವೆ?” +ಎಂದರು. ನಾನು ಇಲ್ಲವೆಂದೆ. +“ನಿಮಗೆಲ್ಲ ಅಡಿಗೆ ಮಾಡಿ ಹಾಕೋರು ಯಾರು ಪಾಪ. ಉಡುಪರೂ ಮನೇಲಿ ಇಲ್ಲ . ಆ ಬ್ರಹ್ಮರಾಕ್ಷಸ ಈಗಲೂ ಮನೇ ಸುತ್ತ ಓಡಾಡುತ್ತ?” +ಎಂದರು. ಅವತ್ತಿನಿಂದ ಅದು ಕಾಣಿಸಿಕೊಂಡಿಲ್ಲ ಎಂದೆ. +“ಏನೋ ಯಮುನಕ್ಕನಿಗೆ ವಾಂತಿ-ಗೀಂತಿ ಆಗುತ್ತ? ಜ್ವರಗೆಡ್ಡೆಯಾದರೆ ತುಂಬ ವಾಂತಿಯಾಗುತ್ತೆ ಅಂತಾರೆ. ಔಷಧಿ ತಗೊಳ್ಳೊಕ್ಕೆ ನಾನು ಅವಳಿಗೆ ಮೊನ್ನೆ ಹೇಳಿದೆ. ಏನಾದರೂ ತಗೋತಿದಾಳ?” +ಎಂದು ಕೇಳಿದರು. ನನಗೆ ಏನು ಹೇಳಬೇಕೊ ತಿಳಿಯದೆ ಹೊತ್ತಾಯಿತೆಂದು ಸರಸರನೆ ಹೆಜ್ಜೆ ಹಾಕಿ ಮನೆಗೆ ಬಂದೆ. ಯಮುನಕ್ಕನಿಗೆ ಅವರು ಹೀಗೆ ಹೀಗೆ ಕೇಳಿದ್ದಕ್ಕೆ ನಾನು ಹೀಗೆ ಹೇಳಿದೆ ಎಂದೆ. ಯಮುನಕ್ಕ ನನ್ನ ಮಾತನ್ನು ಕೇಳಿ ಗಾಬರಿಯಾಗಿ ಕೂತರು. ಅವರ ಕಣ್ಣಿನ ತುಂಬ ನೀರು ತುಂಬಿತು. ‘ನೀನು ಆ ಕಡೆ ಇನ್ನು ಹೋಗಬೇಡ’ ಎಂದರು. ನಾನು ‘ಆಗಲಿ’ ಎಂದೆ. +ಅವತ್ತು ಮಧ್ಯಾಹ್ನ ಗಣೇಶನ ಅಪ್ಪ ತಿಪ್ಪಶಾಸ್ತ್ರಿಗಳು ಹೊರಣಿಯಿಂದ ಬಂದರು. ಯಮುನಕ್ಕ ಮಾತಾಡಿಸಿದರೂ ಅವರು ಮಾತಾಡಲಿಲ್ಲ. ಯಮುನಕ್ಕ ಮಾಡಿಕೊಟ್ಟ ಪಾನಕವನ್ನು ಮುಟ್ಟಲಿಲ್ಲ. ಗಣೇಶನಿಗೆ ‘ನಿನ್ನ ಚಾಪೆ ಬಟ್ಟೆಗಳನ್ನು ಕಟ್ಟಿಕೊ’ ಎಂದು ಕರೆದುಕೊಂಡು ಹೋಗಿಬಿಟ್ಟರು. ಆಮೇಲೆ ಮನೆಯಲ್ಲಿ ಯಮುನಕ್ಕ ಕೂತು ಬಹಳ ಹೊತ್ತು ಅತ್ತರು. ಆ ದಿನ ರಾತ್ರೆ ಊಟ ಮಾಡಿ ನಾನು ಕೈ ತೊಳೆಯಲು ಹಿತ್ತಲಿಗೆ ಹೋದಾಗ ಕತ್ತಲಿನಲ್ಲಿ ಯಾರೋ ಜಿಗ್ಗಿನ ಮೇಲೆ ನಡೆದು ಬರುವ ಸರಸರ ಶಬ್ದವಾಯಿತು. ‘ಯಮುನಕ್ಕ’ ಎಂದು ಕಿರುಚಿಕೊಂಡೆ. ಯಮುನಕ್ಕ, ಶಾಸ್ತ್ರಿ ಓಡಿಬಂದರು. ಯಾರೋ ಒಬ್ಬ ಮನುಷ್ಯ ದಡದಡನೆ ಓಡಿಹೋಗಿದ್ದು ಕಾಣಿಸಿತು. “ಈ ಬ್ರಹ್ಮರಾಕ್ಷಸನ ಕಾಟಕ್ಕೆ ಏನು ಮಾಡಬೇಕು?” ಎಂದು ಶಾಸ್ತ್ರಿ ಯಮುನಕ್ಕನ ಕಡೆ ನೋಡಿದ. “ನೀನು ಮಾತಾಡಬೇಡ, ಸುಮ್ಮನಿರು” ಎಂದು ಯಮುನಕ್ಕ ಗದರಿಸಿದರು. ಗಣೇಶನನ್ನು ಅವರ ಅಪ್ಪ ಬಂದು ಕರೆದುಕೊಂಡು ಹೋದ ಹಾಗೆ ನನ್ನ ಅಪ್ಪಯ್ಯನೂ ಯಾಕೆ ನನ್ನನ್ನು ಕರೆದುಕೊಂಡು ಹೋಗಲಿಲ್ಲೆಂದು ನಾನು ರಾತ್ರೆ ಮಲಗಿಕೊಂಡವನು ಅತ್ತೆ. ಯಮುನಕ್ಕ ನನ್ನನು ತಬ್ಬಿಕೊಂಡು, “ನೀನು ನನ್ನನ್ನು ಬಿಟ್ಟುಹೋಗಬೇಡ” ಎಂದು ಬಿಕ್ಕಿ ಬಿಕ್ಕಿ ಅತ್ತರು. ಯಮುನಕ್ಕ ಮೂರೂ ಹೊತ್ತೂ ಮನೆಯ ಒಳಗೇ ಇರುತ್ತಿದ್ದರು. ಗೋದಾವರಮ್ಮ ಒಂದು ದಿನ ಬಂದು ಬಾಗಿಲು ತಟ್ಟಿದರೆ – ಸಾಯಂಕಾಲದ ಸಮಯ- ಮನೆಯಲ್ಲಿಲ್ಲವೆಂದು ಹೇಳೆಂದು ನನಗೆ ಹೇಳಿಕಳುಹಿಸಿದರು. ಮಧ್ಯಾಹ್ನ ನಮಗೆ ವೇದವನ್ನು ಹೇಳಿಕೊಟ್ಟಾದ ಮೇಲೆ ಹೊರಟು ನಿಂತ ಉಪಾಧ್ಯರಿಗೆ ಕುಡಿಯಲು ಪಾನಕ ತಂದಿಟ್ಟರೆ “ನನಗೆ ಇದು ಬೇಡಮ್ಮ” ಎಂದು ಹೊರಟು ಹೋದರು. ಯಮುನಕ್ಕ ಸದಾ ಮೂಲೆಮೂಲೆಯಲ್ಲಿ ನಿಂತು ಯೋಚಿಸುತ್ತ ಅಳುತ್ತ ಇರುತ್ತಿದ್ದರು. ಒಂದು ದಿನ ನಮಗೆಲ್ಲ ವೇದಪಾಠವನ್ನು ಬೇಗ ಮುಗಿಸಿ ಉಪಾಧ್ಯರು ಹೊರಟು ಹೋದರು. ಶಾಸ್ತ್ರಿ ರಂಗಣ್ಣನ ಜೊತೆ ಮಾತಾಡಲು ಹೋದ. ನಾನು, ಯಮುನಕ್ಕ ಇಬ್ಬರೇ ಮನೆಯಲ್ಲಿ ಇದ್ದೆವು. ಆಗ ಪುಟ್ಟರಂಗಿ ಎನ್ನುವ ಕೊಂಕಣಿಗರ ಹೆಂಗಸೊಬ್ಬಳು ಹಿತ್ತಲ – ಬಾಗಿಲಲ್ಲಿ ಅಮ್ಮಾ ಎಂದು ಕರೆದು ಯಮುನಕ್ಕನ ಹತ್ತಿರ ಮಾತಾಡುತ್ತ ಕೂತಳು. ಮಾತಿನ ಮಧ್ಯೆ, ಏನು ಯಮುನಮ್ಮ, ಈಚೆಗೆ ನೀವು ನೋಡಲು ತುಂಬ ಚೆನ್ನಾಗಿ ಕಾಣಿಸುತ್ತೀರಿ. ಗುಂಡಗುಂಡಗೆ, ದಪ್ಪಗೆ ಆಗಿದ್ದೀರಿ“ಎಂದು ಅವಳು ಹೇಳಿದ ಕೂಡಲೆ ಮಾತನ್ನು ಅಲ್ಲಿಗೆ ನಿಲ್ಲಿಸಿ ಯಮುನಕ್ಕ ಒಳಕ್ಕೆ ಬಂದವರು ಮತ್ತೆ ಹೊರಗೇ ಹೋಗಲಿಲ್ಲ. ಪುಟ್ಟರಂಗಿ ಕಾದು ಕಾದು “ಯಾಕೆ ಅಮ್ಮನಿಗೆ ಸಿಟ್ಟು ಬಂತೇ?” ಎಂದು ಹೊರಟುಹೋದಳು. ಅವತ್ತು ರಾತ್ರೆ ಯಮುನಕ್ಕ ನನ್ನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಬಹಳ ಹೊತ್ತು ಅತ್ತರು. ಆಮೇಲೆ ಮಡಿಲಿನ ಗಂಟನ್ನು ಬಿಚ್ಚಿ, ಸೀರೆಯನ್ನು ಕೆಳಕ್ಕೆ ಸರಿಸಿ, ಅವರ ಕಿಬ್ಬೊಟ್ಟೆಯ ಹತ್ತಿರ ನನ್ನ ಕಿವಿಯನ್ನು ಇಡಿಸಿ, ,ಮಲಗಿಕೊಂಡು, “ನಾಣಿ ಏನಾದರೂ ನಿನಗೆ ಕೇಳಿಸುತ್ತದ?” ಎಂದರು. ಅವರ ಮೆತ್ತಗೆ ಬೆಚ್ಚಗೆ ಇದ್ದ ಹೊಟ್ಟೆಯ ಮೇಲೆ ಕೆನ್ನೆ ಇಟ್ಟ ನನಗೆ ತುಂಬ ಸುಖವಾಗಿ, ಅಮ್ಮನ ನೆನಪಾಗಿ, ಯಮುನಕ್ಕ ಅಳುತ್ತಿದ್ದರಿಂದ ನನಗೂ ಅಳು ಬಂತು. ಮತ್ತೆ ನನ್ನ ಮುಖವನ್ನು ಅವರ ಮೊಲೆಗಳಿಗೊತ್ತಿಕೊಂಡು ಬೆನ್ನಿನ ಮೇಲೆ ಕೈಯಾಡಿಸಿದರು. “ನೀನು ಎಲ್ಲಿಗೂ ನನ್ನನ್ನ ಬಿಟ್ಟು ಹೋಗಬೇಡ ಆಯಿತ?” ಎಂದರು. ನಾನು ಸುಖವಾಗಿ ಅವತ್ತು ನಿದ್ದೆ ಮಾಡಿದೆ. +ಅದರ ಮಾರನೆ ದಿನ ಉಪಾಧ್ಯರು ನಮಗೆ ಜಪ ಹೇಳಿಕೊಡಲಾಗಲಿ, ವೇದ ಹೇಳಿಕೊಡಲಾಗಲಿ ಬರಲಿಲ್ಲ. ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮುಗಿಸಿಕೊಂಡು ಹಾಗೇ ಹೊರಟುಹೋದರು. ಆಮೇಲಿಂದ ಅವರು ಮನೆಕಡೆ ಸುಳಿಯಲೇ ಇಲ್ಲ. ತ್ರಿಕಾಲ ಸ್ನಾನ ಸಂಧ್ಯಾವಂದನೆ ತಪ್ಪಿತೆಂದು ನನಗೆ ಗೆಲುವಾಯಿತು. ಒಂದು ದಿನ ತುಳಸಿ – ಪತ್ರೆಗೆಂದು ಹೋದ ಶಾಸ್ತ್ರಿ ಮನೆಗೆ ಬರಲೇ ಇಲ್ಲ. ಸಾಹುಕಾರರ ಮನೆಯಲ್ಲೇ ಇರತೊಡಗಿದ. ನನ್ನ ಮುಖ ಕಂಡರೆ ದೂರದಿಂದಲೇ ಅಣಕಿಸುತ್ತಿದ್ದ. +ಈ ದಿನಗಳಲ್ಲೆಲ್ಲ ನನ್ನನ್ನ ಮನೆಯಿಂದ ಹೊರಗೆ ಹೋಗಲು ಯಮುನಕ್ಕ ಬಿಡುತ್ತಿರಲಿಲ್ಲ. ನನಗೆ ಸಿಟ್ಟು ಬರುತ್ತಿತ್ತು. ಕಿಟಕಿಯಿಂದ ನೋಡುತ್ತ ಕೂತಿರುತ್ತಿದ್ದೆ. ಒಕ್ಕಣ್ಣಿನ ಶಾಸ್ತ್ರಿ ರಂಗಣ್ಣನ ಜೊತೆ ಹರಟುತ್ತ ಅಡ್ಡಾಡುತ್ತಿದ್ದ. ಪ್ರೈಮರಿ ಸ್ಕೂಲಿನ ಹುಡುಗರು ಮರಕೋತಿಯಾಡುತ್ತ, ಬುಗುರಿಯಾಡುತ್ತ, ಗಲಾಟೆ ಮಾಡಿಕೊಂಡಿರುತ್ತಿದ್ದರು. ನಮ್ಮ ಮನೆಯ ಹತ್ತಿರ ಒಂದು ನರಹುಳವೂ ಬರುತ್ತಿರಲಿಲ್ಲ. ನಾನು ಮತ್ತು ಯಮುನಕ್ಕ ಹೀಗೆ ಮನೆಯಲ್ಲೆ ಒಂದು ವಾರ ಹಗಲು-ರಾತ್ರೆಗಳನ್ನು ಕಳೆದೆವು. ಅಪ್ಪಯ್ಯ ಯಾಕೆ ಬಂದು ನನ್ನನ್ನು ಕರೆದುಕೊಂಡು ಹೋಗಲಿಲ್ಲೆಂದು ಅಳು ಬರುತ್ತಿತ್ತು. ಯಮುನಕ್ಕನ ಮುಖ ಕಂಡರೆ ರೇಗುತ್ತಿತ್ತು. ನಾನು ರೇಗಿದರೆ ಯಮುನಕ್ಕ ಕಣ್ಣುತುಂಬ ನೀರು ತುಂಬಿಕೊಂಡು, “ನನ್ನನ್ನು ಬಿಟ್ಟು ಹೋಗಬೇಡ” ಎಂದು ಅಳಲು ಪ್ರಾರಂಭಿಸುತ್ತಿದ್ದರು. ಒಂದು ದಿನ ನನ್ನನ್ನು ಯಮುನಕ್ಕ ಮುದ್ದುಮಾಡಲು ಬಂದಾಗ ನಾನು ಅವರನ್ನು ಒದ್ದೆ. ಆಮೇಲೆ ತಪ್ಪಾಯಿತೆಂದು ಕೇಳಿಕೊಂಡೆ. ಅವತ್ತು ರಾತ್ರೆ ಯಮುನಕ್ಕ ಅಗ್ರಹಾರದಲ್ಲಿ ಎಲ್ಲರೂ ಮಲಗಿಯಾದ ಮೇಲೆ ನನ್ನನ್ನು ಎಬ್ಬಿಸಿ ಕರೆದುಕೊಂಡು ದೇವಸ್ಥಾನಕ್ಕೆ ಹೋದರು. ಅಲ್ಲಿ ದೇವರಿಗೊಂದು ದೀಪ ಹಚ್ಚಿಟ್ಟು ಬಹಳ ಹೊತ್ತು ಕಣ್ಣುಮುಚ್ಚಿ ಕೂತು, ಬಗ್ಗಿ ನಮಸ್ಕಾರ ಮಾಡಿ ಹಿಂದಕ್ಕೆ ಬಂದರು. +* +* +* +ಅವತ್ತೊಂದು ಮಧ್ಯಾಹ್ನ ನಾನೊಬ್ಬನೇ ಕಿಟಕಿಯ ಹತ್ತಿರ ಕೂತಿದ್ದೆ. ಯಮುನಕ್ಕನ ಮೇಲೆ ನನಗೆ ಸಿಟ್ಟು ಬಂದಿತ್ತು. ನನ್ನ ಯಾಕೆ ಅಪ್ಪಯ್ಯ ಕರೆದುಕೊಂಡು ಹೋಗಲಿಲ್ಲ. ನನಗೆ ಹೋಗಬೇಕು ಮನೆಗೆ ಎಂದು ಅಳು ಬಂತು. ಹೊರಗೆ ಬೀದಿಯಲ್ಲಿ ಹುಡುಗಿಯರು ಕುಂಟು-ಬಿಲ್ಲೆ ಆಟ ಆಡುತ್ತಿದ್ದರು. ರಂಗಣ್ಣನ ಜೊತೆಗೆ ಶಾಸ್ತ್ರಿ ಬೀದಿಗೆ ಬಂದು ನನ್ನನ್ನು ನೋಡಿದ. ಕಿಟಕಿಯ ಹತ್ತಿರ ಬಂದು ಕೈಸನ್ನೆ ಮಾಡಿ ಕರೆದ. ನಾನು ‘ಬರೋದಿಲ್ಲ’ ಎಂದು ತಲೆಯಾಡಿಸಿದೆ. ‘ಓಡಾಡಿಕೊಂಡು ಬರೋಣ ಬಾ’ ಎಂದ. ನನಗೆ ಹೊರಗೆ ಹೋಗಿ ಬರುವ ಆಸೆಯಾಯಿತು. ‘ಯಮುನಕ್ಕನನ್ನು ಕೇಳಿ ಬರುತ್ತೇನೆ’ ಎಂದೆ. ‘ಯಮುನಕ್ಕ ಮನೆಯಲ್ಲಿಲ್ಲ ಬಾ’ ಎಂದ. ನಾನು ಒಳಗೆ ಹೋಗಿ ಯಮುನಕ್ಕ ಮನೆಯಲ್ಲಿಲ್ಲವಲ್ಲ ಎಂದು ಆಶ್ಚರ್ಯಪಟ್ಟು ಅವನ ಜೊತೆ ಹೊರಟೆ. +ರಂಗಣ್ಣ ಮತ್ತು ಶಾಸ್ತ್ರಿ ಜೊತೆ ಇನ್ನು ಮೂವರು ಅಗ್ರಹಾರದ ಯುವಕರು – ಅವತ್ತು ಇಸ್ಪೀಟು ಆಡುತ್ತ ಕೂತಿದ್ದವರು – ಬಂದರು. ಕೆರೆಯ ಹತ್ತಿರ ಹೋಗುತ್ತಿದ್ದಂತೆ ಅವರು ಹಾಳುಬಿದ್ದ ಅಗ್ರಹಾರದ ಕಡೆ ನನ್ನನ್ನು ಕರೆದುಕೊಂಡು ಹೋದಾರೆಂದು ನನಗೆ ಹೆದರಿಕೆಯಾಯಿತು. “ನಾನು ಬರೋದಿಲ್ಲ” ಎಂದು ಹಠ ಹಿಡಿದೆ. ಅದಕ್ಕೆ ರಂಗಣ್ಣ ಶಾಸ್ತಿಗೆ “ಹೋಗಲಿ ಬಿಡೊ, ಅದೊಂದು ಶುದ್ಧ ಹೆಣ್ಣಿಗ” ಎಂದ. ಶಾಸ್ತ್ರಿ ಕೇಳಲಿಲ್ಲ. ನನ್ನನ್ನು ಎಳೆದುಕೊಂಡು ಹೋದ. “ನಿನ್ನ ಅಪ್ಪಯ್ಯನಿಗೆ ಕಾಗದ ಹಾಕಿದ್ದೇವೆ, ಕಣೊ, ನಿನ್ನನ್ನ ಕರೆದುಕೊಂಡು ಹೋಗೋದಕ್ಕೆ . ಅದಕ್ಕಿಂತ ಮುಂಚೆ ನಿನಗೊಂದು ತಮಾಷೆ ತೋರಿಸ್ತೇವೆ” ಎಂದು ಶಾಸ್ತ್ರಿ ನನ್ನ ಕೈ ಹಿಡಿದು ಪ್ರೀತಿಯಿಂದ ಹೇಳಿದ. ನನ್ನನ್ನು ಹೆಣ್ಣಿಗನೆಂದು ಹಾಸ್ಯ ಮಾಡುತ್ತಾರೆಂದು ಹೆದರಿ ಅವರ ಜೊತೆ ಹೋದೆ. ದಾರಿಯುದ್ದಕ್ಕೂ ನನಗೆ ಸುಬ್ರಹ್ಮಣ್ಯ ದೇವರನ್ನು ನಾನು ಮೈಲಿಗೆಯಲ್ಲಿ ಮುಟ್ಟಿದ್ದು, ಹಾವನ್ನು ಕಂಡಿದ್ದು, ಮನೆಯ ಸುತ್ತ ಬ್ರಹ್ಮರಾಕ್ಷಸ ಸುತ್ತಾಡಿದ್ದು ನೆನಪಾಗಿ ಭಯವಾಯಿತು. ಜೊತೆಗೆ ಇದ್ದ ಐದು ಜನರು ನನಗೆ ಗೇಲಿ ಮಾಡುತ್ತಾರೆಂದು ಇನ್ನಷ್ಟು ದಿಗಿಲಾಯಿತು. ಉದ್ದಕ್ಕೆ, ದೋಟಿಯ ಹಾಗೆ ಬೆಳೆದಿದ್ದ ರಂಗಣ್ಣನನ್ನು ಕಂಡರೆ ನನಗೆ ಅಪ್ಪಯ್ಯನನ್ನು ನೋಡಿದ್ದಕ್ಕಿಂತ ಹೆಚ್ಚು ಗಾಬರಿಯಾಗುತ್ತಿತ್ತು. +ಕಾಡಿನಲ್ಲಿ ತುಂಬ ದೂರದವರೆಗೆ ಬಳಸು – ದಾರಿಗಳಲ್ಲಿ ಹೋಗಿ, ಹಾಳುಬಿದ್ದ ಅಗ್ರಹಾರದ ಒಂದು ತುದಿಯಲ್ಲಿ ಕಾಡಿನ ನಡುವೆ ಇದ್ದ ಬಸ್ತಿಯ ಹತ್ತಿರ ಬಂದೆವು. ಹೊಳೆಯ ಶಬ್ದ ಅಲ್ಲಿಗೆ ಕೇಳಿಸುತ್ತಿತ್ತು. ಶಾಸ್ತ್ರಿ ಗುಟ್ಟಾಗಿ ಹೇಳಿದ ‘ಇಲ್ಲಿಂದ ಮುಂದೆ ಮೆತ್ತಗೆ ನಡೆಯುತ್ತ ನನ್ನ ಹಿಂದೆ ಬನ್ನಿ’ ಅಂತ. ಅವನು ಮುಂದಾಗಿ ನಾವೆಲ್ಲ ಹಿಂದಾಗಿ ಸದ್ದು ಮಾಡದೆ ನಡೆದು, ಅವತ್ತು ನಾನು ಶಾಸ್ತ್ರಿ ಅಡಗಿ ಕೂತಿದ್ದ ಮೋಟು ಗೋಡೆಯ ಹಿಂದೆ ಬಂದೆವು. ನಾನು ಮತ್ತು ಶಾಸ್ತ್ರಿ ಗೋಡೆ ಬಿರುಕು ಬಿಟ್ಟಲ್ಲಿ ಕಣ್ಣಿಟ್ಟು ಕೂತೆವು. ಉಳಿದ ನಾಲ್ವರು ಎತ್ತರಕ್ಕಿದ್ದುದರಿಂದ ಗೋಡೆಗೆ ಆತು ನಿಂತುಕೊಂಡು ಇಣುಕಿದರು. ನನಗೆ ಹಾವಿನ ನೆನಪಾಗಿ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು. +ಶಾಸ್ತ್ರಿ ‘ಎದುರಿಗೆ ಏನು ಕಾಣಿಸ್ತಿದೆ, ನೋಡು’ ಎಂದ. ನಮಗಿಂತ ಸ್ವಲ್ಪ ದೂರದಲ್ಲಿ ಯಮುನಕ್ಕ ನಮಗೆ ಬೆನ್ನು ಹಾಕಿ ಕಲ್ಲು-ಚಪ್ಪಡಿಯೊಂದರ ಮೇಲೆ ಕೂತಿದ್ದರು. ಎರಡು ಕೈಗಳ ಮೇಲೆ ತಲೆಹೊತ್ತು ಬಗ್ಗಿ ಕೂತಿದ್ದರು. ಇವರು ಇಷ್ಟು ದೂರ ಬಂದು ಒಬ್ಬರೇ ಕೂತಿದ್ದಾರಲ್ಲ, ಹೆದರಿಕೆಯಾಗಲ್ಲವೆ, ಇಲ್ಲಿ ಹಾವಿದೆ ಎಂದು ಇವರಿಗೆ ಗೊತ್ತಿಲ್ಲವೆ ಎಂದು ನಾನು ಆಶ್ಚರ್ಯಪಟ್ಟೆ. ಸ್ವಲ್ಪ ಹೊತ್ತಿನ ನಂತರ ಯಮುನಕ್ಕ ಎದ್ದು ನಿಂತದ್ದು ಕಂಡು ಗೋಡೆಯ ಮೇಲಿಂದ ಇಣಿಕಿ ನೋಡುತ್ತಿದ್ದವರು ಕೂತುಬಿಟ್ಟರು. ಯಮುನಕ್ಕ ಯಾರನ್ನೊ ಹುಡುಕುವವರ ಹಾಗೆ ನಮ್ಮ ಕಡೆಯೇ ನಡೆದು ಬಂದರು. “ಯಮುನಕ್ಕ ನಾವೆಲ್ಲ ಇಲ್ಲಿ ಇದ್ದೇವೆ, ಕದ್ದು ನೋಡುತ್ತಿದ್ದೇವೆ. ಇಲ್ಲೊಂದು ಹಾವಿದೆ” ಎಂದು ನನಗೆ ಹೇಳಬೇಕೆನಿಸಿತು. ಆದರೆ ನಾನು ಬಾಯಿ ತೆರೆದ ಕೂಡಲೆ ಶಾಸ್ತ್ರಿ ನನ್ನ ಬಾಯಿ ಮುಚ್ಚಿದ. ರಂಗಣ್ಣ ಮೂಗಿನ ಮೇಲೆ ಬೆರಳಿಟ್ಟು ನನಗೆ ಹೆದರಿಸಿದ. ನಾನು ಸುಮ್ಮನಾದೆ. +ಯಮುನಕ್ಕ ನಮ್ಮ ಕಡೆ ಬರುತ್ತಿದ್ದವರು ನಿಂತು ಮೋಟು-ಗೋಡೆಯನ್ನೆ ಎವೆಯಿಕ್ಕದೆ ನೋಡಿದರು. ಶಾಸ್ತ್ರಿ ಉಸಿರು ಹಿಡಿದು ಕೂತು ನನ್ನ ಬಾಯನ್ನು ಕೈಯಿಂದ ಮುಚ್ಚಿದ. ಯಮುನಕ್ಕ ಸೆರಗಿನಿಂದ ಕಣ್ಣೊರಸಿಕೊಂಡು ಕುರುಡರ ಹಾಗೆ ಪರದಾಡುತ್ತ ನಡೆದು ಹಿಂದಕ್ಕೆ ಹೋಗಿ ಅದೇ ಕಲ್ಲಿನ ಮೇಲೆ ಕೂತರು. ಹಿಂದೆ ಕೂತ ರೀತಿಯಲ್ಲೆ. +ನನಗೆ ಕೂತು ಕೂತು ಬೇಜಾರಾಯಿತು. ಸಾಹುಕಾರರ ಮಗ ರಂಗಣ್ಣ ಮತ್ತು ಉಳಿದವರು ನಿಂತು ಸಾಕಾಗಿ ಕೂತರು. ಶಾಸ್ತಿಯ ಕಿವಿಯಲ್ಲಿ ಕಂಡಕೂಡಲೆ ಹೇಳು ಎಂದರು. ರಂಗಣ್ಣ ಸಿಗರೇಟು ಹೊತ್ತಿಸಿ, ಇನ್ನೊಂದನ್ನು ಶಾಸ್ತಿಗೆ ಕೊಟ್ಟ. ಶಾಸ್ತ್ರಿ ನನಗೆ, “ಇನ್ನು ಸ್ವಲ್ಪ ಹೊತ್ತಿಗೆ ಬ್ರಹ್ಮರಾಕ್ಷಸ ಬರುತ್ತಾನೆ, ನೀನು ಕಣ್ಣಾರೆ ನೋಡಬಹುದು” ಎಂದ . ನನಗೆ ತುಂಬ ಗಾಬರಿಯಾಯಿತು. ಇನ್ನಷ್ಟು ಹೊತ್ತಾಗಿ ಬೇಜಾರಾಗಿ ಸಾಯಂಕಾಲವಾಯಿತು. +ನನಗೆ ಅಪ್ಪಯ್ಯ ಅಮ್ಮನ ಜ್ಞಾಪಕವಾಯಿತು. ಯಾರ ಕೈಯಲ್ಲೊ ಸಿಕ್ಕಿಹಾಕಿಕೊಂಡೆ, ಇನ್ನು ನಾನು ಮನೆಗೆ ಹೋಗುತ್ತೇನೋ ಇಲ್ಲವೊ ಎಂಬ ದುಃಖವಾಯಿತು. ‘ಹಿಂದಕ್ಕೆ ಹೋಗೋಣ’ ಎಂದು ಶಾಸ್ತಿಗೆ ಹೇಳಿದೆ. “ನೀನು ಬೇಕಾದರೆ ಒಬ್ಬನೇ ಹೋಗು, ದಾರಿಯಲ್ಲಿ ಮಾತ್ರ ಹಾವು ಅಟ್ಟಿಸಿಕೊಂಡು ಬರುತ್ತದೆ. ನನ್ನ ಕೈಯಲ್ಲಿ ಗರುಡ-ಮಚ್ಚೆಯಿದೇಂತ ನಿನಗೆ ಗೊತ್ತಿಲ್ಲವ” ಎಂದು ಶಾಸ್ತ್ರಿ ನನಗೆ ಗದರಿಸಿ ನಕ್ಕ. ನಾನು ಸುಮ್ಮನಾದೆ. +ಸ್ವಲ್ಪ ಹೊತ್ತಾದ ಮೇಲೆ ದೂರದಿಂದ ಒಬ್ಬ ಬರುವುದು ಕಾಣಿಸಿತು. ತೆಳ್ಳಗೆ, ಉದ್ದಗೆ ಇದ್ದ. ಕಚ್ಚೆ ಹಾಕಿ ಪಂಚೆಯುಟ್ಟಿದ್ದ; ಕ್ರಾಪು ಬಿಡಿಸಿದ್ದ. ಹತ್ತಿರ ಬಂದ ಮೇಲೆ ಇವನೇ ಹಿಂದಿನ ಸಾರಿ ನಾನಲ್ಲಿ ಕದ್ದು ನೋಡಿದಾಗ ಬಂದು ಕೂತಿದ್ದವ ಎಂದು ಗೊತ್ತಾಯಿತು. ತುಮಕೂರಿನಿಂದ ವರ್ಗವಾಗಿ ಬಂದು, ಸೈಕಲ್ಲಿನ ಮೇಲೆ ಶಿವಪುರದಿಂದ ನಮ್ಮೂರಿನ ಸ್ಕೂಲಿಗೆ ಬಂದು ಹೋಗುತ್ತಿದ್ದ ಆ ಎಣ್ಣೆಗೆಂಪು ಬಣ್ಣದ ಪೇಟೆಯವನ ಹೆಸರು ನನಗೆ ಗೊತ್ತಿರಲಿಲ್ಲ. +ಶಾಸ್ತ್ರಿ ಚಿಟಿಕೆ ಹೊಡೆದು ‘ಬ್ರಹ್ಮರಾಕ್ಷಸ ಬಂದ’ ಎಂದ. ಕೂತಿದ್ದವರೆಲ್ಲ ನಿಂತು ಮೋಟು-ಗೋಡೆಯಿಂದ ಇಣಿಕಿದರು. +ಯಮುನಕ್ಕನ ಪಕ್ಕದಲ್ಲಿ ಅವನು ನಮಗೆ ಬೆನ್ನು ಮಾಡಿ ಕೂತದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. “ನೋಡು, ನೋಡು, ಸರಿಯಾಗಿ ನೋಡು – ಏ ಶುಕಮುನಿ” ಎಂದು ಶಾಸ್ತ್ರಿ ನನಗೆ ಚುಚ್ಚಿದ. ಅವನು ಯಮುನಕ್ಕನಿಗೆ ಏನೋ ಹೇಳಿದ. ಯಮುನಕ್ಕ ಗಡಗಡ ನಡುಗಿದರು. ಅವನು ಯಮುನಕ್ಕನ ಕೈ ಹಿಡಿದುಕೊಂಡ. ಯಮುನಕ್ಕ ಕೈಕೊಸರಿಕೊಂಡು ದೂರ ಸರಿದರು. +ಶಾಸ್ತ್ರಿ ಸಿಳ್ಳೆ ಹಾಕುತ್ತ ಸಿಗರೇಟು ಹಚ್ಚಿಸಿ, ಹುಬ್ಬನ್ನು ಎತ್ತಿ ನನ್ನ ಕಡೆ ನೋಡಿದ. +ಬಿರುಕಿನಿಂದ ನೋಡುತ್ತ ಕೂತ ನನಗೆ ಒಂದು ಹಾವು ನಿಧಾನವಾಗಿ ಹರಿಯೋದು ಕಾಣಿಸಿತು. ‘ಹಾವು’ ಎಂದೆ. ಎಲ್ಲರೂ ಅದನ್ನು ನೋಡಿದರು. ಕೇರೆ ಹಾವಿರಬೇಕು ಸುಮ್ಮನಿರು ಎಂದರು. ನಾನು ಕೂಗಿಕೊಳ್ಳುವುದರಲ್ಲಿದ್ದೆ. ರಂಗಣ್ಣ ಒಂದೇಟು ಹೊಡೆದು ನನ್ನ ಬಾಯಿ ಮುಚ್ಚಿದ. ಅಳುತ್ತಿದ್ದ ನನಗೆ ಶಾಸ್ತ್ರಿ, “ಅಳಬೇಡ, ಮುಂದೆ ಇನ್ನೂ ತುಂಬ ಮಜವಿದೆ. ಕಾದು ನೋಡು” ಎಂದ. ನಾನು ಸುಮ್ಮನಾದೆ. +ಕೆನ್ನೆಯನ್ನು ಉಜ್ಜಿಕೊಳ್ಳುತ್ತ ಕೂತೆ. ಹಾವು ಮೆತ್ತಗೆ ಸದ್ದು ಮಾಡದೆ ಯಮುನಕ್ಕ ಕೂತ ಕಡೆ ಹರಿಯುತ್ತಿತ್ತು. ಬೆನ್ನು ಹಾಕಿ ಕೂತ ಅವರು ತಿರುಗಿ ನೋಡಲೇ ಇಲ್ಲ. ಹಾವು ಬಳಕುತ್ತ ಹೊಳೆಯುತ್ತ, ಮೂಸಿ ಮೂಸಿ ನೋಡುತ್ತ ಹರಿಯುತ್ತಿತ್ತು. “ಕೇರೆ-ಹಾವು ಹೆದರಬೇಡ ” ಎಂದು ಶಾಸ್ತ್ರಿ ಹೇಳಿದ. “ಹಾವಿನ ಕಡೆ ನೋಡಬೇಡ. ಅದು ಹರಿದು ಹುತ್ತಕ್ಕೆ ಹೋಗುತ್ತದೆ. ಅವರಿಬ್ಬರ ಮಜ ನೋಡು” ಎಂದ. ಹಾವು ಎಡಗಡೆಗೆ ತಿರುಗಿತು. ಯಮುನಕ್ಕ ಕೂತ ಕಡೆ ಅದು ಹೋಗಲಿಕ್ಕಿಲ್ಲವೆಂದುಕೊಂಡರೆ ಮತ್ತೆ ಬಲಕ್ಕೆ ತಿರುಗಿ ಹರಿಯಿತು. ನಮ್ಮ ಜೊತೆ ಬಂದವನೊಬ್ಬ, “ಈ ಮುಂಡೆಯಿಂದಾಗಿ ದೇವರಿಗೆ ಮೈಲಿಗೆಯಾಗಿದೆ. ಅದಕ್ಕಾಗಿ ಈ ಹಾವು” ಎಂದ. ಎಲ್ಲರೂ ನಿಜ ನಿಜವೆಂದು ತಲೆಯಾಡಿಸಿದರು.ನನಗೆ ಸುಬ್ರಹ್ಮಣ್ಯ ದೇವರನ್ನು ಮೈಲಿಗೆಯಲ್ಲಿ ಮುಟ್ಟಿದ್ದು ನೆನಪಾಗಿ ಮೈ ನಡುಗಿತು. ನನ್ನ ಸುತ್ತಲೂ ನೋಡಿಕೊಂಡೆ. ರಂಗಣ್ಣ ಹೇಳಿದ: “ದೇವರೇ ಈ ಹಾವನ್ನು ಕಳಿಸಿದ್ದರೆ ಇದು ಅವಳನ್ನು ಕಚ್ಚಿ ಸಾಯಿಸುತ್ತದೆ. ಪಾಪಕ್ಕೆ ತಕ್ಕ ಶಾಸ್ತ್ರಿ.” +ಹಾವು ಸಿಂಬೆ ಸುತ್ತಿ ಕೂತುಕೊಂಡು ಹೆಡೆಯನ್ನು ಬಿಚ್ಚಿ ಸುತ್ತಲೂ ನೋಡಿತು. ನನ್ನನ್ನು ಅದು ನೋಡಬಹುದೆಂದು ನನಗೆ ದಿಗಿಲಾಯಿತು. ‘ಹಾ ಸರ್ಪ ಸರ್ಪ’ ಎಂದು ಎಲ್ಲರ ಬಾಯಿಂದ ಬಂದಿತು. ನಾನು ಎದ್ದು ನಿಂತೆ. ಶಾಸ್ತ್ರಿ, ಜಗ್ಗಿ ನನ್ನನ್ನು ಎಳೆದು ಕೂರಿಸಿದ. ಹಾವು ಮತ್ತೆ ಹರಿಯುತ್ತ ಕಲ್ಲು – ಚಪ್ಪಡಿಯ ಕಡೆ ಹೋಯಿತು. +ಯಮುನಕ್ಕನಿಗೆ ಅವನು ಏನೋ ಹೇಳುತ್ತಲೇ ಇದ್ದ. ಆದರೆ ಯಮುನಕ್ಕ ಕೈಯಲ್ಲಿ ಮುಖ ಮುಚ್ಚಿಕೊಂಡೆ ಕೂತಿದ್ದರು. ಅವನು ಹತ್ತಿರ ಹೋಗಿ ಅವರ ಹೆಗಲಿನ ಮೇಲೆ ಕೈಹಾಕಿದ. ಯಮುನಕ್ಕ ಮತ್ತೆ ಕೊಸರಿಕೊಂಡು, ಈ ಸಾರಿ ಎದ್ದು ನಿಂತರು. +ಗೋಡೆಯಿಂದ ಇಣುಕುತ್ತಿದ್ದವರು ಕೂತರು. ಹರಿಯುತ್ತ ತಮ್ಮ ಕಡೆ ಬರುವ ಹಾವನ್ನು ಯಮುನಕ್ಕ ನೋಡಬಹುದು ಎಂದು ನನ್ನ ಮನಸ್ಸು ಹಗುರವಾಯಿತು. ಆದರೆ ಅವರು ಅದನ್ನು ನೋಡಲೇ ಇಲ್ಲ. ಮತ್ತೆ ಅವನ ಪಕ್ಕಕ್ಕೆ ಕೂತರು. ನನಗೆ ಅಳು ಬರುವಷ್ಟು ಭಯವಾಯಿತು. ಹಾವು ಹರಿದು ಅವರು ಕೂತಿದ್ದ ಕಲ್ಲು-ಚಪ್ಪಡಿಯ ಹತ್ತಿರ ಹೋಯಿತು. ‘ಸುಬ್ರಹ್ಮಣ್ಯ ಸುಬ್ರಹ್ಮಣ್ಯ’ ಎಂದು ನಾನು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿದೆ. ಕಲ್ಲು-ಚಪ್ಪಡಿಯ ಹತ್ತಿರ ಹೋದ ಹಾವು ಅದರ ಬಾಯಿಂದ ಚಪ್ಪಡಿಯನ್ನು ಮುಟ್ಟಿ ಮುಟ್ಟಿ ನೋಡಿತು. ನಾನು ನಡುಗತೊಡಗಿದೆ. ಶಾಸ್ತ್ರಿ ನನ್ನ ಕೈ ಹಿಡಿದು – “ತಪ್ಪಿಗೆ ತಕ್ಕ ಶಿಕ್ಷೆ” ಎಂದ. +ಹಾವು ಕಲ್ಲು-ಚಪ್ಪಡಿಯ ಸಂದಿಯಲ್ಲಿ ಹೋಯಿತು. ಯಮುನಕ್ಕ ಮತ್ತು ಅವನು ಕಾಲನ್ನು ಇಳಿಬಿಟ್ಟು ಕೂತಿದ್ದರಿಂದ ಅವರ ಕಾಲನ್ನದು ಕಡಿಯಬಹುದೆಂದು ನನಗೆ ಮೈಯ ಕೂದಲೆಲ್ಲ ಎದ್ದು ನಿಂತುಕೊಂಡಿತು. +ಕಲ್ಲು-ಚಪ್ಪಡಿಯ ಸಂದಿಯಲ್ಲಿ ಅದಕ್ಕೆ ಸಾಕಷ್ಟು ಜಾಗ ಸಿಗಲಿಲ್ಲವೆಂದು ಕಾಣುತ್ತೆ. ಮತ್ತೆ ಹೊರಗೆ ಬಂದಿತು. ಮೋಡದಿಂದ ತೂರಿಕೊಂಡು ಹೊರಗೆ ಬಂದ ಸಂಜೆಯ ಸೂರ್ಯನ ಬೆಳಕಿನಲ್ಲಿ ಹಾವು ಪಳಪಳ ಹೊಳೆಯುತ್ತಿತ್ತು. +ಅವನು ಮತ್ತೆ ಏನೋ ಹೇಳುತ್ತ ಯಮುನಕ್ಕನ ಹೆಗಲಿನ ಮೇಲೆ ಕೈಹಾಕಿದ. ಅವನು ಹೆಗಲಿನ ಮೇಲೆ ಕೈಹಾಕಿದ್ದರಿಂದ ಯಮುನಕ್ಕ ಸಿಟ್ಟಿನಿಂದ ಕೊಸರಿಕೊಂಡು ಎದ್ದು ನಿಲ್ಲುತ್ತಾರೆ, ಆಗ ಹಾವು ಕಲ್ಲು-ಚಪ್ಪಡಿಯನ್ನು ಬಾಯಿಂದ ಮುಟ್ಟಿ ಮುಟ್ಟಿ ನೋಡುವುದನ್ನು ಕಣ್ಣಾರೆ ನೋಡುತ್ತಾರೆ, ಪರವಾಯಿಲ್ಲ, ಎಂದು ನಾನು ನಿಟ್ಟುಸಿರು ಬಿಟ್ಟೆ. ಆದರೆ ನಾನು ಎಣಿಸಿದ್ದಂತೆ ಯಮುನಕ್ಕ ಎದ್ದು ನಿಲ್ಲಲಿಲ್ಲ. ಅವನಿಗೆ ಒತ್ತಿ ಕೂತು ಅಳುತ್ತಾ ಅವನನ್ನು ತಬ್ಬಿಕೊಂಡರು. ಅವನ ತೊಡೆಯ ಮೇಲೆ ತಲೆಯಿಟ್ಟರು. +ನಾನು ನನ್ನ ಕೈಯನ್ನು ಕೊಸರಿಕೊಂಡು ಚಂಗನೆ ನೆಗೆದೆ. ರಂಗಣ್ಣ, ಶಾಸ್ತ್ರಿ ನನ್ನನ್ನು ಹಿಡಿಯುವುದರ ಒಳಗೆ ಮೋಟು ಗೋಡೆಯನ್ನು ಬಳಸಿ, ಒಂದೇ ಉಸುರಿಗೆ, “ಅಯ್ಯೋ ಅಲ್ಲಿ ಹಾವಿದೆ ಯಮುನಕ್ಕಾ” ಎಂದು ಕಿರುಚುತ್ತಾ ಅವರ ಕಡೆ ಓಡಿದೆ. +ಯಮುನಕ್ಕ ಎದ್ದು ನಿಂತರು. ಗಾಬರಿಯಿಂದ ಹತ್ತು ಹೆಜ್ಜೆ ಓಡಿ ಕಂಗಾಲಾದವರಂತೆ ನಿಂತರು. ಮೋಟು ಗೋಡೆಯ ಹಿಂದೆ ನಿಂತಿದ್ದವರೆಲ್ಲ ಹಾರಿ ಓಡಿದರು. ಯಮುನಕ್ಕನ ಜೊತೆಗಿದ್ದವ ಅವರನ್ನು ಕಂಡಕ್ಷಣವೇ ಇನ್ನೊಂದು ದಿಕ್ಕಿಗೆ ಪಂಚೆಯನ್ನು ಎತ್ತಿಕೊಂಡು ಓಡಿಬಿಟ್ಟ. ನಾನು ಓಡುತ್ತಿದ್ದವನು ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಚಪ್ಪಡಿಯ ಕಡೆ ಓಡಿದೆ. ನನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಹಾವಿನ ಮೇಲೆ ಆ ಕಲ್ಲನ್ನು ಎಸೆದು, ಜಲ್ಲೆಂದು ಭಯವಾಗಿ ಮೈ ಬೆವರಲು, ಓಡಿ ಹೋಗಿ ಯಮುನಕ್ಕನನ್ನು ತಬ್ಬಿಕೊಂಡೆ. ಹಾವಿಗೆ ಏಟು ಬಿದ್ದಿರಬೇಕು; ಅದು ಹೆಡೆಯನ್ನು ಇಷ್ಟಗಲ ಬಿಚ್ಚಿ ಬು ಎಂದು ಕಲ್ಲು-ಚಪ್ಪಡಿಯನ್ನು ಕುಟ್ಟಿತು. ಯಮುನಕ್ಕನ ಹೊಟ್ಟೆಯ ಮೇಲೆ ತಲೆಯಿಟ್ಟು ಕೈಗಳಿಂದ ಅವರನ್ನು ಬಿಗಿದು ನಿಂತಿದ್ದ ನನಗೆ ಪ್ರಾಣಾಂತಿಕ ಭಯವಾಯಿತು. ಇನ್ನೊಂದು ಕಲ್ಲನ್ನು ಎತ್ತಿ ಅದರ ಕಡೆ ಎಸೆದೆ. ಹಾವು ಸರಸರನೆ ಹರಿದು ಕಲ್ಲು-ಚಪ್ಪಡಿಯಿಂದ ಇಳಿಯಿತು. ಅಷ್ಟುದ್ದದ ತನ್ನ ನೀಳವಾದ ಮೈಯನ್ನು ಹೀಗೆ ಹೀಗೆ ಹೀಗೆ ಬಳುಕಿಸುತ್ತ ಬು ಎಂದು ನಮ್ಮನ್ನು ಅಟ್ಟಿಸಿಕೊಂಡು ಬಂತು. ನಾವಿಬ್ಬರೂ ಓಡಿದೆವು. ಯಮುನಕ್ಕನ ಕೈಯನ್ನು ದರದರನೆ ಹಿಡಿದೆಳೆಯುತ್ತ ನಾನೇ ಮುಂದಾಗಿ ಅಷ್ಟು ದೂರ ಓಡಿ, ಯಮುನಕ್ಕನಿಗೆ ಸುಸ್ತಾಗಲು ನಿಂತೆ. ಯಮುನಕ್ಕ ಕುಸಿದು ಕೂತರು. ನನಗೆ ಮೈ ಬೆವತು ಕಣ್ಣು ಕತ್ತಲೆಕಟ್ಟಿ ಬಂತು. ಯಮುನಕ್ಕನ ಜೊತೆ ಕೂತು ಸುಧಾರಿಸಿಕೊಂಡು ಕಣ್ಣುಬಿಟ್ಟೆ. ನಮ್ಮ ಎದುರಿಗೇ ಇದ್ದ ಒಂದು ಹುತ್ತದ ಒಳಕ್ಕೆ ಹಾವು ತಲೆ ಹಾಕಿತು. ಮೆಲ್ಲ ಮೆಲ್ಲಗೆ ತನ್ನ ನೀಳವಾದ ಮೆಯನ್ನು ಎಳೆದುಕೊಳ್ಳುತ್ತ, ಕೊನೆಗೊಂದು ಬಾಲ ಮಾತ್ರ ಚೂಪಾಗಿ ಉಳಿದು, ಕೊನೆಗೆ ಅದೂ ಮಾಯವಾಯಿತು. ಎವೆಯಿಕ್ಕದೆ ಇದನ್ನು ನಾನು ನೋಡುತ್ತ ಕೂತೆ. ಆ ನಿರ್ಜನವಾದ ಹಾಳುಬಿದ್ದ ಅಗ್ರಹಾರದಲ್ಲಿ ಆಗ ಉಳಿದಿದ್ದವರು – ಯಮುನಕ್ಕ, ನಾನು ಮತ್ತು ಯಾವ ಹುತ್ತದೊಳಗಿನ ಕತ್ತಲೆಗೊ ಮಾಯವಾದ, ಗಾಯಗೊಂಡರೂ ಸಾಯದ, ರಚ್ಚಿನಲ್ಲಿ ಬುಸುಗುಟ್ಟುವ ಹಾವು. +ಯಮುನಕ್ಕನನ್ನು ಕೈ ಹಿಡಿದು ಎಬ್ಬಿಸಿ ನಾನು ಕರೆದುಕೊಂಡು ಹೋಗಿ ಹಿತ್ತಲ ಬಾಗಿಲಿಂದ ಮನೆ ತಲುಪಿದೆ. ನನಗೆ ಕಾಲುಗಳು ಜಗಿಯುತ್ತಿದ್ದವು. ಒಂದು ಸಾಹಸವನ್ನು ಮಾಡಿ ಮುಗಿಸಿದವನ ಭಾವನೆಯಲ್ಲಿ ನಾನು ಇದ್ದುದರಿಂದ ಮನೆಗೆ ಹೋದವನೆ ಅಳಲಿಲ್ಲ. ಎಲ್ಲ ಬಾಗಿಲಿನ ಅಗಳಿಗಳನ್ನೂ ಹಾಕಿ ನಡುಮನೆಗೆ ಬಂದೆ. ಅಲ್ಲಿ ಯಮುನಕ್ಕ ನೆಲದ ಮೇಲೆ ಬಿದ್ದು ಹೊರಳುತ್ತಿದ್ದರು. ಸಾಯುವವರು ಸಂಕಟಪಡುವ ಹಾಗೆ ನರಳುತ್ತಿದ್ದರು. ನಾನು ಸುಮ್ಮನೇ ನಿಂತೆ. ಎಲ್ಲ ಬಾಗಿಲುಗಳನ್ನೂ ಹಾಕಿದ್ದರಿಂದ ನಡುಮನೆಯ ತುಂಬ ಕತ್ತಲಾಗಿತ್ತು. ಯಮುನಕ್ಕ ಕಾಣಿಸುತ್ತಿರಲಿಲ್ಲ. ಅವರು ನರಳುತ್ತ ಹೊರಳುವ ಶಬ್ದ ಮಾತ್ರ ಕೇಳಿಸುತ್ತಿತ್ತು. ಬಹಳ ಹೊತ್ತು ನಾನು ಮೂಲೆಯಲ್ಲಿ ಹಾಗೆ ನಿಂತೆ. +ಹೊರಳುವುದನ್ನು ನಿಲ್ಲಿಸಿ ಯಮುನಕ್ಕ ನನ್ನನ್ನು ‘ಬಾ’ ಎಂದು ಕರೆದರು. ಕತ್ತಲಿನಲ್ಲಿ ತಡಕಾಡುತ್ತ ನಾನು ಅವರಿದ್ದಲ್ಲಿಗೆ ಹೋದೆ. ನನ್ನನ್ನು ಎರಡು ಕೈಗಳಿಂದಲೂ ಬಾಚಿ ಅವಚಿಕೊಂಡರು. ಯಮನಕ್ಕ ಸಂಪೂರ್ಣ ಬೆತ್ತಲೆಯಾಗಿದ್ದಾರೆಂದು ಆಗ ನನಗೆ ಅನುಭವವಾಯಿತು. ನನ್ನ ಮುಖವನ್ನು ಎತ್ತಿ ತನ್ನ ಹೊಟ್ಟೆಯ ಮೇಲೆ ಇಟ್ಟುಕೊಂಡು ಅಯ್ಯೋ ಉರಿ ಉರಿ ಎಂದು ಅತ್ತರು. ಮೆತ್ತಗೆ ಬೆಚ್ಚಗೆ ಇದ್ದ ಹೊಟ್ಟೆಗೆ ಒತ್ತಿದ್ದ ನನ್ನ ಮುಖ ಬೆವರಿತು. ಉಸಿರಾಡುವುದು ಕಷ್ಟವಾಯಿತು. “ಅಯ್ಯೋ ನನ್ನ ಬಿಡಿ,ಬಿಡಿ” ಎಂದು ನಾನು ಕಷ್ಟದಿಂದ ಬಿಡಿಸಿಕೊಂಡು ಎದ್ದೆ. ಯಮುನಕ್ಕ ಸುಮ್ಮನಾಗಿಬಿಟ್ಟರು. ನಿಶ್ಚಲರಾಗಿ ಅಂಗಾತನೆ ಮಲಗಿದರು. +ನಾನು ಸ್ವಲ್ಪ ಹೊತ್ತು ಹಾಗೇ ಕೂತಿದ್ದೆ. ಗಣೇಶನ ಹಾಗೆ ನಾನೂ ಮನೆಗೆ ಹೋಗಿಬಿಡಬೇಕಿತ್ತು ಎನ್ನಿಸಿತು. ಈ ಯಮುನಕ್ಕ ಸತ್ತುಹೋದರೆ ಸಾಕು, ನಾನು ಸೀದ ಮನೆಗೆ ಎದ್ದುಬಿಡಬಹುದು ಎಂದು ಯೋಚಿಸಿ, ಈಗಲೇ ಎಲ್ಲಾದರೂ ಯಮುನಕ್ಕ ಸತ್ತುಬಿಟ್ಟಿದ್ದಾರೊ ಎಂದು ಭಯಪಟ್ಟೆ. “ಯಮುನಕ್ಕ ಯಮುನಕ್ಕ” ಎಂದು ಕೂಗಿದೆ. ಉತ್ತರ ಬರಲಿಲ್ಲ – ಭಯವಾಯಿತು. ‘ಯಮುನಕ್ಕ ಹಸಿವು’ ಎಂದು ಅಳತೊಡಗಿದೆ. ಯಮುನಕ್ಕ ಎದ್ದು ಸೀರೆಯನ್ನುಟ್ಟುಕೊಂಡು, ಅಡಿಗೆ-ಮನೆಗೆ ಹೋಗಿ ಅರಳು-ಹಿಟ್ಟನ್ನು ಮಜ್ಜಿಗೆಯಲ್ಲಿ ಕಲಸಿ ನನಗೆ ಕೊಟ್ಟರು. “ನಿಮಗೆ?” ಎಂದು ಕೇಳಿದೆ. “ನೀನು ತಿನ್ನು” ಎಂದು ಅವರು ಕತ್ತಲಿನಲ್ಲಿ ಕೂತರು. ಕತ್ತಲಲ್ಲೇ ಅರಳು-ಹಿಟ್ಟನ್ನು ತಿನ್ನುತ್ತ ನನಗೆ ಅಳು ಬಂತು. ‘ಅಳಬೇಡ’ ಎಂದರು ಯಮುನಕ್ಕ ಮೃದುವಾಗಿ. +ಹೊರಗೆ ಬಾಗಿಲನ್ನು ಬಡಿಯುವ ಶಬ್ದವಾಯಿತು. ಬಾಗಿಲು ಬಾಗಿಲು ಎಂದು ನಾಲ್ಕೆದು ಜನರ ಗಂಟಲು ಕೇಳಿಸಿತು. ಯಮುನಕ್ಕ ಏಳಲಿಲ್ಲ: ಮಾತೂ ಆಡಲಿಲ್ಲ. ರಂಗಣ್ಣನ ಧ್ವನಿ ಕೇಳಿಸಿತು- ನನ್ನನ್ನು ಹೊರಗೆ ಕಳಿಸುವಂತೆ ಅವನು ಹೇಳಿದ. ಯಮುನಕ್ಕ ನನಗೆ “ಬೇಕಾದರೆ ಹೋಗು” ಎಂದರು. “ನಾನು ಹೋಗೋದಿಲ್ಲ” ಎಂದೆ: ಯಮುನಕ್ಕನ ಕೈ ಹಿಡಿದು ಕೂತೆ. ಮತ್ತೆ ಹೊರಗಿದ್ದವರು ಅಗಳಿ ಮುರಿಯುವ ಹಾಗೆ ಬಾಗಿಲನ್ನು ತಟ್ಟಿದರು. ಮತ್ತೆ ಎಲ್ಲ ನಿಶ್ಶಬ್ದವಾಯಿತು. ಕೊನೆಗೊಂದು ಧ್ವನಿ ಕೇಳಿಸಿತು: “ದೇವರನ್ನು ಮುಟ್ಟಿ ಮೆಲಿಗೆ ಮಾಡಬೇಡ. ದೇವಸ್ಥಾನಕ್ಕೆ ಬರಬೇಡ. ನಾಳೆಯೊ ನಾಡಿದ್ದೊ ಉಡುಪರು ಬರುತ್ತಾರೆ – ಅವರು ಬಂದ ಮೇಲೆ ವಿಚಾರವಾಗಲಿ…” ಜೀ, ಜೀ, ಬಿಕೊ ಎಂದು ಮತ್ತೆ ಮೌನ ಕವಿಯಿತು. ಕತ್ತಲೆಯಾಗಿ ತುಂಬ ಹೊತ್ತಾಗಿರಬೇಕು. ಕೂತಲ್ಲೆ ಎಷ್ಟು ಹೊತ್ತಿಗೆ ನನಗೆ ನಿದ್ದೆ ಬಂತೊ ತಿಳಿಯದು. +* +* +* +ಥಟ್ಟನೆ ಕಣ್ಣುತೆರೆದು ನೋಡಿದಾಗ ನಾನು ಒಂದು ಹಾಸಿಗೆಯ ಮೇಲೆ ಮಲಗಿದ್ದೆ. ಮೈಮೇಲೆ ಹೊದಿಕೆ ಹೊದಿಸಿತ್ತು. ಕೈಗಳಿಂದ ತಡವಿದಾಗ ಪಕ್ಕದಲ್ಲಿ ಯಮುನಕ್ಕ ಇರಲಿಲ್ಲ. ಎದ್ದು ಭಯವಾಗಿ ಯಮುನಕ್ಕ ಎಂದು ಕರೆದೆ. ಹಿತ್ತಲಿಗೆ ಹೋಗಿ ನೋಡಿದೆ-ಇರಲಿಲ್ಲ. ಬಾವಿಕಟ್ಟೆಯ ಹತ್ತಿರ ನಿಂತು ಅಳಲು ಪ್ರಾರಂಭಿಸಿದೆ. ನನ್ನನ್ನು ಎತ್ತಿ ಹಾಸಿಗೆ ಮೇಲೆ ಮಲಗಿಸಿ ಯಮುನಕ್ಕ ಎಲ್ಲಿ ಹೋದರೆಂದು ಸಿಟ್ಟು ಬಂತು. ದೂರದಲ್ಲಿ ಒಂದು ಮನೆಯ ಚಾವಡಿಯ ಮೇಲೆ ಯಾರೋ ಲಾಟೀನಿನ ಸುತ್ತ ಕೂತು ಮಾತನಾಡುತ್ತಿದ್ದರು. ಎಷ್ಟು ಹೊತ್ತೆಂದು ನನಗೆ ತಿಳಿಯಲಿಲ್ಲ. ಅರ್ಧ ರಾತ್ರೆಯ. ಬೆಳಗಾಗುತ್ತಿದೆಯೇ. ಇನ್ನೂ ಸಂಜೆ ಕಳೆದು ಪ್ರಾರಂಭವಾದ ರಾತ್ರೆಯೆ? ಆಕಾಶವನ್ನು ನೋಡಿದೆ. ಬರೇ ನಕ್ಷತ್ರಗಳು. ಜಪ ಮಾಡದೆ ಬಹಳ ದಿನಗಳಾದ್ದರಿಂದ ತಿಥಿ, ವಾರ, ನಕ್ಷತ್ರ ಏನೂ ನನಗೆ ಗೊತ್ತಿರಲಿಲ್ಲ. ಅಮಾವಾಸ್ಯೆಯ ರಾತ್ರೆಯೆಂದು ನನಗೆ ಭಯವಾಯಿತು. ಬ್ರಹ್ಮರಾಕ್ಷಸನ ನೆನಪಾಯಿತು. ಹಾಳು ಯಮುನಕ್ಕ ಎಲ್ಲಿ ಸತ್ತರು ಎಂದು ಶಪಿಸಿಕೊಂಡೆ. ನನ್ನನ್ನು ಕೈಬಿಟ್ಟು ಹೋದರಲ್ಲ ಎಂದು ಅತ್ತು ಅತ್ತು ಸಾಕಾಗಿ ಬಾವಿಕಟ್ಟೆಗೊರಗಿ ನಿಂತೆ. ಹಿತ್ತಲಲ್ಲಿ ದೂರದಿಂದ ಅಮ್ಮ ಎನ್ನುವ ಶಬ್ದ ಕೇಳಿ ಬೆಚ್ಚಿದೆ: ಅಮ್ಮ ಅಮ್ಮ ಎಂದು ಜೋರಿಂದ ಕೂಗಿದ ಹಾಗಾಯಿತು. ‘ಯಾರು’ ಎಂದೆ. ನಾನಯ್ಯ ಕಟೀರ. ನನಗೆ ಇವತ್ತು ಕೂಳಿಲ್ಲವ?” ಎಂದು ಬೇಲಿಯ ಹತ್ತಿರದಿಂದ ಶಬ್ದ ಬಂತು. “ಏ ಕಟೀರ ಬಾರೊ ಇಲ್ಲಿ” ಎಂದೆ. “ಅಲ್ಲಿ ನಾನು ಬರುವ ಹಾಗಿಲ್ಲಯ್ಯ” ಎಂದ. ನಾನೇ ಅವನ ಹತ್ತಿರ ಹೋಗಿ, ‘ಅಮ್ಮ ಮನೇಲಿಲ್ಲ. ನನ್ನ ಜೊತೆ ಬಾ’ ಎಂದೆ. ನನಗೆ ಕೂಡಲೆ, ಯಮುನಕ್ಕ ಹೊಳೆ ಬದಿಯ ಹಾಳು ಅಗ್ರಹಾರಕ್ಕೆ ಮತ್ತೆ ಹೋಗಿದ್ದಾರೆ. ಅಲ್ಲಿಗೆ ಅವರೆಲ್ಲ ಮತ್ತೆ ಬಂದಿರುತ್ತಾರೆ ಎಂದು ದುಃಖವಾಯಿತು. +ಕಟೀರ ನನಗಿಂತ ಸ್ವಲ್ಪ ಮುಂದಾಗಿ ನಡೆದ. ನನಗೆ ಕಾಡಿನಲ್ಲಿ ಕತ್ತಲಿನಲ್ಲಿ ನಿಶ್ಯಬ್ದವಾಗಿ ನಡೆಯೋದು ಭಯವಾದ್ದರಿಂದ ಗಟ್ಟಿಯಾಗಿ ಕಟೀರನ ಹತ್ತಿರ ಸಾಯಂಕಾಲ ನಡೆದದ್ದನ್ನೆಲ್ಲ ಹೇಳತೊಡಗಿದೆ. ಆದರೆ ನಾನು ಹೇಳಿದ್ದು ಏನೂ ಅವನಿಗೆ ಅರ್ಥವಾದ ಹಾಗೆ ಕಾಣಲಿಲ್ಲ. ಸುಮ್ಮನೆ ಹೂಗುಡದೆ, ಮುಂದೆ ನಡೆದ. ಕೆರೆಯ ಹತ್ತಿರ ಬಂದೆವು. ಅಲ್ಲಿ ಒಂದಷ್ಟು ಜನ ಅವನ ಜಾತಿಯ ಹೊಲೆಯರು ಕೈಯಲ್ಲಿ ದೊಂದಿ ಹಿಡಿದು ಮೀನು ಹಿಡಿಯುತ್ತಿದ್ದರು. ಅವನ ಕೈಯಿಂದ ಕೇಳಿ ಒಂದು ದೊಂದಿಯನ್ನು ಇಸಿದುಕೊಂಡು, “ಇಲ್ಲೊಂದು ಒಳದಾರಿಯಿದೆಯಯ್ಯ ಬನ್ನಿ” ಎಂದು ಕುರುಚಲು-ಗಿಡಗಳು ಒತ್ತಾಗಿ ಬೆಳೆದಿದ್ದ ದಾರಿಯಲ್ಲಿ ಕರೆದುಕೊಂಡು ಹೋದ. ಸ್ವಲ್ಪ ದೂರ ನಡೆದ ಮೇಲೆ ನನಗೆ ಭಯ ಹೆಚ್ಚಾಯಿತು. ಕಟೀರ ತನ್ನಷ್ಟಕ್ಕೆ ಹಾಡಿಕೊಳ್ಳಲು ತೊಡಗಿದ. ಅವನು ತುಂಬ ಮುಂದಾಗಿ ನಡೆಯುತ್ತಿದ್ದುದರಿಂದ ನನಗೆ ಹಾದಿ ಕಾಣಿಸುತ್ತಿರಲಿಲ್ಲ. ಮೊಟ್ಟಿನಲ್ಲಿ ಬಗ್ಗಿ ಕೆಲವು ಕಡೆ ತೆವಳುತ್ತ ನಡೆಯಬೇಕಾಯಿತು. ಕಟೀರ ಬಗ್ಗಿ ತೆವಳುವಾಗಲೆಲ್ಲ ಹು ಹು ಎನ್ನುತ್ತಿದ್ದ. ಆಗ ಸರ ಸರ ಸರ ಎಂದು ಮೊಟ್ಟಿನ ಸಂದಿಗಳಿಂದ ಏನೇನೋ ಓಡಿಹೋಗುತ್ತಿದ್ದವು. “ಹಿಂದಕ್ಕೆ ಹೋಗೋಣ ಕಟೀರ” ಎಂದೆ. ಅಳಲು ಪ್ರಾರಂಭಿಸಿದೆ. “ಇಕೊ ಬಂದು ಬಿಟ್ಟಿತು” ಎಂದು ಅವನು ಹೇಳಿದ. ನಾವು ಸ್ವಲ್ಪ ಬಯಲಾದ ಜಾಗದಲ್ಲಿ ಬಂದು ನಿಂತಿದ್ದೆವು. “ಕಟೀರ ನನ್ನ ಕೈ ಹಿಡಿದುಕೊ” ಎಂದೆ. “ಅದು ಹೇಗೆ ಆಗ್ತದಯ್ಯ? ನಾನು ಹೊಲೆಯನಲ್ಲವ?” ಎಂದು ಇನ್ನಷ್ಟು ದೂರ ಹೋಗಿ ದೊಂದಿ ಹಿಡಿದು ನಿಂತ. ಕೌಪೀನ ಮಾತ್ರ ಹಾಕಿದ ಅವನ ಕಪ್ಪಾದ, ಉದ್ದಗೆ ನೀಳವಾದ ಬೆತ್ತಲೆಯ ದೇಹವನ್ನು ದೊಂದಿಯ ಬೆಳಕಿನಲ್ಲಿ ಕಂಡು ನನಗೆ ಹೆದರಿಕೆಯಾಯಿತು. ಕೆದರಿದ ಕೂದಲಿನ ಸ್ವರೂಪ ಪಂಜುರ್ಲಿಯನ್ನು ನೆನಪಿಗೆ ತಂದಿತು. “ಕಟೀರ, ಕಟೀರ, ನೀನು ಕಟೀರನಲ್ಲವ” ಎಂದೆ. “ಹೌದಯ್ಯ” ಎಂದ. ನಾನು ಓಡಿಹೋಗಿ ಅವನನ್ನು ಮುಟ್ಟಲು ಪ್ರಯತ್ನಿಸಿದೆ. ಅವನು ದೊಂದಿಯನ್ನು ಕೆಳಗೆ ಹಾಕಿ ಓಡಿದ. ನಾನು ದೊಂದಿಯನ್ನು ಎತ್ತಿಕೊಂಡು ಅಳಲು ಪ್ರಾರಂಭಿಸಿದೆ. ಅವನು ಹಿಂದಿನಿಂದ ಬಂದು “ನೀವು ಮುಂದೆ ನಡೆಯಿರಿ” ಎಂದ. ದೊಂದಿಯ ಬೆಳಕಿನ ಸಣ್ಣ ವೃತ್ತದಲ್ಲಿ ನಿಂತ ನನಗೆ ಕಾಡಿನ ಎಲ್ಲ ಮೂಲೆಗಳಿಂದಲೂ ಏನೇನೋ ಪ್ರಾಣಿಗಳು, ನೆರಳುಗಳಂತಹ ದೆವ್ವಗಳು ಮೆತ್ತಗೆ ಕದ್ದು ನನ್ನ ಕಡೆಗೇ ಕೈ ಚಾಚಿ ಬರುತ್ತಿವೆ ಎನ್ನಿಸಿತು. ಕಾಲನ್ನು ಇಟ್ಟಲ್ಲೆಲ್ಲ ಹಾವು ಇದೆ ಎನ್ನಿಸಿತು. ಮೃತ್ಯುಂಜಯ ಜಪ ಮಾಡುತ್ತ ಮುಂದೆ ನಡೆದೆ. ಇದ್ದಕ್ಕಿದ್ದಂತೆ ನನಗೆ ಭಯವೆಲ್ಲ ಮಾಯವಾಯಿತು. ಈ ಕತ್ತಲೆ ಕಳೆದ ಮೇಲೆ ಬೆಳಕಾಗಿ ಸುತ್ತಲು ಇರುವುದೆಲ್ಲ ಮರಗಳು, ಮೊಟ್ಟುಗಳು ಎಂದು ಗೊತ್ತಾಗುತ್ತದೆ. ನಾನು ಯಾಕೆ ಹೆದರಬೇಕು ಎನ್ನಿಸಿತು. ಯಮುನಕ್ಕನನ್ನು ಉಳಿಸುವುದರ ಭಾರ ನನ್ನ ಮೇಲಿದೆ. ಈಗ ನಾನು ಚಿಕ್ಕ ಮಾಣಿಯಲ್ಲ. ಉಪನಯನದಲ್ಲಿ ಗಾಯತ್ರಿಯ ಉಪದೇಶವಾದ್ದರಿಂದ ಈಗ ನಾನು ದೊಡ್ಡವನು ಎಂದು ಧೈರ್ಯಬಂತು. ಕಟೀರ ತನ್ನ ಪಾಡಿಗೆ ಹಾಡಿಕೊಳ್ಳುತ್ತ ನನ್ನನ್ನು ಹಿಂಬಾಲಿಸಿದ. +ಹುತ್ತವಿದ್ದಲ್ಲಿಗೆ ಬಂದು ನೋಡಿದರೆ ಅಲ್ಲಿ ಯಮುನಕ್ಕ ಒಬ್ಬರೇ ಇದ್ದರು. ಹುತ್ತಕ್ಕೆ ಮೈಯನ್ನು ಆತುಕೊಂಡಿದ್ದರು. ಅವರ ಒಂದು ಕೈ ಹುತ್ತದೊಳಗಿತ್ತು. ನೋಡಿದ ಕೂಡಲೆ ನನಗೆ ಭಯವಾಗಲಿಲ್ಲ. ಇನ್ನೇನು ಮಾಡೋದು. ಯಮುನಕ್ಕ ಸತ್ತುಹೋಗಿಬಿಟ್ಟಿದ್ದಾರೆ ಎನ್ನಿಸಿತು. ಮತ್ತೊಂದು ಕ್ಷಣದಲ್ಲಿ ಮೈಯೆಲ್ಲ ನಡುಗತೊಡಗಿತು. “ಕಟೀರ ಯಮುನಕ್ಕನನ್ನು ಎಬ್ಬಿಸೋ” ಎಂದು ಕೂಗಿದೆ. ಕಟೀರ ನಿಂತಲ್ಲಿಂದ ಕದಲಲಿಲ್ಲ. ನನಗೆ ಆ ಹುತ್ತದ ಒಳಗೆ ಗಾಯವಾಗಿ ಸೇರಿದ ಹಾವಿನ ನೆನಪಾಯಿತು. ಹಾವಿಗೆ ಹನ್ನೆರಡು ವರ್ಷ ರಚ್ಚಿರುತ್ತದೆ ಎಂದು ಅಮ್ಮ ಹೇಳುತ್ತಿದ್ದುದು ನೆನೆದು ಗಾಬರಿಯಾಯಿತು. ದೊಂದಿಯನ್ನು ಬೀಸುತ್ತ ನನ್ನ ಕಾಲುಬುಡದಲ್ಲೆಲ್ಲ ನೋಡಿಕೊಂಡೆ. ಒಂದು ಉದ್ದ ಕೋಲಿನಿಂದ ಯಮುನಕ್ಕನನ್ನು ಚುಚ್ಚಿದೆ. ಅವರು ಎದ್ದುನಿಂತು, “ಹೋಗು, ಹೋಗು” ಎಂದರು. ನಾನು, “ಹೋಗಲ್ಲ – ನನ್ನ ಜೊತೆ ಬನ್ನಿ” ಎಂದೆ. ಅವರು ಮಾತಾಡದೆ ಎದ್ದು ನಮ್ಮ ಜೊತೆ ಬಂದರು. ಕಟೀರ ಒಂದೂ ಮಾತಾಡದೆ ಅಗ್ರಹಾರದ ತನಕ ಬಂದು ನಮ್ಮನ್ನು ಮನೆಗೆ ಮುಟ್ಟಿಸಿ, ಯಾವುದೊ ಹಾಡನ್ನು ಗೊಣಗಿಕೊಳ್ಳುತ್ತ ಹೊರಟು ಹೋದ. +ಮತ್ತೆ ಮನೆಗೆ ಬಂದ ಮೇಲೆ ಯಮುನಕ್ಕ ಕತ್ತಲೆಯಲ್ಲಿ ಮಾತಾಡದೆ ಸ್ವಲ್ಪ ಹೊತ್ತು ಕೂತರು. “ನನ್ನನ್ನು ಯಾಕೆ ಸಾಯಲು ಬಿಡಲಿಲ್ಲ” ಎಂದು ಬೈದರು. ನಾನು ಸುಮ್ಮನೆ ಕೂತೆ. “ನಿದ್ದೆ ಬರ್ತಿದೆ ಮಲಗಿಕೊಳ್ಳೋಣ ಬನ್ನಿ” ಎಂದೆ. “ಎಲ್ಲಿಗೊ ನಾನು ಹೋಗಬೇಕು” ಎಂದರು. ನನಗೆ ಸಿಟ್ಟು ಬಂದು ಅಳಲು ಪ್ರಾರಂಭಿಸಿದೆ. “ನೀನೂ ನನ್ನ ಜೊತೆ ಬಾ” ಎಂದರು. “ನಾನು ಬರಲ್ಲ” ಎಂದೆ. “ನನ್ನನ್ನು ಅಮ್ಮನ ಹತ್ತಿರ ಕಳಿಸಿಕೊಡಿ” ಎಂದೆ. “ಅಷ್ಟು ದೂರವಿಲ್ಲ. ನನ್ನ ಜೊತೆ ಬಾ” ಎಂದರು. “ಅಯ್ಯೋ ನನಗೆ ಕೂಡಲ್ಲ. ಕಾಲು ನೋಯುತ್ತಿದೆ” ಎಂದೆ. ನನ್ನನ್ನು ತಬ್ಬಿಕೊಂಡು ತೆಂಗಿನ ಎಣ್ಣೆಯನ್ನು ಕಾಲಿಗೆ ಹಚ್ಚಿ ಒತ್ತಿದರು. ಆಮೇಲೆ “ನೀನು ಮಲಗಿಕೊ” ಎಂದು ಒಬ್ಬರೇ ಹೊರಗೆ ಹೊರಟರು. ನನಗೆ ಇರಲು ಭಯವಾಗಿ ಅವರ ಜೊತೆಗೆ ಹೊರಟೆ. +ಕದ್ದಿಂಗಳಿನ ರಾತ್ರೆಯಲ್ಲಿ ಅಗ್ರಹಾರ ಹಾಳು ಸುರಿಯುತ್ತಿತ್ತು. ನರಹುಳವೂ ಕಾಣಿಸುತ್ತಿರಲಿಲ್ಲ. ಇಬ್ಬರೇ ನಡೆದುಕೊಂಡು ಹೊರಟೆವು. ಯಾವುದೋ ಕಬ್ಬಿನ ಗದ್ದೆ ಹೊಕ್ಕ ನರಿ ಕೂಗಿದ್ದು ಕೇಳಿಸಿತು. ನಾನು ನಡುಗಿದೆ. ಯಮುನಕ್ಕ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು. +“ಆ ಹಾಳು ಬಿದ್ದ ಅಗ್ರಹಾರಕ್ಕಾದರೆ ನಾನು ಬರಲ್ಲ” ಎಂದು ಅತ್ತೆ. “ಅಲ್ಲಿಗಲ್ಲ. ನಿನ್ನಾಣೆ ಅಲ್ಲಿಗಲ್ಲ” ಎಂದರು. “ಮತ್ತೆಲ್ಲಿಗೆ?” ಎಂದು ಕೇಳಿದೆ. “ಅದೊಬ್ಬನ ಮನೆಗೆ. ನಾನು ನೀನು ಅಲ್ಲಿಗೆ ಹೋಗಿದ್ದೆವೂಂತ ನೀನು ಯಾರಿಗೂ ಹೇಳಕೂಡದು. ನಾಳೆ ನನ್ನ ಅಪ್ಪಯ್ಯ ಬಂದು ಕೇಳಿದರೆ ಏನೂ ಗೊತ್ತಿಲ್ಲ ಅಂತ ಸುಮ್ಮನಿದ್ದುಬಿಡು” ಎಂದರು. ನಾನು ಹೂ ಎಂದೆ. ತುಂಬ ದೂರ ಗಾಡಿ-ದಾರಿಯಲ್ಲಿ ನಡೆದು ಆಮೇಲೊಂದು ಸೀಳು-ದಾರಿಯನ್ನು ಹಿಡಿದು, ಒಂದು ದಿಬ್ಬವನ್ನು ಹತ್ತಿ ಇಳಿದು, ಗದ್ದೆಯ ಅಂಚಲ್ಲಿ ಅಷ್ಟು ದೂರ ನಡೆದು ಕೊನೆಗೊಂದು ಮನೆಯನ್ನು ತಲುಪಿದೆವು. +ಆ ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿತ್ತು. ಸೆಕಲ್ಲಿನ ಮೇಲೆ ಬಂದು ಹೋಗುತ್ತಿದ್ದ ಸ್ಕೂಲಿನ ಮೇಷ್ಟ್ರು ಅಲ್ಲಿದ್ದ. ಅವನು ಮತ್ತೆ ಯಮುನಕ್ಕನ ಹೆಗಲಿನ ಮೇಲೆ ಕೈಹಾಕುತ್ತಾನೆಂದು ನನಗೆ ದಿಗಿಲಾಯಿತು. ಅವನು ಯಮುನಕ್ಕನನ್ನು ಕ್ರೂರವಾಗಿ ನೋಡಿ ಹೇಳಿದ: +“ಯಾಕೆ ಇಷ್ಟೊತ್ತು? ಎಷ್ಟು ಹೊತ್ತೂಂತ ನಾನು ಕಾದಿರಬೇಕು? ಕತ್ತಲಾದ ಕೂಡಲೇ ಬಾ ಅಂತ ಹೇಳಿರಲಿಲ್ಲವ?” +ಯಮುನಕ್ಕ ಮಾತಾಡಲಿಲ್ಲ. “ಏ ಪರ್ಬು” ಎಂದು ಕೂಗಿ ಅವನು ಯಮುನಕ್ಕನನ್ನು ಒಳಗೆ ಕರೆದುಕೊಂಡು ಹೋದ. ನಾನು ಹೊರಗೇ ಕೂತೆ. +ಅದು ಬ್ರಾಹ್ಮಣರ ಮನೆಯ ಹಾಗೆ ಕಾಣದ್ದರಿಂದ ನನಗೆ ಹೇಸಿಗೆಯಾಯಿತು. ಅದೇ ಮೊದಲಿನ ಸಾರಿ ನಾನು ಅಂತಹ ಮನೆಯಲ್ಲಿ ಹೋಗಿ ಕೂತಿದ್ದು. ಸ್ನಾನವಾದ ಮೇಲೆ ನಾನು ಶೂದ್ರರ ಹುಡುಗರ ಜೊತೆ ಮಾತನ್ನು ಸಹ ಆಡುತ್ತಿರಲಿಲ್ಲ. ನನಗೆ ಅಲ್ಲಿ ಕೂತಿರೋದಕ್ಕೆ ಒಂದು ಥರ ಗಾಬರಿಯಾಯಿತು. ಅಂಗಳದಲ್ಲಿ ಕೋಳಿಗೂಡಿತ್ತು. ಮತ್ತೆ ಮನೆಯ ಎದುರಿಗೇ ಸ್ನಾನದ ಹಂಡೆಯಿತ್ತು. ಜಗುಲಿಯ ಮೇಲೆ ನಿಂತು ಪರ್ಬು ಪಿಚಕ್ಕನೆ ಉಗುಳಿ ಹೋದ. ಅಲ್ಲಿ ಜುಟ್ಟಕಟ್ಟಿಕೊಂಡು ಅಂಗವಸ್ತ್ರ ಹೊದ್ದು ಅಂಗವಸ್ತ್ರ ಉಟ್ಟು ಕೂತಿದ್ದ ನನಗೆ, ಇಲ್ಲಿಗೆ ಯಾಕೆ ಬಂದೆ, ನಾನು ಎಲ್ಲಿ ಇದ್ದೇನೆ ಎಂದು ದುಃಖವಾಯಿತು. ಈ ಯಮುನಕ್ಕನ ದೆಸೆಯಿಂದ ಇಷ್ಟೆಲ್ಲ- ಅಪ್ಪಯ್ಯ ಬರಲಿ, ಹೇಳಿ ಮಾಡಿಸುತ್ತೇನೆ ಎಂದು ಸಿಟ್ಟು ಬಂತು. ಯಾರೋ ಅಂಗಳದಲ್ಲಿ ನಿಂತು, ‘ಪರ್ಬುಗಳೇ’ ಎಂದು ಕೂಗಿದ. ಆಮೇಲೆ ಚಾವಡಿಗೆ ಹತ್ತಿರ ಬಂದು ‘ಓ ಇದೇನು ಭಟ್ಟರು ಇಲ್ಲಿ’ ಎಂದ. ಮತ್ತೆ ಒಳಗಿನಿಂದ ದೀಪ ಹಿಡಿದು ಬಂದ ಪರ್ಬುವನ್ನು ನಾನು ಗುರ್ತಿಸಿದೆ. ಮೊದಲನೆಯ ಸಾರಿ ಮೋಟು-ಗೋಡೆಯ ಬಿರುಕಿನಿಂದ ಅವನನ್ನು ಕಂಡಿದ್ದೆ. ದೊಡ್ಡ ಮೀಸೆಯ ದೊಡ್ಡಗೆ ಬೆಳೆದ ಮನುಷ್ಯ. ಬರಿ ಚೆಡ್ಡಿಯೊಂದನ್ನು ಹಾಕಿಕೊಂಡು ಬರಿ ಮೈಯಲ್ಲಿ ಇದ್ದ. ಕತ್ತಿನ ಸುತ್ತ ಏನೋ ಕಟ್ಟಿಕೊಂಡಿದ್ದ. ಪರ್ಬು ಚಾವಡಿಯ ಮೇಲಿದ್ದ ಒಂದು ದೊಡ್ಡ ಮಡಿಕೆಯಿಂದ ಹುಳಿ ವಾಸನೆ ಬರುವುದೊಂದನ್ನು ಬಗ್ಗಿಸಿ ಅಂಗಳದಲ್ಲಿ ನಿಂತವನಿಗೆ ಕೊಟ್ಟ. ಒಳಗಿನಿಂದ ಒಂದು ಹೆಂಗಸು ಎಲೆಯ ಚೂರಿನ ಮೇಲೆ ಕೆಟ್ಟ ವಾಸನೆ ಬರುತ್ತಿದ್ದ ವಸ್ತುವನ್ನು ತಂದುಕೊಟ್ಟಳು. ಕುಡುಮಲ್ಲಿಗೆ ಪೇಟೆಗೆ ಕನ್ನಡಾ ಜಿಲ್ಲೆಯಿಂದ ಗಾಡಿಗಳಲ್ಲಿ ಬರುತ್ತಿದ್ದ ಈ ಹೇಸು ವಾಸನೆಯ ವಸ್ತು ಮೀನಿರಬಹುದು. ಬಂಗಡೆ ಮೀನು ಎಂದು ಅಸಹ್ಯಪಟ್ಟೆ. ಅಂಗಳದಲ್ಲಿ ಅವನು ತಿನ್ನುತ್ತ, ಕುಡಿಯುತ್ತ ಕೂತ, ಹಾಡಿಕೊಳ್ಳುತ್ತ ಅಂಗಳದಲ್ಲೆಲ್ಲ ವಾಲಾಡಿದ. ಕೂಡಲೆ ನನಗೆ ಪರ್ಬು ಅವನಿಗೆ ಬಗ್ಗಿಸಿಕೊಟ್ಟಿದ್ದು ಹೆಂಡವೆಂದು ತಿಳಿಯಿತು. ಅಂಗಳದಲ್ಲಿ ಕುಡಿದುಬಿಟ್ಟವ ನನ್ನ ಮೇಲೆಲ್ಲಿ ಬಂದು ಎರಗುತ್ತಾನೊ ಎಂದು ದಿಗಿಲಾಯಿತು. ಅವನು “ಭಟ್ಟರೇ, ಏ ಭಟ್ಟರೇ, ಪೂಜೆ-ಭಟ್ಟರೇ” ಎಂದು ಹಿ ಹಿ ಹಿ ಎಂದು ನಕ್ಕ. ನಾನು ಎದ್ದು ನಿಂತೆ. ಒಳಗೆ ಓಡಿಹೋದೆ. +ಅಲ್ಲಿ ಯಮುನಕ್ಕನನ್ನು ಬೆತ್ತಲೆಯಾಗಿ ಮಲಗಿಸಿದ್ದರು. ಉಚ್ಚೆ ಹೊಯ್ಯುವ ಜಾಗವನ್ನು ಮಾತ್ರ ಮುಚ್ಚಿದ್ದರು. ಹೊಟ್ಟೆಯ ಮೇಲೆ ಸಗಣಿಯನ್ನು ಮೆತ್ತಿ ಮೇಲೊಂದು ಹಣತೆಯಲ್ಲಿ ದೀಪವನ್ನು ಇಟ್ಟಿದ್ದರು. ನಾನು ನೋಡುತ್ತ ನಿಂತಂತೆ ಪರ್ಬು ಒಂದು ಬೋಗುಣಿಯನ್ನು ಅದರ ಮೇಲೆ ನಿಧಾನಕ್ಕೆ ಮುಚ್ಚಿ, “ಹಾಗೇ ಬಿಡಿ, ಎಳೆದುಕೊಳ್ಳಲಿ” ಎಂದ. ಯಮುನಕ್ಕನ ಸುತ್ತ ಪರ್ಬು ಮತ್ತು ಒಂದು ಹೆಂಗಸು ಮತ್ತು ‘ಅವನು’ ಇದ್ದರು. ಕೈಗಳನ್ನು ಚಾಪೆಯ ಮೇಲೆ ಚೆಲ್ಲಿ, ಕಣ್ಣು ಮುಚ್ಚಿ ಅಂಗಾತನೆ ಮಲಗಿದ್ದ ಯಮುನಕ್ಕನನ್ನು ನೋಡಿ ನನಗೆ ಭಯವಾಯಿತು. ಅವರು ಬೆತ್ತಲೆಯಿದ್ದಿದ್ದರಿಂದ ನಾನು ಹೊದ್ದ ಅಂಗವಸ್ತ್ರವನ್ನು ಹತ್ತಿರ ಹೋಗಿ ಅವರ ಎದೆಯ ಮೇಲೆ ಹಾಕಿದೆ. ಪರ್ಬು ನನ್ನನ್ನು ದೂಡಿದ. ನಾನು ಅಳುತ್ತ ಹೇಳಿದೆ: +“ಯಮುನಕ್ಕ ಬನ್ನಿ, ಮನೆಗೆ ಹೋಗೋಣ ಬನ್ನಿ. ನಿದ್ದೆ ಮಾಡಬೇಕು…. ನನಗೆ ಹೆದರಿಕೆ….ಬನ್ನಿ.” +ಯಮುನಕ್ಕ ಕಣ್ಣು ಬಿಡಲಿಲ್ಲ. ‘ಅವನು’ ಅವನು ನನ್ನನ್ನು ಎಳೆದುಕೊಂಡು ಹೋದ. ಆ ಹೆಂಗಸು ಕವಳ ತುಂಬಿದ ಬಾಯಲ್ಲಿ ಪರ್ಬುಗೆ ಏನೋ ಕೊಂಕಣಿಯಲ್ಲಿ ಹೇಳಿದಳು. ಮತ್ತೆ ಹೊರಗೆ ಹೋಗಿ ಉಗಿದು ಬಂದಳು. ಅವಳಿಗೆ ಹಣೆಯ ಮೇಲೆ ಕುಂಕುಮವಿರಲಿಲ್ಲ. ಆದರೆ ಕೆದರಿದ ಕೂದಲು ತಲೆಯ ತುಂಬ ಇತ್ತು. +ಪರ್ಬು ‘ಅವನ’ನ್ನು ಹೊರಗೆ ಕರೆದುಕೊಂಡು ಹೋದ. ನಾನೂ ಹೊರಗೆ ಹೋದೆ. “ನಾನೆಲ್ಲ ಮಾಡ್ತೇನೆ. ಇನ್ನು ನೀವು ಹೋಗಿ” ಎಂದು ಪರ್ಬು ಹೇಳಿದ. ‘ಅವನು’ ಜೇಬಿನಿಂದ ಒಂದಷ್ಟು ದುಡ್ಡನ್ನು ತೆಗೆದುಕೊಡುತ್ತ, +“ನಾನು ಈಗಲೇ ಕುಡುಮಲ್ಲಿಗೆಗೆ ಸೆಕಸೈಕಲ್ ಮೇಲೆ ಹೋಗಬೇಕು. ಅಲ್ಲಿಂದ ಮುಂದೆ ಬ ಬಸ್ ಹತ್ತಿ ಹೊರಟು ಹೋಗ್ತೇನೆ” ಎಂದು ಕಿವಿಯಲ್ಲಿ ಇನ್ನೇನೊ ಹೇಳಿದ. ಅವನು ಕುಡುಮಲ್ಲಿಗೆ ಎಂದ ಕೂಡಲೆ ನನಗೆ ನನ್ನ ಮನೆಯ ನೆನಪಾಗಿ ನನಗೂ ಅಲ್ಲಿಗೆ ಹೋಗಬೇಕೆಂದು ಅಳು ಬಂತು. +‘ಅವನು’ ಸೆಕಸೈಕಲ್ ಹಿಡಿದು ಹೊರಟವನು, ‘ಗುಟ್ಟಾಗಿರಲಿ, ಮತ್ತೆ’ ಎಂದು ಪರ್ಬುವಿಗೆ ಹೇಳಿದ. ‘ನಾನೂ ಬರುತ್ತೇನೆ’ ಎಂದು ನಾನು ಕೂಗಿದೆ. ‘ಅವನು’ ನನ್ನ ಮಾತನ್ನು ಗಮನಿಸದೆ ಹೊರಟು ಹೋದ. +ಅಂಗಳದಲ್ಲಿ ಕುಡಿಯುತ್ತಿದ್ದವನು ಮತ್ತೆ ನಗಲು ಹಾಡಲು ಪ್ರಾರಂಭಿಸಿದ. ಒಳಗಿನಿಂದ ಯಮುನಕ್ಕ ನರಳುತ್ತಿದ್ದರು. ‘ಆಹಾ ಭಟ್ಟರೇ’ ಎಂದು ಕುಡಿದವನು ಕಿರುಚುತ್ತ ಹಾಡಿದ. ಪರ್ಬು ಅವನನ್ನು ಗದರಿಸಿ, ಅಳುತ್ತಿದ್ದ ನನಗೆ ಸುಮ್ಮನಿರು ಎಂದ. ಒಳಗೆ ನರಳುತ್ತಿದ್ದ ಯಮುನಕ್ಕನಿಗೆ “ಯಮುನಕ್ಕಾ ನಾನು ಹೋಗಬೇಕು” ಎಂದು ಕೂಗಿ ಹೇಳಿದೆ. ಪರ್ಬು ನನಗೆ ಗದರಿಸಿದ. +ಇನ್ನೊಂದು ಧ್ವನಿ ಅಂಗಳದಲ್ಲಿ ಕೇಳಿಸಿತು. ಆ ಧ್ವನಿ ಕಟೀರನದ್ದೆಂದು ಗೊತ್ತಾಗಿ ನನಗೆ ಜೀವ ಬಂದ ಹಾಗಾಯಿತು. “ಏ ಕಟೀರ” ಎಂದು ಕೂಗಿಕೊಂಡೆ. ಪರ್ಬು ಮತ್ತೆ ನನಗೆ ಗದರಿಸಿ ಹೊಡೆಯಲು ಬರುವವನಂತೆ ಕೈ ತೋರಿಸಿದ. ನಾನು ಸುಮ್ಮನೇ ಕೂತೆ. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ಕಟೀರನೂ ಹಾಡಲು, ತನ್ನಷ್ಟಕ್ಕೆ ಗಟ್ಟಿಯಾಗಿ ಹರಟಿಕೊಳ್ಳಲು ಪ್ರಾರಂಭಿಸಿದ. ‘ಏ ಕಟೀರ ’ ಎಂದು ಮತ್ತೆ ಕೂಗಿದೆ. ಕಟೀರ ‘ಓ’ ಎಂದು ಹತ್ತಿರ ಬಂದು, ‘ಎಲ್ಲಿ ಇನ್ನೊಂದಷ್ಟು ಹಾಕಿ’ ಎಂದ. ‘ಏ ಕಟೀರ ನಾನು ಕಣೊ’ ಎಂದು ಹೇಳಿದೆ. ಅವನು ಅದಕ್ಕೆ “ಯಾರೋ!” ಎನ್ನುತ್ತ ವಾಲಾಡಿಕೊಂಡು, ತೂರಾಡಿಕೊಂಡು ಹೋದ. ಕಟೀರನೂ ಹೀಗೆ ಮಾಡಿದನೆಂದು ನನಗೆ ಕಸಿವಿಸಿಯಾಯಿತು. ಎಷ್ಟು ಕರೆದು ಹೇಳಿದರೂ ಅವನಿಗೆ ನನ್ನ ಗುರುತೇ ಸಿಗಲಿಲ್ಲ. +ಒಳಗಿನಿಂದ ಯಮುನಕ್ಕ ‘ಅಯ್ಯೋ ಅಯ್ಯೋ ಅಯ್ಯೊ’ ಎಂದು ಕೂಗಿದರು. ಅಮ್ಮಾ ಎಂದು ಕೂಗಿದರು. ನಾನು ಹೊರಗಿನಿಂದ “ಯಮುನಕ್ಕಾ ಯಮುನಕ್ಕಾ, ಇಲ್ಲಿ ನಾನಿದ್ದೇನೆ, ಬನ್ನಿ, ಹೋಗೋಣ” ಎಂದು ಕಿರುಚುತ್ತ ಅತ್ತೆ. ಪರ್ಬು ಬಂದು “ಮಲಗಿಕೊ, ಬೆಳಗ್ಗೆ ಎದ್ದು ಹೋದರೆ ಸರಿ” ಎಂದು ಒಂದು ಬಟ್ಟಲನ್ನು ತಂದು ನನ್ನ ಎದುರು ಇಟ್ಟು ‘ಕುಡಿ’ ಎಂದ. ನಾನು ‘ಊಹೂ’ ಎಂದೆ. “ಇದು ಹೆಂಡವಲ್ಲ, ಹಾಲು” ಎಂದು ಅವನು ನಕ್ಕ. ನಾನು ಒಪ್ಪಲಿಲ್ಲ. ಎಣ್ಣಿ ಎಣ್ಣಿ ಅಳುತ್ತ ಕೂತೆ. +ಮತ್ತೆ ನನಗೆ ಎಚ್ಚರವಾದಾಗ ಬೆಳಿಗ್ಗೆ. ಎಷ್ಟು ಬೆಳಗ್ಗೆಯೊ, ನಾನೆಲ್ಲಿ ಇದ್ದೇನೊ, ಇಲ್ಲಿಗೆ ಹೇಗೆ ಬಂದೆನೊ ಎಂದು ಗಾಬರಿಯಾಯಿತು. ನಡೆದದ್ದನ್ನೆಲ್ಲ ನೆನಸಿಕೊಳ್ಳಲು ಪ್ರಯತ್ನಿಸಿದೆ. ಯಾವತ್ತೊ ಉಪನಯನವಾದ ಮೇಲೆ ಕುಡುಮಲ್ಲಿಗೆಯಿಂದ ಒಂದು ಎತ್ತಿನ ಗಾಡಿಯಲ್ಲಿ ಅಮ್ಮ ಬೆಳ್ಳಂಬೆಳಗಿನ ಹೊತ್ತು… ಉಡುಪರ ಮನೆಗೆ ಮಂತ್ರ ಕಲಿಯಲೆಂದು ಕಳಿಸಿದ್ದು ಮಾತ್ರ ನೆನಪಿಗೆ ಬರುತ್ತಿತ್ತು. ಗಾಡಿಯಲ್ಲಿ ಹೊರಟವನು ಮತ್ತೆ ಇಲ್ಲಿಗೆ ಬಂದುಬಿಟ್ಟೆನೆ ಎಂದು ಅಳು ಬಂದಿತು. ಎಲ್ಲಿ ನೋಡಿದರೂ ಕೋಳಿಗಳು ಓಡಾಡುತ್ತಿದ್ದವು. ಹೆಂಡದ ಹುಳಿ ವಾಸನೆ ಬರುತ್ತಿತ್ತು. ಕಣ್ಣುಜ್ಜಿಕೊಳ್ಳುತ್ತ ಚಾವಡಿ ಮೇಲೆ ಕೂತಿದ್ದ ನನ್ನ ಎದುರು ನನ್ನ ವಾರಿಗೆಯ ಒಬ್ಬ ಹುಡುಗನಿದ್ದ. ಅವನು ಕ್ರಾಪು ಬಿಡಿಸಿ, ಕೊಳಕಾದ ಅಂಗಿ ಚಡ್ಡಿಯನ್ನು ಹಾಕಿಕೊಂಡಿದ್ದ. ಅಂಗವಸ್ತ್ರವನ್ನು ಉಟ್ಟು ಜುಟ್ಟು ಕಟ್ಟಿ ಕೂತಿದ್ದ ನನ್ನನ್ನು ಕಂಡು, +“ಭಟ್ಟ ಭಟ್ಟ ಕೋಳಿ ಸುಟ್ಟ – ನೆರೆಮನೆಗೆಲ್ಲ ನಾತ ಕೊಟ್ಟ” ಎಂದು ಗೇಲಿ ಮಾಡಿದ. ನಾನು ತಬ್ಬಿಬ್ಬಾಗಿ ಕೂತೆ. +ಹಿಂದಿನ ರಾತ್ರೆ ನಾನು ನೋಡಿದ ಹೆಂಗಸು ಅವನಿಗೆ ಕೊಂಕಣಿಯಲ್ಲಿ ಏನೋ ಹೇಳಿದರು. ಆ ಹುಡುಗ ಅಂಗಳಕ್ಕಿಳಿದು ಒಂದು ಕೋಳಿಯನ್ನು ಅಟ್ಟುತ್ತ ಓಡಿದ. ಕ್ಕೊ ಕ್ಕೊ ಕ್ಕೊ ಎನ್ನುತ್ತ ಕೋಳಿ ಸಂದಿ – ಮೂಲೆಗಳಲ್ಲಿ ಓಡುತ್ತ, ರೆಕ್ಕೆ ಬಡಿಯುತ್ತ ಅವನಿಂದ ತಪ್ಪಿಸಿಕೊಳ್ಳುತ್ತಿತ್ತು. ಕೊನೆಗೆ ಅವನು ಅದನ್ನು ಹಿಡಿದು ತಳಕಾ-ಪಳಕ ಎತ್ತಿಕೊಂಡ. ಆದರೂ ಅದು ಒದ್ದಾಡಿತು. ಕೊನೆಗೆ ತಲೆಯನ್ನು ಕೆಳಕ್ಕೆ ಹಾಕಿ ‘ಕೊ ಕೊ’ ಎನ್ನತೊಡಗಿತು. ಅದನ್ನು ಅವನು ಒಳಗೆ ತೆಗೆದುಕೊಂಡು ಹೋದ. ಸ್ವಲ್ಪ ಹೊತ್ತಿನ ಮೇಲೆ ಮತ್ತೆ ಕೋಳಿ ಬಡಿದುಕೊಳ್ಳುವ, ಜೀವ ಹೋಗುವ ಹಾಗೆ ಕೂಗುತ್ತ ಒದ್ದಾಡುವ ಶಬ್ದ ಕೇಳಿಸಿತು. ಮತ್ತೆ ಎಲ್ಲ ನಿಶ್ಯಬ್ದವಾಯಿತು. ನಾನು ಗಡಗಡ ನಡುಗಿದೆ. +“ಯಮುನಕ್ಕಾ ಯಮುನಕ್ಕಾ” ಎಂದು ಕೂಗುತ್ತ ಅತ್ತೆ, ‘ಮನೆಗೆ ಹೋಗಬೇಕು’ ಎಂದು ಒಂದೇ ಮಾತನ್ನು ಹೇಳುತ್ತ ಕೂತೆ. +ಯಮುನಕ್ಕಾ ಗೋಡೆಯನ್ನು ಹಿಡಿದು ತಡವುತ್ತ ಬಂದರು. ಅವರ ಮುಖ ಬಿಳಚಿಗೊಂಡಿತ್ತು. ನಾನು ಅವರನ್ನು ಹೋಗಿ ತಬ್ಬಿಕೊಂಡೆ. ಅವರು ಅಳಲು ಪ್ರಾರಂಭಿಸಿದರು. ಪರ್ಬು ಅವರಿಗೆ, +“ಸ್ವಲ್ಪ ಹೊತ್ತು ಇದ್ದು ಸುಧಾರಿಸಿಕೊಂಡು ಹೋಗಿ” ಎಂದ. ಆದರೆ ಯಮುನಕ್ಕ “ಹೋಗೋಣ ಬಾ” ಎಂದು ಕೈ ಹಿಡಿದರು. +ಆ ಹೊತ್ತಿಗೆ ಸರಿಯಾಗಿ ಅಲ್ಲಿಗೊಬ್ಬ ಉದ್ದ ಅಂಗಿ ಹಾಕಿಕೊಂಡು ಗಡ್ಡಬಿಟ್ಟಿದ್ದ ಮನುಷ್ಯ ಬಂದ. ಅವನಿಗೆ ಪರ್ಬು ಏನೋ ಕೊಂಕಣಿಯಲ್ಲಿ ಹೇಳಿ ಒಳಗೆ ಕರೆದುಕೊಂಡು ಹೋದ. ನಾವು ಮೆಲ್ಲಗೆ ಅಂಗಳಕ್ಕೆ ಇಳಿದೆವು. ಆ ಮನುಷ್ಯ ಒಳಗಿನಿಂದ ಏನೋ ಕೆಂಪನೆಯ ತುಂಡುಗಳನ್ನು ಎಲೆಯಲ್ಲಿ ಕಟ್ಟಿಕೊಂಡು ಹೊರಗೆ ಬಂದ. ಎಲೆಯಿಂದ ಹೊರಗೆ ಕಾಣಿಸುತ್ತಿದ್ದ ಕೆಂಪನೆಯ ತುಂಡುಗಳನ್ನು ನೋಡಿ ನನಗೆ ಮತ್ತು ಯಮುನಕ್ಕನಿಗೆ ವಾಂತಿ ಬರುವ ಹಾಗಾಯಿತು. ಇಬ್ಬರೂ ಮುಖವನ್ನು ತಿರುಗಿಸಿದೆವು. +ಹೊರಗೆ ಬಂದ ಅವನು ಯಮುನಕ್ಕನಿಗೆ ‘ಸ್ವಲ್ಪ ನಿಲ್ಲಿ’ ಎಂದು ಹತ್ತಿರ ಬಂದ. ಬಿಡಿಸಿ ಬಿಡಿಸಿ ಮಾತಾಡಿದ: +“ಪಾಪಿಗಳನ್ನು ದೇವರು ರಕ್ಷಿಸುತ್ತಾನೆ. ನೀವು ಹೆದರುವುದು ಬೇಡ”. +ಯಮುನಕ್ಕ ಹೆದರಿ ನಡೆಯತೊಡಗಿದರು. ಅವನು ನಮ್ಮ ಹಿಂದಕ್ಕೆ ಬಂದು ಹೇಳಿದ: +“ಭಯಪಡಬೇಡಿ. ನಿಮ್ಮ ಅಗ್ರಹಾರದ ಜನ ನಿಮ್ಮನ್ನು ದೂರ ಹಾಕುತ್ತಾರೆ. ಆದರೆ ನಮ್ಮ ಕರ್ತನನ್ನು ನೀವು ನಂಬಿದರೆ ಅವನು ನಿಮ್ಮನ್ನು ಕಾಪಾಡುತ್ತಾನೆ . ಇಗರ್ಜಿಗೆ ನನ್ನ ಜೊತೆ ಬನ್ನಿ. ಅಲ್ಲಿ ನಿಮಗೆ ರಕ್ಷಣೆ ಕೊಡುತ್ತೇವೆ.” +ಯಮುನಕ್ಕ ಎಲ್ಲಿ ಅವನ ಜೊತೆಯೂ ಹೋಗಿಬಿಡುತ್ತಾರೊ ಎಂದು ನಾನು ಕಂಗಾಲಾದೆ. ಆದರೆ ಯಮುನಕ್ಕ ಗಡ್ಡದವನನ್ನು ಭಯದಿಂದ ನೋಡಿ, ತಲೆತುಂಬ ಸೆರಗು ಹೊದ್ದು ಮಾತಾಡದೆ ನನ್ನ ಜೊತೆ ನಡೆದರು. ಅವನು ಮತ್ತೆ ಹೇಳಿದ: +“ನಿಮ್ಮ ಕಲ್ಲಿನ ದೇವರಿಗೆ ಕಲ್ಲಿನ ಹೃದಯ. ಆದರೆ ನಮ್ಮ ದೇವರು ಏಸುವನ್ನು ನಂಬಿದವರನ್ನು ಕಾಪಾಡುತ್ತಾನೆ. ನಾನು ಹೇಳಿದ ಹಾಗೆ ಇಗರ್ಜಿಗೆ ಬನ್ನಿ.” +ಯಮುನಕ್ಕ ಮತ್ತು ನಾನು ಅವಸರವಾಗಿ ನಡೆದು ಬಿಟ್ಟೆವು. ಪರ್ಬು ಮತ್ತು ಅವನು ಕೊಂಕಣಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದು ದೂರದಿಂದ ಕೇಳಿಸಿತು. +ನನಗೆ ತಿರುಗಿ ಮನೆಗೆ ಹೋಗುತ್ತಿದ್ದೇವೆಂದು ತುಂಬ ಸಂತೋಷವಾಗಿ ಹುಮ್ಮಸ್ಸು ಬಂದಿತು. ಯಮುನಕ್ಕ ಏದುತ್ತ ನರಳುತ್ತ ನಡೆದರು. ಅವರ ಮಾಸಿದ ಕೆಂಪು ಸೀರೆಯ ಮೇಲೆ ರಕ್ತ ಕಾಣಿಸಿಕೊಂಡಿತೆಂದು ನನಗೆ ಭಯವಾಯಿತು. ‘ಯಮುನಕ್ಕ ನಿಮ್ಮ ಹಿಂದೆ ಸೀರೆಯ ಮೇಲೆಲ್ಲ ರಕ್ತ” ಎಂದೆ. ಯಮುನಕ್ಕ ಕುಸಿದು ಕೂತುಬಿಟ್ಟರು. ನಾನು ಅವರ ಜೊತೆ ಕೂತು ಅವರನ್ನು ಹಿಡಿದುಕೊಂಡೆ. ಮುಚ್ಚಿದ್ದ ಕಣ್ಣನ್ನು ಅವರು ಬಿಟ್ಟರು. +“ಏಳಿ ಯಮುನಕ್ಕ ಮನೆಗೆ ಹೋಗೋಣ” ಎಂದೆ. ಅವರು ನಿಟ್ಟುಸಿರಿಟ್ಟು, +“ನನಗೆ ಕೂಡುತ್ತಿಲ್ಲಪ್ಪ. ನೀನು ಹೋಗು” ಎಂದರು. +“ಏಳಿ, ಏಳಿ, ಯಮುನಕ್ಕ” ಎಂದು ಕೈ ಹಿಡಿದು ಎಳೆಯುತ್ತ ಚಂಡಿ ಮಾಡಿದೆ. +“ನನಗೆ ದಾಹವಾಗುತ್ತಿದೆಯಪ್ಪ. ಬರಲಾರೆ. ನೀನು ಹೋಗು” ಎಂದರು. +“ನೀವು ಜೊತೆಗೆ ಬರದ ಹೊರ್ತು ನಾನು ಹೋಗೋದಿಲ್ಲ” ಎಂದೆ. +“ಮನೆಗೆ ಇನ್ನೆಷ್ಟು ದೂರವಿದೆಯಪ್ಪ” ಎಂದರು. ನನಗೆ ದೂರದಿಂದ ಅಗ್ರಹಾರದ ಬ್ರಾಹ್ಮಣರ ಜೊತೆ ಶಾಸ್ತ್ರಿ, ರಂಗಣ್ಣ ಬರೋದು ಕಾಣಿಸಿತು. +“ಯಮುನಕ್ಕ – ಅವರೆಲ್ಲ ಬರುತ್ತಿದ್ದಾರೆ. ಯಮುನಕ್ಕ ನಾವು ಫಕ್ಕನೆ ಹೋಗಿಬಿಡೋಣ ಯಮುನಕ್ಕ. ನಿಮ್ಮನ್ನು ನಾನು ಮನೆಗೆ ಕರಕೊಂಡು ಹೋಗ್ತೀನಿ ಯಮುನಕ್ಕ” ಎಂದೆ. ನನಗೆ ಅಳು ಬಂತು. ಯಮುನಕ್ಕ ಏಳಲಿಲ್ಲ. ನಿಧಾನವಾಗಿ ಉಸಿರುಬಿಡುತ್ತ ಮಾತಾಡಿದರು : +“ಬಂದರೆ ಬರಲಿ ಪುಟ್ಟ. ನನಗೆ ಎದ್ದು ನಡೆಯಲು ಕೂಡೋದಿಲ್ಲ. ಯಾರು ಬೇಕಾದರೂ ಬಂದು ನೋಡಲಿ. ನಾನು ಇಲ್ಲೇ…” +ನಾನು ಯಮುನಕ್ಕನ ಮೈ ಅಲುಗಿಸುತ್ತ ಮಾತಾಡಿಸಿದೆ. ‘ನನಗೆ ಹೋಗಬೇಕೆ’ಂದು ಹಠ ಮಾಡಿದೆ. ಯಮುನಕ್ಕ ನನ್ನನ್ನು ತಬ್ಬಿಕೊಂಡು ಬೆನ್ನಿನ ಮೇಲೆ ಕೈಯಾಡಿಸಿದರು. +ಅವರೆಲ್ಲ ಬಂದು ಸುತ್ತುಗಟ್ಟಿ ನಿಂತರು. ನನ್ನನ್ನು ಶಾಸ್ತ್ರಿ ಎಳೆದ. ನಾನು ಅವನಿಗೆ ಹೊಡೆದು ಅವನ ಕೈಯನ್ನು ಬಲವಾಗಿ ಕಚ್ಚಿ ಅಳತೊಡಗಿದೆ. ‘ಯಮುನಕ್ಕ, ಯಮುನಕ್ಕ’ ಎಂದೆ. ಯಮುನಕ್ಕ ಎತ್ತಲೋ ದೃಷ್ಟಿಯನ್ನು ಹರಿಸಿ ಯಾರ ಕಡೆಗೂ ನೋಡದೆ ಕೂತಿದ್ದರು. ಅವರ ಕಣ್ಣಿನ ತುಂಬ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು. +* +* +* +ಅಪ್ಪಯ್ಯ ಬಂದು ನನ್ನನ್ನು ಕರೆದುಕೊಂಡು ಹೋದರೆಂದು ನನಗೆ ತುಂಬ ಖುಷಿಯಾಯಿತು. ಮನಗೆ ಹೋದ ಕೂಡಲೆ ನನಗೆ ಬೇರೆ ಜನಿವಾರ ಹಾಕಿಸಿ ಪಂಚಗವ್ಯ ಮಾಡಿಸಿ ಶುದ್ಧ ಮಾಡಿದರು. ಅಮ್ಮ ಕೇಳಿದ್ದಕ್ಕೆ ಅಲ್ಲಿ ನಡೆದದ್ದನ್ನೆಲ್ಲ ಹೇಳಿದೆ. “ಹಾಳು ಮುಂಡೆ ಯಾಕೆ ಬಸುರಿಯಾಗಬೇಕಿತ್ತು” ಎಂದು ಅಮ್ಮ ಹೇಳಿದಳು. ಅಮ್ಮ ಬಸುರಿಯಾಗಲ್ಲವೆ: ಯಮುನಕ್ಕನೂ ಯಾಕೆ ಬಸುರಾಗಬಾರದು ; ಇಷ್ಟೆಲ್ಲ ಯಾಕೆ ಅವಾಂತರ ಎಂದು ನಾನು ಆಶ್ಚರ್ಯಪಟ್ಟೆ. ಸ್ವಲ್ಪ ದಿನಗಳಾದ ಮೇಲೆ ಯಮುನಕ್ಕನಿಗೆ ಜೀವವಿದ್ದಂತೆಯೇ ಉಡುಪರು ಶ್ರಾದ್ಧ ಮಾಡಿ ಜಾತಿಯಿಂದ ಹೊರಗೆ ಹಾಕಿದರೆಂದು ಸುದ್ದಿ ಬಂತು. ಅಪ್ಪಯ್ಯ ಅಮ್ಮ, ‘ಉಡುಪರು ಎಷ್ಟು ಒಳ್ಳೆಯವರೆಂದು ಹೊಗಳಿ, ಯಮುನಕ್ಕನನ್ನು ‘ನೀತಿಗೆಟ್ಟವಳೆಂದು’ ಬೈದರು. ಇನ್ನೊಂದು ದಿನ ಉಡುಪರಿಗೆ ಮದುವೆಯೆಂದು ನಮಗೆ ಅಕ್ಷತೆ ಬಂತು. ಅಪ್ಪಯ್ಯನಿಗಿಂತ ಮುದುಕರಾದ ಉಡುಪರು ಒಂದು ಪುಟ್ಟ ಹುಡುಗಿಯ ಜೊತೆ ಹಸೆಮಣೆಯ ಮೇಲೆ ಕೂತು ಆರತಿ ಎತ್ತಿಸಿಕೊಳ್ಳುತ್ತಾರೆಂದು ಯೋಚಿಸಿ, ನಾನು ‘ಥ’ ಎಂದೆ. ಅಪ್ಪಯ್ಯ ನನಗೆ “ಯಾಕೋ” ಎಂದರು. “ಇವಳು ನೀತಿಗೆಟ್ಟ ಮೇಲೆ ಉಡುಪರಿಗೆ ಸಂಸಾರ ನಡೆಯೋದು ಬೇಡವೆ. ಬೇಯಿಸಿ ಹಾಕಲೊಂದು ಜನ ಬೇಡವೆ. ಅಂತೂ ಕಾಲ ಕೆಟ್ಟಿತು” – ಎಂದು ಅಮ್ಮ ಹೇಳಿದಳು. +***** +೩೦-೩-೧೯೬೨ +ಕೀ ಇನ್ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ +೦೮-೧೨-೨೦೦೫ +ಪೂರಕ ಓದು: +ಘಟಶ್ರಾದ್ಧ ಸಿನಿಮಾ ಬಗೆಗೆ ಅನಂತಮೂರ್ತಿಯವರು ಬರೆದಿರುವ ಲೇಖನ +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […] +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […] +[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_682.txt b/Kannada Sahitya/article_682.txt new file mode 100644 index 0000000000000000000000000000000000000000..d68bb5aa0c5f71f3b4538a1a4aa65a843ce225df --- /dev/null +++ b/Kannada Sahitya/article_682.txt @@ -0,0 +1,76 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಳಿಗ್ಗೆ ಎಂಟೂವರೆ ಗಂಟೆಗೆ ಸರಿಯಾಗಿ ಹತ್ತಾರು ದಿನಗಳಿಂದ ಕಡುನೀಲಿಯಾಗಿಯೇ ಉಳಿದಿದ್ದ ಆಕಾಶದ ತುಂಬ ಅದಾವ ಮಾಯದಲ್ಲೋ ಹಿಂಡು ಹಿಂಡು ಮದ್ದಾನೆಗಳ ಹಾಗೆ ಕಪ್ಪು ಮೋಡಗಳು ದಟ್ಟಯಿಸಿ ಇದ್ದಕ್ಕಿದ್ದಂತೆ ಹಗಲೇ ರಾತ್ರಿಯಾಗಿಬಿಟ್ಟ ಹಾಗೆ, ಕತ್ತಲು ಕವಿದು ಕೆಲವೇ ಕ್ಷಣಗಳಲ್ಲಿ ಎದೆ ನಡುಗಿಸುವಂತಹ ಗುಡುಗು ಮೊಳಗಿ, ಆಗಾಗ ಕಣ್ಣು ಮಿಟುಕಿಸುವಷ್ಟು ಹೊತ್ತು ಮಾತ್ರ ಕತ್ತಲನ್ನು ಹೊಡೆದೋಡಿಸುವಂತೆ ಫಳಾರನೆ ಮಿಂಚು ಮಿಂಚಿ ರಪ ರಪ ರಪ ಎಂದು ಸುರಿಯತೊಡಗಿದ ಆಲಿಕಲ್ಲು ಮಳೆ ಭುವನಗಿರಿಯ ಮರಗಿಡಗಳ ರೆಂಬೆಕೊಂಬೆಗಳನ್ನು ಮುರಿದು ಎಲೆಗಳನ್ನೆಲ್ಲ ಉದುರಿಸಿ ಮನೆಯೊಳಗೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದ ಹಾಗೆ ಅಬ್ಬರಿಸಿ ಹಲವಾರು ಮನೆಗಳ ಹೆಂಚುಗಳನ್ನು ಒಡೆದು ಮುಂಜಾನೆಯೇ ಎಚ್ಚರಗೊಂಡು ಚಿಲಿಪಿಲಿಗುಟ್ಟುತ್ತಿದ್ದ ಗುಬ್ಬಚ್ಚಿಗಳನ್ನೂ ಕಾಗೆ ಕೋಳಿಗಳನ್ನೂ ತೆಪ್ಪಗಿರಿಸಿ ಹೊರಗೆಲ್ಲೋ ಅಡ್ಡಾಡಲು ಹೊರಟಿದ್ದವರ ಜುಟ್ಟು ಹಿಡಿದು ಅಲ್ಲಾಡಿಸಿ ಒಂಟೊಂಟಿಯಾಗಿ ಛತ್ರಿ ಹಿಡಿದು ನೆಟ್ಟಗೆ ನಿಂತ ತೆಂಗಿನ ಮರಗಳ ಗರಿಗಳನ್ನುದುರಿಸಿ ವೇಣುಗೋಪಾಲಸ್ವಾಮಿ ಗುಡಿಯ ಗೋಪುರದ ಕಲಶವನ್ನು ದಢಾರೆಂದು ನೆಲಕ್ಕೆ ಕೆಡವಿ ಅಂಗಳಗಳಲ್ಲಿ ಒಣಹಾಕಿದ್ದ ಬಟ್ಟೆಗಳನ್ನು ದೂರದೂರಕ್ಕೆ ತೇಲಿಸಿ ಹಾರಿಸಿ ಮನೆಮಾಡುಗಳಿಂದ ಜಲಪಾತದ ಹಾಗೆ ಧುಮ್ಮಿಕ್ಕುತ್ತಿದ್ದ ನೀರೆಲ್ಲ ಬೀದಿಗಳ ತುಂಬ ಹರಿದು ಭೋರ್ಗರೆಯುವಂತೆ ಮಾಡಿ ಸಂಜೆಯವರೆಗೂ ತನ್ನ ರಾಕ್ಷಸ ಪ್ರತಾಪವನ್ನು ತೋರಿಸಿದ ಆ ದಿನ ಜಾನಕಮ್ಮ ಕಣ್ಣು ಮುಚ್ಚಿದಳು. +ಆ ದುರದೃಷ್ಟದ ದಿನ ಚೊಚ್ಚಲು ಹೆರಿಗೆಯಲ್ಲಿ ಹೆತ್ತ ಗಂಡು ಮಗುವಿನ ಜೊತೆಯಲ್ಲೇ ಅವಳೂ ಅಸುನೀಗಿದಳಲ್ಲಾ ಎಂದು ಮನೆಯವರೆಲ್ಲರೂ ಬಾಯಿ ಬಾಯಿ ಬಡಿದುಕೊಂಡು ಗೋಳಾಡಿದರು. +ಮಾರನೆಯ ದಿನ ಭುವನಗಿರಿಯ ಯಾವ ಗಿಡದಲ್ಲೂ ಹೂವರಳಲಿಲ್ಲ. +ಮಾರನೆಯ ದಿನ ಆ ಮನೆಯ ಅಂಗಳದಲ್ಲಿ ಹತ್ತಾರು ಕಾಗೆ, ನೂರಾರು ಗುಬ್ಬಚ್ಚಿಗಳು ಸತ್ತುಬಿದ್ದದ್ದನ್ನು ನೋಡಿದರೂ ನಂಅಲಾಗದವರಂತೆ ಎಲ್ಲರೂ ದಿಗ್ಭ್ರಾಂತರಾದರು. +ನಾಲ್ಕನೆಯ ದಿನ ಜನ ಸಾಮಾನ್ಯವಾಗಿ ಮರೆಯುವಂತೆ ನಮ್ಮ ಜಾನಕಮ್ಮನನ್ನೂ ಮರೆತುಬಿಟ್ಟರು, ನಮ್ಮಪ್ಪನ ಆ ಅಕ್ಕನ ಬಗ್ಗೆ ನಾನೆಂದೂ ಅಷ್ಟಾಗಿ ಯೋಚಿಸಿದವಳಲ್ಲ. ನಾನು ಹುಟ್ಟುವುದಕ್ಕೆ ಮೊದಲೇ ಈ ಇಹಲೋಕವನ್ನು ಬಿಟ್ಟುಹೋಗಿದ್ದ ಆಕೆಯ ಬಗ್ಗೆ ನಮ್ಮ ಕುಟುಂಬ ನೆನಪುಗಳಲ್ಲಿ ಅಂಥ ಸ್ಥಾನವೇನೂ ಇದ್ದಂತಿರಲಿಲ್ಲ. ಯಾರದೋ ಮದುವೆಯಲ್ಲೋ ಬಂಧುಬಾಂಧರೆಲ್ಲ ಸೇರಿದಾಗ ಕೂಡ ಅವಳ ವಿಷಯ ಮಾತಿಗೆ ಬರುತ್ತಿದ್ದುದೇ ಅಪರೂಪ. ನಮ್ಮಲ್ಲಿರುವ ಆಲ್ಬಂಗಳಲ್ಲಿ ಮನೆತನದ ಹೆಗ್ಗಳಿಕೆಯ ಶಾಖಾನುಶಾಖೆಯನ್ನು ಪ್ರತಿನಿಧಿಸುವವರ ನೂರಾರು ಫೋಟೋಗಳು ತುಂಬಿ ಹೋಗಿದ್ದರೂ ಯಾಕೋ ಆಕೆಯದೆಂದು ಗುರುತಿಸಲಾಗಿರುವ ಫೋಟೋ ಇರುವುದು ಒಂದೇ ಒಂದು. ಹಳದಿ ಬಣ್ಣಕ್ಕೆ ತಿರುಗಿ ಮುಟ್ಟಿದರೆ ಮುರಿಯುವಷ್ಟು ಹಳೆಯದಾದ ಆ ಫೋಟೋದಲ್ಲಿ ಕ್ಯಾಮೆರಾದ ಇದಿರಿಗೆ ಮುಜುಗರದಿಂದ ಮೈಬಿಗಿದುಕೊಂಡಂತೆ ಕಾಣಿಸುವ-ಓಬೀರಾಯನ ಕಾಲದ ಎಲ್ಲ ಫೋಟೋಗಳಲ್ಲೂ ನಮ್ಮ ಹೆಂಗಸರು ಕಾಣಿಸುವುದೇ ಹಾಗಲ್ಲವೇ-ಹದಿನೇಳೋ ಹದಿನೆಂಟೋ ವರ್ಷದ ಜಾನಕಮ್ಮ ಸೂಕ್ಷ್ಮ ಕೆತ್ತನೆಯಿಂದ ಸಿಂಗಾರಗೊಂಡ ಭಾರೀ ಮರದ ಕುರ್ಚಿಯಲ್ಲಿ ನೆಟ್ಟಗೆ ಸೆಟೆದು ಕುಳಿತಿದ್ದಾಳೆ. +ಅವಳ ಬಳಿಯಲ್ಲಿ ಒಂದೇ ಒಂದು ಕಾಲಿರುವ ಅಂಥದೇ ಕೆತ್ತನೆಯುಳ್ಳ ಗುಂಡು ಮೇಜು. ಅದರ ಮೇಲೆ ಕಸೂತಿ ಹಾಕಿರುವ ಬಿಳಿಯ ಟೇಬಲ್ ಕ್ಲಾತು. ಚಿನ್ನದ ಬಳೆಗಳನ್ನೂ ಕಡಗವನ್ನೂ ತೊಟ್ಟುಕೊಂಡ ತನ್ನ ಕೈಗಳನ್ನು ತೊಡೆಯ ಮೇಲಿಟ್ಟುಕೊಂಡಿದ್ದಾಳೆ. ಆ ತೊಡೆಗಳು ಬಹುಶಃ ಅವರಮ್ಮನ ಹದ್ದಿನ ಕಣ್ಣಿನ ಆಣತಿಗೆ ಅನುಗುಣವಾಗಿ ಮಧ್ಯೆ ಒಂದಿಷ್ಟೂ ಬಿರುಕು ಬಿಡದೆ ಒಂದಕ್ಕೊಂದು ಅಂಟಿಕೊಂಡಂತಿವೆ. ಅವಳು ತನ್ನ ಇದಿರನ್ನೇ ದಿಟ್ಟಿಸುತ್ತಿದ್ದಾಳೆ-ಘನಗಂಭೀರವಾಗಿ, ಒಂದಿಷ್ಟೂ ಮುಗುಳುನಗದೆ, ಮೊದಲೇ ಅಗಲವಾಗಿರುವ ತನ್ನ ಕಣ್ಣುಗಳನ್ನು ಇನ್ನಷ್ಟು ಆಲವಾಗಿ ಅರಳಿಸಿಕೊಂಡು. ಆದರೂ ಯಾಕೋ ಅವಳ ಆ ಬಿಗಿದುಕೊಂಡ ಮುಖವನ್ನು ನೋಡಿದರೆ ಉಕ್ಕಿಬರುತ್ತಿರಬಹುದಾದ ನಗುವನ್ನು ತಡೆದುಕೊಳ್ಳಲು ಹೆಣಗುತ್ತಿದ್ದಾಳೇನೋ ಅಂತ ನನಗೆ ಅನ್ನಿಸುತ್ತಿದೆ. ಬೈತಲೆ ತೆಗೆದು ಹಿಂದಕ್ಕೆ ಎಳೆದು ಚಾಚಿರುವ ಕೂದಲು; ತುರುಬಿನಲ್ಲಿ ಹೂವಿನ ರಾಶಿಯೇ ಇರಬೇಕು. ಕಿವಿಯಲ್ಲಿ ವಜ್ರದ ಓಲೆಗಳು; ಮೂಗಿನಲ್ಲಿ ಮುತ್ತಿರುವ ಬೇಸರಿ; ಬೆರಳುಗಳಲ್ಲಿ ಫಳಫಳ ಹೊಳೆಯುವ ಉಂಗುರಗಳು; ತೋಳಿನಲ್ಲಿ, ಎದೆಯ ಮೇಲೆ ಬಗೆಬಗೆಯ ಚಿನ್ನದ ಆಭರಣಗಳು. ಬಿಗಿಯಾಗಿ ಎಳೆದು ಕಟ್ಟಿದಂತಿರುವ ಸೆರಗಿನ ಹಿಂದೆ ಚಪ್ಪಟೆಯಾದ ಎದೆ. ಅಥವಾ ನನಗೆ ಹಾಗೆ ಕಾಣಿಸುತ್ತಿದೆಯೋ. ಒಟ್ಟಿನಲ್ಲಿ ಹೀಗೆ ಒಡವೆಗಳನ್ನು ಹೇರಿಕೊಂಡು ಕುರ್ಚಿಯಲ್ಲಿ ಕೂತಿರುವ ಹಿಂಸೆಯಿಂದ ಯಾವಾಗ ಬಿಡುಗಡೆಯೋ ಎನ್ನುವಂತಿರುವ ಮುಖಭಾವ. +ಒಡವೆ ವಸ್ತುಗಳ ಮೂಲಕವೇ ಎಂಥ ಐಶ್ವರ್ಯವಂತರ ಮನೆ ಎಂಬುದನ್ನು ಸೂಚಿಸುವಂತೆ ಹೀಗೆ ಹೆಣ್ಣುಮಕ್ಕಳ ಫೋಟೋ ತೆಗೆಸುವುದು ಆ ಕಾಲದ ಪರಿಪಾಠವೇನೋ. ಅಥವಾ ನಮ್ಮ ಮನೆಯಲ್ಲೊಬ್ಬ ವಿವಾಹಯೋಗ್ಯ ಯುವತಿಯಿದ್ದಾಳೆಂದು ಜಗಜ್ಜಾಹೀರು ಮಾಡುವ ಪರಿಯೋ ? ಕಳೆದ ಕೆಲವು ದಿನಗಳಿಂದ ಈ ಫೋಟೋವನ್ನೇ ನೋಡುತ್ತಿದ್ದೇನೆ ನಾನು. ಭುವನಗಿರಿಯ ಈ ಭಾರೀ ಬಂಗಲೆಯಲ್ಲಿ ಕತ್ತಲು ಕವಿದ ಯಾವುದೋ ಕೋಣೆಯ ಕಪಾಟಿನೊಳಗಿಂದ ಒಂದು ಆಲ್ಬಂನಿಂದ ನಾನಿದನ್ನು ಕದ್ದುಕೊಂಡು ಬಂದದ್ದು. ಒಂದು ವೇಳೆ ಕದಿಯದೆ ನನಗೆ ಕೊಡಿ ಎಂದು ಕೇಳಿದ್ದರೆ ಜಾನಕಮ್ಮನ ಬಗ್ಗೆ ನನಗೇಕೆ ಇಷ್ಟು ಕುತೂಹಲ ಎಂದು ಹಲವಾರು ಹುಬ್ಬುಗಳು ಮೇಲೇರಿ ವಿಚಿತ್ರ ಸಂಶಯಕ್ಕೆ ಎಡೆಮಾಡಿಕೊಡಬಹುದಾಗಿತ್ತು. ವಿಸ್ಮಯದ ಸಂಗತಿಯೆಂದರೆ ನಮ್ಮಪ್ಪನ ಕಡೆಯವರಾರೂ ಆಕೆಯ ಬಗ್ಗೆ ಪ್ರಾಸಂಗಿಕವಾಗಿ ಕೂಡ ವಿಶೇಷವಾಗಿ ಅಂಥದೇನನ್ನೂ ಹೇಳದಿದ್ದದ್ದು ಯಾಕೆ ? ಸತ್ತು ಐವತ್ತಾರು ವರ್ಷವಾದ ಮೇಲೂ ಇನ್ನೂ ಯಾಕೆ ಹೀಗೆ ? ಅವಳೇನಾದರೂ ಮನೆತನಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಳೆ ? ಅಥವಾ ಅವಳ ವಿಷಯ ನಿಜಕ್ಕೂ ಯಾರಿಗೂ ಏನೂ ಗೊತ್ತೇ ಇರಲಿಲ್ಲವೋ ? ಮೊನ್ನೆ ಮೊನ್ನೆಯವರೆಗೂ ಬದಿಕಿದ್ದ ನಮ್ಮಜ್ಜಿ ಅವಳ ಹೆಸರೆತ್ತಿದರೆ ಸಾಕು, ಮಹಾಮೌನಿ. ಚಿಕ್ಕಂದಿನಲ್ಲಿ ಅವಳ ಒಡನಾಡಿರಬಹುದಾದ ನಮ್ಮಪ್ಪ ಕೂಡ ಒಮ್ಮೆ ಆಕೆಯ ಪ್ರಸ್ತಾಪ ಬಂದಾಗ ಹುಚ್ಚಿ ಎಂದನಲ್ಲದೆ ಬೇರೇನನ್ನೂ ಹೇಳಲಿಲ್ಲ. +ಜಾನಕತ್ತೆ ಒಳ್ಳೆ ತ್ರಿಪುರಸುಂದರಿಯ ಹಾಗಿದ್ದಳಂತೆ. ಇಡೀ ಪ್ರಪಂಚಕ್ಕೇ ತಂಪೆರೆದು ನೆಮ್ಮದಿ ತರುವಂಥ ಕಣ್ಣುಗಳಿದ್ದುವಂತೆ ಅವಳಿಗೆ. ಬೆಳಗಾದದ್ದೇ ಸ್ನಾನ ಮಾಡಿ ಹಣೆಗೆ ಇಷ್ಟಗಲ ಕುಂಕುಮವನ್ನಿಟ್ಟುಕೊಂಡು ತುಳಸೀ ಕಟ್ಟೆಗೆ ಪೂಜಿಸಿ ಅವಳು ಪ್ರೀತಿಯಿಂದ ಚೆಲ್ಲುತ್ತಿದ್ದ ಕಾಳಿಗಾಗಿ ಕಾದಿರುತ್ತಿದ್ದುವಂತೆ ಹಿಂಡು ಹಿಂಡು ಕಾಗೆ ಗುಬ್ಬಚ್ಚಿಗಳು. ಹದಿನಾರು ತುಂಬಿದ ಮೇಲೆ ಒಂದು ದಿನ ಅದೇನು ಹುಕ್ಕಿ ಬಂತೋ ಮನೆಯಲ್ಲಿದ್ದ ಹಳೆ ಬಟ್ಟೆಗಳನ್ನು ಹರಡಿಕೊಂಡು ಇಡೀ ಮಧ್ಯಾಹ್ನ ಅವುಗಳನ್ನು ಹೇಗೆ ಹೇಗೋ ಕತ್ತರಿಸಿ ಸಂಜೆಯ ಹೊತ್ತಿಗೆ ಒಂದು ಗೊಂಬೆಯನ್ನು ಮಾಡಿದ್ದಳಂತೆ. ಬಣ್ಣಬಣ್ಣದ ಚೂರು ಬಟ್ಟೆಗಳಲ್ಲಿ ಹತ್ತಿ ತುಂಬಿ ಹೊಲಿದಿದ್ದ ಮುದ್ದಾದ ಗೊಂಬೆ. ಅದರ ಕಣ್ಣುಗಳ ಜಾಗದಲ್ಲಿ ಅಂಟಿಸಿದ್ದ ಬಿಳಿ ಕವಡೆ. ಅದುವರೆಗೂ ಯಾರಿಗೂ ಗೊತ್ತಿರದ ಅವಳ ಆ ಜಾಣ್ಮೆಯನ್ನು ಕಂಡು ಎಲ್ಲರಿಗೂ ಸಂತೋಷವಾಯಿತಂತೆ. ಮತ್ತೆರಡು ದಿನಗಳ ನಂತರ ಅಂಥದೇ ಇನ್ನೊಂದು ಗೊಂಬೆ ತಯಾರು. ಮೊದಲಿನದಕ್ಕಿಂತ ಅದು ತುಸು ಪಳಗಿದ ಕೈ ಚಳಕವೆನ್ನುವಂತೆ ಹೆಚ್ಚು ಸುಂದರವಾಗಿತ್ತಂತೆ. ಇನ್ನೂ ಅಷ್ಟು ಮಾಡಿಡು, ನವರಾತ್ರಿಗೆ ಹೇಗೂ ಗೊಂಬೆ ಕೂರಿಸಬೇಕಲ್ಲ ಎಂದಿದ್ದರಂತೆ ಅವರಮ್ಮ ನಗುತ್ತ. +ಜಾನಕಮ್ಮ ಅದನ್ನೊಂದು ಅಪರೂಪದ ಉತ್ತೇಜನವೆಂದು ಬಗೆದು ಇನ್ನೂ ಅಷ್ಟು ಗೊಂಬೆಗಳನ್ನು ಮಾಡಿಟ್ಟಳಂತೆ. ಎಲ್ಲ ಗೊಂಬೆಗಳಿಗೂ ಒಂದೇ ಮುಖ-ಮುಗುಳುನಗುತ್ತಿರುವ ಗಂಡು ಮುಖ. ಅದೊಂದು ದಿನ ಮಂಗಳಮ್ಮ ಉದ್ದ ಜಡೆಯಿರುವ ಒಂದು ಹೆಣ್ಣು ಗೊಂಬೆಯನ್ನೂ ಮಾಡಬಾರದೇನೇ ಎಂದು ಕೇಳಿದಾಗ ಹೆಣ್ಣುಗೊಂಬೆ ಯಾಕೆ, ನಾನೇ ಇದ್ದೇನಲ್ಲ ಸಾಲದೆ ಎಂದು ನಿಟ್ಟುಸುರುಬಿಟ್ಟಿದ್ದಳಂತೆ. ಅಂತೆಕಂತೆಗಳು ಅಲ್ಲಿಗೇ ಮುಗಿಯಲಿಲ್ಲ…. +ಕಡೆಗಾಲದಲ್ಲಿ ಅವಳಿಗೆ ಹೆಚ್ಚುಕಡಿಮೆ ಹುಚ್ಚೇಹಿಡಿದುಬಿಟ್ಟಿತಂತೆ. ಯಾಕೆ ಹುಚ್ಚು ಹಿಡಿಯಿತು ? ಅವಳೇನು ಮಾಡಿದ್ದಳು ? ಯಾರಾದರೂ ಹುಡುಗ ಅವಳ ಮನಸೆಳೆದಿದ್ದನೇ ? ಇಲ್ಲ, ಆ ಕಾಲದಲ್ಲಿ ಈಗಿನಂತೆ ಹುಡುಗರು ಹುಡುಗಿಯರ ಬೆನ್ನುಹತ್ತುತ್ತಿರಲಿಲ್ಲ ಎಂದರಲ್ಲ ಕೆಲವರು. ಇನ್ನೇನು ಕಾರಣವಿದ್ದೀತು ? ಈ ಬಗ್ಗೆ ಏನಾದರೂ ಸುಳಿವು ಕೊಡಬಹುದಾದವಳು ಮಂಗಳಮ್ಮ ಮಾತ್ರವೇ ಎನ್ನಿಸಿ ಅವಳನ್ನು ಹುಡುಕಿಕೊಂಡು ಭುವನಗಿರಿಗೆ ಹೋದೆ. ಒಂದು ಕಾಲದಲ್ಲಿ ಹಳ್ಳಿಯ ಶ್ರೀಮಂತರ ಮನೆಗಳಲ್ಲಿ ತಂದೆತಾಯಿಯಿಲ್ಲದೆ ಅನಾಥರಾದ ಅಥವಾ ತಂದೆತಾಯಿಯಿದ್ದೂ ಬಡವರಾಗಿದ್ದ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದರಷ್ಟೆ. ಅಂಥವರಲ್ಲಿ ಕೆಲವರು ತಮ್ಮ “ಒಳ್ಳೆಯ ನಡತೆ” ಯಿಂದಾಗಿ ಮನೆಯವರ ಮೆಚ್ಚುಗೆಗೆ ಪಾತ್ರರಾಗಿ ತಮ್ಮ ಬಾಲ್ಯ, ಯೌವನಗಳನ್ನೆಲ್ಲ ಕೆಲಸಮಾಡುತ್ತಲೇ ಕಳೆದು ಮನೆಯವರೇನಾದರೂ ಮುತುವರ್ಜಿ ವಹಿಸಿದರೆ ಮದುವೆಯೂ ಆಗಿ ಗಂಡನೊಡನೆ ಅದೇ ಮನೆಯಲ್ಲಿ ಇದ್ದುಕೊಂಡು ಕಡೆಗೆ ಮನೆಯವರಲ್ಲೇ ಒಬ್ಬರಾಗಿಬಿಡುತ್ತಿದ್ದರು. ಹಾಗೆ ನಮ್ಮಲ್ಲಿ ಬೆಳೆದವಳು ಮಂಗಳಮ್ಮ. ನಮ್ಮಜ್ಜಿ ಅವಳನ್ನು ಅಪಾರ ಕರುಣೆಯಿಂದ ನೋಡಿಕೊಂಡರಂತೆ. ಯಾಕೋ ಅವರೆಷ್ಟು ಪ್ರಯತ್ನಿಸಿದರೂ ಅವಳಿಗೆ ಮದುವೆಯಾಗುವ ಯೋಗ ಇರಲಿಲ್ಲ. +ನಮ್ಮಜ್ಜ ಅಜ್ಜಿ ಇಬ್ಬರೂ ಇಲ್ಲವಾಗಿ ಅದೆಷ್ಟೋ ವರ್ಷಗಳು ಕಳೆದಿರುವ ಈಗ ಜಾನಕಮ್ಮನ ಗಂಡ ವಿಶ್ವೇಶ್ವರಯ್ಯನೊಬ್ಬನೇ ಭುವನಗಿರಿಯ ಹಳೆಕಾಲದ ಆ ದೊಡ್ಡಮನೆಗೆ ಉತ್ತರಾಧಿಕಾರಿ. ಸುಬ್ಬಣ್ಣನ ಕಾಣದೆ, ಮೊದಲಿನ ಕಳೆಯಿಲ್ಲದೆ ಬಿಕೋ ಎನ್ನುತ್ತಿರುವ ಆ ಮನೆಯಲ್ಲಿ ಹತ್ತಿರ ಹತ್ತಿರ ತೊಂಭತ್ತು ವರ್ಷದ ವೃದ್ಧೆಯಾಗಿರುವ ಮಂಗಳಮ್ಮ ಜಾನಕತ್ತೆಯ ಕೋಣೆಯಲ್ಲೇ ಹಾಸಿಗೆ ಹಿಡಿದುಬಿಟ್ಟಿದ್ದಳು. ಇದಿರಿಗೆ ಕೂತು ಒಂದಾದಮೇಲೊಂದರಂತೆ ನನ್ನ ಪ್ರಶ್ನೆಗಳನ್ನಿಟ್ಟಾಗ ಸುಮ್ಮನೆ ಕಣ್ಣು ಪಿಳಿಕಿಸುತ್ತ ನನ್ನ ಕಡೆ ನೋಡಿದಳಷ್ಟೆ. ನಲವತ್ತು ಐವತ್ತು ವರ್ಷಗಳ ಹಿಂದಿನ ಪುರಾವೆಯೊಂದೂ ಅವಳಿಗೆ ನೆನಪಿದ್ದಂತಿರಲಿಲ್ಲ. ನಮ್ಮಜ್ಜ ಅಜ್ಜಿಯ ಬಗ್ಗೆ, ಅಷ್ಟೇಕೆ ನಮ್ಮಪ್ಪನ ಬಗ್ಗೆ ಕೂಡ ಅವಳದು ಅಖಂಡ ಮೌನ. ಕಡೆಗೆ ವಿಶ್ವೇಶ್ವರಯ್ಯನ ಸೂಚನೆಯಂತೆಕುತೂಹಲದಿಂದ ಅವಳ ಬಲಗೈಯಲ್ಲಿ ಮಿಂಚುತ್ತಿದ್ದ ಚಿನ್ನದ ಬಳೆಯನ್ನು ಮುಟ್ಟಿ ಅದರತ್ತ ಬೆರಳು ತೋರಿಸಿದೆ. ತಕ್ಷಣ ಭಯಭೀತಿಯಿಂದ ಬೆಚ್ಚಿಬಿದ್ದವಳಂತೆ ಎದ್ದು ಕೂತು ಆ ಬಳೆಯನ್ನೂ ತನ್ನ ಕೈಯೊಳಗೇ ಇದೆಯೆಂದು ಖಾತರಿಪಡಿಸಿಕೊಂಡವಳು, ಆ ಹುಡುಗ ಬಂದಿದಾನೆ ನೋಡೋ ಜಾನಕೀ-ಹೂಂ, ಹೊರಡು ಹಜಾರಕ್ಕೆ… ನನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಮನೇಲಿ… ಎಂದು ಅರ್ಧಂಬರ್ದ ಕೇಳಿಸುವ ಹಾಗೆ ಒಂದಷ್ಟು ಗೊಣಗಿಕೊಳ್ಳುತ್ತ ನಿಡಿದಾಗಿ ಉಸಿರುಬಿಟ್ಟಳಷ್ಟೆ. ಕೆಲವು ಕ್ಷಣಗಳ ಬಳಿಕ, ಎಷ್ಟು ಮುದ್ದಾಗಿದೆಯಲ್ಲೇ ನಿನ್ನ ಮಗು…. ಎಂದೇನೋ ಕನವರಿಸಿಕೊಂಡಂತೆ ಬಡಬಡಿಸಿ ಮಲಗಿಬಿಟ್ಟಳು. ಅಷ್ಟೆ, ಆಮೇಲೆ ಮಾತಿಲ್ಲ ಕತೆಯಿಲ್ಲ. +ನಮ್ಮ ಮನೆತನಕ್ಕೆ ಸಂಬಂಧಿಸಿದ ಈ ಎಳೆಗಳೆಲ್ಲ ಒಂದು ನೆಯ್ಗೆಯಾಗುವುದಾದರೂ ಹೇಗೆ ಎನ್ನುವುದೇ ನನ್ನ ಸಮಸ್ಯೆಯಾಯಿತು. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮದುವೆಯನ್ನು ಮುಂದೂಡುತ್ತಿರುವ ನನ್ನನ್ನು ಅಪ್ಪ ಅಮ್ಮ ಇಬ್ಬರೂ ಎಲ್ಲೋ ಯಾವುದೋ ಗಂಡಿದೆಯೆಂದು ಏಳೆಂಟು ದಿನ ಒಪ್ಪಿಕೋ ಎನ್ನುತ್ತ ಕಾಡಿಸಿ ಪೀಡಿಸಿದ್ದಾಯಿತು. ನನಗೇಕೆ ಮದುವೆ ಬೇಡವೆಂದು ಅವರಿಗಾದರೂ ಹೇಗೆ ಗೊತ್ತಾಗಬೇಕು ? ಮೊನ್ನೆ ನನ್ನ ರೂಮಿನಲ್ಲಿ ಕೂತವಳು ಏನನ್ನೋ ಹುಡುಕುತ್ತ ಅಲಮಾರಿನ ಹಾಳುಮೂಳನ್ನೆಲ್ಲ ತೆಗೆದು ಜಾಡಿಸುತ್ತಿರುವಾಗ ನನಗೆ ಜಾನಕಮ್ಮನ ಅದೇ ಫೋಟೋ ಸಿಕ್ಕಿತು. ಅದೂ ಕೂಡ ಪ್ರೇಮದಿಂದಾಗಿ ಯಮಯಾತನೆಯನ್ನನುಭವಿಸಿ ಚೂರುಪಾರು ನೆನಪುಗಳನ್ನಷ್ಟೇ ಉಳಿಸಿಹೋದ ಒಂದು ಹೆಣ್ಣಿನ ಫೋಟೋವಷ್ಟೆ ಎನ್ನಿಸಿತು. ಒತ್ತಾಗಿ ಬೆಳೆದ ಹುಬ್ಬಿನ ಕೆಳಗೆ ಆ ಸುಂದರ ಬಟ್ಟಲುಗಣ್ಣುಗಳ ಮೂಲಕ ಗಂಟಲಿನ ಸೆರೆಯುಬ್ಬಿ ಬರುತ್ತಿರುವ ಅತೀವ ದುಃಖವನ್ನು ಅದುಮಿಹಿಡಿದುಕೊಂಡಂತೆ ಪ್ರಪಂಚವನ್ನು ನೋಡುತ್ತ ಕೂತವಳ ದೃಷ್ಟಿ ಅವಳನ್ನೇ ನೋಡುತ್ತಿದ್ದ ನನ್ನ ಮೇಲೆ ನೆಟ್ಟು ನಿಂತಂತೆನಿಸಿದ್ದೇ ಆ ದೃಷ್ಟಿಯ ಕರುಳು ನೇವರಿಸುವಂತಹ ಪರಿಣಾಮ, ನಾನೂ ನಿನ್ನಂತೆಯೇ ಒಬ್ಬಳು ಎಂಬ ಹತಾಶಭಾವ ಹಠಾತ್ತಾಗಿ ನನ್ನಲ್ಲುದಿಸಿದ ಆತಂಕವನ್ನು ತುಸು ಸಮಾಧಾನಪಡಿಸಿತು. ಆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಅದರಲ್ಲಿದ್ದವಳು ಒಬ್ಬ ಜೀವಂತ ಹುಡುಗಿಯಾಗಿ ಕಣ್ಣಿನ ರೆಪ್ಪೆಗಳನ್ನು ಅಲುಗಾಡಿಸುತ್ತ ನಿರಾಶೆಯಿಂದ ನಕ್ಕಂತೆ ಕಾಣಿಸಿ ಅವಳು ಅದೇನೋ ರಹಸ್ಯವನ್ನು ನನ್ನೊಡನೆ ಹಂಚಿಕೊಳ್ಳಲು ತವಕಿಸುತ್ತಿರುವಂತೆ ಭಾಸವಾದಾಗ ನಮ್ಮಿಬ್ಬರನ್ನೂ ಬೇರ್ಪಡಿಸಿದ್ದ ಐವತ್ತಾರು ವರ್ಷ ಯಾವ ಮಾಯದಲ್ಲೋ ಕರಗಿಹೋದಂತಾಯಿತು. +-ನೀನು ತಿಳಿದಂತೆ ಆತ ನನ್ನ ಕೈಬಿಡಲಿಲ್ಲ, ವೈದೇಹಿ. +-ಅತ್ತೇ, ಏನು ಮಾತಿದು ? ಅವನು ಇನ್ನೊಬ್ಬಳನ್ನು ಮದುವೆಯಾಗಲಿಲ್ಲವೆ ? +ಅವನಿಗಾಗಿ ಹಂಬಲಿಸಿ ಹಂಬಲಿಸಿ ಕಡೆಗೆ ನೀನೂ ಬೇರೆ ಒಬ್ಬನನ್ನು ಕಟ್ಟಿಕೊಳ್ಳಲಿಲ್ಲವೆ ? ಅದರಿಂದಲೇ ನಿನಗೆ ಹುಚ್ಚು ಹಿಡಿಯಿತಲ್ಲವೆ ? +-ನಾವು ತುಂಬಾ ತುಂಬಾ ಪ್ರೀತಿಸುತ್ತಿದ್ದೆವು, ಪುಟ್ಟೀ. ಆದರೆ ನಮ್ಮ ದುರದೃಷ್ಟಕ್ಕೆ ಏನು ಹೇಳೋಣ. ನಾವು ಬೇರೆ ಬೇರೆಯವರನ್ನೇನೋ ಮದುವೆಯಾದೆವು. ಪ್ರೀತಿ ಸಾಯದಿದ್ದರೆ ದುರದೃಷ್ಟ ಏನುಮಾಡೀತು ಹೇಳು ? ಪರಿಸ್ಥಿತಿ ನಮ್ಮನ್ನು ದೂರ ದೂರ ಸರಿಸಿದರೂ ನಾವು ಪ್ರೀತಿಸುವುದನ್ನು ಬಿಡಲಿಲ್ಲ. ಕಡೆಗೆ ನನಗೆ ಹುಟ್ಟಿದ್ದೂ ಅವನ ವಂಶದಕುಡಿಯೇ ಅಲ್ಲವೆ ? +-ಇದನ್ನೆಲ್ಲ ಹೇಗೆ ತಾನೆ ನಂಬುವುದು ಅತ್ತೇ ? ಒಂದು ದಿನವಾದರೂ ನೀನು ಆ ಮನೆಯಿಂದ ಹೊರಗೆ ಹೆಜ್ಜೆ ಇಟ್ಟದ್ದುಂಟಾ ? ಅದೂ ಅಜ್ಜಿಯ ಹದ್ದಿನ ಕಣ್ಣನ್ನು ತಪ್ಪಸಿ ? +-ಹೌದು, ನನ್ನ ಸುತ್ತ ಸರ್ಪಗಾವಲಿತ್ತು. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ ನಾವು ಹೆಂಗಸರು ಗಂಡಸರಿಗಿಂತ ಧಾರಾಳಿಗಳು. ಪ್ರೀತಿ ಬಾಡಿಹೋದರೂ ನಾವೇ ಅದನ್ನು ಮತ್ತೆ ನೇರೆರೆದು ಬೆಳೆಸಬಲ್ಲೆವು. +ಅಮ್ಮ ಅತ್ತಿರದಲ್ಲೆಲ್ಲೂ ಇಲ್ಲದ ಕಾರಣ ವಿಶಾಲವಾದ ಹಜಾರದಲ್ಲಿ ನನ್ನ ಅಪ್ಪನಿಗಾಗಿ ಕಾಯುತ್ತ ಕೂತಿದ್ದ ಅವನನ್ನು ಅರೆತೆರೆದ ಬಾಗಿಲಿನ ಹಿಂದೆ ನಾನೇ ತುದಿಗಾಲಲ್ಲಿ ನಿಂತಿರುವ ಸುಳಿವೂ ತೋರಗೊಡದೆ ದಿಟ್ಟಿಸುತ್ತಿರುವಾಗ ಪರವಾಗಿಲ್ಲ, ನನಗೆ ಇಷ್ಟವಾಗುವಂಥ ಪ್ರಶಾಂತ ಮುಖದ ಹುಡುಗ ಎನ್ನಿಸಿದ್ದೇ ಇವನಿಲ್ಲಿ ಬಂದಿರುವುದು ನನ್ನ ಕೈ ಹಿಡಿಯುವ ಉಮೇದಿನಿಂದಲೇ ಎಂದಾಗಿದ್ದರೆ ನನ್ನಷ್ಟು ಪರಮಸುಖಿ ಇನ್ನೊಬ್ಬಳಿರಲಾರಳು ಎಂದುಕೊಂಡವಳಿಗೆ, ಪೂರ್ಣಿಮೆಗೋ ಅಮಾವಾಸ್ಯೆಗೋ ಎಂದಾದರೊಮ್ಮೆ ಅಮ್ಮ ವಿಶೇಷ ಮುತುವರ್ಜಿಯಿಂದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗ ಇವನೂ ನನ್ನನ್ನು ನೋಡಿರಬಾರದೇಕೆ ಎಂದು ಅನ್ನಿಸಿದ ತಕ್ಷಣ ನನ್ನ ಕೈಸೋಕಿದ ಬಾಗಿಲು ಕಿರ್ರೆಂದದ್ದೇ ಅವನು ಅತ್ತ ಕಣ್ಣು ಹರಿಸಿದನೋ ಇಲ್ಲವೋ ಮರುಕ್ಷಣ ಹಿಂದೆ ಸರಿದು ಉಸಿರುಬಿಗಿಹಿಡಿದುಕೊಂಡು ನಿಂತವಳು ಸ್ವಲ್ಪ ಸಮಯದ ನಂತರ ಮತ್ತೆ ಹತ್ತಿಕ್ಕಲಾರದ ಆಸೆಯಿಂದ ಹೊರಗಿಣಿಕಿದ್ದೇ ಮುಖದಲ್ಲಿ ತುಂಟುನಗೆ ಮೂಡಿಸಿಕೊಂಡು ನೋಡ್ದುತ್ತಿದ್ದವನ ಕಣ್ಣು ನನ್ನನ್ನು ಇಡಿಯಾಗಿ ನೋಡಿಬಿಟ್ಟಿತೆನ್ನಿಸಿ ಮೈತುಂಬ ನಡುಕವುಂಟಾಗಿ ಸರಸರನೆ ಸದಾ ಕತ್ತಲು ಕವಿದಿರುತ್ತಿದ್ದ ಒಳಗಿನ ಕೋಣೆಗೆ ಹಿಂದಿರುಗಿದವಳು ಅವತ್ತು ಬೆಳಿಗ್ಗೆಯಷ್ಟೇ ಅಮ್ಮ ಮುಗಿಸು ಎಂದು ಕೊಟ್ಟಿದ್ದ ಕಸೂತಿಯನ್ನು ಕೈಗೆತ್ತಿಕೊಂಡು ಮುಂದುವರಿಸುತ್ತ ಕೂತುಬಿಟ್ಟೆ. ಹೊರಗೆ ಹೋಗಿದ್ದ ಅಮ್ಮ ಸಂಜೆಯಾಗುವವರೆಗೂ ಮರಳಿ ಬರುವಂತಿರಲಿಲ್ಲ. ಅಪ್ಪ ? ಹಜಾರದಿಂದ ಈಗ ಗಟ್ಟಿಯಾಗಿ ಮಾತನಾಡುತ್ತಿರುವ ಸದ್ದು ಕೇಳಿಸುತ್ತಿರುವುದರಿಂದ ಅಪ್ಪ ಬಂದಿರಬೇಕೆನ್ನಿಸಿ ಮತ್ತೆ ಆ ಭಾರಿ ಬಾಗಿಲಿನ ಹಿಂಬದಿಯ ರಹಸ್ಯ ತಾಣಕ್ಕೆ ಬಂದದ್ದೇ ಎರಡನೆಯ ಬಾರಿಗೆ ಅವನು ಯಾರಿಗೂ ಸುಳಿವು ಕೊಡದಂತೆ ನನ್ನನ್ನು ನೋಡಿದಾಗ ನಾನು ಮೊದಲಿನಂತೆ ಭಯದಿಂದ ಹಿಂದೆ ಸರಿಯದೆ ನಾನೇ ಇಡಿಯಾಗಿಯೇ ಅವನ ಕಣ್ಣು ತುಂಬುವಂತೆ ಎರಡು ಹೆಜ್ಜೆ ಮುಂದೆ ಸರಿದು ಅರೆತೆರೆದ ಬಾಗಿಲನ್ನು ಎಡಗೈಯಿಂದ ಬಳಸಿಕೊಂಡು ಕ್ಷಣಕಾಲ ನಿಂತು ಮರುಕ್ಷಣ ಹಿಂಸರಿದ ಆ ಕೆಲವು ಕ್ಷಣಗಳಲ್ಲೇ ಅವನ ಕಣ್ಣು ಸಂಪೂರ್ಣವಾಗಿ ನನ್ನನ್ನು ತುಂಬಿಕೊಂಡುಬಿಟ್ಟಿತ್ತು. ಮೊದಲ ಬಾರಿಗೆ ಒಬ್ಬ ಯುವಕನನ್ನು ಕಣ್ಣುತುಂಬ ನೋಡುವಂತಹ ಆ ಅಮೃತಘಳಿಗೆಯಿಂದಾಗಿ ಅದುವರೆಗೂ ಗಾಳಿ ಬೆಳಕಿಲ್ಲದ ಆ ಏಕಾಂತದ ನೀರಸ ನೀರವಕ್ಕೆ ಹೊಂದಿಕೊಳ್ಳಲಾಗದೆ ತೊಳಲಾಡುತ್ತಿದ್ದ ನನಗೆ ಹಠಾತ್ತನೆ ನನ್ನ ಅಸ್ತಿತ್ವವೇ ಹೊಸ ಅರ್ಥಪಡೆದುಕೊಂಡಂತಾಗಿ ಹೊರ ಜಗತ್ತಿನ ಉತ್ಸಾಹ-ಸಂಭ್ರಮಗಳು ನುಗ್ಗಿಬಂದಂತೆ ಏನೋ ಸುಖ, ಉಲ್ಲಾಸ… ನಾನು ಇದಿರಿಗಿರುವಾಗ ಅಪ್ಪ ಅಮ್ಮನ ಜೊತೆ ಮಾತನಾಡುತ್ತಿದ್ದುದೇ ಅಪರೂಪವಾಗಿದ್ದರಿಂದ ಅವೊತ್ತು ರಾತ್ರಿ ಮನೆಯಲ್ಲಿ ಅವರಿವರ ಪಿಸುಮಾತು ಕೇಳಿಸಿಕೊಂಡಷ್ಟರಿಂದಲೇ ಅವನ ಹೆಸರು ಗಂಗಾಧರಯ್ಯ, ಅವನದು ಒಳ್ಳೆಯ ಮನೆತನ ಎಂದಷ್ಟು ಬಿಟ್ಟರೆ ಹೆಚ್ಚೇನೂ ತಿಳಿಯಲಿಲ್ಲ. ಬಹುಶಃ ಅವನ ಜೊತೆ ಅಪ್ಪನದೇನೋ ಲೇವಾದೇವಿಯಿರಬೇಕು, ಆಗಾಗ ಬರುತ್ತಿದ್ದುದರಿಂದ ನನ್ನಲ್ಲಿ ಇಂಗಲಾರದ ಯಾವುದೋ ಆಸೆ. ಮತ್ತೊಂದು ದಿನವೂ ಅಮ್ಮ ಇಲ್ಲದ ಸಮಯದಲ್ಲಿ ಅವನು ಬಂದಾಗ ನಾನು ಅದಾವ ಧೈರ್ಯದಿಂದಲೋ ಹರಿವಾಣದಲ್ಲಿ ಕಾಫಿ ಬಟ್ಟಲಿಟ್ಟುಕೊಂಡು ಹಜಾರಕ್ಕೆ ಹೊರಟ ಮಂಗಳಮ್ಮನನ್ನು ತಡೆದು ನಾನೇ ತಗೊಂಡು ಹೋಗ್ತೇನೆ, ಕೊಡು ಎಂದವಳೇ ಅವಳ ಕೈಯಿಂದ ಆ ಹರಿವಾಣವನ್ನು ಹೆಚ್ಚುಕಡಿಮೆ ಕಿತ್ತುಕೊಂಡೇ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತ ನಡೆದುಕೊಂಡು ಹೋಗಿ ಹಜಾರದಲ್ಲಿ ಹಾಸಿದ್ದ ಚಾಪೆಯ ಮೇಲೆ ಅಪ್ಪನ ಎದುರಲ್ಲೇ ಕುಳಿತಿದ್ದ ಅವನ ಮುಂದೆ ತುಸು ಬಾಗಿ ಒಮ್ಮೆ ಕೂಡ ಕಣ್ಣೆತ್ತದೆ, ಆದರೂ ಅವನು ನನ್ನನ್ನು ನೋಡುತ್ತಿದ್ದಾನೆಂಬ ಅರಿವಿನಿಂದ ಪುಳಕಗೊಳ್ಳುತ್ತ ನಿಂತದ್ದುಂಟು. ಅವನು ಹರಿವಾಣದಿಂದ ಕಾಫಿ ಬಟ್ಟಲನ್ನು ತೆಗೆದುಕೊಳ್ಳುತ್ತಿರುವಂತೆಯೇ ಅಪ್ಪ ಯಾಕೋ ಏನೋ ಬೀದಿಯತ್ತ ತಿರುಗಿದಾಗ ನನಗೇ ಅರಿವಿಲ್ಲದಂತೆ ಒಂದು ಬಗೆಯ ದಿಟ್ಟತನದಿಂದಲೇ ಅವನನ್ನು ಕಣ್ಣಿಟ್ಟು ನೋಡಿಬಿಟ್ಟೆ. ಒಂದೇ ಕ್ಷಣ-ನಾನು ಹಿಂದೆಯೂ ಕಂಡರಿಯದ ನಿರ್ಮಲ ಪ್ರೀತಿಯೇ ಒಂದು ಚಿಲುಮೆಯಂತೆ ಅವನ ಕಣ್ಣುಗಳಲ್ಲಿ ಚಿಮ್ಮುತ್ತಿದೆಯೆನ್ನಿಸಿ ಕೆನ್ನೆಗೆ ಕೆಂಪು ಮೂಡಿ ಮೈಯೆಲ್ಲ ಸುಖದ ಅಮಲಿನಿಂದ ಕಾವೇರಿದಂತಾಗಿ ಹರಿವಾಣವನ್ನು ಎತ್ತಿಕೊಂಡು ಹಿಂದಿರುಗಿದವಳನ್ನು ಮತ್ತೆ ಆ ಬಂಗಲೆಯ ಕತ್ತಲೆ ಕಬಳಿಸಿಬಿಟ್ಟಿತು. +ಆಮೇಲೆ ಅವನು ಬಂದಾಗಲೆಲ್ಲ ಅವನ ಪ್ರೀತಿಯುಕ್ಕಿಸುವ ನೋಟವನ್ನು ಸ್ವಾಗತಿಸುವುದಕ್ಕಾಗಿ ನನ್ನ ಸಂವೇದನೆ ಹುರಿಗೊಳ್ಳುತ್ತಿತ್ತು. ಒಂದು ಬಾರಿ ಕಾಫಿ ಬಟ್ಟಲನ್ನು ಕೈಗೆತ್ತಿಕೊಳ್ಳುತ್ತಿರುವಾಗ ಅವನ ಬೆರಳು ನನ್ನ ಕೈಸೋಕಿದ್ದೇ ಸುಖದ ಅಲೆಗಳು ಅಪ್ಪಳಿಸಿದಂತಾಗಿ ಮೈಯೆಲ್ಲ ಜುಂ ಅಂದದ್ದು ನಿಜ. ದಿನಗಳೆದಂತೆ ನನ್ನ ರಹಸ್ಯವನ್ನು ಕಟ್ಟೆಚ್ಚರದಿಂದ ಕಾಪಾಡಿಕೊಳ್ಳತೊಡಗಿದವಳಿಗೆ ರಾತ್ರಿ ಪಕ್ಕದಲ್ಲೇ ಅಮ್ಮ ಮಲಗಿರುವಾಗ ಕೂಡ ನಿದ್ದೆ ಬರದೆ ಹಾಸಿಗೆಯೇ ಮುಳ್ಳಾಗಿ ಚಡಪಡಿಸುತ್ತಿದ್ದುದುಂಟು. ಬಹುಶಃ ಅಂಥ ಒಂದು ರಾತ್ರಿಯಲ್ಲೇ ಅಮ್ಮ ನನ್ನ ಹೊರಳಾಟವನ್ನು ಗಮನಿಸಿ ಹದಿನೆಂಟು ವರ್ಷವಾಯಿತಲ್ಲಾ, ಇನ್ನು ಮದುವೆ ಮಾಡಬೇಕು ಎಂದು ಯೋಚಿಸಿರಲಿಕ್ಕೇ ಸಾಕು. ಮರುದಿನವೇ ಅಪ್ಪ ಬೆಂಗಳೂರಿಂದ ಬಂದಿದ್ದ ಒಬ್ಬ ಫೋಟೋಗ್ರಾಫರನನ್ನು ಹಿಡಿದು ತೆಗೆಸಿದ್ದು ಇದೇ ಫೋಟೋ. +ಗಂಗಾಧರಯ್ಯನಿಗೆ ಅದಾವ ಮುನ್ಸೂಚನೆ ಸಿಕ್ಕಿತೋ, ಅದೊಂದು ದಿನ ಅವನು ಬಂದಾಗ ಅಪ್ಪ ಅಮ್ಮ ಇಬ್ಬರೂ ಮನೆಯಲ್ಲಿರಲಿಲ್ಲ. ಹಜಾರದೊಳಕ್ಕೆ ಅಡಿ ಇಟ್ಟವನ ಕಣ್ಣು ವಿಚಿತ್ರ ಧಾವಂತದಿಂದ ಹೆಚ್ಚೂಕಡಿಮೆ ತೆರೆದೇ ಇದ್ದ ಬಾಗಿಲಲ್ಲೇ ನಿರುಕಿಸುತ್ತಿತ್ತು. ನಾನಂತೂ ಎಷ್ಟೋ ವರ್ಷಗಳಿಂದ ಆ ಒಂದು ಮುಹೂರ್ತಕ್ಕಾಗಿ ಕಾದಿದ್ದವಳಂತೆ ಆ ಬಾಗಿಲನ್ನು ತುಂಬಿ ನಿಂತಾಗ ನನ್ನ ಮುಖ ಎಂದಿನಂತೆ ಲಜ್ಜೆಯಿಂದ ಕೆಂಪಾಗದೆ ಒಂದು ಬಗೆಯ ಆತಂಕವನ್ನೂ ತಲ್ಲಣವನ್ನೂ ತುಳುಕಿಸಿದ್ದಿರಬೇಕು. +-ಸಧ್ಯದಲ್ಲೇ ನಂಗೆ ಮದುವೆ. ಅಮ್ಮ ಗಂಡು ನೋಡಿದ್ದಾರೆ. ಎಂದುಬಿಟ್ಟ ನನ್ನ ಮುಖದಲ್ಲಿ ನಿರಾಶೆಯ ಛಾಯೆಯೊಂದು ಮೂಡಿ ಮುಳುಗಿತ್ತು. +-ಗೊತ್ತಾಯಿತು. ಇನ್ನು ನಾನೂ ಇಲ್ಲಿರೋಲ್ಲ. ಬೆಂಗಳೂರು ಮಂಡಿಪೇಟೆಯಲ್ಲಿ ಕೆಲಸ ಸಿಕ್ಕಿದೆ. ನಾಳಿದ್ದೇ ಹೊರಟಿದ್ದೇನೆ. +-ಅಯ್ಯೋ, ನಿಮ್ಮನ್ನು ನೋಡದೆ ಹ್ಯಾಗಿರಲಿ ? ಎನ್ನುತ್ತ ಗಳಗಳನೆ ಅತ್ತುಬಿಟ್ಟವಳು ಆ ನಿಂತ ನಿಲುವಿನಲ್ಲೇ ಅದಾವ ಆವೇಶದಿಂದಲೋ ಅವನನ್ನು ಅಪ್ಪಿಕೊಂಡುಬಿಟ್ಟೆ. ಅದೇ ಸಮಯ ತೆರೆದ ಬಾಗಿನಿನ ಹಿಂದೆ ಯಾರೋ ಒಂದು ಕ್ಷಣ ಸುಳಿದು ಮಾಯವಾದಂತಾಯಿತು. +-ಅಳಬೇಡ. ನಾನು ತಾನೆ ನಿನ್ನನ್ನು ಹೇಗೆ ಮರೆಯಲಿ ? ಮರೆಯುವುದಿಲ್ಲ ಎಂದವನು ನಮ್ಮಮ್ಮ ಕೂಡ ಎಂದೂ ತಡವಿರದ ರೀತಿಯಲ್ಲಿ ಪ್ರೀತಿಯಿಂದ ನನ್ನ ಬೆನ್ನು ಸವರುತ್ತಿರುವಾಗ ಅವನ ಕಣ್ಣೂ ತುಂಬಿಬಂದಿರಬೇಕು. +ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಕರ್ಕಶ ದನಿಯಿಂದ ಬೆಚ್ಚಿಬಿದ್ದದ್ದೇ ನಾವಿಬ್ಬರೂ ದೂರ ಸರಿದೆವು. ನಾನಿನ್ನೂ ಮೌನವಾಗಿ ಅಳುತ್ತಿರುವಾಗಲೇ ಸದ್ದಿಲ್ಲದೆ ಅಲ್ಲಿಗೆ ಬಂದುಬಿಟ್ಟ ಮಂಗಳಮ್ಮ, ನಿಮ್ಮಪ್ಪನಿಗೆ ಗೊತ್ತಾದರೆ ಏನು ಗತಿ ? ಏನಿದು, ಈ ಮನೆಹಾಳನ ಜೊತೆ ನಿನ್ನ ಸರಸ ? ಎಂದು ಗದರಿಸಿಕೊಂಡಳು. ಬೇಡ ಬೇಡ, ಅಮ್ಮನಿಗೆ ಹೇಳಬೇಡ, ನನ್ನಾಣೆ ಎಂದು ಅಂಗಲಾಚಿದೆ. ಆ ಕ್ಷಣ ಅಮ್ಮ ದಂಡಿಸುತ್ತಾಳೆ ಎನ್ನುವುದಕ್ಕಿಂತ ಇನ್ನು ಮುಂದೆ ನನ್ನನ್ನು ಹೊರಗೇ ಬಿಡುವುದಿಲ್ಲ ಎಂಬ ಭಯವೇ ನನ್ನನ್ನು ಕಾಡಿರಬೇಕು. +ಅವನು ಬಂದಾಗಲೆಲ್ಲ ನೀನ್ಯಾಕೆ ಈ ಬಾಗಿಲ ಹಿಂದೆ ನೀತಿರತಾ ಇದ್ದೆ ಅಂತ ನಂಗೀಗ ಗೊತ್ತಾಯಿತು. ಬಿಡು ಎಂದು ಆಕೆ ತಟ್ಟನೆ ಅಂದಾಗ ಅವಳ ತುಟಿಗಳ ಮೇಲೆ ಒಂದು ಬಗೆಯ ಕ್ರೂರ ವ್ಯಂಗ್ಯ ತಾಂಡವವಾಡುತ್ತಿತ್ತು. ಅಷ್ಟು ಹೊತ್ತಿಗೆ ಅವನು ಹೊರಟೋಗಿದ್ದ. ಮಂಗಳಮ್ಮ ಸುಮ್ಮನೆ ಬಿಟ್ಟಾಳೆಯೇ ? ಅಲ್ಲಿ ನಿಮ್ಮಮ್ಮ ಗಂಗವಾರದ ಜೋಡೀದಾರರ ಮಗನನ್ನು ನಿಂಗೆ ತಂದುಕೊಳ್ಳಬೇಕಂತ ಪರದಾಡ್ತಾ ಇದ್ದಾರೆ. ನೀನಿಲ್ಲಿ ಈ ದರವೇಸಿ ಜೊತೆ ಚಕ್ಕಂದ ಆಡ್ತಿದೀಯಾ ? ಗೌರವಸ್ತರ ಮನೆ ಹುಡುಗಿ, ನಾಚಿಕೆ ಆಗೋಲ್ವಾ ನಿಂಗೆ ಎಂದು ಎಡೆಬಿಡದೆ ತರಾಟೆಗೆ ತೆಗೆದುಕೊಂಡಳು. ಅವಳನ್ನು ಕಾಡಿ ಬೇಡಿ ಕಾಲಿಗೆ ಬಿದ್ದು ಹೇಗಾದರೂ ಒಲಿಸಿಕೊಳ್ಳಬೇಕೆಂದು ಕೊನೆಯ ಉಪಾಯವೆಂಬಂತೆ ಅಮ್ಮನ ಸಂದೂಕವನ್ನು ತೆರೆದು ಕೈಗೆ ಸಿಕ್ಕಿದ ಚಿನ್ನದ ಬಳೆಯೊಂದನ್ನು ಕೊಟ್ಟಮೇಲೆಯೇ ಅವಳು ಸುಮ್ಮನಾದದ್ದು. ಎಷ್ಟೆಂದರೂ ಅವಳು ಕನಸಿನಲ್ಲೂ ಕಂಡಿರದ ಚಿನ್ನದ ಬಳೆಯಲ್ಲವೆ ? ಅದನ್ನು ತಿರುಗಿಸಿ ತಿರುಗಿಸಿ ನೋಡುತ್ತ, ನೀನು ಏನೇ ಹೇಳು, ಗಂಗವಾರದ ಆ ಜೋಡೀದಾರರ ಮಗನಿಗಿಂತ ಇವನೇ ಎಷ್ಟೋ ಚೆನ್ನಾಗಿದ್ದಾನೆ ಎಂದು ನನ್ನ ತಲೆ ಸವರಿ ತಾರೀಫು ಮಾಡಿದಳು. +ಮರುವರ್ಷವೇ ನಾನು ಕೈಹಿಡಿದದ್ದು ಅಮ್ಮ ನೋಡಿಟ್ಟ, ನೀನೀಗಲೂ ನೋಡುತ್ತಿರುವ ಅದೇ ಗಂಗವಾರದವನನ್ನೇ. ಅಪ್ಪನಿಗೆ ವಯಸ್ಸಾಗುತ್ತಿದ್ದುದರಿಂದ, ನನ್ನ ತಮ್ಮನಿನ್ನೂ ಚಿಕ್ಕವನಾಗಿದ್ದುದರಿಂದ ಗಂಗವಾರದ ವಿಶ್ವೇಶ್ವರಯ್ಯ ಮನೆ ಅಳಿಯನಾಗಿ ಭೂಮಿಲಾಣಿ ನೋಡಿಕೊಳ್ಳುವುದಕ್ಕೆ ಒಂದು ದಿಕ್ಕಾದನೆಂದು ಅಮ್ಮ ಬೀಗಿದಳು. ಐದು ದಿನ ಅದ್ದೂರಿಮದುವೆಯಾಯಿತಂತೆ. ದೇವನಹಳ್ಳಿಯಿಂದ ಎರಡು ಬಿಳಿಯ ಕುದುರೆಗಳ ಸಾರೋಟು ತರಿಸಿದ್ದರಂತೆ. ಮದರಾಸು ಕಡೆಯ ವಾಲಗದವರು ಬಂದಿದ್ದರಂತೆ. ಸ್ವತಃ ಮದುಮಾಳಾಗಿಯೂ ನನಗೆ ಅದರ ಪರಿವೆಯಿರಲಿಲ್ಲ ನೋಡು. ಕೂತಲ್ಲಿ ನಿಂತಲ್ಲಿ, ನನ್ನ ಮನಸ್ಸನ್ನು ತುಂಬುತ್ತಿದ್ದವನು ಗಂಗಾಧರಯ್ಯನೇ. ಸದಾ ಮಂಕು ಕವಿದಂತೆ ಚಡಪಡಿಸುತ್ತಿದ್ದ ನನ್ನನ್ನು ಮೊದಮೊದಲು ನನ್ನ ಗಂಡ ಸಮಾಧಾನಪಡಿಸಿ ನನ್ನ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದ್ದುಂಟು. ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಟ್ಟ. ಅವನಿಗೂ ನನ್ನನ್ನು ಕಂಡರೆ ಪ್ರೀತಿಯೇ. ಮದುವೆಯಾದ ಹೊಸದರಲ್ಲಿ ನೀನು ಸಿಕ್ಕಿದ್ದು ನನ್ನ ಅದೃಷ್ಟ ಎಂದೂ ಒಮ್ಮೆ ಹೇಳಿದ್ದ. ಜೊತೆಗೆ ಅಪ್ಪನ ಅಪಾರ ಆಸ್ತಿಗೆ ತಾನೇ ಒಡೆಯನಾದೆನೆಂಬ ಇನ್ನಿಲ್ಲದ ಸಂತೋಷ. ದಿನಗಳೇನೋ ಒಂದರ ನಂತರ ಒಂದರಂತೆ ಸಾಗುತ್ತಿದ್ದವು. ಆದರೆ ನನ್ನ ಬದುಕು ಮಾತ್ರ ವಾರ ತಿಂಗಳು ವರ್ಷಗಳೆಲ್ಲ ಒಟ್ಟುಗೂಡಿ ಬಹುದೀರ್ಘವಾದ ಒಂದೇ ಒಂದು ದಿನವಾಗಿಬಿಟ್ಟಂತೆ ಬಣಬಣವೆನ್ನುತ್ತಿತ್ತು. ಈ ಮಧ್ಯೆ ಮದುವೆಯಾಗಿ ಎರಡು ವರ್ಷವಾದರೂ ಮಗಳು ಬಸಿರಾಗಲಿಲ್ಲವೆಂದು ಪೇಚಾಡತೊಡಗಿದ ಅಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಉಪವಾಸ ವ್ರತ ಆರಂಭಿಸಿದಳು. ಕಾಲ ಇದ್ದ ಹಾಗೇ ಇರುವುದಿಲ್ಲ ಅಲ್ಲವೇ ವೈದೇಹಿ ? ನಾವು ಹೆಂಗಸರು ಏನೇ ಆಗಲಿ ಒಳ್ಳೆಯ ಕನಸು ಕಾಣುವುದನ್ನು ಮಾತ್ರ ಬಿಡುವುದಿಲ್ಲ ನೋಡು. ಆಮೇಲೊಂದು ದಿನ ಗಂಗಾಧರಯ್ಯ ಊರಿಗೆ ಬಂದಿದ್ದಾನೆಂದು ತಿಳಿದದ್ದೇ ನನ್ನ ಒಳ ನೋವೆಲ್ಲ ಮಂಜಿನಂತೆ ಕರಗಿಹೋಗಿ ಮೈಯಲ್ಲಿ ಹೊಸ ಲವಲವಿಕೆ ಮೂಡಿದಂತಾದಾಗ ನನ್ನ ಗಂಡ ಕೂಡ, ನಿನ್ಗೆ ನಿಜವಾಗಿಯೂ ಇಷ್ಟು ದೊಡ್ಡ ಕಣ್ಣಿತ್ತೇನೇ ಎಂದು ಅಚ್ಚರಿಯಿಂದ ಹುಬ್ಬೇರಿಸಿದ್ದು ನಿಜ. ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿರುವಾಗ ಒಂದು ಬೆಳಿಗ್ಗೆ ದೂರದಲ್ಲಿ ನಡೆದುಹೋಗುತ್ತಿದ್ದ ಅವನು ತುಸು ಸೊರಗಿದಂತೆ ಕಾಣಿಸಿತು. ಕಡೆಗೆ ಊರಿಗೆ ಬಂದವನು ಮನೆಗೂ ಬಂದು ಕದ ತಟ್ಟಿದ. ಗಂಡ ಬಾಗಿಲು ತೆರೆಯಲು ಹೊರಟಾಗ ಆಗಷ್ಟೇ ಎರೆದುಕೊಂಡಿದ್ದ ನಾನು ಒಳ ಅಂಗಳದಲ್ಲಿ ತಲೆ ಒರೆಸಿಕೊಳ್ಳುತ್ತಿದ್ದೆ. ಬೆಂಗಳೂರಿನ ಹವ ಒಗ್ಗಲಿಲ್ಲವೋ ಅಥವಾ ಅಲ್ಲಿ ಕೆಲಸ ಕಳೆದುಕೊಂಡನೋ ಅಂತೂ ಮತ್ತೆ ಊರಿಗೆ ಮರಳಿದ್ದ ಅವನು ಏನಾದರೂ ಕೆಲಸ ಸಿಕ್ಕಿತೆಂದೋ ಏನೋ ನನ್ನ ಗಂಡನೊಡನೆ ವಿಚಾರಿಸುತ್ತಿದ್ದಿರಬೇಕು. ಮದುವೆಯಾಗಿರುವ ನಾನೀಗ ಅಪರಿಚಿತರ ಮುಂದೆ ಸುಳಿದಾಡಿದರೆ ತಪ್ಪೇನಿರಲಿಲ್ಲವಲ್ಲ. ಅವನಿಗೆ ಕೊಡಲೆಂದು ಕಾಫಿ ಬಟ್ಟಲನ್ನು ತೆಗೆದುಕೊಂಡು ಹೋದವಳು ಯಾವ ಮುಜುಗುರವೂ ಇಲ್ಲದೆ ಇವನಿನ್ನೂ ನನ್ನನ್ನು ಪ್ರೀತಿಸುತ್ತಿರಬಹುದೆ ಎಂಬ ನಿರೀಕ್ಷೆಯಿಂದ ಅವನ ಮುಖವನ್ನೇ ದಿಟ್ಟಿಸಿ ನೋಡಿದೆ. ಒಂದು ಗಳಿಗೆ ನನ್ನನ್ನು ನೋಡಿ, ಬಹುಶಃ ನನ್ನ ದೃಷ್ಟಿಯನ್ನು ಎದುರಿಸಲಾಗದೆ ತನ್ನ ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡ. ಇದ್ದಕ್ಕಿದ್ದಂತೆ ನನ್ನ ಕಣ್ಣೂ ತುಂಬಿಬಂದತಾಗಿ ಅಲ್ಲಿ ನಿಲ್ಲಲಾಗದೆ ಒಳಗೆ ಹೋಗಿಬಿಟ್ಟೆ. ಅವತ್ತು ನಾನು ಅನುಭವಿಸಿದ ಯಾತನೆಯನ್ನು ನಿನಗೆ ಹೇಗೆ ತಾನೇ ಬಣ್ಣಿಸಲಿ, ವೈದೇಹಿ. ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆ, ಯಾರದೋ ಭೀತಿಯಿಂದ ಮೈಯೆಲ್ಲ ಉಕ್ಕುವ ಬೆವರು, ಪ್ರಾಣಕ್ಕೆ ಸಮಾನವಾದದ್ದೇನೋ ಕಳೆದುಹೋದಂತೆ ಹತಾಶೆ, ಬೆಳಕಿನಲ್ಲೂ ಏನೂ ಕಾಣಿಸದಂತೆ ಮಂಜು ಮಂಜು…. ಎಷ್ಟು ಹೊರಳಾಡಿದರೂ ನಿದ್ದೆ ಬರದ ಹಲವು ರಾತ್ರಿಗಳ ನಂತರ ಒಂದು ಮುಂಜಾವಿನ ಮಂಪರಿನಲ್ಲಿ ಎಂಥಾ ಕನಸು ಬಿತ್ತು ಗೊತ್ತಾ ? ಸುಂದರ ಉದ್ಯಾನವನವೊಂದರಲ್ಲಿ ನಾನೂ ಅವನೂ ಕೈಕೈಹಿಡಿದುಕೊಂಡು ನಿಂತಿದ್ದೆವು. ನಮ್ಮ ಸುತ್ತ ಹೆಸರು ಗೊತ್ತಿಲ್ಲದ ಬಣ್ಣಬಣ್ಣದ ಹೂವುಗಳು ಅರಳಿರುವ ಗಿಡಗಳು. ಮೇಲೆ ರಾತ್ರಿಯಾಗಿದ್ದೂ ಮನಸ್ಸಿಗೆ ಹಾಯೆನಿಸುವಂತೆ ಬಿಳಿಮೋಡಗಳನ್ನು ತೇಲಿಬಿಟ್ಟಿರುವ ತಿಳಿನೀಲಿಯ ಆಕಾಶ, ಅಂಥ ಆಕಾಶವನ್ನು ನಾನೆಂದೂ ನೋಡಿರಲಿಲ್ಲ ಬಿಡು. ಮೆಲ್ಲಗೆ ಮೈಗೆ ಕಚಗುಳಿಯಿಡುವಂತೆ ಬೀಸಿಬಂದ ಗಾಳಿ ನಮ್ಮಿಬ್ಬರ ತಲೆಯನ್ನೂ ನೇವರಿಸಿತು. ಅದಾಗ ಧಗ್ಗನೆ ಬೆಳಕು ಹೊತ್ತಿಕಂಡಂತೆ ಬಂದು ಅದ್ಭುತ ಅರಮನೆ ಪ್ರತ್ಯಕ್ಷವಾಗಿದ್ದೇ ನಮ್ಮನ್ನು ತನ್ನ ಶಯ್ಯಾಗೃಹಕ್ಕೆ ಬರಮಾಡಿಕೊಂಡಿತು. ಅಲ್ಲಿನ ಮಂಚದ ಮೇಲೆ ಮಲಗಿ ತಲೆಯೆತ್ತಿದರೆ ಛಾವಣಿಯೊಳಗೇ ಇಳಿದುಬಿಟ್ಟಿರುವ ಹುಣ್ಣಿಮೆ ಚಂದಿರ. ಅವನು ನನ್ನನ್ನು ಆಲಂಗಿಸಿಕೊಂಡದ್ದೇ ಇಡೀ ಶಯ್ಯಾಗೃಹವನ್ನು ಸುಗಂಧರಾಜದಂಥ ಹೂವಿನ ಪರಿಮಳ ಮುತ್ತಿಕೊಂಡುಬಿಟ್ಟಿತು ನೋಡು. ಆಶ್ಚರ್ಯ, ಬೆಳಿಗ್ಗೆ ಎಚ್ಚರವಾದಮೇಲೂ ನನ್ನ ಕೋಣೆಯ ತುಂಬದೇ ಪರಿಮಳ; ನನ್ನ ಮೈಯೆಲ್ಲ ಅದೇ ಪರಿಮಳ. ಅಸ್ತಮಾದಿಂದ ಹಾಸಿಗೆ ಹಿಡಿದುಬಿಟ್ಟಿದ್ದ ಅಪ್ಪ ಇದೇನು ವಾಸನೆಯೇ, ಯಾವ ಹೂವು ತಂದಿದೀರೇ ಮನೆಗೆ, ಎಂದು ಕೂಗಿಕೊಳ್ಳುವ ಹೊತ್ತಿಗೆ ಇಡೀ ಮನೆಯ ಮೂಲೆಮೂಲೆಗಳಿಂದ ಅದೇ ಪರಿಮಳ ಈಗ ಮೃದುವಾಗಿ ಈಗ ನವಿರಾಗಿ, ಈಗ ಕಟುವಾಗಿ ಬೇಸಿಗೆಯ ಸೆಕೆಯಲ್ಲಿ ತಣ್ಣಗೆ ಮೈಸೋಕುವ ಗಾಳಿಯಂತೆ ಹಿತವಾಗಿ ಕ್ರಮೇಣ ಎಷ್ಟು ಸರ್ವವ್ಯಾಪಿಯಾಗತೊಡಗಿತೆಂದರೆ ಅಂಗಳದಲ್ಲಿ ಅರಳಿದ ಜಾಜಿ ಮಲ್ಲಿಗೆ ಕನಕಾಂಬರ ಕರ್ಣಕುಂಡಲ ಹೂಗಳು ಕೂಡ ತಮ್ಮ ಅಸಲಿ ವಾಸನೆಯನ್ನು ಮರೆತುಬಿಟ್ಟಿದ್ದವು. ಆ ಪರಿಮಳದ ಮೂಲವನ್ನು ಹುಡುಕುತ್ತ ಮನೆಯೆಲ್ಲ ಜಾಲಾಡಿದ ಮಂಗಳಮ್ಮ ಅನುಮಾನದಿಂದ ಹೌದು, ಇಲ್ಲೇ ಏನೋ ಪನ್ನೀರು ಚೆಲ್ಲಿದ ಹಾಗಿದೆ ಎನ್ನುತ್ತ ನನ್ನ ಕೋಣೆಗೆ ಬಂದವಳೇ ಪದೇ ಪದೇ ತನ್ನ ಮೂಗನ್ನು ಅರಳಿಸುತ್ತ ಮೂಲೆಮೊಡಕುಗಳನ್ನು ತಡಕಾಡಿ ಕಡೆಗೆ ನನ್ನ ಬಳಿ ಸುಳಿದದ್ದೇ, ಇದೇನು ಮಹರಾಯಿತಿ, ಹೀಗೆ ಸುಗಂಧ ಹಂಚತಾಯಿದ್ದಿ, ಯಾವ ಹೂವಮ್ಮಾ ಇದು ಇಷ್ಟು ವಾಸನೆ ಹೊಡೆಯೋದು ಎಂದು ನನ್ನ ಗಲ್ಲ ಸವರಿದಳು. ಅವತ್ತು ಮಧಾಹ್ನ ನನ್ನ ಗಂಡ ಊಟವಾದ ಮೇಲೆ ತುಸು ನಿದ್ದೆ ಮಾಡಿ ಎದ್ದು ಭತ್ತದ ಕಣಕ್ಕೆ ಹೋಗಿ ಬಂದವನು ತನ್ನ ಮೈಯಾಲ್ಲೂ ಯಾಕೆ ಅಂಥದೇ ಸುವಾಸನೆ ಎಂದು ಆಶ್ಚರ್ಯಪಟ್ಟ. ಆಮೇಲೆ ಒಂಭತ್ತು ತಿಂಗಳು ಇಪ್ಪತ್ತೊಂದು ದಿನ ಆ ಪರಿಮಳ ನಮ್ಮಲ್ಲಿ ಯಾರನ್ನೂ ಬಿಡಲಿಲ್ಲ ನೋಡು. ಏನನ್ನುತ್ತೀ ಅದಕ್ಕೆ ? ನಾನಂತೂ ಅದನ್ನು ಅವನ ಪ್ರೀತಿಯೆಂದೇ ಬಗೆದು ಸಂಭ್ರಮಪಟ್ಟೆ. ಇಬ್ಬರು ಮಾತ್ರ ಅರಿಯಬಲ್ಲ ಆ ಪ್ರೀತಿ ನೆಲದ ಈ ನೀರಸ ಬದುಕನ್ನು ಬಿಟ್ಟು ಕನಸಿನ ಕಾಮನಬಿಲ್ಲನ್ನೇರಿ ದಿವ್ಯಾನುಭವಕ್ಕೆ ದಾರಿ ಮಾಡಿತು. ಹಿಂದೆಂದೂ ನನ್ನ ಮುಖ ಅಷ್ಟು ಸುಂದರವಾಗಿರಲಿಲ್ಲವಂತೆ; ನಾನು ನಡೆದರೆ ಸುತ್ತ ಬೆಳಕು ಚಿಮ್ಮುತ್ತಿತ್ತಂತೆ; ಮೊದಲೇ ವಿಶಾಲವಾಗಿದ್ದ ನನ್ನ ಕಣ್ಣುಗಳು ಮತ್ತಷ್ಟು ವಿಶಾಲವಾಗಿ ನೆಮ್ಮದಿಯನ್ನು ತುಳುಕಿಸುತ್ತಿದ್ದುವಂತೆ. ನನ್ನನ್ನು ನೋಡಿದವರು ಹಾಗೆನ್ನುತ್ತಿದ್ದರೆನ್ನು. ನಾನು ಮಾತ್ರ ಮೊದಲಿನಂತೆ ಖಿನ್ನಳಾಗಿರುವುದನ್ನು ಬಿಟ್ಟೆ. ಹಗಲೆಲ್ಲ ತುಂಬು ಲವಲವಿಕೆಯಿಂದ ಮನೆಗೆಲಸದಲ್ಲಿ ಭಾಗಿಯಾಗುತ್ತಿದ್ದವಳು ರಾತ್ರಿಯ ಹೊತ್ತು ಅವನು ಕರುಣಿಸಿದ ಅನುರಾಗವನ್ನು ಸವಿಯುತ್ತ ನನ್ನದೇ ಸ್ವಪ್ನನೌಕೆಯಲ್ಲಿ ತೇಲಾಡುತ್ತಿದ್ದೆ. +ಕಡೆಗೂ ಅದೊಂದು ದಿನ ನಡುರಾತ್ರಿ ನಾವಿಬ್ಬರೂ ವೇಣುಗೋಪಾಲಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿದ್ದೆವು. ಅಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದಷ್ಟು ಕತ್ತಲಿದ್ದರೂ ನಮ್ಮಿಂದ ಹೊಮ್ಮುತ್ತಿದ್ದ ಪರಿಮಳವೇ ಒಂದು ಬಗೆಯ ದೀಪದಂತೆ ದಾರಿ ತೋರಿಸುತ್ತಿತ್ತು. ನನ್ನನ್ನು ಇಡಿಯಾಗಿ ಎತ್ತಿಕೊಂಡು ದೇವರ ಮುಂದಿನ ಜಗಲಿಯ ಮೇಲೆ ಮೆಲ್ಲಗೆ ಮಲಗಿಸಿದ ಅವನು ನನ್ನ ಕೆನ್ನೆ ಚಿವುಟಿದ, ಮೂಗನ್ನು ಹಿಡಿದೆಳೆದ, ತುಟಿಗಳನ್ನು ಚುಂಬಿಸಿದ, ಮಗುವಿನ ಕೈ ಬಿಚ್ಚುವಂತೆ ನನ್ನ ರವಿಕೆಯ ಗುಂಡಿಗಳನ್ನು ಬಿಚ್ಚಿದ. ಇಬ್ಬರಿಗೂ ಮಾತು ಬೇಕಿರಲಿಲ್ಲ. ನನ್ನ ಮೇಲೆ ಮಲಗಿ ಮುಡಿಬಿಚ್ಚಿ ಹರಡಿಕೊಂಡಿದ್ದ ನನ್ನ ಕೂದಲನ್ನು ಆಘ್ರಾಣಿಸುತ್ತ ಪರಿಮಳ ಸೂಸುವಂತೆ ಉಸಿರಾಡುತ್ತ ಅವನು ಆಲಂಗಿಸಿಕೊಂಡ ಆ ಕೆಲವು ಕ್ಷಣ ಕಳೆದದ್ದೇ ಅತೀವ ಸುಖದಿಂದ ಯಾವ ಎಗ್ಗೂ ಇಲ್ಲದೆ ಎಷ್ಟು ಜೋರಾಗಿ ನರಳಿಬಿಟ್ಟೆನೆಂದರೆ ತಕ್ಷಣ ಕಣ್ಣು ತೆರೆದಾಗ ಪಕ್ಕದಲ್ಲಿ ಮಲಗಿದ್ದ ಗಂಡನಿಗೆ ಎಚ್ಚರಾಗಿ ಅವನು ಏನಾಯಿತು ಎಂದು ಗಾಬರಿಯಿಂದ ಕೇಳಿದ. ಸುಮ್ಮನೆ ಮುಗುಳುನಕ್ಕೆ. ಏನು, ಆರಾಮವಾಗಿದ್ದೀ ತಾನೆ ಎಂದದ್ದಕ್ಕೂ ಹೂಂ ಎಂದೆ. ನನ್ನ ಮನಸ್ಸು ತುಂಬಾ ಸಂತೋಷವಾಗಿ ಎಂದದ್ದು ಅವನಿಗೆ ಕೇಳಿಸಿರಲಿಕ್ಕಿಲ್ಲ. +ಆ ನಂತರದ ಹಲವು ತಿಂಗಳುಗಳುದ್ದಕ್ಕೂ ನನ್ನ ಚಡಪಡಿಕೆಯನ್ನೇ ಗಮನಿಸುತ್ತಿದ್ದ ನನ್ನ ಗಂಡನಿಗೆ ಒಳಗೇ ಸಂತೋಷವಾಗಿತ್ತು. ಅಪ್ಪನಿಗೆ ಅಮ್ಮನಿಗೆ ಕೊನೆಗೂ ನಾನು ಬಸಿರಾದೆನೆಂದು ಹಿಗ್ಗೋ ಹಿಗ್ಗು. ಮಂಗಳಮ್ಮ ಬಗೆಬಗೆಯ ತಿಂಡಿತಿನಿಸುಗಳನ್ನು ಮಾಡಿ ಬಡಿಸುತ್ತಿದ್ದಳು. ಕನಸಿನಲ್ಲಿ ಓಡುವವರಂತೆ ಓಡಾಡುತ್ತಿದ್ದ ನಾನು ಅವನಿಗೆ ಈ ಸುದ್ದಿ ಮುಟ್ಟಿಸಬೇಕೆಂದು ತವಕಿಸುತ್ತಿದ್ದೆ. ಆದರೆ ಅವನು ಮತ್ತೆ ಬರಲೇ ಇಲ್ಲ. ಆ ಕಾಲದಲ್ಲೇ ನಾನು ಹಳೆಯ ಬಟ್ಟೆಗಳನ್ನು ಕತ್ತರಿಸಿ ಕೂಡಿಸಿ ಮಾಡಿದ ಹತ್ತಾರು ಗೊಂಬೆಗಳನ್ನು ನೀನೂ ನೋಡಿರಬೇಕು. ನನ್ನ ಮನಸ್ಸಿನಲ್ಲಿ ಮೂಡಿದ್ದ ಅವನದೇ ಚಿತ್ರದ ಪ್ರತಿಬಿಂಬವೇ ಆ ಗೊಂಬೆಗಳಾಗಿದ್ದುವೆಂದು ನಿನಗೆ ಬಿಡಿಸಿ ಹೇಳಬೇಕೇನೇ ಪುಟ್ಟೀ ? ಒಮ್ಮೆ ಕನಸಿನಲ್ಲಿ ಅವನು ಕಂಡಂತಾಗಿ ಎಷ್ಟು ಕೂಗಿಕೊಂಡರೂ ಅವನಿಗದು ಕೇಳಿಸಿದಂತೆ ಕಾಣಲಿಲ್ಲ. ಅವನತ್ತ ಓಡಿಹೋಗಲು ಪ್ರಯತ್ನಿಸಿದರೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನಿಂದಾಗಿ ಓಡಲಾಗದೆ ಕುಸಿದುಬಿದ್ದೆ. ಅಮೇಲೆ ನನ್ನ ಕೋಣೆಯನ್ನು ಬಿಟ್ಟು ಹೊರಗೇ ಸುಳಿಯಲಿಲ್ಲ. ಯಾವಾಗಲೂ ತಲೆಕೆದರಿಕೊಂಡು ಅಸಾಧ್ಯ ನೋವು ತಿನ್ನುತ್ತಿರುವವಳಂತೆ ಕಣ್ಣೀರಗರೆಯುತ್ತ ಮೂಲೆ ಹಿಡಿದಿರುತ್ತಿದ್ದೆ. ಅಪ್ಪ ಆಯುರ್ವೇದ ಪಂಡಿತರನ್ನು ಕರೆಸಿ ತೋರಿಸಿದರು. ಅವರು ಕೊಟ್ಟ ಏನೇನೋ ಚೂರ್ಣ ಕಷಾಯಗಳನ್ನು ಸೇವಿಸಿದ್ದಾಯಿತು. ಅಮ್ಮ ಅನೇಕ ದೇವರುಗಳಿಗೆ ಹರಸಿಕೊಂಡದ್ದಲ್ಲದೆ ಮಂತ್ರವಾದಿಗಳನ್ನು ಕರೆಸಿ ಪೂಜೆಯನ್ನೂ ಮಾಡಿಸಿದಳು. ನಾನು ಮಾತ್ರ ದಿನಗಳೆದಂತೆ ಕೊರಗಿ ಸೊರಗಿ ಕಡ್ಡಿಯಂತಾಗಿದ್ದೆ-ನನ್ನ ತುಂಬಿದ ಹೊಟ್ಟೆಯನ್ನು ಬಿಟ್ಟು. +ಒಂಭತ್ತನೆಯ ತಿಂಗಳು ಹುಚ್ಚು ಹಿಡಿದವಳಂತೆ ನನಗೆ ನಾನೇ ಏನೇನೋ ಮಾತಾಡಿಕೊಳ್ಳುತ್ತ ಮನೆಯೆಲ್ಲ ಸುತ್ತುತ್ತಿದ್ದೆನೆಂದು ಅಮ್ಮ ಹೇಳಿದ್ದುಂಟು. ಒಂದು ಮಧ್ಯಾಹ್ನ ಅವನ ತೀರ ಪರಿಚಿತ ದನಿ ಕೇಳಿದಂತಾಗಿ ಎಂಥದೋ ಉಲಾಸದಲ್ಲಿ ಮೈಮರೆತು ದಡದಡನೆ ನಡೆದುಕೊಂಡು ಹೋಗಿ ಹಜಾರ ಬಾಗಿಲ ಹಿಂದೆ ನಿಂತವಳು ಹಿಂದೆಲ್ಲ ಸುಲಭವಾಗಿ ತೆರೆಯುತ್ತಿದ್ದ ಕದವನ್ನು ಉಸಿರು ಬಿಗಿಹಿಡಿದುಕೊಂಡು ಬಹು ಪ್ರಯಾಸದಿಂದ ತೆರೆಯಲು ಪ್ರಯತ್ನಿಸುತ್ತಿರುವಾಗಲೇ ನನ್ನನ್ನು ನೋಡಿದ ಗಂಡ ಗಡಗಡನೆ ನಡುಗುತ್ತ ದೆವ್ವವನ್ನು ಕಂಡವನಂತೆ ಕಿರಚಿಕೊಂಡಾಗ ಅವನ ಮುಖ ಹಠಾತ್ತನೆ ಬಿಳಚಿಕೊಂಡುಬಿಟ್ಟಿತ್ತು. ಅಮ್ಮ, ಮಂಗಳಮ್ಮ ಓಡಿಬಂದವರು ಹೆಚ್ಚುಕಡಿಮೆ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡೇಹೋಗಿ ನನ್ನ ಕೋಣೆಯಲ್ಲಿ ಮಲಗಿಸಿ ಹಣೆಗೆ ತಣ್ಣೀರುಬಟ್ಟೆ ಕಟ್ಟಿದರು. ಮರುದಿನ ಬೆಳಗಿನ ಜಾವ ನನಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರುತ್ತಿರುವಂತೆ ಪ್ರಜ್ಞೆ ತಪ್ಪಿತು. ಮತ್ತೆ ಎಚ್ಹರವಾದಾಗ ಕೆಳಹೊಟ್ಟೆಯನ್ನು ಯಾರೋ ಕಟ್ಟುತ್ತಿರುವ ಹಾಗೆ ವಿಪರೀತ ನೋವಾಗುತ್ತಿತ್ತು. ಸೂಲಗಿತ್ತಿ ಮುನಿಯಮ್ಮ ನನ್ನ ತೊಡೆಗಳ ಇದಿರಲ್ಲೇ ಕೂತಿದ್ದನ್ನು ಕಂಡ ನೆನಪಷ್ಟೆ. ಆಮೇಲೆ ಗಳಿಗೆ ಗಳಿಗೆಗೂ ಬೆಳಕು ಕಂದುತ್ತಿರುವಂತೆ….ಕಣ್ಣಿಗೆ ಕತ್ತಲು ಕವಿಯತೊಡಗಿದಂತೆ….ಮುಖದಲ್ಲಿ ಪೊತ್ತೆ ಮೀಸೆಯಷ್ಟೇ ಕಾಣಿಸುತ್ತಿದ್ದ ಯಾರೋ ರಾಕ್ಷಸನಂಥವನು ನನ್ನ ಕೈಹಿಡಿದು ಎಳೆದುಕೊಂಡುಹೋದಂತೆ…. +ಕತೆಯೇನೋ ಬರೆದದ್ದಾಯಿತು. ಆದರೆ ಸಂಭವಿಸಿದ್ದಕ್ಕೂ ಸಂಭಾವ್ಯಕ್ಕೂ ಎಷ್ಟು ಅಂತರ ಎಂಬ ಪ್ರಶ್ನೆ ಕಾಡುತ್ತಿದೆ. ಒಬ್ಬೊಬ್ಬರೂ ಒಂದೊಂದು ಪ್ರಪಂಚವಾಗಿರುವ ಈ ಬದುಕಿನಲ್ಲಿ ನಾನು ಗ್ರಹಿಸಿದ ಈ ವಾಸ್ತವದ ತುಣುಕಿಗೆ ತನ್ನದೇ ಆದ ಕಲ್ಪನೆ ಅದೆಂಥ ಬೆಳಕು ಚೆಲ್ಲಿರಬಹುದೋ ಹೇಳಲಾರೆ. ಮದುವೆ ಮುಂದೂಡುವ ನೆಪದಲ್ಲಿ ಅಪ್ಪ ಅಮ್ಮನ ಕಣ್ಣು ತಪ್ಪಿಸುತ್ತಿರುವ ನಾನು ಕೂಡ ಈಗ ಒಂದರ್ಥದಲ್ಲಿ ಜಾನಕಮ್ಮನ ಹಾಗೆಯೇ ಇರುವವಳಲ್ಲವೆ ? ಮತ್ತೆ ನನಗಂಟಿರುವ ಹೊಸ ನಂಟು ಯಾವ ರೀತಿ ಕೊನೆಗೊಳ್ಳುವುದೋ ಯಾರಿಗೆ ಗೊತ್ತು ? +———— +ಪ್ರಾಣ ಪಕ್ಷಿಯ ತೊಟ್ಟಿಲು +– ಮೊಗಳ್ಳಿ ಗಣೇಶ್ – +ಚಿಕ್ಕಪ್ಪನ ಮಗಳು ಅಶ್ವಿನಿ ಆ ದೊಡ್ಡ ಮನೆಯಲ್ಲಿ ತನ್ನ ಕೋಣೆಯ ತೊಟ್ಟಿಲನ್ನು ಎಲ್ಲರಿಂದಲೂ ತೂಗಿಸಿಕೊಂಡದ್ದು ಈಗ ಯಾರ ನೆನಪಿಗೂ ಬೇಕಾಗಿಲ್ಲದ ಸಂಗತಿ. ಕಾಲ ಅವಳನ್ನು ಬಹಳ ದೂರದ ಕಿನಾರೆಗೆ ಕರೆದುಕೊಂಡು ಹೋಗಿದೆ. ಅವಳನ್ನು ತೂಗಿದ್ದ ತೊಟ್ಟಿಲಲ್ಲೆ ಮನೆಯ ಎಲ್ಲ ಮಕ್ಕಳು ಬೆಳೆದದ್ದು. ಅಜ್ಜಿಯರಿಗೆ ತೊಟ್ಟಿಲು ತೂಗುವುದೇ ಜೀವದ ಜೋಕಾಲಿಯಾಗಿತ್ತು. ಅಶ್ವಿನಿಯೇ ಕೊನೆಯ ಪುಣ್ಯವಂತೆ. ಅಂತಹ ರೇಡಿಯೋ ಹುಚ್ಚಿನ ಚಿಕ್ಕಪ್ಪನ ಈ ಮುದ್ದು ಮಗಳಿಗೆ ಅಜ್ಜಿಯರು ದೈವಕ್ಕೆ ಸ್ನಾನ ಮಾಡಿಸಿದಂತೆ ಸಡಗರ ಪಡುತ್ತಿದ್ದರು. ಅನಾದಿಕಾಲದ ಮಂತ್ರಾಚರಣೆಯಂತೆ ಅವರ ಜೋಗುಳವು ಮಧ್ಯರಾತ್ರಿಯಲ್ಲೂ ಮಂದ್ರಸ್ಥಾಯಿಯಲ್ಲಿ ನಿದ್ದೆ ಮಂಪರಲ್ಲಿ ಮಗ್ಗಲು ಬದಲಿಸುವಾಗ ನನ್ನ ಕಿವಿಗೆ ಕಿನ್ನರ ಲೋಕದ ಎಂತದೋ ದನಿಯಲ್ಲಿ ಕೇಳಿಸಿ ಎಚಾರವಾಗಿಬಿಡುತ್ತಿತ್ತು. ನಿಜಕ್ಕೂ ಆ ಅಜ್ಜಿಯರು ಅನಾದಿ ಯುಗದ ದೈವಗಳೇ ಇರಬೇಕೆಂಬ ಅನುಮಾನವೂ ಅಂತಹ ಅವೇಳೆಯಲ್ಲಿ ನನಗೆ ಬರುತ್ತಿತ್ತು. ಅಹೋರಾತ್ರಿಯಲ್ಲಿ ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ, ತೊಟ್ಟಿಲನ್ನು ತೂಗುತ್ತಾ ಆಕಳಿಸುತ್ತಾ ಏನೇನೋ ಗೊಣಗುತ್ತಿದ್ದರು. ಅವರು ಯಾವಾಗ ನಿದ್ದೆ ಮಾಡಿ ಎಚ್ಚರವಾಗುತ್ತಿದ್ದರೆಂಬುದೇ ಗೊತ್ತಾಗುತ್ತಿರಲಿಲ್ಲ. ತುಂಬಿ ತುಳುಕುವ ಆ ಮನೆಯಲ್ಲಿ ಒಂದೊಂದು ಮೂಲೆಯಲ್ಲಿ ಮಲಗಿರುತ್ತಿದ್ದ ಎಲ್ಲರನ್ನೂ ಕಾಯುವವರಂತೆ ಕಾಣುತ್ತಿದ್ದರು. ತೊಟ್ಟಿಲ ಬಳಿ ಅಂತಹ ಅವೇಳೆಯಲ್ಲಿ ಒಂದು ಸಣ್ಣ ಹುಲ್ಲುಕಡ್ಡಿಯ ಸದ್ದಾದರೂ, ಒಂದು ಮರಿ ಇರುವೆ ಹರಿದಾಡಿದರೂ ಅಜ್ಜಿಯರು ಜಾಗೃತರಾಗಿ ಬಿಡುತ್ತಿದ್ದರು. ಹಿರಿಯಜ್ಜಿಯಂತು ಯಾವುದಕ್ಕೂ ಹೇಸದವಳಾಗಿದ್ದು ಎಂತಹ ಕೇಡು ಬಂದರೂ ಅದರೊಡನೆ ಗುದ್ದಾಡಿ ಗೆದ್ದು ಬರುವೆನೆಂಬ ಹಟ ಸಾಧಿಸುತ್ತಿದ್ದಳು. ಆಗ ಅಶ್ವಿನಿಗೆ ಇನ್ನೂ ಒಂದು ವರ್ಷ ತುಂಬಿರಲಿಲ್ಲ. ಅಂತಹ ಅಸುಳೆಗಳ ಮೇಲೆ ಪೀಡೆಗಳಿಗೆ ಸದಾ ಕಣ್ಣಿರುತ್ತದೆ ಎಂದು ತುಂಬ ಎಚ್ಚರಿಕೆ ವಹಿಸುತ್ತಿದ್ದರು. ಒಂದು ಅಮಾವಾಸ್ಯೆಯ ದಿನ ಯಾಕೊ ಗೂಬೆ ಕೂಗಿಕೊಂಡಿತು. ಕತೆ ಕೇಳಿ ನಿದ್ದೆಗೆ ಮುಳುಗುತ್ತಿದ್ದ ನನಗೆ ತಟ್ಟನೆ ಎಚ್ಚರವಾಯಿತು. ಹಾಗೆ ಗೂಬೆ ಕೂಗಿದ್ದೇ ಆದಲ್ಲಿ ಹಿರಿಯಜ್ಜಿ ಸುಮ್ಮನಿರಲು ಸಾಧ್ಯವೇ ಇರಲಿಲ್ಲ. ಅವಳು ಅನಾದಿ ಕಾಲದ ಆಚರಣೆಗೆ ಹೊರಟುಬಿಡುತ್ತಿದ್ದಳು. ಕೋಣೆಗೆ ಹೋಗಿ ಬೆತ್ತಲಾಗಿ, ಒಲೆಯ ಬೂದಿಯನ್ನು, ಮಸಿಯನ್ನೂ ಮೈತುಂಬ ಬಳಿದುಕೊಂಡು, ಒಂದು ಕೆನ್ನೆಗೆ ಕುಂಕುಮಾದ್ದೊ ಎಂತದೋ ಕೆಂಪುಬಣ್ಣವನ್ನು ಬಳಿದುಕೊಂಡು, ಇನ್ನೊಂದು ಕೆನ್ನೆಗೆ ಕರಿ ಮಸಿಯನ್ನು ಮೆತ್ತಿಕೊಂಡು ಮಹಾಕಾಳಿಯ ವೇಷ ತಾಳಿ ಒಂದು ಕೈಯಲ್ಲಿ ಪೊರಕೆಯನ್ನು, ಇನ್ನೊಂದರಲ್ಲಿ ಹರಿದ ಚಪ್ಪಲಿಯ ಹಿಡಿದುಕೊಂಡು ಸದ್ದಿಲ್ಲದೆ ಆಚೆಗೆ ಹೊರಟುಹೋಗುತ್ತಿದ್ದಳು. +ಎಲ್ಲೊ ಮರೆಯಲ್ಲಿ ದೂರದ ಯಾವುದೋ ಹೊಳೆಸಾಲಿನ ಮರದ ಪೊಟರೆಯಲ್ಲೋ ಗುಡ್ಡದ ಗವಿ ಮೂಲೆಯಲ್ಲೋ, ಕುಳಿತು ಹಾಗೆ ಗೂಕ್ ಗೂಕ್ ಎಂದು ಕೂಗಿದ ಗೂಬೆಯನ್ನು ಪತ್ತೆ ಮಾಡಿ ಅದಕ್ಕೆ ಸಾಸ್ತಿ ಮಾಡಿಯೇ ಅಜ್ಜಿ ಹಿಂದಿರುಗುತ್ತಿದ್ದದ್ದು. ತನ್ನ ಕೊನೆಗಾಲದ ಮುದ್ದು ಮೂಳ್ ಮಗಳು ಅಶ್ವಿನಿಯ ಪ್ರಾಣ ಬೇಕೆಂದು ಆ ಗೂಬೆ ಕೂಗುತ್ತಿದೆ ಎಂದೇ ಅಜ್ಜಿ ನಂಬುತ್ತಿದ್ದಳು. ಗೂಬೆಗಾಗಿ ರಾತ್ರಿಯೆಲ್ಲ ತಡಕಾಡಿ ಮಾಯಾವಿನಿಯಂತೆ ಸುತ್ತಾಡಿ, ತಾನೂ ಒಂದು ಗಂಡು ಗೂಬೆಯಂತೆ ಕೂಗಿ ಪತ್ತೆ ಮಾಡಿಬಿಡುತ್ತಿದ್ದಳು. ಆ ಗೂಬೆಯ ಗುರುತು ಸಿಕ್ಕಿದ ಕೂಡಲೇ ಪೈಶಾಚಿಕ ಭಾಷೆಯಲ್ಲಿ ಗೂಬೆಯ ಜೊತೆ ಜಗಳ ತೆಗೆಯುತ್ತಿದ್ದಳು. ಜೀವಜಾಲದ ಎಂತೆಂತದೋ ವಿಚಿತ್ರ ಅನುಕರಣ ಶಬ್ದಗಳನ್ನು ಅವಳು ನಿರಂತರವಾಗಿ ಹಾಡಿನ ಮಂತ್ರದ ಲಯದಲ್ಲಿ ಆಕಾಶಕ್ಕೆ ಮುಖವಿಟ್ಟು ಆ ದಟ್ಟ ಕತ್ತಲ ಹೊತ್ತಲ್ಲಿ ಆಡುತ್ತಿದ್ದರೆ ನಿಜಕ್ಕೂ ಎಲ್ಲಾ ಪೀಡೆಗಳೂ ಹೆದರಿ ಅವಳ ಮಾತಿಗೆ ಸ್ಪಂದಿಸುತ್ತಿವೆ ಎಂಬಂತೆ ಆಗುತ್ತಿತ್ತು. ಹಾಗೆ ಗೂಬೆಯ ಜೊತೆ ಜಗಳಕ್ಕಿಳಿದು ಗೆದ್ದು ಬರುವ ಹೊತ್ತಿಗೆ ಮುಂಜಾವದ ಕೋಳಿಯೂ ಕೂಗಿರುತ್ತಿತ್ತು. ಅಲ್ಲಿತನಕ ಜೋಪಾನವಾಗಿ ಉಳಿದ ಅಜ್ಜಿಯರು ಮೂರು ಸಾಲಿನ ಕರಿಗೆರೆಯನ್ನು ತೊಟ್ಟಿಲ ಸುತ್ತ ಬಿಡಿಸಿ ಕಾದೇ ಇರುತ್ತಿದ್ದರು. ಅಶ್ವಿನಿಯ ತಾಯಿ ವೆಂಕಟಲಕ್ಷ್ಮಿಗೆ ಈ ಯಾವ ಆಚಾರಗಳೂ ತಿಳಿಯುತ್ತಿರಲೂ ಇಲ್ಲ. ಇಂತವೆಲ್ಲದರ ಬಗ್ಗೆ ಅವಳಿಗೆ ಹೆಚ್ಚಿನ ಆಸಕ್ತಿಯೂ ಇರುತ್ತಿರಲಿಲ್ಲ. ಗೂಬೆ ಕುಳಿತು ಕೂಗಿದ್ದ ಮರದ ಸುತ್ತ ಬೂದಿ ಬಿಟ್ಟು ಎಲೆ ಅಡಿಕೆ ಜಗಿದು ರಸವನ್ನು ರಕ್ತದಂತೆ ಸುತ್ತಲೂ ಚೆಲ್ಲಿ ಮತ್ತೊಮ್ಮೆ ಕೂಗಿದರೆ ನಿನ್ನ ಜೀವವನ್ನು ನಿಶ್ಚಿತವಾಗಿಯೂ ಮಾಟ ಮಾಡಿ ತೆಗೆಯುತ್ತೇನೆಂದು ಎಚ್ಚರಿಕೆಯನ್ನು ಕೊಟ್ಟು ಹಿಂದಿರುಗುತ್ತಿದ್ದಳು. ಹಾಗೆ ಬಂದು ಪುಟ್ಟ ಗೊರಕೆಯಲ್ಲಿ ತಾಯಿ ಬೆಚ್ಚನೆಯ ಕಿಬ್ಬೊಟ್ಟೆಯ ಮೊಲೆ ಹಾಲ ಕನಸಲ್ಲಿ ತೇಲುತ್ತಿದ್ದ ಅಶ್ವಿನಿಗೆ ಕಿವಿಯಲ್ಲಿ ಪಿಸಪಿಸನೆ ಏನೋ ಮಂತ್ರೋಚ್ಚಾರ ಮಾಡಿ ಹಾಲುಕುಡಿಸಲು ಸೂಚಿಸುತ್ತಿದ್ದಳು. ಅಂತಹ ನಮ್ಮ ಹಿರಿಯಜ್ಜಿಗೆ ಹಿಂದೆ ಆದದ್ದೂ ಮುಂದೆ ಆಗುವುದೂ ಎರಡೂ ತಿಳಿದಿದ್ದವೆಂದು ಉಳಿದವರು ಗುಪ್ತವಾಗಿ ಮಾತನಾಡಿಕೊಂಡು, ಮುಂದೆ ಏನು ಆಗುತ್ತದೆಂಬುದನ್ನು ಯಾರೂ ಕೇಳಿ ತಿಳಿಯಲು ಬಯಸುತ್ತಿರಲಿಲ್ಲ. +ರೇಡಿಯೋ ಚಿಕ್ಕಪ್ಪ ಯಾವುದೊ ಗ್ರಹದ ಪೂರ್ವಿಕರ ಜೊತೆ ಮಾತನಾಡುತ್ತಾ ಅವರ ಸೆಳೆತದಲ್ಲಿ ಕಳೆದುಹೋಗುತ್ತಾನೆಂದು ಒಮ್ಮೆ ಯಾರಲ್ಲೊ ಸಿಟ್ಟಿನಿಂದ ಹೇಳಿದ್ದು ಈಗ ಅಸ್ಪಷ್ಟವಾಗಿ ನೆನಪಾಗುತ್ತದೆ. ಅಜ್ಜಿ ಹಾಗೆ ಯಾಕೆ ಭವಿಷ್ಯ ನುಡಿದಿದ್ದಳೋ ಆಗ ಯಾರಿಗೂ ಅದು ಅರ್ಥವಾಗಿರಲಿಲ್ಲ. ಈಗ ಕೂಡ ಆ ಮಾತಿನ ಗೂಡಾರ್ಥ ಕಲ್ಪನೆ ಸಹ ಯಾರಿಗೂ ಬರಲಾರದು. ಮನೆಯಲ್ಲಿದ್ದ ಒಬ್ಬೊಬ್ಬರೂ ಅಂಜುತ್ತ ಅಳುಕುತ್ತ ಕೂಡು ಕುಟುಂಬದ ಬಂಧದಿಂದ ಕಳಚಿಕೊಳ್ಳಲು ಉಪಾಯಗಳನ್ನು ಹುಡುಕುತ್ತಿದ್ದರು. ಎಂದೊ ಒಂದು ಕಾಲದಲ್ಲಿ ಉತ್ತರನ ಯಾವುದೊ ಒಂದು ಬೆಟ್ಟ ಗುಡ್ಡಗಳ ಕಣಿವೆಯಿಂದ ಬಯಲುದಾರಿ ಹಿಡಿದು ಬಂದು, ಇಲ್ಲಿ ನೆಲೆಸಿ, ನೂರಾರು ವರ್ಷಗಳು ದಾಟಿ ಬಾಳಿ ಬದುಕಿ, ಹೊಸ ಕಾಲಕ್ಕೆ ಬರುವ ಹೊತ್ತಿಗೆ ಏನೆಲ್ಲ ಏರುಪೇರುಗಳು ಆ ಮನೆಯಲ್ಲಿ ಘಟಿಸಿಹೋಗಿದ್ದವು. ಅವನ್ನೆಲ್ಲ ನೆನೆಯುವುದಕ್ಕೆ ಈಗ ತುಂಬ ಹಿಂಸೆಯಾಗುತ್ತದೆ. ಎಷ್ಟೋ ಬಾರಿ ಹಾಗೆ ಆದದ್ದೆಲ್ಲ ಪೂರ್ವ ನಿಯೋಜಿತವೆಂದು ಅನುಮಾನವಾಗುತ್ತದೆ. ಮನೆಯ ವ್ಯವಹಾರಗಳು ಹೋಳಾಗುತ್ತಾ ಹೋದಂತೆಲ್ಲಾ ಅಸಹಾಯಕಳಾಗಿ ಸಿಟ್ಟಾಗುತ್ತಿದ್ದ ಹಿರಿಯಜ್ಜಿ ಮೂಲೆಯಲ್ಲೊ ಹಿತ್ತಲ ಸಂಪಿಗೆ ಮರದ ಬೊಡ್ಡೆಯಲ್ಲೊ ಕುಳಿತು ತನ್ನ ಅನಾದಿ ಕಾಲದ ಪೈಶಾಚಿಕ ಭಾಷೆಯಲ್ಲಿ ಏನನ್ನೋ ಹಾಡಿಕೊಂಡು ಅದರಲ್ಲೇ ತನ್ನನ್ನು ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಅಂತಹ ವೇಳೆಯಲ್ಲೆಲ್ಲ ಬೇಕಂತಲೇ ಕರ್ಕಶವಾಗಿ ಅಶ್ವಿನಿ ತೊಟ್ಟಿಲಿಂದ ಕಿಟಾರನೆ ಕಿರುಚಿಕೊಳ್ಳುತ್ತಿದ್ದಳು. ಹಾಳಾದ ಕೂಸು ತನ್ನ ಮಾತನ್ನು ಅರ್ಥ ಮಾಡಿಕೊಳ್ಳುತ್ತಿದೆ ಎಂದು ಅಜ್ಜಿ ಆಗ ಎದ್ದು ಬಂದು ಹಾಲಿಲ್ಲದಿದ್ದರೂ ತನ್ನ ಮೊಲೆ ಕಚ್ಚಿಸಿ, ಲಾಲಿಯ ಮುದದಿಂದ ನಿದ್ದೆ ಬರಿಸಿ ದಣಿದ ತನ್ನ ಕಾಲಾಂತರದ ಕಣ್ಣುಗಳನ್ನು ಮನೆಯ ಒಂದೊಂದು ಮುರುಕು ಪ್ರತಿಮೆಯಂತಿದ್ದ ವಸ್ತುಗಳ ಮೇಲೆ ನಿರಾಸಕ್ತಿಯಿಂದ ಚೆಲ್ಲುತ್ತಿದ್ದಳು. +ಅಂತಹ ಹೊತ್ತಲ್ಲಿ ರೇಡಿಯೋ ಚಿಕ್ಕಪ್ಪ ಹಿತ್ತಲಿನ ದೊಡ್ಡ ಬೇವಿನ ಮರಕ್ಕೆ ತೂಗುಯ್ಯಾಲೆಯನ್ನು ಕಟ್ಟಿಸಿಕೊಂಡು, ಅದರ ತೂಗಾಟದ ಲಯದಲ್ಲೇ ರೇಡಿಯೋ ಕೇಳುತ್ತಿದ್ದ. ರೇಡಿಯೋ ಚಿಕ್ಕಪ್ಪನ ಭಾಷೆಗೂ ಮಿತಿಯಿರಲಿಲ್ಲ. ದೂರದ ಬಿಬಿಸಿಯ ವಾರ್ತೆಗಳನ್ನು, ವಾಷಿಂಗ್ಟನ್ನಿನ ಸಂಗೀತದ ಕಾರ್ಯಕ್ರಮಗಳನ್ನು ಅರೇಬಿಯಾದ ಅಲ್ಲಾಹುವಿನ ಪ್ರಾರ್ಥನೆಯನ್ನೂ ಗಂಟೆಗಟ್ಟಲೆ ತಲ್ಲೀನವಾಗಿ ಕೇಳಿಸಿಕೊಂಡು ಆ ಬೇವಿನ ಮರದ ಯಾವುದೊ ಒಂದು ಕೊಂಬೆಯಂತೆ ಜೋತಾಡುತ್ತಲೇ ಇರುತ್ತಿದ್ದ. ತನ್ನೊಳಗೆ ಯಾರಿಗೂ ಹೇಳಿಕೊಳ್ಳಲಾಗದ ಸಂಕಟ, ಯಾತನೆ, ದುಃಖ, ಒಂಟಿತನ, ಅಸಹನೀಯ ಬೇಸರ ತುಂಬಿಕೊಂಡಿವೆ ಎಂಬಂತೆ ಅವನ ನೀಳಮುಖ ಯಾವತ್ತೂ ಸೂಚಿಸುತ್ತಿತ್ತು. ಅಶ್ವಿನಿಗೆ ಆರೈಕೆ ಮಾಡಿದ್ದಕ್ಕೂ ಒಂದು ಕೈ ಮಿಗಿಲಾಗಿ ಆಗ ಹಿರಿಯಜ್ಜಿ ರೇಡಿಯೋ ಚಿಕ್ಕಪ್ಪನ ಬಾಣಂತನವನ್ನು ನಿಷ್ಠೆಯಿಂದ ಮಾಡಿದ್ದಳು. ಅದೇ ಮಾಂತ್ರಿಕ ತೊಟ್ಟಿಲಲ್ಲಿ ಚಿಕ್ಕಪ್ಪ ಕೂಡ ಎಂದೆಂದೂ ಮುಗಿಯದ ಲಾಲಿ ನಾದವ ತುಂಬಿಕೊಂಡದ್ದು, ಅಂತಹ ಒಂದು ತೊಟ್ಟಿಲಲ್ಲಿ ಬೆಳೆದ ನಮಗೆಲ್ಲಾ ನಮ್ಮ ಪರಂಪರಯೇ ಮರೆತುಹೋಗುತ್ತಿತ್ತು. ಎಷ್ಟೋ ಬಾರಿ ಆ ಮರೆವನ್ನು ಎಲ್ಲರೂ ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದರು. ಯಾಕೊ ನನಗಂತೂ ಆ ತೊಟ್ಟಿಲ ರೋಮಾಂಚನದಿಂದ ಒಂದು ಕ್ಷಣವೂ ಹೊರಗುಳಿಯಲು ಆಗುತ್ತಿರಲಿಲ್ಲ. +ಒಮ್ಮೆಯಾದರೂ ಚಿಕ್ಕಪ್ಪ ಅಶ್ವಿನಿಯನ್ನು ಎತ್ತಿಕೊಂಡು ಮುದ್ದಾಡಿದ್ದನ್ನು ನಾವ್ಯಾರೂ ಕಂಡಿರಲಿಲ್ಲ. ಅಶ್ವಿನಿಯ ಬೆನ್ನ ಮೇಲೆ ಬರೆ ಹಾಕಿದಂತೆ ವಿಚಿತ್ರ ಗೆರೆಗಳಿದ್ದುದನ್ನು ಕಂಡು ಇವಳು ತಮ್ಮ ಆದಿ ಕಾಲದ ಪೂರ್ವಿಕಳೆಂದೂ, ಆ ಕಾಲದವಳು ಇವಳಲ್ಲಿ ಹುಟ್ಟಿ ಬಂದಿದ್ದಾಳೆಂದೂ ಎಲ್ಲರೂ ಹೆಚ್ಚಿನ ಗಮನವನ್ನು ಆಕೆಯ ಆರೈಕೆಯಲ್ಲಿ ತೋರುತ್ತಿದ್ದರು. ತಾಯಿ ವೆಂಕಟಲಕ್ಷ್ಮಿಯ ಎದೆ ಹಾಲ ಕೊರೆತೆಯಿಂದ ಅಶ್ವಿನಿಯನ್ನು ನಿಭಾಯಿಸಲಾರದೆ ರೇಡಿಯೋ ಚಿಕ್ಕಪ್ಪನ ಮೇಲೆ ರೇಗಾಡಿ, ಈ ಮನೆಯೂ ಗಂಡನೂ ಆ ಮಗು ಯಾವುದೂ ಯಾಕಾದರೂ ತನಗೆ ಬೇಕೆಂದು ಆಗಾಗ ರೋಸಿಹೋಗುತ್ತಿದ್ದಳು. ಅದನ್ನು ಅರಿತೋ ಏನೋ, ವೆಂಕಟಲಕ್ಷ್ಮಿಯನ್ನೂ ತೊಟ್ಟಿಲ ಮಗುವಂತೆಯೇ ಅಜ್ಜಿಯರು ನಿವಾಳಿಸುತ್ತಿದ್ದರು. +ಆ ತೊಟ್ಟಿಲಲ್ಲಿ ಅಜ್ಜಿಯರ ಎಲ್ಲ ಎಚ್ಚರದ ಆದಿಕಾಲದ ಲಾಲಿ ಪದಗಳ ನಾದವನ್ನು ತಮ್ಮ ದೇಹಕ್ಕೆ ತುಂಬಿಕೊಂಡ ಯಾವ ಮಗುವೂ ಅನಂತವಾಗುತ್ತದೆಂಬುದು ಮನೆತನದ ಮಾತೃನೆಲೆಯ ನಂಬಿಕೆಯಾಗಿತ್ತು. ರೇಡಿಯೋ ಚಿಕ್ಕಪ್ಪ ಯಾವ ಅನೂಹ್ಯ ನಿಸ್ಸಂತು ತರಂಗಗಳ ನಾದವನ್ನು ತುಂಬಿಕೊಂಡನೋ, ಅಶ್ವಿನಿ ಯಾವ ರೀತಿ ಅವನ್ನೆಲ್ಲ ಪಡೆದುಕೊಂಡಳೋ ನಿರ್ದಿಷ್ಟವಾಗಿ ಈಗ ಹೇಳಲಿಕ್ಕೆ ಬರದು. ಆ ತೊಟ್ಟಿಲಿಗಾಗಿ ಎಷ್ಟೋ ತಾಯಂದಿರು ಆಸೆಪಡುತ್ತಿದ್ದರು. ತಾವು ಮಗು ಹಡೆದು ಅಂತಹ ಒಂದು ಚೆಂದದ ತೊಟ್ಟಿಲಿಗೆ ಹಾಕಿ ತೂಗಿದರೆ ಹಡೆದದ್ದು ಸಾರ್ಥಕವಾಗುತ್ತದೆಂದು ಭಾವಿಸುತ್ತಿದ್ದರು. +ನಿಜಕ್ಕೂ ಅದೊಂದು ರಮ್ಯಲೋಕದ ತೊಟ್ಟಿಲು. ಪೂರ್ವಕಾಲದಿಂದಲೂ ಅಜ್ಜಿಯರು ಜತನವಾಗಿ ಆ ತೊಟ್ಟಿಲನ್ನು ಕಾಯ್ದುಕೊಂಡು ಬಂದದ್ದರು. ಅದರ ಬಗ್ಗೆ ಹುರಿಯಜ್ಜಿ ನೂರೆಂಟು ಕತೆಗಳನ್ನು ಹೇಳುತ್ತಿದ್ದಳು.ಆ ಕಿನ್ನರ ಕತೆಯಿಂದಲೋ ಏನೋ ತಾಯ ಮೊಲೆ ಬಿಡಲಾರದೆ ಕಂಗಾಲಾಗುವ ಮಗುವಿನ ಮನಸ್ಸಿನಂತೆ ಆ ತೊಟ್ಟಿಲ ಬಗೆ ನನ್ನ ಮನಸ್ಸು ಹೊಯ್ದಾಡುತ್ತಿತ್ತು. ಆ ತೊಟ್ಟಿಲ ಬಗ್ಗೆಯೇ ವೆಂಕಟಲಕ್ಷ್ಮಿಗೆ ಅಸಮಾಧಾನವಿದ್ದುದನ್ನು ನಾನು ಗ್ರಹಿಸಿದ್ದೆ. ಭೂತಕಾಲದ ಆ ತೊಟ್ಟಿಲಲ್ಲಿ ನನ್ನ ಮಗು ಅಶ್ವಿನಿ ಯಾಕೆ ಬೆಳೆಯಬೇಕೆಂದು ಆಕೆ ಮನೆಯ ಯಾರಲ್ಲೋ ಹೇಳಿಕೊಂಡದ್ದನ್ನು ಕೇಳಿ ಹಿರಿಯಜ್ಜಿ ದೊಡ್ಡ ರಂಪವನ್ನೇ ಮಾಡಿಬಿಟ್ಟಿದ್ದಳು. ಸ್ವತಃ ಆ ದೇವತೆಗಳೇ ಇಂತಹ ಒಂದು ತೊಟ್ಟಿಲನ್ನು ನಮ್ಮ ಪೂರ್ವಿಕರಿಗೆ ಕೊಟ್ಟಿದ್ದೆಂದೂ, ತಲೆಮಾರುಗಳಿಂದ ಅದನ್ನೊಂದು ಪವಿತ್ರ ಶಕ್ತಿಯಾಗಿ ಕಾಯ್ದುಕೊಂಡು ಬಂದಿರುವುದಾಗಿಯೂ ಇದರಿಂದಲೇ ತನ್ನ ವಂಶದ ಎಲ್ಲಾ ಕುಡಿಗಳಿಗೂ ಯೋಗ್ಯವಾದ ದಾರಿ ಸಾಧ್ಯವಾಗುತ್ತದೆಂದು ಅಜ್ಜಿ ವಾದಿಸಿ ವೆಂಕಟಲಕ್ಷ್ಮಿಯನ್ನು ತೆಪ್ಪಗಾಗಿಸಿದ್ದಳು. ಹಾಗಿದ್ದರೆ ತನ್ನ ಗಂಡ ಇದೇ ತೊಟ್ಟಿಲಲ್ಲಿ ನಿಮ್ಮ ಆರೈಕೆಯಲ್ಲಿಯೇ ತಾನೆ ಬೆಳೆದು ಇವತ್ತು ರೇಡಿಯೋ ಹುಚ್ಚಿನಲ್ಲಿ ಕಳೆದುಹೋಗಿರುವುದು ಎಂದು ಬಾಯಿಗೆ ಬಂದಿದ್ದ ಮಾತನ್ನು ನುಂಗಿಕೊಂಡು, ಈ ಮನೆಯ ಎಲ್ಲವೂ ಪುರಾಣದ ಕನಸಿನಲ್ಲಿ ಮುಳುಗಿ ಹೋಗುತ್ತಿದೆ ಎಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡಿದ್ದಳು. ಏನೇ ಆಗಲಿ, ಅಂತಹ ತೊಟ್ಟಿಲ ಬಗ್ಗೆ ಚಿಕ್ಕಮ್ಮ ಯಾಕೆ ಉಪೇಕ್ಷೆ ತಾಳಬೇಕೆಂದು ನನಗೂ ಕೋಪ ಬರುತ್ತಿತ್ತು. ಆದರೆ ಮನೆಯ ಗಂಡಸರಿಗೆ ಮಾತ್ರ ಆ ದೈವಿಕ ತೊಟ್ಟಿಲಿನ ಬಗ್ಗೆ ಭಯ ಕಡಿಮೆ ಆಗುತ್ತಿದ್ದದ್ದಕ್ಕೆ ಅಜ್ಜಿಯರು ಒಟ್ಟಾಗಿ ತಮ್ಮ ಕಾಲದ ತಾಯಾಳಿಕೆಯ ದಣಿದ ಹತಾಶೆಯ ಸಂಕಟದ ಜಗಳ ತೆಗೆಯುತ್ತಿದ್ದರು. ಆ ತೊಟ್ಟಿಲನ್ನು ಅತ್ಯಂತ ಉಪೇಕ್ಷೆಯಿಂದ ಒದ್ದವನು ಮೊದಲಿಗೆ ಚಿಕ್ಕಪ್ಪನೇ ಇರಬೇಕು. ನನಗೀಗಲೂ ನಿಗೂಢವಾದದ್ದೆಂದರೆ ಆ ಬಗೆಯ ಪವಿತ್ರ ತೊಟ್ಟಿಲನ್ನು ಗಂಡಸರು ಯಾಕೆ ಅಷ್ಟೊಂದು ಅಗೌರವದಿಂದ ಉಪೇಕ್ಷಿಸುತ್ತಿದ್ದರೆಂಬುದು. ಹಿಂದೆ ಒಂದು ಕಾಲಕ್ಕೆ ಪ್ಲೇಗು, ಕಾಲರ, ಸಿಡುಬು ಮಾರಿಯರು ಬಂದು ಜನರನ್ನು ಗುಡಿಸಿಕೊಂಡು ಹೋಗುವಾಗ ಇದೇ ತೊಟ್ಟಿಲು ನಮ್ಮನ್ನೆಲ್ಲ ಕಾಪಾಡಿದ್ದೆಂದು ಅಜ್ಜಿ ಹೆಮ್ಮೆಯಿಂದ ಹೇಳಿದ್ದಳು. ಉತ್ತರದಿಕ್ಕಿನ ಯಾವ ಹಳ್ಳಿ, ಯಾವ ಕಾಡು, ಯಾವ ಬಯಲು, ಯಾವ ನದಿ ಹಾದಿಯಲ್ಲಿ ಆ ಕಾಲದಲ್ಲಿ ಪ್ಲೇಗು ಮಾರಿಯರಿಂದ ತಪ್ಪಿಸಿಕೊಂಡು ಆ ತೊಟ್ಟಿಲಲ್ಲಿ ನಾಲ್ಕೈದು ಹಸುಳೆಗಳನ್ನು ಹೊತ್ತುಕೊಂಡು ನಮ್ಮ ಪೂರ್ವಿಕರು ಬಂದರೊ, ಅದು ಸ್ವತಃ ಈಗ ಉಳಿದವರಿಗೇ ನಿಖರವಾಗಿ ಗೊತ್ತಿಲ್ಲ. +ಕಾಲದ ಯಾವುದೊ ಸಮುದ್ರದಲೆಯಲ್ಲಿ ಸಾಗುತ್ತಿರುವ ಅಶ್ವಿನಿಗೆ ತಾಯಿ ವೆಂಕಟಲಕ್ಷ್ಮಿ ಇದನ್ನೆಲ್ಲ ಹೇಳಿಕೊಟ್ಟಿರಲು ಸಾಧ್ಯವೇ ಇಲ್ಲವೆಂದು ನನ್ನ ಮನಸ್ಸು ಹೇಳುತ್ತಿದೆ. ಅಂತಹ ತೊಟ್ಟಿಲಲ್ಲಿ ಬೆಳೆದು ಇವತ್ತು ಯಾವುದೊ ನಮಗೆ ನಿಲುಕದ ಎತ್ತರದಲ್ಲಿರುವ ಅಶ್ವಿನಿಯನ್ನು ಹಿರಿಯಜ್ಜಿ ಬದುಕಿದ್ದು ನೋಡಿರಲೇಬೇಕಿತ್ತು. ನಮ್ಮ ಮನೆಯಲ್ಲಿ ಒಂದು ವಿಚಿತ್ರ ವರ್ಣಮಿಶ್ರಣವಿತ್ತು. ನಮ್ಮ ಅಜ್ಜಿಯರೆಲ್ಲರೂ ಹೊಳೆವ ಸೂರ್ಯನ ಬಣ್ಣದವರೇ ಎಂದು ಹೇಳಿದರೆ ಅದು ಅತಿಶಯವಲ್ಲ. ಅವರನ್ನು ನೋಡಿದರೆ ಇವರು ಎಲ್ಲಿಂದಲೋ ಹೊರಗಿನಿಂದ ಬಂದವರಂತೆ ತೋರುತ್ತಿದ್ದರು. ಅವರ ನೀಳ ಮೂಗು, ಕೆಂಚು ಕಣ್ಣು, ರಸ ಚಿಮ್ಮುವ ಯೌವ್ವನದ ಕೆನ್ನೆ, ರೇಶಿಮೆಯ ಉದ್ದ ಕೂದಲು, ಎಂತಹ ಗಂಡಸರನ್ನೂ ಸೋಲಿಸಿಬಿಡುತ್ತಿದ್ದವು. ಎದೆ ಸೆಟೆಸಿ ನಡೆವ ಅವರ ನಿಲುವಿನಲ್ಲಿ ಎಂತದೊ ದಿವ್ಯತೆಯಿದ್ದು ಕೆಂಪು ಟಮೊಟ ಹಣ್ಣಿನಂತೆ ಅವರ ಮುಖ ಹೊಳೆಯುತ್ತಿತ್ತು. ನೂರಾರು ಮಕ್ಕಳಿಗೆ ಹಾಲೂಡಿಸಿಯೂ ಬತ್ತದಂತೆ ಅಜ್ಜಿಯ ಹಿರಿ ಸ್ತನಗಳು ಮೊಮ್ಮಕ್ಕಳ ಮುಂದೆ ನಾಳಿನ ಯಾವುದೊ ಹಣ್ಣಾದ ಫಲಗಳಂತೆ ತೊನೆಯುತ್ತಿದ್ದವು. ವಿಚಿತ್ರ ಎಂದರೆ ಅಂತಹ ಮುಪ್ಪಿನ ಕಾಲದಲ್ಲೂ ಹಿರಿಯಜ್ಜಿ ಅಶ್ವಿನಿಗೆ ಹಾಲೂಡಿಸುವ ಪದ್ದತಿಯನ್ನು ಇಟ್ಟುಕೊಂಡಿದ್ದಳು. ಹಾಲು ಬರುತ್ತಿತ್ತೊ ಅಥವಾ ಅಜ್ಜಿಯ ತಾಯ್ತನವೋ ಏನೊ, ಅಶ್ವಿನಿ ಕುಶಾಲಿನಿಂದ ತನ್ನ ಮೃದುವಾದ ಬೋಡಿನಿಂದ ಕಚ್ಚಿ ಆಟ ಆಡುತ್ತಿದ್ದುದನ್ನು ನಾವು ತಮಾಷೆಯಿಂದ ನೋಡುತ್ತಿದ್ದೆವು. ಅಜ್ಜಿಯ ಅದೇ ಹಿರಿ ಸ್ತನಗಳು ನನ್ನ ಬಾಯನ್ನೂ ಜೀವ ರಸದಿಂದ ಒದ್ದೆಯಾಗಿಸಿದ್ದವು. ನಮ್ಮ ಮನೆತನದ ಗಂಡಸರು ಸ್ಫುರದ್ರೂಪಿಯಾದ ಅಜ್ಜಿಯರನ್ನು ಎಲ್ಲಿ ಹೇಗೆ ಲಗ್ನ ಮಾಡಿಕೊಂಡರೊ ಅವರ ಮೂಲವನ್ನು ಈಗ ಕೆದಕಲಿಕ್ಕಾಗದು. ಬಹುಪಾಲು ಮನೆಯ ಎಲ್ಲಾ ಗಂಡಸರೂ ಕಂದು ಕಪ್ಪು ವರ್ಣದ, ಗಿಡ್ಡದೇಹದ, ಪುಟ್ಟಕಣ್ಣಿನ, ಚೋಟುಮೂಗಿನ, ವಿಶಾಲ ಭುಜದ, ಸಣ್ಣಕಾಲಿನ, ಗುಂಗುರು ಕೂದಲಿನ, ಒರಟು ರೂಪದಲ್ಲಿಯೇ ಇದ್ದವರಾಗಿದ್ದರು. ಒಂದೊಂದು ತಲೆಮಾರಿಗೆ ಏನೊ ವ್ಯತ್ಯಾಸವಾದಂತೆ ಒಬ್ಬೊಬ್ಬರು ಮಾತ್ರ ಅಜ್ಜಿಯರ ರೂಪವನ್ನು ಧರಿಸಿ ಬರುತ್ತಿದ್ದರು. ಅಂತವರಲ್ಲಿ ರೇಡಿಯೊ ಚಿಕ್ಕಪ್ಪನೂ ಒಬ್ಬ. ಆದರೆ ಗುಣದಲ್ಲಿ ಹೀಗೆ. ಸ್ಫುರದ್ರೂಪಿಯಾಗಿ ಹುಟ್ಟಿ ಬಂದವರಾರೂ ಮೂಲ ಅಜ್ಜಿಯರ ಸ್ವಭಾವವನ್ನು ಪಡೆದು ಬಂದವರಾಗುತ್ತಿರಲಿಲ್ಲ. ರೇಡಿಯೊ ಚಿಕ್ಕಪ್ಪನಿಗೆ ತಂದೆ ಮೂಲದ ಲಕ್ಷಣಗಳೂ ಇರುತ್ತಿರಲಿಲ್ಲ. ಅಜ್ಜಿಯರ ಜೈವಿಕಾಂಶಗಳನ್ನು ಹೊತ್ತು ಬಂದವರೆಲ್ಲಾ ವಿಚಿತ್ರ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಿದ್ದರು. ತಾನಿರುವ ಜಗತ್ತಿನ ಜೊತೆ ಸಾಮರಸ್ಯದಿಂದ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ಅವರು ವಿಫಲರಾಗುತ್ತಿದ್ದರು. +ವೆಂಕಟಲಕ್ಷ್ಮಿಯು ಅಂತಹ ಮನೆಗೆ ಸೊಸೆಯಾಗಿ ಬರುವ ಮುನ್ನ ಮುಗ್ಧತೆಯನ್ನು ತುಂಬಿಕೊಂಡಿದ್ದ ದಡ್ಡಿಯೇ ಆಗಿದ್ದಳು. ಆಗ ಹಿರಿಯಜ್ಜಿಯೇ ಅವಳನ್ನು ಬಲಗಾಲಿರಿಸಿ ಹೊಸಿಲು ದಾಟಿಸಿ ಮನೆಗೆ ಕರೆದುಕೊಂಡು ಹೋಗಿ, ಮೊದಲು ಆ ತೊಟ್ಟಿಲಿಗೆ ಪೂಜೆಮಾಡಿಸಿ ಅದನ್ನು ತೂಗಿಸಿದ್ದಳು. ನಿನ್ನ ಹೊಟ್ಟೆಯಲ್ಲಿರುವ ಗರ್ಭವು ದೇವಲೋಕದ್ದೆಂದೂ, ಇಲ್ಲಿರುವ ಆ ತೊಟ್ಟಿಲು ಮನುಷ್ಯ ಲೋಕದ ಇನ್ನೊಂದು ಗರ್ಭವೆಂದು, ತಿಳಿಸಿದಾಗ ವೆಂಕಟಲಕ್ಷ್ಮಿಯು ಏನೂ ಗೊತ್ತಿಲ್ಲದೆ ಇದು ಯಾವ ಆಚಾರವೋ ಎಂದು ಹೇಳಿದಂತೆ ನಡೆದುಕೊಂಡಿದ್ದಳು. ಮದುವೆಯಾದ ಮೊದಲ ರಾತ್ರಿಯ ಗುಪ್ತ ಆಚರಣೆಗಳು ಮತ್ತಷ್ಟು ಅವಳನ್ನು ಲಜ್ಜೆಗೊಳಪಡಿಸಿದ್ದವು. ಆ ಮನೆಯಲ್ಲಿ ಮದುವೆಯಾದ ಎಲ್ಲರೂ ಖಡ್ಡಾಯವಾಗಿ ಪಾಲಿಸಬೇಕಾದ ಆಚರಣೆಯೊಂದಿತ್ತು. ಮದುಮಕ್ಕಳು ಕೂಡುವ ಆ ರಾತ್ರಿಯ ಮೊದಲ ಕ್ಷಣದಲ್ಲಿ ಹಿರಿಯಜ್ಜಿಯ ಸಾಕ್ಷಿಯಲ್ಲಿ ಇಬ್ಬರೂ ಬೆತ್ತಲಾಗಿ, ದೀಪದ ಮಂದ ಬೆಳಕಿನಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿರುವಾಗ ಒಬ್ಬರನ್ನೊಬ್ಬರು ತೊಟ್ಟಿಲಿಗೆ ಎತ್ತಿ ಕೂರಿಸಿ ಮಲಗಿಸಿ ಮೋಹದ ತೊಟ್ಟಿಲ ತೂಗಿ ಹೆಣ್ಣನ್ನು ಗಂಡು ತೂಗಿ ಗಂಡನ್ನು ಹೆಣ್ಣು ತೂಗಿ, ಕೊನೆಗೆ ಹೆಣ್ಣು ಗಂಡಿಬ್ಬರನ್ನೂ ಆ ತೊಟ್ಟಿಲಲ್ಲೇ ಅಜ್ಜಿಯು ತೂಗಿ ಮಾಂತ್ರಿಕ ಲಾಲಿ ಪದಗಳ ಅಮೂರ್ತ ದನಿಗಳನ್ನು ಕಿವಿಗೆ ತುಂಬಿಸಿಕೊಂಡು ಎದ್ದು ಹೋಗಿ ಒಳಮನೆಯ ಸೇರಿಕೊಂಡು ರತಿಯ ಲಾಲಿ ಪದಗಳನ್ನು ಅವರೇ ದೇಹೈಕ್ಯತೆಯಿಂದ ಹಾಡಬೇಕಿತ್ತು. +ರೇಡಿಯೊ ಚಿಕ್ಕಪ್ಪನನ್ನು ಈ ಆಚರಣೆಗೆ ಹೊಂದಿಸುವಲ್ಲಿ ಮನೆಯ ಎಲ್ಲಾ ಅಜ್ಜಿಯರೂ ಸುಸ್ತಾಗಿ ಹೋಗಿದ್ದರು. ಈ ಆಚರಣೆಯನ್ನು ತಪ್ಪಿಸಿಕೊಂಡರೆ ಮುಂದೆ ಎಂದೆಂದೂ ಮಕ್ಕಳಾಗುವುದಿಲ್ಲವೆಂದೂ, ಲಗ್ನದ ಶಾಸ್ತ್ರ ಮುಗಿಯುವುದಿಲ್ಲವೆಂದೂ, ಅನಂತರ ಹೆಣ್ಣು ಗಂಡಿನ ಹೊಂದಾಣಿಕೆ ಅಸಾಧ್ಯವೆಂದು ಮನೆಯವರು ತಿಳಿದಿದ್ದರು, ಮದುಮಗಳು ವೆಂಕಟಲಕ್ಷ್ಮಿಯು ಹಳ್ಳಿಯ ನಾರುಬೇರಿನ ಸಾರದ ಸಪೂರ ದೇಹದ ಆಕಾಶದಗಲ ಕನಸು ಕಾಣುವಂತಹ ಕಪ್ಪು ಕಣ್ಣಿನ ದಿಟ್ಟ ಚೆಲುವೆಯಾಗಿದ್ದಳು. ಮದುವೆಯಾದ ಮೊದಲ ರತಿ ರಾತ್ರಿಯೇ ಗಂಡ ಬೆತ್ತಲಾಗದೆ ಅನಾಸಕ್ತನಾಗಿ ರೇಡಿಯೊ ಹಿಡಿದುಕೊಂಡಿರುವುದನ್ನು ಕಂಡು ಕಂಗಾಲಾಗಿದ್ದಳು. ರೇಡಿಯೊ ಚಿಕ್ಕಪ್ಪನನ್ನು ಆಗ ಹಿರಿಯಜ್ಜಿ ವಯನ ಮಾಡಿ ನೀನೀಗ ಮುದ್ದುಕಾಲದ ಹಸುಳೆ ಕಂದ ಕಣೊ ಎಂದು ನಂಬಿಸಿ ಈ ತೊಟ್ಟಿಲಲ್ಲಿ ನಿನ್ನನ್ನು ತೂಗಿ ಮಲಗಿಸುತ್ತೇನೆಂದು ಹೇಳಿದ ಮೇಲೆಯೇ ಚಿಕ್ಕಪ್ಪ ವೆಂಕಟಲಕ್ಷ್ಮಿಯ ಕೈಯಿಂದ ಬಟ್ಟೆ ಬಿಚ್ಚಿಸಿಕೊಂಡದ್ದು. ಆ ಮಂದ ಬೆಳಕಿನಲ್ಲಿ ಚಿಕ್ಕಪ್ಪನ ಸುಂದರ ದೇಹ ದಿವ್ಯವಾಗಿ ಕಾಣುತ್ತಿತ್ತು. ಅವನ ದೇಹದಲ್ಲಿ ಯಾವ ಊನವೂ ಇಲ್ಲವೆಂದು ಖಚಿತವಾಗುತ್ತಿತ್ತು. ಅವನನ್ನು ಚಿಕ್ಕಮ್ಮ ಎತ್ತಿ ಭುಜದ ಮೇಲೆ ಹೊತ್ತುಕೊಂಡು ಬೆನ್ನು ತಟ್ಟಿ ಮೈ ಸವರಿ ಅವಳ ಅಂಗಾಂಗಗಳ ಸಂದುಗಳಲ್ಲಿ ಮಿಂಚು ಹರಿಸಿದರೂ ಅವನ ಪ್ರತಿಕ್ರಿಯೆ ಶೂನ್ಯವಾಗಿರುತ್ತಿತ್ತು. ಎರಡೂ ತೊಡೆಗಳನ್ನು ತುಂಬಿದ ತನ್ನ ಯವ್ವನದ ಎಡೆಗೆ ಒತ್ತಿಕೊಂಡು ಎರಡೂ ರಟ್ಟೆಗಳಿಂದ ಬಾಹುಬಂಧನದ ಬಿಗಿಯಲ್ಲಿ ತನ್ನ ಎದೆಯನ್ನು ಅವನ ಕಿಬ್ಬೊಟ್ಟೆಗೆ ಅದುಮಿದರೂ ಚಿಕ್ಕಪ್ಪ ಹಾಲುಗಲ್ಲದ ಹಸುಗೂಸಿನಂತೆ ವೆಂಕಟಲಕ್ಷ್ಮಿಯ ಕುತ್ತಿಗೆಯಿಂದ ಇಳಿಯುತ್ತಿದ್ದ ಬೆವರನ್ನು ಸುಮ್ಮನೆ ತುದಿ ನಾಲಿಗೆಯಿಂದ ನೆಕ್ಕುತ್ತಿದ್ದ. +ಅವನಿಗೆ ರತಿ ಅಮಲನ್ನು ನಿನ್ನ ಮೊಲೆಯಿಂದ ಕುಡಿಸು ಎಂದು ಹಿರಿಯಜ್ಜಿ ಹತಾಶೆಯಿಂದ ಹೇಳುತ್ತಿದ್ದಳು. ವೆಂಕಟಲಕ್ಷ್ಮಿಯು ಹಾಗೇ ಮಾಡಿದ್ದಳು. ಬೆತ್ತಲಾಗಿದ್ದ ಆಕೆ ತೊಡೆಮೇಲೆ ಮಲಗಿಸಿಕೊಂಡು ಉದ್ರೇಕದ ತನ್ನ ಮೊಲೆಯನ್ನು ಅವನ ಬಾಯಿಗೆ ಒತ್ತಿ ತುಂಬಿದಳು. ಉದ್ವೇಗದಿಂದ ಏರಿಳಿದ ಅವಳ ದೇಹದ ನೆರಳು ಗೋಡೆಯ ಮೇಲೆ ಆಡುತ್ತಿತ್ತು. ಚಿಕ್ಕಪ್ಪ ನಿಜವಾಗಿ ಹಾಲು ಕುಡಿಯುತ್ತಿದ್ದನೊ, ರತಿ ಅಮಲನ್ನು ಭ್ರಮಿಸುತ್ತಿದ್ದನೊ, ಗೊತ್ತಾಗುತ್ತಿರಲಿಲ್ಲ. ಅವನನ್ನು ಮೇಲೆ ಮಲಗಿಸಿಕೊ ಎಂದು ಅಜ್ಜಿ ಸೂಚನೆ ಕೊಡುತ್ತಿದ್ದಳು. ಊಹುಂ, ನಾನು ಮೊಲೆ ಬಿಟ್ಟು ಮೇಲೇಳಲಾರೆ ಎಂಬಂತೆ ಚಿಕ್ಕಪ್ಪ ಈಗವಳನ್ನು ಕಚ್ಚಿಕೊಂಡಿದ್ದ. ವೆಂಕಟಲಕ್ಷ್ಮಿಗೆ ಇವನನ್ನು ಪುರುಷನನ್ನಾಗಿಸಿಯೇ ರತಿ ರಾತ್ರಿಯನ್ನು ಪೂರ್ಣಗೊಳಿಸಬೇಕು ಎಂಬ ಹಠ ಬಂದಂತೆ ಕಾಣುತ್ತಿತ್ತು. ಚಿಕ್ಕಪ್ಪನನ್ನು ಹೊಸಗಾದಿಯ ಮೇಲೆ ಮಲಗಿಸಿದಳು. ಬೆವೆತು ತೋಯುತ್ತಿದ್ದಳು. ಯವ್ವನದ ಅವಳ ಆ ಕಂಪು ಕೊಠಡಿಯನ್ನು ಈಗ ತುಂಬಿಕೊಂಡಿತ್ತು. ಚಿಕ್ಕಪ್ಪನ ಮೇಲೆ ಮಲಗಿ ಅವನ ದೇಹದ ಇಂಚಿಂಚನ್ನೂ ಆವರಿಸಿ, ಹಿಂಡಿ ಹಿಚುಕಿ ಅಪ್ಪಿ ಬಿಗಿದಷ್ಟು ನುಲಿದು, ಅವನ ದೇಹದ ಯಾವುದೊ ಮೂಲೆಯಲ್ಲಿ ಇದ್ದ ಒಂದಿಷ್ಟು ರತಿ ಬೆವರ ಸುರಿಸಿ ಅಂಗಾಂಗಗಳಿಗೆ ಅಮಲು ತುರುಕಿ ಉದ್ರೇಕದಿಂದ ಚಿಮ್ಮುವಂತೆ ಮಾಡಿದ್ದಳು. ಹಿರಿಯಜ್ಜಿ ಗೆದ್ದಂತೆ ನಿಟ್ಟುಸಿರುಬಿಟ್ಟಿದ್ದಳು. ಆಮೇಲೆ ಚಿಕ್ಕಪ್ಪನನ್ನು ತೊಟ್ಟಿಲಿಗಿಟ್ಟು ತೂಗುತ್ತಿದ್ದಂತೆಯೇ ಆತ ಗೊರಕೆ ಹೊಡೆಯಲಾರಂಭಿಸಿದ್ದೆ. ಆಚರಣೆಯ ಕೊನೆಯ ಸುತ್ತು ಇನ್ನೂ ಮುಗಿದಿರಲಿಲ್ಲ. ವೆಂಕಟಲಕ್ಷ್ಮಿಯನ್ನು ಎತ್ತಿಕೊಂಡು ಅದೇ ತೊಟ್ಟಿಲಿಗೆ ಮಲಗಿಸಿ ಅವಳ ಕಿಬ್ಬೊಟ್ಟೆ ಮೇಲೆ ಅಷ್ಟೂ ಹೊತ್ತು ಮುಖವಿಟ್ಟು ಮುದ್ದು ಮಾಡಿ ತೂಗಬೇಕಿದ್ದನ್ನು ಆತ ಪೂರೈಸಲಾಗಿರಲಿಲ್ಲ. ಇನ್ನೂ ಕೊನೆಯಲ್ಲಿ ಹಿರಿಯಜ್ಜಿಯಿಂದ ಸತಿಪತಿಗಳಿಬ್ಬರೂ ಅಪ್ಪಿಕೊಂಡು ಕುಳಿತು ತೊಟ್ಟಿಲು ತೂಗಿಸಿಕೊಳ್ಳಬೇಕಾದ್ದನ್ನು ಮಾಡಲೂ ಆಗಿರಲಿಲ್ಲ. +ಅಂತೂ ವೆಂಕಟಲಕ್ಷ್ಮಿಯು ತನ್ನ ಸ್ವಸಾಮರ್ಥ್ಯದಿಂದಲೊ, ಅಜ್ಜಿಯರ ಮುದ್ದಿನಿಂದಲೊ, ರತಿ ರಾತ್ರಿಯ ಮೊದಲ ಆ ಮುದ್ದಿನಿಂದಲೊ, ಗರ್ಭ ಧರಿಸಿ ಅಶ್ವಿನಿಯನ್ನು ಎತ್ತಿ ಅದೇ ತೊಟ್ಟಿಲಿಗೆ ಹಾಕಿ ಅದನ್ನು ತೂಗುವಾಗ ಬದುಕು ಇದೆಷ್ಟೆಯಾ ಎಂದು ವ್ಯಾಕುಲಗೊಂಡಿದ್ದಳು. ರೇಡಿಯೊ ಚಿಕ್ಕಪ್ಪ ಅದೇ ಹಿತ್ತಲ ಬೇವಿನ ಮರದ ದೊಡ್ಡ ತೂಗುಯ್ಯಾಲೆಯ ಲೀಲೆಯಲ್ಲಿ ಆಕಾಶದ ಕಡೆ ನೆಟ್ಟ ನೋಟವನ್ನು ಬಾಣದಂತೆ ಬಿಡುತ್ತಾ ಸೂರ್ಯನನ್ನು ಮುಳುಗಿಸಿದ್ದ. ತಾತನ ಕಾಲದ ತೋಟ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಜೀತದವರೆಲ್ಲಾ ಚಿಕ್ಕಪ್ಪನನ್ನು ಕಂಡು ಹೆದರುತ್ತಿದ್ದರು. ಅವನ ಮೈಮೇಲೆ ಯಾವತ್ತೂ ಅನಾದಿ ದೆವ್ವಗಳು ಸೇರಿಕೊಂಡಿರುತ್ತವೆಂದು ಕೆಲಸ ಮಾಡುವಾಗ ಮಾತನಾಡಿಕೊಳ್ಳುತ್ತಿದ್ದರು. ತುಂಬಿ ತುಳುಕುತ್ತಿದ್ದ ಆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರದಿದ್ದರೂ ಅವರವರ ಎಂತೆಂತದೋ ಹಸಿವು ಒಬ್ಬೊಬ್ಬರನ್ನೂ ಬಾಧಿಸುತ್ತಿತ್ತು. ಇಂದಲ್ಲಾ ನಾಳೆ ಈ ಜೀತದವರೆಲ್ಲಾ ಸೇರಿಕೊಂಡು ಮನೆತನದ ಎಲ್ಲಾ ಆಸ್ತಿಯನ್ನೂ ಕಿತ್ತುಕೊಂಡು ಕೈಗೆ ಭಿಕ್ಷಾಪಾತ್ರೆಯನ್ನು ಕೊಟ್ಟು ಕಳಿಸುವುದು ನಿಶ್ಚಿತ ಎಂದು ಹಿರಿಯಜ್ಜಿ ಯಾವಗಲೊ ಒಮ್ಮೆ ತನ್ನ ಏಕಾಂತದಲ್ಲಿ ಪೈಶಾಚಿಕ ಭಾಷೆಯನ್ನು ಆಡುವಾಗ ಹೇಳುತ್ತಿದ್ದಳೆಂದು ಕಿರಿ ಅಜ್ಜಿ ಹೇಳಿದಂತೆ ನೆನಪು. ಅಜ್ಜಿಯರಿಗೆ ಯಾವಾಗಲೊ ಚಿಕ್ಕವರಾಗಿದ್ದ ನಮ್ಮದೇ ಚಿಂತೆ ಕಾಡುತ್ತಿತ್ತು. ಅಜ್ಜಿಯರ ತಾಯಾಳಿಕೆಯೂ ಮನೆಯಲ್ಲಿ ಕೈ ಜಾರುತ್ತಾ ಇದ್ದ ಗಂಡಸರ ವ್ಯವಹಾರಗಳೂ ಕಲಸಿ ಹೋಗುತ್ತಿದ್ದವು. +ಹಳೆಯದನ್ನೆಲ್ಲ ನೆನೆದರೆ ನನ್ನ ಧಮನಿಗಳು ಬಿರಿದು ಹೋಗುತ್ತವೆ. ಕಾಲಾಂತರದಿಂದಲೂ ಸುಖದ ಸುಗ್ಗಿಯಲ್ಲಿ ತೇಲಿದ್ದ ನಮ್ಮ ಮನೆತನವು ಕಾಲದ ಎಚ್ಚರವೇ ಇಲ್ಲದೆ ಎಲ್ಲವೂ ಹೀಗೆಯೇ ಅಂದವಾಗಿ ಮುಗ್ಧವಾಗಿ ಸುಖದ ಸವಿ ಬೆಳದಿಂಗಳಂತೆ ಶಾಶ್ವತವಾಗಿ ಸಾಗುತ್ತದೆಂದು ನಂಬಿದ್ದರು. ಮನೆಯೊಳಗಿದ್ದ ಅಜ್ಜಿಯರಿಗೆ ಹೊರ ಜಗತ್ತಿನ ಯಾವ ಬದಲಾವಣೆಯೂ ತಿಳಿಯುತ್ತಿರಲಿಲ್ಲ. ಅವರು ಅವರವರ ಮೋಹದ ರಮ್ಯಗಾನದ ಕತೆಗಳ ಪ್ರಾಣಪಕ್ಷಿಯ ತೊಟ್ಟಿಲಲ್ಲಿ ಜೋಗುಳವನ್ನು ಮಾತ್ರವೇ ಆಡುತ್ತಾ, ಕೇಳುತ್ತಾ, ಕಲ್ಪನೆಯ ರೆಕ್ಕೆ ಮೇಲೆ ಕೂತು ಅಕಾಶದಲ್ಲೆಲ್ಲ ಸಂಚರಿಸಿ ಮುದ್ದು ಮೊಮ್ಮಗಳು ಅಶ್ವಿನಿಯ ನಗೆಯಲ್ಲಿ ತೇಲಿಹೋಗಿದ್ದರು. ಹಿಂದಿನಿಂದಲೂ ಒದಗಿ ಬಂದಿದ್ದ ಅಷ್ಟೆಲ್ಲಾ ಆಸ್ತಿಯ ಒಕ್ಕಲುತನವನ್ನೆಲ್ಲ ಜೀತಗಾರರು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೂ ಕೂಡ ಅವರಿಗೆ ತಿಳಿಯುತ್ತಿರಲಿಲ್ಲ. ಆದರೂ ಹಿರಿಯಜ್ಜಿ ಏನೇನೊ ಅಪಶಕುನ ಹೊಳೆಯುತ್ತಿದೆ ಎಂದಾಗಲೆಲ್ಲಾ ಮನೆಯ ಗಂಡಸರು ಆಕೆಯ ಬಾಯಿ ಮುಚ್ಚಿಸುವಂತೆ ಗಡಬಡ ಮಾತನಾಡುತ್ತಿದ್ದರು. ಆಗೆಲ್ಲಾ ವೆಂಕಟಲಕ್ಷ್ಮಿಯು ತನ್ನ ಏಕಮಾತ್ರ ಪುತ್ರಿ ಅಶ್ವಿನಿಯನ್ನು ತೊಡೆ ಮೇಲೆ ಹಾಕಿಕೊಂಡು ಹಜಾರದ ಕಂಬಕ್ಕೆ ಒರಗಿಕೊಂಡು ಏನನ್ನೋ ಲೆಕ್ಕಿಸುತ್ತಿದ್ದಳು. +ಅತ್ತ ಆ ನಿಷ್ಠುರಣಿ ಕಾಲವು ಎಲ್ಲಾ ಲೆಕ್ಕವ ತೂಗಿ ನಮ್ಮೆಲ್ಲರನ್ನೂ ತೂಗಿದ್ದ ಪ್ರಾಣದ ತೊಟ್ಟಿಲ ಹಗ್ಗವನ್ನೂ ಸವೆಸಿ ಜಗ್ಗಿ ಎಳೆದು ತುಂಡುಮಾಡಿ ಹೊಕ್ಕಳುಬಳ್ಳಿಯ ಬಂಧನವನ್ನು ಕಿತ್ತುಹಾಕಿತ್ತು. ಮನೆತನದ ಕೆಲಸಗಾರರು ಯಾಕೋ ಜರೂರತ್ತಿನಿಂದ ಓಡಾಡುತ್ತಿದ್ದರು. ಹಿರಿಯಜ್ಜಿಯ ಮಾತಿಗೆ ಅವರು ಗೇಲಿಯ ಉತ್ತರ ಕೊಟ್ಟು, ಮೀಸೆ ಬಿಡದಿದ್ದ ಅವರು ದಪ್ಪ ಮೀಸೆ ಬಿಟ್ಟು, ಕಾಲದ ತಲೆ ಮೇಲೆ ಕೂತಂತೆ ನೋಡುತ್ತಿದ್ದರು. ಏನೋ ಸರಕಾರ ಅವರ ಪರವಾಗಿ ಎಂತದೊ ಕಾನೂನು ತಂದಿದೆ ಎಂಬ ವಿಷಯ ಸ್ವತಃ ನಮ್ಮ ಮನೆಯ ಯಾರಿಗೂ ಗೊತ್ತಾಗದೆ ಜೀತದವರನ್ನೇ `ಅದೆಂತದ್ರೊ ನಿಮ್ಮ ಕಾನೂನು’ ಎಂದು ಕೇಳಿದ್ದರು. ಕಿರಿಯಜ್ಜಿ ಆ ಕಾನೂನನ್ನು ಕೇಳಿದ ಕೂಡಲೇ ಬೆಂಕಿಯಾಗಿ `ಅದು ಎಂದೆಂದಿಗೂ ಅಸಾಧ್ಯವಾದ ಮಾತು. ನನ್ನ ಜೀವ ಇರೋತನಕ ಅದು ನಡಿಯೊ ಆಗಿಲ್ಲ. ನಾನಂತೂ ಯಾವ ಹಮ್ಮೀರ ಸರದಾರ ಬಂದರೂ ಈ ಜೀತದವರಿಗೆ ಭೂಮಿ ಬಿಟ್ಟುಕೊಡುವುದಿಲ್ಲ’ ಎಂದು ರಂಪ ಮಾಡಿ ನಾಳೆಯಿಂದ ಯಾವ ಕೆಲಸದವನೂ ನಮ್ಮ ಬಳಿ ಬರುವಂತಿಲ್ಲ. ಬಂದದ್ದೇ ಆದರೆ ಅವರ ರಕ್ತ ಕುಡಿದುಬಿಡುತ್ತೇನೆ ಎಂದು ಆ ರಾತ್ರಿಯೆಲ್ಲಾ ರಗಳೆ ಮಾಡಿದ್ದಳು. +ಇದಾದ ಕೆಲವೇ ದಿನಗಳಲ್ಲಿ ಅಂತಹ ಪ್ರಾಣ ಪಕ್ಷಿಯ ವಿಶ್ವಾಸದ ತೊಟ್ಟಿಲು ಕೂಡ ನಮ್ಮನ್ನು ಕಾಯಲಾರದೇ ಹೋಯಿತು. ಹಿರಿಯಜ್ಜಿ ಕಾನೂನಿನ ಸುದ್ದಿ ತಿಳಿದ ಕ್ಷಣದಿಂದ ಅನ್ನಾಹಾರ ಬಿಟ್ಟು ಯಾರನ್ನೂ ನೋಡದೆ ಮಾತನಾಡಿಸದೆ ತೊಟ್ಟಿಲನ್ನು ಹಿಡಿದು ಅದರ ಮೇಲೆ ತಲೆಯಿಟ್ಟು ಯಾವತ್ತಿನಂತೆಯೇ ತನ್ನ ಪೈಶಾಚಿಕ ಭಾಷೆಯಲ್ಲಿ ಮನೆತನವನ್ನು ಕಾಯುವ ನುಡಿಗಳನ್ನು ಮಣಿ ಮಣಿಸುತ್ತಾ ಅಲ್ಲೇ ಐಕ್ಯವಾದಂತೆ ಬೇರುಬಿಟ್ಟಳು. ಊರ ತುಂಬ ಸರಕಾರದವರು ಬಂದು ಉಳುವವನೇ ಭೂ ಒಡೆಯ ಎಂದು ದಿಬ್ಬದ ಮನೆಯ ಎಲ್ಲ ಜಮೀನನ್ನು ಬಿಡಿಸಿ ಬಡವರಿಗೆ ಹಂಚಿಬಿಡುತ್ತಾರೆ ಎಂಬ ಸುದ್ದಿ ಹಬ್ಬಿ, ಆ ಜನರೆಲ್ಲ ಸಡಗರದಿಂದ ಓಡಾಡುತ್ತಿದ್ದರೆ ನಮ್ಮ ಮನೆಯ ಒಳಗೆ ದೀಪ ಹಚ್ಚುವುದಕ್ಕೂ ಮನಸ್ಸಾಗದೇ ಯಾವುದೊ ಮಹಾಕಮರಿಯ ಕತ್ತಲ ಪಾತಾಳಕ್ಕೆ ಬಿದ್ದಂತೆ ವದ್ದಾಡುತ್ತಿದ್ದೆವು. ನೂರಾರು ಬಗೆಯ ಭೀಕರ ಕತೆ ಕಟ್ಟಿ ಮನೆತನದ ಒಬ್ಬೊಬ್ಬರನ್ನೂ ಸರಪಳಿಯಲ್ಲಿ ಬಿಗಿದುಕೊಂಡು ಹೋಗಿ ಸರಕಾರದವರು ಗಲ್ಲಿಗೇರಿಸುತ್ತಾರೆ ಎಂದು ಗುಲ್ಲೆಬ್ಬಿಸಿದ ಮೇಲೆ ಇದ್ದ ಬಿದ್ದ ಗಂಡಸರೆಲ್ಲಾ ಅವಿತುಕೊಂಡರು. ಅಶ್ವಿನಿ ಅದಾವುದನ್ನೂ ಅರಿಯದೆ ನಾಳೆಯ ತನ್ನ ನಗುವ ಯಾರೂ ಕಸಿಯಲಾರರೆಂದು ಗಿಲಕೆ ಗೆಜ್ಜೆಯ ಕುಣಿಸುತ್ತಾ ಹಿರಿಯಜ್ಜಿಯ ಕಡೆ ನೋಡುತ್ತಿದ್ದಳು. ವೆಂಕಟಲಕ್ಷ್ಮಿ ಆಗಲೆ ಗಂಟು ಕಟ್ಟಿ ನಾಳೆಯ ಚಿಂತೆಯ ತಲೆಮೇಲೆ ಹೇರಿಕೊಂಡು ಗಟ್ಟಿಯಾಗಿ ಅಳಲಾರದೆ ಸುಮ್ಮನೆ ಕಂಬನಿ ಸುರಿಸುತ್ತಾ ರೇಡಿಯೊ ಹುಚ್ಚಿನ ಗಂಡನ ನೆನೆದು ವ್ಯಗ್ರತೆಯ ಅಸಹಾಯಕ ಸಂಕಟವನ್ನು ಹೊರಹಾಕಲಾರದೆ ನಾಳೆಯನ್ನು ಹುಡುಕುತ್ತಿದ್ದಳು. ಅಶ್ವಿನಿಯ ನಗೆಯಿಂದಾದರೂ ಹಿರಿಯಜ್ಜಿಯನ್ನು ಎಬ್ಬಿಸಬಹುದೆಂದು ಪ್ರಯತ್ನಿಸಿದರೂ ಆಕೆ ಎಚ್ಚರಗೊಂಡಿರಲಿಲ್ಲ. +ಜನ ಅನ್ನುತ್ತಿದ್ದಂತೆಯೇ ಸರಕಾರದ ಮಂದಿ ಪೇದೆಗಳ ಸಹಿತ ಮನೆಯ ಅಂಗಳಕ್ಕೆ ಬಂದೇಬಿಟ್ಟರು. ನಮ್ಮ ಹೊಲ ಗದ್ದೆ ತೋಟಗಳಲ್ಲಿ ನಿಯತ್ತಿನಿಂದ ದುಡಿಯುತ್ತಿದ್ದ ಆ ಜನರೆಲ್ಲ ನಮ್ಮ ವಿರುದ್ಧ ಕೂಗು ಹಾಕಿ ಆ ಕ್ಷಣದಲ್ಲೇ ಇಲ್ಲೇ ನಮ್ಮ ಎಲ್ಲರ ಜಮೀನನ್ನೂ ಬಿಟ್ಟುಕೊಡಬೇಕು ಎಂದು ಗದ್ದಲವೆಬ್ಬಿಸುತ್ತಿದ್ದರು. ಸರಕಾರದವರ ಜೊತೆ ಮಾತನಾಡಲು ನಮ್ಮ ಮನೆಯ ಯಾರೊಬ್ಬರೂ ತಯಾರಿರಲಿಲ್ಲ. ಎಲ್ಲರೂ ಸೋತು ಅಪರಾಧಿಗಳಂತೆ ಬಚ್ಚಿಟ್ಟುಕೊಂಡಿದ್ದರು. ನಾವು ಹುಡುಗರು ಅಟ್ಟ ಸೇರಿ ಕಿಂಡಿಗಳ ಮೂಲಕ ಎಲ್ಲವನ್ನೂ ಬೆದರಿದ ಕಂಗಳಿಂದ ದಿಟ್ಟಿಸುತ್ತಿದ್ದೆವು. ಪ್ರಾಯದ ಹೆಂಗಸರು ಅಡುಗೆಮನೆಯ ಕತ್ತಲೆಯಲ್ಲಿ ಸೆರಗು ಮುಚ್ಚಿಕೊಂಡು ಮರೆಯಾಗಿದ್ದರೆ, ಮುದುಕಿಯರು ಜೀವ ಬಿಡುವವರಂತೆ ಹಜಾರದಲ್ಲಿ ಬಿದ್ದುಕೊಂಡು ನರಳುತ್ತಿದ್ದರು. ಆಗಲೂ ಅಂತಹ ಮನೆತನದ ಅವಸಾನದ ಕಠೋರ ಸ್ಠಿತಿಯಲ್ಲೂ ರೇಡಿಯೊ ಚಿಕ್ಕಪ್ಪ ಜಗತ್ತಿನ ಯಾವುದೇ ಭಾಷೆಯ ಕರ್ಕಶ ಸದ್ದಿನ ಮಾತುಗಳನ್ನು ಹಾಕಿಕೊಂಡು ಮನೆಯ ಮಾಡಿಗೆ ಮುಖವಿಟ್ಟು ದಿಟ್ಟ ಚಿತ್ತದಿಂದ ಆಲಿಸುತ್ತಿದ್ದ. ಮೊಟ್ಟಮೊದಲನೆಯ ಬಾರಿಗೆ ಅವನ ಕಣ್ಣಲ್ಲಿ ನೀರು ಜಾರಲೊ ಬೇಡವೊ ಎಂಬಂತೆ ಹೊಯ್ದಾಡುತ್ತಿದ್ದವು. ಜನರೆಲ್ಲಾ ನಮ್ಮ ಜಮೀನನ್ನು ಬಿಟ್ಟುಕೊಡಿ ಎಂದು ಕೂಗಾಡುತ್ತಿದ್ದರೆ ಅಂಜದ ಆ ಅಶ್ವಿನಿಯು ವೆಂಕಟಲಕ್ಷ್ಮಿಯ ಕಂಬನಿಯನ್ನು ತನ್ನ ಬೆರಳ ತುದಿಗೆ ಅಂಟಿಸಿಕೊಂಡು ಬಾಯಿಗಿಟ್ಟು ಉಪ್ಪುಪ್ಪಾದ ರುಚಿಗೆ ಮುಖ ಕಿವುಚಿ ಆ ಜನರ ಕರ್ಕಶ ಆವೇಶವನ್ನು ತಾನು ಸಹಿಸಿಕೊಳ್ಳಬಲ್ಲೆ ಎಂಬಂತೆ ಉಸಿರಾಡುತ್ತಿದ್ದಳು. +ಕಾಲಾಂತರದಿಂದಲೂ ತಮಗಾದ ಅನ್ಯಾಯಕ್ಕೆ ಈ ಕ್ಷಣವೇ ನ್ಯಾಯ ಸಿಗಬೇಕು ಎಂಬ ಅವರ ಆಕ್ರೋಶದ ಕೂಗು ನಮ್ಮ ಮನೆಯನ್ನು ನುಂಗುತ್ತಿತ್ತು. ಹಿರಿಯಜ್ಜಿಯನ್ನು ಆ ಯಾವ ಗದ್ದಲವೂ ಎಬ್ಬಿಸಿರಲಿಲ್ಲ. ಸರಕಾರದ ಹಿರಿಯ ಅಧಿಕಾರಿಯೇ ಹೋಗಿ ರೇಡಿಯೊ ಚಿಕ್ಕಪ್ಪನ ರೆಟ್ಟೆ ಹಿಡಿದು ಅಲುಗಾಡಿಸಿದಾಗ, ಆತ ಬೆಚ್ಚಿ ಬಿದ್ದು ಏನು ಏನು ಎಂದು ಬಡಬಡಿಸಿದ್ದ. ಈ ಮನೆಯ ಎಲ್ಲಾ ಆಸ್ತಿಪಾಸ್ತಿಯ ಆಧಾರ ಪತ್ರಗಳು ಎಲ್ಲಿವೆ ಎನ್ನುತ್ತಿದ್ದಂತೆಯೇ ಆತ ಖಜಾನೆಯ ಕಡೆ ಕೈತೋರಿಸುತ್ತಿರಬೇಕಾದರೆ ಕಿರಿ ಅಜ್ಜಿಯು ಓಡಿ ಹೋಗಿ ಬೀಗ ತೆಗೆದು ಎಲ್ಲಾ ಅಧಾರ ಪತ್ರಗಳನ್ನೂ ತೆಗೆದುಕೊಂಡು ಹೋಗಿ ಯಾವತ್ತೂ ಉರಿಯುತ್ತಿದ್ದ ನೀರೊಲೆಗೆ ತುರುಕಿ ದಗದಗಿಸಿ ಬೆಂಕಿ ಮಾಡಿ ಬೂದಿ ಮಾಡಿಬಿಟ್ಟಳು. `ಹೇ ಮುದಿ ರಂಡೇ’ ಎಂದು ಅಧಿಕಾರಿಗಳು ತಡೆಯಲು ಹೋದರೂ ಪ್ರಯೋಜನವಾಗಿರಲಿಲ್ಲ. ಜನ ಕಿರಿ ಅಜ್ಜಿಯನ್ನು ಅದೇ ಒಲೆಗಿಕ್ಕಿ ಸುಟ್ಟುಬಿಡುತ್ತಾರೆಂದು ನಾವೆಲ್ಲ ಗಡಗಡ ನಡುಗುತ್ತಿರಬೇಕಾದರೆ ಹಾಗೇನೂ ಆಗದೆ ನೀವೇ ಆಸ್ತಿ ಪತ್ರ ಬರೆದುಕೊಡಿ ಎಂದು ಬರೆಸಿಕೊಂಡು ಅವರವರಿಗೆ ಸಲ್ಲಬೇಕಾದ ಭೂಮಿಯನ್ನು ಚಾವಡಿಯಲ್ಲಿ ಹಂಚಿಕೊಳ್ಳಲು ಕಿರಿಚಾಡುತ್ತಿದ್ದರು. +ಅವತ್ತು ನಿಜವಾಗಿಯೂ ಸೂರ್ಯ ಸತ್ತಂತೆ ಮುಳುಗಿದ್ದ, ನಕ್ಷತ್ರಗಳು ಅತ್ತಂತೆ ಕಣ್ಣು ಕೆಂಪು ಮಾಡಿಕೊಂಡು ಮಸುಕಾಗಿ ಆಕಾಶದಲ್ಲಿ ಅನಾಥರಂತೆ ಕಾಣಿಸಿಕೊಂಡಿದ್ದವು. ಜನ ತಮ್ಮ ಕೇರಿಗಳಲ್ಲಿ ತಮಟೆ ನಗಾರಿಗಳನ್ನು ಆಗಲೇ ಬಾರಿಸುತ್ತಾ ಹಿಂದೆಂದೂ ಇಲ್ಲದಷ್ಟು ಸಿರಿಯಿಂದ ಸಡಗರ ಪಡುತ್ತಿದ್ದರು. ಕಿರಿ ಅಜ್ಜಿ ಕುದಿಯುತ್ತಿದ್ದಳು. ಎಲ್ಲ ಹೆಂಗಸರೂ ತೊಟ್ಟಿಲ ಬಳಿ ಸುಷುಪ್ತಿಯಲ್ಲಿದ್ದ ಹಿರಿಯಜ್ಜಿಯ ಸುತ್ತ ಕುಳಿತು ಗೋಳಾಡಿ ಎದ್ದೇಳು ಎಂದರೂ ಆಕೆ ತಲೆ ಮೇಲೆತ್ತಿರಲಿಲ್ಲ. ಅವಳ ದೇಹದಲ್ಲಿ ಸೂಲು ಅನಾಥವಾಗಿ ಬಿಕ್ಕುತ್ತಿತ್ತು. ಜಮೀನು ಬಿಟ್ಟುಕೊಡದಿದ್ದರೆ ಗಲ್ಲಿಗೇರಿಸಲಾಗುತ್ತದೆ ಎಂಬ ಭೀತಿಯನ್ನು ಊರ ತುಂಬ ತಮಟೆ ನಗಾರಿಯಲ್ಲಿ ಬಾರಿಸಿ ಹರ್ಷೋದ್ಗಾರಗಳಿಂದ ಜನ ಕೇಕೆ ಹಾಕುತ್ತಿದ್ದರು. ಅವರ ಕಾಲಾಂತರದ ಭೂಮಿಯ ಕನಸು ಎಲ್ಲೆ ಮೀರಿ ಕುಣಿಯುತ್ತಿತ್ತು. ರೇಡಿಯೊ ಚಿಕ್ಕಪ್ಪ ಬೇವಿನ ಮರಕ್ಕೆ ನೇಣು ಹಾಕಿಕೊಂಡಂತೆ ಉಯ್ಯಾಲೆಯಲ್ಲಿ ಕುಳಿತು ಆ ಕತ್ತಲಲ್ಲೂ ಗದ್ದಲದಲ್ಲೂ ರೇಡಿತೊ ಕೇಳುತ್ತಾ ಎಲ್ಲೋ ಕರಗಿ ಹೋಗುತ್ತಿದ್ದ. ಜಮೀನೆಲ್ಲವೂ ತಮ್ಮದಾಗುವುದೆಂದು ಊರಮ್ಮನಿಗೆ ಪೂಜೆ ಮಾಡಿ ಬೀದಿಯಲ್ಲಿ ಮೆರವಣಿಗೆ ಹೊರಟು ನಮ್ಮ ಮನೆಯ ಮುಂದೆ ಅಬ್ಬರಿಸಿ ತಮಟೆ ನಗಾರಿ ಬಡಿದು ರಣ ಕಹಳೆ ಊದಿ ಗೆದ್ದಂತೆ ಕೂಗಾಡಿ ಕೋಳಿ ಕೂಗುವ ತನಕ ಅವರು ಮೆರೆಯುತ್ತಲೇ ಇದ್ದರು. ನೂರಾರು ಎಕರೆ ತೋಟವನ್ನು ಹಂಚಿಕೊಳ್ಳುವಲ್ಲಿ ಅವರಲ್ಲೇ ಕೆಲವರು ಆಗಲೇ ಕಚ್ಚಾಟಕ್ಕೂ ತೊಡಗಿ ತನ್ನ ಪಾಲು ಇಷ್ಟಿಷ್ಟು ಎಂದು ಗದ್ದಲಮಾಡಿಕೊಳ್ಳುತ್ತಿದ್ದರು. ಕಾಲಾಂತರದ ಅವರ ಹಸಿವಿನ ನ್ಯಾಯ ಅವರವರನ್ನೇ ಹಿಡಿದು ಅಲುಗಾಡಿಸುತ್ತಿತ್ತು. ಕೆಳಗಿನ ಕೇರಿಯವರ ಸಿರಿಸುಗ್ಗಿಗೆ ಆಕಾಶವೇ ಕಂಪಿಸುವಂತಿತ್ತು. +ಎಷ್ಟೋ ಹೊತ್ತಾದರೂ ನಮ್ಮ ಮನೆಯ ದಿಡ್ಡಿ ಬಾಗಿಲನ್ನು ತೆರೆಯಲು ನಮಗಾರಿಗೂ ಧೈರ್ಯವಿರಲಿಲ್ಲ. ಸರಕಾರಿ ಅಧಿಕಾರಿಗಳು ಹೊರಟ ಮೇಲೆ ನಮಗೆಲ್ಲ ಬೇರೊಂದು ಭೀತಿ ಆವರಿಸಿತ್ತು. ಕಾಲಾಂತರದಿಂದ ನಮ್ಮ ಸಂಪತ್ತನ್ನೆಲ್ಲ ಕೊಳ್ಳೆಹೊಡೆದು ತುಂಬಿಕೊಂಡಿದ್ದಾರೆಂದು ಅದನ್ನೆಲ್ಲ ಕಸಿದುಕೊಳ್ಳಲು ಜನರೆಲ್ಲ ಒಗ್ಗಟ್ಟಾಗಿ ಬಂದು ಮನೆ ಮೇಲೆ ಧಾಳಿ ಮಾಡುತ್ತಾರೆಂಬ ಸುದ್ದಿ ಅದೇ ಜೀತಗಾರನೊಬ್ಬನಿಂದ ತಿಳಿದು ನಮ್ಮ ಸಂಕಟಕ್ಕೆ ಕೊನೆಯೇ ಇರಲಿಲ್ಲ. ಯಾವ ಕ್ಷಣದಲ್ಲಿ ಅವರು ಬಂದು ಅತ್ಯಾಚಾರಗೈದು ಬೆಂಕಿ ಹಚ್ಚಿ ಎಲ್ಲರನ್ನೂ ಮುಗಿಸಿಬಿಡುವರೋ ಎಂದು ತತ್ತರಿಸುತ್ತಿದ್ದೆವು. ವೆಂಕಟಲಕ್ಷ್ಮಿಯು ಅಶ್ವಿನಿಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಿ ಹೋಗಲು ತುದಿಗಾಲಲ್ಲಿ ನಿಂತಿದ್ದರೂ ಕಿರಿ ಅಜ್ಜಿ ತಡೆದು ಬೇಡ, ಬೇಡ, ಹೊರಗಡೆ ಅವರೆಲ್ಲ ಸೀಳು ನಾಯಿಯಂತೆ ಕಾದಿದ್ದಾರೆ. ನೀನು ಹೊರಗೋಡಿದ ಕೂಡಲೆ ಹರಿದು ತಿಂದುಹಾಕುವರೆಂದು ತಡೆಯುತ್ತಿದ್ದಳು. ನಿಜಕ್ಕೂ ಮನೆಯ ಹೊರಗೆ ಏನೇನೋ ಗದ್ದಲ ಕೇಳಿ ಬರುತ್ತಿತ್ತು. ಮೂರು ದಿನಗಳ ತನಕ ನಾವ್ಯಾರೂ ಹೊರಕ್ಕೆ ಬಂದಿರಲಿಲ್ಲ. ಜನ ದಿಡ್ಡಿ ಬಾಗಿಲ ಬಡಿದು ಸಾಕಾಗುತ್ತಿದ್ದರು. ಕುಡಿಯಲು ಗುಟುಕು ನೀರೂ ಸಿಗದೆ ನಾವೆಲ್ಲ ಸಾವಿನ ಭೀತಿಯಿಂದ ತತ್ತರಿಸಿ ಹೋಗಿದ್ದೆವು. ಆ ಪ್ರಾಣಪಕ್ಷಿಯ ತೊಟ್ಟಿಲು ನಮ್ಮನ್ನೆಲ್ಲ ಹೊತ್ತುಕೊಂಡು ಹೋದಂತೆ ಆ ಭೀತಿಯ ಮಂಪರು ನಿದ್ದೆಯಲ್ಲಿ ನಾನು ಕನಸು ಕಂಡು ಕಣ್ಣು ಬಿಟ್ಟರೆ ದೊಡ್ಡ ಗದ್ದಲದಿಂದ ಜನರೆಲ್ಲಾ ಸೇರಿ ದಿಡ್ಡಿ ಬಾಗಿಲನ್ನು ಮುರಿದು ಹಾಕುತ್ತಿದ್ದರು. ಹೆಂಗಸರು ಮಕ್ಕಳು ಅಳಲೂ ಶಕ್ತಿಯಿಲ್ಲದೆ ಒಂದೊಂದು ಬಿಲ ಸೇರಿಕೊಂಡಂತೆ ದೊಡ್ಡ ಮನೆಯ ಮೂಲೆಗಳಲ್ಲೊ, ಗುಡಾಣಗಳ ಸಾಲಿನಲ್ಲೊ ಅವಿತುಕೊಂಡಿದ್ದರು. ಅಟ್ಟದ ಮೇಲೆ ನಾವು ಸಣ್ಣವರು ಗೊಳೋ ಎಂದು ಆಕಾಶವನ್ನು ಆರ್ತವಾಗಿ ಕರೆಯುತ್ತಿದ್ದೆವು. ಕಿರಿಯಜ್ಜಿ ತಾತನ ಕಾಲದ ತುಕ್ಕು ಹಿಡಿದ ಉದ್ದ ಕತ್ತಿಯೊಂದನ್ನು ಹಿಡಿದು ಬಾಗಿಲ ಬಳಿ ನಿಂತು ಹುಚ್ಚಿಯಂತೆ ಕೂಗಾಡುತ್ತಿದ್ದಳು. ಹೊರಗಿನ ನಡುರಾತ್ರಿಯ ಕತ್ತಲು ಪೂತ್ಕರಿಸುತ್ತಿತ್ತು. ಆಗಲೂ ಹಿರಿಯಜ್ಜಿ ತೊಟ್ಟಿಲು ಬಿಟ್ಟು ಮೇಲೆದ್ದಿರಲಿಲ್ಲ. ವೆಂಕಟಲಕ್ಷ್ಮಿ ಕಚ್ಚೆ ಹಾಕಿ ಬೆನ್ನಿಗೆ ಬಲವಾಗಿ ಅಶ್ವಿನಿಯನ್ನು ಬಿಗಿದುಕೊಂಡು ಉದ್ವೇಗವನ್ನು ತಡೆಯಲಾರದೆ ಕಂಪಿಸುತ್ತಾ ಕೂಗಿಕೊಳ್ಳುತ್ತಿದ್ದರೆ ಅದೇ ರೇಡಿಯೊ ಚಿಕ್ಕಪ್ಪ ಹಜಾರದಲ್ಲಿ ಒಬ್ಬನೇ ನಿಂತು ಕಿವಿಗೆ ರೇಡೊಯೊ ಇಟ್ಟುಕೊಂಡು ಅವಕಾಶದ ಕೊನೆಯ ಕ್ಷಣವನ್ನು ಎದುರು ನೋಡುತ್ತಿದ್ದ. +ಕಿರಿ ಅಜ್ಜಿ ನೀರೊಲೆಗೆ ಹಾಕಿ ಸುಟ್ಟದ್ದು ನಿಜವಾದ ಹಕ್ಕು ಪತ್ರಗಳಲ್ಲವೆಂತಲೂ ಆಸ್ತಿ ಪತ್ರದ ಪತ್ರಗಳು ಇನ್ನೊಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿವೆಯೆಂದೂ ಯಾರೊ ಹೇಳಲಾಗಿ ಅವನ್ನು ಕಿತ್ತುಕೊಂಡು ಲೂಟಿ ಮಾಡಲು ಕೆಲಸದವರೆಲ್ಲಾ ಹುಚ್ಚಾಗಿ ಆ ನಡುರಾತ್ರಿಯಲ್ಲಿ ಬಂದು ದಂಗೆಯೆದ್ದಿದ್ದರು. ನಾನು ಅಟ್ಟದ ಮೂಲೆಗೆ ಹೋಗಿ ಹೆಂಚುಗಳನ್ನು ಸರಿಸಿ ಹೊರಗನ್ನು ನೋಡಿದ ಕೂಡಲೆ ಬಳಬಳನೆ ಉಚ್ಚೆ ಹೊಯ್ದುಕೊಂಡೆ. ಒಬ್ಬೊಬ್ಬರೂ ಪಂಜಿನಂತೆ ಉರಿಯುತ್ತಿದ್ದರು. ಬೆಂಕಿಯ ಅವರ ಕೆನ್ನಾಲಿಗೆ ಮನೆಯನ್ನು ನುಂಗುತ್ತಿತ್ತು. ಅವರು ಬಾಗಿಲನ್ನು ಮುರಿದು ಒಳಕ್ಕೆ ಬಂದೇಬಿಟ್ಟರು. ಮಹಾಕಾಳಿಂಗ ಸರ್ಪದಂತೆ ನುಗ್ಗಿ ಕಿರಿಯಜ್ಜಿಯನ್ನು ಸುತ್ತಿಕೊಂಡರು. ಅವಳು ತುಕ್ಕಿ ಹಿಡದ ಕತ್ತಿಯಿಂದ ಒಂದಿಬ್ಬರನ್ನು ತಿವಿದಳಾದರೂ ಅವರಿಗೇನೂ ಆಗದೆ, `ಮುಂಡೇ ನಿನ್ನ ಕೊಬ್ಬು ಇನ್ನೂ ಕರಗಿಲ್ಲವೇ’ ಎಂದು ಪಂಜಿನ ತುದಿಯಿಂದ ಬಡಿದರು. ಒಬ್ಬೊಬ್ಬರೂ ಕೈಗೆ ಸಿಕ್ಕಿದ್ದನ್ನು ದೋಚಿದರು. ಯಾರೊ ರೇಡಿಯೊ ಚಿಕ್ಕಪ್ಪನ ರೇಡಿಯೊವನ್ನು ಬಲವಂತವಾಗಿ ಹೊಡೆದು ಕಸಿಯುತ್ತಿದ್ದರೂ ಅದನ್ನಾತ ತನ್ನ ಪ್ರಾಣವೆಂಬಂತೆ ಬಿಡದೆ ಬಿದ್ದುಕೊಂಡು ಎದೆಗೆ ಅವುಚಿಕೊಂಡು ಆಗಲೂ ಅದರ ಕರ್ಕಶ ಶಬ್ಧವನ್ನು ಕಿವಿಗೆ ಒತ್ತಿಕೊಂಡು ನಾನು ಇದನ್ನು ಕೊಡಲಾರೆ ಎಂದು ಅಂಗಲಾಚಿ ಬೇಡುತ್ತಿದ್ದ. ಆಕ್ರೋಶದ ಜನ ಧಾನ್ಯದ ಮೂಟೆಗಳನ್ನು ಹೊತ್ತು ಸಾಗುತ್ತಿದ್ದರೆ ಕಾಲಾಂತರದ ಹತಾರು ಗುಡಾಣಗಳನ್ನು ಹೊಡೆದುರುಳಿಸಿ ಅವುಗಳನ್ನು ಬಚ್ಚಿಟ್ಟಿದ್ದ ಏನೇನನ್ನೋ ಅತ್ಯಂತ ಆನಂದದಿಂದ ಬಾಚಿಕೊಂಡು ಓಡಿ ಹೋಗುತ್ತಿದ್ದರು. ಕಬ್ಬಿಣದ ಪೆಟ್ಟಿಗೆಯನ್ನು ಕೊಡಲಿಯಿಂದ ಸೀಳಿ ನಗ ನಾಣ್ಯ ಒಡವೆಯನ್ನೆಲ್ಲ ದೋಚುತ್ತಾ ಮನೆಯ ಇಂಚಿಂಚನ್ನೂ ಹುಡುಕುತ್ತಿದ್ದರು.ಅಟ್ಟದ ಮೇಲೆ ನಾವೆಲ್ಲ ಹುಡುಗರು ಇಲಿ ಮರಿಗಳಂತೆ ಪ್ರಾಣ ಉಳಿಸಿಕೊಳ್ಳಲು ತತ್ತರಿಸುತ್ತಿದ್ದೆವು. ಮನೆಯ ತುಂಬ ಆಗಲೆ ಬೆಂಕಿಯ ಹೊಗೆ ವ್ಯಾಪಿಸುತ್ತಿತ್ತು. ಪಂಜು ಹಿಡಿದು ಒಳಕ್ಕೆ ನುಗ್ಗಿದವರು ವಿಕಾರವಾಗಿ ನಾಲಿಗೆಯನ್ನು ಚಾಚುತ್ತಿದ್ದರು. ವೆಂಕಟಲಕ್ಷ್ಮಿಯು ಅದಾವ ಮಾಯೆಯಲ್ಲೊಮಿಂಚಿನಂತೆ ಮಾಯವಾಗಿದ್ದಳು. ದಿಡ್ಡಿ ಬಾಗಿಲ ಬಳಿ ಕಿರಿ ಅಜ್ಜಿ ಬೆಂಕಿ ತಗುಲಿ ವಿಲವಿಲ ಒದ್ದಾಡಿ ಸುಟ್ಟುಹೋಗಿದ್ದಳು. ಹಜಾರದ ಗೋಡೆ ಸಾಲಿನಲ್ಲಿದ್ದ ಭತ್ತ, ರಾಗಿ ಕಾಳಿನ ಮೂಟೆಗಳಿಗೆ ಬೆಂಕಿ ತಗುಲಿ ಅವು ಉರಿಯಲಾರಂಭಿಸಿದ್ದವು. ನಾನು ಅಟ್ಟದ ಹೆಂಚಿನ ಸಂದುಗಳನ್ನು ಹೇಗೋ ಮುರಿದು ಜಾರಿ ಜೊತೆಗಿದ್ದವರನ್ನು ಕರೆದುಕೊಂಡು ತಪ್ಪಿಸಿಕೊಳ್ಳಲು ಹೆಣಗಾಡಿದ್ದೆ. ಹಿರಿಯಜ್ಜಿಯ ಬಳಿ ಉಳಿದಿದ್ದ ಹೆಂಗಸರು ಸುತ್ತುವರಿದು ಆ ತೊಟ್ಟಿಲಿಗೆ ಏನೂ ಮಾಡಬೇಡಿ ಏನನ್ನಾದರೂ ಕಿತ್ತುಕೊಳ್ಳಿ, ಇದನ್ನು ಮಾತ್ರ ಕಸಿದುಕೊಳ್ಳಬೇಡಿ ಎಂದು ಬೇಡುತ್ತಿದ್ದರು. ಯಾವನೊ ಒಬ್ಬ ಕಿಡಿಗೇಡಿ ತೊಟ್ಟಿಲ ಹಗ್ಗವನ್ನು ಕಿತ್ತುಹಾಕಿದ. ಹಿರಿ ಅಜ್ಜಿ ತೊಟ್ಟಿಲ ಸಹಿತ ಬಿದ್ದು ಹಾಗೇ ಒರಗಿದಳಾದರೂ ಆ ತೊಟ್ಟಿಲಿನಿಂದ ನನ್ನು ಬೇರೆ ಮಾಡಬೇಡಿ, ಬೇಕಾದರೆ ಇದರ ಜೊತೆಗೇ ನನ್ನನ್ನು ಸುಟ್ಟು ಬಿಡಿ ಎಂದು ಕ್ಷೀಣ ದನಿಯಲ್ಲಿ ಹೇಳುತ್ತಿದ್ದಳು. +***** +“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […] +ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […] +ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_683.txt b/Kannada Sahitya/article_683.txt new file mode 100644 index 0000000000000000000000000000000000000000..651c99bdfe2d9fec7ac4c22735fd087bbf22970c --- /dev/null +++ b/Kannada Sahitya/article_683.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! +ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು +ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! +ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! +ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು +ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ +ಮೂಗುದಾರವ ಜಗ್ಗಿ! ನೂರುಗಾಲಿಯ ಕೀಲ +ಸವೆದು ಕಿರುಗುಟ್ಟುತಿವೆ: ನರನಿಗೆ ಜಯಪರಾಕು! +ಬೀದಿಯಂಚಿನ ಕಾಲುದಾರಿಯಲಿ ದನಗಾಹಿ +ಮಹಿಷವಾಹನನಾಗಿ ಕೊಳಲೂದಿ ಸಾಗಿಹನು +ನೋಡಿದಿರ? ನೋಡದಿದ್ದರು ಸರಿಯೆ; ಅವನೇನು +ಮಂತ್ರಿಯೆ? ಯಾವುದಾದರು ಸಭೆಯ ಮನಮೋಹಿ +ಗಾರುಡಿಯೆ? ಅವನಲ್ಲ ಬಿಡಿ; ಆದರೆನ್ನಾಣೆ +ಅಂಥ ಮನಸಿನ ಶಾಂತಿ ಯಾರಿಗಿಹುದೋ ಕಾಣೆ! +***** +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […] +ಅಷ್ಟಿಷ್ಟು ಎದೆ ಮಾಂಸ ತೊಡೆ ಖಂಡಗಳ ಕತ್ತರಿ ಸಿ ಕಚಕಚಾ ತೆರೆದಿಟ್ಟ ಕೋಸಂಬರಿ (ಉಪ್ಪು ತುಸು ಜಾಸ್ತಿ) ***** +೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_684.txt b/Kannada Sahitya/article_684.txt new file mode 100644 index 0000000000000000000000000000000000000000..72876e7b5994216872b192f4e14d9e5890fe59a8 --- /dev/null +++ b/Kannada Sahitya/article_684.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಷ್ಟಿಷ್ಟು ಎದೆ +ಮಾಂಸ ತೊಡೆ +ಖಂಡಗಳ ಕತ್ತರಿ +ಸಿ ಕಚಕಚಾ ತೆರೆದಿಟ್ಟ +ಕೋಸಂಬರಿ +(ಉಪ್ಪು ತುಸು ಜಾಸ್ತಿ) +***** +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […] +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_685.txt b/Kannada Sahitya/article_685.txt new file mode 100644 index 0000000000000000000000000000000000000000..302feebd477e69cd6f3eb84ae1a6692aee619110 --- /dev/null +++ b/Kannada Sahitya/article_685.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ +ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. +ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ +ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. +ಉದಯ ಪುಣ್ಯವನೆ ಹಗಲು ಜ್ಞಾನ, ಮುಚ್ಚಂಜೆ ಮುಕ್ತಿಯಂತೆ +ಕೋಟಿ ತಾರೆಗಳು ಮುತ್ತು ಸತ್ತಿಗೆಯ ಬೆಳಕನೆತ್ತಿದಂತೆ +ಗಾಳಿಯುಸಿರಿನಲಿ ಮೆಲ್ಲನೂದುತಿಹೆ ಪ್ರಾಣವಾಯುವನ್ನೆ +ಬೂದಿ ಹಾರಿ ತನಿಗೆಂಡ ತೋರಿ ತೊಳಗಿರುವುದಾತ್ಮವನ್ನೆ! +ಮೇಘದೋಲೆಯಲಿ ಮಿಂಚುಬಳ್ಳಿ ರುಜುಮಾಡಿ ಬರೆಯುತಿರುವೆ +ಅರ್ಥವಾಗದಿದೆ, ಆದರೂನು ಕನಿಕರದಿ ಮಳೆಯ ಸುರಿವೆ! +ಉಷಾಸಂಧ್ಯೆಯರ ಸುಂದರಾಂಗದಲಿ ನಿಂದ ನಿಲವದೇನು? +ಕನಸು ಕೋದೆ ಕೋದಂಡದಂತೆ ಮಳೆಬಿಲ್ಲ ಚೆಲುವದೇನು! +ಗಿರಿಯ ಬಾಹುಗಳ ಚಾಚಿ ತಬ್ಬಿರುವೆ ಸಸ್ಯಶಾಮಲೆಯನು +ಹಣ್ಣು ಹೂವುಗಳೆ ಭಾರವಾಗಿ ಬಳುಕಿರುವ ಕೋಮಲೆಯನು. +ಗುಡುಗು ಸಿಡಿಲು ಭೋರ್‍ಗರೆವ ಕಡಲು ಮತ್ತೇಕೆ ಇಂಥ ಕೋಪ? +ಆಗ ಈಗ ಭೂಕಂಪ ಬೇರೆ ಮನುಕುಲಕೆ ಕೊಟ್ಟ ಶಾಪ! +ಮಹಾ ಕಾವ್ಯವೀ ಭವ್ಯಸೃಷ್ಟಿ ಇದನೋದಿದನಿತು ರಮ್ಯ +ಮಹಾಕವಿಯ ವಿದ್ವದ್ವಿಭೂತಿ ಅನುಭಾವಿ ಹೃದಯ ಗಮ್ಮ- +ಅರುಹಲಿದನು ಅವತಾರವೆತ್ತಿ ತಂತಾನೆ ಭಾಷ್ಯ ಬರೆದ +ಪೂರ್‍ಣ ಯೋಗಿ ವಿಜ್ಞಾನಿಯಾಗಿ ಇದರಂತರಂಗ ತೆರೆದ. +***** +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ಚನ್ನವೀರ ಕಣವಿ ಕೊಡೆ ಹಿಡಿಯುತ್ತೇವೆ: ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು ಸಿಡಿಸುವ ಕೊಳೆಗೆ, ಆಗದವರು ಎದುರಿಗೆ ಬಂದಾಗ ಮರೆಗೆ- ಹೊತ್ತು ಬಂದಂತೆ. ಮತ್ತೊಬ್ಬರ ತಲೆಗೆ ನೆರಳು ಮಾಡುವ ಉಸಾಬರಿಗೆ ಹೋಗಿ ಚುಚ್ಚುತ್ತೇವೆ; ಮೆಚ್ಚುತ್ತೇವೆ: ಹೆಣ್ಣು […] +ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ? ದುಃಖ ಸುಖವು ನಗೆಯು ಹೊಗೆಯು ಎಲ್ಲ ಅಂತೆ ಅಂತೆ. ನಾವು ಗೈದ ಒಳಿತು ಕೆಡಕು ಜೀವ ಪಡೆವ ಭೋಗ; ನಮ್ಮ ನುಡಿಯ ನಡೆಯ ಒಡಲ ಕಡೆದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_686.txt b/Kannada Sahitya/article_686.txt new file mode 100644 index 0000000000000000000000000000000000000000..f870b9eeaab1851cf7518bd71d1e7b762933a5a2 --- /dev/null +++ b/Kannada Sahitya/article_686.txt @@ -0,0 +1,56 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. +ಈಗ ಎಲ್ಲೇ ನೋಡಿ, ಪೈಪೋಟಿಯ ಮೇಲೆ ಪ್ರಶಸ್ತಿಗಳನ್ನು ಖಾಸಗಿ ಸಂಸ್ಥೆಗಳವರೂ ಒಟ್ಟೊಟ್ಟಿಗೆ ನಲವತ್ತು ಐವತ್ತು ಜನಕ್ಕೆ ನೀಡುತ್ತಾ ಪ್ರಶಸ್ತಿಗಳನ್ನು ನೀಡಲು ಪಾರ್ಟಿಗಳನ್ನು ದುರ್ಬೀನು ಹಾಕಿ ಹುಡುಕಬೇಕಾಗಿ ಬಂದಿದೆ. +ಫೋನ್ ಮಾಡಿ ಬಿಡುವಿದ್ದವರಿಗೆ ಪ್ರಶಸ್ತಿ ನೀಡುವುದು, ಪ್ರಶಸ್ತಿ ಬಾರದಿದ್ದಲ್ಲಿ ತಾವೇ ಒಂದು ಸಂಸ್ಥೆ ಕಟ್ಟಿ ಪ್ರಶಸ್ತಿಗಳನ್ನು ತಮ್ಮ ಖರ್ಚಿನಲ್ಲೇ ಕೊಡಿಸಿಕೊಳ್ಳುವ ಘನಂದಾರಿ ವ್ಯಕ್ತಿಗಳನ್ನು ಈಗ ಕಾಣಬಹುದು. +ಪ್ರಶಸ್ತಿ ತುಂಬಾ ಸಾಮಾನ್ಯ. ಅದರಿಂದ ಬೆಳ್ಳಿ ಕಿರೀಟ, ಚಿನ್ನದ ಕಿರೀಟ, ವಜ್ರದ ಕಿರೀಟಗಳು ಈಗಿನ ಫ್ಯಾಶನ್ ಆಗಿದೆ. +ಬಿರುದುಗಳನ್ನು ಬಿದರಿನಂತೆ ಧಾರಾಳವಾಗಿ ಹಂಚಿದ್ದರಿಂದಾಗಿ ಸಿನಿರಂಗದಲ್ಲಿ ಬಿರುದಾವಳಿಗಳು ಬಾವಲಿಯಂತೆ ಕಂಗೊಳಿಸುತ್ತಿವೆ. +ವಾರ್ತಾ ಇಲಾಖೆ ಟಿ.ವಿ. ಧಾರಾವಾಹಿಗಳಿಗೂ ಪ್ರಶಸ್ತಿ ನೀಡುವ ಪರಿಪಾಠವನ್ನು ದಿಢೀರ್‍ ಆರಂಭಿಸಿ ನೀತಿ ನಿಯಮಾವಳಿಗೆ ಎಳ್ಳುನೀರು ಬಿಟ್ಟದ್ದು ಭಾರೀ ಸುದ್ದಿಯಾಗಿ ಕಾಂಟ್ರವರ್ಸಿ ಭುಗಿಲೆದ್ದು ‘ಮಾಯಾಮೃಗದ ಟಿ.ಎನ್. ಸೀತಾರಾಮ್ ಸರಕಾರಿ ಪ್ರಶಸ್ತಿ ವಾಪಸು ಮಾಡುವೆ ಎಂದು ಹೇಳಿದ್ದೇ ‘ಒಂದು ಈವೆಂಟ್ – ಕಲಿಯುಗದ ಮಹಾ ಪವಾಡ’ ಎಂದು ಭಾವಿಸಿದ ರಂಗಭೂಮಿ ನಾಯಕರು ವಾಪಸ್ಸು ಮಾಡಿದ್ದಕ್ಕೆ ಸೀತಾರಾಮ್‌ಗೊಂದು ಪ್ರಶಸ್ತಿ ನೀಡಿ ಬಂದರೆ ಸರಕಾರಿ ಅವಾರ್ಡ್ ವಾಪಸ್ಸು ಮಾಡಿದರೆ ಜನಮನ್ನಣೆ ಪ್ರಶಸ್ತಿ ಎಂದು ಅದಕ್ಕೂ ಒಂದು ಭಾರೀ ಮೊತ್ತದ ಚೆಕ್ ನೀಡಿ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಈ ಮಹಾನ್ ತಲ್ಲಣದ ಬಿಸಿಗೆ ಬೆಚ್ಚಿದ ಸರಕಾರ ಟೀವಿ ಅವಾರ್ಡ್ ನೀಡಬಾರದೆಂಬ ಸುದ್ದಿಯೂ ಹೊರಬಿತ್ತು. ‘ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರಭದ್ರ’ನೆಂದಾಗಲಿ ಎಂದು ಪ್ರಶಸ್ತಿಗೆ ಕೈಚಾಚಿ ಕುಳಿತಿದ್ದ ‘ಸಾಧನೆ’ಯ ಬಿ.ಸುರೇಶ್ ಆಗಲೂ ಮೌನಿ-ಈಗಲೂ ಮೌನಿ. +ಅನಂತರ ಸಿನಿ ಪ್ರಶಸ್ತಿಗಳತ್ತ ನಿಧಾನವಾಗಿ ಅಪಸ್ವರವೆದ್ದುವು. +ಪ್ರಶಸ್ತಿ ಸಮಿತಿ ಅಧ್ಯಕ್ಷರಾದ ಎಂ.ಎಸ್. ಸತ್ಯು ತಮ್ಮ ಸಮಿತಿ ತೀರ್ಮಾನ ಪ್ರಕಟಿಸಿದ ನಂತರ ಕಾಂಟ್ರವರ್ಸಿಗೆ ಸಿಲುಕಿ ನಲುಗಿದರು. ಹಾಗೆ ನೋಡಿದರೆ ಸತ್ಯು ಒಂದು ರೀತಿ ಕಾಂಟ್ರವರ್ಸಿ ಪ್ರಿಯ. ತುಂಬ ಸರಳವಾದ ಮಾಸ್ತಿ ಕತೆಗಳನ್ನೂ ಕಾಂಟ್ರವರ್ಸಿ ಮಾಡಿರುವ ಕಲೆ ಅವರಿಗೆ ಕರಗತ. +ಅದರಿಂದಲೇ ಅವರು ಬೇಕೆಂದೇ ಹಲವು ‘ಬೋಲ್ಡ್ ಸ್ಟೆಪ್’ ಮುಂದಿಟ್ಟು ಇಕ್ಕಟ್ಟಿಗೆ ಸಿಲುಕಿದರು. ಕಲಾತ್ಮಕ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಏಕೆ? ಎಂದು ಮೇನ್ ಸ್ಟ್ರೀಂ ಫಿಲಂಗಳಿಗೂ ತಕ್ಕೋ ರಾಜ ಎಂದು ಪ್ರಶಸ್ತಿ ನೀಡಿದಾಗ ಬಂಡಾಯದ ಬಾವುಟವೆತ್ತಿದವರು ಬಹುಮಂದಿ. ಅದರಲ್ಲಿ ಅಗ್ರಗಣ್ಯರೆಂದು ಮಂಚೂಣಿಗೆ ನಿಂತವರು ನಾಗತಿಹಳ್ಳಿ ಚಂದ್ರಶೇಖರ್‍. ಈ ಬಾರಿ ಅವರ ‘ನನ್ನ ಪ್ರೀತಿಯ ಹುಡುಗಿ’ ಚಿತ್ರವೂ ಪ್ರಶಸ್ತಿಗೆ ಹೋಗಿತ್ತು. ಅವರ ‘ಕಾರ್‍ ಕಾರ್‍ ಕಾರ್‍ ಎಲ್ನೋಡಿ ಕಾರ್‍’ ಹಾಡಿಗೂ ಪ್ರಶಸ್ತಿ ಬರದಿದ್ದಾಗ ಕೆಂಡಮಂಡಲರಾದ ನಾಗತಿಹಳ್ಳಿ ಬುಸುಗುಡುವುದನ್ನು ಬದಿಗಿಟ್ಟು ತಮ್ಮ ಖಾರವನ್ನು ಜಾಹೀರಾತಿನ ಮೂಲಕ ಕಕ್ಕಿಯೆ ಬಿಟ್ಟರು. ಹಾಗೆ ಪ್ರತಿಭಟಿಸಲು ಸತ್ಯು ‘ನನ್ನ ಪ್ರೀತಿಯ ಹುಡುಗಿ’ ಕೆಟ್ಟ ಚಿತ್ರವೆಂದು ಎಲ್ಲೋ ಹೇಳಿದ ಮಾತು ಅವರ ಕಿವಿಗೆ ಬಿದ್ದಿದ್ದದ್ದು ಕಾರಣ ಎಂದು ಉದಯ ಟೀವಿಯ ‘ನಾಗತಿಹಳ್ಳಿ ಸತ್ಯು’ ಮುಖಾಮುಖಿ ಚರ್ಚೆ ಸ್ಪಷ್ಟಪಡಿಸಿತು. +ಅಂದು ಆ ಕಾರ್ಯಕ್ರಮದಲ್ಲಿ ಹಾಜರಿದ್ದ ಫಿಲಂ ಚೇಂಬರ್‍ ಅಧ್ಯಕ್ಷ ಕೆ.ಸಿ.ಎನ್. ಚಂದ್ರು ನಿಷ್ಪಕ್ಷಪಾತವಾಗಿ ಒಂದು ಗಟ್ಟಿ ನಿಲುವು ತೆಗೆದುಕೊಳ್ಳಲು ಅಸಮರ್ಥರೆನಿಸಿದ್ದು ಅವರ ಮಾತುಗಳಲ್ಲೇ ಸ್ಪಷ್ಟವಾಗಿತ್ತು. +‘ಅಂದರಿಕಿ ಮಂಚಿವಾಡು ಅನಂತಯ್ಯ’ ಎಂಬಂತೆ ಅಡ್ಡಗೋಡೆಯ ಮೇಲೆ ದೀಪವಿಡುವ ಅವರ ಆನೆ ಪಟಾಕಿ ‘ಠುಸ್’ ಎಂದಿತ್ತು. +ಅಂದಿನ ಆ ಚರ್ಚೆ ಘನತೆ ಗಾಂಭೀರ್ಯ ಕಳೆದುಕೊಂಡು ಶಾಲಾ ಮಕ್ಕಳ ಜಗಳದಂತೆ ಕಂಡಿತು. ಮಹಾಲಕ್ಷ್ಮಿ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ನೀಡಿದ್ದು, ಮಕ್ಕಳ ಚಿತ್ರಕ್ಕೆ ಪ್ರಶಸ್ತಿ ನೀಡದೆ ಹೋದದ್ದು, ‘ಡಗಾರ್‍’ ಎಂದು ಹೆಣ್ಣನ್ನು ಕೀಳಾಗಿ ಕಂಡು ಅಸಂಬದ್ಧ ಕತೆ ನೇಯ್ದ ರಾಜೇಂದ್ರಸಿಂಗ್ ಬಾಬು ಅವರ ‘ಕುರಿಗಳು ಸಾರ್‍ ಕುರಿಗಳು’ಗೆ ಪ್ರಶಸ್ತಿ ನೀಡಿದ್ದು ಮತದಾನದ ತಾರಾನ ಕೈಬಿಟ್ಟು ಅನೂಗೆ ಪ್ರಶಸ್ತಿ ನೀಡಿದ್ದು ನಾಗತಿಹಳ್ಳಿ ಕಣ್ಣು ಮತ್ತಷ್ಟು ಕೆಂಪಾಗಲು ಕಾರಣವಾಗಿ ಈ ವರ್ಷದ ಸತ್ಯು ನಿರ್ಮಿತ, ಸರಕಾರಿ ಪ್ರಶಸ್ತಿ ವಂಚಿತ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಆದರೆ ಜನತೆಯಿಂದ ಪ್ರಶಸ್ತಿಗಳಿಸಿದ ಚಿತ್ರ ‘ನನ್ನ ಪ್ರೀತಿಯ ಹುಡುಗಿ’ ಎಂದು ತಾವೇ ಹೇಳಿಕೊಂಡು ಅತ್ಯುತ್ತಮ ಮನರಂಜನಾತ್ಮಕ ಸದಭಿರುಚಿಯ-ಜನಾದರಣೀಯ ಚಿತ್ರ ಇದು. ‘ಪ್ರಜ್ಞಾವಂತ ಪ್ರೇಕ್ಷಕರು ಮ್ಯಾಚ್ ಫಿಕ್ಸಿಂಗ್ ಇಲ್ಲದೆ ನೀಡಿದ ಪ್ರಾಮಾಣಿಕ ತೀರ್ಪು’ ಎಂದು ನಾಗತಿಹಳ್ಳಿ ತಾವೇ ಹೇಳಿಕೊಂಡದ್ದು ಬುದ್ಧಿಜೀವಿಗಳ ವಲಯದಲ್ಲೂ ಬಿಸಿಬಿಸಿ ಚರ್ಚೆಗೆ ವಸ್ತುವಾಗಿತ್ತು. ಈ ಕಾರಣಕ್ಕೆ ‘ಗರಂ ಹವಾ’ ಸತ್ಯು ಗರಂ ಆಗಿದ್ದರು ಎಂದು ಕಾಣುತ್ತದೆ. ಭುಗಿಲೆದ್ದ ಈ ಪ್ರಸಂಗದ ಚರ್ಚೆಗೆ ದಾರಿಮಾಡಿದ್ದು ಉದಯ ಟೀವಿ. +ಅದು ಹಿಂದಿದ್ದ ಎಸ್.ಎಲ್.ಎನ್. ಶಾಲೆಯ ಕುಸ್ತಿಯ ಅಖಾಡವಾಗಿರಲಿಲ್ಲ. +ಟಫ್ ಫೈಟಿನ ರಣಾಂಗಣವಾಗಿತ್ತು. +ನಾಗತಿಹಳ್ಳಿ ಸತ್ಯು ಕಡೆ ತಿರುಗಿಯೂ ನೋಡದೆ ಬುಸುಗುಡುತ್ತಿದ್ದರು. ಪುಣ್ಯಕ್ಕೆ ಅಂದು ಅವರ ಕೈಲಿ ಕತ್ತಿ ಕಠಾರಿಗಳಿರಲಿಲ್ಲ. ಇದ್ದಿದ್ದಲ್ಲಿ ಯಾರು ಯಾರನ್ನು ಮರ್ಡರ್‍ ಮಾಡುತ್ತಿದ್ದರೋ ನಮ್ಮಪ್ಪನಾಣೆಗೂ ಹೇಳುವುದು ಕಷ್ಟ. +“ನಾವು ಪ್ರಶಸ್ತಿ ನೀಡಿದ್ದು ಸಾಧನೆಗೆ ಹೊರತು-ಪ್ರಯತ್ನಕ್ಕಲ್ಲ. ಅತ್ಯುತ್ತಮ ನಟ ಪ್ರಶಸ್ತಿ ಬೆಸ್ಟ್ ಫರ್‌ಫಾರ್ಮರ್‌ಗೆ ನೀಡಿ ಟ್ರೆಡೀಷನ್ ಬ್ರೇಕ್ ಮಾಡಿದೆವು. ಮಕ್ಕಳ ಚಿತ್ರ ಯಾರಿಗಾಗಿ ಮಾಡಿದ್ದಾರೆ ಎಂಬುದೂ ಸ್ಪಷ್ಟವಿಲ್ಲ. ಆದ್ದರಿಂದ ಮಕ್ಕಳ ಚಿತ್ರಕ್ಕೆ ನೀಡಲಿಲ್ಲ. ಮತದಾನ ರಾಜಕೀಯ ಚಿತ್ರಕ್ಕೆ ನೀಡಲಿಲ್ಲ. ಮತದಾನ ರಾಜಕೀಯ ಚಿತ್ರವಾಗೇ ಇಲ್ಲ. ಸಿಲ್ಲಿ ಕಾಮೆಡಿ ಮೇನ್‌ಸ್ಟ್ರೀಮ್‌ನಲ್ಲೂ ಯತ್ನಿಸಿದ್ದಾರೆ ಅದಕ್ಕೆ ೩ನೇ ಪ್ರಶಸ್ತಿ ನೀಡಿದೆವು. ಅದು ಪ್ರಜಾಪ್ರಭುತ್ವದ ರೀತಿ ಎಲ್ಲ ನಿರ್ಧರಿಸಿದ ತೀರ್ಮಾನ ಎಂದಿದ್ದಲ್ಲದೆ ಚಿತ್ರ ನೋಡುವುದೇ ಒಂದು ಹಿಂಸೆಯಾಯಿತು ತೀರ್ಪುಗಾರರಿಗೆ ಎಂದು ಖಾರ ಕಕ್ಕಿದ ಸತ್ಯು-ನಾಗತಿಹಳ್ಳಿ ಮಾತಿನ ಧಾಟಿಗೆ ರೋಸಿ “ನಾವೇನು ನಿಮ್ಮ ಜೀತದ ಆಳಲ್ಲ” ಎಂದರು. +“ನಾವು ಭಿಕ್ಷಾಟನೆಗೆ ಕೈ ಚಾಚಿದ ಭಿಕ್ಷುಕರಲ್ಲ” ಎಂದರು ನಾಗತಿಹಳ್ಳಿ. +ಚರ್ಚೆಯಲ್ಲಿ ಜೀತದಾಳುಗಳು ಭಿಕ್ಷುಕರು ಹಾಜರಾದದ್ದು ವ್ಯಕ್ತಿಗಳ ಘನತೆ ಕುಗ್ಗಿಸಿ ಬೀದಿ ಜಗಳಕ್ಕೆ ಕತ್ತಿನ ಪಟ್ಟಿ ಹಿಡಿದು ನಿಂತಂತಿತ್ತು. +ನಲ್ಲಿ ನೀರಿನ ಜಗಳದಂತೆ ನನ್ನ ‘ಗಳಿಗೆ’ ನೋಡಿದೀರಾ ಅದು ನೋಡಿದೀರಾ ಇದು ನೋಡಿದಿರಾ ಎಂದು ಮಾತುಗಳು ಏಕವಚನ ತಲುಪುವ ಮುನ್ಸೂಚನೆಗಳು ಕಂಡವು. +ಸದ್ಯ ಮುಗಿದರೆ ಸಾಕೆ ಎಂಬ ಘಟ್ಟ ತಲುಪಿತು ಜಗಳ. ಒಂದು ಉತ್ತರ ಧ್ರುವ-ಇನ್ನೊಂದು ದಕ್ಷಿಣ ಧ್ರುವ. +ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಎಣ್ಣೆ ಸೀಗೆಕಾಯಿ ಕಾರ್ಯಕ್ರಮ ಮುಗಿಯಿತು. +ಈ ಅವಾರ್ಡ್ ಕಿತ್ತಾಟ ಚುನಾವಣೆ ಸಮಯದ ವಾರ್ಡ್‌ಗಳ ಕಿತ್ತಾಟ ನೆನಪಿಸಿತು. +ಟ.ವಿ. ಆಫ್ ಮಾಡಿದಾಗ ಭಾರೀ ಮಳೆ ಬಂದು ನಿಂತಂತಾಗಿತ್ತು. +ನಿನ್ನೆ ಏಕೋ ರಿಮೋಟ್ ಒತ್ತುತ್ತಿದ್ದಾಗ ‘ಸುಪ್ರಭಾತ’ದಲ್ಲಿ ಗರಂ ಆಗಿದ್ದ ನಾಗತಿಹಳ್ಳಿ ಚಹರೆ ಕಾಣಿಸಿತು. +ಆ ಕೋಪಕ್ಕೆ ಕಾರಣ ಅವರೆದುರು ಕುಳಿತಿದ್ದು ‘ಯಜಮಾನ’ ನಿರ್ಮಾಪಕ ರೆಹಮಾನ್, ಕತ್ತಿನಪಟ್ಟಿ ಹಿಡಿದು ಕಿತ್ತಾಡದಿರಲೆಂದು ಮಧ್ಯೆ ಕುಳಿತಿದ್ದವರು ನಂಜುಂಡೇಗೌಡ. +ರೀಮೇಕ್-ಸ್ವಮೇಕ್ ಇಲ್ಲಿನ ಜಗಳದ ಕಾರಣವಾಗಿತ್ತು. +ಈಗ ರೆಹಮಾನ್ ಭರ್ಜರಿ ಮಾತಾಡುವುದು ಕಲಿತಿದ್ದಾರೆ ಎಂದು ‘ಹುಚ್ಚ’ ಕ್ಯಾಸೆಟ್ ರಿಲೀಸ್‌ನಂದೇ ನಾನು ಮಾತಾಡುತ್ತಾ ಹೇಳಿದ್ದೆ. +ಮಾತು ಎತ್ತೆತ್ತಲೋ ಜಾರುತ್ತೆ. ಸರಕಾರಿ ಪ್ರಶಸ್ತಿಗಳು ಅಲ್ಲಾಗುವ ಅನ್ಯಾಯ, ಸಾ.ರಾ.ಗೋವಿಂದುವಿನಂತಹ ಕನ್ನಡ ಹೋರಾಟಗಾರ ಹಣ ದೋಚುವ ಹಂಬಲದಿಂದ ರೀಮೇಕ್ ಮಾಡುತ್ತಿರುವ ವಿಷಯ ಗುಟುರು ಹಾಕಿದರು ನಾಗತಿಹಳ್ಳಿ. +ಕನ್ನಡ ಕತೆಗಾರರನ್ನು ನಂಬಿ ತಾವು ಅಡ್ರೆಸ್ಸಿಗಿಲ್ಲದೆ ಕೇರ್‍ ಆಫ್ ಫುಟ್‌ಪಾತ್ ಸ್ಥಿತಿ ಬಂದುದನ್ನು ನೆನಪಿಸಿದರು ರೆಹಮಾನ್. +ಜನ ಯಾವ ಚಿತ್ರ ನೋಡ್ತಾರೋ ಅಂಥ ಚಿತ್ರ ತೆಗೀತೀವಿ. ಅವರು ನೋಡಲಿಲ್ಲ ಅಂದ್ರೆ ಸ್ವಮೇಕೇ ತೆಗೀತಾರೆ ಎಲ್ಲ. ನಂಗೆ ರೀಮೇಕೇ ಆಗಬೇಕು ಅಂತೇನಿಲ್ಲ. ಯಾವ ಯಾವ ಡೈರಕ್ಟರ್‍ ಹತ್ರ ಒಳ್ಳೆ ಕತೆ ಇದೇ ಹೇಳಿ. ನಮ್ಮ ಸರಕಾರ ಇನ್‌ಫ್ರಾಸ್ಟ್ರಕ್ಚರ್‍ ಬಗ್ಗೆ ಯೋಚನೆ ಮಾಡಿಲ್ಲ. ಕಂಠೀರವ ಸ್ಟುಡಿಯೋದಲ್ಲಿ ಒಳ್ಳೆ ಫೆಸಿಲಿಟೀಸ್ ಕೊಡಲ್ಲ ಎಂದು ಅಬ್ಬರಿಸಿದರು ರೆಹಮಾನ್. +ಇದೂ ಒಂದು ರೀತಿ ‘ಭಾರೀ ಟಗ್ ಆಫ್ ವಾರ್‍’ನ ಹಗ್ಗದ ಜಗ್ಗಾಟವಾಗಿತ್ತು. +‘ವಾರ್ಡ್ ಅವಾರ್ಡ್ ಜಗಳ’ ಹೀಗೆ ಬೃಹದಾಕಾರವಾಗುತ್ತ ಹೋದರೆ ಅವಾರ್ಡ್ ಬಂತು ಎಂದರೆ ತಲೆ ತಗ್ಗಿಸಬೇಕಾದ ದಿನ ಬಂದೀತು. +ಇದನ್ನು ನೋಡಿಯೇ ನನ್ನ ಗೆಳೆಯ ಅಂದದ್ದು ‘ಅವಾರ್ಡ್‌ನಲ್ಲಿ ಮೂರು ವರ್ಗ ಮಾಡಿ ಬೆಸ್ಟ್ ಫಿಲಂಸ್, ವರ್ಸ್ಟ್ ಫಿಲಂಸ್, ಆರ್ಟ್ ಫಿಲಂಸ್, ೩ ವಿಭಾಗ ಮಾಡಿ ಪೆಪ್ಪರ್‌ಮೆಂಟಿನಂತೆ ಅವಾರ್ಡ್‌ಗಳನ್ನು ಹಂಚಿಬಿಡುವುದು ವಾಸಿ ಎಂದು. +ಏನೋ! ಹಾಗೆ ಮಾಡುವುದೇ ವಾಸಿಯೇನೋ ಎನಿಸುತ್ತದೆ ಹಲವೊಮ್ಮೆ. +***** +(೧೫-೬-೨೦೦೧) +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […] +ಬಹಳಷ್ಟು ಮಂದಿಯ ‘ಟೀಕಾಸ್ತ್ರ’ಕ್ಕೆ ಬದುಕಿನುದ್ದಕ್ಕೂ ಗುರಿಯಾಗಿದ್ದ ವ್ಯಕ್ತಿ ಟೈಗರ್‍ ಪ್ರಭಾಕರ್‍-ತಪ್ಪೋ ಸರಿಯೋ ತನಗನ್ನಿಸಿದ್ದನ್ನು ರಾಜಾರೋಷವಾಗಿ ಅಬ್ಬರಿಸಿ ಹೇಳುತ್ತ ಬಂದಿದ್ದ ನಟ ಪ್ರಭಾಕರ್‍ ಅವರಲ್ಲಿ ‘ಗುಡ್-ಬ್ಯಾಡ್-ಅಗ್ಲಿ’ಯ ಎಲ್ಲ ಗುಣಗಳೂ ರಾರಾಜಿಸಿದ್ದವು. ಅದೊಂದು ರೀತಿಯ ‘ಹುಚ್ಚು ಮನಸ್ಸಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_687.txt b/Kannada Sahitya/article_687.txt new file mode 100644 index 0000000000000000000000000000000000000000..4c853c448aa68bef4600b143fc46da56c61a12a0 --- /dev/null +++ b/Kannada Sahitya/article_687.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ ಕೆಳಗೆ ಕುಳಿತು ಸುತ್ತಲೂ ನೋಡಿದ. ಆಸು ಪಾಸು ಯಾರೂ ಇರಲಿಲ್ಲ. ‘ದೇವರೇ’ ಅಂತ ನಿಟ್ಟುಸಿರು ಬಿಟ್ಟು ಬೆನ್ನಿಗೆ ಕಟ್ಟಿಕೊಂಡಿದ್ದ ಜೋಳಿಗೆಯನ್ನು ಮುಂದೆ ತೊಡೆಯ ಮೇಲೆ ಇಟ್ಟುಕೊಂಡು ಮಗುವನ್ನು ನೋಡಿದ. ಅದು ಹಸಿವೆಗೋ, ಇವನು ಓಡಿದ ರಭಸಕ್ಕೋ ಆಯಾಸವಾಗಿ ಸತ್ತಂಗೆ ಬಿದ್ದಿತ್ತು. ‘ಅಯ್ಯೋ, ಇದನ್ನು ಬದುಕಿಸೋದಕ್ಕೆ ಅಂತ ನಾನು ಈಟು ದೂರ ಓಡಿ ಬಂದೆ. ಇದು ಸತ್ತೇ ಹೋಯಿತೇ’ ಎಂದು ಅದರ ಎದೆಗೆ ಕಿವಿಗೊಟ್ಟು ಕೇಳಿದ. ಅದಿನ್ನೂ ‘ಡವಡವ’ ಅಂತಿತ್ತು. ಬಾಯಿಗೆ ಬೆರಳು ಹಾಕಿದ. ಕಣ್ಣು ಮುಚ್ಚಿಕೊಂಡೇ ಜುರುಜುರು ಚೀಪಿತು. ‘ಪಾಪ, ಹಸಕೊಂಡೈತ್ಯೋ ಏನೋ’. +ಬಿಟ್ಟ್ಯಾನ ಕಣ್ಮುಂದೆ ತಾನು ಮನೆ ಬಿಟ್ಟು ಹೊರಡುವಾಗಿನ ದೃಶ್ಯ ಸುಳಿಯಿತು. ತನ್ನ ತಾಯಿಯ ಮುಖ ನೆನಪಾದಾಗ ಅಳು ಬಂತು. ಅವಳು ದೈನಾಸಬಟ್ಟು ಅವರಿಗೆಲ್ಲ ಕೈಮುಗಿದು ಕೇಳಿಕೊಳ್ಳುವ ಮಾತು ಮತ್ತೆ ಮತ್ತೆ ಕಿವಿಯಲ್ಲಿ ತುಂಬಿ ಬಿಟ್ಟ್ಯಾನಿಗೆ ಆಕ್ರೋಶ ಬಂತು. ಅವರೆಲ್ಲ ಬಂದದ್ದು ನೋಡಿ, ಅವ್ವ ಅವನನ್ನು ಕರದು +‘ಬಿಟ್ಟ್ಯಾ, ಈ ಮಗೀನ ಕರಕೊಂಡು ಈ ಜಾಗಾ ಕಾಲೀ ಮಾಡು. ಇಲ್ಲಾಂದ್ರ ನನ್ನ ಕೂಡ ನಿಮ್ಮನ್ನೂ ಸಾಯಿಸಿ ಬುಡ್ತಾರೆ’ ಅಂದಳು. +‘ಅದೆಂಗವ್ವಾ ನಿನ್ ಬುಟ್ಬುಟ್ ಓಗ್ಲಿ. ಈ ಎಳೆ ಮಗೀನ ನಾ ಅದೆಂಗ್ ಸಾಕ್ಲೆವ್ವಾ. ಅನ್ನ ತಿನ್ನೋ ಮಗಾ ಆಗಿದ್ರೆ ಎಲ್ಲಾನ ಬಿಕ್ಸೆ ಬೇಡಿ ಸಾಕ್ತಿದ್ದೆ.’ +‘ಅದ್ಯಾಂಗಾರ ಆಗ್ಲಿ. ದೇವ್ರು ಅವ್ನೆ. ನೀ ಮೊದ್ಲು ಇಲ್ಲಿಂದ ಒಂಟೋಗು. ಇದು ಹಾದರಕ್ಕ ಹುಟ್ಟಿದ್ದಲ್ಲ. ನನ್ನ ಗಂಡಗ” ಹುಟ್ಟಿದ್ದು, ಇದು ಬದಕ ಬೇಕು. ಇದು ತಂದಿಗೆ ಹುಟ್ಟಿದ್ದಾದ್ರ ಎಲ್ಲಾರ ಬಾಳಿ ಬದಕ್ತೈತಿ. ಇವರೆಲ್ಲ ಅದು ಹಾದರಕ್ಕ ಹುಟ್ಟಿದ್ದು ಅಂತ ಅದನ್ನ ಸಾಯಿಸ್ತಾರ. ನನ್ನ ಪರಸ್ತಿತಿ ಅಂಗೈತಿ. ದ್ಯಾವ್ರು ಎಲ್ಡೂ ಕಾಲ್ನ ಕಿತ್ಕೊಂಡ್‌ಬುಟ್ಟ. ಎದ್ದೇಳಾಕ ಬರಾಕಿಲ್ಲ. ಗಂಡ ಎಂಗೋ ಸಾಕ್ತಿದ್ದ. ಈ ಮಗೀನ ಬಸ್ರಿ ಇದ್ದಾಗ್ಲೇ ತೀರೋಗಿಬುಟ್ಟ. ಮನೀ ಕಾಲೀ ಮಾಡಿ ಊರು ಬಿಟ್ಟು ಹೊಂಟೋಗು ಅಂತವ್ರೆ. ನಾ ಬುಡಾಕಿಲ್ಲ, ಇದು ನನ್ ಗಂಡನ್ ಮನಿ ಅ೦ದದಕ ಇವರೆಲ್ಲ ನಂಗೆ ಹಾದರಗಿತ್ತಿ ಅಂತವ್ರೆ. ಮಗಾ, ನಾ ಹಾದರಗಿತ್ತಿ ಅಲ್ಲ. ಈಟೊಂದು ಚೆಂದದ ಮಗಾ ಎಲ್ಲದ್ರೂ ಬದಕ್ಲಿ. ಇವರ ಕೈಗೆ ಮಾತ್ರ ಸಿಗಬಾರ್ದು. ನನ್ ಅಣೇಬರಾ ಎಂಗೈತೋ ಅಂಗಾಗ್ಲಿ.’ ಎಂದು ಎಂಟು ವರ್ಷದ ತನ್ನ ದೊಡ್ಡ ಮಗ ಬಿಟ್ಟ್ಯಾನ ಕೈಗೆ ತನ್ನ ಎಂಟು ಹತ್ತು ದಿನದ ಹಸುಳೆಯನ್ನು ಹಾಕಿ ಕಣ್ಣೀರಿಟ್ಟಳು. +ಆ ಮಾತು ಬಿಟ್ಟ್ಯಾನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. +‘ಅಯ್ಯೋ, ಅದನ್ನ ನೆನಸಿಕೊಂತ ಕುಂತ್ರ ಎಂಗೆ. ಈಟೊತ್ತಿಗಾಗ್ಲೇ ನಮ್ಮವ್ವನ್ನ ಸಾಯಿಸಿಬುಟ್ಟಿರ್ತಾರೆ. ಮದ್ಲು ಯಾರ್‌ತಾವಾನಾದ್ರೂ ಮಗೀಗೆ ಒಸಿ ಹಾಲ್ನ ಕೇಳಾದು’ ಅಂತ ಸಂಜೆಯ ಕತ್ತಲಲ್ಲೇ ಊರ ಕಡೆಗೆ ನಡೆದ. +ಒಂದು ದೊಡ್ಡ ಮನೆ ಕಂಡ. ಮನೆಯಲ್ಲಿ ತುಂಬಾ ಬೆಳಕಿತ್ತು. +‘ಇಲ್ಲೇ ಒಸಿ ಹಾಲ್ ಕೇಳಾವಾ’ ಅಂತಾ ಗೇಟು ದಾಟಿ ಒಳಗೆ ಹೆಜ್ಜೆ ಹಾಕಿದ. ಮಗುವಿದ್ದ ಜೋಳಿಗೆಯನ್ನು ಜಗುಲಿಯ ಮೇಲಿಟ್ಟು ಬಾಗಿಲ ಕಡೆಗೆ ನೋಡುತ್ತ ‘ಅವ್ವಾ’ ಎಂದ. ಎಲ್ಲಿತ್ತೋ ಏನೋ ನಾಯಿಯೊಂದು ‘ಬೊವ್ ಬೊವ್’ ಎಂದು ಅವನ ಮೇಲೇರಿ ಬಂದು ಹಿಗ್ಗಾಮುಗ್ಗಾ ಎಳದಾಡಿತು. ‘ಅಯ್ಯೋ ಅವ್ವಾ’ ಎಂಬ ಕೂಗು ಕೇಳಿ ಮನೆಯವರೆಲ್ಲ ಹೊರಗೆ ಬಂದರು. ನಾಯಿ ಅವನನ್ನು ಚೆನ್ನಾಗಿ ಕಚ್ಚಿಬಿಟ್ಟಿತ್ತು. ಹೊಟ್ಟೆಯಲ್ಲಿ ಕೂಳಿಲ್ಲ, ನಾಯಿ ಕಚ್ಚಿದ್ದಕ್ಕೆ ಬಿಟ್ಟ್ಯಾ ಪ್ರಜ್ಞೆ ತಪ್ಪಿದ. +‘ಅಯ್ಯೋ ಪಾಪ, ಅವನನ್ನು ಮೊದ್ಲು ಆಸ್ಪತ್ರೆಗೆ ಕರಕೊಂಡು ಹೋಗೋಣ.’ ಎಂದು ಆಸ್ಪತ್ರೆಗೆ ಸಾಗಿಸಿದರು. +ಸ್ವಲ್ಪ ಹೊತ್ತಿನಲ್ಲಿ ಜೋಳಿಗೆಯಲ್ಲಿದ್ದ ಮಗು ‘ಕಿರ್ರೋ ಕಿರ್ರೋ’ ಎಂದು ಅರಚತೊಡಗಿತು. +‘ಇದೆಲ್ಲಿ೦ದ ಬರ್ತದೆ ಮಗು ಅಳೋ ಶಬ್ದ’ ಎಂದು ಎಲ್ಲರೂ ದೂರದಿಂದಲೇ ನೋಡುತ್ತಿದ್ದರೆ ಜ್ಯೋತಿ ಓಡೋಡಿ ಬಂದು ಆ ಮಗುವನ್ನು ಎತ್ತಿಕೊಂಡು ಒಳಗೆ ಓಡಿಬಿಟ್ಟಳು. ಎಲ್ಲರೂ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಂತೆಯೇ ಜ್ಯೋತಿ ಮಗುವನ್ನು ಎತ್ತಿಕೊಂಡು ತನ್ನ ರೂಮಿಗೆ ನಡೆದೇ ಬಿಟ್ಟಳು. ಬಾಗಿಲು ಹಾಕಿಕೊಂಡು ಮಗುವಿಗೆ ಹಾಲುಣಿಸತೊಡಗಿದಳು. ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ. ಹಾಲು ತುಂಬಿದ ಎದೆನೋವು ತಾಳಲಾರದೆ ಹುಚ್ಚಿಯಂತೆ ಅಳುತ್ತಿದ್ದ ಅವಳು ಈಗ ತಾಯ್ತನದ ಆನಂದ ಪಡೆದಿದ್ದಳು. ಅವಳ ಮುಖ ಪ್ರಸನ್ನವಾಗಿತ್ತು. ಎಲ್ಲರಿಗೂ ಇದೇನು ನಡೆಯುತ್ತಿದೆ ಅನ್ನುವದು ತಿಳಿಯದೇ ಗಾಬರಿಯಿಂದ ಯಾರಿಗೂ ಮಾತೇ ಬಾರದಂತಾಯಿತು. ಆದರೆ ಜ್ಯೋತಿಯ ಮುಖ ನೋಡಿದಾಗ ಎಲ್ಲರಿಗೂ ಸಮಾಧಾನವಾಯಿತು. +‘ಆ ಹುಡುಗ ಯಾರು, ಈ ಕೂಸು ಅವನ ಕೈಗೆ ಹೇಗೆ ಬಂತು’ ಎಲ್ಲರಿಗೂ ಕುತೂಹಲ. +ಅಷ್ಟೊತ್ತಿಗೆ ಜ್ಯೋತಿಯ ಗಂಡ ಸಾಗರ್ ಆಸ್ಪತ್ರೆಯಿಂದ ಬಂದ. ಜ್ಯೋತಿ ಓಡೋಡಿ ಬಂದು +‘ನೋಡ್ರಿ, ನನ್ನ ಮಗೂನ. ಸತ್ತು ಹೋಯಿತು ಅಂದ್ರಲ್ಲಾ. ನೀವು ಬರೀ ಸುಳ್ಳು ಹೇಳ್ತೀರಿ’ ಎಂದಾಗ ಸಾಗರ್ ಇದೇನೆಂದು ಆಶ್ಚರ್ಯದಿಂದ ಎಲ್ಲರ ಕಡೆ ನೋಡಿದ. ಸಾಗರ್‌ನ ತಂದೆ +‘ಆ ಹುಡುಗ ಹೇಗಿದ್ದಾನೆ?’ ಎಂದು ಕೇಳಿದರು. +‘ಪರವಾಗಿಲ್ಲ. ಸುಧಾರಿಸ್ಕೋತಿದ್ದಾನೆ’ +ಒಳಗೆ ಕರೆದುಕೊಂಡು ಹೋಗಿ ನಡೆದದ್ದನ್ನೆಲ್ಲ ಹೇಳಿದರು. +ಜ್ಯೋತಿ ಎಂಟು ದಿನಗಳ ಹಿಂದೆ ತನ್ನ ಮಗುವನ್ನು ಕಳೆದುಕೊಡು ಹುಚ್ಚಿಯಂತಾಗಿದ್ದರಿಂದ ಎಲ್ಲರೂ ಅವಳನ್ನು ಹೇಗೆ ಸಂತೈಸುವದೆಂದು ಚಿಂತಿಸುತ್ತಿದ್ದರು. ಯಾವುದಾದರೂ ಮಗುವಿನ ಅಳುವನ್ನು ಕೇಳಿದ ಕೂಡಲೇ ಓಡೋಡಿ ಹೋಗುತ್ತಿದ್ದಳು. ಹುಟ್ಟುವಾಗಲೇ ಸತ್ತು ಹುಟ್ಟಿದ ತನ್ನ ಮಗುವನ್ನು ನೋಡಿ ಜ್ಯೋತಿ ಕಿರಿಚಿಕೊಂಡು ಪ್ರಜ್ಞೆ ತಪ್ಪಿದ್ದಳು. ಡಾಕ್ಟರೆಲ್ಲ ಉಪಚರಿಸಿ ಅವಳನ್ನೇನೋ ಬದುಕಿಸಿದರು. ಆದರೆ ಜ್ಯೋತಿಯ ಬುದ್ಧಿ ಸ್ತಿಮಿತದಲ್ಲಿ ಉಳಿಯಲಿಲ್ಲ. ಮಗುವಿಗಾಗಿ ಹಂಬಲಿಸುತ್ತಿದ್ದಳು. ಹಾಲು ತುಂಬಿದ ಎದೆ ನೋವು ಬೇರೆ. ಶ್ರೀಮಂತರ ಮನೆಯ ಕೂಸಿಗಾದರೆ ಬಡವರ ಮನೆಯ ಬಾಣಂತಿಯನ್ನು ಕರೆಸಿ ಹಾಲು ಉಣಿಸಬಹುದು. ಆದರೆ ಶ್ರೀಮಂತರ ಮನೆಯ ಬಾಣಂತಿ ಕೂಸು ಕಳೆದುಕೊ೦ಡು ಎದೆ ತುಂಬಿ ನೋವಾದರೂ ತಾಯಿಯನ್ನು ಕಳೆದುಕೊಂಡು ಪರದೇಶಿಯಾದ ಬಡವರ ಮಕ್ಕಳಿಗೆ ಹೇಗೆ ಹಾಲು ಉಣಿಸಿಯಾಳು! ಇದು ನಮ್ಮ ಸಮಾಜದ ರೀತಿ. ಜ್ಯೋತಿಯದೂ ಅದೇ ಹಣೆಬರಹವಾಗಿತ್ತು. ಆದರೆ ಮಗುವೊಂದು ತಾನಾಗಿಯೇ ಅವಳನ್ನು ಹುಡುಕಿಕೊಂಡು ಬಂದು ತಾಯ್ತನದ ಸುಖ ನೀಡಿತ್ತು. ಆದರೆ ಮನೆಯಲ್ಲಿ ಎಲ್ಲರೂ ‘ಇದೆಲ್ಲಿಯ ಮಗುವೋ? ಅದರದೇನು ಕಥೆಯೋ? ಈಗೇನು ಮಾಡಬೇಕು?’ ಎಂದು ಚಿಂತೆಗೀಡಾದರು. ಆಸ್ಪತ್ರೆಯಲ್ಲಿರುವ ಆ ಹುಡುಗನಿಂದಲೇ ಎಲ್ಲ ವಿಷಯ ತಿಳಿಯಬೇಕು. +ಬೆಳಗ್ಗೆ ಬಿಟ್ಟ್ಯಾನಿಗೆ ಎಚ್ಚರ ಬಂತು. ಸಾಗರ್ ಆಸ್ಪತ್ರೆಗೆ ಬ೦ದು ಹುಡುಗನನ್ನು ಮಾತಾಡಿಸಿದ. +‘ನಿನ್ನ ಹೆಸರೇನು’ +‘ಬಿಟ್ಟ್ಯಾ… ಅಯ್ಯೋ ನನ್ ತಮ್ಮ ಎಲ್ಲಿ?’ +‘ನಮ್ಮ ಮನೇಲಿದ್ದಾನೆ. ಚೆನ್ನಾಗಿದ್ದಾನೆ. ಸರಿ. ನೀನ್ಯಾಕೆ ಮಗೂನ ಎತ್ತಿಕೊಂಡ್ ಬಂದೆ?’ +‘ಅದೊಂದ್ ಕತೇನೇ ಬುಡಿ. ಅವ್ವನಿಗೆ ಕಾಲಿರಲಿಲ್ಲ. ನಮ್ಮಪ್ಪ ದುಡದು ಹಾಕ್ತಿದ್ದ. ಮನೇಲೇ ಕೆಲ್ಸ ಮಾಡ್ಕೊಂಡಿದ್ಲು. ಒಂದಿನ ಯಾರೋ ಅಪ್ಪನ್ನ ಕೊಂದಾಕಿದ್ರು. ಯಾಕಂತ ಗೊತ್ತಿಲ್ಲ. ನಮ್ಮವ್ವ ಕಣ್ಣೀರು ಹಾಕ್ತಿದ್ಲು. ನನ್ ತಮ್ಮ ಹುಟ್ದಾಗ ನಮ್ಮ ಜನಾ ಎಲ್ಲಾ ಸೇರಿ ಈ ಮನೆ ಬುಟ್ಟಿ ಎಲ್ಲಿಗಾದ್ರೂ ಒಂಟೋಗು, ಹಾದರಗಿತ್ತಿ ಅಂತಾ ಬಯ್ತಿದ್ರು. ಅಂಗಂದ್ರೇನ್ ಸ್ವಾಮಿ? ನಿನ್ನೆ ಅವರೆಲ್ಲ ಸೇರಿ ಅವ್ವನ್ನ ಹೊಡೀತಾ ಇದ್ರು. ಅಲ್ಲಿದ್ರೆ ನಮ್ಮನ್ನೂ ಸಾಯಿಸ್ತಾರೆ ಅಂತಾ ಮಗೀನ ಎತ್ಕೊಂಡ್ ಓಡೋಡಿ ಬಂದೆ. ಮಗೀಗೆ ಒಸಿ ಹಾಲ್ ಕೇಳಾನ ಅಂತ ನಿಮ್ಮ ಮನಿ ತಾವ ಬಂದೆ. ನಾ ಮಾಡಿದ್ದು ತಪ್ಪಾ ಬುದ್ದೀ?’ +‘ಇಲ್ಲ, ನಿಂದೇನೂ ತಪ್ಪಿಲ್ಲ. ನೀ ಬೇಗ ವಾಸಿಯಾಗಿ ಬಂದು ನಿನ್ ತಮ್ಮನ್ನ ಕರಕೊಂಡು ಹೋಗು.’ +ಸಾಗರ್ ಮನೆಗೆ ಬಂದ. ಮನೆಯಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಅವನ ತಂದೆ ತಾಯಿ ಯೋಚಿಸುತ್ತಿದ್ದರು. ಮಗು ಬಂದದ್ದರಿಂದ ಜ್ಯೋತಿಯ ಆರೋಗ್ಯ ಸುಧಾರಿಸಿದೆಯಾದ್ದರಿಂದ ಒಳ್ಳೆಯದೇ ಆಯಿತು ಎಂದು ಒಮ್ಮೆ ಅನ್ನಿಸಿದರೆ ಮತ್ತೊಮ್ಮೆ ಯಾರ ಮಗುವೋ ಏನು ಕಥೆಯೋ. ನಾಳೆ ಯಾರಾದರೂ ಬಂದು ಕೇಳಿದರೆ ಏನು ಹೇಳುವದು? ದೇವರು ಎಂಥ ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟ! ಇರೋ ಒಬ್ಬ ಮಗ ಸೊಸೆಗೆ ಎಷ್ಟೋ ವರ್ಷ ಮಕ್ಕಳಾಗಿರಲಿಲ್ಲ. ಈಗ ದೇವರು ಒಂದು ಮಗು ಕೊಟ್ಟ ಅನ್ನುವಷ್ಟರಲ್ಲೇ ಅದೂ ಹುಟ್ಟುವಾಗಲೇ ಸತ್ತುಹೋಯಿತು. ಇನ್ನು ಮುಂದೆ ಮಕ್ಕಳಾಗುವದಿಲ್ಲ ಎಂದು ಡಾಕ್ಟರು ಬೇರೆ ಹೇಳಿದ್ದಾರೆ. ಜ್ಯೋತಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಮಕ್ಕಳು ಮಕ್ಕಳು ಎಂದು ಹಂಬಲಿಸುವ ಈಕೆಗೆ ಈ ಮಗುವನ್ನೂ ಆ ಹುಡುಗನಿಗೆ ಕೊಟ್ಟುಬಿಡು ಎಂದು ಹೇಳಿದರೆ ಅವಳ ಗತಿ ಏನಾದೀತು? ಪ್ರಶ್ನೆ ಬಗೆಹರಿಯದಂತಾಗಿತ್ತು. +ಆಸ್ಪತ್ರೆಯಲ್ಲಿ ಬಿಟ್ಟ್ಯಾ ಸ್ವಲ್ಪ ಚೇತರಿಸಿಕೊಂಡ. ‘ನಾನೀಗ ಆ ಮನೆಗೆ ಹೋದರೆ ಮಗೀನ ನನ್ ಕೈಗೇ ಕೊಟ್‌ಬಿಡ್ತಾರೆ. ಈಗ ನನ್ ತಮ್ಮ ಒಳ್ಳೇ ಕಡೆಗೇ ಸೇರ್‌ಕೊಂಡೈತಿ. ನಾ ಅವ್ವನ ಮಾತು ನಡೆಸಿದಂಗೆ ಆಗೈತೆ. ಇನ್ನ ನಾ ಅಲ್ಲಿಗೆ ಹೋಗಾದೂ ಬ್ಯಾಡ, ಇಲ್ಲಿರಾದೂ ಬ್ಯಾಡ’ ಎಂದು ಬಿಟ್ಟ್ಯಾ ಹೊರಟು ಹೋಗಿಬಿಟ್ಟ. +೦೮-೧೨-೨೦೦೫ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, […] +ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […] +“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು. ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_688.txt b/Kannada Sahitya/article_688.txt new file mode 100644 index 0000000000000000000000000000000000000000..fcc26c7acce076c713106f32315037dab11d7974 --- /dev/null +++ b/Kannada Sahitya/article_688.txt @@ -0,0 +1,142 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭಾಷಾ ಸಮಿತಿಯ ವರದಿ +ದಿನಾಂಕ: ೨೭-೧-೧೯೮೧ +(ಡಾ| ಗೋಕಾಕ್ ಸಮಿತಿ ವರದಿ) +(ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ ಏಕೈಕ ಪ್ರತಹಮಭಾಷೆಯಾದ ಕನ್ನಡದ ಜೊತೆಗೆ ನಿಲ್ಲುವುದಿಲ್ಲ ನಿಜ. ಆದರೆ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಈ ಭಾಷೆಗಳು ಪ್ರಥಮ ಭಾಷೆಯೇ (೧೫೦ ಅಂಕಗಳು) ಆಗಿ ೧೯೮೬-೮೭ರ ವರೆಗೆ ಮುಂದುವರಿಯಬೇಕಾಗಿದೆ. ಅದೇ ಪ್ರಕಾರ ೧೯೮೬-೮೭ರ ವರೆಗೆ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಕನ್ನಡ ದ್ವಿತೀಯ ಹಾಗೂ ತೃತೀಯ ಭಾಷೆಯಾಗಿ ಮುಂದುವರಿಯುವುದು. +(ಈ) ಆದರೆ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ೧೯೮೧-೮೨ರಿಂದಲೇ ಕನ್ನಡವು ಏಕೈಕ ಪ್ರಥಮಭಾಷೆ (೧೫೦ ಅಂಕಗಳು) ಯಾಗುವುದು. ಕನ್ನಡವನ್ನು ಬಿಟ್ಟು ಉಳಿದ ಆಧುನಿಕ ಭಾರತೀಯ ಭಾಷೆಗಳು (ತಮಿಳು ಮುಂತಾದ) ದ್ವಿತೀಯ ಹಾಗೂ ತೃತೀಯ ಭಾಷೆಗಳ ಅಂಕಣಗಳಲ್ಲಿ (ಕಾಲಮ್ಗಳು) ಪ್ರಾಚೀನ ಭಾಷೆಗಳೊಡನೆ ಕಾಣಿಸಿಕೊಂಡು ಮುಂಬರುವ ಎಲ್ಲ ವರ್ಷಗಳಲ್ಲಿಯೂ ಅದೇ ರೀತಿಯಾಗಿ ಮುಂದುವರಿಯುವುವು. +(ಉ) ಸಮಿತಿಯ ಸಲಹೆಗಳ ಪ್ರಕಾರ ಎರಡು ಭಾಷೆಗಳನ್ನು (ದ್ವಿತೀಯ ಹಾಗೂ ತೃತೀಯ) ತಮಗೆ ಇಚ್ಚೆಯಿದ್ದಂತೆ ವಿದ್ಯಾರ್ಥಿಗಳು ಆಯ್ದುಕೊಳ್ಳಬಹುದು. ಆದರೆ ಇಂಗ್ಲಿಷು ಭಾಷೆಯೊಂದನ್ನು ೧೯೮೫-೮೬ನೆಯ ಶೈಕ್ಷಣಿಕ ವರ್ಷ ಮುಗಿಯುವವರೆಗೆ ದ್ವಿತೀಯ ಭಾಷೆಯೆಂದು ಮಾತ್ರ ಅಭ್ಯಸು‌ಇಸಬಹುದೆಂದು ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ವಿಧಿಸಲಾಗಿದೆ. ೧೯೮೬-೮೭ರಿಂದ ವಿದ್ಯಾರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿತು ಉಳಿದ ಯಾವ ಎರಡು ಭಾಷೆಗಳನ್ನಾದರೂ ಆಯ್ದುಕೊಳ್ಳಬಹುದು. +(ಊ) ಕನ್ನಡ ಬೇರೆ ಒಂದು ಆಧುನಿಕ ಭಾರತೀಯ ಭಾಷೆ, ಒಂದು ಪ್ರಾಚೀನ ಭಾಷೆ; ಯಾವ ಭಾಷೆಯನ್ನೇ ವಿದ್ಯಾರ್ಥಿಯು ತೃತೀಯ ಭಾಷೆಯೆಂದು ಆಯ್ದುಕೊಂಡಿರಲಿ, ಅದು ೧೮೧-೮೨ರಿಂದಲೇ ಕಡ್ಡಾಯದ ಪರೀಕ್ಷಾ ವಿಷಯವಾಗಿರುವುದು. ಇದೇ ವ್ಯವಸ್ಥೆಯು ಸಮಿತಿಯ ೪ನೆಯ ಸಲಹೆಯ ಪ್ರಕಾರ ಮುಂದೆಯೂ ನಡೆದುಕೊಂಡುಬರುವುದು. +(೨) ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗಳು +‘ಭಾಷಾ ಶಿಕ್ಷಣದ ಗೊತ್ತುಗುರಿಗಳು’ ಎಂಬ ಭಾಗದಲ್ಲಿ ಹೈಸ್ಕೂಲುಗಳಲ್ಲಿ ಕಲಿಯಬೇಕಾದ ಎಲ್ಲ ಭಾಷೆಗಳ ತರತಮ ಮಹತ್ವವನ್ನು ಅಳೆಯಲು ಹವಣಿಸಿದೆ. ಹೀಗೆ ಅಳೆಯುವಾಗ ಉಪಯೋಗಿಸಿದ ಅಳತೆಗೋಲೆಂದರೆ ಇಂದಿನ ಒಬ್ಬ ಸುಸಂಸ್ಕೃತ ನಾಗರಿಕನಿಗೆ ಕನ್ನಡ ನಾಡಿನಲ್ಲಿ ವಿವಿಧ ಭಾಷೆಗಳಿಂದ ಬರುವ ಕೊಡುಗೆಯೇ ಸರಿ. +ಅಭ್ಯಸಿಸಲಿರುವ ಮೂರು ಭಾಷೆಗಳಿಗೂ ಸರಿಸಮಾನ ಅಂಕಗಳಿರಬೇಕೆಂದು ಒಂದು ಅಭಿಪ್ರಾಯವಿದೆ. ಆದರೆ ಪ್ರಥಮ-ದ್ವಿತೀಯ-ತೃತೀಯ ಎಂದು ಭಾಷೆಗಳನ್ನು ವಿಂಗಡಿಸುವುದರಲ್ಲಿಯೇ ಒಂದು ವಿಶೇಷ ಅರ್ಥವಿದೆ. ‘ಪ್ರಥಮ’ ಎಂಬುದು ಬರಿ ಒಂದು ಅಭಿಮಾನ ಇಲ್ಲವೆ ಭಾವನಾವೇಶದ್ಯೋತಕವಾದ ಪದವಲ್ಲ. ಇಂದಿನ ಸಾಮಾನ್ಯ ಅಬಳಕೆಯಲ್ಲಿ ಅಂಥದೊಂದು ಅರ್ಥ ಅದಕ್ಕೆ ಬಂದಿದೆ. ಆದರೆ ಶಿಕ್ಷಣ ಪಡೆಯಬೇಕೆಂಬ ಹವ್ಯಾಸವುಳ್ಳ ಲಕ್ಷಾವಧಿ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಭಾಷೆ ಯಾವುದು? ಕನ್ನಡ ನಾಡಿನಲ್ಲಿ ಕನ್ನಡವೊಂದೇ ಆ ‘ಪ್ರಥಮ’ ಭಾಷೆಯಾಗಬಲ್ಲದು. ಅದು ಕನ್ನಡ ಜನತೆಯ ಭಾಶೆ. ಅಂತೇ ಕನ್ನಡ ನಾಡಿನಲ್ಲಿಯ ವ್ಯವಹಾರದ, ಆಡಳಿತದ, ಸೇವಾ ಆಯೋಗದ, ಶಾಲೆ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ ಮಾಧ್ಯಮವಾದ ಭಾಷೆ. ಅದರ ಪ್ರಯೋಜಕತೆ ಜನತೆಗೆ ಸಂಪೂರ್ಣ ಲಭ್ಯವಿರಲು ತಡವಾದರೆ ಜನತೆ ರೊಚ್ಚಿಗೇಳುವುದರಲ್ಲಿ ಸಂಶಯವಿಲ್ಲ. ಪ್ರಪಂಚದ ಕೆಲವೊಂದು ವಿಶಿಷ್ಟ ವಿಜ್ಞಾನ ವಿಭಾಗಗಳನ್ನು ತೆರ್ದಿಡಲು ಇನ್ನೂ ಅನೇಕ ವರ್ಷಗಳ ವರೆಗೆ ಇಂಗ್ಲಿಷಿನ ಪ್ರತ್ಯಕ್ಷ ಜ್ಞಾನ ಬೇಕಾಗಬಹುದು. ನಾವು ಮೆಚ್ಚಿದ ಒಂದು ಸಾಹಿತ್ಯದ ಮೇಲ್ಮೆಯನ್ನು-ಅದು ಸಂಸ್ಕೃತವೇ ಇರಲಿ ಇಲ್ಲವೇ ಇನ್ನಾವ ಭಾಷೆಯೇ ಇರಲಿ-ಹೃದಯ ತುಂಬಿ ಸೂಸುವಂತೆ ಸವಿಯಲು ಆ ಸಾಹಿತ್ಯದ ಭಾಷೆಯ ನಿಚ್ಚಳವಾದ ಜ್ಞಾನ ಅವಶ್ಯವಾಗಬಹುದು. ಆದರೆ ಕಾಲ ಗತಿಸಿದಂತೆ ನಮ್ಮ ನಾಡಿನ ವಿವಿಧ ಸಂಸ್ಥೆಗಳ ದೃಷ್ಟಿ ನಿಚ್ಚಳವಾದಂತೆ-ಪ್ರಪಂಚದ ಜ್ಞಾನ ವಿಜ್ಞಾನವೆಲ್ಲ ಕನ್ನಡದಲ್ಲಿ ಒಡಮೂಡುವುದರಲ್ಲಿ ಸಂಷಯವಿಲ್ಲ. +ಆಡಳಿತ, ಸಾರವಜನಿಕ ಸೇವೆ, ವ್ಯವಹಾರ, ಉದ್ಯೋಗ, ಉಚ್ಚ ಶಿಕ್ಷಣ-ಹೀಗೆ ಜೀವನದ ವಿವಿಧ ಭಾಗಗಳನ್ನು ಅಭಿವ್ಯಕ್ತಗೊಳಿಸುವುದರಿಂದ ವಿದ್ಯಾರ್ಥಿಯು ಪಡೆಯುವ ಕನ್ನಡದ ಜ್ಞಾನಕ್ಕೆ ಆಳವೂ, ವಿಸ್ತಾರವೂ ಇರಬೇಕಾಗುತ್ತದೆ. ಅನೇಕ ವಿಷಯಗಳ ವ್ಯಾಸಮ್ಗಕ್ಕಾಗಿ ಭಾಶೆಯೇ ಹಿಗ್ಗಬೇಕಾಗುತ್ತದೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿಯ ಕನ್ನಡದ ಅಭ್ಯಾಸ ಮುಂದುವರಿದಿರಬೇಕು. ಹೀಗೆ ಮುಂದುವರಿಸಲು ಭಾಷೆಯ ಜೊತೆಗೆ ಆಧುನಿಕ ಕನ್ನಡ ಸಾಹಿತ್ಯದ ಅಭ್ಯಾಸವೂ ಅವಶ್ಯವಾಗುತ್ತದೆ. ಕನ್ನಡೇತರ ವಿದ್ಯಾರ್ಥಿಯೂ ಕನ್ನಡವನ್ನು ಹೀಗೆ ವೈವಿಧ್ಯಪೂರ್ಣವಾಗಿ ಅಭ್ಯಸಿಸುತ್ತಾನೆ. ಅಂತೆಯೇ ಪ್ರಥಮ ಭಾಷೆಯಾದ ಕನ್ನಡಕ್ಕೆ ೧೫೦ ಅಂಕಗಳನ್ನು ಕಾದಿರಿಸಿದೆ. +ಕನ್ನಡವನ್ನು ಪ್ರಥಮ ಭಾಶೆಯಾಗಿ ಅಭ್ಯಸಿಸುವಾಗ ಈ ಅಭ್ಯಾಸದ ಗುರಿಗಳೇನಿರಬೇಕು? ಪಠ್ಯಪುಸ್ತಕಗಳ ನಿರ್ದೇಶನ ಮಂಡಲವೂ ಗುರಿಗಳನ್ನು ಈ ರೀತಿಯಾಗಿ ಸ್ಫುಟಗೊಳಿಸಿದೆ. ಆ ಮಾತುಗಳನ್ನೇ ಕೆಲವು ಹೆಚ್ಚು ಕಡಿಮೆಗಳೊಡನೆ ಇಲ್ಲಿ ಸೇರಿಸಿದೆ. +(ಅ) ಉತ್ತಮ ಶ್ರವಣ, ಉತ್ತಮ ಅರ್ಥಗ್ರಹಣ, ಹಾಗೂ ಶೀಘ್ರ ವಾಚನ ಸಾಧ್ಯವಾಗುವಂತೆ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಬೆಳೆಸಬೇಕು. +(ಆ) ಮನೋರಂಜನಾ, ಜ್ಞಾನಾರ್ಜನಾ, ಸಾಹಿತ್ಯಾಭಿರುಚಿ, ಹಾಗೂ ಸೂಕ್ಷ್ಮ ಪರಿಜ್ಞಾನದ ತೃಪ್ತಿಗಾಗಿ ಸ್ವತಂತ್ರ ಅಭ್ಯಾಸವನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ಮಾಡುವುದು. +(ಇ) ಅವರ ರಸಗ್ರಹಣ ಶಕ್ತಿ, ಕಲ್ಪಕತೆ, ಸ್ವಂತಿಕೆ, ಹಾಗೂ ಸೃಜನಶೀಲತೆಗಳ ಉದ್ದೀಪ್ತವಾಗುವಂತೆ ಹವಣಿಸುವುದು. +(ಈ) ಉಕ್ತ ಹಾಗೂ ಲಿಖಿತ ಅಭಿವ್ಯಕ್ತಿಯ ಒಳ್ಳೆಯ ವಿಕಾಸ ವಿದ್ಯಾರ್ಥಿಗಳಲ್ಲಿ ರೂಪುಗೊಳ್ಳುವಂತೆ ನೋಡಿಕೊಳ್ಳುವುದು. +(ಉ) ಶುದ್ಧ ಉಚ್ಚಾರ, ದಿನದಿನಕ್ಕೆ ಬೆಳೆಯುತ್ತಿರುವ ಶಬ್ದಕೋಶ, ಭಾಷೆಯು ದೇಹರಚನೆ ಇಲ್ಲವೆ ವಾಕ್ಯಗಳ ಮೈಕಟ್ಟನ್ನು ಚೆನ್ನಾಗಿ ಅರಿತುಕೊಂಡು ಅದನ್ನು ಉಚಿತವಾಗಿ ದೋಷರಹಿತವಾಗಿ ಹಾಗೂ ಪರಿಣಾಮಕಾರಿಯಾಗಿ ಉಪಯೋಗಿಸುವ ಜಾಣ್ಮೆ: ಇವು ವಿದ್ಯಾರ್ಥಿಗಳಲ್ಲಿ ಬೆಳೆಯುವಂತೆ ಪ್ರತ್ನಿಸುವುದು. +(ಊ) ವ್ಯಾಕರಣ, ಭಾಷೆಯಲ್ಲಿಯ ಮುಖ್ಯ ಸಾಹಿತ್ಯ ಪ್ರಕಾರಗಳು ಹಾಗೂ ಮಹತ್ವದ ಕವಿ ಹಾಗೂ ಸಾಹಿತಿಗಳು: ಈ ವಿಷಯಗಳ ಹಾಗೂ ವ್ಯಕ್ತಿಗಳ ಪರಿಚಯ ಮಾಡಿಕೊಡುವುದು. ಆಧುನಿಕ ಕನ್ನಡ ಭಾಷಾ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ವ್ಯಾಕರಣ ಪ್ರಾಕಾರ ಸಾಹಿತ್ಯ ಹಾಗೂ ಸಾಹಿತಿ-ಕವಿಗಳ ಪರಿಚಯವನ್ನು ಮಾಡಿಕೊಡುವುದು. +(ಋ) ಅವರಿಗೆ ಕಲಿಸುವ ಆಧುನಿಕ ಕನ್ನಡ ಗದ್ಯ ಪದ್ಯಗಳ ದ್ವಾರಾ ಜೀವನದ ಶ್ರೇಷ್ಠ ಮೌಲ್ಯಗಳು ದೊರೆತು ಭಾವನೆಗಳ ಉದಾತ್ತೀಕರಣದ ಮಾರ್ಗವಾಗಿ ಉತ್ತಮ ಹೃದಯ ಸಂಸ್ಕೃತಿ ವಿದ್ಯಾರ್ಥಿಗಳದಾಗಿ ಅವರ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸವಾಗುವಂತೆ ಪ್ರಯತ್ನಿಸಬೇಕು. ಹಳಗನ್ನಡ-ನಡುಗನ್ನಡದ ಮುಖ-ಪರಿಚಯವಿರಲೆಂದು ಮಾತ್ರ ಕೀರ್ತಿವಂತ ಕವಿ-ಸಾಹಿತಿಗಳಿಂದ ಒಂದೆರಡು ಉಧೃತ ಭಾಗಗಳನ್ನು ಪಠ್ಯಪುಸ್ತಕದಲ್ಲಿ ಸಂಗ್ರಹಿಸಬಹುದು. +(ೠ) ವಿದ್ಯಾರ್ಥಿಗಳಿಗೆ ಈ ನಾಡು ಹಾಗೂ ರಾಷ್ಟ್ರ ತಮ್ಮದು, ಭಾಶೆ ತಮ್ಮದು, ಸಾಹಿತ್ಯ ಹಾಗೂ ಸಂಸ್ಕೃತಿ ತಮ್ಮದೆಂಬ ಭಾವನೆ ಜಾಗೃತವಾಗುವಂತೆ ಪಠ್ಯಕ್ರಮವನ್ನು ಪಠ್ಯಸಾಮಗ್ರಿಯನ್ನು ಹಾಗೂ ಬೋಧನ ವಿಧಾನವನ್ನು ರೂಪಿಸಬೇಕು. +(ಎ) ಓದು: ಗದ್ಯ: ಪ್ರಬಂಧ, ಸಣ್ಣಕತೆ ಆಟ ನೋಟಗಳ ಪ್ರಪಂಚ, ಸಾಹಸ-ವೈಜ್ಞಾನಿಕ ಸಂಶೋಧನೆಗಳು ಹಾಗೂ ಯಂತ್ರ ಚಮತ್ಕಾರಗಳು, ಸಾಂಸ್ಕೃತಿಕ ಪರಂಪರೆಯ ಕೊಡುಗೆ, ಸಾಹಿತ್ಯಕ ಇಲ್ಲವೆ ಐತಿಹಾಸಿಕ ಮಹತ್ವದ ಪತ್ರಗಳು, ಕಾದಂಬರಿಗಳಿಂದ ಉದ್ಧೃತ ಭಾಗಗಳು: ಭಾಷಣಗಳು, ಪ್ರವಾಸ ಸಾಹಿತ್ಯ, ಚರಿತ್ರೆ, ಆತ್ಮ ಚರಿತ್ರೆ, ಜನತೆಯ ಆಚಾರ ವಿಚಾರ, ಜನತೆಯ ಐತಿಹಾಸಿಕ ಇಲ್ಲವೆ ಭೌಗೋಳಿಕ ವೃತ್ತಾಂತ ವೈಜ್ಞಾನಿಕ ಕಥಾ ಪ್ರಪಂಚ, ಪಶುಪಕ್ಷಿಗಳ ಜಗತ್ತು, ನಾಟಕಗಳಿಂದ ಆಯದ ದೃಶ್ಯಗಳು, ಏಕಾಂಕಗಳು, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಮೇಲೆ ಪ್ರಬಂಧಗಳು, ಡೈರಿಗಳು, ಉದ್ಧೃತ ಭಾಗಗಳನ್ನು ಆದಷ್ಟು ಮಟ್ಟಿಗೆ ಆಧುನಿಕ ಕನ್ನಡ ಸಾಹಿತ್ಯದ (ಅಲ್ಲಲ್ಲಿ ನಡುಗನ್ನಡ ಸಾಹಿತ್ಯದ) ವಿವಿಧ ಶೈಲಿಗಳು ನಿದರ್ಶನಕ್ಕೆ ಬರುವಂತೆ ಆಯ್ದಿರಬೇಕು. +ಪದ್ಯ: +ಭಾವಗೀತೆಗಳು, ಕಥನಕವನಗಳು, ಲಾವಣಿಗಳು, ತ್ರಿಪದಿಗಳು, ಅಷ್ಟಷಟ್ಪದಿಗಳು, ಶೋಕಗೀತೆಗಳು, ಓಡುಗಳು, ನೀಳ್ಗವನಗಳೋಳಗಿಂದ ಉದ್ಧತ ಭಾಗಗಳು, ರಾಷ್ಟ್ರೀಯತೆ, ಶೌರ್ಯ, ನಿಸರ್ಗ, ನೀತಿ, ಭಕ್ತಿ ಮೊದಲಾದ ಜೀವನ ಮೌಲ್ಯಗಳನ್ನು ಕುರಿತ ಕವನಗಳು, ವಚನಗಳು, ಕಂದಗಳು, ದಾಸರ ಹಾಡುಗಳು, ಸಾಂಗತ್ಯ, ಕೆಲವು ವೃತ್ತಗಳು, ಷಟ್ಪದಿಗಳು. +ಉಪಪಠ್ಯ ಗದ್ಯ: ಒಂದು ಏಕಸೂತ್ರತೆಯುಳ್ಳ ಕೃತಿ, ಕಾದಂಬರಿ, ವೈಜ್ಞಾನಿಕ ಕಾದಂಬರಿ, ಸಾಹಸದ ಕತೆ, ವೈದಿಕ ಕತೆಗಳು, ಚರಿತ್ರೆ, ಆತ್ಮಚರಿತ್ರೆ, ಕರ್ನಾಟಕದ ಸಮಗ್ರ ಇತಿಹಾಸವನ್ನು ಒಳಗೊಂಡ ಗ್ರಂಥ. ಸಂಕ್ಷಿಪ್ತಗೊಳಿಸಿದ ಜಗತ್ಪ್ರಸಿದ್ಧ ಕಾದಂಬರಿ, ಒಂದು ನಾಟಕ, ಐದು ಏಕಾಂತಗಳ ಸಂಗ್ರಹ. +(ಏ) ವ್ಯಾಕರಣ, ಛಂದಸ್ಸು, ಮತ್ತು ಅಲಂಕಾರ-ಶಾಸ್ತ್ರ: +ವ್ಯಾಕರಣ: ಇದು ಕ್ರಿಯಾತ್ಮಕವಾಗಿರಬೇಕು. ಈಗಿನ ಕನ್ನಡ ಪ್ರಥಮಭಾಷಾ ಪಠ್ಯಕ್ರಮದಲ್ಲಿ ಇದರ ವಿವರಗಳು ಸಾಕಷ್ಟು ಬಂದಿವೆ. +ಛಂದಸ್ಸು: ಭಾಷಾಭ್ಯಾಸಕ್ಕೆ ನಿಲ್ಲದೆ ಸಾಹಿತ್ಯದ ಅಭ್ಯಾಸವನ್ನೂ ಆಸ್ಥೆಯಿಂದ ಪ್ರಥಮ ಭಾಷಾಭ್ಯಾಸವು ಪಾಲಿಸುವದೆಂಬುವ ಮಾತಿಗೆ ಛಂದಸ್ಸು ಹಾಗೂ ಅಲಂಕಾರ ಶಾಸ್ತ್ರದ ಅಭ್ಯಾಸ ಸಾಕ್ಷಿಯಾಗಿದೆ. ಆದರೆ ಛಂದಸ್ಸನ್ನು ಕಲಿಸುವಾಗ ಬರಿ ಮಾತ್ರೆ, ಗಣ, ಗುರು, ಲಘುಗಳನಲ್ಲದೆ ಕೆಳಗೆ ಕಾಣಿಸಿದ ವಿಷಯಗಳನ್ನು ಮೊದಲು ಕಲಿಸುವುದು ಅವಶ್ಯಕವಾಗಿದೆ:- +೧. ತಾಳ ಲಯವೆಂದರೇನು? +೨. ಗದ್ಯ ಹಾಗು ಪದ್ಯದ ತಾಳ ಲಯಕ್ಕೆ ಇರುವ ಅಂತರವೇನು? +೩. ವಚನ ಹಾಗು ಸ್ವಚಂದ ಛಂದಗಳ ತಾಳ ಲಯಕ್ಕೂ ಗದ್ಯ ಪದ್ಯಗಳ ತಾಳಲಯಕ್ಕೂ ಇರುವ ಅಂತರವೇನು? +ಅಲ್ಲದೆ ಛಂದಸ್ಸು ಕಲಿಸುವಾಗ ಕಂದ ಪದ್ಯ, ಷಟ್ಪದಿಗಳು, ರಗಳೆಗಳು ಹಾಗು ವೃತ್ತಗಳ ಛಂದಸ್ಸನ್ನು ಅಭ್ಯಸಿಸುವ ಏರ್ಪಾಟಿದೆಯೇ ಹೊರೆತು ಆಧುನಿಕ ಕಾವ್ಯದ ಭಾವಗೀತೆ, ಸರಳ ರಗಳೆ, ಅಷ್ಟ ಷಟ್ಪದಿಗಳ ಹಾಗೂ ತ್ರಿಪದೆ- ಸಾಂಗತ್ಯಗಳ ಛಂದಸ್ಸನ್ನು ತಿಳಿಸುವ ಏರ್ಪಾಟ್ ಅಲ್ಲ. ಆಧುನಿಕ ಕಾವ್ಯ ಛಂದಸ್ಸನ್ನು ವಿಧ್ಯಾರ್ಥಿಗಳಿಗೆ ಮೊದಲು ತಿಳಿಸಿಕೊಡುವ ಏರ್ಪಾಟಾಗಬೇಕು. ಇದರ ಬಗ್ಗೆ ಒಳ್ಳೆ ಗ್ರಂಥಗಳು ಪ್ರಕಟವಾಗಿವೆ. ವೇಳೆ ಉಳಿದರೆ ವಚನ, ಸಾಂಗತ್ಯ- ತ್ರಿಪದಿ-ಷಟ್ಪದಿಗಳ ಛಂದಸ್ಸನ್ನೂ ತಿಳಿಸಿಕೊಡಬಹುದು. +ಅಲಂಕಾರಗಳ ವಿಷಯದಲ್ಲಿಯೂ ಕೆಲವು ಮೂಲಭೂತ ವಿವರಣೆಗಳೂ ಅವಶ್ಯವಾಗಿವೆ. ಅಲಂಕಾರಿಕ ಭಾಷೆ ಎಂದರೇನು? ಅದು ವ್ಯಾವಹಾರಿಕ ಹಾಗು ಶಾಸ್ತ್ರೀಯ ಭಾಷೆಯಿಂದ ಹೇಗೆ ಭಿನ್ನವಿರುತ್ತದೆ? ಅಲಂಕಾರಗಳಿಗೂ ಹಾಗೂ ಕಲ್ಪಕತೆ ಮತ್ತು ಭಾವನಾಭಿವ್ಯಕ್ತಿಗೂ ಎನು ಸಂಬಂದ? ಈ ಪ್ರಶ್ನೆಗಳನ್ನು ಬಿಡಿಸಿದಾಗ ಮಾತ್ರ ಅಯ್ದ ಕೆಲ ಒಂದು ಅಲಂಕಾರಗಳ ವಿವರಣೆಗೆ ಅರ್ಥ ಬರುತ್ತದೆ. +ಒ. ಲೇಖನ ಕಾರ್ಯ: ಕನ್ನಡವನ್ನು ಪ್ರಥಮ ಭಾಷೆಯಾಗಿ ಅಭ್ಯಸಿಸಿದ ವಿದ್ಯಾರ್ಥಿಗಳಿಂದ ಯಾವ ಮಟ್ಟದ ಬರವಣಿಗೆಯನ್ನು ನಿರೀಕ್ಷಿಸಬಹುದು? ಇದರ ತರಹಗಳನ್ನು ಮುಂದೆ ಕಾಣೆಸಿದೆ:- +೧. ಉಪಪಠ್ಯ ಪುಸ್ತಕದಿಂದ ಉದ್ಧತವಾದ ಒಂದು ಭಾಗವನ್ನು ಅದರ ಸಾರಕೆಡದಂತೆ ಸಂಕ್ಷೇಪಿಸುವುದೆ. +೨. ಆ ಪುಸ್ತಕದಿಂದಾಯ್ದ ಒಂದು ಸೂತ್ರದ ಸಾರವನ್ನು ವಿಸ್ತಾರವಾಗಿಸಿ ಬರೆಯುವುದು. +೩. ಸಾಮಾನ್ಯ ವಿಷಯಗಳ ಮೇಲಿನ ವಿಚಾರಪೂರ್ಣ ನಿಭಂದಗಳು ಇಲ್ಲವೆ ಅಂತರಂಗವನ್ನು ತೆರೆದು ಬರೆಯುವ ಪ್ರಭಂದಗಳು. +೪. ಪಠ್ಯೇತರ ಪದ್ಯಗಳ ಸಾರಗ್ರಹಣ, ರಸಗ್ರಹಣ, ವಿವರಣೆ, ಇತ್ಯದಿ. +೫. ಸ್ವತಂತ್ರ ಕಥೆ, ವರ್ಣನೆ, ಪ್ರವಾಸ ಕಥನ, ನಿತ್ಯಾನುಭವ ನಿರೂಪಣ, ಇತ್ಯಾದಿ. +೬. ಆಡಳಿತ ಇಲ್ಲದೆ ವ್ಯವಹಾರವನ್ನು ಕುರಿತ ಬರವಣೆಗೆ: ಮನವಿ, ವರದಿ ಇತ್ಯಾದಿ. +೭. ಒಂದು ಸರ್ವ ಸಾಮಾನ್ಯ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಇಲ್ಲವೆ ವೈಜ್ಞಾನಿಕ ವಿಷಯದ ಮೇಲೆ ಪ್ರಭಂದ. +ದ್ವಿತೀಯ ಭಾಷೆ: ಇದು ನಮ್ಮ ಸಲಹೆಯ ಪ್ರಕಾರ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದಾಗಬಹುದು. ಇಂಗ್ಲೀಷಾಗಬಹುದು, ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಲ್ಲಿ ಒಂದಾಗಬಹುದು. ಇದಕ್ಕೆ ಅಂಕಗಳು ೧೦೦. ಹೀಗೆ ಆಯ್ದುಕೊಂಡ ಭಾಷೆಯನ್ನು ಕಲಿಸಲು ಯಾವ ಗುರಿಗಳನಿಟ್ಟುಕೊಳ್ಳಬೇಕು? ಗುರಿಗಳನ್ನು ಹೀಗೆ ನಿರ್ದಿಷ್ಟಗೊಳಿಸಬಹುದು: +ಅ. ಬಳಕೆ ಮಾತಿನ ಹಾಗೂ ರೆಡಿಯೊ ಭಾಷಣಗಳ ಅರ್ಥಗ್ರಹಣ, ಘಟನೆಗಳು ಮಾಡಿದ ವರ್ಣನೆಗಳು ಇಲ್ಲವೆ ಟೀಕೆ ಟಿಪ್ಪಣಿಗಳು ಹಾಗು ವಿಚಾರಗಳ ಕ್ರಮಾನುಗ್ರತಿ: ಇವುಗಳ ಅರ್ಥ ಮಾಡಿಕೊಳ್ಳುವದು. +ಆ. ವಾಕ್ಯಗಳನ್ನು ಹಾಗೂ ಉದ್ಧೃತ ಗದ್ಯ ಭಾಗಗಳ ಅರ್ಥವನ್ನು ತಿಳಿದುಕೊಂಡು ಸ್ಪಷ್ಟವಾಗಿ ಓದುವದು: ಕವಿತಗಳನ್ನು ಅವುಗಳ ತಾಳಲಯ ಹಾಗೂ ಉಚಿತ ಸ್ವರ ಭಾರ ಇಲ್ಲವೆ ಕಾಕುವನ್ನು ಲಕ್ಷಿಸಿ ಹೇಳುವದು. +ಇ. ಪುಸ್ತಕ ಸಂಗ್ರಹಾಲಯದಲ್ಲಿಯ ಪುಸ್ತಕಗಳನ್ನೂ ಮಾಸಿಕಗಳನ್ನೂ ವೃತ್ತಪತ್ರಿಕೆಗಳನ್ನೂ ಓದಲು ನೈಜ ಲವಲವಿಕೆಯನ್ನು ಬೆಳೆಸಿಕೊಳ್ಳುವುದು. +ಈ. ಮೊದಲು ಓದಿಕೊಳ್ಳದೆ ಇದ್ದ ಉದ್ಧತ ಭಾಗಗಳ ಅರ್ಥಗ್ರಹಣ ಇಲ್ಲವೆ ಸಾರಗ್ರಹಣವನ್ನು ಕುರಿತು ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವದು: ಅರ್ಧಮರ್ಧ ಸೂಚಿಸಿದ ಇಲ್ಲವೆ ತುಣುಕು ತುಣುಕಾಗಿ ಕೊಟ್ಟ ಕಥೆಗಳಲ್ಲಿ ಬಿಟ್ಟಿರುವ ವಿವರಗಳನ್ನು ತುಂಬುವದು ಇಲ್ಲವೆ ಸಂಪೂರ್ಣವಾಗಿಸಿ ಮುಕ್ತಾಯಗೊಳಿಸುವದು: ಖಾಸಗಿ ಪತ್ರಗಳನ್ನು ಇಲ್ಲವೆ ಅನೌಪಚಾರಿಕ ಆಮಂತ್ರಣಗಳನ್ನು ಬರೆಯುವದು: ಜಾಹಿರಾತು ಕೊಟ್ಟ ಹುದ್ದೆಗಳಿಗಾಗಿ ಅರ್ಜಿಗಳನ್ನು ಬರೆಯುವದು: ಎಲ್ಲರಿಗೂ ಗೊತ್ತಿರುವ ವಿಷಯಗಳ ಮೇಲೆ ಚಿಕ್ಕ ಚಿಕ್ಕ ಪ್ಯಾರಾಗಳನ್ನು ಬರೆಯುವದು ಸಾಧ್ಯವಿದ್ದರೆ ಚಿಕ್ಕ ನಿಬಂಧಗಳನ್ನು ಬರೆಯುವದು. +ಉ. ವ್ಯಾಕರಣ:- ಪ್ರತಿ ನಿತ್ಯದ ಬಳಕೆ ಮಾತಿನಲ್ಲಿ ಹಾಗೂ ಬರೆಹದಲ್ಲಿ ಬಳಸಲಾಗುತ್ತಿರುವ ಮುಖ್ಯ ಭಾಷಾರೂಡಿಯ ಜೀವಾಣುಗಳನ್ನು (ಹಳೆಯ ಮಾತಿನಲ್ಲಿ ಹೇಳುವುದಾದರೆ ವಿವಿಧ ವ್ಯಾಕರಣ ನಿಯಮಗಳನ್ನು) ಕ್ರಿಯಾತ್ಮಕ ವ್ಯಾಕರಣದಲ್ಲಿ ವಿದ್ಯಾರ್ಥಿಗಳಿಗೆ ಮಾತಿನಲ್ಲಿಯೂ ಬರೆಹದಲ್ಲಿಯೂ ಮನದಟ್ಟಾಗುವಂತೆ ಅವುಗಳನ್ನು ಉಚಿತ ಉದ್ಧೃತ ಇಲ್ಲವೆ ಕಲ್ಪಿತ ಉದಾಹರಣೆಗಳೊಡನೆ ಕಲಿಸಬೇಕು. ಇದೇ ರೀತಿಯಾಗಿ ಸರ್ವಸಾಮಾನ್ಯವಾಗಿ ಮಾತು ಹಾಗೂ ಬರೆಹದಲ್ಲಿದ್ದ ಶಬ್ದಗಳು ಮಕ್ಕಳಿಗೆ ಅನಾಯಾಸ ಉಪಯೋಗಿಸಲು ಬರುವಂತೆ ಅವರು ಅಭ್ಯಸಿಸುವ ಗದ್ಯ-ಪದ್ಯದಲ್ಲಿ ಕಾಣೆಸಿಕೊಳ್ಳುತ್ತಿರಬೇಕು. ಇಂಗ್ಲಿಷಿನಲ್ಲಿ ಇಂಥ ಶಬ್ದಗಳು ಸುಮಾರು ೩೦೦೦ ಇವೆಯೆಂದು ತಜ್ಞರು ಕಂಡುಹಿಡಿದಿದ್ದಾರೆ. +ಊ. ಗದ್ಯ-ಪದ್ಯ ಸಂಗ್ರಹವನ್ನೂ ಒಂದು ಉಪ ಪಠ್ಯ ಪುಸ್ತಕವನ್ನೂ ವಿದ್ಯಾರ್ಥಿಗಳು ಅಭ್ಯಸಿಸುತ್ತಾರೆ. +ಋ. ಸಾಧ್ಯವಿದ್ದರೆ ಸಾದಾ ವಿಷಯಗಳನ್ನು ಕುರಿತು ಕಲಿತ ಭಾಷೆಯಲ್ಲಿ ಮಾತನಾಡುವುದು: ಸಂಭಾಷಣೆಯನ್ನು ಹಾಗೂ ಲೇಖನವನ್ನೂ ಉಳಿದ ಆಧುನಿಕ ಭಾಷೆಗಳ ವ್ಯಾಸಂಗದಲ್ಲಿ ನಿರೀಕ್ಷಿಸಬಹುದು. ಇಂಗ್ಲಿಷಿನಲ್ಲಿ ಇದು ಸುಲಭಸಾಧ್ಯವಲ್ಲ. ಆ ವಿಷಯವನ್ನು ಮುಂದೆ ಚರ್ಚಿಸಿದೆ. +ಇಂಗ್ಲೀಷು ಇವತ್ತಿಗೆ ಜಾಗತಿಕ ಭಾಷೆಯಾಗಿದೆ. ಅದರ ಹೊಟ್ಟೆಯಲ್ಲಿ ಅನೇಕ ಉಪ ಭಾಷೆಗಳಿವೆ: ಲಂಡನ್ ಡೈಯಲೆಕ್ಟ್, ಸ್ಕೌಟ್ಸ್, ಯಾಃರ್ಕ್‌ಷೈರ್ ಡೈಯಲೆಕ್ಟ್ ಮುಂತಾಗಿ. ಆದರೆ ಇಂಗ್ಲೀಷು ತಳೆದ ಜಾಗತಿಕ ರೂಪದಲ್ಲಿ ಅಮೇರಿಕನ್, ಆಸ್ಟ್ರೇಲಿಯನ್, ಸೌತ್ ಆಫ್ರಿಕನ್, ಕನೇಡಿಯನ್ ಮುಂತಾದ ಪ್ರಕಾರಗಳಿವೆ. ಇಂಗ್ಲೆಂಡಿನ ಜನ ಜಗತ್ತಿನ ಬೇರೆಬೇರೆ ಭಾಗಗಳಿಗೆ ಹೋಗಿ ಅಲ್ಲಿ ನೆಲೆಸಿದಂತೆ ಅಲ್ಲಿಯ ಪರಿಸರದಂತೆ ಕೆಲವು ಪರಿವರ್ತನೆಗಳನ್ನು ಹೊಂದಿದ ಇಂಗ್ಲೀಷುಗಳು ಇವು, ಇಂಗ್ಲಿಷ್- ಇಂಗ್ಲಿಷ್, ಆಫ್ರಿಕನ್-ಇಂಗ್ಲಿಷ್ ಎಂದು ಬೇರೆಬೇರೆ ಜನಾಂಗಗಳು ತಮ್ಮ ದೇಶೀಯ ಭಾಷೆಗಳ ಜೊತೆಗೆ ರಾಜಕೀಯ ಕಾರಣಗಳ ಸಲುವಾಗಿ ಕಲಿತು ಇಂದಿಗೂ ಉಳಿಸಿಕೊಂಡ ಇಂಗ್ಲಿಷುಗಳು ತುಸು ಭಿನ್ನವಾಗಿವೆ. ಇವಕ್ಕೆ ಸ್ವತಂತ್ರ ಪ್ರಕ್ರಿಯೆಯಿಲ್ಲ. ಇವುಗಳ ವ್ಯಾಕರಣ ಇಲ್ಲವೆ ತಿರುಳುನುಡಿಗಳು ಇಂಗ್ಲಿಷಿನ ಸ್ವತಂತ್ರ ಪ್ರತಿಭೆ ಹಾಗೂ ಉತ್ಪಾದಕ ಶಕ್ತಿಯೆದ್ದ ದೇಶಗಳಿಂದ ಮಾತ್ರ ಬರಬಲ್ಲವು. ಅಲಂಕಾರಗಳು, ಅಲ್ಲಲ್ಲಿ ಕೆಲವು ಶಬ್ದಗಳನ್ನು ಮಾತ್ರ ದೇಶೀಯ ಭಾಷೆಗಳು ತಮ್ಮತಮ್ಮ ಇಂಗ್ಲಿಷುಗಳಲ್ಲಿ ಸೇರಿಸಿಕೊಳ್ಳಬಲ್ಲವು. +ಹೀಗಾಗಿ ಇಂಗ್ಲಿಷನ್ನು ಒಂದು ಇತಿಯಾದ ಭಾಷೆಯೆಂದು ಕಲಿತುಕೊಡು ಅದನ್ನು ತಿಳಿದು, ಮಾತನಾಡಿ, ಬರೆದು ಓದಿ ಗ್ರಹಿಸಿಕೊಳ್ಳುವ ಅನೇಕ ಮುಖ ಪ್ರಕ್ರಿಯೆಯು ಇಂದು ಕಷ್ಟಕರವಾಗಿದೆ. ಕಾರಖಾನೆಗಳ ಇಂಗ್ಲಿಷು, ಇಂಜನಿಯರಿಂಗ್ ಇಂಗ್ಲಿಷು, ಕೋರ್ಟು ಕಚೇರಿಗಳ ಇಂಗ್ಲಿಷು, ವೈದಕೀಯ ಇಂಗ್ಲಿಷು-ಹೀಗೆ ಭಿನ್ನ ಭಿನ್ನ ಪ್ರಕಾರದ ಇಂಗ್ಲಿಷುಗಳು ‘ಟೇಪ್’ ಆಗಿ ದೊರೆಯುತ್ತವೆ, ಅದೇ ಪ್ರಕಾರ ಬಳಕೆಮಾತಿನ ಇಂಗ್ಲಿಷು, ಬರವಣೆಗೆಯ ಇಂಗ್ಲಿಷು, ಅರ್ಥಗ್ರಹಣ ಇಂಗ್ಲಿಷು: ಹೀಗೆ ವಿವಿಧ ಇಂಗ್ಲಿಷುಗಳ ಪಠ್ಯಕ್ರಮಗಳು (೩ ತಿಂಗಳು-೪ ತಿಂಗಳಿನ ಸರ್ಟಿಫಿಕೆಟ್ ಇಲ್ಲವೆ ಡಿಪ್ಲೊಮಾ ಕೋರ್ಸ್‌ಗಳು) ಜಗತ್ತಿನ ತುಂಬ ಹರಡಿಕೊಂಡಿವೆ. +ಇಂಗ್ಲಿಷ್ ಮಾತೃಭಾಷೆಯೆಂದು ಮಾತನಾಡುವವರೇ ಇಲ್ಲದಾಗಿ ಭಾರತೀಯರೂ ಕ್ರಮೇಣ ಇಂಗ್ಲಿಷಿನಿಂದ ದೂರವಾಗುತ್ತಿರುವಾಗ ಶಾಲೆ-ಕಾಲೇಜುಗಳಲ್ಲಿ ಮೊದಲಿನಂತೆ ಇಂಗ್ಲಿಷು ಕಲಿತು ಇಂಗ್ಲಿಷಿನ ಮೇಲೆ ಸರ್ವಾಂಗೀಣ ಪ್ರಭುತ್ವವನ್ನು ಸ್ಥಾಪಿಸುವೆವೆನ್ನುವದು ಕನಸಿನಲ್ಲಿ ಮಂಡಿಗೆ ತಿಂದಂತೆಯೇ ಸರಿ. ಸಾರಗ್ರಹಣಕ್ಕೆ ನೆರವಾಗುವಷ್ಟು ಇಂಗ್ಲಿಷನ್ನು ನಾವು ಹೈಸ್ಕೂಲುಗಳಲ್ಲಿ ಕಲಿಯಬಹುದು. ಇದರಿಂದ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಓದಿಕೊಳ್ಲಲು ಸಹಾಯವಾಗುವದು. ಇಂಗ್ಲಿಷನ್ನು ಹೆಚ್ಚಿನ ಜ್ಞಾನಾರ್ಜನೆಗಾಗಿ ಕನ್ನಡದಲ್ಲಿ ಭಾಷಾಂತರವಾಗಿದಿದ್ದ ಪುಸ್ತಕ ಓದಲು ಇಲ್ಲವೆ ಸೇರ್ಪಡೆಯಾಗದ ಜ್ಞಾನವನ್ನು ಪಡೆಯಲು ಉಪಯೋಗಿಸಬಹುದು. ಸಾಧ್ಯವಿದ್ದಷ್ಟು ಮಾತು-ಬರೆಹ ಸಾಧಿಸಬಹುದು. ಇದಕ್ಕೂ ಹೆಚ್ಚಿಗೆ ಇಂಗ್ಲಿಷನ್ನು ಹೈಸ್ಕೂಲು ಪಠ್ಯ ಕ್ರಮದಿಂದಲೇ ಸಂಪಾದಿಸಲು ಬಯಸುವದು ಸಾಹಸವೇ ಸರಿ. ಅಂತಹ ಶುದ್ಧ ಮಾತು-ಬರೆಹಗಳು ಶಿಕ್ಷಕರಿಗೇ ಸಾಧಿಸಿರುವುದಿಲ್ಲ. ಇಂದಿನ ಇಂಗ್ಲಿಷಿನಲ್ಲಿ ಬಳಕೆ ಮಾತು-ಬರೆಹಗಳನ್ನು ಕಲಿಯಲು ಮುಂಜಾನೆಯ ಇಲ್ಲವೆ ಸಾಯಂಕಾಲದ ಸರ್ಟಿಫಿಕೆಟ್ ಇಲ್ಲವೆ +ಡಿಪ್ಲೊಮಾ ಪಠ್ಯಕ್ರಮಗಳನ್ನು ಅನುಸರಿಸಿ ಪರೀಕ್ಷೆಗೆ ಕುಳಿತುಕೊಳ್ಳಬೇಕು. +ಇಂಗ್ಲಿಷನ್ನೇ ಮಾಧ್ಯಮವಾಗಿ ಬಳಸುವ ಶಾಲೆಗಳು ಬೆಳೆಯುತ್ತಿವೆ; ಹುಟ್ಟುತ್ತಲಿವೆ. ನಗರಗಳಲ್ಲಿ ಇಂತಹ ಶಾಲೆಗಳಲ್ಲಿಯ ವಿದ್ಯಾರ್ಥಿಗಳು ಒಂದು ತರಹದ ಉಚ್ಚಾರದ ಇಂಗ್ಲಿಷನ್ನು ಮಾತನಾಡುತ್ತಾರೆ. ಅವರ ಮನೆಮಾತುಗಳು ಬೇರೆಬೇರೆ ಭಾಷೆಗಳಾಗಿರುವುದರಿಂದ ಇಂತಹ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭಾಷಣೆ ನಡೆಸಲು ಇಂಗ್ಲಿಷು ಸಹಾಯವಾಗುತ್ತದೆ. ಆದರೆ ಇಂಗ್ಲಿಷು ಮಾಧ್ಯಮವಿದ್ದಮಾತ್ರಕ್ಕೆ ಇಂಗ್ಲಿಷು ಚೆನ್ನಾಗಿ ಬರುವದೆಂದು ತಿಳಿಯುವದು ಭ್ರಮೆಯಲ್ಲದೆ ಬೇರೆ ಅಲ್ಲವೆಂದು ಹಿಂದೆ ಹೇಳಿದ್ದೇವೆ. ಅಲ್ಲದೆ ಪ್ರಾದೇಶಿಕ ಭಾಷೆಯ ಹಾಗೂ ಮಾತೃಭಾಷೆಯ ಜ್ಞಾನವಿಲ್ಲದೆ ಇಂತಹ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿಗೆ ದೂರವಾಗಿ ಉಳಿಯುವದಲ್ಲದೆ ಕ್ರಿಯಾತ್ಮಕ ಶಿಕ್ಷಣ ಕ್ರಮದಿಂದಲೇ ದೂರವಾಗುತ್ತಾರೆ. ಮಂಜು ಬೆಳಕಿನಲ್ಲಿ ಕಾರಿನ ಹೆಡ್‌ಲೈಟುಗಳಂತೆ ವಿಚಾರಗಳು ದೀರ್ಘವಾದರೂ ಸತ್ವಹೀನವಾಗಿ ಅವರ ಕಣ್ಣೆದುರಿಗೆ ಹಾಯುತ್ತವೆ. ಇಂಗ್ಲಿಷು ಹೀಗೆ ಮಾಧ್ಯಮವಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿಯೂ ೩ನೆಯ ಇಯತ್ತೆಯಿಂದ ಪ್ರಾರಂಭಿಸಿ ಪ್ರತಿಯೊಂದು ಇಯತ್ತೆಗೆ, ಉಳಿದ ಭಾಷೆಗಳು ಮಾಧ್ಯಮವಿದ್ದ ಶಾಲೆಗಲಲ್ಲಿಯಂತೆ, ಕನ್ನಡ ಕಲಿಸಿ ೪ನೆ ಇಯತ್ತೆಯಿಂದ ೧೦ನೆ ಇಯತ್ತೆ (ಅಂದರೆ ಎಸ್.ಎಸ್.ಎಲ್.ಸಿ) ಮುಗಿಯುವವರೆಗೆ ೧೫೦ ಅಂಕಗಳ ಕನ್ನಡವನ್ನು ಕಡ್ಡಾಯವಾಗಿ ಕಲಿಸುವಂತಾಗಿರಬೇಕು. +ಒಟ್ಟಾರೆ ದ್ವಿತೀಯ ಭಾಷಯಾಗಿ ಒಂದು ಆಧುನಿಕ ಭಾಷೆಯನ್ನು ಅಭ್ಯಸಿಸುವಾಗ ವಿದ್ಯರ್ಥಿಯ ಗುರಿಗಳೇನು? ಈ ಮೊದಲೇ ಸ್ಪಷ್ಟಪಡಿಸಿದಂತೆ ಸಾರಗ್ರಹಣ, ಅರ್ಥಗ್ರಹಣಗಳು ಇಲ್ಲಿಯ ಭಾಷಾಭ್ಯಾಸದ ಮುಖ್ಯ ಗುರಿಯಾಗುತ್ತವೆ. ಗೊತ್ತುಪಡಿಸಿದ ಪಠ್ಯ ಪುಸ್ತಕಗಳನ್ನು ಸಹ ಈ ಭಾಷಾದೃಷ್ಟಿಯಿಂದ ಅಭ್ಯಸಿಸಬೇಕಾಗುತ್ತದೆ ರಸಾನುಭವ-ತಂತ್ರ-ಅಲಂಕಾರ-ತಾಳಲಯ ಮೊದಲಾದ ಸಾಹಿತ್ಯಕ ದೃಷ್ಟಿಗಳು ಇಲ್ಲಿ ಅಪ್ರಸ್ತುತವಾಗುತ್ತವೆ. ಸಂಭಾಷಣೆ-ಬರೆಹಗಳು ಆಧುನಿಕ ಭಾರತೀಯ ಭಾಷೆಗಳಲ್ಲಿ ಸಾಧ್ಯವಾಗಬಲ್ಲವು. ಆದರೆ ಇಲ್ಲಿ ತನ್ನ ಪರಿಸರವೇ ಇಲ್ಲದ ಇಂಗ್ಲೀಷು ಭಾಷೆಯನ್ನು ಕಲಿಯಬೇಕಾದಾಗ ಮಾತ್ರ ದೋಷಯುಕ್ತವಾದ ಸಂಭಾಷಣೆ ಹಾಗೂ ಬರೆಹ ಮಾತ್ರ ಸಾಧ್ಯವಾಗಬಹುದು. +ಒಂದು ಪ್ರಾಚೀನ ಭಾಷೆಯನ್ನು ದ್ವಿತೀಯ ಭಾಷೆಯೆಂದು ಅಭ್ಯಾಸಕ್ಕೆ ತೆಗೆದುಕೊಂಡಾಗ ಅಭ್ಯಾಸದ ಗುರಿ ಮೇಲಿನ ಗುರಿಗಳಿಗಿಂತ ಬೇರೆಯಾಗುತ್ತದೆ. ಇಲ್ಲಿಯ ಗುರಿಗಳನ್ನು ಹೀಗೆ ಉಲ್ಲೇಖಿಸಬಹುದು. +೧. ಸಂಸ್ಕೃತ ವ್ಯಾಕರಣದ ಮೂಲತತ್ವ ಹಾಗು ರೂಡಿಗಳನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ತಿಳಿಸಿಕೊಡುವುದು. +೨. ತನ್ನ ಪ್ರಾದೇಶಿಕ ಭಾಷೆಯನ್ನು ಇನ್ನಿಷ್ಟು ಚೆನ್ನಾಗಿ ತಿಳಿದುಕೊಳ್ಳುವಂತೆ ಆ ಭಾಷೆಯಲ್ಲಿದ್ದ ತತ್ಸಮ ಶಬ್ದಗಳು ಹಾಗು ಆಗಿರಬಹುದಾದ ಅವುಗಳ ಅರ್ಥಾಂತರ ಇಲ್ಲವೆ ರೂಪಾಂತರ, ಸಂಸ್ಕೃತ ವಾಕ್ಯರಚನೆ, ಸಂಧಿ, ಸಮಾಸ ಮೊದಲಾದ ವಿಶಿಷ್ಟ ಪ್ರಯೋಗಗಳನ್ನು ತಿಳಿಸಿಕೊಡುವದು. (ಈ ವಿಷಯವನ್ನು ಕುರಿತು ಹೊಸತಾಗಿ ಒಂದು ಪುಸ್ತಕವನ್ನು ಬರೆಯಿಸಬೇಕು.) +೩. ಸಂಸ್ಕೃತ ಗದ್ಯ-ಪದ್ಯಗಳನ್ನು ಶುದ್ಧವಾಗಿ ದೋಷರಹಿತವಾಗಿ ಓದಲು ಕಲಿಸಬಹುದು. +೪. ಸಂಸ್ಕೃತ ಭಾಷೆ ಹಾಗು ಸಾಹಿತ್ಯದ ವಿವಿಧ ಹಂತಗಳ ಸೌಂದರ್ಯವನ್ನು ಉದಾಹರಿಸುವ ಸುಲಭ ಉದ್ಧೃತ ಭಾಗಗಳನ್ನು ವೇದೋಪನಿಷತ್ತು, ಪುರಾಣ, ಮಹಾಕಾವ್ಯ ನಾಟಕ, ಕಥೆ, ಗದ್ಯ, ಗೀತಕಾವ್ಯ, ಸುಭಾಷಿತ ಮೊದಲಾದ ಸಾಹಿತ್ಯ ಪ್ರಕಾರಗಳಿಂದ ಆಯ್ದು ಅವುಗಳ ದ್ವಾರಾ ಈ ಸೌಂದರ್ಯಾನುಭವವನ್ನು ವಿದ್ಯಾರ್ಥಿಗಳಿಗೆ ತಂದುಕೊಡುವುದು. +೫. ಸಂಸ್ಕೃತದಿಂದ ಕನ್ನಡಕ್ಕೆ ಒಂದು ಉದ್ಧೃತಭಾಗವನ್ನು ಭಾಷಾಂತರಿಸುವುದು. +೬. ಭಾರತೀಯ ಸಂಸ್ಕೃತಿಯ ಸ್ಪಷ್ಟ ಕಲ್ಪನೆ ಬರುವಂತೆ ಅಭ್ಯಾಸಕ್ಕೆ ಗದ್ಯ-ಪದ್ಯ ಭಾಗಗಳನ್ನು ಆಯ್ದುಕೊಳ್ಳುವುದು. +ಇಲ್ಲಿ ಪ್ರಾಚೀನ ಭಾಷೆಯೊಂದನ್ನು ಅಭ್ಯಸಿಸುವಾಗ ಸಂಭಾಷಣೆ ಇಲ್ಲವೆ ಬರೆಹದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅರ್ಥಗ್ರಹಣ ಇಲ್ಲವೆ ರಸಗ್ರಹಣಕ್ಕೇನೆ ಇಲ್ಲಿ ಹೆಚ್ಚಿನ ಪ್ರಾದಾನ್ಯವಿದೆ. ಉಳಿದ ಭಾಷೆಗಳ ಅಭ್ಯಾಸದಲ್ಲಿ ಕಂಡುಬರುವ ಈ ಎರಡು ನೈಪುಣ್ಯಗಳು (ಸ್ಕಿಲ್ಲ್ಸ್) ಪ್ರಾಚೀನ ಭಾಷೆಯ ಅಭ್ಯಾಸದಲ್ಲಿ ಇಲ್ಲವಾದಕಾರಣ ಅಭ್ಯಾಸವನ್ನು ಸರಿಸಮ ಮಟಕ್ಕೆ ತರಲು ಈ ಕೆಳಗನ ಅಂಶಗಳನ್ನು ಉಪಯೋಗಿಸಲಾಗುವದು. +ಅ. ಅರ್ಥ-ರಸ-ಗ್ರಹಣಕ್ಕಾಗಿ ವಿವಿಧ ಸಾಹಿತ್ಯ ಪ್ರಕಾರಗಳಿಂದ ಗದ್ಯ-ಪದ್ಯ ಆಯ್ದುಕೊಳ್ಳುವದು. +ಆ. ಒಂದು ಸುಲಭ ಸಂಸ್ಕೃತ ಗದ್ಯವನ್ನು ಉಪಪಠ್ಯವನ್ನು ಗೊತ್ತುಪಡಿಸ ಬೇಕು. ಅಲ್ಲದೆ ಹೆಚ್ಚಿನ ಪ್ರಶ್ನೆಗಳನ್ನು ಅರ್ಥಗ್ರಹಣದಲ್ಲಿ ಕೇಳಿ ರಸಗ್ರಹಣವನ್ನು ಕುರಿತು ಒಂದೋ ಎರಡೋ ಇರಬಹುದು. +ಇ. ಛಂದಸ್ಸಿನ ಅಭ್ಯಾಸ. +ಈ. ಅಲಂಕಾರ ಇತ್ಯಾದಿ ಸಾಹಿತ್ಯಾಂಶಗಳ ಅಭ್ಯಾಸ. +ಸಂಭಾಷಣೆ ಹಾಗು ಸಂಸ್ಕೃತ ಲೇಖನ ವಿದ್ಯೆಯ ವಿಷಯಗಳಿಗಾಗಿ ಪಾಠಶಾಲೆಗಳ ಪರಂಪರೆಯ ಏರ್ಪಾಟಿದೆ. ಅಲ್ಲದೆ ಸ್ನಾತಕೋತ್ತರ ಸಂಸ್ಕೃತದ ಅಭ್ಯಾಸಕ್ರಮದಲ್ಲಿ ಒಂದು ಐಚ್ಛಿಕ ಪೇಪರನ್ನು ಸಂಭಾಷಣಿರ-ಲೇಖನಗಳಿಗಾಗಿಯೇ ಇಡಬಹುದು. +ಈಚೆಗಿನ ಸಂಸ್ಕೃತ ಸಾಹಿತ್ಯದ ಗದ್ಯ-ಪದ್ಯ ಭಾಗಗಲನ್ನು ಅಭ್ಯಸಕ್ರಮಕ್ಕಾಗಿ ಒಂದೊ ಎರಡೋ ಉದ್ಧರಗಳನ್ನು ಆಯಿದರಬೇಕಲ್ಲದೆ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇಂದಿನ ಸಂಸ್ಕೃತ ಸೇರ್ಪಡೆಯಾಗಿರುವ ಕಾರಣವಿಲ್ಲ. ಇಂದಿನ ಸಂಸ್ಕೃತ ಸಾಹಿತ್ಯವನ್ನು ಮೀರಿದ ಸಾಹಿತ್ಯ ಪ್ರತಿಯೊಂದು ಅಧುನಿಕ ಭಾರತೀಯ ಭಾಷೆಯಲ್ಲಿ ದೊರೆಯುತ್ತದ. ಸಂಸ್ಕೃತವು ಜಗನ್ಮಾನ್ಯವಾಗಿರುವದು ಅದರಲ್ಲಿರುವ ಪ್ರಾಚೀನ ಸಾಹಿತ್ಯಕ್ಕೋಸ್ಕರ. +ಉಳಿದ ಪ್ರಾಚೀನ ಭಾಷೆಗಳು +ದ್ವಿತೀಯ ಭಾಷೆಗಳೆಂದು ಇವುಗಳ ಅಭ್ಯಾಸವನ್ನು ಸಹ ಸಂಸ್ಕೃತದ ಅಭ್ಯಾಸದ ಮಾದರಿಯ ಮೇಲೆ ಏರ್ಪಡಿಸಬಹುದು. +ತೃತೀಯ ಭಾಷೆ +ಕನ್ನಡ, ಉಳಿದ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದು ಇಂಗ್ಲಿಷು ಇಲ್ಲವೆ ಪ್ರಾಚೀನ ಭಾಷೆಗಳಲ್ಲಿ ಒಂದು ತೃತೀಯ ಭಾಷೆಯಾಗಬಹುದು. +ಸಮಿತಿಯ ಸಲಹೆಯ ಪ್ರಕಾರ ಕನ್ನಡವು ಆಡಳಿತದ ಸೌಕರ್ಯಕ್ಕಾಗಿ ಮಾತ್ರ ೧೯೮೫-೮೬ರವರೆಗೆ ತೃತೀಯ ಇಲ್ಲವೆ ದ್ವಿತೀಯ ಭಾಷೆಯಾಗುವದು. ೧೯೮೬-೮೭ ರಿಂದ ಕನ್ನಡೇತರ ವಿದ್ಯಾರ್ಥಿಗಳಿಗೂ ಅದು ಪ್ರಥಮ ಭಾಷೆ. ಕನ್ನಡ ವಿದ್ಯಾರ್ಥಿಗಳಿಗಂತೂ ಅದು ೧೯೮೧-೮೨ ರಿಂದಲೇ ಪ್ರಥಮ ಭಾಷೆಯಾಗುವದು. +ತೃತೀಯ ಭಾಷೆಗೆ ೫೦ ಅಂಕಗಳಿವೆ. +ಉಳಿದ ಆಧುನಿಕ ಭಾರತೀಯ ಭಾಷೆಗಳು ತೃತೀಯ ಭಾಷೆಗಳಾದಾಗ ಅವುಗಳಭ್ಯಾಸದ ಗುರಿ ಏನಿರಬೇಕು? +೧. ವೃತ್ತಪತ್ರಿಕೆಗಳನ್ನೂ, ಪತ್ರಗಳನ್ನೂ, ಚಿಕ್ಕಚಿಕ್ಕ ಕಥೆಗಳನ್ನೂ, ಪಠ್ಯಪುಸ್ತಕದಲ್ಲಿರುವ ಸರಳ ಗದ್ಯ-ಪದ್ಯವನ್ನೂ ಓದಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವದು. +೨. ದೈನಂದಿನ ವ್ಯವಹಾರದಲ್ಲಿ ಆ ಭಾಷೆಯಲ್ಲಿ ಮಾತನಾಡುವ ಅನುಕೂಲವನ್ನು ಮಾಡಿಕೊಡುವದು. +೩. ಆ ಭಾಷೆಯ ವ್ಯಾಕರಣದ ಮೂಲ ತತ್ವ ಹಾಗು ರೂಢಿಗಳನ್ನು ತಿಳಿಸಿಕೊಡುವುದು. +೪. ಅರ್ಜಿಗಳನ್ನು ಬರೆಯುವುದು, ಪತ್ರಗಳು, ಪಠ್ಯಪುಸ್ತಕಗಳಲ್ಲಿಯ ವಿಷಯಗಳ ಮೇಲೆ ಒಂದೆರಡು ಪ್ಯಾರಾಗಳು, ಭಾಷೆಯಲ್ಲಿರುವ ಕೆಲವು ಪ್ಯಾರಗಳ ಭಾಷಾಂತರಗಳು: ಹೀಗೆ ಲೇಖನ ಕಾರ್ಯವನ್ನೆಸಗುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಪಡೆದಿರಬೇಕು. +೫. ಆ ಭಾಷೆಯಲ್ಲಿ ಮಾಡಿದ ಉಪನ್ಯಾಸಗಳನ್ನು ತಿಳಿದುಕೊಳ್ಳುವ ಯೋಗ್ಯತೆ ಬಂದಿರಬೇಕು. +ಹೀಗೆ ಸಾರಗ್ರಹಣ, ಲೇಖನ, ಉಕ್ತೋಕ್ತಿಯ ಸಾರಗ್ರಹಣ, ಸಂಭಾಷಣಾ ಸೌಲಭ್ಯ ಹಾಗು ಲೇಖನ ಸೌಲಭ್ಯಗಳು ಹಂತಹಂತವಾಗಿ ಸಾಧಿಸುವಂತೆ ಪ್ರೌಢಶಾಲೆಯ ಮೂರು ವರ್ಷಗಳ ಪಠ್ಯಕ್ರಮವನ್ನು ಸುಲಭಾಂಶಗಳಿಂದ ಪ್ರಾರಂಭಿಸಿ ಕಠಿಣವಾದುದನ್ನು ನಾಲ್ಕೂ ಭಾಷಾ ನೈಪುಣ್ಯಗಳಲ್ಲಿ ಕ್ರಮೇಣ ಸೇರಿಸುತ್ತ ಹೋಗಬೇಕು. +ಮಾತನಾಡುವ ಅನುಕೂಲತೆ ಇಂಗ್ಲೀಷಿನಲ್ಲಿ ಮಾತ್ರ ದೋಷರಹಿತವಾಗಿ ಸಾಧಿಸಲಿಕ್ಕಿಲ್ಲ; ಸಾಧ್ಯವಾದಷನ್ನು ಸ್ವಾಗತಿಸಬೇಕು. +ತೃತೀಯ ಭಾಷೆಯ ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆಯಿದ್ದಾಗ ಅಭ್ಯಾಸದ ಗುರಿಗಳು ಇನ್ನೂ ಸ್ವಲ್ಪ ಬೇರೆಯಾಗುತ್ತವೆ. +ಲೇಖನಕಾರ್ಯ ಇಲ್ಲಿ ಸಾಧ್ಯವಿಲ್ಲ. ಓದಿದ ಪಠ್ಯಪುಸ್ತಕಗಳೊಳಗಿನ ಒಂದೆರಡು ಪ್ಯಾರಾಗಳನ್ನು ಭಾಷಾಂತರ ಮಾಡಬಹುದು. ಅದಲ್ಲದೆ ವಿದ್ಯಾರ್ಥಿಗಳು ಓದದೇ ಇಲ್ಲ ಅಷ್ಟೇ ಸುಲಭವಾದ ಒಂದು ಉದ್ಧೃತ ಭಾಗದ ಸಾರವನ್ನು ಕನ್ನಡದಲ್ಲಿ ಕೊಡಬಹುದು. ಅಲ್ಲದೆ ಲೇಖನ ಕಾರ್ಯ ಇಲ್ಲವೆ ಸಂಭಾಷಣೆ ಇಲ್ಲಿ ವ್ಯವಹಾರದ ದೃಷ್ಟಿಯಿಂದ ಚಮತ್ಕಾರಿಕವಾಗಬಹುದೇ ಹೊರತು ಬಹುತೇಕ ಪ್ರಯೋಜನಕರವಲ್ಲ. +ಆದರೆ ರೇಡಿಯೋವಾರ್ತೆಗಳ ಅರ್ಥಗ್ರಹಣ, ಸಂಸ್ಕೃತ ಪ್ರವಚನಗಳ ಸಾರಗ್ರಹಣ, ಪಠ್ಯಪುಸ್ತಕಗಳ ಹಾಗು ಉಪಪಠ್ಯ ಪುಸ್ತಕಗಳ ರಸಗ್ರಹಣ ಹಾಗು ಅರ್ಥಗ್ರಹಣ, ಅದೇ ಪಾತಳಿಯ ಭಾಷಾ ಸೌಲಭ್ಯದ ಗದ್ಯ-ಪದ್ಯಗಳ ಅರ್ಥ-ರಸಗ್ರಹಣ: ಇದೆಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಾಗಬೇಕು. +ಅಲ್ಲದೆ ಹಲವಾರು ಸಂಸ್ಕೃತ ಪದ್ಯಗಳ ಬಾಯಿಪಾಠ ಮತ್ತು ದೋಷರಹಿತವಾಗಿ ಶಬ್ದಗಳ ಅಕ್ಷರಸಂಯೋಜನೆ (ಸ್ಪೆಲಿಂಗ್) ಹಾಗು ಉಚ್ಚಾರಗಳು ಸಹಜ ಸಾಧ್ಯವಾಗಬೇಕು. ಭಾಷೆಯ ವ್ಯಾಕರಣದ ಸರಳ ತತ್ವ-ರೂಡಿಗಳನ್ನೂ, ಸಂಧಿ ಸಮಾಸಗಳಂತಹ ಘಟಕಗಳನ್ನೂ ಚೆನ್ನಾಗಿ ವಿದ್ಯಾರ್ಥಿಯು ತಿಳಿದುಕೊಂಡಿರಬೇಕು. +ಅಲ್ಲದೆ ಒಂದು ಕೃತಿಯ ರಸವಂತಿಕೆ, ಧ್ವನಿ, ಭಾಷೆಯ ಅಲಂಕಾರಿಕತೆ ಹಾಗು ತಾಳಲಯ, ವಿವಿಧ ಸಾಹಿತ್ಯ ಪ್ರಕಾರಗಳು ತಂತ್ರನೈಪುಣ್ಯ ಮೊದಲಾದ ವಿಷಯಗಳನ್ನು ಕುರಿತು ರಸಾಸ್ವಾದನೆ (ಅಪ್ರಿಸಿಯೇಷನ್) ವಿದ್ಯಾರ್ಥಿಗೆ ಸಾಧ್ಯವಾಗಿರಬೇಕು. +ಉಳಿದ ಪ್ರಾಚೀನ ಭಾಷೆಗಳ ಅಭ್ಯಾಸಕ್ರಮವನ್ನೂ ಇದೇ ರೀತಿಯಾಗಿ ಅಳವಡಿಸಬಹುದು. +ತೃತೀಯ ಭಾಷೆಗೆ ೫೦ ಅಂಕಗಳಿವೆ. ಪ್ರಥಮ ಭಾಷೆಯ ಅಭ್ಯಾಸದಲ್ಲಿ ಒಂದು ಪೂರ್ಣ ದೃಷ್ಟಿಯಿಂದೆ. ಅಲ್ಲಿ ನಾಲ್ಕು ಭಾಷಾ ನೈಪುಣ್ಯಗಳಿಗೂ (ಲ್ಯಾಂಗ್ವೇಜ್ ಸ್ಕಿಲ್ಸ್) ಲಿಖಿತಾರ್ಥಗ್ರಹಣ, ಉತಾರ್ಥಗ್ರಹಣ, ಉಕ್ತಾಭಿವ್ಯಕ್ತಿ, ಲಿಖಿತಾವ್ಯಕ್ತಿ, ವ್ಯಾಕರಣ, ತಿರುಳ್ನುಡಿ, ಸಂಧಿ, ಸಮಾಸ ಮೊದಲಾದ ಭಾಷ ಶಾಸ್ತ್ರಾಂಗಗಳ ತಿಳುವಳಿಕೆಗಳು, ರಸಾನುಭಾವ, ಅಲಂಕಾರಿಕ ಭಾಷೆ, ತಾಳಲಯ ಹಾಗು ಛಂದಸ್ಸು, ತಂತ್ರ, ಸಾಹಿತ್ಯ ಪ್ರಕಾರ ಮೊದಲಾದ ಸಾಹಿತ್ಯಾಂಶಗಳ ಸ್ವಾರಸ್ಯಗ್ರಹಣಕ್ಕೂ ಕೂಡಿಯೇ ಅವಕಾಶವಿದೆ. ದ್ವಿತೀಯ ಭಾಷೆಯ ಅಭ್ಯಾಸದಲ್ಲಿ ನಾಲ್ಕು ಭಾಷಾ ನೈಪುಣ್ಯಗಳನ್ನೂ ವ್ಯಾಕರಣ ಮೊದಲಾದ ಶಾಸ್ತ್ರಾಂಗಗಳನ್ನೂ ದಾಟಿ ನಾವು ಹೋಗುವುದಿಲ್ಲ. ಇಂಗ್ಲಿಷನ್ನು ದ್ವಿತೀಯ ಭಾಷೆ ಎಂದು ಅಭ್ಯಸಿಸಿದಾಗ ಈ ನಾಲ್ಕು ನೈಪುಣ್ಯಗಳೂ ಚೆನ್ನಾಗಿ ಸಾಧಿಸುವುದಿಲ್ಲ. ಲಿಖಿತ ಇಲ್ಲವೆ ಉಕ್ತಾಭಿವ್ಯಕ್ತಿ ಅಲ್ಲಿ ದುಃಖಸಾಧ್ಯವಾಗುತ್ತದೆ. ಸಾಧ್ಯವಿದ್ದಲ್ಲಿ ದೋಷಯುಕ್ತವಾಗಿರುತ್ತದೆ. ತೃತೀಯ ಭಾಷೆಯ ಅಭ್ಯಾಸದಲ್ಲಿ ವ್ಯಾಕರಣ ಹಾಗು ಸಂಬಂಧಿಸಿದ ಅಂಶಗಳ ಅಭ್ಯಾಸ ನಡೆಯುತ್ತದೆ. ಆದರೆ ನಾಲ್ಕು ಭಾಷಾ ನೈಪುಣ್ಯಗಳ ಸಾಧನೆಯು ತೀರಾ ಸಾಮಾನ್ಯ ಸ್ತರದಲ್ಲಿ ನಡೆಯುತ್ತದೆ. ಇಂಗ್ಲಿಷಿನಲ್ಲಿ ಅಭಿವ್ಯಕ್ತಿಯ ಎರಡು ನೈಪುಣ್ಯಗಳು ಸಾಧ್ಯವಾಗುವುದೇ ಇಲ್ಲ. +ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆಯನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯೆಂದು ಅಭ್ಯಸಿಸಬಹುದು. ಇಲ್ಲಿ ವ್ಯಾಕರಣ ಹಾಗು ಅದಕ್ಕೆ ಸಂಬಂಧಿಸಿದ ಉಳಿದ ಅಂಶಗಳ ಅಭ್ಯಾಸವಾಗುತ್ತದೆ. ಆದರೆ ಅಭಿವ್ಯಕ್ತಿಗಳ ಎರಡು ನೈಪುಣ್ಯಗಳ ಅಭ್ಯಾಸ ಇಲ್ಲಿ ಪ್ರಸ್ತುತವಾಗುವುದಿಲ್ಲ. ಅವುಗಳ ಬದಲಾಗಿ ಅಭ್ಯಸಿಸುವ ಪಠ್ಯ ಹಾಗು ಉಪಪಠ್ಯ ಪುಸ್ತಕಗಳ ಪುಟಸಂಖ್ಯೆಗಳ ಅರ್ಥ-ರಸ-ಗ್ರಹಣ, ಛಂದಸ್ಸು, ಅಲಂಕಾರಿಕ ಭಾಷೆ, ರಸಾನುಭವ, ತಂತ್ರ, ಸಾಹಿತ್ಯ ಪ್ರಕಾರ ಮೊದಲಾದ ಸಾಹಿತ್ಯಾಂಶಗಳ ಅಭ್ಯಾಸಕ್ಕೆ ಮಹತ್ವ ಕೊಡುವುದು: ಈ ರೀತಿಯಾಗಿ ಪಠ್ಯ ಕ್ರಮದ ಮಟ್ಟವನ್ನು ಸರಿಸಮಾನವಾಗಿ ಮಾಡಬೇಕಾಗುವುದು. ಅಲ್ಲದೆ ಸಂಸ್ಕೃತ ಸಾಹಿತ್ಯ ವಿಕಾಸದ ವಿವಿಧ ಹಂತಗಳಿಂದ ಭಾಗಗಳನ್ನು ಆಯ್ದುಕೊಂಡು ಅವುಗಳ ಸೌಂದರ್ಯಾನುಭವಗಳನ್ನು ಪಡೆದು ಅವು ಭಾರತೀಯ ಸಂಸ್ಕೃತಿಯ ಸ್ಪಷ್ಟ ಕಲ್ಪನೆಯನ್ನು ಹೇಗೆ ಕೊಡುತ್ತವೆಂಬುದನ್ನು ತಿಳಿದುಕೊಳ್ಳಬೇಕಾಗುವುದು. +೩. ಪರೀಕ್ಷೆಗೆ ಕಡ್ಡಾಯದ ವಿಷಯವಾದ ತೃತೀಯ ಭಾಷೆ. +ಪರೀಕ್ಷೆಯ ವ್ಯವಸ್ಥೆಯೇ ಇಲ್ಲದೇ ತೃತೀಯ ಭಾಷೆಯ ಅಭ್ಯಾಸ ಶಿಥಿಲವಾಗಿದೆ. ಈಗ ಬಹಿರಂಗದಲ್ಲಿ-ಅಂದರೆ-ಭೋಧನದಲ್ಲಿ-ತೃತೀಯ ಭಾಷೆಯನ್ನು ಒಪ್ಪಿಕೊಂಡು ಅಂತರಂಗದಲ್ಲಿ-ಅಂದರೆ ಪರೀಕ್ಷೆಯಲ್ಲಿ-ಅದನ್ನು ಕೈಬಿಡಲಾಗಿದೆ. ಇದು ಕ್ಷೇಮಕರ ವ್ಯವಸ್ಥೆಯಲ್ಲ. ತೃತೀಯ ಭಾಷೆಯ ಅಭ್ಯಾಸಕ್ಕೆ ಏರ್ಪಾಟಿದ್ದರೆ ಅಭ್ಯಾಸದ ಕೊನೆಗೆ ಪರೀಕ್ಷೆಯೂ ಇರಬೇಕು. ಮೇಲಾಗಿ ತೃತೀಯ ಭಾಷೆಯು ಒಂದು ದೃಷ್ಟಿಯಿಂದ ಅರ್ಧ ಭಾಷೆಯೇ ಆಗಿದೆ. ಎರಡು-ಮೂರು ಭಾಷೆಗಳನ್ನು ಕಲಿಸಿ ಪರೀಕ್ಷೆ ತೆಗೆದುಕೊಳ್ಳುವುದು ಬಹುಭಾಷಾಬೂಷಿತವಾದ ಭಾರತದಲ್ಲಿ ಭಾರವಾಗುವುದೆಂದು ನಾವು ಹೇಳಲಾರೆವು. ಮೇಲಾಗಿ ಕನ್ನಡವೊಂದನ್ನು ಕಡ್ಡಾಯದ ಭಾಷೆಯನ್ನಾಗಿ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯಲ್ಲಿ ಪೂರ್ಣ ಸ್ವಾತಂತ್ರ್ಯವಿರುವಾಗ ಇದು ನ್ಯಾಯವೂ, ಶಿಕ್ಷಣ ಶಾಸ್ತ್ರ ಸಮ್ಮತವೂ ಎಂದು ಸಮಿತಿಯ ಸ್ಪಷ್ಟ ಸಲಹೆಯಿದೆ. +೪. ಸಮಿತಿಯ ಸಲಹೆಗಳು (ಸಾರಾಂಶ ರೂಪದಲ್ಲಿ) +೧. ೧೯೮೧-೮೨ ನೆಯ ಶೈಕ್ಷಣಿಕ ವರ್ಷದಿಂದಲೇ ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಿ ಅದು ಕಡ್ಡಾಯದ ವಿಷಯವಾಗಬೇಕು. ಅದಕ್ಕೆ ೧೫೦ ಅಂಕಗಳಿರಬೇಕು. ಈ ವಿಷಯದಲ್ಲಿ ಒಂದು ತಾತ್ಪೂರ್ತಿಕ ವ್ಯವಸ್ಥೆಯು ಅವಷ್ಯವಾಗಿದೆ. ಅದನ್ನು ೮ ನೆಯ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ. +೨. ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದನ್ನು ದ್ವಿತೀಯ ಭಾಷೆಯಾಗಿ ಅಭ್ಯಸಿಸಬಹುದು. ಅದಕ್ಕೆ ೧೦೦ ಅಂಕಗಳು; +ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಹಿಂದಿ, ಉರ್ದು; ಹೀಗೆ ಆಧುನಿಕ ಭಾರತೀಯ ಭಾಷೆಗಳಲ್ಲಿ ಒಂದು. +ಇಲ್ಲವೆ +ಇಂಗ್ಲಿಷು +ಇಲ್ಲವೆ +ಸಂಸ್ಕೃತ, ಅರೇಬಿಕ್, ಪರ್ಸಿಯನ್, ಲ್ಯಾಟಿನ್, ಗ್ರೀಕ್; ಈ ಪ್ರಾಚೀನ ಭಾಷೆಗಳಲ್ಲಿ ಒಂದು. +೩. ಒಂದು ತೃತೀಯ ಭಾಷೆಯನ್ನೂ ತೆಗೆದುಕೊಳ್ಳಬೇಕಾಗುವುದು. ಅದಕ್ಕೆ ೫೦ ಅಂಕಗಳು. ಮೇಲೆ (೨) ರಲ್ಲಿ ಕೊಟ್ಟ ಮಾಲಿಕೆಯಿಂದ ದ್ವಿತೀಯ ಭಾಷೆಯೆಂದು ಆಯ್ದುಕೊಂಡ ಭಾಷೆಯೊಂದನ್ನು ಬಿಟ್ಟು ಆ ಮಾಲಿಕೆಯಲ್ಲಿಯ ಬೇರೆ ಯಾವುದೊಂದು ಭಾಷೆಯನ್ನು ತೃತೀಯ ಭಾಷೆಯೆಂದು ತೆಗೆದುಕೊಳ್ಳಬಹುದು. +೪. ತೃತೀಯ ಭಾಷೆಯು ಪರೀಕ್ಷೆಗೆ ಕಡ್ಡಾಯದ ವಿಷಯವಾಗಬೇಕು. +೫. ದ್ವಿತೀಯ ಮತ್ತು ತೃತೀಯ ಭಾಷೆಗಳ ಮಾಲಿಕೆಗಳಲ್ಲಿ ಎಲ್ಲ ಭಾಷಾ ವರ್ಗಗಳೂ ಸೇರ್ಪಡೆಯಾಗುತ್ತವೆ. ಅಭ್ಯಸಿಸಲಿರುವ ಭಾಷೆಯು ಆರ್ವಾಚೀನವಿರಲಿ, ಪ್ರಾಚೀನವಿರಲಿ, ಉಳಿದ ಭಾಷಾ ವರ್ಗಗಳ ಮಟ್ಟಕ್ಕೆ ಅದರ ಮಟ್ಟವೂ ಸರಿಸಮಾನವಾಗಿರಬೇಕು. +೬. ಪ್ರತಿಭಾವಂತೆ ವಿದ್ಯಾರ್ಥಿಗಳ ಸುಪ್ತ ಚೇತನವನ್ನು ಉದ್ದೀಷಿಸುವ ಒಂದು ಆರೋಹಣ ಕ್ರಮವೂ ಅವಶ್ಯವಾಗಿದೆ. ಒಂದು ವಿಶಿಷ್ಟ ವಿಷಯಪರೀಕ್ಷೆಯನ್ನು ಈ ಉದ್ದೇಶದ ಸಲುವಾಗಿ ಏರ್ಪಡಿಸಲಾಗಿದೆ. ಈ ವಿಷಯಕ್ಕೆ ೧೦೦ ಅಂಕಗಳು. ಆದರೆ ೧೫೦ ಅಂಕಗಳದ್ದು ನಾಲ್ಕು ಭಾಷಾ ನೈಪುಣ್ಯಗಳು ವ್ಯಾಕರಣ ಹಾಗು ಉಳಿದ ಸಂಬಂಧಿಸಿದ ಅಂಗಗಳು ಸಾಹಿತ್ಯಾಂಶಗಳು: ಈ ವೈವಿಧ್ಯದ ಪೂರ್ಣ ಅಭ್ಯಾಸವನ್ನು ಇಲ್ಲಿ ೧೦೦ ಅಂಕಗಳಿಗಾಗಿಯೇ ರೂಪಿಸಿದೆ. ಇಂಗ್ಲಿಷು, ಕನಡ, ಉಳಿದ ಆಧುನಿಕ ಭಾರತೀಯ ಭಾಷೆಗಳಲ್ಲಿ ಒಂದು, ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳಲ್ಲಿ ಒಂದು: ಇವುಗಳಲ್ಲಿ ಯಾವುದೊಂದು ಭಾಷೆಯನ್ನು ಇಲ್ಲವೇ ಚಿತ್ರಕಲೆ, ಸಂಗೀತ, ನೃತ್ಯ. ಇತ್ಯಾದಿಗಳಲ್ಲಿ ಒಂದು- ಈ ವಿಶಿಷ್ಟ ವಿಷಯಪರೀಕ್ಷೆಗಾಗಿ ತೆಗೆದುಕೊಳ್ಳಬಹುದು ವಿದ್ಯಾರ್ಥಿಗಳು ಈ ವಿಷಯದಲ್ಲಿ ಪಡೆದ ಅಂಕಗಳನ್ನು ಎಸ್.ಎಸ್.ಎಲ್.ಸಿ ಯ ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಈ ವಿಷಯದ ಪರೀಕ್ಷೆಯನ್ನು ಎಸ್.ಎಸ್.ಎಲ್.ಸಿ; ಪರೀಕ್ಷೆಯ ಜೊತೆಯಲ್ಲಿಯೋ ಅಥವಾ ಅನಂತರವೋ ನಡೆಸಬಹುದು. ಇದರಲ್ಲಿ ಪ್ರತ್ಯೇಕ ಅರ್ಹತಾಪತ್ರವನ್ನು ಕೊಡಲಾಗುವುದು. ಈ ವಿಷಯದ ಮಟ್ಟ ಎಸ್.ಎಸ್.ಎಲ್.ಸಿಗಿಂತ ಸ್ವಲ್ಪ ಮೇಲಿನದಾಗಿರುತ್ತದ. ಇದು ಸ್ವಸಂತೋಷದ ಪರೀಕ್ಷೆ. ಈ ವಿಶಿಷ್ಟ ವಿಷಯವನ್ನು ಶಾಲೆಯಲ್ಲಿ ಕಲಿಸುವುದಿಲ್ಲ. ಅದನ್ನು ತೆಗೆದುಕೊಂಡ ವಿದ್ಯಾರ್ಥಿಗಳು ತಾವೇ ಸ್ವತಂತ್ರವಾಗಿ ಅದನ್ನು ಅಭ್ಯಸಿಸುತ್ತಾರೆ. +೭. ಸಂಸ್ಕೃತವು ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಪ್ರಥಮ ಭಾಷೆಯಾಗಿ ಉಲಿಯುವದಿಲ್ಲ. ಎರಡನೆಯ ಹಾಗು ಮೂರನೆಯ ಸಲಹೆಯಲ್ಲಿ ಹೇಳಿದಂತೆ ಸಂಸ್ಕೃತವನ್ನು ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ಅಭ್ಯಸಿಸಬಹುದು. +೮. ಮೊದಲನೆಯ ಸಲಹೆಯ ವಿಷಯದಲ್ಲಿ ತಾತ್ಪೂತಿಕವಾಗಿ ಮಾಡಬೇಕಾದ ವ್ಯವಸ್ಥೆ. +ಅ. ಕನ್ನಡೆತರ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಪ್ರಾಥಮಿಕ ೩ನೆಯ ಇಯತ್ತೆಯಿಂದ ಕನ್ನಡವನ್ನು ಕಲಿಯಬೇಕೆಂಬ ನಿಯಮ ಅಂಗೀಕೃತವಾಗಿದ್ದರೂ ಕನ್ನಡ ಶಿಕ್ಷಕರು ನೇಮಕವಾಗಿ ಅದಿನ್ನೂ ಜಾರಿಯಲ್ಲಿ ಬಂದಿಲ್ಲ ಕಾರಣ ಮೊದಲನೆಯ ಸಲಹೆಯನ್ನು ಕನ್ನಡೇತರ ವಿದ್ಯಾರ್ಥಿಗಳನ್ನು ಕುರಿತು ಆಚರಣೆಗೆ ತರುವ ಪೂರ್ವದಲ್ಲಿ ಕೆಲವೊಂದು ವ್ಯವಸ್ಥೆಗಳನ್ನುಮಾಡಬೇಕಾಗಿದೆ. +ಆ. ಮೊತ್ತಮೊದಲು ಕರ್ಕಾರವು ಕನ್ನಡೇತರ ವಿದ್ಯಾರ್ಥಿಗಳ ಶಾಲೆಗಳಲ್ಲಿ ಕೊದಲೆ, ಅಂದರೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಈ ವಿದ್ಯಾರ್ಥಿಗಳಿಗೆ ಪ್ರಾಥಮಿಕ ೩ನೆ ಇಯತ್ತೆಯಲ್ಲಿ ಹೀಗೆ ಕನ್ನಡ ಕಲಿಸಲು ಕನ್ನಡ ಶಿಕ್ಷಕರನ್ನು ನೇಮಿಸಬೇಕು. +ಇ. ೩ನೆ ಇಯತ್ತೆಯಲ್ಲಿ ಹೀಗೆ ಕನ್ನಡ ಕಲಿತ ಈ ಕನ್ನಡೆತರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನಾಲ್ಕು ವರ್ಷಗಳವರೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುತ್ತ ಹೋಗಬೇಕು. +೧೯೮೨-೮೩ ೧೯೮೩-೮೪ +೧೯೮೪-೮೫ ೧೯೮೫-೮೬ +ಹೀಗೆ ೪, ೫, ೬, ೭ನೆ ಇಯತ್ತೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿತ ವಿದ್ಯಾರ್ಥಿಗಳ ೧೯೮೬-೮೭ನೆ ವರ್ಷದಲ್ಲಿ ೮ನೆ ಇಯತ್ತೆಯಲ್ಲಿ ೧೦೦ ಅಂಕಗಳ ಕನ್ನಡವನ್ನು ಕಡ್ಡಯವಾಗಿ ಕಲಿಯಲು ಶಕ್ತರಾಗುವರು ಮುಂದೆ ೧೯೮೨-೮೩ರಿಂದ ಪ್ರಾಥಮಿಕ ೩ನೆ ಇಯತ್ತೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯುವ ವಿದ್ಯಾರ್ಥಿಗಳು ಇದೇ ದಾರಿಯನ್ನು ಅನುಸರಿಸುವರು. +ಈ. ೧೯೮೬-೮೭ ವರೆಗೆ ಕನ್ನಡೇತರ ವಿದ್ಯಾರ್ಥಿಗಳು ೧೫೦ ಅಂಕಗಳ ಮಾತೃ ಭಾಷೆಯನ್ನು ಪ್ರಥಮ ಭಾಷೆಯಾಗಿ ಹಾಗು ಬರಿ ೫೦ ಅಂಕಗಳ ಕನ್ನಡವನ್ನು ತೃತೀಯ ಭಾಷೆ ಇಲ್ಲವೆ ೧೦೦ ಅಂಕಗಳ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಯಬೇಕಾಗುವದು. +ಉ. ೧೯೮೬-೮೭ರಿಂದ ಎಲ್ಲ ವಿದ್ಯಾರ್ಥಿಗಳಿಗೂ ೧೫೦ ಅಂಕಗಳ ಕನ್ನಡವು ಕಡ್ಡಯದ ಪ್ರಥಮ ಭಾಷೆಯಾಗುವದು. ಕರ್ನಾಟಕ ರಾಜ್ಯದಲ್ಲಿ ೧೦ವರ್ಷ ಹಾಗು ಮೇಲ್ಪಟ್ಟು ನೆಲಸಿದ ಎಲ್ಲ ಮಕ್ಕಳಿಗೆ ಕನ್ನಡವು ಹೀಗೆ ಕಡ್ಡಾಯದ ವಿಷಯವಾಗುತ್ತದೆ. +ಊ. ಕನ್ನಡಿಗರಾದ ವಿದ್ಯಾರ್ಥಿಗಳಿಗೆ ೧೯೮೧-೮೨ನೆಯ ಶೈಕ್ಷಣಿಕ ವರ್ಷದಿಂದ ಕನ್ನಡವು ಏಕೈಕ ಪ್ರಥಮ ಭಾಷೆಯಾಗಿ ೧೫೦ ಅಂಕಗಳ ಕಡ್ಡಾಯದ ವಿಷಯವಾಗುತ್ತದೆ +ಋ. ಅಲ್ಲದೆ ಕನ್ನಡಿಗರಾದ ವಿದ್ಯಾರ್ಥಿಗಳಿಗೆ ೧೯೮೧-೮೨ರಿಂದ ಕನ್ನಡವನ್ನು ಬಿಟ್ಟು ಉಳಿದೆಲ್ಲ ಭಾರತೀಯ ಭಾಷೆಗಳು ದ್ವಿತೀಯ ಹಾಗು ತೃತೀಯ ಭಾಷೆಗಳ ಅಂಕಣಗಳಲ್ಲಿ (ಕಾಲಂಗಳು) ಸಂಸ್ಕೃತ ಮೊದಲಾದ ಪ್ರಾಚೀನ ಭಾಷೆಗಳೊಡನೆ ಕಾಣೆಸಿಕೊಂಡು ಮುಂಬರುವ ಎಲ್ಲ ವರ್ಷಗಳಲ್ಲಿಯೂ ಅದೇ ರೀತಿಯಾಗಿ ಮುಂದುವರಿಯುವವು. +ೠ. ಸಮಿತಿಯ ೨ನೆ ಹಾಗೂ ೩ನ್ದ್ ಸಲಹೆಗಳ ಪ್ರಕಾರ ಪ್ರಥಮ ಭಾಷೆಯಾದ ಕನ್ನಡವೊಂದನ್ನು ಬಿಟ್ಟು ಉಳಿದ ಯಾವ ಭಾಷೆಯನ್ನಾದರೂ ವಿದ್ಯಾರ್ಥಿಯ ದ್ವಿತೀಯ ಇಲ್ಲವೆ ತೃತೀಯ ಭಾಷೆಯಾಗಿ ತೆಗೆದುಕೊಳ್ಳಬಹುದು. ಆದರೆ ಈ ತಾತ್ಪೂರ್ತಿಕ ವ್ಯವಸ್ಥೆಯಲ್ಲಿ ಇಂಗ್ಲಿಷನ್ನು ೧೯೮೫-೮೬ನೆಯ ವರ್ಷ ಮುಗಿಯುವವರೆಗೆ ಬರಿ ದ್ವಿತೀಯ ಭಾಷೆಯೆಂದು ಅಭ್ಯಸಿಸಬಹುದು. +ಎ. ಕನ್ನಡ, ಉಳಿದ ಅಧುನಿಕ ಭಾರತೀಯ ಭಾಷೆಗಳಲ್ಲಿ ಒಂದು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾಥಿ, ಹಿಂದೀ, ಉರ್ದು) ಹಾಗು ಸಂಸ್ಕೃತ ಇಲ್ಲವೆ ಇನ್ನೊಂದು ಪ್ರಾಚೀನ ಭಾಷೆ (ಅರೇಬಿಕ್, ಪರ್ಷಿಯನ್, ಲ್ಯಾಟಿನ್, ಗ್ರೀಕ್) ಇವುಗಳಲ್ಲಿ ಒಂದು ಭಾಷೆಯನ್ನು ತೃತೀಯ ಭಾಷೆಯೆಂದು ಆಯ್ದುಕೊಂಡು ಅಭ್ಯಸಿಸಬಹುದು. ಹೀಗೆ ಆಯ್ದುಕೊಂಡ ಭಾಷೆ ೧೯೮೧-೮೨ರಿಂದಲೇ ಪರೀಕ್ಷೆಗೆ ಕಡ್ಡಾಯ ವಿಷಯವಾಗುವುದು. ಇದೇ ವ್ಯವಸ್ಥೆ ಮುಂದೆಯೂ ನಡೆದುಕೊಂಡು ಬರುವದು. ೧೯೮೬-೮೭ ರಿಂದ ಕನ್ನಡವು ತೃತೀಯ ಭಾಷೆಗಳ ಪಟ್ಟಿಯಲ್ಲಿರುವುದಿಲ್ಲ. ಬದಲ್ಲಗಿ ಆ ವರ್ಷದಿಂದ ಇಂಗ್ಲಿಷು ಆ ಪಟ್ಟಿಯಲ್ಲಿ ಸೇರುತ್ತದೆ. +೯. ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡಕ್ಕೆ ಪ್ರಾಥಮಿಕ ಶಿಕ್ಷಣಕ್ಕೂ ಸಹ ನ್ಯಾಯವಾಗಿ ದೊರೆಯಬೇಕಾದ ಮನ್ನಣೆಯಾಗಲಿ, ಪುರಸ್ಕಾರವಾಗಲಿ ದೊರೆಯುವುದೇ ಇಲ್ಲವೆಂಬ ದೂರು ಅಲ್ಲಿಯ ಕನ್ನಡಿಗರಿಂದ ಕೇಳಿ ಬರುತಿದೆ. ಅಲ್ಪಸಂಖ್ಯಾತರ ಭಾಷೆಗಳಲ್ಲಿ ಹೈಸ್ಕೂಲನ್ನು ಇಲ್ಲವೆ ಹೈಸ್ಕೂಲುಗಳಲ್ಲಿ ಅಲ್ಪಸಂಖ್ಯಾತರ ಭಾಷೆಗಳ ಅಭ್ಯಾಸಕ್ಕೆ ಮನ್ನಣೆ ಕೊಡುವ ವಿಷಯದಲ್ಲಿಯೂ ಈ ದೂರ ಕೇಳಿಬರುತ್ತದೆ. ಈ ವಿಷಯಗಳಕ್ಕೆಲ್ಲ ಕರ್ನಾಟಕದ ರಾಜ್ಯ ಸರ್ಕಾರ ತುಂಬ ಔದಾರ್ಯದಿಂದ ನಡೆದುಕೊಂಡು ಬಂದಿದೆ. ಆದರೆ ಇಂತಹ ಧೋರಣವನ್ನು ಮುಂದುವರಿಸುವಾಗ ಕನ್ನಡಕ್ಕೂ ಅಂತಹ ಪುರಸ್ಕಾರ, ನೆರೆಹೊರೆಯ ರಾಜ್ಯಗಳಲ್ಲಿ ದೊರೆತಿದೆಯೇ ಎಂದು ತಿಳಿದುಕೊಂಡು ಮುಂದುವರಿಯುವ ಸಮಯ ಬಂದಿದೆ. ಅಲ್ಲದೆ ಕನ್ನಡ ಜನತೆಯ ಮಕ್ಕಳಿಗೇ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕದಲ್ಲಿ ಇನ್ನೂ ಎಲ್ಲಾ ಕಡೆ ಸ್ಥಾಪಿಸುವ ಕೆಲಸ ಮುಗಿಯದಿರುವಾಗ ಉಳಿದ ಭಾಷೆಗಳಿಗೆ ಅದಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಸಾಧುವಲ್ಲ. +೧೦. ಇಂಗ್ಲಿಷು ಮಾಧ್ಯಮವಿದ್ದ ಪ್ರಾಥಮಿಕ ಶಾಲೆಗಳಲ್ಲಿ ಸಹ ಮೂರನೆ ಇಯತ್ತೆಯಿಂದ ಪ್ರಾರಂಭಿಸಿ ಪ್ರತಿಯೊಂದು ಇಯತ್ತೆಗೆ ಉಳಿದ ಭಾಷೆಗಳ ಮಾಧ್ಯಮವಿದ್ದ ಶಾಲೆಗಳಲ್ಲಿರುವಂತೆಯೇ ಕನ್ನಡ ಕಲಿಸಿ ಪ್ರೌಢ ಶಾಲೆಗಳಲ್ಲಿ ೮ನೆ ಇಯತ್ತೆಯಿಂದ ೧೦ನೆ ಇಯತ್ತೆ (ಅಂದರೆ ಎಸ್.ಎಸ್.ಎಲ್,ಸಿ) ಮುಗಿಯುವವರೆಗೆ ೧೫೦ ಅಂಕಗಳ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. +***** +ಮುಗಿಯಿತು +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ […] +ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಳು ಕಾರ್ಯಕ್ರಮ : ಎಚ್.ಎ.ಎಲ್.ನ ‘ವಿಮಾನ’ ಸಂಘದ ವಾರ್ಷಿಕೋತ್ಸವ ಮತ್ತು ಹಿರಿಯ ನಟ ಅಶ್ವತ್‌ರವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸ್ಥಳ : ಡಾ||ರಾಜ್‌ಕುಮಾರ್ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ದಿನಾಂಕ […] +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_689.txt b/Kannada Sahitya/article_689.txt new file mode 100644 index 0000000000000000000000000000000000000000..71a537004585d7dadee935d431081649e92a7e0e --- /dev/null +++ b/Kannada Sahitya/article_689.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ […] +– ನೊಮ್ ಚಾಮ್ಸ್‌ಕಿ (ಕನ್ನಡಕ್ಕೆ ಪ್ರೀತಿ ನಾಗರಾಜ್) ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ […] +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_69.txt b/Kannada Sahitya/article_69.txt new file mode 100644 index 0000000000000000000000000000000000000000..9f39c54a23a9623471bb65bab2bb73f2d9d17909 --- /dev/null +++ b/Kannada Sahitya/article_69.txt @@ -0,0 +1,791 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅದಕ್ಕೇ ಹೇಳಿದೆ: ಯಾರಾದರೊಬ್ಬರು +ಕಾಯಬೇಕಿದೆ ನಿನ್ನ ತೋಟವ. ಅದಕ್ಕೇ +ಎಲ್ಲಿದ್ದರೆ ಅಲ್ಲಿಂದ +ಮಗನೇ ನೀ ಬೇಗನೆ ಬಾ- +-ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು. ದಿನಾ ಕಣ್ಣಲ್ಲಿ ಕಂಬನಿಯಾಯ್ತು. +ಎಷ್ಟು ದಿನ ಕಾದರೂ ಮಗ ಬಾರದೆ, ನೀರು ತುಂಬಿದ ಕಣ್ಣಲ್ಲಿ ಆಟಿಕೆಗಳು ಕಾಣದೆ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಮಗನ ದಾರಿ ನೋಡಿದಳು ಅಬ್ಬೆ : +ಬಾಳೋ ಭಕ್ತಳಿಗೊಂದು ವ್ಯಾಳ್ಯಾವು ಬಂದರೆ +ಕಾಯೋರ್‍ಯಾರೋ ಶಿವನೆ ನಿನ್ನ ಬಿಟ್ಟು? +ಒಳ್ಳೆಯ ಸಂಗತಿಗಳನ್ನ ನೆನಪಿಟ್ಟುಕೊಳ್ಳೋನೇ, +ಕೆಟ್ಟ ಸಂಗತಿಗಳನ್ನ ಮರೆಯೋನೇ, +ಹರಕೆಯ ಬೀಸು ಬಲೆಗೆ ಸಿಕ್ಕಲಾರದ ಶಿವನೇ, +ಅಣುಗಳನ್ನ ಕಳಿಸೊ ಎಂದು- +ಕುಲದೇವರು ನನ್ನ ಪಾಲಿಗಿಲ್ಲದಂಗಾಯ್ತು +ಮನೆದೇವರು ಮರೆತು ಹೋಯ್ತು +ಮನೆ ಜ್ಯೋತಿ ಬೆಳಗಿಸಬೇಕೆಂಬೋ ಬುದ್ದಿ +ನಿನಗಾದರೂ ಬ್ಯಾಡ್ವೇನೇ ಬೆಟ್ಟದ ಮಾಯೀ ಎಂದು, +ನರಲೋಕ ಸುರಲೋಕಗಳ +ಜಬರ್‍ದಸ್ತ್ ಆಳುವ ಶಿವನೇ, +ಮಗನೆಲ್ಲಿ ಅಂತ ನಿನಗೂ ಗೊತ್ತಿಲ್ಲವೇ? +ಗೊತ್ತಿದ್ದೂ ಪಂತಪರೀಕ್ಷೆ ಮಾಡದೆ +ಮಗನ್ನ ಕಳಿಸೋ ಮಾದೇವಾ ಎಂದು +ದಿನದಿನಕ್ಕೆ ಹೊಸ ಹೊಸ ಕಣ್ಣೀರನತ್ತಳು ಅಬ್ಬೆ. +ಸುತ್ತೂದೈವಂಗಳಿಗೆ ಹರಕೆ ಹೊತ್ತದ್ದು, ಉರುಳು ಸೇವೆ ಪಂಜಿನ ಸೇವೆ ಮಾಡಿದ್ದು, ಬೇಕಾದಷ್ಟು ದೂಪ ದೀಪ ಉರಿಸಿದ್ದು ಎಲ್ಲವೂ ವ್ಯರ್ಥವಾಯಿತು. ಹಾದಿ ಸಿಕ್ಕಿದ್ದರೆ ಕೈಲಾಸಕ್ಕೂ ಹೋಗಿ ಶಿವನ ಕೈಕಾಲು ಕಟ್ಟುತ್ತಿದ್ದಳು. ಆಗಲೂ ಮಗ ಬಾರದೆ ಇಂತೆಂಬ ಕಷ್ಟನಿಷ್ಠೂರ ಹೆಂಗೆ ತಾಳಿಕೊಳ್ಳಲೋ ಶಿವನೇ ಎಂದು ಮಂಡೆಯ ಮ್ಯಾಲೆ ಕೈಹೊತ್ತು ಕುಂತಿರುವಲ್ಲಿ ಹುಸಿಹೋಗದ ಹೊಸ ಮದ್ದೊಂದು ನೆಪ್ಪಾಯಿತು ನೋಡು, ಅವಳೇ ಸೈ ಎಂದು ಮಂಗಳವಾರದ ಅಮಾವಾಸ್ಯೆ ಸಪ್ಪಟು ಸರಿ ರಾತ್ರಿ ಮಾರಿಮಸಣಿ ಭೂತಪಿಶಾಚಿ ಅಡ್ಡಾಡೋ ಹೊತ್ನಲ್ಲಿ ತಣ್ಣೀರು ಮಿಂದು, ತಣ್ಣನೆ ದಟ್ಟಿ ಉಟ್ಟು, ಬುಟ್ಟಿ ತುಂಬ ಹಸಿರು ಸೆಗಣಿ, ಗಡಿಗೆ ತುಂಬ ಮೆಣಸಿನ ನೀರು ತಗೊಂಡು ಹಟ್ಟಿಯ ಹೊರಗಿನ ಯಕ್ಷಿಯ ಗುಡಿಗೆ ಹೋದಳು ಅಬ್ಬೆ. +ಹೋಗಿ, ಸೆಗಣಿಯಲ್ಲಿ ಮೆಣಸಿನ ನೀರು ಹುಯ್ದು ಗಂಜಳ ಮಾಡಿ ಯಕ್ಷಿಯ ಶಿಲಾಮೂರ್ತಿಯ ಮುಖಕ್ಕೆ ಬಡಿದು ಡಬ್ಬು ಮಲಗಿಸಿ- +ಎಲಗೆಲಗೇ ಸೋಗಲಾಡಿ ದೇವೀ, +ಹಾಡಿಯ ಬಲ್ಲವಳು ಹಟ್ಟಿಯ ಬಲ್ಲವಳು +ಕಾಡು ನೋಡಿಕೊಂಬೋಳು, ಗೂಡು ನೋಡಿಕೊಂಬೋಳು +ಮುಗಿಲಿನ ಆಚೆ ಬಲ್ಲವಳು ಈಚೆ ಬಲ್ಲವಳು +ಮಗ ಎಲ್ಲಿ ಹೋದ ಅಂಬೋದು +ನಿನಗೆ ಗೊತ್ತಿಲ್ಲ ಅಂದಮ್ಯಾಕೆ +ನೀನ್ಯಾಕೆ ವೈನಾಗಿರಬೇಕು? +ಮಗ ನಿನ್ನ ಪೂಜೆ ಮಾಡಲಿಲ್ಲವ? +ಚಾಕರಿ ಮಾಡಲಿಲ್ಲವ? +ತಪ್ಪು‌ಒಪ್ಪುಗಳ ತೂಕ ಮಾಡೋಳಲ್ಲವ ನೀನು? +ನಿನ್ನ ನಂಬಿದ ನಂಬಿಕೆ ಏನುಳಿಸಿಕೊಂಡೆ? +ನಿನಗ್ಯಾಕೆ ಇನ್ನುಮ್ಯಾಕೆ ಪೂಜೆಪುನಸ್ಕಾರ? +ಇಂದು ಮಂಗಳವಾರದಿಂದ +ಇನ್ನೊಂದು ಮಂಗಳವಾರದವರೆಗೆ- ಮುದ್ದುತು ಕೊಟ್ಟೆ. ಅಷ್ಟರೊಳಗೆ, +ದಿಕ್ಕು ದೇಶಾಂತರ ಹೋದ ಮಗ ಬಂದರೆ ಗುಡ್ಡುಬಿಡ್ತೀನಿ +ಬರದಿದ್ದರೆ ನಿನಗಿದೇ ಗತಿ. +-ಎಂದು ಉರಿಮಾತುಗಳ ಸುರಿದು ಮುದಿಕಿ ಯಕ್ಷಿಯ ಶಿಲಾಮೂರ್ತಿಯ ಬೆನ್ನಿಗೂ ಸೆಗಣಿ ಗಂಜಳ ಸುರಿದು, ಹೊರಬಂದು ಗುಡಿಯ ದ್ವಾರ ಬಾಗಿಲಿಗೆ ಮುಳ್ಳಿನ ಬೇಲಿಯ ಬಿಗಿದು ಬೆಳ್ಳಿ ಮೂಡಿ ಬೆಳಗಾಗೋ ಹೊತ್ತಿಗೆ ಹಾಡಿಗೆ ಬಂದಳು. +೨೩. ಆಕಾಶಕ್ಕೆ ಉರಿ +ಲೋಕ ಲೌಕಿಕದಲ್ಲಿ ಅಬ್ಬೆ ಈ ಪರಿ ಯಕ್ಷಿಗೆ ಶಿಕ್ಷೆ ಮಾಡಿದೇಟ್ಗೆ ಆಕಾಶವೆಂಬ ಬಯಲ ಅರಮನೆಗೆ ಉರಿ ತಾಗಿತು ನೋಡು! +ಮೇಲು ಮಿರಿಲೋಕದ ಏಳುಪ್ಪರಿಗೆ ಮ್ಯಾಲೆ ಕೊಳಲುಲಿಯ ಮತ್ತಿನಲ್ಲಿ ಸೊಗದಿಂದ ಮಲಗಿದ್ದ ನಮ್ಮ ಕಿವಿಯಲ್ಲಿ ಯಾರೋ ಸಿಡಿಲು ಸಿಡಿಸಿದಂತಾಗಿ ಸ್ವಪ್ನಂಗಳಾದ ನಾವೇ ದುಃಸ್ವಪ್ನ ಕಂಡ ಮಕ್ಕಳಂತೆ ಚಂಗನೆ ನೆಗೆದು ನಿಂತೆವು. ಭೀತ ಬೆರಗಿನಲ್ಲಿ ನೋಡಿದರೆ ಶಿವ ಶಿವಾ- +ಮೆಣಸಿನ ನೀರಿನ ಕಾರದುರಿ +ಸೆಗಣಿಗಂಜಳದ ಅವಮಾನದುರಿಗಳಿಂದ +ಯಕ್ಷಿ ಹೊತ್ತಿಕೊಂಡುರಿಯುತ್ತಿದ್ದಾಳೆ ಪಂಜಿನಂತೆ! +ಉರಿ ಉರಿ ಎಂದು ಕಿರುಚುತ್ತ +ಮೈ ಪರಚಿಕೊಳ್ಳುತ್ತ +ನಿಲ್ಲದೆ ಕೂರದೆ ನೆಗೆದಾಡುತ್ತ +ತಾರಾಮಾರು ಹಾರ್‍ಯಾಡುತ್ತಿದ್ದಾಳೆ ಯಕ್ಷಿ ಮಿಂಚಿನಂತೆ! +ಬೆಳ್ದಿಂಗಳು ಸೂಸುವ ಅವಳ ಮುಖ ಮೈಗಳಿಗೆ ಸೆಗಣಿ ಗಂಜಳವಂಟಿದೆ! ಶಿವನೇ ಇದೇನಾಗಿದೆಯೆಂದು ಕಂಗಾಲಾಗಿ ನಿಂತಿದ್ದಾನೆ ಚಂದಮುತ್ತ! ಶಕ್ತಿಗುಂದಿ ಬಾಯೆಂಜಲೊಣಗಿ, ಮಾತು ಬಾರದೆ ಕೈಬಾಯಿ ಸನ್ನೆಯಲಿ ಯಾಕೆಂದು ಏನೆಂದು ಕೇಳಿದ್ದಕ್ಕೆ ಉತ್ತರ ಕೊಡದೆ ಮೈಯಲ್ಲಿ ಆವೇಶವಾದವರಂತೆ ನೆಗೆದಾಡುತ್ತಿದ್ದವಳ ಸಂತವಿಸಲೆಂದು ಸಮೀಪ ಹೋದರೆ “ಮುಟ್ಟಿದರೆ ಕೆಟ್ಟೀಯಾ”- ಎಂದು ಆಕಾಶ ಹರಿವಂತೆ ಕಿಟಾರನೆ ಕಿರಿಚಿ ಎಚ್ಚರಿಸಿದಳು ಯಕ್ಷಿ. ಅವಳ ಮಾತೆಲ್ಲ ಬೆಂಕಿ ಹೊಳೆ, ಕಣ್ಣೆಲ್ಲ ಉರಿಯ ಮಳೆ. ಇಂಪಿರದ ಅವಳ ಮಾತಿಗೆ ಕಂಪಿಸಿತು ಚಂದಮುತ್ತನ ಕಾಯ. ಬೆವರು ಜಲದಿಂದ ನೆಲ ತೊಯ್ದವು. ಏನು ಮಾಡಲೂ ತೋಚದೆ ನಮ್ಮಪ್ಪ ಶಿವನೇ ಕಾಪಾಡೆಂದು ಕರುಳು ಕಿತ್ತು ಬಾಯಿಗೆ ಬರುವಂತೆ ಎದೆ ಬಾಯಿ ಬಡಕೊಂಡು ಒದರಿ ಅಳುತ್ತಿದ್ದಾನೆ ಚಂದಮುತ್ತ. +ಆನಂದಗಳನುಂಡು ಬೆಳೆದ ಚಕೋರಿಯ +ಮುಖದರ್ಶನದಿಂದ ಸಂತೋಷವಾಗುತ್ತಿದ್ದ ನಮಗೆ +ಅವಳ ಕರಾಳ ಮುಖ ನೋಡಿ +ಕರುಳು ಹೊಸಕಿದ ಹಂಗಾಯ್ತು. +ಸರ್ವನಾದಂಗಳ ದೇವಿ +ಈ ಪರಿ ಅಪಸ್ವರದಲ್ಲಿ ಕಿರಿಚಿದ್ದನ್ನು ನಾವೆಂದೂ ಕೇಳಿರಲಿಲ್ಲ. +ಕೇಳಿಸಿಕೊಂಡ ಆಲದ ಅರಮನೆ +ಬೇರು ಸಮೇತ ಥರಾಥರ್‍ನೆ ನಡುಗಿದ್ದ ಕಂಡೆವು. +ನೋವು ತಾಳದೆ ಚಕೋರಿ ಎಂಬ ಯಕ್ಷಿ +ವಿಕಾರವಾಗಿ ಒದರಿ +ಧಾರಾವತಿ ಕಣ್ಣೀರು ಜಲವ ಸುರಿಸಿದಳು. +ಹಸ್ತಗಳಿಂದ ಮೈಮುಟ್ಟಿಕೊಳ್ಳದೆ, ಸುಮ್ಮನಿರಲೂ ಆಗದೆ +ಏಳೇಳು ಲೋಕದ ಸಂಕಟ ಪಟ್ಟಳು. +ತುಟಿ ಕಚ್ಚಿ ಕಣ್ಣುಮುಚ್ಚಿ +ನೋವಿಗೆ ಗುರಿಯಾದ ಮೃದು ಮೈಯ್ಯನ್ನ +ಕಲ್ಲಾಗಿಸಿ ಕಬ್ಬಿಣವಾಗಿಸಿ +ಕೊನೆಗೆ ವಜ್ರವಾಗಿಸಿ +ನೋವು ತಾಳಿಕೊಳ್ಳಲು ಯತ್ನಿಸಿದಳು. +ಶಿವನ ಜೊತೆ ವಾದ ಮಾಡುತ್ತಿರುವಂತೆ +ತನಗಾದ ದ್ರೋಹದ ಬಗ್ಗೆ +ಸಾರಿ ಸಾರಿ ತಕರಾರು ಹೇಳುತ್ತಿರುವಂತೆ +ಆಕಾಶದ ಕಡೆ ನೋಡಿ ಶಿವದುಃಖ ಮಾಡಿದಳು. +ನಿಜ ಹೇಳಬೇಕೆಂದರೆ +ಹೂವಿನಂಥ ಅವಳ ಮನಸ್ಸಿಗೂ +ಕೋಪದಲ್ಲಿ ಕುದಿಯುತ್ತಿದ್ದ ಅವಳ ಆಲೋಚನೆಗಳಿಗೂ +ಹೊಂದಾಣಿಕೆಯಿರಲಿಲ್ಲ. +ಬೆಳ್ದಿಂಗಳಂಥ ಯಕ್ಷಿ +ಇಂತೀಪರಿ ಕೊತ ಕೊತ ಕುದಿಯುವುದೆಂದರೇನು? +ಕುದಿಯೋ ಬೆಳ್ದಿಂಗಳನ್ನ ಯಾರಾದರೂ ಕಂಡಿದ್ದೀರಾ? +ಅಳ್ಳೆ ಅರಳಿವೆ, ಕೋಪಗೊಂಡ ಗೂಳಿಯ ಕಣ್ಣಿನಂತೆ +ಕೆಂಡಕೆಂಡವಾಗಿವೆ ಕಣ್ಣು. +ಚಂದಮುತ್ತ ಆ ಕೆಂಡದಲ್ಲಿ +ಸುಡದ ಹಾಗೆ ನೋಡಿಕೋಬೇಕು. +ನೋಡಿದೆಯಾ ಶಿವನೆ, +ಹ್ಯಾಗೆ ಪರಚಿಕೊಳ್ಳುತ್ತಿದ್ದಾಳೆ ಹೃದಯವ? +ಯಾರನ್ನೋ ಶಪಿಸುವುದಕ್ಕಾಗಿ +ಅಧೋಲೋಕದ ಕರಾಳ ಶಬ್ದಗಳನ್ನ +ಹುಡುಕುತ್ತಿದ್ದಾಳೆ. +ಶಾಪಂಗಳು ಅವಳ ಬಾಯಿಂದ ಸಿಡಿಯುವ ಮುನ್ನ +ಸತಿಯ ಸಂತವಿಸಿರೇ. +ಇರು ಇರು ದೇವೀ +ಅನುಚಿತವ ನೆನೆಯದಿರು. +ಬುದ್ಧಿ ತಪ್ಪಿದಮೇಲೆ ಪಶ್ಚಾತ್ತಾಪ ಪಡಬೇಡ. +ಈಗಲೇ ಎಚ್ಚರಾಗು. +ಇಲ್ಲಿ ಯಾರದೂ ತಪ್ಪಿಲ್ಲ +ಪುಣ್ಯಕೋಟಿ ಹಸುವೇನು ಮಾಡೀತು +ತಪ್ಪಿಸಿಕೊಂಡ ಕರು ನಿನ್ನ ಬಳಿ ಬಂದರೆ? +ಕರುವೇನು ಮಾಡೀತು +ಹಸುವಿನ ಒಡಲ ಹಂಬಲ ತಿಳಿಯದಿದ್ದರೆ? +ನಾಡು ನರಲೋಕದ ನಡಾವಳಿ ಬಲ್ಲವಳು ನೀನು. +ಮುಂದೆ ನಡೆವ ವಿಚಾರ +ಹಿಂದೆ ನಡೆದ ವಿಚಾರ ತಿಳಿದವಳು ನೀನು, +ನೀನಲ್ಲವೇ ನಿಭಾಯಿಸಬೇಕಾದವಳು? +ಕೋಪವ ಪಳಗಿಸು ದೇವೀ. +ನಮ್ಮ ನುಡಿ ಕೇಳಿ ಸಮಾಧಾನವಾಗಿರಬೇಕು ಇಲ್ಲವೆ ಮೈಯುರಿ ಕಮ್ಮಿಯಾಗಿರಬೇಕು. ಚಕೋರಿ ಎಂಬ ಯಕ್ಷಿ ಒಂದು ಸಲ ನಮ್ಮ ಕಡೆ ದಯಮಾಡಿ ನೋಡಿದಳಷ್ಟೆ. ಇನಿಸಿನಿಸಾಗಿ ಮುನಿಸಿಳಿಯಿತು. ಮುಳ್ಳಿರಲಿಲ್ಲ ನೋಟದಲ್ಲಿ. ಹುಬ್ಬು ಗಂಟಿಕ್ಕಿದವು. ಮುಖದಲ್ಲಿ ಬೇರೆ ಬೇರೆ ಹಾವಭಾವ ಮೂಡಿದವು. ನಮಗೆ ತೋರದೆ ಮುಖ ಆ ಕಡೆ ತಿರುಗಿಸಿದಳು. ಗಾಬರಿಯಾದೆವು ನಾವು. ಈಗ ನಮಗವಳ ಗಾಯಗೊಂಡ ಬೆನ್ನು ಮಾತ್ರ ಕಂಡಿತು. ಹೇಳಿದಳು : +ಇಲ್ಲಿಂದ ಈಗಿಂದೀಗ +ತೊಲಗಲಿ ಇವನು. +ಹಿಂದೆ ಮುಂದೆ ಏನೇನೂ ಗೊತ್ತಿಲ್ಲದ ಚಂದಮುತ್ತ ಆಕಡೆ, ಈ ಕಡೆ, ಯಕ್ಷಿಯ ಕಡೆ, ನಮ್ಮ ಕಡೆ ಗಲಿಬಿಲಿಯಲ್ಲಿ ನೋಡುತ್ತ ಅಸಹಾಯಕನಾಗಿ ಅಂಗಲಾಚುವ ದೃಷ್ಟಿಗಳಿಂದ ವಿನಂತಿಸುತ್ತ ನಿಂತ. ನುಡಿದಾಡದೆ ಇಲ್ಲಿಂದ ತೊಲಗೆಂದು ನಾವು ಹಸ್ತಾಭಿನಯದಿಂದ ಹೇಳಿ ಸಪ್ಪಳಾಗದ ಹಾಗೆ ಅವನನ್ನ ಗೇಟಿನ ಕಡೆಗೆ ನಡೆಸಿದೆವು. +“ನಿಲ್ಲು” +ಎಂದಳು ಯಕ್ಷಿ ಉರಿನಾಲಿಗೆಯಿಂದ. ಅವಳಾಡುವ ನುಡಿ ಶಾಪವಲ್ಲದೆ ಬೇರೆ ಆಗಿರಲಾರದೆಂದು ಥರಥರ್‍ನೆ ನಡುಗಿ ನಾವು ಯಾಕೆಂದು ಕೇಳುವ ಧೈರ್ಯ ಮಾಡಲಿಲ್ಲ. ಅವಳೇ ಹೇಳಿದಳು : +ಇಲ್ಲಿ ನೋಡಿದ್ದು ನೋಡಿದ ಲೆಖ್ಖಕ್ಕಿಲ್ಲ +ಇಲ್ಲಿ ಕೇಳಿದ್ದು ಕೇಳಿದ ಲೆಕ್ಖಕ್ಕಿಲ್ಲ. +ಇಲ್ಲಿ ಕಂಡದ್ದನ್ನು ಕಂಡೆನೆನ್ನಕೂಡದು +ಕೇಳಿದ್ದನ್ನು ಕೇಳಿದೆನೆನ್ನಕೂಡದು +ಇದು ಮೀರಿ ಯಾವಾನಾನೊಬ್ಬನಿಗೆ ಹೇಳಿದರೆ +ಹೇಳಿದವನು ಕೇಳಿದವನಿಬ್ಬರೂ +ನಾಲಗೆ ಹಿರಿದು ಸಾಯುತ್ತಾರೆಂದು ತಿಳಿದಿರಲಿ. +ಹಿಂದಿರುಗಿ ಮಾತ್ರ ನೋಡದಿರಲಿ. +ಅವಳಾಜ್ಞೆ ಮುಗಿಯುವುದನ್ನೇ ಕಾಯುತ್ತಿದ್ದ ನಾವು ಸಧ್ಯ ಪಾರಾದೆವೆಂದು ಹಗುರು ಮನಸ್ಸಿನವರಾಗಿ ಚಂದಮುತ್ತನ್ನ ಆಲದ ಮರದಿಂದ ಕೆಳಗಿಳಿಸಿ ‘ನೇರ ನಿಮ್ಮ ಹಟ್ಟಿಯ ಯಕ್ಷಿಯ ಗುಡಿಗೆ ಹೋಗೆಂ’ದು ಕಳಿಸಿದೆವು. +೨೪. ಕೊಟ್ಟೆ ಮಗನ; ನಿನ್ನಡಿಗಿಟ್ಟೆ ಸಿಟ್ಟು ಬಿಡು +ಮೂರು ಹಗಲು ಮೂರು ರಾತ್ರಿ ನಡೆದು ಮಂಗಳವಾರ ಮಟ ಮಟಾ ಮದ್ಯಾಹ್ನ ಚಂದಮುತ್ತ ಸೀದಾ ಯಕ್ಷಿಯ ಗುಡಿಗೆ ಬಂದಾಗ ಅಲ್ಲೇನಿದೆ? +ನರಮಾನವರ ಸುಳಿವಿಲ್ಲ +ಕಾ ಎಂಬ ಕಾಗೆಯಿಲ್ಲ, ಗೂ ಎಂಬ ಗೂಗೆಯಿಲ್ಲ. +ಮಳೆ ತಪ್ಪಿ ಮೇಲುಲೋಕದ ಮೇಘದಲ್ಲೇ ಇದೆ. +ಬೆಳೆತಪ್ಪಿ ಭೂಲೋಕದ ಮಣ್ಣಿನಲ್ಲೇ ಸುಟ್ಟು ಹೋಗಿದೆ. +ಸುತ್ತೂ ಸೀಮೆಯ ಜಲ ಇಂಗಿ ನೆಲ ಬಿರಿದು +ಭಿಕೋ ಅಂತಿದೆ ಕಾಡು ನಾಡು ಒಣಗಿ. +ಯಾರೋ ಬೆಂಕಿ ಹಚ್ಚಿ, +ಈಗಷ್ಟೇ ನಂದಿದ ಹಾಂಗಿದೆ ಬಯಲು. +ಓಡ್ಯಾಡುತಾವೆ ಬಿಸಿಲುಗುದರಿ! +ಕೊತಕೊತ ಕುದಿಯುತ್ತಿದೆ ಆಕಾಲದ ಬೇಸಿಗೆ. +ಮೌನದೊಳಗೆ ಹುಗಿದ ಹಾಗಿದೆ ಜಗವು. +ಕಂದಿಬಿಟ್ಟಿದೆ ಬೆಳಕು, +ಸುರಿಯುತ್ತಾ ಇದೆ ಹಾಳು ಹಾಳು. +ಇರುವೆ ಮೊದಲು ಆನೆ ಕಡೆ ಖಗಮೃಗ ಜಾತಿಯ +ಹೆಣಗಳಲ್ಲಲ್ಲೇ ಬಿದ್ದೈದಾವೆ. +ಹಿಂಗಿರುವಾಗ ಭೂಲೋಕ ಬದುಕೋದು ಹ್ಯಾಂಗೆಂದು +ಹಳೆದೇವರು ಶಕ್ತಿಗುಂದಿದವೇ ಶಿವನೇ ಎಂದು +ಬದುಕುಳಿದಿರುವ ಜೀವಸಂಕುಲ ಚಿಂತೆ ಮಾಡುತ್ತ ಇವೆ. +ಒಳಗೆ ಇಣಕಿ ನೋಡಿದರೆ ಮೈಗೆಲ್ಲ ಸೆಗಣಿ ಗಂಜಳ ಬಡಿದ ಯಕ್ಷಿಯ ಶಿಲಾಮೂರ್ತಿ ಬೆನ್ನುಮೇಲಾಗಿ ಬಿದ್ದುಕೊಂಡಿದೆ! ಚಂದಮುತ್ತನಿಗೆ ಎಲ್ಲವೂ ವೇದ್ಯವಾಯಿತು. ಯಾರೋ ಮಾಡಿದ ತಪ್ಪಿಗೆ ತನಗೆ ನಾಯಿನರಕವಾಯಿತೆಂದು ಖಾತ್ರಿಯಾಗಿ ಕೆನ್ನೆ ಕೆನ್ನೆ ಬಡಿದುಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಆಮ್ಯಾಲೆ ದ್ವಾರಬಾಗಿಲಿನ ಕೊರೆಬೇಲಿ ತೆಗೆದು ಈಚೆ ಚೆಲ್ಲಬೇಕೆಂಬಲ್ಲಿ ಅಲ್ಲೊಂದು ಮುದಿಕೋತಿ ಕೂತಂಗಿತ್ತು. ವಿಸ್ಮಯಂಬಟ್ಟು ನೋಡಿದರೆ ಓಂ ಸಾವಳಗಿ ಶಿವ ಶಿವಾ- ಒಣಗಿದ ಮಲ್ಲಿಗೆ ಬಳ್ಳಿಯ ಗೂಡಿನಲ್ಲಿ ಸುಟ್ಟ ಕಾಡಿನಂತೆ ಕುಂತಿದ್ದಾಳೆ ಪುಣ್ಯಕೋಟಿ ಲಕ್ಕಬ್ಬೆ! ಅತ್ತು ಅತ್ತು ಕಣ್ಣಿರು ಖಾಲಿಯಾದಂಗಿತ್ತು ಆಕೆಯ ಮೋತಿ. ಚಂದಮುತ್ತನ ಕರುಳು ಕಿತ್ತು ಕಣ್ಣಿಗೆ ಬಂದು ಕಣ್ಣೀರು ಜಲ ಸಣ್ಣ ತೊರೆಯಾಗಿ ಹರಿಯಿತು. ‘ಅಬ್ಬೇ’ ಎಂದೊದರಿ ಓಡಿ ಹೋಗಿ ತಬ್ಬಿಕೊಂಡ. ಕೂಗಿಗೆಚ್ಚರವಾಗಿ ಮುದುಕಿ ಕಣ್ಣು ತೆರೆಯುವುದರೊಳಗೆ ಕಂದನ ಅಪ್ಪುಗೆಯಲ್ಲಿದ್ದಳು. ಸ್ಮೃತಿಯಾಯಿತು ನೋಡು, ಕಣ್ಣು ಭಗ್ಗನೆ ಹೊತ್ತಿಕೊಂಡವು. ಮಗನ ಕಂಡಳೇ- ಕೊಚ್ಚಿ ಹೋದವು ಅವಳ ದುಃಖ ದುಗುಡಂಗಳು. “ಬಂದೆಯಾ ಕಂದಾ” ಎಂದು ಚೀರಿ ಮೈಮ್ಯಾಲೆ ಆವೇಶವಡರಿ ಏಳೇಳು ಲೋಕದ ಆನಂದಪಟ್ಟಳು. ಕಣ್ಣಿಂದ ಮಗನ ಹೀರುವಂತೆ ನೋಡಿ ತಬ್ಬಿ ತೂಪಿರಿದು ನೆತ್ತಿಯ ಮೂಸಿ ಆನಂದದ ಆವೇಶ ಹಿಂಗದೆ ಬಂದವನು ಮಗ ಹೌದೋ, ಅಲ್ಲವೋ ಎಂದು ಮತ್ತೆ ಮತ್ತೆ ನೋಡಿ ಹೌದೆಂದು ಖಾತ್ರಿಯಾಗಿ ಮತ್ತೆ ಮತ್ತೆ ತಬ್ಬಿ ಬುದಿಂಗನೆ ಎದ್ದು ‘ಬಾ ಹಟ್ಟಿಗೆ’ ಎಂದು ಕೈಪಿಡಿದು ನಡೆದಳು. ಅಷ್ಟು ದೂರ ಹೋಗಿದ್ದವಳು ಯಕ್ಷಿಯ ನೆನಪಾಗಿ ದುಡುದುಡುನೆ ಓಡೋಡಿ ಹಿಂದಿರಿಗಿ ಬಂದು ಬಾಗಿಲೆದುರು ಕೈಮುಗಿದು ನಿಂತು ‘ನಿನ್ನ ಮರೆತಿದ್ದೇ ತಪ್ಪಾಯಿತೇ ತಾಯಿ, ಭಕ್ತಿಯ ಮಾಡಲು ಮಡಿಯಾಗಿ ಬರುತ್ತೇನಿರು’ ಎಂದು ದಿಂಡುರುಳಿ ಶರಣು ಮಾಡಿ ಮಗನಿಗೂ ದಿಂಡುರುಳಲು ಹೇಳಿದಳು. +ಲಕ್ಕಬ್ಬೆಯ ಸಂತೋಷವನ್ನಾಚರಿಸಲು ಹಟ್ಟಿಯಲ್ಲಿ ಹೆಚ್ಚು ಮಂದಿಯಿರಲಿಲ್ಲ. ಇದ್ದವರೆಲ್ಲರ ಮನೆಮನೆಗೆ ಹೋಗಿ ಮಗಬಂದ ಸುದ್ಧಿಯ ಸಾರಿ ಸಾರಿ ಹೇಳಿ ಮಾತು ನಡೆಸಿಕೊಟ್ಟಳೆಂದು ಭಕ್ತಿಯಿಂದ ಯಕ್ಷಿಯ ಹೊಗಳಿ ಯಕ್ಷಿಯ ಮೀಸಲು ನಾಳೆ ಬರಬೇಕೆಂದು ಆಮಂತ್ರಣ ನೀಡುತ್ತ ಬಂದಳು. ಹಟ್ಟಿಯಾಳ್ತನವ ಮಾಡುವ ಹೆಗಡೇರಿಗೆ ಕೈಯೆತ್ತಿ ನಮಸ್ಕಾರ ಮಾಡಿ ದಯಮಾಡಿಸಬೇಕಪ್ಪ ಎಂದಳು. ಕುಲಗುರುವಿನ ಪಾದಮುಟ್ಟಿ ಧರೆಗೆ ದೊಡ್ಡವನು, ಹರಕೆಯ ನಡೆಸಿಕೊಡು ನನ್ನಪ್ಪ ಎಂದು ಬೇಡಿಕೊಂಡಳು. ಶಿಷ್ಯನ ನೋಡಿ ಕುಲಗುರು ಆನಂದದಲಿ ಮೈಮರೆತಿದ್ದರೆ ‘ಕಂದನ ಹರಸು ತಂದೆ’ ಎಂದು ಅವನ ಕೈ ತಗೊಂಡು ಬಾಗಿದ ಮಗನ ನೆತ್ತಿಯ ಮ್ಯಾಲಿಟ್ಟಳು. +ಮಾರನೆ ದಿನ ಬೆಳ್ಳಿ ಮೂಡುವ ಮೊದಲೆ ಸಿರಿಲಕ್ಕಬ್ಬೆ ಮತ್ತು ಚಂದಮುತ್ತ ತಣ್ಣೀರು ಮಿಂದು ಮೈಲಿಗೆ ಕಳೆದು ಒದ್ದೆ ಮಡಿಯುಟ್ಟರು. ಹರಕೆಯ ಸಾಮಾನು ಸರಂಜಾಮು ಸಜ್ಜುಮಾಡುವಲ್ಲಿ ಬೆಳ್ಳಂಬೆಳಕಾಗಿ ಸಕಲ ಜನ ಕುಲಗುರು ಹೆಗಡೇರ ಸಮೇತ ಯಕ್ಷಿಯ ಗುಡಿಗೆ ಬಂದರು. ಗುಡಿಸಿ ಗುಡಿಯಂಗಳ ಸೆಗಣೆ ಸಾರಣೆ ಮಾಡಿ ಗಂಧದ ನೀರು ಸಿಂಪಡಿಸಿ ರಂಗೋಲಿ ಬರೆದರು ತಾಯಿ ಮಗ.“ನಿನ್ನಿಂದಧಿಕ ದೇವರಿಲ್ಲ ಬಿಡು” ಎಂದು ನೂರೆಂಟು ಗುಣಗಳಿಂದ ಯಕ್ಷಿಯ ಹೊಗಳುತ್ತ ಹಸುಗೂಸನ್ನ ಎರೆವಂತೆ ಯಕ್ಷಿಯ ಮೂರ್ತಿಯ ತೊಡೆಯ ಮ್ಯಾಲೆ ಚೆಲ್ಲಿಕೊಂಡು ಸಣ್ಣ ಯಕ್ಷಿಯ ಪಾತಾಳ ಗಂಗೆಯ ತಣ್ಣೀರಲ್ಲಿ ತೊಳೆದಳು ಅಬ್ಬೆ. ಆಮ್ಯಾಲೆ ಎಣ್ಣೆ, ಬೆಣ್ಣೆ, ತಿಳಿದುಪ್ಪದಲ್ಲಿ ಎರೆದು ನೂರೊಂದು ಚೊಂಬು ಬಿಸಿನೀರಲ್ಲಿ ಸೀಗೆಯಿಂದೊಮ್ಮೆ ಶುದ್ಧ ಮಾಡಿದಳು. ಸಾಬೂನಿನಿಂದೊಮ್ಮೆ ಶುದ್ಧ ಮಾಡಿದಳು. ಬೆನ್ನುಜ್ಜಿ ಮೈಯುಜ್ಜಿ ಕೈಕಾಲು ಮುಖ ತಿಕ್ಕಿ ತಿಕ್ಕಿ ತೊಳೆದಳು. ಸೊಂಪಾದ ಕೂದಲನ್ನ ಚೆನ್ನಾಗಿ ತೊಳೆದು ನೀಟಾದ ಬೈತಲೆಯ ತಿದ್ದಿ ತೀಡಿ ಉಜ್ಜಿದಳು. ಕಿವಿ, ಕಣ್ಣು, ಮೂಗುಜ್ಜಿ ಮೂಗುತಿ, ವಾಲೆ, ಕೊರಳಸರ, ನೇವುಳ, ಬೆರಳುಂಗುರಗಳ ತಿಕ್ಕಿ ತಿಕ್ಕಿ ತೊಳೆದಳು. ಸೊಂಟದ ಡಾಬು ಕಾಲಿನ ಕಡಗ ಮುಂಗೈ ಬಳೆಗಳ ತಿಕ್ಕಿ ತೀಡಿ ತೊಳೆದಳು. ಆಮ್ಯಾಲೆ ನೂರೊಂದು ಚೊಂಬು ಬಿಸಿನೀರಲ್ಲಿ ಬಿಸಿ ಮಾಡಿ ಆಮ್ಯಾಕೆ ಮೈ ಒಣಗಿಸಿ ಬಣ್ಣದಲ್ಲಿ ಮೇಲಾದ ಹಸಿರು ಗಿಣಿ ನೂರು ಬರೆದ ಇಳಕಲ್ ಬಣ್ಣವನುಡಿಸಿ ಗುಳೇದಗುಡ್ಡದ ಬಣ್ಣವ ತೊಡಿಸಿದಳು. ಹೆಗಡೇರು ಕೊಟ್ಟ ಚಿನ್ನದ ಕಣ್ಣು ಬೆಳ್ಳಿಯ ಮೀಸೆ ಇಟ್ಟಳು. ನೊಸಲಲ್ಲಿ ಚಂದ್ರನ ಬೊಟ್ಟಿಟ್ಟು ಕರಗಳ ಮ್ಯಾಲೆ ಗೀರು ಗಂಧ ಬರೆದಳು. ತುರುಬಿಗೆ ಮಲ್ಲಿಗೆ ದಂಡೆ ತುರುಕಿದಳು. ಇಂತೀಪರಿ ಚಿಕ್ಕ ಯಕ್ಷಿಯ ಶೃಂಗಾರಮಾಡಿ ತೆಂಗಿನ ಚಿಪ್ಪಿನಲ್ಲಿ ಕಪಿಲೆ ಹಸುವಿನ ತುಪ್ಪದ ಸೊಡರಿಟ್ಟು ಪೂಜೆಯ ಮಾಡಿದಳು. ಜನ ತಾಳ ಕುಟ್ಟಿ ಜಾಗಟೆ ಬಡಿದು ಶಂಖ ಊದಿದರು. ಆಮ್ಯಾಲೆ ಎಂಟು ಕಾಲಿನ ಕುರಿಯ ಬಲಿ ಕೊಟ್ಟು ಬಾಡಿನ ನೈವೇದ್ಯ, ಕಳ್ಳಿನ ನೆರೆ, ಈಚಲ ರುಚಿಗಳ ಒಪ್ಪಿಸಿಕೊ ಎಂದು ನೀಡಿ ಅಡ್ಡಬಿದ್ದರು. +ಇಂತೀಪರಿ ಪೂಜೆ ಮುಗಿದು ಕಡ್ಡಿ ಕರ್ಪೂರ ಸುಟ್ಟು ಹಣ್ಣುಕಾಯಿ ಅನ್ನ ಶಾಂತಿ ಪುಣ್ಯ ಫಲಗಳ ಎಲ್ಲರೂ ಹಂಚಿಕೊಂಡು ಉಘೇ ಚಾಂಗುಭಲಾ ಎಂದು ಶಬ್ದ ಸಡಗರದಲ್ಲಿ ಜನ ಎದ್ದೇಳುವ ಪ್ರಸ್ತಾವದಲಿ ಯಕ್ಷಿಯ ಗುಡಿಯೇ ಕಿರಿಚಿದ ಹಾಗೆ ಕುಲಗುರು ಕಿಟಾರ್‍ನೆ ಕಿರಿಚಿದ ಶಿವನೆ! ಭೀತ ಮಂದಿ ಮತ್ತೇನು ಘೋರ ಬಂತೆಂದು ನೋಡಿದರೆ ಕುಲಗುರು ಥರಥರ್‍ನೆ ನಡುಗುತ್ತಿದ್ದ. ಅವನ ಮೈಯಲ್ಲಿ ಯಕ್ಷಿಯ ಆವೇಶವಾದದ್ದು ಜನಕ್ಕೆ ಬಹುಬೇಗ ಅರಿವಿಗೆ ಬಂದು ಹಿಂದಿದ್ದ ಹೆಗಡೆ ಮುಂದೆ ಬಂದು ಕೈಮುಗಿದು ನಿಂತ. ಲಕ್ಕಬ್ಬೆ ಚಂದಮುತ್ತ ಸಮೇತ “ಅಪ್ಪಣೆಯಾಗಲಿ ಘನಪಾದವೇ” ಎಂದು ಮೈಚೆಲ್ಲಿ ಕುಲಗುರುವಿನ ಪಾದ ಹಿಡಕೊಂಡು ಕುಂತರು. ಕುಲಗುರು ಆರ್ಭಟಿಸಿ ನಡುಗುವ ಶಬ್ದಂಗಳ ಗರ್ಜಿಸಿದ: +ನನ್ನ ಮಾತು ನಾನುಳಿಸಿಕೊಂಡೆ. +ಇನ್ನುಮ್ಯಾಕೆ ಅತ್ತೆಯೆಂಬಾಕೆ +ತನ್ನ ಮಾತು ತಾನುಳಿಸಿಕೊಳ್ಳಲಿ! +ದಿಗಿಲಾಯಿತೆಲ್ಲರಿಗೂ. ಈಗ ಅತ್ತೆಯೆಂಬಾಕೆ ಲಕ್ಕಬ್ಬೆಯಲ್ಲದೆ ಬೇರೆ ಯಾರೂ ಅಲ್ಲ. ಅವಳು ಉಳಿಸಿಕೊಳ್ಳಬೇಕಾದ ಮಾತು ಯಾವುದೆಂದು ಜನ ತಂತಮ್ಮಲ್ಲಿ ಅಂದಾಡಿಕೊಂಡರು. ತಾನು ಕೊಟ್ಟ ಮಾತು ಆತ್ಮಕ್ಕೆ ಅರಿವಾಗಿ ಲಕ್ಕಬ್ಬೆಯ ಬೆವರು ಜಲ ಸಳಸಳ ಭೂಮಿಗಿಳಿದು ಕುಂತ ನೆಲ ಒದ್ದೆಯಾದವು. ಹತಾಶೆಯಿಂದ ಹೃದಯ ಪರಚಿಕೊಂಬಂತೆ ಎರಡೂ ಕೈಗಳಿಂದ ಎದೆ ಹಿಡಿದುಕೊಂಡು ನೆಲಮುಗಿಲಿಗೆ ತನ್ನ ದುಃಖವ ನಿವೇದಿಸಿಕೊಳ್ಳುವಂತೆ ಮ್ಯಾಲೆ ಕೆಳಗೆ ನೋಡಿದಳು. ಆಹಾಶ ದೇವರಲ್ಲಿ ಸಿಡಿಲಿಲ್ಲವೆ? ಇದ್ದರ್‍ಯಾಕೆ ನನ್ನ ಮ್ಯಾಲೆ ಬೀಳಬಾರದು? ಭೂಮಿಯ ದೇವ ದೈವ ಬೂತಂಗಳಲ್ಲಿ ನ್ಯಾಯವಿಲ್ಲವೆ? ಇದ್ದರ್‍ಯಾಕೆ ನನಗೆ ಸಿಗುತ್ತಿಲ್ಲ? ಎಂದು ಹಣೆ ಹಣೆ ಬಡಿದುಕೊಂಡಳು. ಅಷ್ಟರಲ್ಲಿ- +“ನ್ಯಾಯನುಡಿ ಹೇಳಕೇಳೋರ್‍ಯಾರೂ ಇಲ್ಲವೆ ಈ ಹಾಳು +ಹಟ್ಟಿಯಲ್ಲಿ? ಜವಾಬ್ದಾರಿಯಿದ್ದವರು ನುಡಿಯಿರಯ್ಯಾ” +-ಎಂದು ಕುಲಗುರು ಆರ್ಭಟಿಸಿ ಅಳ್ಳೆ ಅರಳಿಸಿಕೊಂಡು, ಹಲ್ಲು ಕಡಿಯುತ್ತ, ಅಗಲವಾಗಿ ಕಣ್ಣು ಕಿಸಿದು ಸುತ್ತ ನೋಡಿದ. ಗಾಬರಿಗೊಂಡರು ಮಂದಿ. ಮುಖದಲ್ಲಿ ಸೇಡು ಶಾಪಂಗಳ ಹಾವಭಾವಗಳು ಮೂಡಿ ಮುಳುಗಿದವು. ತಕ್ಷಣ ಹೆಗಡೆ ಲಕ್ಕಬ್ಬೆಗೆ ಗದರಿದ: +ತಾಯಿ ಹೇಳಿದ್ದು ನಿನ್ನ ಮಾತು ನೀನುಳಿಸಿಕೊ ಎಂದು +ಅದೇನೆಂದು ಮೊದಲು ಹೇಳು. +ಅಬ್ಬೆ: ಮಗ ಒಂದು ವಾರದ ಮುದ್ದತಿನೊಳಗೆ +ಕ್ಷೇಮದಿಂದ ಗೂಡು ಸೇರಿದರೆ ನಿನಗೇ ಗುಡ್ಡ +ಬಿಡುವುದಾಗಿ ಬೇಡಿಕೊಂಡಿದ್ದೆ. +ದಿನಕ್ಕೊಂದು ಹರಕೆ ಹೊತ್ತು, ಸುತ್ತ ದೇವರಿಗೆ +ದುಬಾರಿ ಬೆಲೆತೆತ್ತು, +ಮಗನ ಯೋಗಕ್ಷೇಮ ಆಯುಷ್ಯ ಅಭಿವೃದ್ಧಿಕೊಂಡಿದ್ದೇನೆ, +ಇಂಥಾ ಮಗನ್ನ ಯಕ್ಷಿಗೆ ಹ್ಯಾಗೆ ಗುಡ್ಡ ಬಿಡಲಿ ಶಿವನೆ? +ಹೆಗಡೆ: ಹರಕೆ ಹೊತ್ತವಳು ನೀನಲ್ಲವೆ? +ಅಬ್ಬೆ: ಹೌದು. +ಹೆಗಡೆ: ತೀರಿಸಬೇಕಾದವಳೂ ನೀನೇ ಅಲ್ಲವೆ? +ಅಬ್ಬೆ: ಲೋಕ ಲೌಕಿಕಳಯ್ಯ ನಾನು. ನನ್ನ ಮಾತಿಗೆ ಕೂಡ +ಉಪ್ಪು, ಹುಳಿ ರುಚಿಯುಂಟು. ಧರ್ಮ, ಕರ್ಮ ಅರಿಯದ +ಮಾತುಕೊಟ್ಟೆ. +ಇದ್ದೊಬ್ಬ ಮಗನ ದೈವಕ್ಕೆ ಅಡವಿಟ್ಟು +ನಾನು ಬರಿಗೈಯಲ್ಲಿ ಕೂತಿರಲೆ? +ಮಾನವನ ತಪ್ಪು ಲೆಕ್ಕಕ್ಕಿದೆಯೆ? ಇದೆಯೆಂದಾದರೆ- +ತಪ್ಪಿ ನುಡಿದ ಮಾತಿಗೆ ತಪ್ಪು ದಂಡ ಹೇಳು. +ಮಗನ್ನನ್ನ ಕೊಡೆಂದರೆ ಹ್ಯಾಗೆ? ಅರಿತವರು ನೀವು ಆಡಿರಯ್ಯಾ +ನುರಿತವರು ನೀವು ನುಡಿಯಿರಯ್ಯಾ. +ದೇವತೆಯೊಂದಿಗೆ ಈ ಪರಿ ಒಗೆತನ ಸಾಧ್ಯವೆ? +ಹೆಗಡೆ : (ಕೋಪದಿಂದ)ಹಾಗಂತ ವೈರ ಸಾಧ್ಯವೆ? +ನಮ್ಮ ದೇವಿ ಸೇಡುಮಾರಿ ಯಕ್ಷಿಯಲ್ಲ, +ಆಲ ಅವಳ ಮರ, ಗಿಣಿ ಅವಳ ಹಕ್ಕಿ. +ಕಲೆಗೆ ಹ್ಯಾಗೋ ಹಾಗೆ ಒಲವಿಗೂ ದೇವತೆ ಅವಳು. +ಬಲಗೈಯಲ್ಲಿ ವರ ಕೊಡುವವಳು. +ನಮ್ಮ ಅಳತೆಗೆ ಮೀರಿದ ಸತ್ಯಗಳೆಷ್ಟೋ ಇದ್ದಾವೆ, +ದೇವಿ ನೋಡಿಕೊಳ್ಳುತ್ತಾಳೆ ಅವುಗಳನ್ನ. +ಹಟ್ಟಿಗೇನು ಸುಖವಿದೆಯೆ? ನೀನೇ ನೋಡು +ಮೊದಲೇ ಮಳೆ ಕಾಣದ ಬರಗಾಲ, +ಸುತ್ತ ದೇವರ ಕೋಪತಾಪ ಶಾಪಂಗಳೇ +ಸಾಕಷ್ಟಿರುವಾಗ +ಈ ಹೊಸದನ್ನ ಸಹಿಸುವ ಶಕ್ತಿ ಯಾರಿಗಿದೆ? +ಹೇಳಿದ ಹಿತನುಡಿ ಕೇಳು. +ಕೆಟ್ಟದ್ದನ್ನ ಯೋಚಿಸದೆ +ಕೊಟ್ಟ ಮಾತು ಉಳಿಸಿಕೊ-ಎಂದು ಕೋಪದಲ್ಲಿ ಗದರಿದ. +ಅಷ್ಟರಲ್ಲಿ ಕುಲಗುರು- +ಆಹಾಹಾ ಇನ್ನೂ ಒಪ್ಪಿಕೊಳ್ಳಲಿಲ್ಲವೆ ಅವಳು? +ಹಟ್ಟಿಯ ಸುಟ್ಟು ಭಸ್ಮ ಮಾಡುತ್ತೇನೆ… +ಎಂದು ಬಗಲ ಚೀಲಕ್ಕೆ ಕೈಹಾಕಿದ್ದೇ ತಡ ಲಕ್ಕಬ್ಬೆ ತಕ್ಷ್ಣ ನಡುಗುವ ಕೈಗಳಿಂದ ಕುಲಗುರುವಿನ ಪಾದ ಹಿಡಿದು ದಮ್ಮಯ್ಯಾ, ದಕ್ಕಯ್ಯಾ ಎಂದು ನಿಜ ಒಪ್ಪಿ ದೀನಭಾವಗಳಿಂದ ಹೇಳಿದಳು: +ಆಯಿತಾಯಿತೇ ತಾಯೀ. ನನ್ನ ನುಡಿ ತಪ್ಪು +ನುಡಿದ ನಾಲಿಗೆ ತಪ್ಪು. ಸಮಾಧಾನ ಮಾಡಿಕೊ. +ಸುಡುಸುಡುವ ಮಾತುಗಳ ಸುರಿಸಬ್ಯಾಡವೆ ತಾಯಿ. ಇಗೊ- +ಕೊಟ್ಟೆ ಮಗನ. ನಿನ್ನಡಿಗಿಟ್ಟೆ. ಸಿಟ್ಟು ಬಿಡು. +ಎಂದು ಹೇಳುವುದ ಹೇಳಿ ಉಳಿದುದ ನುಂಗಿದಳು. +ಈ ಮಾತು ಕೇಳಿದ್ದೇ ಕುಲಗುರು- +ಆಹಾಹಾ ಆನಂದ! +ಪರಮಾನಂದ! +ಶಿವಾನಂದ! +ಎಂದು ತಕ್ಕತೈ ಕುಣಿಯುತ್ತ- +“ಮಗನಿಗೆ ಕೀರ್ತಿ ಶಿಖರವ ಹತ್ತುವ +ಶಿವಯೋಗವಿದೆ. ಇಗೋ ಇಗೋ +ಬಂಡಾರ ತಗೊ ತಗೋ.” +-ಎಂದು ಹೇಳಿ ತಾಯಿ ಮಗನ ಹಣೆಗೆ ಬಗಲ ಚೀಲದ ಬಂಡಾರ ಹಚ್ಚಿ ಕೇಳು ಇನ್ನೇನು ಬೇಕೆಂದ. ತಾಯಿ ಇದ್ಯಾವುದರೆಗ್ಗಿಲ್ಲದೆ ದೋಚಿದ ಮನೆಯಲ್ಲಿದ್ದಂತೆ ಕುಂತಿದ್ದಳು. ಹೆಗಡೆಗೆ ಪ್ರೋತ್ಸಾಹವಾಗಿ ಕುಲಗುರುವಿನ ಪಾದದ ಮ್ಯಾಲೆ ದೊಪ್ಪನೆ ಬಿದ್ದುರುಳಿ: +ಅಂಬಾ ಜಗದಂಬಾ +ನೀ ನಮಗ ತಾಯಿ +ಗತಿ ಯಾರಿಲ್ಲ ನಿನ್ನ ಶಿವಾಯಿ +ಮಳಿ ಕೊಟ್ಟು ನಮ್ಮನ್ನ ಕಾಯಿ +-ಎಂದು ಗಟ್ಟಿಯಾಗಿ ಪಾದ ಹಿಡಿದ. ಕುಲಗುರು ಹೆಗಡೆಯ ಹಣೆಗೆ ಬಂಡಾರ ಹಚ್ಚಿ, +?ಬರುವ ಹುಣ್ಣಿವೆಯಂದು +ಅತ್ತೆಯ ಮಗ ಮಳೆರಾಗ ನುಡಿಸಿದರೆ +ಆಕಾಶದ ಮಳೆ ಅಬ್ಬರಿಸಿ ಬಿದ್ದಾವು +ಏಳೇಳು ಎದ್ದೇಳೆಂದು +-ಎಬ್ಬಿಸಿ ತಾನೂ ಎದ್ದು ನಿಂತು ಬಗಲ ಚೀಲದ ಬಂಡಾರವ ಚಾಂಗುಭಲಾ ಎಂದು ಆಕಾಶಕ್ಕೆ ಎರಚಿದ. ಎರಚಿದ್ದೇ ಆಯ್ತು ನೋಡು: ಹಾಳು ಬಿಸಿಲು ಹೊಂಬಿಸಿಲಾಗಿ ಅರಿಷಿಣದ ಮಜ್ಜನ ಮಾಡಿಸಿಧಂಗಾಯ್ತು ಕಾಡಿಗೆ. +೨೫. ಸುಡುವ ಈ ಸುಣ್ಣದಲಿ ಸಣ್ಣಾದೆನೇ! +ಆಮ್ಯಾಲೆ ಆಳಾಗಲೇ ಇಲ್ಲ ಅಬ್ಬೆ; +ಆರಿಹೋಯ್ತು ಕಣ್ಣಲ್ಲಿಯ ಬೆಳಕು. +ಅನ್ನೋದಕ ಬಿಟ್ಟು +ಬೆನ್ನು ಹಚ್ಚಲೇ ಇಲ್ಲ ಹಾಸಿಗೆಗೆ. +ಕೊಟ್ಟಂತೆ ಮಾಡಿ ಕಸಿದ ಯಕ್ಷಿಯ ರೀತಿ +ಆರುವ ಬೆಂಕಿಯಲ್ಲಿ ಹುಲ್ಲೊಗೆದ ಹಂಗಾಗಿ +ಬೆಂಕಿ ಹತ್ತಿದ ಕಾಡಿನಂತಾದಳು ಮುದುಕಿ. +ಮಕ್ಕಳಾಗಿ, ಗೆಜ್ಜೆ ಕಾಲಿನ ಹಸುಗೂಸುಗಳಾಗಿ +ಗೂಡಿನ ಮೂಲೆಮೂಲೆಗಂಟಿದ್ದ ಕನಸುಗಳನ್ನ +ಕೋಲಿನಿಂದ ಹೊರಗಟ್ಟಿ +ದರೋಡೆಯಾದ ಮನೆಯಲ್ಲಿದ್ದಂತೆ +ಚಡಪಡಿಸಿದಳು ಮುದುಕಿ. +ಚಿತ್ತವೈಕಲ್ಯದ ಹುಚ್ಚಿಯ ಹಾಗೆ +ಕ್ಷಣ ನಕ್ಕು ದಿನವೆಲ್ಲ +ಹುಬ್ಬುಗಂಟಾದಳು ಮುದುಕಿ. +ವಂಶದ ಕುಡಿ ತನ್ನಿಂದ ಬೆಂದುಹೋದವೆಂದು +ಪುರಾತನರೆದುರು ಗೋಳುಗೋಳೆಂದಾಡಿ +ಹಡೆದೊಡಲು ಜೋರಾಗಿ ಹೊಡೆದುಕೊಂಡಳು ತಾಯಿ. +“ನಿನ್ನ ದೃಡವ ಪರೀಕ್ಷೆ ಮಾಡಿದ ಮ್ಯಾಲೂ +ನಿನ್ನ ಹೆಸರುಗೊಳ್ಳುತ್ತೇನೆ ತಾಯೀ ಧೈರ್ಯದಿಂದ. +ನನ್ನ ದುರ್ಗುಣಗಳ ಬೇಕಾದಷ್ಟು ಸಾರಿ ಜಪಿಸು. +ನಮ್ಮ ಮುಕ್ಕೋಟಿ ತಪ್ಪುಗಳ ಮಾಫಿ ಮಾಡೋಳಲ್ಲವೆ ನೀನು? +ಮಗನ ನಿನ್ನಡಿಗಿಟ್ಟು ದುಃಖದ ಹಬ್ಬ ಮಾಡುತ್ತಿದ್ದೇನೆ +ಹುಚ್ಚಲ್ಲವೆ ತಾಯಿ ಇದು? +ಜಗತ್ತಿಗೆ ಬೇಕಾದ ಯಕ್ಷಿ ನೀನು. +ಚಂದಮುತ್ತನಿಗೆ ಮೊದಲು ಹುಟ್ಟಿದ +ಅಕ್ಕ ಅಣ್ಣ ಇಲ್ಲ. +ಮತ್ತೆ ಹುಟ್ಟಿದ ತಮ್ಮ ತಂಗಿಯರಿಲ್ಲ. +ಮಗ್ಗುಲಿಗೆ ಸೊಸೆಯಿಲ್ಲ. +ಮೊಳಕಾಲಿಗಂಟುವ ಮೊಮ್ಮಕ್ಕಳಿಲ್ಲ. +ಮಗನ ನಂತರ ನಂದಾದೀಪವ +ಉರಿಸುವ ಗತಿಗೋತ್ರ ಇಲ್ಲದ ವಂಶ +ಅದ್ಯಾತರದೇ ತಾಯೀ? +ಧಿಕ್ಕರಿಸಬೇಕದನು. +ಸುಡುವ ಈ ಸುಣ್ಣದಲಿ ಸಣ್ಣಾದೆನೇ! +ಕಣ್ಣಿಗಿಲ್ಲವೆ ನಿದ್ದೆ ನಿನ್ನ ಆಣೆ. +ಅನುಚಿತವಾಡಿದೆನೆನ್ನಬ್ಯಾಡ. ನಿನ್ನ ಹೆಸರಲಿ ವಂಶ ಬೆಳೆಸುತ್ತೇನೆ +ನನ್ನ ಕಂದನ ನನಗೆ ಹಿಂದಿರುಗಿ ಕೊಡೆ ತಾಯಿ” +-ಎಂದು ಸೆರಗೊಡ್ಡಿ ಬೇಡಿದಳು ಅಬ್ಬೆ. +೨೬. ಕನಿಕರವಿದ್ದವರು ಕಾಯ್ದುಕೊಳ್ಳಲಿ +ಅಬ್ಬೆಯ ವೇದನೆಯ ಭೇಧಿಸಲಾಗಲೇ ಇಲ್ಲ ಚಂದಮುತ್ತನಿಗೆ. ತನ್ನನ್ನ ಗುಡ್ಡ ಬಿಟ್ಟಿದ್ದು ಅನುಕೂಲವಾಗಿ ಕಂಡರೂ ವ್ಯತ್ಯಾಸ ಕಾಣದೆ ಯಥಾ ತಥಾ ಇದ್ದ. ಏನಿದ್ದೇನು? +ಯಕ್ಷಿ ವಿರಹಿತ ಲೋಕ +ಸಾವಿಗಿನ್ನೊಂದು ಪರಿ +ಹುಗಿದ ಹಾಗಿದೆ ಜಗವು ಮೌನದೊಳಗೆ. +ಎಂದು ಯಕ್ಷಿಯ ವಿಗ್ರಹದೆದುರು ಕುಂತು ಸೋತು ಮಾತಾಡಿದ. ಅವಳ ಕಲ್ಲಿನಂಥಾ ಮನಸು ಬೆಣ್ಣೆಸಮವಾಗಲೆಂದು ಬೇಡಿಕೊಂಡು ನಾಲಗೆಯಲ್ಲವಳ ನಾಮಸ್ಮರಣೆ ತೇದು ಧೀನಭಾವಂಗಳಿಂದ ಅಂಗಲಾಚಿದ: +ಗಜಗಮನೆಯೇ ನಿನ್ನ ನಿಜವ ತಿಳಿದವರ್‍ಯಾರು? +ಅಬ್ಬೆಯ ತಪ್ಪಿಗೆ ನನ್ನ ಶಿಕ್ಷಿಸಬ್ಯಾಡ, +ಅಬ್ಬೆಯ ಮ್ಯಾಲೂ ಕೋಪ ಮಾಡಬ್ಯಾಡೆಂದ. +ನಿನ್ನ ಬದಿಯಗಲಿ ನಾ ಅರೆಗಳಿಗೆ ಇರಲಾರೆ +ಸಿಡಿದು ಸಿಟ್ಟಲಿ ದೂಡಬ್ಯಾಡ ಹೊರಗೆ. +ಅನುಮಾನವ್ಯಾತಕೆ ಮುನಿಸು ಮಾಣೆ ದೇವಿ +ನೆನೆದಂತೆ ಮಾಡುವೆ ಶಿವನ ಆಣೆ. +ರಚನೆಯ ಮಾತಲ್ಲ +ಅಸು ಹೋದರೂ ಹುಸಿಯಾಡುವವನಲ್ಲ, +ಖಚಿತವಾದರೆ ನನ್ನ ವಚನವ ನಂಬು ಎಂದ. +ಮಾನಿನಿಯಳೇ +ಮಧುರ ವಾಕ್ಯದವಳೇ +ತಾವರೆಯ ಮುಖದವಳೇ +ತೆಳ್ಳಾನೆ ಹೊಟ್ಟ್ಯವಳೇ +ಪೂರ್ಣಳೇ, ಪರಿಪೂರ್ಣಳೇ ಎಂದು +ಒಂದು ನೂರಾ ಎಂಟು ಹೆಸರುಗಳಿಂದವಳ ಹೊಗಳಿದ. +ಇದಕ್ಕೆ ಒಪ್ಪಿಗೆ ಉಂಟೆಂಬ ಇಲ್ಲೆಂಬ ಯಾವ ಸನ್ನೆಯೂ ಸಿಗದೆ ಒಂದೆರಡು ದಿನಗಳಲ್ಲಿ ತನ್ನಿಂದಾದ ತಪ್ಪು ಮನ್ನಿಸಿ ಮತ್ತೆ ಕರೆಕಳಿಸುವಳೆಂದು ಹದ್ದುಗೈ ಇಟಗೊಂಡು ಹಾದಿಯ ನೋಡಿದ. ಹುಣ್ಣಿವೆ ಬಂತೆಂದಾಗ ಹತಾಶನಾದ. +ಯಕ್ಷಿಯ ಲೋಕಕ್ಕೆ ಬಾಹಿರನಾದಾಗಿಂದ ಹಾಡು ತನ್ನಿಂದ ಮಾಯವಾಗಿದೆಯೆಂದೇ ಅಂದುಕೊಂಡ. ಹಾಗೆಂದು ಹಾಡದಿರಲೂ ಸಾಧ್ಯವಿಲ್ಲೆಂದ. ಹುಣ್ಣಿವೆ ದಿನ ಶಿವಪಾರ್ವತಿಯರ ಹೆಸರುಗೊಂಡು ಮಳೆರಾಗ ಹಾಡುವುದೆಂದು ಕೃತ ನಿಶ್ಚಯವ ಮಾಡಿದ. ಮಾತು ಕೊಟ್ಟವಳು ಯಕ್ಷಿ. ಗೆಲ್ಲಬೇಕಾದ್ದು ಅವಳ ಸತ್ಯ. ಮಳೆ ಸುರಿಯಿತೇ ಹಟ್ಟಿಯ ಭಾಗ್ಯ. ಇಲ್ಲವೇ? ಅವಳ ಕೇಡು. ಶಿವಕಾರುಣ್ಯ ತೋರಿದ ಹಾಗೆ ನುಡಿಸುವುದು ನನ್ನ ಧರ್ಮ. ಒಂದಂತು ನಿಜ: +ಹಾಡಿಗೆ ಆಕಾಶದ ಮಳೆ ಸುರಿಯಬೇಕು. +ಆಲದ ಯಕ್ಷಿ ಒಲಿದು ಬರಬೇಕು. +ಬಂದರಿದೇ ಮೊದಲ ಹಾಡು. +ಇಲ್ಲವೇ? ಇದೇ ಕೊನೆಯ ಹಾಡೆಂದು +ಶಿವನ ಹೆಸರಿನಲ್ಲಿ ಆಣೆ ಪಂಥವ ಮಾಡಿದ. +ಕನಿಕರವಿದ್ದವರು ಕಾಯ್ದುಕೊಳ್ಳಲಿ +ಎಂದು ಎದ್ದ. +೨೭. ನುಡಿಸಿದನು ನಿವಳಾ ಸುರಿಧಾಂಗ ಹವಳಾ +ಹುಣ್ಣೀವೆಯ ದಿನ ಕೋಳಿ ಕೂಗಿಗೆದ್ದು ಚಂದಮುತ್ತ ತಣ್ಣೀರು ಮುಳುಗೆದ್ದು ತಾಯ ಪಾದವ ಪಡಕೊಂಡ. ಕುಲಗುರುವಿನ ಪಾದದ ಮ್ಯಾಲೆ ಮೈಚೆಲ್ಲಿ ಪಾದಧೂಳಿಯ ಹಣೆಗಿಟ್ಟುಕೊಂಡಾಗ ಕುಲಗುರು ಅನುಮಾನದಿಂದ ಮಂಗಳವಾಕ್ಯವ ಅನುಗ್ರಹಿಸಿದ. (ಅನುಮಾನವ್ಯಾಕೆಂದರೆ ತನಗೇ ಬಾರದ ಮಳೆರಾಗವ ತಾನು ಶಿಷ್ಯನಿಗೆ ಕಲಿಸಿಲ್ಲವಾಗಿ ಅವನು ನುಡಿಸುವುದು ಸಾಧ್ಯವೇ-ಎಂದು) ಮಳೆ ಬೀಳುವತನಕ ಗುಡಿಯ ಕಡೆಗ್ಯಾರೂ ಸುಳಿಯಬಾರದೆಂದು ಕೈಮುಗಿದು ಕೇಳಿಕೊಂಡು ಗುಡಿಗೆ ಹೊರಟ. +ಗುಡಿಯ ರಜವ ಗೂಡಿಸಿ ಗಂಧದ ನೀರು ಸಿಂಪಡಿಸಿ ರಂಗೋಲಿ ಹುಯ್ದು ಮಡಿಬಟ್ಟೆಯ ಯಕ್ಷಿಯ ಮುಂದಿಟ್ಟು ಹೊರಬಂದು ನಿಂತುಕೊಂಡ. ಹಿಂದಿನ ವಾಡಿಕೆಯಂತೆ ಯಕ್ಷಿ ಮಡಿ ಉಡಲಿಲ್ಲವಾಗಿ ಮೈಲಿಗೆ ಬಟ್ಟೆ ಹೊರಬೀಳಲಿಲ್ಲ. ಅಮಂಗಳವೆಂದು ಹೃದಯ ನಡುಗಿ ಉಸಿರುಗರೆದ. ಮೂರು ಬಾರಿ ಗುಡಿಯ ಬಲಗೊಂಡು ದಿಂಡುರುಳಿ ಯಕ್ಷಿಯ ವಿಗ್ರಹದೆದುರು ಕುಂತು ಕಣ್ಣೀರ ಧಾರೆಯ ಸುರಿದ. ಹೆತ್ತಯ್ಯ ಮುತ್ತಯ್ಯರ ನೆನೆದು, ತಂದೆತಾಯಿಯ ನೆನೆದು, ಸುತ್ತ ದೇವರ ನೆನೆದು ಕೊಳಲು ತುಟಿಗಿಟ್ಟ. ನಡುಗುವ ಬಿಸಿ ಉಸಿರನ್ನ ಒತ್ತಾಯದಿಂದ ಒಳಕ್ಕೆ ತಳ್ಳಿದಾಗ ಕೊಳಲು ಅರಚಿಕೊಂಡಿತು. +ರಾಗ ಸರಾಗವಾಗಿ ಸುರುವಾಗಲಿಲ್ಲ. ಉಸಿರು ಗಂಟಲಲ್ಲೇ ಹುಟ್ಟಿ ಸ್ವರ ತುಂಡು ತುಂಡಾಗಿ ಹೊರಬಂತು. ಕೊಳಲು ಕೆಳಗಿಟ್ಟು ಯಕ್ಷಿಯ ಶಿಲಾವಿಗ್ರಹವ ನೆತ್ತಿಗೆ ಹೊಡೆದುಕೊಂಡು ಪ್ರಾಣ ಬಿಡಲೇ? ಎಂದುಕೊಂಡ. ಕಲಾವಿದನಾಗಿ ತನ್ನ ಕೊನೆಯುಸಿರು ಕೊಳಲ ಮೂಲಕವೇ ಹೋಗಲೆಂದು ಗುರುಹಿರಿಯರ ಧ್ಯಾನಿಸಿ ಭೃಂಗೀಶನ ನೆನೆದು ಕೊಳಲು ತುಟಿಗಿಟ್ಟುಕೊಂಡ. +ಒಡೆದುಸಿರು ಬಿಗಿಹಿಡಿದು ಅಖಂಡವಾಗಿಸಿ, ಬಿರುಸಾದ ಉಸಿರ ನಿಯಂತ್ರಿಸಿ ನುಡಿಸಿದ. ನಾಭಿಯ ಕಮಲ ತೆರೆಕೊಂಡಂತಾಗಿ ಮರಳಿ ಯತ್ನವ ಮಾಡಿದಾಗ ಹದಗೊಂಡು ಮೂಡಿತು ರಾಗ. ಸರಾಗವಾಗಿ ಆಲಾಪವ ಸುರುಮಾಡಿದ. ಮ್ಯಾಲಿನ ಮಳೆಗಾಗಿ ಭೂಮಿಯ ಬಡ್ಡಿಬೇರಿನ ಅದಿಮಿ ಹಂಬಲವ ಆಲಾಪವಾಗಿ ನುಡಿಸಿ ಆಕಾಶದಲ್ಲಿ ವೀರಾಜಮಾನರಾಗಿದ್ದ ಮಳೆರಾಯನ ಪರಿವಾರವ ಜಾಗೃತಗೊಳಿಸಿದ. ಖಗಮೃಗಪ್ರಾಣಿ ತಿರ್ಯಕ್ ಜಂತುಜಾಲದ ಹೃದಯಪ್ರಾರ್ಥನೆಯನ್ನು ವಿಸ್ತರಿಸಿ, ಮಳೆರಾಯ ಸಮೇತ ದೇವಗಣ ಕರುಣೆಗೊಳ್ಳುವಂತೆ ಮಾಡಿದ. ಅವರವರ ಚಂದದ ನಡೆನುಡಿಗಳ ಅಲಂಕರಿಸಿ, ಅನುಕರಿಸಿ ಅವರು ಪ್ರಸನ್ನಗೊಳ್ಳುವಂತೆ ಮಾಡಿ, ಅವರೆಲ್ಲ ಮಳೆರಾಯನ ಸಂಕೇತಕ್ಕಾಗಿ ಕಾಯುವಂತೆ ಮಾಡಿದ. ಸಿದ್ಧರಾದ ಅವರೆಲ್ಲರಿಗೆ ನಮಿಸಿ ಮಳೆರಾಯನ ಪ್ರೌಢರಚನೆ ಸುರುಮಾಡಿದ. +ಕೊಳಲಿನ ಮೃದುಕಠಿಣ ಸ್ವಭಾವಂಗಳನರಿದು ಮಳೆರಾಯನ ನೂರೆಂಟು ಹೆಸರುಗಳಿಂದ ಮಧುರ ನಾದಂಗಳಲ್ಲಿ ಸ್ತುತಿಸಿದ. ಕ್ಷಿತಿಜದಗುಂಟ ರಾಗಮಂಡಳ ಬರೆದು ಗುಡಿಯ ನಡುನೆತ್ತಿಯ ಆಕಾಶದಲ್ಲಿ ಪೀಠವ ರಚಿಸಿ ಅನುಗ್ರಹಿಸು ತಂದೇ- ಎಂದು ಪ್ರಾರ್ಥಿಸಿದ್ದೇ ಆಯಿತು ಶಿವಾ, +ಬೀಸಿ ಬೀಸಿ ಬಂದವು ಕಾರ್ಗಾಳಿ +ಹುಯಿಲ್ಗಾಳಿ, ಹಿಂಡುಗಾಳಿಗಳು ಮುಗಿಲುತುಂಬ +ಮುಂಗಾರಮೋಡ ಕವಿದು +ಕಡುನೀಲಿ ಆಗಸ ಕಪ್ಪಿಟ್ಟಿತು. +ಯಾರೋ ಬಂಧಂಗಾಯ್ತು, +ನಾತಿದೂರ ನಾತಿಸಮೀಪ +ಸುಳಿದಾಡಿಧಂಗಾಯ್ತು, +ಸುತ್ತಲಿನ ಹವೆ ತಂಪಾಗಿ +ನೀರುಂಡ ನೆಲದ ಪರಿಮಳ ಸುತ್ತ ಪಸರಿಸಿತು. +ತಾನೀವರೆಗೆ ಕಾಣದ ನಾದರೂಪದ +ಭವ್ಯಸನ್ನಿಧಿಯಲ್ಲಿ ತಾನಿದ್ದಂತೆನಿಸಿ ರೋಮಾಂಚನಗೊಂಡು +ಕಂಪನಗೊಂಬ ಉಸಿರನ್ನ ಬಿಗಿಹಿಡಿದ. +ಭಯಭಕ್ತಿಯಿಂದ ಕುಂಚವನಾಡಿಸುವ ಕಲಾವಿದನಂತೆ +ನಾದವ ಎಳೆ ಎಳೆ ಬಿಡಿಸಿ ನುಡಿಸಿ +ಸುಳಿವ ದೇವತೆಯ ಮೂರ್ತಗೊಳಿಸಿದ. +ಆಕಾಶದ ನಾಲಿಗಿಲ್ಲದ ಗಂಟೆ ಢಣಿಲೆಂದು ಹೊಡೆದಾಡಿ +ಮಳೆರಾಯ ಪ್ರತ್ಯಕ್ಷನಾದ! +ಆನೆಗಾತ್ರ ಮತ್ತು ಬಣ್ಣಗಳಿಂದ ಮತ್ತು ಅಲೌಕಿಕ ಕಾಂತಿಯಿಂದ ಕೂಡಿದ ಆಜಾನುಬಾಹು, ಕಣ್ಣು ಮತ್ತು ನಗೆಗಳಲ್ಲಿ ಮಿಂಚಾಡಿಸುತ್ತ ಪ್ರಸನ್ನವಾಗಿ ಕಾಣಿಸಿಕೊಂಡ. ಕೈಯಲ್ಲಿ ವಜ್ರಾಯುಧ ಫಳ ಫಳ ಹೊಳೆದಾಡಿತು. “ಭಲೆ ಹುಡುಗಾ, ಮೆಚ್ಚಿದೆ ನಿನ್ನ ಕಲೆ ಮತ್ತು ಭಕ್ತಿಯ ಮೆಚ್ಚಿದೆ, ಇಗೋ” ಎಂದು ಡೊಳ್ಳುಬಾರಿಸಿದಂತೆ ಪ್ರಕಟದನಿಯಲ್ಲಿ ನಕ್ಕು ನುಡಿದು ಆಶೀರ್ವದಿಸಿ ಮಾಯವಾದ. ಆಮ್ಯಾಲೆ ಸುರುವಾಯಿತು. ಶಿವಾ, ಮೋಡಗಳ ಕಾಡಾನೆ ಹಿಂಡು ಆಕಾಶದಲ್ಲಿ ಘೀಳಿಟ್ಟವು. +ಗುಡುಗುಡು ಗುಡುಗಿತ್ತು +ಮಿಂಚು ಮಿಡುಕಾಡಿತ್ತು +ಸುರಿಮಳೆ ಸುರಿದಿತ್ತು ಸುತ್ತೂಕಡೆ. +ಕಾರೆಂಬ ಕಾರ್‍ಮಳೆ +ಭೋರೆಂಬ ಭೋರ್‍ಮಳೆ +ಗಿಂಡಿಗಾತ್ರದ ಹನಿಯ ಭಾರೀ ಮಳೆ. +ಆಕಾಶದಣೆಕಟ್ಟು +ಒಡೆಧಾಂಗ ಜಡಿದಾವು +ನೆಲಮುಗಿಲು ಬೆಸೆದಾವು ಸುರಿಮಳೆಗೆ. +ಚಂದಮುತ್ತನ ಹಾಡು +ಮುತ್ತಿನ ಮಳೆಯಾಗಿ +ಸುರಿದಾವು ತಂಪಾಗಿ ಭೂಮಿಯ ಧಗೆ. +ಇಂತೀ ರೀತಿ ಹೇಳಿ ಕಳಿಸಿದ ಹಾಗೆ ಮಳೆ ಬಂದು ಧೋ ಧೋ ಸುರಿದರೆ ಕನಸುಗಳಾದ ನಮ್ಮ ಗತಿಯೇನಾಗಬೇಡ ಶಿವಾ. +ಕೊಳಲಿನ ಉಲಿಗಳ ಹೊಳಿಗಳ ಹರಸಿದ +ನಾವು ಎಳೆಮೀನಾಗಿ ತೇಲಿ +ಸಿಕ್ಕೇವು ಸೆಳವೀಗೆ ಸುಳಿವೀಗೆ ತಿರುಗಣಿಗೆ +ಸಿಕ್ಕವು ನಮಗ್ಯಾವ ದಂಡಿ. +ಆಳ ತಿಳಿಯದು ಕೊಳಲ ಗಾಳ ತಳಿಕ್ಯಾಡುವವು +ಕರಿಯ ಗೂಢಗಳನ್ನ ತಟ್ಟಿ. +ಚಂದಮುತ್ತನ ಹಾಡಿನ್ನೂ ಮುಗಿದಿರಲಿಲ್ಲ; ಈ ತನಕ ಕುಲಗುರುವಿನ ಆದೇಶದಂತೆ ದೂರದಲ್ಲಿ ಕಾಯುತ್ತಿದ್ದ ಜನ ಭರ್ಜರಿ ಮಳೆಯಲ್ಲಿ ನೆಂದು ಈಗ ಆನಂದಂಗಳ ತಡಕೊಳ್ಳಲಾರದೆ ಇದ್ದಲ್ಲಿಂದ ಓಡಿಬಂದು ನಮ್ಮಪ್ಪಾ ಚಂದಮುತ್ತಾ ಎಂದು ಅವನನ್ನೆತ್ತಿಕೊಂಡು ಕೇಕೆ ಹಾಕಿ ಕುಣಿಯತೊಡಗಿದರು. ಇಡೀ ಹಟ್ಟಿಯ ಜನ, ಮಕ್ಕಳು, ಮುದುಕರು, ಗಂಡು ಹೆಣ್ಣೆನ್ನದೆ ಕುಲಗುರು ಮತ್ತು ಹೆಗಡೆ ಸೈತ ಆನಂದದ ಉನ್ಮಾದವೇರಿ ಚಂದಮುತ್ತನಿಗೆ ಚಾಂಗುಭಲಾ ಹೇಳುತ್ತ ತಕ್ಕತೈ ಕುಣಿದರು. +ಈ ತನಕ ಹ್ಯಾಗೆ ಹ್ಯಾಗೋ ಇದ್ದ ಲಕ್ಕಬ್ಬೆ ಈಗ ಮಗನ ಪವಾಡಕ್ಕೆ ಆನಂದದ ಬೆರಗೇರಿ ಓಡೋಡಿ ಹೊರಬಂದು ಅಂಗಳದಲ್ಲಿ ಎಡವಿ ಬಿದ್ದು ಕಾಲುಳುಕಿ ಕುಂಟುತ್ತ ಗೂಡು ಸೇರಿ, ಉದ್ರೇಕದಲ್ಲಿ ತಾನೊಬ್ಬಳೇ ಕಿರಿಚಿ ಕಿರಿಚಿ ಮಾತಾಡುತ್ತ ಮಗನ ದಾರಿ ಕಾದಳು. +ಜಡಿಮಳೆಯಲ್ಲಿ ಜನ ಮೂರು ತಾಸು ರಾತ್ರಿಯಾಗುವತನಕ ಕಿರಿಚಿ ಒದರಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಮಳೆಯ ಅಬ್ಬರ ಕಮ್ಮಿಯಾದ ಮ್ಯಾಲೆ ಸಕಲ ಗೌರವ ಮರ್ಯಾದೆಗಳೊಂದಿಗೆ ಚಂದಮುತ್ತನ್ನ ಅವನ ಗೂಡಿಗಿಳಿಸಿ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕರಿಸಿ ಹೋದರು. ಅಬ್ಬೆಗೆ ಮಾತೇ ಬರಲೊಲ್ಲದು. ಏನೇನೋ ಅಸಂಗತ ಕಿರಿಚುತ್ತ ಮಗನಿಗೆ ನೂರು ಸಲ ದೃಷ್ಟಿ ತೆಗೆದಳು. ನೂರು ಸಲ ತಬ್ಬಿ ತೂಪಿರಿದು ಮುದ್ದಾಡಿದಳು. ಮಗನ ಮುಖದ ಮ್ಯಾಲೆ ನೂರು ಕಪ್ಪಿನ ಬೊಟ್ಟಿಟ್ಟಳು. ಮಗನ ಕೀರ್ತಿಯ ಸುಖದಲ್ಲಿ ಪರವಶಳಾಗಿ ಹಾಗೇ ಮಲಗಿದಳು. +ಸಪ್ಪಟ ಸರಿರಾತ್ರಿ ಗೂಡೆಲ್ಲ ನೀರು ನೀರಾಡಿ ಅಬ್ಬೆಯನ್ನು ಹೊರಸಿನ ಮ್ಯಾಲೆ ಮಲಗಿಸಿದ ಚಂದಮುತ್ತ. ಯಕ್ಷಿಯ ಕೃಪೆಯಾಗಲಿಲ್ಲೆಂಬರಿವು ಇದ್ದುದರಿಂದ ಜನರ ಹೊಳೆವ ಮಾತುಗಳಿಂದ ಸಮಾಧಾನವಾಗಲಿಲ್ಲ. ಈಗ ಒಬ್ಬಂಟಿ +ಆಗಿದ್ದನಲ್ಲಾ, ನೆನಪಾಗಿ ಕಣ್ಣೀರು ಮುತ್ತು ಜಗುಳಿ, +ಇರಲಾರೆ ಆಕೆಯ ಹೊರತ +ಲೋಕ ಸುಂದರಿಯನ್ನ ಮರೆತಾ. +ಎಂದು ನಿಟ್ಟುಸಿರಿಟ್ಟ. ಕೊಟ್ಟಿಗೆಯಲ್ಲಿ ಕಪಿಲೆ ಚಡಪಡಿಸಿ ವಿಚಿತ್ರವಾಗಿ ಅರಚಿದ್ದ ಕೇಳಿ ಅವಸರವಸರವಾಗಿ ಹುಲಿ ಬಂದಿರಬೇಕೆಂದು ಹೊರಬಂದ. ಆಕಾಶ ಹಗುರವಾಗಿ ಮೋಡಗಳಲ್ಲಿ ಚಂದ್ರ ಮೂಡಿ ಮಂದ ಬೆಳ್ದಿಂಗಳಿತ್ತು. +ಆಕಾಶಲೋಕದ ಅಸಮಾನ ಹೂವು +ಭೂಮಿಯ ಮ್ಯಾಲರಳಿ +ಅತಿಶಯದ ಕುಸುಮದ ವಾಸನೆ +ಪಸರಿಸಿತ್ತು ಇಡೀ ಸೀಮೆ. +ಕೊಟ್ಟಿಗೆಯ ಸೂರಿನಡಿ ಯಾರೋ ನಿಂತಿದ್ದರು ತುಪ್ಪದ ದೀಪದ ಹಾಗೆ. ಎದೆ ಢವ ಢವ ಹೊಡೆದುಕೊಂಡು ‘ಎಲವೆಲವೊ ಹುಲುಮನವೆ ಥರಥರಗುಡಬ್ಯಾಡ. ನಡುಗಿ ನಲುಗಲಿ ಬ್ಯಾಡ’ ಎಂದು ತಂತಾನೆ ವಿವೇಕಿಸಿಕೊಂಡು ಒಂದೆರಡು ಹೆಜ್ಜೆ ಮುಂದೆ ಹೋದ. ಬಾಯ ಶಬ್ದ ನಿಶ್ಯಬ್ದವಾಗಿ ಕಣ್ಣು ದೊಡ್ಡದು ಮಾಡಿ ಲಿಖಿತ ಚಿತ್ರದ ಹಾಗೆ ನಿಂತ. +ಮೂಕತನದ ಮುಸುಕಿನಲ್ಲಿ +ನಿಂತುಕೊಂಡಿದ್ದಾಳೆ ಕಾಮನ ಚೂರು +ಚಕೋರಿ ಎಂಬ ಯಕ್ಷಿ! +ಸ್ಥಾವರವೆಲ್ಲವು ಜಂಗಮವಾದವು +ಯಕ್ಷಿಯ ನೋಟ ಮುಟ್ಟಿದರೆ. +ಮೈಯಂತ ಮೈಯೆಲ್ಲ ಜಗಜಗ ಹೊಳೆದಿದೆ +ಸ್ವಂತ ಬೆಳ್ದಿಂಗಳಿದೆ ಸುತ್ತ. +ಮೈತೊಯ್ದು ಇದ್ದೆಮುಖ +ತೊಯ್ದ ಮೈಗಂಟಿದ ದಟ್ಟಿಯಲ್ಲಿ +ಒಡೆದು ಕಂಡವು ಬೆಡಗಿನ ಹೊಂಗೊಡ ಕುಚ. +ತಡಮಾಡದೆ ನೆರಿಗೆಯ ಹಿಂಡಿ ಸರಿಪಡಿಸಿ +ಕಿರಿಗಂಟು ಕಟ್ಟಿ +ಬಡನಡುವ ಸಂವರಿಸಿಕೊಂಡಳು. +ಕಟ್ಟಿದ್ದ ಮುಡಿ ಸಡಲಿ ಬೆನ್ನಿಗಿಳಿದ +ಕಾಳನೀಳ ಕೇಶರಾಶಿಯಿಂದ ಹೂ ಜಗುಳಿ +ಎಳೆಯ ಕುಂತಳದಿಂದ ಮಳೆಯ ಹನಿ ಜಿನುಗಿ +ಕುಡುತೆಗಂಗಳ ದೊಡ್ಡದು ಮಾಡಿ +ಬೆದರಿದೆರಳೆಯ ಪರಿ ನಿಂತಿದ್ದಳು +ಮಾರಿ ಸಣ್ಣದು ಮಾಡಿ. +ಅಂಗನೆಯ ಅಂಗಾಲಿನಲ್ಲಿ ಕುಂಕುಮವಿತ್ತು. +ಮುಖದಲ್ಲಿ ಹಿಂಗದ ಬೆಳದಿಂಗಳು. +ಪದುಮದ ದಳದಂತೆ ಕೆಂಪಗಿದ್ದವು ಕೆನ್ನೆ +ಅದುರಿದವು ಹವಳದುಟಿ ಚಳಿಗೆ. +ನೆಲವನುಂಗುಟದಿಂದ ಬರೆದಳೊಮ್ಮೆ. +ನಮಗಿಷ್ಟೇ ಬೇಕಿತ್ತು, ಯಾವಾಗ ಇಬ್ಬರೂ ಜಗಳ ಮರೆತು +ಕೂಡಿಯಾರೆಂದು ಕಾತರಿಸುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆನಂದದ +ಸಂಗತಿ ಏನಿದೆ? ತಕ್ಷಣವೆ ನುಗ್ಗಿ ಇಬ್ಬರ ಮಧ್ಯೆ ಮತ್ತೆ ಜಗಳ +ಬರದಿರಲೆಂದು- ಪೌರೋಹಿತ್ಯ ವಹಿಸಿದೆವು: +ಎದೆಯ ಬಾಗಿಲು ತೆರೆದು ಒಳಗ ಕರಕೊಳ್ಳಿರಿ +ಎಡವುದು ಬ್ಯಾಡ ಹೊಸ್ತಿಲೊಳಗ. +ಮೆಲ್ಲಗ ಮಾತಾಡಿ ಮೆಲ್ಲಗ ಕೈ ಇಡಿರಿ +ವಿಶ್ವಾಸ ಮೂಡಲಿ ಒಳಗೊಳಗ. +ನಮ್ಮ ಹಿತನುಡಿ ಕೇಳಿ +ಬೆದರಿದ ಕುರಂಗಾಕ್ಷಿ +ಮದನ ಕದನಾಪೇಕ್ಷಿ +ಕಿಡಿ ತಗಲಿದರೆ ಸಿಡಿವ ಮದ್ದಿನ ಕುಡಿಕೆಯಂಥ ಯಕ್ಷಿ +ಒಮ್ಮೆ ವಾರಿನೋಟ ಬೀರಿದಳು ನೋಡು ಹುಡುಗನ ಕಡೆಗೆ- +ಚಂದಮುತ್ತ ಥರಥರ್‍ನೆ ನಡುಗಿ +ನಿನ್ನ ಕರುಣೆಯ ಹರಣ ದೇವೀ ಎಂದು +ಓಡಿ ಹೋಗಿ ದಿಂಡುರುಳಿ +ಪುಳಕಜಲದಲಿ ಅವಳ ಪಾದ ತೊಳೆದ. +ಎಲ್ಲಿದ್ದನೋ ಮಾರಾಯ ಮಾರ, +ಸಕ್ಕರೆ ಬಿಲ್ಲಿನ ಹೆದೆಯ ಶಕ್ತಿಂದ ಕರ್ಣಕೆ ಸೆಳೆದು +ಪಂಚೈದು ಬಾಣಗಳ ಹೊಂಚಿ ಬಿಟ್ಟ ನೋಡು- +ತಬ್ಬಿಬ್ಬಾದರಿಬ್ಬರೂ. +ಠಿಚಿge ೫೧ sಣಡಿಚಿಣs heಡಿe +೮. ಮನಸಿನ ತುಂಬೆಲ್ಲ ನೆನಪುಗಳ ಗಾಯ +ಮಾರನೆ ಬೆಳಿಗ್ಗೆ ಕೂಡ ನಿನ್ನೆಯ ಆನಂದದ ಅಮಲಿನಿಂದ ಹೊರಬರಲಿಲ್ಲ ಅಬ್ಬೆ. ಕಪಿಲೆ ಚಡಪಡಿಸಿತ್ತು ಬೆಳ್ಳಂಬೆಳಗು. ಯಾರೊ ಸುಳಿಧಂಗಿತ್ತು ಕೊಟ್ಟಿಗೆಯ ಬಳಿಯಲ್ಲಿ. ಯಾರೆಂದು ತಿಳಿಯದೆ, ಯಾರೂ ಇರಲಿಲ್ಲವೆಂಬ ಭಾವ ಗಟ್ಟಿಯಾಗದೆ, ಇದ್ದರೆಂಬ ನಂಬಿಕೆ ಹೋಗದೆ – ಅಂತೂ ಭ್ರಾಂತುಭಾವದಲ್ಲಿ ಮಗನನ್ನೇ ಕೇಳಬೇಕೆಂದಳು. ಅವನಾಗಲೇ ಹೊರಗೆ ಹೋಗಿದ್ದರಿಂದ ಹ್ವಾರೆಗೆ ತೊಡಗಿದಳು. +ಬೆಳಗುವ ಪ್ರಾಯದ ಮಗನಿಗಿಂತ ಮುಂಚೆ ಅವನ ಪರಿಮಳದ ಗಾಳಿ ಬೀಸಿ ಗೂಡಿನ ತುಂಬ ಪಸರಿಸಿತು. ಲೋಕವ್ಯಾಪಾರ ಮರೆತವರಂತೆ, ಇನ್ಯಾವುದೋ ಲೋಕಾಂತರಕ್ಕೆ ಸಂಯಮಿಸಿ ಹೂವ ಹುಡದಿಯ ಒಳಗೆ ಹುಡದಿಯಾಡಿ ಬಂಧಂಗಿದ್ದ. ಅಬ್ಬೆಯ ನೋಡಿ ಹೆದರಿ ಬೆವರಿಳಿದು ತಬ್ಬಿಬ್ಬಾದ. ಹೌದೆಂಬ ನಡೆನುಡಿಯ ಮಗ ಇಂದ್ಯಾಕೆ ಹಿಂಗೆಂದು, ಕಣ್ಣಲಿನ್ನೂ ನೆನ್ನೆಯ ದಣಿವಿದೆಯೆಂದು – +‘ಮಿಂದೆಯಾ ಕಂದಾ?’ +ಎಂದಳು. +‘ಇಗೋ ಮಿಂದು ಬಂದೆ’ +ಎಂದು ತಾಮಸವ ನಿವೃತ್ತಿಯ ಮಾಡಿ ಲಂಗೋಟಿಯ ತಗೊಂಡು ದುಡುದುಡುನೆ ಹೊರಗೋಡಿದ. ಹಂಗಿದ್ದರೀವರೆಗೆಲ್ಲಿ ಹೋಗಿದ್ದನೆಂದು ಯೋಚಿಸಿ ಬಗೆಹರಿಯದೆ ಅಡಿಗೆಗಿಟ್ಟಳು. +ಮಗ ಬಂದು ಭಕ್ತಿಗೆ ವಿಭೂತಿ ಹಚ್ಚಿಕೊಂಡು ದೇವರ ಬಿಲದೆದುರು ನಿಂತು ಶಿವಪೂಜೆ ಶಿವಗ್ಯಾನವ ಮಾಡಿ ನೂರೆಂಟು ಸಲ ಶಿವನಾಮವ ಹೊಗಳಿ ಬಂದ. ಲಕ್ಕಬ್ಬೆ ಮಗನ ಚೆಲ್ವಿಕೆಯ ಚೋದ್ಯವ ನೋಡಿ ಅಭಿಮಾನದಲ್ಲಿ ಮೈಮರೆತು ನಿಂತಿದ್ದವಳು ಮಗನನ್ನ ಯಕ್ಷಿಗೆ ಗುಡ್ಡ ಬಿಟ್ಟ ವೃತ್ತಾಂತ ನೆನಪಾಗಿ ನಿಟ್ಟುಸಿರಿಟ್ಟು ಕೈ ಹಿಡಿದು ಮಗನ ಒಲೆಯ ಬಳಿಗೆ ಕರೆದೊಯ್ದಳು. ಹಾಲು, ಅನ್ನ, ಜೇನು, ಬೆಲ್ಲ, ಪಾಲು ಪಂಚಾಮೃತದ ಅಡಿಗೆಯ ನೀಡಿ ತಾನೇ ತುತ್ತು ಮಾಡಿ ತಿನ್ನಿಸುವಾಗ ನೋಡಿದರೆ- ಮುಖದ ತುಂಬ ಗಾಯಗಳಾಗಿವೆ ಮಗಂಗೆ! ಚಂದ್ರಾಮನಂಥ ತಿಳಿಯಾದ ಮೋರೆಯಲಿ ಕಲೆ ತೋರಿವೆ! +ಕೆನ್ನೆ ಕತ್ತಿನ ಮ್ಯಾಲೆ ಮುದ್ದಿನ ಗಾಯ +ಗಲ್ಲ ತುಟಿಗಳ ಮ್ಯಾಲೆ ಹಲ್ಲೂರಿದ ಗಾಯ +ಮೈತುಂಬ ಕಂಡಾವು ಚೆಳ್ಳುಗುರು ಗಾಯ +ಮಾದಕದ ನೋಟುಗಳು ನೆಟ್ಟ ಎದೆ ಗಾಯ! +ಅವ್ವಾ ಕಣ್ಣಿನ ತುಂಬಾ ಕನಸುಗಳ ಗಾಯ +ಕಿವಿಗಳ ತುಂಬ್ಯಾವು ಗಳರವದ ಗಾಯ +ಹೃದಯದ ತುಂಬೆಲ್ಲ ಆನಂದಗಳ ಗಾಯ +ಮನಸಿನ ತುಂಬೆಲ್ಲ ನೆನಪುಗಳ ಗಾಯ! +ಮಗಂಗೆ ಹೆಣ್ಣು ಗಾಳಿ ಬೀಸಿರಬಹುದೇ? ಹಾಂಗಿದ್ದರೆ ನನಗೆ ತಿಳಿಸದೆ ನನ್ನ ಉಡಿಯಿಂದ್ಯಾರು ಕದ್ದೊಯ್ದರು ಕಂದನ್ನ?- +ಯಕ್ಷಿಯ ನೆನಪಾಗಿ ಸಳಸಳ ಬೆವರು ಜಲವಿಳಿದು ನೆಲ ತೊಯ್ದವು. ಇಲ್ಲಿಲ್ಲ ಹಂಗಾಗಿರಲಾರದೆಂದು, ಆಮ್ಯಾಲೆ ಮಗನ ಕೇಳಿದರಾಯ್ತೆಂದು ತನ್ನ ತಾನು ವಿವೇಕಿಸಿಕೊಂಡು ಸುಮ್ಮನಾದಳು. +೨೯. ಜೇನು ತುಂಬಿದ ಹೂಗಳೆಲ್ಲಾ ಕಡೆ +ಬರಬಾರದ ಜಡಿ ಮಳೆ ಜಡಿದು ಕೊಚ್ಚಿಹೋದವು ನೋಡು ಧರೆಯ ಖಾಯಿಲೆಗಳು ಮಾತ್ತು ಶಾಪಂಗಳು, +ಹಳ್ಳಾಕೊಳ್ಳಾ ತುಂಬಿ ತುಳುಕಿ +ತೊಳೆದು ಹೋದವು ಎಲ್ಲ ಕಿಲುಬು. +ಕಾಡಿನಂಗಳದಲಿ ತಂಗಾಳಿಯಾಡಿ +ಮತ್ತೆ ಅಧಿಕಾರಕ್ಕೆ ಬಂತು ಹಸಿರು. +ಮೇಲು ಮಿರಿಲೋಕದ ಏಳುಪ್ಪರಿಗೆ ಮೋಡಗಳಲಿದ್ದ ನಾವು ಕನಸುಗಳು +ಮುತ್ತಾಗಿ ಸುರಿದು ಹೂವಾಗಿ ಅರಳಿ +ಏರಿದೆವು ಬೆಟ್ಟದ ಮುಡಿಗೆ. +ಕಂಡಲ್ಲಿ ಪಲ್ಲವಿಸಿ ಫಲ ಹೆರುವ ಮರಗಳು +ಜೇನು ತುಂಬಿದ ಹೂಗಳೆಲ್ಲಾ ಕಡೆ. +ದೀಪಗಳು ಉರಿದಾವು ಸಂಪಿಗೆಯ ಮರದಲ್ಲಿ +ತುಂಬಿಗಳ ತುಟಿಯಲ್ಲಿ ಹಾಡು ಜಿನುಗಿ. +ಕಾಡಿನ ಹೂಗಳಿಗೆ ರೆಕ್ಕೆ ಮೂಡಿದ ಹಾಗೆ +ಬಣ್ಣ ಬಣ್ಣದ ಚಿಟ್ಟೆ ಹಾರಾಡಿವೆ. +ಮರವ ಮತಾಡಿಸುವ ಸವಿಗೊರಳ ಹಕ್ಕಿಗಳು +ಆನಂದ ಹಾಡುಗಳ ಹಾಡುತ್ತಿವೆ. +೩೦. ಹಬ್ಬಿತು ಕೀರ್ತಿ ಪರಿಮಳದ ಪವನದಂತೆ +ಹಟ್ಟಿಯ ಕಾಡಿನಲ್ಲಿ ಇಂತಪ್ಪ ಹಸಿರಿನ ಪವಾಡಂಗಳು ನಡೆವ ಕಾಲದಲ್ಲಿ ತನ್ನ ಕೊಳಲ ಹಾಡಿನಿಂದ ಮಳೆ ಸುರಿಸಿದ ಚಂದಮುತ್ತನ ಕೀರ್ತಿ ಸುತ್ತೂ ಸೀಮೆಗೆ ಹಬ್ಬಿತು ನೋಡು ಹರಿಶ್ಚಂದ್ರನ ಗಾಳಿಯಂತೆ. +ಹಟ್ಟಿಯಲ್ಲಿ, ಹಟ್ಟಿಯವರ ಮನದಲ್ಲಿ +ಇನ್ನಿಲ್ಲ ಇವನ ಸಮನೆಂದು ಪೂರಾ ತುಂಬಿ +ಸಕಲರಿಗೆ ಬೇಕಾದವನಾದ ಚಂದಮುತ್ತ. +ಇಂಥ ಮಗನ ಪಡೆಯಲು ಲಕ್ಕಬ್ಬೆ +ಯಾ ಪುಣ್ಯ ಮಾಡಿದಳೋ ಯಾ ನೋಂಪಿ ನೋಂತಳೊ +ಎಂದು ಹೊಳಪುಳ್ಳ ಶಬ್ದಗಳಲ್ಲಿ ಹೊಗಳಿದರು ಜನ. +ಕೇರಿಗೆ ದೊಡ್ಡವನಾದ ಊರಿಗೆ ದೊಡ್ಡವನಾದ +ದಿಕ್ಕಿಗೆ ದೊಡ್ಡವನಾದ ನಾಡಿಗೆ ದೊಡ್ಡವನಾದ +ನಾಕು ರಾಜ್ಯ ಎಂಟು ದಿಕ್ಕಿನಾಗಿಲ್ಲ ಇವನ ಸಮ +ಎಂದು ಒಂದೆ ನುಡಿ ಸಾಕರಲು +ನೂರೊಂದು ಹೊಗಳಿದರು ಜನ. +ಮಳೆರಾಯನ ಪಳಗಿಸಿದನೆಂದು +ಸಿಡಿಲು ಮಿಂಚುಗಳ ಹಾದಿಗೆ ತಂದನೆಂದು +ರಂಯ ವಚನಂಗಳಿಂದ ಹಾಡಿ +ಮಕ್ಕಳಿಗವನ ಹೆಸರಿಟ್ಟರು ಜನ. +೩೧. ಸೂರ್ಯಮುತ್ತ ಹೆಗಡೆ ಕನವರಿಸಿದ್ದು +ದಿನಾ ಬೆಳೆಯುವ ಚಂದ್ರನ್ನ +ಹೊಳೆಯುವ ಚಂದ್ರನ್ನ +ಹ್ಯಾಗೆ ಸಹಿಸುತ್ತೀಯೋ ಕಂದಾ? +ಬೆಳ್ದಿಂಗಳು ಹಬ್ಬುವುದನ್ನ +ಲೋಕವ ಬೆಳಗುವುದನ್ನ +ಹ್ಯಾಗೆ ಕಣ್ಣಾರೆ ನೋಡುವಿಯಾ ಕಂದಾ? +ಬೆಂಕಿಯಿಡು ಅವನ ಮಸಡಿಗೆ. +ಆದಿಮದ ಸೇಡು ಮರೆಯಬೇಡವೊ. +೩೨. ಹೇಳಿ ಕಳಿಸಿದ ಹಾಗೆ ಇಳಿದು ಬಂದ +ಚಂದಮುತ್ತನ ಕೀರ್ತಿ ಪುರಕ್ಕೆ ತಲುಪಿದೇಟ್ಗೆ +ಭೂಮಂಡಳ ಗಿರ್ರನೆ ತಿರುಗಿ ಸೂರ್ಯ ದೇವರು ಕಳಚಿ ಬಿದ್ದಂಗಾಯ್ತು +ಮಹಾನುಭಾವನಿಗೆ. +ಇಂತಪ್ಪ ಕಲೆಗಾರ ಕೊಳಲೆಂತು ನುಡಿಸುವನೆಂಬುದ ಅರಿಯಬೇಕೆಂದು +ಒಡೆಯನ ವಾಕ್ಯವಾದದ್ದೇ +ಹಾವು ಮೆಟ್ಟಿದ ಹಾಗೆ ನೆಗೆದು ನಿಂತ. +“ಸೈ ಬಿಡು ಒಡೆಯಾ, ಅವ ನನ್ನ ಶಿಷ್ಯ +ಹೇಳಿ ಕಳಿಸಿದರೆ ಓಡೋಡಿ ಬರುವ” +-ಎಂದು ಆಶ್ವಾಸನೆಯ ನೀಡಿ- +ಎಲ ಎಲಾ ಮಳೆತರಿಸುವಂತಾದನೆ ಗೊಲ್ಲರ ಬಾಲಕ ! +-ಎಂದು ವಿಸ್ಮಯಂಬಟ್ಟು +ನಿರನುಭವಿ ಹೈದ ಏನೆಲ್ಲ ಆದ ನನ್ನ ದಯದಿಂದ; +ಹಿಂದಿರುಗಿ ಬಂದು ಸಿದ್ಧಿ ಸಾಧನೆಗಳ ಸುದ್ದಿಯ +ಹೇಳಬಾರದೆ? +ಮಳೆರಾಗ ನನಗರಿದು, ಹಾಗಿದ್ದರಿವನೆಲ್ಲಿ ಕಲಿತ? +ಮುದಿ ಜೋಗ್ತಿಯ ಯೋಗವಾಯಿತೆ? +-ಎಂದು ಅನುಮಾನ ಮೂಡಿ +ಆನಂದಗೆಟ್ಟು ನೆಲದ ಮ್ಯಾಲೆ ನಿಲ್ಲದಾದ. +ಹೇಳಿ ಕಳಿಸಿದರೆ- +ಅರಿತವನು ತಾನೆಂಬ, +ನುರಿತವನು ತಾನೆಂಬ, +ಮಳೆ ತರಿಸಿದವನು ತಾನೆಂಬ ಹಮ್ಮಿನಲಿ +ಬಾರದೆ ಇದ್ದಾನೆಂದು, +ಖುದ್ದಾಗಿ ಹೋಗಿ ಕರೆತರಬೇಕೆಂದು +ಹೇಳಿಕಳಿಸಿದ ಹಾಗೆ +ಚಂದಮುತ್ತನ ಹಟ್ಟಿಗಿಳಿದು ಬಂದ. +ಠಿಚಿge ೧೦೫ sಣಚಿಡಿಣs heಡಿe +-ಟಚಿಟಿg|-size> +೩೩. ಮುರಿಯಿತಭಿಮಾನ +ನಾವು ಲೋಕದ ಕನಸುಗಳೆಲ್ಲ ಈಗ ಚಂದಮುತ್ತನ ಹಟ್ಟಿಯ ಕಾಡಿನಲ್ಲೇ ಬೀಡು ಬಿಟ್ಟಿದ್ದೆವು. ಎಲ್ಲೆಂದರಲ್ಲಿ ಹಸಿರೆಲೆಗಳಿಗೆ, ಹೂ ಚಿಗುರಿಗೆ, ದುನ್ಬಿ ಪಾತರಗಿತ್ತಿಗಳಿಗೆ, ಮನು ಮುನಿ ಮಾನವ ಖಗಮೃಗ ಜಾತಿಯ ಮನಸ್ಸುಗಳಿಗೆ ಅಂಟಿಕೊಂಡು ಚಂದಮುತ್ತ ಕೊಳಲು ತುಟಿಗಿಡುವುದನ್ನೇ ಕಾಯುತ್ತಿದ್ದೆವು. ಇಲ್ಲವೆ ಮೋಡಗಳಲ್ಲಿ ನವಿಲಾಟವಾಡುತ್ತ ಕಾಯುತ್ತಿದ್ದೆವು. ಕೊಳಲು ನುಡಿಸಿದನೇ, ಸುಖದ ಅಲೆಗಳಾಗಿ ತೇಲುವುದೊಂದೇ ಕೆಲಸ. ಇಂತಿರುವಲ್ಲಿ ಆ ದಿನ ಸಂಜೆ ಚಂದಮುತ್ತ ಹಿಂಡು ದನ ಮೇಯಿಸ್ಕೊಂಡು ಅಟ್ಟಿಸಿಕೊಂಡು, ಹಟ್ಟಿಗೆ ಬಂದು ಕೊಟ್ಟಿಗೆಗೆ ಬಿಟ್ಟು ಅಕ್ಕಚ್ಚು ಎರೆವಾಗ ಕೋಲಕಾರ ಬಂದು ಗೂಡಿನ ಕಟ್ಟೆಗೆ ಕೋಲುಕುಟ್ಟಿ ‘ಚಂದೂ ಚಂದಣ್ಣಾ ಚಂದಮುತ್ತಾ’- ಹೆಂಗಿದ್ದರೆ ಹಂಗೇ ಎಲ್ಲಿದ್ದರಲ್ಲಿಂದ ಬರಬೇಕೆಂದು ಹೆಗಡೆ ಹೇಳಿದನಪ್ಪೋ- ಎಂದು ಒದರಿದ್ದರಿಂದ ತುರ್ತಿನ ಕಾರ್ಯವೆಂದು ಅಬ್ಬೆಗೂ ಹೇಳದೆ ಓಡಿದ. +ಹೋಗಿ ನೋಡಿದರೆ ಹೆಗಡೆ ಮನೆಯ ಚಿತ್ರದ ಚಾವಡಿಯಲ್ಲಿ ಮುಕ್ಕಾಲು ಮಂಚದ ಮ್ಯಾಲೆ ನೂರೆಂಟು ಬಿರುದು, ಬೆಳ್ಳಿ ಬೆತ್ತದ ದಂಡಸಮೇತ ಒರಗಿ, ಎಲಡಿಕೆ ಮೆಲ್ಲುತ್ತ ಎಡ ಅಂಗೈಯಲ್ಲಿ ಬಲ ಹೆಬ್ಬೆರಳೂರಿ ಸುಣ್ಣದಲಿ ಸೊಪ್ಪಿನ ತುಂಡು ತೀಡುತ್ತ ಕುಂತಿದ್ದಾನೆ ಮಹಾನುಭಾವ! ನೋಡಿದ್ದೇ ಚಂದಮುತ್ತನ ಹೃದಯ ಹೂವಿನಂತರಳಿ ದಡುಬಡನೋಡಿ ದಿಂಡುರುಳಿ ಪಾದ ಪಡಕೊಂಡು “ಯಾವಾಗ ಬಿಜು ಮಾಡಿದೆ ಶಿವನೆ?” ಎಂದು ಗುರುಪಾದವ ಮತ್ತೆ ಮತ್ತೆ ಹಣೆಗೊತ್ತಿಕೊಂಡ. ಮಾರ್ಗಾಯಾಸವೆಂದು ಕಾಲೊತ್ತಿ ಪರಿಪರಿ ರೀತಿಯಲ್ಲಿ ಉಪಚರಿಸಿದ. ಇಷ್ಟಾದರೂ ಮಹಾನುಭಾವ ಏನೊಂದೂ ನುಡಿದಾಡದೆ ಕುಂತ ಹೆಗಡೆಯ ಕಡೆ ಮತ್ತವನ ಮಗನ ಕಡೆ ಕುಲಗುರುವಿನ ಕಡೆ, ನಿಂತ ಮಂದಿಯ ಕಡೆಗೆ ನೋಡುತ್ತ ಚಂದಮುತ್ತನ ಭಕ್ತಿಯ ತೋರಿಸಿ ಬೀಗುತ್ತ ಕುಂತ. ಪುರದಿಂದ, ನೇರ ಇಡೆಯನ ಕಡೆಯಿಂದ ಬಂದವನಾಗಿ ಹೆಗಡೆ ಸೈತ ಎಲ್ಲರನ್ನೂ ಹೆದರಿಸಿದ್ದ. ಈಗ ಈ ಕಾಡಿನ ಹೈದರಿಗೆ ತಾನು ಚಂದಮುತ್ತನ ಗುರುವೆಂಬುದು ತಿಳಿದಿರಲೆಂದು ಪ್ರಕಟದನಿಯಲ್ಲಿ ‘ಆಹಾ ಚೆಲುವಾಯ್ತು ನನ್ನಾಸೆ ಗೆಲುವಾಯ್ತೆಂ’ದು ಕಿಲಕಿಲ ನಗುತ್ತ “ಭೇಶ್ ಮಗನೆ, ನನ್ನ ಅಭಿಮಾನ ಕಾದ ಶಿಷ್ಯ ನೀನೊಬ್ಬನೇ ನೋಡು” ಎಂದು ಹೇಳಿ ಚಂದಮುತ್ತನ ಭಕ್ತಿಯ ದಯಮಾಡಿ ಸ್ವೀಕರಿಸಿ, +“ಗುರುವಿಗೆ ಸಣ್ಣವನಾಗಿ +ಹಟ್ಟಿಗೆ ದೊಡ್ಡವನಾಗಿ ಬಾಳು” +-ಎಂದು ಆಶೀರ್ವದಿಸಿದ. ಇದನ್ನೇ ಕಾಯುತ್ತಿದ್ದ ಹೆಗಡೆ ಚಿನ್ನಮುತ್ತನನ್ನ ಮಹಾನುಭಾವನ ಪಾದಂಗಳ ಮ್ಯಾಲೆ ಚೆಲ್ಲಿ “ಇದಕ್ಕೂ ಒಂದಿಷ್ಟು ವಿದ್ಯಾಬೋಧನೆಯಾದರೆ ಧನ್ಯನಾದೇನು ಶಿವನೆ” ಎಂದು ಕೈಮುಗಿದ ಮಹಾನುಭಾವ ಸಂತೋಷದಿಂದ +“ಹಂಗೇ ಆಗಲೇಳು.” +-ಎಂದು ಕೃಪೆ ಮಾಡಿದ. ಆದರೂ ಬೆಂಕಿಯಂತೆ ಉರಿವ ಕಣ್ಣಿನ ಮಹಾನುಭಾವನ ನೋಡಿ ಹೆಗಡೆ ಮತ್ತು ಚಿನ್ನ ಮುತ್ತನ ಹೊರತು ಮತ್ಯಾರಿಗೂ ಸಂತೋಷವಾಗಲಿಲ್ಲ. +ಯಾವ ಕಜ್ಜ ಕಾರ್ಯಕೆ ಬರೋಣವಾದಿರೆಂದು ಚಂದಮುತ್ತ ಕೇಳಿ, ಅವನು ಉತ್ತರವ ಮರೆಮಾಚಿ ಗುರುಶಿಷ್ಯರಿಬ್ಬರೇ ವೇಳೆ ಮೀರುವತನಕ ಏಕಾಂತ ಮಾತಾಡಿಕೊಂಡರು. ಅಕ್ಕಪಕ್ಕದ ಸುದ್ದು, ಕಾಡು ನಾಡಿನ ಸುದ್ದಿ, ಮಹಾ ಶಿವರಾತ್ರಿಯ ಸುದ್ದಿಯ ಮಾತಾಡುತ್ತ ಮುದುಜೋಗ್ತಿಯ ಪ್ರಸ್ತಾಪವಾದ ತಕ್ಷಣ ಮಿರಿಲೋಕದಲ್ಲಿ ಯಕ್ಷಿ ಹಾಕಿದ ಆಣೆ ನೆನಪಾಗಿ ಚಂದಮುತ್ತ- +“ಇಲ್ಲಿಂದ ಮುಂದೆ ಕೇಳಿದರೆ ನಿನಗೂ ಕೇಡು +ಹೇಳಿದರೆ ನನಗೂ ಕೇಡು ಗುರುಪಾದವೇ” +-ಎಂದು ಗಪ್ಪನೆ ಗುರುವಿನ ಕಾಲು ಗಟ್ಟಿಯಾಗಿ ಹಿಡಿದುಕೊಂಡ. ಮಾತಿನಲ್ಲಿ ಹೆಚ್ಚು ಕಡಿಮೆ ಬಂದದ್ದನ್ನು ಗಮನಿಸಿ ಮಹಾನುಭಾವನ ಅಭಿಮಾನ ಮುರಿಯಿತು. ಅಯಿತಾಯಿತು ಎಂದು ಕಾವಿ ಬಣ್ಣದ ಹಲ್ಲು ತೋರಿಸಿ ನಗಾಡಿ ಸುಮ್ಮನಾದ. +ಹರನ ಸಮ ಗುರು ಬಂದನೆಂಬ ವಾರ್ತೆಯ ಕೇಳಿ ಲಕ್ಕಬ್ಬೆ ಕರಿಕಂಬಳಿ ಮ್ಯಾಲೆ ಸೇಸಕ್ಕಿ ಹುಯ್ದು ಗದ್ದಿಗೆ ಮಾಡಿ ಆಸರೆಗೆ ಹಣ್ಣು ಹಾಲು ಜೇನುಗಳ ಸಜ್ಜು ಮಾಡಿ ವೀಳ್ಯೆದೆಲೆಯ ಸಣ್ಣಬುಟ್ಟಿ ಇಟ್ಟು ದಾರಿ ಕಾದಳು. ಕಾಲ ತಡವಾಗಿ ಮಗ ಬಂದನೇ ಹೊರತು ಗುರು ಬರಲಿಲ್ಲ. +೩೪. ಎದುರುಬದುರಾದರು ಗುರುಶಿಷ್ಯರು +ಮಾರನೆ ದಿನ ಚಂದಮುತ್ತ ಕೋಳಿಯಕೂಗಿನಲ್ಲಿ ಮಿಂದು ಮಡಿಯುಟ್ಟು ಯಕ್ಷಿಯ ಗುಡಿಗೈದಿ ಎಂದಿನಂತೆ ನೈವೇದ್ಯ ಬಾಗಿನಗಳ ಅರ್ಪಿತ ಮಾಡಿ ಹೊರಬಂದು ಬಾಗಿಲಿಕ್ಕಿಕೊಂಡು ಕಾದುನಿಂತ. ಗಳಿಗೆ ಎಷ್ಟಾದರೂ ಬಾಗಿಲು ತೆರೆಯಲಿಲ್ಲ. ಕಾದು ಕಂಗಾಲಾಗಿ ಮೆಲ್ಲಗೆ ಕದ ತೆರೆದು ಹಣಿಕಿ ಹಾಕಿದ. ವಿಗ್ರಹದ ಮುಂದಿನ ಮಡಿಬಟ್ಟೆ ಹಾಂಗೇ ಇದ್ದ ಚೋದ್ಯವ ನೋಡಿ ದುಃಖ ಗಾಬರಿಯಾಗಿ ಅಂಗಜಲ, ನೇತ್ರಜಲ, ಜಗುಳಿ, ನೆಲ ಒದ್ದೆಯಾದವು. ನನ್ನ ಭಕ್ತಿ ಬಿನ್ನವಾಯಿತೇ! ಎಂದು ಗಡ ಗಡ ನಡುಗಿ ಯಕ್ಷಿಯ ಪಾದದ ಮ್ಯಾಲೆ ಮೈ ಚೆಲ್ಲಿ ಅಡ್ಡಬಿದ್ದ. +ಅಡಗಿಸಿಟ್ಟ ಕಪಟ ತಂತಾನೆ ಪ್ರಕಟವಾಗುವ ಹಾಂಗೆ ಯಾರೋ ನಕ್ಕಿದ್ದು ಕೇಳಿಸಿ ಚಂದಮುತ್ತ ಆಸುಪಾಸು ನೋಡಿದ. ಅಕ್ಕ ಪಕ್ಕ ನೋಡಿದ. ಮ್ಯಾಲೂ ಕೆಳಗೂ ನೋಡುತ ಪರಿಶೋಧನೆ ಮಾಡಿದ. ವಿಗ್ರಹದ ಹಿಂದೆ ಅಡಗಿ ಕುಂತಿದ್ದ ಮಹಾನುಭಾವ ಫಳಾರನೆ ಹಲ್ಲು ತೋರಿಸಿ ನಂಜಿನ ನಗಾಡುತ್ತ ಈಚೆ ಬಂದ. ಘನಘೋರ ಆಘಾತವಾಯ್ತು ಚಂದಮುತ್ತನಿಗೆ. +ಚಂದಮುತ್ತ : ನಾನು ಬಾಗಿನವಿಟ್ಟು ಬಾಗಿಲಿಕ್ಕಿಕೊಂಡಾಗ ನೀನು ಒಳಗೇ +ಇದ್ದೆಯಾ ಗುರುಪಾದವೇ? +ಮಹಾನುಭಾವ: ಹೌದು. +ಚಂದಮುತ್ತ : ಯಾಕಾಗಿ? +ಮಹಾನುಭಾವ: ನಿನ್ನ ಸತ್ಯ ಕಾಂಬುದಕ್ಕೆ. +ಚಂದಮುತ್ತ: ಕಂಡೆಯಾ? +ಮಹಾನುಭಾವ: ಆಹಾ ಕಂಡೆನಯ್ಯಾ ಕಂಡೆನು! +ಗೊಲ್ಲಕುಲದ ಸೋಜಿಗವ ಕಂಡೆನು! +ಹಟ್ಟಿಯ ಕೀರ್ತಿಶಿಖರದ ಬೆಳಕ ಕಂಡೆನು! +ಲೀಲೆಗಳ ಮೆರೆವ ಮಹಾಲೀಲೆಗಾರ ನೀನು, +ನಿನ್ನ ಭಕ್ತಿಗೆ ಕಪ್ಪು ಬಿಳಿಯಾದದ್ದು, +ಬಿಳಿ ಬೆಳಕಿನಲ್ಲಿ ಕಲ್ಲಿನ ಯಕ್ಷಿ +ಹೆಣ್ಣು ದೇವತೆಯಾಗಿ ನಿನಗೊಲಿದಿದ್ದು ಕಂಡೆನು! +ಕಂಡೆನಯ್ಯಾ ಕಂಡೆನು +ಯಕ್ಷಿ ದಯಮಾಡಿ ನಕ್ಕದ್ದು +ಮೈಲಿಗೆ ಕಳೆದು ಮಡಿಯುಟ್ಟದ್ದು +ಚಂದ್ರಲೋಕದ ಗಾಳಿ ಬೀಸಿದ್ದು ಕಂಡೆನು! +ಚಂದಮುತ್ತ : ವ್ಯಂಗ್ಯದ ನುಡಿ ನಿನಗೆ ಶೋಭಿಸಲೊಲ್ಲದು ಶಿವನೆ. +ಮಹಾನುಭಾವ : ನಿನಗೆ ಸುಳ್ಳು ಕೂಡ. +ಚಂದಮುತ್ತ : ನಾನೇನು ಸುಳ್ಳು ಹೇಳಿದೆ? +ಮಹಾನುಭಾವ : ಹಾಂಗಿದ್ದರೆ ವಿಗ್ರಹ ತಂತಾನೆ ಕೈಯಾರೆ +ಯಾಕೆ ಮಡಿ ಉಡಲಿಲ್ಲ? +ಚಂದಮುತ್ತ: ಹಾಗೆಂದು ನಾನು ಕೊಚ್ಚಿಕೊಂಡಿಲ್ಲ. +ಮಹಾನುಭಾವ ಮಾತಿನಲ್ಲಿ ಸಣ್ಣವನಾದ. ವಿಗ್ರಹ ಮಡಿಯುಡುವ ವಿಚಾರ ಹೇಳಿದವನು ಚಿನ್ನಮುತ್ತ. ತನ್ನ ತಪ್ಪಿನ ಅರಿವಾಗಿ ಅದನ್ನು ಬಚ್ಚಿಟ್ಟುಕೊಂಡು ಎಡಗೈ ಕಿರು ಉಂಗುರ ಕಚ್ಚಿ ಮುಗುಳ್ನಕ್ಕು ಹೇಳಿದ. +ಮಹಾನುಭಾವ : ಆಯಿತಯ್ಯ, +ರಚನೆಯ ಮಾತು ಬಿಟ್ಟು +ಮುದಿಜೋಗ್ತಿಯ ವೃತ್ತಾಂತ ಹೇಲಯ್ಯ. +ನೀನವಳ ಗೆದ್ದ ಬಗೆ +ಅವಳಿಂದ ಹ್ಯಾಗೆ ವಿದ್ಯವ ಪಡೆದೆ? +ಎಂಬಿತ್ಯಾದಿ ಒಂದೂ ಬಿಡದೆ ಹೇಳು. +ಚಂದಮುತ್ತ : ಶಿವಪಾದವೇ, +ಬಲಗೈ ಭಾಷೆ, ಎಡಗೈ ನಂಬಿಕೆ ಕೊಟ್ಟು +ಹೇಳುತ್ತೇನೆ, ನನ್ನ ಮಾತು ನಂಬು. +ಜುಲುಮೆಯ ನಿಲ್ಲಿಸಿದರೆ ಇಲ್ಲಿಗೆ +ಇಬ್ಬರಿಗೂ ಹಿತ. +ಮಹಾನುಭಾವ: ಹೆಚ್ಚಳ ಪಡಬೇಡವೋ ಗೊಲ್ಲಗೋಕುಲದ ಹೊಸಕುಡಿಯೇ, +: ಈಗಷ್ಟೇ ಕುಡಿ ಬಿಟ್ಟದ್ದೀಯಾ, ನೆತ್ತಿಯ ಸುಳಿ ಬಲಿಯುವ +: ತನಕ ನಿಧಾನಿಸು. ಗುರುವಿಗೂ ಮಿಗಿಲೇನು ಆ ನಿನ್ನ ಮುದಿ +ಜೋಗ್ತಿ? ಗುರುದ್ರೋಹ ದೋಷಕ್ಕೆ ಈಡಾಗಬಾರದೆಂಬಲ್ಲಿ +ನುಡಿಗಳಿಗೆ ವೇಷ ತೊಡಿಸದೆ ನಿಜವಾರ್ತೆಯ ಹೇಳು. +ಚಂದಮುತ್ತ : ಕಿವಿಯ ಸುಖವ ನಾನು ನುಡಿಯಲಾರೆ ಶಿವನೇ. +ಮಹಾನುಭಾವ: ಹಾಂಗಿದ್ದರೆ ನೀನೇ ತೂಕ ಮಾಡಿ ಹೇಳಯ್ಯಾ. ತಂದೆಗಿಂತ +ನೂರು ಮಡಿ ಹೆಚ್ಚಿನ ಗುರುವಾಗಿ ಭೋಧನೆ ಮಾಡಿದ ನಾನು +ಕಮ್ಮಿ; ಆ ಮುದಿಜೋಗ್ತಿ ಹೆಚ್ಚಲ್ಲವೆ ನಿನಗೆ? +ಚಂದಮುತ್ತ : ಪೂರ್ವಾಪರವರಿಯದೆ ಮಾತಾಡುತ್ತಿರುವಿ ಗುರುವೆ. +ಈ ಮೂಲಕ ರಿಪೇರಿಯಾಗದ ಅಪಾಯಗಳ +ಇಬ್ಬರಿಗೂ ತಂದೊಡ್ಡುವಿ ಅಂತ ಗೊತ್ತೇನು? +ಮಹಾನುಭಾವ: (ಪಾಯ ನೋಡಿ ಪಟ್ಟು ಹಾಕುವಂತೆ)ಆಯಿತಯ್ಯ. ದಕ್ಷಿಣೆ +ತೆರಬೇಕಲ್ಲವೆ ಗುರುವಿಗೆ ನೀನು? ಗುರುವಿಗೆ, ಗುರು ಕಲಿಸಿದ +ಕಲೆಗೆ, ಕಲೆಯೊಂದಿಗೇ ಬರುವ ಅದರ ಪರಿವಾರಕ್ಕೆ. +ಕೃತಜ್ಞತೆ ಅಂಬೋದಿದ್ದಲ್ಲಿ ಮುದಿಜೋಗ್ತಿಯ ವೃತ್ತಾಂತ +ವನ್ನೇ ಕೊಡು. +ಚಂದಮುತ್ತ : ಕೇಳಿದ ತಪ್ಪಿಗೆ ದುಬಾರಿ ದಂಡ ತೆರಬೇಕಾಗುತ್ತದೆ ನೀನು. +ಮಹಾನುಭಾವ: ಹೇಳದದ್ದರೆ ನೀನು ಕೂಡ. +ಚಂದಮುತ್ತ : (ಭಾವೋದ್ರೇಕದಿಂದ)ಹಾಂಗಿದ್ದರೆ ಕೇಳು. +: ಒಡೆಯಬಾರದ ಮಾತು ಒಡೆದಲ್ಲಿ +ಹೇಳಕೇಳುವ ನಾವಿಬ್ಬರೂ +ಪ್ರಾಣ ಬಿಡುವುದು ಖಚಿತ. +ಗುಟ್ಟು ಹೇಳಿದ್ದಕ್ಕೆ ನನ್ನೊಬ್ಬನ ಪ್ರಾಣ ಮಾತ್ರ +ಹೋಗುವಂತಿದ್ದರೆ ಆಗಲೆಂದು ಅರ್ಪಿತ ಮಾಡುತ್ತಿದ್ದೆ. +ಆದರೆ ಕೇಳಿದ ನೀನೂ +ನನ್ನ ಜೊತೆಗೇ ನಾಲಗೆ ಹಿರಿದು +ಪ್ರಾಣ ಬಿಡುತ್ತಿ. +ಹೇಳಲೇನು? +ಮಹಾನುಭಾವ: ಅದೇನೆಂಬುದ ಕೇಳಿಯೇ ಸಾಯುತ್ತೇನೆ, ಹೇಳಯ್ಯಾ- +ಎಂದು ಘಟ ಹೋದರೂ ಹಟ ಬಿಡಬಾರದೆಂದು, ಆದರೂ ಜೀವಭಯದಲ್ಲಿ ಅಳ್ಳೆಯ ಅರಳಿಸಿಕೊಂಡು ಕೆಂಡಗಣ್ಣಾಗಿ ನಿಂತುಕೊಂಡ ಮಹಾನುಭಾವ. +“ಹಾಂಗಿದ್ದರಿಗೋ ಕೇಳು” +-ಎಂದು ನಿರ್ಧಾರವಾಗಿ ನಿಂತಿದ್ದ ಚಂದಮುತ್ತ ಒಂದು ಕ್ಷಣ ಧ್ಯಾನ ತಪ್ಪಿ ಚಿತ್ತ ಮಿಡಿದು ಸುಮ್ಮನಾದ. ಸುಮ್ಮನಾಗುವ ಅಗತ್ಯವಿತ್ತು ಅವನಿಗೆ. ಸಾವಿನ ಭಯದಿಂದಲ್ಲ. ಹೇಳುವ ಮುನ್ನ ಸಾವಿರಾರು ಕನಸುಗಳನ್ನ ಬಲಿಕೊಡಬೇಕಾಗಿತ್ತು. ಒಂದೊಂದು ಕನಸೂ ಕರುಳಿಗಂಟಿಕೊಂಡು ಬೆಳೆದಿತ್ತು. +ಸಿದ್ಧಿ ಒಂದು ಶಾಪ, ಪ್ರಸಿದ್ಧಿ ಇನ್ನೊಂದು ಶಾಪ. ಪ್ರಸಿದ್ಧಿಯಾಸೆ ಅಸೂಯೆ ಹುಟ್ಟಿಸಿ ಮಹಾನುಭಾವನ ಎದೆಯಲ್ಲಿ ನಾಟಿ ಗಾಯ ಮಾಡಿತ್ತು. ಗುಣ ಹೊಂದುವ ಲಕ್ಷಣಗಳಿರಲಿಲ್ಲ. ಕೀಳುಗೀಳಿಗೆ ಗಂಟುಬಿದ್ದು ಚಂದಮುತ್ತನ್ನ ಗೋಳು ಗೋಳೆಂದು ಕಾಡಿಸಿ ಪೀಡಿಸಿ ಅವನು ತನ್ನ ಸತ್ಯಗಳನ್ನು ವ್ಯರ್ಥ ತೇಯುವ ಹಾಗೆ ಮಾಡಿದ. ಆದರೆ ಕೊನೆಯಲ್ಲಿ ಇಬ್ಬರ ವಾದ ಈ ಘಟ್ಟ ತಲುಪೀತೆಂದು, ಆತ್ಮಹತ್ಯೆಗಿಬ್ಬರೂ ಸಿದ್ಧರಾದಾರೆಂದು ನಮಗ್ಯಾರಿಗೂ ಅಂದಾಜಾಗಿರಲಿಲ್ಲ. +ಅಷ್ಟೂ ಕನಸುಗಳನ್ನು ಬಲಿಕೊಟ್ಟು ಚಂದಮುತ್ತ ಕಣ್ಣುಮುಚ್ಚಿ ಹೆತ್ತಯ್ಯ ಮುತ್ತಯ್ಯರ ನ್ನೆದು, ಲಕ್ಕಬ್ಬೆ, ಕಪಿಲೆ, ಚಕೋರಿ ಎಂಬ ಯಕ್ಷಿಯ ನೆನೆದು, ಹಂಕಾರ ಪಡುವವರ ಬೆಂಕೀಲಿ ಸುಡುವ ಕೆಂಡಗಣ್ಣ ಸ್ವಾಮಿ ಶಿವನ ನೆನೆದು ಹೇಳುವುದಕ್ಕೆ ಬಾಯಿ ತೆಗೆದ ನೋಡು- +ಅಷ್ಟರಲ್ಲಿ ಯಕ್ಷಿ ಗುಡಿಯ ದ್ವಾರಬಾಗಿಲು ಧಡಾರನೆ ಮುಚ್ಚಿಕೊಂಡಿತು. ಇಬ್ಬರೂ ಆ ಕಡೆ ನೋಡಿದರು. ಮಹಾನುಭಾವ ಹೇಳಬೇಡವೆಂದು ಕೈಸನ್ನೆ ಮಾಡಿ ಸೂಚಿಸಿ ಆಗಲೇ ತನ್ನನಗಲಿದ್ದ ಉಸಿರನ್ನ ದೀರ್ಘವಾಗಿ ತಗೊಂಡು ಮೈಯಂತ ಮೈಯೆಲ್ಲ ಜಲ ಜಲ ಬೆವರಿ ಕುಸಿದ. ಸುಧಾರಿಸಲು ಸಮಯವೇ ಹಿಡಿಯಿತು. ಅಷ್ಟರಲ್ಲಿ ಗುಡಿಯ ದ್ವಾರ ಬಾಗಿಲು ತೆರೆಯಿತು. ಮೈಲಿಗೆ ಬಟ್ಟೆ ಹೊರಕ್ಕೆ ಬಿತ್ತು. ಹೋಗಿ ನೋಡಿದರೆ ಯಕ್ಷಿಯ ಮೈಮ್ಯಾಲೆ ಮಡಿಬಟ್ಟೆಯಿತ್ತು. ಅರ್ಥವಾಗಿ ನಕ್ಕು ಮಹಾನುಭಾವ +“ಇಷ್ಟಾದ ಮ್ಯಾಕೆ ನನ್ನವರ್‍ಯಾಕೆ ತನ್ನವರ್‍ಯಾಕೆ?” +ಎಂದುಕೊಳ್ಳುತ್ತ ಹೇಳಕೇಳದೆ ಹಟ್ಟಿಯ ಕಡೆಗೆ ನಡೆದ. ನಾನು ಕಾರಣವಾಗಿ ಮಾನಕ್ಕೆ ಹೀನಾಯವಾದರೂ ಇಂತೆಂಬ ಕಷ್ಟನಿಷ್ಠುರದಿಂದ ಪಾರು ಮಾಡಿದೆಯಲ್ಲ ದೇವೀ-ಎಂದು ಚಂದಮುತ್ತ ಯಕ್ಷಿಯ ಪಾದಕ್ಕೆ ಹಣೆ ಗಟ್ಟಿಸುತ್ತಿರಬೇಕಾದರೆ- +೩೫. ಏನೆಂದು ಚಿಂತಿಯ ಮಾಡಿದಳು? +ಈ ಕಡೆ ಹಾಡಿಯಲ್ಲಿ ಏನು ಕಥೆ ನಡೆಯಿತೆಂದರೆ, ಪುಣ್ಯಕೋಟಿ ಲಕ್ಕಬ್ಬೆಗೆ ಚಂದಮುತ್ತನ ಚಿತ್ರ ಚರಿತ್ರದ ಬಗ್ಗೆ ಚೋದ್ಯದ ಸುದ್ಧಿ ತಲುಪಿ ಆಘಾತವಾಗಿತ್ತು. ಮಗನಿಲ್ಲದಾಗ ಮಗನ ಗುರುದೇವ, ಅದೇ ಆ ಮಹಾನುಭಾವ ಬಂದು “ಯಕ್ಷಿಯ ಸಂಗವಾಗಿದೆ ಮಗಂಗೆ; ಕಾಪಾಡಿಕೊ” ಎಂದು ಅವನು ಹೇಳಿ, ಇವಳು ಕೇಳಿದ್ದೇ ಆಯ್ತು ನೋಡು ಬೋಧೆ ತಪ್ಪಿ ಬಿದ್ದಳು. ಸ್ಮೃತಿ ಬಂದಾಗ ಮಹಾನುಭಾವ ಇರಲಿಲ್ಲ. ಕಣ್ಣಿಂದ ಜಲಬಿಂದು ಜಗುಳಿ ಮುದುಕಿಯ ಆನಂದಗಳು ಇದ್ದಿಲಾದವು. ನೆಲಮುಗಿಲುಗಳಿಗೆ ತನ್ನ ದುಃಖವ ತೋಡಿಕೊಂಬಂತೆ ಮ್ಯಾಲೂ, ಕೆಳಗೂ ನೋಡಿ, +ಶಿವನೇ ಸಲವಬೇಕು ನೀ ನಮಗ +ಎತ್ತು ಬಗಲಾಗ +ಎಂದು ಶಿವದುಃಖ ಮಾಡುತ್ತ, +ಹೂವಿನ ವಿನ್ಯಾಸದ +ಮೂರ್‍ಕಾಲಿನ ಮಂಚವನೊರಗಿ +ಮುಂಗೈ ಮ್ಯಾಲೆ ಗದ್ದವ ಹೇರಿ ಗುಮಾನಿ ಬಂದು +ಚಿಂತಿಯ ಮಾಡಿದಳು. +ಏನೆಂದು ಚಿಂತಿಯ ಮಾಡಿದಳು? +ಎಲ ಎಲಾ, ಹೌಂದಲ್ಲ! +ಮಂದಮತಿಗೆ ಹೊಳೆದಿರಲಿಲ್ಲ. +ರಾತ್ರಿಯಿಡೀ ಎಲ್ಲೆಲ್ಲೋ ಅಲೆದಾಡಿ ಬರುವ +ಸುಖ ಸುರತದಲ್ಲಿ ಅದ್ದಿ ಬಂಧಂಗಿರುವ +ಮುರಿದ ಶಬ್ದಗಳಲ್ಲಿ ಏನೇನೋ ಕನವರಿಸುವ +ಆಡುತಾಡುತ ಶಬ್ದಗಳ ಮರೆವ +ನೋಡಿ ನೋಡದ ಹಾಗೆ ನುಡಿಸದೆ ಹೋಗುವ +ಹತ್ತಿರ ಬಂದರು ತಾತ್ಸಾರ ಮಾಡುವ +ಎಲೆ ಮರೆಯ ಪರಾಗ ಭರಿತ ಹೂವಿಗಾಗಿ +ದುಂಬಿಯಂತೆ ಅಂಬಲಿಸುತ್ತ +ಸದಾ ಪರಗ್ಯಾನ ಪರಚಿತ್ತದಲ್ಲಿರುವ! +ಇದೆಲ್ಲ ಹೆಣ್ಣಿನ ಸಂಗದೋಷವಲ್ಲವೆ? +ಹೆಣ್ಣೆಂದರೆ ಇವನಿಗೆ ಯಕ್ಷಿಯ ವಿನಾ +ಇನ್ಯಾರು? +ಈಗೊ ಇನ್ಯಾವಗೊ ಹರಣ ಹಾರ್‍ಯಾವೆಂದು +ಹಾಗೂ ಹೀಗೂ ಕಾದು ಹ್ಯಾಗೋ ಬದುಕಿದ್ದೇನೆ. +ಹ್ಯಾಗಿರುವಿ ಎಂದೊಮ್ಮೆ ಕೇಳಿದನ? +ಇವನಿಗೆ ಹತ್ತಿದೆ ಅಮರಿಯ ವ್ಯಸನ. +ತಂದೆಯಿಲ್ಲದ ಕಂದನೆಂದು ಕೊಂಡಾಟದಲಿ ಬೆಳೆಸಿದರೆ +ಬೇಲಿಯಿಲ್ಲದ ಬದುಕಾಯಿತಲ್ಲ ಮಗಂದು! +ಇದನು ಅನ್ಯರಿಗೆ ಹೇಳಲಮ್ಮೆ ಶಿವನ ಕೇಳಲಮ್ಮೆ. +ಈಗಿವನಿಗೆ ನೀತಿನುಡಿ ಹೇಳಬಲ್ಲವನು ಕುಲಗುರುವೆ ಸೈ ಎಂದು +ಬುದಿಂಗನೆದ್ದು ಕುಲಗುರುವಿನಲ್ಲಿಗೆ ಓಡಿದಳು. ನಮಸ್ಕಾರವ +ಮಾಡಿ, ಏನ್ಹೇಳ್ಲಿ ನನ್ನಪ್ಪ, ಚಂದಮುತ್ತ, +ಒಂದರಿತು ಇನ್ನೊಂದನರಿಯದ ಕಂದನ +ನಡೆ ಚೋದ್ಯವೋ ಶಿವನೆ ನುಡಿ ಚೋದ್ಯ | ನೀನಾರೆ +ಹೇಳಬಾರದೆ ನೀತಿ ನುಡಿಯ || +ಕ್ಷಣ ನಕ್ಕು ದಿನವೆಲ್ಲ ಹುಬ್ಬುಗಂಟಾಗುವನು +ಹೃದಯಕ್ಕೆ ಬಾಹಿರಳ ಮಾಡಿ| ನೋಡುವನು +ಮುಳ್ಳಿರುವ ನೋಟಗಳ ಬೀರಿ || +ಚಂದ್ರನ ಕಲೆಯಂಥ ಕಲೆಗಳು ಮೂಡ್ಯಾವು +ಕಂದನ ಕೆನ್ನೆಯಲಿ ದಿನವು | ಕಣ್ಣಲ್ಲಿ +ದಣಿದ ಸುಖ ಆಕಳಿಸುತಾವು || +-ಎಂದು ಹಾಡಿಕೊಂಡತ್ತಳು. ಯಕ್ಷಿಯ ಸಂಗವಾಗಿದೆಯಂತೆ ಮಗಂಗೆ ಕವಡೆ ಚೆಲ್ಲಿ ಶಾಸ್ತ ನೋಡು ನನ್ನಪ್ಪಾ ಎಂದು ಜಲಜಲ ಕಣ್ಣೀರು ಸುರಿಸಿದಳು. +ತಾಯಿ ನುಡಿ ಸಾದ್ಯಾಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸುತ್ತ ಚೌಕಚಿತ್ತಾರದ ಮಣೆ ಮ್ಯಾಲೆ ಕಂತೆ ಹಾಸಿ ಕವಡೆಗಳ ತಂದು ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸಿದ. ಆಮ್ಯಾಲೆ ಭಕ್ತಿಯಿಂದ ಕವಡೆ ಚೆಲ್ಲಿ ಬೆರಳೆಣಿಸಿ, ಗಣಿತ ಗುಣಿಸಿ ಲೆಕ್ಕಾಚಾರ ಹಾಕಿ ಗಂಭಿರವಾಗಿ ಹೇಳಿದ. +ಕುಲಗುರು: ಹೌದು ಅಬ್ಬೆ. +ಮಗಂಗೆ ಯಕ್ಷಿಯ ಸಂಗವಾಗಿದೆಯೆಂದು +ಶಾಸ್ತ ಹೇಳುತ್ತದೆ. +ಲಕ್ಕಬ್ಬೆ: ಅಯ್ಯೊ ಅಯ್ಯೊ ನಾನು ಕೇಳಿದ್ದು +ನಿಜವಾಗಿದೆಯಲ್ಲಪ್ಪ. +ಕುಲಗುರು: ಆದರವಳು ನೀನಂದುಕೊಂಡಂತೆ +ಸೇಡುಮಾರಿ ಯಕ್ಷಿಯಲ್ಲ ಅಬ್ಬೆ. +ಲಕ್ಕಬ್ಬೆ: ಅವಳು ಆಕಾಶದ ತುದಿಯಲ್ಲಿರುವವಳು +ನಮಗೆ ದೇವರೊಂದಿಗೆ ಒಗೆತನ +ಅಥವಾ ವೈರ ಸಾಧ್ಯವೆ ಶಿವನೆ? +ಕುಲಗುರು: ಸಮಾಧಾನ ಮಾಡಿಕೊ ಅಬ್ಬೆ. +ಚಂದಮುತ್ತ ನಿನಗೆ ಮಗನಾದರೆ ನನಗೆ ಶಿಷ್ಯ. +ಶಾಸ್ತ ರೀತ್ಯಾ ಲಾಭಾಂಶಗಳೇ ಜಾಸ್ತಿಯಿವೆ +ಈ ಒಗೆತನದಲ್ಲಿ. +ಲಕ್ಕಬ್ಬೆ: ಅವಳು ಎಷ್ಟೆಂದರೂ ಬ್ಯಾರೆ ಸೀಮೆಯವಳು. +ಹಸಿರು ಕಣ್ಣವಳು, ಕರಾಳ ವಿದ್ಯೆ ಬಲ್ಲವಳು. +ಅವಳ ಕಟ್ಟಳೆ ಹ್ಯಾಂಗಿದೆಯೊ! +ಅವಳ ಜೊತೆ ವ್ಯವಹರಿಸಲಿಕ್ಕೆ +ನಿನ್ನ ಜಾಣ್ಮೆ ಸಾಲದೇ ಬರಬಹುದು ಅಂತ +ತಿಳಿ ಹೇಳಿ ಮಗನ ಪಳಗಿಸು ಶಿವನೇ. +ಲಕ್ಕಬ್ಬೆ: ನಮ್ಮಳವು ಮೀರಿದ ಸತ್ಯಗಳು ಬೇಕಾದಷ್ಟಿವೆ ಅಬ್ಬೆ; +ಅವುಗಳನ್ನು ಶಿವ ನೋಡಿಕೊಳ್ಳುತ್ತಾನೆ. ಮಗನನ್ನ +ಹ್ಯಾಂಗೂ ಯಕ್ಷಿಗೆ ಗುಡ್ಡ ಬಿಟ್ಟಿರುವಿ. ಇನ್ನವನ +ಆಗುಹೋಗು ಅವಳದಲ್ಲವ? ನೀನು ಯಕ್ಷಿಯ +ಮೀಯಿಸಿದ ದಿನ ಕಾರಣಿಕದಲ್ಲಿ ನಿನ್ನನ್ನವಳು ಅತ್ತೆ‌ಅಂದದ್ದು +ನೆನಪಿದೆಯ ಅಬ್ಬೆ? +ಲಕ್ಕಬ್ಬೆ: ಆಹಾ ಹೌದು ಶಿವನೆ! +ಎಂದು ನೆನಪಾಗಿ ತಾಯಿ +ಸಳಸಳ ಪುಳಕ ಜಲದಲ್ಲಿ ಅದ್ದಿಹೋದಳು. +ಕುಲಗುರು : ಅಂದಿನಿಂದ ಚಂದಮುತ್ತನ ಕೀರ್ತಿ ಹಬ್ಬಿದೆ. +ನಮ್ಮ ಕಾಡು ಹಚ್ಚ ಹಸಿರಾಗಿದೆ. +ಕೊಟ್ಟಿಗೆಯಲ್ಲಿ ದನಕರು, ಕಾಡಿನಲ್ಲಿ ಜೇನು, +ಹಣ್ಣು ಹೆಚ್ಚಿಲ್ಲವೆ? +ನಮ್ಮ ಕೂಸುಗಳು ಹೆಚ್ಚು ಹೆಚ್ಚು ಹಡೆಯುತ್ತಿಲ್ಲವೆ? +ಹೆರಿಗೆಯಾಗಿ ಒಂದು ಮಗುವೂ ಸತ್ತಿಲ್ಲ; ಸಾಕಲ್ಲವೆ? +ಚಂದಮುತ್ತ ಸಣ್ಣ ಹರೆಯದಲ್ಲಿ +ದೊಡ್ಡದನ್ನ ಸಾಧಿಸಲು ತಪಿಸುತ್ತಿದ್ದಾನೆ. +ಯೋಗ ಭಾಗ್ಯ ಹಾಂಗಿದ್ದರೆ ಹಂಗೇ ಆಗಲೇಳು. +ನಿನ್ನ ಗೋಳುಗಳಿಂದವನ ವ್ರತ ಭಂಗ ಮಾಡಬೇಡ. +ಯಕ್ಷಿಯನ್ನ ಸೊಸೆಯಾಗಿ ಪಡೆದುದಕ್ಕೆ +ಕುಲದೇವರ ಹಬ್ಬ ಮಾಡಬೇಕು ನೀನು +ಹೋಗು ಹೋಗು. +-ಎಂದು ತಿಳಿ ಹೇಳಿ ಕಳಿಸಿದ. ಮಗನನ್ನ ಇನ್ನೊಮ್ಮೆ ಕಳಕೊಂಡವಳಂತೆ ಗೋಳಾಡಿದಳು ಮುದುಕಿ. ಆಮೇಲಾಮೇಲೆ ತಾಯಿಗೆ ವಿಚಿತ್ರ ಅನುಭವಗಳಾದವು. ಒಮ್ಮೊಮ್ಮೆ ಹೊಸಲೋಕದ ಹೆಸರಿಸಲಾಗದ ಸುಖದ ಸನ್ನಿಧಿಯಲಿದ್ದಂತೆ ಆಕಾರಣ ಆನಂದಂಗಳ ಅನುಭವಿಸಿದಳು. ರಾತ್ರಿ ಹೊಳಹುದೋರದ ಶಾಂತ ಬೆಳಕು ಗೂಡಿನ ತುಂಬ ಸುಳಿದಾಡಿದ್ದ ಕಂಡಳು. ಮಗನೊಂದಿಗೆ ತನ್ನ ಗೂಡಿಗೆ ಯಾರೋ ಅತಿಥಿ ಬಂದ ಹಾಗೆ, ಗಾಳಿಯಲ್ಲಿ ಗಾಳಿಯಾಗಿ ಸಂಚರಿಸಿದ ಹಾಗೆ ಅನಿಸಿಕೊಂಡಳು. ದನಕರು ಅನೇಕ ಬಾರಿ ಇದ್ದಕ್ಕಿದ್ದಂತೆ ಕಿವಿ ನಿಮಿರಿ ಕಣ್ಣುಗಳು ಅಗಲವಾಗಿ ತೆರೆದು, ರೆಪ್ಪೆ ತುಳುಕದೆ , ನಿಶ್ಯಬ್ದವಾಗಿ ತನ್ನ ಅಥವಾ ಮಗನ ಹಿಂದೆ ಅಥವಾ ಮುಂದೆ ಅಥವಾ ಅಕ್ಕಪಕ್ಕ ನೋಡುತ್ತ ಮೈಮರೆಯುತ್ತಿದ್ದವು. +ಎನೇ ಆದರೂ ಯಕ್ಷಿ ನೆತ್ತರಲ್ಲಿ ಹುಟ್ಟಿದವಳಲ್ಲ, ನೀರಲ್ಲಿ ಬೆಳೆದವಳಲ್ಲ. ಅವಳೇನು ಉಂಡುಟ್ಟು ಬಾಳುವ ಹೆಣ್ಣೆ? ಇಲ್ಲಿಗೆ ತನ್ನ ಸಂತಾನ ಸಮಾಪ್ತಿಯಾಯಿತೆಂದು ನೆನಪಾದೊಡನೆ ಬೆಲ್ಲದಂಥಾ ಮನಸ್ಸು ಬೇವಾಗಿ ಹಡೆದ ಒಡಲಿಗೆ ಕೆಂಡ ತುಂಬಿದೆಯೇ ಮಾಯಿ- ಎಂದು ಏಳೇಳು ಲೋಕದ ಶಿವದುಃಖ ಮಾಡುತ್ತ ಕೂರುತ್ತಿದ್ದಳು. ಮಗನ ಪಳಗಿಸಲಾರೆನೆಂಬ, ಆಗುವ ಅನಾಹುತ ತಪ್ಪಿಸಲು ತನ್ನಿಂದಾಗದೆಂಬ ನಿರ್ಧಾರಕ್ಕೆ ಬಂದಂತಿದ್ದಳು ಮುದುಕಿ. ನಾವೇನು ಹೇಳಿದರೂ ಅದಕ್ಕೆ ಕಲ್ಲಿನಂತೆ, ಇಲ್ಲವೆ ಕಾಡಿನಂತಿರುತ್ತಿದ್ದಳು. ದಿನಾ ಕ್ಷೀಣಿಸುತ್ತಾ ಯಾವಾಗ ನೋಡಿದರೂ ಗುಟ್ಟಾಗಿ ಅತ್ತಹಾಗಿರುತ್ತಿದ್ದಳು. ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳುತ್ತಿದ್ದಳು. ನಮಗೆ ಆ ಮಾತು ಕೇಳಿಸುತ್ತಿರಲಿಲ್ಲ. ಕೇಳಿದರೂ ತಿಳಿಯುತ್ತಿರಲಿಲ್ಲ. +೩೬. ನಖಶಿಖಾಂತ ಉರಿದೆವು +ನಮ್ಮ ಕಥೆಗೆ ಒಂದಿನಿತೂ ಒದಗದ ಮಹಾನುಭಾವ ಮರೆವಿಗೆ ಸಂದು ಆರೆಂಟು, ಚಂದ್ರರು ಕಳೆದರು. ಈ ಮಧ್ಯೆ ಚಂದಮುತ್ತ ತಿಂಗಳುರಾಗದ ಕಠಿಣ ವ್ರತಾಚರಣೆಯಲ್ಲಿದ್ದನಾಗಿ ಘಟಿತಂಗಳೇನೂ ನಡೆಯಲಿಲ್ಲ. +ಅದೇನು ವ್ರತಾಚರಣೆಯೋ, ಚಂದಮುತ್ತ ದಿನಾ ತಾರೆ ಅಡಗಿ ತಾವರೆ ಅರಳುವ ಹೊತ್ತಿಗೆದ್ದು ಜಳಕವ ಮಾಡಿ ಜಡೆಕಟ್ಟಿ ಲಂಗೋಟಿ ಹಾಕಿಕೊಂಡು, ಮುಂಜಾನೆಯ ಹಾಲುಗಂಜಿ ಉಂಡು ಒಡಲ ತಂಪೇರಿಸಿಕೊಂಡು ಕಾಡು ಹೊಕ್ಕನೆಂದರೆ ಹೊರಬರುವುದು ಯಾವಾಗಲೊ. ವ್ರತಾಚರಣೆಯ ವಿಧಿಗಳು ಬೋರು ಬೋರೆಂದು ನಾವ್ಯಾರೂ ಆ ಕಡೆ ಸುಳಿಯಲಿಲ್ಲ. ಆ ದಟ್ಟ ಕಾಡಿನಲ್ಲಿ ಗಿಡಬಳ್ಳಿಗಳ ಅಡಿ ಪೊದರು ಕಡಿದು, ಮೇಲು ಪದರು ಸವರಿ ದಾರಿಮಾಡಿಕೊಂಡು ಚಂದಮುತ್ತನಿದ್ದಲ್ಲಿಗೆ ಹೋಗುವಷ್ಟು ಆಸಕ್ತಿ ನಮ್ಮಲ್ಲಿರಲಿಲ್ಲ. +ಚಂದಮುತ್ತ ಯಕ್ಷಿಯ ಸ್ನೇಹವ +ಚಪ್ಪರಿಸಿ ಸವಿದನೆಂದು +ಪರಾಗಭರಿತ ಹೂವಿನಲ್ಲಿ ದುಂಬಿ +ಹುದುಗಿ ಹೋಯಿತೆಂದು +ಪ್ರಿಯವಾದ ಚಾಡಿಗಳ ಹಾಡುಮಾಡಿ ಚಂಡಿನ ಹಾಗೆ ಅವುಗಳನ್ನು ನಮ್ಮ ಮಧ್ಯೆ ಎಸೆದಾಡುತ್ತ ಪರಸ್ಪರ ಚುಡಾಯಿಸುತ್ತ ಯಕ್ಷಿಯ ಗುಡಿಯ ಮ್ಯಾಲಿನ ಮೋಡಗಳಲ್ಲಿ ನವಿಲಾಟವಾಡುತ್ತ ಕಾಲ ಕಳೆಯುತ್ತಿದ್ದೆವು. +ಆದರೆ ಯಾವಾಗಂದರೆ ಆವಾಗ ಕೊಳಲ ತಾಲೀಮಿನ ದನಿ ಕೇಳಿಸಿ ಕಿವಿ ನಿಮಿರಿ ನಿಲ್ಲುತ್ತಿದ್ದೆವು. ನಾವು ಹಿಂದೆಂದೂ ಕೇಳರಿಯದ ನಾದಂಗಳು, ಹಾಡಿನ ತುಂಡುಗಳು ಪರಿಮಳದಂತೆ ತೇಲಿ ಬಂದು ಪರವಶಗೊಳಿಸುತ್ತಿದ್ದವು. ಜನ್ಮಜನ್ಮಾಂತರದ ಆಳದ ಸುಖ ಅಥವಾ ನೋವಿನ ಮ್ಯಾಲೆ ಯಾರೋ ಬೆರಳಾಡಿಸಿದಂತೆ ತನ್ಮಯರಾಗುತ್ತಿದ್ದೆವು. +ಚಂದಮುತ್ತನ ನಡೆನುಡಿಗಳಿಗೆ ಈಗ ಅಸಮಾನ್ಯ ಘನತೆ ಒದಗಿತ್ತು. ಅವನೊಂದು ಹೆಜ್ಜೆಯಿಟ್ಟರೂ ಅದರಲ್ಲಿ ನಿರ್ಧಾರ ಮತ್ತು ಛಲಗಳಿದ್ದುವಾಗಿ ನಡೆಯುವಾಗ ನಾವರಿಯದ ಯಾವುದೋ ಲೋಕದ ಜಬರ್‍ದಸ್ತ್ ಸಾಮ್ರಾಟನಂತೆ ಕಾಣುತ್ತಿದ್ದ. ಜೋಡಿ ಚಂದ್ರಾಮರಂಥ ಅವನ ಕಣ್ಣುಗಳಿಗೆ ಕ್ಷಿತಿಜದಾಚೆಗಿನ ದನಕರುಗಳೇನು, ಚಂದ್ರನಲ್ಲಿಯ ಜಿಂಕೆ ಕೂಡ ಕಾಣುತ್ತಿತ್ತು. ಬೀಜ ಬಿರಿಯುವ ಶಬ್ದ, ಚಿಕ್ಕೆ ತಾರೆಯರ ರೆಪ್ಪೆ ದನಿ ಕೂಡ ಕೇಳಿಸುತ್ತಿತ್ತು ಅವನ ಕಿವಿಗಳಿಗೆ. ಅವನ ಮೈಯಂತ ಮೈಯೆಲ್ಲ ಜಗ ಜಗ ಹೊಳೆಯುತ್ತಿತ್ತು. ಕೊಳಲು ನುಡಿಸುತ್ತಿದ್ದ ನೇರ ಶಿವನಿಗೇ ಕೇಳಿಸುವಂತೆ, ಕೇಳಿ ಶಿವ ಕೂತಲ್ಲೆ ಮೈಮರೆಯುವಂತೆ. ಸಣ್ಣವನಾದರೂ ಧರೆಗೆ ದೊಡ್ಡ ಸಾಧನೆಯಲ್ಲಿ ತೊಡಗಿದ್ದಾನೆಂದು ನಮಗೆ ಖಾತ್ರಿಯಾಗಿತ್ತು. ಆ ಸಾಧನೆ ಸೋಮವಾರ ಹುಣ್ಣಿವೆಯಂದು ಮಂಗಳವಾಗಲಿದೆಯೆಂದು, ಅವನ ಸಾಧನೆಯ ಸಿದ್ಧಿ ಫಲಂಗಳು ಅಂದೇ ಸಿಕ್ಕಲಿವೆಯೆಂದು ಸುದ್ಧಿ ಕೇಳಿದ್ದೇ ನಾವೆಲ್ಲ ಭಾವಪರವಶರಾದೆವು. ಕಲಾವಿದರೆಲ್ಲ ಕನಸುಗಾರರೇ. ಆದರೆ ಚಂದಮುತ್ತನ ಹಾಗೆ ನಮ್ಮನ್ನು ಕರುಳಿಗಂಟಿಸಿಕೊಂಡವರಿಲ್ಲ. ಸುದ್ಧಿ ಕೇಳಿ ನಮ್ಮಲ್ಲಿಯ ಕೆಲವರು ಬುಟ್ಟಿ ತುಂಬ ಬಣ್ಣದ ಹೂ ಹರಿದು ಆಕಾಶಕ್ಕೆ ಎರಚಿ ಹೂಮಳೆಯಲ್ಲಿ ನಿಂತು ಆನಂದವ ಆಚರಿಸಿದರು. ಇನ್ನೊಬ್ಬ ನೂರೊಂದು ಕಿರಣಗಳ ಪಂಚೈದು ಬಣ್ಣದ ಹೂಗಳಿಂದ ಮಳೆಬಿಲ್ಲು ಮಾಡಿ ಆಕಾಶವ ಸಿಂಗರಿಸಿದ. ಒಬ್ಬ ಯಕ್ಷಿಯ ಬಗ್ಗೆ ರಾಗ ರಚನೆಯ ಕಟ್ಟಿ ಕವಿ ಮಾಡಿ ಹೀಗೆ ಪದ ಹಾಡಿದ: +ತಿಂಗಳ ನಗೆಯವಳೊ +ನಮ್ಮ ಯಕ್ಷಿ | ಚಿಕ್ಕೆಗಳ ಮುಡಿಯುವವಳೊ +ಎದ್ದು ನೋಡೋ ಮುದ್ದು ಚಂದ್ರಾಮ | ಕಾಡಿನಲಿ +ಕೈಲಾಸ ತೂಗಿರುವಳೊ || +ಗಿಂಡಿಯ ಮೊಲೆಯವಳೊ +ಚಿನ್ನದ ಚೊಂಬಿನ ಮೊಲೆಯವಳೊ +ಚಿನ್ನದ ಚೊಂಬಿನ ಮೊಲೆಯಿಂದ | ಬೆಳಕಿನ +ನೊರೆಹಾಲ ಸುರಿವವಳೊ || +ಹಾಡಿಗೆ ಒಲಿಯುವಳೊ +ಹುರಿಗೊಂಡ | ನಾದದಲಿ ಅಡಗಿರುವಳೊ +ಗುಂಗುಗುಂಗಿನ ನಾದ ಗುಂಭದ | ಒಳಗಿಂದ +ಹಾಡಾಗಿ ಹೊಮ್ಮುವವಳೊ || +ಚಂದಮುತ್ತನ ವ್ರತಾಚರಣೆಯ ಸಿದ್ಧಿಗೆ ಯಾವ ಕಂಟಕಗಳೂ ಬಾರದಿರಲೆಂದು ಎಳೆಯ ಸರಳನೊಬ್ಬ ಕೆಸರು ಮಣ್ಣಿನಲ್ಲಿ ಕಂಟಕ ನಿವಾರಕ ಬೆನಕನ ಮೂರ್ತಿಯ ಮಾಡಿ ಅಡ್ಡಬಿದ್ದ. ಇಲ್ಲಿಯೇ ಬಿಕ್ಕಟ್ಟಾಯಿತು ನೋಡು. ಇನ್ನೊಬ್ಬ ಮುಂದೆ ಬಂದು ಬೆನಕನಿಗೆ ಮಜ್ಜನ ಮಾಡಿಸೋಣವೆಂದು ಮೂರ್ತಿಯ ಮ್ಯಾಲೆ ನೀರು ಸುರಿದ. +ಅಯ್ಯಯ್ಯೋ ಪಾಪವೇ! ಅಕಟಕಟಾ ಕರ್ಮವೇ! +ಕೆಸರಿನ ಬೆನಕ ಭಿನ್ನವಾಗಿ +ಕೈಕಾಲೊಂದು ಕಡೆ, ಸೊಂಡಿಲೊಂದು ಕಡೆ ಬಿದ್ದು +ಮೂರ್ತಿಯ ಮಾಡಿದಾತ ದೊಡ್ಡ ದನಿ ತೆಗೆದು +ಬಾಯಿ ಬಡಕೊಂಡತ್ತ. +ಸುರುವಾಯಿತು ವಿರಸ. +ಉರಿದೆವು ನಖಶಿಕಾಂತ. +ಕನಸುಗಳು ಇತ್ತಂಡಗಳಾಗಿ +ಸುಡುಸುಡುವ ಮಾತು ಸುರಿದೆವು +ಪರಸ್ಪರರ ಮ್ಯಾಲೆ. +ರಾತ್ರಿ ಸುಮ್ಮನಿರದೆ ಅಬ್ಬೆಯ ನಿದ್ದೆಗೂ ನುಗ್ಗಿ +ಬೆಳ್ಳಂಬೆಳಗು ಜಗಳವಾಡಿ +ಹುಡದಿಯಾಡಿದೆವು +ಕಠಿಣೋಕ್ತಿಗಳಿಂದ ಹೀಂಕಾರವಾಗಿ ಜರಿದು +ಪಂಥವ ಮಾಡಿ ಅಗಲಿದೆವು. +ಹಿಂಗಾಗಿ ಹುಣ್ಣಿಮೆ ದಿನದ ಯಕ್ಷಿಯ ಬೆಳಗಿನ ಪೂಜೆಗೆ +ನಾವ್ಯಾರೂ ಸಿದ್ಧರಿರಲಿಲ್ಲ. +ಹಕ್ಕಿಯ ಚಿಲಿಪಿಲಿಗೆ ಎಚ್ಚೆತ್ತು ನಾವಿನ್ನೂ ಆಕಳಿಸುತ್ತಿರಬೇಕಾದರೆ- +ಯಕ್ಷಿಯ ಗುಡಿಗೆ ಚಂದಮುತ್ತನ ಬದಲು ಲಕ್ಕಬ್ಬೆ ಸಾಮಾಗ್ರಿ ಸಮೇತ ಬಂದುದ ಕಂಡು ಬೆರಗಾದೆವು. ಅವಳೊಂದಿಗೆ ಕಪಿಲೆಯ ಕರು ನಂದಿನಿ ಬಂದಿತ್ತು. ಇದೇ ಮೊದಲ ಬಾರಿ ಇಷ್ಟು ದೂರ ಬಂದುದರಿಂದ ಗುಡಿ, ಕಾಡು ಘಮಘಮ ಮಾಡಿಸುವ ಮಲ್ಲಿಗೆ ಇವನ್ನೆಲ್ಲ ಕಂಡು ಕರುವುನ ಕಿವಿಯಲ್ಲಿ ಗಾಳಿ ತುಂಬಿ ವಿನಾಕಾರಣ ಓಡಾಡಿ ಆನಂದವನ್ನಾಚರಿಸಿತು. ನಾವು ಮುದುಕಿಯ ಉತ್ಸಾಹ ಕಂಡು ಆಶ್ಚರ್ಯವ ಆಚರಿಸುತ್ತಿರಬೇಕಾದರೆ ಎಲ್ಲಿಗೋ ಹೋಗಿದ್ದ ಯಕ್ಷಿ ಅವಸರದಲ್ಲಿ ಬಂದು ವಿಗ್ರಹದಲ್ಲಿ ಅಡಕಗೊಂಡಳು. ಅಬ್ಬೆಗಿದು ಕಾಣಲಿಲ್ಲವಾದರೂ ನಂದಿನಿಗೆ ಗೋಚರವಾಗಿ ಮೈ ಅದುರಿ ಹೆದರುತ್ತ ಕಿವಿ ನಿಮಿರಿ ಕಣ್ಣಗಲಿಸಿ ಒಂದೇ ಸಮನೆ ನಿಟ್ಟಿಸಿತು. ಹೊತ್ತು ಬಹಳ ಹೀಗೇ ನಿಂತು ನೋಡಿ ವಿಗ್ರಹದ ಬಳಿ ಬಂದು ಮೈತುಂಬ ಮೂಸಿ ಅಪಾಯವಿಲ್ಲವೆಂದು ಖಾತ್ರಿಯಾದಾಗ ಆಶೀರ್ವದಿಸುವ ಅವಳ ಕೈ ನೆಕ್ಕಿತು. +ಚಂದಮುತ್ತ ಅವಸರದಲ್ಲಿ ಗುಡಿಗೆ ಬಂದಾಗ ಲಕ್ಕಬ್ಬೆ ಆಗಲೇ ಹಸಿರು ಗಂಜಳದಲ್ಲಿ ಗುಡಿ ಸಾರಿಸಿ, ಗಂಧದ ನೀರು ಸಿಂಪಡಿಸಿ, ಹೊರಗಡೆ ಬಣ್ಣದ ರಂಗೋಲಿ ಹುಯ್ಯುತ್ತಿದ್ದಳು. ಮಗನ ನೋಡಿ “ಮಲ್ಲಿಗೆ ಮೊಗ್ಗಿನಿಂದ ದಂಡೆ ಮಾಡು” ಎಂದು ಹೇಳಿ ಒಳಗೆ ಬಂದು ನಂದಾದೀಪ ಏರಿಸಿದಳು. ಯಕ್ಷಿಗೆ ಎಣ್ಣೆತುಪ್ಪದಲ್ಲಿ ಮಜ್ಜನ ಮಾಡಿಸಿದಳು. ಆಮ್ಯಾಲೆ ಸೀಗೆ ಕಾಯಿಂದೊಮ್ಮೆ, ಸಾಬೂನಿನಿಂದೊಮ್ಮೆ ಮೈಯ್ಯುಜ್ಜಿ ಪಾತಾಳಗಂಗೆಯ ತಿಳಿನೀರೆರೆದು ತಂಪು ಮಾಡಿದಳು. ಅಡಿಯಿಂದ ಮುಡಿತನಕ ಸೀರೆ ಸೆರಗಿನಿಂದೊರೆಸಿ ಮೈ ಆರಿಸಿದಳು. ನಮ್ಮಲ್ಲಿಯ ಕೆಲವರಾಗಲೇ ಮೋಜು ಮಜ ಮಾಡುತ್ತ ಮುದುಕಿಯ ಕಣ್ಣಿಗೆ ಮಾಯ ಮಾಡಿಯೇ ಬಿಟ್ಟರು. ವಿಗ್ರಹದ ಬದಲು ಅಬ್ಬೆಗೆ ತನ್ನ ಸೊಸೆ ಚಕೋರಿ ಎಂಬ ಯಕ್ಷಿಯೇ ಕಾಣತೊಡಗಿದಳು. ಅವಳ ಮೂರು ಮಾರಿನ ಕಾಳನೀಳ ಕೂದಲು ಕೊಡವಿ ಜಾಡಿಸಿ, ಎಳೆಬಿಸಿಲಲ್ಲಿ ಸೊಂಪಾಗಿ ಬೆನ್ನಿಗಿಳಿಸಿ, ಬಂಗಾರ ಬಾಚಣಿಕೆಯಿಂದ ಹಿಕ್ಕಿ, ಹೇನುಗಳ ಹೆಕ್ಕಿ ತೆಗೆದು ಕೊಡದಂಥಾ ತುರುಬು ಕಟ್ಟಿದ ಕನಸು ಕಂಡಳು. ಉಡುಸೀರೆಯಲ್ಲಿ ಮೇಲಾದ, ಸೆರಗಿನಲ್ಲಿ ಹಾರುವ ಗಿಣಿ ನೂರು ಬರೆದ ಇಳಕಲ್ ಸೀರೆಯನುಡಿಸಿ, ಬುಗುರಿ ಕುಚದೆದೆಗೆ ಕುಣಿವ ನವಿಲು ಬರೆದ, ನವಿಲುಗುಂದದ ಕುಬಸ ತೊಡಿಸಿದಳು. +ಲಕ್ಕಬ್ಬೆಗೆ ಹ್ಯಾಗೇನೋ ನಮಗೆ ಮಾತ್ರ ವಿಗ್ರಹದಲ್ಲಿ ಅಡಕಗೊಂಡಿದ್ದ ಯಕ್ಷಿಯೂ ಕಾಣಿಸುತ್ತಿದ್ದಳಾಗಿ ಉತ್ಸಾಹದಲ್ಲಿ ಅಬ್ಬೆ ಸೇವೆ ಮಾಡುವುದು, ಯಕ್ಷಿ ಸಂಕೋಚದಿಂದ ಮುಟ್ಟಿದಲ್ಲಿ ಮುದುಡುವುದು ನೋಡಿ ನಮಗೆ ಬಹಳ ಮೋಜೆನಿಸಿತು. ಅಬ್ಬೆಯ ಅಕ್ಕರೆಗೆ ಚಕೋರಿ ಕರಗಿ ವಿಗ್ರಹದಲ್ಲೂ ಬೆವರಿದ್ದಳು. ಲಕ್ಕಬ್ಬೆ ಯಕ್ಷಿಯ ಸುಳಿಗುರುಳ ನ್ಯಾವರಿಸಿ, ಎಳೆಯ ಕುಂತಳ ತಿದ್ದಿ ಕೆನ್ನೆ ಕದಪುಗಳ ತಿಳಿ ಬೆವರೊರೆಸಿದಳು. ತಿದ್ದಿ ತೀಡಿದಳು ನೀಟಾದ ಬೈತಲೆಯ. ಕಣ್ಣಿಗೆ ಕಾಡಿಗೆ, ನೊಸಲಿಗೆ ಚಂದ್ರನ ತಿಲಕವನ್ನಿಟ್ಟಳು. ಸಂಪಿಗೆಯೆಸಳು ಮೂಗಿನಲ್ಲಿ ತೂಗುವ ಮುತ್ತಿನ ಮೂಗುತಿಯಿಟ್ಟಳು. ಕರಗಳ ಮ್ಯಾಲೆ ಗೀರು ಗಂಧವ ಬರೆದಳು. ಟೊಂಕಕ್ಕೆ ಒಡ್ಯಾಣ ಬಿಗಿದು ಕೊರಳಿಗೆ ಚಂದ್ರಹಾರಗಳನ್ನಿಟ್ಟು ಬಂಗಾರದಲ್ಲಿ ಶೃಂಗಾರ ಮಾಡಿದಳು. ಎಡಬಲ ಹೂ ಹಿಂಗಾರುಗಳನ್ನಿಟ್ಟು ಯಕ್ಷಿಯ ದುಂಡುದುರುಬಿನ ತುಂಬ ಹೂದಂಡೆ ಮುಡಿಸಿದಳು. ಎಂತೆಂತು ಸಿಂಗರಿಸಿದರು ಸಾಲದು ಸಾಲದಾಯಿತು ಮುದುಕಿಗೆ. ಸೊಸೆಯ ಕಣ್ಣು ಕೋರೈಸುವ ದಿವ್ಯ ಚೆಲ್ವಿಕೆ ಕಂಡು ಅಬ್ಬೆಯ ಸಂಭ್ರಮ ಅಂಬಾರಕಡರಿತು. ಕಣ್ಣಗಲಿಸಿ ಬೆರಗಿನಲ್ಲಿ ನೋಡುತ್ತ ಮೈಮರೆತು ತಾನೂ ವಿಗ್ರಹವಾಗಿ ನಿಂತುಬಿಟ್ಟಳು. ಹೊತ್ತು ಬಹಳ ಹೀಗೇ ನಿಂತು ಆನಂದಬಾಷ್ಪಗಳ ಒರೆಸಿಕೊಂಡು- +ನನ್ನ ಗಗನಮಲ್ಲಿಗೆ ಹೂವೇ +ಆಕಾಶದ ಹೊಂಬೆಳಕೇ +ತಾವರೆಯ ಮುಖದವಳೇ +ತೊಂಡೆ ತುಟಿಯವಳೇ +ಮೊಳಕೆ ನಗೆಯವಳೇ +ತೆಳ್ಳಾನೆ ಹೊಟ್ಟೆವಳೇ +ತಂಬೀಗೆಯಂಥ ತುಂಬಿದ ಕುಚದವಳೆ +ಮೈತುಂಬ ಪರಿಮಳವ ನಾರುವವಳೆ +ನಿನಗ್ಯಾರೂ ಸರಿಯಾಗದ ಸೊಸೆಮುದ್ದೇ- +ಬಳಗವೆಲ್ಲವ ತೊರೆದು ಮಗನ ಬಳಿ ಬಂದೆ, +ನರಲೋಕದ ನಡಾವಳಿ ನಿನಗರಿದೆ? +ಮಗ ಬೇಕು, ಮಗನ ತಾಯಿ ಬ್ಯಾಡೆಂದರೆ ಹ್ಯಾಂಗವ್ವ? +ಅವನ ಜೊತೆ ಮಾತಾಡುತ್ತಿ, ನನ್ನೊಂದಿಗ್ಯಾಕಿಲ್ಲ? +ಅಕ್ಕಪಕ್ಕ ನರಮನುಷ್ಯರಾರಿಲ್ಲ +ಈಗಲೇ ಎರಡು ನುಡಿ ನುಡಿದಾಡು. +ನನಗೊಮ್ಮೆ ಬಾಯ್ತುಂಬ ಅತ್ತೇ ಅನಬಾರದೆ ನನ್ನವ್ವ? +ಗೊಲ್ಲ ಗೋಕುಲರ ನಡತೆ ಸೇರದೆ ನಿನಗೆ? +-ಎಂದು ನಿಟ್ಟುಸಿರಿಟ್ಟಳು ಮುದುಕಿ. ಇಂತೆಂಬ ನುಡಿ ಕೇಳಿ ಚಕೋರಿ ಎಂಬ ಯಕ್ಷಿ ಉಕ್ಕಿಬಂದ ಆನಂದವ ಹತ್ತಿಕ್ಕಲಾರದೆ ಹೊರಗೂ ತುಳುಕಲಾರದೆ ಚಡಪಡಿಸಿ ಥೈ ಥೈ ಕುಣಿಯಬೇಕೆಂದಳು. ಅತ್ತೇ ಎಂದು ಅಬ್ಬೆಯ ತಬ್ಬಿಕೊಂಡು ಮುದ್ದಿಸೋಣ ಎಂದಳು. ತನ್ನ ಘನಾನಂದವ ತಾನೆ ನಿಯಂತ್ರಿಸಿಕೊಂಡು ಮೆಲ್ಲಗೆ ‘ಅತ್ತೇ’ ಎಂದು ಹೇಳಿ ಭಕ್ತಿಯಿಂದ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕಾರ ಮಾಡಿಯೇ ಬಿಟ್ಟಳು. ಕಿವಿಗೆ ಶಬ್ದ ಕೇಳಿಸಿ ಪಾದಗಳಿಗೆ ಕೈ ಸ್ಪರ್ಶವಾಗಿ ಆನಂದದ ಉನ್ಮಾದದಲ್ಲಿ ಮುದುಕಿ ಹುಚ್ಚಡರಿದ ದನದ ಹಾಗೆ ಒದರಿ ಎದ್ದು ಗುಡಿತುಂಬ ಓಡಾಡಿದಳು. ಸಳ ಸಳ ಪುಳಕಂಗಳೆದ್ದು ಬೆವರು ಜಲದಲ್ಲಿ ಒದ್ದೆಯಾದಳು. ಕಣ್ತುಂಬ ನೋಡಿ ದೃಷ್ಟಿಯಾದೀತೆಂದು ವಿಗ್ರಹಕ್ಕೆ ಲಟಿಕೆ ಮುರಿದಳು. ಸೀರೆ ಸೆರಗಿನಿಂದ ಸೊಸೆಯ ತಿಳಿಬೆವರೊರೆಸಿದಳು. ಮತ್ತೆ ಎದ್ದಳು. ಕೂತಳು, ಹೊರಗೋಡಿ ಇನ್ನೆರಡು ಹೂ ತಂದು ಯಕ್ಷಿಯ ಮುಡಿಗಿರಿಸಿದಳು. ನಿಜ ಹೇಳಬೇಕೆಂದರೆ ಮುದುಕಿಯ ಬಗ್ಗೆ ನಾವು ಗಾಬರಿಯಾದೆವು. +೩೭. ನೆಲದ ತೇಜೋಮಯವೆ +ಸಂಜೆ ಸಾಯಂಕಾಲವಾಗಿ ಸೂರ್ಯನಾರಾಯಣದೇವರು +ಪಡುವಣದಲ್ಲಿ ಅಸ್ತಂಗತವಾಗಿ +ಮೂಡುಮಲೆ ಬಿರಿದು ಉದಯವಾದರು ಚಂದ್ರಾಮಸ್ವಾಮಿ. +ಶಿವನ ಸೋಮವಾರ, ತುಂಬಿದ ಹುಣ್ಣಿಮೆಯ +ಕಲ್ಯಾಣದ ಬೆಳಕು ಬೆಳ್ದಿಂಗಳು +ಕ್ಷಿತಿಜವ ತುಂಬಿ ತುಳುಕಿತು ಶಿವನೆ. +ನಿಶ್ಚಯಿಸಿದ ಗಳಿಗೆ ಮುಹೂರ್ತದಲ್ಲಿ +ಚಂದಮುತ್ತ ಜಳಕವ ಮಾಡಿ +ವಾರೆ ಜಡೆಕಟ್ಟಿ ನವಿಲಗರಿ ಜಡೆಗೇರಿಸಿಕೊಂಡು +ಒದ್ದೆ ಲಂಗೋಟಿಯಲ್ಲಿ, ಹೆಚ್ಚಿನ ಕರಿಕಂಬಳಿಯ +ಹೆಗಲಿಗೇರಿಸಿಕೊಂಡು ಗೂಡಿನ ಬಿಲಕ್ಕೆ ಹೋಗಿ +ಹೆತ್ತಯ್ಯ ಮುತ್ತಯ್ಯರ ನೆನೆದ. +ಸುತ್ತಲಿನ ದೇವರ ನೆನೆದ. +ಆದರದಿಂದ ಆದಿಯ ಶಿವನ ನೆನೆದು +ತಾಯಿ ಪಾರ್ವತಿಯ ನೆನೆದು +ದಾಸೋಹಂ ಭಕ್ತನ ಕಾಪಾಡಬೇಕೆಂದು ಕೈಮುಗಿದು +ಭಕ್ತಿಗೆ ಬೂದಿ ಹಚ್ಚಿಕೊಂಡು +ಗೆಜ್ಜೆ ಕೊಳಲು ಸೊಂಟದಲ್ಲಿ ಸಿಕ್ಕಿಕೊಂಡು ನಡೆದ. +ಒಂದು ಹೆಜ್ಜೆ ಮುಂದೆ ಹೋಗಿ ಹಿಂದೆ ನೋಡಿದ, +ಎರಡು ಹೆಜ್ಜೆ ಹಿಂದೆ ಹೋಗಿ ಹಿಂದೆ ನೋಡಿದ +ಮೂರಡಿ ಮುಂದೆ ಹೋಗಿ ಹಾ ಮರೆತಿದ್ದೆ ಎಂದು +ಹಿಂದಿರುಗಿ ಬಂದು, +ಅಬ್ಬೆಯ ಪಾದಮುಟ್ಟಿ ನಮಸ್ಕಾರ ಮಾಡಿ ಜಯ ಒದಗುವಂತೆ +ಶುಭನುಡಿ ಅಬ್ಬೆ ಅಂದ. +ವ್ರತಾಚರಣೆಯ ವಿಚಾರ ಅಬ್ಬೆಗೆ ಗೊತ್ತಿದ್ದದ್ದು ಅಲ್ವ. ರಾತ್ರಿಯಿಡೀ ಕೆಟ್ಟ ಕನಸಾಗಿತ್ತು. ಬಲಭುಜ ಬಲಗಣ್ಣು ಹಾರಿತ್ತು. ಇದನ್ನು ಒಡೆದಾಡುವ ಮುನ್ನವೇ, +“ನಿನಗೆ ಅಕ್ಷಯವಾಗ್ಲಿ ನನ ಕಂದಾ, +ಜಯವುಳ್ಳವನಾಗಿ ಬಾ” +-ಎಂದು ಬಾಯಿಂದ ಮಾತು ಬಂದೇ ಬಿಟ್ಟಿತು. ಮಗನ ನೆತ್ತಿಯ ಮುಟ್ಟಿ ಮೂಸಿ ಆಶೀರ್ವದಿಸಿ ಮಗ ಹೋಗುವ ಚಂದವ ತಾಯಿ ಕಣ್ತುಂಬ ನೋಡಿದಳು. ಆಮ್ಯಾಲೆ, ಕುಲಗುರುವಿನ ಬಳಿ ಬಂದು ಇಡಲು ಹಾಸಿ ಪಾದ ಪಡಕೊಂಡು ಪಾದಧೂಳಿ ಹಣೆಗೊತ್ತಿಕೊಂಡ. ಕುಲಗುರುವಿಗೆ ವ್ರತಾಚರಣೆಯ ವಿಚಾರ ಸಾದ್ಯಂತ ಗೊತ್ತಿದ್ದುದರಿಂದ “ದೇವಲೋಕದ ಸಿರಿಯ ದೋಚಿಕೊಂಡು ಬಾ ಮಗನೇ” ಎಂದು ಹಣೆ ತುಂಬ ಬಂಡಾರ ಹಚ್ಚಿ ಹರಸಿ ಕಳಿಸಿದ. +ಯಕ್ಷಿಯ ಗುಡಿಗೆ ಬಂದು ರಾತ್ರಿಯ ಶಾಂತಿ ಪೂಜೆ ಮಾಡಿ ಮೂರು ಬಾರಿ ಪ್ರದಕ್ಷಿಣೆ ಬಂದು ಚಂದ್ರಜಪ ಮಾಡಲು ಪಡುದಿಕ್ಕಿಗೆ ಮುಖ ಮಾಡಿದ. ನಾವಲ್ಲೆ ಬಾಯಿಮುಚ್ಚಿಕೊಂಡು ಅವನನ್ನೇ ನೋಡುತ್ತಿದ್ದೆವು. ನಮ್ಮ ಕಡೆಗೊಮ್ಮೆ ನೋಡಿದ. ಅವನ ನೋಟಗಳಿಂದಲೇ ನಮಗಲ್ಲಿರಲು ಅವಕಾಶವಿಲ್ಲೆಂದರಿತು ಹೆಚ್ಚು ಕಡಿಮೆ ಆಡದೆ ಕಣ್ಣಿಗೆ ದೂರ, ಕಿವಿಗೆ ಸಮೀಪವಾಗುವಂತೆ ಹೋಗಿ ಗಿಡಮರ ಅಡರಿ ಕೂತೆವು. ಆಗಲೇ ಬೆಳ್ದಿಂಗಳು ಬಲಿತು ಚದುರಿದ ಮೋಡಗಳಲ್ಲಿ ಮುತ್ತಿನ ಅರಮನೆ, ಗಾಜು ವಜ್ರಗಳ ಅರಮನೆಗಳು ಮೂಡಿ ಹೊಳೆಯುತ್ತಿದ್ದವು. ತರುಮರಗಳಲ್ಲಿ ಅಲ್ಲಲ್ಲಿ ಕತ್ತಲೆ ಜೋತು ಬಿದ್ದಿತ್ತು. ದೂರ ಕುಂತಿದ್ದೆವಾಗಿ ಚಂದಮುತ್ತ ಚಕೋರಿಯರ ವ್ರತಾಚರಣೆಯ ವಿವರಗಳು ನಮಗೆ ಕಾಣಲಿಲ್ಲ. +ಮಧ್ಯರಾತ್ರಿಯವರೆಗೆ ನಮಗೇನೂ ಕೇಳಿಸಲಿಲ್ಲ. ಶಿವನ ನಗೆಯಂಥ ಬೆಳ್ದಿಂಗಳು ಮಾತ್ರ ಹುಚ್ಚು ಹತ್ತಿಸುವಷ್ಟು ಮಾದಕವಾಗಿದ್ದುದರಿಂದ ಕೆಲವರಾಗಲೇ ತೂಕಡಿಸುತ್ತಿದ್ದೆವು. ಇಡೀ ಕಾಡು ಶೀತಲ ಶಿವಶಾಂತಿಯಲ್ಲಿ ಅದ್ದಿಬಿಟ್ಟಿತ್ತು. ಆವಾಗ ನೋಡು ಶಿವಾ- +ನಿಗೂಢವಾಗಿ ನಿನದಿಸುವ ಚಂದಮುತ್ತನ ಕೊಳಲನಾದ +ಮೆಲ್ಲಮೆಲ್ಲನೆ ಸುರುವಾಯಿತು ನೋಡು +ಕಟ್ಟಿದ ಗೂಡಿಂದ ಜೇನು ತೊಟ್ಟಿಕ್ಕುವ ಹಾಗೆ +ಚಂದಮುತ್ತನ ಕೊಳಲ ದನಿ ಕೇಳಿಸಿತು. +ಹಿಂದೆಷ್ಟೋ ಬಾರಿ ಚಂದಮುತ್ತನ ಕೊಳಲ +ಕೇಳಿಲ್ಲವೆ ನಾವು? +ಆದರಿದೇ ಬೇರೆ ಎನ್ನಿಸಿ ಸೊಲ್ಲಿಲ್ಲದ ಸೊಮ್ಮಿಲ್ಲದೆ +ಪರವಶರಾದೆವು. +ನಾಮರೂಪಕ್ರೀಗಳೆಲ್ಲ ನಿಷ್ಕ್ರಿಯಗಳಾಗಿ, +ಶಬ್ದಮುಗ್ಧರಾಗಿ, ಕಾಲವಿರಹಿತರಾಗಿ +ಬರೀ ಕಿವಿಗಳಾದೆವು. +ನಮ್ಮೆಲ್ಲರ ಮೂಲಾಧಾರದಿಂದ ಯಾವುದೋ ಆದಿಮ +ನಾದವೊಂದು ಹೊರಟು +ಬಯಲು ತುಂಬಿ ಬಯಲು ನಾದಮಯವಾಗಿ +ಒಳಗೂ ನಾದ ಹೊರಗೂ ನಾದ +ಒಳಹೊರಗೆ ಏಕಾಗಿ +ತಿಳಿವಿಂಗೆ ನಿಲುಕದ ನಿಜವೊಂದು +ನಾದದಲ್ಲಿ ಹುರಿಗೊಳ್ಳುತ್ತಿರುವಂತೆ +ಅರಿವಿಗೆ ಬಂತು. +ಮುಂದುವರೆಯುವುದು +೧. ಪ್ರಾರ್ಥನೆ ಓಂ ಪ್ರಥಮದಲ್ಲಿಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದುನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ. ನಾವು ಕನಸುಗಳು,ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,ಆದಿಮ ಕಾಲದಿಂದ […] +ಪೀಠಿಕಾ ಸಂಧಿಶ್ರೀ ವನಿತೆಯರಸನೆವಿಮಲ ರಾಜೀವ ಪೀಠನ ಪಿತನೆ ಜಗತಿಪಾವನನೆ ಸನಕಾದಿ ಸಜ್ಜನಿಕರ ದಾತಾರರಾವಣಾಸುರ ಮಥನ ಶ್ರವಣ ಸುಧಾ ವಿನೂತನ ಜನದ ಗದುಗಿನ ವೀರನಾರಾಯಣ ೧ ಶರಣ ಸಂಗವ್ಯಸನ ಭುಜಗಾಭರಣನಮರ ಕಿರೀಟ ಪಂಡಿತಚರಣ ಚಾರುಚರಿತ್ರ ನಿರುಪಮ […] +ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆ‌ಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_690.txt b/Kannada Sahitya/article_690.txt new file mode 100644 index 0000000000000000000000000000000000000000..d76ef9f7bb12167617567ceafc723aa770ef4026 --- /dev/null +++ b/Kannada Sahitya/article_690.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು, ಅವನು, +ಮಳೆಯಲ್ಲಿ ನಿಂತಿದ್ದೇವೆ +ಮೈಗೆ ಮೈ ಬೆಸೆದ ಅಂತರದಲ್ಲಿ +ನೆನೆಯುತ್ತಾ +ಅವನ ದೇಶದ ಕಾಡುಗಳನ್ನ. +ಆಳೆತ್ತರ ಮರಗಳು ಅಲ್ಲಿ +ಟೊಂಗೆ ಟೊಂಗೆಗಳಲ್ಲಿ +ಗೂಡು ಕಟ್ಟಿದೆ ಪ್ರೀತಿ. +ಮೆಲ್ಲಗೆ ನುಡಿಯುತ್ತಾನೆ, +‘ಅಲ್ಲೂ ಹೀಗೇ ಮಳೆ’. +ಅವನ ಕರಿ ಗುಂಗುರ ಸುರುಳಿ +ನನ್ನ ಹಣೆ ಮೇಲಾಡಿ, +ಪಿಸುಗುಡುತ್ತೇನೆ, +’ಮಳೆ ಇಲ್ಲೂ ಹಾಗೇ’ +ಮಿಂಚು ಕಣ್ಣುಗಳಲ್ಲಿ +ಜಿನುಗುತ್ತದೆ ಮೋಹ +ಸುರಿಯುತ್ತದೆ ಮಳೆ. +ನನ್ನ ಬಿಸಿಯುಸಿರು +ಅವನ ಮೈ ಮೇಲಾಡಿ +ಅವನ ನಗು ನನ್ನ ತುಟಿ ಮೇಲೆ, +ಕಾಯುತ್ತದೆ ಮಳೆ +ಹೊರಗೆ, +ನಾವು ಒಳಗೆ; +ನೆನೆಯುತ್ತೇವೆ…. +ಮಳೆಯಾಗಿ ಅವನು ನನ್ನೊಳಗೆ +ನಾನು ಮಳೆ ಅವನೊಳಗೆ +ಮಳೆ ಒಳಗೆ ಹೊರಗೆ! +ಈಗ ಇಲ್ಲಿ, +ಮಳೆಯಾಗಿ ಸುರಿಯುತ್ತದೆ +ಅವನ ನೆನಪು +ಮರೆತ ಕನಸು ಮರುಕಳಿಸಿದ ಹಾಗೆ +ಘಮ್ಮೆಂದು ಪ್ರೀತಿ. +ಅಲ್ಲಿ ಅವನೆದೆಯಲ್ಲಿ +ಹನಿಯುತ್ತದೆ ನನ್ನ ನೆನಪು! +ಸುರಿಯುತ್ತದೆ ಮಳೆ +ಅಲ್ಲಿ ಇಲ್ಲಿ. +***** +ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […] +ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […] +ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_691.txt b/Kannada Sahitya/article_691.txt new file mode 100644 index 0000000000000000000000000000000000000000..5c6667d790a16eeb92bcc8dfbcac69f1a46109e8 --- /dev/null +++ b/Kannada Sahitya/article_691.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. +ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ ಅವರ ದುರಂತಮಯ ಸಾವಿನೊಂದಿಗೆ ಅಂತ್ಯಗೊಂಡರೂ, ರಾಜ್ಯದ ಜನತೆಯ ಪಾಲಿಗೆ ಅಲ್ಲವಾದರೂ ಸರ್ಕಾರಕ್ಕಂತೂ ಮುಗಿಯದ ಸಮಸ್ಯೆಯಾಗಿದೆ. ನರಹಂತಕ ವೀರಪ್ಪನ್ ವಶದಲ್ಲಿದ್ದ ನಾಗಪ್ಪ ಅವರ ಸಾವಿಗೆ ಕಾರಣ ನಿಗೂಢವಾಗಿದ್ದು, ಜನತಾ ದಳ(ಯು) ನಾಯಕರು ಮತ್ತು ವೀರಶೈವ ಮಠಾಧೀಶರೂ ಸೇರಿದಂತೆ ನಾಗಪ್ಪ ಅವರ ಬೆಂಬಲಿಗರು ಸಾವಿನ ಬಗ್ಗೆ ಸಿಬಿ‌ಐ ತನಿಖೆಗೆ ಒತ್ತಾಯಪಡಿಸುತ್ತಿರುವಾಗಲೇ ಸರ್ಕಾರ ನ್ಯಾಯಾಂಗ ವಿಚಾರಣೆ ಏರ್ಪಡಿಸುವ ನಿರ್ಧಾರ ಪ್ರಕಟಿಸಿದೆ. +ಸಿಬಿ‌ಐ ತನಿಖೆಯೇ ಆಗಬೇಕೆಂಬ ಒತ್ತಾಯ ಹೆಚ್ಚತೊಡಗಿದೆ. ಮಠಾಧೀಶರು ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸಿ, ಸಿ‌ಐಡಿ ತನಿಖೆಯಿಂದಲೇ ನಾಗಪ್ಪ ಅವರ ಸಾವಿನ ನಿಗೂಢ ಬಯಲಾಗಲು ಸಾಧ್ಯ ಎಂಬುದನ್ನು ಪುನರುಚ್ಚರಿಸುತ್ತಿದ್ದಾರೆ. ಇದೀಗ ಸಾವಿನ ಪ್ರಕರಣ ಹಾಗೂ ಆ ಸಂಬಂಧದ ಚಳವಳಿ ದುರದೃಷ್ಟವಶಾತ್ ಜಾತೀಯ ಸ್ವರೂಪ ಪಡೆಯುತ್ತಿರುವುದನ್ನು ಜನ ಗುರುತಿಸತೊಡಗಿದ್ದಾರೆ. ಹೊಸ ವರ್ಷದಲ್ಲಿ ಬದಲಾದ ಮತ್ತು ಹೊಸ ವಾತಾವರಣವನ್ನು ನಿರೀಕ್ಷಿಸುತ್ತಿದ್ದ ಜನತೆ, ನಾಗಪ್ಪ ಹತ್ಯೆ ಪ್ರಕರಣ ಸಂಬಂಧದ ಆಗ್ರಹಪೂರ್ವಕ ಒತ್ತಾಯ, ಚಳವಳಿಯಾಗಿ ಮಾರ್ಪಟ್ಟಿದ್ದು ಅದು ಯಾವ ರೂಪ ಪಡೆದೀತು ಎಂಬುದನ್ನು ಆತಂಕದಿಂದಲೇ ಕಾದುನೋಡುತ್ತಿದ್ದಾರೆ. +ನಾಗಪ್ಪ ಅವರ ಅಪಹರಣವಾದಾಗ ಅವರ ಬಿಡುಗಡೆಗೆ ಸರ್ಕಾರ, ರಾಜ್‌ಕುಮಾರ್ ಅಪಹರಣವಾದಾಗ ತೋರಿದಷ್ಟು ಆಸಕ್ತಿ ತೋರಿಲ್ಲ ಎಂಬುದೇ ನಾಗಪ್ಪ ಬೆಂಬಲಿಗರ ದೂರು ಆಗಿತ್ತು. ಆದರೆ ನಾಗಪ್ಪ ಅವರ ಬಿಡುಗಡೆಗೆ ವಿಶೇಷ ಕಾರ್ಯಪಡೆ (ಎಸ್‌ಟಿ‌ಎಫ್)ಯನ್ನು ಸರ್ಕಾರ ಚುರುಕುಗೊಳಿಸುವಷ್ಟರಲ್ಲಿ ನಾಗಪ್ಪ ಅವರ ಕುಟುಂಬ ವರ್ಗದವರು ಮತ್ತು ಜನತಾ ದಳ (ಯು) ನಾಯಕರು ಅದನ್ನು ತೀವ್ರವಾಗಿ ವಿರೋಧಿಸಿದ ಕಾರಣ ಎಸ್‌ಟಿ‌ಎಫ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. +ನಂತರ ವೀರಪ್ಪನ್ ಕಳುಹಿಸಿದ ಕ್ಯಾಸೆಟ್‌ನಲ್ಲಿ ಜೇಲಿನಲ್ಲಿರುವ ಕೊಳತ್ತೂರು ಮಣಿಯನ್ನು ಸಂಧಾನಕ್ಕೆ ಕಳುಹಿಸುವಂತೆ ಒತ್ತಾಯಪಡಿಸಲಾಗಿತ್ತು. ಆರಂಭದಲ್ಲಿ ಸರ್ಕಾರ ಅದನ್ನು ವಿರೋಧಿಸಿದರೂ, ನಂತರ ನಾಗಪ್ಪ ಅವರ ಕುಟುಂಬದವರ ಮತ್ತು ಬೆಂಬಲಿಗರ ಒತ್ತಾಯಕ್ಕೆ ಮಣಿದು ಜಾಮೀನಿನ ಮೇಲೆ ಮಣಿಯ ಬಿಡುಗಡೆಗೆ ಸರ್ಕಾರ ಪ್ರಯತ್ನಿಸಿದ್ದು ನಿಜ. ಗಂಭೀರ ಆಪಾದನೆಯ ಮೇಲೆ ಮಣಿಯನ್ನು ಬಂಧಿಸಿರುವಾಗ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಸುಲಭದಲ್ಲಿ ಒಪ್ಪಿಕೊಳ್ಳುತ್ತದೆ ಎಂದು ನಿರೀಕ್ಷಿಸುವುದೇ ತಪ್ಪು. ಮಣಿಯನ್ನು ಸಂಧಾನಕ್ಕೆ ಕಳುಹಿಸಲು ಸರ್ಕಾರ ವಿಫಲವಾದಾಗ, ವೀರಪ್ಪನ್ ನೀಡಿದ ಗಡುವು ಮುಕ್ತಾಯಗೊಂಡಿತು. ತಮಿಳುನಾಡು ಎಸ್‌ಟಿ‌ಎಫ್‌ನವರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ನಾಗಪ್ಪ ಸಾವಿಗೀಡಾಗಿದ್ದಾರೆ ಎಂದು ತಿಳಿಸುವ ವೀರಪ್ಪನ್ ಕ್ಯಾಸೆಟ್ ನಾಗಪ್ಪ ಕುಟುಂಬದವರನ್ನು ತಲುಪಿದಾಗ ನಾಗಪ್ಪ ಸತ್ತು ಮೂರು ದಿನಗಳಾಗಿದ್ದುವು. +ನಾಗಪ್ಪ ಅವರ ಮೃತದೇಹದ ಮೇಲೆ ಒಂದೇ ಬುಲೆಟ್ ಹೊಕ್ಕಿರುವ ಗುರುತು ಇದ್ದ ಕಾರಣ ಅದು ದೂರದಿಂದ ಹೊಡೆದ ಗುಂಡು ಇರಬಹುದೇ ಅಥವಾ ಅವರನ್ನು ಸಮೀಪದಿಂದಲೇ (ವೀರಪ್ಪನ್ ಬಳಗದವರು) ಸಾಯಿಸಿರಬಹುದೇ ಎಂಬ ಜಿಞಸೆ ಆರಂಭವಾಯಿತು. ಕರ್ನಾಟಕ ಎಸ್‌ಟಿ‌ಎಫ್ ಪಡೆಯವರ ಅಚಾತುರ್ಯದಿಂದ ಸತ್ತಿರಬಹುದು ಎಂಬ ವಾದವೂ ಇದೆ. ಈ ಎಲ್ಲ ಗೊಂದಲ ನಿವಾರಣೆಯಾಗಬೇಕಾದರೆ ಸಿಬಿ‌ಐ ತನಿಖೆ ಅಗತ್ಯ ಎಂದು ನಾಗಪ್ಪ ಕುಟುಂಬದವರು ಮತ್ತು ಜನತಾ ದಳ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇದು ಯಾವ ಹಂತ ತಲುಪೀತು ಎಂದು ಈಗಲೇ ಹೇಳಲಾಗದು. +ಈ ಮಧ್ಯೆ ಕಾವೇರಿ ನೀರು ಬಿಡುವ ವಿಚಾರ ಹೊಸ ತಿರುವು ಪಡೆದಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದ್ದು, ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂಬ ನಿಲುವು ತಾಳಿದ್ದ ರಾಜ್ಯ ಸರ್ಕಾರ, ಇತ್ತೀಚೆಗೆ ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ಸೇರಲು ನಿಯೋಜಿತವಾಗಿದ್ದಾಗ, ೧೨೦೦ ಕೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲು ಒಪ್ಪಿರುವುದು ಮತ್ತೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಈ ತೀರ್ಮಾನವನ್ನು ರೈತ ಮುಖಂಡರು ಹಾಗೂ ವಿರೋಧ ಪಕ್ಷದವರು ಆಕ್ಷೇಪಿಸಿದ್ದಾರೆ. ಮುಂದೇನು ಎಂದು ರಾಜ್ಯದ ಜನತೆ ಆತಂಕದಿಂದ ಪ್ರಶ್ನಿಸಲಾರಂಭಿಸಿದ್ದಾರೆ. +ವೀರಪ್ಪನ್‌ನನ್ನು ಹಿಡಿಯುವಲ್ಲಿ ವೀರಾವೇಶದ ಹೇಳಿಕೆಗಳು ಕೇಳಿಬರುತ್ತಿವೆಯೇ ಹೊರತು, ಗಂಭಿರ ಪ್ರಯತ್ನ ಕಂಡುಬರುತ್ತಿಲ್ಲ. ಈ ಕಾಡುಗಳ್ಳ ಯಾವಾಗ ಏನು ಮಾಡುತ್ತಾನೆ ಎಂಬುದು ನಮ್ಮ ಪೊಲೀಸ್ ಗೂಢಚಾರರಿಗೂ ಗೊತ್ತಾಗುವುದಿಲ್ಲ. ಇದು ಅನುಭವದ ಮಾತು. ಇಂಥ ಅನಿಶ್ಚಿತ ವಾತಾವರಣದಲ್ಲಿಯೇ ಹೊಸ ವರ್ಷ ಆರಂಭವಾಗಿದೆ ಎಂಬುದನ್ನು ಮರೆಯಲಾಗದು. +***** +‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ […] +‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ […] +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_692.txt b/Kannada Sahitya/article_692.txt new file mode 100644 index 0000000000000000000000000000000000000000..4659b1283ed3f62870cc914f4491e1853acac668 --- /dev/null +++ b/Kannada Sahitya/article_692.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ +‘ಮರ’ಕ್ಕೆ ಮರವೆನ್ನದೆ +ಸುಮ್ಮನೆ ಬೇರೇನೋ ಕರೆದಿದ್ದರೆ, +‘ಮರ’ ಬೇರೇನೋ ಆಗಿರುತ್ತಿತ್ತು. +ಅದನ್ನು ‘ಆಕಾಶ’ ಎಂದು ಕರೆದಿದ್ದರೆ, +ಅದು ಮೂರಕ್ಷರದ ಮರವಾಗಿ; +ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. +ಹುಡುಗಿಯರಿಗೆ +ಸುಮ್ಮನೆ ಅವಳು ಎಂದು +ಏನೇನೋ ಬೇಕಾದ್ದು ಹೇಳದೆ +ಸರಿಯಾಗಿ ಬೇರೇನೋ ಕರೆದಿದ್ದರೆ; +ಹುಡುಗರು, +ಎಂದೂ ಹೀಗೆ…. +ಈಗಿರುವ ಹಾಗೆ ಇರುತ್ತಿರಲಿಲ್ಲ. +ದ ಬಾಂಡ್ ಬಿಟ್ವೀನ್ ದ +ಸಿಗ್ನಿಫಯರ್‍ ಅಂಡ್ ದ ಸಿಗ್ನಿಫೈಡ್ +ಈಸ್ ಆರ್ಬಿರ್ಟರಿ. +***** +ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- ಎಂದು ಕಿವಿ ನಂಬದಾಯ್ತು. ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ ಅದೇ ಅದೇ ಎಂದು ಖಾತ್ರಿಯಾಯ್ತು. ಮಬ್ಬುಗತ್ತಲೆಯನ್ನು ಭೇದಿಸಿ […] +೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […] +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_693.txt b/Kannada Sahitya/article_693.txt new file mode 100644 index 0000000000000000000000000000000000000000..43d5740346057e028035a0a5e5bf76bd51a53cb8 --- /dev/null +++ b/Kannada Sahitya/article_693.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶನಿವಾರ ಬೆಳಗ್ಗೆ ಅಪರಾಧೀ ಪ್ರಜ್ಞೆಯಿಂದ ಟೆಲಿಫೋನ್ ಡಯಲ್ ತಿರುಗಿಸಿದೆ. ‘ಹಲೋ ಶೇಖರ್, ಇವತ್ತು ನನಗೆ ಸಮಯವಿಲ್ಲ, ಮೀಟಿಂಗ್-ಗೆ ಬರೋಕ್ಕೆ ಆಗೊಲ್ಲ’ ಎಂದೆ. ‘ಪರವಾಗಿಲ್ಲ ಶಿವು, ಆದರೆ ಇಂದು ಮಧ್ಯಾಹ್ನ ಬಾದಾಮಿ ಹೌಸ್-ನಲ್ಲಿ ‘ದ್ವೀಪ‘ ಚಿತ್ರದ ಸ್ಕ್ರೀನಿಂಗ್ ಇದೆ, ಬರುತ್ತೀರ’ ಎಂದಾಗ ‘ಖಂಡಿತಾ ಬರ್ತೀನಿ ಶೇಖರ್ ಏನೇ ಕೆಲ್ಸ ಇದ್ರೂ ಬಿಟ್-ಬರ್ತೀನಿ‘ ಎಂದು ಹೇಳಿ ಫೋನ್ ಇಟ್ಟೆ. ಅತ್ತ ಕಡೆ ಶೇಖರ್ ನಗುತ್ತಿರಬಹುದೆ ಎನ್ನುವ ಯೋಚನೆಯೂ ನನಗಿರಲಿಲ್ಲ. +ಕಾಸರವಳ್ಳಿಯವರ ‘ಮೂರು ದಾರಿಗಳು’, ‘ಕ್ರೌರ್ಯ’ ಬಿಟ್ಟು ಮಿಕ್ಕೆಲ್ಲಾ ಚಿತ್ರಗಳನ್ನೂ ನೋಡಿರುವ ನನಗೆ, ಇದನ್ನು ಮಿಸ್ ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಅನೇಕ ಕಾರಣಗಳಿಗೆ ‘ಬಣ್ಣದ ವೇಷ’ ಮತ್ತು ‘ಘಟಶ್ರಾದ್ಧ‘ ನನಗೆ ತುಂಬಾ ಇಷ್ಟ. ಇದ್ದ ಕೆಲಸಗಳನ್ನೆಲ್ಲಾ ಆದಷ್ಟು ಬೇಗ ಮುಗಿಸಿ ೨-೪೫ರ ಒಳಗೆ ಬಾದಾಮಿ ಹೌಸ್ ತಲುಪಬೇಕಾಗಿತ್ತು. ಮಳೆಯನ್ನೂ ಲೆಕ್ಕಿಸದೆ ಹೋದರೂ ತಲುಪಿದ್ದು ೨-೫೫ ಆಗಿತ್ತು. ಎಲ್ಲಿ ಶೇಖರ್ ಸಿಗುವುದಿಲ್ಲವೋ ಎಂದುಕೊಳ್ಳುವ ಹೊತ್ತಿಗೆ ಅವರೇ ಕಂಡರು. ಪ್ರವೇಶ ದೊರೆಯಿತು. ಕುಳಿತುಕೊಳ್ಳುತ್ತಲೇ ಶೇಖರ್ ‘ನೋಟ್ಸ್ ಮಾಡಿಕೊಳ್ಳಿ ಶಿವು, ಒಂದು ಲೇಖನಕ್ಕೆ ತೊಡಗಿ’ ಎಂದರು. ನನ್ನ ಜ್ಞಾಪಕ ಶಕ್ತಿಯ ಬಗ್ಗೆ ತುಂಬಾ ಹೆಮ್ಮೆ ಇದ್ದರೂ, ಅಹಂಕಾರ ಬೇಡವೆಂದು ಪೆನ್ನು ಹಾಳೆ ಹಿಡಿದು ಕೂತೆ. +ಇಲ್ಲಿ ನಾನು ಏನನ್ನು ಬರೆಯುತ್ತಿದ್ದೇನೆ ಎನ್ನುವುದು ಓದುಗ ಮಹಾಶಯರಿಗೆ ಸ್ಪಷ್ಟವಾಗುವ ಮೊದಲು ನನಗೇ ಸ್ಪಷ್ಟವಾಗಬೇಕು. ‘ವಿಮರ್ಶೆ’ ಎನ್ನುವುದಾದರೆ ಅದು ಅತ್ಯಂತ ಆತ್ಮಪ್ರತ್ಯಯದ ತೊಡಗುವಿಕೆ. ವಿಮರ್ಶಕ ತನ್ನನ್ನು ತಾನೆ ಮಿಕ್ಕೆಲ್ಲಕ್ಕಿಂತಾ ಮುಖ್ಯ ಎಂದು ಭಾವಿಸುವ ಅಪಾಯದ ಅಂಚಿನಲ್ಲಿರುತ್ತಾನೆ. ಅದು ಸ್ವಲ್ಪ ಹೆಚ್ಚಾದರೆ ಚಿತ್ರದಲ್ಲಿ ತಪ್ಪೇನಿದೆ ಎಂದು ಹುಡುಕುವುದು ಹವ್ಯಾಸವಾಗುತ್ತದೆ. ‘ಅನಿಸಿಕೆ’ ಎನ್ನುವುದಾದರೆ ಅದು ನನ್ನ ಅಭಿಪ್ರಾಯಗಳಿಗೆ ಏನೂ ಬೆಲೆ ಕೊಟ್ಟಂತಾಗುವುದಿಲ್ಲ. ಇವೆರಡರ ನಡುವೆ ಇರುವ ನಾನು ಈ ಬರವಣಿಗೆಯನ್ನು ಏನೆಂದು ಕರೆಯಬೇಕು. ನನ್ನ ಬುದ್ಧಿವಂತಿಕೆ, ಅಹಂಕಾರ, ಮೌಢ್ಯತೆ, ಪೆದ್ದುತನ, ಸಾಂಸ್ಕೃತಿಕ ಪ್ರಜ್ಞೆ-ಗಳಿಂದ ನಾನು ಚಿತ್ರಕ್ಕೆ ಸ್ಪಂದಿಸಲು ಯತ್ನಿಸಿರುವುದರಿಂದ, ಪ್ರಜ್ಞಾವಂತ (ಎಂದು ನಂಬಿಕೊಂಡಿರುವ) ಪ್ರೇಕ್ಷಕನೊಬ್ಬ ಚಿತ್ರದೊಂದಿಗೆ ನಡೆಸಿದ ಸಂವಾದವೆಂದು ಕರೆಯಲಿಚ್ಛಿಸುತ್ತೇನೆ. +ನಾ. ಡಿಸೋಜರ ‘ದ್ವೀಪ’ -ದ ಕಥೆಯನ್ನಾಧರಿಸಿದೆ ಈ ಚಿತ್ರ. ಮೂಲ ಕಥೆಯನ್ನು ಓದಿಲ್ಲದ ನನಗೆ ಚಿತ್ರದ ನೋಡಿದ ಬಳಿಕ ಅನ್ನಿಸಿದ್ದಿಷ್ಟು. ಸೀತಾ ಪರ್ವತವೆಂಬ ದ್ವೀಪವೊಂದರಲ್ಲಿ ನಾಗಿ, ಅವಳ ಮಾವ ದುಗ್ಗಜ್ಜ ಮತ್ತು ಗಂಡ ಗಣಪ ವಾಸವಾಗಿದ್ದಾರೆ. ಮೂಲತಹ ಬೇಸಾಯಗಾರರು, ಭೂತವೊಂದರ ಆರಾಧಕರೂ, ಪೂಜಾರಿಗಳೂ ಕೂಡ. ದ್ವೀಪದ ಒಳಗಿರುವ ಮತ್ತು ಹೊರಗಿರುವ ಜನರ ಪರವಾಗಿ ಭೂತಕ್ಕೆ ‘ನೇಮ’ ಕಟ್ಟಿ, ಅದನ್ನು ತಮ್ಮೊಳಗೆ ಆಹ್ವಾನಿಸಿ ಜನರ ತೊಂದರೆಗಳನ್ನು ನಿವಾರಿಸುವ ಈ ಕೆಲಸವನ್ನು ಮನೆಯ ಗಂಡಸರು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಅನೇಕ ವರ್ಷಗಳಿಂದ ಇದರಲ್ಲಿ ತೊಡಗಿರುವ ದುಗ್ಗಜ್ಜನದ್ದು ಸಂಪೂರ್ಣ ಶ್ರದ್ಧೆ. ಮಗ ಗಣಪನಿಗೆ ತಂದೆಯ ಸಂಪೂರ್ಣ ಶ್ರದ್ಧೆಯಿಲ್ಲದಿದ್ದರೂ ಬೇರೆ ಯಾವುದೂ ಬುದ್ಧಿಗೆ ನಿಲುಕದ ಕಾರಣ, ಆಲದ ಮರಕ್ಕೆ ಜೋತು ಬಿದ್ದವ. ದುಗ್ಗಜ್ಜ ಒಮ್ಮೆ ಹೀಗೆಯೇ ಇದ್ದಿರಬಹುದು, ಗಣಪ ಮುಂದೇ ದುಗ್ಗಜ್ಜನಷ್ಟೇ ಶ್ರದ್ಧೆ ಬೆಳೆಸಿಕೊಳ್ಳಬಹುದು ಎನ್ನುವ ಯೋಚನೆ ಪ್ರೇಕ್ಷಕನಿಗೆ ಬರದೇ ಇರುವುದಿಲ್ಲ. ಆದರೆ ನಾಗಿ ಪಟ್ಟಣವನ್ನು ಕಂಡವಳು. ಮದುವೆಯ ನಂತರ ಈ ದ್ವೀಪಕ್ಕೆ ಬಂದವಳು. ಗಂಡ, ಮಾವನಿಗಿಂತ ವಾಸ್ತವಾಂಶಗಳ ಬಗ್ಗೆ ಹೆಚ್ಚು ಕಾಳಜಿಯುಳ್ಳವಳು. +ಕಳೆದ ಕೆಲವು ವರ್ಷಗಳಿಂದ ಅಣೆಕಟ್ಟೊಂದು ಇವರ ಜೀವನವನ್ನು ಪ್ರವೇಶಿಸಿದೆ. ಅದರಲ್ಲಿ ಪೂರ್ತಿ +ನೀರು ತುಂಬಿದಾಗ ಸೀತ ಪರ್ವತ ಮುಳುಗಿಹೋಗಬಹುದು ಎನ್ನುವ ಭಯವಿದೆ. ಪುರಾಣ ಪ್ರಸಿದ್ಧ, ಭೂತದೇವರಿರುವ ಆ ಜಾಗ ಮುಳುಗಿಹೋಗಬಹುದು ಎನ್ನುವುದೇ ದುಜ್ಜನಿಗೆ ಹಾಸ್ಯಾಸ್ಪದ. ಗಣಪನಿಗೆ ಇದಕ್ಕಿಂತ ಹೆಚ್ಚು ಯೋಚಿಸಲು ಬಾರದು. ಆದರೆ ನಾಗಿಗೆ ಮಾತ್ರ ನವಿರಾದ ಆತಂಕ. ಈ ಹಿನ್ನಲೆಯಲ್ಲಿ ಚಿತ್ರ ಆರಂಭವಾಗುತ್ತದೆ. +ನಾಗಿಯ ಆತಂಕ ಗಣಪನಿಗೆ ತಟ್ಟದಿದ್ದರೂ ಸೀತ ಪರ್ವತವನ್ನು ಬಿಟ್ಟು ಹೋಗಬೇಕೆಂಬ ಸರ್ಕಾರದ ಆದೇಶ ಅವನನ್ನು ಇಷ್ಟವಿಲ್ಲದಿದ್ದರೂ ಸರ್ಕಾರಿ ಅಧಿಕಾರಿಯನ್ನು ಕಾಣುವ ಹಾಗೆ ಮಾಡುತ್ತದೆ. ಆದರೆ ಗಣಪನ ಯಾವ ವಾದಕ್ಕೆ ಸರ್ಕಾರದಲ್ಲಿ ಬೆಲೆಯಿಲ್ಲ. ಭೂತ, ನೇಮಕ್ಕೆ ಸರ್ಕಾರದಲ್ಲಿ ಬೆಲೆಯಿಲ್ಲ. ಇವರ ಸಾಂಸ್ಕೃತಿಕ ಪರಿಸರವನ್ನು, ಗೌರವವನ್ನೂ ಉಳಿಸಿಕೊಳ್ಳುವಂತಹ ಪುನರ್ವಸತಿ ನಿರ್ಮಾಣದ ಕುರಿತು ಸರ್ಕಾರಕ್ಕೆ ಅಸಡ್ಡೆ. ಗಣಪ ಕಡೆಗೂ ಅಧಿಕಾರಿಯನ್ನು ಮತ್ತೊಮ್ಮೆ ಸಮೀಕ್ಶೆ ನಡೆಸಲು ಒಪ್ಪಿಸುತ್ತಾನೆ. +ಆದರೆ ತಮ್ಮ ಜೀವನ-ಪರಿಸರದ ಬಗೆಗಿನ ದುಗ್ಗಜ್ಜನ ಶ್ರದ್ಧಾಪೂರಿತ ವಿವರಣೆಗೆ ಸರ್ಕಾರಿ ಅಧಿಕಾರಿಗಳ ಅಸಡ್ಡೆ, ಕುಚೋದ್ಯಗಳೇ ಉತ್ತರವಾಗುತ್ತವೆ. ಮೇಲಾಗಿ ಅವರು ಜೀವನ ನಡೆಸುತ್ತಿರುವ ಭೂಮಿಯೇ ಅವರದ್ದೆಂದು ಹೇಳಲು ಯಾವ ದಾಖಲೆಯೂ ಇಲ್ಲ. ಅವರ ಸಾಂಸ್ಕೃತಿಕ ಜೀವನದ ಪುನರ್ನಿರ್ಮಾಣವಿರಲಿ, ಅವರ ಭೌತಿಕ-ಜೀವನ ಮಟ್ಟ ಕಾಯ್ದುಕೊಳ್ಳಬಲ್ಲ ಪರಿಹಾರ ಸಿಗುವುದೇ ಕಷ್ಟವಾಗುತ್ತದೆ. ಸರ್ಕಾರಿ ಅಧಿಕಾರಿಗಳನ್ನು ಎದಿರು ಹಾಕಿಕೊಳ್ಳಬಾರದೆಂಬ ಪ್ರಜ್ಞೆ ಗಣಪನಿಗಿದ್ದರೂ, ದುಗ್ಗಜ್ಜ ಮಾತ್ರ ಇವರ ಕುಚೋದ್ಯದಿಂದ ತುಂಬಾ ನೊಂದುಕೊಳ್ಳುತ್ತಾನೆ. ಸರ್ಕಾರದ ವಿರುದ್ಧ ಅವನ ಧಿಕ್ಕಾರ ಹೆಚ್ಚುತ್ತದೆ. ಈ ನಡುವೆ ಒಬ್ಬೊಬ್ಬರೇ ದ್ವೀಪವನ್ನು ಬಿಡುತ್ತಾ, ತಮಗೆ ಸಿಕ್ಕ ಪರಿಹಾರದಿಂದ ಹೊಸ ಜೀವನವನ್ನು ಆರಂಭಿಸಲು ತೊಡಗುತ್ತಾರೆ. ಕಡೆಗೆ, ಭೂತದ ಅತಿ ಮುಖ್ಯ ಭಕ್ತರಾದ ಹೇರಂಭ ಹೆಗ್ಗಡೆ, …. ಹೆಗ್ಗಡೆಗಳೂ ಸೀತಾ ಪರ್ವತವನ್ನು ಬಿಟ್ಟಾಗ ನಾಗಿಯನ್ನು ಒಂಟಿತನ ಕಾಡಲಾರಂಭಿಸುತ್ತದೆ. ಗಂಡ, ಮತ್ತು ಮಾವನ ಹಠದ ಮುಂದೆ ನಾಗಿ ಏನೂ ಮಾಡಲಾರದವಳಾಗುತ್ತಾಳೆ. +ಕಡೆಗೊಮ್ಮೆ, ಪೊಲೀಸರು ದಂಡ-ಭೇದದಿಂದ ಇವರನ್ನು ಬಲವಂತವಾಗಿ ದ್ವೀಪದಿಂದ ಹೊರಗಟ್ಟುತ್ತಾರೆ. ಬೇರೆ ದಾರಿಯಿಲ್ಲದೆ ನಾಗಿಯ ತವರು ಮನೆಯಲ್ಲಿ ಇವರು ಕೆಲದಿನಗಳ ಮಟ್ಟಿಗೆ ಬಿಡಾರ ಹೂಡುತ್ತಾರೆ. ಹೇರಂಭ ಹೆಗ್ಗಡೆ, … ಹೆಗ್ಗಡೆಗಳು ಗಣಪನಿಗೆ ಪಟ್ಟಣದಲ್ಲಿ ಒಂದು ಅಂಗಡಿ ಹಾಕಿಕೊಳ್ಳುವಂತೆ ಪರಿಹಾರ ಸೂಚಿಸುತ್ತಾರೆ. ಆದರೆ ಬೀಗರ ಮನೆಯಲ್ಲಿರಬೇಕಾದ ಪರಿಸ್ಥಿತಿಯನ್ನು ತಾಳಲಾರದ, ತನ್ನ ಸಾಂಸ್ಕೃತಿಕ ಪರಿಸರವನ್ನು ಬಿಡಲಿಚ್ಛಿಸದ ದುಗ್ಗಜ್ಜ ಹೇಳದೆ ಕೇಳದೆ, ಮಳೆಯನ್ನೂ ಲೆಕ್ಕಿಸದೆ ಸೀತಾ ಪರ್ವತಕ್ಕೆ ಹೊರಟುಬಿಡುತ್ತಾನೆ. ವಿಧಿಯಿಲ್ಲದೆ ಗಣಪ, ಅವನ ಹಿಂದೆ ನಾಗಿ ಹೊರಡಬೇಕಾಗುತ್ತದೆ. ದ್ವೀಪದಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿಯಿಂದ ವಿಚಲಿತಳಾದ ನಾಗಿಯ ತಾಯಿ ಇವರಿಗೆ ಕಷ್ಟದಲ್ಲಿ ಜೊತೆಯಾಗಲಿ ಎಂದು, ಮುಂಬೈ-ಯಲ್ಲಿ ವ್ಯವಹಾರ ಹಾಗೂ ಪ್ರೇಮದಲ್ಲಿ ಸೋತು ವಿಷ ಕುಡಿದು ಸಾಯಲು ಬಯಸಿದ್ದ ಹಿನ್ನೆಲೆಯಿರುವ ಕೃಷ್ಣನನ್ನು ಇವರ ಜೊತೆ ಕಳಿಸಲು ನಿರ್ಧರಿಸುತ್ತಾಳೆ. ಯಾವಾಗಲೂ ಜೋಕಾಗಿ ಮಾತನಾಡುವ ಕೃಷ್ಣ ಬರುವುದಾದರೆ ಒಳ್ಳೆಯದೆ ಎಂದು ನಾಗಿ ಸಂತೋಷ ಪಡುತ್ತಾಳೆ. ಇಲ್ಲಿಂದ ಚಿತ್ರದ ಎರಡನೇಯ ಅಧ್ಯಾ ಶುರುವಾಗುತ್ತದೆ. +ಹೀಗೆ ನಾಗಿಯ ಸಂಸಾರ ಆತಂಕದಲ್ಲಿರುವಾಗಲೇ, ಕೃಷ್ಣನ ಆಗಮನವಾಗುತ್ತದೆ, ಹೊಸತರಲ್ಲಿ ಎಲ್ಲರಿಗೂ ಖುಷಿಯಾಗುತ್ತದೆ. ಮಳೆಯ ರಭಸ ಹೆಚ್ಚುತ್ತದೆ. ಇನ್ನೇನು ಮನೆ ಮುಳುಗಿಹೋಗುವ ಭಯ ಇದಿರಾದಾಗ, ಕೃಷ್ಣ ದುಗ್ಗಜ್ಜನನ್ನು ಬಲವಂತದಿಂದ ಒಪ್ಪಿಸಿ. ಎಲ್ಲರೂ ಸ್ವಲ್ಪ ಎತ್ತರದ ಪ್ರದೇಶದ ಹೇರಂಭ ಹೆಗ್ಗಡೆಯ ಮನೆಯ ಒಂದು ಭಾಗಕ್ಕೆ ಬಂದು ಸೇರುತ್ತಾರೆ. ದುಗ್ಗಜ್ಜ ಇನ್ನೂ ಭೂತ, ಸೀತ ಪರ್ವತ ಮುಳುಗುವುದಿಲ್ಲ ಎನ್ನುವ ನಂಬಿಕೆ ಕಳೆದುಕೊಳ್ಳುವಿದಿಲ್ಲ. ಕೃಷ್ಣನ ಅಧಿಕಪ್ರಸಂಗತನ ಕ್ರಮೇಣ ಜಾಸ್ತಿಯಾಗುತ್ತದೆ. ಈ ಮಧ್ಯೆ, ಮನುಷ್ಯ ಸಂಪರ್ಕವಿಲ್ಲದೇ ಬೇಸತ್ತ ಕಾರಣಕ್ಕೆ ನಾಗಿ ಕೃಷ್ಣನ ಜೊತೆ ಹೆಚ್ಚು ಕಾಲ ಕಳೆಯ ತೊಡಗುತ್ತಾಳೆ. ನಾಗಿ-ಗಣಪರಲ್ಲಿ ವಿರಸ ಮೂಡುತ್ತದೆ. ಕಡೆಗೊಮ್ಮೆ, ಕೃಷ್ಣನಿಗಿಂತಾ ನಾನೆ ಹೆಚ್ಚು ಎಂದು ಸಾಬೀತು ಪಡಿಸಲು, ಗಣಪ ಕೃಷ್ಣನನ್ನು ಹಸು-ಕರುವನ್ನು ಉಕ್ಕಿಹರಿಯುತ್ತಿರುವ ನದಿಯಲ್ಲಿ ಈಜಿ ಹೊಡೆದುಕೊಂಡು ಬರುವ ಪಂಥಕ್ಕೆ ಆಹ್ವಾನಿಸುತ್ತಾನೆ. ಒಪ್ಪಿಕೊಂಡ ಕೃಷ್ಣ ಪಂಥದಲ್ಲಿ ಸೋತರೂ ನಾಗಿಯ ಅನುಕಂಪಕ್ಕೆ ಗುರಿಯಾಗುತ್ತಾನೆ. ನಾಗಿಯ ಮಾತೃವಾತ್ಸಲ್ಯಕ್ಕೆ ಹೇಗೆ ವರ್ತಿಸಬೇಕೆಂದು ತಿಳಿಯದೆ ಪೆದ್ದನಂತೆ ವರ್ತಿಸುತ್ತಾನೆ. ಗಣಪ-ನಾಗಿಯ ಸಂಬಂಧ ಮತ್ತಷ್ಟು ಕೆಡುತ್ತದೆ. ಈ ಮಧ್ಯೆ ಭೂತದೇವರ ಸ್ಥಾನ ಹಾಗೂ ಹಳೆಯ ಮನೆ ಭಾಗಶಃ ಮುಳುಗಿಹೋಗುತ್ತದೆ. ದುಗ್ಗಜ್ಜನ ನಂಬಿಕೆ ಸುಳ್ಳಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದ ನೊಂದ ದುಗ್ಗಜ್ಜ ಭೂತದೇವರಿಗೆ ‘ನೇಮ’ ಕಟ್ಟಿ ತನ್ನ ದಾರಿಯನ್ನು ಕಂಡುಕೊಳ್ಳಲೆತ್ನಿಸಿ ಪ್ರಾಣ ಕಳೆದುಕೊಳ್ಳುತ್ತಾನೆ. +ಸರ್ಕಾರ ಇವರನ್ನು ಸಂಪೂರ್ಣವಾಗಿ ಕೈಬಿಡುತ್ತದೆ. ೫೦,೦೦೦ ಮಾತ್ರ ಪರಿಹಾರ ಸಿಗುತ್ತದೆ. ಇನ್ನೇನೂ ದಾರಿ ಕಾಣದೆ ಗಣಪ ಅದನ್ನು ತೆಗೆದುಕೊಂಡರೂ, ಸಂಪೂರ್ಣವಾಗಿ ನಿಯಂತ್ರಣ ತಪ್ಪುತ್ತಾನೆ. ತನ್ನ ಮೇಲೆ ತನ್ನ ಮತ್ತು ನಾಗಿಯ ಸಂಬಂಧದ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾನೆ. ನಾಗಿ ಬದುಕಲು ಹವಣಿಸುತ್ತಲೇ, ಶಕ್ತಿ ಕಳೆದುಕೊಳ್ಳುತ್ತಲೇ ಹೋರಾಟ ನಡೆಸುತ್ತಾಳೆ. ಗಂಡನ ಅಪನಂಬಿಕೆ ತಾಳಲಾರದೆ ಕಡೆಗೆ ತಮ್ಮಿಬ್ಬರ ಮಾತನ್ನು ಕದ್ದು ಕೇಳಿಸಿಕೊಂಡ ನೆಪವೊಡ್ಡಿ ಕೃಷ್ಣನನ್ನು ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಇದ್ದ ಒಂದು ಆಸರೆಯನ್ನು ಕಳೆದುಕೊಳ್ಳಲು ಇಷ್ಟಪಡದ ಕೃಷ್ಣ ಪರಿ-ಪರಿಯಾಗಿ ಬೇಡಿಕೊಂಡರೂ ಕೆಳುವುದಿಲ್ಲ. ಹತಾಶನಾದ ಕೃಷ್ಣ, ಇದ್ದ ಒಂದೇ ದೋಣಿಯನ್ನು ತೆಗೆದುಕೊಂಡು ಹೋಗಿ, ನಾಗಿಯ ಕಡೆಯ ಆಸರೆಯನ್ನೂ ಇಲ್ಲದಂತೆ ಮಾಡುತ್ತಾನೆ. ಕ್ರಮೇಣ ಹೋರಾಟದ ಶಕ್ತಿಯನ್ನು ಗಣಪ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ನಾಗಿ ಮಾತ್ರ ಏನೇ ಆದರೂ ಹತಾಶಳಾಗುವುದಿಲ್ಲ. ಕಡೆಗೊಮ್ಮೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಹರಿದರೂ ಹೇರಂಭ ಹೆಗ್ಗಡೆಯ ಮನೆ ಮುಳುಗುವುದಿಲ್ಲ. ನಾಗಿ ಇನ್ನು ಮುಂದೆ ಆತಂಕವಿಲ್ಲವೆಂದು ಸಂತೋಷದಿಂದ, ಗಣಪನನ್ನು ಕರೆದು ತೋರಿಸಿದಾಗ, ಗಣಪ ಎಲ್ಲಕ್ಕೂ ಭೂತ ಕಾರಣನೆಂದು ನಾಗಿಯ ಹೋರಾಟಕ್ಕೆ ಯಾವ ಬೆಲೆಯಿಲ್ಲದಂತೆ ಮಾಡುತ್ತಾನೆ. ಇಲ್ಲಿಗೆ ಚಿತ್ರ ಮುಗಿಯುತ್ತದೆ. +ಚಿತ್ರದಲ್ಲಿ ಮೂರು ಮುಖ್ಯ ಧಾರೆಗಳಿವೆ. ಮೊದಲನೇಯದು, ಆಧುನಿಕ ಸಮಾಜದ ಅಭಿವೃದ್ಧಿಯ ಪ್ರಜ್ಞೆಯನ್ನು ಸಂಕೇತಿಸುವ ಅಣೆಕಟ್ಟು ಜೀವನದಲ್ಲಿ ಉಂಟುಮಾಡಬಹುದಾದ ತರಂಗಗಳಿಗೆ, ಪರಂಪರೆಯನ್ನು ಶ್ರದ್ಧೆಯಿಂದ ಬದುಕುವ, ಅದನ್ನು ಸಂಕೇತಿಸುವ, ಆಧುನಿಕತೆಯನ್ನು ಎಳ್ಳಷ್ಟು ಜೀರ್ಣಿಸಿಕೊಳ್ಳಲಾಗದ ದುಗ್ಗಜ್ಜ ಹೇಗೆ ಪ್ರತಿಕ್ರಯಿಸುತ್ತಾನೆ ಎನ್ನುವುದು. ಎರಡನೇಯದು ಪರಂಪರೆಯ ಅರಿವುಳ್ಳ, ಅದರ ಬಗ್ಗೆ ಗೌರವವಿರುವ, ಆಧುನಿಕ ಪ್ರಪಂಚದ ಅರಿವಿರುವ, ಅದಕ್ಕೆ ಹೊಂದಿಕೊಳ್ಳ ಬಯಸುವ ನಾಗಿಯ ಪ್ರತಿಕ್ರಯೆ. ಮೂರನೇಯದು ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಸರಿಯಾಗಿ ಬದುಕಲಾರದ ಗಣಪನ ಪ್ರತಿಕ್ರಿಯೆ. ಇವು ಮುಖ್ಯ ಧಾರೆಗಳಾದರೆ, ಅತ್ಯಂತ ವ್ಯಕ್ತಿಗತ ಹಿನ್ನೆಲೆಯಲ್ಲಿ ಈ ಅಣೆಕಟ್ಟು (ತನ್ಮೂಲಕ ಬರುವ ಕೃಷ್ಣ) ಗಣಪ-ನಾಗಿಯರ ಸಂಬಂಧದಲ್ಲಿ ಮೂಡಿಸುವ ಬಿರುಕು, ಪರಂಪರೆಯೇ ಮುಖ್ಯವಾದ ಈ ಸಮಾಜದಲ್ಲಿ ಹೆಣ್ಣಿನ ಸ್ಥಾನ ಚಿತ್ರದಲ್ಲಿ ಸಣ್ಣ ಝರಿಗಳಾಗಿ ಚಿತ್ರದುದ್ದಕ್ಕೂ ಹರಿಯುತ್ತವೆ. ಇವುಗಳಲ್ಲಿ ನನಗೆ ಅತಿ ಮುಖ್ಯವೆನಿಸುವುದು ನಾಗಿ ಮತ್ತು ದುಗ್ಗಜ್ಜರ ಹೋರಾಟ ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರ. +ದುಗ್ಗಜ್ಜನಿಗೆ ಪರಂಪರೆಯಲ್ಲಿ, ಅದರ ಶಕ್ತಿಯಲ್ಲಿ, ತನ್ನ ನಂಬಿಕೆಗಳಲ್ಲಿ ಸಂಪೂರ್ಣವಾದ ಶ್ರದ್ಧೆ. ಸೀತ ಪರ್ವತ, ಭೂತದೇವರು ಮುಳುಗುವುದಕ್ಕೆ ಸಾಧ್ಯವಿಲ್ಲ ಎನ್ನುವುಡೆ ಆತನ ನಂಬಿಕೆ. ಅದಕ್ಕೆ ವಿರದ್ಧವಾಗಿ, ಹಂತ ಹಂತವಾಗಿ ರೂಪುಗೊಳ್ಳುವ ಘಟನೆಗಳು, ಎಚ್ಚರಿಕೆಗಳು ಇವು ಯಾವುವೂ ಅವನಿಗೆ ಅರ್ಥವಾಗುವುದಿಲ್ಲ. ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಅವನ ಹತಾಶೆ. ಪರಂಪರೆಯನ್ನು ಬಿಟ್ಟರೆ ಅವನಿಗೆ ಬದುಕಲು ಆಧಾರವೇ ಇಲ್ಲ. ಕಡೆಯ ಪಕ್ಷ ಪರಂಪರೆಯ ಯಾವುದಾದರೂ ಒಂದು ಅಂಶವನ್ನು ಉಳಿಸಿಕೊಳ್ಳಬಹುದಾದ ಪರಿಹಾರಕ್ಕೆ ಅವನ ಸಮ್ಮತಿಯಿದೆ. ಆದರೆ ಸರ್ಕಾರ ಭೂತ ದೇವರ ಸ್ಥಳಾಂತರಕ್ಕೆ ಒಪ್ಪುವುದಿಲ್ಲ. ಸೀತಾ ಪರ್ವತದ ಯಾವ ದೃಷ್ಟಾಂತಕ್ಕೂ ಯಾರೂ ಬೆಲೆ ಕೊಡುವುದಿಲ್ಲ. ಪರಂಪರೆಗೆ ಬೆಲೆಯೇ ಇಲ್ಲದ ಸಮಾಜ ಅವನ ಮುಂದೆ ನಿಲ್ಲುತ್ತದೆ. ಆದರೂ ಅನಾಹುತ ಸಂಭವಿಸಲಾರದು ಎನ್ನುವ ಆಶಯ. ಇದು ಅವನಿಗೂ ತಿಳಿದಿದೆ. ಕಡೆಗೆ ಅವನ ನಂಬಿಕೆ ಸಂಪೂರ್ಣ ಸುಳ್ಳಾದಾಗ, ನಿಜಕ್ಕೂ ಹೊಸ ಆಧಾರಗಳನ್ನು ಹುಡುಕುವ ದುಗ್ಗಜ್ಜ, ದಿಕ್ಕುಗಾಣದೆ ‘ನೇಮ‘ದ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿ ಪ್ರಾಣ ಕಳೆದುಕೊಳ್ಳುತ್ತಾನೆ. +ಅವನ ಸಾವು ಪರಂಪರೆಯ ದುರಂತವನ್ನು ಸಂಕೇತಿಸುತ್ತದೆ. ಅಭಿವೃದ್ಧಿ ಎನ್ನುವುದು ಜನರ ಜೀವನದಲ್ಲಿ ಆಡಬಹುದಾದ ಆಟಗಳನ್ನು ಸಂಕೇತಿಸುತ್ತದೆ. ‘ಚೋಮನ ದುಡಿ’-ಯ ನಂತರ ತಮ್ಮ ಜೀವನದ ಅತಿ ಮುಖ್ಯ ಪಾತ್ರದಲ್ಲಿ ವಾಸುದೇವ ರಾವ್, ಪೂರ್ಣ ನ್ಯಾಯ ಒದಗಿಸಿ ನಟಿಸಿದ್ದಾರೆ. ಚಿತ್ರದ ಅತ್ಯುತ್ತಮ ನಟನೆ ಅವರದ್ದು. ರಾಷ್ಟ್ರ ಪ್ರಶಸ್ತಿ ಪಡೆದ ಬೇರೆ ಚಿತ್ರಗಳನ್ನು ನೋಡಿಲ್ಲವಾದ್ದರಿಂದ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, ಅವರಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಬರಬಹುದಿತ್ತು. ಈ ಪಾತ್ರ ಹೆಚ್ಚು ಬೆಳವಣಿಗೆಯನ್ನು ಕಾಣುವುದಿಲ್ಲ, ಹೆಚ್ಚು ಏರಿಳಿತಗಳನ್ನು ಕಾಣುವುದಿಲ್ಲ. ಸಿನಿಕತನದಿಂದ ಶುರುವಾಗು ಪಾತ್ರ, ಸಿಟ್ಟು, ನೋವು, ಹತಾಶೆ ಅನುಭವಿಸುತ್ತಾ ಕಡೆಗೆ ದುರಂತ ಕಾಣುತ್ತದೆ. ಪ್ರತಿ ಹಂತದಲ್ಲೂ ರಾವ್ ಅತ್ಯುತ್ತಮವಾಗಿ, ಆಲ್ಮೊಸ್ಟ್ ತಪ್ಪಿಲ್ಲದಂತೆ(:)-) ಅಭಿನಯಿಸಿದ್ದಾರೆ. +ಇದಕ್ಕೆ ಪ್ರತಿಯಾಗಿ ನಾಗಿ ಈ ತೆರನಾದ ಅಭಿವೃದ್ಧಿಯನ್ನು ಅರಗಿಸಿಕೊಳ್ಳಲು ತಯಾರಾಗಿದ್ದಾಳೆ. ತನ್ನ ಯಾವುದೇ ಇಚ್ಛೆಯಿಲ್ಲದೆ ಇಂತಹ ಒಂದು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಅದರಿಂದ ತಪ್ಪಿಸಿಕೊಳ್ಳುವುದು ಮಾತ್ರ ಅವಳ ಮುಖ್ಯ ಉದ್ದೇಶ. ಅದಕ ಪೂರಕವಾಗಬಹುದಾದ ಪರಂಪರೆಯನ್ನು ಉಳಿಸಿಕೊಳ್ಳಲು ತಯಾರು. ಬಿಡಬೇಕಾದ್ದುದನ್ನು ಬಿಡಲು ತಯಾರು. ಆದರೆ ಅವಳ ಅಭಿಪ್ರಾಯಕ್ಕೆ ಪರಂಪರೆಯಲ್ಲಿ ಬೆಲೆಯಿಲ್ಲ. ನಾಗಿ ತನ್ನ ಬದುಕಿಗೆ ಬೇಕಾದ ಆಧಾರಗಳನ್ನು ಸೃಷ್ಟಿಸಲು ತಾನೆ ತಯಾರಾಗುತ್ತಾಳೆ. ಚಿತ್ರದ ಅತ್ಯಂತ ಜೀವಂತ ಪಾತ್ರ ನಾಗಿಯದು. ಪ್ರತಿ ಹಂತದಲ್ಲೂ ಹೋರಾಡುತ್ತಾಳೆ. ಒಂಟಿತನ ತುಂಬಿದ ದ್ವೀಪದಲ್ಲಿ ಕೃಷ್ಣನನ್ನು ಬರಮಾಡುತ್ತಾಳೆ. ಸಂಸಾರದಲ್ಲಿ ಬಿರುಕುಂಟಾದಾಗ ಕೃಷ್ಣನನ್ನು ಹೊರಗಟ್ಟುತ್ತಾಳೆ. ಹತಾಶೆಗೊಂಡ ಗಂಡನಲ್ಲಿ ಸ್ಫೂರ್ತಿ ತುಂಬುತ್ತಾಳೆ. ಅನೇಕ ಏರಿಳಿತಗಳನ್ನು ಕಾಣುವ ಪಾತ್ರ ಇದು. ಆತಂಕದಿಂದ ಶುರು ಆಗುವ ಈ ಪಾತ್ರ, ಆಸೆ, ನಿರಾಸೆ, ದಾಂಪತ್ಯ ಸಂಕಷ್ಟ, ಒಂಟಿತನ, ಬೆಲೆಯಿಲ್ಲದಿರುವಿಕೆ ಎಲ್ಲವನ್ನೂ ತಿರು-ತಿರುಗಿ ಅನಿಭವಿಸಿ ಕಡೆಗೆ ಗೆದ್ದೂ ಗೆಲುವನ್ನು ತನ್ನದಾಗಿಸಿಕೊಳ್ಳುವಲ್ಲಿ ಸೋಲುತ್ತಾಳೆ. ಚಿತ್ರದ ಅತ್ಯಂತ ಕಠಿಣ ಪಾತ್ರ ಇದು. ಸೌಂದರ್ಯ ಸಾಕಷ್ಟು ನ್ಯಾಯ ಒದಗಿಸಿದ್ದಾರೆ ಎಂದೇ ಹೇಳಬೇಕು. ಆಕೆ ಒಬ್ಬ ಸೂಕ್ಷ್ಮ ಹಾಗೂ ಬುದ್ಧಿವಂತ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವೇ ಕೆಲವೆಡೆ ಪಟ್ಟಣದ ಮ್ಯಾನರಿಸಂ ಬಿಡಲು ಅವರಿಗೆ ಸಾಧ್ಯವಾಗಿಲ್ಲ. ಅಷ್ಟಾಗಿಯೂ ಅದು ಎಲ್ಲೂ ಘಾಸಿಗೊಳಿಸಿಲ್ಲ ಎನ್ನುವುದು ಆಕೆಗೆ ಕ್ರೇಡಿಟ್. +ಸಂಪೂರ್ಣವಾಗಿ ಐಡೆಂಟಿಟಿ ಕ್ರೈಸಿಸ್ ಅನುಭವಿಸುವ ಪಾತ್ರ ಗಣಪನದ್ದು. ಪರಂಪರೆಯನ್ನು ಸಿಕ್ಕಾಪಟ್ಟೆ ನಂಬಿಲ್ಲ. ಆದರೆ ಅದಿಲ್ಲದೆ ಬದುಕಿಲ್ಲ. ಆಧುನಿಕತೆಯನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾರ. ಪರಿಸ್ಥಿತಿ ತಂದೊಡ್ಡುವ ದಾಂಪತ್ಯ ಕಲಹವನ್ನು ನಿವಾರಿಸಿಕೊಳ್ಳುವ ಚೈತನ್ಯವಿಲ್ಲ. ನಿಷ್ಕ್ರಿಯತೆಯೇ ಅವನ ಪ್ರತಿಭಟನೆಯಾಗುತ್ತದೆ. ಕಡೆಗೆ ಸಂಪೂರ್ಣ ಹತಾಶೆಗೊಂಡು, ನಿರ್ಜೀವಿಯಂತಾಗಿ, ಹೆಂಡತಿಯ ಹೋರಾಟದಿಂದ ಮತ್ತೆ ಜೀವಂತನಾಗುವ ಗಣಪ, ಕಡೆಗೆ ಎಲ್ಲಾವನ್ನೂ ಭೂತದಯೆ ಎಂದು ಪರಿಗಣಿಸಿ, ಹೆಂಡತಿಗೆ ಸಲ್ಲಿಸಬೇಕಾದುದನ್ನು ಸಲ್ಲಿಸದೆ, ತನ್ನ ಕೀಳರಿಮೆಯನ್ನು ಪ್ರದರ್ಶಿಸುತ್ತಾನೆ. ತುಂಬಾ ಸೂಕ್ಷ್ಮವಾದ ಈ ಪಾತ್ರದಲ್ಲಿ ಅವಿನಾಶ್ ಕಷ್ಟಪಟ್ಟು ಅಭಿನಯಿಸಿದ್ದಾರೆ. ‘ಮತದಾನದ’ ಪಾತ್ರಕ್ಕಿಂತಾ ಕಷ್ಟದ್ದು, ಅಲ್ಲಿ ದ್ವಂದ್ವ ಇರಲಿಲ್ಲ, ಇಲ್ಲಿ ಪಾತ್ರ ಅತಿ ಹೆಚ್ಚು ಕ್ರೈಸಿಸ್ ಕಾಣುತ್ತದೆ. ಅತೀವ ಕೀಳರಿಮೆಯಿಂದ ನರಳುತ್ತದೆ. ಮನಃಶಾಸ್ತ್ರ ಹಾಗೂ ಥಿಯರಿಟಿಕಲ್ ಕಾರಣಕ್ಕಾಗಿ ತುಂಬಾ ಆಸಕ್ತಿಕರ ಪಾತ್ರ. ದುಗ್ಗಜ್ಜ ಹಾಗೂ ನಾಗಿಯರ ನಡುವಿನ ಪರಿಸ್ಥಿತಿಯನ್ನು ಪ್ರತಿನಿಧಿಸುವ ಪಾತ್ರ. +ಮೇಲಿನ ಮೂರನ್ನು ಬಿಟ್ಟರೆ, ಚಿತ್ರದ ಅತಿ ಮುಖ್ಯ ಪಾತ್ರ ಕೃಷ್ಣನದ್ದು. ಚಿತ್ರದ ಆಶಯದ ಚೌಕಟ್ಟಿಗಿಂತ ಹೆಚ್ಚು ಸಂಗತಿಗಳನ್ನೊಳಗೊಂಡ, ಅದೇ ಕಾರಣಕ್ಕೆ ಚಿತ್ರದ ಫೋಕಸ್-ಅನ್ನು ಕೆಡಿಸುವ ಪಾತ್ರ. ಹರೀಶ್ ರಾಜು ಸಮರ್ಪಕವಾಗೆ ನಿರ್ವಹಿಸಿದ್ದಾರೆ. ಈ ಪಾತ್ರ ಚಿತ್ರದಲ್ಲಿ ಅನೇಕ (ಕೆಲವು ಅನವಶ್ಯ) ವೈವಿಧ್ಯತೆಯನ್ನು ತರುತ್ತದೆ. ಪಟ್ಟಣದ ಸಂಕೇತವಾಗಿ ಬರುವ ಈ ಪಾತ್ರ, ಅದನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತದೆ. ದುಗ್ಗಜ್ಜನ್ನು ಕುತಂತ್ರದಿಂದ ಹೇರಂಭ ಹೆಗ್ಗಡೆಯ ಮನೆಗೆ ಹೋಗಲು ಒಪ್ಪಿಸುವ ದೃಶ್ಯ ಅದಕ್ಕೊಂದು ಉದಾಹರಣೆ. ಅಣೆಕಟ್ಟಿನ ಬೈ-ಪ್ರಾಡಕ್ಟ್-ಅನ್ನು ಪ್ರತಿನಿಧಿಸುವ ಕೃಷ್ಣ ಮೊದಲು ಬರುವುದು ಇವರ ಜೊತೆಯಾಗಿರಲು. ಮಳೆಯಿಂದ ಏನೂ ಮಾಡಲಾಗದೆ ಬೋರ್ ಹೋಡೆದಿರುವಾಗ ಪಾತ್ರೆಗಳ ಜೊತೆ ಆಟವಾಡುವ ದೃಶ್ಯ ಅದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಆದರೆ, ಕ್ರಮೇಣ ಗಣಪ-ನಾಗಿಯರ ಜೀವನದಲ್ಲಿ ಬಿರುಕು ಮೂಡಲು ಈ ಪಾತ್ರ ಕಾರಣವಾಗುತ್ತದೆ. ಕಡೆಗೆ ಅವರಿಬ್ಬರಿಗೂ ಬೇರೆ ಯಾವ ಆಧಾರವೂ ಇಲ್ಲದಂತೆ ಮಾಡಿ, ನಡು-ನೀರಿನಲ್ಲಿ ಕೈಬಿಟ್ಟು ಹೊರಡುತ್ತದೆ. ಅಷ್ಟರ ಮಟ್ಟಿಗೆ ಪಾತ್ರ ತನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಆದರೆ ಈ ಪಾತ್ರದ ವೈಯಕ್ತಿಕ ತೊಂದರೆಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರದ ಫೋಕಸ್ ಕೆಡಿಸುತ್ತದೆ. ಅಷ್ಟಲ್ಲದೆ, ಕೃಷ್ಣ ಮತ್ತು ನಾಗಿಯರ ಸಂಬಂಧವನ್ನು ಸಹಿಸಲಾಗದೆ, ಸರ್ಕಾರದಿಂದ ಪರಿಹಾರ ಸ್ವೀಕರಿಸಿ ದ್ವೀಪ ಬಿಟ್ಟರೆ ಕೃಷ್ಣನ ಕಾಟ ತಪ್ಪುತ್ತದೆ ಎನ್ನುವ ನಿರ್ಧಾರಕ್ಕೆ ಗಣಪ ಬರುತ್ತಾನೆ. ಅಲ್ಲಿಗೆ ವೈಯಕ್ತಿಕ ಸಮಸ್ಯೆಯೊಂದು ಚಿತ್ರದಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಚಿತ್ರದಲ್ಲಿ ಬರುವ ಮಿಕ್ಕೆಲ್ಲಾ ಸಂಕೇತಗಳ ಜೊತೆ ಇದು ಹೊಂದುವುದೇ ಇಲ್ಲ. +ಚಿತ್ರದಲ್ಲಿ ಅನೇಕ ಒಳ್ಳೆಯ ಹಾಗೂ ಇನ್ನೂ ಚೆನ್ನಾಗಿ ಬರಬಹುದಾದ ದೃಶ್ಯಗಳಿವೆ. ಪೋಲೀಸರು ಎತ್ತಂಗಡಿ ಮಾಡಲು ಬಂದಾಗ ದುಗ್ಗಜ್ಜನ ಪ್ರತಿಕ್ರಿಯೆ, ಮಗುವಿನಂತಹ ಹಟ – ಪಾತ್ರದ ವಿವರಣೆಯ ದೃಷ್ಟಿಯಿಂದ ಉತ್ತಮ. ಅಂತೆಯೇ, ದುಗ್ಗಜ್ಜ ಮೌನವಾಗಿ ದುಃಖಿಸುವ ದೃಶ್ಯಗಳು, ನಾಗಿ-ಗಣಪ ಜಗಳಾವಾಡಿ ನಂತರ ಮೌನವಾಗುವ ದೃಶ್ಯಗಳೂ ಕೂಡ. ಮನುಷ್ಯ ಸಂಪರ್ಕವಿಲ್ಲದ ಜೀವನ ನಡೆಸಬೇಕಾದೀತು ಎನ್ನುವ ಭಯದಲ್ಲಿದ್ದ ನಾಗಿಯು ಕೃಷ್ಣ ಬಂದಾಗ ಖುಶಿಪಡುವುದು, ಕೃಷ್ಣನ ಪ್ರವೇಶ, ಕೃಷ್ಣ ಕರೆದುಕೊಂಡು ಬಂದ ಕೆಲಸಗಾರರು ಹಾಡುವ ಜಾನಪದ ಹಾಡಿಗೆ ನಾಗಿ ದನಿಗೂಡಿಸುವುದು ಪಾತ್ರಗಳ ವಿವರಣೆಯ ದೃಷ್ಟಿಯಿಂದ ಸರಿಯಾದುದು. ಕೃಷ್ಣ ಬೇಸರಗೊಂಡಾಗ ಪಾತ್ರೆಗಳ ಜೊತೆ ಆಟವಾಡುವುದು ಆ ಪಾತ್ರದ ಹಿಂದಿರುವ ಆಶಯವನ್ನು ಸರಿಯಾಗಿ ಬಿಂಬಿಸುತ್ತದೆ. ಇವಲ್ಲದೆ, ಇನ್ನೂ ಒಂದು ಮುಖ್ಯ ದೃಶ್ಯವಿದೆ. ದುಗ್ಗಜ್ಜನ ಅಂತ್ಯ ಸಂಸ್ಕಾರದಲ್ಲಿ ಮಳೆಯಲ್ಲಿ ತೋಯುತ್ತಿರುವ ನಾಗಿ ಹಾಗೂ ಗಣಪರಿಗೆ ಕೃಷ್ಣ ಕೊಡೆ ಕೊಡುತ್ತಾನೆ. ಗಣಪನಿಗೆ ಅದನ್ನು ಹಿಡಿಯಲೂ ಸಾಧ್ಯವಾಗದೆ, ಪ್ರಜ್ಞಾಹೀನನಂತೆ ಮುನ್ನಡೆಯುತ್ತಾನೆ. ನಾಗಿ ಮಾತ್ರ ಕೊಡೆ ಹಿಡಿದೇ ಮುನ್ನಡೆಯಲು ಪ್ರಯತ್ನಿಸುತ್ತಾಳೆ, ಆದರೆ ಶಕ್ತಿ ಸಾಲದೆ ಅಳುತ್ತಾ ಕೆಳಗೆ ಬೀಳುತ್ತಾಳೆ. ಅವಳ ಹೋರಾಡುವ ಶಕ್ತಿ ತುಂಬಾ ಕಡಿಮೆಯಾಗಿರುವ ಸಂದರ್ಭ ಅದು. ಪರಿಸ್ಥಿತಿಯ ಗಾಂಭೀರ್ಯ, ಪಾತ್ರಗಳ ಪರಿಸ್ಥಿತಿ ಇವುಗಳ ದೃಷ್ಟಿಯಿಂದ ಒಳ್ಳೆಯ ದೃಶ್ಯವಿದು. ಭರವಸೆ ಮೂಡಿಸುವ ಮತ್ತೊಂದು ದೃಶ್ಯ ಕ್ಲೈಮಾಕ್ಸ್ನಲ್ಲಿ ಬರುತ್ತದೆ. ಅಣೆಕಟ್ಟು ತುಂಬಿ ಹರಿಯುತ್ತಿರುವುದನ್ನು, ಓಡುತ್ತಾ ನೋಡುವ ನಾಗಿ ಅಷ್ಟೆ ತೀವ್ರವಾಗಿ ಸಂತೋಷವನ್ನು ಅನುಭವಿಸುತ್ತಾಳೆ. ಆದರೆ ಇಲ್ಲಿ, ಬರಿಯ ಅಣೆಕಟ್ಟನ್ನು ತೋರುವ ಕೆಲ ದೃಶ್ಯಗಳು ಅತ್ಯುತ್ತಮ ಅನುಭವದ ಸಾಧ್ಯತೆಯನ್ನು ಕಳೆದು ನಿರಾಶೆ ಮೂಡಿಸುತ್ತದೆ. ಇಲ್ಲಿನ ಪ್ರತಿ ದೃಶ್ಯದಲ್ಲೂ ನಾಗಿ ಇರಬೇಕಾಗಿತ್ತು ಎಂದೆನ್ನಿಸುತ್ತದೆ. +ಕೃಷ್ಣನ ಮೂಲಕ ಗಣಪ-ನಾಗಿಯ ನಡುವಿನ ವಿರಸ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದನ್ನು ಮರೆಯುವುದಾದರೆ, ಕೆಲವು ದೃಶ್ಯಗಳು ಮೇಲ್‌ಸ್ತರದ್ದವು. ಶೀತವಾಗಿದ್ದ ಕೃಷ್ಣನಿಗೆ ಮುಲಾಮು ಹಚ್ಚುವಾಗ ನಾಗಿಯ ಮಾತೃ ವಾತ್ಸಲ್ಯ ಮತ್ತು ಅದಕ್ಕೆ ಕೃಷ್ಣ ಒಂದು ಆಸರೆ ಸಿಕ್ಕಂತೆ ಉತ್ಸಾಹಿತನಾಗುವುದು ಅದಕ್ಕೊಂದು ಉದಾಹರಣೆ. ಇಲ್ಲಿ ಸೌಂದರ್ಯ ಹಾಗೂ ಹರೀಶ್ ರಾಜು ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಕೃಷ್ಣನ ಮುಳುಗಡೆ ಮೇಲೆ ಹೇಳಿರುವ ದೃಶ್ಯಕ್ಕೆ ಪೂರಕ. ಗಣಪನ ಕೀಳರಿಮೆಯಿಂದ ಸಿದ್ಧಪಡಿಸಿದ ಈ ನಾಟಕದಲ್ಲಿ ಕೃಷ್ಣನ ಮುಳುಗಡೆಯಿಂದ ಗಣಪ ಖುಶಿ ಪಡುವುದು ಪಾತ್ರದ ಬೆಳವಣಿಗೆಯಲ್ಲಿ ಸರಿಯಾದರೂ, ಚಿತ್ರದ ಆಶಯದ ದೃಷ್ಟಿಯಿಂದ ಅಗತ್ಯಕ್ಕಿಂತ ಹೆಚ್ಚು ಜಾಗ ಪಡೆದುಕೊಂಡಿದೆ. ಹಾಗೆಯೆ, ನಾಗಿ-ಕೃಷ್ಣ ಪಗಡೆ ಆಡುತ್ತಿದ್ದಾಗ, ಗಣಪನ ನೆರಳು ಅವನ ಬರುವನ್ನು ತಿಳಿಸುವುದು ಒಂದು ಒಳ್ಳೆಯ ದೃಶ್ಯ. ನಾಗಿಗೆ ಅದು ತಿಳಿಯದಿರುವುದೂ ಕೃಷ್ಣನಿಗೆ ತಿಳಿಯುವುದೂ ಒಳ್ಳೆಯ ಸಂಯೋಜನೆ. ತಮ್ಮ ಮಾತುಗಳನ್ನು ಕದ್ದು ಕೇಳಿಸಿಕೊಂಡ ಕೃಷ್ಣನನ್ನು ಹೊಡೆಯುವ ನಾಗಿ ಆ ಕ್ಷಣದಲ್ಲಿ ಅನುಭವಿಸುವ ದ್ವಂದ್ವ, ಹೊಡೆದ ನಂತರ ತನ್ನ ಅತಿಯಾದ ಪ್ರತಿಕ್ರಿಯೆಯಿಂದ ದುಃಖಗೊಳ್ಳುವುದು – ಇಲ್ಲಿ ಸೌಂದರ್ಯರ ಸೂಕ್ಷ್ಮವಾಗಿ ನಟಿಸಿದ್ದಾರೆ. +ಗಣಪ ಸರ್ಕಾರಿ ಅಧಿಕಾರಿಯಲ್ಲಿ ಹೋಗಿ ಕಡೆಗೆ ‘ಫಾರಂ ಕೊಡಿ’ ಎಂದು ಕೇಳುವಾಗ ಅವನು ಅನುಭವಿಸುವ ದ್ವಂದ್ವ ಇನ್ನಷ್ಟು ತೀವ್ರವಾಗಿ ಬರಬೇಕಿತ್ತು. ಬೆಟ್ಟದಲ್ಲಿ ಗಣಪ ಮತ್ತು ನಾಗಿಯರು ಮತ್ತೆ ಒಂದಾಗುವ ದೃಶ್ಯದಲ್ಲಿ ಒಂದು ಲಾಂಗ್ ಶಾಟ್ ಅವಶ್ಯಕತೆಯಿತ್ತು. ಹೆಗ್ಗಡೆಯವರು ಹೊರಟಾಗ ನಾಗಿ ಓಡಿ ಬಂದು ಅವರಿಗೆ ವಿದಾಯ ಕೋರುವ ದೃಶ್ಯದಲ್ಲೂ ಒಂದು ಲಾಂಗ್ ಶಾಟ್ ಅವಳ ಒಂಟಿತನವನ್ನು ಪ್ರತಿನಿಧಿಸಲು ಸಹಾಯವಾಗುತ್ತಿತ್ತು. ಈ ಮಾತನ್ನು ಪ್ರತಿಯೊಬ್ಬರ ದೃಷ್ಟಿಯಿಂದಲೂ ಹೇಳಬಹುದು, ಪ್ರತಿಯೊಬ್ಬರೂ ದ್ವೀಪವಾಗುವುದನ್ನು ಲಾಂಗ್ ಶಾಟ್-ಗಳು (ಅದರಲ್ಲೂ ಬೆಟ್ಟವನ್ನು ಹಿನ್ನೆಲೆಯಾಗುಳ್ಳ ದೃಶ್ಯಗಳು) ಹೆಚ್ಚು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದವು. +ಚಿತ್ರದಲ್ಲಿ ಅನೇಕ ಕಡೆ ದೃಶ್ಯಗಳು ಸೂಚಿಸಬೇಕಾಗಿದ್ದುದನ್ನು ಮಾತುಗಳು ಹೇಳುತ್ತವೆ. ದುಗ್ಗಜ್ಜನ ನಂಬಿಕೆ ಸುಳ್ಳಾದಾಗ ದುಗ್ಗಜ್ಜ ‘ನನ್ನ ನಂಬಿಕೆ ಸುಳ್ಳಾಯಿತಲ್ಲ‘ ಎಂದು ಆಶ್ಚರ್ಯ-ದುಃಖ ಪಡುವುದು, ದುಗ್ಗಜ್ಜನ ಸಾವಿಗೆ ತಾನೇ ಕಾರಣವೇನೋ ಎಂದು ನಾಗಿ ಅನುಮಾನದಿಂದ ದುಃಖಿಸುತ್ತಿದ್ದಾಗ ಆ ಮಾತನ್ನು ಕೃಷ್ಣನ ಬಾಯಲ್ಲಿ ಹೇಳಿಸುವುದು, ಕೃಷ್ಣನ ಸ್ವಾರ್ಥವನ್ನು ನಾಗಿ ಅದೇ ಮಾತಲ್ಲಿ ಹಲುಬುವುದು,ಅಧಿಕಾರಿಯ ಮುಂದೆ ಒಬ್ಬನನ್ನು ಮುಗಿಸಿ ಇನ್ನೊಬ್ಬನನ್ನು ಉದ್ಧಾರ ಮಾಡೋದು ಯಾವ ನ್ಯಾಯ‘ ಎಂದು ಗಣಪ ಹಲುಬುವುದು (ಚಿತ್ರದ ಮೂಲ ಆಶಯ ಇದೇ ಇರಬಹುದೇ ಎಂದು ಪ್ರೇಕ್ಷಕನಿಗೆ ಅನುಮಾನ ಬರಬಹುದು), ‘ದ್ವೀಪ‘ ಪದದ ಅತಿ ಬಳಕೆ, ಪಾತ್ರಗಳು ಕೆಲವೆಡೆ ತಮ್ಮ ಬುದ್ಧಿ ಮೀರಿದ ಮಾತಾಡುವುದು ಇವೆಲ್ಲಾ ದೃಶ್ಯಗಳ ರಭಸವನ್ನು ಕಡಿಮೆ ಮಾಡುತ್ತವೆ. +ಚಿತ್ರದಲ್ಲಿ ಮಳೆ ಅನಿವಾರ್ಯ. ಅದಿಲ್ಲದೆ ಚಿತ್ರ ಸಾಧ್ಯವೇ ಇಲ್ಲ. ಅದನ್ನು ಪ್ರತಿಯೊಂದು ದೃಶ್ಯದ ಆಶಯಕ್ಕೆ, ಒಟ್ಟೂ ಚಿತ್ರದ ಆಶಯಕ್ಕೆ ಪೂರಕವಾಗಿ ಸಂಕೇತವಾಗಿ ಬಳಸಿರುವುದು ಚಿತ್ರದ ಪ್ಲಸ್ ಪಾಯಿಂಟ್-ಗಳಲ್ಲಿ ಒಂದು. ಇಲ್ಲಿ ಕಾಸರವಳ್ಳಿಯವರ ಸೃಜನಶೀಲತೆ, ರಾಮಚಂದ್ರರ ಕೈಚಳಕ ಎದ್ದು ಕಾಣುತ್ತದೆ. ಸಂಗೀತ ಮೊದ ಮೊದಲು ಸ್ವಲ್ಪ ಜೋರಾಯಿತು ಎಂದಿನ್ನಿಸಿದರೂ ಕ್ರಮೇಣ ಹೊಂದಿಕೊಳ್ಳುತ್ತದೆ. ಆದರೂ ಅಷ್ಟೊಂದು ಜೋರಾಗಿರಬೇಕಾಗಿರಲಿಲ್ಲ. ಸಂಭಾಷಣೆಯೇ ಚಿತ್ರ ಮೈನಸ್ಗಳಲ್ಲಿ ಒಂದು. ಮಿಕ್ಕ ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ಕಾಸರವಳ್ಳಿಯವರ ಮಾಮೂಲಿನ ಅಚ್ಚುಕಟ್ಟುತನ ಚೆನ್ನಾಗಿ ಅನುಭವಕ್ಕೆ ಬರುತ್ತದೆ. +ಆದರೆ ಚಿತ್ರದ ನಿಲುವನ್ನು ಗ್ರಹಿಸುವಲ್ಲಿ ಪ್ರೇಕ್ಷಕ ಸ್ವಲ್ಪ ಪರದಾಡಬೇಕಾಗುತ್ತದೆ. ಸಮಾಜದ ಯಾವುದೇ ಧೋರಣೆಯಿಂದ ಕಟ್ಟ ಕಡೆಯ ಮನುಷ್ಯನ ಮೇಲಾಗುವ ಪರಿಣಾಮ ದಾಖಲಿಸಬೇಕು ಎನ್ನುವ ಸಮಾಜವಾದೀ ಪ್ರಜ್ಞೆಯಿಂದ ಈ ಚಿತ್ರ ಬಂದಿರುವುದು ಸರಿಯೆ. ಆದರೆ ಏನನ್ನು ಮುಖ್ಯವಾಗಿ ಪ್ರತಿನಿಧಿಸುತ್ತದೆ ಎನ್ನುವುದು ಪ್ರೇಕ್ಷಕನನ್ನು ಮುಖ್ಯವಾಗಿ ಕಾಡಿ ಉತ್ತರ ಸಿಗದಂತೆ ಮಾಡುತ್ತದೆ. ನರ್ಮದಾ ಬಚಾವೊ ಆಂದೋಲನ್ ಹಿನ್ನೆಲೆಯಲ್ಲಿ, ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಣೆಕಟ್ಟು ವಿರೋಧಿ ಪರಿಸರವಾದದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮುಖ್ಯವಾಗುತ್ತದೆ. ಅಣೆಕಟ್ಟು ಪ್ರತಿನಿಧಿಸುವ ಅಭಿವೃದ್ಧಿ ಎಂಬ ಪೆಡಂಭೂತ ಒಂದು ಜೀವನ ಶೈಲಿಯನ್ನು ಹೇಗೆ ನಾಶಪಡಿಸುತ್ತದೆ ಎನ್ನುವುದು ಮುಖ್ಯವಾದರೆ, ದುಗ್ಗಜ್ಜ ಮುಖ್ಯನಾಗುತ್ತಾನೆ. ಮಧ್ಯದಲ್ಲೇ ನೇಮದ (ಪರಂಪರೆ) ಮೂಲಕ ಪ್ರತಿಭಟಿಸಿ ಸಾಯುತ್ತಾನೆ. ದುಗ್ಗಜ್ಜನ ಜೊತೆ ಅವನ ಹಳೆಯ ಮನೆ, ಭೂತ ದೇವರು ಎಲ್ಲಾ ಮುಳುಗಿವೆ. ಆದರೆ ಅವನ ಸಾವಿನ ತೀವ್ರತೆಯನ್ನು ತಿಳಿಗೊಳಿಸುವಂತೆ ನಾಗಿ ಹೋರಾಟ ನಡೆಸಿ ಗಂಡನ ಜೊತೆ ಮುನ್ನಡೆದೂ ಬಿಡುತ್ತಾಳೆ. ಅವನ ದುರಂತಕ್ಕೆ ಬೆಲೆ ಕಡಿಮೆಯಾಗುತ್ತದೆ. ದುಗ್ಗಜ್ಜನ ಕುರಿತಾದ ಸಿಂಪತಿ-ಯೇ ಚಿತ್ರದ ಮೂಲ ಆಶಯವಾಗಿದ್ದಲ್ಲಿ ಹೀಗಾಗುತ್ತಿರಲಿಲ್ಲ, ಇದ್ದೂ ಹೀಗಾಗಿದ್ದರೆ ಅದು ಚಿತ್ರದ ಸೋಲೇ ಸರಿ. ಇನ್ನು ನಿರ್ದೇಶಕ ಒಬ್ಬ ಪರಿಸರವಾದಿಯಾದ ಹೊರಾಟಗಾರನಾಗಿದ್ದರೆ ದುಗ್ಗಜ್ಜನ ಸಾವು ಮತ್ತು ಗಣಪ-ನಾಗಿಯರ ಸ್ಥಳಾಂತರ ಅಥವಾ ಅವರಿಬ್ಬರ ದುರಂತದಲ್ಲಿ ಚಿತ್ರ ಮುಗಿದಿರಬಹುದಿತ್ತು. ಅಣೆಕಟ್ಟಿನ ರಾಜಕೀಯ ಹೆರಂಭ ಹೆಗ್ಗಡೆ ಮುಂತಾದವರ ಸೂಕ್ಷ್ಮ ಸಂಕೇತಗಳಿಗಿಂತಾ ಹೆಚ್ಚಾಗಿ ನೇರವಾಗಿ ಚಿತ್ರದಲ್ಲಿ ಬರುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ದುಗ್ಗಜ್ಜ ಹಾಗೊ ಅವನು ಪ್ರತಿನಿಧಿಸುವ ಪರಂಪರೆಯ ನಾಶ ಜೀವನದ ದುರಂತಗಳಲ್ಲೊಂದು ಎಂದಷ್ಟೆ ಹೇಳಿ ನಿರ್ದೇಶಕ ಮುಂದುವರೆಯುತ್ತಾನೆ ಎಂದುಕೊಂಡರೆ ಚಿತ್ರ ಹೆಚ್ಚು ಗ್ರಾಹ್ಯವಾಗುತ್ತದೆ. ಇದು ಕೇವಲ ದಾಖಲೆಕಾರನ ದೃಷ್ಟಿ. ನಾಗಿಯ ಹೋರಾಟ ಚಿತ್ರದಲ್ಲಿ ಗಣಪ-ದುಗ್ಗಜ್ಜರಿಗೆ ಪ್ಯಾರಲ್ಲಲ್ ಆಗಿ ಬಂದಿರುವುದು, ಕಡೆಗೆ ಅವಳಿಗೆ ಜಯ ಸಿಗುವುದು ಆಧುನಿಕ ಸತ್ಯಗಳಿಗೆ ಹೊಂದಿಕೊಳ್ಳುವ ಜೀವನಪ್ರೇಮವನ್ನು, ಜೀವನದ ಮುನ್ನಡೆಯನ್ನು ಸಂಕೇತಿಸುತ್ತದೆ. ಇಲ್ಲೆಲ್ಲಾ ದಾಖಲೆಕಾರನ ಡಿಟಾಚ್ಮೆಂಟ್-ಅನ್ನು ನಿರ್ದೇಶಕನಲ್ಲಿ ಕಾಣಬಹುದು. ಆದರೆ ಕಾಸರವಳ್ಳಿಯವರ ನಿಲುವು ಇದಾಗಿತ್ತೇ? +ಇವೆಲ್ಲಾ ಏನೇ ಇದ್ದರೂ, ಸೂಕ್ಷ್ಮವಾಗಿರಬೇಕಿದ್ದ ಎರಡು ಅಂಶಗಳು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆದು ಚಿತ್ರಕ್ಕೆ ಅಪರಿಪೂರ್ಣತೆಯ ತಂದೊಡ್ಡಿವೆ, ಅವು ಗಣಪ-ನಾಗಿಯರ ಬಿರುಕು ಹಾಗೂ ವಾಮನವಾಗಿರಬೇಕಿದ್ದ ಕೃಷ್ಣನ ಪಾತ್ರ ತ್ರಿವಿಕ್ರಮನಾಗುವುದು. ಅಲ್ಲದೆ ಚಿತ್ರದುದ್ದಕ್ಕೂ ಸ್ತ್ರೀಯೊಬ್ಬಳ ಅಭಿಪ್ರಾಯಗಳಿಗೆ ಹೆಚ್ಚು ಬೆಲೆ ಸಿಗದಿರುವುದು ಸೂಕ್ಷ್ಮವಾಗಿ ಬಂದಿದ್ದರೂ, ಕ್ಲೈಮಾಕ್ಸ್ ದೃಶ್ಯದಲ್ಲಿ ಅದೇ ಮುಖ್ಯವಾಗಿಬಿಡುವುದು ಪ್ರೇಕ್ಶಕನಲ್ಲಿ ‘ಇದೇ ಚಿತ್ರದ ಮುಖ್ಯ ಹೇಳಿಕೆಯೇ‘ ಎಂಬ ಪ್ರಶ್ನೆ ಹುಟ್ಟಿಸಿ ಗೊಂದಲಕ್ಕೆ ದೂಡುತ್ತದೆ. ಚಿತ್ರದ ಆಶಯದ ಬಗೆಗಿನ ಗೊಂದಲ ಮತ್ತು ಚಿತ್ರದ ಶಿಲ್ಪ ಆಶಯಕ್ಕೆ ಸಂಪೂರ್ಣವಾಗಿ ಪೂರಕವಾಗಿರದಿರುವುದು ನಿರಾಶೆ ಉಂಟು ಮಾಡುತ್ತದೆ. ಹೀಗೆ, ಅನೇಕ ಉತ್ತಮ ಅಂಶಗಳನ್ನೊಳಗೊಂಡ ಈ ಚಿತ್ರ, ಕೆಲವು ಸಾಧ್ಯತೆಗಳನ್ನು ತಪ್ಪಿಸಿಕೊಂಡು ಪರಿಪೂರ್ಣ ಕಲಾಕೃತಿಯಾಗುವಲ್ಲಿ ಸೋತಿದ್ದರೂ, ಒಂದು ಉತ್ತಮ ಕಲಾಕೃತಿಯಾಗಿದೆ. +ಚಿತ್ರ ಮುಗಿದ ನಂತರ, ಅಲ್ಲೇ ದೋಸೆ ತಿಂದು, ಶೇಖರ್ ಜೊತೆ ಚಿತ್ರದ ಕುರಿತು ಸ್ವಲ್ಪ ಜಗಳವಾಡಿ, ಮನೆಗೆ ಬಂದಾಗ, ೩-೪ ಗಂಟೆಗಳಲ್ಲಿ ಮೂರು ಗಂಟೆಗಳನ್ನು ಚೆನ್ನಾಗಿ ಕಳೆದ ಅನುಭವ ದಟ್ಟವಾಗಿತ್ತು. +***** +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_694.txt b/Kannada Sahitya/article_694.txt new file mode 100644 index 0000000000000000000000000000000000000000..cc7a84dbd8bb2ec5eeeb48cac78f23256dceb1dd --- /dev/null +++ b/Kannada Sahitya/article_694.txt @@ -0,0 +1,1584 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ +ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. +ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ ಮಾತುಗಳನ್ನು ಹೇಳಿಕೊಡುತ್ತಾರೆ. +ಗೊರವಯ್ಯ : ಸುಳ್ಳುತನದ ಮಾತಾಡುವುದಿಲ್ಲ. +ಗೌರಿ : ಸುಳ್ಳುತನದ ಮಾತಾಡುವುದಿಲ್ಲ. +ಗೊರವಯ್ಯ : ಕಳ್ಳತನ ಎಂದೆಂದಿಗೂ ಮಾಡಲಾರೆ +ಗೌರಿ : ಕಳ್ಳತನ ಎಂದೆಂದಿಗೂ ಮಾಡಲಾರೆ +ಗೊರವಯ್ಯ : ತಂದೆ ಶಿವನ ಹೆಸರು ಹೇಳಿ, ಭಿಕ್ಷಕ್ಕೆ ಹೋಗಿ +ಗೌರಿ : ತಂದೆ ಶಿವನ ಹೆಸರು ಹೇಳಿ, ಭಿಕ್ಷಕ್ಕೆ ಹೋಗಿ +ಗೊರವಯ್ಯ : ತಂದ ಭಿಕ್ಷವ ಹಂಚಿಕೊಂಡು ತಿನ್ನುತ್ತೇನೆ. +ಗೌರಿ : ತಂದ ಭಿಕ್ಷವ ಹಂಚಿಕೊಂಡು ತಿನ್ನುತ್ತೇನೆ. +ಅವರ ವಿಧಿಗಳು ಮುಗಿದ ನಂತರ ೪-೫ ಗೊರವರು ಸೇರಿ ಹಾಡು ಹೇಳುತ್ತಾ ಕುಣಿಯುತ್ತಾರೆ. +ಏಳ್ಕೋಟಿ ಉಘೇ ಉಘೇ +ಏಳ್ಕೋಟಿ ಉಘೇ ಉಘೇ +ಮೈಲಾರ ಮೈಲಾರ ಮೈಲಾರ ಲಿಂಗಯ್ಯ +ನಿನ ಪಾದಕ್ಕೆ ಶಿರವಿಟ್ಟೆ ಕರಿಗುಡ್ಡದಯ್ಯ +ಕಷ್ಟಕಾಲಕೆ ನಿಜದ ಕಾರ್ಣೀಕ ನುಡಿಸಯ್ಯ +ಎಳೆಬಾಲೆ ಕೈಹಿಡಿದು ಕಾಪಾಡು ಮಲ್ಲಯ್ಯ +ಕರಡಿ ಗೊರವರು ನಾವು ಧರಣೀಲಿ ಆಡುವೆವು +ಮೈದೋರೆ ಮೈಲಾರ ಮೈ ಮರೆವೆವು +ಊರ ದೇವರು ನೀನೆ ಕಾಡು ಮಲ್ಲೇಶನೆ +ನಾಲಗೆಯ ತಟವಟವ ತಪ್ಪಿಸೋ ಶಿವನೆ +ಬಡವರ ಮನೆ ಬೆಳಕು ಬಲ್ಲಿದರ ಮನೆಬೆಳಕು +ಎಲ್ಲೆಲ್ಲೂ ಬೆಳಕಾದ ಪರಂಜ್ಯೋತಿ ನೀ ತಾಯೆ +ನುಡಿವಂತೆ ನಡೆವುದನು ನಡೆದಂತೆ ನುಡಿವುದನು +ಎಡೆಬಿಡದೆ ಭಕುತಿಯನು ನೀಡವ್ವ ಮಾಳವ್ವ +ಸೋಮವಾರದ ಭಿಕ್ಷೆಯ ಹಂಚಿತಿನ್ನುವೆನಯ್ಯ +ಬಂದ ಬಂಗವ ಬಿಡಿಸಿ ಕಾಪಾಡೋ ಶಿವನೇ +ಆದಿ ಬಂಡಾರ ಭಕ್ತಿ ಕವಡೆಯೇ ನಿಜಶಕ್ತಿ +ಮಾಳವ್ವ ಮಾತಾಯೆ ಕೊಡಿಸವ್ವ ನೀ ಮುಕ್ತಿ ಏಳ್ಕೋಟಿ ಉಘೇ ಉಘೇ +ದೃಶ್ಯ – ೨ / ಹಗಲು / ಒಳಾಂಗಣ / ಸರ್ಕಾರಿ ಕಛೇರಿ +ಸರ್ಕಾರಿ ಕಛೇರಿಯ ಒಳಗೆ ಟೈಪ್‌ರೈಟರ್‌ನ ಕ್ಲೋಸ್ ಷಾಟ್‌ನಿಂದ ದೃಶ್ಯ ಪ್ರಾರಂಭವಾಗುವುದು. +ಬಿಳಿಯ ಹಾಳೆಯ ಮೇಲೆ ಕೆಳಗಿನ ಅಕ್ಷರಗಳು ಮೂಡತೊಡಗುವವು. +‘ಸರ್ಕಾರಿ ಆದೇಶ’ +‘ಸಂಖ್ಯೆ: ಎ‌ಇ‌ಒ೩೪/೧೫.೧೦.೨೦೦೪’ +ಟೈಪ್‌ರೈಟರ್‌ನ ಕಟ ಕಟ ಸದ್ದು ಇಡೀ ಕಛೇರಿಯನ್ನು ವ್ಯಾಪಿಸಿದೆ. +ಟೈಪ್ ಮಾಡುತ್ತಿರುವ ಹೆಂಗಸಿನ ವಯಸ್ಸು ಸುಮಾರು ನಲವತ್ತು ವರ್ಷ. ದಪ್ಪ ಗಾಜಿನ ಕನ್ನಡಕ ಹಾಕಿದ್ದಾಳೆ. +ಆಕೆ ಟೈಪ್‌ರೈಟರ್‌ನ ಸದ್ದಿನಲ್ಲಿ ಉಳಿದವರ ಮಾತು ಕೇಳುತ್ತಿಲ್ಲ. +ಯಾರೋ ಕ್ಲರ್ಕ್ ಮುಂದೆ ಕುಳಿತ ವ್ಯಕ್ತಿ ಕುಳಿತಿದ್ದಾನೆ. +ವ್ಯಕ್ತಿ ಒಂದಿಷ್ಟು ಹಣ ಕ್ಲರ್ಕ್ ಕೈಗೆ ಕೊಡುತ್ತಾನೆ. +ಕ್ಲರ್ಕ್ ತೀರ ಕೆಳಗಿದ್ದ ಯಾವುದೋ ಫೈಲ್‌ನ ಧೂಳು ತೆಗೆದು ಮೇಲೆ ಎತ್ತಿಡುತ್ತಾನೆ. +ಯಾರೋ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದಾನೆ. +ಮೂಲೆಯಲ್ಲಿ ಜೇಡ ಬಲೆ ಹೆಣೆದಿದೆ. +ಅಲ್ಲೇ ಕೆಳಗೆ ಗಾಂಧೀಜಿಯ ಫೋಟೋ ಇದೆ. ಅದರ ಮೇಲೆ ಧೂಳು ಕುಳಿತಿದೆ. +ಅದರ ಕೆಳಗೆ ಲಕ್ಷ್ಮೀ ಫೋಟೋ ಇದೆ. ಅದನ್ನು ಕೈ ಒಂದು ಒರೆಸಿ ಹೂ ಮುಡಿಸುತ್ತದೆ. +ಇತ್ಯಾದಿ ಮಾಂಟೇಜ್‌ಗಳನ್ನು ತೋರಿಸಲಾಗುವುದು. +ಕಟ್ ಟು… +ದೃಶ್ಯ – ೩ / ಹಗಲು / ಗೊರವಯ್ಯನ ಮನೆ +ಗೊರವಯ್ಯ ಗೌರಿಯ ಕೈ ಹಿಡಿದು ರಸ್ತೆಯಲ್ಲಿ ನಡೆದು ಬರುತ್ತಿದ್ದಾನೆ. +ಅವನ ವಯಸ್ಸು ಸುಮಾರು ೭೫ ವರ್ಷ, ಗೌರಿಯ ೮-೯ ವರ್ಷದ ಹುಡುಗಿ. +ಇವನು ತನ್ನ ಮನೆಯ ಬಳಿ ಬಂದಾಗ ಪಕ್ಕದ ಮನೆಯ ಹೆಂಗಸು ಹೊರಗೆ ಏನೋ ಕೆಲಸ ಮಾಡುತ್ತಾ ಕುಳಿತಿದ್ದವಳು. +ತಾಯವ್ವ : ಇದೇನಜ್ಜ… ಯಾವುದೋ ಹೆಣ್ಣು ಮಗ ಕರಕಂಡ ಬತ್ತಾ ಇದ್ದೀಯ? +ಗೊರವಯ್ಯ : ಇದು ನಮ್ಮ ಮೈಲಾರನಿಂಗನ ಜಾತ್ರೇಲಿ ತಿರಕಂಡ್ ತಿನ್ತಿತ್ತು… ನನ್ನ ಬದ್ಕೂ ತಿರಕಂಡ್ +ತಿನ್ನಾದೇ ಅಲ್ವ… ಜೊತೆಯಾತದೆ ಅಂತ ಕರಕಂಡ ಬಂದೆ ಕಣವ್ವ… ಗೌರವ್ವ ತಗೋ ತಾಯಕ್ಕಂಗೆ ಈ ಭಂಡಾರ ಕೊಟ್ಟು ಬಾ. +ಎಂದು ತನ್ನ ಜೋಳಿಗೆಯಿಂದ ಭಂಡಾರ ತೆಗೆದು ಕೊಡುತ್ತಾನೆ. +ಗೌರಿ ತಾಯವ್ವನಿಗೆ ಭಂಡಾರ ಒಯ್ದು ಕೊಡುತ್ತಾಳೆ. +ತಾಯವ್ವ : ಏನವ್ವಾ ನಿನ್ನ ಎಸ್ರು? +ಗೌರಿ : ಗೌರಾ… +ಅವಳು ಮಾತನಾಡುವಾಗ ಗೊರವಯ್ಯ ತನ್ನ ಮುರುಕಲು ಮನೆಯ ಬೀಗ ತೆಗೆಯುತ್ತಾನೆ. +ಗೌರಿ ಓಡಿ ಬಂದು ಜೊತೆಯಾಗುತ್ತಾಳೆ. +ಗೊರವಯ್ಯ ತನ್ನ ಗೊರವಯ್ಯನ ವೇಷವನ್ನು ತೆಗೆದು ಗೂಟಕ್ಕೆ ನೇತು ಹಾಕಲು ಹೋಗುತ್ತಾನೆ. +ಆಗ ಅವನ ಕಣ್ಣಿಗೆ ಗೋಡೆಯಲ್ಲಿ ಸಣ್ಣ ಬಿರುಕು ಕಾಣುತ್ತದೆ. +ಅವನ ದೃಷ್ಟಿ ಬಿರುಕಿನ ಮೂಲವನ್ನು ಹುಡುಕುತ್ತಾ ಬಂದಾಗ +ಅದು ನೆಲದ ಮಟ್ಟದಿಂದ ಹೊರಟಿರುವುದು ಕಾಣಿಸುತ್ತದೆ. ಅಲ್ಲೇ ಬಿರುಕಿನಿಂದ ಸಣ್ಣ ಬೇರು ಹೊರ ಬಂದಿದೆ. +ಅದನ್ನು ಕೈಯಲ್ಲಿ ಮುಟ್ಟಿ ಪರೀಕ್ಷಿಸುತ್ತಾನೆ. ಬದಿಯ ಕಿಟಕಿಯಿಂದ ಹೊರಕ್ಕೆ ಮರದತ್ತ ನೋಡುತ್ತಾನೆ. +ಮನೆಯಿಂದ ಹೊರಬರುತ್ತಾನೆ. +ಇವನ ಮನೆಯ ಗೋಡೆಗೂ ಕಾಡುಮರಕ್ಕೂ ಸುಮಾರು ಐದಾರು ಅಡಿಯ ಅಂತರವಷ್ಟೇ ಇದೆ. +ಅದನ್ನು ಕೊಂಚ ನಿಂತು ಗಮನಿಸಿದವನಿಗೆ ಅಲ್ಲೂ ಗೋಡೆಯ ಬಿರುಕು ಕಾಣಿಸುತ್ತದೆ. +ಅಷ್ಟರಲ್ಲಿ ಹುಡುಗಿ ಮನೆಯ ಒಳಗಿನಿಂದ ಹೊರ ಬರುತ್ತಾಳೆ. +ಹುಡುಗಿ : ಏನಜ್ಜ ಅಂಗ್ ನೋಡ್ತಿದ್ದೀಯ? +ಗೊರವಯ್ಯ : ಬಿರುಕು ಕಣವ್ವ… ಈ ಮರದ ಬೇರು ಅದಿ ಕೊರೀತಾ ಐತೆ. ಗ್ವಾಡೆ ನೋಡು, +ಎಂಗ್ ಬಿರುಕ್ ಬಿಟ್ಟೈತೆ… +ಹುಡುಗಿ : ಬಿರುಕ್ ಬಿಟ್ರೆ ಏನಾಗುತ್ತಜ್ಜ? +ಗೊರವಯ್ಯ : ಇಂಗೇ ಇದು ದೊಡ್ಡದಾದ್ರೆ ಒಂದಿನ ಗ್ವಾಡೇನೆ ಬಿದ್ದೋಗುತ್ತೆ… +ಹುಡುಗಿ : ಗ್ವಾಡೆ ಬಿದ್ರೆ? +ಗೊರವಯ್ಯ : ಮಾಡು ಬಿದ್ದೋಗುತ್ತೆ… +ಹುಡುಗಿ : ಮಾಡು ಬಿದ್ರೆ? +ಗೊರವಯ್ಯ : ಮನೇನೆ ಬಿದ್ದೋದಂಗಲ್ವ… +ಹುಡುಗಿ : ಮನೇ ಬಿದ್ರೆ ? +ಗೊರವಯ್ಯ : (ರಾಗವಾಗಿ) ಸಂಭೋ ಸಂಕರ… +ಹುಡುಗಿ : (ಹುಸಿನಗುತ್ತಾ) ಸಂಭೋ ಸಂಕರ…(ಒಟ್ಟಿಗೇ) ಸಂಭೋ ಸಂಕರ +ಕಟ್ ಟು… +ದೃಶ್ಯ – ೪ / ಬೆಳಗ್ಗೆ / ವೆಂಕಟೇಶಯ್ಯನ ಮನೆ +ಇದು ತಾಲ್ಲೂಕು ಕೇಂದ್ರದಲ್ಲಿರುವ ಸಾಧಾರಣ ಮನೆ. +ಈ ಮನೆಯ ಯಜಮಾನ ವೆಂಕಟೇಶಯ್ಯ. ಈತನ ವಯಸ್ಸು ಸುಮಾರು ೫೫ ವರ್ಷ. +ಈತ ಸರ್ಕಾರಿ ಉದ್ಯೋಗಿ. +ದೃಶ್ಯ ಆರಂಭವಾದಾಗ ಆಫೀಸಿಗೆ ಹೋಗಲು ತಯಾರಿ ನಡೆಸುತ್ತಿದ್ದಾನೆ. +ಭವಾನಿ : (ಮೆಲ್ಲನೆ) ಅಪ್ಪಾ… +ವೆಂಕಟೇಶಯ್ಯ : ಇನ್ನು ಯಾಕಮ್ಮ ಅಪ್ಪಾ ಅಂತ ರಾಗ ಎಳೀತೀಯ? ಮುಂದೆ ಓದಿಸೋಕ್ ಅಗಲ್ಲ ಅಂತ +ನಾನು ಆವತ್ತೇ ಹೇಳಲಿಲ್ಲವೇನಮ್ಮ? ನಿಮ್ಮಕ್ಕನ ಮದ್ವೇ ಸಾಲಾನೇ ಜೇಬುತುಂಬ ಇದೆ! ಇನ್ನು ನಿನ್ನ ಓದಿಗೆಲ್ಲಿ ದುಡ್ಡು ತರಲಿ? +ಅಷ್ಟರಲ್ಲಿ ಒಳಗಿನಿಂದ ಅವನ ಹೆಂಡತಿ ಊಟದ ಕ್ಯಾರಿಯರ್ ತಂದು ಕೊಡುತ್ತಾ, +ಹೆಂಡತಿ : ನಿನ್ನ ಹಿಂದೆ ಇನ್ನೂ ಒಬ್ಳ್ರು ಇದ್ದಾಳೆ ಅನ್ನೋದನ್ನ ಮರೀಬೇಡ ಕಣೆ. ಓದಿದ್ದು-ಗೀದಿದ್ದು +ಎಲ್ಲಾ ಸಾಕು ಇವಳಿಗೆ ಒಂದು ಗಂಡು ಹುಡುಕಿ. +ಮಗಳು : ನಂಗೆ ಈಗ್ಲೇ ಮದ್ವೆ(ಅಳುವಿನ ಧ್ವನಿ) ಬೇಡ. ನಾನು ಇನ್ನೂ ಓದಬೇಕು. +ವೆಂಕಟೇಶಯ್ಯ ಅವಳ ಹತ್ತಿರ ಬಂದು ತಲೆ ನೇವರಿಸಿ, +ವೆಂಕಟೇಶಯ್ಯ : ನೀನು ಓದಲಿ ಅನ್ನೋ ಆಸೆ ನಂಗೂ ಇದೆಯಮ್ಮ. ಆದ್ರೆ ಕೈ ನಡೀಬೇಕಲ್ಲ! +ಮೂರೂವರೆ ಸಾವಿರ ರೂಪಾಯಿ ಬೇಸಿಕ್ ಇಟ್ಕೊಂಡು ಇಷ್ಟು ಮಾಡಿರೋದೇ ಹೆಚ್ಚು. ಇನ್ನು ಒಂದ್ ವರ್ಷಕ್ಕೆ ರಿಟೈರ್ ಆಗಿ ಮನೇಗ್ ಬರೋ ನಿಮ್ಮ ಅಪ್ಪನಿಗೆ ಸಾಲನೂ ಹುಟ್ಟಲ್ಲ. +ಅಷ್ಟರಲ್ಲಿ ಮನೆಯ ಹೊರಗೆ ಡಮರುಗ ಬಡಿದ ಸದ್ದು. +ಧ್ವನಿ : ಯಾರಣ್ಣಿ ಮನೆ ಒಳಗೆ, ಲಿಂಗ ಬಿಕ್ಷೆ ನೀಡಿ, ಜಂಗಮನ ಪಾದ ಕಟ್ಟಿ… +ವೆಂಕಟೇಶಯ್ಯ: ನೋಡೋಗು,… +ಮಗಳು ಹೊರಗೆ ಬಂದು ಭಿಕ್ಷೆ ಹಾಕುತ್ತಾಳೆ. ಭಿಕ್ಷೆ ಸ್ವೀಕರಿಸಿದ ಆತ, +ಗೊರವಯ್ಯ : ಸಕಲ ಭಾಗ್ಯ ಕೊಟ್ಟು ಕಾಪಾಡು ಪಾರ್ವತೀ ರಮಣಾ…. +(ಎಂದು ಆಶೀರ್ವದಿಸಿ ಮನೆ ಒಳಕ್ಕೆ ಕತ್ತು ಚಾಚಿ ನೋಡುತ್ತಾನೆ) +ಗೊರವಯ್ಯ : ತಾಯೀ, ಅಟ್ಟಿವಳಗೆ ಅಪ್ಪಾವರು ಅವರಾ? +ಮಗಳು : ಹುಂ, ಇದ್ದಾರೆ… +ಗೊರವಯ್ಯ : ವಸಿ ಅವರನ್ನ ಕರದರೇ? +ಅಷ್ಟರಲ್ಲಿ ರೆಡಿಯಾದ ವೆಂಕಟೇಶಯ್ಯ ತಾನೇ ಆಚೆ ಬರುತ್ತಾನೆ. ಅವನನ್ನು ನೋಡಿದ ಗೊರವಯ್ಯ ಅತಿ ವಿನಯದಿಂದ, +ಗೊರವಯ್ಯ : ಅಡ್ಡಬಿದ್ದೆ ಸ್ವಾಮಿ… +ವೆಂಕಟೇಶಯ್ಯ : ಹುಂ, +ಎಂದು ಹೇಳಿ ಹೆಚ್ಚಿನ ಮಾತಿಗೆ ನಿಂತರೆ ಬಟ್ಟೆ ಬೇಡಬಹುದು ಎಂದು ಅವನನ್ನು ನಿರ್ಲಕ್ಷಿಸಿ +ಬಾಗಿಲಬಳಿ ಇದ್ದ ತನ್ನ ಸೈಕಲ್ ತೆಗೆಯುತ್ತಾನೆ. +ಗೊರವಯ್ಯ : ಸ್ವಾಮೀ ಮರದ ಬೇರು ಮನೇ ಬೀಳಸ್ತಾ ಐತೆ, ಮರ ತೆಗ್ಸಿ ಮನೆ ಉಳಿಸಿಕೊಡಬೇಕು +ವೆಂಕಟೇಶಯ್ಯ : ಏನ್ ತತ್ವಪದ ಹೇಳ್ತಾ ಇದ್ದೀಯಾ? +ಗೊರವಯ್ಯ : ಯಾವ ತತ್ವಾನೂ ಇಲ್ಲ ಬುದ್ಧಿ… ಮರದ ಬೇರಿಂದ ಮನೆ ಬೀಳ್ತಾ ಅದೆ… ಮರ +ಕಡೀಬೇಕಾಗದೆ ಅಷ್ಟೇ… +ವೆಂಕಟೇಶಯ್ಯ : ನಿಂಗ್ ಪರ್ಮಿಷನ್ ಬೇಕಾ? +ಗೊರವಯ್ಯ : ಹುಂ, ಆಪೀಸ್‌ತಾವ ಓಗಿದ್ದೆ ಬುದ್ಧಿ, ತಾವು ಬರಬೇಕೂಂದ್ರು … +ವೆಂಕಟೇಶಯ್ಯ : ಅಲ್ಲೇ ಇದ್ರೆ ಬರತಿದ್ದೆ… +ಗೊರವಯ್ಯ ತನ್ನ ಹೆಗಲಿನಲ್ಲಿದ್ದ ಎರಡು ತೆಂಗಿನಕಾಯಿಗಳನ್ನು ಅವನ ಮುಂದೆ ಹಿಡಿಯುತ್ತಾನೆ. +ವೆಂಕಟೇಶಯ್ಯ : ಬ್ಯಾಡ … +ಗೊರವಯ್ಯ : ನಾನೇನ್ ದುಡ್ಡು ಕೇಳಿದ್ನಾ ಬುದ್ಧಿ. ತಗಳವ್ವಾ…. +ಭವಾನಿ ಗೊರವಯ್ಯನಿಂದ ಕಾಯಿ ಪಡೆಯುತ್ತಾಳೆ. +ವೆಂಕಟೇಶಯ್ಯ ಸೈಕಲ್ ಏರಿ ಹೊರಡುತ್ತಾನೆ. +ಗೊರವಯ್ಯ ಸೈಕಲ್ ಹೋದ ಹಾದಿ ಬಿಟ್ಟು ಸಂದು ರಸ್ತೆಯಲ್ಲಿ ನಡೆಯುತ್ತಾನೆ. +ಕಟ್ ಟು… +ದೃಶ್ಯ – ೫ / ಹಗಲು / ಹೊರಾಂಗಣ-ಒಳಾಂಗಣ/ ಕಛೇರಿ +ವೆಂಕಟೇಶಯ್ಯ ಕಚೇರಿಯ ಬಳಿಗೆ ಸೈಕಲ್ ಏರಿ ಬರುತ್ತಾನೆ. +ಅಲ್ಲೇ ಜೀಪು ನಿಂತಿದೆ… ಡ್ರೈವರ್ ಗಾಳಿ ಪಂಪ್ ಮಾಡುತ್ತಿದ್ದಾನೆ. ವೆಂಕಟೇಶಯ್ಯನಿಗೆ ವಿಶ್ ಮಾಡುತ್ತಾನೆ. +ಬಾಗಿಲಲ್ಲಿ ನಿಂತಿದ್ದ ಜವಾನ, ವೆಂಕಟೇಶಯ್ಯ ಬಂದದ್ದನ್ನು ನೋಡಿ +ಓಡಿ ಹೋಗಿ ಅವನಿಂದ ಸೈಕಲ್ ಪಡೆದು ಅದನ್ನು ಸ್ಟ್ಯಾಂಡ್‌ನತ್ತ ಒಯ್ಯುತ್ತಾನೆ. +ವೆಂಕಟೇಶಯ್ಯ ಮೆಟ್ಟಿಲು ಹತ್ತುತ್ತಾನೆ. +ಅಲ್ಲಿ ಆಗಲೇ ಗೊರವಯ್ಯ ಬಂದು ಕುಳಿತಿದ್ದಾನೆ. +ಇಬ್ಬರೂ ಪರಸ್ಪರ ಒಂದು ಕ್ಷಣ ನೋಡುತ್ತಾರೆ. +ಫೋನ್‌ನಲ್ಲಿ ಮಾತಾಡುತ್ತಿದ್ದ ಗುಮಾಸ್ತನೊಬ್ಬ ವೆಂಕಟೇಶಯ್ಯನನ್ನು ನೋಡಿ ಮಾತು ನಿಲ್ಲಿಸಿ ಫೋನ್ ಕೆಳಗಿಡುತ್ತಾನೆ. +ಟೈಪ್‌ರೈಟರ್‌ನ ಸದ್ದು ಕೇಳುತ್ತಲೇ ಇದೆ. +ವೆಂಕಟೇಶಯ್ಯ ಬಂದು ತನ್ನ ಜಾಗದಲ್ಲಿ ಕೂರುತ್ತಾನೆ. +ಜವಾನ ಇವನ ಮುಂದೆ ಕೆಲವು ಫೈಲ್‌ಗಳನ್ನು ಇಡುತ್ತಾನೆ. +ಜವಾನ : ಮೈಸೂರ್‌ನಿಂದ ಫೋನ್ ಬಂದಿತ್ತು… +ವೆಂಕಟೇಶಯ್ಯ : ಯಾರು? +ಜವಾನ : ಹೊಸಾ ಸಾಹೇಬ್ರಂತೆ… +ವೆಂಕಟೇಶಯ್ಯ : ಏನಂತೆ? +ಜವಾನ : ಎಲ್ಡು ಮೂರು ದಿನದಲ್ಲಿ ಬಂದು ಚಾರ್ಜ್ ತಗಾತರಂತೆ. +ವೆಂಕಟೇಶಯ್ಯ : ಸರಿ… +ಎಂದು ಯಾವುದೋ ಫೈಲ್ ತೆರೆಯುತ್ತಾನೆ. +ಗೊರವಯ್ಯ ವೆಂಕಟೇಶಯ್ಯನ ಮುಂದೆ ಬಂದು ನಿಲ್ಲುತ್ತಾನೆ. +ವೆಂಕಟೇಶಯ್ಯ ‘ಏನು?’ಎಂಬಂತೆ ನೋಡುತ್ತಾನೆ. +ಗೊರವಯ್ಯ : ಸ್ವಾಮೀ, ನಮ್ಮಟ್ಟಿ ಗ್ವಾಡೆಗೆ ಒಂದು ಮರ ಬೇರು ಬಿಟ್ಕಂಡದೆ…. +ವೆಂಕಟೇಶಯ್ಯ: ಮರ ಕಡಿಯಾದು ಅಂದ್ರೆ ಸುಮ್ನೆ ಅಲ್ಲ. ಅದಕ್ಕೆ ಜಾಗ ನೋಡಬೇಕು, ಇನ್ಸ್‌ಪೆಕ್ಷನ್ +ಆಗಬೇಕು. ಆಮೇಲೆ ಪರ್ಮಿಶನ್ನು. ಎಲ್ಲಾದ್ರು ಅದು ಗಂಧದ ಮರ ಆಗಿ, ನಾವೂ ನೋಡ್ದೆ ನೀನು ಅದನ್ನ ಕತ್ರಸಾಕಿ ಬಿಟ್ರೆ, ನಮ್ಮ ಕುತ್ಗೆಗೆ ಬರುತ್ತೆ … +ಗೊರವಯ್ಯ : ಗಂಧದ ಮರ ಅಲ್ಲ ಬುದ್ಧೀ, ಕಾಡುಮರ…. +ವೆಂಕಟೇಶಯ್ಯ : ಸರಿ, ನಾಕು ದಿನ ಬಿಟ್ಟು ಬಾ… +ಗೊರವಯ್ಯ ಮೌನವಾಗಿ ಹೋಗುತ್ತಾನೆ. ಆತ ಸತ್ಯವತಿಯ ಮುಂದೆ ಹಾಯುವಾಗ, +ಸತ್ಯವತಿ : ಗೊರವಯ್ಯ, ಮನೇಲಿ ಮಗೂ ತುಂಬಾ ಹೆದರಿಕೋತಾ ಇದೆ… +ಗೊರವಯ್ಯ : (ತನ್ನ ಕೈಚೀಲದಿಂದ ತೆಗೆದು) ತಗಾಳಿ. ಇದನ್ನ ಕಟ್ಟಿ ಸರಿ ಓಯ್ತದೆ. +ಆಕೆ ಅವನಿಗೆ ತನ್ನ ಪರ್ಸ್‌ನಿಂದ ಹಣ ತೆಗೆದು ಕೊಡುತ್ತಾಳೆ. +ಅದನ್ನ ಪಡೆದು ಕೊಳಲೂದಿ ಒಂದು ಕಾಂಡ ಅಲ್ಲೇ ಕುಣಿದು, +ಗೊರವಯ್ಯ : ಬಂದ ಕಷ್ಟ ಬಯಲಾಗಿ, ಸಕಲ ಭಾಗ್ಯ ಕೊಟ್ಟು ಕಾಪಾಡು ಪಾರ್ವತೀರಮಣಾ… +ಎಂದು ಆಶೀರ್ವದಿಸುತ್ತಾನೆ. ಈ ಶಬ್ದ ವೆಂಕಟೇಶಯ್ಯನನ್ನು ಕೆರಳಿಸುತ್ತದೆ. +ವೆಂಕಟೇಶಯ್ಯ : ಏಯ್, ಇಲ್ಲೇ ನಿನ್ನ ಆಟ ಕಟ್ಟಿಬಿಟ್ಟಲ್ಲಯ್ಯಾ, ಸುಮ್ಮನೆ ಆಚೆ ಹೋಗಿ ಕುಣಿ ಹೋಗು… +ಮನೇಗು ಆಪೀಸ್‌ಗೂ ವ್ಯತ್ಯಾಸ ಇಲ್ವಾ ಇವುನ್ಗೆ… +ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. +ಗೊರವಯ್ಯ ಆಚೆ ಹೊರಡುತ್ತಾನೆ. +ವೆಂಕಟೇಶಯ್ಯ ಸತ್ಯವತಿ ಕಡೆ ದುರುಗುಟ್ಟಿ ನೋಡಿ ಫೋನ್ ತೆಗೆದುಕೊಳ್ಳುತ್ತಾನೆ. +ವೆಂಕಟೇಶಯ್ಯ : ಹಲೋ… ವೆಂಕಟೇಶಯ್ಯ ಮಾತಾಡೋದು…. +ಧ್ವನಿ : ನಾನ್ ರಘುನಂದನ್ ಅಂತ, ನಂಗೆ ನಿಮ್ಮಲ್ಲಿಗೆ ಪೋಸ್ಟಿಂಗ್ ಆಗಿದೆ. +ವೆಂಕಟೇಶಯ್ಯ : ನಮಸ್ಕಾರ ಸಾರ್… ಆಗಲೇ ಫೋನ್ ಮಾಡಿದ್ರಂತೆ ನಾನು ಸರ್ವೇಗೋಗಿದ್ದೆ ಸಾರ್. +ಧ್ವನಿ : ಸರಿ… ಭಾನುವಾರ ಬರತಿದ್ದೀನಿ. ಜೊತೇಲಿ ನನ್ನ ಫ್ಯಾಮಿಲಿ ಇರುತ್ತೆ… +ವೆಂಕಟೇಶಯ್ಯ : ಇಲ್ಲಿ ಉಳ್ಕಳೋಕೆ ಏನೂ ಯೋಚ್ನೆ ಮಾಡಬೇಕಿಲ್ಲ ಸಾರ್. ಕ್ವಾರ್ಟರ್ಸ್ ಇದೆ, ಹಿಂದಿನ +ಸಾಹೇಬರು ಅಲ್ಲೇ ಇದ್ರು, ಖಾಲಿ ಇದೆ, ನೀವು ಬರೋದ್ರೊಳ್ಗೆ ಕ್ಲೀನ್ ಮಾಡ್ಸಿ ಇಡಸಿರತೀನಿ. ನೀವು ಆರಾಮಾಗಿ ಬಂದು ಸಂಸಾರ ಹೂಡಬಹುದು ಸರ್… +ಧ್ವನಿ : ಸರಿ ಇಡತೀನಿ. +ವೆಂಕಟೇಶಯ್ಯ : ಓಕೆ ಸರ್… ನಮಸ್ಕಾರ +ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಈ ಮಾತಿಗೆ ತಿರುಗಿ ನೋಡುತ್ತಾರೆ. +ಒಬ್ಬೊಬ್ಬರ ಭಾವ ಒಂದೊಂದು! ಬೇಸರ, ಸಂತೋಷ, ನಿರ್ಲಿಪ್ತತೆ ಇತ್ಯಾದಿ…. +ಕಟ್ ಟು… +ದೃಶ್ಯ – ೬ / ಹಗಲು / ಬಸ್ ನಿಲ್ದಾಣ +ವೆಂಕಟೇಶಯ್ಯ ಜೀಪಿನಲ್ಲಿ ಕುಳಿತು ಕಾದಿದ್ದಾನೆ. +ಆಗ ಹಾರ್ನ್ ಮಾಡುತ್ತಾ ಪ್ರೈವೇಟ್ ಬಸ್ಸು ಬರುತ್ತದೆ. +ರಘುನಂದನ್ ಬಸ್ಸಿನಿಂದ ಇಳಿಯುತ್ತಾನೆ. ಜೊತೆಯಲ್ಲಿ ಮಡದಿ ಸುಮ ಕೂಡ ಇದ್ದಾಳೆ. +ರಘುನಂದನ್‌ನ ವಯಸ್ಸು ಸುಮಾರು ೪೦-೪೫ ವರ್ಷವಿರಬಹುದು. +ವೆಂಕಟೇಶಯ್ಯ ಜೀಪಿನಿಂದ ಇಳಿದು ಬಂದು ಅವರನ್ನು ತಾನೇ ಗುರುತಿಸಿ ಸ್ವಾಗತಿಸುತ್ತಾನೆ. +ವೆಂಕಟೇಶಯ್ಯ : ರಘುನಂದನ್ ಸಾರ್ ಅಲ್ವಾ ಸರ್ ? +ರಘುನಂದನ್ : ಹೌದು… +ವೆಂಕಟೇಶಯ್ಯ : ಸಾರ್ ನಮಸ್ಕಾರ. ನಾನು ವೆಂಕಟೇಶಯ್ಯ ಅಂತ ಸಾರ್. +ರಘುನಂದನ್ : ನಮಸ್ಕಾರ. (ಹಿಂದೆ ಇದ್ದ ಹೆಣ್ನನ್ನು ತೋರಿಸುತ್ತಾ) ನನ್ನ ಹೆಂಡತಿ ಸುಮಾ … +ವೆಂಕಟೇಶಯ್ಯ : ನಮಸ್ಕಾರಾಮ್ಮ… ಬನ್ನಿ ಲಗ್ಗೇಜ್ ಕೊಡಿ ಇಲ್ಲಿ. ಜೀಪ್ ಇದೆ, ಈ ಕಡೆ ಬನ್ನಿ… +ಎಂದು ಜೀಪಿನ ಬಳಿ ಕರೆದೊಯ್ಯುತ್ತಾನೆ. ಎಲ್ಲರೂ ಜೀಪೇರುತ್ತಾರೆ. +ರಸ್ತೆಯಲ್ಲಿ ಹೋಗುತ್ತಾ ವೆಂಕಟೇಶಯ್ಯ ತನ್ನ ಬಗ್ಗೆ ಊರಿನ ಬಗ್ಗೆ ಮಾತಾಡುತ್ತಾನೆ. +ವೆಂಕಟೇಶಯ್ಯ : ಇದೇ ಸಾರ್ ನಮ್ಮ ಈ ಕರಡಿಗುಡ್ಡದ ಮುಖ್ಯ ರಸ್ತೆ. +ಎಂದಾಗ ಜೀಪು ಸಡನ್ ಆಗಿ ಬ್ರೇಕ್ ಹಾಕುತ್ತದೆ. ಕುಳಿತವರು ಮುಗ್ಗರಿಸುತ್ತಾರೆ. +ಜೀಪಿಗೆ ಎಮ್ಮೆಯೊಂದು ಅಡ್ಡ ಬಂದಿರುತ್ತದೆ. ಅವು ರಸ್ತೆ ದಾಟಿದ ನಂತರ ಜೀಪು ಮುಂದುವರೆಯುತ್ತದೆ. +ಸುಮ : ಇಲ್ಲಿ ಸುತ್ತ-ಮುತ್ತಾ ತುಂಬಾ ಕರಡಿಗಳು ಇವೆಯಾ? +ವೆಂಕಟೇಶಯ್ಯ : (ನಕ್ಕು) ನಾನಂತೂ ಇಲ್ಲೀವರೆಗೂ ಒಂದೇ ಒಂದು ಕರಡೀನು ನೋಡಿಲ್ಲ. +ಆದ್ರೆ ಇಲ್ಲಿ ಜನ ಸ್ವಲ್ಪ ಕರಡಿಗಳ ಹಾಗೆ ಅಷ್ಟೇ (ಎಂದು ತನ್ನ ಜೋಕಿಗೆ ತಾನೇ ನಗುತ್ತಾ). ಬಹುಶಃ ಬಹಳ ಹಿಂದೆ ಕರಡಿಗಳು ತುಂಬಾ ಇದ್ವು ಅಂತ ಕಾಣುತ್ತೆ, ಅದಕ್ಕೇ ಈ ಊರಿಗೆ ಕರಡಿಗುಡ್ಡ ಅಂತ ಹೆಸರು ಬಂದಿರಬೇಕು. ಸುತ್ತಲೂ ಗುಡ್ಡಗಳ ಸಾಲು, ಇದಕ್ಕೆ ಹೊಂದಿಕೊಂಡ ಹಾಗೆ ದಟ್ಟವಾದ ಕಾಡಿದೆ. ಅಲ್ಲಿ ಕರಡಿ, ಜಿಂಕೆ, ಹುಲಿ ಕೂಡ ಇದೆ ಅಂತ ಹೇಳ್ತಾರೆ. +ಇವನು ಈ ಮಾತಾಡುವಾಗ ಹಂದಿಗಳ ಹಿಂಡು ರಸ್ತೆಯಲ್ಲಿ ಹಾದು ಹೋಗುವುದು, +ಇತ್ಯಾದಿ ಹಳ್ಳಿಯ ವಾತಾವರಣಕ್ಕೆ ಸಂಬಂಧಿಸಿದ ದೃಶ್ಯಗಳನ್ನು ತೋರಿಸಲಾಗುವುದು. +ಅದನ್ನು ನೋಡಿ ಸುಮ ಮುಖ ಕಿವುಚಿದರೆ, ರಘುನಂದನ್ ನಿರ್ಲಿಪ್ತನಾಗಿರುತ್ತಾನೆ. +ಜೀಪು ಮುಖ್ಯ ರಸ್ತೆಯಿಂದ ಸಣ್ಣ ರಸ್ತೆಗೆ ತಿರುಗುತ್ತದೆ. +ದೃಶ್ಯ – ೭ / ಹಗಲು / ಹೊರಾಂಗಣ-ಒಳಾಂಗಣ / ಕ್ವಾರ್ಟರ್ಸ್ +ಜೀಪು ಕ್ವಾರ್ಟರ್ಸ್ ಮುಂದೆ ಬಂದು ನಿಲ್ಲುತ್ತದೆ. +ವೆಂಕಟೇಶಯ್ಯ ತಾನು ಮೊದಲು ಇಳಿದು ಕ್ವಾರ್ಟರ್ಸ್‌ನ ಬೀಗ ತೆಗೆಯುತ್ತಾನೆ. +ರಘುನಂದನ್ ಮತ್ತು ಸುಮ ಅವನನ್ನು ಹಿಂಬಾಲಿಸುತ್ತಾರೆ. +ವೆಂಕಟೇಶಯ್ಯ : ಇದನ್ನ ಕಟ್ಟಿಸಿ ಸುಮಾರು ಇಪ್ಪತ್ತು ವರ್ಷ ಆಗಿರಬಹುದು ಸಾರ್. ಎರಡು ರೂಂ ಇದೆ. +ಹಾಲು, ಅಡಿಗೆ ಮನೆ, ಬಚ್ಚಲು ಮನೆ. ಹಿಂದೆ ಹಿತ್ತಲು ಇದೆ. ಅಲ್ಲಿ ಬಾವಿ ಕೂಡ ಇದೆ. +ರಘುನಂದನ್ ಮತ್ತು ಸುಮ ಮನೆಯನ್ನೊಮ್ಮೆ ಸುತ್ತು ಹಾಕಿಬರುತ್ತಾರೆ. +ಅಲ್ಲಲ್ಲಿ ಜೇಡರ ಬಲೆ, ಮಣ್ಣು ಬಿದ್ದಿರುವುದು, ಧೂಳು ಉಳಿದಿರುವುದು ಕಾಣುತ್ತದೆ. +ರಘುನಂದನ್ ಅದನ್ನು ಗಮನಿಸಿದಾಗ ವೆಂಕಟೇಶಯ್ಯನಿಗೆ ಮುಜುಗರವಾಗುತ್ತದೆ. +ಸುಮ : ಇಲ್ಲಿ ಫೋನ್ ಇಲ್ವಾ? +ವೆಂಕಟೇಶಯ್ಯ : ಇದೆ ತಾಯಿ…. +ರಘುನಂದನ್ ಅಲ್ಲೇ ಇದ್ದ ಹಳೆಯ ಕಾಲದ ಫೋನ್ ಕೈಗೆತ್ತಿಕೊಳ್ಳುತ್ತಾನೆ. +ಅದರಿಂದ ಯಾವ ಶಬ್ದವೂ ಬರುತ್ತಿಲ್ಲ ಎಂಬುದು ಅವನ ಮುಖಭಾವದಿಂದ ಗೊತ್ತಾಗುತ್ತದೆ. +ಸುಮ ರಘುನಂದನ್ ಮುಖ ನೋಡುತ್ತಾಳೆ. +ವೆಂಕಟೇಶಯ್ಯ : ನಿನ್ನೆ ಸರಿ ಇತ್ತಲ್ಲಾ… ಮಕ್ಕಳಿಗೆ ಫೋನ್ ಮಾಡಬೇಕಿತ್ತೇನೋ… +ಅದಕ್ಕೆ ಇಬ್ಬರೂ ಮಾತನಾಡುವುದಿಲ್ಲ. +ವೆಂಕಟೇಶಯ್ಯ : ಎಷ್ಟು ಮಕ್ಕಳು ತಾಯಿ? +ಸುಮ ರಘುನಂದನ್ ಮುಖ ನೋಡುತ್ತಾಳೆ. +ರಘುನಂದನ್ ತಲೆ ತಗ್ಗಿಸುತ್ತಾನೆ. +ವೆಂಕಟೇಶಯ್ಯ ಏನೋ ಅರ್ಥವಾದವನಂತೆ, +ವೆಂಕಟೇಶಯ್ಯ : ನೀವೇ ಪುಣ್ಯವಂತರು…. ನಂಗೆ ಮೂರು ಜನಾ ಹೆಣ್ಣು ಮಕ್ಕಳು! +ಎಂದು ಪೆಚ್ಚು ಪೆಚ್ಚಾಗಿ ನಗುತ್ತಾನೆ. ಅವನ ಮಾತಿಗೆ ಇಬ್ಬರೂ ಪ್ರತಿಕ್ರಿಯಿಸುವುದಿಲ್ಲ. +ವೆಂಕಟೇಶಯ್ಯ : ನೀವು ಸ್ವಲ್ಪ ರೆಸ್ಟ್ ತಗೊಂಡು ಸ್ನಾನ-ಗೀನ ಮುಗ್ಸಿ ಸಾರ್ … ನಾನ್ ಬರತೀನಿ. +ರಘುನಂದನ್ : ಆಯ್ತು… +ವೆಂಕಟೇಶಯ್ಯ ಹೋಗುತ್ತಾನೆ. +ರಘುನಂದನ್ ಬಾಗಿಲು ಹಾಕಿ ಬರುತ್ತಾನೆ. +ಸುಮ ಹಿಂಬಾಗಿಲಿನಿಂದ ಒಳಬರುತ್ತಾಳೆ. +ಸುಮ : ಇಂಪಾಸಿಬಲ್… +ರಘುನಂದನ್ : ಏನಾಯ್ತು? +ಸುಮ : ಟಾಯ್‌ಲೆಟ್‌ಗೆ ಕಾಲಿಡೋಕಾಗಲ್ಲ… +ರಘುನಂದನ್ : ಬಹಳ ದಿನದಿಂದ ಯಾರೂ ಬಳಸಿಲ್ಲ ಒಂದೊಂದಾಗಿ ಎಲ್ಲ ಸರಿ ಮಾಡ್ಕೊಂಡು ಹೊಸಾ +ಜಾಗಕ್ಕೆ ಹೊಂದಿಕೋಬೇಕು…. +ಸುಮ : ಒಟ್ಟಿನಲ್ಲಿ ಕಾಡಿಗೆ ಕರಕೊಂಡು ಬಂದು, ಎಲ್ಲಾ ಪ್ರಾಣಿಗಳಿಗೂ ಅಡ್ಜೆಸ್ಟ್ ಮಾಡ್ಕೋಬೇಕು ಅಂತೀರ? +ರಘುನಂದನ್ : ಇಂಥಾ ಪರಿಸರ ಬೇಕು ಅಂದ್ರೂ ಸಿಟೀಲಿ ಸಿಗುತ್ತೇನೆ? +ಸುಮ : ನಾನು ಇಂಥಾ ಪರಿಸರ ಬೇಕು ಅಂತ ಯಾವಾಗ ನಿಮ್ಮನ್ನ ಕೇಳಿದ್ದೆ? ಈ ಭೂತಬಂಗಲೇಲಿ ನಾನು +ಒಬ್ಬಳೇ ಕಾಲ ಕಳೀಬೇಕು. +ಎಂದು ಹೊರಗೆ ಮಕ್ಕಳು ಆಟ ಆಡುತ್ತಿರುವುದನ್ನು ಅವಳು ಕಿಟಕಿಯಿಂದ ನೋಡುತ್ತಾಳೆ. +ಮಕ್ಕಳು ಕೇಕೆ ಹಾಕಿ ನಗುತ್ತಿದ್ದಾರೆ. +ರಘುನಂದನ್ ಅದನ್ನು ನೋಡಿ ಇರುಸು ಮುರುಸಾಗುತ್ತದೆ. +ಕಟ್ ಟು… +ದೃಶ್ಯ- ೮ / ಹಗಲು / ಕಚೇರಿ +ರಘುನಂದನ್ ಚೇಂಬರ್‌ನಲ್ಲಿ ಸ್ಟಾಫ್ ಎಲ್ಲ ನೆರೆದಿದ್ದಾರೆ. +ವೆಂಕಟೇಶಯ್ಯ ಎಲ್ಲರನ್ನೂ ಪರಿಚಯಿಸುತ್ತಾನೆ. +ವೆಂಕಟೇಶಯ್ಯ : ಸಾರ್ ಇವರು ಶ್ರೀಧರಮೂರ್ತಿ ಎಸ್‌ಡಿಸಿ. ನಾಲ್ಕು ವರ್ಷ ಆಯ್ತು ಇಲ್ಲಿಗ್ ಬಂದು ಒಳ್ಳೇ +ವರ್ಕರ್ರು… ಇವ್ರು ಸತ್ಯವತಿ ಟೈಪಿಸ್ಟು, ಇದೇ ಊರಿನವರು. ಇವರು ಮಹದೇವು ಅಂತ ಎಸ್‌ಡಿಸಿ, ಬಂದು ಒಂದು ವರ್ಷ ಆಯ್ತು. ಇನ್ನಿಬ್ಬರು ರಜಾದಲ್ಲಿದ್ದಾರೆ. ಈತ ಕೆಂಪಯ್ಯ ಅಂತ ಅಟೆಂಡರ್ರು, ನನ್ನ ಬಿಟ್ರೆ ಇವನೇ ಸೀನಿಯರ್ರು. +ರಘುನಂದನ್ : ಎಲ್ರಿಗೂ ನಮಸ್ಕಾರ, ನನ್ನ ಹೆಸರು ರಘುನಂದನ್ ಅಂತ. ಈ ಡಿಪಾರ್ಟ್‌ಮೆಂಟ್‌ನಲ್ಲಿ +ಹನ್ನೆರಡು ವರ್ಷ ಸರ್ವೀಸ್ ಆಗಿದೆ. ಮದುವೇಗೆ ಮುಂಚೆ ದಕ್ಷಿಣಕನ್ನಡ ಜಿಲ್ಲೇಲಿದ್ದೆ. ಮದುವೆಯಾದ ಮೇಲೆ ಮೈಸೂರ್‌ನಲ್ಲಿ ಸರ್ವೀಸ್ ಮಾಡ್ದೆ. ಇದು ನನ್ನ ಮೂರನೇ Posಣiಟಿg. ನಂಗೆ ಹಳ್ಳಿಗಳು, ಕಾಡು-ಮೇಡು ಅಂದ್ರೆ ತುಂಬಾ ಇಷ್ಟ. ಅದಕ್ಕೇ ಇಲ್ಲಿಗ್ ಹಾಕಿದಾಗ ತುಂಬಾ ಸಂತೋಷ ಪಟ್ಟು ಬಂದೆ. ಆಫೀಸ್‌ನ ಕೆಲ್ಸ Uಠಿ ಣo ಜಚಿಣe ಆಗಿರಬೇಕು, ಕೆಲಸದಲ್ಲಿ ಪ್ರಾಮಾಣಿಕತೆ, ಶಿಸ್ತನ್ನ ಮೈಗೂಡಿಸಿಕೊಂಡಿರಬೇಕು. ಯಾವುದೇ ಸಮಸ್ಯೆ ಇದ್ರೂ ನನ್ನ ಹತ್ರ ನೇರವಾಗಿ ಮಾತಾಡಿ… ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನ ಮರೀಬೇಡಿ… ಮೊದಲು ಆಫೀಸ್‌ನ ಕ್ಲೀನ್ ಮಾಡ್ಸಿ… ಸರಿಯಾಗಿ ಕೆಲ್ಸ ಮಾಡೋಕೆ, ಆಫೀಸ್‌ನ ಂಣmosಠಿheಡಿe ಚನ್ನಾಗಿರಬೇಕು… +ದೃಶ್ಯ – ೯ / ಆಫೀಸಿನ ಹೊರಗೆ +ಆಫೀಸಿನ ಹೊರಗೆ ಕಾರೊಂದು ಬಂದು ನಿಲ್ಲುತ್ತದೆ. ಕಾರಿನಿಂದ ಸಫಾರಿಧಾರಿಯೊಬ್ಬ ಇಳಿಯುತ್ತಾನೆ. +ಆಫೀಸಿನ ಗೇಟ್‌ನಲ್ಲಿದ್ದ ಜವಾನ ಎದ್ದು ಸಲ್ಯೂಟ್ ಹೊಡೆಯುತ್ತಾನೆ. +ಶ್ರೀಕಂಠಯ್ಯ : (ಮೆಲ್ಲನೆ) ಎಂಗಪ್ಪಾ ಹೊಸಾ ಸಾಹೇಬರು? +ಜವಾನ : (ತಾನೂ ಮೆಲ್ಲನೆ) ಸ್ವಲ್ಪ ಸ್ಟ್ರಿಕ್ಟು ಅನ್ಸುತ್ತೆ ಕಣಣ್ಣ +ಆಫೀಸಿನಲ್ಲಿ ಒಳಗೆ ಎಲ್ಲರೂ ಅವನನ್ನು ನೋಡಿ ನಮಸ್ಕರಿಸುತ್ತಾರೆ. +ಶ್ರೀಕಂಠಯ್ಯ ಟೇಬಲ್ ಮಧ್ಯೆ ನಡೆಯುತ್ತಲೇ, +ಶ್ರೀಕಂಠಯ್ಯ : ಎಲ್ಲಿ ಶ್ರೀಧರಮೂರ್ತಿ ನನ್ನ ಬಿಲ್ ಪಾಸ್ ಆಗಲೇ ಇಲ್ಲ. +ಶ್ರೀಧರಮೂರ್ತಿ : ಎಲ್ಲ ರೆಡಿ ಸಾರ್. ಸಾಹೇಬರು ಸೈನ್ ಆಗಬೇಕು ಅಷ್ಟೆ, ಈಗ್ ಕಳಿಸ್ತೀನಿ +ಶ್ರೀಕಂಠಯ್ಯ : ಬೇಗ ಕಳಿಸಿಬಿಡಪ್ಪ…. +ಎಂದು ವೆಂಕಟೇಶಯ್ಯನ ಟೇಬಲ್ ಖಾಲಿ ಇರುವುದನ್ನು ನೋಡಿ, ಸತ್ಯವತಿಗೆ, +ಶ್ರೀಕಂಠಯ್ಯ : ಎಲ್ಲಮ್ಮ ಚಿಕ್ಕ ಸಾಹೇಬರು? +ಸತ್ಯವತಿ : ಒಳಗೆ ದೊಡ್ಡ ಸಾಹೇಬರತ್ರ ಮಾತಾಡ್ತಿದ್ದಾರೆ… +ಯಾರ ಪರ್ಮಿಷನ್ನೂ ಕೇಳದೆ ರಘುನಂದನ್ ಛೇಂಬರ್ ಬಾಗಿಲು ತೆರೆಯುತ್ತಾನೆ. +ಒಳಗೆ ರಘುನಂದನ್ ಹಾಗೂ ವೆಂಕಟೇಶಯ್ಯ ಮಾತನಾಡುತ್ತಿದ್ದಾರೆ. +ವ್ಯಕ್ತಿ : ನಮಸ್ಕಾರ ಸಾರ್, ನಾನು ಶ್ರೀಕಂಠಯ್ಯ ಅಂತ ಈ ತಾಲ್ಲೂಕಿನ ಕಂಟ್ರ್ಯಾಕ್ಟರ್ ಸಂಘದ ಅಧ್ಯಕ್ಷ. +ನೀವು ಇವತ್ತು ಚಾರ್ಜ್ ವಹಿಸಿಕೊಳ್ತೀರಿ ಅಂತ ಗೊತ್ತಾಯ್ತು, ವಿಶ್ ಮಾಡೋಕ್ ಬಂದೆ. +ರಘುನಂದನ್ : oಜಿಜಿiಛಿiಚಿಟ mಚಿಣಣeಡಿs ಜisಛಿuss ಮಾಡ್ತಿದ್ದೀವಿ. ಸ್ವಲ್ಪ ಹೊರಗಿರಿ, ನಾನೇ ಕರೀತೀನಿ. +ಶ್ರೀಕಂಠಯ್ಯನಿಗೆ ರಘುನಂದನ್ ಮಾತಿನಿಂದ ಪೆಚ್ಚಾದರೂ ತೋರಿಸಿಕೊಳ್ಳದೆ ‘ಆಯ್ತು ಸಾರ್’ ಎಂದು ಹೊರಬರುತ್ತಾನೆ. +ವೆಂಕಟೇಶಯ್ಯ : ಸಾರ್ ಈ ಆಸಾಮಿ ತುಂಬಾ ಠಿoತಿeಡಿಜಿuಟಟ ಸಾರ್… +ರಘುನಂದನ್ : ಇರಲಿ, ಆ ಆeveಟoಠಿmeಟಿಣಚಿಟ ಚಿಛಿಣiviಣies ಫೈಲ್ ಕೊಡಿ. +ವೆಂಕಟೇಶಯ್ಯ ಒಂದು ಫೈಲನ್ನು ಹುಡುಕಿ ತೆಗೆದುಕೊಡುತ್ತಾನೆ. +ಕ್ಲೋಸ್ ಅಪ್‌ನಲ್ಲಿ ‘ ಅಭಿವೃದ್ಧಿ ತಖ್ತೆ-’ ಫೈಲ್ ಹೆಸರು ಕಾಣಿಸುತ್ತದೆ. +ರಘುನಂದನ್ ಅದನ್ನು ತೆರೆಯುತ್ತಾನೆ. +ಅದರಲ್ಲಿ ಒಂದು ಬಿಳಿಯ ಖಾಲಿ ಹಾಳೆ ಮಾತ್ರ ಇದೆ. +ಇದನ್ನು ನೋಡಿ ರಘುನಂದನ್‌ಗೆ ಆಶ್ಚರ್ಯವಾಗುತ್ತದೆ. +ರಘುನಂದನ್ : ಇದೇನ್ರೀ ವೆಂಕಟೇಶಯ್ಯ ಖಾಲಿ ಫೈಲು! +ವೆಂಕಟೇಶಯ್ಯ : ಈ ವರ್ಷದ್ದು ಸಾರ್, ಅದಕ್ಕೇಂತ ಇನ್ನು ಈuಟಿಜs ಬಂದಿಲ್ಲ ಸಾರ್. +ರಘುನಂದನ್ ವಿಷಣ್ಣ ಭಾವದಿಂದ ನೋಡುತ್ತಾನೆ. +ರಘುನಂದನ್ : ನವೆಂಬರ್ ಮುಗೀತಾ ಬಂತಲ್ರೀ… ಫಂಡ್ಸ್‌ಗೆ ಬರೆದಿದ್ದೀರಾ? +ವೆಂಕಟೇಶಯ್ಯ : ಬರೆದಿದ್ದೀನಿ ಸಾರ್, ರೆಗ್ಯುಲರ್ ಆಗಿ ರಿಮೈಂಡರ್ಸೂ ಕಳಿಸಿದ್ದೀನಿ… ಪ್ರತಿ ಇಟ್ಟಿಲ್ಲ ಸಾರ್ +ಆಫೀಸ್ ಹೊರಗೆ…. +ವೆಂಕಟೇಶಯ್ಯ ಹೊರಬರುತ್ತಾನೆ. ಅಲ್ಲೇ ಕುಳಿತಿದ್ದ ಶ್ರೀಕಂಠಯ್ಯನ ಬಳಿ ಬಂದು, +ವೆಂಕಟೇಶಯ್ಯ : ಸಾಹೇಬ್ರು ಸ್ವಲ್ಪ sಣಡಿiಛಿಣ ಉ… ಏನು ಅಂದ್ಕೋಬೇಡಿ. ಹೋಗಿ ಮಾತಾಡಿಸಿ… +ಶ್ರೀಕಂಠಯ್ಯ : ಇರಲಿ… ಇರಲಿ… +ಎಂದು ಹೇಳಿ ತಾನೇ ಹೂವಿನ ಹಾರದ ತಟ್ಟೆ ಹಿಡಿದು ಒಳಹೋಗುತ್ತಾನೆ. +ದೃಶ್ಯ – ೧೦ / ಕಛೇರಿ (ಒಳಗೆ) +ಶ್ರೀಕಂಠಯ್ಯ ಛೇಂಬರ್ ಒಳಬಂದು, +ಶ್ರೀಕಂಠಯ್ಯ : ಕ್ಷಮಿಸಿ, ನಿಮ್ಮ ಕೆಲಸದ ಮಧ್ಯೆ ತೊಂದ್ರೆ ಕೊಡ್ತಾ ಇದ್ದೀನಿ. +ರಘುನಂದನ್ : ಪರವಾಗಿಲ್ಲ…. ಕೂತ್ಕೊಳಿ +ಶ್ರೀಕಂಠಯ್ಯ : (ನಿಂತೇ) ನಿಮಿಗೆ ಗೊತ್ತಿಲ್ಲ, ನಾವು ಒಂಥರದಲ್ಲಿ ಇಲಾಖೆಗೆ ಸಂಬಂಧಪಟ್ಟವರೇ. ಇಲಾಖೆ +ಸ್ಟಾಫ್ ಅಲ್ಲ ಅನ್ನೋದು ಬಿಟ್ರೆ ನಮ್ಮ ಕೆಲ್ಸ ಇದರ ಜೊತೆ ತಳಕು ಹಾಕಿಕೊಂಡಿದೆ; ಒಂಥರಾ ನಂಟಸ್ತನ. +ರಘುನಂದನ್ : ಕುಳಿತುಕೊಳಿ…. +ಶ್ರೀಕಂಠಯ್ಯ : (ಕುಳಿತುಕೊಂಡು ಪೆಚ್ಚು ಪೆಚ್ಚಾಗಿ) ನೀವು ಮುಂದಿನ ಭಾನುವಾರ ನಮ್ಮ ಸಂಘದ ಜiಟಿಟಿeಡಿ +ಗೆ ಬರಬೇಕು. ಯಾವುದೇ ಆಫೀಸರ್ ಹೊಸದಾಗಿ ಬಂದಾಗಲೂ, ಹಳಬರಾಗಿ ಹೋಗುವಾಗಲೂ ಅವರನ್ನ ಗೌರವಿಸೋದು ನಮ್ಮ ಸಂಪ್ರದಾಯ. +ರಘುನಂದನ್ : ಕ್ಷಮಿಸಿ, ತುಂಬಾ ವರ್ಕ್ ಪ್ರೆಶರ್… ನೆಕ್ಟ್ ಟೈಂ ನೋಡೋಣ… +ಶ್ರೀಕಂಠಯ್ಯ : ದಯವಿಟ್ಟು ಇದನ್ನಾದ್ರು ಒಪ್ಪಿಸಿಕೋಬೇಕು. ಹೂವು ಹಣ್ಣು ಅಷ್ಟೇ. +ರಘುನಂದನ್ : (ಸ್ವಲ್ಪ ಯೋಚಿಸಿ) ಆಯ್ತು… (ಎಂದು ಹೇಳಿ ಟೇಬಲ್ ಮೇಲಿನ ಬೆಲ್ ಒತ್ತುತ್ತಾನೆ) +ಕೆಂಪಯ್ಯ : (ಒಳಬಂದು) ಸಾರ್… +ರಘುನಂದನ್ : ಈ ಹಣ್ಣನ್ನ ಎಲ್ಲರಿಗೂ ಹಂಚಿಬಿಡಪ್ಪ… +ಶ್ರೀಕಂಠಯ್ಯ : ನಾನು ಬರಲಾ? +ರಘುನಂದನ್ : ಸರಿ… +ಕಟ್ ಟು… +ದೃಶ್ಯ – ೧೧ / ಗೊರವಯ್ಯನ ಮನೆ +ಗೊರವಯ್ಯನ ಮನೆಯಲ್ಲಿ ತನ್ನ ವೇಷ ಇಟ್ಟುಕೊಂಡು ರಿಪೇರಿ ಮಾಡುತ್ತಾ ಹಾಡು ಹೇಳಿಕೊಡುತ್ತಿದ್ದಾನೆ. +ಗೌರಿ ಪೊರಕೆಯಿಂದ ಕಸ ಗುಡಿಸುತ್ತಾ ಹಾಡು ಕಲಿಯುತ್ತಿದ್ದಾಳೆ. +ಗೊರವಯ್ಯ : ಹುಟು ಬಂಜೆ ಹೊನ್ನಮ್ಮ, ಏಳು ತಲೆ ನಾಗೀಂದ್ರ +ಗೌರಿ : ಹುಟು ಬಂಜೆ ಹೊನ್ನಮ್ಮ, ಏಳು ತಲೆ ನಾಗೀಂದ್ರ +ಗೊರವಯ್ಯ : ಇಬ್ರೂ ಕುಂತುಗೊಂಡು ದುಕ್ಕವನು ಮಾಡುವಾಗ +ಗೌರಿ : ಇಬ್ರೂ ಕುಂತುಗೊಂಡು ದುಕ್ಕವನು ಮಾಡುವಾಗ +ಗೊರವಯ್ಯ : ಸ್ವಾಮಿ ಹಿಂಗ ತಿರುಗಿ ನೋಡುದ್ರು +ಗೌರಿ : ಅಜ್ಜಾ ನೋಡಿಲ್ಲಿ ಮಣ್ಣು… +ಬಿರುಕು ಸ್ವಲ್ಪ ದೊಡ್ಡದಾಗಿದೆ. ಅದರಿಂದ ಉದುರಿದ ಮಣ್ಣು ಗುಪ್ಪೆಯಾಗಿ ನಿಂತಿದೆ. +ಅದನ್ನು ಗುಡ್ಡೆ ಮಾಡಿದ ಹುಡುಗಿ ಮೊರಕ್ಕೆ ತುಂಬಿಕೊಳ್ಳುತ್ತಾಳೆ. ಅಲ್ಲೇ ಇದ್ದ ಗೊರವಯ್ಯನಿಗೆ ತೋರಿಸುತ್ತಾ, +ಗೊರವಯ್ಯ : ಹುಂ, ಬಿರುಕು ದೊಡ್ಡದಾಗ್ತಾ ಐತೆ… ಮರ ಕಡೀದೆ ಇದ್ರೆ ಕಷ್ಟಾನೇ… +ಗೌರಿ : (ನಗುತ್ತಾ) ಆಮೇಲೆ ಸಂಭೋ ಸಂಕರ… +ಗೊರವಯ್ಯ ಆಕೆಯ ತಮಾಷೆಯ ಮಾತಿಗೆ ನಗುವುದಿಲ್ಲ. +ಮೌನವಾಗಿ ಬಿರುಕನ್ನೇ ನೋಡುತ್ತಾನೆ. +ದೃಶ್ಯ – ೧೨ / ಕಛೇರಿ +ರಘುನಂದನ್ ಆಫೀಸಿನಲ್ಲಿ ಮೊದಲ ದಿನ, ಟಾಯ್‌ಲೆಟ್‌ನಿಂದ ಹೊರಬರುತ್ತಾನೆ. +ಅದೇ ಸಮಯಕ್ಕೆ ವೆಂಕಟೇಶಯ್ಯ ಫೈಲ್ ಹಿಡಿದು ಅವನ ಛೇಂಬರ್ ಒಳಬರುತ್ತಾನೆ. +ರಘುನಂದನ್ : ವೆಂಕಟೇಶಯ್ಯ, ಯಾಕ್ರೀ ನಲ್ಲೀಲ್ ನೀರೇ ಬರತಿಲ್ಲ? +ವೆಂಕಟೇಶಯ್ಯ : ಹೊರಗೆ ನೀರಿನ ಪೈಪು ಒಡೆದು ಹೋಗಿದ್ದರಿಂದ ಅದನ್ನ ಬ್ಲಾಕ್ ಮಾಡಿದಾರೆ ಸಾರ್ +ರಘುನಂದನ್ : ಮತ್ತೆ ಆಫೀಸ್‌ನಲ್ಲಿ ನೀರಿಗೆ ಏನ್ ಮಾಡ್ತೀರ? +ವೆಂಕಟೇಶಯ್ಯ : ಕುಡಿಯುವ ನೀರನ್ನು ಪಕ್ಕದ ಮನೆಯಿಂದ ತರ್‌ತೀವಿ ಸಾರ್ +ರಘುನಂದನ್ : ಮತ್ತೆ ಟಾಯ್‌ಲೆಟ್‌ಗೆ !? +ವೆಂಕಟೇಶಯ್ಯ : ನಾವ್ಯಾರೂ ಇಲ್ಲಿ ಟಾಯ್‌ಲೆಟ್ ಬಳಸುವುದೇ ಇಲ್ಲ, ಆಫೀಸ್ ಹಿಂದೆ ಹೋಗಿಬರುತ್ತೀವಿ +ರಘುನಂದನ್ : ಲೇಡೀಸ್ ಏನು ಮಾಡುತ್ತಾರೆ? +ವೆಂಕಟೇಶಯ್ಯ : ಅವರು ಮನೆಗೆ ಹೋಗಿ ಬರುತ್ತಾರೆ… +ರಘುನಂದನ್ : ಅಷ್ಟೊತ್ತು ಆಫೀಸಿನ ಕೆಲ್ಸ ಹೆಲ್ಡ್ ಅಪ್ ಆಗುತ್ತೆ ಅಲ್ಲವಾ? +(ರಘುನಂದನ್ ಪ್ರಶ್ನೆಗೆ ವೆಂಕಟೇಶಯ್ಯ ಉತ್ತರಿಸುವುದಿಲ್ಲ) +ರಘುನಂದನ್ : ಪೈಪ್ ಯಾಕ್ ಬ್ಲಾಕ್ ಮಾಡಿದ್ದಾರೆ ? +ವೆಂಕಟೇಶಯ್ಯ : ಒಂದು ದಿನ ನಮ್ಮ ಆಫೀಸಿಗೆ ನೀರು ಬರೋ ಪೈಪ್ ಮೇಲೆ ಗೌವರ್ನ್‌ಮೆಂಟ್ ಬಸ್ಸು +ಹರಿದು ಪೈಪ್ ಒಡೆದು ಹೋಯಿತು. ನಾವು ಜಿಲ್ಲಾಪಂಚಾಯಿತಿಯವರಿಗೆ ಹೀಗಾಗಿದೆ ಅಂತ ಬರದ್ವಿ. ಅವರು ಬಂದು ನೋಡಿ, ಒಡೆದು ಹೋಗಿರೋದು ನಿಮ್ಮ ಕಡೆ ಪೈಪು ಅದನ್ನ ನಾವು ಹಾಕೋಕಾಗಲ್ಲ, ನೀವೇ ಹಾಕಿಸಿಕೋಬೇಕು ಅಂದ್ರು… ಅಲ್ಲೀವರೆಗೂ ನೀರು ಹರಿದು ವೇಸ್ಟ್ ಆಗದೇ ಇರಲಿ ಅಂತ್ ಕನೆಕ್ಷನ್ ಬ್ಲಾಕ್ ಮಾಡಿದ್ರು. ಠಿiಠಿe ಡಿeಠಿಟಚಿಛಿe ಮಾಡೋಕೆ ಬರೆದಿದ್ದೀನಿ… +ರಘುನಂದನ್ : ಪೈಪು ಒಡೆದು ಎಷ್ಟು ದಿನ ಆಯ್ತು… +ವೆಂಕಟೇಶಯ್ಯ : ಮೂರು ತಿಂಗಳಾಯ್ತು, ಎರಡು ರಿಮೈಂಡರ್ ಕಳ್ಸಿದ್ದೀನಿ ಸಾರ್… +ರಘುನಂದನ್ : ಪ್ರತಿ ಇಟ್ಟುಕೊಂಡಿಲ್ಲ ತಾನೆ! +ವೆಂಕಟೇಶಯ್ಯ ತಲೆತಗ್ಗಿಸುತ್ತಾನೆ. +ರಘುನಂದನ್ :ಅಲ್ರೀ ವೆಂಕಟೇಶಯ್ಯ, ಇದನ್ನ ರಿಪೇರಿ ಮಾಡೋಕೆ ನೂರು-ಇನ್ನೂರು ರೂಪಾಯಿ +ಖರ್ಚಾಗಬಹುದು. ಅದನ್ನ ಹ್ಯಾಗೋ ರಿಪೇರಿ ಮಾಡಿಸೋದು ಬಿಟ್ಟು….. +ವೆಂಕಟೇಶಯ್ಯ ಮೌನವಾಗಿ ನಿಂತಿರುತ್ತಾನೆ. +ರಘುನಂದನ್ ಜೇಬಿನಿಂದ ಹಣ ತೆಗೆದುಕೊಟ್ಟು +ರಘುನಂದನ್ : ತಗೋಳಿ ಇವತ್ತೇ ಅದನ್ನ ರಿಪೇರಿ ಮಾಡಿಸಿ… +ಆಫೀಸಿನ ಗೋಡೆ ಗಡಿಯಾರ ಐದು ಗಂಟೆ ತೋರಿಸುತ್ತದೆ. +ದೃಶ್ಯ – ೧೩ / ಆಫೀಸಿನ ಹೊರಗೆ +ಆಫೀಸಿನ ಹೊರಗೆ ಗೊರವಯ್ಯ ಕಾದು ಕುಳಿತಿದ್ದಾನೆ. ಜೊತೆಯಲ್ಲಿ ಗೌರಿಯೂ ಇದ್ದಾಳೆ. +ಅವನ ದೃಷ್ಟಿ ಕಛೇರಿಗೆ ಹೋಗಿಬರುವವರ ಮೇಲೆಯೇ ಇದೆ. +ರಘುನಂದನ್ ಹೊರಗೆ ಬರುತ್ತಾನೆ. ಜವಾನ ಎದ್ದು ಸಲ್ಯೂಟ್ ಹೊಡೆಯುತ್ತಾನೆ. +ಜೀಪು ಬಂದು ನಿಲ್ಲುತ್ತದೆ. ರಘುನಂದನ್ ಅದನ್ನು ಏರಿ ಹೋಗುತ್ತಾನೆ. +ಅವನು ಹೊರಟಂತೆಯೇ ಆಫೀಸಿನ ಇತರರು ಒಬ್ಬೊಬ್ಬರಾಗಿ ಹೊರಬರುತ್ತಾರೆ. +ವೆಂಕಟೇಶಯ್ಯ ಬಂದು ತಾವು ಸೈಕಲ್ ನಿಲ್ಲಿಸಿದ್ದ ಜಾಗದ ಹತ್ತಿರ ಹೋಗುತ್ತಾನೆ. +ಗೊರವಯ್ಯ ಅವನತ್ತ ಸರ ಸರನೆ ನಡೆದುಹೋಗುತ್ತಾನೆ. +ಗೊರವಯ್ಯ : ಬುದ್ದೀ ಅಡ್ಡಬಿದ್ದೆ… +ವೆಂಕಟೇಶಯ್ಯ : ಹುಂ… +ಗೊರವಯ್ಯ : ಬುದ್ಧೀ, ಬಿರುಕು ದೊಡ್ಡದಾಗತಾ ಐತೆ, ಮರ ಕಡೀಬೇಕು ಬುದ್ಧಿ… +ವೆಂಕಟೇಶಯ್ಯ : ಆಫೀಸ್ ಬಾಗಿಲು ಹಾಕಿದ ಮೇಲೆ ಬಂದಿದ್ದೀಯಲ್ಲ… +ಗೊರವಯ್ಯ : ಆಗಲೇ ಬಂದೇ ಬುದ್ಧಿ, ನೀವು ಸಾಯೇಬ್ರತ್ರ ಅವ್ರೆ ಅಂದ್ರು ಅದ್ಕೇ ಇಲ್ಲಿ ಕಾಯಕಂಡು +ಕೂತಕಂಡೆ. +ವೆಂಕಟೇಶಯ್ಯ : ನಾಳೆ ಬಾ ನೋಡೋಣ. +ಗೊರವಯ್ಯ ತನ್ನ ವಲ್ಲಿಯಲ್ಲಿ ಮುಚ್ಚಿಕೊಂಡಿದ್ದ ಹಲಸಿನ ಹಣ್ಣನ್ನ ತೆಗೆಯುತ್ತಾನೆ. +ವೆಂಕಟೇಶಯ್ಯ ಸುತ್ತ ನೋಡಿ +ವೆಂಕಟೇಶಯ್ಯ : (ಗದರು) ನಿಂಗೆ ಆಫೀಸಿಗೂ ಮನೇಗೂ ವ್ಯತ್ಯಾಸನೇ ಗೊತ್ತಾಗಲ್ಲ. +ಗೊರವಯ್ಯ : (ಪಶ್ಚಾತ್ತಾಪ) ತಪ್ಪಾಯ್ತು ಬುದ್ಧಿ…. +ಎಂದು ಸೈಕಲ್ ಏರುತ್ತಾನೆ. +ಗೊರವಯ್ಯ ಹಣ್ಣು ಹಿಡಿದು ಗೌರಿ ಇದ್ದಲ್ಲಿಗೆ ಬರುತ್ತಾನೆ. +ಗೌರಿ : ಅವ್ರಿಗೆ ಬ್ಯಾಡವಂತ…. ನಾವೇ ಕುಯ್ಯಕಂಡು ತಿನ್ನೋಣ. +ಗೊರವಯ್ಯ ಮಾತನಾಡುವುದಿಲ್ಲ. +ದೃಶ್ಯ – ೧೪ / ರಘುನಂದನ್ ಮನೆ +ರಘುನಂದನ್ ಜೀಪಿನಲ್ಲಿ ಬಂದಿಳಿಯುತ್ತಾನೆ. +ಸುಮ ಮನೆಯ ಹೊರಗೆ ಬಾಗಿಲು ಹಾಕಿ ಕುಳಿತಿದ್ದಾಳೆ. +ರಘುನಂದನ್ ಜೀಪನ್ನು ಕಳಿಸಿ ಸುಮಳ ಹತ್ತಿರ ಬಂದವನು, +ರಘುನಂದನ್ : (ನಾಟಕೀಯವಾಗಿ) ಏನೂ ರಾಣೀಸಾಹೇಬರು, ಎಲ್ಲಾ ಕೆಲ್ಸ ಮುಗ್ಸಿ ಗಾಳಿ ಸೇವನೆಗೋಸ್ಕರ +ಹೊರಗೆ ಕುಳಿತಿರೋ ಹಾಗಿದೆ +ಸುಮ : (ತಾತ್ಸಾರ) ಗಾಳೀನು ಇಲ್ಲ ಎಂಥದ್ದೂ ಇಲ್ಲ. (ಚಿಂತೆ) ಒಳಗಡೆ ಇರೋಕೆ ಭಯ ಆಗಿ ಇಲ್ಲಿ ಬಂದು +ಕುಳಿತಿದ್ದೀನಿ. +ರಘುನಂದನ್ : ಭಯಾನ!? ಯಾಕೆ? +ಸುಮ : (ಎದ್ದು ನಿಂತು) ಮನೇ ಒಳಗೆ ಯಾರೋ ಓಡಾಡಿದ ಹಾಗೆ ಆಗ್ತಾ ಇದೆ. ಅಡ್ಗೇ ಮನೇಲಿರೋ +ಪಾತ್ರೆಗಳೆಲ್ಲಾ ಕೆಳಗೆ ಬಿದ್ವು ಅಂತ ಹೋಗಿ ನೋಡಿದರೆ, ಏನೋ ಆಚೆಗೆ ಓಡಿ ಹೋದ ಹಾಗೆ ಆಯ್ತು. ಆಮೇಲೆ ಬೆಡ್‌ರೂಂನಲ್ಲಿ ಯಾವುದೋ ಸಾಮಾನು ಬಿತ್ತು. ಅದೇನೂಂತ ಅಲ್ಲಿ ಹೋಗಿ ನೋಡಿದ್ರೆ ಏನೋ ಮಂಚದ ಕೆಳಕ್ಕೆ ಹೋಗಿ ಸೇರಿಕೊಂಡಹಾಗಾಯ್ತು. ಭಯವಾಗಿ ಬೆಡ್‌ರೂಂ ಬಾಗಿಲು ಹಾಕ್ಕೊಂಡು ಇಲ್ಲಿ ಬಂದು ಕೂತಿದ್ದೀನಿ. +ರಘುನಂದನ್ : (ಆಶ್ಚರ್ಯ) ಹೌದಾ! ನಡೀ ನೋಡೋಣ. +ಎಂದು ಒಳಕ್ಕೆ ಹೋಗುತ್ತಾನೆ. ಸುಮ ಅವನನ್ನು ಹಿಂಬಾಲಿಸಿಕೊಂಡು ಹೋಗುತ್ತಾಳೆ. +ಮೆಲ್ಲನೆ ರೂಂ ಬಾಗಿಲು ತೆರೆಯುತ್ತಾನೆ. ರೂಮಿನಲ್ಲಿ ಯಾರೂ ಕಾಣುವುದಿಲ್ಲ. +ಮಂಚದ ಕೆಳಗೆ ಬಗ್ಗಿ ನೋಡುತ್ತಾನೆ. ಹೆಗ್ಗಣವೊಂದು ಗೋಡೆ ಬದಿಯಲ್ಲಿ ಓಡಿ ಬಾಗಿಲಾಚೆ ಹೋಗುತ್ತದೆ. +ಸುಮ ಭಯದಿಂದ ಕಿರುಚಿಕೊಳ್ಳುತ್ತಾಳೆ. ರಘು ಅದನ್ನೇ ಹಿಂಬಾಲಿಸಿಕೊಂಡು ಹೋಗುತ್ತಾನೆ. +ಹೆಗ್ಗಣ ಬಿಲವೊಂದಕ್ಕೆ ಹೋಗಿ ಮರೆಯಾಗುತ್ತದೆ. ಅಡುಗೆ ಮನೆ ಮೂಲೆಯಲ್ಲಿ +ಒಂದು ಡೊಗರು ಆಗಿದ್ದು, ಮಣ್ಣು ಗುಡ್ಡೆಯಾಗಿ ಬಿದ್ದಿರುವುದು ಗಮನಕ್ಕೆ ಬರುತ್ತದೆ. +ವಸ್ತುಸ್ಥಿತಿಯನ್ನು ಅರಿತವನಂತೆ ಗಾಬರಿಯಿಂದ ನಿಂತಿದ್ದ ಹೆಂಡತಿಯ ಬಳಿ ಬಂದು, +ರಘುನಂದನ್ : ಅಯ್ಯೋ ಹುಚ್ಚಿ, ಅದು ಹೆಗ್ಗಣ, ಅಡಿಗೆ ಮನೇಲಿ ನೋಡಿದೆಯಾ ದೊಡ್ಡ ಬಿಲ +ಮಾಡಿಕೊಂಡಿದೆ. +ಸುಮ : (ಬಗ್ಗಿ ನೋಡಿ) ಎಷ್ಟೊಂದು ದೊಡ್ಡದಾಗಿದೆ… +ರಘುನಂದನ್ : ಹಳ್ಳಿ ಮನೆಗಳಲ್ಲಿ ಇದು ಕಾಮನ್ +ಸುಮ : ಏನು ಕಾಮನ್ನೋ, ಇದೆಲ್ಲಾ ನೋಡಿದ್ರೆ ಮೈ ಜುಂ ಅನ್ನ್ಸುತ್ತೆ. +ರಘುನಂದನ್ : ಅದೇನೂ ಮಾಡಲ್ಲ. ಆ ದೊಗರಿದೆಯಲ್ಲಾ ಅದನ್ನ ಮುಚ್ಚಿದ್ರೆ ಆಯ್ತು, ಮತ್ತೆ ಬರೋಲ್ಲ. +ಸುಮ : ನಂಗ್ ಒಬ್ಬಳಿಗೇ ಭಯವಾಗ್ತಿದೇರಿ… +ರಘುನಂದನ್‌ದು ಧೈರ್ಯ ತುಂಬುವ ಅಸಹಾಯಕ ನೋಟ. +ದೃಶ್ಯ – ೧೫ / ಕಛೇರಿ +ವೆಂಕಟೇಶಯ್ಯನ ಬಳಿಗೆ ರೈತನೊಬ್ಬ ವೆಂಕಟೇಶಯ್ಯನ ಬಳಿ ಬಂದು ನಮಸ್ಕಾರ ಹಾಕುತ್ತಾನೆ. +ರೈತ : ಸ್ವಾಮಿ ಕಾಪಿಗ್ ಬರತೀರ? +ವೆಂಕಟೇಶಯ್ಯ : ಯಾಕ್ ಬರಬೇಕು… +ರೈತ : ನಮ್ಮ ಜಮೀನ್ದು ಎಡವಟ್ಟಾಗ್ ಬುಟ್ಟೈತೆ… ಅದರದು ಒಸಿ ಮಾತಾಡ್ಬೇಕಿತ್ತು. +ವೆಂಕಟೇಶಯ್ಯ : ನಂಗೆ ಅದಕ್ಕೆಲ್ಲಾ ಟೈಂ ಇಲ್ಲ. ರೀ ಶ್ರೀಧರಮೂರ್ತಿ, ಇವನದ್ದೇನು ಅದು ನೋಡ್ರಿ. +ಕಾಫಿಗೆಂತ ಹೊರಗಡೆ ಹೋಗಬಾರದು ಅಂತ ಸಾಹೇಬರು ಹೇಳಿದ್ದಾರೆ. ಇಲ್ಲೇ ಕುಂತು ಫೈಸಲ್ ಮಾಡಿ. +ಶ್ರೀಧರಮೂರ್ತಿ ಇತರರು ಕಿರುಗಣ್ಣಲ್ಲಿ ಇದನ್ನು ನೋಡುತ್ತಾರೆ. +ಅಷ್ಟರಲ್ಲಿ ರಘುನಂದನ್ ಬರುತ್ತಾನೆ. +ವೆಂಕಟೇಶಯ್ಯ ರಘುನಂದನ್ ಹಿಂಬಾಲಿಸಿ ಛೇಂಬರ್‌ಗೆ ಬರುತ್ತಾನೆ. +ವೆಂಕಟೇಶಯ್ಯ : ಸಾರ್… ಹೆಡ್ ಆಫೀಸ್‌ನಿಂದ ಒಂದು ಲೆಟರ್ ಬಂದಿದೆ ಸಾರ್… +(ರಘುನಂದನ್ ಆದನ್ನು ಪಡೆದು) +ರಘುನಂದನ್ : ಏನಂತೆ… (ಒಮ್ಮೆ ಕಣ್ಣಾಡಿಸಿ) ….ಕರಡಿಗುಡ್ಡದ ಸಾಲಿನಲ್ಲಿ ದೊರೆತ ಲೋಹದ +ನಿಕ್ಷೇಪವೊಂದರ ಪರಿಶೀಲನೆಯ ಸಲುವಾಗಿ ವಿದೇಶಿ ತಜ್ಞರ ಸಮಿತಿಯೊಂದಿಗೆ ಮಂತ್ರಿ ರಾಜೂದೇಸಾಯಿಯವರು ಮುಂದಿನ ತಿಂಗಳ ೫-೬ ರಂದು ಕರಡೀಗುಡ್ಡಕ್ಕೆ ಭೇಟಿ ಕೊಡಲಿದ್ದಾರೆ. ಅವರನ್ನು ಇಳಿಸಲು ಕರಡಿಗುಡ್ಡದ ಮೇಲಿರುವ ಐಬಿಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ಇದರ ಬಂದೂಬಸ್ತ್ ಇತ್ಯಾದಿಗಳನ್ನು ತಕ್ಷಣವೇ ಪರಿಶೀಲಿಸಿ ವರದಿ ಮಾಡತಕ್ಕದ್ದು…. +ರಘುನಂದನ್ : ಇದೇನ್ರೀ ವೆಂಕಟೇಶಯ್ಯ, ನಾನು ಬಂದು ಇನ್ನು ಒಂದು ವಾರ ಆಗಿಲ್ಲ ಆಗಲೇ ಮಂತ್ರಿಗಳು +ಇಲ್ಲಿಗೆ ಬರತೀನಿ ಅಂತ ಬರೆದಿದ್ದಾರಲ್ರೀ? +ವೆಂಕಟೇಶಯ್ಯ : ನೀವು ಬಂದ ಘಳಿಗೆ ಅಂತಾದ್ದು ಸಾರ್. ನಾನು ಇಲ್ಲಿಗೆ ಬಂದು ಆರು ವರ್ಷ ಆಯ್ತು. +ಒಬ್ಬರೇ ಒಬ್ರು ಮಿನಿಸ್ಟ್ರು ನಮ್ಮ ತಾಲ್ಲೂಕಿಗೆ ತಲೆ ಹಾಕಿರಲಿಲ್ಲ. ಈಗ ಇವರು ಬರತಿರೋದು ಕೇಳಿ ಒಂದು ಕಡೆ ಸಂತೋಷ ಇನ್ನೊಂದು ಕಡೆ ಭಯ ಆಗ್ತಾ ಇದೆ… +ರಘುನಂದನ್ : ಭಯ ಯಾಕ್ರೀ? ನಮ್ಮ ಡ್ಯೂಟಿ ನಾವು ಮಾಡಿದರಾಯ್ತು. ಇರಲಿ, ಆ ಕರಡಿಗುಡ್ಡದ +ಮೇಲೆ ನಮ್ಮ ಇಲಾಖೆಗೆ ಸಂಬಂಧಪಟ್ಟ ಒಂದು ಐಬಿ ಇದೆ, ಅಲ್ಲಿ ವ್ಯವಸ್ಥೆ ಮಾಡಿ ಅಂತ ಬರೆದಿದ್ದಾರಲ್ಲ, ಅದು ವಿ‌ಐಪಿಗಳು ಉಳಕಳ್ಳೋದಕ್ಕೆ ಸರಿಯಾಗಿದೆಯೇನ್ರೀ ? +ವೆಂಕಟೇಶಯ್ಯ : ಇರಬೋದು ಸರ್… +ರಘುನಂದನ್ : ಇರಬಹುದು ಅಂದ್ರೆ ಏನ್ರೀ ?! +ವೆಂಕಟೇಶಯ್ಯ : (ಅನುಮಾನ) ಅದೂ, ಆ ಐಬಿ ಹ್ಯಾಗಿದೆ ಅಂತಾ ನಾನು ನೋಡಿಲ್ಲ ಸರ್. +ರಘುನಂದನ್ : ಏನ್ ಹಾಂಗಂದ್ರೆ?! ಇಷ್ಟು ವರ್ಷದಿಂದ ಕೆಲ್ಸ ಮಾಡ್ತಿದ್ದೀರಿ, ಡಿಪಾರ್ಟ್‌ಮೆಂಟ್‌ಗೆ +ಸಂಬಂಧಪಟ್ಟ ಐಬಿ ನೋಡಿಲ್ಲವಾ ?! ಈಗಲೇ ಹೋಗಿ ನೋಡ್ಕಂಡು ಬಂದು ರಿಪೋರ್ಟ್ ಕೊಡಿ. +ವೆಂಕಟೇಶಯ್ಯ : ಸಾರ್ ಅದು ಏನಾಗಿದೆ ಅಂದ್ರೆ, ಡಾಕ್ಟ್ರು ಗುಡ್ಡ-ಬೆಟ್ಟ ಹತ್ತಬಾರದು ಅಂತ ಸ್ಟ್ರಿಕ್ಟ್ ಆಗಿ +ಹೇಳಿಬಿಟ್ಟಿದ್ದಾರೆ ಸಾರ್…. ಹಾರ್ಟ್‌ಗೆ ಸಂಬಂಧಪಟ್ಟಿದ್ದು… ಕ್ಷಮಿಸಬೇಕು… +ರಘುನಂದನ್ : ಸರಿ ಆ ಶ್ರೀಧರಮೂರ್ತೀನೋ ಯಾರನ್ನಾದ್ರು ಕಳಿಸಿ ರಿಪೋರ್ಟ್ ತರಿಸಿ… +ವೆಂಕಟೇಶಯ್ಯ : ಯಾರಿಗೂ ಅಷ್ಟು ಜವಾಬ್ದಾರಿ ಇಲ್ಲ ಸಾರ್. ಆಮೇಲೆ ನಾಳೆ ಒಂದು ಹೋಗಿ +ಇನ್ನೊಂದಾದರೆ ಕಷ್ಟ. ಅದಕ್ಕೇ ನಾನು ಏನು ಹೇಳ್ತೀನಿ ಅಂದ್ರೆ, ಇಲ್ಲಿ ಯಾವುದಕ್ಕೂ ವ್ಯವಸ್ಥೆ ಸರಿ ಇಲ್ಲ ಅಂತ ಬರೆದು ಬಿಡೋಣ ಸಾರ್. +ರಘುನಂದನ್ : ಅಲ್ರೀ ವ್ಯವಸ್ಥೆ ಸರಿ ಇಲ್ಲ ಅಂದ್ರೆ ಸರಿ ಮಾಡ್ಸಿ ಅಂತಾರೆ. ಹಾಗಂತ ಹೇಳಿಸಿಕೊಳ್ಳೋಕೆ +ನಾನು ತಯಾರಿಲ್ಲ. ಆ ಐಬಿ ಫೈಲ್ ಕಳ್ಸಿ, ನಾನೇ ಹೋಗ್ತೀನಿ. +ವೆಂಕಟೇಶಯ್ಯ : ಛೆ! ಛೇ! ತಮಗೆ ಯಾಕ್ ಸಾರ್ ಶ್ರಮ, ನಾನೇ ಹ್ಯಾಗೋ ಹೋಗಿ ರಿಪೋರ್ಟ್ ಮಾಡ್ತೀನಿ. +ರಘುನಂದನ್ : ಡಾಕ್ಟ್ರು ಹೋಗಬೇಡ ಅಂತ ಹೇಳಿದ್ದಾರೆ ಅಂತ ಹೇಳಿದ್ರಲ್ರೀ.. +ವೆಂಕಟೇಶಯ್ಯ : ನಿಜ ಸಾರ್, ಆದ್ರೆ ಸರ್ಕಾರಿ ಕೆಲ್ಸ ದೇವ್ರ ಕೆಲ್ಸ ಅಂತ ನೀವೆ ಅಂದ್ರಲ್ಲಾ ಸಾರ್! ಆ ದೇವ್ರೇ +ಒಂದು ದಾರಿ ತೋರಿಸ್ತಾನೆ ಬಿಡಿ +ಎಂದು ಹೇಳಿ ಚೇಂಬರ್‌ನಿಂದ ಹೊರ ಹೊರಡುತ್ತಾನೆ. +ದೃಶ್ಯ – ೧೬ / ಆಫೀಸಿನ ಹೊರಗೆ +ವೆಂಕಟೇಶಯ್ಯ ತನ್ನ ಸೀಟಿಗೆ ಬಂದು ಅಸಹನೆ ವ್ಯಕ್ತಪಡಿಸಿದ್ದನ್ನು ಸತ್ಯವತಿ ನೋಡುತ್ತಾಳೆ. ನಿರ್ಲಿಪ್ತ ನೋಟ… +ಹೊರಗೆ ನಿಂತಿದ್ದ ಗೊರವಯ್ಯ ವೆಂಕಟೇಶಯ್ಯನ ಮೇಲೆ ಕಣ್ಣಿಟ್ಟಿದ್ದವನು ಒಳಬರುತ್ತಾನೆ. +ಗೊರವಯ್ಯ : ಬುದ್ಧೀ ಅಡ್ಡಬಿದ್ದೆ… +ವೆಂಕಟೇಶಯ್ಯ : ಏನಯ್ಯಾ ಗೊರವಯ್ಯ, ಬೆಳ ಬೆಳಗ್ಗೇನೆ +ಗೊರವಯ್ಯ : ನಮ್ಮನೆ ಗ್ವಾಡೆ, ಬಿರುಕು… ಮರ…. +ಎಂದು ಏನೋ ಹೇಳಲು ಹೊರಟ ಗೊರವಯ್ಯನನ್ನು ಅರ್ಧದಲ್ಲೇ ತಡೆದು. +ವೆಂಕಟೇಶಯ್ಯ : ನೀನು ಮುಂದಿನವಾರ ಬಾ ಹೋಗು… +ಗೊರವಯ್ಯ : ಕಳದ ಸಲಾನೂ ಇಂಗೇ ಹೇಳಿದ್ರಿ…(ಎಂದು ರಾಗ ಎಳೆಯುತ್ತಾನೆ) +ವೆಂಕಟೇಶಯ್ಯ : ಮಂತ್ರಿಗಳು ಬರತಾರಲ್ಲ ಎಂಗಪ್ಪ ಸುಧಾರಿಸೋದು ಅಂತ ನಾನು ತಲೆ ಕೆಡಿಸಿಕೊಂಡು +ಕೂತಿದ್ದೀನಿ, ನಿಂದೊಂದು… ಈಗ ಆಗಲ್ಲ ನೀನು ಓಗು… +ಗೊರವಯ್ಯ ಸಪ್ಪಗಾಗಿ ಹೊರನಡೆಯುತ್ತಾನೆ. +ವೆಂಕಟೇಶಯ್ಯ ಅವನು ಹೊರ ಹೋಗುವುದನ್ನೇ ನೋಡುತ್ತಾನೆ. +ಅವನ ಮನಸ್ಸಿನಲ್ಲಿ ಏನೊ ಹೊಳೆಯುತ್ತದೆ. ಕುರ್ಚಿಯಿಂದ ಮೇಲೆದ್ದು ಅವನನ್ನು ಹಿಂಬಾಲಿಸುತ್ತಾನೆ. +ಮುಂಬಾಗಿಲ ಬಳಿ ಅವನನ್ನು ಕೂಗಿ ನಿಲ್ಲಿಸುತ್ತಾನೆ. +ವೆಂಕಟೇಶಯ್ಯ : ಅಪ್ಪಾ ಗೊರವಯ್ಯ… +ಗೊರವಯ್ಯ : (ನಿಂತು, ತಿರುಗಿ) ಏನ್ ಬುದ್ಧೀ… +ವೆಂಕಟೇಶಯ್ಯ : (ಹತ್ತಿರ ಬಂದು, ಸುತ್ತನೋಡಿ) ನಿಂಗೆ ಈ ಗುಡ್ಡಗಾಡು ಪ್ರದೇಶ ಚನ್ನಾಗಿ ಗೊತ್ತೋ? +ಗೊರವಯ್ಯ : ಗೊತ್ತು ಬುದ್ದಿ… ಉಪಾದಾನಕ್ಕೆ ಅಂತ ನಾನು ಓಗ್ದೇ ಇರೋ ಜಾಗವೇ ಇಲ್ಲ. +ಯಾಕ್ ಬುದ್ಧೀ ? +ವೆಂಕಟೇಶಯ್ಯ : ಈ ಕರಡೀಗುಡ್ಡದಲ್ಲಿ ನಮ್ಮ ಆಫೀಸಿಂದು ಒಂದು ಹಳೇ ಬಂಗಲೆ ಇದೆ ನೋಡಿದ್ದೀಯ? +ಗೊರವಯ್ಯ : (ಕ್ಷಣ ಯೋಚಿಸಿ) ನನ್ನ ಕಣ್ಣಿಗೆ ಬಿದ್ದಿಲ್ಲವಲ್ಲ ಬುದ್ಧೀ… +ವೆಂಕಟೇಶಯ್ಯ : ಅದು ನಮ್ಮ ತಾತನ ಕಾಲದಲ್ಲಿ ಕಟ್ಟಿಸಿರೋ ಬಂಗಲೆ. ಆಪೀಸರ್‌ಗಳು ಈ ಕಡೆ ಬಂದ್ರೆ +ಉಳಕಳೋಕೇಂತ ಇರೋದು. ಆ ಗುಡ್ಡದ ಮೇಲೆ ಇದೆ, ಈಗ ಮಿನಿಸ್ಟರ್ ಬಂದಾಗ ಅಲ್ಲಿ ಉಳಿಸಬೇಕು… ನಂಗ್ ಹೋಗಿ ನೋಡಿಕಂಡ ಬರಾಕೆ ನಮಗೆ ಟೈಮಿಲ್ಲ. ಅದಕ್ಕೇ ನೀನು ನೋಡಿಕಂಡ ಬಂದು ಅಲ್ಲಿ ಯಾರನ್ನಾದ್ರು ಉಳಸಬೌದಾ ಅಂತ ಹೇಳಕಾಗುತ್ತ? +ಗೊರವಯ್ಯ : ಅದಕ್ಕೇನ ತಗಾಳಿ ಏಳ್ತೀನಿ… ಮುಂದಿನ ಪೋರಣಮೀಗೆ ಜಾತ್ರೆಗೋಗ್‌ಬೇಕು, ಈ ಗುಡ್ಡ +ದಾಟೇ ಓಗೋದು, ಆಗ ನೋಡ್ಕಂಡ್ ಬತ್ತೀನಿ ಬುಡೀ… +ವೆಂಕಟೇಶಯ್ಯ : ನೀನು ಅಮಾವಾಸ್ಯೆ-ಪೌರ್ಣಮಿ ಅಂತ ಕೂತಿದ್ರೆ ಆಗಲ್ಲ, ನಾಡಿದ್ದರೊಳಗೆ ರಿಪೋರ್ಟ್ +ಕಳಿಸಬೇಕು. ಅಷ್ಟರಲ್ಲಿ ನೋಡಿಕೊಂಡ್ ಬಂದು ಹೇಳಬೇಕು. ಆಗುತ್ತಾ? +ಗೊರವಯ್ಯ : ಆ ಮರದ್ದೊಂದು ತಲೇ ತಿಂತಾಯ್ತಲ್ಲ ಬುದ್ಧೀ…. ಅದನ್ನ ಕಡಿಯಾಕೆ ಅಪ್ಪಣೆ ಚೀಟಿ +ಕೊಟ್ಟುಬಿಟ್ರೇ…. (ರಾಗ ಎಳೆಯುತ್ತಾನೆ) +ವೆಂಕಟೇಶಯ್ಯ : ಮೊದ್ಲು ನೀನು ನಮ್ಮ ಕೆಲ್ಸ ಮಾಡಿಕೊಡು ಆಮೇಲೆ ನಿನ್ನ ಕೆಲ್ಸ, ಆಯ್ತಾ? +ಗೊರವಯ್ಯ : ಸರಿ ಬುದ್ಧೀ… ಈಗ್ಲೇ ಒಂಟೇ +ವೆಂಕಟೇಶಯ್ಯ : ಅದನ್ನ ನೋಡ್ಕಂಡು ಮನೇ ಹತ್ರಕ್ಕೆ ಬಂದುಬಿಡು, ನಾನು ಕಾಯ್ತಿರತೀನಿ… +ಗೊರವಯ್ಯ : ಆಯ್ತು ಕಣ ಏಳೀ… +ಎಂದು ಉತ್ಸಾಹದಿಂದ ಹೊರಡುತ್ತಾನೆ. ವೆಂಕಟೇಶಯ್ಯನ ಮುಖದ ಮೇಲೆ ಸಮಾಧಾನದ ಗುರುತು. +ಕಟ್ ಟು… +ದೃಶ್ಯ – ೧೭ / ಕರಡಿಗುಡ್ಡ +ಗೊರವಯ್ಯ ಐಬಿಯನ್ನು ಹುಡುಕಿಕೊಂಡು ಅಲೆಯುತ್ತಿದ್ದಾನೆ. +ಅವನು ಹುಡುಕುವ ವಿವಿಧ ಹಂತಗಳು… +ಎಲ್ಲೂ ಕಾಣಿಸದೆ ಸುಸ್ತಾಗಿ ಒಂದು ಬಂಡೆಯ ಮೇಲೆ ಕುಳಿತುಕೊಳ್ಳುತ್ತಾನೆ. +ಆಗ ಅದೇ ದಾರಿಯಲ್ಲಿ ಕಾಡಿನಿಂದ ಸೌದೆ ಹೊರೆ ಹೊತ್ತ ರೈತನೊಬ್ಬ ಬರುತ್ತಾನೆ. +ರೈತ : ಅಜ್ಜಾ ಸ್ವಲ್ಪ ಈ ಹೊರ ಸರಿ ಮಾಡ್ತೀಯ ? +ಗೊರವಯ್ಯ ಅವನಿಗೆ ಸಹಾಯ ಮಾಡುತ್ತಾನೆ. +ಗೊರವಯ್ಯ : ಯಾವೂರಪ್ಪ ? +ರೈತ : ಇಲ್ಲೇ ಹುಣಿಸೆಕೊಪ್ಪಲು… ನೀನೇನು? ಕ್ವಾರಣ್ಯಕ್ಕೆ ಕಾಡಿಗೆ ಬಂದು ಬಿಟ್ಟಿದ್ದೀಯ. +ಗೊರವಯ್ಯ : ಕ್ವಾರಣ್ಯಕ್ಕಲ್ಲಪ್ಪ, ನಾನು ಈ ದೊಡ್ಡಮನುಸ್ರು ಉಳ್ಕಂತರಲ್ಲ, ಆ ಒಂದು ಬಂಗಲೆ ಇಲ್ಲೆಲ್ಲೋ +ಅದಂತೆ, ಅದನ್ನ ಹುಡುಕ್ತಾ ಇದ್ದೀನಿ. ನೀನೆಲ್ಲಾರ ಕಂಡಿದ್ದೀಯ… +ರೈತ : ಇಲ್ಲಿ ಸುತ್ತ ಮುತ್ತಾ ಯಾವುದೂ ಅಂತಾದ್ದು ನಾನು ಕಂಡಿಲ್ಲಪ್ಪ… (ಯೋಚಿಸಿ) ಆಂ! ಆಲ್ಲಿ ನೋಡು +ಆ ಗುಡ್ಡದ ಮಗ್ಗಲಲ್ಲಿ ಒಂದು ಪಾಳು ಬಿದ್ದಿರೋ ಬಂಗಲೆ ಐತೆ. ಅಲ್ಲಿ ಯಾರೂ ಇದ್ದಂಗಿಲ್ಲ. +ಗೊರವಯ್ಯ : ಅಂಗಾರೆ ಅದೇ ಇರಬೈದು. ನೋಡ್ಕಂಡ್ ಬತ್ತೀನಿ ನಡಿ… +ಎಂದು ಅವಸರದಲ್ಲಿ ಹೊರಡುತ್ತಾನೆ. +ರೈತ : ಅದನ್ನ ಯಾಕ್ ಹುಡುಕ್ತಿದ್ದೀಯ? +ಗೊರವಯ್ಯ : ದೊಡ್ಡಮನುಸ್ರು ಹೇಳಿದ್ದನ್ನ ಮಾಡಿರತಾನೆ ನಮ್ಮ ಅಟ್ಟಿ ಉಳ್ಕಳಾದು +ಎಂದು ಒಂದಷ್ಟು ಎತ್ತರಕ್ಕೆ ಹತ್ತುತ್ತಾನೆ. +ಅಲ್ಲಿ ದೂರದಲ್ಲಿ ಒಂದು ಹಳೆಯದಾದ ಬಿಲ್ಡಿಂಗ್ ಕಾಣುತ್ತದೆ. +ಗೊರವಯ್ಯನ ಮುಖ ಅರಳುತ್ತದೆ. +ಅದರತ್ತ ನಡೆಯುತ್ತಾನೆ. +ಕಟ್ ಟು… +ದೃಶ್ಯ – ೧೮ / ಹಗಲು / ರಘುನಂದನ್ ಮನೆ +ರಘುನಂದನ್ ಮಧ್ಯಾಹ್ನ ಮನೆಗೆ ಬರುತ್ತಾನೆ. +ಸುಮ ಬಂದು ಬಾಗಿಲು ತೆರೆಯುತ್ತಾಳೆ. +ರಘುನಂದನ್ : ಬಾಗಿಲು ತೆಗೆಯೋಕೆ ಯಾಕ್ ಇಷ್ಟು ಹೊತ್ತಾಯ್ತು? +ಸುಮ : ಕೈ ಎಲ್ಲಾ ಮಣ್ಣಾಗಿತ್ತು, ತೊಳಕೊಂಡು ಬಂದೆ… +ರಘುನಂದನ್ : ಮಣ್ಣಾಗೋ ಕೆಲ್ಸ ಏನ್ ಮಾಡ್ದೆ? +ಎಂದು ಕೈಕಾಲು ತೊಳೆಯಲು ಬಚ್ಚಲಿಗೆ ಹೋಗುತ್ತಾನೆ. +ಸುಮ : ಇನ್ನೇನು ಇದ್ದೇ ಇದೆಯಲ್ಲ ಹೆಗ್ಗಣದ ದೊಗರು ಮುಚ್ಚೋ ಕೆಲ್ಸ! +ರಘುನಂದನ್ : ಮೊನ್ನೆ ಅಡಿಗೆ ಮನೇಲಿ ಮುಚ್ಚಿ ಆಯ್ತಲ್ಲಾ ? +ಸುಮ : ಅಲ್ಲಿ ನೋಡಿ ಬಚ್ಚಲ ಪಕ್ಕದಲ್ಲಿ ಮತ್ತೆ ಕೊರಕೊಂಡು ಬಂದಿದೆ. +ರಘು ನೋಡುತ್ತಾನೆ. ಹೊಸದಾಗಿ ನೆಲಕೊರೆದ ಗುರುತು. +ದೃಶ್ಯ – ೧೯ / ಹೊರಾಂಗಣ / ಕಛೇರಿ +ರಘುನಂದನ್ ಊಟ ಮುಗಿಸಿ ಹಿಂತಿರುಗಿ ಆಫೀಸಿಗೆ ಜೀಪಿನಲ್ಲಿ ಬಂದಾಗ +ಮುಖ್ಯದ್ವಾರದಲ್ಲೇ ವೆಂಕಟೇಶಯ್ಯ ಏದುಸಿರು ಬಿಡುತ್ತಾ ಸೈಕಲ್‌ನಲ್ಲಿ ಎದುರಾಗುತ್ತಾನೆ. +ವೆಂಕಟೇಶಯ್ಯ : ಗುಡ್ ಆಫ್ಟರ್ ನೂನ್ ಸಾರ್… +ರಘುನಂದನ್ : ಏನ್ರೀ ವೆಂಕಟೇಶಯ್ಯ ನಿನ್ನೆ ಪತ್ತೇ ಇಲ್ಲ, ಇವತ್ತು ಬೆಳಗ್ಗೇನು ಕಾಣಸಿಲಿಲ್ಲ; ಲೀವ್ +ಲೆಟರ್‌ನೂ ಕೊಟ್ಟಿಲ್ಲ… +ವೆಂಕಟೇಶಯ್ಯ : ಡ್ಯೂಟಿ ಮೇಲೆ ಹೋಗಿದ್ದೆ ಸಾರ್. ಕರಡಿಗುಡ್ಡದ ಐಬಿ ನೋಡಿಕೊಂಡು ಬನ್ನಿ ಅಂತ +ನೀವೇ ಹೇಳಿದ್ರಲ್ಲಾ ಸಾರ್. +ರಘುನಂದನ್ : ಓ! ನೋಡಿಕೊಂಡು ಬಂದ್ರಾ? ಹ್ಯಾಗಿದೆ ಐಬಿ? +ವೆಂಕಟೇಶಯ್ಯ : ಅದನ್ನ ಯಾರಾದ್ರು ಐಬಿ ಅಂತ ಕರೆಯೋಕ್ ಆಗುತ್ತಾ ಸಾರ್? ದನದ ಕೊಟ್ಟಿಗೇಗಿಂತ +ಕಡೆ. ಅಂಥಾ ಜಾಗಕ್ಕೆ ಮಿನಿಸ್ಟ್ರುನ ಕರಕೊಂಡು ಹೋಗೋಕ್ ಆಗುತ್ತಾ ಸಾರ್? ಅಲ್ಲ ಒಂದು ಗೆಸ್ಟ್ ಹೌಸ್ ಕಟ್ಟಿಸಬೇಕಾದ್ರೆ ಯಾವ ಜಾಗದಲ್ಲಿ ಕಟ್ಟಿಸಬೇಕು, ಎಲ್ಲಿ ಕಟ್ಟಿಸಬಾರದು ಅಂತ ಪರಿಜ್ಞಾನ ಬೇಡವೇ? ಜಿiಡಿsಣ oಜಿ ಚಿಟಟ ಅಲ್ಲಿಗೆ ಹೋಗೋದಿಕ್ಕೆ ಸರಿಯಾದ ರಸ್ತೇನೆ ಇಲ್ಲ. ಸುಮ್ನೆ ಸರ್ಕಾರದ ಹಣಾನ ಪೋಲು ಮಾಡಿಬಿಟ್ಟಿದ್ದಾರೆ ಸಾರ್. +ರಘುನಂದನ್ : ಹಾಗಾದ್ರೆ ಅಲ್ಲಿ ಈಗ ಏನೂ ವ್ಯವಸ್ಥೆ ಮಾಡೋಕೆ ಆಗಲ್ಲ ಅಂತೀರ? +ವೆಂಕಟೇಶಯ್ಯ : ವ್ಯವಸ್ಥೆ ಮಾಡಬೇಕು ಅಂದ್ರೆ ಮೊದ್ಲು ರಸ್ತೆ ಆಗಬೇಕು, ಬಿದ್ದಿರೋ ಗೋಡೆ ಎಲ್ಲ ಎತ್ತಿ +ಕಟ್ಟಬೇಕು, ಬಾಗಿಲು-ಚಿಲಕ ಹಾಕಿಸಬೇಕು, ಸುಣ್ಣ-ಬಣ್ಣ ಆಗಬೇಕು… ಬೆಳಕು- ನೀರು ವ್ಯವಸ್ಥೆ ಆಗಬೇಕು…. ಅದಕ್ಕೆ ಸ್ಯಾಂಕ್ಷನ್! ಕಂಟ್ರಾಕ್ಟೂ! ಇವೆಲ್ಲ ಅವಸರದಲ್ಲಿ ಆಗೋ ಕೆಲ್ಸ ಅಲ್ಲ. ಅದಕ್ಕೆ ಈಗ ಮಿನಿಸ್ಟ್ರನ್ನ ಬೇರೆ ಯಾವುದಾದರು ಗೆಸ್ಟ್ ಹೌಸ್‌ನಲ್ಲಿ ಇಳಿಸೋ ವ್ಯವಸ್ಥೆ ಮಾಡೋದು ಬಿಟ್ರೆ ಬೇರೆ ದಾರಿ ಇಲ್ಲ. +ರಘುನಂದನ್ : ಸದ್ಯಕ್ಕೆ ನಮ್ಮ ಐಬೀಲಿ ಅಗೋಲ್ಲ ಅಂತ ಒಂದು ಲೆಟರ್ ಮಾಡ್ಕೊಂಡ್ ಬನ್ನಿ… ಅದರಲ್ಲಿ +ನೀವು ಹೇಳಿದ ಎಲ್ಲಾ ಡೀಟೈಲ್ಸ್‌ನೂ ಮೆನ್ಷನ್ ಮಾಡ್ಬೇಕು…. +ವೆಂಕಟೇಶಯ್ಯ : ಆಯ್ತು ಸಾರ್… +ಕಟ್ ಟು…. +ದೃಶ್ಯ – ೨೦ / ಹಗಲು / ಹೊರಾಂಗಣ / ರಘುನಂದನ್ ಮನೆ +ಗೊರವಯ್ಯ ಭಿಕ್ಷೆ ಬೇಡಲೆಂದು ರಘುನಂದನ್ ಮನೆಗೆ ಬರುತ್ತಾನೆ. ಜೊತೆಯಲ್ಲಿ ಗೌರಿ ಇದ್ದಾಳೆ. +ಮನೆ ಹೊರಗೆ ನಿಂತು, ಡವರುಗ ಬಡಿಯುತ್ತಾನೆ. +ಸುಮ ಮನೆಯೊಳಗೆ ಏನೋ ಮಾಡುತ್ತಿದ್ದವಳು ಶಬ್ದ ಕೇಳಿ ಕಿಟಕಿ ತೆರೆಯುತ್ತಾಳೆ. +ಹೊರಗೆ ಕಿಟಕಿಯ ಪಕ್ಕದಲ್ಲೇ ನಿಂತ ಗೊರವಯ್ಯನ ಮುಖ ನೋಡಿ ಭಯಪಟ್ಟು ಸಣ್ಣಗೆ ಕಿರುಚಿ ಕಿಟಕಿ ಮುಚ್ಚುತ್ತಾಳೆ. +ಗೊರವಯ್ಯನಿಗೆ ಇದನ್ನು ನೋಡಿ ಆಶ್ಚರ್ಯವಾಗುತ್ತದೆ. +ಗೊರವಯ್ಯ : ನಾನು ಕಣವ್ವ ಗೊರವಯ್ಯ… ಕ್ವಾರಣ್ಯ ಭಿಕ್ಷಕ್ ಬಂದಿವ್ನಿ +ಸುಮ ಒಳಗೇ ಒಂದು ಕ್ಷಣ ಅನುಮಾನಿಸುತ್ತಾಳೆ. +ಗೊರವಯ್ಯ : ಎದರಬ್ಯಾಡ ತಾಯಿ, ಹೊರಗ್ ಬಾ. ಭಿಕ್ಷೆ ಆಕು ಒಳ್ಳೇದಾಗುತ್ತೆ… +ಸುಮ ಕಿಟಕಿಯನ್ನು ಸ್ವಲ್ಪವೇ ತೆರೆದು ನೋಡುತ್ತಾಳೆ. +ಅವಳ ಕಣ್ಣಿಗೆ ಗೌರಿ ಕಾಣಿಸುತ್ತಳೆ. +ಗೊರವಯ್ಯ ಕೊಳಲನ್ನು ಊದುತ್ತಲೇ ಇದ್ದಾನೆ. +ಸುಮ ಬಾಗಿಲು ತೆರೆಯುತ್ತಾಳೆ. ಅವಳ ಮೊರದಲ್ಲಿ ಅಕ್ಕಿ ಇದೆ. +ಗೌರಿ ಅದನ್ನು ತನ್ನ ಜೋಳಿಗೆಗೆ ಹಾಕಿಸಿಕೊಳ್ಳುತ್ತಾಳೆ. +ಗೊರವಯ್ಯ : ನನ್ನ ವೇಸ ನೋಡಿ ಎದುರಿಕಂಡ್ ಬುಟ್ರಾ ? +ಸುಮ : ಹೌದು! ನಾನು ಮೊದ್ಲು ಇದನ್ನ ನೋಡಿರಲಿಲ್ಲ. ಏನ್ ವೇಷ ಇದು ? +ಗೊರವಯ್ಯ : ಇದನ್ನ ಗೊರವರ ವೇಸ ಅಂತಾರೆ? ಇದು ಅಂತಿಂಥ ವೇಷ ಅಲ್ಲ ಕಣವ್ವ, ಪರಸಿವ +ತಾರಕಾಸುರನ್ನ ಸಮ್ಮಾರ ಮಾಡೋ ಟೈಮ್ನಲ್ಲಿ ಹಾಕ್ಕೊಂಡ ವೇಸ! +ಎಂದು ಇಡೀ ಕಥೆಯನ್ನು ಪದಕಟ್ಟಿ ಹಾಡುತ್ತಾನೆ. (ಅದರ ಗದ್ಯ ರೂಪ ಕೆಳಗಿನಂತಿದೆ) +ಗೊರವಯ್ಯ : ಕಾಲಾನುಕಾಲದ ಹಿಂದೆ ನಮ್ಮವ್ವ ಪಾರ್ವತಿ ಇದ್ದು, ಯಾವ ಭೂತ, ಪ್ರೇತ, ಪಿಶಾಚಿ, ನರಮಾನವರು ದೇವಮಾನವರಗೂ ಹೆದರುವವಳಲ್ಲಾ ಅಂದ್ರು… ಆಗ ತಂದೆ ಶಿವ ಎಲಲೇ ಪಾರ್ವತಿ ನೀನು ಅಂತಾ ಗಟ್ಟಿಗಾರ್ತಿ ಹೆಂಗಸಾ, ಲೋಕದ ಮೇಲಿನವುರೇ ಆಗಲಿ, ಕೈಲಾಸದ ದೇವಮಾನವುರೇ ಆಗಲಿ ಒಂದಲ್ಲಾ ಒಂದು ಟೈಮ್‌ನಲ್ಲಿ ಹೆದರಲೇ ಬೇಕಾಯ್ತದೆ ಅಂತಂದ್ರು… ಪಾರ್ವತಿಯಿದ್ದು, ಇಲ್ಲಾ ಇಲ್ಲಾ ನಾನು ಯಾರ್ಗೂ ಯಾವ ಕಾರಣಕ್ಕೂ ಹೆದರುವುಳಲ್ಲಾ ಅಂದ್ಲು… ಒಂದಿನ ಸ್ವಾಮಿ ಶಿವ ಲೋಕದ ಮ್ಯಾಲೆ ಸಂಚಾರ ಬರೋವತ್ಗೆ ಇತ್ಲಾಗೆ ತಾರಕಾಸುರನೆಂಬೋ ರಾಕ್ಷಸನ ಹಾವುಳಿ ಸ್ಯಾನೆ ಆಗೋಗ್ಬುಟ್ಟಿತ್ತು. ಆಗ ಶಿವನು ರಾಕ್ಷಸರೂಪಾಗಿ ಬಂದು ತಾರಕಾಸುರನ್ನ ಶಿರನ ಎರಡು ತುಂಡು ಮಾಡಿಬಿಟ್ರು… ಅದೇ ಯಾಸದಲ್ಲಿ ಕೈಲಾಸಕ್ಕೆ ಬಂದು ಎಡದ ಕೈಲಿದ್ದ ಕೊಳ್ಳು ಊದಕಂಡು, ಬಲದ ಕೈಯಾಗಿನ ಡಮರುಗಾ ಬಾರಿಸ್ಕಂಡು ಕುಣಿತರೇ, ಹೆಂಗವ್ವಾ ಅಂದ್ರೆ ಪಾರ್ವತಿ ಬೆಚ್ಚಿ ಬೆದರಂಗೇ…(ಹಾಡು) +ಕೈಲಾಸದೊಳಗೊಮ್ಮೆ ಶಿವನ ಮಾತಿಗೆ ಕೆರಳಿ +ಪಾರ್ವತಿಯು ನುಡಿದಳು ಭಯವೆಂಬುದರಿಯೆ ನಾ +ಭ್ರಮೆಬೇಡ ಭ್ರಮರಾಂಭೆ ನಸುನಗುತ ಶಿವನೆಂದ +ಆದಿ ಭಯ ಎಂದಿಗೂ ಯಾರನ್ನೂ ಬಿಡದೆಂದ +ಭೂಲೋಕದಲ್ಲಿತ್ತು ಮಣಿಮಲ್ಲರ ಪಿಡುಗು +ರಕ್ಕಸರ ವಧೆಗೆಂದು ಭುವಿಗಿಳಿದು ಪರಶಿವನು +ಕರಡಿ ಮುಂಡಾಸುಟ್ಟು ಕವಡೆ ಹಾರವ ತೊಟ್ಟು +ಡಮ ಡಮನೆ ಡಮ ಡಮನೆ ಡಮರು ಬಾರಿಸಿದ +ಗತಿಸಿದರು ರಕ್ಕಸರು ನರ್ತಿಸಿದ ಭೈರವನು +ಗೊರವ ವೇಷದಲೆ ತಾ ನಡೆದ ಹಿಮಗಿರಿಗೆ +ಡಮರುಗದ ರಣಘೋಷ ಪರಶಿವನ ಹೊಸವೇಷ +ಅಂಜಿದಳು ಅಳುಕಿದಳು ಕದವಿಕ್ಕಿ ಗಿರಿಜೆ +ಕೊಳಲೂದಿ ಶಿವ ಕರೆದ ಭಯವೇಕೆ ಶಂಕರಿ +ನಗುನಗುತ ಬಂದಳಾ ಆಭಯಂಕರಿ +ಅಂಬೆಯ ಕಿಂಕರ ಅರ್ಧನಾರೀಶ್ವರ +ಆನಂದ ತಾಂಡವದಿ ಕುಣಿದ ಪರಮೇಶ್ವರ +ಹಾಡು ಮುಗಿಯುತ್ತದೆ… ಸುಮಳಿಗೆ ಇದನ್ನು ಕೇಳಿ ತುಂಬಾ ಸಂತೋಷವಾಗುತ್ತದೆ. +ಸುಮ : ಇಂಟೆರೆಸ್ಟಿಂಗ್ ಆಗಿದೆ… +ಗೊರವಯ್ಯ : ಇದರಿಂದಾನೇ ನಮ್ಮ ಹೊಟ್ಟೆಪಾಡು ಕಣ್ರವ್ವ… +ಸುಮ : ಹೆಂಡ್ತಿ ಮಕ್ಕಳು ? +ಗೊರವಯ್ಯ : ನನ್ನದೊಂದು ಒಂಟಿ ಜೀವ ಕಣವ್ವ, ಒಂಟಿಯಾಗಿರಬೇಡ ಕಣ್ಲಾ ಮಗಾ ಅಂತ ಆ ಶಿವ ನಮ್ಮ +ಈ ಗೌರಿನ ಕರುಣಿಸ್ದ… +ಸುಮ : ಮೊಮ್ಮಗಳಾ? +ಗೊರವಯ್ಯ : ಇಲ್ಲ ಕಣವ್ವ, ಯಾವ್ದೋ ಅನಾಥ ಹುಡುಗಿ, ಜಾತ್ರೇಲಿ ಅಪ್ಪ-ಅವ್ವನ್ನ ಕಳಕಂಡು ಅಳ್ತಿತ್ತು, +ನಾನು ಕರಕಂಡಬಂದು ಸಾಕ್ಕಂಡಿದ್ದೀನಿ…. +ಸುಮ : ನಿಮ್ಮದು ದೊಡ್ಡಗುಣ ಅಜ್ಜಾ… +ಗೊರವಯ್ಯ : ನಾ ಬತ್ತೀನಿ… +ಸುಮ ಅವರಿಬ್ಬರೂ ಹೋಗುವುದನ್ನೇ ನೋಡುತ್ತಾಳೆ. +ದೃಶ್ಯ – ೨೧ / ಹಗಲು / ಕಛೇರಿ ಒಳಗೆ +ರಘುನಂದನ್ ಟೇಬಲ್ ಮೇಲಿನ ಫೋನ್ ರಿಂಗಾಗುತ್ತದೆ. +ರಘುನಂದನ್ : ಹಲೋ… ರಘುನಂದನ್…. +ಆಫೀಸರ್ : ನಾನ್ರೀ ಹೆಡ್ ಆಫೀಸ್‌ನಿಂದ, ಪುರುಷೋತ್ತಮ್… +ರಘುನಂದನ್ : ನಮಸ್ಕಾರ ಸಾರ್ +ಆಫೀಸರ್ : ಐಬಿ ವಿಷಯಕ್ಕೆ ನೀವು ಬರಿದಿದ್ದ ಲೆಟರ್ ಬಂತು…. ಐಬಿ ಅಷ್ಟೊಂದು +ಅಧ್ವಾನವಾಗಿದೆಯೇನ್ರೀ? +ರಘುನಂದನ್ : ಹೌದು ಸಾರ್… +ಆಫೀಸರ್ : ನಿಮ್ಮ ಲೆಟರ್‌ನಲ್ಲಿ ಮೆನ್ಷನ್ ಮಾಡಿರೋ ಎಲ್ಲಾ ಡೀಟೈಲ್ಸು ಆ ಇನ್ಸ್‌ಪಕ್ಷನ್ ಬಂಗಲೇಗೆ +ಸಂಬಂಧಪಟ್ಟಿದ್ದೇನ್ರೀ ? +ರಘುನಂದನ್ : ನನ್ನ ನಂ.೨ ವೆಂಕಟೇಶಯ್ಯನವರನ್ನೇ ಕಳಿಸಿದ್ದೆ… ಅದು ಅವರು ಕೊಟ್ಟ +ರಿಪೋರ್ಟ್‌ನಲ್ಲಿರೋ ಡೀಟೈಲ್ಸ್‌ನೆಲ್ಲಾ ಪಾಯಿಂಟ್ ಟು ಪಾಯಿಂಟ್ ಅವರ ಹತ್ರ ಡಿಸ್‌ಕಸ್ ಮಾಡಿ ನನ್ನ ಲೆಟರ್ ಕಳಿಸಿದ್ದು ಸರ್… +ಆಫೀಸರ್ : ಅಲ್ಲಾ ರಘುನಂದನ್, ಇದು ಮಿನಿಸ್ಟರ್ ವಿಸಿಟ್‌ಗೆ ಸಂಬಂಧಿಸಿದ್ದು- ಸೀರಿಯಸ್ ವಿಷಯ…. +ನೀವು ಸಬಾರ್ಡಿನೇಟ್ಸ್ ಮಾತು ನಂಬಿಕೊಂಡು ಕೂತಿದ್ದೀರಲ್ಲ . ಅವರು ಯಾವಾಗಲೂ ಜವಾಬ್ದಾರಿಯಿಂದ ನುಣುಚಿಕೊಳ್ಳೋಕೆ ನೋಡ್ತಾ ಇರತಾರೆ…. +ರಘುನಂದನ್ : ಇಲ್ಲ ಸಾರ್ ಅವರು ತುಂಬಾ ಸೀನಿಯರ್ರು ಜೊತೆಗೆ ಸಿನ್ಸಿಯರ್ರು… +ಆಫೀಸರ್ : ಅದೇನೇ ಇರಲಿ. ಅವರಿಗೆ ಕೆಲವು ವಿಷಯ ಗೊತ್ತಿಲ್ಲ ಅಂತ ಕಾಣುತ್ತೆ. ರಸ್ತೆ ಸರಿ ಇಲ್ಲ +ಅನ್ನೋದು ಮೊದಲ ಪಾಯಿಂಟು. ಆದ್ರೆ ಈಗ ಆರು ತಿಂಗ್ಳು ಹಿಂದೆ ರಸ್ತೆ ರಿಪೇರಿ ಆಗಿದೆ ಅನ್ನೋ ರಿಪೋರ್ಟ್ ಇಲ್ಲೇ ನನ್ನ ಮುಂದಿದೆ. ಅದೂ ಅಲ್ದೆ ಎಂಟು ವರ್ಷದ ಹಿಂದೆ ಐಬಿ ಹಳೇದಾಗಿ ಬಿದ್ದು ಹೋಗ್ತಾ ಇದೆ, ರಿನೋವೇಟ್ ಮಾಡಿಸಬೇಕು ಅಂತ ಒಂದು ಲಕ್ಷದ ಏಳು ಸಾವಿರ ರೂಪಾಯಿ ಸ್ಯಾಂಕ್ಷನ್ ಮಾಡಿಸಿಕೊಂಡಿರೋ ದಾಖಲೆ ಕೂಡ ನನ್ನ ಟೇಬಲ್ ಮೇಲಿದೆ. ಇದರಲ್ಲಿ ಎಲೆಕ್ಟ್ರಿಸಿಟಿ, ವಾಟರ್‌ಸಪ್ಲೈ, ಫರ್ನಿಷಿಂಗ್ ಅಂತ ಎಲ್ಲಾದರ ಬಿಲ್ ನನ್ನ ಕಣ್ ಮುಂದೇನೆ ಇದೆ. ಇಷ್ಟೆಲ್ಲಾ ಮಾಡಿದ ಮೇಲೂ ಇಷ್ಟು ಬೇಗ ಹಾಳಾಗಿದೆ ಅಂದ್ರೆ ಏನ್ರೀ ಅರ್ಥ? +ರಘುನಂದನ್ : ಸ್ಸಾರಿ ಸರ್! ನಾನು ರೀಸೆಂಟ್ ಆಗಿ ಚಾರ್ಜ್ ತಗೊಂಡಿದ್ದೀನಿ ಸರ್. ಈ +ಡೀಟೈಲ್ಸ್ ಎಲ್ಲಾ ನಂಗೊತ್ತಿರಲಿಲ್ಲ. +ಆಫೀಸರ್ : ನೋಡಿ ರಘುನಂದನ್, ಐಬಿ ಇದೇ ಅಂತಾನೇ ಅಲ್ಲಿ ಠಿಡಿogಡಿಚಿmme ಜಿix ಮಾಡಿಸಿದ್ದೀನಿ. +ಈಗ ಠಿಡಿogಡಿಚಿmme ಛಿಚಿಟಿಛಿeಟ ಮಾಡೋಕ್ ಆಗೋಲ್ಲ. ನೀವೇ ಖುದ್ದಾಗಿ iಟಿsಠಿeಛಿಣ ಮಾಡಿ, ಈ miಟಿisಣeಡಿ visiಣ mಚಿಟಿಚಿge ಮಾಡೋದಿಕ್ಕೆ ಂbsoಟuಣe miಟಿimum ಡಿeಠಿಚಿiಡಿs ಎಷ್ಟಾಗುತ್ತೆ ಅನ್ನೋದನ್ನ ತಿಳಿಸಿ. ಂs ಚಿ sಠಿeಛಿiಚಿಟ ಛಿಚಿse, sಚಿಟಿಛಿಣioಟಿ ಮಾಡ್ತೀನಿ. ಒoಟಿಜಚಿಥಿ ಒಳಗೆ ನಂಗೆ ನಿಮ್ಮ ರಿಪೋರ್ಟ್ ಇಲ್ಲಿರಬೇಕು…. ಓಕೆ? +ರಘುನಂದನ್ : ಓಕೆ ಸಾರ್…. +ಎಂದು ಫೋನ್ ಇಟ್ಟು ಕ್ಷಣ ಚಿಂತಿಸಿ ನಂತರ ಬೆಲ್ ಮಾಡುತ್ತಾನೆ. +ಜವಾನ ಕೆಂಪಣ್ಣ ಬಂದು ನಿಲ್ಲುತ್ತಾನೆ. +ರಘುನಂದನ್ : ವೆಂಕಟೇಶಯ್ಯನೋರನ್ನ ಕರಿ ಇಲ್ಲಿ… +ಕೆಂಪಣ್ಣ : ಸಾರ್ ಅವ್ರು ರಜ ಹಾಕಿ ಊರಿಗೆ ಹೋದ್ರಲ್ಲಾ ಸಾರ್. ಅದೇನೋ ಅವರ ಅತ್ತೆ ವೈಕುಂಠ ಇದೆ +ಮುಗಿಸ್ಕಂಡು ಸೋಮವಾರ ಬರತೀನಿ ಅಂತ ನಿಮಗೆ ಹೇಳಿದ್ರಲ್ಲಾ ಸಾರ್… +ರಘುನಂದನ್ : ಓ! … ಆ ಐಬಿ ಒಚಿiಟಿಣಚಿiಟಿಚಿಟಿಛಿe ಫೈಲ್ ತಗೊಂಡ ಬಾ. +ಕೆಂಪಯ್ಯ ಹೋಗುತ್ತಾನೆ. ರಘುನಂದನ್ ಚಿಂತಿಸುತ್ತಾ ಕೂರುತ್ತಾನೆ. +ಕಟ್ ಟು… +ದೃಶ್ಯ – ೨೨ / ರಾತ್ರಿ / ರಘುನಂದನ್ ಮನೆ +ರಾತ್ರಿ ರಘುನಂದನ್ ಮನೆಯಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದಾನೆ. +ಸುಮ : ಇವತ್ತಿಗೆ ನಾವು ಇಲ್ಲಿಗೆ ಬಂದು ಒಂದು ತಿಂಗಳು ಆಯ್ತು ಯಾಕೋ ಬೋರ್ ಆಗ್ತಾ ಇದೆ. ನಾಳೆ +ಮೈಸೂರಿಗೆ ಹೋಗಿಬರೋಣ. +ರಘುನಂದನ್ : ನಾಳೇನ ಬೇಡ…. ಮುಂದಿನ ವಾರ ಹೋಗೋಣ. +ಸುಮ : ನಾಳೆ ಯಾಕ್ ಬೇಡ. +ರಘುನಂದನ್ : ನಾಳೆ ನಾನು ನಿನ್ನ ಕರಡೀಗುಡ್ಡಕ್ಕೆ ಕರಕೊಂಡು ಹೋಗ್ತೀನಿ ಬರತೀಯ? +ಸುಮ : (ನಿರುತ್ಸಾಹ) ಕರಡೀಗುಡ್ಡಕ್ಕಾ…. (ಮುನಿಸು) ನೀವು ಯಾವಾಗಲೂ ನನ್ನ ಆಸೆಗೆ ವಿರುದ್ಧವಾಗಿಯೇ +ಪ್ಲಾನ್ ಮಾಡ್ತೀರ +ರಘುನಂದನ್ : (ರಮಿಸುತ್ತಾ) ಹಾಗಲ್ಲ ಸುಮಾ, ಏನ್ ಗೊತ್ತಾ? ಮಂತ್ರಿ ರಾಜೂದೇಸಾಯಿ ಮುಂದಿನ +ತಿಂಗಳು ೫-೬ಕ್ಕೆ ಕರಡಿಗುಡ್ಡಕ್ಕೆ ವಿಸಿಟ್ ಮಾಡ್ತಿದ್ದಾರೆ, ಅವ್ರು ಉಳಕಳ್ಳೋಕೆ ಅಲ್ಲಿರೋ ನಮ್ಮ ಡಿಪಾರ್ಟ್‌ಮೆಂಟ್ ಐಬೀನ ವ್ಯವಸ್ಥೆ ಮಾಡಬೇಕು…. +ಸುಮ : ಅಷ್ಟಕ್ಕೆ ಇಷ್ಟು ಸುತ್ತಿ ಬಳಸಿ ಮಾತು ಯಾಕೆ? ಆಫೀಸ್ ಕೆಲ್ಸ ಅಂತ ಹೇಳಿ ನಂಗೆ ಅರ್ಥ ಆಗುತ್ತೆ…. +ಕಾಡು-ಮೇಡು ಅಂತ ಬಣ್ಣ ಯಾಕ್ ಕಟ್ತೀರ? ನೀವು ಹೋಗಿ ಬನ್ನಿ ನಾನು ಬರೋಲ್ಲ… +ರಘುನಂದನ್ : (ಅನುನಯಿಸುತ್ತಾ) ಪ್ಲೀಸ್ ಸುಮಾ… +ಸುಮ : ಇನ್ನು ಊಟ ತಿಂಡಿ ಬೇರೆ ಪ್ಯಾಕ್ ಮಾಡಿಕೊಬೇಕು… +ರಘುನಂದನ್ : ಅದು ಗೆಸ್ಟ್ ಹೌಸು. ಅದಕ್ಕೇಂತ ಒಬ್ಬ ಮೇಟಿ ಇರತಾನೆ ಊಟ-ತಿಂಡಿ ತಾಪತ್ರಯ +ಇರೋಲ್ಲ ಆರಾಮಾಗಿ ಕೈ ಬೀಸಿಕೊಂಡು ಹೋಗೋಣ… ಓಕೆ… +ಸುಮಳಿಗೆ ಅರ್ಧ ಮನಸ್ಸು +ಕಟ್ ಟು… +ದೃಶ್ಯ – ೨೩ / ಹಗಲು / ಹೊರಾಂಗಣ /ಕರಡಿಗುಡ್ಡ +ಮಾರನೆಯದಿನ ಜೀಪಿನಲ್ಲಿ ರಘುನಂದನ್ ಹೆಂಡತಿ ಸುಮಳೊಂದಿಗೆ ಕರಡಿಗುಡ್ಡಕ್ಕೆ ಹೋಗುತ್ತಾನೆ. +ಒಂದು ಹಂತದವರೆಗೂ ರಸ್ತೆಯಿದ್ದು ಒಂದೆಡೆ ಅದು ಕೊನೆಯಾಗುತ್ತದೆ. +ಡ್ರೈವರ್ ಜೀಪು ನಿಲ್ಲಿಸಿ ಇಳಿದು ಸುತ್ತಲೂ ಒಮ್ಮೆ ನೋಡಿ, ಕುಳಿತಿದ್ದ ರಘುನಂದನ್ ಬಳಿ ಬಂದು, +ಡ್ರೈವರ್ : ಸಾರ್, ಇಲ್ಲಿಂದ ಐಬೀಗೆ ಹ್ಯಾಗೆ ಹೋಗಬೇಕು ಸರ್. +ರಘುನಂದನ್ : ಯಾಕೆ ನೀನು ಯಾವತ್ತೂ ಐಬೀಗೆ ಹೋಗೇ ಇಲ್ವ? +ಡ್ರೈವರ್ : ಇಲ್ಲ ಸಾರ್, ನಾನು ಆಫೀಸ್‌ಗೆ ಸೇರಿ ಆರುತಿಂಗಳಾಯ್ತು ಅಷ್ಟೆ… ಆವಾಗಿನಿಂದ ಈ ಕಡೆ +ಬಂದಿಲ್ಲ…. ನೀವು ಕೂತಿರಿ ಸಾರ್, ನಾನು ಇಲ್ಲೇ ಎಲ್ಲಾದ್ರು ಹೋಗಿ ವಿಚಾರಿಸಿಕೊಂಡು ಬರತೀನಿ. +ರಘುನಂದನ್ ಸುಮಳ ಮುಖ ನೋಡುತ್ತಾನೆ. ಆಕೆ ನಿಟ್ಟುಸಿರು ಬಿಡುತ್ತಾಳೆ. +ರಘುನಂದನ್ : ಬೇಡ, ನಾವೇ ನಡಕೊಂಡು ಹೋಗಿ ನೋಡ್ತೀವಿ. ನೀನು ಜೀಪನಲ್ಲೇ ಇರು… ಅಲ್ಲಿಂದ +ಮೇಟೀನ ಕಳಿಸ್ತೀನಿ… ಊಟಕ್ಕೆ ಏನಾದ್ರು ಸಾಮಾನು ಬೇಕಾದ್ರೆ ಊರಿನಿಂದ ತಂದುಕೊಡುವೆಯಂತೆ. +ಡ್ರೈವರ್ : ಸರಿ ಸಾರ್… +ರಘುನಂದನ್ : ಬಾ ಸುಮ… +ಸುಮ : ನಡಕೊಂಡು ಹೋಗೋದಾ? +ರಘುನಂದನ್ : ಹುಂ, ಅದರಲ್ಲೇ ಇರೋದು ಮಜಾ. ಬಾ… +ಇಬ್ಬರೂ ಇಳಿದು ನಡೆಯುತ್ತಾರೆ. +ಅಲ್ಲಲ್ಲಿ ನಿಂತು ಸುತ್ತಲೂ ಐಬಿಗಾಗಿ ಹುಡುಕಿ ಮುಂದೆ ನಡೆಯುತ್ತಾರೆ +ದಾರಿ ಮಧ್ಯೆ ಸಿಕ್ಕ ಗಿಡ-ಮರ-ಹೂವಿನ ಬಗ್ಗೆ ರಘುನಂದನ್ ಮಾತನಾಡುತ್ತಾನೆ. +ಸುಮಳಿಗೆ ಅಷ್ಟೊಂದು ಆಸಕ್ತಿ ಇಲ್ಲ. +ಸ್ವಲ್ಪ ದೂರ ನಡೆದು ಒಂದು ತುದಿ ತಲಪುತ್ತಾರೆ. +ರಘುನಂದನ್ ಪರೀಕ್ಷಾತ್ಮಕ ದೃಷ್ಟಿಯಿಂದ ಸುತ್ತಲೂ ನೋಡುತ್ತಾನೆ. +ಸುಮ : ಅರ್ಧ ಗಂಟೆಯಿಂದ ಹುಡುಕ್ತಾನೇ ಇದ್ದೀರ? ಎಲ್ರೀ ನಿಮ್ಮ ಐಬಿ? ಹಸಿವಾಗ್ತಿದೆ. +ರಘುನಂದನ್ : ಇಲ್ಲಿ ಎಲ್ಲಾ ಗುಡ್ಡಗಳೂ ಒಂದೇ ತರ ಕಾಣಿಸುತ್ತೆ. ನಮಗೆ ಬೇಕಾದ ಕರಡಿಗುಡ್ಡ +ಯಾವುದು ಅಂತ ಹೇಳೋಕೆ ಒಬ್ರೂ ದಿಕ್ಕಿಲ್ಲ. ಮ್ಯಾಪ್ ಇದೆಯಲ್ಲ ಚಕ್ ಮಾಡೋಣ. +ಎಂದು ಹೇಳಿ ತನ್ನ ಕೈನಲ್ಲಿದ್ದ ಬ್ಲೂಪ್ರಿಂಟ್ ಹರಡಿ ಚಕ್ ಮಾಡುತ್ತಾನೆ. +ರಘುನಂದನ್ : ಇದ್ರಲ್ಲಿ ಯಾವುದೂ ಗುರುತೇ ಇಲ್ಲವಲ್ಲ… ಆ ಎತ್ತರದಲ್ಲಿದೆಯಲ್ಲಾ ಬಂಡೆ ಅದನ್ನ ಹತ್ತಿ +ನೋಡೋಣ. +ಸುಮ : ನಂಗೆ ಸುಸ್ತಾಗಿದೆ, ನೀವು ಬೇಕಾದ್ರೆ ಹತ್ತಿ ನೋಡಿಕೊಂಡ್ ಬನ್ನಿ… ಮನೆಯಿಂದ ತಿನ್ನೋಕೆ ಏನಾದ್ರು +ತಗಳೋಣ ಅಂದ್ರೂ ಕೇಳಲಿಲ್ಲ. ಮೇಟಿ ಇರತಾನೆ ಬಾ ಅಂದ್ರಿ… ಐಬೀನೆ ಇಲ್ಲ; ಇನ್ನು ಮೇಟಿ ಇನ್ನೆಲ್ಲಿ?! +ಎಂದು ಅಲ್ಲೇ ಒಂದೆಡೆ ಕುಸಿದು ಕೂರುತ್ತಾಳೆ. +ರಘುನಂದನ್ : ಸಿಗುತ್ತೆ ಎಲ್ಲಿ ಹೋಗುತ್ತೆ… +ಎಂದು ಒಬ್ಬನೇ ನಡೆದುಹೋಗಿ ಹುಡುಕುತ್ತಾನೆ. +ಆದರೆ ಎಷ್ಟು ಹುಡುಕಿದರೂ ಐಬಿ ಸಿಗುವುದೇ ಇಲ್ಲ. +ಕೊನೆಗೆ ನಿರಾಸೆಯಿಂದ ಹೆಂಡತಿ ಬಳಿ ಬರುತ್ತಾನೆ. +ಸುಮ ಐಬಿ ಸಿಕ್ಕಿತೇ ಎಂಬಂತೆ ಅವನನ್ನು ನೋಡುತ್ತಾಳೆ. +ರಘುನಂದನ್ : ಸ್ಸಾರಿ ಸುಮ, ಎಲ್ಲೂ ಕಾಣಿಸ್ತಿಲ್ಲ. +ಸುಮ : ನೀವೋ ನಿಮ್ಮ ಐಬೀನೋ. ಆ ಮಿನಿಸ್ಟ್ರು ಪ್ರೋಗ್ರಾಮ್ ದೇವ್ರೇ ಗತಿ… +ರಘುನಂದನ್ : ಏ, ವೆಂಕಟೇಶಯ್ಯ ಮೊನ್ನೆ ತಾನೆ ಬಂದು ನೋಡಿಕೊಂಡು ಹೋಗಿದ್ದಾರೆ, ಬಹುಶಃ ನಾವೇ +ದಾರಿ ತಪ್ಪಿರಬೇಕು… ಇದನ್ನ ಇಳಿದು ಆ ಕಡೆ ಗುಡ್ಡ ಹತ್ತಿ ನೋಡೋಣ್ವ? +ಸುಮ : ನೀವು ಯಾವ ಗುಡ್ಡನಾದ್ರು ಹತ್ತಿಕೊಳ್ಳೀ, ಯಾವ ಗುಡ್ಡನಾದ್ರು ಇಳಿಕೊಳಿ, ನಾನು ಮನೇಗ್ +ಹೋಗ್ತೀನಿ… +ಎಂದು ಬಂದ ದಾರಿಯಲ್ಲಿ ಹಿಂತಿರುಗತೊಡಗುತ್ತಾಳೆ. +ರಘುನಂದನ್ : ಸುಮಾ, ಪ್ಲೀಸ್ ನಿಂತ್ಕೋ… +ಅವಳು ನಿಲ್ಲದೆ ನಡೆದಾಗ ವಿಧಿಯಿಲ್ಲದೆ ರಘುನಂದನ್ ಮೌನವಾಗಿ ಹಿಂಬಾಲಿಸುತ್ತಾನೆ. +ಕಟ್ ಟು… +ದೃಶ್ಯ – ೨೪ / ಹಗಲು / ಒಳಾಂಗಣ / ಕಛೇರಿ +ರಘುನಂದನ್ ಛೇಂಬರ್‌ನಲ್ಲಿ ವೆಂಕಟೇಶಯ್ಯನನ್ನು ಇದ್ದಾನೆ. +ರಘುನಂದನ್ : ಆ ಐಬಿ ಎಲ್ರೀ ಇದೆ ವೆಂಕಟೇಶಯ್ಯ? +ವೆಂಕಟೇಶಯ್ಯ : ಕರಡಿಗುಡ್ಡದಲ್ಲಿ ಸಾರ್… +ರಘುನಂದನ್ : ಕರಡೀಗುಡ್ಡ ಎಲ್ಲಿದೆ? +ವೆಂಕಟೇಶಯ್ಯ : ಸುತ್ತು ಮುತ್ತ ಇರೋವೆಲ್ಲ ಕರಡಿಗುಡ್ಡಗಳೇ ಸಾರ್… +ರಘುನಂದನ್ : ಅದೇ ಐಬಿ ಇರೋ ಕರಡೀಗುಡ್ಡ ಎಲ್ಲಿದೆ? ನಿನ್ನೆ ಎಲ್ಲಾ ಅಷ್ಟು ಹುಡುಕಿದರೂ ಸಿಗಲೇ ಇಲ್ಲ +ವೆಂಕಟೇಶಯ್ಯ : (ಗಾಬರಿ) ನೀವು ನಿನ್ನೆ ಐಬಿ ಹುಡುಕಿಕೊಂಡು ಹೋಗಿದ್ದಿರಾ? +ರಘುನಂದನ್ : ಹೌದು, ಮ್ಯಾಪ್ ಹಿಡಿದುಕೊಂಡು ಮೂರು ನಾಲ್ಕು ಕಿಲೋಮೀಟರ್ ಅಲೆದೆ. ಆದ್ರೆ ಆ +ಐಬೀನೆ ಸಿಗಲಿಲ್ಲ. ಇವತ್ತು ಸಂಜೆ ಒಳಗೆ ಹೆಡ್ ಆಪೀಸ್‌ಗೆ ರಿಪೋರ್ಟ್ ಕಳಿಸಬೇಕು, ನೀವು ಮೊನ್ನೆ ಹ್ಯಾಗೂ ಹೋಗಿ ನೋಡಿಕೊಂಡು ಬಂದಿದ್ದೀರಲ್ಲ, ನಡೀರಿ ನಾನು ಬರತೀನಿ ಹೋಗಿಬರೋಣ… +ವೆಂಕಟೇಶಯ್ಯ : (ಅನುಮಾನಿಸಿ) ಸಾರ್…ಅದೂ… +ರಘುನಂದನ್ : ಮತ್ತೆ ಗುಡ್ಡ-ಬೆಟ್ಟ ಹತ್ತಬೇಕು ಅಂತ ಯೋಚನೇನ? ನೀವು ಐಬೀವರೆಗೂ ಬರೋದ್ +ಬೇಡ. ಜೀಪಲ್ಲೇ ಕೂತಿರಿ. ಎಲ್ಲಿದೆ ಅಂತ ತೋರಿಸಿ ಸಾಕು. +ರಘುನಂದನ್ ಪೆನ್ನಿನ ಕ್ಯಾಪ್ ಮುಚ್ಚಿ ಎದ್ದುನಿಲ್ಲುತ್ತಾನೆ. +ವೆಂಕಟೇಶಯ್ಯ ನಿಧಾನವಾಗಿ ತಲೆ ಎತ್ತಿ ಕೈ ಮುಗಿಯುತ್ತಾ, +ವೆಂಕಟೇಶಯ್ಯ : ಸಾರ್, ನೀವು ಈ ಗರೀಬನ್ನ ಕ್ಷಮಿಸಬೇಕು ಸಾರ್! +ರಘುನಂದನ್ : ಕ್ಷಮೆ! ಯಾಕ್ರೀ? +ವೆಂಕಟೇಶಯ್ಯ : ನಾನು… ನಾನು… ಮೊನ್ನೆ ಆ ಐಬೀನ ನೋಡೋಕ್ ಹೋಗಲಿಲ್ಲ ಸಾರ್. ಗೊರವಯ್ಯ +ಹೋಗಿ ನೋಡಿಕೊಂಡು ಬಂದದ್ದು ಸಾರ್. ಅದ್ರ ಪ್ರಕಾರ ನಾನು ರಿಪೋರ್ಟ್ ಕೊಟ್ಟೆ… +ರಘುನಂದನ್ : ಗೊರವಯ್ಯ ಅಂದ್ರೆ ಏನು ಮೇಟೀನ? +ವೆಂಕಟೇಶಯ್ಯ : ಅಲ್ಲ ಸಾರ್, ಅವನು ಒಬ್ಬು ಗೊರವರ ದೀಕ್ಷೆ ತಗೊಂಡಿರೋನು… ಅವನಿಗೆ ಈ ಪ್ರದೇಶ, +ಕಾಡು-ಮೇಡು ಎಲ್ಲ ಚನ್ನಾಗಿ ಗೊತ್ತು ಅಂತ ಕಳಿಸಿದ್ದೆ. +ರಘುನಂದನ್ : ನೀವು ಈ ಥರ ಕೆಲ್ಸ ಮಾಡ್ತಿದ್ರೆ ನಾನು ಆಕ್ಷನ್ ತಗೋಬೇಕಾಗುತ್ತೆ ಅಷ್ಟೆ… +ವೆಂಕಟೇಶಯ್ಯ : (ಕೈಮುಗಿದು) ಅದು ಮಾತ್ರ ಮಾಡಬೇಡಿ ಸಾರ್. ನಾನು ಮಕ್ಕಳೊಂದಿಗ…. +ರಘುನಂದನ್‌ಗೆ ಮಕ್ಕಳೊಂದಿಗ ಎಂದದ್ದು ಚುಚ್ಚಿದಂತಾಗುತ್ತದೆ. +ರಘುನಂದನ್ : ಸರಿ ಸರಿ…. ನಾನೀಗ ಆ ಐಬಿನ ಇವತ್ತು ನೋಡ್ಲೇಬೇಕು. ಆ ಜಾಗ ಇನ್ಯಾರಿಗೆ ಗೊತ್ತಿದೆ? +ವೆಂಕಟೇಶಯ್ಯ : ಅದು ನಮ್ಮಲ್ಲಿ ಸರಿಯಾಗಿ ಯಾರಿಗೂ ಗೊತ್ತಿಲ್ಲ ಸಾರ್. ಅದೂ ಊರಿಂದ ಆಚೆ, ಕಾಡಿನ +ಮಧ್ಯೆ ಯಾವುದೋ ಗುಡ್ಡದ ಮೇಲೆ ಇರೋದು, ಸ್ವಲ್ಪ ದೂರ, ಹಾಗಾಗಿ ನಮ್ಮ ಆಫೀಸಿನಿಂದ ಯಾರೂ ಅದನ್ನ ಬಳಸ್ತಾನೇ ಇಲ್ಲ. ಅಲ್ಲದೆ, ನಾನು ಇಲ್ಲಿಗೆ ಬಂದಾಗಿನಿಂದ ಯಾರೂ ವಿ‌ಐಪಿಗಳೂ ಬಂದಿಲ್ಲ. ತುಂಬಾ ಹಳೇದು ಅಂತ ರೆಕಾರ್ಡ್ಸ್ ಹೇಳುತ್ತೆ. +ರಘುನಂದನ್ : (ವ್ಯಂಗ್ಯವಾಗಿ) ನಿಮ್ಮ ಅದೇ ರೆಕಾರ್ಡ್ಸು ಪ್ರತಿ ವರ್ಷ ಒಚಿiಟಿಣಚಿiಟಿಚಿಟಿಛಿe ಗೆ ಅಂತ ಒಂದಿಷ್ಟು +ಹಣಾನು ಖರ್ಚಾಗ್ತಾ ಇದೆ ಅಂತಾನು ಹೇಳುತ್ತೆ ಅದಕ್ಕೊಬ್ಬ ಮೇಟಿ ಇದ್ದಾನೆ ಅಂತಾನೂ ಹೇಳುತ್ತೆ…. ಆ ಮೇಟಿನ್ನಾದ್ರು ಕರೆಸಿ… +ವೆಂಕಟೇಶಯ್ಯ : ಅವನು ಒಂದನೇ ತಾರೀಕು ಅಷ್ಟೇ ಸಾರ್ ಬರೋದು, ಸಂಬಳಕ್ಕೆ… ಅವನೂ ಅಲ್ಲೇ +ಇರಬೋದು… +ರಘುನಂದನ್ : ಸರಿಹೋಯ್ತು… ಅದೇನು ನಿಮ್ಮ ವ್ಯವಸ್ಥೇನೋ ಒಂದೂ ಗೊತ್ತಾಗಲ್ಲ. (ಕ್ಷಣ ಬಿಟ್ಟು) +ಒಂದು ಕೆಲ್ಸ ಮಾಡಿ, ಆ ಗೊರವಯ್ಯನಿಗೆ ಈ ಪ್ರದೇಶ ಎಲ್ಲಾ ಚನ್ನಾಗಿ ಗೊತ್ತು ಅಂದ್ರಲ್ಲ, ಅವನ್ನೇ ಕರೆಸಿ ಜೊತೇಲಿ ಕರಕೊಂಡು ಹೋಗೋಣ. +ವೆಂಕಟೇಶಯ್ಯ : ಆಯ್ತು ಸಾರ್… +ರಘುನಂದನ್ : ಹಾಗೇ ಮೇಟಿ ಸಿಗ್ತಾನ ಅಂತಾನ ಅಂತ ನೋಡಿ… +ವೆಂಕಟೇಶಯ್ಯ : ಸರಿ ಸಾರ್… +ಎಂದು ತಲೆತಗ್ಗಿಸಿಕೊಂಡು ಹೊರಹೋಗುತ್ತಾನೆ. +ಕಟ್ ಟು… +ದೃಶ್ಯ – ೨೫ / ಹಗಲು / ಗೊರವಯ್ಯನ ಮನೆ +ವೆಂಕಟೇಶಯ್ಯ ಗೊರವಯ್ಯನ ಮನೆಗೆ ಸೈಕಲ್‌ನಲ್ಲಿ ಬರುತ್ತಾನೆ. +ಅಲ್ಲಿ ಗೊರವಯ್ಯನ ಮನೆ ತಿಳಿಯದೆ ಪಕ್ಕದ ಮನೆಯೊಂದರ ಬಳಿ ಹೋಗಿ ಅಲ್ಲಿದ್ದವರನ್ನು, +ವೆಂಕಟೇಶಯ್ಯ : ಇಲ್ಲಿ ಗೊರವಯ್ಯನ ಮನೆ ಯಾವುದಮ್ಮ? +ಹೆಂಗಸು : ಅದೇ ಸ್ವಾಮಿ… ಆದ್ರೆ ಆ ಒಜ್ಜ ಇಲ್ಲ… +ವೆಂಕಟೇಶಯ್ಯ : ಎಲ್ಲಿಗೋದ? +ಹೆಂಗಸು : ಯಾರಿಗೋ ದೀಕ್ಷೆ ಕೊಡಬೇಕು ಬರೋದು ಒಂದು ನಾಕೈದು ದಿನ ಆಗುತ್ತೆ ಅಂತ ಹೋಯ್ತ್ತು. +ವೆಂಕಟೇಶಯ್ಯ : (ಬೇಸರ) ಎಲ್ಲಿಗೆಂತ ಏನಾದ್ರು ಗೊತ್ತಾ? +ಹೆಂಗಸು : ಗೊತ್ತಿಲ್ಲ ಸ್ವಾಮಿ… ಏನಾಗಬೇಕಿತ್ತು ಸ್ವಾಮಿ? +ವೆಂಕಟೇಶಯ್ಯ : ಆಫೀಸ್‌ದೊಂದಿಷ್ಟು ಕೆಲ್ಸ ಇತ್ತು… +ಹೆಂಗಸು : ಅದೇನೋ ಮರ ಕಡಿಸಬೇಕು ಅಂತಿತ್ತು, ಅದಾ ಸ್ವಾಮಿ… +ವೆಂಕಟೇಶಯ್ಯ : (ತಲೆಯಾಡಿಸಿ, ಸ್ವಗತ) ನಮ್ಮ ತಲೆ ಕಡಿಯೋ ಸ್ಥಿತಿ ಬಂದಿದೆ (ಪ್ರಕಟ) ಅವನು ಬಂದ್ರೆ ಅರ್ಜೆಂಟ್ ಆಫೀಸ್ ಹತ್ರ ಬರೋಕ್ ಹೇಳಮ್ಮ +(ಎಂದು ಹೇಳಿ ಹೊರಡುತ್ತಾನೆ) +ದೃಶ್ಯ – ೨೬ / ಹಗಲು / ರಸ್ತೆ +ವೆಂಕಟೇಶಯ್ಯ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿದ್ದಾನೆ. +ಅವನ ತಲೆಯಲ್ಲಿ ನೂರಾರು ಯೋಚನೆಗಳು. +ಇನ್ನೊಂದು ಕಡೆ ಗೊರವಯ್ಯ ಮತ್ತು ಇತರರು ಹೊಸದಾಗಿ ದೀಕ್ಷೆ ಪಡೆದವನಿಗೆ ಕುಣಿತ ಹೇಳಿಕೊಡುತ್ತಿದ್ದಾರೆ. +ಕುಣಿತದ-ಸೈಕಲಿನ ಎರಡೂ ಒovemeಟಿಣ ಗಳನ್ನು Iಟಿಣeಡಿಛಿuಣ ಮಾಡಲಾಗುತ್ತದೆ. +ಕಟ್ ಟು… +ದೃಶ್ಯ – ೨೭ / ಹಗಲು / ರಘುನಂದನ್ ಮನೆ +ರಘುನಂದನ್ ಜೀಪಿಳಿದು ತನ್ನ ಮನೆಗೆ ಬರುತ್ತಾನೆ. +ಬಾಗಿಲು ಮುಚ್ಚಿದೆ, ತಟ್ಟುತ್ತಾನೆ. +ಗೊರವಯ್ಯನ ಮನೆಯಲ್ಲಿದ್ದ ಹುಡುಗಿ ಗೌರಿ ಬಾಗಿಲು ತೆರೆಯುತ್ತಾಳೆ. +ಆಕೆಯನ್ನು ನೋಡಿ ರಘುನಂದನ್‌ಗೆ ಆಶ್ಚರ್ಯವಾಗುತ್ತದೆ. +ಗೌರಿ : ಯಾರು ? +ರಘುನಂದನ್ : (ತುಂಟುತನದಿಂದ) ನಾನು, ರಘುನಂದನ್ ಅಂತ. ನೀನು ಯಾರು? +ಗೌರಿ : (ನಾಚಿಕೆ) ನಾನು… ನಾನು… ಗೊತ್ತಿಲ್ಲ…. (ಒಳಗೋಡುತ್ತಾ) ಅವ್ವಾರೆ… +ಸುಮಾ : ಬಂದೇ… (ರಘುವನ್ನು ನೋಡಿ) ನೀವಾ! (ಗೌರಿಗೆ) +ರಘುನಂದನ್ : ಯಾರೀ ಹುಡುಗಿ? (ಎಂದು ಹುಸಿನಗುತ್ತಾ ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾನೆ) +ಸುಮ : ಇದೇ ಊರಿನವಳು, ಗೌರೀ ಅಂತ. ಗೊರವಯ್ಯನ ಕುಲದವರು? +ರಘುನಂದನ್ : (ಆಶ್ಚರ್ಯ) ಯಾವ ಗೊರವಯ್ಯ ? +ಸುಮ : ಅದೇರಿ, ಆವತ್ತು ನಾನು ಕತೆ ಹೇಳಲಿಲ್ವ? ತಲೇಗೆಲ್ಲ ಕರಡಿ ಟೋಪಿ ಹಾಕಿರತಾರಲ್ಲ ಅವರು… +ರಘುನಂದನ್ : (ಕುತೂಹಲ) ಅವ್ರು ಇಲ್ಲಿಗೆ ಬಂದಿದ್ರ ? +ಸುಮ : ಹುಂ, ಯಾವುದೋ ಕೆಲಸದ ಮೇಲೆ ಊರಿಗೆ ಇವಳನ್ನೂ ಕರಕೊಂಡು ಹೊರಟಿದ್ರು, ನಂಗೆ +ಜೊತೆಯಾಗುತ್ತೆ, ನೀವು ಬರೋವರೆಗೂ ಇಲ್ಲೇ ಇರಲಿ ಅಂತ ಹೇಳಿ ಇರಿಸಿಕೊಂಡೆ. ತುಂಬಾ ಜಾಣೆ. ನಂಗೆ ಎಷ್ಟು ಕೆಲ್ಸ ಮಾಡಿಕೊಟ್ಟಳೂ ಅಂತೀರ? +ರಘುನಂದನ್ : ಒಳ್ಳೇದಾಯ್ತು ಬಿಡು… +ಸುಮ : ಇವಳು ಎಷ್ಟು ಚನ್ನಾಗಿ ಹಾಡು ಹೇಳ್ತಾಳೆ ಅಂತೀರ. +ರಘುನಂದನ್ : ಹೌದಾ! ಅಡಿಗೆ ಆಗಿದೆಯಾ? +ಸುಮ : ಬಂದೇ ಬಡಿಸ್ತೀನಿ. +ದೃಶ್ಯ – ೨೮ / ಹಗಲು / ಕಛೇರಿ +ರಘುನಂದನ್ ಜೀಪಿಳಿದು ಆಫೀಸ್ ಪ್ರವೇಶಿಸುತ್ತಾನೆ. +ಎಲ್ಲರೂ ನಮಸ್ಕರಿಸುತ್ತಾರೆ. ವೆಂಕಟೇಶಯ್ಯನ ಕುರ್ಚಿ ಖಾಲಿ ಇದೆ. +ರಘುನಂದನ್ ಅದನ್ನು ಗಮನಿಸುತ್ತಾನೆ. ಅಲ್ಲೇ ನಿಂತು, +ರಘುನಂದನ್ : ಏನು, ವೆಂಕಟೇಶಯ್ಯ ಇವತ್ತೂ ಬಂದಿಲ್ವ? +ಸತ್ಯವತಿ : ಇಲ್ಲ ಸಾರ್?… ಸಾರ್ ಹೆಡ್ ಆಫೀಸಿನಿಂದ ನಿಮ್ಮನ್ನ ಕೇಳಿಕೊಂಡು ಫೋನ್ ಬಂದಿತ್ತು, ವಿಷ್ಯ +ಏನೂಂತ ಹೇಳಲಿಲ್ಲ. +ರಘುನಂದನ್ : ಐಬಿ ರಿಪೋರ್ಟ್ ಎಲ್ಲಿ ಅಂತ ಕೇಳೋಕ್ ಫೋನ್ ಮಾಡಿರಬೇಕು… ಅದು ಗೊತ್ತಿರೋದು +ಈ ವೆಂಕಟೇಶಯ್ಯ ಒಬ್ಬರಿಗೇ! ಈತ ನೋಡಿದ್ರೆ ಎರಡು ದಿನದಿಂದ ಆಪೀಸ್‌ಗೆ ಬಂದಿಲ್ಲ. ಗೊರವಯ್ಯನ-ಮೇಟಿನ ಹುಡುಕಿಕೊಂಡು ಹೋದೋರು ತಾವೇ ನಾಪತ್ತೆ ಆದ್ರು! +ಜವಾನ : ಅವರಿಗೆ ತುಂಬಾ ಜ್ವರವಂತೆ… ಅವರ ಡಾಟರ್ರು ಬೆಳಗ್ಗೆ ಫೋನ್ ಮಾಡಿದ್ರು ಸಾರ್… +ರಘುನಂದನ್ : ಅಲ್ಲ ನಿಂಗೂ ಆ ಮೇಟಿ ಮನೆ ಎಲ್ಲೀಂತ ಗೊತ್ತಿಲ್ಲವೇನಯ್ಯ? +ಜವಾನ : ಇಲ್ಲ ಸಾರ್…. +ರಘುನಂದನ್ : ನೀವೆಲ್ಲಾ ಆಫೀಸ್‌ಗೆ ಯಾಕ್ ಬರತೀರಿ? (ಎಲ್ಲರನ್ನೂ ಉದ್ದೇಶಿಸಿ) ನಮ್ಮ +ಡಿಪಾರ್ಟ್‌ಮೆಂಟ್‌ನಲ್ಲಿ ಇರೋ ಐಬಿ ಬಗ್ಗೆ ನಿಮಗೆ ಯಾರಿಗೂ ಗೊತ್ತಿಲ್ಲ. ಅದನ್ನ ನೋಡಿಕೊಳೋ ಮೇಟಿನ ಮನೇನು ಯಾರಿಗೂ ಗೊತ್ತಿಲ್ಲ. ತಿಂಗಳಿಗೊಂದು ಸಲ ಬಂದು ಸಂಬಳ ತಗೋತಾನಲ್ಲ ಅವನ ಮುಖಾನಾದ್ರು ನೋಡಿದ್ದೀರೋ ಇಲ್ವೋ? ಅವನೂ ಒಬ್ಬ ನಿಮ್ಮ ಸಹೋದ್ಯೋಗಿ… +ಶ್ರೀಧರಮೂರ್ತಿ : ಸಾರ್ ಆದ್ರೆ ಅವನು ಸ್ಟಾಫ್ ಅಲ್ಲ ಸಾರ್. ಕ್ಯಾಶುಯಲ್ ಲೇಬರ್ರು… ಹಾಗಾಗಿ ಸ್ಟಾಫ್ +ರಿಜಿಸ್ಟರ್‌ನಲ್ಲಿ ಅವನ ಹೆಸರು, ಡೀಟೈಲ್ಸ್ ಯಾವುದೂ ಇಲ್ಲ. ಐಬಿ ಒಚಿiಟಿಣಚಿiಟಿಚಿಟಿಛಿe ಲೆಕ್ಕಾಚಾರ ಎಲ್ಲ ವೆಂಕಟೇಶಯ್ಯನವರೆ ನೋಡಿಕೊಳ್ಳೋದರಿಂದ, ಯಾರಿಗೆ ಯಾವಾಗ ದುಡ್ದು ಕೊಡತಾರೆ ಅಂತಾನೂ ನಮಗ್ ಗೊತ್ತಾಗಲ್ಲ. ಇಂಪಾರ್ಟೆಂಟ್ ಫೈಲ್ಸ್ ಎಲ್ಲಾ ಅವರ ಬೀರೂನಲ್ಲಿರುತ್ತೆ. ಯಾವಾಗಲೂ ಅದಕ್ಕೆ ಬೀಗ ಹಾಕಿ ಬೀಗದ ಕೈ ಅವರೇ ಇಟ್ಟುಕೊಂಡಿರುತ್ತಾರೆ. +ರಘುನಂದನ್ : ಸಧ್ಯ ಆಫೀಸ್ ಬೀಗದ ಕೈ ನಿಮ್ಮ ಹತ್ರ ಇದೆಯಲ್ಲಾ ಅದೇ ಪುಣ್ಯ. +ಶ್ರೀಧರಮೂರ್ತಿ ತಲೆ ತಗ್ಗಿಸುತ್ತಾನೆ. +ದೃಶ್ಯ – ೨೯ / ಹಗಲು / ವೆಂಕಟೇಶಯ್ಯನ ಮನೆ +ವೆಂಕಟೇಶಯ್ಯ ಮಂಚದ ಮೇಲೆ ಹೊದೆದುಕೊಂಡು ಮಲಗಿದ್ದಾನೆ. +ಅವನ ಮಗಳು ಭವಾನಿ ಬಂದು ಏಳಿಸುತ್ತಾಳೆ. +ಭವಾನಿ : ಅಪ್ಪಾ… ಅಪ್ಪಾ… ಸಾಹೇಬರು ಬಂದಿದ್ದಾರೆ… +ವೆಂಕಟೇಶಯ್ಯ ಗಡಬಡಿಸಿ ಏಳುತ್ತಾನೆ. +ರಘುನಂದನನ್ನು ನೋಡಿ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. +ರಘುನಂದನ್ : ಇರಲಿ ಪರವಾಗಿಲ್ಲ… ಈಗ ಹ್ಯಾಗಿದೀರಿ ? +ವೆಂಕಟೇಶಯ್ಯ : ಪರವಾಗಿಲ್ಲ ಸಾರ್, ನೀವು ಯಾಕ್ ಬರೋಕ್ ಹೋದ್ರಿ. ಹೇಳಿಕಳಿಸಿದ್ರೆ ನಾನೇ ಬರತಿದ್ದೆ. +ರಘುನಂದನ್ : ಹೆಡ್ ಆಫೀಸ್‌ನಿಂದ ಮೇಲಿಂದ ಮೇಲೆ ಆ ಐಬಿ ವಿಷಯ ಏನಾಯ್ತು ಅಂತ ಫೋನ್ +ಮಾಡ್ತಿದ್ದಾರೆ. ಮೇಟಿನ ಹುಡುಕ್ಕೊಂಡು ಬರತೀನಿ ಅಂತ ಅಂದ ನೀವು ಪತ್ತೇನೆ ಇಲ್ಲ… ಅವರಿಗೆ ಏನು ರಿಪೋರ್ಟ್ ಕಳಿಸೋದು ಅಂತ ಗೊತ್ತಾಗ್ತಾ ಇಲ್ಲ. +ವೆಂಕಟೇಶಯ್ಯ : ತುಂಬಾ ಹಳೇ ಕಾಲದ್ದು, ಅಲ್ಲಿ ಉಳಕಳ್ಳೋ ವ್ಯವಸ್ಥೆ ಇಲ್ಲ ಅಂತ ಇನ್ನೊಂದುಸಲ ಬರೆದು +ಬಿಡಿ ಸಾರ್… ಆಮೇಲೆ ನೋಡ್ಕಳೋಣ. +ರಘುನಂದನ್ : ಒಂದು ಸಲ ನಿಮ್ಮ ಮಾತು ನಂಬಿಕೊಂಡು ರಿಪೋರ್ಟ್ ಕಳ್ಸಿ ಹೆಡ್ ಆಫೀಸ್‌ನಿಂದ ಮಾತು +ಕೇಳಿದ್ದೀನಿ. ಇನ್ನೊಂದು ಸಲ ಆ ತಪ್ಪನ್ನ ಮಾಡಲ್ಲ? +ವೆಂಕಟೇಶಯ್ಯ ಭಾವುಕನಾಗಿ ಗೊಳ ಗೊಳನೆ ಅಳತೊಡಗುತ್ತಾನೆ. +ರಘುನಂದನ್‌ಗೆ ಗಾಬರಿಯಾಗಿ +ವೆಂಕಟೇಶಯ್ಯ : ನಿಜ ಸಾರ್…ನಾನು ತಪ್ಪು ಮಾಡಿದೀನಿ ಸಾರ್… ನಾನು ತಪ್ಪು ಮಾಡಿದ್ದೀನಿ. +ದೊಡ್ಡಮನಸ್ಸು ಮಾಡಿ ನೀವು ನನ್ನನ್ನ ಕ್ಷಮಿಸಬೇಕು ಸಾರ್… +ರಘುನಂದನ್ : ಹಳೇದೆಲ್ಲ ಬಿಟ್ಟು ಬಿಡಿ ವೆಂಕಟೇಶಯ್ಯ, ಮೇಟಿ ಸಿಕ್ನಾ ಅಷ್ಟು ಹೇಳಿ? +ವೆಂಕಟೇಶಯ್ಯ : ಮೇಟಿ ಎಲ್ಲಿ ಸಿಕ್ತಾನೆ ಸಾರ್? +ರಘುನಂದನ್ : ಎಲ್ಲಿ ಸಿಕ್ತಾನೆ ಅಂದ್ರೆ ಏನರ್ಥ? ಪ್ರತಿತಿಂಗಳೂ ಬಂದು ಸಂಬ್ಳ ತಗೊಂಡು ಹೋಗ್ತಾ +ಇದ್ದಾನಲ್ರೀ… ಸಂಬಳ ನೀವೇ ತಾನೆ ಕೊಡ್ತಿದ್ದದ್ದು? +ವೆಂಕಟೇಶಯ್ಯ : ಹೌದು ಸಾರ್, ಈ ಪಾಪೀನೆ ಕೊಡ್ತಿದ್ದದ್ದು… ಸಾರ್, ನಂಗೆ ಮೂರು ಜನ ಹೆಣ್ಣು +ಮಕ್ಳು ಸಾರ್. ಸಾಲ ಮಾಡಿ ಒಬ್ಳು ಮದ್ವೆ ಮಾಡಿದ್ದೀನಿ. ಇನ್ನೂ ಇಬ್ರು ಜನ ಓದ್ತಾ ಇದ್ದಾರೆ. ಮನೇಲಿ ನಮ್ಮ ಮಿಸೆಸ್‌ಗೆ ಯಾವಾಗಲೂ ಏನಾದ್ರು ಒಂದು ಕಾಯಿಲೆ ಇದ್ದೇ ಇರುತ್ತೆ ಸಾರ್. ಬರೋ ಸಂಬಳ ಸಾಕಾಗೋಲ್ಲ. ಮನೇ ಕಡೆ ತುಂಬಾ ತಾಪತ್ರಯ ಸಾರ್. +ರಘುನಂದನ್ : ಅದಕ್ಕೂ ಇದಕ್ಕೂ ಏನ್ರೀ ಸಂಬಂಧ? +ವೆಂಕಟೇಶಯ್ಯ : ನಾಲ್ಕು ವರ್ಷದಿಂದ ಆ ಮೇಟಿ ಮುಖಾನೇ ನಾನು ನೋಡಿಲ್ಲ ಸಾರ್. +ರಘುನಂದನ್ : ಮತ್ತೆ ಆಫೀಸ್ ರಿಜಿಸ್ಟರ್‌ನಲ್ಲಿ ಅವನು ಹೋದ ತಿಂಗಳು ಸಂಬಳ ತಗೊಂಡಿರೋದಕ್ಕೆ ಸೈನ್ +ಮಾಡಿದ ದಾಖಲೆ ಇದೆ! +ವೆಂಕಟೇಶಯ್ಯ : ಆ ಸೈನ್ ಮಾಡಿರೋದು ನಾನೇ ಸಾರ್. ಅವನು ನಾಲ್ಕು ವರ್ಷದಿಂದ ಆಫೀಸ್ ಕಡೆ +ಮುಖಾನೇ ಹಾಕಿಲ್ಲ. ನಾನು ಈ ಆಫೀಸಿಗೆ ವರ್ಗವಾಗಿ ಬಂದಾಗ ಬರತಿದ್ದ ಸಾರ್. ಹಿಂದಿದ್ದ ಆಫೀಸರ್ ಟ್ರಾನ್ಸ್‌ಫರ್ ಆಗಿ ಹೋದ ಮೇಲೆ ಇದ್ದಕ್ಕಿದ್ದಂಗೆ ಬರೋದೇ ಬಿಟ್ಟು ಬಿಟ್ಟ ಸಾರ್. ನಾನೂ ಮೂರು ತಿಂಗ್ಳು ನೋಡ್ದೆ, ಅವನು ಬರಲಿಲ್ಲ. ಯಾರನ್ನೋ ಅವನೆಲ್ಲಿ ಅಂತ ಕೇಳ್ದೆ, ಅವರು ಅವನಿಗೆ ತುಂಬಾ ಕಾಯಿಲೆ ಅಂದ್ರು. ನಾನು ಅವನು ಸತ್ತು-ಗಿತ್ತು ಹೋಗಿರಬೇಕು ಅಂತ ಅವನ ಹೆಸರಲ್ಲಿ ಸೈನ್ ಮಾಡಿ ಸಂಬಳ ನಾನೇ ಖರ್ಚು ಮಾಡ್ಕಂಡ್‌ಬಿಟ್ಟೆ ಸಾರ್…. ಮಣ್ಣು ತಿನ್ನೋ ಕೆಲ್ಸ ಮಾಡಿದ್ದೀನಿ. ನನ್ನ ಕ್ಷಮಿಸಿಬಿಡಿ ಸಾರ್. ನಾನು ಮಕ್ಳಂದಿಗ ಕತ್ತಿಗೆ ಹಗ್ಗ ಹಾಕಿಸಬೇಡಿ ಸಾರ್… +ಎಂದು ರಘುನಂದನ್‌ನ ಕೈ ಹಿಡಿದು ಅಳುತ್ತಾನೆ. +ರಘುನಂದನ್ ಅವನಿಂದ ಬಿಡಿಸಿಕೊಂಡು, +ರಘುನಂದನ್ : ನೀವೇ ಏನೇ ಹೇಳಿ ವೆಂಕಟೇಶಯ್ಯ ನಾನು ಇದನ್ನ ಕ್ಷಮಿಸೋಕಾಗಲ್ಲ. ಇದು ದುಡ್ಡಿಗೆ ಸಂಬಂಧ ಪಟ್ಟ ವಿಷಯ… ಒisಚಿಠಿಠಿಡಿoಠಿಡಿiಚಿಣioಟಿ… veಡಿಥಿ seಡಿious mಚಿಣಣeಡಿ… +ಎಂದು ಹೇಳಿ ಎದ್ದು ಹೊರಡುತ್ತಾನೆ. +ಅಡಿಗೆ ಮನೆಯ ಬಾಗಿಲ ಮರೆಯಲ್ಲಿ ನಿಂತು ಇದನ್ನೆಲ್ಲಾ ಗಮನಿಸುತ್ತಿದ್ದ +ವೆಂಕಟೇಶಯ್ಯನ ಹೆಂಡತಿ ಮಕ್ಕಳ ಮುಖದಲ್ಲಿ ಭಯ ಮನೆಮಾಡಿದೆ. +ಕಟ್ ಟು… +ದೃಶ್ಯ – ೩೦ / ಹಗಲು / ಕಛೇರಿ +ಆಫೀಸಿನಲ್ಲಿ ಟೈಪಿಸ್ಟ್ ಸತ್ಯವತಿ ರಘುನಂದನ್ ಛೇಂಬರ್ ಬಾಗಿಲು ತೆರೆದು ಒಳಬರುತ್ತಾಳೆ. +ಅವಳ ಕೈನಲ್ಲಿ ಡಿಕ್ಟೇಷನ್ ತೆಗೆದುಕೊಳ್ಳುವ ನೋಟ್ ಬುಕ್ ಇದೆ. +ರಘುನಂದನ್ ಚಿಂತೆಯಲ್ಲಿ ಕುಳಿತಿದ್ದಾನೆ. +ಅವನ ಸ್ಥಿತಿ ನೋಡಿ, ಅವಳಿಗೆ ಮಾತನಾಡಿಸಲು ಸ್ವಲ್ಪ ಅಳುಕಾಗುತ್ತದೆ. +ಸತ್ಯವತಿ : (ಮೆಲ್ಲನೆ) ಸಾರ್… +ರಘುನಂದನ್ : (ಅವಳನ್ನು ನೋಡದೇ) ಹುಂ, ಬರಕೊಳಿ… ವೆಂಕಟೇಶಯ್ಯನವರಿಗೆ ಅಡ್ರೆಸ್ ಮಾಡಿ… +ಸತ್ಯವತಿ : ಯಾವ ವೆಂಕಟೇಶಯ್ಯ ಸಾರ್? +ರಘುನಂದನ್ : ಇನ್ಯಾರು ನಮ್ಮ ಆಫೀಸಿನ ವೆಂಕಟೇಶಯ್ಯ… +ಸತ್ಯವತಿ ಪೆನ್ಸಿಲ್ ಸಿದ್ಧ ಮಾಡಿಕೊಂಡು ವಿಷಯ ಏನಿರಬಹುದೆಂದು ಕುತೂಹಲದಿಂದ ಕಾಯುತ್ತಾಳೆ. +ರಘುನಂದನ್ : (ಕ್ಷಣ ಬಿಟ್ಟು) ನಮ್ಮ ಇಲಾಖೆಗೆ ಸಂಬಂಧಿಸಿದ ಇನ್ಸ್‌ಪೆಕ್ಷನ್ ಬಂಗಲೆಯ ಮೇಟಿ ನಾಲ್ಕು +ವರ್ಷದಿಂದ ಕೆಲಸಕ್ಕೆ ಬರದೆ ನಾಪತ್ತೆಯಾಗಿದ್ದರೂ ನೀವು ಅದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಜೊತೆಗೆ ಅವನಿಗೆ ಸಲ್ಲಬೇಕಾಗಿದ್ದ ಸಂಬಳವನ್ನೂ ತಾವೇ ದುರುಪಯೋಗ ಪಡಿಸಿಕೊಂಡಿದ್ದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ತಮ್ಮ ಮೇಲೆ ಕ್ರಮ ಜರುಗಿಸಬಾರದೇಕೆ ಎಂಬುದಕ್ಕೆ ಡಿಸೆಂಬರ್ ಹದಿನೈದರ ಒಳಗೆ ತಮ್ಮ ವಿವರಣೆಯನ್ನು ಈ ಮೂಲಕ ಕೇಳಲಾಗುತ್ತಿದೆ…. +ಸತ್ಯವತಿಗೆ ಈ ವಿಷಯ ಶಾಕ್ ತರುತ್ತದೆ. +ಸತ್ಯವತಿ : (ಮೆಲ್ಲನೆ) ಸಾರ್… +ರಘುನಂದನ್ : ಟೈಪ್ ಮಾಡಿಟ್ಟಿರಿ… ನಾನು ಊಟಕ್ಕೆ ಮನೇಗ್ ಹೋಗ್ ಬರತೀನಿ. +ಎಂದು ಅವಳ ಉತ್ತರಕ್ಕೆ ಕಾಯದೆ ಹೊರನಡೆಯುತ್ತಾನೆ. +ಸತ್ಯವತಿ ಆತಂಕದಿಂದ ಅವನತ್ತಲೇ ನೋಡುತ್ತಲೇ ನಿಲ್ಲುತ್ತಾಳೆ. +ಕಟ್ ಟು… +ದೃಶ್ಯ – ೩೧ / ಹಗಲು / ರಘುನಂದನ್ ಮನೆ +ರಘುನಂದನ್ ಜೀಪು ಕ್ವಾರ್ಟರ್ಸ್ ಮುಂದೆ ಬಂದು ನಿಲ್ಲುತ್ತದೆ. +ಅದರಿಂದ ಇಳಿದು ಮನೆಯತ್ತ ನಡೆಯುತ್ತಾನೆ. ಮನೆಯ ಬಾಗಿಲು ತೆರೆದಿರುತ್ತದೆ. ಒಳಬರುತ್ತಾನೆ. +ಅಲ್ಲಿದ್ದ ವೆಂಕಟೇಶಯ್ಯನ ಹೆಂಡತಿ ಮಕ್ಕಳು ಕುಳಿತಿದ್ದವರು ಗೌರವದಿಂದ ಎದ್ದು ನಿಲ್ಲುತ್ತಾರೆ. +ಅವರನ್ನು ಆ ಹೊತ್ತಿನಲ್ಲಿ ಅಲ್ಲಿ ನಿರೀಕ್ಷಿಸಿರದಿದ್ದ ರಘುನಂದನ್‌ಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ. +ಏನು ಮಾಡುವುದು ಎಂದು ತೋಚದೆ ಮೌನವಾಗಿ ಕುರ್ಚಿಯಲ್ಲಿ ಕುಳಿತು ಶೂ ಬಿಚ್ಚತೊಡಗುತ್ತಾನೆ. +ಅವನಿಗೆ ಹೆಣ್ಣುಮಕ್ಕಳು ‘ಸೊರಕ್… ಸೊರಕ್’ ಎಂದು ಅಳುವ ಶಬ್ದ ಕೇಳಿಸುತ್ತದೆ. +ಸುಮ ಅಲ್ಲೇ ಇದ್ದು ಇದನ್ನೆಲ್ಲ ನೋಡುತ್ತಿದ್ದವಳು ಹೆಣ್ಣು ಮಕ್ಕಳಿಗೆ ಸುಮ್ಮನಿರುವಂತೆ ಸನ್ನೆ ಮಾಡುತ್ತಾಳೆ. +ಸುಮ : (ಮೆಲ್ಲನೆ) ರೀ, ನೀವು ವೆಂಕಟೇಶಯ್ಯನವರ ಮನೆಯಿಂದ್ ಹೋದ ಮೇಲೆ ಅವರ ವರ್ತನೇನೆ ಸರಿ +ಇಲ್ಲವಂತೆ. ಏನಾದ್ರು ಅನಾಹುತ ಮಾಡಿಕೊಂಡುಬಿಡ್ತಾರೇನೋ ಅಂತ ಇವರೆಲ್ಲ ಹೆದರಿದ್ದಾರೆ. +ರಘುನಂದನ್ : ಅದಕ್ಕೆ ನಾನು ಏನ್ ಮಾಡ್ಲಿ ಸುಮಾ? ಆಫೀಸ್ ಪ್ರೊಸೀಜರ್ ಫಾಲೋ ಮಾಡ್ಲೇಬೇಕು… +ವೆಂ.ಹೆಂಡತಿ : ಹಾಗನ್ಬೇಡಿ ಸಾರ್… ನಮ್ಮ ಸಂಸಾರ ಉಳಿಸೋದು ನಿಮ್ಮ ಕೈನಲ್ಲೇ ಇದೆ. +ಸುಮ : ಅವರಿಗೆ ತಮ್ಮ ತಪ್ಪು ಗೊತ್ತಾಗಿದೆ. ಪಶ್ಚಾತಾಪಕ್ಕಿಂತ ಬೇರೆ ಶಿಕ್ಷೆ ಇದೆಯಾ? +ವೆಂ.ಹೆಂಡತಿ : ಕೈ ಮುಗಿದು ಕೇಳಿಕೋತೀವಿ ಸಾರ್… ಇದೊಂದು ಸಾರಿ, ಮನಸ್ ಮಾಡಿ. +ರಘುನಂದನ್ : (ನಿಟ್ಟುಸಿರಿಟ್ಟು) ಸರಿ, ನೀವು ಮನೇಗ್ ಹೋಗಿ. ವೆಂಕಟೇಶಯ್ಯ ಹುಷಾರಾದ ಮೇಲೆ +ಆಫೀಸ್‌ಗೆ ಬರೋಕ್ ಹೇಳಿ. +ಹೆಣ್ಣುಮಕ್ಕಳ ಮುಖದಲ್ಲಿ ಧನ್ಯತಾಭಾವ ಮೂಡುತ್ತದೆ. +ಕೃತಜ್ಞತಾ ಭಾವದಿಂದ ಇಬ್ಬರಿಗೂ ಕೈ ಮುಗಿದು ಹೊರಡುತ್ತಾರೆ. +ಸುಮ : ಇರಿ… ಕುಂಕುಮ ಕೊಡ್ತೀನಿ…. +ಎಂದು ಕುಂಕುಮ, ತಾಂಬೂಲ ತರಲು ಒಳಹೋಗುತ್ತಾಳೆ. +ಕಟ್ ಟು… +ದೃಶ್ಯ – ೩೨ / ಹಗಲು / ಒಳಾಂಗಣ / ಕಛೇರಿ +ಟೈಪಿಸ್ಟ್ ಸತ್ಯವತಿ ಛೇಂಬರ್ ಬಾಗಿಲು ತಳ್ಳಿಕೊಂಡು ಒಳಬರುತ್ತಾಳೆ. +ಕೈಯಲ್ಲಿ ಟೈಪ್ ಮಾಡಿದ ಲೆಟರ್ ಇದೆ. +ರಘುನಂದನ್ ಯಾವುದೋ ಫೈಲ್‌ನಲ್ಲಿ ಮುಖ ಹುದುಗಿಸಿದ್ದಾನೆ. +ಸತ್ಯವತಿ : (ಮೆಲ್ಲನೆ) ಸಾರ್… +ಎಂದು ಹೇಳಿ ಪತ್ರ ಇಡುತ್ತಾಳೆ. ರಘುನಂದನ್ ಗಮನಿಸಿಯೂ ಗಮನಿಸಿದವನಂತೆ. +ರಘುನಂದನ್ : ಏನ್ರೀ ಅದು ? +ಸತ್ಯವತಿ : ಸಾರ್ … +ರಘುನಂದನ್ : (ಅದರತ್ತ ನೋಡದೆ) ಅದನ್ನ ಹರಿದು ಹಾಕಿ… +ಸತ್ಯವತಿ : (ಸಂತೋಷ) ಥ್ಯಾಂಕ್ಸ್ ಸಾರ್…. +ಎಂದು ಅದನ್ನು ಅಲ್ಲೇ ಹರಿದು ಕಸದಬುಟ್ಟಿಗೆ ಹಾಕುತ್ತಾಳೆ. +ರಘುನಂದನ್ ಅವಳ ಸಂಭ್ರಮವನ್ನು ಗಮನಿಸುತ್ತಾನೆ. +ದೃಶ್ಯ – ೩೩ / ಹಗಲು / ರಘುನಂದನ್ ಮನೆ +ರಾತ್ರಿ, ರಘುನಂದನ್ ಮತ್ತು ಸುಮ ಊಟ ಮಾಡಿ ಕುಳಿತಿದ್ದಾರೆ. +ಸುಮ : ಆ ಐಬಿ ಎಲ್ಲಿದೆ ಅಂತ ನಿಮ್ಮ ಆಫೀಸ್‌ನಲ್ಲಿ ಬೇರೆ ಯಾರಿಗೂ ಗೊತ್ತೇ ಇಲ್ವ? +ರಘುನಂದನ್ : ಉಹುಂ, ಹೆಚ್ಚಿನವರು ಇತ್ತೀನಿನವ್ರು; ಅವ್ರಲ್ಲೆಲ್ಲ ಸೀನಿಯರ್ ಅಂದ್ರೆ ವೆಂಕಟೇಶಯ್ಯನೇ…. +ಸುಮ : ಹಾಗಾದ್ರೆ ಹಿಂದೆ ನೀವು ಇಲ್ಲಿಗೆ ಕೆಲ್ಸಕ್ಕೆ ಬರೋಕ್ ಮುಂಚೆ ಇದ್ರಲ್ಲ ಆಫೀಸರ್‌ಗಳು ಅವ್ರನ್ನ +ವಿಚಾರಿಸಿದ್ರೆ ಎಲ್ಲಿದೆ ಅಂತ ಗೊತ್ತಾಗುತ್ತೆ… +ರಘುನಂದನ್ : ಅವ್ರೆಲ್ಲಾ ರಿಟೈರ್, ಟ್ರಾನ್ಸ್‌ಫರ್ ಆಗಿ ಎಲ್ಲೆಲ್ಲಿದ್ದಾರೋ? +ಸುಮ : ಹುಡುಕಬೇಕು ಅಂದ್ರೆ ನಿಮ್ಮ ಆಫೀಸ್ ರೆಕಾರ್ಡ್ಸ್‌ನಲ್ಲಿ ಡೀಟೈಲ್ಸ್ ಸಿಗೋಲ್ವ? ಹುಡುಕಿನೋಡಿ… +ರಘುನಂದನ್ ಅವಳ ಮಾತುಗಳನ್ನೇ ಮೆಲುಕು ಹಾಕುತ್ತಾನೆ. +ದೃಶ್ಯ – ೩೪/ ಹಗಲು / ಒಳಾಂಗಣ / ಕಛೇರಿ +ವೆಂಕಟೇಶಯ್ಯ ರಘುನಂದನ್ ಛೇಂಬರ್ ಒಳಕ್ಕೆ ಕೆಲವು ಫೈಲ್‌ಗಳನ್ನು ಹಿಡಿದು ಬರುತ್ತಾನೆ. +ರಘುನಂದನ್ : ಡೀಟೈಲ್ಸ್ ಸಿಕ್ತಾ? +ವೆಂಕಟೇಶಯ್ಯ : ಸಿಕ್ತು ಸಾರ್… ಈ ಐಬಿ ಕಟ್ಟಿದಮೇಲೆ ಈ ಆಫೀಸ್‌ಗೆ ಎಂಟು ಜನ ಆಫೀಸರ್‌ಗಳು +ಬಂದು ಹೋಗಿದ್ದಾರೆ. ಬದುಕಿರೋ ಮೂವರಲ್ಲಿ ಈ ಕೃಷ್ಣಪ್ಪ ಇದ್ದಾರೆ ನೋಡಿ ಇವರ ಪೀರಿಯಡ್‌ನಲ್ಲೆ ಸುಮಾರು ಐವತ್ತೆಂಟು ಸಾವಿರ ರೂಪಾಯಿ ವೆಚ್ಚದಲ್ಲಿ ಕರಡಿಗುಡ್ಡದ ಮೇಲೆ ಐಬಿ ಕಟ್ಟಿದ್ದಾರೆ ಸಾರ್. ಇವರ ಯಾರು ಅಂತ ನಿಮಗೆ ಗೊತ್ತಿರಬೇಕು? +ರಘುನಂದನ್ : ಯಾರು ಹೇಳಿ? +ವೆಂಕಟೇಶಯ್ಯ : ಅದೇ ಸಾರ್ ಈಗ ಕೃಷ್ಣಕುಮಾರ್ ಅಂತ ಕಂದಾಯ ಸಚಿವರಾಗಿಲ್ವ, ಅವರೇ !… ಸಾರ್ +ಇವರು ರಿಟೈರ್ ಆದಮೇಲೆ ರಾಜಕೀಯ ಸೇರಿದರು, ಇನ್‌ಪ್ಲೂಯನ್ಸ್ ಬಳಸಿಕೊಂಡು ಗೆದ್ದೂ ಬಿಟ್ರು. ಈ ಕಡೆಯವರು ಯಾರು ಹೋದ್ರೂ ಹಳೇದೆಲ್ಲ ನೆನಪಿಲ್ಲದವರ ತರ ಃehಚಿve ಮಾಡಿದ್ರಂತೆ… +ರಘುನಂದನ್ : ನಾವು ಹೋಗಿ ಐಬಿ ಎಲ್ಲಿ ಸ್ವಾಮಿ ಅಂತ ಅವರನ್ನ ಕೇಳೋ ಹಾಗಿಲ್ಲ… ಸರಿ, ಇನ್ಯಾರು ? +ವೆಂಕಟೇಶಯ್ಯ : ಇನ್ನೊಬ್ಬರು ಗೋಪಲ್‌ರಾವ್… ಇವರ ಪೀರಿಯಡ್‌ನಲ್ಲಿ ಹಳೆದಾದ ಐಬಿ ರಿಪೇರಿಗೆ ಅಂತ +ಒಂದು ಲಕ್ಷದ ಏಳು ಸಾವಿರ ರೂಪಾಯಿಗಳನ್ನ ಸ್ಯಾಂಕ್ಷನ್ ಮಾಡಿಸಿಕೊಂಡಿದ್ದಾರೆ. ಇವರು ರಿಟೈರ್ ಆದಮೇಲೆ ಮೈಸೂರಿಗೆ ಹೋಗಿ ಸೆಟ್ಲ್ ಆಗಿದ್ದಾರೆ… ದೇವೇಂದ್ರಪ್ಪ ಲಾಸ್ಟ್ ಆಫೀಸರ್ ಇವರು ಸರ್ವೀಸ್‌ನಲ್ಲಿ ಇದ್ದಾಗಲೇ…. (ಮೇಲೆಕ್ಕೆ ಎಂಬಂತೆ ಸನ್ನೆ) ಖಾಲಿ ಇದ್ದ ಜಾಗಕ್ಕೆ ನೀವು ಬಂದ್ರಿ… +ರಘುನಂದನ್ : (ಯೋಚಿಸಿ) ವೆಂಕಟೇಶಯ್ಯ, ನೀವು ಆ ಮೇಟಿ ಸತ್ತಿದ್ದಾನೊ ಬದ್ಕಿದಾನೊ ಅಂತ +ತಿಳ್ಕೋಬೇಕು. ಒಂದು ವೇಳೆ ನಮಗೆ ಆ ಮೇಟಿ ಸಿಕ್ಕಿಬಿಟ್ರೆ ನಮ್ಮ ಎಲ್ಲಾ ಪ್ರಾಬ್ಲಂ ಸಾಲ್ವ ಆಗೋಗುತ್ತೆ. +ವೆಂಕಟೇಶಯ್ಯ : ಹೌದು ಸಾರ್, ನಾನು ಆ ಕೆಲ್ಸ ಮಾಡ್ತೀನಿ. ನಾನು ಮಾಡಿರೋ ತಪ್ಪಿಗೆ ಪ್ರಾಯಶ್ಚಿತ್ತವಾಗಿ +ಈ ಐಬೀನ ಹುಡುಕೇ ಹುಡುಕಬೇಕು ಸಾರ್ +ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ. ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ರಘುನಂದನ್ ರಿಸೀವ್ ಮಾಡುತ್ತಾನೆ. +ಆಫೀಸರ್ : ನಾನ್ರೀ, ಹೆಡ್ ಆಫೀಸ್‌ನಿಂದ ಪುರುಷೋತ್ತಮ್ ಇಲ್ಲಿ… +ರಘುನಂದನ್ : ನಮಸ್ಕಾರ ಸಾರ್ +ಆಫೀಸರ್ : ನಮಸ್ಕಾರ… ಎಲ್ರೀ ನಿಮ್ಮ ರಿಪೋರ್ಟು ? +ರಘುನಂದನ್ : ರೆಡಿ ಆಗ್ತಾ ಇದೆ ಸಾರ್… ಸಾರ್ ಪ್ರೋಗ್ರಾಂ ಕನ್‌ಫರ್ಮಾ ಸಾರ್ +ಆಫೀಸರ್ : ಹೌದು ಯಾಕೆ ಅನುಮಾನ? +ರಘುನಂದನ್ : ಇಲ್ಲಾ ಸುಮ್ಮನೆ ಕೇಳ್ದೆ ಸಾರ್… +ಆಫೀಸರ್ : ನೋಡಿ ರಘುನಂದನ್ ಯಾವ ತೊಂದ್ರೇನು ಆಗದ ಹಾಗೆ ನೋಡಿಕೊಳಿ, ಇದ್ರಿಂದ +ನಿಮಗೂ ಒಳ್ಳೇ ಹೆಸರು ಬರಬೇಕು ನಮಗೂ ಬರಬೇಕು. ಹಾಂ! ಇನ್ನೊಂದು ವಿಷ್ಯ, ಮಿನಿಸ್ಟ್ರು ವಿಸಿಟ್‌ನ ಸೀಕ್ರೆಟ್ ಆಗಿ ಇಡಿ. ಜನಕ್ಕೆ ಗೊತ್ತಾದ್ರೆ ಅಹವಾಲು, ಸನ್ಮಾನ, ಉದ್ಭಾಟನೆ, ರಾಜಕೀಯ ಅಂತ ಅವಾಂತರ ಶುರುವಾಗುತ್ತೆ. ಜೊತೇಲಿ ಫಾರಿನ್ ಟೀಂ ಇರುತ್ತೆ. ಈ ಇನ್ಸ್‌ಟ್ರಕ್ಷನ್ನು ಮಿನಿಸ್ಟ್ರ ಆಫೀಸ್‌ನಿಂದಾನೇ ಬಂದಿರೋದು… +ರಘುನಂದನ್ : ಇಲ್ಲ ಸಾರ್ ಯಾರಿಗೂ ಲೀಕ್ ಮಾಡಲ್ಲ…ಓಕೆ ಸಾರ್. (ಎಂದು ಫೋನಿಟ್ಟು +ವೆಂಕಟೇಶಯ್ಯನ ಕಡೆ ತಿರುಗಿ) ನೋಡೀ ಆಗ್ಲೇ ಮೇಲಿಂದ ಪ್ರೆಶರ್ರು!… +ವೆಂಕಟೇಶಯ್ಯ ಸುಮ್ಮನೆ ನೋಡುತ್ತಾನೆ. +ಕಟ್ ಟು… +ದೃಶ್ಯ – ೩೫ / ಹಗಲು / ಕಛೇರಿ ಹೊರಭಾಗ +ಒಳಗೆ ಈ ಮಾತುಕತೆ ನಡೆಯುತ್ತಿದ್ದಾಗ ಹೊರಗೆ ಗೊರವಯ್ಯ ಬರುತ್ತಾನೆ. +ಜವಾನ ಅವನನ್ನು ಬಾಗಿಲಲ್ಲಿಯೇ ತಡೆದು ನಿಲ್ಲಿಸುತ್ತಾನೆ. +ಗೊರವಯ್ಯ : ನಾನು ಸಾಯೇಬ್ರನ್ನ ನೋಡ್ಬೇಕಿತ್ತಲ್ಲಪ್ಪ +ಜವಾನ : ಅವ್ರು ಯಾವುದೋ ಅರ್ಜೆಂಟ್ ಮೀಟಿಂಗ್‌ನಲ್ಲವರೆ, ನೀನು ಮುಂದಿನವಾರ ಬಾ +ಗೊರವಯ್ಯ : ಅವರೇ ಮನೆ ಹತ್ರ ಬಂದಿದ್ರಂತಲ್ಲ, ಯಾಕೆ ? +ಜವಾನ : ನಂಗೇನ್ ಗೊತ್ತಜ್ಜ… ಆದ್ರೆ ಈಗ ಯಾರನ್ನೂ ಒಳಗ್ ಬಿಡಬೇಡ ಅಂತ ಹೇಳವರೆ +ಗೊರವಯ್ಯ : ತಿರುಗಿ ತಿರುಗಿ ನನ್ನ ಕಾಲೆಲ್ಲಾ ಬಿದ್ದು ಹೋದವಲ್ಲಪ್ಪ… +ಜವಾನ : ಆಫೀಸ್ ಕೆಲ್ಸ ಅಂದ್ರೆ ಅಂಗೇಯ… ಬಾ ಅಂಗೇ ಟೀ ಕುಡಿಯೋಣ. +ದೃಶ್ಯ – ೩೬ / ಹಗಲು / ರಘುನಂದನ್ ಮನೆ +ಗೌರಿ ಹಾಡುತ್ತಿದ್ದಾಳೆ. ಸುಮ ಕುಳಿತು ಕೇಳುತ್ತಿದ್ದಾಳೆ. +ಬಣ್ಣದ ಗುಬ್ಯಾರು ಮಳಿರಾಜ +ಅವರು- ಮಣ್ಣಾಗಿ ಹೋದರು ಮಳಿರಾಜ +ಬಣ್ಣದ ಗುಬ್ಯಾರು ಮಣ್ಣಾಗಿ ಹೋದರು +ಅನ್ಯದ ದಿನ ಬಂದು ಮಳಿರಾಜ +ಒಕ್ಕಲಗೇರ್ಯಾಗ ಮಳಿರಾಜ- +ಅವರು- ಮಕ್ಕಳ ಮಾರ್ಯಾರ ಮಳಿರಾಜ +ಮಕ್ಕಳ ಮಾರಿ ರೊಕ್ಕ ಹಿಡಕಂಡು +ಭತ್ತಂಡ ತಿರಗ್ಯಾರ ಮಳಿರಾಜ +ಸೊಲಿಗಿ ಹಿಟ್ಟಿನಾಗ ಮಳಿರಾಜ- +ಅವರು- ಸುಣ್ಣಾನ ಕುಡಿಸ್ಯಾರ ಮಳಿರಾಜ +ಹಸ್ತು ಬಂದ ಕೇರಿ ಗಪ ಗಪ ತಿಂದು +ಒದ್ದಾಡಿ ಸತ್ತಾರ ಮಳಿರಾಜ +ಗಂಡುಳ್ಳ ಬಾಲ್ಯಾರು ಮಳಿರಾಜ- +ಅವರು- ಭಿಕ್ಷಾಕ ಹೊರಟಾರು ಮಳಿರಾಜ +ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದಾರು +ಅನ್ಯದ ದಿನ ಬಂದು ಮಳಿರಾಜ +ಸ್ವಾತೀಯ ಮಳಿಬಂದು ಮಳಿರಾಜ- +ಸುತ್ತ ದೇಶಾಕ ಆಗ್ಯಾದ ಮಳಿರಾಜ +ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು +ಯಾವಾಗ ಬಂದ್ಯಪ್ಪ ಮಳಿರಾಜ… +ನೀನು ಯಾವಾಗ ಬಂದ್ಯಪ್ಪ ಮಳಿರಾಜ… +ಅಷ್ಟರಲ್ಲಿ ಹೊರಗೆ ಗೊರವಯ್ಯ ಬಂದು ಕೂಗುತ್ತಾನೆ. +ಗೊರವಯ್ಯ : ಅವ್ವಾ… ಅವ್ವಾರೆ. +ಸುಮ, ಗೌರಿನೊಂದಿಗೆ ಹೊರಬರುತ್ತಾಳೆ. ಗೌರಿಗೆ ತಾತನನ್ನು ನೋಡಿ ಸಂತೋಷವಾಗುತ್ತದೆ. +ಗೊರವಯ್ಯ : ಚಂದಾಕಿದ್ದೀಯ ಕೂಸೇ? ಅವ್ವಾವ್ರಿಗೆ ಏನೂ ಕಷ್ಟ ಕೊಡಲಿಲ್ಲ ತಾನೆ? +ಸುಮ : ಚನ್ನಾಗಿ ಹೊಂದಿಕೊಂಡಿದ್ಳು. ಅವಳು ಇದ್ದಿದ್ದರಿಂದ ನಂಗೂ ಬೇಜಾರು ಕಳೀತು. ಒಳಗ್ ಬನ್ನಿ… +ಗೊರವಯ್ಯ : ಇಲ್ಲ ತಾಯಿ, ಮನೇ ಕಡೆ ಬಿಟ್ಟಿದ್ದು ಬಿಟ್ಟಂಗೆ ಓಗಿದ್ದೆ, ಒಸಿ ನೋಡಬೇಕು. ಗೌರಿ ನಡಿ… +ಗೌರಿ ಅರ್ಧ ಮನಸ್ಸಿನಿಂದ ಸುಮಳ ಮುಖ ನೋಡುತ್ತಾಳೆ. ಸುಮಳಿಗೆ ಅವಳ ನೋಟದ ಮಾತು ಅರ್ಥವಾಗುತ್ತದೆ. +ಸುಮ : ಇವಳು ಇಲ್ಲೇ ಇರಲಿ ಬಿಡಿ…. +ಗೊರವಯ್ಯ : ಬರೋವಾರ ಕರಕಂಡ್ ಬತ್ತೀನಿ… ನಡಿಯವ್ವಾ… +ಗೌರಿ ಇಷ್ಟವಿಲ್ಲದ ಹೊರಡುತ್ತಾಳೆ. +ಸುಮಳೂ ಮನಸ್ಸಿಲ್ಲದೆ ಕಳಿಸಿಕೊಡುತ್ತಾಳೆ. +ಇಬ್ಬರೂ ನಡೆದು ಮರೆಯಾಗುವುದನ್ನೇ ಸುಮ ನಿಂತು ನೋಡುತ್ತಾಳೆ. +ದೃಶ್ಯ – ೩೭ / ಹಗಲು / ರಘುನಂದನ್ ಮನೆ +ರಘುನಂದನ್ ಅವಸರದಲ್ಲಿ ಮನೆಗೆ ಬರುತ್ತಾನೆ. +ರಘುನಂದನ್ : ಸುಮಾ, ನಾನು ಮೈಸೂರಿಗೆ ಹೋಗ್ತಾ ಇದ್ದೀನಿ… ಕೆಲಸ ಆಗಲಿಲ್ಲಾಂದ್ರೆ ಒಂದಿನ ಉಳಕೋ +ಬೇಕಾಗಬಹುದು. ಬ್ಯಾಗಿಗೆ ಬಟ್ಟೆ ಹಾಕಿಕೊಡು. +ಸುಮ : ಮೈಸೂರಿಗಾದ್ರೆ ನಾನೂ ಬರತೀನಿ, ಅಪ್ಪ-ಅಮ್ಮನ್ನ ನೋಡಿದ ಹಾಗೂ ಆಗುತ್ತೆ? +ರಘುನಂದನ್ : ನಾನು ಆಫೀಸ್ ಕೆಲ್ಸದ ಮೇಲೆ ಹೋಗ್ತಿರೋದು, ಅಲ್ಲಿರೋದು ಒಂದು ಗಂಟೆ ಕೆಲ್ಸ ಅಷ್ಟೆ. +ಸುಮ : ಒಂದು ಗಂಟೇನೋ ಹತ್ತು ನಿಮಿಷಾನೋ. ನನ್ನ ಪಾಡಿಗೆ ನಾನು ನಮ್ಮ ತಂದೇ ಮನೇಲಿರತೀನಿ, +ನೀವು ಹೊರಡೂ ಅಂದಾಗ ಹೊರಡತೀನಿ. +ರಘುನಂದನ್ : ಆದ್ರೆ ಆ ಹುಡುಗೀನ್ ಏನ್ ಮಾಡ್ತೀಯ? +ಸುಮ : ಅವರ ತಾತ ಬಂದು ಕರಕೊಂಡು ಹೋದ್ರು… +ರಘುನಂದನ್ : ಅಂದ್ರೆ ಆ ಗೊರವಯ್ಯನಾ ?! +ಸುಮ : ಹೌದು… +ರಘುನಂದನ್ : ಎಷ್ಟು ಹೊತ್ತಾಯಿತು ಹೋಗಿ… +ಸುಮ : ತುಂಬಾ ಹೊತ್ತಾಯಿತು… ಯಾಕೆ ? +ರಘುನಂದನ್ : ಏನಿಲ್ಲ, ಆತ ಸಿಕ್ಕಿದ್ರೆ ಚನ್ನಾಗಿರೋದು…. ಇರಲಿ, ಬೇಗ ಹೊರಡು… +ಕಟ್ ಟು… +ದೃಶ್ಯ – ೩೮ / ಹಗಲು / ಮಾವನ ಮನೆ +ಮೈಸೂರಿನ ಮನೆಯೊಂದರ ಮುಂದೆ ರಘುನಂದನ್ ಜೀಪು ನಿಲ್ಲುತ್ತದೆ. +ಮನೆಯ ಗೇಟಿನ ಮೇಲೆ ‘ದಯಾನಂದ ದೊಡ್ಡಬಾವಿ, ಲೇಖಕರು’ ಎಂಬ ಬೋರ್ಡಿದೆ. +ರಘುನಂದನ್ ಜೀಪಿನಲ್ಲೇ ಕುಳಿತಿದ್ದಾನೆ. ಸುಮ ಕೆಳಗಿಳಿಯುತ್ತಾಳೆ. +ರಘುನಂದನ್ : ನಾನು ಕೆಲ್ಸ ಮುಗಿದ ತಕ್ಷಣ ಫೋನ್ ಮಾಡ್ತೀನಿ, ರೆಡಿಯಾಗಿರು… +ದಯಾನಂದ : ಮನೆವರೆಗೂ ಬಂದು ಹಾಗೇ ಹೋಗೋದಾ? ಕಾಫಿ ಕುಡಿದು ಹೋಗಿ ಬನ್ನಿ… +ಎಂದು ಒತ್ತಾಯಿಸಿ ಒಳಗೆ ಕರೆಯುತ್ತಾಳೆ. +ದಯಾನಂದನಿಗೆ ಬಂದ ಪ್ರಶಸ್ತಿ ಫಲಕಗಳು, ಪುಸ್ತಕಗಳು ಅವನ ಪ್ರಖ್ಯಾತಿಯನ್ನು ಸಾರಿ ಹೇಳುತ್ತಿವೆ. +ದಯಾನಂದ : ಹೇಗಿದೆ ಕೆಲ್ಸ? +ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ಮಗಳು ಫೋನ್ ತೆಗೆದುಕೊಳ್ಳುತ್ತಾಳೆ. +ಸುಮ : ಹಲೋ… ಒಂದ್ನಿಮಿಷ ಸಾರ್. ಇದ್ದಾರೆ ಕೊಡ್ತೀನಿ. (ತಂದೆಗೆ ಫೋನ್ ಕೊಡುತ್ತಾ) ಅಪ್ಪಾ, +ಸಂಸ್ಕೃತಿ ಇಲಾಖೆ ಮಿನಿಸ್ಟ್ರು ನಿಮ್ಮ ಹತ್ರ ಮಾತಾಡಬೇಕಂತೆ. +ದಯಾನಂದ : (ಫೋನ್ ತೆಗೆದುಕೊಂಡು) ಹಲೋ… ನಮಸ್ಕಾರ ಸಾರ್. ಹೇಗಿದ್ದೀರಿ? ಮಂತ್ರಿಗಿರಿ ಅಂದ್ರೆ +ಸಾಮಾನ್ಯನೇ, ಇಡೀ ರಾಜ್ಯದ ಸಂಸ್ಕೃತಿ ಕಾಪಾಡೋ ಕೆಲ್ಸ… ಹೇಳಿ ನನ್ನಿಂದ ಏನಾಗಬೇಕು ಅಪ್ಪಣೆಯಾಗಲಿ? ಅಯ್ಯೋ ಖಂಡಿತ ಬೇಡ ಸಾರ್… ಯಾವ ಅಧ್ಯಕ್ಷಗಿರೀನು ಬೇಡ. ಪ್ರಶಸ್ತಿ ತಗೊಂಡೋರೇನು ನಮಗೆ ಕಿರೀಟ ಇಡೋಲ್ಲ, ಆದ್ರೆ ಸಿಗದೇ ಇದ್ದೋರು ಉಗುದು ಉಪ್ಪಿನಕಾಯಿ ಹಾಕ್ತಾರೆ…. ಒಬ್ಬನ ಸಂತೋಷಕ್ಕೆ ಉಳಿದವರ ಕೈನಲ್ಲಿ ಬೈಸಿಕೋಬೇಕಲ್ಲ ಕಮಿಟಿ ಅಧ್ಯಕ್ಷರು… +ಸುಮ ಹೆಮ್ಮೆಯಿಂದ ತಂದೆಯನ್ನು ನೋಡುತ್ತಾಳೆ. +ರಘುನಂದನ್ ಅಸಹನೆಯಿಂದ ಹೊರಟು ನಿಲ್ಲುತ್ತಾನೆ. ಮಾವನ ಮಾತು ಮುಗಿಯುವಂತೆ ಕಾಣುವುದಿಲ್ಲ. +ತಾನು ಹೋಗಿ ಬರುತ್ತೇನೆಂದು ಸನ್ನೆ ಮಾಡುತ್ತಾನೆ. +ದಯಾನಂದ : (ಫೋನ್ ಮೇಲೆ ಕೈಯಿಟ್ಟು) ಒಂದ್ನಿಮಿಷ ಸಾರ್… ಮಿನಿಸ್ಟ್ರು ಮಾತಾಡ್ತಿದ್ದಾರೆ. +ರಘುನಂದನ್ : ನೀವು ಮಾತಾಡಿ, ನಾನು ಆಮೇಲೆ ಬರತೀನಿ… +ಎಂದು ಅವನ ಉತ್ತರಕ್ಕೂ ಕಾಯದೆ ಹೊರಟುಹೋಗುತ್ತಾನೆ. +ದಯಾನಂದನ ಮಾತು ಮುಂದುವರಿಯುತ್ತದೆ. +ದಯಾನಂದ : ಕ್ಷಮಿಸಿ, ನಮ್ಮ ಅಳಿಯ ಹೊರಟಿದ್ರು, ನಾನು ಅಧ್ಯಕ್ಶಗಿರಿ ಬೇಡ ಅಂದಿದ್ದನ್ನ ಕೇಳಿ ಒಪ್ಪಿಕೊಳಿ ಅಂತ ಒತ್ತಾಯ ಮಾಡ್ತಾ ಇದ್ರು…. ಇಲ್ಲಿ ನೀವು ಬಿಡ್ತಾ ಇಲ್ಲ. ಸಂಸ್ಕೃತದಲ್ಲಿ ಒಂದು ಮಾತಿದೆ… +ದೃಶ್ಯ – ೩೯ / ಹಗಲು / ಗೋಪಾಲ್‌ರಾವ್ ಮನೆ +ಒಂದು ಹಳೆಯ ಮನೆಯ ಮುಂದೆ ಜೀಪು ಬಂದು ನಿಲ್ಲುತ್ತದೆ. +ಡ್ರೈವರ್‌ನನ್ನು ಜೀಪಿನಲ್ಲೇ ಕುಳಿತಿರಲು ಹೇಳಿ ರಘುನಂದನ್ ಒಬ್ಬನೇ ಮನೆ ಪ್ರವೇಶಿಸುತ್ತಾನೆ. +ರಘುನಂದನ್ : ಯಾರಿದ್ದೀರಿ ಒಳಗೆ? +ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಆಮೇಲೆ ನೋಡಿದರೆ ಮುಂಬಾಗಿಲಿಗೆ ಚಿಲಕ ಹಾಕಿದೆ. +ಅಕ್ಕ-ಪಕ್ಕ ನೋಡಿ ರಸ್ತೆ ಕಡೆ ತಿರುಗಿದವನಿಗೆ ಒಳಗಿನಿಂದ +‘ಯಾರು ಬೇಕು?’ ಎಂದು ಯಾವುದೋ ಕೂಗಿದಂತಾಗುತ್ತದೆ. +ಹತ್ತಿರ ಹೋಗಿ ನೋಡಿದರೆ ಕಿಟಕಿಯಿಂದ ಯಾರೋ ಹೆಂಗಸು ಇಣುಕಿ ನೋಡುತ್ತಿದ್ದಾಳೆ. +ರಘುನಂದನ್ : ಇದು ಗೋಪಾಲರಾವ್ ಮನೆ ಅಲ್ವ? +ಹೆಂಗಸು : ಹೌದು… +ರಘುನಂದನ್ : ನಾನು ರಘುನಂದನ್ ಅಂತ, ಇವ್ರು ಕೆಲಸ ಮಾಡಿದ ಆಫೀಸಿನಲ್ಲಿ ಈಗ ನಾನಿದ್ದೀನಿ. ಒಂದಿಷ್ಟು ಆಫೀಸಿನ ವಿಚಾರ ಮಾತಾಡಿಹೋಗೋಣ ಅಂತ ಬಂದೆ. ಸಾಹೇಬರು ಇದ್ದಾರ ಮನೆಯಲ್ಲಿ? +ಹೆಂಗಸು : ಇದ್ದಾರೆ… ಬನ್ನಿ ಒಳಗೆ. +ರಘುನಂದನ್ : ಬಾಗಿಲಿಗೆ ಚಿಲಕ ಹಾಕಿದೆ? +ಹೆಂಗಸು : ನೀವು ತೆಕ್ಕೊಂಡು ಬನ್ನಿ… ಯಾರೋ ಹುಡುಗರು ಹಾಕಿಬಿಟ್ಟಿರಬೇಕು. +ರಘುನಂದನ್ ಚಿಲಕ ತೆಗೆದು ಒಳ ಹೋಗುತ್ತಾನೆ. ಹೆಂಗಸು ಸ್ವಾಗತಿಸುತ್ತಾಳೆ. ಮನೆಯಲ್ಲಿ ಯಾರೂ ಕಾಣುವುದಿಲ್ಲ. +ಹೆಂಗಸು : ಕುಳಿತುಕೊಳ್ಳೀ… ಏನಾದ್ರು ತಗೋತೀರ? +ರಘುನಂದನ್ : ಏನೂ ಬೇಡೀಮ್ಮ… ಸಾಹೇಬರನ್ನ ಕರೀತೀರ ? +ಹೆಂಗಸು: ಅವರನ್ನ ಕರೆದ್ರೆ ಬರೋಲ್ಲ. ನಾವೇ ಅಲ್ಲಿಗ್ ಹೋಗಬೇಕು… +ರಘುನಂದನ್ : ಸರಿ ಹೋಗೋಣ ? +ಹೆಂಗಸು : ಬನ್ನಿ… +ಎಂದು ಹಿತ್ತಲ ಕಡೆ ಕರೆದೊಯ್ಯುತ್ತಾಳೆ. ಹಿಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ +ಹೆಂಗಸು : ಆ ಚಿಲಕ ನಂಗೆ ಎಟುಕೋಲ್ಲ, ಸ್ವಲ್ಪ ತೆಗೀತೀರ? +ರಘುನಂದನ್ ಚಿಲಕ ತೆಗೆಯುತ್ತಾನೆ. +ಈಗ ಆಕೆಯೇ ಬಾಗಿಲು ತೆರೆದು ಹೊರಕ್ಕೆ ಹೋಗುತ್ತಾಳೆ. +ಅವಳ ಹಿಂದೆಯೇ ಬಂದ ರಘುನಂದನ್‌ಗೆ ಅಲ್ಲಿ ಯಾರೂ ಕಾಣಿಸುವುದಿಲ್ಲ. +ರಘುನಂದನ್ : ಎಲ್ಲಿದ್ದಾರೆ ಸಾಹೇಬರು? +ಹೆಂಗಸು : ಹೀಗ್ ಬನ್ನಿ ತೋರಿಸ್ತೀನಿ… +ಎಂದು ಅವನ ಕೈ ಹಿಡಿದು ನೆಲ ಬಾವಿಯ ಮೆಟ್ಟಿಲುಗಳನ್ನು ಇಳಿಸಿಕೊಂಡು ನೀರಿನ ಬಳಿ ಬರುತ್ತಾಳೆ. +ಹೆಂಗಸು : ನೋಡಿ ನಮ್ಮೆಜಮಾನ್ರು ಅಲ್ಲಿದ್ದಾರೆ… +ಎಂದು ನೀರಿನತ್ತ ಕೈ ತೋರಿಸುತ್ತಾಳೆ +ರಘುನಂದನ್ : (ಆಶ್ಚರ್ಯ) ಇಲ್ಲಾ…! +ಹೆಂಗಸು : ಹೌದು! ಅವ್ರು ಇಲ್ಲಿಗೆ ಬಿದ್ದು ಮೂರು ವರ್ಷ ಆಯ್ತು. ನಾನು ಅವರ ಹತ್ರ ಹೋಗ್ತೀನಿ ಅಂದ್ರೆ +ಯಾರೂ ಬಿಡ್ತಾನೇ ಇರಲಿಲ್ಲ. ನೀವು ತುಂಬಾ ಒಳ್ಳೆಯವರು ಬಾಗಿಲು ತೆಗೆದು ನನ್ನ ಇಲ್ಲಿ ಬರೋಕ್ ಬಿಟ್ರಿ. (ನೀರಿನತ್ತ ತಿರುಗಿ) ರೀ, ನಾನು ನಿಮ್ಮ ಹತ್ರ ಬರತಾ ಇದ್ದೀನಿ… +ಎಂದು ನೀರಿಗೆ ಹಾರಲು ಹೋಗುತ್ತಾಳೆ. +ರಘುನಂದನ್ : ಅಯ್ಯೋ ತಾಯೀ ಏನ್ ಮಾಡ್ತಿದ್ದೀರಿ… ಯಾರಾದರೂ ಇದ್ದೀರ? +ಹೆಂಗಸು : ಬಿಡಿ, ನಾನು ನಮ್ಮ ಯಜಮಾನ್ರ ಹತ್ರ ಹೋಗಬೇಕು… +ರಘುನಂದನ್ : ನೀವು ಹೀಗ್ ಬನ್ನಿ… +ರಘುನಂದನ್ ಕಷ್ಟಪಟ್ಟು ಆಕೆಯನ್ನು ಹಿಡಿದು ಮೇಲಕ್ಕೆ ಕರೆದುಕೊಂಡು ಬರುತ್ತಾನೆ. +ಅಷ್ಟರಲ್ಲಿ ಆಕೆಯ ಮಗನಂತೆ ಕಾಣುವ ವ್ಯಕ್ತಿಯೊಬ್ಬ ಬರುತ್ತಾನೆ. +ಮಗ : ಅಯ್ಯಯ್ಯೋ, ಯಾರು ಬಾಗಿಲು ತೆರೆದಿದ್ದು… +ರಘುನಂದನ್ : ನಾನೇ… ಹಿಡ್ಕೊಳಿ. +ಮಗ : ಯಾಕ್ ತೆಗೆಯೋಕ್ ಹೋದ್ರಿ… ಇವರು ಸರಿ ಇಲ್ಲ… ನೀನು ಬಾಮ್ಮ… +ಎಂದು ಇಬ್ಬರೂ ಸೇರಿ ಆಕೆಯನ್ನು ರೂಮಿಗೆ ತಳ್ಳಿ ಬಾಗಿಲು ಭದ್ರ ಪಡಿಸುತ್ತಾರೆ. +ರಘುನಂದನ್ : ಸ್ಸಾರಿ, ಹೀಗೆ ಅಂತ ನಂಗೊತ್ತಿರಲಿಲ್ಲ… ನಾನು ಬಂದಾಗ ಮನೇಲಿ ಯಾರೂ ಇರಲಿಲ್ಲ. +ಮಗ : ನಾನು ನಮ್ಮ ತಾಯೀನ ಕೂಡಿ ಹಾಕಿ, ಇಲ್ಲೇ ಅಂಗಡೀಗೆ ಹೋಗಿದ್ದೆ… +ರಘುನಂದನ್ : ನಾನು ನಿಮ್ಮ ತಂದೇನ ನೋಡೋಣ ಅಂತ ಬಂದೆ… ನಾನು ರಘುನಂದನ್ ಅಂತ +ಕರಡೀಗುಡ್ಡದ ಆಫೀಸಿನಲ್ಲಿ ಕೆಲ್ಸ ಮಾಡ್ತೀನಿ… ನಿಮ್ಮ ತಂದೆ ಪೀರಿಯಡ್‌ನಲ್ಲಿ ಅಲ್ಲಿ ಐಬಿ ರಿನೋವೇಟ್ ಮಾಡಿಸಿದ್ದಾರೆ. ಈಗ ಅದು ಎಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ. ನಿಮ್ಮ ತಂದೆಯವರಿಗೆ ಡೀಟೈಲ್ಸ್ ಗೊತ್ತಿರುತ್ತೇನೋ ಅಂತ ಬಂದೆ. +ಮಗ: ಆದ್ರೆ ಈ ಐಬಿ ವಿಚಾರ ಕೇಳಿಕೊಂಡು ಎರಡು ವರ್ಷದ ಹಿಂದೆ ಇನ್ನೊಬ್ಬರು ಆಫೀಸರ್ +ಬಂದಿದ್ರು. ನಮ್ಮ ತಂದೆಯಿಂದ ಕೆಲವು ಕ್ಲಾರಿಫಿಕೇಷನ್ ಬೇಕು ಅಂತ ಜಿಲ್ಲಾ ಕೇಂದ್ರಕ್ಕೆ ಕರಕೊಂಡು ಹೋಗಿದ್ರು… ಅಲ್ಲಿಂದ ಬಂದ ಮೇಲೆ ನಮ್ಮ ತಂದೆ ಹೇಗೆ ಹೇಗೋ ಆಡೋಕ್ ಶುರು ಮಾಡಿದ್ರು… ಯಾರನ್ನ ನೋಡಿದ್ರೂ ಪೊಲೀಸಿನವರು ಅಂತ ಭಯ ಪಡೋರು… ಒಂದಿನ ಮಧ್ಯೆ ರಾತ್ರಿ ಹಿತ್ತಲ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ್ರು… +ರಘುನಂದನ್ : ಐ ಯಾಮ್ ಸ್ಸಾರಿ. ಅವರ ಡೈರಿ ಗೀರಿ ಏನಾದ್ರು ಇದೆಯಾ? +ಮಗ : ಇಲ್ಲ. ಯಾವುದೋ ಸಂದರ್ಭದಲ್ಲಿ ಇದ್ದ ಬದ್ದ ಎಲ್ಲಾ ಕಾಗದಪತ್ರಗಳನ್ನ ಒಲೇಗ್ ಹಾಕಿಬಿಟ್ರು.. +ರಘುನಂದನ್ : ಸರಿಬಿಡಿ… ನನಗೆ ಇನ್ನೇನು ಮಾಹಿತಿ ಸಿಗಲ್ಲ ಅಂದ ಹಾಗಾಯ್ತು. ನಾನು ಬರತೀನಿ. +ಎಂದು ನಿರಾಶೆಯಿಂದ ಎದ್ದು ಕೈ ಮುಗಿಯುತ್ತಾನೆ. +ಕಟ್ ಟು… +ದೃಶ್ಯ – ೪೦ / ರಾತ್ರಿ / ಮಾವನ ಮನೆ +ರಾತ್ರಿ ಮಾವನ ಮನೆಯಲ್ಲಿ ರಘುನಂದನ್ ಊಟಕ್ಕೆ ಕುಳಿತಿದ್ದಾನೆ. ಸುಮಳೂ ಇದ್ದಾಳೆ. +ಮಾವ : ಹೇಗಿದೆ ಹೊಸಾ ಜಾಗ, ಹೊಸಾ ಕೆಲ್ಸ? +ರಘುನಂದನ್ : ಪರವಾಗಿಲ್ಲ… +ಸುಮ : ಅವರಿಗೆ ಪರವಾಗಿಲ್ಲ…. ಆದ್ರೆ ಜೊತೆಯವರಿಗೆ ಕಷ್ಟ! +ರಘುನಂದನ್ ಹೆಂಡತಿಯತ್ತ ನೋಡುತ್ತಾನೆ. +ರಘುನಂದನ್ : ಸರ್ಕಾರಿ ನೌಕರನ ಹೆಂಡತಿ ಅಂದ್ಮೇಲೆ ಇದೆಲ್ಲಾ ಹೊಸದೇನಲ್ಲ. +ಮಾವ : ನೀವು ಹೇಳೋದು ನಿಜ, ಆದ್ರೆ ಕೆಲವು ಕಷ್ಟಗಳನ್ನ ತಪ್ಪಿಸಿಕೋಬಹುದು. ಮೊನ್ನೆ ಏನಾಯ್ತೂಂದ್ರೆ +ಒಂದು ವೇದಿಕೆ ಮೇಲೆ ಮಿನಿಸ್ಟರ್ ದೇಸಾಯಿಯವರೂ ಸೇರಿದ್ವಿ. ಬಹಳಾ ಹಳೇ ಪರಿಚಯ, ಹಾಗೇ ಮಾತಿಗೆ ಬಂದು ನಿಮ್ಮ ಅಳಿಯ ಏನು ಮಾಡ್ತಾ ಇದ್ದಾರೆ ಅಂತ ಕೇಳಿದ್ರು, ನಾನು ನಿಮ್ಮ ಇಲಾಖೇಲೆ ಕೆಲ್ಸ ಮಾಡ್ತಾ ಇದ್ದಾರೆ ಕರಡಿಗುಡ್ಡಕ್ಕೆ ಟ್ರಾನ್ಸ್‌ಪರ್ ಆಗಿ ಒಂದು ವಾರ ಆಯ್ತು ಅಂದೆ. ಅಯ್ಯೋ ಅಲ್ಲಿ ಯಾಕ್ ಹೋದ್ರು, ಅಂಥಾ ಹಳ್ಳೀಗಳಲ್ಲಿ ಜೀವನ ಮಾಡೋದು ಕಷ್ಟ, ನನ್ನನ್ನ ನೋಡೋಕೆ ಹೇಳಿ ಎಲ್ಲಿಗೆ ಬೇಕು ಅಲ್ಲಿಗೆ ಹಾಕಿಸೋಣ ಅಂದ್ರು, ನಾಳೇನೆ ಮೀಟ್ ಮಾಡೋಣ. +ರಘುನಂದನ್ : ನಾನು ಅವತ್ತೇ ಹೇಳಿದ್ದೀನಿ, ನಂಗೆ ಈ ಮಿನಿಸ್ಟರ್ ಮುಂದೆ ಎಲ್ಲಾ ಕೈ ಜೋಡಿಸಿಕೊಂಡು +ನಿಂತ್ಕಳೋದು ಇಷ್ಟ ಆಗಲ್ಲ. ಅಲ್ಲೇನು ಶಾಶ್ವತವಾಗಿ ಇರೋಕ್ ಹೋಗಿದ್ದೀವ. ಕೆಲವು ವರ್ಷ ಅಷ್ಟೆ. ಅಲ್ಲಿರೋವರು ಮನುಷ್ಯರೇ ತಾನೆ. +ಸುಮ : ಅಪ್ಪ ನೀವು ಯಾಕೆ ತಲೆಕೆಡಿಸಿಕೋತೀರ? ಇವ್ರು ಸರ್ಕಾರ ಉದ್ಧಾರ ಮಾಡೋಕ್ ಹೊರಟಿದ್ದಾರೆ, +ನಾಳೆ ರಾಷ್ಟ್ರಪತಿಗಳು ಕರೆದು ಮೆಡಲ್ ಕೊಡ್ತಾರೆ ನೋಡಿ…. ಎಷ್ಟು ಹೇಳಿದ್ರೂ ಅಷ್ಟೆ…. +ಎಂದು ಹೇಳಿ ಒಳಗೆ ಹೋಗುತ್ತಾಳೆ +ಉಳಿದವರು ಯಾರೂ ಮಾತನಾಡುವುದಿಲ್ಲ. +ಕಟ್ ಟು… +ದೃಶ್ಯ- ೪೧ / ರಾತ್ರಿ / ಮಾವನ ಮನೆ ಬೆಡ್ ರೂಮ್ +ರಘುನಂದನ್ ಕಿಟಕಿಯಿಂದ ಹೊರಗೆ ನೋಡುತ್ತಾ ಸಿಗರೇಟು ಸೇದುತ್ತಿದ್ದಾನೆ. +ಸುಮ ಮಲಗಲು ಬರುತ್ತಾಳೆ. +ಅವಳು ಒಳಗೆ ಬಂದಿದ್ದು ರಘುನಂದನ್ ಅರಿವಿಗೆ ಬರುತ್ತದೆ. +ರಘುನಂದನ್ : ಸುಮಾ, ನನ್ನ ಮೇಲೆ ನಿಮ್ಮ ತಂದೆ ಹತ್ರ ಕಂಪ್ಲೇಂಟ್ ಮಾಡಿದ್ಯಾ? +ಸುಮ ಮಾತನಾಡುವುದಿಲ್ಲ… ರಘುನಂದನ್ನೇ ಮಾತು ಮುಂದುವರಿಸುತ್ತಾನೆ. +ರಘುನಂದನ್ : ನಿಂಗೆ ಅಲ್ಲಿ ಇರೋದು ಕಷ್ಟ ಅನ್ನಿಸಿದ್ರೆ ಇಲ್ಲೇ ಇರು, ನಂದೇನು ಅಭ್ಯಂತರ ಇಲ್ಲ. +ಸುಮ : ನಾನು ಇಲ್ಲಿ ಒಂಟಿಯಾಗಿ ಇರಬೇಕು ? +ರಘುನಂದನ್ ಅಕೆಯ ಮಾತಿಗೆ ತಲೆತಗ್ಗಿಸುತ್ತಾನೆ, ಕ್ಷಣಬಿಟ್ಟು ಅನುನಯಿಸುವ ಧ್ವನಿಯಲ್ಲಿ +ರಘುನಂದನ್ : ನೋಡು ನಮ್ಮ ಕಷ್ಟನ ನಾವೇ ಅನುಭವಿಸಬೇಕು. ಯಾರೂ ಪರಿಹಾರ ಮಾಡೋಕಾಗಲ್ಲ. +ಸುಮ ಅವನ ಮಾತಿಗೆ ಪ್ರತಿಕ್ರಿಯಿಸದೆ ಮುಸುಕು ಹೊದ್ದು ಮಲಗುತ್ತಾಳೆ. +ರಘುನಂದನ್ ತಪ್ಪಿತಸ್ಥ ಭಾವನೆಯಲ್ಲಿ ಕಿಟಕಿಯಲ್ಲಿ ಹೊರನೋಡುತ್ತಾ ನಿಲ್ಲುತ್ತಾನೆ. +ಕಟ್ ಟು… +ದೃಶ್ಯ – ೪೨ / ಹಗಲು / ರಘುನಂದನ್ ಮನೆ +ರಘುನಂದನ್ ಮತ್ತು ಸುಮ ತಮ್ಮ ಕರಡಿಗುಡ್ಡದ ಕ್ವಾರ್ಟರ್ಸ್‌ಗೆ ಬಾಗಿಲು ತೆಗೆದು ಒಳಬರುತ್ತಾರೆ. +ರಘುನಂದನ್ ಸುಸ್ತಾದವನಂತೆ ಹಾಲ್‌ನಲ್ಲಿನ ಕುರ್ಚಿಯಲ್ಲಿ ಮೈ ಚಲ್ಲುತ್ತಾನೆ. +ಸುಮ ಬೆಡ್‌ರೂಂಗೆ ಹೋಗುತ್ತಾಳೆ. ಒಳಗೆ ಹೋದವಳು ಜೋರಾಗಿ ಕಿರುಚುತ್ತಾಳೆ. +ರಘುನಂದನ್ ಗಾಬರಿಯಿಂದ ಒಳಕ್ಕೆ ಓಡಿ ಹೋಗುತ್ತಾನೆ. +ಸುಮ ಶಾಕ್‌ನಲ್ಲಿ ನಿಂತಿದ್ದಾಳೆ. +ಬೆಡ್ ಮೇಲೆ ಬೆಕ್ಕು ಸತ್ತು ಬಿದ್ದಿದೆ. +ಅದು ಸಾಯುವ ಮುಂಚೆ ಯಾವುದೋ ಪ್ರಾಣಿಯೊಂದಿಗೆ ಹೋರಾಡಿದ ಲಕ್ಷಣ ಕಾಣುತ್ತದೆ. +ಅದರ ಪಕ್ಕದಲ್ಲಿಯೇ ಹೆಗ್ಗಣದ ಬಾಲವೂ ಬಿದ್ದಿದೆ. +ಸುಮ ಅಸಹ್ಯ-ಭಯದಿಂದ ಆಚೆ ಹೋಗುತ್ತಾಳೆ. ರಘುನಂದನ್ ದಿಗ್ಭ್ರಾಂತನಾಗಿ ನಿಂತಿದ್ದಾನೆ. +ಕಟ್ ಟು… +ದೃಶ್ಯ – ೪೩/ ಹಗಲು / ಒಳಾಂಗಣ / ಕಛೇರಿ +ರಘುನಂದನ್ ಟೈಪಿಸ್ಟ್ ಸತ್ಯವತಿಗೆ ಡಿಕ್ಟೇಷನ್ ಕೊಡುತ್ತಿದ್ದಾನೆ. +ರಘುನಂದನ್ : ಮೇಲ್ಕಾಣಿಸಿದ ಎಲ್ಲಾ ವಿವರಗಳಿಂದ ಕರಡಿಗುಡ್ಡದ ಐಬಿಯಲ್ಲಿ ಮಂತ್ರಿಗಳನ್ನು +ಉಳಿಸುವ ವಿಚಾರ ದುಸ್ತರವಾಗಿದೆ. ಆದ್ದರಿಂದ ಅದಕ್ಕೆ ತಾವು ಬೇರೆ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ. +ರಘುನಂದನ್ : ಸರಿ… ಟೈಪ್ ಮಾಡಿ ತಗೊಂಡ್ ಬನ್ನಿ… +ಎನ್ನುವಾಗ ಬಾಗಿಲು ತಳ್ಳಿಕೊಂಡು ವೆಂಕಟೇಶಯ್ಯ ಸಡಗರದಿಂದ ಒಳಗೆ ಬರುತ್ತಾನೆ. +ವೆಂಕಟೇಶಯ್ಯ : ಸಾರ್… ಸಾರ್… ಸಿಕ್ಕ ಬಿಟ್ಟ ಸಾರ್, ಸಿಕ್ಕಿಬಿಟ್ಟ. +ರಘುನಂದನ್ : ಯಾರ್ರೀ ಸಿಕ್ಕಿದ್ದು? +ವೆಂಕಟೇಶಯ್ಯ : ಮೇಟಿ ಸಾರ್… ಮೇಟಿ ಸಿಕ್ಕಿಬಿಟ್ಟ. +ರಘುನಂದನ್ : ಹೌದಾ! ಎಲ್ಲಿದ್ದಾನೆ… +ವೆಂಕಟೇಶಯ್ಯ : ಕರೀಗಟ್ಟದಲ್ಲಿ ಸಾರ್… +ರಘುನಂದನ್ : ಐಬಿ ವಿಷ್ಯ ಏನಾದ್ರು ಬಾಯಿ ಬಿಟ್ನಾ? +ವೆಂಕಟೇಶಯ್ಯ : ಅವನು ಯಾಕೋ ನನ್ನ ಹತ್ರ ಸರಿಯಾಗ್ ಮಾತಾಡಲಿಲ್ಲ. ಕುಡಿದಿದ್ದ ಅಂತಾ ಕಾಣುತ್ತೆ, +ಅದ್ಕೇ ನಿಮ್ಮನ್ನ ಕರಕೊಂಡೇ ಹೋಗೋಣ ಅಂತ ಬಂದ್ ಬಿಟ್ಟೆ… +ರಘುನಂದನ್ : ಸರಿ ನಡೀರಿ… +ಸತ್ಯವತಿ ಲೆಟರ್ ಟೈಪ್ ಮಾಡುವುದೇ ಬೇಡವೇ ಎಂಬ ಸಂದಿಗ್ಧದಲ್ಲಿ ಬೀಳುತ್ತಾಳೆ. +ಕಟ್ ಟು… +ದೃಶ್ಯ – ೪೪ / ಹಗಲು / ಹೊರಾಂಗಣ / ಮೇಟಿ ಮನೆ +ಮೇಟಿಯನ್ನು ಹುಡುಕಿಕೊಂಡು ವೆಂಕಟೇಶಯ್ಯ ಮತ್ತು ರಘುನಂದನ್ ಹಳ್ಳಿಯೊಂದರ ಮನೆಗೆ ಬರುತ್ತಾರೆ. +ಅದೊಂದು ಹಳೆಯದಾದ ಮುರುಕಲು ಮನೆ. ವೆಂಕಟೇಶಯ್ಯ ಬಾಗಿಲಲ್ಲಿ ನಿಂತು ಕೂಗುತ್ತಾರೆ. +ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. +ಸ್ವಲ್ಪ ಹೊತ್ತಾದ ಮೇಲೆ ಬಾಗಿಲನ್ನು ತೆರೆದುಕೊಂಡು ಒಂದು ಹಣ್ಣು ಹಣ್ಣು ಮುದುಕಿ ಆಚೆ ಬರುತ್ತದೆ. +ವೆಂಕಟೇಶಯ್ಯ : ಸಿದ್ದಪ್ಪನ್ನ ಕರೆಯಜ್ಜಿ… +ಅಜ್ಜಿ : ಇಲ್ಲ ಸ್ವಾಮಿ… +ವೆಂಕಟೇಶಯ್ಯ : ಇಲ್ಲಾಂದ್ರೆ ಹ್ಯಾಗೆ? ಬೆಳಗ್ಗೆ ಮಾತಾಡಿಕೊಂಡು ಹೋಗಿದ್ದೀನಿ… ಎಲ್ಲಿಗ ಹೋದ? +ಅಜ್ಜಿ : ಗೊತ್ತಿಲ್ಲ ಸ್ವಾಮಿ… +ವೆಂಕಟೇಶಯ್ಯ : ಯಾವಾಗ ಬರತಾನೆ? +ಅಜ್ಜಿ : ಗೊತ್ತಿಲ್ಲ +ವೆಂಕಟೇಶಯ್ಯನಿಗೆ ನಿರಾಶೆಯಾಗುತ್ತದೆ. ಜೀಪಿನಲ್ಲಿ ಕುಳಿತಿದ್ದ ರಘುನಂದನ್ ಬಳಿ ಬರುತ್ತಾನೆ. +ವೆಂಕಟೇಶಯ್ಯ : ಸಾರಿ ಸರ್, ಆ ಸಿದ್ದಪ್ಪ ಎಲ್ಲಿಗೋ ಹೋಗ್‌ಬಿಟ್ಟಿದ್ದಾನೆ. +ರಘುನಂದನ್ : ನಾವು ಬರತೀವಿ ಅಂತ ಗೊತ್ತಾಗೇ ತಪ್ಪಿಸಿಕೊಂಡಿರಬಹುದ? +ವೆಂಕಟೇಶಯ್ಯ : ಇರಬಹುದು ಸಾರ್? +ರಘುನಂದನ್ : (ಸುತ್ತಲು ನೋಡಿ) ಈ ಊರಲ್ಲಿ ಏನು ಜನವೇ ಇಲ್ವ? +ವೆಂಕಟೇಶಯ್ಯ : ಇದ್ದಾರೆ. ಜೀಪು-ಗೀಪು ಬಂದ್ರೆ ಪೊಲೀಸಿನವರೇನೋ ಅಂತ ಹೆದರಿಕೊಂಡು ಒಬ್ರೂ +ಆಚೆ ಬರೋಲ್ಲ ಅಷ್ಟೆ… +ರಘುನಂದನ್ : ಬನ್ನಿ ಹೋಗೋಣ… +ವೆಂಕಟೇಶಯ್ಯ : ಸಿದ್ದಪ್ಪ ಸಾರ್… +ರಘುನಂದನ್ : ಇಲ್ಲಿದ್ದು ಪ್ರಯೋಜನ ಇಲ್ಲ ಬನ್ನಿ… +ಎಂದು ಅವನನ್ನು ಕೂರಿಸಿಕೊಂಡು ಊರಿನ ಹೊರಗೆ ಬರುತ್ತಾರೆ. +ಅಲ್ಲಿ ಒಂದು ಕಡೆ ಕೆಲವು ದನ ಕಾಯುವ ಹುಡುಗರು ಕಾಣಿಸುತ್ತಾರೆ. +ರಘುನಂದನ್ ಜೀಪು ನಿಲ್ಲಿಸಿ ವೆಂಕಟೇಶಯ್ಯನ ಕಿವಿಯಲ್ಲಿ ಏನೋ ಹೇಳುತ್ತಾನೆ. +ವೆಂಕಟೇಶಯ್ಯ ಅವರ ಬಳಿ ಹೋಗಿ ದುಡ್ಡುಕೊಟ್ಟು ಸಿದ್ದಪ್ಪನ ಬಗ್ಗೆ ವಿಚಾರಿಸುತ್ತಾನೆ. +ಎಲ್ಲವೂ ಮೂಕಾಭಿನಯದಲ್ಲಿ ನಡೆಯುತ್ತದೆ. ಮೊದಲು ಬಾಯಿ ಬಿಡಲು ಹಿಂದೆ-ಮುಂದೆ ನೋಡಿದರೂ ಇನ್ನೊಂದು ನೋಟು ಕೈ ಸೇರಿದಾಗ ಅವರು ಒಂದು ಕಡೆ ಕೈ ತೋರಿಸುತ್ತಾರೆ. ವೆಂಕಟೇಶಯ್ಯ ಪತ್ತೆ ಹಚ್ಚಿದೆ ಎಂದು ಬಂದು ರಘುನಂದನ್ ಕಡೆ ಗೆದ್ದ ನೋಟ ನೋಡುತ್ತಾನೆ. +ದೃಶ್ಯ – ೪೫ / ಹಳೇ ದೇವಸ್ಥಾನ-ಮಂಟಪ +ಯಾವುದೋ ಒಂದು ಪಾಳುಮಂಟಪದಲ್ಲಿ ಸಿದ್ದಯ್ಯ ಅಡಗಿ ಕುಳಿತಿರುತ್ತಾನೆ. +ಅವನು ಇವರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಾನೆ. +ಅವನನ್ನು ಹಿಡಿದು ಕೂರಿಸಿ ಮಾತಾಡುತ್ತಾರೆ. +ಅವನು ಗೂರಲು ರೋಗವಿರುವುದು ಗೊತ್ತಾಗುತ್ತದೆ. ಏದುಸಿರು ಬಿಡುತ್ತಾ ಮಾತನಾಡುತ್ತಾನೆ. +ಮಧ್ಯೆ ಮಧ್ಯೆ ಕೆಮ್ಮುತ್ತಾನೆ. +ಸಿದ್ದಯ್ಯ : ಬುದ್ಧಿ ನಂದೇನು ತಪ್ಪಿಲ್ಲ, ನನ್ನ ಬಿಟ್ಟುಬಿಡಿ ಬುದ್ದೀ… ನಿಮ್ಮ ಕಾಲಿಗ್ ಬೀಳ್ತೀನಿ +ರಘುನಂದನ್ : ನೀನು ಕೈ ಮುಗಿಯೋದು ಕಾಲಿಗೆ ಬೀಳೋದು ಬೇಡ. ಐಬಿ ಎಲ್ಲಿ ಅದನ್ನ ಹೇಳು ಮೊದ್ಲು? +ಮೇಟಿ : ನಂಗೊತ್ತಿಲ್ಲ ಬುದ್ಧೀ… +ರಘುನಂದನ್ : ಗೊತ್ತಿಲ್ಲ ಅಂದ್ರೆ ಏನಯ್ಯ ಅರ್ಥ? ನೀನೇ ತಾನೆ ಮೇಟಿ? +ಮೇಟಿ : ಹೌದು ಸ್ವಾಮಿ… ಅಲ್ಲ ಸ್ವಾಮಿ +ರಘುನಂದನ್ : ಯಾಕಯ್ಯ ಹಿಂದೆ ಎಲ್ಲಾ ಸಂಬಳ ತಗೊಂಡಿಲ್ವ ? +ಮೇಟಿ : ತಪ್ಪಾಗಿಬಿಟ್ಟೈತೆ ಕ್ಷಮಿಸಿಬಿಡಿ ಸ್ವಾಮಿ… +ರಘುನಂದನ್ : ಅದಿರಲಿ ಆ ಐಬಿ ಎಲ್ಲಿದೆ ಸ್ವಲ್ಪ ತೋರಿಸು ನಡಿ… +ಮೇಟಿ : ಐಬಿ ಇದ್ರಲ್ಲವಾ ಬುದ್ಧೀ ತೋರಿಸೋದು… +ರಘುನಂದನ್ : ಏನಂದೆ? ಐಬಿ ಇಲ್ಲಾ! +ಮೇಟಿ : ಹುಂ ಬುದ್ಧೀ, ಅಲ್ಲಿ ಯಾವ ಐಬೀನು ಇಲ್ಲಾ… +ರಘುನಂದನ್ ಅಚ್ಚರಿಯಿಂದ ವೆಂಕಟೇಶಯ್ಯನ ಮುಖ ನೋಡುತ್ತಾನೆ. ಅವನಿಗೂ ಅಷ್ಟೇ ಆಶ್ಚರ್ಯವಾಗಿದೆ. +ರಘುನಂದನ್ : ಅಲ್ಲಯ್ಯ ಐಬಿನೆ ಇಲ್ಲ ಅಂದ ಮೇಲೆ ಪ್ರತೀ ತಿಂಗ್ಳು ಮೇಟಿ ಅಂತ ಸಂಬಳ ಯಾಕ್ +ತಗೋತಾ ಇದ್ದೆ? +ಮೇಟಿ : ನಂದೇನು ತಪ್ಪಿಲ್ಲ ಸ್ವಾಮಿ, ನಾನು ಮನೆ ಮನೇತಾವ ಓಗಿ ಸೌದೆ ಒಡಕಂಡು ಜೀವನ ಮಾಡ್ತಿದ್ದೆ +ಬುದ್ಧೀ. ವಾರಕ್ಕೊಂದು ಸಲ ಹಳೇ ಸಾಹೇಬರು ಕೃಷ್ಣಪ್ಪನವರ ಮನೇಗು ಓಗ್ತಿದ್ದೆ. ಒಂದಿನ ಅವ್ರು ನನ್ನ ಕರೆದುಬಿಟ್ಟು, ನೀನು ಇನ್ಮೇಲೆ ಯಾರ ಮನೇಗು ಓಗಿ ಕೆಲಸ ಮಾಡಬೇಡ ನಮ್ಮನೇಲಿ ಅಷ್ಟೇ ಮಾಡು. ತಿಂಗ್ಳಿಗೊಂದು ಸಲ ಆಫೀಸ್‌ತಾವ ಬಂದು ದುಡ್ಡು ತಗೊಂಡು ಹೋಗೋ ಅಂದ್ರು… ಅಂಗೇ ನಾನು ತಿಂಗ್ಳೆಲ್ಲಾ ಅವರ ಮನೆ ಕೆಲ್ಸ ಮಾಡ್ತಾ ಇದ್ದೆ, ಒಂದನೇ ತಾರೀಖು ಹೋಗಿ ಹೆಬ್ಬೆಟ್ಟು ಒತ್ತಿ ಸಂಬಳ ತಗಾತಾ ಇದ್ದೆ. ಇಂಗೇ ವರ್ಸಾನುಗಟ್ಟಲೆ ನಡ್ಕೊಂಡು ಬಂತು. ಆಮೇಲೆ ಅವರು ಒಂಟೋಗಿ ಇನ್ಯಾರೋ ಬಂದ್ರು. ನಾನು ಅವರ ಮನೇಲು ಕೆಲ್ಸ ಮಾಡ್ತಿದ್ದೆ ಆಫೀಸಿಗೋಗಿ ಸಂಬಳ ತಗಾತಿದ್ದೆ. ಇಂಗೇ ಐದು ಆರು ವರ್ಸ ಕಳೀತು. ಆಮೇಲೆ ಗೋಪಾಲಪ್ಪೋರು ಬಂದ್ರು. ನನ್ನ ಒಂದಿನ ಕರದು ವಿಚಾರಣೆ ಮಾಡಿದ್ರು. ನಿನ್ನ ಸಂಬಳ ಹೆಚ್ಗೆ ಮಾಡಿದ್ದೀನಿ. ಕ್ವಾಟ್ರಸ್‌ನಾಗೆ ಕೆಲ್ಸ ಮಾಡು ಸಂಬಳ ತಗೊಂಡೋಗು ಅಂದ್ರು. ನಾನು ಅಂಗೇ ಮಾಡ್ತಿದ್ದೆ. ಗೋಪಾಲಪ್ಪೋರು ಓಗಿ ಇನ್ಯಾರೋ ಆಫೀಸರ್ ಬತ್ತಾರೆ ಅಂದ್ರು. ನಂಗೆ ಈ ಗೂರಲು ಎಚ್ಚಾಯ್ತು, ಈ ಸವಾಸವೇ ಬ್ಯಾಡ ಅಂತ ಅತ್ಲಾಗೆ ಓಗೋದೆ ಬಿಟ್ಟು ಬಿಟ್ಟೆ ಸ್ವಾಮಿ… ಇಷ್ಟೇ ಸ್ವಾಮಿ ನಂಗೊತ್ತಿರೋದು. ನಂದೇನು ತಪ್ಪಿಲ್ಲ ಸ್ವಾಮಿ. ಸಂಬಳ ತಗಂಡಿರಾದಕ್ಕೆ ಕೆಲ್ಸ ಮಾಡಿದ್ದೀನಿ ಬುದ್ಧಿ… +ರಘುನಂದನ್ : ನೀವೆಲ್ಲಾ ಸೇರಿ ಏನೇನ್ ಕೆಲ್ಸ ಮಾಡಿದ್ದೀರಿ ಅಂತ ಗೊತ್ತಾಯ್ತಲ್ಲ… ಮಾಡಿದ್ದಕ್ಕೆ +ಅನುಭವಿಸ್ತೀರಾ ?… +ಎಂದು ಕೋಪದಲ್ಲಿ ಎದ್ದು ಹೊರಡುತ್ತಾನೆ. +ವೆಂಕಟೇಶಯ್ಯ ಅವನನ್ನು ಹಿಂಬಾಲಿಸುತ್ತಾನೆ. +ಹಿನ್ನೆಲೆಯಲ್ಲಿ ಮೇಟಿ ಸಿದ್ಧಯ್ಯ ಅಳುತ್ತಲೇ ಕುಳಿತಿದ್ದಾನೆ. +ಜೀಪಿನಲ್ಲಿ ರಘುನಂದನ್ ಮತ್ತು ವೆಂಕಟೇಶಯ್ಯ ಪ್ರಯಾಣಿಸುತ್ತಿದ್ದಾರೆ. +ರಘುನಂದನ್ ಎಲ್ಲೋ ನೋಡುತ್ತಿದ್ದಾನೆ. ಅವನ ಮುಖದಲ್ಲಿ ಕೋಪ, ತಿರಸ್ಕಾರ ಇತ್ಯಾದಿ ಭಾವನೆಗಳು ಮನೆ ಮಾಡಿವೆ. +ವೆಂಕಟೇಶಯ್ಯನ ಮುಖದಲ್ಲಿ ದುಗುಡವಿದೆ. +ಜೀಪು ಓಡುತ್ತಿದೆ. +ಕಟ್ ಟು… +ದೃಶ್ಯ – ೪೬ / ಹಗಲು / ರಘುನಂದನ್ ಮನೆ +ಸುಮ ಕಾಫಿ ಹಿಡಿದು ಬರುತ್ತಾಳೆ. +ರಘುನಂದನ್ ಹತಾಶೆಯಿಂದ ಇದ್ದಾನೆ. +ವೆಂಕಟೇಶಯ್ಯ ಚಿಂತೆಯಲ್ಲಿ ಕುಳಿತಿದ್ದಾನೆ. +ಸುಮ ಇಬ್ಬರಿಗೂ ಕಾಫಿ ಕೊಡುತ್ತಾಳೆ. +ವೆಂಕಟೇಶಯ್ಯ : (ಮೆಲ್ಲನೆ) ಸಾರ್… ಮುಂದೆ ಏನು ಮಾಡೋದು ಸಾರ್? +ರಘುನಂದನ್ : ಇನ್ನೇನ್ ಮಾಡೋದು. ಎಲ್ಲಾ ಸರ್ಕಾರಕ್ಕೆ ರಿಪೋರ್ಟ್ ಮಾಡೋದು. +ವೆಂಕಟೇಶಯ್ಯ : ತೊಂದ್ರೆ ಆಗಲ್ವಾ ಸಾರ್… +ರಘುನಂದನ್ : ಆದ್ರೆ ಆಗಲಿ… +ವೆಂಕಟೇಶಯ್ಯ : ಸಾರ್… ನನ್ನ ವಿ…ಷ…ಯ? +ರಘುನಂದನ್ : ಯಾವುದನ್ನೂ ಮುಚ್ಚಿಡೋಕ್ ಆಗೋಲ್ಲರೀ… ಎಲ್ಲಾದಕ್ಕೂ ಒಂದು ಮಿತಿ ಇದೆ. +ವೆಂಕಟೇಶಯ್ಯ : ಸಾರ್, ಮಗಳು ಭವಾನಿದು ಮದುವೆ ಗೊತ್ತಾಗಿದೆ ಸಾರ್. ಮುಂದಿನ ವಾರ +ಎಂಗೇಜ್‌ಮೆಂಟ್. +ರಘುನಂದನ್ : ಅದಕ್ಕೆ ನನ್ನ ಏನು ಮಾಡು ಅಂತೀರ? +ವೆಂಕಟೇಶಯ್ಯ : ಇದೆಲ್ಲಾ ಬಯಲಾದ್ರೆ…. +ರಘುನಂದನ್ : ಹೇಳಿದ್ನಲ್ಲ ವೆಂಕಟೇಶಯ್ಯ, ಇದೆಲ್ಲಾ ನನ್ನ ಕೈ ಮೀರಿದ್ದು ಅಂತ…. ನಂಗೆ ತಲೆ ಕೆಟ್ಟಿದೆ, ಸ್ವಲ್ಪ ಒಂಟಿಯಾಗಿರೋಕ್ ಬಿಡಿ… ನಾಳೆ ಆಫೀಸ್‌ನಲ್ಲಿ ಸಿಕ್ತೀನಿ. +ವೆಂಕಟೇಶಯ್ಯ ನಿಧಾನವಾಗಿ ಎದ್ದು ಹೋಗುತ್ತಾನೆ. +ಸುಮ ಮೌನವಾಗಿ ಅದನ್ನು ನೋಡುತ್ತಾಳೆ. +ಕಟ್ ಟು… +ದೃಶ್ಯ – ೪೭ / ರಾತ್ರಿ / ರಘುನಂದನ್ ಮನೆ +ರಘುನಂದನ್ ನಿದ್ದೆ ಬರದೆ ಕಿಟಕಿ ಬಳಿ ನಿಂತು ಹೊರಗೆ ನೋಡುತ್ತಿದ್ದಾನೆ. +ಇವನನ್ನೇ ಗಮನಿಸುತ್ತಿದ್ದ ಸುಮ, +ಸುಮ : ಯಾಕ್ ನಿದ್ದೆ ಬರತಿಲ್ವಾ? +ರಘುನಂದನ್ : ಹ್ಯಾಗ್ ಬರುತ್ತೆ ? +ಸುಮ : ಏನ್ ಮಾಡಬೇಕು ಅಂದ್‌ಕೊಂಡಿದ್ದೀರ? +ರಘುನಂದನ್ : ಏನ್ ಮಾಡೋದು, ಈ ಭ್ರಷ್ಟಾಚಾರದ ಬಗ್ಗೆ ಹೆಡ್ ಆಫೀಸ್‌ಗೆ ಡೀಟೈಲ್ ಆಗಿ ರಿಪೋರ್ಟ್ +ಮಾಡ್ತೀನಿ. ಅವ್ರು ಇಟಿquiಡಿಥಿ ಮಾಡ್ಲಿ. ತಪ್ಪು ಮಾಡಿದವರು ಅನುಭವಿಸ್ತಾರೆ. +ಸುಮ : ಯಾರು ಯಾರಿಗೆ ಶಿಕ್ಷೆ ಕೊಡಿಸಬೇಕು ಅಂತಿದ್ದೀರ? +ರಘುನಂದನ್ : ಇನ್ಯಾರಿಗೆ? ಕಟ್ಟಿಸಿದಿವಿ ಅಂತ ದುಡ್ಡು ನುಂಗಿ ಹಾಕಿದವರಿಗೆ, ಇಲ್ಲದ ಐಬೀನ ಇದೆ ಅಂತ +ರಿನೋವೇಟ್ ಮಾಡಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿದವರಿಗೆ, ಫೋರ್ಜರಿ ಮಾಡಿ ಸಂಬಳ ತಗೊಂಡವರಿಗೆ… +ಸುಮ : ಕಟ್ಟಿಸಿದವರು ಈಗ ಮಂತ್ರಿಯಾಗಿದ್ದಾರೆ. ರಿನೋವೇಟ್ ಮಾಡಿಸಿದವರು ಸತ್ತು ಹೋಗಿದ್ದಾರೆ. +ಸಂಬಳ ತಗಂಡವನು ಸಾಯೋ ಸ್ಥಿತೀಲಿದ್ದಾನೆ. ಇದರಲ್ಲಿ ಯಾರನ್ನ ಸಿಕ್ಕಿ ಹಾಕಿಸ್ತಿರಿ? +ರಘುನಂದನ್ : ಅದೆಲ್ಲಾ ಅನ್ನೋದು ಸರ್ಕಾರಕ್ಕೆ ಬಿಟ್ಟದ್ದು, ಮಿನಿಸ್ಟ್ರು ಬರೋ ದಿನ ಹತ್ರ ಬರತಾ ಇದೆ. +ಇನ್ನು ರಿಫೊರ್ಟ್ ತಡ ಮಾಡೋಕ್ ಆಗಲ್ಲ…. ರಿಪೋರ್ಟ್ ಕಳಿಸಿಬಿಟ್ರೆ ನನ್ನ ತಲೆ ಮೇಲಿನ +ಭಾರಾ ಇಳಿಯುತ್ತೆ. +ಸುಮ : ಏನ್ ವ್ಯವಸ್ಥೇನೋ…. ! +ಎಂದು ಎದ್ದು ಲೈಟ್ ಆಫ್ ಮಾಡುತ್ತಾಳೆ. +ರಘುನಂದನ್ ನಿಂತೇ ಇದ್ದಾನೆ. +ಆ ಕತ್ತಲೆಯಲ್ಲಿ ಅವನ ಸಿಗರೇಟಿನ ಬೆಂಕಿಯಷ್ಟೇ ಕಾಣುತ್ತಿದೆ. +ಕಟ್ ಟು… +ದೃಶ್ಯ – ೪೮ / ರಾತ್ರಿ / ರಘುನಂದನ್ ಮನೆ +ಮಧ್ಯರಾತ್ರಿ… +ಬಾಗಿಲಮೇಲೆ ಸದ್ದಾಗುತ್ತದೆ. +ಮಲಗಿದ್ದ ರಘುನಂದನ್ ಸದ್ದಿಗೆ ಏಳುತ್ತಾನೆ. +ಹೊರಬಂದು ಬಾಗಿಲು ತೆರೆಯುತ್ತಾನೆ. ಬಾಗಿಲ ಹೊರಗೆ ವೆಂಕಟೇಶಯ್ಯನ ಮಗಳು ಭವಾನಿ ಮತ್ತು ಅವಳ ತಂಗಿ ನಿಂತಿದ್ದಾರೆ. ಅವರ ಕಣ್ಣಲ್ಲಿ ನೀರು. ಇವನನ್ನು ನೋಡಿ ಬಿಕ್ಕಳಿಸುತ್ತಾರೆ. +ರಘುನಂದನ್ : ಯಾಕಮ್ಮ? ಏನಾಯ್ತು? +ಭವಾನಿ : ಸಾರ್, ನಮ್ಮ ತಂದೆ ಎದೆನೋವು ಅಂತ ಒದ್ದಾಡ್ತಾ ಇದ್ದಾರೆ. ನಮಗೆ ಏನು ಮಾಡೋದು ಅಂತ +ಗೊತ್ತಾಗ್ತಾ ಇಲ್ಲ. ಆಸ್ಪತ್ರೇಗೆ ಕರಕೊಂಡು ಹೋಗೋಣ ಅಂದ್ರೆ ಯಾವ ಗಾಡೀನು ಸಿಗ್ತಾ ಇಲ್ಲ. +ರಘುನಂದನ್ ಬಂದು ಸಹಾಯ ಮಾಡಲಿ ಎಂಬ ಆಸೆ ಅವರ ಮುಖದಲ್ಲಿರುತ್ತದೆ. +ರಘುನಂದನ್ : ಒಂದ್ನಿಮಿಷ ಬಂದೇ… +ಎಂದು ಬಂದು ಶರಟು ಹಾಕಿಕೊಳ್ಳುತ್ತಾನೆ. ಸುಮ ಕೂಡ ಎದ್ದಿದ್ದಾಳೆ. +ಸುಮ : ಏನಾಯ್ತು? +ರಘುನಂದನ್ : ವೆಂಕಟೇಶಯ್ಯಂಗೆ ಹುಷಾರಿಲ್ಲವಂತೆ ನೋಡ್ಕಂಡ್ ಬರತೀನಿ. +ಎಂದು ಹೊರಬಂದು ಜೀಪು ತೆಗೆದು ಅದರಲ್ಲಿ ಭವಾನಿ ಹಾಗೂ ಅವಳ ತಂಗಿಯನ್ನು ಕೂರಿಸಿಕೊಂಡು ಹೊರಡುತ್ತಾನೆ. +ಕಟ್ ಟು… +ದೃಶ್ಯ – ೪೯ / ರಾತ್ರಿ / ಆಸ್ಪತ್ರೆ +ಇಸಿಜಿಯಲ್ಲಿ ಯಂತ್ರದ ಕ್ಲೋಸ್ ಅಪ್. +ವೈದ್ಯರು ಆ ರಿಪೋರ್ಟ್ ಅನ್ನು ಪರೀಕ್ಷಿಸುತ್ತಿದ್ದಾರೆ. +ವೆಂಕಟೇಶಯ್ಯ ಬೆಡ್ ಮೇಲೆ ಮಲಗಿದ್ದಾರೆ. +ವೈದ್ಯರು ಹೊರಬರುತ್ತಿದ್ದಾರೆ. +ಅಲ್ಲಿ ವೆಂಕಟೇಶಯ್ಯನ ಕುಟುಂಬ ಹಾಗೂ ರಘುನಂದನ್ ಇದ್ದಾರೆ. +ರಘುನಂದನ್ ವೈದ್ಯರನ್ನು ಹಿಂಬಾಲಿಸುತ್ತಾನೆ. +ಡಾಕ್ಟರ್ : ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಸರಿಯಾದ ಟೈಂನಲ್ಲಿ ಕರಕೊಂಡು ಬಂದಿದ್ದೀರ… +ಬೆಳಗ್ಗೇವರೆಗೂ ಅಬ್ಸರ್‌ವೇಶನ್‌ನಲ್ಲಿರಲಿ, ನೋಡೋಣ. +ರಘುನಂದನ್ : ಸರಿ ಸಾರ್… +ಕಟ್ ಟು… +ದೃಶ್ಯ – ೫೦ / ರಾತ್ರಿ / ರಘುನಂದನ್ ಮನೆ +ರಘುನಂದನ್ ಜೀಪಿನಲ್ಲಿ ಮನೆಗೆ ಬರುತ್ತಾನೆ. +ಸುಮ ಬಾಗಿಲು ತೆರೆಯುತ್ತಾಳೆ. +ಸುಮ : ಹ್ಯಾಗಿದ್ದಾರೆ? +ರಘುನಂದನ್ : ಮೈಲ್ಡ್ ಹಾರ್ಟ್ ಆಟ್ಯಾಕ್ ಅಂತೆ. ಡಾಕ್ಟರ್ ಟ್ರೀಟ್‌ಮೆಂಟ್ ಕೊಟ್ಟು +ಅಬ್ಸರ್‌ವೇಶನ್‌ನಲ್ಲಿಟ್ಟಿದ್ದಾರೆ. +ಸುಮ : ತಮ್ಮ ಕೆಲಸ ಹೋಗುತ್ತೆ ಅಂತ ಗಾಬರಿಯಾದ್ರೋ ಏನೋ? +ರಘುನಂದನ್ : ಸ್ವಲ್ಪ ಟೀ ಮಾಡ್ತೀಯ… +ರಘುನಂದನ್ ಏನೂ ಮಾತನಾಡುವುದಿಲ್ಲ. ಸಿಗರೇಟಿಗೆ ಬೆಂಕಿ ತಾಗಿಸುತ್ತಾನೆ. +ಕಟ್ ಟು… +ದೃಶ್ಯ – ೫೧ / ಹಗಲು / ಆಸ್ಪತ್ರೆ +ರಘುನಂದನ್ ಆಸ್ಪತ್ರೆಗೆ ಬರುತ್ತಾನೆ. +ವೆಂಕಟೇಶಯ್ಯನಿಗೆ ಅವರ ಮಗಳು ಕಾಫಿ ಕುಡಿಸುತ್ತಿದ್ದಾಳೆ. +ರಘುನಂದನ್ : ಹೇಗಿದ್ದೀರಿ ವೆಂಕಟೇಶಯ್ಯ? +ವೆಂಕಟೇಶಯ್ಯ : ಇನ್ನೂ ಬದ್ಕಿದ್ದೀನಿ ಸಾರ್… +ರಘುನಂದನ್ : ಎಲ್ಲ ಸರಿಹೋಗುತ್ತೆ. ಏನೂ ಯೋಚ್ನೆ ಮಾಡಬೇಡಿ. +ವೆಂಕಟೇಶಯ್ಯನದು ಕೈ ಚೆಲ್ಲಿದ ಪ್ರತಿಕ್ರಿಯೆ. +ಅಷ್ಟರಲ್ಲಿ ಅಲ್ಲಿಗೆ ಬಂದ ಡಾಕ್ಟರ್ ಅವರನ್ನು ಪರೀಕ್ಷಿಸಿ, +ಡಾಕ್ಟರ್ : ಹೆಚ್ಗೆ ಯೋಚ್ನೆ ಮಾಡೋಕ್ ಹೋಗಬೇಡಿ. ನಾಳೆ ನೀವು ಮನೇಗ್ ಹೋಗಬಹುದು. +ರಘುನಂದನ್ ಮುಖದಲ್ಲಿ ಸಮಾಧಾನ. +ಕಟ್ ಟು… +ದೃಶ್ಯ – ೫೨ / ಹಗಲು / ರಘುನಂದನ್ ಮನೆ +ಸುಮ ರಘುನಂದನ್‌ಗೆ ತಿಂಡಿ ತಂದುಕೊಡುತ್ತಾಳೆ. +ರಘುನಂದನ್ ಅದನ್ನು ಪಡೆದು ತಿನ್ನತೊಡಗುತ್ತಾನೆ. +ಸುಮ : ಪಾಪ! ವೆಂಕಟೇಶಯ್ಯನವರ ಹೆಂಡತಿ ಸ್ಥಿತಿ ನೋಡೋಕ್ ಆಗೋಲ್ಲ. ಮಗಳ ಎಂಗೇಜ್‌ಮೆಂಟ್‌ಗೆ +ಬರೀ ಒಂದು ವಾರ ಇರೋವಾಗ ಹೀಗಾಯ್ತಲ್ಲ ಅಂತ ತುಂಬಾ ನೊಂದುಕೊಂಡ್ರು… ಎಲ್ಲಿ ಮದುವೇನೆ ನಿಂತುಹೋಗುತ್ತೋ ಅನ್ನೋ ಆತಂಕ ಅವರದು. ಈ ಎನ್‌ಕ್ವೈಯರಿ ಯಾವಾಗ ಆಗಬಹುದು? +ರಘುನಂದನ್ : ನಾನು ರಿಪೋರ್ಟ್ ಕೊಟ್ಟ ತಕ್ಷಣ… +ಸುಮ : ನೀವು ತಡವಾಗಿ ಕೊಡೋಕ್ ಆಗೋಲ್ವ? +ರಘುನಂದನ್ : ಇಲ್ಲ. ಮಿನಿಸ್ಟರ್‌ನ ಇಲ್ಲದ ಐಬೀಲಿ ಇಳಿಸೋಕೆ ಆಗೋಲ್ಲ ಅನ್ನೋದನ್ನ ಈ +ರಿಪೋರ್ಟ್ ಕೊಟ್ಟೇ ಹೇಳಬೇಕು. ತಡವಾಗಿ ಅಂದ್ರೆ ಇವತ್ತೇ! +ಸುಮ : ಇಷ್ಟೆಲ್ಲಾ ಆದಮೇಲೂ ವೆಂಕಟೇಶಯ್ಯನ್ನ ಸಿಕ್ಕಿಹಾಕಿಸಬೇಕು ಅಂತಾನೆ ಡಿಸೈಡ್ ಮಾಡಿದ್ದೀರ? +ರಘುನಂದನ್ : ನನ್ನ ಕೆಲಸ ನಾನ್ ಮಾಡ್ತೀನಿ… +ಸುಮ : ನಾನೊಂದು ಐಡಿಯಾ ಹೇಳ್ಲಾ? +ರಘುನಂದನ್ : ಏನು? +ಸುಮ : ಇಲ್ಲದೇ ಇರೋ ಐಬೀನ ಇಲ್ಲ ಅನ್ನಿಸಿಬಿಡಿ. +ರಘುನಂದನ್ : ಅಂದ್ರೆ!? +ಸುಮ : ಬಿದ್ದು ಹೋಯಿತು ಅನ್ನೋದು? +ರಘುನಂದನ್ : ಚನ್ನಾಗಿದೆ. ಇಲ್ಲಿ ನಾಲ್ಕು ವರ್ಷದಿಂದ ಸರಿಯಾಗಿ ಮಳೇ ಕೂಡ ಬಂದಿಲ್ಲ. ಐಬಿ ಹ್ಯಾಗೆ +ಬಿದ್ದುಹೋಗುತ್ತೆ? +ಸುಮ : ಅದೇ ಆಗಿ ಬಿದ್ದು ಹೋಗದೇ ಇದ್ರೆ ಬ್ಯಾಡ, ತುಂಬಾ ಹಳೇದಾಗಿದೆ ಹೊಸದಾಗಿ ಕಟ್ಟಬೇಕು ಅಂತ +ನೀವೇ ಬೀಳಿಸಿಬಿಡಿ. ಆಗ ಯಾರೂ ಪ್ರಶ್ನೆ ಮಾಡೋಲ್ಲ. ಎಲ್ಲಾ ಸಮಸ್ಯೆಗಳು ಬಗೆಹರಿಯುತ್ವೆ. +ರಘುನಂದನ್ : ಈ ವಿಷಯದಲ್ಲಿ ಇಷ್ಟು ವರ್ಷ ಎಲ್ರೂ ಸುಳ್ಳು ಹೇಳಿಕೊಂಡೇ ಬಂದ್ರು… ಈಗ ನಾನೂ +ಅವರಲ್ಲಿ ಒಬ್ಬ ಆಗೂ ಅಂತೀಯ? ಇಷ್ಟು ವರ್ಷ ಸರಕಾರೀ ಉದ್ಯೋಗದಲ್ಲಿ ಹೇಗಿದ್ದೆ ಅಂತ ನಿಂಗೇ ಗೊತ್ತಲ್ಲ; ಈಗ ಯಾರದೋ ವಿಷಯಕ್ಕೆ ನನ್ನ ವ್ಯಕ್ತಿತ್ವ ಮಾರಿಕೋಬೇಕಾ? +ಸುಮ : ಒಂದು ಕ್ಷಣ ಯೋಚ್ನೆ ಮಾಡಿ. ಈಗ ಈ ಪ್ರಕರಣಾನ ಬಯಲಿಗೆ ಎಳೆಯೋದರಿಂದ +ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅದರ ಬದಲು ಯಾರಿಗೂ ತೊಂದ್ರೆ ಆಗದೇ ಇರೋ ಒಂದು ಸುಳ್ಳು ಹೇಳೋದರಿಂದ ಎಷ್ಟು ಜನಕ್ಕೆ ಅನುಕೂಲ ಆಗುತ್ತೆ ನೋಡಿ. ನೀವೇನು ತಪ್ಪು ಮಾಡ್ತಾ ಇಲ್ಲ. ಇಲ್ಲದೇ ಇರೋದನ್ನ ಹೊಸಾದ್ ಕಟ್ತಾ ಇದ್ದೀರ. ಅಲ್ವಾ? +ರಘುನಂದನ್ ಯೋಚಿಸತೊಡಗುತ್ತಾನೆ. +ಕಟ್ ಟು… +ದೃಶ್ಯ – ೫೩ / ಹಗಲು / ಕಛೇರಿ +ಕಚೇರಿಯಲ್ಲಿ ರಘುನಂದನ್ ಟೈಪಿಸ್ಟ್ ಸತ್ಯವತಿಗೆ ಡಿಕ್ಟೇಷನ್ ಕೊಡುತ್ತಿದ್ದಾನೆ. +ರಘುನಂದನ್ : ಮೇಲ್ಕಾಣಿಸಿದ ಎಲ್ಲಾ ಕಾರಣಗಳಿಂದ- +ಮಂತ್ರಿಗಳ ವಿಸಿಟ್‌ಗೆ ಬೇರೆ ವ್ಯವಸ್ಥೆ ಮಾಡುವುದು. +ಈಗಿರುವ ಐಬಿಯನ್ನು ತಕ್ಷಣವೇ ನೆಲಸಮಗೊಳಿಸುವುದು. ಇದರ ಖರ್ಚು ಸುಮಾರು ೫೦ ಸಾವಿರ ರೂಪಾಯಿಗಳು. +ಅದೇ ಜಾಗದಲ್ಲಿ ಹೊಸಾ ಐಬಿ ನಿರ್ಮಾಣದ ಬಗ್ಗೆ ಸದ್ಯದಲ್ಲೇ ಪೂರ್ಣ ಪ್ರಮಾಣದ ವರದಿ ಕಳಿಸಲಾಗುತ್ತದೆ. +ತಾವು ನಮ್ಮ ವಿನಂತಿಯನ್ನು ಮನ್ನಿಸುತ್ತೀರೆಂದು ನಂಬಿದ್ದೇವೆ… ಸರಿಯಾಗಿದೆಯೇನ್ರೀ ಸತ್ಯವತಿ? +ಅಕೆ ನಿರ್ಭಾವುಕಳಾಗಿ ತಲೆಯಾಡಿಸುತ್ತಾಳೆ. +ಕಟ್ ಟು.. +ದೃಶ್ಯ – ೫೪ / ಹಗಲು / ಗೊರವಯ್ಯನ ಮನೆ +ಗೊರವಯ್ಯನ ಮನೆಯಲ್ಲಿ ಹೆಚ್ಚಿನ ಮಣ್ಣು ಉದುರಿ ಬಿದ್ದಿದೆ. +ಅದರ ಅಡಿಯಲ್ಲಿ ಈತ ನಿತ್ಯ ಉಪಾದಾನಕ್ಕೆ ಬಳಸುವ ಡಮರುಗ, ಕೊಳಲು, ಇತ್ಯಾದಿ ವಸ್ತುಗಳು ಸೇರಿ ಹೋಗಿವೆ. +ಅದನ್ನು ನೋಡುತ್ತಾ ಅವನ ಮುಖದಲ್ಲಿ ನೋವು ಮಡುಗಟ್ಟುತ್ತದೆ… +ಆತ ಮಣ್ಣನ್ನು ತೆಗೆಯ ತೊಡಗುತ್ತಾನೆ. +ಅದನ್ನು ನೋಡಿ ಗೌರಿ ಕಣ್ಣಲ್ಲೂ ನೀರು… +ಕಟ್ ಟು… +ದೃಶ್ಯ – ೫೫ / ಹಗಲು / ಹೆಡ್ ಆಫೀಸ್ +ಆಫೀಸರ್ ಪುರುಷೋತ್ತಮ್ ಮುಂದೆ ಕುಳಿತಿರುವ ರಘುನಂದನ್ +ಆಫೀಸರ್ : (ನೋಡುತ್ತಿದ್ದ ಫೈಲನ್ನು ಮುಚ್ಚಿ) ಮಿ. ರಘುನಂದನ್, ಐಬಿ ಡೆಮಾಲಿಷ್ ಮಾಡೋದಿಕ್ಕೆ +ನೀವು ಕೊಟ್ಟ ರಿಪೋರ್ಟ್ ಎಲ್ಲಾ ಸ್ಟಡಿ ಮಾಡಿದ್ದೀನಿ. ಎಲ್ಲಾ ಕರೆಕ್ಟ್ ಆಗಿದೆ. I ಚಿm ಛಿoಟಿviಟಿಛಿeಜ… ನಿಮ್ಮ ಪೀರಿಯಡ್‌ನಲ್ಲಿ ಅದೇ ಜಾಗದಲ್ಲಿ ಇನ್ನೊಂದು ಹೊಸಾ ಐಬಿ ರೆಡಿಯಾಗಲಿ… ನನ್ನ ಕೈಲಿ ಆಗೋ ಎಲ್ಲಾ ಸಹಾಯ ನಾನು ಮಾಡ್ತೀನಿ… +ರಘುನಂದನ್ : ಥ್ಯಾಂಕ್ ಯು ಸಾರ್… ಆದ್ರೆ ಈಗ ಮಿನಿಸ್ಟರ್‌ನ ಉಳಿಸೋದು ಎಲ್ಲಿ ಸಾರ್? +ಆಫೀಸರ್ : ಓ! ನಿಮಗೆ ನಾನು ಹೇಳಲಿಲ್ಲ ಅಲ್ವಾ? ಮಿನಿಸ್ಟರ್ ಪ್ರೋಗ್ರಾಂ ಪೋಸ್ಟ್‌ಪೋನ್ ಆಗಿದೆ. +ರಘುನಂದನ್ : (ವಿಷಣ್ಣನಾಗಿ) ಅಯ್ಯಯ್ಯೋ! ಹೌದಾ ಸಾರ್! ಮುಂಚೇನೆ ಗೊತ್ತಾಗಿದ್ದಿದ್ರೆ… +ಆಫೀಸರ್ : ಮುಂಚೇನೆ ಗೊತ್ತಾಗಿದ್ರೆ? … +ರಘುನಂದನ್ : ಏನೂ ಇಲ್ಲ ಸಾರ್… ಟೆನ್ಷನ್ ಕಡಿಮೆಯಾಗ್ತಿತ್ತು ಅಂತ ಅಷ್ಟೆ… +ಆಫೀಸರ್ : ಕೀ ಪೋಸ್ಟ್‌ನಲ್ಲಿರೋ ನಮ್ಮ ನಮ್ಮಂತೋರಿಗೆ ಇದೆಲ್ಲಾ ಕಾಮನ್ ರಘುನಂದನ್… +ರಘುನಂದನ್ ಪೆಚ್ಚು ನಗೆ ನಗುತ್ತಾನೆ. +ಕಟ್ ಟು… +ದೃಶ್ಯ – ೫೬ / ಹಗಲು / ಗೊರವಯ್ಯನ ಮನೆ +ಗೊರವಯ್ಯ ಮತ್ತು ಗೌರಿ ಇಬ್ಬರೂ ಸೇರಿ ಬಿರುಕು ದೊಡ್ಡದಾದ ಗೋಡೆಗೆ ಮಣ್ಣು ಮೆತ್ತುತ್ತಿದ್ದಾರೆ. +ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಯುವಕ ಮತ್ತು ಅವನ ಸ್ನೇಹಿತ ಅತ್ತಲೇ ಬರುತ್ತಾರೆ. +ಯುವಕ ರೈತಸಂಘದ ಕಾರ್ಯಕರ್ತನಂತೆ ಕಾಣ ಬಹುದು. +ಯುವಕ : ಅಜ್ಜಾ ಗ್ವಾಡೆಗೆ ತ್ಯಾಪೆ ಹಾಕ್ತಾನೇ ಇರು, ಅದು ಉದುರುತನೇ ಇರಲಿ… +ಗೊರವಯ್ಯ : ಏನು ಮಾಡದಪ್ಪ ಬಿದ್ದೋಯ್ತದೆ ಅಂತ ಬುಡಕ್ಕಾದತಾ ? ಅಂಗೇನಾರ ಬಿದ್ರೆ ತಲೆ ಮೇಲೆ +ಕವುಚಿಕತ್ತದಲ್ಲಪ್ಪಾ. +ಯುವಕ : ಅದಕ್ಕೆ ಈ ಮರ ಕಡಿಯೋದೊಂದೇ ದಾರಿ ನೋಡು… +ಗೊರವಯ್ಯ : ಅದಕ್ಕೆ ಸಾಹೇಬ್ರು ಬಂದು ನೋಡಿ ಬರಕೊಡಬೇಕಂತಲ್ಲಪ್ಪ… +ಯುವಕ : ಅಯ್ಯೋ ನೀನೊಬ್ಬ. ಅವರು ಬರಕೊಟ್ರು; ಅದು ಆಯ್ತು. ನೀನು ಹುಂ ಅನ್ನು, ನಾಳೆನೇ +ಈ ಮರ ಇಲ್ಲ ಅನ್ನಿಸಿಬಿಡ್ತೀವಿ, ಅದು ಯಾವನು ಬರತಾನೋ ಬರಲಿ, ಪ್ಯಾಂಟ್ +ಬಿಚ್ಚಾಕ್‌ಬಿಡತೀವಿ! +ಗೊರವಯ್ಯ : ಅಯ್ಯೊಯ್ಯೋ ಅದೆಲ್ಲಾ ರೇಜಿಗೆ ಬ್ಯಾಡಪ್ಪ. ಇವತ್ತು ಇನ್ನೊಂದಪ ಹೋಗಿ ಕೇಳ್ತೀನಿ. +ಯುವಕ : ಜಬರ್‌ದಸ್ತ್ ಮಾಡ್ಬೇಕು ಜಬರ್‌ದಸ್ತು. ಅಗಲೇ ಮಾತು ನಡಿಯಾದು… +ಗೊರವಯ್ಯ ಅವನ ಮಾತನ್ನೇ ಕುರಿತು ಚಿಂತಿಸುತ್ತಾನೆ. +ಕಟ್ ಟು… +ದೃಶ್ಯ – ೫೭ / ಹಗಲು / ರಘುನಂದನ್ ಮನೆ +ಸುಮ ಬಂದು ಬಾಗಿಲು ತೆರೆಯುತ್ತಾಳೆ. +ಎದುರಿಗೆ ನಿಂತಿರುವ ಗೌರಿ ಮತ್ತು ಗೊರವಯ್ಯ. +ಅವರನ್ನು ನೋಡಿ ಸುಮಾಗೆ ಆಶ್ಚರ್ಯವಾಗುತ್ತದೆ. +ಸುಮ : ನೀವಾ! ಯಾವಾಗ ಬಂದ್ರಿ… ಬನ್ನಿ..ಬನ್ನಿ +ಗೊರವಯ್ಯ : ನಿಮ್ಮನ್ನ ನೋಡಬೇಕು ನೋಡಬೇಕು ಅಂತ ಸ್ಯಾನೆ ಅಂಗಲಾಪು ಪಡ್ತಿದ್ಳು ಕಣವ್ವ… ನಂಗೂ +ಒಸಿ ಆಪೀಸ್ ಕೆಲ್ಸ ಇತ್ತು, ಅಂಗೇ ನಿಮ್ಮತಾವ ಬುಟ್ಟು ಓಗೋಣ ಅಂತ ಕರಕೊಂಡು ಬಂದೆ… +ಸುಮ : ನಿಜವಾಗಿ ಹೇಳಬೇಕೂಂದ್ರೆ ನಂಗೂ ಇವಳನ್ನ ನೋಡೋ ಮನಸ್ಸಾಗಿತ್ತು. ನಿಮ್ಮ ಮನೆ ಎಲ್ಲಿ? +ಯಾರ ಕೈಲಿ ಹೇಳಿ ಕಳಿಸೋದು ಅಂತ ಯೋಚ್ನೆ ಮಾಡ್ತಾ ಇದ್ದೆ. +ಗೌರಿ : ಅಜ್ಜಯ್ಯ ಈ ಸಲ ಬ್ಯಾರೆ ಬ್ಯಾರೆ ಪದ ಹೇಳ್ಕೊಟ್ರು ಕಣಕ್ಕ… +ಸುಮ : ಹೌದಾ! ಜಾಣೆ. ನಂಗೂ ಹೇಳಿಕೊಡೂವಂತೆ…. ಬಾ. ಬನ್ನಿ ತಾತ. +ಗೊರವಯ್ಯ : ನಾನು ಒಸಿ ಆಪೀಸ್‌ತಾವ ಒಗಿ ಬತ್ತೀನಿ ಕಣವ್ವ… +ಸುಮ : ಸರಿ… +ಗೊರವಯ್ಯ ಹೋಗುತ್ತಾನೆ. +ಎಂದು ಗೌರಿಯನ್ನು ಒಳಕ್ಕೆ ಕರೆದೊಯ್ಯುತ್ತಾಳೆ. +ಕಟ್ ಟು… +ದೃಶ್ಯ – ೫೮ / ಹಗಲು / ಕಛೇರಿ +ರಘುನಂದನ್ ಏನೋ ಕೆಲಸ ಮಾಡುತ್ತಿರುವಾಗ ಫೋನ್ ರಿಂಗಾಗುತ್ತದೆ. +ಬರೆಯುತ್ತಲೇ ಫೋನ್ ತೆಗೆದುಕೊಳ್ಳುತ್ತಾನೆ. +ರಘುನಂದನ್ : ಹಲೋ, ರಘುನಂದನ್… +ಆಫೀಸರ್ : ನಾನ್ರೀ ಪುರುಷೋತ್ತಮ್. +ರಘುನಂದನ್ : ನಮಸ್ಕಾರ ಸಾರ್. +ಪುರುಷೋತ್ತಮ : ನಮಸ್ಕಾರ… ಈಗ ಕರಡಿಗುಡ್ಡದ ಐಬೀನ ಡೆಮಾಲಿಶ್ ಮಾಡಬೇಕು ಅಂತ +ಬರೆದಿದ್ದರಲ್ಲ, ನಿಮ್ಮ ಪ್ರಪೋಸಲ್‌ನ ಅಪ್ರೂವ್ ಮಾಡಿದ್ದೀನ್ರೀ… +ರಘುನಂದನ್ : (ಸಂತೋಷ) ಹೌದಾ ಸರ್. ಥ್ಯಾಂಕ್ಯು ಸಾರ್ +ಪುರುಷೋತ್ತಮ : ಆದ್ರೆ ಅದರದೊಂದು ಸ್ಪಾಟ್ ಇನ್ಸ್‌ಪೆಕ್ಷನ್ ಅಗಬೇಕಲ್ಲರೀ. +ರಘುನಂದನ್ : (ಗಾಬರಿ) ಸ್ಪಾಟ್ ಇನ್ಸ್‌ಪೆಕ್ಷಾನ್ನಾ ಸಾರ್! +ಆಫೀಸರ್ : ಹೌದು. ನಾನು ಶನಿವಾರ ಬೇರೆ ಯಾವುದೋ ಪರ್ಸನಲ್ ಕೆಲ್ಸದ ಮೇಲೆ ಆ ಕಡೆ ಬರತಾ +ಇದ್ದೀನಿ, ಬಂದಾಗ ಆ ಕೆಲ್ಸಾನೂ ಮುಗಿಸಿಬಿಡಬಹುದಲ್ಲಾ… +ರಘುನಂದನ್ : (ನಿಧಾನವಾಗಿ) ಬನ್ನಿ ಸಾರ್, ನಾನು ಅರೇಂಜ್ ಮಾಡಿರತೀನಿ… +ರಘುನಂದನ್ ಫೋನ್ ಇಟ್ಟು ತಲೆ ಮೇಲೆ ಕೈ ಹೊರುತ್ತಾನೆ. +ಟೇಬಲ್ ಮೇಲಿದ್ದ ಬೆಲ್ ಬಾರಿಸುತ್ತಾನೆ. +ಸ್ವಲ್ಪ ಹೊತ್ತು ಯಾರೂ ಬರುವುದಿಲ್ಲ. +ಅಸಹನೆ ಹೆಚ್ಚಾಗುತ್ತದೆ. ಮತ್ತೊಮ್ಮೆ ಬೆಲ್ ಬಾರಿಸುತ್ತಾನೆ. +ಆಗ ಜವಾನ ಬಾಗಿಲು ತೆಗೆದು +ಜವಾನ : ಬುದ್ಧೀ… +ರಘುನಂದನ್ : ಎಷ್ಟೊತ್ತಯ್ಯ ಕರೆಯೋದು. ಎಲ್ಲಾ ಎಲ್ಲಿ ಹಾಳಾಗ್ ಹೋಗಿರತೀರ… ಆ ವೆಂಕಟೇಶಯ್ಯನ +ಕರಿಯಯ್ಯ…. +ಜವಾನ ಆಚೆ ಹೋಗುತ್ತಾನೆ. +ವೆಂಕಟೇಶಯ್ಯ ಒಳಬರುತ್ತಾನೆ. +ವೆಂಕಟೇಶಯ್ಯ : ಸಾರ್… +ರಘುನಂದನ್ : ಹೆಡ್ ಆಫೀಸಿನಿಂದ ಫೋನ್ ಬಂದಿತ್ತು… ಅವ್ರು ಸ್ಪಾಟ್ ಇನ್ಸ್‌ಪೆಕ್ಷನ್‌ಗೆ ಬರತಿದ್ದಾರೆ. +ವೆಂಕಟೇಶಯ್ಯ : ಯಾವ ಸ್ಪಾಟ್ ಇನ್ಸ್‌ಪೆಕ್ಷನ್ನು ಸಾರ್ ? +ರಘುನಂದನ್ : ಐಬೀ ನೋಡಬೇಕಂತ್ರೀ ಐಬೀ . ಎಲ್ಲಿಂದ ತಂದು ತೋರಿಸಲಿ ಹೇಳಿ? ಈಗ ಪ್ರಾಬ್ಲಂ +ನಿಮ್ಮ ತಲೆಯಿಂದ ನನ್ನ ಹೆಗಲಿಗೆ ಬಂದು ಕೂತುಕೊಳ್‌ತಲ್ಲ! ಏನು ಮಾಡಲಿ ? +ಅಷ್ಟರಲ್ಲಿ ಹೊರಗೆ ಯಾರೋ ಕೂಗಾಡುವುದು ಕೇಳಿಸುತ್ತದೆ. +ಆಗ ಜವಾನ ಒಳಬಂದು ವೆಂಕಟೇಶಯ್ಯನಿಗೆ +ಜವಾನ : ಸ್ವಾಮಿ, ಆ ಮುದುಕ ಬಂದು ರಾಂಗ್ ಮಾಡ್ತಾವ್ನೆ, ಏನು ಹೇಳಿದರೂ ಕೇಳಿಸ್ಕಂತಿಲ್ಲ. +ವೆಂಕಟೇಶಯ್ಯ : (ರಘುನಂದನ್‌ಗೆ) ಒಂದ್ನಿಮಿಷ ಬಂದೆ ಸಾರ್… +ಎಂದು ಹೊರಬರುತ್ತಾನೆ. +ದೃಶ್ಯ – ೫೯ / ಆಫೀಸ್ ಹೊರಗೆ +ಗೊರವಯ್ಯ ಹಾಲ್ ಮಧ್ಯೆ ನಿಂತು ಶ್ರೀಧರಮೂರ್ತಿಯೊಂದಿಗೆ ವಾದಿಸುತ್ತಿದ್ದಾನೆ. +ಶ್ರೀಧರಮೂರ್ತಿ : ಜೋರಾಗಿ ಬಾಯಿಮಾಡಬೇಡ, ಅಂತ ಎಷ್ಟು ಸಲವಯ್ಯ ನಿಂಗೆ ಹೇಳೋದು? +ಗೊರವಯ್ಯ : ನಾ ಮಾತಾಡಿರೆ ನಿಂಗೆ ಕಿರುಚಿದಂಗಿರತದಾ ಬುದ್ಧಿ ? +ಅಷ್ಟರಲ್ಲಿ ವೆಂಕಟೇಶಯ್ಯ ಹೊರಗೆ ಬರುತ್ತಾನೆ. ಅವನನ್ನು ನೋಡಿದ ಗೊರವಯ್ಯ, +ಗೊರವಯ್ಯ : ಏನ್ ಸ್ವಾಮಿ, ನಾಳಿಕ್ಕೋ ನಾಡದ್ದೋ ನನ್ನ ಮನೆ ಗ್ವಾಡೆ ಬಿದ್ದೋಗಂಗಾಗೈತಲ್ಲ, ಮರ +ಕಡಿಯಾಕೆ ನೀವು ನಂಗೆ ಆರ್ಡ್ರು ಕೊಡವ್ರಾ, ಇಲ್ವಾ? +ವೆಂಕಟೇಶಯ್ಯ : ಮೆತ್ತಗ್ ಮಾತೋಡೋ. ಏನ್ ಬೆಳ್ ಬೆಳಗ್ಗೇನೆ ಪರಮಾತ್ಮನ್ನ ಏರಿಸಿಕ್ಕೊಂಡ್ ಬಂದ್ +ಬಿಟ್ಟಿದ್ದೀಯ? (ಕೈ ತೋರಿಸುತ್ತಾನೆ) +ಗೊರವಯ್ಯ : ನೋಡಿ ಎಂಗದೆ ನಮುಂತ ಬಡವರ ಪರಸಂಗ ? ವಸಿ ಮೆತ್‌ಗ್ ಮಾತಾಡಿದ್ರೆ ಹೊಟ್ಟಿಗೇನು +ತಿಂದಿಲ್ವಾ ಅಂತೀರ, ಜೋರಾಗಿ ಕೇಳಿದ್ರೆ ಕುಡಕಂಡ್ ಬಂದಿದ್ದೀಯ ಅಂತೀರ. ಅದೆಲ್ಲಾ ಬ್ಯಾಡ ಮರ ಕಡಿಯಾಕ್ ಈಗೇನ್ ಆರ್ಡ್ರು ಮಾಡವರಾ, ಇಲ್ವಾ? +ವೆಂಕಟೇಶಯ್ಯ : ನಿಂತ ಕಾಲ ಮೇಲೆ ಆರ್ಡರ್ ಮಾಡಿ ಅಂದ್ರೆ ಮಾಡೋಕಾಗಲ್ಲ ಕಣಯ್ಯ. ಅದಕ್ಕೆಲ್ಲಾ +ಇನ್ಸ್‌ಪೆಕ್ಷನ್ ಮಾಡಬೇಕು ಅಂತ ಅವತ್ತೇ ಹೇಳಲಿಲ್ವ ನಾನು. +ಗೊರವಯ್ಯ : ಅವತ್ತಿಂದಾ ಅದನ್ನೇ ಏಳ್ತಿದ್ದೀರ! ಯಾವತ್ತ ಸ್ವಾಮಿ ನೀವು ಬಂದು ನೋಡಾದು? ನಿಮ್ಮ ಕೆಲ್ಸ +ಆಗಬೇಕಾದ್ರೆ ಎಂಗ್ ಮಾಡಿಸಿಕಂಡ್ರಿ ನೋಡಿ. +ವೆಂಕಟೇಶಯ್ಯ : ಅಪ್ಪಾ, ನೀನು ಆ ಕೆಲ್ಸ ಮಾಡಿಕೊಟ್ಟಿದ್ದರಿಂದಾನೇ ನಾವೀಗ ನಾವು ಅನುಭವಿಸ್ತಾ +ಇರೋದು… +ಗೊರವಯ್ಯ : ನಾನು ಏನ್ ಮಾಡ್ದೆ ಅಂತ ಅಂಗಂತೀರ ಸ್ವಾಮಿ ? +ವೆಂಕಟೇಶಯ್ಯ : ಸುಮ್ನೆ ಮಾತಾಡಿ ನನ್ನ ಪಿತ್ಥ ನೆತ್ತಿಗೇರಿಸಬೇಡ ಹೋಗಯ್ಯ… +ಗೊರವಯ್ಯ : ಇಂಥಾ ಮಾತಾಡಿ ನಮ್ಮ ಹೊಟ್ಟೆ ಉರುಸ್‌ಬ್ಯಾಡಿ ಸ್ವಾಮಿ, ನಿಮ್ಮ ಕಾಲಿಗ್ ಬೀಳ್ತೀನಿ… +ವೆಂಕಟೇಶಯ್ಯ : ಏ ಕೆಂಪಾ ತಳ್ಳೋ ಇವನ್ನಾ… +ಎಂದು ಮತ್ತೆ ಚೇಂಬರ್‌ನೊಳಕ್ಕೆ ಹೋಗುತ್ತಾನೆ. +ಜವಾನ ಕೆಂಪಯ್ಯ ಗೊರವಯ್ಯನ ರೆಟ್ಟೆಗೆ ಕೈ ಹಾಕಿ ಹೊರಕ್ಕೆ ಎಳೆದೊಯ್ಯುತ್ತಾನೆ. +ಜವಾನ : ಬಾರಜ್ಜ ನೀನು… +ಗೊರವಯ್ಯ : ನಾನ್ ಬರಾಕಿಲ್ಲ, ನನ್ನ ಮನೆ ಬಿದ್ದೋಗುತ್ತೆ…. +ಜವಾನ : ನಡಿಯಪ್ಪ ನೀನು… ಸುಮ್ಮನೆ ತೊಂದ್ರೆ ಕೊಡ್ಬೇಡ… +ಗೊರವಯ್ಯ : ನನ್ನೇ ಆಚೆಗೆ ತಳ್‌ತೀಯೇನಲೇ ? ನಾನು ಪಾರ್ವತಿ ಮಗಾ, ನಾನ್ ಸುಮ್ಕಿದ್ರೂ ನಮ್ಮವ್ವ +ಸುಮ್ಮಕಿರೋಲ್ಲ. ನಿನ್ನ ನೋಡ್ಕಂತಳೇ….. +ಎಂದು ಕೂಗಾಡುತ್ತಲೇ ಹೋಗುತ್ತಾನೆ. +ಕಟ್ ಟು… +ದೃಶ್ಯ – ೬೦ / ರಾತ್ರಿ / ರಘುನಂದನ್ ಮನೆ +ರಘುನಂದನ್ ರಾತ್ರಿ ಮನೆಯಲ್ಲಿ ಚಿಂತೆಯಲ್ಲಿದ್ದಾನೆ. +ಸುಮ ಅವನ ಸ್ಥಿತಿ ಗಮನಿಸುತ್ತಾಳೆ. +ಸುಮ : ರಘು ಯಾಕೆ ಇನ್ನೂ ಮಲಗಿಲ್ಲ… +ರಘುನಂದನ್ : ನಂಗೆ ನಿದ್ದೆ ಬರತಿಲ್ಲ ಸುಮ… ನಾನು ಇಲ್ಲದ ಐಬೀನ ಇಲ್ಲ ಅನ್ನಿಸೋಕೆ +ಹೋಗಬಾರದಿತ್ತು… I ಜiಜ ಚಿ misಣಚಿಞe…. +ಸುಮ : ಹೀಗಾಗುತ್ತೆ ಅಂತ ನಾನು exಠಿeಛಿಣ ಮಾಡಲಿಲ್ಲ +ರಘುನಂದನ್ : ನಾನೊಂದು ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಹಾಗ್ ಆಗಿದ್ದೀನಿ. ಹೊರಗೆಬರೋಕೆ ಯಾವ +ದಾರೀನು ಕಾಣಿಸ್ತಿಲ್ಲ. +ಸುಮ ಅವನ ಸ್ಥಿತಿ ನೋಡಿ ಮರುಗುತ್ತಾಳೆ. +ಕಟ್ ಟು… +ದೃಶ್ಯ – ೬೧ / ಮುಂಜಾನೆ / ರಘುನಂದನ್ ಮನೆ +ಬೆಳಗ್ಗೆ ಚುಮು ಚುಮು ಇರುವಾಗಲೇ ವೆಂಕಟೇಶಯ್ಯ ರಘುನಂದನ್ ಮನೆಯ ಬಾಗಿಲು ತಟ್ಟುತ್ತಾನೆ. +ಸುಮ ಬಂದು ಬಾಗಿಲು ತೆರೆಯುತ್ತಾಳೆ. +ವೆಂಕಟೇಶಯ್ಯ : ನಮಸ್ಕಾರ ತಾಯಿ, ಸಾಹೇಬ್ರು ಎದ್ದಿದಾರ? +ಸುಮ : ಇಲ್ಲ ಮಲಗಿದ್ದಾರೆ. ರಾತ್ರಿಯೆಲ್ಲಾ ತುಂಬಾ ತಲೆ ಕೆಡಿಸಿಕೊಂಡಿದ್ರು… +ವೆಂಕಟೇಶಯ್ಯ : ಅದಕ್ಕೇ ಒಂದು ಪರಿಹಾರ ಯೋಚ್ನೆ ಮಾಡ್ಕೊಂಡು ಹೇಳೋಣ ಅಂತ ಓಡೋಡಿ ಬಂದೆ +ತಾಯಿ. ಸ್ವಲ್ಪ ಏಳಿಸ್ತೀರ? +ಸುಮ ಏಳಿಸಲು ತಿರುಗಿದಾಗ ರಘು ಎದ್ದು ಹೊರಬಂದಿರುತ್ತಾನೆ. +ವೆಂಕಟೇಶಯ್ಯ : ಸಾರ್, ಆ ಗೊರವಯ್ಯ ಯಾವುದೋ ಹಳೇ ಬಿಲ್ಡಿಂಗ್ ನೋಡ್ಕಂಡ್‌ಬಂದು ಅದೇ ಐಬಿ +ಅಂದ್ನಲ್ಲಾ… ಈಗ ಅದನ್ನೇ ನಾವು ಐಬಿ ಅಂತ ಹೆಡ್ ಆಫೀಸಿನವರಿಗೆ ಯಾಕ್ ತೋರಿಸಬಾರದು? +ರಘುನಂದನ್ : ಈಗಾಗಲೇ ಮಾಡಿರೋದು ಸಾಲ್ದು ಅಂತ ಇನ್ನೊಂದು ತಪ್ಪು ಮಾಡು ಅಂತಿದ್ದೀರ? +ವೆಂಕಟೇಶಯ್ಯ : ಇಲ್ಲ ಸಾರ್, ಆಗಿರೋ ತಪ್ಪನ್ನು ಸರಿಪಡಿಸೋ ಮಾರ್ಗ ಹೇಳ್ತಾ ಇದ್ದೀನಿ. ನಾವು +ಬಿಲ್ಡಿಂಗ್ ಹಾಳಾಗಿದೆ ಅಂತ ಈಗಾಗಲೇ ರಿಪೋರ್ಟ್ ಕೊಟ್ಟಿದ್ದೀವಿ. ಈಗ ತೋರಿಸೋದು ಅಂತಾ ಹಾಳಾಗಿರೋ ಒಂದು ಬಿಲ್ಡಿಂಗು. ಹ್ಯಾಗಿದ್ರೂ ಅದನ್ನ ಒಡೆದು ಹೊಸಾದು ಕಟ್ಟೋದು ತಾನೆ? +ರಘುನಂದನ್ : ಏನೋಪ್ಪ, ನಂಗ್ ಒಂದೂ ತೋಚ್ತಾ ಇಲ್ಲ. +ಸುಮ : ರಘು, ವೆಂಕಟೇಶಯ್ಯನವರು ಹೇಳೋದೆ ಸರಿ ಅನ್ನಿಸುತ್ತೆ. ಈಗಾಗಲೇ ಐಬಿ ಇದೆ ಅಂತ ಹೇಳಿ ಸಿಕ್ಕಿ +ಹಾಕಿಕೊಂಡು ಆಗಿದೆ, ಯಾವುದಾದರೂ ಒಂದು ಬಿಲ್ಡಿಂಗ್‌ನ ತೋರಿಸಲೇ ಬೇಕಲ್ಲ… +ರಘುನಂದನ್ : ನೀವು ತೋರಿಸೋದು ಯಾವ ಬಿಲ್ಡಿಂಗೋ ಏನೋ? ಅವ್ರು ಒಪ್ಪಬೇಕಲ್ಲ? +ವೆಂಕಟೇಶಯ್ಯ : ಅದೆಲ್ಲಾ ವ್ಯವಸ್ಥೆ ಮಾಡೋಣ ಸಾರ್. ಅವ್ರು ಬರೋಕ್ ಮುಂಚೆ ನಾವು ಒಂದ್ಸಲ +ಹೋಗಿ ನೋಡಿಕೊಂಡು ಬಂದ್ರೆ ಆಯ್ತು. +ರಘುನಂದನ್ : ಅದೇನ್ ಮಾಡ್ತೀರೋ ಮಾಡಿ… ನೀರಲ್ಲಿ ಬಿದ್ದಾಗಿದೆಯಲ್ಲಾ! +ಎಂದು ಹೇಳಿ ರಘುನಂದನ್ ನಿಟ್ಟುಸಿರು ಬಿಡುತ್ತಾನೆ. +ದೃಶ್ಯ – ೬೨ / ಹಗಲು / ಗೊರವಯ್ಯನ ಮನೆ +ವೆಂಕಟೇಶಯ್ಯ ಗೊರವಯ್ಯನ ಮನೆಗೆ ಸೈಕಲ್‌ನಲ್ಲಿ ಬರುತ್ತಾನೆ. +ಗೊರವಯ್ಯ ಹೊರಗೆ ಏನೋ ಕೆಲಸ ಮಾಡುತ್ತಿದ್ದಾನೆ. ವೆಂಕಟೇಶಯನನ್ನು ನೋಡಿ ಸಂತೋಷವಾಗುತ್ತದೆ. +ಗೊರವಯ್ಯ : ಬುದ್ಧೀ, ಅಡ್ಡಬಿದ್ದೆ ಬುದ್ಧೀ… +ವೆಂಕಟೇಶಯ್ಯ : ಹುಂ… ನಮಸ್ಕಾರಪ್ಪ… +ಗೊರವಯ್ಯ : ನಿನ್ನೆ ನನ್ನ ಮನ್ಸು ರೋಸೋಗಿತ್ತು ಸ್ವಾಮಿ, ಏನೇನೋ ಅಂದುಬಿಟ್ಟೆ… ಏನು ಅಂದ್ಕೋಬೇಡಿ. +ವೆಂಕಟೇಶಯ್ಯ : ಇರಲಿ ಬಿಡಯ್ಯ… (ಮರದತ್ತ ನೋಡಿ) ಓಹೋಹೋ ಇದೇನೋ ಮರ… +ಗೊರವಯ್ಯ : ಹುಂ ಸ್ವಾಮಿ, ನೋಡಿ ಎಂಗೆ ಬಿರುಕು ಬಿಟ್ಟೈತೆ… ನೀವು ಅಟ್ಟೀ ವಳಿಕ್ ಬಂದ್ರೆ ಬೇರು +ತೋರಿಸ್ತೀನಿ. +ವೆಂಕಟೇಶಯ್ಯ : ಇರಲಿ ಬಿಡು… ಇಲ್ಲೇ ಕಾಣ್ಸುತ್ತಲ್ಲ. +ಗೊರವಯ್ಯ : ಸ್ವಾಮಿ, ಹಾವಿನ ಹೆಡೆ ಕೆಳ್ಗಿನ ಕಪ್ಪೆಯಂಗೆ ಬದುಕ್ತಿದ್ದೀನಿ ಬುದ್ಧೀ. ಯಾವಾಗ +ಮಗುಚಿಕಳುತ್ತೋ ಭಗವಂತನೇ ಬಲ್ಲ ? +ವೆಂಕಟೇಶಯ್ಯ : ಏನೂ ಯೋಚ್ನೆ ಮಾಡಬೇಡ. ಇದನ್ನ ಕಡೀಬೇಕಾದ್ದೆ… +ಗೊರವಯ್ಯ : ಅಂಗಾರೆ, ಇವತ್ತು ನಾಳೇಲಿ ಕಡಿಸಿಬಿಡ್ಲಾ ಬುದ್ಧಿ… +ವೆಂಕಟೇಶಯ್ಯ : ಅಂಗೆಲ್ಲಾ ಮಾಡಿಗೀಡಿಯ. ಸಾಹೇಬ್ರು ಬಂದು ಒಂದ್ಸಲ ನೋಡಿ ಆರ್ಡ್ರು ಮಾಡಿಬಿಡ್ಲೀ +ಆಮೇಲೆ ಕಡ್ಸಿಬಿಡೂವಂತೆ… +ಗೊರವಯ್ಯ : ನೀವೇ ವಸಿ ಇಂಗಿಂಗೆ ಅಂತ ಏಳಿಬುಡಿ ಬುದ್ಧೀ. ಅವರೊಂದ್ಸಲ ಯಾಕೆ? +ವೆಂಕಟೇಶಯ್ಯ : ನಂಗೆ ಆ ಅಧಿಕಾರ ಇಲ್ಲಪ್ಪ… ಈಗ ಏನಾಗಿದೆ ಅಂದ್ರೆ? +(ಮುಂದಿನ ದೃಶ್ಯ ಒಂದು ಸಣ್ಣ ಹಾಡಿನ ರೂಪದಲ್ಲಿ ಬರುತ್ತದೆ) +ವೆಂಕಟೇಶಯ್ಯ ಗೊರವಯ್ಯನನ್ನು ಏನೋ ಮಾತನಾಡುವುದು. +ಅವನು ಮೊದಲು ತಾನು ಬರುವುದಿಲ್ಲ ಎನ್ನುವುದು. ವೆಂಕಟೇಶಯ್ಯ ಅವನನ್ನು ಪುಸಲಾಯಿಸುವುದು…. ಇತ್ಯಾದಿ +ದೃಶ್ಯ – ೬೩ / ಹಗಲು / ಕರಡಿಗುಡ್ಡ +ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ +ಜೋಡು ಹೆಂಡಿರಂಜಿ ಓಡಿ ಹೋಗುವಾಗ ಗೊಡೆ ಬಿದ್ದು ಬಯಲಾಯಿತಲ್ಲಾ \ಪ\ +ಎಚ್ಚರವಗೊಳಲಿಲ್ಲ ಮನವೆ ಹುಚ್ಚನಾದೆನಲ್ಲಾ ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲಾ +ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ, ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲಾ +ಯೋಗವು ಬಂತಲ್ಲ ಬದುಕು ವಿ +ಭಾಗವಾಯಿತಲ್ಲಾ ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲ. +ಜೀಪಿನಲ್ಲಿ ರಘುನಂದನ್, ವೆಂಕಟೇಶಯ್ಯ ಮತ್ತು ಗೊರವಯ್ಯ ಬರುತ್ತಾರೆ. +ಗುಡ್ಡ ಹತ್ತಿ ಒಂದು ಸ್ಥಳಕ್ಕೆ ಬರುತ್ತಾರೆ. +ಅಲ್ಲಿ ಬಿಲ್ಡಿಂಗ್ ಒಂದರ ಅಸ್ಥಿಪಂಜರ ಕಾಣುತ್ತದೆ. ಅದರ ಚಾವಣಿ ಹಾರಿಹೋಗಿದೆ. +ಸುತ್ತಲೂ ಬರಿಯ ಗೋಡೆಗಳು ನಿಂತಿವೆ. +ಅದನ್ನು ನೋಡಿ ವೆಂಕಟೇಶಯ್ಯ ಮತ್ತು ರಘುನಂದನ್‌ಗೆ ಅಚ್ಚರಿಯಾಗುತ್ತದೆ. +ಗೊರವಯ್ಯನೊಂದಿಗೆ ಏನೋ ಮಾತನಾಡುತ್ತಾರೆ. +ಷಾಟ್ ಬದಲಾದರೆ ಈ ಬಾರಿ ರಘುನಂದನ್ ಆಫೀಸರ್ ಜೊತೆಯಲ್ಲಿದ್ದಾನೆ. +ಜೊತೆಯಲ್ಲಿ ಆಫೀಸರ್ ಸಹಾಯಕನೊಬ್ಬನಿದ್ದಾನೆ. ಅವನು ಕೆಲವು ಛಾಯಾಚಿತ್ರಗಳನ್ನು ತೆಗೆಯುತ್ತಾನೆ. +(ಇಲ್ಲಿಗೆ ಹಾಡೂ ಮುಗಿಯುತ್ತದೆ) +ಅಫೀಸರ್ : ಇದೇನ್ರೀ ಇಷ್ಟೊಂದು ಹಾಳಾಗಿದೆ! +ವೆಂಕಟೇಶಯ್ಯ : ಈಗೊಂದು ಆರು ತಿಂಗಳ ಹಿಂದೆ ಭರ್ಜರಿ ಮಳೆ ಬಂತು ಸಾರ್. ಅವತ್ತು ಬೀಸಿದ +ಬಿರುಗಾಳಿಗೆ ಇದರ ಸೂರೆಲ್ಲಾ ಹಾರಿ ಹೋಗಿದೆ ಸಾರ್. (ದೂರದಲ್ಲಿ ಕೈ ಕಟ್ಟಿ ನಿಂತಿದ್ದ ಗೊರವಯ್ಯನನ್ನು ತೋರಿಸಿ) ಇವನೇ ಸಾರ್ ಇದರ ಮೇಟಿ. +ಆಫೀಸರ್ : veಡಿಥಿ bಚಿಜ! ಇಷ್ಟೊಂದು ಹಾಳಾಗಿದೆ ಅಂತ ನಾನು ಅಂದುಕೊಂಡಿರಲಿಲ್ಲ. ಮಿ.ರಘುನಂದನ್, +ಇದನ್ನ ತಕ್ಷಣ ಡೆಮಾಲಿಶ್ ಮಾಡಿಸಿ. ನೆಕ್ಟ್ ವೀಕ್‌ನಲ್ಲೇ ಠಿಚಿಥಿmeಟಿಣ ಡಿeಟeಚಿse ಆಗೋ ಹಾಗೆ ನಾನು ನೋಡ್ಕೋತೀನಿ. Iಟಿ ಣhe meಚಿಟಿ ಣime ಇದೇ ಜಾಗದಲ್ಲಿ ಹೊಸಾ ಗೆಸ್ಟ್ ಹೌಸ್ ಕಟ್ಟೋದಿಕ್ಕೆ ಒಂದು ಡೀಟೈಲ್ಡ್ ಪ್ರಪೋಸಲ್ ಕಳಿಸಿ, ನಾನು ಅಪ್ರೂವ್ ಮಾಡಿಸ್ತೀನಿ. ಅ‌ಒ ಬಂದು iಟಿಚಿuguಡಿಚಿಣe ಮಾಡಬೇಕು ಹಾಗ್ ಮಾಡ್ತೀನಿ. ಓಕೆ… ಒoಟಿಜಚಿಥಿ ಬಂದು ನನ್ನ ಠಿeಡಿsoಟಿಚಿಟ ಆಗಿ ಮೀಟ್ ಮಾಡಿ. +ರಘುನಂದನ್ : ಥಿes siಡಿ… ಖಿhಚಿಟಿಞ ಥಿou veಡಿಥಿ muಛಿh siಡಿ +ರಘುನಂದನ್ ಮುಖದಲ್ಲಿ ಸಮಾಧಾನ ಕಾಣುತ್ತದೆ. ಕಟ್ ಟು.. +ದೃಶ್ಯ – ೬೪ / ಹಗಲು / ಗೊರವಯ್ಯನ ಮನೆ +ಗೊರವಯ್ಯನ ಮನೆಯ ಬಿರುಕು ದೊಡ್ದದಾಗಿದೆ. +ಗೊರವಯ್ಯ ಬಿರುಕಿಗೆ ಈ ಹಿಂದೆ ಮೆತ್ತಿದ್ದ ಮಣ್ನನು ಎರೆದು ಹಾಕುತ್ತಿದ್ದಾನೆ. +ಅದೇ ಊರಿನ ಯುವಕನೊಬ್ಬ ಅದನ್ನು ನೋಡಿ, +ಯುವಕ : ಇದೇನ್ ನಿಂಗ್ ಹುಚ್ಚು-ಗಿಚ್ಚು ಹಿಡದೈತೇನಜ್ಜ, ಮೆತ್ತಿರಾ ಮಣ್ಣೆಲ್ಲಾ ಹಂಗ್ ಎರೆದ್ ಹಾಕ್ತಾ +ಇದ್ದೀಯ! ಹಿಂಗಾದರೆ ಗೋಡೆ ಉಳಿಯುತ್ತಾ? +ಗೊರವಯ್ಯ : ಅದು ಅಂಗಲ್ಲ ಕಣಪ್ಪ, ದೊಡ್ಡ ಸಾಹೇಬ್ರು ಈ ಗೋಡೆ ನೋಡೋಕ್ ಬರತೀನಿ ಅಂದವ್ರೆ… +ಅವ್ರು ಬಂದಾಗ ಬಿರುಕು ದೊಡ್ಡದಾಗಿ ಇರಬೇಕು. ನಾವು ಮಣ್ಣು ಮೆತ್ತಿ ಸರಿ ಮಾಡ್ಕಂಡಿದ್ದೀವಿ ಅಂತ ಗೊತ್ತಾದ್ರೆ ಎಲ್ಲಾ ಸರಿಯಾಗೇ ಐತಲ್ಲ, ಮರ ಯಾಕ್ ಕಡೀಬೇಕು? ಅಂತ ಕೇಳ್ತಾರೆ. ಆಗ ಏನು ಉತ್ರ ಕೊಡ್ತೀಯ? +ಎಂದು ತನ್ನ ಕೆಲಸ ಮುಂದುವರಿಸುತ್ತಾನೆ. ಯುವಕ ಗೊರವಯ್ಯನನ್ನು ವಿಚಿತ್ರವಾಗಿ ನೋಡುತ್ತಾನೆ. +ಕಟ್ ಟು… +ದೃಶ್ಯ – ೬೫ / ಹಗಲು / ಹೆಡ್ ಆಫೀಸ್ +ಹೆಡ್ ಆಫೀಸಿನಲ್ಲಿ ರಘುನಂದನ್ ಕುಳಿತಿದ್ದಾನೆ. ಆಫೀಸರ್ ಛಾಯಾಚಿತ್ರಗಳನ್ನು ನೋಡುತ್ತಾ ಕುಳಿತಿದ್ದಾರೆ. +ಫೋಟೋ ನೋಡುವುದನ್ನು ಮುಂದುವರೆಸುತ್ತಲೇ ಮಾತಾಡುತ್ತಾರೆ. +ಆಫೀಸರ್ : ರಘುನಂದನ್, ಕರಡಿಗುಡ್ಡ ಏರಿದ್ದು ನಂಗೆ ಹೊಸಾ ಎಕ್ಸ್‌ಪೀರಿಯನ್ಸು…. +ರಘುನಂದನ್ : ಹೌದು ಸಾರ್ ನಂಗೂ ಇದೆಲ್ಲಾ ಹೊಸಾ ಎಕ್ಸ್‌ಪೀರಿಯನ್ಸೇ… +ಆಫೀಸರ್ : ನೀವು ಆ ಐಬಿ ಡೆಮಾಲಿಷನ್‌ಗೆ ಎಷ್ಟು ಹಣ್ದ ಕೇಳಿದ್ರಿ, ೫೦ ಸಾವಿರ ಅಲ್ವ ? +ರಘುನಂದನ್ : ಹೌದು ಸಾರ್… +ಆಫೀಸರ್ : ಸಿಟೀಲಿ ಏನಾದ್ರು ಮನೆ-ಗಿನೆ ಕಟ್ಟಿಸ್ತಾ ಇದ್ದೀರ? +ರಘುನಂದನ್ : ಇಲ್ಲ ಸಾರ್… ಯಾಕ್ ಸಾರ್? +ಆಫೀಸರ್ : ನೋಡಿ, ಬಿಲ್ಡಿಂಗ್ ಕಟ್ಟಿಸೋದಿಕ್ಕು ಖರ್ಚಾಗುತ್ತೆ; ಕೆಡುವೋದಿಕ್ಕೂ ಖರ್ಚಾಗುತ್ತೆ ಆದ್ರೆ ಇಲ್ಲದೇ +ಇರೋ ಕಟ್ಟಡಾನ ಇಲ್ಲ ಅನ್ನಿಸೋಕೆ ಖರ್ಚಾಗುತ್ತೆ ಅಂತ ಫಸ್ಟ್ ಟೈಂ ನಂಗ್ ಗೊತ್ತಾಯ್ತು… +ರಘುನಂದನ್ ಗಾಬರಿಯಿಂದ ಆಫೀಸರ್ ಮುಖ ನೋಡುತ್ತಾನೆ. +ಆಫೀಸರ್ : ಏನು ರಘುನಂದನ್ ನನ್ನನ್ನ ಸುಲಭವಾಗಿ ಫೂಲ್ ಮಾಡಬಹುದು ಅಂತ ತಿಳ್ಕೊಂಡರಾ? +ಯಾವುದೋ ಹಳೇ ಚರ್ಚ್ ತೋರಿಸಿ ಐಬಿ ಅಂದ್ರೆ ನಂಬೋವಷ್ಟು ಮೂರ್ಖನೇನ್ರೀ ನಾನು? +ರಘುನಂದನ್ : ಸಾರ್ ಅದೂ ಐಬೀನೆ ಸಾರ್. ಚರ್ಚಲ್ಲ… +ಆಫೀಸರ್ : ಈ ಫೋಟೋ ನೋಡಿ, ಇದರಲ್ಲಿ ಒಂದು ಪೋರ್ಷನ್ ಮಾರ್ಕ್ ಮಾಡಿದ್ದೀನಲ್ಲ, ಅದನ್ನ +ನೋಡಿ. ನಿಮಗೆ ಅದು ಹಳೇ ಚರ್ಚ್ ಅಲ್ಲವೋ ಹೌದೋ ಅಂತ ಗೊತ್ತಾಗುತ್ತೆ. ನಮ್ಮ ಹುಡುಗ ತುಂಬಾ ಶಾರ್ಪು ಹುಡುಕ್ಕೊಂಡು ಪೋಟೋ ತೆಗೆದಿದ್ದಾನೆ. +ಅದನ್ನು ನೋಡಿ ರಘುನಂದನ್ ಗಾಬರಿಯಾಗುತ್ತಾನೆ. ಅವನ ಮುಖದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಭಾವ. +ರಘುನಂದನ್ : I ಚಿm soಡಿಡಿಥಿ siಡಿ…. +ಆಫೀಸರ್ : ನೀವೂ ಹೀಗೆಂತ ಅಂದುಕೊಂಡಿರಲಿಲ್ಲ ಙou mಚಿಥಿ hಚಿve ಣo ಜಿಚಿಛಿe ಣhe ಛಿoಟಿsequeಟಿಛಿess… +ಕಟ್ ಟು… +ದೃಶ್ಯ – ೬೬ / ರಾತ್ರಿ / ರಘುನಂದನ್ ಮನೆ +ಮನೆಯಲ್ಲಿ ಸುಮ ಆಫೀಸರ್ ಕೊಟ್ಟ ನೋಟೀಸ್ ಅನ್ನು ಓದುತ್ತಿದ್ದಾಳೆ. +ಅವಳ ಕಣ್ಣಿನಿಂದ ನೀರು ಹರಿಯುತ್ತದೆ. ತಲೆಯೆತ್ತಿ ಗಂಡನನ್ನು ನೋಡುತ್ತಾಳೆ. ಅವನು ವಿಸ್ಕಿಯನ್ನು ಗುಟಕರಿಸುತ್ತಿದ್ದಾನೆ. +ಸುಮ : ನಿಮ್ಮನ್ನ ಸಸ್ಪೆಂಡ್ ಮಾಡ್ತಾರಾ? +ರಘುನಂದನ್ : ಏನು ಬೇಕಾದ್ರು ಆಗಬಹುದು. ನಿನ್ನ ಮಾತು ಆ ವೆಂಕಟೇಶಯ್ಯನ ಮಾತು ಕೊನೆಗೆ ಆ +ಗೊರವಯ್ಯನ ಮಾತೂ ಕೇಳ್ದೆ; ಸುಳ್ಳ ಆದೆ. ನಾನು ದುಡ್ಡು ಹೊಡೀತನಂತೆ. ನಾಳೇ ಪೇಪರ್‌ನಲ್ಲಿ ಬರುತ್ತೆ ನೋಡು. ‘ಇಲ್ಲದ ಕಟ್ಟಡ ಇಲ್ಲ ಎನ್ನಿಸಲು ಸರ್ಕಾರಿ ಅಧಿಕಾರಿಯ ಪ್ರಯತ್ನ-ಬಯಲು’ ಅಂತ ದೊಡ್ಡದಾಗಿ ಬರುತ್ತೆ. ಆಮೇಲೆ ನಾನು ಎಲ್ಲೂ ಮುಖ ಎತ್ತಿಕೊಂಡು ತಿರುಗೋ ಹಾಗಿಲ್ಲ… +ಎಂದು ಮತ್ತಷ್ಟು ವಿಸ್ಕಿಯನ್ನು ಬಾಟಲಿಯಿಂದ ಗ್ಲಾಸಿಗೆ ಸುರಿದುಕೊಳ್ಳುತ್ತಾನೆ. +ಸುಮ ವ್ಯಥೆಯಿಂದ ಇದನ್ನೆಲ್ಲಾ ನೋಡುತ್ತಾಳೆ. +ಕಟ್ ಟು… +ದೃಶ್ಯ – ೬೭ / ರಾತ್ರಿ / ಮಾವನ ಮನೆ +ಸುಮ ತಂದೆಯ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾಳೆ. +ತಂದೆ : ಇಷ್ಟಕ್ಕೆಲ್ಲಾ ನೀನು ಯಾಕಮ್ಮ ಕಣ್ಣೀರು ಹಾಕ್ತೀಯ? ಇದೇನು ಅಷ್ಟೊಂದು ದೊಡ್ಡ ವಿಷ್ಯ ಅಲ್ಲ. +ನಾನು ನೋಡ್ಕೋತೀನಿ. ಅಲ್ಲಿ ನಿನ್ನ ಗಂಡ ಒಬ್ನೇ ಇರತಾನೆ. ನೀನು ಊರಿಗೆ ಹೋಗು. ಈ ಸಂದರ್ಭದಲ್ಲಿ ನೀನು ಅವನ ಜೊತೇಲಿ ಇರೋದು ಒಳ್ಳೇದು. +ಸುಮ ಕಣ್ಣೀರು ಒರೆಸಿಕೊಳ್ಳುತ್ತಾಳೆ. +ಕಟ್ ಟು… +ದೃಶ್ಯ – ೬೮ / ರಾತ್ರಿ / ಗೊರವಯ್ಯನ ಮನೆ +ಹೊರಗೆ ಮಳೆ ಸುರಿಯುತ್ತಿದೆ. +ಮುರುಕಲು ಗುಡಿಸಲಿನಲ್ಲಿ ಗೊರವಯ್ಯ ಮತ್ತು ಗೌರಿ ಮಲಗಿದ್ದಾರೆ. +ಗೋಡೆಯ ಬಿರುಕು ದೊಡ್ಡದಾಗಿರುವುದರಿಂದ ಅಲ್ಲಿಂದ ಬಂದ ಮಿಂಚು ಗುಡಿಸಲನ್ನು ಪ್ರಕಾಶಮಾನವಾಗಿಸುತ್ತಿದೆ. +ಗೋಡೆಯಿಂದ ನೀರು ಮಣ್ಣಿನೊಂದಿಗೆ ಬೆರೆತು ಬರುತ್ತಿದೆ. +ಮಧ್ಯರಾತ್ರಿ ಗೋಡೆಯ ತುಂಡೊಂದು ಹುಡುಗಿಯ ಕೈ ಮೇಲೆ ಬೀಳುತ್ತದೆ. +ಮಣ್ಣಿನ ಹೆಂಟೆ ಬಿದ್ದ ಪೆಟ್ಟಿಗೆ ಗೌರಿ ಕಿರುಚಿ ಏಳುತ್ತಾಳೆ. +ಗೊರವಯ್ಯನೂ ಏಳುತ್ತಾನೆ. +ಗೌರಿ ಮಣ್ಣಿನಲ್ಲಿ ಹೂತ ತನ್ನ ಕೈ ಆಚೆ ತೆಗೆಯಲು ಒದ್ದಾಡುತ್ತಿದ್ದಾಳೆ. +ಗೊರವಯ್ಯ ಮಣ್ಣನ್ನು ಬಗೆ ಮಾಡಿ ಕೈ ತೆಗೆಯುತ್ತಾನೆ. +ಅದನ್ನು ನೋಡಿ ಅವನ ಮುಖದಲ್ಲಿ ನೋವಿನ ಭಾವ ಕಾಣುತ್ತದೆ. ಅದು ನಿಧಾನವಾಗಿ ಕೋಪಕ್ಕೆ ತಿರುಗುತ್ತದೆ. +ಡಮರುಗದ ಕರ್ಕಶ ಶಬ್ದ ಅವನ ಮುಖದ ಮೇಲೆ ಪ್ರಾರಂಭವಾಗುತ್ತದೆ. +ಕತ್ತಲಲ್ಲಿ ಗೊರವಯ್ಯ ಡಮರುಗ ಬಾರಿಸಿಕೊಂಡು ರುದ್ರತಾಂಡವ ಮಾಡುತ್ತಾನೆ… +ದೃಶ್ಯ – ೬೯ / ಹಗಲು / ಹೆಡ್ ಆಫೀಸ್ +ಆಫೀಸರ್ ಮುಂದೆ ಕುಳಿತಿರುವ ರಘುನಂದನ್ +ಆಫೀಸರ್ : ಅಲ್ಲಾ ರಘುನಂದನ್ ನೀವು ತಿಡಿiಣeಡಿ ದಯಾನಂದ್ ಅವರ ಡಿeಟಚಿಣive ಅಂತ ಮೊದಲೇ +ಹೇಳಬಾರದೇನ್ರೀ? ನಿಮಿಗೆ ಗೊತ್ತಿಲ್ಲ, ನಾನು Uಟಿiveಡಿsiಣಥಿ ಯಲ್ಲಿ ಓದತಿರಬೇಕಾದ್ರೆ ನನ್ನ ಗುರುಗಳಾಗಿದ್ರು ಅವರು… ನಾನು Iಟಿಣeಡಿಟಿಚಿಟs ಠಿಚಿss ಮಾಡಿದ್ದೇ ಅವರ ಹೆಲ್ಪ್‌ನಿಂದ! ಊe is ಚಿ gಡಿeಚಿಣ mಚಿಟಿ! ಅಲ್ಲ ಅವರ ಅಳಿಯ ಅಂತ ಒಂದು ಮಾತು ಹೇಳಬಾರದಿತ್ತ ? +ರಘುನಂದನ್ : ನಂಗೆ ಆ ರೀತಿ ಹೆಸರಿನ ದುರುಪಯೋಗ ಇಷ್ಟ ಆಗಲ್ಲ ಸಾರ್… +ಆಫೀಸರ್ : ಆದ್ರೆ, ಅವರ ಹೆಸರು ಇಲ್ಲಿ ಪ್ರಸ್ತಾಪ ಆಗದೇ ಇದ್ರೆ ನಾನು ನಿಮ್ಮನ್ನ ಇಲ್ಲಿ ಕರಸ್ತಾನು ಇರಲಿಲ್ಲ; +ಈ Pಡಿobಟem soಟve ಮಾಡೋ ಪ್ರಯತ್ನಾನು ಮಾಡತಿರಲಿಲ್ಲ. +ರಘುನಂದನ್‌ಗೆ ಪೆಚ್ಚೆನಿಸುತ್ತದೆ. ಅನಿವಾರ್ಯವಾಗಿ ಸಹಿಸಿಕೊಂಡು ಕೂರುತ್ತಾನೆ. +ಅವನ ಸ್ಥಿತಿ ಪುರುಷೋತ್ತಮ್ ಸಾಹೇಬ್ರಿಗೆ ಅರ್ಥವಾಗುತ್ತದೆ. +ಆಫೀಸರ್ : (ಅನುನಯಿಸುತ್ತ) ನೋಡಿ ರಘುನಂದನ್ ನೀವು ಒಬ್ಬ ಸಿನ್ಸಿಯರ್ ಆಫೀಸರ್ ಅಂತ +ನಂಗೊತ್ತು. ನಿಮ್ಮಂತೋರು ಸರ್ಕಾರಿ ಸರ್ವೀಸ್‌ನಲ್ಲಿ ಇರಬೇಕು. ನಿಮಗೆ ಕೆಟ್ಟ ಹೆಸರು ಬರಬಾರದು ಅನ್ನೋದು ನನ್ನ ಉದ್ದೇಶ. ಮೇಲಾಗಿ ಈ ಪ್ರಕರಣದಲ್ಲಿ ನಿಮ್ಮ ತಪ್ಪೂ ಇಲ್ಲ ಅನ್ನಿ. ಏನೋ ಒಳ್ಳೇದು ಮಾಡೋಣ ಅಂತ ಹೋಗಿ ನೀವೇ ಸಿಕ್ಕಿ ಹಾಕಿಕೊಂಡ್ರಿ. ಇರಲಿ, ಆoಟಿ’ಣ ತಿoಡಿಡಿಥಿ ಎಲ್ಲ ಸರಿ ಮಾಡೋಣ. ತಕ್ಷಣಕ್ಕೆ ನೀವು ಒಂದು ಡಿeಠಿoಡಿಣ ಛಿಡಿeಚಿಣe ಮಾಡಿಕೊಡಬೇಕು. +ರಘುನಂದನ್ : ರಿಪೋರ್ಟ್!? ಏನ್ ರಿಪೋರ್ಟ್ ಸಾರ್? +ಆಫೀಸರ್ : Simಠಿಟe, ನೀವು ಆವತ್ತು ನನಗೆ ತೋರಿಸಿದ ಚರ್ಚ್ ಇದೆಯಲ್ಲಾ ಅದನ್ನೇ ಐಬಿ ಅಂತ ನಾನು +ಒಪ್ಪಿಕೊಂಡು ಸರ್ಕಾರಕ್ಕು ಹೇಳ್ತೀನಿ. ಆದ್ರೆ ಅದು ಇಷ್ಟು ಬೇಗ ಹ್ಯಾಗೆ ಹಾಳಾಯ್ತು ಅನ್ನೋದಕ್ಕೆ ಛಿoಟಿviಟಿಛಿiಟಿg ಇರೋತರ ರಿusಣiಜಿiಛಿಚಿಣioಟಿ ಯೋಚನೆ ಮಾಡಿ ಕೊಡಿ …. ಮುಂದಿನದು ನಂಗಿರಲಿ. +ರಘುನಂದನ್‌ಗೆ ಅವರ ಮಾತುಗಳು ಒಗಟಾಗಿ ಕಾಣಿಸುತ್ತವೆ. +ಕಟ್ ಟು… +ದೃಶ್ಯ – ೭೦ / ಹಗಲು / ಆಫೀಸ್ +ರಘುನಂದನ್ ಛೇಂಬರ್‌ನಲ್ಲಿ ವೆಂಕಟೇಶಯ್ಯ ಕುಳಿತು ಮಾತನಾಡುತ್ತಿದ್ದಾರೆ. +ವೆಂಕಟೇಶಯ್ಯ : ಹಾಗಾದ್ರೆ ನಾವು ಈಗ ಮುಂದೆ ಏನ್ ಮಾಡೋದು ಸಾರ್ ? +ರಘುನಂದನ್ : ನಂಗೊಂದೂ ತೋಚ್ತಾ ಇಲ್ಲ ವೆಂಕಟೇಶಯ್ಯ… ಆ ಬಂಗಲೆ ಸ್ಥಿತೀಗೆ ಬರೋದಿಕ್ಕೆ ಏನು +ಕಾರಣ ಕೊಡೋದು ? ಫರ್ನೀಚರ್ ಏನಾಯ್ತು ? ಕಿಟಕಿ ಬಾಗಿಲು ಏನಾದ್ವು? +ವೆಂಕಟೇಶಯ್ಯ : ನಾನು ತುಂಬಾ ಯೋಚನೆ ಮಾಡಿ ಒಂದು ಹಾದಿ ಹುಡುಕಿದ್ದೀನಿ ಸಾರ್… ಆದ್ರೆ ನೀವು +ಒಪ್ಪಬೇಕು ಅಷ್ಟೇ… +ರಘುನಂದನ್ : ಹೇಳಿ ಏನದು ? +ವೆಂಕಟೇಶಯ್ಯ : ಸಾರ್ ನಾವು ಅವತ್ತು ಗೊರವಯ್ಯನ್ನ ಮೇಟಿ ಅಂತ ಸಾಹೇಬ್ರಿಗೆ ತೋರಿಸಿದ್ವಲ್ಲಾ ಸಾರ್. +ಈಗ ಅವನೇ ಯಾರದೋ ಜೊತೆ ಸೇರಿಕೊಂಡು ಫರ್ನಿಚರ್ ಮತ್ತೊಂದೆಲ್ಲಾ ಮಾರಿಕೊಂಡು, ಮರ-ಮುಟ್ಟು, ಕಿಟಕಿ-ಬಾಗಿಲೆಲ್ಲ ಕಳ್ಳತನದಲ್ಲಿ ಸಾಗಿಸಿಬಿಟ್ಟಿದ್ದಾನೆ ಅಂತ ಅವನ ಮೇಲೆ ಒಂದು ಕಂಪ್ಲೇಂಟ್ ಕೊಟ್ಟುಬಿಡೋದು ಸಾರ್… +ರಘುನಂದನ್ : ಅಂದ್ರೆ ಗೊರವಯ್ಯನೇ ಅಲ್ಲಿ ಮೇಟಿ ಅಂತ ಹೇಳೋದ…. +ವೆಂಕಟೇಶಯ್ಯ : ಹೌದು ಸಾರ್… ನಾವು ಹಳೇ ಮೇಟಿ ಸಿದ್ಧಯ್ಯನ ಟಚ್ ಮಾಡೋಕೋದ್ರೆ ಏನೇನೋ +ಪ್ರಾಬ್ಲಂ ರೈಸ್ ಆಗುತ್ತೆ. ಅದಕ್ಕೆ ಗೊರವಯ್ಯನೇ ಅದ್ರ ಮೇಟಿ ಆಗಿದ್ದ ಅಂತ ಹೇಳಿಬಿಡೋದು… +ರಘುನಂದನ್ : (ದಿಗ್ಭ್ರಾಂತ) ಏನ್ ಮಾತಾಡ್ತಿದ್ದೀರಿ ವೆಂಕಟೇಶಯ್ಯ… ಪಾಪ! ಆ ಮುಗ್ಧ ಗೊರವಯ್ಯನ +ಮೇಲೆ ಸುಳ್ಳು ಆಪಾದನೆ ಹೊರಿಸೋದಾ ?! ನೋ… ಇಟ್ ಈಸ್ ನಾಟ್ ಫೇರ್… +ವೆಂಕಟೇಶಯ್ಯ : ಬೇರೆ ಏನೂ ದಾರಿ ಇಲ್ಲ ಸಾರ್… +ರಘುನಂದನ್ : ಆದ್ರೆ ಆ ಗೊರವಯ್ಯ ಯಾವ ತಪ್ಪೂ ಮಾಡ್ದೇ ಇದ್ರೂ ಕಳ್ಳ ಆಗಲ್ಲವೇನ್ರೀ ? +ವೆಂಕಟೇಶಯ್ಯ : ಹಾಗಲ್ಲ ಸಾರ್… ಆ ಗೊರವಯ್ಯನಿಗೆ ಹಿಂದಿಲ್ಲ ಮುಂದಿಲ್ಲ. ಅವನಿಗೆ ಈಗ ಬೇಕಿರೋದು +ಎರಡು ಹೊತ್ತಿನ ಊಟ ಅಷ್ಟೇ. ಅದಕ್ಕೋಸ್ಕರ ಬಿಸಿಲು-ಗಾಳಿ-ಮಳೆ ಅನ್ನದೆ ಮನೆ ಮನೆ ಅಲೀತಿರತಾನೆ… ನಾಳೆ ಜೈಲಿನಲ್ಲಿ ಅವನಿಗೆ ಕೂತಿದ್ದ ಕಡೆ ಊಟ ಹಾಕ್ತಾರಲ್ಲ ಸಾರ್. ಇದಕ್ಕಿಂತ ಇನ್ನೇನ್ ಬೇಕು ? +ರಘುನಂದನ್ ಮಾತು ಮರೆತವನಂತೆ ಕೂರುತ್ತಾನೆ. ಅವನ ಮುಂದೆ ಗೊರವಯ್ಯನ ಮುಖ ತೇಲಿ ಹೋಗುತ್ತದೆ. +ದೃಶ್ಯ- ೭೧ / ರಾತ್ರಿ / ರಘುನಂದನ್ ಮನೆ +ಮನೆಯಲ್ಲಿ ರಘುನಂದನ್ ಎದುರು ನಿಂತು ಸುಮ ಮಾತನಾಡುತ್ತಿದ್ದಾಳೆ. +ಸುಮ : ಇದು ಅನ್ಯಾಯ. ತುಂಬಾ ಅನ್ಯಾಯ. ಒಬ್ಬ iಟಿಟಿoಛಿeಟಿಣ ನ ಸಿಕ್ಕಿಹಾಕಿಸೋದಿಕ್ಕೆ ನೀವು ಹ್ಯಾಗೆ +ಒಪ್ಪಿಕೊಂಡ್ರಿ ರಘು ? +ರಘುನಂದನ್ : I ಜoಟಿ’ಣ hಚಿve ಚಿಟಿಥಿ sಚಿಥಿ! +ಸುಮ : ನೋಡಿ ರಘು, ನೀವು ಈ ಪ್ರಾಬ್ಲಂನ ಬೇರೆ ಹ್ಯಾಗಾದ್ರುs ssoಟve ಮಾಡ್ಕೊಳೊ ದಾರಿ ನೋಡಿ. +ಆದ್ರೆ ಯಾವ ಕಾರಣಕ್ಕೂ ಪಾಪ ಆ ಗೊರವಯ್ಯನ್ನ ಮಾತ್ರ ಸಿಕ್ಕಿ ಹಾಕಿಸಬೇಡಿ. ಅವನೊಬ್ಬ ಮುಗ್ಧ, ಅವನಿಗೆ ಸುಮ್ನೆ ತೊಂದ್ರೆ ಕೊಟ್ರೆ ನಾಳೆ ನಮಗೆ ಒಳ್ಳೇದಾಗಲ್ಲ. ನಾವು ಈಗ ಅನುಭವಿಸ್ತಾ ಇರೋದೆ ಸಾಕು. +ಎಂದು ಅಳುತ್ತಾ ಒಳ ಹೋಗುತ್ತಾಳೆ. +ರಘುನಂದನ್ ಮೌನವಾಗಿ ನಿಂತಿದ್ದಾನೆ. +ಕಟ್ ಟು… +ದೃಶ್ಯ- ೭೨ / ಹಗಲು / ಗೊರವಯ್ಯನ ಮನೆ +ರಘುನಂದನ್ ಮತ್ತು ವೆಂಕಟೇಶಯ್ಯ ಜೀಪಿನಲ್ಲಿ ಗೊರವಯ್ಯನ ಮನೆಯ ರಸ್ತೆಯಲ್ಲಿ ಬರುತ್ತಾರೆ. +ಇಬ್ಬರ ಮುಖದಲ್ಲೂ ದುಗುಡ ಮನೆ ಮಾಡಿದೆ. +ರಘುನಂದನ್ ಗಹನವಾದ ಚಿಂತೆಯಲ್ಲಿದ್ದಂತೆ ಕಾಣುತ್ತಿದ್ದಾನೆ. +ವೆಂಕಟೇಶಯ್ಯ : ಸಾರ್ ನೀವೇನು ಚಿಂತೆಮಾಡಬೇಡಿ ಸಾರ್. ಅವನತ್ರ ನಾನು ಮಾತಾಡಿ ಒಪ್ಪಿಸ್ತೀನಿ. +ರಘುನಂದನ್ : ನನ್ನ ಮನಸ್ಸು ಯಾಕೋ ಒಪ್ತಾ ಇಲ್ಲ ವೆಂಕಟೇಶಯ್ಯ. ನಡೀರಿ, ವಾಪಸ್ ಹೋಗೋಣ. +ರಘುನಂದನ್ : ನೀವು ಸಂಕೋಚ ಮಾಡಿಕೋಬೇಡಿ ಸಾರ್. ನಾನು ಊಚಿಟಿಜಟe ಮಾಡ್ತೀನಿ, ನೀವು +ಸುಮ್ನಿರಿ… +ಅಷ್ಟರಲ್ಲಿ ಗೊರವಯ್ಯನ ಮನೆಯ ರಸ್ತೆ ಬರುತ್ತದೆ. +ಗೊರವಯ್ಯನ ಮನೆಯ ಬಳಿ ಬಂದಂತೆ ಅಲ್ಲಿ ಜನರ ಗುಂಪು ಕಾಣುತ್ತದೆ. +ಜೀಪು ನಿಲ್ಲಿಸಿ ಇಳಿದು, ಜನರ ಮಧ್ಯೆ ಜಾಗ ಮಾಡಿಕೊಂಡು ಬಂದು ನೋಡುತ್ತಾರೆ. +ರಾತ್ರಿ ಬಿದ್ದ ಮಳೆಗೆ ಗೊರವಯ್ಯನ ಮನೆ ಉರುಳಿಬಿದ್ದಿದೆ. +ಅವಶೇಷಗಳ ಕೆಳಗೆ ಗೊರವಯ್ಯ ಸಿಕ್ಕಿ ಸತ್ತು ಹೋಗಿದ್ದಾನೆ. +ಬದಿಯಲ್ಲೇ ಗೌರಿ ಅಳುತ್ತಾ ನಿಂತಿದ್ದಾಳೆ. +ರಘುನಂದನ್ ದಿಗ್ಭ್ರಾಂತನಾಗಿ ಇದನ್ನು ನೋಡುತ್ತಾನೆ. +ಮನೆಯನ್ನು ಉರುಳಿಸಿದ ಮರದ ಬೇರು ಆಕಾಶಕ್ಕೆ ಮುಖ ಮಾಡಿದೆ. +ವೆಂಕಟೇಶಯ್ಯನಿಗೆ ಇದನ್ನು ನೋಡಿ ಮಾತೇ ಹೊರಡುತ್ತಿಲ್ಲ. +ರಘುನಂದನ್ ಒಂಟಿಯಾಗಿ ನಿಂತ ಗೌರಿಯ ಕಡೆ ನೋಡುತ್ತಾನೆ. +ಅವಳ ಬಳಿಗೆ ನಡೆದು ಅವಳ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ. +***** +ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […] +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_695.txt b/Kannada Sahitya/article_695.txt new file mode 100644 index 0000000000000000000000000000000000000000..13fa73a5e881c7f375ef1888cea50daee65d7a13 --- /dev/null +++ b/Kannada Sahitya/article_695.txt @@ -0,0 +1,48 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಪ್ರಕಾರವೊಂದು ಪಡೆದುಕೊಳ್ಳುವ ವಿಶಿಷ್ಟ ರೂಪ ಕೂಡ ಬಿಚ್ಚಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ನಮ್ಮ ಬಹುಮಟ್ಟಿನ ವಿಮರ್ಶಾ ಸಂವೇದನೆಯಲ್ಲಿ ತುಂಬಿರುವ ಒಂದು ಬಗೆಯ ‘ತಾತ್ವಿಕ ಮುಗ್ಧತೆ’ ಯಿಂದ ಬಿಡಿಸಿಕೊಳ್ಳುವ ಕ್ರಮ ಕೂಡ ಹೌದು ಎಂದು ನನ್ನ ನಂಬಿಕೆ. ನಮ್ಮ ಅಪ್ರಜ್ಞಾಪೂರ್ವಕ ಗೃಹೀತಗಳ ಕಡೆಗೆಷ್ಟು ನಿರ್ದಿಷ್ಟ ಗಮನಕೊಟ್ಟರೆ ನಮ್ಮ ವೈಚಾರಿಕ ಬಿಡುಗಡೆ ಕೂಡ ಪ್ರಾರಂಭವಾಗುತ್ತದೆ. ಕನ್ನಡ ವಿಮರ್ಶೆ ತನ್ನ ಸಂಸ್ಕೃತಿ ವಿಶಿಷ್ಟ ಪರಿಕಲ್ಪನೆಗಳನ್ನು ರೂಢಿಸಿಕೊಳ್ಳುವ ಮಹಾನ್ ಪ್ರಯತ್ನದ ಒಂದು ಅನಿವಾರ್ಯ ಅಂಗ ಇದು. +ಬರೀ ಕಥೆ ಕಾದಂಬರಿ ಅಲ್ಲ; ಒಂದು ದೀರ್ಘವಾದ ಕಥೆ ಕೂಡ ಕಾದಂಬರಿ ಅಲ್ಲ. ಪಾಶ್ಚಿಮಾತ್ಯ ವಿಮರ್ಶೆಯಲ್ಲಿ ಜಾರ್ಜ್ ಲುಕಾಚ್ಸ್, ಸಾರ್ತ್ರ್, ಗೋಲ್ದ್‌ಮನ್, ಹೆಗೆಲ್‌ರು ಈ ಸಮಸ್ಯೆಯನ್ನು ವಿಶ್ಲೇಷಿಸಿರುವ ರೀತಿ ಈ ಬಗ್ಗೆ ಒಂದು ಮಹತ್ವದ ಚರ್ಚೆಗೆ ಪ್ರಾರಂಭದ ನೆಲೆಯನ್ನೂ ಒದಗಿಸುತ್ತದೆ. ಇವರ ತಾತ್ವಿಕ ಚರ್ಚೆಯಲ್ಲಿ ಒಂದು ಸಾಮಾನ್ಯ ಅಂಶ ಇದೆ. ಅದನ್ನು ಹೀಗೆ ಸಂಗ್ರಹಿಸಬಹುದು: ಸಾಂಪ್ರದಾಯಿಕ ಕಥೆಯಲ್ಲಿ ಸಮಾಜದ ಜೊತೆಗೆ ಸಾವಯವ ಬಿರುಕು (ಆರ್ಗಾನಿಕ್ ಬ್ರೇಕ್ ಎಂಬರ್ಥದಲ್ಲಿ) ಇರುವುದಿಲ್ಲ. ಕಾದಂಬರಿ ಹುಟ್ಟಿಕೊಳ್ಳುವುದೇ ಈ ಸಾವಯವ ಬಿರುಕಿನ ಮೂಲ ನೆಲೆಯಲ್ಲಿ. ಕಾದಂಬರಿ ಪ್ರಕಾರದ ಒಳಗೇ ನಿರೂಪಣಾ ಪ್ರಜ್ಞೆ ಮತ್ತು ಸಮಾಜದ ನಡುವೆ ಒಂದು ಮೂಲಭೂತ ಸಾವಯವ ಛಿದ್ರೀಕರಣ ಇರುತ್ತದೆ. ಎಲ್ಲೋ ನಿರೂಪಣಾ ಪ್ರಜ್ಞೆ ಸಮಾಜದ ಸಮಷ್ಟಿ ಸ್ಥಿತಿಯಿಂದ ಸಿಡಿದು ದೂರ ನಿಂತಿರುತ್ತದೆ. ಜಾನಪದ ಕಥೆಯನ್ನೋ, ಸಾಂಪ್ರದಾಯಕ ಕಥನವನ್ನೋ ತೆಗೆದುಕೊಳ್ಳೋಣ. ಅಲ್ಲಿ ನಿರೂಪಣಾ ಪ್ರಜ್ಞೆ ಮತ್ತು ಕಥನ ಪರಿಕರಗಳ ನಡುವೆ ಒಂದು ಬಗೆಯ ಅಖಂಡ ಸಂಬಂಧವಿರುತ್ತದೆ. ನಿರೂಪಣಾ ಪ್ರಜ್ಞೆಗೆ ಜಾನಪದ ಮತ್ತಿತರ ಸಾಂಪ್ರದಾಯಕ ಕಥನಗಳಲ್ಲಿ ಮೂಲತನ್ಮಯ ಸ್ಥಿತಿ ಇರುತ್ತದೆ. +ಆದರೆ ಕಾದಂಬರಿಯ ಹುಟ್ಟು ಎಲ್ಲಿದೆ ಅಂದರೆ ನಿರೂಪಣಾ ಪ್ರಜ್ಞೆಗೆ ಈ ರೀತಿಯ ತನ್ಮಯತೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ. ಸಾಂಪ್ರದಾಯಕ ಕಥನದಲ್ಲಿ ಕಥಾಕೃತಿ ಎನ್ನುವುದು ಸೃಷ್ಟಿಯಾಗುವುದೇ ಅಖಂಡತೆಯ ನೆಲೆಯಲ್ಲಿ, ಕಾದಂಬರಿ ರೂಪಗೊಳ್ಳುವುದೇ ಇದಕ್ಕೆ ಪೂರ್ಣ ವಿರುದ್ಧವಾದ ಸ್ಥಿತಿಯಲ್ಲಿ. +ಇದನ್ನೇ ಪಾಶ್ಚಿಮಾತ್ಯ ವಿಮರ್ಶೆ ಹೀಗೆ ಹೇಳುತ್ತದೆ: ಬಂಡವಾಳಶಾಹಿ ನಾಗರಿಕತೆಯ ಉಗಮದ ಜೊತೆಗೆ ಕಾದಂಬರಿಯ ಉಗಮವೂ ಆಗುತ್ತದೆ. ಹೊಸ ಮಧ್ಯಮ ವರ್ಗವೊಂದು ಹುಟ್ಟುತ್ತದೆ. ಆ ಮಧ್ಯಮ ವರ್ಗದ ‘ಮಹಾಕಾವ್ಯ’ವೇ ಕಾದಂಬರಿ. (ಹೆಗೆಲ್‌ನ ವ್ಯಾಖ್ಯೆ ಇದು.) ಆದರೆ, ಈ ಹೊಸ ‘ಮಹಾಕಾವ್ಯ’ಕ್ಕೂ ಹಿಂದಿನ ಕಥನಕ್ಕೂ ಎಂಥ ವ್ಯತ್ಯಾಸವಿದೆ! ‘ದೇವರಿಲ್ಲದ ಜಗತ್ತಿನ ಮಹಾಕಾವ್ಯ’ ಇದು ಎಂದು ಲುಕಾಚ್ಸ್ ಹೇಳುವ ಮಾತಿನಲ್ಲಿ ಈ ರುದ್ರ ವ್ಯತ್ಯಾಸದ ಸ್ವರೂಪ ಸ್ಪಷ್ಟವಾಗಿ ಮೂಡುತ್ತದೆ. ಆಮೇಲೆ, ಇನ್ನೊಂದು ಮಾತನ್ನೂ ಕಾದಂಬರಿ ಮತ್ತು ಸಾಂಪ್ರದಾಯಕ ಕಥನಗಳ ಬಗ್ಗೆ ಸಾರ್ತ್ರ್ ಹೇಳುತ್ತಾನೆ. ಸಾಂಪ್ರದಾಯಕ ಕಥನಗಳಲ್ಲಿ ಗದ್ಯಕ್ಕಿರುವ ಗುಣ ಕಾಲಾತೀತವಾದದ್ದು. ಇಲ್ಲವೇ ಭೂತಕ್ಕೆ ಹೊಂದಿಕೊಂಡಂಥದ್ದು; ಇದು ಸಾಂಪ್ರದಾಯಕ ಕಥನದ ಗದ್ಯವನ್ನು ಓದುತ್ತಿದ್ದರೆ ತಕ್ಷಣ ಅನುಭವಕ್ಕೆ ಬರುವಂಥದು. ‘ಕಲಾವತಿ ಪರಿಣಯ’ದ ಯಾವುದೇ ಭಾಗ ತೆಗೆದು ಓದಿದರೂ ಈ ಮಾತು ಸ್ಪಷ್ಟವಾಗುತ್ತದೆ. ಹೀಗೆ ಕಾಲಾತೀತ ಅಥವಾ ಭೂತ ಅಥವಾ ವರ್ತಮಾನ ಸಾಂಪ್ರದಾಯಕ ಗದ್ಯವನ್ನು ಹಿಡಿತದಲ್ಲಿಟ್ಟಿರುತ್ತದೆ. ಪಾಶ್ಚಿಮಾತ್ಯ ಕಾದಂಬರೀ ಮೀಮಾಂಸೆಯಲ್ಲಿ ನಮಗೆ ಪ್ರಸ್ತುತವಾದ ಅಂಶ ಬಹುಶಃ ಇದೊಂದೇ. +ಇನ್ನೊಂದು ಮುಖ್ಯ ವ್ಯತ್ಯಾಸವನ್ನು ನಾವು ಸಾಂಪ್ರದಾಯಕ ಕಥನ ಮತ್ತು ಕಾದಂಬರಿಯ ನಡುವೆ ಕಾಣಲು ಸಾಧ್ಯ. ಅದು ಪಾತ್ರಗಳ ವರ್ತನೆಯ ಹಿಂದಿನ ಕಾರಣವನ್ನು ಹುಡುಕುವಿಕೆಯ ಕುರಿತದ್ದು. ಇವನು ಯಾಕೆ ಹೀಗೆ? ಯಾಕೆ ಹೀಗೆ ವರ್ತಿಸಿದ? ಈ ಕಾದಂಬರಿ ಪಾತ್ರನಿರ್ಮಾಣಕ್ಕೆ , ವರ್ತನೆಗೆ ನಿರ್ದಿಷ್ಟ ಕಾರಣಗಳನ್ನೂ ಹುಡುಕುವ ಕೆಲಸ ಮಾಡುತ್ತದೆ. ಈ ನೆಲೆಯಲ್ಲಿ ಕಾದಂಬರಿ ತನ್ನ ತಾತ್ವಿಕತೆಯನ್ನು ಕಂಡುಕೊಳ್ಳುವುದು ಕೂಡಾ. ವರ್ತನೆಗಳ ಸಾಮಾಜಿಕ ಮೂಲವನ್ನು ಹುಡುಕುವುದೇ ಕಾದಂಬರಿಯ ಮುಖ್ಯ ಲಕ್ಷಣ. +ಕಾದಂಬರಿಯ ಇನ್ನೊಂದು ಗುಣ ಎಂದರೆ ‘ಅವನತಮುಖೀ ಪ್ರಪಂಚದಲ್ಲಿ ಅಧಿಕೃತ ಮೌಲ್ಯಗಳ ಹುಡುಕಾಟ’. ಗೋಲ್ಡ್‌ಮನ್‌ನ ಮಾತು ಇದು. ಇವುಗಳೆಲ್ಲದರ ಹಿಂದೆ ಇರುವ ತಾತ್ವಿಕ ಚರ್ಚೆಯನ್ನು ಹೀಗೆ ಸಂಗ್ರಹಿಸಬಹುದು. ‘ಇಂಡಿವಿಜುವಲಿಸಂ’ (ವ್ಯಕ್ತಿ ವಿಶಿಷ್ಟ ಸಿದ್ಧಾಂತ)ನ ಉಗಮದ ಜೊತೆಗೆ ಕಾದಂಬರಿಯೂ ಹುಟ್ಟಿಕೊಳ್ಳುತ್ತದೆ. ಆಧುನಿಕ ವ್ಯಕ್ತಿಯೊಬ್ಬ, ಸಮಾಜದ ಜೊತೆಗೆ ಮೂಲಭೂತ ಸಂಘರ್ಷವಿರುವ ವ್ಯಕ್ತಿಯೊಬ್ಬ ಹುಟ್ಟಿಕೊಳ್ಳುತ್ತಾನೆ. ಕಾದಂಬರಿಯ ಹುಟ್ಟು ಇಲ್ಲಿಯೇ. ಇದು ಪಾಶ್ಚಿಮಾತ್ಯ ವಿಮರ್ಶೆ ಮತ್ತು ಪಾಶ್ಚಿಮಾತ್ಯ ಕಾದಂಬರಿಗಳ ಕಥೆ. +ಆದರೆ ಮೂರನೇ ಜಗತ್ತಿನ ಕಾದಂಬರಿಗೆ ಸಂಬಂಧಿಸಿದಂತೆ ಸನ್ನಿವೇಶ ಕೊಂಚ ಬೇರಾಗುತ್ತದೆ. ಇಲ್ಲಿ ಕಾದಂಬರಿಯ ಉಗಮ ಇರುವುದು ವಸಾಹತೀಕರಣದ ಜೊತೆಗೆ, ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಪರಕೀಯ ಯಜಮಾನ ಸಂಸ್ಕೃತಿ ಮತ್ತು ದೇಸೀ ಸಂಸ್ಕೃತಿಗಳ ನಡುವಿನ ಮುಖಾಮುಖಿಯಲ್ಲಿ ಕಾದಂಬರಿ ಹುಟ್ಟುತ್ತದೆ. ದೇಸಿ ಮಧ್ಯಮವರ್ಗ ರೂಪುಗೊಂಡು ತನಗೊಂದು ಆಧುನಿಕ ಸಾಂಸ್ಕೃತಿಕ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವಾಗ ಉಂಟಾಗುವ ದ್ವಂದ್ವದಲ್ಲಿ ಕಾದಂಬರಿ ಹುಟ್ಟುತ್ತದೆ. ಪರಕೀಯ ಯಜಮಾನ ಸಂಸ್ಕೃತಿ ದೇಸಿ ಮಧ್ಯಮವರ್ಗದ ಒಳಗೇ ಹೊಕ್ಕು ಭದ್ರವಾಗಿ ಕೂತಿದೆ. ಅದು ಹಳೆಯ ದೇಸಿ ಜೊತೆಗೆ ಮುಖಾಮುಖಿಯಾಗಿ ದೇಸಿಯನ್ನು ಟೀಕಿಸುವ, ವಿಮರ್ಶಿಸುವ. ಅದನ್ನೂ ತನ್ನ ಜೊತೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ದೇಸಿ ಕೂಡಾ ತನಗೆ ಸಾಧ್ಯವಾದಷ್ಟು ಪ್ರತಿಭಟಣೆಯನ್ನು, ಪರಕೀಯ ಯಜಮಾನನನ್ನು ಟೀಕಿಸುವ ಕೆಲಸವನ್ನೂ ಮಾಡುತ್ತದೆ. ಭಾರತದ ಅನೇಕ ಭಾಷೆಗಳ ಮೊದಲ ಕಾದಂಬರಿಗಳ ಮೂಲ ಅನುಭವ ಇದು. ಹೀಗಾಗಿ ಇಲ್ಲಿ ಒಂದು ಇಡೀ ಜನಾಂಗದ ಅನುಭವದ ಆತ್ಮವಿಮರ್ಶೆ ಪ್ರಧಾನವಾಗಿ ಕಾಣುತ್ತದೆ. ಹೀಗಾಗಿ, ಇದರ ತಾರ್ಕಿಕ ಪರಿಣಾಮ ಎಂಬಂತೆ ಕಾದಂಬರಿ ಘಟನಾಪ್ರಧಾನವಾಗಿ ಬಿಡುತ್ತದೆ. ಸಾಮಾಜಿಕ ಗುಂಪುಗಳ ಅನುಭವ ಮುಖ್ಯ ನೆಲೆಗೆ ಬಂದು ನಿಂತು ಕಾದಂಬರಿಯನ್ನು ನಿಯಂತ್ರಿಸುತ್ತದೆ. (ಚಾರ್ಲ್ಸ್ ಲಾಸನ್ ಎಂಬ ವಿಮರ್ಶಕ ಇದನ್ನು ಚರ್ಚಿಸುತ್ತಾನೆ). +ನನ್ನ ಮುಂದಿನ ಮಾತುಗಳ, ವಿಶ್ಲೇಷಣಾ ಕ್ರಮಗಳ ಹಿಂದೆ ಕೆಲಸ ಮಾಡಿರುವ ಚೌಕಟ್ಟು ಮೇಲಿನದೇ. ಅಂದರೆ ಮುಖ್ಯವಾಗಿ ಇಲ್ಲಿ ನಮ್ಮ ಕಾದಂಬರಿಗಳು ಕೊಡುವ ಅನುಭವದ ಒಳಗಿನಿಂದಲೇ ವಿಮರ್ಶಾಸೂತ್ರವೊಂದನ್ನು ರೂಪಿಸುವ ಪ್ರಯತ್ನ ಮಾಡಿದ್ದೇನೆ. +೨ +ಆದರ್ಶ ಮತ್ತು ವಾಸ್ತವಗಳ ನಡುವಿನ ಸಂಬಂಧವನ್ನು ರೂಪಿಸುವುದು ಕಾದಂಬರೀ ರೂಪ. ಇಲ್ಲಿ ರೂಪ ಎನ್ನುವುದು ಕೃತಿಯ ವಸ್ತು, ಅದರ ತತ್ವ ಮತ್ತು ಜೀವನದರ್ಶನಗಳ ನಡುವಿನ ಅಂತರ್‌ಪ್ರಕ್ರಿಯೆಯಿಂದ ಸಿದ್ಧವಾಗುತ್ತದೆ. +ಉದಾಹರಣೆಗೆ ‘ಮಾಡಿದ್ದುಣ್ಣೋ ಮಹರಾಯ’ವನ್ನೆ ತೆಗೆದುಕೊಳ್ಳೋಣ. ಇದು ಮೂಲತಃ ಒಂದು ಸಾಂಪ್ರದಾಯಕ ಕಥನದ ಚೌಕಟ್ಟಿನೊಳಗೆ ನಿಂತು ಕಾದಂಬರಿಯನ್ನು ಒಳಗೊಳ್ಳುವ, ಕಾದಂಬರಿಯನ್ನು ಹೀರಿಕೊಳ್ಳಲು ಮಾಡಿರುವ ಪ್ರಯತ್ನ. ಸಾಂಪ್ರದಾಯಕ ಕಥನಗಳಲ್ಲಿ ಸಾಮಾನ್ಯ ತಂತ್ರವಾಗಿರುವ ಕತೆಯೊಳಗೊಂದು ಕತೆಯ ಸ್ವರೂಪ ಇದಕ್ಕಿದೆ. ಈ ಅಂಶ ಪುಟ್ಟಣ್ಣನವರಿಗೂ ಗೊತ್ತಿದೆ. ಅದಕ್ಕಾಗಿಯೇ ಅವರು ಈ ಕೃತಿಯ ಮುನ್ನುಡಿಯಲ್ಲಿ ಆ ಅಂಶವನ್ನು ಪ್ರಸ್ತಾಪಿಸುತ್ತಾರೆ. ಮೇಲುನೋಟಕ್ಕೆ ಅತ್ತಿತ್ತ ಚದುರಿಹೋದಂತೆ ಕಾಣುವ ಘಟನೆಗಳು ಕೂಡಾ ಮುಖ್ಯ ಪ್ಲಾಟ್‌ಗೆ ಸಂಬಂಧಿಸಿದ್ದೇ ಎಂದು ಬರೆಯುತ್ತಾರೆ. ಕಾದಂಬರಿಗೆ ಇರಲೇಬೇಕಾದ ಐಕ್ಯತೆಯ ಬಗ್ಗೆ ಗಮನವಿದ್ದೂ ‘ಸರಗತೆ’ಯ ರೂಪದ ಕಾರಣಕ್ಕಾಗಿ ಅದು ಸಾಧ್ಯವಾಗದೇ ಇರುವ ಕೃತಿ ಇದು. +ಈ ಹಿನ್ನೆಲೆಯಲ್ಲಿ ನನಗೆ ‘ಮಾಡಿದ್ದುಣ್ಣೊ ಮಹರಾಯ’ಕ್ಕಿಂತ ಹೆಚ್ಚು ಆಸಕ್ತಿ ಮೂಡಿಸಿರುವ ಕೃತಿ ’ಮುಸುಗ ತೆಗೆಯೇ ಮಾಯಾಂಗನೆ’. ಕನ್ನಡ ಕಾದಂಬರಿ ತನ್ನ ಭ್ರೂಣ ರೂಪದಿಂದ ಬೇರೆ ಬೇರೆ ರೂಪಗಳನ್ನು, ಹಂತಗಳನ್ನು ದಾಟಿ ಪ್ರಬುದ್ಧ ರೂಪವಾಗಿ ಕಾರಂತರಲ್ಲಿ, ಪುಟ್ಟಪ್ಪನವರಲ್ಲಿ ಫಲಿಸಿತು. ಆ ದೃಷ್ಟಿಯಿಂದ ’ಮುಸುಗ ತೆಗೆಯೇ ಮಾಯಾಂಗನೆ’ ಕಾದಂಬರಿ ಆಗುವ ಕಡೆಗಿನ ಒಂದು ದಾಪುಗಾಲು. +’ಮುಸುಗ ತೆಗೆಯೇ ಮಾಯಾಂಗನೆ’ಯಲ್ಲಿ ಪುಟ್ಟಣ್ಣನವರು ರಾಜತ್ವದ ನ್ಯಾಯಬದ್ಧತೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಅದು ಬದುಕುತ್ತದೆಯೇ, ಉಳಿಯುತ್ತದೆಯೇ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ವಾಚ್ಯದಲ್ಲಿ ಅದರ ಬಗ್ಗೆ ದೊಡ್ಡ ದೊಡ್ದ ಗೌರವವಿದ್ದಂತೆ ಕಂಡರೂ, ಕೃತಿಯ ಸಂವಿಧಾನದಲ್ಲಿ ಅದನ್ನು ನಿರಾಕರಿಸುತ್ತಾರೆ. ಅದು ಉಳಿಯುವುದಿಲ್ಲ ಅಂತ ಅವರಿಗೆ ಆಳವಾಗಿ ಅನ್ನಿಸಿಬಿಟ್ಟಿದೆ. ಮತ್ತು ಈ ಮೂಲಕ ಬಂಡವಾಳಶಾಹಿಯ ಉಗಮಕ್ಕೆ, ಆ ನಾಗರಿಕತೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಪತ್ತೇದಾರಿ ಕಾದಂಬರಿ. ಉದ್ದಕ್ಕೂ ನಿರೂಪಕ ಮಾತಾಡುತ್ತಾ, ಟೀಕಿಸುತ್ತಾ ಬರುತ್ತಾನೆ. ನಿರೂಪಕನ ಮನಸ್ಸಿನಲ್ಲಿ ಆಗಲೇ ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಬಗೆಗೆ ಒಂದು ಸ್ಪಷ್ಟವಾದ ಚಿತ್ರ ಬಂದುಬಿಟ್ಟಿದೆ. ಕಾದಂಬರಿಕಾರನ ಮನಸ್ಸು ಮತ್ತು ಮೌಲ್ಯಗಳು ಹಳೆಯ ಕಾಲದವು. ಹೊಸ ಯುಗ – ಬಂಡವಾಳಶಾಹಿಯುಗ – ಲೇಖಕರ ತೀವ್ರ ಟೀಕೆಗೆ ಗುರಿಯಾಗಿದೆ. ಕಾದಂಬರಿಯ ಉದ್ದಕ್ಕೂ ಪುನರಾವರ್ತನೆಯಾಗುವ ಅಂಶ ಇದು. ಒಂದು ಪುಟ್ಟ ಟೀಕೆಯನ್ನು ಇಲ್ಲಿ ಉದಾಹರಿಸುತ್ತೇನೆ. “ಪರದೇಶಿಗಳು, ದಿಕ್ಕುಗೆಟ್ಟವರು ಅಂದರೆ ಅವರನ್ನು ಆದರಿಸುವ ಧರ್ಮಗುಣವು ನಮ್ಮ ಜನರಲ್ಲಿ ಬಲವಾಗಿಯೇ ಇತ್ತು. ಬಂದ ಅತಿಥಿಗಳನ್ನು ‘ಏನಾದರೂ ಕೆಲಸಮಾಡು, ದುಡಿದು ಸಂಪಾದನೆ ಮಾಡು, ಆಚೆಗೆ ನಡೆ, ನಿನ್ನಂಥಹ ಮುಟ್ಟಿಲಿಗಳಿಂದಲೇ ನಮ್ಮ ದೇಶವು ಹಾಳಾಯಿತೆಂದು’ ಅಟ್ಟಿ ಹರಿಯುವ ಕೋಣೆಮನೆ ಶೂರರು, ದೇಶಾಭಿಮಾನಿಗಳು ಆಗ ಇನ್ನೂ ಹುಟ್ಟಿರಲಿಲ್ಲ.” ಈ ಮಾತನ್ನೂ ಗಮನಿಸಿ: “ಧರ್ಮಗುಣವು ಹಿಂದೂಸ್ಥಾನವನ್ನು ಇನ್ನೂ ಬಿಟ್ಟಿರಲಿಲ್ಲ”. +ಈ ಹಿನ್ನೆಲೆಯಲ್ಲಿ ಶಿವರಾಮಕಾರಂತರಿಗೂ ಪುಟ್ಟಣ್ಣನವರಿಗೂ ಇರುವ ವ್ಯತ್ಯಾಸವನ್ನು ಗಮನಿಸಿ. ಬಂಡವಾಳಶಾಹಿ ನಾಗರಿಕತೆಯ ಸತ್ವವೇ ದುಡಿಮೆಯ ಪರಮೋಚ್ಚತೆ. ಅದು ಬೆಳೆಯುವುದೇ ನಿರ್ದಯ ದಕ್ಷತೆಯ ಆಧಾರದ ಮೇಲೆ. ಕಾರಂತರ ಕೃತಿಗಳ ಮೌಲ್ಯ ನಿಂತ್ತಿರುವುದೇ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಮಾಣಿಕವಾಗಿ, ದಕ್ಷತೆಯಿಮ್ದ ದುಡಿಯಬೇಕು ಎಂಬ ನೆಲೆಯಲ್ಲಿ. ಹೀಗಾಗಿ ಕಾರಂತ ಮತ್ತು ಪುಟ್ಟಣ್ಣನವರಿಬ್ಬರೂ ಎರಡು ಬೇರೆ ಬೇರೆ ಯುಗಗಲ, ಮೌಲ್ಯಗಳ ಪ್ರತಿನಿಧಿಗಳು. +ಆದ್ದರಿಂದಲೇ, ‘ಮುಸುಗ ತೆಗೆಯೇ ಮಾಯಾಂಗನೆ’ಯಲ್ಲಿ ಎರಡು ಲೋಕಗಳ ಸಹ-ಅಸ್ತಿತ್ವವನ್ನು ಕಾಣುತ್ತೇವೆ. ಹಳೆಯ ಲೋಕ ಕಥೆಯಲ್ಲಿ, ಘಟನೆಗಳಲ್ಲಿ, ವಿವರಗಳಲ್ಲಿ ಇದ್ದರೆ, ಹೊಸಲೋಕ ಎನ್ನುವುದು ನಿರೂಪಕನ ಪ್ರಜ್ಞೆಯಲ್ಲಿ ದಟ್ಟವಾಗಿ ನಿಂತಿದೆ. ಪದಾರ್ಥ ಹಳೆಯ ಲೋಕದ್ದು, ಪ್ರಜ್ಞೆ ಹೊಸಲೋಕದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿರುವಂಥದ್ದು. ವಾಸ್ತವ ಮತ್ತು ಆದರ್ಶಗಳ ನಡುವಿನ ತೀಕ್ಷ್ಣ ಸಂಘರ್ಷವನ್ನು ಅದು ಗ್ರಹಿಸಿರುವ ಕಾರಣಕ್ಕಾಗಿಯೇ ಕಾದಂಬರಿ ಅಗೋಚರದ ಕಡೆಗೆ ದೊಡ್ದ ಹೆಜ್ಜೆಯನ್ನು ಹಾಕಿದೆ. ಈ ಕೃತಿಯಲ್ಲಿ ಕಡೆಗೆ ಒಂದು ಥರ ಶುಭಮಂಗಳದ ಪ್ರಸ್ತಾಪ ಬಂದು ಬಿಡುತ್ತದೆ. ಎಲ್ಲವೂ ಸರಿ ಹೋಯಿತು, ಇನ್ನೇನು ಯೋಚನೆ ಮಾಡಬೇಕಿಲ್ಲ ಅನ್ನುವ ಸ್ಥಿತಿ ಬರುತ್ತದೆ. ಪ್ರಭುಗಳು ಕಥಾನಾಯಕನನ್ನು ಕರೆದು ಸತ್ಕರಿಸುತ್ತಾರೆ. ಆಗ ಪ್ರಭುಗಳು ಹೇಳುವ ಮಾತು ಇಡೀ ಕೃತಿಯನ್ನು ಹೊಸ ಎತ್ತರಕ್ಕೆ ಒಯ್ದುಬಿಡುತ್ತದೆ. ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಈ ಮಾತಿನಲ್ಲಿ ಇಡೀ ವ್ಯವಸ್ಥೆಯ ಯೋಗ್ಯತೆ, ನ್ಯಾಯಬದ್ಧತೆ ಪರೀಕ್ಷೆಯಾಗಿ ಬಿಡುತ್ತದೆ. +ಪ್ರಭುಗಳು ಹೇಳುತ್ತಾರೆ: “ಇಂಥ ಘಟಕರೂ, ಸಾಹಸಿಗಳೂ ನಮಗೆ ದೊರೆಯುವುದು ಅಪೂರ್ವ. ಇಂಥವರು ತಾವಾಗಿಯೇ ನಮ್ಮಲ್ಲಿಗೆ ಬರುವುದಿಲ್ಲ. (ಯಾಕೆಂದರೆ ಈ ಮಾತು ಕಾದಂಬರಿಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವುದು. ಮಹಾರಾಜರ ಸುತ್ತ ನಿಜವಾದ ಪ್ರಾಮಾಣಿಕರು ಶ್ರದ್ಧಾವಂತರು ಯಾರೂ ಇರುವುದಿಲ್ಲ.) ಒಂದು ವೇಳೆ ಯಾರಾದರೂ ಹಠಾತ್ತಾಗಿ ಬಂದರೂ, ನಮ್ಮ ಸುತ್ತಮುತ್ತ ಓಡಾಡಿಕೊಂಡು ನಮ್ಮನ್ನು ಸ್ತೋತ್ರಮಾಡುತ್ತಾ, ಅರಮನೆಯಿಂದ ಬೇಕಾದ್ದನ್ನು ದೋಚಿಕೊಂಡು ತಮ್ಮ ಹೊಟ್ಟೆ ತುಂಬಿಕೊಳ್ಳುತ್ತಾ, ಸಮಯದಲ್ಲಿ ನಮಗೇ ಎರಡು ಬಗೆಯುತ್ತಾ ಇರುವ ಪರಮನೀಚರು, ಅಂಥವನು ನಮ್ಮ ದೃಷ್ಟಿಗೆ ಬೀಳದಂತೆಯೇ ಮಾಡಿ ನಮ್ಮ ಈ ಲೋಕವೆಲ್ಲಾ ಈ ಖೂಳರೇ ಎನ್ನುವ ಹಾಗೆ, ಹಾಗೂ ಅರಮನೆ ಎನ್ನುವುದು ಕಾರಾಗೃಹವೆನ್ನುವ ಹಾಗೆ ಮಾಡಿಬಿಟ್ಟಿದ್ದಾರೆ. ದೊರೆತನ ಮಾಡುವವನಿಗೆ ದೈವ ಕೃಪೆಯಿಂದ ನಿಮ್ಮಂತಹ ಸತ್‌ಪುರುಷರ ಸಹವಾಸ ದೊರೆಯಬೇಕೇ ಹೊರತು ಮತ್ತೆ ಬೇರೆ ಮೋಕ್ಷವೇ ಇಲ್ಲ”. +ಪ್ರಭುಗಳ ಮಾತಿನಲ್ಲಿರುವ ನಿರಾಶಾವಾದವನ್ನು ಗಮನಿಸಿ. +ಈ ಕೃತ್ರಿಮ ಘಟನೆಗಳು ಏನು ಹೇಳುತ್ತಾ ಇವೆ? ಅವುಗಳ ತರ್ಕ ಏನು ಹೇಳುತ್ತಾ ಇದೆ? ಮಹಾರಾಜರ ಆಡಳಿತದ ಆದರ್ಶ ಅದು. ಪುಟ್ಟಣ್ಣನವರು ಬೇರು ಬಿಟ್ಟಿರುವುದೂ ಆ ಜಗತ್ತಿನ ಒಳಗಡೆಯೇ. ಆದರೆ ವಾಸ್ತವ ತರ್ಕ ಬೇರೆ. ಮಹಾರಾಜರ ಪ್ರಭುತ್ವ ಎಷ್ಟೇ ಘನವಾದ ಆದರ್ಶದ ಮೇಲೆ ನಿಂತಿದ್ದರೂ ಅದು ಬದುಕೋದಿಲ್ಲ. ಆದ್ದರಿಂದ, ಇಲ್ಲಿ ಅದರ ಸೋಲು ಅನಿವಾರ್ಯ ಎಂಬ ಧ್ವನಿಯನ್ನು ಪುಟ್ಟಣ್ಣನವರು ಮೂಡಿಸುತ್ತಾರೆ. +ಅಂದರೆ ಈ ಕಾದಂಬರಿ ನಿಂತಿರುವುದು ನಾಶವಾಗುತ್ತಿರುವ ವ್ಯವಸ್ಥೆ, ಮೌಲ್ಯಗಳ ನೆಲದಲ್ಲಿ. ನಾಶವಾಗುತ್ತಿರುವ ಆದರ್ಶದ ಮೇಲೆ ಈ ಕಾದಂಬರಿ ನಿಂತಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. +‘ಇಂದಿರಾಬಾಯಿ’ಗೂ ’ಮುಸುಗ ತೆಗೆಯೇ ಮಾಯಾಂಗನೆ’ ಕೃತಿಗೂ ಈ ದೃಷ್ಟಿಯಿಂದ ಇರುವ ವ್ಯತ್ಯಾಸ ತುಂಬ ಕುತೂಹಲಕಾರಿ. ‘ಇಂದಿರಾಬಾಯಿ’ಯಲ್ಲಿ ಇರುವಂಥ ಆದರ್ಶ ಯಾವುದೆಂದರೆ, ಕಾದಂಬರಿಯಲ್ಲೇ ನಿಜವಾಗಿಬಿಡುವ ಆದರ್ಶ ಅದು. ‘ಇಂದಿರಾಬಾಯಿ’ ಕಾದಂಬರಿಯಲ್ಲಿ ವಾಸ್ತವ ಮತ್ತು ಆದರ್ಶಗಳೆರಡೂ ಬೆರೆತು ಹೋಗುತ್ತವೆ. ಇದು ನಿಂತಿರುವುದು ಕೃತಿಯಲ್ಲೇ ಸಾಕ್ಷಾತ್ಕಾರಗೊಳ್ಳುವ ಆದರ್ಶದ ಮೇಲೆ. ಆ ಕಾದಂಬರಿಯ ಬಂಧದಲ್ಲಿ ಈ ಅಂಶ ಸ್ಪಷ್ಟವಾಗಿ ಮೂಡಿದೆ. +ಈ ಕಾದಂಬರಿಯಲ್ಲಿ ಪರಸ್ಪರ ವಿರೋಧೀ ಶಕ್ತಿಗಳ ನಡುವೆ ಪೂರ್ಣ ಪ್ರಮಾಣದ ಘರ್ಷಣೆ ಇಲ್ಲ. ಇಂದಿರಾಬಾಯಿ ನಮಗೆ ಗೊತ್ತಿರುವ ಪೂರಾ ಪ್ಯಾಸೀವ್ ಪಾತ್ರ. ಅಲ್ಲಿ ಭಾಸ್ಕರರಾಯ ಮತ್ತು ಆತನ ವಿರೋಧೀ ಮೌಲ್ಯಗಳ ನಡುವೆ ಪೂರ್ಣ ಪ್ರಮಾಣದ ಸಂಘರ್ಷವೇ ಇಲ್ಲ. ನಾಟಕೀಯ ಮುಖಾಮುಖಿಯೇ ಇಲ್ಲ. ಕಲಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಕೂಡಾ ಅನಿವಾರ್ಯವಾಗಿದ್ದ ಪ್ರಸಂಗ ಅದು. ಆದರೆ ಅದು ಘಟಿಸುವುದೇ ಇಲ್ಲ. ಯಾಕೆ ಹೀಗೆ? ಈ ಪ್ರಶ್ನೆ ಈ ಕಾದಂಬರಿಯ ಅತ್ಯಂತ ಮುಖ್ಯ ಪ್ರಶ್ನೆ ಎಂದು ನಾನು ಭಾವಿಸಿದ್ದೇನೆ. ಇಲ್ಲಿ ಮೊದಲಿನಿಂದಲೇ ಈ ಘರ್ಷಣೆ ಪರಿಹಾರವಾಗಿ ಬಿಟ್ಟಿದೆ. ಮೊದಲಿನಿಂದಲೂ ಭೀಮರಾಯ ಮತ್ತು ಆತನ ಹೆಂಡತಿ ಖಳರೇ. ಅವರ ವ್ಯಕ್ತಿತ್ವದಲ್ಲಿ ಯಾವ ಒಂದು ಒಳ್ಳೆಯ ಅಂಶವೂ ಇಲ್ಲ. ತಮ್ಮ ಪಾಪದ ಭಾರಕ್ಕೆ ತಾವೇ ಕುಸಿಯುವ ಹಾಗೆ ಅವರು ಕಡೆಯಲ್ಲಿ ಸೋತು ಹೋಗುತ್ತಾರೆ. +ಹೀಗೆ ಕಾದಂಬರಿಯಲ್ಲಿ ಮೊದಲಿನಿಂದಲೂ ಒಂದು ರೀತಿಯ ಚಾರಿತ್ರಿಕ ಖಚಿತತೆಯನ್ನೂ ಆಶಾವಾದವನ್ನೂ ಕಾಣುತ್ತೇವೆ. ಚರಿತ್ರೆಯಲ್ಲಿ ಗೆದ್ದವರ ದನಿ ಅದು. ಪುಟ್ಟಣ್ಣನವರು ಚರಿತ್ರೆಯ ಈಚೆ, ಗುಲ್ವಾಡಿಯವರು ಆಚೆ ದಡದಲ್ಲಿ. ಇಡೀ ಕಾದಂಬರಿಯಲ್ಲಿ ಕಾಣುವ ಸುಭದ್ರ ದೃಷ್ಟಿಕೋನ ಆಶ್ಚರ್ಯಕರವಾದದ್ದು. ಇಲ್ಲಿ ಗಮನಿಸತಕ್ಕ ಸಂಗತಿ ಎಂದರೆ ಕಾದಂಬರಿಯ ಕಚ್ಚಾವಸ್ತುವಿಗೇ ಆ ರೀತಿಯ ತರ್ಕ ಇದೆ ಎಂಬುದು. ಭೀಮರಾವ್-ಅಂಬಾಬಾಯಿ ಯಾಕೆ ಜಯಗಳಿಸಲಿಲ್ಲ? ಚರಿತ್ರೆಯಲ್ಲೇ ಅವರಿಗೆ ಜಯ ಸಿಕ್ಕಲಿಲ್ಲ. ಸಾರಸ್ವತ ಬ್ರಾಹ್ಮಣ ಜಗತ್ತು ತನ್ನ ಚರಿತ್ರೆಯಲ್ಲಿ ಅಂಥವರನ್ನು ನಿರಾಕರಿಸಿ ಬಿಟ್ಟಿತು. ಚರಿತ್ರೆಯಲ್ಲಿ ಗೆದ್ದದ್ದೇ ಕಾದಂಬರಿಯಲ್ಲೂ ಗೆದ್ದಿದೆ. ವಾಸ್ತವ ಮತ್ತು ಆದರ್ಶಗಳು ಬೆರೆತುಹೋಗುತ್ತ ಆದರ್ಶ ಸಾಕ್ಷಾತ್ಕಾರಗೊಳ್ಳುವ ಸ್ಥಿತಿ ಅದು ಎನ್ನುವ ಮಾತಿನ ಅರ್ಥ ಇದೇ ಆಗಿದೆ. ಈ ಕಾರಣಕ್ಕಾಗಿ ಕಲಾತ್ಮಕವಾಗಿ ಸಮಶಕ್ತಿಯ ವಾತಾವರಣ ಇಲ್ಲ. +ಈ ಘಟ್ಟ ಮುಗಿದ ಮೇಲೆ ಕನ್ನಡದ ಯಾವ ಮುಖ್ಯ ಕಾದಂಬರಿಯಲ್ಲೂ ವಾಸ್ತವ – ಆದರ್ಶಗಳ ನಡುವಿನ ಸಂಘರ್ಷ ಪರಿಹಾರವಾಗುವುದಿಲ್ಲ. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಚೋಮನದುಡಿ – ಹೀಗೆ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು. +ಯಾಕೆ ‘ಇಂದಿರಾಬಾಯಿ’ (‘ವಾಗ್ದೇವಿ’ಗೂ ಅನ್ವಯವಾಗುವ ಮಾತು ಇದು) ಕಾದಂಬರಿಯಲ್ಲಿ ಸಾಕ್ಷಾತ್ಕಾರಗೊಳ್ಳುವ ಆದರ್ಶವನ್ನು ಕಾಣುತ್ತೇವೆ? ವಾಸ್ತವದಲ್ಲೇ ಆದರ್ಶ ಫಲಿಸಿಬಿಡುತ್ತದಲ್ಲ, ಯಾಕೆ? ಕಾರಣ ಹುಡುಕಬೇಕಾದರೆ ನಾವು ಈ ಕಾದಂಬರಿಗಳನ್ನು ಸೃಷ್ಟಿಸಿದ ಸಾಮಾಜಿಕ ವರ್ಗದ ಅನುಭವಕ್ಕೆ, ಮನಸ್ಥಿತಿಗೆ ಹೋಗಬೇಕು. +ಕನ್ನಡದಲ್ಲಿ ಸಾಮಾಜಿಕ ಕಾದಂಬರಿ ಅನ್ನುವುದು ಹುಟ್ಟಿದ್ದು ಒಂದು ನಿರ್ದಿಷ್ಟ ಸಾಮಾಜಿಕ ಗುಂಪಿನ ಸ್ವ-ವಿಮರ್ಶೆಯಿಂದ. ಬ್ರಾಹ್ಮಣರ ಸ್ವ-ವಿಮರ್ಶೆಯಿಂದ. ಅದರಲ್ಲೂ ದಕ್ಷಿಣ ಕನ್ನಡದ ವಿಶೇಷ ಸಾಮಾಜಿಕ ಪರಿಸರ ಇಲ್ಲಿ ಮುಖ್ಯ. ಈ ವರ್ಗದ ಸಾಮಾಜಿಕ ಚಿಂತನೆಯ ತೀವ್ರ ರೂಪದ ಪರಿಣಾಮ ಅದು. ಒಂದು ರೀತಿಯ ಒಂದು ರೀತಿಯ ಉಗ್ರವಾದ ವಿಮರ್ಶೆಯನ್ನು, ಟೀಕೆಯನ್ನು ನಾವು ಕಾಣುತ್ತೇವೆ. ಈ ಉಗ್ರವಾದ ಸ್ವ-ವಿಮರ್ಶೆಗೆ, ಟೀಕೆಗೆ ಅವರು ತೆಗೆದುಕೊಂಡ ಭಾಷೆ ಪಶ್ಚಿಮದ್ದು. ಅವರ ಟೀಕೆಗಳು ಮೂರ್ತರೂಪದಲ್ಲಿ ಫಲಿಸಿಯೂ ಬಿಟ್ಟವು. ಈ ಸಾಮಾಜಿಕ ವರ್ಗದ ಕಾಳಜಿಗಳ ಸೀಮಿತತೆ ಮತ್ತು ತತ್‌ಕ್ಷಣತೆಯ ಪ್ರತಿಫಲನವನ್ನು ನಾವು ‘ಇಂದಿರಾಬಾಯಿ’ ‘ವಾಗ್ದೇವಿ’ಗಳಲ್ಲಿ ಕಾಣುತ್ತೇವೆ. ಚರಿತ್ರೆಯ ಅಲ್ಪಕಾಲದಲ್ಲಿ ನಿಜವಾಗಿಬಿಟ್ಟ ಕಾಳಜಿಗಳ ಸಾಮಾಜಿಕ ಅನುಭವದ ಗುಂಪಿನಿಂದ ಹುಟ್ಟಿದ ಕಾದಂಬರಿಗಳು ಇವು ಎಂಬ ಮಾತು ಮೂಲಭೂತವಾಗಿ ನಮ್ಮ ಮೊದಲ ಕಾದಂಬರಿಗಳ ಸೀಮಿತ ಪ್ರತಿಭೆಯನ್ನು ಹೇಳುತ್ತದೆ. +ತಮ್ಮ ತಕ್ಷಣದ ಆಚೆಗೆ ಹೋಗಿ ಒಟ್ಟು ಭಾರತೀಯ ಬದುಕಿನ ಮೂಲ ದುರಂತದ ಕಡೆಗೆ ಆ ಪ್ರತಿಭೆ ಮುಖ ಮಾಡಿದ್ದರೆ? ಹಾಗೆ ನಡೆಯಲಿಲ್ಲ. ಬಹುಶಃ ಕನ್ನಡ ಸಾಹಿತ್ಯದ ಮೊದಲ ಘಟ್ಟದ ಸೀಮಿತ ಸಂವೇದನೆಗೆ ಇದೂ ಕೂಡಾ ಒಂದು ಸಾಕ್ಷಿ. +***** +ಕೀಲಿಕರಣ: ರಾಘವೇಂದ್ರ ಉಡುಪ +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […] +ಪತ್ರಿಕಾ ಹೇಳಿಕೆ : ೧ ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ ನನ್ನ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೭೪ರಲ್ಲಿ ಎಂದು ಕಾಣುತ್ತದೆ. ಬರೆದೊಂದು ಲೇಖನವಿದೆ. ಗೌಡರನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_696.txt b/Kannada Sahitya/article_696.txt new file mode 100644 index 0000000000000000000000000000000000000000..cca5bb08bac230c643d5fa99f54030b5a59042e0 --- /dev/null +++ b/Kannada Sahitya/article_696.txt @@ -0,0 +1,101 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ನಮ್ಮದೊಂದು ಮನೆ ವಿನಾ +ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ +ಮುಂಜಾನೆ ರಂಗವಲ್ಲಿ; +ಕಿಲಿಕಿಲಿಸಿದಂತೆ ಇಡಿ ಗಲ್ಲಿ. +ಹಾಲಿಗೆ ಹೊರಟಾಗ ಹೊತ್ತಾರೆ +ಚಿತ್ತಾಪಹಾರಿ ಚಿತ್ತಾರ +ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ +ತೆರೆದು, ತುಂಬುವುದೆಂಥ ಭಾವಾವೇಗ! +ಈ ಡಿಸೈನಿನ ಹಾಗೆ ಅದಿಲ್ಲ, +ಜ್ಯಾಮಿತಿಯ ಗಡಸು, ಜಟಿಲ ಸೂತ್ರಗಳಿಗೆಲ್ಲ +ದಕ್ಕಿರುವುದಿಲ್ಲ ಮಿಗಿಲರ್ಥ, +ಮೃದು ಬೆರಳ ಪರಿಹಾರ; +ಕಾಲೇಜು ಕಲಿಯದ ಸುಮಂಗಲೆ +ರಂಗೋಲಿ ನೆವದಿಂದ ನೀಡಿದ್ದಾಳೆ +ಪ್ರತಿದಿನವೂ ಸೂತ್ರಗಳಿಗಾಕಾರ. +ಕೋನ ರೇಖೆಗಳೇನು! ಚೌಕ ವೃತ್ತಗಳೇನು! +ಸ್ವಸ್ತಿಕ, ಮಂಡಲ, ಚುಕ್ಕೆ; +ಯಾವುದೋ ಆರ್ಷ ಮಂತ್ರಕ್ಕೆ +ಒಡಮೂಡಿದೆ ಕಲೆಗಾರಿಕೆಯ ರೆಕ್ಕೆ. +– ೨ – +ರಂಗವಲ್ಲಿ +ನನ್ನೆದೆಯ ಕದ್ದದ್ದು ಚಿಕ್ಕಂದಿನಲ್ಲಿ, +ಇದರ ಶುರು ಮತ್ತೆ ಕೊನೆಯೆಲ್ಲಿ ಎಂದು +ಗೊತ್ತಾಗದೆ ನೊಂದು +ತಲೆ ಕೆಡಿಸಿಕೊಂಡಿದ್ದೇನೆ ಸಲಸಲಕ್ಕು; +ಈ ಬೆಳ್ಳನೆಯ ಕಗ್ಗಾಡ ಕಣ್ಣಿಂದ ಹೊಕ್ಕು. +ನೆರೆಯಾಕೆ ಬಾಗಿ +ಚಣದಲ್ಲಿ ಬಿಡಿಸಿದ ವಿಚಿತ್ರಕ್ಕೆ ಬೆರಗಾಗಿ +ಚಾಕ್‌ಪೀಸು ಪುಡಿಯಿಂದ ನಮ್ಮ ಪಡಸಾಲೆಯಲಿ +ನಕಲಿಸಲು ಹೋಗಿ ಸಲಸಲವು ಸೋತಿದ್ದೆ; +ಕಾಫರನ ಬಿರುದು ಹೆತ್ತವಳಿಂದ ಹೊತ್ತಿದ್ದೆ. +ಪಕ್ಕದ ಮನೆ ಅಯ್ಯಂಗಾರರ ವೇದವಲ್ಲಿ +ಬಿಡಿಸಿದ್ದರೊಮ್ಮೆ ತೊಡಕಾದ ರಂಗವಲ್ಲಿ. +ನೆಟ್ಟಕಣ್ಣಿನ ನನ್ನ ಕೌತುಕಕ್ಕೆ +ಮೆರೆಸಿ ತಮ್ಮೆಲ್ಲ ಹಲ್ಲ- +“ಸಾಬರು ಯಾಕೊ ರಂಗೋಲಿ ಇಡೊಲ್ಲ?” +-ದೇವರೇ, ಜವಾಬು ಗೊತ್ತಿದ್ದರೆ! +ನಾಚಿ ನೀರಾಗಿದ್ದೆ. +ನಮ್ಮ ಔಟ್‌ಹೌಸಿನ ಜನ +ಹೊಸ್ತಿಲ ಬಳಿ ರಂಗೋಲಿ ಬಿಡಿಸಿದ ಹೊತ್ತು +ಅಜ್ಜಿ ತೋರಿರಲು ಬಿರು ನುಡಿಯ ದೌಲತ್ತು +ಅಬ್ಬ! ನನಗೆಂಥ ನೋವಾಗಿತ್ತು. +ಒಮ್ಮೆ ಯಾವುದೋ ಚಿಂತೆಯಲಿ ಬಗೆ ನೆಟ್ಟು +ಮನೆಯೊಂದರ ರಂಗೋಲಿ ಮೇಲೆ ಅಡಿಯಿಟ್ಟು +ಸರಕ್ಕನೆಳೆದುಕೊಂಡಿದ್ದೆ ಕೆಂಡ ತುಳಿದವನಂತೆ; +ಜೊತೆಗೆ ಆ ಮನೆಯವರು ಕಂಡರೋ ಎಂಬ ಚಿಂತೆ. +– ೩ – +ಆರು ವರ್ಷದ ಹಿರಿಯ ಮಗ ಮೊನ್ನೆ +ಹಾಲು ತರಲು ಹೊರಟ ನನ್ನೊಡನೆ. +ರಂಗೋಲಿ ನೋಡುತ್ತ ನಡೆದಿದ್ದೆ; +ಗಮನಿಸಿದ ಅವನೆಂದ: +-ಯಾಕೆ ಬಿಡಿಸುತ್ತಾರೆ ಇವರು +ಹೀಗೆ ದಿನಾ ಚಕ್ರಬಂಧ?- +ವಿವರಣೆಯ ಗೆಣ್ಣು ಗಂಟುಗಳನ್ನೆಲ್ಲ +ಹೆರೆದು ಸಾಫುಗೊಳಿಸಿದ್ದೆ ಉತ್ತರದ ಗೆಲ್ಲ: +“ನಮ್ಮ ಪದ್ಧತಿಗೆ ಅದು ಸಲ್ಲ.” +ಮನದ ಗೊಂದಲ ತಿಳಿ ಮೊಗಕ್ಕೂ ಮುಸುಕಿ +ಯಾಕೆಂಬ ಮರುಪ್ರಶ್ನೆ ಮಿಂಚಿಸಿರಲು- +ತೆಪ್ಪಗಿರಿಸಲು ಮಗನ, ಪಲುಕಿದೆ ಹಳೆಯ ರಾಗ: +“ಖುರಾನ್, ಧರ್ಮಗ್ರಂಥಗಳಲ್ಲಿ ಹೇಳಿಲ್ಲ.” +ತೊರೆದು ಅರೆ ಗಳಿಗೆ ಮೌನದ ಹಕ್ಕೆ +ಹವ್ವನೆರಗಿತು ಮತ್ತೆ ಪ್ರಶ್ನೆ ಗರುಡನ ರೆಕ್ಕೆ; +-ಅಲ್ಲಿ ಹೇಳಿದ ಹಾಗೆ ಆಚರಿಸಬೇಕೆ?- +ಹೌದೆಂದೆ, ಪ್ರಶ್ನೆ ಸೋನೆಯ ಬೇಸರಕ್ಕೆ. +-ಮನೆಯ ಕಟ್ಟಿದ ಇಸ್ವಿ, +ನಿನ್ನ ಹೆಸರು, ಮನೆಯೆದುರಲ್ಲಿ +ಬರೆಸಿರುವೆಲ್ಲ, ಹೇಳಿದೆಯೆ ಖುರಾನಿನಲ್ಲಿ? +-ಆತ್ಮಸಾಕ್ಷಿಯ ಕತ್ತು ಹಿಚುಕಬಂದವನನ್ನ, +ಮಗುವೆನ್ನಬಹುದೆ ಇವನನ್ನ? +ಭೋಳೆ ಪ್ರಶ್ನೆ ಎಲ್ಲೆಲ್ಲಿಗೊ ಕೈಚಾಚಿ +ಪೇಚಿಗಿಡಿಸಿತು ನನ್ನ +ಆಚರಣೆ ನಂಬಿಕೆಗಳ ಮಡಿಕೆ ಮಡಿಕೆಯ ರಾಚಿ. +“ಕ್ಯೂ ಬೆಳೆಯುತ್ತೆ, ಹೆಜ್ಜೆ ಹಾಕೋ ಬೇಗ” +ಎಂದೆ ಎಚ್ಚೆತ್ತು. +ರಂಗೋಲಿ ಹಾಯಾಗಿತ್ತು ಯಾವತ್ತಿನಂತೆ: +ಬೆರಗು ಪ್ರಶ್ನೆಗಳವಳಿ ರೆಕ್ಕೆ +ಹರಡಿದ ಪುಟ್ಟ ಹಕ್ಕಿಯಂತೆ; +ಮನದ ತುಂಬಾ ನೆರೆಸಿ ಚಿಂತನೆಯ ಸಂತೆ. +***** +ಕೀಲಿಕರಣ: ಶ್ರೀನಿವಾಸ +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […] +ನಿಕ್ಸನ್ನಿನ ಆಡಳಿತದ ಪ್ರತಿಯೊಂದೂ ನಿಮಿಷಕೊಂದು ವಿಯಟ್ನಾಮಿನಲ್ಲಿ ಬಾಂಬು, ಯುದ್ಧವನ್ನು ಪ್ರತಿಭಟಿಸುವ ಶಾಂತಿಯ ಮೆರವಣಿಗೆ ಮೇಲೆ ಪೋಲೀಸರ ಲಾಠಿ ಗುಂಡು ನಾನು ಕಂಡ ಅಮೆರಿಕ. ಶಿಕ್ಷಣಕ್ಕೆ ದುಡ್ಡಿಲ್ಲದ, ದೇಣಿಗೆಗಳ ಇಳಿಗಾಲದ, ಬಾಂಬು ತಯಾರಿಕೆಗೆ ಮಾತ್ರ ಕೋಟ್ಯಾಂತರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_697.txt b/Kannada Sahitya/article_697.txt new file mode 100644 index 0000000000000000000000000000000000000000..52550246654a661eae9659ee798094e5a1d147b7 --- /dev/null +++ b/Kannada Sahitya/article_697.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಾನವ ಜನ್ಮ ದೊಡ್ಡದು, +ಇದ ಪಂತುವರಾಳಿ ಅಟ್ಟ +ಮಾನವ ಜನ್ಮ ದೊಡ್ಡದು, ಇದ +ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ ಪ +ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ +ಮಣ್ಣು ಮುಕ್ಕಿ ಮರುಳಾಗುವರೆ +ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ +ಉಣ್ನದೆ ಉಪವಾಸ ಇರುವರೆ ಖೋಡಿ ೧ +ಕಾಲನ ದೂತರು ಕಾಲ್ಪಿಡಿದೆಳೆವಾಗ +ತಾಳು ತಾಳೆಂದರೆ ತಾಳುವರೆ +ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೊ +ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲುಬೇಡಿ ೨ +ಏನು ಕಾರಣ ಯದುಪತಿಯನು ಮರೆತಿರಿ +ಧನ ಧಾನ್ಯ ಸತಿಸುತರು ಕಾಯುವರೆ +ಇನ್ನಾದರೂ ಏಕೋಭಾವದಿ ಭಜಿಸಿರೋ +ಚೆನ್ನ ಶ್ರೀ ಪುರಂದರವಿಠ್ಠಲರಾಯನ ೩ +***** +ರಾಗ — ಮೋಹನತಾಳ — ಅಟ್ಟ ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ |ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| ವಿತ್ತವುಳ್ಲವನ ಕುಲ ಎಣಿಸುವುದುಂಟೆ |ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| ಅತ್ತೆಮನೆ ಸೇರುವಗೆ ಅಭಿಮಾನವುಂಟೆ |ಬತ್ತಲೆ […] +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_698.txt b/Kannada Sahitya/article_698.txt new file mode 100644 index 0000000000000000000000000000000000000000..b0543e0a1f25d331482d9e96981ce70b249a07c6 --- /dev/null +++ b/Kannada Sahitya/article_698.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ: +ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ ರೀತಿ, ಕ್ಷಿಪ್ರಗತಿಯಲ್ಲಿ ಅದು ಪಡೆದ ವ್ಯಾಪಕರೂಪ ಹಾಗೂ ಅಷ್ಟೇ ದಿಢೀರಾಗಿ ಮಗುಚಿಬಿದ್ದ ವೈಖರಿಯಲ್ಲಿ ಬಹುಬಗೆಯ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ….. +ಮೊದಲ ಬಾರಿಗೆ ವಿಭಿನ್ನ ಪಂಥದ ಸಾಹಿತಿಗಳು, ಕವಿಗಳು, ಕಲಾವಿದರೂ, ಪತ್ರಕರ್ತರು, ಅಧ್ಯಾಪಕರು, ವಕೀಲರು ಹಾಗೂ ಇತರ ಬುದ್ಧಿ ಜೀವಿಗಳು ಒಂದಾಗಿ ಹುರಿದುಂಬಿಸಿದ ಚಳುವಳಿ ಇದು. +ಮೇಲಿನ ಮಾತುಗಳಲ್ಲಿ ನಾನು ಒತ್ತುಕೊಟ್ಟಿರುವ ‘ಒಂದಾಗಿ’ ಎಂಬ ಶಬ್ದವನ್ನು ಒಪ್ಪಿಕೊಳ್ಳುವುದು ಕಷ್ಟ. ಸಾಹಿತ್ಯ ಪರಿಷತ್ತಿನ ಹಿಂದಿದ್ದವರಿಗೂ, ಬೆಂಗಳೂರು, ಧಾರವಾಡ ಮತ್ತು ಮೈಸೂರುಗಳಲ್ಲಿ ಕ್ರಿಯಾಶೀಲರಾದವರಲ್ಲಿ ಹಲವರಿಗೂ ನಡುವೆ ಪ್ರಾರಂಭದಲ್ಲಿ ಒಮ್ಮತವಿದ್ದಂತೆ ಕಂಡರೂ, ಅವರುಗಳ ನಡುವೆ ಅಷ್ಟು ಘ್ಹನವಲ್ಲದ ಕಾರಣಗಳಿಂದ ಉದ್ಭವವಾದ ಒಡಕುಗಳು ಇದ್ದವು ಎಂಬುದನ್ನೂ, ಕನ್ನಡ ಪ್ರೇಮದ ಘೋಷಣೆ ಕೂಹುವುದರಲ್ಲಿ ಯಾರಿಗಿಂತ ಯಾರು ಹೆಚ್ಚು ಎಂಬುದನ್ನು ತೋರಿಸಿಕೊಳ್ಳುವುದರಲ್ಲೇ ಕೆಲವರು ನಿರತರಾ‌ಇದ್ದರೆಂಬುದನ್ನೂ ನಾವು ಕಡೆಗಣಿಸುವಂತಿಲ್ಲ. ಹಿಂಬಾಲಕರಲ್ಲಿರುವ ಸಾಚಾತನ ಸಾಮಾನ್ಯವಾಗಿ ನಾಯಕರಲ್ಲಿರುವುದಿಲ್ಲವೆಂಬ ರಾಜಕೀಯ ಕಟುಸತ್ಯವನ್ನು ಈ ಚಳುವಳಿಯಲ್ಲೂ ನಾವೂ ಮರೆಯುವಂತಿರಲಿಲ್ಲ. “ಕನ್ನಡದ ಅನ್ನ ತಿಂದು ಕನ್ನಡ ಕಲಿಯದವರನ್ನು ಕರ್ನಾಟಕದಿಂದ ಓಡಿಸಿ”-ಎಂಬ ಆಕ್ರೋಶದ ಕೂಗಿನಲ್ಲಿ ಯಾರಿಗೂ ಹಿಂದುಳಿಯುವ ಇಚ್ಛೆಯಿರಲಿಲ್ಲ. ನಾವು ಗೌರವಿಸುವ ಇಬ್ಬರು ಹಿರಿಯ ಸಾಹಿತಿಗಳೂ ಈ ಧೋರಣೆಯ ಮಾತನ್ನಾಡಿದರು ಎಂಬುದು ವಿಷಾದದ ಸಂಗತಿ. ಇಂಥ ಆಕ್ರೋಶದ ಮಾತುಗಳ ಹಿನ್ನೆಲೆಯಲ್ಲಿ ಪರೀಕ್ಷಿಸಿದಾಗ ರಘುರಾಮ ಶೆಟ್ಟರು ಹೇಳುವ ಈ ಮಾತನ್ನು ನಾವು ಅನುಮಾನಿಸುವಂತಾಗುತ್ತದೆ : “ನಾಡಿನ ಜನಜೀವನ ಸಂಪದಗೊಳ್ಳಲು ಏನು ಮಾಡಬೇಕೆಂಬುದರ ಸರಿಯಾದ ಕಲ್ಪನೆ ಈ ಸಾಹಿತಿಗಳ ಸಮೂಹಕ್ಕೆ ಇತ್ತೆಂದೇ ತಿಳಿಯಬೇಕಾಗುತ್ತದೆ” +‘ಕನ್ನಡಪ್ರಭ’, ‘ಪ್ರಜಾವಾಣಿ’ಗಳಲ್ಲಿ ಅಚ್ಚಾಗಿದ್ದ ನನ್ನ ಲೇಖನದಲ್ಲಿ ಗೋಕಾಕ್ ವರದಿಯ ಪೂರ್ಣ ಅನುಷ್ಠಾನದ ಒತ್ತಾಯದಲ್ಲಿ ಅಡಗಿರುವ ಕೆಲವು ಅಪಾಯಗಳನ್ನು ಸೂಚಿಸಿದ್ದೇನೆ. ಈ ಒತ್ತಾಯದಿಂದ ಭಾಷಾ ಅಲ್ಪಸಂಖ್ಯಾತರಿಗೆ ಯಾಕೆ ಅನ್ಯಾಯವಾದೀತೆಂಬ ವಾದವನ್ನು ಹೋರಾಟ ಮಾಡುತ್ತಿದ್ದ ಯಾರೂ ಶಾಂತಭಾವದಿಂದ ಚರ್ಚಿಸಲು ತಯಾರಿರಲಿಲ್ಲವೆಂಬುದನ್ನು ಪತ್ರಿಕೆಗಳಲ್ಲಿ ನನ್ನ ಲೇಖನಕ್ಕೆ ವಿರೋಧವಾಗಿ ಪ್ರಕಟವಾದ ಪತ್ರಗಳಿಂದ ತಿಳಿಯಬಹುದು. ನಾನು ಏನು ಹೇಳಿದ್ದೇನೆ ಎಂಬುದನ್ನು ಗ್ರಹಿಸುವುದಕ್ಕೆ ಕೂಡ ಕೆಲವರು ತಯಾರಿರಲಿಲ್ಲ. ೧೦ನೇ ಇಯತ್ತೆ ಮುಗಿಯುವ ತನಕ ಇಂಗ್ಲಿಷನ್ನು ಯಾರಿಗೂ ಕಲಿಸಕೂಡದೆಂದೂ ನಾನು ಹೇಳಿದ್ದರೂ ಶ್ರೀ ತರಾಸುರವರು ತಮ್ಮ ಪತ್ರದಲ್ಲಿ (ಅವರೇ ಹೇಳುವಂತೆ ಅದನ್ನು ‘ಮೂರು ಬಾರಿ’ ಓದಿದ ಮೇಲೂ) ಅರ್ಥಮಾಡಿಕೊಂಡದ್ದು: ಇಂಗ್ಲಿಷನ್ನು ಮಕ್ಕಳಿಗೆ ಕಡ್ಡಾಯ ಮಾಡಬೇಕೆಂದು ನಾನು ವಾದಿಸುತ್ತಿದ್ದೇನೆ ಎಂದು. ಹೀಗೆ ಅಪಾರ್ಥ ಮಾಡುವುದು ಒಂದೋ ದಡ್ಡತನದಿಂದ ಅಥವಾ ದುಷ್ಟತನದಿಂದ. ಶ್ರೀ ಎಲ್.ಎಸ್. ಶೇಷಗಿರಿರಾಯರು ಕೆಲವು ಬೆಂಗಳೂರು ತಮಿಳರ ಭಾಷಾಂಧತೆಯನ್ನು ಉದಾಹರಣೆಯಾಗಿ ಕೊಟ್ಟು ಕನ್ನಡಿಗರಲ್ಲಿ ಭಾಷಾ ಅಲ್ಪಸಂಖ್ಯಾತರ ವಿರುದ್ಧ ಪ್ರತೀಕಾರದ ರೊಚ್ಚನ್ನು ಬೆಳೆಸುವಂತೆ ಬರೆದರು. ತಮ್ಮ ಪತ್ರದ ಕೊನೆಯ ವಾಕ್ಯದಲ್ಲಿ ನನ್ನ ಶೈಲಿಯನ್ನು ಹಂಗಿಸಬಲ್ಲ ಒಳ್ಳೆಯ ನಕಲಿಗಾರ ತಾವೆಂಬುದನ್ನೂ ಪ್ರದರ್ಶಿಸಿದರು. ನಾವೆಲ್ಲರೂ ಸಜ್ಜನರೆಂದು ತಿಳಿದವರಾದ (ನಿಜವಾಗಿ ಸಜ್ಜನರೂ ಆದ) ತರಾಸು ಮತ್ತು ಶೇಷಗಿರಿರಾಯರ ಪತ್ರಗಳಲ್ಲಿ ಅಡಗಿರುವ ಮುಸ್ಲಿಮರಿಗೆ ವಿಶೇಷ ಮಾನ್ಯತೆಯಿದೆ ಎಂಬ ಅಸಹನೆ, ತಮಿಳರ ಬಗೆಗಿನ ಕೋಪಗಳು, ಉದಾರಧೋರಣೆಯ ಜನತಂತ್ರ ವ್ಯವಸ್ಥೆಗೆ ಮಾರಕವಾಗಬಲ್ಲವು ಎಂಬುದು ಪ್ರತ್ಯಕಾಹವಾಗುವುದು ಈ ಬಗೆಯ ಆಪತ್ತಿನ ಸಮಯದಲ್ಲೇ. ‘ಶೂದ್ರ’ ಪತ್ರಿಕೆಯಲ್ಲಿ (ಡಿಸೆಂಬರ್, ೧೯೮೧) ಶ್ರೀ ಬಿ.ಸಿ. ದೇಸಾಯಿಯವರು ಬರೆದಿರುವ “ಅಮೂರ್ತತೆ. ಕೆಲವು ಅನಿಸಿಕೆಗಳು” ಎಂಬ ಲೇಖನದಲ್ಲಿ ನಾಝಿ ಜರ್ಮನಿಯ ಅಲ್ಬರ್ಟ್ ಸ್ಪಿಯರ್ ಬಗ್ಗೆ (ಆತನೂ ತರಾಸು, ಶೇಷಗಿರಿರಾಯರಂತಹ ಸಜ್ಜನನೇ) ಇರುವ ಕೆಲವು ಮಾತುಗಳು ಇಲ್ಲಿ ಉಲ್ಲೇಖಕ್ಕೆ ಅರ್ಹವಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಸಾಕಷ್ಟು ಯಹೂದ್ಯ ಗೆಳೆಯರನ್ನು ಪಡೆದಿದ್ದ ಸ್ಪಿಯರನೇ ಯಹೂದ್ಯ ಜನಾಂಗದ ಅಮಾನುಷ ಕೊಲೆಗಳಲ್ಲಿ ಭಾಗಿಯಾದ. ಅವನು ಅದಕ್ಕೆ ಕೊಡುವ ಕಾರಣ ಭಯಾನಕವಾಗಿದೆ. ಸ್ಪಿಯರ್ ಜೈಲಿನಿಂದ ಬಿಡುಗಡೆಯಾದ ನಂತರ ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾನೆ. ಯಹೂದ್ಯರನ್ನು ವ್ಯಕ್ತಿಗಳೆಂದು ಕ್ರಮೇಣಾ ತಾನು ಯಾಕೆ ಕಾಣ್ಲಾರದೆ ಹೋದೆ ಎಂಬುದಕ್ಕೆ ಅವನು ಕೊಟ್ಟಿರುವ ಕಾರಣಗಳನ್ನು ನಾವು ಗಮನಿಸಬೇಕು: +ವೃತ್ತಿಯಿಂದ ಹೊಡೆದೋಡಿಸಲ್ಪಟ್ಟ, ಆಸ್ತಿಗೆ ಮುಟ್ಟುಗೋಲು ಹಾಕಿಸಿಕೊಂಡ ಇವರೆಲ್ಲ ಕೊನೆಗೆ ಕಾನ್‌ಸೆಂಟ್ರೇಶನ್ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಬರುಬರುತ್ತ ನನಗೆ ಅಮೂರ್ತರಾದರು. ಅವರು ಬೇರೆಯವರಂತೆ ಕುಟುಂಬ, ಆಕಾಂಕ್ಷೆ, ನೋವು, ಬೇಡಿಕೆಗಳಿದ್ದ ಮನುಷ್ಯಜೀವಿಗಳಾಗಿ ನನಗೆ ತೋರಲಿಲ್ಲ. ಅಸ್ತಿತ್ವವೇ ಇಲ್ಲದವರಂತೆ ಈ ಜನ ನನ್ನ ಬದುಕು ಯೋಚನೆಯಿಂದ ಮಾಯವಾಗಿ ಬಿಟ್ಟರೆಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯೆನ್ನಿಸುತ್ತದೆ. ಅವರನ್ನು ಮನುಷ್ಯ ಜೀವಿಗಳೆಂದೇ ಕಾಣುತ್ತ ಬಂದಿದ್ದರೆ ನಾನು ನಾಝಿಯಾಗಿ ಉಳಿಯುತ್ತಲೇ ಇರಲಿಲ್ಲ. ನಾನೇನೂ ಅವರನ್ನು ದ್ವೇಷಿಸಲಿಲ್ಲ; ಬದಲು ಉಪೇಕ್ಷಿಸತೊಡಗಿದೆ. ನಾನು ಯಹೂದ್ಯ ವಿರೋಧಿಯಾಗಿರಲಿಲ್ಲವಾದ್ದರಿಂದ ನನ್ನ ಅಪರಾಧ ತೀರಾ ಕೆಟ್ಟದು. +ನಮ್ಮಲ್ಲೂ ಈಗಾಗಲೇ ಸವರ್ಣೀಯರಿಗೆ ಅಸ್ಪೃಷ್ಯರು ವ್ಯಕ್ತಿಗಳೆಂದು ಅನ್ನಿಸುವುದಿಲ್ಲ. ಕೆಲವು ಮತಾಂಧ ಹಿಂದೂಗಳಿಗೆ ಮುಸ್ಲಿಮರು, ಅಂತೆಯೇ ಮುಸ್ಲಿಮರಿಗೆ ಹಿಂದೂಗಳು, ಸುಖದುಃಖಗಳಲ್ಲಿ ನಮ್ಮಂತೆಯೇ ಬದುಕುವ ವ್ಯಕ್ತಿಗಳು ಎಂದು ಅನ್ನಿಸುವುದಿಲ್ಲ. ಕನ್ನಡಿಗರನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ಹೀಗೆ ಹಿಂಸಿಸಿದೆ. ಮನೆ ಹತ್ತಿ ಉರಿಯುತ್ತದೆಂದು ಟೆಲಿಫೋನ್ ಮಾಡಿದಾಗ ಕನ್ನಡಾದಲ್ಲಿ ಮಾತನಾಡಲು ಒಲ್ಲದ ಫೈರ್ ಬ್ರಿಗೇಡಿನ ತಮಿಳ, ದೇವರಾಜಾರಸ್ ರಸ್ತೆ ಮಾಡುವಾಗ ದೇವಸ್ಥಾನ ಕೆಡವಲು ಸಾಧ್ಯವಾದರೂ ಮುಸ್ಲಿಮರ ಪವಿತ್ರ ಸ್ಥಳವನ್ನು ಹಾಗೇ ಉಳಿಸಿಕೊಳ್ಳಬೇಕಾಗಿ ಬಂದದ್ದು-ಇಂಥ ಕೆಲವು ಘಟನೆಗಳ ಆಧಾರದಿಂದಲೇ ಈ ಜನರ ಬಗ್ಗೆ ಕೆಲವು ಅಮೂರ್ತವಾದ ಸಾರ್ವತ್ರಿಕ ಸತ್ಯವೆಂಬಂಥ ಅಭಿಪ್ರಾಯಗಳನ್ನು ಹುಟ್ಟುಹಾಕಬಲ್ಲ ವಿಚಾರಕ್ರಮಕ್ಕೆ ಪುಷ್ಟಿಕೊಡುವಂತೆ ಗೋಕಾಕ್ ವರದಿ ಜಾರಿಗಾಗಿ ನಡೆದ ಚಳುವಳಿ ಬೆಳೆದದ್ದು ಅತ್ಯಂತ ವಿಷಾದದ ಸಂಗತಿ. ಶಿವಸೇನೆಯಲ್ಲಿ ಪುಂಡರು ಮಾತ್ರ ಇದ್ದಾರೆ; ದೊಡ್ಡ ಮರಾಠಿ ಲೇಖಕರು ಅದರಲ್ಲಿ ಇಲ್ಲವೆಂದು ನಾನು ತಿಳಿದಿದ್ದೇನೆ. ಉರ್ದು, ತಮಿಳು, ಮರಾಠಿ ಇತ್ಯಾದಿ ಭಾಶೆಗಳನ್ನಾಡುವ ಜನ ಭಯಪಡುವಂತೆ ಗೋಕಾಕ್ ವರದಿಗಾಗಿ ನಡೆದ ಚಳುವಳಿಯ ಅಗ್ರಪಂಕ್ತಿಯಲ್ಲಿದ್ದ ಕೆಲವು ಜನ ಮಾತಾಡಿದರೆಂಬುದು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನಾಚಿಕೆಯ ವಿಷಯವಾಗಬೇಕು. +ಕನ್ನಡ ಭಾಷೆ ಈ ರಾಜ್ಯದ ಎಲ್ಲರಿಗೂ ಕಡ್ಡಾಯವಾಗಲೇಬೇಕೆಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲದ ನಾನು ಚಳುವಳಿಯ ಪ್ರಾರಂಭದಲ್ಲಿ ಗೋಕಾಕ್ ವರದಿ ಬಗ್ಗೆ ನನ್ನ ವಿರೋಧ ಮರೆತು ಸಹಕರಿಸಿದ್ದೆ; ಮೈಸೂರಿನಲ್ಲಿ ನಡೆದ ಧರಣಿಯಲ್ಲಿ (೧೯-೩-೮೨) ಭಾಗವಹಿಸಿದೆ. ಅದಕ್ಕೆ ಮುಂಚೆ ಫೆಬ್ರವರಿ ತಿಂಗಳಲ್ಲಿ ಶ್ರೀ. ಜಿ.ಎಚ್. ನಾಯಕರ ನಿರ್ವಹಣೆಯಲ್ಲಿ ಮೈಸೂರಿನಲ್ಲಿ ಕೆಲವು ಗೆಳೆಯರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕರೆದಿದ್ದ ಒಂದು ಸಭೆಯಲ್ಲಿ ನನ್ನ ಲೇಖನದಲ್ಲಿರುವ ಎರಡನೇ ಸೂತ್ರವನ್ನು ಒಪ್ಪಿಕೊಳ್ಳುವಂತೆ ವಾದಿಸಿದ್ದೆ. ಕೆಲವು ಬದಲಾವಣೆ ಸಹಿತ ಅದನ್ನು ಒಪ್ಪಿದ ಅಲ್ಲಿದ್ದ ಎಲ್ಲ ಮಿತ್ರರು ಆ ನಿರ್ಣಯಕ್ಕೆ ಸಹಿ ಹಾಕಿದ ನಂತರವೂ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸದಂತೆ ಆ ಸಭೆಯಲ್ಲೇ ಇದ್ದ ಕೆಲವರು ತಡೆದರು. ಭಾರತೀಯ ಭಾಷಾ ಸಂಸ್ಥಾನದಲ್ಲಿ ೨೦-೩-೮೨ರಂದು ನಡೆದ ವಿಚಾರ ಗೋಷ್ಠಿಯಲ್ಲೂ ಈ ವಾದವನ್ನು ಮಂಡಿಸಿದೆ. ಅನಂತರ ಮೈಸೂರಿನಲ್ಲಿ ನಡೆದ ಒಂದು ಬಹಿರಂಗ ಸಭೆಯಲ್ಲಿ (೨೩-೩-೮೨) ಗೋಕಾಕ್ ವರದಿಯಿಂದ ಮುಸ್ಲಿಮರಿಗೆ ಒಂದೋ ಉರ್ದುವನ್ನು, ಅಥವಾ ಇಂಗ್ಲಿಷನ್ನು, ಕಡಿಮೆ ಕಲಿಯಬೇಕಾದ ಪರಿಸ್ಥಿತಿ ಉದ್ಭವವಾಗುವುದು ಅನ್ಯಾಯವೆಂದು ಹೇಳುತ್ತಲೇ, ಕನ್ನಡ ಕಡ್ಡಾಯ ಮಾಡಲು ನಾನು ಸರಿಯೆಂದು ತಿಳಿದ ಮೇಲಿನ ಸೂತ್ರವನ್ನು ಮಂಡಿಸಿದೆ. ಆದರೆ, ಗೋಕಾಕ್ ವರದಿ ಅನುಷ್ಠಾನಕ್ಕೆ ತರಬೇಕೆಂಬ ಚಳವಳಿಯ ಚೌಕಟ್ಟಲ್ಲೆ ನನ್ನ ಮೇಲಿನ ಉದ್ದೇಶವನ್ನು ಸಾಧಿಸಬಹುದೆಂಬ ನನ್ನ ನಂಬಿಕೆ. ಕ್ರಮೇಣ ಬೆಳೆಯುತ್ತ ಹೋದ ಸಮೂಹಸನ್ನಿಯಲ್ಲಿ ಮಾಯವಾದ್ದರಿಂದ ನಾನು ಆ ಲೇಖನವನ್ನು ಬರೆಯಲೇ ಬೇಕಾಯಿತು. ಆದರೆ ಅದು ‘ಕನ್ನಡಪ್ರಭ’ ಸಂಪಾದಕರೂ, ನನಗೆ ಹಿರಿಯರಾಗಿ ಗೌರವಾನ್ವಿತರೂ ಆದ ಶ್ರೀ ಖಾದ್ರಿಶಾಮಣ್ಣನವರಿಗೆ ಇಂಗ್ಲಿಷ್ ಮೋಹದಿಂದ ಉತ್ಪನ್ನವಾದ, ಆದರೆ ಒಂದು ಕಾಲದಲ್ಲಿ ಇಂಗ್ಲಿಷ್ ವಿರೋಧಿಯಾಗಿದ್ದವನ, ‘ಅಧಃಪತನ’ದಂತೆ ಕಂಡಿತು. ಶ್ರೀ ಚದ್ರಶೇಖರ ಪಾಟೀಲರಿಗೆ ನನ್ನಲ್ಲಿ ಗುಪ್ತವಾಗಿರುವ ಸಂಸ್ಕೃತ ಪ್ರೇಮದಂತೆ ಕಂಡಿತು. ನನ್ನನ್ನು ಪ್ರೀತಿ ವಿಶ್ವಾಸಗಳಿಂದ ಕಾಣುವ ಇನ್ನು ಕೆಲವರಿಗೆ ಕನ್ನಡ ಕಡ್ಡಾಯವಾಗಬೇಕೆಂದು ಒಪ್ಪುವ ನಾನು ಅದಕ್ಕಾಗಿ ನಡೆಯುತ್ತಿದ್ದ ಚಳುವಳಿಯ ಚೌಕಟ್ಟಿನಿಂದ ಸಂಪೂರ್ಣ ಹೊರಗೆ ನಿಂತು ಮಾತನಾಡಿರುವುದು ಅನಗತ್ಯವದ ಅಧಿಕ ಪ್ರಸಂಗದಂತೆಯೋ ಅಥವಾ ಸೂಕ್ಷ್ಮ ಅಪ್ರಾಮಾಣಿಕ ವರ್ತನೆಯಂತೆಯೋ ಕಂಡಿತು. ಆದರೆ ನನ್ನ ಆ ಲೇಖನದಿಂದ ಕುಪಿತರಾದವರ ಹಿಂಸೆಯ ಬೆದರಿಕೆಗೆ ಒಳಗಾಗಬೇಕಾಗಿ ಬಂದ ನಾನು ಜನಪ್ರಿಯನಾಗುವ ಹವಣಿಕೆಯಿಂದ ಅದನ್ನು ಬರೆದದ್ದಲ್ಲವೆಂಬಷ್ಟು ಔದಾರ್ಯವನ್ನಾದರೂ ನನ್ನನ್ನು ಟೀಕಿಸಿದವರಿಂದ ನಾನು ಕೇಳುತ್ತೇನೆ. ಯಾಕೆಂದರೆ ೧೦೦ ಅಂಕಗಳ ಮೂರು ಭಾಷೆಗಳಲ್ಲಿ ಒಂದನ್ನು ಸಾಂಸ್ಕೃತಿಕವಾಗಿಯೂ, ಎರಡನ್ನು ವ್ಯಾವಹಾರಿಕವಾಗಿಯೂ ಎಲ್ಲ ವಿದ್ಯಾರ್ಥಿಗಳೂ ಕಲಿಯಬೇಕೆಂದೂ, ಈ ಮೂರು ಭಾಷೆಗಳಲ್ಲೊಂದು ಭಾಷೆ ಕನ್ನಡವಾಗಿರಲೇಬೇಕೆಂದೂ ನಾನು ಮಡಿಸಿದ ಸೂತ್ರವನ್ನು ಕನ್ನಡ ದ್ರೋಹವೆಂದು ಕಂಡ ಜನರಲ್ಲಿ ಅನೇಕರು ೩೦೦ ಅಂಕಗಳ ಬದಲು ೩೫೦ ಅಂಕಗಳ ಅನಾವಶ್ಯಕ ಹೊರೆಯ ಸರ್ಕಾರೀ ಸೂತ್ರವನ್ನು ದಿಢೀರನೆ ಒಪ್ಪಿಕೊಂಡರು. ಡ್. ಭೈರಪ್ಪ, ಶ್ರೀ ತರಾಸು, ಶ್ರೀ ಶೇಷಗಿರಿರಾಯರು ಯಾಕೆ ದಿಢೀರನೆ ಬದಲಾದರು? ಗೆಳೆಯರಾದ ತರಾಸು, ಮತ್ತು ಶೇಷಗಿರಿರಾಯರಿಗೆ ಒಬ್ಬ ಲೇಖಕ ಬಂಧುವಾದ ನಾನು ಹೇಳಿದ್ದು ಘೋರ ಅಪರಾಧವೆಂದು, ಕೆಲವು ದಿನಗಳ ನಂತರ ಮುಖ್ಯಮಂತ್ರಿ ಶ್ರೀ ಗುಂಡೂರಾಯರು ದಯಪಾಲಿಸಿದ್ದು ಕನ್ನಡದ ಹಿತಕ್ಕೆ ಯೋಗ್ಯವೆಂದೂ ಹೇಗಾದರೂ ಅನ್ನಿಸಲು ಸಾಧ್ಯ? ಬಂಡಾಯದ ನಾಯಕರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಅಗತ್ಯವಿದ್ದರೆ ಭಾರತದ ಸಂವಿಧಾನವನ್ನು ಸುಡುತ್ತೇನೆಂದು ಹೇಳಿ ಈಗೇಕೆ ತಣ್ಣಗಾದರು? ಶ್ರೀ ಬರಗೂರು ರಾಮಚಂದ್ರಪ್ಪನವರು ಮರ್ಕ್ಸ್‌ವಾದಿ ಲೇಖಕರು; ಆದರೆ ಇವರು ರಷ್ಯನ್ ಭಾಶೆಯನ್ನು ಒತ್ತಾಯದಿಂದ ಹೇರುವುದರ ಬಗ್ಗೆ ಲೆನಿನ್ ಹೇಳಿದ್ದನ್ನು ಯಾಕೆ ಉಪೇಕ್ಷಿಸುತ್ತಾರೆ ಎಂದು ನಾನು ಕೇಳಲು ಬಯಸುತ್ತೇನೆ. ಅಂತೆಯೇ ಲೋಹಿಯಾ ವಾದಿಗಳಾದ ಶ್ರೀ ಖಾದ್ರಿ ಶಾಮಣ್ಣ, ಶ್ರೀ ಪಿ. ಲಂಕೇಶ, ಶ್ರೀ ರಮದಾಸ್ ಮತ್ತು ಶ್ರೀ ಚಂದ್ರಶೇಖರ ಪಾಟೀಲರು ಭಾರತೀಯ ಭಾಷೆಗಳ ಬಗ್ಗೆ ಮಹಾತ್ಮಗಾಂಧಿ ಮತ್ತು ಲೋಹಿಯಾ ಬರೆದದ್ದರ ಹಿಂದಿರುವ ಉದಾರ ಧೋರಣೆಯನ್ನು ಯಾಕೆ ಗೌರವಿಸುವುದಿಲ್ಲ ಎಂದು ನಾನು ಕೇಳಬಯಸುತ್ತೇನೆ. +ಕನ್ನಡವನ್ನು ಕಡ್ಡಾಯ ಮಾಡಬೇಕೆಂದು ಹೇಳುವಷ್ಟಕ್ಕೆ ಗೋಕಾಕ್ ವರದಿ ಸ್ತುತ್ಯವದರೂ, ಅದರಲ್ಲಿ ಬರುವ ಈ ಕೆಳಗಿನ ಮಾತುಗಳು ಖಂಡಿತವಾಗಿ ಶಕ್ತಿ ರಾಜಕೀಯದವರು ಆಡಬಹುದಾದದೇ ಹೊರತು ವಸ್ತುನಿಷ್ಠವಾಗಿ ಯೋಚಿಸುವ ಶಿಕ್ಷಣ ತಜ್ಞರೊಬ್ಬರು, ಅಥವಾ ಸತ್ಯ ಪಕ್ಷಪಾತಿಯಾದ ಸಾಹಿತಿ ಆಡಬಹುದಾದ ಮಾತುಗಳಲ್ಲ: +ಔದಾರ್ಯವು ಒಳ್ಳೆಯ ಗುಣವೇ. ಅದೇ ಈ ಗುಣದಲ್ಲಿ ಅನೇಕಸಲ ಅಜ್ಞಾನವು ಬೆರೆತಿರುತ್ತದೆ. ಒಮ್ಮೊಮ್ಮೆ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಗ್ರಾಂಟ್ ಅಂತೂ ಹೋಗಲಿ, ಪ್ರತ್ಯಕ್ಷ ಪರಿಪಾಠದಲ್ಲಿ ಮನ್ನಣೆ ಸಹ ದೊರೆತಿಲ್ಲವೆಂದು ಅಲ್ಲಿನ ಅಲ್ಪಸಂಖ್ಯಾತರಾದ ಕನ್ನಡಿಗರು ಪತ್ರಿಕೆಗಳಲ್ಲಿ ಬರೆಯುತ್ತಿರುತ್ತಾರೆ. ಆದರೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಿಗೆ ಮಾಧ್ಯಮಿಕ ಹಂತದಲ್ಲಿರುವ ಅವರ ಭಾಷಾ ಮಾಧ್ಯಮದ ಮಾಧ್ಯಮಿಕ ಶಾಲೆಗಳನ್ನು ತನ್ನ ವೆಚ್ಚದಿಂದ ಕೆಲವೆಡೆ ನಡೆಸುತ್ತಿರುವುದೂ ಉಂಟು. ಈ ತರಹದ ಔದಾರ್ಯ ಅನಿಷ್ಟವೆಂದು ಬೇರೆ ಹೇಳಬೇಕಾಗಿಲ್ಲ. +(‘ಭಾಷಾ ಸಮಿತಿಯ ವರದಿ’, ಕನ್ನಡ ಸಾಹಿತ್ಯ ಪರಿಷತ್ತು, ಪು.೨೮) +ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವುದು ಸರಿಯಾದ್ದು ಎಂಬುವವನು ಆಡಬಹುದಾದ ಮಾತುಗಳು ಇವಲ್ಲ. ನೆರೆರಾಜ್ಯ ಮಾಡುವ ತಪ್ಪನ್ನು ನಾವು ಮಾಡಬಹುದೆಂಬುದು ಶಕ್ತಿ ರಾಜಕೀಯದ್ದು. ಆದರೆ ಇಲ್ಲಿರುವ ವಿರೋಧಾಭಾಸವೆಂದರೆ, ಅಂತಹ ರಾಜಕೀಯದಲ್ಲಿ ನಿಷ್ಣಾತರಾದ ರಾಜಕಾರಣಿಗಳೇ ಇಲ್ಲಿ ಸೂಕ್ತ ರೀತಿಯಲ್ಲಿ ನಡೆದುಕೊಂಡಾಗಲೂ, ಅವರಿಗೇ ಪ್ರತೀಕಾರದ ಧೋರಣೆಯನ್ನು ಕಲಿಸಿಕೊಡಲು ಗೋಕಾಕ್ ವರದಿ ಮುಂದಾಗಿರುವುದು. ಶಿಕ್ಷಣದಂತಹ ವಿಷಯದಲ್ಲಿ ರಾಜಕೀಯಕ್ಕಾಗಲೀ ಪ್ರತೀಕಾರಕ್ಕಾಗಲೀ ಎಡೆಯಿಲ್ಲ. ಯಾವುದು ಸರಿಯೋ ಅದು ಎಲ್ಲ ಸಂದರ್ಭದಲ್ಲೂ ಸರಿಯೆಂದೇ ನಾವು ತಿಳಿಯಬೇಕು. ಇಲ್ಲಿ ತಂತ್ರಕ್ಕೆ ಜಾಗವಿಲ್ಲ. ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸುವುದನ್ನು ಔದಾರ್ಯವೆಂದು ತಿಳಿಯುವುದು ಕೂಡ ಅಲ್ಪತನದ ಧೋರಣೆಯಾಗುತ್ತದೆ. ಪ್ರತಿ ಪ್ರಜೆಯೂ ವಿದ್ಯಾವಂತನಾಗಲು ನಾವು ಅನುಸರಿಸಬೇಕಾದ ನೀತಿ ನಮ್ಮ ಅನುಲ್ಲಂಘನೀಯ ಕರ್ತವ್ಯಕ್ಕೆ ಸೇರಿದ್ದು. ಈ ಮಾತು ನೋಡಿ, ಇಲ್ಲಿರುವ ಅಲ್ಪತನ ಶೈಕ್ಷಣಿಕ ವಿಷಯದಲ್ಲಿ ಅಕ್ಷಮ್ಯ: +೩೦ ವಿದ್ಯಾರ್ಥಿಗಳು ಒಂದು ಹೈಸ್ಕೂಲಿನಲ್ಲಿ ತಮ್ಮ ಮಾತೃಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರೆ ಅದು ಅವರಿಗೆ ಈಗಿನಂತೆ ಸಾಧ್ಯವಾಗಬೇಕು. ಈ ಸೌಲಭ್ಯವನ್ನು ಒದಗಿಸುವುದಕ್ಕೆ ಮುಂಚಿತವಾಗಿ ಆ ಭಾಷೆಯ ರಾಜ್ಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೂ ಅಂಥ ಸೌಲಭ್ಯ ದೊರೆತಿರುವುದೇ ಎಂದು ನಾವು ತಿಳಿದುಕೊಂಡಿರಬೇಕು. +(ಅದೇ) +ಇದಕ್ಕೆ ಬದಲಾಗಿ ನಾವು ಹೇಳಬೇಕಾದ್ದು ನೆರೆರಾಜ್ಯ ಹಾಗೆ ಮಾಡದಿದ್ದಲ್ಲಿ ಅದು ಅಕ್ಷಮ್ಯವೆಂದು. ಹಾಗೆ ಹೇಳುವ ಅಧಿಕಾರ ನಮಗೆ ಒದಗುವುದು ನಾವು ಪ್ರತೀಕಾರಕ್ಕಾಗಿಯೂ ಅವರಂತೆ ನಡೆದುಕೊಳ್ಳದಿದ್ದಾಗ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯವನ್ನು ಟ್ರೇಡ್ ಯೂನಿಯನ್ನಿನವರು ಮಾಲೀಕರ ಜೊತೆ ನಡೆಸುವ ಸಂಧಾನದಲ್ಲಿ ಅನುಸರಿಸುವ ಚೌಕಾಸಿ ರೀತಿಯಲ್ಲಿ ಕಾಣಕೂಡದು. ಸಾಂಸ್ಕೃತಿಕ ವಿಷಯದಲ್ಲಿ ಇದು ‘ಇದು ಪ್ರಾಕ್ಟಿಕಲ್ಲೋ’ ಎಂದು ಕೇಳುವುದನ್ನೇ ಅಭ್ಯಾಸ ಮಾಡಿಕೊಂಡವನು ‘ಇದು ಸತ್ಯವೋ’, ‘ಇದು ಸರಿಯೋ’ ಎಂದು ಕೇಳಬಲ್ಲ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಅಂದರೆ ವಸ್ತುನಿಷ್ಠ ಶೋಧವೇ ಅಂಥವನಿಗೆ ಅಸಾಧ್ಯವಾಗಿ ಹೋಗುತ್ತದೆ. +ಕೆಲವು ವರ್ಷಗಳ ಹಿಂದೆ ಪುಣೆಯಲ್ಲಿ ಒಂದು ಘಟನೆ ನಡೆಯಿತು. ಅಲ್ಲಿನ ಕನ್ನಡ ಸ್ಕೂಲಿನ ಗಾಜನ್ನು ಶಿವಸೇನೆಯವರು ಒಡೆದರು. ಆಗ ಆ ಮೊಹಲ್ಲಾದ ಹಿರಿಯ ಮರಾಠಿ ಸಾಹಿತಿ ಶ್ರೀಪಾದಜೋಷಿಯವರು ಈ ದೌರ್ಜನ್ಯವನ್ನು ಇಡೀ ಮೊಹಲ್ಲಾದ ಎಲ್ಲ ಮರಾಠಿ ಜನರ ಜವಾಬ್ದಾರಿಯೆಂದು ತಿಳಿದು ತಲಾ ಎರಡು ರೂಪಾಯಿಗಳಂತೆ ಸಮಾನವಾಗಿ ಎಲ್ಲರಿಂದ ಸಂಗ್ರಹಿಸಿ ಒಡೆದ ಗಾಜುಗಳನ್ನು ದುರಸ್ತಿ ಮಾಡಿಸಿದರಂತೆ. ಭಾರತದ ಎಲ್ಲ ನಾಡಲ್ಲೂ ಇಂಥ ಜನರಿಲ್ಲವೆಂದರೆ ಯಾವ ಮೌಲ್ಯವನ್ನೂ ನಮ್ಮ ಸಂಸ್ಕೃತಿ ಕಾದಿಟ್ಟುಕೊಳ್ಳಲಾರದು; ‘ಇದು ಶಕ್ಯವೇ’ ಎಂದು ಕೇಳಲೇಬೇಕಾದ ಕಡೆ ‘ಇದು ಪ್ರಾಕ್ಟಿಕಲ್ಲೆ’, ಎಂದು ಕೇಳಲು ಅವಕಾಶವೇ ಇಲ್ಲ. +ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಪ್ರಾರಂಭವಾದ ಚಳುವಳಿಯಲ್ಲಿ ರಘುರಾಮಶೆಟ್ಟಿಯವರು ಕಾಣುವ ಆದರ್ಶ ಮೊದಲಿನಿಂದಲೇ ಇರಲಿಲ್ಲವೆಂದು ನನಗೆ ಅನ್ನಿಸುತ್ತದೆ. ಅವರು ಹೇಳುವ ಈ ಮಾತುಗಳು ನಿಜವಲ್ಲ: +ಜನರ ಭಾವನೆಯನ್ನು ಕೆರಳಿಸಬಲ್ಲ ಭಾಷೆಯ ಪ್ರಶ್ನೆಯನ್ನೆತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶ ಇವರ್‍ಯಾರಿಗೂ ಇರಲಿಲ್ಲ. ಕನ್ನದ ಭಾಷೆ ಮತ್ತು ಜನರ ಹಿತಾಸಕ್ತಿಯೇ ಸಾಹಿತಿಗಳನ್ನು ಚಳುವಳಿಯ ಕಣಕ್ಕೆ ಎಳೆತಂದಿತೆಂದು ಗ್ರಹಿಸಬೇಕಾಗುತ್ತದೆ……. ಗೋಕಾಕ್ ವರದಿ ಪೂರ್ಣ ಜಾರಿಗೆ ಬರಬೇಕೆಂಬ ವಿಚಾರದಲ್ಲಿ ಸಾಹಿತಿಗಳ್ಯಾರೂ ಬೇರೆ ಮಾತನಾಡಿಲ್ಲ. ಈ ಉದ್ದೇಶ ಸಾಧನೆಗೆ “ಸರ್ವತ್ಯಾಗಕ್ಕೂ” ಇವರು ಸಿದ್ಧರಾಗಿದ್ದರು. +(ಪ್ರಜಾವಾಣಿ, ೨೪ ಏಪ್ರಿಲ್) +ಬದಲಾಗಿ, ಶ್ರೀ ಕುವೆಂಪುರವರು ಕನ್ನಡವನ್ನು ರಾಜ್ಯಭಾಷೆಯೆಂದು ಕರೆದು, ಅದನ್ನು ಕಡ್ಡಾಯವಾಗಿ ಅಲ್ಪಸಂಖ್ಯಾತರಿಗೆ ವ್ಯಾವಹಾರಿಕವಾಗಿ ಕಲಿಸಿದರೂ ಸಾಕೆಂದು ಖಾಸಗಿಯಾಗಿ ಹೇಳಿದ್ದರೆಂದು ನಾನು ಕೇಳಿದ್ದೇನೆ. ಇದು ತಪ್ಪಿದ್ದರೆ ಅವರ ಕ್ಷಮೆ ಕೇಳುತ್ತೇನೆ. ಅವರ ಈ ನಿಲುವು ಸರಿಯಾದ್ದೇ ಆಗಿದೆ. ಆದರೆ ಅಷ್ಟನ್ನಾದರೂ ಪಡೆದುಕೊಳ್ಳುವ ಉದ್ದೇಶದಿಂದ ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕಾಗಿ ಚಳವಳಿ ನಡೆಸಬೇಕಾದ್ದು ಒಂದು ಅಗತ್ಯವಾದ ‘ತಂತ್ರ’ ಎಂದು ಶ್ರೀ ಕುವೆಂಪುರಂತಹ ದೊಡ್ಡವರೇ ತಿಳಿದದ್ದು ಸರಿಯಲ್ಲ. ಯಾಕೆಂದರೆ ಶೈಕ್ಷಣಿಕ ವಿಷಯ ರಾಜಕೀಯ ಸಂಧಾನದ ವಿಷಯವಲ್ಲ. ಮೊದಲು ಉಗ್ರವಾಗಿ ಮಾತನಾಡಿ ಈಗ ಬದಲಾದ ಶ್ರೀರಂಗರಂಥ ಹಿರಿಯರ ಬಗ್ಗೆಯೂ ಮೇಲಿನ ಮಾತನ್ನು ಹೇಳಬೇಕಾಗುತ್ತದೆ. ಬಂಡಾಯದ ಸಭೆಯಲ್ಲೂ ಗೋಕಾಕ್ ವರದಿಯ ಪೂರ್ಣ ಅನುಷ್ಠಾನದ ಹೋರಾಟವನ್ನು ಒಂದು ತಂತ್ರವೆಂದು ಬಗೆಯಬೇಕೆಂದೂ, ಮೂರನೇ ಭಾಷೆಗೆ ೫೦ ಅಂಕಗಳ ಬದಲಾಗಿ ೧೦೦ ಅಂಕಗಳನ್ನು ಕೊನೆಯಲ್ಲಿ ಒಪ್ಪಿಕೊಳ್ಳಬಹುದೆಂದೂ ಸದಸ್ಯರಲ್ಲಿ ಒಪ್ಪಿಗೆಯಾಗಿತ್ತೆಂದು ನಾನು ಕೇಳಿದ್ದೇನೆ. ಇದು ನಿಜವಿದ್ದರೆ ಈಗಿನ ಸರ್ಕಾರದ ನೀತಿಯಲ್ಲಿ ಶ್ರೀ ಚಂದ್ರಶೇಖರ ಪಾಟೀಲರು ಕಾಣುವ ದೊಡ್ಡ ದೋಷವಾದರೂ ಏನು ನನಗೆ ತಿಳಿಯುತ್ತಿಲ್ಲ. +ಮಕ್ಕಳನ್ನು ಮರೆತು ವಯಸ್ಕರಾದ ನಾವು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದೇವೆ. ಈಗಿನ ೩೫೦ ಅಂಕಗಳ ಹೊರೆಯನ್ನು ಮಕ್ಕಳು ಹೊರುವುದು ಸಾಧ್ಯವೇ? ಇದನ್ನು ನಾವು ಯೋಚಿಸದೇ ಸರ್ಕಾರಿ ಸೂತ್ರವನ್ನು ಸ್ವಾಗತಿಸಿದ್ದೇವೆ. ನನ್ನ ಲೇಖನದ ಎರಡನೇ ಸೂತ್ರ ಸರ್ಕಾರಿ ಸೂತ್ರಕ್ಕಿಂತ ಉತ್ತಮವೆಂದು ನಾನು ತಿಳಿದಿದ್ದೇನೆ. ಆದರೆ, ನನ್ನ ಯೋಚನಾಕ್ರಮದಲ್ಲಿ ಇರುವ ತಪ್ಪೊಂದನ್ನು ನಾನಿಲ್ಲಿ ಒಪ್ಪಿಕೊಳ್ಳಬೇಕು. ಹತ್ತನೇ ತರಗತಿ ಮುಗಿಯುವ ತನಕ ಮಕ್ಕಳಿಗೆ ಒಂದೇ ಸಮನಾದ ಇಂಗ್ಲಿಷನ್ನು ದೇಶದ ಎಲ್ಲೆಡೆಯಲ್ಲೂ ಕಲಿಸುವುದು ಸಾಧ್ಯವಿಲ್ಲವಾದ್ದರಿಂದ ನನ್ನ ಸೂಚನೆಯ ತ್ತಿಭಾಷಾ ಸೂತ್ರದಲ್ಲಿ ಇಂಗ್ಲಿಷನ್ನು (ಅದನ್ನು ಮಾತೃಭಾಷೆಯಾಗಿ ಪಡೆದವರಿಗೆ) ಸೇರಿಸುವುದೇ ಶೈಕ್ಷಣಿಕವಾಗಿ ಸಮರ್ಪಕವಲ್ಲ. ಪಟ್ಟಣಗಳಲ್ಲಿ ಒಳ್ಳೆಯ ಶಾಲೆಗಳಿಗೆ ಹೋಗಬಲ್ಲ ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಎರಡು ಸಾಧ್ಯತೆಗಳಿವೆ : (೧) ಇಂಗ್ಲಿಷನ್ನು ತಮ್ಮ ಪರಿಸರದಲ್ಲೇ ಕೇಳಿಸಿಕೊಳ್ಳಬಲ್ಲ ಸೌಲಭ್ಯ, ಮತ್ತು (೨) ಇಂಗ್ಲಿಷನ್ನು ತಕ್ಕಮಟ್ಟಿಗಾದರೂ ಚೆನ್ನಾಗಿ ಕಲಿಸಬಲ್ಲ ಉಪಾಧ್ಯಾಯರನ್ನು ಪಡೆದ ಖಾಸಗಿ ಶಾಲೆಗಳ ಸೌಲಭ್ಯ. ಆದರೆ ಇವುಗಳಲ್ಲಿ ಮೊದಲನೆಯದು ಶೈಕ್ಷಣಿಕ ವ್ಯವಸ್ಥೆಯ ಹಿಡಿತಕ್ಕೆ ಸಿಗಲಾರದ್ದು; ಎರಡನೆಯದು ಸಿಗಬಹುದಾದ್ದು. ಆದರೆ ವಾಸ್ತವಿಕವಾಗಿ ಅಷ್ಟು ಇಂಗ್ಲಿಷ್ ಅಧ್ಯಾಪಕರು ಎಲ್ಲ ಶಾಲೆಗಳಲ್ಲೂ ದೊರಕಲಾರರು. ಆದ್ದರಿಂದ ಅಸಮಾನತೆಯನ್ನು ಸೃಷ್ಟಿಸಬಲ್ಲಂಥ ವಿಶೇಷ ಸೌಕರ್‍ಯದ ಖಾಸಗಿ ಶಾಲೆಗಳನ್ನು ಕೊನೆಗಾಣಿಸಿ, ಒಂದೇ ಯೋಗ್ಯತೆಯ ಶಾಲೆಗಳನ್ನು ದೇಶದ ಎಲ್ಲೆಡೆ ತೆರೆದು ನಾವು ಸರಿಯಾಗಿ ಇಂಗ್ಲಿಷನ್ನು ಹೇಳಿಕೊಡಬಹುದಾದ ಇಯತ್ತೆಯಿಂದ ಮಾತ್ರ ಅದನ್ನು ಬಯಸಿದವರಿಗೆಲ್ಲರಿಗೂ ಹೇಳಿಕೊಡುತ್ತೇವೆಂಬುದೇ ಸರಿಯಾದ ಮಾರ್ಗ. ಇಂಗ್ಲಿಷಿನ ಅಂತರರಾಷ್ಟ್ರೀಯ ಮಹತ್ವವನ್ನು ಬಲ್ಲವರೆಲ್ಲರೂ ಅದನ್ನು ಸಮರ್ಪಕವಾಗಿ, ಸಮಯದ ಅಪವ್ಯಯವಾಗದಂತೆ ಕಲಿಸಲು ಇರುವ ಮಾರ್ಗ ಇದೊಂದೇ ಎಂದು ಒಪ್ಪುತ್ತಾರೆಂದು ನಾನು ತಿಳಿದಿದ್ದೇನೆ. ಎಂದರೆ, ದೇಶದ ಮಕ್ಕಳೆಲ್ಲರೂ ತಾವು ಹುಟ್ಟಿದ ಸ್ಥಳ ಮತ್ತು ಜಾತಿಗಳಿಂದಾಗಿ ಇಂಗ್ಲಿಷನ್ನು ಪ್ರಾರಂಭದಲ್ಲೆ ತಪ್ಪಿಲ್ಲದಂತೆ ಕಲಿಯಲಾರದ ಕಾರಣದಿಂದ, ನಗರ ಪ್ರದೇಶದ ಹಣವಂತರ ಮಕ್ಕಳಿಗಿಂತ ಹಿಂದುಳಿಯುವಂತೆ ಮಾಡುವುದು ಅಕ್ಷಮ್ಯವೆಂದು ತಿಳಿಯುವವರೆಲ್ಲರೂ ಇದನ್ನು ಒಪ್ಪಬೇಕಾಗುತ್ತದೆ. +ಆದರೆ ಈ ಬಗೆಯ ಸಮಾನತೆಯನ್ನು ಬಯಸುವ ನನ್ನಂಥವರು ನಮ್ಮ ಮಕ್ಕಳಿಗೆ ವಿಶೇಷ ಸೌಲಭ್ಯ ಸಿಗುವುದು ಸಾಧ್ಯವಿದ್ದಾಗ ಸಾಮಾನ್ಯ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸುವಷ್ಟು ಆದರ್ಶವಾದಿಗಳಾಗಿರುವುದಿಲ್ಲ. ಮಧ್ಯಮ ವರ್ಗದ ಮೇಲೇರುವ ಆಸೆಯನ್ನಿಟ್ಟುಕೊಂಡಿರುವ ನಾವೆಲ್ಲರೂ ಚಿಂತನಾಕ್ರಮದಲ್ಲಿ ಏನನ್ನು ಬಯಸಿದರೂ ನಮ್ಮ ವರ್ಗಕ್ಕಿರುವ ಎಲ್ಲ ಸವಲತ್ತುಗಳನ್ನು ಖಂಡಿತ ಬಳಸಿಕೊಳ್ಳುವವರಾಗಿರುತ್ತೇವೆ. ಈ ಬಗ್ಗೆ ನನ್ನಂಥವರು ಅನುಭವಿಸುವ ಪಾಪಪ್ರಜ್ಞೆ ಕೂಡ ನಿರುಪಯೋಗಿಯಾದ ಒಂದು ಲಕ್ಷುರಿ ಎಂಬುದನ್ನು ಮರೆಯಬಾರದು. ಆದರೂ ಚಿಂತನೆಯಲ್ಲಾದರೂ ಯಾವುದು ಸರಿಯೆನ್ನಿಸುತ್ತದೋ ಅದನ್ನು ಹೇಳುವುದು (ಇದು ಕೂಡ ಅಭ್ಯಾಸಗತವಾಗುವ ಜೀವನಕ್ರಮದಲ್ಲಿ ಕ್ರಮೇಣ ಮಂಜಾಗುತ್ತ ಹೋಗುವ ಕಾಣ್ಕೆಯಾಗಿ ಬಿಡಬಹುದು) ಕೇವಲ ಆಷಾಢಭೂತಿತನವೆಂದು ತಳ್ಳಿಹಾಕಕೂಡದು. ಯಾಕೆಂದರೆ ನಮ್ಮ ಇಡೀ ಸಮಾಜದಲ್ಲಿ ಆಗಬೇಕಾದ ಬದಲಾವಣೆಗಾಗಿ ಸ್ವಂತ ಹಿತದ ವಿರುದ್ಧವಾಗಿ ಚಿಂತನೆ ಮಾಡುವವರೆಲ್ಲರೂ ಅದು ಸಾಧ್ಯವಾಗುವ ದಿಕ್ಕಿನಲ್ಲಾದರೂ ಇದ್ದಾರೆಂಬುದು ಖಚಿತ. +ನಮ್ಮಂಥವರು ಈ ಎರಡರಲ್ಲಿ ಒಂದು ಮಾಡೆಲ್ಲನ್ನು ಆಯ್ದಿರುತ್ತೇವೆ: ಸ್ವಂತ ಜೀವನವನ್ನೇ ಮಾರ್ಪಡಿಸಿಕೊಳ್ಳುತ್ತ ಹೋಗುವ, ಹೃದಯ ಪರಿವರ್ತನೆಯಲ್ಲಿನಂಬುವ, ಗಾಂಧಿಯ ಮಾರ್ಗ ರಾಜಕೀಯ ಕ್ರಿಯೆಗೆ ಇರುವ ಒಂದು ಮಾಡೆಲ್ಲಾದರೆ; ಇನ್ನೊಂದು, ಇಡೀ ಸಮಾಜದ ಆರ್ಥಿಕ ಬುನಾದಿಯನ್ನೇ ಬದಲು ಮಾಡುವುದರ ಮುಖಾಂತರ ಪ್ರತಿ ವ್ಯಕ್ತಿಯೂ ಅನಿವಾರ್ಯವಾಗಿ ಬದಲಾಗಲೇಬೇಕಾದ ಮಾರ್ಕ್ಸ್‌ವಾದೀ ಸಮೂಹ ಬದಲಾವಣೆಯ ಮಾಡೆಲ್. ಈ ಎರಡೂ ಒಂದಕ್ಕೊಂದು ಹೆಣೆದುಕೊಳ್ಳದ ಹೊರತು ಯಾವ ಸಮಾಜವೂ ಸರ್ವಹಿತದ ಉದ್ದೇಶವನ್ನು ಈಡೇರಿಸಿಕೊಳ್ಳದೇನೋ. ಗಾಂಧಿ ಮಾಡೆಲನ್ನು ಆಯ್ದು ತನ್ನ ಉದ್ದೇಶಕ್ಕೆ ತಕ್ಕಂತೆ ಬದುಕಲಾರದವನು ದ್ವಂದ್ವಗಳಲ್ಲಿ ನರಳುತ್ತಾನೆ; ಆದರೆ ಮಾರ್ಕ್ಸ್‌ವಾದಿ ಮಾಡೆಲ್ಲನ್ನು ಮಾತ್ರ ನೆಚ್ಚಿದವನು ಕೇವಲ ಉಪಾಯಗಾರನಾಗುತ್ತ ಹೋಗುತ್ತಾನೆ. ಆದ್ದರಿಂದಲೇ ಈಗಿರುವ ಶಿಕ್ಷಣ ಕ್ರಮದಿಂದ ನಮ್ಮ ನಮ್ಮ ಮಕ್ಕಳ ಹಿತವನ್ನು ಸಾಧಿಸಿಕೊಳ್ಳುತ್ತಿರುವ ನಾವೆಲ್ಲರೂ, ನಮ್ಮನ್ನು ನಾವು ವಿಮರ್ಶೆಗೆ ಒಡ್ಡಿಕೊಳ್ಳುತ್ತಲೇ ಆದರ್ಶವಾದುದ್ದರ ಕಡೆಗೂ ಇಡೀ ಸಮಾಜ ಮುನ್ನಡೆಯುವಂತೆ ಶ್ರಮಿಸಬೇಕಾಗುತ್ತದೆ. ಯಾಕೆಂದರೆ ಸಮಾನತೆಯಿಲ್ಲದ ಸಮಾಜದಲ್ಲಿ ನಮ್ಮ ವರ್ಗ ತನ್ನ ಆಸೆಬುರುಕತನದಲ್ಲಿ ಪಡದದ್ದು ನರಳುವ ಅಗಾಧ ಜನರೆದುರು ಕ್ಷುಲ್ಲಕವಾಗಿ ನಮ್ಮ ವರ್ಗದ ಸೂಕ್ಷ್ಮಜ್ಞರಾದ ಅನೇಕರಿಗೆ ಕಾಣಿಸುತ್ತಲೇ ಇರುತ್ತದೆ. ಅಸಮಾನತೆ ಅಧಿಕವಾಗಿರುವ ಸಮಾಜದಲ್ಲಿ ಯಾರಿಗೂ ಮನಃಶಾಂತಿ ಇರುವುದಿಲ್ಲ. ಆದ್ದರಿಂದಲೇ ಎಲ್ಲ ವರ್ಗದ ಜನರಿಗೂ ತಮ್ಮ ಜೀವನ ಕ್ರಮದ ವಿರೋಧಗಳಲ್ಲೂ, ಸಮಾನತೆಯ ಸಮಾಜಕ್ಕಾಗಿ ಹೋರಾಡುವುದು ನೈತಿಕ ಅಗತ್ಯವೆನಿಸುವುದು. +ಮೇಲಿನ ಮಾತುಗಳ ತಾತ್ಪರ್‍ಯ ಇಷ್ಟೆ; ಇಂದಲ್ಲದಿದ್ದರೆ ನಾಳೆಯಾದರೂ ನಾವು ಸಮಾನ ಯೋಗ್ಯತೆಯ ಏಕರೀತಿಯ ಶಾಲೆಗಳಿಗಾಗಿ ಹೋರಾಡಬೇಕಾಗುತ್ತದೆ; ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್ ಕಲಿಸುವುದು ಅಸಾಧ್ಯವಾದ್ದರಿಂದ ಮಾತೃಭಾಷೆ ಮತ್ತು ರಾಜ್ಯ ಭಾಷೆಗಳನ್ನು ಮಾತ್ರ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಇವೆರಡೂ ಒಂದೇ ಆಗಿರುವ ಮಕ್ಕಳು ಇನ್ನೊಂದು ಭಾಷೆ ಕಲಿಯುವುದಾದರೆ ಅದು ಯಾವುದಾದರೊಂದು ಭಾರತೀಯ ಒಂದು ಭಾಷೆಯನ್ನು ಚೆನ್ನಾಗಿ, ಆಳವಾಗಿ, ಸೃಜನಾತ್ಮಕವಾಗಿ ಕಲಿತ ವಿದ್ಯಾರ್ಥಿ, ಮೂರು ಪ್ರಯೋಗದ ವಿಷಯದಲ್ಲಿ ಹೆಚ್ಚು ಶಕ್ತನಾಗಿರುತ್ತಾನೆ. ಅಷ್ಟೇ ಅಲ್ಲ, ಇಂಥ ಒಬ್ಬ ವಿದ್ಯಾರ್ಥಿ ಕಾಲೇಜು ಸೇರುವ ಮುನ್ನ ಇಂಗ್ಲಿಷನ್ನೂ, ಹಿಂದಿಯನ್ನೂ ಆರು ತಿಂಗಳ ಒಳಗೆ ಈಗಿನ ನುರಿತು ಊರಿದ ಮನಸ್ಸು, ರಾಜ್ಯ ಭಾಷೆಯಲ್ಲಿ ನೈಪುಣ್ಯ ಪಡೆಯುವುದರ ಜೊತೆಗೇ, ಜ್ಞಾನ ಮಾಧ್ಯಮವಾದ ಹೊರ ದೇಶದ ಭಾಷೆಯೊಂದನ್ನು ಚೆನ್ನಾಗಿ ಕಲಿಯುವುದು ಶಿಕ್ಷಣದ ಸರ್ವತೋಮುಖ ಅಭ್ಯುದಯದ ದೃಷ್ಟಿಯಿಂದ ಅತ್ಯಂತ ಸೂಕ್ತವಾದ ಕ್ರಮವಾಗಿರುತ್ತದೆ. ಈ ಕ್ರಮದಲ್ಲಿ ಕರ್ನಾಟಕದೊಳಗೇ ಬಹಳ ಹಿಂದಿನಿಂದ ಚಾಲ್ತಿಯಲ್ಲಿರುವ, ಅಥವಾ ಈ ದೇಶದೊಳಗೇ ಹುಟ್ಟಿರುವ ತುಳು, ಕೊಡವ, ಕೊಂಕಣಿಯಂಥ ಭಾಷೆಗಳೂ ನಶಿಸಿ ಹೋಗುವುದರ ಬದಲಾಗಿ ಬೆಳೆಯುತ್ತಾ ಹೋಗುವುದೂ ಸಾಧ್ಯವಾಗುತ್ತದೆ. +ಕೆಲವರು ಅಲ್ಪಸಂಖ್ಯಾತರ ಭಾಷೆಗಳನ್ನು ರಕ್ಷಿಸುವ ನೆಪದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದನ್ನು ವಿರೋಧಿಸುವುದುಂಟು. ಇಂಥವರಲ್ಲಿ ಹಲವರು ನಿಜಾವಾಗಿ ಬಯಸುವುದು ತಮ್ಮ ಮಾತೃಭಾಷೆಯ ಬೆಳವಣಿಗೆಯನ್ನಲ್ಲ; ಇಂಗ್ಲಿಷನ್ನು ಈಗಿರುವ ಪ್ರತಿಷ್ಠೆಯ ಸ್ಥಾನದಲ್ಲೇ ಉಳಿಸಿಕೊಳ್ಳುವುದನ್ನು. ಆದ್ದರಿಂದಲೇ (ಅದರ ಘೋಷಿತ ಉದ್ದೇಶವೇನೇ ಇರಲಿ) ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ಗಳಲ್ಲಿ ಪ್ರಕಟವಾದ ಗೆಳೆಯ ಹರಿಕುಮಾರರ ವಾದವನ್ನು, ಮೇಲಿನ ಗುಮಾನಿಯಿಂದಾಗಿ ಒಪ್ಪಿಕೊಳ್ಳುವುದು ನನಗೆ ಕಷ್ಟವಾದ್ದು. ಯಾಕೆಂದರೆ ಭಾರತೀಯ ಭಾಷೆಗಳು ಬೆಳೆಯುವುದಕ್ಕೋಸ್ಕರ ಅವು ಪಡೆಯಬೇಕಾದ ಪ್ರಭುತ್ವದ ಪೋಷಣೆಯಲ್ಲಿ ಅವರಿಗೆ ಆಸಕ್ತಿಯಿಲ್ಲ. ಒಂದು ಕಡೆ, ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಒಲ್ಲದವರನ್ನು ದೇಶ ಬಿಟ್ಟು ತೊಲಗಿ ಎಂದು ಗರ್ಜಿಸುವವರು. ಇನ್ನೊಂದು ಕಡೆ, ಯಾವ ಭಾರತೀಯ ಭಾಷೆ, ಸಂಸ್ಕೃತಿಗಳಿಗೂ ಬದ್ಧರಾಗದೇ ಇಂಗ್ಲಿಷನ್ನು ಬೆಳೆಸುವ ನೆವದಲ್ಲಿ ಅಲ್ಪಸಂಖ್ಯಾತರ ಭಾಷೆಗೆ ವಕೀಲಿ ವಹಿಸುವವರು – ಈ ಇಬ್ಬರ ಜೊತೆಗೂ ನಿಲ್ಲದೆ ಕರ್ನಾಟಕದ ಎಲ್ಲ ಮಾತೃಭಾಷೆಗಳ ಬೆಳವಣಿಗೆಯ ಜೊತೆ ಜೊತೆಗೇ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಹೇಗೆ ಮಾಡಬೇಕೆಂಬುದನ್ನು ಯೋಜಿಸ ಹೊರಟಿರುವ ನಮ್ಮಂಥವರ ನಿಲುವು ಸದ್ಯಕ್ಕೆ ಜನಪ್ರಿಯವಾಗಲಾರದು. ಆದರೂ ಚಿಂತೆಯಿಲ್ಲೆಂದು ನಾವು ನಮ್ಮ ವಿಚಾರವನ್ನು ನಿರ್ಭಯವಾಗಿ ಮಂಡಿಸ ಬೇಕಾಗಿದೆ. +ಹಲವು ಸಾಹಿತಿಗಳು ರೋಷಾವೇಶದಲ್ಲಿ ವಿಶ್ವಕನ್ನಡ ಸಮ್ಮೇಳನಗಳ ಸಮಿತಿಯಿಂದ, ಅಕಾಡಮಿಯಿಂದ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ. ಅನಂತರ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ಹೋರಾಡುವ ತಮ್ಮ ಹಿಂದಿನ ನಿಲುವನ್ನು ಬದಲಿಸಿಕೊಂಡಿದ್ದಾರೆ. ಅಂದರೆ, ಇವರೆಲ್ಲರೂ ಈಗ ತಮ್ಮ ರಾಜೀನಾಮೆಗಳನ್ನು ಹಿಂದಕ್ಕೆ ತಗೆದುಕೊಳ್ಳಬಹುದು. ಇವರನ್ನು ಅದಕ್ಕಾಗಿ ಅಣಕಿಸುವುದು ನನ್ನ ಉದ್ದೇಶವಲ್ಲ. ಆದರೆ ಈ ಕನ್ನಡ ಲೇಖಕರು ಸಾಕಷ್ಟು ವಿನಯದಲ್ಲಿ ತಮ್ಮ ಆತ್ಮಶೋಧ ಮಾಡಿಕೊಳ್ಳದಿದ್ದಲ್ಲಿ, ಅವರ ಅವಮಾನ ಇಡೀ ಕನ್ನಡ ಸಾಹಿತ್ಯ ಲೋಕದ ಅಪ್ರಬುದ್ಧತೆಯ ಒಂದು ಲಕ್ಷಣವಾಗಿ ಕಾಣುತ್ತದೆ. ಮೊದಲು ಮುನ್ನುಗ್ಗುವುದು, ನಂತರ ಹಿಂಜರಿಯುವುದು, ಹಿಂಜರಿದನೆಂದು ಅವಮಾನ ಪಡುತ್ತ ಮತ್ತೆ ಮುನ್ನುಗ್ಗುವ ನಾಟಕ ಮಾಡುವುದು; ಅಥವಾ ನನಗೆ ಸದ್ಯಕ್ಕಿಷ್ಟು ಸಾಕು, ಆದರೆ ನಿಮ್ಮಲ್ಲಿ ಕೆಚ್ಚಿದ್ದರೆ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ಶಾಂತಿಯುತವಾಗಿ ಹೋರಾಡಿ ಎನ್ನುವುದು-ಇವೆಲ್ಲವೂ ಅಪ್ರಬುದ್ಧ ವರ್ತನೆಗಳೇ. ಮೇಲಾಗಿ, ಕನ್ನಡ ವಿಶ್ವಭಾಷೆಯಲ್ಲದಿದ್ದಾಗ ಈ ‘ವಿಶ್ವ ಕನ್ನಡ ಸಮ್ಮೇಳನ’ ಮಾಡಿ ಕನ್ನಡಿಗರ ಬಗ್ಗೆ ಬೀಗುವುದೂ ಅತ್ಯಂತ ಅಪಕ್ವ ವರ್ತನೆಯೇ. +ಯಾವ ಜಾತಿಯ ಸಸ್ಯವಾಗಲೀ ಪ್ರಾಣಿಯಾಗಲೀ ನಾಶವಾದರೆ ಇಡೀ ಪರಿಸರದ ಸಮತೋಲ ತಪ್ಪುತ್ತದೆ ಎಂದು ಇಕಾಲಜಿ ಬಲ್ಲವರು ಹೇಳುತ್ತಾರೆ. ಒಂದು ಪರಿಸರದಲ್ಲಿರುವ ಭಾಷೆಗಳೂ ಹಾಗೆಯೇ. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಮಾತ್ರ ಆಳವಾಗಿ, ಆಪ್ತವಾಗಿ ಜ್ಞಾನ ಸಂಪಾದನೆ ಮಾಡಬಲ್ಲರು ಎಂದು ನಂಬುವವರು ಕರ್ನಾಟಕದಲ್ಲಿರುವ ಎಲ್ಲ ಭಾಷೆಗಳನ್ನೂ ಆಯಾ ಮಕ್ಕಳ ಮನಸ್ಸಿನ ಬೆಳವಣಿಗೆಗಾಗಿ ಬಳಸಬೇಕು. ಹ್ಯಾಲಿಡೇ ಎಂಬ ಪ್ರಸಿದ್ಧ ಆಂಗ್ಲ ಭಾಷಾತಜ್ಞನ ಪ್ರಕಾರ ಲಂಡನ್ನಿನ ಸ್ಲಮ್ಮಿನ ಮಕ್ಕಳು ಸ್ವೀಕೃತವಾದ ಇಂಗ್ಲಿಷ್‌ನಲ್ಲಿ ಪಾಠ ಕಲಿಯುವುದಕ್ಕಿಂತ ತಮ್ಮ ಪ್ರದೇಶದ ‘ಗ್ರಾಮ್ಯ’ ಇಂಗ್ಲಿಷ್‌ನಲ್ಲಿ ಹೇಳಿಕೊಟ್ಟರೆ ಇನ್ನಷ್ಟು ಬೇಗ ಕಲಿಯುತ್ತಾರಂತೆ. ಅಂದರೆ ಕರ್ನಾಟಕದಲ್ಲಿ ಮಕ್ಕಳ ಜ್ಞಾನವನ್ನು ಬೆಳೆಸಲು ಉರ್ದು, ಕೊಂಕಣಿ, ತುಳು, ಕೊಡವಗಳು ಮಾತ್ರವಲ್ಲದೆ ಕನ್ನಡದ ಹಲವು ಪ್ರಾದೇಶಿಕ ರೂಪಗಳೂ ಬಳಕೆಯಾಗಬೇಕು. ತಮ್ಮ ತಮ್ಮ ಮಾತೃಭಾಷೆಯಲ್ಲಿ ಆಳವಾಗಿ ಆಪ್ತವಾಗಿ ಸ್ವತಂತ್ರವಾಗಿ ಯೋಚಿಸಲು ಕಲಿಯುವ ಮಕ್ಕಳೆಲ್ಲರೂ ತಮ್ಮ ಹೊರ ಪರಿಸರದ ಭಾಷೆಯಾದ ಕನ್ನಡವನ್ನು ಕಲಿಯಬೇಕು. ಒಂದು ಹಂತದ ತನಕ ಇವರೆಲ್ಲರೂ ಯಾವುದಾದರೊಂದು ಭಾಷೆಯಲ್ಲಿ ದೃಢವಾದ ರೀತಿಯಲ್ಲಿ ಗ್ರಹಿಸುವ ಅಭಿವ್ಯಕ್ತಿಸುವ ಶಕ್ತಿ ಪಡೆದ ನಂತರ ಹೊರದೇಶದ ಭಾಷೆಗಳನ್ನು ಕಲಿಯಬೇಕು. +ಇದು ಕನಸಿರಬಹುದು; ಆದರೆ ಇಂದಲ್ಲ ನಾಳೆ ಕರ್ನಾಟಕವೂ ಈಗಿರುವುದಕ್ಕಿಂತ ಹೆಚ್ಚು ಸ್ವಾಯತ್ತ ರಾಜ್ಯವಾಗಬೇಕಾಗುತ್ತದೆ. ಕೇಂದ್ರ ಸರ್ಕಾರ ಇಡೀ ರಾಷ್ಟ್ರದ ರಕ್ಷಣೆಯ ಜವಾಬ್ದಾರಿಯನ್ನು ಮಾತ್ರ ಇಟ್ಟುಕೊಂಡು, ಈ ರಾಜ್ಯಗಳಿಗೆ ಉಳಿದ ಅಧಿಕಾರಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಗಾಂಧೀಜಿ ಕನಸುಕಂಡ ಈ ವಿಕೇಂದ್ರೀಕರಣದಲ್ಲಿ ರಾಜ್ಯದ ಒಂದು ಗ್ರಾಮದ ಜನ ಕೂಡ ಪ್ರಭುತ್ವದಲ್ಲಿ ಪಾಲುದಾರರಾಗಿರುತ್ತಾರೆ. ಹೀಗಾಗುವ ಕರ್ನಾಟಕ ತನ್ನ ರಾಜ್ಯದೊಳಗೆ ಸಾಮ್ರಾಜ್ಯಶಾಹಿ ಧೋರಣೆ ಬೆಳೆಸಿಕೊಳ್ಳಕೂಡದು. (ಹಲವು ಭಾಷೆಗಳು ಹೀಗೆ ಸಾಮರಸ್ಯದಿಂದ ಬೆಳೆಯಬಹುದೆಂಬ ಬಗ್ಗೆ ಅತ್ಯಂತ ಸಮರ್ಪಕವಾಗಿ ಚಿಂತಿಸಿದ ಇಬ್ಬರೆಂದರೆ ಲೆನಿನ್ ಮತ್ತು ಗಾಂಧಿ) ಈಗ ನಡೆಯುತ್ತಿರುವ ಚಳವಳಿಯ ಗೊಂದಲದಲ್ಲಿ ನಾನು ಬರೆದಿರುವುದೆಲ್ಲ ಅಧಿಕಪ್ರಸಂಗದಂತೆ ಕಾಣಬಹುದು. ಆದರೆ ಕನ್ನಡಸಂಸ್ಕೃತಿಗೆ ನಿಷ್ಠವಾದ ‘ರುಜುವಾತು’ ಪತ್ರಿಕೆಯ ಸಂಪಾದಕರಾಗಿ ಹೀಗೆ ಬರೆಯುವುದು ನನ್ನ ಕರ್ತವ್ಯವೆಂದು ತಿಳಿದಿದ್ದೇನೆ. ಯಾವುದು ಜನಜೀವನಕ್ಕೆ ಅಗತ್ಯವೆಂಬ ಪ್ರಜ್ಞೆಯುಳ್ಳವರು. ಸದ್ಯದ ಯಶಸ್ಸಿಗಾಗಿ ಸಂಘಟಿತರಾದ ದೊಂಬಿಗಾರ ಜನರಿಗೆ ಅಪ್ರಿಯವಾಗುವಂತೆ ನಡೆದುಕೊಳ್ಳಲು ಹಿಂಜರಿಯಬಾರದು. ಹಾಗೆ ಹಿಂಜರಿಯುವವನು ಸಂಸ್ಕೃತಿಗೆ ಬೆಲೆಯುಳ್ಳ ಏನನ್ನೂ ಸೇರಿಸಲಾರ. ಇದನ್ನು ಅವಿನಯದ ಮಾತೆಂದು ಓದುಗರು ತಿಳಿಯಬಾರದು. ಯಾಕೆಂದರೆ ನನ್ನ ವಾದದಲ್ಲಿ ತಪ್ಪಿದ್ದರೆ ಅದರಿಂದ ನಷ್ಟವಾಗುವುದು ನನಗೆ ಮಾತ್ರ. ಆದರೆ ಜನರನ್ನು ರೊಚ್ಚಿಗೇಳಿಸುವ ಶಕ್ತಿಯುಳ್ಳ ಕನ್ನಡ ಚಳವಳಿಯ ‘ಪಾಪ್ಯುಲಿಸ್ಟ್’ ನಾಯಕರು ಮಾಡುವ ತಪ್ಪಿನಿಂದ ಇಡೀ ಸಮುದಾಯಕ್ಕೇ ನಷ್ಟವಾಗುತ್ತದೆ. +***** +ರುಜುವಾತು ೬, ೧೯೮೨ +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […] +– ನೊಮ್ ಚಾಮ್ಸ್‌ಕಿ (ಕನ್ನಡಕ್ಕೆ ಪ್ರೀತಿ ನಾಗರಾಜ್) ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ […] +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_699.txt b/Kannada Sahitya/article_699.txt new file mode 100644 index 0000000000000000000000000000000000000000..7babcd5543416badc10d66bd6b6c8ba9b595cbe4 --- /dev/null +++ b/Kannada Sahitya/article_699.txt @@ -0,0 +1,101 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಸದಾ ಇವರು ಹೀಗೆಯೇ- +ಇಲ್ಲೆ, ಗಾಂಧಿಬಜಾರಿನ ಹಿರಿ ಚೌಕದೆದುರಲ್ಲೇ, +ಸಿಗರೇಟು ಸೇದುತ್ತಲೊ ಪತ್ರಿಕೆಯನೋದುತ್ತಲೊ +ಹರಟುತ್ತಲೊ ಇದ್ದಾಗ ಎದುರಾಗುವರು ಇದ್ದಕಿದ್ದಂತೆ +ನಿರ್ದಿಷ್ಟ ಸಮಯದಂತೆ. +ವಯಸು ಅನುಭವ ಹೂಡಿ ಸುಖದುಃಖ ಬೆಳೆದ ಮುಖ, +ಹಿಂದೊಮ್ಮೆ ನೆಲಸಿದ್ದ ಬೆಳಕ ಕನವರಿಸುತಿಹ ಮಂದಗಣ್ಣು; +ಸಾಂತ್ವನವ ನುಡಿದಿರುವ ಹಳೆ ನಮೂನೆಯ ಚಶ್ಮ; +ಅದೇ ಕೊಡೆಯ ಗದೆ: +ಬೆದರಿಸಲು ಭಿಕ್ಷುಕರ ಹುಡುಗರನ್ನ, +ಬೀದಿ ಕುನ್ನಿಯ, ಪೋಲಿ ದನಗಳನ್ನ, +ಎದುರಿಸಲು ಮಳೆ ಬಿಸಿಲ ದಾಳಿಯನ್ನ, +ಸಾಲು ವೃಕ್ಷದ ಹಕ್ಕಿ ಹಿಕ್ಕೆಯನ್ನ. +ಇವರು ನನ್ನೆದುರಲ್ಲಿ ಹಾದು ಹೋದಾಗೆಲ್ಲ +ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆಯೊಂದು ನಗರಕ್ಕೆ ಸಂದಂತೆ, +ಬೆಳಗಾಗ ಛಳಿಯಲ್ಲಿ ಬಿಸಿ ನೀರ ಮಿಂದಂತೆ +ಎದೆ ಸ್ವಚ್ಛಗೊಳ್ಳುತ್ತದೆ; ಹಗುರಕ್ಕೆ ಸಲ್ಲುತ್ತದೆ. +– ೨ – +ಗವೀಪುರದಿಂದ ಗಾಂಧಿಬಜಾರಿನ ಕೊನೆಗೆ +ಪ್ರಕೃತಿಯ ಕರೆಯಂತೆ ಎಳೆಯುವುದು ಕ್ಲಬ್ಬು; +ಅಲ್ಲಿ ಕಾಯುತ್ತಾರೆ ಕಿಟ್ಟಿ ಗುಂಡೂ ಸುಬ್ಬು- +ಹೊಚ್ಚ ಹೊಸ ಯೌವನದ ರಂಗುಗಳ ಗುಂಗುಗಳ, +ಫ್ಯಾಶನ್ನು ಪಹರೆಗಳ, ಕಸಿ ಹಣ್ಣು ಚಹರೆಗಳ +ವರ್ತಮಾನದ ನಟ್ಟನಡುವಿನಲ್ಲಿ +ಹುಚ್ಚು ಹುರುಪಿನ ನೂಕುನುಗ್ಗುಲಲ್ಲಿ- +ಅಚ್ಚುಕಟ್ಟಿನ ಹಾಗೆ, +’ ಮಾದರಿಯ ಬೆಂಗಳೂರಿನ ಹಾಗೆ, +ಕಾಲ ಕುಗ್ಗಿಸಿದೊಡಲು ಕಾಲನೆಳೆಯುತ ಬರಲು +ಈ ವೃದ್ಧರನು ಕಂಡು “ಅಯ್ಯೊ” ಎಂದಿದ್ದೇನೆ; +ಎನ್ನುತಿರುವಂತೆಯೆ ಕೈಯ ಮುಗಿದಿದ್ದೇನೆ. +ರಸ್ತೆ ಹಿರಿದಾಗಿ ಫುಟ್‌ಪಾತು ಕಿರಿದಾಗಿ +ಓಡಾಟ ಹೆಚ್ಚಾಗಿ, ನೆಮ್ಮದಿಯೆ ಪೆಚ್ಚಾಗಿ, +ಲೋಕ ಕಂಪ್ಯೂಟರಿನ ಸ್ವಿಚ್ಚು ತಂತಿಗಳಂತೆ ಸಂದಿಗ್ಧವಾಗಿ, +ಬೆಲೆಗಳೆಲ್ಲ ಬಿದ್ದು ಹರಡಿ ದಿಕ್ಕಾಪಾಲು +ಎಸೆಯುತಿವೆ ಪ್ರತಿಕ್ಷಣವು ಸರಳ ವೃದ್ಧಾಪ್ಯಕ್ಕೆ ಹಿರಿ ಸವಾಲು. +– ೩ – +ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು +ಇಪ್ಪತ್ತೆಂಟನಾಡುವುದು – ನಡುವೆ ಅದೂ ಇದೂ +ಇಪ್ಪತ್ತೆಂಟನಾಡುವುದು; +ನಂಬರೆರಡರ ಬಸ್ಸಿನೆದುರು ಬಾಳೆಯ ಸಿಪ್ಪೆ +ಟೈಲರಿನ ಎಡಗಾಲನುಳುಕಿಸಿದ್ದು; +ರಾತ್ರಿ ಪುರ ಭವನದಲಿ ಸಂಗೀತ ಸಾಮ್ರಾಜ್ಞಿ +ಶಂಕರಾಭರಣದಲಿ ಪುಲಕಿಸಿದ್ದು; +ಅಬ್ದುಲನ ಹೈಕೋರ್ಟು ರಿಟ್ಟು ವಜಾ ಆದದ್ದು; +ಖೋಟ ನೋಟ್ ಕೃಷ್ಣನಿಗೆ ಕಠಿಣ ಸಹ ಆದದ್ದು; +ಬದರಿ ನಾದಿನಿಗೊಬ್ಬ ಒಳ್ಳೆ ವರ ಸಿಕ್ಕಿದ್ದು; +ರಷ್ಯ ಚೀನಾ ಕ್ಯೂಬ ಅಮೇರಿಕ ವಾರ್ತೆ ಮಿಕ್ಕಿದ್ದು- +ಅದೂ ಇದೂ ಇಪ್ಪತ್ತೆಂಟನಾಡುವುದು; +ನಡುವೆ ತಪ್ಪಾಡಿದರೆ ಎದುರಾಳಿಯಲ್ಲೊಬ್ಬ +ಮನೆಯ ಕಿರಿ ಸೊಸೆಯಂತೆ ಮುಖವನೂದಿಸಿ ಬೀಗಿ +ಗೊಣಗುವುದು: ಲೆಟ್ ಅಸ್ ಪ್ಲೇ ದಿ ಗೇಂ ಫಾರ್ ಗೇಮ್’ಸ್ ಸೇಕ್ +ಇನ್ನಿವರ ಜೀವನ? ಅದು ಕೂಡ ಹೀಗೆಯೇ, ಎಲ್ಲ ಖುಲ್ಲ; +ಖುಷಿಗಷ್ಟೆ ನಫೆಗಲ್ಲ. +ಗಂಟೆಗಟ್ಟಲೆ ಕಲಸಿದರು ಕೈ +ಬಂದರಿಪ್ಪತ್ತು ಹೋದರಿಪ್ಪತ್ತು ನ. ಪೈ., +ಕೂಗು ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ +ಬಿರಿಸಿ ನಕ್ಕಾಗಿವರು, ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ; +ಚಣಕ್ಕಷ್ಟು ಚಳಿ ನೂಲು, ಒಂದಿಷ್ಟು ಹೂಬಿಸಿಲು, +ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು. +– ೪ – +ಹೊತ್ತಾಯಿತೆ? ಆವರಿಸಿತೇ ಮಬ್ಬು? +ಕೊಡೆ ತೆರೆದು ಏಕಾಕಿ ಮನೆಯತ್ತ ನಡೆಯುವರು ಮರೆತು ಕ್ಲಬ್ಬು. +ಗಾಂಧಿಬಜಾತೀಗ ತಿಳಿಯಾಗಿ ಫರ್ಲಾಂಗು ಬೆಳಕ ಹಬ್ಬ- +ಚೌಕದೆಡೆ ಆಗೀಗ ಪ್ರತಿಪಕ್ಷದವನೊಬ್ಬ +ಎಲುಬಿರದ ನಾಲಗೆಯ ನಾಚು ನಡೆಸುತ್ತಿರಲು +ಸರ್ಕಾರದಸಫಲತೆಯ ಹುಣ್ಣ ನೊಣ – ಸುತ್ತಿರಲು, +ದೀಪಗಳ ಝಗಮಗದಿ ಕಣ್ಸೋತು ನಿಂತಿರಲು +ಮನೆಮಠವ ಮರೆತಿರುವ ಮಂದಿ ಸಂತೆ, +ಬೊಬ್ಬೆ ಅಬ್ಬರದೆದುರು ಗುರುತು ಹತ್ತದ ಹಾಗೆ +ಕಾಲಿಗೊತ್ತಿದ ಗಾಜ ಚೂರ ದೂರಕೆ ಎಸೆದು +ಸಾಗುವರು ಸದ್ದಿರದೆ ಚಂದ್ರನಂತೆ; +ಗಂಭೀರವಾಗಿ +ಕರ್ತವ್ಯದೆಚ್ಚರಿನ ಸನ್ನೆಯಂತೆ. +ನೋಡುತ್ತಲಿದ್ದಂತೆ +ಹೋಟಲಿನ ಬದಿಯಲ್ಲಿ ಬೀದಿ ತಿರುಗನು ಹೊಕ್ಕು +ಮರೆಯಾಗುವರು ಮಾಸ್ತಿ- +ಸಂದ ಜೀವನದೊಂದು ರೀತಿಯಂತೆ; +ಸರಳ ಸದಭಿರುಚಿಯ ಖ್ಯಾತಿಯಂತೆ. +***** +ಕೀಲಿಕರಣ: ಶ್ರೀನಿವಾಸ +“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […] +– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […] +ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_7.txt b/Kannada Sahitya/article_7.txt new file mode 100644 index 0000000000000000000000000000000000000000..d0f2342b2c8a9fbb46855189605c22818bce61a5 --- /dev/null +++ b/Kannada Sahitya/article_7.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಭವ ಕಾದಂಬರಿ ಮೊದಲು ಪ್ರಕಟವಾದದ್ದು ೧೯೯೪ ರಲ್ಲಿ. ಶ್ರೀ.ಯು.ಅರ್.ಅನಂತಮೂರ್ತಿಯವರ ಎಲ್ಲ ಕೃತಿಗಳನ್ನು ಪ್ರಕಟಿಸುವ ಹೆಗ್ಗೋಡಿನ ಅಕ್ಷರ ಪ್ರಕಾಶನ. +ಒಟ್ಟು ೯೯ ಪುಟಗಳಿರುವ ಈ ಕಾದಂಬರಿಯ ಬೆಲೆ : ರೂ ೬೦. +ಪ್ರತಿಗಳು ಬೇಕಾಗಿರುವವರು ಸಂಪರ್ಕಿಸಬೇಕಾದ ವಿಳಾಸ: +ಅಕ್ಷರ ಪ್ರಕಾಶನ – ಹೆಗ್ಗೋಡು (ಸಾಗರ) ಕರ್ನಾಟಕ – ೫೭೭೪೧೭ ಅಥವ ಈ – ಮೈಲ್ ಮೂಲಕ ಸಂಪರ್ಕ ಬೇಕಾದಲ್ಲಿ ಇಲ್ಲಿ ಕ್ಲಿಕ್ಕಿಸಿ +ಕನ್ನಡಸಾಹಿತ್ಯ.ಕಾಂ ‘ಭವ’ ಪ್ರಕಟಿಸಲು ‘ಬರಹ’ಕ್ಕಿಳಿಸಿದವರು: +ಸೀತಾ ಶೇಖರ್ +ಸಿ.ಶ್ರೀನಿವಾಸ್ +ನಂದಿನಿ ಶೇಖರ್ +ಗುರುಪ್ರಸಾದ್ ಟಿ.ಆರ್. +ಶೀಲಾ ಸತೀಶ್ +ಇವರಿಗೆಲ್ಲ ಕನ್ನಡಸಾಹಿತ್ಯ.ಕಾಂ ಪರವಾಗಿ ಧನ್ಯವಾದಗಳು +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ಆರಿದ್ರಾ ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_70.txt b/Kannada Sahitya/article_70.txt new file mode 100644 index 0000000000000000000000000000000000000000..263e729c2c7fb5fa0063100df82e10ecb450bb12 --- /dev/null +++ b/Kannada Sahitya/article_70.txt @@ -0,0 +1,453 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಗ ವತ್ಸರಾಜನಿಗೆ ಹುಟ್ಟಲಿರುವ ಸಂತತಿಯ ವಿಷಯವಾಗಿ ಒಮ್ಮೆಲೇ ಕಾಳಜಿ ಹೊಕ್ಕಿತ್ತು. ಮನೆಯಲ್ಲಿ ಒಂದು ತಿಂಗಳಿಂದ ಕಲಹ ಶುರುವಾಗಿತ್ತು. “ನಿನ್ನ ಲಗ್ನ ಮಾಡಿದೆ. ಈಗ ನೀನು ನನ್ನನ್ನು ಗತಿ ಕಾಣಿಸು!” ಎಂದು ವತ್ಸರಾಜನಿಗೆ ವಿನಂತಿ ಮಾಡಿಕೊಂಡರು. ದೇವರಾಜರ ಎರಡನೆಯ ಮದುವೆಯನ್ನು ವತ್ಸರಾಜ ಬಲವಾಗಿ ವಿರೋಧಿಸಿದ. ಶ್ರಾವಸ್ತಿ ರಾಜ್ಯ ಬೇರೆಯಾದ ನಂತರ ಬಹಳಷ್ಟು ಆಸ್ತಿ ಪಾಸ್ತಿ ಕೈಬಿಟ್ಟು ಹೋಗಿ ಭದ್ರಮುಖರ ಮನೆತನದ ಆರ್ಥಿಕ ಸ್ಥಿತಿ ಅರ್ಧದಷ್ಟು ಹದಗೆಟ್ಟಿತು. ದೇವರಾಜರ ಹರೆಯದ ದಾಸಿಯೊಬ್ಬಳಿಗೆ ಗರ್ಭ ನಿಂತಾಗ , ಆಕೆಯ ತಂದೆ ತಾಯಿಯರು ಪೌರರಿಗೆ ದೂರು ಕೊಡುವುದಾಗಿ ಹೆದರಿಸಿ ತುಸು ಭೂಮಿಯನ್ನು ದೇವರಾಜರಿಂದ ಕಿತ್ತುಕೊಂಡಿದ್ದರು. ವತ್ಸರಾಜ ಇದನ್ನೂ ವಿರೋಧಿಸಿದ್ದ. ಅಪವಾದದ ಭೀತಿಯಿಂದ ಆ ಪ್ರಕರಣವನ್ನು ಮುಂದುವರೆಸಲಿಲ್ಲ ಅಷ್ಟೇ! +ದೇವರಾಜರಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ವಿಚಾರಮಾಡಿದಷ್ಟೂ ಪಕ್ಷ್ಮಾದೇವಿಯ ಸೌಂದರ್ಯವೇ ಅವರಿಗೆ ಕಣ್ಣು ತುಂಬಿಸಿಬಿಟ್ಟಿತು. ಇದರಲ್ಲಿ ಏನಾದರೂ, ತನಗೆ ರಾಜಕೀಯ ಲಾಭವಿಲ್ಲ. ಪಕ್ಷ್ಮಾಳ ಬಗ್ಗೆ ಮಹಾರಾಣಿಯವರಿಗೆ ಅಸೂಯೆ ಇದೆ. ಮಹಾರಾಜರಿಗೆ ಹೊರತಾಗುವಂತೆ ತಾವೇ ಪಕ್ಶ್ಮಳನ್ನು ನೋಡಿಕೊಳ್ಳುವುದೆಂದು ಅಂಗಲಾಚಿಕೊಂಡು ಪಕ್ಷ್ಮಳ ಮೇಲಿನ ನಿಷೇಧ ದೂರ ಮಾಡಬಹುದೆ? ಮಹಾರಾಣಿ ಇದಕ್ಕೆ ಏಕೆ ಒಪ್ಪಬಾರದು? ಏನೇ ಆಗಲಿ, ಮೊದಲು ಪಕ್ಷ್ಮಳನ್ನು ಒಮ್ಮೆ ನೋಡಬೇಕೆಂದು ಆಸೆಯಾಯಿತು. ಮರುದಿನ ವೀರಸೇನನನ್ನು ಬರಹೇಳಿದ್ದು ಒಳ್ಳೆಯದೇ ಆಯಿತೆಂದು ನಿಶ್ಚಯ ಮಾಡಿಕೊಂಡರು. +ಮರುದಿನ ವೀರಸೇನ ಬಂದಾಗ ಅವನಿಗೆ ಇಪ್ಪತ್ತು ವರಹಗಳನ್ನು ಓಲೈಸಿ, ಛದ್ಮವೇಷದಲ್ಲಿ ಬೆಳಗಿನ ಮೂರು ಪ್ರಹರದ ಸುಮಾರಿಗೆ ದೇವರಾಜರು ಆಮ್ರವನದ ಸಮೀಪದ ಗುಡಿಸಲಿಗೆ ಕಾಲ್ನಡಿಗೆಯಿಂದ ಬಂದರು. ವೀರಸೇನನನ್ನು ಹೊರಗೆಯೇ ಕೂಡಿಸಿ, ಗುಡಿಸಲನ್ನು ಪ್ರವೇಶಿಸಿದರು. ಕೇಶಾಲಂಕಾರದಲ್ಲಿ ನಿರತಳಾದ ಪಕ್ಷ್ಮೆ ಚಕಿತಳಾಗಿ ನಿಂತಳು. ಗಡ್ಡ ಮೀಸೆಗಳನ್ನು ಕಿತ್ತೊಗೆದು, ದೇವರಾಜರು ಸಾಷ್ಟಾಂಗವೆರಗಿ ಭೋಗಭಿಕ್ಷೆಯನ್ನು ಬೇಡಿದರು. ಅಯೋಧ್ಯೆಯಲ್ಲಿ ಪಕ್ಷ್ಮೆ ನಿರ್ಗತಿಕಳಾದಾಗ ತಾವು ಆಶ್ರಯ ಕೊಟ್ಟುದನ್ನು ನೆನಪಿಗೆ ತಂದುಕೊಟ್ಟರು. ಮಹಾರಾಣಿಯನ್ನು ಓಲೈಸಿ ಆಕೆಗೆ ಕ್ಷಮಾದಾನ ಕೊಡಿಸುವುದಾಗಿ ಆಶ್ವಾಸನವಿತ್ತರು. ಅದು ಶಕ್ಯವಾಗದಿದ್ದರೆ, ಅಯೋಧ್ಯೆಯ ಹೊರಗೆ ಸಮೀಪದ ಒಂದು ಹಳ್ಳಿಯಲ್ಲಿ ಆಕೆ ವೈಭವದಿಂದ ಇರಲಿಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಒಟ್ಟಿಗೆ ಇದ್ದ ಎರಡೇ ದಿನಗಳನ್ನು ನೆನಪಿಗೆ ತಂದುಕೊಟ್ಟರು. +ಅಷ್ಟೊತ್ತಿಗೆ ಹೊರಗೆ ಏನೋ ಸದ್ದು ಕೇಳಿಸಿತು. +ಲಗುಬಗೆಯಿಂದ ದೇವರಾಜರು ಗಡ್ಡಮೀಸೆಗಳನ್ನು ಪುನಃ ಧರಿಸಿದರು. +ಅಯೋಧ್ಯೆಯ ಹತ್ತು ಪಹರೆಯ ಸಿಪಾಯಿಗಳು ಗುಡಿಸಲನ್ನು ಮುತ್ತಿದ್ದರು. ಪಕ್ಷ್ಮೆಯನ್ನೂ, ದೇವರಾಜರನ್ನೂ ಬಂಧಿಸಿ ಜವನಿಕೆಯಿದ್ದ ರಥದಲ್ಲಿ ಬೇರೆಬೇರೆಯಾಗಿ ಕಟ್ಟಿಕುಳ್ಳಿರಿಸಿ ರಥವನ್ನು ಅಯೋಧ್ಯೆಯತ್ತ ದೌಡಾಯಿಸಿದರು. ಯಾರೂ ಪಿಟ್ಟೆಂದು ಮಾತಾಡಲಿಲ್ಲ. +ಅರಮನೆಯ ಹಿಂದಿನ ಕುದುರೆಯ ಲಾಯದಲ್ಲಿ ಇಬ್ಬರನ್ನೂ ಬೇರೆಯಾಗಿ ಕೂರಿಸಲಾಯಿತು. ಒಂದು ಪ್ರಹರ ಹಾಗೆಯೇ ಮೌನವಾಗಿ ಕುಳಿತಿದ್ದರು. ಅನಂತರ ದೇವರಾಜರನ್ನು ಅವರ ಗಡ್ಡ ಮೀಸೆಗಳ ಸಹಿತವಾಗಿ ಮಹಾರಾಣಿಯ ಕೋಣೆಯ ಕೆಳಗಿನ ನೆಲಮನೆಗೆ ಒಯ್ಯಲಾಯಿತು, ಮುಸುಕಿನಲ್ಲಿ. +ಮಹಾರಾಣಿ ಒಬ್ಬಳೇ ನಿಂತಿದ್ದಳು. ಜೊತೆಗೆ ಇನ್ನಾರೂ ಚೇಟಿಯರು ಇರಲಿಲ್ಲ. ಪಹರೆಯವರು ಬಾಗಿಲವರೆಗೆ ಮಾತ್ರ ಬಂದರು. +“ಭದ್ರ ಮುಖ ದೇವರಾಜ! ಗಡ್ಡಮೀಸೆ ತೆಗೆದು ಬನ್ನಿರಿ!” ಮಹಾರಾಣಿ ಗಡ್ಡಮೀಸೆ ತೆಗೆದೊಗೆದು ದೇವರಾಜರು ಸಾಷ್ಟಾಂಗ ಪ್ರಣಿಪಾತ ಮಾಡಿದರು. +“ನಾನು ಸರ್ವಸ್ವಿ ತಪ್ಪುಗಾರ, ಸಾಮ್ರಾಜ್ಞಿ! ನನ್ನನ್ನು ಕ್ಷಮಿಸಿ.” +“ಕ್ಷಮಿಸುವುದೇನಿದೆ, ಭದ್ರಮುಖ! ಎಲ್ಲ ಗಂಡಸರು ಮಾಡುವುದನ್ನೇ ಮಾಡಿದಿರಿ. ಆದರೆ ನೆನಪಿರಲಿ. ನಿಮ್ಮ ಸೊಸೆ ನನ್ನ ಗೆಳತಿ.” +“ಹೌದು ಮಹಾರಾಣಿ. ಆಕೆಯ ಸಲುವಾಗಿಯಾದರೂ..” +“ನಿಮ್ಮ ಔದಾರ್ಯವನ್ನು ಪರೀಕ್ಷಿಸುವುದಕ್ಕಾಗಿ ನಾನೇ ವೀರಸೇನನನ್ನು ನಿಮ್ಮ ಬಳಿಗೆ ಅಟ್ಟಿದ್ದೆ. ಅವನಿಗೆ ಏನು ಪಾರಿತೋಷಕ ಕೊಟ್ಟಿರಿ?” +“ಇಪ್ಪತ್ತು ವರಹಗಳನ್ನು…” +“ಒಂದು ವರಹ ವಾರ್ತೆಗಾಗಿ, ಇಪ್ಪತ್ತು ವರಹ ಜೊತೆಗೆ ಬಂದು ದಾರಿ ತೋರಿಸುವುದಕ್ಕಾಗಿ, ಹತ್ತು ವರಹ ಪಹರೆ ಕುದುರೆಗಾಗಿ, ಹತ್ತು ವರಹ ನಿಮ್ಮ ರಥ ಎಳೆದು ತಂದದ್ದಕ್ಕಾಗಿ, ಅಲ್ಲವೆ? ರಾಜಪುರುಷರೇ ಹೀಗೆ ಜಿಪುಣತನ ತೋರಿಸಿದರೆ ರಾಜಪುರುಷರ ಮರ್ಯಾದೆ ಏನು ಉಳಿಯಿತು? ಆಗ ಪಕ್ಷ್ಮಾಳ ಎರಡು ದಿನದ ಸ್ನೇಹಕ್ಕಾಗಿ ಏನು ಕೊಟ್ಟಿರಿ?” +“ಹತ್ತು ವರಹಗಳು, ಮಹಾರಾಣಿ!” +“ನಿಮ್ಮ ರಸಿಕತೆಯ ಬೆಲೆ ಇಷ್ಟೇ ಏನು?” +ದೇವರಾಜರು ಕೈಹೊಸೆದುಕೊಳ್ಳುತ್ತ ಮೆಲ್ಲನೆ ಹೇಳಿದರು: +“ಶ್ರಾವಸ್ತಿಯ ಅರಸರು ಅಯೋಧ್ಯೆಯ ನಾಲ್ಕು ಹಳ್ಳಿಗಳನ್ನು ವಶಪಡಿಸಿಕೊಂಡಮೇಲೆ ನಮ್ಮ ಮನೆತನದ ಪ್ರಾಪ್ತಿ ಅರ್ಧದಷ್ಟು ಕಳೆದು ಹೋಯಿತು, ಮಹಾರಾಣಿ! ನಾನು ಈಗ ಅಯೋಧ್ಯೆಯ ವಣಿಕಪುತ್ರರಿಗಿಂತ ದರಿದ್ರ.” +“ಶ್ರಾವಸ್ತಿಯ ಅರಸರ ಪರಿಚಯ ನಿಮಗೆ ಇದೆಯೇ?” +“ಶ್ರಾವಸ್ತಿಯ ಈಗಿನ ಮಹಾರಾಜ ಸುಭಾನು ನನ್ನ ಬಾಲ್ಯದ ಸ್ನೇಹಿತ.” +“ನಿಮ್ಮಷ್ಟೇ ಸ್ತ್ರೀಲೋಲುಪನೇ?” +“ಹೌದು ಮಹಾರಾಣಿ!” ತಮಗೆ ಆದ ಅಪಮಾನವನ್ನು ನುಂಗುತ್ತ ದೇವರಾಜರು ಹೇಳಿದರು. +“ಪಕ್ಷ್ಮಾದೇವಿಯನ್ನು ಅವನಿಗೆ ಒಪ್ಪಿಸಿದರೆ ನಮ್ಮ ನಾಲ್ಕು ಹಳ್ಳಿಗಳನ್ನು ನಮಗೆ ಒಪ್ಪಿಸಬಹುದೇ?” +“ಕೇಳಿ ನೋಡಬೇಕು, ಮಹಾರಾಣಿ!” +“ಹಾಗಾದರೆ ನೀವು ಈ ಸಂಧಾನವನ್ನು ಮಾಡುವಿರಾ?” +“ತಮ್ಮ ಇಷ್ಟವಿದ್ದರೆ..” +“ನಮ್ಮದೇನು ಇಷ್ಟ? ನಿಮ್ಮ ಹಿರಿಯರು ವಶಪಡಿಸಿಕೊಂಡ ಭೂಭಾಗ ಅದು. ಅಯೋಧ್ಯೆಗೆ ಮರಳಿ ಬಂದರೆ ನಿಮ್ಮ ಪ್ರಾಪ್ತಿಯೂ ಇಮ್ಮಡಿಸಬಹುದಲ್ಲವೆ? ನಮ್ಮ ಹಿರಿಯರು ಬೇನೆಯಿಂದ ನರಳುತ್ತಿರುವಾಗ ದುರ್ಲಕ್ಷ್ಯಗೊಂಡ ನಮ್ಮ ರಾಜ್ಯದ ಸರಯುನದಿಯ ಆಚೆಗಿರುವ ಒಂದು ಪಟ್ಟಿಯನ್ನು ಶ್ರಾವಸ್ತಿಯ ಹೊಸರಾಜರು ವಶಪಡಿಸಿಕೊಂಡರು. ಅಲ್ಲಿಯ ಮಾಂಡಲಿಕರಾದ ನೀವು ಅಯೋಧ್ಯೆಯಲ್ಲಿ ನಿದ್ದೆಹೋದಿರಿ. ವೇಳೆಗೆ ಸರಿಯಾಗಿ ಸೈನ್ಯ ಕಳಿಸಿಕೊಡದಿದ್ದುದು ನಿಮ್ಮ ತಪ್ಪು. ಅದೀಗ ಅಯೋಧ್ಯೆಯ ಕೈಬಿಟ್ಟು ಹೋಗಿದೆ. ಅಲ್ಲಿಯ ಕೃಷಿವಲಯವನ್ನು ಇನ್ನೂ ಉಪಭೋಗಿಸುತ್ತ ಇದ್ದಾರೆ. ಇತ್ತ ಅಯೋಧ್ಯೆಗೂ ಕಪ್ಪ ಒಪ್ಪಿಸುವುದಿಲ್ಲ. ಅತ್ತ ಶ್ರಾವಸ್ತಿಗೂ ಕಪ್ಪ ಒಪ್ಪಿಸುವುದಿಲ್ಲ. ಗಾವುಂಡರಿಗೆ ಒಪ್ಪಿಸುತ್ತಾರೆ. ಗಾವುಂಡರು ತಾವೇ ತಿನ್ನುತ್ತಾರೆ. ಶ್ರಾವಸ್ತಿಗೆ ಆ ಭಾಗದ ಜನರಮೇಲೆ ಪೂರ್ಣ ನಿಯಂತ್ರಣವಿಲ್ಲ. ಅಲ್ಲಿಯ ಪಯಿರಿನ ಫ಼ಲ ಅಯೋಧ್ಯೆಯಲ್ಲೇ ಮಾರಾಟವಾಗುತ್ತದೆ. ನಾವೆಯಲ್ಲಿ ಸರಕು ತುಂಬಿ ಇಲ್ಲಿಯೇ ಬರುತ್ತಾರೆ. ಇಲ್ಲಿಯ ವರಹಗಳನ್ನು ತುಂಬಿಕೊಂಡು ಹೋಗಿ ಅಲ್ಲಿ ರೈತರು ಉಪಜೀವನ ಸಾಗಿಸುತ್ತಾರೆ…” +“ಹೌದು ಮಹಾರಾಣಿ, ಇಂದಿಗೂ ಅಲ್ಲಿಯ ರೈತರು ಅಯೋಧ್ಯೆಯ ಹೆಸರಿನಿಂದಲೇ ಅನ್ನ ಕಾಣುತ್ತಾರೆ.” +“ನಿಮ್ಮ ಹಿರಿಯರು ಸೋಮಾರಿಗಳು. ನೀವು ಸುಭಾನುವಿನ ಎದುರು ಪಕ್ಷ್ಮಾದೇವಿಯ ಗುಣಗಾನ ಮಾಡಿರಿ. ಒಪ್ಪಿದರೆ ರಾಜಸಭೆಯ ಎದುರು ನೃತ್ಯ ಮಾಡಿಸಿರಿ. ಒಪ್ಪದಿದ್ದರೆ, ಹಳ್ಳಿಗಳಿಗೆ ಹೋಗಿ ರೈತರನ್ನು ಹುರಿದುಂಬಿಸಿ ಕ್ರಾಂತಿ ಹೂಡಿರಿ. ನಮ್ಮ ಸೈನ್ಯ ನಂದಿಗ್ರಾಮದಲ್ಲಿ ಸನ್ನದ್ಧವಾಗಿ ನಿಂತಿರುತ್ತದೆ. ಕ್ರಾಂತಿಯ ವಾರ್ತೆ ಕೇಳಿಬಂದ ಕೂಡಲೆ ಮುನ್ನುಗ್ಗುತ್ತದೆ. ಆದರೆ ನಿಮ್ಮ ಪಕ್ಷ್ಮಾ ಸಂಧಾನ ಯಶಸ್ವಿಯಾಗಲೆಂದು ನಾನು ಮನಃಪೂರ್ವಕ ಇಚ್ಛಿಸುತ್ತೇನೆ..ಯುದ್ಧ ತಪ್ಪಿಸುವುದೇ ಮೇಲು. ಸ್ನೇಹಿತ ಸುಭಾನುವಿಗೆ ಮನವರಿಕೆ ಮಾಡಿಕೊಡಿರಿ. ನಿಮ್ಮ ಸಂಧಾನದ ಫ಼ಲಶ್ರುತಿಯನ್ನು ಹೇಳಿಕಳಿಸಿರಿ. ಸ್ತ್ರೀ ಸೌಂದರ್ಯವನ್ನು ಬಣ್ಣಿಸುವ ವಿಷಯ ನಿಮಗೆ ಸುಲಭ. ನಾನು ಅದರಲ್ಲಿ ಕುಶಲಳಲ್ಲ. ಎಂದು ಹೊರಡುತ್ತೀರಿ?” +“ನಾಳೆಯೇ!” +“ನಿಮ್ಮ ಬಾಲ್ಯ ಸ್ನೇಹಿತ ಮಾದ್ರಕನ ನೆನಪಿದೆಯೇ?” +“ಇದ್ದಾನೆ ಮಹಾರಾಣಿ. ಅಯೋಧ್ಯೆಗೆ ಕಾಳುಕಡ್ಡಿ ಮಾರಾಟಕ್ಕೆ ಬಂದಾಗೊಮ್ಮೆ ಬಂದು ಕಾಣುತ್ತಾನೆ.” +“ಸುಭಾನುವನ್ನು ಕಾಣುವ ಮೊದಲು ಮಧುವನ ಗ್ರಾಮಕ್ಕೆ ನಿಂತು ಮಾದ್ರಕನನ್ನು ಕಾಣಿರಿ. ಅವನಿಗೆ ಪಕ್ಷ್ಮೆಯ ಪರಿಚಯವಿದೆ. ಆದರೆ ಅದನ್ನು ಸುಭಾನುವಿಗೆ ತಿಳಿಸುವುದು ಬೇಡ. ಮಾದ್ರಕನ ಮನೆಯವರೆಗೆ ಪಕ್ಷ್ಮೆಯನ್ನು ಮುಟ್ಟಿಸುವುದು ನನಗೆ ಕೂಡಿತು. ನೀವು ಅವನಿಗೆ ತಿಳಿಸಬೇಕು-ಸಂಧಾನ ಯಶಸ್ವಿಯಾಗದಿದ್ದ ಪಕ್ಷದಲ್ಲಿ ನಾಲ್ಕು ಜನ ರೈತರನ್ನು ಕೂಡಿಸಿಕೊಂಡು ಶ್ರಾವಸ್ತಿಯ ಕೆಲ ಸೈನಿಕರನ್ನು ಹೊಡೆದುಬಡಿದು ಹಳ್ಳಿಯಿಂದ ಹೊರಗೆ ಅಟ್ಟಬೇಕು. ನಂದಿಗ್ರಾಮದಲ್ಲಿ ನಮ್ಮ ಸೈನ್ಯ ನಿಂತಿದೆಯೆಂದು ಭರವಸೆ ಕೊಡಬೇಕು. ಅನಂತರ ಸುಭಾನುವನ್ನು ಕಾಣಬೇಕು. ಸರಿಯೇ?” +“ಸರಿ. ಮಹಾದೇವಿ!” +ಆ ಕ್ಷಣದಲ್ಲಿ ತಮಗರಿಯದೆಯೇ ’ಮಹಾದೇವಿ’ ಎಂದು ಪುರುಕುತ್ಸಾನಿಯನ್ನು ಸಂಬೋಧಿಸಿದುದೇ ನಂತರ ಅವಳಿಗೆ ಖಾಯಂ ಹೆಸರಾಯಿತು. +“ಹಾಗಾದರೆ ಹೊರಡಿ..ಈ ಬಡ ವೇಷಭೂಷಣ ಬೇಡ. ಬದಿಯ ಕೋಣೆಯಲ್ಲಿ ಖಿಲ್ಲತ್ತು. ರಾಜಪ್ರತಿನಿಧಿಯ ವೇಷಭೂಷಣಗಳಿವೆ. ತಲೆಬಾಗಿಲಿನಿಂದಲೆ ಹರ್ಷಚಿತ್ತರಾಗಿ ಹೊರಡಿ. ನಿಮ್ಮ ಕಾರ್ಯವನ್ನು ಯಾರಿಗೂ ಹೇಳಬೇಡಿರಿ. ಹೋಗಬಹುದು.” +ಸಂತುಷ್ಟನಾದ ಭದ್ರಮುಖ ರಾಣಿಯ ಕಾಲುಮುಟ್ಟಿ ನಮಿಸಿ ಬೀಳ್ಕೊಂಡನು. +೪ +ಹತ್ತು ನಿಮಿಷ ರಾಣಿ ವಿಚಾರ ಮಾಡುತ್ತ ಕುಳಿತಳು. +ವೇಷಭೂಷಣ ಧರಿಸಿ ದೇವರಾಜರು ಹೊರಗೆ ಹೋದ ಸುದ್ದಿಯನ್ನು ಬಾಗಿಲಿಗೆ ಕಟ್ಟಿದ ಗೆಜ್ಜೆಯ ಮೃದು ಸದ್ದು ಹೇಳಿತು. +ರಾಣಿ ತಟ್ಟನೆದ್ದು ತಾರ್ಕ್ಶ್ಯನಿಗೆ ಹೇಳಿ ಕಳುಹಿಸಿದಳು. +ತಾರ್ಕ್ಶ್ಯ ಬಂದೊಡನೆ ಅವನನ್ನು ಅಮ್ರವನಕ್ಕೆ ಓಡಿಸಿದಳು, ವಾರ್ತೆಯೊಂದಿಗೆ. ಪಕ್ಷ್ಮ ಆಮ್ರವನಕ್ಕೆ ಬಂದುದನ್ನು ಯಾರೋ ಅಪರಿಚಿತ ರಾಹುತರು ನೋಡಿ, ಆಕೆಯನ್ನು ಬಂಧಿಸುವ ಹೆದರಿಕೆ ಹಾಕಿದರಂತೆ. ಅವರಿಗೆ ಲಂಚ ಕೊಟ್ಟು, ಕುದುರೆ ಏರಿ ಪಕ್ಶ್ಮಾದೇವಿ ರಾಜ್ಯದ ಹೊರಗೆ ಓಡಿದಳಂತೆ.-ಇದೇ ಸುದ್ದಿಯ ಸಾರಾಂಶ. ಎತ್ತ ಹೋದಳು ತಿಳಿಯದು. ಬೇರೆ ಏನಾದರೂ ವ್ಯವಸ್ಥೆ ಮಾಡುತ್ತೇನೆ. ಕಾಯಿರಿ ಎಂಬ ಭರವಸೆ. ಈ ಕಟ್ಟುವಾರ್ತೆಯೊಂದಿಗೆ ತಾರ್ಕ್ಸ್ಯ ಹೊರಟುಹೋದಮೇಲೆ, ಮಹಾರಾಣಿ ಪಕ್ಶ್ಮಾದೇವಿಯನ್ನು ಒಳಗೆ ಬರ ಹೇಳಿದಳು. +ಆಕೆ ಬರುವವರೆಗೆ ಅಸೂಯೆಯನ್ನು ಹತ್ತಿಕ್ಕಿ ಹತ್ತಿಕ್ಕಿ, ಮುಖದ ಮೇಲೆ ಯಾವ ಪ್ರತ್ಯಕ್ಷ ಭಾವವೂ ತೋರಗೊಡದಂತೆ ಮುಗುಳು ನಗೆಯೊಡನೆ ನಿಂತಿದ್ದಳು. +ದುಮದುಮ ಉರಿಯುತ್ತ ಪಕ್ಷ್ಮಾರಾಣಿ ಪುರುಷರ ವಿಷಯದಲ್ಲಿ ತಾನೇ ಮೇಲುಗೈಯೆಂಬ ಅಭಿಮಾನದಲ್ಲಿ ಒಳಗೆ ಬಂದು ಸೆಟೆದು ನಿಂತಳು. ಕೆಂಗಣ್ಣುಗಳನ್ನು ವಿಸ್ಛಾಲಿಸಿ ರಾಣಿಯನ್ನು ದುರುದುರು ನೋಡಿ ಕೂಗಿದಳು: +“ನಾನು ಬದುಕುವುದು ಮಹಾರಾಣಿಗೆ ಇಷ್ಟವಿಲ್ಲ. ಹೀಗೆ ಭಯ-ಚಿಂತೆಯಿಂದ ಬದುಕುವುದಕ್ಕಿಂತ ಸಾವು ಮೇಲು. ನನ್ನನ್ನು ಶೂಲಕ್ಕೆ ಏರಿಸಿಬಿಡಿ, ಇದೇ ನನ್ನ ಪ್ರಾರ್ಥನೆ.” +ಮಹಾರಾಣಿ ಎರಡು ಹೆಜ್ಜೆ ಮುಂದೆ ಹೋಗಿ ಪಕ್ಶ್ಮಾದೇವಿಯನ್ನು ಆಲಿಂಗಿಸಿ ಚುಂಬಿಸಿದಳು. ಆಸನವನ್ನು ತೋರಿ “ಕೂರು” ಎಂದಳು. +ಅಷ್ಟಕ್ಕೇ ಪಕ್ಶ್ಮಾರಾಣಿಯ ಸಿಟ್ಟು ಅರ್ಧ ಇಳಿದಿತ್ತು. ಕುದುರೆಯ ಲಾಯದಲ್ಲಿ ನಿಂತು ನಿಂತು ಆಕೆಯ ಕಾಲು ಸೋತಿದ್ದವು. ಆಸನದ ಮೇಲೆ ಕುಕ್ಕರಿಸಿ, “ಈಗ ಚುಂಬನವೇಕೆ?” ಎಂದು ಕೊಂಕುನುಡಿ ಆಡಿದಳು. +“ನನ್ನ ಪತಿಯ ಚುಂಬನಗಳನ್ನು ನಾನು ನಿನ್ನ ಮುಖದ ಮೇಲಿಂದ ಕದ್ದೆನೆಂದು ನಿನಗೆ ಬೇಸರವೇ?-ರಾಣಿ ಕೇಳಿದಳು. ಇಂಥ ಉತ್ತರ ಅನಪೇಕ್ಷಿತವಾಗಿತ್ತು. ಪಕ್ಷ್ಮಳಿಗೆ ಏನು ಉತ್ತರ ಕೊಡಲಿಕ್ಕೂ ಮನಸಾಗಲಿಲ್ಲ. ಸೋತು ಹೋದಳು. +“ನನಗೆ ಮರಣ ಭಿಕ್ಷೆ ಕೊಡಿ” ಎಂದಿಷ್ಟೇ ಹೇಳಿದಳು. +“ಅದು ನನ್ನ ಕೈಯಲ್ಲಿ ಇಲ್ಲ. ಆ ಭಿಕ್ಷೆ ಕೊಡುವವರು ಮಹಾರಾಜರು. ಅದು ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ಅಧಿಕಾರ, ನಡೆಯುವವರೆಗೆ ಮಾತ್ರ. ದೇವರಾಜ ಅತಿಥಿಗೃಹದಲ್ಲಿ ನೀನು ಇದ್ದಾಗ ಚೇಟಿಯ ಜೊತೆಗೆ ಹೇಳಿ ಕಳಿಸಿದ್ದೆ. ನಿನಗೆ ಹೆದರಿಸುವುದಕ್ಕಾಗಿ. ಹೆದರುವುದು, ಬಿಡುವುದು ನಿನ್ನನ್ನು ಕೂಡಿದುದು. “ಆ ಶಿಕ್ಷೆ ವಿಧಿಸಲು ನಿನ್ನ ರಾಣಿ ಯಾರು? ನಾನು ಮಹಾರಾಜರ ಆನಂದಕ್ಕಾಗಿ ಬಂದವಳು” ಎಂದು ಆಗಲೇ ಹೇಳಿ ಬಿಟ್ಟಿದ್ದರೆ ನನ್ನ ಅಧಿಕಾರ ಏನು ಉಳಿಯುತ್ತಿತ್ತು? ಆದರೆ ನೀನು ಮೂವತ್ತು ವರಹಗಳ ಕಾಣಿಕೆಗಾಗಿ ನನ್ನ ಮಾತು ಕೇಳಿದೆ, ಅಲ್ಲವೆ? ನಿನ್ನ ಸ್ವಾತಂತ್ರ್ಯವನ್ನು ನೀನೇ ಮಾರಿಕೊಂಡೆ. ನನ್ನದೇನು ತಪ್ಪು?” +“ಮಹಾರಾಜರು ನೂರು ವರಹ ಕೊಡುವೆನೆಂದು ಹೇಳಿ ಕರೆಸಿಕೊಂಡರು..” +“ನಿನ್ನ ನೂರು ವರಹಗಳು ಮಧುವನದಲ್ಲಿ ನಿನಗೆ ಸಂದಿವೆ. ಅಯೋಧ್ಯೆಯಲ್ಲಿ ನೂರು ವರಹಗಳು ಸಂದಿವೆ. ಮಹಾರಾಜರಿಗೆ ಹತ್ತು ದಿನ ನೀಡಿದ ಸುಖಕ್ಕಾಗಿ ಇನ್ನೂ ನೂರು ವರಹಗಳು ಸಲ್ಲುತ್ತವೆ…ದೇವರಾಜರು ನಿನಗೆ ಕೊಟ್ಟಿದ್ದೆಷ್ಟು? ಎರಡು ದಿನಗಳ ಭೋಗಕ್ಕಾಗಿ ಹತ್ತು ವರಹಗಳು! ಅದರ ಇಮ್ಮಡಿ ತೆರ ಮಹಾರಾಜನಿಂದ ನಿನಗೆ ಸಲ್ಲುತ್ತದೆ. ಆದರೆ ನೀನು ಹೋದಲ್ಲಿ ಬಂದಲ್ಲಿ ಅಯೋಧ್ಯೆಯ ಜನ ಅರಸಿಕರು ಎಂದು ಪ್ರಚಾರ ಮಾಡಬಾರದು!” +“ನಾನು ಒಂದು ಸ್ಥಳದ ನಿಂದೆಯನ್ನು ಇನ್ನೊಂದು ಕಡೆಗೆ ಮಾಡುವುದಿಲ್ಲ. ಅದು ನಮ್ಮ ಧರ್ಮದ ವಿರುದ್ಧ.!” +“ನೀನು ಧರ್ಮಿಷ್ಟೆಯೆಂದೇ ಈ ಮಾತನ್ನು ಹೇಳುತ್ತಿದ್ದೇನೆ. ಮಾದ್ರಕನ ಜೊತೆಗೆ ನಿನ್ನ ವಾಗ್ದಾನದ ಪ್ರಕಾರ ಇನ್ನೆಷ್ಟು ದಿನಗಳು ಉಳಿದಿವೆ?” +“ಇಪ್ಪತ್ತೆಂಟು. ಅವನ ಮನೆಯಲ್ಲಿ ಮಾಡಿದ ನೃತ್ಯದ ಲೆಕ್ಕ ಹಿಡಿದರೆ, ಇಪ್ಪತ್ತೈದು.” +“ನಿನ್ನನ್ನು ಮಾದ್ರಕನ ಮನೆಗೆ ಕಳಿಸುತ್ತೇನೆ. ಕದಾಚಿತ್, ಅವನು ಸ್ವೇಚ್ಚೆಯಿಂದ ಶ್ರಾವಸ್ತಿಯ ಮಹಾರಾಜ ಸುಭಾನುವಿನ ಕಡೆಗೆ ನಿನ್ನನ್ನು ಕಳುಹಿಸಬಹುದು. ನಿನಗೆ ಸಂತೋಷವೇ?” +“ಸಂತೋಷ” +“ಎಲ್ಲರಿಗೂ ಸಂತೋಷ ಮಾಡುವುದೇ ರಾಜಧರ್ಮ. ನಿನಗೆ ಮರಣದ ಚಿಂತೆ ಬೇಡ. ಇಂದು ರಾತ್ರಿ ಅರಮನೆಯಲ್ಲಿ ಕಳೆದು ನಾಳೆ ನೀನು ಮಧುವನ ಗ್ರಾಮಕ್ಕೆ ತೆರಳಬೇಕು. ಜವನಿಕೆಯ ರಥ ಕಳಿಸಿಕೊಡುತ್ತೇನೆ. ಸಂತೋಷದಿಂದ ಇರು!” +ಸೆಟೆದು ಕುಳಿತ ಪಕ್ಶ್ಮಾದೇವಿ ದಿಗ್ಗನೆ ಎದ್ದು ರಾಣಿಯ ಪದ್ಮಕಮಲಗಳಿಗೆ ಎರಗಿದಳು. ಪಾದಗಳನ್ನು ಚುಂಬಿಸಿದಳು. ಕರುಣೆಯಿಂದ ಮಹಾರಾಣಿಯ ಎವೆ ಒದ್ದೆಯಾದವು. +“ಏಳು, ಊಟ ಮಾಡು. ಇಂದು ರಾತ್ರಿ ತಾರ್ಕ್ಶ್ಯ ಬಂದು ನಿನಗಿತ್ತ ಭರವಸೆಯನ್ನು ಪೂರ್ಣಗೊಳಿಸುತ್ತಾನೆ. ಆಗಬಹುದೇ?” +ಪಕ್ಶ್ಮಾದೇವಿಯು ಕಂಬನಿ ತುಂಬಿದ ಮೊಗ ಮೇಲೆ ಎತ್ತಿ ಗದ್ಗದಿಸಿದಳು. +“ಮಹಾರಾಣಿ, ತಾವು ಸಾಕ್ಷಾತ್ ಇಂದ್ರಾಣಿ!” +ಮಹಾರಾಣಿಗೆ ತನ್ನ ಸೋಲಿನ ತೀವ್ರ ಅರಿವಾಯಿತು. ಆದರೆ ರಾಜಧರ್ಮದ ಗೌರವವನ್ನು ಬಿಟ್ಟು ಕೊಡಲಿಲ್ಲ. +“ನೀನು ಈ ಕೋಣೆಯಲ್ಲೇ ವಿಶ್ರಮಿಸು. ಊಟ ಇಲ್ಲಿಯೇ ಬರುತ್ತದೆ.” +೫ +ಅಂದು ರಾತ್ರಿ ತಾರ್ಕ್ಷ್ಯ ತನ್ನ ಪಣವನ್ನು ಸಲ್ಲಿಸಿದನು, ಪಕ್ಷ್ಮ ಸಾಕೆನ್ನುವಂತೆ. +ಮರುದಿನ ಬೇಗನೆದ್ದು ಪಕ್ಶ್ಮಾರಾಣಿಯನ್ನು ಗೌರವದಿಂದ ಅವಗುಂಠಿತ ರಥದಲ್ಲಿ ಮಧುವನಕ್ಕೆ ಕರೆದೊಯ್ದು ಮಾದ್ರಕನಿಗೆ ಒಪ್ಪಿಸಿದನು. ಹೋಗುವಾಗ , +“ಇಂದು ಮಧ್ಯಾಹ್ನ ನಿನ್ನ ಬಾಲ್ಯಸ್ನೇಹಿತ ದೇವರಾಜರು ಬರುತ್ತಾರೆ. ಪಕ್ಶ್ಮಾ ಇಲ್ಲಿ ಇದ್ದುದನ್ನು ಈಗಲೇ ಹೇಳಬೇಡ. ಇಲ್ಲಿಂದ ಸುಭಾನು ಮಹಾರಾಜರನ್ನು ಕಾಣಲು ಶ್ರಾವಸ್ತಿಗೆ ತೆರಳುತ್ತಾರೆ. ಮರಳಿ ಬಂದಮೇಲೆ ಹೇಳಬಹುದು” ಎಂದು ತಿಳಿಸಿ ಅಯೋಧ್ಯೆಗೆ ತಾರ್ಕ್ಶ್ಯ ಮರಳಿದನು. +ದೇವರಾಜರ ಸಂಧಾನ ಕೈಗೂಡಿತು. ಪಕ್ಶ್ಮಾರಾಣಿಯನ್ನು ಸುಭಾನುವಿಗೆ ಒಪ್ಪಿಸಿ, ಲಿಖಿತ ಸನದಿನೊಡನೆ ತಮ್ಮ ನಾಲ್ಕು ಹಳ್ಳಿಗಳಿಗೆ ಬಂದರು. ರೈತರ ಗಾವುಂಡ ಸಭೆ ಏರ್ಪಡಿಸಿ, ಗಾವುಂಡರು ಕೂಡಿಸಿಟ್ಟ ಹಣದಲ್ಲಿ ಅರ್ಧದಷ್ಟು ಕಪ್ಪವನ್ನು ಎತ್ತಿದರು. ನಂದಿಗ್ರಾಮದಲ್ಲಿ ಜಮಾವಣೆಯಾದ ರಾಹುತರಲ್ಲಿ ಒಂದೊಂದು ಹಳ್ಳಿಗೆ ಇಪ್ಪತ್ತರಂತೆ ನೇಮಿಸಿದರು. ವೈಭವದಿಂದ ಅಯೋಧ್ಯೆಗೆ ಮರಳಿ ಬಂದರು. ನಂದಿಗ್ರಾಮದ ಬಳಿಯ ಅರಣ್ಯದಲ್ಲಿ ಸುತ್ತ ಬಿಡಾರ ಮಾಡಿದ ಐನೂರು ಸೈನಿಕರು ಸದ್ದಿಲ್ಲದೆ ಚೆದುರಿಹೋದರು. +ಅಯೋಧ್ಯೆಯ ತುಂಬ ಸಂಭ್ರಮವೋ ಸಂಭ್ರಮ. ಏನಾಯಿತು, ಯಾರಿಗೂ ಗೊತ್ತಿಲ್ಲ. ಶ್ರಾವಸ್ತಿಯ ನಾಲ್ಕು ಹಳ್ಳಿಗಳು ಅಯೋಧ್ಯೆಗೆ ಮರಳಿ ದೊರಕಿದುದಷ್ಟೇ ಎಲ್ಲರಿಗೂ ತಿಳಿದ ವಿಷಯ. +೬ +ಇದೀಗ ತಾರ್ಕ್ಶ್ಯನಿಗೆ ಹೊಸ ಸಂಕಟ ಶುರುವಾಗಿತ್ತು. +ಪಕ್ಶ್ಮಾರಾಣಿಯ ಪಲಾಯಾನದ ವಾರ್ತೆ ಮಹಾರಾಜರಲ್ಲಿ ಯಾವ ಕ್ರೋಧವನ್ನೂ ಹುಟ್ಟಿಸಲಿಲ್ಲ-ನಿಜ. +ಹತ್ತು ದಿನ ಸುಖ ಭೋಗಿಸಿದರೂ ಮಹಾರಾಜರಿಗೆ ತೃಪ್ತಿ ಮಾತ್ರ ಇರಲಿಲ್ಲ. +“ತಾರ್ಕ್ಶ್ಯಾ! ನನಗೆ ಮದುವೆಯಾಗಬೇಕು! ” ಎಂದಿಷ್ಟೇ ಮಹಾರಾಜರು ಹೇಳಿದರು. +ಇದಕ್ಕೆ ಏನನ್ನಬೇಕು? +ಈ ಮಾತನ್ನು ಮಹಾರಾಣಿಯವರಿಗೆ ವರದಿ ಒಪ್ಪಿಸುವುದಕ್ಕೆ ಧೈರ್ಯ ತಾರ್ಕ್ಶ್ಯನಿಗೆ ಇಲ್ಲ. +ಮರುದಿನ ಮಹಾರಾಜರು ತಮ್ಮ ಬೇಡಿಕೆಯನ್ನು ಮತ್ತೆ ಹೇಳಿದರು, ತಮ್ಮ ಮಾತಿನ ಅರ್ಥವನ್ನು ವಿವರಿಸಿದ ಮೇಲೆ ತಾರ್ಕ್ಶ್ಯನಿಗೆ ತುಸು ನೆಮ್ಮದಿಯಾಯಿತು. +ಬಲಿತ ಗಣಿಕೆಯರಿಗೆ ಸಂಗವೇ ಮಹಾರಾಜರಿಗೆ ಬೇಸರವಾಗಿತ್ತು. ಅವರಿಗೆ ಉಪವರ ಕುಮಾರಿಯ ಮೀಸಲು ಮುರಿಯುವ ಹವ್ಯಾಸ ಹೊಕ್ಕಿತ್ತು. +ಗಣಿಕೆಯರಿಗೆ ಉಪವರ ಹೆಣ್ಣುಮಕ್ಕಳಿದ್ದಾರೆಯೇ, ಎಂದು ಊರೂರು ಅಲೆದದ್ದಾಯಿತು. ಯಾರೂ ಕೈಗೆ ಎಟುಕಲಿಲ್ಲ. +ಕುಲೀನ ಕುಟುಂಬಗಳಿಗೆ ಒಂದೆರಡು ಚೌಕಾಶಿ ಮಾಡಿದ್ದೂ ವ್ಯರ್ಥವಾಯಿತು. ಅಯೋಧ್ಯೆಯಲ್ಲಿ ಬಡವರಿದ್ದರೇ ಹೊರತು ಮಹಾರಾಜನ ಕೀರ್ತಿ ಕೇಳಿದವರಾರೂ ಇಂಥ ನರಕ ಯಾತನೆಗೆ ತಮ್ಮ ಮಕ್ಕಳನ್ನು ಒಪ್ಪಿಸಲಿಕ್ಕೆ ಸಿದ್ಧರಾಗಲಿಲ್ಲ. +ಇನ್ನು ನಾಗಕುಟುಂಬದ ಕಾಡು ಜನರನ್ನು ಸಂಧಿಸಬೇಕು. ಅಯೋಧ್ಯೆಯ ಉತ್ತರ ದಿಕ್ಕಿನಲ್ಲಿ ಬಹುದೂರ ಪ್ರಯಾಣ ಮಾಡಬೇಕು. +ಪುರುಕುತ್ಸ ಮಹಾರಾಜರ ಹವ್ಯಾಸವಂತೂ ಮಿತಿಮೀರಿಬಿಟ್ಟಿತು. ತಾರ್ಕ್ಷ್ಯನನ್ನು ತಮ್ಮ ಸೇವೆಯಿಂದ ಕಡಿದುಬಿಡುವುದಾಗಿ ಹೆದರಿಸತೊಡಗಿದರು. +ಗುಪ್ತ ರೀತಿಯಿಂದ ಪುರುಕುತ್ಸಾನಿಯ ಸೇವಕನಾದ ತಾರ್ಕ್ಷ್ಯನಿಗೆ ಸಂಕಟವಾಯಿತು. ಊರು ಬಿಟ್ಟು ಓಡಿ ಹೋಗುವುದು ಒಂದು ಉಪಾಯ. ಆದರೆ ಪುರುಕುತ್ಸಾನಿ ಕಾಲಕಾಲಕ್ಕೆ ತನಗೆ ಒಪ್ಪಿಸಿದ ಅರ್ಧ ರಾಜಕೀಯ ಕಾರ್ಯಗಳಿಗೆ ಮನಸೋತಿದ್ದ ತಾರ್ಕ್ಷ್ಯನಿಗೆ ಇದು ಬಹಳ ಬಿಗಿಯ ನಿರ್ಣಯವಂತಾಗಿ ತೋರಿತು. +ಮಹಾರಾಜರಿಗೂ ಮಹಾರಾಣಿಯವರಿಗೂ ಒಂದು ವಾರ ಊರಿಗೆ ಹೋಗುತ್ತೇನೆಂದು ಬಿನ್ನೈಸಿಕೊಂಡು ಉತ್ತರಕೋಸಲದ ಕಡೆಗೆ ಪ್ರಯಾಣ ಬೆಳೆಸಿದ. ಹತ್ತು ದಿನ ಬರಲಿಲ್ಲ. +೭ +“ಕಾಲಿಯಾ! ತಾರ್ಕ್ಶ್ಯ ಬಂದನೇನು?” +ಈ ಒರಲು ಮಹಾರಾಜರಿಂದ ಐದನೇ ದಿನ ಶುರುವಾದದ್ದು ಐದು ದಿವಸ ಅವ್ಯಾಹತವಾಗಿ ಸಾಗಿತು. +“ಇನ್ನೂ ಇಲ್ಲ!” ಎಂದು ಹೇಳಿಹೇಳಿ ಕಾಲಿಯಾ ಬೇಸತ್ತಿದ್ದ. +ಹತ್ತನೆಯ ದಿವಸ ಸಂಜೆ ಕುದುರೆಯ ಖುರಪುಟ ಕೇಳಿ ಬಂತು. +ತಾರ್ಕ್ಷ್ಯನೇ ಬಂದನೆಂದು ಕಾಲಿಯಾ ಹೊರಗೆ ಓಡಿದ. +ಬಂದವನು ತಾರ್ಕ್ಷ್ಯನಲ್ಲ. ಅಪರಿಚಿತ ರಾಹುತನೊಬ್ಬ. +ಕುದುರೆಯ ಮುಂಭಾಗದಲ್ಲಿ ಕಂಬಳಿಯ ಮುಸುಕಿನಲ್ಲಿ ಸಡಿಲಾಗಿ ಕಟ್ಟಿದ ಹಸಿಬೆಯಂತ ಚೀಲವಿದ್ದಿತು. +ಕಾಲಿಯನನ್ನು ಸಮೀಪ ಕರೆದು ರಾಹುತ ಕುದುರೆಯ ಲಗಾಮು ಗಟ್ಟಿಯಾಗಿ ಹಿಡಿದು ನಿಲ್ಲುವಂತೆ ಹೇಳಿದ. ಅಪರಿಚಿತನು ತನ್ನನ್ನು ’ಕಾಲಿಯಾ’ ಎಂದು ಸಂಭೋದಿಸಿದ್ದನ್ನು ಕೇಳಿ ಕಾಲಿಯಾ ಮುಂದೆ ಬಂದು ಲಗಾಮು ಹಿಡಿದು ನಿಂತ. +ಜತನದಿಂದ ರಾಹುತ ಕುದುರೆಯಿಂದ ಇಳಿದು, ಆ ಹಸಿಬೆಯನ್ನು ತನ್ನ ಹೆಗಲಿಗೆ ಏರಿಸಿಕೊಂಡ. “ಮಹಾರಾಜರೆಲ್ಲಿ?” ಎಂದು ಕೇಳಿದ. +ಹಸಿಬೆಯೊಳಗಿಂದ ಅಫ಼ೀಮಿನ ಅಮಲಿನಲ್ಲಿ ಸಣ್ಣ ನರಳಿಕೆ ಕೇಳಿ ಬರುತ್ತಿತ್ತು. +ಕಾಲಿಯಾ ಲಗುಬಗೆಯಿಂದ ಕುದುರೆಯನ್ನು ಗಿಡಕ್ಕೆ ಕಟ್ಟಿ, ರಾಹುತನನ್ನು ಕರೆದೊಯ್ಯಲಿಕ್ಕೆ ಬಂದ. +ರಾಹುತ ಒಳಗೆ ಹೋಗಿ, ಕಾಲಿಯಾನನ್ನು ಅಲ್ಲಿಯೇ ನಿಲ್ಲಲಿಕ್ಕೆ ಹೇಳಿದ. +“ಪ್ರಭುಗಳು ಚಿತ್ತೈಸಬೇಕು. ತಾರ್ಕ್ಷ್ಯ ಈ ಕಾಣಿಕೆ ಕಳಿಸಿಕೊಟ್ಟಿದ್ದಾನೆ. ಇನ್ನೂ ಅಫ಼ೀಮಿನ ಅಮಲು ಇಳಿದಿಲ್ಲ. ಇಲ್ಲೇ ಮಲಗಿಸಲೇ?” +“ಹಾಸಿಗೆಯ ಮೇಲೇ ಮಲಗಿಸು.” +ಕಂಬಳಿಯ ಆವರಣವನ್ನು ತೆಗೆದು ಹದಿಮೂರು ವರ್ಷದ ಎಳೆಯ ಬಾಲಕಿಯನ್ನು ಹಾಸಿಗೆಯ ಮೇಲೆ ಮಲಗಿಸಿದ. +“ತಾರ್ಕ್ಷ್ಯನೆಲ್ಲಿ?” +“ನಾಳೆಗೆ ಬಂದು ಮುಟ್ಟುತ್ತಾನೆ. ಅವನ ಕಾಲಿಗೆ ಗಾಯವಾಗಿದೆ. ನಾಲ್ಕು ಕ್ರೋಸಿನ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದಾನೆ. ಪ್ರಭುಗಳು ತಡವಾದದ್ದಕ್ಕೆ ಕ್ಷಮಿಸಬೇಕು. ಅವನನ್ನು ಕರೆದು ತರಲು ನಾನು ಹೋಗಲೇ?” +“ನೀನು ಹೊರಡು.” +“ಅಪ್ಪಣೆ, ಮಹಾಪ್ರಭು!” ರಾಹುತ ಈಚೆಗೆ ಬಂದ. ಕಾಲಿಯಾನನ್ನು ದಿಟ್ಟಿಸಿ ನೋಡುತ್ತ, “ನೀನು ಇಲ್ಲಿಯೇ ಇರು” ಎಂದು ಹೇಳಿ ಕುದುರೆಯೇರಿ ಹೊರಟು ಬಿಟ್ಟ. +ಮರುದಿನ ಬೆಳಿಗ್ಗೆ ಕಾಲಿಯಾ ಎದ್ದು ಮಹಾರಾಜರ ಹಾಸಿಗೆಗೆ ಹೋಗಿ, ಮಲಗಿದ ಬಾಲಕಿಯನ್ನು ಎತ್ತಿ ತಂದ. ಚಿಕ್ಕ ಹುಡುಗಿ. ಏಕೋ ಕಾಲಿಯನಿಗೆ ಕಸಿವಿಸಿಯಾಯ್ತು. ಮಂದಪ್ರಕಾಶದಲ್ಲಿ ಎಲ್ಲಿಯೋ ಪರಿಚಿತ ಬಾಲಿಕೆಯೆಂಬ ಭಾವನೆ ಬಂದಿತು. +ಬಾಲಿಕೆಗೆ ಇನ್ನೂ ನಿಚ್ಚಳ ಎಚ್ಚರ ಬಂದಿದ್ದಿಲ್ಲ. +ಮೊಗಸಾಲೆಯ ಕಟ್ಟೆಯ ಮೇಲೆ ಕಾಲಿಯಾ ಅವಳನ್ನು ದಿಟ್ಟಿಸಿ ನೋಡಿದ. +ತನ್ನ ತಂಗಿ ನಾಗಿಯಾ! +ಒಳಗಿನಿಂದ ಒಂದು ಚಾದರ ತಂದು ಹೊದ್ದಿಸಿದ. ಗಾಳಿ ಹಾಕತೊಡಗಿದ. ಕ್ರೋಧ ಉಕ್ಕೇರಿತು. ಒಂದು ಕ್ಷಣ ಒಳಗೆ ಹೋಗಿ ರಾಜನನ್ನು ಚೂರಿಯಿಂದ ತಿವಿಯಬೇಕೆನಿಸಿತು. ಅಷ್ಟು ಕ್ರೋಧ. ತನ್ನ ಸಂಕಟವನ್ನು ಹತ್ತಿಕ್ಕಿದ. +ಹಾಗೆ ಮಾಡಿದ್ದರೆ ಚೀರಾಟವಾಗಿ ಪಹರೆಯವರು ನುಗ್ಗಿಬರಬಹುದಾಗಿತ್ತು. +ಆಮೇಲೆ ನಾಗಿಯಳ ಗತಿ..? +ನಾಗಿಯಳ ಉಸಿರು ಸಂತವಾಗಿ ಸಾಗತೊಡಗಿತು. +ಇನ್ನು ಅರ್ಧಪ್ರಹರದಲ್ಲಿ ಎಚ್ಚರವಾಗಬಹುದು. ಕುದುರೆ ಸಿಕ್ಕರೆ ಎರಡು ಹರದಾರಿ ಅಡ್ಡಹಾದಿ ಬಿದ್ದು ಓಡಿ ಹೋಗಬಹುದು. +ಹೊರಗೆ ಒಬ್ಬನೆ ಪಹರೆಯವನು ಎಚ್ಚರವಿದ್ದ. ಉಳಿದ ಐವರು ನಿದ್ರಿಸುತ್ತಿದ್ದರು. +ಕಾಲಿಯಾ ಆ ಪಹರೆಯ ರಾಹುತನನ್ನು ಕುರಿತು, “ಮಹಾರಾಜರು ತಾರ್ಕ್ಷ್ಯನನ್ನು ಕರೆದುಕೊಂಡು ಬರಲಿಕ್ಕೆ ಹೇಳಿದ್ದಾರೆ” ಎಂದ. +“ನಾನು ಹೋದರೆ ಇಲ್ಲಿ ಪಹರೆ ಯಾರು ಮಾಡಬೇಕು?” +“ನಾನು ವೈಜನಾಥನನ್ನು ಎಬ್ಬಿಸುತ್ತೇನೆ. ಬೇಗ ಹೋಗು.” +“ತಾರ್ಕ್ಷ್ಯ ಎಲ್ಲಿದ್ದಾನೆ?” +“ಅಯೋಧ್ಯೆಯ ತನ್ನ ಮನೆಯಲ್ಲಿ.” +ರಾಹುತ ಲಗುಬಗೆಯಿಂದ ಅಯೋಧ್ಯೆ ಕುರಿತು ಕುದುರೆ ಬಿಟ್ಟ. ಕಾಲಿಯಾ ಮಲಗಿದ್ದ ವೈಜನಾಥನ ಕಡೆಗೆ ಹೋಗುವುದನ್ನು ನೋಡಿ. +ಕಾಲಿಯಾ ವೈಜನಾಥನನ್ನು ಎಚ್ಚರಗೊಳಿಸಲಿಲ್ಲ. ಆತನ ಕುದುರೆಯನ್ನು ಅಲ್ಲಿಯೇ ಗಿಡಕ್ಕೆ ಕಟ್ಟಿದ್ದರು. ಮೆಲ್ಲನೆ ಬಿಚ್ಚಿ ಸದ್ದಿಲ್ಲದೆ ಆ ಕುದುರೆಯನ್ನು ಆಮ್ರವನದ ಮನೆಯ ಬಾಗಿಲಿಗೆ ತಂದು ನಿಲ್ಲಿಸಿದ. +ಆ ಕುದುರೆಗೆ ಕಾಲಿಯನ ಪರಿಚಯವಿತ್ತು. +ಮೆಲ್ಲನೆ ತಂಗಿ ನಾಗಿಯಾಳನ್ನು ಎತ್ತಿ ಒಯ್ದು ಕುದುರೆಯ ಹೆಗಲ ಮೇಲೆ ಮಲಗಿಸುತ್ತಲೆ, ಅದೇ ಕೈಯಿಂದ ಕಡಿವಾಣ ಹಿಡಿದು ಕುದುರೆಯನ್ನು ಏರಿದ. ನಡೆಸುತ್ತ ನಡೆಸುತ್ತ ಬೇಲಿಯ ಹೊರಗೆ ಹಿಂಭಾಗಕ್ಕೆ ಬಂದ. ಅಲ್ಲಿಯ ಅರಣ್ಯದಲ್ಲಿ ನಾಲ್ಕು ಹೆಜ್ಜೆ ನಡೆಯುತ್ತಲೇ ಮುಂದುವರಿದು, ಕಡಿವಾಣ ಎಳೆದ. +ಕುದುರೆ ಚಂದವಾಗಿ ಓಡತೊಡಗಿತು. +ಅದರ ರೂಢಿಗಳನ್ನು ಕಾಲಿಯಾ ಎಡಹೆಗಲಿಗೆ ಒಮ್ಮೆ ಚಪ್ಪರಿಸಿದ. ನಾಗಾಲೋಟದಿಂದ ಕುದುರೆ ಸಂಚರಿಸತೊಡಗಿತು. +೮ +ಪುರುಕುತ್ಸ ಮಹಾಪ್ರಭುಗಳಿಗೆ ಅಂದು ಮದುವೆಯಾಯಿತೆ? +ತೇಲುಗಣ್ಣು-ಮೇಲುಗಣ್ಣಾಗಿ ತುಯ್ಯುತ್ತ ತಮ್ಮ ವಧುವಿನ ಕುಪ್ಪೆಯೊಂದಿಗೆ ಹಾಸಿಗೆಯ ಬಳಿಗೆ ಬಂದು ನೋಡಿದರು. +ಹುಡುಗಿಗೆ ಇನ್ನೂ ಅಫ಼ೀಮಿನ ಅಮಲು ಇಳಿದಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅಸ್ಪಷ್ಟವಾಗಿ ನರಳುತ್ತಿತ್ತು. +ಅಲ್ಲಿಯೇ ಕುಳಿತು ಮಹಾರಾಜರು ಕಣ್ಣರಳಿಸಿ ನೋಡಿದರು. +ಹುಡುಗಿ ಚೆಲುವೆಯೇನೋ ಹೌದು. +ಆದರೆ.. +ಕೊರಳಲ್ಲಿ ಕರಿಮಣಿಯ ಸರಗಳು, ನಾಗಮುದ್ರಿಕೆಯ ಹಿತ್ತಾಳೆಯ ತಾಯಿತ, ಕೈಯಲ್ಲಿ ಕರಿದಾರ, ಗಲ್ಲದ ಮೇಲೆ ಹಚ್ಚೆ..ನಾಗಕನ್ನಿಕೆಯ ಎಲ್ಲ ಲಕ್ಷಣಗಳೂ ಇದ್ದವು. +ಹಾಗೆಯೇ ದಿಟ್ಟಿಸಿ ನೋಡುವಂತೆ, ಒಮ್ಮೆಲೇ ಗುರುತು ಹತ್ತಿದಂತಾಯಿತು. ಆಕೆಯ ಮುಖವನ್ನು ಮುಂಚೆ ಎಲ್ಲಿ ನೋಡಿದ್ದೇನೆ? ಎಲ್ಲಿಯೋ ನೋಡಿದ ನೆನಪು! ಮಹಾರಾಜರು ತಲೆ ಚಚ್ಚಿಕೊಂಡರು.. +ಹೌದು! ಒಂದೆರಡು ವರ್ಷಗಳ ಕೆಳಗೆ ಕಾಲಿಯಾ ಬಂದ ಹೊಸತರಲ್ಲಿ ಹೀಗೆಯೇ ಇರಲಿಲ್ಲವೇ? +ಕಾಲಿಯಾನ ತಂಗಿ ಇರಬಹುದೆ? +’ತಂಗಿ’ ಎಂಬ ಶಬ್ದದೊಡನೆ ಮಹಾರಾಜರಲ್ಲಿ ಜುಗುಪ್ಸೆ ಹುಟ್ಟಿತು..ತಮ್ಮ ಬಗ್ಗೆ, ತಮ್ಮ ದೈವದ ಬಗ್ಗೆ, ತಮ್ಮ ತಂದೆಯ ಬಗ್ಗೆ, ಕಾಲಿಯಾನ ಬಗ್ಗೆ, ಈ ಹುಡೂಗಿಯ ಬಗ್ಗೆ, ಹೆಚ್ಚಾಗಿ ತಮ್ಮ ಬಗ್ಗೆ… +ಇದೇನು ಮಾನಸಶಾಸ್ತ್ರ?- ಶಬ್ದ ಸಂಕೇತಗಳು ಈ ಮಾಟಮಾಡಬಹುದೇ? ಗೊತ್ತಿಲ್ಲ. +ಬಚ್ಚಲಿಗೆ ಹೋಗಿ ಮಹಾರಾಜರು ವಾಂತಿ ಮಾಡಿಕೊಂಡರು. +ಬಂದು ಇನ್ನೊಂದು ಮೂಲೆಯಲ್ಲಿ ಅಲ್ಲಿಯೇ ಒರಗಿಕೊಂಡರು. +೯ +ಕಾಲಿಯಾನ ಹುಟ್ಟೂರು ಅಮರು ಗ್ರಾಮವನ್ನು ಮುಟ್ಟಲಿಕ್ಕೆ ಆ ಚಟುಲ ಕುದುರೆಗೂ ಮಧ್ಯಾಹ್ನವೇ ಆಯಿತು. +ತಂದೆ ವಾಸುಕಿ ತಾಯಿ ಭೋಗಿಯಾ ಮಗಳು ಕಳೆದು ಹೋಗಿದ್ದರಿಂದ ಚಿಂತಿತರಾಗಿ ಊಟವನ್ನೂ ಬಿಟ್ಟು ಕುಳಿತಿದ್ದರು. ನಾಗಿಯಾ ಪೇರಲೆಹಣ್ಣಿನ (ಅಮರುದ) ತೋಟದಲ್ಲಿ ಹಣ್ಣು ಕದಿಯುವಾಗ ತೋಟಿಗನ ಕೈಗೆ ಸಿಕ್ಕಿದರ ಸುದ್ದಿ ಅವರಿಗೆ ತಿಳಿದಿತ್ತು. ಭೀಮಕಾಯದ ವಾಸುಕಿ ಮುದಿ ತೋಟಿಗನನ್ನು ಎಳೆದು ತಂದು ಚಚ್ಚಿದ್ದನು. ’ನಾಗಿಯ ಹಣ್ಣು ಕದಿಯಲಿಕ್ಕೆ ಬಂದಿದ್ದು ನಿಜ. ಒಂದು ಹಣ್ಣು ತಿನ್ನಲಿಕ್ಕೆ ಕೊಟ್ಟು ನಾವು ಒಳಗೆ ಊಟಕ್ಕೆ ಕುಳಿತಿದ್ದೆವು. ಹೊರಗೆ ಬರುವಷ್ಟರಲ್ಲಿ ಆಕೆ ಮಾಯವಾಗಿದ್ದಳು. ಎದ್ದು ಮನೆಗೆ ಹೋಗಿರಬೇಕೆಂದು ಭಾವಿಸಿ ನಾವು ಬೇರೆ ವಿಚಾರ ಮಾಡಲಿಲ್ಲ. ಇಲ್ಲದಿದ್ದರೆ ಊಟ ಮಾಡಿ ಆಕೆಯನ್ನು ತಂದು ನಿಮಗೆ ದೂರುವ ವಿಚಾರವಿತ್ತು!” ಎಂದು ತೋಟಿಗ ಸುಖಿಯಾ ಹೇಳಿದನು. ಅವನು ವಯೋವೃದ್ಧ. ಅವನ ಮಾತು ಅಲ್ಲಗೆಳೆಯಲಾಗದಿದ್ದರೂ ಸಿಟ್ಟು ತಡೆಯದೆ ವಾಸುಕಿ ಅವನ ಮೈಮೇಲೆ ಬಿದ್ದು, ಕೈತಿರುವಿ ಗುದ್ದು ಕೊಟ್ಟಿದ್ದನು. ಅವನ ಹೆಂಡತಿ ಊರ ಗಾಮುಂಡನಿಗೆ ದೂರು ಕೊಟ್ಟಿದ್ದಳು. ಇಬ್ಬರು ದಾರಿಕಾರರು ಯಾರೋ ಒಂದು ಕಂಬಳಿಯಲ್ಲಿ ಸುತ್ತಿದ ಗಂಟನ್ನು ಹೊತ್ತುಕೊಂಡ ಕುದುರೆ ಸವಾರರನ್ನು ಸಂಧಿಸಿದ ಸುದ್ದಿ ತಿಳಿಯಿತು. ಗಂಟಿನಿಂದ ಒಂದು ಕಾಲು ಇಳಿಬಿದ್ದಿದನ್ನು ನೋಡಿ ಅವನನ್ನು ತಡೆಯುವ ಯತ್ನ ಮಾಡಿದ್ದರು. ಆದರೆ ರಾಹುತ ಬಲವಾಗಿ ಕುದುರೆ ಬಿಟ್ಟಮೂಲಕ ಸಾಧ್ಯವಾಗಲಿಲ್ಲವೆಂದು ತಿಳಿದಿತ್ತು. ಗಾಮುಂಡ ಊರ ಹಿರಿಯರನ್ನು ಕೂಡಿಸಿದ್ದ. ರಾಜನಿಗೆ ವರದಿ ಕಳಿಸಬೇಕು. ಯಾವ ರಾಜನೆಂಬ ಬಗ್ಗೆ ವಿವಾದ ಎದ್ದಿತ್ತು. +ಅಮರು ಗ್ರಾಮ ಗಡಿಪ್ರದೇಶ. ಯಾವ ರಾಜ್ಯಕ್ಕೆ ಸೇರಿದ್ದು ಊರವರಿಗೇ ಯಾರಿಗೂ ಗೊತ್ತಿಲ್ಲ. ಕೆಲವರು ಕಾಶಿರಾಜನೆಂದೂ, ಕೆಲವರು ಅಯೋಧ್ಯಾರಾಜನೆಂದೂ, ಕೆಲವರು ನೇಪಾಳ ರಾಜನೆಂದೂ ವಾದಿಸತೊಡಗಿದರು. ಕೋತ್ವಾಲನು ಕಾಶಿರಾಜನ ಅಭಿಮಾನಿ; ಸಭೆ ಬಿಟ್ಟು ಎದ್ದು ಹೋದನು. ಒಬ್ಬ ಹಿರಿಯ, “ನಮಗೆ ಒಳ್ಳೇದು ಮಾಡುವವರು ನಮ್ಮ ರಾಜರು” ಎಂದು ಹೇಳಿ, “ಅಯೋಧ್ಯಾ ರಾಜರು ಒಳ್ಳೆಯವರೆನ್ನಲಾರೆ, ಆದರೆ ನಿಮ್ಮ ಕೆಲಸವಾಗಬೇಕಾದರೆ, ಸಾಮ್ರಾಜ್ಞ್ನಿ ಮಹಾದೇವಿಯವರ ಕಡೆಗೆ ಹೋಗಬೇಕು!” ಎಂದು ಸಲಹೆ ಮಾಡಿದನು. ವಾಸುಕಿ ಸಭೆಗೆ ಬರಲಿಲ್ಲ. ಕುದುರೆ ಏರಿ ಆರು ಹಳ್ಳಿ ಸುತ್ತಿ ಏನೂ ತಿಳಿಯದ ಊರ ಕಡೆಗೆ ತಿರುಗಿದಾಗ, ಅಡವಿಯಲ್ಲಿ ಕುದುರೆಯ ಖುರಪುಟ ಕೇಳಿ, ಗಿಡಕ್ಕೆ ಮರೆಯಾಗಿ ದೊಣ್ಣೆಯೊಂದನ್ನು ಎತ್ತಿಕೊಂಡು ಸನ್ನದ್ಧವಾಗಿ ನಿಂತಿದ್ದನು. ಕಾಲಿಯಾನನ್ನು ಗುರುತಿಸಿ, ದೊಣ್ಣೆಯನ್ನು ದಪ್ಪಗೆ ಕೆಳಗೆ ಚಲ್ಲಿ, “ಕಾಲಿಯಾ” ಎಂದು ಕುದುರೆ ಇಳಿದು ಧಾವಿಸಿದನು. +ಚಾಣಾಕ್ಷ ಕಾಲಿಯಾ ಕುದುರೆ ನಿಲ್ಲಿಸಿ, “ಏನು?” ಎಂದು ಕೇಳಿದನು. +“ನಿನ್ನ ತಂಗಿ ನಾಗಿಯಾ..! ಎಂದು ವಾಸುಕಿ ಗದ್ಗದಿಸಿದನು.” +“ಇಲ್ಲಿದ್ದಾಳೆ ನಾಗಿಯಾ..!” ಎನ್ನುತ್ತ ಕುದುರೆ ಬಿಟ್ಟು ಕಾಲಿಯಾ ಇಳಿದನು. +ಅವನ ಬೆನ್ನ ಹಿಂದೆಯೇ ನಾಗಿಯಾ ಕುಳಿತಿದ್ದಳು. ಅವಳ ಅಫ಼ೀಮಿನ ಅಮಲು ಅಳಿದಿತ್ತು. ನೀಟಾಗಿ ಬಾಚಿಕೊಂಡು ಏನೂ ಆಗದವಳಂತೆ ಕುದುರೆಯ ಹಿಂದೆ ಕುಳಿತಿದ್ದಳು. “ನಾಗಿಯಾ…!” ಎಂದು ಆಕ್ರೋಶಿಸಿ, ಆಕೆಯನ್ನು ಕುದುರೆಯ ಮೇಲಿಂದ ಕೆಳಗಿಳಿಸಿ ವಾಸುಕಿ ಆಲಂಗಿಸಿದನು, “ಎಲ್ಲಿ ಹೋಗಿದ್ದೆ, ಮಗಳೇ..” ಎಂದು ಗೋಳಿಟ್ಟು ಕೇಳತೊಡಗಿದನು. +“ಅಮರುದ ತೋಟದಿಂದ ಸೀಳುದಾರಿಯಿಂದ ಅಡವಿಯನ್ನು ಸೇರಿದಾಗ ದಾರಿ ತಪ್ಪಿತ್ತು ಅಪ್ಪಾ, ನೀವೆಷ್ಟು ಚಿಂತೆ ಮಾಡಿದರೋ ಏನೋ?” ಎಂದು ನಾಗಿಯಾ (ಅಣ್ಣನ ಕಲಿಸಿಕೆಯ ಅನುಸಾರವಾಗಿ) ಹೇಳಿದಳು. +ಹಿಗ್ಗಿನ ಸಂಭ್ರಮದಲ್ಲಿ ತನ್ನ ಕುದುರೆಯ ಮೇಲೆ ಕೂಡಿಸಿಕೊಂಡು ವಾಸುಕಿ ಮಗನೊಡನೆ ಊರಿಗೆ ಬಂದನು. ಊರಿನ ಹೆಣ್ಣು ಮಕ್ಕಳು ಆರತಿ ಮಾಡಿ, ಕೇರಿನ ಬೊಟ್ಟಿನೊಡನೆ ಆಕೆಯ ದೃಷ್ಟಿದೋಷವನ್ನು ತೆಗೆದರು. ಅಲ್ಲಿಗೇ ಆ ಪ್ರಕರಣ ಮುಗಿದಿತ್ತಾದರೂ, ಮುದುಕಿ ಭೋಗಿಯಾಗೆ ಸಮಾಧಾನವಾಗಲಿಲ್ಲ. +ಆ ಪೇರಲ ತೋಟ (ಅಮರುದ) ಶ್ರೀವಾಮದೇವ ಮಹರ್ಷಿಗಳು ಬೆಳೆಸಿದ್ದು. ಈಗ ಹಿಮಾಲಯಕ್ಕೆ ತಪಶ್ಚರ್ಯೆಗಾಗಿ ತೆರಳಿದ್ದರು. ತೋಟದ ಉಸ್ತುವಾರಿ ನೋಡಲಿಕ್ಕೆ ತಮ್ಮ ಶಿಷ್ಯೋತ್ತಮ ದೇವದೇಮ ಮುನಿಗಳನ್ನು ಅಲ್ಲಿ ಬಿಟ್ಟು ಹೋಗಿದ್ದರು. ಭೋಗಿಯಾ ತನ್ನ ಮಗಳು, ಮಗ, ಗಂಡನೊಂದಿಗೆ ಮಹರ್ಷಿ ದೇವದೇಮ ದರ್ಶನಕ್ಕಾಗಿ ಬಂದು, ಕಾಯಿ-ಕರ್ಪೂರ ಅರ್ಪಿಸಿ, ಮಗಳು ನಾಗಿಯಾಳ ಬಗ್ಗೆ ಪ್ರಶ್ನೆ ಕೇಳಿದಳು. +ದೇವದೇಮರು ಮಹಾತಪಸ್ವಿಗಳು , ತ್ರಿಕಾಲ ಜ್ಞಾನಿಗಳು. ಅವರನ್ನು ಎಷ್ಟು ಹೊಗಳಿದರೂ ಕಡಿಮೆ. +ಯಾರ ಕಡೆಗೂ ನೋಡದೆ ಆಕಾಶ ನೋಡುತ್ತ ಒಮ್ಮೆ ಮಾತ್ರ ಮಹರ್ಷಿಗಳು ಗಟ್ಟಿಯಾಗಿ ನಕ್ಕು ಬಿಟ್ಟರು. +ಅನಂತರ ಕೆಲವು ನಿಮಿಷ ಗಂಭೀರವದನರಾಗಿ ಪುಟಪುಟನೆ ’ಅಸ್ಯವಾಮ ದೇವಸ್ಯ’ ಮುಂತಾದ ಮಂತ್ರಗಳನ್ನು ಪಠಿಸಿದರು. +ಒಂದೇ ಬಾರಿ ನಾಗಿಯಾಳ ಸರ್ವಾಂಗಗಳ ಮೇಲೆ ಕಣ್ಣುಹಾಯಿಸಿದರು. +“ನಾನು ಮಂತ್ರಿಸಿಕೊಟ್ಟ ತಾಯಿತ ಕಳೆದಿಲ್ಲ ತಾನೆ?” ಎಂದು ನಾಗಿಯಾಳಿಗೆ ಪ್ರಶ್ನಿಸಿದರು. +ನಾಗಿಯಾ ತನ್ನ ಕೊರಳಲ್ಲಿ ನೇತಾಡುತ್ತಿರುವ ತಾಯಿತವನ್ನು ಎತ್ತಿ ತೋರಿಸಿದಳು. ಅಲ್ಲಿಗೇ ಆಕೆಯನ್ನು ಬಿಟ್ಟು ಕಾಲಿಯಾನಿಗೆ ಪ್ರಶ್ನಿಸತೊಡಗಿದರು. +“ನೋಡು, ಕಾಲಿಯಾ! ನಾಗಕುಲದವರು. ಅಥರ್ವಣವೇದಿಗಳು. ದೇವರು ನಮಗೆ ಎಲ್ಲ ಕಲೆಗಳನ್ನೂ ದಯಪಾಲಿಸಿದ್ದಾನೆ. ಮಂತ್ರ-ತಂತ್ರ-ವಿಷ ಬಾಧೆಯ ಔಷಧ-ವೈದ್ಯವೇದ, ಶರೀರ ಸಂಪತ್ತು ಎಲ್ಲ ಕೊಟ್ಟಿದ್ದಾನೆ. ಆದರೆ ಒಂದನ್ನು ಮಾತ್ರ ಕೊಡಲಿಲ್ಲ? ಏನದು, ಹೇಳು?” +“ನಾನು ಅರಿಯೆ, ಗುರು! ತಾವೇ ಸರ್ವಜ್ಞರು. ಹೇಳೋಣವಾಗಲಿ.” +“ಹೇಳುತ್ತೇನೆ, ಕೇಳು. ಹೇಗೆ ಬದುಕಬೇಕೆಂಬ ಕಲೆಯನ್ನು ಮಾತ್ರ ಕೊಡಲಿಲ್ಲ.” +“ನಾವು ಹೃಷ್ಟಪುಷ್ಟರಾಗಿ ಬದುಕುತ್ತೇವಲ್ಲ ಗುರುಗಳೇ!” +“ಈಗ ನೋಡು. ನಿಮ್ಮ ಅಪ್ಪ ವ್ಯಗ್ರಚಿತ್ತನಿಗೆ ಹಿಂದು ಮುಂದಿನ ವಿಚಾರ ಮಾಡದೆ ತೋಟಿಗ ಮುದಿ ಸಖಿಯಾನನ್ನು ಥಳಿಸಿದನಂತೆ. ಇದಕ್ಕೆ ಜೀವನ ಕಲೆಯೆಂದು ಹೇಳಬಹುದೇ?” +ವಾಸುಕಿ ಬಾಯಿಬಿಟ್ಟ: “ನನ್ನ ಮನಸ್ಸು ಕಹಿಯಾಗಿತ್ತು. ತಾಳ್ಮೆ ಉಳಿದಿಲ್ಲ, ಪ್ರಭೂ, ತಪ್ಪಾಗಿ ಹೋಯಿತು.” +“ಚಿಂತೆಯಿಲ್ಲ ಬಿಡು, ನಾನು ಇಲ್ಲಿ ಇದ್ದೇನೆ! ಸಖಿಯಾ ಮೂರು ದಿನದಲ್ಲಿ ಸಂಪೂರ್ಣ ಗುಣವಾಗದಿದ್ದರೆ ನಾನು ಅಥರ್ವಣವೇದಿಯೇ ಅಲ್ಲ. ಈಗ ನೀನು, ಕಾಲಿಯಾ, ಊರು ಬಿಟ್ಟು ಅಯೋಧ್ಯೆಗೆ ಹೋದೆ. ಅಲ್ಲಿ ಅಯೋಗ್ಯ ಧನಿಯ ಸೇವೆ ನಿನ್ನ ಪಾಲಿಗೆ ಬಂತು ಹೌದೇ?” +ಈ ಬಗ್ಗೆ ಮಾತು ಮುಂದುವರೆಸುವುದಕ್ಕೆ ಮನಸಾ ಕಾಲಿಯಾ ಸಿದ್ದನಿರಲಿಲ್ಲ. ಅಲ್ಲಿಯೇ ಮಾತು ಮುಗಿಸಬೇಕೆಂದು, “ನಿಜ ಪ್ರಭು” ಎಂದನು. +“ಈಗ ನೀನು ತಾಯಿ! ನನ್ನ ಮಾತನ್ನು ಕ್ಷಮಿಸು. ನಿನ್ನ ಮಗಳು ಋತುಸ್ನಾತೆಯಾದಾಗ ಒಂದು ಋಗ್ವೇದೀಯ ಯಜ್ಞವಿದೆ. ಮಾಡಿದ್ದೀಯಾ?” +“ಇಲ್ಲ ಪ್ರಭು. ಅಥರ್ವಣವೇದಿಯವರು ಅದನ್ನು ಆಚರಿಸಲಿಕ್ಕೆ ಅಧಿಕಾರಿಗಳೇ?” ವಾಸುಕಿ ಅಡ್ಡಬಾಯಿ ಹಾಕಿದನು. +“ಏಕಿಲ್ಲ? ಎಲ್ಲ ವೇದಗಳು ಆ ಪರಬ್ರಹ್ಮನಿಂದ ಮೂಡಿಬಂದವಲ್ಲವೆ? ಆ ಯಾಗವನ್ನು ಮಾಡಿದರೆ, ತಾನು ಕುಮಾರಿಯಲ್ಲ, ಕನ್ಯೆ ಎಂಬ ಅರಿವು ಮಗಳಿಗೆ ಮೂಡುತ್ತಿತ್ತು, ಆಗ ಗಿಡ ಏರಬಾರದೆಂದು ತಿಳಿಯುತ್ತಿತ್ತು. ಈ ಎಲ್ಲ ಯಾಗಗಳು, ವ್ರತಗಳು, ನೇಮಗಳು, ಮನಸ್ಸನ್ನು ದೇಹದ ಅರಿವಿನತ್ತ ತಿರುಗಿಸಿ, ಆಯಾ ವಯಸ್ಸಿನ ಧರ್ಮ ಆಚರಿಸಲು ಬುದ್ದಿ ತರುತ್ತವೆ. ಅಲ್ಲವೆ? ವಾಸುಕೀ ನಿನ್ನ ವಯಸ್ಸೆಷ್ಟು?” +“ನನಗೆ ನೆನಪಿಲ್ಲ, ಪ್ರಭು!” +ಅವನ ಕೈಬೆರಳುಗಳನ್ನು ತಮ್ಮ ಕೈಯಲ್ಲಿ ಹಿಡಿದು, ಉಗುರುಗಳನ್ನು ಮುಟ್ಟಿ ನೋಡಿ “ನಿನಗೆ ೫೮ ವರ್ಷ. ಇನ್ನೆರಡು ವರ್ಷದಲ್ಲಿ ನಿನ್ನ ಷಷ್ಠ್ಯಬ್ದ ಪೂರ್ತಿ ಯಾಗವಾಗಬೇಕು ತಿಳಿಯಿತೆ? ಇರಲಿ; ಗ ಜ್ಯೋತಿಷ್ಯ ಶಾಸ್ತ್ರವನ್ನಷ್ಟು ನೋಡುತ್ತೇನೆ. ಯಾವ ದುಷ್ಟ ನಕ್ಷತ್ರಗಳು ಪ್ರಭಾವ ಬೀರಿ ನಾಗಿಯಾನ ಕಷ್ಟಕ್ಕೆ ಕಾರಣವಾದವೆಂಬುದನ್ನು ಗುಣಿಸಿ ಹೇಳುತ್ತೇನೆ.” +ಮಣ್ಣು ತುಂಬಿದ ಪಾತ್ರ್ಯೊಂದನ್ನು ತರಿಸಿ, ಗುಣಾಕಾರ ಭಾಗಾಕಾರದಲ್ಲಿ ಋಷಿಗಳು ತುಸು ಸಮಯ ಕಳೆದರು. ಪ್ರಶ್ನಜ್ಯೋತಿಷ್ಯದ ಲೆಕ್ಕದಂತೆ ಆಕೆ ಕಳೆದು ಹೋದ ದಿಕ್ಕನ್ನು ಹೇಳುತ್ತಿರುವಾಗ, ಭಯಪಟ್ಟು, ತಾಳ್ಮೆಗೆಟ್ಟು, ನೆಲದ ಮೇಲೆ ಕಾಲಿಯಾ ಕಾಲು ಹೊಸೆಯುತ್ತಿದ್ದದ್ದು ಕಾಣಿಸಿತು. ಹೆಚ್ಚು ವಿವರ ಹೇಳುವುದು ಈ ಸಂದರ್ಭದಲ್ಲಿ ಅಯುಕ್ತವೆಂದು ಋಷಿಗಳಿಗೆ ಅನಿಸಿತು. ಲೆಕ್ಕವನ್ನು ಅರ್ಧಕ್ಕೇ ನಿಲ್ಲಿಸಿ, ದಿವ್ಯ ದೃಷ್ಟಿಯನ್ನು ಮುಗಿಲತ್ತ ಹಾಯಿಸಿ ಹೇಳಿದರು. +“ಏನೋ, ಆ-ಮ್ರ, ಆ-ಮ್ರವೆಂಬ ಶಬ್ದ ನನ್ನ ಅಂತಃಕರಣದಲ್ಲಿ ಧ್ವನಿಸುತ್ತಿದೆ..” +ತಟ್ಟನೆ ಕಾಲಿಯಾ ಹೇಳಿದ: “ಅದೇ ಮಹಾಗುರು, ಅದೇ..ಇದೇ ಅಮರೂದ ತೋಟದಲ್ಲಿ ನಮ್ಮ ನಾಗಿಯಾ ದಾರಿ ತಪ್ಪಿಸಿಕೊಳ್ಳಲಿಲ್ಲವೇ? ತಾವು ಹೇಳಿದ್ದು ತಂತೋತಂತ ಹೊಂದಿಕೆಯಾಗುತ್ತದೆ!” +ಮಹರ್ಷಿಗಳು ಕಾಲಿಯಾನತ್ತ ನೋಡಿ, ಮುಗುಳುನಗೆ ನಕ್ಕರು. ತೋಟದಲ್ಲಿನ ಒಂದು ಸುಂದರ ಅಮರೂದ ಹಣ್ಣನ್ನು ಅಕ್ಷತೆಯೊಂದಿಗೆ ನಾಗಿಯಾಳ ಉಡಿಯಲ್ಲಿ ಹಾಕಿ, ” ಏನೂ ಭಯವಿಲ್ಲ ಮಗಳೇ, ಇನ್ನಾರು ತಿಂಗಳಲ್ಲಿ ನಿನ್ನ ವಿವಾಹವಾಗುತ್ತದೆ” ಎಂದು ಹೇಳಿ ಅಂದಿನ ಪ್ರಶ್ನೆಯ ವಿಷಯವನ್ನು ಮುಗಿಸಿ, ಎದ್ದರು. +ಎಲ್ಲರೂ ಹರ್ಷಚಿತ್ತರಾಗಿ ಮನೆಗೆ ಮರಳಿದರು. ಕಾಲಿಯನಿಗೆ ಮಾತ್ರ ಮಹರ್ಷಿಗಳ ಮುಗುಳುನಗೆಯಲ್ಲಿ ಏನೇನೋ ಗೂಢಾರ್ಥ ಕಾಣಿಸಿತು. ’ಎಲ್ಲ ಗೊತ್ತಿದೆ. ಆದರೆ ಎಲ್ಲ ಹೇಳಲಿಲ್ಲ. ನಮ್ಮ ಪುಣ್ಯ!’ ಎಂದುಕೊಂಡ. +೧೦ +ತಾರ್ಕ್ಶ್ಯನಿಂದ ಸ್ವಜನಘಾತವಾಗಿತ್ತು ಅವನೂ ನಾಗಕುಲದವನೇ. ಮಹಾರಾಜ-ಮಹಾರಾಣಿಯವರೂ ಅದೇ ಕುಲದವರು. ಅರಸನ ಹೊಸ ಲಾಲಸೆಯನ್ನು ಪೂರೈಸುವುದಕ್ಕಾಗಿ ಮಾಡಿದ ದುಷ್ಕರ್ಮವು ಅವನ ಜೀವ ಹಿಂಡತೊಡಗಿತ್ತು. ಅದಕ್ಕೆಂದೇ ತಾರ್ಕ್ಷ್ಯ ಒಬ್ಬ ರಾಹುತನ ಜೊತೆಗೆ ತನ್ನ ಭಾರವನ್ನು ಆಮ್ರವನಕ್ಕೆ ಸಾಗಿಸಲು ವ್ಯವಸ್ಥೆ ಮಾಡಿದನು. ಸಾಲದುದಕ್ಕೆ ದಾರಿಯಲ್ಲಿ ಇನ್ನೊಮ್ಮೆ ನಾಗಿಯಳನ್ನು ನೋಡಬೇಕೆಂದು ಅನಿಸಿತು. ಆಫ಼ೀಮು ಇನ್ನೂ ಕೆಲಸ ಮಾಡುತ್ತದೆಯೋ ಇಲ್ಲವೊ ಎಂಬ ಪರೀಕ್ಷೆಗಾಗಿ. ಜೊತೆಗಿದ್ದ ರಾಹುತ ಮುಖಿಯಾ ಅತ್ಯಂತ ಪ್ರಭಾವಕಾರಿ ಅಮಲು ಬರುವ ವಿಶೇಷ ಅಫ಼ೀಮಿನ ಮಿಶ್ರಣ ಕೂಡಿಸಿ ತಯಾರಿಸಿದ ಖಾದ್ಯವನ್ನು ಆಕೆಗೆ ತಿನಿಸಿದ್ದನು. ಅವನ ಸಹಾಯದಿಂದ, ನಾಗಿಯಾಳನ್ನು ನೆಲಕ್ಕೆ ಮಲಗಿಸಿ, ಕಣ್ಣು ಪಾಪೆಯನ್ನು ತೆರೆದು ನೋಡಿದನು. ಕಣ್ಣುಗುಡ್ಡೆಗಳು ಇನ್ನೂ ನೀಲಿಯಾಗಿದ್ದವು. ಆಕೆಯ ಮುಖದ ಹೋಲಿಕೆ ಕಾಲಿಯನಂತೆ ಇದ್ದದ್ದು ತಾರ್ಕ್ಷ್ಯನ ಚಿಂತೆಗೆ ಕಾರಣ, “ಏನೇ ಆಗಲಿ, ತಡವಂತೂ ಆಗಿದೆ. ನಾನೇ ಪಾಪಕ್ಕೆ ಸಾಕ್ಷಿಯಾಗಲಾರೆ. ವರದಿಯಂತೂ ಮಹಾರಾಣಿಗೆ ಮುಟ್ಟಲೇ ಬೇಕು” ಎಂದು, ಆ ಎರಡನೇ ರಾಹುತ ಮುಖಿಯಾನಿಗೆ ನಾಗಿಯಾಳನ್ನು ಒಪ್ಪಿಸಿ, ತಾನು ಅಯೋಧ್ಯೆಗೆ ಬಂದು, ಆದಷ್ಟು ಮೆತ್ತಗಾಗಿ ರಾಣಿಗೆ ವರದಿ ಒಪ್ಪಿಸಿದನು. ಅರಸನ ಶಬ್ದಗಳನ್ನು ಬಳಸಲು ಧೈರ್ಯ ಬರಲಿಲ್ಲ. ಆದರೆ ಅವನ ಹೊಸ ಹವ್ಯಾಸದ ಸೂಕ್ಷ್ಮ ಪರಿಚಯ ಮಾಡಿಕೊಟ್ಟನು. ಅರಸನ ಮನಸ್ಸು ತಿರುಗಿಸುವ ತನ್ನ ಎಲ್ಲ ಯತ್ನ ವ್ಯರ್ಥವಾದುದನ್ನು ತಿಳಿಸಿದ. +“ಈ ವಿಷಯವನ್ನು ಮೊದಲೇ ಯಾಕೆ ಹೇಳಲಿಲ್ಲ?..” ಇಷ್ಟೇ ಹೇಳಿ, ರಾಣಿ ನಾಲಗೆ ಕಚ್ಚಿ ಹಿಡಿದಳು. +ಕ್ಷಣಾರ್ಧದಲ್ಲಿ ಆಕೆಯ ಮನಸ್ಸಿನಲ್ಲಿ ಒಂದು ವಿಚಾರ ಸುಳಿದು, ಆಕೆಯ ಪ್ರಭುಶಕ್ತಿಯೆದುರು ಮಾಯವಾಗಿತ್ತು. ತಾನೇ ವೇಷ ಮರೆಸಿಕೊಂಡು ಬೇರೆ ರೀತಿಯ ಕೇಶಾಲಂಕಾರ ಮಾಡಿಕೊಂಡು, ರಾಜನಿಗೂ ಅಫ಼ೀಮು ಕೊಟ್ಟು ತನ್ನ ಮನಃಕಾಮನೆಯನ್ನು ಏಕೆ ಪೂರೈಸಿಕೊಳ್ಳಬಾರದು? ಆದರೆ, ಹಾಗೆ ಹೇಳಿದ್ದರೆ ರಾಣಿಗೆ ತನ್ನ ಕೌಮಾರ್ಯಾವಸ್ಥೆಯ ವಿಷಯವನ್ನು ತಾರ್ಕ್ಶ್ಯನಿಗೆ ಸೂಚಿಸುವುದು ಅನಿವಾರ್ಯವಾಗುತ್ತಿತ್ತು. ’ತಾವೇ ಬೇಕಾದುದನ್ನು ತರ್ಕಿಸಿಕೊಳ್ಳಲಿ. ನನ್ನ ನಾಲಗೆ ಜಾರತಕ್ಕದಲ್ಲ’ ಎಂಬುದೇ ಅವಳ ನಿರ್ಧಾರ. +ತಾರ್ಕ್ಶ್ಯ ತನ್ನ ಸಂದೇಹಗಳನ್ನು ಸ್ಪಷ್ಟವಾಗಿ ಹೇಳಿದ. “ತಂದ ಕುಮಾರ್ತಿ ಕಾಲಿಯನ ತಂಗಿಯೇ ಆಗಿದ್ದರೆ, ಅದರಿಂದ ಉದ್ಭೂತವಾಗುವ ಸಮಸ್ಯೆಗಳು ತುಂಬಾ ಇವೆ” ಇಷ್ಟೇ ಹೇಳಿ ಮನೆಗೆ ತೆರಳಿದ. +ಮರುದಿನ ಮುಂಜಾನೆ ಪಹರೆಯ ರಾಹುತ ಕರೆಯಲು ಬಂದಾಗ “ಪಹರೆ ಬಿಟ್ಟು ಏಕೆ ಬಂದಿ?” ಎಂದು ಗಡುಸಾಗಿಯೇ ಕೇಳಿ ಅವನ ಜೊತೆಗೆ ತಾರ್ಕ್ಷ್ಯ ಆಮ್ರವನಕ್ಕೆ ಓಡಿ ಬಂದ. +ಆಗಾಗಲೇ ಹಕ್ಕಿಗಳು ಮಾಯವಾಗಿದ್ದವು. +ರಾತ್ರಿ ನಿದ್ದೆ ಇಲ್ಲದೆ ಮಹಾರಾಜರು ಇನ್ನೂ ಮಲಗಿಯೇ ಇದ್ದರು. +“ನಾವು ಬಂದಿದ್ದೆನೆಂದು ಮಹಾರಾಜರಿಗೆ ಎದ್ದಮೇಲೆ ತಿಳಿಸು!” ಎಂದು ಹೇಳಿ ಮಹಾರಾಣಿಯವರಿಗೆ ವರದಿ ಸಲ್ಲಿಸಲು ಅಯೋಧ್ಯೆಗೆ ಓಡಿದನು. +“ಮಹಾರಾಣಿ, ಕಾಲಿಯ ಮಾಯವಾಗಿದ್ದಾನೆ. ಆ ಕುಮಾರ್ತಿಯೂ ಮಾಯವಾಗಿದ್ದಾಳೆ. ನನ್ನ ಅಚಾತುರ್ಯ! ನನ್ನ ಹಣೇ ಬರಹ ! ” ಎಂದು ಅಕ್ಕಸದಿಂದ ಹಣೆ ಬಡಿದುಕೊಂಡನು. +“ಅಂಥ ಅಚಾತುರ್ಯವೇನು ಆಯಿತು?” +“ನಾನು ನಮ್ಮ ಊರಿಗೆ ಹೋಗಿ ನನ್ನ ಜನರಿಗೆ ಮುಖ ಹೇಗೆ ತೋರಿಸಲಿ?” +“ಶಾಂತನಾಗು. ವಿಚಾರಕ್ಕೆ ಸಮಯಕ್ಕೆ ಕೊಡು..ಕಾಲಿಯಾನ ಊರಾವುದು, ನೆನಪಿದೆಯೆ!” +’ಅಮರು ಗ್ರಾಮ..’ +೧೧ +ದೇವದೇಮ ಮಹರ್ಷಿಗಳು ಮಂಗಳವಾರದ ದಿನ ಪ್ರಶ್ನೆಗೆ ನಿಷಿದ್ದವೆಂದು ವಿಧಿಸಿದ್ದರು. ಅಂದು ಮಂಗಳವಾರ. ಪ್ರಶ್ನೆ ಕೇಳುವ ಜನರು ಇರುವುದಿಲ್ಲ. ಅಂದೇ ಕಾಲಿಯಾ ಅವರ ಆಶ್ರಮಕ್ಕೆ ಬಂದನು. +’ನಾನು ಧರ್ಮಚರ್ಚೆಗೆ ಬಂದಿದ್ದೇನೆ. ಜ್ಯೋತಿಷ್ಯ ಪ್ರಶ್ನೆಗಲ್ಲ!’ ಎಂದು ಹೇಳಿ, ಬಾಗಿಲ ಬಳಿ ನಿಂತ ಶಿಷ್ಯನನ್ನು ಬದಿಗೆ ಸರಿಸಿ ಒಳಗೆ ಪ್ರವೇಶಿಸಿದನು. +ಮಹರ್ಷಿಗಳ ಪೂಜೆ ಮುಗಿಯಲಿಕ್ಕೆ ಬಂದಿತ್ತು. ನಾಗದೇವನಿಗೆ ಮಂಗಳಾರತಿ ಬೆಳಗಿ, ಹಾಲಿನ ನೈವೇದ್ಯವಿಟ್ಟು, ಪೂಜೆ ಮುಗಿಸಿದನು. ತೀರ್ಥ ಪ್ರಸಾದಗಳನ್ನು ಕಾಲಿಯನಿಗೆ ಕೊಟ್ಟರು, ಮೌನವಾಗಿ. +“ಏನು ನಿನ್ನ ಧರ್ಮಪ್ರಶ್ನೆ?” ಗುರುಗಳು ಕೇಳಿದರು. +“ಒಬ್ಬ ಸ್ವಾಮಿಯು ಅಯೋಗ್ಯನಾಗಿರುವಾಗ ಅವನನ್ನು ಬಿಟ್ಟು ಇನ್ನೊಬ್ಬ ಸ್ವಾಮಿಯ ಸೇವೆ ಕೈಕೊಂಡರೆ ಅದು ಅಧರ್ಮವೇ?” +“ಮಗೂ, ನಿನ್ನ ಅಂತಃಕರಣದಲ್ಲಿ ಮೂಡಿದ ಸಂದರ್ಭ ನನಗೆ ಕಾಣುತ್ತಿದೆ. ನೀನು ಯಾರ ಸೇವೆ ಮಾಡಬೇಕೆಂದು ಇಚ್ಚಿಸುತ್ತೀಯೋ ಅವರು ಗುರುವಾರ ಮುಂಜಾನೆ ಇಲ್ಲಿಯೇ ಬರುತ್ತಾರೆ. ಆದರೇನು?-ಅವರನ್ನು ಕಾಣುವುದು ಬಿಡುವುದು ನಿನ್ನ ಸಾತ್ವಿಕ ಶಕ್ತಿಯ ಮೇಲೆ ಅವಲಂಬಿಸಿದೆ. ಅದು ನಿನ್ನದೇ ನಿರ್ಧಾರದ ವಿಷಯ!” +ಕಾಲಿಯನಿಗೆ ನೆಲಕ್ಕೆ ಕುಸಿಯುವಂತಾಯ್ತು. ತುಸು ಬೆರಳು ಕಚ್ಚುತ್ತ ಅವನು ಹೇಳಿದನು; +“ಪ್ರಭು ಇಂದು ಮಂಗಳವಾರ. ತಾವು ಪ್ರಶ್ನೆಗೆ ಉತ್ತರ ನೀಡುವುದಿಲ್ಲವೆಂದು ಕೇಳಿದ್ದೆ. ನನ್ನ ಮೇಲೆ ಕೃಪೆ ಮಾಡಿದಿರಲ್ಲ.” +“ಕೃಪೆ ಹೌದೋ ಅಲ್ಲವೋ, ನಿನ್ನ ದೃಢ ನಿಶ್ಚಯದ ಮೇಲೆ ಅವಲಂಬಿಸಿದೆ.” +“ಯಾಕೆ, ಮಹಾಸ್ವಾಮಿ?” +“ಹೆರವರ ಪಾಪಕೃತ್ಯಗಳನ್ನು ನೀನು ಮೂಕಸಾಕ್ಷಿಯಾಗಿ ನೋಡುತ್ತ ಬಂದಿರುವಿ. ನಿನ್ನ ಚಿತ್ತ ಚಂಚಲವಾಗಿದೆ. ಅದರ ಒಳಗಿನ ಅಂತಃಕರಣವನ್ನು ನೀನು ಆಶ್ರಯಿಸುವುದಾದಲ್ಲಿ , ಕಲ್ಯಾಣವಿದೆ. ಚಿತ್ತದ ಅಪಾರ ತೆರೆಗಳನ್ನು ನೀನು ನೋಡುತ್ತ ನಿಲ್ಲುವಿಯಾದರೆ, ಹೀಗೂ ಆಗಬಹುದು. ಹಾಗೂ ಆಗಬಹುದು. ಅದಕ್ಕೆ ನಿಯಮವೆಂಬುದೇ ಇಲ್ಲ. ಅದು ದೈವದ ಮಾತು. ಚಿತ್ತದ ನೂರಾಯೆಂಟು ತೆರೆಗಲಲ್ಲಿ ನೀನು ಆಯ್ದು ಒಂದು ತೆರೆ ಅಂತಃಕರಣದ ಮಾತಿಗೆ ಸಂವಾದಿಯಾದರೆ ಯಶಸ್ಸೂ ಸಿಕ್ಕಬಹುದು. ಉಳಿದ ನೂರಾಯೇಳು ತೆರೆಗಳು ನಿನ್ನ ಘಾತ ಮಾಡುವುದಕ್ಕೂ ಸಮರ್ಥವಿದೆ!” +“ನನ್ನ ಅಂತಃಕರಣದಲ್ಲಿ ಮೂಡಿದ ಪ್ರಶ್ನೆಯನ್ನು ತಾವು ಹೇಗೆ ಓದಿದಿರಿ?” +“ನಿರ್ಮಲಾಂತಃಕರಣದಿಂದ ! ಅಂತಃಕರಣಗಳು ಅಂತಃಕರಣಗಳಿಗೆ ಯಾವಾಗಲೂ ಮೂಕ ಸಂದೇಶ ತಿಳಿಸುತ್ತಲೇ ಇರುತ್ತವೆ. ಓದುವವನಿಗೆ ನಿರ್ಮಲ ಅಂತಃಕರಣ ಬೇಕು ಅಷ್ಟೇ!” +“ಮಂಗಳವಾರ ಕೂಡ ಅಂತಃಕರಣ ಓದಬಹುದೇ?” +“ಯಾಕಿಲ್ಲ? ನೀನು ಆಶ್ರಮದ ನಿಯಮ ಭಂಗಿಸಿ ಇಂದು ಪ್ರಶ್ನೆ ಕೇಳಲಿಕ್ಕೆ ಬಂದಿದ್ದೇ ಸಾಕು. ನಿನ್ನ ಮನಸ್ಸಿನಲ್ಲಿ ಇದ್ದದ್ದು ಅಂತಃಕರಣದ ಪ್ರಶ್ನೆ ಎಂದು ತಿಳಿಯಬಹುದು. ಅಂತಃಕರಣದ ಪ್ರಶ್ನೆ ಇದ್ದಾಗ ಯಾವ ದಿನವಾದರೂ ಸರಿ.” +“ಜ್ಯೋತಿಷ್ಯ ಪ್ರಶ್ನೆಗೂ ಅಂತಃಕರಣದ ಪ್ರಶ್ನೆಗೂ ಅಂತರವೇನು?” +“ಜ್ಯೋತಿಷ್ಯಶಾಸ್ತ್ರ ಒಂದು ವಿದ್ಯೆ. ಅದರ ನಿಯಮ ಅನುಸರಿಸಿ ಫಲ ಹೇಳಬಹುದು. ಅದು ಕಡಿಮೆ ಶ್ರಮದ ಕೆಲಸ. ದಿವಸಕ್ಕೆ ಇಪ್ಪತ್ತು ಜನರ ಜ್ಯೋತಿಷ್ಯ ಹೇಳಬಹುದು. ಅಂತಃಕರಣದ ಪ್ರಶ್ನೆ ಹಾಗಲ್ಲ. ಮೊದಲು ಅಂತಃಕರಣದ ಪ್ರವೇಶ ಮಾಡಬೇಕು. ಓರೆಕೋರೆಗಳನ್ನು ಅರಿಯಬೇಕು. ವ್ಯಾಪಿಸಿ ಅನಂತರ ಹೊರಗೆ ಕಾಲಿಟ್ಟು, ಭವಿಷ್ಯತ್ತಿನ ಸಾಧ್ಯಾಸಾಧ್ಯತೆಗಳ ರೇಷೆಗುಂಟ ಪ್ರಯಾಣ ಮಾಡಬೇಕು. ಒಂದು ದಿವಸದಲ್ಲಿ ಇಬ್ಬರು ಮೂವರ ಅಂತಃಕರಣ ಪ್ರವೇಶ ಮಾಡಬಹುದು. ಹೆಚ್ಚಿಗೆ ನನ್ನಿಂದಾಗುವುದಿಲ್ಲ. ನಮ್ಮ ಗುರು ವಾಮದೇವ ಮಹರ್ಷಿಗಳಿಗೆ ಈ ಸಮಸ್ಯೆ ಇಲ್ಲ. ಅವರ ಮಾತೇ ಜನರ ಭವಿಷ್ಯವಾಗುತ್ತದೆ. ಅವರವರ ಭವಿಷ್ಯ ಆಚಾರ್ಯರ ಮಾತಿನಂತೆ ಓಡುತ್ತದೆಯೆಂಬುದು ಅವರವರ ಅನುಭವದ ಮಾತು. ನಿಜವೆಂದರೆ, ಯಾವ ಶ್ರಮವಿಲ್ಲದೆ ಮಹರ್ಷಿಗಳು ಎಲ್ಲ ಘಟನೆಗಳನ್ನೂ ಹೇಳಬಲ್ಲರು.” +“ದೈವವು ಪೂರ್ವನಿಯೋಜಿತವೆಂದಾಯಿತಲ್ಲ!” +“ಹೌದು. ಜೀವನದ ಮುಖ್ಯ ಘಟನೆಗಳು ಪೂರ್ವನಿಯೋಜಿತ. ಅವನ್ನು ಸಾಧಿಸಲು ಮಾಡುವ ಪ್ರಯತ್ನ ಇಷ್ಟಾನಿಷ್ಟೋಪಪತ್ತಿಯಿಂದ ನೋಡುವವರ ಕಣ್ಣಿಗೆ ರಮ್ಯವಾಗುತ್ತದೆ. ಅನುಭವಿಸುವವನಿಗೆ ಏರುತಗ್ಗುಗಳಾಗಿ ಕಾಣಿಸುತ್ತದೆ. ಈಗ ನೀನೆ ಇರುವೆ. ಕಳೆದ ವಾರ ನಿನಗೆ ಒಂದು ದಾರುಣ ಅನುಭವ ಬಂದಿತು. ಚಿತ್ತವನ್ನು ಕದಡಿಸುವ ವಿಷಯಗಳೇ ಬೇರೆ. ಅಂತಃಕರಣದ ಮೇಲೆ ಚಿರಂತನ ಕಚ್ಚು ಬೀಳಿಸುವ ಘಟನೆಗಳೇ ಬೇರೆ. ನಿನಗೆ ಆದ ಅನುಭವ ಪೂರ್ವಕಲ್ಪಿತ. ನಿನ್ನ ಜೀವನವನ್ನು ಇಡಿಯಾಗಿ ನೀನೆ ನೋಡಿಕೊಂಡರೆ ಈ ದಾರುಣ ಆಘಾತದ ಸಂಭಾವ್ಯತೆ ನಿನಗೇನೆ ಮನವರಿಕೆಯಾಗಬಹುದು. ಆದರೆ ಅರ್ಧಮರ್ಧ ನೋಡಿ ಮನುಷ್ಯ ಸಂಭಾವ್ಯತೆಯನ್ನು ಮರೆತು, ಒಂದು ಘಟನೆಯನ್ನು ಒಂದೇ ಘಟನೆಯೆಂದಾಗಿ ಭಾವಿಸುತ್ತಾನೆ. ಅದೇ ದೃಷ್ಟಿದೋಷ ಮಾಯೆ. ಜೀವನನಾಟಕ ನಡೆಯಬೇಕಾದರೆ ಕತ್ತಲೆಯಲ್ಲಿ ಪಂಜುಗಳ ಅಂಧಕಪ್ರಕಾಶವೇ ಬೇಕೆಂದು ಅನಿಸುತ್ತದೆ. ನಿಚ್ಚಳ ಬುದ್ಧಿಯ ನಿರ್ಮಲಾಂತಃಕರಣಿಗಳಿಗೆ ಎಲ್ಲವೂ ನಿಚ್ಚಳ. ಅವರಿಗೆ ಅಚ್ಚರಿಯೆಂಬುದೇ ಇಲ್ಲ.” +“ಮಹಾಸ್ವಾಮಿ, ನನ್ನ ಕಣ್ಣ ಮೇಲಿನ ಪರೆ ಕಳಚಿದಿರಿ!” +“ನಿನ್ನ ಕಣ್ಣ ಮೇಲೆ ಒಂದೇ ಪರೆ ಇಲ್ಲ, ಕಾಲಿಯಾ! ದೇವರು ನಿನಗೆ ಸದ್ಬುದ್ಧಿಯನ್ನು ಕೊಡಲಿ. ನಿನ್ನ ಮನಸ್ಸಿನ ಗಾಯಗಳ ಲಸಿಕೆ ನಿನ್ನ ಅಂತಃಕರಣವನ್ನು ಮುಟ್ಟದಿರಲಿ. ನೀನು ಹೋಗಬಹುದು!” +ಕಾಲಿಯನ ಮನಸ್ಸಿನಲ್ಲಿ ಇನ್ನಷ್ಟು ನಿಚ್ಚಳ ಪ್ರಶ್ನೆಗಳಿದ್ದವು. ಆದರೆ ನಿರ್ಣಾಯಕ ಮಾತೇ ಬಂದಿದ್ದರಿಂದ ಮುಂದೆ ಏನೂ ಕೇಳಲಿಲ್ಲ. ’ಮುಖದ ಮೇಲೆ ಅವಗುಂಠನವಿದ್ದೇ ನಡೆಯುವುದು ದೈವ!’ ಎಂದುಕೊಂಡು ಅವನು ನಮಸ್ಕರಿಸಿ ಹೊರಟನು. +ಬುದ್ಧಿವಂತನಾಗಿದ್ದರೆ, ’ನಾನು ಏನು ಮಾಡಬೇಕು?’ ಎಂಬ ಪ್ರಶ್ನೆಯನ್ನು ಕೇಳಬಹುದಾಗಿತ್ತು. ಅರ್ಜುನನು ಬುದ್ಧಿವಂತನಾದುದರಿಂದ “ತದೇಕಂವದ ನಿಶ್ಚಿತ್ಯ ಯೇನ ಶ್ರೇಯೋಹಮಾಪ್ನುಯಾಂ” ಎಂಬ ಪ್ರಶ್ನೆ ಕೇಳಿದ. ಆದರೆ ಆಗಿನ ಶಿಕ್ಷಣ, ಸಂಸ್ಕೃತಿ ಇನ್ನೂ ಆ ಮಟ್ಟಕ್ಕೆ ಏರಿರಲಿಲ್ಲ. ಪರಿಪೂರ್ಣ ಋಷಿ ಮುನಿಗಳು ಇದ್ದರೇ ಹೊರತು ಸಾಮಾನ್ಯರು ಅವರ ಪೂರ್ಣ ಲಾಭ ಪಡೆಯುವ ಮಟ್ಟಕ್ಕೆ ಬಂದಿರಲಿಲ್ಲ. ಗುರುಗಳ ಶಕ್ತಿ ಪರೀಕ್ಷೆ ಮಾಡುವ ’ಅಚ್ಚರಿ’ ಎಂಬ ಮಾಯೆ ಇನ್ನೂ ಕಾಲಿಯನ ಮನಸ್ಸನ್ನು ಮುಸುಕಿತ್ತು. +೧೨ +ಚಿಕ್ಕ ವಯಸ್ಸೇ ಆಗಲಿ, ರಾಜ-ರಾಣಿಯರ ಎಲ್ಲ ಗುಟ್ಟನ್ನೂ ಅರಿತ ಸೇವಕನೊಬ್ಬ ಓಡಿಹೋಗಿ ಶತ್ರುವಾಗುವುದು ಮಹಾರಾಣಿಗೆ ಪ್ರಶಸ್ತವೆನಿಸಲಿಲ್ಲ. ಅಮರು ಗ್ರಾಮಕ್ಕೆ ಹೋಗಿ ದೇವದೇಮ ಮಹರ್ಷಿಗಳನ್ನು ಕಂಡು. ಅವಂತಿಕಾದೇವಿಗೆ ಅಭಿಷೇಕ ಮಾಡಿಸಿ, ತನ್ನ ಕುಲ ಧರ್ಮಗವನ್ನು ಮುಗಿಸಿದಂತಾಯಿತೆಂದು ಮಹಾರಾಣಿ ಅಮರುವಿಗೆ ಗುರುವಾರ ಎರಡು ಪ್ರಹರಕ್ಕೆ ಬಂದು ಮುಟ್ಟಿದಳು. ದೇವಿಯ ದರ್ಶನ ಪಡೆದಳು. ಮಹರ್ಷಿಗಳ ದರ್ಶನಕ್ಕೆ ಬಿಳಿ ಸೀರೆಯನ್ನು ಉಟ್ಟುಕೊಂಡು, ತಲೆಯ ಮೇಲೆ ಸೆರಗು ಹೊದ್ದುಕೊಂಡು, ಪಾದಚಾರಿಣಿಯಾಗಿ ರಾಣಿ ಪುರುಕುತ್ಸಾನಿ ಆಶ್ರಮಕ್ಕೆ ಬಂದಳು. +ವಾಮದೇವ ಮಹರ್ಷಿಗಳ ಶಿಷ್ಯೆಯಾದ ಮಹಾರಾಣಿಯನ್ನು ಮಹರ್ಷಿ ದೇವದೇಮರು ಆದರದಿಂದ ಸ್ವಾಗತಿಸಿದರು. ಎಲ್ಲ ಶಿಷ್ಯರನ್ನೂ ಹೊರಗೆ ಕಳಿಸಿ, ಗುಟ್ಟಾಗಿ ಹೇಳಿದರು: “ನೀನು ಇಲ್ಲಿಯವರೆಗೆ ಯಶಸ್ವಿಯಾಗಿದ್ದೀಯ. ಮುಂದೆ ಪರಚಕ್ರದ ಸಂಭಾವ್ಯತೆಗಾಗಿ ಜೋಕೆಯಿಂದ ಇರಬೇಕು. ಮೊದಲು ತುಸು ಕಷ್ಟವಾದರೂ ಕೊನೆಗೆ ರಾಜ್ಯದ ಹಡಗು ನಿನ್ನಿಂದಲೇ ದಡ ಮುಟ್ಟುತ್ತದೆ. ಚಿಂತೆ ಬೇಡ.” +ಮಹಾರಾಣಿ ಬೆಕ್ಕಸಬೆರಗಾದಳು. +“ಮಹರ್ಷಿಗಳು ಆಶೀರ್ವದಿಸಬೇಕು. ಸಂಕಟ ನಿವಾರಣೆಗೆ ಬೇಕಾದ ಯಾಗವನ್ನು ಮಾಡಬೇಕು: ನಾನಿನ್ನೂ ಹಸುಳೆ.” +“ಆಗಲಿ; ಇಂದೇ ಶತಚಂಡೀ ಹೋಮವನ್ನು ಪ್ರಾರಂಭಿಸುತ್ತೇನೆ. ದೈವದಲ್ಲಿ ಇದ್ದುದನ್ನು ಯಾರೂ ಅಳಿಸುವುದು ಸಾಧ್ಯವಿಲ್ಲ. ಅದರ ಪರಿಣಾಮಗಳನ್ನು ಸಹ್ಯವಾಗಿ ಆಗುವಂತೆ ಮಾಡಬಹುದು, ಅಷ್ಟೆ. ನಿನಗೆ ಚಿಂತೆ ಬೇಡ. ಗುರುವರ್ಯರ ಕೃಪೆ ನಿನ್ನ ಮೇಲೆ ಸದೈವ ಇದೆ” ಎಂದು ಹೇಳಿ ಒಳಗಿನಿಂದ ಎಲೆ, ಅಡಿಕೆ, ಕಾಯಿ ತಂದು ಅವಳ ಎದುರಿಗೆ ಇಟ್ಟರು. ಮಹಾರಾಣಿ ಅದರಲ್ಲಿ ಐನೂರು ವರಹಗಳ ದಕ್ಷಿಣೆ ಇಟ್ಟು ಕೊಡಲು ಹೋದಳು. ಮಹರ್ಷಿಗಳು ಒಮ್ಮೆಲೇ ಹಿಂದೆಗೆದು, “ನಾನು ಹೊನ್ನು ಮುಟ್ಟುವುದಿಲ್ಲ. ನಮ್ಮ ಗೋತ್ರದ ಶಾಸ್ತ್ರಿಗಳಿದ್ದಾರೆ. ಅವರಿಗೆ ಕೊಡಬಹುದು” ಎಂದರು. +“ತಾವು ಸ್ವತ: ಕಂಕಣ ಕಟ್ಟಿಕೊಂಡು ಆಹುತಿ ನೀಡಬೇಕೆಂದು ನನ್ನ ಬಯಕೆ.” +“ಆಗಲಿ, ಅದಕ್ಕೆ ವೀಳ್ಯವಿದೆ. ಹಣ ಶಾಸ್ತ್ರಿಗಳಿಗೆ ಕೊಡಬೇಕು” ಎಂದರು. +ಅವರ ಅಪ್ಪಣೆಯ ಮೇರೆಗೆ ನಾಗೇಶ ಶಾಸ್ತ್ರಿಗಳು ಬಂದರು. ದೊಡ್ಡ ಹಮ್ಮಿಣಿಯನ್ನು ಕಂಡವರೇ, “ಇತ್ತೀಚೆಗೆ ಇಲ್ಲಿ ಚೋರಭಯ ಹೆಚ್ಚಾಗಿದೆ..” ಎಂದು ಅನುಮಾನ ಹೇಳಿದರು. +“ಇಲ್ಲಿ ಪಹರೆ ಇಡಿಸುತ್ತೇನೆ” ಎಂದಳು ಮಹಾರಾಣಿ, ವೀಳ್ಯ-ಅಕ್ಷತೆಯನ್ನೂ ಅಂಗವಸ್ತ್ರವನ್ನೂ ಮಹರ್ಷಿಗಳಿಗೆ ನೀಡಿ, ಹಮ್ಮಿಣಿಯನ್ನು ನಾಗೇಶ ಶಾಸ್ತ್ರಿಗಳಿಗೆ ಅರ್ಪಿಸಿ, ಸಾಷ್ಟಾಂಗ ನಮಸ್ಕಾರ ಮಾಡಿ, ಮಹಾರಾಣಿ ಹೊರಗೆ ಬಂದಳು. +ನೆರೆದ ಜನಸಂಮರ್ದದಲ್ಲಿ ಕಾಲಿಯಾ ಕಾಣಲಿಲ್ಲ. +ಆವಂತಿಕಾದೇವಿಯ ಅಭಿಷೇಕ ಶುಕ್ರವಾರ ಆಗಲಿ. ಎಂದು ನಿರ್ಣಯವಿತ್ತು ಮಹಾರಾಣಿ ಎರಡು ದಿನ ನಿಂತಳು. +ಕಾಲಿಯಾ ಬರಲಿಲ್ಲ; ಭೇಟಿಯಾಗಲಿಲ್ಲ. +ಶುಕ್ರವಾರ ಪೂಜೆಯ ಅನಂತರ ರಾಣಿ ತಾನೇ ಬಾಯಿಬಿಟ್ಟು ಕಾಲಿಯಾ ಮತ್ತು ಅವನ ಕುಟುಂಬದ ಜನರನ್ನು ವಿಚಾರಿಸಿಕೊಂಡು ಬರಲಿಕ್ಕೆ ಕಳಿಸಿದಳು. +ಒಂದು ದಿನ ಮುಂಚಿತವಾಗಿಯೇ ನೆರೆಯ ಹಳ್ಳಿಯಲ್ಲಿದ್ದ ಸಂಬಂಧಿಯಾರಿಗೋ ದೇಹಸೌಖ್ಯವಿಲ್ಲದ್ದಕ್ಕಾಗಿ ನೋಡಲು ಹೋಗಿರುವರೆಂದು ಗಾವುಂಡರು ವರದಿ ಒಪ್ಪಿಸಿದರು. +“ಇಲ್ಲಿಯೇ ಒಬ್ಬ ಶತ್ರು ಹುಟ್ಟಿಕೊಂಡ. ದೈವಲೀಲೆಗೆ ಉಪಾಯವಿಲ್ಲ” ಎಂದು ಮಹಾರಾಣಿ ಮತ್ತೊಮ್ಮೆ ಆವಂತೀಕಾದೇವಿಗೆ ನಮಿಸಿದಳು. ಎರಡು ಪಹರೆಯವರನ್ನು ದೇವದೇಮರ ಆಶ್ರಮದ ತೋಟ ಕಾಯಲಿಕ್ಕೆ ಇಟ್ಟು ದೇವದೇಮ ಮಹರ್ಷಿಗಳನ್ನು ಕಂಡು ಬೀಳ್ಕೊಡುವ ನಮಸ್ಕಾರ ಮಾಡಿದಳು. +“ಪುತ್ರವತೀ ಭವ!” ಎಂದು ಮಹರ್ಷಿಗಳು ಹರಸಿದರು. +ತನ್ನ ಸ್ಥಿತಿ ಅರಿತ ಮಹಾರಾಣಿಗೆ ಆಶೀರ್ವಾದ ಔಪಚಾರಿಕವೆನಿಸಿತು. ಕಿರುನಗೆ ನಕ್ಕು ಬೀಳ್ಕೊಂಡಳು. +ಶುಕ್ರವಾರ ಸಂಜೆ ಅವರು ಗ್ರಾಮವನ್ನು ಬಿಟ್ಟಾಗ ರಥದಲ್ಲಿಯೇ ಮಹಾರಾಣಿ ವಿಚಾರ ಮಾಡಿದಳು. +ಪುತ್ರವತೀ ಭವ! ಇದು ಕೇವಲ ಬಂಜೆ ಹೆಣ್ಣು ಮಕ್ಕಳಿಗೆ ಸಂತುಷ್ಟ ಪಡಿಸುವ ಆಶೀರ್ವಾದಿಸುವೊ ಮಹರ್ಷಿಗಳ ನೈಜ ಆಶೀರ್ವಾದವೋ?’ +ಮಹಾರಾಣಿಯ ಮನಸ್ಸು ಚಂಚಲವಾಯಿತು. ನಗೆಯೂ ಬಂತು. +ಅರಮನೆಗೆ ಮರಳಿದೊಡನೆ ಪರಚಕ್ರದ ವಿಷಯವಾಗಿ ಆಳ ವಿಚಾರ ನಡೆಸಿದಳು. +೧೩ +ಟಾಂಕಿ ಹಳ್ಳಿಯ ಹದಿನಾರು ವರ್ಷದ ನಾಗಕುಲದ ಬಾಲನೆಂದು ಅಯೋಧ್ಯೆಯ ಅರಸರ ಸೇವೆಗೆ ಸೇರಿದ ಕಾಲಿಯನಿಗೆ ತನ್ನ ವಯಸ್ಸಿಗೆ ಬರುವ ಮುಂಚೆಯೇ ಪ್ರಬುದ್ಧತೆ ಬಂದುಬಿಟ್ಟಿತ್ತು. ವಯಸ್ಸಿಗೆ ಮೀರಿದ ಮಹತ್ವಾಕಾಂಕ್ಷೆಯೂ ಅವನಲ್ಲಿ ಸೇರಿಕೊಂಡಿತ್ತು. ಅವನಿಗೆ ಸಿಕ್ಕಿದ ಕೆಲಸವೇ ಹಾಗೆ. +ರಾಣಿ ಪುರುಕುತ್ಸಾನಿ ಒಮ್ಮೆಲೇ ಮಹಾದೇವಿಯಲ್ಲಿ ಆದರ-ಭಕ್ತಿ. ರಾಜ ಪುರುಕುತ್ಸನ ಬಗ್ಗೆ ಜುಗುಪ್ಸೆ. ಈಗತಾನೆ ನಡೆದ ಘಟನೆಯಂತೂ ಅವನಿಗೆ ಕ್ರೋಧ ಆಕ್ರೋಶಗಳನ್ನು ತಂದಿತ್ತು. ಅದಕ್ಕೆ ಕಾರಣನಾದ ತಾರ್ಕ್ಷ್ಯನ ಮೇಲೆ ದ್ವೇಷ ಉಮ್ಮಳಿಸಿತ್ತು. ಸೇಡಿಗಾಗಿ ಹಾತೊರೆಯುತ್ತಿದ್ದ. +ಗುಪ್ತವೇಷದಲ್ಲಿ ಅಯೋಧ್ಯೆ ಮುಟ್ಟಿ, ತಾರ್ಕ್ಷ್ಯನ ಅಕೃತ್ಯವನ್ನು ರಾಣಿಗೆ ಹೇಳಿ, ಅವನ ವಿಶ್ವಾಸದ ಸ್ಥಾನವನ್ನು ತಾನು ಪಡೆದು, ಭದ್ರಮುಖ ಸ್ಥಾನಕ್ಕೆ ಬರಬೇಕೆಂದು ಅವನ ಮಹತ್ವಾಕಾಂಕ್ಷೆ. ರಾಣಿಯ ನ್ಯಾಯಬುದ್ಧಿಯಲ್ಲಿ ಅವನಿಗೆ ವಿಶೇಷ ವಿಶ್ವಾಸ. ಮಹಾದೇವಿಗೂ ಅನ್ಯಾಯವಾಗಿದೆ; ತನಗೂ ಅನ್ಯಾಯವಾಗಿದೆ. ಒಂದಾಗಿ ಕೆಲಸ ಮಾಡಿದರೆ ತಾರ್ಕ್ಷ್ಯ ಮಹಾರಾಜರನ್ನು ಉರುಳಿಸುವುದು ಯಾವ ಕಠಿಣ ಕೆಲಸ? +ಅವನಿಗೆ ’ತಾರ್ಕ್ಷ್ಯ’ನೆಂದರೆ ರಾಜನಿಗೆ ಗಣಿಕೆಯರನ್ನು ತರುವ ಭಟನೆಂದೇ ಕಲ್ಪನೆ. ತಾರ್ಕ್ಷ್ಯನ ಅನೇಕ ಮುಖಗಳಲ್ಲಿ ಇದು ಒಂದು ಮಾತ್ರ, ಎಂಬ ಕಲ್ಪನೆ ಅವನಿಗಿಲ್ಲ. +ಗುರು ದೇವದೇಮರಲ್ಲಿ ಅವನಿಗೆ ನಿಸ್ಸೀಮ ಭಕ್ತಿ. ಆದರೆ ಅಪಕ್ವ ವಯಸ್ಸು. ’ಏನು ಮಾಡಲಿ?’ ಎಂದು ಸ್ಪಷ್ಟವಾಗಿ ಕೇಳಲಿಕ್ಕೆ ನಾಚಿದ. ತನ್ನ ಆಕಾಂಕ್ಷೆಗಳನ್ನು ಬಚ್ಚಿಟ್ಟ. ಅವರ ಹೇಳಿಕೆಯಂತೆ ನೆಚ್ಚಿನ ರಾಣಿ ಪುರುಕುತ್ಸಾನಿ ಗುರುವಾರ ಪ್ರತ್ಯಕ್ಷಳಾಗುವಳೆಂದು ಅವನಿಗೆ ತಿಳಿದಿದ್ದು ಬುಧವಾರ ಮಾತ್ರ. +ಗುರುಗಳು ತಂಗಿಗೆ ಕೊಟ್ಟ ತಾಯಿತ ಇಂಥ ದೊಡ್ಡ ಕೆಲಸ ಸಾಧಿಸಿತ್ತೆಂಬ ಕಲ್ಪನೆ ಅವನಿಗಿರಲಿಲ್ಲ. +ಆ ತಾಯಿತವನ್ನು ತಾರ್ಕ್ಷ್ಯ ನೋಡಿದ್ದ. ದಾರಿಯಲ್ಲಿ ಆಕೆಯ ಅಮಲು ಇಳಿದಿದೆಯೇ, ಎಂದು ಪರೀಕ್ಷೆ ಮಾಡಲು ಕುದುರೆಯಿಂದ ಇಳಿಸಿದಾಗ, ಮುಖದ ಹೋಲಿಕೆ ನೋಡಿ ಕಾಲಿಯಾನ ತಂಗಿ ಇರಬಹುದೆಂದು ತಾರ್ಕ್ಷ್ಯ ತರ್ಕಿಸಿದ್ದ. ಆದರೆ ದೇವದೇಮರ ಚಿಹ್ನವಿದ್ದ ತಾಯಿತ ಆಕೆಯನ್ನು ರಕ್ಷಿಸುವದೆಂಬ ಧೈರ್ಯದಿಂದಲೇ ತಾರ್ಕ್ಷ್ಯ ಸುಮ್ಮನಾಗಿದ್ದ. ಇದು ಕಾಲಿಯನಿಗೆ ಹೇಗೆ ತಿಳಿದೀತು? +ಮಹಾರಾಜರೂ ಆ ತಾಯಿತವನ್ನು ಗುರುತಿಸಿದರು. ಗುರುಭಗಿನಿಯ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿದ್ದರೂ ಕಾಲಿಯನ ತಂಗಿ ಇರಬಹುದೆಂದು ಸಂಶಯ ಹುಟ್ಟಿತ್ತು. ಆ ಶಬ್ದವೇ ಅವರಲ್ಲಿ ಹೇಸಿಗೆ ಹುಟ್ಟಿಸಿತ್ತು. ಇದೆಲ್ಲ ಕಾಲಿಯನಿಗೆ ತಿಳಿಯದು. ಏನೇ ಕಾರಣದಿಂದ ತಂಗಿ ಪ್ರಸಂಗದಿಂದ ಪಾರಾದಳೆಂಬುದಿಷ್ಟೇ ಅವನಿಗೆ ಗೊತ್ತು. +ಮಹಾದೇವಿ ಅಮರು ಗ್ರಾಮಕ್ಕೆ ಬರುವರೆಂಬ ಸುದ್ದಿ ತಿಳಿದಮೇಲೆ ಕಾಲಿಯಾನ ಮನಸ್ಸು ವ್ಯಗ್ರವಾಯಿತು. +ಕಾಲಿಯನಿಗೆ ಕಠಿಣ ಯಶಸ್ಸು ಬೇಕು. ಸುಲಭ ಯಶಸ್ಸು ಬೇಡ. ಅದು ಅವನ ಸ್ವಭಾವ. +ಯೇಟ್ಸ್ ಮಹಾಕವಿ ಹೇಳಿದ ಈಚಿsಛಿiಟಿಚಿಣioಟಿ oಜಿ ತಿhಚಿಣ is ಜiಜಿಜಿiಛಿuಟಣ ಎಂಬುವ ದೂರ, ದುರೂಹ ಕೆಲಸಗಳ ಬಗ್ಗೆ ಅವನಿಗೆ ಇಷ್ಟ. ತನ್ನ ತಂಗಿಯನ್ನು ಉಳಿಸಿ ತರುವ ಕೆಲಸವನ್ನು ಅವನು ಯಶಸ್ವಿಯಾಗಿ ನೆರವೇರಿಸಿದ್ದ.. ರಾಜನ ಸೇವೆ ಅವನಿಗೆ ಬೇಸರ ತಂದಿತ್ತು. ಏಕೆಂದರೆ ಅದು ಸುಲಭ ಕೆಲಸ. ಮಹಾರಾಣಿ ಅಲ್ಲಿಗೆ ಬರದೇ ಹೋಗಿದ್ದರೆ, ಕಠಿಣ ಕೆಲಸವಾದ ಮಹಾರಾಣಿಯ ಗುಪ್ತಭೇಟಿ, ದೂರು, ತಾರ್ಕ್ಷ್ಯಗೆ ಶಿಕ್ಷೆ, ಇತ್ಯಾದಿಗಳನ್ನು ಮಾಡಿಯೂ ಮಾಡಬಹುದಿತ್ತು. ಮಹಾರಾಣಿ ಅಲ್ಲಿಯೇ ಬರುವುದರಿಂದ ತನ್ನ ಗುಪ್ತ ಭೇಟಿಯ ಕೆಲಸ ತಾನು ಊಹಿಸಿದ್ದಕ್ಕಿಂತ ಕಠಿಣವಾಗಿ ತೋರತೊಡಗಿತು. +ಈಗ ರಾಣಿಯ ಗುಪ್ತಸೇವಕರು ತನ್ನ ಶೋಧದಲ್ಲಿ ತೊಡಗಿರಬಹುದು. ನಾನು ಗುಪ್ತವೇಷದಿಂದ ಪ್ರಯಾಣ ಮಾಡುವುದು ಹೇಗೆ? ಕುದುರೆ ಬೇಕು. ಕುದುರೆಯ ಗುರುತು ಹಿಡಿದು ತನ್ನನ್ನು ಹಿಡಿಯಬಹುದು. ಮಹಾರಾಣಿ ನನ್ನನ್ನು ನಂಬಲಿಕ್ಕಿಲ್ಲ. ತಾರ್ಕ್ಷ್ಯನ ಮೇಲೆಯೇ ವಿಶ್ವಾಸವಿಡಬಹುದು. ತಾರ್ಕ್ಷ್ಯ ಏನಾದರೂ ಸುಳ್ಳು ಹೇಳಿ ಈಗಾಗಲೇ ವಿಷ ಊರಿರಬಹುದು. ಮಹಾರಾಣಿ ತಂಗಿಯೂ ಹೌದು, ಹೆಂಡತಿಯೂ ಹೌದು. ಕೇವಲ ನಾಗರಕ್ತವನ್ನೇ ನಂಬಲಿಕ್ಕಿಲ್ಲ. ತಾರ್ಕ್ಷ್ಯನೂ ನಾಗನೇ. ಅಲ್ಲಿಗೇ ಕಷ್ಟ ಪಟ್ಟು ಹೋಗಿ ಕಾರಾಗೃಹದಲ್ಲಿ ಕೊಳೆಯುವುದು ಬಂದರೆ ಏನು ಮಾಡಿದಂತಾಯ್ತು ? …ಇಂಥ ಸಾವಿರಾರು ತುಮುಲಗಳು ಅವನನ್ನು ಕೆರಳಿಸಿ, ಮಹರ್ಷಿಗಳು ಹೇಳಿದ ವಿವೇಕವಾಣಿಯನ್ನು ಮಸುಕುಮಾಡಿತು. ಒಂದು ಗಂಟೆ ಗಿಡದ ಬುಡದಲ್ಲಿ ಕುಳಿತು ವಿಚಾರ ಮಾಡಿ ಒಂದು ನಿರ್ಧಾರಕ್ಕೆ ಬಂದನು. +ಮರುದಿನ ಬುಧವಾರ. ಊಟ ಮಾಡಿ ಹೊರಬಿದ್ದ ಕಾಲಿಯಾ ಮನೆಗೆ ಬಂದು ತನ್ನ ಕಕ್ಕನಿಗೆ ಸರ್ಪದಂಶವಾಗಿದೆಯೆಂದೂ, ಅತ್ಯವಸ್ಥೆಯಲ್ಲಿದ್ದಾನೆಂದೂ, ಟಾಂಕೀ ಗ್ರಾಮದವನೊಬ್ಬನು ಹೇಳಿದನೆಂದೂ ತಂದೆಗೆ ತಿಳಿಸಿದನು. ಮನೆಯವರೆಲ್ಲ ಗೋಳೋ ಎಂದು ಅಳುತ್ತ ಬಂಡಿ ಹೂಡಿ ಟಾಂಕೀ ಗ್ರಾಮಕ್ಕೆ ಹೊರಟರು. ಊರು ಮುಟ್ಟುವ ಹೊತ್ತಿಗೆ “ಇಲ್ಲ, ಕಕ್ಕ ಕಾಗೆಯ ಕೂಟವನ್ನು ನೋಡಿದ್ದಕ್ಕಾಗಿ ಹೇಳಿಕಳಿಸಿದ್ದಾನೆ. ಏನೂ ಚಿಂತೆಯಿಲ್ಲ.” ಎಂದು ಕಾಲಿಯಾ ಹೇಳಿದನು. ಎಲ್ಲರಿಗೂ ಸಮಾಧಾನವಾಯಿತು. ಕಕ್ಕ ದಖಿಯಾ ಇವರೆಲ್ಲ ಬಂದರೂ ಸೌಜನ್ಯದಿಂದ ಸ್ವಾಗತಿಸಿ “ಬಂದೀರಿ. ಎರಡು ದಿನ ಇದ್ದು ಹೋಗಿರಿ. ನಾಗಿಯಾ ದಾರೀ ತಪ್ಪಿಸಿಕೊಂಡ ಸುದ್ದಿ ಕೇಳಿದ್ದೆ. ನಾನೇ ಬರುವವನಿದ್ದೆ!” ಎಂದು ಹೇಳಿ ಕರೆದೊಯ್ದನು. +ಟಾಂಕೀ ಗ್ರಾಮದಲ್ಲಿ ಚಿರತೆಯ ಹಾವಳಿ ಇತ್ತು. ಹಳ್ಳಿಯ ಯುವಕರು ಕೋಲು, ಬಡಿಗೆ, ಕತ್ತಿ, ಬಿಲ್ಲು, ಬಾಣ, ಕೊಡಲಿಗಳ ಸಮೇತ ಗುಂಪುಕಟ್ಟಿಕೊಂಡು ಬೇಟೆಗೆ ಹೋಗುತ್ತಿದ್ದರು. ಚಿರತೆಯ ವಧುವಾಗಬೇಕಾದರೆ ಒಂದು ವಾರವೇ ಬೇಕಾಯಿತು. ಮುದುಕನಾದರೂ ಸದೃಢಕಾಯದ ವಾಸುಕಿಯೂ ಮೃಗಯಾ ವ್ಯಸನದಿಂದ ಹುರುಪಿಗೆದ್ದನು. ಕಾಲಿಯಾನಿಗೂ ಹತ್ತು ಹದಿನೈದು ಯುವಕರ ಸ್ನೇಹವಾಯಿತು. ಬೇಟೆಯ ಉತ್ಸಾಹದಲ್ಲಿ ಅವರ ಸ್ನೇಹ ಬಲಗೊಂಡಿತು. +ಏಳನೆಯ ದಿವಸ ಚಿರತೆ ಒಂದು ಆಡನ್ನು ಮುರಿದು ತಿಂದು ನಿದ್ರಿಸುತ್ತಿರುವಾಗ ಅದರ ಮೇಲೆ ಬಲೆ ಬೀಸಿ, ಗಿಡಕ್ಕೆ ಕಟ್ಟಿ, ಚಿರತೆಯನ್ನು ಜೀವಂತ ಹಿಡಿಯುವ ದುಃಸಾಹಸಕ್ಕೆ ಕಾಲಿಯಾ ಮುಂದಾದನು. ಹದಿನೈದು ಜನರಲ್ಲಿ ಒಬ್ಬನಾದ ಕಾಲಿಯಾ ಒಮ್ಮೆಲೇ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಚಿಕ್ಕನಾಯಕನ ಪದವಿಗೆ ಏರಿದನು. +೧೪ +ಪರಚಕ್ರದ ವಿಷಯಕ್ಕೆ ಹಗಲಿರುಳು ಚಿಂತಿಸುತ್ತಿದ್ದ ಪುರುಕುತ್ಸಾನಿ ತನ್ನದೇ ಆದ ಒಂದು ವಿಧಾನವನ್ನು ಸ್ವರೂಪಿಸಿದಳು. ಅಯೋಧ್ಯೆ ಸಣ್ಣರಾಜ್ಯ. ಅದರ ಸುತ್ತ ಮುತ್ತಲಿನ ಇತರ ಸಣ್ಣ ರಾಜ್ಯಗಳಾದ ಶ್ರಾವಸ್ತಿ, ಗಯಾ, ಕಾಶಿ, ಕಾಮಾಖ್ಯ ಇವುಗಳ ಜೊತೆಗೆ ಸ್ನೇಹವೇ ಇದರ ತಿರುಳು. ಮುಂದೆ ಸಾವಿರಾರು ವರ್ಷಗಳ ಮೇಲೆ ಬಂದ ಕೌಟಲೀಯ ಅರ್ಥಶಾಸ್ತ್ರದ ಪೂರ್ತಿ ವಿರುದ್ಧ ವಿಧಾನ ಅದು. +ಮೊದಲಿಗೆ ಒಂದು ನೆಪ ಬೇಕಾಗಿತ್ತು. ದೈವವಶಾತ್ ಗಂಡಕಿನದಿಯ ತೀರದ ಭಿಲ್ಲರು ಗುಂಪುಗುಂಪಾಗಿ ಶ್ರಾವಸ್ತಿಯ ಮೇಲೆ ಹಲ್ಲೆಮಾಡಿ ಕೊಲೆ-ಸುಲಿಗೆ-ದರೋಡೆಗಳನ್ನು ಮಾಡತೊಡಗಿದರು. ಶ್ರಾವಸ್ತಿಗೆ ಬಾಧೆ ಬಂದರೆ ಇಂದಿಲ್ಲ ನಾಳೆ ಅಯೋಧ್ಯೆಗೂ ಭಿಲ್ಲರು ದಾಳಿಯಿಕ್ಕಬಹುದೆಂಬ ನೆಪವೊಡ್ಡಿ ಐನೂರರ ಪಡೆಯನ್ನು ತಾನಾಗಿಯೇ ಶ್ರಾವಸ್ತಿಯ ಸುಭಾನುವಿನ ನೆರವಿಗೆ ಕಳಿಸಿಕೊಟ್ಟಳು. ಇತ್ತ ಶಸ್ತ್ರಾಸ್ತ್ರಸಂಗ್ರಹಣೆಗೆ ತೊಡಗಿದಳು. ಊರ ಕಮ್ಮಾರರ ಕುಲುಮೆಗಳೆಲ್ಲ ಕೆಲಸ ಮಾಡತೊಡಗಿದವು. ಕತ್ತಿ-ಭಲ್ಲೆ-ಚಪ್ಪಗೊಡಲಿಗಳು ಸದ್ದಿಲ್ಲದೆ ತಯಾರಾಗಿ ಶಸ್ತ್ರಾಗಾರವನ್ನು ಸೇರತೊಡಗಿದವು. ಆಯಕಟ್ಟಿನ ಸ್ಥಳಗಳಲ್ಲಿ ಪಹರೆಯವರನ್ನಲ್ಲದೆ ಗುಪ್ತಸೈನ್ಯವನ್ನು ಕಳಿಸತೊಡಗಿದಳು. ಹೊಸ ಯುವಕರನ್ನು ಸೇನೆಗೆ ಭರ್ತಿ ಮಾಡಿಸಿದಳು. +ಭಂಡಾರಿಯವರು ಬಂದು ಬೊಕ್ಕಸದ ಮೇಲೆ ಭಾರ ಬೀಳುತ್ತಿದೆಯೆಂದು ತಕರಾರು ಮಾಡಿದರು. +ಅದೇ ಸಮಯಕ್ಕೆ ಒಬ್ಬ ದೂತ ಹಠಾತ್ತನೆ ಬಂದು ಮಹಾದೇವಿಗೆ ಬಾಯಿ ವರದಿ ನೀಡಿದನು: “ಮಹಾದೇವಿ, ಶ್ರಾವಸ್ತಿಗೆ ಹೋದ ಚಿತ್ರ ಬಾಹುದಣ್ಣಾಯಕರ ವಾರ್ತೆ..” +ಭಂಡಾರಿಗಳನ್ನು ಕಳಿಸಿಕೊಟ್ಟು, ದೂತನನ್ನು ಮಹಾದೇವಿ ಅಲ್ಲಿಯೇ ನಿಲ್ಲಿಸಿಕೊಂಡು ಹೊರಗೆ ನಿಂತ ಕಾವಲುಗಾರನ್ನು ದೂರ ಕಳಿಸಿದಳು. +“ಏನು ವಾರ್ತೆ?” +“ದಣ್ಣಾಯಕರು ದಂಡವತ್ ಪ್ರಮಾಣ ಸಲ್ಲಿಸಿ ಹೇಳಿಕಳಿಸಿದ್ದಾರೆ. ಶ್ರಾವಸ್ತಿಯ ದಕ್ಶಿಣ ದಿಕ್ಕಿಗೆ ನಮ್ಮ ದಳಗಳ ಪ್ರಚಂಡ ವಿಜಯ ಗಳಿಸಿ ನೂರು ಭಿಲ್ಲರನ್ನು ಸೆರೆಹಿಡಿದಿವೆ.. ಆದರೆ..” +“ಆದರೇನು?” +ಭಿಲ್ಲರ ನಾಯಕ ಮೋಸಮಾಡಿದ್ದಾನೆ. ಏಳು ಜನರೊಂದಿಗೆ ತಾನು ಶರಭಾರಣ್ಯದಲ್ಲಿ ಓಡಿ ಹೋದನು. ಈವರೆಗೆ ಶ್ರಾವಸ್ತಿಯಲ್ಲಿ ಸುಲಿಗೆ ಮಾಡಿದ ರತ್ನ-ಕನಕಗಳೊಂದಿಗೆ. ಅವರ ಕಡೆಯ ಕೆಲವು ಭಿಲ್ಲರಿಗೆ ಶಿಕ್ಷೆಕೊಟ್ಟು ಕೇಳಲಾಗಿ ಈ ಸುದ್ಧಿ ಹೊರಬಂದಿತು. ಮುಖ್ಯ ಮಾಲು ಅರಣ್ಯಕ್ಕೆ ಹೋಗಿದೆ. ಅರಣ್ಯದಲ್ಲಿ ನಮ್ಮ ಸೈನಿಕರು ಅವರನ್ನು ಹುಡುಕಿ ಬಂಧಿಸುವುದಕ್ಕೆ ಹೋಗಬಹುದು. ಆಗ ಸೈನ್ಯವನ್ನು ಹತ್ತು-ಹತ್ತು ಜನರ ಚಿಕ್ಕ ಚಿಕ್ಕ ಗುಂಪುಗಳಾಗಿ ಕಳಿಸಬೇಕಾಗುತ್ತದೆ. ಈಗ ಸೆರೆಸಿಕ್ಕ ನೂರು ಭಿಲ್ಲರನ್ನು ಶ್ರಾವಸ್ತಿ ಮಹಾರಾಜರಿಗೆ ಒಪ್ಪಿಸಿಬಿಟ್ಟರೆ ಅವರ ಸಾವು ಖಂಡಿತ. ಹಾಗೆ ಹೆದರಿಕೆ ಹಾಕಿ, ಅವರ ತಲೆ ಬೋಳಿಸಿ, ಬಯಲುನಾಡಿನತ್ತ ಅಟ್ಟಬೇಕೆಂದು ದಣ್ಣಾಯಕರು ಸೂಚಿಸುತ್ತಾರೆ, ಮಹಾರಾಣಿ ಅಪ್ಪಣೆ ಕೇಳಿದ್ದಾರೆ.” +“ಅದೇಕೆ?” +“ನೂರು ಜನ ಭಿಲ್ಲರು ಅಡವಿಯ ಸಂಚಾರದಲ್ಲಿ ನಮ್ಮ ಸೈನಿಕರಿಗಿಂತ ಸಮರ್ಥರು. ಕಟ್ಟಿ ಇಟ್ಟರೂ ಬಿಡಿಸಿಕೊಳ್ಳಬಲ್ಲರು. ನಮ್ಮ ಸೈನ್ಯ ತುಂಡು ತುಂಡಾಗಿ ಹರಿದು ಹಂಚಿ ಅಡವಿಯಲ್ಲಿ ಶೋಧಕ್ಕಾಗಿ ಕಳಿಸುವುದು ದಣ್ಣಾಯಕರಿಗೆ ಇಷ್ಟವಿಲ್ಲ. ಅವರನ್ನು ಶ್ರಾವಸ್ತಿ ಮಹಾರಾಜರಿಗೆ ಒಪ್ಪಿಸಬಹುದೆ?” +“ಎರಡೂ ಬೇಡ. ನಮ್ಮ ಸೈನ್ಯ ಶ್ರಾವಸ್ತಿಗೆ ಹೋಗಬಾರದು. ಶರಭಾರಣ್ಯಕ್ಕೂ ಹೋಗಬಾರದು. ಇದ್ದಲ್ಲಿಂದ ನಂದಿಗ್ರಾಮಕ್ಕೆ ಬಂದು ಬಿಡಾರ ಹೂಡಿ ವಿಶ್ರಮಿಸಬೇಕು. ನಾಲ್ವರು ಭಿಲ್ಲರ ಪಡೆಯ ನಾಯಕರನ್ನು ಉಳಿದು ಉಳಿದ ಸೆರೆಯಾಳುಗಳಿಗೆ ಕೈಕೋಳ ಹಾಕಿ ಸೈನ್ಯದೊಂದಿಗೆ ಕರೆತರಬೇಕು. ಅವರ ನಾಯಕರನ್ನು ಮರ್ಯಾದೆಯಿಂದ ನೋಡಿಕೊಳ್ಳಬೇಕು. ನಂದಿಗ್ರಾಮದಲ್ಲಿ ರಾತ್ರಿ ನಾಲ್ವರು ನಾಯಕರನ್ನು ಬಿಟ್ಟು ಬಿಡಬೇಕು. ಅವರ ಹಿಂದೆ ಪಾಳತಿ ಇಡಲಿಕ್ಕೆ ನಮ್ಮ ಐವತ್ತು ಗುಪ್ತಚರರನ್ನು ಇಡಿರಿ. ಅವರಿಗೆ ಸ್ವತಂತ್ರ ಬಿಟ್ಟರೂ ದೂರದಿಂದ ನಮ್ಮ ಕಾವಲುಪಡೆಯವರು ಕಣ್ಣಿಟ್ಟಿರಬೇಕು! ಎಲ್ಲ ನೆನಪಿಟ್ಟೆಯಾ? ಯಾರಿಗೂ ಹೇಳಬೇಡ. ಊಟ ಮಾಡಿಕೊಂಡು ನೀನು ಹಿಂದಿರುಗು.” +ಮಹಾದೇವಿಯ ಸಂದೇಶದ ಜಾಣ್ಮೆಗೆ ದೂತ ಸಹದೇವ ನಾಯಕನು ತಲೆದೂಗಿ ಲಗುಬಗೆಯಿಂದ ಕುದುರೆ ಏರಿದನು. ಊಟಕ್ಕೆ ನಿಲ್ಲಲಿಲ್ಲ. ಅಡಿಗೆಯ ಮನೆಗೆ ಹೋದಂತೆ ನಟಿಸಿ, ಕೇವಲ ಹಾಲನ್ನು ಕುಡಿದು ಹೊರಟು ಬಿಟ್ಟನು. ರಾಣಿಗೆ ಅಡಿಗೆಮನೆಯಿಂದ ಸಹದೇವನ ಬಗ್ಗೆ ವರದಿ ಹೋಯಿತು. +ರಾಣಿ ಮೆಚ್ಚಿದಳು. ಆದರೂ ಸಮಾಧಾನವಾಗಲಿಲ್ಲ. ದೇವರಾಜ ಭದ್ರಮುಖರಿಗೆ ತಕ್ಷಣ ಬರಲಿಕ್ಕೆ ಹೇಳಿಕಳಿಸಿದಳು. +ಅವರು ಬಂದೊಡನೆ, ರಾಣಿ ಪ್ರಶ್ನಿಸಿದಳು: “ನಿಮ್ಮ ಸ್ನೇಹಿತ ಮಾದ್ರಕನ ಜನರು ಶರಭಾರಣ್ಯವನ್ನು ಬಲ್ಲರೆ?” +“ಬಲ್ಲರು, ಮಹಾದೇವಿ.” +“ನೀವು ಐವತ್ತು ಸೈನಿಕರನ್ನು ಜೊತೆಗೆ ಕರೆದುಕೊಂಡು ಮಧುವನ ಗ್ರಾಮಕ್ಕೆ ಹೋಗಬೇಕು. ಅಲ್ಲಿ ನಿಮಗೆ ಸಿಕ್ಕಷ್ಟು ರೈತರ ಪಡೆಯನ್ನು ಕೂಡಿಸಿಕೊಳ್ಳಿರಿ. ಪಶ್ಚಿಮ ದಿಕ್ಕಿನ ಕಡೆಯಿಂದ ಶರಭಾರಣ್ಯ ಪ್ರವೇಶಿಸಿರಿ. ಏಳು ಜನ ಭಿಲ್ಲ ನಾಯಕರು ಅವರ ಅರಸನೊಂದಿಗೆ ಶರಭಾರಣ್ಯದಲ್ಲಿ ನುಸುಳಿಕೊಂಡಿದ್ದಾರೆ. ಅವರನ್ನು ಹಿಡಿಯಲೇಬೇಕು. ಬಂಧಿಸಿ ಅಯೋಧ್ಯೆಗೆ ತರಬೇಕು. ಇದರ ಬಗ್ಗೆ ಬೊಬ್ಬಾಟ ಬೇಡ. ಆಗಬಹುದೇ?” +“ಆಗಲಿ, ಮಹಾದೇವಿ.” +“ಈಗಲೇ, ಹೋಗಿಬಿಡಿ.” +ದೇವರಾಜನ ಲೋಲುಪ ತೂಗಾಟದ ನಡಿಗೆಯನ್ನು ನೋಡಿ ಮಹಾರಾಣಿಗೆ ಅಸಹ್ಯವೆನಿಸಿತು. ಅವರನ್ನು ಹಿಂದೆ ಕರೆದಳು. +“ನಿಮ್ಮ ಜೊತೆಗೆ ನಿಮ್ಮ ಮಗು ವತ್ಸರಾಜನನ್ನು ಕರೆದೊಯ್ಯುವಿರಾ?” ಆಕೆಯ ಧ್ವನಿಯ ಸೂಚ್ಯತೆಯನ್ನು ಅರಿತು, ದೇವರಾಜ “ಹೌದು, ಮಹಾರಾಣಿ” ಎಂದರು. +“ಹಾಗಾದರೆ ಐವತ್ತು ಸೈನಿಕರಿಗೆ ಅವನೇ ದಣ್ಣಾಯಕನಾಗಲಿ, ಅವನಿಗೆ ತಕ್ಕ ಸಲಹೆ ಕೊಡಿರಿ. ಅವರು ಶರಭಾರಣ್ಯ ಪ್ರವೇಶಿಸಿದ ಮೇಲೆ, ನೀವು ಅಲ್ಲಿಂದ ಶ್ರಾವಸ್ತಿಗೆ ಹೋಗಿ ಮಹಾರಾಜ ಸುಭಾನುವಿನ ಸಂದೇಶ ಮುಟ್ಟಿಸಿರಿ. ಅವನ ರಾಜ್ಯದ ದಕ್ಷಿಣದಿಸೆಯಿಂದ ನುಗ್ಗಿ ಬಂದ ಭಿಲ್ಲರ ಪಡೆಗಳು ಚದುರಿ ಹೋಗಿ ದಕ್ಷಿಣಭಾಗ ನಿಷ್ಕಂಟಕವಾಗಿದೆ, ಎಂದು.” +“ಆಗಲಿ, ಮಹಾದೇವಿ.” +ಅವರು ಹೊರಟು ಹೋದರು. ಮಹಾರಾಣಿ ಒಂದೇ ಉಸಿರಿನಲ್ಲಿ ದೇವರಾಜರನ್ನು ಕೆಳಗೆ ತಂದಿದ್ದಳು. ವತ್ಸರಾಜನಿಗೆ ದಣ್ಣಾಯಕ ಪದವಿಗೆ ಏರಿಸಿದ್ದಳು. ಶ್ರಾವಸ್ತಿಯ ಪಕ್ಶ್ಮಾರಾಣಿಯನ್ನು ಕಾಣುವ ಸುವರ್ಣಾವಕಾಶವನ್ನೂ ದೇವರಾಜರಿಗೆ ಕಲ್ಪಿಸಿದ್ದಳು. +೧೫ +ಸುಗ್ಗಿ ಮುಗಿದ ಹದಿನೈದು ದಿನಗಳಲ್ಲಿ ಅಮರು-ಟಾಂಕಿ ಗ್ರಾಮಗಳ ಸುಮಾರು ೨೫ ಯುವಕರ ಗುಂಪು ತಾವು ಅಯೋಧ್ಯೆ ನೋಡಿ ಬರುತ್ತೇವೆಂದು ಹೇಳಿ ಎರಡು ಚಕ್ಕಡಿ ಹೂಡಿದರು . ಒಂದು ಕ್ರೋಸು ಕ್ರಮಿಸಿ ಕೆಳಗೆ ಇಳಿದು ಪೊದೆಗಳಲ್ಲಿ ಬಚ್ಚಿಟ್ಟ ದೊಣ್ಣೆ, ಚೂರಿ, ಖಡ್ಗಗಳು, ಬಿಲ್ಲುಗಳನ್ನು ಎತ್ತಿ ಚಕ್ಕಡಿಗೆ ಹೇರಿದರು. ಅವರ ಮುಂದಾಳು ಚಿರತೆಯನ್ನು ಜೀವಂತ ಹಿಡಿದ ವೀರ, ಕಾಲಿಯಾ. +ಅವನಿಗೆ ಗೊತ್ತು. ಆಮ್ರವನದಲ್ಲಿ ಹಗಲು ಆರೇ ಜನರ ಪಹರೆ, ರಾತ್ರಿ ಒಬ್ಬ ಎಚ್ಚರ ಇರುತ್ತಾನೆ. ಉಳಿದವರು ನಿದ್ದೆಹೋಗಿರುತ್ತಾರೆ. ಶಸ್ತ್ರಗಳನ್ನು ಬದಿಗೆ ಮಲಗಿಸಿ; ಒಬ್ಬರು ಮೂರು ಪ್ರಹರ ಪಹರೆ ಮಾಡಿ ಇನ್ನೊಬ್ಬರನ್ನು ಎಬ್ಬಿಸುತ್ತಾರೆ. +ತನ್ನ ಗೆಳೆಯರಿಗೆ ಮೊದಲೇ ಹೇಳಿದ್ದ. ಸದ್ದಿಲ್ಲದೆ ಹೋಗಿ ಮೊದಲು ಮಲಗಿದವರ ಖಡ್ಗಗಳನ್ನು ಸೆಳೆದುಕೊಳ್ಳಬೇಕು. ಎಚ್ಚರವಿದ್ದ ಪಹರೆ ರಾಹುತನ ಕುದುರೆಯನ್ನು ದೂರದ ಗಿಡಕ್ಕೆ ಕಟ್ಟಿ, ಅವನನ್ನು ಸಂಧಿಸಬೇಕು, ಅವನಿಗೆ ಖಡ್ಗ ತೋರಿಸಿ, ನಿಶ್ಯಸ್ತ್ರಗೊಳಿಸಿ, ಹಗ್ಗದಿಂದ ಬಿಗಿಯಬೇಕು. ಅನಂತರ ಒಳಗಿದ್ದ ಸೇವಕನನ್ನು ತುಂಡರಿಸಬೇಕು. ಅನಂತರ.. +ಎಲ್ಲ ಯೋಜನೆ ಮೊದಲೇ ಸಿದ್ಧಗೊಳಿಸಲಾಗಿತ್ತು. ಮಣ್ಣ ಮೇಲೆ ಬರೆದು ಬರೆದು ಅವರವರ ಸ್ಥಾನವನ್ನು ಗೊತ್ತುಪಡಿಸಿ, ಯಾರ ಯಾರ ಮೇಲೆ ದಾಳಿ ಮಾಡಬೇಕೆಂಬುದನ್ನು ಮೊದಲೇ ವಿವರಿಸಿ ಹೇಳಿದ್ದ. ಕಾಲಿಯನ ಯೋಜನೆ ನಿರ್ದೋಷವಾಗಿತ್ತು. ಮಹಾರಾಜರನ್ನು ಖಡ್ಗದಿಂದ ತಿವಿಯುವ ವಿಶೇಷಾದಿಕಾರವನ್ನು ಕಾಲಿಯನೇ ವಹಿಸಿಕೊಂಡಿದ್ದ. +ಆಮ್ರವನದ ಹಿಂದೆ ಅಡವಿಯ ಆಚೆ ಚಕ್ಕಡಿಗಳ ಕೊರಳು ಬಿಚ್ಚಿ, ದನಗಳಿಗೆ ಮೇವು ಹಾಕಿ, ಕಟ್ಟಿ, ಕಾಲ್ನಡಿಗೆಯಿಂದ ಅಡವಿಯನ್ನು ದಾಟಲಿಕ್ಕೆ ಅವರು ಹೊರಟರು. ನಿಯೋಜಿತ ಶಸ್ತ್ರಗಳನ್ನು ಇಟ್ಟುಕೊಂಡು, ಜೊತೆಗೆ ಒಂದೊಂದು ದೊಣ್ಣೆಯನ್ನೂ ಹಿಡಿದಿದ್ದರು. ಒಂದೆರಡು ಪಂಜುಗಳೂ ಇದ್ದವು. ಒಂದು ದೊಣ್ಣೆಯನ್ನೂ ಹಿಡಿದಿದ್ದರು. ಒಂದೆರಡು ಪಂಜುಗಳೂ ಇದ್ದವು. ಒಂದು ಪಂಜನ್ನು ಕಾಲಿಯಾ ತಾನೇ ಹಿಡಿದು ಎಲ್ಲರ ಮುಂದೆ ಸಾಗಿ ದಾರಿ ತೋರಿಸುತ್ತಿದ್ದ. ಎಲ್ಲರೂ ಮೌನವಾಗಿ ಹಿಂಬಾಲಿಸುತ್ತಿದ್ದರು. +ಅರಣ್ಯದ ಸರಿ ಮಧ್ಯಕ್ಕೆ ಬಂದು ಮುಟ್ಟಿರಬಹುದು. ಗಿಡದ ಮೇಲಿಂದ ತಾರ್ಕ್ಷ್ಯನ ಕ್ರೂರಧ್ವನಿ ಕೇಳಿ ಬಂತು: +“ಕಾಲಿಯಾ! ಅಲ್ಲಿಯೇ ನಿಲ್ಲು. ಈ ಬಾಣ ನೇರ ನಿನ್ನ ಎದೆಯನ್ನೇ ನೋಡುತ್ತಿದೆ.” +ಅಪ್ರತಿಭನಾಗಿ ಕಾಲಿಯಾ ನಿಂತ. ಅವನ ಸಂಗಡಿಗರು ಅಡವಿಯಲ್ಲಿ ಚೆಲ್ಲಾಪಿಲ್ಲಿಯಾಗುವುದರಲ್ಲಿ ಇದ್ದರು. ಮತ್ತೆ ತಾರ್ಕ್ಷ್ಯನ ಧ್ವನಿ: +“ನಿನ್ನ ಸಂಗಡಿಗರಿಗೆ ನಿಂತಲ್ಲಿಯೇ ನಿಲ್ಲುವಂತೆ ಹೇಳು. ನಿನ್ನ ಹಿಂದೆ ಮೂವತ್ತು ಗಿಡಗಳಲ್ಲಿ ಸೈನಿಕರು ಇದ್ದಾರೆ. ಅವರ ಬಾಣಗಳೂ ನಿನ್ನವರ ಎದೆ ಸೀಳಬಹುದು, ಓಡಲು ಯತ್ನಿಸಿದರೆ… +“ನಿಮ್ಮ ಬಳಿಯಲ್ಲಿ ಇರುವ ದೊಣ್ಣೆ-ಬರ್ಚಿ-ಕತ್ತಿಗಳನ್ನು ಆ ಬೇವಿನ ಗಿಡದ ಕೆಳಗೆ ಹಾಕಲು ಹೇಳು.” +ಕಾಲಿಯಾ ಅಸಹಾಯಕನಾಗಿ ತಾನೇ ಸಂಗಡಿಗರ ಶಸ್ತ್ರಗಳನ್ನು ಜಮಾಯಿಸಿ ಬೇವಿನಮರದ ಕೆಳಗೆ ಇಟ್ಟನು. +ಗಿಡಗಳಿಂದ ಜಿಗಿದ ಸುಮಾರು ಮೂವತ್ತು ರಾಹುತರು ಎಲ್ಲರನ್ನೂ ಸುತ್ತುಗಟ್ಟಿದರು. ಆಯುಧಗಳನ್ನು ಮರದ ಕೆಳಗೆ ಇರಿಸಲು ಬಗ್ಗಿದ ಕಾಲಿಯಾ ತನ್ನ ಸೊಂಟದ ಬರ್ಚಿಯನ್ನು ತೆಗೆದು ತಾರ್ಕ್ಷ್ಯನ ಮೇಲೆ ಏರಿ ಹೋದನು. ಹಿಂದಿನಿಂದ ಒಂದು ದೊಣ್ಣೆ ಅವನ ಮುಂಗೈಗೆ ಬಲವಾಗಿ ಬಿದ್ದು ಕೈಯಲ್ಲಿಯ ಭರ್ಚಿ ಕೆಳಗೆ ಬಿತ್ತು. ಕೈ ತಿಕ್ಕಿಕೊಳ್ಳುತ್ತ ಕಾಲಿಯಾ ನೆಲಕ್ಕೆ ಕುಸಿದನು. +ಗಿಡದ ಮರೆಗೆ ಅಡಗಿ ಕುಳಿತ ವೀರಸೇನ, “ಇನ್ನೂ ಒಂದು ಖಡ್ಗ ಬಂದಿಲ್ಲ!” ಎಂದನು. +ಒಬ್ಬ ರಾಹುತ ಒಂದು ಪೊದೆಯಲ್ಲಿ ಎಸೆದ ಖಡ್ಗವನ್ನು ತಂದು “ಇಲ್ಲಿದೆ” ಎಂದು ಒಪ್ಪಿಸಿದನು. ಕ್ಷಣಾರ್ಧದಲ್ಲಿ ಕಾಲಿಯನ ಹೊಂಚಿಗೆ ಪೂರ್ಣವಿರಾಮ. +ಎಲ್ಲರನ್ನೂ ಬಂಧಿಸಿದರು. ಇಪ್ಪತ್ತು ರಾಹುತರನ್ನು ಅಲ್ಲಿಯೇ ಬಿಲ್ಲುಬಾಣ ಖಡ್ಗಸಜ್ಜಿತರಾದ ಹತ್ತು ರಾಹುತರೊಂದಿಗೆ ತಾರ್ಕ್ಷ್ಯ ಬೇರೆ ಸೀಳುದಾರಿಯಿಂದ ಅಯೋಧ್ಯೆಗೆ ನಡೆದ. +ಬೆಳಗಿನವರೆಗೆ ಕಾಲಿಯನ ಜನರು ಕಾರಾಗೃಹದಲ್ಲಿ ಕಳೆದರು. +೧೬ +ಮರುದಿನ ಕಾಲಿಯನೊಬ್ಬನನ್ನೇ ಮಹಾರಾಣಿಯ ಎದುರು ನಿಲ್ಲಿಸಲಾಯಿತು. ಅವನ ಬಲಗೈಗೆ ಒಂದು ಸೆಲ್ಲೆ ಸುತ್ತಲಾಯಿತು. +ಏನು ಶಿಕ್ಷೆ ವಿಧಿಸುವಳೋ ನೋಡಿಯೇ ಬಿಡುತ್ತೇನೆ, ಎಂಬ ಕ್ರೂರ ನೋಟದಿಂದ ಮಹಾರಾಣಿಯ ಎದುರು ಕಾಲಿಯಾ ಸೆಟೆದು ನಿಂತನು, ಮೌನವಾಗಿ. ನಮಸ್ಕರಿಸುವ ಗೋಜಿಗೆ ಹೋಗಲಿಲ್ಲ. ರಾಣಿಯೇ ಮೊದಲು ಮಾತಾಡಿದಳು: +“ಏನಪ್ಪಾ ಕಾಲಿಯಾ! ನಿನ್ನ ತಂದೆ ತಾಯಿಯರನ್ನು ನೋಡಬೇಕೆಂದು ಅಮರುವಿನವರೆಗೆ ನಾವೇ ಬಂದೆವು. ನೀನು ಅವರನ್ನು ಎಲ್ಲಿ ಬಚ್ಚಿಟ್ಟಿ?” +ತಂದೆ-ತಾಯಿಯರ ಮಾತಿನಿಂದ ಕಾಲಿಯ ಒಮ್ಮೆಲೇ ಕರಗಿಹೋದನು. ಮಹಾರಾಣಿಗೆ ವಂದಿಸದಿದ್ದುದಕ್ಕೆ ಪಶ್ಚಾತ್ತಾಪವೆನಿಸಿತು. ಆದರೂ ತನ್ನ ಹೊರ ಠೀವಿಯನ್ನು ಬಿಡಲಿಲ್ಲ. “ಕಕ್ಕನಿಗೆ ಹಾವು ಕಚ್ಚಿತೆಂದು ವಾರ್ತೆ ಬಂದಿತ್ತು. ಎಲ್ಲರೂ ಟಾಂಕಿಗೆ ಹೋಗಿದ್ದೆವು.” +“ಟಾಂಕಿಯಲ್ಲಿ ಜೀವಂತ ಚಿರತೆಯನ್ನು ಹಿಡಿದೆಯಂತಲ್ಲಾ!” +“ಹೌದು!” +“ಭಾಪು! ನಾವು ನಾಗಕುಲದವರು, ಯಾವಾಗಲೂ ವೀರರು! ಅಲ್ಲವೇ?” +ಇನ್ನೂ ತನ್ನ ದ್ರೋಹಯತ್ನದ ಬಗ್ಗೆ ಮಾತೇ ಇಲ್ಲ. ರಾಣಿಯ ಪ್ರಶ್ನೆಗೆ ’ಹೂಂ!’ ಎಂದು ತಲೆಯಲ್ಲಾಡಿಸಿದನು. +“ಅಮರುವಿನಲ್ಲಿ ನಮ್ಮ ರಾಜ್ಯದ ಕ್ಷೇಮಕ್ಕಾಗಿ ಆಚಾರ್ಯದೇವದೇಮರು ಶತಚಂಡಿ ಹೋಮ ಪ್ರಾರಂಭಿಸಿದ್ದಾರೆ. ಅಲ್ಲಿ ಕಳ್ಳರ ಹಾವಳಿಯಿದೆಯೆಂದು ಶಾಸ್ತ್ರಿ ನಾಗೇಶರು ಹೇಳಿದರು. ಅಲ್ಲಿ ಇಬ್ಬರು ರಾಹುತರನ್ನು ಇಟ್ಟಿದ್ದೇನೆ. ನಿನ್ನ ಸ್ನೇಹಿತರು ಕಲಿಗಳು. ಅವರದೊಂದು ಪಡೆ ಸ್ಥಾಪಿಸಿ ನೀನು ಅದರ ದಳಪತಿಯಾಗಬಹುದೇ?” +ಇದೇನು ಆಟ?-ದ್ರೋಹಿಗಳ ಪಡೆ? ದ್ರೋಹಿಯಾದ ತನಗೆ ದಳಪತಿಯ ಸ್ಥಾನ?-ಎಲ್ಲವೂ ವಿಚಿತ್ರ. ಆದರೂ ಬಾಗಿ, “ಆಗಬಹುದು, ಮಹಾರಾಣಿ!” ಎಂದು ಮುಜುರೆ ಮಾಡಿದ. +“ಅದಕ್ಕಿಂತ ಮುಂಚೆ ನೀನು ಮುಂದಾಳುತನವನ್ನು ಸಿದ್ಧಗೊಳಿಸುವ ಪರೀಕ್ಷೆಯಾಗಬೇಕು. ಅಯೋಧ್ಯೆಯ ಸೈನಿಕರೂ ವೀರರು. ಆದರೆ ಅರಣ್ಯದ ಯುದ್ಧದಲ್ಲಿ, ಅರಣ್ಯ ಸೋಸಿ ತೆಗೆಯುವುದರಲ್ಲಿ, ಅವರ ಅನುಭವ ಸಾಲದು. ಶ್ರಾವಸ್ತಿಯ ಮೇಲೆ ದಾಳಿ ಮಾಡಿದ ಭಿಲ್ಲ ಪಡೆಯವರನ್ನು ಅಯೋಧ್ಯೆಯ ಸೈನ್ಯ ಸೋಲಿಸಿದೆ. ಆದರೆ ಅವರ ರಾಜನೂ , ಆರು ಜನರೂ ಶರಭಾರಣ್ಯದಲ್ಲಿ ಅಡಗಿ ಕುಳಿತಿದ್ದಾರೆ. ನಿನ್ನ ನಾಗಸ್ನೇಹಿತರು ಶರಭಾರಣ್ಯವನ್ನು ಅರಿಯರು ನೀನೂ ಗಾಯಗೊಂಡಿರುವಿ. ಹೀಗಿದ್ದೂ ನಿನಗೆ ನಿನ್ನವರನ್ನು ಸೇರಿಕೊಂಡು, ಶರಭಾರಣ್ಯ ಸೋಸಿ, ಏಳೂ ಜನರನ್ನು ಬಂಧಿಸುವ ಕೆಲಸ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ನೀನು ಯಶಸ್ವಿಯಾದರೆ, ನಿನ್ನನ್ನು ಅಮರುವಿನ ದಳಪತಿಯಾಗಿ ಮಾಡಿ ಅಮರುವಿಗೆ ಕಳಿಸಿಕೊಡುತ್ತೇನೆ. ಆಗಬಹುದೇ?” +ಇಂಥವೇ ಕಠಿಣ ಕಾರ್ಯಗಳನ್ನೇ ಕಾಲಿಯಾ ಬೇಡಿ ಬಯಸಿದ್ದು. ಅವನ ಕಣ್ಣಲ್ಲಿ ನೀರೂರಿತು. +“ಆಗಬಹುದು, ಮಹಾದೇವಿ!-ಆದರೆ..ನನ್ನ ಅಪರಾಧಕ್ಕೆ..” +“ನಿನ್ನ ಅಪರಾಧವೇನು? ನಿನ್ನ ತಂಗಿಗೆ ಆದ ಅಪರಾಧದ ಬಗ್ಗೆ ನೀನು ಕೆರಳಿ ಅವಿವೇಕ ಮಾಡಿರುವೆ. ಅದೇನು ಅಪರಾಧವಲ್ಲ. ನಾನು ನಿನ್ನೂರಿಗೆ ಬಂದಾಗ ನೀನು ನನ್ನನ್ನು ಕಂಡು ದೂರು ತಿಳಿಸಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಆ ಮಾತು ಬೇಡ. ಈಗ ಮಾಡಬೇಕಾದ ಕೆಲಸವನ್ನು ನಿನ್ನವರಿಗೆ ವಿವರಿಸಿ ಹೇಳು. ನಾಗರು ಕಲಿಗಳು. ಕೆರಳುವಿಕೆ ಅವರ ಸ್ವಭಾವಗುಣಧರ್ಮ. ಅದನ್ನು ಹಿತವಾಗಿ ಬಳಸುವ ಅವಕಾಶ ನಿನಗಿದೆ. ಬಳಸುವುದು ನಿನ್ನನ್ನು ಕೂಡಿದೆ!” ಎಂದಳು ರಾಣಿ. +ಕಾಲಿಯಾ ಕುಲುಕುಲು ನಗುತ್ತ ಕಾರಾಗೃಹಕ್ಕೆ ಮರಳಿ ಬಂದು ಪ್ರವೇಶಿಸಿ ಎಲ್ಲವನ್ನೂ ವಿವರಿಸಿ ಹೇಳಿದನು. ಸಂಗಡಿಗರು ’ಇದು ಕಾಲಿಯಾನ ವಿಜಯ!’ ವೆಂದೇ ಭಾವಿಸಿದರು. ಹರ್ಷೋದ್ಗಾರ ಮಾಡಿದರು. +ರಾಣಿಯ ಅಪ್ಪಣೆಯ ಮೇರೆಗೆ ಅವರ ಊಟವಾಗಿ, ಶಸ್ತ್ರಾಸ್ತ್ರಗಳು, ಬಿಲ್ಲು ಬಾಣಗಳು ದೊರಕಿ, ಒಂದು ವಾರ ಸಾಲುವಷ್ಟು ರೊಟ್ಟಿ ಸಿಕ್ಕು ಅವರು ಸೀಳುದಾರಿಯಿಂದ ಶರಭಾರಣ್ಯವನ್ನು ಕಾಲ್ನಡಿಗೆಯಿಂದಲೆ ಉತ್ತರ ದಿಕ್ಕಿನಿಂದ ಪ್ರವೇಶಿಸಿದರು. +೧೭ +ಮಾದ್ರಕನ ಸಲಹೆಯ ಮೇರೆಗೆ ವತ್ಸರಾಜನು ಉತ್ತರ ದಿಕ್ಕಿನ ಪಳವುಪೊದೆಗಳಲ್ಲಿ ಭಿಲ್ಲರಾಜ ಓಡಿ ಹೋಗದಂತೆ ದಿಗ್ಬಂಧನ ಮಾಡಿದನು. ತನ್ನ ಸೇನೆಯನ್ನು ಸುತ್ತುವರಿಸಿ ಭಿಲ್ಲರ ಸಣ್ಣ ಗುಂಪು ನಂದಿಗ್ರಾಮದ ಸಮೀಪ ಬರುವಣ್ತೆಯೇ ಚಾಣಾಕ್ಷ ವತ್ಸರಾಜನು ತನ್ನ ಸೇನೆಗಳನ್ನು ಏರ್ಪಡಿಸಿದ್ದನು. ಅಲ್ಲಿ ಸರಯೂನದಿ ಅವರಿಗೆ ಅಡ್ಡವಾಗುತ್ತದೆ. ಭಾರವಾದ ಸುಲಿಗೆಯನ್ನು ನಾವಿಕರು ದಾಟಿಸಲಾರರು. ಅಲ್ಲಿಗೇ ಅವರ ಓಟ ಕುಂಠಿತವಾಗುತ್ತದೆಯೆಂದು ಅವನ ಬೇತು. +ಉತ್ತರ ದಿಕ್ಕಿನಿಂದ ಪ್ರವೇಶಿಸಿದ ಕಾಲಿಯನ ಗುಂಪಿಗೆ ಇದರ ಲಾಭ ಚೆನ್ನಾಗಿಯೇ ಸಿಕ್ಕಿತು. ಎಲ್ಲರೂ ತಿಂದು ಉಗಿದ ತಾಂಬೂಲದ, ಹೆಜ್ಜೆಗಳ, ಕುದುರೆಗಳು ಮೇದ ಸ್ಥಳಗಳ ಗುರುತು ಗುರುತಿಸಿ, ಅವರು ಕುಳಿತ ಜಾಗೆಯನ್ನೇ ಕಾಲಿಯನ ಜನರು ಶೋಧಿಸಿ ಹಿಡಿದು, ಸಮೀಪದಲ್ಲೇ ವಿಶ್ರಮಿಸಿದರು. +ಮಾರನೆಯ ದಿನದ ಬೆಳಗಿನ ಜಾವದಲ್ಲಿ ಭಿಲ್ಲರು ಇನ್ನೂ ನಿದ್ರಿಸುತ್ತಿದ್ದಾಗ ಕಾಲಿಯಾ ಅವರನ್ನು ಸಂಧಿಸಿದನು. ಏಳುವ ಮೊದಲೇ ಅವರ ಕೈಗಳಿಗೆ ಸಂಕೋಲೆ ಬಿದ್ದಿತ್ತು. ಒಬ್ಬರಿಗೂ ಗಾಯವಾಗಲಿಲ್ಲ. ಅವರ ಮೇಲೆಯೇ ಅವರ ಸಾಮಾನು-ಗಂಟುಗದಡಿಗಳನ್ನು ಹೇರಿಸಿ, ಸರಯೂ ನದಿಯ ಮುಖದ ಕಿರಿಯಾಳನೀರಿನಲ್ಲಿ ನಡೆಸುತ್ತ, ಹಸ್ತಿಗ್ರಾಮಕ್ಕೆ ಬಂದನು. ಅಲ್ಲಿ ನಾಲ್ಕು ಚಕ್ಕಡಿ ಬಾಡಿಗೆಯಿಂದ ಗೊತ್ತುಮಾಡಿ ಒಂದೂವರೆ ದಿನಗಳಲ್ಲಿ ಸೀಳುದಾರಿಯಿಂದ ಅಯೋಧ್ಯೆಗೆ ಬಂದು ಮುಟ್ಟಿ , ಎಲ್ಲ ಸಾಮಾನು ಸರಂಜಾಮು ಸೆರೆಯಾಳುಗಳನ್ನೂ ಮಹಾರಾಣಿಗೆ ಒಪ್ಪಿಸಿದನು. +“ತಿಕ್ಕಾಟವಾಯಿತೆ?” ಎಂಬ ಮಹಾರಾಣಿಯ ಪ್ರಶ್ನೆಗೆ ಕಾಲಿಯಾ “ಅಂಥ ಸಂದರ್ಭವೇ ಒದಗಲಿಲ್ಲ” ಎಂದು ಹೇಳಿದನು. +ಮಹಾರಾಣಿಯಿಂದ ಖಿಲ್ಲತ್ತು ಪಡೆದು, ಸಂಗಡಿಗರೊಂದಿಗೆ ಅಮರು ಗ್ರಾಮಕ್ಕೆ ಹೊರಟು ಹೋದನು. +ಇತ್ತ ವತ್ಸರಾಜನು ದಿನಕ್ಕೆ ಮೂರು ಗಾವುದ ತನ್ನ ಸೈನ್ಯದ ವಲಯವನ್ನು ಬಿಗಿಗೊಳಿಸುತ್ತ, ಇನ್ನು ಎಲ್ಲಿಯೂ ಓಡಿಹೋಗಲಾರರು-ಎಂಬ ಧೈರ್ಯದಲ್ಲಿ ಅವರು ಇದ್ದ ವಸತಿಗೇ ಮಧ್ಯಾಹ್ನ ಮುಟ್ಟಿದನು. ಅವನ ದುರ್ದೈವಕ್ಕೆ ಸಿಕ್ಕಿದ್ದೇನು? ಭಿಲ್ಲರು ಅಡಿಗೆ ಮಾಡಿದ ಗಡಿಗೆ-ಮಡಿಕೆಗಳು, ತುಂಬಿಟ್ಟ ನೀರಿನ ಮಣ್ಣು ಹರಿವೆ, ತಾಂಬೂಲ ಮಿಶ್ರಿತ ಉಗುಳು, ಹರಕು ಬಟ್ಟೆ ಬರೆಗಳು. +’ಇಲ್ಲಿಯೇ ಬಿಡಾರ ಹೂಡಿದ್ದು ಖಂಡಿತ, ಎಲ್ಲಿ ಹೋಗಿರಬಹುದು?’ ಎಂದು ನಂದಿಗ್ರಾಮಕ್ಕೆ ಬಂದನು. ’ಅವರು ವಸತಿ ಮಾಡಿದ ಜಾಗೆ ಸಿಕ್ಕಿತು. ಅವರು ಸಿಕ್ಕಲಿಲ್ಲ!’ ಎಂಬ ಸಂದೇಶವನ್ನು ಮಹಾರಾಣಿಗೆ ಕಳಿಸಿದನು. ’ಸಿಕ್ಕಿದ್ದಾರೆ. ನಿನ್ನ ಚಾತುರ್ಯಕ್ಕೆ ಏನೂ ನಷ್ಟವಿಲ್ಲ. ನೀನು ದಳಪತಿ. ಹೊರಟು ಬಾ’ ಎಂದು ಮಹಾರಾಣಿಯ ಸಂದೇಶ ಬಂದಿತು. +ಶ್ರಾವಸ್ತಿಯ ಆತಿಥ್ಯದಿಂದ ಸಂತುಷ್ಟರಾದ ದೇವರಾಜ ಸುಭಾನು ಕೊಡಮಾಡಿದ ವಜ್ರ ವೈಡೂರ್ಯಗಳ ಕಾಣಿಕೆಯೊಂದಿಗೆ ಮಾದ್ರಕನನ್ನು ಮುಂದೆ ಮಾಡಿಕೊಂಡು ನಂದಿಗ್ರಾಮಕ್ಕೆ ಬಂದರು. ವತ್ಸರಾಜನಿಂದ ಭಿಲ್ಲರಾಜ ವಶನಾದ ಸುದ್ದಿ ತಿಳಿದು ಸಂತೋಷಗೊಂಡು, ವತ್ಸರಾಜನಿಗೆ ಕೈ ಮೈ ಮುಟ್ಟಿ ನೋಡಿ ” ನೀನು ಗಾಯಗೊಳ್ಳಲಿಲ್ಲವಷ್ಟೇ?” ಎಂದರು. ಎಲ್ಲರೂ ಕೂಡ ಅಯೋಧ್ಯೆಗೆ ಮರಳಿದರು. ವತ್ಸರಾಜ ದಳಪತಿಯಾದ ಸುದ್ದಿ ಆಗಲೇ ಮುಟ್ಟಿ ಹೃಷ್ಟ ಚಿತ್ತರಾದರು. ಸೆರೆಸಿಕ್ಕ ಭಿಲ್ಲರಾಜ ಉಪೇಂದ್ರನೂ ಅವನ ಸೇನಾನಿಗಳೂ ಎರಡು ದಿವಸ ಕಾರಾಗೃಹದಲ್ಲಿ ಬಂಧನದಲ್ಲಿ ಕಳೆದರು. +ಭಿಲ್ಲರಾಜ ಉಪೇಂದ್ರನ ಕೈಕೋಳವನ್ನು ಬಿಚ್ಚಿ ರಾಣಿಯ ಎದುರು ನಿಲ್ಲಿಸಲಾಯಿತು. +“ನೀವು ಶ್ರಾವಸ್ತಿಯ ಮೇಲೆ ದಾಳಿ ಮಾಡಿದ್ದು ಏಕೆ?” +“ಶ್ರಾವಸ್ತಿಯ ಅರಸರು ನಮ್ಮನ್ನು ಕಾಡುಪ್ರಾಣಿಗಳಂತೆ ಕಾಣುತ್ತಾರೆ. ವಿಜಯದಶಮಿಯ ಭಿಲ್ಲರ ಬೇಟೆಯಾಡುತ್ತಾರೆ. ನಮ್ಮವರ ಹೆಂಡಂದಿರನ್ನು ಎತ್ತಿಕೊಂಡು ಹೋಗುತ್ತಾರೆ.” +“ನಿಮಗೆ ಮತ್ತು ನಿಮ್ಮ ನೂರು ಜನ ಸೆರೆಯಾಳುಗಳಿಗೆ ಅಯೋಧ್ಯೆಯಲ್ಲಿ ಇರಲಿಕ್ಕೆ ಕೊಟ್ಟರೆ ಏನು ಮಾಡುತ್ತೀರಾ? ಕೊಲೆ-ಸುಲಿಗೆ-ದರೋಡೆ ಮಾಡುತ್ತೀರಾ?” +“ಇಲ್ಲ. ನಮಗೆ ಅಯೋಧ್ಯೆಯ ಜನರ ಬಗ್ಗೆ ಯಾವ ದ್ವೇಷವೂ ಇಲ್ಲ.” +“ದ್ವೇಷವಿಲ್ಲವೆಂದರಷ್ಟೇ ಸಾಲದು. ಪ್ರಜೆಗಳ ಜೊತೆಗೆ ಪ್ರಜೆಗಳಾಗಿ ಈ ರಾಜ್ಯ ನಮ್ಮದೇ ಎಂದು ಭಾವಿಸುವುದಾದರೆ ನಿಮಗೆ ಇಲ್ಲಿ ಸ್ಥಾನ ಸಿಕ್ಕೀತು. ಇಲ್ಲವಾದರೆ ನಿಮ್ಮ ನೂರು ಜನರನ್ನು ನಿಮ್ಮನ್ನು ಶ್ರಾವಸ್ತ್ಯ ಸುಭಾನುವಿಗೆ ಕಾಣಿಕೆಗಳಾಗಿ ಕೊಡುವುದಾಗಿ ನಿರ್ಧರಿಸಿದ್ಧೇನೆ.” +“ಬೇಡ ಮಹಾರಾಣಿ, ಸುಭಾನುವಿಗೆ ನಮ್ಮ ಜನರನ್ನು ಕೊಡುವುದೆಂದರೆ ಅವರನ್ನು ಕೊಂದಂತೆಯೇ! ಇಲ್ಲಿಯೇ ನಮ್ಮನ್ನು ಕೊಂದುಬಿಡಿ. ಆ ಚಿತ್ರಹಿಂಸೆ, ಅವಮಾನ ತಡೆದುಕೊಳ್ಳುವುದು ನಮಗೆ ಸಾಧ್ಯವಿಲ್ಲ” ಎಂದು ತನ್ನ ಮುಚ್ಚಿದ ಬಲಮುಚ್ಚಿದ ಮುಷ್ಟಿಯನ್ನು ತೆರೆದು ತೋರಿಸಿದ. ಬಲ ಹಸ್ತದಲ್ಲಿ ಬೆರಳುಗಳೇ ಇರಲಿಲ್ಲ. +“ಇದು ಸುಭಾನುವಿನ ರಾಜ್ಯದ ಕಾನೂನು!” ಎಂದ ವ್ಯಂಗ್ಯವಾಗಿ. +ರಾಜ್ಯಸಭೆಯಲ್ಲಿ ಒಂದೇ ಕೈ ಎತ್ತಿ ತಮ್ಮ ಜನರ ಪದ್ಧತಿಯಂತೆ ಕುರ್ನಿಸಾತ್ ಮಾಡಿದ್ದಕ್ಕಾಗಿ ಇದು ಶಿಕ್ಷೆಯಂತೆ! +“ನಿಮ್ಮಲ್ಲಿ ಹದಿನಾರು ಜನರ ಗುಂಪು ಮಾಡಿರಿ. ನಾನು ಹೇಳಿದ ಅಡವಿಯಲ್ಲಿ ಅವರು ಸಹಕುಟುಂಬ ವಾಸಿಸಲಿ. ಜೇನು ಸಾಕಿ, ಹಣ್ಣು ಮಾರಿ ಉಪಜೀವನ ಸಾಗಿಸಬೇಕು. ಕೊಲೆ-ಸುಲಿಗೆಗಳನ್ನು ಬಿಟ್ಟು ಬಿಡಬೇಕು. ಅವರಿಗೆಲ್ಲ ವರ್ಷಕ್ಕೆ ಹತ್ತು ಹೊನ್ನು ವರಮಾನ. ಪ್ರತಿಯಾಗಿ ಅವರು ರಾಜ್ಯಾಜ್ಞೆಯಾದಾಗ ಯುದ್ಧಕ್ಕೆ ಬರಬೇಕು. ಜನರಿಗೆ ಅನುಕೂಲವಾದ ಸಂರಕ್ಷಣೆ ನೀಡಬೇಕು. ಹೊಳೆ ದಾಟಿಸುವುದಕ್ಕಾಗಿ ಅಂಬಿಗರಾಗಿ ಕೆಲಸ ಮಾಡಬಹುದು. ಅದರ ಶುಲ್ಕ ಅವರೇ ಉಣ್ಣಬಹುದು. ನೀವು ಏಳು ಜನರು ಅಯೋಧ್ಯೆಯಲ್ಲಿ ಅವರ ಒಳ್ಳೆಯ ನಡತೆಗೆ ಒತ್ತೆಯಾಗಿರಬೇಕು. ಇಲ್ಲಿ ನಿಮಗೆ ತಕ್ಕ ರಾಜಮರ್ಯಾದೆ ಸಲ್ಲಿಸಲಾಗುವುದು. ಇದು ನಿಮ್ಮ ನೂರು ಜನಕ್ಕೆ ಒಪ್ಪಿಗೆಯಾಗಬಹುದೇ?” +“ಮಹಾರಾಣಿ, ತಮ್ಮ ನಿರ್ಣಯ ನಮಗೆ ಮಾನ್ಯ. ಆದರೆ ಎಲ್ಲ ಕರಾರುಗಳನ್ನು ನಮ್ಮ ಜನರಿಗೆ ನಾನೇ ವಿವರಿಸಿ ಹೇಳುವುದು ಅಗತ್ಯ. ಏನಾದರೂ ಅಲ್ಪ ಕಾರಣಕ್ಕಾಗಿ ಅವರು ದುರ್ಮಾರ್ಗಕ್ಕಿಳಿದರೆ ನನ್ನ ಅಥವಾ ಇತರ ಆರು ನಾಯಕರ ಜೀವ ವ್ಯರ್ಥ ಅಪಾಯಕ್ಕೀಡಾದೀತು!” +“ಅಗತ್ಯವಾಗಿ, ನಿಮ್ಮನ್ನು ನಮ್ಮ ಮತ್ಸರಾಜನು ರಾಜ್ಯ ಮರ್ಯಾದೆಯಿಂದ ನಂದಿ ಗ್ರಾಮಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಮ್ಮ ಸೇನೆಯ ವಶದಲ್ಲಿ ನಿಮ್ಮ ನೂರು ಯೋಧರಿದ್ದಾರೆ. ಅವರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರಬೇಕು. ಅನಂತರ ಆ ನಿರ್ಣಯವನ್ನು ಬದಲಿಸಕೂಡದು. ನಿಮಗೆ ಎರಡೇ ಮಾರ್ಗಗಳು ತೆರೆದಿವೆ. ಸುಭಾನುವಿಗೆ ಒಪ್ಪಿಸುವುದು; ಅಥವಾ ನನ್ನ ಕರಾರಿನ ಅನ್ವಯ ಅಯೋದ್ಯಾ ರಾಜ್ಯದಲ್ಲಿ ನೆಲೆಸುವುದು.” +“ಅರ್ಥವಾಯಿತು, ಮಹಾದೇವಿ!” +ಕರುಣೆ, ಕರಾರುಗಳ ಆರ್ಭಟೆಯಲ್ಲಿ ತಾವು ಶ್ರಾವಸ್ತ್ಯ ಶೆಟ್ಟರಿಂದ ಸುಲಿದು ತಂದ ಸಂಪತ್ತು ಏನಾಯ್ತು, ಎಂಬುದನ್ನು ಕೇಳುವುದನ್ನೇ ಉಪೇಂದ್ರ ಮರೆತು ಹೋಗಿದ್ದ. +೧೮ +ಮಹಾರಾಣಿ ಭಾಂಡಾರಿಯವರನ್ನು ಕರೆಸಿದಳು. ದೇವರಾಜರು ತಂದ ಶ್ರಾವಸ್ತ್ಯ ಕಾಣಿಕೆಗಳು, ಬಿಲ್ಲರಿಂದ ತಂದ ಧನಕಗಳು ಒಂದೇ ರಾಶಿಯಾಗಿ ಒಂದು ಭದ್ರಕೋಣೆಯಲ್ಲಿ ಬಿದ್ದಿದ್ದವು. ಭಾಂಡಾರಿಯೊಬ್ಬನನ್ನೇ ಒಳಗೆ ಕರೆಸಿ ಅವುಗಳ ಮೌಲ್ಯವನ್ನು ಅಜಮಾಸಿಸಲಿಕ್ಕೆ ಬಿಟ್ಟಳು. ಊಟವೂ ಒಳಗೆ ಬರುತ್ತಿತ್ತು. ಎರಡು ದಿನಗಳ ಸತತ ಯತ್ನದಿಂದ ಅವು ಸುಮಾರು ಇಪ್ಪತ್ತು ಲಕ್ಷ ವರಾಹಗಳಾಗಬಹುದೆಂದು ಭಾಂಡಾರಿ ವರದಿ ಒಪ್ಪಿಸಿದ. ತನಗೆ ಮುತ್ತು ಪರೀಕ್ಷೆ-ವಜ್ರ ಪರೀಕ್ಷೆ ಮಾಡಲು ಬುದ್ಧಿ ಸಾಲದೆಂದು, ಲೆಕ್ಕ ತಪ್ಪಿರಬಹುದೆಂದು ಹೇಳಿದಳು. ” +“ಸರಿ. ಈಗ ನಾನು ಲೆಕ್ಕ ಮಾಡುತ್ತೇನೆ!” ಎಂದು ಮಹಾರಾಣಿ ಒಳಗೆ ಹೋದಳು. ಭಾಂಡಾರಿಯ ಕಡೆಯಿಂದ ಇದ್ದ ಬೆಲೆಬಾಳುವ ಸಾಮಾನುಗಳನ್ನೆಲ್ಲ ಒಂದು ಸಮತಟ್ಟು ಆಗುವಂತೆ ಮಾಡಿಸಿದಳು. ಅದರಲ್ಲಿ ಹದಿನಾರು ಸಮಪಾಲುಗಳನ್ನು ಮಾಡಬೇಕೆಂದು ಹೇಳಿದಳು. ಭಾಂಡಾರಿ ಬೆತ್ತದಿಂದ ಉದ್ದ ಅಡ್ಡ ಗೆರೆ ಎಳೆದು ಹದಿನಾರು ಜ್ಯಾಮಿತೀಯ ಭಾಗಗಳನ್ನು ಮಾಡಿದ. +“ತಿಂಗಳಿಗೆ ಒಂದೊಂದು ಗುಂಪಿನಂತೆ ಇಲ್ಲಿಯ ಧನದ ರಾಶಿಯನ್ನು ಭಾಂಡಾರಕ್ಕೆ ಸಾಗಿಸಬೇಕು. ಭಾಂಡಾರ ತುಂಬಿಸುವ ಮೊದಲು ಬಲ್ಲವರಿಂದ ಸರಿಯಾಗಿ ಬೆಲೆ ಮಾಡಿಸಬೇಕು. ಒಮ್ಮೆ ಬಂದ ಪರೀಕ್ಷಕರು ಇನ್ನೊಮ್ಮೆ ಬರಬಾರದು. ಮೌಲ್ಯದ ವರದಿಯನ್ನು ನನಗೆ ಒಪ್ಪಿಸಬೇಕು. ಯಾರೊಡನೆಯೂ ಇದರ ಬಗ್ಗೆ ಮಾತೆತ್ತಬಾರದು. ಜೋಕೇ!” ಎಂದು ಹೇಳಿ ಬಾಗಿಲು ಭದ್ರಪಡಿಸಿ ಶಯನಮಂದಿರವನ್ನು ಹೊಕ್ಕಳು. ಹಿಂತಿರುಗಿ ಭಾಂಡಾರಿಯತ್ತ ಕಣ್ಣು ಹಾಯಿಸಲಿಲ್ಲ. +ಆಕೆ ಹೋದ ನಿಟ್ಟಿನಲ್ಲೇ ಬೆಕ್ಕಸ ಬೆರಗಾಗಿ ಭಾಂಡಾರಿ ನೋಡುತ್ತಲೇ ನಿಂತ. ಚೇತರಿಸಿಕೊಂಡೂ ಹೊರಟಾಗ ಎದುರಿಗೆ ತಾರ್ಕ್ಷ್ಯ ಬಂದ. +“ಏನು ಕೃಷ್ಣಭಾಂಡಾರಿಗಳೇ. ಮೌಲ್ಯ ಪರೀಕ್ಷೆ ಮುಗಿಯಿತೇ?” +“ಮಹಾದೇವಿಯನ್ನು ಕೇಳು!” ಎಂದರು ಕೃಷ್ಣಭಾಂಡಾರಿಗಳು, ಸೆಡವಿನಿಂದ. +“ನೀವು ಎರಡು ದಿನ ಕಷ್ಟ ಪಟ್ಟಿರಿ. ಮಹಾದೇವಿ ಎರಡು ನಿಮಿಷದಲ್ಲಿ ಕೆಲಸ ಪೂರೈಸಿದಳು. ಯಾರ ಮೌಲ್ಯ ನಿಜ?” +ಆಗ ಭಾಂಡಾರಿಗೆ ಅದರ ಚಟುಲ ಹಾಸ್ಯ ಅರ್ಥವಾಯಿತು. “ನಿಜ ಮೌಲ್ಯ…ತಾರ್ಕ್ಷ್ಯ…ನಿಜ ಮೌಲ್ಯ ಮೌಲ್ಯವಂತರದೇ! ಒಪ್ಪುತ್ತಿಯಾ?” ಎಂದು ನಕ್ಕರು. +“ಒಪ್ಪುತ್ತೇನೆ!” +“ನೀನು?” +“ನಾನೂ!-ಇಂತಹ ಮಹಾರಾಣಿಯನ್ನು ನಾನೆಲ್ಲಿಯೂ ನೋಡಿದ್ದಿಲ್ಲ. ಭಾಂಡಾರಿಯವರೇ!” +ನಗುತ್ತ ಇಬ್ಬರೂ ತಮ್ಮ ತಮ್ಮ ದಾರಿ ಹಿಡಿದರು. +೧೯ +ಭಿಲ್ಲರು ರಾಣಿಯ ಎಲ್ಲ ಕರಾರುಗಳಿಗೂ ಒಪ್ಪಿದರು. ಅವರಲ್ಲಿದ್ದ ಒಳಪಂಗಡಗಳ ಅನುಸಾರವಾಗಿ ಅವರನ್ನು ಬೇರೆ ಬೇರೆ ಕಡೆಗೆ ನೆಲಸುವಂತೆ ರಾಜಾ ಉಪೇಂದ್ರನು ತನ್ನ ನಾಯಕರೊಂದಿಗೆ ಚರ್ಚಿಸಿ ಪಟ್ಟಿಮಾಡಿಕೊಟ್ಟನು. ಕೆಲವರು ಇಲಾವತಿ ತೀರದ ಅಂಬಿಗ ಕುಟುಂಬದವರು ಅಂಬಿಗ ಕೆಲಸವನ್ನು ಒಪ್ಪಿಕೊಂಡರು. ಕೆಲವರು ಲೋಹಾರರು. ಅವರಿಗೆ ಕುಲುಮೆ ಮಾಡಿ ಧಾತುವನ್ನು ಕರಗಿಸುವ ಕಮ್ಮಾರ ಉದ್ಯೋಗವನ್ನು ರಾಣಿ ಅಯೋಧ್ಯೆಯ ಸಮೀಪದ ಅರಣ್ಯಗಳಲ್ಲಿಯೇ ಮಾಡಿಕೊಟ್ಟಳು. ಕೆಲವರು ಬೇಟೆಗಾರರು. ಕೆಲವರು ದಂತದ ಕೆಲಸ ಮಾಡುವಲ್ಲಿ ನಿಷ್ಣಾತರು. ಕೆಲವರು ಮಣಿಗಾರರು. ಅವರವರ ವೃತ್ತಿಗೆ ಯುಕ್ತ ಸ್ಥಳಗಳನ್ನು ಮಹಾರಾಣಿ ಒಪ್ಪಿಸಿದಳು. ಭಿಲ್ಲರಾಜ ಉಪೇಂದ್ರ ಮತ್ತು ಅವನ ಆರು ಸಂಗಡಿಗರನ್ನು ಅಯೋಧ್ಯೆಯಲ್ಲೇ ರಾಜ ಮರ್ಯಾದೆಯಿಂದ ಇಡಲಾಯಿತು. +ಇನ್ನು ಒಂದು ಮುಖ್ಯ ಸಮಸ್ಯೆ; ಅವರವರ ಕುಟುಂಬದ ಜನರನ್ನು ಇಲಾವತಿ-ಗೋಮತಿ ತೀರದಿಂದ ಅಯೋಧ್ಯೆ ರಾಜ್ಯಕ್ಕೆ ತರುವುದು. ಉಪೇಂದ್ರನಿಂದ ಪತ್ರ ಬರೆಸಿ, ವೀರಸೇನನನ್ನು ಕಳಿಸಿದಳು. ಒಂದು ಕಾಲಕ್ಕೆ ಒಂದು ಅಥವಾ ಎರಡು ಕುಟುಂಬಗಳ ಜನರನ್ನಷ್ಟೇ ತರಬೇಕೆಂದು ಗೊತ್ತಾಯಿತು. ಒಂದೂವರೆ ತಿಂಗಳಲ್ಲಿ ಆಯಾ ಕುಟುಂಬಗಳು ತಮ್ಮ ತಮ್ಮ ಯಜಮಾನರನ್ನು ಕೂಡಿ ಕೊಂಡವು. +೨೦ +ಮಹಾರಾಜರಿಗೆ ಅಂದು ವಾಂತಿಯಾದನಂತರ ಕರುಳುಬೇನೆಯಿಂದ ಮೂರು ತಿಂಗಳು ನರಳಿದರು. ಅವರ ಹತ್ತಿರ ರಾಜ್ಯವೈದ್ಯರು ಮತ್ತು ಇಬ್ಬರು ದಾದಿಯರು ಮಾತ್ರ ಇರತೊಡಗಿದರು. +ಒಂದು ದಿನ ಜ್ವರದ ಉಮ್ಮಳಿಕೆಯಲ್ಲಿ “ನಾನು ನನ್ನ ರಾಣಿಯನ್ನು ಕಾಣಬೇಕು!” ಎಂದು ಹಂಬಲಿಸಿದರು. +ರಾಹುತನಿಂದ ವಾರ್ತೆ ಕೇಳಿದೊಡನೆ ಪುರುಕುತ್ಸಾನಿ ಆಮ್ರವನಕ್ಕೆ ಧಾವಿಸಿದಳು. +“ಬಂದೆಯಾ, ಪುರುಕುತ್ಸಾನಿ! ಬರುವೆಯೋ ಇಲ್ಲವೋ ಎಂದಿದ್ದೆ!” ಎಂದರು. +ಮಹಾರಾಣಿ ಅವರ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಕೂದಲು ನೇವರಿಸಿದಳು. +“ಬಾ ಪುರುಕುತ್ಸಾನಿ, ನನ್ನ ಮಗ್ಗುಲಿಗೆ!” +“ಬೇಡ ಮಹಾರಾಜ, ನಿಮಗೆ ಜ್ವರ ಇದೆ!” +“ಜ್ವರದ ತಾಮಸದಲ್ಲಿಯೇ ನಾನು ನಿನ್ನನ್ನು ಭೋಗಿಸಬಲ್ಲೆ.” +“ಈಗ ನಿದ್ದೆ ಹೋಗಿರಿ, ಮಹಾರಾಜ, ನಿಮ್ಮ ಕಾಯಿಲೆ ವಾಸಿಯಾದೊಡನೆ ನಾವು ಇಬ್ಬರೂ ಆವಂತಿಕಾದೇವಿಯ ದರ್ಶನಕ್ಕೆ ಹೋಗೋಣ. ದೇವದೇಮ ಋಷಿಗಳನ್ನು ಕಾಣೋಣ!” +“ಈಗ ನನಗೆ ಕಾಮವಾಸನೆ ಆಗಿದೆ. ನೀನು ಸ್ಥ್ರೀಧರ್ಮವನ್ನು ಆಚರಿಸುತ್ತಿಯೋ ಇಲ್ಲವೋ ನೋಡೇಬಿಡುತ್ತೇನೆ.” +“ಪತಿಯ ಆರೋಗ್ಯ ಸ್ತ್ರೀಧರ್ಮದ ಮೊದಲನೇ ಕರ್ತವ್ಯ!” +“ನಾಳೆ ಜ್ವರ ಕಡಿಮೆಯಾದರೆ ಬರುತ್ತೀಯಾ!” +“ಓಹೋ! ಬರುತ್ತೇನೆ.” +ಮರುದಿನ ಜ್ವರ ಇನ್ನಷ್ಟು ಉಲ್ಬಣಿಸಿದುದರ ವಾರ್ತೆ ಬಂದಿತು. ಮತ್ತೆ ಪುರುಕುತ್ಸಾನಿ ಗಂಡನ ಬಳಿಗೆ ಧಾವಿಸಿದಳು. ಇಡೀ ರಾತ್ರಿ ತಾನೇ ಅರೈಕೆ ಮಾಡಿದಳು. +ಆದರೆ… +ಮರುದಿನ ಬೆಳಿಗ್ಗೆ ಮಹಾರಾಣಿ ಅರಮನೆಗೆ ಬಳಲಿ ಬೆಂಡಾಗಿ ಬಂದಳು. ಅರಮನೆಯ ಎದುರು ಅಂಗಳದಲ್ಲಿ ಒಂದು ದೊಡ್ಡ ಜನ ಸಮ್ಮರ್ದವೇ ನೆರೆದಿತ್ತು. +ಅದು ಅಯೋಧ್ಯೆಯ ಋಗ್ವೇದಿಯ ಬ್ರಾಹ್ಮಣರ ಗುಂಪು. ಮಹಾರಾಣಿ ಅಮರುವಿನಲ್ಲಿ ಶತಚಂಡಿ ಯಾಗವನ್ನು ಶುರುಮಾಡಿಸಿದ ವಾರ್ತೆ ಗೊತ್ತಾದ ಕೂಡಲೇ ವಶಿಷ್ಠ ಗೋತ್ರದ ಬ್ರಾಹ್ಮಣರಿಗೇ ಸರ್ವಸ್ವ ಮೊರೆ ಹೋಗುತ್ತಾಳೆ. ತಮ್ಮ ವಾಸಂತೀಕಾದೇವಿ ಕಡಿಮೆಯವಳೇ? ತಮ್ಮ ಬ್ರಹ್ಮದೇವರು ಕಡಿಮೆಯಾದರೆ? ತಮ್ಮ ಮಂತ್ರಗಳು ಕಡಿಮೆಯವೆ? ತಮ್ಮ ಗೋತ್ರರ್ಷಿ ವಶಿಷ್ಠರು ಕಡಿಮೆಯೇ? ಹೀಗೆ ಗುಜುಗುಜು ನಡೆದಿತ್ತು. ಅದರ ಮುಂದಾಳು ಸಿಂಹಭಟ್ಟ (ಅಥವಾ ಸಮ್ಹ) ನೆಂಬ ವಶಿಷ್ಠಗೋತ್ರಿಯ ಬ್ರಾಹ್ಮಣ. +ಮಹಾರಾಣಿ ಬಂದೊಡನೆ ಬ್ರಾಹ್ಮಣರು ದಾರಿ ಬಿಟ್ಟು ನಿಂತರು. +ಸಿಂಹ ಭಟ್ಟ ವಿವೇಕಿ. ಉಳಿದವರಂತೆ ದ್ವೇಷದಿಂದ ಬಂದವನಲ್ಲ. ಅಯೋಧ್ಯೆಯ ಅರ್ಚಕರು ಮೊದಲನೆಯ ಮೂರುವೇದಗಳ ಅಧಿಕಾರಿಗಳು. ನಲ್ಕನೆಯ ವೇದ ದೇವಮಾನ್ಯವಲ್ಲ. ಅಥರ್ವಣವೇದದ ಕ್ರಿಯೆಗಳು ಮಾಟ-ಮದ್ದುಗಳಿಗೆ ಉಪಯೋಗವೇ ಹೊರತು ಮೂಲದೇವವಲ್ಲ. ಅದಕ್ಕೆ ಉತ್ತೇಜನ ಕೊಡುವುದು ಅಯೋಧ್ಯೆಗೆ ಅವಮಾನಕರ. ಮುಂತಾಗಿ ಅವನು ಪ್ರಾಮಾಣಿಕವಾಗಿಯೇ ನಂಬಿದ್ದನು. +ಸಿಂಹ ಭಟ್ಟನನ್ನು ಕಂಡು, “ನನ್ನ ಸ್ನಾನವಾಗಿಲ್ಲ; ದ್ವಿಜರೊಡನೆ ಸ್ನಾನವಿಲ್ಲದೆ ಮಾತಾಡುವುದು ನನಗೆ ಕ್ಷೇಮವೆಂದು ನನಗೆ ಅನಿಸುವುದಿಲ್ಲ. ನೀವು ಭೂಸುರರು ನನಗೆ ಸ್ನಾನ ಮಾಡಲಿಕ್ಕೆ ಅವಕಾಶಕೊಡಿ. ಇಲ್ಲಿ ಬಿಸಿಲಲ್ಲಿ ಏಕೆ ನಿಂತಿರಿ? ಒಳಗೆ ಸಭಾಂಗಣದಲ್ಲಿ ವಿಶ್ರಮಿಸಿರಿ. ತುಸು ಹಾಲು ಹಣ್ಣು ವ್ಯವಸ್ಥೆ ಮಾಡುತ್ತೇನೆ. ಒಳಗೆ ಬನ್ನಿ” ಎಂದು ಹೇಳಿ ರಾಣಿ ಸ್ನಾನಕ್ಕೆ ಹೋದಳು. +ಭೂಸುರರು ಸಭಾಗಂಣದಲ್ಲಿ ಪವಡಿಸಿದರು. ಉತ್ತತ್ತಿ, ಬದಾಮು, ಖರ್ಜೂರಗಳ ಜೊತೆಗೆ ಕೇಶರ ಮಿಶ್ರಿತ ಹಾಲು ಬಂದಿತು. ತುಸು ವೇಳೆಯಲ್ಲಿ ಮಹಾರಾಣಿ ಬಿಳಿಸೀರೆ ಕುಪ್ಪಸ ಧರಿಸಿ ಹಾಜರಾದಳು. ತಾನೇ ಹಾಲಿನ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ಎಲ್ಲರಿಗೂ ನೀಡತೊಡಗಿದಳು. +ಉಪಾಹಾರವಾದ ಮೇಲೆ ಬ್ರಾಹ್ಮಣರಿಗೆ ಮಾತೇ ಹೊರಡಲೊಲ್ಲವು. ಸಿಂಹಭಟ್ಟನೊಬ್ಬನೆದ್ದು ಮಹಾರಾಣಿ ಪವಡಿಸಿದ್ದ ಆಸನದ ಬಳಿಗೆ ಹೋಗಿ ವಿನಯದಿಂದ ಕೇಳಿದನು: +“ಮಹಾರಾಜರ ಆರೋಗ್ಯ ಹೇಗಿದೆ?” +“ನಿನ್ನೆ ರಾತ್ರಿ ಉಲ್ಬಣಿಸಿತು. ಇಡೀ ರಾತ್ರಿ ನಾನು ಎದ್ದು ಕುಳಿತಿದ್ದೆ. ಅವರ ಆರೋಗ್ಯಕ್ಕಾಗಿ ತಾವು ವಾಸಂತೀಕಾದೇವಿಗೆ ಅಭಿಷೇಕ ಸಲ್ಲಿಸಬೇಕು.” +“ನಾವು ಶತಚಂಡಿಯಾಗ ಮಾಡಬೇಕೆಂದು ವಿಚಾರ ಮಾಡುತ್ತಿದ್ದೇವೆ.” +“ಆಗಬಹುದು. ಅಮರುವಿನಲ್ಲಿ ದೇವದೇಮ ಮಹರ್ಷಿಗಳು ಯಾಗ ಆರಂಭಿಸಿದ್ದಾರೆ. ಅಲ್ಲಿ ಐನೂರು ವರಹ ಸಲ್ಲಿಸಿದ್ದೇನೆ. ಅಯೋಧ್ಯೆಯಲ್ಲಿ ಬ್ರಾಹ್ಮಣರ ಸಂಖ್ಯೆ ದೊಡ್ಡದು. ಇಲ್ಲಿ ಒಂದು ಸಾವಿರ ವರಹ ಸಲ್ಲಿಸುತ್ತೇನೆ. ಅಮರುವಿನಲ್ಲಿ ಯಾಗ ಮುಗಿಯುವುದರಲ್ಲಿ ಮಹಾರಾಜರ ಅನಾರೋಗ್ಯ ಉಲ್ಬಣಿಸಿತು. ಅದನ್ನೇ ಸಹಸ್ರ ಚಂಡಿಯಾಗಕ್ಕೆ ಬಹಳವಾಯಿತು, ಎಂದೇ ಅವರ ವಿಚಾರವಿರಬೇಕು. ನಿಮಗೆ ಕೊಡಮಾಡುವ ಸಾವಿರ ವರಹದಲ್ಲಿ ನಿಮಗೆ ಬೇಕಾದ ಯೋಗ್ಯಯಾಗವನ್ನು ಮಾಡಿರಿ. ನಮ್ಮ ಮುಖ್ಯ ಯೋಚನೆ ಮಹಾರಾಜರ ಆರೋಗ್ಯ ಆಗಬಹುದೇ?” +“ಆಗಬಹುದು.” +ಒಬ್ಬ ಕುಹಕಿ ಬ್ರಾಹ್ಮಣ ಭೀಮಭಟ್ಟ ಎದ್ದುನಿಂತು, “ಅಯೋಧ್ಯೆಯಲ್ಲಿ ಋಗ್ವೇದಿಯರಿಗೆ ಪ್ರಾಶಸ್ತ್ಯವಿರುವುದು ಪರಂಪರಾಪ್ರಾಪ್ತ, ಮಹಾರಾಣಿ !” ಎಂದ. +ಇನ್ನೊಬ್ಬ ಸಾಮವೇದಿ ಅದನ್ನು ನಿಷೇಧಿಸಿ, “ನಮ್ಮ ಅಜ್ಜ ಅಯೋಧ್ಯೆಯ ರಾಜ ಪುರೋಹಿತನಾಗಿದ್ದ. ಮಹಾರಾಣಿ! ನಾವು ಸಾಮವೇದಿಯರು!” +ಇನ್ನೊಬ್ಬ ಯಜುರ್ವೇದಿ ಚಟ್ಟನೆ ಎದ್ದು , “ಎಲ್ಲ ವೇದಗಳಿಗೂ ಮೂಲ ಯಜುರ್ವೇದವೆಂದು ವಿಷ್ಣುಪುರಾಣದಲ್ಲಿ ಹೇಳಿಲ್ಲವೇ, ಮಹಾರಾಣಿ” ಎಂದ. +ಆಗ ಸಿಂಹನು ಮುಂದೆ ಬಂದು, “ಈಗ ವೇದಾಂಗಗಳ ಚರ್ಚೆಗೆ ಬೇಡ. ಮಹಾರಾಣಿಯವರು ನಿನ್ನೆ ರಾತ್ರಿ ಮಹಾರಾಜರ ಶುಶ್ರೂಷೆಗಾಗಿ ನಿದ್ದೆಗೆಟ್ಟು ಬಂದಿದ್ದಾರೆ. ಅವರಿಗೆ ವಿಶ್ರಾಂತಿ ಅತ್ಯಗತ್ಯ. ನಾವು ಈಗ ಹೋಗೋಣ. ಇಂದು ಸಂಜೆ ವಾಸಂತಿಕಾ ದೇವಾಲಯದಲ್ಲಿ ಮಹಾರಾಜರ ಆರೋಗ್ಯಕ್ಕಾಗಿ ’ತ್ರಿಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ’ ಮಂತ್ರದ ಶತಾವರ್ತನೆ ಸಲ್ಲಿಸೋಣ. ಆಮೇಳೆ ಶತಚಂಡಿ ಯಾಗದ ಯೋಜನೆಯನ್ನು ನಿರ್ಧರಿಸೋಣ!” ಎಂದನು. +ಮತ್ತೆ ಋಗ್ವೇದಿ ಭೀಮಭಟ್ಟ ಬ್ರಾಹ್ಮಣ ಎದ್ದು ನಿಂತು, “ಶತಚಂಡಿ ಮಂತ್ರ ಯಾವ ವೇದದ ಅಂಗ?” ಎಂದು ಸವಾಲು ಹಾಕಿದ. +ಅವರ ಬದಿಯಲ್ಲೇ ನಿಂತ ಧಾಂಡಿಗ ಬ್ರಾಹ್ಮಣ ಶಾಮಭಟ್ಟ, “ಸುಮ್ಮನಿರೋ ಖೋಡಿ” ಎಂದು ಚೀರಿದ. +ಕೆಲ ಬ್ರಾಹ್ಮಣರು ಗೊಳ್ಳೆಂದು ನಕ್ಕರು. ಮತ್ತೆ ಕೆಲವರು ಮುಖ ತಗ್ಗಿಸಿದರು. ಕೆಲವರು “ಸರಿ ಹೇಳಿದೆ, ಅವನು ಬಾಯ್ಬಡಕ” ಎಂದು ಉದ್ಗಾರ ತೆಗೆದರು. ಅಂತೂ ಎಲ್ಲರೂ ಸಂತೋಷದಿಂದ ಹೊರಟರು. +ಬಾಗಿಲ ಬಳಿ ಒಬ್ಬ ಯುವಕ ಬ್ರಾಹ್ಮಣ ಹೊರಳಿ ನಿಂತು, “ಮಹಾದೇವಿಗೆ ಜಯವಾಗಲಿ” ಎಂದು ಕೂಗಿದ. ಎಲ್ಲರೂ ದನಿಗೂಡಿಸಿದರು. ಜಯ ಜಯಕಾರದ ಸದ್ದು ನಿಂತ ಮೇಲೆ ಮಹಾರಾಣಿ ಎದ್ದು ನಿಂತು, “ಮಹಾಜನಿಗೆ ಜಯವಾಗಲಿ” ಎಂದಳು. +ಮತ್ತೆ ಜಯಜಯಕಾರವೆದ್ದಿತು, ಮಹಾರಾಜರ ಆರೋಗ್ಯದ ಮುಖ್ಯ ವಿಷಯವನ್ನೇ ಮರೆತದ್ದಕ್ಕಾಗಿ ಅನೇಕರು ನಾಲಗೆ ಕಚ್ಚಿಕೊಂಡರು. +ಸಿಂಹನು ರಾಣಿಯ ಬಳಿಗೆ ಬಂದು, “ಮಹಾರಾಣಿ! ನಮ್ಮ ಅವಿವೇಕವನ್ನು ಕ್ಷಮಿಸಬೇಕು. ನಮ್ಮಲ್ಲಿ ಅನೇಕರು ಅಪಕ್ವರು. ವಾದವಿವಾದದ ರಾದ್ದಾಂತದಲ್ಲೇ ಅವರು ತಮ್ಮ ವಿದ್ವತ್ತೆಯನ್ನು ಹಾಳುಗೆಡವುತ್ತಾರೆ.” +“ಭೂಸುರರ ತಪ್ಪು ನಾನು ಎಣಿಸುವುದಿಲ್ಲ. ಶತಚಂಡಿ ಹೋಮವನ್ನು ಚೆನ್ನಾಗಿ ಮಾಡಿರಿ, ಅಷ್ಟೇ ಸಾಕು” ಎಂದು ಹೇಳಿ ಬೀಳ್ಕೊಟ್ಟಳು. +೨೧ +ವೈದ್ಯರ ಚಾತುರ್ಯವೋ, ಶತಚಂಡೀಹೋಮದ ಪ್ರಭಾವವೋ, ಒಂದು ತಿಂಗಳ ಅವಧಿಯಲ್ಲಿ ಮಹಾರಾಜರು ಗುಣಮುಖರಾಗಿ ಅಡ್ಡಾಡತೊಡಗಿದರು. ಪೂರ್ಣಾಹುತಿಯ ದಿನ ಮಹಾರಾಣಿ ತಾನೇ ಬಂದು, ಅವರಿಗೆ ರಾಜಮಾನ್ಯ ಉಡುಗೆ ತೊಡಿಗೆಗಳನ್ನು ಉಡಿಸಿ, ರಥದಲ್ಲಿ ಕುಳ್ಳಿರಿಸಿ, ವಾಸಂತಿಕಾ ದೇವಸ್ಥಾನಕ್ಕೆ ಕರೆದೊಯ್ದಳು. ಅವರು ಬಂದೊಡನೆ ತಾಳ-ತುತ್ತೂರಿ-ಚೌಘಡದ ಮಂಗಲವಾದ್ಯ ಭೋರ್ಗರೆಯತೊಡಗಿದವು. ಒಳಗೆ ಒಂದು ಕಟ್ಟೆಯ ಮೇಲೆ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಸುವಾಸಿನಿಯರು ಕಿಕ್ಕಿರಿದು ನೆರೆದಿದ್ದರು. ವೇದಿಯ ಸುತ್ತಲೂ ಬ್ರಾಹ್ಮಣರು; ಒಂದು ಕಟ್ಟೆಯ ಮೇಲೆ ಮನ್ನೆಯರು, ಭದ್ರಮುಖರು; ಇನ್ನೊಂದರ ಮೇಲೆ ರಾಜ ಮನೆತನದ ಪರಿಜನರು: ಇನ್ನೊಂದರ ಮೇಲೆ ಸೆಟ್ಟಿ ಸಾಹುಕಾರರು; ಅಟ್ಟದ ಮೇಲೆ ಬಾಲಕರು, ಯುವಕರು, ಸಂದಣಿಗೊಂಡಿದ್ದರು. ದೇವಿಯ ಗರ್ಭಗುಡಿಯ ಇಮ್ಮಗ್ಗಲಿಗೂ ಅಖಂಡ ಸೌಭಾಗ್ಯವತಿಯರಾದ ಅಯೋಧ್ಯೆಯ ಗಣಿಕಾ ಜನರು ಕೈಯಲ್ಲಿ ಬೆಳ್ಳಿಬಟ್ಟಲಿನಲ್ಲಿ ಕುಂಕುಮದ ನೀರು ಜೋಡುವಿಳ್ಯದೆಲೆ ಹಿಡಿದುಕೊಂಡು ಉತ್ಕಂಠೆಯಿಂದ ದಾರಿಕಾಯುತ್ತಿದ್ದರು. +ರಾಜ-ರಾಣಿಯರು ನೇರವಾಗಿ ಗರ್ಭಗುಡಿಗೆ ಬಂದು, ದೇವಿಗೆ ಅರಿಷಿಣ ಕುಂಕುಮ-ಪನ್ನೀರು-ಹೂಗಳನ್ನು ಏರಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಹೊರಬರುತ್ತಲೇ, ಇಬ್ಬರು ಗಂಡುಗೊಜ್ಜೆಯರು ಗೆಜ್ಜೆಯ ಝಣತ್ಕಾರ ಮಾಡಿ ಬೆಳ್ಳಿಯ ಕೋಲು ನೆಲಕ್ಕೆ ಅಪ್ಪಳಿಸಿದರು. ಇನ್ನೊಬ್ಬ ವೃದ್ಧ ವೇಶ್ಯೆಯು ಬಂದು ರಾಜರನ್ನು ಆಲಿಂಗಿಸಿ, ಅವರ ಗಲ್ಲದ ಮೇಲೆ ಕಪ್ಪು ಚುಕ್ಕೆಯನ್ನಿಟ್ಟಳು, ದೃಷ್ಟಿದೋಷ ಪರಿಹಾರಕ್ಕಾಗಿ. ಅನಂತರ ಎಲ್ಲ ವೇಶ್ಯೆಯರೂ ದೂರದಿಂದ ಕೈಮಾಡಿ ಬೆರಳಚಿಟಿಕೆಯನ್ನು ಮುರಿದುಕೊಂಡರು. ಮುಂದೆ ಮುಂದೆ ಬಂದಂತೆಲ್ಲ ರಾಜ ರಾಣಿಯರ ಮೇಲೆ ಕೆಂಪು ಮಿಶ್ರಿತ ಪನ್ನೀರನ್ನು ಸಿಂಪಡಿಸತೊಡಗಿದರು. ವಿಳ್ಯದೆಲೆಗಳ ಕುಚ್ಚಿನಿಂದ. ರಾಜರು ಅವರ ಮುಖಗಳನ್ನು ವೀಕ್ಷಿಸುತ್ತಲೇ ಮುಂದುವರಿದರು, ತಮಗೆ ಹೆಚ್ಚು ಸುಖ ನೀಡಿದ ಮೃಗನಯನೆಯೇ ಕಾಣುವುದಿಲ್ಲವಲ್ಲಾ, ಎಂಬ ಉತ್ಕಂಠೆಯಿಂದ. ಮ್ಲಾನವದನೆಯಾಗಿ, ರಾಜರ ಹಾಸಿಗೆಯಿಂದ ಬಹಿಷ್ಕೃತಳಾದ ಮೃಗನಯನೆ, ತುಸು ಹಿಂದೆ ಹಿಂಜರಿದು ನಿಂತಿದ್ದಳು. ಅವಳನ್ನು ಕಾಣುತ್ತಲೇ ರಾಜರು ಒಂಟಿಹುಬ್ಬು ಮೇಲೆ ಏರಿಸಿದರು. ಆದರೂ ಮುಖ ಸಿಂಡರಿಸಿಕೊಂಡೇ ಆಕೆ ದೂರಿಂದ ಕುಚ್ಚಿನಿಂದ ಪನ್ನೀರು ಸಿಂಪಡಿಸಿದಳು. ಆಕೆಯನ್ನು ನೋಡುವ ಭರದಲ್ಲಿ ರಾಜರ ಸೆಲ್ಲೆ ಕೆಳಗೆ ಜಾರಿಬಿತ್ತು. ಮಹಾರಾಣಿಯೇ ಅದನ್ನು ಎತ್ತಿ ಅವರಿಗೆ ಮತ್ತೆ ಹೊದಿಸಿದಳು. ನಂತರ ಗರ್ಭಗುಡಿಯ ಹೊರಗೆ ಬಂದಾಗ, ಸುವಾಸಿನಿಯರು ಮಂಗಳಾರತಿ ಎತ್ತಿದರು. ಒಂದು ಬಾರಿ ದೇವಾಲಯದ ಪ್ರದಕ್ಷಿಣೆಯ ನೆಪದಲ್ಲಿ ರಾಜರಾಣಿಯರು ಎಲ್ಲರ ಮುಜುರೆ ಸ್ವೀಕರಿಸಿ ಬರುತ್ತಲೇ, ವೇದಮಂತ್ರಗಳ ಸುಸ್ವರ ಕೇಳಿಸತೊಡಗಿತು. ಗುಂಪು ಗುಂಪಾಗಿ ನಾಲ್ಕೂ ವೇದಗಳ ಶಾಸ್ತ್ರಿಗಳು ತಮ್ಮ ತಮ್ಮ ವೇದಗಳ ಒಂದೊಂದು ಋಚೆಯನ್ನೂ ತಮ್ಮ ತಮ್ಮ ರೀತಿಯಲ್ಲಿ ಹಾಡಿದರು. ಪೂರ್ಣಾಹುತಿಯನ್ನು ಎತ್ತಿ ವೇದಿಯ ಮುಂದೆ ನಿಂತ ಪುರೋಹಿತ ಸಿಂಹಭಟ್ಟನು, ’ಹ್ರಾಂ ಹ್ರೀಂ’ ಮಂತ್ರ ಹೇಳಿ, ಉಚ್ಚ ಕಂಠದಿಂದ ಸಾಮವೇದದ ಋಚೆಯೊಂದನ್ನು ಹಾಡಿ, ರಾಜರಾಣಿಯರ ಕೈಯಿಂದ ಪೂರ್ಣಾಹುತಿ ಬಿಡಿಸಿದನು. ಅಗ್ನಿಯು ಭಗ್ಗನೆ ಮೇಲಕ್ಕೆದ್ದು ಆಹುತಿ ನೊಣೆದನು. ಸುವಾಸಿನಿಯರು ಮಹಾರಾಣಿಯನ್ನು ಮಣೆಯ ಮೇಲೆ ಕೂರಿಸಿ ಅರಿಶಿಣ-ಕುಂಕುಮ ಹಚ್ಚಿ, ಕಾಯಿ-ಅಕ್ಕಿಗಳಿಂದ ಉಡಿ ತುಂಬಿದರು. ಎಲ್ಲ ಕಡೆಯಿಂದಲೂ ಜಯಜಯಕಾರದ ಘೋಷವೆದ್ದಿತು. +ಆ ಪ್ರಕಾಶದಲ್ಲಿ ಪುರುಕುತ್ಸಾನಿ ಢಾಳಾದ ಕುಂಕುಮ ಧರಿಸಿ ಸುಂದರಿಯಾಗಿ ಕಂಡಳೇನೋ ನಿಜ. ಆದರೆ ದುಃಖಿತೆಯಾದ ಮೃಗನಯನೆಯ ಚಿತ್ರವೇ ಅರಸರ ಮೈಮನಸ್ಸಿನಲ್ಲಿ ಅಚ್ಚೊತ್ತಿದಂತೆ ನಿಂತಿತ್ತು. +ಮುಂದೆ ಪಂಜಿನ ಮೆರವಣಿಗೆ. ಜಯಘೋಷಗಳ ಗದ್ದಲದಲ್ಲಿ ದಣಿದ ಮಹಾರಾಜರು ಅರಮನೆಯನ್ನು ಕಾಣುತ್ತಲೇ ಶಯ್ಯೆಯನ್ನು ಇಚ್ಚಿಸಿದರು. ಪುರುಕುತ್ಸಾನಿ ಅವರನ್ನು ಶಯ್ಯೆಯಲ್ಲಿ ಮಲಗಿಸಿದೊಡನೆ ನಿದ್ದೆ ಹತ್ತಿಬಿಟ್ಟಿತು. ಪುರುಕುತ್ಸಾನಿಯೊಬ್ಬಳೇ ಪ್ರಜಾಜನರ ಸಂತೋಷಕ್ಕಾಗಿ ಹೊರಕ್ಕೆ ಬಂದು ತುಸು ಹೊತ್ತು ನೃತ್ಯ ನಾಟಕಗಳನ್ನು ವೀಕ್ಷಿಸಿದಳು. ಅರ್ಧಕ್ಕೆ ಎದ್ದು ಅರಮನೆಯ ಶಯ್ಯಾಗೃಹವನ್ನು ಪ್ರವೇಶಿಸಿದಳು. +ರಾಜರ ಹಣೆಯ ಕುಂಕುಮ ಹಾಗೆಯೇ ಇತ್ತು. +ಪುರುಕುತ್ಸಾನಿ ದೃಢವಾಗಿ ಆಲಿಂಗಿಸಿ ನಿದ್ರೆ ಹೋದಳು. ಮರುದಿನ ಅಮರುವಿಗೆ ಪ್ರಯಾಣ ಬೆಳೆಸಬೇಕು. ಸಹಸ್ರ ಚಂಡೀಹೋಮ ಲಕ್ಷಚಂಡೀ ಹೋಮವಾಗುವುದು ಹಾಸ್ಯಾಸ್ಪದವಾಗಬಹುದಿತ್ತು. +ರಾಜರು ತಾಯಿಯ ಮಡಿಲಿನಲ್ಲಿ ಮಲಗಿದ ಮಗುವಿನ ಹಾಗೆ ಮಲಗಿಯೇ ಇದ್ದರು. +೨೨ +ಮರುದಿನ ನಸುಕಿನಲ್ಲಿ ಎದ್ದು ರಥವೇರಿ ಮಹಾರಾಣಿ ಅಮರುಗ್ರಾಮಕ್ಕೆ ತೆರಳಿದರು. +ಅಚ್ಚುಕಟ್ಟಾದ ವ್ಯವಸ್ಥೆಯನ್ನು ಪಾಳ್ಯಗಾರ ಕಾಲಿಯಾ ಮಾಡಿದ್ದ. ಅವನ ಮನೆ ಈಗ ತುಸುವಿಸ್ತಾರಗೊಂಡಿತ್ತು. ಆವಂತಿಕಾದೇವಸ್ಥಾನ ತಳಿರು ತೋರಣಗಳಿಂದ ಅಲಂಕೃತವಾಗಿತ್ತು. ವಿಶೇಷವೇನೆಂದರೆ ಅಲ್ಲಿ ಹೊಸತಾಗಿ ನೆಲಸಿದ ಏಳು ಭಿಲ್ಲ ಕುಟುಂಬಗಳ ಸುವಾಸಿನಿಯರು ಒಂದೊಂದು ಮಣಿಮಾಲೆಯನ್ನು ರಾಣಿಯ ಕೊರಳಲ್ಲಿ ಹಾಕಿದರು. ಸುತ್ತಲೂ ಕುಣಿದರು. ಅವರ ಟೋಪಿಯನ್ನು ಧರಿಸಿ ರಾಣಿಯೂ ಕುಣಿದು ಚಪ್ಪಾಳೆ ಹಾಕಿದಳು. ಟೋಪಿಯ ಸಹಿತವಾಗಿ ರಾಣಿ ಅಮರುದವನಕ್ಕೆ ಬಂದು ಪೂರ್ಣಾಹುತಿ ನೀಡಿದಳು. ದೇವದೇಮ ಮಹರ್ಷಿಗಳು ಮತ್ತೆ ಏಕಾಂತ ಸಂದರ್ಶನ ನೀಡಿದರು. “ಬಹಳ ಅಚ್ಚುಕಟ್ಟಾಗಿ ಯಾಗ ನೆರವೇರಿತು. ಊರ ಸುವಾಸಿನಿಯರೆಲ್ಲ ದಿವಸವೂ ಮಾಲೆ ಮಾಡಿ ತರುತ್ತಿದ್ದರು ಅಗ್ನಿನಾರಾಯಣನಿಗೆ” ಎಂದು ಹೇಳಿ, “ವಾಮದೇವ ಮಹರ್ಷಿಗಳಿಂದ ನಿನಗಾಗಿ ಸಂದೇಶ ಬಂದಿದೆ. ಶಿಷ್ಯನೊಬ್ಬ ನಿನ್ನೆಯೇ ಬಂದ”-ದೇವದೇಮರು ಉಸಿರಿದರು. +ವಾಮದೇವರ ಹೆಸರು ಕೇಳುತ್ತಲೇ ರಾಣಿಯ ಚಿತ್ತ ಚುರುಕಾಯಿತು. +“ಏನು ಸಂದೇಶ?” +“ವಿಸ್ತಾರ ದೃಷ್ಟಿ ಇರಲಿ. ಬರಿ ನೆರೆಹೊರೆಯ ಚಿಂತೆಯಷ್ಟೇ ಮಹಾರಾಣಿಗೆ ಸಲ್ಲದು ಎಂದು ನಿನಗೆಯೇ ಹೇಳಲಿಕ್ಕೆಂದು ಸಂದೇಶ ಬಂದಿದೆ.” +“ಏನು ಇದರರ್ಥ.” +“ನನಗೂ ತಿಳಿಯದು. ನೀನು ನೆರೆಹೊರೆಯವರ ಚಿಂತೆ ಮಾಡಿದೆಯ?” +“ಹೌದು. ನಮ್ಮದು ಸಣ್ಣ ರಾಜ್ಯ. ನೆರೆಹೊರೆಯ ರಾಜ್ಯಗಳು ನಮಗೆ ಒಂದು ರೀತಿಯಿಂದ ಕವಚವಿದ್ದಂತೆ. ಭಿಲ್ಲರು ಶ್ರಾವಸ್ತಿಯನ್ನು ಸುಲಿದಾಗ ನನ್ನ ಸೇನೆ ಅದನ್ನು ಪರಿಹರಿಸಿತು. ಶ್ರಾವಸ್ತಿಯನ್ನು ಸುಲಿದ ಮೇಲೆ ಅವರು ನಮ್ಮ ಮೇಲೂ ಧಾಳಿ ಮಾಡಬಹುದಾಗಿತ್ತು. ಸುಭಾನು ನಮ್ಮ ನೆರವನ್ನು ಕೇಳಲಿಲ್ಲ. ನಾವೆ ಪಡೆಗಳನ್ನು ಕಳಿಸಿದೆವು. ಅದರಿಂದಾಗಿ ನಮ್ಮ ಪ್ರಾಪ್ತಿಯೂ ಹೆಚ್ಚಿತು.” +“ಮಗಳೇ, ನೀನು ಜಾಣೆ. ಸಂದೇಶವಂತೂ ಬಂದಿದೆ. ಅದರ ಅರ್ಥ ನನಗೆ ಆಗುತ್ತಿದೆ. ನಿನಗೆ ಏನು ಅರ್ಥವಾಗುತ್ತದೆಯೋ ಅದು ನಿನ್ನ ವಿಷಯ. ಹೆಚ್ಚಿಗೆ ಹೇಳಲಾರೆ. ಗ್ರಹಗಳಂತೂ ಇನ್ನೂ ಪರಚಕ್ರದ ಕಡೆಗೆ ತೋರಿಸುತ್ತಿವೆ.” +“ನಾನು ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲವೆ?” +“ನಾಳೆ ಬೆಳಿಗ್ಗೆ ಹಸಿದ ಹೊಟ್ಟೆಯಿಂದ ಬಾ. ಆಹಾರವನ್ನು ತೆಗೆದುಕೊಳ್ಳಬೇಡ.” +ಮರುದಿನ ಪುರುಕುತ್ಸಾನಿ ಉಪವಾಸವಿದ್ದು ಮಹರ್ಷಿಗಳ ದರ್ಶನಕ್ಕೆ ಬಂದಳು. +ಮಹರ್ಷಿಗಳು ರಾಣಿಯನ್ನು ಎದುರಿಗೆ ಕೂಡಿಸಿಕೊಂಡು ತುಸುಹೊತ್ತು ತಮ್ಮ ಗುರುಗಳನ್ನು ಕುರಿತು ಧ್ಯಾನ ಮಾಡಿದರು. ನಂತರ ಅವಳ ಕಡೆಗೆ ತೆವಳುಗಣ್ಣಿನಿಂದ ತುಸು ನೋಡಿದರು. ಅವಳ ಅಂತಃಕರಣವನ್ನು ಪ್ರವೇಶಿಸಿದರು. ಓರೆಕೋರೆಗಳನ್ನು ನೋಡಿದರು. ಅವಳ ದೈವರೇಷೆಗಳ ಪ್ರಕಾಶಮಯ ಕಿರಣಗಳನ್ನು ಕಂಡರು. ಅನಂತರ ಮೆಲುದನಿಯಲ್ಲಿ ಹೇಳಿದರು: +“ಮಗಳೇ, ಪಶ್ಚಿಮ ದಿಕ್ಕಿನ ಕಡೆಗೆ ತುಸು ಲಕ್ಷ ಹಾಯಿಸು. ಅದರ ಅರ್ಥವನ್ನು ಕೇಳಬೇಡ. ನಾವು ನಿನ್ನ ಅನುಭವದ ಮೇಲೆಯೇ ಕಟ್ಟುವವರು. ನಮ್ಮ ಅನುಭವವೇ ಬೇರೆ. ನಿನ್ನ ಅನುಭವದ ಅನುಸಾರವಾಗಿಯೇ ನೀನು ವಿಚಾರ ಮಾಡು. ಇಷ್ಟು ದಿನ ಪಶ್ಚಿಮ ದಿಕ್ಕಿಗೆ ಲಕ್ಶ್ಯವಿಟ್ಟಿದ್ದೀಯಾ?” +“ಇಲ್ಲ. ಅತ್ತ ಶರಭಾರಣ್ಯವಿದೆ. ನಂತರ ಶರವಣ ಅರಣ್ಯ ಬರುತ್ತದೆ. ಅಲ್ಲಿಂದ ಪರಚಕ್ರ ಸಾಧ್ಯವಿಲ್ಲ.” +“ಅಲ್ಲಿಂದಲೇ ಬರಬಹುದು.” +ತುಸು ಹೊತ್ತು ಮೌನವಾಗಿ ಇಬ್ಬರೂ ಕುಳಿತರು. +ಅನಂತರ ಪುರುಕುತ್ಸಾನಿ ನಮಸ್ಕಾರ ಮಾಡಿದಳು. +“ಪುತ್ರವತೀ ಭವ!” +ಎರಡೂ ಸಂದೇಶಗಳ ಅರ್ಥವಾಗಲಿಲ್ಲ.. +ಊಟ ಮಾಡಿ ದೇವಿ ಅಮರು ಬಿಟ್ಟು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದಳು. +ಮಹಾರಾಜರು ಆಮ್ರವನಕ್ಕೆ ತೆರಳಿದರೆಂದು ಚೇಟಿ ಹೇಳಿದಳು. +ತಾರ್ಕ್ಷ್ಯನು ಜೋಲುಮೋರೆ ಹಾಕಿಕೊಂಡು ನಿಂತಿದ್ದನು. ಅವನ ಸಮೀಪ ಹೋಗಿ ಪ್ರಶ್ನಾರ್ಥಕವಾಗಿ ಹುಬ್ಬು ಏರಿಸಿದಳು. +“ಮತ್ತೆ ಅದೇ, ಮಹಾರಾಣಿ!” +’ಯಾರು’ ಎಂದು ಕೇಳುವ ಉಸಾಬರಿಗೆ ಪುರುಕುತ್ಸಾನಿ ಹೋಗಲಿಲ್ಲ. ಅಯೋಧ್ಯೆಯಲ್ಲಿ ಪೂರ್ಣಾಹುತಿಯ ದಿನವೇ ಆಕೆಗೆ ಸೂಚನೆ ಸಿಕ್ಕಿತ್ತು. +೨೩ +ತಾರ್ಕ್ಷ್ಯನ ಮುಂದಾಳುತನದಲ್ಲಿ ಐವತ್ತು ಗುಪ್ತಚರರು ನಾನಾ ವೇಷಧಾರಿಗಳಾಗಿ ಯಾತ್ರಿಕರು, ಸಾಧುಗಳು, ಸನ್ಯಾಸಿಗಳು, ವರ್ತಕರು, ನಿರ್ಗತಿಕರು, ಕುದುರೆ ಮಾರುವವರು, ಬಳೆ-ಮಣಿ-ಮಾಂತ್ರಿಕ-ಮಂಗ ಆಡಿಸುವವರು-ಹಾವುಗಾರ-ಕರಡಿ ಕುಣಿತದವ, ನಟ-ಕೀರ್ತನಕಾರ-ಇಂಥಾ ಪ್ರಾರ್ಥನೆಗಳಲ್ಲಿ ಬಿಡಿಬಿಡಿಯಗಿ ಪಶ್ಚಿಮ ದಿಕ್ಕಿಗೆ ಪ್ರಯಾಣ ಮಾಡಿದರು. ದ್ವಾರಕೆಯಿಂದ ಹಿಡಿದು ಗಾಂಧಾರದವರೆಗೆ ನಾನಾ ದೇಶ ಸಂಚರಿಸಿ ಬಂದರು. ಭೃಗುಕಚ್ಚ, ಮಾಳವ, ಆವಂತಿ, ಹಸ್ತೀನಾಪುರ, ಕುರುಪಾಂಚಾಲ, ಕ್ರಿವಿ, ಪಂಚನದ, ಅಹಿಚ್ಚತ್ರ, ಕಾಶ್ಮೀರ, ಕುರುಜಾಂಗಲ, ತಕ್ಶಕ, ಮಿಥಿಲೆ, ಮದ್ರ, ಶಕ, ಹರಿಯೂಪಿಯ, ತ್ರಿಪುರ(ಪಶ್ಚಿಮ), ಔದುಂಬರ, ಕೈಕಯ, ಅಂಬಷ್ಟ, ಬರ್ಬರ, ಬಹ್ಲೀಕ, ಮ್ಲೇಚ್ಚ, ಮತ್ಸ್ಯ-ಎಲ್ಲ ಸಂಚರಿಸಿ ಬಂದರು. +ಯಾವ ನಾಡಿನಲ್ಲೂ ಅಶಾಂತಿ, ಯುದ್ಧಸನ್ನಾಹ, ದಂಡಯಾತ್ರೆ, ರಾಜಸೂಯ, ಸೈನ್ಯ ಜಮಾವಣೆಯ ಲಕ್ಷಣಗಳು ಕಂಡು ಬರಲಿಲ್ಲ. +ಅಯೋಧ್ಯೆ ಭದ್ರವಾಗಿತ್ತು. ಶಾಂತಿ ಸುವ್ಯವಸ್ಥೆ ನೆಲೆಗೊಂಡಿತ್ತು. ಭರ ಭರಾಟಿಯೊಂದಿಗೆ ಶಸ್ತ್ರಾಸ್ತ್ರಗಳ ಸಂಗ್ರಹಣೆ, ಗುಪ್ತ ಸೈನ್ಯಜಮಾವಣೆಯ ಭರ ಭರಾಟಿಯೂ ನಡೆದಿತ್ತು. +ಮಹಾರಾಣಿಯ ಅಳುಕು ಮರೆಯಾಗಲಿಲ್ಲ. ದೇಶ ವಿದೇಶಗಳ ಚಿಂತೆಯಲ್ಲದೆ ಕೌಟುಂಬಿಕ ಚಿಂತೆಯೂ ಮಹಾರಾಣಿಯ ಮನಸ್ಸಿನಲ್ಲಿ ತಾಂಡವವಡುತ್ತಿತ್ತು. +ಹೊರಗೆಲ್ಲ ಶಾಂತಿ ನೆಲೆಸಿರುವಾಗ ಅಯೋಧ್ಯೆಯ ಒಂದು ಹೃದಯ ಮಾತ್ರ ಪರಿತಪಿಸುತ್ತಿತ್ತು. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಶ್ರೀಶ ಕಾರಾಂತ್ +ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ಅಧ್ಯಾಯ ೧೧ – ೧- ಇಷ್ಟು ದಿನವಾದರೂ ಕಮಲುವಿನ ಹೊಟ್ಟೆಯಲ್ಲಿ ಮಕ್ಕಳಾಗಲಿಲ್ಲ. ತಾನು ಸಾಕಿ ಬೆಳೆಸಿದ ಮೊಮ್ಮಗನಿಂದ ವಂಶ ಬೆಳೆಯದ್ದನ್ನು ಕಂಡ ಅಕ್ಕಮ್ಮ ಕೊರಗುತ್ತಿದ್ದಳು. ಮಕ್ಕಳಿಲ್ಲದಿದ್ದರೆ ಬೇಡ, ಇವಳು ತನ್ನ ಗಂಡ ಮತ್ತು ಅಜ್ಜಿಯನ್ನೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_700.txt b/Kannada Sahitya/article_700.txt new file mode 100644 index 0000000000000000000000000000000000000000..d1e2a87b6a946b8c15c92e0809ea0b266559f699 --- /dev/null +++ b/Kannada Sahitya/article_700.txt @@ -0,0 +1,166 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ ಹೆಂಡತಿಗೆ ಈ ವಿಷಯವನ್ನು ತಿಳಿಸಲೆಂದು ಆತುರದಿಂದ ಅವಳ ತೌವರಿಗೆ ಓಡಿದ್ದ. ಇನ್ನೊಬ್ಬ ಯುವಕ ಡಾಕ್ಟರನ್ನು ಕರೆದುಕೊಂಡು ಬರಲೆಂದು ಪೇಟೆಗೆ ಹೋಗಿದ್ದ. ಗರುಡಾಚಾರ್ಯನಿಗೆ ಇದರಿಂದ ಭೀತಿಯಾಯಿತು. ಮಠದಲ್ಲಿ ಗುಂಡಾಚಾರ್ಯ ಜ್ವರ ಬಂದು ಮಲಗಿದ; ಕೆಮರದಲ್ಲಿ ದಾಸಾಚಾರ್ಯ ಮಲಗಿದ; ಇಲ್ಲಿ ನೋಡಿದರೆ ಪದ್ಮನಾಭಾಚಾರ್ಯನ ನಾಲಗೆ ಬಿದ್ದುಹೋಗಿದೆ-ಅಗ್ರಹಾರಕ್ಕೆ ಏನೋ ಗಂಡಾಂತರ ಒದಗಿದೆ ಎಂಬುದು ನಿರ್ವಿವಾದ. ನಾರಣಪ್ಪನ ಶವಸಂಸ್ಕಾರಕ್ಕೆ ಅಡ್ಡಿ ಬಂದ ಗರುಡಾಚಾರ್ಯನನ್ನು ಎಲ್ಲರ ಎದಿರು ಲಕ್ಷ್ಮಣಾಚಾರ್ಯ ಹಳಿದ. ಆದರೆ ಎಲ್ಲರೂ ಇದು ಬೆದಾಡುವ ಕಾಲವಲ್ಲ, ತ್ವರೆಯಾಗಿ ಹೋಗಿ ಅವನ ಸಂಸ್ಕಾರ ಮುಗಿಸಿ ದೇವರಿಗೆ ತಪ್ಪುಕಾಣಿಕೆ ಕಟ್ಟಿ ಎಂದು ಬೋಧಿಸಿದರು. ಮನಸ್ಸಿಲ್ಲದ ಮನಸ್ಸಿನಿಂದ ಪದ್ಮನಾಭಾಚಾರ್ಯನನ್ನು ಅಲ್ಲೆ ಬಿಟ್ಟು ಹೊರಟದ್ದಾಯಿತು. ಆದರೆ ಹೊರಡುವ ಮುಂಚೆ ಗರುಡಾಚಾರ್ಯ ಅಗ್ರಹಾರದವರಿಗೆ ಕೆಮುಗಿದು, ’ದಯಮಾಡಿ ಬಂದ ಡಾಕ್ಟರನ್ನು ಮಠಕ್ಕೆ ಕರೆದುಕೊಂಡು ಹೋಗಿ ಗುಂಡಾಚಾರ್ಯನಿಗೂ ಅಷ್ಟು ಮದ್ದು ಕೊಡಿಸಿಬಿಡಿ’ ಎಂದು ಪ್ರಾರ್ಥಿಸಿದ. ದಾರಿಯಲ್ಲೊಬ್ಬನಿಗೂ ಮಾತಾಡುವ ಧೆರ್ಯವಿಲ್ಲ. ಮಂಕು ಕವಿದುಬಿಟ್ಟಿತು. ಗರುಡಾಚಾರ್ಯ ಮನಸ್ಸಿನಲ್ಲೇ ಮಾರುತಿಗೆ ತಪ್ಪುಕಾಣಿಕೆ ಕಟ್ಟುತ್ತೇನೆ, ಮನ್ನಿಸಿಬಿಡು ಎಂದು ಪ್ರಾರ್ಥಿಸಿದ. ಹೀಗೆ ಭಾರವಾದ ಮನಸ್ಸಿನಿಂದ ನಡೆದು ನಡೆದು ಕೆಮರಕ್ಕೆ ಬಂದು ನೋಡಿದರೆ-ಏನು ನೋಡುವುದು? ದಾಸಾಚಾರ್ಯನ ಬೂದಿ, ಪ್ರಾಣೇಶಾಚಾರ್ಯರ ಹೆಂಡತಿ ತೀರಿಕೊಂಡ ಸುದ್ದಿ. ಬ್ರಾಹ್ಮಣರಿಗೆಲ್ಲ ಇದರಿಂದ ದಿಗ್ಭ್ರಮೆಯಾಗಿ ಬಿಟ್ಟಿತು. ತಾವು ತಿಳಿದಿದ್ದ ಲೋಕ ಅಸ್ತವ್ಯಸ್ತವಾಗಿಬಿಟ್ಟಿತು. ಕತ್ತಲಿನಲ್ಲೊಂದು ಭೂತದ ದರ್ಶನವಾದಂತಾಯಿತು. ಮಕ್ಕಳ ಹಾಗೆ ಗೋಡೆಗೊರಗಿ ಕಣ್ಣೀರು ತುಂಬಿ ಕೂತುಬಿಟ್ಟರು. ಹಿರಿಯರಾದ ಸುಬ್ಬಣ್ಣಾಚಾರ್ಯರು ಸಮಾಧಾನ ಹೇಳಿದರು, ಧೆರ್ಯ ಹೇಳಿದರು. ಬಹಳ ಹೊತ್ತು ಮಂಕಾಗಿ ಕೂತಿದ್ದು, ಗರುಡಾಚಾರ್ಯ ಕ್ಷೀಣವಾದ ಧ್ವನಿಯಲ್ಲಿ ಕೇಳಿದ : ನಮ್ಮ ಅಗ್ರಹಾರದಲ್ಲಿ ಇನ್ನೂ ಇಲಿಗಳು ಬೀಳುತ್ತಿವೆಯೆ? ಸುಬ್ಬಣ್ಣಾಚಾರ್ಯರು ’ನಿಮ್ಮ ಅರ್ಥ ಏನು?’ ಎಂದರು. ’ಏನಿಲ್ಲ, ಹದ್ದುಗಳು ಮನೆಯ ಮೇಲೆ ಕೂತಿದ್ದಾವೆ’ ಎಂದ ಗರುಡಾಚಾರ್ಯ. ’ಸಂಸ್ಕಾರ ಮಾಡಿ ಮುಗಿಸಿ ಎಲ್ಲ ಮಂಗಳವಾಗುತ್ತದೆ’ ಎಂದರು ಸುಬ್ಬಣ್ಣಾಚಾರ್ಯ. ’ನಾನು ಅಗ್ರಹಾರಕ್ಕೆ ಹೋಗುವುದಿಲ್ಲ’ ಎಂದ ಗರುಡಾಚಾರ್ಯ. ಉಳಿದ ಬ್ರಾಹ್ಮಣರೂ ಪಿಸುಗುಟ್ಟಿದರು: ’ಆ ಕೊಳೆತ ಹೆಣದ ಸಂಸ್ಕಾರ ಮಾಡೋದು ಹೇಗೆ, ನಾಲ್ಕು ಗಾಡಿ ಸೌದೆಗೂ ಅದನ್ನು ಸುಡುವುದು ಶಕ್ಯವಿಲ್ಲ.’ ಲಕ್ಷ್ಮಣಾಚಾರ್ಯ ’ಏಳಿ’ ಎಂದ. ಗರುಡಾಚಾರ್ಯ ’ನನಗೆ ಸುಸ್ತಾಗಿದೆ-ನೀವೇ ಯಾರಾದರೂ ಮಾಡಿರಿ’ ಎಂದ. ’ವ್ಯವಹಾರಜ್ಞರಾದ ನೀವೇ ಹೀಗೆ ಭಯದಿಂದ ಮಂಕಾಗಿಬಿಟ್ಟರೆ ಉಳಿದವರ ಗತಿ ಏನು’ ಎಂದರು ಸುಬ್ಬಣ್ಣಾಚಾರ್ಯ. ’ನನಗೆ ಕೂಡಲ್ಲ’ ಎಂದ ಗರುಡಾಚಾರ್ಯ. ’ಏಳಿ ಏಳಿ’ ಎಂದ ಲಕ್ಷ್ಮಣಾಚಾರ್ಯ; ’ಅಗ್ರಹಾರದಲ್ಲಿ ಯಾರೂ ಇಲ್ಲ, ದನಕರುಗಳ ಗತಿ ಏನು, ಅವನ್ನು ಕೊಟ್ಟಿಗೆಯಲ್ಲಿ ಕಟ್ಟುವವರಿಲ್ಲ, ಹಾಲು ಕರೆಸುವವರಿಲ್ಲ’ ಎಂದು ಬೇಡಿದ. ’ಹೌದು ಹೌದು ಹೌದು’ ಎಂದರು ಉಳಿದ ಬ್ರಾಹ್ಮಣರು. ’ಹರಿಹರಿ’ ಎನ್ನುತ್ತ ಹೊರಟರು. ದಾರಿಯುದ್ದಕ್ಕೂ ರಾಘವೇಂದ್ರಸ್ತೋತ್ರ ಮಾಡುತ್ತ ನಡೆದರು. +* * * +ಪಂಜುರ್ಲಿಗೆ ಕೋಳಿ ಬಲಿಕೊಟ್ಟು ಮುಂದಿನ ಅಮಾಸೆ ಕುರಿ ಕೊಡುತ್ತೇವೆಂದು ಹರಕೆ ಹೇಳಿಕೊಂಡರೂ, ಬೆಳ್ಳಿಯ ಅಪ್ಪ ಅವ್ವ ಪ್ರಾಣೇಶಾಚಾರ್ಯರ ಹೆಂಡತಿ ತೀರಿದ ರಾತ್ರಿಯೇ ಪ್ರಾಣಬಿಟ್ಟವು. ಬೆಳ್ಳಿ ಕೂಗಿಕೊಂಡದ್ದು ಕೇಳಿ ಅಕ್ಕಪಕ್ಕದ ಹೊಲೆಯರೆಲ್ಲ ಕೂಡಿದರು. ಕತ್ತಲಲ್ಲಿ ಕಪ್ಪು ನಗ್ನದೇಹಗಳು ಅವಾಕ್ಕಾಗಿ ಗುಡಿಯ ಸುತ್ತ ಕೂತು ಅರ್ಧಗಂಟೆ ಅತ್ತವು. ನಂತರ ಸೋಗೆಯ ಗುಡಿಗೆ ಬೆಂಕಿ ಕೊಟ್ಟಿದ್ದಾಯಿತು. ಕ್ಷಣದಲ್ಲಿ ಬೆಂಕಿ ಹತ್ತಿ ಉರಿದು ಹೊಲೆಯ ಹೊಲತಿಯರನ್ನು ನೆಕ್ಕತೊಡಗಿತು. ಭೀತಳಾಗಿ ನಿಂತಿದ್ದ ಬೆಳ್ಳಿ ದಿಕ್ಕುದಿವಾಣಿ ಲೆಕ್ಕೆಸದೆ ಪಾಳ್ಯವನ್ನು ಬಿಟ್ಟು, ಇಲಿಗಳ ಹಾಗೆ ಕತ್ತಲಲ್ಲಿ ಓಡಿಬಿಟ್ಟಳು. +* * * +ಮಾಲೇರರ ಪುಟ್ಟ ಪ್ರಾರಬ್ಧದಂತೆ ಬೆನ್ನು ಹತ್ತಿಬಿಟ್ಟಿದ್ದ. ನಿಂತರೆ ನಿಲ್ಲುವ; ಕೂತರೆ ಕೂರುವ; ಜೋರು ನಡೆದರೆ ಜೋರಾಗಿ, ನಿಧಾನ ನಡೆದರೆ ನಿಧಾನವಾಗಿ-ಅಂತೂ ಬೆನ್ನು ಬಿಡ. ಪ್ರಾಣೇಶಾಚಾರ್ಯರಿಗೆ ಅತ್ಯಂತ ಕಸಿವಿಸಿಯಾಗತೊಡಗಿತು. ಈಗಷ್ಟು ಹೊತ್ತು ಕಣ್ಣು ಮುಚ್ಚಿ ಕೂತು ತನ್ನ ಪಾಡಿನ ಬಗ್ಗೆ ಚಿಂತಿಸಬೇಕೆಂದರೆ ಈ ಪುಟ್ಟ ಹಡೆಯ ಹಾಗೆ ವಟವಟ ಎನ್ನುತ್ತಿದ್ದಾನೆ. ತಾನು ಆಸ್ಪದ ಕೊಡದಿದ್ದರೂ ತನ್ನ ಸಖ್ಯಕ್ಕಾಗಿ ಆತುಬಿದ್ದಿದ್ದಾನೆ. ತಾನು ವೇದಾಂತಶಿರೋಮಣಿ ಪ್ರಾಣೇಶಾಚಾರ್ಯನೆಂದು ಗೊತ್ತಿಲ್ಲದಿರುವುದರಿಂದ ಸಾಮಾನ್ಯ ಹಾರುವನೊಬ್ಬನ ಜೊತೆ, ಸಂಭಾವನೆಗೆ ಹೊರಟ ಬಡಬ್ರಾಹ್ಮಣನ ಜೊತೆ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳುತ್ತಿದ್ದಾನೆ. ಮೆಟ್ಟಿಲ್ಲದೆ ಇಷ್ಟು ದೂರ ನಡೆಯುವುದು ಸರಿಯಲ್ಲವೆಂದು ಬುದ್ಧಿ ಹೇಳಿದ. ಮೂರು ರೂಪಾಯಿಗೆ ತೀರ್ಥಹಳ್ಳಿಯಲ್ಲಿ ಕೆಯಲ್ಲಿ ಹೊಲಿದ ಜೋಡು ಸಿಗುತ್ತದೆ ಎಂದು ಹೇಳಿದ. ಸುಖ ಮುಖ್ಯವೋ ದುಡ್ಡು ಮುಖ್ಯವೋ ಎಂದು ಬೋಧಿಸಿದ. ನನ್ನ ಜೋಡು ನೋಡಿ. ವರ್ಷವಾಯಿತು, ಸವೆದೇ ಇಲ್ಲ ಎಂದು ಬಿಚ್ಚಿ ತೋರಿಸಿದ. ’ನನಗೆ ಮಾತು ಬೇಕು’ ಎಂದ. ’ಎಲ್ಲಿ ಒಂದು ಒಗಟು ಬಿಡಿಸಿರಿ ನೋಡುವ’ ಎಂದ. ಏರಿ ಬಂದ ಕೋಪವನ್ನು ಹಿಡಿದುಕೊಂಡು ಸುಮ್ಮನಾದರು ಪ್ರಾಣೇಶಾಚಾರ್ಯರು. ’ಒಂದು ನದಿ, ಒಂದು ದೋಣಿ, ಒಬ್ಬ ಮನುಷ್ಯ. ಅವನ ಜೊತೆಗೆ ಒಂದು ಕಟ್ಟು ಹುಲ್ಲು, ಒಂದು ಹುಲಿ, ಒಂದು ದನ. ಒಂದೊಂದನ್ನಾಗಿ ದೋಣಿಯಲ್ಲಿ ದಾಟಿಸಬೇಕು. ಹಸು ಹುಲ್ಲನ್ನು ತಿನ್ನದಂತೆ ನೋಡಿಕೋಬೇಕು. ಹುಲಿ ಹಸುವನ್ನು ತಿನ್ನದಂತೆ ನೋಡಿಕೋಬೇಕು. ಹೀಗೆ ಈ ದಡದಿಂದ ಆ ದಡಕ್ಕೆ ಮೂರನ್ನೂ ಸಾಗಿಸಬೇಕು. ನಿಮ್ಮ ಬುದ್ಧಿ ಎಷ್ಟು ಚುರುಕು ನೋಡುವ’-ಎಂದು ಒಗಟನ್ನು ಹೇಳಿಬಿಟ್ಟು ಪರಮಾನಂದದಿಂದ ಬೀಡಿ ಹತ್ತಿಸಿದ. ಎಷ್ಟು ಸಿಟ್ಟು ಬಂದಿದ್ದರೂ ಪ್ರಾಣೇಶಾಚಾರ್ಯರಿಗೆ ಒಗಟು ಮನಸ್ಸನ್ನು ಕಾಡತೊಡಗಿತು. ’ಹೊಳೆಯಲಿಲ್ಲವೇ? ಹೊಳೆಯಲಿಲ್ಲವೇ?’ ಎಂದು ಪುಟ್ಟ ರೇಗಿಸುತ್ತ ನಡೆದ. ಪ್ರಾಣೇಶಾಚಾರ್ಯರಿಗೆ ಉತ್ತರ ಹೊಳೆಯಿತು. ಆದರೆ ಹೇಳಲು ಬಿಗುಮಾನ. ಒಗಟನ್ನು ಬಿಡಿಸಿದರೆ ಪುಟ್ಟನಿಗೆ ಸ್ನೇಹಹಸ್ತವನ್ನು ಕೊಟ್ಟಂತೆ. ಬಿಡಿಸದಿದ್ದರೆ ತನ್ನನ್ನು ಅವ ಪೆದ್ದನೆಂದು ತಿಳಿಯುತ್ತಾನೆ. ಈಗ ತಾನೇನು ನಿಶ್ಚಯ ಮಾಡಬೇಕೆಂದು ಸಂದಿಗ್ಧಕ್ಕಿಟ್ಟುಕೊಂಡಿತು. ಅವನ ಕಣ್ಣಿನಲ್ಲಿ ಪೆದ್ದನಾಗಿ ಒಂದು ದಡ್ಡ ಪದಾರ್ಥವಾಗಿ ಬಿಡುವ ತೀರ್ಮಾನ ಮಾಡಿಬಿಡಲೇ ಎಂದು ಯೋಚಿಸಿದರು. ’ಹೊಳೆಯಿತೆ?’ ಎಂದ ಪುಟ್ಟ ಬೀಡಿಯನ್ನೆಳೆಯುತ್ತ. ಮಾತನ್ನಾಡಲು ಇಷ್ಟವಾಗದೆ ಪ್ರಾಣೇಶಾಚಾರ್ಯ ಇಲ್ಲವೆಂಬಂತೆ ತಲೆಯಾಡಿಸಿದರು. ’ಹೋ ಹೋ ಹೋ’ ಎಂದು ಪುಟ್ಟ ಬಿದ್ದು ಬಿದ್ದು ನಕ್ಕು ಒಗಟನ್ನು ಬಿಡಿಸಿದ. ಅವನಿಗೆ ಇದರಿಂದಾಗಿ ಪೆದ್ದ ಬ್ರಾಹ್ಮಣನ ಬಗ್ಗೆ ವಿಪರೀತ ಆದರ ಹುಟ್ಟಿತು. ’ಇನ್ನೊಂದು ಒಗಟು’ ಎಂದ. ಬೇಡ ಎಂದರು ಪ್ರಾಣೇಶಾಚಾರ್ಯ. ’ಹೋಗಲಿ, ನೀವೇ ಒಂದು ಹೇಳಿಬಿಡಿ, ನನ್ನನ್ನು ಸೋಲಿಸಿಬಿಡಿ, ಮುಯ್ಯಿ’ ಎಂದ. ’ನನಗೆ ಗೊತ್ತಿಲ್ಲ’ ಎಂದರು ಪ್ರಾಣೇಶಾಚಾರ್ಯ. ’ಪಾಪ’ ಎನ್ನಿಸಿತು ಪುಟ್ಟನಿಗೆ. ಇನ್ನಷ್ಟು ದೂರ ಏನು ಮಾತಾಡುವುದೆಂದು ತಿಳಿಯದೆ ಪುಟ್ಟನಿಗೆ ನಾಲಗೆ ಕಡಿತವಾಗಹತ್ತಿತು. ’ಆಚಾರ್ಯರೆ, ನಿಮಗೆ ಗೊತ್ತ? ಕುಂದಾಪುರದ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಶ್ಯಾಮ ಪಾಪ ತೀರಿಕೊಂಡನಂತೆ’ ಎಂದು ಹೊಸದೊಂದು ಸಂಗತಿ ಪ್ರಾರಂಭಿಸಿದ. ’ಛೆ ಪಾಪ. ತಿಳಿಯದು’ ಎಂದರು ಪ್ರಾಣೇಶಾಚಾರ್ಯ. ’ಹಾಗಾದರೆ ನೀವು ಊರುಬಿಟ್ಟು ಬಹಳ ಸಮಯವಾಗಿರಬೇಕು’ ಎಂದ ಪುಟ್ಟ. ಎದಿರು ಕವಲೊಡೆದ ದಾರಿಯನ್ನು ಕಂಡು ಪ್ರಾಣೇಶಾಚಾರ್ಯರಿಗೆ ಹರ್ಷವಾಯಿತು. ’ನಿಮ್ಮ ಪ್ರಯಾಣ ಯಾವ ಮುಖವಾಗಿ’ ಎಂದು ನಿಂತು ಪುಟ್ಟನನ್ನು ಕೇಳಿದರು. ಈ ಮುಖವಾಗಿ ಎಂದು ಅವನು ಒಂದು ದಾರಿ ತೋರಿಸಿದ. ’ನನ್ನದು ಈ ದಾರಿ’ ಎಂದು ಇನ್ನೊಂದು ಕಾಲುದಾರಿಯನ್ನು ತೋರಿಸಿದರು. ’ಎರಡೂ ಮೇಳಿಗೆಗೇ ಹೋಗುವುದು, ಸ್ವಲ್ಪ ಬಳಸು ಅಷ್ಟೇ- ನನಗೇನೂ ಅವಸರವಿಲ್ಲ… ನಿಮ್ಮ ಜೊತೆಯೇ ಬಂದುಬಿಡುವೆ’ ಎಂದುಬಿಟ್ಟ. ಚೀಲದಿಂದ ಕಾಯಿ ಬೆಲ್ಲವನ್ನು ತೆಗೆದು ತಿನ್ನಿರಿ ಎಂದು ಕೊಟ್ಟು, ತಾನು ತಿನ್ನಲು ಪ್ರಾರಂಭಿಸಿದ. ಪ್ರಾಣೇಶಾಚಾರ್ಯರಿಗೆ ಹಸಿವಾದ್ದರಿಂದ ಪುಟ್ಟನ ಬಗ್ಗೆ ಕೃತಜ್ಞರಾದರು. ಎಲ್ಲಿ ಹೋದರೂ, ಏನಾದರೂ ಮನುಷ್ಯಸಂಗ ಪ್ರಾರಬ್ಧದಂತೆ ಬೆನ್ನು ಹತ್ತಿದ್ದು ಎನ್ನಿಸಿತು. +ಪುಟ್ಟ ಕಾಯಿ ಬೆಲ್ಲವನ್ನು ತಿನ್ನುತ್ತ ಇನ್ನಷ್ಟು ಆಪ್ತವಾಗಿ ಮಾತಾಡತೊಡಗಿದ. “ನಿಮಗೆ ಮದುವೆಯಾಗಿರಬೇಕಲ್ಲವೆ? ಆಗದೆ ಇರುತ್ತದ? ನಾನೊಬ್ಬ ಪೆಕ್ರನ ಹಾಗೆ ಕೇಳುತ್ತಿದ್ದೇನೆ. ಎಷ್ಟು ಮಕ್ಕಳೋ? ಮಕ್ಕಳೇ ಇಲ್ಲವೆ? ಪಾಪ. ನನಗೆ ಎರಡು ಮಕ್ಕಳು. ಎರಡೂ ಗಂಡು, ನಮ್ಮವಳನ್ನು ಕುಂದಾಪುರದಿಂದ ತಂದದ್ದು ಎಂದು ಹೇಳಿದೆ ಅಲ್ಲವೆ? ಒಂದು ವಿಷಯ ನೋಡಿ-ನಗಬೇಕೋ, ಅಳಬೇಕೋ ನನಗೆ ತಿಳಿಯದು. ಅವಳಿಗೆ ಅಪ್ಪ ಅಮ್ಮನೆಂದರೆ ಪ್ರಾಣ. ತಿಂಗಳಿಗೆ ತಪ್ಪಿದರೆ ಎರಡು ತಿಂಗಳಿಗೆ ತೌರಿಗೆ ಹೋಗಬೇಕೆಂದು ಹಟ ಹಿಡಿಯುತ್ತಾಳೆ. ಬಸ್ಸಿನ ಖರ್ಚು ಎರಡು ರೂಪಾಯಿ ಕೊಟ್ಟು ಈ ಕಾಲದಲ್ಲಿ ಯಾರಿಗೆ ಕಳಿಸಲು ಸಾಧ್ಯ ಹೇಳಿ. ಹೇಳಿದರೆ ಕೇಳುವುದೇ ಇಲ್ಲ. ಎರಡು ಮಕ್ಕಳಾದರೂ ಬುದ್ಧಿಯೇ ಬಂದಿಲ್ಲ. ತುಂಬ ಎಳಸು, ಪ್ರಾಯವೂ ಕಮ್ಮಿ ಎನ್ನಿ. ನಮ್ಮ ಅತ್ತೆ ಸ್ವಲ್ಪ ಕಟಿಪಿಟಿಯ ಹೆಂಗಸು, ಆದರೆ ಮಾವನವರ ಬುದ್ಧಿ ದೊಡ್ಡದು. ಎಷ್ಟೆಂದರೂ ವ್ಯವಹಾರ ಬಲ್ಲವರು ಅವರು. ನಮ್ಮ ಅತ್ತೆ ಅಂದದ್ದುಂಟು-ನನ್ನ ಮಗಳಿಗೆ ಏಟು ಕೊಡಲು ಅಳಿಯನಿಗೇನು ಹಕ್ಕು ಅಂತ. ಆದರೆ ಮಾವನವರ ಬಾಯಿಂದ ಒಂದು ದಿನ ಅಂಥ ಮಾತು ಬಂದಿಲ್ಲ. ಏಟು ಹೊಡೆದರೂ ಇವಳಿಗೆ ಬುದ್ಧಿ ಬಂದಿಲ್ಲ. ತೌರಿಗೆ ಕಳಿಸದಿದ್ದರೆ ಬಾವಿಗೆ ಹಾರಿಕೊಳ್ಳುತ್ತೇನೆಂತ ಹೆದರಿಸುತ್ತಾಳೆ. ಏನು ಮಾಡಬೇಕೋ ತಿಳಿಯದು. ಇದೊಂದು ಕೆಟ್ಟಚಾಳಿ ಬಿಟ್ಟರೆ ಉಳಿದ್ದದ್ದರಲ್ಲೆಲ್ಲ ಅವಳದ್ದು ಬಲುವೆನ. ಒಂದು ಅಡಿಗೆ ಮಾಡಲಿ, ಪಾತ್ರೆ ತೊಳೆಯಲಿ, ಎಲ್ಲದರಲ್ಲೂ ಬಲು ಅಚ್ಚುಕಟ್ಟು. ಇದೊಂದು ಬಿಟ್ಟರೆ. ನೀವೇನು ಹೇಳುತ್ತೀರಿ ಇದಕ್ಕೆ…” +ಪ್ರಾಣೇಶಾಚಾರ್ಯರು ಉತ್ತರ ಹೊಳೆಯದೆ ನಕ್ಕರು. ಪುಟ್ಟನೂ ನಕ್ಕ. “ಹೆಂಗಸಾ ಮರ್ಜಿ ತಿಳಿಯೋದು; ನೀರಿನಲ್ಲಿ ಮೀನಿನ ದಾರಿ ಅರಿಯೋದು ಒಂದೇ – ಅಂತ ಅದಕ್ಕೆ ಹಿರಿಯರು ಹೇಳೋದು ಅಲ್ಲವೆ?” ಎಂದ. +“ನಿಜ, ನಿಜ” ಎಂದರು ಪ್ರಾಣೇಶಾಚಾರ್ಯರು. +ಅಂತೂ ಪುಟ್ಟನ ಮಾತು ಸ್ವಲ್ಪ ಕಾಲ ನಿಂತಿತು. ತನ್ನ ಹೆಂಡತಿಯ ಮರ್ಜಿಯನ್ನವನು ಶಬ್ದಾತೀತ ಪ್ರಪಂಚದಲ್ಲಿ ಹುಡುಕುತ್ತಿರಬೇಕು ಎನ್ನಿಸಿತು ಆಚಾರ್ಯರಿಗೆ. ಈಗ ತನ್ನ ಒಗಟು ಇದು. ಇದನ್ನು ನಾನು ಮೊದಲು ಕೂಲಂಕಷವಾಗಿ ನೋಡಲಿಲ್ಲ. ನನ್ನ ಬಾಳಿನ ತೀರ್ಮಾನದ ಗಳಿಗೆ-ನಾರಣಪ್ಪನ ಜೊತೆ, ಮಹಾಬಲನ ಜೊತೆ, ನನ್ನ ಹೆಂಡತಿ ಜೊತೆ, ಅಗ್ರಹಾರದ ಉಳಿದ ಬ್ರಾಹ್ಮಣರ ಜೊತೆ, ಒಟ್ಟು ನಾನು ಆತಿದ್ದ ಧರ್ಮದ ಜೊತೆ-ನನ್ನ ಸಂಬಂಧಸರ್ವಸ್ವವೂ ತೀರ್ಮಾನವಾಗಬೇಕಾಗಿದ್ದ ಗಳಿಗೆ ನಿರಪೇಕ್ಷಿತವಾಗಿ ಉದ್ಭವವಾದ ಆ ಕಾಡಿನ ಕತ್ತಲಿನಲ್ಲಿ, ನಾನು ಥಟ್ಟನೆ ತಿರುಗಿಬಿಟ್ಟೆ. ಅದರ ಪರಿಣಾಮ ನನ್ನ ಮಾತ್ರಕ್ಕೆ ಹೇಗೋ ಹಾಗೆ ಅಗ್ರಹಾರಕ್ಕೂ ಅಗಾಧವಾಗಿಬಿಟ್ಟಿತು. ಅಂದರೆ ನನ್ನ ನಿಶ್ಚಯದ ಪ್ರಶ್ನೆ ಬರಿ ನನ್ನ ನಿಶ್ಚಯದ ಪ್ರಶ್ನೆಯಲ್ಲ-ನನ್ನ ಅಗ್ರಹಾರವನ್ನೂ ಒಳಪಡಿಸಿಬಿಟ್ಟ ಪ್ರಶ್ನೆ. ಇದೆ ಸಂದಿಗ್ಧದ, ಆತಂಕದ, ಧರ್ಮಸಂಕಟದ ಮೂಲ. ನಾರಣಪ್ಪನ ಶವಸಂಸ್ಕಾರದ ಪ್ರಶ್ನೆ ಬಂದಾಗ ನಾನು ನನ್ನ ವೆಯಕ್ತಿಕ ದೃಷ್ಟಿಯಿಂದ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಿಲ್ಲ. ಧರ್ಮಶಾಸ್ತ್ರಕ್ಕೆ ದೇವರಿಗೆ ಗಂಟುಬಿದ್ದೆ. ಧರ್ಮಶಾಸ್ತ್ರವನ್ನು ನಾವು ಸೃಷ್ಟಿಸಿರಲೂ ಇದೇ ಕಾರಣ ತಾನೇ? ನಮ್ಮ ವೆಯಕ್ತಿಕ ನಿಶ್ಚಯಗಳಿಗೂ ಸಮಾಜಕ್ಕೂ ಇಷ್ಟೊಂದು ಗಾಢವಾದ ಸಂಬಂಧವಿರುವುದರಿಂದ ತಾನೇ? ಕಾರಣ-ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ನಾವು ಪಿತೃಗಳನ್ನು, ಗುರುಗಳನ್ನು, ದೆವವನ್ನು, ಮಾನವ ಕುಟುಂಬವನ್ನು ಒಳಮಾಡುತ್ತೇವೆ. ಆ ಕಾರಣದಿಂದ ಧರ್ಮಸಂಕಟ. ಆದರೆ ಚಂದ್ರಿಯ ಜೊತೆ ನಾನು ಮಲಗಿಬಿಟ್ಟಾಗ ಈ ಧರ್ಮಸಂಕಟದ ಅನುಭವವಾಯಿತೆ? ಅದು ಅಳೆದು ಹೊಯ್ದು ತೂಗಿ ಮಾಡಿದ ನಿಶ್ಚಯವಾಗಿತ್ತೇ? ಈಗ ಅದು ಅತ್ಯಂತ ಮಸುಕುಮಸುಕಾಗಿ ಅಸ್ಪಷ್ಟವಾಗಿಬಿಟ್ಟಿದೆ. ಆ ನಿಶ್ಚಯ ಅಥವಾ ಆ ಕ್ರಿಯೆ ನನ್ನನ್ನು ನನ್ನ ಭೂತಲೋಕದಿಂದ, ಬ್ರಾಹ್ಮಣರ ಲೋಕದಿಂದ, ಹೆಂಡತಿಯ ಬಾಳಿನಿಂದ, ನನ್ನ ನಂಬಿಕೆಗಳಿಂದ ಕೊರೆದು ತೆಗೆದುಬಿಟ್ಟಿತು. ಪರಿಣಾಮ ಈಗ ನಾನೊಂದು ಗಾಳಿಯಲ್ಲಿ ತಂತುವಾಗಿ ಮಿಡಿಯುತ್ತಿರುವುದು. +ಇದರಿಂದ ಬಿಡುಗಡೆ? ಬಿಡುಗಡೆ? +“ಆಚಾರ್ಯರೇ” ಎಂದ ಪುಟ್ಟ. +“ಏನಪ್ಪ” +“ಇನ್ನಷ್ಟು ಕಾಯಿಬೆಲ್ಲ ಬೇಕ?” +“ಕೊಡು” ಎಂದರು ಪ್ರಾಣೇಶಾಚಾರ್ಯರು. ಪುಟ್ಟ ಕಾಯಿಬೆಲ್ಲವನ್ನು ಕೊಟ್ಟು “ಇಲ್ಲದಿದ್ದರೆ ದಾರಿ ಕಳೆಯೋದು ಕಷ್ಟ ಅಲ್ಲವೆ? ಮನಸ್ಸಿಗೆ ಬೇಜಾರಾಗುತ್ತಿದ್ದರೆ ಇನ್ನೊಂದು ಒಗಟು ಹೇಳುತ್ತೇನೆ ಬಿಡಿಸಿ. ’ಆಡುತ್ತೆ, ಓಡುತ್ತೆ, ನಿಂತ್ಕೊಂಡು ನೋಡುತ್ತೆ’ ಏನು ಹೇಳಿ” ಎಂದು ಮತ್ತೊಂದು ಬೀಡಿ ಹತ್ತಿಸಿದ. +ಆದ್ದರಿಂದ ನನ್ನ ಆತಂಕ ಸರ್ವಸ್ವದ ಮೂಲವಿರುವುದು ಪ್ರಾಯಶಃ ಕನಸಿನಲ್ಲಿ ಎಂಬಂತೆ ನಾನು ಚಂದ್ರಿಯ ಜೊತೆ ಸಂಭೋಗ ಮಾಡಿಬಿಟ್ಟಿದ್ದರಲ್ಲಿ. ಪರಿಣಾಮ ಈಗಿನ ತ್ರಿಶಂಕು ಸ್ಥಿತಿ. ಸ್ವೇಚ್ಛೆಯಿಂದ, ಖುದ್ದಾಗಿ, ಸಂಪೂರ್ಣ ಎಚ್ಚರದಲ್ಲಿ, ಪರಿಪೂರ್ಣ ನಿಶ್ಚಯದಲ್ಲಿ ಒಂದು ಕ್ರಿಯೆಯನ್ನು ಮಾಡುವುದರ ಮೂಲಕ ಮಾತ್ರ ಇದರಿಂದ ಬಿಡುಗಡೆ. ಈಗ ನಾನು ಗಾಳಿಯಲ್ಲೊಂದು ತಂತು. ಗಾಳಿ ಕೊಟ್ಟ ಆಕಾರವನ್ನು ತಳೆಯುವ ಮೋಡ. ಬರಿಯೊಂದು ವಸ್ತುವಾಗಿಬಿಟ್ಟ ನಾನು ನಿಶ್ಚಿತ ಕ್ರಿಯೆಯ ಮೂಲಕ ಮನುಷ್ಯನಾಗುತ್ತೇನೆ. ನನ್ನ ಜೀವನಕ್ಕೆ ನಾನೇ ಜವಾಬ್ದಾರನಾಗಿ ಬಿಡುತ್ತೇನೆ. ಅಂದರೆ…ಅಂದರೆ…ಕಾಲು ಕೊಂಡಲ್ಲಿಗೆ ಹೋಗಿಬಿಡುವುದೆಂಬ ನಿರ್ಧಾರವನ್ನು ತ್ಯಜಿಸಿ ಬಸ್ಸು ಹಿಡಿದು ಕುಂದಾಪುರಕ್ಕೆ ಹೋಗಿ ಚಂದ್ರಿಯ ಜೊತೆ ಇದ್ದುಬಿಡುತ್ತೇನೆ. ಹಾಗೆ ನನ್ನ ಸಂಕಟವನ್ನೆಲ್ಲ ಕೊನೆ ಮಾಡಿಬಿಡುತ್ತೇನೆ. ಪೂರ್ಣ ಎಚ್ಚರದಲ್ಲಿ ನನ್ನನ್ನು ನಾನು ಪುನಃ ಸೃಷ್ಟಿಸಿಕೊಳ್ಳುತ್ತೇನೆ… +“ಹೊಳೆಯಿತೇ?” ಎಂದ ಪುಟ್ಟ ನಗುತ್ತ. +“ಆಡುವುದು ಮೀನು, ಓಡುವುದು ನೀರು, ನಿಂತುಕೊಂಡು ನೋಡುವುದು ಕಲ್ಲು” ಎಂದರು ಪ್ರಾಣೇಶಾಚಾರ್ಯರು. +“ವ್ಹಾರೆವಾ ಭೇ. ಗೆದ್ದಿರಿ. ನಮ್ಮೂರಿನಲ್ಲಿ ನನ್ನನ್ನು ಏನೆಂದು ಕರೀತಾರೆ ಗೊತ್ತೇ? ಒಗಟಿನ ಪುಟ್ಟ ಅಂತ. ನಾನು ಭಾರೀ ಸರಕು ಇಟ್ಟಿದ್ದೇನೆ. ಒಂದು ನೂರು ಮೆಲಿ ನನ್ನ ಜೊತೆ ನಡೆಯಿರಿ ಬೇಕಾದರೆ, ಮೆಲಿಗೊಂದರಂತೆ ಒಗಟನ್ನು ಹಾಕುತ್ತ ಹೋಗುತ್ತೇನೆ” ಎಂದು ಪುಟ್ಟ ಬೀಡಿಯನ್ನು ಎಸೆದ. +* * * +ಬಿಸಿಲಿನಲ್ಲಿ ನಡೆದು ದೂರ್ವಾಸಪುರವನ್ನು ಗರುಡ, ಲಕ್ಷ್ಮಣ ಇತ್ಯಾದಿ ಬ್ರಾಹ್ಮಣರು ಮುಟ್ಟುವಾಗ ಬಿಸಿಲು ಇಳಿಮುಖವಾಗಿತ್ತು. ಹೆದರುತ್ತ ಅಗ್ರಹಾರಕ್ಕೆ ಕಾಲಿಟ್ಟೊಡನೆ ಮನೆಗಳ ಮೇಲೆ ಹದ್ದುಗಳಿಲ್ಲದಿರುವುದನ್ನು ಕಂಡು ಅವರಿಗಿಷ್ಟು ಸಮಾಧಾನವಾಯಿತು. ಲಕ್ಷ್ಮಣಾಚಾರ್ಯ ಮೆಲ್ಲಗೆ ’ಮನೆಯ ದನಕರು ಏನಾಗಿವೆಯೋ ನೋಡಿಬರುತ್ತೇನೆ, ನೀವು ಮುಂದೆ ಹೋಗಿ’ ಎಂದದ್ದಕ್ಕೆ ಗರುಡಾಚಾರ್ಯ ರೇಗಿ ’ಮೊದಲು ಸಂಸ್ಕಾರದ ಕೆಲಸ, ಆಮೇಲೆ ನಿನ್ನ ಗೃಹಕೃತ್ಯ’ ಎಂದು ಗದರಿಸಿದ. ಲಕ್ಷ್ಮಣಾಚಾರ್ಯನಿಗೆ ಎದುರುತ್ತರ ಕೊಡುವ ಧೆರ್ಯವಾಗಲಿಲ್ಲ. ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರ ಮನೆಗೆ ಬಂದರು. ಪಾಪ ಅವರ ದುಃಖಕ್ಕಷ್ಟು ಸಮಾಧಾನ ಹೇಳಬೇಕೆಂದು ಎಲ್ಲರಿಗೂ ಅನ್ನಿಸಿತು. ಆದರೆ ಕರೆದರೆ ಒಳಗಿನಿಂದ ಉತ್ತರವಿಲ್ಲ. ಮನೆಯೊಳಕ್ಕೆ ಹೋದರೆ ಇಲಿ ಸತ್ತ ನಾತ. ಇದರಿಂದಾಗಿ ಯಾರಿಗೂ ತಮ್ಮ ತಮ್ಮ ಮನೆಯೊಳಕ್ಕೆ ಹೋಗುವ ಧೆರ್ಯವಾಗಲಿಲ್ಲ. ಅಗ್ರಹಾರದ ಬೀದಿಗೆ ಬಂದೊಡನೆ ಮೌಢ್ಯ ಕವಿದುಬಿಟ್ಟಿತು. ಅಗ್ರಹಾರವಂತೂ ಹಾಳುಸುರಿಯುತ್ತಿತ್ತು.’ಈಗೇನು ಮಾಡುವ’ ಎಂದು ಎಲ್ಲರೂ ಒಟ್ಟಾಗಿ ಚಿಂತಿಸಿದರು. ’ಶವಸಂಸ್ಕಾರ’ ಎಂದ ಒಬ್ಬ ಬ್ರಾಹ್ಮಣ. ಆದರೆ ನಾರಣಪ್ಪನ ಮನೆಯೊಳಕ್ಕೆ ಹೋಗಿ ಕೊಳೆತು ವಿಕಾರವಾಗಿರಬಹುದಾದ ಹೆಣವನ್ನು ನೋಡುವ ಧೆರ್ಯ ಯಾರಿಗೂ ಆಗಲಿಲ್ಲ. ಉಪಾಯ ಹೊಳೆದ ಗರುಡಾಚಾರ್ಯ, ’ಪ್ರಾಣೇಶಾಚಾರ್ಯರು ನದಿಗೋ ಎಲ್ಲಿಗೋ ಹೋಗಿರಲಿಕ್ಕೆ ಸಾಕು, ಅವರು ಬರುವವರೆಗೆ ಕಾಯುವ’ ಎಂದ. ಲಕ್ಷ್ಮಣಾಚಾರ್ಯ, ’ಕಳೆಯಲಿಕ್ಕೆ ಕಾಲವಿಲ್ಲ. ಶವಸಂಸ್ಕಾರದ ಸಿದ್ಧತೆಯಾದರೂ ನಡೆಸುವ’ ಎಂದ. ’ಕಟ್ಟಿಗೆ’ ಎಂದ ಒಬ್ಬ ಬ್ರಾಹ್ಮಣ. ’ಮಾವಿನ ಮಾರ ಕಡಿಸಬೇಕು’ ಎಂದ ಇನ್ನೊಬ್ಬ. ’ಕೊಳೆತು ಹೋದ ಹೆಣ ಹಸಿ ಸೌದೆಯಲ್ಲಿ ಎಲ್ಲಿ ಉರಿಯಲಿಕ್ಕೆ ಶಕ್ಯ?’ ಎಂದ ಮತ್ತೊಬ್ಬ. ’ಅವನ ಮನೆಯ ಕಟ್ಟಿಗೆಯಿಂದಲೇ ಸುಟ್ಟರಾಯಿತು” ಎಂದ ಲಕ್ಷ್ಮಣಾಚಾರ್ಯ. ’ನಿನ್ನ ಮನೆಯ ಕಟ್ಟಿಗೆಯನ್ನು ಕೇಳಲಿಲ್ಲವಲ್ಲ’ ಎಂದು ಗರುಡ ಹೀಯಾಳಿಸಿದ. ಆದರೆ ನಾರಣಪ್ಪನ ಮನೆಯನ್ನು ಸುತ್ತಿ ಹಿತ್ತಲಿಗೆ ಹೋಗಿ ನೋಡಿದರೆ ಸಾಕಷ್ಟು ಕಟ್ಟಿಗೆ ಇರಲಿಲ್ಲ. ’ಚಂದ್ರೀ’, ’ಚಂದ್ರೀ’ ಎಂದು ಕೂಗಿದರೆ ಉತ್ತರವಿಲ್ಲ. ’ಕುಂದಾಪುರಕ್ಕೆ ಓಡಿರಬೇಕು, ಊರು ಹಾಳುಮಾಡಿದ ಮಾರಿ’ ಎಂದುಕೊಂಡರು ಬ್ರಾಹ್ಮಣರು. ’ಇನ್ನೇನು ಮಾಡಲಿಕ್ಕೆ ಶಕ್ಯ? ಪ್ರತಿ ಮನೆಯಿಂದ ಒಂದೊಂದು ಹೊರೆ ಸೌದೆಯನ್ನೆತ್ತಿ ಸ್ಮಶಾನಕ್ಕೆ ಒಯ್ದುಬಿಡಿರಿ’ ಎಂದ ಗರುಡಾಚಾರ್ಯ. ಎಲ್ಲರೂ ಒಪ್ಪಿ ಹಿತ್ತಲಿನಿಂದ ಒಂದೊಂದು ತಲೆಹೊರೆ ಸೌದೆಯನ್ನು ಹೊತ್ತು ಎರಡು ಮೆಲಿಯಾಚೆಯಿದ್ದ ಸ್ಮಶಾನಕ್ಕೆ ಒಯ್ದರು. ಮತ್ತೆ ಅಗ್ರಹಾರಕ್ಕೆ ಮರಳಿದರೆ ಪ್ರಾಣೇಶಾಚಾರ್ಯರ ಪತ್ತೆಯೇ ಇಲ್ಲ. ’ಹೆಣ’ ಎಂದ ಒಬ್ಬ ಬ್ರಾಹ್ಮಣ. ’ಪ್ರಾಣೇಶಾಚಾರ್ಯರು ಬರಲಿ’ ಎಂದ ಗರುಡ. ’ಸರಿ’ ಎಂದ ಲಕ್ಷ್ಮಣಾಚಾರ್ಯ. ಎಲ್ಲರಿಗೂ ದಿಗಿಲು-ಒಳಕ್ಕೆ ಹೋಗಿ ನೋಡಲು. ’ಪ್ರಾಣೇಶಾಚಾರ್ಯರಿಗೆ ತಿಳಿಸದೆ ದುಡುಕುವುದು ಸರಿಯಲ್ಲ’ ಎಂದ ಗರುಡ. ’ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡುಬಿಟ್ಟು ಕಾಯುವ’ ಎಂದು ಬ್ರಾಹ್ಮಣರು ನಾರಣಪ್ಪನ ಮನೆಯ ಎದುರು ಮಡಕೆಯಲ್ಲಿ ಬೆಂಕಿ ಹೊತ್ತಿಸಿ, ಬೊಂಬುಗಳನ್ನು ತಂದು ಚಟ್ಟ ಕಟ್ಟುತ್ತ ಕೂತರು-ಪ್ರಾಣೇಶಾಚಾರ್ಯರಿಗೆ ಕಾದು. +* * * +ಮಧ್ಯಾಹ್ನ ಸುಮಾರು ಮೂರು ಗಂಟೆಯಾಗುವ ಹೊತ್ತಿಗೆ ಪ್ರಾಣೇಶಾಚಾರ್ಯರು ಪುಟ್ಟನ ಜೊತೆ ಮೇಳಿಗೆಯ ಕೆರೆಯನ್ನು ತಲ್ಪಿದರು. ಗಾಡಿ ದಾರಿಯಲ್ಲಿ ನಡೆದು ಬರುವಾಗ ಕೆಂಪು ಧೂಳಿನಿಂದ ಮೆಯೆಲ್ಲ ಮಲಿನವಾಗಿತ್ತು. ಕೆರೆಯಲ್ಲಿ ಕೆಕಾಲನ್ನು ತೊಳೆದುಕೊಳ್ಳಲೆಂದು ಇಳಿದಾಗ ಪುಟ್ಟ, “ಅಲ್ಲ. ಎಷ್ಟೆಲ್ಲ ಹರಟಿದೆ. ನನ್ನ ಸ್ವಂತದ ವಿಷಯಾನ್ನ ನಿಮಗೆ ಹೇಳಲೇ ಇಲ್ಲವಲ್ಲ” ಎಂದ. ಮುಖವನ್ನು ತೊಳೆದುಕೊಳ್ಳುತ್ತಿದ್ದಾಗ ಆಚಾರ್ಯರಿಗೆ ಎಲ್ಲಾದರೂ ಮೇಳಿಗೆಯಲ್ಲಿ ಪರಿಚಯದವರು ಕಣ್ಣಿಗೆ ಬಿದ್ದುಬಿಟ್ಟರೆ ಎಂದು ಭಯವಾಯಿತು. ಮತ್ತೆ ಭೀತಿ ಹುಟ್ಟಿಬಿಟ್ಟಿತಲ್ಲ ಎಂದು ಕಸಿವಿಸಿಗೊಂಡರು. ಒಂದು ಸಮಾಧಾನ : ಮೇಳಿಗೆಯ ಬ್ರಾಹ್ಮಣರೆಲ್ಲ ಸ್ಮಾರ್ತರು, ಆದ್ದರಿಂದ ಅಪರಿಚಿತರು. ಜಾತ್ರೆಯ ಗಡಿಬಿಡಿಯಲ್ಲಿ ತನ್ನನ್ನು ಗಮನಿಸುವವರಾದರೂ ಯಾರು? ಆದರೆ ಎಷ್ಟು ಸಮಾಧಾನ ಹೇಳಿಕೊಂಡರೂ ಭೀತಿ. ಜಾತ್ರೆಗೆಂದು ಪರಿಚಯದವರು ಯಾರಾದರೂ ಬಂದೇ ಬಂದಿರುತ್ತಾರೆ. ಆದರೆ ಏನೇ ಆಗಲಿ : ನಿಶ್ಚಯಿಸಿಬಿಟ್ಟ ಮೇಲೆ ತನಗಿನ್ನೆಲ್ಲಿಯ ಭೀತಿ? ಆದರೂ ಭೀತಿಯಿರುವುದು ನಿಜ. ನಿಷ್ಕಾರಣವಿದ್ದರೆ ಯಾಕೆ ಈ ಭೀತಿ? ಇದರ ಮೂಲ ಹುಡುಕಬೇಕು. ಬೇರುಸಹಿತ ಈ ಭೀತಿಯನ್ನು ಕಿತ್ತೆಸೆದು ಬಿಡಬೇಕು. ನಾರಣಪ್ಪ ಹೇಗೆ ರಾಜಾರೋಷವಾಗಿ ಚಂದ್ರಿಯ ಜೊತೆ ಅಗ್ರಹಾರದ ನಡುವೆ ನಿಂತು ಬಾಳ್ವೆ ನಡೆಸಿದ? ನಾನು ಚಂದ್ರಿಯನ್ನು ಸೇರಿದರೂ ಒಳಗೆ ಮುಖ ಮುಚ್ಚಿಕೊಂಡಿರುತ್ತೀನೋ ಏನೋ! ಥೂ ಅದೆಂತಹ ಬಾಳು ಎನ್ನಿಸಿತು. +“ಅಲ್ಲ, ನಿಮ್ಮ ಹತ್ತಿರ ಇಷ್ಟೆಲ್ಲ ಯಾಕೆ ಹರಟುತ್ತಿದ್ದೇನೆಂದು ನಿಮಗೆ ಅನ್ನಿಸಿರಬಹುದಲ್ಲವೆ? ’ಏನು ಇವ ಸಿಕ್ಕರೆ ಬಿಡ’, ಅಂತ. ಹೇಳ್ತೀನಿ ಕೇಳಿ. ನೀವು ಹೆಚ್ಚು ಹರಟುವವರಲ್ಲವಾದರೂ ನಿಮಗೆ ಜನ ಬೇಕು, ಮಾತು ಬೇಕು. ನಿಮ್ಮದು ಸಾಧುಸ್ವಭಾವ. ಪಾಪದ ಜನ.” ಮುಖ ಒರೆಸಿಕೊಳ್ಳುತ್ತ ಪುಟ್ಟ ಹೇಳಿದ. “ಹೌದೋ ಅಲ್ಲವೋ ಹೇಳಿ. ಮುಖ ನೋಡಿ ಹೇಳಿಬಿಡುತ್ತೇನೆ ನಾನು : ಯಾರು ಎಂಥ ಜನ ಅಂತ. ನಿಮ್ಮ ಹತ್ತಿರ ಯಾಕೆ ಮುಚ್ಚುಮರೆ? ನಾನೇನು ಕಳಪೆ ಜನಾಂತ ನೀವು ತಿಳಿದುಕೊಂಡಿಲ್ಲವೆಂದು ಅಂದುಕೊಂಡಿದ್ದೇನೆ. ನಾನು ಮಾಲೇರರವ ಎಂದೆ ಅಲ್ಲವೆ? ಇನ್ನೂ ಬೇಕಾದರೆ ಹೇಳುವೆ. ನನ್ನ ತಂದೆಯವರು ಕುಲೀನ ಬ್ರಾಹ್ಮಣರು. ಇಟ್ಟುಕೊಂಡ ನನ್ನ ತಾಯಿಯನ್ನು ಹೆಂಡತಿಗಿಂತ ಚೆನ್ನಾಗಿ ನೋಡಿಕೊಂಡರು. ನನಗೆ ಮುಂಜಿಯನ್ನೂ ಮಾಡಿಸಿದರು. ನೋಡಿ ಬೇಕಾದರೆ” ಎಂದು ಜನಿವಾರವನ್ನು ಅಂಗಿಯ ಒಳಗಿನಿಂದ ಎಳೆದು ತೋರಿಸಿದ. “ಹಾಗಾಗಿ ನನ್ನ ಮಿತ್ರರೆಲ್ಲ ಬ್ರಾಹ್ಮಣರೆ. ನಡೆಯಿರಿ. ಹೋಗುವ” ಎಂದ. ಕೆರೆಯ ಕಟ್ಟೆಯನ್ನು ಏರುತ್ತಿದ್ದಂತೆ “ಜನ ಎಂಬೋದಕ್ಕೂ ನಾನು ಮಾಡುವುದಕ್ಕೂ ಸರಿಯಾಗಿದೆ. ನನ್ನ ಒಂದು ಹೆಸರು ಒಗಟಿನ ಪುಟ್ಟ; ಇನ್ನೊಂದು ಹರಟೇ ಪುಟ್ಟ. ಒಟ್ಟಿನಲ್ಲಿ ನನಗೆ ಜನ ಬೇಕು” ಎಂದು ನಕ್ಕ. +ಜಾತ್ರೆಯ ಗಡಿಬಿಡಿಯಲ್ಲಿ ಮೇಳಿಗೆಗೆ ಕಳೆಯೇರಿಬಿಟ್ಟಿತ್ತು. ಕನ್ಯಾ, ವೃಶ್ಚಿಕ, ಮಿಥುನ ಇತ್ಯಾದಿ ಚಿತ್ರಗಳಿಂದ ತೇರಿನ ಶಿಖರ ಸರ್ವಾಲಂಕೃತವಾಗಿ ಊರಿನ ಮಧ್ಯೆ ಬಂದು ನಿಂತಿತ್ತು. ದಪ್ಪದಪ್ಪನೆಯ ಎರಡು ಮಿಣಿಗಳು ಹಾದಿಯುದ್ದಕ್ಕೂ ತೇರಿಗೆ ಬಿಗಿದುಬಿದ್ದಿದ್ದವು. ರಥವನ್ನು ಕೊಟ್ಟಿಗೆಯಿಂದ ಎಳೆದು ಅರ್ಧದಾರಿ ತಂದು ಭಕ್ತಾದಿಗಳು ಹಣ್ಣುಕಾಯಿ ಅರ್ಚನೆಗೆಂದು ಬಿಟ್ಟಿದ್ದರು. ಏಣಿಯನ್ನೇರಿ ರಥದೊಳಕ್ಕೆ ಕೂತಿದ್ದ ಪೂಜಾರಿಗೆ ಭಕ್ತಾದಿಗಳು ಕೊಟ್ಟ ಹಣ್ಣುಕಾಯಿಯನ್ನೆಲ್ಲ ಒಬ್ಬ ಬ್ರಾಹ್ಮಣ ಯುವಕ ಹತ್ತಿ ಇಳಿದು ಅರ್ಚನೆಗೆ ಒಪ್ಪಿಸುತ್ತಿದ್ದ. ರಥದ ಸುತ್ತ ಒಂದು ದೊಡ್ಡ ಗುಂಪೇ ಹಣ್ಣುಕಾಯಿಗಳನ್ನು ಹಿಡಿದು ಕಾದಿತ್ತು. ಪ್ರಾಣೇಶಾಚಾರ್ಯರು ಗುಂಪಿನಲ್ಲೆಲ್ಲ ತನ್ನ ಪರಿಚಯದವರು ಯಾರಾದರೂ ಇದ್ದಾರೋ ಎಂದು ಆತಂಕದಿಂದ ಹುಡುಕಿದರು. ಎಳ್ಳು ಬೀರಿದರೆ ಕೆಳಕ್ಕೆ ಬೀಳದ ಗುಂಪಿನ ಮಧ್ಯೆ ಪುಟ್ಟ ಆಚಾರ್ಯರ ಕೆ ಹಿಡಿದು ನಡೆಸಿಕೊಂಡು ಅಂಗಡಿಯೊಂದಕ್ಕೆ ಹೋಗಿ ತೆಂಗಿನಕಾಯಿ ಹಣ್ಣುಗಳನ್ನು ಕೊಂಡ. ’ಗುಂಪು ಖಾಲಿಯಾದ ಮೇಲೆ ಪೂಜೆ ಮಾಡಿಸಿದರಾಯಿತು. ಈಗ ಸ್ವಲ್ಪ ಸುತ್ತಾಡಿಬರುವ, ಆಚಾರ್ರೆ’ ಎಂದ. ಗುಂಪಿನಿಂದ ಹೊರಬಂದರೆ ಪೀಪಿಗಳ ಶಬ್ದ; ಪ್ರತಿಯೊಬ್ಬ ಹಳ್ಳಿಯ ಹುಡುಗನ ಬಾಯಲ್ಲೂ ತಾಯಿತಂದೆಯರಿಂದ ಕಾಡಿ ಪಡೆದ ಬಿಲ್ಲೆಯಿಂದ ಕೊಂಡ ವಿಧವಿಧ ನಾದದ ಪೀಪಿ. ಕರ್ಪೂರ ಊದುಬತ್ತಿಯ ವಾಸನೆ. ಹೊಸ ಬಟ್ಟೆಯ ವಾಸನೆ. ಬೆಲೂನು ಮಾರುವವನ ಹಾಡು. ಮೂಲೆಯೊಂದರಲ್ಲಿ ಬೊಂಬಾಯಿ ಪೆಟ್ಟಿಗೆ. ಬಿಲ್ಲೆ ಕೊಟ್ಟರೆ ಕಂಡಿಯಿಂದ ಅವನು ಗೆಜ್ಜೆ ಕಟ್ಟಿದ ಪೆಟ್ಟಿಗೆಯನ್ನು ತಟ್ಟುತ್ತ ಕುಣಿಯುತ್ತ ತೋರಿಸುತ್ತಾನೆ : “ದಿಲ್ಲಿಯ ಪಟ್ನ ನೊಡು, ಅಠಾರ ಕಛೇರಿ ನೋಡು, ಬೆಂಗ್ಳೂರು ಪೇಟೆ ನೋಡು, ಮೆಸೂರು ಅರಸರ ನೋಡು, ಆಹಾ ದರ್ಬಾರು ಮೋಜು ನೋಡು, ತಿರುಪತಿಯ ಒಡೆಯ ನೋಡು, ಆಹಾ ಬೊಂಬಾಯಿ ಸೂಳೆ ನೋಡು, ಆಹಾ ಬೊಂಬಾಯಿ ಸೂಳೆ ನೋಡು” ಗೆಜ್ಜೆಯ ಕುಣಿತ ನಿಲ್ಲುತ್ತದೆ. ’ಬೊಂಬಾಯಿ ಪೆಟ್ಟಿಗೆ-ಪೆಟ್ಟಿಗೆ-ಬರೀ ಒಂದು ಬಿಲ್ಲೆ, ಬಿಲ್ಲೆ’ ಎಂದು ಕೂಗುತ್ತಾನೆ. ಪುಟ್ಟನಿಗೆ ಸುಮ್ಮನೇ ನೋಡಿ ನಡೆದುಬಿಡೋದು ಸಾಧ್ಯವಾಗಲಿಲ್ಲ. “ಆಚಾರ್ರೆ, ನಾನು ನೋಡಬೇಕು” ಎಂದ. ’ಆಗಲಿ’ ಎಂದರು ಪ್ರಾಣೇಶಾಚಾರ್ಯರು, “ಬಿಟ್ಟೆಲ್ಲೂ ಹೋಗಬೇಡಿ. ಇಲ್ಲೇ ಇರಿ” ಎಂದು ಪುಟ್ಟ ಕರಿಯ ಪರದೆಯನ್ನು ಮುಖಕ್ಕೆಳೆದುಕೊಂಡು, ಕಂಡಿಯಲ್ಲಿ ನೋಡುತ್ತ ಕೂತ. ’ಈಗ ಇವನನ್ನಿಲ್ಲೆ ಬಿಟ್ಟು ಹೋಗಿಬಿಡಲೆ?’ ಎನ್ನಿಸಿತು ಆಚಾರ್ಯರಿಗೆ, ಮತ್ತೆ ಪಾಪ ಎನ್ನಿಸಿತು. ಆದರೆ ಇವನನ್ನು ಕಟ್ಟಿಕೊಂಡಿದ್ದರೆ ಶಾಂತಿಯಿಲ್ಲ, ನಾನೀಗ ಒಂಟಿಯಾಗಿರಬೇಕೆಂದು-ನಡೆದುಬಿಟ್ಟರು. ಸ್ವಲ್ಪ ದೂರ ಹೋಗುವುದರಲ್ಲೇ ’ಆಚಾರ್ರೇ’ ಎಂದು ಕೂಗಿದ್ದು ಕೇಳಿಸಿತು. ತಿರುಗಿ ನೋಡಿದರೆ ಪುಟ್ಟ. ” ನೀವು ಕಳೆದೇ ಹೋಗಿಬಿಟ್ಟಿರಿ ಎಂದುಕೊಂಡೆ. ಆದರೆ ಬೊಂಬಾಯಿ ಪೆಟ್ಟಿಗೆಯವ ನೀವು ಹೋದ ಮಾರ್ಗ ತೋರಿಸಿದ, ನಡೆಯಿರಿ” ಎಂದ. ಪ್ರಾಣೇಶಾಚಾರ್ಯರಿಗೆ ಮೆಪರಚಿಕೊಳ್ಳುವಂತಾಯಿತು. ಬೆದುಬಿಡಲೆ ಎನ್ನಿಸಿತು. ಆದರೆ ಕೇಳದೆ, ಬೇಡದೆ, ನಿರಪೇಕ್ಷಿತವಾಗಿ ಸ್ನೇಹಹಸ್ತವನ್ನಿತ್ತ ಒಂದು ಕಂಡರಿಯದ ಮನುಷ್ಯ ಪ್ರಾಣಿಯನ್ನು ಹೇಗಾದರೂ ನೋಯಿಸಲಿಕ್ಕೆ ಶಕ್ಯ? ಅನುಭವಿಸಿಬಿಡು ಎಂದುಕೊಂಡರು. “ಆಹಾ ನೋಡಿ” ಎಂದ ಪುಟ್ಟ. ದೊಂಬರ ಆಟ ನಡೆದಿತ್ತು. ಸರ್ಪಶರೀರದ ಮಾಟವಾದ ದೇಹದ ಚೆಲುವೆಯೊಬ್ಬಳು ಕೆಕಾಲುಗಳನ್ನು ಚೆಲ್ಲಿ ಬರಿ ಹೊಟ್ಟೆಯ ಮೇಲೆ ಸಮತೂಕ ತಪ್ಪದಂತೆ ಬಿದಿರುಗಣೆಯ ಮೇಲೆ ಮಲಗಿ ತೂಗಿದಳು. ದೊಂಬ ತಮ್ಮಟೆ ಬಾರಿಸಿದ. ಇನ್ನೊಂದು ಕ್ಷಣದಲ್ಲಿ, ಗಳದ ಮೇಲೆ ತೂಗಿದ ಚೆಲುವೆ ಸರ್ರೆಂದು ಕೆಳಗಿಳಿದು ಕುಣಿಯುತ್ತಿದ್ದಳು. ಜನ ಬಿಲ್ಲೆಗಳನ್ನು ಎಸೆದರು. ಪುಟ್ಟನೂ ಒಂದು ಬಿಲ್ಲೆಯನ್ನೆಸೆದ. ದೇವಸ್ಥಾನದ ಸಮೀಪಕ್ಕೆ ಬರುತ್ತಿದ್ದಂತೆ ಎರಡು ಪಕ್ಕದಲ್ಲೂ ಕೆಮೋಟಾದವರು, ಕಾಲುಮೋಟಾದವರು, ಕಣ್ಣಿಲ್ಲದವರು, ಮೂಗಿನ ಜಾಗದಲ್ಲಿ ಬರಿ ಎರಡು ಹೊಳ್ಳೆಯುಳ್ಳವರು, ವಿಧವಿಧದ ಅಂಗವಿಹೀನರು ನೆಲದಲ್ಲಿ ಹೊರಳುತ್ತ ಬೇಡುತ್ತಿದ್ದರು. ಅತ್ಯಂತ ಆಕರ್ಷಕವಾಗಿ ಅಂಗವಿಹೀನನಾದವನಿಗೆ ಬಿಲ್ಲೆಯನ್ನೆಸೆಯುತ್ತ ಪುಟ್ಟ ನಡೆದ. ಮುಂದೆ ಹೆಂಗಸರ ಬಣ್ಣ ಬಣ್ಣದ ಟೇಪುಗಳನ್ನೆಲ್ಲ ಇಳಿಬಿಟ್ಟಿದ್ದ ಹೊತ್ತುತಿರುಗುವ ಒಂದು ಅಂಗಡಿಯಲ್ಲಿ ಒಂದು ಗಜ ಟೇಪನ್ನು ಹೆಂಡತಿಗೆಂದು ಕೊಂಡ. ’ಅವಳಿಗೆ ಇದು ಆಸೆ’ ಎಂದ. ಎರಡು ಬಣ್ಣದ ತಗಡಿನ ಪೀಪಿಗಳನ್ನು ಮಕ್ಕಳಿಗೆಂದು ಕೊಂಡು ಊದಿನೋಡಿದ. ’ನಡೆಯುವ’ ಎಂದ. ಪ್ರಾಣೇಶಾಚಾರ್ಯರಿಗೆ ಗದ್ದಲದ ನಡುವೆ, ಸಂಭ್ರಮದ ನಡುವೆ ಅತಂತ್ರವಸ್ತುವಾಗಿ ಭೇತಾಳನಂತೆ ಅಲೆಯುತ್ತಿರುವ ಅನುಭವವಾಯಿತು. ಪುಟ್ಟನಿಗೊಂದು ಸೋಡಾ ಅಂಗಡಿ ಕಂಡದ್ದೆ “ಬನ್ನಿ. ಒಂದು ಕ್ರ ಕುಡಿಯುವ” ಎಂದ. “ಇಲ್ಲ, ನಾನು ಕುಡಿಯುವುದಿಲ್ಲ” ಎಂದರು ಪ್ರಾಣೇಶಾಚಾರ್ಯರು. ಕೊಂಕಣಿಯೊಬ್ಬನ ಸೋಗೆ ಹಚ್ಚಿದ ಸೋಡಾ ಅಂಗಡಿಯಲ್ಲಿ ಪರೀಕ್ಷಿಸಿ ಪುಟ್ಟ ಅಚ್ಚಕೆಂಪು ಬಣ್ಣದ ನೀರಿರುವ ಬಾಟ್ಲಿಯೊಂದನ್ನು ತೋರಿಸಿ ’ಒಂದು ಕ್ರ’ ಎಂದ. ಆ ಅಂಗಡಿಯ ತುಂಬೆಲ್ಲ ನಾಚಿಕೆಯಿಂದ ಬಾಟ್ಲಿಯ ಗಮಗಮ ಸೋಡಾ ಕ್ರಗಳನ್ನು ಕುಡಿಯುವ ಹೆಗ್ಗಡತಿಯರು, ಗೌಡರು, ಮಕ್ಕಳು. ಎಣ್ಣೆ ಹಾಕಿ ನುಣ್ಣಗೆ ಬಾಚಿದ ತಲೆ. ಮುಡಿದ ಚೆಂಡುಹೂ. ಉಟ್ಟ ಹೊಸ ಸೀರೆ. ಗೌಡರ ಮೆಮೇಲೆ ಹೊಸ ಅಂಗಿ. ಕ್ರಶ್ಶಿನ ಬಾಟ್ಲಿಯ ಗೋಲಿಯನ್ನು ತಳ್ಳುವಾಗ ಬರುವ ’ಕುಂಂii,ಗೊಯಿP’ ಎನ್ನುವ ಶಬ್ದ; ಸಿಹಿಯಾದ ಬಣ್ಣದ ಗ್ಯಾ ಇರುವ ನೀರು ಕುಡಿದ ಮೇಲೆ ’ಗರP’ ಎಂದು ಬರುವ ತೇಗು-ಅದೊಂದು ಅಪೇಕ್ಷೆ, ಅನುಭವ, ತೃಪ್ತಿಯ ಸಂಗತಿ. ಜಾತ್ರೆ ಕೊಡುವ ಅನೇಕ ಸುಖಗಳಲ್ಲಿ ಇದೂ ಒಂದು. ಎಲ್ಲರೂ ಇದನ್ನು ಮೊದಲೇ ಅಪೇಕ್ಷಿಸಿ ಬೇಕಾದಷ್ಟು ಕಾಸನ್ನು ಅದಕ್ಕೆಂದು ತೆಗೆದಿಟ್ಟುಬಿಟ್ಟಿರುತ್ತಾರೆ. ಈ ಎಲ್ಲ ಸಾಮಾನ್ಯ ಸುಖಗಳ ಲೋಕದಿಂದ ಹೊರಗೆ ನಿಂತು ಪ್ರಾಣೇಶಾಚಾರ್ಯರು ನೆರೆದವರನ್ನೆಲ್ಲ ನೋಡಿದರು. ’ಗರP’ ಎಂದು ತೇಗಿ ಪುಟ್ಟನಿಗೆ ಮುಖ ಅಗಲವಾಯಿತು. “ಬನ್ನಿ ಹೋಗುವ” ಎಂದ. “ನೀವೇನೂ ತೆಗೆದುಕೊಳ್ಳಲೇ ಇಲ್ಲವಲ್ಲ” ಎಂದ. +ಹೀಗೆ ಗದ್ದಲದಲ್ಲಿ, ಸಂಭ್ರಮದಲ್ಲಿ, ಬೆಲೂನು, ಪೀಪಿ, ಮಿಠಾಯಿ, ಕ್ರಶ್ಶಿನ ಶಬ್ದ, ದೇವಸ್ಥಾನದ ಗಂಟೆಗಳ ನಾದ, ಹೆಂಗಸರ ಬಳೆಯ ಅಂಗಡಿಯ ವೆಭವದ ನಡುವೆ, ಭ್ರಮಿತರಂತೆ ಪ್ರಾಣೇಶಾಚಾರ್ಯರು ಪುಟ್ಟನನ್ನು ಅನುಸರಿಸಿ ನಡೆದರು. ಎಲ್ಲಿ ನೋಡಿದರೂ ತತ್ಪರವಾದ ಕಣ್ಣುಗಳು. ತನ್ನದೊಬ್ಬನದ್ದು ಮಾತ್ರ ಯಾವುದರಲ್ಲೂ ತತ್ಪರವಾಗಲಾರದ ಕಣ್ಣುಗಳು. ಪುಟ್ಟ ಸರಿ. ಇವನನ್ನು ನಾನು ಸಂಧಿಸಿದ್ದೂ ವಿಧಿಯಿರಬೇಕು. ನಾನು ಮಾಡಿದ ನಿಶ್ಚಯ ಪೂರ್ಣವಾಗಲು ಪುಟ್ಟನಂತೆ ಜೀವನದಲ್ಲಿ ತತ್ಪರನಾಗಿಬಿಡುವ ಯೋಗ್ಯತೆಯಿರಬೇಕು. ಚಂದ್ರಿಯದು ಇದೇ ಲೋಕ. ನಾನು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ದ್ವಂದ್ವಕ್ಕೆ ಸಿಕ್ಕಿಕೊಂಡುಬಿಟ್ಟೆ. ಕಾಫಿ, ಮಸಲೆದೋಸೆಯ ವಾಸನೆ ಬಂತು. ಪುಟ್ಟ ನಿಂತ, ಆಚಾರ್ಯರೂ ನಿಂತರು. +“ಬನ್ನಿ, ಒಂದಿಷ್ಟು ಕಾಫಿ ಕುಡಿಯುವ” ಎಂದ ಪುಟ್ಟ. +“ನನಗೆ ಬೇಡ” ಎಂದರು ಪ್ರಾಣೇಶಾಚಾರ್ಯರು. +“ಇದು ಬ್ರಾಹ್ಮಣರ ಹೋಟೆಲು. ಜಾತ್ರೆಗೆಂದು ತೀರ್ಥಹಳ್ಳಿಯಿಂದ ಬಂದದ್ದು. ದೋಷವಿಲ್ಲ. ಒಳಗೆ ಮಡಿಬ್ರಾಹ್ಮಣರಿಗೆಂದು ಪ್ರತ್ಯೇಕ ಸ್ಥಳವಿದೆ.” +“ಬೇಡ. ನನಗೆ ಕಾಫಿ ಬೇಡ.” +“ಅದೆಲ್ಲ ಆಗದು. ನಾನು ಕುಡಿಸುವೆ ನಿಮಗೆ ಕಾಫಿ, ಬನ್ನಿ” ಎಂದು ಪುಟ್ಟ ಕೆಹಿಡಿದು ಒಳಗೆ ಕರೆದುಕೊಂಡು ಹೋದ. ಪ್ರಾಣೇಶಾಚಾರ್ಯರು ಮಣೆಯ ಮೇಲೆ ಒಲ್ಲದೆ ಕೂತರು, ಇಲ್ಲಿ ಯಾರಾದರೂ ನನ್ನ ಪರಿಚಯದವರು ಇದ್ದಿರಬಹುದೋ ಎಂದು ಭೀತಿಯಿಂದ ಹುಡುಕಿದರು. ವೇದಾಂತ ಶಿರೋಮಣಿಯೊಬ್ಬ ಹೋಟೇಲು ಕಾಫಿ ಕುಡಿಯೋದು ಕಣ್ಣಿಗೆ ಬಿದ್ದು ಬಿಟ್ಟರೆ…ಥv ಈ ಭೀತಿಯಿಂದ ಮೊದಲು ಪಾರಾಗಬೇಕೆಂದು ತಮ್ಮನ್ನು ಶಪಿಸಿಕೊಂಡರು. ಪುಟ್ಟ ಸ್ವಲ್ಪ ದೂರದಲ್ಲಿ ಹೋಗಿ ಕೂತು ಪ್ರಾಣೇಶಾಚಾರ್ಯರ ಬ್ರಾಹ್ಮಣ್ಯಕ್ಕೆ ಗೌರವ ತೋರಿಸಿದ. ’ಎರಡು ಸ್ಪೆಷ ಕಾಫಿ’ ಎಂದ ಎದುರು ನಿಂತ ಮಾಣಿಗೆ. ಎರಡಾಣೆ ಕೊಟ್ಟು, ಲೋಟಾದಲ್ಲಿ ಬಂದ ಕಾಫಿಯನ್ನು ಕುಡಿಯುತ್ತ ’ಹಾಳು ಜಾತ್ರೆ ಕಾಫಿ’ ಎಂದ. ಪ್ರಾಣೇಶಾಚಾರ್ಯರಿಗೆ ದಾಹವಾಗಿದ್ದರಿಂದ ಕಾಫಿ ಕುಡಿದು ಸಮಾಧಾನವೇ ಆಯಿತು. ಹುರುಪು ಬಂತು. ಹೊರಬಂದರು. “ನೀವು ಬೇಕಾದರೆ ದೇವಸ್ಥಾನದಲ್ಲಿ ಹೋಗಿ ಊಟ ಮಾಡಿ. ಇವತ್ತು ಆರುಗಂಟೆಯ ತನಕ ಊಟದ ಸಂತರ್ಪಣೆ ನಡೆಯುತ್ತದೆ ಬ್ರಾಹ್ಮಣರಿಗೆ” ಎಂದ ಪುಟ್ಟ. ಎಷ್ಟೋ ದಿನಗಳಿಂದ ಊಟವೇ ಇಲ್ಲದ್ದರಿಂದ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಬಿಸಿಬಿಸಿ ಅನ್ನ ಸಾರಿನ ಊಟ ಮಾಡಬೇಕೆಂಬ ಅಪೇಕ್ಷೆಯಾಯಿತು. ಆದರೆ ಫಕ್ಕನೆ, ತನಗೀಗ ಸೂತಕವಲ್ಲವೆ, ದೇವಸ್ಥಾನದಲ್ಲಿ ಹೋಗಿ ಊಟ ಮಾಡುವಂತಿಲ್ಲ. ಮೆಲಿಗೆ ಮಾಡಿದರೆ ರಥ ಮುಂದಕ್ಕೆ ಚಲಿಸುವುದಿಲ್ಲವೆನ್ನುತ್ತಾರೆ ಎಂಬ ನಂಬಿಕೆ ನೆನಪಾಯಿತು. ಆದರೆ ನಾರಣಪ್ಪ ಗಣಪತಿಯ ಮೀನನ್ನು ಹಿಡಿದು ಜಯಿಸಿಕೊಳ್ಳಲಿಲ್ಲವೇ? ತನಗೆ ಹಾಗೆ ಬ್ರಾಹ್ಮಣ್ಯವನ್ನು ಸಂಪೂರ್ಣ ಧಿಕ್ಕರಿಸಿ ನಡೆಯುವ ಧೆರ್ಯವಿಲ್ಲ ಎನ್ನಿಸಿತು. ಹಾಗಾದರೆ ಚಂದ್ರಿಯನ್ನು ಕೂಡಿ ಬದುಕುತ್ತೇನೆಂಬ ನಿಶ್ಚಯಕ್ಕೆ ಯಾವ ಬೆಲೆ ಎಂದು ಮನಸ್ಸು ಹೀಯಾಳಿಸಿತು. ನಿಶ್ಚಯವೆಂದರೆ ಪೂರ್ಣ ನಿಶ್ಚಯವಾಗಬೇಕು. ಕಟ್ಟಿಕೊಂಡರೆ ಸಂಪೂರ್ಣ ಕಟ್ಟಿಕೊ. ಬಿಟ್ಟರೆ ಪೂರ್ಣ ಬಿಡು. ದ್ವಂದ್ವಾತೀತನಾಗುವ ದಾರಿ ಅದು. ಭೀತಿಯಿಂದ ಪಾರಾಗುವ ದಾರಿ ಅದು. ಮಹಾಬಲ ಹೇಗೆ ನಿಶ್ಚಯಿಸಿಬಿಟ್ಟ… +“ಸ್ವಲ್ಪ ನಿಲ್ಲಿ ಆಚಾರ್ರೆ. ಅಲ್ಲಿ ನೋಡಿ” ಎಂದ ಪುಟ್ಟ. ದೂರದಲ್ಲೊಂದು ದಿಬ್ಬದ ಮೇಲೆ ಪರವಶರಾದಂತೆ ಕಾಣುವ ಒಂದು ಶೂದ್ರರ ಗುಂಪಿತ್ತು. “ಬನ್ನಿ. ಅಲ್ಲಿಗೆ ಹೋಗಿ ನೋಡುವ. ಕೋಳಿ ಅಂಕವಿರಬೇಕು” ಎಂದ ಪುಟ್ಟ. ಪ್ರಾಣೇಶಾಚಾರ್ಯರಿಗೆ ಎದೆ ಜಗ್ಗೆಂದಿತು. ಆದರೂ ಪುಟ್ಟನ ಕೂಡ ನಡೆದರು-ವಿಧಿಗೆ ತಲೆಬಾಗಿ. ಗುಂಪಿನಿಂದ ಸ್ವಲ್ಪದೂರ ನಿಂತು ನೋಡಿದರು. ಹೆಂಡದ ವಾಸನೆಯಿಂದ ಅವರಿಗೆ ವಾಕರಿಕೆ ಬಂತು. ಕಾಲಿಗೆ ಕತ್ತಿ ಕಟ್ಟಿದ್ದ ಎರಡು ಹುಂಜಗಳು ’ರ’, ’ರ’ ಎಂದು ರೆಕ್ಕೆ ಬಡಿದು ಚೂರಿಯಿಂದ ತಿವಿದುಕೊಳ್ಳುತ್ತ ಪರಸ್ಪರ ಎಗರಾಡುವುದನ್ನು ನೋಡುತ್ತ ಜನ ಕುಕ್ಕುರುಗಾಲಿನಲ್ಲಿ ಕೂತಿದ್ದರು-ತುದಿಗಾಲಿನ ಮೇಲೆ, ಬಾಯಿ ಬಿಟ್ಟು, ಸುತ್ತುಗಟ್ಟಿ. ಅಷ್ಟು ತತ್ಪರ, ತೀಕ್ಷ್ಣ, ಕಠೋರ ದೃಷ್ಟಿಯನ್ನು ಪ್ರಾಣೇಶಾಚಾರ್ಯರು ಜನ್ಮಾಪಿ ಕಂಡೇ ಇರಲಿಲ್ಲ. ಪಂಚಪ್ರಾಣವೇ ಇತ್ತು ಕೂತವರ ಕಣ್ಣಿನ ನೋಟದಲ್ಲಿ-ಪ್ರಾಣ ಮತ್ತು ಎರಡು ಹುಂಜಗಳು. ಇಲ್ಲ. ನಾಲ್ಕು ರೆಕ್ಕೆ, ನಾಲ್ಕು ಕತ್ತಿಗಳು. ಕೊP ಕೊP ಕೊP ಕೊP-ಸುತ್ತ ನಲವತ್ತು ಕಣ್ಣುಗಳು. ಕೆಂಪು ಕಿರೀಟದ ಹುಂಜಗಳ ಹೊಳೆಯುವ ಚೂರಿಗಳು. ಬಿಸಿಲು ಪಳಪಳP. ಚಮಕು. ಚಕಮಕಿ. ಆಹಾ ಚಮತ್ಕಾರ. ಬಡಿಯಿತು. ಬಡಿಯಿತು. ಏರಿ ಕೂತಿತು. ಪ್ರಾಣೇಶಾಚಾರ್ಯರಿಗೆ ದಿಗಿಲಾಗಿಬಿಟ್ಟಿತು. ಒಂದು ರಾಕ್ಷಸಲೋಕಕ್ಕೆ ಥಟ್ಟನೇ ಬಂದುಬಿಟ್ಟಂತೆನ್ನಿಸಿತು. ಚಂದ್ರಿಯೊಡನೆ ಬಾಳಲು ನಿಶ್ಚಯಿಸಿದ ಅಧೋಲೋಕದ ಆಳದ ಕತ್ತಲೆಯಲ್ಲೆಲ್ಲೋ ಗುಹೆಯಲ್ಲೆಲ್ಲೋ ಈ ಪರವಶ ಪ್ರಾಣಿಗಳ ಕಣ್ಣಿನ ಕಠೋರ ತತ್ಪರತೆಯೂ ಒಂದಂಶವಾದರೆ ಅಲ್ಲಿ ಬ್ರಾಹ್ಮಣನಾದ ತಾನು ಬಾಡಿ ಬಳಲಿಹೋಗಿ ಬಿಡಬಹುದೆಂದು ಪರಮಭೀತರಾಗಿ ಕೂತುಬಿಟ್ಟರು. ಎರಡು ಹುಂಜಗಳ ಒಡೆಯರು ತಮ್ಮ ಹುಂಜಗಳನ್ನು ಹುರಿದುಂಬಿಸುತ್ತ ಮಾಡುತ್ತಿದ್ದ ಶಬ್ದ ಮನುಷ್ಯನ ಗಂಟಲಿನಿಂದ ಬಂದದ್ದಲ್ಲ ಎನ್ನಿಸಿತು. ಈ ಎಲ್ಲ ಕ್ರೂರ ತೀಕ್ಷ್ಣ ಭಾವಗಳ ಲೋಕದಲ್ಲಿ ಬದುಕುವ ಸಾಮರ್ಥ್ಯ ತನಗೆ ಖಂಡಿತಾ ಇಲ್ಲವೆಂದು ಖಚಿತವಾಯಿತು. ಕಾಮದ ಒಂದು ಪಾ ಮಾರ್ದವವಾದರೆ, ಇನ್ನೊಂದರಲ್ಲಿ ಈ ರಾಕ್ಷಸ ಛಲವಿರಬೇಕು. ನಾರಣಪ್ಪ ತನ್ನನ್ನು ಧಿಕ್ಕರಿಸಿ ನಡೆದ ಆ ದಿನ ತನ್ನ ವ್ಯಕ್ತಿತ್ವವೆಲ್ಲ ಕಂತಿದಂತಾಗಿ ಅನುಭವಿಸಿದ್ದ ಪುಕ್ಕಲು ಮರುಕಳಿಸಿತು. ಎರಡು ಹುಂಜಗಳನ್ನೂ ಬಡಿದಾಟದಿಂದ ಬಲಾತ್ಕಾರವಾಗಿ ಬಿಡಿಸಿ ಗಾಯವಾಗಿ ಬರುತ್ತಿದ್ದ ಜಾಗಗಳನ್ನು ಹೊಲಿದು ಮತ್ತೆ ಕಾಳಗಕ್ಕೆ ಬಿಟ್ಟರು. ಈ ಮಧ್ಯೆ ಗೆಲುವಿನಿಂದ ನೋಡುತ್ತಿದ್ದ ಪುಟ್ಟ ಒಬ್ಬ ಅಪರಿಚಿತನ ಜೊತೆ ಪಂಥ ಕಟ್ಟಿದ್ದ. ’ಈ ಹುಂಜ ನನ್ನದು’ ಎಂದು ಪುಟ್ಟ. ’ಇದು ಗೆದ್ದರೆ ಎರಡಾಣೆ’ ಎಂದ ಅಪರಿಚಿತ. ತನ್ನದು ಗೆದ್ದರೆ ನಾಲ್ಕಾಣೆ ಎಂದ ಪುಟ್ಟ. ಎಂಟಾಣೆ ಎಂದ ಅವ. ಹತ್ತಾಣೆ ಎಂದ ಪುಟ್ಟ. ಹನ್ನೆರಡಾಣೆ ಅಂದ ಅವ. ’ನೋಡುವ’ ಎಂದ ಪುಟ್ಟ. ಪ್ರಾಣೇಶಾಚಾರ್ಯರು ಆತಂಕದಿಂದ ಕಾದರು. ಈ ಹಡೆ ಹುಡುಗ ಕೆಯಲ್ಲಿರುವ ದುಡ್ಡನ್ನೆಲ್ಲ ಕಳೆದುಕೊಂಡರೆ ಏನು ಗತಿ? ಆದರೆ ಪರಮಾಶ್ಚರ್ಯ. ಪುಟ್ಟನೇ ಗೆದ್ದ. ಆದರೆ ಪುಟ್ಟ ಅಲ್ಲಿಂದ ಹೊರಡಲು ಎದ್ದಕೂಡಲೇ ಸೋತಿದ್ದವನು ’ಇನ್ನೊಂದು ಪಂತ’ ಎಂದ. ’ಬೇಡ’ ಎಂದ ಪುಟ್ಟ. ಅವನು ಕುಡಿದುಬಿಟ್ಟಿದ್ದರಿಂದ ಪುಟ್ಟನಿಗೆ ಹೊಡೆಯಲು ಬಂದ. ಪ್ರಾಣೇಶಾಚಾರ್ಯರು ತಡೆದರು. ಬ್ರಾಹ್ಮಣನನ್ನು ಕಂಡು ಅವ ಕೋಪವನ್ನು ನುಂಗಿಕೊಂಡ. ಎಲ್ಲರೂ ’ಏನು’, ’ಏನು’ ಎಂದು ಏರಿಬರುವುದರೊಳಗೆ ಪ್ರಾಣೇಶಾಚಾರ್ಯರು ಪುಟ್ಟನನ್ನೆಳೆದುಕೊಂಡು ನಡೆದುಬಿಟ್ಟರು. +ಹನ್ನೆರಡಾಣೆ ಗಳಿಸಿ ಹಿರಿಹಿರಿ ಹಿಗ್ಗಿದ ಪುಟ್ಟ. ಇದರಿಂದೇನೂ ಅಪ್ರತಿಭನಾದಂತೆ ಕಾಣಲಿಲ್ಲ. ಪ್ರಾಣೇಶಾಚಾರ್ಯರಿಗೆ ಮಾತ್ರ ಥಟ್ಟನೆ ಪುಟ್ಟನ ಬಗ್ಗೆ ವಾತ್ಸಲ್ಯಭಾವ ಮೂಡಿತು. ನನಗೊಬ್ಬ ಮಗನಿದ್ದಿದ್ದರೆ ಪ್ರೀತಿಯಿಂದ ಸಲಹಬಹುದಿತ್ತು ಎನ್ನಿಸಿತು. +“ಹೌದು ಪುಟ್ಟ, ನಾವಿನ್ನು ದಾರಿ ಹಿಡಿಯುವ” ಎಂದರು ಪ್ರಾಣೇಶಾಚಾರ್ಯರು-ತಮ್ಮ ಸ್ನೇಹವನ್ನು ಅಲ್ಲಿಗೇ ಮುಕ್ತಾಯಗೊಳಿಸಲು ಯತ್ನಿಸುತ್ತ. +“ಯಾವ ದಿಕ್ಕಿಗೆ ತಮ್ಮ ಪ್ರಯಾಣ?” ಎಂದು ಪುಟ್ಟ ಮುಖ ಸಣ್ಣಗೆ ಮಾಡಿಕೊಂಡ. ನನ್ನಿಂದ ಏನನ್ನು ಅಪೇಕ್ಷಿಸಿ ಇವ ಹೀಗೆ ಗಂಟುಬಿದ್ದಿದ್ದಾನೆ ಎಂದು ಆಚಾರ್ಯರಿಗೆ ಅನುಮಾನವಾಯಿತು. +“ಹೀಗೆ. ನಿಶ್ಚಿತವಿಲ್ಲ” ಎಂದರು. +“ಅಷ್ಟು ದೂರ ನಿಮ್ಮನ್ನು ಕಳಿಸಿಬರುವೆ ಹಾಗಾದರೆ. ದೇವಸ್ಥಾನದಲ್ಲಿ ಊಟ ಮಾಡಿ ಹೋದರಾಯಿತಲ್ಲ” ಎಂದ ಒತ್ತಾಯಪೂರ್ವಕವಾಗಿ ಪುಟ್ಟ. ಫಜೀತಿಗಿಟ್ಟುಕೊಂಡಿತಲ್ಲ ಎಂದು ಪ್ರಾಣೇಶಾಚಾರ್ಯರು : +“ನಾನೊಬ್ಬ ಸೋನೆಗಾರನನ್ನು ನೋಡಬೇಕು” ಎಂದರು. +“ಯಾಕೆ?” ಎಂದ ಪುಟ್ಟ ಅಷ್ಟಿಷ್ಟಕ್ಕೆ ಜಗ್ಗದೆ. +“ನನ್ನದೊಂದು ಬಂಗಾರದ ಚೂರು ಮಾರುವುದಿದೆ.” +“ಯಾಕೆ? ಸದ್ಯಕ್ಕೆ ಖರ್ಚಿಗೆ ಕಾಸಿಲ್ಲದಿದ್ದರೆ ಈ ಹನ್ನೆರಡಾಣೆ ತಗೊಳ್ಳಿರಿ ಕೆಗಡವಾಗಿ. ಇನ್ನೊಮ್ಮೆ ಕೊಡುವಿರಂತೆ”. +ಇಂತಹ ಮನುಷ್ಯನಿಂದ ಪಾರಾಗುವುದಾದರೂ ಹೇಗೆಂದು ಪ್ರಾಣೇಶಾಚಾರ್ಯರು ದಿಕ್ಕೆಟ್ಟರು. ಕಾಲಿಗೆ ತೊಡರಿಕೊಳ್ಳುವ ಬಳ್ಳಿಯಂತೆ ಇವನ ಕರುಳು. +“ಇಲ್ಲ ಪುಟ್ಟ. ಅಷ್ಟಿಷ್ಟು ಹಣವಲ್ಲ ಬೇಕಾಗಿರೋದು. ಕುಂದಾಪುರಕ್ಕೆ ಬಸ್ಸು ಹಿಡಿಯಬೇಕು. ಹಾಗೆ ಹೀಗೇಂತ ಇನ್ನೊಂದಷ್ಟು ಖರ್ಚಿನ ಬಾಬತ್ತಿದೆ” ಪ್ರಾಣೇಶಾಚಾರ್ಯರು ಅವನ ಪಟ್ಟಿನಿಂದ ತಪ್ಪಿಸಿಕೊಳ್ಳಲಾರದೆ ಎಂದರು. +“ಓ ಹಾಗೋ. ಬನ್ನಿ ಹಾಗಾದರೆ, ನನಗೊಬ್ಬ ಸೋನೆಗಾರನಿಲ್ಲಿ ಪರಿಚಯ. ಏನು ಮಾರುವುದಿದೆ?” +“ಯಜ್ಞೋಪವೀತಕ್ಕೆ ಹಾಕಿದ ಪವಿತ್ರದ ಉಂಗುರ”. ವಿಧಿಯಿಲ್ಲದೆ ಪ್ರಾಣೇಶಾಚಾರ್ಯರು ಹೇಳಿಕೊಂಡರು. +“ಎಲ್ಲಿ ತೋರಿಸಿ?” ಎಂದು ಪುಟ್ಟ ಕೆಯೊಡ್ಡಿದ. ಜನದ ಗುಂಪಿನಲ್ಲಿ ನಾಚುತ್ತ ಪ್ರಾಣೇಶಾಚಾರ್ಯರು ಯಜ್ಞೋಪವೀತದ ಉಂಗುರವನ್ನು ಬಿಚ್ಚಿಕೊಟ್ಟರು. ಪುಟ್ಟ ಅದನ್ನು ಕೆಯಲ್ಲಿ ಹಿಡಿದು ಪರೀಕ್ಷಿಸಿ “ಸುಮಾರು ಹದಿನೆದು ರೂಪಾಯಿಗಿಂತ ಕಮ್ಮಿ ಹೇಳಿದರೆ ಒಪ್ಪಿಕೊಳ್ಳಬೇಡಿ” ಎಂದ. ಇಬ್ಬರೂ ಕೇರಿಯೊಂದನ್ನು ಹೊಕ್ಕು ಸೋನೆಗಾರನ ಮನೆಗೆ ಹೋದರು. ಮರದ ಪೆಟ್ಟಿಗೆಯೊಂದರ ಎದುರು ಅರದಿಂದ ಉಂಗುರ ಒಂದನ್ನು ಉಜ್ಜುತ್ತ ಕೂತ ಸೋನೆಗಾರ ಬೆಳ್ಳಿಕಟ್ಟಿನ ಕನ್ನಡಕವನ್ನು ನೇರ ಮಾಡಿಕೊಂಡು, ’ಏನು?’ ಅಂದ ಪುಟ್ಟನನ್ನು ಕಂಡು. “ಏನು, ಪುಟ್ಟಯ್ಯನವರ ಕಾಲು ನಮ್ಮಲ್ಲಿಗೆ ಬೆಳೆಸಿತಲ್ಲ” ಎಂದು ಉಪಚರಿಸಿದ. ಉಂಗುರವನ್ನು ಕೊಟ್ಟಿದ್ದಾಯಿತು. ಸೋನೆಗಾರ ಅದನ್ನು ಗುಲಗಂಜಿ ತಕ್ಕಡಿಯಲ್ಲಿ ತೂಗಿ, ಒರೆ ಹಚ್ಚಿ ನೋಡಿ, ’ಹತ್ತು ರೂಪಾಯಿ’ಯೆಂದ. ಪುಟ್ಟ “ಹದಿನೆದಕ್ಕೆ ಕಡಿಮೆಯಾದರೆ ಮಾತೇ ಬೇಡ” ಎಂದ. ವ್ಯವಹಾರದ ಮಾತಿನಿಂದ ಆಚಾರ್ಯರಿಗೆ ಕಸಿವಿಸಿಯಾಯಿತು. “ಬಂಗಾರದ ಬೆಲೆ ಇಳಿದಿದೆ” ಎಂದ ಸೋನೆಗಾರ. “ಅದೆಲ್ಲ ನನಗೆ ಲೆಕ್ಕವಿಲ್ಲ. ಹದಿನೆದು ಕೊಡುತ್ತೀರೋ ಇಲ್ಲವೋ” ಎಂದು ಆಚಾರ್ಯರ ಮುಖ ನೋಡಿ ತನ್ನ ವ್ಯವಹಾರಜ್ಞತೆಯನ್ನು ಮೆಚ್ಚಿರೆಂದು ಹುಬ್ಬು ಹಾರಿಸಿದ. ಆಚಾರ್ಯರು ಅದಕ್ಕೆ “ಹತ್ತಾದರೆ ಹತ್ತು. ನನ್ನ ಖರ್ಚಿಗಷ್ಟು ಈಗ ಸಾಕು” ಎಂದು ಚರ್ಚೆ ಮಾಡಲು ಇಷ್ಟವಾಗದೆ ಅಂದುಬಿಟ್ಟರು. ಪುಟ್ಟನಿಗೆ ಪೆಚ್ಚಾಯಿತು. ಸೋನೆಗಾರನ ಮುಖ ಅಗಲವಾಯಿತು. ಹತ್ತು ರೂಪಾಯಿಯನ್ನು ಎಣಿಸಿಕೊಟ್ಟು ಕೆಮುಗಿದ. ಪ್ರಾಣೇಶಾಚಾರ್ಯರು ’ಉಪಕಾರವಾಯಿತು’ ಎಂದು ಹೊರ ಬಂದರು. +ಹೊರಬಂದದ್ದೇ ತಡ ಪುಟ್ಟ ಪರಚಿಕೊಳ್ಳಲು ಪ್ರಾರಂಭಿಸಿದ-ಒಳ್ಳೆ ಕೆಹಿಡಿದ ಹೆಂಡತಿಯ ಹಾಗೆ : “ಏನೋ ನಿಮಗೆ ಉಪಕಾರ ಮಾಡೋಣ ಅಂತ ಹೋದರೆ ನನ್ನ ಮಾನಾನೇ ಕಳೆದಿರಲ್ಲರಿ. ನನ್ನ ಮಾತಿಗೆ ಇನ್ನು ಅವನ ಹತ್ತಿರ ಬೆಲೆಯೇ ಇಲ್ಲ-ಹೋಗಲಿ-ಆದರೆ ಐದು ರೂಪಾಯಿಗೆ ನಿಮಗೇ ನಾಮವಲ್ಲ! ಕಲಿಯುಗದಲ್ಲಿ ನಿಮ್ಮ ಹಾಗೆ ಬೆಪ್ಪರಾಗಿರಕೂಡದು, ತಿಳಿಯಿತ? ಅಕ್ಕಸಾಲಿಗಳು ಸ್ವತಃ ಅಕ್ಕನ ಬಂಗಾರವನ್ನೇ ಕದೀತಾರಂತೆ, ಕೇಳಿದೀರ?” +“ಹಣದ ಆತುರವಿತ್ತು. ದುಡುಕಿಬಿಟ್ಟೆ ಕ್ಷಮಿಸು.” +ಪ್ರಾಣೇಶಾಚಾರ್ಯರು ವಿನಯದಿಂದ ಪುಟ್ಟನ ಮನಸ್ಸನ್ನು ನೋಯಿಸಲು ಇಚ್ಛಿಸದೆ ಎಂದರು. ಪುಟ್ಟ ಮೆತ್ತಗಾಗಿ : +“ನಿಮ್ಮನ್ನು ನೋಡಿದ ಕೂಡಲೆ ತಿಳಿಯಿತು. ನೀವು ಬಹಳ ಸಾಧು ಅಂತ. ನಿಮ್ಮೊಬ್ಬರನ್ನೆ ಎಲ್ಲಿಗೂ ಕಳುಹಿಸಬಾರದು. ನಿಮ್ಮನ್ನು ಬಸ್ಸುಹತ್ತಿಸಿ ನಾನು ಹಿಂದಕ್ಕೆ ಹೋಗುವೆ. ಈಗ ನಾನು ಹೇಳಿದ ಹಾಗೆ ಮಾಡಿ. ನಮ್ಮ ಪೆಕಿಯ ಜನ ಒಂದಿದೆ. ಅವರನ್ನು ನಾನು ನೋಡಿ ಬರಬೇಕು. ಜೊತೆಗೆ ಬನ್ನಿ. ಮತ್ತೆ ದೇವಸ್ಥಾನಕ್ಕೆ ಹೋಗಿ ಊಟ ಮಾಡಿ. ಚಿಂತೆಯಿಲ್ಲ. ಸಾಯಂಕಾಲದವರೆಗೂ ಅಲ್ಲಿ ಪಂಕ್ತಿಯ ಮೇಲೆ ಪಂಕ್ತಿ ಊಟ. ಮತ್ತೆ ರಾತ್ರೆ ಇಲ್ಲೆ ಎಲ್ಲಾದರೂ ಮಲಗಿದ್ದು ಬೆಳಿಗ್ಗೆ ಎದ್ದು ಐದು ಮೆಲಿ ನಡೆದರೆ ತೀರ್ಥಹಳ್ಳಿ. ಅಲ್ಲಿಂದ ಆಗುಂಬೆಗೆ ಬಸ್ಸಿದೆ. ಟ್ಯಾಕ್ಸಿಯಲ್ಲಿ ಘಟ್ಟ ಇಳಿದರೆ ನೇರ ಕುಂದಾಪುರಕ್ಕೆ ಬಸ್ಸು” ಎಂದ. +ಕುಂದಾಪುರದಿಂದ ದಾರಿ ಖರ್ಚಿಗೆಂದು ಉಂಗುರ ಮಾರಿ ಬಂದ ಹಣವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆಚಾರ್ಯರು ’ಸರಿ’ ಎಂದರು. ’ಹಣ ಜೋಕೆ’ ಎಂದು ಪುಟ್ಟ ಎಚ್ಚರಿಸಿದ. +ಊಟಕ್ಕೆ ಹೋಗಿದ್ದಾಗ ಮೆತ್ತಗೆ ಇವನಿಂದ ಜಾರಿಬಿಟ್ಟರಾಯಿತು ಎಂದುಕೊಂಡರು. ಯಾವ ಅಪೇಕ್ಷೆಯೂ ಇಲ್ಲದೆ ತನ್ನ ಜೀವನದಲ್ಲಿ ಒಳಗಾಗಲೆತ್ನಿಸುವ ಪುಟ್ಟನನ್ನು ಕಂಡು ಅವರಿಗೆ ಇದು ಖಂಡಿತ ಪ್ರಾರಬ್ಧಕರ್ಮದಿಂದ ಉಂಟಾದ ಸನ್ನಿವೇಶ ಎನ್ನಿಸಿತು. ಯಾವ ಜನ್ಮದ ಋಣವೋ ಹೀಗೆ ತೀರುತ್ತಿರಬಹುದು. ಒಟ್ಟು ಮನುಷ್ಯನ ಸಹವಾಸದಿಂದ ಬಿಡುಗಡೆಯಿಲ್ಲ. ಕಾಲಿಗೆ ಬಳಸಿಕೊಳ್ಳುವ ಬಳ್ಳಿ. ನನ್ನ ಬಾಳು ನನ್ನದೆಂದು ಯಾವ ಮುಖದಲ್ಲಿ ಹೇಳಲಿಕ್ಕೆ ಸಾಧ್ಯ. +“ಹೀಗೆ ಬನ್ನಿ” ಎಂದು ಪುಟ್ಟ ಜನ ಕಿಕ್ಕಿರಿದ ದೇವಸ್ಥಾನದ ಮಾರ್ಗವಾಗಿ ಒಂದು ಓಣಿಗೆ ಕರೆದುಕೊಂಡು ಹೋದ. ನಡೆಯುತ್ತ ನಡೆಯುತ್ತ ಅವರು ಒಂದು ನಿರ್ಜನವಾದ ಪ್ರದೇಶಕ್ಕೆ ಬಂದುಬಿಟ್ಟರು. ಅಲ್ಲೊಂದು ಹಳ್ಳ. ಹಳ್ಳ ದಾಟಲು ಬಿದಿರಿನ ಬೊಂಬಿನ ಸಾರ. ಬೇಲಿ ದಾಟಿ ಗದ್ದೆಗೆ ಬಂದರು. ಗದ್ದೆಯಂಚಲ್ಲಿ ನಡೆಯುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಕೋಳಿ ಅಂಕದ ನೆನಪಾಯಿತು. ಹೇಗೆ ಒಂದು ಹುಂಜ ಇನ್ನೊಂದನ್ನೇರಿ ರೆಕ್ಕೆಗಳ ಕೋಲಾಹಲದಲ್ಲಿ ನುರಿಯಿತು-ಹರಿದು, ಪರಚಿ, ಒಳಕ್ಕೆ ಒಳಕ್ಕೆ ಬಿಸಿಲಿನಲ್ಲಿ ಚೂಪಾಗಿ ಹೊಳೆದ ಚೂರಿ. ಮತ್ತ ಆ ಕಣ್ಣುಗಳು. ಹೆಂಡದ ವಾಸನೆ ಎಳೆದು ಹೊಯ್ದು ಬಿಡಿಸಿದರೂ ಅಂಗಾತ ಮಲಗಿಸಿಕೊಂಡು ಗಾಯವನ್ನು ಹೊಲಿಯುತ್ತಿದ್ದಾಗಲೂ ಕೊP ಕೊP ಎಂದು ತುಯ್ಯುತ್ತಿದ್ದುವು. ಛಲದ ದುರಾಶೆಯ ರಾಕ್ಷಸಲೋಕ. ಅಲ್ಲಿ ನಾನು ಅತಂತ್ರ ಪಿಶಾಚಿಯಂತಿದ್ದೆ. ಗಾಬರಿಪಟ್ಟೆ : ನನ್ನ ನಿಶ್ಚಯದ ಕ್ರಿಯೆಯಿಂದ ಆ ಲೋಕಕ್ಕೆ ನಾನು ಮಾರ್ಪಟ್ಟರೆ? ಮತ್ತೆ ಆ ದೊಂಬರ ಹುಡುಗಿ. ಸ್ಫುಟವಾಗಿ ಎದ್ದುಕಾಣಿವಂತೆ ಬಿಗಿಯಾದ ಬಟ್ಟೆತೊಟ್ಟು, ಬಿದಿರುಗಳದ ತುದಿಯಲ್ಲಿ ಆಕಾಶದಲ್ಲಿ ತುಯ್ದ ಕಸರತ್ತು. ಸರ್ರನಿಳಿದುಬಿಟ್ಟಳು. ಕುಣಿದಳು. ತಳ್ಳಿದರೆ ಕುಂಂii ಗೊಯಿಂP ಎನ್ನುವ ಗೋಲಿ. ಬಣ್ಣದ ನೀರು, ಗರಕ್ಕೆಂಬ ತೇಗು, ಅಪೇಕ್ಷೆ, ಅನುಭವ, ತೃಪ್ತಿ. ತತ್ಪರವಾದ ಕಣ್ಣುಗಳು. ಕಣ್ಣುಗಳು, ಬಣ್ಣಬಣ್ಣದ ಟೇಪು ಬೆಲೂನುಗಳ ಮಧ್ಯೆ, ತೇರಿನ ಶಿಖರದ ಸುತ್ತ, ನನ್ನ ಬೆನ್ನ ಹಿಂದೆ, ಎರಡು ಪಕ್ಕಗಳಲ್ಲಿ. ರೆಕ್ಕೆ-ಚೂರಿ-ಕೊಕ್ಕು-ಉಗುರುಗಳ ಸುತ್ತ ಕಣ್ಣುಗಳು. ತದ್ರೂಪ, ತತ್ಪರ. ಅಪೇಕ್ಷೆ ತೃಪ್ತಿಗಳ ಅದ್ವೆತ. ತತ್ತ್ವಮಸಿ. ತತ್ತ್ವಮಸಿ. ನನಗೆ ದಿಗಿಲು : ಪ್ರೇತತ್ವ ಕಳೆದು ರಾಕ್ಷಸತ್ವ ಪ್ರಾಪ್ತವಾಗುವ ದಿಗಿಲು. +“ನಾವು ಈಗ ಎಲ್ಲಿಗೆ ಹೋಗುತ್ತಿದ್ದೇವೆ. ಗೊತ್ತೋ?” ಪುಟ್ಟ ಬೀಡಿ ಹತ್ತಿಸಿ ತುಂಟನಗು ನಗುತ್ತ ಕೇಳಿದ. +ಪ್ರಾಣೇಶಾಚಾರ್ಯರು ಗೊತ್ತಿಲ್ಲವೆಂದು ತಲೆಯಾಡಿಸಿದರು. +“ನಿಮ್ಮ ಮರ್ಜೀನ್ನ ಬೇಕಾದರೆ ಒಪ್ಪಿದೆ, ಮಾರಾಯರೆ. ಎಲ್ಲಿಗೆ ಯಾಕೆ ಕೇಳದೆ ನಡಿ ಎಂದರೆ ನಡೆದುಬಿಡುತ್ತೀರಿ. ನಾನೂ ಸ್ವಲ್ಪ ಹಾಗೆಯೇ, ಮಾರಾಯರೆ. ಒಂದು ಸಾರಿ ನನ್ನ ಮಿತ್ರನೊಬ್ಬನ ಸಂಗಡ ಹೀಗೇ ನಾನು ಶಿವಮೊಗ್ಗಕ್ಕೂ ಹೋಗಿಬಿಟ್ಟೆ. ಪುಟ್ಟ ಹೋದರೆ ಹೋದಲ್ಲೆ ಅಂತ ನಮ್ಮ ಮಾವಂದಿರಿಗೆ ಅಷ್ಟು ಅಸಮಾಧಾನ. ’ಪುಟ್ಟನೊ? ನಮ್ಮ ಪುಟ್ಟ ಬಿಟ್ಟರೆ ಸಿಗ; ಸಿಕ್ಕರೆ ಬಿಡ’ ಎನ್ನುತ್ತಾರೆ ಅವರು”. +“ಯಾರೋ ನಿಮ್ಮ ಪೆಕಿಯವರ ಮನೆಗೆ ಎಂದಿರಿ ಅಲ್ಲವೆ?” +“ಆಚಾರ್ರೆ, ನನ್ನನ್ನು ಏಕವಚನದಲ್ಲೆ ಕರೀರಿ. ನೀವು ನನ್ನ ಬಹುವಚನದಲ್ಲಿ ಕರೆಯೋದು ನನ್ನ ಆಯಸ್ಸಿಗೆ ಒಳ್ಳೆದಲ್ಲ”. +“ಆಗಲಿ.” +“ಇಲ್ಲೇ ಒಂದು ತೋಟ. ಆ ಅದೇ ನೋಡಿ. ಅದನ್ನು ಗುತ್ತಿಗೆಗೆ ಹಿಡಿದು ನಮ್ಮ ಪೆಕಿಯವಳೊಬ್ಬಳು ಇದ್ದಾಳೆ. ಒಬ್ಬಂಟಿಯಾಗಿ. ಬಲು ಧೆರ್ಯದ ಹೆಂಗಸು. ಕೆತೊಳೆದು ಮುಟ್ಟಬೇಕು, ಅಂತಹ ರೂಪು. ನನಗೆ ದೂರದ ಸಂಬಂಧ. ನಿಮ್ಮಂತಹ ವೆದಿಕ ಬ್ರಾಹ್ಮಣರೆಂದರೆ ಬಲು ಮರ್ಯಾದೆ. ಅವಳಿಗಷ್ಟು ಮುಖ ತೋರಿಸಿಬಿಟ್ಟು ನಡೆದುಬಿಡುವ. ಇಲ್ಲದಿದ್ದರೆ ’ಏನೊ ಪುಟ್ಟ ಬಂದಿದ್ದಿಯಂತೆ, ಮುಖ ತೋರಿಸಿ ಇದ್ದೀಯೋ ಸತ್ತೀಯೋ ಎಂದು ವಿಚಾರಿಸಲಿಕ್ಕೂ ನಿನಗೆ ಅವಸರವಾಗಿಬಿಟ್ಟಿತ ಎನ್ನುತ್ತಾಳೆ. ನೋಡಿ, ಯಾರ ಮನಸ್ಸನ್ನೂ ನೋಯಿಸಲಿಕ್ಕೆ ಇಷ್ಟವಿಲ್ಲ. ಮನುಷ್ಯನ ಜೀವ ಅಂದರೆ ಈಗಲೋ, ಇನ್ನೊಂದು ಘಳಿಗೆಯೋ. ಯಾಕೆ ಯಾರನ್ನ ನೋಯಿಸಬೇಕು ಹೇಳಿ. ಅದಕ್ಕೆ ನಾನು ಎಲ್ಲದಕ್ಕೆ ಹಾ ಎಂದುಬಿಡುವೆ. ಆದರೂ ನೋಡಿ ಮಾರಾಯರೇ, ನನ್ನ ಹೆಂಡತಿಯೊಬ್ಬಳು ಮಾತ್ರ ತಿಂಗಳಿಗೊಮ್ಮೆ ತೌರಿಗೆ ಹೋಗಬೇಕೆಂದು ದುಂಬಾಲುಬೀತ್ತಾಳೆ. ಮೊದಮೊದಲು ಹಾ ಎಂದೆ. ಆಮೇಲೆ ಉಹೂ ಎಂದೆ. ಹೊಡೆದು ನೋಡಿದೆ. ಮತ್ತೆ ಅಯ್ಯೋ ಎನಿಸುತ್ತದೆ, ಹಾಡು ಕೇಳಿರಬೇಕು ನೀವು : ’ಮಡದಿಯ ಹೊಡೆದಾನು! ಮನದೊಳಗೆ ಮರುಗ್ಯಾನು! ಒಳಗೋಗಿ ಕಾಲು ಹಿಡಿದಾನು! ಒಳಗೋಗಿ ಕಾಲ ಹಿಡಿದು ತಾ ಕೇಳ್ಯಾನು! ನಾನ್ಹೆಚ್ಚೊ ನಿನಗೆ ತವರ್ಹೆಚ್ಚೊ’-ಹಾಗೆ ನಾನು.” +’ಇಕೊ ಬಂದುಬಿಟ್ಟೆವು’ ಎಂದು ತೋಟದ ಮೇಲಕ್ಕಿದ್ದ ಹೆಂಚು ಹೊದೆಸಿದ ಮನೆಗೆ ಬಂದರು. ’ಇದ್ದಾಳೊ ಇಲ್ಲವೋ. ಜಾತ್ರೆಗೆ ಹೋಗಿರಲಿಕ್ಕೂ ಸಾಕು’ ಎಂದು ಪುಟ್ಟ, ’ಪದ್ಮಾವತೀ’ ಎಂದು ಕರೆದ. ಜಗುಲಿಯ ಮೇಲೆ ಚಾಪೆಯ ಮೇಲೆ ಕೂತ ಪ್ರಾಣೇಶಾಚಾರ್ಯರಿಗೆ ’ಬಂದೆ’ ಎನ್ನುವ ಹೆಣ್ಣಿನ ಕೋಮಲಧ್ವನಿ ಕೇಳಿಸಿತು. ಆಪ್ಯಾಯಮಾನವಾದ ಧ್ವನಿ. ಭಯ. ಇವಳು ಯಾರು? ಪುಟ್ಟ ನನ್ನನ್ನು ಇಲ್ಲಿ ಯಾಕೆ ಕರೆದುಕೊಂಡು ಬಂದ. ’ಬಂದಿರಾ’ ಎಂದು ಉಪಚಾರ ಹೇಳಿತು ಅದೇ ಧ್ವನಿ. ಪ್ರಾಣೇಶಾಚಾರ್ಯರು ಬೆಚ್ಚಿ ತಿರುಗಿ ನೋಡಿದರು. ಹೊಸಿಲನ್ನು ದಾಟಿ ಕಂಬವನ್ನು ಎತ್ತಿದ ಕೆಯಿಂದ ಹಿಡಿದು ನಿಂತಿದ್ದಳು. ತನ್ನ ಕಣ್ಣು ತಿರುಗಿದ ಕ್ಷಣ ಎದೆಯ ಮೇಲೆ ಸೆರಗೆಳೆದುಕೊಂಡಳು. ’ಯಾರನ್ನು ಕರೆದುಕೊಂಡು ಬಂದಿದ್ದೇನೆ ನೋಡು. ಆಚಾರ್ಯರು’ ಎಂದ ಪುಟ್ಟ. ’ಬಂದಿರಾ’ ಎಂದಳು ಮತ್ತೊಮ್ಮೆ ನಾಚಿ. ’ಒಂದಿಷ್ಟು ಗಂಗಾಮೃತ ಕೊಡಲೆ?’ ಎಂದಳು. ’ಹಾಲುಹಣ್ಣಾದರೂ ತೆಗೆದುಕೊಳ್ಳಿ’ ಎಂದು ಆಗ್ರಹ ಮಾಡಿ ಒಳಕ್ಕೆ ಹೋದಳು. ಪ್ರಾಣೇಶಾಚಾರ್ಯರ ಮೆಬೆವತುಬಿಟ್ಟಿತು. ಅನುಮಾನವೇ ಇಲ್ಲ : ಮಾಲೇರರವಳು. ಒಂಟಿಯಾಗಿರುವವಳು. ನನ್ನನ್ನಿಲ್ಲಿ ಯಾಕೆ ಪುಟ್ಟ ಕರೆದುಕೊಂಡು ಬಂದ? ಪುಟ್ಟನ ಮಾತೇ ಇಲ್ಲ. ವಟಗುಟ್ಟುತ್ತಿದ್ದವ ಸುಮ್ಮನಾಗಿಬಿಟ್ಟಿದ್ದಾನೆ. ತನ್ನ ಬೆನ್ನಿನ ಹಿಂದೆ ಎರಡು ಕಣ್ಣುಗಳು ನೋಡುತ್ತಿವೆ ಎಂದು ದಿಗಿಲಾಯಿತು. ಆ ನೋಡುವ ಕಣ್ಣುಗಳಿಗೆ ತಾನು ಬಚ್ಚಿಟ್ಟ ಪದಾರ್ಥವಾಗಿಬಿಟ್ಟಿದ್ದೇನೆ ಎನ್ನಿಸಿತು. ತಿರುಗಿ ನೋಡಲು ಹೆದರಿಕೆ. ಆಸೆ. ಆ ಕಣ್ಣುಗಳು ಏನನ್ನು ಹೇಳುವುವೊ? ಕಣ್ಣು ಕಣ್ಣನ್ನು ಸಂಧಿಸಿದ ಕೂಡಲೆ ಅಮೂರ್ತವಾದದ್ದು ಏನು ರೂಪ ತಾಳಿಬಿಡುವುದೋ? ನೀಳವಾದ ಕಪ್ಪು ಕಣ್ಣುಗಳು. ಎದೆಯ ಇಳಿಬಿಟ್ಟ ಕೃಷ್ಣಸರ್ಪದ ಜಡೆ. ಗಳದ ಮೇಲೆ ತೂಗಿದ ಹುಡುಗಿ. ಚೂರಿ-ರೆಕ್ಕೆ-ಕೊಕ್ಕು-ಪುಕ್ಕ. ಕಾಡಿನಲ್ಲಿ ಕತ್ತಲಿನಲ್ಲಿ ಒಡ್ಡಿದ ಪುಷ್ಟ ಮೊಲೆ. ಬೆಳ್ಳಿಯ ಮಣ್ಣಿನ ಬಣ್ಣದ ನಗ್ನ ಮೊಲೆ. ಎಲ್ಲವನ್ನೂ ಬಿಚ್ಚಿಟ್ಟ ಪದಾರ್ಥದಂತೆ ನೋಡಿಬಿಡುವ ರೆಪ್ಪೆ ಮಿಟುಕದ ಕಣ್ಣು ಬೆನ್ನಿನ ಹಿಂದೆ. ಕೃಷ್ಣಸರ್ಪದ ಕಣ್ಣಿಗೆ ಪಕ್ಷಿ ಪರವಶ. ಭೀತಿ. ತಿರುಗಿದರು. ನಿಜ. ತಟ್ಟೆಯನ್ನು ಕೆಯಲ್ಲಿ ಹಿಡಿದು ಕದ್ದು ನೋಡುತ್ತಿದ್ದ ಕಣ್ಣುಗಳು. ಬಾಗಿಲಿನಿಂದ ಇಣುಕಿ ನೋಡುತ್ತಿದ್ದ ಕಣ್ಣುಗಳು ಸರ್ರೆಂದು ಕತ್ತಲಿಗೆ ಹೋದವು. ಬಳೆ ಸದ್ದಾಯಿತು. ಮತ್ತೆ ಬೆಳಕಿಗೆ ಬಂದಳು. ನೆಮ್ಮದಿ. ದೇಹದಲ್ಲಿ ಆಸೆಯನ್ನು ಕೊರೆಯುತ್ತ ತಿರುಗಿದ ಒಂದು ನಿರೀಕ್ಷೆ. ತಟ್ಟೆಯನ್ನಿಡಲು ಬಗ್ಗಿದಾಗ ಜಾರಿದ ಸೆರಗು, ಮುಂದಕ್ಕೊಡ್ಡಿದ ಮೊಲೆ. ಭಾರವಾಗಿ ನೋಡಿದ ಬೇಡಿದ ಕಣ್ಣು. ಎದೆಯಲ್ಲಿ ಬೆಂಕಿಯ ಸಂಚಾರ. ಅವರ ಕಣ್ಣುಗಳು ಕುದಿಯುತ್ತ ನೋಡಿದುವು. ಬೆನ್ನಿನ ಹಿಂದಿನ ಕಣ್ಣುಗಳಿಗೆ ಬಿಚ್ಚಿಟ್ಟ ಪದಾರ್ಥವಾಗಿಬಿಟ್ಟ ಭಾವನೆ ಮಾಯವಾಯಿತು. ಈಗ ತಾವೇ ಆ ಕಣ್ಣುಗಳು. ತತ್ತ್ವಮಸಿ. ’ಯಾವ ಕಡೆಯವರೊ’ ಎಂದಳು, ತೇಜಸ್ವಿಗಳಂತೆ ಕಾಣುತ್ತಿದ್ದ ಆಚಾರ್ಯರನ್ನು ನೋಡಿ ಪದ್ಮಾವತಿ. ’ಕುಂದಾಪುರದವರು’ ಎಂದ ಪುಟ್ಟ. ’ಶೀನಪ್ಪಯ್ಯನವರ ಪರಿಚಯವಿದೆ’ ಎಂದು ಸುಳ್ಳು ಹೇಳಿದ. ’ದೇವಸ್ಥಾನದ ವೆವಾಟು ನೋಡುತ್ತಾರೆ’ ಎಂದು ಇನ್ನೊಂದು ಸುಳ್ಳು ಹೇಳಿದ. ’ವಸೂಲಿ ಕೆಲಸಕ್ಕೆ ಈ ಪ್ರಾಂತಕ್ಕೆ ಬಂದವರು’ ಎಂದು ತನಗಿನ್ನೊಂದು ಹೊಸ ವ್ಯಕ್ತಿತ್ವವನ್ನೇ ಕೊಟ್ಟುಬಿಟ್ಟ. ಅಪರಿಚಿತರ ಕಣ್ಣುಗಳಲ್ಲಿ ಹೊಸ ರೂಪ, ಹೊಸ ವೇಷ. ನಾನು ನಿಜವಾಗಿ ಯಾರೆಂದು ಅನುಮಾನ ಬರುವಷ್ಟು ಒಂದು ದಿನದಲ್ಲೇ ಬೇರೆ ಬೇರೆ ವ್ಯಕ್ತಿಯಾಗಿಬಿಟ್ಟೆ. ಆಗಲಿ. ನಡದದ್ದು ನಡೆಯಲಿ. ಕಾಯುತ್ತ ಕೂತರು. ನುರಿದ ಪಕ್ಷಿ, ನುರಿಸಿಕೊಂಡ ಪಕ್ಷಿ. ಚೂರಿ. ಹಸಿಹಸಿ ಪ್ರಾಣವನ್ನು ಮುಟ್ಟಿಬಿಟ್ಟಂತೆ. ಕಿಟಾರನೆ ಕಿರುಚಿ ನಿಶ್ಚೇಷ್ಟಿತಳಾಗಿ ಬಿದ್ದ ಭಾಗೀರತಿ. ಮತ್ತೆ ಬೆಂಕಿಯಲ್ಲಿ ಧಗಧಗನೆ ಉರಿದ ತನ್ನ ತಪೋಭೂಮಿ. ಕಳೆದುಕೊಂಡೆ. ಭ್ರಷ್ಟನಾದೆ. ಈ ಕಣ್ಣುಗಳಿಗೆ ಬಿದ್ದು ಪ್ರೇತತ್ವದ ತ್ಯಾಗ, ಪ್ರಾಯಶಃ. +ಪದ್ಮಾವತಿ ತನ್ನ ಕಣ್ಣಿಗೆ ನೇರವಾಗಿ ಸಿಕ್ಕದಂತೆ ಹೋಗಿ ಬಾಗಿಲಿನ ಬುಡದಲ್ಲಿ ಕೂತಳು. ಹಾಗೆ ಕೂತು ತನ್ನನ್ನವಳು ನೋಡುತ್ತಿದ್ದಾಳೆಂದು ಪ್ರಾಣೇಶಾಚಾರ್ಯರಿಗೆ ಮತ್ತೆ ಕಸಿವಿಸಿಯಾಗತೊಡಗಿತು. ಕತ್ತನ್ನು ಧೆರ್ಯ ತಂದು ತಿರುಗಿಸಿದರು. ಎದೆ ಹೊಡೆದುಕೊಳ್ಳುತ್ತಿತ್ತು. ಪದ್ಮಾವತಿ ಎದ್ದು ಎಲೆಯಡಿಕೆ ತಟ್ಟೆಯನ್ನು ತಂದಿಟ್ಟಳು. ಪುಟ್ಟ ಎಲೆಗೆ ಸುಣ್ಣ ಹಚ್ಚಿ ಬೆರಳುಗಳ ಸಂದಿ ಸಿಕ್ಕಿಸಿ, ಅಡಿಕೆಯನ್ನು ಬಾಯಲ್ಲಿ ಎಸೆದು ಮಾತಿಗೆ ಪ್ರಾರಂಭಿಸಿದ. ಪದ್ಮಾವತಿ ಮತ್ತೆ ಬಾಗಿಲಿನ ಬುಡದಲ್ಲಿ ಕೂತಳು. ಪುಟ್ಟ ಹೇಳಿದ : +“ಆಚಾರ್ರು ದಾರಿಯಲ್ಲಿ ಸಿಕ್ಕರು. ಹಾಗೆ ಹರಟುತ್ತ ಬಂದೆವು. ಕುಂದಾಪುರದ ಮಾರ್ಗವಾಗಿ ಹೊರಟವರು ಇವರು. ನಾನು ಹೇಳಿದೆ-ಇವತ್ತು ರಾತ್ರೆ ಇಲ್ಲೆ ತಂಗಿದ್ದು ನಾಳೆ ತೀರ್ಥಹಳ್ಳಿಗೆ ಹೋಗಿ ಬಸ್ಸು ಹಿಡಿದರಾಯಿತು ಅಂತ, ಅಲ್ಲವೆ?” +ಪದ್ಮಾವತಿ ನಾಚಿಕೆಯಲ್ಲಿ ಒತ್ತಾಯಪಡಿಸುತ್ತ ಅಂದಳು : +“ಖಂಡಿತ. ಇಲ್ಲೆ ರಾತ್ರಿ ಮಲಗಿದ್ದು ಹೋದರಾಯಿತು”. +ಪ್ರಾಣೇಶಾಚಾರ್ಯರಿಗೆ ಮೂರ್ಛೆ ಬಂದಂತಾಯಿತು. ಕಿವಿ ಗವ್ವೆಂದು ಕೆ ಬೆವತಿತು. ಬೇಡ. ಬೇಡ. ಇವತ್ತು ಬೇಡ. ನಾಳೆ ನಿಶ್ಚಯಮಾಡಿ ಬಿಡಬೇಕಾದ ಗಳಿಗೆ ಈ ಕ್ಷಣದಲ್ಲೇ ಪ್ರಾಪ್ತವಾಗಿಬಿಡಬಹುದೆಂದು ನಾನು ಎಣಿಸಿರಲಿಲ್ಲ. ಇವತ್ತು ಬೇಡ. ನನಗೆ ಸೂತಕ. ಹೆಂಡತಿಯನ್ನು ಸುಟ್ಟು ಬಂದಿದ್ದೇನೆ. ನಾರಣಪ್ಪನ ಶವವನ್ನಿನ್ನೂ ತೆಗೆದಿಲ್ಲ. ಕೊಳೆಯುತ್ತಿದೆ. ಹದ್ದುಗಳು ಮನೆಯ ಮೇಲೆ ಬಂದು ಕೂತಿವೆ. ಹೇಳಿಬಿಡಬೇಕು. ಸತ್ಯ ನುಡಿದುಬಿಡಬೇಕು. ಇಲ್ಲಿಂದೆದ್ದು ಧಾವಿಸಿಬಿಡಬೇಕು. ಅಂತರ್ಧಾನವಾಗಿಬಿಡಬೇಕು. ಆದರೆ ದೇಹ ಅಲ್ಲೆ ಗಟ್ಟಿಯಾಗಿ, ಪದ್ಮಾವತಿ ನಿರೀಕ್ಷೆಯಲ್ಲಿ ನೋಡುತ್ತಿರುವ ಪದಾರ್ಥವಾಗಿ ಕೂತುಬಿಟ್ಟಿತು. ಪುಟ್ಟ ಹೇಳಿದ : +“ಸರಿ ಹಾಗಾದರೆ. ಇವರದ್ದಿನ್ನೂ ಊಟವಾಗಿಲ್ಲ. ದೇವಸ್ಥಾನದಲ್ಲಿ ಊಟ ಮಾಡಿಬರುತ್ತಾರೆ. ಇಲ್ಲಿಗೆ ಧರ್ಮಸ್ಥಳದ ಮೇಳ ಬಂದಿದೆಯಲ್ಲವೆ? ನೋಡಲು ಹೋಗುತ್ತೀಯ?” +“ಇಲ್ಲವಪ್ಪ. ಸಾಯಂಕಾಲ ಹೋಗಿ ದೇವರ ದರ್ಶನ ಮಾಡಿ ಬಂದುಬಿಡುವೆ. ನಿಮಗಾಗಿ ಕಾಯುವೆ”. +ತಾನು ಹಾ ಹೂ ಎನ್ನದೆ ಪುಟ್ಟ-ಪದ್ಮಾವತಿಯರ ನಡುವೆ ತನ್ನ ಬಾಳಿನ ನಿಶ್ಚಯವಾಗಿಬಿಟ್ಟಿತು. ’ಏಳಿರಿ’ ಎಂದ ಪುಟ್ಟ. ಆಚಾರ್ಯರು ಎದ್ದು ನಿಂತರು. ಪದ್ಮಾವತಿಯನ್ನು ನೋಡಿದರು. ಸ್ನಾನ ಮಾಡಿ ಎಣ್ಣೆ ಹಾಕದ ಕೂದಲು. ಮಾಂಸದಿಂದ ಪುಷ್ಟವಾದ ತೊಡೆ, ನಿತಂಬ, ಎದೆ, ನೀಳ, ಎತ್ತರ ರೂಪ. ಕಣ್ಣುಗಳಲ್ಲಿ ಹೊಳಪು. ನಿರೀಕ್ಷೆ. ಕಾದಿದೆ. ಪುಷ್ಪವತಿಯಾಗಿ ಐನೀರಿನ ಸ್ನಾನ ಮಾಡಿರಬೇಕು. ಉಸಿರಿಗೆ ಮೊಲೆಗಳು ಉಬ್ಬಿ ತಗ್ಗುತ್ತಿವೆ. ಒತ್ತಿಕೊಂಡರೆ ಕತ್ತಲಿನಲ್ಲಿ ಪುಟಿಯುತ್ತವೆ. ಹುಲ್ಲಿನ ಸುಗಂಧಿಯ ವಾಸನೆ. ತೇರು ತೇರು ಮಿಣುಕುಹುಳ. ಬೆಂಕಿ-ಕಟ್ಟಿಗೆಗೆ ಹತ್ತಿ, ಮತ್ತೆ ಕೆಕಾಲಿಗೆ ಹತ್ತಿ, ಹೊಟ್ಟೆಯಲ್ಲಿ ಪಚಪಚ ಬೆಂದು, ಚೀರಿ, ಸಿಡಿದು, ಬುರುಡೆಯನ್ನು ಚಳ್ಳನೆ ಸೀಳಿ ಎದೆಗೆ ನಾಲಗೆ ಚಾಚಿದ ಅಗ್ನಿ. ಇನ್ನೂ ಸುಡದ ನಾರಣಪ್ಪನ ಶವ. ಮಹಾಬಲ ಹೇಗೆ ಗುಡಿಗುಡಿ ಸೇದುತ್ತ ಚಾವಡಿಯ ಮೇಲೆ ಕೂತುಬಿಟ್ಟ. ಬಿದಿರು ಗಳದ ಮೇಲೆ ತೂಗಿತು, ತುಯ್ಯಿತು. ಯಾಜ್ಞವಲ್ಕ್ಯರು ಕರೆದು ಹೇಳಿದರು : ಪ್ರೀತಿ. ಯಾರ ಮೇಲೆ ಪ್ರೀತಿ, ಹೆಂಡತಿಯೆಂಬ ಪ್ರೀತಿ, ನನ್ನ ಮೇಲೇ ನನ್ನ ಪ್ರೀತಿ, ದೇವರೆಂಬ ಪ್ರೀತಿ, ನನ್ನ ಮೇಲೆ ನನ್ನ ಪ್ರೀತಿ. ಮೂಲ ಹುಡುಕುವೆ. ಗೆಲ್ಲುವೆ. ನೋಡಿದರು, ಮೆಚ್ಚಿದರು, ದೋಣಿಯಲ್ಲಿ ವ್ಯಾಸ ಕಮಂಡಲ ಹಿಡಿದು ಹುಟ್ಟಿದ. ನಡೆದುಬಿಟ್ಟ. “ಹೋಗಿ ಬನ್ನಿ ಹಾಗಾದರೆ. ನಾನು ಕಾದಿರುವೆ” ಎಂದಳು ಪದ್ಮಾವತಿ. ಮುಖ್ಯವಾಗಿ ಮಾರುತಿ ಕೆಕೊಟ್ಟುಬಿಟ್ಟ. ಮಹಾಬಲ ಮೋಸ ಮಾಡಿದ. ನಾರಣಪ್ಪ ರಚ್ಚು ತೀರಿಸಿಕೊಂಡ. ಬ್ರಾಹ್ಮಣರು ಬಂಗಾರಕ್ಕಾಗಿ ಆಸೆಪಟ್ಟರು. ಚಂದ್ರಿ ಕತ್ತಲಲ್ಲಿ ನಿಂತಳು-ಕೊಟ್ಟಳು-ನಡೆದುಬಿಟ್ಟಳು. ಭಾಗೀರತಿ ಚೀರಿ ಸತ್ತುಬಿಟ್ಟಳು. ಪುಟ್ಟ ಬೆನ್ನಿನ ಮೇಲೆ ಕೆಯಿಟ್ಟ. ಗದ್ದೆಯಂಚಲ್ಲಿ ನಿಲ್ಲಿಸಿದ. “ಏನೆನ್ನುತ್ತೀರಿ” ಎಂದ. “ನಾನು ಊಹಿಸಿದಂತೆಯೇ ಆಯಿತು” ಎಂದ. “ಅದು ಕಳಪೆ ಜನವೆಂದು ತಿಳಿಯಬೇಡಿ, ಮಾರಾಯರೆ. ಶೂದ್ರರಾರೂ ಸುತ್ತಮುತ್ತ ಸುಳಿದಿದ್ದಿಲ್ಲ. ಅಂತಿಂಥ ಸಾಮಾನ್ಯ ಬ್ರಾಹ್ಮಣರಿಗೂ ಒಪ್ಪುವ ಜೀವವಲ್ಲ. ದುಡ್ಡಿಗಲ್ಲ, ಕಾಸಿಗಲ್ಲ. ನೀವೇ ನೋಡಲಿಲ್ಲವೆ? ತೋಟವಿದೆ. ಋಷಿಗಳಿಗೂ ಮನಸ್ಸಾಗಿ ಬಿಡಬೇಕು-ಹಾಗಿದ್ದಾಳೆ. ಮತ್ತೆಲ್ಲಿ ನೀವು ನಾನು ಅಂದ ಸುಳ್ಳನ್ನು ಬಯಲು ಮಾಡಿಬಿಡುತ್ತೀರೋ ಎಂದು ಕಂಗಾಲಾಗಿದ್ದೆ. ಒಪ್ಪಿಗೆಯಾಯಿತು ತಾನೆ? ಈ ಪುಟ್ಟ ಸ್ನೇಹಕ್ಕೆ ಏನನ್ನಾದರೂ ಮಾಡುವವ. ಪರೋಪಕಾರಿ ಪುಟ್ಟ ಎಂಬೋದು ನನ್ನ ಬಿರುದು” ಎಂದು ನಗುತ್ತ ಬೆನ್ನು ತಟ್ಟಿದ. +ಗದ್ದೆ ದಾಟಿ, ಬೇಲಿ ದಾಟಿ, ಸಾರ ಹಾಯ್ದು, ಓಣಿಯಲ್ಲಿ ನಡೆದು ಮತ್ತೆ ಜಾತ್ರೆಯ ಗದ್ದಲಕ್ಕೆ. ತೇರಿನ ಸುತ್ತ ಜನ. ಸೋಡದಂಗಡಿಯ ಸುತ್ತ ಜನ. ಮಂಗನನ್ನು ಕುಣಿಸುವವನ ಸುತ್ತ ಜನ. ಮಕ್ಕಳ ಪೀಪಿ. ಬೆಲೂನು. ಈ ನಡುವೆ ಒಬ್ಬ ಬೇತಾಳ, ಪಿಶಾಚಿ. ಡಂಗುರ ಸಾರುತ್ತ ಒಬ್ಬ ಜನಸಂದಣಿಯ ನಡುವೆ ನಿಂತು ಕೂಗಿ ಕೂಗಿ ಹೇಳಿದ : ’ಶಿವಮೊಗ್ಗೆಯಲ್ಲಿ ಪ್ಲೇಗು ಮಾರಿಖಾಹಿಲೆ: : ಶಿವಮೊಗ್ಗೆಗೆ ಹೋಗೋರು ಇದ್ದರೆ ತೀರ್ಥಹಳ್ಳೀಲಿ ಇನಾಕ್ಯುಲೇಷ ಮಾಡಿಸಿಕೋಬೇಕು; ಮುನಿಸಿಪಾಲಿಟಿಯಿಂದ ಈ ಎಚ್ಚರಿಕೆ’. ಜನ ಕುತೂಹಲದಿಂದ ಕೇಳಿ ಮತ್ತೆ ಸೋಡ ಕುಡಿದರು. ಮಂಗನ ಕುಣಿತಕ್ಕೆ ಗಹಗಹಿಸಿ ನಕ್ಕರು. ಒಬ್ಬ ಉರ್ದು-ಕನ್ನಡದಲ್ಲಿ ಮಾತಾಡುವ ದ್ವಿಭಾಷಾಚತುರ ನೆರೆದಿದ್ದವರಿಗೆ ಮದ್ದನ್ನು ಮಾರುತ್ತಿದ್ದ : “ಬರೆ ಒಂದಾಣೆ, ಏP ಆಣಾ ಏP ಆಣಾ. ಹೊಟ್ಟೆ ನೋವಿಗೆ, ಕಿವಿನೋವಿಗೆ, ಬಹು ಮೂತ್ರಕ್ಕೆ, ಕಾಲುವಾತಕ್ಕೆ, ಮಕ್ಕಳ ಖಾಹಿಲೆಗೆ, ಮುಟ್ಟಿನ ದೋಷಕ್ಕೆ, ಕಜ್ಜಿಗೆ, ಸೀತ ಜ್ವರಕ್ಕೆ ಈ ಮಾತ್ರೆ. ಮಲೆಯಾಳಿ ಪಂಡಿತರು ಮಂತ್ರಿಸಿ ಮಾಡಿದ ಈ ಮಾತ್ರೆ ಕೇವಲ ಒಂದಾಣೆ. ಏP ಆಣಾ ಏP ಆಣಾ…” ಬೊಂಬಾಯಿ ಪೆಟ್ಟಿಗೆಯವ ಕುಣಿಯುತ್ತಿದ್ದ. “ತಿರುಪತಿ ತಿಮ್ಮಪ್ಪ ನೋಡು! ಬೊಂಬಾಯಿ ಸೂಳೆ ನೋಡು.” ಮೇಲೆ ಮರದ ರೆಂಬೆಯೊಂದಕ್ಕೆ ಮತ್ತು ಕೆಳಗೆ ನೆಲಕ್ಕೆ ಬಿಗಿದಿದ್ದ ದಪ್ಪನೆಯ ಮಿಣಿಯ ಇಳಿಜಾರಿನಲ್ಲೊಬ್ಬದೊಂಬ ಜರ್ರನೆ ಜಾರಿಬಿಟ್ಟು ನಿಂತು, ಸಲಾಮು ಮಾಡಿದ. ಬೆಲೂನನ್ನು ಬೇಡಿದ ಒಬ್ಬ ಹುಡುಗನನ್ನ ತಾಯಿ ಹೊಡೆದಳು. ಹುಡುಗ ಅತ್ತ. ಕಾಫಿ ಹೋಟಲಿನಿಂದ ಗ್ರಾಮಾಫೋ ಹಾಡು. ಬ್ಯಾರಿಯ ಅಂಗಡಿಯಲ್ಲಿ ಬಣ್ಣಬಣ್ಣದ ಮಿಠಾಯಿ. ಗೌಡರ, ಹೆಗ್ಗಡತಿಯರ ರಾಗವಾದ ಮಾತು. ತೇರಿನ ಮೇಲೆ ಬಡಬಡ ಮಂತ್ರ. ಸ್ಮಾರ್ತ ಬ್ರಾಹ್ಮಣರ ವಟವಟ ಮಾತು. ಈಗ ಇಲ್ಲಿ ಏತನ್ಮಧ್ಯೆ ನಿಶ್ಚಯಿಸಬೇಕು. ತಾನು ಇಪ್ಪತ್ತೆದು ವರ್ಷದ ಸಂಸ್ಕಾರವನ್ನು ಬಿಟ್ಟು ಈ ಲೋಕದವನಾಗಿಬಿಡುವ ನಿರ್ಧಾರ ಮಾಡಬೇಕು. ಇಲ್ಲ. ಮೊದಲು ನಾರಣಪ್ಪನ ಶವಸಂಸ್ಕಾರವಾಗಬೇಕು. ಆಮೇಲೆ ನಿಶ್ಚಯ. ಗುರುಗಳ ಅಪ್ಪಣೆ ಪಡೆದು ಇವತ್ತು ಗರುಡ ಲಕ್ಷ್ಮಣರು ಬಂದಿರುತ್ತಾರೆ. ಗುರುಗಳು ಬೇಡವೆಂದಿದ್ದರೆ ನಾನೇನು ಹೇಳಬೇಕು. ಮತ್ತದೇ ಸಂಕಟ. +ದೇವಸ್ಥಾನದ ಸಮೀಪದಲ್ಲಿ ನಿಂತರು. ಕುರುಡನೊಬ್ಬ ಶ್ರುತಿಪೆಟ್ಟಿಗೆ ಹಿಡಿದು ’ಹೇಗೆ ಮೆಚ್ಚಿಸಲು ಅರ್ಚಿಸಲಿ ನಿನ್ನ’ ಎಂದು ದಾಸರ ಪದವನ್ನು ಹಾಡುತ್ತಿದ್ದ. ಪುಟ್ಟ ಅವನ ತಟ್ಟೆಗೆ ಬಿಲ್ಲೆ ಹಾಕಿದ್ದನ್ನು ಕಂಡು, ಮೋಟು ಕೆಕಾಲಿನ ಇನ್ನೊಬ್ಬ ಭಿಕ್ಷುಕ ತೆವಳುತ್ತ ಬಂದು ಮೊಂಡುಕೆಯನ್ನು ಆಡಿಸುತ್ತ ’ಕೆಕಾಲಿಲ್ಲದವ’, ’ಕೆಕಾಲಿಲ್ಲದವ’ ಎಂದು ಗೋಗರೆದು, ಅಂಗಾತ ಮಲಗಿ, ಕಾಲೆತ್ತಿ ಕೆಯೆತ್ತಿ ಬಡಿದುಕೊಳ್ಳುತ್ತ, ಬೆರಳುಗಳು ಕೊಳೆತು ಗುಜ್ಜಾದ ಜಾಗಗಳನ್ನು ಪ್ರದರ್ಶಿಸಿದ. ಪ್ರಾಣೇಶಾಚಾರ್ಯರಿಗೆ ತೊನ್ನಿನಲ್ಲಿ ಕರಗಿಹೋಗುತ್ತಿದ್ದ ದೇಹವನ್ನು ಕಂಡು ನಾರಣಪ್ಪನ ಸಂಸ್ಕಾರವಿಲ್ಲದ ಕೊಳೆಯುವ ಹೆಣ ಮರುಕಳಿಸಿತು. ಪುಟ್ಟ ಇನ್ನೊಂದು ಬಿಲ್ಲೆಯೊಗೆದ. ಇನ್ನಷ್ಟು ದೇಹಗಳು ಮಗುಚುತ್ತ ತೆವಳುತ್ತ ಹೊಟ್ಟೆ ಹೊಡೆದುಕೊಳ್ಳುತ್ತ ಬಾಯಿ ಬಡಿದುಕೊಳ್ಳುತ್ತ ನುಗ್ಗಿ ಬಂದವು. ’ಹೋಗುವ, ಹೋಗುವ’ ಎಂದರು ಆಚಾರ್ಯರು. +“ನೀವು ಹೋಗಿ ಊಟ ಮಾಡಿ ಬನ್ನಿ” ಎಂದ ಪುಟ್ಟ. +“ನೀನೂ ಬಾ” ಎಂದರು ಪ್ರಾಣೇಶಾಚಾರ್ಯರು. ಥಟ್ಟನೇ ಅವರಿಗೆ ಜೊತೆಯಲ್ಲೊಬ್ಬನಿಲ್ಲದೆ ದೇವಸ್ಥಾನದ ಪ್ರಾಂಗಣದಲ್ಲಿ ಊಟಕ್ಕೆ ಕೂತ ಬ್ರಾಹ್ಮಣರ ಕಣ್ಣಿಗೆ ಬೀಳಲು ದಿಗಿಲಾಯಿತು. ಜೊತೆಗೆ ಪುಟ್ಟನಿಲ್ಲದೆ ಕದಲಲಾರೆ ಎನ್ನಿಸಿತು. ಹೀಗೇ ಒಂಟಿಯಾಗಿರಲಾರೆ ಎಂದೆನ್ನಿಸಿದ್ದೆ ಇಲ್ಲ ಅವರಿಗೆ ಈ ಮುಂಚೆ. +“ಒಳ್ಳೆ ಹೇಳುತ್ತೀರಿ. ಮಾಲೇರರವ ನಾನೆಂಬುದನ್ನು ಮರತೇಬಿಟ್ಟಿರ” ಎಂದ ಪುಟ್ಟ ಅದಕ್ಕೆ. +“ಚಿಂತೆಯಿಲ್ಲ, ಬಾ” ಎಂದರು. +“ಹಾಸ್ಯ ಮಾಡುತ್ತೀರೊ ಹೇಗೆ? ಈ ಮೇಳಿಗೆ ತುಂಬ ನನ್ನ ಪರಿಚಯದವರು ಮಾರಾಯರೆ. ಇಲ್ಲವಾದರೆ ಒಂದು ಕೆನೋಡಿಬಿಡುತ್ತಿದ್ದೆ. ಓಂii, ನಾನು ಇದನ್ನ ಮಾಡಿದ್ದಿಲ್ಲವೆಂದುಕೊಳ್ಳಬೇಡಿ. ಉಡುಪಿಯಲ್ಲಿ ಚೌಕಿಯ ಊಟಮಾಡಿದ್ದುಂಟು. ಅಲ್ಲಿ ಕೇಳೋವರು ಯಾರು? ಓಂii, ಸೋನೆಗಾರನ ಹುಡುಗನೊಬ್ಬ ಸುಳ್ಳು ಹೇಳಿ ಮಠದಲ್ಲಿ ಕೆಲಸಕ್ಕೆ ಸೇರಿದ್ದು ಗೊತ್ತಲ್ಲವೆ ನಿಮಗೆ. ಹಾಗೆ ನೋಡಿದರೆ ನಮಗೇನು ಜನಿವಾರವಿಲ್ಲವೆ? ಮಾತಿಗೆ ಹೇಳಿದೆ ಅಷ್ಟೆ. ನಿಮ್ಮ ಜೊತೆ ಊಟಮಾಡುವಷ್ಟು ಸೊಕ್ಕಿನವನಲ್ಲಪ್ಪ ನಾನು. ನೀವು ಹೋಗಿಬನ್ನಿ. ನಾನು ಇಲ್ಲೇ ಕಾದಿರುವೆ. ” +ಮುತ್ತಿದ್ದ ಭಿಕ್ಷುಕರ ಆಲಾಪವನ್ನು ಸಹಿಸಲಾರದೆ ಪ್ರಾಣೇಶಾಚಾರ್ಯರು ದಿಗ್ಭ್ರಮೆಯಲ್ಲಿ ಒಳಗೆ ನಡೆದುಬಿಟ್ಟರು. +ದೇವಸ್ಥಾನದ ನಾಲ್ಕು ಜಗುಲಿಯ ಮೇಲೂ ಬಾಳೆಲೆ ಹಾಕಿತ್ತು. ಎಲೆಯೊಂದರ ಮುಂದೆಯಂತೆ ಅಶನಾರ್ಥಿ ಬ್ರಾಹ್ಮಣರು ಕೂತಿದ್ದರು. ಅವರೆಲ್ಲರ ಮುಖಗಳನ್ನು ನೋಡುತ್ತಿದ್ದಂತೆ ಪ್ರಾಣೇಶಾಚಾರ್ಯರ ಎದೆ ಧಸಕ್ಕೆಂದು ಬಿಟ್ಟಿತು. ಪತ್ತೆಯಾಗಿಬಿಟ್ಟರೆ? ಓಡಿಹೋಗಿಬಿಡುವ ಎನ್ನಿಸಿತು. ಆದರೆ ಕಾಲನ್ನೆತ್ತಲೂ ಸಾಧ್ಯವಾಗಲಿಲ್ಲ. ನಿಶ್ಚೇಷ್ಟಿತರಾಗಿ ನಿಂತು ಯೋಚಿಸಿದರು : ನಾನೇನು ಮಾಡುತ್ತಿದ್ದೇನೆ? ಎಂತಹ ಚಾಂಡಾಲ ಕೃತ್ಯ ಮಾಡುತ್ತಿದ್ದೇನೆ? ಸೂತಕದಲ್ಲಿರುವ ನಾನು ತಿಳಿದೂ ತಿಳಿದೂ ಈ ಬ್ರಾಹ್ಮಣರ ಜೊತೆ ಊಟ ಮಾಡಲೆ? ಅವರೆಲ್ಲರಿಗೆ ಮೆಲಿಗೆ ಮಾಡಲೆ? ಮೆಲಿಗೆಯಾದರೆ ರಥ ಮುಂದಕ್ಕೆ ಹೋಗುವುದಿಲ್ಲೆಂದು ನಂಬಿದ ಜನ ಇವರು. ಈಗ ನಾನಿಲ್ಲಿ ಕೂತು ಊಟ ಮಾಡಿದರೆ ನಾರಣಪ್ಪ ಗಣಪತಿಯ ಮೀನನ್ನು ಹಿಡಿದು ಬ್ರಾಹ್ಮಣ್ಯ ನಾಶಮಾಡಿದಷ್ಟೇ ಭ್ರಷ್ಟ ಕೆಲಸ ಮಾಡಿದಂತೆ. ಊಟ ಮಾಡುತ್ತಿರುವಾಗಲೆಲ್ಲಾದರೂ ತಾನು ಪ್ರಾಣೇಶಾಚಾರ್ಯನೆಂದು ಪತ್ತೆಯಾಗಿಬಿಟ್ಟರೆ… ತನಗೆ ಸೂತಕವೆಂದು ತಿಳಿದುಬಿಟ್ಟರೆ…ಕೋಲಾಹಲವಾಗಿಬಿಡುತ್ತದೆ. ಇಡಿಯ ರಥೋತ್ಸವವೇ ನಿಂತುಬಿಡುತ್ತದೆ. ಸಾವಿರ ಕಣ್ಣುಗಳು ನನ್ನನ್ನು ನುಂಗಿಬಿಡುತ್ತವೆ. “ಇಲ್ಲೊಂದು ಎಲೆಯಿದೆ. ಬನ್ನಿ, ಬನ್ನಿ. ” ಬೆಚ್ಚಿದರು. ನೋಡಿದರು. ತುದಿಯಲ್ಲಿ ಕೂತ ಬ್ರಾಹ್ಮಣನೊಬ್ಬ ಕರೆಯುತ್ತಿದ್ದಾನೆ, ಏನು ಮಾಡಲಿ? ಪರಮಾತ್ಮ, ಏನು ಮಾಡಲಿ? ನಿಂತೇ ಇದ್ದರು. “ಕರೆದದ್ದು ಕೇಳಿಸಲಿಲ್ಲವೆ?” ಕರೆದ ಬ್ರಾಹ್ಮಣ ನಗುತ್ತ ಕೆಹಿಡಿದ. ಖಾಲಿಯಿರುವ ಎಲೆ ತೋರಿಸಿದ. “ನೋಡಿ, ನಿಮಗೆಂದು ಎಲೆಯ ಮೇಲೆ ಲೋಟವನ್ನಿಟ್ಟು ಬಂದೆ. ಇಲ್ಲವಾದರೆ ಮುಂದಿನ ಪಂಕ್ತಿಗೆ ನೀವು ಕಾಯಬೇಕಾಗಿತ್ತು” ಎಂದ. ಆಚಾರ್ಯರು ಯಾಂತ್ರಿಕವಾಗಿ ಅವನ ಜೊತೆ ಹೋಗಿ ಕೂತರು. ತಲೆ ಸುತ್ತತೊಡಗಿತು. +ಮನಸ್ಸನ್ನು ಸ್ತಿಮಿತಕ್ಕೆ ತರಲು ಯತ್ನಿಸುತ್ತ ಯೋಚಿಸಿದರು : +ದೇವರೆ, ಈ ಭೀತಿಯ ಮೂಲವೆಲ್ಲಿ? ಪುನರ್ಜನ್ಮದ ಮೊದಲಿನ ಯಾತನೆಯೆ ಇದು? ಯಾರಾದರೂ ಕಂಡುಬಿಟ್ಟರೆ ಎನ್ನುವ ಆತಂಕವೇ? ಈ ಭೀತಿಯನ್ನು ಹೇಗೆ ನಿರ್ಮೂಲಗೊಳಿಸಲಿ? ಪದ್ಮಾವತಿಯ ಜೊತೆ ಈ ರಾತ್ರೆ ಮಲಗಿದರೆ ತೀರುವ ಭೀತಿಯೇ ಇದು? ಚಂದ್ರಿಯ ಸಂಗಡ ಹೋಗಿ ಬಾಳಿಬಿಟ್ಟರೆ ತೀರುವ ಭೀತಿಯೆ ಇದು? ನನ್ನ ನಿಶ್ಚಯದ ಬೆಲೆ ಏನು? ಯಾವ ನಿಶ್ಚಯವನ್ನು ಮಾಡಲಾರದೆ ಪ್ರೇತತ್ವವೇ ನನಗೆ ಖಾತ್ರಿಯಾದ ಸ್ಥಿತಿಯೇ? ಈಗ ಪುಟ್ಟನಿರಬೇಕಿತ್ತು. ಎದ್ದುಬಿಡಲೆ? ಏನೆಂದುಕೊಂಡಾನು ಪಕ್ಕದಲ್ಲಿ ಇರುವ ಬ್ರಾಹ್ಮಣ? +ಒಬ್ಬ ಬ್ರಾಹ್ಮಣ ಅಭಿಗಾರವನ್ನು ಎಲೆಯ ತುದಿಗೆ ಸೋಕಿಸುತ್ತ ನಡೆದ. ಅವನ ಹಿಂದೊಬ್ಬ ಪಾಯಸವನ್ನು ಎಲೆಯ ಅಂಚಿಗೆ ಚಮಚದಿಂದ ಸುರಿಯುತ್ತ ನಡೆದ. ಅವನ ಹಿಂದಿನಿಂದ ಇಬ್ಬರು ದಾರ್ಢ್ಯ ಬ್ರಾಹ್ಮಣರು ಅನ್ನವನ್ನು ಬಡಿಸುತ್ತ ’ದಾರಿ ದಾರಿ ದಾರಿ’ ಎಂದರು. ಮತ್ತೆ ಕೋಸಂಬರಿ. ಸೌತೆಕಾಯಿಯ ಪಲ್ಯ. ಬಡಿಸಲು ಬರುವ ಪ್ರತಿಯೊಂದೂ ಹೊಸ ಮುಖ ಕಂಡು ಹೆದರಿಕೆ. ನಾನು ಇವನಿಗೆ ಪರಿಚಯವಿದ್ದುಬಿಟ್ಟರೆ- +ಪಕ್ಕದಲ್ಲಿ ಕೂತವ-ತನಗೆ ಎಲೆ ಕೊಟ್ಟವ-ಭೀಮಸೇನನಂತಹ ಕಾಯದ ಕಪ್ಪು ಬಣ್ಣದ ಬ್ರಾಹ್ಮಣ. ನೊಸಲಿಗೆ ಗಂಧವನ್ನು ಅಡ್ಡಲಾಗಿ ಎಳೆದ ಸ್ಮಾರ್ತ. ಅವನನ್ನು ಕಂಡೇ ಆಚಾರ್ಯರಿಗೆ ದಿಗಿಲಾಗಿತ್ತು. ಮತ್ತೆ ಅವನ ಪ್ರಶ್ನೆಗಳೆಲ್ಲವೂ ಅವರನ್ನು ತಬ್ಬಿಬ್ಬಾಗಿ ಮಾಡಿದವು : +“ಯಾವ ಕಡೆಯವರೊ?” +“ಘಟ್ಟದ ಕೆಳಗೆ.” +“ನಾನು ಈ ಊರವನೆ. ಘಟ್ಟದ ಕೆಳಗೆ ಎಲ್ಲೋ?” +“ಕುಂದಾಪುರ…” +“ಯಾವ ಜನವೋ?” +“ವೆಷ್ಣವ” +“ಯಾವ ಪಂಗಡವೋ?” +“ಶಿವಳ್ಳಿ” +“ನಾವು ಕೋಟದವರು. ನಿಮ್ಮ ಗೋತ್ರ?” +“ಭಾರದ್ವಾಜ”. +“ನಾವು ಅಂಗೀರಸ ಗೋತ್ರದವರು. ಮಹಾರಾಯರೆ, ನಿಮ್ಮ ಪರಿಚಯವಾದ್ದು ಬಹಳ ಸಂತೋಷವಾಯ್ತು. ನಮ್ಮದೊಂದು ಹುಡುಗಿಯಿದೆ, ಸ್ವಾಮಿ. ಇನ್ನೇನು ಒಂದೆರಡು ವರ್ಷಕ್ಕೆ ನೆರೆದುಬಿಡುವಳು. ಮೆನೆರೆಯುವ ತನಕ ಮದುವೆ ಮಾಡದಷ್ಟು ನಾವಿನ್ನೂ ಕೆಟ್ಟಿಲ್ಲ. ಆದಕಾರಣ ಹುಡುಗಿಗೊಂದು ಅನುರೂಪನಾದ ವರನನ್ನು ಹುಡುಕುತ್ತಿದ್ದೇನೆ. ನಿಮ್ಮ ಕಡೆಯೊಂದು ಎಲ್ಲಾದರೂ ಗಂಡಿದ್ದರೆ ತಿಳಿಸಿ, ಮಹಾರಾಯರೆ. ಕನ್ಯಾಹೊರೆ ಕಳೆದ ಉಪಕಾರವಾದಂತೆ. ಊಟ ಮುಗಿದಮೇಲೆ ಮನೆಗೆ ಹೋಗುವ ಬನ್ನಿ. ನಿಮ್ಮ ಕೆಯಲ್ಲಿ ಜಾತಕದ ಪ್ರತಿಯೊಂದು ಕೊಡುತ್ತೇನೆ. ಇವತ್ತು ನಮ್ಮಲ್ಲೆ ಇಳಿದಿದ್ದರಾಯಿತು.” +ಪ್ರಾಣೇಶಾಚಾರ್ಯರು ದೊನ್ನೆಗೆ ಸಾರು ಹಾಕಿಸಿಕೊಳ್ಳುತ್ತ ತಲೆ ಎತ್ತಿ ನೋಡಿದರು. ಸಾರನ್ನು ಬಡಿಸುವಾತ ಇವರ ಮುಖವನ್ನೇ ನೋಡುತ್ತಿದ್ದ. ಕ್ಷಣ ನಿಂತ. ಮತ್ತೆ ಮುಂದಕ್ಕೆ ಹೋದ. +“ಆಗಲಿ” ಎಂದರು ಪ್ರಾಣೇಶಾಚಾರ್ಯರು ಅಲ್ಲಿಗೇ ಮಾತನ್ನು ಸಾಕುಮಾಡಲು. ಈ ಸಾರು ಬಡಿಸಲು ಬಂದವನಿಗೆ ನನ್ನ ಪರಿಚಯವಿರಬಹುದೇ? ಹಣೆಯ ಮೇಲೆ ಅಂಗಾರವಿತ್ತು. ಮಾಧ್ವರವ. ನನ್ನ ಪರಿಚಯವಿರಲಿಕ್ಕೆ ಸಾಕು. ಎದ್ದುಬಿಡುವ ಎಂದರೆ ಪರಿಷಂಚನೆ ಕಟ್ಟಿಯಾಗಿದೆ. ಕೆಯಲ್ಲಿ ತೀರ್ಥ ಹಿಡಿದಾಗಿದೆ. ’ಶ್ರೀಮz ರಮಾರಮಣ ಗೋವಿಂದಾ ಗೋವಿಂದ’ ಎಂದು ಕುಡಿದೂ ಆಗಿದೆ. ಬಿಸಿಬಿಸಿ ಅನ್ನಕ್ಕೆ ಸಾರನ್ನು ಕಲಿಸಿ ತಿಂದರು. ಎಷ್ಟು ದಿನವಾಗಿಬಿಟ್ಟಿತ್ತು ಊಟ ಮಾಡಿ? ಪರಮಾತ್ಮ. ಈ ಗಂಡಾಂತರದಿಂದ ಪಾರು ಮಾಡು. ಇವತ್ತಷ್ಟಕ್ಕೆ ನಾನು ಪತ್ತೆಯಾಗದಂತೆ ನೋಡಿಕೊ. ನನ್ನ ನಿಶ್ಚಯ ಇದು ಎಂದು ನಾನು ನಿಶ್ಚಯ ಮಾಡಲಾರೆ, ನನ್ನ ನಿಶ್ಚಯದಲ್ಲಿ ಉಳಿದವರೂ ಭಾಗಿಯಾಗಿಬಿಡುತ್ತಾರೆ. ಇಷ್ಟೆಲ್ಲ ಆದಮೇಲೆ ನಾರಣಪ್ಪನ ಶವದ ಸಂಸ್ಕಾರ ನಾನು ಮಾಡಬೇಕಿತ್ತು. ಆದರೆ ಒಬ್ಬನೇ ಹೇಗೆ ಮಾಡಲಿ? ಹೆಣವನ್ನು ಎತ್ತಿಹಾಕಲು ಇನ್ನು ಮೂವರು ಬೇಕು. ಆ ಮೂವರಿಗೆ ನಾನು ಹೇಳಬೇಕು. ಹೇಳಿದರೆ ಅವರ ಬ್ರಾಹ್ಮಣ್ಯವನ್ನು ನನ್ನ ನಿಶ್ಚಯಕ್ಕೆ ಒಳಪಡಿಸಿಬಿಟ್ಟಂತೆ. ಇದೇ ನನ್ನ ಆತಂಕದ, ಸಂಕಟದ ಮೂಲ. ಆದರೆ ಕಂಡರಿಯದಂತೆ ಚಂದ್ರಿಯ ಜೊತೆ ಕೂಡಿದಾಗಲೂ ಅಗ್ರಹಾರದ ಬಾಳನ್ನು ನನ್ನ ಕ್ರಿಯೆಗೆ ಒಳಪಡಿಸಿಬಿಟ್ಟೆ. ಪರಿಣಾಮವಾಗಿ ನನ್ನ ಬಾಳು ಲೋಕದ ಕಣ್ಣಿಗೆ ತೆರೆದಿಟ್ಟುಬಿಟ್ಟ ಪದಾರ್ಥವಾಗಿಬಿಟ್ಟಿತು. ಸಾರನ್ನು ಬಡಿಸಿದವ ಇನ್ನೊಮ್ಮೆ ’ಸಾರು ಸಾರು’ ಎಂದು ಕೂಗುತ್ತ ಬಂದ. ಮತ್ತೆ ತನ್ನ ಎಲೆ ಎದುರು ನಿಂತು ’ಸಾರು’ ಎಂದ. ಹೆದರುತ್ತ ಆಚಾರ್ಯರು ಕಣ್ಣೆತ್ತಿದರು. +“ನಿಮ್ಮನ್ನೆಲ್ಲೋ ನೋಡಿದ್ದೀನಿ” ಎಂದ ಅವ. +“ಇರಬಹುದು” ಎಂದರು ಆಚಾರ್ಯರು. ಮತ್ತೆ ಅವ ದೇವರ ದಯದಿಂದ ಇನ್ನೊಂದು ಸಾಲಿಗೆ ಸಾರನ್ನು ಬಡಿಸುತ್ತ ಹೋದ. ಅವನ ಕಣ್ಣುಗಳು ತನ್ನನ್ನೇ ನೆನೆಯುತ್ತಿವೆ; ಮನಸ್ಸಿನೊಳಗೆ ನನ್ನ ಬಿಂಬವನ್ನು ಕಳಿಸಿ ಪತ್ತೆ ಹಚ್ಚುತ್ತಿವೆ. ಚಂದ್ರಿಯ ಜೊತೆ ಹೋಗಿದ್ದರೂ ಯಾರಾದರೊಬ್ಬ ನನ್ನನ್ನು ಸಂಧಿಸಿ ’ನೀವು ಯಾರು’ ಎನ್ನುತ್ತಾನೆ. ಯಾವ ಗೋತ್ರ? ಯಾವ ಪಂಗಡ? ಬ್ರಾಹ್ಮಣ್ಯವನ್ನು ಸಂಪೂರ್ಣ ತೊರೆದು ನಿಲ್ಲದ ಹೊರೆತು ಇದರಿಂದ ಸ್ವತಂತ್ರನಾಗಲಾರೆ. ತೊರೆದರೆ ಕೋಳಿ ಅಂಕದ ಆ ವ್ಯಾಘ್ರಲೋಕಕ್ಕೆ ಹುಳದಂತೆ ಬಿದ್ದು ಸುಟ್ಟುಬಿಡುವೆ. ಈ ಭೇತಾಳತನದಿಂದ ಹೇಗೆ ಪಾರಾಗಲಿ? +“ಎರಡನೆಯ ಸಾರಿ ಬಡಿಸಿದ ಸಾರಿಗೆ ನೀರು ಬೆರಸಿಬಿಟ್ಟಿದ್ದಾರೆ” ಎಂದ ಪಕ್ಕದಲ್ಲಿ ಕೂತ ಬ್ರಾಹ್ಮಣ. “ಏನು ಬರೀ ಸಾರಿನಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀರಲ್ಲ. ಭಕ್ಷ್ಯಭೋಜ್ಯಗಳು ಬರುವುದಿದೆ. ಕಾಯಿರಿ” ಎಂದು ಹೇಳಿದ. +ಸಾರನ್ನು ತಂದವನೇ ಮತ್ತೆ ಹುಳಿಯನ್ನು ಬಡಿಸುತ್ತ ಅದೇ ಸಾಲಿಗೆ ಬಂದ, ಎದುರು ನಿಂತು, +“ಎಲ್ಲೆಂದು ನೆನಪೇ ಆಗುತ್ತಿಲ್ಲ. ಮಠದಲ್ಲಿ ಇರಬಹುದೆ? ಆರಾಧನೆಗೆ ಒಮ್ಮೊಮ್ಮೆ ನಾನು ಅಡಿಗೆಕೆಲಸಕ್ಕೆ ಹೋಗುವುದುಂಟು. ನಮ್ಮ ಅಗ್ರಹಾರ ಹೊಳೆಯಾಚೆಯಾಯಿತು. ಮೊನ್ನೆ ಮಠದಲ್ಲಿ ಆರಾಧನೆಯ ಅಡಿಗೆ ಮಾಡಿ ಇಲ್ಲಿಗೆ ಬಂದೆ” +ಎಂದು ಮತ್ತೆ ಅವರಸದಲ್ಲಿ ’ಹುಳೀ ಹುಳೀ ಹುಳೀ’ ಎಂದು ಸಾರುತ್ತ, ಇನ್ನೊಂದು ಪಂಕ್ತಿಗೆ ಬಡಿಸುತ್ತ ನಡೆದ. +ತಾನೀಗ ಎದ್ದು ನಡೆದುಬಿಡಬೇಕೆಂದುಕೊಂಡರು. ಆದರೆ ಕಾಲು ಮರಗಟ್ಟಿಬಿಟ್ಟಿತ್ತು. ಪಕ್ಕದಲ್ಲಿ ಕೂತ ಬ್ರಾಹ್ಮಣ, +“ನಮ್ಮ ಹುಡುಗಿ ಅಡಿಗೆ ಕೆಲಸದಲ್ಲಿ ಜಾಣಳು. ಹಿರಿಯರಿಗೆ ವಿಧೇಯಳಾಗಿ ನಡೆಯುತ್ತಾಳೆ. ಅತ್ತೆ ಮಾವ ಇರುವ ದೊಡ್ಡದೊಂದು ಕುಲೀನರ ಮನೆಗೆ ಸೇರಿಸಬೇಕೆಂದು ನಮ್ಮ ಹಂಬಲ” ಎಂದ. +ಈ ಭೀತಿಯಿಂದ ಪಾರಾಗಲು ಇರುವುದು ಒಂದೇ ಮಾರ್ಗ. ನಾರಣಪ್ಪನ ಶವಸಂಸ್ಕಾರದ ಹೊಣೆ ಹೊರಬೇಕು. ನಾನು ಉದಾತ್ತವಾಗಿ ಬೆಳೆದ ಅಗ್ರಹಾರದ ಬ್ರಾಹ್ಮಣರ ಕಣ್ಣೆದುರಿನಲ್ಲೇ ನಿಲ್ಲಬೇಕು. ಗರುಡ, ಲಕ್ಷ್ಮಣರನ್ನು ಕರೆದು ಹೇಳಬೇಕು : ಹೀಗೀಗಾಯಿತು. ನನ್ನ ನಿಶ್ಚಯ ಹೀಗೆ, ನಿಮ್ಮ ಕಣ್ಣೆದುರಿನಲ್ಲಿ ಬೆಳೆದ ಉದಾತ್ತ ವ್ಯಕ್ತಿತ್ವವನ್ನು ತೊರೆದುಬಿಡುತ್ತೇನೆ. ನಿಮ್ಮ ಕಣ್ಣಿನ ಎದುರೇ ಅದನ್ನು ಬಿಸಾಕಲೆಂದು ಬಂದಿದ್ದೇನೆ. ಇಲ್ಲವೇ ನನ್ನ ಈ ಭೀತಿ ತಪ್ಪಿದ್ದಲ್ಲ, ನನಗೆ ಸ್ವಾತಂತ್ರ್ಯವಿಲ್ಲ. +ಆಗ-ಗಣಪತಿಯ ಮೀನನ್ನು ಹಿಡಿದು ಅಗ್ರಹಾರದ ಜೀವನವನ್ನು ತಲೆಕೆಳಗು ಮಾಡಿದ ನಾರಣಪ್ಪನಂತೆಯೇ ನಾನೂ ಬ್ರಾಹ್ಮಣರ ಬಾಳನ್ನು ಬುಡಮೇಲು ಮಾಡಿಬಿಟ್ಟಂತಾಗುತ್ತದೆ. ಅವರಲ್ಲಿದ್ದ ನಂಬಿಕೆಗೆ ವಜ್ರಾಘಾತವಾಗಿಬಿಡುತ್ತದೆ. ಏನೆಂದು ಹೇಳಲಿ? ಚಂದ್ರಿಯನ್ನು ಕೂಡಿದೆ. ಹೆಂಡತಿಯನ್ನು ಕಂಡು ಹೇಸಿದೆ. ಹೋಟೆಲಲ್ಲಿ ಕಾಫಿ ಕುಡಿದೆ. ಕೋಳಿ ಅಂಕಕ್ಕೆ ಹೋದೆ. ಪದ್ಮಾವತಿಯಿಂದ ಆಕರ್ಷಿತನಾದೆ. ಕೊನೆಗೆ ಸೂತದಲ್ಲಿದ್ದಾಗಲೂ ದೇವಸ್ಥಾನದಲ್ಲಿ ಬ್ರಾಹ್ಮಣರ ಜೊತೆ ಕೂತು ಊಟಮಾಡಿದೆ. ಮಾಲೇರರ ಹುಡುಗನೊಬ್ಬನನ್ನೂ ಜೊತೆಗೆ ಊಟಮಾಡಲಿಕ್ಕೆ ಕರೆದೆ. ನನ್ನ ಪಾಲಿನ ಸತ್ಯ ಇದು. ತಪ್ಪೊಪ್ಪಿಗೆಯಲ್ಲ ಇದು. ನಾನು ಪಾಪಿ ಎಂಬ ಪಶ್ಚಾತ್ತಾಪವಲ್ಲ ಇದು. ಬರಿ ಕಠೋರ ಸತ್ಯ. ನನ್ನ ಒಳಬಾಳಿನ ಸತ್ಯ. ಆದ್ದರಿಂದ ಇದು ನನ್ನ ನಿಶ್ಚಯ. ಈ ನಿಶ್ಚಯದ ಮೂಲಕ ಇಗೋ ಕಡಿದುಕೊಂಡೆ. +“ಒಂದಿಷ್ಟು ಬೇಕಾದರೆ ವರದಕ್ಷಿಣೆಯನ್ನೂ ಕೊಡಲಿಕ್ಕೆ ಅಡ್ಡಿಯಿಲ್ಲ, ಮಹಾಶಯರೆ, ಏಕೆಂದರೆ ಇತ್ತೀಚೆಗೆ ಕಾಲ ಕೆಟ್ಟು ಕಪ್ಪುಬಣ್ಣದ ಹುಡುಗಿಯರಿಗೆ ಮದುವೆಯಾಗೋದೇ ಕಷ್ಟಕ್ಕಿಟ್ಟುಕೊಂಡುಬಿಟ್ಟಿದೆ. ನೀವು ಬಂದು ಹುಡುಗಿಯನ್ನು ನೋಡಿ ಬೇಕಾದರೆ. ಕಪ್ಪೆಂದು ಒಂದು ಊನವೇ ಹೊರತು ಕಣ್ಣು ಮೂಗು ಲಕ್ಷಣವಾಗಿದೆ. ಜಾತಕದ ಪ್ರಕಾರ ಗಜಕೇಸರಿ ಯೋಗವಿದೆ. ಕಾಲಿಟ್ಟ ಮನೆಗೆ ಲಕ್ಷ್ಮಿಯಾಗುತ್ತಾಳೆ” +ಹುಳಿಯನ್ನವನ್ನು ಉಣ್ಣುತ್ತ ಪಕ್ಕದ ಬ್ರಾಹ್ಮಣ ಹೇಳಿದ. +ಆದರೆ ಅಗ್ರಹಾರದ ಬ್ರಾಹ್ಮಣರಿಗೆ ಹೇಳದಿದ್ದರೆ, ನಾರಣಪ್ಪನ ಶವಸಂಸ್ಕಾರ ಮಾಡದಿದ್ದರೆ ಭೀತಿ ತಪ್ಪಿದ್ದಲ್ಲ. ತಿಳಿಸದೇ ಚಂದ್ರಿಯ ಜೊತೆ ಬದುಕುವ ನಿಶ್ಚಯ ಮಾಡಿದರೆ ಪೂರ್ತಿಯಾದಂತಲ್ಲ. ನಾನೀಗ ಪೂರ್ಣ ನಿಶ್ಚಯಮಾಡಿಬಿಡಬೇಕು. ಪರೋಕ್ಷವಾದದ್ದೆಲ್ಲ ಪ್ರತ್ಯಕ್ಷವಾಗಿಬಿಡಬೇಕು. ಕಣ್ಣಿಗೆ ನೆಟ್ಟುಬಿಡಬೇಕು. ಆದರೆ ಹಾಗೂ ಸಂಕಟ, ಹೀಗೂ ಸಂಕಟ : ಮುಚ್ಚಿಟ್ಟುಕೊಂಡರೆ ಬದುಕಿನುದ್ದಕ್ಕೂ ಯಾರ ಕಣ್ಣಿಗೋ ಬಿದ್ದುಬಿಡುವೆನೆಂಬ ಸಂಕಟ; ನನ್ನ ಬ್ರಾಹ್ಮಣ್ಯ ಸೃಷ್ಟಿಯಾದ ಕಣ್ಣುಗಳ ಎದುರು ಸತ್ಯವನ್ನು ಬಿಚ್ಚಿ ತೋರಿಸಿದಲ್ಲಿ ಅವರ ಬದಕೂ ಇದರಿಂದ ಪರಿಭ್ರಮಿತವಾಗಬಹುದೆಂಬ ಸಂಕಟ; ಇನ್ನೊಂದು ಬಾಳನ್ನು ನನ್ನ ನಿಶ್ಚಯಕ್ಕೆ ಒಳಪಡಿಸುವ ಅಧಿಕಾರ ನನಗಿದೆಯೇ ಎಂಬ ಸಂಕಟ. ಅಧೆರ್ಯ. ದೇವರೇ, ನಿಶ್ಚಯ ಮಾಡುವ ಜವಾಬ್ದಾರಿಯನ್ನು ತಪ್ಪಿಸಿಬಿಡು. ಕಾಡಿನಲ್ಲಿ ಕತ್ತಲಿನಲ್ಲಿ ಅವಾಕ್ಕಾಗಿ ಆಗಿಬಿಟ್ಟಂತೆ ಈ ನಿಶ್ಚಯವೂ ಆಗಿಬಿಡಲಿ. ಕಣ್ಣು ಮುಚ್ಚಿಬಿಡುವುದರೊಳಗೆ ಹೊಸ ಜನ್ಮ ಬಂದುಬಿಡಲಿ. ನಾರಣಪ್ಪ, ನಿನಗೆ ಈ ಸಂಕಟವಿತ್ತೇ? ಮಹಾಬಲ, ನೀನೂ ಪಟ್ಟೆಯ? ಕೇಳಬೇಕು. +ಸಾರು ಬಡಿಸಿದವನೇ ಮತ್ತೆ ಬುಟ್ಟಿಯಲ್ಲಿ ಲಾಡು ತುಂಬಿ ಬಡಿಸುತ್ತ ಬಂದ. ಪಕ್ಕದ ಬ್ರಾಹ್ಮಣ ಲಾಡುವನ್ನು ಎಲೆಗೆ ಹಾಕಿಸಿಕೊಳ್ಳದೆ ಎಡಗೆಯಲ್ಲಿ ಇಸಕೊಂಡು ಪಕ್ಕದಲ್ಲಿಟ್ಟುಕೊಂಡ. ಮತ್ತೆ ಅವ ತನ್ನೆಲೆಯ ಎದುರು ನಿಂತ. ಎದೆ ಜಗ್ಗೆಂದಿತು. +“ಅಲ್ಲ, ನನ್ನ ಹಾಳು ಮರೆವಿಗೆ ಏನು ಹೇಳಬೇಕು? ನೀವು ದೂರ್ವಾಸಪುರದ ಪ್ರಾಣೇಶಾಚಾರ್ಯರಲ್ಲವೇ? ತಮ್ಮಂಥವರು ಇಲ್ಲಿ ಬಂದು ಊಟಕ್ಕೆ ಕೂರುವುದೇ? ಸಾಹುಕಾರರ ಮನೆಯಲ್ಲಿ ಚಿರೋಟಿ ಊಟವಿತ್ತು. ದೊಡ್ಡವರಿಗೆಲ್ಲ ಅಲ್ಲೇ ಸಂತರ್ಪಣೆ. ನಿಮ್ಮ ಹಣೆಯ ಮೇಲೆ ಅಂಗಾರ ಅಕ್ಷತೆ ಇಲ್ಲದ್ದರಿಂದ ನನಗೆ ಥಟ್ಟನೆ ಪತ್ತೆಯೇ ಆಗಲಿಲ್ಲ. ನೀವೂ ಹೇಳಲಿಲ್ಲ. ಸಾಹುಕಾರರಿಗೆ ಹೇಳದಿದ್ದರೆ ನನಗೆ ತಕ್ಕ ಶಾಸ್ತಿಯಾಗಿಬಿಡುತ್ತದೆ-ಮಹಾಪಂಡಿತರೊಬ್ಬರಿಗೆ ಕಂದಲೆಯ ಊಟ ಹಾಕಿದ ಅಂತ. ಒಂದು ಕ್ಷಣದಲ್ಲಿ ಬರುವೆ ಇರಿ” +ಎಂದು ಅವ ಲಾಡಿನ ಬುಟ್ಟಿಯನ್ನಲ್ಲೇ ಇಟ್ಟು ಓಡಿದ. ಪ್ರಾಣೇಶಾಚಾರ್ಯರು ಆಪೋಶನ ತೆಗೆದುಕೊಂಡು ಚಂಗನೆ ಎದ್ದು ಅಲ್ಲಿಂದ ನಡೆದುಬಿಟ್ಟರು. “ಸ್ವಾಮಿ. ಸ್ವಾಮಿ. ಇನ್ನೂ ಪಾಯಸ ಬರುವುದಿದೆ” ಎಂದು ಪಕ್ಕದ ಬ್ರಾಹ್ಮಣ ಕೂಗಿದ. ತಿರುಗಿನೋಡದೆ ದೇವಸ್ಥಾನದ ಹೊರಗೆ ಬಂದುಬಿಟ್ಟರು. ತೊಳೆಯದ ಕೆಯಲ್ಲೆ ಓಡಿದರು ಜನರಿಂದ ದೂರ, ದೂರ. ಅಷ್ಟು ದೂರ ಹೋಗುವುದರೊಳಗೆ ಕೇಳಿಸಿತು : “ಆಚಾರ್ರೇ…. ಆಚಾರ್ರೇ….” ಪುಟ್ಟನ ಧ್ವನಿ. ಓಡಿ ಬಂದು ಜೊತೆಗೆ ನಿಂತ. ಪ್ರಾಣೇಶಾಚಾರ್ಯರು ಸರಸರನೆ ಕಾಲುಹಾಕತೊಡಗಿದರು. +“ಇದೇನು ಮಾರಾಯರೆ. ಮಾತಿಲ್ಲ, ಕತೆಯಿಲ್ಲ. ಓಡುತ್ತಿದ್ದೀರಿ-ಒಳ್ಳೇ ಒಂದಕ್ಕೊ ಎರಡಕ್ಕೊ ಅವಸರವಾದವರ ಹಾಗೆ” ಎಂದು ಪುಟ್ಟ ನಕ್ಕ. ಜನರಿಂದ ದೂರವಾದ ಮೇಲೆ ಪ್ರಾಣೇಶಾಚಾರ್ಯರು ನಿಂತರು. ತಮ್ಮ ಎಂಜಲು ಕೆಯನ್ನು ನೋಡಿಕೊಂಡು ಹೇಸಿದರು. +“ಏನು, ಕೆತೊಳೆಯಲಿಕ್ಕೂ ಅವಸರವಾಗಿಬಿಟ್ಟಿತ, ಮಾರಾಯರೆ. ನನಗೂ ಹಾಗಾಗಿದ್ದುಂಟು. ಬನ್ನಿ, ಕೆರೆಗೆ ಹೋಗುವ.” +ಕೆರೆಯ ಕಡೆ ನಡೆದದ್ದಾಯಿತು. ದಾರಿಯಲ್ಲಿ ಪುಟ್ಟ ಹೇಳಿದ : +“ನಾನೊಂದು ನಿಶ್ಚಯ ಮಾಡಿಬಿಟ್ಟೆ, ಆಚಾರ್ರೆ-ನಿಮ್ಮ ಜೊತೆಗೇ ನಾಳೆ ಬೆಳಿಗ್ಗೆ ಕುಂದಾಪುರಕ್ಕೂ ಬಂದುಬಿಡುವ ಅಂತ. ನಿಮಗೆ ಹೇಳಲಿಲ್ಲ ನಾನು. ನನ್ನ ಹೆಂಡತಿಮಕ್ಕಳು ತೌರಿಗೆ ಹೋಗಿ ತಿಂಗಳಾಯಿತು. ಕಾಗದ ಇಲ್ಲ. ಬುದ್ಧಿ ಹೇಳಿ ಕರೆದುಕೊಂಡು ಬರಬೇಕು. ನೀವು ಹಿರಿಯರು ಬ್ರಾಹ್ಮಣರಲ್ಲವೆ? ಒಂದು ಉಪಕಾರ ಮಾಡಿ. ನನ್ನ ಹೆಂಡತಿಗಷ್ಟು ಬುದ್ಧಿವಾದ ಹೇಳಿ. ನಿಮ್ಮ ಮಾತು ಕೇಳಿಯಾಳು. ಒಂದು ದಿನದಲ್ಲೇ ನೀವು ನನ್ನ ಪ್ರಾಣಮಿತ್ರರಾಗಿಬಿಟ್ಟಿರಿ. ಇನ್ನೊಂದು ಮಾತು ಆಚಾರ್ರೆ, ನನ್ನಲ್ಲಿ ಚಾಡಿಛಿದ್ರದ ಸ್ವಭಾವವಿಲ್ಲ; ನೀವು ಪದ್ಮಾವತೀ ಮನೆಯಲ್ಲಿ ಮಲಗಿದ್ದನ್ನ ನಾನು ತಾಯಿಯ ಆಣೆ-ಯಾರಿಗೂ ಹೇಳುವವನಲ್ಲ. ನಾನಲ್ಲಿ ಮಂಗನ ಕುಣಿತ ನೋಡುತ್ತ ನಿಂತಿದ್ದೆ ಮಾರಾಯರೆ, ನೀವು ಓಡೋದು ನೋಡಿ ನಗೆ ಬಂದುಬಿಟ್ಟಿತು. ಊಟ ಮಾಡುತ್ತಿದ್ದಂತೆ ಅವಸರವಾಗುವುದು ಉಂಟಲ್ಲವೆ? ಇರಬಹುದೆಂದು ನಕ್ಕುಬಿಟ್ಟೆ.” +ಪ್ರಾಣೇಶಾಚಾರ್ಯರು ಕೆರೆಯಲ್ಲಿಳಿದು ಕೆತೊಳೆದುಕೊಂಡರು. ಮೇಲೆ ಕಟ್ಟೆಯ ಮೇಲೆ ಬೆನ್ನುಹಾಕಿ ನಿಂತ ಪುಟ್ಟ, ಕೆತೊಳೆದು ಪಕ್ಕದಲ್ಲಿ ಬಂದು ನಿಂತ ಪ್ರಾಣೇಶಾಚಾರ್ಯರಿಗೆ : +“ಏನು, ಇಷ್ಟು ಬೇಗ?” ಎಂದ. +“ಒಂದು ವಿಷಯ, ಪುಟ್ಟ” +ಪ್ರಾಣೇಶಾಚಾರ್ಯರು ಮೇಲಕ್ಕೆ ನೋಡಿದರು : ಬೇಸಗೆಯ ದೀರ್ಘ ಸಂಜೆ. ಪಶ್ಚಿಮದಲ್ಲಿ ಕೆಂಪು ಓಕಳಿ ಚೆಲ್ಲಿದೆ. ಬೆಳ್ಳಕ್ಕಿಗಳ ಸಾಲು ಸಾಲು ಗೂಡಿನ ದಾರಿ ಹಿಡಿದಿವೆ. ಕೆಳಗೆ ಕೆರೆಯ ಅಂಚಿನಲ್ಲಿ ಬಕ ಕುಗುರುತ್ತಿದೆ. ಇನ್ನೇನು ದೀಪ ಹಚ್ಚುವ ಹೊತ್ತು ಸಮೀಪ. ಅಗ್ರಹಾರದಲ್ಲಿ ದೀಪ ಹಚ್ಚಿ ಎಷ್ಟು ದಿನವಾಯಿತೋ. ಸಂಜೆ ಕೊಟ್ಟಿಗೆಗೆ ಬಂದ ದನಕರುಗಳನ್ನು ಕಟ್ಟಿ ಕರೆಸಿ, ದೇವರಿಗೆ ನೆವೇದ್ಯ ಮಾಡಿ ಎಷ್ಟು ದಿನವಾಯಿತೋ. ಕನಸಿನಲ್ಲಿ ಕರಗುತ್ತಿರುವ ಲೋಕದಂತೆ ಪಶ್ಚಿಮಘಟ್ಟದ ದಿಗಂತದ ಸ್ಪಷ್ಟರೂಪಗಳು ಮಸುಕಾಗುತ್ತಿವೆ. ಈಗಿನ ರಂಗು ಇನ್ನೊಂದು ಕ್ಷಣಕ್ಕೆ ಇಲ್ಲದೆ ಬಾನು ಬೆತ್ತಲಾಗುತ್ತಿದೆ. ಅಮಾವಾಸ್ಯೆ ಕಳೆದಿರಬೇಕು-ಇನ್ನಷ್ಟು ಹೊತ್ತಿನಲ್ಲಿ ಚಂದ್ರನ ಗೆರೆ ಬೆಟ್ಟಗುಡ್ಡಗಳ ನೆತ್ತಿಯ ಮೇಲೆ ಅಭಿಷೇಕಕ್ಕೆ ಬಗ್ಗಿಸಿದ ಬೆಳ್ಳಿಯ ಬಟ್ಟಲಿನ ಅಂಚಿನಂತೆ ಕಾಣುತ್ತೆ. ಬೆಟ್ಟಗಳ ಸಂದಿಯ ಕಣಿವೆಗಳಲ್ಲಿ ಮೌನ ಗಾಢವಾಗಿ ಕವಿದುಬಿಡುತ್ತದೆ. ರಾತ್ರೆಯ ಅರ್ಚನೆ ಮುಗಿಯುತ್ತಿದ್ದಂತೆ, ಹತ್ತಿಸಿದ ದೊಂದಿಗಳು ಮಂಕಾಗಿ ಜಾತ್ರೆಯ ಗಲಿಬಿಲಿ ಕಡಿಮೆಯಾಗುತ್ತಿದೆ. ಮತ್ತೆ ಮೇಳದವರ ಚಂಡೆಯ ಧ್ವನಿ ಉಕ್ಕೇರಿ ಹರಡುತ್ತದೆ. ಈಗ ನಡೆದುಬಿಟ್ಟರೆ ಅರ್ಧರಾತ್ರೆಯ ಹೊತ್ತಿಗೆ ಅಗ್ರಹಾರ ಸೇರುತ್ತೇನೆ-ಈ ಲೋಕದಿಂದ ದೂರನಾಗಿ. ಭಯಗ್ರಸ್ತ ಬ್ರಾಹ್ಮಣರ ದೃಷ್ಟಿಯಲ್ಲಿ ಹಸಿಹಸಿ ಪ್ರಾಣದಂತೆ ತೊರೆದು ನಿಂತು, ಅವರ ನಡುವಿನ ಹಳಬ ನಡುರಾತ್ರೆಯಲ್ಲಿ ಹೊಸಬನಾಗುತ್ತೇನೆ. ಪ್ರಾಯಶಃ, ಅವನ ಶವದ ಸುತ್ತ ಬೆಂಕಿ ನೆಗೆದಾಡಿದರೆ ಒಂದು ಸಮಾಧಾನ. ಹೇಳುವಾಗ ಪಶ್ಚಾತ್ತಪದ ಸೋಂಕಿರಕೂಡದು, ತಾನು ಪಾಪಿಯಾಗಿಬಿಟ್ಟೆನೆಂಬ ದುಃಖವಿರಕೂಡದು. ಇಲ್ಲವೇ ದ್ವಂದ್ವ ಕಳೆಯದು. ಮಹಾಬಲನನ್ನು ನೋಡಬೇಕು. ನಮ್ಮ ನಿಶ್ಚಯದಲ್ಲಿ ನಾವು ಗಳಿಸಿಕೊಳ್ಳುವ ಸ್ವರೂಪ ಮಾತ್ರ ಖಾತ್ರಿಯಾಗಿ ನಮ್ಮದೆಂದು ಅವನಿಗೆ ಹೇಳಬೇಕು ಎಂಬುದಾದರೂ ನಿಜವೇ? ಹಾಗಾದರೆ ನಿನಗೇನೂ ಈಗ ದೇವರ ಹಂಬಲವೇ ಇಲ್ಲವೇ ಎಂದು ಕೇಳಬೇಕು. ’ಲಲಿತ ಲವಂಗ ಲತಾಪರಿಶೀಲನ ಕೋಮಲ ಮಲಯ ಸಮೀರೇ’ ಪ್ರಾಣೇಶಾಚಾರ್ಯರಿಗೆ ಅತ್ಯಂತ ವ್ಯಾಕುಲವಾಗಿಬಿಟ್ಟಿತು. ಪ್ರೇಮ ಬಂದುಬಿಟ್ಟಿತು. ಪುಟ್ಟನ ಹೆಗಲಿನ ಮೇಲೆ ಪ್ರಥಮ ಬಾರಿಗೆ ಕೆಹಾಕಿದರು. ಬರಸೆಳೆದರು. ಅವನ ಭುಜವನ್ನು ತಟ್ಟುತ್ತ “ಏನೋ ಹೇಳಹೊರಟಿದ್ದೆನಲ್ಲ” ಎಂದರು. +“ಅಲ್ಲ ಮಾರಾಯರೆ, ದಾರಿಯಲ್ಲಿ ನೀವು ಸಿಕ್ಕಾಗ ನಿಮ್ಮ ಮಾತಿನ ಬಿಗಿ ನೋಡಿ, ಇವರೇನು ನನ್ನಂಥವನ ಜೊತೆ ಸ್ನೇಹ ಮಾಡುವವರಲ್ಲವೆಂದುಕೊಂಡುಬಿಟ್ಟಿದ್ದೆ” ಎಂದು ಪುಟ್ಟ ಆಚಾರ್ಯರು ಹೆಗಲ ಮೇಲೆ ಕೆಹಾಕಿದರೆಂದು ಹರ್ಷಿತನಾಗಿ ಹೇಳಿದ. +“ನೋಡು ಪುಟ್ಟ, ನಾನು ಯಾಕೆ ಅವಸರದಲ್ಲಿ ಊಟ ಬಿಟ್ಟು ಬಂದೆ ನಿನಗೆ ಗೊತ್ತ? ಈ ಕ್ಷಣವೇ ನಾನು ದೂರ್ವಾಸಪುರಕ್ಕೆ ಹೋಗಿಬಿಡಬೇಕು”. +“ಓಹೊ, ಅದೆಲ್ಲಿ ಸಾಧ್ಯ, ಮಾರಾಯರೆ? ನಿಮ್ಮ ಪದ್ಮಾವತಿ ಅಲ್ಲಿ ಸುಪ್ಪತ್ತಿಗೆ ಸಿದ್ಧಪಡಿಸಿ ಊದುಬತ್ತಿ ಹಚ್ಚಿ ಹೂಮುಡಿದು ಕಾದಿರುತ್ತಾಳೆ. ನೀವು ಜೊತೆಯಲ್ಲಿಲ್ಲದೆ ಅವಳಿಗೆ ಹೇಗೆ ಮುಖ ತೋರಿಸಲಿ? ಎಷ್ಟೇ ನಿರ್ವಾಹವಿರಲಿ ಅವಸರವಿರಲಿ, ಈ ರಾತ್ರಿ ತಂಗಿದ್ದು ಬೆಳಿಗ್ಗೆಯೇ ನೀವು ಹೋಗೋದು. ಈಗ ಹೊರಟರೆ ನನ್ನಾಣೆ” +ಎಂದು ಪುಟ್ಟ ಪ್ರಾಣೇಶಾಚಾರ್ಯರನ್ನು ಜಗ್ಗಿದ. ಪ್ರಾಣೇಶಾಚಾರ್ಯರಿಗೆ ಭಯವಾಯಿತು. ತನ್ನ ನಿಶ್ಚಯದಿಂದ ತಾನು ಕರಗಿಬಿಡಬಹುದೆಂದು ಅನುಮಾನವಾಯಿತು. ಈ ಪುಟ್ಟನಿಂದ ಪಾರಾಗಬೇಕು. +“ಇಲ್ಲ, ಪುಟ್ಟ. ಖಂಡಿತ ಸಾಧ್ಯವಿಲ್ಲ. ನಿಜ ಹೇಳಲೆ? ನಿನ್ನ ಮನಸ್ಸಿಗೆ ಯಾಕೆ ರಗಳೆ ಹಚ್ಚುವುದೆಂದು ಹೇಳಲಿಲ್ಲ”. ಏನು ಹೇಳಲೆಂದು ಕ್ಷಣ ಚಿಂತಿಸಿ ಒಂದು ಸುಳ್ಳು ಹೇಳಿಬಿಡುವುದೇ ಕ್ಷೇಮವೆಂದು ಅಂದರು : “ನನ್ನ ಸೋದರ ದೂರ್ವಾಸಪುರದಲ್ಲಿ ಸಕv ಕಾಹಿಲೆಯಾಗಿ ಮಲಗಿದ್ದಾನೆಂತ ಊಟಕ್ಕೆ ನಾನೂ ಕೂತಿದ್ದಾಗ ತಿಳಿಯಿತು. ಅವ ಈಗಲೋ ಇನ್ನೊಂದು ಘಳಿಗೆಯೋ ಎಂದಿರುವಾಗ ನಾನು ಹೇಗೆ…” +ಪುಟ್ಟ ನಿಟ್ಟುಸಿರಿಟ್ಟ ನಿರಾಶೆಯಿಂದ. +“ಸರಿ ಹಾಗಾದರೆ” ಎಂದ. +ಪ್ರಾಣೇಶಾಚಾರ್ಯರು ಹೊರಡಲುದ್ಯುಕ್ತರಾಗಿ, +“ಇನ್ನೊಮ್ಮೆ ಎಂದು ನೋಡೋದು ನಿನ್ನ? ಕುಂದಾಪುರಕ್ಕೆ ಹೋಗುವ ಮಾರ್ಗ ಪದ್ಮಾವತಿಯನ್ನು ನೋಡುವೆನೆಂದು ಹೇಳು. ನಾನು ಹೊರಡಲೆ ಇನ್ನು?” ಎಂದರು. ಪುಟ್ಟ ಚಿಂತಿಸುತ್ತ ನಿಂತವನು, +“ನಿಮ್ಮೊಬ್ಬರನ್ನೇ ಈ ಕತ್ತಲಿನಲ್ಲಿ ಕಾಡಿನ ಮಾರ್ಗ ಹೇಗೆ ಕಳಿಸಲಿ? ನಾನೂ ಬಂದುಬಿಡುವೆ” ಎಂದ. +ಈಗ ಪ್ರಾಣೇಶಾಚಾರ್ಯರು ಅಪ್ರತಿಭರಾಗಿಬಿಟ್ಟರು. ಯಾವ ಯುಕ್ತಿಯಿಂದಲೂ ಇನ್ನು ಇವನನ್ನು ತಾವು ಅಟ್ಟುವಂತಿಲ್ಲ. ನನ್ನಿಂದ ನಿನಗೆ ಸುಮ್ಮನೇ ತೊಂದರೆ, ಬೇಡವೆಂದರು. ಪುಟ್ಟ ಜಗ್ಗಲಿಲ್ಲ. +“ತೊಂದರೆಯೂ ಇಲ್ಲ. ತಾಪತ್ರಯಾನೂ ಇಲ್ಲ. ದೂರ್ವಾಸಪುರದಲ್ಲಿ ನನ್ನದೂ ಒಂದು ಕೆಲಸವಿದೆ. ಪಾರಿಜಾತಪುರದಲ್ಲಿ ನನ್ನ ಜ್ಞಾತಿಗಳಿದ್ದಾರೆ. ನಾರಣಪ್ಪನವರ ಪರಿಚಯ ನಿಮಗಿರಲಿಕ್ಕೆ ಸಾಕು. ಪಾರಿಜಾತಪುರಕ್ಕೊಮ್ಮೆ ಹೋದಾಗ ನಿಮ್ಮ ಪರಿಚಯವಾದ ಹಾಗೇ ಅವರ ಪರಿಚಯವಾಯಿತು. ಅಲ್ಲ ಮಾರಾಯರೆ, ಒಳ್ಳೆದಾಯಿತು ನೆನಪಾದ್ದು. ಊರಿಗೇ ಗೊತ್ತಲ್ಲ ಹೇಗೆ ನಾರಣಪ್ಪನವರ ಆಸ್ತಿ ಪೋಲಾಯ್ತು ಅಂತ. ಸೀರೆಯುಟ್ಟದೊಂದು ಸುಳಿದರೆ ಬಾಯಿಬಿಡುವ ಪೆಕಿ ಅವರು. ನಿಮ್ಮಲ್ಲೆ ಇರಲಿ ಮಾರಾಯರೆ. ಅವರೇನಾದರೂ ನಿಮಗೆ ಪರಿಚಯವಿದ್ದಲ್ಲಿ ದಯಮಾಡಿ ನಿಮ್ಮನ್ನ ಪದ್ಮಾವತಿ ಕರೆದ ವಿಷಯ ತಿಳಿಸಬೇಡಿ. ನಿಮ್ಮ ಹತ್ತಿರ ಯಾಕೆ ಮುಚ್ಚುಮರೆ? ನಾರಣಪ್ಪನವರು ಪರಿಚಯವಾದ್ದೇ ನನಗೆ ಗಂಟುಬಿದ್ದುಬಿಟ್ಟರು : ಪದ್ಮಾವತೀನ್ನ ಗುರುತುಮಾಡಿಸಿಕೊಡು ಅಂತ. ನಾನು ಹಾಗೆಲ್ಲ ತೀರ ಹಡೆಯಲ್ಲ ನೋಡಿ. ಆದರೂ ಬ್ರಾಹ್ಮಣನೊಬ್ಬ ಗಂಟುಬಿದ್ದಮೇಲೆ ಏನು ಮಾಡಲಿಕ್ಕೆ ಶಕ್ಯ? ಆದರೆ ಪದ್ಮಾವತಿಗೆ ಅವರ ಮರ್ಜಿ ಸರಿಬೀಳಲಿಲ್ಲ. ಶುದ್ಧ ಕುಡುಕ ಅವರೂಂತ ’ಇನ್ನು ಮುಂದೆ ಇಲ್ಲಿಗವರನ್ನು ಕರಕೊಂಡು ಬರಬೇಡ’ ಎಂದು ಬಿಟ್ಟಳು. ಎಲ್ಲ ನಿಮ್ಮಲ್ಲೆ ಇರಲಿ ಮಾರಾಯರೆ. ಏನೋ ಹೇಳಹೋಗಿ ಮಾತು ಎತ್ತಲೊ ಹರಿದುಬಿಟ್ಟಿತು. ನಿಮಗೆ ಹೇಳಿದೆನಲ್ಲ, ತೀರ್ಥಹಳ್ಳಿಯ ಆಚೆ ನಮ್ಮ ಗ್ರಾಮ ಅಂತ. ಅಲ್ಲಿ ನಾರಣಪ್ಪನವರದ್ದೊಂದು ತೋಟವಿದೆ. ಹಾಳುಬಿದ್ದು ನೆಲಸಮವಾಗಿದೆ. ಅವರಿಗೆ ಅದರ ಗೇಣಿಯ ಒಂದಡಕೆ ಸೇರದೆ ವರ್ಷಗಳಾಗಿ ಹೋದವು. ಪರಿಚಯವಲ್ಲವೆ, ನನಗೆ ಇಲ್ಲವೆನ್ನುತ್ತಾರ, ಕೇಳಿ ನೋಡುವ ಎಂದು ಒಂದು ಆಸೆ. ತೋಟವನ್ನು ಗುತ್ತಿಗೆಗೆ ಕೊಡಿ. ಊರ್ಜಿತಗೊಳಿಸಿ ನಿಮಗೂ ಒಂದು ಗೇಣಿಯ ದಾರಿ ಮಾಡಿ ಕೊಡುತ್ತೇನೆ, ಅಂತ. ಅದಕ್ಕೆ ಅಂದೆ-ನಿಮಗೂ ಕತ್ತಲಲ್ಲಿ ದಾರಿಗೊಂದು ಜನವಾಯಿತು. ನನಗೂ ಕೆಲಸವಾದ ಹಾಗೆ ಆಯಿತು ಅಂತ.”” +ಪ್ರಾಣೇಶಾಚಾರ್ಯರು ಒದ್ಡಾಡಿಕೊಳ್ಳುತ್ತ ಪುಟ್ಟನ ಮಾತನ್ನು ಕೇಳಿಸಿಕೊಂಡರು. ನಾರಣಪ್ಪನು ಸತ್ತನೆಂದು ಹೇಳಲೇ? ನನ್ನ ನಿಜವಾದ ಸಮಸ್ಯೆಯನ್ನು ತಿಳಿಸಿಬಿಡಲೇ? ಆದರೆ ಇಷ್ಟೊಂದು ಸರಳ ಮನಸ್ಸಿನಲ್ಲಿ ದೊಡ್ಡ ಗೊಂದಲವೆಬ್ಬಿಸುವ ಮನಸ್ಸಾಗಲಿಲ್ಲ. ಒಂದುವೇಳೆ ಅವನೇನಾದರೂ ಜೊತೆಗೆ ನಡೆದೇ ಬಿಟ್ಟರೆ ಹೇಳದೇ ಇರುವುದು ಅಶಕ್ಯ-ಹೀಗೆ ಯೋಚಿಸುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಪುಟ್ಟ ತನ್ನ ಜೊತೆಗಿದ್ದರೆ ವಾಸಿ ಎನ್ನಿಸಿತು. ಒಂಟಿಯಾಗಿ ಹೇಗೆ ಆ ಬ್ರಾಹ್ಮಣರನ್ನೆಲ್ಲ ಎದುರಿಸಲಿ? ಮೊದಲು, ಪರಮಾಪ್ತನಾಗಿಬಿಟ್ಟ ಪುಟ್ಟನಿಗೆ ಹೇಳಿನೋಡುವುದು. ಅವನ ಕಣ್ಣಲ್ಲಿ ತಾನೇನಾಗುತ್ತೇನೆಂದು ತಿಳಿಯುವುದು-ಅದೂ ಒಂದು ಒಳ್ಳೆಯ ಉಪಾಯ. ಈಗ ಬಾನು ಪೂರ್ಣ ಬೆತ್ತಲೆಯಾಗಿಬಿಟ್ಟಿತು. ದೇವಸ್ಥಾನದಲ್ಲಿ ಶಂಖ ಜಾಗಟೆಗಳನ್ನು ಬಾರಿಸಿದ ಶಬ್ದ. ಬೇಗ ಹೋಗಬೇಕು. ಇಲ್ಲೆ ನಿಂತಿದ್ದರೆ ತನ್ನನ್ನು ಪತ್ತೆಮಾಡಿದಾತ ಹುಡುಕಿಕೊಂಡು ಬಂದುಬಿಟ್ಟಾನು. ’ಹೋಗುವ ಹಾಗಾದರೆ’ ಎಂದರು. +ಆ ವೇಳೆಗೆ ಸರಿಯಾಗಿ ಅವರ ಮಾರ್ಗವಾಗಿ ಒಂದು ಕಮಾನುಗಾಡಿ ಬಂದಿತು. “ಸ್ವಲ್ಪ ನಿಲ್ಲಿರಿ” ಎಂದ ಪುಟ್ಟ ಆಚಾರ್ಯರನ್ನು ನಿಲ್ಲಿಸಿ. ಕೆ ಅಡ್ಡಮಾಡಿ ಗಾಡಿಯನ್ನು ತಡೆದ. ಗಾಡಿಯಿಂದೊಬ್ಬರು ಜರಿಶಲ್ಲೆ ಹೊದ್ದ ಬ್ರಾಹ್ಮಣರು ತಲೆಹಾಕಿ “ಏನು?” ಅಂದರು. +“ನಿಮ್ಮ ಗಾಡಿ ಏನಾದರೂ ಆಗುಂಬೆ ಮಾರ್ಗವಾಗಿ ಹೋಗುವುದೋ?” ಎಂದು ಪುಟ್ಟ ಕೇಳಿದ. +“ಹಾ” ಎಂದರು ಗಾಡಿಯೊಳಗಿಂದ ಶಲ್ಲೆ ಹೊದ್ದವರು. +“ಇಬ್ಬರಿಗೆ ಜಾಗವುಂಟೊ? ದೂರ್ವಾಸಪುರದ ಮಾರ್ಗ ಹೊರಟವರು ನಾವು” ಎಂದ ಪುಟ್ಟ. +“ಒಬ್ಬರಿಗೆ ಮಾತ್ರ ಜಾಗವಿದೆಯಲ್ಲ.” +ಪುಟ್ಟ ಪ್ರಾಣೇಶಾಚಾರ್ಯರ ಕೆಹಿಡಿದು, “ನೀವು ಹೋಗಿ, ಆಚಾರ್ಯರೆ” ಎಂದ. “ಬೇಡ, ಇಬ್ಬರೂ ಒಟ್ಟಿಗೆ ನಡೆದು ಹೋಗುವ” ಎಂದರು ಆಚಾರ್ಯರು. “ಛೆ ಛೆ, ಆಷ್ಟು ದೂರ ನಡೆದು ದಣಿಯುವುದು ಬೇಡ. ನಾಳೆ ಬಂದು ನೋಡುತ್ತೇನೆ” ಎಂದ ಪುಟ್ಟ. ಶಲ್ಲೆ ಹೊದ್ದವರು ಅವಸರ ಮಾಡಿದರು : “ಏನು ಹಾಗಾದರೆ? ಬರುವವರೊ? ನಾವು ದೂರ್ವಾಸಪುರದ ಹತ್ತಿರ ಒಂದೆರಡು ಮೆಲಿಯಾಚೆ ತಿರುಗಿಬಿಡುತ್ತೇವೆ. ಒಬ್ಬರು ಬೇಕಾದರೆ ಬನ್ನಿ. ಬೇಗ ಬನ್ನಿ.” +ಪುಟ್ಟ ಪ್ರಾಣೇಶಾಚಾರ್ಯರನ್ನು ಒತ್ತಾಯಪೂರ್ವಕ ತಳ್ಳಿದ. ಪ್ರಾಣೇಶಾಚಾರ್ಯರು ನಿರ್ವಾಹವಿಲ್ಲದೆ ಗಾಡಿಯನ್ನು ಹತ್ತಿ ಒಳಕ್ಕೆ ಕೂತರು. ಗಾಡಿ ಹೊರಟಿತು. “ನಾಳೆ ನಿಮ್ಮನ್ನು ನೋಡುತ್ತೇನೆ” ಎಂದ ಪುಟ್ಟ. “ಆಗಲಿ” ಎಂದರು ಪ್ರಾಣೇಶಾಚಾರ್ಯರು. +ಆಯಿತು. ಇನ್ನು ನಾಲ್ಕೆದು ಗಂಟೆಗಳ ಪ್ರಯಾಣ. ಮತ್ತೆ? +ಈಗ ಆಕಾಶದಲ್ಲಿ ನಕ್ಷತ್ರಗಳು. ಗೆರೆ ಚಂದ್ರ. ದಿಟ್ಟಗೆ ನಿಂತ ಸಪ್ತರ್ಷಿ ಮಂಡಳ. ಇದ್ದಕ್ಕಿದ್ದಂತೆ ಚಂಡೆಯ ಶಬ್ದ. ಅಲ್ಲೊಂದು ಇಲ್ಲೊಂದು ಕೊಳ್ಳಿಯ ಬೆಂಕಿ. ಗುಡ್ಡ ಹತ್ತುವ ಎತ್ತಿನ ಉಸಿರು. ಕೊರಳಿನ ಗೆಜ್ಜೆ. ನಾಲ್ಕೆದು ಗಂಟೆಗಳ ಪ್ರಯಾಣ. ಮತ್ತೆ? +ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು. +***** +ಮುಗಿಯಿತು +ಬರ್ಮಿಂಗಂ +ಏಪ್ರಿ ೨೮, ೧೯೬೫ +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +ಭವ ಕಾದಂಬರಿ ಮೊದಲು ಪ್ರಕಟವಾದದ್ದು ೧೯೯೪ ರಲ್ಲಿ. ಶ್ರೀ.ಯು.ಅರ್.ಅನಂತಮೂರ್ತಿಯವರ ಎಲ್ಲ ಕೃತಿಗಳನ್ನು ಪ್ರಕಟಿಸುವ ಹೆಗ್ಗೋಡಿನ ಅಕ್ಷರ ಪ್ರಕಾಶನ. ಒಟ್ಟು ೯೯ ಪುಟಗಳಿರುವ ಈ ಕಾದಂಬರಿಯ ಬೆಲೆ : ರೂ ೬೦.ಪ್ರತಿಗಳು ಬೇಕಾಗಿರುವವರು ಸಂಪರ್ಕಿಸಬೇಕಾದ ವಿಳಾಸ:ಅಕ್ಷರ […] +ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […] +‘ಪ್ರಥಮಾಶ್ವಾಸಂ’ ಸಹಸ್ರಪರಮಾಂ ದೇವೀ ಶತ ವಂಧ್ಯಾ ದಶವರಾಂ ಗಾಯತ್ರೀಂ ಸಂಜಪೇನ್ನಿತ್ಯಂ ಯತವಾಕ್ಕಾಯ ಮಾನಸಃ | ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_701.txt b/Kannada Sahitya/article_701.txt new file mode 100644 index 0000000000000000000000000000000000000000..8accf1181ed3c0d03d893478de0711682a81f187 --- /dev/null +++ b/Kannada Sahitya/article_701.txt @@ -0,0 +1,295 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು ತನ್ನೊಡನೆ ತಂದ-ನಮ್ಮನ್ನು ಎಂದೋ ಅಗಲಿದ ನನ್ನ ಪ್ರೀತಿಯ ಗೆಳತಿ ಆಬೋಲೀನಳ ನೆನಪಿನಿಂದ ಜೀವ ಕಳವಳಿಸಿತು. ನನ್ನ ಮೋರೆಯ ಮೇಲೆ ಆಗ ಯಾವ ಭಾವ ಮೂಡಿತ್ತೊ: ಹತ್ತಿರವೇ ನಿಂತ ಇವರು ಕೇಳಿದರು: ಏನಾಯಿತೇ ಸುಮತಿ, ಕೊಳ್ಳಲ್ಲ-ನಿನ್ನ ಪ್ರೀತಿಯ ಹೂವು ಎಂದು ಒತ್ತಾಯಪಡಿಸಿದರು. ಹೂ ಜಡೆಯನ್ನೇನೋ ಕೊಂಡೆ: ಆದರೆ ಮೊದಲಿನ ಉತ್ಸಾಹದಿಂದಲ್ಲ. ಇತ್ತಲಾಗಿ ಅನೇಕ ದಿನಗಳಿಂದ ಹೀಗೆ ಬಂದಿರದ ಆಬೋಲೀನಳ ನೆನಪು ಅಂದೇ ಏಕೆ ಬಂತೋ! +ಹೂವು ಮುಡಿದು, ಶೃಂಗರಿಸಿಕೊಂಡು ಅಂದು ಗಾಳಿವಿಹಾರಕ್ಕೆ ಹೊರಗೆ ಹೋದಾಗ ಇವರಿಗೆ ನನ್ನ ಮನಸ್ಸನ್ನು ಕದಡಿದ ಆಬೋಲೀನಳ ಕತೆ ಹೇಳಿದೆ. +೨ +ಆಬೋಲೀನ ನನ್ನ ಹುಟ್ಟಿದೂರಿನ ಕ್ರಿಶ್ಚನ್ ಹುಡುಗಿಯೊಬ್ಬಳು-ನಮ್ಮ ಮನೆಯ ಮುಂದಿನ ಓಣಿಯ ಆಚೆಕೇರಿಯ ಕೈತಾನನ ಮಗಳು. ಮನೆಯಲ್ಲಿ ಆಡುವ ಭಾಷೆ ಕೊಂಕಣಿ. ಕೊಂಕಣಿಯಲ್ಲಿ ಅಬ್ಬಲಿಗೆ ಹೂವಿಗೆ ‘ಆಬೋಲೆಂ’ ಎನ್ನುತ್ತಾರೆ. ಆಬೋಲೀನ ಹೆಸರು ಈ ಹೂವಿನ ಹೆಸರಿನಿಂದಲೇ ಬಂದಿರಲಿಕ್ಕಿಲ್ಲವಷ್ಟೇ? ಏನೋ! ಆದರೆ ಆಬೀಲೀನಳು ಮಾತ್ರ ನಿಜಕ್ಕೂ ಹೂವಿನಂತಹ ಹುಡುಗಿ. ಕೋಮಲ ಮನಸ್ಸಿನವಳು: ಸಿಹಿಯಾದ ಹೃದಯದವಳು. ಅಂತೆಯೇ ಬಂದಿರಬೇಕು ಅವಳ ನೆನಪು ಅಂದು ಹೂವು ಕೊಳ್ಳುವಾಗ. +ಅಬ್ಬಲಿಗೆ ವಾಸನೆಯಿಲ್ಲದ ಹೂ-ಅಲ್ಲ ವಾಸನೆ ಹೊರಚೆಲ್ಲದ ಹೂ. (ಏಕೋ ನಿರ್ಗಂಧ ಕುಸುಮದ ಕಲ್ಪನೆಯೇ ನನಗೆ ಸಹಿಸದು.)ಆಬೋಲೀನಳೂ ಒಳಮನಸ್ಸಿನ ಹುಡುಗಿ, ಒಳ ವಿಚಾರದ ಹುಡುಗಿ-ಈ ವಾಸನೆ ಕೊಡದ ಅಬ್ಬಲಿಗೆ ಹೂವಿನಂತೆ. +ಆಬೋಲೀನಳ ಬಗ್ಗೆ ಇಂತಹ ವಿಚಾರ ಬಂದಾಗೆಲ್ಲ ನನಗೆ ತಪ್ಪದೇ ಕಣ್ಣಮುಂದೆ ಕಾಣುತ್ತಿದ್ದುದು ಅವಳ ಲಗ್ನದ ದಿನ-ಹೆಣ್ಣು ಮಕ್ಕಳಿಗೆ ತಮ್ಮ ಜೀವನದಲ್ಲೇ ಅತ್ಯಂತ ಸುಖದ ದಿನ-ಮದುಮಕ್ಕಳ ಮೆರವಣಿಗೆಯಲ್ಲಿ ನೋಡಿದ ಅವಳ ಮೋರೆ. ಅವಳು ಈ ಲಗ್ನಕ್ಕೆ ಹೇಗೆ ಒಪ್ಪಿಕೊಂಡಳೋ? ಅವಳೇ ಒಪ್ಪಿಕೊಂಡಳೆ? ಇಲ್ಲವೇ ತಂದೆಯ ಬಲಾತ್ಕಾರವೇ? ಹಾಗಾದರೆ ಅವಳಿಗೆ ತನಗಾದ ಅನ್ಯಾಯದಿಂದ ಸಿಟ್ಟೇ? ದುಃಖವೇ? ಇಲ್ಲ-ಇಂತಹ ಯಾವ ಭಾವವೂ ಆ ಮೋರೆಯ ಮೇಲೆ ಮೂಡಿರಲಿಲ್ಲ. ಅತಿ ಶಾಂತ, ಅತಿ ಮುಗ್ಧ-ನಿಷ್ಪಾಪ ಮಗುವಿನಂತೆ. ಆನಂದವೋ ದುಃಖವೋ ಯಾವುದರ ಲವಲೇಶವೂ ಅವಳ ಮೋರೆಯಲ್ಲಿ ಕಾಣಲಿಲ್ಲ, ಆಗ. +ಆದರೂ ನನಗನಿಸಿತ್ತು, ನಮಗೆಲ್ಲ ಅನಿಸಿತ್ತು-ಊರಿಗೆ ಊರೇ ಮರುಗಿತ್ತು. ಈ ಮದುವೆಯಲ್ಲೇನೋ ಮೋಸವಿದೆ. ಇದು ಆಬೋಲೀನಳು ಬಯಸಿದ ಮದುವೆಯಲ್ಲ. ಯಾವ ಹುಡುಗಿಯೂ ಜನ್ಮಜನ್ಮಾಂತರದಲ್ಲಿ ಪಡೆಯಬಾರದಂತಹ ಒಬ್ಬ ದುಷ್ಟ ಹುಂಬನನ್ನು-ಮನವೇಲನನ್ನು-ಹೂವಿನಂತಹ ಆಬೋಲೀನ ಮದುವೆಯಾಗಲು ಒಪ್ಪುವುದೆಂತು? +೩ +ಅದಾಗಲೇ ನಮ್ಮ ಕೇರಿಯಲ್ಲಿ ಈ ಲಗ್ನವನ್ನು ಕುರಿತು ತರ್ಕ ಕುತರ್ಕ ನಡೆದಿದ್ದವು. ಆದರೆ ನನಗೆ ಮಾತ್ರ ಈ ಲಗ್ನದ ವಿಷಯ ತಿಳಿದದ್ದು, ಲಗ್ನಕ್ಕಿಂತ ಎಷ್ಟೋ ದಿನಗಳ ಮೊದಲೇ-ನನ್ನ ತಂದೆತಾಯಂದಿರ ಮುಖಾಂತರ. +ತಂದೆಯವರಿಗೆ ಅಂಗಡಿಯಿಂದ ಬರಲು ರಾತ್ರೆ ಹತ್ತರ ಮೇಲಾಗುತ್ತಿತ್ತು. ಅಷ್ಟು ಹೊತ್ತಿಗೆ ನಾವು ಮಕ್ಕಳೆಲ್ಲ ಊಟ ಮುಗಿಸಿ ನಿದ್ದೆಹೋಗುತ್ತಿದ್ದೆವು. ಆಗ ಸೆಖೆಯ ದಿನಗಳಾದ್ದರಿಂದ ನಾವೆಲ್ಲ ಹೊರಗೆ, ಚಪ್ಪರದ ಕೆಳಗೆ ಅಂಗಳದಲ್ಲೇ ಮಲಗುತ್ತಿದ್ದೆವು; ತಾಯಿ, ನನ್ನ ತಮ್ಮ-ತಂಗಿಯರು, ನಾನು ಒಂದೆಡೆ; ಹಾಗೂ ಇನ್ನೊಂದೆಡೆ ನಮ್ಮಿಂದ ಎರಡು ಮಾರು ಜಾಗ ಬಿಟ್ಟು ತಂದೆಯವರು. ಅಂದು ತಂದೆಯವರು ಊಟ ಮುಗಿಸಿ ಹಾಸಿಗೆಗೆ ಬಂದಾಗ ಹೇಗೋ ನನಗಿನ್ನೂ ಎಚ್ಚರವಿತ್ತು. ತಂದೆಯವರು ಹಾಸಿಗೆಯಲ್ಲಿ ಕುಳಿತು ಬೀಡಿ ಸೇದುತ್ತಿದ್ದರು. +ಕೆಲಹೊತ್ತಿನ ನಂತರ ತಾಯಿಯವರು ತಮ್ಮ ಊಟ, ಒಳಗಿನ ಕೆಲಸ ಮುಗಿಸಿ, ಜಗಲಿಯ ಮೇಲಿನ ಕಂದೀಲಿನ ದೀಪವನ್ನು ಸಣ್ಣದು ಮಾಡಿ, ನನ್ನ ಬಳಿಯ ಹಾಸಿಗೆಯಲ್ಲಿ ಅಡ್ಡಾದರು. ಅಂಗಳದಲ್ಲಿಯ ನಸುಗತ್ತಲೆಯಲ್ಲಿ ತಂದೆಯವರು ಬಾಯಲ್ಲಿಯ ಬೀಡಿಯ ಬೆಂಕಿ ವಿಚಿತ್ರ ಕಾಣುತ್ತಿತ್ತು. ಸುತ್ತಲೆಲ್ಲ ನೀರವತೆ. ಹಗಲೆಲ್ಲ ದುಡಿದು ದಣಿದ ಕೇರಿಗೆ ಕೇರಿಯೇ ನಿದ್ದೆಯ ಸಿದ್ಧತೆಯಲ್ಲಿತ್ತು. ಎಲ್ಲೋ ದೂರ ಒಕ್ಕಲ ಕೇರಿಯಿಂದ ಕೇಳಿಬರುತ್ತಿದ್ದ ಗುಮ್ಟೆಗಳ ಸದ್ದೋ, ಅಗೇರ ಮುರ್ಕುಂಡೀ ಮನೆಯ ನಾಯಿಗಳ ಬೊಗಳೋ ಅಷ್ಟೇ ಈ ನೀರವತೆಯನ್ನು ಕದಡುತ್ತಿದ್ದವು ಆಗೀಗ. ಅದಾಗ ತಂದೆಯವರು ಪಿಸುದನಿಯಲ್ಲಿ ಅಮ್ಮನ ಹತ್ತಿರ ಮಾತನಾಡಹತ್ತಿದರು. ದನಿಯಲ್ಲಿ ನಮ್ಮ ನಿದ್ದೆ ಕೆಡಬಾರದು ಎಂಬ ಹೇತುವಿಗಿಂತ ಹೆಚ್ಚಾಗಿ ತಾವು ಆಡಲಿರುವ ವಿಷಯ ತುಂಬ ಅಂತರಂಗದ್ದು ಎನ್ನುವುದು ವ್ಯಕ್ತವಾಗುತ್ತಿತ್ತು. ಅಂತರಂಗದ ಮಾತೇ ಹಾಗೆ; ಸುತ್ತಲೂ ಕೇಳಲು ನಮ್ಮನ್ನು ಬಿಟ್ಟು ಇನ್ನೊಬ್ಬರಿಲ್ಲದಿದ್ದರೂ ತಗ್ಗಿದ ದನಿಯಲ್ಲಿ ಆಡುತ್ತೇವೆ! ಮಾತುಗಳು ಎಂಥಹುದೋ ಭೀತಿಯಿಂದ, ಕಾತರತೆಯಿಂದ ಹೆಪ್ಪುಗಟ್ಟಿದಂತೆ ತಡೆತಡೆದು ಸಾವಕಾಶ ಬರುತ್ತಿದ್ದವು. ನನಗೆ ಈಗಲೂ ನಿಚ್ಚಳವಾಗಿ ನೆನಪುಳ್ಳ ನನ್ನ ಚಿಕ್ಕಂದಿನ ಕೆಲವೇ ಒಂದು ಅನುಭವಗಳಲ್ಲಿ ಈ ಸಂಭಾಷಣೆಯೂ ಒಂದು: +“ಇಂದು ಕೈತಾನ ಬಂದಿದ್ದ ಅಂಗಡಿಗೆ.” +“ಹೂಂ?” +“ಆಬೋಲೀನಳ ಮದುವೆ ನಿಶ್ಚಯವಾಗಿದೆಯಂತೆ.” +“ಹೂಂ.?” +“ನಿನಗೆ ಗೊತ್ತಿತ್ತೇ?” +“ಪದ್ಮಾವತಿ ಏನೋ ಅಂದಂತ್ತಿತ್ತು.” +“ನೀನು ನನಗೇನೂ ಹೇಳಲಿಲ್ಲವಲ್ಲ?” +“ತಾನಾಗಿಯೇ ಗೊತ್ತಾಗುತ್ತಿತ್ತು…..ಮುಚ್ಚಿಡುವ ಸಂಗತಿಯೇನಲ್ಲ…..” +“ಆದರೆ ….. ಹುಡುಗ….?” +“ಮನವೇಲನಲ್ಲವೇ?” +“ಅಹುದು….ಒಳ್ಳೇ ಬಂಗಾರದಂತಹ ಹುಡುಗಿ….ಎಲ್ಲರನ್ನೂ ಬಿಟ್ಟು ಆ ಫಟಿಂಗನಿಗೆ….” +“ನೀವು…(ಕೈತಾನನನ್ನು)ಕೇಳಲಿಲ್ಲವೆ?” +“ಕೇಳದೇ ಇರಲಾಗುತ್ತದೆಯೆ? ಸರಿಯಾಗಿ ಏನೂ ಹೇಳಲಿಲ್ಲ. ಏನೋ ಸುತ್ತುಸುತ್ತಾಗಿ ಪಾದ್ರಿಯ ಒತ್ತಾಯ ಎಂದ.” +“ವಯಸ್ಸು ಇನ್ನೂ ತೀರ ಚಿಕ್ಕದು….ಬರಿಯೆ ಹದಿನಾಲ್ಕೋ ಹದಿನೈದೋ!….ಪಾದ್ರಿಯ ಒತ್ತಾಯ ಎಲ್ಲಿ ಬಂತು?” +“ಅಂದಂತೆ ಮನವೇಲನಿಗೆ ಮುವ್ವತ್ತರ ಮೇಲೇ ಆಗಿರಬೇಕು. ಈಗಾಗಲೇ ಇಬ್ಬರು ಹೆಂಡಂದಿರನ್ನು ಕಳಕೊಂಡವ….ದುರ್ವ್ಯಸನಿ…” +“ಅಂದ ಬಳಿಕ ಕಣ್ಣಿದ್ದ ಯಾರೂ ಒತ್ತಾಯ ಪಡಿಸುವ ಮಾತು ಅಲ್ಲವಲ್ಲ?” +“ಏನೋ…..ಕೈತಾನನಿಗೂ ಈ ಮದುವೆ ಒಪ್ಪಿಗೆ ಇದ್ದಂತಿಲ್ಲ…..ಹೋಗುವಾಗ ಕಣ್ಣಲ್ಲಿ ನೀರು ಕಂಡಂತಿತ್ತು. +“ಹಣಕ್ಕಾಗಿ ಬಂದಿದ್ದನೇ?” +“೫೦ ರೂಪಾಯಿ ಬೇಕಿತ್ತು- ಕೊಟ್ಟೆ.” +“ಮದುವೆಗೆ ಕಾರಣ ಬೇರೆಯೇ ಏನೋ ಇರಬೇಕು.” +“ಪದ್ಮಾವತಿಗೆ ಗೊತ್ತಿದೆಯೇ?” +“ಹುಡುಗಿ ಮೇಲೆ ಕಾಣಿಸುವಷ್ಟು ಸಂಭಾವಿತಳಲ್ಲ ಎಂದಳು.” +“ಛೇ ಛೇ! ಅವಳಿಗೆ ಎಂದಿಗೂ ಸಂಶಯವೇ! ಆದರೆ ಆಬೋಲೀನಳ ವಿಷಯಕ್ಕೂ?” +“ನಾನು ಹಾಗೆಯೇ ಅಂದೆ.” +“ಏನಂತೆ?” +“ಎರಡು ತಿಂಗಳು ಹೋಗಿವೆಯಂತೆ.” +“ಅಯ್ಯೋ ಭಗವಂತ ಯಾರು?” +“ಅವನೇ…” +“ಮನವೇಲ?” +“ಹೂಂ.” +ಕತ್ತಲೆಯಲ್ಲಿ ಹೊರಟ ಈ ಮಾತುಗಳನ್ನು ಆಡಿದವರ ಮೋರೆಗಳು ನನಗೆ ಕಾಣಿಸುತ್ತಿರಲಿಲ್ಲ; ಅವನ್ನು ನೋಡುವ ಧೈರ್ಯವೂ ನನಗೆ ಇರಲಿಲ್ಲ. ಆದರೆ ಆ ಮಾತುಗಳ ಹಿಂದೆ ಆಬೋಲೀನಳ ಬಗ್ಗೆ ಇದ್ದ ಅಪಾರ ಪ್ರೀತಿ, ಕಳವಳ, ಅವಳ ಭವಿಷ್ಯತ್ತನ್ನು ಕುರಿತಿದ್ದ ಚಿಂತೆ ಭೀತಿ ಇವು ನನ್ನ ಮನಸ್ಸಿನ ಮೇಲೆ ನಾಟುತ್ತಿದ್ದವು. +ಪದ್ಮಾವತಿ ನಮ್ಮ ನೆರೆಮನೆಯ ಹೆಂಗಸು. ನಾವೆಲ್ಲ ಕರೆಯುವುದು ಪದ್ಮಕ್ಕ ಎಂದು ಪದ್ಮಕ್ಕನಿಗೆ ಆಬೋಲೀನಳ ಕುರಿತು ವಿವರ ಪೂರ್ಣ ಮಾಹಿತಿ ಇದ್ದಂತಿತ್ತು. ಅದು ಅವಳಿಗೆ ಹೇಗೆ ಯಾವಾಗ ದೊರಕಿತೊ ದೇವರೊಬ್ಬ ಬಲ್ಲ. ಆದರೆ ಇಷ್ಟೊಂದು ನಿಜ: ಊರಲ್ಲಿ ನಡೆಯುವ ಇಂತಹ ಎಲ್ಲ ಸಂಗತಿಗಳು ತಿಳಿಯುವುದೇ ಅವಳಿಗೆ ಮೊದಲು! ಆದರೆ ಆಬೋಲೀನಳ ಬಗ್ಗೆ ತಿಳಿದ ಸಂಗತಿ ನಿಜವಾದುದೇ? ದೇವರೇ ಅದು ಸುಳ್ಳಾಗಲಿ!…. +ಆದರೆ ಅದು ಸುಳ್ಳಾಗುವ ಬಗೆ ಹೇಗೆ? ಇಂತಹ ಯಾವುದೇ ಕಾರಣ ಇದ್ದ ಹೊರತು ಕೈತಾನ ತನ್ನ ಒಬ್ಬಳೇ ಮಗಳಾದ ಆಬೋಲೀನಳನ್ನು, ಹದಿನಾಲ್ಕು ವರುಷದ ಎಳೆಮಗುವನ್ನು-ಮನವೇಲನಂತಹ ಹುಂಬನಿಗೆ ಕೊಡಲು ಒಪ್ಪುವುದೆಂತು? ಪದ್ದಕ್ಕ ತಂದ ಸುದ್ದಿಯೇ ನಿಜ ಹಾಗಾದರೆ. +ಆಬೋಲೀನ ಲಗ್ನವಾಗುವ ಮೊದಲೇ ಗರ್ಭಿಣಿ? ಹದಿನಾಲ್ಕು ವರುಷದ ಹೊಟ್ಟೆಯಲ್ಲಿ ಇನ್ನೊಂದು ಮಗು? +ಈ ಸಂಗತಿ ನನಗೂ ಗೊತ್ತಿತ್ತು. ಸ್ವತಃ ಆಬೋಲೀನಳ ಬಾಯಿಯಿಂದಲೇ ತಿಳಿದಿತ್ತು. ಅದೂ ಯಾವ ರೀತಿಯಲ್ಲಿ! ನೆನಪು ಮಾಡಿದರೆ ಈಗಲೂ ಜೀವ ಬೆಚ್ಚುತ್ತದೆ! +೪ +ಕೈತಾನನ ಮನೆ ನಮ್ಮ ಮನೆಯ ಇದಿರಿನ ಕೇರಿಯಲ್ಲೇ ಇತ್ತು-ಓಣಿಯ ಆ ಬದಿಯಲ್ಲಿ. ಉದ್ಯೋಗದಿಂದ ಗಾಣಿಗನವ. ಖೊಬ್ಬರಿ ಹಾಗೂ ಸುರಗೀಕಾಯಿಗಳ ಎಣ್ಣೆಯನ್ನು ನಮ್ಮ ಹಾಗೂ ನೆರೆಯ ಹಳ್ಳಿಗಳಲ್ಲಿ ಮಾರುತ್ತಿದ್ದ. ಮನೆಯಲ್ಲಿ ಮೂರೇ ಮಂದಿ-ಕೈತಾನ, ಆಬೋಲೀನ ಹಾಗೂ ಅವಳ ಕಿರಿಯ ತಮ್ಮ ಬಸ್ತ್ಯಾಂವ. ಕೈತಾನ ತನ್ನ ಹೆಂಡತಿಯನ್ನು ಕಳಕೊಂಡು ಆಗ ಹತ್ತು ವರ್ಷಗಳ ಮೇಲೆ ಆಗಿರಬೇಕು. ಅವಳು ಸಾಯುವಾಗ ಬಸ್ತ್ಯಾಂವ ಒಂದು ವರ್ಷದ ಕೂಸು. ತಮ್ಮ ಬಾಲ್ಯದಲ್ಲಿಯೇ ತಾಯನ್ನು ಕಳಕೊಂಡ ಈ ತಬ್ಬಲೀ ಜೀವಿಗಳಿಗೆ ಕೈತಾನನೇ ತಾಯಿಯಾದ. ಅವನು ಅವರಿಬ್ಬರನ್ನು ನೋಡಿಕೊಂಡು ಬಂದ ರೀತಿಯಲ್ಲಿ ಮಮತೆ, ವಾತ್ಸಲ್ಯ ಅಪಾರ. ನಾನು ಚಿಕ್ಕಂದಿನಲ್ಲಿ ಕೈತಾನನ ಮನೆಗೆ ಹೋಗಿದ್ದೇನೆ, ಲೆಕ್ಕವಿಲ್ಲದಷ್ಟು ಸಲ. ಸಾಲೆ ಬಿಟ್ಟ ಬಳಿಕ ಸಂಜೆ ತಿರುಗಾಡ ಹೋಗುವುದು ಒಂದೇ ಆಬೋಲೀನಳ ಮನೆಗೆ ಇಲ್ಲವೇ ಚಾ ಅಂಗಡಿಯ ಸರ್ವೋತ್ತಮನ ತಂಗಿ ಸರಸ್ವತಿಯ ಮನೆಗೆ. ಆದರೆ ತುಸು ದೊಡ್ಡವಳಾದ ಬಳಿಕ ಸರ್ವೋತ್ತಮನ ಬಗ್ಗೆ ನನಗೆ ಚೇಷ್ಟೆ ಮಾಡುತ್ತಿದ್ದರಿಂದ ನಾನು ಅಲ್ಲಿ ಹೋಗುವುದನ್ನೇ ಬಿಟ್ಟುಕೊಟ್ಟಿದ್ದೆ. ಆಬೋಲೀನಳ ಮನೆಯವರೇ ನನ್ನ ಚಿಕ್ಕಂದಿನ ಗೆಳೆಯರು; ಕೈತಾನ, ಆಬೋಲೀನ, ಬಸ್ತ್ಯಾಂವ-ಎಲ್ಲರೂ. +ಇವರು ಮೂವರೂ ತಮ್ಮ ಮನೆಯ ಉದ್ಯೋಗವಾದ ಗಾಣದ ಕೆಲಸದಲ್ಲಿ ನಿರತರಾದಾಗ ನೋಡುತ್ತ ನಿಲ್ಲುವುದೆಂದರೆ ನನಗೊಂದು ಹಬ್ಬ. ಕೈತಾನ ಹಾಗೂ ಬಸ್ತ್ಯಾಂವ ಅತಿ ಉತ್ಸಾಹದಿಂದ ಗಾಣದ ನೊಗವನ್ನು ತಾವೇ ಹೊತ್ತು ಸುತ್ತು ತಿರುಗುತ್ತಿದ್ದರು. ಆಬೋಲೀನ ಗಾಣದ ಮೇಲೆ ಏರಿ ಕೂತು ಗಾಣದ ಒರಳಿನಲ್ಲಿ ಹಿಂಡಿಯನ್ನು ಸರಿಪಡಿಸುತ್ತ ಇವರಿಬ್ಬರನ್ನು ಹುರಿದುಂಬಿಸುತ್ತಿದ್ದಳು-ಹಾಡುತ್ತ, ನಗುತ್ತ. +ಒಂದು ರೀತಿಯಿಂದ ಕೈತಾನ ಹಾಗೂ ಬಸ್ತ್ಯಾಂವರಿಗೆ ಆಬೋಲೀನಳೇ ತಾಯಿ ಎನ್ನಬೇಕು. ಕೈತಾನನೇ ತನ್ನ ತಾಯ ಮುಂದೆ ಇಂತಹ ಉದ್ಗಾರ ತೆಗೆದ ನೆನಪಿದೆ. ಅವಳು ಅವರಿಬ್ಬರನ್ನು ನೋಡಿಕೊಳ್ಳುವ ರೀತಿಯೇ ಹಾಗೆ: ಮನೆಯ ಯಜಮಾನಿಯಾಗಿ. ಬಸ್ತ್ಯಾಂವ ಏನೂ ಅರಿಯದ ಕೂಸು. ಕೈತಾನ ಮುದುಕನಲ್ಲದಿದ್ದರೂ ವಯಸ್ಸು ದಾಟಿದವ. ಮನೆ ನಡೆಸಿಕೊಂಡು ಹೋಗುವ ಜವಾಬುದಾರಿಯೆಲ್ಲ ಆಬೋಲೀನಳ ಮೇಲೆ. ವಯಸ್ಸು ಬರಿಯೇ ಹದಿನಾಲ್ಕು ಆದರೂ ಅವಳ ದೇಹದ ಬೆಳವಣಿಗೆಯಿಂದ, ಸಂಸಾರ ನಡೆಸುವ ದಕ್ಷತೆಯಿಂದ ಅವಳ ವಯಸ್ಸನ್ನು ನಂಬುವುದು ಕಷ್ಟ. ತುಂಬಿದ ದಷ್ಟಪುಷ್ಟ ಮೈ; ಎತ್ತರದ ನಿಲುವು; ನೀಳವಾದ ಕೂದಲು; ಸಾದಗಪ್ಪು ಮೈ ಬಣ್ಣ-ಸುಂದರಳಲ್ಲ, ಬಲು ಮೋಹಕಳು. +ನಾನಂದು ಸಂಜೆ ಸಾಲೆ ಬಿಟ್ಟವಳೇ ಕೈತಾನನ ಮನೆಗೆ ಹೋದಾಗ ಗಾಣದ ಮನೆಯಲ್ಲಿ ಯಾರೂ ಇರಲಿಲ್ಲ. ಅಚ್ಚರಿಯಾಯಿತು. ಆಬೋಲೀನಳನ್ನು ಹುಡುಕುತ್ತ ಹಿಂದಿನ ಜಗಲಿಗೆ ಹೋದೆ. ಅವಳು ಹಿಂದಿನ ಅಂಗಳದಲ್ಲಿಯ ಬಾವಿ ಕಟ್ಟೆಯ ಬಳಿಯಲ್ಲಿ ಕುಳಿತಿದ್ದಳು. ಬಿಚ್ಚಿದ ತನ್ನ ಕೂದಲನ್ನು ಬೆನ್ನಮೇಲೆ ಹರಹಿ ಮುಂದಿಟ್ಟುಕೊಂಡ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು. ನಾನು ಸದ್ದು ಮಾಡದೆ ಹಿಂದಿನಿಂದ ಹೋಗಿ ಅತಿ ಸಮೀಪ ಬಂದ ಬಳಿಕ ಕೇಳಿದೆ: +“ಏನೇ, ಇಂದು ಯಾರು ನೋಡಲು ಬರುತ್ತಾರೆಯೇ? ಇಷ್ಟರಲ್ಲೇ ಸಿಂಗರಿಸಿಕೊಳ್ಳ ಹತ್ತಿದ್ದೀ?” +ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಯಿಂದ ಅವಳು ಬೆಚ್ಚಿಬಿದ್ದಳು. ಅಚ್ಚರಿಯಿಂದ ತನ್ನ ಮೋರೆಯನ್ನು ನನ್ನೆಡೆ ತಿರುವಿದಾಗ ಕಂಡೆ: ಅವಳ ಮುಗ್ಧ ಕಣ್ಣುಗಳಲ್ಲಿ-ನೀರು! +“ಅರೆ! ಅಳ್ತಾ ಇದ್ದೀಯೇನೇ? ಏನಾಯಿತೇ?” +ಅವಳು ಲಗುಬಗೆಯಿಂದ ತನ್ನ ಕಿರಗಣೆಯ ತುದಿಯಿಂದ ಕಣ್ನನ್ನು ಒರೆಸುತ್ತ ಅಂದಳು. ಹಾರಿಕೆಯ ದನಿಯಲ್ಲಿ: +“ಇಲ್ಲ, ಏನಿಲ್ಲ. ಏಕೋ ಅಮ್ಮನ ನೆನಪಾಯಿತು.” +ನನಗೆ ಈ ಮಾತಿನಲ್ಲಿ ವಿಶ್ವಾಸ ಕೂತಿರಲಿಕ್ಕಿಲ್ಲ-ಆ ಭಾವದಿಂದ ನಾನು ಅವಳೆಡೆ ನೋಡಿರಬೇಕು. ನನ್ನ ದೃಷ್ಟಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಬಿಚ್ಚಿದ ತನ್ನ ಕೂದಲನ್ನು ಸರಿಪಡಿಸಿಕೊಳ್ಳುತ್ತ ಕೇಳಿದಳು: +“ಇಂದು ಸಾಲೆಯಿಂದ ಬೇಗ ಬಂದಿಯೇನೇ?” ನನಗೂ ಆಗ ಮೊದಲೊಮ್ಮೆ ಅರಿವಾಯಿತು: ನಾನು ದಿನಕ್ಕಿಂತ ಒಂದು ತಾಸು ಮುಂಚಿತವಾಗಿಯೇ ಬಂದದ್ದು. ನನ್ನಲಕ್ಷ್ಯ ಇನ್ನೂ ಕಂಬನಿಗೆರೆದ ಅವಳ ಕಣ್ಣುಗಳಲ್ಲೇ ನೆಟ್ಟಿತ್ತು. ಅವಳು ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ನಾ ಕೇಳಿದೆ: +“ಇಂದು ಗಾಣ ಇಲ್ಲವೇನೇ?” +“ಇಂದು ಗಾಣದ ಕೆಲಸ ಬೇಗ ಮುಗಿಯಿತು. ಅಪ್ಪ, ಬಸ್ತ್ಯಾಂವ ಇಬ್ಬರೂ ಗೋಕರ್ಣಕ್ಕೆ ಹೋಗಿದ್ದಾರೆ. ನಾಳೆ ವೆಂಕಟರಮಣ ದೇವರ ಉತ್ಸವ ತಾನೇ?” +“ಓಹೋ! ಎಣ್ಣೆ ಕೊಡಲು ಹೋಗಿದ್ದಾರೆಯೇ?” +“ಅಹುದು.” +ಆಬೋಲೀನಳ ಮಾತಿನಲ್ಲಿ ಉತ್ಸಾಹವಿರಲಿಲ್ಲ. ಅವಳು ಇನ್ನೂ ನನ್ನ ಜಗತ್ತಿಗೆ ಬಂದೇ ಇರಲಿಲ್ಲ. ಅವಳಿಗೆ ಸದ್ಯ ನಾನು ಬರಲೇ ಬಾರದಿತ್ತು ಎಂದು ಅನಿಸಿರಬಹುದು. ನನಗೆ ಏನು ಮಾಡಬೇಕೋ ತೋಚಲಿಲ್ಲ. ಅದಾಗ ಅವಳೇ ಬಾಯಿ ಬಿಟ್ಟಳು-ಕನಸಿನಿಂದ ಎಚ್ಚೆತ್ತವಳಂತೆ: +“ಸುಮತೀ, ಮಕ್ಕಳು ಹೇಗೆ ಹುಟ್ಟುತ್ತವೆ, ಗೊತ್ತಿದೆಯೆ?” +ಇವಳಿಗೆ ಹುಚ್ಚು ಹಿಡಿದಿಲ್ಲವಷ್ಟೇ? ಇದೆಂತಹ ಪ್ರಶ್ನೆ! ಹುಡುಗಾಟಿಕೆಯೇ? ಆದರೆ ಆಬೋಲೀನಳ ಭೀತಗೊಂಡ ಕಣ್ಣುಗಳು, ನಿರ್ವಿಣ್ಣವಾದ ಮೋರೆ ನೋಡಿದಾಗ ಅನಿಸಿತು, ಇದು ಬರಿಯ ಚೇಷ್ಟೆಯ ಮಾತು ಅಲ್ಲವೆಂದು. ಆದರೂ ಮಾತನ್ನು ಚೇಷ್ಟೆಯ ಮೇಲೆ ಒಯ್ಯಲೆಂದು ನಾನೆಂದೆ, ಬಲವಂತದ ನಗೆ ನಗುತ್ತ: +“ಈಗ ಯಾಕೆ ಈ ಪ್ರಶ್ನೆ? ಇನ್ನೂ ಲಗ್ನವೂ ಆಗಿಲ್ಲ. ಇದಾಗಲೇ ಮಗುವಿನ ಆಸೆಯೆ?” +“ಲಗ್ನ ಆಗುವ ಮೊದಲು ಮಗು ಹುಟ್ಟುವುದಿಲ್ಲವೆ?” +ಆಬೋಲೀನಳ ಮೋರೆಯ ಮೇಲೆ ಭಯಗ್ರಸ್ತ ಮುಗ್ಧತೆಯಿತ್ತು. +“ಛೇ! ಇದೆಂತಹ ಮಾತೇ!” ನಗು ನಟಿಸುತ್ತ ಎಂದೆ. ಸತ್ಯವನ್ನು ಕೂಡಲೇ ಎದುರಿಸುವ ಧೈರ್ಯ ಆಗ ನನಗಿರಲಿಲ್ಲ. ಅವ್ಯಕ್ತ ಭೀತಿಯಿಂದ ಮನ ನಡುಗಿತು. +“ಹಾಗಾದರೆ ನಾನು….?” +ಅವಳ ತುಟಿ ನಡುಗಹತ್ತಿದವು. ಮೋರೆ ಇನ್ನೂ ಬಿಳುಪೇರಹತ್ತಿತು. ಕಣ್ಣಲ್ಲಿ ನೀರು ತುಂಬ ಹತ್ತಿತು. ಅವಳ ಅಳು ನೋಡಿ ನನಗೂ ಅಳಬೇಕು ಅನ್ನಿಸಿತು. +“ಛೇ ಆಬೋಲಿನ್, ಇದೇನು ಹುಚ್ಚುತನವೇ?” +“ಇಲ್ಲ ಸುಮತೀ, ನನಗೇಕೋ ಭಯವಾಗ್ತಾ ಇದೆ. ಅಮ್ಮ ಇದ್ದಿದ್ದರೆ…. +ಅವಳು ನಿಜಕ್ಕೂ ಅಳಹತ್ತಿದಳು. +“ಅಳಬೇಡವೆ ಅಳಬೇಡವೇ ಆಬೋಲಿನ್.” +“ಬಸುರಾದರೆ ಹೇಗೆ ತಿಳಿಯುತ್ತದೆಯೇ?” +ಆಬೋಲೀನಳ ಕಂಬನಿ ತುಂಬಿದ ಪ್ರಶ್ನೆ: ಹೇಗೆ ತಿಳಿಯುತ್ತದೆ? ನನಗೇನು ಗೊತ್ತಿರಬೇಕು? ನನಗಾಗ ಇನ್ನೂ ಹನ್ನೆರಡು ವರುಷ. ಆದರೆ ‘ಗರ್ಭ ನಿಂತರೆ ಹೊಟ್ಟೆ ದೊಡ್ಡದಾಗುತ್ತದೆ’ ಎನ್ನುವ ಅರ್ಥದ ಮಾತು ಗೊತ್ತಿತ್ತು. ಹಾಗೆಯೇ ಏನೋ ಅಂದೆ. ಆ ಮಾತಿನಲ್ಲಿ ಏನೋ ಬೆಳಕು ಕಂಡಳು ಎಂಬಂತೆ ನನ್ನನ್ನು ತನ್ನೆಡೆ ಎಳಕೊಂಡು ನನಗೆ ಇವಳು ಏನು ಮಾಡುತ್ತಾಳೆ ಎನ್ನುವುದರ ಕಲ್ಪನೆ ಬರುವ ಮೊದಲೇ ತನ್ನ ಕಿರಗಣಿಯ ದಾರ ಬಿಚ್ಚಿ ನನ್ನ ಕೈಯನ್ನು ತನ್ನ ಹೊಟ್ಟೆಯ ಮೇಲಿಟ್ಟು ಕೇಳಿದಳು: +“ನೋಡು ನೋಡು ನಾನು ಬಸುರಿಯೇ?” +ಅಚಾನಕವಾಗಿ ಬಂದ ಅವಳ ಈ ಕೃತ್ಯ, ಅವಳ ನಡುಗುವ ಕೈಗಳು, ಕಂಪಿಸುವ ದನಿ ಇವೆಲ್ಲವುಗಳಿಂದ ಭೀತಿಗೊಂಡ ನನ್ನ ಒಳಜೀವ ಚಿಟ್ಟನೆ ಚೀರಿತ್ತು. ಅವಳ ಕೈಗಳಿಂದ ಬಲುಮೆಯಿಂದ ಬಿಡಿಸಿಕೊಂಡವಳೇ ಓಡಿದೆ, ನನ್ನ ಮನೆಯತ್ತ- +“ಇಲ್ಲ, ಇಲ್ಲ ನನಗೇನೂ ಗೊತ್ತಿಲ್ಲ”ಎನ್ನುತ್ತ. ನಾನು ಓಡೋಡುತ್ತ ದಣಪೆ ದಾಟುವಾಗ ಆಬೋಲೀನಳು ಕುಳಿತಲ್ಲಿಂದಲೇ ಒದರಿ ಹೇಳಿದಳು: +“ಯಾರಿಗೂ ಹೇಳಬೇಡ ಸುಮತೀ, ನನ್ನಾಣೆಯಿದೆ.” ನೆನೆದರೆ ಕೈಗೇ ಹತ್ತುವದೇನೋ ಎಂಬ ಅನಿಸಿಕೆ-ಅಂದು ಮುಟ್ಟಿದ ಆ ನುಣುಪಾದ, ತಂಪಾದ ಮಿದು ಮಿದು ಬತ್ತಲೆ ಹೊಟ್ಟೆ! +ಆ ಇಡಿಯ ಸಂಜೆ ನಾನದರ ವಿಷಯ ವಿಚಾರಿಸುತ್ತಲೇ ಇದ್ದೆ. ಚಿಂತಿಸುತ್ತಲೇ ಇದ್ದೆ: ಅವಳ ಈ ಕೃತ್ಯದ ಅರ್ಥವೇನು? ಅಮ್ಮನಿಗೆ ಹೇಳಲೇ? ಹೇಳಲೇಬೇಕೇ! ಯಾರಿಗಾದರೂ ಹೇಳಬೇಕು. ನನ್ನೊಬ್ಬಳಿಗೇ ತಿಳಿದ ಆ ಪಾಪದ ಗುಟ್ಟಿನ ಹೊಣೆಗಾರಿಕೆ(ಯಾರಿಗೂ ಹೇಳಬೇಡ, ನನ್ನಾಣೆಯಿದೆ) ನನ್ನನ್ನು ಹಿಂಡುತ್ತಿತ್ತು. +ಮಕ್ಕಳು ಹೇಗೆ ಹುಟ್ಟುತ್ತವೆ ಎನ್ನುವುದರ ಕಲ್ಪನೆ ಇರದಿದ್ದರೂ ಲಗ್ನದ ಮೊದಲು ಮಕ್ಕಳು ಹುಟ್ಟುವುದು ಮಹಾಪಾಪ, ದೊಡ್ಡ ಅನರ್ಥ ಎಂಬುದರ ಅಂಧುಕ ಅರಿವು ಇತ್ತು. ಅಯ್ಯೋ ಆಬೋಲೀನ!….ತಿರುಗಿ ತಿರುಗಿ ಅದೇ ಚಿತ್ರ ಕಣ್ಣಮುಂದೆ; ಅವೇ ಪ್ರಶ್ನೆ ಕಿವಿಯಲ್ಲಿ! +ಆ ಪಾಪದ ಗುಟ್ಟನ್ನು ನನ್ನಲ್ಲಿ ಇಟ್ಟುಕೊಳ್ಳಲೂ ಆರೆ ಇನ್ನೊಬ್ಬರಿಗೆ ಹೇಳಲೂ ಆರೆ ಎಂಬ ಸ್ಥಿತಿಯಲ್ಲಿ ತೊಳಲುತ್ತಿರುವಾಗಲೇ ಒಂದು ದಿನ ಕೇಳಿದ್ದು ತಂದೆ-ತಾಯರ ಸಂಭಾಷಣೆಯನ್ನು. ಮನವೇಲನಂತಹ ದುಷ್ಟಹುಂಬನನ್ನು, ದುರ್ವ್ಯಸನಿಯನ್ನು ಆಬೋಲೀನ ಲಗ್ನವಾಗುವ ಪ್ರಸಂಗ ಒದಗಿತಲ್ಲ ಎಂದು ಮನ ಮಿಡುಕಾಡಿದರೂ ಆ ಸಂಭಾಷಣೆಯನ್ನು ಆಲಿಸುವಾಗ ಎಂತಹುದೋ ಗುಪ್ತ ಆನಂದದಿಂದ ನನ್ನ ಮನಸ್ಸು ಹರುಷಗೊಂಡಂತಿತ್ತು. ಕೊನೆಗೂ ಈ ಗುಟ್ಟನ್ನು ಕಾಪಾಡುವ ಹೊಣೆಗಾರಿಕೆಯಿಂದ ಬಿಡುಗಡೆಹೊಂದಿದೆನಲ್ಲ ಎಂದೇ? ಇಲ್ಲವೇ ಆಬೋಲೀನಳ ಮೇಲೆ ಒದಗಿ ಬಂದ ಆಪತ್ತಿಗೂ ಒಂದು ಪರಿಹಾರ ದೊರಕಿತಲ್ಲ ಎಂದೇ? ಏನೋ….ಆದರೆ- +ಪದ್ದಕ್ಕ ತಂದ ಸುದ್ದಿ-ಅಲ್ಲ, ಸ್ವತಃ ಆಬೋಲೀನಳ ಬಾಯಿಯಿಂದ ನಾನೇ ತಿಳಿದ ಸಂಗತಿ ಕೂಡ ಸುಳ್ಳಾಗಿತ್ತು ಎನ್ನುವುದು ಮಾತ್ರ ನಮ್ಮೆಲ್ಲರ ಕಲ್ಪನೆಗೆ ಮೀರಿದ್ದಾಗಿತ್ತು! ಅಹುದು, ಅದೆಲ್ಲ ಸುಳ್ಳಾಗಿತ್ತು. ಆದರೆ ಸತ್ಯ ಸಂಗತಿ ನಮಗೆಲ್ಲ ತಿಳಿಯುವ ಹೊತ್ತಿಗೆ ಎಲ್ಲವೂ ತೀರ ತಡವಾಗಿತ್ತು: ಆಬೋಲೀನಳ ಮದುವೆಯಾಗಿ ಅದಾಗಲೇ ಹಲವು ತಿಂಗಳು ಕಳೆದುಹೋಗಿದ್ದವು. +೫ +ನಾನಂದು ಸಂಜೆ ಸಾಲೆಯಿಂದ ಬಂದಾಗ ಅಮ್ಮ ಅದೇ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋಗುತ್ತಿದ್ದಳು. ನನಗೂ ಬೇರೆ ಏನೂ ಕೆಲಸವಿಲ್ಲದ್ದರಿಂದ ನಾನೂ ಬರುತ್ತೇನೆಂದು ಅವಳ ಜತೆಗೆ ನಡೆದೆ. ನಾವಿಬ್ಬರೂ ಕೊಟ್ಟಿಗೆಯಲ್ಲಿದ್ದಾಗ ಕೈತಾನ ಬಂದ. ಬಂದ ರೀತಿಯಲ್ಲೇ ಏನೋ ವಿಶೇಷವಿದ್ದಂತಿತ್ತು. ಮೇಲಾಗಿ ಆಬೋಲೀನಳ ಮದುವೆಯ ನಂತರ ಕೈತಾನ ನಮ್ಮ ಮನೆಗೆ ಬರುವುದೇ ಅಪರೂಪವಾಗಿತ್ತು. ಎಣ್ಣೆ ಕೊಡಲು ಬಸ್ತ್ಯಾಂವನೆ ಬರುತ್ತಿದ್ದ. +ಹೆಚ್ಚಿನ ಅನರ್ಥ ಒದಗುವ ಮೊದಲೇ ಲಗ್ನ ಜರುಗಿದರೂ ಈ ಲಗ್ನದ ಹಿಂದಿನ ‘ಗೋಪ್ಯ’ ದ ಬಗ್ಗೆ ಮಾತ್ರ ಜನರ ಬಾಯನ್ನು ಮುಚ್ಚಲಾಗಲಿಲ್ಲ. ಆಡಿಕೊಳ್ಳುವವರು ಆಡಿಕೊಳ್ಳುತ್ತಲೇ ಇದ್ದರು. ತುಂಬ ಮಾನವಂತ, ಸಜ್ಜನನಾದ ಕೈತಾನ ಈ ಮದುವೆಯನ್ನು ಮನಸ್ಸಿಗೆ ಹಚ್ಚಿಕೊಂಡದ್ದು ಅಚ್ಚರಿಯಲ್ಲ. ತನ್ನ ಬಾಳಿನ ಸರ್ವಸ್ವವಾದ ಮುದ್ದಿನ ಮಗಳು ಅಯೋಗ್ಯನೊಬ್ಬನನ್ನು ಮದುವೆಯಾಗುವ ಪ್ರಸಂಗ ಬಂದಿತಲ್ಲ ಎಂಬ ದುಃಖದೊಂದಿಗೆ ತಮ್ಮ ಕುಟುಂಬದ ಮರ್ಯಾದೆಗೇ ಕಲಂಕ ತಂದ ಈ ದುರ್ಘಟನೆಯಿಂದ ಅವನು ಜರ್ಜರಿತನಾದ. ಆದುದರಿಂದಲೇ ಅವನು ಆಗೀಗ ನಮ್ಮ ಮನೆಗೆ ಬಂದಾಗ ಈ ಲಗ್ನದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಈ ಲಗ್ನದ ವಿಷಯ ಅವನು ನಮ್ಮ ತಂದೆಯವರಿಗೆ ಹೇಳಿದ ಮಾತಿಗಿಂತ ಹೆಚ್ಚಾಗಿ(:ಪಾದ್ರಿಯ ಒತ್ತಾಯ)ಏನನ್ನೂ ಹೇಳಿರಲಿಲ್ಲ. ಅವನು ನಮ್ಮೊಡನೆ ನಡಕೊಳ್ಳುವ ರೀತಿ ನೋಡಿದರೆ ‘ನಿಮಗೆಲ್ಲ ಗೊತ್ತಿದೆ’ ಎಂಬುದನ್ನುಗ್ರಹೀತ ಹಿಡಿದೇ ನಡೆದಂತಿತ್ತು. ನಾವೂ ‘ಏನೂ ಗೊತ್ತಿಲ್ಲ’ಎಂದು ನಟಿಸುವದೆಂತು? ಆದರೂ ಬಾಯಿ ಬಿಟ್ಟು ಕೇಳಲಾಗುತ್ತಿರಲಿಲ್ಲ. ಅಂತೆಯೇ ನಮ್ಮ ನಡುವಿನ ಸೌಹಾರ್ದದಲ್ಲಿ ಒಂದು ಬಗೆಯ ಕೃತ್ರಿಮತೆ ಬಂದು ನೆಲೆಸಿತ್ತು. +ಆಬೋಲೀನ ನಮ್ಮ ಮನೆಯವರಿಗೆಲ್ಲ ಅತಿ ಮೆಚ್ಚುಗೆಯ ಹುಡುಗಿ. ಲಗ್ನವಾದಂದಿನಿಂದ ಅವಳನ್ನು ಕಾಣಲೇ ಇಲ್ಲ. ಅವಳ ಆರೋಗ್ಯದ ಬಗ್ಗೆ ಕೇಳಬೇಕು, ಸೌಖ್ಯದ ಬಗ್ಗೆ ವಿಚಾರಿಸಬೇಕು ಎಂಬ ಬಯಕೆ. ಆದರೆ ಅವಳ ಬಗ್ಗೆ ಮಾತನಾಡುವುದೆಂದರೆ ಅವಳ ಲಗ್ನದ ಬಗ್ಗೆ ಮಾತು ತೆಗೆದಂತೆಯೆ! ಆದರೂ ಕಳವಳ; ತಾಯಿಯಿಲ್ಲದ ಮಗು! ಏನೂ ಅರಿಯದ ಹುಡುಗಿ. ಎಲ್ಲಿ ಕೈ ತಪ್ಪಿತೋ; ಈಗ ಹೇಗಿರುವಳೋ; ಗಂಡನ ಮನೆಯವರು ಹೇಗೆ ನಡೆಸಿಕೊಳ್ಳುತ್ತಾರೋ’ ನಾವೂ ಕೇಳಲಿಲ್ಲ ಕೈತಾನನೂ ಹೇಳಲಿಲ್ಲ…. +ಕೈತಾನ ಬಂದುದನ್ನು ಕಂಡು ಅಮ್ಮ ಕೇಳಿದಳು: +“ಏನು ಕೈತಾನ?” +“ಹಾಲು ಹಿಂಡಾಯಿತೇ?” +“ಏಕೆ? ಹಾಲು ಬೇಕಿತ್ತೇ?” +“ಇಲ್ಲಮ್ಮ, ಇನ್ನು ಈ ಬಾಯಿ ಹಾಲು ಹೇಗೆ ಕುಡಿದೀತು? ಬರಿಯ ಮಣ್ಣು….” +ಕೈತಾನ ತನ್ನ ಎರಡೂ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಕೊಟ್ಟಿಗೆಯ ಬಾಗಿಲಲ್ಲೇ ಕುಳಿತುಬಿಟ್ಟ. +“ನನ್ನ ಬಾಯಲ್ಲಿ ಮಣ್ಣು ಹಾಕಿದನಮ್ಮ….” +“ಛೀ, ಕೈತಾನ, ದೀಪ ಹಚ್ಚುವ ಹೊತ್ತು….” +ಅಮ್ಮ ಇನ್ನೂ ಹಾಲು ಹಿಂಡುತ್ತಿದ್ದಳು. +“ಕೊನೆಗೂ ಆ ದುಷ್ಟ ನಮ್ಮನ್ನೆಲ್ಲ ಮೋಸಗೊಳಿಸಿದ….ಆಬೋಲೀನ ಬಸುರಿಯಲ್ಲ….” +“ಆಂ!!” +ಕೈತಾನ ಒಡೆದ ಸುದ್ದಿಯಿಂದ, ಅದಕ್ಕೆ ಉತ್ತರವಾದ ಅಮ್ಮನ ಉದ್ಗಾರದಿಂದ ನಮ್ಮ ನಡುವೆ ಇಷ್ಟು ದಿನ ನಿಂತುಕೊಂಡ ಕೃತ್ರಿಮತೆಯ, ನಟನೆಯ ಗೋಡೆ ಕ್ಷಣಾರ್ಧದಲ್ಲಿ ಮುರಿದು ಬಿದ್ದಿತ್ತು. +“ಎಲ್ಲವೂ ನನ್ನದೇ ತಪ್ಪು; ಅಯ್ಯೋ ಏನೂ ಅರಿಯದ ಎಳೆ ಕಂದನನ್ನು….” +ಕೈತಾನ ಅಳಹತ್ತಿದ. +“ಛೇ, ಕೈತಾನ, ಹೀಗೆ ಅತ್ತು ಏನು ಪ್ರಯೋಜನ?” +“ಪಾಪ….ಆ ಮಗುವಿಗೆ….ಬಸುರಾಗುವುದೆಂದರೆ….ಏನು….ಎನ್ನುವುದೇ ಗೊತ್ತಿರಲಿಲ್ಲ….” +ಕೈತಾನ ಬಿಕ್ಕುತ್ತ ನುಡಿದ. +ನನ್ನ ಮನ ತಿರುಗಿ ಗೊಂದಲಿಸಿತು. ಕೈಕಾಲುಗಳಲ್ಲಿ ನನಗೆ ಅರ್ಥವಾಗದ ನಡುಕ ಸೇರಿಕೊಂಡಿತು. ಇದು ನಿಜವೇ? ನಾನಂದು ಮುಟ್ಟಿನೋಡಿದ ಹೊಟ್ಟೆಯ ಅರ್ಥ ಇದುವೇನೇ? ಹಾಗಾದರೆ ಈ ಎಲ್ಲ ಅನರ್ಥದ ಹೊಣೆ ನನ್ನ ಮೇಲೂ ಇದೆಯೇ?….ಆದರೂ ಕೈತಾನ ಅಂದಿರಲಿಲ್ಲವೇ: ‘ಎಲ್ಲವೂ ನನ್ನದೇ ತಪ್ಪು’ ಎಂದು? ತುಸು ಸಮಾಧಾನ-ಸ್ವತಃ ತಂದೆಯಾದವನೇ ತನ್ನ ಮಗಳನ್ನು ಅರಿಯದ ಸಾಮರ್ಥ್ಯ ಇಲ್ಲದಿದ್ದರೆ ನನಗೇನು ತಿಳಿಯಬೇಕು? ಆದರೂ ಜೀವ ಕಳವಳಿಸಿತು. ಇನ್ನು ಅಲ್ಲಿ ನಿಲ್ಲುವುದು ಕಷ್ಟವೆನಿಸಿತು. ಅಂತೆಯೇ ಅಂದೆ: +“ಅಮ್ಮ, ಮನೆಗೆ ಹೋಗೋಣವೇ?” +“ಹೌದು ಸುಮತಿ, ಮನೆಗೆ ಹೋಗೋಣ. ಆ ಕರುವನ್ನು ಬಿಟ್ಟುಬಿಡು, ಕುಡಿಯಲಿ” ಎಂದವಳೇ ಹಾಲು ಹಿಂಡುವುದನ್ನು ಅರ್ಧಕ್ಕೇ ಬಿಟ್ಟು ಎದ್ದು ನಿಂತಳು; ಹಾಗೂ ಇನ್ನೂ ಕುಳಿತೇ ಇದ್ದ ಕೈತಾನನಿಗೆ ಅಂದಳು: +“ನಡೆ ಕೈತಾನ, ಮನೆಗೆ ಹೋಗೋಣ. ಅಲ್ಲಿಯೇ ಹೇಳುವಿಯಂತೆ ಎಲ್ಲವನ್ನು.” +ಕೈತಾನ ಎಲ್ಲ ಹೇಳಿದ. ಆದರೆ ಉಕ್ಕುಕ್ಕಿ ಬರುತ್ತಿದ್ದ ದುಃಖದಿಂದ, ನಡುನಡುವೆ ಸೇರಿಕೊಳ್ಳುತ್ತಿದ್ದ ಸಂಕೋಚದಿಂದ ಅವನ ಕತೆ ತುಂಡುತುಂಡಾಗಿ ಬರುತ್ತಿತ್ತು. ಮೇಲಾಗಿ ಅವನು ಹೇಳಿದುದೆಲ್ಲವನ್ನು ಅರಿಯುವ ಶಕ್ತಿ ನನ್ನಲ್ಲಿತ್ತು ಎಂದೂ ಹೇಳಲಾರೆ. ಆದರೆ ಇಂದಿನ ಬೆಳೆದ ದೃಷ್ಟಿಯಿಂದ ಅದನ್ನೆಲ್ಲ ವಿಮರ್ಶಿಸಿದಾಗ ಅಂದು ಅರ್ಧಮರ್ಧವಾಗಿ, ಬಿಟ್ಟು ಬಿಟ್ಟು ಕೇಳಿದುದೇ ತಿಳಿದುದೇ ಒಂದು ಹೊಸ ಅರ್ಥ ತಳೆದು, ಜೀವಕಳೆ ಧರಿಸಿ ತಂತಾನೆ ಹೆಣೆದುಕೊಂಡು ನಿಲ್ಲುತ್ತದೆ-ಆ ಇಡಿಯ ದುರಂತಕತೆ ನನ್ನ ಕಣ್ಣ ಮುಂದೆ-ನಿನ್ನೆಯೇ ನಡೆದುದೆಂಬಂತೆ! +೬ +ಒಂದು ದಿನ ಮಧ್ಯಾಹ್ನದ ಹೊತ್ತಿಗೆ ಚಕ್ರಖಂಡೇಶ್ವರದ ಹಿಂದಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರಿ ಹಾಗೂ ಇನ್ನೊಬ್ಬ ದೀವರ ಹೆಂಗಸು ಕೆಲಸದ ದಣಿವಾರಿಸಲೆಂದು ಗದ್ದೆಯ ತಡಿಯಲ್ಲಿ ನಿಂತ ನೇರಿಲ ಮರವೊಂದರ ನೆರಳಲ್ಲಿ ಕುಳಿತು ಕವಳ ಜಗಿಯುತ್ತಿರುವಾಗ ಮುಂದಿನ ಗುಂದೆಯ ಮೇಲಿನ ಸುರಗೀ ಮರಗಳ ನಡುವೆ ಯಾರೋ ಕ್ಷೀಣಸ್ವರದಲ್ಲಿ ‘ಅಯ್ಯೋ’ ಎಂದಂತೆ ಕೇಳಿಸಿತು. ಇಬ್ಬರೂ ತಲೆಯೆತ್ತಿ ನೋಡಿದಾಗ ಕಣ್ಣ ಮುಂದೆ ನಂಬಲಾಗದ ದೃಶ್ಯ. ಮನವೇಲನ ಬಿಗಿದ ಅಪ್ಪುಗೆಯಲ್ಲಿ ಯಾವಳೋ ಒಬ್ಬ ಹರೆಯದ ಹುಡುಗಿ.ಹುಡುಗಿ ತೋರಿಸುತ್ತಿದ್ದ ಪ್ರತೀಕಾರವನ್ನು ಲೆಕ್ಕಿಸದೆ ಅವಳ ಮೋರೆಯನ್ನೆಲ್ಲ ಮುದ್ದಿಸುತ್ತಿದ್ದ, ಮನವೇಲ. ಅನಪೇಕ್ಷಿತವಾಗಿ ನೋಡ ಸಿಕ್ಕ ಈ ನೋಟವನ್ನು ಎವೆಯಿಕ್ಕದೇ ನೋಡುತ್ತಿದ್ದ ಆ ಇಬ್ಬರು ಹೆಂಗಸರು ಒಮ್ಮೆಲೇ ಜಿಗುಪ್ಸೆಪಟ್ಟವರಂತೆ “ಇಶ್ಯಿಶ್ಯೀ! ಇವರಿಗೆ ಬಂದ ರೋಗವೇ!ಹಗಲಿಗೇ?” ಎಂದು ಮೋರೆಯನ್ನು ತಿರುವಿಯೇ ಕುಳಿತರು. ಗುಂದೆ ಅವರಿಂದ ದೂರವಿತ್ತು. ಮನವೇಲನ ಗುರುತು ಸಿಕ್ಕರೂ ಅವನ ತೋಳುಗಳಲ್ಲಿ ಬಂಧಿತಳಾದವಳ ಪರಿಚಯ ಸಿಗಲಿಲ್ಲ. ಮೇಲಾಗಿ ಅವರಲ್ಲಿ ನಡೆಯುತ್ತಿದ್ದ ಮಾತುಕತೆಯೂ ಕೇಳಿಸುತ್ತಿರಲಿಲ್ಲ; ಕೇಳಿಸಿದ್ದರೂ ಅರ್ಥವಾಗುತ್ತಿರಲಿಲ್ಲ. ಅವರು ಮೋರೆ ತಿರುವಿ ಕುಳಿತ ಹೊತ್ತಿಗೇ ಮನವೇಲ ತನ್ನ ಗುಂಡು ಅಂಗೈಯನ್ನು ಹುಡುಗಿಯ ಹೊಟ್ಟೆಯ ಮೇಲೆ ಆಡಿಸಿ ಅಂದಿದ್ದ ನಟಿಸಿದ ಭಯದ ದನಿಯಲ್ಲಿ: +“ಅರೇ! ನಿನಗೆ ಹೊಟ್ಟೆ ಬಂದಿದೆ-ನೀನು ಬಸುರಿ!!ಎರಡು ತಿಂಗಳಾದರೂ ಆಗಿರಬೇಕು. ಅಯ್ಯೋ!ನಾನಂದು ಬರಿಯ ಚೇಷ್ಟೆಗೆ ಅಂದ ಮಾತು ನಿಜವಾಗಬೇಕೇ? ಇದೇನನರ್ಥ!” ಎಂದವನೇ ಮನವೇಲ ಹುಡುಗಿಯನ್ನು ತನ್ನ ಅಪ್ಪುಗೆಯಿಂದ ಚೆಲ್ಲಿಕೊಟ್ಟು ತನಗೆ ಒಪ್ಪಿಗೆಯಿಲ್ಲದ ಅನರ್ಥ ನಡೆಯಿತೆನ್ನುವ ಭಯ, ತಾತ್ಸಾರ ನಟಿಸುತ್ತ ಅಲ್ಲಿಂದ ಜಾರಿಕೊಂಡ. ಮೊದಲೊಮ್ಮೆ ತಿರಸ್ಕಾರದಿಂದ ಮೋರೆ ತಿರುವಿ ಕುಳಿತ ಆ ದೀವರ ಹೆಂಗಸರು ತಮ್ಮ ಕುತೂಹಲವನ್ನು ತಡೆಯಲಾಗದೇ ಕಳ್ಳದೃಷ್ಟಿಯಿಂದ ಗುಂದೆಯೆಡೆ ನೋಡಿದಾಗ ಅವರಿಗೆ ಅಲ್ಲಿ ಮನವೇಲ ಕಾಣಿಸಲಿಲ್ಲ. ಅವನಿಂದ ಬಿಡಿಸಿಕೊಂಡ ಹುಡುಗಿ ಮಾತ್ರ ತ್ವರೆಯಿಂದ ಗುಂದೆಯನ್ನಿಳಿದು ಓಡುತ್ತ ರಸ್ತೆ ಸೇರುತ್ತಿದ್ದಳು. ರಸ್ತೆ ಸೇರಿದಮೇಲೆ ಮಾತ್ರ ಅವಳ ಗುರುತು ಸಿಗದಿರಲಿಲ್ಲ. +“ಇದೆ! ನಮ್ಮ ಆಬೋಲೀನಳಲ್ಲವೇ?-ಕೈತಾನನ ಮಗಳು! ಈ ಧಂದೆಗೆ ಬಂದಳೋ ನೋಡ್ತೆ.” +ನುಡಿದವಳು ಪರಮೇಶ್ವರಿಯಲ್ಲ; ಅವಳ ಜೊತೆಗಾರ್ತಿ. +“ಇಲ್ಲಕ್ಕ ಅದಿನ್ನೂ ಕೂಸು-ಬುದ್ಧಿಯಿಲ್ಲದ್ದು. ಇವನು ಫಟಿಂಗ.” +“ನೀನು ಸುಮ್ಮನಿರೆ, ನನಗೆ ಹೇಳಬೇಡ ಅದರ ಅಪ್ಪಂತತನ. ಕಿರಿಸ್ತಾನರ ಹುಡುಗಿ! ಈಗೆಲ್ಲ ತಿಳೀತು. ಅಂದು ದೇವಸ್ಥಾನದಲ್ಲಿ ತೆಣೆಯಮೇಲೆ ಗಂಡಸಿನ ಜೊತೆಗೆ ಮಲಗಿದ ಹಾದರಗಿತ್ತಿ ಇವಳೇ! ನಾನು ಗದ್ದೆಯಿಂದ ಮನೆಗೆ ಹೋಗುತ್ತೇನೆ;ಇವರು….ಥೂ! ನನಗಂದು ಯಾರೆಂದು ತಿಳಿಯಲಿಲ್ಲ. ‘ಪಾಪ ಪಾಪ’ ಎನ್ನುತ್ತ ಕಣ್ಣು ಮುಚ್ಚಿಕೊಂಡೇ ಮನೆಗೆ ನಡೆದೆ….” +* +* +* +ಈ ಘಟನೆ ನಡೆದದ್ದು ಈಗ ಅವರಿಬ್ಬರೂ ಕೂಡಿಯೇ ನೋಡಿದ ಘಟನೆಗಿಂತ ಎರಡು ತಿಂಗಳ ಮೊದಲು: +ಅಂದು ಅಂಬೋಲೀನ ಗುಂದೆಗಳಲ್ಲೆಲ್ಲ ಅಲೆದು ಸುರಗೀ ಕಾಯಿಗಳನ್ನು ಹೆಕ್ಕಿ, ಬುಟ್ಟಿಯಲ್ಲಿ ತುಂಬಿ ದೇವಸ್ಥಾನಕ್ಕೆ ಬಂದಾಗ ಬಿಸಿಲಲ್ಲಿ ಕಾದ ಜೀವಕ್ಕೆ ‘ಇಲ್ಲಿ ತಂಪಾಗಿದೆ; ತುಸು ಹೊತ್ತು ಕೂಡ್ರೋಣ’ ಎನಿಸಿರಬೇಕು. ಅಂತೆಯೇ ದೇಗುಲ ಹೊಕ್ಕು ಪಡಸಾಲೆಯಲ್ಲಿಯ ತೆಣೆಯೊಂದರಲ್ಲಿ ಹಾಯಾಗಿ ಕುಳಿತಳು. ಕುಳಿತಲ್ಲೇ ಸಣ್ಣ ಜೊಂಪು ಹತ್ತಿರಬೇಕು. ಇವಳ ಚಟುವಟಿಕೆಗಳನ್ನೆಲ್ಲ ಸಮೀಪದ ಗೇರಮರವೊಂದರಿಂದ ಅವಲೋಕಿಸುತ್ತಿದ್ದ ಮನವೇಲ ಬಂದ-ಹದ್ದಿನಂತೆ. ಬಂದವನೇ ಅವಳ ಮೇಲೆ ಬಗ್ಗಿ ಅವಳನ್ನು ತನ್ನ ತೋಳುಗಳಲ್ಲಿ ಬಿಗಿದಪ್ಪಿದ. ಆಬೋಲೀನ ಎಚ್ಚರಾಗಿ ಕಣ್ಣು ತೆರೆಯುವ ಮೊದಲೇ ಮನವೇಲನ ಪಾಪಯುಕ್ತ ತುಟಿಗಳು ಅವಳ ತುಟಿಗಳನ್ನು ಮುದ್ದಿಸುತ್ತಿದ್ದವು. ಅವನ ಉನ್ಮತ್ತ ಕೈಗಳು ಅವಳ ಅಂಗಾಂಗಗಳ ಮೇಲೆ ಆಡಹತ್ತಿದವು. ಗಂಡಸಿನ ಆಲಿಂಗನದ ಈ ಅನುಭವವು ಆಬೋಲೀನಳ ಕಲ್ಪನೆಗೂ ಮೀರಿದ್ದು. ಅನೂಹ್ಯವಾಗಿ, ಅಚಾನಕವಾಗಿ ಒದಗಿದ ಈ ಘಟನೆಯಿಂದ ಅವಳು ಥಥ್ಥರ ನಡುಗಿದಳು. “ಅಯ್ಯೋ”ಎಂದು ಚೀರುತ್ತ ಅವಳು ಬಿಡಿಸಿಕೊಳ್ಳುತ್ತಿರುವಾಗ ಮನವೇಲ ಅಂದಿದ್ದ ದುಶ್ಯಾಸನ-ನಗೆ ನಗುತ್ತ: “ಈಗಲಾದರೂ ಒಪ್ಪುತ್ತೀಯೋ ಇಲ್ಲವೋ ನನ್ನನ್ನು ಮದುವೆಯಾಗಲು? ನನ್ನ ಎಂಜಲ ನಿನ್ನ ತುಟಿಯಲ್ಲಿದೆ. ಈಗ ನೀನು ಬಸುರಾಗುತ್ತಿ.” +ಮುಂದೆ ನಡೆದ ಎಲ್ಲ ದುರಂತಕ್ಕೆ ನಾಂದಿ ಇಟ್ಟಿದ್ದು ಇಲ್ಲಿ-ಈ ದೇಗುಲದಲ್ಲಿ, ಈ ಈಶ್ವರಲಿಂಗದ ಸಾಕ್ಷಿಯಲ್ಲಿ!…. +“ಈಗಲಾದರೂ ಒಪ್ಪುತ್ತೀಯೋ ಇಲ್ಲವೋ?” ಎಂದಿದ್ದ ಮನವೇಲ. ಅಂದರೆ ಈ ಮೊದಲೇ ಹಲವು ಸಲ ಅವನು ಅಂಬೋಲೀನಳನ್ನು ಭೆಟ್ಟಿಯಾಗಿ ಅವಳನ್ನು ಮಾತನಾಡಿಸಿರಬೇಕು. ಆಗಲೇ ಈ ಮುಗ್ಧಜೀವದ ಅಜ್ಞಾನದ ನೆಲೆಯರಿತಿರಬೇಕು. ಇವಳನ್ನು ತನ್ನ ಬಲೆಯಲ್ಲಿ ಹಾಕಬೇಕಾದರೆ ಇಂತಹ ದುಷ್ಟ ಬೆದರಿಕೆಯೇ ಸಾಕು ಎಂದು ಬಗೆದಿರಬೇಕು…. +ಚಿಕ್ಕಂದಿನಲ್ಲೇ ತಾಯಿಯನ್ನು ಕಳಕೊಂಡ ಹಸುಳೆ. ಮನೆಯಲ್ಲಿದ್ದ ಇನ್ನಿಬ್ಬರೂ ಗಂಡಸರು-ವಯಸ್ಸು ದಾಟಿದ ತಂದೆ, ಎಳೆಯ ತಮ್ಮ. ಇಡೀ ದಿನ ಕಳೆಯುತ್ತಿದ್ದುದು ಮನೆಗೆಲಸ, ಗಾಣದ ಕೆಲಸದಲ್ಲಿ; ಒಬ್ಬರ ತಾಪತ್ರಯಕ್ಕಿಲ್ಲ, ತಂಟೆಗಿಲ್ಲ. ಸಾಲೆ ಕಲಿತವಳಲ್ಲ. ತಮ್ಮ ಜಾತಿಯವರ ಕೇರಿಯಿಂದ ದೂರವಾದ ಮನೆ.ಹೇಳಿ ಕೇಳಿ ಗೊತ್ತಿದ್ದುದು ನಮ್ಮ ಮನೆ ಮಾತ್ರ. ಅಲ್ಲಿಯೂ ಸಲಿಗೆ ಬರಿಯೇ ನನ್ನ ಹತ್ತಿರ, ಇಂತಹ ವಾತಾವರಣದಲ್ಲಿ ಬೆಳೆದ ಆ ಅಜ್ಞ ಮುಗುದೆಗೆ ತನ್ನ ನಿತ್ಯ ಪರಿಚಯದ ‘ತಂದೆ-ಮಗಳು’,‘ಅಕ್ಕ-ತಮ್ಮ’-ಈ ಸಂಬಂಧಗಳ ಹೊರತಾಗಿ ಇವುಗಳಿಂದ ತೀರ ಭಿನ್ನವಾದ ಇನ್ನೊಂದು ‘ಗಂಡು-ಹೆಣ್ಣಿ’ನ ಸಂಬಂಧ ಇದೆ ಎಂಬ ಅರಿವು ಇದ್ದರೂ ಆ ಸಂಬಂಧದ ವೈಚಿತ್ರವೇನು? ವೈಶಿಷ್ಟ್ಯವೇನು? ಎನ್ನುವುದರ ಜ್ಞಾನ ಮಾತ್ರ ಇರಲಿಲ್ಲ. ಹೀಗಿರುವಲ್ಲಿ ಅವಳು ಮನವೇಲನ ಬೆದರಿಕೆಯಿಂದ ಕಂಗಾಲಾದುದರಲ್ಲಿ ಅಚ್ಚರಿಯೇನು? +* +* +* +ಅನಿರೀಕ್ಷಿತವಾದ ಗಂಡು ಬಾಹುಗಳ ಆಲಿಂಗನ, ಕಲ್ಪನಾತೀತವಾದ ಗಂಡುತುಟಿಗಳ ಚುಂಬನ ಇವೆಲ್ಲವುಗಳಲ್ಲಿ ಜೀವ ಹಿಂಡುವ ಭೀಕರತೆಯಿತ್ತು. ಜೊತೆಗೆ ಅರ್ಥವಾಗದ ಸುಖವಿತ್ತು. ಆದರೆ ಈ ಭಯಂಕರ ಗಂಡಸಿನ ಎಂಜಲ! ಇದರಲ್ಲಿ ಇರಬಹುದೇ ತನ್ನ ಬಸಿರನ್ನು ಚಿಗುರಿಸುವ ಮಾಯಾ ಶಕ್ತಿ? ಇದು ನಿಜವೇ? ತಾ ಬಸುರಿಯೆ? ಬಸುರಾಗುವುದೆಂದರೆ ಇದೇನೆ? ಇಷ್ಟೇನೇ?-ಗಂಡಸಿನ ಅಪ್ಪುಗೆಯಲ್ಲಿ ಮಲಗಿದಾಗ, ಅವನ ಕೈ ತನ್ನ ಮೈಮೇಲೆಲ್ಲ ಹರಿದಾಡುತ್ತಿರುವಾಗ ಅವನ ತುಟಿಯ ಎಂಜಲ ತಿನ್ನುವುದು? ಇಲ್ಲ ಇಲ್ಲ, ಇದರಲ್ಲೇನೋ ಮೋಸವಿದೆ. ಅಥವಾ ಹಾಗೆಂದು ನಂಬಿ ಇಷ್ಟು ದಿನ ಸುಮ್ಮಗುಳಿದೇ ಕೆಟ್ಟೆನೆ? ಇಲ್ಲವಾದರೆ ತಾನಾಗಿ ಮುತ್ತಿಡಲು ಬಂದ ಮನವೇಲನಂತಹ ಗಂಡಸೂ ಬೆದರಿ ತನ್ನನ್ನೇಕೆ ತೊರೆದು ದೂರ ಸರಿಯುತ್ತಿದ್ದ? ಅಯ್ಯೊ! ಇದೆಂತಹ ಅನರ್ಥ. ಲಗ್ನವಾಗುವ ಮೊದಲು ತಾ ಬಸುರಿ! ಮುಂದೆ ತನ್ನ ಗತಿ?… +ಗುಂದೆ ಇಳಿದವಳೇ ಆಬೋಲೀನ ಅವಸರ ಅವಸರವಾಗಿ ರಸ್ತೆ ಸೇರಿ ಓಡಿಯೇ ಮನೆ ಸೇರಿದ್ದಳು. ಅದೇ ದಿನ ಸಂಜೆ ನಾನವಳ ಭೆಟ್ಟಿಗೆ ಹೋದದ್ದು-ಹುಚ್ಚಿಯಂತೆ ಅವಳು ತನ್ನ ಬತ್ತಲೆ ಹೊಟ್ಟೆಯನ್ನು ನನಗೆ ತೋರಿಸಿದ್ದು. ಅಂದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಈ ದೀವರ ಹೆಂಗಸರಿಂದಲೇ ತಿಳಿದಿದ್ದು, ಪದ್ದಕ್ಕನಿಗೆ, ಊರಿನ ಉಳಿದ ಅನೇಕರಿಗೆ ಈ ಗುಂದೆಯ ಪ್ರಕರಣ. ಇಂದೆಲ್ಲ ಅರ್ಥವಾಗುತ್ತದೆ; ಆದರೆ ಅಂದು?…. +ಅಂದು- +ನಾನು ಅಂಬೋಲೀನಳು ಕೇಳಿದ ಪ್ರಶ್ನೆಗೆ ಹೆದರಿ ಅವಳ ಹಿಡಿತದಿಂದ ಬಿಡಿಸಿಕೊಂಡು ಮನೆಗೆ ಓಡಿಹೋದ ತುಸು ಸಮಯದ ಬಳಿಕವೇ ಮನವೇಲ ತಿರುಗಿ ಆಬೋಲೀನಳನ್ನು ಭೆಟ್ಟಿಯಾದ. ಮನೆಯಲ್ಲಿ ಅವಳನ್ನು ಬಿಟ್ಟು ಯಾರೂ ಇಲ್ಲದ್ದನ್ನು ನೋಡಿ ಮನೆಯ ಹಿಂದಿನ ಪಾಗಾರದ ಅಡ್ಡ ನಿಂತು ಅವಳ ಹೆಸರಿನಿಂದ ಕೂಗಿದ. ಇನ್ನೂ ಬಾವಿಕಟ್ಟೆಯ ಬಳಿಯಲ್ಲೇ ಇದ್ದ ಆಬೋಲೀನ ಅವನ ದನಿಯಿಂದ ಬೆಚ್ಚಿಬಿದ್ದಳು. ಅಲ್ಲಿಂದ ಎದ್ದು ಮನೆಯ ಒಳಗೆ ಓಡಿ ಹೋಗಬೇಕು ಎನ್ನುವಾಗ ಮನವೇಲ ಎಂದ, ಯಾಚಿಸುವ ದನಿಯಲ್ಲಿ: +“ಒಂದು ಕ್ಷಣ ತಡೆ ಆಬೋಲೀನ್…ನೋಡು, ಯಾರಾದರೂ ಕೇಳಿದರೆ ನನ್ನ ಹೆಸರು ಹೇಳಬೇಡ, ದಮ್ಮಯ್ಯ…ಎರಡು ತಿಂಗಳೆಂದೂ ಹೇಳಬೇಡ…ಬೇಗ ಏನಾದರೂ…ಅದೆ! ಯಾರೋ ಬಂದರು…”ಎಂದವನೇ ಅಲ್ಲಿಂದ ಕಾಣದಾದ. ಒಳಗೆ ಬಂದವನು ಬಸ್ತ್ಯಾಂವ. ಆಬೋಲೀನಳಿಗೆ ತುಂಬ ಧೈರ್ಯವೆನಿಸಿತು. ಆದರೆ ಬಸ್ತ್ಯಾಂವ ಒಬ್ಬನೇ ಬಂದುದನ್ನು ನೋಡಿ ಕೇಳಿದಳು: +“ಅಪ್ಪ ಬರಲಿಲ್ಲವೇ, ಬಸ್ತ್ಯಾವ್?” ದನಿಯಲ್ಲಿ ನಡುಕವಿತ್ತು. +“ಅಪ್ಪ ಇಗರ್ಜಿಗೆ ಹೋಗಿದ್ದಾನೆ. ಪಾದ್ರಿ ನಾವು ಮಧ್ಯಾಹ್ನ ಗೋಕರ್ಣಕ್ಕೆ ಹೋಗುವಾಗಲೇ ನಮ್ಮನ್ನು ಭೆಟ್ಟಿಯಾಗಿ ಸಂಜೆ ತಮ್ಮನ್ನು ಕಾಣಲು ಹೇಳಿದ್ದರು” ಎಂದಬಸ್ತ್ಯಾಂವ. ಆಬೋಲೀನಳಿಗೆ ಕಣ್ಣಲ್ಲಿ ಕತ್ತಲೆ ಬಂದಂತಾಗಿ ನಿಂತಲ್ಲೆ ಕುಸಿದಳು. ಬಸ್ತ್ಯಾಂವ ಗಾಬರಿಯಾಗಿ, +“ಏನಾಯಿತ್ರ್ ಅಕ್ಕ?” ಎಂದು ಅವಳನ್ನು ಹಿಡಿಯಹೋದ. +“ನನಗೇಕೋ ಮೈಯಲ್ಲಿ ಸರಿಯಿಲ್ಲ. ನಾನು ತುಸು ಹೊತ್ತು ಇಲ್ಲಿಯೇ ಕೂಡ್ರುತ್ತೇನೆ. ಅಡುಗೆಯ ಮನೆಯಲ್ಲಿ ನಿನಗೆ ತಿನ್ನಲಿಕ್ಕೆ ಇಟ್ಟಿದ್ದೇನೆ; ಹೋಗಿ ತಿನ್ನು, “ಎಂದಳು ತನ್ನನ್ನು ಸಾವರಿಸಿಕೊಳ್ಳುತ್ತ. ಏನೂ ಅರಿಯದ ಬಸ್ತ್ಯಾಂವ ಕಕ್ಕಾವಿಕ್ಕಿಯಾಗಿ ಅವಳನ್ನೇ ಕೆಲಹೊತ್ತು ನೋಡಿ, ಕೊನೆಗೆ ತನ್ನ ತಿನ್ನುವ ಚಪಲವನ್ನು ತಡೆಯಲಾಗದೇ ಒಳಗೆ ನಡೆದ. +ಆಬೋಲೀನಳಿಗೆ ಕುಳಿತಲ್ಲೇ ತನಗೆ ತುಂಬ ದಣಿವಾದಂತೆ ಎನಿಸಿತು. ತನ್ನ ಅರಿವಿಗೆ ಮೀರಿದ ಅದ್ಭುತ ಕರಾಳ ಶಕ್ತಿಗಳು ತನ್ನನ್ನು ಎಲ್ಲೆಡೆಯಿಂದಲೂ ಮುತ್ತಿ ಗಾಸಿಗೊಳಿಸುವಂತೆ ಭಾಸವಾಯಿತು. ಪಾದ್ರಿ ಅಪ್ಪನನ್ನು ಕರೆಸಿದ್ದಾರೆ, ಯಾಕೆ? ಅವರಿಗೂ ತಿಳಿದಿದೆಯೇ ತನಗೇ ಇನ್ನೂ ತಿಳಿಯದ ಸಂಗತಿ? ಅಮ್ಮ ಇದ್ದಿದ್ದರೆ?…ಅವಳ ಅಂಗಾಂಗಗಳೆಲ್ಲ ನಿರ್ವಿಣ್ಣವಾದವು. ಕುಳಿತಲ್ಲಿಂದ ಏಳುವ ಶಕ್ತಿಯೇ ತನ್ನಲ್ಲಿ ಉಳಿದಿಲ್ಲ ಎನಿಸಿತು. ಒಂದೇ ದಿನದಲ್ಲಿ ಎಷ್ಟೊಂದು ಜೀವ ಹಿಂಡುವ ಅನುಭವ! ಕತ್ತಲೆ! ಕತ್ತಲೆ! ಎಲ್ಲೂ ಬೆಳಕೇ ತೋರದಲ್ಲ! +ದೀಪ ಹಚ್ಚುವ ಹೊತ್ತಾದುದರಿಂದ ಆಬೋಲೀನ ಮೆಲ್ಲನೆ ಎದ್ದು ಕೈಕಾಲು ತೊಳೆದು ದೇವರ ಕೋಣೆ ಹೊಕ್ಕು ಮೇರಿ ಹಾಗೂ ಕ್ರೈಸ್ತರ ಮೂರ್ತಿಗಳ ಮುಂದೆ ಮೇಣದ ಬತ್ತಿ ಹಚ್ಚಿ ಮೊಣಕಾಲೂರಿ ಪ್ರಾರ್ಥಿಸಹತ್ತಿದಳು: +“ಸಾಂತಾ ಮೊರೀಯೇ, ದೇವಾಚೇ ಮಾಯೇ ಆಮೀಂ +ಪಾಪಿಯಾಂ ಖಾತೀರ್ ವಿನೋತಿ ಕೋರ್ ಆತಾಂ +ಆನೀ ಅಮ್ಚಾ ಮೋರ್ನಾಂ ಚಾ ಕಾಳೀಂ. ಆಮೇನ್… +ಶಾರ್ಣಾ ಎತಾಂ ತುಕಾ ರಾಣಿಯೇ, ಕಾಕುಳ್ತೇಚೇ ಮಾಯೇ +ತುಂ ಅಮ್ಚೊ ಜೀವ್, ತುಂ ಅಮ್ಚೊ ಬೊರ್ವೊಂಸೊ, +ತುಕಾ ಶಾರ್ಣಾ ಎಂತಾಂ…” +೭ +ಇಗರ್ಜಿಯ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕೈತಾನ ತಿರುತಿರುಗಿ ಮಧ್ಯಾಹ್ನ ತನ್ನನ್ನು ಆ ಸಂಕದ ಬಳಿಯಲ್ಲಿ ಸಂಧಿಸಿ ಮಾತನಾಡಿಸಿದ ಪಾದ್ರಿಯ ಗಂಭೀರ ಮುಖಭಾವವನ್ನೇ ನೆನಸುತ್ತಿದ್ದ. “ನಿನ್ನ ಹತ್ತಿರ ಮಾತನಾಡುವುದಿದೆ; ಸಂಜೆ ಬಂದು ಭೆಟ್ಟಿಯಾಗುವೆಯಾ?” ಎಂದು ಕೇಳಿದರು ಪಾದ್ರಿ. ಎಂದೂ ಹಾಗೆ ಕರೆದವರಲ್ಲ. ಇಂದೇ ಏಕೆ? +ಇಗರ್ಜಿ ಒಂದು ಸಣ್ಣ ಗುಡ್ಡದ ತುದಿಗೆ ಇದೆ. ಇಗರ್ಜಿಯ ಅಂಗಳದಲ್ಲಿ ಶತಪಥ ಹಾಕುತ್ತಿದ್ದ ಪಾದ್ರಿ ಕೈತಾನನನ್ನು ಕಂಡ ಕೂಡಲೇ ಅಂದರು: +“ಬಾ ಕೈತಾನ, ನಿನ್ನದೇ ದಾರಿ ನೋಡುತ್ತಿದ್ದೆ.” +ಪಾದ್ರಿಯ ದನಿಯಲ್ಲಿ ಇನ್ನೂ ಮಧ್ಯಾಹ್ನದ್ದೇ ಗಾಂಭೀರ್ಯವಿತ್ತು. +“ಏನು ಗುರುಗಲೇ, ಏಕೆ ಕರೆಸಿದಿರಿ?” +ಪಾದ್ರಿ ಅವನನ್ನು ಸಮೀಪ ಕರೆಯಿಸಿ, ಅಂಗಳದ ಪಶ್ಚಿಮಕ್ಕಿದ್ದ ದೊಡ್ಡ ಕಲ್ಲುಕಟ್ಟೆಯ ಮೇಲೆ ತಮ್ಮ ಬಳಿಯಲ್ಲೇ ಕೂಡ್ರಿಸಿಕೊಂಡು ಕೆಲಹೊತ್ತು ಮೌನವಾಗಿ ಉಳಿದರು. ಕೈತಾನನ ದುಗುಡ ಇನ್ನೂ ಹೆಚ್ಚಿತು. ಕೊನೆಗೆ ಕೇಳಿದರು ಪಾದ್ರಿ, ಅತಿ ಶಾಂತ ದನಿಯಲ್ಲಿ: +“ನಿನ್ನ ಹೆಂಡತಿ ಸತ್ತು ಬಹಳ ವರುಷಗಳಾದುವು ಅಲ್ಲವೆ?” +“ಅಹುದು ತಂದೆ, ಹತ್ತು ವರುಷಗಳ ಮೇಲಾದುವು” +(ಆದರೆ ಈಗೇಕೆ ಅವಳ ಮಾತು?) +“ಅವಳು ಸಾಯುವಾಗ ಆಬೋಲೀನ್…” +“ಮೂರೋ ನಾಲ್ಕೋ ವರುಷದವಳು.” +“ಈಗ ಪ್ರಾಯಕ್ಕೆ ಬರುವ ಹುಡುಗಿ…” +ಕೈತಾನ ಮಾತಾಡಲಿಲ್ಲ. +ಪಾದ್ರಿಯೇ ಮುಂದುವರೆಸಿದರು: +“ತಾಯನ್ನು ಕಳಕೊಂಡು ಹುಡುಗಿಯ ಜೋಪಾನ ತುಂಬ ಕಾಳಜಿಯಿಂದ ಆಗಬೇಕಾಗುತ್ತದೆ. ಅಲ್ಲವೇ?” +ಕೈತಾನನಿಗೆ ಇದಾವುದರ ಅರ್ಥವೇ ಆಗುತ್ತಿರಲಿಲ್ಲ. ಆದರೂ ನುಡಿದ: +“ಆಬೋಲೀನ ಬಹಳ ಚುರುಕು ಹುಡುಗಿ; ನನ್ನನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಾಳೆ.” +“ಅಲ್ಲೇ ತಪ್ಪಿದ್ದು. ನೀನು ಅವಳನ್ನು ತಂದೆಯಂತೆ ನೋಡಿಕೊಳ್ಳಲಿಲ್ಲ. ಪ್ರಾಯಕ್ಕೆ ಬರುವ ಹುಡುಗಿ…” +“ನಿಮ್ಮ ಮಾತಿನ ಅರ್ಥ….?” +“ಹುಡುಗಿಗೆ ತನ್ನ ಶೀಲಕ್ಕಿಂತ ಪವಿತ್ರವಾದುದು ಬೇರೊಂದಿದೆಯೆ?” +“ಆದರೆ ನನ್ನ ಆಬೋಲೀನ ಹೂವಿನಂತಹಳು: ಪವಿತ್ರಳು.” +ಕೈತಾನನ ಮಾತಿನಲ್ಲಿ ಬಿರುಸಿತ್ತು. +“ಅವಳು ತನ್ನ ಕೌಮಾರ್ಯವನ್ನು ಕಳಕೊಂಡಿದ್ದಾಳೆ.” +ಈ ಗಂಭೀರವಾದ ಆಪಾದನೆಯಿಂದ ಕೈತಾನನ ಮೇಲೆ ಸಿಡಿಲೆರಗಿದಂತಾಯಿತು. ಅಯ್ಯೋ! ತಾನಿದೇನು ಕೇಳುತ್ತಿದ್ದೇನೆ! ತನ್ನ ಆಬೋಲೀನ ಕುಮಾರಿಯಲ್ಲ! +“ಇಲ್ಲ ಇಲ್ಲ ತಂದೆಯೇ, ಇದರಲ್ಲೇನೋ ತಪ್ಪಿದೆ.” +“ನನಗೆಲ್ಲ ತಿಳಿದಿದೆ ಕೈತಾನ, ನಿನ್ನ ಮಗಳನ್ನೇ ಕೇಳಿನೋಡು. ಅವಳು ತಾಯಿಯಾಗಲಿದ್ದಾಳೆ. ನನಗೆ ನಿಮ್ಮ ಮೇಲೆ ದ್ವೇಷವೇ, ಇಲ್ಲದ ಆರೋಪ ಹೊರಿಸಲು? ನನಗಿದಾವುದರಲ್ಲೂ ಸಂತೋಷವಿಲ್ಲ ಕೈತಾನ. ಬಹಳ ದುಃಖಪಟ್ತಿದ್ದೇನೆ, ನೊಂದುಕೊಂಡಿದ್ದೇನೆ. ಹಲವಾರು ದಿನಗಳ ಮೊದಲೇ ಗಾಳಿ ಸುದ್ದಿ ಕೇಳಿದಂತಿತ್ತು. ಆದರೂ ನಿನ್ನ ಮೇಲೆ ವಿಶ್ವಾಸವಿಟ್ಟು ಸುಮ್ಮಗುಳಿದೆ…‘ಅವನ’ ಹೆಸರು ತಿಳಿದಿದೆ. ಇದಕ್ಕೆ ಬೇರೆ ಉಪಾಯವೇ ಇಲ್ಲ. ಅವರಿಬ್ಬರ ಮದುವೆ. ಅವನೂ ಇದಕ್ಕೆ ಒಪ್ಪಿರಲಿಲ್ಲ. ಎಲ್ಲ ತಪ್ಪನ್ನು ಆಬೋಲೀನಳ ಮೇಲೆ ಹೊರಿಸಲು ಯತ್ನಿಸಿದ. ನಾನೇ ತಿಳಿಹೇಳಿ ಒಪ್ಪಿಸಿದ್ದೇನೆ. ಮನೆಗೆ ಹೋಗಿ ಆಬೋಲೀನಳನ್ನು ವಿಚಾರಿಸು…” +ಕೈತಾನನಿಗೆ ಮುಂದೆ ಕೇಳುವ ಶಕ್ತಿಯಿರಲಿಲ್ಲ. ಅವನ ಇಳಜೀವ ಆಗಲೇ ಮೂರ್ಛೆ ಹೋಗುವ ಸ್ಥಿತಿಯಲ್ಲಿತ್ತು. ಇದೆಂತಹ ಅನರ್ಥ! ಪಾದ್ರಿಯ ಕಿವಿಯವರೆಗೂ ಮುಟ್ಟಿರಬೇಕಾದರೆ ಸುದ್ದಿ ಊರೆಲ್ಲ ಹರಡಿರಬೇಕು. ಅಯ್ಯೊ ದೇವರೇ! ಪಾದ್ರಿ ಅಂದಂತೆ ನಾನೇ ದುರ್ಲಕ್ಷ್ಯ ಮಾದಿದೆ. ಎಲ್ಲವನ್ನೂ ಆ ಮಗುವಿಗೇ ವಹಿಸಿದೆ. ಆದರೂ ನನ್ನ ಆಬೋಲೀನ ಅಂತಹಳಲ್ಲ…ಅಂತಹಳಲ್ಲ…ಎನ್ನುತ್ತ ಮನೆಯತ್ತ ಸಾಗಿದ್ದ ಕೈತಾನ. +೮ +ದೇವರ ಮೂರ್ತಿಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದ ಆಬೋಲೀನಳಿಗೆ ಜಗಲಿಯ ಮೇಲಿನ ಹೆಜ್ಜೆಯ ಸದ್ದು ತನ್ನ ತಂದೆಯದೆಂದು ಗುರುತಿಸಲು ಹೊತ್ತು ಹಿಡಿಯಲಿಲ್ಲ. ಎಡಬಿಡದೆ ತನ್ನತ್ತಲೇ ಬರುತ್ತಿದ್ದ ಆ ಹೆಜ್ಜೆಯ ಸಪ್ಪಳಕ್ಕೆ ಸಾವೇ ತನ್ನೆಡೆಗೆ ಬರುತ್ತಿದೆ ಎಂಬಂತೆ ಗಡಗಡ ನಡುಗಿದಳು. “ತಾಯೇ ಮೇರೀ ನೀನೇ ಕಾಯಬೇಕು; ನಾನು ನಿರಪರಾಧಿ, ಏನೂ ಅರಿಯದವಳು” ಎಂದು ಪ್ರಾರ್ಥಿಸಿದಳು. ಕೈತಾನ ಬಂದವನೇ ಅಧೀರ ಹೆಜ್ಜೆ ಇಡುತ್ತ ದೇವರ ಮನೆಯಲ್ಲಿದ್ದ ಆಬೋಲೀನಳನ್ನು ಸಮೀಪಿಸಿದ. ಆಬೋಲೀನಳನ್ನು ಕುರಿತು ಮೊದಲೊಮ್ಮೆ ಅತ್ಯಂತ ಸಿಟ್ಟು, ಆ ನಂತರ ತಿರಸ್ಕಾರ ಮೂಡಿದ್ದವು. ಆದರೆ ದೇವರ ಮೂರ್ತಿಯ ಮುಂದೆ ಒರಗಿದ ಆ ಚಿಕ್ಕ ದೇಹವನ್ನು ಕಂಡಕೂಡಲೇ ವಾತ್ಸಲ್ಯವೇ ಬಾಯಿ ಬಿಟ್ಟು ಕರೆಯಿತು: +“ಮಗೂ ಆಬೋಲೀನ” +ಆಬೋಲೀನಳಿಂದ ಯಾವ ಉತ್ತರವೂ ಬರಲಿಲ್ಲ. ಅವಳು ತನ್ನ ನಡುಕವನ್ನು ಅಡಗಿಸಲು ಇನ್ನಷ್ಟು ಬಗ್ಗಿದಳು. ಆದರೂ ಸಾಧ್ಯವಾಗಲಿಲ್ಲ. ಮೇಣಬತ್ತಿಯ ಬೆಳಕಿನಲ್ಲಿಕೈತಾನನಿಗೆ ಈ ನಡುಕ ಕಂಡಿರಲಿಕ್ಕಿಲ್ಲ. ತನ್ನ ಕರೆಗೆ ಓ ಬರದಿದ್ದನ್ನು ಕಂದು ಅಂದ: +“ಇಗರ್ಜಿಗೆ ಹೋಗಿ ಬಂದೆ; ಪಾದ್ರಿ ಬರಹೇಳಿದ್ದರು.” +ತಂದೆಯ ಮಾತನ್ನು ಕೇಳಿದ ಮೇಲೂ ತನ್ನ ಭಯ, ದುಃಖ ತಡೆಯಲಾಗಲಿಲ್ಲ. ಒಡನೆಯೇ ತನ್ನ ಜಾಗದಿಂದ ಎದ್ದು ತನ್ನ ತಂದೆಯ ಕಾಲುಗಳನ್ನು ಗಟ್ಟಿಯಾಗಿ ಹಿಡಿದು, ಸಂಯಮದ ಕಟ್ಟೆಯೊಡೆದು ಹರಿಯುತ್ತಿದ್ದ ತನ್ನ ಕಂಬನಿಗಳಿಂದ ಅವನ ಪಾದಗಳನ್ನು ಒದ್ದೆ ಮಾಡಿದಳು. ಪಾದ್ರಿ ಹೇಳಿದ ಮಾತು ನಿಜ ಹಾಗಾದರೆ-ನಿಜ ಹಾಗಾದರೆ! ಇಲ್ಲದಿದ್ದರೆ ಈಗ ತಾನು ನೋಡುತ್ತಿದ್ದುದರ ಅರ್ಥವೇನು? +“ಅಯ್ಯೋ ಮಗು, ಇದೇನಾಯಿತು! ಇದು ನಿಜವೇ?” +ಕೈತಾನ ನಿಂತಲ್ಲೇ ಕುಳಿತು ತನ್ನ ಕಾಲ ಮೇಲೆ ಒರಗಿದಾ‌ಅಬೋಲೀನಳ ಬೆಂನ್ನಮೇಲೆ ವಾತ್ಸಲ್ಯದ ಕೈಯಾಡಿಸಿದ. ಇದರಿಂದ ಅವಳ ಅಳು ಇನ್ನೂ ಹೆಚ್ಚಾಯಿತೇ ಹೊರತು ಅವಳ ಬಾಯಿಯಿಂದ ಯಾವ ಶಬ್ದವೂ ಹೊರಬೀಳಲಿಲ್ಲ. ಆದರೆ ‘ಅದು’ ಹೌದು, ‘ಅದೆಲ್ಲ’ ನಿಜ ಎನ್ನುವುದಕ್ಕೆ ಇನ್ನೆಂತಹ ಸಾಕ್ಷಿ ಬೇಕಿತ್ತು? +“ಅಳಬೇಡ ಕಂದಾ ಅಳಬೇಡ. ದೇವರಿದ್ದಾನೆ, ಅವನೇ ರಕ್ಷಿಸುವ.” +ಕೈತಾನ ಆಬೋಲೀನಳ ಬೆನ್ನಮೇಲೆ ಕೈಯಾಡಿಸುತ್ತಲೇ ಇದ್ದ. ದೊಡ್ಡವಳಾದಮೇಲೆ ತಂದೆ ತನ್ನನ್ನು ಮುಟ್ಟಿದ್ದು ಇದೇ ಮೊದಲು. ತಿರುಗಿ ಗಂಡಸಿನ ಸ್ಪರ್ಷ; ಆದರೆ ಎಷ್ಟು ಬೇರೆ ರೀತಿಯದು! ಎಂತಹ ತುಂಬಿದ ಮಮತೆಯಿತ್ತು ಅದರಲ್ಲಿ, ಎಂತಹ ಸಂರಕ್ಷಣೆಯ ಆಶ್ವಾಸನ! “ಇದೆಲ್ಲ ಹೇಗಾಯಿತು?” +ತನ್ನ ದನಿಯ ಗುರುತು ತನಗೇ ಹತ್ತಿತೋ ಇಲ್ಲವೋ ಕೈತಾನನಿಗೆ. +“ಈಶ್ವರ ದೇಗುಲದಲ್ಲಿ.” +ಆಬೋಲೀನಳ ತುಸು ಶಾಂತವಾಗುತ್ತಲಿದ್ದ ಅಳು ಇನ್ನೊಮ್ಮೆ ಹೆಚ್ಚಿತು. ಆದರೆ ಅವಳ ಬಾಯಿಯಿಂದ ಬಂದ ಎರಡೇ ಶಬ್ದಗಳಿಂದ ಕೈತಾನನ ಕಣ್ಣಮುಂದೆ ಎಂದಿಗೂ ಕತ್ತಲೆ ಇದ್ದಂತಿದ್ದ ಆ ದೇವಸ್ಥಾನದ ಪಡಸಾಲೆಯಲ್ಲಿ ತನ್ನ ಮಗಳು ಹಾಗೂ ‘ಅವನು’ ಒಂದೆಡೆ…..ಎಷ್ಟೆಷ್ಟೋ ಅಸಹ್ಯ ಚಿತ್ರಗಳು ಕಣ್ಣಮುಂದೆ ನಿಂತವು. ಆದರೆ ತಾನು ಹೀಗೆ ಕಲ್ಪಿಸಿಕೊಂಡದ್ದಕ್ಕೂ, ತನ್ನ ಮಗಳು ಉಚ್ಚರಿಸಿದ ಆ ಎರಡು ಶಬ್ದಗಳಿಗೂ ಯಾವ ಸಂಬಂಧವೂ ಇರಲಿಲ್ಲ ಎನ್ನುವುದು ತಿಳಿಯುವ ಬಗೆ ಹೇಗೆ? +“ಎಷ್ಟು ತಿಂಗಳು?” +“ಎರಡು.” +ಮನವೇಲ ಹೇಳಿರಲಿಲ್ಲವೇ?-ಯಾರಾದರೂ ಕೇಳಿದರೆ ಎರಡು ತಿಂಗಳೆಂದು ಮಾತ್ರ ಹೇಳಬೇಡ ಎಂದು? ದುಷ್ಟ! ಮಾಡುವುದೆಲ್ಲವನ್ನೂ ಮಾಡಿ ಈಗಲೂ ಮೋಸಗೊಳಿಸುವೆಯಾ? ಪಾದ್ರಿಗೆ ತಿಳಿದಿದೆ; ಅಪ್ಪನಿಗೆ ಗೊತ್ತಾಗಿದೆ; ಊರಿಗೆ ಊರೇ….ಅಯ್ಯೋ! ಅಂದೇ ತನಗೆ ಅನ್ನಿಸಿತ್ತು-ಆ ದೀವರ ಹೆಂಗಸು ಕೊನೆಗೂ ತನ್ನನ್ನು ಗುರುತಿಸಿರಬೇಕು….ಈಗಲೂ ಸತ್ಯವನ್ನು ಬಚ್ಚಿಟ್ಟರೆ ತನಗೆ ಉಳಿಗಾಲ ಇಲ್ಲವೆಂದು ಅರಿತೇ ನುಡಿದಿದ್ದಳು, ಇಲ್ಲದ ಧೈರ್ಯ ತಂದುಕೊಂಡು: +“ಎರಡು ತಿಂಗಳು” +ಕೂಡಲೇ ಮದುವೆ ಮಾಡಿದರೆ ಜನರ ಬಾಯನ್ನು ಮುಚ್ಚಬಹುದು ಎಂದೆನಿಸಿತು, ಕೈತಾನನಿಗೆ: +“ಯಾರು?” +“ಮನವೇಲ.” +ಈಗಲೂ ಆ ಮೋಸಗಾರ ಮನವೇಲನನ್ನು ಉಳಿಸುವ ಯತ್ನಮಾಡಲಿಲ್ಲ ಆಬೋಲೀನ. ಆದರೆ ಇದೆಲ್ಲದರಿಂದ ತನ್ನ ಬಲಿ ತಗೊಳ್ಳಲೆಂದೇ ಮನವೇಲ ಸಿದ್ಧಗೊಳಿಸಿಟ್ಟ ಯಮಪಾಶಕ್ಕೆ ತಾನಾಗಿ ಕೊರಳು ಸೇರಿಸುತ್ತಿದ್ದೇನೆ ಎನ್ನುವ ಅರಿವು ಮಾತ್ರ ಆ ಮುಗ್ಧ ನಿಷ್ಪಾಪ ಜೀವಕ್ಕೆ ಕೊನೆಗೂ ಬರಲಿಲ್ಲ. +ಮುಂದಿನ ಐದಾರು ದಿನಗಳಲ್ಲೇ ಆಬೋಲೀನಳ ಲಗ್ನವು ನಿಶ್ಚಯವಾಗಿ ಒಂದು ದಿನ ಮದುವೆಯೂ ಆಗಿಬಿಟ್ಟಿತು-ಪಾದ್ರಿಯ, ಧರ್ಮದ ಆಶೀರ್ವಾದ ಪಡೆದು. +ಹೊಣೆಗೇಡಿ ನಿಂದಕರು ಹಲವರು ಈ ಮದುವೆಯನ್ನು ಕುರಿತು ಏನಿಲ್ಲದ್ದೊಂದು ಆಡಿಕೊಂಡರೂ ವಿಶಾಲಹೃದಯದ, ಮಾನವ ಅಂತಃಕರಣದ ಕೆಲವು ಸಜ್ಜನರು ಮಾತ್ರ ಸಮಾಧಾನ ತೋರಿದರು. ಮನವೇಲನೇನೋ ಈ ಹುಡುಗಿಗೆ ಯೋಗ್ಯನಾದ ವರನಲ್ಲ. ಆದರೂ ಬಂದೊದಗಿದ ಅನರ್ಥಕ್ಕೆ ಒಂದು ಪರಿಹಾರ ದೊರಕಿತಲ್ಲ. ಇಲ್ಲವಾದರೆ ಹುಡುಗಿಯ ಆಯುಷ್ಯವೇ ಹಾಳಾಗುವ ಸಂದರ್ಭ. ಇದೆಲ್ಲವನ್ನೂ ಸಕಾಲದಲ್ಲಿ ಕಂಡುಹಿಡಿದ ಪಾದ್ರಿಯನ್ನೂ ಹೆಚ್ಚಿನ ‘ಗಲಾಟೆ’ಯಾಗುವ ಮೊದಲೇ ಲಗ್ನ ಜರುಗಿಸಿದ ಅವರ ದೂರದೃಷ್ಟಿಯನ್ನೂ ಜನರು ಹೊಗಳದೇ ಇರಲಿಲ್ಲ. +ಆದರೆ ಮನವೇಲನ ಧೂರ್ತ ಕಪಟ ಪಾದ್ರಿಯನ್ನೂ ಮೋಸಗೊಳಿಸಿತ್ತು ಎನ್ನುವುದರ ಕಲ್ಪನೆ ಮಾತ್ರ ಆಗ ಯಾರಿಗೂ ಬಂದಿರುವುದು ಶಕ್ಯವಿರಲಿಲ್ಲ. +೯ +ಚಕ್ರಖಂಡೇಶ್ವರ ದೇವಸ್ಥಾನದಲ್ಲಿ ಮನವೇಲನ ಅಪ್ಪುಗೆಯಲ್ಲಿ ಆಬೋಲೀನಳನ್ನು ಕಂಡದ್ದು ಬರಿಯ ಆ ದೀವರ ಹೆಂಗಸು ಒಬ್ಬಳೇ ಆಗಿರಲಿಲ್ಲ. ಮನವೇಲನ ಕೇರಿಯವರೇ ಇಬ್ಬರು ಕ್ರಿಶ್ಚಿಯನ್ನರು ನೋಡಿದ್ದರು. ನೋಡಿದ ಸಂಗತಿ ಇನ್ನು ಕೆಲವರ ಕಿವಿಗೆ ಮುಟ್ಟುವ ಹೊತ್ತಿಗೆ ಬೇರೆಯ ಒಂದು ರೂಪ ತಳೆದು ಮುಂದೆ ಕೆಲವು ದಿನಗಳ ನಂತರ ಇಗರ್ಜಿಯ ಪಾದ್ರಿಯ ಕಿವಿಗೂ ಮುಟ್ಟುವುದರಲ್ಲಿತ್ತು. ಆದರೆ ಮನವೇಲನನ್ನು ಬಲ್ಲವರು ಅವನ ಗೊಡವೆಗೆ ಹೋಗಲು ಅಂಜುತ್ತಿದ್ದರಿಂದಲೋ ಏನೋ ಆ ವಿಷಯ ಹೆಚ್ಚು ಗದ್ದಲವಾಗದೇ ಆ ಘಟನೆಯನ್ನೇ ಮರೆಯುವ ಸ್ಥಿತಿ ಬಂತು. ಪಾಪ! ಮುದುಕ ಕೈತಾನನಿಗೆ ಮಾತ್ರ ಇದರ ಸುಳಿವು ಕೊನೆಗೂ ಹತ್ತಲಿಲ್ಲ. +ಹೀಗಿರುವಾಗ ಒಂದು ದಿನ, ಪಾದ್ರಿ ಕೈತಾನನನ್ನು ಇಗರ್ಜಿಗೆ ಕರೆ ಕಳಿಸಿದುದರ ಏಳೆಂಟು ದಿನಗಳ ಮೊದಲು-ಆಬೋಲೀನ ನಿತ್ಯದಂತೆ ಗುಂದೆಗಳಿಂದ ಸುರಗೀಕಾಯಿಗಳನ್ನು ಹೆಕ್ಕಿ ಮನೆಗೆ ಬರುತ್ತಿರುವಾಗ ಹಾದಿಯಲ್ಲಿ ಮನವೇಲನ ಕೇರಿಯ ಹುಡುಗಿಯೊಬ್ಬಳು(ಪುಲ್ಲು ಎಂದು ಅವಳ ಹೆಸರು)ಭೇಟಿಯಾದಳು. ಸಾಧಾರಣ ಆಬೋಲೀನಳದೇ ವಯಸ್ಸಿನವಳು-ಇಲ್ಲ, ತುಸು ದೊಡ್ಡವಳು. ಆದರೆ ಬಲು ಧೂರ್ತಳು. ಗುಂದೆಗಳಲ್ಲಿ ಇಲ್ಲ ಗದ್ದೆಗಳಲ್ಲಿ ಬಿದ್ದ ಸಗಣಿಯನ್ನು ಒಟ್ಟುಗೂಡಿಸಲು ಬಂದಾಗ ಇಲ್ಲವೇ ಇಗರ್ಜಿಗೆ ಹೋದಾಗ ಆಗೀಗ ಮಾತನಾಡಿ ಪರಿಚಯವೇ ಹೊರತು ಹೆಚ್ಚಿನ ಸಲಿಗೆಯಿದ್ದವಳಲ್ಲ. ಆದರೆ ತನ್ನಂತೆಯೇ ಒಂದು ಹೆಣ್ಣು ಜೀವ ತಾನೆ! ತನ್ನನ್ನು ಅನೇಕ ದಿನಗಳಿಂದ ಕಾಡುತ್ತಿದ್ದ ದುಷ್ಟ ಭೀತಿಯೊಂದನ್ನು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕೆಂಬ ಆಂತರಿಕ ಒತ್ತಡ ಅಚಾನಕವಾಗಿ ಭೆಟ್ಟಿಯಾದ ಈ ಹುಡುಗಿಯಲ್ಲೂ ಒಬ್ಬ ಆಪ್ತಳನ್ನು ಕಾಣಲು ಹಚ್ಚಿರಬೇಕು. ಇಲ್ಲ, ನನ್ನ ಅಪ್ಪ ಹೇಳುವಂತೆ ಮುಂದೆ ನಡೆಯಲಿದ್ದ ದುರಂತದ ಸೂತ್ರಧಾರಿಯಾದ ವಿಧಿ ಇವರಿಬ್ಬರು ಹೀಗೆ ಭೆಟ್ಟಿಯಾಗುವುದನ್ನೇ ಕಾಯುತ್ತಿರಬೆಕು. ಒಟ್ಟಿನಲ್ಲಿ ಪುಲ್ಲು ಭೆಟ್ಟಿಯಾದುದೇ ‘ಯಾವಾಗೊಮ್ಮೆ ನೀನು ಸಿಗುವೆ; ನಿನ್ನನ್ನು ಕೇಳುವೆ’ ಎಂದು ಕಾಯುತ್ತ ನಿಂತವಳ ರೀತಿಯಲ್ಲಿ ಆಬೋಲೀನ ಕೇಳಿದಳು- ಈ ಘಟನೆಯ ಎಂಟು ದಿನಗಳ ನಂತರ ನನ್ನನ್ನು ಕೇಳಿದುದನ್ನೇ-“ಪುಲ್ಲು, ಮಕ್ಕಳು ಆಗುವುದು ಹೇಗೆ? ಗೊತ್ತೇ?” ಮುಗ್ಧ ಸ್ವಭಾವದ ಆಬೋಲೀನಳಿಗೆ ತಾನು ಕೇಳಿದ ಪ್ರಶ್ನೆಗೆ ಪುಲ್ಲು ಯಾವ ಅರ್ಥ ಹಚ್ಚಬಹುದು ಎಂಬುದರ ಕಲ್ಪನೆ ಆಗ ಇರಲಿಲ್ಲ. ಆದರೆ ಪುಲ್ಲು ಮಾತ್ರ ಈ ಪ್ರಶ್ನೆಯ ಹಿಂದಿನ ಗುಟ್ಟೆಲ್ಲ ತನಗೆ ಗೊತ್ತಿದೆ ಎನ್ನುವ ಹಾಗೆ ಅತ್ಯಂತ ತಿರಸ್ಕಾರದಿಂದ “ಹೋಗೇ” ಎಂದು ಆಬೋಲೀನಳ ಮೇಲೆ ಹರಿಹಾಯ್ದು ಅಲ್ಲಿಂದ ಕಾಲ್ದೆಗೆದವಳೇ ಅವಸರ ಅವಸರವಾಗಿ ತನ್ನ ಕೇರಿಯತ್ತ ಸಾಗಿದಳು- ‘ನಿನ್ನ ಜೊತೆಯಲ್ಲಿ ಕಾಣಿಸಿಕೊಳ್ಳುವುದೂ ಅಪರಾಧವಾದೀತು’ ಎನ್ನುವ ಭಾವ ಪ್ರಕಟಿಸುತ್ತ. ಇದೆಲ್ಲದರಿಂದ ಆಬೋಲೀನ ಇನ್ನಷ್ಟು ಕಂಗೆಟ್ಟಳು. +ಪುಲ್ಲು ಮನೆ ಮುಟ್ಟಿದುದೇ, ನಡೆದುದರ ವರದಿಯನ್ನು ತಾಯಿಗೆ ಮುಟ್ಟಿಸಿದಳು. ಕೇಳಿದ ತಾಯಿ ‘ಅಬ್ಬಾ’ ಎಂದಳು. ಕೆಲವು ದಿನಗಳ ಮೊದಲು ಕೇಳಿದ ಚಕ್ರಖಂಡೇಶ್ವರದ ಪ್ರಕರಣ ಆಬೋಲೀನಳ ಈ ನಿಷ್ಪಾಪ ಪ್ರಶ್ನೆಗೆ ಒಂದೇ ಅರ್ಥ ಸೂಚಿಸಿತು. ಆಗ ಗಾಳಿಯಲ್ಲಿ ತೂರಿ ಬಂದ ಆ ಸಣ್ಣ ‘ಪುಚ್ಛ’ವೂ ಈಗ ಜೀವಕಳೆ ಧರಿಸಿ, ಬಲಿತು ದೊಡ್ಡ ‘ಕಾಗೆ’ಯೇ ಆಗಿ ಕೇರಿಯಲ್ಲಿ ಅಲ್ಲಲ್ಲಿ ಹಾರಾಡಿತು-ಕಾವ್‌ಗುಟ್ಟಿತು! ಕೇರಿಯ ಮಾನವಂತರು ಕೆಲವರು ಹುಡುಗಿಯ ಭವಿಷ್ಯದ ಬಗ್ಗೆ ಕಳವಳಪಟ್ಟು ಸುದ್ದಿಯನ್ನು ಪಾದ್ರಿಯ ಕಿವಿಯಲ್ಲಿ ಹಾಕಿದರು. ಸುದ್ದಿ ಬಂದ ದಿನವೇ ಪಾದ್ರಿ ಮನವೇಲನನ್ನು ಕರೆಕಳಿಸಿದರು. ಊಹಿಸಿ ನೋಡಿದಲ್ಲಿ ಇದು ಗುಂದೆಯ ಪ್ರಕರಣದ ಮುನ್ನಾದಿನ ಎಂದು ಗೊತ್ತಾಗುವುದು. +ಮನವೇಲ ಪಾದ್ರಿಯನ್ನು ಭೆಟ್ಟಿಯಾಗಲು ನಡೆದ. +ಕೇರಿಯಲ್ಲೆಲ್ಲ ಹರಡಿದ ಸುದ್ದಿ ಮನವೇಲನ ಕಿವಿಗೂ ಮುಟ್ಟದೇ ಇರುತ್ತದೆಯೆ? ಆಬೋಲೀನ ಪುಲ್ಲೂಗೆ ಕೇಳಿದ ಪ್ರಶ್ನೆಯ ಹಿಂದಿನ ನಿಜವಾದ ಗುಟ್ಟನ್ನು ಅವನೊಬ್ಬನೇ ಬಲ್ಲವನಾಗಿದ್ದ. ಆದರೆ ಸುದ್ದಿ ಕೇಳಿದಾಗ ಅವನಿಗೂ ಮೊದಲು ಆಶ್ಚರ್ಯವಾಗದಿರಲಿಲ್ಲ. ಅಂದು ದೇಗುಲದಲ್ಲಿ ತಾನು ಹಾಕಿದ್ದ ಆ ದುಷ್ಟ ಭೀತಿ ಇಷ್ಟು ಬೇಗ ಫಲಕಾರಿಯಾಗಬಹುದೆಂದು ಅವನು ಊಹಿಸಿರಲಿಕ್ಕಿಲ್ಲ. ಅಥವಾ ಯಾರು ಬಲ್ಲರು, ಆ ಬೆದರಿಕೆಯನ್ನು ಹಾಕುವಾಗ ಯಾವ ದುಷ್ಟ ಉದ್ದೇಶವನ್ನೂ ಇಟ್ಟುಕೊಂಡಿರಲಿಕ್ಕಿಲ್ಲ. ಹುಡುಗಿಯ ಭೋಳೇತನದ ನೆಲೆಯರಿತ ಅವನು ಬರಿಯ ಚೇಷ್ಟೆಗೆಂದೇ ಹಾಗೆ ಅಂದಿರಲೂಬಹುದು. ಆದರೆ ಇದೆಲ್ಲ ಮುಂದೆ ಎಡೆಗೊಟ್ಟ ದುರಂತದಿಂದ ಸಂಪ್ತಗೊಂಡ ನಾವು ಮಾತ್ರ ಮನವೇಲವ ಈ ಕೃತಿಗೆ ಒಂದೇ ಅರ್ಥವನ್ನು ಹಚ್ಚಿರಬಹುದು-ಇಂತಹ ಒಂದು ಧೂರ್ತ ಉದ್ದೇಶವನ್ನೇ ಇಟ್ಟುಕೊಂಡೇ ಅವನು ಅವಳನ್ನು ಹಾಗೆ ಬೆದರಿಸಿರಬೇಕೆಂದು. ಆದರೆ ಇಷ್ಟೊಂದು ನಿಜ: ತಾನು ಹಾಕಿದ ಬೆದರಿಕೆಯನ್ನು ಆಬೋಲೀನ ನಿಜಕ್ಕೂ ನಂಬಿದ್ದಾಳೆ ಎಂದು ತಿಳಿದ ಮೇಲೆ ಮಾತ್ರ ಅವಳ ಭೀತಿಯ ಲಾಭ ಪಡೆಯಲು ಆತ ಹಿಂಜರಿಯಲಿಲ್ಲ. ಅದಾಗಲೇ ಕೇರಿಯಲ್ಲಿ ಹಬ್ಬಿದ ಸುದ್ದಿಯೂ ಅವನಿಗೆ ಪ್ರೋತ್ಸಾಹವಿತ್ತಿತ್ತು. ಅಷ್ಟೇ ಅಲ್ಲ, ಅದುವೇ ಅವನಿಗೆ ಮುಂದಿನ ದಾರಿಯನ್ನೂ ಸೂಚಿಸಿತು. ಆ ದಾರಿಯನ್ನು ಕುರಿತು ವಿಚಾರಿಸುತ್ತಲೇ ಮನವೇಲ ಇಗರ್ಜಿಯ ಮೆಟ್ಟಿಲುಗಳನ್ನು ಏರುತ್ತಿದ್ದ….. +ಎಂದಿಗೂ ಇಗರ್ಜಿಯ ಮೆಟ್ಟಿಲುಗಳನ್ನು ಏರಿ ಗೊತ್ತಿರದ ಮನವೇಲನನ್ನು ಕಂಡು ಪಾದ್ರಿಗೆ ಅಚ್ಚರಿಯಾಗದೇ ಇರಲಿಲ್ಲ- ತಮ್ಮ ಕರೆಗೆ ಮನ್ನಣೆಯಿತ್ತು ಅವನು ಬರಬಹುದು ಎಂಬುದರಲ್ಲಿ ಅವರಿಗೆ ನಂಬುಗೆ ಇದ್ದಿರಲಿಲ್ಲ. ಹೇಳಿಕೇಳಿ ಹುಂಬನವ: ಅವನನ್ನು ಕಂಡು ತುಸು ಹೆದರಿಕೆಯೂ ಆಯಿತು. ಅಳುಕುವ ಮನಃಸ್ಥಿತಿಯಲ್ಲೇ ಅವನನ್ನು ಸ್ವಾಗತಿಸಿದರು: +“ಬಾ ಮನವೇಲ….ನಿನ್ನ ಹತ್ತಿರ ಮಾತಾಡಬೇಕಿತ್ತು.” +“ಅಹುದೇ?”ಎಂದು ಕೇಳಿದ. ಮನವೇಲನ ಮಾತಿನಲ್ಲೂ ವಿಚಿತ್ರ ನಡುಕವಿತ್ತು. +“ಬಾ, ಆ ಬದಿಯ ಕಲ್ಲು ಬಂಡೆಯ ಮೇಲೆ ಹೋಗಿ ಕೂಡ್ರೋಣ. ಗಾಳಿಯೂ ಚೆನ್ನಾಗಿ ಬರುತ್ತದೆ ಅಲ್ಲಿ. ಇಂದು ಸ್ವಲ್ಪ ಸೆಕೆಯಲ್ಲವೆ?” ಎನ್ನುತ್ತ ಮನವೇಲನ ಜೊತೆಗೆ ಇಗರ್ಜಿಯ ಹಿಂಬದಿಯಲ್ಲಿ ಗುಡ್ಡದ ಅಂಚಿಗೆ ಇದ್ದ-ತಾವು ನಿತ್ಯ ಸಂಜೆ ಗಾಳಿ ಸೇವನೆಗೆಂದು ಕೂಡ್ರುವ-ಕಲ್ಲುಬಂಡೆಯ ಬಳಿ ಬಂದರು. ಮನವೇಲನನ್ನು ಒಂದೆಡೆಯಲ್ಲಿ ಕೂಡ್ರಲು ಹೇಳಿ ಅತಿ ಮಮತೆಯಿಂದ ಕೇಳಿದರು: +“ಮನವೇಲ….” +“ಏನು ತಂದೆ?” +ಮನವೇಲನ ದನಿಯಲ್ಲಿ ಅಸಾಧಾರಣ ಮಾರ್ಧವತೆಯಿತ್ತು, ನಮ್ರತೆಯಿತ್ತು. ಮಬ್ಬುಗತ್ತಲೆಯ ಶಾಂತಿಯಲ್ಲಿ ಕೇಳಿದ ಮನವೇಲನ ದನಿಯ ಮಾರ್ದವತೆ ಪಾದ್ರಿಯ ಮನಸ್ಸನ್ನು ತಟ್ಟದಿರಲಿಲ್ಲ. ತಾವು ಅವನೊಡನೆ ಆಡಲಿರುವ ಮಾತಿನ ಗಾಂಭೀರ್ಯದಿಂದ ತಮಗೆ ತಾವೆ ಬೆದರಿಕೊಂಡಿದ್ದ ಪಾದ್ರಿಗೆ ಮನವೇಲನ ಮಾತಿನಲ್ಲಿಯ ನಮ್ರತೆಯಿಂದ ಧೈರ್ಯ ಬಂದಿತು. +“ನಿನಗೀಗ ಎಷ್ಟು ವಯಸ್ಸು?” +“ಮುವ್ವತ್ತರ ಮೇಲಾಯಿತು…. ಏಕೆ?” +“ಇನ್ನೂ ಮದುವೆಯಾಗುವ….” +ಆಗಿನಿಂದ ಗೋಣು ಬಗ್ಗಿಸಿ ನೆಲದತ್ತ ನೋಡುತ್ತ ಕುಳಿತ ಮನವೇಲ ಒಮ್ಮೆಲೇ ಕತ್ತೆತ್ತಿ ತಮ್ಮೆಡೆಗೆ ನೋಡಿದ ರೀತಿಗೆ ಪಾದ್ರಿಗೆ ಮಾತನ್ನು ಪೂರ್ಣಗೊಳಿಸುವ ಧೈರ್ಯವಾಗಲಿಲ್ಲವೇನೋ, ಅವರು ಅರ್ಧಕ್ಕೇ ತಡೆದರು. ತುಸು ಹೊತ್ತಿನ ಮೇಲೆ: +“ನಿನ್ನ ಎರಡನೇ ಹೆಂಡತಿ ಸತ್ತು….” +“ಐದು ವರ್ಷಗಳ ಮೇಲಾಯಿತು.” ಪಾದ್ರಿ ತಮ್ಮ ಪ್ರಶ್ನೆಯನ್ನು ಪೂರ್ಣಗೊಳಿಸುವ ಮೊದಲೇ ಬಂದ ಮನವೇಲನ ಉತ್ತರದಲ್ಲಿ ತುಸು ಕಾಠಿಣ್ಯವಿತ್ತು. ಹೀಗೆ ಸುತ್ತು ಮಾತೇಕೆ? ನೇರವಾಗಿ ಮಾತನಾಡಿರಲ್ಲ ಎಂದು ಆಹ್ವಾನಿಸುವಂತಿತ್ತು ಅವನ ಮಾತಿನ ಧಾಟಿ. ಪಾದ್ರಿಯೂ ಮೊದಲಿನ ಸಂಕೋಚ ಬದಿಗಿಟ್ಟು ಬಹು ಗಂಭೀರ ರೀತಿಯಲ್ಲಿ ಹೇಳಿದರು: +“ನಿನ್ನ ಮೇಲೆ ಒಂದು ಆರೋಪ ಬಂದಿದೆ.” +ಮನವೇಲನೂ ಅತಿ ಶಾಂತಚಿತ್ತನಾಗಿ ಉತ್ತರವಿತ್ತ. ‘ನಿಮ್ಮ ಮಾತು ನನಗೆ ಎಳ್ಳಷ್ಟೂ ಅನಪೇಕ್ಷಿತವಲ್ಲ’ ಎನ್ನುವವನ ಹಾಗೆ. +“ನನಗೆ ಗೊತ್ತಿದೆ.” +“ಏನು?” +“ಒಬ್ಬ ಹುಡುಗಿ ನನ್ನಲ್ಲಿ ಪ್ರೇಮ ತೋರಿದ್ದಾಳೆ.” +“ಮುಂದೆ?” +“ನನಗೆ ಅವಳಲ್ಲಿ ಪ್ರೀತಿಯಿಲ್ಲ.” +“ಏಕೆ?” +“ಇದೆಂತಹ ಪ್ರಶ್ನೆ ಗುರುಗಳೇ? ಇದು ಪ್ರೇಮ ಮಾಡುವ ವಯಸ್ಸೇ ನನ್ನದು. ಇದಾಗಲೇ ಇಬ್ಬರು ಹೆಂಡಂದಿರನ್ನು ಕಳಕೊಂಡ ನನ್ನಲ್ಲಿ ಲಗ್ನದ ಬಗ್ಗೆಯೇ ವೈರಾಗ್ಯ ಮೂಡುವ ಹೊತ್ತಿನಲ್ಲಿ…” +ಮನವೇಲನ ದನಿಯಲ್ಲಿ ವ್ಯಕ್ತವಾದ ಪರಿಪೂರ್ಣ ಪ್ರಾಮಾಣಿಕತೆ ಪಾದ್ರಿಯ ಹೃದಯವನ್ನು ಕಲಕಿತು. ತಾವು ಈ ಮೊದಲು ಅವನ ಬಗೆಗೆ ಇಟ್ಟುಕೊಂಡ ಅಭಿಪ್ರಾಯದ ಬಗ್ಗೆ ತಮಗೇ ಕೆಡುಕೆನಿಸಿತು. ಇದು ಪೂರ ಕಲ್ಲುಬಂಡೆಯಲ್ಲ; ಇದರ ಗರ್ಭದಲ್ಲೂ ಮಾನವತೆಯ ತೇವು ಇದೆ! ಮೇಲಾಗಿ ಮನವೇಲನು ಈವರೆಗೆ ಹೇಳಿದ ಕತೆಯ ಧಾಟಿಯನ್ನು ಗಮನಿಸಿದರೆ ಅವನ ಕೇರಿಯ ಗೃಹಸ್ಥರಿಂದ ಬಂದ ದೂರಿನಲ್ಲೇ ಏನೋ ತಪ್ಪು ಇರುವ ಸಂಭವವಿದೆ! ಪಾದ್ರಿ ಮನವೇಲನ ಬಾಯಿಯಿಂದಲೇ ಪೂರ್ಣ ಕತೆಯನ್ನು ತಿಳಿಯಲು ತವಕ ಪಟ್ಟರು. +ಮನವೇಲ ಮುಂದುವರಿದ: +“ಮೇಲಾಗಿ ಈ ಹುಡುಗಿ ಏನೂ ಅರಿಯದ ಕೂಸು.” +“ಹೆಸರು?” +“ಮನವೇಲನಿಂದ ಕೆಲಹೊತ್ತು ಮಾತೇ ಹೊರಡಲಿಲ್ಲ. ಇಬ್ಬರೂ ಮೌನವಾಗಿ ಕುಳಿತಿದ್ದರು. ಆಗ ಮನವೇಲನೇ ನುಡಿದ: +“ಆಬೋಲೀನ” +ಅವನ ಬಾಯಲ್ಲಿ ಆ ಹೆಸರು ಹೇಗೋ ಕೇಳಿಸಿತು. +“ಓ!!” +“ಏನು ತಂದೆ?” +“ಮುಂದೆ?” +“ಈಶ್ವರ ಗುಡಿಯ ಹಿಂದಿನ ಗದ್ದೆಗಳಲ್ಲಿ ನಾನು ದುಡಿಯುತ್ತಿರುವಾಗ ಅಲ್ಲಿಯ ಗುಂದೆಗಳಲ್ಲಿ ಸುರಗೀ ಕಾಯಿಗಳನ್ನು ಹೆಕ್ಕಲು ಬರುತ್ತಿದ್ದಳು. ಅಲ್ಲಿ ನಮ್ಮ ಪ್ರೇಮ ಕೂಡಿತು…ನಾನು ನನ್ನ ಇತಿಹಾಸ ಎಲ್ಲವನ್ನೂ ಹೇಳಿದೆ. ಅವಳ ಕೃತ್ಯದ ಪರಿಣಾಮ ಏನಾಗಬಹುದು ಎಂದೆಲ್ಲ ವಿಸ್ತರಿಸಿ ಹೇಳಿದೆ. ಕೇಳಲಿಲ್ಲ, ನನ್ನನ್ನು ಬಿಟ್ಟು…” +ಮನವೇಲನ ಮಾತಿನಲ್ಲಿ ಲಜ್ಜೆ ಸೇರಿಕೊಂಡಿತು. +ಪಾದ್ರಿ ಇನ್ನೂ ಮೌನ ತಳೆದಿದ್ದರು. +“ನಾನು ಹೆಂಡಂದಿರನ್ನು ಕಳಕೊಂಡು ಹುಚ್ಚನಾದವ. ಆಬೋಲೀನಳಂತಹ ಸುಂದರ ಪ್ರಾಯದ ಹುಡುಗಿ ತಾನಾಗಿ ನನ್ನ ಅಪ್ಪುಗೆಯಲ್ಲಿ ಬರಬೇಕಾದರೆ…” +ಮತ್ತೆ ಮೌನ. +“ಆಗಬಾರದುದೆಲ್ಲ ಆಗಿಬಿಟ್ಟಿತು.” +ಮಬ್ಬುಗತ್ತಲೆ ದಟ್ಟವಾಗಹತ್ತಿತು. ಗಾಳಿಯಲ್ಲಿ ತುಸು ತಂಪು ಸೇರಹತ್ತಿತು. ಮುಂದೆ ಬರಲಿರುವ ದುಷ್ಟ ಸಂಗತಿಯ ಪೂರ್ವಪ್ರಜ್ಞೆಯಿಂದ ಎಂಬಂತೆ ಪಾದ್ರಿಯ ಮನ ಕಳವಳಿಸಿತು. ಅದಾಗ ಮನವೇಲನ ಮಾತು: +“ಆಬೋಲೀನ ಎರಡು ತಿಂಗಳ ಗರ್ಭಿಣಿ.” +ಸಿಡಿಲೆರಗಿದಂತಾಯಿತು: ಪಾದ್ರಿಯ ಜೀವದ ತಂತೋ ತಂತುಗಳಲ್ಲಿ ನಡುಕ ಸೇರಿಕೊಂಡಿತು. ಅಯ್ಯೋ! ಇದೆಂತಹ ಪಾಪ: ಪಾದ್ರಿಯ ಭಯಭೀತ ಮೋರೆ ಆ ನಸುಗತ್ತಲೆಯಲ್ಲೂ ಮನವೇಲನ ದೃಷ್ಟಿಯಿಂದ ಮರೆಯಾಗಲಿಲ್ಲ. +“ಅಯ್ಯೋ ತಂದೆ, ಇದೇನಾಗಿಬಿಟ್ಟಿತು! ಇದಕ್ಕೆ ಪರಿಹಾರವಿಲ್ಲವೇ?” +“ಮದುವೆ” ಬಹು ಗಂಭೀರವಾಗಿ ಸಾರಿದರು, ಪಾದ್ರಿ. +“ಅಲ್ಲವೇ” ಅದಕ್ಕೇ ನಾನು ಇಲ್ಲಿ ಬಂದದ್ದು. ನೀವು ಕರೆಕಳಿಸುವ ಮೊದಲೇ ಬರುವವನಿದ್ದೆ. ಎಲ್ಲರಿಗೂ ಗೊತ್ತಾಗುವ ಮೊದಲೇ ಯಾವನಾದರೂ ಒಬ್ಬ ಹುಡುಗನೊಡನೆ….” +“ಯಾರೊಬ್ಬನೊಡನೆ ಅಲ್ಲ.” ಸಿಟ್ಟಿನಿಂದ ಗುಡುಗಿದರು ಪಾದ್ರಿ. “ಅವಳ ಮದುವೆ ನಿನ್ನೊಡನೆ.” +“ನನ್ನೊಡನೆ” ಆದರೆ ನನಗೆ ಮದುವೆಯಾಗುವ ಇಚ್ಛೆ ಎಳ್ಳಷ್ಟೂ ಇಲ್ಲವಲ್ಲ! ಮೇಲಾಗಿ ಮದುವೆಯಾಗಲು ಇಚ್ಛೆ ಇಲ್ಲದ ನನ್ನನ್ನು ಬಲೆಯಲ್ಲಿ ಹಾಕಲೆಂದೇ…” +“ಬೇಡ ಬೇಡ ಮನವೇಲ, ಇಂತಹ ಕೆಟ್ಟ ಮಾತುಗಳನ್ನು ಆಡಬೇಡ. ನಿನ್ನ ಕೈಯಿಂದ ಆದ ಪಾಪಕ್ಕೆ ಮದುವೆಯೇ ಪ್ರಾಯಶ್ಚಿತ್ತ…” +ಮುಂದಿನ ಅರ್ಧಗಂಟೆಯವರೆಗೆ ಪಾದ್ರಿಯ ಉಪದೇಶ ನಡೆದೇ ಇತ್ತು. ಅದೇ ಹೊತ್ತಿಗೆ ಮನವೇಲನಿಂದ ತನ್ನಲ್ಲಾದ ಪರಿವರ್ತನೆಯ ನಟನೆ! ಕೊನೆಗೂ ಮನವೇಲನನ್ನು ಈ ಮದುವೆಗೆ ಒಪ್ಪಿಸಿ(!) ಅವನನ್ನು ಬೀಳ್ಕೊಡುವ ಹೊತ್ತಿಗೆ ದೊಡ್ಡ ಸುಕೃತವೊಂದನ್ನು ಮಾಡಿದ ಸಮಾಧಾನದಿಂದ ಪಾದ್ರಿಯ ಮನಸ್ಸು ಪುಲಕಿತವಾಗಿತ್ತು. +ಆದರೆ ಇದೆಲ್ಲವೂ ಮನವೇಲ ಹೂಡಿದ ದೊಡ್ಡ ಕಪಟನಾಟಕ. ಈ ಕಪಟದಿಂದ ತಾವು ಮೋಸ ಹೋಗಿದ್ದೇವೆ-ಮೋಸ ಹೋಗುವಷ್ಟು ಅಜಾಗರೂಕತೆ ಅಲ್ಲ ಮೌಡ್ಯ ತೋರಿಸಿದ್ದೇವೆ. ಎನ್ನುವ ಅರಿವು ಪಾದ್ರಿಗೆ ಬರುವ ಹೊತ್ತಿಗೆ ಮಾತ್ರ ಪರಿಸ್ಥಿತಿ ಎಲ್ಲರ ಕೈ ಮೀರಿತ್ತು-ಆಬೋಲೀನ ನಮ್ಮನ್ನೆಲ್ಲ ತೊರೆದು ನಡೆದುಬಿಟ್ಟಿದ್ದಳು, ತನ್ನ ತವರುಮನೆಗೆ-ತನ್ನ ತಾಯ ಬಳಿಗೆ! +೧೦ +ಒಂದರ್ಥದಲ್ಲಿ ಆಬೋಲೀನಳು ಸುಖವನ್ನೇ ಬೇಡಿ ಬಂದಿರಲಿಲ್ಲ ಎನ್ನಬೇಕು. ಇಲ್ಲವಾದರೆ ಮನವೇಲನೊಂದಿಗೆ ಲಗ್ನವಾದ ಮೇಲೂ ಅವಳು ಸುಖದ ಸಂಸಾರವನ್ನೇ ಸಾಗಿಸಬಹುದಿತ್ತು. ಚಿಕ್ಕ ವಯಸ್ಸಿಗೇ ಲಗ್ನವಾಗಿ ಸುಖದ ಸಂಸಾರ ಹೂಡಿದವರಿಲ್ಲವೇ? ನಾನು ಹುಟ್ಟುವಾಗ ನನ್ನ ತಾಯಿಗೆ ಇನ್ನೂ ಹದಿನಾರು ವರುಷವಂತೆ. ತಮ್ಮ ವಯಸ್ಸಿನಲ್ಲಿ ಅನೇಕ ವರುಷಗಳ ಅಂತರವಿದ್ದೂ ಪ್ರೀತಿಯಿಂದ ತಿಳಿವಳಿಕೆಯಿಂದ ಸುಖ ಸಮಾಧಾನದ ಬದುಕನ್ನು ಬದುಕಿದ ಗಂಡ ಹೆಂಡಿರಿಲ್ಲವೇ? ಮನವೇಲ ವ್ಯಸನಿಯೇನೋ ಅಹುದು. ಹೆಂಡಂದಿರ ಸಾವಿನಿಂದ ಸಂಸಾರದ ಸುಖವನ್ನೇ ಕಾಣದ್ದರಿಂದ ಅಡ್ಡದಾರಿ ಹಿಡಿದಿರಬಹುದು. ಆದರೆ ಆಬೋಲೀನಳಂತಹ ತಾನು ಬಯಸಿದ ಹುಡುಗಿಯನ್ನು ಲಗ್ನವಾದ ಮೇಲೂ ಅವನು ಹಾಗೆಯೇ ಇರುತ್ತಿದ್ದನೆಂದು ಯಾರು ಹೇಳಬಹುದಿತ್ತು? ನಿಜಕ್ಕೂ, ಆಬೋಲೀನಳ ಕತೆ ಒಂದು ಸುಖದ ಸಂಸಾರದಲ್ಲೇ ಕೊನೆಗೊಂಡಿದ್ದರೆ ನಾವು ಮನವೇಲನನ್ನು ಕುರಿತು ಸಹಾನುಭೂತಿ, ಸಮಾಧಾನದ ಮಾತನ್ನೇ ಆಡಬಹುದಿತ್ತು. ಆಗ, ಈಗ ಹೇಳಿದ ಕತೆ ಬೇರೆಯೇ ಒಂದು ರೂಪವನ್ನು ತಳೆಯಬಹುದಿತ್ತು. +ಮನವೇಲ-ಆಬೋಲೀನರಿಗೆ ಮನೆತುಂಬ ಮಕ್ಕಳಾಗಿ ಅವರು ಸುಖದಿಂದ ನಲಿದಾಡುತ್ತಿರುವುದನ್ನು ಕಂಡು ಆ ಊರಿಗೆ ಹೊಸಬರಾದವರು ಯಾರಾದರೂ ಅನ್ನಬಹುದಿತ್ತು: ‘ಸೊಗಸಾದ ಜೋಡಿ. ಎಂತಹ ಮುದ್ದಾದ ಮಕ್ಕಳು!’(ಆಬೋಲೀನಳಿಗೆ ಹುಟ್ಟಿದ ಮಕ್ಕಲು ಇನ್ನು ಹೇಗಾಗಬಹುದಿದ್ದವು?) ಆಗ ಆಬೋಲೀನಳಿಗೆ ಕತೆ ಗೊತ್ತಿದ್ದವರು ಅವರಿಗೆ ಈ ಕತೆಯನ್ನು ಒಂದು ಪ್ರಣಯ ಕತೆಯ ಮೆರುಗನ್ನು ಕೊಟ್ಟೇ ಹೇಳಬಹುದಿತ್ತು. ಆಗ ಆ ಹೊಸಬರು ಕೇಳುತ್ತಿದ್ದರು ನಗುತ್ತ: ‘ಇದು ನಿಜವೇ? ಆ ಹುಡುಗಿ ಆ ವಯಸ್ಸಿಗೆ ಅಷ್ಟು ಅಜ್ಞಳಿದಳೇ? ಮನವೇಲನೂ ಬಹು ಧೂರ್ತ! ಪಾಪ! ಅವನಾದರೂ ಏನು ಮಾಡಿಯಾನು? ತಾನು ಪ್ರೀತಿಸಿದ ಹುಡುಗಿ. ಬಾಯಿ ಬಿಟ್ಟು ಕೇಳಿದರೆ ಕೊಡುತ್ತಿರಲಿಲ್ಲ; ನಾಟಕ ಹೂಡಿದ. ಅಡ್ಡಿಯಿಲ್ಲ ಚಂದವಾದ ಸಂಸಾರ….” +ಆದರೆ ಎಲ್ಲ ಆಗಬಹುದಿತ್ತು. ಆದರೆ ಆಗಲಿಲ್ಲ. +ಹಾಗೆ ಆಗುವುದು ಶಕ್ಯವೂ ಇರಲಿಲ್ಲ. ಯಾಕೆಂದರೆ ಅಂದು ಈಶ್ವರ ಗುಡಿಯಲ್ಲಿ ಈಶ್ವರ ಲಿಂಗದ ಸಾಕ್ಷಿಯಲ್ಲಿ ಆಬೋಲೀನಳ ತುಟಿಯಲ್ಲಿಟ್ಟ ಮನವೇಲನ ಎಂಜಲ ಅವಳ ಒಡಲನ್ನು ಚಿಗುರಿಸುವ ಅಮೃತವಾಗಿರದೇ ಪ್ರಾಣ ಹೀರುವ ವಿಷವಾಗಿತ್ತು! +ಲಗ್ನವಾದ ಮೊದಲ ಮೂರು ತಿಂಗಳು ಆಬೋಲೀನಳು ಸುಖದಲ್ಲೇ ಕಳೆದಳು ಎನ್ನುವುದಕ್ಕಿಂತ ಹೆಚ್ಚು ಕಷ್ಟವಿಲ್ಲದೇ ಕಳೆದಳು ಎನ್ನುವುದು ಸಮಂಜಸವೇನೋ. ಅವಳ ಮಾವನ ಮನೆಯವರು ನಮ್ಮ ಹಳ್ಳಿಯಲ್ಲಿಯ ಕ್ರಿಶ್ಚನ್ನರಲ್ಲೇ ತುಸು ಒಳ್ಳೆಯ ಕುಟುಂಬ. ತಮ್ಮ ಹುಡುಗ ಆಬೋಲೀನಳನ್ನು ‘ಈ ರೀತಿ’ ಯಾಗಿ ಮದುವೆಯಾದುದು ಅವರಾರಿಗೂ ಸಮ್ಮತವಿರಲಿಲ್ಲ. ಆದರೆ ಇದೆಲ್ಲದರ ತಪ್ಪನ್ನು ಅವನ ಮೇಲೆ ಹೊರಿಸಲೂ ಸಿದ್ಧರಿರಲಿಲ್ಲ. ಅವನು ಏನೆಂದರೂ ಗಂಡಸು, ಹೆಂಡಂದಿರನ್ನು ಕಳಕೊಂಡವ. ಇವಳು ಹೆಣ್ಣು. ಇವಳಿಗೆ ಬುದ್ಧಿ ಇರಬೇಡವೇ? ಎಲ್ಲ ತಪ್ಪು ಇವಳದೇ ಎನ್ನುವಂತಿತ್ತು ಅವರು ಇವಳೊಡನೆ ನಡಕೊಂಡ ರೀತಿ. ಆದರೆ ಬಾಯಿ ಬಿಟ್ಟು ಏನನ್ನೂ ಹೇಳುವಂತಿರಲಿಲ್ಲ. ಯಾಕೆಂದರೆ ಲಗ್ನಕ್ಕೆ ಕಾರಣವಾದ ಪ್ರಕರಣ ಎಲ್ಲರಿಗೂ ಗೊತ್ತಿದ್ದ ‘ಗೋಪ್ಯ’ ವಾಗಿತ್ತು. ಮೇಲಾಗಿ ಅವಳಿಗೇನಾದರೂ ಆಡಿ ಮನವೇಲನನ್ನು ಎದುರಿಸುವ ಧೈರ್ಯವೂ ಇರಲಿಲ್ಲ. ಆದರೂ ಮನೆಯಲ್ಲೊಂದು ಬಗೆಯ ತಾತ್ಸಾರದ, ಅಸಮ್ಮತಿಯ ವಾತಾವರಣ. ಆಬೋಲೀನಳಿಗೆ ಮೊದಮೊದಲು ಹೇಗೋ ಅನ್ನಿಸಿತು. ಆದರೆ ಕೊನೆಗೆ ಇದೆಲ್ಲ ಅಭ್ಯಾಸವಾಯ್ತು. ಆದರೆ ಅವಳ ಹೊಟ್ಟೆಯಲ್ಲಿಯ ಆ ಚಿಕ್ಕ ಜೀವ ಪಿಂಡ?-ಅದು ಮಾತ್ರ ಬೆಳೆಯಲೇ ಇಲ್ಲ! ದೊಡ್ಡದಾಗಲೇ ಇದ್ದ! ಈ ಸಂಗತಿ ಮನೆಯ ಹೆಂಗಸರ ಸೂಕ್ಷ್ಮದೃಷ್ಟಿಗೆ ತಿಳಿಯದಿರಲಿಲ್ಲ. ಇಲ್ಲವಾದರೆ, ಲಗ್ನದ ಮೊದಲೇ ‘ಎರಡು ತಿಂಗಳು’ ಅನ್ನುವವಳು ಈಗ ಲಗ್ನವಾಗಿ ಮೂರು ತಿಂಗಳಾದರೂ ಗರ್ಭಧಾರಣೆಯ ಯಾವ ಲಕ್ಷಣವೂ ತೋರಬೇಡವೆಂದರೆ! ಮನೆಯವರಿಗೆ ತುಸು ಕುತೂಹಲವೆನಿಸಿತು. ಹೀಗಿರುವಾಗ ಒಂದು ದಿನ ಆಬೋಲೀನ ‘ಹೊರಗೆ ನಿಂತದ್ದು’ ಹೇಗೋ ಅವಳ ನಾದಿನಿಗೆ ಗೊತ್ತಾಯಿತು. ಅವಳಿಗೆ ತನ್ನ ಕುತೂಹಲವನ್ನು ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟಳು: +“ನೀನು ಮುಟ್ಟಲ್ಲವೇನೇ?” +“ಅಹುದು” ಎಂದಳು ಆಬೋಲೀನ ತನ್ನ ಮಾತಿನ ಅರ್ಥ ಏನೆಂದು ಅರಿಯದೇನೆ. +“ಅರೆ! ಅಂದರೆ ನೀನು ಬಸುರಿಯಲ್ಲ!” +ಮಾತಿನಲ್ಲಿ ಆರೋಪವಿತ್ತು; ನೀನು ಬಸುರಿಯೆಂದು ಇಷ್ಟು ದಿನ ನಮ್ಮನ್ನೆಲ್ಲ ಮೋಸಗೊಳಿಸಿದ್ದೀಯೆಂದು. ಆದರೆ ಆಬೋಲೀನಳಿಗೆ ಅದರ ಅರಿವಾಗದೇ ಒಂದು ಅತ್ಯಂತ ಸುಖದ ಸುದ್ದಿಯನ್ನೇ ಕೇಳಿದವಳೆಂಬಂತೆ ಕೇಳಿದಳು: +“ನಿಜಕ್ಕೂ ? ನಾ ಬಸುರಿಯಲ್ಲವೆ?” +ಪ್ರಶ್ನಿಸಿದ್ದು ನಾದಿನಿಯನ್ನಲ್ಲ-ತನ್ನನ್ನೇ!ಅವಳಿಗೆ ಅಂದೇ ಅನ್ನಿಸಿತ್ತು-ಲಗ್ನಾನಂತರದ ‘ಆ’ಹೊಚ್ಚ ಹೊಸ ಅನುಭವ ಬಂದ ಮೊದಲ ದಿನವೇ ತಿಳಿದಿತ್ತು: ಹೆಣ್ಣುತನದ ಎಷ್ಟೋ ಗೂಢಗಳ ಬಗ್ಗೆ ತಾನಿನ್ನೂ ಅಜ್ಞಳಿದ್ದೇನೆ ಎಂದು. ಆದರೆ ನಾದಿನಿ ತನ್ನ ಬಗ್ಗೆ ತೆಗೆದ ಆ ಒಂದು ಉದ್ಗಾರದಿಂದ ಸ್ತ್ರೀಸಹಜವಾದ ಜ್ಞಾನ ಒಮ್ಮೆಲೇ ಸ್ಪೂರ್ತಿಗೊಂಡಂತಾಗಿ ತಾನು ಆ ಒಂದು ಕ್ಷಣದಲ್ಲಿ ಬೆಳೆದುಬಿಟ್ಟಿದ್ದೇನೆ ಎಂಬ ಅನುಭವದ ಪ್ರೌಢಕಳೆ ಅವಳ ಮೋರೆಯ ಮೇಲೆ ಮಿಂಚಿತು. ‘ತಾನು ಬಸುರಿಯಲ್ಲ’; ತನಗೆ ಮೊದಲಿನಿಂದಲೂ ಅನಿಸಿತ್ತು. ಆದರೆ ಯಾರನ್ನು ಕೇಳುವುದು? ಹೇಗೆ ಕೇಳುವುದು? +ತಡವಾಗಿಯಾದರೂ ಹುಟ್ಟಿದ ಈ ಅಜ್ಞಾನದಿಂದ ಆಬೋಲೀನ ಅತ್ಯಂತ ಹರುಷಗೊಂಡಳು. ಅತಿ ನಿರ್ದೋಷವಾದ, ನಿರ್ಮಲವಾದ ಆನಂದ ಅವಳ ಅಂಗಾಂಗಗಳಲ್ಲಿ ನಲಿದಾಡಹತ್ತಿತು: ತಾನು ಕೊನೆಗೂ ‘ಪಾಪಿ’ಯಲ್ಲ ಹಾಗಾದರೆ. ತಾನು ನಿರ್ದೋಷಿ. ಆ ಆನಂದದ ಸುದ್ದಿಯನ್ನು ತಂದೆಗೆ ತಿಳಿಸಬೇಕು-ಕೂಡಲೇ ತಿಳಿಸಬೇಕು ಎಂದು ಅವಳ ಮನ ಆತುರಗೊಂಡಿತ್ತು. ಅವಳಿಗೆ ಗೊತ್ತಿತ್ತು ತನ್ನ ತಂದೆ ತನ್ನ ಪಾಪವನ್ನು ಎಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿದ್ದಾನೆ ಎಂದು. +ಮನೆಯಲ್ಲಾಗ ನಾದಿನಿ ಒಬ್ಬಳೇ ಇದ್ದಳು. ಮಾವ, ಗಂಡ ಕಾರವಾರಕ್ಕೆ ಹೋಗಿದ್ದರು, ಸಂತೆಗೆ-ಕಲ್ಲಂಗಡಿ-ಬೆಲ್ಲಗಡ್ಡೆ ಮಾರಲು. ಅತ್ತೆ ಎಲ್ಲೋ ಕೇರಿಯ ಮೇಲೆ ಹರಟೆ ಹೊಡೆಯಲು ಹೋಗಿದ್ದಳು. ಮೈದುನರಿಬ್ಬರೂ ಗದ್ದೆಯಿಂದ ಹಿಂದಿರುಗಿರಲಿಲ್ಲ. ಕೂಡಲೇ ಹೊರಟರೆ ಹೊತ್ತು ಮುಳುಗುವ ಮೊದಲೇ ತಂದೆಯ ಮನೆ ಸೇರಬಹುದು. ತಂದೆಯ ಮನೆ ಅಲ್ಲಿಂದ ಒಂದು ಮೈಲು ದೂರ. ವಿಚಾರ ಬಂದದ್ದೇ ಆಬೋಲೀನ ತಡಮಾಡಲೇ ಇಲ್ಲ. ನಾದಿನಿಗೆ ಹೇಳಿದವಳೇ ತಂದೆಯ ಮನೆಗೆ ನಡೆದೇಬಿಟ್ಟಳು. ಅತ್ಯಂತ ಉತ್ಸಾಹದ ಮನಸ್ಥಿತಿಯಲ್ಲೇ ತಂದೆಯನ್ನು ಕಂಡಳು. ಅದೇ ದಿನ ಸಂಜೆ ಕೈತಾನ ನಮ್ಮನೆಗೆ ಬಂದದ್ದು, ನಾವು ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿರುವಾಗ. ತಂದೆ ಮಗಳು ಇಬ್ಬರಿಗೂ ಆನಂದವಾಗಿತ್ತು. ಇನ್ನಾದರೂ ತಮ್ಮ ನಿರ್ಧೋಷ ಜನರಿಗೆ ಗೊತ್ತಾಗದಿರದು ಎಂದು. ಆದರೆ ಆಬೋಲೀನ ತಿರುಗಿ ಗಂಡನ ಮನೆ ಸೇರುವುದರೊಳಗೆ ಸಿದ್ಧವಾದ ಘೋರ ಪ್ರತ್ಯಾರೋಪ! ಅದು ಮಾತ್ರ ಯಾರನ್ನೂ ದಂಗುಬಡಿಸುವಂತಹುದಾಗಿತ್ತು. ಅದುವೇ ಆಬೋಲೀನಳ ಭವಿಷ್ಯತ್ತನ್ನೂ ನಿರ್ಧರಿಸಿತು: +‘ತನಗೂ ಆಬೋಲೀನಳಿಗೂ ಲಗ್ನದ ಮೊದಲೇ ಸಂಬಂಧ ಇದ್ದುದು ನಿಜ. ಅದಕ್ಕೂ ಅವಳೇ ಕಾರಣ. ತನಗೆ ಅವಳನ್ನು ಲಗ್ನವಾಗುವ ಇಚ್ಛೆ ಎಳ್ಳಷ್ಟೂ ಇಲ್ಲ ಎಂಬುದನ್ನರಿತೇ ‘ತಾನು ಗರ್ಭಿಣಿ’ ಎಂದು ಸುಳ್ಳು ಸುದ್ದಿ ಹಬ್ಬಿಸಿರಬೇಕು, ತನ್ನ ಮೇಲೆ ನೈತಿಕ ಒತ್ತಡ ತರಲು. ಇದೆಲ್ಲ ಯಾರಿಗೆ ಗೊತ್ತು? ಈ ಮೋಸ ಮೊದಲೇ ಗೊತ್ತಿದ್ದರೆ ತಾನೆಂದೂ ಅವಳನ್ನು ಲಗ್ನವಾಗುತ್ತಿರಲೇ ಇಲ್ಲ!’ +ಎಂತಹ ಕ್ರೂರ ಆರೋಪ! +ಇದರಿಂದ ಮಾತ್ರ ಕೈತಾನ, ಆಬೋಲೀನ ತಲೆಯೆತ್ತಲಿಲ್ಲ. ಅಲ್ಲಿಗೇ ಆಬೋಲೀನಳ ಸುಖದ ಕತೆ ಮುಗಿದಿತ್ತು. ಇಂತಹ ಒಂದು ಸುದ್ದಿಗಾಗಿಯೇ ಕಾದು ಕುಳಿತ ಜನ ‘ಅಬ್ಬಾ’ ಎಂದಿತು. ಹದಿನಾಲ್ಕು ವರುಷದ ಈ ಎಳೆಯ ಹುಡುಗಿಗೆ ಏನೊಂದು ಚಾತುರ್ಯ! ಗಂಡನನ್ನು ದೊರಕಿಸುವ ಈ ಹೊಸ ಉಪಾಯ ಇನ್ನೂ ಕೇಳಿ ಗೊತ್ತಿರಲಿಲ್ಲ ಬಿಡು. ಪಾಪ! ಮನವೇಲ ಹೇಳಿ ಕೇಳಿ ಕೆಟ್ಟವನೆಂದು ಅವನ ಮೇಲೆ ಇಂತಹ ಆರೋಪ ಹೊರಿಸಬಹುದೆ?’-ಜನರ ಬಾಯಿಗೆ ಪೂರ ಬಂದಿತ್ತು. ತಮ್ಮ ಮಾತಿನಿಂದ ಯಾರು ಸತ್ತರೇನು ಬದುಕಿದರೇನು?’-ಬಾಯತಿಂಡಿ ಹೋದದ್ದು ಗೊತ್ತು: ಆಡಿಯೇ ಆಡಿದರು. ಆಬೋಲೀನಳಿಗೆ ಈ ನಿಂದೆ ಕೇಳಿ ಕೇಳಿ ಬದುಕಿರುವುದಕ್ಕಿಂತ ಸಾಯುವುದೇ ಲೇಸೆನ್ನಿಸಿತು. +ಹೀಗೆಯೇ ಕೆಲವು ತಿಂಗಳು ಕಳೆದವು. ಆದರೆ ದಿನ ಹೋದಂತೆ ಆಬೋಲೀನ ಸೊರಗುತ್ತ ನಡೆದಳು. ರಕ್ತ-ಕ್ಷಯ ಹಿಡಿದವರಂತೆ ಕೃಶವಾಗುತ್ತ ನಡೆದಳು. ತನ್ನ ಮೋಸ ಬಯಲಿಗೆ ಬಂದದ್ದು ಮನಸ್ಸಿಗೆ ಹತ್ತಿರಬೇಕು ಎಂದರು ಕೆಲವರು. ಸೂಕ್ಷ್ಮದೃಷ್ಟಿಯ ಇನ್ನೂ ಹಲವರು. “ಗಂಡ ವ್ಯಸನಿ ಎಲ್ಲಿ ‘ರೋಗ’ ಹಚ್ಹ್ಚಿಕೊಂಡಿದ್ದನೋ, ಹುಡುಗಿಗೆ ಬಾಧಿಸಿರಬೇಕು,” ಎಂದರು. ತಿಂಗಳ ಮೇಲೆ ತಿಂಗಳು ಉರುಳಿದಂತೆ ಕೊನೆಯ ಸಂಶಯವೇ ಬಲಗೊಳ್ಳಹತ್ತಿತು. ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು. ಮೊದಲೇ ಸಾವು ಹೊಕ್ಕ ಮನಸ್ಸು ಈ ನೋವನ್ನು ಸಹಿಸಲಾರದಾಯಿತು. ಈ ನೋವಿನಿಂದ ಬಳಲುತ್ತಿರುವಾಗಲೇ ಒಂದು ದಿನ ತನ್ನ ತಂದೆಯ ಮನೆಗೆ ಬಂದಾಗ ಕೇಳಿದ್ದು ನಾವೆಲ್ಲ , ಹೃದಯ ಒಡೆಯುವ ಆ ಬೊಬ್ಬೆ. +ನಮ್ಮ ಮನೆಯವರೆಲ್ಲರೂ ಓಡಿ ಹೋದಾಗ ತಿಳಿದಿತ್ತು: ಆ ರಾತ್ರೆ ಆಬೋಲೀನ ಮನೆಯ ಬಾವಿಯಲ್ಲಿ ಹಾರಿಕೊಂಡಿದ್ದಳು. ಮುಂಜಾನೆ ಮನೆಯವರಿಗೆ ತಿಳಿಯುವ ಹೊತ್ತಿಗೆ ಸತ್ತು ಹೆಣವಾಗಿದ್ದಳು. ಸುದ್ದಿ ಕೇಳಿ ನಾನೂ ಓಡಿದ್ದೆ. ಅದಾಗಲೇ ಹೆಣವನ್ನು ಮೇಲೆ ತೆಗೆದಿದ್ದರು. ಅಯ್ಯೋ! ಆಗ ನಾ ಕಂಡ ದೃಶ್ಯ! ವಿಕೃತಗೊಂಡ ಆ-ಬೇಡ. ಅದನ್ನೆಲ್ಲ ಬಣ್ಣಿಸಿ ಈಗ ಏನು ಬಂದದ್ದು-ಎಲ್ಲವೂ ಮುಗಿದುಹೋದಮೇಲೆ? +ಹೂವಿನ ಹೆಸರಿನ-ಹೂವಿನಂತಹ ಹೆಣ್ಣು ಜೀವವೊಂದು ಅರಳುವ ಮೊದಲೇ ಮಣ್ಣು ಕೂಡಿದ ಮೇಲೆ? ಸುಖ ಬಯಸಿ ಬಂದ ಜೀವ ಸುಖ ಕಾಣುವ ಮೊದಲೇ ಕಣ್ಣು ಮುಚ್ಚಿದ ಮೇಲೆ? +***** +೧೯೫೭ +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_702.txt b/Kannada Sahitya/article_702.txt new file mode 100644 index 0000000000000000000000000000000000000000..f6867c9e651b9db669ebeb4988c7dca89fda3e75 --- /dev/null +++ b/Kannada Sahitya/article_702.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚನ್ನವೀರ ಕಣವಿ +ಕೊಡೆ ಹಿಡಿಯುತ್ತೇವೆ: +ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು +ಸಿಡಿಸುವ ಕೊಳೆಗೆ, ಆಗದವರು +ಎದುರಿಗೆ ಬಂದಾಗ ಮರೆಗೆ- +ಹೊತ್ತು ಬಂದಂತೆ. +ಮತ್ತೊಬ್ಬರ ತಲೆಗೆ +ನೆರಳು ಮಾಡುವ ಉಸಾಬರಿಗೆ +ಹೋಗಿ ಚುಚ್ಚುತ್ತೇವೆ; +ಮೆಚ್ಚುತ್ತೇವೆ: ಹೆಣ್ಣು ಏರಿಸಿದ +ಹೂವಿನ ಕೊಡೆಗೆ-ತಂತಿ ಮೇಲಿನ ನಡಿಗೆ. +ಏಕಚಕ್ರಾಧಿಪತಿಯ ಬೆಳ್ಗೊಡೆಗೆ +ಬೆಂಕಿ ಹಚ್ಚುತ್ತೇವೆ. ಮೆರೆಸುತ್ತೇವೆ +ಉಧೋ ಉಧೋ ಎಂದು +ಛತ್ರ ಚಾಮರ ಹಿಡಿದು +ಪಲ್ಲಕ್ಕಿಯಲ್ಲಿ ಬೇಕಾದ ದೇವರನಿಟ್ಟು. +ಹೊತ್ತು ಹೋದಂತೆ ಮಡಿಚಿ +ಹಿಡಿಯುತ್ತೇವೆ ನಮ್ಮ ಅಭಿರುಚಿ- +ಗೆ ತಕ್ಕಂತೆ: ಬೆದರಿಸಲಿಕ್ಕೆ +ನಾಯಿಗೆ, ನಡೆಯಲಿಕ್ಕೆ +ಊರುಗೋಲಾಗಿ. +***** +೧೯೭೪ +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […] +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_703.txt b/Kannada Sahitya/article_703.txt new file mode 100644 index 0000000000000000000000000000000000000000..59a5ad467ca3f354e794f0d6a6255fe7bde992d7 --- /dev/null +++ b/Kannada Sahitya/article_703.txt @@ -0,0 +1,182 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ನಿನಗೆ ಒಪ್ಪಿಗೆಯೇ?” ಎಂದನು ಶಬರ. +“ಓಹೋ, ಒಪ್ಪಿಗೆ” +ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ ಧೋತ್ರವನ್ನು ಕಳೆದ. ಸೊಂಟಕ್ಕೆ ಸುತ್ತಿದ ಹಮ್ಮಿಣಿಯನ್ನು ಬಿಚ್ಚಿ ಕುಳ್ಳನತ್ತ ಒಗೆದ. ಒಂದೇ ಕೈಯಿಂದ ಅದನ್ನು ಹಿಡಿದು ಭಾರಕ್ಕೆ ಬೀಳದಂತೆ ಪ್ರದಕ್ಷಿಣೆ ಹಾಕಿದ , ಕುಳ್ಳ. +“ಇವರು ಏನು ಮಾಡುತ್ತಾರೆ?” +“ನಿನ್ನ ಜನನಾಂಗವನ್ನು ಕೊಯ್ದು ಬಾಯಲ್ಲಿ ಇಡುತ್ತಾರೆ. ನಮ್ಮ ಪದ್ಧತಿ.” +“ನಾನು ಇಲ್ಲಿ ಬಂದದ್ದು ಶ್ರವಣೆಯನ್ನು ಮದುವೆಯಾಗುವ ಉದ್ದೇಶಕ್ಕಾಗಿ! ಆಕೆಯ ತಂದೆ-ತಾಯಿಗಳಿಗೆ ನನ್ನ ಬೇಡಿಕೆ ಸಲ್ಲಿಸುವುದಕ್ಕಾಗಿ!” +ಒಮ್ಮೆಲೇ ಶಬರರ ಮನಸ್ಸು ಹೊಸಚಿಂತೆಯಿಂದ ಆವರಿಸಿತು. +“ಹಾಗಾದರೆ ಅವಳ ಮಾನಭಂಗ ಏಕೆ ಮಾಡಿದೆ?” +“ಆಗ ನಾನು ಮಧುಮತ್ತನಾಗಿದ್ದೆ. ಏನು ಮಾಡಿದೆನೋ ನನಗೆ ತಿಳಿಯದು.” +ಮತ್ತೆ ಚರ್ಚೆ ಪ್ರಾರಂಭವಾಯಿತು. +ಕುಳ್ಳನು ಗುಗ್ಗನು. ಅವನ ಬಾಯಿ ತುಂಬ ನಾಲಗೆಯೇ ಆವರಿಸಿತ್ತು. ಗೋಣು ಇರಲಿಲ್ಲ. ದಡಕ್ಕೆ ಶಿರ ಅಂಟಿಕೊಂಡಿತ್ತು. ಗುಗ್ಗುತ್ತ ಅವನು ಹೇಳಿದನು, “ಗುರುಗಳತ್ತ ಒಯ್ಯಿರಿ. ಅವರೇ ಶಾಸನ ಮಾಡಲಿ.” ಇಷ್ಟು ಹೇಳುವುದಕ್ಕೆ ಅವನಿಗೆ ಹತ್ತು ಕ್ಷಣಗಳು ಬೇಕಾದವು. ಅನೇಕ ಅಸಂಬದ್ಧ ವ್ಯಂಜನಗಳನ್ನು ಕೂಡಿ. +ಶಬರರು ತಲೆ ಅಲ್ಲಾಡಿಸಿದರು. “ಋಷಭೇಂದ್ರರು ನಮ್ಮ ಪದ್ಧತಿಗಳನ್ನು ಒಪ್ಪುವುದಿಲ್ಲ.” +ಚರ್ಚೆ ಮುಂದುವರೆಯಿತು. ಕೊನೆಗೆ ದುರ್ಗಸಿಂಹನ ಕುರಿತು ಶಬರ ಹೇಳಿದನು; +“ಅವಳ ಕಾಲು ಮುರಿದದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ ಅವರ ಮನೆಯಿಂದಲೇ ಬಂದೆವು. ಸಮೀಪದ ಹಳ್ಳಿಯೊಂದರಲ್ಲಿ ಅವರು ಇರುತ್ತಾರೆ. ನೀನು ಮಾಡಿದ ಅಕೃತ್ಯಕ್ಕಾಗಿ ಅವರು ಹತ್ತು ಹಳ್ಳಿಗಳಿಗೆ ಊಟ ಹಾಕಬೇಕಾಯಿತು.” +“ಊಟ ಹಾಕಿದರೆ ಏನಾಗುತ್ತದೆ?” +“ಶ್ರವಣೆ ಮತ್ತೆ ನಮ್ಮ ಜಾತಿಯಲ್ಲಿ ಬರುತ್ತಾಳೆ.” +“ನನಗೆ ಏನಾದರೂ ಶಿಕ್ಷೆ ಕೊಡಿರಿ. ನಾನೂ ಶುದ್ಧನಾಗುತ್ತೇನೆ. ನೀವು ಹೇಳಿದ ಶಾಸ್ತಿ ಲಗ್ನವಾಗುವವನಿಗೆ ತಕ್ಕುದಲ್ಲ.” +ಮತ್ತಷ್ಟು ಚರ್ಚೆಯಾಗಿ, ಮೊದಲು ಅವನ ಬಲಗಾಲ ಕಾಲ್ಬೆರಳನ್ನು ಒಂದು ಹದನವಾದ ಚೂರಿಯಿಂದ ಕತ್ತರಿಸಿದರು. ತೆಳ್ಳನೆಯ ಚೂರಿ ಎಷ್ಟು ಹದನವಾಗಿತ್ತೆಂದರೆ ರಕ್ತ ಸೋರತೊಡಗಿದರೂ ನೋವು ಅನಿಸಲಿಲ್ಲ. ನಂತರ ಒಂದು ತೆಂಗಿನ ಪರಟೆಯಲ್ಲಿ ಅವನಿಗೆ ಮೂತ್ರವಿಸರ್ಜನೆ ಮಾಡಿಸಿ ಕುಡಿಯ ಹಚ್ಚಿದರು. ಆಮೇಲೆ ಅವನನ್ನು ಒಂದು ಹಾಸುಗಲ್ಲಿನ ಮೇಲೆ ಕೂರಿಸಿ ಮೆದುವಾಗಿ ಚಿಮಟಿಗೆಯಿಂದ ಅವನ ಕೈಯಲ್ಲಿ ನೆಟ್ಟ ಬಾಣವನ್ನು ಎಳೆದು ತೆಗೆದರು. ಬಾಣದ ಅಳತೆ ಒಂದು ಚೋಟುದ್ದ ಏರಬಹುದು. ಡಬ್ಬಣದಷ್ಟು ಆಗಬಹುದು. ಮಸೆದು ಮಸೆದು ತೆಳುವಾಗಿ ಮಾಡಲ್ಪಟ್ಟಿತ್ತು. +“ನಿನ್ನ ಬೇಡಿಕೆಯನ್ನು ಶ್ರವಣಾಳ ತಂದೆ-ತಾಯಿಗಳಿಗೆ ತಿಳಿಸುತ್ತೇವೆ! ಈಗ ಮನೆಗೆ ಹೊರಟಿದ್ದೇವೆ, ನಡೆ” ಎಂದರು. +ದಾರಿಯಲ್ಲಿ ಅವನಿಗೆ ಹಣ್ಣು ಹಂಪಲು ಹರಿದು ತಿನ್ನಲು ಕೊಟ್ಟರು. +ಋಷಭಮುನಿಗಳ ಆಶ್ರಮದಲ್ಲಿ ಕುಳ್ಳನನ್ನೂ ದುರ್ಗಸಿಂಹನನ್ನೂ ಬಿಟ್ಟು ಶಬರರು ಹೊರಟುಹೋದರು, ತಮ್ಮ ಮನೆಗಳಿಗೆ. +ಸಗರನನ್ನು ಎದುರು ನೋಡುತ್ತಿರುವ ಚಿಕ್ಕ ರಾಣಿ ಯಾದವದೇವಿ ಸ್ವಾಗತಕ್ಕಾಗಿ ಬಾಗಿಲಿಗೆ ಧಾವಿಸಿದಳು. ದುರ್ಗಸಿಂಹನನ್ನು ಕಾಣುತ್ತಲೇ ಚೀತ್ಕಾರ ಮಾಡಿ ನೆಲಕ್ಕೆ ಕುಸಿದು ಮೂರ್ಛೆ ಹೋದಳು. +ಕುಳ್ಳನು ಉರುಗಾಯನು(ಬೇಗ ನಡೆಯುವವನು). ಭರದಿಂದ ಮುಂದೆ ನಡೆದು ತಾಯಿಗೆ ನೆಲಕ್ಕೆ ಬೀಳಗೊಡದೆ ಆಸರೆಯಿತ್ತು, ಮೆಲ್ಲನೆ ನೆಲಕ್ಕೆ ಮಲಗಿಸಿದನು. ದುರ್ಗಸಿಂಹನು ಸಮೀಪ ಬಂದು, ಕೃಶಾಂಗಿ, ನೆರೆತ ಕೂದಲಿನ, ಬಡವೇಷದ ಚಿಕ್ಕರಾಣಿ ಯಾದವಿಯ ಗುರುತು ಹಿಡಿದು ಮುಖ ಕೆಳಗೆ ಮಾಡಿದನು. ಅದೇ ಸಂಧ್ಯಾವಂದನೆಗೆ ಕುಳಿತ ಋಷಭೇಂದ್ರರು ಅರ್ಘ್ಯ ಪ್ರದಾನ ಮಾಡಿದೊಡನೆ ಅಷ್ಟಕ್ಕೇ ಮುಗಿಸಿ ಹೊರಗೆ ಬಂದರು. “ಏನಾಯಿತು?” ಎಂದರು. ಕುಳ್ಳನ ತೊಡೆಯ ಮೇಲೆ ಯಾದವಿ ಒರಗಿದ್ದಳು. ಆಕೆಯ ಸೆರಗಿನಿಂದಲೇ ಕುಳ್ಳನು ಆಕೆಗೆ ಗಾಳಿ ಬೀಸುತ್ತಿದ್ದನು. ಎದುರಿಗೆ ಗೋಣು ಬಾಗಿಸಿ ಕಣ್ಣೀರು ಸುರಿಸುತ್ತ ಹೊಸ ಮುಖ ನಿಂತಿತ್ತು. +ಋಷಭರೂ ಕುಳ್ಳನೂ ಯಾದವೀದೇವಿಯನ್ನು ನಡುಮನೆಗೆ ಎತ್ತಿ ಒಯ್ದರು. ಅರಿಷಿನ-ಲೌಳಸರದ ರಸದ ಶೈತ್ಯೋಪಚಾರ ಮಾಡಲಿಕ್ಕೆ ಕುಳ್ಳನಿಗೆ ಬಿಟ್ಟು, ಋಷಿಗಳು ಹೊರಗೆ ಬಂದು, “ನೀವು ಯಾರು?” ಎಂದು ಪ್ರಶ್ನಿಸಿದರು. +“ಯಾದವೀದೇವಿಗೆ ಇಪ್ಪತ್ತು ವರ್ಷದ ಕೆಳಗೆ ನನ್ನ ಅಕ್ಕ ಹಿರಿಯ ರಾಣಿ ಕೇಶಿನಿದೇವಿ ವಿಷ ಹಾಕಿದಾಗ ಆ ವಿಷ ತಂದುಕೊಟ್ಟ ಅಧಮ ನಾನು. ನನ್ನನ್ನು ಕಂಡೊಡನೆ ಮೂರ್ಛೆಹೋದಳು!” ಎಂದು ತನ್ನ ಕತೆಯನ್ನೆಲ್ಲ ಸಾದ್ಯಂತವಾಗಿ ಹೇಳಿದ. ಈಗ ತಾನು ಪದವಿ ಕಳಕೊಂಡು ದೇಶಭ್ರಷ್ಟನಾದುದನ್ನೂ, ಶ್ರವಣಾಳನ್ನು ಮದುವೆಯಾಗಿ, ಇಲ್ಲಿಯೇ ನೆಲೆಸಿ, ಶಬರರ ದಂಡು ಕಟ್ಟಿ ದಶಾರ್ಣದ ಮೇಲೆ ದಾಳಿ ಮಾಡಬೇಕೆಂದು ಇಲ್ಲಿ ಬಂದಿರುವುದಾಗಿಯೂ ಹೇಳಿದನು. +“ಅಕ್ಕನ ಮೇಲೆ ದ್ವೇಷ ಸಾಧಿಸುವುದಕ್ಕಾಗಿಯೇ ಶ್ರವಣಾಳನ್ನು ಲಗ್ನವಾಗುತ್ತೀಯಾ?” +’ಇಲ್ಲ’ವೆಂದು ಹೇಳಿದರೂ ಅನುಮಾನಿಸಿ ’ಹೌದು’ ಎಂದು ಹೇಳಿದನು. +“ದ್ವೇಷದಿಂದ ಮಾಡಿದ ಯಾವ ಕಾರ್ಯಕ್ಕೂ ದೈವದ ಬೆಂಬಲ ಸಿಕ್ಕುವುದಿಲ್ಲ, ಜೋಕೆ!” ಎಂದರು ಋಷಭಮುನಿ. +“ಶ್ರವಣಾಳಿಗೆ ಅನ್ಯಾಯ ಮಾಡಿದ್ದೇನೆ. ಅದನ್ನು ಸರಿಪಡಿಸುವುದು ನನ್ನ ಧರ್ಮವಲ್ಲವೆ?” +“ಅದು ನಿನ್ನ ಧರ್ಮ, ಹೌದು. ಆದರೆ ಲಗ್ನದ ವಿಷಯದಲ್ಲಿ ಧರ್ಮವಷ್ಟೇ ಸಾಲದು. ’ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ’ ಎಂದು ಅಗ್ನಿಸಾಕ್ಷಿಯಾಗಿ ಪಣತೊಡಬೇಕಾಗುತ್ತದೆ.” +ಅರ್ಥವಾದವನಂತೆ ದುರ್ಗಸಿಂಹ ತಲೆಯಾಡಿಸಿದನು. +ಅವನ ಮುಖವನ್ನು ಋಷಭರು ರಾಜಲಕ್ಷಣಗಳಿಗಾಗಿ ಸೂಕ್ಷ್ಮ ಪರಿಶೋಧನೆ ಮಾಡಿದರು. ’ಕೈ ತೋರು’ ಎಂದು ಈಗಲೇ ಹೇಳಲು ಮನಸ್ಸಾಗಲಿಲ್ಲ. ಗೋಣು ಅಲ್ಲಾಡಿಸಿದರು. +“ನನಗೆ ವಿಜಯ ಸಿಕ್ಕಬಹುದೆ?” +“ಈಗ ವಿಶ್ರಮಿಸು. ನಾಳೆ ಹೇಳುತ್ತೇನೆ.” ಎಂದರು. ಸೂರ್ಯ ಮುಳುಗುತ್ತಿದ್ದ. ಪ್ರಶ್ನೆ ಕೇಳಿದ ಸಮಯವನ್ನು ಮನಸ್ಸಿನಲ್ಲೇ ನಮೂದಿಸಿಕೊಂಡರು. +“ರಾಣಿ ಯಾದವೀದೇವಿ ನನ್ನನ್ನು ಕ್ಷಮಿಸಬಹುದೇ?” +“ಕೇಳಿ ನೋಡು, ಒಬ್ಬಳೇ ಇದ್ದಾಗ ಕೇಳು. ವಿಷ ಕೊಟ್ಟವನು ನೀನೇ ಎಂದು ಯಾರಿಗೂ ಹೇಳಬೇಡ. ಆಕೆಯೂ ಹೇಳದಂತೆ ವ್ಯವಸ್ಥೆ ಮಾಡುತ್ತೇನೆ. ಒಳಗೆ ಹೋಗಿ ತುಸು ಉಪಹಾರ ತೀರಿಸು. ಸಗರ ನಿನ್ನನ್ನು ಕರೆದೊಯ್ಯುತ್ತಾನೆ.” +ಯಾದವೀದೇವಿಗೆ ಎಚ್ಚರವಾಗಿತ್ತಾದರೂ ವಿಷಣ್ಣಕಣ್ಣುಗಳಿಂದ ಜಂತಿಯನ್ನೇ ನೋಡುತ್ತ ಶೂನ್ಯವನ್ನೇ ವೀಕ್ಷಿಸುತ್ತಿದ್ದಳು. ಋಷಿಗಳು ಒಳಗೆ ಹೋಗಿ ಮತ್ತೆ ಸಂಧ್ಯಾವಂದನೆಯನ್ನು ಮುಂದುವರೆಸಿದರು. ಅನಂತರ ಸೀದಾ ಯಾದವಿಯತ್ತ ಬಂದು ಎದುರಿಗೆ ಕುಳಿತುಕೊಂಡರು. ಯಾದವೀದೇವಿ ಗೌರವದಿಂದ ಎದ್ದು ಕುಳಿತು ತನ್ನ ಸೆರಗು ಸರಿಪಡಿಸಿಕೊಂಡಳು. ಜೋಲುಮೋರೆ ಹಾಕಿ ಅವರ ಎದುರಿಗೆ ಕುಳಿತಳು. +ತುಸು ಹೊತ್ತು ಮೌನ. ಕೊನೆಗೆ ಯಾದವಿಯ ತಾಳ್ಮೆ ತಪ್ಪಿತು. ತಾನೇ ಮಾತಿಗೆ ಮೊದಲು ಮಾಡಿದಳು. +ಈ ಆಶ್ರಮದಲ್ಲಿ ನನಗೆ ವಿಷ ಹಾಕಿದವನೂ ಇರುವುದಾದರೆ ನಾನು ಎಲ್ಲಿ ಹೋಗಬೇಕು?” +“ಅವನೇ ಹೋಗುತ್ತಾನೆ. ನೀನು ನಿಶ್ಚಿಂತಳಾಗಿರು.” +ಅವರ ಶಾಂತ ದನಿಯನ್ನು ಕೇಳಿಯೇ ಯಾದವಿ ರಚ್ಚಿಗೆದ್ದಳು. ಅವಡುಗಚ್ಚಿ ’ಅಯ್ಯೋ’ ಎಂದು ಚೀತ್ಕಾರ ಹೇಳಿದಳು: “ಇದೇ ಚಾಂಡಾಲನಿಂದ ನನ್ನ ಮಗನ ಕೈಕಾಲು ಊನವಾದವು. ಇವನಿಗೆ ನಾನೇ ಉಣಿಸಬೇಕೆ? ಇದು ಯಾವ ನ್ಯಾಯ? ಒಂಭತ್ತು ತಿಂಗಳು ಊನಗರ್ಭವನ್ನು ಹೊತ್ತೆ. ಹದಿನೆಂಟು ವರ್ಷ ಊನ ಮಗುವನ್ನು ಸಾಕಿದೆ. ಅಸಹ್ಯ ಅನ್ಯಾಯ ಮಾಡುವವರು ಸುಖದಿಂದೇ ಇರುತ್ತಾರೆ. ತುಟಿಪಿಟಿಕ್ಕೆನ್ನದೆ ಕಷ್ಟ ಸಹನ ಮಾಡುವವರಿಗೇನೇ ದೇವರು ಇನ್ನಷ್ಟು ಕಷ್ಟಗಳನ್ನು ತರುತ್ತಾನೆ. ದೇವಾ….ದೇವಾ..ಇದೆಂಥ ನಿನ್ನ ಸೃಷ್ಟಿ?” +“ಮಗಳೇ, ದೇವನಿಗೇ ಬಯ್ಯಿ. ಅದೂ ಅವನ ಸ್ತುತಿಯೇ!” +ರಾಣಿ ಈಗ ನಿಜವಾಗಿಯೂ ರೋದನ ಮಾಡತೊಡಗಿದಳು. “ಇದು ನಿಮ್ಮ ವೇದಾಂತವೇ? ಇದೇ ನೀವು ಕೊಡುವ ಸಮಾಧಾನ? ಇಂಥ ದೇವರ ಮುಖಕ್ಕೆ ನಾನು ಉಗಿಯುತ್ತೇನೆ..” ಎಂದು ಗಡಗಡನೆ ನಡುಗತೊಡಗಿದಳು. +“ನಾನು ಅರ್ಘ್ಯ ಕೊಡುವುದೂ ನೀನು ಉಗಿಯುವುದೂ ಒಂದೇ ಕ್ರಿಯಾರೂಪ! ನೀನು ಉಗಿದಾಗ ನಿನ್ನ ಅಶಾಂತಿ ಇಮ್ಮಡಿಸುತ್ತದೆ. ನಾನು ಅರ್ಘ್ಯದಾನ ಮಾಡಿದಾಗ ನನ್ನ ಶಾಂತಿ ಇನ್ನಷ್ಟೂ ತಂಪುಗೊಳ್ಳುತ್ತದೆ.” +“ನೀವು ಅರ್ಘ್ಯ ಕೊಡುವುದು ನಿಮ್ಮ ಸ್ವಾರ್ಥಕ್ಕಾಗಿಯೇ ತಾನೆ? ಇತರರ ಕಲ್ಯಾಣಕ್ಕಲ್ಲವೆಂದಾಯಿತು, ಅಲ್ಲವೆ?” +“ನೀನು ಸರಿಯಾಗಿಯೇ ಹೇಳಿದೆ, ಮಗಳೇ! ಎಲ್ಲರೂ ತಮ್ಮ ತಮ್ಮ ಕಲ್ಯಾಣ ಸಾಧಿಸಿದರೆ ಜಗತ್ತು ಸುಖಿಯಾಗುತ್ತದೆ.” +“ಅದು ನೀಚ ಸ್ವಾರ್ಥವಲ್ಲವೆ?” +“ಸ್ವಾರ್ಥ ನಿಜ, ನೀಚವಲ್ಲ. ನೀನೆ ಕಲ್ಯಾಣವೆಂದೆ. ವೇದಗಳು ಅದನ್ನೇ ಹೇಳಿವೆ. ಕಲ್ಯಾಣ ಮಾಡುವವನು ಎಂದೂ ದುರ್ಗತಿಗೆ ಇಳಿಯುವುದಿಲ್ಲ.” +“ಮಹರ್ಷಿಗಳೇ, ತಮ್ಮ ವೇದಾಂತ ಸಾಕು. ಈಗ ನನ್ನ ಪ್ರಶ್ನೆಗೆ ಉತ್ತರ ಕೊಡಿರಿ. ನನ್ನ ಗರ್ಭದಲ್ಲಿ ಇದ್ದ ಶಿಶು ಏನು ಪಾಪ ಮಾಡಿತ್ತು? ಯಾವ ಅಪರಾಧಕ್ಕಾಗಿ ಅವನ ಕೈಕಾಲುಗಳು ಊನಗೊಂಡವು? ಯಾರ ಅಪರಾಧಕ್ಕಾಗಿ?- ಹೇಳಿ ತಾತ, ಹೇಳಿ ತಂದೆ, ನನ್ನ ಪ್ರಶ್ನೆಗೆ ಉತ್ತರ ಕೊಟ್ಟು ಇಲ್ಲಿಂದ ಹೋಗಿರಿ” ಎಂದು ಯಾದವಿ ಗಟ್ಟಿಯಾಗಿ ಗುರುಗಳ ಕಾಲು ಹಿಡಿದುಕೊಂಡಳು. ಅವರ ಮುಖವನ್ನು ಕ್ರೂರವಾಗಿ ನಿಟ್ಟಿಸತೊಡಗಿದಳು. +“ಈ ನಿನ್ನ ಅವಸ್ಥೆಯಲ್ಲಿ ನಿನಗೆ ಉತ್ತರ ಕೊಟ್ಟರೂ ಅದರ ಅರ್ಥ ನಿನಗಾಗದು ಮಗಳೇ. ಮೊದಲು ಶಾಂತಳಾಗು. ಉತ್ತರ ಕೊಡುತ್ತೇನೆ.” ಎಂದು ಋಷಿಗಳು ಏಳಹೋದರು. +ಅವರ ಪಾದಗಳನ್ನು ಒತ್ತಿ ಹಿಡಿದು, “ನನಗೆ ಉತ್ತರ ಕೊಟ್ಟು ಹೋಗಿರಿ. ಹೊಟ್ಟೆಯಲ್ಲಿನ ಕೂಸು ಏನು ಅಪರಾಧ ಮಾಡಿದ್ದ? ನಾನು ಏನು ಅಪರಾಧ ಮಾಡಿದ್ದೆ? ಯಾಕೆ ಈ ಶಿಕ್ಷೆ? ಏನು ಇದರ ಅರ್ಥ? ಯಾರಿಗೆ ಶಿಕ್ಷೆಯಾಗಬೇಕಿತ್ತು? ಯಾರಿಗೆ ಆಯಿತು? ಹೇಳದೆ ಇದ್ದರೆ ನಿಮ್ಮನ್ನು ಹೋಗಲು ಬಿಡುವುದಿಲ್ಲ” ಎಂದು ಹಠಮಾರಿತನದಿಂದ ಕೂದಲು ನೆಲಕ್ಕೆ ಅಪ್ಪಳಿಸಿದಳು. ಪಾದಗಳನ್ನು ಬಿಡಲೊಲ್ಲಳು. “ನಿಮ್ಮ ಕರ್ಮ, ಪ್ರಾರಬ್ದ, ಸಂಚಿತ, ಕ್ರಿಯಾಮಾಣ, ಪೂರ್ವಜನ್ಮ, ಪುನರ್ಜನ್ಮ ಕಂತೆಗಳನ್ನು ಬಿಚ್ಚಬೇಡಿರಿ. ನೇರ ಉತ್ತರ ಕೊಡಿರಿ.” ಋಷಿಗಳು ಹೆಣ್ಣು ಕರುಳಿನ ಪ್ರಶ್ನೆಗಾಗಿ ನಿರ್ಧಾರ ಬದಲಿಸಿ ಕುಳಿತರು. +“ನಾನು ನಿನಗೆ ಕೆಲವು ಪ್ರಶ್ನೆ ಮಾಡುತ್ತೇನೆ: ನಿನ್ನ ಗಂಡ ಒಳ್ಳೆಯ ಮನುಷ್ಯನಲ್ಲವೆ?” +“ಹೌದು.” +“ನಿನ್ನನ್ನು ಹೇಗೆ ನಡೆಸಿಕೊಂಡ?” +“ಸುಖದಿಂದ; ಮರ್ಯಾದೆಯಿಂದ; ಸೌಜನ್ಯದಿಂದ.” +“ಇಂಥ ಒಳ್ಳೆಯ ಸಜ್ಜನ ರಾಜನಿಗೆ ಮೂರು ಬಾರಿ ಅರ್ಧಾಂಗ ವಾಯುವಿನ ಆಘಾತ ಸ್ಪರ್ಶವಾಯಿತು. ಮೂರನೆಯ ಆಘಾತಕ್ಕೆ ಅವನು ಜೀವಚ್ಚವನಾಗಿ ಮೂಲಂಗಿಯಂತೆ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದಾನೆ. ಸತ್ತಿಲ್ಲ, ಬದುಕಿಲ್ಲ, ಒಂದು ಮಗ್ಗುಲಾಗಲಿಕ್ಕೂ ಅವನಿಗೆ ತ್ರಾಣವಿಲ್ಲ. ಯಾವ ಪಾಪಕ್ಕಾಗಿ ಅವನಿಗೆ ಈ ಶಿಕ್ಷೆ?” +ಬಹಳ ದುಷ್ಟಕ್ಷಣದಲ್ಲಿ, ಬಹಳ ನಿರ್ದಯ ವಾರ್ತೆಯನ್ನು ಹೇಳಿ, ಯಾದವೀದೇವಿಯ ಭೂತಕಾಲದ ಗೋಳುಗಳನ್ನು ವರ್ತಮಾನದ ಗೋಳಿಗೆ ಪರಿವರ್ತಿಸಿ, ಆಕೆಯ ತಾತ್ವಿಕ ರೊಚ್ಚಿಗೆ ನೈಜದುಃಖದ ರೂಪವನ್ನು ಕೊಟ್ಟರು ಗುರುಗಳು. +ಘೋರ ವಾರ್ತೆ ಕೇಳಿ ಆ ಪ್ರೇಮದ ಪುತ್ಥಳಿ ತನ್ನ ತಾತ್ವಿಕ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಕಂಬನಿ ಮಿಡಿಯತೊಡಗಿದಳು. ಆಕೆಗೆ ಮನಃಪೂರ್ವಕ ಅಳಲು ಬಿಟ್ಟು, ಶಾಂತಳಾದ ಮೇಲೆ ಋಷಿಗಳು ಹೇಳಿದರು: +“ಅಳಬೇಡ ಮಗಳೇ, ಇನ್ನು ಆರು ವರ್ಷ ಅವನು ಹೀಗೆ ಬದುಕಿರುತ್ತಾನೆ. ನಿನ್ನ ಕುಂಕುಮ ಸೌಭಾಗ್ಯಕ್ಕೆ ಯಾವಧಕ್ಕೆಯೂ ಇಲ್ಲ. ಆದರೆ ಇದನ್ನು ನಿನಗೆ ಹೇಳಿದರೆ ಸಮಾಧಾನವಾಗುವುದೇ?” +“ಇಲ್ಲ” ಎಂದು ಅಳುತ್ತಲೇ ಆಕೆ ಗೋಣಲ್ಲಾಡಿಸಿದಳು. +“ನೀನು ಕೇಳಿದ ಪ್ರಶ್ನೆಗಳು ಬದುಕಿನ ಮೂಲ ಪ್ರಶ್ನೆಗಳು. ಕ್ಷಣಕ್ಷಣಕ್ಕೆ ಮನುಷ್ಯನಿಗೆ ಎದುರಾಗುತ್ತವೆ. ಅವುಗಳಿಗೆ ಉತ್ತರಗಳಿಲ್ಲ. ಆದರೆ ಉತ್ತರ ಕೊಡದಿದ್ದರೆ ಮನಸ್ಸಿಗೆ ಸಮಾಧಾನವಾಗುವುದೇ?” +“ಇಲ್ಲ” ಎಂದು ಅಳುತ್ತಲೇ ಆಕೆ ಗೋಣಲ್ಲಾಡಿಸಿದಳು. +“ನೀನು ಕೇಳಿದ ಪ್ರಶ್ನೆಗಳು ಬದುಕಿನ ಮೂಲಪ್ರಶ್ನೆಗಳು. ಕ್ಷಣಕ್ಷಣಕ್ಕೆ ಮನುಷ್ಯನಿಗೆ ಎದುರಾಗುತ್ತವೆ. ಅವುಗಳಿಗೆ ಉತ್ತರಗಳಿಲ್ಲ. ಆದರೆ ಉತ್ತರ ಕೊಡದಿದ್ದರೆ ಮನಸ್ಸಿಗೆ ಸಮಾಧಾನವಾಗದು. ಅದಕ್ಕಾಗಿ ನನ್ನಂಥ ಕೀರ್ತನಕಾರರು ಏನಾದರೊಂದು ಉತ್ತರ ಹುಡುಕಿ ಇಟ್ಟಿದ್ದೇವೆ. ಪ್ರಾರಬ್ಧ, ಸಂಚಿತ, ಪೂರ್ವ ಜನ್ಮದ ಪಾಪ-ಹೀಗೆ ಕತೆಗಳನ್ನು ಹುಟ್ಟಿಸುತ್ತೇವೆ. ಇವು ಕಂತೆಗಳಲ್ಲ; ಸತ್ಯಗಳೂ ಅಲ್ಲ. ನಿನ್ನ ಪಾಲಿಗೆ ಈ ಜೀವನ ಬಂದಿದೆ; ಅದನ್ನು ಎಷ್ಟು ಚೆನ್ನಾಗಿ ಬಳಸುತ್ತೀ, ಅದರ ಮೇಲೆ ನಿನ್ನದೇ ಕಲ್ಯಾಣ ನಿಂತಿದೆ; ನೀನು ಜ್ಞಾನಿಯಾಗಿದ್ದರೆ ಅದರ ಉದ್ದೇಶ ತಿಳಿದು ಸನ್ಮಾರ್ಗದಿಂದ ನಿನ್ನ ವರ್ತಮಾನವನ್ನು ರೂಪಿಸಿಕೊಳ್ಳುತ್ತಿ; ನೀನು ಜ್ಞಾನಿಯಲ್ಲದಿದ್ದರೂ ಇಂಥ ಕಾಲ್ಪನಿಕ ಭೀತಿಗಳ ಜಾಲ ಒಡ್ಡಿ ಧರ್ಮವು ನಿನ್ನನ್ನು ಸನ್ಮಾರ್ಗಕ್ಕೆ ಎಳೆಯುತ್ತದೆ.” +“ಹಾಗಾದರೆ ನ್ಯಾಯವೆಲ್ಲಿಂದ ಬಂತು.” +“ಮನುಷ್ಯನ ಹೃದಯದಿಂದ. ಅವನ ಸಮಾಜ-ಜೀವನಕ್ಕೆ ನ್ಯಾಯ ಅತ್ಯಗತ್ಯ. ನ್ಯಾಯದಂತೆ ನಡೆದುಕೊಂಡರೆ ಅವನ ಮನಸ್ಸು ಸ್ಥಿರವಾಗುತ್ತದೆ. ಪಾಪ ಮಾಡಿದರೆ ಅವನ ಮನಸ್ಸೇ ಹೋಗುತ್ತದೆ.” +“ಜಗತ್ತಿನಲ್ಲಿ ನ್ಯಾಯವಿಲ್ಲವೆ? ಮನುಷ್ಯನು ತನ್ನ ಅಗತ್ಯಕ್ಕಾಗಿ ಮಾತ್ರ ನ್ಯಾಯಕಲ್ಪನೆಯನ್ನು ಹುಟ್ಟಿಸಿಕೊಂಡಿದ್ದಾನೆಯೇ?” +“ಜಗತ್ತಿನ ಹೃದಯದಲ್ಲೂ ನ್ಯಾಯವೇ ಇದೆ. ಅನ್ಯಾಯ ಮಾಡಿದಾಗ ನಮ್ಮ ಹೃದಯ ಹೋಳಾದಂತೆ ಅನಿಸುವುದು ಜಗತ್ತಿನ ಮೂಲಶಕ್ತಿಯ ಮೂಲಕವೇ.” +“ನನ್ನ ಮೂಲಪ್ರಶ್ನೆಗೆ ಇನ್ನೂ ಉತ್ತರ ಬರಲಿಲ್ಲ. ನನ್ನ ಗರ್ಭಸ್ಥ ಶಿಶು ಏನು ಅನ್ಯಾಯ ಮಾಡಿತ್ತು?” +“ನಿನಗೇಕೆ ಹೆರವರ ಯೋಚನೆ? ಹೆರವರಿಗೆ ಆದ ಅನ್ಯಾಯಕ್ಕೆ ಕರುಣೆ ಪಡಬೇಕು. ರುಷ್ಟರಾಗಬಾರದು.” +“ನನ್ನ ಮಗ ನನಗೇ ಹೆರವನೆ?” +“ಅವನು ಸ್ವತಂತ್ರ ಸ್ವಾಯಂಭುವ ವ್ಯಕ್ತಿ. ಅವನಿಗೆ ಕೈಗಳಿಲ್ಲ. ಕಾಲುಗಳಿಲ್ಲ. ಅದಕ್ಕೆಂದೇ ಅವನ ಆತ್ಮಶಕ್ತಿ ಕೈಕಾಲು ದೃಢವಿರುವ ಜನರಿಗಿಂತ ಹೆಚ್ಚಿನ ಅದ್ಭುತ ಪರಿಣತಿ ಪಡೆದಿದೆ. ಕಾಲಿಲ್ಲದ್ದಕ್ಕಾಗಿ ಅವನ ವೇಗ ವರ್ಧಿಸಿದೆ. ಕೈಯಿಲ್ಲದ್ದಕ್ಕೆ ಅವನ ಕೈಗಳ ಚಾಲಾಕು ನೂರು ಮಡಿ ಹೆಚ್ಚಿ ಎಲ್ಲರಿಗಿಂತ ಚಟುಲವಾಗಿ ಬಾಣ ಪ್ರಯೋಗ ಮಾಡುತ್ತಾನೆ. ಗೋಣಿಲ್ಲದ್ದಕ್ಕಾಗಿ ಅವನ ವಾಚೆ ಕುಂಠಿತಗೊಂಡಿದೆ. ಆದರೆ ಒಮ್ಮೆ ಮಾಡಿದ ನಿರ್ಧಾರವನ್ನು ಸಾಧಿಸುವವರೆಗೆ ನಿಷ್ಠುರ ಕಾರ್ಯ ಮಾಡುತ್ತಾನೆ. ಅವನು ಭಾಗ್ಯಶಾಲಿಯೆಂದು ಮೊದಲೇ ಹೇಳಿದ್ದೇನೆ. ಇದೆಲ್ಲ ನೀನು ಅವನಿಗೆ ಕೊಟ್ಟ ವಿದ್ಯೆಗಳೇ? ನಾನು ಕೊಟ್ಟೆನೆ? ಅವನ ಆತ್ಮಶಕ್ತಿ ಎಲ್ಲ ಊನಗಳನ್ನೂ ಮೀರಿ ಬೆಳೆದಿಲ್ಲವೆ? ವಿಚಾರ ಮಾಡು.” +“ಎಲ್ಲ ಹೆಳವರೂ, ಮೋಟುಗೈಯವರೂ ಹೀಗೆ ಚಟುಲರಾಗುತ್ತಾರೆಯೇ?” +“ಅವರವರ ರೀತಿಯಿಂದ ಆಗುತ್ತಾರೆ. ಶಬರರ ನಡುವೆ ಬೆಳೆದ ನಿನ್ನ ಮಗ ಬಿಲ್ಲುಗಾರನಾಗಿದ್ದಾನೆ; ಆತ್ಮಶಕ್ತಿ ತನ್ನ ಪೂರ್ಣ ವಿಕಸಿತರೂಪದಲ್ಲೇ ಪ್ರಕಟವಾಗುತ್ತದೆ. ಅದಕ್ಕೆ ಊನತೆಗಳು ಬಂಧವಾಗುವುದಿಲ್ಲ. ಅದರ ಮೇಲೆ ಅದರ ತಂದೆ ತಾಯಿಗಳ ಅಧಿಕಾರವೂ ಇರುವುದಿಲ್ಲ.” +“ಮಕ್ಕಳನ್ನು ನಾವು ಏಕೆ ಸಾಕುತ್ತೇವೆ?” +“ನಿಮ್ಮನಿಮ್ಮ ಪ್ರೀತಿಗಾಗಿ. ನಿಮ್ಮ ಭವಿಷ್ಯದ ಆಸೆಗಾಗಿ. ಅದು ಪೂರ್ಣಗೊಳ್ಳುವುದು ಆಯಾ ಮಕ್ಕಳ ಸದ್ಗುಣದ ಮೇಲೆ ಅವಲಂಬಿಸಿರುತ್ತದೆ. ಒಟ್ಟಿನ ಸದ್ಗುಣ ಬೆಳೆಸಲು ಯತ್ನಿಸಬೇಕೇ ಹೊರತು ಮೊದಲೇ ಅವನನ್ನು ಬಿಲ್ಲುಗಾರನೆಂದು ಬೆಳೆಸಲು ನೀನು ಯೋಚಿಸಿದ್ದೆಯಾ? ಪ್ರತಿ ಆತ್ಮವೂ ಸ್ವಯಂಭು. ಸ್ವತಂತ್ರ.” +ಅಷ್ಟೊತ್ತಿಗೆ ಅವಳ ಅಕ್ಕಸದ ತಾಮಸಗುಣ ಶಮನವಾಗಿ ಸತ್ವಗುಣ ಅಭಿವೃದ್ಧಿಯಾಗಿತ್ತು. +“ಸ್ವಾಮೀ, ನನ್ನ ಮೈದುನನನ್ನು ಶಿಕ್ಷಿಸಿರಿ ಎಂದು ಕೇಳುವುದಕ್ಕಾಗಿ ಈ ಎಲ್ಲ ಪ್ರಶ್ನೆಗಳನ್ನು ನಿಮ್ಮೆದುರು ಒತ್ತಾಸೆಯಿಂದ ಇಟ್ಟಿದ್ದೆ. ಈಗ ಅದನ್ನು ಕೇಳುವುದಕ್ಕೆ ಮನಸ್ಸೇ ಆಗುತ್ತಿಲ್ಲ. ನನ್ನ ಮಗನಿಗೆ, ನನ್ನ ಗಂಡನಿಗೆ ಹಿತವಾಗಲಿ ಎಂದು ಪ್ರಾರ್ಥಿಸುತ್ತೇನೆ.” +“ತಥಾಸ್ತು.” +ಅಡಿಗೆಯ ಗುಡಿಸಲಿನಲ್ಲಿ ಉಪಹಾರ ಮುಗಿಸಿ, ಕುಳ್ಳನನ್ನು ಸಂಧ್ಯಾವಂದನೆಗೆ ಬಿಟ್ಟು, ದುರ್ಗಸಿಂಹನು ಆಶ್ರಮಕ್ಕೆ ಬಂದ ಋಷಭ-ಯಾದವಿಯರ ಅರ್ಧದಷ್ಟು ಸಂವಾದವನ್ನು ಮರೆಯಿಂದಲೇ ಕೇಳಿದನು. ಒಳಗೆ ಬಂದು, “ಗುರುಗಳೇ, ಪ್ರತಿಯೊಂದು ಆತ್ಮವೂ ಸ್ವಯಂಭು, ಸ್ವತಂತ್ರನೆಂದು ಹೇಳಿದಿರಿ. ರಾಣಿ ತನ್ನ ಮಗನ-ಗಂಡನ ಕ್ಷೇಮಕ್ಕಾಗಿ ಪ್ರಾರ್ಥಿಸಿದಳು, ಅದನ್ನು ಸ್ವೀಕರಿಸಿದಿರಿ. ಇದರಲ್ಲಿ ವಿರೋಧಾಭಾಸವಲ್ಲವೆ?” +“ಸದ್ಭಾವ, ಸದಿಚ್ಛೆ, ದೇವರಿಂದಲೇ ಹೊರಟವು; ದೇವರ ಪರವಾಗಿ ನಾನು ಸ್ವೀಕರಿಸಿದೆ. ದುರ್ಭಾವ, ದುರಿಚ್ಛೆ ದೇವರ ಭದ್ರಕೋಟೆಗೆ ತಾಕಿ, ಪುಟಿದು ಬಂದು, ಪ್ರಾರ್ಥಿಸುವವನಿಗೇ ದುಃಖ ತರುತ್ತವೆ. ಅವನ್ನು ಸ್ವೀಕರಿಸುವ ಗುರುವು ಕೂಡ ಶಿಕ್ಷೆಗೆ ಅರ್ಹನಾಗುತ್ತಾನೆ. +“ನಾನು ಶ್ರವಣಾದೇವಿಗೆ, ಮದುವೆಯಾಗಿ ನ್ಯಾಯ ಕೊಡಲಿಕ್ಕೆ ಬಂದಿದ್ದೇನೆ. ಅದು ಸದಿಚ್ಛೆಯಲ್ಲವೇ?” +“ನಿಮ್ಮ ಉದ್ದೇಶಗಳು ದ್ವೇಷಮೂಲವಾದವು. ನಿನ್ನ ದ್ವೇಷದ ಉಮ್ಮಳಿಕೆ ಸಮತಟ್ಟಾಗಿ ಪರಿವರ್ತನೆಯಾಗುವವರೆಗೆ ಅವುಗಳಿಗೆ ದೈವದ ಬೆಂಬಲ ಸಿಕ್ಕದು.” +“ಇದನ್ನು ಯಾವ ದೈವ ನಿರ್ಣಯಿಸುತ್ತದೆ.” +“ನಿನ್ನ ಹೃದಯದಲ್ಲಿ ಅಡಗಿದ ಸರ್ವಸಾಕ್ಷಿ ದೈವ.” +“ಅದರ ಬೆಂಬಲ ಹೇಗೆ ಪಡೆಯಬೇಕು ಸ್ವಾಮಿ, ಹೇಳಿರಿ” +“ಲಗ್ನದ ಉದ್ದೇಶ ಶಬರರ ಸೇನೆಯನ್ನು ಕೂಡಿಸಿ ದಶಾರ್ಣದ ಮೇಲೆ ದಾಳಿ ಮಾಡುವುದು ಆಗಬಾರದು. ಒಂದು ದುಷ್ಟ ಉದ್ದೇಶದಿಂದ ಇನ್ನೊಂದು ಕಾರ್ಯ ಮಾಡಲು ಯತ್ನಿಸಿದರೆ, ಅದಕ್ಕೂ ಹಾನಿ, ಇದಕ್ಕೂ ಹಾನಿ. ನಿನಗೆ ಶ್ರವಣಾ ಧರ್ಮಪತ್ನಿಯಾಗುವ ನಿಜವಾದ ಆಸೆ ಇದ್ದರೆ ಆ ಆಸೆಯ ಜೊತೆಗೆ ಇನ್ನೊಂದು ಆಸೆ ಕೂಡಿಸಬೇಡ.” +“ನಾನು ಕೆಡಿಸಿದ ಹೆಣ್ಣನ್ನು ಇನ್ನಾರು ಲಗ್ನವಾಗುವರು?” +“ಆ ಭಯ ಬೇಡ. ನಿನ್ನೆ ಹತ್ತು ಹಳ್ಳಿಗಳ ಶಬರರಿಗೆ ಊಟ ಹಾಕಿ ಅವಳ ತಂದೆತಾಯಿಗಳು ಮತ್ತೆ ಆಕೆಯನ್ನು ಕುಲದಲ್ಲಿ ಸೇರಿಸಿಕೊಂಡಿದ್ದಾರೆ.” +“ಶ್ರವಣೆಗಾಗಿ ನಾನು ದಂಡ ತೆತ್ತಿದ್ದೇನೆ. ಕಾಲ್ಬೆರಳು ಕಳೆದುಕೊಂಡಿದ್ದೇನೆ. ಸ್ವ-ಮೂತ್ರಪ್ರಾಶನ ಮಾಡಿದ್ದೇನೆ. ನನ್ನ ಶುದ್ಧಿಯಾದಂತೆ ಅಲ್ಲವೆ?” +“ಅವು ಶಿಕ್ಷೆಗಳಾದವು. ಶಿಕ್ಷೆಗಳು ನಿನ್ನ ಉದ್ದೇಶಗಳನ್ನು ಶುದ್ಧಿಮಾಡಲಾರವು. ನಿನಗೆ ಏನು ಬೇಕು ಎನ್ನುವುದು ನಿನಗೇ ಸ್ಪಷ್ಟವಾಗಬೇಕು.” +“ಶುದ್ಧಿಗಾಗಿ ನಾನು ಏನು ಮಾಡಬೇಕು?” +“ಆತ್ಮನಿರೀಕ್ಷಣೆ ಮಾಡಬೇಕು. ನ್ಯಾಯಾನ್ಯಾದ ವಿಚಾರ ಬಿಟ್ಟುಬಿಡಬೇಕು. ನ್ಯಾಯದಾನಕ್ಕಾಗಿ ನೀನು ಮದುವೆಯಾಗುವುದು ಬೇಡ. ಪ್ರೇಮಕ್ಕಾಗಿ, ಸಹಜೀವನಕ್ಕಾಗಿ, ಸಹಧರ್ಮಕ್ಕಾಗಿ ಸಹಧರ್ಮಿಣಿಯನ್ನು ಬಯಸುವುದು ದೈವ ಒಪ್ಪತಕ್ಕ ಮಾತು.” +“ನಾನು ಎಲ್ಲಿ ಆತ್ಮನಿರೀಕ್ಷಣೆ ಮಾಡಲಿ?” +“ಇಲ್ಲಿ, ಅಲ್ಲಿ, ಎಲ್ಲೆಲ್ಲಿ! ಈಗ, ಈ ಕ್ಷಣ-ಅಥವಾ ಇನ್ನಾರು ತಿಂಗಳ ಮೇಲೆ; ಇನ್ನಾರು ವರ್ಷದ ಮೇಲೆ..ನಿನ್ನನ್ನೇ ಅವಲಂಬಿಸಿದೆ.” +“ಮಿಶ್ರ ಉದ್ದೇಶಗಳು ಯಾವಾಗಲೂ ಅಯಶಸ್ವಿಯಾಗುತ್ತವೆ?” +“ಅಪಯಶಸ್ಸಿನ ಸಂಭವ ಜಾಸ್ತಿ. ಯಶಸ್ಸು ಸಿಕ್ಕರೂ ಸಮಾಧಾನ ಉಳಿಯುವುದಿಲ್ಲ. ಯಶಸ್ಸಿನ ರುಚಿಯೇ ಹಿಂಗುತ್ತದೆ.” +ಹುಂಬ ದುರ್ಗಸಿಂಹ ವಿಚಾರ ಮಾಡುತ್ತಾ ಕುಳಿತನು. +“ಮಹಾರಾಣಿ ನನ್ನ ನಾಶದ ಬಗ್ಗೆ ನಿಮಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಮಾಡಿದ್ದಳು. ಅದರ ಬದಲು ತನ್ನ ಮಗ, ಗಂಡ, ತನ್ನ ಕ್ಷೇಮವನ್ನು ಪ್ರಾರ್ಥಿಸಿದಳು-ಅಂದರೆ ನನ್ನ ದುಷ್ಕೃತ್ಯವನ್ನು ಆಕೆ ಕ್ಷಮಿಸಿರುವುದಾಗಿ ಅರ್ಥವೆ?” +“ಅದು ಆಕೆಯ ಸತ್ವಗುಣ ಇಲ್ಲವೆ?” +“ಇದೆ. ಅಭಿವೃದ್ದಿಗೊಂಡಿಲ್ಲ, ಶುದ್ಧಿಗೊಂಡಿಲ್ಲ.” +“ಇರಲಿ ಬಿಡಿ. ಈಗ ರಾಣಿ ನನ್ನ ನಾಶದ ಪ್ರಾರ್ಥನೆ ಮಾಡಿಕೊಳ್ಳಲಿಲ್ಲ ಎಂದ ಮೇಲೆ ನನ್ನ ನಾಶ ತಪ್ಪಿದಂತಾಯಿತಲ್ಲ!” +“ಆಕೆ ಹಾಗೆ ಪ್ರಾರ್ಥಿಸಿಕೊಂಡಿದ್ದರೂ ನಿನ್ನ ವಿನಾಶವಾಗುತ್ತಿದ್ದಿಲ್ಲ. ಬಿಟ್ಟಳೆಂದು ನಿನ್ನ ವಿನಾಶ ತಪ್ಪಿದಂತಾಗಲಿಲ್ಲ! ಆಕೆಯ ಪ್ರಾರ್ಥನೆಗೂ ನಿನಗೂ ಯಾವ ಸಂಬಂಧವಿಲ್ಲ.” +“ಹಾಗಾದರೆ, ನಿಮ್ಮ ಆಶೀರ್ವಚನಕ್ಕೆ ಬೆಲೆಯೇ ಇಲ್ಲವೆ?” +“ಇದೆ. ಪ್ರಾರ್ಥನೆಯ ಸತ್ವಗುಣವನ್ನು ಆಶೀರ್ವದಿಸುತ್ತೇವೆ. ದುರಾಶೆಗಳಿಗೆ ನಾವು ಆಶೀರ್ವದಿಸಲಾರೆವು.” +“ನಿಮ್ಮ ಆಶೀರ್ವಚನದಿಂದ ಏನು ಲಾಭ ದೊರಕುತ್ತದೆ?” +“ಸತ್ವಗುಣ ಸಮರ್ಥವಾಗಿ ಕೆಲಸ ಮಾಡುತ್ತದೆ.” +“ಈಗ ನಾನು ಅಕ್ಕ ಕೇಶಿನೀದೇವಿಯನ್ನು ಸೋಲಿಸಲು ಇಚ್ಚಿಸುತ್ತೇನೆ. ಅದನ್ನೇ ಇಲ್ಲಿರುವ ಯಾದವೀದೇವಿಯು ಇಚ್ಚಿಸುತ್ತಾಳೆ. ( ಯಾದವಿ ವಿರೋಧಿಸಲು ಯತ್ನಿಸಿದಾಗ ಋಷಭಮುನಿ ಸುಮ್ಮನಿರಲು ಸೂಚಿಸಿದರು) ಆಕೆಯಲ್ಲಿ ನೂರಕ್ಕೆ ಎಂಭತ್ತು ಸತ್ವಗುಣವಿದೆಯೆಂದು ಎಣಿಸುವಾ. ನನ್ನಲ್ಲಿ ತೀರ ಕಡಿಮೆಯೆಂದರೆ ನೂರಕ್ಕೆ ಇಪ್ಪತ್ತು ಪಾಲು ಸತ್ವಗುಣವಿದೆಯೆಂದು ಎಣಿಸುವಾ. ನಾವಿಬ್ಬರೂ ಕೂಡಿ ಅದನ್ನೇ ಪ್ರಾರ್ಥಿಸಿಕೊಂಡರೆ, ನಮಗೆ ಐವತ್ತು ಪಾಲು ವಿಜಯ ಬರುತ್ತದೆಯೆಂದು ತಾವು ಆಶೀರ್ವದಿಸಬಹುದೇ?” +“ಅವರವರ ಸತ್ವಗುಣ ಅವರಿಂದಲೇ ಮೂಡಿ ಬರಬೇಕು.” +“ಹಾಗಾದರೆ ಯಾದವೀ ಪ್ರಾರ್ಥಿಸಿಕೊಳ್ಳಲಿ; ನಾನು ಯುದ್ಧ ಮಾಡುತ್ತೇನೆ.” +“ಅವರವರ ಸತ್ವಗುಣ ಅವರಿಂದಲೇ ಮೂಡಿ ಬರಬೇಕು.” +“ಮಹರ್ಷಿಗಳು ಬೇರಿಜುವಜಾಬಾಕಿ ಕಲಿತಂತಿಲ್ಲ.” +ರಾಣಿ ಕ್ರುದ್ಧಳಾಗಿ ನೋಡಿದಳು. ಮತ್ತೆ ಋಷಭಮುನಿ ಸನ್ನೆ ಮಾಡಿದರು. +“ಪಾಪ-ಪುಣ್ಯ, ಸದಿಚ್ಚೆ-ದುರಾಸೆ, ಪ್ರೇಮ-ದ್ವೇಷ, ಇಂಥ ಪ್ರವೃತ್ತಿಗಳಲ್ಲಿ ಬೇರೀಜು-ವಜಾಬಾಕಿ-ತಾವೇ ನಿರ್ಣಯಿಸಿಕೊಳ್ಳಬೇಕು. ಅದರ ಲೆಕ್ಕಪತ್ರ ಇನ್ನಾರೂ ಇಡಲಾರರು.” +“ಮಹಾಸ್ವಾಮಿಗಳು ಚಿಕ್ಕರಾಣಿಯ ಪಕ್ಷಪಾತಿಗಳೆಂದು ತೋರುತ್ತದೆ.” +“ಆಕೆಯ ಸತ್ವಗುಣ ಆರುಜನ್ಮಗಳಿಂದ ಬೆಳೆದು ಬಂದಿದ್ದು, ಈ ಏಳನೆಯ ಜನ್ಮದಲ್ಲಿ ೪೦ ವರ್ಷಗಳ ದುಃಖ ದೈನ್ಯಗಳನ್ನು ಸಹಿಸಲು ಆಕೆಗೆ ಶಕ್ತಿ ಒದಗಿಸಿದೆ. ಆರು ಜನ್ಮಗಳ ಕೆಳಗೆ ನೀನು ಕರಡಿಯಾಗಿದ್ದಿ, ಐದನೆಯ ಜನ್ಮದಲ್ಲಿ ನೀನು ಮಂಗನಾಗಿ ಹುಟ್ಟಿದಿ. ನಿನ್ನ ಸುದೈವ, ಯಾರೋ ನಿನ್ನನ್ನು ಹಿಡಿದು ಋಷ್ಯಾಶ್ರಮಕ್ಕೆ ದೂಡಿದರು. ಋಷಿಕುಮಾರರು ನಿನಗೆ ಕುರುಡು ಮುದಿತಾಪಸಿಗಳ ಕೈಹಿಡಿದು ಅಡ್ಡಾಡಿಸುವ ಕಲೆಯನ್ನು ಕಲಿಸಿಕೊಟ್ಟರು. ಆ ಪುಣ್ಯದಿಂದ ಮೂರನೆಯ ಜನ್ಮದಲ್ಲಿ ನರನಾಗಿ ಹುಟ್ಟಿದಿ. ಮಂಗನ ಗುಣ ಇನ್ನೂ ಉಳಿದಿತ್ತು. ಮನೆಮನೆಯ ಮಾಳಿಗೆಯಿಂದ ಮಾಳಿಗೆ ಜಿಗಿಯುತ್ತ ಚೋರ ಕರ್ಮ ಮಾಡುತ್ತಿದ್ದಿ. ಒಮ್ಮೆ ಒಬ್ಬ ರಾಜನ ಮನೆಯಲ್ಲಿ ಮುತ್ತಿನಸರವನ್ನು ಕದ್ದಿ. ಆಗ ಕಾವಲುಗಾರರ ಮೇಲೆ ಆರೋಪ ಬಂದು, ಅವನನ್ನು ವಧಸ್ಥಾನಕ್ಕೆ ಎಳೆದೊಯ್ಯುತ್ತಿದ್ದರು. ಅವನ ಹೆಂಡತಿ-ಮಕ್ಕಳು-ಗೊಳೋ ಎಂದು ಅಳುತ್ತ ಅವನ ಬೆನ್ನ ಹಿಂದೆ ಸಾಗಿದರು. ಒಂದಿಷ್ಟು ಸತ್ವಗುಣ ನಿನ್ನಲ್ಲಿ ಉದಯವಾಗಿ, ವಧಸ್ತಂಭದ ಎದುರು ಬಂದು, “ಯಾವುದೋ ಕಾಗೆ ಮುತ್ತಿನ ಸರವನ್ನು ಕಿಟಕಿಯ ಕೆಳಗೆ ಒಗೆದಿತ್ತು” ಎಂದು ಸುಳ್ಳು ಹೇಳಿ, ಕಾವಲುಗಾರನ ವಿಮೋಚನೆಗೆ ಕಾರಣನಾದಿ. ನಿನ್ನ ಪ್ರಾಮಾಣಿಕತನಕ್ಕೆ ಮೆಚ್ಚಿ ಅರಮನೆಯಲ್ಲೇ ನಿನಗೆ ಕಾವಲಿನ ಕೆಲಸ ಕೊಟ್ಟರು. ನಿನ್ನ ಕಿಟಕಿಯಿಂದ ಕಿಟಕಿಗೆ ಹಾರುವ ಚಾತುರ್ಯದಿಂದ ರಾಜನ ಅನೇಕ ಪರಿತ್ಯಕ್ತ ರಾಣಿಯರಿಗೆ ಸಂತೋಷ ಕೊಟ್ಟು ಅವರ ಹರಕೆಯಿಂದ ಮುಂದಿನ ಜನ್ಮದಲ್ಲಿ ಅಂತಃಪುರ ಕಾಯುವ ಗಂಡುಗೊಜ್ಜೆ ಆದಿ. ನಿನಗೆ ಸ್ವತಃ ಸಿಕ್ಕದಿದ್ದರೂ ರಾಣಿಯರ ಸಂದೇಶಗಳನ್ನು ಅವರ ಪ್ರಿಯಕರರಿಗೆ ಸಲ್ಲಿಸುವ ಕೆಲಸ ಮಾಡಿದಿ. ಪರಚಕ್ರ ಬಂದಾಗ ಅಂತಃಪುರವನ್ನು ಕಾಯುವುದರಲ್ಲಿ ವೀರಮರಣ ಅಪ್ಪಿದ ಮೂಲಕ, ಜನ್ಮದಲ್ಲಿ ರಾಜಕುಮಾರನಾದರೂ, ಎರಡನೆಯವನಾದ್ದರಿಂದ ನಿನ್ನ ಅಣ್ಣ ಯುವರಾಜನು ನಿನ್ನನ್ನು ದೂರವಿಟ್ಟು ನಿನ್ನನ್ನು ಅಕ್ಕನ ಮನೆಯಲ್ಲಿ ಬೆಳೆಯುವಂತೆ ಮಾಡಿದನು. ಅಕ್ಕ ರಾಣಿಗೆ ಅನೇಕ ದ್ವೇಷಕಾರ್ಯದಲ್ಲಿ ನೆರವಾದಿ. ಆಕೆಯ ಎಲ್ಲ ಕಾರ್ಯಗಳೂ ದ್ವೇಷಮೂಲವಾದ್ದರಿಂದ ಕೊನೆಗೆ ನೀನೇ ಆಕೆಯ ದ್ವೇಷಕ್ಕೆ ಗುರಿಯಾಗಿರುವಿ. ದ್ವೇಷವನ್ನು ಸಮೂಲ ಹೋಗಲಾಡಿಸದ ಹೊರತು ನಿನಗೆ ಕ್ಷೇಮವಿಲ್ಲ!” +“ಇದೇ ಜನ್ಮದಲ್ಲಿ ನನಗೆ ಮುಕ್ತಿ ಸಿಕ್ಕಲು ಏನು ಮಾಡಬೇಕು?” +“ಒಂದೇ ಜನ್ಮದಲ್ಲಿ ಯಾವ ಜೀವಕ್ಕೂ ಮುಕ್ತಿ ಸಿಕ್ಕದು. ನೀನಿನ್ನೂ ಅಪಕ್ವ. ಅನೇಕ ಜನ್ಮಗಳ ಅನುಭವದಿಂದ ಸತ್ವಗುಣ ವೃದ್ಧಿಯಾಗುತ್ತ ಆಗುತ್ತ ಜೀವನ್ಮುಕ್ತ ಅವಸ್ಥೆ ಪಡೆಯುತ್ತದೆ-ಆತ್ಮದ ವಿಕಾಸವೇ ಜೀವನದ ಉದ್ದೇಶ.” +“ಇನ್ನೂ ನನಗೆ ಎಷ್ಟು ಜನ್ಮಗಳು ಬೇಕು?” +“ಅದು ನಿನ್ನ ಮೇಲೆ ಅವಲಂಬಿಸಿದೆ.” +“ನೂರಕ್ಕೆ ನೂರರಷ್ಟು ಸಾತ್ವಿಕನಾದರೆ ಅದು ಮುಕ್ತಿಯೆಂದು ಹೇಳಬಹುದೇ?” +“ಆ ಅವಸ್ಥೆಯಲ್ಲಿ ಮನುಷ್ಯ ಹೆರವರ ಹಿತಕ್ಕಾಗಿ ಜೀವಿಸುತ್ತಾನೆ. ಆದರೆ ಸತ್ವಗುಣದ ಬಗ್ಗೆಯೇ ಅವನಿಗೆ ಮೋಹ ಹೊಕ್ಕಿರುತ್ತದೆ. ಜೀವನವು ತಂದು ಇಡುವ ಸಂದಿಗ್ದದಿಂದ ಅವನು ನೋಯುತ್ತಾನೆ. ನನ್ನನ್ನೇ ನೋಡು. ನನ್ನ ಹಿಂದಿನ ಜನ್ಮ ಹಾಗೆ ಇತ್ತು. ಆ ಅಸ್ವಸ್ಥತೆಯನ್ನು ನನ್ನ ಉತ್ತರ ವಯಸ್ಸಿನಲ್ಲಿ ತಾಳ್ಮೆಯಿಂದ ಕಾಣುವುದನ್ನು ಕಲಿತುಕೊಂಡೆ. ಈ ಜನ್ಮದಲ್ಲಿ ಹೆರವರ ಹಿತಕ್ಕಾಗಿಯೇ ನಾನು ವಿದೆಯನ್ನು ಸಂಪಾದಿಸಿ ಸೇವೆ ಮಾಡುತ್ತಿರುವೆ. ವಿದ್ಯೆಯನ್ನು ದೂರದೂರ ಹೋಗಿ ಕಲಿಯಬೇಕಾಯಿತು. ಇವೆಲ್ಲ ಮುಂದಿನ ಜನ್ಮದಲ್ಲಿ ನನ್ನ ಹುಟ್ಟುಗುಣಗಳಾಗಿ ಬರುತ್ತವೆ. ವಿದ್ಯೆ ಇದ್ದೂ ಅದರ ಮೋಹ ಅಳಿಯುತ್ತದೆ. ಆಗ ಮುಂದಿನ ಅವಸ್ಥೆಯನ್ನು ಮುಟ್ಟುವುದಕ್ಕಾಗಿ ಸಿದ್ದತೆ ಮಾಡಬೇಕಾಗುತ್ತದೆ.” +“ಅದು ಯಾವ ಅವಸ್ಥೆ?” +“ಅದನ್ನು ಹೇಳುವುದಿಲ್ಲ. ಹೇಳಿದರೂ ತಿಳಿದುಕೊಳ್ಳುವ ಸಿದ್ಧತೆ ನಿನ್ನಲ್ಲಿ ಇಲ್ಲ. ಬೇಕಾದರೆ ಈ ರಾಣಿಗೆ ಹೇಳಬಹುದು. ಭಾಷೆ ತಿಳಿದುಕೊಳ್ಳಲೂ ಪೂರ್ವಸಿದ್ಧತೆ ಬೇಕು-ನಿನಗೆ ಅದು ಇನ್ನೂ ಬಂದಿಲ್ಲ.” +“ಬಿಡಿ. ನಿಮ್ಮ ಕತೆ ನನಗೇಕೆ?-ನನ್ನದೊಂದು ಪ್ರಾರ್ಥನೆ ಇದೆ. ಆಶೀರ್ವದಿಸುವಿರಾ?” +“ಪ್ರಾರ್ಥನೆ ಮಾಡಿಕೊಳ್ಳುವ ಯೋಗ್ಯತೆ ನಿನ್ನಲ್ಲಿ ಇನ್ನೂ ಬಂದಿಲ್ಲ. ಇಚ್ಛೆ ಏನಿದೆ ಹೇಳು.” +“ನಾನು ಈಗ ಮನಸ್ಸಿನಲ್ಲಿ ಮಾಡಿದ ಇಚ್ಛೆ ಕೈಗೂಡುವುದೇ?” +“ಕೈಗೂಡುವುದು, ಇನ್ನು ಎರಡು ವರ್ಷಗಳಲ್ಲಿ.” +“ಧನ್ಯನಾದೆ. ನಿಮಗೆ ವಂದನೆಗಳು.” +“ದೇವರು ನಿನ್ನ ಸತ್ವಗುಣ ವಿಕಸಿಸುವಷ್ಟು ಕಾಲ ನಿನಗೆ ಕೊಡಲಿ. ಈಗ ನಿನ್ನಲ್ಲಿ ಆಶಾಗುಣದಲ್ಲಿಯೇ ಜಿಜ್ಞಾಸಾಗುಣದ ಮೊಳಕೆ ಎದ್ದಿದೆ. ಈ ಅವಸ್ಥೆ ಇನ್ನೂ ಇಪ್ಪತ್ತು ಜನ್ಮಗಳಲ್ಲಿ ಪೂರ್ಣ ವಿಕಸಿಸುತ್ತದೆ. ಇಪ್ಪತ್ತನೆಯ ಜನ್ಮದಲ್ಲಿ ಇದರ ಮುಂದಿನ ಅವಸ್ಥೆ ಮುಮುಕ್ಷು ಪ್ರೇರಣೆಯಾಗುತ್ತದೆ. ಆಮೇಲೆ ಭರದಿಂದ ವಿಕಾಸಗೊಂಡು ಬಹಳವಾದರೆ ಐದಾರು-ಏಳು ಜನ್ಮಗಳಲ್ಲಿ ನಿನಗೆ ಪ್ರಾರ್ಥನೆಯ ಯೋಗ್ಯತೆ ಬರುತ್ತದೆ. ಇಂದು ಇಷ್ಟೇ ಸಾಕು. ನಾಳೆ ಬೆಳಿಗ್ಗೆ ನಿನಗೆ ಮಾರ್ಗದರ್ಶನ ಸಿಕ್ಕುವ ಯೋಗವಿದೆ.” +ಕುಳ್ಳನು ಅವನನ್ನು ಊಟಕ್ಕೆ ಕರೆದೊಯ್ಯಲು ಬಂದನು. +ಋಷಿಗಳು “ಇಂದು ರಾತ್ರಿ ನಿನ್ನ ತಾಯಿಯ ಜೊತೆಯಲ್ಲಿಯೆ ಇರು. ಆಕೆಗೆ ಶೀತ ಜ್ವರ ಬರುವ ಲಕ್ಷಣವಿದೆ. ಪಾಕಾಚಾರಿಯ ಗುಡಿಸಲಿನಲ್ಲಿ ದುರ್ಗಸಿಂಹನ ಶಯನದ ವ್ಯವಸ್ಥೆ ಮಾಡಲಿಕ್ಕೆ ಹೇಳಿ ಬಾ” ಎಂದರು. +ಅವರು ಹೋದಮೇಲೆ ರಾಣಿ ಪ್ರಶ್ನಿಸಿದಳು, “ಸ್ವಾಮಿ, ಅವನ ಇಚ್ಛೆ ಏನಿತ್ತು ಕೇಳಬಹುದೇ?” +“ಭಗವಂತನ ಮಾಯೆ! ಮೃತ್ಯುಮುಖದಲ್ಲೂ ಮನುಷ್ಯನ ಆಶೆ ಮುಗಿಯುವುದಿಲ್ಲ.” +“ಯಾರಿಗೆ ಮೃತ್ಯು, ಸ್ವಾಮಿ!” +“ಅವನು ಕುಳಿತಾಗ ಅವನ ಬೆನ್ನ ಹಿಂದೆ ಒಂದು ಎದ್ದುನಿಂತ ನೆರಳು ಮೂಡಿತ್ತು. ನಿಮಗೆ ಕಾಣಲಿಲ್ಲವೆ?” +“ಇಲ್ಲ” +“ಅದು ಮೃತ್ಯುವಿನ ನೆರಳು.” +ಮರುದಿನ ಮುಂಜಾನೆ ಡಂಗುರದವನು ಸಾರುತ್ತ ಬಂದನು: ಇನ್ನು ಹದಿನೈದು ದಿನ, ಶುಕ್ಲಪಕ್ಷದ ಪೂರ್ಣಿಮೆಯ ದಿನ, ಮಹಾರಾಜಾಧಿರಾಜ ಕರ್ಣಸಿಂಹನ ಪಟ್ಟಾಭಿಷೇಕದ ವಾರ್ತೆಯನ್ನು ಸಾರಿದನು. +ವಾರ್ತೆ ಕೇಳಿ ದುರ್ಗಸಿಂಹನ ಹೃದಯ ಕುಸಿದಿತು. ಹದಿನಾಲ್ಕು ವರ್ಷದ ನನ್ನ ತಮ್ಮನಿಗೆ ದಶಾರ್ಣದ ಪಟ್ಟಾಭಿಷೇಕ! +-ಆದರೂ ಗುರುಗಳು ಇದು ಮಾರ್ಗದರ್ಶನವೆಂದು ಹೇಳಿದ್ದಾರೆ. +-ತಾನು ದಶಾರ್ಣ ರಾಜ್ಯದ ರಾಣಿಯನ್ನು ಸೋಲಿಸಲಿಕ್ಕೆ ಇದು ಮಾರ್ಗದರ್ಶನವಿರಬಹುದೇ? +ಬಾಣ ನೆಟ್ಟ ಸ್ಥಳದಲ್ಲಿ ಬಾವು ಏರಿತ್ತು. ಅದೇ ಅವಸ್ಥೆಯಲ್ಲಿ ಶ್ರವಣಾರಾಣಿಯ ಊರಿಗೆ ಹೋಗಿ ಆಕೆಯ ತಂದೆ ತಾಯಿಗಳ ಮುಂದೆ ತನ್ನ ವಿವಾಹದ ಬೇಡಿಕೆಯನ್ನು ಮುಂದಿಟ್ಟ. “ಗಾಯ ಮಾಯಲಿ. ಮುಂದೆ ವಿಚಾರ ಮಾಡುತ್ತೇವೆ” ಎಂದು ಉತ್ತರ ಕೊಟ್ಟರು. ಆ ಹಳ್ಳಿಯಲ್ಲೇ ನೆಲಸಿದ ಆಶೆಯಿಂದ. +ಶಬರರ ನಾಯಕನಿಗೆ ಭೇಟಿಯಾಗಿ ತನ್ನ ಉದ್ದೇಶವನ್ನು ಅರುಹಿದ. ತಾನು ತಂದ ೫-೬ ಸಾವಿರ ಹೊನ್ನುಗಳಿಂದ ಸೈನ್ಯ ಕೂಡಿಸಿದ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ. ತನ್ನ ಕೈಸಾಗುವವರೆಗೆ ಖಡ್ಗ ಶಿಕ್ಷಣವನ್ನೂ ನೀಡಿದ. ಒಂದು ವರ್ಷದಲ್ಲಿ ಅವನ ಬಲಭಾಗಕ್ಕೆ ಲಕ್ವಾ ಹೊಡೆಯಿತು. ಹಾಸಿಗೆ ಹಿಡಿದು ಮತ್ತೆ ಆಶ್ರಮಕ್ಕೆ ತರಲ್ಪಟ್ಟ. ಋಷಭಮುನಿ ಚಿಕಿತ್ಸೆ ಮಾಡಿದರು. ಇನ್ನೊಂದು ವರ್ಷ ಅವನನ್ನು ಬದುಕಿಸಿದರು. ಆದರೆ ಅವನು ಕಟ್ಟಿದ ಸೈನ್ಯದ ಮುಂದಾಳುತನ ಸ್ವಾಭಾವಿಕವಾಗಿ ಕುಳ್ಳಸಗರನಿಗೆ ಬಂದಿತು. +ಎರಡು ವರ್ಷದ ಮೇಲೆ ಶಬರರ ಪಡೆ ದಶಾರ್ಣದ ಮೇಲೆ ದಾಳಿ ಮಾಡಿತು. ರಾಣಿ ಕೇಶನೀದೇವಿ ತಮ್ಮ ಕರಣಸಿಂಹನೊಡನೆ ಅಹಿಚ್ಛತ್ರದ ತಮ್ಮ ತಂದೆಯ ಮನೆಗೆ ಓಡಿಹೋದಳು. ಗಂಡನನ್ನು ಅಲ್ಲಿಯೇ ಬಿಟ್ಟು. ಭದ್ರಾಯು ದಶಾರ್ಣದ ರಾಜನಾದನು. ಅವನು ರಾಜಪುತ್ರನೆಂದೂ, ರಾಣಿಯಾದವೀದೇವಿಯ ಮಗನೆಂದೂ ರಾಜವೈದ್ಯರು ಸಾಕ್ಷಿ ಹೇಳಿ ಅವನಿಗೆ ಪಟ್ಟಾಭಿಷೇಕ ಮಾಡಿಸಿದರು. ವೈಭವದಿಂದ ರಾಣಿ ಯಾದವಿದೇವಿಯನ್ನು ರಾಜಧಾನಿಗೆ ಕರೆತರಲಾಯಿತು. ಮಗನ ಪಟ್ಟಾಭಿಷೇಕದ ಸಮಯದಲ್ಲೂ ತನ್ನ ಗಂಡನನ್ನು ಬಿಟ್ಟು ರಾಣಿ ಬರಲಿಲ್ಲ. +ಋಷಭ ಋಷಿಗಳ ಆಶಿರ್ವಾದದಿಂದಲೂ, ರಾಣಿಯ ಶುಶ್ರೂಶೆಯಿಂದಲೂ ಮಹಾರಾಜ ತುಸು ಗುಣಮುಖನಾಗಿ ಒಂದೆರಡು ತೊದಲುನುಡಿ, ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲ ಆಗುವಷ್ಟು ಸಮರ್ಥನಾದ, ತನ್ನ ಔರಸಪುತ್ರನೇ ರಾಜನಾದದ್ದು ಕೇಳಿ ಸಂತೋಷಪಟ್ಟನು. +ರಾಣಿ ಕೇಶಿನಿದೇವಿ ಹೋಗುವಾಗ ರಾಜ್ಯದ ಬೊಕ್ಕಸವನ್ನು ಖಾಲೀ ಮಾಡಿ ತನ್ನೊಡನೆ ಅಮೂಲ್ಯ ವಜ್ರಗಳನ್ನು ಒಯ್ದಿದ್ದಳು. ಆರು ತಿಂಗಳಲ್ಲೇ ಭದ್ರಾಯು ಪಾಂಚಾಲ ರಾಜ್ಯದ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡು ಕುರುಪಾಂಚಾಲ ಸಾಮ್ರಾಜ್ಯವನ್ನು ಕಟ್ಟಿದ; ಮುಂದೆ ಮಾಹಿಷ್ಮತಿಯನ್ನು ಆಕ್ರಮಿಸಿದನು. ಹಡಗುಪಡೆಯನ್ನು ಕಟ್ಟಿ ಗಂಗಾನದಿಯ ದಂಡೆಯಲ್ಲಿ ಇದ್ದ ಅನೇಕ ಚಿಕ್ಕಪುಟ್ಟ ರಾಜ್ಯಗಳನ್ನು ಆಕ್ರಮಿಸಿ ಶ್ರಾವಸ್ತಿಯವರೆಗೆ ಬಂದನು. +ಪಶ್ಚಿಮದಿಂದ ಪರಚಕ್ರ ಬರುವ ವಾಮದೇವರ ಸಂದೇಶ ಹೀಗೆ ಸತ್ಯವಾಯಿತು. +ಆದರೆ ಪುರುಕುತ್ಸಾನಿ ಮಾಡಿದ ಪೂರ್ವ ತಯಾರಿಯ ಮೂಲಕ ಅಯೋಧ್ಯೆಯನ್ನು ಗೆಲ್ಲುವುದು ಭದ್ರಾಯುವಿಗೆ ಶಕ್ಯವಾಗಲಿಲ್ಲ. +ಗಂಗಾತಟದ ಎಂಟು ಬೇರೆ ಸ್ಥಳಗಳಲ್ಲಿ ಅವನ ಸೇನೆಯ ಗುಂಪುಗಳು ಇಳಿದು ಅಯೋಧ್ಯೆಯತ್ತ ಕೂಚು ಮಾಡಿದವು. ಅಲ್ಲಲ್ಲಿ ಪುರುಕುತ್ಸಾನಿ ಬಚ್ಚಿಟ್ಟ ನಾಗ ಬಿಲ್ಲುಗಾರರು ಗಂಗಾ-ಸರಯೂ ನದಿಗಳ ನಡುವೆಯೇ ಸಗರನ ಸೈನಿಕರನ್ನು ತಡೆದು ಹಿಂದಟ್ಟಿದರು. +ಆದರೆ ಒಂದು ಶಬರ ಸೈನಿಕರ ತುಕಡಿಯು ಸುತ್ತು ದಾರಿಯಿಂದ ಬಂದು ಆಮ್ರವನಕ್ಕೆ ಮುತ್ತಿಗೆ ಹಾಕಿ ಮಹಾರಾಜ ಪುರುಕುತ್ಸನನ್ನು ಗುಪ್ತ ರೀತಿಯಿಂದ ಅಪಹರಿಸಿಕೊಂಡು ಓಡಿ ಹೋಯಿತು. ಆಗ ಮಹಾರಾಜರು ಮೃಗನಯನೆಯ ತೋಳ್ತೆಕ್ಕೆಯಲ್ಲಿ ವಿಶ್ರಮಿಸಿದ್ದರು. ಅವರ ಬೆಂಗಾವಲಿಗೆ ಇದ್ದ ಅರಣ್ಯದ ಐವತ್ತು ಸೈನಿಕರು ಶರಯೂ ನದಿಯ ಆಚೆ ದಂಡೆಯಲ್ಲಿ ಹೋರಾಡುತ್ತಿದ್ದರು. ಆರು ಖಡ್ಗದಾರಿ ಕಾವಲುಗಾರರನ್ನು ಶಬರರು ಬಾಣ ಹೊಡೆದುಕೊಂದರು. ಪುರುಕುತ್ಸನನ್ನೂ ಮೃಗನಯನೆಯನ್ನು ಬಂಧಿಸಿ, ಕುದುರೆಯ ಮೇಲೆ ಹೇರಿಕೊಂಡು ಪಲಾಯನ ಹೇಳಿದರು; ಭದ್ರಾಯುವಿಗೆ ತಂದು ಒಪ್ಪಿಸಿದರು. +ಅಯೋಧ್ಯೆಯನ್ನು ಗೆಲ್ಲದಿದ್ದರೂ ಅದರ ರಾಜನನ್ನು ಬಂಧಿಸಿದ್ದಷ್ಟೇ ಭದ್ರಾಯುವಿಗೆ ಸಮಾಧಾನ. +ಮುಂದೆ ಹತ್ತು ವರ್ಷ ಅಯೋಧ್ಯೆ ನಿರ್ಭಾದಿತವಾಗಿ ಉಳಿಯಿತು. +ಹತ್ತು ವರ್ಷ ಅಹಿಚ್ಛತ್ರದ ಸೆರೆಮನೆಯಲ್ಲಿ, ಯಾವ ಸುಖಕ್ಕೂ ಎರವಾಗದೆ, ಸದ್ದುಗದ್ದಲವಿಲ್ಲದೆ, ಮಹಾರಾಜ ಪುರುಕುತ್ಸನು ಮೃಗನಯನೆಯೊಡನೆ ಇದ್ದನು. +ಅವನು ಎಲ್ಲಿ ಬಂಧನದಲ್ಲಿ ಇದ್ದಾನೆಂಬುದರ ಪತ್ತೆ ಕೂಡ ಅಯೋಧ್ಯೆಯ ಪ್ರಜೆಗಳಿಗೆ ತಿಳಿಯದಾಯಿತು. ತಾರ್ಕ್ಷ್ಯನ ಎಲ್ಲ ಪ್ರಯತ್ನಗಳೂ ವಿಫಲವಾದವು. ಯುದ್ಧದಲ್ಲೇ ಮಹಾರಾಜರು ಹತರಾದರೆಂದು ಜನಜನಿತ ಮಾತು ಹಬ್ಬಿತು. +ಬದುಕಿಯೂ ಇರಬಹುದೆಂಬ ವಾರ್ತೆಯೂ ಇದ್ದಿತು. ತನ್ಮೂಲಕ ಪುರುಕುತ್ಸಾನಿ ವಿಧವೆಯೆನಿಸಲಿಲ್ಲ, ಅಷ್ಟೇ! +ಪುರುಕುತ್ಸಾನಿಯ ರಾಜ್ಯಶಾಸನದ ಕುಶಲತೆಯನ್ನು ಮೆಚ್ಚಿ ಭದ್ರಾಯು ಸಂದೇಶ ಕಳಿಸಿದನು: “ಆಕೆಯ ವಿವಾಹ ಭಾರತೀಯ ಪದ್ದತಿಯಿಂದ ನ್ಯಾಯ ಸಮ್ಮತವಲ್ಲವೆಂದು, ತನ್ನನ್ನು ಮದುವೆಯಾಗಬೇಕೆಂದು, ತಮ್ಮ ರಾಜ್ಯಗಳು ಒಂದಾದರೆ ಕಾಶಿ, ವಂಗ, ಅಂಗ, ಕಲಿಂಗರಾಜ್ಯಗಳು ಒಂದಾಗಿ ವಿಶಾಲ ಆರ್ಯಾವರ್ತ ಸಾಮ್ರಾಜ್ಯವನ್ನು ಕಟ್ಟಬಹುದೆಂದು, ಪುರುಕುತ್ಸ ಮಹಾರಾಜರು ಕ್ಷೇಮದಿಂದ ಇಲ್ಲಿಯೇ ಇರುವರೆಂದೂ, ಇದಕ್ಕೆ ಅವರ ಸಮ್ಮತಿ ಇದೆಯೆಂದು, ತಾವೇ ಕಾಶೀವಿಶ್ವನಾಥನ ಸನ್ನಿಧಿಯಲ್ಲಿ ನಮ್ಮ ವಿವಾಹ ನಡೆಯಲೆಂದು ಹೇಳಿದುದಾಗಿಯೂ, ಸಂದೇಶ ಬಂತು. +ಮೊದಲು ನನ್ನ ಗಂಡನನ್ನು ತಂದು ಒಪ್ಪಿಸು, ಆಮೇಲೆ ಮಾತಾಡೋಣ, ಎಂದು ಪುರುಕುತ್ಸಾನಿ ಹಟ ಹಿಡಿದಳು. +ಭದ್ರಾಯು ಅದಕ್ಕೆ ಒಪ್ಪಲಿಲ್ಲ. ಅಯೋಧ್ಯೆ ಅವನಿಗೆ ಕಂಟಕವಾಗಿತ್ತು. ಅಯೋಧ್ಯೆಯನ್ನು ದಾಟದ ಹೊರತು ಕಾಶಿ ಅಲಭ್ಯವಾಗಿತ್ತು. +ತನ್ನ ಊನ ಅವಸ್ಥೆಗೆ ಪುರುಕುತ್ಸಾನಿ ಮಾಡಿದ ಅಪಚಾರವೆಂದು ಭದ್ರಾಯು ಸಿಡಿಮಿಡಿಗೊಂಡನು. ನೂರು ರಾಜಕುವರಿಯರನ್ನು ಲಗ್ನವಾಗಿ ನೂರು ಮಕ್ಕಳನ್ನು ಪಡೆದು, ನಿಃಸಂತಾನ-ಪುರುಕುತ್ಸಾನಿಗೆ ತನ್ನ ಸಂತಾನ ಸಾಮರ್ಥ್ಯವನ್ನು ತೋರ್ಪಡಿಸಿದನು. ಪುರುಕುತ್ಸಾನಿ ಜಗ್ಗಲಿಲ್ಲ. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಕಿರಣ್.ಎಂ +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […] +ಅಧ್ಯಾಯ ಒಂದು – ೧ – ‘ಮಳೆ ಬಂದರೂ ಕಾಯೂದೇ… ’ ಅಂದಳು ಯಮುನೆ. ಬೆಳಗಿನ ಎಂಟು ಗಂಟೆಯ ಹೊತ್ತಿಗೆ, ಮನೆಯ ಹಿಂಭಾಗದ ಹಿತ್ತಿಲ ಕೊನೆಯಲ್ಲಿರುವ ಗೇರು ಮರದ ಕೆಳಗೆ ಪಂಢರಿಯೂ ಅವಳ ಸೊಸೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_704.txt b/Kannada Sahitya/article_704.txt new file mode 100644 index 0000000000000000000000000000000000000000..0ec636abbdd2014489c9a06a05de0e976ef38460 --- /dev/null +++ b/Kannada Sahitya/article_704.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದೊಂದು ಸಲ ನನಗೂ ನಿನಗೂ ನಡುವೆ +ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. +ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು +ಕೂತು, ಕೂತಲ್ಲಿಯೇ ನಮ್ಮನ್ನು ಹೂತು +ಸುತ್ತಲೂ ಗೋಡೆ ಕಟ್ಟುತ್ತವೆ. +ಎದ್ದ ಗೋಡೆಯ ತುಂಬ ಕೆಂಗಣ್ಣು ಕೆಮ್ಮೀಸೆ; +ಮೀಸೆಯ ಕೆಳಗೆ ಸೊಟ್ಟ ಮೂತಿಯ ಕೆಟ್ಟ ಬಾಯಿ +ಉಗಿಯುತ್ತದೆ ಬೆಂಕಿ. +ಆಗ, +ನಾನೂ ನೀನೂ ಬಹುಕಾಲದಿಂದ ನೀರೆರೆದು ಬೆಳೆಸಿದ +ಹೂವಿನ ತೋಟ ಸೀದು ಹೊಗೆಯಾಡುತ್ತದೆ. +ಹೊಗೆಯಲ್ಲಿ ಉಸಿರು ಕಟ್ಟಿಕೊಂಡು +ನಾನು ಮತ್ತು ನೀನು +ಗೋಡೆಯೆರಡೂ ಬದಿಗೆ +ನರಳಿ ಹೊರಳುತ್ತೇವೆ +ಭೋರೆಂಬ ಗಾಳಿ ಮೊನೆಸುತ್ತ ಊಳಿಡುತ್ತದೆ. +ಕಾರಿರುಳು ಗಪ್ಪನೆ ಕೂತು +ಕೋಳಿ ಕೂಗುವುದನ್ನು ಕೇಳುತ್ತಾ +ಗೋಡೆಯ ಆಚೆಗೆ ನೀನು +ಈಚೆಗೆ ನಾನು +ಗೋಡೆ ಕರಗುವುದನ್ನೆ ಕಾಯುತ್ತಾ ಕೂರುತ್ತೇವೆ. +***** +(ಗೋಡೆ ೧೯೭೨) +ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿಹುರಿನಿಂತ ಛಲದಲ್ಲಿ ದುರುಗುಟ್ಟಿತು,ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿಗೆದ್ದ ಭಮೆ ಕಲಕೊಂಡು ಕವಿಯಾಯ್ತುಅನ್ಯಕೆ ಎಡೆಯಿರುವ ವಿನಯವಾಯ್ತು ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇತನ್ನಷ್ಟೆ ತಾನಾಗಿ […] +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು ಹಲ್ಲು ಮೊಲೆ ಮೂಗು ಕೈಕಾಲುಗಳಿಗು. ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ. ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ ಮೈಕಡಿದರೆ ಅದಕ್ಕೊಂದು ಕ್ರೀಮು, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_705.txt b/Kannada Sahitya/article_705.txt new file mode 100644 index 0000000000000000000000000000000000000000..ebc91be8fc08f1cc379ca84998405100f481cd9c --- /dev/null +++ b/Kannada Sahitya/article_705.txt @@ -0,0 +1,192 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು ಮರೆಯುವುದು ಸಾದ್ಯವೆ? ಭ್ರೂಮಧ್ಯ ಕುಂಕುಮವಿಟ್ಟು, ಕಮಾನು ಕ್ರಾಪು ಬಿಟ್ಟು, ಅಲ್ಲಿ ಇಲ್ಲಿ ಉದುರಿದ ಹಲ್ಲುಗಳಿಂದಾಗಿ ಆರತಿಯಂತಿದ್ದ ದವಡೆಗಳನ್ನು ತೆರೆದು ತೋರಿಸುತ್ತ ನಗುವ ಬಾಯಿಯ ನನ್ನ ಅಬಾಲ್ಯದ ಸಖ-ಇಂಥ ವೆಂಕಟನನ್ನು? ಖಾದಿ ಚೀಲ ಕಂಕುಳಲ್ಲಿತ್ತು. ತರಕಾರಿಯಂಗಡಿಯನ್ನು ಅದೊಂದು ಬೊಂಬೆಯಂಗಡಿ ಎಂಬಂತೆ ಬಾಯಿಬಿಟ್ಟು ನೊಡುತ್ತ ನಿಂತಿದ್ದ. ಬೇಯುತ್ತಿದ್ದ ಸೆಖೆಯಲ್ಲಿ ನದಿಯನ್ನು ಕಂಡವನಂತೆ ಅವನೆದುರು ನಿಂತೆ. ತೊಂಡೆಕಾಯಿರಾಶಿಯಿಂದ ಬಾಳೆಗೊನೆಗಳಿಗೆ , ಬಾಳೆಗೊನೆಗಳಿಂದ ಅಲಸಂಡೆಗೆ. ಅಲ್ಲಿಂದ ಹಳೆಯ ವರ್ಷದ ಬಣ್ಣದ ಸೌತೆಕಾಯಿಗೆ. ಮತ್ತೆ ತನ್ನನ್ನು ಯಾವ ಅಪೇಕ್ಷೆಯೂ ಇಲ್ಲದಂತೆ ಎದುರಿನ ಉಡಾಳ ದನಗಳನ್ನು ನೋಡುವಂತೆಯೇ ನೋಡುತ್ತಿದ್ದ ಒಂಟಿ ಕಣ್ಣಿನ ಅಂಗಡಿ ಕೊಂಕಣಿಗೆ ದೃಷ್ಟಿಯನ್ನು ವರ್ಗಾಯಿಸುತ್ತ ನಿಂತಿದ್ದ ವೆಂಕಟ ನನ್ನನ್ನು ನೋಡಿದ. ಆದರೆ- ಸುಮ್ಮನೇ ನೋಡಿದ. ಆಸುಪಾಸಿನಲ್ಲಿ ಕಂಕುಳಲ್ಲಿ ಕೊಡೆಯಿಲ್ಲದವರು ಅವನು ಮತ್ತು ನಾನು ಇಬ್ಬರೇ. ತಿಂಗಳು ಜುಲೈ ಆದರೂ ಮಳೆ ಬರುವುದಿಲ್ಲವೆಂದು ತನಗೆ ಗೊತ್ತೆಂದು ಜೋಯಿಸನಾಗಿ ಅವನು ಇದರಿಂದ ಉಲಿಯುವಂತಿತ್ತು. ಆಕಾಶದಲ್ಲಿ ಮೋಡವಿಲ್ಲದಿದ್ದರೂ ಎಲ್ಲರ ಬಗಲುಗಳಲ್ಲೂ ಇದ್ದ ಕೊಡೆಗಳು ಅವರ ಆತಂಕ ಮತ್ತು ಭರವಸೆಗಳನ್ನು ಸಾರುತಿದ್ದವು. ಹಳ್ಳಿಯನ್ನು ಎಂದೋ ಬಿಟ್ಟು ಪರದೇಶಗಳಲ್ಲಿದ್ದು ಈಗ ಮೈಸೂರಿನ ಪೇಟೆಮಂಗನಾದ ನಾನು ಕೊಡೆಯಿಲ್ಲದೇ ಊರಿಗೆ ಬಂದಿರುವುದು ನನ್ನ ಗರಿಯಾದ ಪ್ಯಾಂಟಿನಿಂದ ಯಾರಿಗೂ ಆಶ್ಚರ್ಯದ ವಿಷಯವಾಗಬೇಕಿರಲಿಲ್ಲ. ಆದರೆ ಪಂಚೆಯನ್ನು ಮೇಲೆತ್ತಿ ಕಟ್ಟಿಕೊಳ್ಳದೆ, ಕೊಡೆಯೂ ಇಲ್ಲದೆ ಬಗಲಲ್ಲಿ ಬ್ಯಾಗನ್ನು ಅವುಚಿ ಕನ್ನಡ ಜಿಲ್ಲೆಯಿಂದಲೋ, ಶಿವಮೊಗ್ಗದಿಂದಲೋ ಪೇಟೆಗೆ ಸರಬರಾಜಾದ ತರಕಾರಿಯನ್ನು ಅದೆನೂ ತಿನ್ನಲಿರುವ ಪದಾರ್ಥವಲ್ಲವೆಂಬಂತೆ ನೋಡುತ್ತ ನಿಂತ ವೆಂಕಟ ತನ್ನಷ್ಟಕ್ಕೆ ತಾನು ಮುಗುಳ್ನಕ್ಕದ್ದನ್ನು ಕಂಡಾಗ ಆಕಾಶದ ವಿದ್ಯಮಾನಗಳ ಜ್ಞಾನ ತನಗೊಬ್ಬನಿಗೇ ಮಾತ್ರ ತಿಳಿದಿದೆಯೆಂದು ಸೂಚಿಸುವಂತೆ ತೋರಿದ. ಹಡೆ ವೆಂಕಟನನ್ನು ಹಠಾತ್ತನೆ ಕಂಡ ಪುಳಕ ಅವನು ಗುರುತಿಸಿಲಿಲ್ಲವೆಂಬ ಬೇಸರದಲ್ಲಿ ಇಂಗಿತೆ? ಮಳೆಯಿಲ್ಲದಲ್ಲಿ ನೆನಪುಗಳು ಹೇಗೆ ಉಳಿದಾವು? +ನನಗಿಂತ ಐದಾರು ವರ್ಷಗಳಾದರೂ ಹಿರಿಯ ಈ ವೆಂಕಟ, ಆದರೂ ಬಾಲ್ಯದಲ್ಲು ನನ್ನ ಸಕತ್ ಸ್ನೇಹಿತ. ಮೈ ಮನಸ್ಸುಗಳನ್ನು ಎಷ್ಟೋ ಬರಿ ಸಡಲಿಸಿದವ. ಥಟ್ಟನೇ ಜ್ಞಾಪಕಕ್ಕೆ ಬರುವುದು ಇದು: ಹೊಳೆಯೆಂದರೆ ನನಗೆ ಭಯ. ನಾನು ಎಂಟೋ ಒಂಬತ್ತೋ ವರ್ಷದವನಿರಬೇಕು. ಆಮ್ಮನಿಗೆ ಗೊತ್ತಿಲ್ಲದಂತೆ ಪುಸಲಾಯಿಸಿ ಹೊಳೆಗೆ ಕರೆದುಕೊಂಡು ಹೋದ. ಒದರುತ್ತಿದ್ದ ಕಿರುಚುತ್ತಿದ್ದ ನನ್ನನ್ನು ಅವುಚಿಕೊಂಡು ಬಂಡೆಯಿಂದ ಮಡುವಿಗೆ ಧುಮಿಕಿದ. ಕೆಮ್ಮಿ, ನೀರು ಕುಡಿದು, ಕಂಗಾಲಾಗಿ ಮತ್ತೆ ಅವನ ಭದ್ರಹಿಡಿತದಲ್ಲಿ ನೀರಲ್ಲಿ ಹಗುರಾಗಿ ಮೆಲಿಂದ ಒಳಕ್ಕೆ, ಒಳಗಿನಿಂದ ಮೇಲಕ್ಕೆ ಚಲಿಸುತ್ತ ನೀರಲ್ಲಿ ಕಣ್ಣು ಬಿಡುವುದನ್ನು ಕಲಿತು ಕಣ್ಣು ಬಿಟ್ಟು ನನ್ನ ಅಂಗೈ ಇಷ್ಟಗಲವಾದದ್ದನ್ನು ಕಂಡು ಸುಖಿಸಿ ಪುಟ್ಟ ಪುಟ್ಟ ಮೀನುಗಳಿಂದ ತೊಡೆ ಸಂದಿಯಲ್ಲಿ ಕಚಗುಳಿ ಇಡಿಸಿಕೊಂಡು ನಾನು ನೀರಿನ ಸಖನಾದೆ. ಕತ್ತು, ಬಾಯಿ, ಮೂಗು, ಕಣ್ಣು, ನೆತ್ತಿ ಹೀಗೆ ಹಂತ ಹಂತವಾಗಿ ಆಳಗಳಲ್ಲಿ ಇಳಿದೆ. ಬೆರಳೊತ್ತಿದರ್ರೆ ಸಾಕು ನನ್ನನು ಚಂಡಿನಂತೆ ಪುಟಿಸುವ ನೀರು, ತಂಪಿನ ಮಡುವಿನಿಂದ ಮೇಲೆದ್ದು ಬಂದು ಬಿಸಿ ಮರಳಲ್ಲಿ ಮಲಗಿದ್ದವನನ್ನು ಮೈಮೇಲೆ ಬಿದ್ದು ಒಣಗಿಸುವ ಸೂರ್ಯ.. ಈಗ ಊರಿನ ಹೊಳೆ ಬತ್ತಿರಬೇಕು. ಹೀಗೆಲ್ಲ ತಿಳಿಯುತ್ತ ನಿಂತ ನನ್ನ ಗುರುತು ವೆಂಕಟನಿಗೆ ಹತ್ತದಿದ್ದರೂ ನೀರಿಗೆ ಹಾರುವ ಮುನ್ನ ತುದಿಗಾಲಲ್ಲಿ ನಿಂತು ಕೈ‌ಒಡ್ಡುವನಂತೆ ಏನೋ ಎಂದೆ. +“ಬಣ್ಣದ ಸೌತೆ ಅದೆಷ್ಟು ದುಬಾರಿಯಾಯ್ತು ಮಾರಾಯರೆ” +ನಾನು ಹಿಂದೆಗೆಯಲಿಲ್ಲ. ಅವನ ಕಣ್ಣುಗಳಲ್ಲಿ ನೆಡುತ್ತ ನುಗ್ಗುವುದಕ್ಕೆ ಪ್ರಯತ್ನಿಸಿದೆ. “ನನ್ನ ಕಂಕುಳಲ್ಲಿರೋದು ನಿಮಗೆ ಹುಂಜದಂತೆ ಕಂಡಿತೆ?” ಎಂದು ಉದುರಿದ ಹಲ್ಲುಗಳ ಬಾಯಿ ತೆರೆದ. +” ಹೌದೊ ಬುಡಾನ್ಸಾಬಿ. ನಿನ್ನ ಹುಂಜದ ಮಂಡೆ ಅದ್ಯಾಕೆ ಜೊತು ಬಿದ್ದಿದೆಯೋ ಬ್ರಾಂಬ್ರ ಖಾಲಿ ಜೋಳಿಗೆ ಹಾಗೆ?” +“ನನ್ನ ಹುಂಜ ಕಾಳಗದಲ್ಲಿ ಮೆಟ್ಟಿ ಇದನ್ನು ಸಾಯಿಸಿತಯ್ಯ” ಕಾಲುಗಳಿಂದ ಕೋಳಿಯನ್ನೆತ್ತಿ ಹಿಡಿಯುವಂತೆ ವೆಂಕಟ ಬ್ಯಾಗನ್ನು ನನಗೊಡ್ಡಿದ. +“ಎಷ್ಟೊಂದು ಹಲ್ಲುಗಳನ್ನು ಕಳಕೊಂಡು, ಬಿಳಿದಾದ ಕುರುಚಲು ಗಡ್ಡವನ್ನು ಕೆತ್ತಿಸಿಕೊಳದೆ ಈ ಹುಣ್ಣಿಮೆಯ, ಈ ಹಗಲು, ಆ ಕಂಕುಳಲ್ಲಿ, ಈ ಕೋಳಿಯನ್ನವಚಿ, ಈ ಪರಸ್ಥಳದಲ್ಲಿ ಇಂತು ಓಡಾಡುವ ಈ ದುರವಸ್ಥೆ ನಿನಗೆ ಹೇಗೆ ಒದಗಿತು ರಾಜಪುತ್ರ.? +ನಾವಿಬ್ಬರೂ ಕೂಡಿ ನೋಡುತ್ತಿದ್ದ ಯಕ್ಷಗಾನದ ಧಾಟಿಯ ನನ್ನ ಮಾತಿಗೆ ವೆಂಕಟ ಪಂಚೆಯನ್ನು ಮೇಲೆತ್ತಿ ಕಟ್ಟಿ ಚಂಗನೆ ಹಿಂದೆ ನೆಗೆದ. ಬಾಳೆಹಣ್ಣಿನ ಸಿಪ್ಪೆ ತಿನ್ನುತ್ತಿದ್ದ ಮುದಿ ದನದ ಕೊಂಬಿಗೆ ಅವನ ಕುಂಡೆ ತಾಕಿತು. ಅಂಡುಜ್ಜಿಕೊಳ್ಳುತ್ತ “ಅನಂತು ಅಲ್ಲವೇನೋ?” ಎಂದ. ಹಿಂದಕ್ಕೆ ತಿರುಗಿ ಬಾಳೆಹಣ್ಣಿನ ಸಿಪ್ಪೆಗಾಗಿ ಚರಂಡಿಯಲ್ಲಿ ಮೂತಿ ಹಾಕಿದ ದನಕ್ಕೆ ಹೇಳಿದ: +“ತಾಯಿ ಮಹಾಲಕ್ಶ್ಮಿ. ಈ ಅನಂತು ನನಗೆ ಅಮಲ್ದಾರನಿರಬಹುದೆಂಬ ಸಂಶಯ ಮೂಡುವಂತೆ ಯಾಕೆ ಮಾಡಿದಿ? ಅಥವಾ ನೀನು ಯಾವಾಗಲೂ ಕಂಗೆಡಿಸುತ್ತಿರುವ ಮಾಯಾವಿಯೋ ?” +ಚರಂಡಿಯಿಂದ ದನ ಬಾಳೆಹಣ್ಣಿನ ಸಿಪ್ಪೆಯನ್ನು ಎತ್ತಿಕೊಂಡಿತು: ಕಣ್ಣುಗಳನ್ನು ಅರ್ಧ ಮುಚ್ಚಿ ಬಾಯನ್ನು ಓರೆ ಮಾಡುತ್ತ ಭಕ್ಷಿಸಿತು. ಒಂಟಿ ಕಣ್ಣಿನ ಅಂಗಡಿ ಕೊಂಕಣಿ ನನಗೆ “ಎಷ್ಟು ತೊಂಡೆಕಾಯಿ ಕೊಡಲಿ?” ಎಂದ. ವೆಂಕಟನ ಬ್ಯಾಗನ್ನು ಇಸಕೊಂಡು ಅದರಲ್ಲಿ ತೊಂಡೆ, ಸೌತೆ, ಅಳಸಂಡೆ, ಆಲೂಗಡ್ಡೆ, ನೀರುಳ್ಳಿಗಳನ್ನು ಕಂಠ ಪೂರ್ತಿ ತುಂಬಿಸಿದೆ. ವೆಂಕಟನಿಗೆ “ನಿಮ್ಮನೇಗೆ ನಡಿ ಹೋಗೋಣ” ಎಂದೆ. +“ಬೆಳದಿಂಗಳು ಕಾಣಿಸ್ತೀನಿ. ಮನೆಗೆ ಬಾ. ಬಿಸಿ ಬಿಸಿ ನೀರು ಹೇಗೂ ಇರುತ್ತೆ.” +ಪೇಟೆಯಿಂದ ಹಬ್ಬಕ್ಕೆ ಸಾಮಾನು ಕೊಂಡು ಕಾರ್ಯೋನ್ಮುಖನೊಬ್ಬ ಅವಸರದಿಂದ ನಡೆಯುವಂತೆ ವೆಂಕಟ ಜನರನ್ನು ಕೈಯಿಂದ ಮೃದುವಾಗಿ ತಳ್ಳುತ್ತ ನಡೆದ +“ಹಾಗಾದರೆ ಭೃಂಗಾಮಲಕ ತಗೋತೀನಿ” +ಹೊಗೆಸೊಪ್ಪಿನ ಘಾಟು ಹೊಡೆಯುವ ಪ್ರಭುಗಳ ಅಂಗಡಿಯ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿದೆ. +“ಏನು ಇಷ್ಟು ಅಪರೂಪವಾಗಿ ಊರಿಗೆ ಬಂದ್ದದ್ದು ಮೂರ್ತಿಯವರೇ? ನಿಮ್ಮ ತಂದೆಯವರ ಕಾಲದಿಂದ ನಡೆದು ಬಂದಂತೆ ನಿಮ್ಮ ತಮ್ಮಂದಿರೂ ಇಲ್ಲೇ ಲೆಕ್ಕ ಇಟ್ಟಿರೋದು. ಬನ್ನಿ ಬನ್ನಿ ಬಾಯಾರಿಕೆಗೆ ತರಸಲ?” +ಕಿವಿಯಲ್ಲಿ ಪೆನ್ಸಿಲ್ ಸಿಕ್ಕಿಸಿ ಕೂತ ಪ್ರಭು ಡಬ್ಬಿಗಳ ನಡುವೆ ನನಗೊಂದು ಸ್ಟೂಲು ತೋರಿಸಿದರು. +“ಊರಿಗೆ ಬರ್ತಿರ್ತ್ತೀನಿ. ಆದರೆ ಪೇಟೆಗೆ ಬಂದದ್ದು ಇಲ್ಲ ಅಷ್ಟೆ , ಎಲ್ಲ ಸೌಖ್ಯವೆ?” ಎಂದೆ. ಹೊಗೆಸೊಪ್ಪಿನ ಘಾಟಿನ ಜೊತೆ ತಕ್ಕಡಿಯಲ್ಲಿ ತೂಗುತಿದ್ದ ಬೆಲ್ಲದವಾಸನೆ ಬೆರೆತುಕೊಂಡಿತು. +“ಏನು ಸೌಖ್ಯ? ಮಳೆ ಇಲ್ಲ, ಬಾಕಿ ವಸೂಲಾಗುವಂತಿಲ್ಲ. ದೊಡ್ಡ ಮಗ ಹೋದ ವರ್ಷ ಮೂರು ದಿನಗಳ ಜ್ವರಕ್ಕೆ ತೀರಿಕೊಂಡ. ವ್ಯಾಪಾರದಲ್ಲಿ ಪೈಸೆ ನಫೆ ಇಲ್ಲ. ಅಪ್ಪ ಕಲಿಸಿಕೊಟ್ಟ ಕಸುಬಲ್ಲ ಎಂದು ಕೂತಿರೋದು ಅಷ್ಟೆ. ನನ್ನ ಮಕ್ಕಳು ನಿಮ್ಮಂತೆ ಇಂಗ್ಲೆಂಡಿಗೆ ಹೋಗಿ ಓದುವಷ್ಟು ಪುಣ್ಯ ಮಾಡಿರಲಿಲ್ಲ. ಹೊಗೆಸೊಪ್ಪು ಹುರುಳಿ ವ್ಯಾಪಾರಾನೇ ಸಾಕೂಂತ ಕೂತರು. ನೋಡಿ ಅವ ಎರಡೇನೇಯವ, ಅವ ಮೂರನೆಯವ, ಅವ ನಾಲ್ಕನೇಯವ, ಇನ್ನಿಬ್ಬರು ಜವಳಿ ಅಂಗಡಿ ತೆರೆದಿದ್ದಾರೆ. ಮೂರು ಹೆಣ್ಣು ಮಕ್ಕಳನ್ನೂ ಲಾಯರ್‌ಗಳಿಗೆ ಕೊಟ್ಟು ಮದುವೆ ಮಾಡಿದೆ. ನನ್ನ ದೊಡ್ಡ ಮಗನ ಮಕ್ಕಳು ಹೈಸ್ಕೂಲಿಗೆ ಹೋಗ್ತಾವೆ ನಿಮಗೆಷ್ಟು ಮಕ್ಕಳು – ಈಗ ಎಲ್ಲಿರೋದು…” ನೊಣಗಳನ್ನು ಓಡಿಸುತ್ತ ಬೆಲ್ಲದ ಅಚ್ಚನ್ನು ಕತ್ತರಿಸಿ ತೆಗೆದು ತೂಕ ಸರಿದೂಗಿಸುತ್ತ ಮಾತಾಡಿದರು. ಹೀಗೇ, ಎಂದೊ ನಡೆದಿತ್ತು, ಇಲ್ಲೆ ಎಂದು ನನಗನ್ನಿಸಿತು. +“ಮೈಸೂರಿನಲ್ಲಿ. ಎರಡು ಮಕ್ಕಳು, ಒಂದು ಗಂಡು ಒಂದು ಹೆಣ್ಣು. ಭೃಂಗಾಮಲಕ ತೈಲ ಇದೆಯೇ?” +“ಏನು ವೆಂಕಟ ಜೋಯಿಸರ ಅಭ್ಯಂಜನವೋ? ಅವರು ಜೈಲಲ್ಲಿದ್ದಾಗ ಕೆ.ಟಿ. ಭಾಷ್ಯಂಗೆ ಎಣ್ಣೆ ಹಚ್ಚಿ ಎರೆದವರಲ್ಲವೇ? ಎಷ್ಟೊಂದು ಮಂತ್ರಿಗಳು ಗೊತ್ತು ಅವರಿಗೆ. ಎಲ್ಲ ಹಿಂದಿನ ಕಾಲದವರೇ. ಅವರಿಂದ ತಲೆ ತಿಕ್ಕಿಸಿಕೊಳ್ಳದವರೇ ಈ ಕರ್ನಾಟಕದಲ್ಲಿ ಇಲ್ಲ. ಆದರೂನೂ ಎರಡು ವರ್ಷದಿಂದ ಅವರಿಗೆ ಯಾಕೆ ಪಿಂಚಣಿ ಸಿಕ್ಕಿಲ್ಲವೋ. ಹೌದ ಜೋಯಿಸ್ರೆ-ಮೂರ್ತಿಗಳ ಹತ್ತಿರ ಹೇಳ್ಸಿ ನೋಡೋಣ. ನಿಮಗೆ ಪಿಂಚಣಿ ಸಿಕ್ಕರೆ ನಮ್ಮ ಹಳೇ ಬಾಕಿಯಾದರೋ ಅಷ್ಟು ಬಂದೀತೆಂದು ನನಗೆ ಆಸೆ. ಒಟ್ಟಿನಲ್ಲಿ ಜೋಯಿಸ್ರು ನನ್ನ ಹಾಗೇ ನತದೃಷ್ಟ ಮನುಷ್ಯ. ಮಗ ಇದಾನೆ ಹೆಸರಿಗೆ. ಶುದ್ದ ಪುಂಡ. ಓದಲಿಲ್ಲ ಪಾಸಾಗಲಿಲ್ಲ. ಹೋಟ್ಲು ಚಟ ಬೇರೆ. ಏನೋ ನಾವಿದ್ದ ಕಾಲ ಒಳ್ಳೇದು. ಈಗ ಎಲ್ಲ ಯತ್ವಾಸಿಯಾಗ್ಬಿಡ್ತು. +ವೆಂಕಟ ಬಾಯನ್ನು ಅಗಲವಾಗಿ ತೆರೆದು ಮುಗುಳ್ನಗುತ್ತ ಚೀಲವನ್ನು ತನ್ನ ಡೊಂಕು ಕಾಲಿಗೆ ಒರಗಿಸಿ ಕೆಳಗಿಟ್ಟ. ಜೇಬಿನಿಂದ ನಸ್ಯ ತೆಗೆದು ಏರಿಸಿದ. ಧೂಳು ತುಂಬಿದ ಬಾಟ್ಲಿಯನ್ನು ತಂದ ಹುಡುಗನ ಕೈಯಿಂದ ಅದನ್ನು ಇಸಕೊಂಡು “ಬಿ.ವಿ. ಪಂಡಿತರದ್ದು ತಾನೆ? ಅದೆ ಬಲು ತಂಪು” ಎಂದ. +“ಹೌದು ಜೋಯಿಸರೇ, ಹೊಸಾ ಮಾಲು. ಇಲ್ಲಿ ಹಳಬನೆಂದರೆ ನಾನು ಮಾತ್ರ” ಎಂದು ಪ್ರಭು ನನ್ನಿಂದ ದುಡ್ಡು ಪಡೆದು “ಇದು ಇವತ್ತಿನ ಮೊದಲನೇ ನಗದು ವ್ಯಾಪಾರ ಹೇಗಿದೆ ನೋಡಿ ನಮ್ಮ ಸ್ಥಿತಿ” ಎಂದರು. +ವೆಂಕಟ ಡಬ್ಬಿಗಳ ಮೇಲಿಂದ ಕೈ‌ಒಡ್ಡಿ ತಕ್ಕಡಿ ಮೆಲಿದ್ದ ಪ್ರಭುಗಳ ಕೈಯನ್ನು ಹಿಡಿದ, ಧ್ಯಾನಿಸಿದ. +‘ಪ್ರಭುಗಳೆ, ನೋಡಿದ ಕೂಡಲೆ ಅಂದುಕೊಂಡೆ. ನಿಮಗೆ ಉಷ್ಣವಾಗಿದೆ. ಅಭ್ಯಂಜನವಾಗಬೇಕು. ನಾಳೆ ಬಂದು ತಲೆಗಷ್ಟು ಎಣ್ಣೆ ಹಾಕುವೆ ಆಯಿತ? +ತನ್ನ ಕೈಯನ್ನು ಸೊಪ್ಪಿನ ಕಟ್ಟಿನಂತೆ ವೆಂಕಟನ ಕೈಯಲ್ಲಿಟ್ಟ ಪ್ರಭು ಆಯಾಸದಿಂದ ನಿಟ್ಟುಸಿರಿಟ್ಟು ಹೇಳಿದರು. +“ಈ ಜೋಯಿಸರು ತಿಕ್ಕದೇ ಉಳಿದ ತಲೆ ಈ ಊರಲ್ಲಿ ಉಂಟೆಂದು ತಿಳಿದಿರಾ ಮೂರ್ತಿಗಳೆ? ಇಂಥ ಮನುಷ್ಯನಿಗೆ ಅದೆಂತ ಮಗ ಹೇಗೆ ಹುಟ್ಟಿದನೋ ಪರಮಾತ್ಮನಿಗೇ ಗೊತ್ತು. ಮೊನ್ನೆ ಕಾಲೆಜು ಪ್ರಿನ್ಸಿಪಾಲರನ್ನೆ ರಾತ್ರೆ ಅಡ್ಡಕಟ್ಟಿ ಹೊಡೆದು ಹಣ ಕಿತ್ತುಕೊಂಡನಂತಲ್ಲ ಮಾರಾಯರೇ” +ವೆಂಕಟ ತನ್ನ ಹಣೆಯ ಮೇಲೊಂದು ಗೀಟನ್ನು ಎಳೆದುಕೊಂಡು ನಕ್ಕ. ಗೀಟನ್ನು ಪ್ರತ್ಯಕ್ಷಗೊಲಿಸಲೆಂಬಂತೆ ಹುಬ್ಬನ್ನೆತ್ತಿದ. ಪ್ರಭುಗಳು ಹುಬ್ಬೆತ್ತಿ ಗೀಟು ಬರಿಸಿಕೊಂಡು ಕೈಗೆ ಹತ್ತಿದ ಬೆಲ್ಲ ಒರೆಸಿಕೊಂಡು ಹೇಳಿದರು; +“ಜೈಲಾಗುತ್ತ ಜೊಯಿಸರೆ?” +ಹುಬ್ಬನ್ನು ಕೆಳಗಿಳಿಸಿ ಚೀಲವನ್ನೆತ್ತಿ ಹೊರಡಲು ಉದ್ಯುಕ್ತನಾಗಿ ವೆಂಕಟ ಹೇಳಿದ: +“ಅವನ ಹಣೇಲಿ ಬರದದ್ದು ಆಗಲೇಬೇಕಲ್ಲ. ಜಾಮೀನಿನ ಬಿಡಿಸಿಕೊಂಡು ಬಂದಿದೀನಿ. ಇನ್‌ಸ್ಪೆಕ್ಟರಿಗೊಂದು ಒಳ್ಳೆ ಅಭ್ಯಂಜನ ಮಾಡಿಸಿದೆ. ಪ್ರಿನ್ಸಿಪಾಲರಿಗೊಂದು ಮಾಡಿಸಿದೆ. ಇನ್ನು ಜಡ್ಜಿಗೊಂದು ಮಾಡಿಸೊದು..” +ವೆಂಕಟಕನ ನಗುವಿನಿಂದ ನನಗೆ ಮುಜುಗರವಾಯ್ತು. ಆದರೆ ಪ್ರಭುವಿಗೆ ಮುಜುಗರವಾಗಿರಲಿಲ್ಲ. ಹಿಂದಿನಂತೆಯೇ ಈ ವೆಂಕಟ ಇಡೀ ಊರಿನ ಬಾಯಿಗೆ ಬಿದ್ದವನು. ನಾಚಿಕೆಯಿಲ್ಲದವನು. +ಕೆರೆಕೊಪ್ಪದ ಹಾಡಿಯಲ್ಲಿ ನಡೆದೆವು. ಕಾಲುಹಾದಿ ಮಾತ್ರ ಹದಿನಾಲ್ಕು ವರ್ಷಗಳಾದರು ಬದಲಾದಂತೆ ಕಾಣಲಿಲ್ಲ. ವೆಂಕಟನನ್ನು ಮನಸಾರೆ ಬಯ್ಯತೊಡಗಿದೆ. ಮೊದಲಿಂದ ಹೀಗೆ ಹಡೆ. ಕ್ವಿಟ್ ಇಂಡಿಯ ಚಳುವಳೀಲಿ ನಮ್ಮನ್ನೆಲ್ಲ ಈ ಭೃಗು ಹೇಗೆ ಸಿಕ್ಕಿಸಿದ್ದ. “ಪೋಸ್ಟ್‌ಬಾಕ್ಸನ್ನ ಲಪಟಾಯಿಸೊಣ ಬರ್ರೋ” ಎಂದು ಅರ್ಧ ರಾತ್ರೆ ಹೈಸ್ಕೂಲ್ ಹುಡುಗರಾಗಿದ್ದ ನಮ್ಮನ್ನು ಎಬ್ಬಿಸಿಕೊಂಡು ಹೋದ. ಪೊಸ್ಟ್ ಡಬ್ಬಿಯನ್ನು ಅಮಾಸೆ ಕತ್ತಲಲ್ಲಿ ಕದ್ದುಕೊಂಡು ಹೊಗಿ ಹೊಳೆಯ ಮರಳಲ್ಲಿ ಒಂದಾಳ ಹುಗಿದು ಬಂದೆವು. ಮಾರನೇ ದಿನ ಊರಲ್ಲೆಲ್ಲ ಗುಲ್ಲೊ ಗುಲ್ಲು. ನಾವು ಮಾತ್ರ ಇದು ನಮ್ಮ ಕೆಲಸವಲ್ಲ ಎನ್ನುವಂತೆ ನಿತ್ಯದಂತೆ ಪ್ರಭಾತ ಫೇರಿ ಹೋದೆವು. ಹಾಡಿದೆವು: ಕಮಲಾದೇವಿಯವರೇ/ ಕಸ್ತೋರಿಬಾಯಿಯವರೇ/ ನಾವ್ ಚಳುವಳಿ ಮಡುವವರೆ-’ ಇತ್ಯಾದಿ. ಹೆಂಡದಂಗಡಿ ಎದುರು ಮಲಗಿದೆವು. ಸ್ಕೂಲ್‌ಗೆ ಹೋಗಿ ಅಡ್ಡಕಟ್ಟಿ ಮಲಗಿದೆವು. ವೆಂಕಟ ನಮ್ಮ ಲೀಡರ್. ಅವನ ಬಾಯಿ ಸುಮ್ಮನಿರಬೇಕಲ್ಲ? ಯಾರೋ ದಾರೀಲಿ ನಿಲಿಸಿದನಂತೆ. ‘ಏನು ಎತ್ತ, ನಾನು ಪರಸ್ಥಳದವ. ಒಳ್ಳೆ ಕಾಫಿ ಎಲ್ಲಿ ಸಿಗುತ್ತೆ ಅಂತ ಕೇಳಿದನಂತೆ. ಶೀನಪ್ಪಯ್ಯನ ಹೋಟೆಲಿಗೆ ಅವನ ಕರಕೊಂಡು ಹೋದ- ಈ ಪರೋಪಕಾರಿ ವೆಂಕಟ. ಅವ ಸಿ. ಐ.ಯಂತ ಈ ಷುನಶ್ಯೇಫನಿಗೆ ತಿಳಿಯದು. “ಏನ್ರೋ ನೀವೆಂತ ಹುಡುಗರೊ, ಶಿಮೊಗ್ಗದಲ್ಲಿ ಗೊತ್ತ ಸ್ಟೂಡೆಂಟ್ಸ್ ಏನ್ಮಾಡ್ತಿದಾರೆ ಅಂತ”. ಇತ್ಯಾದಿ ಆ ಹಲಾಲುಖೋರ ಸಿ.ಐ.ಡಿ. ಬಿಸಿ ಬಿಸಿ ಕಾಫಿ ಹೀರ್ತಾ ಕಿಚಾಯಿಸಿದ. ವೆಂಕಟ ನಾಲಿಗೆ ಸಡಿಲಬಿಟ್ಟ. ‘ಬಿಡ್ರಿ, ಬಿಡ್ರಿ, ಶೀಮೊಗ್ಗದ ಸ್ಟೂಡೆಂಟ್ಸ್‌ಗಿಂತ ನಾವೇನು ಕಮ್ಮಿಯಿಲ್ಲ’ ಎಂದ. ‘ ಸರ್ಕಾರಾನ್ನ ಸೀದ ಮುಟ್ಟೋ ದೈರ್ಯ ನಿಮಗೆಲ್ಲಿ ಬಂತಪ್ಪ’ ಎಂದು ಸಿ.ಐ.ಡಿ. ಹಂಗಿಸಿದ. ಆಗ ವೆಂಕಟ ನಮ್ಮ ರಾತ್ರೆಯ ಸಾಹಸವನ್ನ ಕೊಚ್ಚಿ ಕೊಚ್ಚಿ ಇಳಿಸಿದ . ಪರಿಣಾಮ; ಪೊಲೀಸರು ನಮ್ಮನ್ನು ವೆಂಕಟನನ್ನು ಹೊಳೆ ಡಂಡೆಗೆ ಮೆರವಣಿಗೇಲಿ ಕರೆದುಕೊಂಡು ಹೊದರು. +ಆಮೇಲೆ ಊರಿಗೆ ಊರೆ ದಂಡೆ ಮೆಲೆ ಸೇರ್ತ? ಸರಿ- ನಮ್ಮ ಕೈಲಿ ಗುದ್ದಲಿ ಕೊಟ್ಟು ಪೋಲೀಸರು ‘ಮುಂಡೆ ಮಕ್ಕಳ್ರ ನೀವೇ ಅಗೀರಿ’ ಎಂದರು. ನಾವು ಬಿಸಿಲಿನಲ್ಲಿ ಮರಳನ್ನು ಅಗೆದೂ, ಅಗೆದೂ ಬಚ್ಚಿಟ್ಟಿದ್ದ ಪೋಸ್ಟ್ ಡಬ್ಬನ ಹೊರಕ್ಕೆ ತೆಗೆದೆವು; ಎಲ್ಲ ಜನರ ಕಣ್ಣೆದುರು ಅದನ್ನ ಮೆರವಣಿಗೇಲಿ ಹೊತ್ಕೊಂಡು ಹೋಗಿ ಪೊಸ್ಟ್ ಆಫೀಸಿನಲ್ಲಿ ಇಟ್ಟೆವು. ಅಷ್ಟಕ್ಕೇ ಮುಗೀತ? ಪೊಲೀಸರು ನಮ್ಮನು ಲಾರೀಲಿ ಕೋರಿಸು ಸಕ್ರೇಬೈಲಿನ ಕಾಡಿನಲ್ಲಿ ಬಿಟ್ಟುಬಂದ್ರು. ನಾವು ಹರಿ ಹರೀಂತ ನಡೆದೂ ನಡೆದೂ ದಾರೀ ಮೇಲೆ ಸಿಕ್ಕ ಅಮಟೆ ಗಿಮಟೆ ತಿಂದುಕೊಂಡು ಮಾರನೆ ದಿನ ಊರು ಸೇರಿದ್ವಿ. +ನಾನಿವನ್ನೆಲ್ಲ ಕೋಪದಿಂದ ನೆನಪಿಸಲು ಪ್ರಯತ್ನಿಸಿದರೋ ನಗು ಬರಲು ತೊಡಗಿಡ್ದರಿಂದ ವೆಂಕಟ ಚೀಲವನ್ನು ಕೆಳಗಿಟ್ಟು ಕೈ ತಟ್ಟಿ ಕುಣಿದು ನಕ್ಕ. ‘ನೀನೊಬ್ಬ ಹಲ್ಕ ಚಿರಂಜೀವಿ ಕಣಯ್ಯ’ ಎಂದೆ. ಫೇಲ್ ಆಗಿ ನನ್ನ ಕ್ಲಾಸ್ಮೇಟೂ ಅದವ. ಆಗಲೇ ಅವನಿಗೊಂದು ಜಗಳಗಂಟಿ ಹೆಂಡತಿಯು ಇತ್ತು. ಹಳ್ಳಿಯಿಂದ ಸ್ಕೂಲಿಗೆ ಬರುವಾಗ ಆರತಿಗೋ ಅಕ್ಷತೆಗೋ ಅವಳನ್ನೂ ಕರೆದುಕೊಂಡು ಬರಬೇಕಾದ ಪ್ರಮೇಯ ಒದಗಿದರೆ ಪೇಟೆ ಬೀದೀಲಿ ಇವನು ಜೋರಾಗಿ ಮುಂದೆಮುಂದೆ ಅವಳು ಇನ್ಯಾರೋ ಎನ್ನೋ ಥರ; ಅವಳು ಮಾತ್ರ ಗುಡುಗುಡು ಓಡ್ತ ರೀ ರೀ ಎನ್ನುತ್ತ ಇವನ ಹಿಂದೆ. ಎಲ್ಲೆಸ್ ಓದ್ತಿರೋ ನಮಗೆಲ್ಲರಿಗೂ ಹೀಗಾಗಿ ಗೊತ್ತು. ಇವನಿಗೊಂದು ಹೆಂಡತೀನೂ ಇದೆ ಅಂತ. ‘ಏ ಕುಂಟೆಕೋಣ’ ಅಂತ ನಮ್ಮ ಲೆಕ್ಕದ ಮೇಷ್ಟ್ರು ಬೆತ್ತದಲ್ಲಿ ಅವನಿಗೆ ಒಂದು ಸಾರಿ ಹೊಡೆಯೋಕ್ಕೆ ಷುರು ಮಾಡಿದಾಗ ;‘ಸಾರ್ ಸಾರ್ ನನಗೆ ಮದುವೆ ಆಗಿದೆ, ಹೊಡೀಬೇಡ್ರಿ’ ಎಂದು ಮುಖ ಬುಕ್ಕು ಮಾಡಿಹೇಳಿ ಮೇಷ್ಟ್ರನ್ನೂ ಎಷ್ಟು ನಗಿಸಿದ್ದ ಎಂದರೆ, ಅವರು ಸುತ್ತಿದ್ದ ಪೇಟವನ್ನ ಹುಷಾರಾಗಿ ಮೇಜಿನ ಮೇಲಿಟ್ಟು ನಗುತ್ತಾ ಮುಖ ಒರೆಸಿಕೊಂಡು ಮುಖದ ಮೇಲೆಲ್ಲ ಸೀಮೆಸುಣ್ಣ ಬಳಿದುಕೊಂಡಿದ್ದರು. ಕಪ್ಪುಮೂತಿಯ ಮೇಷ್ಟ್ರು ಹೀಗೆ ಅಕರಾಳ ವಿಕರಾಳವಾದದ್ದು ಕಂಡು ನಾವು ನಗುತ್ತಿರಲು ವೆಂಕಟ ಡಸ್ಟರ್‌ನಿಂದ ಅವರ ಮುಖ ಒರೆಸಿಹೋಗಿ ನಮ್ಮನ್ನೆಲ್ಲ ಮತ್ತಷ್ಟು ನಗಿಸಿ ತಿರುಗಿ ಮೇಷ್ಟ್ರು ಹೊಡೆಯಲು ಬಂಡಾಗ ಮೇಜಿನಡಿ ನುಸುಳಿದ್ದ. “ಬಾಸುಂಡೆ ಬಂದ್ರೆ ಹೆಂಡತಿಗೆ ಗೊತ್ತಾಗತ್ತೆ-ಬೇಡ್ರೀ” ಎಂದು ಕೈಮುಗಿದ. ಸದಾಸೊಂಟದ ನೋವಿನ ಮೇಷ್ಟ್ರು ಬಗ್ಗಲಾರದೆ ಅವನ ಅಂಡಿಗೆ ಒದ್ದು. ‘ಏಳೋ ಹಡಬೇ ಮುಂಡೇ ಗಂಡ’ ಎಂದಿದ್ದರು. ಇಂಥ ವೆಂಕಟ ನನ್ನನ್ನು ಸಿಟ್ಟಾಗುವುದು ದುಸ್ಸಾಧ್ಯವೆಂಬಂತೆ ನಗಿಸುತ್ತಿದ್ದರೂ ತನ್ನ ಸ್ವಂತ ಮಗನನ್ನು ಜವಾಬ್ದಾರಿಯ ಅರಿವಿಲ್ಲದಂತೆ ಬೆಳೆಸಿದೆನೆಂದು ನಾನವನನ್ನು ಸೀರಿಯಸ್ಸಾಗಿ ‘ನೀನೊಬ್ಬ ಪಲಾಯನವಾದಿ. ಭೋಳ್ಳೇಶಂಕರ, ಬೆನ್ನೆಲುಬಿಲ್ಲದ ನಾಮರ್ಧ ಇತ್ಯಾದಿ ಬಯ್ಯಲು ಪ್ರಯತ್ನಿಸಿದೆ. +“ಯಾರು ಹಠದಲ್ಲಿ ಸಾದಿಸಿದ್ದಾದರೂ ಏನಪ್ಪ? ಬಾ ಅಭ್ಯಂಜನ ಮಾಡಿಸಿ ನಿನ್ನ ಸೊಕ್ಕನ್ನೆಲ್ಲ ಇಳಿಸ್ತಿನಿ.’ +ವೆಂಕಟ ದಾಪುಗಾಲಲ್ಲಿ ನಡೆಯಲು ಶುರುಮಾಡಿದ-ಬಾ ಮಾಡಿಸ್ತೀನಿ ಎನ್ನುವ ಹುಡುಗನ ಥರ . +* +* +* +‘ನಿಲ್ಲೋ’ ಎಂದೆ. ನಿಜವಾಗಿಯೂ ಅವನಿಗೆ ನಾನು ಹೇಳುವುದಿತ್ತು; ನಿನ್ನನ್ನು ನಾನು ಅಲಕ್ಷಿಸಿದೆ ಮಾರಾಯ. ಅಗೀಗ ಊರಿಗೆ ಬಂದಾಗಲೂ ನಿನ್ನನ್ನು ನಾನು ನೊಡಲಿಲ್ಲ. ಇವತ್ತು ಅಕಸ್ಮಾತ್ ಸಿಕ್ಕಿದ್ದರಿಂದ ನನ್ನನ್ನು ಹೀಗೆ ಬಿಚ್ಚುತ್ತಿರಿವಿ. ಆದರೂ ಈ ಆಟ ಕ್ಷಣಿಕವೆಂದು ನಾನು ಬಲ್ಲೆ. ನಾನು ಒಣಗುತ್ತಿರುವೆ. ನಿನ್ನ ಈ ಹಡೆಯೂ ಅಭ್ಯಾಸಗತವಿರಬಹುದು. ನನ್ನಲ್ಲಿ ಅರ್ಥವಾಗದೊಂದು ಕಳವಳ ಹುಟ್ಟಿಕೊಂಡಿದೆ. ಏನೂ ಬೇಕೆನಿಸುವುದಿಲ್ಲ. ಈಚೆಗೆ ಬರೆಯುವುದಕ್ಕೂ ಏನೂ ಹೊಳೆಯುವುದಿಲ್ಲ, ಬಾಯಿ ಬಿಟ್ಟರೆ ದೊಡ್ಡ ದೊಡ್ಡ ಮಾತುಗಳು ಉರುಳುತ್ತವೆ. ಎದುರಿನ ತಲೆಗಳು ತೂಗುತ್ತವೆ. ಈ ನಾಟಕ ಮುಗಿದದ್ದೇ ಭಣ ಭಣ ಎನ್ನಿಸುತಿದೆ. ನಾನು ಏನ್ನೂ ಯಾಕೆ ಕಾಣುತ್ತಿಲ್ಲ? ನಿನಗೆ ಕಾಣುತ್ತದೋ, ಅಥವಾ ಕಂಡವನಂತೆ ನಟಿಸುತ್ತಿದೆಯೋ, ನಿನ್ನ ಈ ನಿರಹಂಕಾರ ಪೋಜಿನದು ಅಲ್ಲವೆ. ಅಥವಾ ನಾನು ಬಾಲ್ಯದಲ್ಲಿ ಕಂಡುಂಡ ನಿನ್ನನು ಬರೆಯದೇ ಏನೇನೋ ದೊಡ್ಡದನ್ನೆಲ್ಲ ಬರೆಯಹೋಗಿ ನಾನಿಂತ ಖಾಲಿ ಡಬ್ಬಿಯಾಗಿರುವುದೆ? +ಕೇದಿಗೆಯ ವಾಸನೆ ಎಂದು ವೆಂಕಟ ಸುತ್ತ ಮುತ್ತ ಮೂಗರಳಿಸಿ ಗಾಳಿಯನ್ನು ಮೂಸಿದ- ಕತೆಯಲ್ಲಿ ರಾಕ್ಷಸರು ‘ನರಮನುಷ್ಯರ ವಾಸನೆ’ ಎನ್ನುವಂತೆ. ನಾನಿನ್ನೂ ಬಾಯಿಬಿಡದೆ ಅವನನ್ನು ನಿಲ್ಲಿಸಿಕೊಂಡಿದ್ದೆ. ಚೀಲವನ್ನೆಲ್ಲ ಇಟ್ಟು “ನನ್ನ ಮಗಳು ಗಂಗಾಗೆ ಕೇದಿಗೆಯ ಜಡೆಯೆಂದರೆ ಇಷ್ಟ ಕಣೋ” ಎಂದು ಪೊದೆಗಳ ನಡುವೆ ಕಣ್ಮರೆಯಾದ. ಇದು ಕೇದಿಗೆಯ ಕಾಲವೇ ನನಗೆ ತಿಳಿಯದು. ಸ್ವಲ್ಪ ಹೊತ್ತಾದ ಮೇಲೆ ಬರಿಗೈಯಲ್ಲಿ ಅವನು ಕಾಣಿಸಿಕೊಂಡ. ‘ಎಲ್ಲಿ ಮುಚ್ಚಿಟ್ಟುಕೊಂಡಿದ್ದೆಯೊ ದರಿದ್ರದ್ದು’ ಎಂದು ಶಪಿಸಿದ. ‘ನಡಿ’ ಎಂದ. +ಎದುರಿಗೊಬ್ಬರು ಸಿಕ್ಕಿ ನಿಲ್ಲಿಸಿದರು. ಕಿವಿಯಲ್ಲಿ ಹರಳಿನ ಒಂಟಿ ಹಾಕಿಕೊಂಡು ತಲೆಯ ಮೇಲೊಂದು ವಸ್ತದ ಗಂಟು ಹೊತ್ತವರು. ಕವಳ ಉಗಿಯುತ್ತ ಹೇಳಿದರು: +“ ಏನೋ ಜೊಯಿಸ, ನಿನ್ನ ಮನೆ ಮೇಲಾಗೆ ಬಂದೆ ಮಾರಾಯ. ನಿನ್ನ ಹೆಂಡತಿ ನನ್ನ ನಿಲ್ಲಿಸಿ ನಿನಗೆ ಮಹಾಮಸ್ತಕಾಭಿಷೇಕ ಮಾಡಿದಳೊ. ಬೆಳಿಗ್ಗೆಯಿಂದ ನೀನು ನಾಪತ್ತೆಯಂತೆ. ಪೇಟೆಗೆಂದು ಹೊದವರು ಬಂದೇ ಇಲ್ಲ ಎಂದು ಶುರುವಾಯ್ತು ಸಹಸ್ರನಾಮ ಮಾರಾಯ…” +ತಲೆಯ ಮೇಲಿಂದ ಅವರ ಹೊರೆಯನ್ನು ಇಳಿಸಿಕೊಂಡು ವೆಂಕಟ ಹೇಳಿದ: +“ ಹಿತ್ತಲಲಿ ಸಿಕ್ಕಳೋ? ಮುಂಬಾಗಿಲಲ್ಲೋ ನನ್ನ ಮಡದಿ ನಿಮ್ಮನ್ನು ಎದುರ್‌ಗೊಂಡ ಕ್ಷೇತ್ರಜ್ಞಾನ ಮಾಡಿಸುವಿರಾ ನಾರದ ಮುನಿಗಳೇ?” +“ ಯಾಕೆ. ಹಿತ್ತಲಲ್ಲಿ” ಅವರು ಕವಳವನ್ನು ಬಾಯಿಯಿಂದ ಪೂರ್ಣ ಉಗಿದು ಪಾಣಿಪಂಚೆಯಿಂದ ಬಾಯೊರೆಸಿಕೊಂಡು ನಗಲು ಪ್ರಾರಂಭಿಸಿದರು- ಅಲ್ಲಿ ಇಲ್ಲಿ ಉದುರಿದ ಕೆಂಪು ಹಲ್ಲುಗಳನ್ನು ತೊರಿಸುತ್ತ. +“ಹಾಗಾದರೆ ಹಿತ್ತಲಲಿ ಬೆಳೆದ ಅಗತೆ ಸೊಪ್ಪಿನ ಪಲ್ಯ ಮಾಡಿರುತ್ತಾಳೆ. ನನ್ನ ಹೆಂಡತಿ ದನದ ಮುರವನ್ನೂ ರುಚಿಯನ್ನಿಸುವಂತೆ ಬೇಯಿಸಬಲ್ಲ ಪುಣ್ಯಾತ್ಮೆ. ಈ ಶುಭದ ನುಡಿಗಾಗಿ ನಾವು ಕೃತಜ್ಞರು ಮುನಿವರ್ಯ.” +“ ಆದರೆ ಅವಳ ಬಾಯಿ ಮಾತ್ರ ಮಾರಾಯ.” ಎನ್ನುತ್ತ ಮುಂದೆ ಹೊದವರು ತಿರುಗಿ ನಿಂತು ಗಟ್ಟಿಯಾಗಿ ಹೇಳಿದರು. +“ ಅಲ್ಲೋ ಜೊಯಿಸ. ನಿನ್ನ ಮಗ ಸುಬ್ಬ ಅದ್ಯಾಕೆ ಹಾಗೆ ಬುಸಬುಸ ಅಂತ ಇರ್ತಾನೊ. ಮಾತಾಡ್ಸಿದ್ರೆ‘ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಹೊಗ್ರಿ ಹೊಗ್ರಿ’ ಎಂದ. ‘ಆಗ್ಲಯ್ಯ ಉರಿಮೂತಿ ಸುಬ್ಬ’ ಎಂದು ನಾಲಿಗೆ ತುದೀಲಿ ಬಂದಿದ್ದನ್ನು ನುಂಗಿಕೊಂಡು ನನಗ್ಯಾಕೆ ಬೇರವರ ಉಸಾಬರಿ ಅಂತ ನಡೆದೆ. ಊರು ಮನೆ ಅಂತ ನಾವು ಅನ್ಕೊಂಡರೆ ನಿನ್ನ ಮಗ ಮಾತ್ರವಲ್ಲ ಕಾಲೇಜಿಗೆ ಹೋದವುಗಳ ಹಣೇಬರಾನೆ ಇಷ್ಟು ಕಣಯ್ಯ.” +ತಲೆ ಹೊರೆಯನ್ನು ಬ್ಯಾಲನ್ಸ್ ಮಾಡಿಕೊಂಡು ಕೈ ಬೀಸಿ ನಾರದರು ನಡೆದುಬಿಟ್ಟರು. ವೆಂಕಟ ‘ಹಾ ಸರಿ’ ಎಂದು ನನ್ನನ್ನು ಬಂದು ಸೇರಿಕೊಂಡ. ಏನೂ ಆಗದವರ ಥರ ನಡೆಯತೊಡಗಿದ. ಅವನದು, ಹಂಸಪಾದ. ಅರೇ ಆಸಾಮಿ ಎಂದು ಕೊಂಡೆ. ಅವನ ವೈವಾಟೆಲ್ಲ ಕಲಸುಮೇಲೊಗರವೆಂದು ನನಗೆ ಖಾತ್ರಿಯಾಗಿತ್ತು. ಆದರೂ ಎಗ್ಗಿಲ್ಲದಂತೆ ಇರುತ್ತಾನಲ್ಲ- ಇವನೇನು ಪಿರ್ಕಿಯೊ ಅಥವಾ ಆಷಾಢಭೂತಿಯೋ ಅಥವಾ ಕುರುಚಲು ಗಡ್ಡದ ಅವಧೂತನೊ? +“ಎಷ್ಟು ಮಕ್ಕಳಯ್ಯ?” ಎಂದೆ. +“ ನಾಲ್ಕು. ಮೂರನೆಯವನೇ ಮಗರಾಯ. ಕೇಳಬೇಡ- ಹೆಣ್ಣು ಮಕ್ಕಳಿಗಿನ್ನೂ ಮದುವೆಯಾಗಿಲ್ಲ. ಹಾಗಾಗಿ ಮೊದಲೇ ಚಾಮುಂಡಿಯಾಗಿದ್ದ ಹೆಂಡತಿ ಈಗ ಕಾಳಿಯಾಗಿದ್ದಾಳೆ. ನಾನು ಹೇಗೂ ಅಮ್ಮನವರ ಭಕ್ತನಲ್ಲವೆ? ಮಹಾಕಾಳಿಯ ಬೈಗುಳವೂ ಪ್ರಸಾದವೆಂದು ತಿಳಿದು ಇಹಲೊಕದ ವಾಸನೆಯಿಂದ ಇನ್ನೂ ಪುಳಕಿತನಾಗಿರುವೆ.” +ಯಕ್ಷಗಾನದ ಧಾಟಿಯಲ್ಲಿ ವೆಂಕಟ ಕೊಟ್ಟ ಉತ್ತರದಿಂದ ನನಗೆ ಕಿರಿಕಿರಿಯೇ ಆಯಿತು. ಯಾಕೆ ಇಂಥವನು ಮಕ್ಕಳನ್ನು ಹುಟ್ಟಿಸೊದು? ದಾರಿಹೊಕರೆಲ್ಲರ ಬಾಯಿಗೆ ಬೀಳುವಂತೆ ಬದುಕೊದು? ಮಾರ್ಕ್ಸ್ ಹೇಳುವ ವಿಲೇಜ್ ಈಡಿಯಸಿಯ ಇಂಥವರಿಂದಾಗಿಯೇ ಈ ದೇಶ ಏನೂ ಬದಲಾಗದೆ, ಇತ್ಯಾದಿ ಇತ್ಯಾದಿ ಅಂದಿಕೊಂಡೆ. ಜಡತ್ವದ ಪರಮ ಸ್ಥಿತಿಯಲ್ಲಿ ಬದುಕುತ್ತಿರುವವರನ್ನೆಲ್ಲ ಸಂಕೇತಿಸುವಂತೆ ವೆಂಕಟ ನನಗೆ ಕಂಡ. ಈ ದೇಶ ಎಂದೂ ಬದಲಾಗುವುದೇ ಇಲ್ಲವೇನೊ ಎಂದು ಈಚೀಚೆಗೆ ಗೆಳೆಯರ ಜೊತೆ ಮಾತಾಡುವಾಗ ಕಳವಳ ಪಡುವ ನಾನು ನನ್ನ ಧೊರಣೆಯನ್ನು ಆದಷ್ಟು ಸೀರಿಯಸ್ಸಾಗಿ ವೆಂಕಟನಲ್ಲಿ ನಿವೇದಿಸಿಕೊಳ್ಳಲು ಪ್ರಯತ್ನಿಸಿದೆ. ಅವನೇನು ಕಿವಿಗೊಡುವ ಆಸಾಮಿಯೆ? +“ಮಳೆಯೇ ಬಂದಿಲ್ಲೊ, ಮುಂದಿನ ಡಿಸೆಂಬರಿನಲ್ಲಿ ಮಾವಿಗೆ ಹೂವು ಕಚ್ಚಿ ಕೊಳ್ಳುವುದೋ ನೋಡಬೇಕೋ, ಹೊದವರ್ಷ ಒಂದು ಮಿಡಿಯೂ ಹತ್ತಲಿಲ್ಲೋ.” +“ನೊಡು, ಆ ಮರದ ತುಂಬ ಗಿಣಿಗಳು ಹಿಂಡುಕಟ್ಟಿ ಬರುವುದುಂಟೊ.” +“ಅದು ನವಿಲಿನ ಗುಡ್ಡವೊ, ಅಲ್ಲೊಂದು ಗುಹೆಯುಂಟೊ. ಮಕ್ಕಳಿಗೆ ಮದುವೆಯಾದದ್ದೇ ನಾನಲ್ಲಿ ಹೊಗಿ ಇದ್ದು ಬಿಡುವೆನೊ.” +“ಎಷ್ಟು ಚೆಂದ ಅಲ್ಲಿಂದ ಸುತ್ತ ನೊಡಲಿಕ್ಕೆ ಅಂತೀಯ? ಪೆನ್‌ಶನ್‌ನನ್ನು ಹೆಂಡತಿಗೆ ಕೊಟ್ಟು ಬಿಡುವೆ- ಆಮೇಲೆ ಅಲ್ಲಿದ್ದು ಬಿಡುವೆನೊ.” +ಇತ್ಯಾದಿ ವಟಗುಟ್ಟುತ್ತಲೇ ನನ್ನನ್ನು ಕೇಳಿಸಿಕೊಂಡ. ಈ ಬಗೆಯ ವೆಂಕಟನ ಪ್ರತಿಕ್ರಿಯೆಗಳ ನಡುವೆ ನಾನು: +“ ರಾಜಕೀಯವೆಂದರೆ ಏನು. +ಜೀವಂತಿಕೆಯ ಲಕ್ಷಣ ಬದಲಾವಣೆ. +ಯಾವ ದಿಕ್ಕಿನಲ್ಲಿ ಬದಲಾವಣೆ? ಉಳ್ಳವರ ದಿಕ್ಕಲ್ಲೋ? ಇರದವರ ದಿಕ್ಕಲ್ಲೋ? ಇದನ್ನು ಮಾಡಲು ಯಾಕೆ ಹಠದ ಅಗತ್ಯವುಂಟು? +ನಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಪ್ರಕೃತಿಯನ್ನೂ, ಉಳಿದ ಜನರನ್ನೂ ಬದಲಾಯಿಸಬೇಕೆಂಬ ಹಠವೇ ಎಲ್ಲ ರಾಜಕೀಯದ ಮೂಲದಲ್ಲಿರುವುದು. ವಿಜ್ಞಾನದ ಮೂಲದಲ್ಲಿರುವುದು. +ಧಾರ್ಮಿಕ ಕ್ರಿಯೆಗಳ ಮೂಲದಲ್ಲೂ ಇರುವುದು. ಅದೂ ಕೂಡ ರಾಜಕಾರಣವೇ- ಶಾಶ್ವತದಲ್ಲಿ ನಡೆಯುವ ರಾಜಕಾರಣ… +ನಿನ್ನ ಹೆಂಡತಿ ನಿನ್ನ ಮಕ್ಕಳು ನೀನು ಯಾವುದನ್ನು ಸರಿಯೆಂದು ತಿಳಿದಿದ್ದೆಯೋ ಆ ದಿಕ್ಕಲ್ಲಿ ನಡೆಯಬೇಕೆಂದು ನೀನು ಇಷ್ಟಪಡುವುದಿಲ್ಲವೆ? ಇರುವುದು ಇದ್ದಂತೆಯೇ ಇರಲಿ ಎಂಬುದೂ ಕೂಡ ರಾಜಕೀಯವೇ. +ಯಾಕೆ ಗೊತ್ತ? ಬದಲಾಗೋದು ಪ್ರಕೃತಿಯ ಲಕ್ಷಣ. ಅದನ್ನ ಕೆಲವರು ತಮ್ಮ ಹಿತಕ್ಕಾಗಿ ತಡೆಯೋಕೆ ಪ್ರಯತ್ನಿಸುತ್ತಾರೆ. ಅದು ಹೆಚ್ಚು ಕಾಲ ನಡೆಯಲ್ಲ. +ಎಲ್ಲ ಬಿರಿಯುತ್ತೆ. ಸಿಡಿಯುತ್ತೆ. ಯಾವುದೂ ಇರುವಂತೇನೂ ಇರಲ್ಲ. ಆದ್ದರಿಂದಲೇನೇ ಒಂದು ನಮಗೆ ಸರೀಂತ ಕಂಡ ಸುವ್ಯವಸ್ಥೆಗಾಗಿ ಪ್ರಯತ್ನಿಸ್ತಾನೆ ಇರಬೇಕು.” +ಹೀಗೆಲ್ಲ ಹೇಳುತ್ತ ನಡೆದೆ. +“ ಎಲ್ಲ ಅವರವರ ಜಾಯಮಾನ.” +ಹೀಗೆಂದು ವೆಂಕಟ ಚೀಲವನ್ನು ಕೆಳಗಿಟ್ಟು ಕೈಮುಗಿದು ಆಕಾಶ ನೋಡ್ತ. +“ನಿಮ್ಮಂಥ ಧೀರರಿಗೆ ನಮೋನ್ನಮಃ. ಈ ಹಡೆ ವೆಂಕಟನನ್ನ ನಿಮ್ಮ ಪೈಕಿಯವರು ಕ್ಷಮಿಸಿಬಿಡಲಿ. ಧೀರರಿಗೆ ತಲೆ ಬಿಸಿಯಾದಾಗ ನನ್ನಂತವನ ಅಭ್ಯಂಜನದ ಸೇವೆ ಬೇಕೆ ಬೇಕಲ್ಲ.” ಎಂದು ಬಾಗಿ ತನ್ನೆದುರು ತೆಲೆಯಿದೆಯೆಂದು ನಟಿಸುತ್ತ ಅದನ್ನು ರಪರಪನೆ ತಿಕ್ಕಿದ. +“ಥತ್ ನಿನ್ನ” ಎಂದೆ. ನನ್ನ ಕೋಪ ನಿಜವೆಂದಿಕೊಂಡು ವೆಂಕಟ, +‘ಅಲ್ಲೋ ಅನಂತು. ಕೈ ಹಿಡಿದ ಹೆಂಡತೀನ್ನೇ ಬದಲಾಯಿಸಕ್ಕಾಗಲ್ಲ. ಇನ್ನು ಪ್ರಪಂಚಾನ್ನ ಬದಲಾಯಿಸೋದು ಸಾಧ್ಯವೇನೋ? ನಾನು ಈಗ ಇದೀನಿ. ಮುಂದಿನ ಕ್ಷಣ ಇರ್ತೀನೀಂತ ಏನು ಗ್ಯಾರಂಟಿ?” ಎಂದು ಚೀಲವನ್ನು ಎತ್ತಿಕೊಂಡು ಹೊರಟ. ಮೂರು ಅಡಿಕೆ ಮರಗಳನ್ನು ಇಟ್ಟು ಮಾಡಿದ ಸಾರವನ್ನು ನಾವು ದಾಟುವುದಿತ್ತು. “ಜೋಕೆ, ನೀನು ಮುಂದೆ ಹೋಗು” ಎಂದು ವೆಂಕಟ ನಿಂತ ನಾನು ಅಂಜುತ್ತಂಜುತ್ತ ಸಾರದ ಮೇಲೆ ನಡೆದು ಬೇಲಿ ಹಾಯ್ದು ವೆಂಕಟನಿಗೆ ಕಾದೆ. ಮಾ‌ಅತಿನಲ್ಲಿ ವೆಂಕಟ ಅಂತೂ ನನ್ನ ಕೈಗೆ ಸಿಕ್ಕನಲ್ಲ ಎಂದು ಹೇಳಿದೆ: +“ವೆಂಕಟ ನಾವು ಮುಂದಿನ ಕ್ಷಣ ಸಾಯಬಹುದು, ಹಾಗೇನೆ ಸಾಯ್ದೇನೆ ಇರಬಹುದು. ನಾವು ಸತ್ತರೂ ಬೇರೆಯವರು ಇರ್ತಾರಲ್ಲ.” +ಒತ್ತಾಯ ಮಾಡಿ ವೆಂಕಟನ ಕೈಯಿಂದ ಚೀಲ ಇಸಕೊಂಡೆ. ಗದ್ದೆಯಂಚಲ್ಲಿ ನಡೆಯುತ್ತ ವೆಂಕಟ ಹೇಳಿದ: +“ ಸಾರ ದಾಟೋಕೆ ಮುಂಚೆ ನಾವಿದ್ದದ್ದು ಒಂದು ಪಂಜುರ್ಲಿ ವನವೋ ಅನಂತು. ಆ ಪಂಜುರ್ಲಿಗೆ ಮೂಗಿನ ಮೇಲೆ ಕೋಪವಂತೆ! ಬಹಳ ಹಿಂದೆ ಒಂದು ಸಾರಿ ನಾನು ನನ್ನಷ್ಟಕ್ಕೇ ಹಾಡಿಕೋತ ಆ ವನದಲ್ಲಿ ಬರ್ತಿದ್ದೆ. ಸಾಯಂಕಾಲದ ಹೊತ್ತು. ಅದೇನೋ ಪರಪರಾಂತ ದರಗು ಮೆಟ್ಟಿದ ಶಬ್ಧವಾಯ್ತು. ಬೆನ್ನ ಹಿಂದೆ. ಏನೂಂತ ತಿರುಗಿ ನೋಡಿದೆ. ಮಾರಾಯ, ಒಂದು ಹುಲಿ. ಕಣ್ಣುಕತ್ತಲೆ ಕಟ್ಟಿ ಕುಸಿದೇ ಬಿಟ್ಟೆ. ಎಚ್ಚರವಾದಾಗ ನೋಡ್ತೀನಿ; ಪಂಚೇಲಿ ನಾನು ಒಂದ ಮಾಡಿಕೊಂಡುಬಿಟ್ಟಿದೀನಿ.” +“ಯಾಕಿದನ್ನ ನನಗೀಗ ಹೇಳ್ತಿರೋದು?” +“ಛೆ. ಛೆ, ಯಾಕಿಲ್ಲ. ನಾನೊಬ್ಬ ದೊಡ್ಡ ಪುಸಕಾನು ಪುಕ್ಕ ಕಣೋ ಅನಂತು. ಪಂಜುರ್ಲಿ ಮೈಮೇಲೆ ಬಂದಂಗೆ ನೀನು ಮಾತಾಡ್ದಾಗ ನನಗೇನು ಹೇಳಬೇಕು ಗೊತ್ತಾಗಲ್ಲ. ನನ್ನ ಹೆಂಡತೀಗೆ ಹೇಳ್ತೀನಿ; ‘ನೋಡೇ ನಾನು ಇರೋದೆ ಹೀಗೆ. ಏನು ಮಾಡ್ಲಿ ಹೇಳು.’ ಅವಳ ಬಾಯಿ ಕೆಟ್ಟದು ಅಷ್ಟೆ. ನನಗೆ ಹೊಟ್ಟೆ ನೋವು ಬಂದ್ರೆ ಅವಳು ಮೈಲಿಯಾದರೂ ನಡೆದು ಆ ಸೊಪ್ಪು ಈ ಸೊಪ್ಪು ತಂದು ತಂಬಳಿ ಮಾಡಿ ಕೊಡ್ತಾಳೆ… ಹುಲೀನ್ನ ಕಂಡು ಹೆದರಿದೆ ಯಾಕೆ ಗೊತ್ತ? ಅದನ್ನು ಹಿಡಿದು ಕೂರಿಸಿ ಅಭ್ಯಂಜನ ಮಾಡಿಸೋದು ಹೇಗೆ ನನಗೆ ಗೊತ್ತಿಲ್ಲ. ಗೊತ್ತಿದ್ದಿದ್ರೆ ಅದರ ಮೀಸೆ ಹಿಡಿದು ಕೂರಿಸಿ, ಅದರ ಹಣೆಯನ್ನು ಮೃದುವಾಗಿ ಸವರಿ…” +ವೆಂಕಟ ಹೊಟ್ಟೆ ಹಿಡಿದುಕೊಂಡು ನಗಲು ಪ್ರಾರಂಭಿಸಿದ. ನಾವು ಹುಡುಗರಾಗಿದ್ದಾಗ ಅವನು ಒದೆಸಿಕೊಂಡದ್ದೆಲ್ಲ ನೆನಪಾಗಿ ನನಗೂ ನಗು ಬಂತು. ಆದರೆ ಅವನು ಹೇಳದಿದ್ದ ಮಾತುಗಳೆಲ್ಲ ಅವನ ನಗುವಿನಲ್ಲಿ ಇವೆಯೆಂದು ನನಗನ್ನಿಸಿ ನಾನು ಸೋರಿ ಬಿಡಬಹುದೆಂದು ದಿಗಿಲು ಹುಟ್ಟಿತು. ‘ ಏ ಮುಟ್ಠಾಳ, ಅಹಂಕಾರವಿಲ್ಲದೆ ಬದುಕುವುದು ಸಾಧ್ಯವೆ. ಎಂಥ ಸಾತ್ವಿಕನಿಗೂ ಅಹಂಕಾರದ ಅಗತ್ಯವಿದೆ’- ಹೀಗೆಂದುಕೊಳ್ಳುತ್ತ ವೆಂಕಟನಂಥವನನ್ನು ನಾಶ ಮಾಡದೆ ವಿದ್ಯುಚ್ಛಕ್ತಿಯಿಲ್ಲ, ಅಣೆಕಟ್ಟುಗಳಿಲ್ಲ, ಪೆನ್ಸಿಲಿನ್ ಇಲ್ಲ, ಮಾನವಿಲ್ಲ, ಮರ್ಯಾದೆಯಿಲ್ಲ, ಕಾಂದ ಉಲ್ಲಾಸವಿಲ್ಲ, ಹೆಣ್ನನ್ನು ಗೆಲ್ಲುವುದಿಲ್ಲ, ಶಿಖರವಿಲ್ಲ, ವಿಮಾನವಿಲ್ಲ, ಜೀವವಿಕಾಸವಿಲ್ಲ, ಸ್ಮೃತಿಯಿಲ್ಲ, ಉತ್ಕಟತೆಯಿಲ್ಲ, ಖುಷಿಯಿಲ್ಲ ಎಂದೆಲ್ಲ ಯೋಚಿಸಲು ತೊಡಗಿದ ನನಗೆ ಖುಷಿಯ ಬುಗ್ಗೆಯಾಗಿ ಗದ್ದೆಯಂಚಿನಲ್ಲಿ ಬರಿಗಾಲಲ್ಲಿ ನಿಂತ ವೆಂಕಟನ್ನ ಕಂಡು ತಬ್ಬಿಬ್ಬಾಯಿತು. ಅವನು ಕರುಣೆಯಿಂದ ನಗುತ್ತಿದ್ದನೆ? +“ಬೆಳೆದು ನಿಂತ ಹೆಣ್ನು ಮಕ್ಕಳಿಗೆ ಮದುವೆ ಮಾಡಿಲ್ಲ ಅಂತೀಯ. ಅವರು ಕೆಟ್ಟರೆ?” +ನನ್ನನ್ನು ಕರುಣೆಯಿಂದ ಕಾಣಬಲ್ಲ ವೆಂಕಟನನ್ನು ನೋಯಿಸಬೇಕನ್ನಿಸಿತು. +“ ನೀನೆ ಎಲ್ಲಾದರೂ ಗಂಡು ನೊಡಿಕೊಡೋ ಮಾರಾಯ. ನಾನೆಲ್ಲಿಂದ ವರದಕ್ಷಿಣೆ ತರಲೊ? ಮುತ್ತಿನಂತ ಹುಡುಗೀರು ಅವರು. ಅವರು ಯಾಕೆ ಕೆಟ್ಟಾರು? ಕೆಡೊದಾದ್ರೆ ಅದು ಅವರ ಜಾಯಮಾನ. ತಪ್ಪಿಸೋದಕ್ಕೆ ನನ್ನಿಂದ ಸಾಧ್ಯವೆ?” +ವೆಂಕಟನ ನಿಷ್ಕಪಟ ಧಾಟಿಯಿಂದಾಗಿ ನನ್ನ ಬಾಯಿ ಕಟ್ಟಿತ್ತು. ಹೇಗಾದರೂ ದುಡ್ಡು ಮಾಡು ಎನ್ನಲೆ? ಸಮಾಜ ಪರಿವರ್ತನೆಗಾಗಿ ಕ್ರಾಂತಿ ಮಾಡು ಎನ್ನಲೆ? ವೆಂಕಟ ಮುಗುಳ್ನಗುತ್ತ ಹೇಳಿದ, ಅವನ ಆಟಗಾರಿಕೆಯ ಬಿಂಕವಿಲ್ಲದಂತೆ: +“ ನಾನೊಬ್ಬ ಪೂಜಾರಿ ಕಣೊ. ಪೂಜಿಸೋದು ನನ್ನ ಜಾಯಾಮಾನ. ಕಂಡದ್ದನ್ನು ಪೂಜಿಸೋದು. ಸಿಕ್ಕ ತಲೆಯನ್ನೆಲ್ಲ ಪೂಜಿಸೋದು. ಪಂಜುರ್ಲಿ, ಬೊಬ್ಬರ್ಯ, ಜಟ್ಟಿಗ, ಸ್ಕೂಲ್ ಇನ್ಸ್‌ಪೆಕ್ಟರ್, ದಫೇದಾರ, ಅಮಲ್ದಾರ, ಈಗ ನೀನು. ಹಿಂದೆ ಭಾಷ್ಯಂ- ಈ ಪರಿಯಾಗಿ ನಾನು ಅಮ್ಮನೋರ ಪೂಜೆ ಮಾಡೋದು. ಹಾಯೋಕ್ಕೆ ಬಂದದ್ದಕ್ಕೆ ವಿರುದ್ಧವಾಗಿ ನೀನೂ ಹಾಯಲಿಕ್ಕೆ ಹೋದರೆ ಹಣಾಹಣಿಯಾಗಿ ಏನಾಗುತ್ತೆ ಹೇಳು? ಹಣೆ ಊದಿಕೊಳ್ಳುತ್ತೆ.ಅಮ್ಮ ನನ್ನ ಹೊಟ್ಟೆ ಹೊರ್ದಿದಾಳೆ- ನನ್ನ ಹೆಂಡ್ತಿ ರುಕ್ಕು ಬಾಳೆಲೆ ದೊನ್ನೆ ಮಾಡಿಕೊಡ್ತಾಳೆ. ನಾನವನ್ನ ತಲೆ ಮೇಲೆ ಹೊತ್ತುಕೊಂಡು ಹೋಗಿ ಪೇಟೇಲಿ ಮಾರಿ ಬರ್ತೀನಿ. ಇನ್ನೇನು ಸದ್ಯ ಪೆನ್‌ಶನ್ನೂ ಸಿಗುತ್ತೆ. ನಮ್ಮ ಎಂ.ಎಲ್.ಎ.ಗೆ ಮೊನ್ನೆ ಗಡದ್ದಾದ ಒಂದು ಅಭ್ಯಂಜನ ಮಾಡಿಸಿದೆ. ಕೆ.ಟಿ.ಭಾಷ್ಯಂಗೆ ಜೈಲಲ್ಲಿ ಬೆಳದಿಂಗಳು ಹೇಗೆ ಕಾಣಿಸ್ದೆ ಅಂತ ಅವರಿಗೆ ಹೇಳಿದೆ. .. ಈ ಮರ ಗಿಡಗಳು ಹೇಗೆ ದೇವರನ್ನ ಒಳಗೆ ಬಿಟ್ಟುಕೋತಾವೆ ನೋಡು. ಹಾಗೆ ಬಿಟ್ಟುಕೋಬೇಕು ನಾವೂನು. ಆದರೆ ನನ್ನಲ್ಲಿ ಇನ್ನೂ ಒಂದಷ್ಟು ಹುಳಿ ಉಳಿದಿರ್ಬೇಕು. ಇಲ್ದಿದ್ರೆ ನನ್ನ ಮಗ ಸುಬ್ಬ ಹೀಗೆ ಉರೀತಾ ಇರ್ಲಿಲ್ಲ.” +ವೆಂಕಟ ಚೀಲವನ್ನು ನನ್ನ ಕೈಯಿಂದ ಕಸಕೊಂಡ. ಆರಾಮಾಗಿ ನಡಿ ಎಂದು ನನಗೆ ಇಷ್ಟವಾದ ಹಕ್ಕಿಗಳನ್ನೆಲ್ಲ ತೊರಿಸಿದ. +“ ನಮ್ಮ ಕಣ್ಣಿಗೂ ಬೀಳೋಕೂ ಅವಕ್ಕೆ ಇಷ್ಟವಿಲ್ಲ ನೋಡು. ನಿನ್ನ ಬದಲಾವಣೇನೂ ಅವಕ್ಕೆ ಬೇಡ. ನನ್ನ ಅಭ್ಯಂಜನವೂ ಬೇಡ. ಬಾರೀ ಸೊಕ್ಕಿನ ಕೊಳ್ಳಿದೆವ್ವಗಳ ತಲೆ ಮೇಲೂ ಅವು ಪಿಚಕ್ಕಂತ ಹಿಕ್ಕೆ ಹಾಕಿ ಪುರ್ರಂತ ಹಾರಿಬಿದ್ತಾವೆ. ಅವು ಬದುಕಲಿಕ್ಕಾಗಿ ಹಡೇನೂ ಆಗಬೇಕಾಗಿಲ್ಲ. ರಣವೀರರೂ ಆಗಬೇಕಿಲ್ಲ. ಅಲ್ಲವಾ ಅನಂತು?” +ನನಗೆ ಹಸಿವಾಗುತ್ತಿತ್ತು. ಬೇಗ ಬೇಗ ಹೆಜ್ಜೆ ಹಾಕಿದೆ. ವೆಂಕಟ ಹಿಂದಿನಿಂದ ನನ್ನ ನಡಿಗೆಯನ್ನು ಅಣಕಿಸುತ್ತ ನಡೆದ- ಸ್ಕೂಲಿನ ದಿನಗಳಲ್ಲಿ ಅಣಕಿಸದಂತೆಯೇ, ಇನ್ನೂ ನಾನು ಆ ಹಿಂದಿನ ಹಸಿ ಬಾಲಕನಂತೆಯೇ ನಡೆಯುತ್ತೇನೆಯೆ? ಮುಜುಗರವಾಯ್ತು. +ಅಲ್ಲಿ ಇಲ್ಲಿ ಸುಮ್ಮನೆ ಕೂತಿರುತ್ತಿದ್ದ ಹಳ್ಳಿಯ ಜನ ಮಳೆಯಿಲ್ಲದೆ ಆತಂಕಗೊಂಡಿಡಿದ್ದರು. ‘ಜೊಯಿಸ್ರೆ ಯಾವಾಗ ಬರತ್ತೆ ಮಳೆ?” ಎಂಬ ಆಲಸ್ಯದ ಪ್ರಶ್ನೆಗೆ “ ಇನ್ನೊಂದು ವಾರ ತಡೀರಿ” ಎಂದು ಹುಸಿ ಗಾಂಭೀರ್ಯದಲ್ಲಿ ವೆಂಕಟ ಹೇಳುತ್ತಿದ್ದ. “ನಿಮ್ಮ ದೊನ್ನೆ ಕಟ್ಟೋಕ್ಕು ಬಾಳೆಲೇನೆ ಇಲ್ಲವಲ್ಲಾರಿ. ನಿಮ್ಮ ಮಂತ್ರತಂತ್ರವೆಲ್ಲ ಹಾಗಾರೆ ಬುರ್ನಾಸ?” ಎಂದು ಪ್ಯಾಂಟು ಹಾಕಿದ ಹಳ್ಳಿಯ ಯುವಕನೊಬ್ಬ ವೆಂಕಟನನ್ನು ಕೆಣಕಲು ನೋಡಿದ. “ಈಚೆಗೆ ಕಾಡಿಂದ ಮುತ್ತುಗದ ಎಲೆ ತಂದು ಹೆಣೀತಿದೀವೆ. ಹೇಗೋ ಅಂತೂ ಸಂಸಾರ ಸಾಗಬೇಕಲ್ಲ.” ಎಂದು ವೆಂಕಟ ಅವನಿಗೆ ಕೈಮುಗಿದು ಮುಂದೆ ನಡೆದ. ದನಕಾಯುವ ಹುಡುಗನೊಬ್ಬನಿಗೆ “ ಏನೋ ಚಿಕ್ಕ, ನಿಮ್ಮ ಒಡೇರ ದನ ತಪ್ಪಿಸಿಕೊಂಡಿತ್ತಂತೆ. ನಿಮಿತ್ಯಕ್ಕೆ ಬಂದಿದ್ದರು. ಮಣಿಮಂತ್ರಿಸಿ ಕೊಟ್ಟಿದ್ದೆ. ಬಂತಾ ದನ?” ಎಂದು ಕೇಳಿದ. ‘ ಬಂತು ಜೋಯಿಸ್ರೆ.’ ಎಂದು ಚಿಕ್ಕ ತನ್ನ ಪಾಡಿಗೆ ತಾನು ಕಲ್ಲಲ್ಲಿ ಆಡುತ್ತ ಕೂತ. ಇದೇ ವೆಂಕಟನ ನಿತ್ಯ ವಿಧಿಯಿರಬೇಕೆಂದುಕೊಂಡೆ. ಹಡೆಯೊಬ್ಬನ ಬಿಚ್ಚಿದ ಬದುಕು. ಮೊಳೆಯುವುದೂ ಇಲ್ಲ. ಕೊಳೆಯುವುದೂ ಇಲ್ಲ. ನಗುತ್ತಾನೆ. ನಗಿಸುತ್ತಾನೆ. ನವಿಲು ಗುಡ್ಡದ ಗುಹೆಯಲ್ಲಿ ಒಬ್ಬನೇ ಹೋಗಿ ಇರಬೇಕೆಂದು ಕನಸು ಕಾಣುತ್ತಾನೆ. ಹಾಯಲು ಬಂದದ್ದಕ್ಕೆ ಎದುರಾಗದಂತೆ ಸರಿದು ನಿಲ್ಲುತ್ತಾನೆ. ಹೆಂಡತಿಯಿಂದ ಬೈಸಿಕೊಳ್ಳುತ್ತಾನೆ. ಮುಚ್ಚಿಲ್ಲ. ಮರೆಯಿಲ್ಲ. ಹೊಟ್ಟೆಯಲ್ಲಿ ವಿಷವಿದ್ದರೆ ತಾನೆ ಹಡೆಯಲ್ಲಿ ರತ್ನವಿರುವುದು? ಸಿಟ್ಟು ಸಿಡುಕು ಅಸೂಯೆಗಳಿಲ್ಲದ ಹ್ಯಾಪ ಇವನು. ಎತ್ತಿ ಹಿಡಿದಿದ್ದ ಮುಷ್ಟಿ ಬತ್ತಿದೆಯೆಂದು ಇವನನ್ನು ನಾನು ಒಪ್ಪಬಾರದು. +ವೆಂಕಟ ಒಂದು ಮರ ತೋರಿಸಿದ. ಎಷ್ಟೊಂದು ದಪ್ಪನೆಯ ದಢೂತಿ ಮರ. “ಇದರಲ್ಲೊಂದು ವಿಶೇಷವಿದೆ. ಅದಕ್ಕೊಂದು ಕೈ ಇದೆ ನೋಡಿದೆಯ? ಅದರ ಕೈ ನೆಲ ತೋರಿಸುತ್ತಿದೆ. ಅದರರ್ಥ ನೆಲದಲ್ಲಿ ನಿಧಿಯಿದೆಯಂತೆ” ಎಂದ. ನಾನು ನಕ್ಕೆ. “ ಆಸೆ ಬುರುಕರು. ಅಗೆದು ನೋಡಿದ್ದುಂಟು. ಆದರೆ ಆ ನಿಧಿ ಈ ಪ್ರದೇಶದ ಜಟ್ಟಿಗ ಎನ್ನೋ ಭೂತಕ್ಕೆ ಸೇರಿದ್ದು. ಅಂದ ಮೇಲೆ ಅದು ಹಾಗೆ ದಕ್ಕುವುದುಂಟೆ?” ಎಂದ ವೆಂಕಟನ ಈ ಬಗೆಯ ‘ಕ್ಷೇತ್ರಜ್ಞತೆ’ ನನಗೆ ಮೋಜೆನಿಸಿತು. ತನ್ನ ಈ ಗಡಿಯ ಅಡಿ ಅಡಿಯನ್ನೂ ವ್ಯಾಖ್ಯಾನಿಸ ಬಲ್ಲವನಾಗಿದ್ದ ಈ ನನ್ನ ಬಾಲ್ಯ ಸಖ. ಅಷ್ಟಲ್ಲದೆ, ಅವನದೇ ಅದೊಂದು ತತ್ವಜ್ಞಾನ ಈ ಕ್ಷೇತ್ರದ ಹಲವು ಭೂತಗಳ ಸನ್ನಿಧಿಯಲ್ಲಿ ರೂಪುಗೊಂಡಿತ್ತು. +* +* +* +ನನಗೆ ಅದರ ಪರಿಚಯವಾದದ್ದು ಹೀಗೆ: ಒಳದಾರಿಗಳಿಗೇ ಒಳದಾರಿಗಳನ್ನು ಬಲ್ಲವನಾಗಿದ್ದ ವೆಂಕಟ ನನ್ನನ್ನು ಎತ್ತೆತ್ತಲೋ ಸುತ್ತಿಸುತ್ತ. ನಾವು ತುಳಿಯುತ್ತಿದ್ದ ಕೆರೆಕೊಪ್ಪದ ಗುಪ್ತ ಸಂಚಾರಿ ವ್ಯವಸ್ಥೆಗೂ ಶ್ರೀರಾಮಚಂದ್ರನ ವನವಾಸದ ಐತಿಹ್ಯಕ್ಕೂ ನಂಟುಗಳನ್ನು ಬೆಸೆಯುತ್ತ ನಡೆದಿದ್ದ. “ ಒಂದು ಸಾರಿ ಸೀತಮ್ಮನೋರು…” ಎಂದು ಪ್ರಾರಂಭವಾಗುತ್ತಿದ್ದ ಕಷ್ಟಕಾರ್ಪಣ್ಯಗಳ ವನವಾಸದ ಕಥೆಯಲ್ಲಿ ಅವನು ತೋರಿಸಿದ ಒಂದು ದಪ್ಪನೆಯ ಎಲೆ ಸೀತೆ ಉರಿಸಿದ ಹಣತೆಗೆ ಬತ್ತಿಯಾಗಿತ್ತು. ಎದುರಿಗಿದ್ದ ಮರದ ಮೇಲೆ ಬಿಟ್ಟಿದ್ದ ಸೀತಾಳ ದಂಡೆಯನ್ನು ರಾಮ ಕೊಯ್ದು ತಂದು ತನ್ನ ಹೆಂಡತಿಗೆ ಮುಡಿಸಿದ್ದ. “ ಅಗೋ ಅಲ್ಲಿ, ಲಕ್ಷ್ಮಣ ಬಂಡೆಯ ಮೇಲೊಂದು ಬಾಣ ಬಿಟ್ಟು ಅಂತರ್ಜಲವನ್ನು ಹೊರತಂದಿದ್ದ.” ಬಂಡೆಯಲ್ಲೊಂದು ಎರಡೂ ಕೈಗಳನ್ನು ಬೊಗಸೆಯಾಗಿ ಅದ್ದಬಲ್ಲಷ್ಟು ಕುಣಿಯನ್ನು ತೋರಿಸಿ ವೆಂಕಟ “ ಅದರ ನೀರನ್ನು ಮೊಗಿ ನೋಡೋಣ” ಎಂದ. ನಾನು ಮೊಗೆದಷ್ಟೂ ಅದ್ ತುಂಬುತ್ತಿತ್ತು. ಕುಡಿ ಎಂದ. ನೀರು ತಂಪಾಗಿ ಸಿಹಿಯಾಗಿತ್ತು. “ ಈ ನೀರಿನಿಂದ ಶ್ರೀ ರಾಮಚಂದ್ರ ಅಬಿಷೇಕ ಮಾಡಿದ ಉದ್ಬವಲಿಂಗ ಇದು.” ಎಂದು ಬಂಡೆಯ ಮೇಲೆ ಊದಿಕೊಂಡಿದ್ದ ಇನ್ನೊಂದು ಕಲ್ಲನ್ನ ತೋರಿಸಿ, ಅದರ ಮೇಲೆ ಬೊಗಸೆ ನೀರನ್ನೆತ್ತಿ ಹೊಯ್ದು ಆಮೇಲೆ ಶಿವನ ನಂದಿಯಂತೆ ಡೊಂಕು ಕಾಲಲ್ಲಿ ಕಣ್ಣುಮುಚ್ಚಿ ನಿಂತು ವೆಂಕಟ ಆಡಿದ ಮಾತುಗಳ ಸಾರಾಂಶ ಹೀಗಿದೆ: +“ ಪರಮಾತ್ಮ ಕೆಲವರಿಗೆ ಅಮ್ಮ, ಕೆಲವರಿಗೆ ಅಪ್ಪ. ಅಮ್ಮಾಂತ ತಿಳಿದೊರ ಕಣ್ಣು ಸದಾ ಅಮ್ಮನವರ ಮೊಲೆ ಮೇಲೆ. ಅದು ಹಾಲು ಹರಿಯುವ ಪೂರ್ಣಕುಂಭದಂಥ ಮೊಲೆ. ಅದನ್ನು ಕುಡಿಯೋರು ಮೊಲೆಯಿಂದ ಬಾಯಿ ಕೀಳಲೊಲ್ಲರು. ಬೇರೆ ಮೊಲೆ ಬೇಡಲೊಲ್ಲರು. ಅಪ್ಪಾಂತ ತಿಳಿದೋರು ಕತ್ತೆತ್ತಿ ದೊರೆಯ ಕಣ್ಣು ನೋಡುತ್ತಾರೆ. ಉನ್ಮತ್ತರಾಗುತ್ತಾರೆ. ನೋಡಬೇಕು ನೋಡಬೇಕು ಅಂತ ಅವರಿಗೆ ಇಡೀ ಪ್ರಪಂಚಾನ್ನ ನುಂಗೋ ರಾವು. ಕಣ್ಣಿನ ಹಸಿವು ಎಂದಾದರೂ ತೀರುತ್ತ? ಮೊಲೆಗೆ ಬಾಯಿಟ್ಟ ಕೂಸು ನಿದ್ದೆ ಹೋಗತ್ತೆ. ಮತ್ತೆ ಎದ್ದು ಹಾಲು ಕುಡಿಯುತ್ತೆ. ಕುಡಿಯೋ ಪೈಕಿ ನಾನು. ನೋಡೋ ಪೈಕಿ ನೀನು…” +“ನೋಡಿ ಗೆಲ್ಲಬೇಕೆಂಬ ಹಂಬಲದ ಆದಿಶಂಕರರಿಗೆ ಮೊಲೆ ಕುಡಿಯುವ ಷಣ್ಮುಖನಾಗಬೇಕೆಂಬ ಆಸೆ ಯಾಕೆ ಹುಟ್ಟಿತೊ. ಅರಿಯದಿದ್ದರೂ ಸೈ. ಕುಡಿಯುವುದಕ್ಕೇನು ಕಷ್ಟ. ನೋಡು ಎರೆಹುಳ ಹೇಗೆ ಕುಡಿಯುತ್ತಿರುತ್ತೆ. ಮರ ಹೇಗೆ ಕುಡಿದು ಅರಳುತ್ತೆ.” +“ಎಷ್ಟು ಕುಡಿಯೋದು. ಇನ್ನು ಸಾಕು ಅಂತ ಅಮ್ಮನೇ ಎತ್ತಿ ಕೆಳಗಿಟ್ಟರೆ ಕಣ್ಣುಬಿಟ್ಟು ಅರಿಯಲೂಬಹುದು. ಅದು ಅಮ್ಮನ ಮರ್ಜಿಗೆ ಬಿಟ್ಟದ್ದು. ಅಮ್ಮ ಒಂದು ಮೊಲೆಯಿಂದ ಕಿತ್ತು ಇನ್ನೊಂದಕ್ಕೆ ಎತ್ತಿ ಇಟ್ಟುಕೊಳ್ಳೋದೂ ಉಂಟು. ಆಗ ಭಯವಾಗುತ್ತೆ. ಈ ಮೊಲೆ ಜೀವನವಾದರೆ, ಆ ಮೊಲೆ ಸಾವು. ಎರಡರ ನಡುವೆ ಅವಳ ಕಣ್ಣುಗಳನ್ನು ಕೆಲ ಪುಣ್ಯಾತ್ಮರು ಕಾಣುವುದುಂಟು. ಕಿರುಚಿಕೊಂಡು ಅಳದೇ ಇದ್ದರೆ.” +“ಹುರಿಮೀಸೆಯ ಜಬರುದಸ್ತಿನ ಪೌರುಷ ನನ್ನಂಥವರಿಗೆ ಸಲ್ಲದು. ಈ ಲೋಕಕ್ಕೆ ನನ್ನದು ಹಡೆ ಸೇವೆ ಎಂದೇ ಇಟ್ಟುಕೊ. ನಿನಗೀಗ ಉಂಡು ಮಲಗೋ ಆಸೆ. ಮಕ್ಕಳು ಕುಡಿಯೋವಾಗ ತಾಯೀನ ಒದೀತಾವೆ. ನಿನ್ನ ಆಸೆಗೆ ತಕ್ಕಂತೆ ಲೋಕಾನ್ನ ಜಗ್ಗಬೇಕೆಂಬ ನಿನ್ನ ಪೌರುಷದ ಹಠಕ್ಕೆ ಮುಂಚೆ ಹೊಟ್ಟೆ ಒಂದಿಷ್ಟು ತಂಪಾಗಬೇಕೊ ಬೇಡವೊ. ಆ ತಂಪು ನಿನಗೆಲ್ಲಿಂದ ಸಿಕ್ಕೋದು? ಅಮ್ಮನ ಹಾಲಿನಿಂದ. ನನ್ನ ಅಭ್ಯಂಜನದಿಂದ.” +ಭಾಗವತರ ಆಟದ ಋಷಿಯಂತೆ ವೆಂಕಟ ಮಾತಾಡಿ, ತನ್ನ ಮಾತಿನ ಗುಂಗಿನಿಂದ ತಾನೇ ತತ್ಪರನಾಗಿ ನಿಂತು ನಸ್ಯವೇರಿಸಿದ. “ಇದು ಬೀಡಿ ಬಿಟ್ಟ ಮೇಲೆ ಹಚ್ಚಿಕೊಂಡ ಚಟ” ಎಂದ. “ನಿನ್ನ ಕಂಡದ್ದೇ ನನ್ನ ಹೆಂಡತಿಯ ಬಯ್ಯೋ ಬಾಯಿಗೆ ಬೀಗ ಬಿದ್ದಂಗೆ ಆಗತ್ತೋ” ಎಂದು ನಗುತ್ತ ಸುಖಿಸಿದ. ತನ್ನ ಮಾತಿಗೆ ತಾನೆ ತಲೆದೂಗುತ್ತ. ಡೊಂಕು ಕಾಲುಗಳನ್ನು ಅತ್ತ ಇತ್ತ ಇಡುತ್ತ ನಡೆದ. ಅವನದು ಮಂಡಿಯನ್ನುಜ್ಜುವ ಕಾಲುಗಳು.- ಎಂದೇ ಅವರು ದೂರ ದೂರ ಕಾಲುಹಾಕಿ ನಡೆಯುವುದು. +* +* +* +* +ಎದುರೊಂದು ಮನೆಯಿತ್ತು. ನಾಡಹೆಂಚಿನ ಹಾಳುಸುರಿಯುತ್ತಿದ್ದ ಮನೆ. ಸುಣ್ಣ ಹೊಡೆಯದೆ, ಸಾರಿಸದೆ, ರಂಗವಲ್ಲಿಯಿಕ್ಕದೆ ಬಿಕೊ ಎನ್ನುತ್ತಿದ್ದ ಮನೆ. “ಶೇಷಣ್ಣಂದು. ಅವನಿಗೆ ಸಖತ್ ಖಾಯಿಲೆ. ನೋಡಿ ಬರೋಣ- ಬಾ” ಎಂದು ವೆಂಕಟ ಬಾಗಿಲಲ್ಲೆ ಚೀಲವಿಟ್ಟು, ಕತ್ತಲಿನ ನಡುಮನೆಗೆ ನನ್ನ ಕೈಹಿಡಿದು ಕರಕೊಂಡು ಹೋದ. “ ಅನಂತು ಬಂದಾನೆ- ಆಚಾರ್ರ ಮಗ ಅನಂತು- ಪ್ರೊಫೆಸರ್. ಮೈಸೂರಲ್ಲಿ. ಗೊತ್ತಿರಬೇಕು ಅಲ್ವ?” ಎಂದ. ಕತ್ತಲಿಗೆ ಕಣ್ಣನ್ನು ಒಗ್ಗಿಸಿಕೊಳ್ಳುತ್ತ ಅಂದುಕೊಂಡೆ: ಅರೆ ವೆಂಕಟ. ಈತ ತತ್ವಜ್ಞಾನಿ ಬೇರೆ. ನನ್ನ ಉತ್ತರ ಹೇಗೆ ಹೇಳಲಿ? ಅದಕ್ಕೆ ಇಂಗ್ಲಿಷ್ ಪದಗಳು ಬೇಕು. ಅಥವಾ ವೆಂಕಟನಿಗೆ ಪರಿಚಯವಿರದ ತರ್ಜುಮೆಗಳು. +ಇಂಥವು: +ಸಫರಿಂಗ್‌ಗೆ ಇನ್‌ಸೆನ್ಸಿಟಿವ್ ಆಗುವ ಉಡಾಫೆ…ಹೆಂಬೇಡಿಯ ಫಿಲಾಸಫಿಕಲ್ ರೆಸಿಗ್ನೇಶನ್…ಅನ್‌ಅಥೆಂಟಿಕ್ ಆದ ವ್ಯಕ್ತಿತ್ವ…ಪಲಾಯನವಾದ…ಮೂಢನಂಬಿಕೆಯಿಂದ ಹುಟ್ಟಿದ ಸಾಂತ್ವನ.ವಿಲೇಜ್ ಈಡಿಯಸಿಯ ಮುಗ್ಧತೆ…ಹೀಗೆ. +ಅವನು ನಾನು ಬರೆದದ್ದನ್ನು ಓದಿದರೆ ತನ್ನನ್ನು ಮಾತ್ರ ಓದಿಕೊಳ್ಳುತ್ತಾನೆ. ಮೊದಲೆ ಹಡೆಯಾದ್ದರಿಂದ ನನ್ನ ಐರನಿ ಅವನನ್ನು ಮುಟ್ಟಲ್ಲ. ಆದರೆ ವಸ್ತುವಾಗಿ ಶುರುವಾದದ್ದು ಹೇಗೆ ಪ್ರಜ್ಞೆಯಾಗಿ ನನ್ನನ್ನು ಅಡ್ಡಹಾಕ್ತಿದೆ. ಯಾವ ಹವಣಿಕೆಯೂ ಇಲ್ಲದವನಿಗೆ ಪ್ರಪಂಚದ ನಿರಂತರ ಚಲನೆ. ಫ್ಲಕ್ಸ್. ಬದಲಾವಣೆಗಳಲ್ಲಿ ಆಸಕ್ತಿ ಇರೋದಿಲ್ಲ. ಇಂಥ ಒಬ್ಬ ನಾನ್ ಪೊಲಿಟಿಕಲ್ ಬೀಯಿಂಗ್ ಎದುರಿನಲ್ಲಿ ನನ್ನ ಎಲ್ಲ ಜ್ಞಾನವೂ ವ್ಯರ್ಥ. ಕಿಸಿಂಜರ್‌ಗೆ ಇವ ಡೈರೆಕ್ಟ್ ಆಪೋಸಿಟ್. ಗಾಂಧಿಯಲ್ಲಿ ಹವಣಿಕೆಯಷ್ಟೇ ತನ್ಮಯತೆಯೂ… ಅರೆ ವೆಂಕಟ, ಕಥೆಯಾಗಿ ಬಂದವನು ಎಸ್ಸೆಯಾಗಿ ಬೆಳೆಯುತ್ತಿದ್ದಾನಲ್ಲ! +“ಇವನು ಶೇಷಣ್ಣಾಂತ. ಮಗ ಬೊಂಬಾಯಿಯಲ್ಲಿದ್ದಾನೆ. ಆಟಂಬಾಬ್ ಮಾಡ್ತಾರಂತಲ್ಲ- ಅಲ್ಲಿ. ನಿನ್ನ ಹಾಗೆ ಕೆಂಗಣ್ಣ: ನನ್ನ ಸುಪುತ್ರನಿಗೂ ಅವನಂತಾಗೋ ಆಸೆ. ಅವನಿಗೊಬ್ಬಳು ಬಿಳಿ ಹೆಂಡ್ತಿ ಇದ್ದಾಳೆ. ಸೀರೆ ಉಟ್ಟು ಕುಂಕುಮ ಇಟ್ಟರೆ ಥೇಟು ಅಮ್ಮನವರ ಥರ ಕಣೋ… ಬಂದಿದ್ದಳು. ಮಾವನ್ನ ಅಲ್ಲೇ ಬಂದಿರಿ ಅಂತ ಕರೆದ್ಲು. ಇವ ಎಲ್ಲಿ ಹೋಗ್ತಾನೆ? ಈರುಳ್ಳಿ ಆಲೂಗಡ್ಡೆ ಹುಳಿ ಚಪಲ ಇವನಿಗೆ. ಜೊತೆಗೆ ಯಜಮಾನಿಕೆ ಹುಚ್ಚು. ತಾನು ಹೇಳ್ದಂಗೆ ಆಗಬೇಕು. ಓದಿದ ಮಗ ಕೇಳ್ತಾನ? +ವೆಂಕಟ ಕತ್ತರಿಯಲ್ಲಿ ಅಡಿಕೆಯನ್ನು ನಾಜೂಕಾಗಿ ಹೆಚ್ಚುತ್ತ ಹರಟಿದ. ಶೇಷಣ್ಣ ಕೆಮ್ಮಲು ಪ್ರಾರಂಭಿಸಿದ. ಉಸಿರೇನು ನಿಂತೇ ಹೋಗಿಬಿಡ್ತೋ ಎನ್ನುವಂಥ ಕೆಮ್ಮು. ವೆಂಕಟ ಅವನನ್ನು ಎತ್ತಿ ತನಗಾನಿಸಿ ಕೂರಿಸಿಕೊಂಡ. ಬೆನ್ನುಜ್ಜುತ್ತ ತಟ್ಟೆಯೊಂದನ್ನು ಅವನೆದುರು ಹಿಡಿದ. ಶೇಷಣ್ಣ ಪಡ್ಚ ಎಂದು ನನಗನ್ನಿಸಿತು.-ಕೆಮ್ಮಿ ಕೆಮ್ಮಿ ಕೆಮ್ಮಿ ಕತ್ತನ್ನು ಹಿಂದೆ ಹಾಕಿ ಗೊರಗೊರ ಎಂದು ಉಸಿರೆಳದೊಕೊಳ್ಳಲು ಒದ್ದಾಡಿದ. ‘ಉಗಿ ಉಗಿ’ ಎಂದು ವೆಂಕಟ ಅವನ ಕತ್ತನ್ನು ಬಗ್ಗಿಸಿದ. ಶೇಷಣ್ಣ ರಕ್ತ ಕಾರಿಕೊಂಡಿರಬೇಕು. ವೆಂಕಟ ಅವನನ್ನು ಮಲಗಿಸಿ ಹಿತ್ತಲಿಗೆ ಹೋಗಿ ತಟ್ಟೆ ತೊಳೆದು ಬಂದ. ‘ಸ್ಟವ್‌ನಲ್ಲಿ ಕಾಫಿ ಬಿಸಿ ಮಾಡಿಕೊಡ್ತೀನಿ’ ಎಂದು ಮತ್ತೆ ಒಳಗೆ ಹೋದ. ಶೇಷಣ್ಣ ಬಾಯಿಕಳೆದು ಜೋರಾಗಿ ಏದುಸಿರು ಬಿಡುತ್ತಿದ್ದ. ಹಾ ಹೋ ಎನ್ನುವ ರಾದ್ಧಾಂತದ ಉಸಿರು. ಯಾಂತ್ರಿಕವಾಗಿ ತೆರೆದು ಮುಚ್ಚುವ ಕಣ್ಣುಗಳು. ಮಾಡಿಗೆ ಹಾಕಿದ್ದ ಗಾಜಿನ ಹೆಂಚೊಂದರಿಂದಲೂ, ಎತ್ತರದಲ್ಲಿದ್ದ ಕಿಟಕಿಯೊಂದರಿಂದಲೂ ಬೆಳಕು ಕ್ಷೀಣವಾಗಿ ನಡುಮನೆಗೆ ತೆವಳಿತ್ತು. ಮರದ ಜಂತಿಗೆ ತೂಗು ಹಾಕಿದ್ದ ಬಣ್ಣದ ಸೌತೆಕಾಯಿಗಳನ್ನು ಎಣಿಸಿದೆ.. ಕ್ಷಣಕ್ಷಣವೂ ಕುಗ್ಗುತ್ತ ಕೂತೆ. ಮೂಲೆಯೊಂದರಲ್ಲಿ ಒರಟೊರಟಾಗಿ ಕೆತ್ತಿದ ಮಚದ ಮೇಲೆ ಪ್ರೇತದಂತೆ ತೆಳ್ಳಗೆ ಕಂಬಳಿ ಹೊದ್ದು ಮಲಗಿದ್ದ ಶೇಷಣ್ಣ. ಅವನಿಗೆ ಕ್ಷಯವಿರಬೇಕು. ವೆಂಕಟನದೇ ಶುಶ್ರೂಷೆ ಇರಬೇಕು. ಹಿಂದಿನಿಂದಲೂ ಹೀಗೇ ವೆಂಕಟ ಪರೋಪಕಾರಿ. ಸ್ಕೂಲಿನ ಚೀಲದಲ್ಲಿ ಯಾರ್ಯಾರಿಗೋ ಪೇಟೆಯಿಂದ ಔಷಧಿ ತರಲೆಂದು ಬೆಂಡಿನ ಗಿದ್ನಗಳಿದ್ದ ತರಹೇವಾರಿ ಸೀಸೆಗಳು. ಗುಟ್ಟಾಗಿ ಚಟ ಬೆಳೆಸಿಕೊಂಡ ಹೆಂಗಸರು ನಸ್ಯ ತರಲು ಕಳುಹಿಸುತ್ತಿದ್ದ ಬಿಲ್ವಪ್ತೆಯ ಬಿರಡೆಗಳು. ಹೆಣ್ಣು ಮಕ್ಕಳಿಗೆ ಟೇಪು. ಹೇನು ತೆಗೆಯುವ ಎರಡೂ ಕಡೆ ಹಲ್ಲುಗಳಿದ್ದ ಬಾಚಣಿಗೆ. ಅನಂತನ ವ್ರತಕ್ಕೆ ರೇಷ್ಮೆ ದಾರ. ಗೌರಿ ಪೂಜೆಗೆ ಬಿಚ್ಚೋಲೆ, ಹತ್ತಿ, ಬೇಗಡೆ. ಯಾರ್ಯಾರ ಮಕ್ಕಳಿಗೊ ಸಾಬರ ಅಂಗಡಿ ಬತ್ತಾಸು. ಅವನ ಚೀಲದಲ್ಲಿ ಇರಬೇಕಾದ ಪುಸ್ತಕದ ಹೊರತಾಗಿ ಇಂಥವೇ ಇನ್ನೆಲ್ಲ. ತನ್ನ ಕೊಡೆಯ ರಿಪೇರಿಗೆಂದು ತರುತ್ತಿದ್ದ ಇನ್ನೆರಡು ಮಾಸಿದ ಬಟ್ಟೆಯ ಕೊಡೆಗಳು. ತೇಪೆಗಳನ್ನು ಹಾಕಿದ ಅಂಗಿ ತೊಟ್ಟು, ಜುಟ್ಟಿನಲ್ಲಿ ತಳಸಿ ಮುಡಿದು, ಪೇಟೆ ಬದಿ ತನಗೇ ಸೇರಿದ್ದೆಂಬಂತೆ ದಾಪುಗಾಲು ನಡೆಯುತ್ತಿದ್ದ ವೆಂಕಟ. ನಮಗೆಲ್ಲ ತಿನ್ನಲು ಅಮಟೆ ಮಿಡಿ ತರುತ್ತಿದ್ದ. +ವೆಂಕಟ ಕಾಫಿಯನ್ನು ಬಿಸಿ ಮಾಡಿ ತಂದು ಶೇಷಣ್ಣನಿಗೆ ಕುಡಿಸಿದ. “ ನಾನು ಯಾವಾಗ ಕಣ್ಣು ಮುಚ್ಚೋದೋ ಮಾರಾಯ” ಎನ್ನುತ್ತ ಸಣ್ಣ ಸಣ್ಣ ಗುಟುಕಲ್ಲಿ ಶೇಷಣ್ಣ ಶಬ್ದ ಮಾಡುತ್ತ ಕುಡಿದ. ವೆಂಕಟ ಲೋಟವನ್ನು ಊದಿ, ಊದಿ ಕಾಫಿಯನ್ನು ಆರಿಸಿ ಅವನ ಬಾಯಿಗಿಡುತ್ತಿದ್ದ. +“ಅದ್ಯಾಕೆ ಅಷ್ಟು ಬೇಗ ಕಣ್ಣು ಮುಚ್ಚೀಯ ನೀನು? ಯಮ ಏನಾರು ಕೋಣ ಹತ್ತಿ ನಿನ್ನ ಮನೆ ಬಾಗಿಲಿಗೆ ಬಂದ್ರೆ ‘ಸ್ವಲ್ಪ ಇರೋ ಮಾರಾಯ. ಈರುಳ್ಳೀ ಆಲೂಗಡ್ಡೆ ಹುಳಿ ಮಾಡಿಟ್ಟಿದ್ದೀನಿ. ಅದನ್ನ ತಿಂದು ಬರ್ತೀನಿ’ ಅನ್ನೊ ಪೈಕಿ ನೀನು. ಆ ಯಮ ಏನಾದರೂ ಅದೆಂಥ ಹುಳಿಯಪ್ಪಾಂಥ ರುಚಿ ನೋಡಿಬಿಟ್ರೆ ನಿನ್ನನ್ನು ಭೂಲೋಕದಲ್ಲೇ ಬಿಟ್ಟು ಹೋಗ್ತಾನೆ- ಇವನನ್ನ ಇಲ್ಲಿಂದ ವರ್ಗ ಮಾಡಿಸೋದು ಬೇಡ. ದಾರೀಲಿ ಹಸಿವಾದ್ರೆ ಇಷ್ಟೊಳ್ಳೆ ಹುಳಿ ಸಿಗೋ ಜಾಗ ಒಂದಿರ್ಲಿ ಅಂತ. ಆದ್ರೆ ಹೇಳು- ಬಂದಿರೋ ಯಮ ಅದು ಹ್ಯಾಗೆ ಬರಿಗೈಲಿ ಹೋದಾನು? ಟಿ.ಎ. ಡಿ.ಎ ದಂಡವಾಗಬಾರ್ದೂಂತ ನಿನ್ನೇ ಕೇಳ್ತಾನೆ, ಬೇರೆ ಗಿರಾಕಿ ತೋರಿಸೂ ಅಂತ. ಆಗ ನೀನು ಏನು ಅಂತಿ. ಈ ಊರಲ್ಲೊಬ್ಬ ಹಡೆ ವೆಂಕಟಾಂತ ಇದಾನೆ. ನನಗಿಂತ ಕಿರಿಯ. ಈಗ ಅವನ ಹಡೆ ಆಟ ಎಲ್ಲ ಹಾಳಾಗಿಬಿಟ್ಟಿದೆ. ಅವನ್ನ ತಗೊಂಡು ಹೋಗು ಅಂತ. ನನ್ನ ಹೆಂಡ್ತಿ ನಾಲಿಗೇಗೆ ಏನಾರು ಯಮರಾಯ ಹೆದರಿದ್ನೋ, ನಾನು ಬಚಾವ್. ಇಲ್ಲವಾದರೆ ಪಡ್ಚ.” +ಶೇಷಣ್ಣನ ಮುಖ ಕೊಂಚ ಪಲ್ಲವಿಸಿದಂತೆ ತೋರಿತು. ಅವನ ತಲೆಯನ್ನು ದಿಂಬಿನ ಮೇಲಿಟ್ಟು ವೆಂಕಟ ಎದ್ದ. ನನಗೆ ಹೊರಡುವಂತೆ ಸನ್ನೆ ಮಾಡುತ್ತ “ಶೇಷಣ್ಣ, ಪುನರ್ಪಾಕದ ಅನ್ನಾನ ಸಾರಲ್ಲಿ ಕಿವಚಿ ಕಳಿಸ್ತೇನೆ- ನನ್ನ ಮಗಳು ತಂದುಕೊಡ್ತಾಳೆ.” ಎಂದು ಹೊರಟ. +“ನಿನ್ನ ಸ್ನೇಹಿತರಿಗೆ ನನ್ನ ಮಗ ಗೊತ್ತಿರಬಹುದು. ಡಾಕ್ಟರ್ ಸುಬ್ರಹ್ಮಣ್ಯಶಾಸ್ತಿ. ಲಂಡನ್ನಿನಲ್ಲಿ ಓದಿದ್ದು. ಬೊಂಬಾಯಿಯಲ್ಲಿ ಇಂಜಿನಿಯರ್, ಆಟಂಬಾಂಬ್ ಮಾಡ್ತಾರಂತಲ್ಲ- ಅಲ್ಲಿ. ಅದೇನೋ ಮೂರು ಸಾವಿರ ಸಂಬಳವಂತಪ್ಪ. ಒಳ್ಳೇ ಬಂಗ್ಲೇ..” ಎನ್ನುತ್ತ ಶೇಷಣ್ಣ ಎದ್ದು ಕೂರಲು ಯತ್ನಿಸಿದ. ವೆಂಕಟ “ ಮಲಕ್ಕೊ ಮಲಕ್ಕೊ” ಎಂದ. ನಾನು ನಮಸ್ಕಾರ ಹೇಳಿ ಹೊರಬಿದ್ದೆ. +* +* +* +ನನ್ನನ್ನು ಮುಂದೆ ಬಿಟ್ಟುಕೊಂಡು ವೆಂಕಟ ಉಣಗೋಲು ತೆಗೆದ. “ ಲೇ ಬಾರೇ ಇಲ್ಲಿ ಯಾರು ಬಂದಿರೋದು ನೋಡೇ” ಎಂದ ತನ್ನ ಆತ್ಮರಕ್ಷಣೆಯ ಅಸ್ತವನ್ನು ಉಲ್ಲಾಸದಿಂದ ಅರ್ಭಟಿಸಿದ. ಉರಿಯುತ್ತ ಹೊರಬಂದ ರುಕ್ಕು ನೀರು ಬಿದ್ದ ಕೊಳ್ಳಿ ಚೊಂಯ್ ಎನ್ನುವಂತೆ ತನ್ನ ಒದ್ದೆ ಕೈಗಳನ್ನು ಸೊಂಟಕ್ಕೆ ಒರೆಸಿಕೊಳ್ಳುತ್ತ ನನ್ನ ನೋಡಿ ಹಿಗ್ಗಿದಳು. “ ಬೇಡಾಂದ್ರೂ ಅನಂತು ಕೊಂಡದ್ದು” ಎಂದು ತರಕಾರಿ ಚೀಲವನ್ನು ಅವಳ ಕೈಯಲ್ಲಿಟ್ಟ. ಸಾವಿರ ತಾಪತ್ರಯಗಳು ಕೊರೆದಿದ್ದ ಅವಳ ಮುಖದ ನಿರಿಗೆಗಳು ಕೃತಜ್ಞತೆಯ ಮಂದಹಾಸದಲ್ಲಿ ಕಣ್ಣಿನ ಸುತ್ತ ಸುಕ್ಕಿದವು. ಕೆನ್ನೆಯಲ್ಲಿ ಅರಿಸಿನ.. ಹಣೆ ಮೇಲೆ ದೊಡ್ಡದಾದ ಕುಂಕುಮ. ಬಿಳಿಗೂದಲಿನ ಮೋಟು ಜಡೆಯಲ್ಲಿ ಸಂಪಗೆ ಹೂವು. ರುಕ್ಕು ಸೊರಗಿದ ದೇಹದ ಕುಳ್ಳಿ. ಒಲೆಯನ್ನು ಊದಿ ಊದಿ ಬತ್ತಿದ ಕಣ್ಣುಗಳು. ಶಕುಂತಳ. ಗೌರಿ, ಗಂಗ ಪ್ರತ್ಯಕ್ಷರಾದರು. ಹಿರಿಯರಾದ ಇಬ್ಬರು ತುಂಡುಟ್ಟಿದ್ದ ಹುಡುಗಿಯರು. ಮೈನೆರೆದವರು. ಬಿಗಿದು ಕಟ್ಟಿದ ಕಪ್ಪು ಜಡೆಯವರು. ಗಾಜಿನ ಬಳೆ, ಕಿವಿಯಲ್ಲಿ ಓಲೆ, ತಲೆಯಲ್ಲಿ ಘಮಘಮಿಸುವ ಸಂಪಗೆ- ಇಷ್ಟೇ ಅವರ ಶೃಂಗಾರ. ನನ್ನನ್ನು ನೋಡಿ ನಾಚುತ್ತ ಹಿಗ್ಗಿದರು. ಒಬ್ಬಳು ಕಾಲು ತೊಳೆಯಲು ಬಿಸಿನೀರು ತಂದಳು. ಇನ್ನೊಬ್ಬಳು ಪಾಣಿಪಂಚೆ ತಂದಳು. ಕಿರಿಯವಳು ತೇಪೆಗಳನ್ನು ಹಾಕಿದ ಲಂಗದಲ್ಲಿ ಅಮ್ಮನ ಬೆನ್ನ ಹಿಂದೆ ಇಣುಕುತ್ತ ನಿಂತಳು. ಕಿರಿಯವಳ ಕೈಯಲ್ಲಿ ಬಾಳೆಯ ನಾರಲ್ಲಿ ಅವಳು ಹೆಣೆಯುತ್ತಿದ್ದ ಮಲ್ಲಿಗೆ ಸರ ಕಂಡೆ. ಕಾಲು ತೊಳೆದುಕೊಳ್ಳುತ್ತ ಓಡಿದೆ: ಮನೆಯ ಎದುರಿನ ಹೂವಿನ ತೋಟ ತುಂಬಾ ಚೆನ್ನಾಗಿತ್ತು. ಎಷ್ಟೋ ವರಷಗಳಿಂದ ನಾನು ನೋಡದಿದ್ದ ಹೂವಿನ ಗಿಡಗಳೆಲ್ಲ ಅಲ್ಲಿದ್ದವು. ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ಗುಲಾಬಿ, ನಂದಿಬಟ್ಟಲು, ಸೇವಂತಿಗೆ, ಕುಂಕುಮರಾಜಿ, ರತ್ನಗಂಧಿ, ಸಂಜೆಮಲ್ಲಿಗೆ, ಸಂಪಗೆ, ದಾಸವಾಳ, ಹಲವು ಬಗೆಯ ತುಂಬೆ, ಹಲವು ಬಣ್ಣಾದ ಶಂಖಪುಷ್ಪ, ಚೆಂಡು ಹೂ, ಪಾರಿಜಾತ- ನೀರು ಕುಡಿದು ಹಸಿರಾಗಿದ್ದ ತೋಟ. ಮಳೆಯಿಲ್ಲದಿದ್ದರೂ ವೆಂಕಟನ ಬಾವಿ ಬತ್ತಿರಲಿಕ್ಕಿಲ್ಲ. +ಮನೆಯೂ ಅಷ್ಟೆ ಓರಣ. ತಿಕ್ಕಿ ತಿಕ್ಕಿ ಹೊಳೆಯುತ್ತಿದ್ದ ಕಡುಕಪ್ಪಾದ ಮಣ್ಣುನೆಲ. ಅದರ ಮೇಲೆ ಹಿಟ್ಟಿನ ಬಿಳಿ ರಂಗೋಲೆ, ಸುಣ್ಣ ಬಳಿದ ಗೋಡೆ, ಜಂತಿಗಳಲ್ಲಿ ತೂಗುಬಿದ್ದ ಬಣ್ಣಾದ ಸೌತೆಕಾಯಿಗಳು, ಗೋಡೆಯಲ್ಲಿ ಒಂದು ಮೊಳೆಯ ಮೇಲೆ ಪಂಚಾಂಗ, ಇನ್ನೊಂದರಲ್ಲಿ ವೆಂಕಟ ತನ್ನ ಅಂಗಿಯನ್ನು ಬಿಚ್ಚಿ ಸಿಕ್ಕಿಸಿದ. ಒಂದು ಮೂಲೆಯಲ್ಲಿ ನೀಟಾಗಿ ಸುತ್ತಿಟ್ಟ ಹಾಸಿಗೆಗಳು. ಒಡೆದ ತೋರಣ ಬಾಗಿಲಿನ ಮೇಲೆ, ಮತ್ತೆ ಹತ್ತಿಯ ತೋರಣ- ಹೋದ ಗೌರಿಹಬ್ಬದ್ದಿರಬೇಕು. ನಾನು ಕಾಲು ತೊಳೆಯಲು ಬಳಸಿದ ತಾಮ್ರದ ಚೆಂಬು ಝಳಝಳಿಸುತ್ತಿತ್ತು. ಅಕ್ಕಿ ತೊಳೆದ ನೀರಿಗೆ ಹಾಲು, ಬೆಲ್ಲ, ಏಲಕ್ಕಿ ಹಾಕಿದ ತಂಪಾದ ಪಾನಕವನ್ನು ಕಂಚಿನ ಲೋಟದಲ್ಲಿ ಶಕುಂತಳ ನನ್ನೆದುರು ತಂದಿಟ್ಟಳು. ನನಗೂ ಇಬ್ಬರು ಮಕ್ಕಳು ಎಂದೆ. ಒಂದು ಗಂಡು, ಒಂದು ಹೆಣ್ಣು, ಇನ್ನೂ ಸಣ್ಣವರು ಎಂದೆ. ‘ಮನೆಯಲ್ಲೆಲ್ಲ ಸೌಖ್ಯವ?’ ಎಂದಳು ರುಕ್ಕು. ಗಡಿಬಿಡಿಯಲ್ಲಿ ನಡುಮನೆಯಿಂದ ವಿವಾದ ಹುಟ್ಟಿಕೊಂಡಿತು. ‘ ಈಗಲೇ ಅಭ್ಯಂಜನ’ ಎಂದು ಅವನು. ‘ಈಗ ಸ್ನಾನ ಮಾಡಿ ಊಟ ಮಾಡಲಿ, ರಾತ್ರೆ ಅಭ್ಯಂಜನವಾಗಲಿ’ ಎಂದು ರುಕ್ಕು. ರುಕ್ಕುವೇ ಗೆದ್ದಳು . ಸ್ನಾನದ ಮನೆಗೆ ಹೊದ ನನ್ನ ಬೆನ್ನ ಹಿಂದೆ ಬಂದ ವೆಂಕಟ. +‘ನೀನು ಬಂದೀಂತ ನನಗೆ ಷೋಡಶೋಪಾಚಾರ ಪೂಜೆ ನಡೀಲಿಲ್ಲ ಮಾರಾಯ’ ಎಂದ. +ನಾನು ನಗುತ್ತ ಬಿಸಿಬಿಸಿಯಾದ ನೀರನ್ನು ಮೈಮೇಲೆ ಹೊಯ್ದುಕೊಂಡೆ. ಬಚ್ಚಲಲ್ಲಿ ಅಭ್ಯಂಜನಕ್ಕೆಂದು ಬಾನಿ ಬೇರೆ ಇತ್ತು. ಕಪ್ಪು ಕಲ್ಲಿನ ಬಾನಿ. ಅಕ್ಕಪಕ್ಕದಲ್ಲಿ ದೊಡ್ಡ ಕಡಾಯಿಗಳು. ದೊಡ್ಡದೊಂದು ಪಾತ್ರೆಯಲ್ಲಿ ತಂಪಾದ ಮತ್ತಿ. ಡಬ್ಬಿಗಳಲ್ಲಿ ಸೀಗೇಪುಡಿ. ವೆಂಕಟನ ಈ ಎಲ್ಲ ಅಸ್ತಗಳನ್ನು ನೋಡುತ್ತ ನಾನು ಸಂಜೆಗೆ ಹೆದರಿದೆ. +“ಯಾಕೆ ಸಿಟ್ಟು ಬರಿಸ್ತೀಯ ಹೆಂಡತಿಗೆ?” ಎಂದೆ. +“ಸಿಟ್ಟು ಯಾಕೆ ಬರಿಸಬೇಕು. ಅದು ಸುಮ್ಮನೆ ಬರುತ್ತೆ. ನನ್ನನ್ನ ಅಮ್ಮನವರು ರಕ್ಷಿಸಲಿಕ್ಕೇಂತ ಅವಳಿಗೆ ದಯಪಾಲಿಸಿದ ಅಸ್ತ ಅದು. ಈ ಹಡೇನ ಒಂದು ಹದ್ದಲ್ಲಿ ಇಡಬೇಕಲ್ಲ. ಮನೇಲೊಂದು ಒಪ್ಪ ಓರಣ ಬೇಕಲ್ಲ. ಸಿಕ್ಕಿದವರ ಜೊತೆ ನಾನು ಹರಟ್ತ ಕೂತಿರಬಾರದಲ್ಲ. ಈ ಹಡೆಯ ಬೆನ್ನ ಮೇಲೆ ಸವಾರಿಗೆ ಕೂತವರನ್ನ ಹೆದರಿಸಿ ಇಳಿಸಬೇಕಲ್ಲ…” +ವೆಂಕಟ ಉರಿಯುತ್ತಿದ್ದ ಕುಂಟೆಯನ್ನು ಒಲೆಯೊಳಗೆ ತಳ್ಳುತ್ತ ಹೇಳಿದ. +“ ನಿನ್ನ ಮಗ ಎಲ್ಲೋ?” ಎಂದೆ. +“ಅವನಿಗೆ ಇಸ್ಪೀಟಿನ ಚಟ ಅಂಟಿಕೊಂಡಿದೆಯೊ. ಅವನ ಮೇಲೊಂದು ಈ ಯಾವ ಅಸ್ತಾನೂ ನಡೆಯೋಲ್ಲ ಮಾರಾಯ. ನನ್ನನ್ನು ಕಂಡರೆ ಕೆಂಡ ಆಗ್ತಾನೆ.” +ನಿನ್ನ ಫಿಲಾಸಫಿಯ ಸೋಲು ನಿನ್ನ ಮಗನಲ್ಲಿ ನಿನಗೆ ಎದುರಾಗಿದೆ ಎಂದು ನಾನವನಿಗೆ ಹೇಳಲಿಲ್ಲ. ಮೈಗೆ ನೀರು ಹೊಯ್ದುಕೊಳ್ಳುತ್ತ ಆ ಬಗೆಯಲ್ಲಿ ಟೀಕಿಸುವಂತೆ ನಾನವನನ್ನು ನೋಡಿದೆ. ವೆಂಕಟ ತನಗೇನೂ ಅರ್ಥವಾಗದು ಎನ್ನುವಂತೆ ಹೇಳಿದ. +“ತನ್ನ ಅಪ್ಪನಿಗೆ ಕಿಮ್ಮತ್ತಿಲ್ಲಾಂತ ಸುಬ್ಬ ಹಲ್ಲು ಹಲ್ಲು ಕಡೀತಾನೆ. ಆದರೆ ನನ್ನ ಜಾಯಮಾನ ಬದಲಾಗತ್ತ? ಅವನ ಪ್ರಿಸ್ನಿಸ್ಪಾಲರು ಹಾಜರಿ ಸಾಲದೂಂತ ಪರೀಕ್ಷೆಗೆ ಕೂರಿಸಲಿಲ್ಲಂತೆ. ಅದಕ್ಕೆ ಇವ ರಾತ್ರೆ ಅಡ್ಡಕಟ್ಟಿ ಹೊಡೀಬೇಕ? ಅವರ ಜೇಬಲ್ಲಿದ್ದ ದಡ್ಡನ್ನೂ ಕಿತ್ಕೊಂಡ ಅಂತಾರೆ . ಪೇಟೇಲಿ ಒಂದು ಹಿಟ್ಟಿನ ಗಿರಣಿ ತೇಗೀಬೇಕು. ದುಡ್ಡು ಕೊಡು ಅಂತ ಪೀಡಿಸ್ತಾನೆ. ನನ್ನದೋ ಅನನ್ಯಹನಿ. ಎಲ್ಲಿಂದ ದುಡ್ಡು ತರಲಿ?” +‘ನಿನಗೇ ಈ ವಿಲ್ಲೇ ಅರ್ಥವಾಗಲ್ಲೋ ಹ್ಯಾಪ. ಮಡುಗಟ್ಟಿದಲ್ಲಿ ಮಾತ್ರ ಕೆಸರಲ್ಲಿ ಅರಳೋ ಕಮಲ ಪುಷ್ಪದಂತೆ ನೀನು. ಎರಡು ದಿನ ನಿನ್ನ ಜೊತೆ ನಾನು ಇರಲಾರೆ. ನಿನಗೆ ಕಾಲ ಚಲಿಸೊದೇ ಇಲ್ಲವೋ, ರೈಕ್ವಮುನಿ. ಹಾಯಾಗಿ ಕಜ್ಜಿ ತುರಿಸ್ಕೋತ, ಬಿಸಿಲು ಕಾಯಿಸ್ಕೋತ ಇದ್ದೇ ಬಿಡ್ತಿ- ಅದೇ ಹಡೆ ಆಟನ್ನ ಮತ್ತೆ ಮತ್ತೆ ಅಡ್ತ’- ಇಂಥ ಭಾವನೆಗಳನ್ನು ನುಂಗಿಕೊಂಡು ಅಕ್ಕರೆ, ಅಸಹ್ಯಗಳೆರಡನ್ನೂ ಪಡುತ್ತ ನಾನು ಸ್ನಾನ ಮುಗಿಸಿದೆ. ಆಮೇಲೆ ವೆಂಕಟ ‘ಗಂಗೇಚ ಯಮುನೇಚೈವ ಗೋದವರಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಗಟ್ಟಿಯಾಗಿ ಜಪಿಸುತ್ತ ತಾನು ಶಾಸ್ತೋಕ್ತವಾಗಿ ಹೊಯ್ದುಕೊಂಡ ನೀರನ್ನು ಕೆಸರಲ್ಲಿ ಬೆಳೆದ ಕಸುವಿಗೆ ಉಣ್ಣಿಸಿದ. ನಾನು ಕಸುವನ್ನು ನೋಡುವುದು ಕಂಡು ‘ರಾತ್ರೆಗೆ ಪತ್ರಡೆ ಮಾಡಸ್ತೀನೋ’ ಎಂದ. +ಶಕುಂತಳ ನನಗೆಂದು ಕುಡಿ ಎಲೆಯೊಂದನ್ನು ಬೆಂಕಿಯಲ್ಲಿ ಬಾಡಿಸಿ ಅದರ ಸುತ್ತ ರಂಗೋಲಿ ಬಿಡಿಸಿದ್ದಳು. ಕೂರಲು ಮಣೆಯಿಟ್ಟಿದ್ದಳು. ತೊಟ್ಟು ಮುರಿದರೆ ಇನ್ನೂ ಸೊನೆಯಿದ್ದ ಮಾವಿನಮಿಡಿ ಉಪ್ಪಿನಕಾಯಿ. ಹಲಸಿನ ಹಪ್ಪಳ, ಬಾಳ ಮೆಣಸು, ಅರಮರಳುಕಾಯಿಗಳಿದ್ದ ಲಿಂಬೆಹಣ್ಣಿನ ಉಪ್ಪಿನಕಾಯಿ. ಅದೆಷ್ಟೋ ವರ್ಷಗಳ ಹಿಂದಿನ ಒಣಗಿದ ಕಂಚೀಕಾಯಿ ಉಪ್ಪಿನಕಾಯಿ. ಅರಳು ಸಂಡಿಗೆ. ಇನ್ನೊಂದು ಬಗೆಯ ಚಪ್ಪಟೆಯಾದ ಖಾರವಾದ ಸಂಡಿಗೆ-ಹೆಸರು ಕೇಳಲು ನಾಚಿಕೆಯಾಯ್ತು. ಎಲೆಯ ತುದಿಯಲ್ಲಿ ಅಕ್ಕಿಯ ಪಾಯಸ. +“ಎನೂ ಮಾಡಿಲ್ಲ. ಎಲ್ಲ ಅವಸರದಲ್ಲಿ ಮಾಡಿದ್ದು.” ಎಂದು ರುಕ್ಕು ಉಪಚರಿಸುತ್ತ ಬಿಸಿಬಿಸಿ ಅನ್ನಕ್ಕೆ ಸಾರು ಹೊಯ್ದಳು. ಮತ್ತೆ ಎರಡು ಬಗೆಯ ತಂಬಳಿ. ವೆಂಕಟ ಊಹಿಸಿದ್ದಂತೆ ಚಗತೆ ಸೊಪ್ಪಿನ ಪಲ್ಯ. ಕೊತ್ತಂಬರಿ ಸೊಪ್ಪು, ಹಸಿಶುಂಠಿ ಹಾಕಿದ ನೀರು ಮಜ್ಜಿಗೆ ಕೈಯೂರಿ ಕೂತು ವೆಂಕಟ ಕಣ್ಣು ಮುಚ್ಚಿ ಸುಖಿಸುತ್ತ ಊಟ ಮಾಡಿದ. ಅನ್ನವನ್ನು ಬಾಲ್ಯದಲ್ಲೇ ಆದರೂ ಹೆಸರೂ ಮರೆತಿತ್ತೂ, ಹೊಟ್ಟೆಯ ಡೊಳ್ಳನ್ನೆಲ್ಲ ತುಂಬುವ ಹಗುರಾದ ರುಚಿಯಾದ ಊಟ. +ಶಕುಂತಳ ಗೌರಿಯ ಪೈಪೋಟಿಯಲ್ಲಿ ಹಾಸಿಕೊಟ್ಟ ಹಾಸಿಗೆಯಲ್ಲಿ ನಾನು ಮಲಗುವ ಮುಂಚೆ ರುಕ್ಕು ಹೊರಬಾಗಿಲಲ್ಲಿ ನಿಂತು. +“ಏ ಸುಬ್ಬಾ ಸುಬ್ಬಾ, ಊಟ ಮಾಡು ಬಾರೋ” ಎಂದು ಕೂಗುವುದು ಕೇಳಿಸಿತು. ಅರ್ಧ ಆರ್ತವಾಗಿ ಅರ್ಧ ಸಿಟ್ಟಿನಲ್ಲಿ ಚಡಪಡಿಸುತ್ತ ಕೂಗುವ ತಾಯಿಯ ಧ್ವನಿ. “ರೀ ರೀ ಕರೀರ್ರಿ ಸುಬ್ಬನ್ನ.” +ವೆಂಕಟನ ಜೊತೆ ನಾನೂ ಹೊರಬಂದು ನೋಡಿದೆ. ಶರ್ಟು ಪ್ಯಾಂಟು ತೊಟ್ಟ ಬೆನ್ನೊಂದು ಮಾತ್ರ ನನಗೆ ಕಂಡಿತು. ಕತ್ತಿನ ಮೇಲೆ ಹಿಪ್ಪಿ ಕೂದಲು. ಬಿರಬಿರನೆ ಹಿಂದಕ್ಕೆ ತಿರುಗಿ ನೋಡದೆ ಅವನು ನಡೆಯುತ್ತಿದ್ದ. ನಡಿಗೆಯ ಕ್ರಮದಲ್ಲಿ ಮಾತ್ರ ಥೇಟು ಅಪ್ಪನೆ. ಆದರೆ ಅಪ್ಪನಿಗಿಂತ ಉದ್ದ. ಸಪೂರ. ವೆಂಕಟ ಅಂಗಿಯಿಲ್ಲದೆ ಬರೀ ಪಂಚೆಯಲ್ಲಿ ಅವನ ಹಿಂದೆ ಓಡಿಹೋದ. ಸುಬ್ಬ ನಿಂತು, ಹಿಂದಕ್ಕೆ ತಿರುಗಿ, ಕೈಗಳನ್ನು ಕ್ರೂರವಾಗಿ ಬೀಸುತ್ತಾ ಏನೋ ವದರುತ್ತಿರುವವನಂತೆ ಕಂಡ. ವೆಂಕಟ ಅಷ್ಟಾವಕ್ರನಂತೆ ಕೈಕಟ್ಟಿ ನಿಂತು ಏನೇನೋ ಬೇಡಿಕೊಳ್ಳುತ್ತಿದ್ದ. ಸುಬ್ಬ ಚಕ್ಕನೆ ಬಾಗಿ, ಹುಡುಕಿದ. ಕಲ್ಲೆತ್ತಿಕೊಂಡ. ವೆಂಕಟ ಕೈಗಳನ್ನು ಮುಖಕ್ಕೆ ಅಡ್ಡ ಮಾಡಿ ಹಿಂದೆ ಹಿಂದೆ ಸರಿಯುತ್ತ ಇನ್ನೂ ಏನೋ ಹೇಳಿಕೊಳ್ಳುತ್ತಿದ್ದ. ಸುಬ್ಬ ಬಿರಬಿರನೆ ನಡೆದುಬಿಟ್ಟ. ತುದಿಗಾಲಲ್ಲಿ ರುಕ್ಕು ನಿಂತು ಮಗನಿಗಾಗಿ ಸಂಕಟ ಪಡುತ್ತಿರುವುದನ್ನು ನೋಡಲು ನನಗೆ ಕಷ್ಟವಯಿತು. ಹ್ಯಾಪ ಮೋರೆಯಲ್ಲಿ ಹಿಂದಕ್ಕೆ ಬಂದ ವೆಂಕಟ ನನ್ನನ್ನು ಕಂಡು- +“ಸುಬ್ಬನಿಗೆ ತಲೆ ಬಿಸಿಯಾಗಿಬಿಟ್ಟಿದೆ ಮಾರಾಯ. ಹುಲಿಯಂತೆ ಇನ್ನೇನು ನನ್ನ ಮೇಲೆ ಎರಗಲಿದ್ದ” ಎಂದು ಹುಸಿದಿಗಿಲಿನಲ್ಲಿ ಕಂಪಿಸುತ್ತಿರುವವನಂತೆ ನಟಿಸಿದ. +“ನಿಮ್ಮ ಹಡೇನ ಈಗ್ಲಾದ್ರೂ ನಿಲ್ಲಿಸಬಾರ್ದ? ಮಾಣಿ ಕೆನ್ನೆಗೆ ನಾಕು ಬಿಟ್ಟು ಎಳಕೊಂಡು ಬರೋಕೆ ಆಗದ ನೀವು ಅದೆಂಥ ತಂದೆಯೋ ನಾಕಾಣೆ.” ಎಂದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ರುಕ್ಕು ಒಳಗೆ ಹೋದಳು. +“ನೀವೇನೊ ಈ ಊರಲಿ ಕೊಳೆತಿರಿ ಎಂದರೆ ಈಗಿನ ಕಾಲದ ನಿಮ್ಮ ಮಗ ಕೊಳೀತಾನ? ಅಪ್ಪ ಎಂದರೆ ಊರಿಗೆಲ್ಲ ಸಸಾರ, ದುಗ್ಗಾಣಿ ಬೆಲೆ ನಮಗಿಲ್ಲ. ಮಗನಿಗೆ ಹೇಗೆ ಗೌರವ ಬರತ್ತೆ ಹೇಳಿ. ನೀವೂ ಹೋದರೆ ಹೋದಲ್ಲಿ ಬಂದರೆ ಬಂದಲ್ಲಿ ಹಿಹಿಹಿ ಅಂತ ಇದ್ದುಬಿಡ್ತೀರಿ.ನಿಮ್ಮಂಥವರಿಂದ ಮಕ್ಕಳು ಏನು ಕಲಿತಾವು. ನಿಮ್ಮಂಥವರಿಗೇಕೆ ಸಂಸಾರ ಹೇಳಿ. ಎಷ್ಟು ವರ್ಷದಿಂದ ನಿಮಗೆ ಪೆನ್‌ಶನ್ ಬಂದಿಲ್ಲ. ನಾನೇ ಮಾಡಿ ಸಾಯಬೇಕು. ದೊನ್ನೆ ಕಟ್ಟಬೇಕು. ಎಲೆ ಮಾಡಬೇಕು. ಮನೆ ಒಪ್ಪ ಓರಣ ನೋಡಿಕೋಬೇಕು. ಮಕ್ಕಳನ್ನ ಹದ್‌ಬಸ್ತಲ್ಲಿಡಬೇಕು. ಒಂದು ಕಾಸು ಬಿಚ್ಚದ ಆ ಜುಗ್ಗ ಶೇಷಣ್ಣನಿಗೆ ಮೂರು ಮೂರು ಸಾರಿ ಬೇಯಿಸಿ ತಿನ್ನಿಸಬೇಕು. ಪುನರ್ಪಾಕದ ಅನ್ನ ಸಾರು ಕಳಿಸಿದ್ರೆ ‘ಒಂದು ಚೂರು ಮಾವಿನ ಮಿಡಿ ಕಳಿಸ್ಬಾರ್ದ? ನಿಮ್ಮ ತಾಯಿ ಕೈ ಯಾಕೆ ಹೀಗೆ ಗಿಡ್ಡ’ ಅಂದ್ನಂತೆ. ಬಿಟ್ಟಿ ಗೇಯೋದಲ್ದೆ ಅವನಿಂದ ನಾನು ಹೀಗೆ ಅನ್ನಿಸ್ಕೋಬೇಕ? ಈ ಹಾಳು ಊರು ಬಿಟ್ಟು ನಾನಾಗಲೀ ಮಕ್ಕಳಾಗಲೀ ಬೇರೇನೂ ಕಂಡಿಲ್ಲ. ಒಂದು ಜಾತ್ರೆಯೊ, ಒಂದು ಸಿನಿಮಾನೊ, ಒಂದು ಪಟ್ಟಣವೊ- ನಾವೇನು ಕಂಡಿದೀವಿ ಹೇಳಿ. ಪಾಪ ಸುಬ್ಬ. ಅಕ್ಕಿ ಕಡಲೇಬೇಳೆ ಪಾಯಸ ಅಂದರೆ ಅದಕ್ಕಿಷ್ಟ. ಏನೂ ತಿನ್ನದೆ ಬಿಸಿಲಲ್ಲಿ ಅಲೀತಿದೆ. ಅಪ್ಪನ ಮ‌ಏಲೆ ಕೈಮಾಡುವಷ್ಟು ಕೆಟ್ಟಿದೆ. ಯಾರೋ ಆಗದವರು ಮಾಟ ಮಾಡಿಸಿದ್ದಾರೆ. ಕೆಟ್ಟದ್ದು ಏನೂ ನಿಮಗೆ ತಿಳಿಯಲ್ಲ. ಶುದ್ಢ ಭೋಳೆ ನೀವು…” +ಮಳೆಯಂತೆ ಜಿಟಿಜಿಟಿ ಬೀಳುತ್ತಿದ್ದ ಬೈಗುಳದಲ್ಲಿ ನನಗೆ ಜೊಂಪು ಹತ್ತುತ್ತಿದ್ದ,ತೆ ಎಷ್ಟು ಹೊತ್ತಾಯ್ತೊ ತಿಳಿಯದು. ವೆಂಕಟ ನನ್ನ ಸುತ್ತ ಭೃಂಗಾಮಲಕದ ಸೀಸೆ ಹಿಡಿದುಕೊಂಡು ಚಡಪಡಿಸುತ್ತಿದ್ದ ಎಂಬುದು ಕಣ್ಣು ಬಿಟ್ಟೊಡನೆ ತಿಳಿಯಿತು. ‘ಇದೇನೊ ಮಾರಾಯ’ ಎನ್ನುತ್ತ ಎದ್ದು ಕೂತೆ. ಬಾಯಲ್ಲಿ ಕವಳ ತುಂಬಿಸಿಕೊಂಡು ಮುಗುಳ್ನಗುತ್ತ ‘ಣಡಿ ಣಡಿ’ ಎಂದ. ನಾನು ಎದ್ದು ಬಚ್ಚಲಿಗೆ ಅವನನ್ನು ಹಿಂಬಾಲಿಸಿದೆ. ಸಂಜೆಯಾಗಿತ್ತು. ಸೊಂಟಕ್ಕೆ ಉಡಿದಾರ ಕಟ್ಟಿಸಿ ಕೌಪೀನ ಹಾಕಿಸಿ ನನ್ನ ಬೆತ್ತಲು ಮಾಡಿದ. ಒಲೆಯಲ್ಲಿ ಭೋರ್ಗರೆಯುವ ಬೆಂಕಿ. ಕಡಾಯಿಗಳಲ್ಲೆಲ್ಲ ತಣ್ಣೀರು ತುಂಬಿಸಿಟ್ಟಿದ್ದ. ಬಚ್ಚಲಿನ ಬಾಗಿಲು ಹಾಕಿಬಂದು ಮಣೆಯ ಮೇಲೆ ಕೂರಿಸಿದ ದೂರ್ವೆಯನ್ನು ಎಣ್ಣೆಯಲ್ಲದ್ದಿ ನನ್ನ ಹಣೆಗೂ ನೆತ್ತಿಗೂ ಮುಟ್ಟಿಸಿ ಕವಳ ತುಂಬಿ ಬಾಯೆತ್ತಿ ಮಣಮಣಾಂತ ಏನೋ ಮಂತ್ರ ಹೇಳಿ ಎಣ್ಣೆ ಶಾಸ್ತ ಮಾಡಿದ. ಕೈಗೆ ಎಣ್ಣೆಯನ್ನು ಹಚ್ಚಿ ಮೂಸಿ ನೋಡಿದ. ಕೆರೆ ಕಟ್ಟೆ ತೋಡಲು ಹೊರಟವನಂತೆ ಅವನು ಪಾಣಿಪಂಚೆ ಸುತ್ತಿದ್ದ. ಬಾಯಲ್ಲಿನ ಕವಳ ಉಗಿದು ಬಂದು ಪಾದಗಳಿಂದ ಶುರುಮಾಡಿದ. ಮೈಪೂರ್ತ ಎಣ್ಣೆ ಹಚ್ಚಿದ ಮೇಲೆ ತಟ್ಟೆಯಲ್ಲಿ ಹರಳೆಣ್ಣೆ ಹಾಕಿ, ಒಂದು ಸ್ಟೂಲಿನ ಮೇಲೆ ನನ್ನ ಕೂರಿಸಿ ತಟ್ಟೆಯಲ್ಲಿ ನನ್ನ ಪಾದಗಳನ್ನಿರಿಸಿದ. ‘ಅದರ ತಂಪು ಕ್ರಮೇಣ ನೆತ್ತಿಗೆ ಏರತ್ತೆ’ ಎಂದು ವ್ಯಾಖ್ಯಾನಿಸಿದ. ಕೈಗಳನ್ನು ಮೇಲಕ್ಕೆ ಕೆಳಕ್ಕೆ ಝಾಡಿಸಿ ಅಂಗೈಯನ್ನು ಸವುಟಿನಂತೆ ಹಳ್ಳಮಾಡಿ, ಭೃಂಗಾಮಲಕವನ್ನು ಅದರಲ್ಲಿ ಹೊಯ್ದುಕೊಂಡು ನೆತ್ತಿಗದನ್ನು ಸುರಿದು ‘ಅಮ್ಮ ಮಹಾತಾಯಿ’ ಎಂದು ದಡಬಡನೆ ಎರಡು ಕೈಗಳಿಂದಲೂ ತಲೆಯನ್ನು ಮದ್ದಲೆಯಂತೆ ಬಡಿದ. ಬಡಿಯುವ ಲಯ, ಘಾತಗಳನ್ನು ಬದಲಿಸುತ್ತ “ನಿನ್ನ ನೆತ್ತಿ ಜೊತೆ ಮಾತಾಡ್ತಿದೀನಿ. ಹೇಗಿದೆ ಸದ್ದು? ಈಗ ಮೃದಂಗದಂತೆ ಕೇಳಿಸುತ್ತಲ್ವ?” ಎಂದ. ನಾನು ದಾಕ್ಷಿಣ್ಯದಿಂದ ‘ಹೂಂ’ ಎಂದೆ. ಈ ಪೂಜೆಯಿಂದ ನನಗೆ ಮುಜುಗರವಾಗತೊಡಗಿತ್ತು. ಅವನು ಬಡಿದ ಕ್ರಮದಿಂದ ನನ್ನ ಹಿಂದೆ ಆವ ಕುಣಿಯುತ್ತಿರಬದುದೆಂಬ ಅನುಮಾನವಾಯಿತು. ಆದರೆ ಕತ್ತು ತಿರುಗಿಸುವಂತಿಲ್ಲ. “ನೆತ್ತಿಯ ಮೂಲಕ ಈ ನಾದ ನಿನ್ನ ನಾಭಿಯವರೆಗೂ ಹರಿಯುತ್ತದೊ” ಎಂದ. “ಈ ನಾದ ಷಟ್ಚಕ್ರಗಳನ್ನು ಪುಸಲಾಯಿಸುತ್ತೆ ಅಂತಾರಪ್ಪ. ನನಗದರ ವಿಶೇಷ ಜ್ಞಾನವೇನೂ ಇಲ್ಲ, ಅನ್ನು. ಆದರೆ ಕೆಲಸ ಮಾತ್ರ ಬರತ್ತೆ” ಎಂದು ಏದುತ್ತ ಹೇಳಿದ. ಖಂಡಿತ ಅವನು ಕುಣಿಯುತ್ತಿರಬೇಕು. ಸಂಗೀತದ ನಡುವೆ ತನಿ ಬಿಟ್ಟಾಗ ಘಟ ಬಾರಿಸುತ್ತಿರುವವನಂತೆ ಅವನು ನನಗೆ ಭಾಸವಾದ. +ಈ ತಾಡನ ಕ್ರಿಯೆಯ ನಂತರದ ವಿಧಿಗಳು ನಾನಾ ಬಗೆಯ ಕಂಪನಗಳನ್ನು ಉಂಟುಮಾಡುವ ಉದ್ದೇಶ ಹೊಂದಿದ್ದವು. ವೆಂಕಟನ ಏದುಸಿರಿನ ಮೃದುವಾಗಿ ಕಂಪಿಸುವ ಮಾತುಗಳ ರನ್ನಿಂಗ್ ಕಾಮೆಂಟರಿ ಸಹಿತ ಈ ಕಂಪನಕ್ರಿಯೆ ನಡೆದಿತ್ತು. ದೂರದಲ್ಲಿ ನನ್ನ ಬೆನ್ನಿಗಿದ್ದ ಬೆಂಕಿಯಿಂದ ನನ್ನ ಹಿಂಭಾಗ ಕಾದಿತ್ತು. ಈಗ ವೆಂಕಟ ಪ್ರದಕ್ಷಿಣೆ ಸುತ್ತುತ್ತ ನನ್ನ ತಲೆಯ ಮೇಲೆ ಬೇರೆಬೇರೆ ಭಾಗಗಳನ್ನು ಬೆರಳುಗಳ ವೈವಿಧ್ಯಮಯ ಸಂಯೋಜನೆಗಳಿಂದ ಕಚಗುಳಿಯಿಡುತ್ತ, ಚಿವುಟುತ್ತ, ಹಿಂಜುತ್ತ ಮಿಡಿಯುತ್ತ, ಸವರುತ್ತ, ಕೆರೆಯುತ್ತ, ನೂಕುತ್ತ, ಎಳೆಯುತ್ತ ಎಣ್ಣೆಯಿಂದ ಪೂಜಿಸಿದ.. “ಈಗ ನಿನ್ನ ತಲೆಯೇ ನನ್ನ ಜೊತೆ ಮಾತಾಡ್ತಿದೆ”- ಎಂದು ತನ್ನ ತಲೆಗೆ ಸುತ್ತಿದ್ದ ಪಾಣಿಪಂಚೆಯಿಂದ ಬೆವರೊರೆಸಿಕೊಂಡು ಷಟ್ಚಕ್ರಗಳನ್ನು ಎಬ್ಬಿಸುವ ತೈಲಮರ್ದನದ ಪೂಜೆಯ ಎರಡನೇ ಹಂತಕ್ಕೆ ಉದ್ಯುಕ್ತನಾದ. ಅವನಿಗಿದ್ದದ್ದು ಇಪ್ಪತ್ತು ಬೆರಳೊ, ನೂರಾರೊ ಎಂದು ನನಗಚ್ಚರಿಯಾಗುತ್ತಿದ್ದಂತೆ ಅವನ ರನ್ನಿಂಗ್ ಕಾಮೆಂಟರಿ ಮಂತ್ರದ ಉದ್ದೀಪನವನ್ನು ತನ್ನ ಲಯಬದ್ಧ ರಾಗದಲ್ಲಿ ಅಗತ್ಯಕ್ಕನುಗುಣವಾಗಿ ಬದಲಾಗುತ್ತ ಪಡೆದುಕೊಂಡಿತು- ಈ ಪರಿಯಲ್ಲಿ: +“ಅನಂತು ಅನಂತು ಇದೀಗ ಕಾಡುಹೊಕ್ಕಿ ಕಾಡುಹೊಕ್ಕಿ… ಕಾಡಲ್ಲಿ ಮರ, ಮರ, ಮರ… ಮರದ ಮೇಲೆ ಗಿಣಿ, ಗಿಣಿ, ಹಸಿರು ಗಿಣಿ… ಎಲೆಗಳ ನಡುವೆ ಹಸಿರು ಹಸಿರು ಗಿಣಿ… ಹಸಿರು ಗಿಣಿಗೆ ಬಾಗಿದ ಕೊಕ್ಕು, ಬಾಗಿದ ಕೊಕ್ಕಲ್ಲಿ ಕೆಂಪು ಹಣ್ಣು, ಕೆಂಪು, ಕೆಂಪು ಹಣ್ಣು… +ಕೆಳಗೆ ತಂಪು, ತಂಪು. ತಂಪಿನಲ್ಲೊಂದು ಮೊಟ್ಟು, ಮೊಟ್ಟಿನಿಂದ ಘಮಘಮ… ಅದು ಹಳದಿ ಬಣ್ಣದ ಕೇದಿಗೆ, ನೋಡು…ನೋಡು… ಸಂದಿಂದ ನೋಡು. ಹೇಗೆ ಬಿರೀತಿದೆ ನೋಡು… ಒರಟಾದ ಉದ್ದನೆಯ ಮುಳ್ಳಂಚಿನ ಹಸಿರೆಲೆ. ಹಸಿರಿನ ಒಳಗೆ ಮೃದುವಾದ ಹಳದಿ…ನುಣುಪಾದ ಹಳದಿ… ಪುಡಿಪುಡಿ ಹಳದಿ… ಜಾರೋ ಹಳದಿ… ಗುಟ್ಟಾದ ಹಳದಿ… +ಮುಂದೆ ನಡಿ ಮೆತ್ತಗೆ ನಡಿ… ಮೆಲ್ಲ ಮೆಲ್ಲ ನಡೀತ ನೋಡು… +ಇದು ಬಸರಿ. ಇದು ಹಲಸು. ಇದು ನಂದಿ. ಇದು ಮುತ್ತುಗ. ಇದು ಮಾವು. ಇದು ಆಲ. ಇದು ರಂಜ. ಆಲದ ಬೀಳು ನೋಡು. ಬೀಳಿನ ತುದಿ ನೋಡು… ತುದೀಲಿ ಅದಕ್ಕೆ ಉಗುರಿದೆ… ಇದು ಋಷಿಯೋ- ಜಡೆ ಋಷಿ… +ಇಲ್ಲೆಲ್ಲ ಆಕಾಶ ಚೂರು ಚೂರಾದ ನೀಲಿ. ಹಣುಕೋ ನೀಲಿ. ಕೆಣಕೋ ನೀಲಿ, ಕಿರಿ ಕಿರಿ ನೀಲಿ. ಪಿರಿಪಿರಿ ನೀಲಿ. ಮುಂದೆ ನಡಿ. ಮೆತ್ತಗೆ ನಡಿ. ಮುಂದೆ ನಡಿ… ನಿಲ್ಲು… ಈಗ ಬಯಲು. ಬಯಲೋ ಬಯಲು. ಬಟ್ಟ ಬಯಲು ನೋಡು… +ಎದುರೊಂದು ಪುಟ್ಟ ಗಿಡ. ಗಿಡದ ಮೇಲೊಂದು ಎಲೆ.. ಎಲೆ ಮೇಲೊಂದು ಚಂಗನೆ ನೆಗೀತಿದೆ. ಚಂಗನೆ ನೆಗೀತಿದೆ… ಪುಟೀತಿದೆ…ಹೀಗೆ…ಹೀಗೆ ಯಾವತ್ತೋ ಒಂದು ದಿನ ನೀನು ಸ್ಕೂಲಿಗೆ ಬರ್ತಿದ್ದಾಗ ಅದು ನೆಗೆದಿತ್ತು… ಅಲ್ವ? ನೀನು ಚೀಲಾನ್ನ ಬಿಸಾಕಿ ನೋಡ್ತಾ ನಿಂತಿ ನೋಡ್ತಾ ನಿಂತಿ ನೋಡ್ತಾನೆ… +ಸೂರ್ಯನ ಕುದುರೇನ ನೋಡ್ತಾ ನಿಂತಿ. ಅದರ ಡೊಂಕು ಕಾಲನ್ನು ನೋಡ್ತಾ ನಿಂತಿ. ಅದರ ಡುಬ್ಬು ಬೆನ್ನನ್ನು ನೋಡ್ತಾ ನಿಂತಿ. ಅದರ ಅಲ್ಲಾಡೋ ಮೀಸೇನ್ನ ನೋಡ್ತಾ ನಿಂತಿ. ಅತ್ತ, ಮತ್ತಿತ್ತ. ಅತ್ತ… ಮತ್ತಿತ್ತ ಅತ್ತ, ಅತ್ತ.. ಅರರೆ ಮತ್ತಿತ್ತ… +ಪುಟ್ಟ ಕುದುರೆ, ಪುಟಾಣಿ ಕುದುರೆ… ಹೇಗೆ ಸೂರ್ಯ ಅದರ ಬೆನ್ನ ಮೇಲೆ ಸವಾರಿ, ಮಾಡ್ತಾನಲ್ಲಾಂತಾ ನೋಡ್ತಾ ನಿಂತಿ… +ಹಸಿರಿನ ಮೇಲೆ ಸೂರ್ಯ ಸವಾರಿ ಮಾಡ್ತಾನೋ ಸರದಾರ ಅವ…ಇದು ಪುಟ್ಟ ಕುದುರೆ. ಹಸಿರು ಬಣ್ಣದ ಪುಟಾಣಿ ಕುದುರೆ. ಚಂಗನೆ ಹಗುರಾಗಿ ಹಾರೋ ಕುದುರೆ. ಅದರ ಡುಬ್ಬು ಬೆನ್ನಿನ ಮೇಲೆ ದೊಡ್ಡ ಸೂರ್ಯ ಈಟೀಟು ಕೂತ. ಈಟೀಟು ಕೂತ. ಹಗುರಾಗಿ ಕುತ. ಕಾಣದಂತೆ ಕೂತ. ಸಂದೀಲಿ ಮಿಂಚುತ ಕೂತ… +ಎಲ್ಲಿ ಎಲ್ಲಿ ಮಿಂಚುತಾನೆ ನೋಡು. ಚಂಚದಲ್ಲಿ ಮಿಂಚುತಾನೆ. ಹಸಿರಿನ ಮೇಲೆ ಮಿಂಚುತಾನೆ. ಕಣ್ಣು ಪಾಪೇಲಿ ಮಿಂಚುತಾನೆ. ಮೊಡದ ಅಂಚಿಂದ ಮಿಂಚುತಾನೆ. ಬುಡು ಬುಡೂ ಉರುಳುತಾನೆ. ಹರಿಯೋ ನೀರಲ್ಲಿ ಜಾರುತಾನೆ. ಜಾರಿಬಿದ್ದು ಓಡುತಾನೆ. ಇಡೀ ಇದ್ದವನು ಬಿಡಿಬಿಡಿಯಾಗುತ್ತಾನೆ. ನೆರಳಾಗ್ತಾನೆ. ಬಣ್ಣವಾಗ್ತಾನೆ. ಕತ್ತಲಾಗ್ತಾನೆ. ಉಷೆಯಾಗ್ತಾನೆ. ಸುರೀತಾನೆ… +ನೋಡು ಈಗ ಬರೀ ಬಯಲು. ಬಟ್ಟ ಬಯಲು. ಮೆಲೆ ಸುರೀತಿರೋ ಸೂರ್ಯ. ಅವನ್ನ ಹಗುರಾಗಿ ಹೊತ್ಕೊಂಡು ನೆಗೀತ, ನೆಗೀತ ಇರೋದು ಬಯಲು. ಇದೊಂದು ಸೂರ್ಯನಕುದುರೆ ಮಾತ್ರ. ಜೀನಿಲ್ಲದ ಅದರ ಜರ್ಬು ನೋಡು. ಅಂಕೂ ಡೊಂಕೂ ಕಾಲು ನೋಡು…ಸಟಗೊಂಡು ಇರೋ ಬಾ ನೋಡು… ದೇಶ ಹುಡುಕೋ ಮೀಸೆ ನೋಡು. +ಎಲೇಂದ ಎಲೆಗೆ ನೆಗೀತ ಇದೆ. ಇಡೀ ನೋಡು. ಬಿಡಿಬಿಡಿಯಾಗಿ ನೋಡು. ಹಸಿರಿನ ರಾಶೀಲಿ ಕೆನೆಯಾದ ಹಸಿರು. ಕಣ್ಣೂ ಹಸಿರು. ಹೇಳ್ತಿದೆ ಕೇಳು. ಸೂರ್ಯನ ಕುದುರೆ ಹೇಳ್ತಿದೆ ಕೇಳು: +ನಾನೇನು ಕುದುರೆ ನೀನ್ಯಾವ ಮನುಷ್ಯ. ನಾನೂ ನೀನೂ ಅದಲೂ ಬದಲೂ. +ಅನಂತಣ್ಣ, ಅನಂತಣ್ಣ, ಚಂಗನೆ ಹಾರೋ ಅನಂತಣ್ಣ, ಸೂರ್ಯನ್ನ ಹೊರೊ ಅನಂತಣ್ಣ. +ಈಗ ಬಿಡ್ತು, ಈಗ ಬಿಡ್ತು. ಸಿಟ್ಟು ಬಿಡ್ತು. ಸಿಡುಕು ಬಿಡ್ತು. ಗರ್ವ ಬಿಡ್ತು. ರಾವು ಬಿಡ್ತು. ದುಡ್ಡಿನ ಮೇಲಿನ ಮೋಹ ಬಿಡ್ತು. ಹೆಸರಿನ ಮೇಲಿನ ಜರ್ಬು ಬಿಡ್ತು. ಎಲ್ಲಾ ಬಿಡ್ತು. ಎಲ್ಲಾ ಬಿಡ್ತು… +ಅಪ್ಪನ ದೃಷ್ಟಿ ಅಮ್ಮನ ದೃಷ್ಟಿ ಮಂತ್ರಿ ದೃಷ್ಟಿ ತಂತ್ರಿ ದೃಷ್ಟಿ ಸೂಳೇ ದೃಷ್ಟಿ ರಂಡೇ ದೃಷ್ಟಿ ಮುಂಡೇ ದೃಷ್ಟಿ ಸುಡುಗಾಡು ದೃಷ್ಟಿ ಯೋನಿ ದೃಷ್ಟಿ ಓಣಿ ದೃಷ್ಟಿ ಹರಕಲು ದೃಷ್ಟಿ ಮುರುಕಲು ದೃಷ್ಟಿ ಓದೊ ಎಲ್ಲಾ ಪುಸ್ತಕದ ದೃಷ್ಟಿ ಬಿಡ್ತು ಬಿಡ್ತು ದೃಷ್ಟಿ ಬಿಡ್ತು. +ಉಳಿದದ್ದೊಂದೇ ಸೂರ್ಯನ ಕುದುರೆ. ನೀನೇ ಕುದುರೆ ನೀನೇ ಕುದುರೆ…” +ಇವನ ಮಾತಿನ ಓಘ ಬದಲಾದಂತೆ ಮರ್ದನ ಕ್ರಿಯೆಯು ಕಂಪನಕ್ರಮಗಳೂ ಬದಲಾಗುತ್ತ, ಸಾವಿರಾರುಬೆರಳುಗಳು ತಲೆಯ ಮೇಲೆ ನರ್ತಿಸುತ್ತಿದ್ದವು. ಕಣ್ಣಿಗೆ ಎಣ್ಣೆ ಇಳಿದು ಉರಿಯತೊಡಗಿತು. ಅದನ್ನು ಗಮನಿಸಿದ ವೆಂಕಟ ಉಸ್ಸೆಂದು ತನ್ನ ತಲೆಗೆ ಸುತ್ತಿದ್ದ ಪಾಣಿಪಂಚೆಯಿಂದ ನನ್ನ ಕಣ್ಣನ್ನು ಒರೆಸಿದ. ಆರ್ತನಾದ ಧ್ವನಿಯಲ್ಲಿ ಕೇಳಿದ: +“ಅನಂತು ಬೆಳದಿಂಗಳು ಕಾಣಿಸಲಿಕ್ಕೆ ಶುರುವಾಗಿತ್ತೇನೋ?” +ನನಗೆ ಇಲ್ಲವೆನ್ನಲು ಮನಸಾಗಲಿಲ್ಲ. ಹೂ ಎಂದೆ. ವೆಂಕಟ ಮೈಗೆ ನೀರು ಹೊಯ್ದುಕೊಂಡವನಂತೆ ಬೆವರಿದ್ದ. ನುಣ್ಣಗೆ ಅವನೆದುರು ಕೂತ ನನ್ನ ನಗ್ನತೆಯಿಂದ ನಾಚಿಕೆಯಾಯ್ತು. +“ಇಲ್ಲ- ನಿನಗೆ ಬೆಳದಿಂಗಳ ತರ ಕಂಡಿದೆಯಷ್ಟೆ. ಇನ್ನೊಂದು ಅಭ್ಯಂಜನಕ್ಕೆ ಬೆಳದಿಂಗಳೇ ಕಾಣಿಸ್ತದೆ” ವೆಂಕಟ ನಸ್ಯವೇರಿಸಿದ. +ನಾನು ತಿಳಿದದ್ದು ಸುಳ್ಳು. ಈ ಹಡೆ ವೆಂಕಟನೂ ಒಬ್ಬ ಹವಣಿಕೆಯ ರಾಜಕಾರಣಿಯೇ. ಎಂಥ ಮ್ಯನಿಪುಲೇಟರ್. ನನ್ನ ಸ್ಥಿತಿಯನ್ನೇ ಬದಲಾಯಿಸಲು ಹವಣಿಸಿದ್ದ. +ಬಿಸಿ ನೀರು ತುಂಬಿದ ಬಾನಿಯಲ್ಲಿ ಕೂರಿಸಿದ. ಕಂಕುಳ ಸಂದಿಯನ್ನೆಲ್ಲ ಉಜ್ಜಿಕೋ ಎಂದ. ತಣ್ಣನೆಯ ಮತ್ತಿಯ ಲೋಳೆಯನ್ನು ತಲೆಗೆ ಸುರಿದು ಸೀಗೆಯಲ್ಲಿ ಗಸಗಸ ಉಜ್ಜಿದ. ಬೋಸಿಯಲ್ಲಿ ನೀರು ತುಂಬಿ ಎತ್ತರದಿಂದ ಪಟಾಪಟಾ ಎಂದು ಚೆಲ್ಲಿದ. ಕಾದು ಬೆಂದು ನಾನು ರಸಪುರಿಯಂತೆ ಕೆಂಪಾಗಿದ್ದೆ. ನನ್ನ ಕೈಗಳಲ್ಲಿ ಬಲ ಉಳಿದಿರಲಿಲ್ಲ. ಅವನೇ ಮೈ ಒರೆಸಿದ. ಬೆಲ್ಲದ ಪಾನಕ ಕುಡಿಸಿ, ಹಂಡೆಯ ಕರಿಯನ್ನು ಹಣೆಗೆ ಹಚ್ಚಿ ಹಾಸಿಗೆಯಲ್ಲಿ ಮಲಗಿಸಿ ಮನೆಯಲ್ಲಿದ್ದ ಎಲ್ಲ ಕಂಬಳಿಗಳನ್ನೂ ಹೊದೆಸಿ ‘ಚೆನ್ನಾಗಿ ಬೆವರ ಬೇಕು’ ಎಂದ. ಸ್ವಲ್ಪ ಹೊತ್ತಿನಲ್ಲೇ ನಾನು ಇನ್ನೊಂದು ಸ್ನಾನ ಮಾಡಿದವನಂತೆ ಬೆವತಿದ್ದೆ. ಮತ್ತೆ ನನ್ನನ್ನು ಒರೆಸಿ ಚಾಪೆಯ ಮೇಲೆ ಮಲಗಿಸಿದ. ಬಿಸಿ ಬಿಸಿಯಾದ ಕಾಫಿಯನ್ನು ತಂದುಕೊಟ್ಟ. ಕಾಫಿ ಕುಡಿದ ನನಗೆ ಜೊಂಪು ಹತ್ತಿತ್ತು. ರುಕ್ಕು ಕಣ್ಣಿರು ಹಾಕುತ್ತ ಪತ್ರಡೆಯ ಏರ್ಪಾಡಿನಲ್ಲಿ ತೊಡಗಿದ್ದಳು. +ನನಗೆ ನಿದ್ದೆ ತಿಳಿದು ಎಚ್ಚರಾದಾಗ ವೆಂಕಟ ಹೆಂಡತಿಯನ್ನು ಬೇಡುತ್ತಿದ್ದ.“ಶೇಷಣ್ಣನಿಗೆ ಗಂಜಿ ಮಾಡಿಕೊಡೇ. ನಾನೇ ಬಿರ್ರನೆ ಹೋಗಿ ಕುಡಿಸಿ ಬರ್ತೀನಿ” ಅಂತ. “ಮಗ ತಿಂಗಳಿಗೆ ಐನೂರು ಕಳಿಸ್ತಾನಂತೆ. ನಿಮಗೊಂದು ದುಗ್ಗಾಣಿ ಅವ ಬಿಚ್ಚಲ್ಲ. ನಿಮಗೋ ಹೊಟ್ಟೇಲಿ ಹುಟ್ಟಿದ ಮಗನ ಚಿಂತೆ ಇಲ್ಲ. ನಾನ್ಯಾಕೆ ಆ ಜುಗ್ಗನ ಶುಶ್ರೂಷೆ ಮಾಡಲಿ? ಆ ಮುದುಕ ಸತ್ತರೇನು ಇದ್ದರೇನು ನಮಗೆ” ಎಂದು ರುಕ್ಕು ಒದರುತ್ತಿದ್ದಳು. ಆದರೂ ವೆಂಕಟ ಶಕುಂತಳನಿಂದ ಗಂಜಿ ಮಾಡಿಸಿಕೊಂಡು ಹೊರಬಿದ್ದ. ಎದ್ದು ಕೂತ ನನ್ನೆದುರು ರುಕ್ಕು ಬಂದು ನಿಂತು ಅಳಲು ಶುರು ಮಾಡಿದಳು. ಅವಳ ಪ್ರಕಾರ ಸುಬ್ಬನ ಗ್ರಹಚಾರ ಸರಿಯಿರಲಿಲ್ಲ. ಅವನಿಗೆ ಬೆಂಗಳೂರಿಗೋ ಮೈಸೂರಿಗೋ ಹೊಗಿ ಎಂಜಿನ್ ಕೆಲಸ ಕಲಿಯೋ ಆಸೆ. ಯಾಕವನು ಶೇಷಣ್ಣನ ಮಗನಂತೆಯೇ ಮುಂದಕ್ಕೆ ಬರಬಾರದು? ಅವನಿಗೇನು ಕಮ್ಮಿ? ನನ್ನ ಸ್ನೇಹಿತನ ಮುಖ ನೋಡಿಯಾದರೂ ನಾನವನನ್ನು ಮೈಸೂರಿಗೆ ಕರಕೊಂಡು ಹೋಗಿ ಎಲ್ಲದರೂ ಕೆಲಸ ಕೊಡಿಸಬೇಕು. +ನನಗೆ ಭಯ. ಅವನನ್ನು ಮೈಸೂರಿಗೆ ಕರಕೊಂಡು ಹೋಗಿ ಮನೆಯಲ್ಲಿಟ್ಟುಕೊಂಡರೆ ಅವನ ಉಪದ್ವ್ಯಾಪಗಳನ್ನು ನನ್ನ ಹೆಂಡತಿ ಸಹಿಸುವವಳಲ್ಲ. ಆದರೂ ವಚನ ಕೊಟ್ಟೆ. ಎಲ್ಲಾದ್ರೂ ರೂಂ ಮಾಡಿ ಇಡ್ಸಿದರೂ ಆಯಿತು ಎಂದು ಕೊಂಡೆ. ಇದರಿಂದ ರುಕ್ಕುಗೆ ಎಷ್ಟು ಖುಷಿಯಾಯಿತೆಂದರೆ ಇಡೀ ಮನೆ ಅವಳ ಗೆಲುವಿನಿಂದ ಉಕ್ಕಿತು. ಶಕುಂತಳ, ಗೌರಿ ಮತ್ತು ಚಿಕ್ಕ ಹುಡುಗಿ ಗಂಗ ಕೂಡ ಸಡಗರದಿಂದ ಓಡಾಡಿದರು. ಹೀಗೆ ಬದಲಾದ ವಾತಾವರಣ ಕಂಡು ಹಿಂದಕ್ಕೆ ಬಂದು ವೆಂಕಟನೂ ಹಿಗ್ಗಿ ಹೀರೆಕಾಯಿಯಾದ. ನಾನು ಕೊಟ್ಟ ವಚನ ಗೊತ್ತಿರಲಿಲ್ಲ. ಶೇಷಣ್ಣನ ಜುಗ್ಗುತನವನ್ನು ಒಂದಿಷ್ಟೂ ಕೊಂಕಿಲ್ಲದಂತೆ ಅದೊಂದು ರಮಣೀಯ ನಾಟಕದಲ್ಲಿನ ದೃಶ್ಯವೆಂಬಂತೆ ನಟಿಸಿ ತೋರಿಸಿದ. ಹಿಂದೆ ನಡೆದೊಂದು ಘಟನೆ: ವೆಂಕಟ ಔಷಧ ತಂದುಕೊಟ್ಟಿದ್ದ. ದುಡ್ಡನ್ನು ಮುರಿಸಿ ತಂದಿದ್ದ ಬಾಕಿ ಚಿಲ್ಲರೆಯನ್ನು ಶೇಷಣ್ಣ ಎಣಿಸಿದ. ಮತ್ತೆ ಎಣಿಸಿದ. (ವೆಂಕಟ ಕೆಮ್ಮುತ್ತ ಒಂದೊಂದೇ ನಾಣ್ಯವನ್ನು ನಡುಗುವ ಕೈಯಲ್ಲಿ ನೋಡಿ ನೋಡಿ ಎಣಿಸುವುದನ್ನು ಕಂಡು ರುಕ್ಕು ಕೂಡ ನಕ್ಕಳು.) ಮತ್ತೆ ಎಣಿಸುವಾಗ ‘ಏನಾಗಿದೆ ಶೇಷಣ್ಣ?’ ಎಂದು ವೆಂಕಟ ಕೇಳಿದ. ‘ಪಾವಲಿಯೊಂದು ಸವೆದು ಬಿಟ್ಟಿದೆಯಲ್ಲ ಮಾರಾಯ’ ಎಂದ ಶೇಷಣ್ಣ. ‘ನಡೀತದೆ ಬಿಡಿ’ ಎಂದ ವೆಂಕಟ. ‘ಇದೊಂದು ದಾಟಿಸಿ ಬೇರೊಂದು ಪಾವಲಿ ತಂದುಬಿಡಯ್ಯ’ ( ಶೇಷಣ್ಣನಂತೆಯೇ ಬಾಯಿ ಬಿಟ್ಟು ಗೊರಗೊರ ಅಂತ ವೆಂಕಟ ಯಾಚಿಸಿದ) ‘ಈಗಲೇ ತರಬೇಕ ಶೇಷಣ್ಣ ಪೇಟೇಂದ?’ ಮೂರು ಮೈಲಿ ನಡೆದುಬಂದಿದ್ದ ವೆಂಕಟ ಕೇಳಿದ. ‘ಮತ್ತೇನಾದ್ರೂ ಇವತ್ತೇ ಪೇಟೆಗೆ ಹೋಗೋದು ಇದ್ರೆ…’ (ಈಗ ಶೇಷಣ್ಣನ ಮುಖದಲ್ಲಿ ಮರಣ ಸುಖ ಹೊಂಚಿತ್ತು)“ಮಾರಾಯ ನಿದ್ದೆ ಮಾಡಲ್ವಲ್ಲ ಅಂತ ಹತ್ತಿರವಿದ್ದ ಇನ್ನೊಂದು ಪಾವಲೀನ ಕೊಟ್ಟು ಬಂದೆ ಅನ್ನು” ವೆಂಕಟ ಎಷ್ಟು ದಿನವಾದರೂ ತಾನು ದಾಟಿಸಲು ಅಸ್ಮರ್ಥನಾದ ಸವಕಲು ಪಾವಲಿಯೊಂದನ್ನು ಕಿಸೆಯಿಂದ ತೆರೆದು ತೋರಿಸಿದ. ರುಕ್ಕುಗೆ ಸಿಟ್ಟು ಬಂದು “ಸತ್ತ ಮೇಲೆ ಅದನ್ನ ಅವನ ಹೆಣದ ಮೇಲೆ ಹಾಕಿ” ಎಂದು ಎಲೆ ಬಡಿಸಲು ಎದ್ದು ಹೋದಳು. +* +* +* +ನನಗೆ ಬಾಲ್ಯದಲ್ಲಿ ಪ್ರಿಯವಾಗಿದ್ದ ಪತ್ರಡೆಯನ್ನು ತಿನ್ನಲಾರದಂಥ ಒಂದು ಅನ್ನಕಂಟಕ ಘಟನೆ ನಡೆಯಿತು. ವೆಂಕಟ ಮತ್ತು ಶಕುಂತಳ ಎಷ್ಟು ಉಪಚರಿಸಿದರೂ ರುಕ್ಕು ಬಿಕ್ಕಿ ಬಿಕ್ಕಿ ಅಳುವುದನ್ನು ನಾನು ಹೇಗೆ ಗಮನಿಸದೇ ಇರಲಿ? ಆದದ್ದು ಇಷ್ಟು: ನನಗೆ ಬೆಳ್ಳಿ ಲೋಟದಲ್ಲೆ ಹಾಲಿನ ಖೀರನ್ನು ಬಡಿಸಬೇಕೆಂಬ ಆಸೆಯಿಂದ ರುಕ್ಕು ತನ್ನ ಮದುವೆಗೆ ಬಳುವಳಿಯಾಗಿ ಬಂದಿದ್ದ ವಸ್ತುಗಳನ್ನೆಲ್ಲಜೋಪಾನವಾಗಿಟ್ಟಿದ್ದ ದೊಡ್ಡ ಹಿತ್ತಾಳೆ ಟ್ರಂಕಿನ ಮುಚ್ಚಳವನ್ನು ತೆಗೆದು ನೋಡಿದರೆ ಅಲ್ಲೇನಿದೆ? ಮೊಮ್ಮಕ್ಕಳಿಗೆಂದು ಗೋರೋಜನ, ಜಾಯಿಕಾಯಿ, ಒಣಶುಂಠಿ, ಕಸ್ತೂರಿ ಮಾತ್ರೆ, ಅಳಲೇಕಾಯಿ, ರುದ್ರಾಕ್ಷಿ, ಒಣಗಿಸಿದ ದಾಳಿಂಬೆಯೋಡು, ಒಂದು ಶ್ರೀಗಂಧದ ಕೊರಡು, ಆಭರಣ ತೊಳೆಯಲೆಂದು ಇದ್ದ ಅಂಟ್ವಾಳ- ಇಷ್ಟನ್ನು ಬಿಟ್ಟು ಉಳಿದಿದ್ದೆಲ್ಲ ಬರಿದಾಗಿದೆ. ಹೆಣ್ಣುಮಕ್ಕಳ ಮದುವೆಗೆಂದು ರುಕ್ಕು ಜೋಪಾನ ಮಾಡುತ್ತ ಬಂದಿದ್ದ ಎಂಥ ಬಡತನದಲ್ಲೂ ಅಡವು ಇಡದಂತೆ ರಕ್ಷಿಸಿದ್ದ ಬುಗುಡಿ, ಕೆನ್ನೆ ಸರಪಳಿ, ನಾಲ್ಕೆಳೆಯ ಅವಲಕ್ಕಿ ಸರ, ನಾಲ್ಕು ಬಳೆ, ಸೊಂಟದ ಪಟ್ಟಿ, ತಿರುಪಿನ ಹೂವು, ಮೂಗುಬಟ್ಟು, ಕಾಲಿನ ಚೈನು, ಹವಳದ ಒಂದು ಸರ, ಎರಡು ಬೆಳ್ಳಿಯ ಬಟ್ಟಲು, ಮೂರು ಬೆಳ್ಳಿಯ ಪಂಚಪಾತ್ರೆ, ಸಂಧ್ಯಾವಂದನೆಯ ಬೆಳ್ಳಿ ತಟ್ಟೆ, ಬೆಳ್ಳಿಯ ಚೊಂಬು, ಬೆಳ್ಳಿಯ ಉದ್ಧರಣೆ, ಬೆಳ್ಳಿಯ ಅರಸಿನ-ಕುಂಕುಮದ ಬಟ್ಟಲುಗಳು ಎಲ್ಲವೂ ನಾಪತ್ತೆಯಾಗಿದ್ದವು. ಏನೂ ಆಗಿಲ್ಲವೆಂಬಂತೆ ವೆಂಕಟ ನಟಿಸುತ್ತ ನನ್ನನ್ನು ಪತ್ರಡೆ ತು‌ಇನ್ನುವಂತೆ ಒತ್ತಾಯಿಸುತ್ತಿದ್ದರೂ ಚಿಕ್ಕ ಮಗು ಗಂಗ ಓಡಿಬಂದು ಅವಸರ ಅವಸರವಾಗಿ ಹೇಳಿದಳು: +“ಅಮ್ಮ ಅಳ್ತಿದ್ದಾಳೆ. ಸುಬ್ಬ ಎಲ್ಲಾ ನಗಾನೂ ಕದ್ದುಕೊಂಡು ಹೋಗಿದಾನೆ. ಶುಕ್ರವಾರ ಅಮ್ಮ ಟ್ರಂಕನ್ನು ತೆಗೆದಾಗ ಎಲ್ಲಾ ಇತ್ತು. ನಿಮ್ಮ ಹೊಟ್ಟೆ ನೋವಿಗೆ ದಾಳಿಂಬೆ ಓಡು ತೇಯಕ್ಕೇಂತ ತೆಗೆದಿದ್ಲು. ಮೊನ್ನೆ ಅಮ್ಮ ಬಟ್ಟೆಯೊಗೆಯೋಕ್ಕೆಂತ ಕೆರೆಗೆ ಹೋಗಿದ್ಲಲ್ಲ. ಶಕ್ಕು ಗೌರಿನೂ ಅಮ್ಮನ ಜೊತೆ ಹೋಗಿದ್ರಲ್ಲ, ಅವತ್ತೇ ಸುಬ್ಬ ಬಾಳೆನಾರನ್ನ ಒದ್ದೆ ಮಾಡಿಕೊಟ್ಟು ‘ಮಲ್ಲಿಗೆ ಸರ ಮಾಡೆ. ಪೇಟೇಲಿ ಮಾರಿ ನಿನಗೆ ದುಡ್ಡು ತಂದುಕೊಡ್ತೀನಿ’ ಅಂದ. ಇದ್ಯಾಕೆ ಇಶ್ಟು ಒಳ್ಲೆಯವನಾದ ಅಂತ ನಾನು ಬಚ್ಚಲಿಗೆ ಹೋದೆ. ಸುಬ್ಬ ಕೋಣೇಲೇನೊ ಮಾಡ್ತ ಇದ್ದ. ಬೀಡಿ ಸೇದಕ್ಕೇಂತ ಬಾಗಿಲು ಹಾಕ್ಕೊಂಡಿದ್ದಾನೆ ಅಂತ ನಾನು ಅನ್ಕೊಂಡ್ರೆ…” +ವೆಂಕಟನಾಗಲೀ ಶಕ್ಕುವಾಗಲೀ ಗೌರಿಯಾಗಲೀ ಮಾತಾಡಲಿಲ್ಲ: ಅಮ್ಮನನ್ನು ಸಮಾಧಾನ ಮಾಡಲು ರುಕ್ಕು ಹೋದಳು. “ಸಿಗತ್ತೆ. ಎಲ್ಲಿ ಹೋಗತ್ತೆ? ಅಡ ಇಟ್ಟಿರಬೇಕು ಮಾರಾಯ. ನೀನು ಊಟ ಮಾಡು” ಎಂದು ಉಪಚರಿಸುತ್ತ ವೆಂಕಟ ಬೇಗ ಬೇಗನೆ ಊಟ ಮುಗಿಸಿದ. ನಾನೂ ಊಟದ ಶಾಸ್ತ ಮಾಡಿ ಎದ್ದೆ. ಮನೆಯೆದುರಿದ್ದ ಓರಣವಾದ ಚಿಟ್ಟೆಯ ಮೇಲೆ ಹೋಗಿ ಕೂತೆ. ಈ ನಿರುಪದ್ರವಿಗೆ ಇದೆಂಥ ಪಾಡೆಂದು ಚಿಂತಿಸುತ್ತ. ಸುಬ್ಬನ ಸುಳಿಹಿಗಾಗಿ ಕೂತಲ್ಲಿಂದಲೇ ಹುಡುಕಿದೆ. ದೂರದಲ್ಲಿ‌ಒಂದೆರಡು ಮನೆ, ದೇವಸ್ಥಾನ. ಕಾಲನಡಿಗೆಯಿಂದ ಸವೆದ ಬೀದಿ. ಇನ್ನೂ ದೂರದಲ್ಲಿ ಗುಡ್ಡದ ಹಸಿರು. ಹೀಗೇ ಸಾಗುತ್ತದೆ ಪೇಟೆಗೆ ಹೋಗುವ ಕಾಲುದಾರಿ. ನಾನು ಕೂತಲ್ಲಿ ಮೃದುವಾದ ವಾಸನೆಯನ್ನು ಚೆಲ್ಲುತ್ತಿದ್ದ ಕೇಸರದ ತೊಟ್ಟಿನ ಪಾರಿಜಾತ. ಅಂಗಳದ ತುಂಬ ಊವಿನ ಗಿಡಗಳು. ವೆಂಕಟನ ಮರ್ದನ ಕಲೆಯಲ್ಲಿ ನಾನು ಕಾಣದಿದ್ದ ಬೆಳದಿಂಗಳು ಈಗ ಜಳಜಳನೆ ತೋಟವನ್ನು ತುಂಬಿತ್ತು. ರುಕ್ಕು ಅಳುತ್ತ ನರಳುವುದು ಕೇಳಿಸುತ್ತಿತ್ತು: “ನನ್ನ ಮಕ್ಕಳ ಮದುವೆನ್ನ ಇನ್ನು ಹೇಗೆ ಮಾಡಲೋ, ಯಾಕೆ ಹೀಗೆ ತಾಯಿ ಹೊಟ್ಟೆ ಉರಿಸ್ತೀಯೋ.” +“ಆಹಾ ಬೆಳದಿಂಗಳು” ಎಂದು ವೆಂಕಟ ನಾನಿದ್ದಲ್ಲಿಗೆ ಬಂದ. ನನ್ನ ಸನಿಹದಿಂದ ಹೆಂಡತಿಯ ಮಾತಿನ ಉರಿ ಇಂಗಲಿ ಎಂದು ಅವನು ಬಂದಿರಬೇಕು. ನಾನು ಕಷ್ಟಪಡುತ್ತಿರಬಹುದೆಂದೂ ಅವನಿಗೆ ಮುಜುಗರವಾಗಿರಬೇಕು. ನನ್ನ ಗೆಳೆಯ ಹೀಗೆ ತಣ್ಣಗಾದದ್ದು ಕಂಡು ನನಗೆ ಸಂಕಟವಾಯಿತು. “ಬಾ ಕೂತುಕೊ” ಎಂದೆ. “ ಪಾರಿಜಾತದ ವಾಸನೆ ಚೆನ್ನಾಗಿದೆ ಅಲ್ವಾ?” ಎಂದ ನಾನು ನಕ್ಕು ಬಾಯಿ ಮುಚ್ಚುವಂತೆ ಸನ್ನೆ ಮಾಡಿದೆ. ಸಂತೈಕೆಯ ಮಾತುಗಳು ನನಗೆ ತಿಳಿಯವು. ಆದರೂ ಒಳಗೆ ಹೊಗಿ “ರುಕ್ಕಮ್ಮ ಊಟ ಮಾಡಿ” ಎಂದೆ. ಅವಳು ನನ್ನ ಎದುರು ಗಳಗಳನೆ ಅತ್ತಳು. ಹೊರಬಂದರೆ ಬೆಳದಿಂಗಳಲ್ಲಿ ತೋಟ ಸುತ್ತುತ್ತಿದ್ದ ವೆಂಕಟ. “ನಮ್ಮ ಗಂಗೆಗೆ ತೋಟ ಅಂದ್ರೆ ಪ್ರಾಣ ಕಣಯ್ಯ” ಎಂದ. +ರಾತ್ರೆ ಬಹಳ ಹೊತ್ತು ಯಾರಿಗೂ ನಿದ್ರೆ ಹತ್ತಿದಂತೆ ಕಾಣಲಿಲ್ಲ. ವೆಂಕಟನಂಥ ನಿರಾಮಯರನ್ನು ಬಿಟ್ಟು ಸುಬ್ಬನದು ಉಳಿದ ಯಾರಿಗಾದರೂ ಸಾಧ್ಯವಿರಬಹುದಾದ ಸ್ಥಿತಿಯೆಂದು ನನಗೆ ಅನ್ನಿಸಿತ್ತು. ಈ ಹಳ್ಳಿಯಲ್ಲಿ ಕೊಳೆಯಲೇಬೇಕಾಗಿ ಬಂದಿದ್ದರೆ ನಾನಾದರೂ ಏನಾಗಿರುತ್ತಿದ್ದೆನೋ? ನನ್ನ ಮನೆತನದ ನಡಾವಳಿಗಳನ್ನು ಅಪ್ಪನಿಗೆ ಎದುರಾಗಿ ಧಿಕ್ಕರಿಸಿದ್ದರಿಂದಲೇ ತಾನೆ ನಾನು ಬೆಳೆದು ಹೀಗಾಗಲು ಸಾಧ್ಯವಾಯಿತು. ಆದರೆ ಅದು ಈ ಮನೆಯಲ್ಲೂ ಯಾಕೆ ಉತ್ಪನ್ನವಾಯ್ತು? ವೆಂಕಟ ಮಗನಿಂದ ಅವಾಕ್ಕಾದವನಂತೆ ನನಗೆ ಕಂಡಿದ್ದ. ಅವನ ಹಡೆ, ಅವನ ಅಭ್ಯಂಜನ, ಅವನ ಲೋಳೆ ಸೇವೆ ಯಾವುದೂ ಇಲ್ಲಿ ಉಪಯೋಗಕ್ಕೆ ಬರುವಂತೆ ನನಗೆ ಕಾಣಲಿಲ್ಲ. ಈ ಚಂದ್ರ, ಈ ಗಿಡ, ಈ ಮರ, ಈ ಹಕ್ಕಿಗಳ ಸನ್ನಿಧಿಯಲ್ಲಿ ವೆಂಕಟನಂಥದು ಹೇಗೆ ಇದೆಯೋ ಹಾಗೆ ಸುಬ್ಬನಂಥವರ ನಿರ್ನಿಮಿತ್ತವಾದ ಕ್ರೌರ್ಯವೂ ಇಲ್ಲಿದೆ. ವೆಂಕಟನ ಮನಸ್ಥಿತಿ ಇದನ್ನು ಉಂಡೀತೆ. ಉಂಡು ಅರಗಿಸಿಕೊಂಡೀತೆ ಅಥವಾ ಉಗುಳಿಬಿಡುವುದೆ? ಹಾಗಿದ್ದರೆ ಪಲಾಯನವಾದಿಯೊಬ್ಬನ ಹಡೆತನ ಕರುಣಾಜನಕವಾದ್ದು. ಮುಜುಗರ ಪಡಿಸುವಂಥದ್ದು. ಆದರೆ ಈಚೆಗೆ ನಾನು ಕಳೆದುಕೊಳ್ಳುತ್ತಿರುವ ಮಾನವ ಪ್ರೀತಿಯನ್ನು ಮತ್ತೆ ನನ್ನಲ್ಲಿ ಚಿಗುರಿಸಲು ತೊಡಗಿದ್ದ ನನ್ನ ಬಾಲ್ಯದ ಸಖನನ್ನು ಹೀಗೆ ದೂಡಿ ಬಿಡುವುದಕ್ಕೂ ನನ್ನ ಮನಸ್ಸು ಇಷ್ಟಪಡಲಿಲ್ಲ. ಹೊಡೆಯಲು ಬಂದ ಮಗನ ಎದುರು ಅಷ್ಟಾವಕ್ರನಂತೆ ಕೈಕಟ್ಟಿ ಅವಾಕ್ಕಾಗಿ ನಿಂತ ವೆಂಕಟನ ಚಿತ್ರ ನನ್ನನ್ನು ಬಾಧಿಸಿತ್ತು. ಕಲ್ಲನ್ನು ಎತ್ತಿ ಹಿಡಿದಿದ್ದ ಸುಬ್ಬ ಅದಮ್ಯ ಶಕ್ತಿಯನ್ನು ಅದುಮಿಟ್ಟುಕೊಡು ಬರ್ಬರನಂತೆ ಕಂಡಿದ್ದ. ಅವನ ಈ ಬರ್ಬರ ತಿರಸ್ಕಾರ ನಿರಾಕರಣೆಗಳಲ್ಲೆ ಅಣ್ವಸ್ತ ವಿಷವಾಯುಗಳನ್ನು ಸೃಷ್ಟಿಸಬಲ್ಲ ಪ್ರೇರಣೆ ಪಡೆದ ಜೀವಶಕ್ತಿಯಿದೆಯೆನ್ನಿಸಿತು. ವೆಂಕಟನ ಲಾಸ್ಯದ ಈ ಪರಿಮಿತ ಕ್ಷೇತ್ರವನ್ನು ಧಿಕ್ಕರಿಸಿ (ಇಲ್ಲವಾದರೆ ಸಾಧ್ಯವೆ) ಅದು ಹುಟ್ಟಿಕೊಂಡಿತ್ತು. ನಾನು ಕೂಡ ಹೆತ್ತವರನ್ನು ಒದ್ದು ಬಂದವನೇ. ವೆಂಕಟನ ಸ್ಥಿತಿಯಲ್ಲಿ ಪಾರಿಜಾತದಂತೆ ಅರಳುವುದು ಬಾಡುವುದು ಹೊರತು ಚಲನೆಯಿಲ್ಲ. ಚಲನೆಗೆ ಇರುವ ಸುಬ್ಬನ ರೂಪವನ್ನು ನಾನು ಮಲಗಿದ್ದಾಗ ಮಾಡಿಕೊಂಡ ಕಲ್ಪನೆಯಲ್ಲಿ ಉತ್ಪ್ರೇಕ್ಷೆ ಇರಬಹುದು. ಕದ್ದದ್ದರಲ್ಲಿ ಅಂಥ ಏನು ವಿಶೇಷವಿದೆ? ಎಂದು ಆಮೇಲಿಂದ ನಾನೇ ಸಮಾಧಾನಪಟ್ಟುಕೊಳ್ಳುತ್ತಿದ್ದೆ. ಆದರೆ ಎಲ್ಲರೂ ನಿದ್ದೆ ಹೋಗಿದ್ದ ಹೊತ್ತಿನಲ್ಲಿ ಸೂರ್ಯೋದಯಕ್ಕಿಂತ ತುಸು ಮುಂಚಿನ, ಇಬ್ಬನಿಯಿಂದ ನೆಲ ಗಿಡಗಳೆಲ್ಲವೂ ಒದ್ದೆಯಾಗುವ ಸ್ಫಟಿಕದಂತೆ ಶುಕ್ರ ಕಾಣುವ ಹೊತ್ತಿನಲ್ಲಿ ನಾನು ಕಂಡದ್ದು ಈಗಲೂ ನನಗೆ ಭಾರವಾಗಿ ಉಳಿದಿದೆ. +ತೋಟದಲ್ಲಿ ಏನೊ ಸದ್ದಾಗುತ್ತಿದೆಯೆಂದು ನಾನು ಹೊರಗೆದ್ದು ಹೋದರೆ, ಅದು ಮರವನ್ನು ಕಡಿಯುವ ಶಬ್ದ. “ಯಾರು” ಎನ್ನುತ್ತ ಇನ್ನೇನು ನಾನು ಮೆಟ್ಟಿಲಿಳಿಯಬೇಕು ಆಗ ಸುಬ್ಬ ಕತ್ತಿಯನ್ನೆತ್ತಿ “ಹತ್ರ ಬಂದ್ರೆ ಕಡಿದುಬಿಡ್ತೀನಿ” ಎಂದು ಮಸಕು ಮಸಕು ಬೆಳಕಲ್ಲಿ ಕೂಗಿದ. ನಾನು ಕದಲದೆ ನಿಂತೆ. ಉಷಸ್ಸಿನ ಮಂದ ಬೆಳಕಲ್ಲಿ ಪಾರಿಜಾತ ಮರವನ್ನು ಹಲ್ಲು ಕಚ್ಚಿ ಕಡಿಯುತ್ತಿದ್ದ ಅವ ಕೆದರಿದ ಕೂದಲಲ್ಲಿ ರಕ್ಕಸನಂತೆಯೇ ಕಂಡ. ಮೃದುವಾದ ಕಾಂಡದ ಹೂವಿನ ಗಿಡಗಳನ್ನೆಲ್ಲ ಅವನು ಈಗಾಗಲೆ ನೆಲಸಮ ಮಾಡಿದ್ದ. ಒರಟಾದ, ವಕ್ರವಾದ, ಪಾರಿಜಾತದ ಮರ ಮಾತ್ರ ಸುಬ್ಬನ ಕತ್ತಿಯ ಏಟಿನ ಗುರಿ ತಪ್ಪಿಸುತ್ತ ಇನ್ನೂ ನಿಂತಿತ್ತು. ನನ್ನ ಹಿಂದೆ ಬಂದ ವೆಂಕಟ ಸುಬ್ಬನಿದ್ದಲ್ಲಿಗೆ ಓಡಿಹೊದ. ಸುಬ್ಬ ಅಪ್ಪನನ್ನು ಕಡಿಯಲೆಂದು ಹೇಗೆ ಕತ್ತಿ ಎತ್ತಿದನೆಂದರೆ, ‘ಅಮ್ಮ ತಾಯಿ’ ಎನ್ನುತ್ತ ವೆಂಕಟ ಚಂಗನೆ ಪಕ್ಕಕ್ಕೆ ಹಾರಿ, ಹಿಂದೆಯೋಡಿ ಬಂದ. ನಾನು ತಡೆದರೂ ರುಕ್ಕು ಕೇಳದೆ ನನ್ನ ತೆಕ್ಕೆಯಲ್ಲಿ ಒದರಾಡಿದಳು. “ಕಡಿದು ಬಿಡೋ ಕಡಿದುಹಾಕಿಬಿಡು. ನನ್ನ ಹೊಟ್ಟೇಲಿ ಹುಟ್ಟಿದ ವಿಷಾನ್ನ ನಾನೇ ಕುಡಿದು ಸತ್ತು ಬಿಡ್ತೇನೆ” ತಾಯಿ ಕೊಸರಿಕೊಂಡು ಮಕ್ಕಳು ತಡೆದರೂ ಕೇಳದೆ ಸುಬ್ಬನ ಎದುರು ಓಡಿಹೋಗಿ ನಿಂತಳು. “ಬೇಡ, ಬೇಡ, ನನ್ನ ಕೆಣಕಬೇಡ. ನಿನ್ನ ತಲೆ ಕಡಿದು ಬಿಡ್ತೀನಿ” ಎಂದು ಸುಬ್ಬ ಕತ್ತಿಯನ್ನೆತ್ತಿದ. ನಾವೆಲ್ಲರೂ ಕಣ್ಣುಮುಚ್ಚಿ ನಿಂತು ಬಿಟ್ಟೆವು. ನಾವು ಭಯದಿಂದ ಕಣ್ಣು ತೆರೆದಾಗ ಸುಬ್ಬ ಶಪಿಸುತ್ತ ಕತ್ತಿ ಹಿಡಿದು ಕೈ ಬೀಸಿಕೊಂಡು ಉಣುಗೋಲು ದಾಟಿ ಹೊರಗೆ ಹೋಗುತ್ತಿದ್ದ. ಬಿರಬಿರನೆ ನಡೆಯುತ್ತ ಎದುರಿನ ಪೇಟೆಗೆ ಹೋಗುವ ದಾರಿಯಲ್ಲಿ ಕಣ್ಮರೆಯಾದ. ಕಣ್ಣು ಮುಚ್ಚಿ ನಿಂತಿದ್ದ ರುಕ್ಕು ಕತ್ತಿ ಬೀಳುವುದಕ್ಕೆ ಕಾದು ಹಾಗೇ ನಿಂತಿದ್ದಳು. ವೆಂಕಟ ಅವಳ ಕೈ ಹಿಡಿದು ತಳ್ಳುತ್ತ ಒಳಗೆ ಕರಕೊಂಡು ಹೋದ. ಗಂಗೆ ನಿರ್ನಾಮವಾದ ತನ್ನ ತೋಟ ನೋಡುತ್ತ ಅಳುವುದನ್ನು ಕಂಡು ಇಬ್ಬರೂ ಅಕ್ಕಂದಿರೂ ಅತ್ತರು. ನಾನು ಮಣ್ಣಿನ ಚಿಟ್ಟೆ ಮೇಲೆ ಕಂಗಾಲಾಗಿ ಕೂತಿದ್ದೆ. ನನ್ನಲ್ಲಿ ಯಾವ ಸಾಂತ್ವನದ ಮಾತುಗಳೂ ಉಳಿದಿರಲಿಲ್ಲ. ಆದರೆ ವೆಂಕಟ ಇದರಿಂದೆಲ್ಲ ಜರ್ಜರಿತನಾಗಿ ಬಿಡಬಹುದೆಂದು ತಿಳಿದ ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಬೆಳಗಾದ ಮೇಲೆ. +ಎಷ್ಟು ಹತ್ತಿರದ ಯಾರೇ ಸಾಯಲಿ, ನಿತ್ಯದ ವಿಧಿಗಳೆಲ್ಲ ಹೇಗೋ ನಡೆದುಕೊಂಡು ಹೋಗುತ್ತದೆ ಅಲ್ಲವೆ? ಯಾರೋ ಸತ್ತಂತೆ ಅನ್ನಿಸುತ್ತಿದ್ದ ವೆಂಕಟನ ಮನೆಯಲ್ಲೂ ಬೆಳಿಗ್ಗೆ ಶಕುಂತಳ ಕಾಫಿ ಮಾಡಿದಳು. ನಾನು ಉಮಿಕರಿಯಲ್ಲಿ ಹಲ್ಲುಜ್ಜಿದೆ. ವೆಂಕಟ ಬೇಗ ಸ್ನಾನ ಮಾಡಿ ಮುಗಿಸಿ ಹೊಳೆ ಬದಿಯ ದೇವಸ್ಥಾನದ ಪೂಜೆಗೆಂದು ಗಂಧ ತೇಯುತ್ತ ಕೂತ. ರುಕ್ಕು ಹಾಸಿಗೆ ಹಿಡಿದಿದ್ದಳು. ದನಕಾಯುವವನು ಬಂದಾಗ ಗೌರಿ ಬೇಗೆಬೇಗನೆ ದನಗಳ ಹಾಲು ಕರೆದು ಕೊಟ್ಟಿಗೆಯಿಂದ ಅವುಗಳನ್ನು ಅಟ್ಟಿದಳು. ವೆಂಕಟನ ಒಳಗೆ ಏನೋ ಸತ್ತಿದೆಯೆಂದು ನನಗೆ ಅನ್ನಿಸಿದ್ದರಿಂದ ಅವನಿಗೆ ಕಣ್ಣು ಕೊಡದಂತೆ ನಾನು ಹೊರ ಚಿಟ್ಟೆಯ ಮೇಲೆ ಕೂತೆ. ಆದರೆ ಹಾಳು ಬಿದ್ದ ತೋಟ ನೋಡಲಾರದೆ ಮನೆಯನ್ನು ಬಳಸಿ ಹೋಗಿ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡದಡಿ ನಿಂತೆ. ಬೇಲಿಯ ಬಳಿ ವೆಂಕಟ ಕೌಪೀನವುಟ್ಟು ಡೊಂಕು ಕಾಲಲ್ಲಿ ಸೊಟ್ಟಗೆ ನಿಂತಿದ್ದ. ‘ಅರೆ – ವೆಂಕಟ ಹಿತ್ತಲಿನ ಬೇಲಿ ಹತ್ತಿರ ಅಷ್ಟು ತತ್ಪರನಾಗಿ ನಿಂತು ಏನು ಮಾಡ್ತಿದ್ದಾನೆ ಇವ? ಎಂದು ನನಗೆ ಆಶ್ಚರ್ಯವಾಯಿತು. ಸ್ನಾನ ಸಂಧ್ಯಾವಂದನೆಗಳಾದ ಮೇಲೆ ಚೊಂಬು ತೊಗೊಂಡು ಬಹಿರ್ದೆಸೆಗೆ ಹೋಗಿರುವುದು ಸಾದ್ಯವಿಲ್ಲ. ಕಿವಿಯ ಮೇಲೆ ಜನಿವಾರ ಹಾಕಿಕೊಂಡಿಲ್ಲ. ತಾನು ಇಲ್ಲ ಎನ್ನಿಸುವಂತೆ- ಚೂರೂ ಹಂದದೆ ನಿಂತಿದ್ದ. ನಾನು ಅವನನ್ನು ನೋಡುತ್ತ ನಿಂತಲ್ಲೇ ನಿಂತೆ. ರತ್ನಗಂದಿಯ ಬೇಲಿ, ಅದರ ಎದುರು ನಿಶ್ಚಲನಾದ, ತನ್ಮಯನಾದ, ಬರಿ ಮೈಯಲ್ಲಿ ವಕ್ರವಾಗಿ ನಿಂತ ವೆಂಕಟ. ಎದುರಿನ ಹಸಿರು ಬೇಲಿ ಬಿಟ್ಟರೆ ಮತ್ತೇನೂ ಕಾಣದು. ನಾನು ಮೆತ್ತಗೆ ಸದ್ದು ಮಾಡದಂತೆ ಅವನತ್ತ ಚಲಿಸಿದೆ. ಅವನ ಬೆನ್ನ ಹಿಂದೆ ನಿಂತೆ. ಆದರೂ ವೆಂಕಟನಿಗೆ ನನ್ನ ಧ್ಯಾನವಿಲ್ಲ. ಅರೆ, ಎಂದು ಕುತೂಹಲದಿಂದ ನಾನೂ ರತ್ನಗಂದಿಯ ಬೇಲಿಯನ್ನು ದಿಟ್ಟಿಸಿದೆ. ಅಲ್ಲಲ್ಲಿ ಹಳದಿಯ ಗೊಂಚಲು ಗೊಂಚಲು ಹೂವುಗಳು. ಹಸಿರೆಲೆಗಳು. ಎಲೆ ಎಲೆಯನ್ನು ನೋಡಿದೆ. ಅವನ ಕಣ್ಣುಗಳ ಗುರಿ ಯಾವುದಿರಬಹುದೆಂದು, ಕುತೂಹಲದಿಂದ ನನ್ನ ದೃಷ್ಟಿಯ ಅವಧಿಯಲ್ಲಿದ್ದುದನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತ ಹೋದೆ. ಕಾಣಿಸಿದ್ದು: ಒಂದು ಸೂರ್ಯನ ಕುದುರೆ. ನನ್ನ ಈ ನಿರುಪದ್ರವಿ ಗೆಳೆಯ ಆ ಉಬ್ಬಿದ ಡೊಂಕುಕಾಲಿನ, ಹಗುರಾದ ದೇಹದ ದಟ್ಟ ಹಸಿರಿನ ಜಾಮಿತಿಯ ಕೋನಗಳಂತೆ, ಅಷ್ಟಾವಕ್ರ ರೂಪದ ಕೀಟವನ್ನು ಬೆರಗಾಗಿ ನೋಡುವುದು ಕಂಡು ನನಗೆ ಕ್ಷಣ ಮೋಜೆನಿಸಿತು. ಕ್ಷಣ ಮಾತ್ರ, ಸೂರ್ಯನ ಕುದುರೆ ಡೊಂಕು ಕಾಲನ್ನೊತ್ತಿ ಚಿಮ್ಮಿದ್ದು, ಅದು ಚಿಮ್ಮುತ್ತಿದ್ದಂತೆಯೇ ತದೇಕಮಗ್ನನಾದ ವೆಂಕಟನೂ ತಿರುಗಿ, ನನ್ನ ಣೋಡಿ ಅದೆಷ್ಟು ಮುಗ್ಧ ಮಂದಹಾಸದಲ್ಲಿ “ಸೂರ್ಯನ ಕುದುರೆ” ಎಂದ. ಸೂರ್ಯನಕುದುರೆಯನ್ನು ಕಂಡ ಅವನ ಬೆರಗಿನ ಕಣ್ಣುಗಳಲ್ಲಿ ನನ್ನ ಕಣ್ಣೂ ನೆಟ್ಟು ಬಾಯಿ ತೆರೆಯಿತು: +“ಸೂರ್ಯನ ಕುದುರೆ”- ಎಂದೆ. +“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […] +ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ […] +೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_706.txt b/Kannada Sahitya/article_706.txt new file mode 100644 index 0000000000000000000000000000000000000000..6d371308bd0b1cc123f86d5665b5427b608122d8 --- /dev/null +++ b/Kannada Sahitya/article_706.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಸೋ’ ಎಂದು ಸುರಿವ ಮಳೆ +ಉನ್ಮಾದಗೊಂಡ ಇಳೆ! +ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ +ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ. +ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ, +ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ, +ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ. +ಕೊಳೆಯನಲ್ಲವ ಕೊಚ್ಚಿ ತೇಲಿಸಿದೆ ಹೊನಲು +ಗಾಳಿಯೂ ಕರಕರಗಿ ನೀರಾಯಿತೆನಲು +ದಂಡತ್ತಿ ಬರುತಿರುವ ಮೋಡಗಳ ಸಾಲು +ಸೋತವರ ಸೊತ್ತೆಲ್ಲ ಗೆದ್ದವರ ಪಾಲು! +ಒಂದ ಚಣ: +ಮಾಯೆ ಬೀಸಿದುದತ್ತ ಇಂದ್ರಜಾಲ! +ಬಾನಿಳೆಯ ಉನ್ಮತ್ತ ಬೆಸುಗೆ ಹಿಲ್ಲೋಲದಲಿ +ಜನಮನವು ಸ್ವಪ್ನಲೋಲ. +ಮತ್ತೊಂದೆ ಚಣ: +ಮಳೆಯು ನಿಂದತ್ತು +ಸಡಿಲಿತ್ತು ನೆಲ ಜಲದ ಗಾಢಮಿಲನ! +ಮೂಡಿತ್ತು ತಿಳಿನಗೆಯು ಆಗಸದ ಮೊಗದಿ +ಮಾತಿರದ ಮೃದು ಮಧುರ ಮೌನಾವಲೋಕನದಿ +ಸೃಷ್ಟಿಯಲಿ ಹೊಮ್ಮಿತ್ತು ಚಿಮ್ಮುಗಾಲ! +ವರ್ಷ ಋತು +ಹರ್ಷ ಋತು +ಮನುಜ ದುಃಖದಿ ಬೆರೆತು +ತೇಲಿತ್ತು ಮುಳುಗಿತ್ತು ಅನಂತಕಾಲ. +***** +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_707.txt b/Kannada Sahitya/article_707.txt new file mode 100644 index 0000000000000000000000000000000000000000..3f3ba927c02ece12e90d10ba53a6a012dbdfd939 --- /dev/null +++ b/Kannada Sahitya/article_707.txt @@ -0,0 +1,147 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು ತಬ್ಬಲಿಬೀಳುವಂತೆ ಎಸೆದು, ಬಿದಿರಿನ ಒರಗು ಕುರ್ಚಿಯಲ್ಲಿ ಶಹಜಾದಿಯಂತೆ ಕುಳಿತು ಮಾತಿಗಾರಂಭಿಸಿದಳು. ತಾನು, ಉದ್ಯೋಗ, ತನ್ನ ಪತಿ, ಮಗಳು ಅವಳ ಹೆಸರು, ವಯಸ್ಸು…. ಸಮಿತಾ ಹುಂಗುಡುತ್ತಲೇ ಇದ್ದಳು. ಕಂಡ ಕೂಡಲೆ ಉದ್ದ ಪರಿಚಯ ಹೇಳಿಕೊಳ್ಳುವ ಧೈರ್ಯ ಇದು; ಎದುರಿಗಿರುವವರು ಖಂಡಿತಾ ಆಲಿಸಿಯೇ ಆಲಿಸುತ್ತಾರೆಂಬ ಧೈರ್ಯ. ಧೈರ್ಯವೋ ಇದು ಅಹಂಕಾರವೊ. ಸತ್ಯ ನೋಡಿದರೆ ಇಷ್ಟು ವಿವರ ಬೇಕೆ ತನಗೆ ಈಗ? ಅವಳಿನ್ನೂ ಬಂದಿದ್ದಾಳಷ್ಟೇ. ತಾನಾದರೂ ಈಗ ಬಂದು ಸುಧಾರಿಸಿಕೊಳ್ಳುತ್ತಿರುವವಳು. ಕಂಡ ಕೂಡಲೇ ವಿವರ ಕೇಳುವ ತವಕವೂ ತನ್ನದಲ್ಲ. ಹೇಳುವ ತಹತಹವಿದ್ದವರಿಗೆ ಕೇಳುಗರ ಗೋಜೇ ಇರುವುದಿಲ್ಲ ಬಹುಶಃ. ಸದ್ಯ ಬೇರೆ ಮಾತೇ ಇಲ್ಲದ ಹಾಗೆ ಆಕೆ ಮುಂದುವರಿದು ಪತಿ-ಸಂಶೋಧಕ, ಮಗಳು ಬ್ರಿಲಿಯಂಟ್, ಪತಿಯ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಲು ಹಾತೊರೆವ ಎಕ್ಸಲೆಂಟ್ ವಿದ್ಯಾರ್ಥಿ ವಿದ್ಯಾರ್ಥಿನಿಯರು, ತನ್ನ ಕವಿತೆಗಳು, ಪ್ರಾಧ್ಯಾಪಕಿಯಾಗಿರುವ ತನ್ನ ಜನಪ್ರಿಯತೆ – ಮಾತನ್ನೇ ಪ್ಯಾಕ್ ಮಡಿತಂದು ಬಿಡಿಸುತ್ತಿರುವ ಆಭಾ. ಮುಖದ ರೇಖೆ, ಕುಳಿತುಕೊಳ್ಳುವ ಮಟ್ಟು, ಹಾವಭಾವ ಎಲ್ಲ – ವಿಚಿತ್ರ ಚಡಪಡಿಕೆಯ ಮತ್ತೊಂದು ಮಗ್ಗುಲಿನಂತಿತ್ತು. ಅಂತೂ ನಡುವೊಮ್ಮೆ ಮಾತು ಕಡಿದು, +“ಹಸಿವೆ!” +“ಊಟಕ್ಕೆ ಹೋಗೋಣ. ಕೈಕಾಲು ಮುಖ ತೊಳೆದುಕೊಂಡು ಬಾ” ಇಬ್ಬರೂ ಊಟ ಮುಗಿಸಿ ಮತ್ತೆ ರೂಮು ಸೇರಿದರು. ಗಂಟೆ ಆಗಲೇ ಒಂಭತ್ತಾಗುತ್ತಾ ಬಂದಿತ್ತು. ವಯಸ್ಸು ಮತ್ತು ರಾತ್ರಿ ಎಂತಹ ಗಾಢ ಸಂಬಂಧ ಅಲ್ಲವ? ಎಂದಳು ಆಭಾ ಸೀರೆ ಬದಲಿಸುತ್ತ. “ಎಷ್ಟು ಸುಂದರ ರಾತ್ರಿಗಳು, ಸುಂದರ ಕನಸುಗಳು” – ಎಂದು ಹಾಡುತ್ತ ಜೊತೆಗೆ “ಎಷ್ಟು ಸುಂದರ ನೈಟಿಗಳು” ಎಂದೂ ಸೇರಿಸಿ ನಕ್ಕು ಅದನ್ನೇ ಶಿಳ್ಳಿನಲ್ಲಿ ಮೆದುವಾಗಿ ನುಡಿಸುತ್ತಾ ಹೇಗಿದೆ ಎಂಬಂತೆ ಕುಶಾಲಿನ ಹುಬ್ಬೇರಿಸಿದಳು. ಸಮಿತಾಗೆ ಊರು ಬಿಟ್ಟು ಬಹಳ ದೂರ ಬಂದ ಭೀತಿ ಪ್ರಥಮತಃ ಆವರಿಸಿತು. ಯಾಕೋ ಪರಪುರುಷನೊಂದಿಗೆ ಇದ್ದಂತೆ ಅಸ್ವಸ್ಥಳಾದಳು. ತೋರಿಕೊಲ್ಳದೆ – “ಚಿನ್ನಾಗಿದೆ”. +ಸಿಗರೇಟು ಹಚ್ಚಿದಳು ಆಭಾ. ಸಮಿತಾ ಹೊಗೆಯೋಡಿಸಿಕೊಳ್ಳುವುದನ್ನು ನೋಡಿ ಸಿಗರೇಟಿನ ಎಡೆಯಲ್ಲಿಗಯೇ ನಕ್ಕಳು ಹೊರತು ನಂದಿಸಲಿಲ್ಲ. ಕಟ್ಟುನಿಟ್ಟಿನ, ದಾಕ್ಷಿಣ್ಯದ ಮನೆಯಲ್ಲಿ ಬೆಳೆದುಬಂದವಳು ಸಮಿತಾ, ಮಾತಾಡದೆ ಕುಳಿತಳು. ಮಾತಾಡದೆ ಕುಳಿತುಕೊಳ್ಳಬಹುದು. ಆದರೆ ಜೊತೆಯಲ್ಲಿದ್ದವರಿಗೆ ಮಾತಾಡಬೇಡಿ ಎನ್ನಲಾದೀತೆ? ಆಭಾ ಮತ್ತೆ ಕಲ್ಕತ್ತ, ಕಾಲೇಜು, ತನ್ನ ಲವ್ಲಿ ಸಂಸಾರ, ಸಾಹಿತ್ಯ. ….ಹೇಳಲಾರದ ಅಸ್ವಸ್ಥತೆಯಲ್ಲಿ, ಮುತ್ತುತ್ತಿದ್ದ ನಿದ್ದೆಯಲ್ಲಿ ಕೇಳು‘ವಂತೆ’ ಇದ್ದ – ಸಮಿತಾಗೆ ನಿದ್ದೆ ಬಂತು. ಫೋನು ಟ್ರಿಣಿಗುಟ್ಟಿದಾಗಲೇ ಎಚ್ಚರ. ಫೋನು! ಎಂದಳು ಆಭಾ ಅದನ್ನೆ ನಿರೀಕ್ಷಿಸುತ್ತ ಕುಳಿತಂತೆ. ರಿಸೀವರ್ ಎತ್ತಿ ಮಾತಾಡಿ ಮುಗಿಸಿಟ್ಟರೆ ಮರುಕ್ಷಣಕ್ಕೆ ಮತ್ತೆ. ಮತ್ತೊಂದು ಕ್ಷಣಕ್ಕೆ ಮತ್ತೆ. ಕೊನೆಗೆ “ನಾಳೆ ನೋಡುತ್ತೇವಲ್ಲ” – ಫೋನಿಟ್ಟು ಪ್ಲಗ್ ತೆಗೆದು “ರಾಸ್ಕಲ್” ಎಂದಳು. ಸಿಟ್ಟಿನ ಲೇಪವೇ ಇಲ್ಲದೆ. ಹಾಗೆಂದರೆ ಯಾರು ಕೇಳುವಳೆಂದರೆ ಕೇಳದೆ ಸಮಿತಾ ನಿದ್ದೆ ನಟಿಸಿದಾಗೆ “ಸೆಖೆ. ಸ್ನಾನ ಮಾಡಿ ಬರುತ್ತೇನೆ.” ಆಕೆಯ ಎಚ್ಚರ ತಿಳಿದಿರುವಂತೆ ಹೇಳುತ್ತ ಬಚ್ಚಲಿಗೆ ನಡೆದಳು ಆಭಾ….. +ಇನ್ನು ಎರಡು ದಿನವಿಡೀ ಹೀಗೆಯೇ? ಸಮಿತಾಗೆ ಚಿಂತೆಯಲ್ಲಿ ಮೈಮರೆತು ನಿದ್ದೆ ಬರದು. ಮಂಪರು, ಎಚ್ಚರ. ಕಣ್ಣು ತೆರೆದು ನೋಡಿದರೆ ಮಂದ ಬೆಳಕಲ್ಲಿ ಆಭಾ ಕೈಮೈ ಹೇಗೆಂದರೆ ಹಾಗೆ ಚೆಲ್ಲಿಕೊಂಡು ಮಲಗಿರುವುದು ಕಾಣಿಸಿತು. ನಿದ್ದೆಯುಸಿರು. ಮೊದಲ ಭೇಟಿಯೆಂದೂ ನೋಡದೆ ಎಷ್ಟು ಮಾತು! ಪಯಣದುದ್ದಕ್ಕೂ ಯೋಚಿಸಿ ಯೋಚಿಸಿ ದಣಿದು ತೊಪ್ಪೆಯಾದವರು ಮಾತ್ರ ಹೀಗೆ ತುತ್ತತುದಿಯಲ್ಲಿ ಸಿಕ್ಕಿದವರೊಡನೆ ಎಲ್ಲವನ್ನೂ ಕಕ್ಕಿಬಿಡುವರೇನೋ. “ಮಗಳು ಉಜ್ವಲಾ. ಅವಳು ಮನೆಯಲ್ಲಿ ಇರುವುದೇ ಬೇಡ ಅಂತ ಹಾಸ್ಟೆಲಿಗೆ ಸೇರಿಸಿದೆ. ಹಾಸ್ಟೆಲು. ಯಾಕಿಲ್ಲ, ಸುಮ್ಮನೆ. (ತನ್ನೊಳಗೇ ಎಂಬಂತೆ ಮೆಲ್ಲಗೆ) ಹೆಚ್ಚು ಸೇಫ್ ಅಲ್ಲವೆ? ಪರಿಚಯವೆಂಬುದು ತುತ್ತ ತುದಿಯಲ್ಲಿ ಒಂದು ಬಗೆಯ ಸ್ವಗತವೂ ಆಗಿಬಿಡುವ ಚೋದ್ಯವೇ! ತನಗೆ ತಾನೇ ಯಾರೆಂದು ಕೇಳಿಕೊಂಡು ನಿಂತುಬಿಡುವ ಕ್ಷಣವೂ. ಯಾರೆಂದು ಕಂಡುಕೊಳ್ಳುವ ಕ್ಷಣವೂ? +* +* +* +ಬೆಳಗಾಯಿತು. ಈ ಊರಿನಲ್ಲಿಯೂ ಸೂರ್ಯನಿದ್ದಾನೆ! ಕಿರಣ ತಟ್ಟಿ ಎಬ್ಬಿಸುತ್ತಾನೆ. ತನ್ನೂರಿನಲ್ಲಿ ಮಾತ್ರ ಅಂತಿದ್ದೆನಲ್ಲ. ಅಲ್ಲಿರುವಷ್ಟು ಉರಿಗತ್ತಿನಲ್ಲಲ್ಲವಾದರೂ ಬೆಚ್ಚಗಿದ್ದ. ಬೆಳಗಿನ ಚಿತ್ರದ ಮುಸುಕನ್ನು ನಿಧಾನವಾಗಿ ತೆರೆಯುತ್ತಾ ಇದ್ದ. ಆಭಾಳನ್ನು ಕರೆದು ತೋರಿಸುವ ಅಂತ ಅತ್ತ ತಿರುಗಿದರೆ ಹೊದಿಕೆಯೆಲ್ಲ ಅಸ್ತವ್ಯಸ್ತ ತಳಿದುಕೊಂಡು ಕವುಚಿ ಮಲಗಿದ್ದಳು ಆಭಾ. ಉರುಳಾಡಿದ ಕುರುಹಂತೆ ಕೂದಲೆಲ್ಲ ಸಿಕ್ಕಾಗಿ ಕೆದರಿತ್ತು. ಥೊ. ಇವಳಿಗೊಂದು ಮಲಗಲೂ ಯಾರೂ ಹೇಳಿಕೊಡಲಿಲ್ಲವೆ?…. ‘ಮಲಗಲೂ ಹೇಳಿಕೊಡುವುದು!’ ತನ್ನೊಳಗೇ ನಗುತ್ತ ಸಮಿತಾ ಅವಳ ಹೊದಿಕೆ ಸರಿಪಡಿಸಿ ಕೂದಲು ಸರಿಸಿ “ಹೆ. ಸರಿ ಮಲಕೊ. ಒಳ್ಳೆ ಗಂಡಸರಂತೆ ಮಲಗಿದ್ದೀಯಲ್ಲ.” +ಕಣ್ಣತೆರೆಯದೇ ಎಂದಳು ಆಭಾ “ಹಾಗಾದರೆ ಗಂಡಸುತನ ಎಲ್ಲೆಲ್ಲ ಇರುತ್ತದಪ್ಪ!…. ಮಲಗುವುದರಲ್ಲಿಯೂ ಇದೆ ಎಂದರೆ!…. ಅಥವಾ ಇರುವುದು ಅಲ್ಲಿ ಮಾತ್ರವ?…. ಬಿಡು. ನಾನೊಂದು ರೀತಿ ಗಂಡಸೇ. ಇಲ್ಲವಾದರೆ ಇಷ್ಟೊತ್ತಿಗೆ…. (ಅದನ್ನಿಲ್ಲಿಗೇ ಬಿಟ್ಟು)…. ನಿನ್ನದೆಲ್ಲ ಮುಗಿಸಿಕೊ. ನಾನು ಆಮೇಲೆಯೇ ಏಳುವುದು” ಮಗ್ಗುಲಾದಳು. ಚಹಾ ಬಂದರೂ “ಆಮೇಲೆ”. ಸಮಿತಾ ತನ್ನ ಪಾಡಿಗೆ ತಾನು ಹೊರಟು “ಏಳು. ನಾನು ರೆಡಿಯಾಗಿಯಾಯಿತು. ಸರಿಯಾಗುತ್ತದೆ ಇನ್ನು.” +ಸಮಿತಾ ಹೇಳಿದ್ದು ಇನ್ನು ಎದ್ದರೆ ಸರಿಯಾಗುತ್ತದೆ ಎಂಬರ್ಥದಲ್ಲಾದರೆ ಆಭಾ ಮಿಂಚು ಹೊಡೆದಂತೆ ಎದ್ದು ಅವಳ ಕೈ ಹಿಡಿದು “ಸತ್ಯ ಹೇಳು. ಎಲ್ಲ ಸರಿಯಾಗುತ್ತದೆಯೇ?” – ಯಾಕೆ ಹಾಗೆನ್ನುತ್ತಿ ಮುಂತಾಗಿ ವಿವರ ಕೇಳದೇನೆ ಸಂತೈಸಬೇಕು, ಹಾಗೆ. ಸಮಿತಾ ಹಾಗೆಯೇ ಸಂತೈಸಿದಳು “ಎಲ್ಲ ಸರಿಯಾಗುತ್ತದೆ, ಖಂಡಿತ.” +ಎಷ್ಟು ಹೊತ್ತಾದರೂ ಹೊರಟು ಮುಗಿಯದ ಆಭಾ, ಸಮಿತಾ ಕಡೆ ತಿರುಗಿ ಹುಬ್ಬೇರಿಸಿ “ಸತ್ಯಕ್ಕೂ ನೀನು ಹೊರಟಾಯಿತಾ?” +“ಹುಂ” +“ಹೀಗೆ!” +“ಹೂಂ.” +“ಛೆ. ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದಾದರೂ ಅಭ್ಯಾಸಮಾಡಿಕೊಳ್ಳಬೇಕು ಕಣೆ. ಇಕ. ಹೊಸತು. ನಾನಿನ್ನೂ ಯೂಸ್ ಮಾಡದ್ದು. ಹಚ್ಚಿಕೊ.” +“ಬೇಡ. ಥ್ಯಾಂಕ್ಸ್. ಬೇಗ ಹೊರಡು ನೀನೀಗ.” +ಕನ್ನಡಿ ಮುಂದೆ ನಿಂತಂತೆ, ಎಂದಳು ಆಭಾ, “ಒಂದು ವಯಸ್ಸು. ಆ ವಯಸ್ಸಿನವರೆಗೆ ನೀನು ಹೇಗಿದ್ದರೂ ಸರಿಯೆ. ಯೌವನವಿರುತ್ತದೆ ನೋಡು. ಕಾಸ್ಮೆಟಿಕ್ಸ್ ಎಲ್ಲ ಬೇಕಾಗುವುದು ಆ ವಯಸ್ಸಿನ ನಂತರವೇ. ನಮ್ಮಲ್ಲೊಂದು ರಿಸರ್ಚ್ ಹುಡುಗಿ ಬರುತ್ತಾಳಲ್ಲ…. (ಅದನ್ನಲ್ಲಿಗೆ ಬಿಟ್ಟು, ಪುಟ ಮಗುಚಿದ ಹಾಗೆ) ಹೊ. ನಿನಗೆ ನೀನು ಏನೂ ಹಾಕಿಕೊಳ್ಳುವುದಿಲ್ಲ ಅಂತ ಜಂಭ.” +“ಹೌದು ಜಂಭ.” +“ಮರೀ ಇದೆಲ್ಲ ಬೇಕು. ಇಲ್ಲದಿದ್ದರೆ ನಿನ್ನ ಗಂಡ ನಿನ್ನನ್ನು ದೂರ ಮಾಡುತ್ತಾನೆ. ಅಷ್ಟೇ ಅಲ್ಲ ನಿನ್ನನ್ನು ನೋಡುವಾಗ ಯಾರ ಕಣ್ಣಲ್ಲಿಯೂ ಕುತೂಹಲವಿರುವುದಿಲ್ಲ. ಪಾರ್ಟಿಗಳಲ್ಲಿ ನೀನು ಎದ್ದು ಕಾಣುವುದಿಲ್ಲ. ಬಣ್ಣ ಕಂಡರೆ ಸವರುವ ಮಾತಾಡುವ ಗಂಡು ಜಾತಿಯನ್ನು ಮಂಗ ಮಾಡುವುದು ಸುಲಭ. ನೋಡೀಗ. ನಾನು ಹೋದೊಡನೆ ಎಲ್ಲ ನನ್ನ ಕಡೆಗೇ ಹೇಗೆ ನೋಡುತ್ತಾರೆ ಅಂತ.” ಆದರೆ…. ಈ ಮಾತುಗಳು ಅವಳ ಒಡಲಿನವೇ ಅಂತ ತನಗೆ ನಂಬಿಕೆ ಯಾಕೆ ಬರುತ್ತಿಲ್ಲ? ಅವಳ ಮಾತಿನಲ್ಲಿ ಅವಳಿಲ್ಲ; ಮುಂಗೈವರೆಗೂ ತೋಳಿನ, ತುದಿಯಲ್ಲಿ ಮೊಗ್ಗಿನಂತೆ ಕಸೂತಿ ಮಾಡಿದ ಸುಂದರ ರವಕೆ ತೊಟ್ಟಿದ್ದಳು ಆಭಾ. ತನ್ನ ಗೌರವರ್ಣದೊಂದಿಗೆ ಒಳಜೀವಂತಿಕೆ ಪುಟಿದು ಕಾಣುವಂತೆ ಕಡುನೀಲಿ ಬಣ್ಣದ ಸೀರೆಯುಟ್ಟಿದ್ದಳು. “ನಮ್ಮಲ್ಲೊಂದು ರಿಸರ್ಚ್ ಹುಡುಗಿ ಬರುತ್ತೆ ಎಂದೆನಲ್ಲ, ನನ್ನ ಗಂಡನ ಶಿಷ್ಯೆ….” – ಮತ್ತೆ ಆ ಸಾಲು ಕಳೆದೇಹೋದಂತೆ ತನ್ನ ಬಾಕ್ಸ್ನಲ್ಲಿ ಇನ್ನೇನನ್ನೋ ಹುಡುಕುವಂತೆ ಅದು ಸಿಕ್ಕಿದಂತೆ ಉಸಿರುಬಿಟ್ಟು “ಅಬ್ಬ ತಂದಿಲ್ಲ ಅಂತ ಜೀವ ಹೋಯಿತು ಒಮ್ಮೆ. ಏನು ಮರವೆಯವಳು ನಾನು ಗೊತ್ತ” ಎನ್ನುತ್ತ ಏನನ್ನೋ ಎತ್ತಿಕೊಂಡಳು. +“ನಾನೊಂದು ಸುತ್ತು ಕಾಲಾಡಿಕೊಂಡು ಬರುತ್ತೇನೆ. ನೀನು ರೆಡಿಯಾಗುತ್ತಾ ಇರು. ಮುಗಿಯುವುದರೊಳಗೆ ಬಂದು ಬಿಡುತ್ತೇನೆ.” ಸಮಿತಾ ಹೊರಟುಹೋದಳು. ಸೂರ್ಯರಶ್ಮಿ ಬೆಚ್ಚನೆ ಹಾಸಿತ್ತು. ನಡೆದರೆ ಎಲ್ಲಿ ನಲುಗುವುದೋ ಎಂದು ಜಾಗರೂಕತೆಯಿಂದ ಹೆಜ್ಜೆ ಹಾಕುವಂತೆ. ತಣ್ಣಗಿನ ಬೆಳಗಿನಲ್ಲಿ ಒಬ್ಬರೇ ನಡೆಯುವುದೆಂದರೆ ಅಂತರಂಗಕ್ಕೆ ಮೌನವಾಗಿ ಸುತ್ತು ಬಂದಂತೆ. ಪ್ರಿಯತಮವಾದ ಏನನ್ನೋ ನೆನೆಯುತ್ತ ಭಾವಾರ್ದ್ರಗೊಳ್ಳುವ ಸುಖದಂತೆ. ಉಕ್ಕುಕ್ಕಿ ಬರುವ ಕಣ್ಣೀರಿನ ಸುಖವದು. ಏನು, ಯಾರನ್ನು, ಯಾಕೆ ಏನೊಂಚೂರೂ ಸುಳಿವು ಸಿಗದೆ ಒಂದೇ ಸವನೆ, ಕೇಳಿಯೂ ಇಲ್ಲದ ಹೆಸರೊಂದನ್ನು ತೀಕ್ಷ್ಣ ಮಧುರವಾಗಿ ಕರೆಯುತ್ತ ಹೊರಟಂತೆ…. +ಯಾರೋ ‘ಮೇಡಂ’ ಅಂತ ಕರೆದಂತಾಯಿತು. ಹಿಂತಿರುಗಿ ನೋಡಿದರೆ ಹೋಟೆಲು ಹುಡುಗ. ಓಡಿ ಬರುತ್ತಿದ್ದ. “ಅಲ್ಲಿ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ.” +ಸಮಿತಾ ಧಾವಂತದಿಂದ ರೂಮಿಗೆ ಓಡಿ ಬಂದು ನೋಡಿದರೆ ಆಭಾ ಕಣ್ಣುಮುಚ್ಚಿ ಮಲಗಿದ್ದಳು. ಆಗಷ್ಟೇ ಅಲಂಕರಿಸಿಕೊಂಡೆದ್ದೆಲ್ಲ ಅತ್ತಿತ್ತಾಗಿ ಮುಖ ತುಂಬ ಚಿತ್ತಾಗಿ ಹರಡಿತ್ತು. ನೀಡಿಕೊಂಡ ಕೈಬೆರಳ ತುದಿಯಿಂದ ಕೂಡ ವೇದನೆ ಹೊಮ್ಮುವಂತೆ ಕಾಣುತ್ತಿತ್ತು. ಬಂದು ಹತ್ತಿರ ಕುಳಿತ ಸಮಿತಾಳ ಮಡಿಲಲ್ಲಿ ಮುಖ ಮರೆಸಿ “ನಾ ಬರುವುದಿಲ್ಲ. ಯಾಕೊ ಧೈರ್ಯವೇ ಸಾಲುವುದಿಲ್ಲ. ಕನ್ನಡಿ ಮುಂದೆ ನಿಂತರೆ ಕಳೆದುಹೋದಂತನಿಸುತ್ತದೆ.” +“ಸಣ್ಣ ಮಕ್ಕಳಂತಾಡಬೇಡ ಆಭಾ. ಏನಾಯಿತೀಗ?…. ಹೊರಡು ಹೊತ್ತಾಯಿತು.” +“ಇಲ್ಲ. ನಿನಗದು ತಿಳಿಯುವುದಿಲ್ಲ. ನೀನು ಹೋಗು, ಯಾರಿಗೂ ಹೇಳಬೇಡ. ಕೇಳಿದವರಿಗೆ ಅವಳಿಗೆ ತಲೆನೋವು ಎಂದುಬಿಡು.” ವಿಹ್ವಲತೆಯಿಂದ ಸಣ್ಣಗೆ ಕಂಪಿಸುತ್ತಿದ್ದಳು ಆಭಾ. “ಬಾಗಿಲು ಲಾಕ್ ಮಾಡಿಕೊಂಡು ಹೋಗು”…. +* * * * +ಸಂಜೆ ಸಮಿತಾ ಮರಳಿ ಬಂದಾಗಲೂ ಆಕೆ ಇನ್ನೂ ಮಲಗಿದಲ್ಲೇ ಇದ್ದಳು. ದಿಂಬಿನ ಪಕ್ಕದಲ್ಲೇ ಆಶ್ಶಟ್ರೇ….. ಕೋಣೆಯಿಡೀ ತುಂಬಿದ ಸಿಗರೇಟು ಘಾಟು. ಹೊಟ್ಟೆ ತೊಳೆಸುವಂತಾಯಿತು. ಸಮಿತಾ ಬಂದದ್ದು ತಿಳಿಯಿತೆಂಬಂತೆ ಕಣ್ಣುಮುಚ್ಚಿಕೊಂಡೇ ಕೇಳಿದಳು “ಏನು, ಹೇಗಾಯಿತು ಎಲ್ಲ?” +“ಆಗುವಂತೆಯೇ. ಅಂಥಾ ವಿಶೇಷವೇನೂ ಇಲ್ಲ.” +“ಕೇಳಿದರೆ ಯಾರಾದರೂ ನನ್ನನ್ನು?” +“ಓ! ಕೇಳದೆ? ಯಾರಾದರೂ ಏನು? ಎಲ್ಲರೂ. ವಾಸುದೇವ್, ರಮೇಶ್, ರಮಾಕಾಂತ್, ಕ್ಷಮಾ, ಕೃಷ್ಣಾ, ಮುತ್ತಪ್ಪ…. ಎಲ್ಲರೂ. ತಲೆನೋವು ಮಲಗಿಬಿಟ್ಟಿದ್ದಾಳೆ ಎಂದೆ. ಮತ್ತೆ, ಒಬ್ಬರಂತೂ , ಯಾರೋ ನಿರ್ಗುಣ ರಾವ್ ಅಂತೆ. ವ್ಹಾ ಏನು ಒಂದು ಹೆಸರೆಂದರೆ! ಬೇರೆ ಯಾವುದೂ ಸಿಗಲಿಲ್ಲ ಬಹುಶಃ! ತಲೆನೋವೇ ಅಂತ ಸೀದಾ ಇಲ್ಲಿಗೇ ಹೊರಟರು ‘ತಲೆನೋವಿನ ಬೇಗಂ’ನನ್ನು ನೋಡಿಕೊಂಡೇ ಬರುತ್ತೇನೆ ಅಂತ ನಗುತ್ತ. ದಯವಿಟ್ಟು ಹೋಗಬೇಡಿ ಆಕೆ ಭಯಂಕರ ಸುಸ್ತಾಗಿದ್ದಾಳೆ ಎಂದೆ. ಪುಣ್ಯ. ಹೆಜ್ಜೆ ಮುಂದಿಟ್ಟವರು ಹಿಂದೆ ಬಂದರು!” +“ಹೂಂ?!” +“ಅದಿರಲಿ ಆಭಾ. ನಿಜಕ್ಕೂ ಏನಾಯಿತು ಹೇಳು.” +“ಏನೋ ನನಗೆ ಗೊತ್ತಿದ್ದರೆ…..” +“ಭಾರೀ ಗಮನವಿಟ್ಟು ಅಲಂಕರಿಸಿಕೊಂಡರೆ ಆಗುವುದು ಹಾಗೇ ಮತ್ತೆ.” +ಜೋರಾಗಿ ನಕ್ಕಳು ಆಭಾ. “ನಿನಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು.” +“ಹೊಟ್ಟೆಕಿಚ್ಚು! ನಾ ಹೇಳಿದ್ದು, ನಿನಗೆ. ಸ್ವಂತದ ದೃಷ್ಟಿಯೇ ತಾಕುತ್ತದೆ ಅಂತ” +“ನಿಜವಾದ ಕಷ್ಟ ಗೊತ್ತಾ? ಸುಮ್ಮನೆ ಹಿಂದೆ ಬೀಳುತ್ತವೆ ಅವು. ಅರ್ಥವೇ ಇಲ್ಲ, ಏನಂತಿ?” +“ಏನಾದರೂ ಹೊಟ್ಟೆಗೆ ತೆಗೆದುಕೊಂಡೆದ್ದೀಯ?” +“ಹೂಂ.” +“ಏನು?” +“ಸಿಗರೇಟು.” +ಮನಸ್ಸು ಎಷ್ಟೋ ಸಲ ಸುಳಿವೇ ಕೊಡದೆ ಮುಖದ ಮೇಲೆ ಭಾವಗಳನ್ನು ಕಳಿಸುತ್ತದೆ. ಸಮಿತಾಳ ಮುಖ ನೋಡಿ ದೊಡ್ಡದಾಗಿ ನಕ್ಕಳು ಆಭಾ. “ಹೋಗುವುದರೊಳಗೆ ನಿನಗೆ ಸಿಗರೇಟು ಅಭ್ಯಾಸ ಮಾಡಿಸದಿದರೆ ನಾನು ಆಭಾ ಅಲ್ಲ.” +“ಓಹೋ?” +“ಒಮ್ಮೆ ರುಚಿ ಹತ್ತಲಿ ಆಮೇಲೆ ನೀನೇ ಬಿಡುವುದಿಲ್ಲ.” +“ನಾನೊಂದು ಚಹಾಕ್ಕೆ ಹೇಳುತ್ತೇನೆ.” +“ಚಹಾ ಬೇಡ. ಇಬ್ಬರೂ ಹೊರಗೆ ಹೋಗೋಣ. ಸ್ವಲ್ಪ ಬೀರ್ ಬಿದ್ದರೆ ಎಲ್ಲ ಸರಿಯಾಗುತ್ತದೆ.” +“ಬೀರ್!” +“ಕಾಲ ಎಲ್ಲುಂಟು ನೀನೆಲ್ಲಿದ್ದಿ?! ಬೀರ್‍ಗೇ ಇಷ್ಟು ಹೆದರಿದರೆ! ಇದೆಲ್ಲ ಒಂದು ಬಗೆಯ ಬಿಡುಗಡೆ ಹುಡುಗೀ.” +“ಸರಿಯೆ. ಬೀರ್‍ವರೆಗೆ ಯಾಕೆ ಹೋಗಬೇಕು? ನೈಟಿ ಬಂದಾಗ, ನೈಟಿ ಹಾಕುವುದೂ ಬಿಡುಗಡೆಯೇ ಆಗಿತ್ತು. ಬಿಗಿ ಉಡುಪು ಕಳಚಿ, ಗೊತ್ತಲ್ಲ? ಫೈನ್, ನೈಸ್, ಬ್ಯೂಟಿಫುಲ್, ವಂಡರ್‍ಫುಲ್, ಫೆಂಟಾಸ್ಟಿಕ್ ಅಂತೆಲ್ಲ ಗಟ್ಟಿಯಾಗಿ ಉದ್ಗರಿಸುವುದೂ ಬಹುಶಃ ನಿನ್ನ ಮಟ್ಟಿಗೆ ಬಿಡುಗಡೆಯೇ. ಹ್ಞಂ? ಆದರೆ ಬಿಡುಗಡೆ ಆ ಮೂಲಕವೇ ಬೇಕು ಅಂತ ಸಹಜವಾಗಿ ಅನಿಸಬೇಕಲ್ಲ? ನಾವು ಇಷ್ಟು ಬೇಗ ಉದ್ಗಾರಗಳನ್ನು ಒಗೆಯುವವರೂ ಅಲ್ಲ, ಸ್ವಲ್ಪ ಬೇರೆ. ಕ್ಷಮಿಸಬೇಕು.” ಇದ್ದಕ್ಕಿದ್ದಂತೆ ಆವೇಶದಿಂದ ಅವಳು ಬಹುವಚನಕ್ಕೆ ಹಾರಿದ ವೈಖರಿಗೆ ಕಣ್ಣು ತುಂಬ ನಕ್ಕಳು ಆಭಾ. +“ಫೆಂಟಾಸ್ಟಿಕ್ ಸ್ಪೀಚ್…. ಹಮ್ಮು ನಿನಗೆ.” +“ಹಮ್ಮು ಅಂತ ಕಂಡರೆ ಹಮ್ಮು, ಇರಲಿ. ಹಮ್ಮಿಗೆ ಅಲ್ಲಿ ಏನುಂಟಂತ ಬೇಕಲ್ಲ.” ಬಾಗಿಲ ಬೆಲ್. ಅದು ತನಗೇ ಖಂಡಿತ ಎಂಬಂತೆ, ತನಗೆ ಮೊದಲೇ ತಿಳಿದಿರುವಂತೆ ಆಭಾ ಓಡಿ ಹೋಗಿ ಬಾಗಿಲು ತೆರೆದು ಬಂದವರೊಡನೆ ಮಾತಾಡಿ ಒಳಬಂದು “ಈಗ ಬಂದೆ. ನನ್ನ ಫ್ರೆಂಡ್ ಬಂದಿದ್ದಾನೆ. ಒಂದೇ ನಿಮಿಷ.” ಎಂದವಳು ಕನ್ನಡಿ ಮುಂದೆ ಕ್ಷಣವೂ ನಿಲ್ಲದೆ ಬೆಳಿಗ್ಗೆಯಿಂದ ಸಂಜೆಯವರೆಗೂ ಹೊರಳಾಡಿದ ಆ ಅಸ್ತವ್ಯಸ್ತ ಸ್ಥಿತಿಯಲ್ಲಿಯೇ ಅದರ ಖೆರೇ ಇಲ್ಲದಂತೆ, ಮೇಲೊಂದು ಶಾಲನ್ನು ಅವಸರದಿಂದ ಹೊದೆದುಕೊಂಡು ಸರಸರನೆ ಹೊರ ನಡೆದುಬಿಟ್ಟಳು! ಬೆಳಿಗ್ಗೆ ಇದೇ ಆಭಾಳೇ ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತದ್ದು!? ಬಾಗಿಲೆಳೆದುಕೊಂಡು ಹೋದ ಸದ್ದು ಎಂದರೆ – ‘ಎಲ್ಲಿಗೆಂತ ಕೇಳಬೇಡ.” ಎಂದಂತೆ! +ಸೆಮಿನಾರ್‍ನಲ್ಲಿ ಬೆಳಿಗ್ಗೆಯಿಂದ ಕೇಳಿದ ಮಾತುಗಳನ್ನು ಮೆಲುಕುತ್ತ ಟಿಪ್ಪಣಿ ಮಾಡಿಕೊಳ್ಳುತ್ತ ಕುಳಿತಳು ಸಮಿತಾ. ಸುಮಾರು ಒಂದು ಒಂದೂವರೆ ಗಂಟೆಯೇ ಕಳೆದಿರಬಹುದು. ಬಾಗಿಲು ತೆರೆದ ಸದ್ದಿನೊಂದಿಗೆ ಕಮಟು ವಾಸನೆ ರೂಮಿನೊಳಗೆ ಹಾಸಿ ಬಂದಂತಾಗಿ ತಲೆಯೆತ್ತಿ ನೋಡಿದರೆ ಆಭಾ. ಸಮಿತಾ ಕೇಳಬಹುದಾದ ಪ್ರಶ್ನೆಗಳನ್ನು ಮರೆಸುವಂತೆ ಗೆಲುವಿನ ರುಮುರುಮು ದನಿಯಲ್ಲಿ “ಓ! ಏನು ಭಾರೀ ಟಿಪ್ಪಣಿಯ! ನಾನು ನಿನ್ನ ಹಾಗೆಯೇ – ಅದಕ್ಕೇ ಎಷ್ಟು ಪಾಪ್ಯುಲರ್ ಗೊತ್ತಾ ನಾನು?” ತನ್ನ ಜನಪ್ರಿಯತೆಯ ಉದಾಹರಣೆಗಳನ್ನು ಒಗೆಯುತ್ತ ಕುರ್ಚಿಗೊರಗಿದಳು. ಉದಾಹರಣೆಗಳೆಲ್ಲ ಸಾಗುತ್ತಿರುವಾಗ ಕೇಳಿದಳು ಸಮಿತಾ. “ನೇರ ಹೇಳಿಬಿಡು. ಯಾರು ಬಂದದ್ದು?” +ಸಿಕ್ಕಿಬಿದ್ದು ಖುಶಿಯಾದಂತೆ ಕಾಲ್ಬೆರಳಲ್ಲಿ ಖುಶಿ ಬಾರಿಸುತ್ತ “ನೀನು ನಾನೆಣಿಸಿದ ಹಾಗಿಲ್ಲ….ಜೋರಿದ್ದಿ. ಯಾರೆಂದರೆ…. ಅದೇ…. ನಿನ್ನ ನಿರ್ಗುಣ ರಾವ್!” – +(“ಸ್ಸಿ. ‘ನಿನ್ನ’ ಎನ್ನಬೇಡ.”) +* +* +* +ರಾತ್ರಿ ಊಟ ಮುಗಿಸಿ ಒಂದು ರೌಂಡು ವಾಕಿಂಗ್ ಹೋಗಿ ರೂಮಿಗೆ ಬಂದವಳೇ, ಇದೇ ಸ್ವಲ್ಪ ಹೊತ್ತಿಗೆ ಮುಂಚೆ ಗೆಲುವಿದ್ದದ್ದೇ ಸುಳ್ಳೆಂಬಂತೆ ದಣಿವಾದಳು ಆಭಾ. ತಲೆ ನಿಜವಾಗಿಯೂ ಈಗ ಸಿಡಿಯುತ್ತಿದೆ, ಒಡೆದೇ ಹೋಗುತ್ತದೆ ಎನ್ನುತ್ತಾ ಹಾಸಿಗೆಯಲ್ಲಿ ಉರುಳಿಕೊಂಡಳು. +“ತಲೆನೋವು ಬರಬೇಕಾದ್ದು ನಂಗೆ. ನಿಂಗೆ ಹೇಗೆ ಬಂತದು?” +“ನಿಂಗೇನು ತಮಾಷೆ” ಆಭಾ ಎದ್ದು ಕನ್ನಡಿ ನೋಡಿದಳು. ತನ್ನ ತಲೆ ತಾನೇ ಸವರಿಕೊಳ್ಳುತ್ತ ಮತ್ತೆ ಮಲಗಿದಳು. ಹಣೆಯೊತ್ತಿಕೊಂಡು ನರಳತೊಡಗಿದಾಗ “ಮಾತ್ರೆ ಬೇಕಾ? ಇದೆ ನನ್ನ ಬಳಿ.” ಎಂದಳು ಸಮಿತಾ. +“ಹೂಂ…. ಎರಡು ಕೊಡು…..” +“ಎರಡ! ಬೇಡ. ಒಂದೂ ಕೊಡುವುದಿಲ್ಲ, ಹೋಗು. ಕಣ್ಣು ಮುಚ್ಚಿ ಮಲಕೊ ಎಲ್ಲ ಸರಿಯಾಗುತ್ತದೆ.” ‘ಸರಿಯಾಗುತ್ತದೆ’ ಎಂಬ ಶಬ್ದ ಕೇಳಿದ್ದೇ ಏನಾಗುವುದೋ ಆಭಾಗೆ. ಸಮಿತಾಳ ಕೈ ಹಿಡಿದು “ಸರಿಯಾಗುತ್ತದೆ ಅಲ್ಲವೆ ಖಂಡಿತ?” +“(ಅರೆ!) ಹೂಂ. ನಾನು ಯಾರಂತ ಮಾಡಿದೆ? ದೇವರೇ. ಸರಿಯಾಗುತ್ತದೆ ಎಂದ ಮೇಳೆ ಸರಿಯಾಗುತ್ತದೆ. ಹೆದರಬೇಡ.” +“ನಗಬೇಡವೆ….. ಸತ್ಯಕ್ಕೂ ಹೇಳು. ನನ್ನ ವಯಸ್ಸು ಕಾಣುತ್ತದ, ಇಲ್ಲ ಅಲ್ಲವೆ?” ಮರುಳು ಆಭಾ. ವಯಸ್ಸು ಎಷ್ಟಾಗಿರಬಹುದು? +* +* +* +ಪಿಸುಮಾತು ಕೇಳಿದಂತಾಗಿ ಸಮಿತಾಗೆ ಎಚ್ಚರವಾಯಿತು. ನೋಡಿದರೆ ಆಭಾ ಫೋನಿನಲ್ಲಿ ಮಾತಿನ ಸಂಭ್ರಮದಲ್ಲಿ ತೇಲಿ ಹೋಗಿದ್ದಾಳೆ. ಆ ಅಪರಾತ್ರಿಯಲ್ಲಿ ಸಿಂಗರಿಸಿಕೊಂಡು. ಫ್ರೆಶ್ ಆಗಿ. ಫೋನಿನ ಆಚೆಗೆ ತಾನು ಕಾಣಿಸುತ್ತಿದ್ದೇನೆ ಎಂಬಷ್ಟು ದೃಢ ನಂಬಿಕೆಯಲ್ಲಿ ಹಾವಭಾವ ತುಂಬಿದ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. ಸಮಿತಾ ತೆರೆದ ಕಣ್ಣಲ್ಲಿ ತನ್ನನ್ನೇ ನೋಡುತ್ತಿರುವುದನ್ನು ಗಮನಿಸಿ ರೆಪ್ಪೆ ಮಿಟುಕಿದಳು. ಪಕ್ಕದಲ್ಲೇ ಸಿಗರೇಟು ಪ್ಯಾಕು, ಲೈಟರ್. ಸಿಗರೇಟು ಉರಿಸುತ್ತಾ ಕುಳಿತ ಭಂಗಿಯೋ. ಮುಗಿಯುತ್ತಲೇ ಸೀದಾ ಬಂದು ವಿಲಾಸೀ ಮೂಡಿನಲ್ಲಿ ಸಮಿತಾ ಮುಖದ ನೇರಕ್ಕೇ ಹೊಗೆಬಿಟ್ಟಳು. “ಶ್ ಸೇದುವವಳು ಆಚೆಗೆ ಹೋಗು. ಕಿರಿಕಿರಿ ಮಾಡಬೇಡ” – ನಗುತ್ತಾ ಎದ್ದು ತುದಿಯಲ್ಲಿ ಕುಳಿತಳು ಆಭಾ. ಆಶ್ಚರ್ಯ. ನಿನ್ನೆ ಇವಳೇ ಏನು ತನ್ನಲ್ಲಿ ಭೀತಿ ಹುಟ್ಟಿಸಿದವಳು! ಒಂದೇ ದಿನದಲ್ಲಿ ಆ ವಿಚಿತ್ರ ಭೀತಿ ಓಡಿತು ಹೇಗೆ? ನಿದ್ದೆ ಎನ್ನುವುದು ನಾವೇ ಒಂದಷ್ಟು ಹೊತ್ತು ತಿಳಿಯದಂತೆ ಒಳಹೊಕ್ಕು ಮೌನ ಚಿಂತಿಸುವ ಸಮಯವೇ? ನಮಗೂ ಸುಳಿವು ಕೊಡದಂತೆ ತೀರ್ಮಾನಗಳನ್ನು ಮಾಡುತ್ತ ಮಿದುಳಿನಲ್ಲಿ ಬಿಂಬಿಸಿಡುವ ಹೊತ್ತೇ ಅದು! ಎಂತಲೇ ನಿದ್ದೆಯಿಂದ ನಿದ್ದೆಗೆ ನಾವು ಬೆಳೆಯುತ್ತೇವೆ ಎಂಬ ಮಾತು? ಬೆಳೆಯುವುದೋ ಬದಲಾಗುವುದೋ? +* +* +* +“ಇವತ್ತು ಸುರುವಿಗೇ ಕವಿಗೋಷ್ಠಿ. ನೆನಪಿದೆಯಲ್ಲ. ಬೇಗ ಹೊರಡು. ನಿನ್ನೆಯ ಹಾಗೆ ಮಾಡಬೇಡ.” +“ಬೇಜಾರು ಕಣೆ. ನನ್ನ ಕವಿತೆಯನ್ನ ನೀನೇ ಓದಿಬಿಡು.” +“ನನಗೇನು ಗ್ರಹಚಾರವಲ್ಲ.” +“ಎಂಥ ಫಸ್ಟ್ ಕ್ಲಾಸ್ ವಿಮರ್ಶೆ! ಥ್ಯಾಂಕ್ ಯೂ.” +ಸಮಿತಾ ಹೊರಡತೊಡಗಿದಳು “ಪುಣ್ಯಾತಗಿತ್ತಿ ಸ್ವಲ್ಪ ಅತ್ತ ತಿರುಗು.” +“ಏನಿದೆ ಅಂಥದ್ದು?….. ಇಲ್ಲಿ ಕೇಳು. ಸ್ನೇಹ ಎಂದರೆ ಹೇಗಿರಬೇಕು ಗೊತ್ತಾ? ನಡುವೆ ನಾಚಿಕೆ ಒಂದು ಚೂರೂ ಕೂಡ ಇರಬಾರದು. +“ಅಂತಹ ಸ್ನೇಹವೆಲ್ಲಿ ಬಂತೀಗ ಎರಡು ದಿನದೊಳಗೆ?” +“ಇಷ್ಟು ಬೇಕಷ್ಟಾಯಿತು. ಸ್ನೇಹವಿಲ್ಲದೆ ಒಂದು ಕ್ಷಣ ಕೂಡ ಹೀಗೆ ಜೊತೆಗಿರಲು ಸಾಧ್ಯವಿಲ್ಲ ತಿಳಕೊ.” +“ನಿನಗೆ ‘ಜೊತೆಗಿರುವ’ ಎಂಬ ಶಬ್ದದ ಅರ್ಥವೇ ಗೊತ್ತಿಲ್ಲ ಬಹುಶಃ, ಅದು ಏನು ಗೊತ್ತಾ? (ವಾಕ್ಯ ಅಲ್ಲಿಗೇ ಕಡಿದು)….. ನಾನು ಸಣ್ಣದಿರುವಾಗ ಮದುವೆ ಮನಗೆ ಹೋದಾಗೆಲ್ಲ ಯಾಕೆ ಗಂಡಸನ್ನೇ ಮದುವೆಯಾಗಬೇಕು ಅನ್ನಿಸುತ್ತಿತ್ತು. ಅಜ್ಜನೊಡನೆ ಹೇಳುತ್ತಿದ್ದೆ ಕೂಡ. ನಾನು ಮದುವೆಯಾಗುವುದು ಹುಡುಗಿಯನ್ನೇ ಅಂತ!” +ಅದಕ್ಕೂ ಇದಕ್ಕೂ ಏನು ಸಂಬಂಧ ಈಗ?….. ಹ್ಞೂಂ?…. ಏನೇ ಇರಲಿ – “ನನ್ನನ್ನೆಂದೂ ಮದುವೆಯಾಗಬೇಡ. ನಾನೊಲ್ಲೆ.” +ಗಹಗಹಿಸಿ ನಕ್ಕಳು ಆಭಾ. ಲಘುವಾಗಿ ನೇರ ಮಾತಾಡುತ್ತ ಆಡುತ್ತ ಎಷ್ಟು ಬೇಗ ಒಳಮುಖವಾಗುತ್ತಾಳೆ ಹೊರಬರುತ್ತಾಳೆ ಈ ಆಭಾ. ಅವಳ ನಗೆಯೊ, ತುಟಿಯ ಮೇಲಿನ ತೆಳ್ಳನೆಯ ಮೀಸೆಯೋ! ಅವಳನ್ನೇ ನೋಡುತ್ತ ನಿಂತಂತೆ ಗಂಡಸರು ಹೆಂಗಸರ ಹಾಗೆ ಹೆಂಗಸರು ಗಂಡಸರ ಹಾಗೆ ಕಾಣಿಸಿದರೆ ಏನು ತಮಾಷೆ ಅನಿಸಿ ತನಗೇ ಅನಿರೀಕ್ಷಿತವಾಗಿ ನುಡಿದಳು ಸಮಿತಾ – “ಇದ್ದಾನಲ್ಲ ಆ ನಿರ್ಗುಣ ರಾವ್. ಥು. ಥೇಟ್ ಹುಡುಗಿ. ನಡೆಯುವುದೂ ಸ್ವರವೂ….” +“ಅಲ್ಲೇಬಿದ್ದೆ ನೀನು. ‘ಥು” ಯಾಕೆ? ಹುಡುಗಿಯರಂತೆ ಇದ್ದರೆ ಏನೀಗ? ಹುಡುಗಿಯರೆಂದರೆ ಕಡಿಮೆ ಅಂತ ನೀನೇ ಹೇಳಿದ ಹಾಗಾಯಿತಲ್ಲ.” +“ಅರೆ ನಾನೆಲ್ಲಿ ಹಾಗೆ ಹೇಳಿದೆ? ಗಂಡಸಿನಂತೆ ಇರುವ ಹೆಂಗಸಿಗೆ ಗಂಡುಬೀರಿ, ಸ್ತ್ರೀ ವೇಷ ಅಂತೆಲ್ಲ ಹೇಳುವುದಿಲ್ಲವ? ಏನಂದರೂ ಗಂಡು ಗಂಡಿನಂತೆಯೇ ಹೆಣ್ಣು ಹೆಣ್ಣಿನಂತೆಯೇ ಇರಬೇಕಪ್ಪ. ಅಂದರೆ ಅವರ ಆಕೃತಿಯಲ್ಲಿ. ಮೇಲುಕೀಳು ಎಂಬ ಅರ್ಥದಲ್ಲಿ ಹೇಳುವುದಲ್ಲ ನಾನು…..” +“ಅರ್ಥ! ನನ್ನನ್ನು ಕೇಳು. ಅರ್ಥ ಎಂಬುದೇ ಇಲ್ಲ. ಈ ಸಾಲು ಇವತ್ತಿನ ‘ಚಿಂತನ’, ಬರಕೊ.” +“ಈಗಷ್ಟೇ ಅರ್ಥಗಿರ್ಥ ಅಂತೆಲ್ಲ ಮಾತು ಹೊಡೆದೆ ಮತ್ತೆ?” +ನಗುತ್ತ ಕನ್ನಡಿ ಮುಂದೆ ನಿಂತು +ಎಷ್ಟೆಲ್ಲ ಬಣ್ಣಗಳು ಬಣ್ಣಗಳಿಗೆ +ಬಣ್ಣದ ಬಣ್ಣದ ಗಳಿಗೆಗಳಿಗೆ +-ಕೆನ್ನೆಗೆ ರಂಗು ಹಚ್ಚಿಕೊಳ್ಳುತ್ತ ಹಾಡತೊಡಗಿದಳು ಆಭಾ. ಕನ್ನಡಿಯಲ್ಲಿಯೇ ಸಮಿತಾಳ ಕಡೆ ನೋಡಿ “ಹೇಗಿದೆ ಪದ್ಯ?” ಸಮಿತಾ ಬಾಯಿ ತೆರೆಯುವ ಮೊದಲೇ ಅವಳೇ ಮುಂದುವರೆಸಿದಳು “ಫೆಂಟಾಸ್ಟಿಕ್!…. ಇಲ್ಲವಾದರೆ ಆ ಹುಡುಗಿಗೆ ಏನುಂಟು?…… ರಿಸರ್ಚ್….. ನಿಜಕ್ಕೂ ಏನು ಗೊತ್ತಾ? ಬದುಕು ಎಂದರೆ ಹುಡುಕುವುದು…. ಮತ್ತೆ ಮತ್ತೆ ಹುಡುಕುವುದು…… ಬಣ್ಣಹುಡುಕುವುದು….” +“ಒಂದು ತಿದ್ದುಪಡಿ. ನಮಗೆ ಬೇಕಾದ ಬಣ್ಣ.” +“ಸಿಕ್ಕಿದರೆ, ಬಿಟ್ಟು…..” +“ಹೆದರಿಸಬೇಡ ಆಭಾ. ಸುಮ್ಮನೆ ಹೊರಡು.” +“ಹೆದರಿಕೆಯೆ? ಯಾಕೆ? ಈ ಮದುವೆ ಎನ್ನುವುದು ಗೊತ್ತ. ನಲ್ವತ್ತು ವರ್ಷದ ನಂತರ ರದ್ದಾಗಿ ಸಂಬಂಧಗಳೆಲ್ಲ ರೀಶಫಲ್ ಆಗಬೇಕು…..” +“ಮಂಡೆ. ಇವತ್ತೂ ನಿನ್ನೆಯ ಹಾಗೆ ಮಾಡಬೇಡ ಮತ್ತೆ. ಹೊರಡು….. ಹೊರಡು….” +* +* +* +ಕವಿಗೋಷ್ಠಿಯಲ್ಲಿ ತನ್ನ ಕವಿತರೆಯನ್ನು ಓದಿದಳು ಆಭಾ. +ಎಷ್ಟೆಲ್ಲ ಬಣ್ಣಗಳು ಬಣ್ಣಗಳಿಗೆ +ಬಣ್ಣ ಬಣ್ಣದ ಗಳಿಗೆಗಳಿಗೆ +ಎಷ್ಟು ಸುಂದರ ರಾತ್ರಿಗಳು ಕನಸುಗಳಿಗೆ…. +ಮುಂದರಿಸಿದಳು. ಹುಟ್ಟಾ ಪ್ರಸನ್ನಮುಖಿಯಂತೆ ಮುಖದಲ್ಲಿ ಉದ್ದ ನಗೆ ಸಿದ್ಧವಾಗಿಟ್ಟು, ಅದನ್ನು ಕೊಂಚವೂ ಅಳಿಸಿಕೊಳ್ಳದೆ ಎಲ್ಲರ ನಡುವೆ ಲಕಲಕ ಓಡಾಡಿಕೊಂಡಿದ್ದ ಬಗೆಯೆಂದರೆ! ನೋಡಿದರೇ ಸಾಕು ಎದುರಿನವರಲ್ಲಿ ಮಾತು ಹುಟ್ಟಬೇಕು. ಜಡ ತೊಲಗಿ ಚೇತನವಾಗಬೇಕು. ಅದೆಲ್ಲ ಸರಿ – +“ಅದೆಲ್ಲ ಸರಿ ಆಭಾ. ನಿನ್ನ ಸ್ವರಕ್ಕೆ ಹೆದರಿಯೇ ಅದನ್ನು ಕವಿತೆ ಅಂತ ಒಪ್ಪಿಬಿಡಬೇಕು, ಹಾಗೆ ಓದಿದೆಯಲ್ಲ! ಅದೊಂದು ಒಳ್ಳೆಯ ಕವಿತೆಯಾಗಿದ್ದೂ…..” +“ಹೂಂ?!” +“ನೀನದಕ್ಕೆ ಅವಮಾನ ಮಾಡಿದೆ. ನಿನ್ನ ನೀನೇ ಅವಮಾನಿಸಿದಂತೆ. ಉಳಿದವರು ಅದನ್ನು ಕವನವೆಂದು ಗಣಿಸದೇ ಹೋದರೆ ಎಂದು ನೀನೇ ಅನುಮಾನಿಸಿದಂತೆ. ಸತ್ಯಕ್ಕೂ ಹೇಳಬೇಕೆಂದರೆ ಆ ನಿನ್ನ ‘ನಿರ್ಗುಣಿ” ಭಜನ್ ಹೇಗಿತ್ತು ಗೊತ್ತಾ? ನೀನು ನಿಶ್ಚಲಳಾಗಿ ಓದಿದ್ದರೂ ಅಥವಾ ‘ನಿರ್ಗುಣ’ ದಲ್ಲಿ ಓದಿದ್ದರೂ ಅದರ ಪ್ರಕಾಶ ತಟ್ಟುತ್ತಿತ್ತು.” ಆಭಾ ಅವಳದ್ದೇ ವಿಶಿಷ್ಟ ಮಿಟುಕಿನಲ್ಲಿ ನಕ್ಕಳು. +“ನೀನು ನನಗಿಂತ ಸೂಕ್ಷ್ಮವಿದ್ದೀ….. ಆದುದರಿಂದ ಇಕೊ. ಕೇಳು. ನನಗೊಬ್ಬ ಗೆಳತಿಯಿದ್ದಳು. ಊಟ ತಿಂಡಿ ನಿದ್ದೆ ಆಟ ಎಲ್ಲದಕ್ಕೂ ನಾನು ಅವಳು ಜೊತೆ. ಏನೆಲ್ಲಾ ಆಡುತ್ತಿದ್ದೆವು ನಾವು. ಮನೆಯಾಟವಾಡಿದ್ದಂತೂ ಸ್ವಲ್ಪ ಸಲವಲ್ಲ. ಪ್ರತಿಸಾರಿಯೂ ಅವಳು ಹೆಂಡತಿ, ನಾನು ಗಂಡ. ಬಿಡು. ಆ ಸಂಸಾರವೇ ಚೆನ್ನಾಗಿತ್ತು. ಈ ನಿರ್ಗುಣ ರಾವ್ ಗೊತ್ತಲ್ಲ ನಿನಗೆ, ಒಂದು ರೀತಿಯಲ್ಲಿ ಅವಳನ್ನೇ ಹೋಲುತ್ತಾನೆ! ಅವನನ್ನು ಕಂಡಾಗೆಲ್ಲ ಅವಳ ನೆನಪಾಗುತ್ತದೆ. ಏನು ವಿಚಿತ್ರ ನೋಡು. ಅರ್ಥವಾಗುತ್ತ ನಿನಗೆ?” +“ಹ್ಞಂ?!” +* +* +* +ಅದೇ ಸಂಜೆ ಹೊರಟಳು ಆಭಾ. ಸಮಿತಾಳನ್ನು ಆಲಂಗಿಸಿ “ಆಲ್ ದಿ ಬೆಸ್ಟ್.” +“ನಿನಗೂ ಅದೇ!” +ನಕ್ಕಳು. “ಅಪ್ಪಟ ದಕ್ಷಿಣಾದಿ, ತಿರುಪತಿ, ನೀನು….. ನನಗೂ ಅದೇ ಅಂದರೆ ನಾನು ಬರುವ ಸಲ ಇನ್ನಷ್ಟು ಒಳ್ಳೆಯ ಕವಿಯತ್ರಿ ಆಗಬೇಕು. ಎಂದರೆ ಕ್ಷಣಕ್ಷಣಗಳನ್ನು ಇನ್ನಷ್ಟು ಸುಡಬೇಕು. ಶಬ್ದ ಶಬ್ದಗಳನ್ನು ಸುಡಬೇಕು. ಜೊತೆಗೆ ಪ್ರತಿ ಅಕ್ಷರ ವ್ಯಂಜನ ವಿಸರ್ಗ ಅನುಸ್ವಾರ ಅನುಸ್ವರಗಳನ್ನೂ ಅನಿವಾರ್ಯವಾಗಿ. ಅವು ಕರಟದಂತೆ ಕಾಯುತ್ತ ಸಮಯ ನೋಡಿ ಇಕ್ಕಳದಲ್ಲಿ ಟಪ್ಪೆಂದು ಹೆಕ್ಕಿ ಕವನದಕ್ಷರ ಜೋಡಿಸಿಕೊಳ್ಳಬೇಕು. ಎಷ್ಟೆಲ್ಲ ಶ್ರಮ ನೋಡು. ಇಷ್ಟಾಗುವಾಗ ಸ್ವತಃ ನಾನೇ ದಹಿಸಿ ಹೋಗಬಹುದಲ್ಲವೆ? ಅದೇನು ದೊಡ್ಡದಲ್ಲ ಬಿಡು….. ಅಥವಾ ಈ ಎಲ್ಲದರ ಬದಲು ಸುಮ್ಮನೆ ಕಾರ್ಪೋರೇಶನ್ ಇಲೆಕ್ಷನ್ನಿಗೆ ನಿಂತರೆ ಹೇಗೆ? ಗೆದ್ದರೆ ನಗರ ಗುಡಿಸಿ ಚೊಕ್ಕ ಮಾಡಿದ ಹಾಗಾದರೂ ಆಗುತ್ತದೆ!” ಕ್ಷಣದಲ್ಲಿ ನಗುವ ಕ್ಷಣದಲ್ಲಿ ವಿಷಾಧಿಸುವ ಲಘುವಾಗುವ ಗೂಢವಾಗುವ ಕ್ಷಣಕ್ಷಣದಲ್ಲಿ ಭಾವ ಪಲ್ಲಟಗೊಳ್ಳುವ ಆಭಾ. “ಇಷ್ಟಕ್ಕೂ ಈಗ ಸಿಗರೇಟು ಸುಡುವುದನ್ನೇ ಹೇಳಿಕೊಡಲಿಲ್ಲವಲ್ಲ ನಾನು ನಿನಗೆ. ಹೋ, ಹಾಗಾದರೆ ನಾನಿನ್ನು ಆಭಾ ಅಲ್ಲ!” ಸಿಗರೇಟು ಹೊಗೆ ಸುರುಳಿ ಸುರುಳಿಯೊಳಗೆ ನಗೆ ಹೊರಳುವಂತೆ ನಕ್ಕಳು. +ಕಳಿಸಿಕೊಡಲು ಕೆಳಾಂಗಣಕ್ಕೆ ಹೋದರೆ ಅಲ್ಲಿ ಟ್ಯಾಕ್ಸಿ ನಿಂತಿತ್ತು. ಆಕೆ ಹತ್ತಿರ ಹೋಗುತ್ತಿದ್ದಂತೆ ಅವಳಿಗಾಗಿಯೇ ಕಾಯುತ್ತಿರುವ ಹಾಗೆ ಬಾಗಿಲು ತೆರೆಯಿತು. ಅರೆ! ನಿರ್ಗುಣ ರಾವ್! ತೆರೆದ ಬಾಗಿಲಲ್ಲಿ “ಬಾ. ಇಲ್ಲಿ ಕುಳಿತುಕೊ” ಕರೆಯುತ್ತಿದ್ದ. ಆಕೆ ಒಳಗೆ ಕುಳಿತದ್ದೇ ಅವಳನ್ನೊತ್ತಿಕೊಂಡು ಬಾಗಿಲು ಬೀಸಿದೆ. ಟ್ಯಾಕ್ಸಿ ಹೊರಟಿತು. ಆ ಹೊತ್ತಿನ ಸುತ್ತ ಹೊರಡುವ ಟ್ರೈನ್ ಹತ್ತುವವರೆಲ್ಲ ಒಟ್ಟಿಗೆ ಹೊರಟಿದ್ದಾರೆ. ಸ್ಟೇಷನ್ನಿನಲ್ಲಿ ಬೇರೆಯಾಗುತ್ತಾರೆ…. (ಯೇ?) ಕೈಯಾಡಿಸುತ್ತಿದ್ದಳು ಆಭಾ, ವೇಗವಾಗಿ. ಕಣ್ಮರೆಯಾಗುವವರೆಗೂ. ಅದೇನದು ಸಂಭ್ರಮವೋ ಚಡಪಡಿಕೆಯೋ, ಬಿಟ್ಟೇ ಕೊಡದ ಮಿಶ್ರಣ. +ಸಮಿತಾ ರೂಮಿಗೆ ಮರಳಿದಳು. ಹೊಗೆಯ ಘಾಟು ಇನ್ನೂ ಕರಗಿರಲಿಲಲ. ಪರದೆ ಸರಿಸಿ ಕಿಟಕಿ ಬಾಗಿಲು ಅಗಲಕ್ಕೆ ತೆರೆದಿಟ್ಟಳು. ಫ್ಯಾನ್ ಸ್ವಿಚ್ ಹಾಕಿ ಬೆಳಗಿನ ಪೇಪರನ್ನೇ ಹಿಡಿದು ಕುಳಿತಳು, ಸುಮ್ಮನೆ ನೋಡುತ್ತ. ಅಲ್ಲಿದ್ದರೂ ಅಲ್ಲಿಲ್ಲದ ಮನಸ್ಸು. ಬಂದ ಲಾಗಾಯ್ತಿನಿಂದ ಕಂಡ ಆಭಾಳ ಚಿತ್ರ ಮತ್ತೆ ಮತ್ತೆ ಕಣ್ಣೆದುರು. ಕನ್ನಡಿ ಮುಂದಿನ ತಳಮಳದಂತಿದ್ದಳಲ್ಲವೆ ಆಭಾ? ಹೊಗೆಯಾಚೆ ಹೊಳೆಯುವ ಅವಳ ದೃಷ್ಟಿ ಅರ್ಥವಾದಂತೆ ಅರ್ಥವಾಗದಂತೆ ಅತ್ತಂತೆ ನಕ್ಕಂತೆ ಕೆಡುಕು ಒಳಿತುಗಳ ನಡುವಿನ ವಿಲವಿಲದಂತೆ. ಆ ಹುಡುಗಿಯ ಕಥೆ ಎತ್ತುವ ಅಲ್ಲಿಗೇ ಬಿಡುವ ಆಭಾ. ತಾನೂ ವಿವರ ಕೇಳಿಲಿಲ. ಕಡೆಗೂ ಅವಳು ಹೇಳಲಿಲ್ಲ. ಏನಂದು ಕೊಂಡಿರಬಹುದು ಆಕೆ? ತಾನೇಕೆ ಅವಳ ಉಮೇದು ಕೆಳಿಸಲಿಲ್ಲ? ಯಾವ ಭಯ? ಅದು ಭಯವೆ… ಹೌದೆ? +ಪೇಪರಿಂದ ಕಣ್ಣೆತ್ತಿ ನೋಡಿದರೆ ಅಲ್ಲಿ ಮೇಜಿನ ಮೇಲೆ ಸಿಗರೇಟು ಲೈಟರ್! ಅಯ್ಯ, ಬಿಟ್ಟೇ ಹೋಗಿದ್ದಾಳೆ! ಇನ್ನೇನು ಬಿಟ್ಟು ಹೋಗಿದ್ದಾಳೊ ಪುಣ್ಯಾತಗಿತ್ತಿ ಅಂತ ಸುತ್ತ ನೋಡಿದರೆ ಕನ್ನಡಿ ಮುಂದೆ ಅವಳ ಪ್ರಿಯ ಮೇಕಪ್ ಬಾಕ್ಸ್. ದೇವರೆ, ತನ್ನ ಜೀವವನ್ನೇ ಮರೆತು ಹೋಗಿದ್ದಾಳಲ್ಲ! ಅಥವಾ ಇನ್ನಿದೆಲ್ಲ ಬೇಡ ಅನಿಸಿರಬಹುದೆ? ಕೃಷ್ಣನ ಕೊಳಲಿಗೆ ಹೊರಟ ಗೋಪಿಯಂತೆ. +* +* +* +ಊರಿಗೆ ಬಂದವಳೇ ಅವೆರಡನ್ನೂ ಪ್ಯಾಕ್ ಮಢಿ ರಿಜಿಸ್ಟರ್ ಪಾರ್ಸೆಲ್ ಮಾಡಿದಳು ಸಮಿತಾ. ಅದು ಹೋದ ಹಾಗೆಯೇ ಹಿಂದೆ ಬಂತು ಯೋಚಿಸುತ್ತ ರಾತ್ರಿ ಫೋನ್ ಮಾಡಿದರೆ ಆಚಿಂದ ಪುರುಷ ಧ್ವನಿಯೊಂದು “ಆಕೆ ಸತ್ತು ಹೋಗಿಯಾಯಿತು. ಗೊತ್ತಿಲ್ಲವ ನಿಮಗೆ?” ಫೋನ್ ಕುಕ್ಕಿಟ್ಟ ಸದ್ದು. +“ಫೆಂಟಾಸ್ಟಿಕ್ ಆಭಾ. ಆಲ್ ದಿ ಬೆಸ್ಟ್.” +ತನ್ನ ಉದ್ಗರವೆ ಇದು!? +ಆಭಾಳ ನೆನಪಲ್ಲಿ ಶಹಜಾದೆಯಂತೆ ಕುಳಿತು ನಿಡಿದುಸಿರು ಬಿಟ್ಟಳೂ ಸಮಿತಾ. +ಧುಮ್ಮಿಕ್ಕ ಹೊರಟ ಒಳದುಗುಡವೊಂದು ಸ್ವಂತ ಏಕಾಂತ ಕ್ಷಣದಲ್ಲಿಯೂ ಝಿಲ್ಲನೆ ಅಳುಕಿ ಅಲ್ಲಿಯೇ ಗಂಟಲುಕಟ್ಟಿಕೊಂಡಿತು. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […] +ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […] +ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_708.txt b/Kannada Sahitya/article_708.txt new file mode 100644 index 0000000000000000000000000000000000000000..e04cd326097c41b40c0e213a4103adf1fb753fc5 --- /dev/null +++ b/Kannada Sahitya/article_708.txt @@ -0,0 +1,141 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇವತ್ತು ನಾನು ಮಾತಾಡಲು ಆರಿಸಿಕೊಂಡ ವಿಷಯ, ‘ಪದ್ಯ ಬಗೆವ ಬಗೆ’ ಅಂದರೆ ಎರಡು ಅರ್ಥಗಳಲ್ಲಿ: ಪದ್ಯವನ್ನು ನಾವು ಅರ್ಥ ಮಡಿಕೊಳ್ಳುವ ಕ್ರಮ ಮತ್ತು ಪದ್ಯ ನಮ್ಮ ಅರಿವನ್ನು ಹೆಚ್ಚಿಸುವ ಕ್ರಮ. ಇದು ಯಾವ ಯಾವ ಹಂತದಲ್ಲಿ ಹೇಗೆ ಹೇಗೆ ಜರುಗುತ್ತದೆ ಎನ್ನುವುದನ್ನು ತಿಳಿಯುವುದಕ್ಕಾಗಿ ಒಂದು ಪದ್ಯವನ್ನು ಆರಿಸಿ ಕೊಂಡಿದ್ದೇನೆ. ಅ ಪದ್ಯ ಅಡಿಗರ ‘ಶ್ರೀ ರಾಮನವಮಿಯ ದಿವಸ’. ಪದ್ಯಕ್ಕೂ ಚಿತ್ರಕ್ಕೂ ಮುಖ್ಯವಾದ ಒಂದು ವ್ಯತ್ಯಾಸವಿದೆ: ಒಂಡು ಚಿತ್ರವನ್ನು ಇಡೀ ನೊಡುತ್ತೇವೆ, ಮೊದಲು; ಅನಂತರ, ಅದು ಮುಖ್ಯವಾದ ಚಿತ್ರ ಅಂತ ನಮಗನ್ನಿಸಿದರೆ, ಅದರ ಒಂದೊಂದು ಬಿಡಿಭಾಗ ಇನ್ನೊಂದು ಭಾಗದ ಜೊತೆ ಹೇಗೆ ಸಾಂಗತ್ಯದಲ್ಲಿದೆ ಅನ್ನುವುದನ್ನು ನೋಡುತ್ತೇವೆ; ಬಣ್ಣಗಳನ್ನು ಹೋಲಿಸಿ ನೋಡುತ್ತೇವೆ. ಚೂರುಚೂರುಗಳನ್ನು ಹೀಗೆ ನೋಡಿದನಂತರ ಮತ್ತೆ ಇಡೀ ನೋಡುತ್ತೇವೆ; ಅಥವಾ ಆ ಚೂರುಗಳನ್ನು ನೋಡುವಾಗಲೂ ನಾವು ಇಡಿಯನ್ನು ನೋಡುತ್ತಾ ಇರುತ್ತೇವೆ. ಆದರೆ ಸಂಗೀತವನ್ನು ಕೇಳಿಸಿಕೊಳ್ಳುವಾಗ ನಾವು ಅದನ್ನು ಒಂದು ಕಾಲದಲ್ಲಿ ಕೇಳಿಸಿಕೊಳ್ಳುತ್ತೇವೆ; ಈಗ ಶುರುವಾದ್ದು, ಹಂತಹಂತವೇರುತ್ತ ಹೋಗುತ್ತದೆ; ಅಂದರೆ ಅದು ಕಾಲದಲ್ಲಿ ಸಂಭವಿಸುತ್ತದೆ. ಸಾಹಿತ್ಯವೂ ಹೀಗೆ ಕಾಲದಲ್ಲಿ ಸಂಭವಿಸುತ್ತದೆ. ಹೊಸ ರೀತಿಯ ಪದ್ಯಗಳು ಬಂದಾಗ ಆದ ತೊಡಕು ಇದು- ಸಾಮಾನ್ಯವಾಗಿ ನಾವು ಪದ್ಯಗಳನ್ನು ಓದುವಾಗ ಅವುಗಳಲ್ಲಿ ಒಂದು ನೇರ ತಾರ್ಕಿಕ ಬೆಳವಣಿಗೆ ಇರುತ್ತದೆ ಎಂದು ತಿಳಿದುಕೊಂಡು ಓದಿದವರು. ಎಲ್ಲಾ ಸರಳರೇಖಾತ್ಮಕ ನಡಿಗೆಯ ನಿರೂಪಣೆಯಲ್ಲೂ, ‘ ಇದು ಆಯ್ತು, ಆದದ್ದರಿಂದ ಇದು ಆಯ್ತು’ ಅನ್ನುವ ಒಂದು ತಾರ್ಕಿಕ ವಿಧಾನ ಇರುತ್ತದೆ. ಅದರೆ ಹೊಸ ರೀತಿಯ ಪದ್ಯಗಳು, ‘ ಇದು ಬಂತು, ಆಮೇಲೆ ಇನ್ನೊಂದು ಬಂತು, ಇವುಗಳಲ್ಲಿ ಏನು ಸಂಬಂಧ? ಎರಡರ ನಡುವೆ ಕಂದಕ ಇದೆಯಲ್ಲವೆ? ’ ಅಂತ ಅನ್ನಿಸುವ ಹಾಗೆ ಇದ್ದವು. ಅಂಥ ಪದ್ಯಗಳನ್ನು ಓದುವಾಗ ನಾನು ಅದನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಹೇಗೆ ಅನ್ನುವುದನ್ನು ತೋರಿಸುವುದಕ್ಕೆ ಈ ಪದ್ಯವನ್ನು ಆರಿಸಿಕೊಂಡಿದ್ದೇವೆ. +ಮೊದಲು ಪದ್ಯವನ್ನು ಓದೋಣ: +ಶ್ರೀರಾಮನವಮಿಯ ದಿವಸ ರಾಮಾನಾಮೃತವೆ +ಪಾನಕ, ಪನಿವಾರ,ಕೋಸಂಬರಿ; +ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ; +ವೃಕ್ಷಮಧ್ಯಕ್ಕೆ ಬಂದುರಿವ ಶಬರಿ, +ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ- +ಕುಳಿತ ಮೂಲಾಧಾರ ಜೀವಧಾತು +ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು; +ಮಣ್ಣೊಡೆದು ಹಸರು ಹೂ ಹುಲ್ಲು ಮುಳ್ಳು. +ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ; +ಅಶ್ವತ್ಥದ ವಿವರ್ತ ನಿತ್ಯಘಟನೆ; +ಗುಮ್ಮಟಗಿರಿಯ ನೆತ್ತಿಯಲಿ ಕಲ್ಲರಳಿದ್ದು +ಕಾರ್ಯಕಾರಣದೊಂದಪೂರ್ವ ನಟನೆ. +ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು +ಜೆಟ್‌ವಿಮಾನವೇರಿ ಕೊಂಚ ದೂರ +ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ +ತಿಂಗಳಿಗೆ ಬಡಿವಾಧುನಿಕ ವಿಕಾರ.. +ವೇದೋಪನಿಷದಗಳ ಭೂತಕನ್ನಡಿಯೊಳಗೆ +ಪಡಿಮೂಡಿದಾಕೃತಿಗೆ ತಾನೆ ಮುಗ್ಧ +ಮತ್ಸ್ಯ್ ಕೂರ್ಮವರಾಹಮೆಟ್ಟಲುಗಳೇರುತ್ತ +ಹುತ್ತಗಟ್ಟಿದ್ದ ಕೈ ಕಡೆದ ನೋಟ: +ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ +ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ, +ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ +ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ: +ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ, +ಹಾಲ್ಗಡಲ ಬಗೆದೊಲೆವ ರಾಜಹಂಸ; +ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಿನಲ್ಲಿ +ಹೆದ್ದಾರಿ ಹಾಸಿದ್ದ ರಾಮಚರಿತ.. +ಸಂಕಲ್ಪ ಬಲದ ಜಾಗರಣೆ; ಕತ್ತಲಿನೆಡೆಗೆ +ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ; +ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ +ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.. +ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ +ಹತ್ತೆ ತಲೆ? ನೂರಾರೆ? ಅದು ಅಸಂಖ್ಯ: +ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ +ಅನಾದಿ; ಕೋದಂಡ ದಂಡವೂ ಹೀಗೆ ದಂಡ; +ಆಥವಾ ಚಕ್ರಾರಪಂಕ್ತಿ ; ಚಕಮಕಿ ಕಲ್ಲ ನುಜ್ಜುತ್ತ +ಕೂತುಕೊಂಡಿದ್ದೇನೆ ಕತ್ತಲೊಳಗೆ, +ಪನಿವಾರ ತಿಂದು ಪಾನಕ ಕುಡಿದು ನೋನುತ್ತ +ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.. +ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ +ಅಂಚೆ ತಲುಪೀತೆ ಸಹಸ್ರಾರಕೆ? +ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು +ಪುರುಷೋತ್ತಮನ ಆ ಅಂಥ ರೂಪ-ರೇಖೆ? +ಈ ಪದ್ಯದಲ್ಲಿ ಒಂದು ಪ್ರತೀಕಕ್ಕೂ ಇನ್ನೊಂದು ಪ್ರತೀಕಕ್ಕೂ ನಡುವೆ ಇರುವ ಮೌನಗಳು ಕೊನೆಯ ಪಕ್ಷ ನನ್ನನ್ನು ಟೀಸ್ ಮಾಡಬೇಕು.. ಟೀಸ್ ಮಾಡಿದರೆ ಇನ್ನೊಂದು ಸಾರಿ ಓದುತ್ತೇವೆ; ಮಾಡದೇ ಇದ್ದರೆ ಓದುವುದಿಲ್ಲ.. ಮಿನಿಮಮ್ ಆಗಿ ನಾನು ಒಂದು ಪದ್ಯದಿಂದ ಕೇಳುವುದು ಇದು.. +ಈ ಪದ್ಯ ಓದಿದಾಗ, ಕೆಲವು ಸಾಲುಗಳು, ಅದರಲ್ಲಿರುವ ಲಯಗಾರಿಕೆ, ಸಂಗೀತ , ಇಂಥವು ನನ್ನನ್ನು ಮತ್ತೊಮ್ಮೆ ಅದನ್ನು ಓದಿಕೊಳ್ಳುವಂತೆ ಬೇಡುತ್ತವೆ ಎಂದು ನನಗೆ ಅನ್ನಿಸುವುದರಿಂದ- ಅದು ನನ್ನ ರುಚಿಯ ಮಾತೂ ಆಗಿರುವುದರಿಂದ- ಇನ್ನೊಂದು ಸಾರಿ ಓದುತ್ತೇನೆ.. ಆಗ ನನ್ನ ಗಮನಕ್ಕೆ ಬರುವುದು: ಈ ಪದ್ಯ ಕೇವಲ ಕಾಲದಲ್ಲಿ – ವರ್ತಮಾನದಿಂದ ಭವಿಷ್ಯತ್ತಿಗೆ ಹೋಗುವ ಕಾಲದಲ್ಲಿ – ಮೊತ್ತವಾಗಿ ಬೆಳೆಯುತ್ತಾ ಹೋಗುವ ಪದ್ಯ ಮಾತ್ರವಲ್ಲ; ಈಗ ನಾನು ಓದಿದ ಒಂದು ಮಾತು ಕೊನೆಯ ಸಾ‌ಇನಲ್ಲಿ ಬರುವ ಒಂದು ಮಾತಿನಿಂದ ಮತ್ತೆ ಬೆಳಕನ್ನ ಪಡೆದುಕೊಳ್ಳಬಹುದಾದಂತಹ ಪದ್ಯ ಇದು ಎಂಬುದು.. ಅಂದರೆ ಇದು ಲೀನಿಯರ್ ಸ್ಟ್ರಕ್ಚರ್ ಅಲ್ಲ, ಹಿಂದಿನದು ಮುಂದಿನದನ್ನು ಬಳಸಿಕೊಳ್ಳುತ್ತೆ, ಅಂದರೆ ಒಂದಕ್ಕೊಂದು ಸಂಬಂಧವಿರುವಂತೆ ಇಡೀ ಪದ್ಯ ಜರುಗುತ್ತೆ.. ಬೇಕಾದರೆ ಒಂದು ಮಂಡಳದಲ್ಲಿ ಯಾವ ರೇಖೆಯನ್ನು ನೋಡಿದರೂ ಅದು ಇನ್ನೊಂದು ರೇಖೆಯನ್ನು ಬಂದು ಸೇರಬದುದು; ಮತ್ತೆ ಅಲ್ಲಿಂದ ಶುರುವಾಗಿ ಇನ್ನೊಂದು ರೇಖೆಗೆ ಹೋಗಬಹುದು.. ಆ ರೀತಿಯ ಸಂವಿಧಾನ ಇರುವುದರಿಂದಲೇ ಇಂಥ ಕೆಲವು ಪದ್ಯಗಳು ತೊಡಕಿನಾದಾಗುತ್ತದೆ.. +ಮೊದಲನೇ ಸಾರಿ ಪದ್ಯ ಓದುವಾಗ ನಾನು ಅಪೇಕ್ಷಿಸುವ ಮತ್ತೊಂದು ಅಂಶ: ಇದರಲ್ಲಿ ಬರುವ ಚಿತ್ರಗಳು ಕೊಕ್ಕೆಗಳಾಗಿ ನಮ್ಮಲ್ಲಿ ತೂಗಿ ಬೀಳಬೇಕು, ಆಗ, ಇನ್ನೊಂದು ಸಾರಿ ಓದಿದಾಗ, ಕೊಕ್ಕೆಗಳಾಗಿ ನಮ್ಮಲ್ಲಿ ತೂಗಿ ಬೀಳಬೇಕು.. ಕೊಕ್ಕೆಗಳಂತಿರುವ ಮಾತುಗಳೂ ಚಿತ್ರಗಳೂ ನಮಗೆ ನೆನಪಿರುವುದರಿಂದ, ಅವುಗಳ ಅರ್ಥಗಳನ್ನು ಕೂಡಿಸಿಟ್ಟು ಬೆಳೆಸುವ ಪದ್ಯದ ಜೀವಂತ ಅಂಗಗಳೆಂದು ತಿಳಿಯುತ್ತದೆ.. +ಜೊತೆಗೆ ಇಂತ ಪದ್ಯಗಳಲ್ಲಿ ನನ್ನ ಅಧಿಕಪ್ರಸಂಗದಿಂದಾಗಿ ಅಲ್ಲಿ ಇಲ್ಲದೇ ಇರುವ ಅರ್ಥವನ್ನೂ ಅದಕ್ಕೆ ನಾನು ಹಚ್ಚಬಹುದಾದ ಅಪಾಯವಿದೆ.. ಬಹಳ ಬುದ್ಧಿವಂತನಾಗಬೇಕು ಅಂತ ಪದ್ಯ ನಮ್ಮನ್ನು ಕೇಳುವುದರಿಂದ, ಅದು ಕೇಳುವುದಕ್ಕಿಂತಲೂ ಹೆಚ್ಚು ಬುದ್ಧಿವಂತನಾಗಿ- ನಾನೆಲ್ಲಿ ದಡ್ಡ ಅಂತ ಜನ ತಿಳಿದುಕೊಳ್ಳುತ್ತಾರೊ ಅಂತಂದುಕೊಂಡು- ಪದ್ಯದಲ್ಲಿ ಇಲ್ಲದೇ ಇರುವ ಅರ್ಥವನ್ನು ಅದು ಸ್ಫುರಿಸುತ್ತೆ ಅಂತ ನಾನು ತಿಳಿಯಬಹುದು.. ಇಂಗ್ಲಿಷ್ ಆಧುನಿಕ ಕಾವ್ಯವನ್ನು ಪಾಠ ಹೇಳುವಾಗ ಇದೊಂದು ಪರೀಕ್ಷೆ ನಾನು ಮಾಡುವುದಿದೆ; ಯೇಟ್ಸ್‌ನನ್ನು ಪಾಠಮಾಡುತ್ತಾ ಇರುವಾಗ ಯಾವುದೋ ಒಂದು, ಬಹಳ ಸರಳವಾಗಿ ಕೂಡಲೇ ಅರ್ಥವಾಗುವಂಥ ಪದ್ಯವನ್ನು ವಿದ್ಯಾರ್ಥಿಗಳಿಗೆ ಕೊಟ್ಟರೆ, ಅದರಲ್ಲಿ ಏನೋ ಇರಬೇಕು ಎಂದು ಅವರು ಅರ್ಥ ಬಿಡಿಸಲಿಕ್ಕೆ ಪ್ರಾರಂಭಿಸಿ ಆ ಪದ್ಯ ನಿಜವಾಗಿಯೂ, ತನ್ನ ಸದ್ಯತನದಲ್ಲಿ ಕೊಡಬಹುದಾದ್ದನ್ನು ಸ್ವೀಕರಿಸಲಾರದೇ ಪದ್ಯವನ್ನು ಕಗ್ಗಂಟುಮಾಡಿಕೊಂಡುಬಿಡುತ್ತಾರೆ.. ಅಂದ್ರೆ ಎಷ್ಟು ಪ್ರತಿಕ್ರಿಯಿಸಬೇಕೋ ಅಷ್ಟು ಪ್ರತಿಕ್ರಿಯಿಸದೇ- ಒಂದೋ ಹೆಚ್ಚು ಪ್ರತಿಕ್ರಿಯಿಸುವುದು ಅಥವಾ ಕಡಿಮೆ ಪ್ರತಿಕ್ರಿಯಿಸುವುದು- ಇದು ಎಲ್ಲಾ ಓದಿನಲ್ಲೂ ಇರಬಹುದಾದ ಅಪಾಯ.. ವಿಮರ್ಶೆ ಎಂದರೆ ಈ ಅಪಾಯದಿಂದ ಹೇಗೆ ಪಾರಾಗುವುದು ಎನ್ನುವುದನ್ನು ನಮಗೆ ಕಲಿಸುವ ಒಂದು ಶಿಸ್ತು.. ಈಗ ಆ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಈ ಪದ್ಯವನ್ನು ಓದುತ್ತೇನೆ.. +ರಾಮಾನಾಮೃತವೆ ಪಾನಕ, ಪನಿವಾರ,ಕೋಸಂಬರಿ.. ರಾಮನ ಹೆಸರು ಹೇಳುವುದೇ ಅಮೃತ ಎನ್ನುತ್ತಿದ್ದಾರೆ.. ಅಂದರೆ ಅದೊಂದು ರುಚಿಯಾದ ವಿಷಯ, ನಾಲಗೆಗೆ ಸಿಗುವಂಥದ್ದು.. ಅದು ಪಾನಕ, ಪನಿವಾರ,ಕೋಸಂಬರಿ, ‘ಕರಬೂಜ ಸಿದ್ದೋಟುಗಳ ಹೋಳು’.. ರಾಮನವಮಿ ಆಗುವ ಸಮಯವೇ ಮಾರ್ಕೆಟ್ಟುಗಳಲ್ಲಿ ಕರಬೂಜ, ಸಿದ್ದೊಟು ಸಿಗುವ ಸಮಯ.. ಒಂದು ಇಡೀ ಋತುವನ್ನು, ಎರಡು ಹಣ್ಣುಗಳ ಮುಖಾಂತರ, ನೆನಪಿಗೆ ತರುತ್ತಾರೆ.. ಅಂದರೆ ಇವೆಲ್ಲ ನನ್ನ ಮನಸ್ಸಿನಲ್ಲಿ ಕೊಕ್ಕೆಗಳ ಹಾಗೆ ಬೀಳುತ್ತಿವೆ.. +ಇಷ್ಟರವರೆಗೆ ಪದ್ಯ ನನಗೆ ಸಂಪೂರ್ಣ ಅರ್ಥವಾಗುವ ನೆಲೆಯಲ್ಲಿಯೇ ಇದ್ದೇನೆ.. ಇದ್ದಕಿದ್ದ ಹಾಗೇ, ಕೂಡಲೇ ಅರ್ಥವಾಗದ ನೆಲೆಗೆ ನನ್ನನ್ನು ತೆಗೆದುಕೊಂಡು ಹೋಗುವಂತೆ ಕವಿ ‘ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’ ಅನ್ನುತ್ತಾರೆ.. ಇಲ್ಲಿರುವ ತೊಡಕೇನು ಹೇಳುತ್ತೇನೆ.. ವ್ಯಕ್ತ ಮಧ್ಯ ಎನ್ನುವುದು ಮೊದಲನೇ ತೊಡಕು; ಅದು ಬರೀ ಶಬ್ದದ ಅರ್ಥದ ತೊಡಕಲ್ಲ; ವ್ಯಕ್ತವಾಗುವ ಮಧ್ಯದ ವಾಚ್ಯಾರ್ಥ ಸ್ಪಷ್ಟವಾದ್ದು.. ಆದರೆ ಗೀತೆಯನ್ನು ಓದಿದವನಿಗೆ ಗೊತ್ತಾಗುತ್ತೆ; ಸಾವಿನನಂತರದ್ದು, ಅವ್ಯಕ್ತ; ಹುಟ್ಟಿಗಿಂತ ಪೂರ್ವದ್ದು , ಅವ್ಯಕ್ತ.ಈ ಬದುಕು ಎನ್ನುವುದು ‘ವ್ಯಕ್ತಮಧ್ಯ’. +‘ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’: ಉರಿಯುವ ಎಂದೇ ಯಾಕೆ? ನನಗದು ಭಾವುಕವಾಗಿ ಗೊತ್ತಾಗುತ್ತೆ; ಅವಳು ರಾಮನಿಗಾಗಿ ಆ ರೀತಿ ಕಾಯುತ್ತಾಳೆ.. ‘ಉರಿವ’ ಅನ್ನುವುದು ಕಾಯುತ್ತಿರುವುದಕ್ಕೆ ಒಂಡು ಪ್ರತೀಕವಾಗಿ ನನಗೆ ಸದ್ಯ ಅನ್ನಿಸುತ್ತಿದೆ: ಬೆಳಕಿಂದ ಉರಿಯುವ, ಅಥವಾ ನೋವಿನಿಂದ ಉರಿಯುವ, ಆತಂಕದಿಂದ ಉರಿಯುವ ಇತ್ಯಾದಿ.. ಇಷ್ಟನ್ನು ನಾನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ.. ‘ಯಾಕೆ ಹಣ್ಣಿನ ಹೋಳಿನ ಜೊತೆ ಶಬರಿಯೂ ಬಂದಳು?’ ಅಂತ ಕೇಳಿ ಪದ್ಯವನ್ನು ಕೆಡಿಸಿಕೊಳ್ಳುವುದಕ್ಕೆ ಸದ್ಯದಲ್ಲಿ ನನಗೆ ಇಷ್ಟವಿಲ್ಲ.. ಏನೋ ಇರಬೇಕು ಕಾರಣ.. ಹಣ್ಣಿನ ಹೆಸರುಗಳು ಬಂದವು.. ನಂತರ ಇದ್ದಕ್ಕಿದ್ದಹಾಗೆ ಶಬರಿಯೂ ಬಂದಳು.. ಶಬರಿ ಹಣ್ಣನ್ನು ರಾಮನಿಗೆ ಕೊಡುತ್ತಾಳೆ.. ಆದ್ದರಿಂದ ಹಾಗೆ ಬಂದಿರಬಹುದು.. ಅಂದರೆ ಈ ಅರ್ಥಗಳನ್ನೆಲ್ಲಾ ನಾನು ಸಸ್ಪೆಂಡ್ ಮಾಡಿರ್ತೀನಿ.. ( ಇಡೀ ಋತುವೇ ಶಬರಿಯಂತೆಯೆ ಉರಿಯುತ್ತ ಕಾದಿರಬಹುದೆ?) +ಮುಂದಿನ ಸ್ಟಾಂಜಾಕ್ಕೆ ಹೋಗುತ್ತೇನೆ: +ಕಾಮ ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ- +ಕುಳಿತ ಮೂಲಾಧಾರ ಜೀವಧಾತು +ಇಲ್ಲಿ ಬಿಸಿಲಿನಲ್ಲಿ ಕಾಯುತ್ತ ಮಣ್ಣಿನ ಒಳಗಡೆ ಇರುವ ಒಂದು ಬೀಜದ ಚಿತ್ರವಿದೆ.. ಮೂಲಾಧಾರ ಎಂದಿರುವುದರಿಂದ ಅದು ಬರೀ ಬೀಜವಲ್ಲ; ಆದರೆ ಬೀಜವೂ ಹೌದು.ಕವಿ ಅಲ್ಲಿ ಸಂಸ್ಕೃತ ಶಬ್ದವನ್ನು ಬಳಸಿದ ಕೂದಲೇ ಅದನ್ನು ಇಂದ್ರೀಯಗಳಿಗೆ ಗೋಚರವಾಗುವ ವಿಷಯಕ್ಕೆ ಮಾತ್ರವಲ್ಲದೇ, ಇಂದ್ರಿಯಾತೀತವಾದ ಯಾವುದನ್ನೋ ಸೂಚಿಸುವುದಕ್ಕೂ ಉಪಯೋಗಿಸುತ್ತಿರಬಹುದೆಂದು ಅನ್ನಿಸುತ್ತದೆ. ಆದರೆ ಆ ಪದ ಸೂಚಿಸುವ ಅರ್ಥ ’ವ್ಯಕ್ತ ಮಧ್ಯದಂತೆಯೆ’ ಇಂದ್ರಿಯಗ್ರಾಹ್ಯವಾಗಿಯೂ ಇದೆ. ರಾಮನವಮಿ ಆಚರಿಸುವುದು ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ. ಕಾದ ಂಅಣ್ಣಿನೊಳಗಡೆ ಕುಳಿತ ಮೂಲಾಧಾರ ಜೀವಧಾತು ಎಂದೊಡನೆಯೇ ಹಿಂದೆ ಮಾರ್ಕೆಟ್ಟಿನಲ್ಲಿ ಸಿಗುವ ಹಣ್ಣುಗಳಿಂದ ಋತುವನ್ನು ಕವಿ ನೆನಪು ಮಾಡಿದಂತೆಯೇ, ಇದು ಏಪ್ರಿಲ್ಕಾಲದ ಸೆಖೆಯನ್ನೂ ನೆನಪು ಮಾಡುತ್ತದೆ- ಅಲ್ಲಿ ಕಾದಿರುವ ಶಬರಿ; ಇಲ್ಲಿ ಕಾದಿರುವ ಬೀಜ. ’ಕಾದಿರುವ’ ಎನ್ನುವ ಕಲ್ಪನೆಯೆ ಇಲ್ಲಿ ಮತ್ತಷ್ಟು ಬೆಳೆಯಿತು. +ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು +ಮಣ್ಣೊಡೆದು ಹಸುರು ಹೂ ಹುಲ್ಲು ಮುಳ್ಳು +ಈಗ ಇಲ್ಲಿ ವಾಕ್ಯದಲ್ಲಿ ಅನ್ಯವೆನ್ನಿಸುವ ಇನ್ನೊಂದು ಶಬ್ದ ಸಿಕ್ಕಿತು, ‘ಸಹಸ್ರಾರ’.. ಇದು ಯೋಗದ ಪಾರಿಭಾಷಿಕ ಪದವಾಗಿದ್ದರು ಆ ಅರ್ಥದಲ್ಲಿ ಮಾತ್ರ ಇದನ್ನು ಸ್ವೀಕರಿಸಬೇಕಾಗಿಲ್ಲ.. ಆ ಬೀಜ ಮಣ್ಣಿನೊಳಗಡೆ ಇದ್ದು ಮರವಾಗಿ ಮೇಲಕ್ಕೆ ಹೋಗುವಂಥದ್ದು ಅಥವಾ ಮೋಡದಿಂದ ನೀರನ್ನು ಬಯಸುವಂಥದ್ದು.‘ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು’; ಇಲ್ಲಿಯೂ ಕೂಡ ’ಸಹಸ್ರಾರ’ ಎಂಬ ಸಂಸ್ಕೃತ ಪದ ಅಮೂರ್ತವಾದ್ದನ್ನು ಮೂರ್ತದ ಚೌಕಟ್ಟಿನಲ್ಲಿಟ್ಟು ಹೊಸ ಅರ್ಥವನ್ನು ಹೊಮ್ಮಿಸುವ ಪ್ರಯತ್ನ ಮಾಡುತ್ತಿದೆ.. ಜೊತೆಗೇ ಇಲ್ಲಿ ಗಮನಿಸಿ: ಬೀಜ ಇರುತ್ತೆ; ಮಳೆ ಬೀಳುತ್ತೆ;ಮೊಳಕೆ ಬರುತ್ತೆ; ಹೂ ಹಣ್ಣು ಇತ್ಯಾದಿಗಳೆಲ್ಲವೂ ಆಗುತ್ತವೆ.. ಇದು ಒಂಡು ಜೈವಿಕ ಪ್ರಕ್ರಿಯೆ- ಆರ್ಗಾನಿಕ್ ಪ್ರೋಸೆಸ್.. ನನಗಿನ್ನೂ ಗೊತ್ತಿಲ್ಲ, ಯಾತಕ್ಕೆ ಶಬರಿಯ ನಂತರ ಇದು ಬರುತ್ತಿದೆ ಎನ್ನುವುದು.. +ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ; +ಅಶ್ವತ್ಥದ ವಿವರ್ತ ನಿತ್ಯಘಟನೆ; +ಗುಮ್ಮಟಗಿರಿಯ ನೆತ್ತಿಯಲಿ ಕಲ್ಲರಳಿದ್ದು +ಕಾರ್ಯಕಾರಣದೊಂದಪೂರ್ವ ನಟನೆ.. +ಇಲ್ಲಿ ಮಣ್ಣನ್ನು ‘ಉಟ್ಟ; ಎನ್ನುತ್ತಿದ್ದಾರೆ.. ಈ ಪದ್ಯದಲ್ಲಿ ಕೆಲವು ಕೊಕ್ಕೆಗಳು ಮೊದಲೇ ನನ್ನನ್ನು ಸಿಗಿಸಿದವು ಎಂದು ಹೇಳಿದೆ.. ಅದರಲ್ಲಿ ಈ ಶಬ್ದವೂ ಒಂದು.. ಮೊದಲ ಎರಡು ಸಾಲು ಗಮನಿಸಿ: ಮರ ಹುಟ್ಟಿ ಬೆಳೀತಾ ಇರೋದು- ಇದು ಪ್ರತಿನಿತ್ಯ ನಡೆಯುತ್ತಿರುವ ಘಟನೆ, ಅನಂತರ ಬರುವುದು, ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ ಕಾರ್ಯಕಾರಣದ ಒಂದು ‘ಅಪೂರ್ವ’ ನಟನೆ: ಅಲ್ಲಿ ‘ನಿತ್ಯಕ್ಕೆ’ ಇಲ್ಲಿ ‘ಅಪೂರ್ವ’ ವಿರೋದವಾಗಿದೆ.. ಮರ ಹೂ ಬಿಡೋದು, ಚಿಗುರೋದು, ಬೆಳೆಯೋದು ನಿತ್ಯ ಸಂಭವಿಸುವ ಘಟನೆಯಾದರೆ ಒಬ್ಬ ಗುಮ್ಮಟನ ಉದಯವಾಗುವುದು ಯಾವುದೋ ಕಾಲದಲ್ಲಿ, ಚರಿತ್ರೆಯಲ್ಲಿ ಜರುಗುವಂತಹುದು.. ಅದೊಂದು ಅವತಾರ.. ಕಾರ್ಯಕಾರಣ ಅಪೂರ್ವವಾಗಿ ಸೇರಿದಾಗ‘ ಜರುಗುವುದು’ – ಅದನ್ನು ನಟನೆ ಎನ್ನುತ್ತಾರೆ.. ಅಂದರೆ ಮನುಷ್ಯ ಮಾಡಿ ತೋರಿಸುವಂತಹದು.. ಜೈವಿಕ ಪ್ರಕ್ರಿಯೆಗೆ ಸಂಬಧಿಸಿದ್ದರೂ, ಅದರಷ್ಟು ಸಹಜವಾದದ್ದಲ್ಲ, ‘ಅಸಹಜ’ವಾದದ್ದು.. ನಾನಿದನ್ನು ನೆಗೆಟಿವ್ ಅರ್ಥದಲ್ಲಿ ಹೇಳುತ್ತಿಲ್ಲ; ಅದೊಂದು ನಟನೆ; ಅದು ಮಾಡುವ ಕ್ರಿಯೆ; ಸಹಜವಾಗಿ ಆಗುವ ಕ್ರಿಯೆ ಅಲ್ಲ.. +ಯಾಕೆ ಅಶ್ವತ್ಥವನ್ನೂ, ಗೊಮ್ಮಟವನ್ನೂ ಒಂದಕ್ಕೊಂದು ವಿರೋಧವಾಗಿ, ಒಂದೇ ಸ್ಟಾಂಜಾದಲ್ಲಿ ನಿಲ್ಲಿಸಿದ್ದಾರೆ ಎಂಬ ಪ್ರಶ್ನೆಯನ್ನು ಹೊತ್ತುಕೊಂಡು ಮುಂದಕ್ಕೆ ಹೋಗುತ್ತೇನೆ.. +ನೆಲಕ್ಕಂಟಿ ಬಿದ್ದ ಆಕಶಯಾನದ ಕನಸು +ಜೆಟ್‌ವಿಮಾನವೇರಿ ಕೊಂಚ ದೂರ +ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ +ತಿಂಗಳಿಗೆ ಬಡಿವಾಧುನಿಕ ವಿಕಾರ.. +ಗೊಮ್ಮಟನನ್ನು ಕೆತ್ತಿ ನಿಲ್ಲಿಸಿದ್ದರೆ ಜತೆಗೇ ಮನುಷ್ಯನ ಇನ್ನೊಂದು ಕನಸು- ಆಕಾಶಯಾನದ ಕನಸು- ಜೆಟ್ ವಿಮಾನವಾಗಿ, ನಂತರ ರಾಕೆಟ್ಟುಗಳಾಗಿ, ಈಗ ಅದು ತಿಂಗಳಿಗೆ ಅಂದರೆ ಚಂದ್ರನಿಗೆ ಬಡಿಯುವ ಆಧುನಿಕ ವಿಕಾರವಾಗಿದೆ.. ಹಿಂದಿನದನ್ನು ನಟನೆ ಎಂದರು; ಇದನ್ನು ವಿಕಾರ ಅಂದರು.. ಗೊಮ್ಮಟನನ್ನು ಕೆತ್ತಿ ನಿಲ್ಲಿಸಿದ್ದೂ ಸಂಕಲ್ಪದಿಂದ; ಆಕಾಶಯಾನದ ಕನಸನ್ನು ನಿಜ ಮಾಡಿಕೊಂಡು ಚಂದ್ರನಿಗೆ ಬಡಿವಾಧುನಿಕ ವಿಕಾರವೂ ಸಂಕಲ್ಪದಿಂದಲೇ ಸಾಧ್ಯವಾದದ್ದು.. ಆದರೆ ಒಂದು ನಟನೆ ಮತ್ತೊಂದು ವಿಕಾರ.. +ಹೀಗೆ ಓದುತ್ತಿದ್ದಂತೆ ಶಬರಿಯೂ ಅಂಥದೇ ಇನ್ನೊಂದು ಬಗೆಯ- ರಾಮನನ್ನು ಪಡೆವ- ಸಂಕಲ್ಪದಲ್ಲಿ ನಿಂತವಳು ಎಂದು ನಿಮಗೆ ಗೊತ್ತಾಗುತ್ತದೆ.. +ಮುಂದೆ- +ವೇದೋಪನಿಷದಗಳ ಭೂತಕನ್ನಡಿಯೊಳಗೆ +ಪಡಿಮೂಡಿದಾಕೃತಿಗೆ ತಾನೆ ಮುಗ್ಧ +ಮತ್ಸ್ಯ್ ಕೂರ್ಮವರಾಹಮೆಟ್ಟಲುಗಳೇರುತ್ತ +ಹುತ್ತಗಟ್ಟಿದ್ದ ಕೈ ಕಡೆದ ನೋಟ: +ಹುತ್ತಗಟ್ಟಿದ ಅಂದ ಕೂಡಲೇ ಗೊತ್ತಾಗುತ್ತದೆ- ರಾಮನನ್ನು ಧ್ಯಾನಿಸುತ್ತ ಹುತ್ತದೆ ಒಳಗಿರುವ ವಾಲ್ಮೀಕಿ ಎಂದು.. ಅವನೂ ಒಂದು ಸಂಕಲ್ಪದಲ್ಲಿ ವ್ರತದಲ್ಲಿ ಕಾಯುತ್ತ ಕೂತವನು.. ಅವನ ‘ಕೈ ಕಡೆದ ನೋಟ’ ಯಾವುದು?- ರಾಮ.. ಆದರೆ ಬರೀ ರಾಮ ಅಲ್ಲ, ಮತ್ಸ್ಯ ಕೂರ್ಮವರಾಹ ಮೆಟ್ಟಿಲುಗಳೇರುತ್ತ ಆದ ರಾಮ; ಉನ್ಮುಖ ಬೆಳವಣಿಗೆಯ ವಿಕಾಸವಾದ ಇದೆ ಇಲ್ಲಿ.. ಅಷ್ಟೇ ಅಲ್ಲ; ರಾಮನ ಸೃಷ್ಟಿಯ ಹಿಂದೆ ವೇದೋಪನಿಷದಗಳ ಆದರ್ಶಕ್ಕೆ ತತ್ಸಮವಾದ ಒಂದು ರೂಪವನ್ನು ಒಬ್ಬ ಕವಿ ಸೃಷ್ಟಿಸಿದ ಕ್ರಿಯೆ ಕೂಡ ಇದೆ.. ಈ ವೇದೋಪನಿಷದುಗಳು ಇರುವುದನ್ನು ದೊಡ್ಡದಾಗಿಮಾಡಿ ತೋರಿಸುವ ‘ಭೂತ’ ಕನ್ನಡಿ; ಜೊತೆಗೇ ವರ್ತಮಾನ ಕಾಲವನ್ನು ನಿರ್ದೇಶಿಸಬಲ್ಲ ‘ಭೂತ’ನಾಗಿದ್ದಾನೆ.. ‘ಕವಿ ತನ್ನ ಕೃತಿಗೆ ತಾನೆ ಮಣಿವನ್’ ಎಂಬಂತೆ.. ಅಂದರೆ ರಾಮನ ಅವತಾರ ಸಾಧ್ಯವಾದದ್ದು; ವೇದೋಪನಿಷದುಗಳ ಭೂತ ಕನ್ನಡಿಯಲ್ಲಿ ಕಂಡಿದ್ದನ್ನು ಪಡಿಮೂಡಿಸಿದ್ದರ ಮುಖಾಂತರ; ಮತ್ತು ಹೀಗೆ ಪಡಿಮೂಡಿಸಿದ್ದು ಕವಿ ತನ್ನ ಸುತ್ತ ಹುತ್ತವನ್ನು ಕಟ್ಟಿಸಿಕೊಳ್ಳುವಷ್ಟು ಸಂಕಲ್ಪ ಬಲದ ಪ್ರತಿಯಾಗಿದ್ದರ ಮುಖಾಂತರ.. ಗ ನಮಗೆ ಹಿಂದೆ ಬಂದ ಶಬರಿ ಜ್ಞಾಪಕಕ್ಕೆ ಬರುತ್ತಾಳೆ.. ಅಂದರೆ ಪದ್ಯ ಮುಂದೆ ಹೋಗುತ್ತಾ ಇರುವಾಗಲೇ ನಾವು ಹಿಂದಕ್ಕೂ ಹೋಗುತ್ತಾ ಇರುತ್ತೇವೆ.. ಬೇರೆ ಬೇರೆ ರೀತಿಯ ಪ್ರಕ್ರಿಯೆಗಳಲ್ಲಿ ಮನುಷ್ಯ ಸಂಕಲ್ಪ ಸೃಷ್ಟಿಸಿದ್ದನ್ನೂ ಗ್ರಹಿಸುತ್ತಿದ್ದೇವೆ- ಗೊಮ್ಮಟ, ಜೆಟ್ ವಿಮಾನ, ರಾಮ- ಹೀಗೆ.. +ಮುಂದೆ- +ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ +ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ, +ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ +ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ: +ಇಲ್ಲಿಯೂ ಕೂಡ ‘ಕೆಳಪಟ್ಟು’ ಶಬ್ದ ನನ್ನನ್ನು ಕೊಕ್ಕೆಯಾಗಿ ಹಿಡಿಯುತ್ತದೆ.. ಮೇಲ್ಪಟ್ಟು ಎಂಬ ಪದ ಕೇಳಿದ್ದೇವೆ; ಆದರೆ ಕೆಳಪಟ್ಟು ಎಂಬುದನ್ನು ಕೇಳಿಲ್ಲ.. ‘ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ’ – ಇದರಲ್ಲಿರುವ ವಕ್ರತೆ ನನ್ನನ್ನು ಆಕರ್ಷಿಸುತ್ತದೆ; ಜೊತೆಗೇ ಇನ್ನೊಂದು ಸಾರಿ ಪದ್ಯ ಓದಬೇಕೆಂದು ಈ ಸಾಲು ನನ್ನನ್ನು ಬೇಡುತ್ತದೆ.. ಕೌಸಲ್ಯೆ ದಶರಥರಿಗೆ ಮಗ ಬೇಕು ಎನ್ನುವ ಅಪೇಕ್ಷೆ- ಸಾಮಾನ್ಯವಾಗಿ ಎಲ್ಲಾ ದಂಪತಿಗಳಿಗೂ ಇರುವ ಪುತ್ರ ಸಂತಾನದ ಒಂದು ಅಪೇಕ್ಷೆ.. ವಾಲ್ಮೀಕಿಗೆ ವೇದೋಪನಿಷದುಗಳ ಭುತಗನ್ನಡಿಯೊಳಗೆ ವ್ಯಕ್ತವಾಗುವ ಆದರ್ಶಗಳನ್ನೆಲ್ಲ ಸಫಲಮಾಡಿಕೊಂಡಿದ್ದರ ಫಲವಾಗಿ ರಾಮ ಮೂಡಿದ್ದರೆ, ಒಬ್ಬ ಸಾಮಾನ್ಯ ತಂದೆ ತಾಯಿಗಳಿಗೆ ಮಗ ಬೇಕು ಎಂಬಾಶೆಯೇ ರಾಮ ಆದ.. ಆದರೆ ಇಲ್ಲಿ ಮತ್ತೊಂದು ವಿಶೇಷವೂ ಇದೆ.. +ಅದು ಹಠಾತ್ತಾಗಿ, ಈ ಆಸೆ ಅಥವಾ ಅಪೇಕ್ಷೆ- ತಂದೆ ತಾಯಿಯಾದವರ ಸಂತಾನದ ಆಶಯ ಒಂದು ಗೆರೆ=ವರ್ತಮಾನದ ಭೂತ ಭವಿಷ್ಯತ್ತುಗಳ ತ್ರಿಕಾಲ ಚಕ್ರವನ್ನು ಅಕಸ್ಮಾತ್ತಾಗಿ ಮುಟ್ಟಿದ ಘಟನೆಯೂ ಆಗಿದೆ.. ಗುಮ್ಮಟ ಗಿರಿಯ ನೆತ್ತಿಯಲ್ಲಿ ಗುಮ್ಮಟ ಅರಳಿದ್ದು ಕೂಡ ಹೇಗೆ ಒಂದ್ ಅಪೂರ್ವವಾದ ಘಟನೆಯೋ, ಹಾಗೆಯೇ ಇದೂ ಕೂಡ ಹಠತ್ತಾಗಿ ಆದದ್ದು.. ನಾನು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿರುವುದರಿಂದ ಇಲ್ಲಿ ಕೂಡ ಎಲಿಯಟ್‌ನ ಒಂದು ಮಾತು ನೆನಪಿಗೆ ಬರುತ್ತದೆ.. ‘iಟಿಣಡಿesಣiಟಿg oಜಿ ಣhe ಣemಠಿoಡಿಚಿಟ ತಿiಣh ಣhe ಟಿoಟಿ-ಣemಠಿoಡಿಚಿಟ’, ಐಹಿಕವಾದ ಕಾಲ ಇದೆಯಲ್ಲ ಅದು ಈ ತ್ರಿಕಾಲವನ್ನು ಎಲ್ಲೋ ಮುಟ್ಟಿದಾಗ ಏಸುವಿನ ಜನ್ಮವಾಯಿತು ಎಂದು ಒಂದು ಕಲ್ಪನೆಯಿದೆ.. ಹಾಗೆಯೇ ಚರಿತ್ರೆಗೆ ಅತೀತವಾದ ತ್ರಿಕಾಲವನ್ನು ಮುಟ್ಟಿದ ಆ ಕ್ಷಣದಲ್ಲಿ ರಾಮನ ಜನ್ಮವಾಯಿತು.. +ಕೌಸಲ್ಯೆ ದಶರತರ ಪುತ್ರಕಾಮೇಷ್ಠಿ ಗೆರೆ +ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ.. +ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ | ಆಸ್ಫೋಟಿಸಿತ್ತು ಸಿಡಿತಲೆ;’: ಅಂದ ಕೂಡಲೇ ಹಿಂದೆ ರಾಕೆಟ್ಟು ಬಂದದ್ದು ನೆನಪಾಗುತ್ತದೆ.. ರಾಕೆಟ್ಟಿನ ತುದಿಯನ್ನು ಸಿಡಿತಲೆ ಅನ್ನುತ್ತಾರೆ, ಕನ್ನಡದಲ್ಲಿ.. ‘ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ’: ಎಲ್ಲಾ ತೇಜಸ್ಸೂ ತನ್ನ ಗರಿಷ್ಠ ಅವಸ್ಥೆಯಲ್ಲಿ ಇರುವ ಚೂಪಾದ ತುದಿ ಅದು.. ಸಾಮಾನ್ಯವಾಗಿ ರಾಕೆಟ್ಟು ಅಂದರೆ ಮೇಲೆ ಹೋಗುವ ವಸ್ತು ಎಂದೇ ನಾವು ಯೋಚನೆ ಮಾಡುತ್ತೇವೆ.. ಇಲ್ಲಿ ಅದು ಕೆಳಗೆ ಬರುವ ವಸ್ತುವಾಗಿದೆ; ‘ಕೆಳಪಟ್ಟು ಮಣ್ಣುಟ್ಟ ನಿಂತ ಘಟನೆ’.. ಹಿದೆ ಬಂದಿದ್ದ ರಾಕೆಟ್ಟು ‘ತಿಂಗಳಿಗೆ ಬಡಿವಾಧುನಿಕ ವಿಕಾರ’ವಾದರೆ ಇಲ್ಲಿ ಅದರ ಗರಿಷ್ಠ ತೇಜದ ಮೊನೆ ಭೂಮಿಯಲ್ಲಿ ಅವತರಿಸುತ್ತದೆ, ಮೂರ್ತವಾಗುತ್ತದೆ- ರಾಮನಾಗುತ್ತದೆ.. +ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ, +ಹಾಲ್ಗಡಲ ಬಗೆದೊಲೆವ ರಾಜಹಂಸ; +ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಿನಲ್ಲಿ +ಹೆದ್ದಾರಿ ಹಾಸಿದ್ದ ರಾಮಚರಿತ.. +ಬೆಳ್ಳಂಬೆಳಕಿನಲಿ ಬಿಳಿಹಾಯಿಗಳ ಪರದಾಟ,’- ಇದನ್ನು ಬರೇ ಚಿತ್ರವಾಗಿಯೇ ಕಲ್ಪಿಸಿಕೊಳ್ಳಿ.. ಹಿಂದಿನ ಸ್ಟಾಂಜಾದಲ್ಲಿ ‘ಸಹಸ್ರಾರ’ ಬಂದಿದ್ದರಿಂದ ಇಲ್ಲಿ ಹಂಸ ಬಂದಕೂಡಲೇ ಅದನ್ನು ಆತ್ಮ ಇತ್ಯಾದಿ ಅರ್ಥಗಳಲ್ಲೂ ಸ್ವೀಕರಿಸಬಹುದೇನೋ ಎನ್ನಿಸುತ್ತದೆ.. ಹಾಲ್ಗಡಲ ಬಗೆದು’ ‘ಬಗೆದು’ ಎಂದರೆ ಅರ್ಥಮಾಡಿಕೊಂಡು, ಬೇರ್ಪಡಿಸುತ್ತ, ಹಾಗೆಯೇ ಸೀಳುತ್ತ ಒಲೆವ ರಾಜಹಂಸ.. ಈಗ ಕೊನೆಯ ಎರಡು ಸಾಲುಗಳನ್ನು ಗಮನಿಸಿ.. ಯಾರಾದರೂ ಯುದ್ಧಕಾಲದಲ್ಲಿ ಸರ್ಚ್ ಲೈಟನ್ನು ನೋಡಿದ್ದರೆ ಇದು ಕೂಡ ಕಣ್ಣಿಗೆ ಕಟ್ಟುವ ಒಂದು ಚಿತ್ರ.. ಸರ್ಚ್ ಲೈಟ್ ಆಕಾಶದಲ್ಲಿ ಚಲಿಸುವ ಒಂದು ರೋಡ್ ಆಗುತ್ತದೆ; ಇಡೀ ಪ್ರದೇಶವನ್ನು ಅದು ಸ್ಕ್ಯಾನ್ ಮಾಡುತ್ತದೆ.. ಆಕಾಶದಲ್ಲಿ ಎನೇ ಹಾರಾಡುತ್ತಿರಲಿ ಸರ್ಚ್‌ಲೈಟಿನಲ್ಲಿ ಎಲ್ಲವು ಸ್ಪಷ್ಟವಾಗಿ ಗೋಚರವಾಗುತ್ತದೆ.. ರಾಮನ ಕಥೆ ಗೊತ್ತಿರುವವರಿಗೆಲ್ಲ ತಿಳಿದಿರುವ ಅಂಶ ಏನೆಂದರೆ, ರಾಮ ತನ್ನ ಎಲ್ಲಾ ಕಾರ್ಯಗಳನ್ನೂ ಸಂಪೂರ್ಣವಾಗಿ ಜನರ ಕಣ್ಣೆದುರಿಗೇ ಮಾಡಿಕೊಂಡು ಬದುಕಿದವನು.. ಈ ಅರ್ಥದಲ್ಲಿ ಅವನ ಚರಿತ್ರೆ ಅಂತರಂಗದ ಸರ್ಚ್‌ಲೈಟಿನಲ್ಲಿ ನಮ್ಮ ಕಣ್ಣೆದುರು ಹಾಸಿದ್ದು.. ಈ ಕಾರಣಕ್ಕಾಗಿಯೇ ರಾಮ ಗಾಂಧೀಜಿಗೆ ನೈತಿಕ ಆದರ್ಶ ಆದದ್ದು.. ಉದ್ಧದ ಚಿತ್ರಗಳು ಹಿಂದೆ ಕೂಡ ಬಂದಿವೆ.. ರಾಮಾಯಣವೂ ಕೂಡ ಒಂದು ಯುದ್ಧ ನೋಡಿ- ರಾವಣನ ಜೊತೆಗೆ ರಾಮಮಾಡಿದ ಯುದ್ಧ ಆದುದರಿಂದಲೇ ಈ ‘ಸರ್ಚ್‌ಲೈಟ್’ ಅನ್ನುವುದು ಆ ಯುದ್ಧದ ಸಂಗತಿಗಳಲ್ಲಿ ನನ್ನ ಮನಸ್ಸಿಗೆ ತರುತ್ತದೆ.. +ಸಂಕಲ್ಪ ಬಲದ ಜಾಗರಣೆ; ಕತ್ತಲಿನೆಡೆಗೆ +ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ; +ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ +ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.. +ಇಡೀ ರಾಮಾಯಣವನ್ನು ಇಲ್ಲಿ ನಾಲ್ಕು ಸಾಲುಗಳಲ್ಲಿ ಹೇಳಿದ್ದಾರೆ.. ಸಂಕಲ್ಪ ಬಲದ ಜಾಗರಣೆ’; ಇದು ಸದಾ ಎಚ್ಚರವಿರುವಂಥಹ ಸ್ಥಿತಿ.. ಇಲ್ಲಿ ‘ಸಂಕಲ್ಪ’ ಶಬ್ದ ಸಿಕ್ಕಿದ ಕೂಡಲೇ ಹಿಂದಿನ ಮತ್ತು ಸಂಕಲ್ಪ ವ್ರತದ ಚಿತ್ರಗಳೆಲ್ಲವೂ ನಂಗೆ ಇನ್ನಷ್ಟು ಸ್ಪಷ್ಟವಾಗುತ್ತವೆ.. ‘ಕತ್ತಲಿನೆಡೆಗೆ ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ’; ಆ ದೊಣ್ಣೆ ಹಿಡಿದು ರಾಮ ದಂಡಕಾರಣ್ಯಕ್ಕೆ ಶಿಕ್ಷೆಗೆ ಎಂದು ಹೋಗುತ್ತಾನೆ.. ಮಣ್ಣಿನುಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ’- ನಾನು ಮೊದಲ ಬಾರಿ ಪದ್ಯ ಓದಿದಾಗ ಮಹತ್ವದ ಸಾಲುಗಳು ಎನ್ನಿಸಿದವುಗಳಲ್ಲಿ ಇದೂ ಕೂಡ ಒಂದು.. ಮಣಿನುಣುಗಿ ಯಾರು? ಸೀತೆ.. ಹಿಂದೆ ಬಂದ ‘ಮಣ್ಣುಟ್ಟ ಬಿತ್ತ’- ಮಳೆಹನಿಯ ಸೇಕಕ್ಕೆ ಕಾದದ್ದು ನೆನಪಾಗುತ್ತದೆ.. ಸೀತೆಯೂ ಮಣ್ಣಿನ ಮಗಳು.. ಅಂಥ ಅವಳ ಸೆಳವಿನಲ್ಲಿ ಲಂಕೆಗೆ ಬೆಂಕಿ.. ರಾಮ ಹುಟ್ಟಿದ್ದು ಹೇಗೆ? ಒಬ್ಬ ಸಾಮಾನ್ಯ ತಂದೆತಾಯಿಯರ ‘ಮಗ ಬೇಕು’ ಎಂಬ ಆಶೆಯಿಂದ- ಪುತ್ರಕಾಮೇಷ್ಠಿಯಿಂದ- ಹುಟ್ಟಿದವನು.. ಆದರೆ ಯಾವುದೋ ಇನ್ನೊಂದು ಬಂದು ಸೇರಿಕೊಂಡು ರಾಮನಾದವನು.. ಈಗ ತನ್ನ ಹೆಂಡತಿಯ ಮೇಲಿನ ನಿಷ್ಠೆಯಿಂದಲೇ- ಮಣ್ಣಿನುಣುಗಿಯ ಸೆಳವಿನಲ್ಲಿ- ರಾಮ ಒಂದು ದೊಡ್ಡ ರಾಜಕೀಯ ಯುದ್ಧದಲ್ಲಿ ತೊಡಗಿದ್ದಾನೆ.. ಅಂದರೆ ಅಮೂರ್ತವಾದ ಈವಿಲ್-ಕೆಟ್ಟದ್ದು, ರಾಕ್ಷಸ- ಎನ್ನುವುದನ್ನು ತೊಡೆದುಹಾಕುವ ನಿಷ್ಠೆಯೂ ಅವನಲ್ಲಿ ಹುಟ್ಟಿದ್ದು ಮಣ್ಣಿನುಣುಗಿಯ ಸೆಳವಿನಲ್ಲಿ.. ‘ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.. : ಇಲ್ಲಿ ‘ಉಡಾಫೆ’ ಎಂಬ ಶಬ್ದವೂ ಮೊದಲನೇ ಓದಿನಲ್ಲಿಯೇ ನನಗೆ ಈ ಪದ್ಯ ಶ್ರೀಮಂತವಾದ ಶಬ್ದಕೋಶವನ್ನು ಪಡೆದಿರುವಂಥದ್ದು ಎಂಬ ಸೂಚನೆಯನ್ನು ಕೊಟ್ಟಿದೆ.. ಯಾಕೆಂದರೆ , ‘ಸಹಸ್ರಾರ’,‘ಜೆಟ್’,‘ವ್ಯಕ್ತಮಧ್ಯ’ ಇಂಥವುಗಳ ನಡುವೆ ‘ಮಣ್ಣಿನುಣುಗಿ’ ‘ಉಡಾಫೆ’ ಎನ್ನುವ ಶಬ್ದಗಳೂ ಇಲ್ಲಿವೆ.. ಹೀಗೆ ಒಂದು ಸಣ್ಣಾ ಪದ್ಯದಲ್ಲಿಯೇ ಕನ್ನಡದಲ್ಲಿ ನಮಗೆ ಇವತ್ತು ಹ್ಡೊರೆಯಬಹುದಾದ ಎಲ್ಲಾ ಆಕರಗಳಿಂದಲೂ- ಸಂಸ್ಕೃತ ಇಂಗ್ಲಿಷ್ ಉರ್ದು ಇತ್ಯಾದಿ-ಶಬ್ದಗಳು ದೊರೆಯುತ್ತವೆ.. ನೋಡಿ, ರಾಮನಿಗೆ ಗೊತ್ತಿದೆ- ಸೀತೆ ಪವಿತ್ರಳು ಅಂತ.. ಆದ್ದರಿಂದ ಅವಳು ಸುಟ್ಟು ಬರದಿದ್ದರೆ ನಾನು ಮುಟ್ಟುವುದಿಲ್ಲ ಅನ್ನುವುದು ‘ಉಡಾಫೆ’.. ಜೊತೆಗೆ ರಾಮನು ಸಮಾಜಕ್ಕೆ ಬದ್ದನಾದ ರಾಜನಾಗಿರುವುದರಿಂದ, ಎಲ್ಲಾ ಸ್ತರಗಳಲ್ಲೂ ನೈತಿಕವಾಗಿ ಫಲಿಸಬೇಕಾದ ಮನುಷ್ಯನಾಗಿರುವುದರಿಂದ ಸಾಮಾಜಿಕನಾಗಿ ತನ್ನನ್ನು ಒಪ್ಪ್ಸಿಕೊಳ್ಳವುದಕ್ಕಾಗಿ ಈ ‘ ಉಡಾಫೆ’.. +ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ +ಹತ್ತೆ ತಲೆ? ನೂರಾರೆ? ಅದು ಅಸಂಖ್ಯ: +ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ +ಅನಾದಿ; ಕೋದಂಡ ದಂಡವೂ ಹೀಗೆ ದಂಡ; +‘ವಿಜೃಂಭಿಸಿತು ರಾಮಬಾಣ’- ‘ವಿಜೃಂಭಿಸಿತು’ ಎನ್ನುವ ಶಬ್ದದ ಝೇಂಕಾರ ಗಮನಿಸಿ; ನಂತರದ ಅನುಮಾನ ಗಮನಿಸಿ; ‘ ನಿಜ ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ’.. ರಾವಣನ ಒಂದೊಂದು ತಲೆಯನ್ನು ಕಡಿದರೂ ಇನ್ನೊಂದು ತಲೆ ಅಲ್ಲಿ ಹುಟ್ಟುತ್ತದೆ.. ಎಷ್ಟು ಕತ್ತರಿಸಿದರೂ ಮತ್ತೆ ‘ಕತ್ತಿಗೆ ಬರುವ’, ಅಂದರೆ ತರಿಯುವ ಕತ್ತಿಗೆ ಬರುವ, ಜೊತೆಗೇ ನಮ್ಮ ಕತ್ತಿಗೆರ್ ಬರುವ (ಆಪತ್ತಾಗುವ)‘ಅನಾದಿ’, ಈಚಿನ ಪದ್ಯಗಳಲ್ಲಿ ಅಡಿಗರು ‘ಈವಿಲ್’ ಸದಾ ಇರುವಂಥದು ಎಂದೇ ಹೇಳುತ್ತಾ ಬಂದಿದ್ದಾರೆ.. ಮುಂದೆ ಬರುವ ‘ಕೋದಂಡ ದಂಡವೂ ಹೀಗೆ ದಂಡ’ ಅಂದರೆ ಯಾವತ್ತಿನವರೆಗೆ ಈವಿಲ್ ಇರುತ್ತದೀಯೋ, ಅವತ್ತಿನವರೆಗೆ, ಅದನ್ನು ಶಿಕ್ಷಿಸುವಂತ ಒಂದು ದಂಡದ ಅಗತ್ಯ ಇದ್ದೇ ಇದೆ; ಅದರ ಜೊತೆಗೇ ಎಷ್ಟು ಕತ್ತರಿಸಿದರೂ ಮತ್ತೆ ಮತ್ತೆ ಅದು ಬೆಳೆಯುತ್ತಲೇ ಇರುತ್ತದೆ ತಾನೆ? ಆದ್ದರಿಂದ ‘ಕೋದಂಡ ದಂಡವೂ ಹೀಗೆ ದಂಡ’.. ಲೋಹಿಯಾರವರು ಹೇಲುವ ‘ ನಿರಾಶಾಕಿ ಕರ್ತವ್ಯ’ ಈ ಬಗೆಯ ಇಬ್ಬಗೆ ಭಾವನೆಯಿಂದ ಹುಟ್ಟಬಹುದು.. ನಾವು ‘ಏನು ಮಾಡಬೇಕು’ ಎಂದಿದ್ದರೂ ‘ ಏನೂ ಅಗುವುದಿಲ್ಲ’ ಎಂದು ತಿಳಿದೇ ಮಾಡಬೇಕು.. ‘ ಕೋದಂಡ ದಂಡವೂ ಹೀಗೆ ದಂಡ’- ಟೋನಿನ ವ್ಯತ್ಯಾಸದಲ್ಲಿಯೇ ನಮಗೆ ಎರಡು ಅರ್ಥ ವ್ಯತ್ಯಾಸವೂ ಗೊತ್ತಾಗುತ್ತಡೆ.. +ಅಥವಾ ಚಕ್ರಾರಪಂಕ್ತಿ ; ಚಕಮಕಿ ಕಲ್ಲ ನುಜ್ಜುತ್ತ +ಕೂತುಕೊಂಡಿದ್ದೇನೆ ಕತ್ತಲೊಳಗೆ, +ಪನಿವಾರ ತಿಂದು ಪಾನಕ ಕುಡಿದು ನೋನುತ್ತ +ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.. +ರಾಮನನ್ನು ಸೃಷ್ಟಿಸಿದ ವಾಲ್ಮೀಕಿ ಹುತ್ತಗಟ್ಟಿ ಕೂ‌ಇದ್ದ.. ಆದರೆ ಈ ಕವಿ ಅನುಮಾನಿಸುತ್ತ ಕೂಥಂಥವನು;‘ಚಕಮಕಿ’ ಕಲ್ಲನುಜ್ಜುತ್ತ ಕೂತುಕೊಂಡಿದ್ದೇನೆ ಕತ್ತಲೊಳಗೆ/ಪನಿವಾರ ತಿಂದು ಪಾನಕ ಕುಡಿದು ನೋನುತ್ತ’.. ನೋನುತ್ತ- ಇದು ಅಚ್ಚಗನ್ನಡ ಶಬ್ದ.. ತಪಸ್ಸಿನ ಬದಲಿಗೆ ‘ನೋನುವ’ ಎನ್ನುವ ಪದ ಬಂದಿದೆ.. ಈ ಪದ್ಯದಲ್ಲಿ ವ್ರತಕ್ಕೆ ಸಂಬಂಧಿಸಿದ ಅನೇಕ ಶಬ್ದಗಳಿವೆ.. ‘ನೋನು’ ಎನ್ನುವುದೂ ಆ ಶಬ್ದಗಳ ಸಲಿನಲ್ಲಿ ಬಂದು ಸೇರಿಕೊಳ್ಳುತ್ತದೆ.. ಯಾವೊದೋ ಒಂದು ಸ್ಫೋಟವಾಗುತ್ತದೆ, ಏನೋ ಅಗುತ್ತದೆ, ಬರುತ್ತದೆ ಎಂದು ಈ ಕವಿ ಕಾದಿದ್ದಾನೆ.. ಇದು ನಿಸ್ಸಹಾಯಕ ಸ್ಥಿತಿಯನ್ನೂ ತೋರಿಸುವುದರ ಜೊತೆಗೆ; ಇನ್ನೊಂದು ಅವತಾರವಾಗುತ್ತದೆ; ಆ ಅವತಾರ ಒಂದು ಸ್ಫೋಟವಾಗಿ ಬರುತ್ತದೆ; ಅಥವಾ ತನ್ನ ಒಳಗೇ ಯಾವುದೋ ಒಂದು ಸ್ಫೋಟ ಉಂಟಾಗುತ್ತದೆ ಎಂದು ಭರವಸೆಯಲ್ಲಿ ಮತ್ತು ಆತಂಕದಲ್ಲಿ ಕಾಯ್ವ ಸ್ಥಿತಿಯೂ ಆಗುತ್ತದೆ.. +ಹೀಗೆ ‘ ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ’ ಕೂತಿರೋನು ಸ್ವಲ್ಪ ಹಾಸ್ಯಾಸ್ಪದ ವ್ಯಕ್ತಿಯಾಗಿಯೂ ಕಾಣುತ್ತಾನೆ.. ಯಾಕೆಂದರೆ ಅವನು ವಾಲ್ಮೀಕಿಯ ಹಾಗೆ ಸಂಕಲ್ಪಬಲದಿಂದ ಕೂತವನಲ್ಲ.. ಪನಿವಾರ ತಿಂದು ಪಾನ ಕುಡಿದು- ದೈಹಿಕ ತೃಪ್ತಿ ಪಡೆದಾದ ಮೇಲೆ- ನೋನುತ್ತ, ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ, ಕೂತವನು.. ಶಬರಿಯ ಹಾಗೆ ಉರಿಯುವವನೂ ಅಲ್ಲ.. ಬೇಕಾಗಿರುವುದಕ್ಕಿಂತಲೂ ಹೆಚ್ಚು ಪ್ರತಿಕ್ರಿಯಿಸುತ್ತಿರಬಹುದು ಇವನು.. ಇವನು ಬೆಳಕಿಗೆಂದು, ಆಸ್ಫೋಟಕ್ಕೆ ಕಾದುಕೊಂಡಿರುವುದಾದರೂ ಉಜ್ಜುವದು ಚಮಕಿಕಲ್ಲನ್ನು.. ಆದುದರಿಂದಲೇ, ಚಕಮಕಿ ಕಲ್ಲಿನಿಂದಲೇ, ದೊಡ್ಡ ಆಸ್ಫೋಟವಾದೀತು ಎಂದು ತಿಳಿದುಕೊಂಡಿದ್ದಾನೆ.. ಆದ್ದರಿಂದ ಈತ ನಮ್ಮ ಹಾಗೇ ಸಣ್ಣ ಖಾಸಗಿ ವ್ಯಕ್ತಿ- ದುರ್ಬಲ, ಏಕಾಂಗಿ, ಆದರೆ ಅರಿವು ಉಳ್ಳಾತ.. ಅಡಿಗರ ಅನೇಕ ಪದ್ಯಗಳ ಕೇಂದ್ರವ್ಯಕ್ತಿ ಇಂಥವನೇ; ಇವನು ನವೋದಯ ಕವಿಗಳ ರಸ‌ಋಷಿಯೂ ಅಲ್ಲ, ದ್ರಷ್ಟಾರನೂ ಅಲ್ಲ; ಆದ್ದರಿಂದಲೇ ನಮ್ಮ ಕಾಲ್ದ ಸಂಕಟ ಮಿಡಿಯಬಲ್ಲನು.. +ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ +ಅಂಚೆ ತಲುಪೀತೆ ಸಹಸ್ರಾರಕೆ? +ಇವೆಲ್ಲವೂ ಅನುಮಾನಗಳು, ಪ್ರಶ್ನೆಗಳು.. ಹಿಂದೆಯೇ ಬಂದ ರಾಕೆಟ್ಟು ಮತ್ತು ಯುದ್ಧದ ಚಿತ್ರ, ಜೊತೆಗೇ ಯೋಗದ ವಿಕಾಸದ ವಿಚಾರ- ಇವೆಲ್ಲವೂ ಇಲ್ಲಿ ಕೂಡಿಕೊಂಡು ‘ಷಟ್ಚಕ್ರ ರಾಕೆಟ್ಟು’ ಆಗಿದೆ.. ಹಂತಹಂತವೇರುವ ರಾಕೆಟ್ಟು, ನಾಭಿ ಬಳಿ ಇರುವ ಮೂಲಾಧಾರದಿಂದ ನೆತ್ತಿಯ‘ಸಹಸ್ರಾರ’ಕ್ಕೆ ಹಂತ ಹಂತ ಏರುವ ಯೋಗ, ಒಂದಕ್ಕೊಂದು ಇಲ್ಲಿ ಮೆಟಫರ್ ಆಗುವುದು ಮಾತ್ರವಲ್ಲ; ರಾಮನನ್ನು ತೊಡಗಿಸಿದ (ಅಂತರ್ಮುಖವಾದ ಜೊತೆಗೇ ಬಹಿರ್ಮುಖವಾದ, ಆಧ್ಯಾತ್ಮಿಕವಾದ ಜೊತೆಗೇ ರಾಜಕೀಯವಾದ) ಎರಡೂ ಹೋರಾಟಗಳನ್ನು ಅಭಿನ್ನವೆಂಬಂತೆ ಹೇಳುವ ಪ್ರತೀಕ ‘ಷಟ್ಚಕ್ರ ರಾಕೆಟ್ಟು’.. ರಾಮ ಹೀಗೆ ಸತತವಾದ ಒಂದು ವಿಕಾಸದ ಫಲ; ಮತ್ಸ್ಯ ಕೂರ್ಮವರಾಹ ಅವತಾರಗಳ ತುಟ್ಟತುದಿ; ಸಾಮಾನ್ಯ ತಂದೆ ತಾಯಿಯರ ಪುತ್ರಕಾಮೇಷ್ಠಿಯಿಂದ ಹುಟ್ಟಿದವನು; ಹಠತ್ತಾಗಿ ಈ ಹುಟ್ಟಿನಲ್ಲಿ ತ್ರಿಕಾಲಸ್ಥನಾದ ದೈವದ ಒಂದಂಶವನ್ನು ಪಡೆದವನು; ಹೆಂಡತಿಯ ಮೇಲಿನ ಸಾಂಸಾರಿಕ ಪ್ರೀತಿಯಿಂದಲೇ ಲಂಕೆಗೆ ಬೆಂಕಿಯಿಡುವ ತನಕ ಬೆಳೆದವನು; ಯೋಗದ ಪರಮಸ್ಥಿತಿ ಮುಟ್ಟಿದವನು- ಇಷ್ಟಿದ್ದೂ ಸಾಮಾಜಿಕವಾಗಿ ಉಳಿದವನು.. (ಇಂಥವನನ್ನು ಧ್ಯಾನಿಸುತ್ತಿರುವ ಕವಿ ‘ಅಂಚೆ ತಲುಪೀತೆ ಸಹಸ್ರಾರಕೆ’ ಎನ್ನುತ್ತಾರೆ.. ಅಂಚೆ ಎಂದರೆ ಇಲ್ಲಿ ಟಪ್ಪಾಲು ಮತ್ತು ಹಂಸ.. ಹಂಸ- ಆಧ್ಯಾತ್ಮಿಕ ಪದವೂ ಹೌದು.. ಎಲ್ಲ ಅರ್ಥಗಳೂ ಇಲ್ಲ್ಲಿ ದುಡಿಯುತ್ತವೆ.. ವಾಕ್ಯ ಪ್ರಶ್ನಾರ್ಥಕವಾಗಿರುವುದರಿಂದ ಅಸ್ತಿತ್ವದ ಪ್ರಸ್ತುತ ವಾಸ್ತವವನ್ನು ಕಾಪಾಡಿಕೊಂಡಿದ್ದೂ ಅನುಭವಕ್ಕೆ ಆದರ್ಶದಲ್ಲಿ ದಕ್ಕಬೇಕಾದ್ದನ್ನೂ ಸೂಚಿಸುತ್ತದೆ.. ಶಬ್ದಗಳು ಇಲ್ಲಿ ‘ಆಂಟನ’ಗಳಂತೆ ಸಾಧ್ಯತೆಗಳನ್ನು ಹುಡುಕುತ್ತವೆ.. ಹಲವು ಸಾಧ್ಯತೆಗಳಿಗೆ ತೆರೆಯಬಲ್ಲ ಮಿಡಿಯಬಲ್ಲ ಒಂದು ಮನಸ್ಸಿನ ಸ್ಥಿತಿಯನ್ನು, ರಾಮನ ಸಮಗ್ರ ಬಹುಮುಖ ವ್ಯಕ್ತಿತ್ವದ ಮನನದಿಂದಲೂ, ಜೊತೆಗೇ ರಾಮನನ್ನು ಸಾಧ್ಯವಾಗಿಸಿದ ಅಪಾರ ಶ್ರಮ,ವ್ರತ,ತಪಸ್ಸುಗಳನ್ನು ಪದ್ಯದಲ್ಲಿ ನಮ್ಮ ಪ್ರಜ್ಞೆಯೊ‌ಅಳಕ್ಕೆ ಊರಿದ್ದರಿಂದಲೂ ಈ ಕೊನೆಯ ಸಾಲುಗಳು ಪ್ರಸ್ತುತ ನಮ್ಮ ಬದುಕಿಕೆಗೆ ಸವಾಲಾಗಿ ಬರುವುದು ಸಾಧ್ಯವಾಗಿದೆ.. ಅಂದರೆ ಹಲವು ಅನುರಣನಗಳನ್ನು ಅಲೆ‌ಅಲೆಯಾಗಿ ನಮ್ಮಲ್ಲಿ ಎಬ್ಬಿಸಿ‌ಅಬಲ್ಲ ಪದ್ಯದ ಮೂರ್ತತ್ವದಿಂದ ಈ ಸಾಲುಗಳು ಸಾಧ್ಯವಾದವು.. +ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು +ಪುರುಷೋತ್ತಮನ ಆ ಅಂಥ ರೂಪ-ರೇಖೆ? +ಕನ್ನಡದ ಈ ಕಾಲದ ಅತ್ಯಂತ ಮಹತ್ವದ ವಿಮರ್ಶಕರೆನ್ನಬದುದಾದ ಗತಿ‌ಉಸಿದ ಗೆಳೆಯ ಎಂ,ಜಿಕೆ.. ಅವರ ವಿಮರ್ಶಾ ಸಂಕಲನದ ಮೊದಲನುಡಿಯಾಗಿ ಈ ಸಾಲುಗಳನ್ನು ಅವರು ಉದ್ಧರಿಸಿದ್ದಾರೆ ಎಂಬುದು ಗಮನಾರ್ಹ.. ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತಾ ಕುಳಿತವನು ಕೇಳುವ ಪ್ರಶ್ನೆ ಇದು ಎಂಬುದನ್ನು ಮರೆಯಬಾರದು; ನಾವು ಮತ್ತೆ ವಾಲ್ಮೀಕಿಗಳಾಗದೆ- ಹುತ್ತಗಟ್ಟಬಲ್ಲಷ್ಟು ವ್ರತಿಗಳಾಗದೆ- ನಮ್ಮ ಚಿತ್ತ ಮತ್ತೆ ಆ ಪುರುಷೋತ್ತಮನನ್ನು ಕೆತ್ತಬಲ್ಲುದೇನು ಎಂದು ಕವಿ ಕೇಳುತ್ತಾರೆ.. ರಾಮ ಪುರುಷರಲ್ಲಿ ಉತ್ತಮಾನಾಗಿದ್ದುಕೊಂಡು ದೈವತ್ವವನ್ನು ಪಡೆದವನು ಎಂಬುದು ಇಲ್ಲಿ ಮುಖ್ಯ.. ಒಟ್ಟಿನಲ್ಲಿ ಪದ್ಯ ಏನು ಹೇಳುತ್ತದೆ ನೋಡೋಣ: ಪದ್ಯದಲ್ಲಿ ಒತ್ತುಬರುವುದು ವ್ರತಕ್ಕೆ: ( ಶಬರಿ, ವಾಲ್ಮೀಕಿ, ಕೌಸಲ್ಯೆ ದಶರಥರು ಮತ್ತು ರಾಮ ಎಲ್ಲರೂ ವ್ರತಿಗಳೇ) ಹೀಗೆ ಈ ವ್ರತದಲ್ಲಿ ಸಿದ್ದಿಸಿದ್ದು ಈ ಮಣ್ಣಿನ ಬದುಕಿನಲ್ಲಿ ಮೂರ್ತವಾಗತಕ್ಕದ್ದು.. ಪದ್ಯದ ಪ್ರಾರಂಭದಲ್ಲಿ ಬರುವಂತೆ ಅದೊಂದು ಜೈವಿಕ ಪ್ರಕ್ರಿಯೆಯೂ ಹೌದು; ಹಾಗೆಯೇ ಸಂಕಲ್ಪ ಶಕ್ತಿಯಿಂದ ಈ ಜೈವಿಕ ಪ್ರಕ್ರಿಯೆಯಲ್ಲಿ ಅಪೂರ್ವವಾದ್ದೊಂದು ಬಂದು ಸೇರಿಕೊಳ್ಳುವ ಸಂಗಮವೂ ಹೌದು.. ಈ ದೃಷ್ಟಿಯಿಂದ ಅದ್ ವ್ರತದಲ್ಲಿ ಪಡೆದದ್ದೂ ಹೌದು, ಕೃಪೆಯಿಂದ ಅವತಾರವೂ ಹೌದು.. ಅವನು ಕೌಸಲ್ಯೆಗೆ ಮಗ; ಶಬರಿಗೆ ಹಣ್ನನ್ನು ತಿನ್ನುವ ಪ್ರಿಯವಸ್ತು; ವಾಲ್ಮೀಕಿಗೆ ಅವತಾರಗಳ ವಿಕಾಸದ ಫಲ; ಚಕಮಕಿ ಕಲ್ಲನ್ನು ಉಜ್ಜುತ್ತ ಕೂತವನಿಗೆ ಸ್ಫೋಟವಾಗಿ ಅನುಭವಿಸಬೇಕೆಂಬ ಅಕಾಂಕ್ಷೆ; ಅ‌ಆದರೆ ಗಟ್ಟದೇ ಅವನನ್ನು ಮತ್ತೆ ಕೆತ್ತುವುದು ಸಾಧ್ಯವಿಲ್ಲವೆಂಬ ಅರಿವು.. (ಕೆತ್ತು ಎನ್ನುವ ಪ್ರಯತ್ನ ಮತ್ತು ಕೌಶಲಗಳನ್ನು ಸೂಚಿಸುವ ಪದ ಕೂಡ ಇಲ್ಲಿ ಗಮನಾರ್ಹ, ಏಕೆಂದರೆ ಗೀತೆ ಹೇಳಿದಂತೆ ಯೋಗ ಎಂಬುದು ಕರ್ಮಡಃಲ್ಲಿ ಕುಶಲತೆ.. ಇಷ್ಟು ಅರ್ಥವಾದ ನಂತರ, ಅಡಿಗರ ಹಿಂದಿನ ಪದ್ಯಗಳನ್ನು ಓದಿರುವವರಿಗೆ ಈ ಪದ್ಯದ ಹೆಚ್ಚು ತಿಳಿಯಬಹುದು.. ಯಾಕೆಂದರೆ ‘ಪ್ರಾರ್ಥನೆ’ಯಲ್ಲಿ ನಾವು ಓದಿದ್ದೇವೆ: ( ಸದಾ ಏಕಾಂಗಿಯಾಗಿ, ಇನ್ನೊಬ್ಬರ ಜೊತೆ ಸಂಪರ್ಕವಿಲ್ಲದಿರುವಂಥವನು ಮುಷ್ಠಿಮೈಥುನದ ಅಹಂಕಾರಕ್ಕೆ ತುತ್ತಾಗುತ್ತಾನೆ; ಆದರೆ ಹೊರಗಿನ ಜೊತೆ ತೀರಾ ಸಂಪರ್ಕ ಮಾಡುವವನು ಫ್ರಂಗಿರೋಗಕ್ಕೆ ಒಳಗಾಗುತ್ತಾನೆ.. ಅಡಿಗರ ಪದ್ಯಗಳನ್ನು ಓದುವಾಗ ಅವರು ಈ ಎರಡು ಯೋಚನೆಗಳನ್ನು ಸದಾ ಮಾಡುತ್ತಿರುವುದನ್ನು ನಾವು ಗಮನಿಸಬಹುದು: ಎಕಾಂಗಿತನದಲ್ಲಿ ಸಫಲಿಸಿಕೊಳ್ಳಬೇಕಾದ್ದು ಮತ್ತು ಅದು ಅತಿಯಾದಾಗ ಆಗುವ ಅಪಾಯ, ಒಂದು; ಎರಡನೆಯದು, ಹೊರಗಿನ ಜತೆಗಿನ ಸಂಪರ್ಕ ಅತಿಯಾದಾಗಿನ ಅಪಾಯ.. ಅದರ ಇವೆರಡೂ ಒಂದು ಸಮತೂಕದಲಿರುವಾಗ ಪಡೆಯಬಹುದಾದ ಏಕಾಗ್ರತೆ ಮತ್ತು ಸಮಗ್ರತೆ.. ಆಮನಲ್ಲಿ ಅಡಿಗರಿಗೆ ಈ ಸಮತೂಕ, ಸಮಗ್ರತೆಗಳು ಕಂಡಿವೆ.. ‘ನೆಹರೂ ನಿವೃತ್ತರಾಗುವುದಿಲ್ಲ’ ಪದ್ಯದ ನೆಹರೂನಲ್ಲಿ ಮೂರ್ತವಾದ್ದರ ಜತೆಗೆ ಸಂಪರ್ಕ ಇಲ್ಲದೆ ಬಯಸುವ ಅಮೂರ್ತ ಆದರ್ಶ ಏನಾಗುತ್ತದೆ ಎಂಬುದನ್ನು ನಾವು ಗುರುತಿಸಬಹುದು.. ಆದರೆ ರಾಮ ಮೂರ್ತದ ಜೊತೆಯೇ ವ್ಯವಹರಿಸುತ್ತ ಅಮೂರ್ತವಾದದ್ದನ್ನು ಸಾಧಿಸಿಕೊಳ್ಳುವುದರ ಪರಿಪೂರ್ಣ ಚಿತ್ರ.. ಷ್ಟಾದ ನಂತರ, ನಾನು ವಿಮರ್ಶಕನಾಗಿ ಮಾತಾಡುವುದಾದರೆ ಕನ್ನಡದಲ್ಲಿ ವಿಚಾರವನ್ನು ಕಾವ್ಯವನ್ನಾಗಿ ಮಾಡುವುದಕ್ಕೆ- ವೈಚಾರಿಕತನ್ನೇ ಕಾವ್ಯ ಮಡುವುದಕ್ಕೆ -ಹೊರಟ ಒಂದು ಪ್ರತಿಕ್ರಿಯೆಯಲ್ಲಿ ಅಡಿಗರು ಸಾಧಿಸಿರುವ ಒಂದು ದಿಟ್ಟವಾದ ಹೆಜ್ಜೆ ‘ಶ್ರೀರಾಮನವಮಿಯ ದಿವಸ’ ಎನ್ನಿಸುತ್ತದೆ.. ಯಾಕೆಂದರೆ ಅವರ ಹಿಂದಿನ ಪದ್ಯ ‘೧೯೫೮ ರ ಪಾಠ’ ದಲ್ಲಿಯೇ ಇದೇ ರೀತಿಯ ಪ್ರಯತ್ನ ಇತ್ತು.. +ನೋಡೀ ನುಗ್ಗೆ : +ನಿಲ್ಲಲೊಂದಿಷ್ಟು ಲಂಗೊಟಿಯಿಯಗಲದ ಜಾಗ +ಆಕಾರ ತಳೆದ ಆಭೋಗ, ಉಳಿದದ್ದೆಲ್ಲ +ಪ್ರದೇಶ, ಗೊಡ್ಡು ಗಾಳಿಯ ಕಾಮಕೇಳಿ ಫಲ.. +ಈ ರೀತಿಯ ಮಾತುಗಳಲ್ಲಿ ಒಂದು ವಿಚಾರವನ್ನು ಬೆಳೆಸುವ ಪ್ರಯತ್ನ ಅಡಿಗರು ಮಾಡಿದ್ದರು.. ಆ ಪ್ರಯತ್ನ ಹೆಚ್ಚು ಸಫಲಿಸಿರುವುದು ‘ಶ್ರೀರಾಮನವಮಿಯ ದಿವಸ’ದಲ್ಲಿ ಎಂದು ನನಗನ್ನಿಸುತ್ತದೆ.. +***** +ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […] +ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ […] +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_709.txt b/Kannada Sahitya/article_709.txt new file mode 100644 index 0000000000000000000000000000000000000000..6b9886605a4fdc3c22d2cf860ebec46d71431b70 --- /dev/null +++ b/Kannada Sahitya/article_709.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, subತಿಚಿಥಿ, gಡಿಚಿಜe seಠಿಚಿಡಿಚಿಣoಡಿ. . . – ಹೀಗಿತರೆಗಳು ಒಡ್ಡಿರುವ ಛಿuಡಿಣಚಿiಟಿ gಟಚಿziಟಿg, ಚಿಟuಛಿo ಠಿಚಿಟಿeಟ, ಠಿoಟಥಿಛಿಚಿಡಿboಟಿಚಿಣe, ಛಿuಟಣuಡಿeಜ mಚಿಡಿbಟe, exಠಿoseಜ ಛಿoಟಿಛಿಡಿeಣe…- ಈ ತರಹೆಗಳ ನಾಜೂಕಿನ ತೋರಿಕೆಗಳನ್ನು ತನ್ನೊಳಗೆ ಅಳವಡಿಸಿಕೊಂಡು ಒಟ್ಟು ಭೌತರೂಪದಲ್ಲೇ ಮಾರ್ಪಾಟು ಹೊಂದಿದಂತಿರುವ ಊರಿನ qಟಚಿಟಿಜsಛಿಚಿಠಿe, sಞಥಿಟiಟಿe, moಜeಡಿಟಿ, ಟಿeo-ಚಿಡಿisಣoಛಿಡಿಚಿಣ, uಡಿbಚಿಟಿ, uಡಿbಚಿಟಿiಣಥಿ, iಜeಟಿಣiಣಥಿ. . . – ಇಂತಹ ಲಗತ್ತುಗಳನ್ನು ನಮ್ಮ ಆಡುನುಡಿ ತನ್ನದಾಗಿಸಿಕೊಂಡು ದುಡಿಸಿಕೊಳ್ಳಲಿಕ್ಕೆ ಎಷ್ಟೊಂದು ಮಾತು ಖರ್ಚು ಮಾಡಬೇಕು ನೋಡಿ. ಹಾಗೆ ಮಾಡಿಕೊಂಡದ್ದು ನುಡಿಗಟ್ಟಾಗುವ ಹೊತ್ತಿಗೆ ಇನ್ನಷ್ಟು ಹೊಸ ಹೊಸ ವಸ್ತುವಿಷಯಗಳನ್ನು ಊರು ಚಪ್ಪರಿಸಿ ಇವೆಲ್ಲ ಉಪಯೋಗಕ್ಕೆ ಬರದಷ್ಟು ಸವಕಲಾಗಿರಬಹುದು. ಮೊನ್ನೆ ನಮ್ಮ ಸಂಪಂಗಿ ರಾಮ ಉರುಫ್ ಸ್ಯಾಂರ್‍ಯಾಮ್ ಜೊತೆ ಐ-ಬಾರಿನಲ್ಲಿ ನಡೂರಾತ್ರಿಯವರೆಗೆ ತೊನೆದಾಡಿದವಳು ಬಳಿಕ ಅವನೊಟ್ಟಿಗೆ ಬತ್ತಲಾದಾಗ – ಕನ್ನಡದಲ್ಲಿ ಪ್ರೀತಿ ಮಾಡಬಾರದೆ? – ಅಂದದ್ದಕ್ಕೆ oಡಿgಚಿsm-ಗೆ ಪರಿಭಾಷೆ ಹುಡುಕುತ್ತಾ ಅವನೆಲ್ಲೋ ಕಳೆದುಹೋದನಂತೆ! ಆ ಮಾತು ಬೇರೆ ಬಿಡಿ. ಸೊಂಟದ ಕೆಳಕ್ಕೆ ತೊಡಲಾಗುವ ಟoತಿ ತಿಚಿisಣ-ಗಳು ತೊಗಲಿನದೇ ಭಾಗವೇನೋ ಎನ್ನುವಷ್ಟು ಅಂಟಿಕೊಂಡರೆ, ಹಾಗೆ ಮೈದೋರುವ ಹಣಾಹಣಿಯಲ್ಲಿ ಆಚಿಟಿgeಡಿousಟಥಿ ಟoತಿ-ಎಂಬ ಪಂಚ್‌ಲೈನ್ ಒಂದು ನಮೂನೆ ಕೌತುಕವನ್ನು ಹುಟ್ಟಿಸದಿದ್ದರೆ ಹೇಳಿ. ಐess is moಡಿe -ಎನ್ನಲಾಗುವ ಮತ್ತೊಂದು ಉದ್ಘೋಷದಲ್ಲಿ ಎದೆ ತೋಳುಗಳನ್ನು ‘ಮೈ’ಲಾಗುವಷ್ಟು ತೋರುತ್ತಾರೆ ಈ ಶತಮಾನದ ವಾರಸುಗಳಂತಿರುವ ಗಂಡು ಹೆಣ್ಣುಗಳು. ಅವರನ್ನು ಮುಡಿಯಿಂದ ಅಡಿಯವರೆಗಿರಲಿ, ನಡುಮಟ್ಟಕ್ಕೆ ಬರುವಷ್ಟರಲ್ಲಿ ಹೊಕ್ಕಳ ಕೆಳಗಿನ ಪ್ರಪಾತದ ಊಹೆಯಲ್ಲಿ ಮನಸ್ಸು ಮರೆತು ಹೋಗದಿದ್ದರೆ ಹೇಳಿ. ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್‌ಗಳ ಸಾಯಂಫೇರಿಯಲ್ಲಿ, ಕಾಫೀ ಡೇಯ ಅನುದಿನದ ಫೇರಿನಲ್ಲಿ ಒದಗುವ ಸಪೂರ ಮೈಗಳ ನಳನಳವನ್ನು ನೋಡಿದರೆ ಆ ವಯಸ್ಸಿನವರ ಧಿಮಾಕು ಹಿಡಿ ಹಿಡಿ ಅಸೂಯೆ ಹುಟ್ಟಿಸಬಹುದು. ಎಡಗಿವಿಯಲ್ಲಿ ನಕ್ಷತ್ರದ ಕಿಡಿ ತೊಟ್ಟು ಒತ್ತು ಕೂದಲಿನ ಜೊಂಪೆ ಇಳಿಬಿಟ್ಟಿರುವ ಸಂಪಂಗಿ ಈ ನಮೂನೆಯಲ್ಲೊಂದು ನೇರ ತಳಿಯೇ ಸರಿ. ಅವನ ಕೊರಳಿನ ದಪ್ಪನೆ ಕರಿ ಎಳೆಯಲ್ಲಿ ಬೆಳ್ಳಿ ಚೇಳಿನ ಪದಕ ತೂಗಿರುತ್ತದೆ. ಅದರ ನಿರ್ವಿಷದ ಕೊಂಡಿ ಹದದ ಎದೆಯಲ್ಲಿಳಿದು ಪುಟಿಯುವಲ್ಲೆಲ್ಲ ಪಾಚಿ ಹಸಿರಿನ ನಾಡಿ ಎಳೆ ರೇಖಿಸಿದಂತಿದೆ. +ರೆಸಿಡೆನ್ಸೀ ರಸ್ತೆಯ ಸೇಂಟ್ ಮಾರ್ಕ್ಸ್ ಜಂಕ್ಷನ್ನಿನ ಮೂಲೆಯಲ್ಲಿ ಥಳ ಥಳ ಗಾಜು ಮಿರಿ ಮಿರಿ ಗ್ರನೈಟು ಹೊದ್ದಿರುವ ನಾಲ್ಕಂತಸ್ತಿನ ಕಟ್ಟಡದ ಎರಡನೇ ಮಹಡಿಯ ಐದು ಸಾವಿರ ಚದರಡಿಗಳ ಆಕ್ಸಿಸ್ ಟೆಕ್ನಾಲಜೀಸ್ ಎಂಬ ಕಾಲ್ ಸೆಂಟರೊಂದಿದೆ. ಇಲ್ಲೇ ಇಪ್ಪತ್ತೊಂಬತ್ತು ವಯಸ್ಸಿನ ಸಂಪಂಗಿ ರಾಮಚಂದ್ರ ವೈಕುಂಠಂ ಕೆಲಸಕ್ಕಿದ್ದಾನೆ. ಹಳೆಯ ಮದರಾಸು ರಸ್ತೆ ಅಲಸೂರು ಕೆರೆಯನ್ನು ಬಳಸಿ ಸಾಗಿ ಮುಂದೆ ಸಿಗುವ ಕೃಷ್ಣರಾಜಪುರದ ತೂಗುಸೇತುವೆ ಬಲ ದಟ್ಟಣೆಯ ಉದಯನಗರದಲ್ಲಿ ಅವನ ಮನೆ. ಅವನ ಓರಗೆಯವರಿರಲಿ, ಅವನಿಗಿಂತ ಐದು ವರ್ಷ ಕಿರಿಯರೆಲ್ಲ ಮದುವೆಯಾಗಿದ್ದರೂ ಇವನಿನ್ನೂ ಅವಿವಾಹಿತನುಳಿದಿದ್ದಾನೆ. ಬೆನ್ನಿನಲ್ಲಿ ಅವಳಿ ಸೋದರರಿದ್ದು ಒಟ್ಟು ಐದು ಮಂದಿಯಿರುವ ಎಂಟು ಚದರದ ಮನೆಯಲ್ಲಿ ಇವನೊಬ್ಬನೇ ಗ್ರಾಜುಯೇಟೆಂಬ ಹೆಮ್ಮೆ. ಪ್ರತಿಷ್ಠಿತ ಎಮ್ ಜೀ ರಸ್ತೆಯ ಆಜುಬಾಜೂ ಕೆಲಸದ ದೆಸೆಯಿಂದ ದಟ್ಟ ನಾಗರಿಕತೆಯ ರಿವಾಜುಗಳನ್ನು ಹೊದ್ದಿರುವುದರಿಂದ ಈಗಲೇ ಮದುವೆಯಲ್ಲಿ ಆಸ್ಥೆಯಿಲ್ಲ. ಅವನೆಲ್ಲೋ ಓದಿಕೊಂಡ ಇಂಟರ್‌ನೆಟ್ ವರದಿಯ ಪ್ರಕಾರ ವಿದ್ಯಾಭ್ಯಾಸವಿರುವವರಿಗೆ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆ ಅಂತಿದ್ದುದನ್ನು ತನ್ನಂತಹವರ ಧ್ಯೇಯವಾಕ್ಯವೆಂಬಂತೆ ಸದ್ಯಕ್ಕಂತೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ – ಮದುವೆಯಿಲ್ಲದೆ ಹೆಂಗೆಳೆಯರಿರುವುದು ಒಂದು ಫ್ಯಾಷನ್ ಸ್ಟೇಟ್‌ಮೆಂಟೆಂದೇ ಗಟ್ಟಿ ನಂಬಿಬಿಟ್ಟಿದ್ದಾನೆ. ದೂರದ ತಿರುಪತಿಯ ಆಸುಪಾಸಿನಿಂದ ನಲವತ್ತು ವರ್ಷಗಳ ಹಿಂದೆ ವಲಸೆ ಬಂದ ಮೂರು ಮಕ್ಕಳ ವರದರಾಜ ವೈಕುಂಠಮ್ ಮತ್ತು ಪೆರಿನಾಯಕಿಯರ ಕುಟುಂಬದಲ್ಲಿ ಈಗ ಅವನ ಮದುವೆಯೊಂದೇ ಸಮಸ್ಯೆಯಾಗಿಬಿಟ್ಟಿದೆ. ಹಾಗೆ ನೋಡಿದರೆ ಸಮಸ್ಯೆಯಿರುವುದು ಅವನು ಮದುವೆಯನ್ನು ಸಕಾರಣವಿಲ್ಲದೆ ಮುಂದೂಡುತ್ತಿದ್ದಾನೆ ಅಂತಲ್ಲ. ಸಮಸ್ಯೆಯಾಗಿರುವುದು ಮದುವೆಗೆಂದು ತುದಿಗಾಲಿನಲ್ಲಿ ನಿಂತಿರುವ ಅವನ ನಾಲ್ಕು ವರ್ಷ ಕಿರಿಯ ತಮ್ಮ ಶ್ರೀನಿವಾಸನ ಕಿರಿಕಿರಿಯಲ್ಲಿ. ತನ್ನ ಚಡ್ಡಿಯ ದಿನಗಳ ಒಡನಾಟದವರಿಗೆಲ್ಲ ಮದುವೆಯೆನ್ನುವುದು ಇದೀಗ ಸಂತತಿಗೆ ಸಜ್ಜಾಗುವಷ್ಟು ಹಳೆಯದಾಗಿರುವಾಗ ಎಸ್ಸೆಸ್ಸೆಲ್ಸೀ ನಪಾಸಿನ ಓದಿದ್ದರೂ ಸ್ವಂತ ಉದ್ದಿಮೆಯ ನೆರಳಿರುವ ಶ್ರೀನಿವಾಸನಿಗೆ ತನ್ನ ಬಲಿತ ಮೈ ಒಳಗೊಳಗೇ ನಡೆಸುವ ಪಿತೂರಿಯನ್ನು ಹತ್ತಿಕ್ಕಲಾಗುತ್ತಿಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಮದುವೆಗೆಂದು ದುಂಬಾಲು ಬಿದ್ದಿದ್ದಾನೆ. ಪೆರಿನಾಯಕಿಯೋ ಅಣ್ಣನ ಮದುವೆಯಾಗಲಿ ಅಂತ ಸಬೂಬು ಹೇಳಿ ಅವನನ್ನು ಸಮಾಧಾನ ಪಡಿಸುತ್ತಲೇ ಇದ್ದಾಳೆ. +ಚಿಕ್ಕವ ವೆಂಕಟೇಶ ಈಗ ಎಳವೆಯಿಂದ ಆಡಿ ಬೆಳೆದ ಉದಯನಗರದ ಆ ಮನೆಯೊಟ್ಟಿಗಿನ ಇಪ್ಪತ್ತು ವರ್ಷಗಳ ಉದ್ದದ ಎಲ್ಲ ಕೊಂಡಿಗಳನ್ನು ಪೂರ್ತಾ ಕಳಚಿಕೊಂಡಿದ್ದು ಇಂದು ಅದರ ದಾಖಲೆಯ ಮೇಲೆ ಠಸ್ಸೆಯೊತ್ತುವ ವಿಚಿತ್ರ ತರಾತುರಿಯಲ್ಲಿದ್ದಾನೆ. ಕಳೆದ ಎರಡು ತಾಸುಗಳಿಂದ ನಾರಾಯಣ ಪಿಳ್ಳೈ ಬೀದಿಯಲ್ಲಿ ಹಚ್ಚೆ ಹಾಕುವನೊಬ್ಬನನ್ನು ಹುಡುಕಿಕೊಂಡು ಬೈಕಿನಲ್ಲಿ ಗಸ್ತಿಗೆ ತೊಡಗಿದ್ದಾನೆ. ಅವನಿಗೆ ಎರಡು ವರ್ಷಗಳ ಹಿಂದೆ ತಂಜಾವೂರಿನ ಈ ಹಚ್ಚೆಗಾರನನ್ನು ಇಲ್ಲೇ ಒಂದು ಮನೆಯ ಬಿಸಿಲು ಮಚ್ಚಿನ ಬಾಡಿಗೆ ಕೊಠಡಿಯೊಂದರಲ್ಲಿ ಭೆಟ್ಟಿ ಮಾಡಿದ ನೆನಪು. ಕಮರ್ಷಿಯಲ್ ಸ್ಟ್ರೀಟಿಗೆ ಮಗ್ಗುಲಿನ ಈ ಬೀದಿಯಲ್ಲಿ ಈಚೆಗೆ ಅಲ್ಲಿನ ವಾಣಿಜ್ಯ ವಹಿವಾಟೆಲ್ಲ ಇಲ್ಲಿ ವಿಸ್ತರಿಸಿಕೊಂಡಿರುವುದರಿಂದ ಜಂಗುಳಿಯಲ್ಲಿ ವಿಳಾಸವಿಲ್ಲದೆ ಒಬ್ಬನನ್ನು ಹುಡುಕುವುದು ದುಸ್ತರವೆಂಬ ಪರಿವೆ ಇದ್ದಂತಿಲ್ಲ. ಹಚ್ಚೆಯವನನ್ನು ಪರಿಚಯಿಸಿದ ಲಿಯೋ – ಇವನೊಟ್ಟಿಗೆ ಸೊಮಾಟಿಕ್ಸ್ ಫಿಟ್‌ನೆಸ್ ಪ್ಲಾನೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದವನು, ಈಗ ಮಲೇಷಿಯಾದಲ್ಲೆಲ್ಲೋ ವಲಸೆ ಹೋಗಿರುವುದರಿಂದ ಆ ತ್ಯಾಂಜೋರ್ ಸಾಮಿಯ ಗೊತ್ತುಗುರಿಯ ಖಚಿತ ಗುರುತಿಲ್ಲ. ಜಿಮ್ಮಿನಲ್ಲಿ ದುಡಿ ದುಡಿಸಿ ಕಸುವು ತೆಗೆದ ಎಡತೋಳಿನ ಹೊರಬದಿಯಲ್ಲಿ ಶರಭದ ಮಾದರಿಯಲ್ಲಿ ಬರೆಯಲಾಗುವ ತಮಿಳಿನ ಸಾಂಪ್ರಾದಾಯಿಕ ನಕಲು ಹೊಯ್ಯಿಸಿಕೊಳ್ಳುವುದು ಇವನಿಗೆ ಈಗ ಎಲ್ಲಿಲ್ಲದ ತುರ್ತು. ಜಿಮ್ಮಿನಲ್ಲಿ ಕೆಲಸ ಮಾಡುತ್ತಿದ್ದ ಇವನ ಮಾಜಿ ಗರ್ಲ್‌ಫ್ರೆಂಡ್ ಜಯಶಾಂತಿ ಹಚ್ಚೆಗೆ ಕುಮ್ಮಕ್ಕು ಕೊಟ್ಟಂದೇ ಮಧ್ಯಾಹ್ನ ಲಿಯೋ ಜತೆಯಲ್ಲಿ ಕ್ಯಾಷುವಲ್ ಲೀವ್ ತೆಗೆದು ಇಲ್ಲಿ ಬಂದದ್ದು. ಪೆರಿನಾಯಕಿಗೆ ಈ ವಿಷಯ ಅದೇ ಸಂಜೆಗೆ ತಿಳಿದದ್ದೇ ಕೆಂಡಾಮಂಡಲಗೊಂಡು ನೆಲ ಮುಗಿಲು ಸೇರಿಸಿಬಿಟ್ಟಿದ್ದಳು. ಇನ್ನು ಇದು ಮನೆಯಲ್ಲಿ ಅಸಾಧ್ಯ ಪಿರಿಪಿರಿ ಹುಟ್ಟಿಸಬಹುದೆಂದು ವೆಂಕಿ ಹಚ್ಚೆಯ ಯೋಚನೆಯನ್ನು ಕೈ ಬಿಟ್ಟಿದ್ದ. ಈಗ ಜನವರಿ ಹದಿನಾಲ್ಕರ ಇಪ್ಪತ್ತಾರನೇ ಬರ್ತ್‌ಡೇ ಹೊತ್ತಿಗೆ ಹಳೆಯ ಎಲ್ಲ ಅಂಟುನಂಟುಗಳನ್ನು ಕೊಡವಿಕೊಳ್ಳುವ ವಿಲಕ್ಷಣ ಹುಮ್ಮಸ್ಸಷ್ಟೇ ರೂಪಿಸಿರುವ ತನ್ನದೇ ಒಂದು ಅಜೆಂಡಾದಲ್ಲಿ ತನಗೊಂದು ಹೊಸ ವಿಭಿನ್ನ ಇಮೇಜನ್ನು ಕಟೆದುಕೊಳ್ಳುವುದು ಅವನಿಗೆ ಮೊದಲ ಅಂಶವಾಗಿಬಿಟ್ಟಿದೆ. ಕಳೆದ ಒಂದು ವಾರದ ಅಂತರ್ಮುಖತೆಯಲ್ಲಿ ನಿಯೋಜನೆಗೊಂಡ ಆ ಅಜೆಂಡಾದಲ್ಲಿ ತನ್ನ ಅವಳಿ ಅಣ್ಣ ಶ್ರೀನಿಯೊಟ್ಟಿಗಿನ ಎಲ್ಲ ಹೋಲಿಕೆಯನ್ನು ಕಳಚಿಬಿಡುವ ಹುನ್ನಾರವಿದೆ. +ಈವರೆಗಿನ ಆರು ಖಾಸಗೀ ಕತ್ತಲುಗಳಲ್ಲಿ ತನ್ನನ್ನು, ತನ್ನ ಭವಿತವ್ಯದ ನಿಟ್ಟುಗಳನ್ನು ಬೇರೊಂದು ಕೋನದಿಂದ ನೋಡಿ ಆಮೂಲಾಗ್ರವೆನ್ನುವಂತೆ ವೆಂಕಿ ತಡಕಿಕೊಂಡಿದ್ದಾನೆ. ಅವನ ಅಂತರ್ಮುಖತೆಯಲ್ಲಿ ಅತೀವ ಸ್ವಕೀಯವೆನ್ನುವ ಹಮ್ಮಿದೆ. ತನಗಿನ್ನು ತಾನೇ ಎನ್ನುವ ಪರಮಾಪ್ತತೆಯಿದೆ. ತಾನಿನ್ನು ಪ್ರಶ್ನಾತೀತನೆನ್ನುವ ಸಡ್ಡಿದೆ. ಜಿಮ್ಮುಗನ್ನಡಿಯ ದೊಡ್ಡ ದೊಡ್ಡ ಹರಹುಗಳಲ್ಲಿ ತೋರುವ ಹತ್ತಾರು ಚಹರೆ ಚರ್ಯೆಗಳಲ್ಲಿ ತನ್ನೊಬ್ಬನದೇ ಬಿಂಬವಷ್ಟೇ ಫೋಕಸ್‌ಗೊಂಡು ಪ್ರಧಾನವೆನಿಸುತ್ತದೆ. ಹಗಲುಗಳಲ್ಲಿ ಕನ್ನಡಿ ಅದನ್ನೇ ಪಿಸುಗುಟ್ಟುತ್ತದೆ. ಕತ್ತಲು ಆ ಕನಸಿನ ಸಾಕಾರದತ್ತ ತುಣುಕು ತುಣುಕಿಗೆ ಕನ್ನಡಿ ಹಿಡಿಯುತ್ತದೆ. ‘ಏಥಿ ಟಿx ಛಿ ಜಣಡಿಣಿqeಥಿeq ಜಿಟಿಞಞeತಿeuಥಿ ದಿಟಿe ಣಿಣಟಿuಥಿ’ – ಎಂದು ಮತ್ತೆ ಮತ್ತೆ ತನಗೆ ತಾನೇ ಹೇಳಿಕೊಳ್ಳುತ್ತಾನೆ. ಕಳೆದ ಮಂಗಳವಾರ ಸಂಜೆ ಇತ್ತ ರೂಮೂ ಅಲ್ಲದ ಅತ್ತ ಮನೆಯೂ ಅಲ್ಲದ ತನ್ನ ಹೊಸತಾಗಿ ಬಾಡಿಗೆ ಹಿಡಿದ ಬೆನ್ಸನ್ ಟೌನಿನ ಮೂಲೆಯ ವಸತಿಗೆ ಬಂದವನೇ ಟ್ರ್ಯಾಕ್ಸು ಟೀಷರಟು ಕಳಚಿ ಬ್ರೀಫಿನಲ್ಲಷ್ಟೇ ಕನ್ನಡಿಯ ಮುಂದೆ ನಿಂತವನು ಎಂತೆಂಥದೋ ಪೋಸಿಗೆ ತೊಡಗಿಬಿಟ್ಟಿದ್ದ. ಹತ್ತಾರು ಕಾಲದಲ್ಲಿ ದಿನಾಲೂ ಬೆವರಿಳಿಸಿ ಸೊಕ್ಕಿಸಿದ ಖಂಡ ಖಂಡವನ್ನೂ, ಧಮನಿ ಧಮನಿಯನ್ನೂ ಮಸೂರಗಣ್ಣಿನಿಂದ ದಿಟ್ಟಿಸಿ ನೋಡಿದ್ದ. ಬಲಗಿವಿಯ ಕೆಳನೇರದ ಕೊರಳಿನಲ್ಲಿರುವ ಮಚ್ಚೆಯ ಹರವು ಇನ್ನಷ್ಟು ದೊಡ್ಡದಿರಬಾರದಿತ್ತೆ ಅಂತ ಕೆಲವು ಕ್ಷಣ ಅವನಿಗೆ ಅನಿಸಿತ್ತು. ಸಿನೆಮಾಗಳಲ್ಲಿ ತೋರಿಸುವಂತೆ ಅವರಿಬ್ಬರ ಅವಳಿ ಚರ್ಯೆಗಳಲ್ಲಿ ಶ್ರೀನಿಯಿಂದ ತಾನು ಬೇರೆ ಅನ್ನಿಸಿಕೊಳ್ಳಲಿಕ್ಕೆ ಅದೊಂದೇ ಗುರುತಷ್ಟೆ. ಹಾಗಾಗಿ ಅದು ಇನ್ನಷ್ಟು ಪ್ರಧಾನವಾಗಿ ತೋರುವಂತಿದ್ದಿದ್ದರೆ ಚೆನ್ನಿತ್ತಲ್ಲವೆ? ಉಳಿದ ಒಡಲನ್ನು ಹೊರತುಗೊಳಿಸಿ ಮುಖದ ಮೇಲೆ ನೋಟ ನೆಟ್ಟಾಗ ಅದನ್ನು ಶ್ರೀನಿಯದಕ್ಕಿಂತ ಹೇಗೆ ವಿಭಿನ್ನಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿ ವೆಂಕಿ ಕಳೆದುಹೋಗಿದ್ದ. ತನ್ನ ಮುಡಿಯ ಗುಂಗುರನ್ನು ನೇರಗೊಳಿಸಿ, ಕೂದಲನ್ನು ಉದ್ದಗೊಳಿಸಿದರೆ ಹೇಗೆ? ಇನ್ನೂ ಸಾಕಷ್ಟು ಬಲಿಯದ ಕೆನ್ನೆ ಗಲ್ಲ ಗದ್ದಗಳ ಮೇಲಿನ ಕಳೆಯನ್ನು ಹುಲುಸುಗೊಳಿಸುವುದು ಹೇಗೆ? ಇಬ್ಬರಲ್ಲೂ ಅಷ್ಟೇನೂ ಒತ್ತಾಗಿರದ ಹುಬ್ಬಿನ ರಚನೆಯನ್ನು ತಾನೊಬ್ಬನೇ ಗಾಢಗೊಳಿಸಿದರೆ ಹೇಗೆ? ಎರಡೂ ಕಿವಿಗಳಲ್ಲಿ ಇನ್ನೂ ಮುಚ್ಚಿರದ ರಂಧ್ರಗಳಲ್ಲಿ ಸಂಪಂಗಿಯಂತೆ ನಕ್ಷತ್ರಗಳ ಕಿಡಿ ತೊಟ್ಟರೆ ಹೇಗೆ? ಹೀಗೆ ಕನ್ನಡಿಯಲ್ಲಿ ತನ್ನ ಮುಖದ, ಮುಂಡದ ವಿವರಗಳನ್ನು ತಡಕುತ್ತ ಹೋದಂತೆ ಒಂದು ಸೂಕ್ಷ್ಮ ಸ್ತರದಲ್ಲಿ ಕೆಲವು ಶ್ರೀನಿಯದೆ ಅನ್ನಿಸಿ – ಥತ್! ತಾನು ತಾನಾಗಿಯೇ ಇರಬಾರದಿತ್ತೆ!! – ಅಂತ ಸಶಬ್ದ ಹೇಳಿಕೊಂಡು, ಮತ್ತೆ ದೇಹದ ಖಾಸಗೀ ಪರಾಮರ್ಶೆಯಲ್ಲಿ ತೊಡಗಿಕೊಂಡಿದ್ದ. ನಡೆದಾಗ ಒಂದು ಭಂಗಿಯಲ್ಲಿ ತಾನು ಅವನಂತೆ ಅನ್ನಿಸಬಹುದೆಂದು ಅಗತ್ಯಕ್ಕಿಂತ ಹೆಚ್ಚು ಎದೆ ಸೆಟೆಸಿ ಕೆಲವು ಹೊಸ ನಡಿಗೆಯ ಮಾದರಿಗಳನ್ನು ರೂಢಿಕೊಂಡ. ಮರುನಸುಕಿನಲ್ಲಿ ಎಂದಿನಂತೆ ಐದಕ್ಕೇ ಎದ್ದು ಮತ್ತೆ ಕನ್ನಡಿಯಲ್ಲಿ ಇಳಿದು – ಅರೆ! ಇದು ಅವನೇ! – ಅನ್ನಿಸಿ ಬಿಂಬದ ಆಳಕ್ಕಿಳಿದಂತೆ ಮನಸ್ಸು ಅಸಂಗತ ಸುಳಿಗೆ ಸಿಕ್ಕಿ ಗಿರಿಗಿರಿ ಸುರುಳಿ, ಕೊನೆಗೆ ಆರರ ಕೆಲಸಕ್ಕೆ ಅರ್ಧ ತಾಸು ತಡವಾಗಿ ಹೋಗಿ ಬಯ್ಯಿಸಿಕೊಂಡೂ ಇದ್ದ. +‘ಕ್ಯಾ ಬೋಲ್ತೀ?’ ಎಂದು ವಯಸ್ಸಾದ ಮುಸಲ್ಮಾನ ಎದ್ದು ಹತ್ತಿರ ಬಂದಾಗ ವೆಂಕಿ ಬೈಕಿನಿಂದ ಇಳಿದು ಹಚ್ಚೆಯವನನ್ನು ಕುರಿತು ಕೇಳುತ್ತಾನೆ. ‘ಸಾಮೀ! ಈ ಜಗಾಹ್‌ದಲ್ಲಿ ಅಡ್ರೆಸ್ಸ್ ಇಲ್ದೇ ಏನು ಖೋಜ್ ಮಾಡ್ತೀ?’ ಅನ್ನುತ್ತ ಅವನು ದಟ್ಟ ಶಿವಾಜಿನಗರಿಯಲ್ಲಿ ಗಡ್ಡ ತುರಿಸಿಕೊಳ್ಳುತ್ತಾನೆ. ವೆಂಕಿ ಮತ್ತೆ ಬೈಕು ಕುಟುಕುಟಿಸಿ ಮತ್ತೊಂದು ಸುತ್ತಿಗೆ ಅಣಿಯಾಗುತ್ತಾನೆ. ಹಗಲು ತನ್ನ ಕೊನೆಯ ಪಾಳಿಯತ್ತ ಹೊರಳುತ್ತದೆ. ವಿಳಾಸವಿಲ್ಲದೆ ಒಬ್ಬನನ್ನು ಹುಡುಕುವ ತನ್ನ ಸಾಹಸದ ಬಗ್ಗೆ ಅವನಿಗೆ ನಗೆ ಬರುತ್ತದೆ. ಆದರೆ ಆ ಕುರಿತು ಅವನಿಗೆ ಕೊಂಚವೂ ಹತಾಶೆಯಿಲ್ಲ. ಅವನ ಮನಸ್ಸಿನ ತುಂಬಾ ಹಚ್ಚೆಯ ಚಿತ್ತಾರ ತುಂಬಿಕೊಂಡಿದೆ. ಅಸಂಗತ ದೂರದಲ್ಲಿ ಶರಭವನ್ನು ಹೋಲಿಸುವ ಒಟ್ಟಾರೆ ನಾಜೂಕಿನ ಹಸಿರು ಎಳೆಗಳು. ಕಾವಿನ ಮೊನಚು ಮೈಗೆ ಚುಚ್ಚಿದರೆ ಅಸಾಧ್ಯ ಯಾತನೆಯಾಗುವುದಿಲ್ಲವೆ? ಬುದ್ಧಿ ಬಂದಾಗಿನಿಂದ ಶ್ರೀನಿಯತ್ತಲೇ ಎಲ್ಲ ರೀತಿಯಲ್ಲೂ ತುಸು ವಾಲಿ ಅವನ ಪರ ವಹಿಸಿ ಚುಚ್ಚುವ ಮನೆಯವರ ತಿವಿಯುವಂತಹ ಮಾತುಗಳಿಗಿಂತ ಕೆಂಪಗೆ ಕಾದ ಕಡ್ಡಿ ತೊಗಲಿನಾಳಕ್ಕಿಳಿದು ನೆತ್ತರನ್ನು ಸೀಯಿಸಿದರೆ ನೋವಾಗದೇನೋ. ನೋವಾದರೂ ಅದನ್ನು ತಡೆಯಬಲ್ಲೆನೆಂಬ ವಿಚಿತ್ರ ನಂಬಿಕೆ ಅವನದ್ದು. ‘ಚಿಕ್ಕವನಿರುವಾಗಿನಿಂದ ಇಬ್ಬರೂ ಹೀಗೇನೇ. ನಮ್ಮ ವೆಂಕಿಗೆ ಏನು ಬೇಕೋ ಅದೇ ಶ್ರೀನಿಗೂ ಬೇಕು. ಇವನು ಎಲ್ಲಾದರಲ್ಲೂ ಸೋತು ಬಿಟ್ಟುಬಿಡ್ತಾನೆ. ಸೋತು ಗೆಲ್ಲೋದರಲ್ಲೇ ಖುಷಿ ಇದೆ ಅಂತ ನಾವು ಇವನಿಗೆ ಹೇಳ್ತಾ ಇರ್‍ತೀವಿ. ಅಷ್ಟಕ್ಕೂ ಇವನು ಜೀವನದಲ್ಲಿ ಅದೇನು ಸಾಧಿಸಿದ್ದಾನೆ ಹೇಳಿ? ಇವನು ಮನೆಗೆ ಅಂತ ಒಂದು ಎರಡು ಸಾವಿರ ಕೊಟ್ಟರೆ ಈ ಕಾಲದಲ್ಲಿ ಏನು ಸಾಕಾಗುತ್ತೆ ಹೇಳಿ. ಶ್ರೀನಿ ತನ್ನದೆ ಅಂತ ಈ ಅಂಗಡಿ ಹಾಕ್ಕೊಂಡ ಮೇಲೆ ನಾವೂ ಅಷ್ಟೋ ಇಷ್ಟೋ ಚೆನ್ನಾಗಿದ್ದೀವಿ. ಇವರಿಬ್ಬರದ್ದು ಏನು ಓದಾ? ಬರಾನಾ? ನಾನಂತೂ ಇವನ ಕೈ ಬಿಟ್ಟುಬಿಟ್ಟಿದ್ದೀನಿ. . . . ಸಂಪಂಗಿ ತನ್ನ ಪಾಡಿಗೆ ತಾನು, ತಾನಾಯಿತು ತನ್ನ ಕೆಲ್ಸ ಆಯಿತು ಅಂತ ಇದ್ದಾನೆ. ಈ ವೆಂಕಿಗೊಂದು ಒಂದು ನೆಲೆ ಕೊಡಬೇಕು ಅಂತ ನಾವೆಲ್ಲ ಎಷ್ಟು ಮಾಡಿದ್ದೀವಿ. ಒಂದು ಕಡೆ ಸರಿಯಾಗಿ ನಿಲ್ಲೋಲ್ಲ. ಮೂರು ವರ್ಷದಲ್ಲಿ ನಾಲಕ್ಕು ಕೆಲಸ ಬದಲಾಯಿಸಿದ್ದಾನೆ. ಹೋಗಲಿ ಹೇಗೋ ಶ್ರೀನಿ ಜೊತೆನೇ ಅಡ್ಜಸ್ಟ್ ಮಾಡ್ಕೊಂಡು ಇರೋ ಅಂದರೆ ಇಬ್ಬರೂ ಕೋಳಿಗಳ ಥರಾ ಕಿತ್ತಾಡ್ತಾರೆ. . . ನನಗಂತೂ ಸಾಕು ಸಾಕಾಗಿ ಹೋಗಿದೆ. ಈಗ ಬೇರೆ ಮನೆ ಮಾಡ್ಕೊಂಡು ಹೋಗು ಅಂತ ನಾನೇ ಹೇಳಿದ್ದೀನಿ. . . . . ’ – ಎಂದು ಅಮ್ಮ ತನ್ನನ್ನು ಹುಡುಕಿಕೊಂಡು ಬಂದ ಪ್ರಕಾಶನಿಗೆ ಹೇಳಿದ್ದಳಂತೆ. ತನ್ನನ್ನು ಹೀಗೆ ಒಬ್ಬನೇ ಇರುವಂತೆ ಹೇಳಲು ಶ್ರೀನಿಯದೇ ಪ್ರೇರೇಪಣೆ. ಎಷ್ಟಾದರೂ ಅವನಿಗೆ ತಾನು ಕಣ್ಣು ಹಾಕಿದ್ದನ್ನೆಲ್ಲ ಗಿಟ್ಟಿಸಿಕೊಳ್ಳುವ ಬುದ್ಧಿ. ಅಜ್ಜಿ ಅಮ್ಮನಿಗೆಂದು ಕೊಟ್ಟ ಮೈಕೆಲ್ ಪಾಳ್ಯದ ಸೈಟಿನಲ್ಲಿ ಅಚ್ಚುಕಟ್ಟಾದ ನಾಲ್ಕು ರೂಮುಗಳ ಮನೆಯನ್ನು ಮೂವರೂ ದುಡಿದು ಕಟ್ಟೋಣವೆಂದು ಎಷ್ಟೆಲ್ಲ ಪ್ಲ್ಯಾನು ತೆಗೆದದ್ದಾಗಿತ್ತು? ಒಂದೇ ಮಾತಿನಲ್ಲಿ ತಾನಿದ್ದರೆ ಅವನು ಇರುವುದಿಲ್ಲವೆಂದು ಎಷ್ಟು ಸುಲಭವಾಗಿ ಹೇಳಿಬಿಟ್ಟ! ಈ ಅಮ್ಮನದ್ದೂ ಎಷ್ಟಾದರೂ ಅವನನ್ನು ಕಂಡರೆ ಪ್ರೀತಿಯಲ್ಲಿ ಒಂದು ಕೊಸರು ಹೆಚ್ಚೇ. ಊಟ ಬಡಿಸುವಾಗಲೂ ಅವನಿಗೇ ಒಂದೆರಡು ತುತ್ತು ಹೆಚ್ಚು. ತಾನು ಯಾವುದರಲ್ಲೂ ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ ಅಂತ. . . . ಕೊನೆಗೆ ಇವನು ತನ್ನ ಬದುಕಿನ ಮೇಲೆ ಚಪ್ಪಡಿಯೆಳೆಯಬಲ್ಲ. . . . +ಹೊಸತಾಗಿ ಸೆಕೆಂಡ್ ಫ್ಲೋರನ್ನು ತಳೆದು ಫೇಸ್‌ಲಿಫ್ಟ್ ಮಾಡಿಸಿಕೊಂಡಿದ್ದರೂ ನೂರಾರು ಕಾಲದ ಹಳೆಯ ಕೊಂಡಿಯಂತೆ ಅಂಟಿಕೊಂಡು ಬೀದಿಗುಂಟ ಚಾಚಿಕೊಂಡಿರುವ ಜಗುಲಿಯ ಮೇಲೆ ಕುಳಿತಿದ್ದ ವೃದ್ಧ ಟ್ಯಾಟೂ ಅಂದದ್ದನ್ನು ಕೇಳಿ ಕಣ್ಣು ಪಿಳಿ ಪಿಳಿಸುತ್ತಾನೆ. ವೆಂಕಿ ಕೂಡಲೆ ತಮಿಳಿನಲ್ಲೊಮ್ಮೆ, ಕನ್ನಡದಲ್ಲೊಮ್ಮೆ ಹಚ್ಚೆಯವನನ್ನು ಕುರಿತು ಹೇಳುತ್ತಾನೆ. ವಯಸ್ಸಾದವನ ದಪ್ಪ ಗಾಜಿನಲ್ಲಿ ಧೂಳಿನ ಮಬ್ಬು ನೆನಪನ್ನೂ ಮಾಸಿಬಿಟ್ಟಿದೆ ಅನಿಸುತ್ತದೆ. ಒಳಗಿನಿಂದ ಬಂದ ಎರಡನೇ ತಲೆಮಾರಿನ ನಡುವಯಸ್ಕ ವೆಂಕಿಯನ್ನೊಮ್ಮೆ ಮುದುಕನನ್ನೊಮ್ಮೆ ಸೂಕ್ಷ್ಮವಾಗಿ ನೋಡಿ ಏನೂ ಹೇಳದೆ ಅಲ್ಲಿದ್ದ ಹೀರೋ ಹೊಂಡ ಕಿಕ್ಕಿಸಿ ಮೊದಲ ತಿರುವಿನಲ್ಲಿ ಎಡಕ್ಕೆ ಸರಿಯುತ್ತಾನೆ. ಏನೂ ತೋಚದೆ ನಿಂತವನಲ್ಲಿ ಶರಭದ ಗೆರೆಗಳು ಗಾಢಯಿಸುತ್ತವೆ. +ಮನೆಯ ಮಗ್ಗುಲಿನ ಕಿರಿಯ ಓಣಿಯಲ್ಲಿ ಬೀದಿಗೆ ಹತ್ತಿರವಿದ್ದ ವೆಂಕಿಯ ಸ್ಪ್ಲೆಂಡರನ್ನು ಹೇಳದೆ ಕೇಳದೆ ಒಂದು ಭಾನುವಾರ ಶ್ರೀನಿ ಒಯ್ದಿದ್ದ. ಹಿಂದಿನ ವಾರವಷ್ಟೇ ಎರಡು ಸಾವಿರ ಸುರಿದು ಕಂಡೀಷನ್ ಮಾಡಿಸಿದ್ದುದು ವಾಪಸು ಬಂದಾಗ ಫುಯೆಲ್ ಟ್ಯಾಂಕ್ ಎಗ್ಗಿ ಹೋಗಿತ್ತು. ಕೇಳಿದ್ದಕ್ಕೆ ಅದು ಹಾಗೆಯೇ ಇತ್ತೆಂದು ಅವನು ವಾದಿಸಿದ್ದ. ಮನೆಯ ಮುಂದಿನ ಕಡಿದು ಗಲ್ಲಿಯೆಲ್ಲ ನೆರೆಯುವ ಹಾಗೆ ರಂಪವಾದಾಗ ಪೆರಿನಾಯಕಿ ವೆಂಕಿಯನ್ನು ಒತ್ತಾಯದಿಂದ ರಟ್ಟೆ ಹಿಡಿದು ಒಳಕ್ಕೆ ಕರೆದೊಯ್ದು ರಪರಪ ಜಡಿದಿದ್ದಳು. ‘ನೀನು ಚಿಕ್ಕವನಲ್ಲವೇನೋ? ಮನೆಗೆ ಅಂತ ನೀನೇನು ಮಾಡ್ತಾ ಇದ್ದೀ ಹೇಳು? ಅವನ ಗಾಡಿ ಪಂಚರ್ ಆಗಿತ್ತು ಅಂತ ನಿನ್ನದನ್ನು ಎತ್ತಿದ್ದಾನೆ. ಅದರಲ್ಲಿ ಏನು ತಪ್ಪು ಹೇಳು? ಚಿಕ್ಕವನು – ಅಡ್ಜಸ್ಟ್ ಮಾಡಿಕೋ ಬೇಕು!!’ ನಾರಯಣ ಪಿಳ್ಳೈ ಬೀದಿಯ ಕೊನೆಯಲ್ಲಿ ಎಡಕ್ಕೆ ತಿರುಗುವಾಗ ವೆಂಕಿ ಗೇರು ಬದಲಿಸುತ್ತಾ – ನಾನು ಚಿಕ್ಕವನು! – ಎಂದು ಜೋರಾಗಿ ಹೇಳಿಕೊಳ್ಳುತ್ತಾನೆ. ನೆನಪಿರುವಂದಿನಿಂದ ಐದು ನಿಮಿಷಗಳ ಹಿರೀತನವಿರುವ ತನ್ನದೇ ರೂಹುಗಳ ನಕಲಿನಂತಿರುವ ಇವನೊಟ್ಟಿಗೆ ಈ ಬದುಕೇ ಅಡ್ಜಸ್ಟ್ ಆಗಿಬಿಟ್ಟಿದೆ. ಐದು ನಿಮಿಷದ ತರುವಾಯದಲ್ಲಿ ತಾನು ಅವನಿಗಿಂತ ತುಸು ಬೆಳ್ಳಗೋ, ಇನ್ನಷ್ಟು ಕಪ್ಪಾಗಿಯೋ ಹುಟ್ಟಬಾರದಿತ್ತೆ? ಮುನ್ನೂರು ಸೆಕೆಂಡುಗಳ ವಾಯಿದೆಯಲ್ಲಿ ಎಷ್ಟೆಲ್ಲ ಪವಾಡಗಳು ನಡೆಯಬಹುದಂತೆ. . . ಮನೆಯಿಂದ ಮೇಯಿನ್ ರೋಡಿಗೆ ನಡೆಯಬಲ್ಲ, ದಿನಾಲೂ ಕಕ್ಕಸಿಗೆ ವ್ಯಯಿಸುವ ಗಡುವಷ್ಟರ ಆ ಕಾಲಮಾನದಲ್ಲಿ ಅವನಿಗೆ ತನಗಿಂತ ದೊಡ್ಡವನೆಂಬ ಅಹಂಭಾವ! ಅವನ ಪಿಳಿಪಿಳಿ, ಕೀರಲು, ಆಕಳಿಕೆ, ಉಸಿರು, ಎದೆ ಬಡಿತ, ಕೊನೆಗೆ ಮೀಸೆ ಚಿಗುರಿದಾಗಿನ ಮೊದಲ ಪುಳಕವೂ ತನಗಿಂತ ಐದು ನಿಮಿಷ ಮೊದಲಂತೆ. ಹಾಗಾಗಿಯೇ ಅವನು ನೋಡಲು ತನ್ನ ಹಾಗೆ ಅನ್ನುವುದಕ್ಕಿಂತ ತಾನು ಅವನ ಹಾಗಂತೆ. . . ಎಲ್ಲದರಲ್ಲೂ ಅವನು ಅಗ್ರ!! ಮತ್ತೊಂದು ತಿರುವಿನಲ್ಲಿ ವೇಗ ಹೆಚ್ಚಿಸುವಾಗ ಅಮ್ಮನ ಗರ್ಭದಲ್ಲಿರುವಾಗ ತನ್ನ ಕೈಯಲ್ಲಿ ಈ ಗೇರು ಎಕ್ಸೆಲರೇಟರ್ ಇರಬಾರದಿತ್ತೆ ಅನ್ನಿಸುತ್ತದೆ ವೆಂಕಿಗೆ. +ಕಮರ್ಷಿಯಲ್ ಸ್ಟ್ರೀಟಿನ ಒಮ್ಮುಖ ಹರಿವಿನಲ್ಲಿ ಎಡಕ್ಕೆ ಕವಲೊಡೆಯುವ ಮೂರನೆಯ ಓಣಿಯಲ್ಲಿ ಬೈಕಿಗೆ ಸ್ಟ್ಯಾಂಡು ಜಡಿದು ಲಿಯೋನಿಂದ ವಿಳಾಸ ತೆಗೆದುಕೊಂಡೇ ಪುನಃ ಹಚ್ಚೆಗಾಗಿ ಬರಬೇಕೆಂದುಕೊಂಡು ವೆಂಕಿ ನಿಲ್ಲುತ್ತಾನೆ. ಬೆನ್ಸನ್ ಟೌನಿನ ಬಾಡಿಗೆ ಮನೆಗೆ ಬಂದು ಇಂದಿಗೆ ಎರಡು ವಾರಗಳು ಕಳೆದಿವೆ. ವಾರದಿಂದ ಅಮ್ಮನಿಗೂ ಅವನ ಉಸಾಬರಿಯಿಲ್ಲ. ಇನ್ನು ಮುಂದಕ್ಕೆ ತನ್ನ ಕೆಲಸವಷ್ಟೇ ತನಗೆ ಎಲ್ಲ ಅನ್ನುವ ಹಾಗೆ ಇದ್ದುಬಿಟ್ಟಿದ್ದಾನೆ ಅವನು. ಹದಿನೆಂಟರ ಆ ಶನಿವಾರದ ಘಟನೆಯಂತೂ ಅವನಿಗೆ ಬದುಕಿನಲ್ಲಿ ಇದ್ದ ನಂಬಿಕೆಯನ್ನೂ, ಮನೆಯವರ ಮೇಲಿನ ವಾಂಛೆಯನ್ನೂ ಪೂರ್ತಾ ಬುಡ ಸಮೇತ ಕಿತ್ತೊಗೆದಿತ್ತು. ಐದು ನಿಮಿಷಗಳ ಹಿರೀಕನೆನಿಸಿರುವ ಅವನದೇ ಪಡಿಯಚ್ಚು ಅವನ ಮೇಲೆ ಎಂತಹ ಹಿರಿತನವನ್ನು ಜಡಿದಿತ್ತು ಅಂದರೆ ಅವನ ಇರವೇ ಘಾಸಿಗೊಂಡಿತ್ತು. ಆ ಘಾಸಿಯಲ್ಲಿ ಶ್ರೀನಿಯ ಹಿರಿತನ ಒತ್ತಿದ ಕುಟಿಲ ಮೊಹರು. ಅಂದು ವೆಂಕಿಯ ಪ್ರಪಂಚದ ಎಲ್ಲ ಹಿಸ್ಸೆಗಳು ಟೊಳ್ಳೆನಿಸಿದ್ದವು. ಹಾಗೂ ಹೀಗೂ ಗಟ್ಟಿ ಅಂತನಿಸಿದವೆಲ್ಲ ಮೋಸ ಅನ್ನಿಸಿತ್ತು. +ಹತ್ತು ನಿಮಿಷಗಳ ಬಳಿಕ ಮಗ್ಗುಲಿನ ಇಮಿಟೇಷನ್ ಜುಯೆಲ್ಲರಿ ಮಳಿಗೆಯೊಳಕ್ಕೆ ಮೆಲ್ಲನೆ ಬರುತ್ತಾನೆ. ಒಳಗೆ ಮೇಲಿನ ಮೆಜನೈನಿಗೆ ಮೆಟ್ಟಿಲು ಏರುವಾಗ ಎದುರಿನ ಕನ್ನಡಿಯಲ್ಲಿ ಫಕ್ಕನೆ ತನ್ನ ನೆರಳು ಕಂಡು ಅದು ಶ್ರೀನಿಯೇ ಎಂದು ಒಮ್ಮೆ ಹುಬ್ಬೇರಿಸಿ ಹಿಂದಕ್ಕೆ ಬಂದು ಮತ್ತೆ ಅಭ್ಯಾಸ ಮಾಡಿದ ಹೊಸ ಭಂಗಿ ಹೊತ್ತ ನಡಿಗೆಯಲ್ಲಿ ಮೇಲೇರುತ್ತಾನೆ. ಕನ್ನಡಿಯೊಳಕ್ಕೆ ಇನ್ನೇನು ಹುದುಗಿಯೇ ಬಿಡಬಹುದು ಎನ್ನುವಷ್ಟು ಹತ್ತಿರವಾದಾಗ ಹುಬ್ಬೇರಿಸಿ ಕೊಂಕನೆ ನಕ್ಕು – ‘Iಣ is me – ಣhe oಟಿe ಚಿಟಿಜ oಟಿಟಥಿ – ಗಿeಟಿಞಚಿಣesh ಗಿಚಿiಞuಟಿಣಚಿm’ ಗಟ್ಟಿಯಾಗಿ ಹೇಳಿಕೊಂಡು ಲ್ಯಾಂಡಿಂಗ್‌ನಲ್ಲಿ ತಿರುವಿ ಮುನ್ನಡೆಯುವಾಗ ಗಿeಟಿಞಥಿ, ಥಿou ಚಿಡಿe ಜiಜಿಜಿeಡಿeಟಿಣ ಚಿಟಿಜ uಟಿique!! ಎಂದು ಸಾರುವಂತೆ ಎದೆ ಸೆಟೆಸುತ್ತಾನೆ. ಎದುರಿನ ಗಾಜುಗದ ಜೀಕುತ್ತ ಆಚೆ ಬಂದ ಸಪೂರದ ಹುಡುಗಿ ಊi Shಡಿeeಟಿi! ಊoತಿ ಛಿome heಡಿe?’ ಎಂದು ತೊನೆಯುತ್ತಿದ್ದಂತೆ ಅವನ ಹುಮ್ಮಸ್ಸೆಲ್ಲ ಠುಸ್ಸೆಂದು ಬಿಡುತ್ತದೆ. ತಾನು ಅವನಲ್ಲವೆಂದು ಹೇಳಿಕೊಳ್ಳುವ ಮೊದಲೇ ‘ಊoತಿ ಛಿome ಚಿಟoಟಿe? ಶರೋಣ್ ಎಲ್ಲಿ?’ ಎಂದು ಮತ್ತೊಂದು ಮದ್ದೆಸಗುತ್ತಾಳೆ. ವೆಂಕಿಗೆ ಅದೇನನ್ನಿಸಿತೋ ಅವಳತ್ತ ಮುಸುಡಿ ಕೊಂಕಿಸಿ ಕದ ಜೀಕಿ ಬೆಳ್ಳಿಯ ಸ್ಟಡ್‌ಗಳಿರುವ ವಿಭಾಗಕ್ಕೆ ಬರುತ್ತಾನೆ. ಅಯ್ಯೋ ಬದುಕೆ! ಈ ಸಾಮ್ಯದ ವಿಡಂಬನೆಗೂ ಒಂದು ಮಿತಿ ಬೇಡವೆ? ವೆಂಕಿಗೆ ಈಗ ತನ್ನ ರೂಪದ ಮೇಲೆ ಇನ್ನಷ್ಟು ಹೆಚ್ಚು ಮುನಿಸು ಬರುತ್ತದೆ. ಶರೋಣ್‌ಳ ಹೆಸರನ್ನು ಕೇಳಿದ ಕೂಡಲೇ ಮುನಿಸು ಕೆಂಡದಲ್ಲಿ ಹೊರಳಿ ಪುಟಗೊಳ್ಳುತ್ತದೆ. ನೂರಾರು ಬೆಳ್ಳಿಯ ಸುತ್ತುಗಳಿರುವ ಕರ್ಣಕುಂಡಲಗಳ ಷೋ-ವಿಂಡೋದ ಹಿನ್ನೆಲೆಯಲ್ಲಿ ಅವನ ಮುಖದ ಕೋಪ ತೋರಿಕೊಳ್ಳುತ್ತದೆ. ಅಲ್ಲೆಲ್ಲ ಒಂದು ನಮೂನೆ ಕೆಂಡದ ನಿಗಿನಿಗಿ. +ಸೇಲ್ಸ್‌ಮನ್ ಗಾಜಿನ ಮೇಲ್ಮೈಯುಳ್ಳ ಮೇಜಿನಿಂದ ಕಿವಿಯ ನಕ್ಷತ್ರಗಳನ್ನು ತೆಗೆಯುವಾಗ ವೆಂಕಿಯಲ್ಲಿ ಒಂದು ಮಾದರಿಯ ನಿರ್ಭಾವುಕತೆ ಮಡುಗಟ್ಟಿದೆ. ಉದಾಸದಿಂದಲೇ ಆ ಟ್ರೇಯಿಂದ ಕೆಲವನ್ನು ಹೆಕ್ಕಿ ಕಿವಿಯಲ್ಲಿ ತೊಟ್ಟು ಕನ್ನಡಿಗೆ ಮುಖವೊಡ್ಡುತ್ತಾನೆ. ಕನ್ನಡಿಯಲ್ಲಿ ಅವನ ಮುಖವನ್ನು ಹಾಯುವಂತೆ ಅವಳು ಈಸಿದ್ದಾಳೆ. ಕೆನ್ನೆ ಗಲ್ಲಗಳಲ್ಲಿ ಬೆರಳ ಮೊನೆಯಾಡಿಸುತ್ತಾಳೆ. ಮೂರು ವರ್ಷಗಳಿಂದ ತನಗೆ ದುಂಬಾಲು ಬಿದ್ದು ಸ್ನೇಹದ ನೆವದಲ್ಲಿ ತನ್ನೊಟ್ಟಿಗೇ ಏನೆಲ್ಲ ನಡೆಸಿದವಳು! ಅವನ ಕಣ್ಣುಗಳು ತದೇಕಚಿತ್ತಗೊಂಡು ಕಿವಿ ಕಿಡಿಯಲ್ಲಿ ನೆಡುವಾಗ ಮಂಪರುಗೊಳ್ಳುವಂತೆ ಉಕ್ಕಿವೆ. ಒಮ್ಮೆಲೇ ಕಿವಿಯಿಂದ ಕಿಡಿ ತೆಗೆದು ಸೇಲ್ಸ್‌ಮನ್‌ಗೆ ವಾಪಸಿತ್ತು – ‘ಖಿhಚಿಟಿಞ ಥಿou. I ತಿiಟಟ ರಿusಣ be bಚಿಛಿಞ..’ – ಎಂದು ಮಳಿಗೆಯಿಂದ ಬೀದಿಗೆ ಬರುತ್ತಾನೆ. ಕ್ರಿಸ್‌ಮಸ್ ಸಂದರ್ಭ ಬೀದಿಗೆ ಝಗಮಗ ಜಿಗಿಜಿಗಿ ಆವಾಹಿಸಿದಂತಿದೆ. ನಕ್ಷತ್ರ ದೀಪಗಳು, ಸೀರಿಯಲ್ ಲೈಟುಗಳು, ಮೆರ್ರಿ ಕ್ರಿಸ್ಮಸ್ ಹೋರ್ಡಿಂಗುಗಳು ಗಜಿಬಿಜಿಯ ಘಟಕಗಳಾಗಿವೆ. ಅದೋ – ಆ ಮೂಲೆಯ ಎತ್ತರದ ನೆತ್ತಿಯಲ್ಲಿ ಸಾಂತಾನ ಚಿತ್ರದ ಮೇಲೆ ಬೆಳ್ಳನೆ ಬೆಳಕು. ಅಲ್ಲಿಯೇ ನಿಂತು ಕಣ್ಣು ಮುಚ್ಚಿ ಒಮ್ಮೆ, ಆಕಾಶದ ಗೋಣಿನಲ್ಲೊಮ್ಮೆ ಮೂಕವಾಗಿ ಮೊರೆಯಿಡುತ್ತಾನೆ. +ಅವಳು ಕ್ರಿಸ್‌ಮಸ್‌ಗೆಂದು ಊರಿಗೆ ಹೋಗುವ ಮೊದಲಿನ ಎರಡು ದಿನ ಅವನೊಟ್ಟಿಗೆಂದು ತಿಂಗಳುಗಳ ಹಿಂದೆಯೇ ಯೋಜನೆಯಾಗಿತ್ತು. ಐeಣ us go ouಣ ಗಿeಟಿಞಥಿ ಚಿಟಿಜ shಚಿಡಿe some iಟಿಣimಚಿಣe ಣime!! ಅದು ನಿನಗೆ ಕ್ರಿಸ್‌ಮಸ್ ಗಿಫ್ಟ್!’ – ಎಂದು ಆ ಸಂಜೆ ಕೆರೆಯಂಚಿನಿಂದ ಹಾಯಿದೋಣಿಯವರೆಗೆ ಮಾತು ಕಟ್ಟಿದ್ದಳು. ಸಂಜೆ ಹಾಸ್ಟೆಲ್ ಬಳಿ ಬೈಕಿನಿಂದ ಇಳಿಯುವಾಗ ಮುಂಗೈ ಮುದ್ದಿಸಿ ಕಣ್ಣು ಮಿಟುಕಿಸಿದ್ದಳು. ‘ಈ ವಾರ ನನ್ನ ಪರೀಕ್ಷೆ ಮುಗೀತಿದ್ದ ಹಾಗೆ ಕ್ರಿಸ್ಮಸ್ ರಜೆ. ನೆನಪಿರಲಿ!!’ ವೆಂಕಿ ಕಣ್ಣಿನಿಂದ ತೊಟ್ಟಿಕ್ಕಿದ ಬಿಂದುವನ್ನು ಅಂಗೈಯಲ್ಲಿ ಹಿಡಿದು ನಿಟ್ಟಿಸುತ್ತಾನೆ. ಅದರಲ್ಲಿ ತುಳುಕಿದ ಬಣ್ಣ ಬಣ್ಣದ ಬೆಳಕು ನಿಯಾನಿನದೆ ಅಥವಾ ಸೋಡಿಯಮ್ಮಿನ ಕಾಮಾಲೆ ಕಣ್ಣಿನದೆ? ಥತ್!! ಯಾವುದಾದರೇನು? ಕಳೆದ ಶನಿವಾರವ – ಹದಿನೆಂಟರಂದು ಸಂಪಂಗಿ ಯಾವುದಕ್ಕೋ ಫೋನು ಮಾಡಿದ ದೇಶಾವರಿಯಲ್ಲಿ ಶ್ರೀನಿ ಎರಡು ದಿನಗಳಿಂದ ಮನೆಯಲ್ಲಿಲ್ಲವೆಂಬ ಸುದ್ದಿ ಹೇಳಿದ್ದ. ಅದರ ಹಿಂದಿನ ಮೂರು ದಿನಗಳಿಂದ ಅವಳ ಮೊಬೈಲಿಗೆ ಕಾಯುತ್ತಿದ್ದವನು ಅವಳು ಮಾತಿಗೆ ಸಿಗಲಿಲ್ಲವೆಂದು ಒಮ್ಮೆ ಅವಳ ಹಾಸ್ಟೆಲ್‌ಗೆ ಹೋಗಿ ವೆಂಕಿ ವಿಚಾರಿಸಿದ್ದ. ‘ಇಲ್ಲ ವೆಂಕಿ! ನಾನು ಪರೀಕ್ಷೆ ಮುಗಿದ ಕೂಡಲೆ ಊರಿಗೆ ಹೋಗಬೇಕು. ಮಮ್ಮಿ ಕೂಡಲೆ ಬರಹೇಳಿದ್ದಾರೆ.’ – ಅನ್ನುವಾಗಲೇ ಅವನನ್ನು ಏನೋ ಶಂಕೆ ತಡಕಿತ್ತು. ಸಂಪಂಗಿಯಿಂದ ಶ್ರೀನಿಯ ಸುದ್ದಿ ತಿಳಿದದ್ದೇ ವೆಂಕಿ ಇಬ್ಬರ ಮೊಬೈಲುಗಳಿಗೆ ಫೋನು ಹಚ್ಚಿದ್ದ. ಒಮ್ಮೆಯೂ ಇಬ್ಬರಿಂದಲೂ ಉತ್ತರವಿಲ್ಲ. ಏರ್‌ಟೆಲ್‌ನಲ್ಲಿರುವ ಪರಿಚಯದ ಓರಗೆಯವನೊಬ್ಬನಿಗೆ ಇಬ್ಬರ ನಂಬರುಗಳನ್ನು ಕೊಟ್ಟು ಅವರೆಲ್ಲಿರಬಹುದೆಂದು ವಿಚಾರಿಸಿಕೊಂಡ. ಉತ್ತರವಾಗಿ ಮಡಿಕೇರಿಯ ರಾಜಾಸೀಟ್ ಮೇಲಿರುವ ಏರ್‌ಟೆಲ್ ಟವರಿನ ಸುಳಿವು ಸಿಕ್ಕಿತ್ತು. ಕಣ್ಣುಗಳೇ ತೂಗದ ಆ ರಾತ್ರಿ ಘೋರವೆನಿಸಿತ್ತು. ಕತ್ತಲ ನೆರಳಿನಲ್ಲೂ ಅವಿಶ್ವಾಸದ ಹೊಂಚಿತ್ತು. ಹನ್ನೆರಡರ ಸುಮಾರಿಗೆ ಅಮ್ಮನಿಗೆ ಫೋನಿಸಿದಾಗ ಧ್ವನಿ ತೂಗುತ್ತಿತ್ತು. ಪೆರಿನಾಯಕಿಗೆ ಮಗ ಕಂಡಾಪಟ್ಟೆ ಇಳಿಸಿದ್ದರ ಮತ್ತು ಪರಿವೆಗೆ ಬಂದಿರಲಿಲ್ಲ. ‘ಅವನೆಲ್ಲಿದ್ದರೆ ನಿನಗೇನೋ? ಅವನು ಆ ಮಂಗಳೂರು ಹುಡುಗಿ ಜೊತೆ ಹೋಗಿದ್ದರೂ ತಪ್ಪಿಲ್ಲ ಬಿಡು. ಎಷ್ಟಾದರೂ ನಿನಗಿಂತ ದೊಡ್ಡವನು!! ನನಗೂ ಆ ಶರಣ್ಣು ಕ್ರಿಸ್ತೀನಾದರೂ ಶ್ರೀನಿಗೆ ಸರಿ ಅನ್ನಿಸುತ್ತೆ!!’ ಅಂದಿನ ಮಂಪರು ಮರುದಿನ ಜಿಮ್ಮಿನ ಕನ್ನಡಿಗಳಲ್ಲೂ ಮಬ್ಬಡರಿಸಿತ್ತು. ಸಂಜೆಯ ವೇಳೆಗೆ ಎಂಥದೋ ಖಚಿತ ನಿಲುವು ತಳೆದವನ ಹಾಗೆ ಮನಸ್ಸು ನಿಲೆಗೊಂಡಿತ್ತು. ಬಯೋಟೆಕ್ನಾಲಜಿ ಜೀವದ ನಕಲನ್ನು ಮಕ್ಕಿ ಕಾ ಮಕ್ಕಿ ತೆಗೆಯುವುದಾದರೆ ತಾನು ಅದೇನೂ ಇಲ್ಲದೆ ತನ್ನ ನಕಲಿತನವನ್ನು ಕಳಚಿ ಡೀ-ಕ್ಲೋನ್ – ಜಿeಜqಣue ಆಗಬೇಕು. ಈ ಒಂದು ನಿರ್ಧಾರದಿಂದಷ್ಟೇ ಅವನಿಗೆ ವಯಸ್ಸು ಐದು ನಿಮಿಷ ಹೆಚ್ಚಿದಂತಾಗಿ ಮನಸ್ಸು ಗಟ್ಟಿಗೊಂಡಿತ್ತು. +ಸಾಂತಾನನ್ನು ನೋಡುತ್ತ ಎಷ್ಟೋ ಹೊತ್ತು ನಿಂತ ಕೊನೆಗೆ ವಾಸ್ತವಕ್ಕಿಳಿದು ವೆಂಕಿ ಹೆಜ್ಜೆಗಳನ್ನು ಭಾರದಿಂದ ತೂಗುತ್ತ ಬೈಕಿನತ್ತ ಬರುತ್ತಾನೆ. ತನಗೆ ನೆನಪಿರುವ ಹಾಗೆ ಬೆಳವಣಿಗೆಯ ಹೆಸರಿನಲ್ಲಿ ಹತ್ತು ವರ್ಷಗಳಲ್ಲಿ ಹಾಗೆ ತನ್ನೊಳಗೆ ಗಿಲೀಟಿನ ಜಡ್ಡು ಕೂಡಿಕೊಳ್ಳುತ್ತಿರುವ ಊರು ತನ್ನ ಮೇಲೂ ಅದನ್ನೇ ಹೇರಿಬಿಟ್ಟಿದೆ ಅನಿಸುತ್ತದೆ. ಈ ಥಳುಕಿನ ಅಡವಿಯಲ್ಲಿ ಎಲ್ಲರೂ ಗಿಲೀಟಿನ ಹೂವುಗಳೇ ಸರಿ. . . ಇದ್ದಕ್ಕಿದ್ದಂತೆ ಅವನಲ್ಲಿ ಎಂಥದೋ ಸಾಕ್ಷಾತ್ಕಾರವಾದ ಅನುಭವವಾಗಿ ಎದೆ ಹಗುರವೆನಿಸುತ್ತದೆ. ಬೈಕು ಕಿಕ್ಕಿಸಿ ಆ ಜಂಗುಳಿಯನ್ನು ದಾಟುತ್ತಿರುವಾಗ ಅಲ್ಲೇ ವುಡೀಸ್‌ನ ಎದುರು ಸಂಪಂಗಿ ಇಬ್ಬರು ಹುಡುಗಿರೊಟ್ಟಿಗೆ ನಡುವೆ ಕೈ ಕೈ ಹಿಡಿದು ನಡೆಯುತ್ತಿರುವುದು ಕಾಣುತ್ತದೆ. ಓಹೋಹೋ!! – ಅಂತ ನಿರ್ವಿಣ್ಣವಿದ್ದರೂ ನಿರ್ಲಿಪ್ತತೆ ಕೆನೆಯುತ್ತದೆ. ತಾನಿನ್ನು ಬದುಕಿನಲ್ಲಿ ಪ್ರತಿ ಐದು ನಿಮಿಷವನ್ನು ಉಳಿದವರಿಗಿಂತ ಮೊದಲು ಕ್ರಮಿಸಬೇಕೆಂಬ ಅದಮ್ಯ ಒತ್ತಾಸೆ, ಉತ್ಸಾಹದಿಂದ ಎಕ್ಸೆಲರೇಟರ್ ತಿರುವಿ ಗೇರು ಬದಲಿಸುತ್ತಾನೆ. ಎಂಥದೋ ವೇಗೋತ್ಕರ್ಷವನ್ನು ಸ್ಪ್ಲೆಂಡರಿನ ಗಾಲಿಗಳು ಗಿರಿಗಿರಿಸುತ್ತವೆ. +***** +ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ […] +ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ […] +ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_71.txt b/Kannada Sahitya/article_71.txt new file mode 100644 index 0000000000000000000000000000000000000000..9ab957ca75ee2f473ed3cb2312021c82b519098f --- /dev/null +++ b/Kannada Sahitya/article_71.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಸ್‌ ಸ್ಟಾಂಡಿನ +ಕಕ್ಕಸಿನ ಸ್ಥಿತಿ +ತುಂಬಾ +ಶೌಚನೀಯ. +***** +ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? ***** +ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ ***** +ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_710.txt b/Kannada Sahitya/article_710.txt new file mode 100644 index 0000000000000000000000000000000000000000..bf913b880274c7956fb1e5a42fddeff690d0e9b3 --- /dev/null +++ b/Kannada Sahitya/article_710.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್‍ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ. +ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ ಬಂತು ಸ್ವಾತಂತ್ರ್‍ಯ” ಹಾಡೀಗ ನೆನಪಾಗುತ್ತಿದೆ. ಹಾಡಿಕುಣಿದು ಕನ್ನಡಿಗರನ್ನು ನಕ್ಕು ನಲಿಸುತ್ತಿದ್ದ ಡಾ. ರಾಜ್ ಅವರನ್ನು ಕಾಡೆಂಬ ಜೈಲು ಖಾನೆಯಲ್ಲಿ ಬಂದಿ ಮಾಡಿಟ್ಟು ಬಗೆಬಗೆಯ ಬ್ಲಾಕ್‌ಮೇಲ್ ತಂತ್ರ ಬಳಸಿ ಹಣದೋಚುವ ಕನಸು ಕಾಣುತ್ತಿದ್ದಾನೆ ವೀರಪ್ಪನ್. +ಡಾ. ರಾಜ್ ಅವರು ಇನ್ನು ನಾಲ್ಕಾರು ದಿನ ತಡವಾದರೂ ಸುಕ್ಷೇಮವಾಗಿ ಹಿಂತಿರುಗಲೆಂದು ಎಲ್ಲಾ ಹಾರೈಸುತ್ತಿದ್ದಾರೆ. +ಅವರು ಬಂದ ನಂತರ ಮತ್ತೆ ಚಿತ್ರರಂಗ ದಿಢೀರ್‍ ಎಚ್ಚೆತ್ತು-ಕಾರ್ಯೋನ್ಮೂಖವಾಗುತ್ತದೆ ನಿಜ. +“ಆಗ ಎಂತ ಚಿತ್ರಗಳು ಬರಬೇಕು” ಎಂದು ಚಿತ್ರ ರಸಿಕರನ್ನು ವಿಚಾರಿಸಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. +“ನಮಗೆ ಆಕ್ಷನ್ ಫಿಲಂಗಳು ಸಾಕಾಗಿವೆ. ಹಿಂಸೆ, ಕ್ರೌರ್ಯ, ರೇಪ್‌ಗಳ ಸರಮಾಲೆ ಕಂಡು ಕಣ್ಣುಗಳು ರೋಸಿ ಹೋಗಿವೆ. ಇನ್ನು ಅಂಥ ಚಿತ್ರಗಳು ಬೇಡವೇ ಬೇಡ”. +“ಯಾರನ್ನೋ ಕಿಡ್ನಾಪ್ ಮಾಡಿಕೊಂದು ಹೋಗುವುದು. ಕೋಟಿ ಕೋಟಿ ಬೇಡುವುದು ಎನ್ನುವ ಚಿತ್ರ ತೆಗೆವಾಗ ಮಕ್ಕಳನ್ನು ಹೇಗೆ ಕಿಡ್ನಾಪ್ ಮಾಡುವುದು ಕಾಲೇಜ್‌ಗೆ ಹೋದ ಬೆಡಗಿನ ಬಾಲೆಯನ್ನು ಯಾವ ರೀತಿ ಹಾರಿಸಿಕೊಂಡು ಹೋಗಬಹುದು ಮುಂತಾದ ತಂತ್ರಗಳನ್ನು ಕಲಿಸುವ ಪಾಠ ಇನ್ನು ನಮಗೆ ಚಲನಚಿತ್ರದಿಂದ ಬೇಕಿಲ್ಲ” +“ಚಿತ್ರಮಾಧ್ಯಮದಲ್ಲಿ ಹೆಣ್ಣಿಗೆ ನೀಡಬೇಕಾದ ಸ್ಥಾನಮಾನ ನೀಡದೆ, ಅವಳನ್ನೊಬ್ಬ ಮೈಮಾರಿಕೊಳ್ಳುವ ಬೀದಿ ವೇಶ್ಯೆಯಾಗಿ ಚಿತ್ರಿಸಿ-ಪಡ್ಡೆ ಹುಡುಗರ ನಿದ್ದೆಗೆಡಿಸಲು ಬೆತ್ತಲೆ ಕುಣಿತ ತುಂಬಿ ತುಳುಕಿಸಿ, ಈವರೆಗೆ ಆಗಿರುವ ನಷ್ಟ ಸೆಕ್ಸೀ ಫಿಲಂಗಳಿಂದ ತುಂಬಿಕೊಳ್ಳುವ ಪ್ರಯತ್ನ ಇನ್ನಾದರೂ ಆಗದಿರಲಿ” +“ಡಬ್ಬಲ್ ಮೀನಿಂಗ್, ಟ್ರಿಬ್ಬಲ್ ಮೀನಿಂಗ್, ಮಾದಕ ವ್ಯಸನಿಗಳ ಮೋಜು, ಎಂ.ಟಿ.ವಿ. ಕಲ್ಚರ್‍ ಗೇಲಿ ಮಾಡುವ ನೆವದಲ್ಲಿ ಕನ್ನಡ ಸಂಸ್ಕೃತಿಯ ಬೇರಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ಖಂಡಿತಾ ಬೇಡ” +“ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ಸಿಗಬೇಕೆಂದರೆ ಕನ್ನಡ ಚಿತ್ರ ನಿರ್ಮಾಪಕ – ನಿರ್ದೇಶಕರು ಪರಭಾಷಾ ನಟಿ ಮಣಿಯರಿಗೆ ರೆಡ್‌ಕಾರ್ಪೆಟ್ ಹಾಸುವುದು ತಕ್ಷಣ ನಿಲ್ಲಬೇಕು” +“ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ಸಿಗಬೇಕೆಂದರೆ ಕನ್ನಡ ಚಿತ್ರ ನಿರ್ಮಾಪಕ ನಿರ್ದೇಶಕರು ಪರಭಾಷಾ ನಟಿಯರನ್ನು ತುಂಬುವಾಗ ಕನ್ನಡದಲ್ಲಿ ಅಂಥ ಪ್ರತಿಭೆಗಳಿಲ್ಲ ಎಂಬುದಾಗಲಿ, ಕಾಜೋಲ್, ಸೋನಾಲಿ ಬೇಂದ್ರೆ-ಮಾಧುರಿ ದೀಕ್ಷಿತ್ ಅಂತಹವರಿಗೆ ಲಕ್ಷ ಲಕ್ಷ ಸುರಿದು ಜೋಕುಮಾರಸ್ವಾಮಿ, ಸಾಂಗ್ಯಾಬಾಳ್ಯದಂಥ ಜಾನಪದ ಚಿತ್ರ ಮಾಡ ಹೊರಡುವುದು ತಪ್ಪಾದೀತು ಎಂದು ಕನ್ನಡಿಗರೆಲ್ಲ ಒಕ್ಕೊರಲಿನಿಂದ ಹೇಳಬೇಕಾದ ಸಂಕ್ರಮಣಕಾಲವಿದು” +“ಡಾ. ರಾಜ್‌ಕುಮಾರ್‍ ಅವರನ್ನು ವೀರಪ್ಪನ್ ಅಪಹರಿಸಿದ ನಂತರ ಎಲ್ಲಾ ಚಿತ್ರರಸಿಕರೂ ಈಗ ಕನ್ನಡದ ಬಗ್ಗೆ ಉದ್ದುದ್ದ ಮಾತನಾಡುತ್ತಿದ್ದಾರೆ. ಫಿಲಂ ಚೇಂಬರಿನವರು – ಕನ್ನಡದ ಹೋರಾಟಗಾರರು ಕನ್ನಡಾಭಿಮಾನಿಗಳ ಸಹನೆ-ಸೌಜನ್ಯ ಹಾಡಿ ಹೊಗಳುತ್ತಿದ್ದಾರೆ. ಆದರೆ ಚಿತ್ರರಂಗ ಮತ್ತೆ ಯಥಾಪ್ರಕಾರದ ಸ್ಥಿತಿಗೆ ಬಂದಾಗ ಮತ್ತೆ ಪರಭಾಷಾ ಗಿಣಿಗಳನ್ನು ಕರೆತಂದು – ಅವರನ್ನು ತುಂಬಾ ಮಿನಿಮಮ್ ಉಡುಪಿನಲ್ಲಿ ತೋರುವುದಂತೂ ಸತ್ಯ. ಈ ಬಾರಿ ಹಾಗೆ ಮಾಡಿದಲ್ಲಿ ಎಚ್ಚೆತ್ತ ಕನ್ನಡಿಗರು ಚಿತ್ರಮಂದಿರದತ್ತ ತಿರುಗಿಯೂ ನೋಡದೆ ಪಾಠ ಕಲಿಸುವ ಹೊಣೆ ಚಿತ್ರದ ಹಣೆಬರಹ ಬರೆವ ನೋಡುಗರದೇ ಆಗಿದೆ” +“ಡಾ. ರಾಜ್‌ಕುಮಾರ್‍ ಅವರು ಅಪಹರಣವಾಗಿ ನೊವು ಅನುಭವಿಸಿದಾಗ ಚಿತ್ರಗಳಲ್ಲಿ ಭಾಗವಹಿಸಿದರೆ ಅವರ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾದವರು ಕನ್ನಡದ ಚಿತ್ರನಟ-ನಟಿಯರು. ಆದರೆ ಗಾಂಧೀನಗರ ಮತ್ತೆ ಚಾಲೂ ಆದ ಕೂಡಲೆ ಲಕ್ಷ ಲಕ್ಷ ಪೀಕಿ ಸ್ಟಾರ್‍ ಹೋಟೇಲ್‌ಗೆ ಬಂದಿಳಿವವರು ಈಗೇಕೆ ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲ ಎಂಬುದನ್ನು ಚಿತ್ರರಸಿಕರಾದ ನಾವು ಕೇಳಿಯೇ ಕೇಳುತ್ತೇವೆ” +“ಚಿತ್ರನಟ-ನಟಿಯರನೇಕರು ಈಗ ಟಿ.ವಿ. ಧಾರಾವಾಹಿಗಳಿಂದ ಬದುಕುತ್ತಿದ್ದಾರೆ. ಫಿಲಂ ಷೂಟಿಂಗ್ ಶುರುವಾದ ಕೂಡಲೇ ಪರಭಾಷಾ ನಟಿಯರು ನಾಯಕಿಯರಾಗಿ ಮೆರೆಯುತ್ತಾರೆ. ಕನ್ನಡದ ನಟ-ನಟಿಯರು ಟೀವಿಯಲ್ಲಿ ಚಿಕ್ಕಪುಟ್ಟ ಪಾತ್ರಕ್ಕೆ ಹಿಂತಿರುಗಬೇಕಾಗುವುದು ದೌರ್ಭಾಗ್ಯ” +“ನನ್ನ ಕೇಳಿದರೆ ಕನ್ನಡದ ಕಥೆ ಕಾದಂಬರಿಗಳನ್ನು ಚಿತ್ರ ಮಾಡುವ ದಿನ ಮತ್ತೆ ಬರಲಿ” +“ತಂಗಾಳಿಯಂತೆ ತೇಲಿ ಬರುವ ಸಾಹಿತ್ಯಕ ಮೌಲ್ಯವಿರುವ ಗೀತೆಗಳು-ಸಂಭಾಷಣೆ ಚಲನಚಿತ್ರಗಳಲ್ಲಿ ಬರುವಂತಾಗಲಿ” +“ಕನ್ನಡ ಬಾರದ ಅನ್ಯಭಾಷಿಗರು ಕನ್ನಡದವರ ಕೈಲಿ ಬರೆಸಿ ತಮ್ಮ ಹೆಸರು ಹಾಕಿಕೊಳ್ಳುವ ಕೆಟ್ಟ ಚಾಳಿ ಇನ್ನಾದರೂ ತಪ್ಪಲಿ” +“ಅಂಬರೀಶ್ ಅಧ್ಯಕ್ಷರಾಗಿರುವ ಚಲನಚಿತ್ರ ಕಲಾವಿದರ ಸಂಘವೂ ಈ ಬಗ್ಗೆ ದನಿ ಎತ್ತಲಿ” +“ಕಣಗಾಲ್ ಪುಟ್ಟಣ್ಣ, ಹುಣಸೂರು, ಎಂ.ಆರ್‍. ವಿಠಲ್, ಎನ್. ಲಕ್ಷ್ಮೀನಾರಾಯಣ್ ಅಂಥವರನ್ನು ನೆನಪಿಸಿಕೊಂಡು ಒಳ್ಳೆ ಚಿತ್ರ ಮಾಡುವ ಮನಸ್ಸು ಮಾಡಲಿ” “ಯಾವುದೋ ತೆವಲಿಗೆ ಕನ್ನಡದ ಕೊಲೆ ಮಾಡುವಂತ ನಟ-ನಟಿಯರನ್ನು ಸೆಟ್ ಮೇಲೆ ಕರೆತರದಿರಲಿ” +– ಎಂದು ಬಗೆ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರೇ ಬಿಸಿಲು ಮಳೆಯಲ್ಲಿ ನಿಂತು ಟಿಕೇಟು ಕೊಳ್ಳುವವರಾದ್ದರಿಂದ ಮುಂದೆ ಚಿತ್ರ ತೆಗೆಯಲು ಹೊರಡುವವರು ಎಚ್ಚರದ ಹೆಜ್ಜೆಗಳನ್ನಿಟ್ಟು ಕನ್ನಡ ಉಳಿಸಿ-ಬೆಳೆಸಲಿ. +***** +(೧೮-೦೮-೨೦೦೦) +“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […] +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […] +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_711.txt b/Kannada Sahitya/article_711.txt new file mode 100644 index 0000000000000000000000000000000000000000..7872b2281ee6f63515c54dc9734cac3424cc6f31 --- /dev/null +++ b/Kannada Sahitya/article_711.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಮಾ ನನ್ನನ್ನು ನಸುಕಿಗೇ ಎಬ್ಬಿಸುತ್ತಿದ್ದಳು. ಸದ್ದು ಮಾಡದೆ ಮುಖ ತೊಳೆಸುತ್ತಿದ್ದಳು. ನಂತರ ಖೋಲಿಯ ಬಾಗಿಲು ಮುಚ್ಚಿ ಕತ್ತಲಲ್ಲೆ ಬೀಗ ಹಾಕಿ, ನನ್ನ ಮತ್ತು ಅವಳ ಪ್ಲಾಸ್ಟಿಕ್ ಚಪ್ಪಲಿಗಳನ್ನು ಕೈಲಿ ಹಿಡಿದುಕೊಂಡು ತೇಲಿಗಲ್ಲಿಯ ಕೊನೆತನಕ ಸದ್ದಾಗದಂತೆ ನಡೆದು, ಮುಖ್ಯರಸ್ತೆ ಸೇರುವಲ್ಲಿ ನಿಂತು ಚಪ್ಪಲಿ ಹಾಕಿಕೊಂಡು ದಾಪುಗಾಲಲ್ಲಿ ಸನಿಹದ ಅಂಧೇರಿ ಸ್ಟೇಶನ್ನಿಗೆ ಓಡುತ್ತಿದ್ದೆವು. ಅಲ್ಲಿ ಟಿಕೆಟ್ಟು ತಗೊಂಡು ಮೊದಲ ಲೋಕಲ್ ಹಿಡಿದು ಧೈಸರ್ ಸ್ಟೇಷನ್ನಿನಲ್ಲಿಳಿಯುತ್ತಿದ್ದೆವು. ನಾನು ಅಪ್ಪನನ್ನು ಕಾಣುವ ವಿಚಿತ್ರವಾದ ಕಂಗಾಲು ಖುಷಿಯಲ್ಲಿರುತ್ತಿದ್ದೆ. ಮಾ ಮಾತ್ರ ನಾನು ಮಾತನಾಡದಿದ್ದರೂ ಪದೇ ಪದೇ ಶ್‌ಶ್ ಎಂದು ಸುಮ್ಮನಿರಿಸುತ್ತಿದ್ದಳು. ಅವಳ ಈ ಶ್‌ಶ್ ಕೇಳಿಯೇ ಸುಮ್ಮಗಾದಂತೆ ಇಡೀ ವಿಶ್ವ ಆ ನಸುಕಿನಲ್ಲಿ ನಿಶ್ಯಬ್ದವಾಗಿರುತ್ತಿತ್ತು ಮತ್ತು ಆ ನಿಶ್ಯಬ್ದದಲ್ಲಿ ಶ್‌ಶ್ ಇನ್ನೂ ದೊಡ್ಡದಾಗಿ ಭಾಸವಾಗುತ್ತಿತ್ತು. ನಸುಕಿನ ನಾಲ್ಕೂಕಾಲು ಆಗಲು ಬಂದಂತೆ ಇಬ್ಬರೂ ಅಧೀರರಾಗುತ್ತಿದ್ದೆವು. ಏಕೆಂದರೆ ಇನ್ನೇನು ಉತ್ತರದಿಂದ ಬರುವ ತೂಫಾನ್ ಮೇಲ್ ಶರವೇಗದಲ್ಲಿ ಬರುತ್ತದೆ. ಈ ನಿರ್ಜನ ನಿಲ್ದಾಣದ ಕಸಕಡ್ಡಿ ಧೂಳನ್ನೆಲ್ಲ ಸುಂಟರಗಾಳಿಯಂತೆ ಎಬ್ಬಿಸಿ ಭೋರೆಂದು ಅರ್ಧ ನಿಮಿಷದಲ್ಲಿ ಹಾದು ಹೋಗಿಬಿಡುತ್ತದೆ. ಇಲ್ಲಿ ನಿಲ್ಲುವುದಿಲ್ಲ. ಆದರೆ ಅದರಿಂದ ನನ್ನ ಅಪ್ಪ ಜಿಗಿಯುತ್ತಾನೆ. ಬರೇ ಜಿಗಿಯುವುದಿಲ್ಲ. ಹೊಟ್ಟೆಗೊಂದು ಪೊಟ್ಟಣವನ್ನು ಕಟ್ಟಿಕೊಂಡು ಪ್ರಾಣಾಂತಿಕವಾಗಿ ಉರುಳಿ ಏನೇನೋ ಭಂಗಿಯಲ್ಲಿ ಬಿದ್ದು. ತೂಫಾನ್ ಮೇಲು ಎಬ್ಬಿಸಿದ ಧೂಳಿನ ಮೋಡ ಆರುವುದರೊಳಗೇ ಎದ್ದು ಕುಂಟುತ್ತ ಕೈಲಿದ್ದ ಚೀಲವನ್ನು ನಮ್ಮೆಡೆಗೆ ಎಸೆದು ಹೊಟ್ಟೆಗೆ ಬಿಗಿದ ಪೊಟ್ಟಣದೊಂದಿಗೆ, ಪ್ಲಾಟಫಾರ್ಮಿನ ಕೊನೆಯಲ್ಲಿ ಕಾದಿದ್ದ ಇಬ್ಬರನ್ನು ಸೇರಿ ಹೊರಗೆ ಹೋಗಿಬಿಡುತ್ತಾನೆ. ಅದೊಂದೇ ಕ್ಷಣ ನಾವಿಬ್ಬರೂ ಅವನನ್ನು ನೋಡೋದು. ಅವನು ಬಿದ್ದಾಗ ನಾವು ಸಮೀಪ ಓಡುವಂತಿಲ್ಲ. ತೂಫಾನ್ ಮೇಲ್‌ನ ದೂರದಲ್ಲಿ ಹಿಂದಿನ ಕೆಂಪು ದೀಪ ಮರೆಯಾಗುವುದರೊಳಗೆ ಆತ ತೆವಳುತ್ತ ಎದ್ದು ಚೀಲ ನಮ್ಮತ್ತ ಎಸೆದು, ಒಂದು ಬಗೆಯಲ್ಲಿ ನಮ್ಮಿಬ್ಬರನ್ನು ನೋಡಿ ಕೈ ಬೀಸಿ ಮರೆಯಾಗುವವರೆಗೆ ನಾವು ವಿಗ್ರಹದಂತೆ ನಿಂತು ನೋಡುತ್ತಿದ್ದೆವು. ನಂತರ ಮಾ ಓಡಿ ಚೀಲ ಎತ್ತಿಕೊಂಡು ಬರುತ್ತಿದ್ದಳು. ನಾನು ಬಾಯ್ ತೆರೆದರೆ ಶ್‌ಶ್ ಎನ್ನುತ್ತಿದ್ದಳು. ನಾವು ಮನೆ ತಲುಪುವಾಗ ತೇಲಿಗಲ್ಲಿ ಆಗಷ್ಟೇ ಏಳುತ್ತಿರುತ್ತದೆ. ಬಾಗಿಲು ತೆರೆದು ಲಗುಬಗನೆ ಚೀಲದಿಂದ ಮಾ ಹೊಸಬಟ್ಟೆ, ತಿಂಡಿ ತಿನಿಸು, ತಗಡಿನ ಆಟಿಕೆ ತೆಗೆಯುತ್ತಿದ್ದಳು. ಪ್ಲಾಸ್ಟಿಕ್‌ನಲ್ಲಿ ಇಟ್ಟು ದಾರದಿಂದ ಸುತ್ತಿದ ಹಣವೂ ಇರುತ್ತಿತ್ತು. ಅದನ್ನು ತಕ್ಷಣ ಟ್ರಂಕಿನಲ್ಲಿಡುತ್ತಿದ್ದಳು, ನಂತರ ಯಾವಾಗ ಎಣಿಸುತ್ತಿದ್ದಳೋ ಏನೋ. ಖುಷಿಯಾದರೂ ಆಗದವಳಂತೆ ಇರುತ್ತಿದ್ದಳು. ನೆರೆಹೊರೆಯಿಂದ ಏನನ್ನೋ ಬಚ್ಚಿಡದಂತೇ ಇರುತ್ತಿದ್ದಳು. ಅಪ್ಪ ಯಾಕೆ ಮನೆಗೆ ಬರುವುದಿಲ್ಲ? ಅವನು ಎದೆಗೆ ಅವಚಿಕೊಂಡಿದ್ದ ಪೊಟ್ಟಣ ಏನು? ಅವನು ಯಾರ ಜೊತೆಗೆ ಹೋದ? ಅವನು ತೂಫಾನ ಮೇಲ್ ನಿಲ್ಲುವ ದಾದರ್ ಸ್ಟೇಷನ್ನಿನ್ನಲ್ಲಿ ಇತರ ಪ್ರಯಾಣಿಕರ ಜತೆ ಇಳಿಯದೆ, ಈ ನಿರ್ಜನ ಧೈಸರ್ ಸ್ಟೇಷನ್ನಿನ್ನಲ್ಲೇ ಯಾಕೆ ಹೀಗೆ ಅಪಾಯಕಾರಿಯಾಗಿ ಜಿಗಿಯಬೇಕು? ಇಂಥ ಪ್ರಶ್ನೆಗಳನ್ನೆಲ್ಲ ಮಾ ಕೇವಲ ಶ್‌ಶ್ ಗಳಿಂದಲೇ ನಿಭಾಯಿಸುತ್ತಿದ್ದಳು. ಆ ಅರ್ಧನಿಮಿಷದಲ್ಲಿ ನಮ್ಮತ್ತ ನೋಡಿ ಕುಂಟುತ್ತ ಎದ್ದು ಕೈಬೀಸಿ ತೆವಳಿದ ಅಪ್ಪನ ಮುಖ ಎಷ್ಟೋ ದಿನಗಳ ಕಾಲ ಮಾಸದೆ ಮನಸ್ಸಿನಲ್ಲುಳಿಯುತ್ತಿತ್ತು. ಆ ಮುಖದಲ್ಲಿ ನಗುವೇ ಇರಲಿಲ್ಲ ಎಂಬುದನ್ನು ನೆನೆದರೆ ಭಯವಾಗುತ್ತಿತ್ತು. ಹೀಗೆ ಈ ಅಪವೇಳೆಯಲ್ಲಿ ಆರೇಳು ಸಲ ಅರೆಗನಸಿನಂತೆ ಕಂಡ ಅಪ್ಪ ಮನೆಗೆ ಮತ್ತೆಂದೂ ಬರಲೇ ಇಲ್ಲ. ಕಣ್ಣಾಚೆಗೇ ಅವನು ಅವನು ಅಳಿದುಹೋದ. ವಾರಕ್ಕೊಮ್ಮೆ ತೂಫಾನ್ ಮೇಲ್ ಬರುತ್ತಲೇ ಇತ್ತು. ತಿಂಗಳಿಗೊಮ್ಮೆ ನಿಗದಿತ ದಿನ ಹೋಗುತ್ತಿದ್ದ ಮಾ ನಂತರ ಪ್ರತಿವಾರ ಒಬ್ಬಳೇ ಹೋಗಿ ಬರಿಗೈಲಿ ಮರಳುತ್ತಿದ್ದಳು. ಮಣಭಾರದ ಲೋಹದ ತೂಫಾನ್ ಮೇಲ್, ಶರವೇಗದಲ್ಲಿ ಧೂಳಿನ ಸುಂಟರಗಾಳಿಯನ್ನೆಬ್ಬಿಸಿ ಹೋಗುತ್ತಿತ್ತು. ಅದರಿಂದ ಯಾವ ಆಕೃತಿಯೂ ಹೊರಗೆ ಜಿಗಿಯುತ್ತಿರಲಿಲ್ಲ. ಕೊನೆಕೊನೆಗೆ ರೈಲಿನಿಂದ ಚೀಲವಾದರೂ ಹೊರಗೆಸೆಯಲ್ಪಟ್ಟಿದೆಯೋ ಎಂಬಂತೆ ಇಡೀ ಪ್ಲಾಟಫಾರ್ಮನ್ನು ನೋಡಿ ಬರುತ್ತಿದ್ದಳಂತೆ. ವರುಷಗಟ್ಟಲೆ ಕಾದುಕಾದು ಅವಳೂ ಇಲ್ಲವಾದಳು. ಆದರೆ ತೂಫಾನ ಮೇಲ್ ಮಾತ್ರ ನಿಗೂಢವಾಗಿ ನಸುಕನ್ನು ಸೀಳಿ ಹೋಗುತ್ತಲೇ ಇತ್ತು. ಒಂದು ದಿನ ಮುನ್ನಾ ಅಂತಿದ್ದ ನನ್ನ ಹೆಸರನ್ನು ತೂಫಾನ ಅಂತ ಬದಲಿಸಿಕೊಂಡು ಬಿಟ್ಟೆ. ಆ ಮೂಲಕ ನನ್ನ ನಸುಕಿನ ಲೋಕದ ಅಸೀಮ ಸಾಹಸಿ ಅಪ್ಪ ಮತ್ತು ನಿರ್ಭೀತಿಯಿಂದ ನನ್ನನ್ನು ಬೆಳೆಸಿದ ಮಾ ಇವರಿಬ್ಬರೂ ನನ್ನ ಜತೆಗಿದ್ದಾರೆ ಅಂತನಿಸುತ್ತದೆ.”- ಎಂದು ದಂಡೆಯಿಂದ ಹತ್ತಾರು ಅಡಿ ದೂರದಲ್ಲಿದ್ದ ಹಡಗಿನಲ್ಲಿ ಬೃಹತ್ ಗಾಜಿನ ಪುಟ್ಟ ಸೆಟ್ ಒಂದನ್ನು ಆಣಿಗೊಳಿಸುತ್ತಿದ್ದ ಯೂನಿಟ್ ಹುಡುಗರನ್ನೇ ನೋಡುತ್ತ ಸ್ಟಂಟ್ ಕಲಾವಿದ ತೂಫಾನ್, ಮಾತು ನಿಲ್ಲಿಸಿದ. ಆಸಕ್ತಿಯಿಂದ ಆಲಿಸುತ್ತಿದ್ದ ಮಧುವಂತಿ ಆತನ ಮುಖವನ್ನು ನೋಡದೇ ತಾನೂ ಆ ಹಡಗನ್ನೇ ನೋಡುತ್ತಿದ್ದಳು. +ಕುಲಾಬಾದ ಹಳೆಯ ಪಾಳುಬಿದ್ದ ಮಿಲ್ ಕಾಂಪೌಂಡಿನಲ್ಲಿ ಸಮುದ್ರದ ದಂಡೆಯ ಮೇಲೆ ‘ಧಕ್ಕಾದ’ ಮೇಲೆ ಫೈಟಿಂಗ್ ದೃಶ್ಯದ ಚಿತ್ರೀಕರಣವಿದ್ದರೆ, ಇನ್ನೊಂದು ಬದಿಗೆ ಸಮೂಹ ನೃತ್ಯದ ದೃಶ್ಯವಿತ್ತು. ನೃತ್ಯ ತಂಡದಲ್ಲಿ ಒಬ್ಬಳಾಗಿದ್ದ ಮಧುವಂತಿಗೆ ರಿಹರ್ಸಲ್ ನಡುವೆ, ತೂಫಾನ್‌ನ ಬೈಕ್ ಜಂಪ್ ಮತ್ತು ಗ್ಲಾಸ್‌ಬ್ರೆಕ್ ಇದೆ ಎಂದು ತಿಳಿದದ್ದೇ ಓಡಿ ಬಂದಿದ್ದಳು. ಆರೇಳು ವರುಷಗಳ ಹಿಂದೆ ಅವಳ ಮತ್ತು ಫೈಟರ್ ತೇಜಬಲಿಯ ಪ್ರೇಮವಿವಾಹಕ್ಕೆ ಮುಖ್ಯ ಸಪೋರ್ಟು ಕೊಟ್ಟವನೇ ತೂಫಾನ್. ಹೀಗಾಗಿ ಶೂಟಿಂಗ್ ಸಂದರ್ಭದಲ್ಲಿ ಹೇಗೆ ಅಚಾನಕ್ ಆಗಿ ಒಂದೇ ಲೊಕೇಶನ್‌ನಲ್ಲಿ ಸಿಕ್ಕಾಗೆಲ್ಲ ಬಂದು ತನ್ನ ಸಂಸಾರದ ಚಿಲ್ಲರೆ ಸುಖದುಃಖ ಬೆಳವಣಿಗೆ ಎಲ್ಲಾ ಮಾತಾಡಿ ಹೋಗುತ್ತಿದ್ದಳು. ಈವತ್ತೂ ಹಾಗೇ ಏನೋ ಮುಖ್ಯವಾದದ್ದು ಹೇಳಲೆಂಬಂತೆ ಬಂದವಳು ಇಂದಿನ ಗ್ಲಾಸ್‌ಬ್ರೆಕ್ ದೃಶ್ಯ ಎಂದರೆ ಆಳೆತ್ತರದ ಗಾಜಿನ ಮೂಲಕ ಬೈಕ್‌ನಿಂದ ಜಿಗಿಯುವುದು. ತೂಫಾನ್ ಈಚಿನ ವರ್ಷಗಳಲ್ಲಿ ಗ್ಲಾಸ್‌ಬ್ರೆಕ್ ಪ್ರವೀಣನೆನಿಸಿಕೊಂಡಿದ್ದ. ಇಂದಿನ ದೃಶ್ಯದಲ್ಲಿ ಅವನು ಹಡಗಿನಲ್ಲಿಯೇ ಬೈಕ್ ಓಡಿಸಿಕೊಂಡು ಬಂದು ಅಲ್ಲಿಯ ಪುಟ್ಟ ಗ್ಲಾಸ್ ಸೆಟ್ಟಿನ ಗಾಜು ಮುರಿದು ಜಿಗಿದು ಹತ್ತು ಅಡಿ ಸಮುದ್ರಲಂಘಿಸಿ ದಂಡೆಯಲ್ಲಿ ಬೈಕಿನೊಂದಿಗೆ ಲ್ಯಾಂಡ್ ಆಗಬೇಕಿತ್ತು. ಹಡಗು ಮತ್ತು ದಂಡೆಯ ನಡುವೆ ಅಲೆಗಳನ್ನೆಬ್ಬಿಸುತ್ತಿದ್ದ ಸಮುದ್ರ ಕಳವಳ ಉಕ್ಕಿಸುತ್ತಿತ್ತು. ಹೀಗಾಗಿ ಏನೋ ಹೇಳಲು ಬಂದವಳು ಅನುಮಾನದಲ್ಲಿ ನಿಂತಾಗ ತೂಫಾನ್‌ನೇ ಮುಂದಾಗಿ – “ಏನೇ ಮಧು. ಪ್ರತಿ ಸಲವೂ ನನ್ನ ಹೆಸರು ತೂಫಾನ್ ಹೇಗೆ ಬಂತು ಅಂತ ಕೇಳ್ತಿದ್ದೆಯಲ್ಲ. ತಗೋ ಹೇಳ್ತೇನೆ ಕೇಳು” ಎಂದು, ಎಂದೂ ಮಾತಾಡದವನಂತೆ, ಈಗ ಬಿಟ್ಟರೆ ಮತ್ತೆಂದೂ ಸಮಯ ಸಿಗದವನಂತೆ, ಈ ಬಚ್ಚಿಟ್ಟ ಗಾಯದಂತಿದ್ದ ತೂಫಾನ್‌ಮೇಲ್‌ನ ಸಂಗತಿಯನ್ನು ಹೇಳಿ ಮುಗಿಸಿದ್ದ.ಮುಂಚಿತವಾಗೇ ತೋಳು ತೊಡೆ ಭುಜ ಎಲ್ಲ ಕಡೆ ರಕ್ಷಣೆಯ ಕವಚ ತೊಟ್ಟುಕೊಂಡು ಯಂತ್ರ ಮಾನವನಂತೆ ಕೂತಿದ್ದ ತೂಫಾನ್ – ತನ್ನ ಕಥೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಬ್ಬಿಬ್ಬಾಗಿರುವಂತಿದ್ದ ಮಧುವಂತಿಯನ್ನು “ಹೋಗು ಹೋಗು… ಡಾನ್ಸ್ ಮಾಸ್ಟರ್ ಸೀಟಿ ಹೊಡೀತಿದಾಳೆ ನೋಡು. ನಿಮ್ಮ ಹೀರೋಯಿನ್ ಬರೋತನಕ ವನ್ ಟೂ ಥ್ರೀ ಫೋರ್ ವನ್ ಟೂ ಥ್ರೀ ಫೋರ್… ಎಂದು ಡ್ರಿಲ್ ಮಾಡ್ತಾನೇ ಇರಿ. ಹೋಗು ಹೋಗು” ಎಂದು ನಗುತ್ತ ಬೆನ್ನು ತಟ್ಟಿದ. ಮಧುವಂತಿ “ನಿನ್ನ ದೋಸ್ತ್ ತೇಜ್‌ಬಲಿ ನನ್ನ ಜೀವಾ ತಿಂತಿದಾನೆ. ಅದನ್ನೆಲ್ಲಾ ಆಮೇಲೆ ಹೇಳ್ತೇನೆ. ಸುನೀಲ್ ಶೆಟ್ಟಿಯ ಚಿತ್ರಗಳೆಲ್ಲಾ ಗೋತಾ ಹೊಡೀತಿವೆಯಲ್ಲಾ. ಎಲ್ಲಾ ಲವ್‌ಸ್ಟೋರಿಗಳೇ ಈಗ. ಫೈಟಿಂಗ್ ಇರೋದೇ ಕಡಿಮೆ, ಹೀಗಿದ್ದಾಗ ಕೆಲಸ ಬಂದ್ರೂ – ಇಲ್ಲಾ ಮಾಡೋದಿಲ್ಲ – ಅಂತಾನೆ. ಇನ್‌ಶೂರೆನ್ಸ್ ಇಲ್ಲ, ಮೆಡಿಕಲ್ ಇಲ್ಲ, ಸುಮ್ನೆ ಯಾಕೆ ಜೀವ ಜೋಖಂ ಮಾಡೋದು ಅಂತ ಮನೇಲೆ ಕೂತಿರ್ತಾನೆ. ಇರಲಿ ಆಮೇಲೆ ಹೇಳ್ತೇನೆ” ಎಂದಳು. “ಲಂಚಲ್ಲಿ ನಾನ್‌ವೆಜ್ ತಗೋ. ಹಾಂ? ನೀನು ತಿನ್ನೋದಿಲ್ಲ ಗೊತ್ತು. ಆದರೆ ನಾನು ಪ್ಯಾಕ್ ಮಾಡ್ಕೊಂಡು ಹೋಗ್ತೇನೆ. ಸೋನಿಗೆ ಯೂನಿಟ್‌ನ ನಾನ್‌ವೆಜ್ ಅಂದ್ರೆ ಪಂಚಪ್ರಾಣ” – ಎಂದು ಎದ್ದು ನಿಂತಳು. +ಎದ್ದು ನಿಂತಾಗ ರಾಜಸ್ತಾನಿ ಘಾಗ್ರಾ ಚೋಲಿಯಲ್ಲಿ ಅವಳ ಹೊಟ್ಟೆ ದೊಡ್ಡದಾಗಿ ಕಂಡು – “ಏನೇ, ಪ್ರೊಡಕ್ಷನ್ ನಂಬರ್ ಟೂನಾ? ಫೈಟಿಂಗ್ ಬಿಟ್ಟು ತೇಜ್‌ಬಲಿ ಮನೇಲಿ ಬೆಡ್‌ರೂಂ ಸೀನ್ ಶುರುಮಾಡಿದಾನೇನೆ?” – ಎಂದ. ತೂಫಾನ್‌ನನ್ನು ತಿವಿದು – “ಥೂ, ಬೇರೆ ಕೆಲಸ ಇಲ್ವಾ ನನಗೆ? ಇರೋ ಒಂದು ಮರೀನ ಬೆಳೆಸೋಕೆ ಈ ಮಧ್ಯವಯಸ್ಸಿನಲ್ಲಿ ಈ ಬಿಸಿಲಿನಲ್ಲಿ ಈ ಹಗಲುವೇಷ ಹಾಕ್ಕೊಂಡು ದಿನಕ್ಕೊಂದು ಸೊಲ್ಲಿಗೆ ನೂರು ಸಲ ಕುಂಡೆ ಅಲ್ಲಾಡಿಸ್ತಿದೀನಿ” – ಎಂದು ನಕ್ಕೂ “ಎಲ್ಲಿ ತನಕ ಅಲ್ಲಾಡೋಕೆ ಆಗುತ್ತೋ ಅಲ್ಲಿ ತನಕಾ ನಡೀಲಿ. ಊಟಿ ಗೀಟಿ ಔಟ್‌ಡೋರ್ ಇದ್ರೂ ಈಗ ರೆಡಿ ನಾನು. ತೇಜ್‌ಬಲಿ ಮನೆ ನೋಡ್ಕೊಳ್ಳಲಿ. ಸೋನಿಗೆ ಇಂಗ್ಲಿಷ್ ಮೀಡಿಯಂಗೆ ಹಾಕಬೇಕು…” – ಎಂದು ಕುಪ್ಪಳಿಸುತ್ತ ಇಳಿದು ಮಧುವಂತಿ ನೃತ್ಯದ ಫೀಲ್ಡಿಗೆ ಓಡಿದಳು. ಅವಳ ಆ ಬಲವಂತದ ಚಿಮ್ಮುವಿಕೆಯಲ್ಲಿ ತನ್ನ ವಯಸ್ಸನ್ನು ಕಡಿಮೆ ಗೊಳಿಸುವ, ನೃತ್ಯವೃತ್ತಿಯಲ್ಲಿ ಉಳಿಯುವ ಹತಾಶೆ ಯತ್ನ ಕಂಡಂತಾಗಿ ತೂಫಾನ್‌ಗೆ ಬೇಜಾರಾಯಿತು. ಭಾರವಾಗಿ ಓಡುತ್ತ ಮಧುವಂತಿ ಡಾನ್ಸ್ ಮಾಸ್ಟರ್ ಸೀಟಿಗೆ ಅಲ್ಲಾಡುತ್ತಿದ್ದ ಐವತ್ತು ನರ್ತಕಿಯರ ಸಾಲನ್ನು ಸೇರಿಕೊಂಡಳು. +ತನ್ನ ಶಾಟ್‌ಗೆ ಮೊದಲು ಒಂದು ಲಿಂಬು ಸೋಡಾ ಕುಡಿಯುವ ಪರಿಪಾಠವಿದ್ದ ತೂಫಾನ್‌ಗೆ ಯೂನಿಟ್ ಹುಡುಗ “ಬಾಸ್, ಸೋಡಾ ಒಡೆಯಲೇ?” – “ಬೇಡ, ತುಸು ತಾಳು” – ಎಂದ ತೂಫಾನ್‌ನ ಕವಿಯಲ್ಲಿ ಮೇಕಪ್ ಮಹಾಲೆ “ತೂಫಾನ್, ಗ್ಲಾಸ್‌ಬ್ರೇಕ್‌ಗೆ ಎಷ್ಟು ಮಾತಾಡಿದ್ದೀ. ಎಂದಿನಂತೆ ಬರೇ ಇಪ್ಪತ್ತು ಸಾವಿರವೇ? ಇದು ಬರೀ ಗ್ಲಾಸ್‌ಬ್ರೇಕ್ ಅಲ್ಲಪ್ಪಾ ನೀರ ಮೇಲಿಂದ ಜಂಪ್ ಸಹಾ ಉಂಟಲ್ಲಾ, ಡಬಲ್ ಕೇಳಬೇಕು ನೀನು. ಹೆಚ್ಚು ಕಡಿಮೆ ಆದರೆ ಈ ಇಪ್ಪತ್ತು ಸಾವಿರವೂ ಆಸ್ಪತ್ರೆಗೇ ಅರ್ಪಿಸುತ್ತೀ ತಾನೆ? ಆಮೇಲೆ ಬ್ಯಾಂಡೇಜು ಬಿಗಿದುಕೊಂಡು, ಪ್ಲಾಸ್ಟರ್ ಹಾಕಿಕೊಂಡು ವಾರಗಟ್ಟಲೆ ಆಸ್ಪತ್ರೆಯ ಬ್ರೆಡ್ಡು ತಿನ್ನುತ್ತೀ. ಕೇಳು. ಡಬಲ್ ಕೇಳು. ಈಗಲೂ ವೇಳೆ ಮಿಂಚಿಲ್ಲ. ನಿನ್ನನ್ನು ಬಿಟ್ಟರೆ ಗ್ಲಾಸ್‌ಬ್ರೇಕ್‌ಗೆ ಮತ್ತ್ಯಾರೂ ಈಗ ಸಿಗುವಂತಿಲ್ಲ. ಕೇಳು. ಮೂವತ್ತಾದರೂ ಕೇಳು… ಹೂಂ…” ಎಂದು ಪುಸಲಾಯಿಸತೊಡಗಿದಂತೆ – ರೇಗಿ – ತೂಫಾನ್ “ಚುಪ್‌ರೇ. ತಲೆ ತಿನ್ನಬೇಡ. ನಾನೇನು ಮೈಮುಟ್ಟಿದ ಮೇಲೆ ರೇಟು ಹೆಚ್ಚು ಮಾಡುವ ಕೆನಡಿ ಬ್ರಿಜ್ಜಿನ ಹುಡುಗಿ ಅಂದುಕೊಂಡೆಯಾ? ಮಾತು ಆದ ಮೇಲೆ ಮುಗೀತು. ಅಷ್ಟೂ ನೀಯತ್ತು ಇಲ್ಲದಿದ್ರೆ ಹ್ಯಾಗೆ?” – ಎಂದು ಎರಡೂ ಕೈಗಳನ್ನು ಗಾಳಿಯಲ್ಲಿ ಗೋಲಾಕಾರವಾಗಿ ತಿರುಗಿಸುತ್ತ ಭುಜದ ಸ್ನಾಯುಗಳನ್ನು ಸಡಿಲು ಮಾಡಿಕೊಳ್ಳತೊಡಗಿದ. +ಮಹಾಲೆ ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಪ್ರತಿ ಗ್ಲಾಸ್‌ಬ್ರೆಕ್ ನಂತರವೂ ಆಂಬ್ಯುಲೆನ್ಸು, ಸ್ಟ್ರೆಚರು, ಗಾಯ, ಆಸ್ಪತ್ರೆ ಅಂತ ಮಲಗುವ ಕಾಲ ಒಂದಿಷ್ಟು ಇದ್ದೇ ಇರುತ್ತಿತ್ತು. ‘ಬಾದ್‌ಶಾಹ್’ದಲ್ಲಿ ಶಾಹ್‌ರುಖ್‌ನ ಡಬಲ್ ಆಗಿ ಮೂಳೆ ಮುರಿದುಕೊಂಡಿದ್ದಾಗ, ತೇಲಿಗಲ್ಲಿಯ ಆ ಖೋಲಿಯಲ್ಲಿ ಮಲಗಿದ್ದ ತೂಫಾನ್‌ನ ಯೋಗಕ್ಷೇಮ ಕೇಳಲು ಒಂದು ನಡುರಾತ್ರಿ ಗಪ್‌ಚುಪ್ ಆಗಿ ಶಾಹ್‌ರುಖ್ ಮಾರುವೇಷದ ರಾಜನಂತೆ ಬಂದು ಹೋದದ್ದು ಬಿಟ್ಟರೆ – ಉದ್ಯಮದ ಯಾರೂ ಅವನ ಕಡೆ ತಪ್ಪಿಯೂ ನೋಡಲು ಬಂದಿರಲಿಲ್ಲ. ಈ ಲೈನಿನ ಮಜವೇ ಅದು. ಒಂದು ಅದ್ಭುತ ಗ್ಲಾಸ್‌ಬ್ರೆಕ್. ನಂತರ ಅಜ್ಞಾತವಾಸ. ತೂಫಾನ್ ಮತ್ತೆ ಮತ್ತೆ ಯೋಚಿಸಿದ್ದಿದೆ. ಈ ಬೈಕ್ ಸ್ಟಂಟಿನ ನಿಜವಾದ ಮಜಾ, ಅಸಲೀ ಮಜಾ ಇರೋದು ಎಲ್ಲಿ? ಶಾಟ್‌ಗೆ ಮುನ್ನವೇ ಮನಸ್ಸನ್ನು ಕವಿಯುವ ವಿಚಿತ್ರ ಶೂನ್ಯವಿದೆಯಲ್ಲ, ಅದೆ? ಅಥವಾ ನಂತರದ ಹಗುರೇ? ಅಥವಾ ಯೋಚನೆಯಿಲ್ಲದೆ ಆಗಿಹೋಗುವ ಸ್ಟಂಟ್‌ನ ಕ್ಷಣವೆ? ಅಸಲೀ ಮಜಾ ಯಾವುದು? ಮಧುವಂತಿಯ ಗಂಡ ಫೈಟರ್ ತೇಜ್‌ಬಲಿಯ ಅಭಿಪ್ರಾಯವೇ ಬೇರೆ. ಅವನ ಪ್ರಕಾರ ಬಚಾವಾಗುಳಿಯುವುದೇ ಅಸಲಿ ಮಜಾ! ಬಚಾವಾದೆ ಅನ್ನೋದು ಮನಸಿಗೆ ತಿಳಿಯೋದಕ್ಕಿಂತ ಮೊದಲು ದೇಹಕ್ಕೆ ತಿಳಿದು ಹೋಗುತ್ತದೆಯಲ್ಲ, ಅದು, ಅದು ಅಸಲೀ ಮಜಾ ಎನ್ನುತ್ತಾನೆ ಈತ. ಅವನು ಹಾಗೆಂದಾಗೆಲ್ಲ ತೂಫಾನ್ ಮೇಲ್ ತನ್ನ ಮೈಯಿಂದ ಹಾದು ಹೋದ ಹಾಗೆ ಭಾಸವಾಗುತ್ತಿತ್ತು. ಅದು ಕಣ್ಣಿಂದ ಮರೆಯಾಗುವುದರೊಳಗೆ, ತನ್ನ ಕರ್ತವ್ಯದಲ್ಲಿ ಕಿಂಚಿದೂನವೂ ಆಗದ ಘನತೆಯಲ್ಲಿ ಬಿದ್ದಲ್ಲಿಂದ ತೆವಳುತ್ತ ಎದ್ದ ಅಪ್ಪನ ಆಕೃತಿ ಮೆಲ್ಲಗೆ ಮೂಡುತ್ತಿತ್ತು. +ಹಡಗು ಮತ್ತು ದಂಡೆಯ ಅಂತರವನ್ನು ತದೇಕಚಿತ್ತನಾಗಿ ನೋಡುತ್ತಿದ್ದ ತೂಫಾನ್‌ನ ಗಮನ ಸೆಳೆಯುವಂತೆ ದೂರದಲ್ಲೊಂದು ಗಲಾಟೆ ಕೇಳಿಬಂತು. ಹೊರಳಿ ನೋಡಿದರೆ ನೃತ್ಯದ ಫೀಲ್ಡಿನ ಕಡೆಯಿಂದ ಮಧುವಂತಿ ಜೋರಾಗಿ ಕೂಗಿಕೊಂಡು ದೃಶ್ಯವೊಂದರ ತಾಲೀಮಿನಂತೆ ಈ ಕಡೆ ಓಡಿ ಬರುತ್ತಿದ್ದಳು. ಅವಳನ್ನು ಅಟ್ಟಿಸಿಕೊಂಡು, ಏನನ್ನೋ ದೊಡ್ಡಕ್ಕೆ ಅರಚುತ್ತ ಒಬ್ಬ ಬರುತ್ತಿದ್ದ. ಇದ್ಯಾವ ದೃಶ್ಯವಪ್ಪ ಎಂದು ಕುತೂಹಲವಾಗುತ್ತಿದ್ದಂತೆ ಜನ ತಮ್ಮತಮ್ಮ ಕೆಲಸಬಿಟ್ಟು ಅವರಿಬ್ಬರ ಹಿಂದೆಯೇ ತಮಾಷಾ ನೋಡುವವರಂತೆ ಗುಂಪಾಗಿ ಚದುರುತ್ತ ಓಡಿ ಬರತೊಡಗಿದರು. ಅರೇ ಅವನು ತೇಜಬಲಿಯಲ್ಲವೆ? ರಿಸ್ಕೇ ಬೇಡವೆಂದು ಮೈಗಳ್ಳನಾಗಿ ಮನೇಲಿ ಕುಳಿತವನು, ಇಲ್ಯಾಕೆ ಬಂದ? ಇದೆಂಥ ಧಾಂದಲೆ ಎಬ್ಬಿಸಿದ್ದಾನೆ. ಗಂಡ ಹೆಂಡಿರ ಈ ಬಹಿರಂಗ ನಾಟಕ ತನ್ನೆಡೆಗೇ ಬರುತ್ತಿದೆಯಲ್ಲ ಎನಿಸಿ ಎದ್ದು ನಿಲ್ಲುವುದರೊಳಗೆ ಓಡುವ ಪ್ರೇಕ್ಷಕ ವೃಂದವನ್ನು ಬೆನ್ನಿಗೆ ಕಟ್ಟಿಕೊಂಡೇ ಏದುಸಿರುಬಿಡುತ್ತ ಇಬ್ಬರೂ ಎದುರು ನಿಂತು ಬಿಟ್ಟರು. +“ಹೇಳು, ಹೇಳು. ಮಾತು ಮಾತಿಗೆ ತೂಫಾನ್‌ಗೆ ಹೇಳ್ತೇನೆ ಅಂತೀಯಲ್ಲ. ಏನ್ ಹೇಳ್ತೀಯೋ ಹೇಳು. ಇಲ್ಲೇ ನನ್ನ ಸಮ್ಮುಖದಲ್ಲೇ ಎಲ್ಲ ಆಗಿಹೋಗಲಿ,” ಎಂದು ಕೂಗುತ್ತಾ ತೇಜಬಲಿ ಒಂದು ಕೈಯಿಂದ ‘ಮಾತಾಡು’ ಅನ್ನುವಂತೆ ಅವಳನ್ನು ನೂಕಿದ. ಯಂತ್ರಮಾನವನ ದಿರಿಸಿನಲ್ಲಿ ವಿಚಿತ್ರವಾಗಿ ನಿಂತಿದ್ದ ತೂಫಾನ್ – “ಅರೆ… ಅರೆ… ಶ್‌ಶ್ ಮೆಲ್ಲಗೆ. ಏನಿದು ತಮಾಷಾ – ಎಲ್ಲರೆದುರು… ಶ್‌ಶ್” ಎಂದು ಎರಡೂ ಕೈಗಳಿಂದ ದನಿ ತಗ್ಗಿಸುವಂತೆ ಕೋರಿ, ನೆರೆದವರಿಗೆ “ನಾನು ನೋಡಿಕೊಳ್ಳುತ್ತೇನೆ, ನೀವೆಲ್ಲ ನಿಮ್ಮ ನಿಮ್ಮ ಕೆಲಸಕ್ಕೆ ಹೋಗಿ” – ಎನ್ನುವಂತೆ ಹುಬ್ಬು ಹಾರಿಸಿದ. +ತೇಜಬಲಿ ಅವರೆಲ್ಲ ಚದುರಿ ಹೋಗುವುದನ್ನು ಕಾಯದೆ ಮಧುವಂತಿಯನ್ನು “ಹೇಳು, ಹೇಳು” ಎಂದು ಅಲ್ಲಾಡಿಸಿದ. ಮಧುವಂತಿ “ತೂಫಾನ್, ದಿನಾ ಮನೆಯಲ್ಲಿ ನನ್ನ ಜೀವ ತಿಂತಿದ್ದವನು ಈಗ ನೋಡು, ಹೇಗೆ ಇಲ್ಲಿ ಬಂದು ಯೂನಿಟ್ಟಿನವರೆದುರು ನನ್ನನ್ನು ಹರಾಜಿಗೆ ಹಾಕ್ತಿದಾನೆ. ಮಾತು ಮಾತಿಗೆ ಬೇಶರಮ್ ಲಜ್ಜೆಗೆಟ್ಟವಳೇ ಎಂದು ಕೂಗುವುದನ್ನು ಕೇಳಿಕೊಂಡೇ ಬಂದಿದ್ದೀನಿ. ಆದರೆ ನಿನ್ನೆ, ನಿನ್ನೆ ರಾತ್ರೆ ಏನಾಯ್ತು ಗೊತ್ತೆ. ನನ್ನ ಐದು ವರ್ಷದ ಸೋನಿ ‘ಮಮ್ಮೀ ಶರಮ್ ಅಂದರೆ ಏನು? ನಿನಗ್ಯಾಕೆ ಶರಮ್ ಇಲ್ಲ?’ ಎಂದು ಕೇಳಿದಳು ಗೊತ್ತೆ? ಅವಳಿಗೆ ಏನು ಹೇಳಬೇಕು ನಾನು? ಅವಳೆದುರು ನನ್ನನ್ನು ಹೀಗೆ…” – ಎಂದು ಬಿಕ್ಕತೊಡಗಿದಳು. ಇದಕ್ಕೇ ಕಾಯ್ತಿದ್ದವನಂತೆ ತೇಜಬಲಿ “ಇದೇ… ಇದೇ… ನಾನು ಹೇಳಿದ್ದು. ನೋಡು ತೂಫಾನ್ ಹೇಗೆ ಎಲ್ಲರೆದುರು ಬೇಶರಮ್ ಆಗಿ ಅಳ್ತಿದಾಳೆ ನೋಡು. ಲಜ್ಜೆ ಅನ್ನೋದೇ ಇಲ್ಲ. ಇದೇ, ಇದೇ…” ಎಂದು ಸಣ್ಣದನಿಯಲ್ಲಿ ಹಲ್ಲು ಕಚ್ಚಿದ. ತೂಫಾನ್ “ಬಸ್ ಚುಪ್” ಎಂದ. ಅವಳ ಅಳು ಮತ್ತು ಅವನ ಅಟ್ಟಹಾಸ ಎರಡೂ ಒಮ್ಮೆಗೇ ಮಂದವಾದವು. +ಮಧುವಂತಿ ಈಗ ಸ್ಪಷ್ಟವಾಗಿ ಮಾತನಾಡತೊಡಗಿದಳು. “ಸಾರಿ ತೂಫಾನ್, ನನಗೆ ನಿನ್ನದೇ ಜೀವನ್ಮರಣದ ಜಂಪ್ ಇದೆ. ಈಗ ನಿನ್ನ ತಲೆ ಹಾಳಮಾಡಬಾರ್ದು ನಾವು. ಆದರೆ ಈ ಮುಠ್ಠಾಳ ನನ್ನ ಡಾನ್ಸ್ ರಿಹರ್ಸಲ್ಲನ್ನು ಅಲ್ಲಿ ಅಡಗಿ ಕೂತು ನೋಡುತ್ತಿದ್ದ. ಹೇಳು ಕಳ್ಳತನಾ ಮಾಡ್ತಿದೀನಾ ಇಲ್ಲಿ ನಾನು ಹೀಗೆ ಅವನು ಕದ್ದು ಹೊಂಚು ಹಾಕಿ ನನ್ನ ಮೇಲೆ ನಿಗಾ ಇಡಲಿಕ್ಕೆ? ಛೇ….ಈಗ ಬೇಡ ತೇಜ್‌ಬಲಿ. ಆಮೇಲೆ ಮಾತಾಡೋಣ. ಗ್ಲಾಸ್‌ಬೈಕ್ ಮುಗೀಲಿ ಪ್ಲೀಸ್….” ಇಷ್ಟು ಅಂದವಳೇ ಹೊರಳಿ ಹೊರಡಲನುವಾದಳು. ತೇಜ್‌ಬಲಿ “ಸಾಕು ನಿಲ್ಲೆ” ಎಂದದ್ದೇ ನಿಂತುಬಿಟ್ಟಳು. “ತೂಫಾನ್…ನಿನಗೆ ಗೊತ್ತಿಲ್ಲ. ಪ್ರತಿ ದಿನ ನಾಟಕ ಆಡ್ತಾಳೆ ಅವಳು. ನಾನು ಇವಳನ್ನು ಮುಟ್ಟಿ ಸಮೀಪ ಎಳಕೊಂಡರೆ ನಾಚಿದಂತೆ ಮಾಡ್ತಾಳೆ. ಹೇಗೆ ನಾಚಿದಂತೆ ಮಾಡ್ತಾಳೆ ಅಂತಿ. ಪಿಕ್ಚರಲ್ಲಿ ಪ್ರಥಮರಾತ್ರಿ ತಲೆಯ ಮೇಲಿನ ಸೆರಗನ್ನು ಹೀರೋ ಸರಿಸಿದಾಗ ಹೀರೋಯಿನ್ ಲಜ್ಜೆಯಿಂದ ಕಣ್ಮುಚ್ತಾಳಲ್ಲ ಹಾಗೆ. ಸುಳ್ಳು. ಎಲ್ಲಾ ಸುಳ್ಳು. ನನಗೇನೂ ತಿಳಿಯೋದಿಲ್ಲ ಅಂದ್‌ಕೊಂಡಿದಾಳೆ. ಸುಳ್ಳು ಲಜ್ಜೆ ಅದು. ಹೀರೋಯಿನ್ ಆಗೋ ಕನಸು ಅದು. ಮತ್ತೆ ಮತ್ತೆ ಆ ಸೀನನ್ನು ಅಭಿನಯಿಸುತ್ತಾಳೆ. ಹೀರೋಯಿನ್ ಆಗೋದಂತೂ ಹಣೇಲಿ ಬರೆದಿಲ್ಲಾ. ಮೂರು ಕಾಸಿನ ಎಕ್‌ಸ್ಟ್ರಾ ಆಗಿದಾಳೆ. ಗಂಡನ ಕಣ್ಣಿಗೇ ಮಣ್ಣೆರಚ್ತಾಳೆ, ನಾಚ್ತಾಳೆ….”ಮಧುವಂತಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಕೂತಳು. ಅವಳನ್ನು ನೋಡುವುದಿರಲಿ, ಅಲ್ಲಿ ಕಣ್ತೆರೆದಿರುವುದೂ ದುಸ್ಸಾಧ್ಯವಾಗಿ ತೂಫಾನ ಮುಖ ತಪ್ಪಿಸಿ ದೂರದ ನಿಶ್ಯಬ್ದ ನಿರ್ಜನ ಹಡಗುಗಳನ್ನು ನೋಡಿದ. ಅದನ್ನೂ ತಪ್ಪಿಸಿ ತನ್ನ ಕಾಲಿನ ಲೋಹದ ಪಾದರಕ್ಷೆಯ ನಟ್ಟುಬೋಲ್ಟುಗಳನ್ನು ಸವರಿ ಬಿಗಿ ಮಾಡತೊಡಗಿದ. ಖಾಸಗಿ ಸಂಕಟವನ್ನು ಬಹಿರಂಗವಾಗಿ ಹೇಳಿಕೊಂಡೇ ಅಧಿಕೃತಗೊಳಿಸುತ್ತಿದ್ದ ತೇಜಬಲಿಯ ಆವೇಶವನ್ನು ಮೆಲ್ಲಗೆ ಸುಸಂಗತಗೊಳಿಸುವಂಥ ಮೌನ ಅಲ್ಲಿತ್ತು. ಈ ಮೌನದ ಮೇಲಿನ ಹಿಡಿತವೆಲ್ಲಿ ತಪ್ಪಿ ಹೋದೀತೋ ಎಂಬಂತೆ ಮತ್ತೆ ಬಾಯ್ಬಿಟ್ಟ- +“ಆಗಿನಿಂದ ನೋಡ್ತಿದೇನೆ ಇಲ್ಲಿ. ಆ ಡುಮ್ಮಿ ಡಾನ್ಸ್ ಮಾಸ್ಟರ್ ರಿಪೀಟ್ ಎಂದು ಸೀಟಿ ಹೊಡೆದಾಗೆಲ್ಲ ಎಲ್ಲರ ಜತೆ ದುಪಟ್ಟಾ ಇಲ್ಲದ ಎದೆಯನ್ನಷ್ಟೇ ಹಿಂದು ಮುಂದು ಜೋರಾಗಿ ಕುಲುಕಿಸುತ್ತಿದ್ದೀ. ಸ್ಟಾಪ್ ಅಂದಾಗ ನಿಲ್ಲಿಸ್ತೀ. ಮತ್ತೆ ಸೀಟಿ ಹೊಡೆದದ್ದೇ ಮತ್ತೆ ವನ್ ಟೂ ಥ್ರೀ ಫೋರ್ ಎದೆ ಕುಲುಕೋದು. ‘ಇನ್ನೂ ಜೋರಾಗಿ’ ಅಂತ ಡುಮ್ಮಿ ಹೇಳಿದರೆ ಶ್ವಾಸ ಬಿಟ್ಟು ಬಿಟ್ಟು ಜೋರಾಗಿ ಕುಲುಕೋದು.” +ತಡೆಯಲಾಗದೆ ಮಧುವಂತಿ ಮುಖ ಮುಚ್ಚಿಕೊಂಡೇ “ಛೀ” ಎಂದು ಕೈ ತೆಗೆದು, ಅವನ ಕಣ್ಣಲ್ಲಿ ಕಣ್ಣಿಟ್ಟು “ನನ್ನ ಕೆಲಸಾ ಅದೂ ಕೆಲಸಾ!” ಎಂದು ಚೀರಿದಳು. +“ಹಾಗಾದ್ರೆ ಮನೇಲ್ಯಾಕೆ ನಾಚ್ತೀ, ಬೇಕ ಬೇಕೂಂತಲೇ, ಸುಳ್ಳು ಸುಳ್ಳೇ?” ಎನ್ನಲು ಹೊರಟ ತೇಜಬಲಿಗೆ ಹಠಾತ್ತನೆ ಹೇಳಬಯಸಿದ್ದನ್ನು ಹೇಳಲೇ ಆಗುತ್ತಿಲ್ಲವಲ್ಲ ಎಂಬಂಥ ಹತಾಶೆ ಉಕ್ಕಿ ಬಂದು, ಬಾಯಿ ನಿಲ್ಲಿಸಿ ಎರಡೂ ಕೈಯಿಂದ ಏನೋ ಹಾವಭಾವ ಮಾಡಿ ಅದೂ ಸಾಲದೆ ಉಮ್ಮಳ ಉಕ್ಕಿ ಬಿಕ್ಕತೊಡಗಿದ. “ಅರೇ… ಅರೇ… ತೇಜಬಲೀ… ತೇಜಬಲೀ… ಫೈಟರ್ ನೀನು ಹೀಗೆ ಇಮೋಶನಲ್ ಆದ್ರೆ ಹ್ಯಾಗೋ… ಛೀ” – ಎಂದ ತೂಫಾನ್‌ನ ಲೋಹ ಕವಚದ ಭುಜದ ಮೇಲೊರಗಿ ತೇಜಬಲಿ ಅಳತೊಡಗಿದ. ಲೈಟ್ ಹುಡುಗರೆಲ್ಲ “ತೇಜಬಲಿ ಅಳ್ತಿದಾನೆ… ತೇಜಬಲಿ ಅಳ್ತಿದಾನೆ” – ಎಂದು ಕೂಗುತ್ತಾ ಬಂದರು. ಒಂದು ಬಗೆಯ ಬಿಳಿಚಿಕೊಂಡ ನಗುವಿನಲ್ಲಿ ಮಧುವಂತಿ “ಹೆಂಡ್ತೀ ಮೇಲೆ ಕದ್ದು ನಿಗಾ ಇಡಲಿಕ್ಕೆ ಬಂದಿದ್ದ. ಗಂಡ್ಸಂತೆ ಗಂಡಸು. ಅಳ್ತಾನೆ ನೋಡು ಹೇಗೆ ಮೀನಾಕುಮಾರಿ ಥರಾ” ಎಂದು ಗೊಣಗುತ್ತ ತೇಜಬಲಿಯ ಕಿವಿಯ ಬಳಿ ಹೋಗಿ “ಪಬ್ಲಿಕ್‌ನಲ್ಲಾದರೂ ನಾಚ್ಕೆ ಇಟ್ಕೋ” – ಎಂದು ಪಿಸುಮಾತಿನಲ್ಲಿ ಚೀರಿ ಅವನನ್ನು ತೂಫಾನ್‌ನ ಬಾಹುನಿಂದ ದೂರ ಸರಿಸಿದಳು. +ನಾಲ್ಕು ಜನ ಬಂದು ತೇಜ್‌ಬಲಿಯನ್ನು ರಮಿಸುತ್ತ ಕ್ಯಾಂಟೀನ್ ಕಡೆಗೆ ಕರೆದೊಯ್ದರು. ಮಧುವಂತಿ ತನ್ನ ತನ್ನ ರಾಜಸ್ತಾನೀ ಘಾಗ್ರಾದ ನಿರಿಗೆಗಳನ್ನೆಲ್ಲ ಸರಿಪಡಿಸಿ ಕೊಡವಿಕೊಂಡು, “ತೂಫಾನ್, ಗುಡ್‌ಲಕ್,” – ಎಂದು ಕೈಕುಲುಕಿ “ಆಮೇಲೆ ಎಲ್ರೂ ಒಟ್ಟಿಗೆ ಖಿಮಾಪಾವ್ ತಿನ್ನುವಾ” – ಎಂದು ತನ್ನೆಲ್ಲಾ ಲವಲವಿಕೆಯನ್ನು ಅಮೂಲಾಗ್ರವಾಗಿ ತನ್ನೊಳಗೆ ತರಲು ಯತ್ನಿಸುತ್ತ ಲಂಗವನ್ನು ಎರಡೂ ಕೈಗಳಲ್ಲಿ ತುಸುವೇ ಎತ್ತಿ ಹಿಡಿದು ಭಾರವಾಗಿ ಚಿಮ್ಮುತ್ತ ತನ್ನ ತಂಡದ ಕಡೆಗೆ ಓಡಿದಳು. +ಅವಳನ್ನು ನೋಡುತ್ತಿರುವಂತೆ ತೂಫಾನ್‌ಗೆ, ನಸುಕಿನಲ್ಲಿ ತನ್ನನ್ನು ಎಬ್ಬಿಸಿ ಅಪ್ಪನ ಮಿಂಚಿನ ದರ್ಶನಕ್ಕೆ ಆಣಿಗೊಳಿಸಿ ಹೊರಡಿಸುತ್ತಿದ್ದ ಮಾ, ಆಗ, ಇದೇ ವಯಸ್ಸಿನವಳಿದ್ದಳು ಎಂದು ಹೊಳೆದುಹೋಯಿತು. ತೇಜಬಲಿಯ ಜೀವವನ್ನು ಹಿಂಡುತ್ತಿರುವ ಈ ಮಧುವಂತಿಯ ಲಜ್ಜೆ ಎಂಥದು? ತನಗೀಗ ಮನಸ್ಸಿನ ದೂರದಲ್ಲಿ ಹಿರೀಕಳಾಗಿ ತೋರುವ ಮಾ, ನಿಜಕ್ಕೂ ಈ ಮಧುವಂತಿಯಷ್ಟೇ ಇದ್ದಳಲ್ಲವೆ? ಅವಳ ಲಜ್ಜೆಯ ಹೋರಾಟ ಅದೆಂಥದಿತ್ತು? ಒಮ್ಮೊಮ್ಮೆ ಟೇಕ್‌ನಲ್ಲಿ ಬೈಕಿನ ಜಿಗಿತದ ಹದ ತಪ್ಪಿ ಕರ್ಕಶವಾಗಿ ನಾನು ಬೀಳುತ್ತೇನಲ್ಲ, ಆಗ ನಾನು ಮೆಲ್ಲಗೆ ಏಳುವಾಗ, ಉಳಿದವರು ಬಂದು ಬೈಕನ್ನು ಎತ್ತಿ ನಿಲ್ಲಿಸಿ ಕೊಡುತ್ತಾರಲ್ಲ, ಆ ಮೌನದಲ್ಲಿ ಯಾಕೆ ಲಜ್ಜೆ ಇರುವುದಿಲ್ಲ? ಮಧುವಂತಿಗೆ ಉರಿಯುವ ಬಿಸಿಲಲ್ಲಿ ಸಾವಿರ ಕಣ್ಣುಗಳೆದುರಿಗೆ ದಾವಣಿ ಇಲ್ಲದ ಬಿಗಿ ಕುಪ್ಪಸದ ಎದೆಯನ್ನು ಒಂದೇ ಸೊಲ್ಲಿಗೆ ನೂರು ಬಾರಿ ಕುಲುಕುವಾಗ ಆಗದ ಅಪಮಾನ, ತೇಜಬಲಿ ಸುಳಿವು ಕೊಡದೆ ಬಂದು ಕದ್ದು ನೋಡಿ ಆಯ್ದು ಮಾತನಾಡುವಾಗ ಯಾಕೆ ಆಗುತ್ತದೆ? ನನ್ನ ಏಕಾಂಗಿ ಮಾ ಮತ್ತೆ ಮತ್ತೆ ಉಸುರುತ್ತಿದ್ದ ಶ್‌ಶ್‌ಶ್, ಅವಳ ಲಜ್ಜೆಯ ಸ್ವರವಾಗಿತ್ತೆ? ಅದು ಅವಳದೇ ಲೋಕವನ್ನು ಸಂಭಾಳಿಸುತ್ತಿತ್ತೆ? +ಮೆಲ್ಲಗೆ ತೂಫಾನ್ ಅಂಚಿನ ಕಡೆ ಚಲಿಸ ತೊಡಗಿದ. ನಸುಕಿನಲ್ಲಿ ಆ ನಿರ್ಜನ ನಿಲ್ದಾಣಲ್ಲಿ ಶರವೇಗದ ರೈಲಿನಿಂದ ಉಪೇಕ್ಷಿತ, ವ್ಯಕ್ತ ಪ್ರಾಣಿಯಂತೆ ಬಿದ್ದು ಮೆಲ್ಲಗೆ ಏಳುವ ಅಪ್ಪನ ಭಂಗಿಯಲ್ಲಿ, ಎವೆಯಿಕ್ಕದೆ ನೋಡುತ್ತಿದ್ದ ನಮ್ಮಿಬ್ಬರ ಸ್ಥಿರ ನಿಲುವಿನಲ್ಲಿ ಲವಲೇಶವೂ ಅವಮಾನ ಇರಲಿಲ್ಲವಲ್ಲ. ಅದನ್ನು ತೂಫಾನ್ ಮೇಲ್ ಹಾರಿಸಿಕೊಂಡು ಹೋಯಿತೆ? ಅಥವಾ, ಉಳಿವಿಗಾಗಿ, ಕನಿಷ್ಠ ಅನ್ನಕ್ಕಾಗಿ ಆಯ್ದುಕೊಂಡ ವೃತ್ತಿಗೇ ತಂತಾನೆ ಒಂದು ಮಾನ ಪ್ರಾಪ್ತವಾಗುತ್ತದೆಯೇ? +“ಶಾಟ್ ರೆಡೀ” ಎಂಬ ಕೂಗು ಕೇಳಿತು. ಇಳಿ ಹಗಲಲ್ಲೂ ಬೃಹತ್ ದೀಪಗಳು ಬೆಳಗಿ ಕೊಂಡವು. ಯುದ್ಧೋಪಾದಿಯಲ್ಲಿ ಹುಡುಗರು ಹಿಂದೆ ಮುಂದೆ ಓಡಿದರು. ಆಂಬ್ಯುಲೆನ್ಸ್ ಮತ್ತು ಸ್ಟ್ರೆಚರ್‌ಗಳನ್ನು ಫೀಲ್ಡಿನ ಸಮೀಪ ನಿಲ್ಲಿಸಲಾಗಿತ್ತು. ಯೂನಿಟ್ ಹುಡುಗ ಬಂದು ಸೋಡಾ ಒಡೆದು, ಅದರಲ್ಲೇ ನಿಂಬೆಹಣ್ಣು ಹಿಂಡಿಕೊಟ್ಟ. ಅದನ್ನು ಕುಡಿದ ತೂಫಾನ್ ತಾತ್ಪೂರ್ತಿಕವಾಗಿ ಹಾಕಿದ್ದ ಪುಟ್ಟ ಹಲಗೆಯ ಮೇಲೆ ಕಟ್ ಕಟ್ ಎಂದು ಲೋಹದ ಹೆಜ್ಜೆಗಳನ್ನೂರುತ್ತ ನೀರನ್ನು ದಾಟಿ ಹಡಗಿನ ಡೆಕ್ಕನ್ನು ಸೇರಿದ. +ಹಲಗೆಯನ್ನು ತೆಗೆಯಲಾಯಿತು. ಬೈಕಿನ ಮೇಲೆ ಮೆಲ್ಲಗೆ ಕೂತುಕೊಂಡ. ‘ಧಕ್ಕಾ’ದ ಮೇಲೆ ಅವನು ಲ್ಯಾಂಡ್ ಮಾಡಬೇಕಾದ ಜಾಗದಲ್ಲಿ ಸುಣ್ಣದ ಹುಡಿಯನ್ನು ಹಾಕಿ ಗುರುತು ಮಾಡಲಾಗಿತ್ತು. ಒಂದು ಕಡೆಯಿಂದ ನೃತ್ಯದ ಹಾಡಿನ ಸೊಲ್ಲು ತೇಲಿ ತೇಲಿ ಬರುತ್ತಿತ್ತು. ಇನ್ನೊಂದು ಕಡೆ ಹತ್ತಾರು ಹಳದಿಬಣ್ಣದ ಜನರೇಟರುಗಳ ಅಶ್ವಶಕ್ತಿಯ ಸದ್ದು. ಹೆಲ್ಮೆಟ್ ಹಾಕಿಕೊಂಡ ತಕ್ಷಣ ಎಲ್ಲ ಸದ್ದುಗಳೂ ದೂರವಾದವು. ಎದುರು ದಂಡೆಯ ಎಂದಿನ ಆಪ್ತಲೋಕ, ಈಗ, ಈ ಕ್ಷಣದಲ್ಲಿ ಹಿಂದೆ ಸರಿದು, ಒಂದು ಲಜ್ಜೆಯಲ್ಲಿತ್ತು. ಜಿಗಿತಕ್ಕೆ ಬೇಕಿರುವ ವೇಗವನ್ನು ಗಳಿಸಿಕೊಳ್ಳಲು ಡೆಕ್ಕಿನ ಮೇಲೆ ತಾನು ಕ್ರಮಿಸಬೇಕಿರುವ ದಾರಿಯನ್ನೂ, ಭೇದಿಸಬೇಕಿರುವ ಗಾಜಿನ ಗೋಡೆಯನ್ನೂ ಒಮ್ಮೆ ನೋಡಿ, ಎದುರಿಂದ ಕೆಂಬಣ್ಣದ ಸಿಗ್ನಲ್ ಬಂದಿದ್ದೇ, ತುಸು ನೀಳವಾಗಿ ಮೇಲೆ ಜರುಗಿ ಬೈಕಿಗೆ ಕಿಕ್ ಕೊಟ್ಟ. ಒಮ್ಮೆಗೇ, ನೀರವವನ್ನು ನೀಗುತ್ತ, ನಸುಕಿನ ತೂಫಾನ್ ಮೇಲ್‌ನ ಸದ್ದು ಸಮೀಪಿಸತೊಡಗಿತು. +***** +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […] +ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_712.txt b/Kannada Sahitya/article_712.txt new file mode 100644 index 0000000000000000000000000000000000000000..daaec0d3bf628f4634f59d0cb4b7baa11de2fc41 --- /dev/null +++ b/Kannada Sahitya/article_712.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. +ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. +ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ ಸಂಘ-ಈಗ ನಿರ್ದೇಶಕರ ಸಂಘವನ್ನೂ ಜತೆಗೂಡಿಸಿ ಕೊಂಡು ‘ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದ’ ಎಂಬಂತೆ ಹುಚ್ಚು ರಭಸದಲ್ಲಿ ಓಡುತ್ತಿದ್ದಾರೆ. +ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ತಾವು ನಿಸ್ಸೀಮರು ಎಂದು ಹೇಳಿಕೊಳ್ಳಲು ಹೊರಟಿದ್ದಾರೆ. +ಅಶಿಸ್ತು-ಅನ್ಯಾಯ-ಸೇಡಿನಿಂದಲೇ ತುಂಬಿ ತುಳುಕಿರುವ ಚಿತ್ರರಂಗದ ಮಂದಿ ಈಗ ಶಿಸ್ತಿನ ಪಾಠ ಹೇಳಹೊರಟಿದ್ದಾರೆ. +ನಿರ್ದೇಶಕ ದಿನೇಶ್‌ಬಾಬು ಅವರನ್ನು ಮೂರು ತಿಂಗಳು ಸಸ್ಪೆಂಡ್ ಮಾಡಿ -೨೫ ಸಾವಿರ ದಂಡ ವಿಧಿಸಿದೆ ನಿರ್ಮಾಪಕರ ಸಂಘ, ಅದಕ್ಕೀಗ ಬಸಂತ್‌ಕುಮಾರ್‍ ಪಾಟೀಲ್ ನಾಯಕರು. ರಾಕ್‌ಲೈನ್ ವೆಂಕಟೇಶ್ ಪ್ರಕಾರ ಇದು ತುಂಬಾ ಸೌಮ್ಯ ಶಿಕ್ಷೆ. ಇದಕ್ಕಿಂತ ಉಗ್ರವಾದ ಶಿಕ್ಷೆ ಕೊಡಬೇಕಿತ್ತು ಎಂದವರ ವಾದ. ‘ನನ್ನ ಚಿತ್ರಕ್ಕೆ ಒಪ್ಪಿದವರು-ಅಡ್ವಾನ್ಸ್ ತೆಗೆದುಕೊಂಡಿದ್ದವರು – ಈಗ ರಾಮೋಜಿರಾವ್ ಚಿತ್ರ ಮಾಡಿದ ನಂತರ ನಮ್ಮ ಚಿತ್ರ ಎಂದರೆ ಸುಮ್ಮನಿರುತ್ತೇನೆಯೆ’ ಎಂದು ಅಬ್ಬರಿಸುತ್ತಾರೆ ರಾಕ್‌ಲೈನ್. +ಇಂಥ ಶಿಕ್ಷೆ ನೀಡುವಾಗ ರಾಜೇಂದ್ರಸಿಂಗ್ ಬಾಬು – “ಭಾರತ್ ೨೦೦೦” ದಿಂದ ಕನ್ನಡದವರಿಗೆ ಮಾಡಿದ ಅನ್ಯಾಯ ಎಲ್ಲ ಮರೆತು ಬಿಡುವುದು ಹೇಗೆ ಸರಿ? +ಈ ವಿಷಯ ಫಿಲಂ ಚೇಂಬರ್‍ ಮುಂದೆ ಬಂದಾಗ ನಟ ಲೋಕನಾಥ್ ಜಡ್ಜ್ ಆಗಿ ಕುಳಿತಿದ್ದರಂತೆ. ನಿರ್ದೇಶಕ ಸಿದ್ದಲಿಂಗಯ್ಯನವರೂ ಹಾಜರಿದ್ದರಂತೆ. ಅವರು ಈ ವಿಷಯ ಕೂಲಂಕುಷವಾಗಿ ಪರಿಶೀಲಿಸಿ ದಿನೇಶ್‌ಬಾಬು ಅವರನ್ನು ಚಿತ್ರರಂಗದಿಂದ ಆರು ತಿಂಗಳು ಸಸ್ಪೆಂಡ್ ಮಾಡಿ ೪೦ ಸಾವಿರ ದಂಡ ವಿಧಿಸಿದೆ ಫಿಲಂ ಚೇಂಬರ್ಸ್. +ರಾಕ್‌ಲೈನ್ ವೆಂಕಟೇಶ್ ಇನ್ನೂ ಉಗ್ರವಾದ ಶಿಕ್ಷೆ ಕೊಡಬೇಕಿತ್ತು ಎಂಬ ಮಾತನ್ನು ಫಿಲಂ ಚೇಂಬರ್ಸ್ ನಿಜ ಮಾಡಿದೆ. +ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕ ಸಂಘದ ಎಗೋ ಕ್ಲಾಷ್‌ನಿಂದ ಈಗ ನೋವು ಅನುಭವಿಸಬೇಕಿರುವವರು ದಿನೇಶ್‌ಬಾಬು. +ದಿನೇಶ್‌ಬಾಬು ಮಲೆಯಾಳಿ ಇರಬಹುದು. ಆದರೆ ನಮ್ಮ ನಿರ್ಮಾಪಕ-ನಿರ್ದೇಶಕರಿಗೆ ಮಲೆಯಾಳಿ, ತೆಲುಗು, ತಮಿಳು, ಹಿಂದಿ ನಟಿಯರು ಬೇಕು. ಕನ್ನಡ ಪ್ರತಿಭೆಗಳು ಬೇಕಿಲ್ಲ – +ಫಿಲಂ ಚೇಂಬರ್ಸ್ ತಾನು ನಿರ್ಮಾಪಕರ ಸಂಘಕ್ಕಿಂತ ಹಿರಿದಾದ ಸಂಸ್ಥೆ ಎಂಬುದನ್ನು ಶಿಕ್ಷೆ ವಿಧಿಸುವುದರಲ್ಲಿ ತೋರಿದೆ. +ಟಿ.ವಿ. ಸೀರಿಯಲ್‌ಗಳು ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘದ ಕಕ್ಷೆಗೇ ಬರುವುದಿಲ್ಲ. ಅಂತಹುದರಲ್ಲಿ ಟಿ.ವಿ. ಧಾರವಾಹಿಗಳಲ್ಲಿ ಮಾಡುವಂತಿಲ್ಲ ಎನ್ನುವುದೂ ಡಿಕ್ಟೇಟರ್‌ಷಿಪ್ ಸೂಚನೆ. +ರಾಜೇಂದ್ರಸಿಂಗ್ ಬಾಬು ಸಹಾ ಈಗ ಬಸಂತ್‌ಕುಮಾರ್‍ ಪಾಟೀಲರೊಂದಿಗೆ ಕೈ ಜೋಡಿಸಿದ್ದಾರೆ. ಒಕ್ಕೂಟಕ್ಕೆ ಎದುರಾಗಿ ಒಂದು ಸಂಸ್ಥೆ ಕಟ್ಟಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ರಾಜೇಂದ್ರಸಿಂಗ್ ಬಾಬು ನಿರ್ದೇಶಕರ ಸಂಘಕ್ಕೆ ‘ಭಾರತ್ ೨೦೦೦’ ಸಮಯದಲ್ಲಿ ರಾಜೀನಾಮೆ ಇತ್ತಿದ್ದರು. ಆಗ ಫಿಲಂ ಚೇಂಬರ್ಸ್ ತೂಕಡಿಸುತ್ತಿತ್ತೆ? +ಬ್ಯಾಟಲ್ಲಿ ಹೊಡೆದ ಪ್ರಕರಣಕ್ಕೆ ಜಗ್ಗೇಶ್‌ನ ಬ್ಯಾನ್ ಮಾಡಿತ್ತು ಫಿಲಂ ಚೇಂಬರ್ಸ್. ಆ ಬ್ಯಾನ್ ಮಂಜಿನಂತೆ ಕರಗಿದ್ದು ಹೇಗೆ? +ಟಿ.ವಿ.ಯವರದೇ ಆದ ಬೇರೆ ಸಂಘವೇ ಒಂದಿದೆ. ಅದರ ಮೇಲೆ ಈ ಎರಡು ಸಂಘಗಳವರು ಸ್ವಾಮ್ಯ ಸಾಧಿಸಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ. ದಿನೇಶ್‌ಬಾಬು ಕೇಳಿದರೆ “ರಾಕ್‌ಲೈನ್‌ಗೆ ಲಾಲಿ ಮಾಟಿಕೊಟ್ಟದ್ದು ನಾನು. ಈಗ ನಾನು ಯಾರಿಗೂ ಬೇಡವಾಗಿದ್ದೇನೆ. ಸಿದ್ಧಲಿಂಗಯ್ಯನವರಂತಹ ಹಿರಿಯ ನಿರ್ದೇಶಕರೂ ಫಿಲಂ ಚೇಂಬರ್ಸ್‌ನಲ್ಲಿದ್ದು ಇಂಥ ಕಠಿಣ ಶಿಕ್ಷೆ ಏಕೆ ನೀಡಿದರೋ ಅರ್ಥವಾಗುತ್ತಿಲ್ಲ. ಶಿಕ್ಷೆ ನೀಡುವುದರಲ್ಲಿ ಪೈಪೋಟಿ ಮಾಡಿಕೊಂಡು ನನಗೀಗ ಹಿಂಸೆಯಾಗಿದೆ” ಎಂದರು. +ಕಲಾವಿದರು ಅಡ್ವಾನ್ಸ್ ತೆಗೆದುಕೊಂಡು ಷೂಟಿಂಗ್‌ಗೆ ಹಾಜರಾಗದಿದ್ದರೂ ಪಾಟೀಲರು ಇಂಥ ನಿರ್ಧಾರಗಳಿಗೆ ಬರಲು ಸಾಧ್ಯವೆ? +ಪರಭಾಷಾ ನಿರ್ಮಾಪಕ-ನಿರ್ದೇಶಕರನ್ನು ಓಡಿಸಿ-ಪರಭಾಷಾ ನಟಿಯರನ್ನು ಮಾತ್ರ ಪ್ರೀತಿಯಿಂದ ಕರೆತರುವ ನಿರ್ಮಾಪಕ-ನಿರ್ದೇಶಕರಿಗೆ-ಫಿಲಂ ಚೇಂಬರ್ಸ್‌ನವರಿಗೆ ಕಠಿಣ ಶಿಕ್ಷೆ ಕೊಡುವ ಹೊಣೆ ಈಗ ಕನ್ನಡ ಚಿತ್ರ ರಸಿಕರದಾಗಿದೆ. +ಚಿದಂಬರಶೆಟ್ಟರಂತಹವರನ್ನು ಕೊಲೆ ಮಾಡಿದ ಮಂದಿ, ಅಂಡರ್‍ ವರ್ಲ್ಡ್‌ನವರು-ಚಿತ್ರರಂಗಕ್ಕೆ ಬಂದು ವಿಚಿತ್ರವಾಗಿ ನಡೆದುಕೊಂಡಾಗಲೂ ಇಂಥ ಕಠಿಣ ಕ್ರಮ ತೆಗೆದುಕೊಳ್ಳುವುದು ಸಾಧ್ಯವೇ ಎಂಬ ಮಾತನ್ನೀಗ ಅವರೇ ಹೇಳಬೇಕು. +ಹೆಚ್‌ಟುಓ ಈ ಹೊತ್ತಿಗೆ ಮುಗಿಯಬೇಕಿತ್ತು. ಅದಾಗಲಿಲ್ಲ ಎಂಬ ಕಾರಣಕ್ಕೆ ಈ ಸಂಸ್ಥೆಗಳು ಏನು ಮಾಡಲಾದೀತು? +ದಿನೇಶ್‌ಬಾಬುಗೆ ಪೈಪೋಟಿಯ ಮೇಲೆ ಶಿಕ್ಷೆ ಕೊಟ್ಟಿರಿ. ಸರಿ…. ಮುಂದೆ ಯಾರೇ ಇಂತ ತಪ್ಪು ಮಾಡಿದರೂ-ದಿಟ್ಟತನದ ನಿಲುವು ತೆಗೆದುಕೊಳ್ಳಬಲ್ಲಿರಾ ಪಾಟೀಲ್? +ನಿಮ್ಮ ನಿರ್ಮಾಪಕರ ಸಂಘದಲ್ಲೇ ‘ಸೆಕ್ಸ್ ಫಿಲಂ’ ತೆಗೆಯುವವರು ತುಂಬಿದ್ದಾರೆ. ಅಂಥವರನ್ನು ದಾರಿಗೆ ತರಬಲ್ಲಿರಾ? +ಬಡ್ಡಿಗೆ ಚಕ್ರಬಡ್ಡಿ ಹಾಕುವವರನ್ನು ರಿಪೇರಿ ಮಾಡಬಲ್ಲಿರಾ? +ಚಿತ್ರ ನಿರ್ಮಾಪಕ-ನಿರ್ದೇಶಕರಿಗೂ ಒಂದು ಸಾಮಾಜಿಕ ಹೊಣೆ ಇದೆ. ಅದನ್ನರಿಯದವರು ಸಿನಿಮಾ ಮಾಡುವುದೇ ಒಂದು ದಂಧೆ ಮಾಡಿಕೊಂಡರೆ-ಪಡ್ಡೆ ಹುಡುಗರನ್ನು ಅಡ್ಡದಾರಿಗೆಳೆದರೆ ಅದನ್ನು ಶಿಸ್ತಿನ ಹೆಸರಿನಲ್ಲಿ ಕಂಟ್ರೋಲ್ ಮಾಡುವಿರಾ? +ಫಿಲಂ ಚೇಂಬರ್‍ಸ್‌ನವರು ಮಾಡಿದ ರೂಲ್ಸ್‌ಗಳೆಲ್ಲ ಎಷ್ಟರಮಟ್ಟಿಗೆ ಜಾರಿಗೆ ಬಂದಿದೆ. ಎಲ್ಲಾ ಲೆಕ್ಕಾಚಾರದಂತೆ ಆಗಬೇಕು ನಿಜ. ಫಿಲಂ ಚೇಂಬರ್ಸ್‌ನ ಚುನಾವಣೆ ಏಕಾಗಿಲ್ಲ ಹಾಗಾದಲ್ಲಿ? +ಫಿಲಂ ಫೆಸ್ಟಿವಲ್ ಕೀರ್ತಿ ಈ ಕಮಿಟಿಯವರಿಗೇ ಬರಬೇಕೆಂದೆ? +ನಿರ್ಮಾಪಕ-ನಿರ್ದೇಶಕರು-ಫಿಲಂ ಚೇಂಬರ್ಸ್‌ನಲ್ಲಿ ಒಂದಾಗಿರದೆ ಶಿಸ್ತು ಮುರಿದು ಈಚೆ ಬಂದದ್ದೇಕೆ? ಇಂಥ ಅನೇಕ ಪ್ರಶ್ನೆಗಳನ್ನು ಪ್ರತಿಯೊಬ್ಬರು ಕೇಳಿಕೊಳ್ಳುವುದು ವಾಸಿ. +ವಯಸ್ಸಾದ ಹೆಣ್ಣು ಮಕ್ಕಳನ್ನೆಲ್ಲ ‘ಡಕೋಟಾ’ ಎನ್ನುವ ಮಂದಿ ಕನ್ನಡ ಜನಕ್ಕೆ ಪಾಠ ಹೇಳುವ ದಿನ ಬಂತಲ್ಲ ಎಂಬುದು ದುರ್ದೈವ. +ಅಂಗೈ ಅಗಲದ ಪ್ರಪಂಚದಲ್ಲಿ ಒಬ್ಬರ ಮುಖ ಒಬ್ಬರು ದಿನ ಬೆಳಗಾದರೆ ನೋಡಬೇಕು. ಅಂತಹುದರಲ್ಲಿ ಐಕ್ಯತೆಯ ಮಾತನಾಡುತ್ತಾ-ದ್ವೇಷದಿಂದ ಬುಸುಗುಟ್ಟುವುದು ಸರಿಯೇ ಯೋಚಿಸಿ ನೋಡಿ. ಈಗ ಟಿ.ವಿ.ಯವರು ಎಚ್ಚೆತ್ತುಕೊಳ್ಳದಿದ್ದಲ್ಲಿ ನಾಳೆ ನಿಮಗೂ ಇದೇ ಗತಿ ಬಂದೀತು. +***** +(೩-೮-೨೦೦೧) +ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […] +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […] +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_713.txt b/Kannada Sahitya/article_713.txt new file mode 100644 index 0000000000000000000000000000000000000000..0bab12a146a323420fa567772a1cf72c57f8d743 --- /dev/null +++ b/Kannada Sahitya/article_713.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಸ್ತೆಯಲ್ಲಿ ನಡೆಯುವಾಗ +“ಮುಂದೆ ನೋಡಿಕೊಂಡು ಹೋಗು” +ಎನ್ನುತ್ತಾರೆ ತಿಳಿದವರು. +ಕೆಳಗೂ ಕಣ್ಣು ಹಾಯಿಸಬೇಡವೆ? +ಅಲ್ಲಿ ಬಿದ್ದಿರಬಹುದಲ್ಲ +ಲೈವ್ ವೈರು. +***** +ಬಸ್‌ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. ***** +ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_714.txt b/Kannada Sahitya/article_714.txt new file mode 100644 index 0000000000000000000000000000000000000000..475d60311e11a00b883f4e8532bdadc0539a4b8d --- /dev/null +++ b/Kannada Sahitya/article_714.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬರುವುದೆಲ್ಲ ಬರಲಿ ಬಿಡು +ಏಕೆ ಅದರ ಚಿಂತೆ? +ದುಃಖ ಸುಖವು ನಗೆಯು ಹೊಗೆಯು +ಎಲ್ಲ ಅಂತೆ ಅಂತೆ. +ನಾವು ಗೈದ ಒಳಿತು ಕೆಡಕು +ಜೀವ ಪಡೆವ ಭೋಗ; +ನಮ್ಮ ನುಡಿಯ ನಡೆಯ ಒಡಲ +ಕಡೆದ ಬೆಣ್ಣೆ ಯೋಗ! +ಕಣ್ಣು ಕಟ್ಟಿ ಬೆನ್ನು ತಟ್ಟಿ +ಓಡಿಸುವನು ಕಾಲ, +ಇವರ ಬಿಟ್ಟು ಇವರು ಯಾರು?- +ಎಂಥ ಮೋಹ ಜಾಲ! +ಮಿಡುಕನುಳಿದು ಹುಡುಕಬೇಕು +ಅದುವೆ ಬಾಳ ಮೂಲ, +ಪಡೆಯದಿರಲು ಕಣ್ಣ ನೀರ +ಕರೆವುದಲ್ಲ ಶೀಲ. +ಬಟ್ಟಬಯಲ ತುತ್ತತುದಿಗೆ +ತಿರುಗುತಿಹವು ಗೋಲ- +ಕೊಟ್ಟು, ತೀರಲಿಲ್ಲ ಜನುಮ +ದೇವನಿತ್ತ ಸಾಲ. +ಏಸೊ ಕಡಲ ಈಸಿ ಬಂದು +ಬೀಸುತಿಹುದು ಗಾಳಿ; +ಗಾಸಿಗೊಂಡ ಭೂಮಿತಾಯಿ +ನರಳುತಿಹಳೆ ಹೇಳಿ. +ಮುಗಿಲಜೇನನರಸುತ್ತಿರುವ +ತುಂಬಿ ಭಾವದುಂಬಿ,- +ಹುಟ್ಟುಹರಿಯೆ ಮುಂದುಗೆಟ್ಟ +ಓಟ ಎತ್ತೊ ಎಂಬಿ. +ಶಿಖರಕೊಂದು ಹೆಜ್ಜೆಯಿಟ್ಟು +ಗಾಳಿದೇರನೇರಿ, +ಬಾಳಕನಸು ಕರೆಯುತಿಹುದು +ಯಕ್ಷ ಲೋಕ ಸೇರಿ. +ಏನು ಮಾಟ! ಏನು ಮೋಡಿ! +ಚಣದ ನೋಟ ಬೇಟ; +ಹೀಗೆ ಸಾಗುತಿಹುದು ನಮ್ಮ +ನೆಳಲು ಬೆಳಕಿನಾಟ! +***** +ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ ಅರಸದಿದ್ದರು ಕಾಲ ತೊಡಕುವೀ […] +– ೧ – ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ ಗದೇ ಮಾಮೂಲು ಭಂಗಿ; ಯಾರೂ […] +ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_715.txt b/Kannada Sahitya/article_715.txt new file mode 100644 index 0000000000000000000000000000000000000000..b6e5d23ee2a01aacad01fef7cd32655aad9db758 --- /dev/null +++ b/Kannada Sahitya/article_715.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. +ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ ಅಲ್ಲದ, ಆದರೂ ವೇಗದ ರಸ್ತೆ. ಹೈವೇ ಮೇಲೆ ಹೋಗುತ್ತಿದ್ದರೆ ಅಕ್ಕ-ಪಕ್ಕ ಕಾಡೋ, ಬಯಲೋ ಬಿಟ್ಟರೆ ವಿಶೇಷವಾಗಿ ಏನೂ ಕಾಣುವುದಿಲ್ಲ. ಹೈವೇ ಮೇಲೆ, ಮುಂದಿನ ವಾಹನದ ಮೇಲೆ ಕಣ್ಣು ನೆಟ್ಟಿರುತ್ತದೆ. ಮನಸ್ಸಿನಲ್ಲಿ ನಿಮ್ಮ ವೈಯಕ್ತಿಕ ಸಮಸ್ಯೆಗಳೋ, ಟೋಲ್‌ಗೆ ಕೊಡಲು ಬೇಕಾದ ದುಡ್ಡಿದೆಯೋ ಇಲ್ಲವೋ ಎಂಬ ಆತಂಕವೋ, ಹೀಗೆ ಇನ್ನೇನೋ ತುಂಬಿರುತ್ತದೆ. ರೂಟ್ ೧, ಹಾಗಲ್ಲ, ಊರುಗಳ ಮಧ್ಯೆಯೇ ಹಾದು ಹೋಗುವುದರಿಂದ ಅಕ್ಕ-ಪಕ್ಕ ಹತ್ತಾರು ಆಕರ್ಷಣೆಗಳು. ಝಗಮಗಿಸುವ ನಿಯಾನ್ ಫಲಕ ಹೊತ್ತ ರೆಸ್ಟೊರೆಂಟುಗಳು, ನೈಟ್ ಕ್ಲಬ್ಬುಗಳು, ಗ್ಯಾಸ್ ಸ್ಟೇಶನ್‌ಗಳು. ದಾರಿ ತಪ್ಪಿಸುವ, ತಪ್ಪಿದರೆ ತಮಗೆ ತೋಚಿದ್ದನ್ನು ತೋರಿಸುವ ಗವಾಕ್ಷಿಗಳು. ಇತ್ಯಾದಿಗಳ ಮಧ್ಯ ವೇಗದ ಮಿತಿ ಕಾಪಾಡುತ್ತ, ರಸ್ತೆಯ ಕಡೆ ನಿಗಾ ಇಡುತ್ತಾ ನಿಮ್ಮ ಕಾರು ಓಡಿಸಬೇಕು. ನಾನು, ಗೋಪಿ (ಗೋಪಿನಾಥ್ ತಾತಾಚಾರ್) ‘ಕೆ.ಎಸ್.ಸಿ’ ಮುಂದೆ ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸುತ್ತಾ ಹೊರಟಿದ್ದೆವು. ಸುದೈವವಶಾತ್ ಗೋಪಿ ಕೈಯಲ್ಲಿ ಚಕ್ರವಿತ್ತು. ಎಡಿಸನ್‌ನಲ್ಲಿ ಸೇರುವುದು ಎಂದು ಹರೀಶ್ ಕಡ್ಲಬಾಳು ಮತ್ತು ಸತೀಶ್ ಕುಮಾರ್ ಮಾತು ಕೊಟ್ಟಿದ್ದರು. ಕೊಟ್ಟಂತೆ ನಡೆದರು. +ಎಡಿಸನ್‌ನ ದೋಸಾ ಕ್ಯಾಂಪಿನಲ್ಲಿ ವಡೆ, ದೋಸೆಯ ಸಮಾರಾಧನೆ ಮತ್ತು ಕೊಂಚ ಬಿರುಸಿನ ಚರ್ಚೆಯ ನಂತರ ‘ಕೆ.ಎಸ್.ಸಿ.’ಯ ತಂಡ ಹೊರಟಿತು ವಾಸು ಅವರ ಮನೆಗೆ, ಅದೇ ‘ನಮ್ಮ ಬರಹ’ದ ಶೇಷಾದ್ರಿ ವಾಸು ಅವರ ಮನೆಗೆ. ‘ವಾಸು’ ಜೊತೆ ಆ ಮೊದಲು ಒಂದೆರಡು ಈ-ಮೈಲ್ ವಿನಿಮಯ, ಮತ್ತು ಅದೇ ದಿನ ಅವರನ್ನು ಭೇಟಿಯಾಗುವ ಕುರಿತು ಫೋನಿನ ಮಾತುಕತೆಯಾಗಿತ್ತಾದರೂ, ಅವರ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಕಲ್ಪನೆ ನನಗೆ ದಕ್ಕಿರಲಿಲ್ಲ. ಹಿರಿಯರದು ತಮಿಳು ಮೂಲ, ‘ವಾಸು’ ಮಾತ್ರ ಕನ್ನಡಿಗರಲ್ಲಿ ಕನ್ನಡಿಗ, ಬೆಂಗಳೂರಿನ ಐ.ಐ.ಎಸ್.ಸಿ. ಯಲ್ಲಿ ವಿದ್ಯಾಭ್ಯಾಸ ಇತ್ಯಾದಿ ಚಿತ್ರಗಳು ಮನಸ್ಸಿನಲ್ಲಿ ಇದ್ದವು. ಶೇಖರ್ ಇವರನ್ನು ಓರ್ವ ಸಾಂಸ್ಕೃತಿಕ ಚಳುವಳಿಗಾರ ಎಂದು ಕರೆಯುವುದೂ ನನ್ನ ಮನಸ್ಸಿನಲ್ಲಿ ಇತ್ತು. ಸಂಪ್ರದಾಯದ ಮೌಲ್ಯಗಳಲ್ಲಿ ಗಟ್ಟಿ ನಿಂತ ಮೃದುಭಾಷಿ, ಸಾಧಕ, ಎಂಬ ಚಿತ್ರ ಪೂರ್ಣಗೊಂಡಿದ್ದು ಭೇಟಿಯಾದ ನಂತರವೇ. +‘ದೇಸಿ’(ಅಮೇರಿಕನ್ ಭಾರತೀಯರ ಪರಿಭಾಷೆಯಲ್ಲಿ ಬಳಸುವ ಅರ್ಥದಲ್ಲಿ, ಸಾಹಿತ್ಯಿಕ ಪರಿಭಾಷೆಯ ಅರ್ಥದಲ್ಲಿ ಅಲ್ಲ, ನನ್ನ ಗ್ರಹಿಕೆಯಲ್ಲಿ ಇವೆರಡರ ನಡುವೆ ಸೂಕ್ಷ್ಮ ವ್ಯತ್ಯಾಸಗಳಿವೆ) ಪಟ್ಟಣವೇ ಆದ ಎಡಿಸನ್‌ನಲ್ಲಿ-‘ದೇಸಿ’ ಈ ಊರಿನಲ್ಲಿ ಸುತ್ತುವಾಗ, ಇನ್ನೊಬ್ಬನ ನೆಲದಲ್ಲಿ ನುಗ್ಗಿ ತನ್ನದೇ ನೆಲೆ ಸ್ಥಾಪಿಸಿರುವ ಅಭಿಮಾನ, ನುಗ್ಗಿದ್ದೇನಲ್ಲ ಎನ್ನುವ ಮುಜುಗುರ, ಇಲ್ಲಿ ಬಂದರೂ ಅಲ್ಲಿನವನೇ ಆಗುಳಿದೆನಲ್ಲಾ ಅನ್ನುವ ಹತಾಶೆ ಎಲ್ಲವನ್ನೂ ಒಟ್ಟೊಟ್ಟಿಗೆ ಅನುಭವಿಸುತ್ತಿರುತ್ತಾನೆ. ಆ ಮೂಲಕ ಜಾಗತೀಕರಣದ ಪಾಶ್ಚಿಮಾತ್ಯರ ಜೊತೆಗಿನ ವಹಿವಾಟಿನಲ್ಲಿ ಈ ‘ದೇಸಿ’ ಒಂದರ್ಥದಲ್ಲಿ ಸೋತರೂ ಗೆದ್ದಿರುತ್ತಾನೆ, ಗೆದ್ದರೂ ಸೋತಿರುತ್ತಾನೆ- ದೋಸೆಯ ನಂತರ, ದೇವರ ಚಿತ್ರಗಳಿಂದ ಅಲಂಕೃತದೊಂಡಿದ್ದ ಗೋಡೆಯ ವಾಸು ಅವರ ಅಪಾರ್ಟ್ಮೆಂಟ್ನಲ್ಲಿ ಕೂತಾಗ ಟಿ.ವಿ.ಯ ಪರದೆ ಮೇಲೆ ಮೂಡುತ್ತಿದ್ದ ಕೆಟ್ಟ ಅಮೇರಿಕನ್ ಕಾರ್ಯಕ್ರಮ ಒಟ್ಟೂ ನನ್ನ ಅಂದಿನ ಅನುಭವ ಪ್ರಪಂಚಕ್ಕೆ ಒಗ್ಗುತ್ತಿರಲಿಲ್ಲ. ಅದನ್ನು ಗಮನಿಸಿಯೋ ಏನೋ ವಾಸು ಅವರ ಪತ್ನಿ ತುರ್ತಾಗಿ ಅದನ್ನು ಆರಿಸಿದರು. ‘ಕನ್ನಡ ತಂತ್ರಾಂಶ’ದ ವಿಷಯಕ್ಕೆ ಸಂಬಂಧಿಸಿದಂತೆ ಕೆ.ಎಸ್.ಸಿ. ತಂಡ ಒಟ್ಟಾರೆ ಯಾವ ಬಗೆಯ ಚಟುವಟಿಕೆಯನ್ನು ಮಾಡಬಹುದು, ‘ಕನ್ನಡ ತಂತ್ರಾಂಶ’ದ ತತ್‌ಕ್ಷಣದ ಅಗತ್ಯಗಳೇನು ಈ ಕುರಿತು ‘ವಾಸು’ ಅವರೊಡನೆ ಸಮಾಲೋಚಿಸಲು ನಾವಲ್ಲಿ ಸೇರಿದ್ದೆವು. ‘ಕನ್ನಡ ತಂತ್ರಾಂಶ’ದ ಕುರಿತಂತೆ ನನಗೆ ಹಲವು ಸಮಸ್ಯೆಗಳ ಅರಿವಿದೆಯಾದರೂ, ವಿಸ್ತಾರವಾಗಲಿ, ಆಳವಾದ ಜ್ಞ್ಯಾನವಾಗಲಿ ಇಲ್ಲ. ನನ್ನದು ಮೂಲತಃ ಆಕಡೆಮಿಕ್ ಆದ, ಸಾಹಿತ್ಯಿಕ, ಸಾಂಸ್ಕೃತಿಕ, ಅವ್ಯಕ್ತ ಆಬ್ಸ್ಟ್ರ್ಯಾಕ್ಟ್ ನೆಲೆಯಲ್ಲಿ ಆಲೋಚಿಸುವ ಮನಸ್ಸು. ಪ್ರಶ್ನೆಗಳನ್ನು ಹೊರತು ಪಡಿಸಿ ಹೆಚ್ಚಾಗಿ ಮೂಕನಾಗಿದ್ದೆನೆನೋ. +ವಾಸು ಮಾತ್ರ ಉತ್ಸಾಹದಿಂದ ಮಾತಾಡಿದರು, ‘ತುಂಗಾ’ ಫಾಂಟಿನಲ್ಲಿದ್ದ ದೋಷಗಳನ್ನು ಯುನಿಕೋಡ್‌ನ ಹೊಸ ಅವೃತ್ತಿಯಲ್ಲಿ ತಿದ್ದಲಾಗಿದೆ, ‘ಬರಹ’ದಲ್ಲಿ ಇದೀಗ ಫಾಂಟ್ ಪರಿವರ್ತಕ ಸಲಕರಣೆ ಇದೆ, ‘ದಟ್ಸ್ ಕನ್ನಡ’, ‘ಕನ್ನಡ ಪ್ರಭ’ದ ಪುಟಗಳನ್ನು ಈಗ ಸುಲಭವಾಗಿ ‘ಬರಹ’ದಲ್ಲಿ ಮತ್ತು ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕತ್ತರಿಸಿ ಅಂಟಿಸಬಹುದು, ಇದರಿಂದ ಪ್ರಿಂಟ್ ಮಾಡಲು ಅನುಕೂಲ, ಕನ್ನಡ ತಂತ್ರಾಂಶದಲ್ಲಿ ಈ ವರೆಗೆ ಏನು ಲಭ್ಯವಿದೆ, ಏನು ಬೇಕಾಗಿದೆ? ಚಾಲ್ತಿಯಲ್ಲಿರುವ ಯೋಜನೆಗಳು ಯಾವವು? ಇತ್ಯಾದಿಗಳ ಒಂದು ಸಮಗ್ರ ಪಟ್ಟಿಯಾಗಬೇಕು, ‘ಕನ್ನಡ’ ಗೇಮ್‌ಗಳನ್ನು, ಪದಬಂಧ ಇತ್ಯಾದಿಗಳನ್ನು ಸೃಜನಶೀಲವಾಗಿ ನಿರ್ಮಿಸಬೇಕು, ಕರ್ನಾಟಕದ ಸಮಸ್ಯೆಗಳನ್ನು ಕುರಿತಂತೆ ಪ್ರಮುಖವಾದ ಸಮಿತಿಗಳ ವರದಿಯ ಉಗ್ರಾಣವಾಗಬೇಕು, ಕನ್ನಡದ ಟೆಕ್ಸ್ಟ್‌ನಿಂದ ಸ್ಪೀಚ್‌ಗೆ ವರ್ಗಾಯಿಸಲು ಅವಶ್ಯವಾದ ತಂತ್ರಜ್ಯಾನ ಲಭ್ಯವಿದೆ, ಇತ್ಯಾದಿ ಮಾತುಗಳು, ಸಲಹೆಗಳನ್ನು ನಮ್ಮೆಲ್ಲರೆದುರು ಹೇಳುತ್ತಾ ಸಾಗಿದರು. ‘ಕನ್ನಡ ತಂತ್ರಾಂಶ’ಕ್ಕೆ ಸಂಬಂಧಿಸಿದಂತೆ ದೊಡ್ಡ ಕಂಪನಿಗಳನ್ನೂ ಹಾಗು ಕೇಂದ್ರ-ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಕಿವಿಗಳನ್ನು ತಲುಪಲು ಒತ್ತಡ ನಿರ್ಮಿಸಬಹುದಾದ ಚಟುವಟಿಕೆಗಾರರ (ಪ್ರೆಶರ್ ಆಕ್ಟಿವಿಸ್ಟ್) ತಂಡವೊಂದಿದೆಯೆ? ನಾವು ನಿರ್ಮಿಸಬಹುದೆ? ಎಂದು ಆಲೋಚನೆ ಸಾಗಿತು. ಸ್ಪಷ್ಟ ಉತ್ತರಗಳು ಸಿಗಲಿಲ್ಲ. ‘ಕನ್ನಡ ಗಣಕ ಪರಿಷತ್’ ಈಗಾಗಲೇ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಕನ್ನಡಿಗರು ಅವರನ್ನು ಬೆಂಬಲಿಸಿ ನಮ್ಮೆಲ್ಲರ ಆಶಯವಾಗಿರುವ ‘ಕನ್ನಡ ತಂತ್ರಾಂಶ ಅಭಿವೃದ್ಧಿ’ಯನ್ನು ಬಲಗೊಳ್ಳಿಸಬೇಕು ಎಂದು ನನಗನ್ನಿಸುತ್ತದೆ. +ವಾಸು ಮತ್ತವರ ಪತ್ನಿಯಿಂದ ಬೀಳ್ಕೊಟ್ಟು ಗೋಪಿ ಅವರ ಮನೆಗೆ ಹೋಗುವಾಗ ದಾರಿಯಲ್ಲಿ (ಮತ್ತೆ ಅದೇ ರೂಟ್ ಒನ್, ಅದೇ ವೇಗ, ಝಗಮಗಿಸುವ ನಿಯಾನ್ ಫಲಕ ಹೊತ್ತ ಗ್ಯಾಸ್ ಸ್ಟೇಶನ್‌ಗಳು, ರೆಸ್ಟೊರೆಂಟುಗಳು, ಗವಾಕ್ಷಿಗಳು) ಎಲ್ಲೇ, ಇದ್ದರೂ, ಯಾವುದೇ ವೃತ್ತಿಯಲ್ಲಿದ್ದರೂ, ಮೇಲ್ವರ್ಗದ ನಾವೆಲ್ಲ ಬೇಡಿ ಬಯಸುವ ಇಂದಿನ ‘ಇಂಡಿಜ್ಯುವಲಿಸ್ಟಿಕ್’ ದಿನಗಳಲ್ಲಿ ‘ವಾಸು’ ನಮಗೆ ಏಕೆ ಮತ್ತು ಹೇಗೆ ಒಂದು ಮಾದರಿ ಎಂದು ಕೊಂಚ ಭಾವೋತ್ಕಟತೆಯಲ್ಲಿ ಗೋಪಿನಾಥರೆದುರು ನಾನು ಹೇಳುತ್ತಿದ್ದೆ. +ರೂಟ್ ಒನ್‌ನ ಮೇಲೆ ರೂಪಕ ಮತ್ತು ಕ್ರಿಯೆಯಾಗಿ ‘ಬರಹ’ದ ವಾಸು. +***** +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […] +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_716.txt b/Kannada Sahitya/article_716.txt new file mode 100644 index 0000000000000000000000000000000000000000..8581a6bd4d72077eaac705c5b8fdc5c471e8ac3e --- /dev/null +++ b/Kannada Sahitya/article_716.txt @@ -0,0 +1,65 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆ ಗಿಡಾ, ಈ ಗಿಡಾ +ಒಂದೊಂದೂ ಜೇಂಗೊಡಾ; +ಬಾಂದೇವಿಗೆ +ನೆಲದಾಯಿಯ +ಹೂಗೊಂಡೆಯ ಹೊಂಗೊಡಾ +ಯಾವ ಹಸಿರೊ, ಯಾವ ಹೆಸರೊ +ತರುಲತೆಗಳ ತೋರಣಾ; +ಬಂದುದೆಲ್ಲಿ? +ಬೆಳೆಯಿತಲ್ಲಿ? +ನಿಷ್ಕಾರಣ ಕಾರಣಾ +ನೀಲಾಂಗಣ, ತಿರೆ-ಕಂಕಣ +ಕೆಂದಳಿರಿನ ಕಾವಣಾ; +ಅಲ್ಲಿ ಇಲ್ಲಿ +ಎಲ್ಲೆಲ್ಲಿಯು +ಸವಿಹಾಡಿನ ರಿಂಗಣಾ +ಹೂ ಹೂವಿಗೆ ದುಂದುಂಬಿಯ +ಮೈ ಕೈಗಳ ಸ್ಪರ್ಶನಾ; +ಅಪರಂಜಿಯ +ಅನುರಾಗದ +ಮಾಧುರ್ಯದ ಬಂಧನಾ +ಮಾಂದಳಿರಿನ ಮೇಲ್ಮಾಳಿಗೆ +ಮಧುಕೋಗಿಲೆಗಾಸರಾ; +ಎದೆಯುಬ್ಬಿಸಿ +ಕುಕಿಲಿಡುತಿರೆ +ಎಲೆ ಎಲೆಗಳ ಮರ್‍ಮರಾ +ಅಳಲುಸಿರಿಗೆ ಸುಸಿಲುಸಿರಿನ +ತಂಪಿನ ತಳಿ ಚಿಮುಕಲಾ; +ಹಾಲುಗಳ್ಳಿ +ಜೋಲು ಬಳ್ಳಿ +ತೂಗುಮಂಚ ಚಂಚಲಾ +ಜುಳು ಜುಳು ನದಿ ಕಲ ಕಲ ರುತಿ +ಜೋಗುಳದುಲಿ ಕೇಳಲಾ; +ವಿಶ್ವದೊಡಲ +ತಣಿಸಲೆಂದ +ಹಾಲ್ಜೇನಿನ ಮಳೆಯಲಾ +ತಿರೆಯ ನವಿರು ಹುಲ್ಲು ಹಸಿರು +ಮಕಮಲ್ಲಿನ ಮುಸುಗಲಾ +ಮುಗುದೆ ತನ್ನ +ಮನೆಗೆಲಸದಿ +ಗುಣುಗುಣಿಸುವ ಹಾಡಲಾ +ಹಕ್ಕಿಜೋಡಿ ಒಂದುಗೂಡಿ +ಉಲಿಯುತಿರುವ ಹುಮ್ಮಸಾ; +ಬನದೈಸಿರಿ +ಕುಶಲ ಕುಂಚ +ಚಿತ್ರದಂತೆ ಹೊಸ ಹೊಸಾ +* * * +ತನಗೆ ತಾನೆ ತಿಳಿಯದಂತೆ +ತುಳುಕಿತಹಹ ಭಾವನಾ +ಕಮ್ಮಲರಿಗೆ +ಕವಿ-ಗಾಳಿಗೆ +ಕಾವ್ಯಾಕ್ಷಿಗೆ ವಂದನಾ +***** +ಹಗಲೆಂದರೆ ಇವಳು ಕಾಣುವ ಕನಸು ಹೊತ್ತು ತರಬೇಕು ಇವಳಿದ್ದಲ್ಲಿ, ನಿದ್ದೆ-ಮಂಪರು-ಕನಸು-ಕಂಪನ; ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ ರಾತ್ರಿ ಚಾದರದಡಿಗೆ ದಂಡು ದಂಡು ಮಂದಿ ಬಂದು ಬೀಳುತ್ತಾರೆ ಉಂಡಷ್ಟೂ (ಸಹ) ಭೋಗ ಕೊಂಡಷ್ಟೂ (ಸ)ರಾಗವೆಂದು. ಸಾವಿರ […] +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […] +ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನುಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆಕೂಡಿ ಇಮ್ಮೈಯಾಗಿ ಪಡೆಯರಂತೆ ಅಲೆಯ ಮೇಲಲೆಯ ಸುಖವಂತೆ ಪಡುವಾಗಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆಕಣ್ ಮುಚ್ಚರಂತೆ ನಮ್ಮಂತೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_717.txt b/Kannada Sahitya/article_717.txt new file mode 100644 index 0000000000000000000000000000000000000000..e6d66faaf12437b040a790efa723992a7eec4ce2 --- /dev/null +++ b/Kannada Sahitya/article_717.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎರಡೂ ಬಲೆಯೇ: +ಹೀಗಿದ್ದರೂ +ಜೇಡನ ಬಲೆಯಿಂದ ಮೀನು +ಹಿಡಿಯಲಾಗದು; +ಮೀನಿನ ಬಲೆಯಿಂದ ನೊಣ +ದಕ್ಕಲಾರದು. +***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? ***** +History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_718.txt b/Kannada Sahitya/article_718.txt new file mode 100644 index 0000000000000000000000000000000000000000..49b9bb63eda8750af0eec8f55d9c71e66b45ee63 --- /dev/null +++ b/Kannada Sahitya/article_718.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇಲ್ಲಿ! +ಎರಡು ಬಂಡೆಗಳ ಬಿರುಕಲ್ಲಿ +ನುಸುಳಿದರೆ ಮೆಲ್ಲಗೆ…. +ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು +ತನ್ನೊಳಗೆ ಅವಿಸಿಕೊಂಡು +ಹನಿ ಹನಿ ಹುಲ್ಲು ಹುಲ್ಲೆ +ಜೀವ ಜಂತುಗಳ ವಾಸನೆಯ ಆಘ್ರಾಣ +ತೆರೆಯ ಬಿಟ್ಟರೆ +ಕಣ್ಣಿಗೆ +ಕತ್ತಲ ಮೈದಡವುತ್ತಾ ತೆವಳುವ ಕಸುಬು +ಬಿರುಕು ಮೈ, ಒರಟು ಕೈ…… +ಬಂಡೆಗಳ ಅಪ್ಪುಗೆಯ ತಪ್ಪಿ +ಜಾರುವ ತುಂತುರು ಬೆಳಕಲ್ಲಿ +ಹೊಳೆವ ಹನಿ ಹನಿ ಬೆವರು. +ಮತಂಗ ಪರ್ವತಕ್ಕೆ +ಅಂಗಾಂಗನ್ನೇ ಹೀರಿ ಬಿಡುವ ವ್ಯಾಮೋಹ +ಉತ್ತುಂಗ ಶಿಖರದ +ತುತ್ತ ತುದಿಯ ತಳಕ್ಕೆ +ಕಾಣುವುದು, +ಪಾಳು ಬಿದ್ದ (ವಿಜಯನಗರದ) +ವೇಶ್ಯಾವಾಟಿಕೆಯ ವೈಭವ. +***** +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […] +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_719.txt b/Kannada Sahitya/article_719.txt new file mode 100644 index 0000000000000000000000000000000000000000..c763a54805169fa8efafae7b437c74f06e2cab49 --- /dev/null +++ b/Kannada Sahitya/article_719.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನೆವರೆಗೆ ಜಯಭೇರಿ ಹೊಡೆದ ನಾ +-ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ +ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು +ಇನ್ನೇನುಂಟು? +ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ +ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ +ಹಾಕಿಸಿಕೊಂಡು ಒಬ್ಬಂಟಿ +ಅಲ್ಲಲ್ಲಿ ಹರಡಿ ಬಿದ್ದ ಮೇಕಪ್ ಸಾಮಗ್ರಿ +ತಂಬು ಹರಿದ ಚಿಂದಿ ಲೈಟಿನ ಝರಿ +ಧೂಳು ಹೆಕ್ಕುತ್ತ ಕೂಡ್ರುವ ಬಿಕೋ ಕೆಲಸ +ಮೂಲೆ ಮೂಲೆಯಲ್ಲು ಹರಿದ ನಿದ್ರೆ +ಪ್ರತಿ ಮೌನಕ್ಕು ಮಾತು ತೊಡಿಸಿ ಅರ್ಥ ಕೂಡಿಸುವ +ಡೊಂಬರಾಟ ಸ್ವಲ್ಪ ಗೂಟಕ್ಕಿಟ್ಟು +ಆರಾಮು ಮಾತು ಗುಟುಕುತ್ತ ಬದುಕಿನಾಟ ಆರಂಭಿಸೋಣ +-ವೇ ಅಥವ ಎಲ್ಲವನು ಗುಡಿಸಿ ನೀರೊಲೆಗಿಟ್ಟು +ಕೊಂಚ ಸುಧಾರಿಸಿಕೊಂಡು +ಮತ್ತೆ ಸ್ಟೇಜು ಕಟ್ಟುವ ಹೊಣೆ ಹೊತ್ತುಕೊಳ್ಳೋಣವೇ +ನಾವು ಕಟ್ಟ ಬಲ್ಲೆವು ಮಾತ್ರ ನಟಿಸಲಾರೆವು ಜೀಯಾ +ಯಾಕೆ ಗೊತ್ತ +ನಮಗೆ ಇಲ್ಲದ್ದ ತೊಡಿಸುವುದಕ್ಕಿಂತ ಇದ್ದದ್ದ +ಕಳಚುವುದೇ ಸುಲಭ. ರಂಗಕಿಂತಲೂ ಜಾಸ್ತಿ ನೇಪಥ್ಯ ಗುರ್‍ತು +ಮಂಕು ಕತ್ತಲೆಯಲ್ಲವಯವಗಳ ತಪಾಸಣೆ +ಕಷ್ಟವಲ್ಲವೆ ಮತ್ತೆ ಆದರೂ ತಡವುತ್ತೇವೆ +ತಡವುತ್ತಲೇ ಗಟ್ಟಿಗೊಳ್ಳುತ್ತೇವೆ +ಮತ್ತೆ ಹೀಗೆ ಎಲ್ಲ ಬಿಚ್ಚಿ ಬಿಟ್ಟೆ ಹರಾಜಿಗಿಟ್ಟು +ಕೂಡ್ರುತ್ತೇವೆ ಸಾಯುವುದಿಲ್ಲ +ನಮ್ಮ ಸಮಾಧಾನಕ್ಕಲ್ಲ +ತಬ್ಬಲಿ ತಬಲಾ ಪೀಯನ್ನುಗಳ ಸ್ಥಾಯೀ ಬರಗಾಲಕ್ಕಲ್ಲ +ಗಡಗಡೆಯಿಂಧಡ್ಡುರುಳುವ +ರಾಸ್ತಾ ಹೂ ಪಾರ್‍ಕು ಅರಣ್ಯಗಳಿಗಾಗಲ್ಲ +ಸಾಯಲಿ, ಜಂಗು ಕಬ್ಬಿಣದ ಖುರ್‍ಚಿಗಳಿಗಾಗೂ ಅಲ್ಲ +ಬದುಕಿದ್ದೇನೆ ಎನ್ನುತ್ತೇವೆ +ರಂಗದಿಂದೊಂದಿಷ್ಟು ದೂರ ಕೂತು +ಕನಿಷ್ಠ ಬದುಕಿದಂತೆ ನಟಿಸುತ್ತೇವೆ +ನಮ್ಮ ನಿಸ್ವಾರ್‍ಥ ಸ್ವಾರ್‍ಥಕ್ಕಾಗೇ. +***** +ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […] +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ ಹಾಳಾದ ಕಾರಖಾನೆ ! ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ ! […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_72.txt b/Kannada Sahitya/article_72.txt new file mode 100644 index 0000000000000000000000000000000000000000..94956d09436208e902f5f1ceb9e2412208fc8400 --- /dev/null +++ b/Kannada Sahitya/article_72.txt @@ -0,0 +1,152 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಏಸುಕ್ರಿಸ್ತ ಏಸು ಬುದ್ಧ +ಏಸು ಬಸವ ಬಂದರೂ, +ತಮ್ಮ ಅಂತರಂಗವನ್ನೆ +ಲೋಕದೆದುರು ತೆರೆದರೂ +ನಶ್ವರದಲಿ ಈಶ್ವರನನು +ಕಂಡು ಜಗದ ಕಲ್ಯಾಣಕೆ +ಎದೆಯ ಪ್ರಣತಿ ಜ್ಯೋತಿಯಲ್ಲಿ +ದಯೆಯ ತೈಲವೆರೆದರೂ, +ಪುಣ್ಯ ಪುರುಷ ಗಾಂಧಿ ತಂದೆ +ನೆತ್ತರಲ್ಲಿ ನಾಂದರೂ +ನೀನು ಮಾತ್ರ ಬೋರ್ಕಲ್ಲೆಲೆ ಪೆಡಂಭೂತನಂತಿಹೆ! +ಮತ್ತೆ ಹೊಲಸು ಕೆಸರಿನಲ್ಲೆ ಮತ್ತನಂತೆ ಬಿದ್ದಿಹೆ; +ತೊಳೆದು ಹೋಗಲಿಲ್ಲವಿನ್ನು ನಿನ್ನ ಮನದ ಮೈಲಿಗೆ +ಬರುವದಿಲ್ಲೆ ನಾಚಿಗೆ? +ಮೇಲೆ ಅಹಾ! ಥಳಕು ಬೆಳಕು +ಒಳಗಸಹ್ಯ ಕೊಳಚೆ ಕೊಳಕು +ದುರಾಚಾರ ದುರುದ್ದೇಶ +ದುರ್ನೀತಿಯ ಹೊಲೆಯಿದೆ; +ಡಾಂಭಿಕತೆಯ ಮುಸುಗಿನಲ್ಲಿ +ಬೂಟಾಟಿಕೆಯಾಟವಲ್ಲಿ; +ನೀತಿಯೆಂಬ ಹೆಸರಿನಲ್ಲಿ +ಹುಚ್ಚು ಹೊಳೆಯ ಹಸುರಿನಲ್ಲಿ +ಅಹಂಕಾರ ಹೂಂಕಾರವ- +ಗೈವ ದುರುಳ ಕರುಳಿನಲ್ಲಿ +ಮೋಸವಲ್ಲಿ ನೆಲಸಿದೆ! +ಬಲ್ಮೆ ಸುಲಿಗೆ ನಡೆಸಿದೆ! +ಗುಣವಿಹೀನ ನಿನ್ನ ರೂಪ +ಬಿಸಿಲ ತಾಪ, ವಿಷದ ಕೂಪ +ರೊಚ್ಚಿಗೆದ್ದು ಕೊಡಲು ಶಾಪ +ಅಯ್ಯೊ ಪಾಪ ಎನಿಸಿದೆ. +ನಗುವ ಹುವ ಹೊದರಿನಲ್ಲಿ ಹಾವು ಹುತ್ತ ಕಟ್ಟಿದೆ +ವಿಷದ ಹೊಗೆಗೆ ದೀನ ಜನರ ಉಸಿರು ಕಟ್ಟಿ ಬಿಟ್ಟಿದೆ +ಎತ್ತ ನೋಡಿದತ್ತ ಕುತ್ತು ಕಾಲು ಕೆದರಿ ನಿಂತಿದೆ +ಕರುಣೆಯೊಡಲು ಕುಸಿದು ಬಿದ್ದ ಜ್ವಾಲಾಮುಖಿಯಂತಿದೆ! +೨ +ದೊಡ್ಡ ಜನರ ದೊಡ್ಡಸ್ತಿಕೆ +ಹೊಗಳು ಭಟರ ಡಬಡ್ಡಳಿಕೆ +ಅನ್ಯಾಯದ ದಬ್ಬಾಳಿಕೆ +ಹೇಳು ಕ್ರೂರಿ ಏತಕೆ? +(ಸ್ವಲ್ಪ ಜನರ ಸಂತೋಷಣಕೆ!) +ನರಗೆ ನರನ ರಕ್ತ ರುಚಿಯೆ? +ಶೋಷಣೆಯಿದು ನಿನಗೆ ಶುಚಿಯೆ? +ಹೇ! ಸಮಾಜಪಾತಕಿ +ಕಪಟ ವೇಷ ನರ್ತಕಿ! +ನಿನ್ನ ಲಾಸ್ಯ ಹಾಸ್ಯದಲ್ಲಿ +ಕುಡಿತ ಮೆರೆತ ಕೇಕೆಯಲ್ಲಿ +ಉದರಭರಣಕಾಗಿ ಹರಣ +ಕೊಡುವ ಈ ದುರಂತ ಮರಣ +ಚರಮ ಗೀತ ಕೇಳದೆ? +ಅಂಜುಬುರುಕರೆಂದು ಕಪ್ಪೆ ಚೆಲ್ಲಿ ಮೋಜು ನೋಡುವೆ +ಮುಗ್ಧ ಕುಸುಮಕೋಮಲೆಯರ ರುಂಡಮಾಲೆ ಸೂಡುವೆ! +ನಿಷ್ಕಲ್ಮಷ ಎದೆಗಳನ್ನೆ ಹತ್ತಿ ತುಳಿದು ಹಿಂಡುವೆ +ಧೀರರೆಂದು ಕಂಡು ಬರುವ ಮೊದಲೆ ಜೀವ ಹೀರುವೆ! +ಕೈಯ ತುತ್ತು ಕಸಿಯುವೆ +ಮತ್ತೆ ಹಲ್ಲು ಮಸೆಯುವೆ +ಪದೇ ಪದೇ ಅದೇ ರೀತಿ +ಅದೇ ನೀತಿ ಎನ್ನುವೆ, +ಹಳಸಿ ಹೋದ ತತ್ತ್ವಗಳನೆ +ಮೆದುಳಿನಲ್ಲಿ ತುರುಕುವೆ, +ಎಂದಿನಂತೆ ನಿನ್ನ ಭೂಮ +ಹೊಟ್ಟೆ ಹೊರೆದುಕೊಳ್ಳುವೆ! +೩ +ಹಗಲು ಇರುಳು ಅರಳು-ಮರಳು +ಇದ್ದು ಬಿದ್ದ ಜೀವಕುರುಲು! +ನಿನಗೆ ಹಿಡಿದ ಒಳರೋಗಕೆ +ಸೂಜಿ ಮದ್ದು ಸಾಲದು! +ಬೇಕು ಅದಕೆ ಮಾಚಿಕಿತ್ಸೆ +ಒಲ್ಲೆನೆಂದರಾಗದು! +ಉಸ್ಸೆನ್ನುವ ಜನದುಸಿರಿಗೆ +ಬುಸ್ಸೆನ್ನುತ ಹಡೆಯನೆತ್ತಿ +ಕಚ್ಚಿ ವಿಷವ ಕಾರುವೆ! +ಹಾಲನುಣಿಸಿ ಹಿತದ ಮಾತ +ಹೇಳಿದವರ ಮರೆಯುವೆ +ಧರ್ಮಾಂಧರ ಹಣವಂತರ +ಬೆನ್ನು ಕಟ್ಟಿ ಗುಣವಂತರ +ಬಡಿವ ಭೂತ ಬೆಂತರ! +ರಕ್ತ ಕೋಡಿ ಹರಿಸಿದೆ, +ಮಂತ್ರದರ್ಥವರಿಯದಯ್ಯೊ +ಮೂಢ ಸಂತೆ ನೆರೆದಿದೆ! +ಮಡಿಯ ಮಾಡಿ ಉಡುವೆನೆಂದು +ಬೊಗಸೆ ನೀರು ಸುರುವಿ ಕೊಳಕು +ಪಂಚೆ ತೊಳೆದ ಮಾತ್ರಕೆ +ಅಚ್ಚ ಹಸನುಗೊಳಿಸದಿರಲು +ಮನಕೆ ಶುಭ್ರವೆನಿಸದಿರಲು +ಮಡಿಯಾಯಿತೆ ಪೂಜೆಗೆ? +ಅದರೊಳುಳಿದ ಜಿಡ್ಡಿನಂತೆ +ನೀನು ಕೂಡ ಮಡ್ಡನಂತೆ +ತಿಳಿಯೊ ಮೊದಲು ತತ್ತ್ವವ +ಅದರ ಮೂಲ ಸತ್ತ್ವವ! +೪ +ಅಧಿಕಾರದ ಅಮಲಿನಲ್ಲಿ +ಮೂಢ ಜನರ ಬೆಂಬಲದಲಿ +ಹೆಸರು ಪಡೆವ ಹಂಬಲದಲಿ +ಅರಿಯದಂಥ ಕುನ್ನಿಗಳನು +ನುಂಗಿ ನೀರು ಕುಡಿದಿಹೆ! +ತೀರಲಿಲ್ಲ ಆ ಪಿಪಾಸೆ +ಟೊಣೆಯುತಿರುವ ಈ ದುರಾಶೆ- +ವಿಶ್ವಪ್ರೇಮ ದಿವದ ಬಯಕೆ- +ಗೆಲ್ಲ ಕೀಲಿ ಜಡಿದಿಹೆ! +ನೊಂದರೂನು ಕರುಣೆ ಬಂದು +ಪರಿಪರಿಯಲಿ ಹೇಳುವೆ; +ಕೇಳಲಾರೆಯಾದರಿನ್ನು +ಭೀಮಗದೆಯನೆತ್ತುವೆ! +ನೂರು ದೂರು ಕೇಳುತಿರುವೆ +ನಿತ್ಯ ನಾನೆ ನೋಡುತ್ತಿರುವೆ +ಇನ್ನು ಬರಿದೆ ತಾಳಬಹುದೆ ಇಂಥ ನರಕಯಾತನೆ +ಕಣ್ಣಮುಂದೆ ನಡೆಯುತ್ತಿರಲು ಋತದ ಶಿವದ ಭರ್ತ್ಸನೆ! +ಎನಿಸು ಕಾಲ ನಡೆಸಬಹುದು ಘೋರ ಆತ್ಮವಂಚನೆ +ಅದಕೆ ಕೊಡುವೆನಿಂದು ಕೊನೆಯ ಎಚ್ಚರಿಕೆಯ ಸೂಚನೆ; +ಹರೆಯದೇರು ಗರುವದಲ್ಲಿ +ಉದ್ರೇಕದ ಮಬ್ಬಿನಲ್ಲಿ +ಕೈಲಾಗದ ಕನಸನುಂಡು +ಮೈಯನೆಲ್ಲ ಪರಚುತಿರುವೆ +ಕನಲಿ ಕೆಂಡವಾಗುತ್ತಿರುವ +ಅಪ್ರಬುದ್ಧ ಬುದ್ಧಿಹೀನ- +ನೆಂದು ಹಳಿಯಬಹುದು, ತುಳಿಯಬಹುದು ಆದರೆ- +ಅರಿವು ಮರವೆಯಾದರೂ +ನಾವು ನೀವು ಅಳಿದರೂ +ಉಳಿದೆವೆಂದು ತಿಳಿದರೂ +ಸತ್ಯವೊಂದು ನಿತ್ಯವಾಗಿ ಗೆಲ್ಲುವದೋ ಬಾಳನು! +ಪಂಜು ಹಿಡಿದು ಹೊರದೆಗೆವುದು ಕೆಟ್ಟ ಕೀಳು ಕಿಲುಬನು! +ಪಾಳ್ಮಸಗಿದ ನೆಲದೊಳಂದು ಮಾಮಸಕವೆ ನಡೆವುದು +ಭೂತ ವರ್ತಮಾನ ನಡೆದ ಕಥೆಯನಲ್ಲ ಪೇಳ್ವುದು. +ಹೊಸತು ಬಾಳ ಹೊಸತಿಲಲ್ಲಿ ಅದೋ ಯುವಕ ವೃಂದವು +ಕೋಟಿ ಹೃದಯ ನಾಟಿ ತಂತ್ರಿ ಮೀಟಿ ಬರುವ ಬಯಕೆಯು +ಒಳಗೆ ಕುದ್ದು ಕುದ್ದು ಅದನೆ ಮೆದ್ದ ಉಗಿಯ ಶಕ್ತಿಯು +ಬೆಂಕಿಯಾಗಿ ಚಿಮ್ಮಿ ನಿನ್ನ +ಜ್ವಾಲೆಯಾಗಿ ಸುಡುವ ಮುನ್ನ +ಒಳಗು ಹೊರಗನೆಲ್ಲವಿಂದೆ +ತೊಳೆದುಕೋ ಸಮಾಜವೆ! +ಧ್ಯೇಯವಾದಿಗಳನು ತುಳಿಯೆ +ನಿನ್ನ ನೀನೆ ಕೊಂದುಕೊಳುವೆ +ಸುಟ್ಟು ಬೂದಿಯಾಗುವೆ! +ಕೆಲವು ಕಾಲ ಮೆರೆಯಬಹುದು ನಿನ್ನ ಉಬ್ಬಿದಬ್ಬರ +ಇಂದು ಕಟ್ಟು ಕಟ್ಟಳೆಗಳ ನಿಗಳ ಕಳಚು ಚಚ್ಚರ! +ಮಸೆದ ಗಂಡುಗೊಡಲಿ ಕೆರಳಿ ಕೊಟ್ಟ ಕೊನೆಯ ಎಚ್ಚರ! +ಎನಿತೊ ಕಾಲ ಮಣಸನರೆದ ತಲೆಯ ತಿಂದ ಬೆಂತರ! +***** +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! ***** +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_720.txt b/Kannada Sahitya/article_720.txt new file mode 100644 index 0000000000000000000000000000000000000000..b065d047f863e513033628e6271b998f27eefd11 --- /dev/null +++ b/Kannada Sahitya/article_720.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾಗಿಲು ತೆಗೆದದ್ದೇ ನನ್ನ ಜತೆ ಮತ್ತೊಬ್ಬ ಸಣ್ಣ ಅತಿಥಿಯನ್ನು ನೋಡಿ ಸಿಡಿಮಿಡಿಯನ್ನು ಅಣ್ಣಗೆ ವ್ಯಕ್ತಪಡಿಸಿ ಸುಮಿ ಸರ್ರಂತ ತಿರುಗಿ ಸೀದ ಒಳಹೋದಳು. ದಂಗಾದ ಛೋಟು ಮಿಕಿಮಿಕಿ ನನ್ನೇ ನೋಡಿದ. “ಬಾ ಛೋಟೂ ಬಾ”-ಎಂದು ಅವನ ಬೆನ್ನು ಸವರಿ ಮನೆಯೊಳಕ್ಕೆ ತಂದೆ. ಒಂಬತ್ತು ಗಂಟೆ. ಸಾಮಾನ್ಯವಾಗಿ ನಮ್ಮ ಊಟದ ಸಮಯ. ರೇಡಿಯೋ ತೆಪ್ಪಗಿತ್ತು. ಸುಮಿ ತಳ್ಳಿಕೊಂಡು ಹೋದ ಕರ್ಟನ್‌ಗಳು ಮೆಲ್ಲಗೆ ತೂಗುತ್ತಿದ್ದವು. ಕೂತು ಶೂ ತೆಗೆಯಲಾರಂಭಿಸಿದೆ. ಸುಮಿಗೆ ಹೇಳದೇ ಆಫೀಸಿನ ನಂತರ ಸೀದಾ ಭಗೀರಥನ ಮನೆಗೆ ಹೋದದ್ದು ನನ್ನ ಮೊದಲ ಗುನ್ಹೆ. ತಡವಾಗಿ ಬಂದದ್ದು ಎರಡನೆಯದು. ಮತ್ತೀಗ ಬರುವಾಗ ಅನಿರೀಕ್ಷಿತವಾಗಿ ಭಗೀರಥನ ಪುತ್ರ ಛೋಟೂನನ್ನು ಕರಕೊಂಡು ಬಂದದ್ದು ಪ್ರಾಯಶಃ ಸುಮಿಯ ಸಂತಾಪಕ್ಕೆ ಕಲಶವನ್ನಿಟ್ಟಿದೆ. ಭಗೀರಥ ಹಿಂದೊಮ್ಮೆ ನನ್ನ ಸಹೋದ್ಯೋಗಿಯಾಗಿದ್ದವನು. ಮಾಲತಿ ಅವನ ಹೆಂಡತಿ. ಅವನಿಗೇನೋ ಪ್ರಮೋಷನ್ ಆಯಿತು ಅಂತ ತಿಳಿದದ್ದರಿಂದ ಅಭಿನಂದನೆ ಮಾಡೋಣ ಅಂತ ಸೀದ ಆಫೀಸಿನಿಂದ ಅವನಲ್ಲಿಗೆ ಹೋಗಿದ್ದೆ. ಭಗೀರಥ ಮತ್ತು ಮಾಲತಿ ಎಷ್ಟು ಬೇಡವೆಂದರೂ ಕೇಳದೆ “ನನ್ನ ಉತ್ತರಾಧಿಕಾರಿ ಮನೆಯಲ್ಲಿದ್ದಾನಲ್ಲ! ಅವನ ಜತೆ ಎರಡು ದಿನ ಇರಲಿ ಛೋಟು. ಅವನಿಗೂ ಒಂದು ಛೇಂಜ್. ಯಾಕೆ ಛೋಟೂ ಬರ್ತೀಯಲ್ಲ” ಅಂತ ಕೇಳಿದಾಗ ಈ ಪುಟ್ಟ ಸಂಭಾವಿತ ಹೋಗಲೋ ಬೇಡವೋ ಅನ್ನುವಂತೆ ವಿಧೇಯತೆಯಿಂದ ಮಾಲತಿಯ ಕಡೆ ನೋಡಿದ್ದ. “ನಡಿಯೋ ಮಾರಾಯಾ ಎರಡು ದಿನ ತಂಟೆ ಇಲ್ಲ ನಿಂದು” ಎಂದು ಅವರಿಬ್ಬರೂ ಕಳಿಸಿಕೊಟ್ಟಾಗ ಇಷ್ಟು ಸುಲಭದಲ್ಲಿ ಕಳಿಸಿಕೊಟ್ಟು ಅತ್ತು ರಂಪ ಮಾಡುವ ಅತ್ಯುತ್ತಮ ಅವಕಾಶ ತಪ್ಪಿಹೋದದ್ದಕ್ಕೋ ಏನೋ ರಸ್ತೆಯಲ್ಲಿ ಬಸ್‌ಸ್ಟಾಪಿನಲ್ಲಿ ಎಲ್ಲ ಮಂದವಾಗಿಯೇ ಇದ್ದ. “ನಮ್ಮ ಮನೆಯಲ್ಲಿ ರೈಲಿದೆ. ಹೆಲಿಕಾಪ್ಟರು, ಕೇರಂ, ನಿನಗೆ ಯಾವ ತಿಂಡಿ ಇಷ್ಟ? ನಮ್ಮ ಕಿಶೋರ ಮತ್ತು ನೀನು ಅಣ್ಣ ತಮ್ಮಂದಿರಂತೆ ಇರಬೇಕು ಗೊತ್ತಾಯ್ತಾ?”-ಎಂದಾಗ “ಕಿಶೋರ್‌ಗೆ ಫೈಂಟಿಂಗ್ ಬರತ್ತಾ?” ಎಂದು ಅನುಮಾನ ವ್ಯಕ್ತಪಡಿಸಿದ. “ಹೆ ಹೆ ಫೈಂಟಿಂಗ್ ಗೈಟಿಂಗ್ ಎಲ್ಲಾ ಮಾಡಬಾರದು ನೀವು. ಅಣ್ಣ ತಮ್ಮಂದಿರಂತೆ ಇರಬೇಕು”-ಎಂದಾಗ ನಿರಾಶನಾಗಿ ನಿಂತ. ಮನೆಯಲ್ಲಿ ಕಟ್ಟುನಿಟ್ಟಾದ ವಾರ್ನಿಂಗ್ ಕೊಟ್ಟಿತ್ತು ಅವನಿಗೆ. “ಅಂಕಲ್‌ಗೆ ಇದು ಕೊಡಿಸು ಅದು ಕೊಡಿಸು ಅಂತ ಕಾಡಿಸಬೇಡ”-ಅಂತ. ಒಟ್ಟಾರೆ ತೀರ ನಿರುಪಾಯನಾಗಿದ್ದ ಆತ ಬಸ್ಸಿನಲ್ಲಿ ಸೀಟೊಂದು ಖಾಲಿಯಾದಾಗ ಎಷ್ಟು ಕೂತುಕೋ ಅಂದರೂ ಕೂಡ್ರಲೇ ಇಲ್ಲ ಆಸಾಮಿ. ನಮ್ತರ ನಾನೇ ಕೂತು ಅವನನ್ನು ತೊಡೆ ನಡುವೆ ನಿಲ್ಲಿಸಿಕೊಂಡೆ. ಇವನನ್ನು ಕರಕೊಂಡೇನೋ ಬಂದೆ ಹೌದು ನಾನು. ಆದರೆ ಸುಮಿಯ ಬಗ್ಗೆ ಅಷ್ಟೊಂದು ವಿಚಾರ ಮಾಡಿರಲೇ ಇಲ್ಲವಲ್ಲ ಅಂದುಕೊಂಡರೂ, ಅವಳಿಗೆ ಎಷ್ಟೆಷ್ಟೋ ಆಶ್ಚರ್ಯಗಳನ್ನು ಕೊಟ್ಟ ನನ್ನಿಂದ ಬಹುಶಃ ಯಾವುದೂ ಅವಳಿಗೆ ಅನಿರೀಕ್ಷಿತವಲ್ಲ ಅನಿಸಿತ್ತು. ಬಸ್ಸಿನಲ್ಲಿ ಬಹಳ ಗದ್ದಲ ಇತ್ತು. ಬದಿಗೊಬ್ಬ ವಿಚಿತ್ರವಾದ ಮುಖವುಳ್ಳ ಮನುಷ್ಯ ನಿಂತಿದ್ದ. ಅವನ ತುಟಿ ಯಾವುದು ನಾಲಿಗೆ ಯಾವದು ಎಂಬುದು ಎಂಬುದು ತಿಳಿಯದ ರೀತಿಯಲ್ಲಿ ಬಾಯನ್ನು ಅಲ್ಲಾಡಿಸುತ್ತಿದ್ದ. ಛೋಟು ಅವನನ್ನೇ ಎರಡು ಕ್ಷಣ ನಿಟ್ಟಿಸಿ ನೋಡಿದ. ಆಮೇಲೆ ಉಳಿದವರನ್ನೆಲ್ಲ ಒಂದೊಂದಾಗಿ ನೋಡಿದ. ಎಲ್ಲರೂ ವಿಚಿತ್ರವಾಗಿ ಕಂಡಂತಾಗಿಯೋ ಏನೋ ನನ್ನೆಡೆ ತಿರುಗಿ ನೋಡಿದ. ನಾನು ಹೇಗೆ ಕಂಡೇನೋ ಏನೋ ಒಮ್ಮೆಲೆ ಅಳುಮುಖ ಮಾಡಿದ. ಅವನ ಕೆಳತುಟಿಯ ಕೆಳಭಾಗ ಮೆಲ್ಲಗೆ ಅದುರಲಾರಂಭಿಸಿತ್ತ ಅಳುವಿನೆಡೆ ಸಾಗುವ ಲಕ್ಷಣಗಳು ಕಾಣಹತ್ತಿದವು. “ಅರೆರೆರೆ, ಹೇ ಹೇ ಹೊರಗೆ ನೋಡು, ಆ ಕೆಂಪು ನೀಲಿ ದೀಪ ನೋಡು, ಆಯಿತು ಮನೆ ಬಂತು. ಮುಂದಿನ ಸ್ಟಾಪಿಗೇ ಮನೆ ಬಾ, ಇಳಿಯುವಾ” ಎಂದು ಅವನನ್ನೆಬ್ಬಿಸಿ ಜನಸಂದಣಿಯಲ್ಲಿ ನುಸುಳುತ್ತ ಡ್ರೈವರನ ಎಡಬದಿಗೆ ನಿಂತೆ. “ಚಾಕಲೇಟು ಬೇಕಾ?” ಎಂದೆ. “ಕೊಡಿಸುತ್ತೇನೆ” ಎಂದೆ. “ನಮ್ಮ ಮನೆಯಲ್ಲಿ ಗಾಜಿನ ಹೂಜಿಯಲ್ಲಿ ಬಣ್ಣ ಬಣ್ಣದ ಮೀನಿದೆ ನೋಡುವಿಯಂತೆ” ಎಂದೆ, ಬಸ್ಸಿನ ಗದ್ದಲ ಬ್ರೇಕಿನ ಆಘಾತ ಇತ್ಯಾದಿಗಳಲ್ಲಿ ಛೋಟೂ ಪುಟ್ಟ ತಲೆ ಮೇಲೆತ್ತಿ ನನ್ನ ಚೌಕಾಶಿಗಳನ್ನು ಕಣ್ಣುಗಳಲ್ಲಿ ಹಾಕಿಕೊಳ್ಳುತ್ತಿದ್ದ. ಸ್ಟಾಪು ಬಂತು. ಅವಸರದಲ್ಲಿ ಇಳಿದೆವು. ಇಳಿದ ತಕ್ಷಣ ಛೋಟೂ ಏನೋ ಪಿಸುಗುಟ್ಟಿದ. ‘ಆಂ?’ ಎಂದೆ. “ಮನೆಗೆ ಹೋಗುತ್ತೇನೆ” ಎಂದು ತೀರ ಕೆಳಗಿನ ದನಿಯಲ್ಲಿ ಉಸುರಿದ. ಕೇಳದವನಂತೆ ನಟಿಸಿ ಸಮೀಪದ ಅಂಗಡಿಯಲ್ಲಿ ಚಾಕಲೇಟು ತೆಗೆದುಕೊಂಡು ಅವನಿಗೆ ಕೊಟ್ಟು-ಸುಮಿ ಇವ ಬಂದ ಅಂತ ಸ್ಪೆಷಲ್ ಆಗಿ ಏನೂ ಮಾಡಲಾರಳೇನೋ ಅನಿಸಿ ಬದಿಯ ಸ್ವೀಟ್ ಸ್ಟಾಲ್‌ನಲ್ಲಿ ಅರ್ಧ ಕಿಲೋ ಜಾಮೂನು ಖರೀದಿಸಿ ಮನೆಗೆ ಬಂದೆ. +ಶೂ ಕಳಚುತ್ತಿದ್ದ ನನ್ನನ್ನೇ ಅವಾಕ್ಕಾಗಿ ನೋಡುತ್ತ ಛೋಟು ನಿಂತಿದ್ದ. ಅವನನ್ನು ಬಳಿಗೆ ಎಳೆದು-“ಇದು ನಮ್ಮ ಮನೆ ತಿಳಿಯಿತಾ? ಈಗ ಒಳಗೆ ಹೋದಳಲ್ಲಾ ಅವಳು ಸುಮಿ ಆಂಟಿ. ನಿನ್ನ ಬರ್ತಡೇಗೆ ಬಂದಿದ್ದಳು ಅವಳು. ನೆನಪು ಇಲ್ಲವಾ?” ಎಂದೆ. ಸುಮಿ ಕಡೇ ಪಕ್ಷ ಅವನ ಗಲ್ಲವನ್ನಾದರೂ ಸವರಿ ಒಳಗೆ ಹೋಗಬಹುದಿತ್ತು. ಛೋಟೂಗೂ ಅದು ಅನಿಸಿತೋ ಇಲ್ಲವೋ ಆದರೆ ತನ್ನ ಮನೆಗೆ ಆಗಾಗ ಬಂದು ಹೋಗುವ ಸುಮಿ ಆಂಟಿಯಿಂದ ಅವನೇನೋ ಮಿಸ್ ಮಾಡಿದಂತಿತ್ತು. “ಕಿಶೋರ್” ಎಂದು ಕೂಗಿದೆ. ಕಿಚನ್‌ನಿಂದ ಸುಮಿ “ಊಟ ಮಾಡುತ್ತಿದ್ದಾನೆ” ಎಂದು ಗಡಸು ದನಿಯಲ್ಲಿ ಹೇಳಿದಳು. “ಕಿಶೋರ್” ಎಂದು ಮತ್ತೊಮ್ಮೆ ಕೂಗಿ “ನೋಡಿಲ್ಲಿ ಯಾರು ಬಂದಿದ್ದಾರೆ. ಛೋಟೂ ಬಂದಿದ್ದಾನೆ ಛೋಟೂ” ಎಂದು ಅರಚಿದೆ. ಛೋಟೂನ ಮೋರೆಯ ಮೇಲೆ ಮೆಲ್ಲಗೆ ಹುರುಪು ಜಿನುಗಿತು. ಒಳಗಿಂದ ಸದ್ದು ಬರಲಿಲ್ಲ. “ನಮ್ಮ ಕಿಶೋರ ಊಟ ಮಾಡ್ತಾ ಇದ್ದಾನೆ., ಬಾ, ನಾವೂ ಊಟ ಮಾಡೋಣ. ಹಾಂ?” ಎಂದು ಅವನನ್ನೆಬ್ಬಿಸಿ ಒಳಗೊಯ್ಯುವಾಗ ಅವನು ಮನೆಯನ್ನು ವಿಚಿತ್ರ ಆಸ್ಥೆಯಿಂದ ಅವಲೋಕಿಸಿದ. ಬಾಗಿಲ ಪಕ್ಕದಲ್ಲಿಯ ಅಕ್ವೇರಿಯಂ ಕಣ್ಣಿಗೆ ಬಿದ್ದಿರದಿದ್ದರೆ ಅವ ಮತ್ತೊಮ್ಮೆ ‘ಮನೆಗೆ ಹೋಗುತ್ತೇನೆ’ ಅಂತ ಪಿಸುಗುಡಬಹುದಿತ್ತು. “ಮೊದಲು ಊಟ, ನಂತರ ಅದನ್ನೆಲ್ಲ ನೋಡೋಣ” ಎಂದು ಅವನನ್ನು ನೇರ ಅಡಿಗೆಮನೆಯೊಳಕ್ಕೆ ಕರಕೊಂಡು ಹೋದೆ. ಊಟವನ್ನು ಅರ್ಧಕ್ಕೇ ಬಿಟ್ಟು ಹೊರಗೆ ಬರಲು ಒದ್ದಾಡುತ್ತಿದ್ದ ಕಿಶೋರನನ್ನು ಹಿಡಿದು ಅವನ ಬಾಯಲ್ಲಿ ಹಾಲು ಅನ್ನ ತುರುಕುತ್ತಿದ್ದಳು. “ನೋಡು ಯಾರು ಬಂದಿದ್ದಾರೆ?” ಎಂದೆ. ಛೋಟೂ ಹೆದರುತ್ತ ನಾಚುತ್ತ ಕಿಶೋರನನ್ನು ನೋಡಿದ. ಕಿಶೋರನ ಖುಶಿಯನ್ನು ಸಾರಲು ಬಾಯಿಯ ಅವಶ್ಯಕತೆ ಬೀಳಲಿಲ್ಲ . ಸುಮಿ ಸೊಟ್ಟ ಮೋರೆ ಬದಲಾಯಿಸಲಿಲ್ಲ. ಛೋಟುವೆನೆಡೆ ನೋಡಲೂ ಇಲ್ಲ. ನನಗೆ ರೇಗಲಾರಂಭಿಸಿತು. “ನಮಗೂ ಬಡಿಸು. ಛೋಟೂನೂ ಮಾಡ್ತಾನೆ” ಎಂದು ಬಾತ್‌ರೂಂಗೆ ನಡೆದೆ. ನಾನು ಕೈತೊಳೆಯುತ್ತಿದ್ದಾಗ ಒಳಗಿಂದ ಸುಮಿ “ಏನೋ ಛೋಟೂ ಅಮ್ಮ ಹುಷಾರಾಗಿದ್ದಾಳೇನೋ. ನಿಮ್ಮ ಮನೆಯಲ್ಲಿ ಟೀ.ವಿ. ತಂದರಂತಲ್ಲಾ. ಆ ದಿನ ನಿಮ್ಮಮ್ಮ ಸಿಕ್ಕಾಗ ಹೇಳಲೇ ಇಲ್ಲ. ನಿನಗೂ ಹೇಳಬೇಡ ಅಂತ ಹೇಳಿದಾಳೇನೋ” ಅಂತೇನೋ ಹೇಳುತ್ತಿದ್ದಳು. ಬಟ್ಟೆ ಬದಲಾಯಿಸಿ ಬಂದಾಗ ಛೋಟೂ ಅಲ್ಲೇ ಕುರ್ಚಿಯ ಮೇಲೆ ಕೂತು ಕಿಶೋರನ ಊಟದ ತಟ್ಟೆಯನ್ನೂ, ಸುಮಿಯ ಉಣ್ಣಿಸುವ ಪರಿಯನ್ನೂ, ಬದಿಯಲ್ಲಿದ್ದ ತುಂಬಿದ ಹಾಲಿನ ಗ್ಲಾಸನ್ನೂ ನೋಡುತ್ತಿದ್ದ. +“ಛೋಟೂ ಕೈ ತೊಳೆದುಕೊಂಡೆಯೇನೋ” ಅಂತ ಕೇಳಿದೆ. ಅವನು ಉತ್ತರ ಕೊಡುವ ಮೊದಲೇ ಸುಮಿ “ನಮ್ಮ ಕಿಶೋರ ನೋಡು ಜಾಣ. ಯಾವಾಗಲೂ ಕೈತೊಳೆದೇ ಊಟಕ್ಕೆ ಕೂಡ್ರುತ್ತಾನೆ. ಅಲ್ಲವೇನೋ”-ಎಂದಳು. ಕಿಶೋರ “ಹೌದು” ಎಂದ. ನಾನು “ಇಲ್ಲ ಛೋಟೂ ಕೂಡ ಜಾಣ. ಅವನೂ ಕೈ ತೊಳೆದೇ ಊಟ ಮಾಡುತ್ತಾನೆ. ಅಲ್ಲವೇನೋ?” ಎಂದೆ “ಹೌದು” ಎನ್ನುವಂತೆ ತಲೆಯಾಡಿಸಿದ. ಅವನನ್ನು ಸಿಂಕಿಗೆ ಒಯ್ದು ಕೈತೊಳೆಸಿದೆ. ಟೇಬಲ್ ಎದುರು ಕೂತಾಗ ಯಾಕೋ ಛೋಟೂ ಕೇವಲ ನನ್ನನ್ನೇ ನೋಡುತ್ತಿದ್ದ. ಕಿಶೋರ ಊಟ ಮುಗಿಸಿ ಕೈ ತೊಳೆಯಲು ಓಡಿದ. ಸುಮಿ ನನ್ನೆಡೆ ನೋಡಲೂ ತಯಾರಿರಲಿಲ್ಲ. ಬಡಿಸಿದಳು. “ಬಟಾಟೆ ತಿನ್ನುತ್ತೀಯಲ್ಲಾ?” ಎಂದೆ. “ಹೌದು” ಅಂದ. “ಹಾಲು ಅನ್ನ ಊಟ ಮಾಡು”-ಎಂದೆ. ಸುಮಿ “ಕೆಲ ಮಕ್ಕಳಿಗೆ ಹಾಲು ಅಂದರೆ ಆಗೋದಿಲ್ಲ. ನಿನಗೆ? ಆ ಮೇಲೆ ಚೆಲ್ಲಬಾರದೂ, ವೇಸ್ಟ್ ಮಾಡಬಾರದೂ” ಎಂದಳು. “ಇಲ್ಲ ಅವನು ಜಾಣ” ಅಂದೆ. “ಸಾಕು ಸಾಕು. ಅವನದೆಲ್ಲ ಗೊತ್ತು ನಿಮಗೆ” ಅಂದವಳೇ “ಅಲ್ಲಿ ಹೋಗುವುದಿದ್ದರೆ ಬೆಳಿಗ್ಗೆ ಒಂದು ಮಾತು ಹೇಳಬಾರದಾಗಿತ್ತಾ?”-ಎಂದಳು. ವಿಚಿತ್ರ ದರ್ಪದಲ್ಲಿ. “ಓಕೇ ಓಕೇ ನಾನು ಹೇಳಲಿಲ್ಲ ನಿನಗೆ. ಹೌದು. ಮರೆತುಹೋಯ್ತು. ಐ ಆಮ್ ಸಾರಿ. ಆದರೆ ಈಗ ಅಟೆಂಡ್ ಟು ಹಿಮ್ ಅಟ್‌ಲೀಸ್ಟ್” ಎಂದೆ. ಏನೋ ಗೊಣಗುತ್ತ ಒಳಗೆ ಹೋಗಿ ಬಂದಳು. ತಬ್ಬಿಬ್ಬಾಗಿ ತುತ್ತು ಕೆದರುತ್ತಿದ್ದ ಛೋಟೂನ ಬೆನ್ನ ಮೇಲೆ ಕೈಯಾಡಿಸಿ “ಮನೇಲಿ ಅಮ್ಮ ಉಣ್ಣಿಸ್ತಾಳೇನೋ ನಿನಗೆ?” ಎಂದು ಕೇಳಿದೆ. “ಇಲ್ಲ” ಅಂದ ವಿಚಿತ್ರ ಮುಗ್ಧ ಸ್ವಾಭಿಮಾನದಲ್ಲಿ. “ಹೇಳು ಮರಿ ನಿಮ್ಮ ಅಮ್ಮನ ಸುದ್ದಿ ಇವರಿಗೆ. ನಿಮ್ಮಮ್ಮ ಯಾವಾಗ ಮನೇಲಿರ್ತಾಳೆ ಅಂತ ಹೇಳು. ಹೇಳು”-ಎಂದಳು. ಆವೇಗದಿಂದ. ಥತ್ ಮತ್ತದೇ ವಿಷಮಯ ಕಥೆಯ ಪಲ್ಲವಿ ಅನಿಸಿ-“ಸುಮೀ ಪ್ಲೀಸ್, ಈಗ ಏನೂ ಬೇಡ. ಯಾವ ಸೀನೂ ಬೇಡ” ಎಂದು ಊಟ ನಿಲ್ಲಿಸಿದೆ. ಗೆದ್ದವಳಂತೆ ವಿಚಿತ್ರ ಸದ್ದು ಮಾಡಿದಳು. ಛೋಟೂನನ್ನು ನೋಡಿದೆ. ಈ ಮನೆಯಲ್ಲಿ ನಗುವೇ ಇಲ್ಲವೇನೋ ಅನ್ನಿಸುವ ಹಾಗೆ ಹೆದರಿದಂತೆ ಛೋಟೂ ತುತ್ತು ಮುಕ್ಕುತ್ತಿದ್ದ. ಪಲ್ಯ ಅವನಿಗೆ ಹಿಡಿಸಿರಲಿಲ್ಲ. “ಎಲ್ಲಾ ಖಾಲಿ ಮಾಡಬೇಕು”-ಎಂಬ ಸುಮಿಯ ಅಪ್ಪಣೆಗೆ ತತ್ತರಿಸಿದಂತಿದ್ದ. “ಬೇಡವಾದರೆ ಬಿಡು” ಎಂದೆ. ಹೊರಗಿಂದ ಕಿಶೋರ್ “ಆಟಕ್ಕೆ ಬಾರೋ ಛೋಟೂ”-ಎಂದು ಕೂಗಿದ. ಸುಮಿ ದನಿಯೇರಿಸಿ “ಕಿಶೋರ್ ಈಗ ಆಟ ಗೀಟ ಅಂದ್ರೆ ನೋಡು, ಹೋಂವರ್ಕ್ ಮಾಡೋದು ಎಷ್ಟೆಲ್ಲಾ ಬಿದ್ದಿದೆ” ಎಂದು ಗದರಿಸಿದಳು. ಕಿಶೋರ ‘ಪಪ್ಪಾಽಽ’ಎಂದು ರಾಗವೆಳೆದ. ನಾನು “ತಡಿಯೋ ಮರಿ. ನಾನೂ ಛೋಟೂ ಇಬ್ಬರೂ ಬರ್ತೇವೆ. ಎಲ್ಲಾ ಕೂಡಿ ಆಡೋಣ. ಕೇರಂ ಕೊಯ್‌ನಗಳನ್ನು ಹುಡುಕಿಡು” ಎಂದೆ. ಚೆಂಗು ಚೆಂಗನೆ ನೆಗೆಯುತ್ತಾ ಕಿಶೋರ ಅಲ್ಲಿ ಇಲ್ಲಿ ಹುಡುಕಲಾರಂಭಿಸಿದ. ಛೋಟುವೂ ಜೋರಾಗಿಯೇ ತುತ್ತಿಳಿಸತೊಡಗಿದ. ಸುಮಿ “ಛೋಟೂ, ನಿಮ್ಮಪ್ಪ ಅಮ್ಮ ಜಗಳಾ ಆಡ್ತಾರೇನೋ” ಅಂತೇನೋ ಶುರುಮಾಡುವವಳಿದ್ದಳು. +“ಸಾಕು, ಈವತ್ತಿಗೆ ಇಷ್ಟು ಸೀನು ಮಾಡಿದ್ದು ಸಾಕು”-ಎಂದೆ. ನನ್ನ ದನಿಯ ಗಡಸು ಅವಳ ಮೇಲಿಗಿಂತ ಜಾಸ್ತಿ ಪರಿಣಾಮ ಛೋಟೂನ ಮೇಲೆ ಮಾಡಬಹುದಾಗಿದ್ದುದರಿಂದ ಮೌನ ಧರಿಸಿದೆ. ಕಿವಿ ಗಡಚಿಕ್ಕುವ ಮೌನ. ಛೋಟೂ ಊಟ ಅರ್ಧಕ್ಕೆ ನಿಲ್ಲಿಸಿದ್ದ. “ಸಾಕು ಓಡು” ಎಂದೆ. ಅವನು ಇಳಿಯುವುದರಲ್ಲಿದ್ದ-ಅಷ್ಟರಲ್ಲಿ ಹೊರಗಿಂದ ಕಿಶೋರ್ ಜಾಮೂನ್ ಜಾಮೂನ್ ಎಂದು ಕುಣಿಯುತ್ತ ಪೊಟ್ಟಣ ಹಿಡಿದು ಬಂದ. ಇಳಿಯುವುದರಲ್ಲಿದ್ದ ಛೋಟೂ ಪುನಃ ಏರಿ ಕೂತು ಪೊಟ್ಟಣ ನಿಟ್ಟಿಸುತ್ತಿರುವಾಗ ಸುಮಿ ಸರಸರ ಹೋಗಿ ಕಿಶೋರನ ಕೈಯಿಂದ ಇಸಗೊಂಡು “ತಿಂಡಿ ಕಾಣದವರ ಹಾಗೆ ಕುಣಿಯೋದಕ್ಕೆ ನಾಚಿಕೆಯಾಗೊದಿಲ್ಲಾ?”-ಎಂದು ಫಳೀರನೆ ಕೆನ್ನೆಗೆ ಬಿಗಿದಳು. ಒಂದೆರಡು ಸೆಕೆಂಡು ಮೌನವನ್ನು ಆಚರಿಸಿದ ಕಿಶೋರ್ ತಕ್ಷಣ ತಾರಕದಲ್ಲಿ ಅಳಲಾರಂಭಿಸಿದ. ಛೋಟೂ ಬೆಚ್ಚಿದ. ಕಿಶೋರ್ ಅಳುತ್ತ ಕಾಲು ಬಡಿಯುತ್ತ ಹೊರ ಕೋಣೆಗೆ ಹೋದ. ಸುಮಿ ದುಮುದುಮಿಸುತ್ತ ಪೊಟ್ಟಣವನ್ನು ಶೆಲ್ಫಿನ ಯಾವುದೋ ಡಬ್ಬಿಯ ಸಂದಿಗಿಟ್ಟು ಬೇರೆ ಕೆಲಸಕ್ಕೆ ತೊಡಗಿದಳು. ನನ್ನ ಮಾತು ಎಂಥ ಸ್ಪೋಟಕ್ಕೂ ಕಾರಣವಾದೀತು ಎಂದು ನಾನು ಮನಗಟ್ಟಿ ಹಿಡಿದು ಛೋಟೂನನ್ನ “ನಡಿ ಕೈತೊಳಿ” ಎಂದು ಸಿಂಕಿಗೊಯ್ದು ಕೈತೊಳೆಸಿದೆ. ನಂತರ ಬಚ್ಚಲಿಗೆ ಹೋದೆ. ಸುಮಿ ಏನೋ ಗೊಣಗುತ್ತಿದ್ದಳು. ನಾನು ಕೈ ಒರೆಸುತ್ತ ಹೊರ ಕೋಣೆಗೆ ಬಂದಾಗ ಒದ್ದೆಮುಖದ ಛೋಟೂ ಅಳುತ್ತ ಬಿಕ್ಕಳಿಕೆಯಲ್ಲಿದ್ದ. ಕಿಶೋರನನ್ನೇ ಮೊಣಕಾಲ ಮೇಲೆ ಕೈಯೂರಿ ನೋಡುತ್ತ ನಿಂತಿದ್ದ. +“ಕಿಶೋರ್ ಅಳ್ಬಾರ್ದು ಬೇಟಾ. ಅಳ್ಬಾರ್ದು, ಛೇ ಛೇ ಮನೇಗೀವತ್ತು ಛೋಟೂ ಬಂದಿದ್ದಾನೆ. ಮತ್ತೆ ನೀನಳ್ತೀ? ಆ ದಿನ ಅವನ ಮನೆಗೆ ನಾವು ಹೋಗಿದ್ದಾಗ ಭಗೀರಥ ಮಾಮಾ ನಿನಗೆ ಏನೆಲ್ಲ ಆಟ ಆಡಲು ಕೊಟ್ಟಿರಲಿಲ್ಲಾ? ಈಗ ನೀನು ಅತ್ರೆ ಛೋಟೂ ಮತ್ತೆಂದೂ ಬರೋದಿಲ್ಲ. ಛೀ ಛೀ ಜಾಣ. ಅಳ್ಬಾರ್ದು” ಎಂದು ಮುದ್ದಿಸುತ್ತಾ ಸಂತೈಸಿದ. ಸೋಫಾದ ಹಿಂದುಗಡೆ ಇದ್ದ ಕೇರಂ ಬೋರ್ಡು ತೆಗೆದು ಅವರೆದುರು ಹರಡಿದೆ. ಅಳು ನಿಲ್ಲಿಸಿದ ಕಿಶೋರ ಬಿಕ್ಕಳಿಕೆಯಲ್ಲೇ ನಕ್ಕ. ಛೋಟೂ ಮತ್ತು ಅವ ಕೈ ಕೈ ಹಿಡಿದುಕೊಂಡು ಆಟಕ್ಕೆ ಕೂತರು. ನಾನೂ ಅವರಿಬ್ಬರ ಜೊತೆ ಒಂದಿಷ್ಟು ಹೊತ್ತು ಕೂತೆ. ಆಡಿದೆ, ವಾವಾ ಎಂದೆ. ಆದರೆ ಎಷ್ಟು ಹೊತ್ತಾದರೂ ಸುಮಿಯ ಸುಳಿವು ಕಾಣಲಿಲ್ಲ. ಮೆಲ್ಲಗೆ ಎದ್ದು ಒಳಹೋದೆ. ತೆಪ್ಪಗೆ ಟೇಬಲ್ ಒರಸುತ್ತ ನಿಂತಿದ್ದ ಅವಳು ಯಾವುದೋ ಮೂಕಿ ಚಿತ್ರದ ದೃಶ್ಯದಂತೆ ಕಂಡಳು. ತುಂಬಾ ಕೆಡುಕೆನಿಸಿತು. ಸಮೀಪ ಹೋದೆ, ಬೆಚ್ಚಿದೆ, ಅವಳು ಅಳುತ್ತಿದ್ದಳು-ಎಳೆಮಗುವಿನಂತೆ. “ಸುಮೀ ಪ್ಲೀಸ್ ಮಕ್ಕಳಂತೆ ಮಾಡಬೇಡ” ನನ್ನ ಕೈ ಕಿತ್ತೆಸೆದಳು. “ಯಾಕೆ ಇಲ್ಲದ್ದನ್ನೆಲ್ಲ ತಲೆಗೆ ಹಚ್ಚಿಕೊಂಡು ಕುಸಿಯುತ್ತೀ? ಆಂ?” ಎಂದೆ. “ಅವಳು ನನ್ಮನೆ ಹಾಳು ಮಾಡ್ತಾ ಇದಾಳೆ. ನಾನು ಅವಳಿಗೆ ಏನು ಮಾಡಿದ್ದೆ?”-ಎಂದು ತುಟಿಕಚ್ಚಿ ಧಳಧಳ ಬಿಕ್ಕಿದಳು. “ಸುಮೀ-ಪ್ಲೀಸ್ ಇಲ್ನೋಡು…” ಅವಳ ಅಳು ಜೋರಾಗೇ ಇತ್ತು. ಈ ಹಂತದಲ್ಲಿ ನಾನೇನೂ ಮಾಡುವಂತಿಲ್ಲ ಅನಿಸಿತು. ಅಷ್ಟರಲ್ಲಿ ಹೊರಗಿನಿಂದ ಕಿಶೋರ ಏನೋ ಪುಕಾರು ಹೇಳುವವನಂತೆ ಬಮ್ದ. ತಾಯಿಯ ಅಳುವನ್ನು ದಂಗಾಗಿ ನೋಡುತ್ತ ನಿಂತ. ಒಂದು ಕ್ಷಣದಲ್ಲಿ ಅವ ನನ್ನ ಮಗ ಕಿಶೋರ ಅಂತ ಅನಿಸಲೇ ಇಲ್ಲ. ನಾನು ಅವನನ್ನು ತಿರುಗಿ ಹೊರಗೆ ಕರೆದುಕೊಂಡು ಹೋದೆ. ಕಾಯಿಗಳನ್ನು ಬೋರ್ಡಿನ ಮೇಲೆ ಒಟ್ಟಾಗಿ ಪೇರಿಸಿಟ್ಟು “ಹೊಡೆಯಿರಿ” ಎಂದೆ. ಕಿಶೋರ “ಅಮ್ಮ ಅಳ್ತಾಳೆ”-ಅಂತೇನೋ ಛೋಟೂನ ಬಳಿ ಹೇಳಿದಂತಾಯ್ತು. “ಸುಮ್ಮನೆ ಆಡ್ರೋ”-ಎಂದು ಅರಚಿದೆ. ಇಬ್ಬರೂ ಬೆಚ್ಚಿಬಿದ್ದರು. ಅತ್ಯಂತ ಗಂಭೀರರಾಗಿ ಕೂತರು. ನನ್ನ ಸಿಟ್ಟೇರಿದ ಮುಖವನ್ನೇ ಹೆದರುತ್ತ ನೋಡುತ್ತಿದ್ದ ಛೋಟೂನ ಮುಖ ಪಕ್ಕಾ ಮಾಲತಿಯದೇ ಇದ್ದಂತಿತ್ತು. +ತಿರುಗಿ ಎದ್ದು ಒಳಗೆ ಹೋದಾಗ ಅಡಿಗೆಮನೆಯಲ್ಲಿ ಸುಮಿ ಇರಲಿಲ್ಲ. ಬೆಡ್‌ರೂಂಗೆ ಹೋದೆ. ಕತ್ತಲಲ್ಲಿ ಮುದುಡಿ ಮಲಗಿದ್ದಳು. ಕಣ್ಣುಮುಚ್ಚಿದಂತೆನಿಸುವ ಕತ್ತಲು. ಹೃದಯ ಕಲಕುವ ಒಂದು ಬಗೆಯ ವಿಚಿತ್ರಮೌನ ಮಾತಿಗೆ ತೊಡಗಿದಂತೆ ಇತ್ತು. ಅವಳ ಬಳಿ ಕೂತು ಒದ್ದೆ ಕೆನ್ನೆ ನೇವರಿಸಿದೆ. ತಲೆಗೂದಲು ನೇವರಿಸಿದೆ. ಅವಳಿಗೊತ್ತಿ ಅವಳನ್ನು ಬಳಸಿಕೊಂಡು ಅವಳ ತಲೆಯನ್ನು ಹಾಗೇ ನೇವರಿಸುತ್ತ ಕೂತೆ. ಒಂದಿಷ್ಟು ಹೊತ್ತುನ ನಂತರ ಛೋಟೂ ಏನೋ ಬೇಕೆಂಬಂತೆ ಅಂಕಲ್ ಅಂಕಲ್ ಎಂದು ಕೂಗುತ್ತ ಕಿಚನ್‌ಗೆ ಹೋಗಿ ಅಲ್ಲಿ ನನ್ನ ಕಾಣದೇ ಬಚ್ಚಲಿಗೆ ಹೋಗಿ ಅಲ್ಲೂ ನನ್ನ ಕಾಣದೆ ತೆರೆದ ಬೆಡ್‌ರೂಂ ಬಾಗಿಲಿಗೆ ನಿಂತು ಒಳಗಿನ ಕತ್ತಲನ್ನು ಮಿಕಿಮಿಕಿ ನೋಡಿ ತಿರುಗಿ ಓಡಿಹೋದ. +***** +ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. […] +ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ […] +ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_721.txt b/Kannada Sahitya/article_721.txt new file mode 100644 index 0000000000000000000000000000000000000000..b4da3451dd542021480a4f5b46ef1974b9a2a196 --- /dev/null +++ b/Kannada Sahitya/article_721.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಸೌರಾಷ್ಟ್ರ +ತಾಳ — ಏಕ +ಎಲ್ಲರು ಮಾಡುವುದು ಹೊಟ್ಟೆಗಾಗಿ | +ಗೇಣು ಬಟ್ಟೆಗಾಗಿ ||ಪ|| +ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು | +ಕೂಲಿಗಳ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೧|| +ನಾಲುಕು ವೇದ – ಪುರಾಣ ಶಾಸ್ತ್ರ ಪಂಚಾಂಗ ಹೇಳಿಕೊಂಡು | +ಕಾಲಕಳೆಯುವುದೆಲ್ಲ ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೨|| +ಬಡಿದು ಬಡಿದು ಕಬ್ಬಿಣವ ಕಾಸಿ ತುಬಾಕಿ ಮಾಡಿ | +ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೩|| +ಚಂಡಭಟರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು | +ಖಂಡತುಂಡ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೪|| +ದೊಡ್ಡ ದೊಡ್ಡ ಕುದುರೆಯನೇರಿ ನೇಜೆ ಹೊತ್ತು ರಾಹುತನಾಗಿ | +ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೫|| +ಕುಂಟಿ – ಕೂರಿಗೆಯಿಂದ ಹೆಂಟೆ ಮಣ್ಣ ಹದಮಾಡಿ | +ರಂಟೆಹೊಡೆದು ಬೆಳೆಸುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೬|| +ಕೆಟ್ಟತನದಿಂದ ಕಳ್ಳತನವನ್ನೆ ಮಾಡಿ | +ಕಟ್ಟಿ ಹೊಡಿಸಿಕೊಂಬುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೭|| +ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡಬೈರಾಗಿ | +ನಾನಾ ವೇಷಕೊಂಬುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೮|| +ಉನ್ನತ ಕಾಗಿನೆಲೆಯಾದಿಕೇಶವನ | +ಅನುದಿನ ನೆನೆವುದು ಭಕ್ತಿಗಾಗಿ – ಪರಮುಕ್ತಿಗಾಗಿ ||೯|| +***** +ರಾಗ — ಕಾಂಬೋದಿ ತಾಳ — ಝಂಪೆ ಬಾಯಿ ನಾರಿದ ಮೇಲೆ ಏಕಾಂತವೆ | ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | ಬಣ್ಣಗುಂದಿದ ಮೇಲೆ ಬಹುಮಾನವೆ || […] +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_722.txt b/Kannada Sahitya/article_722.txt new file mode 100644 index 0000000000000000000000000000000000000000..5c0d5e5d3ca1505b353353713d654d4f053c55da --- /dev/null +++ b/Kannada Sahitya/article_722.txt @@ -0,0 +1,64 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಫಿಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿನಿಂದ ಪಾರ್ಸಲ್ ಒಂದನ್ನು ತಂದು ನನ್ನ ಪಕ್ಕಕ್ಕಿಟ್ಟು, ” ಮಧ್ಯಾನ್‌ದ ಪೋಸ್ಟ್‌ನಲ್ ಬಂತು” ಎಂದಳು. ನನಗದನ್ನು ಬಿಚ್ಚಿ ನೋಡುವ ಉತ್ಸಾಹವಿಲ್ಲದಷ್ಟು ಸುಸ್ತು. ಪಾರ್ಸಲ್ ಕವರ್ ಮೇಲೆ ವಿದೇಶಿ ಸ್ಟಾಂಪುಗಳಿದ್ದುದು ಕಂಡು ಕುತೂಹಲವಾಯ್ತು. ” ಏನದು?” ಎಂದು ಕೇಳಿದೆ ಕಾಫಿ ಕುಡಿಯುತ್ತಾ. “ನಿಮಗಿನ್ನೇನು ಬರುತ್ತೆ ಪುಸ್ತಕ ಬಿಟ್ಟು” ಎಂದು ಖಾಲಿಯಾದ ತಟ್ಟೆ ಲೋಟಗಳನ್ನು ತೆಗೆದುಕೊಂಡು ರೂಮಿನಿಂದ ಹೊರಹೋದಳು. +ನಾನು ಕವರಿನಿಂದ ಪುಸ್ತಕವನ್ನು ತೆಗೆದೆ. ‘Vestiges of Anglicised India’ ಆ ಪುಸ್ತಕದ ಹೆಸರು. ಕಸಿವಿಸಿಯಾಯ್ತು. ಲೇಖಕರಾರೆಂದು ನೊಡಿದೆ, ಕ್ಯಾತರಿನ್ ಪಾಲ್-ಡಿ.ಲಿಟ್.ಸೋಸಿಯಾಲಜಿ ಎಂದಿತ್ತು. ಹೆಸರು ನೋಡಿದಾಗ ಆದ ಭಾವನೆ ನೆನಪಾಗುತ್ತಿಲ್ಲ. ಪುಸ್ತಕವನ್ನು ಬಿಡಿಸಿದೆ. ಮೂರನೆ ಪುಟದಲ್ಲಿ “ಸಂಸ್ಕೃತಿ ಸ್ತುತ್ಯಾರ್ಹರಾದ ಗುಲಾಮರಿಗೆ- ಅರ್ಪಣೆ” ಎಂದಿತ್ತು. ಅದರ ಮುಂದಿನ ಪುಟದಲ್ಲಿ ಲೇಖಕಿ ಪುಸ್ತಕವನ್ನು ಬರೆಯುವ ಮುನ್ನ ಆಕೆ ಇತರರೊಂದಿಗೆ ನಡೆಸಿದ ಚರ್ಚೆಗಳು, ತನ್ನ ಪುಸ್ತಕದ ವಿಷಯ ಹಾಗು ಕ್ರಮರಹಿತವಾದ ಮಾಹಿತಿಗಳನ್ನು ಸ್ಪಷ್ಟಗೊಳಿಸಲು ಹೇಗೆಲ್ಲಾ ಸಹಕಾರಿಯಾಗಿದ್ದವು ಎಂದು ಆಕೆಯೊಂದಿಗೆ ಚರ್ಚಿಸಿದವರುಗಳ ಪಟ್ಟಿಯನ್ನು ಕೊಟ್ಟು ಕೃತಜ್ಞತೆಗಳನ್ನು ಸೂಚಿಸಿದ್ದಳು.ಅದರಲ್ಲಿ ನನ್ನ ಹೆಸರೂ ಕಂಡುಬಂತು! ಆರು ಪೌಂಡ್ ಬೆಲೆಯ ಆ ಪುಸ್ತಕದ ಹಿಂದಿನ ರಕ್ಷಾಪುಟದಲ್ಲಿ ಲೇಖಕಿ ಮುದ್ದಿನ ಬೆಕ್ಕಿನೊಂದಿಗೆ ಹಿಡಿಸಿಕೊಂಡಿದ್ದ ಭಾವ ಚಿತ್ರದೊಂದಿಗೆ ಆಕೆಯ ಬಗೆಗೆ ಸಂಕ್ಷಿಪ್ತ ವಿವರ… +ಆ ಪುಸ್ತಕದೊಂದಿಗೆ ಇದ್ದ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದ್ದ ಐದಾರು ಸಾಲಿನ ಪತ್ರದ ಮೇಲೆ ಕಣ್ಣಾಡಿಸಿದೆ: +ಚಂದ್ರು , +ಅಳುಕು, ಸಂಬಂಧಗಳನ್ನು ಮುರಿಯಲು, ವ್ಯಕ್ತಿಗಳು ಮೌನವಾಗಿ ಸಂಬಂಧಗಳಿಂದ ವಿಮುಖರಾಗಲು ಕಾರಣವಾಗುತ್ತೆ.ಎರಡು ವರ್ಷಗಳಿಂದ ನನ್ನ ಪತ್ರಗಳಿಗೆ ನೀನು ನಿರುತ್ತರನಾಗಿ ಮೌನಿಯಾಗಿರುವುದು ಈ ಹಿನ್ನೆಲೆಯಲ್ಲಿ ಶೋಧನಾರ್ಹ. ಪುಸ್ತಕದ ಬಗೆಗೆ ನಿನ್ನ ವಿಮರ್ಶೆಯ ನಿರೀಕ್ಷೆಯೊಂದಿಗೆ…. +ಅಳುಕಿನ, +ಕ್ಯಾತರಿನ್ ಪಾಲ್‌ಕ್ವೀನ್ಸ್ ಕಾಲೇಜ್ – ಕೇಂಬ್ರಿಡ್ಜ್ +ವಿ.ಸೂ: ಈ ಪುಸ್ತಕದ ಪ್ರಕಟಣೆಗೆ ಮಂದಣ್ಣನ ಹಣವೇ ಬಳಸಿರುವುದು. +ಪತ್ರವನ್ನು ಓದಿ ಮುಗಿಸುತ್ತಿದ್ದಂತೆ ಸೀತ ರೂಮಿಗೆ ಬಂದಳು.”ಯಾರದ್ರೀ ಕಾಗ್ದ?” ಎಂದು ಕೇಳಿದಾಗ ಏನೂ ಹೇಳಲಿಕ್ಕೆ ತೋಚದೆ ಸ್ನೇಹಿತರದು ಎಂದಷ್ಟೆ ಹೇಳಿ ಬಚ್ಚಲಿಗೆ ಹೋಗಿ ಮುಖ ತೊಳೆದು ಉಡುಪು ಬದಲಿಸಿ ಮನೆಯಿಂದಾಚೆ ಬಂದೆ. +ಯಾವುದೆ ವಿಧದಲ್ಲು ನನಗೆ ನೇರ ಸಂಬಂಧವಿರದ ಘಟನೆಗಳ ಅಸ್ಪಷ್ಟ ನೆನೆಪುಗಳ ತಾಕಲಾಟಕ್ಕೆ ಅಂತರ್ಮುಖಿಯಾಗುತ್ತಿದ್ದಂತೆ ಈ ಬಾರಿಯ ಅವಳ ಕಾಗದದಲ್ಲಿ ನನ್ನ ಮೇಲೆ ಅವಳು ಅಳುಕಿನ ಆರೋಪ ಹೊರಿಸಿರುವುದರ ಬಗೆಗೆ ಯವುದೆ ತೀರ್ಮಾನಕ್ಕೆ ಬರದಾದೆ. +ಇದೆಲ್ಲ ನಡೆದುದು ಸುಮಾರು ವರ್ಷಗಳ ಹಿಂದೆ ಕೊಡಗಿನಲ್ಲಿ. ಅಂದರೆ ಆಗ ಹಾರಂಗಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಸಮಯ. ಬೆಂಗಳೂರಿನ ನಾನು ಸಂಪ್ರದಾಯಬದ್ಧ ಕಟುಶಿಸ್ತಿನ ವಾತಾವರಣಕ್ಕೆ ಹೇಸಿ ನಿರುದ್ಯೋಗಿಯಾಗಿ ಕೊಡಗನ್ನು ಸೇರಿದ್ದೆ. ಹೇಗೇಗೊ ಯರ್‍ಯಾರನ್ನೊ ಹಿಡಿದು ದಿನಗೂಲಿಯ ಮೇಲೆ ಗ್ರೂಪ್‌ಲೀಡರ್ ಮೇಸನ್ [ಮೇಸ್ತ್ರಿ] ಆಗಿ ಕೆಲಸ ಸಿಕ್ಕಿತು. ಹಾರಂಗಿಯಿಂದ ಹಾಸನದ ದಿಕ್ಕಿಗೆ ಕಾಡಿನ ಮುಖಾಂತರವೆ ಹೋಗಬೇಕಾಗಿದ್ದ ನಾಲೆ ತೋಡುವಿಕೆಯ ಮೇಲ್ವಿಚಾರಣೆಗಾಗಿ ನನ್ನ ನೇಮಕವಾಗಿತ್ತು. ಕೆಲಸ-ಕಾಡು ಎರಡೂ ರಮ್ಯ ಹೊಸ ಅನುಭವದ ತಾಣವಾಗಿತ್ತು. +ಕ್ರಮೇಣ ಕಾಡಿನ ರೊಮಾಂಚಕಾರಿ ಅನುಭವಗಳ ಉತ್ಸಾಹ ಕುಗ್ಗುತ್ತಿದ್ದಂತೆ , ಬೇಸರ ಒಂಟಿತನ ಕಾಡಲಾರಂಭಿಸಿದಾಗ ಹುಚ್ಚನಂತೆ ಅಲ್ಲಿ-ಇಲ್ಲಿ ಅಲೆದಾಡತೊಡಗಿದೆ. ಮುರ್‍ನಾಲ್ಕು ಎಸ್ಟೇಟುಗಳು ಗಮನ ಸೆಳೆದಿದ್ದವು. ಅದರಲ್ಲೂ ಪರಂಪರೆಯ ಚರಿತ್ರೆಯನ್ನು ನುಂಗಿರುವಂತೆ ಕಂಡುಬರುತ್ತಿದ್ದ ಬಂಗಲೆಯೊಂದು ತನ್ನ ಸ್ತಬ್ಧತೆಯ ಗುಣದೊಂದಿಗೆ ನನಗೆ ಸಾಮಾನ್ಯಕ್ಕಿಂತ ವಿಶೇಷವಾಗಿ ಕಂಡುಬಂದಿತ್ತು. ಆ ಬಂಗಲೆಯ ಬಗೆಗಿನ ನನ್ನ ಕುತೂಹಲವನ್ನು ತಣಿಸುವ ಮಾರ್ಗವಾವುದೂ ಇರಲಿಲ್ಲ. ಬಹಳ ದಿನಗಳ ನಂತರ ಆ ಎಸ್ಟೇಟ್ ಬಂಗಲೆಯೊಡೆಯನಾದ ಮಂದಣ್ಣ ತೀರಾ ಕುಡುಕನೆಂದೂ, ಆತನ ಪತ್ನಿ ವಿದೇಶಿಯಳೆಂದೂ, ಅವರಿವರಿಂದ ಅಪ್ರಯತ್ನವಾಗೆ ತಿಳಿಯಿತು. ಒಂದೆರಡು ಬಾರಿ ಮಂದಣ್ಣ ತನ್ನ ಜೀಪಿನಲ್ಲಿ ನಮ್ಮ ನಾಲೆಯ ಕೆಲಸದ ಬಳಿ ಕಾಲುದಾರಿಯಲ್ಲಿ [ಮಡಿಕೇರಿಗೆ ಹೋಗುತ್ತಿತ್ತು.] ಹೋಗಿ ಬರುವುದು ಮಾಡುತ್ತಿದ್ದುದನ್ನು ನೋಡಿದೆ. ಆತ ನನ್ನನ್ನೂ, ಕೆಲಸವಿಲ್ಲದೆ ಯಾವುದಾದರು ಬಂಡೆಯ ಮೇಲೆಯೊ, ಮರದ ನೆರಳಲ್ಲೋ ಏನನ್ನಾದರು ಓದುತ್ತಲೋ, ಬರೆಯುತ್ತಲೋ ಕುಳಿತಿರುತ್ತಿದ್ದುದನ್ನು ಗಮನಿಸಿದ್ದ. ಆವನೂ, ಅವನ ಬಂಗಲೆಯೂ ಒಂದೇ ತರಹ,ಯಾವಾಗಲೂ ಏನನ್ನೋ ದುರ್ದಾನ ಪಡೆದಂತೆ. +ಒಂದು ದಿನ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕಾಡು ನೋಡಲು ಸುಂದರವಾಗಿರುತ್ತದೆಂದನ್ನಿಸಿ ನನ್ನ ಕೊಠಡಿಗೆ ಬೀಗ ತಗುಲಿಸಿ ಸುರಿಯುತ್ತಿದ್ದ ತೆಳು ಹಿಮದಿಂದ ರಕ್ಷಿಸಿಕೊಳ್ಳಲು ಶಾಲು ಹೊದ್ದು ಸ್ವಲ್ಪ ದೂರದಲ್ಲಿದ್ದ ಒಂದು ಸಣ್ಣ ಮಣ್ಣಿನ ಗುಡ್ಡವನ್ನು ಹತ್ತಿದೆ. ಅಲ್ಲೇ ನಾಲೆಯ ಕೆಲಸ ನಡೆಯುತ್ತಿದ್ದುದರಿಂದ , ಜನ ವಾಸ ಮಾಡುತ್ತಿದ್ದುದರಿಂದ ಕ್ರೂರ ಪ್ರಾಣಿಗಳ ಹೆಚ್ಚಿನ ಕಾಟವಿರುತ್ತಿರಲಿಲ್ಲ. ಆಗಾಗ್ಯೆ ದಿನಗೂಲಿಗಳ ಗುಡಿಸಲುಗಳ ಮೇಲೆ ನುಗ್ಗುತ್ತಿದ್ದ ಆನೆಗಳ ಹಿಂಡಿನದು ಬಿಟ್ಟರೆ. ಗುಡ್ಡದ ಮೇಲೆ ಮೈ ಮರೆತಿದ್ದೆ. ಎಷ್ಟು ಹೊತ್ತು ಹಾಗಿದ್ದೆನೊ… ಮಂಜು ಬೀಳುವುದು ಜಾಸ್ತಿಯಾದ್ದರಿಂದ ಗುಡ್ಡ ಬಿಟ್ಟು ಇಳಿಯತೊಡಗಿದೆ. ಅರ್ಧ ಇಳಿದಿದ್ದೆ. ಸ್ವಲ್ಪ ದೂರದಲ್ಲಿ ಜೀಪು ಬರುತ್ತಿರುವ ಸದ್ದು ಕೇಳಿಸಿತು. ಒಂದೆರಡು ನಿಮಿಷಕ್ಕೆಲ್ಲ ಜೀಪು ಗಕ್ಕನೆ ಎಲ್ಲಿಗೋ ಗುದ್ದಿದ ಸದ್ದೂ ಕೆಳಿಸಿತು. ನಾನು ಸರಸರ ಗುಡ್ಡ ಇಳಿದೆ..ಸ್ವಲ್ಪ ದೂರದಲ್ಲಿ ಮರಕ್ಕೆ ಜೀಪು ಮುತ್ತಿಟ್ಟಂತೆ ಹೆಚ್ಚು ಜಖಂಗೊಳ್ಳದೆ ನಿಂತಿತ್ತು. ಡ್ರೈವ್ ಮಾಡುತ್ತಿದ್ದ ಮಂದಣ್ಣನಿಗೆ ಏನೂ ಗಾಯಗಳಾಗಿರಲಿಲ್ಲ. ಆತ ಕುಡಿದಿದ್ದ ವಾಸನೆ ನನ್ನ ಹೊಟ್ಟೆ ತೊಳೆಸುವಷ್ಟು ಕೆಟ್ಟದಾಗಿತ್ತು. ಪ್ರಜ್ಞಾಶೂನ್ಯನಾಗಿದ್ದವನನ್ನು ಅಲುಗಾಡಿಸಿದೆ. ಎಚ್ಚರಾಗುವಂತೆ ಕಾಣಲಿಲ್ಲ. ಗುಡಿಸಿಲಿನ ಕೂಲಿಯಾಳುಗಳ ಸಹಾಯವನ್ನಾದರು ಪಡೆಯೋಣವೆಂದು ಯೋಚಿಸಿದೆ. ಅವರುಗಳೂ ಮಂದಣ್ಣನ ಸ್ಥಿತಿಯಲ್ಲೇ ಇರುತ್ತಿದ್ದರು. ಯೋಚಿಸುತ್ತಾ ನಿಂತುಕೊಳ್ಳುವಷ್ಟು ಸಾವಕಾಶವಿರಲಿಲ್ಲ. ಮಂದಣ್ಣನ ಎಸ್ಟೇಟಿನ ಬಂಗಲೆಯತ್ತ ಹೆಜ್ಜೆ ಹಾಕಿದೆ. +ಬಂಗಲೆಯ ಮುಂದೆ ಬಂದಾಗ ನಾಯಿಗಳು ಊಳಿಡಲಾರಂಭಿಸಿದವು.ಬಂಗಲೆಯ ಬಾಗಿಲು ಹಾಕಿದ್ದು ಮತ್ತು ನನಗೆ ಅಭ್ಯಾಸವಿರದ ಸ್ತಬ್ಧತೆಯ ಗಾಢ ವಾತಾವರಣ ಗಪ್ಪನೆ ಮುಖಕ್ಕೆ ರಾಚಿ ಹೊಡೆಯುವಂತಿತ್ತು.ಯೋಚಿಸದೆ ಬಾಗಿಲ ಬಳಿ ಇದ್ದ ಕರೆಗಂಟೆ ಒತ್ತಿದೆ. ಯಾರೂ ಬರದೆ ಪುನಃ ಒತ್ತಿದೆ. +ಗಂಟೆ ಶಬ್ಧ ಇನ್ನೂ ಕೇಳುತ್ತಿದ್ದಂತೆಯೆ ಬಾಗಿಲು ತೆಗೆದ ವ್ಯಕ್ತಿಯಲ್ಲಿ ಅಸಹನೆ ಪುಟಿದಿತ್ತು. ವಿದೇಶಿ ಹುಡುಗಿ. ಹಾಕಿದ್ದ ಉಡುಪು, ಗುಂಗುರುಗುಂಗುರಾದ ಕತ್ತರಿಸಿದ ಕೂದಲಿನ ರೀತಿ ಮತ್ತು ಆಕೆಯ ಇನ್ನಿತರ ವಿವರಗಳನ್ನು ಗುರುತಿಸಿ ಬ್ರಿಟನ್ನಿನವಳಿರಬೇಕೆಂದು, ಅಕೆಯೆ ಮಂದಣ್ಣನಾಕೆ ಇರಬೇಕೆಂದು ತೋಚಿತು. “ಏನು ಬೇಕು?” ಬಾಣದಂತೆ ಬಂದ ಪ್ರಶ್ನೆಯಲ್ಲಿ ತಿರಸ್ಕಾರ -ಅಸಹನೆ- ಅಧಿಕಾರಯುತ ಧೋರಣೆಯ ಸ್ವರ ನನ್ನನ್ನು ಇರಿಸುಮುರಿಸುಗೊಳಿಸಿತು. ನಾನು ಆಕೆಯಷ್ಟು ನಿರರ್ಗಳವಾಗಿ ಬ್ರಿಟನ್ನಿನ ಇಂಗ್ಲಿಷ್ ಧಾಟಿಯನ್ನನುಸರಿಸಿ ಆಕೆಯ ಗಂಡ ಅಪಘಾತಕ್ಕೀಡಾಗಿರುವುದನ್ನು ತಿಳಿಸಿದೆ. ಅಪಘಾತದ ವಿಷಯ ನಿತ್ಯ ಘಟಿಸುವ ಸಾಧಾರಣವೆಂಬಂತೆ ಆಕೆ ದಿಗ್ಭ್ರಾಂತಳೂ ಆಗಲಿಲ್ಲ , ವಿಚಲಿತಳೂ ಆಗಲಿಲ್ಲ. ಬದಲಿಗೆ ನನ್ನ ಇಂಗ್ಲೀಷ್ ಧಾಟಿಯನ್ನು ಅಭಿನಂದಿಸಿದಳು.ಆಳುಗಳು ಯಾರೂ ಇಲ್ಲವೆಂದು ಹೇಳಿ ಭದ್ರತೆಗೆಂದು ಎರಡು ನಾಳದ ಬಾರುಕೋವಿಯೊಂದನ್ನು ಹಿಡಿದು ನನ್ನನ್ನನುಸರಿಸಿ ಬಂದಳು. ದಾರಿಯಲ್ಲಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿಚಾರಿಸಿ ತಿಳಿದು ಕೊಂಡಳು. ಏಳೆಂಟು ನಿಮಿಷಗಳಲ್ಲಿ ಅಪಘಾತ ನಡೆದ ಸ್ಥಳದಲ್ಲಿದ್ದೆವು. ಬೀಸುತ್ತಿದ್ದ ಥಂಡಿ ಗಾಳಿಗಾಗಲೆ ಅರೆಪ್ರಜ್ಞೆ ಮರಳಿದ್ದ ಮಂದಣ್ಣ ತನ್ನ ಭಾಷೆಯಲ್ಲಿ ಏನೇನೊ ಒದರುತ್ತಿದ್ದ. ಅವನನ್ನು ಬಂಗಲೆಗೆ ಸಾಗಿಸಲು ದೈನ್ಯತೆಯ ಧ್ವನಿಯಲ್ಲಿ ನನ್ನ ಸಹಾಯವನ್ನು ಕೇಳಿದ ಆಕೆ ನನ್ನ ಸಮ್ಮತಿಯನಂತರ ಜೀಪನ್ನು ತಾನು ಡ್ರೈವ್ ಮಾಡಲಾರಂಭಿಸಿದಳು. ದಾರಿಯಲ್ಲಿ ಆಕೆಯ ಹೆಸರನ್ನು ಕೇಳಿದಾಗ ಕ್ಯಾತರಿನ್ ಎಂದು ಅರೆಮನಸ್ಕಳಾಗಿಯೆ ಉತ್ತರಿಸಿದಳು. +ಡ್ರೈವ್ ಮಾಡುತ್ತಾ ಇಂಗ್ಲಿಷ್ ಭಾಷೆಯ ಮೇಲಿನ ನನ್ನ ಪ್ರಭುತ್ವವನ್ನು ಮೆಚ್ಚಿಕೊಳ್ಳುವುದು ತನ್ನ ಕರ್ತವ್ಯವೆಂಬಂತೆ ನಿರಾಸಕ್ತಿಯಿಂದ ಒಂದೆರಡು ಮಾತುಗಳನ್ನಾಡಿದಳು. ಧ್ವನಿಯಲ್ಲಿ ಕೃತಕತೆ ಒಡೆದು ಕಂಡು ಆ ಕ್ಷಣದ ಕಿರುಪರಿಚಯದಲ್ಲೆ ಸ್ನೇಹ ಪೂರ್ಣ ವಿಶ್ವಾಸ ವ್ಯಕ್ತಪಡಿಸುವ ಮಾತುಗಳು ಹೊರಬಿದ್ದರು, ತನ್ನ ಅಧಿಕಾರಯುತ ಧೋರಣೆ , ನೋಟಗಳನ್ನು ಸ್ವಲ್ಪವೂ ಸಂಕುಚಿತಗೊಳಿಸಿರಲಿಲ್ಲ. +ಬಂಗಲೆ ತಲುಪಿದ ನಂತರ ಮಂದಣ್ಣನನ್ನು ಬಂಗಲೆಯ ಮಹಡಿಯಲ್ಲಿ ಕೋಣೆಯ ಮಂಚದ ಮೇಲುರುಳಿಸಿ ಕೆಳಗಿಳಿದು ಬಂದೆವು.”ಕುಡಿಯುತ್ತೀಯ?” ಆಕೆ ಕೇಳಿದ ಪ್ರಶ್ನೆಗೆ ಅಭ್ಯಾಸವಿಲ್ಲವೆಂದೆ. ಆನಂತರ ಆಕೆ ಅಡಿಗೆಮನೆಗೆ ಹೋಗಿ ತನಗೆ ಸ್ಕಾಚ್ ತುಂಬಿದ್ದ ಪೆಗ್ ಗ್ಲಾಸನ್ನು, ನನಗೆ ಟೀಯನ್ನು ತಂದು ಆತಿಥ್ಯ ತೋರಿದಳು. “ಆಳುಗಳಾರು ಇಲ್ಲವೇಕೆ?” ನಾನು ಕೇಳಿದ ಪ್ರಶ್ನೆಗೆ “ಯಾರು ರಾತ್ರಿವೇಳೆ ಉಳಿಯುವುದಿಲ್ಲ. ಇರುವ ಮುದುಕ ಜೀಪಿನ ಷೆಡ್ಡಿನಲ್ಲಿ ಕುಡಿದು ಮಲಗಿಬಿಡುತ್ತಾನೆ.” ಎಂದು ಹೇಳಿ ಪುನಃ “ಭಾರತೀಯರು ಆರೋಗ್ಯಕ್ಕೆ ಕುಡಿಯದೆ, ಲಘು ಮೋಜಿಗೆ ಕುಡಿಯದೆ, ಚಟವಾಗಿಸಿಕೊಂಡುಬಿಡುತ್ತಾರೆ.ಮಂದಣ್ಣ ಪ್ರಾರಂಭದಲ್ಲಿ ಕುಡಿಯುತ್ತಿದ್ದವರು ನನ್ನ ಮದುವೆಯಾದ ಮೇಲೆ ಬಿಟ್ಟುಬಿಟ್ಟಿದ್ದರು. ಆದ್ರೆ ಈಗ ಪುನಃ ಅತಿ ಮಾಡಿಕೊಂಡುಬಿಟ್ಟಿದ್ದಾರೆ…” ಕ್ಯಾತರಿನ್ ಅದೆಲ್ಲಾ ಹೇಳಲು ನಾನು ತನ್ನ ಗಂಡನ ಬಗೆಗೆ ಅನ್ಯಥ ಭಾವಿಸಬಾರದೆಂಬುದಕ್ಕಿರಬೇಕು. +ಆ ರಾತ್ರಿ ಆಕೆಯ ಸಲಹೆ ಮೇರೆಗೆ ಹೊರಗೆ ಜೀಪು ಶೆಡ್ಡಿಗೆ ಹೊಂದಿಕೊಂಡಂತೆ ಇದ್ದ ಔಟ್‌ಹೌಸ್ನಲ್ಲೆ ಉಳಿದುಕೊಂಡೆ. +ಬೆಳಿಗ್ಗೆ ಆ ಮನೆಯ ಆಳು ಎಂದು ಹೇಳಿಕೊಂಡು ಬಂದವ ಡೈನಿಂಗ್ ಹಾಲ್‌ಗೆ ಬರಬೇಕೆಂದು ಕರಕೊಟ್ಟು ಹೋದ. ನಾನು ಅಲ್ಲೆ ಇದ್ದ ಸಿಂಕಿನಲ್ಲಿ ಮುಖ ತೊಳೆದುಕೊಂಡು ಡೈನಿಂಗ್ ಹಾಲ್‌ಗೆ ಬಂದಾಗ ಕ್ಯಾತರಿನ್ ಹಾಗು ಮಂದಣ್ಣ ಇಬ್ಬರು ಟೇಬಲ್ ಮುಂದೆ ಕುಳಿತು ಪಕ್ಕದಲ್ಲೆ ಇದ್ದ ಬೆಂಕಿಗೂಡಿಗೆ ಕೈ ಒಡ್ಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ನಾನು ಅಲ್ಲಿಗೆ ಬಂದುದನ್ನು ಗಮನಿಸಿದ ಕ್ಯಾತರಿನ್ , ಮಂದಣ್ಣನಿಗೆ ರಾತ್ರಿ ನಡೆದ ವಿಚಾರವನ್ನು ತಿಳಿಸಿ ಸಾಂಪ್ರದಾಯಿಕವಾಗಿ ಇಬ್ಬರಿಗೂ ಪರಿಚಯ ಮಾಡಿಕೊಟ್ಟಳು. ಮಂದಣ್ಣ ಪರಿಚಯಕ್ಕೆ ಉತ್ತರವೆಂಬಂತೆ ” ಹೌದಾ..” ಎಂದು ಹೇಳಿ ಮೌನಿಯಾದ. ಕ್ಯಾತರಿನ್ ನನಗೂ ಟೀ ಕೊಟ್ಟಳು. ಮೂವರ ನಡುವಿನ ಮೌನದಲ್ಲಿನ ಸ್ತಬ್ಧತೆ, ನಿರ್ವಾತ ವಾತಾವರಣ, ಆ ಬಂಗಲೆ ಹೊರ ಪಾರ್ಶ್ವದ ಶೂನ್ಯತೆಯ ವಾತಾವರಣಕ್ಕೆ ಹೊಂದಿದಂತಿದ್ದು ನನಗಾಗಲೆ ಇರಿಸುಮುರಿಸಾಗಿತ್ತು. ನನಗೆ ಅಪರಿಚಿತವಾದ ಶ್ರೀಮಂತಿಕೆಯ ಗತ್ತಿನ ಮೌನದಿಂದಾಗಿ ಮತ್ತಷ್ಟು ಇರಿಸುಮುರಿಸು. ಮಂದಣ್ಣ ಶೂನ್ಯತೆಯನ್ನು ಶಬ್ಧಗಳಿಂದಲಾದರು ತುಂಬಲೆಂಬಂತೆ ” ನಾನಿವರನ್ನು ನೋಡಿದ್ಡೇನೆ, ಚಾನಲ್ ಕೆಲಸದ ಬಳಿ ..ಯವಾಗಲು ಏನಾದರು ಓದ್ತಾ ಬರೀತಾ ಇರ್‍ತಾರೆ..”- ಕನ್ನಡದಲ್ಲಿ ಹೇಳಿದ ಅವನ ಮಾತುಗಳನ್ನು ಅರ್ಥ ಮಾಡಿಕೊಂಡಳೆಂಬಂತೆ ಆಶ್ಚರ್ಯವನ್ನು ಸೂಕ್ಷ್ಹಿಸುತ್ತಾ ” “ಹೌದಾ? ಏನೇನು ಓದುತ್ತಿ?” ಎಂದು ಕೇಳಿದಳು. ನಾನು ಅಮೆರಿಕದ ಐದಾರು ಸಮಾಜ ಶಾಸ್ತಜ್ಞರ ಹೆಸರುಗಳನ್ನು ಹೇಳುತ್ತಿದ್ದಂತೆ ಆಕೆ ಮುಖ ಕಿವುಚಿದಂತೆ ಮಾಡಿ ಆ ಲೇಖಕರು ತನ್ನ ಮಟ್ಟಕ್ಕೆ ಕೀಳೆಂಬಂತೆ..” ಅವರ ಪುಸ್ತಕಗಳನ್ನ ಓದ್ತೀಯ..? ಅಪ್ರಬುದ್ಧರು, ಇಂಗ್ಲೆಂಡಿನಿಂದ ಪ್ರಭಾವಿತರಾದವರು.” ಎಂದು ಹೇಳಿದಳು. ಮಂದಣ್ಣ ಅಸಮಾದಾನದಿಂದ ಮುಖ ಸಂಕುಚಿಸಿದಂತೆ ಮಾಡಿ ಆಕೆಯ ಕುರಿತಂತೆ ನನ್ನ ಕಡೆ ತಿರುಗಿ ” ಈಕೆ ಬನಾರಸ್ಸಿನಲ್ಲಿ ಸಮಾಜ ಶಾಸ್ತದ ಹಿನ್ನೆಲೆಯಿಂದ ಭಾರತವನ್ನು ಅಭ್ಯಸಿಸಿದವಳು.” ಎಂದ. ಅವನ ಮಾತಿನಲ್ಲಿ ವ್ಯಂಗ್ಯವನ್ನು, ಅದರ ತೀಕ್ಷ್ಣತೆಯನ್ನು ಗುರುತಿಸಿದ ಕ್ಯಾತರಿನ್ ” ಯಾಕೆ ಹೀಗಾಡುತ್ತಿ? ಈತ ನಮ್ಮ ಅತಿಥಿಯಷ್ಟೆ.” ಎಂದಳು, ವ್ಯಗ್ರ ನೋಟವನ್ನು ಆತನ ಕಡೆಗೆ ಎಸೆದವಳಂತೆ ಮಾಡಿ. +ನಾನು ಮತ್ತೂ ಅಲ್ಲಿರಲು ಇಷ್ಟ ಪಡದೆ ಹೊರಟಾಗ ಬಂಗಲೆ ಕಾಂಪೌಂಡಿನ ಗೇಟಿನ ತನಕ ಕಳುಹಿಸಿಕೊಡಲು ಬಂದ ಅವರಿಬ್ಬರು ಬಿಡುವಿದ್ದಾಗ ತಮ್ಮಲ್ಲಿಗೆ ಆಗಾಗ್ಯೆ ಬಂದು ಹೋಗುವಂತೆ ಮಾಡಲು ತಿಳಿಸಿದರು. ನಾನು ಆ ಎಸ್ಟೇಟಿನಿಂದಾಚೆ ಬಂದನಂತರ ಕಟ್ಟಿದ್ಡ ಅಸಮಧಾನದ ಉಸಿರನ್ನೆಲ್ಲ ಬಿಟ್ಟು ಸಮಧಾನಗೊಂಡೆ. +ಕುತೂಹಲ , ಆ ಬಂಗಲೆಯ ನಿಶ್ಚಲ ಗಾಢ ಸ್ತಬ್ಧತೆಗಂಟಿಕೊಂಡಿದ್ದಂತೆ ನಾನು ಅಲ್ಲಿಗೆ ಬಿಡುವಿದ್ದಾಗಲೆಲ್ಲಾ ಹೋಗಿ ಬರಲಾರಂಭಿಸಿದೆ. ಆದರೆ ಇದ್ದ ಕುತೂಹಲವನ್ನು ನಾನೆಂದೂ ವ್ಯಕ್ತ ಪಡಿಸುವ ಆತುರಕ್ಕೆ ಹೋಗದೆ ಅವರಿಗೆಲ್ಲ ದೂರವೆ ಇರಬಯಸಿದ್ದೆನಾದ್ದರಿಂದ ಅವರು ಮಾತನಾಡುವುದು ನಾನು ಕೇಳುವುದಷ್ಟೇ ನಡೆಯುತ್ತಿತ್ತು. ಹೆಚ್ಚಿನ ಬಾಗ ಕ್ಯಾತರಿನ್‌ಳೊಂದಿಗಿನ ಚರ್ಚೆ ಮಟ್ಟದ್ದಾದ ಸಂಭಾಷಣೆಯೆ ಒಳಗೊಳ್ಳುತ್ತಿತ್ತು. ಇದರ ನಡುವೆ ಆ ಎಸ್ಟೇಟ್ ಮ್ಯಾನೇಜರ್ ಪೊಣ್ಣಪ್ಪನ ಪರಿಚಯವೂ ಆಯ್ತು. ಮಲೆಯಾಳಿಯಂತೆ ಕಾಣುತ್ತಿದ್ದ ಅವನು ಕುಸ್ತಿ ಪಟುವಿನಂತೆ ದೃಢಕಾಯನಾಗಿದ್ದ. ಚೆನ್ನಾಗಿ ಮಾತನಾಡುತ್ತಿದ್ದ. ಆದರೆ ಸಾಹಿತ್ಯವೆಂದರೆ ದೂರ. ಸಾಹಿತ್ಯ ಮೂರು ಕಾಸಿಗೂ ಪ್ರಯೋಜನವಿಲ್ಲವೆಂದು ಅವನ ದೂರು. ಸಾಹಿತ್ಯದ ಬಗೆಗೆ ಮಾತುಬಂದಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಿದ್ಡ. ಅತಿ ಚುರುಕಿನ ಓಡಾಟ, ಪ್ರತಿಯೊಂದನ್ನು ತೂಗಿನೋಡುವ ಬುದ್ಧಿಯ ಅವನ ಮುಖದಲ್ಲಿ ಒರಟುತನ, ಆ ಒರಟುತನದಲ್ಲೂ ನಯಗಾರಿಕೆ. ಒಟ್ಟಾರೆ ಅವನನ್ನು ” ಇಂತಹವನೆಂದು ” ಖಡಾಖಂಡಿತವಾಗಿ ಹೇಳಲು ಬಾರದು. +ಒಮ್ಮೊಮ್ಮೆ ನನಗೆ ಮಂದಣ್ಣ ಪ್ರತ್ಯೇಕವಾಗಿ ಸಿಗುತ್ತಿದ್ದ. ಅದೂ ನಾನಲ್ಲಿ ಹೋದ ಐದಾರು ವಾರಗಳ ನಂತರ. ತಾನು ಮಲಗುವುದನ್ನು ಮಹಡಿಯಿಂದ ಕೆಳಗಿನ ಕೋಣೆಯೊಂದಕ್ಕೆ ವರ್ಗಾಯಿಸಿದ್ದ. ನನ್ನನ್ನು ನೋಡಿದ ಗಳಿಗೆಯಿಂದ ಬೇಗನೆ ಬಿಟ್ಟುಕೊಡದೆ ತನ್ನ ಕೋಣೆಯಲ್ಲೆ ಕೂಡಿಸಿಕೊಳ್ಳುತ್ತಿದ್ದ. ತಾನು ಕುಡಿಯುತ್ತಿದ್ದ. ಮಾಂಸ ಕಚ್ಚುತ್ತಿದ್ದ. ಸುಮ್ಮನೆ ನನ್ನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದ. ನಾನು ಬಲವಂತವಾಗಿ ಬಿಡಿಸಿಕೊಂಡುಬರುತ್ತಿದ್ಡೆ. ಒಮ್ಮೊಮ್ಮೆ” ನೀನೂ ಕುಡಿದರೆ ಚೆನ್ನಿತ್ತು. ಅಭ್ಯಾಸ ಮಾಡು.” ಎಂದು ಬೋಧಿಸುತ್ತಿದ್ದ. ನಾನು ಇಡೀ ಬಂಗಲೆಗೆ ಒಮ್ಮೆಗೆಯೆ ಹತ್ತಿರದವನಾಗಿ- ದೂರದವನಾಗಿ ಉಳಿದುಕೊಂಡಿದ್ದೆ. ನನ್ನ ಹಾಗು ಬಂಗಲೆಯವರ ಭೇಟಿ ಅಧಿಕವಾಗುತ್ತಿದ್ದಂತೆ ಪೊಣ್ಣಪ್ಪ ನನ್ನಲ್ಲಿ ಇದ್ದಕ್ಕಿದ್ದಂತೆ ಅವಿಶ್ವಾಸ ವ್ಯಕ್ತಪಡಿಸಲಾರಂಭಿಸಿದ್ದ. ನನ್ನ ಕೆಲಸಕ್ಕೆ ಎರಡು ದಿನ ರಜೆ ಬಂದಾಗ ಮಂದಣ್ಣ ಮಡಿಕೇರಿ ಭಾಗಮಂಡಲಕ್ಕೆ ವಿಹಾರ ಕಾರ್ಯಕ್ರಮವನ್ನು ಏರ್ಪಡಿಸಿದ. ಬೆಳಿಗ್ಗೆಯೆ ಹೊರಟು ಮಡಿಕೇರಿ ಭಾಗಮಡಲವನ್ನೆಲ್ಲ ನೋಡಿಕೊಂಡು ಬಂದನಂತರ ಅಲ್ಲಿಯೆ ಪ್ರವಾಸಿಮಂದಿರದಲ್ಲುಳಿದುಕೊಂಡೆವು. ರಾತ್ರಿ ಭೋಜನಾನಂತರ ತಿರುಗಾಡಿಕೊಂಡು ಬರಲು ಹೊರಟೆ. ” ನಾನು ನಿಮ್ಮೊಂದಿಗೆ ಬರಬಹುದೆ?” ಎಂದು ಕೃತಕ ಸೌಜನ್ಯದಿಂದ ಪ್ರಶ್ನಿಸಿ ನನ್ನೊಡನೆ ಬಂದ ಪೊಣ್ಣಪ್ಪ ” ಏನ್ಸಮಾಚಾರ?” ಎಂದ ತಮಾಷೆಗೆಂಬಂತೆ. ಕಣ್ಣುಗೀಟಿ. ನಾನು ಸಂಗತಿ ತಿಳಿಯದವನಂತೆ ಅವನ ಕಡೆ ನೋಡಿದಾಗ ” ಕ್ಯಾತರಿನ್ ನಿಮ್ಮನ್ನು ಬಹಳ ಹೊಗಳುತ್ತಾಳೆ…ಏನೇನೋ ಚರ್ಚಿಸ್ತೀರಂತೆ…” ಎಂದಾಗ ನಾನು ವ್ಯಂಗ್ಯವಾಗಿ ” ಪ್ರಯೋಜನಕ್ಕೆ ಬಾರದುದು..” ಎಂದೆ. +“ನಿಮಗೂ ಮಂದಣ್ಣನವರಿಗೂ ಹೇಗೆ ಸಂಬಂಧ?” ಎಂದು ಕೇಳಿದೆ. ಅವನು ಉತ್ಸಾಹಿತನಾಗಿ ಹೆಗ್ಗಳಿಕೆಯ ಪ್ರಾಮಾಣಿಕ ಧ್ವನಿಯಲ್ಲಿ “ಹತ್ತೆಂಟು ವರ್ಷಗಳ ಹಿಂದೆ ಮಂದಣ್ಣ ಯಾರೂಂತಲೆ ಗೊತ್ತಿರಲಿಲ್ಲ. ತೀರಾ ಬಡತನದಲ್ಲಿದ್ದ ನನ್ನನ್ನು ಕಾಲೇಜಿನಿಂದ ಬಿಡಿಸಿ , ತಮ್ಮ ಎಸ್ಟೇಟಿಗೆ ಹಾಕಿಕೊಂಡರು. ಆಗಿನಿಂದಲೂ ಕ್ಯಾತರಿನ್ ಬರೊತನಕ ಅವರ ವೈಯಕ್ತಿಕ ಕೆಲಸಗಳನ್ನೆಲ್ಲ ನಾನೆ ಮಾಡ್ತಿದ್ದೆ. ಕ್ರಮೇಣ ಅವರೇ ನನಗೆ ಎಸ್ಟೇಟಿನ ವಹಿವಾಟನ್ನೆಲ್ಲ ವಹಿಸಿದರು. ಅವತ್ತಿನಿಂದ ಇವತ್ತಿನವರೆಗೂ ವಿಶ್ವಾಸಿಯಾಗೆ ಉಳಿದುಕೊಂಡಿದ್ದೇನೆ.” +” ಮಂದಣ್ಣನ ತಂದೆ ತಾಯಿ..?” +“ಅವರಾ..ತಾಯಿ ಚಿಕ್ಕ ವಯಸ್ಸಿನಲ್ಲೆ ತೀರಿಕೊಂಡರಂತೆ. ತಂದೆ ಮತ್ತು ಮಂದಣ್ಣನ ಸೋದರತ್ತೆ ಮಂದಣ್ಣನ್ನ ಬೆಳೆಸಿದರಂತೆ. ಮಂದಣ್ಣನ ತಂದೆ ಸದಾ ಎಸ್ಟೇಟ್ ಕೂಲಿ ಹೆಣ್ಣಾಳುಗಳ ಮೋಜಿನಲ್ಲೆ ಇರುತ್ತಿದ್ದುದರಿಂದ ಎಸ್ಟೇಟ್ ವಹಿವಾಟೆಲ್ಲಾ ಮಂದಣ್ಣನ ಅತ್ತೇನೆ ನೊಡ್ಕೋತಿದ್ದರಂತೆ. ಆಕೆ, ಮಂದಣ್ಣನ್ನ ಬಾಳಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಳಂತೆ. ಆಗ ಬ್ರಿಟೀಷ್‌ನವರಿದ್ದ ಕಾಲ. ಯಾರೋ ಪರಂಗಿಯವನ ಜತೆ ಎಸ್ಟೇಟಿನ ದುಡ್ಡೆಲ್ಲಾ ದೋಚಿಕೊಂಡು ಇಂಗ್ಲೆಂಡಿಗೆ ಒಡಿಹೋದಳಂತೆ. ಆಸ್ತಿ, ಗೌರವ, ಒಲವಿನ ತಂಗಿ ಸೇರಿದಂತೆ ಎಲ್ಲವನ್ನು ಕಳೆದುಕೊಂಡ ಮಂದಣ್ಣನವರ ತಂದೆ ತೀರಿಕೊಂಡರಂತೆ. ಕ್ಯಾತರಿನ್ ಮಂದಣ್ಣನ ಸೋದರತ್ತೆ ಮಗಳೆ. ಎರಡು ವರ್ಷ ಆಯ್ತು ಭಾರತಕ್ಕೆ ಬಂದು. ಬನಾರಸ್ಸಿನಲ್ಲಿದ್ದ ಆಕೆಯನ್ನು ನೋಡಲು ಇವರು ಆಗಾಗ್ಯೆ ಹೋಗುತ್ತಿದ್ದರು. ಮದುವೆಯೂ ಆಯ್ತು. ಎಸ್ಟೇಟನ್ನು ಪುನಃ ಒಂದು ಸ್ಥಿತಿಗೆ ತಂದಿದ್ದ ಮಂದಣ್ಣನವರು ಆಕೆಯನ್ನು ಮದುವೆಯಾದ್ದರಿಂದ ಇಲ್ಲಿನ ಕೂಲಿಯಾಳುಗಳು ಕೈಬಿಟ್ಟರು. ನಮ್ಮ ಕೂರ್ಗಿಗಳಿಗೆ ಪರಂಗಿಗಳ ಬಗ್ಗೆ ಮೋಹ-ದ್ವೇಷ ಎರಡೂ ವಂಶಪಾರಂಪರ್ಯವಾಗಿ ಬಂದದ್ದು….” +ಪೊಣ್ಣಪ್ಪ ಹೇಳೀದುದನ್ನು ಕೇಳಿದ ಮೇಲೆ ನಾನು ಅದರ ಹಿನ್ನೆಲೆಯಲ್ಲಿ ಯೋಚಿಸಲಾರಂಭಿಸಿದಾಗ ಬೇರೆಯದೆ ಆದ ಸಂಸ್ಕೃತಿಯ ಪ್ರಭಾವವನ್ನು ಜೀರ್ಣಿಸಿಕೊಳ್ಳಲಿಕ್ಕಾಗದ ಜೊತೆಗೆ ವಂಶ ಪಾರಂಪರ್ಯವಾಗಿ ಬಂದ ಸ್ವಾಭಿಮಾನವನ್ನು- ಧರ್ಮವನ್ನು ಬಿಡಲಾಗದೆ ನರಳಿದ ಒಂದು ಪರಂಪರೆಯ ಮೂಲಚಿತ್ರ ಮನಸ್ಸಿನಲ್ಲಿ ಸ್ಪಷ್ಟಗೊಳ್ಳತೊಡಗಿತು. ಈ ರೀತಿಯ ನಾಗರಿಕತೆಯ ಜಟಿಲತೆ ನಾಡಿನುದ್ದಗಲಕ್ಕು ಹಬ್ಬಿದೆ ಎಂದನ್ನಿಸತೊಡಗಿದಂತೆ, ಇದನ್ನೆಲ್ಲಾ ಕ್ಯತ್ರಿನ್ ಜೊತೆ ಚರ್ಚಿಸಿದರೆ ಹೇಗೆ ಎಂಬ ಅಭಿಪ್ರಾಯವೂ ಮೂಡತೊಡಗಿತು. ಅದರ ಹಿಂದೆ ಆಕೆಯೊಡನೆ ಚರ್ಚಿಸಿದ್ದ ವಿಷಯಗಳಲ್ಲಿ ಆಕೆ ತನ್ನ ವಿಚಾರವನ್ನೇ ನನ್ನ ಮುಂದೆ ಮಂಡಿಸಲು ಅವಕಾಶ ಕೊಟ್ಟಿದ್ದೆನೆಯಾಗಲಿ ನಾನು ಆಗೊಮ್ಮೆ ಈಗೊಮ್ಮೆ ಬಾಯ್ತೆರೆದುದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಆಕೆ ಚರ್ಚೆಯಲ್ಲಿ , ನಾನು ಆಕೆಯ ಮಾತುಗಳ ಮೂಲಕ ಮೀರಿಹೋಗಲು ಅವಕಾಶ ಕೊಟ್ಟಿರಲಿಲ್ಲ. ಅದಕ್ಕೆ ಕಾರಣ, ಆಕೆಯ ಗತ್ತು – ಹಮ್ಮು ಮಾತ್ರ ಕಾರಣವಲ್ಲ. ನನಗೆ ಶಾಲಾ ವಿದ್ಯಾಭ್ಯಾಸದ ಶಿಕ್ಷಣ ಇಲ್ಲದುದು – ಬಡತನ ಸ್ವಾಭಿಮಾನಶೂನ್ಯತೆಯನ್ನು ಬಿಚ್ಚಿ ತೊರಿಸಿಕೊಳ್ಳಲು ಸಂಕೋಚ ಹಾಗು ಕೀಳರಿಮೆ ನನ್ನಲ್ಲಿ ಮನೆ ಮಾಡಿದ್ದುದು ಸ್ಪಷ್ಟವಾಗಿ ನನಗೇಯೇ ನಾಚಿಕೆಯಾಗಿತ್ತು. +ಪ್ರವಾಸಿ ಮಂದಿರಕ್ಕೆ ಹೋದಾಗ ಕೋಣೆಯಲ್ಲೇ ಇದ್ದ ಅವರಿಬ್ಬರಿಗೂ ಏನೋ ವಾಗ್ಯುದ್ಧ ನಡೆದುದರ ಚಿನ್ಹೆಗಳಿದ್ದವು. ನನ್ನನ್ನು ನೋಡಿದ ಮಂದಣ್ಣ, ” ಚಂದ್ರು , ನಾನು ಹೊರಗೆ ಹೋಗ್ತಾ ಇದ್ದೀನಿ. ಕಂಪನಿ ಕೊಡ್ತೀರ? ” ಎಂದು ಕೇಳಿದಾಗ ನಾನು ಕ್ಯಾತರಿನ್‌ಳತ್ತ ನೋಡಿದೆ. ಮುಖ ತಿರುಗಿಸಿದಳು. ಪೊಣ್ಣಪ್ಪನನ್ನು ಕೋಣೆಯಲ್ಲೆ ಬಿಟ್ಟು ನಾವಿಬ್ಬರು ಆಚೆ ಬಂದೆವು. ಮಂದಣ್ಣ ಕಾರು ಸ್ಟಾರ್ಟ್ ಮಾಡಿ ನೈಟ್ ಬಾರ್ ಕಡೆಗೆ ಬಿಟ್ಟ. ಹೆಚ್ಚಾಗಿ ಬೆಳಕಿಲ್ಲದ ಒಂದು ಮೂಲೆಯಲ್ಲಿ ಕುಳಿತು ತನಗೆ ಬೀರ್, ಕರಿದ ಮೀನು, ಸಿಲೋನ್ ಪರೋಟ ಎಲ್ಲಾ ಹೇಳಿ ನನಗೆ ಚೌಚೌ ಹೇಳಿ ಸಿಗೆರೇಟ್ ಪ್ಯಾಕ್ ನನ್ನತ್ತ ಎಸೆದಾಗ ನಾನು ಅದರಿಂದ ಒಂದು ತೆಗೆದು ಹಚ್ಚಿದೆ. ಕುಡಿಯುತ್ತಾ ಕುಡಿಯುತ್ತಾ ಖಿನ್ನನಾದ ಮಂದಣ್ಣ ದಿಡೀರನೆ ಇಂಗ್ಲೀಷ್‌ನಲ್ಲಿ “ಚಂದ್ರು, ನಾನು ಜೀವಿಸಿರಬೇಕು. ಜೀವಿಸಿರುವುದೆಂದರೆ ಅಗೋಚರ ಸಂಕಷ್ಟಗಳತ್ತ ನಡೆಯುವುದು ಎಂದರೂ ಸರಿಯೆ.ಇತ್ತೀಚೆಗೆ ಆತ್ಮಹತ್ಯೆಯ ಬಗೆಗಿನ ಆಲೋಚನೆ ಬಂದಾಗಲೆಲ್ಲ ಸಾವು ಸಮಸ್ಯೆಗೆ ಪರಿಹಾರವಲ್ಲ ಅಂತನ್ನಿಸ್ತಿದೆ. ಅದು ಏನನ್ನೂ ಕೊಡೋಲ್ಲ. ಜೀವಿಸಿರಬೇಕೂನ್ನೊ ಆಸೆ ಇದ್ದರು ಅಲ್ಲೇನೊ ಅವ್ಯಕ್ತ ಭಯವೂ ಇದೆ….” ಎಂದು ಬಾಯಿಗೆ ಬಂದಂತೆಲ್ಲಾ ಮಾತಾಡಿ ಅಳತೊಡಗಿದ. ನನಗೆ ಕನಿಕರ ಮೂಡಿತು. ಇಷ್ಟು ದೊಡ್ಡ ಆಳು ಹೀಗೆ ಖಿನ್ನ ಮನಸ್ಕನಾಗಿ ಅಳುವುದೆ..ಛೆ ಎಂದನ್ನಿಸಿತಾದರೂ ನಾನು ಹೆಚ್ಚಿಗೆ ಏನನ್ನೂ ಹೇಳಲು ಹೋಗಲಿಲ್ಲ. ಕೆದಕಿ ಕೇಳಲಿಕ್ಕೂ ಹೋಗಲಿಲ್ಲ…ಆತ ಮುಂದುವರಿದು- +“ನನಗೆ ಅಪ್ಪ ಅಮ್ಮ ಚಿಕ್ಕ ವಯಸ್ಸಿನಿಂದಲೇ ಇರಲಿಲ್ಲ. ಇದ್ದ ತಂದೆ ಬೇಜವಬ್ದಾರಿಯಿಂದ ಬದುಕಿದ. ನನ್ನ ಜೀವನದಲ್ಲಿ ಕ್ಯಾತರಿನ್ ಬಂದಾಗ ಅವಳ ಪ್ರೀತಿ ನನಗೇನೊ ಹೊಸ ಪ್ರಪಂಚವನ್ನೆ ತೋರಿತು. ಆದರೆ ಆಕೆ ಬೌದ್ಧಿಕ ದಾಹದಿಂದ ಕೂಡಿದವಳು.ಅಂತಹ ಆಲೊಚನೆಗಳಿಂದ ಹುಟ್ಟುವ ನೀತಿ ಸಂಹಿತೆಗಳನ್ನು ಜೀವನದಲ್ಲಿ ಪ್ರಾಯೋಗಿಕ ಮಟ್ಟದಲ್ಲಿ ಕ್ರಿಯಾತ್ಮಕವಾಗಿ ಕಾಣಲು ಬಯಸುವವಳು. ಅವಳ ಆ ಭಾಗ ನನಗೆ ಅಪರಿಚಿತವಾಗೆ ಉಳಿಯಿತು. ನೀವು ಶುದ್ಧ ಭಾರತೀಯರು.ಕ್ಯಾತರಿನ್ ರೋಸಿಕೊಂಡು ಹೇಳುವ ಪ್ರಕಾರ ಮೇಧಾವಿಗಳು, ಬುದ್ಧಿಜೀವಿಗಳು, ಆದರೆ ಕ್ಯಾತರಿನ್‌ಳಂತೆ ತನ್ನೆಲ್ಲಾ ವಿಚಾರವನ್ನು ಬೇರೊಬ್ಬರ ಇಷ್ಟಕ್ಕೆ ವಿರೋಧವಾಗಿ ಆ ಬೇರೊಬ್ಬರ ಮೇಲೆ ಹೇರುವ ಪ್ರಭುತ್ವದ ಧೋರಣೆ ನಿಮಗಿಲ್ಲ. ನೀವು ಕ್ಯಾತರಿನ್ ಮಾತನಾಡುವಾಗ ನೀವು ಬಾಯ್ತೆರೆದುದೆ ಅಪರೂಪ. .. ಅದಕ್ಕೆ ಇತ್ತೀಚೆಗೆ ಕ್ಯಾತರಿನ್‌ಗಿಂತ ನೀವೆ ನನಗೆ ಆಪ್ತರಾಗಿ ಕಾಣುತ್ತೀರಿ.” ಆತ ಕುಡಿದು ಕುಡಿದು ತೀರಾ ಭಾವೋದ್ವೇಗನಾಗಿ ನನ್ನನ್ನಪ್ಪಿ ಮುದ್ದಿಸಿದ. ಕ್ಯಾತರಿನ್‌ಳನ್ನು ಬಯ್ಯತೊಡಗಿದ. ಆತನನ್ನು ಅಲ್ಲಿಂದ ಬಲವಂತವಾಗಿ ಎಬ್ಬಿಸಿ ಕಾರ್ ಡ್ರೈವ್ ಮಾಡಲು ಬಿಡದೆ ಹೆಗಲು ಆಸರೆ ಕೊಟ್ಟು ಪ್ರವಾಸಿಮಂದಿರಕ್ಕೆ ನಡೆಸಿಕೊಂಡೇ ಕರೆತಂದೆ. +ಪೊಣ್ಣಪ್ಪ ಆಗಲೆ ಕುಡಿದು ತನ್ನ ಕೋಣೆಯ ದೀಪವನ್ನಾರಿಸಿ ಗಾಢ ನಿದ್ದೆಯಲ್ಲಿದ್ದುದು ಸ್ಪಷ್ಟವಿತ್ತು. ಕ್ಯಾತರಿನ್‌ಳೆ ಬಾರಿನಿಂದ ಕಾರನ್ನು ತಂದಳು. ಬಾರಿಗೆ ಹೋಗುವಾಗ ದಾರಿಯಲ್ಲಿ ಏನನ್ನೂ ಮಾತಾಡಲಿಲ್ಲ. ಅವಳು ಬೇರೆಲ್ಲರ ಹಾಗೆ ವೈಯಕ್ತಿಕ ವಿಚಾರಗಳನ್ನು ಸಲೀಸಾಗಿ ಬಿಟ್ಟುಕೊಡುವಷ್ಟು ಸುಲಭದ ಹೆಣ್ಣಾಗಿರಲಿಲ್ಲ. ತನ್ನ ಮಾತುಗಳಲ್ಲಿ ವೈಯಕ್ತಿಕ ವಿಚಾರ ನುಸುಳಲು ಅವಕಾಶ ಕೊಡದಷ್ಟು ಜಾಗೃತೆ ವಹಿಸುತ್ತಿದ್ದುದರಿಂದಲೆ ಆಕೆಗೆ ಬೇರೆಯವರ ಮೇಲೆ ಹಿಡಿತ ಸಾಧಿಸುವಂತಾಗಿತ್ತು. ದಾರಿಯಲ್ಲಿ ಮಡಿಕೇರಿಯ ಮೇಲೆ ಬ್ರಿಟೀಷರ ಪ್ರಭಾವದ ಅವಶೇಷಗಳ ಶೇಷ ಭಾಗವನ್ನು ಚರ್ಚಿಸಿದೆವು. ರಸ್ತೆ, ಕಟ್ಟಡ, ನಗರಯೋಜನೆ, ಜನಜೀವನದ ನಡವಳಿಕೆ ಇತ್ಯಾದಿಗಳನ್ನು ನಾನು ಉದಾಹರಿಸಿ ಮಾತನಾಡುತ್ತಿದ್ದುದನ್ನು ಕೇಳಿದಳು,ಮೊದಲಬಾರಿಗೆ ನಾನು ಮಾತನಾಡುವಾಗ ಸುಮ್ಮನೆ ಇದ್ದ ಆಕೆಯ ಮೌನದಲ್ಲಿ ನಗ್ನವಿಚಾರದೊಂದಿಗೆ ಸಮ್ಮತಿಯ ಬದಲು ತಿರಸ್ಕರಿಸುವ ಕಾಠಿಣ್ಯತೆ ಇತ್ತು. ಕಾರು ಪ್ರವಾಸಿಮಂದಿರಕ್ಕೆ ಬಂದ ಮೇಲೆ ತನ್ನ ಕೋಣೆಗೆ ಹೋಗುವಾಗ ನನ್ನ ಕಡೆ ಕ್ರೋಧದಿಂದ ನೋಡಿ ಮಾತಿನ ತುಣುಕೊಂದನ್ನು ಎಸೆದಳು:” ನೀನು ಬಹಳ ಬುದ್ಧಿವಂತ, ಘಾಟಿ. ನಾನಂದುಕೊಂಡಿದ್ದಕ್ಕಿಂತಲೂ ಹೆಚ್ಚಿನವ…” +ಮಡಿಕೇರಿಯಿಂದ ಪುನಃ ಹಿಂತಿರುಗಿ ಹೊರಟ ಮೇಲೆ ದಾರಿಯಲ್ಲಿ ನನ್ನ ಬಳಿ ಪೊಣ್ಣಪ್ಪನನ್ನು ಬಿಟ್ಟರೆ ಅವರಿಬ್ಬರೂ ಏನೊಂದನ್ನೂ ಮಾತನಾಡಲಿಲ್ಲ. ಪರಸ್ಪರ ಅವರಿಬ್ಬರೂ ಮಾತನಾಡಲಿಲ್ಲ. ಆಕೆಯಂತೂ ಕಾರಿನಲ್ಲಿ, ಪುಸ್ತಕದಲ್ಲಿ ಮುಖ ಹುದುಗಿಸಿದವಳು ಮೇಲೆತ್ತಲಿಲ್ಲ. +ನಾನು ಮತ್ತೆ ಪುನಃ ಎರಡು ದಿನದನಂತರ ಮೂರು ದಿನ ಮಡಿಕೇರಿಗೆ ಹೋದವನು ಅಲ್ಲೇ ಉಳಿದುಕೊಳ್ಳಬೇಕಾಯ್ತು. ಹಿಂತಿರುಗಿ ಬಂದಾಗ ಬಂಗಲೆಯಲ್ಲಿ ಒಂದೇ ರಗಳೆಯೆಂದು ಸುದ್ಧಿ ತಿಳಿಯಿತು. ಆ ಸಂಜೆ ಬಂಗಲೆಯ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಪೊಣ್ಣಪ್ಪ _ ಮಂದಣ್ಣ ಬುದ್ಧಿ ಸ್ಥಿಮಿತದಲ್ಲಿಲ್ಲದವನಂತೆ ಆಡುತ್ತಿದ್ದಾನೆಂತಲೂ, ಹಿಂದಿನ ದಿನ ಎಸ್ಟೇಟಿಗೆ ನುಗ್ಗಿದ ಸಲಗವನ್ನು ಓಡಿಸದೆ ಸುಟ್ಟು , ಪೊಲೀಸಿನವರದು ರೇಂಜ್ ಅಧಿಕಾರಿಗಳ ತಾಪತ್ರಯ ಅತಿಯಾಗಿದೆಯೆಂದೂ , ಮಂದಣ್ಣ ಲಂಚ ಕೊಡಲು ನಿರಾಕರಿಸುತ್ತಿದ್ದಾನೆಂತಲು, ತಾನು ಎಲ್ಲಾ ವ್ಯವಹಾರವನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುವುದಾಗಿ ನಾನೊಂದೆರಡು ಮಾತುಗಳನ್ನು ಮಂದಣ್ಣನಿಗೆ ಹೇಳಬೇಕೆಂತಲೂ ಹೇಳಿ ಹೋದ. +ನಾನು ಬಂಗಲೆಗೆ ಹೋದಾಗ ಮಂದಣ್ಣನಿಗೆ ವೈದ್ಯರು ನಿದ್ರೆ ಔಷದಿಯ ಇಂಜೆಕ್ಷನ್ ಕೊಟ್ಟಿದ್ದರಿಂದ ನಿದ್ದೆ ಹೋಗಿದ್ದ. ಕ್ಯಾತರಿನ್ ಕೋಣೆಗೆ ಹೋದೆ. ಅವಳ ಕಠಿಣವಾದ ಮುಖದ ಸಪ್ಪೆ ಕಣ್ಣುಗಳಲ್ಲಿ ನೀರು ತುಂಬಿತ್ತು. ನನ್ನನ್ನು ನೋಡಿ ಒರೆಸಿಕೊಂಡಳು. ನಾನು ಸುಮ್ಮನೆ ಅವಳೆದುರಿಗೆ ಕುಳಿತೆ. ಅಂದು ಅವಳು ಮಾತನಾಡಿದುದು ಪೂರ್ತಿ ವೈಯಕ್ತಿಕವಾಗಿತ್ತು. ಅದೂ ಸಹ ನಾನು ಕೇಳದೆಯೆ.” +ನಮ್ಮಮ್ಮ ಭಾರತೀಯಳು. ಬಾರತವನ್ನ ನೋಡಬೇಕಂತ ಬಂದವಳು ಇಲ್ಲಿಯೇ ಉಳಿದುಕೊಂಡೆ. ಸಂಶೋಧನೆಗೆಂದು. ಒಂಟಿಯಾಗಿ ಅನಾಥನಂತೆ ಕಾಡಿನಲ್ಲಿ ಬೆಳೆದಿದ್ದ ಮಂದಣ್ಣ ಅನಪೇಕ್ಷಿತವಾಗಿ ನನಗೆ ಅಂಟಿಕೊಂಡ. ನನ್ನ ಸಾಂಗತ್ಯ ಅವನಿಗೆ ಅನಿವಾರ್‍ಯವಾಗಿದ್ದುದನ್ನು ಗುರುತಿಸಿದ ನಾನೇ ಅವನನ್ನು ಮದುವೆಯಾದೆ. ಎಳೆ ಮಗುವಿನಂತೆ ನನ್ನ ಹಿಂದೆ ಸುತ್ತುತ್ತಿದ್ದ. ಹಾಗೆ ಹೇಳಲು ಹೋದರೆ ಗುಲಾಮನಾಗಿದ್ದ. ಹೀಗೆ ಸ್ಪರ್ಧೆಯೇ ಇಲ್ಲದ ಆಸಕ್ತಿರಹಿತವಾದ ಬದುಕು ದುರ್ಬರವೆನಿಸತೊಡಗಿದಂತೆ ನನ್ನ ಅವನ ನಡುವೆ ಕಂದರ ಅಗಾದವಾಗತೊಡಗಿತು. ಅದನ್ನು ಅವನೂ ಗುರುತಿಸಿದ. ಆದರೆ ಅವನು ನನ್ನಿಂದ ಸ್ಪರ್ಧೆಯನ್ನು ಎದುರು ನೋಡದೆ ಒಣ ಪ್ರೀತಿಯನ್ನು ಎದುರು ನೋಡಿದ್ದು ಅವನ ಸ್ಥಿತಿಗೆ ಅನಿವಾರ್ಯವಿರಬಹುದು., ಪುನಃ ಕುಡಿಯಲಾರಂಭಿಸಿದ. ಅನುಚಿತವಾಗಿ ನಡೆದುಕೊಳ್ಳತೊಡಗಿದ.ಲೈಂಗಿಕವಾಗಿ ಹಿಂಸಿಸಲಾರಂಭಿಸಿದ. ಅವನ ಕಡೆಯಿಂದ ನನ್ನ ಬಗ್ಗೆ ಧ್ವೇಷಭರಿತವಾದ ಪ್ರೀತಿಯ ಸಂಬಂಧ ರೂಪುಗೊಳ್ಳುತ್ತಿದ್ದುದನ್ನು ಕಂಡು ಬೇಸರವಾಯ್ತು. …ಮೊನ್ನೆ ಮಡಿಕೇರಿಯಲ್ಲಿ ನಾನು ಇದನ್ನೆಲ್ಲ ವಿವರಿಸಿ ವಿವಾಹರದ್ಧನ್ನು ಸೂಚಿಸಿದೆ. ಅಂದಿನಿಂದ ಅವನು ಈ ರೀತಿಯಾಗಿದ್ದಾನೆ…ನನ್ನ ಸ್ಥಿತೀನ ನೀನು ಅರ್ಥ ಮಾಡಿಕೊಳ್ಳಬಹುದು…” ಎಂದು ಅಡಗಿಸಿಟ್ಟಿದ್ದನ್ನೆಲ್ಲ ಹೊರ ಕಕ್ಕಿದಳು. +“ಹೌದು ಅರ್ಥವಾಗುತ್ತಿದೆ. ಎಷ್ಟೇ ಆಗಲಿ ನೀನು ಬ್ರಿಟೀಷ್ ತಂದೆಗೆ ಜನಿಸಿದವಳು. ..” ಎಂದೆ. ನನ್ನ ಧ್ವನಿಯಲ್ಲಿ ಅವಳ ಬಗ್ಗೆ ಕನಿಕರವಿರಲಿಲ್ಲ.ಕ್ರೌರ್ಯವಿತ್ತು. +“ಭಾರತೀಯರೆ ಹೀಗೆ..ಛೆ” ಅವಳ ಧ್ವನಿಯಲ್ಲಿನ ತಿರಸ್ಕಾರಕ್ಕೆ ಕೋಪ ಭುಗಿಲ್ಲನೆ ಹತ್ತಿ ಉರಿದರೂ ಬೇರೇನಾದರು ಮಾತನಾಡುವುದು ಅನುಚಿತಪ್ರವೇಶವಾತ್ತದೆಂದು ನಾನು ಅವಳ ಕೋಣೆಯಿಂದ, ಬಂಗಲೆಯಾಚೆ ಬಂದಾಗ , ಹೌದು ನಾನು ಆ ಬಂಗಲೆಯ ಕುಟುಂಬಕ್ಕೆ ಹತ್ತಿರದವನಾಗಲೇ ಬಾರದಿತ್ತು. ಇದೆಲ್ಲಿಯ ಕರ್ಮ. ನನ್ನ ಪ್ರಪಂಚವೆ ಬೇರೆ.ಇನ್ನು ಅಲ್ಲಿಗೆ ಹೋಗಲೇಬಾರದೆಂದುಕೊಂಡೆ. +ಮತ್ತೆ ನಾನು ಅಲ್ಲಿಗೆ ಹೋಗಲೇ ಇಲ್ಲ. +ಪೊಣ್ಣಪ್ಪ ಆಗಾಗ್ಗೆ ನಾಲೆ ಕೆಲಸದ ಬಳಿಯೇ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ. ಈಗವನು ಒಂದು ರೀತಿಯಲ್ಲಿ ಸಮಾಧಾನಗೊಂಡಿದ್ದ. ಮಂದಣ್ಣನ ಜೀಪಾಗಲಿ, ಕಾರಾಗಲಿ ಆ ದಾರಿಯಲ್ಲಿ ಮತ್ತೆ ಕಾಣಲಿಲ್ಲ. +ಐದಾರು ವಾರದನಂತರ ಒಂದು ದಿನ ಕೂಲಿಗಾರರೆಲ್ಲ ಹೋ ಎಂದು ಹುಯಿಲಿಡಲಾರಂಭಿಸಿದರು. ದೂರದಲ್ಲಿ ಒಬ್ಬ ವ್ಯಕ್ತಿ ಬೆಂಕಿಯಲ್ಲಿ ಉರಿದು ಬೆಂದು ಹೋಗುತ್ತಿದ್ದ. ಉರಿ ತಾಳಲಾರದೆ ಆ ವ್ಯಕ್ತಿ ಆ ನಡು ಮದ್ಯಾಹ್ನದ ಬಿಸಿಲಿನಲ್ಲಿ ಗಿರಗಿರನೆ ಗಾಳಿಯಲ್ಲಿ ಸುತ್ತುತ್ತಿದ್ದ. ಗಾಳಿ ಇನ್ನೂ ಜೋರಾಗಿ ಬೆಂಕಿ ಚೆನ್ನಾಗಿ ಕಚ್ಚಿಕೊಂಡಿತು . ನಾನು ಸ್ಟೋರಿನಿಂದ ಕಂಬಳಿ ತರುವಂತೆ ಹೇಳಿ ಅತ್ತ ಓಡಿದಾಗ ಉರಿಯುತ್ತಿದ್ದ ವ್ಯಕ್ತಿ ತನ್ನ ಶರೀರಕ್ಕೆ ಚೆನ್ನಾಗಿ ಬಟ್ಟೆ ಸುತ್ತಿಕೊಂಡಿದ್ದುದು ಕಂಡಿತು.ಕೂಲಿಯಾಳು ತಂದ ಕಂಬಳಿಯನ್ನು ಉರಿಯುತ್ತಿದ್ದ ವ್ಯಕ್ತಿಯ ಮೇಲೆ ದೂರದಿಂದ ಎಸೆದು ನಂತರ ತಬ್ಬಿ ಹಿಡಿದು ಅವನನ್ನು ನೆಲಕ್ಕುರುಳಿಸಿದೆವು. ಬೆಂಕಿ ನಂದಿದನಂತರ ಕಂಬಳಿ ಬಿಚ್ಚಿದಾಗ ಮಂದಣ್ಣ ಪೂರ್ತಿ ಸುಟ್ಟು ಕರಕಲಾಗಿಹೋಗಿದ್ದ. ಕ್ಯಾತರಿನ್‌ಳ ನೈಲಾನ್ ಉಡುಪು ಕರಗಿ ದ್ರವವಾಗಿ ಮಂದಣ್ಣನ ಸುಟ್ಟ ಶರೀರದೊಂದಿಗೆ ಬೆಸೆದುಕೊಂಡಿತ್ತು. ಎಸ್ಟೇಟಿಗೆ ಆಳನ್ನು ಅಟ್ಟಿದೆ… +ಸುದ್ಧಿ ತಿಳಿದು ಬಂದ ಸಬ್‌ಇನ್ಸ್‌ಪೆಕ್ಟರ್ ತನ್ನ ಅಧಿಕಾರಯುತ ತನಿಖೆಗಾರಂಭಿಸಿದ. ಈ ಭಾರಿ ಕ್ಯಾತರಿನ್ ಅಪಸ್ಮಾರ ಬಡಿದವಳಂತೆ ನಿಂತಿದ್ದಳು. ಆಕೆಯ ಬಗೆಗೆ ನಾನು ಕಳೆದ ಬಾರಿ ವ್ಯಕ್ತಪಡಿಸಿದ್ದ ಕ್ರೋಧದ ನ್ಯಾಯವನ್ನು ಮನಗಂಡಿದ್ದರೂ ತನ್ನ ಕಾಠಿಣ್ಯತೆಯನ್ನು ತಗ್ಗಿಸಿರಲಿಲ್ಲ. +ಮಂದಣ್ಣ ನನಗೊಂದು, ಇನ್ಸ್‌ಪೆಕ್ಟರಿಗೊಂದು ಪತ್ರವನ್ನು ಬಿಟ್ಟಿದ್ದ. ಇನ್ಸ್‌ಪೆಕ್ಟರಿನ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ತಾನೆ ಬಾಧ್ಯಸ್ಥನೆಂದಷ್ಟೆ ತಿಳಿಸಿದ್ದ.ನನಗೆ ಬರೆದಿದ್ದ ಪತ್ರದಲ್ಲಿ ತನ್ನ ದಾರುಣಮಯ ನಿರ್ಧಾರಕ್ಕೆ ಕಾರಣ ತನಗೆ ಅಸ್ಪಷ್ಟವೆಂದೂ ತಾನಿನ್ನೂ ಜೀವಂತವಾಗಿರಬಯಸಿದ್ದನೆಂದೂ ತಿಳಿಸಿದ್ದ. ತನಗೆ ಯಾರನ್ನು ಲೆಕ್ಕಕ್ಕೆ ತೆಗೆದುಕೊಂಡು ಪ್ರೀತಿಸಬೇಕೊ ತಿಳಿಯದೆಂದೂ , ಕಡೆಗೆ ನನ್ನನ್ನು, ಕ್ಯಾತರಿನ್‌ಳನ್ನು, ಪೊಣ್ಣಪ್ಪನನ್ನು ನಂಬದೆ ಕೇವಲ ಪ್ರೀತಿಸಿದ್ದನೆಂದು; ಅದು ತನಗೆ ಹಿಂತಿರುಗಿ ಬರಲಿಲ್ಲವೆಂದೂ ತಿಳಿಸಿ, ಅವ್ಯಕ್ತ ಕಾರಣಗಳಿಗಾಗಿ ನಮ್ಮನ್ನು ಕೃತಘ್ನರೆಂದು ಕರೆದಿದ್ದ!! +-ನಾನು ಆ ಊರನ್ನು ಬಿಟ್ಟು ಬಂದೆ. ಮಂದಣ್ಣ ತನ್ನೆಲ್ಲ ಒಟ್ಟು ಆಸ್ತಿಯನ್ನು ಕ್ಯಾತರಿನ್‌ಳಿಗೆ ಬರೆದಿದ್ದ. ಕ್ಯಾತರಿನ್ ಅದನ್ನೆಲ್ಲಾ ಒಬ್ಬ ಬ್ರಿಟೀಷ್ ಮಿಲಿಟರಿ ಕಮಾಂಡರಿಗೆ [ರಿಟೈರ್ಡ್] ಮಾರಿ ಇಂಗ್ಲೆಂಡಿಗೆ ಹೊರಟುಹೋದಳು. ಆನಂತರ ಪ್ರೊಫೆಸರ್ [ಪಾಲ್] ಒಬ್ಬನನ್ನು ಮದುವೆಯಾಗಿರುವುದಾಗಿ ಪತ್ರ ಬರೆದಳು. ಪೊಣ್ಣಪ್ಪ ಈಗೆಲ್ಲೋ ನೀಲಗಿರಿಯಲ್ಲಿ ಏನೋ ವ್ಯಾಪಾರ ಮಾಡಿಕೊಂಡಿದ್ದಾನಂತೆ. +ನಾನು ನಿಮಗೆ ತಿಳಿಸಿರುವ ದಾರುಣಮಯ ಘಟನೆಯ ಮೇಲ್ಮೈ ವಿವರ ಅದರ ಬಂಧದ ಮೂಲದಲ್ಲಿ ಆಗಾಗ ನೆನೆಪಿಗೆ ಬಂದರೂ, ಅದರ ಬಗೆಗೆ ವಿಶ್ಲೇಷಿಸಲು ಸಮಯವಿಲ್ಲದೆ…ಕಡೆಗೆ ಪ್ಯಾಕ್ಸ್ ಓ ಬ್ರಿಟನ್ ಎಂದು ಹೇಳಲೂ ಸಹ ಸಮಯವಿಲ್ಲದೆ ಈ ನಗರದ ಪ್ರಯೋಜನಕ್ಕೆ ಬಾರದ ಅನೇಕಾನೇಕ ಚಟುವಟಿಕೆಗಳ ಇತಿಮಿತಿಗಳಲ್ಲಿ ಕರಗಿಹೋಗಿದ್ದೇನೆ, ಒಂದುರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ… +***** +ತುಷಾರ [ಜುಲೈ,೧೯೮೦] ಮಾಸಿಕದಲ್ಲಿ ಪ್ರಕಟ. ಪ್ರಕಟಿಸಿದ ಈಶ್ವರಯ್ಯನವರಿಗೆ ನನ್ನ ಕೃತಜ್ಞತೆಗಳು. +ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು […] +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ […] +ಮೈಸೂರಿನ ದೇವಾಂಬ ಅಗ್ರಹಾರದ ಗೋಪಾಲಯ್ಯಂಗಾರ್‌ಗೆ ರಾತ್ರಿ ಹನ್ನೊಂದಾದರೂ ಅವತ್ತು ಇನ್ನೂ ಯಾಕೋ ಕಣ್ಣು ಎಳೆದಿರಲಿಲ್ಲ. ಸುಮಾರು ಇಪ್ಪತೈದು ವರ್ಷದಿಂದ ಮಲಗುತ್ತಿದ್ದ ಹಳೆ ಕಿಂಗ್‌ಸೈಜ್ ಬೆಡ್‌ನಲ್ಲಿ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತ, ಒಂದು ಕ್ಷಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_723.txt b/Kannada Sahitya/article_723.txt new file mode 100644 index 0000000000000000000000000000000000000000..6211765ba358067b8223010245ee6434ecbe3097 --- /dev/null +++ b/Kannada Sahitya/article_723.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಹುದೂರದೂರಿನ ಅಪರಿಚಿತ +ಜಾತ್ರೆಯ ಪೀಪಿ ಬೊಂಬೈ ಮಿಠಾಯಿ +ಮಕ್ಕಳಳು ತೇರು ಪುಗ್ಗೆ ಬ್ಯಾಂಡು ಬಿಸಿಲು +ಗಳ ದಪ್ಪ ಉಸಿರಿನ ನಡುವೆ ಥಟ್ಟನೆ +ಒಬ್ಬ ಪರಿಚಿತ ಸಿಕ್ಕ ಖುಷಿ-ಗೆಳೆಯರು +ಇದ್ದಾಗ ಬೇಡ ಇಲ್ಲದಾಗ ಬೇಕು +ಹೊಳಹು ಬೀದಿಗಳು ತೆಕ್ಕೆ ಬಿದ್ದು ಆಳುವ +ಅವಲಂಬನ ನೆಮ್ಮದಿಯಾಲಿಂಗನ +ದೃಷ್ಟಿಕೋನಗಳ ಛೇದ ಪರಿಚ್ಛೇದಗಳ +ಭರ್ಜರಿ ಬಿಂಬಗಳ ಸಮತೂಕದಾಹಾರ +ತೊರೆದು ತಿವಿದು ಸೊಕ್ಕು ನುರಿದು ಹಾಯ್ +ಮಧುರಯಾತನೆಯೊಟ್ಟು ಖ್ಖಿಖ್ಖಿಖ್ಖಿ ಹೊಟ್ಟೆಕಿಚ್ಚು +ನಕ್ಕು ಜೋಕು ಬದುಕಿನ ಗಂಭೀರತೆ ಮರೆತು +ಬೇಲೆಯಲ್ಲಿ ಒಬ್ಬರಿಗೊಬ್ಬರು ಹಂಚಿಹೋಗಿ +ವರುಷಕ್ಕೊಮ್ಮೆ ದಿವಾಳಿಗಿವಾಳಿ ಗ್ರೀಟಿಂಗ್ಸ್ +ಹರುಷಕ್ಕೊಮ್ಮೆ ಒಣನಗು ಕಂಗ್ರಾಚುಲೇಷನ್ಸ +ಗಳ ಅನಿವಾರ್ಯ ಸಂತೆಯ ಉತ್ತರೋತ್ತರರು +ಬೆಳೆಯುತ್ತಿರುವೆನೆಂಬರಿವಾರಿಸಿ ಜತೆಗೇ +ಬೆಳೆದು ಪರಸ್ಪರ ಮಣ್ಣು ಮುಕ್ಕಿಸಿದಾವೃತ್ತಿಗಳ +ನೆಚ್ಚಿ ಕಾಯುವ ಕಾಲದ ಪುಕ್ಕಟೆ ಸಾಕ್ಷಿದಾರರು +ಇಂದು: ಊರಿಗೆ ಬಂದಾಗ ನಮ್ಮನೆಗೆ ಬಾ-ಇವಳು +ನನ್ನವಳು ಈತ ಹಿರಿಯ ಮಗ ತುಂಟ-ಮರೀ +ಮಾಮಂಗೆ ನಮಸ್ಕಾರಾ ಮಾಡು-ಆಗಾಗ ಬರೆಯುತ್ತಿರು +ಎಂಬೀ ಹಗುರ ವ್ಯವಹಾರವೆಲ್ಲಿ? +ಅಂದು: ನನ್ನ ಪ್ರೇಯಸಿ ಜತೆ ನೀನೂ ಬಾ +ಪಿಕ್ಚರಿಗೆ-ಅಂದ ಸಹಜ ಸಲಿಗೆಯಲ್ಲಿ? +ಇಂದು ಸಿಟಿ ಬಸ್ಸಿನಲ್ಲಿ ಕಂಡರೂ +ಕಾಣದಂತಿರುವ ಮುಖವಾಡವೆಲ್ಲಿ? +ಅಂದು ಬೆತ್ತಲೆ ಒಬ್ಬರಿಗೊಬ್ಬರು ಪಿಟಿ ಪಿಟಿ +ಕಾಣಿಸಿಕೊಂಡು ಜತೆಗೇ ಮಿಂದ +ಮುಗ್ಧ ಆಖಾಡವೆಲ್ಲಿ? +ಹತ್ತೂರು ಗಲ್ಲಿ ಗಲ್ಲಿ +ಹುಡುಕಿದರೂ ಸಿಗದ ದಕ್ಕದ +ರಕ್ತದ ಚಿತ್ರಕಲೆಗಳು +ಬತ್ತದ ಚಿತ್ತದ ಸೆಲೆಗಳು +ಗೆಳೆಯರು +***** +ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […] +ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್‍ಣತೆಯ ಬಿಂಬಿಪಂತೆ, ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು […] +‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_724.txt b/Kannada Sahitya/article_724.txt new file mode 100644 index 0000000000000000000000000000000000000000..ae70463a6be3dd8d32f14364b5f7dd42d14e3ade --- /dev/null +++ b/Kannada Sahitya/article_724.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿ +ಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂ +ಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂ +ನನಗೆ ಕಂಡವು; +ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತು +ಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. +೨೬-೧೨-೯೧ +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […] +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_725.txt b/Kannada Sahitya/article_725.txt new file mode 100644 index 0000000000000000000000000000000000000000..2fe477a4e45c52ef3ddd9d652c9eab3a98a480c7 --- /dev/null +++ b/Kannada Sahitya/article_725.txt @@ -0,0 +1,86 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) +ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು +ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ +ತನ್ನ ಜೀವದ ಕೆಂಪು ರಗ್ತವ ಹರಿಸಿ +ಆರಾಮವಾಗಿ ಹಾದು ಹೋಗುವ +ಕಣ್ಣು, ಆತ್ಮ, ಜೀವ, ಮನ ಇದ್ಯಾವುದೂ ಇಲ್ಲದ ಮನುಜರ ಮುಂದೆ +ಅಂಗಾತ ಬಿದ್ದು ಸತ್ತಿದೆ ನೋಡಲ್ಲಿ +ಎಷ್ಟೊಂದು ವಿಶ್ವಾಸವಿಟ್ಟು ದಿನ ಕಳೆದಿದ್ದಿರಬೇಕು +ಈ ನಾಯಿಯೂ ಕೂಡಾ +ಜಾಗೃತವೇ ಇದ್ದು ರಾತ್ರಿ-ದಿನ ಕಾದು +ಪರರಿಗೆ ಬೊಗಳಿ +ತಮ್ಮವರಿಗೆ ಬಾಲ ಎಸ್ಟು ಸಾರಿ ಅಲ್ಲಾಡಿಸಿದ್ದಿರ್ಬೋದು? +ಎಲುಬು ನೆಕ್ಕಿಯೂ, ಗೊಬ್ರದಲ್ಲೇ ಬಿದ್ದಾದ್ರೂ +ಬದುಕಿದ್ದಿಲ್ಲ ಅದು? +ಈ ಧನಿಗಳು – ಮನುಷ್ಯರೂ ನೋಡಿ +ಕದಿಯುವ ಬೆಕ್ಕಿಗೆ ಮಂಚ ಕೊಟ್ಟು +ಬಹದೂರ್ ನಾಯಿಗೆ ಮುಂದೆ ಇಟ್ಟು +ಒಳಗೆ ಅಡಗಿ ತಮಾಶೆ ನೋಡ್ತಾರೆ ನೋಡಿ +ಸೆರಗಿಗೆ ಹಿಡಿದು, ಕಂಬಳಿ ಹೊದಿದು +ಕನಸಲ್ಲಿ ಹಣ್ಣು ತಿನ್ನೋರು +ಈಗ ಕವಿಗಳ ಆತ್ಮಗಳ ಸಾಲು ನೋಡಿ +ಸತ್ತ ನಾಯಿಸುತ್ತ ನಿಂತು ಬೊಬ್ಬೆ ಹಾಕ್ತಾರೆ +ಇಲ್ಲಿ ಕ್ರಾಂತಿ ಆಗೋ ಹಾಗೆಯೇ ಇಲ್ಲ +ಕ್ರಾಂತಿಯವ್ರಿಲ್ಲಿ ಹೊಟ್ಟೆ ತುಂಡಾಗಿ +ಜಠರ ಸಿಗಿದು, ಅಂಗಾತಬಿದ್ದು +ಈ ಮಂಟಪವನ್ನೇ ಬಿಟ್ಟೋದ್ರು +ಯಾರೂ ಕೇಳ್ಳೇ ಇಲ್ಲ ನೋಡಿ +ಲಾರಿ ಹಾಯಿತೋ ಅಥ್ವಾ ಮರ್ಸಿಡಿಸ್ ಕಾರೋ +ಹಾಯಿತೋ ಅಥ್ವಾ ಯಾರೋ ತೆಗೆದ್ರೋ +ಯಾರಿಗೆ ಯೇನು ಬಿದ್ದೋಗಿದೆ +ಕಡೇಗೆ ಒಂದು ನಾಯಿ ನೋಡಿ; ನಾಯಿಗಳು ಇಷ್ಟೊಂದು ಇರುವಾಗ +ಪೋಸ್ಟ್ ಮಾರ್ಟಮ್ ಯಾಕಪ್ಪಾ ಬೇಕು? +ಕೊಂಕಣಿ ಮೂಲ +ಅನ್ಯೇಕ್ ಪೆಟೊ ಮೆಲಾ ಪಳೆ +ಅಳೇ ಅನ್ಯೇಕ್ ಪೆಟೊ ಮೆಲಾ ಥಂಯ್ +ರಾಜ್ ರಸ್ತ್ಯಾಚೆರ್‍ಚ್ ದಿಸಾಚಾ ಮಧೆಂಚ್ +ಅಪ್ಲ್ಯಾ ಕುಡಿಂತ್ಲ್ಯಾ ತಾಂಬ್ಡ್ಯಾ ರಗ್ತಾಕ್ ವ್ಹಾಳವ್ನ್ +ಸುಶೆಗಾತ್ ಪಾಶಾರ್ ಜಾಂವ್ಚಾ +ದೊಳೆ ಅತ್ಮೊ ಜೀವ್ ಮತ್ ನಾತ್ಲೆಲ್ಯಾ ಮನ್ಶಾಂಸವೆಂ +ಉದಾರೊಚ್ ಪಡೊನ್ ಮೆಲಾ ಪಳೆ +ಕಿತ್ಲ್ಯಾ ವಿಶ್ವಾಸಾನ್ ದೀಸ್ ಕಾಡ್‌ಲ್ಲೆ ಜಾವ್ಯೆತಾ +ಹ್ಯಾ ಪೆಟ್ಯಾನ್‌ಯ್ +ಜಾಗೊಚ್ ರಾವೊನ್ ದೀಸ್‌ರಾತ್ ಪಾರೊತ್ ಕರುನ್ +ಪರ್ಕ್ಯಾಂಕ್ ಘೊಂಕುನ್ +ಅಪ್ಲ್ಯಾಂಕ್ ಶಿಮ್ಟಿ ಕಿತ್ಲಿ ಹಾಲಯಿಲ್ಲಿ ಜಾವ್ಯೆತಾ +ಹಾಡಾಂ ಚಿಂವೊನ್ ಗೊಬ್ರಾರ್ ಪಡೊನ್ ತರ್‍ಯ್ +ಆವ್ಕ್ ಸಂಪಯಿಲ್ಲೆಂ ತಾಣೆಂ +ಹಿಂ ಧನ್ಯಾಂ – ಮನ್ಶಾಂಯ್ ಪಳೆ +ಚೊರಿ ಕರ್ಚಾ ಮಾಜ್ರಾಕ್ ಖಾಟ್ ದಿವುನ್ +ಬಾದೂರ್ ಪೆಟ್ಯಾಕ್ ಮುಕಾರ್ ಘಾಲುನ್ +ಭಿತರ್ ಲಿಪೊನ್ ತಮಾಸೊ ಚೊಯ್ತಾತ್ ಪಳೆ +ಪಾಲಂವಾಕ್ ಧರುನ್, ವೊಲಿಂಕ್ ಗುಟ್ಲಾವ್ನ್ +ಸ್ವಪ್ಣಾಂನಿ ಖೆಳಿಂ ಖಾತೆಲೆ +ಕವಿಂಚಾ ಅತ್ಮ್ಯಾಂಚೊ ವ್ಹೊರ್ ಪಳೆ +ಭಂವ್ತೊಣಿಂ ರಾವೊನ್ ಬೊಬೊ ಘಾಲ್ತಾತ್ +ಹಾಂಗಾ ಕ್ರಾಂತಿ ಜಾಂವ್ಚೆಪರಿಂಚ್ ನಾ +ಕ್ರಾಂತೆಚೆ ಹಾಂಗಾ ಪೋಟ್ ಫುಟೊನ್ +ಆನ್ಕಿಟೊ ಚಿರೊನ್ ಉದಾರೆಚ್ ಪಡೊನ್ +ಹೆಂ ರಂಗ್‌ಮಂಚ್‌ಚ್ ಸಾಂಡುನ್ ಗೆಲ್ಯಾತ್ +ಕೊಣೆಂಯ್ ವಿಚಾರ್ಲೆನಾಂ ಪಳೆ +ಲೊರಿ ಹಾಂಡ್ಲಿಗಿ ಯಾ ಮರ್ಸಿಡಿಸ್ ಕಾರ್ +ಹಾಂಡ್ಲಿಗೀ ಯಾ ಕೊಣೆಯ್ ಕಾಡ್ಲೊಗೀ +ಕೊಣಾಕ್ ಕಿತೆಂ ಪಡೊನ್ ಗೆಲಾಂ +ಅಖ್ರೇಕ್ ಏಕ್ ಪೆಟೊ ಪಳೆ; ಪೆಟೆ ಕಿತ್ಲೆಯ್ ಆಸ್ತಾನಾ +ಪೋಸ್ಟ್ ಮಾರ್ಟಮ್ ಕರ್ಚೆಂಚ್ ಕಿತ್ಯಾಕ್? +***** +ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […] +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. ***** +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_726.txt b/Kannada Sahitya/article_726.txt new file mode 100644 index 0000000000000000000000000000000000000000..fc144250f578b30c1a109c4a75716eeb701080fb --- /dev/null +++ b/Kannada Sahitya/article_726.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಳೆದ ತಿಂಗಳು ಇದೇ ಪುಟದಲ್ಲಿ ಕಾಣಿಸಿಕೊಂಡ ಬರವಣಿಗೆಯ ತುಣುಕಿಗೆ ಪ್ರತಿಕ್ರಿಯಿಸಿ ಎಂದು ಸೂಚಿಸಿದಾಗ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಅವುಗಳನ್ನೆಲ್ಲ ಪ್ರಕಟಿಸಲಾಗಿದೆ. ಪ್ರತಿಕ್ರಿಯೆಗಳು ಒಂದಷ್ಟು ಗಣಕ ಉತ್ಸಾಹದ ಅಗತ್ಯ ಪ್ರಥಮಿಕ ಮಾಹಿತಿಗಳನ್ನು ನೀಡುವುದಕ್ಕಷ್ಟೆ ಸೀಮಿತಗೊಂಡಿರುದರಿಂದ ನನ್ನ ಹಿಂದಿನ ಬರವಣಿಗೆಯನ್ನು ಇಲ್ಲಿ ವಿಸ್ತರಿಸಿದ್ದೇನೆ. ನನ್ನ ಹಿಂದಿನ ತುಣುಕಿನ ಪ್ರಧಾನಾಂಶದ ಸಾರವನ್ನು ಇಲ್ಲಿ ಪಟ್ಟಿ ಮಾಡಿ ಮುಂದುವರೆಯುವುದು ಸೂಕ್ತ ಎಂದನ್ನಿಸುತ್ತಿದೆಯಾದ್ದರಿಂದ, ಇಗೋ ಅವುಗಳ ಪಟ್ಟಿ: +೧. ಕನ್ನಡದ ಕುರಿತಂತೆ ಯುನಿಕೋಡ್ ಹಿನ್ನೆಲೆಯಲ್ಲಿ ಸ್ಟಾಂಡರ್ಡೈಸೇಶನ್ ಕುರಿತ ಅಗತ್ಯಕ್ಕೆ ಒತ್ತು. ಅದೇ ನಿಟ್ಟಿನಲ್ಲಿ ಭಾರತೀಯ ಎಲ್ಲ ಭಾಷೆಗಳಿಗೆ ಒಂದೇ ಶಿಷ್ಟೀಕರಣ ಇರಬೇಕೆನ್ನುವ ಸೂಚನೆ. (ಕೀಬೋರ್ಡ್ ಪ್ರಾಸಂಗಿಕ – ಈ ಶಿಷ್ಟೀಕರಣದ ಸಾಧನೆ ಯಾರ ಕೈಯಲ್ಲಿದೆ ಎಂಬುದು ಬೇರೆ ಮಾತು.) +೨. ಅನಿವಾಸಿ ಕನ್ನಡಿಗರು ಹಾಗು ಸ್ಥಳೀಯ ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಯುವಕ ಯುವತಿಯರು ಒಂದು ರೀತಿಯಲ್ಲಿ ಸಾಂಸ್ಕೃತಿಕ ವಿಸ್ಮರಣೆಗೊಳಗಾಗುತ್ತಿರುವುದು. (ಇದರಲ್ಲಿ ಲಿನಕ್ಸ್ ಉತ್ಸಾಹಿಗಳು ಸಹ ಹೊರತಲ್ಲ) +೩. ಮೇಲಿನೆರಡು ಕಾರಣಗಳಿಂದ ಮೈಕ್ರೋಸಾಫ್ಟ್‌ನಂತಹ ದೊಡ್ಡ ದೊಡ್ಡ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಗಳಿಸುವ ನಿಟ್ಟಿನಲ್ಲಿ ಪರಿಸರ ನಿರ್ಮಾಣವಾಗುತ್ತದೆ- ಡಿಜಿಟೇಲ್ ಡಿವೈಡ್, ಸಾಮಾಜಿಕ/ಆರ್ಥಿಕ/ರಾಜಕೀಯ ಅಸಮತೋಲನ- ಪ್ರಕ್ಷುಬ್ದತೆ. +* +* +* +ಸೋರ್ಸ್ ಕೋಡ್ ಗಟ್ಟಿಯಾಗಿ ಹಿಡಿದು ಕುಳಿತ ಮೈಕ್ರೊಸಾಫ್ಟ್ ಒಂದು ಕಡೆ. ಅದರ ಏಕಸ್ವಾಂಯವನ್ನು ಮುರಿದು ಎಲ್ಲ ಪ್ರಗತಿ ಪ್ರಿಯರಿಗೆ ಸಮಾನ ಅವಕಾಶವಿರಬೇಕು ಎಂದಂದುಕೊಂಡು ಸೋರ್ಸ್ ಕೋಡನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟ ಲಿನಕ್ಸ್, ಯುನಿಕ್ಸ್ ಒಂದುಕಡೆ. ಈ ಎರಡು ವಿಭಜನೆಯಲ್ಲಿ ಯಾವುದು ಶ್ರೇಷ್ಟ ಎಂಬ ವಾದಕ್ಕೆ ನಾನು ಇಳಿಯುತ್ತಿಲ್ಲ. ಇದರಿಂದ ಏನಾಗುತ್ತದೆ ಎಂಬುದನ್ನು ನಮ್ಮ ಮುಂದಿರುವ ಒಂದು ಸಾಮಾಜಿಕ ಹಾಗು ಭಾಷಾ ಸನ್ನಿವೇಶವನ್ನು ಗಮನಿಸೋಣ. ಈ ಸನಿವೇಶದ ಉದಾಹರಣೆ ನೀಡುತ್ತಿರುವುದು ಕೇವಲ ತುಲನಾತ್ಮಕ ಸ್ಪಷ್ಟತೆಗಾಗಿ ಮಾತ್ರ. +ರೇಡಿಯೋ ಕೇಳುವ ಅಭ್ಯಾಸವಿದ್ದರೆ ಅದರಲ್ಲೂ ವಾರ್ತೆಗಳು ಕೇಳುವ ಅಭ್ಯಾಸವಿದ್ದರೆ ಒಂದನು ಗಮನಿಸಬಹುದು: ಸಂಸ್ಕೃತದಲ್ಲಿ ವಾರ್ತೆಗಳು. ಹಾಗೆಯೇ ದೂರದರ್ಶನದಲ್ಲಿ ಈ ಸಂಸ್ಕೃತ ವಾರ್ತೆಗಳು ಈಗಲೂ ಇದೆಯೋ ಇಲ್ಲವೋ ನನಗಂತೂ ತಿಳಿಯದು. ಅದು ಬಿಟ್ಟರೆ ಒಂದಷ್ಟು ಮಂದಿಗೆ ಶಾಲೆ, ಕಾಲೇಜು ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಒಂಡು ಸಾಧನವಾಗಷ್ಟೆ ಸಂಸ್ಕೃತ ಉಳಿದುಕೊಂಡಿದೆ. ಇಂದು ಅದು ಬಳಕೆಯಲ್ಲಿಲ್ಲದ ಸತ್ತ ಭಾಷೆ (ಸತ್ವವಿದೆ – ಇಲ್ಲ ಇದು ಬೇರೆ ವಿಷಯ) ‘ಇದು ಸಾಮಾನ್ಯನ ಭಾಷೆಯಾಗಲಿಲ್ಲ, ಆದುದರಿಂದಲೇ ಇಂದು ಸತ್ತ ಭಾಷೆಯಾಗಿದೆ’ – ಎಂಬ ವಾದವೊಂದು ಇದೆ. ಈ ವಾದದ ಹಿನ್ನೆಲೆಯಲ್ಲಿರಬಹುದಾದ ರಾಜಕೀಯಗಳನ್ನು ಬದಿಗಿಟ್ಟು ನೋಡಿದರು ಈ ವಾದದಲ್ಲಿ ಹುರುಳೇ ಇಲ್ಲ ಎಂದು ಖಚಿತವಾಗಿ ಹೇಳಲಾರೆವು. ಸಂಸ್ಕೃತದ ದಬ್ಬಾಳಿಕೆಯ ವಿರುದ್ಧ ಬಂಡೆದ್ದ ಪಾಲಿ ಭಾಷೆ, ಕನ್ನಡದ ವಚನಗಳು ಇಂದು ಮಠ ಹಾಗು ಸರ್ಕಾರದ ಕೃಪೆಯ ಶೈಥ್ಯಾಗರದಲ್ಲಿದೆ. ಅದೇ ರೀತಿಯಲ್ಲಿ ಈ ವಿಂಡೋಸ್ ಹಾಗು ಲಿನಕ್ಸ್. ವಿಂಡೋಸ್ ಮಾರುಕಟ್ಟೆಯ ಏಕಸ್ವಮ್ಯಕ್ಕದ ದೃಷ್ಟಿಯಿಂದ ಏಕಸ್ವಾಮ್ಯವಿಟ್ಟುಕೊಂಡಿದ್ದರೆ ಲಿನಕ್ಸ್ ವ್ಯವಸ್ಥೆಯನ್ನು ಸರಳವಾಗಿಡುವುದರ ಬದಲು ಸಂಸ್ಕೃತೀಕರಣಗೊಳಿಸಿಬಿಟ್ಟಿದ್ದಾರೆ. ಪ್ರಾದೇಶಿಕ ಮಟ್ಟದ ಭಾಷೆಗೆ ಲಿನಕ್ಸ್ ಇಳಿಯದೆ ಹೋದರೆ ಅದು ಸಹ ಶೈಥ್ಯಾಗಾರದ ಕೃಪೆಗೊಳಗಾಗುವುದರಲ್ಲಿ ಸಂಶಯವಿಲ್ಲ. ಮೈಕ್ರೋಸಾಫ್ಟ್ ತನ್ನ ಮಾರುಕಟ್ಟೆ ವಿಸ್ತರಣೆಗೆ ಪ್ರಾದೇಶಿಕ ಭಾಷೆಗಳನ್ನು ಬಳಸಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ‘ಆರ್ಥಿಕ ಸಂಪನ್ಮೂಲಗಳಿಲ್ಲ’- ಅರ್ಧ ನಿಜ ಅರ್ಧ ನೆಪ. ಅದರ್ಶಕ್ಕೂ ಬೆಲೆಯಿಲ್ಲ- ಹಣಕ್ಕೂ ಬೆಲೆಯಿಲ್ಲ ಎಂಬ ಪರಿಸರ ನಿರ್ಮಾಣವಾದರೆ ಅಶ್ಚರ್ಯವಿಲ್ಲ. ಜೊತೆಗೆ ಮಹಾ ದುರಂತವೆಂದರೆ ಯಾರ ಶ್ರಮಕ್ಕೂ ಬೆಲೆ ಇರುವುದಿಲ್ಲ. +ಸರಿ – ಇನ್ನೂ ಒಂದು ಸಂಗತಿಯನ್ನು ಗಮನಿಸುವ. ಸಾಮಾನ್ಯ ಕೆಲಸ ಕಾರ್ಯಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಪೂರೈಸುವ ಸಾಧನಗಳನ್ನು ಈಗಾಗಲೆ ನೀಡಲಾಗಿದೆ, ನಿಮ್ಮ ಕಂಪ್ಯೂಟರ್‍ನಲ್ಲಿ ‘ಕನ್ನಡ’ ಬರುತ್ತದೆಯಲ್ಲವೆ ಎನ್ನುವ ವಾದವನ್ನೂ ಮಾಡುವ ಮಂದಿ ಇದ್ದೇ ಇದ್ದಾರೆ. ಜೊತೆಗೆ ಎಷ್ಟು ಮಂದಿ ಕಂಪ್ಯೂಟರ್ ಬಳಸುತ್ತಾರೆ? ಸಾಮಾನ್ಯನಿಗೇಕೆ ಸಂಸ್ಕೃತ ಭಾಷೆ? ಅವನು ಅಕ್ಷರಸ್ಥನಾದರೆ ಸಾಕು. ಭಾಷೆಯನ್ನು ಬರಿ ‘ಫಂಕ್ಷನಲ್’ ಆಗಿ ಬಳಸುವ ಅವನು ಕೇವಲ ಬಳಾಕೆದಾರ- ಪಂಡಿತನಲ್ಲ. ಆಗಬೇಕಾದ್ದೂ ಇಲ್ಲ..ಹೀಗೆ ಈ ವಾದ ಮುಂದುವರೆಯುತ್ತದೆ. +ಈ ನನ್ನ ಮಾತುಗಳ ಹಿನ್ನೆಲೆಯಲ್ಲಿ ಡಿಜಿಟಲ್ ಡಿವೈಡ್ ಮುಚ್ಚುವ ಹಂಬಲವನ್ನು ಗಮನಿಸ್ ಎಂದಷ್ಟೆ ಕೋರಿಕೊಳ್ಳುತ್ತ: +ಯುನಿಕೋಡ್ ವ್ಯಾಪಕವಾಗಿ ಬಳಕೆಗೆ ಬರುವ ಕಾಲ ಇನ್ನೂ ದೂರವಿದೆ ಎಂದು ಕಣ್ಮುಚ್ಚಿ ಕುಳಿತುಕೊಳ್ಳುವುದಿಲ್ಲ- ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದ್ದೇವೆ , ಲಿನಕ್ಸ್೬ನಲ್ಲೂ ‘ನುಡಿ’ ಬಿಡುಗಡೆ ಮಾಡುತ್ತೇವೆ ಎನ್ನುವ ಗಣಕ ಪರಿಷತ್ ಕಾರ್ಯದರ್ಶಿ ನರಸಿಂಹ ಮೂರ್ತಿಯವರ ಭರವಸೆಗಳನ್ನು ನಂಬುತ್ತಲೇ ಆ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಆದರೆ ‘ಯೂನಿಕೋಡ್‌ಗೆ ಸಂಬಂಧಿಸಿದಂತೆ ಕನ್ನಡಕ್ಕೆ ಅಗತ್ಯವಾದ ಬದಲಾವಣೆಗಳನ್ನು ಸೂಚಿಸಿರುವ ಪತ್ರವನ್ನು ಕನ್ನಡ ಗಣಕ ಪರಿಷತ್ತು ಕೇಂದ್ರ ಸರ್ಕಾರದ ಟಿ. ಡಿ. ಐ. ಎಲ್. ಗೆ ಕರ್ನಾಟಕ ಸರ್ಕಾರದ ಮೂಲಕ ಈಗಾಗಲೇ ಕಳಿಸಿದೆ. ಈ ಬದಲಾವಣೆಯನ್ನು ಯೂನಿಕೋಡ್ ಒಪ್ಪಿ ಅನುಷ್ಠಾನಗೊಳಿಸದ ಹೊರತು ಯೂನಿಕೋಡ್ ಕನ್ನಡದ ಬಳಕೆಗೆ ಒಗ್ಗುವುದಿಲ್ಲ. ಹೀಗಾಗಿ ಯೂನಿಕೋಡ್ ಬಳಕೆ ಕನ್ನಡದ ಮಟ್ಟಿಗೆ ಸದ್ಯಕ್ಕೆ ದೂರದ ಮಾತು.’ ಎನ್ನುವ ಅವರ ಮಾತುಗಳು ಸಹ ಏಕೋ ಆತಂಕ ಹುಟ್ಟಿಸುತ್ತವೆ. ನಮ್ಮ ಕೆಲಸವನ್ನು ಬೇರೆಯವರ ಸುಪರ್ದಿಗೆ ಒಪ್ಪಿಸುವುದು ಬೇಡ, ಅದು ಆಗಲೇ ಬೇಕು ಎನ್ನುವ ಕಡೆ ಒತ್ತಡ ಹೇರಲು ಬೇಕಾದ ಕ್ರಮಗಳನ್ನು, ಕಾರ್ಯಕ್ರಮಗಳನ್ನು ಗಣಕ ಪರಿಷತ್ ರೂಪಿಸಿದರೆ ಅವರ ಜೊತೆ ಕೈ ಜೋಡಿಸಲು ಕನ್ನಡಸಾಹಿತ್ಯ.ಕಾಂ ತಯಾರಾಗಿದೆ ಎನ್ನುವ ಭರವಸೆಯನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ‘ನುಡಿ’ಯ ಲಿನಕ್ಸ್ ಆವೃತ್ತಿ ಬಿಡುಗಡೆ ಮಾಡುತ್ತಾರೆ ಎಂದು ಆಶಿಸುತ್ತೇನೆ. +ಹೀಗೆಯೇ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿತ್ಯೂಟ್ ಆಫ್ ಟೆಕ್ನಾಲಜಿಯ ‘ಇಂಡ್ ಲಿನಕ್ಸ್’ ಯೋಜನೆ ಶೀಘ್ರ ಕಾರ್ಯಗತಗೊಂದು ಕಾರ್ಯಾಚರಣೆಗೆ ಬರಲಿ ಎಂದು ಸಹ ಆಶಿಸಬಹುದು. +ಜೊತೆಗೆ ಇನ್ನೂ ಒಂದು ಒತ್ತಾಯವಿದೆ. ಅದು ಕನ್ನಡದ ಮೂರ್ನಾಲ್ಕು ಬೇಸ್ ಫಾಂಟ್‌ಗಳನ್ನು ಗುರುತಿಸಿ (೮ ಬಿಟ್ ಕೋಡ್ ಹಾಗು ೧೬ ನಿಟ್ ಕೋಡ್ ಯುನಿಕೋಡ್) ಅವುಗಳನ್ನು ಎಲ್ಲ ತಂತ್ರಾಂಶಗಳಲ್ಲಿ ಅದಕವಾಗಿರುವಂತೆ ಮಾಡಬೇಕು. ಆಗ ಕಂಪಾಟಬಲಿಟಿಯ ಜಿಗುಟುತನ ಇರುವುದಿಲ್ಲ. +* +* +* +‘ನೋಡಯ್ಯ ಅವನ ಕೆಪಾಸಿಟೀನ, ಹಡಗ್ನಲ್ಲಿ ಪ್ಲೇನುಗಳನ್ನ ಎತ್ಕೊಂದು ಬಂದು ನಿಲ್ಲಿಸಿ ಬಾಂಬ್‌ಗಳನ್ನ ಹಾಕ್ತಾ ಅವ್ನೆ..’ – ಅಮೆರಿಕದ ಅಭಿಮಾನಿ ಮಿತ್ರನೊಬ್ಬ ಹೇಳಿದ್ದು ದಂಗು ಬಡಿಸಲಿಲ್ಲ. ಅವನ ಮಾತುಗಳಲ್ಲಿನ ಕ್ರೌರ್ಯದಲ್ಲಿ ಒಂದು ರೀತ್ಯ ಮೌಡ್ಯವೂ ಬೆರೆತಿತ್ತು. ತಮ್ಮಗಳ ಹುಚ್ಚು ಅಭಿಮಾನವನು ಮೆರೆಸಲು ಅವರು ಎಂತಹ ಉದಾಹರಣೆಯನ್ನಾದರೂ ವಿಜೃಂಭಿಸಿ ಹೇಳಬಲ್ಲರು. ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಡಾರ್ವಿನ್ ಸಿದ್ಧಾಂತವನ್ನೇ ಆಧರಿಸಿದ ಎಡ್ವರ್ಡ್ ಓ ವಿಲ್ಸನ್‌ನ ಸೋಶಿಯೋ ಬಾಯಾಲಜಿಯನ್ನು ಎಡಪಂಥೀಯ ವಿಮರ್ಶಕರು ಛಿದ್ರಗೊಳಿಸಿದ್ದು ಇದಕ್ಕಾಗಿಯೇ. ಹಾಗಾದರೆ ಸರ್ವಸಮಾನ ಸಮಾಜವಾದ ಕನಸಿಗೆ ಬೆಲೆಯೇ ಇಲ್ಲವ ಎಂದು ಅವರೆಲ್ಲ ಪ್ರಶ್ನಿಸಿದ್ದರು. ‘ಶೇಖರ್, ಸರ್ವೈವಲ್ ಆಫ್ ದ ಫಿಟ್ಟೆಸ್ಟ್- ಶಕ್ತಿ ಇರೋನು ಹೊಡೆಯುತ್ತಾನಪ್ಪ’ ಎಂದು ಮತ್ತೊಬ್ಬ ಮಿತ್ರರು ಹೇಳಿದಾಗ ನಾನು ನಿಜವಾಗಿಯೂ ದಂಗು ಬಡಿದು ಹೋಗಿದ್ದೆ. ಅವರು ಓದದವರೇನಲ್ಲ. ಆಲೋಚಸಲಾಗದವರೇನಲ್ಲ. ಅವರ ಬಾಯಲ್ಲಿ ಇಂತಹ ಮಾತುಗಳೆ- ಇದು ಬುಷ್ ಮಹಾಶಯನ ಕ್ರೌರ್ಯಕ್ಕಿಂತಲೂ ಹೆಚ್ಚಿನದು- ಅದಕ್ಕಿಂತಲೂ ಹೀನಾಯದ್ದು..ಎಂದನ್ನಿಸಿದ್ದರಿಂದ ಅವರೊಂದಿಗೆ ನನ್ನ ಮಾತುಗಳೆಲ್ಲ ಹಳಿ ತಪ್ಪಿದ್ದವು. ಇರಲಿ, ಸಂಯುಕ್ತ ರಾಷ್ಟ್ರ ತನ್ನ ಮಾತುಗಳನ್ನು ಒಪ್ಪದಿದ್ದರೂ ‘ನಾನು ಮಾಡುವುದನ್ನೇ ಮಾಡುತ್ತೇನೆ’ ಎಂದು ಹೊರಟಿರುವ ಬುಷ್ ಸರ್ವಾಧಿಕಾರದ ಯುದ್ಧವನ್ನು ಖಂದಿಸುವ ನೋಮ್ ಚಾಮ್ಸ್‌ಕಿಯ ಲೇಖನದ ಅನುವಾದವನ್ನು ಪ್ರಕಟಿಸುವ ಮೂಲಕ ಎಲ್ಲೂ ಮುಟ್ಟದ ನಮ್ಮ ಖಂಡನೆಯನ್ನು ವ್ಯಕ್ತ ಪಡಿಸುತ್ತಿದ್ದೇವೆ. ಎಲ್ಲೂ ಮುಟ್ಟದ್ದರಿಂದ ನಾವೆಲ್ಲ ಖಂದಿಸುತ್ತೇವೆಯೋ ಎಂಬ ಸೋಜಿಗವೂ ನನ್ನನ್ನು ಆಗಾಗ್ಯೆ ಕಾಡಿದ್ದಿದೆ.. +* +* +* +ಈ ಬಾರಿ ಕನ್ನಡಸಾಹಿತ್ಯ.ಕಾಂ ಲೇಖಕ ಬಳಗಕ್ಕೆ ಐವರು ಸೇರಿದ್ದಾರೆ. ದೇವನೂರ ಮಹಾದೇವ, ಜಯಂತ ಕಾಯ್ಕಿಣಿ, ಕುಸುಮಾ ಶಾನಾಭಾಗ, ಶಾಂತಾದೇವಿ ಕಣವಿ ಹಾಗು ಕೆ ಎಂ ವಿಜಯಲಕ್ಷ್ಮಿ. ಒಡಲಾಳದ ಬಗೆಗೆ ಯು ಆರ್ ಅನಂತಮೂರ್ತಿಯವರು ಬರೆದಿರುವ ಲೇಖನವೂ ಇದೆಯಾದ್ದರಿಂದ ನಾನು ಹೇಳಬೇಕಾದ್ದೇನೂ ಇಲ್ಲವೆಂದೆನ್ನಿಸುತ್ತದೆ. ಇರಾಕ್-ಅಮೆರಿಕ ಯುದ್ಧದ ಆತಂಕದ ನಡುವೆ ಅಳುಕಿನಿಂದಲೇ ಒಮ್ದನ್ನು ಹೇಳಬಹುದೇನೋ: ಸ್ವಭಾನು ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ತರಲಿ- ಯುಗಾದಿ ಶುಭಾಶಯಗಳು.. +-ಶೇಖರ್‍ಪೂರ್ಣ +***** +೨-೦೪.೨೦೦೩ +ಅಂತರ್ಜಾಲದಲ್ಲಿ ಕನ್ನಡ ತಾಣವೆ? – ಜನ ನಮಗೆ ಹುಚ್ಚು ಎಂದಾರು ಅಥವ ಈ ತಾಣವನ್ನು ಉಪೇಕ್ಷಿಸಿಯಾರು ಎಂದು ನಾವು ಸ್ವಲ್ಪ ಸಂಕೋಚದಿಂದಲೇ ಈ ತಾಣವನ್ನು ಪ್ರಾರಂಭಿಸಿದೆವು. ಅಂತರ್ಜಾಲವೆಂದರೆ ಕೇವಲ ಇಂಗ್ಲಿಷ್‌ಮಯ ಅಥವ ಇಂಗ್ಲಿಷ್ ಹೊರತಾದ […] +ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […] +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_727.txt b/Kannada Sahitya/article_727.txt new file mode 100644 index 0000000000000000000000000000000000000000..221c82e8caf71925a15abe112a66388ec0acd3a2 --- /dev/null +++ b/Kannada Sahitya/article_727.txt @@ -0,0 +1,202 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“Earth has not anything to show more fair!” +– Wordsworth +(ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ) +ಮೂಡಣದ ಬಾನಿನಲಿ +ಮುಗಿಲು ನೆಲ ಮಿಲನದಲ +ಕ್ಷಿತಿಜ ಕಂಕಣದಲ್ಲಿ +ಉಷೆಯ ನಸುನಗೆಯಂತೆ +ಬಣ್ಣ ಬಣ್ಣದ ಸಂತೆ +ಬಾಂದಳವ ಸಿಂಗರಿಸಿ +ಬಗೆಯಲ್ಲಿ ಬಿತ್ತರಿಸಿ +ಚೆಲುವು ಮೈದೋರುತಿರೆ +ಎದೆ ಹಿಗ್ಗಿ ತರೆಯುತಿರೆ +ದುಂಡಾಗಿ ಚೆಂಡಾಗಿ +ಕುಂಕುಮಾಂಕಿತನಾಗಿ +ಸುಕುಮಾರ ಸುಂದರನು +ಮೂಡಿದನದೊ! +ಗಿಡಮರದ ಸಂದಿಯಲಿ +ಹಸುರಿಡಿದ ತೋಪಿನಲಿ +ಹೊಂಗಿರಣ ನುಗ್ಗಿ ಬರೆ +ಸುಳಿಗಾಳಿ ತೇಲಿಸಿರೆ, +ಹುಲ್ಲಿನಸಳುಗಳಲ್ಲಿ +ಮಂಜುಹನಿ ಮುತ್ತಿನಲಿ +ಕೆತ್ತನೆಯ ನಿರ್‍ಮಿಸಿರೆ, +“ಕುಹೂ ಕುಹೂ ಹಾ ಹೂ +ಚಿಂವ್ ಚುಕ್ ಚುಕ್ ಟಿವೂ” +ನೂರಾರು ಹಕ್ಕಿಗಳ +ಸ್ವಚ್ಛಂದ ರಾಗಗಳ +ತಾಳ ಹಿಮ್ಮೇಳದಲಿ, +ಬಂಚರದ ಇಂಚರದ +ಗಾನ ಮಧುಪಾನದಲಿ +ವಿದ್ಯಾಲಯದ ಬಯಲು +ತುಂಬಿ ತುಳುಕಾಡಿರಲು +ಕಿವಿದೆರೆದು ಮೌನದಲಿ +ಆಲಿಸಿಲ್ಲಿ! +ಬಳ್ಳಿಗಳ ಗೊಂಚಲಲಿ +ದಾಂಗುಡಿಯ ಜೋಕಾಲಿ, +ಹುಲುಗಲದ ಟೊಂಗೆಯಲಿ +ಕೊನರಿರುವ ಹೊಂಗೆಯಲಿ +ಚಂದಳಿರ ಮಾವಿನಲಿ +ಚಿಗುರೊಡದ ಹುಣಿಸೆಯಲಿ +ರಾಜಿಸಿರೆ ಹೂಜಲ್ಲಿ +ಸೂಸಿರುವ ನೆಲದಲ್ಲಿ +ತುಂಬಿಗಳ ಝೇಂಕಾರ- +ಬನದೆದೆಯ ಓಂಕಾರ! +ಹಾರುತಿದೆ ಮಮಕಾರ +ಸೌಂದರ್‍ಯ ಸಾಕಾರ- +ಗೊಂಡು ಕಂಗೊಳಿಸಿಹುದು +ಕಂಡು ಕಂಗಳ ಬರವು +ಹಿಂಗುತಿಹುದು! +ಇದರಾಚೆ ನೋಡಲ್ಲಿ! +ಹೆಬ್ಬಾವಿನಂದದಲಿ +ಹಬ್ಬಿರುವ ನಗರದಲಿ +ಪೊಗೆದಳೆದ ಮಬ್ಬಿನಲಿ +ನಿದ್ದೆಯಲಿ ಮುಸುಕಿನಲಿ +ಇಂತಿರುವ ನಸುಕಿನಲಿ +ನೀರವದ ಬೀದಿಯಲಿ +ನಿಚ್ಚಳದ ಹಾದಿಯಲಿ, +ಒಂದರೆಡು ಮೂರಾಗಿ +ಹತ್ತಾಗಿ ಹಲವಾಗಿ +ಜನವೆದ್ದು ನಡೆದಿಹುದು, +ವಾಹನವು ಓಡಿಹುದು; +ಎದ್ದಿರುವ ಧೂಳಿಯಲಿ +ಗದ್ದಲದ ಹೋಳಿಯಲಿ +ಶಾಂತಿ ಕಾಲ್ದೆಗೆಯುತಿದೆ +ನೆಮ್ಮದಿಯು ಕದಡುತಿದೆ +ನಿತ್ಯ ವ್ಯವಹಾರದಲಿ +ನಗರದಲ್ಲಿ. +ಹೊತ್ತು ನಡುನೆತ್ತಿಯಲಿ +ಕೆಂಡವನು ಕಾರುತಿರೆ +ನಿಟ್ಟುಸಿರು ಜಾರುತಿರೆ +ಮೈಬೆವರು ಹನಿಯುತಿರೆ, +ನೀಲಗಣಿ ಬಾನಿನಲಿ +ಗಾಜು ಕೊಪ್ಪರಿಗೆಯಲಿ +ತುಂಡು ಮೋಡದ ದಂಡು +ಉಂಡಾಡಿಗರ ಹಿಂಡು +ಅತ್ತಿತ್ತ ಸರಿದಾಡೆ +ತಿಳ್ಳಿಯಾಟವನಾಡೆ,- +ಮೇಣಿಲ್ಲಿ ತಿರೆಯಲ್ಲಿ +ಬಿತ್ತರದ ಬಯಲಿನಲಿ +ಬಿಸಿಲುಗುದುರೆಯನೇರಿ +ಕಣ್ಣಿಟ್ಟಿ ಹೌಹಾರಿ +ಹಗಲು ದಿಗಿಲಾಗಿಹುದು! +ಗಾಳಿ ಮಾತಾಡಿಸದೆ +ಎಲೆಯನಲುಗಾಡಿಸದೆ +ಮರದ ತಣ್ಣೆಳಲಲ್ಲಿ +ನಿರ್‍ವಿಣ್ಣ ಮೌನದಲಿ +ವಿಶ್ರಾಂತಿ ಪಡೆಯುತ್ತಿದೆ +ಸದ್ದಿಲ್ಲದೆ! +ದೂರ ಕಾನನದಲ್ಲಿ +ಏಳೆ ಸುಂಟರಗಾಳಿ +ಮುಗಿಲುದ್ದ ಕೆಂಧೂಳಿ- +ಯಲ್ಲಿ ತರಗೆಲೆ ತೇಲಿ +ಎಳೆ ಹರಿದ ಪಟದಂತೆ +ವಿಚ್ಛಿನ್ನ ಮನದಂತೆ +ಮರವಟ್ಟು ಸುತ್ತುತಿದೆ +ಗಿರಗಿರನೆ ತಿರುಗುತಿದೆ +ಭೂವ್ಯೋಮ ಮಧ್ಯದಲಿ +ಶೂನ್ಯದಲ್ಲಿ! +ಗಾಡಿ ಸಿಳ್ಳನು ಹೊಡೆದು +ಮೌನ ಮುದ್ರೆಯನೊಡೆದು, +ಗಿರಿಯ ಕಿಬ್ಬದಿಯಿಂದ +ಕಂದರದ ಮರೆಯಿಂದ +ಧೀಂಕಿಟ್ಟು ಹೊರಬಂದು +ವಿಧವಿಧದ ಪಯಣಿಗರ +ಹೊತ್ತು ಮನ ಬೇಸತ್ತು +ಚೀರಿ ಬುಸುಗುಟ್ಟುತ್ತ +ಕರ್‍ಬೊಗೆಯ ಕಾರುತ್ತ +ಧಾವಿಸಿದೆ ರಭಸದಲಿ +ಕಾರ್‍ಯ ಮುಗಿತಾಯಕ್ಕೆ +ನಿಲ್ದಾಣಕ್ಕೆ! +ಪಡುವಣದ ಮಡಿಲಲ್ಲಿ +ರವಿ ನಿದ್ದೆಗೈವಂದು, +ಹೊಂಗಿರಣಗಳ ಚಾಚಿ +ಬಾಂದೇವಿ ತಲೆಬಾಚಿ +ಬಣ್ಣದೆಣ್ಣೆಯ ಪೂಸಿ +ತೊಟ್ಟಿಲಲಿ ಪಟ್ಟಿರಿಸಿ +ಬಾನಲ್ಲಿ ಬುವಿಯಲ್ಲಿ +ಬನದಲ್ಲಿ ಬಯಲಲ್ಲಿ +ಗುಡಿ ಚರ್‍ಚು ಗೋಪುರದಿ +ಕಾಲೇಜಿನಂಗಳದಿ +ಹೊಂಬೆಳಕು ಹರಡುತಿರೆ +ಕವಿಗಾಳಿ ತೀಡುತಿರೆ +ಕಲಕಂಠನುಲಿಯುತಿರೆ +ಗಿಳಿವಿಂಡು ಹಾರುತಿರೆ +ಬೆಳ್ಳಕ್ಕಿ ಬಳಿವಿಡಿದು +ಬಿಳಿಚುಕ್ಕಿ ಗರಿಯೊಡೆದು +ಬಾಂದಳವನಲೆವಂತೆ +ಉಡ್ಡಾಣಗೈಯುತಿರೆ +ದನಕರದ ಕೊರಳಿಂದ +ಗಂಟೆಗಳ ಟಿಂಟಿಣಿಯು +ಕೊಳಲಿಂದ ಇನಿದನಿಯು +ಮಂದ ಮಂದಾನಿಲನ +ಬೆನ್ನೇರಿ ಬಳಿಸಾರೆ, +ಲಾಲಿ ಕಿವಿ ತಟ್ಟುತಿರೆ +ಚಿನ್ಮಯಾನಂದದಲಿ +‘ನಾನು’ ಬಯಲಾಗುತ್ತಿರೆ +‘ನೀನು’ ಮೈದುಂಬುತಿರೆ +ರೋಮ ರೋಮಂಗಳಲಿ +ನಾದದುನ್ಮಾದದಲಿ +ಚೈತನ್ಯ ಹರಿಯುತಿರೆ +ಮಾನಸ ಸರೋವರವು +ತೊಳೆದ ಕನ್ನಡಿಯಾಗೆ +ಹೃದ್ರಂಗದಲಿ ಭಾವ +ಚಿಲುಮೆ ಪುಟಿದೇಳುತಿರೆ +ಜೇನ್ನೊಣದ ಹುಟ್ಟಿನಲಿ +ಗಜೆಬಜೆಯು ಹುಟ್ಟುತಿರೆ +ಜೇಂಬನಿಯು ಜಗಳುತಿರೆ, +ಮುಚ್ಚಂಜೆ ಮುಸುಗಿನಲಿ +ಹೊಂಬಣ್ಣ ಮಾಸುತಿರೆ +ಇಳೆಯು ಸೆರೆಯಾಗುತಿರೆ +ಮೆಲ್ಲಮೆಲ್ಲನೆ ಇರುಳು +ಇಳಿಯುತಿಹುದು. +ಕತ್ತಲೆಯ ಮೊತ್ತದಲಿ +ಬಡಿದು ಮಲಗಿಸಿದಂತೆ +ಪಟ್ಟಣವು ನಿದ್ರಿಸಿರೆ +ನಿಶ್ಯಬ್ದ ಮುದ್ರಿಸಿರೆ +ಗಿಡಗಂಟಿ ಬೇಲಿಯಲಿ +ಕೀಟ ಜಿಂಯ್‌ಗುಟ್ಟುತಿರೆ, +ಚಿಕ್ಕೆಗಳು ಗಗನದಲಿ +ಕಣ್ಣುಮುಚ್ಚಾಲೆಯಲಿ +ಚಂದಿರನ ಹುಡುಕುತಿರೆ +ಚೆಲ್ವೆಳಕ ಸಿಡಿಸುತಿರೆ +ನಾ ನಿಂತ ಕಟ್ಟಡವು +ತಲೆಯೆತ್ತಿ ನಿಂತಿಹುದು +ಪರ್‍ವತಪ್ರಾಯದಲಿ +ಧ್ಯಾನದಲ್ಲಿ! +ರುದ್ರ, ಭೀಷಣದಲ್ಲಿ +ಗಾಳಿ ತುಸು ಮೊರೆಯುತಿರೆ, +ನೆನೆನೆನೆಸಿ ಅತ್ತಂತೆ +ಎಲೆ, ರವುದೆ ನಲುಗುತಿರೆ +ಟಿಂವಕ್ಕಿ ಟಂಕಾರ +ದಿಗ್ದಿಗಂತಕೆ ಹಬ್ಬಿ +ಗಿರಿಸಾನುಗಳ ತಬ್ಬಿ +ಕತ್ತಲಲಿ ಕರಗುತಿದೆ! +ಅರರೆ! ಹೊನ್ನಿಯ ಹುಳವು +ಧರೆಯ ಜಂಗಮ ತಾರೆ +ಮಿಂಚು ಹುಡಿಯಾದಂತೆ +ರೆಕ್ಕೆಯಿಹ ಕಿಡಿಯಂತೆ +ಕತ್ತಲೆಯ ಕಣ್ಣಿನೊಲು +ಮುಚ್ಚುತಿದೆ ತೆರೆಯುತಿದೆ +ಕುಳಿತೆದ್ದು ಹಾರುತಿದೆ +ಅತ್ತಿತ್ತ ಸಾರುತಿದೆ +ಕಂಡು ಮರೆಯಾಗುತಿದೆ +ಬೆಳಕು ಹನಿಯಾದಂತೆ +ತಿರೆಯುತ್ತಮಾಂಗದಲಿ +ಕತ್ತಿರುವ ಮಣಿಯಂತೆ +ಕತ್ತಲೆಯ ಕಡಲಿನಲಿ +ಮುತ್ತಿನಂತೆ! +***** +೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […] +ನೀರಿನ ತುಂಬ ಮೋಡ ಮೋಡದ ಮೇಲೆಲ್ಲ ಅಲೆ ಅಲೆಯಾಗಿ ಹರಿವ ಮೀನು ಮೋಡದೊಳಗೆ ಗುಡುಗು, ನೀರಲ್ಲಿ ಸುಳಿ ಮಿಂಚು ನದಿಯ ತಳದಲ್ಲೊಂದು ಕಥೆ ನದಿಯ ಮುಖದಲ್ಲಿ ನಗುವ ತರಂಗಗಳು. ***** +ದೂರ ದೂರದ ತನಕ ದಾರಿ ಕಾಯುವ ಹುಡುಗಿ ಏನು ಹೇಳೆ ನಿನ್ನ ಮನದ ಅಳಲು. ಯಾವ ಊರಿನ ಅವನು! ಯಾವ ಊರಿನ ಇವಳು! ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_728.txt b/Kannada Sahitya/article_728.txt new file mode 100644 index 0000000000000000000000000000000000000000..73454c67a8c3b3f4c8a8e51909019465e8bf1d21 --- /dev/null +++ b/Kannada Sahitya/article_728.txt @@ -0,0 +1,73 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ಜಿಯಾವುದ್ದೀನ್ ಸರದಾರ್ +ಕನ್ನಡಕ್ಕೆ: ಅಕ್ಷರ ಕೆ.ವಿ. +ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ ಲೇಖನ ಮತ್ತು ಪುಸ್ತಕಗಳನ್ನು ರಚಿಸಿದ್ದಾರೆ; ಅಂಥ ಚಿಂತನೆಗಳನ್ನು ಕುರಿತ ‘ಫ್ಯೂಚರ್ಸ್’ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಲಂಡನ್ನಿನ ಸಿಟಿ ಯುನಿವರ್ಸಿಟಿಯ ವಸಾಹತೋತ್ತರ ಅಧ್ಯಯನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಇವರು ಇಸ್ಲಾಮ್ ಧರ್ಮ, ಸಮಾಜ ಮತ್ತು ಅದರ ಭವಿಷ್ಯದಬಗ್ಗೆ-‘ಇಸ್ಲಾಮಿಕ್‌ಫ್ಯೂಚರ್ಸ್: ದ ಶೇಪ್ ಆಫ್ ಐಡಿಯಾಸ್ ಟು ಕಮ್’ ಮತ್ತು ‘ದಿ ಫ್ಯೂಚರ್ ಆಫ್ ಮುಸ್ಲಿಮ್ ಸಿವಿಲೈಜೇಷನ್’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸೆಪ್ಟೆಂಬರ್ ೧೧ರ ಬಳಿಕದ ಜಾಗತಿಕ ವಿದ್ಯಮಾನಗಳನ್ನು ತುಂಬ ಬೇರೆಯದೇ ಕಣ್ಣಿನಿಂದ ನೋಡುವ ಇವರ ಪ್ರಸ್ತುತ ಲೇಖನವನ್ನು ‘ಸೆಮಿನಾರ್’ ಪತ್ರಿಕೆಯ ಜನವರಿ ಸಂಚಿಕೆಯಿಂದ ಲೇಖಕರ ಅನುಮತಿಯೊಂದಿಗೆ ಅನುವಾದಿಸಲಾಗಿದೆ. +ಇಸ್ಲಾಮಿನೊಳಗೇ ಗಂಭೀರವಾದ ಮರುಚಿಂತನೆ ನಡೆಯಬೇಕಾಗಿರುವುದು ಈಗ ಬಹುಕಾಲದಿಂದ ಅಗತ್ಯವಾಗಿರುವ ಒಂದು ಸಂಗತಿಯಾಗಿದೆ. ಮುಸ್ಲಿಮರು ತುಂಬ ದೀರ್ಘಕಾಲದಿಂದಲೂ ಹಳೆಯ ವ್ಯಾಖ್ಯಾನಗಳನ್ನೇ ಅವಲಂಬಿಸುತ್ತ ಅದನ್ನೇ ನಂಬುತ್ತಲೂ ಬಂದುಬಿಟ್ಟಿದ್ದಾರೆ. ಆದ್ದರಿಂದಲೇ ಇವತ್ತಿನ ಈ ಸಮಕಾಲೀನ ಜಗತ್ತಿನಲ್ಲಿ ನಾವು ತುಂಬ ನೋವನ್ನು ಅನುಭವಿಸತೊಡಗಿದ್ದೇವೆ; ಯಾಕೆ ನಮಗೆ ಆಧುನಿಕತೆಯೊಂದಿಗೆ ತುಂಬ ಸಮಸ್ಯೆಗಳಾಗುತ್ತಿವೆಯೆಂದು ಒದ್ದಾಡತೊಡಗಿದ್ದೇವೆ. ಈಗ ಒಂದು ಶತಮಾನದ ಈಚಿನಿಂದಲೂ ಹಲವು ವಿದ್ವಾಂಸರು ಮತ್ತು ಚಿಂತಕರು, ‘ಇಜ್ತಿಹಾದ್’ ನ ಒಂದು ಪ್ರಯತ್ನವನ್ನು, ಅರ್ಥಾತ್ ಇಸ್ಲಾಮವನ್ನು ಪುನರ್‌ನಿರ್ಮಿಸುವ ತಾರ್ಕಿಕವಾದ ಮರುಚಿಂತನೆಯ ಚಳುವಳಿಯೊಂದನ್ನು, ಆರಂಭಿಸುವುದು ಅಗತ್ಯವಾಗಿದೆಯೆಂದು ಹೇಳುತ್ತಲೇ ಬಂದಿದ್ದಾರೆ. +ಕಳೆದ ಶತಮಾನದ ಆದಿಯಲ್ಲಿ, ಜಮಾಲುದ್ದೀನ್ ಆಫ್ಘನಿ ಮತ್ತು ಮೊಹಮೊದ್ ಅಬ್ದುಲ್ಲ ಅವರಿಬ್ಬರೂ ಇಂಥ ಹೊಸ ‘ಇಜ್ತಿಹಾದ್’ ಗಾಗಿ ಕರೆಕೊಟ್ಟಿದ್ದರು. ಆಮೇಲೆ ಉದ್ದಕ್ಕೂ ಹಲವು ಧೀಮಂತರು, ಶಾಸ್ತ್ರಜ್ಞರು ಮತ್ತು ಸಂತರು ಈ ಕರೆಗೆ ದನಿಗೂಡಿಸುತ್ತಲೇ ಬಂದಿದ್ದಾರೆ-ಮೊಹಮೊದ್ ಇಕ್ಬಾಲ್, ಮಲಿಕ್‌ಬಿನ್‌ನಬ್ಬಿ, ಅಬ್ದುಲ್ ಖಾದಿರ್ ಔಧಾ ಮೊದಲಾದವರೆಲ್ಲ ಸೇರಿದಂತೆ. ಹಾಗಿದ್ದರೂ ಇದುವರೆಗೂ ಯಾವುದೇ ಒಂದು ಮುಸ್ಲಿಮ್ ಸಮಾಜವೂ ‘ಇಜ್ತಿಹಾದ್’ನ್ನು ಕೈಗೊಳ್ಳಲು ವಿಫಲವಾಗಿದೆ. ಯಾತಕ್ಕೆ? +ಕಳೆದ ಸೆಪ್ಟೆಂಬರ್ ೧೧ರ ಈಚೆಗೆ ಈ ಯಾತಕ್ಕೆಂಬ ಪ್ರಶ್ನೆಗೆ ಇನ್ನಷ್ಟು ತುರ್ತು ಒದಗಿಬಂದಿದೆ. ಆ ದಿನದ ದುರ್ಫಟನೆಯು ಇನ್ನಾವುದೇ ಸಂಗತಿಗಿಂತ ಹೆಚ್ಚಾಗಿ ನಮಗೆ ಕಾಣಿಸಿಕೊಟ್ಟದ್ದೆಂದರೆ – ನಾವು ಇಸ್ಲಾಮಿನ ತತ್ವಾದರ್ಶಗಳಿಂದ ಬಹಳ ದೂರ ಸರಿದುಬಿಟ್ಟಿದ್ದೇವೆ ಎಂಬ ಸತ್ಯವನ್ನೇ. ಇಸ್ಲಾಂ ಎಂಬುದು ಒಂದು ಬಿಡುಗಡೆಯ ಶಕ್ತಿಯಾಗಿ, ಸಮಾನತೆಯ ಉದ್ದೇಶವನ್ನಿಟ್ಟುಕೊಂಡ ಒಂದು ಸಾಮಾಜಿಕ ಸಾಂಸ್ಕೃತಿಕ – ಬೌದ್ಧಿಕ ಚಲನಶೀಲತೆಯಾಗಿ ಮತ್ತು ನ್ಯಾಯ ಹಾಗೂ ಮಾನವೀಯತೆಗಳ ಪ್ರತಿಪಾದಕ ಮಾರ್ಗವಾಗಿ ಕಾಣಿಸುವ ಬದಲು ಈಗ ಅದು ಸ್ವತಃ ರೋಗಿಷ್ಟವೆಂಬಂತೆ ಗೋಚರಿಸತೊಡಗಿದೆ. ನನಗನ್ನಿಸುವ ಪ್ರಕಾರ, ಹಲವು ಶತಮಾನಗಳ ಕಾಲದಿಂದ ಉದ್ದಕ್ಕೂ, ಹಿಂದಿನ ಮತ್ತು ಇಂದಿನ ಪಶ್ಚಿಮದ ಜಗತ್ತು ಇಸ್ಲಾಮನ್ನು ಪ್ರತಿನಿಧಿಸಿದ ಮತ್ತು ಮುಸ್ಲಿಮರನ್ನು ರಾಕ್ಷಸರಂತೆ ಕಾಣಿಸಿದ ನಿರೂಪಣೆಗಳನ್ನು ನಾವೀಗ ಸ್ವತಃ ನಮ್ಮ ಮೇಲೆ ಅನ್ವಯಿಸಿಕೊಳ್ಳಲು ಅರಂಭಿಸಿಬಿಟ್ಟಿದ್ದೇವೆ. ಅಂದರೆ, ಪಶ್ಚಿಮವು ನಮ್ಮೆಲ್ಲರನ್ನು ಸಾಮೂಹಿಕವಾಗಿ ಯಾವ ವೇಷದಲ್ಲಿ ಕಾಣಿಸಿಸುತ್ತ ಬಂದಿದೆಯೋ ಅದೇ ವೇಷವನ್ನು ನಾವೀಗ ಸ್ವತಃ ಧರಿಸಲು ತೊಡಗಿದ್ದೇವೆ ಎಂಬುದನ್ನು ತುಂಬ ವಿಷಾದದಿಂದಲೇ ಒಪ್ಪಿಕೊಳ್ಳಬೇಕಾಗಿದೆ. +ಆದರೆ, ಇದಕ್ಕಾಗಿ ಪಶ್ಚಿಮವನ್ನು ಬಯ್ಯುವುದು, ಇದು ನಮಗೆ ಹೊರತಾಗಿದ್ದ ಅಧುನಿಕತೆಯೊಂದನ್ನು ನಮ್ಮ ಮೇಲೆ ಹೇರಿದ್ದರಿಂದ ಉಂಟಾದ ಸಮಸ್ಯೆ ಎಂದು ಹೇಳಿಕೊಳ್ಳುವುದು, ಇವೆಲ್ಲ ಈಗ ನನಗೆ ಕೇ‌ಅಲ ಬೌದ್ಧಿಕ ದಾರಿದ್ರ್ಯವೆಂದು ಕಾಣತೊಡಗಿದೆ. ನಿಜ, ಪಶ್ಚಿಮದ ಜಗತ್ತಿನ ಮೇಲೆ, ಅದರಲ್ಲೂ ಮುಖ್ಯವಾಗಿ ಅಮೇರಿಕಾದ ಮೇಲೆ, ಅವು ಉತ್ತರಿಸಬೇಕಾದ ಹಲವು ಮುಖ್ಯ ಆರೋಪಗಳೇನೋ ಇವೆ. ಮತ್ತು, ಯುರೋಪು-ಅಮೇರಿಕಾದ ವಿದೇಶ ನೀತಿಗಳು ಮಾಡಿರುವ ಅನ್ಯಾಯ ಮತ್ತು ಮೆರೆದ ಯಜಮಾನಿಕೆಗಳೇ ಈ ಸಮಸ್ಯೆಗೆ ಕಾರಣವೆಂಬುದನ್ನು ಈಗಾಗಲೇ ಮುಸ್ಲಿಮರು ಬೆಟ್ಟು ಮಾಡಿಯೂ ತೋರಿಸಿದ್ದಾರೆ. ಆದರೂ ಇವೆಲ್ಲ ಈ ಸಮಸ್ಯೆ ಒಂದು ಭಾಗ ಮಾತ್ರ ಮತ್ತು ನನ್ನ ಪ್ರಕಾರ ಇದು ಅಪರಿಹಾರ್ಯವಾದ ವಿಧಿಯೇನೂ ಆಗಬೇಕಿರಲಿಲ್ಲ. ಯಜಮಾನಿಕೆಯೆಂಬುದು ಯಾವಾಗಲೂ ಹೇರಲ್ಪಡುವಂಥದು ಮಾತ್ರವೇ ಅಲ್ಲ, ಕೆಲವೊಮ್ಮೆ ಅದನ್ನು ನಾವೇ ಅಹ್ವಾನಿಸಿಕೊಳ್ಳುತ್ತೇವೆ ಕೂಡಾ. ಇಸ್ಲಾಮಿನ ಒಳಗಿರುವ ಆಂತರಿಕ ಸ್ಥಿತಿ ಇಂಥ ಒಂದು ಮುಕ್ತ ಅಹ್ವಾನವನ್ನು ಕೊಡುವಂತಿದೆ. +* +* +* +ಇದುವರೆಗೂ ನಾವು ‘ಇಜ್ತಿಹಾದ್’ನ ಕರೆಗೆ ಓಗೊಡದೆ ಉಳಿದಿರುವುದಕ್ಕೆ ಕೆಲವು ಮುಖ್ಯವಾದ ಕಾರಣಗಳೂ ಇದ್ದಾವೆ. ಇವುಗಳಲ್ಲಿ ಆತ್ಯಂತ ಪ್ರಮುಖವಾದ ಒಂದೆಂದರೆ ನಮ್ಮ ಪವಿತ್ರ ಗ್ರಂಥಗಳು – ನಮ್ಮ ಎಲ್ಲ ನಂಬಿಕೆಗಳಿಗೆ ಚೌಕಟ್ಟನ್ನು ಹಾಕಿಕೊಡುವ ಕುರಾನ್ ಮತ್ತು ಪ್ರವಾದಿ ಮೊಹಮ್ಮದ್‌ರ ಉದಾಹರಣೆಗಳು – ಇತಿಹಾಸದಲ್ಲಿ ಗಡ್ಡೆಗಟ್ಟಿ ಕೂತುಬಿಟ್ಟಿರುವುದು. ಯಾವುದೇ ಒಂದು ಪಠ್ಯದ ಜತೆಗೆ ನಮ್ಮ ಸಂಬಂಧಿಸಿಯಂತೂ ಈ ಮಾತು ಇನ್ನಷ್ಟು ಸತ್ಯ. ಆದರೆ ಆಯಾ ಪಠ್ಯಗಳನ್ನು ವ್ಯಾಖ್ಯಾನಿಸುವ ಸಂದರ್ಭಗಳು ನಮ್ಮ ಕಾಲದ ಸಂದರ್ಭಗಳಿಗೆ ಸಂವಾದಿಯಾಗಿಲ್ಲದೆ ಹೋದರೆ ಆಗ ಅಂಥ ವ್ಯಾಖ್ಯಾನಗಳೇ ಅರ್ಥಹೀನವಾಗಿ ಬಿಡುತ್ತವೆ; ಇವತ್ತಿನಲ್ಲಿ ನಿಂತ ನಮಗೆ ಅವು ಅನುಪಯುಕ್ತವೂ ಆಗಿಬಿಡುತ್ತವೆ. +ಇನ್ನು ಕೇವಲ ಐತಿಹಾಸಿಕ ವ್ಯಾಕ್ಯಾನಗಳನ್ನೇ ನಾವು ಮಾಡುತ್ತ ಕುಳಿತರೆ, ಅವು ನಮ್ಮನ್ನೂ ಇಥಾಸದ ಕಡೆಗೇ ಸೆಳೆಯುತ್ತವೆ; ಪುರಾತನಕಾಲದ ಪಳೆಯುಳಿಕೆಗಳಂಥ ಸನ್ನಿವೇಶಗಳಿಗೆ ನಮ್ಮನ್ನು ಕರೆದೊಯ್ದು ಮುಟ್ಟಿಸುತ್ತವೆ. ಅಥವಾ ಇನ್ನೂ ಅಪಾಯಕಾರಿಯೆಂದರೆ ಅವು ಇತಿಹಾಸದಲ್ಲೂ ಇದ್ದಿರದಂಥ ಕಲ್ಪಿತ- ರಮ್ಯ ಸನ್ನಿವೇಶಗಳಿಗೆ ನಮ್ಮನ್ನು ತಲುಪಿಸುತ್ತವೆ. ಆದ್ದರಿಂದಲೇ ಇವತ್ತು ಏನಾಗಿಹೋಗಿದೆಯೆಂದರೆ -ಮುಸ್ಲಿಮರಿಗೇನೋ ಇಸ್ಲಾಮಿನೊಂದಿಗೆ ತುಂಬ ಗಾಢವಾದ ಬಂಧವಿದೆ; ಆದರೆ ಸ್ವತಃ ಇಸ್ಲಾಂ ಒಂದು ಲೋಕದೃಷ್ಟಿಯಾಗಿ ಮತ್ತು ನೀತಿವ್ಯವಸ್ಥೆಯಾಗಿ ನಮ್ಮ ನಿತ್ಯ ಜೀವನಕ್ಕೆ ಸಂಗತವಾಗಿ ಕೂಡಿಕೊಳ್ಳಲು ಸಾದ್ಯವಾಗದೆ ಅದು ಕೇವಲ ಪೂಜೆ-ಆಚರಣೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಆದ್ದರಿಂದಲೇ ಇಲ್ಲಿ ಮತ್ತು ಹೊಸಚಿಂತನೆಗಳು ಉದ್ಭವಿಸಲಿಕ್ಕೆ ಅಗತ್ಯವಾದ ಸಂಧರ್ಭವೇ ಅಸಾದ್ಯವಾಗಿ ಪರಿಣಮಿಸಿಬಿಟ್ಟಿದೆ. +ವ್ಯಾಖ್ಯಾನಗಳ ನಿಲುಗಡೆಯೆಂದರೆ ಅದು ‘ಇಜ್ತಿಹಾದ್’ನ ಬಾಗಿಲುಗಳನ್ನು ಮುಚ್ಚಿದಂತೆಯೇ ಸರಿ. ಇದು ಇವತ್ತಿನ ಮುಸ್ಲಿಮರ ಚಿಂತನೆ ಮತ್ತು ಕ್ರಿಯೆಗಳ ಮೇಲೆ ವಿನಾಶಕರ ಪರಿಣಾಮವನ್ನು ಉಂಟುಮಾಡಿದೆ. ನಿರ್ಧಿಷ್ಟವಾಗಿ ಹೇಳುವುದಾದರೆ ಇದು ಮುಖ್ಯವಾಗಿ ಮೂರು ರೀತಿಯ ಅದ್ಯಾತ್ಮಿಕ ಗಂಡಾಂತರಗಳನ್ನು ಸೃಷ್ಟಿಸಿದೆಯೆಂದು ನಾನು ಸೂಚಿಸುತ್ತೇನೆ. ಮೊದಲನೆಯದು, ಷರೀಯತ್‌ನ್ನು ದೈವಿಕವೆಂದು ಎತ್ತರಕ್ಕೇರಿಸಿ ಕೂರಿಸಿದ್ದು; ಎರಡನೆಯದು, ಇದರಿಂದಾಗಿ ನಂಬುವವರಸಮೂಹಕ್ಕೆ ಇವತ್ತು ಯಾವುದೇ ಕ್ರಿಯಾಸಾದ್ಯತೆಯೂ ಉಳಿಯದಂತಾಗಿರುವುದು ಮತ್ತು ಮೂರನೆಯದು ಇಸ್ಲಾಮನ್ನೂ ರಾಷ್ಟ್ರವೆಂಬ ಕಲ್ಪನೆಯನ್ನೂ ಜತೆಗೂಡಿಸಿದ್ದು. ಇವುಗಳನ್ನು ಒಂದೊಂದಾಗಿ ನಾನು ವಿವರಿಸುತ್ತೇನೆ. +ಸಾಧಾರಣವಾಗಿ ‘ಇಸ್ಲಾಮಿ ಕಟ್ಟಲೆ’ ಯೆಂದು ಭಾಷಾಂತರಿಸಲಾಗುವ ಷರೀಯತ್ ಎಂಬುದು ದೈವಿಕವಾದದ್ದು. -ಎಂದು ಬಹುತೇಕ ಮುಸಲ್ಮಾನರು ಭಾವಿಸಿದ್ದಾರೆ. ಆದರೆ ಷರೀಯತ್ನಲ್ಲಿ ಅಂಥ ದೈವಿಕವಾದದ್ದೇನೂ ಇಲ್ಲ. ನಿಜವಾಗಿ, ಇಸ್ಲಾಮ್‌ನಲ್ಲಿ ಯಾವುದನ್ನಾದರೂ ದೈವಿಕವೆಂದು ಕರೆಯಬಹುದಾದದ್ದು ಇದ್ದರೆ ಅದು ಕುರಾನ್ ಮಾತ್ರವೇ ಸರಿ. ಷರೀಯತ್ ಎಂಬುದು ಮನುಷ್ಯನಿರ್ಮಿತವಾದದ್ದು, ಅದು ಒಂದು ನಿರ್ಧಿಷ್ಟ ಸಂಧರ್ಭದಲ್ಲಿ ದೈವಿಕ ಆಶಯಗಳನ್ನು ಅರ್ಥೈಸಿ ಹೇಳುವಂಥದು. ಈ ಕಾರಣದಿಂದಲೇ ಷರೀಯತ್‌ನ ಬಹುಭಾಗದಲ್ಲಿರುವುದು ‘ಫಿಖ್’ಗಳೆಂದು ಕರೆಯಲಾಗುವನೀತಿಸೂಚನೆಗಳು. ಇವೆಲ್ಲವೂ ಶಾಸ್ತ್ರೀಯ ಯುಗದ ನ್ಯಾಯಾಧಿಪತಿಗಳಿಂದ ಉಕ್ತವಾದ ನ್ಯಾಯ ಸಲಹೆಗಳೇ ಹೊರತು ಹೆಚ್ಚೇನೂ ಅಲ್ಲ. +ಅಬ್ಬಾಸಿದ್ ದೊರೆಯ ಕಾಲದವರೆಗೂ ‘ಫಿಖ್’ ಎಂಬ ಶಬ್ದವೇ ಚಾಲ್ತಿಯಲ್ಲಿರಲಿಲ್ಲ. ಆ ಕಾಲದಲ್ಲೇ ಅದನ್ನು ಸೃಷ್ಟಿಸಿ ಸೂತ್ರಪ್ರಾಯವಾಗಿ ನಿರೂಪಿಸಲಾಯಿತು. ಮತ್ತು ಹಾಗೆ ‘ಫಿಖ್’ ಎಂಬುದಕ್ಕೆ ಆ ಅಬ್ಬಾಸಿದ್ ಕಾಲದ ಮುಸ್ಲಿಂ ಸಮಾಜದಲ್ಲಿ ಅಂಥ ಕಟ್ಟಲೆಯ ಸ್ವರೂಪ ಒದಗುವುದಕ್ಕೆ ಮೂರು ರೀತಿಯ ಹಿನ್ನೆಲೆಗಳಿದ್ದವು-ಆ ಕಾಲದಲ್ಲಿ ಮುಸ್ಲಿಂ ಇತಿಹಾಸವು ತನ್ನ ವಿಸ್ತರಣೆಯ ಹಂತದಲ್ಲಿತ್ತು ಮತ್ತು ಅಂಥ ಕಾಲದ ಮುಸ್ಲಿಂ ಸಾಮ್ರಾಜ್ಯಶಾಹಿಯ ತರ್ಕಗಳನ್ನು ಆ ಕಟ್ಟಲೆಗಳು ಅಂತರ್ಗತಗೊಳಿಸಿಕೊಂಡಿದ್ದವು. ಉದಾಹರಣೆಗೆ, ಧರ್ಮತ್ಯಾಗವನ್ನು ನಿಷೇಧಿಸಿ ‘ಫಿಖ್’ ವಿಧಿಸಿದ ನಿಯಮಗಳೆಲ್ಲ ಇದೇ ಕಾರಣದಿಂದ ಉಧ್ಬವಿಸಿದ್ದು. +ಇದಲ್ಲದೆ ಆಗ ಪ್ರಪಂಚವು ಹೆಚ್ಚು ಸರಳವಾಗಿದ್ದು ಅದನ್ನು ಕಪ್ಪುಬಿಳುಪುಗಳಾಗಿ ವಿಂಗಡಿಸಲು ಸಾಧ್ಯವಿತ್ತು. ಆದ್ದರಿಂದಲೇ ಜಗತ್ತನ್ನು ಆಗ ದರಾಲ್ ಇಸ್ಲಾಮ್ ಮತ್ತು ದರಾಲ್ ಹರ್ಬ್‌ಗಳೆಂದು ಬೇರ್ಪಡಿಸಬಹುದಾಗಿತ್ತು. ಅದಕ್ಕಿಂತ ಮುಖ್ಯವಾಗಿ, ಆಗ ಕಾನೂನನ್ನು ಮಾಡುತ್ತಿದ್ದವರು ಸ್ವತಃ ಸಮಾಜವನ್ನು ನಿರ್ವಹಿಸುತ್ತಿದ್ದವರೂ ಆಗಿರದೇ ಇದ್ದುದರಿಂದ, ಆಗ ಕಾನೂನು ಕೇವಲ ತತ್ವವಾಗಿತ್ತು; ಅದನ್ನು ಮಾರ್ಪಡಿಸುತ್ತಹೋಗುವುದು ಅಗತ್ಯವಾಗಿರಲಿಲ್ಲ. ಜತೆಗೆ, ಕಾನೂನಿನ ನಿರ್ಮಾಪಕರಿಗೆ ಆ ಕಾನೂನುಗಳ ಅನ್ವಯದಲ್ಲಿ ಒದಗುವ ತೊಡಕುಗಳ ಪರಿವೆಯೂ ಇರಲಿಲ್ಲ; ಆದುದರಿಂದಾಗಿಯೇ ಅವುಗಳನ್ನು ಮರುವಿಮರ್ಶಿಸುವ ಮರುನಿರೂಪಿಸುವ ಅಗತ್ಯಗಳೂ ಹುಟ್ಟಲಿಲ್ಲ. ಇವತ್ತು ನಮಗೆ ದೊರೆಯುವ ಈ ಎಲ್ಲ ‘ಫಿಖ್’ಗಳೂ ಇಂಥ ವಿಭಜನೆಯ ಸನ್ನಿವೇಷದಲ್ಲೇ ಉದ್ಭವಿಸಿದ್ದು-ಆಗ ಕಾನೂನು ಮಾಡುವವರು ಮತ್ತು ಆಳುವವರು ಬೇರೆಯಾಗಿದ್ದುದಲ್ಲದೆ, ಅದು ಗತಕಾಲದ ಮುಸ್ಲಿಂ ‘ಸ್ವರ್ಣಯುಗ’ವೊಂದನ್ನು ಮಾದರಿಯಾಗಿ ಇರಿಸಿಕೊಂಡಂಥದಾಗಿತ್ತು. ಅದನ್ನೆಲ್ಲ ಮರೆತು, ಈಗ ನಾವು ‘ಫಿಖ್’ಗಳನ್ನು ದೈವಿಕವೆಂದು ಕರೆಯತೊಡಗಿದರೆ, ಆಗ ನಾವು ಕೇವಲ ಪುರಾತನಕಾಲದ ‘ಫಿಖ್’ಗಳಿಗೆ ದೈವಿಕ ಸಮ್ಮತಿಯನ್ನು ಆರೋಪಿಸಿದಂತೆ ಆಗುತ್ತದೆ, ಅಷ್ಟೇ. +ವಾಸ್ತವದಲ್ಲಿ ಇವತ್ತು ಹಲವು ಮುಸ್ಲಿಂ ದೇಶಗಳು ಷರೀಯತ್‌ನ್ನು ಸರ್ವೋನ್ನತವೆಂದು ವಿಧಿಸಿದಾಗ ಆಗಿರುವ ಪರಿಣಾಮ ಕೂಡ ಇದೇ. ಹೀಗೆ ಮಾಡಬೇಕೆಂದು ಬೇಡಿಕೆಯು ಇವತ್ತು ಇಂಡೋನೇಷ್ಯಾದಿಂದ ನೈಜೀರಿಯಾದವರೆಗಿನ ಮುಸ್ಲಿಮರಿಂದ ಇದ್ದರೂ ಇದನ್ನು ನಿಜವಾಗಿಯೂ ಅನ್ಚಯಿಸತೊಡಗಿದರೆ ಆಗ ನಮಗೆ ಇದ್ದಕ್ಕಿದ್ದಂತೆ ಈ ‘ಫಿಖ್’ಗಳ ಮೂಲಸಂದರ್ಭಕ್ಕೂ ನಡುವಿನ ವೈರುದ್ಧ್ಯಗಳು ದೊಡ್ಡದಾಗಿ ಕಾಣಿಸಿ ತೊಂದರೆ ಕೊಡಲಿಕ್ಕೆತೊಡಗುತ್ತವೆ. ಆದ್ದರಿಂದಲೇ ಇಂಥ ಷರೀಯತ್ ಕಟ್ಟಲೆಯನ್ನು ವಿಧಿಸಿದ ಎಲ್ಲ ಕಡೆಗಳಲ್ಲೂ ಈ ವೈರುದ್ಧ್ಯಢಾಳಾಗಿ ಕಂಡು ಮುಸ್ಲಿಂ ಸಮಾಜಗಳು ಮಧ್ಯಯುಗೀನ ರೂಪವೆಂಬ ವರ್ಣನೆ ಪಡೆದುಕೊಳ್ಳುತ್ತವೆ. +ನಾವಿವತ್ತು ಸೌದಿ ಅರೇಬಿಯಾದಲ್ಲಿ, ಸುಡಾನಿನಲ್ಲಿ, ತಾಲಿಬಾನ್ ನಿಯಂತ್ರಿತ ಆಫ್ಗಾನಿಸ್ತಾನದಲ್ಲಿ ಕಾಣಬಹುದಾದ ಪ್ರಕ್ರಿಯೆ ಇದೇ. ಫಿಖ್‌ಗಳಿಗೆ ಮತ್ತು ಇಸ್ಲಾಮಿನ ಒಂದಲ್ಲೊಂದು ಶಾಖೆಯ ನಿಯಮಗಳಿಗೆ ಸಂಕುಚಿತ ಅರ್ಥದಲ್ಲಿ ಬದ್ಧರಾಗಲು ತೊಡಗಿಬಿಟ್ಟರೆ ಆಗ ಇಡೀ ಸಮಾಜಕ್ಕೆ ಪಳೆಯುಳಿಕೆಯ ಸ್ವರೂಪ ಒದಗಿ ಬಂದುಬಿಡುತ್ತದೆ; ಸಮಕಾಲೀನ ವಾಸ್ತವಗಳಿಗೆ ಸ್ಪಂದಿಸುವ ಗುಣ ನಷ್ಟವಾಗಿಬಿಡುತ್ತದೆ. ಆಗ ನಾವು ನಮ್ಮ ಎಲ್ಲ ಸಮಸ್ಯೆಗಳನ್ನೂ ಷರೀಯತ್ ಪರಿಹರಿಸುತ್ತದೆ ಎಂಬ ಸಾಧಾರಣೀಕೃತ ನಂಬಿಕೆಗಳಿಗೆ ತಲುಪುತ್ತೇವೆ. ಹಾಗೂ ಇಂಥ ನಂಬಿಕೆಗಳು ರೂಢಿಗೆ ಬಂದೊಡನೆ ಸ್ಥಾಪಿತ ಹಿತಾಸಕ್ತಿಗಳಿರುವ ಒಂದು ಗುಂಪು ಷರೀಯತ್‌ನ ಎಲ್ಲೆಗಳನ್ನು ಹೇಗಾದರೂ ಮಾಡಿ ಭದ್ರವಾಗಿ ಕಾಪಾಡಲು ಹವಣಿಸತೊಡಗುತ್ತದೆ; ಅದರಿಂದ ತನಗೆ ಉದ್ಭವಿಸುವ ಅಧಿಕಾರ ಮತ್ತು ಮೇಲ್ಮೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸತೊಡಗುತ್ತದೆ. ಹೀಗೆ, ಸವಕಲಾಗಿರುವ ಕಾನೂನಿನ ಸಮೂಹವೊಂದನ್ನು ಷರೀಯತ್ ಎಂದು ಕರೆಯುವುದಲ್ಲದೆ ಅದು ದೈವಿಕವಾದ್ದರಿಂದ ಅದನ್ನು ಬದಲಾಯಿಸಲು ಅಸಾದ್ಯವೆಂದೂ ಸಾಧಿಸುವ ಪ್ರಯತ್ನ ಮೊದಲಾಗುತ್ತದೆ. +ಷರೀಯತ್‌ನ್ನು ಈರೀತಿ ದೈವಿಕತೆಯ ಮಟ್ಟಕ್ಕೆ ಮೇಲೆತ್ತುವುದರಿಂದ ಆಗುವ ಇನ್ನೊಂದು ಸಮಸ್ಯೆಯೆಂದರೆ-ಹಾಗೆ ಮಾಡಿದಾಗ ಈ ಧರ್ಮವನ್ನು ನಂಬಿರುವವರಿಗೆ ಯಾವುದೇ ಕ್ರಿಯಾಸಾಧ್ಯತೆಗೆ ಅವಕಾಶವಿಲ್ಲವಾಗುತ್ತದೆ. ಕಾನೂನು ಎಂಬುದು ಪೂರ್ವದಿಂದಲೇ ದತ್ತವಾಗಿ ಬಂದಂಥದು ಎಂದು ಭಾವಿಸಿಕೊಂಡಾಗ ಜನರು ಇದನ್ನು ಅನುಸರಿಸುವುದನ್ನು ಬಿಟ್ಟರೆ ಇನ್ನೇನೂ ಮಾಡಲಿಕ್ಕೆ ಅವಕಾಶ ಉಳಿಯುವುದಿಲ್ಲ. ಇದರ ಫಲವಾಗಿ ನಂಬಿಕೆಯಿರುವ ಜನರು ಸತ್ಯವನ್ನು ಕ್ರಿಯಾಶೀಲವಾಗಿ ಆವಿಷ್ಕರಿಸುವ ಮಾರ್ಗವನ್ನು ಹಿಡಿಯುವ ಬದಲು ಸಿದ್ಧ ಸತ್ಯಗಳನ್ನು ಸ್ವೀಕರಿಸುವುದಷ್ಟಕ್ಕೇ ಸೀಮಿತರಾಗಬೇಕಾಗುತ್ತದೆ. +ವಾಸ್ತವದಲ್ಲಿ ನೋಡಿದರೆ, ಷರೀಯತ್ ಎಂಬುದು ಕೇವಲ ಒಂದಿಷ್ಟು ನಿಯಮಗಳ ಗುಚ್ಛವೇ ಹೊರತು ಹೆಚ್ಚೇನಲ್ಲ; ಅದು ಮುಸ್ಲಿಮ್ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೌಲ್ಯವ್ಯವಸ್ತೆಯೊಂದರ ಚೌಕಟ್ಟು ಮಾತ್ರ. ಆದರೆ ಈ ನಿಯಮಗುಚ್ಛವೇ ಆಗಲಿ ಮೌಲ್ಯದ ಚೌಕಟ್ಟೇ ಆಗಲಿ ಸ್ಥಿರವಾಗಿ ಉಳಿದುಬಂದದ್ದಲ್ಲ, ಅದು ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ಚಲನಶೀಲವಾಗಿ ಬದಲಾಗುತ್ತ ಹೋಗುವಂತದ್ದು. ಆ ಕಾರಣದಿಂದಲೇ ಷರೀಯತ್ ಎಂಬುದನ್ನು ಕಾನೂನು ಎಂದು ತಿಳಿಯುವ ಬದಲು ಸಮಸ್ಯೆಗಳನ್ನು ಪರಿಹರಿಸುವ ಒಂದು ವಿಧಾನ ಮಾತ್ರವೆಂದು ನಾವು ತಿಳಿಯಬೇಕು. ಈ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡು ಧಾರ್ಮಿಕರು ಮತ್ತೆಮತ್ತೆ ಕುರಾನಿನ ವ್ಯಾಕ್ಯಾನಗಳನ್ನು ಮಾಡುತ್ತಹೋಗಬೇಕು; ಪ್ರವಾದಿ ಮೊಹಮದ್‌ರ ಬದುಕನ್ನು ಬದಲಾಗುತ್ತ ಹೋಗುವ ಕಣ್ಣುಗಳಿಂದ ನೋಡುತ್ತ ಹೋಗಬೇಕು. ಪ್ರತಿಯೊಂದು ಯುಗವೂ ಕುರಾನಿಗೆ ತನ್ನದೇ ಆದ ಹೊಸ ವ್ಯಾಕ್ಯಾನವನ್ನು ಕೊಟ್ಟುಕೊಳ್ಳುವುದು ತುಂಬ ಅಗತ್ಯ, ಹಾಗೆಯೇ ಷರೀಯತ್‌ನ್ನೂ ಮತ್ತು ಇಡಿಯ ಮುಸ್ಲಿಮ್ ಧರ್ಮವನ್ನೂ ಪ್ರತಿಯುಗದಲ್ಲೂ ಆಯಾ ಸಂಧರ್ಭಕ್ಕನುಸಾರವಾಗಿ ಮರುಚಿಂತನೆಗೆ ಒಳಪಡಿಸುವುದು ಅನಿವಾರ್ಯ. ಇಸ್ಲಾಮಿನಲ್ಲಿ ಯಾವತ್ತೂ ಬದಲಾಗದೇ ಉಳಿಯುವ ಒಂದೇ ಒಂದು ಸಂಗತಿಯೆಂದರೆ ಅದು ಕುರಾನಿನ ಪಠ್ಯಮಾತ್ರ; ಅದು ಯಾವತ್ತೂ ಬದಲಾಗುತ್ತ ಹೋಗುವ ಅದರ ವ್ಯಾಕ್ಯಾನಗಳಿಗೆ ಒಂದು ಭಿತ್ತಿಯಾಗಿ ನಿಲ್ಲುವಂಥದು. +* +* +* +ಇಸ್ಲಾಮ್ ಎಂಬುದು ನಿಜವಾಗಿ ಒಂದು ಧರ್ಮವೇ ಅಲ್ಲ; ಅದು ಹಲವು ದೃಷ್ಟಿಗಳನ್ನು ಸಂಶ್ಲೇಷಿಸಿಕೊಂಡ ಒಂದು ಲೋಕ ಗ್ರಹಿಕೆ. ಅರ್ಥಾತ್ ಇಸ್ಲಾಮ್ ಎಂಬುದು-ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಸಮಾಹಿತಗೊಳಿಸಿಕೊಂಡು ಮನುಷ್ಯನ ಬದುಕಿನ ಎಲ್ಲ ಮಾರ್ಗಗಳ ಬಗ್ಗೆಯೂ ಒಟ್ಟಾಗಿ ಒಂದು ನೈತಿಕ ನೊಟವನ್ನು ಒದಗಿಸುವಂಥ ಗ್ರಹಿಕೆ. ಮನುಷ್ಯಕುಲ ಎದುರಿಸುವ ಎಲ್ಲ ಸಮಸ್ಯೆಗಳಿಗೂ ಸಿದ್ಧವಾದ ಉತ್ತರಗಳು ಇಸ್ಲಾಮಿನಲ್ಲಿಲ್ಲ; ಆದರೆ ಅಂಥ ಉತ್ತರಗಳನ್ನು ಆವಿಷ್ಕರಿಸಲಿಕ್ಕೆ ಸಾಧ್ಯವಾಗುವಂತೆ ಅದು ಮುಸ್ಲಿಮರಿಗೆ ಒಂದು ನೈತಿಕ-ನ್ಯಾಯಬದ್ಧ ಚೌಕಟ್ಟನ್ನು ನಿರ್ಮಿಸಿಕೊಟ್ಟಿದೆ. ಹಾಗೆ ತಿಳಿಯದೇ ನಾವು ಷರೀಯತ್‌ನ್ನೇ ದೈವಿಕವೆಂದೂ ಎಲ್ಲ ಕಾನೂನುಗಳೂ ಅದರಲ್ಲೇ ಅಡಕವಗಿವೆಯೆಂದೂ ಭಾವಿಸಿಬಿಟ್ಟರೆ, ಆಗ ಇಸ್ಲಾಮೆಂಬುದು ಕೇವಲ ಸರ್ವಾಧಿಕಾರಿ ಸಿದ್ಧಾಂತವಾಗಿಬಿಡುತ್ತದೆ. ಇವತ್ತಿನ ಹಲವಾರು ಇಸ್ಲಾಮಿ ಚಳುವಳಿಗಳು ಮಾಡುತ್ತಿರುವುದು ಇದನ್ನೇ- ಪಾಕಿಸ್ತನ ಮತ್ತು ಭಾರತದ ’ಜಮಾತ್-ಏ-ಇಸ್ಲಾಮಿ’ ಹಾಗೂ ಮುಸ್ಲಿಮ್ ಬ್ರದರ್‌ಹುಡ್ ಮೊದಲಾದ ಸಂಘಟನೆಗಳು ಇದನ್ನೇ ಮಾಡತೊಡಗಿವೆ. ಮತ್ತು ಆ ಮೂಲಕ ಇಸ್ಲಾಮನ್ನು ಒಂದು ಸರ್ವಾಧಿಕಾರಿ ಸಿದ್ಧಾಂತವಾಗಿ ಅಪಾರ್ಥಗೊಳಿಸಿವೆ. +ಈಗ ನಾನು ಈ ಹಿಂದೆ ಪ್ರಸ್ತಾಪಿಸಿದ ಮೂರನೆಯ ಗಂಡಾಂತರದ ವಿಷಯಕ್ಕೆ ಬರುತ್ತೇನೆ. ಮೇಲೆ ಹೇಳಿದ ಸರ್ವಾಧಿಕಾರಿ ಸಿದ್ಧಾಂತವನ್ನು ಒಂದು ರಾಷ್ಟ್ರಪ್ರಭುತ್ವದ ಸನ್ನಿವೇಶದಲ್ಲಿ ಇಟ್ಟುಬಿಡಿ, ಮತ್ತು ಕೇಂದ್ರದಲ್ಲಿ ದೈವಿಕ ಆದೇಶವಾಗಿರುವ ಷರೀಯತ್‌ನ್ನು ಕೂರಿಸಿಬಿಡಿ, ಆಗ ನಿಮಗೆ ಇಸ್ಲಾಮಿಕ್ ಪ್ರಭುತ್ವ ಸಿಕ್ಕಿಬಿಡುತ್ತದೆ. ಇವತ್ತಿನ ಎಲ್ಲ ಇಸ್ಲಾಮಿಕ್ ಪ್ರಭುತ್ವಗಳೂ- ಇರಾನ್, ಸೌದಿ ಅರೇಬಿಯಾ ಮತ್ತು ಸುಡಾನಿನಿಂದ ಮೊದಲುಗೊಂಡು ಆ ಮಾರ್ಗವನ್ನು ಹಿಡಿಯಲು ಆಶಿಸುತ್ತಿರುವ ಪಾಕಿಸ್ತಾನದವರೆಗೆ ಎಲ್ಲ ಪ್ರಭುತ್ವಗಳೂ-ಇಸ್ಲಾಮನ್ನು ಇಂಥ ಮೂರ್ಖ ಸರಳೀಕರಣಕ್ಕೆ ತಂದಿಟ್ಟಿವೆ. ಆದರೆ ಹೀಗೆ ಇಸ್ಲಾಮ್ ಒಂದು ರಾಜಕೀಯ ಸಿಧಾಂತವಾಗುತ್ತಿದಂತೆಯೇ ಅದು ಸ್ಥಾಪಿತ ಹಿತಾಸಕ್ತಿಯ ಒಂದು ಗುಂಪಿನ ಯೊಜನೆಗಳ ಸಾಧನವೂ ಆಗಿಬಿಡುತ್ತದೆ. ಮತ್ತು ಆಗ ಅದು ತನ್ನ ಮಾನವೀಯತೆಯನ್ನು ಕಳೆದುಕೊಂಡು ಒಂದು ರಣರಂಗವಾಗಿ ಮಾರ್ಪಡುತ್ತದೆ-ಆ ರಣರಂಗದಲ್ಲಿ ನೀತಿ-ತರ್ಕ- ನ್ಯಾಯಗಳೆಲ್ಲವೂ ಭಾವನೆಯ ಬಲಿಪೀಠದಲ್ಲಿ ಆಹುತಿಯಾಗುತ್ತವೆ. +ಅಲ್ಲದೆ, ಸರ್ವಾಧಿಕಾರಿ ರಾಜಕೀಯ ಸಿಧಾಂತದಿಂದ ಸಂಪೂರ್ಣ ಸರ್ವಾಧಿಕಾರಿ ವ್ಯವಸ್ಥೆಯ ನಡುವಿನ ಅಂತರ ಒಂದೇ ಮೆಟ್ಟಿಲು ಮಾತ್ರ. ಅಂಥ ವ್ಯವಸ್ಥೆಯಲ್ಲಿ ಮನುಷ್ಯಬದುಕಿನ ಎಲ್ಲ ಸನ್ನಿವೇಶಗಳೂ ಪ್ರಭುತ್ವದ ಅಧೀನಕ್ಕೆ ಒಳಗಾಗುತ್ತವೆ ಇಂಥ ಪ್ರಭುತ್ವ ಬೆಂಬಲಿತ ರಾಜಕೀಯ ಸಿದ್ಧಾಂತಗಳಲ್ಲಿ ನ್ಯಾಯನೀತಿಯ ಪ್ರಶ್ನೆಗಳು ಅಪ್ರಸ್ತುತವಾಗುತ್ತವೆ ಮಾತ್ರವಲ್ಲ ಇದರಿಂದಾಗಿ ಇದುವರೆಗಿನ ಎಲ್ಲ ಮುಸ್ಲಿಂ ಇತಿಹಾಸವನ್ನೂ ನಾವು ಇಸ್ಲಾಮಿಗೆ ಹೊಂದದೇ ಇರವಂಥದು ಎಂದು ಕಳಚಿ ಹಾಕಬೇಕಾಗುತ್ತದೆ. +ಅದ್ದರಿಂದಲೆ, ಇಸ್ಲಾಮಿಕ್ ಪ್ರಭುತ್ವಗಳು ಒಂದು ’ಗತಕಾಲದ ಸ್ವರ್ಣಯುಗ’ ವನ್ನು ಹುಡುಕಿಕೊಳ್ಳುತ್ತವೆ ಮತ್ತು ಇಂಥ ಗತಕಾಲವು ವರ್ತಮಾನವನ್ನು ನಿರಾಕರಿಸುವಂಥದೂ ಭವಿಷ್ಯವನ್ನು ಹಾಸ್ಯಸ್ಪದಗೊಳಿಸುವಂಥದು ಆಗಿಬಿಡುತ್ತದೆ. ಕಡೆಗೆ ನಮಗೆ ಉಳಿಯುವುದು ಕೇವಲ ಗೊಂದಲಮಯವಾದ ಪ್ರವಾದಿತನವೊಂದೇ. ಇಂಥ ಸ್ಥಿತಿಯನ್ನು ನಾವು ಈಗಾಗಲೇ ತಾಲೀಬಾನಿನ ಆಡಳಿತದಲ್ಲಿ ಕಂಡಿದ್ದೇವೆ; ಅಲ್ಲಿ ಕ್ರಿಯಾಶೀಲತೆಯಿರುವ ಎಲ್ಲ ರೀತಿಯ ರಾಜಕಾರಣಕ್ಕೂ ಪಕ್ಷವಾತ ತಗುಲಿ ಅರ್ಥಹೀನವಾದ ಕರ್ಮವಿಧಿಗಳೇ ರಾಷ್ಟ್ರದ ಬುನಾದಿಯಾಗುವ ವ್ಯಂಗ್ಯ ಉದ್ಭವಿಸಿದ್ದನ್ನು ನೋಡಿದ್ದೇವೆ. +ಇಸ್ಲಾಮನ್ನು ರಾಷ್ಟ್ರದ ಚೌಕಟ್ಟಿನಲ್ಲಿ ಕೂರಿಸುವ ಇಂಥ ದರ್ಶನದಿಂದಾಗಿಯೇ ಮುಸ್ಲಿಂ ರಾಜಕಾರಣವೆನ್ನುವುದು ಒಂದು ಧಾರ್ಮಿಕ- ಆಧ್ಯಾತ್ಮಿಕ ಕೆಲಸವೋ ಎಂಬಂತೆ ಕಾಣತೊಡಗುತ್ತದೆ. ಇಂಥ ವಿಚಿತ್ರ ಸ್ಥಿತಿಯಲ್ಲಿ ಯಾವ ಕಾರ್ಯವನ್ನು ಬೇಕಾದರೂ ಇಸ್ಲಾಮಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ; ರಾಜಕೀಯ ಹುನ್ನಾರಗಳಿಗೆ ಇದು ಒಂದು ನೆಪವಾಗಿ ಪರಿವರ್ತಿತವಾಗುತ್ತದೆ. ಕ್ರಾಂತಿಕಾಲದ ಇರಾನಿನಲ್ಲಿ ನಾವು ನೋಡಿದ್ದು ಇದನ್ನೇ. +ಈ ರೀತಿ, ನಾನು ಈವರೆಗೆ ವಿವರಿಸಿದ ಮೂರು ಆಧ್ಯಾತ್ಮಿಕ ಗಂಡಾಂತರಗಳೇನಿವೆ ಅವೆಲ್ಲವೂ ಇಸ್ಲಾಮಿ ನಂಬಿಕೆಗಳ ಸರಳೀಕರಣದಿಂದ ಉದ್ಭವಿಸಿದಂಥವು ಮತ್ತು ಈಗ ಇಸ್ಲಾಮಿ ಸಮಾಜಗಳಲ್ಲಿ ಸ್ವತಃಸಿದ್ಧವೆಂಬಂತೆ ಕಾಣಿಸಿಕೊಳ್ಳುತ್ತಿರುವಂಥವು. ಇಸ್ಲಾಮಿನೊಳಗೆ ಇಂಥ ಸರಳೀಕರಣ ನಡೆಯತೊಡಗಿದ್ದು ಈಚಿನ ಬೆಳವಣಿಗೆಯೇನೂ ಅಲ್ಲವಾದರೂ ಅದು ಇಂಥ ಅಸಂಗತ ಮಟ್ಟಕ್ಕೆ ತಲುಪಿದ್ದು ಮಾತ್ರ ಈಚಿನ ಕಾಲಗಳಲ್ಲಿ. ಹಾಗಾಗಿ ಇವತ್ತು ಯಾವ ಇಸ್ಲಾಮಿ ಚಿಂತನೆಗಳು ನಮನ್ನು ಹೆಚ್ಚು ಹೆಚ್ಚು ಮಾನವೀಯ ಮೌಲ್ಯಗಳ ಕಡೆಗೆ ಕರೆದೊಯ್ಯಬೇಕಾಗಿತ್ತೋ ಅವೇ ಮೌಲ್ಯಗಳು ನಮನ್ನು ವಿರುದ್ಧ ದಿಕ್ಕಿಗೆ ಸಾಗಿಸುತ್ತಿರುವ ವಿಪರ್ಯಾಸವನ್ನು ನಾವು ಕಾಣತೊಡಗಿದ್ದೇವೆ. ಉದಾಹರಣೆಗೆ, ಕರುಣೆ ಮತ್ತು ಪ್ರೀತಿಯನ್ನಾಧರಿಸಿ ಪ್ರತಿ ಸಂದರ್ಭದಲ್ಲೂ ನ್ಯಾಯವೆಂಬ ಪರಿಕಲ್ಪನೆಯನ್ನು ಹೊಸತಾಗಿಯೇ ಸೃಷ್ಟಿಸಿಕೊಳ್ಳಬೆಕಾದ ಇಸ್ಲಾಮಿನ ಸೂಕ್ಷ್ಮ ಸುಂದರ ಮಾರ್ಗವೇನಿದೆ ಅದು ಇವತ್ತು ಯಾಂತ್ರಿಕ ಸೂತ್ರಗಳಾಗಿ ಗಡ್ಡೆಗಟ್ಟಿದೆ. ಜನರಾದರೋ ತಮಗೆ ಸ್ವತಃ ಯೋಚನೆ ಮಾಡುವ ಯಾವ ಜವಬ್ದಾರಿಯೂ ಇಲ್ಲವೆಂದೂ ಉತ್ತರಿಸಬೇಕಾದ ಎಲ್ಲ ಪ್ರಶ್ನೆಗಳನ್ನೂ ಯಾವತ್ತೋ ಬದುಕಿದ್ದ ಶಾಸ್ತ್ರೀಯ ಉಲೆಮಾಗಳು ಈಗಾಗಲೇ ಉತ್ತರಿಸಿಬಿಟ್ಟಿದ್ದಾರೆಂದೂ ಭಾವಿಸಿ ಒಪ್ಪಿಕೊಳ್ಳತೊಡಗಿದ್ದಾರೆ. ಮತ್ತು ಈ ಎಲ್ಲದನ್ನೂ ಇಸ್ಲಾಮ್ ಎಂಬ ಹಣೆಪಟ್ಟಿಯಲ್ಲಿ ಕೂರಿಸಲಾಗಿದೆಯಾದ್ದರಿಂದ ಇವನ್ನು ಪ್ರಶ್ನಿಸುವುದೂ ಇವುಗಳ ವಿರುದ್ಧ ವಾದಿಸಿವುದೂ ಪಾಪಕ್ಕೆ ಸಮಾನವೆಂದು ಪರಿಗಣಿತವಾಗತೊಡಗಿದೆ. +* +* +* +ಇಸ್ಲಾಮ್‌ನಲ್ಲಿ ಇಂಥ ಸರಳೀಕರಣ ಆರಂಭವಾಗಿದ್ದು ಪಂಡಿತ ಎಂಬರ್ಥವನ್ನು ಸೂಚಿಸುವ ‘ಆಲಿಮ್’ ಎಂಬ ಶಬ್ದದ ಅಪಾರ್ಥದಿಂದಲೇ. ಈ ಆಲಿಮ್ ಅಂದರೆ ಯಾರು? ಈ ಆಲಿಮ್ ಒಬ್ಬ ಅಧಿಕಾರಯುಕ್ತ ವ್ಯಕ್ತಿಯಾದದ್ದು ಹೇಗೆ?- ಎಂಬ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆರಂಭಕಾಲದ ಇಸ್ಲಾಮಿನಲ್ಲಿ ಯಾರು ‘ಇಲ್ಮ್’ ನ್ನು ಪಡೆದಿದ್ದರೋ ಅವರು ‘ಆಲಿಮ್’ ಎನ್ನಿಸಿಕೊಂಡಿದ್ದರು ಮತ್ತು ಆಗ ಇಲ್ಮ್ ಎಂಬುದಕ್ಕೆ ತುಂಬ ವಿಶಾಲಾರ್ಥದಲ್ಲಿ ಜ್ಞಾನವೆಂಬ ಅರ್ಥಪ್ರತೀತಿಯಿತ್ತು. ಹಳೆಯ ವಿದ್ವಾಂಸರುಗಳಾದ ಆಲ್ ಕಿಂಡಿ. ಆಲ್ ಫರಿಬಿ. ಇಬ್ನ್ ಸಿನಾ. ಆಲ್ ಘಜಲಿ ಮತ್ತು ಇಬ್ನ್‌ಕೌಲ್‌ದುನ್ ಅವರೆಲ್ಲರೂ ಕೊಟ್ಟ ಜ್ಞಾನವೆಂಬುದರ ವಿವರಣೆಯಲ್ಲಿ ನಾವು ಈ ಅರ್ಥವನ್ನೇ ಕಾಣಬಹುದಾಗಿದೆ. ಶಾಸ್ತ್ರೀಯ ಇಸ್ಲಾಮಿನಲ್ಲಿ ನಿಜವಾಗಿ, ಜ್ಞಾನವೆಂಬುದರ ವ್ಯಾಖ್ಯಾನ ಮತ್ತು ಅದರ ವರ್ಗೀಕರಣಗಳು ಪ್ರಮುಖ ಬೌದ್ಧಿಕ ಚಟುವಟಿಕೆಗಳಾಗಿದ್ದವು. ಆದ್ದದಿಂದಲೇ ಆಗ ಉಲೆಮಾಗಳೆಂಬುವವರು ಸಮೂಹಕ್ಕೆ ಎಲ್ಲ ಧೀಮಂತರೂ ವಿಜ್ಞಾನಿಗಳೂ ತಾತ್ವಿಕರೂ ಮತ್ತು ಧರ್ಮಶಾಸ್ತ್ರಜ್ಞರೂ ಸೆರಿದವರಾಗಿದ್ದರು. ಆದರೆ, ಅಬ್ಬಾಸಿದ್ ಯುಗದಲ್ಲಿ ’ಇಜ್ತಿಹಾದ್’ ನ ಬಾಗಿಲುಗಳನ್ನು ಮುಚ್ಚಿದಮೇಲೆ ’ಇಲ್ಮ್’ ಎನ್ನುವುದು ಕ್ರಮೇಣ ಧಾರ್ಮಿಕ ಜ್ಞಾನಕ್ಕೆ ಸೀಮಿತವಾಗಿ ಬಳಕೆಯಾಗತೊಡಗಿತು. ಹಾಗೂ ಉಲೆಮಾಗಳು ನಿಧಾನವಾಗಿ ಕೇವಲ ಧರ್ಮಶಾಸ್ತ್ರಜ್ಞರು ಮಾತ್ರವೇ ಆಗಿ ಸೀಮಿತಗೊಳ್ಳತೊಡಗಿದರು. +ಹಾಗೆಯೇ, ‘ಇಜ್ಮಾ’ ಎಂಬ ಪರಿಕಲ್ಪನೆಯೂ ಕೂಡಾ. ಇಸ್ಲಾಮಿನ ಸಾಮುದಾಯಿಕ ಬದುಕಿನ ಕೇಂದ್ರ ಪ್ರತೀಕವಾಗಿದ್ದ ಆ ಶಬ್ದವು ಕ್ರಮೇಣ ಆಯ್ದ ಕೆಲವೇ ಜನರ ಏಕಸ್ವಾಮ್ಯಕ್ಕೆ ಪ್ರತಿನಿಧಿಯಾಗಿಬಿಟ್ಟಿತು. ‘ಇಜ್ಮಾ’ ಎಂಬ ಶಬ್ದಕ್ಕೆ ಜನರ ಒಟ್ಟಭಿಪ್ರಾಯ ಎಂಬರ್ಥ. ಈ ಪರಿಕಲ್ಪನೆಯು ಮೂಲದಲ್ಲಿ, ಆ ಕಾಲದ ಮುಸ್ಲಿಂ ಸಮುದಾಯದ ಮೊದಲ ನಾಯಕರೂ ಆಗಿದ್ದ ಪ್ರವಾದಿ ಮೊಹಮೊದ್‌ರ ಕಾಲದ್ದು. ಆಗ ಪ್ರವಾದಿಮೊಹಮೊದ್‌ರು ಯಾವುದೇ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಆಗಿನ್ನೂ ಸಂಖ್ಯೆಯಲ್ಲಿ ಸೀಮಿತವಾಗಿದ್ದ ಇಡೀ ಮುಸ್ಲಿಂ ಸಮುದಾಯವನ್ನು ಮಸೀದಿಗೆ ಕರೆದು ಅವರ ಅಭಿಪ್ರಾಯ ಪಡೆಯುತ್ತಿದ್ದರು. ಅಲ್ಲಿ ಚರ್ಚೆ ನಡೆಯುತ್ತಿತ್ತು; ಪರ-ವಿರೋಧಭಿಪ್ರಾಯಗಳು ಮಂಡಿತವಾಗುತ್ತಿದ್ದವು; ಅಂತಿಮವಾಗಿ ಇಡಿಯ ಸಮಾಜವು ಒಂದು ಸಮಾನಾಭಿಪ್ರಾಯಕ್ಕೆ ತಲುಪುತ್ತಿತ್ತು. +ಆರಂಭಕಾಲದ ಇಸ್ಲಾಮಿನ ಸಾಮುದಾಯಿಕ ಜೀವನದಲ್ಲಿ, ಹೀಗೆ, ಒಂದು ಪ್ರಜಾಸತ್ತಾತ್ಮಕ ಕ್ರಮ ಅಡಕವಾಗಿತ್ತು ಆದರೆ ಕಾಲಕ್ರಮೇಣ ಧರ್ಮಗುರುಗಳು ಮತ್ತು ಪಂಡಿತರು ಜನವರ್ಗವನ್ನು ಈ ಪ್ರಕ್ರಿಯೆಯಿಂದ ತೆಗೆದುಹಾಕಿದ್ದರಿಂದ ಈ ಶಬ್ದಕ್ಕೆ ‘ಧರ್ಮಪಂಡಿತರ ಸಮಾನಾಭಿಪ್ರಾಯ’ವೆಂಬ ಅರ್ಥ‌ಉತ್ಪನ್ನವಾಯಿತು. ಈ ಕಾರಣದಿಂದಲೇ ಇವತ್ತು ಮುಸ್ಲಿಮ್ ಜಗತ್ತಿನಲ್ಲಿ ಸರ್ವಾಧಿಕಾರ, ಧರ್ಮಾಧಿಕಾರ ಮತ್ತು ಏಕಾಧಿಪತ್ಯಗಳೆಲ್ಲ ಪ್ರತಿಷ್ಠೆಗೆ ಅರ್ಹವಾಗಿಬಿಟ್ಟಿರುವುದು ಅಶ್ಚರ್ಯದ ಸಂಗತಿಯಲ್ಲ. ಇವತ್ತು ಇಸ್ಲಾಮಿನ ಎಲ್ಲ ಅರ್ಥವಿವರಣೆಗಳ ಬಗ್ಗೆಯೂ ಏಕಸ್ವಾಮ್ಯವನ್ನು ಪಡೆದಿರುವ ಅಧಿಕೃತ ಧಾರ್ಮಿಕ ಆವರಣವೇನಿದೆ ಅದನ್ನು ನೋಡಿಯೇ ಇವತ್ತಿನ ಇಸ್ಲಾಮಿ ರಾಜಕೀಯ ವಲಯಗಳು ತಮ್ಮ ಪ್ರತಿಷ್ಠೆ- ರೂಢಿಗಳನ್ನು ರೂಪಿಸಿಕೊಂಡಿವೆ. ಉಲೆಮಾಗಳೆಂಬ ಹೆಸರಿನಲ್ಲಿ ಇವತ್ತು ಸಂದಿಗ್ಧಾರ್ಥದಲ್ಲಿ ಮಾತಾಡುವ ಮುಲ್ಲಾಗಳು ಸೇರಿಕೊಂಡಿದ್ದಾರೆ; ಅವರೇ ಇವತ್ತು ಮುಸ್ಲಿಂ ಸಮಾಜವನ್ನು ತಾತ್ವಿಕ ಸರಳೀಕರಣ ಮತ್ತು ಧರ್ಮಾಂಧತೆಗಳ ಕಡೆಗೆ ತಳ್ಳತೊಡಗಿದ್ದಾರೆ. +ಇಂಥದೇ ಅರ್ಥಪಲ್ಲಟದ ಗತಿ ಇನ್ನೂ ಹಲವಾರು ಪರಿಕಲ್ಪನೆಗಳಿಗೂ ಒದಗಿಬಂದಿದೆ. ಜಾಗತಿಕ ಮಟ್ಟದಲ್ಲಿ ಮುಸಲ್ಮಾನರ ಅಧ್ಯಾತ್ಮಿಕ ಸಮುದಾಯವನ್ನು ಸೂಚಿಸುವ “ಉಮ್ಮಾ’ ಎಂಬ ಪರಿಕಲ್ಪನೆಯನ್ನು ನೋಡಿ. ಈಗ ಈ ಪರಿಭಾಷೆಯನ್ನು ಒಂದು ರಾಷ್ಟ್ರಪ್ರಭುತ್ವವೆಂಬುದಕ್ಕೆ ಸಂವಾದಿಯಾಗಿ ಉಪಯೋಗಿಸಲಾಗುತ್ತಿದೆ. ‘ನನ್ನ ದೇಶದ ನಿಲುವು ತಪ್ಪೇ ಸರಿಯೇ’ ಎಂದು ಚರ್ಚಿಸಲಾಗುವಂತೆಯೇ ಇವತ್ತು ನಮ್ಮ ಉಮ್ಮಾದ ನಿಲುವು ಸರಿಯೇ ತಪ್ಪೇ ಎಂದೂ ಮಾತಾಡಲಾಗುತ್ತಿದೆ. ಇಂಥ ‘ಉಮ್ಮಾ ಪ್ರಜ್ಞೆ’ ಉಮ್ಮಾ ಐಕಮತ್ಯ’ ಗಳೆಂಬ ಕಲ್ಪನೆಗಳನ್ನಿಟ್ಟುಕೊಂಡೇ ಇವತ್ತು ಸದ್ದಾಂಹುಸೇನನಂಥ ನಿರಂಕುಶಪ್ರಭುವನ್ನು ಸಮರ್ಥಿಸಲಾಗಿತ್ತದೆ. +ಹಾಗೆಯೇ ‘ಜೆಹಾದ್’ ಎಂಬ ಶಬ್ದವು ಇವತ್ತು ತೀರ ಸರಳೀಕರಣಗೊಂಡು ಧರ್ಮಯುದ್ಧವೆಂಬ ಏಕೈಕ ಅರ್ಥಕ್ಕೆ ವಾಹಕವಾಗಿಬಿಟ್ಟಿದೆ. ಈ ಅನುವಾದ ಅತ್ಯಂತ ವಿಕೃತವಾದದ್ದು, ಕಾರಣ, ಇಂಥ ಅನುವಾದದಲ್ಲಿ ಈ ಶಬ್ದಕ್ಕೆ ಬೌದ್ಧಿಕ ಮತ್ತು ಸಾಮಾಜಿಕ ಅರ್ಥವ್ಯಾಪ್ತಿಯೂ ಇರುವುದನ್ನು ಮರೆಮಾಚಲಾಗಿದೆ. ಅದಕ್ಕಾಗಿಯೇ ಇವತ್ತು ಜೆಹಾದ್ ಅಂದರೆ, ಭಯೋತ್ಪಾದನೆಯು ಸೇರಿದಂತೆ ಏನಕೇನಪ್ರಕಾರದಲ್ಲಿ ನಡೆಸುವ ಯಾವುದೇ ಯುದ್ಧವೂ ಆಗಬಹುದಾಗಿದೆ. ಹಾಗಾಗಿ ಇವತ್ತು ಯಾರ ಮೇಲೆ ಯಾರು ಬೇಕಿದ್ದರೂ ಜೆಹಾದ್‌ನ್ನು ಸಾರಬಲ್ಲವರಾಗಿದ್ದಾರೆ; ಅದಕ್ಕೆ ಯಾವ ನೈತಿಕ-ತಾರ್ಕಿಕ ನಿರ್ಬಂಧವೂ ಇಲ್ಲದಂತಾಗಿದೆ. ಜೆಹಾದ್ ಪಡೆದಿರುವ ಈ ಅರ್ಥಕ್ಕೂ ಅದರ ಮೂಲಾರ್ಥಕ್ಕೂ ಏನೇನು ಸಂಬಂಧವಿಲ್ಲ. ಜೆಹಾದ್ ಪಡೆದಿರುವ ಈ ಅರ್ಥಕ್ಕೂ ಹಲವು ಧ್ವನ್ಯರ್ಥಗಳಿವೆ-ಅದು ಒಂದು ವೈಯಕ್ತಿಕ ಹೋರಾಟ, ಬೌದ್ಧಿಕ ಪ್ರಯತ್ನ ಮತ್ತು ಸಾಮಾಜಿಕ ಸಂಘಟನೆ ಎಲ್ಲವೂ ಹೌದು. ಆದರೆ ಈ ಅರ್ಥಗಳೆಲ್ಲ ಈಗ ಅಳಿಸಿಹೋಗಿವೆ. ಹಾಗೆಯೇ ಇಸ್ಲಾಮಿಕ್ ಕಟ್ಟಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯೆಂಬ ಅರ್ಥವನ್ನು ಸೂಚಿಸುವ ಒಂದು ಪ್ರಮುಖ ಕಲ್ಪನೆಯಾದ ‘ಇಸ್ತಿಸ್ಲಾಹ್’ ಎಂಬುದು ಇವತ್ತು ಇಸ್ಲಾಮಿಕ್ ಪ್ರಜ್ಞೆಯಿಂದಲೇ ಕಾಣೆಯಾಗಿದೆ. ಮತ್ತು, ನಾನು ಮೊದಲೇ ಹೇಳಿದ ಹಾಗೆ, ‘ಇಜ್ತಿಹಾದ್’ ಅನ್ನುವುದು ಈಗ ಕೇವಲ ಧಾರ್ಮಿಕ ಹಂಬಲವಷ್ಟೇ ಆಗಿ ನಿರ್ವಿಣ್ಣಗೊಂಡಿದೆ. +ಇನ್ನು, ಈ ಎಲ್ಲ ತಾತ್ವಿಕ ಅರ್ಥಾಂತರ ಮತ್ತು ಅಪಮೌಲ್ಯಗಳ ಹಿಂಸೆಗಿಂತ ಹೆಚ್ಚು ಗಂಭೀರವಾದದ್ದು ಸ್ವತಃ ಕುರಾನ್ ಮತ್ತು ಪ್ರವಾದಿ ಮೊಹಮೊದ್‌ರ ಹೇಳಿಕೆಗಳನ್ನು ಅಪಾರ್ಥಗೊಳಿಸಿರುವ ರೀತಿ. ಮುಸ್ಲಿಂ ವಿದ್ವಾಂಸ ಫಜಲುರ್ ರೆಹಮಾನ್ ಅವರು, ಈಗೀಗ ಕುರಾನಿನ ಸಂದರ್ಭ ವಿಚ್ಛೇದಿತ ವ್ಯಾಖ್ಯಾನಗಳು ಬರಲಾರಂಭಿಸಿವೆಯೆಂದು ಹಿಂದೆ ದೂರಿದ್ದರು.; ಅದೀಗ ನಿತ್ಯ ಸಾಮಾನ್ಯವಾಗಿಬಿಟ್ಟಿದೆ. ಕುರಾನಿನ ಸಂದರ್ಭ ತಪ್ಪಿಸಿ ಉಲ್ಲೇಖಗಳನ್ನು ಮಾಡುವ ಮೂಲಕ ಇವತ್ತು ಯಾವುದೇ ಕೆಲಸವನ್ನೂ ಎಂಥಾ ಕೆಲಸವನ್ನೂ ಸಮರ್ಥಿಸಿಕೊಳ್ಳುವುದು ಸಾಧ್ಯವಾಗಿಬಿಟ್ಟಿದೆ. +ಉದಾಹರಣೆಗೆ, ಸೆಪ್ಟಂಬರ್ ೧೧ರ ಘಟನೆಯ ಬಳಿಕ ಹಲವಾರು ತಾಲೀಬಾನ್ ಬೆಂಬಲಿಗರು ಮತ್ತು ಬ್ರಿಟನ್ನಿನ ಅವರ ಕೆಲವು ಸಹಾನುಭೂತಿಗಾರರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲಿಕ್ಕೆ ಕುರಾನಿನ ಈ ಉಕ್ತಿಯನ್ನು ಉಲ್ಲೇಖಿಸಿದರು-‘ನಾವು ಧರ್ಮವನ್ನು ನಂಬದಿರುವ ಜನಗಳ ಹೃದಯದಲ್ಲಿ ಭಯವನ್ನು ಹುಟ್ಟಿಸುತ್ತೇವೆ. ಅವರು ಧರ್ಮದ ಸಮ್ಮತಿಯಿಲ್ಲದ ಬೇರೆ ದೇವರುಗಳನ್ನು ನಂಬುವಂಥವರಾದ್ದರಿಂದ ಅವರ ಮನೆಗಳು ನರಕಗಳಾಗುವಂತೆ ನಾವು ಮಾಡುತ್ತೇವೆ’(೩:೧೪೯). ಆದರೆ, ಈ ಉಕ್ತಿಗೆ ಆ ತಾಲೀಬಾನ್ ಬೆಂಬಲಿಗರು ಆರೋಪಿಸಿದ ಅರ್ಥಕ್ಕೂ ಕುರಾನಿನ ನಿಜವಾದ ಅರ್ಥಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. +ಕುರಾನ್‌ನಲ್ಲಿ ಈ ನಿರ್ದಿಷ್ಟ ಉಕ್ತಿಯು ಪ್ರವಾದಿ ಮೊಹಮೊದ್‌ರನ್ನು ಉದ್ದೇಶಿಸಿಯೇ ಹೇಳಲ್ಪಟ್ಟಿದೆ. ಸಂದರ್ಭ ಹೀಗೆ-ಆಗ ನಡೆಯುತ್ತಿದ್ದ ಉಹಾದ್‌ನ ಕದನದಲ್ಲಿ ಪ್ರವಾದಿಗಳ ಪರವಾಗಿದ್ದ ಸೈನ್ಯವು ಸಣ್ಣದಾಗಿತ್ತು, ಯುದ್ಧಸಜ್ಜಿತವೂ ಆಗಿರಲಿಲ್ಲ. ಅದು ಆಗ ತನಗಿಂತ ದೊಡ್ಡದಾದ ಮತ್ತು ಸಜ್ಜಿತವಾದ ಸೈನ್ಯವನ್ನು ಎದುರಿಸಬೇಕಾಗಿತ್ತು. ಆದ್ದರಿಂದಲೇ ಅವರು ಆ ಯುದ್ಧದ ಪರಿಣಾಮದ ಬಗ್ಗೆ ಚಿಂತಿತರಾಗಿದ್ದರು. ಅದಕ್ಕೆ ಪ್ರತಿಯಾಗಿ ಕುರಾನ್ ಪ್ರವಾದಿಯವರಿಗೆ ಸಮಾಧಾನ ಹೇಳಲಿಕ್ಕೆ ಈ ಉಕ್ತಿಯನ್ನು ಬಳಸುತ್ತದೆ ಮತ್ತು ಆ ಮೂಲಕ ಶಸ್ತ್ರಸಜ್ಜಿತವಲ್ಲದ ಸೈನ್ಯ ಕೂಡಾ ತನ್ನ ನಂಬಿಕೆಯ ಮೂಲಕ ಎದುರಾಳಿಗಳನ್ನು ಸೋಲಿಸುವುದಾಗಿ ಆಶ್ವಾಸನೆ ಕೊಡುತ್ತದೆ. ಇದನ್ನು ಆ ಕಾಲದಲ್ಲಿ ಸಂಭವಿಸುತ್ತಿದ್ದ ನಿರ್ದಿಷ್ಟ ವಿದ್ಯಮಾನಗಳ ಸಂದರ್ಭದಲ್ಲಿಟ್ಟು ನೋಡಬೇಕೇ ಹೊರತು ಈ ಮಾತನ್ನು ಎಲ್ಲ ಮುಸಲ್ಮಾನರಿಗೂ ಸಲ್ಲುವಂತೆ ಕೊಟ್ಟ ಸಾರ್ವತ್ರಿಕ ಕರೆ ಎಂಬಂತೆ ಗ್ರಹಿಸಲಾಗದು. +ಅದೇ ರೀತಿ ಈಗೀಗ ತೀರಾ ತೀವ್ರಗಾಮಿ ನಡೆವಳಿಕೆಗಳನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಕೂಡಾ ‘ಹಾದಿತ್’ ಗಳನ್ನು ಎತ್ತಿ ಹೇಳುವ ರೂಢಿ ಆರಂಭವಾಗಿದೆ. ಇಷ್ಟರ ಮೇಲೆ, ಸ್ವತಃ ಪ್ರವಾದಿಗಳ ರೂಪ ಚಹರೆಗಳನ್ನೂ ಅವರ ಬಟ್ಟೆ ಗಡ್ಡಗಳನ್ನೂ ಈಗೀಗ ಒಂದು ಅನುಕರಣೆಯ ಪದಾರ್ಥವೆಂಬಂತೆ ಕಾಣಲಾಗುತ್ತಿದೆ. ಅದಕ್ಕಾಗಿಯೇ ಈಗ ಇಬ್ಬ ‘ಒಳ್ಳೆಯ ಮುಸಲ್ಮಾನ’ ನು ಕೇವಲ ಗಡ್ಡ ಬಿಟ್ಟರಷ್ಟೇ ಸಾಲದು; ಆತನ ಗಡ್ಡದ ಉದ್ದ ಮತ್ತು ಆಕಾರಗಳೂ ಕೂಡ ನಿಯಮಬದ್ಧವಾಗಿರಬೇಕು! ಹೀಗೆ ಪ್ರವಾದಿಗಳನ್ನೂ ಕೂಡಾ ಕೇವಲ ಅವರ ಸಂಜ್ಞೆ ಲಾಂಛನಗಳಿಗೆ ಇಳಿಸಿ ಸರಳೀಕರಿಸುವ ರೂಢಿ ಚಾಲ್ತಿಗೆ ಬಂದಿದೆ. ಆದರೆ, ಅವರ ಇನ್ನಾವುದೇ ಗುಣಗಳು-ಅವರ ನಡವಳಿಕೆಯ ಸಾತ್ವಿಕತೆ, ಅವರ ಕ್ರಿಯೆಗಳ ಹಿಂದೆ ಕಾಣುತ್ತಿದ್ದ ನೈತಿಕ ಪ್ರಜ್ಞೆ, ಅವರ ವಿನಯ ಮತ್ತು ಕರುಣೆ ಮೊದಲಾಗಿ ಅವರು ಪ್ರತಿಪಾದಿಸಿದ ಎಲ್ಲ ಗುಣಗಳ ಸಮೂಹವು ಇವತ್ತು ಅನುಕರಣೀಯವಾಗಿ ಕಾಣದೆ ಕೇವಲ ಮೇಲುಮೇಲಿನ ಬಿಂಬಗಳಿಗೆ ಅವರನ್ನು ಸರಳೀಕರಿಸಲಾಗುತ್ತಿದೆ. +ಇವೆಲ್ಲದರ ಸಂಚಿತ ಪರಿಣಾಮವಾಗಿಯೇ ನಾನು ಮೊದಲು ಹೇಳಿದ ಗಂಡಾಂತರಗಳು ಉದ್ಭವವಾಗಿವೆ. ಇಸ್ಲಾಮಿನ ಪ್ರಸಿದ್ಧ ಸೂತ್ರಗಳ ಈ ವಿಕೃತ ಸರಳೀಕರಣವೇ ಇವತ್ತು ಭಯೋತ್ಪಾದಕ ಹುನ್ನಾರಗಳಿಗೂ ನೈತಿಕ ಅಧಃಪತನಕ್ಕೂ ಕುಮ್ಮಕ್ಕು ಕೊಡತೊಡಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ವಾದಿಸುತ್ತ ಬಂದಿದ್ದೆ-ಇಸ್ಲಾಮ್ ನಾಗರಿಕತೆ ಇವತ್ತು ಛಿದ್ರಛಿದ್ರವಾಗಿ ನಾಶವಾಗಿರುವುದರಿಂದ ನಾವೀಗ ಇದನ್ನು ‘ಒಂದೊಂದೇ ಇಟ್ಟಿಗೆ’ಗಳನ್ನಿಟ್ಟು ಮರುನಿರ್ಮಿಸಬೇಕಾಗಿದೆ-ಎಂಬುದಾಗಿ. ಈಗ ನೋಡಿದರೆ, ಇದನ್ನು ಇಟ್ಟಿಗೆ ಇಟ್ಟಿಗೆಯಾಗಿ ಮಾತ್ರವಲ್ಲ ಇದರ ‘ಒಂದೊಂದು ಚಿಂತನೆ’ಗಳನ್ನೂ ನಾವಿವತ್ತು ಹೊಸಹೊಸತಾಗಿ ಚಿಂತಿಸಿ ಮರುರೂಪಿಸಬೇಕಾದ ಕಾಲ ಬಂದಿರುವಂತೆ ಕಾಣುತ್ತಿದೆ. +ಈ ಕೆಲಸವನ್ನು ನಾವು ತುಂಬ ಸರಳವಾದ ಒಂದು ನೆಲೆಯಿಂದ ಆರಂಭಿಸಬೇಕು. ಮೊತ್ತಮೊದಲಿಗೆ, ಇಡೀ ಜಗತ್ತಿನ ಸತ್ಯವೆಲ್ಲವೂ ಮುಸ್ಲಿಮರ ಏಕಸ್ವಾಮ್ಯದಲ್ಲಿದೆ ಎಂಬ ಯೋಚನೆಯನ್ನು ನಾವೀಗ ಕೈಬಿಡಬೇಕು. ಯಾವುದು ಸರಿ, ಯಾವುದು ಒಳ್ಳೆಯದು, ಯಾವುದು ನ್ಯಾಯ-ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಅಥವಾ ಅಂಥ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಹೊರಡುವ ಬೌದ್ಧಿಕ ಅಭಿಮಾನಿಗಳು ಕೇವಲ ಇಸ್ಲಾಮ್ ಧರ್ಮಕ್ಕೆ ಸೀಮಿತವಾದ ಸಂಗತಿಗಳಲ್ಲ ಎಂಬುದನ್ನು ನಾವಿವತ್ತು ಅರಿಯಬೇಕು. ಮನುಕುಲದ ಉಳಿದ ಸಮುದಾಯಗಳಂತೆಯೇ ನಾವೂ ಕೂಡಾ ನಮ್ಮನಮ್ಮದೇ ಪವಿತ್ರ ನಂಬಿಕೆಗಳನ್ನು ಆಧರಿಸಿಕೊಂಡು, ಅವುಗಳನ್ನು ಬಳಸಿಕೊಂಡು, ಈ ಉತ್ತರಗಳನ್ನು ಹುಡುಕುವ ಸಾಹಸದಲ್ಲಿ ತೊಡಗಿಕೊಳ್ಳಬೇಕು; ಮತ್ತು ಆ ಮೂಲಕವೇ ನಮ್ಮ ಸಮಕಾಲೀನ ಜಗತ್ತನ್ನು ಅರ್ಥೈಸುವ ಮತ್ತು ಬದಲಾಯಿಸುವ ಪ್ರಯತ್ನವನ್ನು ನಡೆಸಬೇಕು. +* +* +* +* +ಇಸ್ಲಾಮಿನ ಇಂಥ ನವೀನ ಮತ್ತು ಸಮಕಾಲೀನ ವ್ಯಾಖ್ಯಾನಕ್ಕೆ ದಾರಿಯೆಂದರೆ-ನಾವೀಗ ಎದುರಿಸುತ್ತಿರುವ ಆಧ್ಯಾತ್ಮಿಕ ಗಂಡಾಂತರಗಳನ್ನು ಎದುರಿಸಿ ನಿಲ್ಲುವುದು ಹಾಗೂ ಸರಳೀಕರಣದಿಂದ ದೂರಸರಿದು ಸಂಶ್ಲೇಷಣೆಯ ಕಡೆಗೆ ನಡೆಯುವುದು. ಹೀಗೆ ಮಾಡಲು ಮೊತ್ತಮೊದಲು ಮುಸ್ಲಿಮರು ವೈಯಕ್ತಿಕವಾಗಿ ಮತ್ತು ಸಮುದಾಯಗಳಾಗಿ ತಮ್ಮ ಕ್ರಿಯಾಶಕ್ತಿಗಳನ್ನು ಮರಳಿ ಸಂಪಾದಿಸಿಕೊಳ್ಳುವುದು ಅಗತ್ಯ, ತಮ್ಮ ಹಕ್ಕು ಮತ್ತು ಧರ್ಮದ ತಿಳಿವಳಿಕೆಯುಳ್ಳವರಾಗಿ ಇಸ್ಲಾಮಿನ ಮೂಲತತ್ವವನ್ನು ವ್ಯಾಖ್ಯಾನಿಸುವ ಕೆಲಸಕ್ಕೆ ಕೈಹಾಕಬೇಕು. ಮತ್ತು ಈಗ ಷರೀಯತ್‌ನ ಹೆಸರಿನಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪ್ರಶ್ನಿಸಬೇಕು; ರೂಢಿಯಲ್ಲಿರುವ ಹಲವಾರು ಫಿಖ್‌ಗಳು ಇವತ್ತಿನ ಕಾಲಕ್ಕೆ ತೀರಾ ಅಪ್ರಸ್ತುತವಾಗಿರುವುದನ್ನು ಎತ್ತಿಹೇಳಬೇಕು ಹಾಗೂ ಇಸ್ಲಾಮ್ ಎಂಬುದು ನಿರ್ದಿಷ್ಟ ಭೌಗೋಲಿಕ ಪ್ರದೇಶಗಳೊಳಗೆ ಸೀಮಿತವಾಗಿರುವ ಒಂದು ರಾಷ್ಟ್ರವೆಂಬ ಅಸಂಬದ್ಧ ನಿಲುವನ್ನು ವಿರೋಧಿಸಬೇಕು. +ನಾವು ನಮ್ಮ ನಂಬಿಕೆಯನ್ನು ನಿಜವಾಗಿಯೂ ಗೌರವಿಸುವುದಾದರೆ, ಅದರ ವ್ಯಾಖ್ಯಾನ ಮತ್ತು ನಿರ್ವಹಣೆಯ ಜವಾಬ್ದಾರಿಗಳನ್ನು ಅರೆತಿಳುವಳಿಕೆಯ ನಾಯಕರಿಗಾಗಲೀ ಕೇವಲ ಧರ್ಮಪಂಡಿತರಿಗಾಗಲಿ ವಹಿಸಿಕೊಡದೆ ಅದರಲ್ಲಿ ನಾವೂ ಪಾಲ್ಗೊಳ್ಳಬೇಕು. ಈ ನಾಯಕರು ಮತ್ತು ಪಂಡಿತರಿಗೆ ಸಮಕಾಲೀನ ಜಗತ್ತಿನ ಸಮಸ್ಯೆಗಳ ಪರಿಚಯವಿಲ್ಲ ಮಾತ್ರವಲ್ಲ ಜ್ಞಾನ ಮತ್ತು ಸಾಂಸ್ಕೃತಿಕ ಆಯಾಮಗಳ ಬಗ್ಗೆ ಅವರಲ್ಲಿ ಅಪಾರ ನಿರ್ಲಕ್ಷ್ಯ ತುಂಬಿಕೊಂಡಿದೆ. ಇಸ್ಲಾಮನ್ನು ನಾವು ಬಹುಕಾಲದಿಂದ ವಿಶೇಷಜ್ಞರ ವಲಯಕ್ಕೆ ಬಿಟ್ಟುಕೊಟ್ಟಿದ್ದೇವೆ; ಮತ್ತು ಈಗ ಆ ವಿಶೇಷಜ್ಞರು ೧೧ನೆಯ ಶತಮಾನವನ್ನು ತಿಳಿದುಕೊಂಡಿರುವಷ್ಟು ನಾವಿವತ್ತು ಬದುಕುತ್ತಿರುವ ಕಾಲಮಾನವನ್ನು ಅರಿತುಕೊಂಡವರಾಗಿಲ್ಲ. ಈ ವಿಶೇಷಜ್ಞರು ‘ಇಜ್ತಿಹಾದ್’ ಎಂಬ ಘನಾವಾದ ಪರಿಕಲ್ಪನೆಯನ್ನು ಹೂಲಿ ಅದನ್ನು ದೂರ ಇತಿಹಾಸದ ಒಂದು ನೆನಪಾಗಿಸುವುದಕ್ಕೆ ನಾವೀಗ ಅವಕಾಶ ಕೊಡಬಾರದು. +ಆದ್ದರಿಂದಲೇ ಇವತ್ತು ಪ್ರಪಂಚದಾದ್ಯಂತ ಇರುವ ಎಲ್ಲ ಸಾಮಾನ್ಯ ಮುಸಲ್ಮಾನರೂ ಇಸ್ಲಾಮಿನ ಪ್ರಸ್ತುತ ಸ್ಥಿತಿಯ ಬಗ್ಗೆ ತಮಗಿರುವ ಕಳಕಳಿಯನ್ನು, ಪ್ರಶ್ನೆಗಳನ್ನು, ತಮ್ಮೊಳಗೆ ನಡೆಯುತ್ತಿರುವ ನೈತಿಕ ಒಳತೋಟಿಗಳನ್ನು ಕ್ರಿಯಾಶೀಲವಾಗಿ ಅಭಿವ್ಯಕ್ತಿಸುವ ಮೂಲಕ ಈ ಧರ್ಮದ ತತ್ವಗಳನ್ನು ಪುನರಾವಿಷ್ಕರಿಸಿ ಅದನ್ನು ವಿಶಾಲವಾದ ಭಿತ್ತಿಯಲ್ಲಿ ಮರುಸ್ಥಾಪಿಸುವ ಅಗತ್ಯ ತುರ್ತಾಗಿ ಉದ್ಭವಿಸಿದೆ. ಇಂಥ ಮರುಸ್ಥಾಪನೆಯಲ್ಲಿ-ಇಜ್ಮಾ ಎಂಬುದು ಎಲ್ಲ ನಾಗರಿಕರ ಸಮಾನಾಭಿಪ್ರಾಯವನ್ನು ಒಳಗೊಳ್ಳುವಂತಾಗಬೇಕು; ಅದು ಜನಗಳನ್ನು ಒಳಗೊಳ್ಳುವುದಕ್ಕೆ ಮತ್ತು ಜನರಿಗೆ ಜವಾಬ್ದಾರಿಯುತವಾದ ಆಳ್ವಿಕೆಯನ್ನೊದಗಿಸಲಿಕ್ಕೆ ಪೂರಕವಾಗಿರುವಂತಾಗಬೇಕು. ಜಿಹಾದ್ ಎಂಬುದನ್ನು ಅದರ ಎಲ್ಲ ಆಧ್ಯಾತ್ಮಿಕ ಅರ್ಥಗಳೊಂದಿಗೆ ಅರ್ಥೈಸಿಕೊಳ್ಳುವಂತಾಗಬೇಕು; ಅದು ಎಲ್ಲ ಸ್ಥಳಗಳಲ್ಲಿರುವ ಎಲ್ಲ ಜನರೂ ತಮ್ಮ ನಿತ್ಯ ಬದುಕಿನ ಶಾಂತಿ ಮತ್ತು ನ್ಯಾಯಕ್ಕಾಗಿ ನಡೆಸುವ ಹೋರಾಟಗಳಿಗೆ ಅನ್ವರ್ಥವಾಗಬೇಕು. ಉಮ್ಮಾ ಎಂಬ ಪರಿಕಲ್ಪನೆಯನ್ನು ಈಗಿರುವ ತೀರಾ ಸೀಮಿತ ಅರ್ಥದಿಂದ ಬಿಡುಗಡೆಗೊಳಿಸಿ ಅದನ್ನು ವಿಶಾಲಜಗತ್ತಿನ ಸಂದರ್ಭದಲ್ಲಿ ಪುನರ್ ನಿರೂಪಿಸಲು ಸಾಧ್ಯವಾಗಬೇಕು. +ಉಮ್ಮಾ ಎನ್ನುವುದು ‘ತಾವು ಮುಸ್ಲಿಮರೆಂದು ಹೇಳಿಕೊಳ್ಳುವ ಎಲ್ಲ ಜನಗಳ ಸಮುದಾಯ’ ಮಾತ್ರವೇ ಅಲ್ಲ-ಎಂದು ಅನ್ವರ್ ಇಬ್ರಾಹಿಮ್ ಅವರು ವಾದಿಸಿದ್ದಾರೆ. ಬದಲು, ಅವರ ಅಭಿಪ್ರಾಯದಲ್ಲಿ ಅದು-‘ಮುಸ್ಲಿಮರು ತಮ್ಮ ಧರ್ಮದ ಜನರ ನಡುವೆ, ಬೇರೆ ಧರ್ಮ-ಸಮುದಾಯಗಳ ಜನರೊಂದಿಗೆ ಮತ್ತು ಒಟ್ಟೂ ಭೌತಿಕ ಜಗತ್ತಿನೊಂದಿಗೆ ಕೂಡಿ ಹೇಗೆ ಒಂದು ಸಮುದಾಯವಾಗಿ ರೂಪುಗೊಳ್ಳಬೇಕೆಂಬುದರ ಕುರಿತು ಇರುವಂಥ ಒಂದು ನೈತಿಕ ನಿಲುವು’. ಅರ್ಥಾತ್ ಈ ವ್ಯಾಖ್ಯೆಯ ‘ಉಮ್ಮಾ’ದಲ್ಲಿ ಮುಸಲ್ಮಾನರಲ್ಲದವರೂ ಕೂಡಿಕೊಳ್ಳುತ್ತಾರೆ; ನ್ಯಾಯಕ್ಕಾಗಿ ಹೋರಾಡುವ ಎಲ್ಲ ದಮನಿತ ಸಮುದಾಯಗಳೂ ಈ ಸಮೂಹಕ್ಕೆ ಸೇರಿಕೊಳ್ಳುತ್ತಾರೆ. ಇಂಥ ಸಂಶ್ಲೇಷಣೆಯ ಕಡೆಗೆ ನಡೆಯುವ ಹೋರಾಟವೇ ಇವತ್ತು ನಿಜವಾಗಿ ಇಸ್ಲಾಮಿನ ನಿಜವಾದ ಅರ್ಥವನ್ನು ಸಮೀಪಿಸುವ ಚಳುವಳಿಯಾಗಬಲ್ಲದು. ಯಾಕೆಂದರೆ ಇಸ್ಲಾಮ್ ಎನ್ನುವುದು ನಿಜವಾದ ಅರ್ಥದಲ್ಲಿ-ಜಗತ್ತನ್ನು ನೋಡುವ ಮತ್ತು ಸಂಘಟಿಸಿಕೊಳ್ಳುವ ನೈತಿಕವಾದ ಒಂದು ದೃಷ್ಟಿ; ಶಾಂತಿಯುತವಾಗಿ ಬದುಕುವ ಒಂದು ನಾಗರಿಕ ಸಂಸ್ಕೃತಿ;ಎಲ್ಲರನ್ನೂ ಒಳಗೊಳ್ಳುವ ಒಂದು ಆಡಳಿತ ವಿಧಾನ ಮತ್ತು ತಿಳಿವು-ಆಸ್ತಿತ್ವ-ಕ್ರಿಯೆಗಳ ಬಗ್ಗೆ ಏಕೀಕೃತವಾದ ನಿಲುವುಗಳನ್ನಿಟ್ಟುಕೊಂಡಿರುವ ಒಂದು ಸಮಗ್ರ ಜೀವನ ಪದ್ಧತಿ. +ಸೆಪ್ಟಂಬರ್ ೧೧ರ ಘಟನೆಯು ಪರೋಕ್ಷವಾಗಿಯಾದರೂ ಇಂಥ ಒಂದು ಉತ್ತಮ ಅಪೇಕ್ಷೆಗಳನ್ನು ಉತ್ತೇಜಿಸಿ ಉದ್ದೀಪಿಸುವಂತಾದರೆ, ಮತ್ತು ಆ ಮೂಲಕ ಇಸ್ಲಾಮಿನ ಮೂಲತತ್ವಗಳ ಹುಡುಕಾಟಕ್ಕೆ ಪ್ರೇರಕವಾಗುವಂತಾದರೆ, ಆಗ ನಿಜವಾಗಿಯೂ ಅಂದು ಉರುಳಿದ ಎರಡು ಗೋಪುರಗಳ ಸುಟ್ಟ ಬೂದಿಯಿಂದ ಹೊಸತೊಂದು ಫೀನಿಕ್ಸ್ ಪಕ್ಷಿ ಮೇಲೆದ್ದು ಬಂದಂತಾದೀತು. +***** +‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […] +ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […] +“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_729.txt b/Kannada Sahitya/article_729.txt new file mode 100644 index 0000000000000000000000000000000000000000..a8f626eba4729e0bc51e06809bac7a00f926f216 --- /dev/null +++ b/Kannada Sahitya/article_729.txt @@ -0,0 +1,153 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ ತಲೆಮೇಲೆ ಕೈಹೊತ್ತು ಮಲಗಿದ್ದಳು. ನನ್ನನ್ನು ಕಂಡವಳೇ ಎದ್ದು ಕೂತು “ಬಾ ಶೀನಿಂಗಿ” ಎಂದಳು. ನನಗಿಷ್ಟೇ ಬೇಕಿತ್ತು. ಹಿರಿ ದೊರೆಸಾನಿಯ ನಡಪಟ್ಟಿ ಕಥೆ ಹೇಳಿ ನಗಾಡಿದೆ. ಸಿಂಗಾರೆವ್ವ ನಗಲಿಲ್ಲ. ಗಂಭೀರಳಾದಳು. ಹಣೆಯ ಮೇಲೆ ಚಿಂತೆಯ ಗೆರೆ ಮೂಡಿದವು. ಒಂದು ಬಾರಿ ನಿಟ್ಟುಸಿರಿಟ್ಟು- +“ಏನ ಹೇಳಲೇ ಶೀನಿಂಗಿ; ರಾತ್ರಿ ಕುಡೀತಾನ, ಬಂದ ಬೀಳತಾನ. ನಾ ಮಂಚದ ಮ್ಯಾಲ ಮಲಗಿದ್ದರ ಕೆಳಗ ಮಲಗತಾನ. ಹಾಂಗಂತ ನಾನಽ ಕೆಳಗ ಮಲಗಿ ನೋಡಿದೆ, ಅವ ಮಂಚದ ಮ್ಯಾಲೆ ಬಿದ್ದುಕೊಂಡ. ಒಂದು ಸಲ ಆದರೂ ಈ ಕ್ವಾಣ್ಯಾಗ ನನ್ನ ಹೆಂಡತಿ ಇದ್ದಾಳ; ಆಕೀನ ಮಾತಾಡಸಬೇಕು ಅಂತ ಅಂದವನಽ ಅಲ್ಲ. ಬೆಳಗ್ಗೆದ್ದಾಗ ಒಮ್ಮೊಮ್ಮೆ ಬೆರಗಲೆ ಕಣ್ಣತಗದ “ನೀವೂ ಇದಽ ಕ್ವಾಣ್ಯಾಗ ಮಲಗಿದ್ರಿ?” ಅಂತ ಕೇಳತಾನ. ಹೇಂತೀನ ಮಾಡಿಕೊಂಡದ್ದಾದರೂ ನೆನಪೈತೋ ಇಲ್ಲೊ! ಬರೀ ಮಕ್ಕಳ ಮಕ್ಕಳಂದರ ಅವೇನ ಜಂತ್ಯಾಗಿಂದ ಉದರತಾವು? ಶಿವ ನನ್ನ ಹಣ್ಯಾಗ ಮಕ್ಕಳ್ನ ಬರದಿಲ್ಲ ಶೀನಿಂಗಿ”-ಎಂದು ಅಳತೊಡಗಿದಳು. +ಆತ ರಾತ್ರಿ ತಡಮಾಡಿ ಬರುವುದು ನನಗೆ ಗೊತ್ತಿತ್ತು. ಆದರೆ ಗಂಡಹೆಂಡತಿ ಸರಸವಾಗೇ ಇರಬೇಕೆಂದು ನನ್ನ ಕಲ್ಪನೆಯಾಗಿತ್ತು. ಇಕಾ ಇದನ್ನ ಕೇಳಿದರೆ ಹೀಗ! ದೇಸಾಯಿಯ ಬಿಳಿಚಿಕೊಂಡ ಮುಖ, ತೆಳ್ಳಗಿನ ಮೈ ಕಂಡು ನನಗೆ ನನ್ನ ಅನುಮಾನಗಳಿದ್ದವು. ನಾನು ಅಂಥ ಅನುಭವಿಕಳಲ್ಲವೆಂಬುದನ್ನು ಒಪ್ಪುತ್ತೇನೆ. ಆದರೆ ಹೆಂಗಸರಿಗೆ ಅದೆಲ್ಲ ತಿಳಿಯುತ್ತದೆ. ಮದುವೆಯಾದ ಹೊಸದರಲ್ಲಿ ಹೆಣ್ಣಿಗೆ ಒಂದು ಬಗೆಯ ಸುಖದ ಅಮಲು ಬರುತ್ತದೆ. ಮನಸ್ಸಿನ ತುಂಬಾ ಹಾಸಿಗೆಯ ಪರಿಮಳ ಇಡಗಿ ನರನರಗಳೆಲ್ಲ ಬಿಗಿಯುತ್ತವೆ. ಆಗ ಕೆಲಸ ಬೇಡಾಗಿ ಆಕಳಿಸೋಣ ಎನ್ನಿಸುತ್ತದೆ, ಹೀಗೇ ಇನ್ನೂ ಏನೇನೋ! ಆದರೆ ಇದ್ಯಾವುದನ್ನೂ ಸಿಂಗಾರೆವ್ವ ಅನುಭವಿಸಲೇ ಇಲ್ಲ. ಅಥವಾ ಇದನ್ನು ಮರೆಯುವುದಕ್ಕೇ ಇರಬೇಕು, ಸದಾ ಒಂದಿಲ್ಲೊಂದು ಕಾರುಬಾರು ಅಂಟಿಸಿಕೊಳ್ಳುತ್ತಿದ್ದಳು. ಆದರೆ ಬಾಯಿ ಬಿಟ್ಟು ಕೇಳೋದು ಹ್ಯಾಗೆ? ಸಿಂಗಾರೆವ್ವ ತಾನಾಗೇ ಬಾಯಿಬಿಡುವ ಪೈಕಿ ಅಲ್ಲ. ಅವಳಿನ್ನೂ ಅಳುತ್ತಿದ್ದುದರಿಂದ ಈಗ ಮಾತಾಡಬೇಕಾದವಳು ನಾನು. ಆದರೆ ಏನು ಮಾತಾಡಬೇಕೆಂಬುದೇ ಹೊಳೆಯದಾಯಿತು. “ಬೆಂಕೀ ಹಂತ್ಯಾಕಿನ ಬೆಣ್ಣಿ ಎಷ್ಟದಿನ ಕರಗದಽ ಇದ್ದೀತ ಬಿಡ ಎವ್ವಾ” ಅಂದೆ. ಆದರಿದು ಹುಸಿ ಸಮಾಧಾನದ ಮಾತೆಂದು ಇಬ್ಬರಿಗೂ ಗೊತ್ತಿತ್ತು. ಈಗೇನೋ ಹೇಳಬೇಕಲ್ಲ, ಆದ್ದರಿಂದ ಹೇಳಿದೆ- +“ಅವ ಬರಾಣಿಲ್ಲೆಂದರ ಬ್ಯಾಡ, ನೀನೂ ಹಾಂಗ ಮಾಡಬೇಕೇನ? ನೀನಽ ತುಸು ಹಾದಿಗಿ ಬರಬೇಕವಾ” ಅಂದೆ. ಇದಕ್ಕೆ ಅವಳೇನೂ ಹೇಳಲಿಲ್ಲ. ಸುಮ್ಮನಾದಳು. ನಾನೂ ಸುಮ್ಮನೇ ಎದ್ದು ಬಂದೆ. +ಆದರೆ ಆದಿನ ಬಹಳ ಹೊತ್ತಿನ ತನಕ ನನಗೆ ನಿದ್ದೆಯೇ ಬರಲಿಲ್ಲ. ದೇಸಾಯಿ ಆಗಲೇ ಬಂದಿದ್ದ. ನಾನು ಸಿಂಗಾರೆವ್ವನ ಬಗ್ಗೆಯೇ ಚಿಂತೆ ಮಾಡುತ್ತಿದ್ದೆ. ಗೌಡನ ಮಗಳಾಗಿ, ಚೆಲುವೆಯಾದ ಅವಳು ಸುಖದ ಹಕ್ಕುದಾರಳಾಗಿಯೇ ಹುಟ್ಟಿದ್ದಳು. ಅವಳನ್ನು ಯಾರು ಕಂಡರೂ ಈ ಕೂಸು ಸುಖವಾಗಿರಲೆಂದೇ ಹರಸುತ್ತಿದ್ದರು, ಹಾಂಗಿದ್ದಳು ಸಿಂಗಾರವ್ವ. ಇಲ್ಲಿ ನೋಡಿದರೆ ಏನಿದೆ? ಅಪ್ಪ ಅಂಥವ ಗಂಟುಬಿದ್ದ. ಗಂಡ ನೋಡಿದರೆ ಅಂಥವನು, ಅವಳ ಯಾವ ಕರ್ಮಕ್ಕೆ ಹಿಂಗಾಗಿದೆ? ಮಗ್ಗಲು ಬದಲಿಸಿ ಮತ್ತೆ ಮತ್ತೆ ಇದನ್ನೇ ಧ್ಯಾನಿಸಿದೆ. ಬಗೆ ಹರಿಯಲಿಲ್ಲ. +ಅಷ್ಟರಲ್ಲಿ ಸಿಂಗಾರೆವ್ವ ಧಡಧಡ ಜಿನೆಯಿಳಿದು “ಶೀನಿಂಗೀ” ಎಂದು ಕೂಗಿದಳು. ತಕ್ಷಣ “ಯಾಕವ್ವಾ?” ಎಂದು ಎದ್ದೆ. “ಲಗು ಬಾ” ಎಂದವಳೇ ಮತ್ತೆ ಮೇಲೇರಿ ಹೋದಳು. ನಾನೂ ಓಡಿಹೋದೆ. ನೋಡಿದರೆ, ದೇಸಾಯಿ ಕೈಕಾಲು ಸೆಟೆಸಿ ಬೇಹೋಶ್ ಆಗಿ ಬಿದ್ದುಬಿಟ್ಟಿದ್ದ. ಇಬ್ಬರೂ ಜೋರಿನಿಂದ ಅಂಗಾಲು ತಿಕ್ಕತೊಡಗಿದೆವು. ಸಿಂಗಾರೆವ್ವ ಅತ್ತೆಯ ಬಳಿ ಓಡಿದಳು. ದೆಸಾಯಿಯ ಮುಖ ಕೆಂಪೇರಿ ಕೆಂಜಗವಾಗಿತ್ತು. ಮೈತುಂಬ ನೀರು ಸುರಿದಹಾಗೆ ಬೆವರಿಳಿಯುತ್ತಿತ್ತು. ನನಗೆ ಅಷ್ಟಿಷ್ಟು ಆಸೆ ಮೂಡಿದ್ದೂ ಆ ಬೆವರಿನಿಂದಲೇ. ಸಿಂಗಾರೆವ್ವ ಆತಂಕದಲ್ಲಿ ಎಬ್ಬಿಸಿದರೆ ಆ ಮುದುಕಿ “ಗಡಿಬಿಡಿ ಮಾಡಬ್ಯಾಡ, ಈಗ ಎಚ್ಚರಾಗತಾನ, ಹೋಗಿ ಮೂಗಿಗೆ ಉಳ್ಳಾಗಡ್ಡಿ ಹಿಂಡಿ ಹಿಡಿ” ಎಂದಳಂತೆ. ಬರುವಾಗ ಸಿಂಗಾರೆವ್ವ ಒಂದು ಉಳ್ಳಾಗಡ್ಡಿಯನ್ನು ತಂದಿದ್ದಳು. ಹಿಂಡಿ ಮೂಗಿಗೆ ಹಿಡಿದಳು. ನಾನು ಅವನ ಕಿರಿಬೆರಳು ಹಿಸುಕುತ್ತಿದ್ದೆ. ನಮ್ಮ ಪ್ರಯತ್ನ ಸಾವಿನೊಂದಿಗೆ ಸೆಣೆಸಾಟದಂತಿತ್ತು. ಬಹಳ ಹೊತ್ತಿನ ನಂತರ ನಮ್ಮ ಪ್ರಯತ್ನ ಫಲಕಾರಿಯಾಯಿತು. ಮೆಲ್ಲಗೆ ದೇಸಾಯಿ ಎಚ್ಚರಗೊಂಡು ನರಳಿದ. ಸಿಂಗಾರೆವ್ವ ಈಗ ಹಗುರವಾಗಿ ಹಾಗೇ ಕಂಬಕ್ಕೊರಗಿದಳು. +ನಿನ್ನೆ ರಾತ್ರಿ ಏನು ನಡೆಯಿತೆಂದು ಸಿಂಗಾರೆವ್ವ ಮರುದಿನ ಹೇಳಿದಳು. ನಾನು ಹೇಳಿದೆನಲ್ಲ,-ನೀನು ತುಸು ಹಾದಿಗೆ ಬಾ ಅಂತ. ಸಿಂಗಾರೆವ್ವನಿಗೆ ಅದು ಹೌದೆನಿಸಿತ್ತು. ರಾತ್ರಿ ದೇಸಾಯಿ ಬಂದಾಗ ಇವಳು ನೆಲದ ಮೇಲೆ ಒರಗಿದ್ದಳು. ಬಂದವನು ಮಂಚದ ಮೇಲೆ ಮಲಗಿದ. ಬಹಳ ಹೊತ್ತಾದ ಮೇಲೆ ದೀಪ ಸಣ್ಣದಾಗಿಸಿ ಇವಳೂ ಮಂಚದ ಮೇಲೆ ಹೋದಳು. ಮೆಲ್ಲಗೆ ಅವನೆದೆಯ ಮೇಲೆ ಕೈಯಿಟ್ಟು ಒಂದೆರಡು ಬಾರಿ ಆಡಿಸಿದಳು. ದೇಸಾಯಿ ಗಬಕ್ಕನೆ ಎದ್ದನಂತೆ. ಹೋಗಿ ದೀಪ ದೊಡ್ಡದು ಮಾಡಿ ಬಂದು ಬೆಳಕಿನಲ್ಲಿ ಅಂಗಾತಾಗಿ ಬಿದ್ದಿದ ಹೆಂಡತಿಯ ರೂಪರಾಶಿಯನ್ನು ಹರಿದು ತಿಂಬವರಂತೆ ನೋಡತೊಡಗಿದ. ಸಿಂಗಾರೆವ್ವ ಖುಶಿಯಾಗಿ, ನಾಚಿ, ನೋಡಲಾರದೆ ಎರಡೂ ಕೈಯಿಂದ ಮುಖ ಮುಚ್ಚಿಕೊಂಡಳು. ಈತ ಕಾಲಕಡೆಯಿಂದ ನಿಧಾನವಾಗಿ ಸೀರೆ ಎತ್ತುತ್ತ ಹೋದ. ಸೀರೆ ಮೇಲೆ ಸರಿದ ಹಾಗೆ ಸಿಂಗಾರೆವ್ವ ಅರಳುತ್ತ ಪುಳಕಗೊಂಡಳು. ಮೊಳಕಾಲಿನ ತನಕ ಬಂದಿರಬೇಕು, ಹಾಗೇ ಅವಳ ಹೊಟ್ಟೆಯ ಮೇಲೆ ಬಿದ್ದುಕೊಂಡ. ಸಿಂಗಾರೆವ್ವ ಈಗಲೂ ಕಣ್ಣು ತೆರೆಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆತ ಹಾಗೇ ನೆಲಕ್ಕುರುಳಿದ. ಈಗ ಕಣ್ಣು ತೆರೆದು ನೋಡಿದರೆ ದೆಸಾಯಿ ಕೈಕಾಲು ಸೆಟೆಸಿ ಬೇಹೋಶ್ ಆಗಿ ಬಿದ್ದಿದ್ದನಂತೆ. ಇದು ಅವನಿಗೆ ಆಗಾಗ ಬರುವ ರೋಗವೆಂದೂ ಜೀವಕ್ಕೆ ಅಪಾಯವಿಲ್ಲವೆಂದೂ ಮುದುಕಿಯಿಂದ ತಿಳಿಯಿತು. ಬೇಕಾದಷ್ಟು ವೈದ್ಯ ಮಾಡಲಾಗಿದೆಯೆಂದೂ, ಪರಿಣಾಮ ಕಾಣದ್ದರಿಂದ ಹುಶಾರಾಗಿರಬೇಕೆಂದೂ ಹೇಳಿದಳು. ಸಿಂಗಾರೆವ್ವನ ಮುಖದಲ್ಲಿ ಅಂದು ಮೂಡಿದ ಚಿಂತೆಯ ಗೆರೆ ಕೊನೆಯ ತನಕ ಮರೆಯಾಗಲೇ ಇಲ್ಲ. +ಸಿಂಗಾರೆವ್ವ ಈಗ ಹೆಚ್ಚು ಹೆಚ್ಚು ಒಂಟಿಯಾದಳು. ಆಳುಗಳೊಂದಿಗೆ ಮನಸ್ಸಿಗೆ ಬಂದರೆ ಮಾತಾಡಿದಳು, ಇಲ್ಲದಿದ್ದರೆ ಇಲ್ಲ. ಕೆಲಸ ಕಾ‌ಅರ್ಯಗಳಲ್ಲಿ ಮೊದಲಿನ ಉತ್ಸಾಹ ಕಾಣಿಸುತ್ತಿರಲಿಲ್ಲ. ನನ್ನೊಂದಿಗೂ ಒಮ್ಮೊಮ್ಮೆ ಮಾತಾಡುತ್ತಿರಲಿಲ್ಲ. ಯಾಕೆಂದರೆ ಮುದುಕಿ ಇವಳ ಮುಖ ಕಂಡರೆ ಸಾಕು ಬಸಿರಿನ ಬಗ್ಗೆಯೇ ಮಾತಾಡುತ್ತಿದ್ದಳು. ತನ್ನ ತಂದೆ ಮೋಸ ಮಾಡಿದ್ದನ್ನು ಸಿಂಗಾರೆವ್ವ ಒಂದೆರಡು ಬಾರಿ ಖಾರವಾಗಿ ನನ್ನ ಬಳಿ ತೋಡಿಕೊಂಡಲು. ತನ್ನ ತಾಯಿಯಾದರೂ ತಪ್ಪಿಸಬಹುದಿತ್ತಲ್ಲಾ ಎಂದೊಮ್ಮೆ ಕಣ್ಣೀರು ತಂದಳು. ಮರುಕ್ಷ್ಣವೇ ತಂದೆಯ ಕ್ರೌರ್‍ಯದ ನೆನಪಾಗಿ, ತಾಯಿಯ ಅಸಹಾಯಕತೆಗೂ ಅತ್ತಳು. ತನ್ನ ದೈವವನ್ನಂತೂ ಕೂತಾಗೊಮ್ಮೆ, ನಿಂತಾಗೊಮ್ಮೆ, ಮಲಗುವಾಗೊಮ್ಮೆ, ಏಳುವಾಗೊಮ್ಮೆ, ಹಳಿಯುತ್ತಿದ್ದಳು. +ಒಮ್ಮೆ ನನ್ನೊಂದಿಗೆ ಇಡೀ ದಿನ ಮಾತಡಲಿಲ್ಲ. ನನ್ನ ಮೇಲೂ ಇವಳಿಗೆ ಕೋಪವೇನೋ ಅಂದುಕೊಂಡೆ. ನನ್ನೊಡನೆ ಮಾತಾಡುವುದರಿಂದ ಇವಳಿಗೆ ಹಿಂಸೆಯಾಗುತ್ತಿದ್ದರೆ ನಾನ್ಯಾಕೆ ಇಲ್ಲಿರಬೇಕು? ಆ ದಿನ ಮಧ್ಯಾಹ್ನವಾದರೂ ಇಬ್ಬರೂ ಊಟ ಮಾಡಲಿಲ್ಲ. ಪಡಸಾಲೆಯಲ್ಲಿ ಕೂತಿದ್ದಳು. ಮೆಲ್ಲಗೆ ಹೋಗಿ “ಊಟಾ ಮಾಡೇಳು” ಎಂದು. ನನ್ನ ಕಡೆಗೆ ಲಕ್ಷ್ಯ ಕೊಡಲೇ ಇಲ್ಲ. ನನಗೆ ತಡೆಯಲಾಗಲಿಲ್ಲ. +“ನಿನಗ ಬ್ಯಾಡಾದ ಮ್ಯಾಲ ನಾ ಯಾಕ ಇಲ್ಲಿರಲಿ? ನಂದಗಾವಿಗೆ ಹೋಗತೀನಿ”- ಅಂದೆ. +ತಕ್ಷಣ ನನ್ನ ಕಡೆಗೆ ತಿರುಗಿ “ನಿನಗೂ ಬ್ಯಾಡಾದ್ನೇನೆ ಶೀನಿಂಗೀ” ಎನ್ನುತ್ತ ಉಕ್ಕಿಬಂದ ಕಣ್ಣೀರು ತೋರಿಸದೆ ಒಳಕ್ಕೆ ಹೋದಳು. ಯಾಕಾದರೂ ಅಂದೆನೊ! ಯಾಕೆಂದರೆ, ಸಿಂಗಾರೆವ್ವ ಸಣ್ಣ ಮುಖಮಾಡಿ ಕೂರುವುದು ನನಗೆ ಸರಿಬರುತ್ತಿರಲಿಲ್ಲ. ಅದಕ್ಕೆ- ನಾನೂ ಬೆನ್ನುಹತ್ತಿ ಹೋದೆ. +ಅಂತಸ್ತಿನ ಕೋಣೆಯಲ್ಲಿ ಅಳುತ್ತಿದ್ದಳು. ನನಗೂ ಅಳು ತಡೆಯಲಾಗಲಿಲ್ಲ. “ತಪ್ಪಾಯಿತು ಎವ್ವಾ”-ಅಂದೆ. ತುಸು ಹೊತ್ತು ಇಬ್ಬರೂ ಮಾತಾಡಲಿಲ್ಲ. ಆಮೇಲೆ ಹೇಳಿದೆ. “ಇಲ್ಲೀತಂಕ ನಿನ್ನ ಅಕ್ಕನ್ಹಾಂಗ ಇದ್ದೆ, ಈಗ ತಾಯಿ ಸಮ, ಹೇಳತೇನ ಕೇಳಽ ಎವ್ವಾ; ಮಕ್ಕಳಾಗೋದಿಲ್ಲಂತ ತಲೀಮ್ಯಾಲ ಕೈಹೊತ್ತು ಕೂತರ ಎದಕ್ಕ ಬಂತು? ಈ ಜಗತ್ತಿನಾಗ ದೇವರ ದಿಂಡರ ಇಲ್ಲಂದಿ? ಹರಿಕಿ ಹೊರು, ವರತ ಮಾಡು. ಈ ಊರಾಗಿನ ಕುಮುದವ್ವ ಎಂಥೆಂಥಾ ಬಂಜೇರಿಗಿ ಮಕ್ಕಳಾ ಕೊಟ್ಟಾಳಂತ, ನಿನಗಽ ಇಲ್ಲಂತಾಳು?” ಈ ಮಾತು ಕೇಳಿ ಅವಳ ಕಣ್ಣೊಳಗೆ ಭಗ್ಗನೆ ಬೆಳಕು ಹೊಳೆಯಿತು. ಮಂಚದ ಮೇಲಿದ್ದವಳು ನನ್ನ ಬಳಿ ಬಂದು +“ಶೀನಿಂಗಿ, ಖರೆಖರೆ ಮಕ್ಕಳ ಆದಾವೇನ?”-ಅಂದಳು. ಮತ್ತೇನು ತಿಳಿಯಿತೋ, “ನನ್ನ ಗಂಡಗ ರೋಗ ಐತಲ್ಲ ಎವ್ವಾ” ಅಂದಳು. +“ದೇವರ ಸತ್ಯೆ ಮನಶೇರಿಗೆ ತಿಳಿದೀತೇನಽ ತಾಯಿ? ದೇವರ ಮುಂದ ನಾವೆಷ್ಟರವರಾ? ನೀ ಬಗ್ಗಿ ಬಂದರ ತಾಯಿ ಅದನ್ನೂ ಪರಿಹಾರ ಮಾಡತಾಳ. ನಿನ್ನ ಗಂಡನ ಸುದ್ದಿ ಕುಮುದವ್ವಗ ಗೊತ್ತಿಲ್ಲಂದಿ?” +ಈ ಮಾತು ಅವಳಿಗೆ ಪಟಾಯಿಸಿತು. +“ಹೌಂದಽ ಶೀನಿಂಗಿ, ದೇವೀನಽ ನಿನ್ನ ಬಾಯಿಂದ ಈ ಮಾತ ಆಡಿಸಿರಬಾರದ್ಯಾಕ?”-ಎಂದು ಎದ್ದಳು. +ಅಂದೇ ಕುಮುದವ್ವನಿಗೆ ಹರಕೆ ಹೊತ್ತಳು. ಮಕ್ಕಳಾದರೆ ತನ್ನ ಅತ್ತೆ ಕೊಡುವ ಚಿನ್ನದ ನಡುಪಟ್ಟಿಯನ್ನು ಅವಳಿಗೇ ಕೊಡುವುದಾಗಿ ಹೇಳಿದಳು. ಹರಕೆ ಹೊತ್ತದಿನ ಸೋಮವಾರ. ಅದು ಸಾವಳಗಿ ಶಿವನಿಂಗನ ವಾರ. ಅವನ ಹೆಸರಿನಲ್ಲಿ ಪ್ರತಿ ಸೋಮವಾರ ಉಪವಾಸವಿರುವುದಾಗಿ ಬೇಡಿಕೊಂಡಳು. ಮಗನಾದರೆ ಮೂರುವರ್ಷ ಎತ್ತಿಕೊಂಡು ಬಂದು ಶಿವನಿಂಗನ ಕೊಂಡ ಹಾಯುವುದಾಗಿಯೂ, ಸಿದ್ಧರಾಮಸ್ವಾಮಿಗಳಿಗೆ ಬೆಳ್ಳೀ ಚಡಿ ಮಾಡಿಸಿಕೊಡುವುದಾಗಿ ಹರಕೆ ಹೊತ್ತಳು. ಅದೇ ಕಾಲಕ್ಕೆ ಕಾಗೆಯೊಂದು ಕೂಗಿ ಶುಭಲಕ್ಷಣವಾಯಿತು. ಕೂಗಿ ನೆಂಟರನ್ನು ಕರೆಯುವ ಹಾಗೆ ಬೇರೆ ಸೀಮೆಯ ಈ ನೆಂಟನನ್ನೂ ಕರೆತರಲೆಂದು ಹಾರೈಸಿದೆವು; ಹಾಗೆಂದು ನಂಬಿದೆವು. +ಏಳು +ನಾವೇ ಹೀಗೇ ಶಿವನೇ ಎಂದು ಕೈ ಹೊತ್ತು ಕೂತಿದ್ದರೆ ಅವರಪ್ಪ ಬಂದು ತನ್ನ ಮನಸ್ಸಿನ ನಿಜ ತೋರಿಸಿ ಹುಣ್ಣಿನ ಮೇಲೆ ಬರೆಯೆಳೆದ. ನಡೆಯಲಿಕ್ಕೆ ಬಂದವಳು ತೌರಿಗಿನ್ನೂ ಹೋಗಿರಲಿಲ್ಲವಲ್ಲ. ಅದೇ ನೆಪದಿಂದ ಗೌಡಬಂದ. ಮದುವೆಯ ಮೊದಲನೇ ವರ್ಷ ಅದು. ದೀಪಾವಳಿ ಹಬ್ಬಕ್ಕೆ ಮಗಳು ಅಳಿಯ ತಮ್ಮಲ್ಲಿಗೇ ಬರಬೇಕೆಂದು ಹೇಳಿದ. ಸರಗಂ ದೇಸಾಯಿ ಸರಳ ಮನುಷ್ಯ. “ಓಹೋ ಇಬ್ಬರೂ ಬರ್‍ತೀವಿ” ಅಂತ ಅಂದುಬಿಟ್ಟ. ಸಿಂಗಾರೆವ್ವನಿಗೆ ಅಸಮಧಾನವಿತ್ತಲ್ಲ” ಆಗೋದಿಲ್ಲ” ಅಂದಳು. +“ಆಗೋದಿಲ್ಲಂದರ ಬ್ಯಾಡ. ಬೇಕಾದರ ನೀವು ಒಬ್ಬರೇ ಹೋಗಿ ಬರ್ರಿ” ಎಂದು ಹೆಂಡತಿಗೆ ಹೇಳಿದ. +“ನಾನೂ ಹೋಗೋದಿಲ್ಲ.” +“ಆಯಿತಲ್ಲ ಮಾವ, ನಾವಿಬ್ಬರೂ ಬರೋಣಿಲ್ಲ”ಎಂದು ಹೇಳಿ ದೇಸಾಯಿ ಹೊರಟುಹೋದ. ಗೌಡ ಅಷ್ಟಕ್ಕೇ ಸುಮ್ಮನಾಗಿದ್ದರೆ ಪಾಡಿತ್ತು. ಕೈ ಹೊಸೆದು ಅಕ್ಕರತೆ ಅಭಿನಯಿಸುತ್ತ ಸುತ್ತ ಯಾರಿಲ್ಲದ್ದನ್ನು ಗಮನಿಸಿ, +“ನೋಡ ಸಿಂಗಾರೆವ್ವ, ನಿನ್ನ ಸಲುವಾಗಿ ಎಷ್ಟ ತ್ರಾಸ ತಗೊಂಡೀನಿ. ಶಿರಟ್ಟಿ ಕೇಸಿನಾಗ ಮನ್ಯಾಗಿನ ಚಿನ್ನ ಕರಗಿಹೋಯ್ತು”-ಅಂದ. ಸಿಂಗಾರೆವ್ವ ಸುಮ್ಮನೆ ಇದ್ದಳು. +“ಚಲೋ ಮನೀಗಿ ಬಂದಿ ಅಂತ ಕೊಟ್ಟ ಮನಿ ಮರೀಬ್ಯಾಡವಾ, ಅದನೂ ಅಷ್ಟು ಎತ್ತಿ ಹಿಡಿ.” +ಸಿಂಗಾರೆವ್ವ ಈಗಲೂ ಸುಮ್ಮನಿದ್ದಳು. +“ಅಡಚಣಿ ಭಾಳ ಐತಿ. ಈಗೊಂದ ಹತ್ತುಸಾವಿರ ರೂಪಾಯಿ ಸಾಗಸ್ತೀಯೇನು?”-ಅಂದ. +“ನನ್ನ ಹಂತ್ಯಾಕ ಎಲ್ಲೀ ರೊಕ್ಕ?” -ಅಂದಳು. +“ಎಲ್ಲೀವಂದರ ಹೆಂಗವಾ, ನಿನ್ನ ಮದಿವೀ ಸಾಲಿದು. ಬೇಕಾದ್ರ ನಿನ್ನವೆರಡು ದಾಗೀನ(ಆಭರಣ) ಕೊಟ್ಟಿರು, ಆಮ್ಯಾಲ ನೋಡೋಣಂತ”-ಅಂದ. +-ಈ ಮಾತು ಹೇಳಿದನೋ ಇಲ್ಲವೋ ಸಿಂಗಾರೆವ್ವನಿಗೆ ಅದೆಲ್ಲಿಂದ ಬಂತೋ ಭಾರೀ ಸಿಟ್ಟು ಬಂದು,- +“ಹೌಂದ ಹೌಂದ, ಜಗತ್ತಿನಾಗ ಯಾರೂ ಮಾಡಾಣಿಲ್ಲ. ನನ್ನ ಮದಿವೀ ಮಾಡಿ ಉಪಕಾರ ಮಾಡಿದೀ ನೋಡು. ಹೆಣದ ಜೋಡಿ ಮದಿವಿ ಮಾಡಿದಿ, ಅಲ್ಲೀ ಆಸ್ತಿಪಾಸ್ತಿ ಎಲ್ಲ ನುಂಗಿದಿ. ಈ ಗಂಡನೂ ಲಗೂ ಸಾಯ್ತಾನ, ಇದೂ ಆಸ್ತಿ ನಿನಗಽ ಆಗ್ತೈತಿ ಅಂತ ಮದಿವಿ ಮಾಡಿದಿ. ನಿನ್ನ ಆಸೆ ಇನ್ನೂ ಕೈಗೂಡವಲ್ದು, ಕೆಡಕನ್ನಿಸೇತ್ಯೋ ಏನೋ! ಅದಕ್ಕಽ ಈಗ ಈ ಆಟ ಹೂಡೀದೀ.” +ನಾನು ಹುಟ್ಟಿದಾಗಿನಿಂದ ಕಂಡಿದ್ದೇನೆ, ಅವಳೆಂದೂ, ಅದೂ ಈ ಥರ ಸಿಟ್ಟಿಗೆದ್ದವಳಲ್ಲ. ನಮ್ಮ ಸಿಂಗಾರೆವ್ವ ಬಹಳ ಮೃದು ಸ್ವಭಾವದ ಹೆಂಗಸು, ಹೂವಿನಂಥಾಕಿ. ಈಗಿನ ಅದ್ಯಾವ ಭೂತ ಅವಳ ಮೈಯಲ್ಲಿ ಹೊಕ್ಕಿತೋ ಅಥವಾ ಹಿಂದಿನಿಂದ ತಡೆದಿಟ್ಟ ಸಿಟ್ಟು ಈಗ ಕಟ್ಟೆಯೊಡೆದು ಹೊರನುಗ್ಗಿತೋ! ಹಡೆದ ಅಪ್ಪನಿಗೇ ಹೀಗೆ ಹೇಳೋಣವೆಂದರೆ! ಗೌಡನ ಬಗ್ಗೆ ಮೊದಲೇ ನನಗೆ ಸಿಟ್ಟಿತ್ತು. ಈ ಮಾತು ಕೇಳಿ ಆನಂದವಾಗಬೇಕಿತ್ತು. ಆದರೆ ನನಗೇ ಗಾಬರಿಯಾಯಿತೆಂದರೆ! ಆಶ್ಚರ್ಯವೆಂದರೆ ಗೌಡನಿಗೆ ಸಿಟ್ಟು ಬರಲೇ ಇಲ್ಲ. ಮೊದಲೇ ಇದನ್ನೆಲ್ಲ ಲೆಕ್ಕಹಾಕಿದ್ದವನಂತೆ ತನ್ನ ವ್ಯಂಗ್ಯನಗೆ ನಗುತ್ತಾ “ಹಡೆದವ್ರಿಗೆ ಹಾಂಗೆಲ್ಲ ಅನಬಾರದವ, ಇದಽ ನಿನ್ನ ಖಾಯಂ ಮನಿ ಅಲ್ಲ”-ಅಂದ. +“ಅಂದರ?” +“ಅದಽ ಹೇಳಿದ್ಯಲ್ಲ ಹಾಂಗ ನಿನ ಗಂಡ ಸತ್ತ ಮ್ಯಾಲ ನಿನಗೊಂದು ಆಧಾರ ಬೇಕೋ ಬ್ಯಾಡೋ?” +ಈಗ ಮಾತ್ರ ಸಿಂಗಾರೆವ್ವ ಭಗ್ಗನೆ ಉರಿಯತೊಡಗಿದಳು. ತುಟಿ ನಡುಗಿ ಕಣ್ಣು ಕೆಂಪಾದವು. ದೊಪ್ಪನೆ ಕೆಳಗಡೆ ಕೂತು ಬಲಗೈಯಿಂದ ನೆಲ ಬಾರಿಸುತ್ತ “ಹಾ ಹಾ, ಇದಽ ನನ್ನ ಖಾಯಂ ಮನಿ. ತೌರುಮನಿ ಹಾಳಾಗಿ ಬಾಗಿಲಿಗೆ ಬೇಲಿ ಹಚ್ಚಲಿ. ನನ್ನನ್ನ ಬರೀ ಸಾಯೋ ಗಂಡರಿಗಿ ಮಾರಿ ಭಾಡಾ ತಿಂದೇನಂತೀಯೇನೋ! ಥೂ ನಿನಗ ಹೆಂಗ ತಂದಿ ಅಂತನ್ಲಿ. ನನ್ಗಂಡ ಸಾಯತಾನಂತ ಲೆಕ್ಕ ಹಾಕೀಯಲ್ಲ, ಉಳಿಸ್ಕೋತೀನಿ. ಗಂಡುಮಗನ್ನ ಹಡದ ತೋರ್‍ಸಾಕ ನಿನ್ನ ಕರಸ್ತೀನಿ, ಆಗ ಬಂದೀಯಂತ. ಅಲ್ಲೀತನಕ ಈ ಕಡೆ ಕಾಲಿಡಬ್ಯಾಡ”-ಎಂದು ಹೇಳಿ ಅಲ್ಲಿ ನಿಲ್ಲಲಾರದೆ ಒಳಕ್ಕೆ ಹೋದಳು. +ಗೌಡ ತುಸು ಹೊತ್ತು ಅಲ್ಲೆ ಕೂತ. ಬಹುಶಃ ಸಿಂಗಾರೆವ್ವನಿಂದ ಇಂಥಾ ಮಾತನ್ನವ ನಿರೀಕ್ಷಿಸಿರಲಿಲ್ಲ. ಅಥವಾ ಯಾರಿಂದಲೂ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ನಾಚಿಕೆಯ ನೆರಳೇನೋ ಅವನ ಮುಖದಲ್ಲಿ ಸುಳಿದಾಡಿತು. ಬಹುಶಃ ತನ್ನ ಗುಟ್ಟು ಈ ರೀತಿ ಬಯಲಾದದ್ದಕ್ಕೆ ಇದ್ದೀತು. ಆದರೆ ಅದೂ ಬಹಳ ಹೊತ್ತು ಉಳಿಯಲಿಲ್ಲ. ಮತ್ತೆ ಅದೇ ವ್ಯಂಗ್ಯನಗೆ ಮುಖದಲ್ಲಿ ಮೂಡಿತು. ಹೊರಟುಹೋದ. ನಾನೂ ಏನೊಂದೂ ಆಡಲಿಲ್ಲ. +ಸಿಂಗಾರೆವ್ವ ದೊರೆಸಾನಿಯಾದದ್ದರಿಂದ ಮನೆಬಿಟ್ಟು ಊರಲ್ಲಿ ಪ್ರವೇಶಿಸುವಂತಿರಲಿಲ್ಲ. ನನಗ ಅಂಥ ನಿರ್ಬಂಧಗಳಿರಲಿಲ್ಲವಾದ್ದರಿಂದ ಆಳುಗಳನ್ನು ಕರೆಯುವುದಕ್ಕೆ, ಹರಟೆ ಹೊಡೆಯುವುದಕ್ಕೆ ಊರಿನಲ್ಲಿ ಹೋಗುತ್ತಿದ್ದೆ. ಊರಿನಲ್ಲಿ ನನಗೆಷ್ಟೋ ಮಂದಿ ಗೆಲತಿಯರಿದ್ದರು. ಈ ಊರಿನ ಹೆಂಗಸರು ಬಹಳ ಒಳ್ಳೆಯವರು. ಮೈ ಮುರಿದು ಹೊಲಮನೆಗಳಲ್ಲಿ ದುಡಿಯುತ್ತಾರೆ. ಬಂದುದರಲ್ಲಿ ನೀರಂಬಲಿಯೋ ಗಂಜೀನುಚ್ಚೋ ಮಾಡಿ, ಗಂಡ-ಮಕ್ಕಳೊಂದಿಗೆ ಹಂಚಿಕೊಂಡು ಕುಡಿಯುತ್ತಾರೆ. ಯಾರ ಕಣ್ಣಲ್ಲಿಯೂ ಅತೃಪ್ತಿಯೆಂಬುದಿಲ್ಲ. ಏನು ಬಂದರೂ ಅದನ್ನು ಕುಮುದವ್ವನ ಪ್ರಸಾದವೆಂದು ಉಡಿಯೊಡ್ಡಲು ಸದಾ ಸಿದ್ಧ. ಮತ್ತು ಕೃತಜ್ಞತೆಯಿಂದ ಅವಳನ್ನು ಹಾಡಿಹೊಗಳಲು ಪದಗಳು ಅವರ ನಾಲಗೆಯ ತುದಿಗಳಲ್ಲೇ ನಿಂತಿರುತ್ತವೆ. ಈ ಹೆಂಗಸರು ಏನನ್ನೂ ಮುಚ್ಚಿಕೊಂಬವರಲ್ಲ, ಹಾದರವನ್ನೂ, ಏನಿದ್ದರೂ ಎದುರಿಗೇ ಅಡಿ ಚುಕ್ತ ಮಾಡುವಂಥವರು. +ಸರಗಂ ದೇಸಾಯಿ ಒಬ್ಬಂಟಿಗನಾಗಿದ್ದಾಗ ಅರಮನೆ ಅವರ ಆಸಕ್ತಿಯ ಕೇಂದ್ರವಾಗಿರಲಿಲ್ಲ. ನಾವು ಬಂದಿವಲ್ಲ, ಸುರುವಾಯ್ತು. ಬಂದು ಬಂದು ಸಿಂಗಾರೆವ್ವನಿಗೆ ನಮಸ್ಕಾರ ಮಾಡೋದೇನು, ಕಣ್ಣರಳಿಸಿ ನೋಡುತ್ತ ನಿಲ್ಲೋದೇನು, ಈಕೆ ಮಾತಾಡಿಸಿದರೆ ಹಿಗ್ಗೋದೇನು, ಅಯ್ಯಯ್ಯೋ ಈಕೆ ಕೇಳಿದ್ದರೆ ನಿಂತಲ್ಲೇ ಪ್ರಾಣಬಿಡೋರು! ಕುಟ್ಟುಬೀಸುವಾಗ ಅವರು ಸಿಂಗಾರೆವ್ವನ ಬಗ್ಗೆ ಹಾಡಿಕೊಳ್ಳೋದನ್ನ ನಾನೇ ಕೇಳಿದ್ದೇನೆ,-ಇವಳು ಸ್ವಥಾ ದೇವಿ ಇದ್ದಹಾಂಗಿದ್ದಳಂತೆ, ಬಂಗಾರ ಕೂದಲಿನವಳಂತೆ,-ಇವಳು ಒಮ್ಮೆ ನೋಡಿದರೆ ರೋಗ ಪರಿಹಾರವಾಗುತ್ತದಂತೆ, ಇವಳು ಅಂಗಾಲಿಟ್ಟಲ್ಲಿ ಕುಂಕುಮದ ಹುಡಿ ಬೀಳುತ್ತದಂತೆ, ಈಕೆ ಇರೋದು ತಮ್ಮ ಸೌಭಾಗ್ಯವೆಂಬಂತೆ ಹಾಡಿಕೊಂಬವರು. ಇಂಥಾ ತಾಯಿಗೆ ಎಂಥಾ ಗಂಡ ಗಂಟುಬಿದ್ದನಲ್ಲಾ ಎಂದು ಕೆಲವು ಮುದುಕಿಯರು ಹಳಹಳಿಸದೆಯೂ ಇರಲಿಲ್ಲ. ಏನೇ ಹೇಳು, ಬಹಳ ಸರಳ ಜನ. ಅಸೂಯೆ ಇಲ್ಲದವರು. +ಆದರೆ ಗಂಡಸರಿದ್ದಾರೆ ನೋಡು, ಹೊಟ್ಟೆಕಿಚ್ಚಿನವರು. ಒಬ್ಬೊಬ್ಬರೂ ಈ ಅರಮನೆಯಲ್ಲಿ ತನ್ನ ಮನೆಯಲ್ಲಿ ಎಂದು ಒಳಗೊಳಗೇ ನಂಬಿದವರು. ಮತ್ತು ಅದೇನಾದರೂ ಹಾಳಾದರೆ ತಮ್ಮ ಪಾಲಿಗೆ ಅದರ ಎಷ್ಟು ಕಲ್ಲು, ಎಷ್ಟು ಮರ ಬರಬೇಕೆಂಬುದನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ ಮಂಡಿಗೆ ತಿಂಬವರು. ಇವರಲ್ಲಿ ಎಷ್ಟೋ ಮಂದಿ ದೇಸಗತಿಯಿಂದ ಸ್ಥಿತಿವಂತರಾದವರು. ಆದರೂ ಆ ಜನಕ್ಕೆ ಕೃತಜ್ಞತೆ ಬೇಡ, ತೃಪ್ತಿ ಕೂಡ ಇರಲಿಲ್ಲ. ಅವರೇನಾದರೂ ದೇಸಗತಿ ಬಗ್ಗೆ ಆಡಿದರೆ, ನೀನು ಖಂಡಿತ ತಿಳಿಯಬಹುದು: ಅವರ ಮನಸ್ಸಿನಲ್ಲಿರೋದು ಅದಲ್ಲ-ಅಂತ. ತಮ್ಮ ಮಾತುಗಳಿಂದ ಮೈಮರೆಸಿ, ನೀನು ಎಲ್ಲಿ ಮೈಮರೆಯುತ್ತೀಯೋ ಅಲ್ಲಿಂದಲೇ ಒಳಹೊಕ್ಕು ದೋಚುವವರು. ನಾನು ಹೀಗೆ ಹೇಳುವುದಕ್ಕೆ ಕಾರಣಗಳಿವೆ: +ದೇಸಾಯಿಗೆ ಬಯಲಾಟದ ಹುಚ್ಚಿತ್ತಲ್ಲ, ಹುಚ್ಚೇನು ಬಯಲಾತವಾಡುವುದೇ ಅವನ ಕಸುಬಾಗಿತ್ತು. ಬಯಲಾಟಕ್ಕೆ ಅಲತಗಿಯಿಂದ ಚಿಮಣಾಳನ್ನು ಕರೆಸುತ್ತಿದ್ದರು. ಅವಳಿಗೆ ಬೇಕಾದಷ್ಟು ಹಣ ಸುರಿದು ಎಂಟೆಂಟು ದಿನ ಇಲ್ಲೇ ಇಟ್ಟುಕೊಳ್ಳೂತ್ತಿದ್ದರು. ಇವರಾಡುವ ಬಯಲಾಟಗಳೋ, ಸಿಂಗಾರೆವ್ವನ ಮಲಗುವ ಕೋಣೆಯಿಂದ ನಾವೇ ನೋಡಿದ್ದೇವಲ್ಲ,- ಚೆನ್ನಾಗಿರುತ್ತಿರಲಿಲ್ಲ. ಸರಗಂ ದೇಸಾಯಿ ರಾಜನಾಗಿರುತ್ತಿದ್ದ. ಅದೇನು ಪಾರ್ಟೋ, ಅದೇನು ಅಭಿನಯವೋ, ಇವ ಬಂದೊಡನೆ ಜನ ಬಾಯಿ ಮುಚ್ಜಿಕೊಂಡು ನಗುತ್ತಿದ್ದರು. ಸುಳ್ಯಾಕೆ ಹೇಳಲಿ, ಇವನ ಭಾಗ ಬಂದೊಡನೆ ಸಿಂಗಾರೆವ್ವ ಕಿಡಕಿ ಬಾಗಿಲು ಮುಚ್ಚಿ ಮಲಗಿಬಿಡುತ್ತಿದ್ದಳು. ಇದಲ್ಲ ನಾನು ಹೇಳಬೇಕೆಂದದ್ದು. ಬಯಲಾಟದ ಹಿಂದುಮುಂದಿನ ನಾಕೈದು ದಿನ ಸರಿರಾತ್ರಿ ದೇಸಾಯಿಯನ್ನು ಹೊತ್ತುಕೊಂಡೇ ಮನೆಗೆ ಬರುತ್ತಿದ್ದರು. ಅವ ಬೇಹೋಶ್ ಆಗುವುದು ನಮಗೆ ಗೊತ್ತಿತ್ತಲ್ಲ, ದೈವ ಶಪಿಸುತ್ತ ಉಪಚರಿಸುತ್ತಿದ್ದೆವು. ಆದರೆ ಬಯಲಾಟದ ಹಿಂದುಮುಂದಿನ ದಿನಗಳಲ್ಲೇ ಯಾಕೆ ಹೀಗಾಗಬೇಕೆಂದು ನಮಗೆ ಹೊಳೆದಿರಲೇ ಇಲ್ಲ. +ಯಾಕೆಂದರೆ ಅಲ್ಲಿ ಚಿಮಣಾಳ ತೊಡೆ ನೋಡುತ್ತಿದ್ದ! ಆ ಕಾರ್ಯಕ್ರಮ ನಡೆಯುತ್ತಿದ್ದುದು ಹೀಗೆ: ಚಿಮಣಾಳನ್ನು ಕರೆತಂದವನು ತಾಲೀಮು ಮುಗಿದಮೇಲೆ ಚಿಮಣಾಳ ರೂಪ, ಮೈಮಾಟವನ್ನು ವರ್ಣಿಸಿ, ದೇಸಾಯಿಯನ್ನು ರಮಿಸಿ ಒಂದು ಗುಡಿಸಲಿಗೆ ಕರೆದೊಯ್ಯುವುದಂತೆ. ಗುಡಿಸಿಲ ಹೊರಗೆ ದೇಸಾಯಿಯನ್ನು ಕೂರಿಸಿ ಒಂದು ಸಣ್ಣ ಕಿಂಡಿಯಿಂದ ಒಳಗೆ ನೋಡಲಿಕ್ಕೆ ಹೇಳುವುದು. ಒಳಗೆ ದೀಪದ ಬೆಳಕಿನಲ್ಲಿದ್ದ ಅವಳು ಮೆಲ್ಲನೆ ಸೀರೆ ಎತ್ತುವುದು, ಎತ್ತುತ್ತ ಹೋದಂತೆ ಇವ ಉದ್ರಿಕ್ತನಾಗಿ, ಮೈಮುಖ ಕೆಂಪಾಗಿ, ಅವಳು ಪೂರಾ ತೊಡೆ ತೋರಿಸುವಷ್ಟರಲ್ಲಿ ಈತ ಬೇಹೋಶ್ ಆಗಿ ಬೀಳುವುದು. ಆಮೇಲೆ ಹೊತ್ತು ತಂದು ಮನೆಯಲ್ಲಿ ಚೆಲ್ಲುವುದು. ದೇಸಾಯಿ ಈ ಉದ್ರೇಕಕ್ಕಾಗಿ ಬೇಕಾದಷ್ಟು ಹಣ ಸುರಿಯುತ್ತಿದ್ದ. ಊರಿನ ಕೆಲವರು ಇದರ ಉಪಯೋಗವನ್ನು ಸರಿಯಾಗೇ ಮಾಡಿಕೊಳ್ಳುತ್ತಿದ್ದರು. ಕೆಲವರಂತೂ ಚಿಮಣಾ ಎಂದು ಹೇಳಿ ತಮ್ಮ ಹೆಂಡಂದಿರನ್ನು ಕರೆತಂದು ತೋರಿಸುತ್ತಿದ್ದರಂತೆ. ಹ್ಯಾಗೂ ದೇಸಾಯಿ ಮುಖದ ತನಕ ನೋಡುವುದಿಲ್ಲವಲ್ಲ, ಆತಂಕವೇನಿದೆ? ಯಾವಳ ಕತ್ತಿನಲ್ಲಾದರೂ ಅರಮನೆಯ ಆಭರಣ ಕಂಡಿತೆನ್ನು, ಅವಳು ದೇಸಾಯಿಗೆ ತೊಡೆ ತೋರಿದವಳೆಂದೇ ಜನ ಆಡಿಕೊಳ್ಳುತ್ತಿದ್ದರು. ಬರಬರುತ್ತ ಅಂಥ ಆಭರಣ ಧರಿಸುವುದನ್ನೇ ಜನ ನಾಚಿ ಬಿಟ್ಟರಂತೆ. +ಇಂಥಾದ್ದನ್ನ ಎಲ್ಲಿಯಾದರೂ ಕೇಳಿದ್ದೀಯೇನಪ್ಪ? ಕೇಳೋದೇನು ಬಂತು. ಮುಂದೆ ನಾನೇ ಕಣ್ಣಾರೆ ಕಂಡೆ. ಆದರೆ ನನಗೆ ಭಾರೀ ದೊಡ್ಡ ಆಘಾತವಾಗಿತ್ತು. ಜನ ಹೇಳುವುದೆಲ್ಲ ನನಗೆ ಖಾತ್ರಿಯಾಗಿತ್ತು. ಯಾಕೆಂದರೆ ಸಿಂಗಾರೆವ್ವನ ತೊಡೆ ನೋಡಿ ದೇಸಾಯಿ ಮೂರ್ಛೆ ಹೋದದ್ದಿತ್ತಲ್ಲ. ಇವ ಹೀಂಗಿದ್ದರೆ ಸಿಂಗಾರೆವ್ವ ವ್ರತ ಮಾಡಿದರೇನು ಬಂತು, ಹರಕೆ ಹೊತ್ತರೇನು ಬಂತು, ದಿಂಡುರುಳಿದರೇನು ಬಂತು? ಇದನ್ನು ಅವಳಿಗೆ ಹ್ಯಾಗೆ ಹೇಳಬೇಕೆಂಬುದೇ ನನಗೆ ದೊಡ್ಡ ಗೂಢವಾಯ್ತು. ಹೇಳಿದರೆ ಸುಖವಿಲ್ಲ ನಿಜ; ಹೇಳದಿದ್ದರೂ ಸುಖವಿಲ್ಲ. ಅವಳನ್ನು ಕಾಡಿಸಲಿಕ್ಕೆ ಅಪ್ಪ, ಗಂಡ, ಈ ಜನ ಸಾಲದೆಂದು ದೇವರು ಕೂಡ ಇವರ ಸಂಚಿನಲ್ಲಿ ಸಾಮೀಲಾಗಿದ್ದಾನೆನ್ನಿಸಿತು. ಮನುಷ್ಯರ ದುಷ್ಟತನ ಹ್ಯಾಗೊ ಎದುರಿಸಬಹುದು. ದೇವರೇ ಎದುರು ಬಿದ್ದರೆ ಗತಿ ಯಾರು? ಈ ವಿಚಾರ ತಲೆಗೆ ಹೊಕ್ಕೊಡನೆ ನಿಂತ ನೆಲ ಕುಸಿದ ಹಾಗಾಯ್ತು; ಮುಗಿಲು ಹರಿದು ಮೈಮೇಲೆ ಬೀಳುವುದೊಂದು ಬಾಕಿ. “ಸಿಂಗಾರೆವ್ವ ಕೆಟ್ಟೆ ತಾಯಿ ಕೆಟ್ಟೆ” ಎಂದು ಎದೆಯ ಮೇಲೆ ಕೈಯಿಟ್ಟುಕೊಂಡು ಕುಸಿದುಬಿಟ್ಟೆ. +ಆ ದಿನ ಮಧ್ಯಾಹ್ನ ಊರೊಳಗಿಂದ ಬಂದಾಗ ಅರಮನೆಯಲ್ಲಿ ಸಿಂಗಾರೆವ್ವ ಕಾಣಿಸಲಿಲ್ಲ. ಮಲಗೋ ಅಂತಸ್ತಿನಲ್ಲೂ ಇರಲಿಲ್ಲ. ಅತ್ತೆಯ ಬಳಿ ನೋಡಿದೆ. ಅಡಿಗೆಮನೆ ನೋಡಿದೆ; ಬಚ್ಚಲಮನೆ ಕೂಡ ನೋಡಿದೆ: ಆಯ್ ಶಿವನೇ, ಮನೆ ಬಿಟ್ಟು ಪೌಳಿಯಾಚೆ ಹೆಜ್ಜೆಯಿಟ್ಟವಳಲ್ಲ. ಎಲ್ಲಿ ಇದ್ದಿದ್ದಾಳೆಂದು ದನದ ಕೊಟ್ಟಿಗೆಯ ಕಡೆಗೆ ನಡೆದೆ. ಯಾಕೆಂದರೆ, ಕೆಂದಾಕಳು ಮೊನ್ನೆಯಷ್ಟೇ ಕರು ಹಾಕಿತ್ತು,- ಬಾಣಂತಿ ದನಗಳ ಆರೈಕೆ ಮಾಡುವುದು ಅವಳಿಗೆ ತುಂಬ ಪ್ರಿಯವಾದ ಕೆಲಸವೆಂದು ನಾನು ಬಲ್ಲೆ. ನಾನು ಊಹಿಸಿದಂತೆಯೇ ಅಲ್ಲಿದ್ದಳು. ನಂಜಿಯ ಜೊತೆಗೆ ಅದೇನೋ ಗುಟ್ಟನ್ನು ಹಂಚಿಕೊಂಬವರಂತೆ ಇಳಿದನಿಯಲ್ಲಿ ಮಾತಾಡುತ್ತಿದ್ದಳು. ಜೀವ ತಡೆಯಲಿಲ್ಲ, ನಾನೂ ಮೆಲ್ಲಗೆ ಅವರ ಬಳಿಗೇ ಹೋಗಿ ಅವರಾಡುವುದೆಲ್ಲ ಕೇಳಿಸುವಷ್ಟು ಸಮೀಪ ನಿಂತೆ. ಮೇವಿನ ಕಟ್ಟೆಯ ಮರೆಯಲ್ಲಿ ನಿಂತುದರಿಂದ ನಾನು ಅವರ ಕಣ್ಣಿಗೆ ಬೀಳುತ್ತಿರಲಿಲ್ಲ. ಇಣಿಕಿ ನೋಡಿದೆ. +ಎಳೇ ಮಕ್ಕಳಂತೆ ಇಬ್ಬರೂ ಅಸಮಾನ ಆಸಕ್ತಿ ಮತ್ತು ಆನಂದದಿಂದ ಕಳೆಕಳೆಯಾಗಿದ್ದರು. ನಂಜಿ, ನಮ್ಮ ಹೆಣ್ಣಾಳು, ಚೊಚ್ಚಿಲು ಬಸಿರಿದ್ದದ್ದು ನನಗೆ ಗೊತ್ತಿತ್ತು. ಇಬ್ಬರೂ ಅದರ ಬಗ್ಗೇ ಮಾತಾಡುತ್ತಿದ್ದರು. ಈಗಷ್ಟೇ ಹೊಸ ಆಟಿಗೆಯನ್ನು ಹೊಂದಿದ ಯಜಮಾನಿಯಂತೆ ನಂಜಿ, ಅದು ತನಗಿಲ್ಲವಲ್ಲಾ ಎಂದು, ಅವಳ ಕೈಲಾದರೂ ಅದನ್ನು ನೋಡಿ ಆನಂದಿಸೋಣವೆಂದು, ಆಸೆಬುರಕತನದಿಂದ ನೋಡುವ ಬಡಕೂಸಿನಂತೆ ಸಿಂಗಾರೆವ್ವ-ಕಂಡರು. ನಂಜಿಯ ಮುಖದಲ್ಲಿ ತೃಪ್ತಿಯ ಬಣ್ಣ ಬಂದಿತ್ತು. ಹೊಡೆ ಹಿರಿದ ಬೆಳೆಯಂತೆ ಮುಗುಳುನಗೆ ಮುಖದಲ್ಲಿ ತುಳುಕಾಡುತ್ತಿತ್ತು. ದೇವರಮನೆಯ ನಂದಾದೀಪದಂತೆ ಅವಳ ಕಣ್ಣು ಶಾಂತವಾಗಿ, ನಿಶ್ಚಿಂತವಾಗಿ ಬೆಳಗುತ್ತಿದ್ದವು. ಸಿಂಗಾರೆವ್ವನ ಕಣ್ಣು ಆಸೆಯಿಂದ ಝಳಪಿಸುತ್ತಿದ್ದವು. ಮತ್ತೆ ಮತ್ತೆ ಅವಳೊಳಗೆ ಬಿರುಗಾಳಿಯೆದ್ದು ಹೊಯ್ದಾಡಿ ತಂತಾನೇ ಸುಂಟರಗಾಳಿಯಾಗಿ ಸುತ್ತುತ್ತಿತ್ತು. ಮತ್ತು ಅವಳ ಮುಖ ಕನ್ನಡಿಯಂತೆ ಅದನ್ನೆಲ್ಲ ಬಿಂಬಿಸುತ್ತಿತ್ತು. ಎಳೇ ಮಕ್ಕಳ ಹಾಗೆ ಏನೇನೋ ಕೇಳುತ್ತಿದ್ದಳು, ಹಾಗೆ ಕೇಳಿದಾಗ ಅವಳ ಉಸಿರಾಟ ಅಸಹಜವಾಗಿ ತೀವ್ರಗತಿಗೇರಿ ಕುಸಿಯುತ್ತಿತ್ತು. ದನಿಯ ಏರಿಳಿತ ಅಸಮಾನವಾಗಿತ್ತು. ಸಿಂಗಾರೆವ್ವ ಹೇಳಿದಳು: +“ನಂಜೀ, ಇನ್ನಮ್ಯಾಲ ಹೊಲಕ್ಕ ಹೋಗಬ್ಯಾಡ….” +“ನಮ್ಮತ್ತಿ ಬಿಡೋದಿಲ್ರೆವ್ವ.” +“ಬಿಡೋದಿಲ್ಲಂದರ? ಚೊಚ್ಚಿಲ ಬಸರಿ, ನಿಮ್ಮತ್ತಿಗಿ ತಿಳೀಬಾರದಾ? ಶೀನಿಂಗಿ ಬರಲಿ, ನಿಮ್ಮತ್ತಿಗೆ ಹೇಳಿಕಳಸ್ತೀನಿ; ಅಂಧಾಂಗ ನಂಜೀ, ಒಳಗ ಹೆಂಗ ಅನಸತೈತೆ?” +ನಂಜಿಯೇನು ಹೆತ್ತವಳೆ? ಅವಳಿಗೂ ಇದು ಹೊಸದೇ, ಬಾಯಿ ಬಿಟ್ಟು ಹೇಳಲಾರದ ಸುಖದಲ್ಲಿದ್ದವಳು, ಕಣ್ಣು ಮುಚ್ಚಿ ಮುಗುಳುನಕ್ಕು ಒಂದುಕ್ಷಣ ತಲೆದೂಗಿದಳಷ್ಟೆ. +“ಹಂಗಲ್ಲಗಽ ಹೊಟ್ಯಾಗ ಹೆಂಗ ಅನಸತೈತಿ?” +ನಂಜಿ ಈ ಮಾತಿಗೂ ಹಾಗೇ ನಕ್ಕು, “ನಂಗೊತ್ತಿಲ್ಲರೆವ್ವಾ” ಎಂದಳು. “ಏಳುವಾಗ, ಕೂಡುವಾಗ ಮೆಲ್ಲಗ ಕೂಡು. ಅವಸರ ಮಾಡಬ್ಯಾಡ. ನಿಚ್ಚಣಿಕಿ ಅಂತೂ ಹತ್ತಬ್ಯಾಡ. ಇದನೆಲ್ಲ ನಿಮ್ಮತ್ತಿಗಿ ಹೇಳಿಕಳಸ್ತೀನಿ. ನೀ ಏನ ಕಾಳಜಿ ಮಾಡಬ್ಯಾಡ. ನಿನ್ನ ಗಂಡ ಈಗ ನಿನ್ನ ಜಾಸ್ತಿ ಮಾಯೇ ಮಾಡತಾನೇನ?” +“ಹೋಗ್ರೆವಾ….” +“ಆಯ್ ಹೇಳಗಽ…..ರಾತ್ರಿ ಬರ್‍ತಾನಿಲ್ಲ? +“ಬರತಾನ, ಮನ್ನಿ ರಾತ್ರಿ ನಾ ಮಲಗಿದ್ದೆ, ಅವ ಬಂದು ಮೆಲ್ಲಗ ಹೊಟ್ಟೀ ಮ್ಯಾಲ ಕೈಯಾಡಿಸಿ ಮುದ್ದ ಕೊಟ್ಟ…” +ಇಷ್ಟು ಹೇಳಬೇಕಾದರೆ ಆ ಹುಡುಗಿ ನಾಚಿ ನೀರಾಗಿ ಮುಖ ಮುಚ್ಚಿಕೊಂಡಳು. ಸಿಂಗಾರೆವ್ವನಿಗೇನೋ ಅದೆಲ್ಲಾ ತನಗೇ ಆದಂತೆ ಮುಖ ಕೆಂಪೇರಿತ್ತು. +“ಆಯ್ ಶಿವನಽ, ಹೌಂದೇನ ನಂಜೀ?”-ಎನ್ನುತ್ತ ಮುಖದ ಮೇಲಿನ ಅವಳ ಕೈ ತೆಗೆದು ನಂಜಿಯ ಮುಖವನ್ನ ಕಣ್ಣಿನಿಂದ ಹೀರುವ ಹಾಗೆ ನೋಡಿ ಆನಂದಭರಿತಳಾದಳು. ತಕ್ಷಣ ಅದೇನೋ ತನ್ನ ಮನಸ್ಸು ಕೊರೆಯುತ್ತಿರುವಂತೆ, “ನಂಜೀ ಒಂದ ಮಾತ ಕೇಳಲೇನ?” ಎಂದಳು. +“ಕೇಳ್ರವ್ವ…..” +“ನೀ ಇಲ್ಲಂದರ….” +“ನಿಮಗ ಇಲ್ಲಂದೇನೇನ್ರಿ?…” +“ನಾನೂ ನಿನ್ನ ಹೊಟ್ಟಿಮ್ಯಾಲ ಒಮ್ಮಿ ಕೈಯಾಡಿಸಲೇನ?”-ಎಂದಳು, “ಹೂಂ” ಎನ್ನುತ್ತ ನಂಜಿ ಹೊಟ್ಟೆಯಮೇಲಿನ ಸೀರೆ ತೆಗೆದಳು. ಅವಳು ಇಷ್ಟು ಬೇಗ ಒಪ್ಪಿಕೊಂಡಾಳೆಂದು ಇವಳಿಗೆ ಅನ್ನಿಸಿರಲಿಲ್ಲವೆಂದು ತೋರುತ್ತದೆ. ಆದರೂ ಕೈಯಾಡಿಸುವ ಮುನ್ನ ಒಮ್ಮೆ ಹಿಂದ ಮುಂದ ನೋಡಿ, ಅಪರೂಪದ ಸೌಭಾಗ್ಯ ದೊರೆತುದಕ್ಕೆ ಆನಂದಗೊಂಡು, ಮೆಲ್ಲಗೆ ಅಂದರೆ ಮೆಲ್ಲಗೆ ಕೈಯಿಟ್ಟಳು. ಆಕೆ ಪುಳಕಿತಳಾದದ್ದನ್ನು, ಅವಳ ಕಣ್ಣು ದೀಪದ ಹಾಗೆ ಹೊಳೆಯುತ್ತಿದ್ದುದನ್ನು ಅಷ್ಟು ದೂರದಿಂದಲೂ ನಾನು ನೋಡುತ್ತಿದ್ದೆ. ಆನಂದೋದ್ರೇಕದಲ್ಲಿ ಮಾತು ಸಮ ಹೊರಡುತ್ತಿರಲಿಲ್ಲ. ದನಿ ಕಂಪಿಸುತ್ತ ಕೇಳಿದಳು- +“ನಂಜೀ, ಒಳಗ ಅದು ಹೆಂಗ ಹತ್ತತೈತಿ?” +“ಹೆಂಗೊ ಏನೋ, ನಂಗೊತ್ತಿಲ್ಲರೆವ್ವಾ.” +“ಗೊತ್ತಿಲ್ಲಂದರ, ನಾ ಹೇಳಲಿ?-ಅಂಗೈಯಾಗ ಹಕ್ಕೀಮರಿ ಹಿಡಿಧಾಂಗ ಅನಸತೈತಿ ಅಲ್ಲಾ?” +ನಂಜಿ ಹೂ ಅಂದಳು. ಹಾಗೇ ಕೈಯಾಡಿಸುತ್ತ, “ನಂಜೀ ನಿನಗ ಏನೇನ ಬೇಕ ಹೇಳ,ಏನೇನ ಬಯಕಾಗ್ಯಾವು? ಏನ ತಿನಬೇಕನಸತೈತಿ? ನನ್ನ ಮುಂದ ಹೇಳಽ….” “ಅವಳು “ಏನೂ ಬ್ಯಾಡ್ರೀ” ಎನ್ನುತ್ತಿದ್ದಳು. ಇವಳೇ ಒತ್ತಾಯ ಮಾಡಿ ಅವಳ ಬಾಯಿಂದ ಏನೇನೋ ಪಲ್ಯ ಏನೇನೋ ರೊಟ್ಟಿ, ಚಟ್ನಿ ಹೊರಡಿಸಿ “ನೀನು ಮೆಲ್ಲಗ ಮನೀ ಕಡೆ ನಡಿ, ಈಗಿಂದೀಗ ತಯಾರ ಮಾಡಿ ಶೀನಿಂಗೀನ ಕಳಸ್ತೀನಿ” ಎಂದು ಹೇಳಿ ಅಡಿಗೆ ಮನೆಯತ್ತ ಓಡಿದಳು. ನಾನೂ ಎದ್ದೆ. +ಓಡಿಹೋದವಳು ಶೀನಿಂಗೀ ಶೀನಿಂಗೀ ಎನ್ನುತ್ತ ಮನೆತುಂಬ ಹುಡುಕುತ್ತಿದ್ದಳು. ನನ್ನ ಕಂಡೊಡನೆ ಕೈ ಹಿಡಿದುಕೊಂಡು ಅಡಿಗೆ ಮನೆಗೆ ಎಳೆದುಕೊಂಡೇ ಹೋದಳು. “ನಂಜಿಗಿ ಬಯಕಿ ಹತ್ಯಾವಂತ; ಲಗೂನ ಅಡಿಗಿ ಮಡೂಣ ಬಾ” ಎಂದು ಹೇಳಿ ತಾನೂ ಸಹಾಯಕ್ಕೆ ನಿಂತಳು. ಅಡಿಗಿ ಮುಗಿಯುವ ತನಕ ನಂಜಿಯ ಬಗ್ಗೆ ಏನೇನೋ ಹೇಳಿದಳು. ಹೊಟ್ಟೆಯ ಮೇಲೆ ಕೈಯಾಡಿಸಿದ್ದನ್ನೂ ಹೇಳಿ, ಆ ಹೊಟ್ಟೆ ಹ್ಯಾಗಿರುತ್ತದೆಂದು ವರ್ಣನೆ ಮಾಡಿದಳು. ಅಡಿಗೆ ಮುಗಿದಾಗ ಸಂಜೆಯಾಗಿ ದನಕರು ಮನೆಗೆ ಬರುತ್ತಿದ್ದವು. ತಾನೇ ಕೈಯಾರೆ ಹೆಡಿಗೆ ತುಂಬಿ, ನನ್ನ ಹೊರಿಸಿ “ಹುಷಾರಾಗಿ ಉಣಿಸಿ ಬಾ” ಎಂದು ಬಾಗಿಲತನಕ ಬಂದು ಕಳಿಸಿದಳು. +ನಂಜಿಯ ಮನೆಗೆ ಹೋದೆ. ಮನೆ ಮುಂದೆ ಹೆಂಗಸರು ಸೇರಿದ್ದರು. ಯಾರೋ ಅವಳತ್ತೆ ಎಂದು ಕಾಣುತ್ತದೆ- ಅಳುತ್ತ ಯಾರನ್ನೋ ಶಪಿಸುತ್ತಿದ್ದಳು. ನಾನು ಬಂದುದನ್ನು ನೋಡಿದ ಒಬ್ಬ ಗರತಿ, ಬಂದವಳೇ ನನ್ನ ರೆಟ್ಟೀ ಹಿಡಿದು ಒಂದು ಸಂದಿಯಲ್ಲಿ ಕರೆದೊಯ್ದು, +“ಏನ ಶೀನಿಂಗಕ್ಕಾ, ಸಣ್ಣ ದೊರಿಸಾನಿ ಹಿಂಗ ಮಾಡಬೇಕೇನು?”-ಎಂದಳು. ನನಗೇನೂ ಅರ್ಥವಾಗಲಿಲ್ಲ. +“ಏನು, ಏನು ”-ಅಂದೆ. +“ಮದ್ದಿನದಾಗ ಸಣ್ಣ ದೊರಿಸಾನಿ ನಂಜೀನ ಕರದು ಹೊಟ್ಟಿಮ್ಯಾಲ ಕೈಯಾಡಿಸಿ ಕಳಿಸಿದಳಂತ. ನಂಜಿ ಮನೀಗಿ ಬಂದ ಹಲಿವುಳ್ದೈತಿ! ಪಾಪ, ಬಂಜೀ ಕೈ ಮುಟ್ಟಿದರ ಹೊಟ್ಟೀ ತಡದೀತಽ? ತಿಳೀಬಾರದ ದೊರಿಸಾನಿಗೆ? ನೀ ಆದರೂ ಬುದ್ಧಿ ಹೇಳಬಾರದ?” +-ಅಂದಳು. ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ. ಹಾ ಹೂ ಎನ್ನದೆ, ಹೊತ್ತ ಹೆಡಿಗೆ ಇಳಿಸದೆ ಒಂದೇ ಹೆಜ್ಜೆಯಲ್ಲಿ ಮನೆಗೆ ಬಂದೆ. ಬಂದವಳೇ ಗಾಳಿ ತುಂಬಿದ ಕರುವಿನಂತೆ ಅಡಿಗೆ ಮನೆ ಹೊಕ್ಕು ಹೆಡಿಗೆ ಇಳಿಸಿ ಕಂಬಕ್ಕೊರಗಿ ಹಾಗೇ ಕುಕ್ಕರಿಸಿದೆ. ಸುರಿಯೋ ಬೆವರು, ಒತ್ತಿ ಬರುತ್ತಿದ್ದ ಏದುಸಿರು, ಢವಢವ ಎದೆ ಹೊಡೆದುಕೊಂಡು ಕಣ್ಣಿಗೇನೂ ಕಾಣಿಸದಂತಾಗಿತ್ತು. ಅಷ್ಟೇ ಆತುರದಲ್ಲಿ ಸಿಂಗಾರೆವ್ವ ಬಂದಳು. ನಾ ಕೂತ ಭಂಗಿಯಿಂದಲೇ ಗಾಬರಿಯಾಗಿ +“ಶೀನಿಂಗೀ, ಯಾಕ? ಏನಾಯ್ತು?”-ಅಂದಳು. +“ನಂಜಿ ಹುಲಿವಳ್ದಾಳ ಎವ್ವಾ.” +‘ಏನಂದಿ?” +ನನ್ನ ಬಾಯೊಳಗ ಹುಳಬೀಳಲಿ, ಯಾರು ಎಂತಾ ಏನೂ ವಿಚಾರ ಮಾಡದೆ ಎಲ್ಲಾ ಹೇಳಿಬಿಟ್ಟೆ. +“ಖರೇನ ಎವ್ವಾ, ನೀ ಮದ್ದಿನದಾಗ ಆಕೀ ಹೊಟ್ಟೀಮ್ಯಾಲ ಕೈಯಾಡಿಸಿದೆಂದ. ಬಂಜೀ ಕೈಮುಟ್ಟಿ ಹಂಗಾಯ್ತಂತ ಎಲ್ಲರೂ ಆಡಿಕೋತಿದ್ದರು. ಓಡಿಬಂದೆ.” +ಸಿಂಗಾರೆವ್ವ ಕೇಳಿ, ಸುಂಟರಗಾಳಿಗೆ ಸಿಕ್ಕ ಎಳೇ ಬಿದಿರುಮೆಳೆಯಂತೆ ನಡುಗಿ, ಹೊಯ್ದಾಡಿ ನಿಂತಿರಲಾರದೆ ನಾ ಕೂತ ಕಂಬ ತಬ್ಬಿಕೊಂಡು ಹಾಗೇ ಕುಸಿದಳು. ಬಹಳ ಹೊತ್ತು ಮಾತಾಡಲಿಲ್ಲ. ಕೊನೆಗೆ ನಾ ಮಾಡಿದ್ದೇನೆಂದು ಅರಿವಿಗೆ ಬಂತು. ಸಿಂಗಾರೆವ್ವನ ಎದೆಯೊಳಗೆ ಭಾರೀ ಗಾಯವಾಗಿತ್ತು. “ಎವ್ವಾಽ” ಅಂದೆ. ಇಲ್ಲೀತನಕ ತಡೆಹಿಡಿದ ಅಳಾಪದ ಕಟ್ಟೆಯೊಡೆದು ಉಕ್ಕಿಬಂತು. +“ಶೀನಿಂಗಿ, ಶಿವ ನನ್ನ ಹಣ್ಯಾಗ ಇನ್ನಽ ಏನೇನ ಬರದ್ದಾನಽ”- ಎಂದು ಒದರಿ ಹೇಳುತ್ತ ಕಂಬಕ್ಕೆ ಹಣೆಹಣೆ ಗಿಟ್ಟಿಸತೊಡಗಿದಳು. ಎವ್ವಾ, ನನ್ನಾಣಿ ಹಿಂಗ ಮಾಡಬ್ಯಾಡೆಂದವಳೇ ಹೋಗಿ ಹಿಡಿದುಕೊಂಡು ಕಂಬದಿಂದ ದೂರ ಎಳೆದುತಂದೆ. ನನ್ನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಳು. +“ಮುತ್ತೈದೆ, ಮೂರೂಸಂಜಿ, ತುಂಬಿದ ಮನ್ಯಾಗ ಅಳಬಾರದೆವ್ವಾ”-ಅಂದೆ. ಹಾಗೇ ಕರೆದುಕೊಂಡು ಹೊರಗೆ ಬಂದೆ. ಪರಸ್ಪರ ಅಂಟಿಕೊಂಡೇ ಮನೆಯಂಗಳದ ತನಕ ಹೋದೆವು. ಬೆಳದಿಂಗಳಿತ್ತು. ಈಗ ಅಳೋದನ್ನ ನಿಲ್ಲಿಸಿ ನನ್ನ ಭುಜದ ಮೇಲೆ ತಲೆಯೂರಿ ಬರೀ ಕಣ್ಣೀರು ಸುರಿಸುತ್ತ ಕೂತಳು. +ಈ ದಿನ ಕಂಡು ಕೇಳಿದ ನಮ್ಮ ಕನಸುಗಳನ್ನು ಹುಡಿ ಮಾಡಿಬಿಟ್ಟಿದ್ದವು. ನಮ್ಮ ಎದೆಯೊಳಗೆ ಎಂಥಾ ದೊಡ್ಡ ಗಾಯವಾಗಿತ್ತೆಂದರೆ, ಅದು ಈ ಜನ್ಮದಲ್ಲಿ ಮಾಯುವ ಹಾಗಿರಲಿಲ್ಲ. ಹಾಗೆನಿಸಿದೊಡನೆ ಥಟ್ಟಂತೆ ಕಣ್ಣೀರು ಬಂತು. ಸಿಂಗಾರೆವ್ವನ ಕಡೆ ನೋಡಿ ಹಾಗೇ ಕೈಚಾಚಿದೆ. ದುಃಖದ ಝಳದಲ್ಲಿ ಅವಳೆಷ್ಟು ಬಾಡಿ ಮೆತ್ತಗಾಗಿದ್ದಳೆಂದರೆ, ಕೈ ಮುಟ್ಟಿದ್ದೇ ತಡ ಮೆತ್ತಗೆ ಕೂಸಿನ ಹಾಗೆ ನನ್ನ ತೆಕ್ಕೆಗೆ ಬಂದು, ಎದೆಯಲ್ಲಿ ಮುಖ ಹುದುಗಿದಳು. ಅಳುವ ಗೆಳತಿಯನ್ನು ಸಾಂತ್ವನಗೊಳಿಸಬೇಕು; ನನ್ನಿಂದಾಗಲಿಲ್ಲ. ಬೆಳದಿಂಗಳೇ ಆ ಕೆಲಸ ಮಾಡಲೆಂದು ಸುಮ್ಮನಾದೆ. +ಎಷ್ಟು ಹೊತ್ತು ಹೀಗೇ ಕೂತಿದ್ದೆವೋ, ಸಿಂಗಾರೆವ್ವನ ಕಣ್ಣೀರಿನಿಂದ ನನ್ನ ಕುಬಸ ಒದ್ದೆಯಾಗಿತ್ತು. ಬಿಕ್ಕು ನಿಂತಿದ್ದರೂ ನಿಟ್ಟುಸಿರಿನ ಬಿಸಿಯಿನ್ನೂ ಎದೆಗೆ ತಾಗುತ್ತಿತ್ತು. ಕರುಳು ಹಂಚಿಕೊಂಡವರ ಭಾವನೆಗಳು ಮಾತಿಲ್ಲದೆ ಪರಸ್ಪರ ತಿಳಿಯುವಂತಿತ್ತು. ಹಾಗೆ ನಮಗೂ ತಿಳಿದುಬಿಟ್ಟಿತ್ತು. ಶಿವನಿಗೆ ಕರುಳಿರಲಿಲ್ಲ. ಹಡೆದವನೊಬ್ಬ ವೈರಿ, ಮದುವೆಯಾದವ ಇನ್ನೊಬ್ಬ ವೈರಿ. ಮದುವೆಯಾಗಿ ಹೆಣ್ತನದ ಸುಖವಿಲ್ಲ, ಅದನ್ನು ಮರೆಯುವುದಕ್ಕೆ ಸಂತಾನ ಸುಖವಿಲ್ಲ. ಬರಿಯುಡಿಯಲ್ಲಿ ಬಂದು, ಬರಿಯುಡಿಯಲ್ಲೇ ಮಣ್ಣುಗಾಣುವುದು. ನನ್ನ ಹೃದಯಕ್ಕೆ ಹೇಳುವ ಹಾಗೆ ಎದೆಗೊರಗಿಕೊಂಡೇ, “ಶಿವ ನನ್ನ ಕೈ ಬಿಟ್ನಽ ಶೀನಿಂಗಿ!” ಎಂದಳು. ಈ ಮಾತು ಅವಳು ಹೇಳುವುದಷ್ಟೇ ತಡ, ತಮ್ಮಾ ನೀನು ನಂಬುತ್ತೀಯೋ ಇಲ್ಲವೋ ಪೌಳಿಯ ತೊಲೆಬಾಗಿಲು ಧಡ್ಡನೆ ತೆರೆದುಕೊಂಡಿತು. ಇಬ್ಬರೂ ಆ ಕಡೆ ನೋಡುತ್ತೇವೆ. ಬಾಗಿಲ ಉದ್ದಗಲ ತುಂಬಿ ಜಂಗಮ ಮೂರ್ತಿಯೊಂದು ನಿಂತುಬಿಟ್ಟಿದೆ! ಕಾವಿಬಟ್ಟೆ, ಕರ್ರಗಿನ ಮೈ, ಗುಡಿಯೊಳಗಿನ ಶಿವಲಿಂಗವೇ ಕಾವಿಯುಟ್ಟಂತೆ. ಹೊಳೆಯೋ ಕಣ್ಣು ಉರಿಯುವ ಪಂಜಿನಂತೆ; ಒಂದು ಕೈಯಲ್ಲಿ ಕಂದೀಲಿದೆ, ಇನ್ನೊಂದರಲ್ಲಿ ಜೋಳಿಗೆಯಿದೆ! ಮೈ ಝುಮ್ಮೆಂದು, ಸಳಸಳ ಪುಳಕವೆದ್ದು, ಬೆವರಿಳಿದು, ತೆರೆದ ಕಣ್ಣು ತೆರೆದಂತೇ, ಬರೆದ ಗೊಂಬೆಯಹಾಗೆ ಮಾತು ಮರೆತು ಕೂತೆವು. ಬಂದವನು ಸಿಡಿಲ ಗುಡುಗಿದ ಹಾಗೆ “ಉಂಟು, ಮಕ್ಕಳ ಫಲ ಉಂಟು! ನಿನಗ ಮಕ್ಕಳಾ ಕೊಡದಿದ್ದರೆ ಶಿವನ ಪಾದ ತಿರುವತೀನಿ!”-ಎಂದು ಗುಡುಗಿ, ಹಾಗೇ ಮಾಯವಾದ! +ಎಂಟು +“ಸಾಕ್ಷಾತ್ ಶಿವನೇ ಹಾಗೆ ಹೇಳಿ ಹೋದನೆಂದು ಸಿಂಗಾರೆವ್ವ ಸಂಪೂರ್ಣ ನಂಬಿದಳು. ಹಾಗಂತ ನಾನು ಸುಮ್ಮನಿರಲಿಲ್ಲ. ಅವರಿವರೆದುರಿಗೆ ಅವನ ವರ್ಣನೆ ಮಾಡಿ ಅವ ಯಾರು, ಏನು, ಎತ್ತ ತಿಳಿಯಲು ಹವಣಿಸುತ್ತಿದ್ದೆ. ನಂಜಿ ಹಲಿವುಯ್ದಳಲ್ಲ. ಸಿಂಗಾರೆವ್ವನಿಗೆ ಬಂಜೆ ಎಂಬ ಶಬುದ ಖಾಯಂ ಅಂಟಿಕೊಂಡುಬಿಟ್ಟಿತು. ಮೊದಮೊದಲು ಜನ ಹೆಂಗಸರು ಅರಮನೆಗೆ ಬರುತ್ತಿದ್ದವರು, ಬರಬರುತ್ತಾ ಕಮ್ಮಿಯಾಗಿ ಕೊನೆಗೆ ಅವರು ಬರುವುದು ನಿಂತೇ ಹೋಯಿತು. ಮಕ್ಕಳನ್ನೆತ್ತಿಕೊಂಡು ಹೋಗುತ್ತಿದ್ದ ಅವ್ವಕ್ಕಗಳು ಅರಮನೆ ಮುಂದೆ ಹಾಯುವಾಗ ಬಂಜಿ ದೊರೆಸಾನಿಯ ಕೆಟ್ಟದೃಷ್ಟಿ ತಾಗೀತೆಂದು ಮಕ್ಕಳಮೇಲೆ ಸೀರೆ ಸೆರಗು ಹೊದಿಸಿ ಮರೆಮಾಡಿಕೊಂಡು ದಾಟಿಹೋಗುತ್ತಿದ್ದರು. ಇದೆಲ್ಲ ಸಿಂಗಾರೆವ್ವನಿಗೆ ತಿಳಿಯಲಿಲ್ಲವೆಂದಲ್ಲ. ಈ ಜನ ಮಕ್ಕಳ ಬಗ್ಗೆ ಎಷ್ಟೊಂದು ಸೂಕ್ಷ್ಮ ಮತ್ತು ಅದೇ ಕಾರಣಕ್ಕಾಗಿ ಅವರು ಎಷ್ಟೊಂದು ನಿರ್ದಯಿಗಳಾಗಬಲ್ಲರೆಂಬುದಕ್ಕೂ ಇದು ಸಾಕ್ಷಿಯಾದೀತು. ಆದರೆ ಅದೇನೋ ಅಂತಾರಲ್ಲ – ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಧಾರ ಅಂತ. ಹಾಗೆ ನಾವಂತೂ ಆ ಜಂಗಮನ ಮಾತಿಗೆ ಜೋತುಬಿದ್ದು ಶಿವನೇ ಎನ್ನುತ್ತ ಕುಂತೆವು. ಆ ಜಂಗಮನ ಹೆಸರು ಹುಚ್ಚಯ್ಯ ಅಂತ…..” +ಇಲ್ಲಿ ಹುಚ್ಚಯ್ಯನ ಬಗ್ಗೆ ನನ್ನ ಒಂದೆರಡು ಮಾತು ಸೇರಿಸುತ್ತೇನೆ. ಹುಚ್ಚಯ್ಯನನ್ನು ಚಿಕ್ಕಂದಿನಲ್ಲಿ ನಾನು ನೋಡಿದ್ದೆ. ಅವನೊಂದಿಗೆ ಆಟ ಆಡಿದ್ದೆ. ಅವನ ಊರುಕೇರಿಗಳ ವಿಚಾರ ನಮ್ಮ ಊರಿನವರಿಗೂ ತಿಳಿಯದು. ಊರು ಕೇಳಿದರೆ ಶಿವನೂರು ಅನ್ನುತ್ತಿದ್ದ. ತಂದೆ ತಾಯಿ ಬಗ್ಗೆ ಕೇಳಿದರೆ ಶಿವಪಾರ್ವತಿಯರ ಹೆಸರು ಹೇಳುತ್ತಿದ್ದ. ಇಂಥವನಿಂದ ಏನು ಬಿಚ್ಚಲಾದೀತು? ಅವನಿಗೊಂದು ಮನೆಯಿಲ್ಲ, ಮಠವಿಲ್ಲ, ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ. ಕರೆದವರ ಮನೆಗೆ ಊಟಕ್ಕೆ ಹೋದರೆ ಹೋದ, ಇಲ್ಲದಿದ್ದರಿಲ್ಲ. ಕೆಲವು ಸಲ ಯಾರದೋ ಅಡಿಗೆ ಮನೆಗೆ ನುಗ್ಗಿ “ಇಂದು ಶಿವನ ಊಟ ಇಲ್ಲೇ”-ಎಂದು ಹೇಳಿ ಕೂತುಬಿಡುತ್ತಿದ್ದ. ಅವನಿಗೆ ಇಲ್ಲವೆಂದು ಹೇಳಿವಂಥ ಧೈರ್ಯ ಅಥವಾ ಮನಸ್ಸು ನಮ್ಮೂರಿನಲ್ಲಿ ಯಾರಿಗೂ ಇರಲಿಲ್ಲ. ಅಷ್ಟೇ ಅಲ್ಲ, ಅವ ಉಂಡು ಹೋದರೆ ಸ್ವಯಂ ಶಿವನೇ ಬಂದು ಉಂಡುಹೋದಂತೆ ಧನ್ಯರಾಗುತ್ತಿದ್ದರು. +ಮಕ್ಕಳೆಂದರೆ ಅವನಿಗೆ ಪ್ರಾಣ. ಒಮ್ಮೊಮ್ಮೆ ಎಳೇ ಮಕ್ಕಳ ಹಾಗೆ ಬೆರಳು ಸೀಪಿಕೊಂಡು ಮಣ್ಣಾಟ ಆಡುತ್ತಿದ್ದ. ನಾವೇನಾದರೂ ಚಿಣ್ಣಿದಾಂಡ, ಹುತುತು, ಸರಮಂಚ ಆಡುತ್ತಿದ್ದರೆ ಬಂದು ಸೇರಿಕೊಳ್ಳುತ್ತಿದ್ದ. ಆಟ ತಪ್ಪಿದರೆ ಎದುರಾಳಿಯ ಅಂಗಿ ಹಿಡಿದು ಮಕ್ಕಳಂತೇ ಬೈದಾಡಿ ಜಗಳಾಡುತ್ತಿದ್ದ. ಗೆದ್ದರೆ ಕುಣಿದಾಡುತ್ತಿದ್ದ. ಸೋತರೆ ಬಾಡುತ್ತಿದ್ದ. ಒಮ್ಮೆ ಅವನೇ ಆಟ ತಪ್ಪಿ, ತಪ್ಪನ್ನೇ ಸಮರ್ಥಿಸಿಕೊಂಡಾಗ ಈ ನನ್ನ ಮಿತ್ರ ಶಿರಸೈಲ ಮತ್ತವನ ಹುಡುಗರು ಅವನನ್ನು ಮುತ್ತಿ ಥಳಿಸಿದ್ದರು. ಹುಚ್ಚಯ್ಯ ಅಳುತ್ತ ಶಿವನಿಗೆ ಹೇಳುವುದಾಗಿ ಕುಮುದವ್ವನ ಗುಡಿಯತ್ತ ಹೋಗಿದ್ದ. ಆದರೆ ಹುಣ್ಣಿಮೆ ಅಮಾವಾಸ್ಯೆ ಬಂತೆಂದರೆ ಅದರ ಹಿಂದುಮುಂದಿನ ದಿನ ಮಾಯವಾಗುತ್ತಿದ್ದ. ಆಗ ಅವ ಎಲ್ಲಿ ಹೋಗುತ್ತಿದ್ದ, ಏನು ಮಾಡುತ್ತಿದ್ದ ಎಂಬುದ್ಯಾರಿಗೂ ತಿಳಿಯದು. ಆದರೆ ಆತನ ಬಗ್ಗೆ ಜನರಲ್ಲಿಯ ಭಯಭಕ್ತಿ ಮಾತ್ರ ಅಪಾರ. ಅದಕ್ಕೆ ಮುಖ್ಯ ಕಾರಣವೆಂದರೆ ಅವನ ನಾಲಗೆ. ಆ ಭಾಗದಲ್ಲಿ ಪ್ರಚಾರದಲ್ಲಿದ್ದ ಅವನ ಪವಾಡಗಳೂ ಹಾಗಿದವು. ಒಮ್ಮೆ ಕುಮುದವ್ವನ ಜಾತ್ರೆಯಲ್ಲಿ ಜನ ಊಟಕ್ಕೆ ಕುಳಿತಿದ್ದರು. ಜೋರಿನಿಂದ ಮಳೆ ಬಂತು. ಜನ ಬುದಿಂಗನೆ ಏಳಬೇಕೆನ್ನುವಾಗ ಇವನು “ಏಳಬ್ಯಾಡ್ರೀ, ಪಂಕ್ತಿ ಹಂಗಾಽ ಸಾಗಲಿ” ಎಂದು ಹೇಳಿ ಎರಡೂ ಕೈ ಎತ್ತಿದನಂತೆ. ಜನ ಊಟಕ್ಕೆ ಕೂತಲ್ಲಿ ಮಾತ್ರ ಮಳೆ ಇರಲಿಲ್ಲ, ಅದಷ್ಟು ಸ್ಥಳ ಬಿಟ್ಟು ಉಳಿದೆಲ್ಲಾ ಕಡೆ ಧೋ ಧೋ ಮಳೆ ಸುರಿದು ನೀರಾಡಿತಂತೆ! +ಇಷ್ಟಿದ್ದೂ ಆತ ಹೆಚ್ಚು ಖ್ಯಾತನಾದದ್ದು ತನ್ನ ಕಚ್ಚೆಹರುಕುತನದಿಂದ. ಮತ್ತು ಅವನ ಈ ಬಗೆಯ ಪವಾಡಗಳೇ ಹೆಚ್ಚು ಜನಪ್ರಿಯವಾಗಿದ್ದವು. ಒಂದೆರಡು ಸ್ಯಾಂಪಲ್ ನೋಡಿರಿ: ಒಮ್ಮೆ ನಮ್ಮೂರಿನ ಠಕ್ಕಪ್ಪ ಗಾಡಿಹೂಡಿಕೊಂಡು ಗೋಕಾವಿಗೆ ಹೊರಟಿದ್ದ. ಹುಚ್ಚಯ್ಯ ತಾನೂ ಬರುವುದಾಗಿ ಹೇಳಿ ಗಾಡಿ ಹತ್ತಿ ಕೂತ. ಅದೇ ದಾರಿಯಲ್ಲಿ ಬುಟ್ಟಿಹೊತ್ತು ಕೊಣ್ಣೂರಿಗೆ ಹೊರಟಿದ್ದ ಹೆಂಗಸೊಬ್ಬಳು ಸಿಕ್ಕಳು. “ದಣಿವಾಗೇತಿ ನನ್ನಷ್ಟ ಗಾಡಿ ಹತ್ತಿಸಿಕೊಳ್ರಪ್ಪ” ಎಂದು ಕೇಳಿಕೊಂಡು ಅವಳು ಹತ್ತಿದಳು. ಗಾಡಿ ತುಸು ಮುಂದೆ ಸಾಗುವಷ್ಟರಲ್ಲೇ ಹುಚ್ಚಯ್ಯ ಆ ಹೆಂಗಸನ್ನು ಮರುಳು ಮಾಡಿದ್ದ. ಗಾಡಿ ಹೊಡೆಯುತ್ತಿದ್ದ ಠಕ್ಕಪ್ಪನಿಗೆ ಹುಚ್ಚಯ್ಯ “ಮಗನಽ ಠಕ್ಕ್ಯಾ ಹಿಂದಿರಿಗಿ ನೋಡಬ್ಯಾಡ; ನೋಡಿದರ ನಿನ್ನ ಕಣ್ಣ ಹೋಗ್ತಾವಲೇ”- ಅಂದ. ಠಕ್ಕಪ್ಪನಿಗೆ ಕುತೂಹಲ ತಡೆದುಕೊಳ್ಳಲಾಗಲಿಲ್ಲ. ಮೆಲ್ಲಗೆ ಎಡಗಣ್ಣಿಂದ ಓರೆ ನೋಡಿದ. ಆದರೆ ನೋಡನೋಡುತ್ತಿದ್ದಂತೆ ಅವನ ಎಡಗಣ್ಣು ಕುರುಡಾಗಿಬಿಟ್ಟಿತು. ಈ ಪವಾಡ ನನಗೂ ಖಾತ್ರಿಯಾಗಿದೆ. ಯಾಕೆಂದರೆ ಈಗಲೂ ಠಕ್ಕಪ್ಪ ಜೀವಂತವಾಗಿದ್ದಾನೆ, ಎಡಗಣ್ಣು ಕುರುಡಾಗಿದೆ. +ಹುಚ್ಚಯ್ಯನೊಮ್ಮೆ ಸಾವಳಗಿ ಜಾತ್ರೆಗೆ ಹೋಗಿದ್ದಾಗ ಯಾವಳೋ ಒಬ್ಬ ಹೆಂಗಸಿನ ಮೇಲೆ ಆಸೆಯಾಯ್ತು. ನೆರೆದ ಭಾರೀ ಜಾತ್ರೆಯಲ್ಲಿಯೇ ಕೂಡಿಬಿಟ್ಟ. ತಕ್ಷಣ ನಮ್ಮೂರ ನಾಕೈದು ಜನ ಅವನ ಭಕ್ತರು ನೋಡಿ, ಓಡಿಹೋಗಿ ದಿಕ್ಕಿಗೊಬ್ಬೊಬ್ಬರು ಸುತ್ತುಗಟ್ಟಿ ನಿಂತು ಉಟ್ಟ ಧೋತ್ರಗಳನ್ನೆ ಕಳಚಿ ಅವರ ಸುತ್ತ ಪರದೆಯಂತೆ ಹಿಡಿದು ಮರೆಮಾಡಿದರಂತೆ! +ಇನ್ನೊಂದು ಪವಾಡ ಕೇಳಿರಿ: ಒಮ್ಮೆ ಒಬ್ಬ ಗೌಡನ ಮನೆಗೆ ಹುಚ್ಚಯ್ಯ ಬಿನ್ನಾಯಕ್ಕೆ ಹೋಗಿದ್ದ. ಊಟ ಬಡಿಸುತ್ತಿದ್ದ ಅವನ ಹೆಂಡತಿಯನ್ನು ನೋಡಿ ಹುಚ್ಚಯ್ಯ “ಗೌಡಾ, ಈಕೀನ ನನಗೆ ಕೊಡೋ” ಎಂದನಂತೆ. ಗೌಡ ಕೊಟ್ಟ. ಕೊಟ್ಟು “ನನಗೇನ ಕೊಡ್ತೀಯಪ”-ಅಂದನಂತೆ. ಹುಚ್ಚಯ್ಯ “ತಗೋ” ಎಂದು ತನ್ನ ಕಾಲ್ಮರಿಯನ್ನೇ ಕೊಟ್ಟನಂತೆ. ಆ ಕಾಲ್ಮರಿಯನ್ನು ಈಗಲೂ ಆ ಮನೆತನದವರು ದೇವರ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ! ನಮ್ಮೂರವರನ್ನು ಕೇಳಿದರೆ ಇಂಥ ಸಾವಿರ ಪವಾಡ ಹೇಳಿಯಾರು. ಇವನ್ನು ಪವಾಡವೆಂದು ಒಪ್ಪಿಕೊಂಡು ಕಥೆಮಾಡಿ ಹೇಳುವ ಈ ಜನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನಮ್ಮ ಊರಿನಲ್ಲಿ ಆತ ಬಯಸಿದ್ದನ್ನು ಎರಡು ಮಾತಿಲ್ಲದೆ ಕೊಡುವ ಭಕ್ತರಿದ್ದಾರೆ. ಸುಳ್ಳಲ್ಲ, ಅವನು ಉಗಿದ ಉಗುಳನ್ನೂ ನುಂಗಿದ ಭಕ್ತರಿದ್ದಾರೆ. ಬಹುಶಃ ಎದುರಾಡಿದರೆ ಅವನು ನೊಂದು ಏನಾದರೂ ಅಂದುಗಿಂದಾನೆಂದು, ಹಾಗೇನಾದರೂ ಅಂದರೆ ಅದು ಹುಸಿ ಹೋಗುವುದಿಲ್ಲವೆಂದು ಹೆದರಿಕೊಂಡು ಜನ ಅವನನ್ನು ಒಪ್ಪಿರಬೇಕು. ನನ್ನ ಇತ್ತೀಚಿನ ಅಂದಾಜಿನ ಪ್ರಕಾರ ಅವನೊಬ್ಬ ವಿಷಯಾಸಕ್ತನಾದ ತಾಂತ್ರಿಕ ಸಿದ್ಧ. ಕೆಲವು ವಿಲಕ್ಷಣ ಶಕ್ತಿಗಳು ಅವನಲ್ಲಿದ್ದುದು ನಿಜ. ಮತ್ತು ಆ ಶಕ್ತಿಗಳ ದುಡಿಮೆಯಿಂದ ಅವನು ಚಕ್ರಬಡ್ಡಿ ಸಮೇತ ಸುಖ ಪಡೆಯುತ್ತಿದ್ದ. ಮುಖದ ವರ್ಚಸ್ಸಿನಿಂದಾಗಿ ಅವನು ಸಾಕ್ಷಾತ್ ಶಿವನೆಂದು ಸಣ್ಣ ದೊರೆಸಾನಿ ನಂಬಿದ್ದರೆ ಅದು ಹೆಚ್ಚಲ್ಲ. ಆದರೆ ಹೋಗಿ ಹೋಗಿ ಇಂಥವನ ಪ್ರಭಾವಕ್ಕೆ ಒಳಗಾದಳಲ್ಲ-ಎಂದು ನನಗೂ ಹಳಹಳಿಯಾಯಿತೆಂದು ಮಾತ್ರ ಹೇಳಬಲ್ಲೆ, ಈಗ ಶೀನಿಂಗವ್ವನ ಮುಂದಿನ ಕಥೆ ಕೇಳೋಣ: +“ಹುಚ್ಚಯ್ಯನ ಹೆಸರನ್ನು ಈ ಹಿಂದೆ ನಾವು ಕೇಳಿದ್ದೆವಾದರೂ ಅಷ್ಟು ಗಮನ ಕೊಟ್ಟಿರಲಿಲ್ಲ. ಊರ ಭಕ್ತರೊಂದಿಗೆ ಅಷ್ಟೊಂದು ವಹಿವಾಟಿದ್ದವನು ಅರಮನೆಗ್ಯಾಕೆ ಈತನಕ ಬಂದಿರಲಿಲ್ಲವೆನ್ನುವುದೂ ಸೋಜಿಗವೇ. ಈಗ ಕರೆಯದೆಯೇ ಅರಮನೆಗೆ ಬಂದಿದ್ದ. ಅವನ ನಾಲಗೆ ಹುಸಿ ಹೋಗುವುದಿಲ್ಲವೆಂದು ಅನೇಕರನ್ನು ಕೇಳಿ ಖಾತ್ರಿ ಮಾಡಿಕೊಂಡಿದ್ದೆ. ಅವನ ಬಗ್ಗೆ ಹೇಳುವ ಜನ ಮತ್ತೆ ಮತ್ತೆ ಆ ಮಾತನ್ನು ಹೇಳುವ ಹಾಗೆ ಮಾಡುತ್ತಿದ್ದೆ. +ಈ ಮಧ್ಯೆ ಸಿಂಗಾರೆವ್ವ ದೇಸಾಯಿಯ ಮನ ಒಲಿಸಿಕೊಳ್ಳಲು ಖಟಪಟಿ ಮಾಡುತ್ತಿದ್ದಳು. ಅವನ ಬಯಲಾಟದ ಖಯಾಲಿ ತಪ್ಪಿಸಿ ಮನೆಯಲ್ಲಿ ಬಿದ್ದುಕೊಳ್ಳುವ ಹಾಗೆ ಮಾಡಬೇಕಿತ್ತು. ಅದಕ್ಕಾಗಿ ತಾನೇ ಮುಂದಾಗಿ ಸಲಿಗೆ ಬೆಳೆಸಿಕೊಂಡಳು. ಊಟಕ್ಕೆ ನೀಡುತ್ತಿದ್ದಳು, ಜಳಕ ಮಾಡಿಸುತ್ತಿದ್ದಳು, ಕಾಲು ತಿಕ್ಕುತ್ತಿದ್ದಳು. ಒಮ್ಮೆ “ನಿಮಗ ನಾ ಹೆಚ್ಚೋ ಬಯಲಾಟ ಹೆಚ್ಜೋ?” ಎಂದು ಕೇಳಿಯೂ ಬಿಟ್ಟಿದ್ದಳು. ಆದರೆ ದೇಸಾಯಿ, “ಹಾ ಪ್ರಿಯೆ, ಪ್ರಶಾಂತ ಹೃದಯೆ” ಅಂತೇನೋ ನಾಟಕದ ಪ್ರಾಸ ಹೇಳಿ ತಪ್ಪಿಸಿಕೊಂಡಿದ್ದ. +ಅಂತೂ ಹುಚ್ಚಯ್ಯನ ವಾಕ್ಯೆ ಆಗಿ ಎಂಟು ತಿಂಗಳಾದರೂ ದೇಸಾಯಿ ಸಿಂಗಾರೆವ್ವನನ್ನು ಮುಟ್ಟುವ ಗೋಜಿಗೆ ಹೋಗಲೇ ಇಲ್ಲ. ಈ ಅವಧಿಯಲ್ಲಿ ಹುಚ್ಚಯ್ಯನೂ ಅರಮನೆಯ ಕಡೆ ಸುಳಿದಿರಲಿಲ್ಲ. +ಅವನೆಲ್ಲೋ ಯಾತ್ರೆ ಹೋಗಿದ್ದವನು ಬಂದಿದ್ದಾನೆಂದು ದುದ್ದಿ ಬಂತು. ಆದರೆ ಅವನಿದ್ದುದು ಕುಮುದವ್ವನ ಗುಡಿ ಕಡೆಯ ಖಾಲಿ ಗುಡಿಸಲಿನಲ್ಲಿ. ಈ ಊರಿನ ಹೆಂಗಸರು ಕುಮುದವ್ವನ ಹೆಸರು ಹೇಳುವವರೇ ಹೊರತು ಅವಳ ಗುಡಿಯ ಕಡೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ, ಮೈಲಿಗೆ ಮುಡಿಚಟ್ಟಾದಾಗ ಆ ಕಡೆ ಮುಖ ಕೂಡ ಮಾಡುವುದಿಲ್ಲ. ನಾನು ಪರವೂರಿನಲ್ಲಿ ಹುಟ್ಟಿ ಬೆಳೆದವಳಾದುದರಿಂದ ಅಂಥ ಭಯಗಳೇನೂ ಇರಲಿಲ್ಲ. ಅಲ್ಲದೆ ಈ ಗುಡಿಸಲಿಗೂ ಕುಮುದವ್ವನ ಗುಡಿಗೂ ತುಂಬ ದೂರ. ಸಿಂಗಾರೆವ್ವನಿಗೂ ಹೇಳದೆ ಇಂದು ಹುಚ್ಚಯ್ಯನನ್ನು ನೋಡೇ ಬಿಡಬೇಕೆಂದು ಹೊರಟೆ. ಊರ ಸೀಮೆ ದಾಟಿರಬೇಕು, ಸುದೈವಕ್ಕೆ ಅವನೇ ಈ ಕಡೆ ಬರುತ್ತಿದ್ದ. ಅಡ್ದಬಿದ್ದು, +“ಸ್ವಾಮಿ, ಗುರುತ ಸಿಕ್ಕಿತ?”-ಅಂದೆ. +“ನೀ ಅರಮನಿ ಶೀನಿಂಗವ್ವಲ್ಲಾ?”- ಅಂದ. ಅವನು ಗುರುತಿಸಿದ್ದಕ್ಕೆ ಸಂತೋಷಗೊಂಡು “ಹೌಂದ್ರೀಯಪಾ”-ಅಂದೆ. +“ಸಣ್ಣ ದೊರೆಸಾನಿ ಹೆಂಗದಾಳ?” +“ಹಂಗೇನ್ರಿ ಮಕ್ಕಳಾಗತಾವಂತ ನಿಮ್ಮ ವಾಕ್ಯೆ ಆಗಿ ಎಂಟು ತಿಂಗಳಾಯ್ತು; ಇನ್ನಽ ಏನೂ ಆಗಲಿಲ್ಲ.” +-ಅಂದೆ. ಎದುರೆದುರಿಗೇ ನಿಮ್ಮ ನುಡಿ ಹುಸಿಯಾಯಿತೆಂದು ಹೇಳಿದ್ದು ಸರಿಯಾಗಲಿಲ್ಲವೆಂದು ಅನ್ನಿಸಿತು. ಯಾರು ಬಲ್ಲರು, ಅವ ಮೊದಲೇ ಹುಚ್ಚಯ್ಯ, ಇನ್ನೇನಾದರೂ ಆಡಿಬಿಟ್ಟರೆ ಒಂದು ಮಾಡಹೋಗಿ ಇನ್ನೊಂದಾಗಬಾರದಲ್ಲ ಎಂದು ಹೆದರಿದೆ. ಸಧ್ಯ ಅಂಥದ್ದೇನೂ ನಡೆಯಲಿಲ್ಲ. ನನ್ನ ಮಾತು ಕೇಳಿ ಹುಚ್ಚಯ್ಯ ಹುಬ್ಬು ಗಂಟಿಕ್ಕಿಕೊಂಡು ಪಕ್ಕದ ಬಾಂದದಮೇಲೆ ಕೂತ. ನನ್ನ ಕಡೆಗೊಮ್ಮಿ ನೋಡಿ ಕಣ್ಣು ಮುಚ್ಚಿದ. ಬಹುಶಃ ಶಿವನೊಂದಿಗೆ ಮಾತಾಡುತ್ತಿದ್ದಾನೆ ಎಂದುಕೊಂಡೆ. ಶಿವನಿಗೆ ನಮ್ಮಾಸೆ ಮುಟ್ಟಲೆಂದು ನಾನೂ ಕೈ ಮುಗಿದು ಕೂತೆ. ಕಣ್ಣು ತೆರೆದ. ಶಿವನಾಜ್ಞೆ ಏನಾಯಿತೋ ಎಂದು ನನ್ನೆದೆ ಹಾರುತ್ತಿತ್ತು. +“ಹಗಲಲ್ಲ, ರಾತ್ರಿ ಅಲ್ಲ, ಮೂರು ಸಂಜಿಕ ಶಿವ ಅರಮನೀಗಿ ಬರತಾನ, ನೀ ಮುಂದ ನಡಿ” ಅಂದ. ಎದೆ ಹಗುರಾಗಿ ಮನೆಕಡೆ ಓಡಿಬಂದೆ. +ಹುಚ್ಚಯ್ಯನಿಗೆ ಭೇಟಿಯಾದದ್ದನ್ನಾಗಲೀ, ಅವನು ಅರಮನೆಗೆ ಬರುವುದನ್ನಾಗಲಿ ಸಿಂಗಾರೆವ್ವನಿಗೆ ಹೇಳಲೇ ಇಲ್ಲ. ಉತ್ಸಾಹದಿಂದ ನಾನು ಕಳಕಳೆಯಾಗಿರುವುದನ್ನು ನೋಡಿ “ಅದೇನಽ ಅಷ್ಟೊಂದು ಉಮೇದಿ ಉಕ್ಕತೈತಿ?” ಎಂದು ಕೇಳಿಯೂ ಬಿಟ್ಟಳು. ನನ್ನ ಒಡತಿ ಯಾ ಗೆಳತಿಗೆ ಉಪಯುಕ್ತವಾದುದೊಂದು ಕೆಲಸವನ್ನ, ಅವಳಿಂದ ಹೇಳಿಸಿಕೊಳ್ಳದೆಯೇ ಮಾಡಿದ್ದು ಗೊತ್ತಾದಾಗ ಅವಳ ಬೆರಗಿನ ಮತ್ತು ಮೆಚ್ಚುಗೆಯ ಮುಖ ನೋಡಬೇಕೆಂದು ನನ್ನ ತವಕ. ಸಂಜೆಯಾಗುತ್ತಲೂ ಅರಮನೆಯ ತೊಲೆಬಾಗಿಲು ತೆರೆದಿಟ್ಟು ಅಲ್ಲೇ ಕಣ್ಣು ನೆಟ್ಟು ಕೂತೆ. ಹೊತ್ತು ಮುಳುಗುತ್ತಿದ್ದರೂ ಆತ ಬರಲಿಲ್ಲ. ಅಷ್ಟರಲ್ಲಿ ಸಿಂಗಾರೆವ್ವ ಓಡಿಬಂದು “ಏ ಶೀನಿಂಗೀ, ಹಿತ್ತಲಾಗ ಹುಚ್ಚಯ್ಯ ಬಂದಾನ ಬಾರಗಽ”-ಎಂದು ಕರೆದಳು. ಇಬ್ಬರೂ ಅತ್ತ ಓಡಿದೆವು. +ಹುಚ್ಚಯ್ಯ ಹಿತ್ತಲ ಬಣಿವೆಯ ಬಳಿ ಕೂತಿದ್ದ. ಇಬ್ಬರೂ ಹೋಗಿ ನಮಸ್ಕಾರ ಮಾಡಿದೆವು. ಸಿಂಗಾರೆವ್ವನನ್ನು ಕುರಿತು “ಬಾ ತಾಯಿ”-ಅಂದ. “ಕೈ ತಾ” ಅಂದ. ಅವಳು ಬಲಗೈ ನೀಡಿದಾಗ ಅಂಗೈಗೆರೆ ಎಣಿಕೆ ಹಾಕಿ ನನ್ನ ಕಡೆ ಓರೆನೋಟ ಬೀರಿದ. ಅವನ ಚಂಚಲ ಕಣ್ಣುಗಳಲ್ಲಿ ಬೆಳಕಾಡುತ್ತಿತ್ತು. ಆ ಕರಿಮುಖದಲ್ಲೂ ಬಿಸಿನೆತ್ತರಾಡಿ ಕೆಂಪಾಗಿತ್ತು. ಅವಳ ಮುಖ ನೋಡುವುದಕ್ಕೆ ಅವನು ಹೆದರುತ್ತಿದ್ದನೋ ಏನೋ, ಅವಳ ಕೈ ಹಿಡಿದ. ಅವನ ಕೈ ನಡುಗುತ್ತಿದ್ದುದು ನನ್ನ ಗಮನಕ್ಕೆ ಬಂತು. +“ಫಲ ಉಂಟು ತಾಯಿ, ಆದರ ಅಮಾಸೀ ದಿನ ಶಿವನಿಗೆ ಒಂದು ಪೂಜಿ ಆಗಬೇಕು. ಆ ಪೂಜಿಗಿ ನೀ ಅಲ್ಲದಽ ಇನ್ನ್ಯಾರೂ ಇರಬಾರದು.” +-ಈ ಮಾತು ಹೇಳುವಾಗ ಅವನ ಮುಖ ಬಿಳಿಚಿಕೊಂಡಿತು. ಎರಡು ಮೂರು ಸಲ ಉಗುಳು ನುಂಗಿದ. ನಾಲಗೆಯಿಂದ ತುಟಿ ಸವರಿಕೊಂಡು ಒದ್ದೆ ಮಾಡಿಕೊಂಡ. ಆದರೆ ಸಿಂಗಾರೆವ್ವ ಒಬ್ಬಳೇ ಇರಬೇಕೆನ್ನುವ ಮಾತನ್ನು ನಾನು ಒಪ್ಪಲಿಲ್ಲ. ಅವಳಂತೂ ಹೆದರಿ ಕೊಟ್ಟ ಕೈ ಹಿಂತೆಗೆದುಕೊಂಡು ಕಣ್ಣರಳಿಸಿ ಅದಾಗದೆಂದು ಹೇಳೆಂಬಂತೆ ನನ್ನ ಕಡೆ ನೋಡಿದಳು. +“ಅಧೆಂಗರಿ ಯಪಾ, ದೊರೆಸಾನಿ ಒಬ್ಬಾಕೀನಽ ಹೆಂಗಿದ್ದಾಳು? ಗುರು ಹಿರಿಯರಿದ್ದ ಮನಿ ಅಂದಮ್ಯಾಲ ಅವರ್‍ನ ಬಿಟ್ಟ ನಮಗ ನಾವಽ ಪೂಜಿ ಮಾಡಾಕಾದೀತ?”-ಎಂದೆ. +ಅವನು ಬೇರೆ ರೀತಿಯ ವ್ಯವಸ್ಥೆಗೆ ಒಪ್ಪಲೇ ಇಲ್ಲ. ಗಂಡ ಹೆಂಡತಿ ಇಬ್ಬರೂ ಪೂಜಿ ಮಾಡಲಿ-ಅಂದೆ. ಅದಕ್ಕೂ ಒಪ್ಪಲಿಲ್ಲ. ಕೊನೆಗೆ “ಇಚ್ಛಾ ಇಲ್ಲದಿದ್ದರ ಬಿಡಿರಿ” -ಅಂದ. ಇನ್ನೆಲ್ಲಿ ಅವನು ಎದ್ದುಹೋಗುತ್ತಾನೋ ಎಂದು ಆತಂಕವಾಗಿ +-ಸಿಂಗಾರೆವ್ವನ ಜೋಡಿ ನಾ ಇದ್ದರ ಆದೀತೇನ್ರೀ?”- ಅಂದೆ, “ಶಿವನಿಚ್ಛೆ”-ಅಂದ. ಪೂಕೆ ಅರಮನೆಯಲ್ಲೆ, ಸರಿರಾತ್ರಿ ಸುರುವಾಗಬೇಕೆಂದ. ಪೂಜಾಸಾಮಾಗ್ರಿಯ ಪಟ್ಟಿ ಹೇಳಿದ. ಆ ದಿನ ರಾತ್ರಿ ಸುಮಾರಿಗೆ ಹಿತ್ತಲ ಬಾಗಿಲಿನಿಂದ ಬರುವುದಾಗಿ ಹೇಳಿ ಅದೇ ಬಾಗಿಲಿನಿಂದ ಮಾಯವಾದ. +ನಾವು ಭಯ ಮತ್ತು ಸಡಗರ ಎರಡನ್ನೂ ಅನುಭವಿಸುತ್ತಿದ್ದೆವು. ಭಯ, ಇದು ಕಳ್ಳವ್ಯವಹಾರವಾಗಿದ್ದಕ್ಕೆ; ಸಡಗರ; ಹ್ಯಾಗೂ ಮಕ್ಕಳಾಗುತ್ತವಲ್ಲಾ-ಎಂಬುದಕ್ಕೆ. ಆದರೆ ಇದಕ್ಕೆ ಅಡಚಣೆಗಳಿದ್ದವು. ಸಿಂಗಾರೆವ್ವ ಎಷ್ಟೆಂದರೂ ಹೊಸಮನೆಗಿತ್ತಿ. ಹಿರಿಯರನ್ನು ನಿರ್ಲಕ್ಷಿಸಿ, ಇಂಥ ಪೂಜೆ ಮಾಡಿಸುವುದು ಸೊಸೆಯೊಬ್ಬಲಿಗೆ ಶೋಭಿಸುವ ನಡೆಯಲ್ಲ. ಮನೆಯಲ್ಲಿ ಗಂಡನಿದ್ದಾನೆ, ಅವನೇ ಮುಂದೆ ನಿಂತು ಮಾಡಿಸಿದ್ದರೆ ಅದು ಬೇರೆ ಮಾತು. ಗಂಡಸರ ಹೆದರಿಕೆಯಲ್ಲೇ ಬೆಳೆದ ನಮಗೆ ದೇಸಾಯಿಗೆ ತಿಳಿಸದೆ ಪೂಜೆ ಮಾಡಿಸೋದು ಹ್ಯಾಗೆಂದು ಹೆಜ್ಜೆಹೆಜ್ಜೆಗೆ ಚಿಂತೆಯಾಯಿತು. ನಾನು ಆ ರಾತ್ರಿ ಹಿರಿಯ ದೊರೆಸಾನಿಯ ಹತ್ತಿರ ಹೋಗಿ ಅದು ಇದು ಮಾತಾಡಿ, ಹುಚ್ಚಯ್ಯನ ದಯದಿಂದ ಮಕ್ಕಳನ್ನ ಪಡೆಯಬಹುದಲ್ಲಾ ಎಂದು ಸುಚಿಸಿ ಅವಳ ಅಭಿಪ್ರಾಯ ತಿಳಿಯಲು ಪ್ರಯತ್ನಿಸಿದೆ. ಅವಳು ಹೌಂದಲ್ಲಾ ಎಂದರೆ ನಮ್ಮ ಕೆಲಸ ಸರಳವಾಗುತ್ತಿತ್ತು. ಹಿರಿಯಳಿಗೆ ತಿಳಿಸಿಯೇ, ಅವಲ ಅಪ್ಪಣೆಯಿಂದಲೇ ಪೂಜೆ ಮಾಡಿಸಿದ ಹಾಗಾಗುತ್ತಿತ್ತು. ನಾಳೆ ದೇಸಾಯಿ ಕೇಳಿದ ಎನ್ನೋಣ, ಅವರವ್ವನ ಕಡೆ ಬೆರಳು ಮಾಡಿ ತೋರಿಸಬಹುದಲ್ಲ,- ಎಂದು ನಮ್ಮ ಲೆಕ್ಕ. ಆದರೆ ಮುದುಕಿ ಒಂದೇ ಮಾತಿನಲ್ಲಿ,- +“ಬ್ಯಾಡ ಮಗಳಽ. ಜಂಗಮರಿಗೂ ಈ ಅರಮನಿಗೂ ಆಗಿ ಬರಾಣಿಲ್ಲ. ಹಿಂದೊಬ್ಬ ಜಂಗಮ ಈ ವಂಶ ನಿರ್ವಂಸಾಗಲೆಂತ ಅರಮನಿ ಮ್ಯಾಲ ಬೂದಿ ಹಾರಿಸ್ಯಾನ. ಆ ನನ್ನ ಹಾಟ್ಯಾ ಹುಚ್ಚಯ್ಯನೂ ಶಾಪ ಹಾಕ್ಯಾನ. ಅದಕ್ಕಽ ನಾವ್ಯಾರೂ ಜಂಗಮರ್‍ನ ಕರೆಯೂದೂ ಇಲ್ಲ. ಅವರ್‍ಯಾರೂ ಬರೋದೂ ಇಲ್ಲ. ಹುಚ್ಚಯ್ಯ ಮೊದಲಽ ನಾದ ಹಲಕಟ್ಟ ಅವ. ಆ ಭಾಡ್ಯಾ ನಮ್ಮ ಮನ್ಯಾಗ ಕಾಲಿಡೋದಽ ಬ್ಯಾಡಾ”- +ಎಂದು ಸ್ಪಷ್ಟವಾಗಿ ಹೇಳಿಬಿಟ್ಟಳು. ನನ್ನ ತೊಡೆಯೊಳಗಿನ ಕಸುವೇ ಉಡುಗಿ ಹೋಯಿತು. ಆ ರಾತ್ರಿ ನಿದ್ದೆ ಬರಲೇ ಇಲ್ಲ. +ಇತ್ತ ಸಿಂಗಾರೆವ್ವನಿಗೂ ಹಾಗೇ ಆಯಿತು. “ಹುಚ್ಚಯ್ಯನ ಮಾತು ಹುಸಿ ಹೋಗೋಣಿಲ್ಲಂತ, ಖರೆ ಏನು?” ಎಂದು ಮೆಲ್ಲಗೆ ದೇಸಾಯಿಯನ್ನು ಕೇಳಿದರೆ ಅವನು ಸಿಡಿದು “ಅವ ಲಫಂಗ ಸ್ವಾಮಿ. ಅವನ ಮಾತೇನ ಖರೆ ಬಂದಾವ, ತಗಿ ತಗೀರಿ”-ಎಂದನಂತೆ. ಅಂತೂ ಹುಚ್ಚಯ್ಯನಿಗೂ ಈ ಮನೆತನಕ್ಕೂ ಕೂಡಿ ಬರುವುದಿಲ್ಲವೆಂದಾಯಿತು. ನಾವು ಮಾಡಿಸಬೇಕೆಂದ ಪೂಜೆಗೆ ಹಿರಿಯರ ಸಮ್ಮತಿ ಇಲ್ಲವೆನ್ನುವುದು ಸ್ಪಷ್ಟವಾಯಿತು. ಬೆಳಗ್ಗೆದ್ದವರೇ ಹಲ್ಲು ಕೂಡ ಉಜ್ಜದೆ ಇಬ್ಬರೂ ಇದನ್ನೆ ಮಾತಾಡಿದೆವು. ಸಿಂಗಾರೆವ್ವ ತಾ ಕಂಡ ಕನಸನ್ನು ಬೇರೆ ಹೇಳಿದಳು: ಅರಮನೆಯ ಮೇಲೆ ಹದ್ದು ಹಾರುತ್ತಿದ್ದಂತೆ, ಬೆತ್ತಲೆ ಮೈಗೆ ಎಣ್ಣೆ ಹಚ್ಚಿಕೊಂಡು, ಕೆಂಪು ಹೂಮಾಲೆ ಧರಿಸಿದ್ದ ದೇಸಾಯಿ ಕೋಲಿನಿಂದ ಅವುಗಳ ಜೊತೆ ಆಟ ಆಡುತ್ತಿದ್ದಂತೆ ಕನಸಾಯಿತಂತೆ. ಕನಸಿನ ಅರ್ಥ ನಮಗಾಗಲಿಲ್ಲ. ಶುಭಲಕ್ಷಣವಂತೂ ಆಗಿರಲಾರದೆಂದು ತರ್ಕ ಮಾಡಿದೆವು. +ಹಿರಿಯ ದೊರೆಸಾನಿ ಹುಚ್ಚಯ್ಯನ ಶಾಪದ ವಿಚಾರ ಹೇಳಿದ್ದಳಲ್ಲ, ಅದೇನೆಂದು ಕೇಳಿದೆ. ಒಮ್ಮೆ ಹಿಂದಿನ ದೊಡ್ಡ ದೇಸಾಯಿ ಹೊಸ ಹೆಂಡತಿಯೊಂದಿಗೆ ಶಯ್ಯಾಗೃಹದಲ್ಲಿ ಮಲಗಿರಬೇಕಾದರೆ ಇದೆ ಹುಚ್ಚಯ್ಯ ಸರಿರಾತ್ರಿಯಲ್ಲಿ ಅದ್ಯಾವುದೋ ಮಾಯೆಯಿಂದ ಅರಮನೆಯಲ್ಲಿ ನುಗ್ಗಿದ್ದನಂತೆ. ಹೋಗಿ ದೆಸಾಯಿ ಮಲಗುವ ಕೋಣೆಯ ಬಾಗಿಲು ತಟ್ಟಿದ. ಇಷ್ಟು ಹೊತ್ತಿನಲ್ಲಿ ಅದ್ಯಾರು ಬಂದಿದ್ದಾರಪ ಎಂದು ಬಾಗಿಲು ತೆರೆದರೆ ಎದುರಿಗೆ ಹುಚ್ಚಯ್ಯ ನಿಂತಿದ್ದ. ದೇಸಾಯಿಯ ನೆತ್ತರು ಕುದಿಯಿತು. ದೊರೆಸಾನಿ ಗಾಢ ನಿದ್ದೆಯಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದಳು. ಹುಚ್ಚಯ್ಯ ಏನು ಎತ್ತ ಅನ್ನದೆ “ದೇಸಾಯೀ, ಇಂದು ಶಿವನ ಹಾಸಿಗಿ ಇದಽ” ಎನ್ನುತ್ತ ಹೋಗಿ ದೊರೆಸಾನಿಯ ಪಕ್ಕದಲ್ಲಿ ಮಲಗಿದನಂತೆ! ದೆಸಾಯಿ “ಹುಚ್ಚಯ್ಯ, ಇಂದು ಶಿವನ ಸೆವಾ ಇದಽ” ಎಂದು ಹೇಳಿ ಕೋಲು ಹಿರಿದುಕೊಂಡು ಹುಚ್ಚಯ್ಯನನ್ನು ಎಲ್ಲೆಂದರಲ್ಲಿ ಬಾರಿಸಿದ. ಹುಚ್ಚಯ್ಯ ಓಡಿಹೋಗುತ್ತ ಅರಮನೆಯ ಮೇಲೆ ಭಸ್ಮ ತೂರಿ ನಿನ್ನ ವಂಸ ನಿರ್ವಂಸವಾಗಲೆಂದು ಶಾಪಹಾಕಿದನಂತೆ +ಶಾಪದ ವಿಚಾರ ಇಬ್ಬರಿಗೂ ಬಗೆಹರಿಯಲಿಲ್ಲ. ಯಾಕೆಂದರೆ ನಿರ್ವಂಸವಾಗಲೆನ್ನುವ ಶಾಪ ಒಂದು ಕಡೆ; ಮಕ್ಕಳಾಗುತ್ತವೆನ್ನುವ ಭರವಸೆ ಇನ್ನೊಂದು ಕಡೆ. ಯಾವುದನ್ನ ನಂಬಬೇಕು, ಯಾವುದನ್ನ ಬಿಡಬೆಕು? ಅದೇನಾದರೂ ಆಗಿರಲಿ ಹುಚ್ಚಯ್ಯನ ಬಗೆಗಿನ ನಮ್ಮ ನಂಬಿಕೆಯಂತೂ ಹಾರಿತು. ಅವ ಹಿತ್ತಲ ಬಾಗಿಲಿನಿಂದ ಬಂದುದರ ಅರ್ಥವೂ ಸ್ಪಷ್ಟವಾಯಿತು. ಶಿವ ಮಾಡಿದಂತಾಗಲಿ, ಹಿರಿಯರ ಅನುಮತಿಯಿಲ್ಲದ ಇಂಥ ಕಾರುಬಾರಿಗೆ ಕೈಹಾಕುವುದೇ ಬೇಡವೆಂದು ತೀರ್ಮಾನಿಸಿದೆವು. +ಅಮಾವಾಸ್ಯೆ ಬಂತು. ಈ ಮಧ್ಯೆ ಹುಚ್ಚಯ್ಯನಿಗೆ ನಮ್ಮ ತೀರ್ಮಾನ ಹೇಳೇನೆಂದರೆ ಅವನು ಊರಲ್ಲಿರಲಿಲ್ಲ. ಬಂದಾಗ ಹೇಳಿದರಾಯ್ತೆಂದುಕೊಂಡೆವು. ಆದರೆ ನಾವೋ ನರಮನುಷ್ಯರು; ನಮ್ಮ ನಮ್ಮ ಮನಸ್ಸುಗಳನ್ನೆ ತಿಳಿಯಲಾಗುವುದಿಲ್ಲ; ಇನ್ನು ಶಿವನ ಮನಸ್ಸನ್ನು ತಿಳಿಯಲಾದೀತೆ? ನಂದಗಾವಿಯಿಂದ ಸಿಂಗಾರೆವ್ವನ ಅಪ್ಪ, ಗೌಡ ಬಂದು ಒಕ್ಕರಿಸಿದ. +ಹೋದ ಸಲ ತಂದೆ ಮಗಳಿಗೆ ಜಗಳವಾಗಿತ್ತಲ್ಲ, ಇನ್ನು ಮೇಲೆ ಈ ಕಡೆ ಅವನು ಕಾಲಿಡಲಾರನೆಂದೇ ನಂಬಿದ್ದೆವು. ಆದರೆ ಅಮಾವಾಸ್ಯೆಯ ದಿನವೇ ಮಟಮಟ ಮಧ್ಯಾಹ್ನ ಸರಗಂ ದೇಸಾಯಿಯೊಂದಿಗೆ ನಗುನಗುತ್ತಾ ಅರಮನೆಗೆ ಬಂದ. ಹೋದ ಸಲದ ಅವಮಾನಗಳು ಅವನ ಮುಖದ ಮೇಲೆ ಒಂದೂ ಗೆರೆ ಮೂಡಿಸಿರಲಿಲ್ಲ. ಸಾಲದ್ದಕ್ಕೆ ಗೆಲುವಾಗಿದ್ದ, ಮತ್ತು ಯಾರು ಏನು ಹೇಳಿದರೂ ನಗಲು ಸಿದ್ಧನಾಗಿದ್ದ. ಬಂದವನು ನನ್ನನ್ನೂ ಮಗಳನ್ನೂ ಸಂತೋಶದಿಂದಲೇ ಮಾತಾಡಿಸಿದ. ಊಟಕ್ಕೆ ಕೂತಾಗ ದೇಸಾಯಿಯನ್ನು ಹೊಗಳಿದ. +ಊಟವಾದ ಮೇಲೆ ಮಾವ ಅಳಿಯ ಇಬ್ಬರೂ ಎಲಡಿಕೆ ಹಾಕುತ್ತ ಕೂತಾಗ ಸಿಂಗಾರೆವ್ವನನ್ನು ಅಲ್ಲಿಗೇ ಕರೆಸಿದರು. ಲೋಕಾಭಿರಾಮವೆಂಬಂತೆ ಗೌಡ “ಏನವಾ ಸಿಂಗಾರೆವ್ವ, ಹೋದಸಲ ಬಂದಾಗ ಗಂಡಮಗನ್ನ ಹಡದ ನೋಡಾಕ ನನ್ನ ಕರಸ್ತೇನಂತ ಅಂದಿದ್ದಿ. ಭಾಳ ದಿನ ಕರಿ ಬರಲಿಲ್ಲ. ಅದಕ್ಕ ಹಡದಿದ್ದಿಯೋ ಹಂಗಂತ ನಾನಽ ನೋಡಿಕೊಂಡು ಹೋಗಾಕ ಬಂದೆ” ಅಂದ. ಕತ್ತರಿಸಿದ ಹಲ್ಲಿಯ ಬಾಲದಂತೆ ಮಗಳು ವಿಲಿವಿಲಿ ಒದ್ದಾಡಿದಳು. ಕೋಪದಿಂದ ಉಸಿರಿನ ರಭಸವೇರಿ ಅವಳ ಮೂಗಿನ ತುದಿ ನಡುಗುತ್ತಿತ್ತು. ಆಕೆ ಮಾತಾಡಲಿಲ್ಲ. ನನಗೂ ಧೈರ್ಯವಾಗಲಿಲ್ಲ. ಅಲ್ಲಿ ನಿಲ್ಲದೆ ಹೋಗಬೇಕೆಂದು ಹಿಂತಿರುಗುವಷ್ಟರಲ್ಲಿ- “ಅರರರ, ಹೇಳಬೇಕಾದ ಸುದ್ದೀನಾಽ ಮರತಬಿಟ್ಟಿನಲ್ಲಾ; ನಿನಗೊಬ್ಬ ತಮ್ಮ ಹುಟ್ಟ್ಯಾನವ್ವ! ನಿನ್ನ ಚಿಗವ್ವ ಗಂಡುಮಗನ್ನ ಹಡದ್ದಾಳ; ಭಾಳ ದಿನಕ್ಕ ಹೆಂಗೂ ಒಬ್ಬ ಗಂಡ ಮಗ ಹುಟ್ಟಿದ, ಇನ್ನ ಮಕ್ಕಳು ಸಾಕೋ ಶಿವನಽ ಅಂದರ, ನಿನ್ನ ಇನ್ನೊಬ್ಬ ಚಿಗವ್ವನೂ ಬಸರಾಗ್ಯಾಳ! ಕೊಡೋ ದೇವರು, ನೋಡ್ರಿ ದೇಸಾಯರಽ ಬ್ಯಾಡಂದವರಿಗಿ ಬೇಕಬೇಕಂತ ಕೊಡತಾನ, ಬೇಕಂದವರು ಉಡಿ ಒಡ್ಡಿ ಹಲುಬಿದರೂ ಕೊಡೋದಿಲ್ಲ!ಇದಕ್ಕ ಏನಂತೀರಿ?” ಎಂದು ದನಿಯೇರಿಸಿ ಹೇಳಿ, ಬಾಯಿಯೊಳಗೆ ಎಲೆ ತುರುಕಿ ಮಗಳ ಕಡೆ ನೋಡಿ ವ್ಯಂಗ್ಯವಾಗಿ ನಕ್ಕ. ತಂದೆ ಮಗಳ ಸಂಬಂಧದ ಹುಳುಕು ದೆಸಾಯಿಗೇನು ಗೊತ್ತು? “ಕಂದನಾ ಆಗಮನದ ಮುಂದೆ ಇನ್ನುಳಿದ ಆನಂದಗಳು ಕುಂದೆಂಬುದರಲ್ಲಿ ಸಂದೇಹವೇನು ಮಾವಾ” ಎಂದೇನೋ ಪ್ರಾಸ ಒದರಿದ. ಈ ಪ್ರಾಸವನ್ನೇ ಮೆಚ್ಚಲಿದ್ದ ತಂದೆಯ ಮಾತನ್ನು ಕತ್ತರಿಸಿ ಸಿಂಗಾರೆವ್ವ ಹೇಳಿದಳು: +“ಭಾಳ ಚೆಲೋ ಆತ ಬಿಡಪ. ನಿನ್ನ ಸಂಸ್ಥಾನ ನಿನಗಽ ದಕ್ಕೂ ಹಂಗಾಯ್ತು. ಮರ್‍ಯಾ ತಿರಿಗಿ ಊರಿಗಿ ಬಂದಾನೇನು?” +ಹೀಂಗ್ಯಾಕೆ ಹೇಳಿದಳೆಂದು ನನಗೆ ಗೊತ್ತಿತ್ತು, ಗೌಡನಿಗೂ. +“ಸತ್ತ ಹೋದನಲ್ಲವಾ, ಸತ್ತವರು ಮತ್ತೆಲ್ಲಿ ಬರತಾರ? ಈ ಗೌಡನ ಎದುರಿಗೆ ಇನ್ನೂತನಕ ಯಾರೂ ನಿಂತಿಲ್ಲವಾ. ಅಂಥವರ್‍ನ ಇಲ್ಲಾ ದೇವರು ಮುರೀತಾನ, ಇಲ್ಲಾ ನಾ ಮುರೀತೀನಿ” ಗೌಡನ ಕಣ್ಣು ಕ್ರೂರವಾಗಿ ಇದು ನಿನಗೂ ಎಚ್ಚರಿಕೆ ಎಂಬಂತೆ ಮಗಳನ್ನು ನೋಡಿದವು. ಸಿಂಗಾರೆವ್ವ ಹತಾಶಳಾಗಿದ್ದಳು. ಇವಳನ್ನರಿಯುವುದಕ್ಕೇ ಅವನು ಮುದ್ದಾಂ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದ. ನೊಂದ ದನಿಯಲ್ಲಿ, ಆದರೂ ಕೊನೆಯ ಅಸ್ತ್ರದಹಾಗೆ, “ಆಯ್ತಲ್ಲಪಾ, ಗಂಡಮಗ ಹುಟ್ಯಾನಂತ ಅರಮನ್ಯಾಗ ಪಾಲಾ ಬೇಡಾಕ ಬಂದಿಲ್ಲ ಹೌಂದಲ್ಲೊ?”-ಎಂದಳು. ಆದರೆ ಗೌಡ ಚಂಡಾಲ. ಇಂಥ ಮಾತುಗಳನ್ನ ನಿರೀಕ್ಷಿಸಿದ್ದಂತೆ “ಅದಕ್ಕಽ ಬಂದೀನವ ನಿನಗೂ ದೇಸಾಯರಿಗೂ ಹೇಳಿ ಹೋಗೋಣಾಂತ ಬಂದೆ; ನೀವ್ಯಾಕ ನನ್ನ ಮಗನ್ನ ದತ್ತಕ ತಗೋಬಾರದು?”-ಅಂದ. +ಏನಪಾ, ತಂದೆಯೆಂಬವ ಮಗಳಿಗಾಡೋ ಮಾತುಗಳ ಇವು? ಬೇರು ಹಿಡಿದಲುಗಿದ ಬಳ್ಳಿಯ ಹಾಗೆ ಸಿಂಗಾರೆವ್ವ ಗಡಗಡ ನಡುಗಿ ಜೀವದಾನ ಮಾಡೆಂಬಂತೆ ಗೌಡನ ಕಡೆ ದೈನ್ಯದಿಂದ ನೋಡಿದಳು. ಈಸಲ ಕುಡುಗೋಲಿನ ಹಾಗೆ ನಗೆಯನ್ನು ಬಳಸಿದ. ಸಿಂಗಾರೆವ್ವನಿಗೆ ಮತ್ತೆ ಕೋಪ ಬಂತು. ಈಗಷ್ಟೆ ಹೊತ್ತು ಮುಳುಗುತ್ತಿತ್ತಲ್ಲ. ಅ ಸಂಜಿ ಮುಗಿಲಿನ ಕೆಂಪೆಲ್ಲ ಅವಳ ಕಣ್ಣೊಳಗೆ ಗಟ್ಟಿಗೊಂಡಹಾಂಗಿತ್ತು. ಕಣ್ಣಂಚಿನಲ್ಲಿ ಒಡೆದ ಹನಿ ನೆತ್ತರಿನಂತೆ ಕಂಡಿತು. ಗೆದ್ದ ಗೌಡ ಕಿಸಕ್ಕನೆ ನಕ್ಕು ದೇಸಾಯಿಯ ಕಡೆ ನೋಡಿ “ನೋಡ್ರಿ ವಿಚಾರಮಾಡ್ರಿ ದೇಸಾಯರಽ, ನನ್ನ ಮಗನ್ನ ಬೇಕಾದ್ರೆ ದತ್ತಕ ಕೊಡಾಕ ನಾ ತಯಾರಿದ್ದೀನಿ.”- ಅಂದ ದೇಸಾಯಿ ಸುಮ್ಮನೆ ಎದ್ದ. +ತಂದೆ ಮಗಳಿಬ್ಬರೂ ಪರಸ್ಪರ ವೈರಿಗಳಾಗಿದ್ದರು. ಸಧ್ಯ ಬೇರೆ ಆಯುಧಗಳಿರಲಿಲ್ಲವಾದ್ದರಿಂದ ಮಾತುಗಳಿಂದಲೇ ಇನ್ನೊಬ್ಬರ ಎದೆ ಸೀಳಲು ಹವಣಿಸುತ್ತಿದ್ದರು. ಗೌಡನಂತೂ ಒಂದೊಂದು ಮಾತಾಡಿ, ಅದು ನಟ್ಟಿತೋ ಇಲ್ಲವೋ ಎಂಬಂತೆ ಮಗಳ ಮುಖ ನೋಡುತ್ತಿದ್ದ. ನಿಜ ಹೇಳಬೇಕೆಂದರೆ ಅವನ ಪುತ್ರೋತ್ಸವವನ್ನು ಆನಂದದಿಂದ ಆಚರಿಸಲು ನಾವಿಬ್ಬರೂ ಸಿದ್ದರಿದ್ದೆವು. ಸಿಂಗಾರೆವ್ವನಿಗೇನು ಕರುಳಿಲ್ಲವೆ? ಆಕಳು ಕರು ಹಾಕಿದರೇ ಹಿಗ್ಗುವವಳು ತನ್ನ ಚಿಕ್ಕಮ್ಮ ಗಂಡು ಹಡೆದಾಗ ಸಂತೋಷಪಡದೆ ಇರುತ್ತಾಳೆಯೇ? ಆದರೆ ಗೌಡನ ಮಾತು ಅವಳೆದೆಯಲ್ಲಿ ವಿಷಬಿತ್ತಿ ಸಂತೋಷಗಳೇ ಮೊಳೆಯದ ಹಾಗೆ ಮಾಡಿದ್ದವು. ಗೌಡನಂತೂ ಹೇಳಿಕೇಳಿ ಅಗ್ಗದ ಮನುಷ್ಯ. ಈಗ ಸಿಂಗಾರೆವ್ವ ತುಸು ಹಣ ಚೆಲ್ಲಿದ್ದರೆ ಅಥವಾ ಒಂದು ಆಭರಣ ಎಸೆದಿದ್ದರೆ ಕುಲುಕುಲು ನಗುತ್ತ “ಹಾಂಗ ಮಗಳಽ. ಹೀಗ ಮಗಳಽ”- ಎಂದು ಹಸ್ತ ಹೊಸೆಯುತ್ತಿದ್ದನೆಂದೂ ನಾ ಬಲ್ಲೆ. ಹೆಣಕ್ಕೇ ಮಗಳನ್ನು ಮದುವೆ ಮಾಡಿಕೊಟ್ಟವನು ಇನ್ಯಾವುದಕ್ಕೆ ಹೇಸಿಕೊಂಡಾನು? +ನಾನು ಹೋದಾಗ ಸಿಂಗಾರೆವ್ವ ಅಳುತ್ತಿರಲಿಲ್ಲ. ಎದೆಯನ್ನು ಕಲ್ಲಿನಂತೆ ಗಟ್ಟಿ ಮಾಡಿಕೊಂಡಿದ್ದಳು. ಮನಸ್ಸಿನಲ್ಲಿ ಅವಮಾನದ ಸುಳಿವಾಗಲೀ, ಸರಿತಪ್ಪುಗಳ ಹೊಯ್ದಾಟವಾಗಲೀ ಇರಲಿಲ್ಲ. ನನಗೆ ಸಮಾಧಾನವೇ ಆಯಿತು. ಮಾತಿಲ್ಲದೆ ಅವಳ ಪಕ್ಕದಲ್ಲೇ ಕೂತೆ. +ಎಷ್ಟು ಹೊತ್ತು ಹೀಗೇ ಕೂತಿದ್ದೆವೋ, ಆಗಲೇ ಮನೆಯಲ್ಲಿ ಕತ್ತಲಾಗಿತ್ತು. ಅಷ್ಟರಲ್ಲಿ ದೇಸಾಯಿ ಲುಟುಲುಟು ಬಂದು “ಮಾವನವರು ಊರಿಗಿ ಹೊಂಟಾರ. ಅವರ್‍ನ ಕಳಿಸಿ ನಾವು ಹಾಂಗಽ ಪಕ್ಕದ ಹಳ್ಳಿಗಿ ಬಯಲಾಟ ನೋಡ್ಲಿಕ್ಹೋಗತೀವಿ” ಎಂದು ಹೇಳಿ ನೇತುಹಾಕಿದ್ದ ಬಂದುಕು ತಗಂಡು ಹೋಗಿಬಿಟ್ಟ. ನಾನೂ ದೀಪ ಹಚ್ಚಿ ಸಿಂಗಾರೆವ್ವನ ಮುಂದೆ ಇಡಬೇಕೆನ್ನುವಷ್ಟರಲ್ಲಿ ಅವಳು ಎದ್ದುನಿಂತು, +“ಶೀನಿಂಗಿ” ಎಂದಳು. +“ಎವ್ವ.” +“ಹಿತ್ತಲ ಬಾಗಲಾ ತಗದಿಡು. ಹುಚ್ಚಯ್ಯ ಬರಲಿ. ಪೂಜಿ ಮಾಡಿಬಿಡೋಣು.” +“ಹುಚ್ಚಯ್ಯ!…..” +“ನಮ್ಮ ಶೀಲ ನಮ್ಮ ಕೈಯಾಗಿದ್ದರ ಯಾರೇನು ಮಾಡತಾರ? ಇಂದು ಶಿವನ ಪರೀಕ್ಷೆ!.” +‘ಬ್ಯಾಡ ಯವ್ವಾ, ಶಿವನ ಪರೀಕ್ಷೆ ಮಾಡಾಕ ನಾವೆಷ್ಟವರು?’-ಎಂಬ ಮಾತು ನನ್ನ ತುದಿ ನಾಲಗೆಯ ತನಕ ಬಂದಿತ್ತು. ಆದರೆ ಅವಳ ಕಣ್ಣೊಳಗೆ ಉರಿಯುತ್ತಿದ್ದ ಪಂಜುಗಳನ್ನು ನೋಡಿ ಅದು ಗಂಟಲಲ್ಲೇ ಇಂಗಿಹೋಯಿತು.” +ಒಂಬತ್ತು +ಶೀನಿಂಗವ್ವ ತನ್ನ ಪೂಜೆಯ ಕಥೆ ಮುಂದುವರಿಸಿದಳು. ಮಧ್ಯೆ ಅವಳು ಹೇಳುವುದಕ್ಕೆ ಇಷ್ಟಪಡದ ಸಂಗತಿಗಳಿದ್ದವು. ಯಾಕೆಂದರೆ ಪೂಜೆ ಸುರುವಾಗಿ ನಾಕೆಂಟು ಮಾತು ಮುಗಿದಿರಲಿಲ್ಲ, ಅಷ್ಟರಲ್ಲೆ ಸರಗಂ ದೇಸಾಯಿಯ ಪ್ರವೇಶವಾಗಿಬಿಟ್ಟಿತ್ತು. ನಾನು ಕೆದಕಿ ಕೆದಕಿ ಕೇಳಿದರೆ ಮುದುಕಿ ಮತ್ತೆ ಮತ್ತೆ ಬಚ್ಚಿಡತೊಡಗಿದಳು. ಶಿರಸೈಲ ನನ್ನ ಸಹಾಯಕ್ಕೆ ಬಂದ. “ಏನೂ ಮುಚ್ಚಿಡಬ್ಯಾಡವೇ, ಅವರೇನು ಬ್ಯಾರೇದವರಾ? ನಮ್ಮ ಊರವರಽ ಅಲ್ಲೇನು? ಅವರಿಗೆಲ್ಲ ಗೊತ್ತಾಗತೈತಿ, ನೀ ಸುಮ್ಮನ ಹೇಳಿಕೊಂಡು ಹೋಗು”-ಎಂದ. ಬೇರೆ ಯಾರದೋ ಕಥೆಯಾದರೆ ನಡೆದೀತು, ಇದು ತನ್ನ ಆಪ್ತ ಗೆಳತಿಯ ವಿಚಾರ, ಕಥೆಯಲ್ಲಿ ಇವಳೂ ಭಾಗವಹಿಸಿದ್ದವಳು, ಸಂಕೋಚವಿರುವುದು ಸ್ವಾಭಾವಿಕ. ದೊರೆಸಾನಿಯ ಅವಮಾನದ ಬಗ್ಗೆ ಕೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಈಗ ನಾಕೈದು ದಿನಗಳಿಂದ ಕಥೆ ಕೇಳುತ್ತಿದ್ದೇನಲ್ಲ, ಮುದುಕಿಗೂ ನನಗೂ ಒಂದು ಬಗೆಯ ಸದರ ಬೆಳೆದಿತ್ತು. ನನ್ನ ಮುಖ ನೋಡಿದಳು. ಕಿಡಿಗೇಡಿತನ ಕಾಣಲಿಲ್ಲವೆಂದು ತೋರುತ್ತದೆ. ಆದರೂ ಅನುಮಾನದಿಂದಲೇ ಕಥೆ ಸುರು ಮಾಡಿ, ತುಸು ಮುಂದೆ ಸಾಗುವಷ್ಟರಲ್ಲಿ ಮೈಛಳಿ ಬಿಟ್ಟು ಹೇಳತೊಡಗಿದಳು: +“ದೇಸಾಯಿ ಹ್ಯಾಗೂ ಬಯಲಾಟವೆಂದು ಪಕ್ಕದ ಹಳ್ಳಿಗೆ ಹೋಗಿದ್ದ. ಹಿರಿಯ ದೊರೆಸಾನಿ ಹಾಸಿಗೆ ಬಿಟ್ಟು ಏಳುವವಳಲ್ಲ. ಇನ್ನು ಆಳುಗಳೋ, ಒಂದೊಂದು ದಿಕ್ಕಿನಲ್ಲಿ ಮಲಗುವಂಥವರು. ಪೂಜೆ ಮಾಡೋದಕ್ಕೆ, ಹಿರಿಯರ ಮಾತು ಮೀರಿದ್ದೆವೆಂಬುದನ್ನು ಬಿಟ್ಟರೆ ಬೇರೆ ಯಾವ ಆತಂಕಗಳೂ ಇರಲಿಲ್ಲ. ಸಿಂಗಾರೆವ್ವ ಮನಸ್ಸು ಕಲ್ಲುಮಾಡಿ ಮಕ್ಕಳನ್ನು ಶಿವನ ಕೈಯಿಂದ ಕಸಿದುಕೊಂಡಾದರೂ ಬರಬೇಕೆಂದು ನಿರ್ಧರಿಸಿಬಿಟ್ಟಿದ್ದಳು. ಅದೇ ಅವಳ ಕೆಟ್ಟ ನಿರ್ಧಾರವಾಯಿತು. +ನಾನು ಓಡಾಡಿ ಪೂಜೆಯ ಸಾಮಾನು ಸರಂಜಾಮು ಕೂಡಿಸತೊಡಗಿದೆ. ಸಿಂಗಾರೆವ್ವ ಅತ್ತೆಗೆ ಮತ್ತು ಆಳುಗಳಿಗೆ ಊಟ ಹಾಕಿ ನನ್ನ ನೆರವಿಗೆ ಬಂದಳು. ನಿಂಬೆ ಹಣ್ಣು, ತೆಂಗಿನಕಾಯಿ, ಕರಿಯದಾರ, ಬೇವಿನಸೊಪ್ಪು, ಮಗುವಿನ ಹೇಲು, ಐದು ಕೂದಲು-ಇವನ್ನೆಲ್ಲ ಓಡಾಡಿ ಹ್ಯಾಗೆ ಸಂಗ್ರಹಿಸಿದೆನೆಂದೇ ತಿಳಿಯದು. ಇನ್ನೆರಡು ಕೋಳಿ ಬೇಕಿದ್ದವು. ಹಿತ್ತಲ ಬಾಗಿಲಿನಿಂದ ಹೊಲಗೇರಿಗೆ ಓಡಿಹೋಗಿ ಅವನ್ನೂ ತಂದೆ. ಕೊಟ್ಟಿಗೆಯಲ್ಲಿ ಮಲಗುವ ಆಳನ್ನು ಪುಸಲಾಯಿಸಿ ದನಕರು ನಾನೇ ನೋಡಿಕೊಳ್ಳುವುದಾಗಿ ಹೇಳಿ ಅವನನ್ನ ಅವನ ಮನೆಗೆ ಕಳಿಸಿದ್ದಾಯಿತು. +ಯಾರಿಗೂ ಪತ್ತೆಯಾಗದಿರಲೆಂದು, ದೇಸಾಯಿ ಇಲ್ಲವಲ್ಲ ಎಂದು ಸಿಂಗಾರೆವ್ವ ಮಲಗುವ ಅಂತಸ್ತಿನಲ್ಲೇ ಪೂಜೆ ಮಾಡುವುದೆಂದು ಗೊತ್ತುಮಾಡಿಕೊಂಡಿದ್ದೆವು. ನಾನು ಕರಿ ಆಕಳ ಸೆಗಣಿಯಿಂದ ನೆಲ ಸಾರಿಸುವಾಗ ಸಿಂಗಾರೆವ್ವ ಇನ್ನೊಮ್ಮೆ ಜಳಕ ಮಾಡಿ ಒದ್ದೆಯಲ್ಲೇ ಬಂದಳು. ಊರೆಲ್ಲ ಮಲಗಿ ಸ್ತಬ್ಧವಾಗಿತ್ತು. ಅರಮನೆಯಲ್ಲಂತೂ ಕೆಳಗೆ ಕೊಟ್ಟಿಗೆಯಲ್ಲಿಯ ದನ ಬಾಲ ಜಾಡಿಸಿಕೊಂಡರೂ ಅದರ ಸದ್ದು ನಮಗೆ ಕೇಳಿಸುತ್ತಿತ್ತು. ಸಿಂಗಾರೆವ್ವ ಸೀರೆ ಕಳಚಿ ಮಡಿಯುಟ್ಟಳು. ಹುಚ್ಚಯ್ಯ ಇನ್ನೂ ಬರಲಿಲ್ಲವಲ್ಲ, ನೋಡೋಣವೆಂದು ತಿರುಗುವಷ್ಟರಲ್ಲಿ ಕರಿ ಆಕಾರವೊಂದು ಬಾಗಿಲಬಳಿ ಮರೆಯಾದಂತೆನಿಸಿತು. ಗಾಬರಿಯಾಗಿ ಯಾರೋ ಬಂದಿದ್ದಾರೆಂದು ದೊರೆಸಾನಿಗೆ ಸನ್ನೆಮಾಡಿ ಕಂದೀಲು ಹಿಡಿದುಕೊಂಡು ಬಂದೆ. ಹುಚ್ಚಯ್ಯ ನಿಂತಿದ್ದ. ಸಿಂಗಾರೆವ್ವ ಒದ್ದೆ ಕಳಚಿದ್ದನ್ನೂ ಕದ್ದು ನೋಡಿದನೆಂದು ಅನ್ನಿಸಿತು. ಅಪಾಯವುಂಟಾಗದಂತೆ ನಾನೇ ಹುಷಾರಾಗಿರಬೇಕೆಂದುಕೊಂಡೆ. +ಮಾತಿಲ್ಲದೆ ಒಳಗೆ ಬಂದ. ಮೈತುಂಬ ಬೂದಿ ಬಳಿದುಕೊಂಡು ಬಗಲಿಗೊಂದು ಜೋಳಿಗೆ ತೂಗುಬಿಟ್ಟಿದ್ದ. ಜೋಳಿಗೆಯಿಂದೊಂದು ಮೂಳೆಯನ್ನೂ ತಲೆ ಬುರುಡೆಯನ್ನೂ ತಗೆದ. ನನ್ನ ಎದೆ ಗಡಗಡ ನಡುಗಿತು. ಕೊಡದಲ್ಲಿ ಕರಿಹೋರಿಯ ಸೆಗಣಿ ಹಾಕಿಸಿ ಗಂಜಳ ಮಾಡುವಂತೆ ನನಗೆ ಹೇಳಿದ. ಆಮೇಲೆ ಅವನೇ ಅದರಲ್ಲಿ ಮಗುವಿನ ಹೇಲನ್ನೂ ಕೂದಲನ್ನೂ ಬೆರೆಸಿ ಕೈ ಒರೆಸಿಕೊಂಡ. ಅರಿಷಿಣ ಕುಂಕುಮಗಳಿಂದ ಕುಂಬಳಕಾಯಿಯ ಮೇಲೆ ಏನೇನೋ ಗೆರೆ ಬರೆದು ಕರಿದಾರ ಸುತ್ತಿದ್ದ ನಿಂಬೆಹಣ್ಣು ಅದಕ್ಕೆ ಚುಚ್ಚಿ ಕಣ್ಣು ಮಾಡಿದ. ಸುಣ್ಣದ ಗೆರೆಯಿಂದ ಬಾಯಿ ಬರೆದು ಮಲ್ಲಿಗೆ ಹೂ ಅಂಟಿಸಿ, ಮಂತ್ರ ಗೊಣಗಲಿಕ್ಕೆ ಸುರುಮಾಡಿದ. ಕುಂಕುಮದಲ್ಲದ್ದಿದ್ದ ಅಕ್ಕಿಯಿಂದ ನೆಲದಮೇಲೇನೋ ನಕ್ಷೆ ಬರೆದ. ಕೋಳಿ ಕುಯ್ದು ನಕ್ಷೆಯ ಸುತ್ತ ನೆತ್ತರು ಸಿಂಪಡಿಸಿ ಸೀಮೆ ಕಟ್ಟಿದ. ಈಗ ಆತನ ದನಿ ಬಿರುಸಾಯಿತು. ಬರಲೊಲ್ಲದ ದೇವರುಗಳನ್ನ ಮಂತ್ರಗಳಿಂದ ಬಂಧಿಸಿ ಎಳೆದು ತರುವಂತೆ ಮಂತ್ರ ಹೇಳತೊಡಗಿದ. ಆಗಾಗ ಅವುಗಳನ್ನು ಹೆದರಿಸಿ ಅಪ್ಪಣೆ ಕೊಡುವಂತೆ ಹಾಂ ಹೂಂ ಎಂದು ಹೂಂಕರಿಸುತ್ತಿದ್ದ, ಅಂಕೆಗೆ ಬಾರದ ಪುಂಡುದನಗಳಂತೆ ದೇವರು ಕಾಡಿಸುತ್ತಿದ್ದವೇನೋ, ಕಣ್ಣು ಖೆಕ್ಕರಿಸಿ, ಕೆಂಡ ಕಾರುತ್ತ ವಿಕಾರವಾಗಿ ಅವುಗಳನ್ನು ನೋಡುತ್ತ ನಕ್ಷೆಯ ಸ್ಥಳಕ್ಕೆ ಬರುವಂತೆ ಸೂಚಿಸುತ್ತಿದ್ದ. ಬಲಗೈಯಲ್ಲಿ ಮೂಳೆ ಹಿಡಿದು, ಮಂತ್ರಗಳನ್ನು ಸಣ್ಣದಾಗಿ ಹೇಳುತ್ತ ಹೊಂಚಿ, ಅವು ಸಿಕ್ಕೊಡನೆ ಅವು ಕೂತಿರಬೇಕಾದ ಸ್ಥಳವನ್ನು ಮೂಳೆ ಬಡಿದು ನಿರ್ದೇಶಿಸುತ್ತ, ಅವು ಬಂದವೆಂದಾಗ ಮೂಳೆ ಜಡಿದು ಬಂಧಿಸುವಂತೆ ಮಂತ್ರ ಗೊಣಗಿದ. +ಆಮೆಲೆ ಕುಂಬಳಕಾಯಿಯನ್ನು ಅಡ್ಡಡ್ಡ ಸರಿ ಅರ್ಧ ಹೋಳು ಮಾಡಿ ದೊರೆಸಾನಿಯ ಗರ್ಭದ ಮುಂದೆ ಹಿಡಿದು ಅದರ ಮೇಲೊಂದು ಸೆಗಣಿಯ ಗುಂಡಿಟ್ಟ. ಅದನ್ನು ನಕ್ಷೆಯೊಳಗಿಟ್ಟು ಅದರ ಮ್ಯಾಲೆ ಬುರುಡೆಯಿಟ್ಟು ಕೈಯೊಳಗಿನ ಮೂಳೆ ಊರಿದ. ಹಾಗೆ ಮೂಳೆ ಊರಿದನೋ ಇಲ್ಲವೋ ಭಗ್ಗನೆ ಬೆಂಕಿ ಹೊತ್ತಿತು. ಅದನ್ನು ಕಂಡೊಡನೆಯೇ ಅದೇನು ಮಾಯವೋ, ಮಾಟವೋ ಅರಿವು ಹಾರಿ ಇಬ್ಬರೂ ಪರವಶರಾದೆವು. ನಾನು ಬರೆದ ಚಿತ್ರವಾದೆ, ಅವಳು ಮಾಟದ ಗೊಂಬೆಯಾದಳು. ದೊರೆಸಾನಿಗೂ ಹುಚ್ಚಯ್ಯನಿಗೂ ಅಂತರಂಗದಲ್ಲೇ ಮಾತುಕತೆ ನಡೆಯುತ್ತಿತ್ತೋ ಏನೋ, ಯಾರೂ ಹೇಳುತ್ತಿರಲಿಲ್ಲ, ಯಾರೂ ಕೇಳುತ್ತಿರಲಿಲ್ಲ. ಹುಚ್ಚಯ್ಯ ರಭಸದಿಂದ ಮಂತ್ರ ವಟಗುಟ್ಟುತ್ತ ಕೊಡದಲ್ಲಿಯ ಗಂಜಳವನ್ನು ಅವಳ ಮೈತುಂಬ ಎರೆದ. ಹುಚ್ಚಯ್ಯ ಸಿಂಗಾರೆವ್ವನನ್ನು ಹಾರಿಸಿಕೊಂಡು ಹೋಗುವನೆಂದೋ, ಏನೋ ಸಪ್ಪಳಾಯಿತೆಂದೋ, ಕೆಡುಕಿನ ಅರಿವು ಬಂದುದರಿಂದಲೋ-ಯಾಕೋ ಏನೋ ಎಂತೋ, ಅಂತೂ ಒದರಿ “ಅವ್ವಾ!” ಅಂದೆ. ಹಾಗೆ ಕೂಗಿದ್ದರಿಂದಲೇ ನನಗೆ ಸರಿಯಾಗಿ ಅರಿವು ಮೂಡಿದ್ದು. ಕೇಳಿದರೆ ಯಾರೋ ತೊಲೆಬಾಗಿಲು ಬಡಿಯುತ್ತಿದ್ದರು. +***** +ಮುಂದುವರೆಯುವುದು +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_73.txt b/Kannada Sahitya/article_73.txt new file mode 100644 index 0000000000000000000000000000000000000000..25dc9ddc49bf78ed5886c0d95cf857da2349d87d --- /dev/null +++ b/Kannada Sahitya/article_73.txt @@ -0,0 +1,105 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ ಸಾವಿಗೆ ಯಾರೂ ಕಾರಣರಲ್ಲ. ತನ್ನ ಆತ್ಮೀಯರಾರಿಗೂ ಯಾವುದೇ ವಿಧದ ಹಿಂದೆಯಾಗಬಾರದು’ ಬರೆದಿಟ್ಟ. ಅಮ್ಮನಿಗೊಂದು ಭಾವುಕವಾಗಿ ಪತ್ರ ಪ್ರಾರಂಭಿಸಿದ. ‘ಹೆತ್ತ ಋಣಕ್ಕೆ ತಾ ನೀಡುತ್ತಿರುವುದು ಸಾವಿನ ನೋವೊಂದೇ_’ ಎಂದು ಮುಗಿಸಿದ. ಇನ್ನು ಸುಧಾಗೊಂದು ಪತ್ರ ಬರೆಯಬೇಕು. ಏನೂ ಹೇಳದೆ, ಹೇಳಲಾರದೆ ಹೋಗುವುದಾದರೂ ಹೇಗೆ? ಏನೆಂದು ಬರೆಯುವುದು? ಬಹಳ ಹೊತ್ತು ಚಿಂತಿಸಿದ. “ಸುಧಾ-ನಿನ್ನ ಜಗತ್ತಿನಲ್ಲಿ ನನಗೆ ಅಣುವಿನಷ್ಟೂ ಸ್ಥಾನವಿಲ್ಲದಿರಬಹುದು, ನನ್ನ ಜಗತ್ತಿನ ತುಂಬ ನೀನೇ ತುಂಬಿರುವೆ” ಆರಂಭಿಸಿ ನಿಲ್ಲಿಸಿದ. ಪದಗಳನ್ನು ಆಯ್ದು ತೂಗಿ ಜೋಡಿಸಿದ. “ಇದು ಆತ್ಮಹತ್ಯೆಯಲ್ಲ ಸುಧಾ. ಆತ್ಮಾರ್ಪಣೆ! ನಿನ್ನ ಪ್ರೀತಿಯ ಬಲಿಪೀಠಕ್ಕೆ ನರಬಲಿಯೇ ಬೇಕಿರಬಹುದು_” ಕಣ್ಣೇಕೋ ಹನಿಗೂಡಿತು. ಮತ್ತೂ ಬರೆದ_ “ನಿನಗೆ ಪ್ರೀತಿ ಆಟಿಗೆಯಂತೆ, ಆಡಿ ಎಸೆಯಬಲ್ಲೆ. ನನಗೆ ಪ್ರೀತಿ, ಪವಿತ್ರವಾದದ್ದು. ಅದಕ್ಕಾಗಿ ಪ್ರಾಣತ್ಯಾಗಕ್ಕೂ ನಾ ಸಿದ್ಧ!” ತಾ ಸಾಯುತ್ತಿರುವುದು ಸುಧಾಗಾಗಿ ಅಲ್ಲ. ಪ್ರೀತಿಯ ಪವಿತ್ರತೆಗಾಗಿ. ಪ್ರೇಮದ ಸಿದ್ಧಾಂತಗಳಿಗಾಗಿ ಹುತಾತ್ಮನಾಗುತ್ತಿದ್ದೇನೆ. ಎಂದು ಸಮರ್ಥಿಸಿಕೊಂಡ. ಕಡೆಗೆ ಸೇರಿಸಿದ_“ಸುಧಾ, ನೀ ಸುಖವಾಗಿರಬೇಕು. ನಿನ್ನ ಸುಖದಲ್ಲಿ ನನ್ನ ಆತ್ಮ ಶಾಂತಿ ಹುಡುಕುತ್ತದೆ. ನಮ್ಮ ಹತ್ತು ವರ್ಷಗಳ ಸಾಂಗತ್ಯ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾಗಿ ಜ್ಞಾಪಿಸಿದರೆ, ನಾ ಧನ್ಯ” ಪದಗಳು ತೃಪ್ತಿಕರವಾಗಿ ಕಂಡವು. ಇಷ್ಟು ಸಾಕು ಎಂದು ಮುಗಿಸಿದ. ನೀಟಾಗಿ ಮಡಚಿ ಕವರ್‍ನಲ್ಲಿ ಹಾಕಿ ಮೇಲೆ ಸುಧಾಳ ಹೆಸರು ಬರೆದ. ನಾಡದ್ದು ಸುಧಾಳ ಹುಟ್ಟು ಹಬ್ಬ. ಆ ದಿನ ಇದನ್ನು ಉಡುಗೊರೆಯಾಗಿ ಕೊಡಬೇಕು! +ಸುಧಾ ರವಿಯ ಸೋದರತ್ತೆಯ ಮಗಳು. ಸುಧಾ ತೊಟ್ಟಿಲಲ್ಲಿ ಬೆಟ್ಟು ಚೀಪುವಾಗಲೇ ‘ನಿನ್ನ ಹೆಂಡತಿ ಕಣೋ’ ಎಂದು ಹಿರಿಯರೆಲ್ಲ ಹೇಳುವಾಗ ಎಳೆಯ ವಯಸ್ಸಿನಲ್ಲಿ ಎಂಥದೋ ಪ್ರೀತಿಯ ಪುಳಕ. ಹದಿಹರೆಯದ ಹೊಸಿಲಲ್ಲಿ ಅವನ ಪ್ರೀತಿಯ ಮಹಾಪೂರಕ್ಕೆ ಸುಧಾ ದಿಕ್ಕಾದಳು. ಹಿರಿಯರ ಆಶಯ-ಒಪ್ಪಿಗೆ ಎಲ್ಲ ಇದ್ದ ಈ ಪ್ರೇಮ ಕತೆಗೆ ಸುಖಾಂತವೇ ಕಾದಿತ್ತು. ಆದರೆ ಆದದ್ದೇ ಬೇರೆ-ಹದಿನಾರರ ವಯಸ್ಸಿನಲ್ಲಿ ತನ್ನೊಡನೆ ಮೂರೂ ಹೊತ್ತೂ ಸುತ್ತಿದ ಹುಡುಗಿ, ಎಂ. ಎಸ್ಸಿ, ಪಾಸಾಗುವ ಹೊತ್ತಿಗೆ ಬಹಳಷ್ಟು ಬದಲಾದಳು, ಬೆಳೆದಳು. ‘ನನ್ನ ಮನಸ್ಸಿಗೆ ರೆಕ್ಕೆ ಮೂಡುವ ಮೊದಲೆ, ದಿಕ್ಕು ತೋರಿಟ್ಟ ಹಾಗಿತ್ತು ರವಿ. ಈಗ ನನ್ನ ಭಾವನೆಗಳು, ಅಭಿರುಚಿಗಳು ಬಹಳಷ್ಟು ಬದಲಾಗಿವೆ. ಹದಿನಾರರ ಮೋಹದಲ್ಲಿ ನೀಡಿದ ಬಾಲಿಷ ಭಾಷೆಗಳಿಗೆ, ಪ್ರಮಾಣಗಳಿಗೆ ಉರುಳು ಹಾಕಿಕೊಳ್ಳಲು ಸಿದ್ಧವಿಲ್ಲ. ನಾ ನನ್ನ ಸಹಪಾಠೀನ ಪ್ರೀತಿಸ್ತಾ ಇದ್ದೇನೆ’ ಎಂದು ತಣ್ಣಗೆ ಹೇಳಿಬಿಟ್ಟಳು. +ಮೊಟ್ಟಮೊದಲ ಬಾರಿಗೆ ಅತೀವ ಸಂಕಟದ ಅನುಭವ. ಹುಟ್ಟಿದಾರಾಭ್ಯ ಬಯಸಿದ್ದೆಲ್ಲ ಬಳಿಯೇ ಇದ್ದು ಬೆಳೆದವನು. ಸುಧಾಳನ್ನು ಹುಚ್ಚಾಪಟ್ಟೆ ಪ್ರೀತಿಸಿದ್ದ. ಎಲ್ಲ ಭಗ್ನ ಪ್ರೇಮಿಗಳಂತೆ ಅವನಿಗೆ ಹೊಳೆದದ್ದೂ ಒಂದೇ ಹಾದಿ. ಸುಧಾ ಇಲ್ಲದೆ ಬದುಕು ಊಹಿಸುವುದು ಹೇಗೆ? ನೆನಪುಗಳನ್ನು ಅಳಿಸುವುದು ಹೇಗೆ? ವರ್ಷಗಳಿಂದ ‘ಫಿಯಾನ್ಸಿ’ ಎಂದು ಸಾರಿಕೊಂಡು ಬಂದ ಸಮಾಜಕ್ಕೆ ಉತ್ತರಿಸುವುದು ಹೇಗೆ? ಪ್ರಶ್ನೆಗಳಿಗೆಲ್ಲ ಅವನ ಮಟ್ಟಿಗೆ ಇದ್ದದ್ದು ಒಂದೇ ಸುಲಭ ಪರಿಹಾರ_ಸಾವು! +ಈ ಮೂರು ಪತ್ರಗಳಲ್ಲಿ ಎಲ್ಲವೂ ಮುಗಿದು ಹೋಗಲಿದೆ. ಎಲ್ಲರನ್ನೂ ಬಿಟ್ಟು ಸಾಯುವುದೇ ಹೇಡಿಯಂತೆ. ಕೊಂಚ ಅಳುಕು, ಅಧೈರ್ಯ, ಇಲ್ಲಿಯವರೆಗೂ ಬೋರ್ ಎನಿಸಿದ್ದ ಶಶಿಯ ಮಾತುಗಳು ತಟ್ಟನೆ ನೆನಪಾದವು. ಅವಳ ಸೋಲು, ನಿರಾಶಾವಾದ, ಇದ್ದಕ್ಕಿದ್ದಂತೆ ಆಪ್ಯಾಯಮಾನವಾಯಿತು. ಶಶಿ ಎಷ್ಟೋ ಬಾರಿ ಹೇಳಿದ್ದಳು_“ಸಾಯೋರನ್ನ ಹೇಡಿ ಅಂತಾರೆ, ಅದು ಸುಳ್ಳು ಕಣೋ. ತಮ್ಮ ಬದುಕನ್ನು ತಮ್ಮ ಕೈಯಿಂದಲೇ ಕೊನೆಯಾಗಿಸೋಕೆ ಎಷ್ಟು ಧೈರ್ಯ ಬೇಕಲ್ಲ! ಬಹುಶಃ ಕೊಲೆ ಮಾಡಲೂ ಅಷ್ಟು ಬೇಕಿರಲಾರದು….” ಸಾವಿನಲ್ಲಿ ಶೌರ್ಯ, ಸಾಹಸ ಹುಡುಕಿದ. ಧೈರ್ಯ ತುಂಬಿಕೊಂಡ. ಒಮ್ಮೆಗೇ ಕತ್ತಲಾದ ಬದುಕಿನಲ್ಲಿ ಸಾವು ಬೆಳಕಿನ ಕಿಂಡಿಯಂತೆ ಕಂಡಿತು. +ಶಶಿ, ಸುಧಾಳ ಬಾಲ್ಯ ಸ್ನೇಹಿತೆ. ಜೊತೆಗೆ ಓದು, ಆಟ, ಸ್ಕೂಲು, ಮೂರು ಹೊತ್ತೂ ಸುಧಾಳ ಮನೆಯಲ್ಲೇ ಇರುತ್ತಿದ್ದ ರವಿಗೆ ಪರಿಚಯವಾಗಿತ್ತು. ಪಿ. ಯು. ಸಿ ವರೆಗೆ ಒತ್ತಿಕೊಂಡಿದ್ದ ಗೆಳತಿಯರು ಕಾಲೇಜು ಹಂತದಲ್ಲಿ ಬೇರೆಯಾದರು. ಕಡೆಗೊಮ್ಮೆ ಸುಧಾ ಮನೆ ಬದಲಿಸಿದಾಗ, ಎದುರಿಗೆ ಸಿಕ್ಕರೆ ನಾಲ್ಕು ಕ್ಷೇಮದ ಮಾತಾಡುವಲ್ಲಿ ಮುಗಿದು ಹೋಗುತ್ತಿತ್ತು. ಬಹುಶಃ ಶಶಿಯ ಮಾವನ ಮನೆ, ರವಿಯ ಪಕ್ಕದ ಮನೆ ಆಗಿರದಿದ್ದರೇ, ಅವರ ಎಳೆತನದ ಪರಿಚಯವೂ ಮರೆಯುತ್ತಿತ್ತು. ಆದರೆ ಶಶಿ, ಬಿ. ಎಸ್ಸಿ. ಕಡೆಯ ಹಂತದಲ್ಲಿದ್ದಾಗ ಅಪ್ಪ ಸತ್ತರು. ಏನೊಂದೂ ಉಳಿಸದೆ ಕೈ ಖಾಲಿ ಸತ್ತ ಅಪ್ಪ….ಇದ್ದ ಒಬ್ಬನೇ ಮಾವನ ಆಶ್ರಯಕ್ಕೆ ತಾಯಿ, ಮಗಳು ಬಂದು ಸೇರುವಂತಾಯಿತು. ಏನೆಲ್ಲ ಕನಸು ಹೊತ್ತ ಶಶಿ ಎಂ. ಎಸ್ಸಿ. ಗೆ ಸೀಟು ದೊರೆತರೂ ಓದಾಲಾರದೆ ಉಳಿದಳು. ನೆನ್ನೆ ಮೊನ್ನೆಯವರೆಗೂ ಸುತ್ತಲಿದ್ದ ಸ್ನೇಹಿತೆಯರು ತಮ್ಮ ಸಂಸಾರಗಳತ್ತ ಹಾರಿ ಹೋಗಿದ್ದರು. ಎಲ್ಲೂ ಹೆಚ್ಚು ಹೋಗದ ಶಶಿ, ರವಿ ಮನೆಗೆ ಆಗಾಗ ಬರುವಳು. ರವಿ ಅಮ್ಮನೊಡನೆ, ರವಿಯೊಡನೆ ಗಂಟೆಗಟ್ಟಲೆ ಮಾತಾಡುವಳು. “ಅಪ್ಪ ಇದ್ದಿದ್ದರೆ…..” ಎಂದು ಭಾವುಕವಾಗಿ ‘ರೆ’ ಪ್ರಪಂಚವನ್ನು ತೆರೆದಿಡುವಳು. ಇದ್ದಾಗ ಧಾರಾಳ ಖರ್ಚು ಮಾಡಿ, ಸತ್ತಾಗ ಏನೂ ಉಳಿಸದ ಅಪ್ಪನ ಬಗ್ಗೆ ಕೆಲವೊಮ್ಮೆ ಕಟುವಾಗಿಯೇ ಟೀಕಿಸುವಳು. ಒಂದು ಕಾಲಕ್ಕೆ ಸತ್ಯವಿದ್ದ ಸಿಹಿ ಕ್ಷಣಗಳ ಕನಸಿನಲ್ಲಿ, ಭೂತದ ಚಿಂತನೆಯಲ್ಲಿ ವರ್ತಮಾನ ಶೂನ್ಯವಾಗುತ್ತಾ ಹೋಯಿತು. ತನ್ನ ನೋವುಗಳನ್ನು, ದುರಾದೃಷ್ಟಗಳನ್ನು ದುರ್ಬೀನಿನಡಿ ಹಿಗ್ಗಿಸಿ ನೋಡಿದಾಗಲೆಲ್ಲ ಸ್ವಯಂ ಮರುಕದ ಸೆಳೆಯೊಡೆದು ಇದ್ದಕ್ಕಿದ್ದಂತೆ ಸಾವಿನ ಬಗ್ಗೆ ದೊಡ್ಡ ದೊಡ್ಡ ವ್ಯಾಖ್ಯಾನ ಪ್ರಾಂರಂಭಿಸಿಬಿಡುವಳು….. ‘ಬದುಕಲಾರದವರು ಸಾಯುತ್ತಾರೆ ಅನ್ನೋದು ಮೂರ್ಖತನ. ನಿಜವಾಗಿ ನೋಡಿದರೆ ಸಾಯಲಾರದವರಷ್ಟೆ ಬದುಕುತ್ತಾರೆ. ನೋಡು ಅತ್ತೆ ಬದುಕಿದ್ದಾಳೆ. ಮೂರು ಕಾಸು ಕೈಗೆ ಹಾಕದ ಮುಂಗೋಪಿ ಮಾವನೊಡನೆ. ಅಪ್ಪನನ್ನು ಕಳಕೊಂಡೂ ಅಮ್ಮ ಬದುಕಿದ್ದಾಳೆ…. ಏನೋ ಸುಖ ದೋಚಿಕೊಳ್ಳಲು ನಿಧಿಯಾಗಿ ಕಾದಿದೆ ಎಂಬ ಕಾರಣಕ್ಕಲ್ಲ, ಕೇವಲ ಸಾಯಲಾರದೆ….’ ಅಲ್ಲಿಂದ ಮುಂದೆ ಅವಳ ಬದುಕಿನ ವಿಶ್ಲೇಷಣೆ ತನ್ನದೇ ದಿಕ್ಕು ಹಿಡಿದು ಸಾವಿನ ಹೊಸಿಲಲ್ಲಿ ಬಂದು ನಿಲ್ಲುತ್ತಿತ್ತು. ಬಹಳಷ್ಟು ಬಾರಿ ಅವಳನ್ನು ಕಾಡುತ್ತಿದ್ದುದು ‘ನಾನಿಂಥ ದುರಾದೃಷ್ಟೆ ಏಕಾದೆ_ನಾನೇ ಏನಾಗಬೇಕಿತ್ತು?’ ಎಂಬ ಪ್ರಶ್ನೆ. ಬದುಕು ತನಗೆ ದೊಡ್ಡ ಅನ್ಯಾಯ ಮಾಡಿದೆ ಎಂಬ ಅನಿಸಿಕೆ. +ಅಪ್ಪನ ಮುದ್ದು ಮಗಳು. ಖಂಡುಗ ಓದಿ, ದೊಡ್ಡ ಹುದ್ದೆ ಹಿಡಿದು ಒಳ್ಳೆ ಕಡೆ ವಿವಾಹವಾಗಲು ಕನಸು ಕಂಡ ಶಶಿಗೆ, ಅಪ್ಪನ ಸಾವಿನ ತಿರುವಿನಲ್ಲಿ ಎಲ್ಲ ತಿರುಗು ಮುರುಗು! ಒಂದು ಕಾಲಕ್ಕೆ ಸ್ಥಿತಿವಂತರಾಗಿದ್ದ ಶಶಿಯನ್ನು ಇಂದಿನ ಈ ಸ್ಥಿತಿಯಲ್ಲಿ ನೋಡುವುದು ನಮಗೆಲ್ಲ ಅಭ್ಯಾಸವಾಗಿದ್ದರೂ, ಶಶಿಗೆ ಇದಿನ್ನೂ ಹೊಂದಿರಲಿಲ್ಲ. ಗತಕಾಲದ ನೆನಪುಗಳಲ್ಲಿ, ಘಟಿಸಿದ ಘಟನೆಗಳ ಅಘಟಿತ ಸಾಧ್ಯತೆಗಳನ್ನು ಕಲ್ಪಿಸಿ ಕೊರಗುವಳು. ಜೊತೆಯ ಸುಧಾ ಎಂ. ಎಸ್ಸಿ. ಮಾಡುತ್ತಿದ್ದಾಳೆ. ಪಿ. ಎಚ್. ಡಿ. ಬಗ್ಗೆಯೂ ಯೋಚಿಸಿದ್ದಾಳೆ. ಬಹಳಷ್ಟು ಸ್ನೇಹಿತೆಯರಾಗಲೇ ಅಚ್ಚುಕಟ್ಟಾಗಿ ಸಂಸಾರ ಹೂಡಿದ್ದಾರೆ. ತನ್ನ ಬದುಕೋ ಹುಚ್ಚು ಹೊಳೆಯಲ್ಲಿ ಬಿಟ್ಟ ಕಾಗದದ ದೋಣಿ! +ಮೊದಮೊದಲು ಶಶಿಯ ಬಗ್ಗೆ ರವಿಗೆ ಅನುಕಂಪವೇ ಇತ್ತು. ಆದರೆ ಇತ್ತೀಚೆಗೆ_‘ಛೇ ಯಾರಿಗೂ ಅಪ್ಪ ಸತ್ತಿಲ್ಲವೆ? ಇವಳಿಗಾದರೆ ತಲೆ ಮೇಲೆ ಸೂರು ನೀಡಲು ಮಾವ ಇದ್ದಾನೆ. ಅದೂ ಅಲ್ಲದೆ ಬೀದಿಗೆ ಬಿದ್ದವರೂ ಮುಂದೆ ಬಂದಿಲ್ಲವೆ? ಇವಳೇಕೆ ಕಳೆದುಹೋದುದನ್ನೇ ಹಿಡಿದಿಡಿದು ಜಗ್ಗುತ್ತಾಳೆ’ ಎನಿಸಿತ್ತು. +“ಬದುಕಿನ ನೋವುಗಳನ್ನು, ಸೋಲುಗಳನ್ನು, ಸವಾಲಿನಂತೆ ಸ್ವಿಕರಿಸಬೇಕು ಶಶಿ” ಎಂದು ಭಾಷಣ ಬಿಗಿದಿದ್ದ ರವಿ. ಇಂದು ಮೇಜಿನ ಮೇಲಿದ್ದ ಮೂರು ಪತ್ರಗಳನ್ನು ವಿಷಾದದಿಂದ ನೋಡಿದ. ಪುಟ್ಟ ಸೀಸೆಯಲ್ಲಿ ಬಿಳಿಯ ಸಯನೈಡ್ ಪುಡಿ ತನ್ನ ಇಂದಿನ ಚಿಂತೆಗಳಿಗೆಲ್ಲ ಸಿದ್ಧೌಷಧಿಯಂತೆ ನಗುತ್ತಿದೆ. +ಶಶಿ ನೂರು ಬಾರಿಯಾದರೂ ಹೇಳಿದ್ದಳು_“ಆತ್ಮಹತ್ಯೆ ಪಾಪದ ಕೆಲಸ ಅಂತ ನನಗೆಂದೂ ಅನಿಸಿಲ್ಲವೊ. ನಮ್ಮ ಜೀವ ತೆಗೆದುಕೊಳ್ಳುವ ಹಕ್ಕೂ ನಮಗಿಲ್ಲ ಅಂದರೆ ಅದೆಂಥ ಸ್ವತಂತ್ರಬದುಕು ನಮ್ಮದು! ಈ ಜೀವನ ನನ್ನದು, ಅದನ್ನು ನನಗಿಚ್ಛೆ ಬಂದಂತೆ ಬದುಕುವ, ಇಲ್ಲ ಬಿಸುಡುವ ಹಕ್ಕೂ ನನ್ನದೇ_ಸತ್ತ ಬದುಕು ಬದುಕುವ ಬದಲು ಒಮ್ಮೆ ಮರಣದ ಬಾಗಿಲು ತಟ್ಟಿಬಿಡುವುದು ಮೇಲು_” ಹೀಗೆ ಸ್ವಗತವೆಂಬಂತೆ ಒಂದೇ ರಾಗದಲ್ಲಿ ಹೇಳುತ್ತಾ ಹೋಗಿದ್ದಳು. ರವಿ ಬಹಳಷ್ಟು ಸಲಹೆ, ಸಮಾಧಾನ, ಪರಿಹಾರ ಸೂಚಿಸಿದ್ದ. ಅವೆಲ್ಲ ಏನೊಂದೂ ಪರಿಣಾಮ ಬೀರದೆ, ಅವನು ಏನೊಂದೂ ಮಾತು ಆಡಿ ಇಲ್ಲವೋ ಎಂಬಂತೆ ಶಶಿ ಮುಂದುವರೆಸಿದ್ದಳು_“ಅಲ್ಲ ಸಾವಿನ ಬಗ್ಗೆ ಏಕಿಷ್ಟು ಹೆದರುತ್ತೇವೆ? ಅದೂ ಬದುಕು ಇಷ್ಟು ದುರ್ಬರವಾದಾಗಲೂ…. ಇಂಥಾ ಬದುಕಿಗಿಂತ ಸಾವು ಭೀಕರವಿರಲಾರದು. ಅಗೋಚರ ಮೃತ್ಯುವಿನ ವಿಚಿತ್ರ ಭಯ. ಕಾಣದ, ಕೇಳದ, ಹೊಸ ಅನುಭವದ ವಿಸ್ತಾರಕ್ಕೆ ಜಿಗಿವ ಭಯ. ಬದುಕಿನ ಎಲ್ಲ ಹಂತಗಳ ಸಹಜತೆಯಂತೆಯೇ ಸಾವೂ ಸಹಜವಲ್ಲವೆ? ಅದು ತನ್ನಂತೆಯೇ ಬರಲಿ, ನಾವಾಗಿಯೇ ಎಳೆದು ತರಲಿ, ವ್ಯತ್ಯಾಸವೇನು? ಸಾವು ಒಂದು ಸ್ಥಿತಿ, ಒಂದು ಅನುಭವ, ನಮ್ಮಂಥವರಿಗಂತೂ ಬದುಕಿಗಿಂತ ಸಿಹಿ ಅನುಭವ, ಸಾವು ಚಿರ ನಿದ್ರೆ_ಕನಸುಗಳೂ ಕಲಕದ ಗಾಢ ನಿದ್ರೆ_” ಎನ್ನುತ್ತಾ ಸಾವನ್ನು ರಮ್ಯವಾಗಿ ಚಿತ್ರಿಸಿಕೊಂಡು ಖುಷಿಪಟ್ಟಿದ್ದಳು. +ಇತ್ತೀಚೆಗೆ ಶಶಿ ಸಾವಿನ ಬಗ್ಗೆ ವಿಪರೀತ obsesseಜ ಆಗುತ್ತಿದ್ದಾಳೆ ಎಂದು ರವಿಗೂ ಅನ್ನಿಸಿತ್ತು. ಒಂದೆರಡು ಬಾರಿ ಗದರಿ ರೇಗಿದ್ದರೂ, ಶಶಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನಿಸಲಿಲ್ಲ. “ಸಾಯೋರ್‍ಯಾರೂ ಹೀಗೆ ಸಾರಿ ಸಾರಿ ಹೇಳೊಲ್ಲ ಬಿಡು. ಒಂದು ಒಳ್ಳೆ ಕೆಲಸ ಸಿಕ್ಕರೆ, ಮದುವೆ ಆದರೆ ಎಲ್ಲ ಸರಿಹೋಗುತ್ತೆ” ಎಂದು ಅಮ್ಮ ಕೂಡ ಹೇಳಿದ್ದಳು. ಅದೂ ಅಲ್ಲದೆ ರವಿಯೊಡನೆ ಮಾತ್ರ ಮುಕ್ತವಾಗಿ ಮಾತನಾಡುವ ಹುಡುಗಿ, ಮತ್ತೆಲ್ಲರ ಜೊತೆ ನಗುನಗುತ್ತಲೇ ಇರುವಳು. ಏನೂ ಆಗದಂತೆ ನಟಿಸುವಳು. “ಸುಮ್ಮನೆ ಮೂರೂ ಹೊತ್ತೂ ಇಲ್ಲದ್ದೆಲ್ಲ ಯೋಚಿಸೋ ಬದಲು, ಗಮನಕೊಟ್ಟು ಬ್ಯಾಂಕ್ ಪರೀಕ್ಷೆಗಳಿಗೆ ಕಟ್ಟಬಾರದ? ಇಲ್ಲ ತೆಪ್ಪಗೆ ಒಂದು ಗಂಡು ಒಪ್ಪಿ ಮದುವೆ ಆಗು, ಅವ ಬರೀ ಬಿ. ಎ. ಇವನಿಗೆ ವಿದ್ಯೆಯ ಗಂಧವೇ ಇಲ್ಲ ಅಂತ ಕಣಿ ಹೇಳುತ್ತಾ ಕೂರಬೇಡ” ಎಂದೆಲ್ಲ ರವಿ ರೇಗಿದ್ದ. ಶಶಿಯ ಚಿಂತನೆಯ ದಿಕ್ಕು ಚೂರೂ ಬದಲಾಗಿರಲಿಲ್ಲ. ತೀವ್ರತರದ ಖಿನ್ನತೆ ಅವಳನ್ನು ಆವರಿಸಿತ್ತು. ಅವಳ ಕಷ್ಟಗಳು ಬಹಳಷ್ಟು ಸ್ವ-ಕಲ್ಪಿತ ಎನಿಸಿದರು ಅವಳ ಮಟ್ಟಿಗೆ ಅವೆಲ್ಲ ವಾಸ್ತವ ಸತ್ಯಗಳು. +ಈಗನಿಸುತ್ತದೆ ಓರ್ವ ವ್ಯಕ್ತಿ ತನ್ನ ದುಃಖಗಳನ್ನು ಎಷ್ಟೇ ಪಾರದರ್ಶಕವಾಗಿ ಹಿಡಿದರೂ, ಏಕೋ ದುರಂತ ಘಟಿಸುವವರೆಗೆ ಘಟಿಸಬಹುದು ಎನಿಸುವುದೇ ಇಲ್ಲ. +ರವಿ ಎಷ್ಟೋ ಹೊತ್ತು ಯೋಚಿಸಿದ. ತನ್ನ ಸಾವಿನ ಪ್ರಶ್ನೆಗಳಿಗೆಲ್ಲ ಶಶಿ ಉತ್ತರಿಸಿ ಆಗಿದೆ. ಅವಳು ಬರೀ ಬಾಯಲ್ಲಿ ಹೇಳುತ್ತಿದ್ದ ಹೊಗಳುತ್ತಿದ್ದ ಮೃತ್ಯುವನ್ನು ತನ್ನ ಕೋಣೆಗಿಂದು ಸ್ವಾಗತಿಸುವೆ. ಮತ್ತೊಮ್ಮೆ ಸುಧಾಗೆ ಬರೆದ ಪತ್ರ ಓದಿಕೊಂಡೆ. “ಸುಧಾಳ ಕಣ್ಣಲ್ಲಿ ತನಗಾಗಿ ಎರಡು ಹನಿ ಉದುರಿದರೆ ಸಾಕು” ಎಂದು ಹುಚ್ಚುಚ್ಚಾಗಿ ಯೋಚಿಸಿದ. ಸಾವಿನ ಕ್ಷಣದಲ್ಲೂ, ಸಾವಿನ ನಿಶ್ಚಯದಲ್ಲೂ ಬದುಕು ಅಡಗಿತ್ತು. ಸತ್ತ ನಂತರ ಮುಗಿಯಿತು. ಸುಧಾ ಅತ್ತರೇನು, ಬಿಟ್ಟರೇನು….. ಉಹುಂ, ಹಾಗಲ್ಲ. ತಾ ಉಳಿಯಬೇಕು…. ಪ್ರೀತಿಸಿದವರ ಎದೆಯಲ್ಲಿ ನೋವಾಗಿ, ಕಣ್ಣಲ್ಲಿ ಕಂಬನಿಯಾಗಿ, ಜನರಲ್ಲಿ ‘ಅಮರ ಪ್ರೇಮ’ದ ನೆನಪಾಗಿ, ಪ್ರೀತಿಯಿಂದ ಕೊಲ್ಲುವುದು ಎಂದರೆ ಇದೇ ಇರಬಹುದು! +ಮೇ ತಿಂಗಳ ನಾಲ್ಕನೇ ತಾರೀಖು, ಸಂಜೆ ಸುಧಾ ಮನೆಗೆ ಹೋಗಿ ಹುಟ್ಟು ಹಬ್ಬದ ಶುಭಾಶಯ ಹೇಳಿ ಕವರ್ ಕೈಗಿಟ್ಟು ಬಂದು ಬಿಡುವುದು. ಸಯನೈಡ್ ಹೆಚ್ಚು ಹೊತ್ತು ಉಳಿಸುವುದಿಲ್ಲ. ಎಲ್ಲ ಹೆಚ್ಚೆಂದರೆ ಹತ್ತು ನಿಮಿಷಗಳ ಅವಧಿ. ಒಮ್ಮೆ ಕುಡಿದರೆ, ಜೀವ ಕೊಟ್ಟ ಬ್ರಹ್ಮನೂ ಉಳಿಸಲಾರ. +ಎಲ್ಲ ಸಿದ್ಧವಾಗಿತ್ತು. ತಯಾರಾಗಿ ಇನ್ನೇನು ಹೊರಡಬೇಕು ಎನ್ನುವಾಗ ಶಶಿ ಬಂದಳು! ರವಿ ಅವಳನ್ನು ನೋಡುವ ಸ್ಥಿತಿಯಲ್ಲೂ ಇರಲಿಲ್ಲ. ಅವನದೇ ನೋವು ಚಿಂತೆ ಹಾಸಿ, ಹೊದೆದು, ಹಂಚುವಷ್ಟಿರುವಾಗ ಶಶಿಯ ಗೋಳುಗಳಿಗೆ ಕಿವಿಯಾಗುವ ತಾಳ್ಮೆ ಎಲ್ಲಿ ಬಂತು. “ಬರ್ತೀಯಾ ರವಿ, ಹೀಗೇ ಸುತ್ತಾಡಿ ಬರೋಣ….” ಶಶಿ ಸಾಕಷ್ಟು ಸುಸ್ತಾದಂತೆ ಕೇಳಿದಳು. “ಸಾರಿ, ನಾನೆಲ್ಲೂ ಬರಲಾರೆ….” ಎಂದೇನೋ ಹೇಳಬೇಕೆಂದುಕೊಂಡವನು, “ಛೆ ಈ ದಿನ ಇದ್ದು ನಾಳೆಗಾಗಲೇ ಸಾವಿನ ಅತಿಥಿಯಾಗುವವನು ನಾನು. ನನ್ನ ಕಡೆಯ ನೆನಪುಗಳನ್ನಾದರೂ ಸಿಹಿಯಾಗಿ ಉಳಿಸಿ ಹೋಗಬೇಕು” ಎಂದು ಎದ್ದು, “ಸರಿ ಬಾ” ಎಂದು ಹೊರಟ. ಅಮ್ಮ ಒಳಗಿಂದ _ “ಸ್ವೆಟರ್ ಹಾಕೊಕೊಂಡು ಹೋಗೋ. ವಾರದಿಂದ ಸುಸ್ತು ತಲೆನೋವು ಅಂತ ಫ್ಯಾಕ್ಟರಿಗೂ ಹೋಗಿಲ್ಲ_” ಕಳಕಳಿಯಿಂದ ಹೇಳಿದಾಗ, ವಿಷಾದದಿಂದ ನಕ್ಕ. +ಇಬ್ಬರೂ ತಮ್ಮದೇ ಚಿಂತೆಗಳಲ್ಲಿ ಮಾತಿಲ್ಲದೆ, ಲಾಲ್‌ಬಾಗ್‌ವರಗೂ ಹೆಜ್ಜೆ ಹಾಕಿದರು. ಕೆರೆಯ ದಡದಲ್ಲಿ ಕುಳಿತಾಗ ಆಗಲೇ ಸೂರ್ಯ ಮುಳುಗಿ, ಸಂಜೆಯ ಕೆಂಪು ಕಪ್ಪಾಗುತ್ತಿತ್ತು. ಎಷ್ಟೋ ಹೊತ್ತು ಏನೂ ಮಾತನಾಡದೆ ಮೌನದಲ್ಲಿ ಮುಳುಗಿದರು. +“ರವಿ ಈ ಬದುಕಿನಲ್ಲಿ ಬದುಕುವಂಥಹದಾದರೂ ಏನಿದೆ?” ಮತ್ತೆ ಶುರುವಾಯಿತು ಇವಳ ಪುರಾಣ ಎನಿಸಬೇಕಿದ್ದ ರವಿಯ ಮನಸ್ಸಿಗೆ, ಶಶಿಯ ಪ್ರಶ್ನೆ ತನ್ನ ಭಾವನೆಗಳಿಗೇ ಮಾತುಕೊಟ್ಟಂತೆ ಆತ್ಮೀಯವಾಯಿತು. +“ಏನೂ ಇಲ್ಲ ಶಶಿ…. ಏನೂ ಇಲ್ಲ” ಎನ್ನುವಾಗ ಅವಳಿಗಿಂತ ತನಗೇ ಎಂಬಂತೆ ಹೇಳಿಕೊಂಡ, ನಿಶ್ಚಿತವಾದ ನಿರ್ಧಾರವನ್ನು ಮತ್ತೂ ಗಟ್ಟಿಮಾಡಿಕೊಳ್ಳುವಂತೆ. ಇದ್ದಕ್ಕಿದ್ದಂತೆ ಶಶಿ ಹೇಳಿದಳು…. +“ನಿನಗೆ ಗೊತ್ತಾ ರವಿ, ಸ್ಕೂಲಲ್ಲಿ ಕಾಲೇಜಲ್ಲಿ ಸುಧಾಗಿಂತ ನಾನೇ ಮುಂದಿದ್ದೆ….” ಎಂಥಹುದೋ ಬಾಲಿಶ ಹೆಮ್ಮೆಯಲ್ಲಿ ನಕ್ಕಳು. ಮರುಕ್ಷಣ ಮಂಕಾಗಿ_ “ರವಿ, ಹೆಣ್ಣಿಗೆ ರೂಪ ಇರಬೇಕು, ಹಣ ಇರಬೇಕು, ಇಲ್ಲ ಅದೃಷ್ಟವಿರಬೇಕು….” ಎಂದೇನೋ ಸಂಬಂಧವೇ ಇಲ್ಲದಂತೆ ಮಾತಾಡಿದಳು. ರವಿ ಅನ್ಯಮನಸ್ಕನಾಗಿಯೇ “ಹುಂ”ಗುಟ್ಟಿದ. ಮತ್ತೆಷ್ಟೋ ಹೊತ್ತು ಬರೀ ಮೌನ. ಬೀದಿ ದೀಪಗಳು ಹೊತ್ತಿಕೊಂಡರೂ, ಕುಳಿತೇ ಇದ್ದರು! ಇದ್ದಕ್ಕಿದ್ದಂತೆ ಶಶಿಯ ತಲೆ ಭುಜಕ್ಕೆ ಒರಗಿದಾಗ ರವಿ ಬೆಚ್ಚಿ ಎಚ್ಚೆತ್ತ. “ಏಯ್ ಶಶಿ… ಶಶಿ…. ಏನಾಯಿತು?” ಅಲುಗಿಸಿದ. ಉತ್ತರ ಸಿಗದಾಗ ಗಾಬರಿಯಿಂದ “ಶಶಿ….” ಎಂದು ಎತ್ತಿ ಕೂರಿಸಲು ಕೈ ಹಿಡಿದ. ಕೈ ಒದ್ದೆಯಾಗಿ ತಟ್ಟನೆ ಬೆಳಕಿಗೆ ಹಿಡಿದರೆ…. ರಕ್ತ! ಬಲಗೈಯ ಮಣಿಕಟ್ಟಿನಿಂದ ಒಸರಿದ ರಕ್ತ! ಒಂದೇ ಏಟಿಗೆ ಅವಳ ವ್ಯಾನಿಟಿ ಚೀಲ ಭುಜಕ್ಕೇರಿಸಿ, ಎರಡೂ ಕೈಯಲ್ಲಿ ಅವಳನ್ನು ಬಿಗಿ ಹಿಡಿದು ಮೇಲೆತ್ತಿ ಗೇಟ್ ಕಡೆ ಧಾವಿಸಿದ. ಬರೀ ನಲವತ್ತು ಕೆ. ಜಿ, ಯಾದರೂ ದಾಪುಗಾಲು ಹಾಕುವುದು ಸುಲಭವಿರಲಿಲ್ಲ. ಹಣೆಯಲ್ಲಿ ಬೆವರು ಜಲಪಾತವಾಯಿತು. ಎದೆ ಬಡಿತ ಅನಿಶ್ಚಿತ ಭಯದಲ್ಲಿ ಹೊಡೆದುಕೊಂಡಿತು. “ಆಟೋ….” ಹುಚ್ಚನಂತೆ ಕೂಗಿ, ಹತ್ತಿರದ ನರ್ಸಿಂಗ್ ಹೋಂಗೆ ಓಡಿಸಿದ. +ರಾತ್ರಿ ಎಂಟರ ಸಮಯ. ಡಾಕ್ಟರ್ ಹೊರಬಂದು_ “ಸಾರಿ ಶಿ ಈಸ್ ಡೆಡ್” ಎಂದಾಗ ಮರಗಟ್ಟಿ ನಿಂತ. ಅವರ ಮಾತುಗಳು ಕಿವಿ ತಮಟೆಗೆ ತಗಲಿಯೂ ಮಿದುಳಿಗೆ ಅರ್ಥವಾಗದೆ ನಿಂತುಬಿಟ್ಟವು. +“ಏನು ಹೇಳ್ತಾ ಇದ್ದೀರಾ…. ಈಗ ಈಗ ನನ್ನ ಜೊತೆ ಮಾತಾಡ್ತ ಇದ್ದಳು….” +“ಸಾರಿ, ಆತ್ಮಹತ್ಯೆ ಇದ್ದ ಹಾಗಿದೆ. ರಕ್ತಸ್ರಾವ ಹೆಚ್ಚಾದ ಹಾಗಿಲ್ಲ. ಪೋಲೀಸ್ ಕೇಸ್, ನಾವಿಲ್ಲಿ ನೋಡಲು ಸಾಧ್ಯವಿಲ್ಲ. ತಕ್ಷಣ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡುಹೋಗಿ….” +ಎಲ್ಲವೂ ಮುಗಿದುಹೋಗಿತ್ತು. ಏನು ಘಟಿಸುತ್ತಿದೆ ಎಣಿಸುವಷ್ಟರಲ್ಲಿ ದೊಡ್ಡ ತೆರೆ! ಬದುಕು-ಸಾವಿನ ಬಾಗಿಲು ತೆರೆದು ಶಶಿ ನಡೆದೇ ಬಿಟ್ಟಿದ್ದಳು. ಒಮ್ಮೆಯೂ ಹಿಂದುರುಗಿ ನೋಡದೆ. ಬಲಗೈ ನರಕ್ಕೆ ಬ್ಲೇಡ್ ತೀಡಿ, ವಿಷ ತುಂಬಿದ್ದಳು. ಸಾಯುವ ಈ ಭಯಂಕರ ಬಗೆಯಾದರೂ ಅವಳಿಗೆ ಹೇಗೆ ತಿಳಿಯಿತು…. ವಿಭ್ರಾಂತನಾಗಿ ಕುಳಿತ. ಸಾವು ತನ್ನದೇ ದಾರಿಗಳನ್ನು ಹುಡುಕಿಕೊಳ್ಳುವುದೇನೊ…. ಮೂರೇ ದಿನಗಳಲ್ಲಿ ತಾ ಸಯನೈಡ್ ಸಂಪಾದಿಸಲಿಲ್ಲವೆ, ಹಾಗೆ, ಎರಡೂ ಕೈಗಳಲ್ಲಿ ತಲೆ ಹುದುಗಿಸಿ ಕುಳಿತ. ರಾತ್ರಿಯ ಹನ್ನೊಂದು ಗಂಟೆ, ಪೋಲೀಸ್ ವಿಚಾರಣೆ ಮುಗಿದಿರಲಿಲ್ಲ. +“ಹುಡುಗಿ ಹೆಸರು….?” +“ಶಶಿ…..” +“ನಿಮಗೂ ಅವರಿಗೂ ಏನು ಸಂಬಂಧ?” +“ಸಂಬಂಧ ಏನೂ ಇಲ್ಲ, ನನ್ನ ಸ್ನೇಹಿತೆ….” +“ಓಹೋ….. ಗರ್ಲ್‌ಫ್ರೆಂಡಾ….” ರಾಗ ಎಳೆದು ಕೇಳಿದರು. ಶಶಿ ಫ್ರೆಂಡಾಗಿದ್ದಳು. ‘ಗರ್ಲ್’ ಆಗಿ ನೋಡಿರಲಿಲ್ಲ. ಸುಧಾ ನನ್ನ ಬಾಲ್ಯ ಯೌವನಗಳ ತುಂಬ ತುಂಬಿ ನಿಂತಾಗ ಯಾವುದೇ ಹುಡುಗಿಯೂ ‘ಗರ್ಲ್’ ಆಗಿ ಕಂಡಿರಲಿಲ್ಲ. +“ನೀವು ಪ್ರೀತಿಸ್ತಾ ಇದ್ರಾ?” ಗುಂಡಿನಂತೆ ನೇರ ಪ್ರಶ್ನೆ. +“ಇಲ್ಲ ಸ್ವಾಮಿ. ಬರೀ ಸ್ನೇಹಿತೆ, ಪಕ್ಕದ ಮನೆಯೋಳು” +“ಮತ್ತೆ ಇದೆಲ್ಲ ಹೇಗಾಯ್ತು?” ಸಂಜೆಯ ಘಟನೆಗಳೆಲ್ಲ ಚಾಚೂ ತಪ್ಪದೆ ವಿವರಿಸಿದ. +“ಅಲ್ರೀ ಸಾಯಂಕಾಲದ ಆರು ಗಂತೆಗೆ ಲಾಲ್‌ಬಾಗ್‌ನಲ್ಲಿ ಹೋಗಿದ್ದೀರಿ. ಪಕ್ಕದಲ್ಲಿ ಅವಳು ಕುಳಿತು ಕೈ ಕತ್ತರಿಸಿಕೊಂಡು ವಿಷ ಹಾಕಿಕೊಂಡರೂ ನಿಮಗೆ ತಿಳಿಯಲಿಲ್ಲವೆ?” +“ಕತ್ತಲಿತ್ತು ನಾ ಏನೋ ಯೋಚಿಸುತ್ತಾ ಇದ್ದೆ….” +“ಲವ್ ಗಿವ್ ಮಾಡಿ ಏನಾದ್ರೂ ಹೆಚ್ಚುಕಮ್ಮಿ….” +“ನಾಳೆ ಪೋಸ್ಟ್ ಮಾರ್ಟೆಮ್ ಮಾಡ್ತೀರಲ್ಲ. ನೀವೇ ನೋಡಿ” ಅಸಹನೆಯಿಂದ ಕಿರುಚಿದ. +“ಸಾರಿ, ಉದ್ರೇಕಗೊಳ್ಳಬೇಡಿ. ನಮ್ಮ ಕೆಲಸ ನಾವು ಮಾಡಬೇಕಲ್ಲ” ಇನ್ಸ್‌ಪೆಕ್ಟರ್ ಭುಜದ ಮೇಲೆ ಕೈಯಾಡಿಸಿ ಹೇಳಿದ. +“ಹಾಂ…. ನೋಡಿ, ನೀವೇ ಏಕೆ ಕೊಲೆ ಮಾಡಿರಬಾರದು?” ಬಾಂಬ್ ಬಿದ್ದಂತೆ ಬೆಚ್ಚಿದ. +“ನಾನು…. ನಾನು… ಏನು ಹೇಳ್ತಾ ಇದ್ದೀರ? ಅವಳನ್ನು ನಾ ಏಕೆ ಕೊಲೆ ಮಾಡ್ಲಿ….?” +“ಮತ್ತೆ ಎಡಗೈಯಿಂದ ಬಲಗೈನ ಅಷ್ಟು ಅಚ್ಚುಕಟ್ಟಾಗಿ ಅವಳೇ ಕೊಯ್ದುಕೊಂಡಳಾ….?” +“ಸತ್ಯವಾಗಿ ಸಾರ್. ಅವಳು ಎಡಚಿ, ಊಟ ತಿಂಡಿ ಬರೆಯೋದು ಎಲ್ಲ ಎಡಗೈಯಲ್ಲೆ….” +“ಅಹ್ಹಾ…. ಒಳ್ಳೆ ಸಮಯಸ್ಪೂರ್ತಿ ಇದೆ ನಿಮಗೆ…..” ಅಪನಂಬಿಕೆಯ ಅಟ್ಟಹಾಸದ ನಗು. +“ಹೋಗಲಿ, ನಿಮ್ಮ ಪ್ರಕಾರ ಆತ್ಮಹತ್ಯೆಗೆ ಕಾರಣ ಏನು ? ಹುಡುಗಿ ಚಿಕ್ಕದು, ಓದಿರೋ ಹುಡುಗಿ….” +“ಅವಳು ತುಂಬಾ ದಿನದಿಂದ ‘ಡಿಪ್ರೆಸ್’ ಆಗಿದ್ದಳು. ಅಪ್ಪಾ ಸತ್ತಾಗಲಿಂದ….” +“ಅಪ್ಪ ಸತ್ತದ್ದು ಯಾವಾಗ?” +“ಎರಡು ವರ್ಷ ಆಯ್ತು.” +“ಎರಡು ವರ್ಷದ ಹಿಂದೆ ಅಪ್ಪ ಸತ್ತದ್ದಕ್ಕೆ ಇವತ್ತು ಆತ್ಮಹತ್ಯೆ ಮಾಡಿಕೊಂಡಳಾ….?” ಏನೆಂದು ಉತ್ತರಿಸುವುದು? ಅವರಿಗಿರಲಿ ರವಿಗೇ ತನ್ನ ಕಾರಣಗಳು, ಸಮರ್ಥನೆಗಳು ನಂಬುವಂತಿರಲಿಲ್ಲ. ಶಶಿ ಏಕೆ ಸತ್ತಳು? ಬರೀ ಬದುಕಿನ ಬಗೆಯ ಆಕ್ರೋಶವೇ? ಖಿನ್ನತೆಯೇ? ಇಲ್ಲ ತನಗೂ ತಿಳಿಯದ ರಹಸ್ಯ ನೋವುಗಳಿತ್ತೆ? ನನ್ನೊಡನೆಯೂ ಹಂಚಿಕೊಳ್ಳದ ಉಳಿದ ಬೇರೆ ಸಮಸ್ಯೆಗಳಿತ್ತೆ? ಸತ್ತವರು ತಮ್ಮ ಹಿಂದೆ ಎಷ್ಟೊಂದು ಪ್ರಶ್ನೆಗಳನ್ನು ಉಳಿಸಿ ಹೋಗುತ್ತಾರೆ? ಯೌವನದ ಹುಡುಗಿ ಲಾಲ್‌ಬಾಗ್‌ನಲ್ಲಿ ತನ್ನ ಪಕ್ಕ ಕುಳಿತು ಪ್ರಾಣಬಿಟ್ಟಳು ಎಂದರೆ ನಂಬುವವರಾರು? +“ಏನಾದ್ರೂ ಚೀಟಿ ಬರೆದಿದ್ದಾರಾ?” ಇನ್ಸ್‌ಪೆಕ್ಟರ್ ಕೇಳಿದ. +“ಗೊತ್ತಿಲ್ಲ….” +“ನಿಮ್ಮ ಭುಜದಲ್ಲಿರೋದು ಆಕೆಯ ಚೀಲಾನಾ?” ತಟ್ಟನೆ ಶಶಿಯ ಚೀಲ ನೆನಪಾಗಿ ತೆರೆಯಲು ಹೋದ_ +“ಇಲ್ಲಿ ಕೊಡಿ….” ಎಂದು ತೆಗೆದುಕೊಂಡರು. ಏನೇನೋ ಸಾಮಾನುಗಳ ನಡುವೆ ಒಂದು ಚಿಕ್ಕ ಪತ್ರ ಸಿಕ್ಕಿತು. ‘ನಾ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ. ನನ್ನ ಸಾವಿಗೆ ಯಾರೂ ಕಾರಣರಲ್ಲ….’ ಎರಡೇ ಸಾಲಿನ ಪತ್ರ. ಗಟ್ಟಿಯಾಗಿ ಓದಿ ‘ಹುಂ….’ ಎಂದರು. ರವಿ ಕೊಂಚ ಉಸಿರಾಡಿದ. +“ಇದು ಆಕೆಯ ಅಕ್ಷರಾನ….? ನೀವೇ ಏಕೆ ಬರೆಸಿರಬಾರದು? ಜೀವನದಲ್ಲಿ ಜಿಗುಪ್ಸೆ ಹುಟ್ಟುವಂತಹುದೇನಾಗಿತ್ತು….?” ಮುಗಿಯದ ತನಿಖೆ. +ಇಡೀ ರಾತ್ರಿ ಶಶಿಗಾಗಿ ಕಣ್ಣೀರು ಸುರಿಸಬೇಕೋ, ಇಲ್ಲ ತಾ ಸಿಕ್ಕಿಕೊಂಡಿರುವ ಸುಳಿಗಾಗಿ ಅಳಬೇಕೋ ತಿಳಿಯಲಿಲ್ಲ. ರಾತ್ರಿ ಮೂರು ಗಂಟೆಗೆ ವಿಷಯ ತಿಳಿದ ಅಪ್ಪ ಬಂದರು. ಗಾಬರಿಯಿಂದ ಕಂಗೆಟ್ಟಿದ್ದರು. ಅವರ ತನಿಖೆ, ವಿಚಾರಣೆ ಆಯಿತು. ಹೇಳಿಕೆ ಬರೆದುಕೊಂಡರು. ಶಶಿಯ ತಾಯಿ ಹಾಗೂ ಮಾವ ಬಳ್ಳಾರಿಗೆ ಹೋಗಿದ್ದ ಕಾರಣ ‘ತಂತಿ’ ಕೊಟ್ಟು ಬಂದರು. ಸದ್ಯ ಶಶಿಗೆ ಪತ್ರ ಬರೆಯುವಷ್ಟು ಮುಂಜಾಗರೂಕತೆ ಇತ್ತಲ್ಲ. ಆದರೆ ಆ ಪತ್ರ ಹೆಚ್ಚೇನೂ ವ್ಯತ್ಯಾಸ ಮಾಡಿದಂತಿರಲಿಲ್ಲ. ಸಾವಿಗೆ ಸ್ಪಷ್ಟ ಕಾರಣವಿರಲಿಲ್ಲ. ಖಿನ್ನತೆಯಿಂದಲೇ ಸತ್ತಳು. ಸಾವಿನ ರಮ್ಯತೆಗೆ ಬೆರಗಾದಳು. ಎಂದರೆ ನಂಬುವವರಾರು? +ಬೆಳಿಗ್ಗೆ ಪೋಲೀಸ್ ಸ್ಟೇಷನ್‌ನಿಂದ ಆಸ್ಪತ್ರೆಗೆ ಬಂದಾಗ ಶಶಿ ಆಗಲೇ ‘ಶವ’ವಾಗಿ ಶವದ ಕೋಣೆಯಲ್ಲಿ! ಕೊಳಕು ಬ್ಯಾಂಡೇಜುಗಳ ರಾಶಿ, ಔಷಧಿ ಬಾಟಲುಗಳ ನಾತ, ಎಳನೀರು ಬುರುಡೆಯ ತಿಪ್ಪೆಯ ನಡುವೆ ಮುಗುಮುಚ್ಚಿ ಹೆಜ್ಜೆಹಾಕುತ್ತಾ ಶವದ ಕೋಣೆಗೆ ಓಡಿ ಬಂದ. ವಿಶಾಲವಾದ ಕೊಠಡಿ. ಒಂದೆರಡು ಕಲ್ಲು ಮೇಜುಗಳು, ಅತ್ತ ಬೆತ್ತಲಾಗಿ ಕಡೆದ ಕಲ್ಲಿನಂತೆ ಕರಕಲಾದ ಗಂಡು ಶವ, ನೆಲದ ಮೇಲೆ ಚಾಪೆಯಲ್ಲಿ ಮುದುರಿಟ್ಟ ಮತ್ತೊಂದು ಹೆಂಗಸಿನ ಶವ, ಇತ್ತ ಬಾಗಿಲ ಬಳಿಯ ಕಲ್ಲು ಮೇಜಿನ ಮೇಲೆ ಕೆಂಪು ಸೀರೆಯಲ್ಲಿ ಅಂಗಾತವಾಗಿ, ಅನಾಥವಾಗಿ, ಎಲ್ಲರಿದ್ದೂ ಯಾರೂ ಇಲ್ಲದಂತೆ ಮಲಗಿದ್ದ ಶಶಿ! ತಣ್ಣಗಾಗಿ ಜೀವರಸ ಬತ್ತಿಹೋದ ನಿರ್ಜೀವ ದೇಹ. ಅರೆ ಮುಚ್ಚಿದ ಕಣ್ಣು, ಯಾರದೋ ಚುಂಬನಕ್ಕೆ ಕಾದಂತೆ ಅರೆಬಿರಿದ ಒಣಗಿದ ತುಟಿಗಳು, ಕೆಲವೇ ಗಂಟೆಗಳ ಹಿಂದೆ ಲಾಲ್‌ಬಾಗಿನ ಹಸಿರಿನಲ್ಲಿ, ನನ್ನ ಪಕ್ಕ ಕುಳಿತ ಹುಡುಗಿ ಈಗಿಲ್ಲ ಎಂದರೆ ರವಿ ನಂಬುವುದು ಹೇಗೆ? ಎಳೆಯ ಮಗುವಿನಂತೆ ರವಿ ಬಿಕ್ಕಿದ. ಅಪ್ಪ ಭುಜ ತಟ್ಟಿ ಸಮಾಧಾನ ಮಾಡುತ್ತ ಹೊರಗೆ ತಂದರು. ಬಾಗಿಲ ಬಳಿ ಇಬ್ಬರು ವಾಚ್‌ಮನ್‌ಗಳು ಆರಾಮವಾಗಿ ಹರುಟುತ್ತ ಮೂಳೆ ರಾಶಿಗಳನ್ನು ಬಟ್ಟೆಯಿಂದ ಒರೆಸಿ ಶುಚಿ ಮಾಡುತ್ತಾ ಕುಳಿತಿದ್ದರು. ಇಲ್ಲಿ ಸಾವು ಎಷ್ಟು ನಿಕಟವಿದೆ, ಸ್ಪರ್ಶಿಸುವಷ್ಟು ಹತ್ತಿರವಿದೆ! +ಹೊರಗೆ ಬಂದು ಕಲ್ಲು ಬೆಂಚಿನ ಮೇಲೆ ಇಬ್ಬರೂ ಕುಳಿತರು. ಅಪ ಬೇಸರದ ಕಂಠದಲ್ಲಿ “ಸ್ಟುಪಿಡ್ ಗರ್ಲ್, ಎಂಥಾ ಕೆಲಸ ಮಾಡಿಕೊಂಡಳು, ಹೇಡಿಗಳ ಕೆಲಸ….” ಹೇಳುತ್ತಿದ್ದಂತೆ ಏಕೋ ತನ್ನನ್ನೇ ಉದ್ದೇಶಿಸಿ ಹೇಳಿದಂತೆ ರವಿ ತಟ್ಟನೆ ರೇಗಿದ “ಸಾಯೋಕೆ ಧೈರ್ಯ ಬೇಕು ಅಪ್ಪ…. ಧೈರ್ಯ ಬೇಕು. ಬದುಕುವವರಿಗೆ ಸಾಯೋ ಹಕ್ಕು ಇಲ್ಲವೆ?” ಅಪ್ಪ ಒಂದು ಕ್ಷಣ ಬೆರಗಾಗಿ ನೋಡಿ, ತಟ್ಟನೆ ಭುಜ ಅಪ್ಪಿ ಸಮಾಧಾನ ಮಾಡಿದರು. +ಗಂಟೆ ಹತ್ತು ದಾಟಿತ್ತು. ಒಬ್ಬ ಕಾನ್ಸ್‌ಟೇಬಲ್ ಹಾಗೂ ಇನ್ಸ್‌ಪೆಕ್ಟರ್ ಬಂದಿಳಿದರು. +“ಅವರ ಕಡೆಯವರಾರೂ ಬಂದಿಲ್ವೆ?” +“ಇಲ್ಲ ಬಳ್ಳಾರಿಗೆ ಹೋಗಿದ್ರು…. ತಂತಿ ಕೊಟ್ಟಿದ್ದೇವೆ.” ಗಂಟೆ ಹನ್ನೊಂದು! ನಿದ್ದೆ ಇರದೆ ಕಳೆದ ರಾತ್ರಿ ರವಿಯ ಕಣ್ಣಲ್ಲಿ ಕೆಂಪಾಗಿ ಕುಳಿತಿತ್ತು. +“ಪೋಸ್ಟ್ ಮಾರ್ಟಮ್ ಮಾಡಿ ಇಡೋಣೇನು? ವಿಷ ತಗೊಂಡಿರೋ ಕೇಸ್. ಬಹಳ ಬೇಗ ಎಲ್ಲ ಮುಗಿಸಬೇಕು” ರವಿ ತಲೆಯಾಡಿಸಿದ. ಪೋಲೀಸ್ ಫೈಲು ಹಿಡಿದು ಓಡಾಡಿದರು. +“ಇಸಮಿನ ಜಾತಿ?” ಪೇದೆ ಬಂದು ಕೇಳಿದ. ಸತ್ತರೂ ಜಾತಿ ಮಾತ್ರ ಹೋಗುವುದಿಲ್ಲ. ಒಂದು ಅಳತೆ ಟೇಪ್ ತಂದು ಶಶಿಯ ಉದ್ದಗಲ ಅಳೆದರು…. +“ಉದ್ದ ಐದು ಅಡಿ…. ಅಗಲ ಮೂವತ್ತು ಅಂಗುಲ….” ನಿನ್ನೆ ಐದು ಅಡಿ ಎತ್ತರವಿದ್ದ ಹುಡುಗಿ, ಇಂದು ಐದು ಅಡಿ ಉದ್ದವಾಗಿ ಮಲಗಿದ್ದಾಳೆ. +ಸುದ್ದಿ ತಿಳಿದ ಒಂದಿಬ್ಬರು ಪರಿಚಿತರು, ಸಂಬಂಧಿಗಳೂ ಬಂದಿಳಿದರು. ಪೊಲೀಸರ ತನಿಖೆ ಪ್ರಾರಂಭ. +“ನೀವೇನಾಗಬೇಕು…. ಇದು ಶಶಿಯ ಅಕ್ಷರಾನ? ಹೆಣ ಗುರುತಿಸುತ್ತೀರಾ….. ಹುಡುಗಿ ಸ್ವಭಾವ ಹೇಗೆ?…. ಏಕೆ ಸತ್ತಳು….” ಇತ್ಯಾದಿ ಇತ್ಯಾದಿ. +“ಅಯ್ಯೋ ಹೋದವಾರ ಬಂದಿದ್ಲು. ಅದೇನಾಯ್ತೋ ಸಾಯೋಕೆ?….” ಅಚ್ಚರಿಯ ರಾಗ. +“ಎಡಗೈಯಲ್ಲಿ ಬರೀತಾ ಇದ್ದಳಾ?” +“ಹೌದು. ಎಲ್ಲ ಎಡಗೈಯಲ್ಲೇ….” +“ಈ ಹುಡುಗ ಯಾರು ಗೊತ್ತಾ?” +“ಹಾಂ, ಶಶಿ ಮನೆ ಪಕ್ಕದಲ್ಲೇ ಇದ್ದಾನೆ.” +“ಏನಾಗಬೇಕು?” +“ಸಂಬಂಧ ಏನೂ ಇಲ್ಲ?” +“ಲವ್ ಮಾಡ್ತಾ ಇದ್ರಾ?” +“ಗೊತ್ತಿಲ್ಲಪ್ಪ….” +ಬಂದವರೆಲ್ಲರ ತನಿಖೆ ವಿಚಾರಣೆ. “ಯಾರು ರವಿ. ಆ ಹುಡುಗಾನಾ? ಅವನಿಗೇನೋ ಮದುವೆಯಂತೆ, ಅದಕ್ಕೇ ಹೀಗಾಯಿತೆ?” ಗುಸು ಗುಸು ಪಿಸು ಮಾತು. “ಛೆ…. ಎಂಥಾ ಒಳ್ಳೆಯ ಹುಡುಗಿ ಹೀಗೆ ಮಾಡಿಕೊಳ್ಳುವುದೆ? ಒಬ್ಬಳೇ ಮಗಳು ಬೇರೆ….” ಅನುಮಾನ ಅನುಕಂಪಗಳ ಸುರಿಮಳೆ. ಬೇಸರದಿಂದ ರವಿ ಎದ್ದು ಬಾಗಿಲಿನ ಬಳಿ ಹೋದ….. ಕ್ಷಣ ಚೀರಿ ಹಾಗೇ ನಿಂತುಬಿಟ್ಟ. ಬಾಗಿಲು ಹಾಕದೆಯೇ ಪೋಸ್ಟ್ ಮಾರ್ಟಮ್ ನಡೆಯುತ್ತಿತ್ತು! ಶಶಿಯ ಕೋಮಲ ಶರೀರವನ್ನು ಕತ್ತರಿಸಿ ಒಗೆವ ಹದ್ದುಗಳಂತೆ ಕಂಡವು…. ಸುತ್ತಲಿನ ಬಿಳಿಯ ಕೋಟುಗಳು! +“ಒಂದು ಚಾಪೆ ಬಿಳಿ ಬಟ್ಟೆ ತನ್ನಿ….” ಪೇದೆ ಬಂದು ಹೇಳಿದ. “ಇಲ್ಲೇ ಆಸ್ಪತ್ರೆ ಹಿಂದೆಯೇ ಸಿಗುತ್ತೆ ಬೇಗ ತನ್ನಿ….” +ಅರ್ಧ ಗಂಟೆಯಲ್ಲಿ ಶಶಿಯನ್ನು ಚಾಪೆಯಲ್ಲಿ ಮೂಟೆಯಾಗಿ ಸುತ್ತಿ ತಂದು, ತುಕ್ಕು ಹಿಡಿದ ಸ್ಟ್ರೆಚರ್ ಮೇಲೆ ಹಾಕಿದರು. ಬರೀ ಮುಖವಷ್ಟೇ ಕಾಣುತ್ತಿತ್ತು. ಇಟ್ಟ ಸ್ಟಿಕರ್ ಬಿಂದಿ ಕೂಡ ಅಲುಗಿರಲಿಲ್ಲ. ಮೈಪೂರಾ ಮುದುಡಿ ಚಾಪೆಯಲ್ಲಿ ಮೂಟೆಯಾಗಿತ್ತು. +“ಹುಡುಗಿ ಅಮ್ಮ, ಮಾವ ಬರಬೇಕು. ಅವರಿಗೆ ಯಾರ ಮೇಲಾದ್ರೂ ಗುಮಾನಿ ಇದೆಯಾ ನೋಡಬೇಕು. ಅವರು ಏನು ಹೇಳ್ತಾರೆ ಅದರ ಮೇಲೆ ನಿರ್ಧಾರ ಆಗುತ್ತೆ….” ರವಿ ಏನನ್ನೂ ಹೇಳಲಾರದ ಸ್ಥಿತಿಯಲ್ಲಿ ಕುಳಿತ. ಇನ್ಸ್‌ಪೆಕ್ಟರ್ ಪೊಲೀಸ್ ಪೇದೆ ಅಲ್ಲೇ ಓಡಾಡುತ್ತಿದ್ದರು. ಹೆಣ ಸಾಗಿಸುವವರೆಗೂ ಅವರಿಗು ಬಿಡುಗಡೆ ಇಲ್ಲವಲ್ಲ. +ಸಂಜೆ ನಾಲ್ಕು ಗಂಟೆ. ಆಗಲೇ ಶವದ ಬಾಯಲ್ಲಿ ಕೆಂಪಗೆ ರಕ್ತ ಜಿನುಗುತ್ತಿತ್ತು. ಮೈ ಬಣ್ಣ ಕಪ್ಪಾಗಿ, ಸ್ವಲ್ಪ ಊದಿದ ಶವ, ಬಾಯಲ್ಲಿ ಒಸರಿದ ರಕ್ತ ಭಯ ಹುಟ್ಟಿಸಿತು. ಸಾವು ಎಂದರೆ ಇದೇ ಏನು? ಅಷ್ಟೆಲ್ಲ ರಮ್ಯವಾಗಿ ಚಿತ್ರಿಸಿದ ಸಾವು ಇಷ್ಟು ಭಯಂಕರವೆ? ಮುದ್ದು ಮುಖದ ನೆನಪುಗಳನ್ನು ತೊಳೆದು ಎಷ್ಟು ಭೀಭತ್ಸ ದೃಶ್ಯಗಳನ್ನು ಬಿಟ್ಟು ಹೋದಳು. ಯಾರದೋ ಕನಸುಗಳಿಗೆ ವಸ್ತುವಾಗುವ ಬದಲು, ‘ನೈಟ್‌ಮೇರ್’ ಆದಳಲ್ಲ. ಇನ್ನು ನೆನೆದಾಗೆಲ್ಲಾ ಶಶಿ, ರಕ್ತ ಒಸರುತ್ತಾ ಮೂಟೆಯಾಗಿ ಮಲಗಿದ ನಿರ್ಜೀವ ಮುಖವಾಗಿ ಕಾಡುತ್ತಾಳೆ. +ಶಶಿ ತಾಯಿ ಬಳ್ಳಾರಿಯಿಂದ ಬಂದಿಳಿದಾಗ ಗಂಟೆ ಐದು ದಾಟಿತ್ತು. ತಾಯಿಯ ಸ್ಥಿತಿಯಂತೂ ನೋಡುವಂತಿರಲಿಲ್ಲ. ಗಂಡನಿಲ್ಲದೆ, ಅಣ್ಣನ ಹಂಗಿಗೆ ಬಿದ್ದ ತಾಯಿಯ ಸಕಲ ಆಸೆಗಳಿಗೂ ಶಶಿ ಊರುಗೋಲಾಗಿದ್ದಳು. ಶಶಿಗೊಂದು ಕೆಲಸವಾಗಬೇಕು, ಮದುವೆಯಾಗಬೇಕು, ತನ್ನ ಮುಪ್ಪಿಗೆ ಆಸರೆಯಾಗಬೇಕು…. ಏನೆಲ್ಲ ಭರವಸೆ ಹೊತ್ತ ತಾಯಿಯ ಕನಸುಗಳು ಒಮ್ಮೆಗೇ ಸ್ಫೋಟಿಸಿ ಚಿಂದಿಯಾದವು. “ನೀನಿದ್ದೂ ಉಳಿಸಿಕೊಳ್ಳಲಿಲ್ಲವೇ ರವಿ….” ರವಿ ಗಳಗಳ ಅತ್ತುಬಿಟ್ಟ. ವಿದ್ಯುತ್ ಚಿತಾಗಾರ ಮುಚ್ಚುವ ಹೊತ್ತಿಗೂ ಹೆಣ ಬಿಟ್ಟುಕೊಡದೆ ಗೋಳಿಟ್ಟಳು. ಚಿತಾಗಾರದ ರೋಲರ್‍ಗಳ ಮೇಲೆ ಇಟ್ಟಿಗೆಯ ಗೂಡಿನೊಳಗೆ ಶಶಿಯ ಹೆಣ ಜಾರಿ, ಕಬ್ಬಿಣದ ಕದ ಮುಚ್ಚಿಕೊಂಡಿತು. +ಶಶಿ ಸತ್ತು ವಾರವಾಗಿದೆ. ಶಶಿಯ ತಾಯಿ ಏನೊಂದೂ ಗುಮಾನಿ, ಅನುಮಾನ ವ್ಯಕ್ತಪಡಿಸದ ಕಾರಣ, ಪೊಲೀಸ್ ಕೇಸ್ ಅಷ್ಟೇನೂ ಜಟಿಲವಿರಲಿಲ್ಲ. ಆದರೂ ದಿನಕ್ಕೊಮ್ಮೆ ಸ್ಟೇಷನ್ ಕಡೆ ಹೆಜ್ಜೆ ಹಾಕಿ ಬರಬೇಕಿತ್ತು. ಫೈಲ್ ಅಷ್ಟು ಬೇಗ ಮುಚ್ಚೋಲ್ಲ. ಕೈ ಬಿಸಿ…. ತಲೆ ಬಿಸಿ…. ಯಾರಿಗೆ ಗೊತ್ತು! ಒಂದು ದಿನ ಹೋಗದಿದ್ದರೂ “ಏನು ಬರಲೇ ಇಲ್ಲ….” ಎಂದು ತಪ್ಪಿಸಿಕೊಂಡ ಕೊಲೆಗಾರನನ್ನು ಹಿಡಿದು ಕೇಳುವ ರೀತಿ ಪ್ರಶ್ನೆಗಳು. ಹೆಚ್ಚೇನೂ ಆಗುವುದಿಲ್ಲ ತಿಳಿದಿತ್ತು. ಸಮಯ ಬೇಕಿತ್ತು. ಶಶಿಯ ಸಾವಿನ ಸುತ್ತ ಅಣಬೆಗಳಂತೆ ರಾತ್ರೋರಾತ್ರಿ ನೂರಾರು ಕತೆಗಳು ಹುಟ್ಟಿಕೊಂಡಿದ್ದವು. ರವಿ-ಶಶಿಯ ಕೂಡಿಸಿದ ಕತೆಗಳು. ಅವಳ ಹೊಟ್ಟೆಯನ್ನಂತೂ ಬಗೆದು ನೋಡಿದ್ದರು. ಹಾಗೇ ಅವಳೆದೆಯನ್ನೂ ತೆರೆದು ನೋಡುವಂತಿದ್ದರೆ! ನೂರೆಂಟು ಉಹಾಪೋಹಗಳು, ಇತ್ತೀಚೆಗೆ ತನ್ನ-ಸುಧಾಳ ‘ಎಂಗೇಜ್‌ಮೆಂಟ್’ ಮುರಿದದ್ದೂ ಸುದ್ದಿಯಾಗಿ ಹರಡಿತ್ತು. ಕತೆಗಳು ಮತ್ತಷ್ಟು ಪುಷ್ಟಿ ಪಡೆದು ದಷ್ಟಪುಷ್ಟವಾದವು. +ವಾರದ ಹಿಂದೆ ಸಾವಿನ ಸುತ್ತ ಗಸ್ತು ಹೊಡೆದ ಮನಸ್ಸಿಗೆ ಹೇಳಿಕೊಂಡ_ ‘ಅಂದು ಸಾಯಲು ಒಂದೇ ಒಂದು ಕಾರಣವಿತ್ತು. ಇಂದು ನೂರು ಕಾರಣಗಳಿವೆ….’ ಡ್ರಾಯರ್‍ನಲ್ಲಿ ಬಿರಡೆ ಬಿಗಿದು ತಣ್ಣಗೆ ಕುಳಿತ ಬಿಳಿಯ ಪುಡಿಯ ಶೀಷೆ ನೆನಪಾಗಿ ಬೆವೆತ. ಇನ್ನೆರಡು ದಿನಕ್ಕೆ ಸುಧಾಳ ಮದುವೆ. ಅವಳಿಗಾಗಿ ಬರೆದಿಟ್ಟ ಪತ್ರವಿನ್ನೂ ತನ್ನ ಡೈರಿಯಲ್ಲಿ ಹಾಗೇ ಮಲಗಿದೆ. ಆದರೆ ಏಕೋ ವಾರದ ಹಿಂದಿದ್ದ ಸಾವಿನ ಬಿಗಿ ನಿರ್ಧಾರ, ಎಳೆ ಎಳೆಯಾಗಿ ಹಿಂಜಿ ಸಡಿಲವಾಗಿದೆ. +ಇಂದು ಶಶಿ ಇಲ್ಲ. ಬಹುಶಃ ನಾಲ್ಕು ಸಾಲಿನ ಪತ್ರದೊಡನೆ ಇಪ್ಪತ್ತು ಮೂರು ವರ್ಷಗಳ ಸಂಬಂಧ ಮುಗಿಸಿಬಿಟ್ಟಿದ್ದಳು. ಸತ್ತು ಬೂದಿ ಆರುವ ಮೊದಲು ಶಶಿ ಇಲ್ಲವಾಗುತ್ತಾಳೆ ಎಂದುಕೊಂಡಳು. ಆದರೆ…. ಶಶಿ ಸಾವಿನಲ್ಲೂ ಬದುಕಿದ್ದಾಳೆ…. ಪ್ರೀತಿಸಿದವರ ಎದೆಯಾಳದಲ್ಲಿ ನೋವಾಗಿ…. ಸಿಹಿ ನೆನಪುಗಳ ಹುಗಿದು, ಭೀಭತ್ಸವಾಗಿ. +ರವಿ ರೂಮು ಸೇರಿಡ್ರಾಯರ್ ತೆಗೆದು ಬಾಟಲಿಯಲ್ಲಿದ್ದ ಬಿಳಿಯ ಸಯನೈಡ್ ಪುಡಿಯನ್ನೇ ಬಹಳ ಹೊತ್ತು ದಿಟ್ಟಿಸಿ ನೋಡಿದ. ಎಷ್ಟು ಬೇಗ ಎಲ್ಲ ಮುಗಿದುಹೋಯಿತು. ಶಶಿಯ ಎಲ್ಲ ಸಮಸ್ಯೆಗಳಿಗೂ ಉತ್ತರವಾಯಿತು. ಆದರೆ ಅವಳ ಸಾವು ತಂದಿಟ್ಟ ಸಮಸ್ಯೆಗಳು…. ನನ್ನ ಕೊಲ್ಲುತ್ತಿವೆ. ಶಂಕೆಯ ಕಣ್ಣುಗಳಿಗೆ, ಎತ್ತ ಬೇಕಾದರೂ ಹೊರಳಬಲ್ಲ ನಾಲಗೆಗಳಿಗೆ ನನ್ನ ಆಹಾರವಾಗಿ ಬಿಟ್ಟು ನಡೆದೇ ಬಿಟ್ಟಳು. ಗಂಡನನ್ನು ಕಳಕೊಂಡ ಅಣ್ಣನ ಹಂಗಿನಲ್ಲಿರುವ ತಾಯಿಯನ್ನು, ಮತ್ತದೇ ಹಂಗಿನ ಹಗ್ಗದಲ್ಲಿ ಬಿಗಿದು ನಡೆದೇಬಿಟ್ಟಳು. ‘ಹೇಳು ಶಶಿ…. ಯಾವ ಗುರಾಣಿ ಹಿಡಿಯಲಿ ಜನರ ಈಟಿ ನೋಟಕ್ಕೆ….’ ಸ್ವಗತವೆಂಬಂತೆ ಹೇಳಿಕೊಂಡ. +ಕ್ಷಣ ಯೋಚಿಸಿದ, ‘ನಾ ಸತ್ತೂ ಸಾಧಿಸುವುದೇನು? ನನ್ನದೇ ಜಾಗದಲ್ಲಿ ಸುಧಾಳನ್ನು ಕೂರಿಸಿ ಹೋಗುತ್ತೇನೆ. ಶಂಕೆಯ ಶಿಲುಬೆಯನ್ನು ಅವಳ ಹೆಗಲಿಗೆ ವರ್ಗಾಯಿಸಿ ಹೋಗುತ್ತೇನೆ. ಬದುಕುಳಿದವರಿಗೂ ಸಾವಿನ ನೆರಳಾಗಿ ಕಾಡುತ್ತೇನೆ. ಸಾಯುವ ಹಕ್ಕು ನಮಗಿರಬಹುದು. ಇತರರಿಗೆ ಇಷ್ಟು ನೋವುಣಿಸುವ ಹಕ್ಕೂ ಇದೆಯೆ? ಅವಳ ಸಾವು ಅವಳಿಗೆ ಪರಿಹಾರವಾಗಿತ್ತು. ಅದರೊಡನೆ ನಮ್ಮೆಲ್ಲರ ನೋವೂ ಅನಿವಾರ್ಯವಿತ್ತು ಎಂದು ತಿಳಿದೂ ಸಾಯುವುದು ಪರಮಸ್ವಾರ್ಥವಲ್ಲವೆ? ಎಲ್ಲವನ್ನು ತ್ಯಜಿಸಿ ನಾ ಸಾಯುತ್ತಿಲ್ಲ. ಎಲ್ಲವನ್ನೂ ಬಯಸಿ ಸಾಯುತ್ತಿರುವೆ. ಸಾವಿನ ಸಮೀಕರಣದಲ್ಲಿ ಇಲ್ಲದ ಆದರ್ಶಗಳ ತೂರಿಸುವುದು ಏಕೆ? ಅದು ಸಿಗಲಿಲ್ಲ, ಇದು ಸಿಗಲಿಲ್ಲ ಎಂದು ಮುನಿಸಿ ಊಟ ಬಿಡುವ ಮಗುವಿನಂತೆ ಶಶಿ ಜೀವಬಿಟ್ಟಳು. ಬದುಕಿನ ಎಲ್ಲ ಸೋಪಾನಗಳೂ ಸಾಫಾಗಿ ಏರುವಂತಿರಬೇಕು. ಎಲ್ಲಿ ಜಾರಿದರೂ ಎದ್ದು ಪ್ರಯತ್ನಿಸದೆ, ಅಲ್ಲಿಗೇ ನಿಲ್ಲಿಸಿ ಹಿಂತಿರುಗುವುದು ಹೇಡಿತನವೇ ಅಲ್ಲವೆ? ಬದುಕಲಾರದ ದೌರ್ಭಾಗ್ಯವನ್ನೂ ವೈಭವೀಕರಿಸುವುದೇಕೆ?’ +ತಟ್ಟನೆ ರೂಮಿನ ದೀಪ ಹತ್ತಿ, ರವಿ ಬೆಚ್ಚಿದ. ದೀಪ ಹಚ್ಚಿದ ಅಪ್ಪ ಮೇಜಿನ ಬಳಿ ಬಂದು ಮೃದುವಾಗಿ ಕೇಳಿದರು.“ಕತ್ತಲಲ್ಲಿ ಏನು ಮಾಡ್ತಾ ಇದ್ದೀಯಾ….?” ಶೀಷೆಯನ್ನು ಡ್ರಾಯರ್ ಒಳಗೆ ನೂಕಿ “ಏನೂ ಇಲ್ಲಪ್ಪ….” ಮುಗ್ಧವಾಗಿ ಉತ್ತರಿಸಿದ. “ರವಿ ಸಾಯಲು ದೈರ್ಯ ಬೇಕು ನಿಜ. ಆದರೆ ಅದರ ಅರ್ಧದಷ್ಟು ಸಾಕಿತ್ತಲ್ಲ ಬದುಕಲು….” ಮೆಲ್ಲನೆ ಭುಜ ತಟ್ಟಿದರು. “ಬಾ ತಿಂಡಿ ತಿನ್ನು….” ಎಂದು, ಕಿಟಕಿಯ ಪರದೆ ಸರಿಸಿ ಒಳಗೆ ಹೋದರು. +‘ಸಾವಿನಲ್ಲಿ ಸುಖ, ಸಾವಿನ ಅಲೌಕಿಕ ಅನುಭವ, ಸಾವಿನ ಅನ್ವೇಷಣೆ, ಕನಸುಗಳೂ ಕದದದ ದೀರ್ಘ ನಿದಿರೆ…. ಎಷ್ಟೆಲ್ಲ ಪದಗಳು….. ಬರೀ ಖಾಲಿ ಖಾಲಿ ಪದಗಳು! ಶಶಿಗೆ ತಿಳಿದಿದ್ದರೆ…. ಸಾವು ಸತ್ಯ…. ಶವದ ಕೋಣೆಯಲ್ಲಿ ರಕ್ತ ಒಸರುತ್ತಾ ಒರಗಿದ ಸತ್ಯ…. ಹೊಟ್ಟೆ ಬಗೆದು ಚಾಪೆಯಲ್ಲಿ ಸುತ್ತಿಟ್ಟ ಭಯಂಕರ ಸತ್ಯ…. ತುಕ್ಕು ಹಿಡಿದ ಸ್ಟ್ರೆಚರ್ ಮೇಲೆ ನಿರ್ಜೀವವಾದ ಭೀಭತ್ಸ ಸತ್ಯ…. ಎಂದು ತಿಳಿದಿದ್ದರೆ, ಬಹುಶಃ ಶಶಿ ಸಯುತ್ತಿರಲಿಲ್ಲವೇನೋ! ಕೊನೆಗೆ ತಾ ಸಾಯುತ್ತಿರುವುದಾದರೂ ಏತಕ್ಕೆ…?’ ರವಿ ಗಲಿಬಿಲಿಗೊಂಡ. ‘ಪ್ರೇಮಕ್ಕೆ ಮದುವೆ….ಮೃತ್ಯು’ ಎರಡನೇ ಗುರಿ ಎಂಬ ಪೂರ್ವಗ್ರಹ ಪೀಡಿತ ಮನೋಭಾವ ಕಾರಣವೇ? ಇಲ್ಲ ಸುಧಾಳ ನಿರಾಕರಣೆಯಲ್ಲಿ ಆತ್ಮಾಭಿಮಾನಕ್ಕೆ ಪೆಟ್ಟುಬಿದ್ದು ತಾಳಲಾರದೆ ಸಾವಿನಲ್ಲಿ ಮುಖ ಮುಚ್ಚಿಕೊಳ್ಳುವ ಬಗೆಯೆ ಇದು? ನಾ ತ್ಯಜಿಸುತ್ತಿರುವುದು ಜಗತ್ತನಲ್ಲ, ನನ್ನ ನೋವುಗಳನ್ನು, ನೋವು ತಾಳದ ನಿಶ್ಯಕ್ತತೆಗೆ ಆದರ್ಶದ ಹೊದಿಕೆ!’ ಡೈರಿಯಲ್ಲಿಟ್ಟ ಮೂರೂ ಪತ್ರಗಳನ್ನು ತೆಗೆದು ಹರಿದು ಹಾಕಿದ. ಎದ್ದು ಬಾಲ್ಕನಿಗೆ ಬಂದ. ಮೇ ತಿಂಗಳು…. ಗುಲ್ ಮೊಹರ್ ಹಾದಿ ಬೀದಿಗಳಲ್ಲಿ ಕೆಂಪಾಗಿ ಅರಳಿ ನಿಂತಿತ್ತು. ಸಂಜೆ ಸುಂದರವಾಗಿ ಕಂಡಿತು. ಕೆಂಪು ಸೂರ್ಯ, ನೀಲಿ ಆಕಾಶ, ಬಿಳಿಯ ಹಕ್ಕಿಗಳು…. ಇವೆಲ್ಲ ಬಿಟ್ಟು ಹೋಗಲು ನಿರ್ಧರಿಸಿದ್ದಾದರೂ ಹೇಗೆ ಅಚ್ಚರಿಗೊಂಡ. ‘ಒಮ್ಮೆ ಸಾವನ್ನು ಸ್ಪರ್ಶಿಸಿ ಸಮೀಪ ನಿಂತು ಸಂಭಾಷಿಸಿ ಬರೆದಿದ್ದೇನೆ… ಬಹುಶಃ ಬದುಕನ್ನು ಯಾರೂ ಪ್ರೀತಿಸದಷ್ಟು ಗಾಢವಾಗಿ ನಾ ಪ್ರೀತಿಸಬಲ್ಲೆ’ ಹೇಳಿಕೊಂಡಂತೆ ಮನಸ್ಸು ಹಗುರವಾಯಿತು. +ಪುಟ್ಟ ಸೀಸೆಯನ್ನು ಹೊರತಂದು, ಕಿಟಕಿಯಾಚೆಗೆ ದೂರ ಎಸೆದ! +***** +ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […] +ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […] +(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_730.txt b/Kannada Sahitya/article_730.txt new file mode 100644 index 0000000000000000000000000000000000000000..b67fb6e63cc535e953750dc52aba0c79c3e706e6 --- /dev/null +++ b/Kannada Sahitya/article_730.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮತ್ತೆ ಬರವಣಿಗೆಯ ಎರಡನೆಯ ದಿನ +ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ ಶರಟುಗಳು. ಹಿಮ ಇದ್ದೀತೆಂಬ ಹೆದರಿಕೆಯಿಂದ ತಂಪು ಕನ್ನಡಕ, ಕಾಲಿಗೆ ಹಂಟರ್ ಶೂಗಳು, ನೀರಿನ ಬಾಟಲು, ಊಟಕ್ಕೆ ಪ್ಲಾಸ್ಟಿಕ್ಕು ತಟ್ಟೆಗಳು, ಬೆನ್ನಿಗೆ ದೊಡ್ಡ ಆನೆ ಚೀಲಗಳು – ನನ್ನ ಬದುಕಿನಲ್ಲಿ ಅದೇ ಮೊದಲ ಬಾರಿ ಅಂಥ ಉಡುಪು ತೊಡುತ್ತಿದ್ದೆ. ಏನೋ ನಾನೇ ಬದಲಾಗಿಬಿಟ್ಟಂತೆ. ಕಾಣದ ಹಿಮಾಲಯದಲ್ಲಿ ನಾನು ಹೀಗೆ ಹೀಗೆ ಕಾಣಿಸಿಕೊಳ್ಳಬೇಕೆಂಬ ಉತ್ಸಾಹ ಹುಮ್ಮಸ್ಸುಗಳು ಮಾತಿನಲ್ಲಿ, ನಡಿಗೆಯಲ್ಲಿ, ಸುಮ್ಮನೆ ಇದ್ದಾಗ ಮತ್ತು ನಿದ್ದೆಯಲ್ಲಿ ಕೂಡ ವ್ಯಕ್ತವಾಗೇ ತುಳುಕುತ್ತಿದ್ದವು. ಚಂದ್ರಾ, ಧಾರಿಣಿಯರೂ ಅಷ್ಟೇ. ಅದೇ ಮೊದಲ ಬಾರಿಗೆ ಚೂಡಿದಾರ್‌ಗಳನ್ನು ಜೀನ್ಸ್ ಪ್ಯಾಂಟು ಶರಟುಗಳನ್ನು, ಉಣ್ಣೆ ಟೋಪಿಗಳನ್ನು ತೊಟ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಟಿಕೆಟ್ಟು ರಿಸರ್ವ್ ಮಾಡಿಸುವ, ಮ್ಯಾಪು ತೆಗೆದುಕೊಂಡು ದಾರು ಹೀಗೆ ಹೀಗೆ ಹೋಗುತ್ತದೆ ಎಂದು ಊಹಿಸುವ ಸಂಭ್ರಮದಲ್ಲಿ ತಿಂಗಳು ಉರುಳಿದ್ದೇ ನಮಗೆ ಯಾರಿಗೂ ತಿಳಿಯಲಿಲ್ಲ. ಬೆಂಗಳೂರಿಗೆ, ಭದ್ರಾವತಿಗೆ, ದೆಹಲಿಗೆ, ಹರಿಹರಕ್ಕೆ ಕಾಗದಗಳು ಎಷ್ಟೊಂದು ಓಡಾಡಿದವು. ನಡೆಯಲು, ಹಿಮಾಲಯದಲ್ಲಿ ಗುಡ್ಡ ಹತ್ತಲು ಅಭ್ಯಾಸ ಇರಲಿ ಅಂತ ದಿನಾ ಸಂಜೆ ನಾಲ್ಕು ನಾಲ್ಕು ಕಿಲೋಮೀಟರ್ ನಡೆದೆವು. ಅದು ನಿಜವಾಗಿ ಏನೂ ಉಪಯೋಗಕ್ಕೆ ಬರಲಿಲ್ಲ ಅನ್ನುವುದು ಬೇರೆ ಮಾತು. +ಆದರೂ ಮನಸ್ಸಿನಲ್ಲಿ ಅಮ್ಮ ಎಲ್ಲೋ ಸಣ್ಣಗೆ ಒತ್ತುತ್ತಿದ್ದರು. ಮುಳ್ಳಿನ ಹಾಗೆ. ನಾನು ಅಲ್ಲೆಲ್ಲೋ ಹೋದಾಗ ಅವರು ಸತ್ತು ಹೋದರೆ? ಅಥವ ಎಂದಿನ ಹಾಗೆ ‘ಅಯ್ಯೊ. ನನ್ನ ಮಗ ಕಷ್ಟ ಪಡುತ್ತಾನಲ್ಲ’ ಅಂತ ಸುಮ್ಮನೆ ತಾವು ಕಷ್ಟ, ಸಂಕಟ ಪಟ್ಟರೆ? ಅದಕ್ಕೇ ತೀರ್ಮಾನ ಮಾಡಿದೆ. ನಾವು ನಡೆದು ಹೋಗುತ್ತೇವೆ ಅಂತ ಅಮ್ಮನಿಗೆ ಹೇಳುವುದೇ ಬೇಡ. ಟೂರ್ ಹೋಗುತ್ತೇವೆ ಅಂದೆ. ಅಯ್ಯೊ, ಸುಳ್ಳು ಹೇಳುತ್ತೇನಲ್ಲ ಅಂತ ಕೊರಗು. ಇರಲಿ. ಪ್ರತಿ ವಾರ, ಅಥವ ಮೂರು ದಿನಕ್ಕೆ ಒಂದು ಕಾಗದ ಬರೆಯುವುದು. ಹಿಮಾಲಯದ ಜೊತೆ ಇದ್ದಾಗ, ಗೆಳೆಯರ ಜೊತೆ ಇದ್ದಾಗ ಅಮ್ಮನ ನೆನಪು ಬರಬಾರದು. ನಾನು ಮಗ ಆಗಿ ಅಲ್ಲ, ಗಂಡ ಆಗಿ ಅಲ್ಲ, ಗೆಳೆಯ ಆಗಿ ಅಲ್ಲ, ನಾನೇ ಅಂತ ಅಲ್ಲಿ ಇರಬೇಕು. ಆದರೆ ಅಮ್ಮನನ್ನು ಅಷ್ಟು ಸುಲಭವಾಗಿ ಒರೆಸಿ ಹಾಕಲು ಸಾಧ್ಯವೆ ಮನಸ್ಸಿನಿಂದ. ಶಿವಮೊಗ್ಗದಲ್ಲಿ ಕೂತೇ ಹೊರಡುವ ಹದಿನೈದು ದಿನ ಮೊದಲೇ ಒಂದಷ್ಟು ಕಾರ್ಡುಗಳಿಗೆ ಅಡ್ರೆಸ್ಸಿನ ಸಮೇತ ಬರೆದಿಟ್ಟುಕೊಂಡೆ: “ಅಮ್ಮನಿಗೆ ನಮಸ್ಕಾರಗಳು. ನಾವು ಕ್ಷೇಮ. ಅರೋಗ್ಯವಾಗಿದ್ದೇನೆ. ತುಂಬ ಚೆನ್ನಾಗಿದ್ದೇನೆ. ಇಂಥಾ ತಾರೀಖು ವಾಪಸ್ಸು ಬರುತ್ತೇವೆ. ಚಂದ್ರಾ ಚನ್ನಾಗಿದ್ದಾಳೆ.” ಅಂತ ಒಕ್ಕಣಿಸಿ ಜೋಡಿಸಿಟ್ಟುಕೊಂಡೆ. ಡಬ್ಬ ಕಂಡ ಕಡೆಯಲ್ಲೆಲ್ಲ ತಾರೀಖು ಬರೆದು ಹಾಕುತ್ತಿದ್ದೆ. ಎಂಥದೋ ಕರ್ತವ್ಯ ನೆರವೇರಿಸಿದ ಸಮಾಧಾನ ಸಿಕ್ಕಿತು – ಅಂದುಕೊಂಡೆ. ಬೆಂಗಳೂರಲ್ಲಿ ರೈಲು ಹತ್ತಿ ಇನ್ನೇನು ಹೊರಡಬೇಕು ಅನ್ನುವ ಹತ್ತು ನಿಮಿಷ ಮುಂಚೆ ಅಮ್ಮ ನಮ್ಮ ಮಾವನನ್ನು ಜೊತೆ ಮಾಡಿಕೊಂಡು ಆಟೋ ಹತ್ತಿ ಓಡಿ ಬಂದಿದ್ದರು. ನಾನು ಬಿಟ್ಟು ಬಂದಿದ್ದ ಗಡಿಯಾರ ಕೊಡಲು. ಹಿಮಾಲಯದಲ್ಲಿ ಗಡಿಯಾರ ಇರಬಾರದು ಅಂತಲೇ ಬಿಟ್ಟಿದ್ದೆ. ಅಮ್ಮನಿಗೆ ಗಡಿಯಾರ ಕೊಡುವುದಕ್ಕಿಂತ ನನ್ನ ಜೊತೆ ಇನ್ನಷ್ಟು ಹೊತ್ತು ಇರುವ ಆಸೆ ಇದ್ದಿರಬಹುದು. ಮಗನಿಗೆ ಅವನು ಮರೆತು ಬಂದಿರುವುದನ್ನು ಕೊಟ್ಟು ಉಪಕಾರ ಮಾಡುವ ಅಪೇಕ್ಷೆ ಇರಬಹುದು. ನನಗೆ ಮುಜುಗರ ಆಯಿತು. +ಆದು ಮೊದಲ ಬಾರಿ: ಎರಡನೆ ಬಾರಿ ನಾನು ಹಿಮಾಲಯಕ್ಕೆ ಹೋಗಿ ಆ ಊರಿನವನೇ ಆದಾಗ ನನಗೆ ಯಾರೂ ನೆನಪು ಬರಲಿಲ್ಲ, ಇರಲಿಲ್ಲ. ಹಾಗೂ ಒಂದು ಸಲ ಸಂಜೆ ನೆದರ್ ಲ್ಯಾಂಡಿನ ಹ್ಯಾನ್ಸ್ ಜೊತೆ ಟೀ ಕುಡಿದು, ಸಂಜೆ ಕತ್ತಲಲ್ಲಿ ಗಂಗೆಯ ಜುಳು ಜುಳು ಕೇಳುತ್ತ, ತಲೆಕೆಳಗಾಗಿ ಕಾಣುವ ಹೃಷಿಕೇಶದ ದೀಪಗಳನ್ನು ನೋಡುತ್ತ ಅವನು ತನ್ನ ಮನೆಯ ಬಗ್ಗೆ ನಾನು ನನ್ನ ಬಗ್ಗೆ ಆಪ್ತವಾಗಿ ಮಾತಾಡಿಕೊಂಡೆವು. ಅವನು ಒಂದು ತಿಂಗಳ ಮಟ್ಟಿಗೆ ಇನ್ನಿಲ್ಲದಂಥ ಆಪ್ತನಾಗಿದ್ದ. ಒಂದು ಕ್ಷಣ ನಾವು ಒಬ್ಬರನ್ನೊಬ್ಬರು ನೋಡದಿದ್ದರೆ ಏನೋ ಕಳಕೊಂಡಂತೆ ನಮಗೆ ಅನಿಸುತ್ತಿತ್ತು. ನಾನು ಮೀಸೆ ತೆಗೆದಿದ್ದೆ. ಆಶ್ರಮಕ್ಕೆ ಮೀಸೆ ಹೊಂದುವುದಿಲ್ಲ ಅಂತ. ಮೀಸೆಯ ಜೊತೆಗೆ ನನ್ನ ಹಳೆಯ ನಾನು ಕೂಡ ಹೊರಟು ಹೋಗಿತ್ತು. ಆಶ್ರಮದವರು ನನಗೆ ಬಿಳೀ ಪಂಚೆ ಕೊಟ್ಟಿದ್ದರು. ನನ್ನ ಖಾದಿ ಜುಬ್ಬ ಇದ್ದವು. ಅಲ್ಲ, ಉಡುಪು ಹೇಗೆ ಎಂತೆಂಥ ಆಸೆ ಹುಟ್ಟಿಸುತ್ತೆ. ಈಗ ನನಗೆ ಹಂಬಲ ಇದ್ದದ್ದು ಅಲ್ಲಿನ ಬಟ್ಟೆಗಳ ವ್ಯವಸ್ಥೆಯಲ್ಲಿ ತೀರ ಮೇಲಕ್ಕೇರಬೇಕು ಅಂತ. ನಮ್ಮಂಥವರು ಬಿಳಿ ಉಡುಗೆಯವರು. ಬ್ರಹ್ಮಚಾರಿಗಳದ್ದು ಹಳದಿ ಬಟ್ಟೆ. ಸನ್ಯಾಸಿಗಳದು ಕಾವಿ. ಕಾವಿಗೆ ಬೇಕಾದ ಸಿದ್ಧತೆಯನ್ನು ಅಥವಾ ಯೋಗ್ಯತೆಯನ್ನು ಪಡೆವ ಅವಕಾಶ ನನಗೆ ಸಿಗುವುದು ಸಾಧ್ಯವೇ ಇರಲಿಲ್ಲ. ಕಾವಿ ಧರಿಸುವ ಅವಕಾಶವಲ್ಲ, ಅಧಿಕಾರ ಇದ್ದಿದ್ದರೆ ನನಗೆ ಚೆನ್ನಾಗಿರುತ್ತಿತ್ತು ಅನ್ನುವ ಆಸೆ ಇತ್ತು. ಸುಮ್ಮನೆ ಅಲ್ಲ ನಿಜವಾಗಲೂ ಆ ಅಧಿಕಾರ ನಾನು ಪಡೆವಂತಿದ್ದರೆ! ಅರಿಶಿನದ ಬಟ್ಟೆಗಳಿಗೆ ಬೇಕಾದ ಯೋಗ್ಯತೆಯನ್ನೂ ಕಳಕೊಂಡಿದ್ದೆ. ಆಶ್ರಮದ ಶ್ರೇಣಿಯಲ್ಲಿ ತೀರ ಕೆಳಹಂತದ ಬಿಳಿ ಉಡುಪಿನವನಾಗಿಯಷ್ಟೆ ಇರಬೇಕು. ಆದರೂ ಒಂದು ಥರ ಹೆಮ್ಮೆ. ನನ್ನ ಬಿಳಿ ಬಟ್ಟೆಯ ಅಧಿಕಾರ ಹ್ಯಾನ್ಸ್‌ನ ಕಿರುಗಡ್ಡ, ಮೀಸೆ, ನಗುಮುಖ, ಪ್ಯಾಂಟು ಶರಟುಗಳಿಗಿಂತ ಮೇಲಿನದು ಅಂತ. ಅವನು ಎಷ್ಟೆಂದರೂ ಕೆಲವು ದಿನಗಳ ಅತಿಥಿ. ನಾನು ಅಲ್ಲಿಯವನು. ಆಶ್ರಮ ವಾಸಿ. ಅವನು ಹಕ್ಕಿ, ನಾನು ಬೇರು ಭದ್ರ ಮಾಡಿಕೊಳ್ಳುತ್ತಿರುವ ಸಸಿ. ಇಂಥ ಹೆಮ್ಮೆ ಅಹಂಕಾರವಾಗಿದ್ದು ಇಂಗ್ಲೆಂಡಿನ ಡಾಕ್ಟರು ಥಾಮಸ್‌ನ ಜೊತೆ ಪಾಥೆಗಾವ್‌ನ ಗುಡ್ಡ ಹತ್ತಿ ಇಳಿಯುತ್ತಿದ್ದಾಗ. ಅವನ ಕೋಟು, ಶೂ, ತುಂಬು ತೋಳಿನ ಬಿಳೀ ಶರ್ಟ್, ಇವುಗಳ ಜೊತೆ ನನ್ನ ಸರಳ ಉಡುಪನ್ನು ಹೋಲಿಸಿ ಮಾತಾಡಿದ್ದೆ. ನಿಜವಾಗಲೂ ಹಾಗನ್ನಿಸಿದ್ದೂ ಹೌದು. ಎರಡು ಬಿಳೀ ಪಂಚೆ, ಎರಡು ಖಾದಿ ಜುಬ್ಬ ಸಾಕಲ್ಲವೇ. ಯಾಕೆ ನಾವು ಉಡುಪಿನ ಬಗ್ಗೆ ಇಷ್ಟು ಆಸೆ ಇಟ್ಟುಕೊಳ್ಳುತ್ತೇವೆ? ಆದರೂ ಆಶ್ರಮ ಬಿಟ್ಟು ಮೂರು ಮೈಲು ಆಚೆ ಹೋಗುವಾಗ, ಪೇಟೆಗೆ ಪ್ಯಾಂಟು ಚೆನ್ನ ಅಂತ ಕೆಲವು ಸಾರಿ ಅನ್ನಿಸುತ್ತಿತ್ತು. ಕ್ರಮೇಣ ಅದೂ ಹೋಯಿತು. ಆದರೆ ಡೆಹರಾಡೂನಿಗೆ ಹೋಗುವುದಾದರೆ ಪ್ಯಾಂಟನ್ನೇ ತೊಡುತ್ತಿದ್ದೆ. ಶಿವಮೊಗ್ಗದಲ್ಲಿ ಕಾಲೇಜಿನ ಉಡುಪು – ಆದರೆ ಚಂದ್ರ ಸಿಡುಕುತ್ತಿದ್ದಳು: ನೀಟಾಗಿರುವುದಿಲ್ಲ, ಇಸ್ತ್ರಿ ಮಾಡುವುದಿಲ್ಲ ಅಂತೆಲ್ಲ, ಬಟ್ಟೆ ಆಗ ಬಹಳ ಇತ್ತು, ಸರಿಯಾಗಿರಲಿಲ್ಲ. ಈಗ ಹಿಮಾಲಯದಿಂದ ಬಂದಮೇಲೆ ಬಟ್ಟೆ ಬದಲಾಗಿದೆ. ಇಸ್ತ್ರಿ ಬಂದಿದೆ, ವೈವಿಧ್ಯ ಬಂದಿದೆ. ಈಗಲೂ ಆಶ್ರಮ ನನಗೆಕೊಟ್ಟ ಎರಡು ಬಿಳೀ ಅಂಗಿ, ಎರಡು ಪಂಚೆ ಇವೆ. ಅವನ್ನು ತೊಟ್ಟಾಗ, ತೊಟ್ಟಷ್ಟು ಹೊತ್ತು ಬೇರೆಯೇ ಅನ್ನಿಸುತ್ತದೆ. +ಹ್ಯಾನ್ಸ್ ಮತ್ತು ನಾನು ನದಿಯ ಪಕ್ಕದಲ್ಲಿ ಕೂತು ಮಾತಾಡುತ್ತಿದ್ದೆವು. ಹ್ಯಾನ್ಸ್‌ಗೆ ಹೆಂಡತಿ ಇದ್ದಾಳೆ. ಇವನ ಆಧ್ಯಾತ್ಮಿಕ ಅಪೇಕ್ಷೆ ಅವಳಿಗೆ ಹಿಡಿಸುವುದಿಲ್ಲ. ಇವನು ಓದಿದ ಕೆಮಿಸ್ಟ್ರಿ ಮತ್ತು ಸೈಕಾಲಜಿ ಇವನಿಗೆ ಸಮಾಧಾನ ಕೊಟ್ಟಿಲ್ಲ. ತುಂಬ ನಿಶಿತ ಬುದ್ಧಿಯ ಹ್ಯಾನ್ಸ್ ಬ್ರಹ್ಮಾನಂದರನ್ನೂ ಕೃಷ್ಣಾನಂದರನ್ನೂ ಕೇಳುವ ಪ್ರಶ್ನೆಗಳು ಕೆಲವುಬಾರಿ ನನ್ನವೂ ಹೌದು. ಅವನು ಹೆಂಡತಿ ಜೊತೆ ಜಗಳಾಡಿದ. ಕಾರಣ ಬೇರೆಯೂ ಇರಬಹುದು ಅನ್ನುವ ಸೂಚನೆಯಷ್ಟೆ ನನಗೆ ಹೊಳೆಯಿತು. ಇಲ್ಲಿಗೆ ಬಂದ ತತ್ತ್ವಶಾಸ್ತ್ರ ಅವನಿಗೆ ಒಡ್ಡುವ ಸಮಸ್ಯೆ, ಪ್ರಶ್ನೆ ಬೇರೆ ರೀತಿಯದು, ನನಗೆ ಬೇರೆ ರೀತಿಯದು. ಆದರೆ ನನಗೆ ಅರ್ಥ ಆದಂತೆ ಅನ್ನಿಸಿದ್ದು ಹೊಳೆದದ್ದು ಅವನಿಗೆ ಹೊಳೆಯುತ್ತಿರಲಿಲ್ಲ. ಆದರೆ ಇಬ್ಬರೂ ಅವು ಜೀವನ್ಮರಣದ ಪ್ರಶ್ನೆಗಳು ಅನ್ನುವ ಹಾಗೆ ಚರ್ಚೆ ಮಾಡುತ್ತಿದ್ದೆವು. ತತ್ತ್ವ ಕಲಿಯುವ ಅನಿವಾರ್ಯವಾಗಿರಲಿಲ್ಲ ನಮ್ಮ ಅನಿವಾರ್ಯ, ಹಿಂಗಿದ, ಹಸಿವು ಆಗಿತ್ತು. ನಿಜವಾಗಿ ತತ್ತ್ವದ ಬಗ್ಗೆ ಅಲ್ಲ ನಮ್ಮ ಬಗ್ಗೆ ತಿಳಿಯುತ್ತಿದ್ದೆವು. +ಟೀ ಕುಡಿದು ಮತ್ತೆ ಬಂದು ಕೂತೆವು. ಹೇಳಿದೆ. ಅಪರಿಚಿತರೊಂದಿಗೆ ಹೇಳಿಕೊಳ್ಳುವಾಗ ನಮ್ಮ ಬಗ್ಗೆಯೇ ಆದರೂ ನಾವೇ ನಮ್ಮನ್ನು ಅಪರಿಚಿತರೆಂಬಂತೆ ಕತೆಮಾಡಿ ಹೇಳಿಕೊಳ್ಳುತ್ತೀವೋ ಏನೋ. ಕತೆಯಲ್ಲಿ ಪಾತ್ರದ ಬಗ್ಗೆ ಬೇಕಾದ ಕೆಲವೇ ಮಾತು ಹೇಳುವ ಹಾಗೆ ನಮ್ಮ ಬಗ್ಗೆ ನಾವೇ ಒಂದೆರಡು ಮಾತುಗಳಲ್ಲಿ ನಮ್ಮ ಸತ್ವ ನಿರೂಪಿಸುವುದಕ್ಕೆ ತೊದಗುತ್ತೇವೇನೋ. ಹಾಗ್ ಹ್ಯಾನ್ಸ್ ನನಗೆ ಅಪರಿಚಿತನೂ ಅಲ್ಲ. ಅವನ ಅಗಲ ದಪ್ಪ ಕೈ, ಸ್ವಲ್ಪ ಚೌಕ ಮುಖ, ಪುಟ್ಟ ಬಾಯಿ, ಹಸುವಿನಂಥ ಕಣ್ಣು, ನುಣುಪಾದ ಹದವಾಗಿ ಕತ್ತರಿಸಿದ ಕೆದರು ಕೂದಲು, ಹುಡುಗುತನ ಮತ್ತು ಪ್ರಬುದ್ಧತೆ ಎರಡೂ ಇದ್ದ ದೃಢವಾದ ಕತ್ತು, ಕೊರಳು, ಭುಜದ ಹ್ಯಾನ್ಸ್ ನನ್ಗೆ, ಸ್ವಲ್ಪ, ಗೆಳೆಯ ರಾಮುನ ನಮ್ಮ ವೇಣುವಿನ ನೆನಪನ್ನೂ ಅವರ ಮನೆಯಲ್ಲಿದ್ದ ಹಸುವಿನ ನೆನಪನ್ನೂ ತರುತ್ತಿದ್ದ. +ಹೇಳಿದೆ – “ಬಹಳ ಸಾರಿ ನನಗೆ ಯೋಚನೆ ಮಾಡುವುದಕ್ಕೆ ಭಯವಾಗುತ್ತದೆ. ಯಾಕೆಂದರೆ ಯೋಚನೆ ಮಾಡಿದ್ದು ಇಚ್ಛೆಯಾಗಿ, ಇಚ್ಛೆ ಪ್ರಬಲವಾಗಿ, ಪ್ರಬಲವಾದ ಇಚ್ಛೆ ನಿಜವಾಗಿಯೇ ಬಿಡುತ್ತದೆ. ನನಗೆ ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಯಾರೂ ನನಗೆ ಇರಬಾರದು ಅನ್ನಿಸಿತ್ತು. ಒಬ್ಬನೇ ಯಾರಿಗೂ ಹೇಳದೇ ಕೇಳದೇ ಅಲೆಮಾರಿಯಾಗಿ ಹೊರಟು ಹೋಗಬೇಕು ಅನ್ನಿಸಿತ್ತು. ನನ್ನ ಅಪ್ಪ ಅಮ್ಮ ಹೆಂಡತಿ ಎಲ್ಲರೂ ನನ್ನ ಬಗ್ಗೆ ತುಂಬ ಪ್ರೀತಿ ಇದ್ದವರೆ, ಇಟ್ಟುಕೊಂಡವರೇ. ನನಗೆ ಕೆಲವು ಸಾರಿ ಅದು ಮನಸ್ಸಿಗೆ ಬಂದಾಗ ಅಯ್ಯೊ ಅನ್ನಿಸುತ್ತೆ. ಅಯೋಗ್ಯ ಅನ್ನಿಸುತ್ತೆ, ಬೇರೆ ಥರ ಇರಬೇಕು ಅನ್ನಿಸುತ್ತೆ. ನನ್ನ ಹೆಂಡತಿ ಜೊತೆ ಇರಲು ನಾನು ಅಯೋಗ್ಯ ಅನ್ನಿಸಿದಾಗ ಥಟ್ಟಂತ ಹೊರಟುಬಿಟ್ಟೆ. ಈಗ ಮತ್ತೆ ವಾಪಸ್ಸು ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ಇಲ್ಲೆ ಯಾಕಿದ್ದೇನೋ ಗೊತ್ತಿಲ್ಲ. ನನಗೆ ಬೇಕಾದ್ದಿ ಸಿಕ್ಕಿದೆಯೋ ಗೊತ್ತಿಲ್ಲ. ಹಾಗೆಯೇ ಮನೆಯ ನೆನಪು ಕೂಡ ಯಾವಾಗಲೂ ಬರಲ್ಲ. ವಾಪಸ್ಸು ಹೋಗಬೇಕು ಆನ್ನಿಸಲ್ಲ.” +ಹ್ಯಾನ್ಸ್ ಕೇಳಿದ – “ನಿನ್ನ ಹೆಂಡತಿಗೆ, ನಿನ್ನ ಅಮ್ಮನಿಗೆ ನೋವು ಆಗುವುದಿಲ್ಲವಾ? ನೀನು ಇಲ್ಲಿರುವುದು ಅವರಿಗೆ ಗೊತ್ತಾ?” +“ಇಲ್ಲ ಗೊತ್ತಿಲ್ಲ. ನೋವಾಗುತ್ತೆ. ನಾನು ಅಲ್ಲೇ ಇದ್ದಿದ್ದರೆ ನನಗೆ ನೋವಾಗುತ್ತಿತ್ತು. ಈಗ ನೋವು ಇಲ್ಲ. ಹೋಗಬಾರದು ಅಂತಲೂ ಇಲ್ಲ. ನಾನು ಬದಲಾಗಿದ್ದೇನೆ ಅನ್ನುವುದು ನಿಜ.” +ನಾವಿಬ್ಬರೂ ನಮ್ಮದಲ್ಲದ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದೆವು. ಎಷ್ಟು ಹೇಳಿದೆವೊ ಎಷ್ಟು ತಿಳಿಯಿತೊ. ಆದರೂ ಹಿಮಾಲಯದ ಬೆಟ್ಟಗಳು, ಗಂಗೆ, ಆಶ್ರಮದ ಬದುಕು, ಒಂದು ತಿಂಗಳ ನಮ್ಮ ಒಡನಾಟ ಎಲ್ಲ ಸೇರಿ ನಾನು ಬದಲಾಗಿರುವುದು ನನಗೆ, ಅವನು ಬದಲಾಗಿರುವುದು ಅವನಿಗೆ ತಿಳಿವಂತೆ ಮಾಡಿದ್ದವು. +ನಿಜ ಒಂದು ಸಾಯಂಕಾಲ. ಫೆಬ್ರುವರಿ ತಿಂಗಳ ಚಳಿ ಬಿಸಿಲಲ್ಲಿ ಥಾಮಸ್‌ನ ಜೊತೆ ಪಾಥೆಗಾವ್‌ದ ಸಾಸುವೆ ಹೊಲದ ಹೂ ತುಂಬಿದ ಗಿಡಗಳನ್ನು ನೋಡಿ ಇಳಿಯುತ್ತ ಹೇಳಿದೆ. ಅವನಿಗೆ ಆಶ್ರಮದ ಜನರ ಬಗ್ಗೆ ಕುತೂಹಲ ಇತ್ತು. ಹೇಳಿದೆ – “ಇಲ್ಲಿ ಇರುವ ಎಲ್ಲರಿಗೂ ಭೂತಕಾಲ ಮಾತ್ರ ಇದೆ. ಭವಿಷ್ಯ ಇಲ್ಲ. ಹಾಗೆ ಇದ್ದೇವೆ.” ಉದ್ದ ಗಡ್ಡದ ದಪ್ಪ ಮೈಯ ಮುದುಕ ಕಾವಲುಗಾರ. ಕ್ರಿಸ್ತನ ಹಾಗೆ ತಲೆಗೂದಲು ಗಡ್ಡ ಇರುವ ಕೇರಳದ ತರುಣ ಮೈಕೆಲ್, ಊಟ ಬಡಿಸುವ ಸಂಸ್ಕೃತ ವಿದ್ವಾಂಸ, ಮನೆಯವರೆಲ್ಲರ ಕಗ್ಗೊಲೆ ನೋಡಿ ಶ್ರೀಲಂಕೆಯಿಂದ ತಾನೊಬ್ಬನೆ ಉಳಿದು ಬಂದು ಇಲ್ಲಿರುವ ಯುವಕ ಕಾವಿಧಾರಿ, ಲೆಕ್ಕ ಪತ್ರ ನೋಡಿಕೊಳ್ಳುವ ಅಲಾವುದೀನ್ ಕತೆಯ ಭೂತದಂತಿರುವ ಮಲೆಯೇಷಿಯಾದ ಕಪ್ಪು ಮನುಷ್ಯ, ಕರಾಟೆಯಲ್ಲಿ ಒಬ್ಬನನ್ನು ಪ್ರಾಣಾಂತಿಕವಾಗಿ ಗಾಯಗೊಳಿಸಿ ವೈರಾಗ್ಯ ಹುಟ್ಟಿ ಇಲ್ಲಿ ಪ್ರೆಸ್ಸಿನ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಯುವಕ ಭಾವಗ್ರಾಹಿ – ನನ್ನ ಪರಿಚಯಕ್ಕೆ ಹಲವು ತಿಂಗಳಲ್ಲಿ ಒದಗಿಬಂದ ಹಲವು ನೂರು ಜನಕ್ಕೆ ಅವರದೇ ಆದ ಭೂತಗಳಿವೆ. ಭವಿಷ್ಯ ಗೊತ್ತಿಲ್ಲದೆ ಇದ್ದಾರೆ. ಭವಿಷ್ಯ ಇಲ್ಲವೇ ಇಲ್ಲ ಅನ್ನುವ ಹಾಗೆ ಇದ್ದಾರೆ. ನಾನೂ. +ಅಲ್ಲೆ ಆಶ್ರಮದ ಹತ್ತಿರವೆ ಪೋಲೀಸ್ ಇನ್ಸ್‌ಪೆಕ್ಟರರ ಮನೆ. ಸೈಕಲ್ಲು. ಒಣಹಾಕಿರುವ ಬಟ್ಟೆಗಳು. ಮಕ್ಕಳು. ಟ್ರಾನ್ಸಿಸ್ಟರ್ ಕೇಳುತ್ತ ಕೂರುವ ಹುಡುಗಿಯರು. ಸಂಜೆ ಟಿವಿ ನೋಡಲು ಅಲ್ಲಲ್ಲಿ ಗುಂಪು ಸೇರುವ ಜನ. ಭವಿಷ್ಯದ ಗುರಿ ಕನಸು ಇರುವವರು. ನನಗೆ ಒಮ್ಮೆ ಪರಿಚಿತವಾಗಿದ್ದ ನನ್ನದೂ ಆಗಿದ್ದ ಬದುಕು ಕೈಯಳತೆಯಲ್ಲೆ ಇದೆ. ಆಶ್ರಮದಲ್ಲಿ ಎರಡೂ ಹೊತ್ತು ಉಳಿದು ಹೋದ ಊಟವನ್ನು ಬೇಡಲು ಬರುವ ಭಿಕ್ಷುಕರ ಗುಂಪು ಇದೆ. ಅವರಿಗೂ ಭವಿಷ್ಯ ಇಲ್ಲ. ಬೇರೆ ಥರದಲ್ಲಿ ಭವಿಷ್ಯ ಇಲ್ಲ. +ಇರುವುದು ಈ ಕ್ಷಣ ಮಾತ್ರ ಅಂತ ಆಗಲೂ ಅನ್ನಿಸಿತ್ತು – ಮೈ ಕೊರೆವ ಸೊನ್ನೆಗೆ ಹತ್ತಿರದ ಚಳಿಯಲ್ಲಿ ರಾತ್ರಿ ದಿನವೆಲ್ಲ ನಡೆದು ಸುಸ್ತಾಗಿ, ಗುರುದ್ವಾರದ ಜನ ಕರುಣಿಸಿದ ಕಂಬಳಿ ಹೊದ್ದು, ರಾಜು ಮತ್ತು ಶ್ರೀನಾಥ ತಂದ ಕೇಜಿಗಟ್ಟಲೆ ಜಿಲೇಬಿಗಳನ್ನು ಬಿಸಿ ಬಿಸಿಯಾಗಿ ನಾವು ಕಬಳಿಸುತ್ತ ಕೂತಿದ್ದಾಗ ಹಾಗನ್ನಿಸಿತ್ತು. +ಮತ್ತೆ ಆಗಲೂ ಹಾಗೇ ಅನ್ನಿಸಿತ್ತು – ಹಿಮದ ಮೇಲೆ ಕೋಲೂರಿ ನಡೆದು ತೀರ ಬೆಳಗಿನ ಜಾವದಲ್ಲಿ ಹೂಗಳ ಕಣಿವೆಗ ಹೋಗಿ ನಿಂತಾಗ. ಕೈಗೆ ತಗಲುವಷ್ಟು ಸಮೀಪ ಇರುವಂತೆನ್ನಿಸುವ ಆದರೆ ನೂರಾರು ಅಡಿ ದೂರವಿರುವ, ಬೃಹತ್ ಅತೀ ಬೃಹತ್ ಗಾತ್ರದಿಂದ ಮೈಮೇಲೆ ಬೀಳುವಂತೆಯೇ ಇರುವ, ಮೊನಚು ಕಲ್ಲುಗಳ ಬೆಟ್ಟಸಾಲುಗಳು ಎತ್ತರ ಅತೀ ಎತ್ತರವಾಗಿ ಎಡಬಲಗಳಲ್ಲಿ ಕಣ್ಣು ಹರಿವಷ್ಟು ದೂರವೂ ನಿಂತು, ಮೇಲೆ ಕವುಚಿ ಬೀಳುವಂತಿರುವ ಮಳೆ ಮೋಡವೂ ಬೆಟ್ಟದ ಮಧ್ಯಂತರದಲ್ಲಿ ನಮ್ಮ ತಲೆ ಸವರಲೆಂದು ಇಳಿದು ಬರುತ್ತಿರುವ ನೇರಳೆ – ಬಿಳಿ ಮೋಡವೂ ಇದ್ದು, ತೇವ ತುಂಬಿದ ಗಾಳಿ ಬೀಸುತ್ತ, ಅಷ್ಟಿಷ್ಟೆ ಎಳೆ ಬಿಸಿಲು ಬೀಳುತ್ತ, ಹೂಗಳ ಬಣ್ಣ ಕಣ್ಣು ತುಂಬುತ್ತ – ಕಲ್ಲುಗಳ ಬಣ್ಣ, ಅಷ್ಟಿಷ್ಟು ಆಗೀಗ ತೋರಿಸುವ ಆಕಾಶದ ಬಣ್ಣ, ಮೋಡದ ಬಣ್ಣ, ಬಿಸಿಲು ಬಿದ್ದ ಮೋಡದ ಬಣ್ಣ, ಮಳೆ ಮೋಡದ ಬಣ್ಣ, ಹೆಪ್ಪುಗಟ್ಟಿದ ಹಿಮನದಿಯ ಬಣ್ಣ, ಹುಲ್ಲು ಹಾಸಿನ ಮೇಲೆ ಬೆಳಗಿನ ಬೆಳಕಿನ ಬೇರೆ ಬೇರೆ ವಿನ್ಯಾಸ, ಅಪ್ಪಟ ಚಳಿಯ ಗಾಳಿಗೆ ನನಗೆ ಚಳಿಚಳಿಯಾಗುತ್ತಿರುವಾಗಲೇ ನನ್ನೊಳಗೆ ಸ್ವಲ್ಪ ಬೆಚ್ಚಗೆ ಹರಿಯುತ್ತಿರುವ ರಕ್ತದ ಬಿಸುಪು, ಉಸಿರಾಡಿದಂತೆಲ್ಲ ಬರುವ ಹಬೆ, ನಾನಿರುವಷ್ಟು ಜಾಗ, ನನ್ನ ಕಣ್ಣಿಗೆ ಬೀಳುವಷ್ಟು ಲೋಕ ಬಿಟ್ಟರೆ ಇನ್ನೇನೂ ಇಲ್ಲವೇ ಇಲ್ಲ ಅಂತ ಅನ್ನಿಸಿದಾಗ – ಇರುವುದು ಈ ಕ್ಷಣ ಮಾತ್ರ. ಆ ದೊಡ್ಡ ಕಣಿವೆಯಲ್ಲಿ ಇದ್ದ ನಾವು ಹತ್ತು ಜನ ಚದುರಿ ಒಬ್ಬೊಬ್ಬರೆ ಇಬ್ಬಿಬ್ಬರೆ ಆದಾಗ ಏಕಾಂತದ ಭಯ ಸ್ವಲ್ಪ ಆಯಿತಲ್ಲ ಆ ಭಯ ಬಿಟ್ಟರೆ ಬೇರೆ ಏನೂ ಇಲ್ಲ ಅನ್ನಿಸಿದ್ದೂ ಇದೆ. +ಆದರೆ ಹಾಗೆ ಬಹಳ ಹೊತ್ತು ಇರಲಿಲ್ಲ. ರಾತ್ರಿ ಬಿದ್ದ ಮಳೆಯ ಹನಿಗಳನ್ನು ಈಗಲೂ ಉದುರಿಸುತ್ತಿರುವ ಎತ್ತರ ಮರಗಳ ಹಿಂದೆ ಇನ್ನೂ ಕತ್ತಲು ಇದೆ. ನಡೆದಷ್ಟೂ ಇರುವ ಕಣಿವೆ, ತಿರುವುಗಳಲ್ಲಿ ಧುತ್ತನೆ ಎದುರಾಗುವ ಬೃಹತ್ ಮತ್ತು ಮೊನಚು ಕೋಡುಗಲ್ಲುಗಳು. ದೇವರು ಇದ್ದರೆ ಇಲ್ಲೆ ಎಲ್ಲೊ ಮುಂದಿನ ತಿರುವಿನಲ್ಲಿ, ಅಲ್ಲಿ ತೇಲುತ್ತಿರುವ ಮೋಡದ ಕೆಳಗೆ, ಇಷ್ಟೆ ಬಿದ್ದಿರುವ ಬೆಳಗಿನ ಬಿಸಿಲಿನಲ್ಲಿ, ಹಿಮದ ಮೇಲೆ ಏನೋ ಮಾಡುತ್ತ ಕೂತಿರಬಹುದು ಅನ್ನಿಸುವ ಹಾಗೆ. ಅಕಸ್ಮಾತ್ತಾಗಿ ಬೀಳುವ ಕನಸೂ ಕೂಡ ಹೂಗಳ ಕಣಿವೆಯಷ್ಟು ಸುಂದರ, ಏಕಾಕಿ, ಭಯಂಕರ, ಮುಗ್ಧವಾಗಿರಲಾರದು. ಆದರೆ ಬಹಳ ಹೊತ್ತು ಹಾಗೇ ಅಲ್ಲಿ ಇರಲಾಗದು. ಮತ್ತೆ ನಡೆದು ಹಿಂದಿರುಗಿ ಗುರುದ್ವಾರಕ್ಕೆ ಹೋಗಿ, ಅಲ್ಲಿಂದ ನಡೆದು ರಸ್ತೆ ತಲುಪಿ, ಅಲ್ಲಿಂದ ಬಸ್ಸು ಹಿಡಿದು ಬದರಿಗೆ ಹೋಗಿ, ಅಲ್ಲಿಂದ ದೆಹಲಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಕಾಲೇಜಿಗೆ ತಲುಪಿ ಪಾಠ ಮಾಡಬೇಕು ಅನ್ನುವ ಭವಿಷ್ಯ ಇಲ್ಲೇ ಇದೇ ನಿಜ ಅನ್ನುವ ಕ್ಷಣಗಳನ್ನು ಆಳುತ್ತಿತ್ತು. +ಹೃಷೀಕೇಶ ಹಾಗಲ್ಲ. ಭೂತ ಮಾತ್ರ ಇತ್ತು. ಭೂತದ ಅಳುಕು, ಅಪರಾಧ, ಪಶ್ಚಾತ್ತಾಪಗಳು ನಿಧಾನವಾಗಿ – ಅವತ್ತು ಪೀನಿಯಲ್ಲಿ ಮಳೆ ಬಂದಾಗ ಬಿದ್ದ ಆಲಿಕಲ್ಲಿನಂತೆ – ಕರಗುತ್ತಿದ್ದವು. ಹಿಂದಿರುಗುವ ಆಸೆ ಇಲ್ಲದೆ, ಭವಿಷ್ಯದಲ್ಲಿ ಏನಿದೆ ಅನ್ನುವ ಚಿಂತೆ ಇಲ್ಲದೆ, ನಾಳೆಯ ಒತ್ತಾಯ ಇಲ್ಲದೆ ದಿನ ದಿನಾ ಸುಮ್ಮನೆ ಇದ್ದೆ. ಇರುತ್ತಿದ್ದೆ, ಭೂತಗಳನ್ನು ಹೊತ್ತ ಜನ, ಭೂತದಿಂದ ತಪ್ಪಿಸಿಕೊಳ್ಳಲು ಬರುವ ಜನ, ಆಶ್ರಮದ ಮೇಲೆ ಕರುಣೆ ತೋರುವ ಜನ, ಅತಿಥಿಗಳಾಗಿ ಬರುವ ಜನ, ಎಲ್ಲರೂ ಬಂದು ಹೋಗುವುದನ್ನು ನೋಡುತ್ತ ಸುಮ್ಮನೆ ಬೆಟ್ಟದಹಾಗೆ ನದಿಯಹಾಗೆ ಇದ್ದೆ. ಎಷ್ಟು ದಿನ ಹೀಗೆ ಇರುತ್ತೇನೋ ಗೊತ್ತಿಲ್ಲದ ಹಾಗೆ ಇದ್ದೆ. +ನಿದ್ದೆ ಬರಲಿಲ್ಲ. ಹೀಗಾಗುವುದು ಅಪರೂಪ. ಮತ್ತೆ ಎದ್ದು ಬರೆಯುತ್ತಿದ್ದೇನೆ. ಹಿಮಾಲಯ ದಿನಗಳ ತುಣುಕುಗಳು ಹಾಸಿಗೆಯಲ್ಲಿ ಹೊರಳಾಡಿಸಿದವು. ನನ್ನ ಇಚ್ಛೆಯದಲ್ಲದ ಆದರೆ ನಾನು ಮಾಡಬೇಕಾದ ಕೆಲಸಗಳು ಬೆಳಗಾಗಲೆಂದೆ ಕಾದಿವೆ. ಆದರೆ – +ಕೈ ಮುಗಿದಾಗ ಹಿಂದೆಂದೂ ಹಾಗೆ ಅನ್ನಿಸಿರಲಿಲ್ಲ. ಹಾಗೆ ಹೃತ್ಪೂರ್ವಕ ಕೈ ಮುಗಿದೂ ಇರಲಿಲ್ಲ. ನನ್ನವೇ ಕೈ ಬೆರಳುಗಳು ಒಂದಕ್ಕೊಂದು ವಿರುದ್ಧವಾಗಿ ಒತ್ತಿಕೊಂಡು, ಅಂಗೈಗೆ ಅಂಗೈ ಒತ್ತಿ, ಒಂದು ಬೆರಳಲ್ಲಿ ಹರಿವ ರಕ್ತದ ಚಲನೆ ಇನ್ನೊಂದು ಬೆರಳಿಗೆ ಗೊತ್ತಾಗಿ, ಇಡೀ ನಾನು ಮುಗಿದ ಕೈಯಾಗಿ, ಕಣ್ಣುಮುಚ್ಚಿ, ಗಂಟೆ ಸದ್ದು ಕಿವಿ ತುಂಬ ತುಂಬಿಕೊಂಡು, ಅಹಂಕಾರ ಮುಕ್ಕು ಮಾಡಿಕೊಳ್ಳುತ್ತ, ನೋಯುತ್ತಲೂ ಸಂತೋಷ ಪಡುತ್ತಲೂ ಸ್ವಲ್ಪಹೊತ್ತು ಇದ್ದೆ. ಮತ್ತೆ, ಆಮೇಲೆ, ನಮಸ್ಕಾರ ಪೂರ್ತಿಮಾಡಿದೆ. ನನ್ನ ಇಡೀ ಮೈಯನ್ನು ನೆಲ ಎತ್ತಿ ಹಿಡಿದಿತ್ತು. ಹಣೆಗೆ ತಗಲುವ ತಣ್ಣಗೆ ಕೊರೆಯುವ ನೆಲ, ತೊಡೆಗೆ ಒತ್ತುವ ನೆಲ, ಕಾಲ ಬೆರಳಿಗೆ ತಂಪ್ಪೆನ್ನಿಸುವ ನೆಲ, ಮನಸ್ಸು ಪೂರ್ತಿ ಇಟ್ಟು ಮಾಡುವ ನಮಸ್ಕಾರ ನೆಲದ ಜೊತೆಗೆ ನನ್ನನ್ನು ಸೇರಿಸಿಕೊಂಡಿತ್ತು. ಆಗಲೂ ಹಿಂದೆ ಒಮ್ಮೆ ಜೊತೆಯಲ್ಲಿದ್ದವರನ್ನೆಲ್ಲ ಮರೆತು, ಸುಸ್ತಾಗಿ, ಬ್ರಿಂಗ್ಟಾ ಟಾಪನ್ನು ಹತ್ತಿ ನೆಲಕ್ಕೆ ಬೆನ್ನು ಕೊಟ್ಟು ಮಲಗಿದಾಗ – ಅದು ಮಲಗಿದ್ದು. ನೆಲ ನನಗೆ ಶಕ್ತಿ ಕೊಟ್ಟಿತ್ತು. ಆ ಶಕ್ತಿಯಲ್ಲಿ ಕೆಲವು ಕ್ಷಣ ಇದ್ದವರನ್ನು ಮರೆತು, ಇರಬೇಕೆಂದು ಬಯಸಿದ – ನನಗೆ ಬೇಕೇ ಬೇಕೆಂದು ನಾನು ಹಂಬಲಿಸಿದ ಮುಖಗಳನ್ನು ಮನಸ್ಸಿಗೆ ತಂದುಕೊಂಡಿದ್ದೆ. ಪಾರ್ವತಿ ನದಿ, ದೂರದಲ್ಲಿ ಕೆಳಗೆ, ಆಳದಲ್ಲಿ, ಸಾವಿರ ಸಾವಿರ ಅಡಿ ಏರಿ ಹತ್ತಿದ ಅಹಂಕಾರ. ಕಾಮನೆಯ ನೆನಪುಗಳು, ಚಿತ್ರಗಳು. ಈಗ ಆಯಾಸವಿಲ್ಲದೆ, ಹತ್ತಿದ ಅಹಂಕಾರವಿಲ್ಲದೆ, ಕಾಡಿದ ಕಾಮನೆಗಳು ನಿಜವಾಗಿ ಉಬ್ಬಿದ ಅಹಂಕಾರಕ್ಕೆ ಕೊಟ್ಟ ನೋವು ಇಲ್ಲದೆ, ಮನುಷ್ಯ ಎಷ್ಟೋ ಕಾಲದಿಂದ ಕಲ್ಪಿಸಿಕೊಂಡ ಇನ್ನೊಂದರ ಎದುರು ಸುಮ್ಮನೆ ನಮಸ್ಕಾರ ಮಾಡಿದಾಗ ತಿಳಿಯಿತು ನಮಸ್ಕಾತ ಎಂಥ ಬಿಡುಗಡೆ ತರುತ್ತದೆ ಎಂದು. ಹುಡುಗನಾಗಿದ್ದಾಗ ಅಪ್ಪ ಅಮ್ಮ ಹೇಳಿಕೊಟ್ಟಹಾಗೆ, ಹೆದರಿಕೊಂಡು, ನಮಸ್ಕಾರ ಮಾಡದಿದ್ದರೆ ಏನಾದೀತೋ ಎಂದು ಕೈ ಮುಗಿದದ್ದು ಬರೀ ಸುಳ್ಳು. ಅವತ್ತು, ಆ ಬೆಳಗ್ಗೆ, ನಿಜವಾಗಿ, ನನಗೇ ನಿಜ ಅನ್ನಿಸುವ ಹಾಗೆ, ನಮಸ್ಕಾರ ಮಾಡಿದ್ದು ಒಂದೇ ಸಲ. ಕೆಲವು ಬಾರಿ ಹೀಗೂ ನಾನು ಕೈ ಮುಗಿದೇನು ಅಂತ ಎಂದೂ ಕಲ್ಪಿಸಿಕೊಂಡೂ ಇರಲಿಲ್ಲ. ಒಮ್ಮೆಯಾದರೂ ಆಯಿತಲ್ಲ. ಸಾಕು. +ಅಂದು ಒಂದು ದಿನ ಹೀಗೇ ರಾತ್ರಿ ನಿದ್ದೆ ಬಾರದೆ ನನ್ನ ಕೋಣೆಯ ಆಚೆ ಕಾಸಾಲೆಯಲ್ಲಿ ಬಂದು ಸುಮ್ಮನೆ ಕೂತಿದ್ದೆ. ಆಗಲೂ ಈಗ ಇರುವ ಹಾಗೇ ಮುಕ್ಕಾಲು ಚಂದ್ರನ ಬೆಳಕಿತ್ತು. ನನಗೆ ನಿದ್ರೆ ಬಾರದಿರುವುದು ಅಪರೂಪ. ನಿದ್ರೆ ಬರಲಿಲ್ಲ. ಅಷ್ಟೆ. ಯಾಕೋ. ಈಗಾದರೂ ಹಿಮಾಲಯದ ಚಿತ್ರ ಮನಸ್ಸಿಗೆ ಬರುತ್ತಿವೆ. ಆಗ ಕಾಡುವ ಚಿತ್ರಗಳೂ ಇರಲಿಲ್ಲ. ವಿಶಾಲ ಅಂಗಳದಲ್ಲಿ ಮರ ಸುಮ್ಮನೆ ನಿಂತಿತ್ತು. ಅಂಗಳದ ತುಂಬ ಚೌಕ ಚೌಕ ಜೋಡಿಸಿದ ಚಪ್ಪಡಿ ಕಲ್ಲುಗಳ ಮೇಲೆದೀಪದ ಬೆಳಕು, ಚಂದ್ರನ ಬೆಳಕು ಇತ್ತು. ಮರದ ಹಿಂದೆ ಅಡುಗೆ ಮನೆಯ ಬಿಸಿಲು ಮಚ್ಚು. ಎರಡು ಮೂಟೆಗಳು ಕೆಲವು ಸೌದೆ ತುಂಡುಗಳು ಸುಮ್ಮನೆ ಇದ್ದವು. ಮರದ ಪಕ್ಕದಲ್ಲಿ ಸ್ಟೀಲಿನ ಗೇಟು ಹಳೆಯ ಹೊಳಪನ್ನು ಬೀರುತ್ತಿತ್ತು. ಅಡುಗೆ ಕೋಣೆಯ ಆಚೆ ಬದಿಗೆ ಗುಡ್ಡ. ಗುಡ್ಡದ ತುಂಬ ಕಾಡು. ಅದರಾಚೆ ಮುಖ್ಯ ರಸ್ತೆ. ಅದರಾಚೆ ಅಲೆಗಳ ಹಾಗೆ ಆರಂಭವಾಗುವ ಹಿಮಾಲಯದ ಬೆಟ್ಟಗಳ ಶ್ರೇಣಿ. ಅಲ್ಲೆ ಹತ್ತಿರದಲ್ಲಿ ಪಾಥೆಗಾವ್ ಹಳ್ಳಿ. ಅಲ್ಲಿ ಎಷ್ಟೊಂದು ಸಾಸುವೆ ಹೂಗಳು ನೆಲದ ತುಂಬ ಹರಡಿದ್ದವು. ಗಂಗಾನದಿಯ ಶಬ್ದ ತೆಳುವಾಗಿ ಕೇಳುತ್ತಿತ್ತು. ಇನ್ನೂ ಹಿಮ ಕರಗಿಲ್ಲ. ನದಿಯ ನೀರು ಹೆಚ್ಚಿಲ್ಲ. ಕೈಸಾಲೆಯಲ್ಲಿ ಖಾಲಿ ಮಂಚ. ಉದ್ದಕ್ಕೂ ಮುಚ್ಚಿದ ಬಾಗಿಲುಗಳು. ಕೆಳಗೆ ಎರಡು ಅಂತಸ್ತು. ನಿದ್ದೆ ಮಾಡುತ್ತಿರುವ ಜನ. ಸನ್ಯಾಸಿಗಳು, ಬ್ರಹ್ಮಾಚಾರಿಗಳು, ನನ್ನಂಥವರು, ಅತಿಥಿಗಳು, ಕೆಲಸದವರು. ಸುಮ್ಮನೆ ಕೂತೇ ಇದ್ದೆ. ಹೀಗೂ ಸುಮ್ಮನೆ ಕೂತೇ ಇರಬಹುದು ಒಂದೊಂದು ಸಲ. ತಟ್ಟನೆ ಎಲ್ಲ ಖಾಲಿಯಾಗಿದೆ. ಈಗ ರಾತ್ರಿ ಎರಡು ಗಂಟೆ. ಸಾಕು. +***** +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ.ಅರ್ಧದಷ್ಟು ಮೆಟ್ಟಿಲಿಳಿದವನು […] +ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […] +ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_731.txt b/Kannada Sahitya/article_731.txt new file mode 100644 index 0000000000000000000000000000000000000000..85c52eced468aa646210babd930ef43bc3179437 --- /dev/null +++ b/Kannada Sahitya/article_731.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಿಸ್ಟರ್‍ ಎಂಕಣ್ಣ ಇದ್ದಕ್ಕಿದ್ದಂತೆ ಮೊನ್ನೆ ನಮ್ಮ ಮನೆಗೆ ಓಡೋಡಿ ಬಂದ. ಚಲನಚಿತ್ರ ನಿರ್ದೇಶಕರ ಸಂಘದ ೧೬ನೇ ವಾರ್ಷಿಕೋತ್ಸವದ ಆಹ್ವಾನ ಅವನ ಕೈಲಿತ್ತು. +ಆ ಆಹ್ವಾನ ಪತ್ರಿಕೆ ನನಗೂ ಬಂದಿದೆ. ೨೪ ಮಂದಿಗೆ ಪ್ರಶಸ್ತಿ ನೀಡುತ್ತಿದ್ದಾರೆ. ಸಹಸ್ರಮಾನದ ನಟ ಎಂದು ಡಾ.ರಾಜ್ ಅವರಿಗೂ, ಶತಮಾನದ ನಿರ್ಮಾಪಕಿ ಎಂದು ಪಾರ್ವತಮ್ಮ ರಾಜ್‌ಕುಮಾರ್‍ ಅವರಿಗೂ ರಜತ ಫಲಕ ಪ್ರಶಸ್ತಿ ನೀಡ್ತಿದಾರೆ. ಹೊಸ ಪ್ರತಿಭೆಗಳನ್ನ-ಅರ್ಹ ಪ್ರಾಜ್ಞರನ್ನ ಗುರುತಿಸಿ ಗೌರವಿಸ್ತಿರೋದು ಸಂತೋಷವಲ್ಲವೆ?” ಎಂದೆ. +“ಅದು ಸಂತೋಷವೆ. ಆದರೆ ಲೆಟರ್‌ಹೆಡ್‌ನಲ್ಲಿ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಅವರೇ ಪ್ರೆಸಿಡೆಂಟ್ ಅಂತ ಇದೆ. ಭಾರತ್ ೨೦೦೦ ಹಗರಣದ ನಂತರ ಅವರು ರಾಜೀನಾಮೆ ನೀಡಿದರಲ್ಲವೆ?” +“ಯಾರು ಇರ್‍ಲಿ ಬಿಡ್ಲಿ-ಒಂದು ಒಳ್ಳೆ ಕೆಲಸ ಆಗ್ತಿದೆ ಅಂತ ಸಂತೋಷಪಡು ಎಂಕಣ್ಣ” ಅಂದೆ. +ತಕ್ಷಣ ಜೇಬಿನಿಂದ ಒಂದು ಕಾಗದ ತೆಗೆದು ನನ್ನ ಕೈಗಿತ್ತ ಎಂಕಣ್ಣ ‘ನನ್ನ ಗೆಳೆಯನಿಗಂತೂ ಇದರಿಂದ ಪರಮ ಸಂತೋಷವಾಗಿದೆ. ಛತ್ರಿ ಚಾಮಣ್ಣ ಅಂತ ಅವನ ಹೆಸರು. ಮಳೆ, ಬಿಸಿಲನ್ನೆಂದೂ ಲೆಕ್ಕಿಸುವವನಲ್ಲ ಅವನು. ಸದಾ ಅವನ ಕಂಕಳಲ್ಲಿ ಒಂದು ಛತ್ರಿ ಇರುತ್ತೆ. ಅದರಿಂದ ಅವನ್ನ ನಾವು ಛತ್ರಿ ಚಾಮಣ್ಣ ಅಂತೀವಿ. ವ್ಯವಹಾರದಲ್ಲಿ ಅವನು ಸಖತ್ ಛತ್ರಿಯೂ ಹೌದು. ಓದಿ ನೋಡು ಅವನ ಸಂತೋಷಕ್ಕೆ ಕಾರಣ’ ಎಂದ. +ಕಾಗದ ಜೋರಾಗೇ ಓದ ತೊಡಗಿದೆ ನಾನು. +ಪ್ರಿಯ ವೆಂಕಣ್ಣನವರೆ, ನಿರ್ದೇಶಕರ ಸಂಘದ ಸದಸ್ಯನಾಗಲೇಬೇಕೆಂದು ನಿರ್ಧರಿಸಿದೆ. ಏಕೆಂದರೆ ನನ್ನ ಪರಮಪೂಜ್ಯ ಗುರುಗಳಾದ ಪುಟ್ಟಣ್ಣನವರು ಕನಸಿದ ಸಂಘ ಅದು. ಈಗ ಅವರನ್ನು ಎಲ್ಲ ಹಾಡಿ ಹೊಗಳುತ್ತಾರೆ. ಆದರೆ ಇದ್ದಾಗ ಎಷ್ಟು ಗೌರವ ತೋರಿದ್ದೇವೆ ನಾವು. ‘ಚಿತ್ರಾ’ದವರು ಮೊದಲ ಬಾರಿಗೆ ‘ಪಡುವಾರಹಳ್ಳಿ ಪಾಮಡವರು’ಗೆ ವಿಚಾರ ಸಂಕಿರಣ ಏರ್ಪಡಿಸದಿದ್ದಲ್ಲಿ ಎಲ್ಲ ವಿಚಾರ ಸಂಕಿರಣಗಳು ಕಲಾತ್ಮಕ ಚಿತ್ರಗಳ ಗುತ್ತಿಗೆಯೇ ಆಗುತ್ತಿತ್ತು. +ಅಂದಿನಿಂದ ನಾನವರನ್ನು ಬಲ್ಲೆ. ನಾನೆಂದೂ ಸುಳ್ಳು ಹೇಳುವವನಲ್ಲ. ಕಣಗಾಲರು ಬಿಸಿಲಲ್ಲಿ ನಿಂತಾಗ ಇದೇ ಛತ್ರಿಯಿಂದ ಅವರಿಗೆ ನೆರಳು ಒದಗಿಸಿದವನು ನಾನು. ಬಾಯಾರಿಕೆ ಎಂದಾಗ ಫಾಂಟಾ-ನೀರು-ಎಳೆನೀರು ಸಪ್ಲೈ ಮಾಡಿದ ಕೈ ಇದು. ಪುಟ್ಟಣ್ಣನವರ ಪ್ರೇಯಸಿ ಕೈ ಕೊಟ್ಟಾಗ ಕಣಗಾಲರು ‘ಹೆಡ್ಡನ ಹಟ್ಟಿ’ಯಲ್ಲಿ ನೊಂದು ಕುಳಿತರು. ಆಗ ಅವರ ಮನಕ್ಕೆ ಸಾಂತ್ವನ ನೀಡಿದವನು ನಾನು. ಆಗಲೇ ಅವರು ನನ್ನಿಂದ ಮತ್ತೆ ಮತ್ತೆ ‘ನಾನೇ ಸಾಕಿದಾಗಿಣಿ’ ಹಾಡಿಸುತ್ತಿದ್ದುದು. ಹಾಡು ಕೇಳುತ್ತ ಭಾವುಕರಾಗಿ ಕಣೀರ ಕೋಡಿ ಹರಿಸಿದಾಗ ಕರ್ಛೀಪ್ ನೀಡುತ್ತಿದ್ದವನು ನಾನೇ. +ಮುಂಚಿನಿಂದಲೂ ಅಷ್ಟೆ. ಸೆಟ್ ಮೇಲೆ ನನ್ನನ್ನವರು ಕರೆಯುತ್ತಿರಲಿಲ್ಲ. ಆದರೂ ನಾನು ಮಾತ್ರ ಏಕಲವ್ಯನಂತೆ ದೂರ ನಿಂತೇ ಅವರ ಮಾತಿನ ರೀತಿ, ನೀತಿ, ಚಿತ್ರೀಕರಣದ ಧಾಟಿ ಎಲ್ಲ ಅಭ್ಯಾಸ ಮಾಡಿದೆ. +ಕಲ್ಪನಾ ನಂತರ ಕಣಗಾಲರ ಕಣ್ಣು ಆರತಿಯತ್ತ ಹೊರಳಿದಾಗ ಹೇಗೆ ಆ ಕಗ್ಗಲ್ಲನ್ನು ಸುಂದರಶಿಲ್ಪ ಮಾಡಿದರು ಎಂಬುದನ್ನು ನಾನು ಬಲ್ಲೆ. ಪದ್ಮಾವಾಸಂತಿಯನ್ನು ಪರಿಚಯಿಸಿದ ರೀತಿ, ಆಕೆಯನ್ನು ಕಲಾವಿದೆಯಾಗಿ ರೂಪಿಸಲು ವಹಿಸಿದ ಶ್ರಮ ನಾನು ಕಣ್ಣಾರೆ ಕಂಡವ, ವಿಷ್ಣು, ಅಂಬರೀಷ್, ಶ್ರೀಧರ್‍, ಜೈ ಜಗದೀಶ್ ಇವರೆಲ್ಲ ಕಣಗಾಲರ ಕೈಲಿ ಕಲಾವಿದರಾಗುವ ಹಂತದಲ್ಲಿ ಏನೇನು ಬೈಸಿಕೊಂಡರು ಎಂಬ ಬೈಗುಳದ ಪಟ್ಟಿ ನನ್ನ ಪರ್ಸನಲ್ ಡೈರಿಯಲ್ಲಿದೆ. ಕಲ್ಲು ಹೂವಾಗಿ ಅರಳಬೇಕೆಂದರೆ ಕಣಗಾಲ್ ಪುಟ್ಟಣ್ಣನವರಿರಬೇಕು ಎಂಬ ದಿನ ಬಂದಾಗಲೇ ನಿರ್ದೇಶಕರಿಗೂ ಸ್ಟಾರ್‍ ವ್ಯಾಲ್ಯೂ ಬಂದದ್ದು. +ಅದರಿಂದ ನಾನು ಈಗ ಒಂದು ಚಿತ್ರ ನಿರ್ದೇಶಿಸಲೇಬೇಕೆಂದು ಹಠ ತೊಟ್ಟಿರುವೆ. ಚಿತ್ರದ ಮೂಲಕ ಮಹತ್ತರವಾದುದನ್ನು ಹೇಳಲೇಬೇಕೆಂಬ ಆಶಯವೇನಿಲ್ಲ. ಆದರೆ ಮುಂದಿನ ಬಾರಿ ನಾನೊಂದು ಪ್ರಶಸ್ತಿ ಗಳಿಸಲೇಬೇಕು. ಅದು ಕಷ್ಟವೇನಲ್ಲ ಎಂಬುದನ್ನು ನಿರ್ದೇಶಕರ ಸಂಘದ ಪ್ರಶಸ್ತಿಗಳನ್ನು ನೋಡಿ ಮನಗಂಡೆ. +ಈ ಸಂಸ್ಥೆ ಪ್ರಕಾರ ಚಿತ್ರ ಫ್ಲಾಪ್ ಆದರೂ ಚಿಂತೆಯಿಲ್ಲ. ಸದಭಿರುಚಿ ಚಿತ್ರವಾದರೆ ಅದಕ್ಕೊಂದು ಪ್ರಶಸ್ತಿ ಇದೆ. ಬರವಣಿಗೆಯಲ್ಲಿ ಮಾಸ್ಟರ್‍ ಎನಿಸಿದ ನನಗೆ ಚಿತ್ರ ಕಥಾ ರಚನೆ ಲೀಲಾಜಾಲ. ಸ್ವಲ್ಪ ಗುಡ್ ಎನ್ನುವಂತಿದ್ದರೂ ಅದಕ್ಕೊಂದು ಪ್ರಶಸ್ತಿ ಇಟ್ಟಿದ್ದಾರೆ. ಮೊದಲ ಚಿತ್ರ ನಿರ್ದೇಶಕರಿಗೊಂದು ಪ್ರಶಸ್ತಿ ಇರುವುದರಿಂದ ನನ್ನ ಕನಸು ನನಸಾಗುವುದು ಕಷ್ಟವಲ್ಲ. ತಾಯಿ ಪಾತ್ರವೇ ಹೈಲೈಟಾಗುವಂತಿದ್ದರೆ ಅದಕ್ಕೊಂದು ಪ್ರಶಸ್ತಿ ಕೊಡುತ್ತಾರೆ. ಅಂಥ ಕತೆಗಳು ನನ್ನತಲೆ ತುಂಬ ತುಂಬಿ ತುಳುಕಿವೆ. ತೀರಾ ಹೊಸಬನಾದರೆ ತಗೊಳ್ಳಿ ಎಂದು ಅವರಿಗೊಂದು ಪ್ರಶಸ್ತಿ ಎಂದ ಮೇಲೆ ನನಗಲ್ಲದೆ ಇನ್ನಾರಿಗೆ ಬಂದೀತು ಪ್ರಶಸ್ತಿ? +ವೆಂಕಣ್ಣನವರೇ, ನಾನು ರಾಜಕೀಯ ರಂಗದಲ್ಲೂ ಹೆಚ್ಚು ಪಳಗಿದವನಾದುದರಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಏನೇನು ಮಾಡಬೇಕು ಎಂಬುದನ್ನು ತುಂಬ ಚೆನ್ನಾಗಿ ಬಲ್ಲೆ. +ನಿರ್ದೇಶಕರ ಸಂಘದ ಮೆಂಬರ್‌ಷಿಪ್ ಸಿಗುವುದು ಕಷ್ಟವೆನಿಸಿದರೂ ನಾನೇನೂ ಚಿಂತಿಸುವುದಿಲ್ಲ. ಮೊದಲ ಚಿತ್ರ ಚೆನ್ನಾಗಿ ನಿರ್ದೇಶನ ಮಾಡಿದವರಿಗೆ ಅರವಿಂದನ್ ಅವಾರ್ಡ್ ಇದ್ದೇ ಇದೆಯಲ್ಲವೆ? ತಾಂತ್ರಿಕ ತಜ್ಞರನ್ನು ನನ್ನೊಂದಿಗೆ ಹಾಕಿಕೊಂಡರೆ ನನ್ನ ಕೆಲಸವೂ ಹಗುರ. ಅವಾರ್ಡೂ ಗ್ಯಾರಂಟಿ. ಪರಿಸರ, ರಾಷ್ಟ್ರೀಯ ಭಾವೈಕ್ಯತೆ, ಏಡ್ಸ್ ಕುರಿತು ಚಿತ್ರ ಮಾಡಿದರೆ ಕೇಂದ್ರ ಸರ್ಕಾರದ ಪ್ರಾದೇಶಿಕ ಪ್ರಶಸ್ತಿಗೇನೂ ಮೋಸವಿಲ್ಲ. +ಇದೆಲ್ಲಾ ಒಂದು ಪಕ್ಕಕ್ಕಿಟ್ಟು – ಒಂದು ಮಕ್ಕಳ ಚಿತ್ರ ಮಾಡಿದರೆ ಮುಗೀತು. ಪ್ರೊ. ಬಿಕೆಸಿ ಮಕ್ಕಳ ಚಿತ್ರಗಳಿಗೆ ವಿಶೇಷ ಅವಾರ್ಡ್ ಇರುತ್ತೆ ಅಂದಿದ್ದಾರೆ. +ವಿಷ್ಣುವರ್ಧನ್ ಅವರು ತಮಗೆ ಬಂದ ಪ್ರಶಸ್ತಿ ನಿರ್ದೇಶಕರಿಗೆ ಹೋಗಬೇಕು ಎಂದವರಲ್ಲವೆ? ಆದರಿಂದ ಈ ಬಾರಿ ಅವರ ಕೈಕಾಲ್ ಹಿಡಿದೇ ಕಾಲ್‌ಷೀಟ್ ಗಿಟ್ಟಿಸುವೆ. ಎಷ್ಟಾಗಲೀ ಅವರೂ ಕಣಗಾಲ್ ಗರಡಿ ವಸ್ತಾದಿಗಳಲ್ಲವೆ? ಅವರು ಕಾಲ್‌ಷೀಟ್ ಕೊಟ್ಟರೆ ಅವರ ಇಮೇಜ್ ಹಿಮಾಲಯದೆತ್ತರಕ್ಕೆ ಬೆಳೆಯುತ್ತೆ. ನಿರ್ದೇಶಕ ಅವಾರ್ಡ್ ನಂಗೇ ಬರುತ್ತೆ. ಅಕಸ್ಮಾತ್ ಬರದಿದ್ದರೆ ನಿಮಗೆ ಬಂದ ಶ್ರೇಷ್ಠನಟ ಪ್ರಶಸ್ತಿ ನಂಗೇ ಕೊಡಿ ಓಪನ್ ಸ್ಟೇಜನಲ್ಲಿ. ನಾನು ನಿಮ್ಮ ಕಾಲಿಗೆ ಬಿದ್ದು ಸ್ವೀಕರಿಸ್ತೀನಿ ಅಂತೀನಿ. ಅಂದ್ಮೇಲೆ ಅವಾರ್ಡ್ ಬರೋದು ಡಬ್ಬಲ್ ಗ್ಯಾರಂಟಿ ಆಯಿತಲ್ವೆ? ದಯಮಾಡಿ ನನ್ನ ಬಗ್ಗೆ ಸಿಕ್ಕಸಿಕ್ಕವರೆದುರು ಎರಡು ಒಳ್ಳೆ ಮಾತಾಡಿ. ನಿಮ್ಮಿಂದ ನಾನು ಬಯಸುವುದು ಇಷ್ಟು ಮಾತ್ರ. +ತಮ್ಮವ +ಛತ್ರಿ ಚಾಮಣ್ಣ +ಎಂದು ಓದಿ ಮುಗಿಸಿದಾಗ ನಾನು ಸುಸ್ತು. ಮಿ. ಎಂಕಣ್ಣ ಕಾಗದ ಜೇಬಿಗೆ ಸೇರಿಸುತ್ತ ಒಂದು ಆಹ್ವಾನ ಪತ್ರಿಕೆ ನೋಡೇ ಇಷ್ಟು ಕನಸು ಕಟ್ತಿದಾನಲ್ಲ ಚಾಮಣ್ಣ ಇಂಥವರೇ ಜಾಸ್ತಿ ಆದರೆ ಚಿತ್ರರಂಗದ ಗತಿ ಏನು?” ಎಂದು ಗೊಣಗುತ್ತಲೇ ತೆರಳಿದ. +(೫-೫-೨೦೦೦) +*** +ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. […] +“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […] +ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_732.txt b/Kannada Sahitya/article_732.txt new file mode 100644 index 0000000000000000000000000000000000000000..fa6a19f8805ba3b2e0e3dcd49dc6a12f5e143791 --- /dev/null +++ b/Kannada Sahitya/article_732.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಶಂಕರಾ‌ಅಭರಣ +ತಾಳ — ಏಕ +ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| +ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | +ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| +ಹುತ್ತದೊಳಾಡುವ ಸರ್ಪ ಮತ್ತ ಗಜವ ನುಂಗಿತು | +ಉತ್ತರದಿಶೆಯೊಳು ಬೆಳುದಿಂಗಳಾಯಿತಮ್ಮ ||೨|| +ಯೋಗಮಾರ್ಗಿ ಕಾಗಿನೆಲೆಯಾದಿಕೇಶವರಾಯ | +ಭಾಗವತರ ಬೆಡಗಿದು ಬೆಳುದಿಂಗಳಾಯಿತಮ್ಮ ||೩|| +***** +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_733.txt b/Kannada Sahitya/article_733.txt new file mode 100644 index 0000000000000000000000000000000000000000..e1b2186d9f5699920560365f0ddf11a044d36f3f --- /dev/null +++ b/Kannada Sahitya/article_733.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅತ್ತಿಂದಿತ್ತ ಇತ್ತಿಂದತ್ತ +ಎತ್ತೆತ್ತಿ ಒಗೆಯುತ್ತಿದೆ ಅವ್ಯಕ್ತ ಹಸ್ತ +ವಿತ್ತ-ಖ್ಯಾತಿಗಳ ನಿಮಿತ್ತವಿರದು +ನಿಕ್ಷಿಪ್ತ ನಿಯಮಕ್ಕೆ ಚಿತ್ತ ನಿರ್ಲಿಪ್ತ +ನೆಲಕಿನ್ನೂ ಅಂಟಿಲ್ಲ, ನೀರಿನ ಸೆಳೆತ +ಮಿಡಿತ ಮಾಗುವ ಮೊದಲೇ ಮತ್ತೊಂದರ ಮೊರೆತ +ಕೈಮೀರಿದಾಟಕ್ಕೆ, ಹುಚ್ಚೆದ್ದ ಓಟಕ್ಕೆ +ಏನು ಗುರಿ? ಯಾವ ಪುರುಷಾರ್ಥ? +ನೀರ ಋಣ ಸ್ನೇಹ ಋಣ ಬಂಧು ಋಣ ಪ್ರೀತಿ ಋಣ; +ಪಡೆದದ್ದ ಕೊಡುವುದು; ಕೊಟ್ಟಿದ್ದ ಪಡೆವುದು; +ಚಲನಶೀಲತೆಯೇ ಬದುಕು; ನಿಶ್ಚಲತೆ ಸಾವು; +ಸಾಕು ನಿಲ್ಲಲಿ, ಇನ್ನೆಷ್ಟು ಕಾರಣ? +ನಿರ್ಭವದ ನಶೆಯೊಳಗೆ ನಿರಪೇಕ್ಷ ನಡಿಗೆ +ಸಾಪೇಕ್ಷ ಸೂತ್ರದಲಿ ಸೌಂದರ್ಯದನುಭಾವ +ನೆಲೆಯಿಂದ ನೆಲೆಗೆ, ಕಲೆಯಿಂದ ಕಲೆಗೆ +ಕನಸುಗಳ ಪರಿಭ್ರಮಣ ಜೀವನದ ವೈಭವ! +***** +ಒಂದೊಂದು ಸಲ ನನಗೂ ನಿನಗೂ ನಡುವೆ ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು ಕೂತು, ಕೂತಲ್ಲಿಯೇ ನಮ್ಮನ್ನು ಹೂತು ಸುತ್ತಲೂ ಗೋಡೆ ಕಟ್ಟುತ್ತವೆ. ಎದ್ದ ಗೋಡೆಯ ತುಂಬ ಕೆಂಗಣ್ಣು […] +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_734.txt b/Kannada Sahitya/article_734.txt new file mode 100644 index 0000000000000000000000000000000000000000..24c43e415aabda1c471d556997d04452d68674f2 --- /dev/null +++ b/Kannada Sahitya/article_734.txt @@ -0,0 +1,82 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಅಮೇರಿಕ ಅಮೇರಿಕ +ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ +ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ +ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ +ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ +ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – +ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡು +ನುಡಿ ಎಡವಿ ಕೈಮುಗಿದು ಬೆಪ್ಪಗಾಗುತ್ತೇನೆ. +ಕಮ್ಯುನಿಸ್ಟ್ ನಾಜಿಗಳ ತುಳಿವ ಹುಲು ನೆವದಲ್ಲಿ +ಲೈಫ್ ಟೈಮುಗಳ ದ್ವಾರ ಸ್ವಪ್ರತಿಷ್ಠೆಯ ನೀನು +ಮೈಥುನಿಸಿದಾಗೆಲ್ಲ ಕ್ಯಾಕರಿಸಿ ಉಗಿದು ವೋಡ್ಕಾ ಹೀರಿ +ಕ್ಯಾಸ್ಟ್ರೊ ಡಿಗಾಲ್ ಹೋಚಿಮಿನ್ ನಾಸೆರರ ಜೊತೆ +ಹರಟುತಿರುವಾಗ – +ಚೀಣ ಪಾಕ್ ದಾಳಿಗಳ ಚೂರಿ ಸ್ಮೃತಿಯನು ತಿವಿದು +ಆರು ಸಾವಿರ ಮೈಲಿಯುದ್ಧದಭಯದ ನಿನ್ನ +ಸ್ನೇಹ ಹಸ್ತವ ಕಂಡು ತೆಪ್ಪಗಾಗುತ್ತೇನೆ. +– ೨ – +ಸಭ್ಯತೆಯ ಧ್ವಜವನಂಪೈರ್ ಸ್ಟೇಟು ಕಟ್ಟಡದ ಮೇಲೆ ತೂಗಿಸಿದಾಗ, +ನೈಟ್‌ಕ್ಲಬ್ಬು ಬೀಚಿನಲಿ ಗಂಡಲೆವ ಕಣ್ಣುಗಳ ನಾಟ್ ನಾಟ್ ಸೆವೆನ್ನುಗಳ +ಹಾಲಿವುಡ್ ಬೀಟ್ ಟ್ವಿಸ್ಟು ಕ್ಯಾನ್‌ಕ್ಯಾನು ರೋಗಿಗಳ ಮಾನಸಿಕ +ಲಾಗಗಳ +ಗಾಂಜ ಮಾರೀವಾನ ಎಲ್ಲೆಸ್ಡಿ ಪಿಲ್ಲುಗಳ ಹಾಗೆ ಎಪ್ಫೆಲ್ಲುಗಳ +ತೀಟೆಗಳ ಕಳ್ಳಕೂಟಗಳ ಗಳಿಗೆಗಿಪ್ಪತ್ತೈದು ಸೋಡಚೀಟಿಗಳ +ಕಂಡು ಕೈ ಚಪ್ಪಾಳೆ ತಟ್ಟಿ ಲೋಕಕ್ಕಿವನು ಸಾರುವಾಸೆ – +ಲೋಕದೆಡೆ ಮೊಗಮಾಡಿ ಬೆಂದಿರುಹಿ ನಿನ್ನತ್ತ +ನಿಂತ ದೇವಿ ಲಿಬರ್ಟಿಯನ್ನು ತಿರುಗಿಸಿ ಹಿಂದೆ +ನಿನ್ನೆದೆಯ ಸ್ಲಮ್ಮುಗಳ ನೀಗ್ರೊ ಹೇರ್ಲಮ್ಮುಗಳ +ಕಡೆಗವಳ ದಿಟ್ಟಿಯನು ಹರಿಸುವಾಸೆ – +ಹುಟ್ಟುಹಬ್ಬಕೆ ಹಸುಳೆಗೆಂದು ನಿನ್ನವರೀವ +ಟಾಮಿಗನ್ನಿನ ಕೊಡಿಗೆಗಳ ಬಿಸುಡಿ, ಬೈಬಲ್ಲು +ಗೀತೆ ಖುರ್‌ಆನುಗಳ ನೀಡುವಾಸೆ – +ನಿನ್ನವರ ಮಲಗೆದ್ದ – ಬೆಡ್‌ಶೀಟು – ಮೊಗಗಳಿಗೆ +ಪ್ರಾಚ್ಯ‌ಋಷಿಗಳ ತೇಜ ತೊಡಿಸುವಾಸೆ – +ಜಾನ್ಸನಿನ ಹಣೆಯಲ್ಲಿ ಗೆರೆಯಾದ ಉಬ್ಬುಗಳ +ಬಿಗಿದಿರುವ ಹುಬ್ಬುಗಳನಿಸ್ತ್ರಿಗೊಳಿಸುತ, ತುಟಿಗೆ +ನೆಹರು ರೋಜದ ನಗೆಯ ತೀಡುವಾಸೆ. +– ೩ – +ಅಮೇರಿಕ, ಅಮೇರಿಕ +ನಿನ್ನ ಬಲದ ಬಡಾಯಿ ಕೊಚ್ಚುತಿರುವಾಗೆಲ್ಲ +ವಿಯಟ್ನಾಮಿನಲಿ ರಾಷ್ಟ್ರೀಯ ವೀರ ದಳ ಮೊರೆದೆದ್ದು +ತಿಗಣೆಯುಜ್ಜುತ್ತಿರುವ ಹರಯದುತ್ಸಾಹಗಳ +ಸರ್ಕಾರಗಳ ಮುರಿದು, ನಿಲಿಸಿ ಹೌದಪ್ಪಗಳ +ಹೆಣಗಿ ಸೋಲುತ್ತಿರುವ ಸಿ.ಐ.ಎ., ಸಂಸ್ಥೆಗಳ +ಏರಿದೊಡನೆಯೆ ಬಿದ್ದು ಮಣ್ಣಾದ ಕ್ಷಿಪಣಿಗಳ, +ಚಂದಿರನ ಏಣಿಗಳ +ಕಡೆ ನಿನ್ನ ಕಿವಿ ಹಿಂಡಿ ತಿರುಗಿಸಲೆ ಎಂದಾಗ +ಗೋಧಿಯ ಋಣ, ಪಿ.ಎಲ್.೪೮೦ರ ಹಣ, +ವಿದೇಶಾಂಗ ನೀತಿ ಕಟ್ಟುವುದು ಬಾಯ. +– ೪ – +ನಿನ್ನ ಸಮಕಿನ್ನೊಂದು ರಾಷ್ಟ್ರವಿಲ್ಲದ್ದನ್ನ +ಆನೆ ಬಿದ್ದರೂ ಕುದುರೆಯಷ್ಟು ಅನ್ನುವುದನ್ನ +ನುಂಗಿ, ತುಟಿಗಳ ಹೊಲಿದು ಸುಮ್ಮನಾಗುತ್ತೇನೆ; +ನಿನಗೆ ಬಾಗುತ್ತೇನೆ. +ಸದ್ದಿರದೆ ಸುದ್ದಿಯಲಿ ನನ್ನ ಕಬಳಿಸುತಿರುವ +ನಿನ್ನ ಉತ್ಕರ್ಷಕ್ಕೆ ಕರುಬಿ ಹಳಿದಾಗೆಲ್ಲ – +ನನ್ನ ಕಡು ದಾರಿದ್ರ್ಯ +ಜನಸಂಖ್ಯೆ +ಭೂಗೋಳ +ನಾಲಗೆಯ ನಿಲಿಸುತ್ತವೆ; +ತಾಳ್ಮೆ ಪಾಠವನೆನಗೆ ಕಲಿಸುತ್ತವೆ. +***** +ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […] +೧ – ಹೊಸ ಮದುಮಗಳ ನಾಚಿಕೆಯಬಡಾವಣೆಗಳಲ್ಲಿಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿಪಳಗಿರುವ ಮೊಹಲ್ಲಗಳಲ್ಲಿಮಾಟಾದ ಸೌಧಗಳನೋಟದಾಮೋದಗಳನೀಟು ದಂತಾವಳಿಯ ನಡುವೆಕಣ್ಣನಿರಿಯುತ್ತವೆ ಧುತ್ತೆಂದು-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;ಪಾರ್ಥೇನಿಯಮ್ಮಿನ ದಟ್ಟ ತೋಟಗಳುಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳುಸೆಟ್ಟರ, ಸೇಟುಗಳ,ನರಾಕೃತಿವೆತ್ತ ನೋಟುಗಳ,ಸುಲಭ ಕಮಾಯಿಯ ಬತ್ತದೂಟೆಗಳು;ದಿನೇ ದಿನೇ […] +-ವೆರ್ಲೆನ್ ಮುಖ್ಯವಾದ್ದು ನಾದ ನಯವಾಗದಂತೆ ವಕ್ರ ಬಳಕುವ ಲಯ ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ ಘನವಾಗದ ಚಂಚಲ ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ ಇಂಗಿತದ ಸೂಕ್ಷ್ಮ, ಮಾತಿಗೆ ದಕ್ಕದಂತೆ ಮಿಗುವ ಮೌನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_735.txt b/Kannada Sahitya/article_735.txt new file mode 100644 index 0000000000000000000000000000000000000000..13d406c39a1a35ffe4d753adfda1955174216c7f --- /dev/null +++ b/Kannada Sahitya/article_735.txt @@ -0,0 +1,102 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಳು +ಕಾರ್ಯಕ್ರಮ : ಎಚ್.ಎ.ಎಲ್.ನ ‘ವಿಮಾನ’ ಸಂಘದ ವಾರ್ಷಿಕೋತ್ಸವ ಮತ್ತು ಹಿರಿಯ ನಟ ಅಶ್ವತ್‌ರವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ +ಸ್ಥಳ : ಡಾ||ರಾಜ್‌ಕುಮಾರ್ ವೇದಿಕೆ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು +ದಿನಾಂಕ : ೦೪-೦೬-೨೦೦೬ +ವೇಳೆ : ಬೆಳಿಗ್ಗೆ ೧೧-೩೦ +ಆಯೋಜನೆ : ’ವಿಮಾನ’ ಸಂಘ +ನಟ ನಟಿಯರು ಅವಕಾಶಗಳಿದ್ದ ಕಾಲದಲ್ಲಿ ಸಂಪಾದನೆ ಮಾಡಿದ್ದನ್ನು ದುಂದುವೆಚ್ಚ ಮಾಡುತ್ತಾ ಹೋದರೆ ಮುಂದೆ ಅವಕಾಶಗಳಿಲ್ಲದ ಮುಪ್ಪಿನ ಕಾಲದಲ್ಲಿ ತೊಂದರೆಪಡಬೇಕಾದೀತು ಎಂದು ಹಿರಿಯ ನಟ ಕೆ.ಎಸ್.ಅಶ್ವತ್ ಕಿರಿಯರಿಗೆ ತಿಳಿಮಾತು ಹೇಳಿದರು. +ಅವರು ಎಚ್.ಎ.ಎಲ್. ಕಾರ್ಖಾನೆಯ ’ವಿಮಾನ’ ಸಂಘ ಕೊಡಮಾಡುವ ’ಕಾಯಕಶ್ರೀ’ ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. +ಮದರಾಸಿನಲ್ಲಿ ಕಳೆದ ಆರಂಭದ ದಿನಗಳನ್ನು ಜ್ಞಾಪಿಸಿಕೊಂಡ ಅವರು, ಇದ್ದ ಸರ್ಕಾರಿ ನೌಕರಿಯನ್ನು ಬಿಟ್ಟು, ಚಿತ್ರರಂಗದಲ್ಲೇ ನನ್ನ ನೆಲೆ ಎಂದುಕೊಂಡು ಅಲ್ಲಿಗೆ ಹೋದೆ. ಆದರೆ ಅಲ್ಲಿ ನನಗೆ ಅಂಥ ಸ್ವಾಗತ ಸಿಗಲಿಲ್ಲ, ಅದೇ ಸಂದರ್ಭದಲ್ಲಿ ಕರ್ಣಾಟಕದಲ್ಲಿ ಅ.ನ.ಕೃ ಅವರ ನಾಯಕತ್ವದಲ್ಲಿ ಕನ್ನಡ ಚಲನಚಿತ್ರರಂಗದ ಪುನರುತ್ಥಾನಕ್ಕಾಗಿ ಚಳುವಳಿ ಆರಂಭವಾಗಿತ್ತು. ಅವರ ಕರೆಗೆ ಓಗೊಟ್ಟ ನಮ್ಮಂತ ನಟರು ’ಕನ್ನಡ ಚಲನಚಿತ್ರ ಕಲಾವಿದರ ಸಂಘ ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸತೊಡಗಿದೆವು. ೧೯೬೨ ರ ಗಾಳಿಗೋಪುರ ಚಿತ್ರದಿಂದ ಜನ ನನ್ನನ್ನು ಗುರುತಿಸಲಾರಂಭಿಸಿದರು ಎಂದು ಹೇಳಿದರು. +ಅಂದಿನ ಕಾಲದಲ್ಲಿ ಕನ್ನಡಿಗರಿಗೆ ಕನ್ನಡ ನಟರ ಬಗ್ಗೆ ಅಂತಹ ಕುತೂಹಲಗಳಿರಲಿಲ್ಲ ಎಂದ ಅಶ್ವತ್, ವರದಾ ನದಿಯ ಪ್ರವಾಹಕ್ಕೆ ಸಿಕ್ಕಿ ಮೃತಪಟ್ಟವರ ಸಹಾಯಾರ್ಥ ಕನ್ನಡ ಚಿತ್ರರಂಗದವರು ಪ್ರವಾಸ ಮಾಡಿ ನಿಧಿ ಸಂಗ್ರಹಿಸಿಕೊಟ್ಟ ನಂತರ, ನಟ ನಟಿಯರ ಬಗ್ಗೆ ಗೌರವ ಮೂಡಿತು ಎಂದು ಹೇಳಿದರು. +ಕನ್ನಡ ಚಿತ್ರರಂಗ ಈಗ ಆರ್ಥಿಕವಾಗಿ ಬಲವಾಗಿದ್ದು ಪೋಷಕ ನಟರೂ ಸೇರಿದಂತೆ ಎಲ್ಲರಿಗೂ ಒಳ್ಳೆಯ ಸಂಭಾವನೆ ಸಿಗುತ್ತಿದೆ. ಹಿಂದೆ, ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲ . ನನ್ನ ಕಷ್ಟದ ದಿನಗಳಲ್ಲಿ ನಾನು ಯಾರನ್ನೂ ಏನನ್ನೂ ಕೇಳಿದವನಲ್ಲ ಎಂದ ಅಶ್ವತ್, ಇದು ಜಂಭದ ಮಾತಲ್ಲ, ಸ್ವಾಭಿಮಾನದ ಮಾತು ಎಂದರು. ಹೊಟ್ಟೆಪಾಡಿಗಾಗಿ ನಟನೆ ಮಾಡಿದ್ದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ’ವಿಮಾನ’ ಸಂಘದವರಿಗೆ ಕೃತಜ್ಞತೆ ತಿಳಿಸಿದರು. +ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಂಸ್ಕೃತಿ ಇಲಾಖೆಯ ಕಾ.ತ.ಚಿಕ್ಕಣ್ಣ, ಅಧಿಕಾರ ಮತ್ತು ಹಣ ನಮ್ಮ ಸಂಸ್ಕೃತಿ ಮನಸ್ಸುಗಳನ್ನು ಕೆಡಿಸದಂತೆ ಎಚ್ಚರವಹಿಸಬೇಕಾಗಿದೆ ಎಂದರು. +ಇದೇ ಸಂದರ್ಭದಲ್ಲಿ ’ವಿಮಾನ’ ವಿಭಾಗದ ಕಾರ್ಯಪಾಲಕ ನಿರ್ದೇಶಕ ಸುಜಿತ್ ಪಂತ್ ಮತ್ತು ಗಾಯಕಿ, ನಟಿ ಎಂ.ಡಿ.ಪಲ್ಲವಿ ಯವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. +ಸನ್ಮಾನ ಸ್ವೀಕರಿಸಿ ಮಾತನಾಡಿದ ಎಮ್.ಡಿ.ಪಲ್ಲವಿ, ಮಾಧ್ಯಮಗಳಲ್ಲಿ ಕನ್ನಡ ಭಾಷೆ ಕಲುಷಿತಗೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಚಲನಚಿತ್ರ, ರೇಡಿಯೊ, ಕಿರುತೆರೆ ಎಲ್ಲವುಗಳಲ್ಲೂ ಆಂಗ್ಲ ಮಿಶ್ರಿತ ಸಂಭಾಷಣೆಗಳನ್ನು ನಾವಿಂದು ಕೇಳಬೇಕಾಗಿದೆ, ಯುವ ಜನರೂ ಸಹ ಇದೇ ಕಲುಷಿತ ಭಾಷೆಯ ಅನುಕರಣೆ ಮಾಡುತ್ತಿದ್ದಾರೆ, ಪ್ರೇಕ್ಷಕರಾದ ನೀವು ಇದನ್ನು ಪ್ರತಿಭಟಿಸಬೇಕೆಂದು ಕರೆ ನೀಡಿದರು . +ನಂತರ ಅವರು ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಗೀತೆಯನ್ನು ಸುಶ್ರಾವ್ಯಗಾಗಿ ಹಾಡಿದರು. +ವಿಮಾನ ಕಾರ್ಖಾನೆಯ ಕನ್ನಡ ಸಂಘದ ಅಧ್ಯಕ್ಷ ಡಾ||ಜಿ.ಎಸ್.ಫಾಲಾಕ್ಷ ಮಾತನಾಡಿ, ಕನ್ನಡದಲ್ಲಿ ಎಲ್ಲಾ ಇದೆ-ಕನ್ನಡಿಗರ ಪಾಲ್ಗೊಳ್ಳುವಿಕೆಯೊಂದನ್ನು ಬಿಟ್ಟು ಎಂದರು. +ಅಧ್ಯಕ್ಷತೆ ವಹಿಸಿ ಮಾತನಾಡಿದ ’ವಿಮಾನ’ ವಿಭಾಗದ ಮಹಾ ವ್ಯವಸ್ಥಾಪಕರಾದ ಅಶೋಕ್ ನಾಯಕ್‌ರವರು ಮಾತನಾಡಿ, ಎಚ್.ಎ.ಎಲ್.ನಲ್ಲಿ ಕನ್ನಡದ ಕೆಲಸಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. +ಅಶ್ವತ್‌ರವರ ಅಭಿನಯದ ಬಗ್ಗೆ ಮಾತನಾಡಿ, ಅವರ ನಟನೆ ಹೊಸ ಜವಾಬ್ದಾರಿಯುತ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಲು ನೆರವಾಯಿತು ಎಂದರು. +ವೇದಿಕೆಯಲ್ಲಿ ಜಾನಪದ ಲೋಕದ ಅಧ್ಯಕ್ಷ ಜಿ.ನಾರಾಯಣ, ವಿಮಾನ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಫಾಲಾಕ್ಷ ಉಪಸ್ಥಿತರಿದ್ದರು. +ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸುಜಿತ್ ಪಂತ್‌ರವರು ವಿತರಿಸಿದರು. ಕಾರ್ಯಕ್ರಮದಲ್ಲಿ ಬೇಲೂರು ಕೃಷ್ಣಮೂರ್ತಿ ವಿರಚಿತ ’ಅವಾಂತರದ ಅಳಿಯ’ ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಲಾಯಿತು. +ಭಾಗ್ಯಶ್ರಿ ಪ್ರಾರ್ಥಿಸಿದರು. ಸದಾನಂದ ಪೈ ಸೊಗಸಾಗಿ ನಿರೂಪಣೆ ಮಾಡಿ ವಂದಿಸಿದರು. +ಕಾರ್ಯಕ್ರಮ : ’ಕರ್ಣಾಟಕ ತಿಲಕ’ ಪ್ರಶಸ್ತಿ ಪ್ರದಾನ ಸಮಾರಂಭ +ಸ್ಥಳ : ಪುಟ್ಟಣ್ಣ ಚೆಟ್ಟಿ ಪುರಭವನ +ದಿನಾಂಕ: ೦೨-೦೬-೨೦೦೬ +ವೇಳೆ : ಸಂಜೆ ೫-೩೦ +ಆಯೋಜನೆ : ಕರುನಾಡ ರಕ್ಷಣಾ ವೇದಿಕೆ +ಸಾಧಕರನ್ನು ಗುರುತಿಸಿ ಸನ್ಮಾನಿಸಲು ಹಿಂದಿನ ಕಾಲದಲ್ಲಿ ರಾಜ-ಮಹಾರಾಜರುಗಳಿದ್ದರು. ಈಗ ಆ ಕಾರ್ಯವನ್ನು ಸರ್ಕಾರದ ಜೊತೆ ಸಂಘ-ಸಂಸ್ಥೆಗಳು ಮಾಡಬೇಕಿದೆ ಎಂದು ಜೆ.ಡಿ.ಎಸ್.ರಾಜ್ಯಾಧ್ಯಕ್ಷ ತಿಪ್ಪಣ್ಣ ಹೇಳಿದರು. +ಕರುನಾಡ ರಕ್ಷಣಾ ಸೇನೆ ಬಸವ ಜಯಂತಿಯ ಅಂಗವಾಗಿ ಕೊಡಮಾಡುತ್ತಿರುವ ’ಕರ್ಣಾಟಕ ತಿಲಕ-೨೦೦೬’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. +ಕರುನಾಡ ರಕ್ಷಣಾ ಸೇನೆಯ ಕಾರ್ಯವನ್ನು ಶ್ಲಾಘಿಸಿದ ಅವರು ಸರ್ಕಾರಗಳು ಗುರುತಿಸ್೦ಅಲಾಗದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವುದು ಆದರಣೀಯ ಎಂದರು. ಪ್ರಶಸ್ತಿ ಸ್ವೀಕರಿಸಿದ ಗಣ್ಯರಲ್ಲಿ ಆಯುರ್ವೇದ ವೈದ್ಯ ಕೆ.ಸಿ ಬಲ್ಲಾಳ್, ವಿಜಯ ಕಾಲೇಜಿನ ಪ್ರಾಂಶುಪಾಲ ಎನ್.ಜಯಪ್ಪ, ಮಹಿಳಾ ಉದ್ಯಮಿ ಸುವರ್ಣಾ ಚನ್ನಣ್ಣ, ಜನಪದ ಸಾಹಿತ್ಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ರಿಸರ್ವ್ ಬ್ಯಾಂಕ್ ಕನ್ನಡ ಸಂಘದ ವಿ.ಎಸ್.ಕಲ್ವಾಡಿ, ಕುಂದಾಪುರದ ಜೇನು ಕೃಷಿ ತಜ್ಞ ಕಿಶನ್‌ಕುಮಾರ ಕೆಂಚನಸೂರ್, ಪೌರಾಣಿಕ ನಾಟಕ ಕ್ಷೇತ್ರದ ದುರ್ಗಮ್ಮ, ಬ್ಯಾಳಗಿ ಶಿವಪ್ರಸಾದ್, ಶಿಲ್ಪಿ ವೆಂಕಟಶ್ಯಾಮಪ್ಪ ಮುಂತಾದವರಿದ್ದರು. ಒಟ್ಟು ೨೮ ಗಣ್ಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. +ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಳದ ಮಠದ ಶಾಂತವೀರ ಸ್ವಾಮಿಗಳು ಸಮಾಜದ ಸೇವೆ ಮಾಡುವ ಮಹನೀಯರನ್ನು ಗೌರವಿಸುವುದೂ ಒಂದು ಸಾಧನೆ ಎಂದರು. +ತಿಪ್ಪಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. +ಶಾಂತವೀರಸ್ವಾಮಿಗಳು ಸನ್ಮಾನಿತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. +ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಯುರ್ವೆದ ವೈದ್ಯ ಕೆ.ಸಿ.ಬಲ್ಲಾಳ್ ನಾವು ಮಾಡಿದ ಅಳಿಲು ಸೇವೆಗೆ ಈ ಸನ್ಮಾನ ಬಹಳ ಹೆಚ್ಚೇ ಆಯಿತು ಎಂದರು. ಆಯುರ್ವೇದ ನಮ್ಮ ದೇಹಕ್ಕೆ, ಆಹಾರ ಪದ್ಧತಿಗಳಿಗೆ ಹೊಂದಿಕೆಯಾಗುವ ಪುರಾತನ ವೈದ್ಯ ಪದ್ಧತಿ ಆದ್ದರಿಂದಲೇ ಅದು ತನ್ನ ಪ್ರಾಧಾನ್ಯತೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂದರು. +ಅರುಣ ಚಂದ್ರಶೇಖರ ಪ್ರಾರ್ಥನೆ ಮಾಡಿ, ನಿರೂಪಿಸಿದರು. ಕರುನಾಡ ಸೇನೆಯ ರಾಜ್ಯಾಧ್ಯಕ್ಷ ಲೋಕನಾಥ್ ವಂದಿಸಿದರು. +ಕಾರ್ಯಕ್ರಮ :”ಕನ್ನಡದ ಮುತ್ತಿನ ಕಥೆ ರಾಜಕುಮಾರ್” ಪುಸ್ತಕ ಬಿಡುಗಡೆ ಸಮಾರಂಭ +ಸ್ಥಳ : ಯವನಿಕ ಸಭಾಂಗಣ , ನೃಪತುಂಗ ರಸ್ತೆ, ಬೆಂಗಳೂರು +ದಿನಾಂಕ: ೦೧-೦೬-೨೦೦೬ +ವೇಳೆ : ಸಂಜೆ ೪-೩೦ +ಪರಿಪೂರ್ಣ ವ್ಯಕ್ತಿಗಳೆನಿಸಿಕೊಳ್ಳಲು ತಪ್ಪುಗಳನ್ನು ಒಪ್ಪಿಕೊಳ್ಳುವ ಮನೋಭಾವವಿರಬೇಕು, ಸಾಮಾನ್ಯರೂ ಅನುಸರಿಸಬಹುದಾದ ಸಾಧಕರ ಗುಂಪಿಗೆ ಡಾ||ರಾಜ್ ಸೇರುತ್ತಾರೆ, ಇಂತಹ ಪ್ರಭಾವವುಳ್ಳ ವ್ಯಕ್ತಿಗಳು ಕೆಲವೇ ಕೆಲವರು ಎಂದು ತರಂಗ ಪತ್ರಿಕೆಯ ಸಂಪಾದಕಿ ಸಂಧ್ಯಾ.ಎಸ್.ಪೈ ಹೇಳಿದರು.ಅವರು ಸಿನಿಮಾ ಸಾಹಿತ್ಯ ಪ್ರಕಾಶನ ಹೊರತಂದಿರುವ ಪತ್ರಕರ್ತ ಬಿ.ಗಣಪತಿಯವರ “ಕನ್ನಡದ ಮುತ್ತಿನ ಕಥೆ ರಾಜಕುಮಾರ್” ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಈ ಪುಸ್ತಕ ಯುವಜನತೆಗೆ ದಾರಿ ದೀಪಿಕೆಯಾಗಲಿ ಎಂದು ಅವರು ಹಾರೈಸಿದರು. +ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಡಾ||ರಾಜ್‌ರವರ ವ್ಯಕ್ತಿತ್ವವನ್ನು ಸೀಮಿತ ಶಬ್ದಗಳಲ್ಲಿ ಹಿಡಿದಿಡಲಾಗದು, ಒಂದು ಮಾತು ಅಥವಾ ಘಟನೆಯ ಮೂಲಕ ರಾಜ್ ವ್ಯಕ್ತಿತ್ವ ಅನಾವರಣವಾಗದು. ಅವರ ವಿನಯ, ಮತ್ತು ಶ್ರಮದೊಂದಿಗೆ ಬೆರೆತ ಪ್ರತಿಭೆ ಇತರರಿಗೆ ಆದರ್ಶಪ್ರಾಯ ಎಂದು ಹೇಳಿದರು. ಡಾ||ರಾಜ್‌ರವರು ತಮ್ಮ ವಿನಯ ಮತ್ತು ಸಜ್ಜನಿಕೆಯಿಂದಲೇ ಮೇರುನಟರಾದರು, ಕನ್ನಡದ ಕಣ್ಮಣಿಯಾದರು ಎಂದು ಹೇಳಿದ ಭಟ್, ವಿಶ್ವಾಸ ಮತ್ತು ನಂಬಿಕೆಯ ಬಗೆಗೆ ಮಾತನಾಡಿ, ಪತ್ರಕರ್ತರಿಗೆ ಈ ಎರಡೂ ಗುಣಗಳ ಅಗತ್ಯವಿದೆ ಮತ್ತು ಇವೆರಡೂ ಬಿ.ಗಣಪತಿ ಅವರಲ್ಲಿವೆ ಎಂದು ತಿಳಿಸಿದರು. +ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಮಾತನಾಡಿ, ಡಾ|| ರಾಜಕುಮಾರ್ ವ್ಯಕ್ತಿತ್ವದಲ್ಲಿ ವಿಕಾರ, ವಿಕೃತಿಗಳಿರಲಿಲ್ಲ, ಹೆಚ್ಚು ನಿರೀಕ್ಷಿಸಿದಷ್ಟೂ ಚೆನ್ನಾಗಿ ನಟಿಸುತ್ತಿದ್ದರು, ರಾಜ್‌ರವರು ಸಾಂಸ್ಕೃತಿಕ ಮತ್ತು ಸಾಮಾಜಿಕ ಒತ್ತಡಗಳ ನಡುವೆ ಅರಳಿದ ಜನಪರ ನಾಯಕ ಎಂದು ಹೇಳಿದರು. ದೊಡ್ಡ ಕಲಾವಿದ ಎಂದು ರಾಜ್ ಯಾವತ್ತೂ ಭಾವಿಸಿರಲಿಲ್ಲ, ಸಾಮಾಜಿಕ ಇತಿಹಾಸಕ್ಕೆ ರಾಜ್ ಹೊಸ ಸೇರ್ಪಡೆ , ಅನುಭವ ಅವರ ಅಧ್ಯಯನ ಎಂದು ನುಡಿದ ಅವರು ರಾಜ್ ಜೀವನ ಅನುಕರಣೀಯ ಎಂದು ಹೇಳಿದರು. +ಪುಸ್ತಕದ ಕರ್ತೃ ಹಾಗು ಪತ್ರಕರ್ತರಾದ ಬಿ.ಗಣಪತಿಯವರು ಮಾತನಾಡಿ, ನನಗೆ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ನೆಲೆ ಸಿಕ್ಕಿರಲಿಲ್ಲ. ಪತ್ರಿಕೋದ್ಯಮ ಅವಕಾಶ ನೀಡಿ ನನ್ನನ್ನು ಬೆಳೆಸಿತು, ಇದು ನನ್ನ ಪ್ರಥಮ ಪುಸ್ತಕ; ಡಾ||ರಾಜ್‌ರವರು ಏನು ಹೇಳಿದರೋ ಅದನ್ನಷ್ಟೇ ಬರೆದಿದ್ದೇನೆ ಎಂದು ತಿಳಿಸಿದರು. +ಶಿವರಾಜ್‌ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುನೀತ್ ರಾಜ್‌ಕುಮಾರ್, ಪ್ರಕಾಶಕ ರವಿಚಂದ್ರ ರಾವ್ ಹಾಜರಿದ್ದರು. +ಕಾರ್ಯಕ್ರಮ : ನಾಟಕ – “ಸ್ವರ್ಣಮೂರ್ತಿ” +ಸ್ಥಳ : ರವೀಂದ್ರ ಕಲಾಕ್ಷೇತ್ರ +ದಿನಾಂಕ: ೩೧-೦೫-೨೦೦೬ +ವೇಳೆ : ಸಂಜೆ ೦೬-೩೦ +ಆಯೋಜನೆ : ಕೆಂಪೇಗೌಡ ಜಯಂತ್ಯುತ್ಸವ ಸಮಿತಿ, ಕನ್ನಡ ಸಂಸ್ಕೃತಿ ಇಲಾಖೆ +ಅ.ನ.ಕೃ ವಿರಚಿತ, ಮ. ನಾ ಮೂರ್ತಿ ನಿರ್ದೇಶನದ ಸ್ವರ್ಣಮೂರ್ತಿ ನಾಟಕವನ್ನು ವೀಕ್ಷಿಸುವ ಅವಕಾಶವೊಂದು ಮೊನ್ನೆ ಒದಗಿಬಂತು .ಪೌರಾಣಿಕ ನಾಟಕಗಳೆಂದರೆ ನನಗೆ ಅಂತ ಆಸಕ್ತಿಯೇನಿಲ್ಲ.ಆದರೆ ಪೌರಾಣಿಕ ನಾಟಕಗಳಲ್ಲಿರುವ ನಾಟಕೀಯತೆ ನನಗೆ ಇಷ್ಟವಾಗುತ್ತದೆ. ಒಬ್ಬ ನಟನಿಗೆ ಬೇಕಾದುದು ನಾಟಕೀಯತೆಯೇ ಹೊರತು ವಾಸ್ತವಕ್ಕೆ ಹತ್ತಿರವಾಗುವಂತೆ ನಟಿಸುವುದಲ್ಲ ಎಂದೇ ನನ್ನ ಭಾವನೆ .ವಾಸ್ತವವನ್ನು ನಾಟಕೀಯವಾಗಿ ಅಭಿನಯಿಸಿದರೇ ಚೆನ್ನ. +ಸ್ವರ್ಣಮೂರ್ತಿ ನಾಟಕ ರಾಮಾಯಣದಲ್ಲಿ ರಾಮ ಗರ್ಭಿಣಿ ಸೀತೆಯನ್ನು ಪುರಪ್ರಜೆಯೊಬ್ಬನ ವ್ಯಂಗ್ಯದ ಮಾತು ಕೇಳಿ ವನವಾಸಕ್ಕೇ ಕಳುಹಿಸುವ ಸನ್ನಿವೇಷವನ್ನಾಧರಿಸಿದ್ದು, ಸಮಾಜದ ಇಂದಿನ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತದೆ. +ಸ್ವರ್ಣಮೂರ್ತಿ ನಾಟಕದ ರಾಮ ’ನೀತಿಪುರುಷ ’ ಗುಣವಾಚಕವನ್ನು ಮರೆತವನಂತೆ ಕಾಣಿಸುತ್ತಾನೆ .ರಾಜಕೀಯ ಮಹತ್ವಾಕಾಂಕ್ಷೆಗಾಗಿ ಸೀತಾಮಾತೆಯನ್ನು ಬಲಿಕೊಟ್ಟೆಯಲ್ಲ ಎಂದು ತಮ್ಮ ಲಕ್ಷ್ಮಣನೇ ಜರಿಯುತ್ತಾನೆ. ಯಾವಾಗಲೂ ಅಣ್ಣನ ಇಚ್ಛೆಯಂತೆ ನೆಡೆಯುತ್ತಿದ್ದ ಲಕ್ಷ್ಮಣ ಇಲ್ಲಿ ರಾಮನ ನಿರ್ಧಾರವನ್ನು ಪ್ರತಿಭಟಿಸುತ್ತಾನೆ . ಆದರೆ ರಾಜಾಜೆಯನ್ನು ಶಿರಸಾವಹಿಸಿ ಪಾಲಿಸಿ ಸೀತೆಯನ್ನು ಕಾಡಿಗೆ ಬಿಟ್ಟು ಬರುತ್ತಾನೆ. ವಿನಯಶೀಲೆ ಊರ್ಮಿಳೆಯೂ ರಾಮನ ನಿರ್ಧಾರವನ್ನು ಪ್ರಶ್ನಿಸುತ್ತಾಳೆ. ಸೀತೆ ಎಂದಿನಂತೆ ಶೋಷಣೆಗೆ ಒಳಗಾ(ದ)ಗುತ್ತಿರುವ ಮಹಿಳೆಯನ್ನು ಪ್ರತಿನಿಧಿಸುತ್ತಾಳೆ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಸಿದ್ಧವಾಗುವ ಇಂದಿನ ರಾಜಕಾರಣಿಗಳಿಗೂ ’ಸ್ವರ್ಣಮೂರ್ತಿ’ಯ ರಾಮನಿಗೂ ವ್ಯತ್ಯಾಸ ಕಾಣಿಸುವುದಿಲ್ಲ. +ನಾಟಕ ಮುಂದುವರೆದಂತೆ ರಾಮನ ಅಂತರಾಳ ಬಯಲಾಗುತ್ತಾ ಹೋಗುತ್ತದೆ. ಸೀತೆಯ ಸ್ವರ್ಣ ಪುತ್ತಳಿಯನ್ನು ಅಂತಃಪುರದಲ್ಲಿ ಪ್ರತಿಷ್ಠಾಪಿಸಿ ಅದರ ಮುಂದೆ ರೋಧಿಸುತ್ತ ನಿಂತ ರಾಮ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ. ಆದರೆ ಆಪ್ತಸೇವಕ(ಕಂಚುಕ)ನ ಕಣ್ಣಲ್ಲಿ ತುಚ್ಛವಾಗುತ್ತಾನೆ. ಕಂಚುಕ ರಾಮನ ನಿರ್ಧಾರವನ್ನು ಪ್ರತಿಭಟಿಸಿ ನಿವೃತ್ತಿ ಘೋಷಿಸುತ್ತಾನೆ. +ಕಾಡಿಗೆ ಕಳುಹಿಸಿದ ಸೀತೆಯನ್ನು ಮರಳಿ ಕರೆಸಿಕೋ ಎಂದು ವಸಿಷ್ಠರಾದಿಯಾಗಿ ಎಲ್ಲರೂ ಹೇಳಿದರೂ ರಾಮ ಕಠಿಣವಾಗುತ್ತಾ ಹೋಗುತ್ತಾನೆ. ಲಕ್ಷ್ಮಣ,ಊರ್ಮಿಳೆ ನಾರುಮಡಿಯನ್ನುಟ್ಟು ಕಾಡಿಗೆ ತೆರಳುತ್ತಾರೆ. ರಾಮ ಒಂಟಿಯಾಗುತ್ತಾನೆ. +ಆಗಲೆ ಅವನಿಗೆ ಅಶ್ವಮೇಧಯಾಗದ ಹುಚ್ಚು ತಲೆಗತ್ತುತ್ತದೆ. ಸೀತೆಯನ್ನು ಪಾತಿವ್ರತ್ಯದ ಪರೀಕ್ಷೆಗೊಳಪಡಿಸಬೇಕೆನ್ನುತ್ತಾನೆ. ವಸಿಷ್ಠರ ಮೂಲಕ ತನ್ನ ನಿರ್ಧಾರಗಳನ್ನು ಸೀತೆಗೆ ತಲುಪಿಸುತ್ತಾನೆ. ಸೀತೆ ದುಃಖಾತಿರೇಖದಿಂದ ಕುಸಿಯುತ್ತಾಳೆ ; ಪ್ರಾಣತ್ಯಾಗ ಮಾಡುತ್ತಾಳೆ. +ಅವಳ ಪ್ರಾಣತ್ಯಾಗದ ವಿಷಯ ವಸಿಷ್ಠರಿಂದ ತಿಳಿದ ರಾಮ ’ಪಷ್ಚಾತ್ತಾಪದ ಮೂರ್ತಿ’ ಯಾಗುತ್ತಾನೆ. ರಾಜಕಾರಣಕ್ಕಾಗಿ ಸೀತೆಯನ್ನು ಬಲಿಕೊಟ್ಟೆನಲ್ಲ ಎಂದು ’ಸ್ವರ್ಣಮೂರ್ತಿ’ಯ ಎದುರು ನಿಂತು ರೋಧಿಸುವ ದೃಶ್ಯದೊಂದಿಗೆ ನಾಟಕ ಮುಗಿಯುತ್ತದೆ. +ರಾಮ ಕಾಡಿಗೆ ಹೋಗಬೇಕಾದ ಸಂದರ್ಭದಲ್ಲಿಸೀತೆ ಸತಿಧರ್ಮವನ್ನು ಪಾಲಿಸಿದಳು. ಆದರೆ ಸೀತೆ ಕಾಡಿಗೆ ಹೋಗಬೇಕಾದಾಗ ರಾಮ ಅವಳ ಜೊತೆಗಿದ್ದು ಪತಿಧರ್ಮವನ್ನು ಪಾಲಿಸಬೇಕಿತ್ತಲ್ಲವೆ ? ಎಂದು ಲಕ್ಷ್ಮಣ ಪ್ರಶ್ನಿಸುವುದು ನಾಟಕದ ಆಶಯವನ್ನು ಎತ್ತಿಹಿಡಿಯುತ್ತದೆ. +ಶ್ರೀರಾಮನ ಪಾತ್ರಧಾರಿ ವೆಂಕಟೇಶ್, ಲಕ್ಷ್ಮಣನ ಪಾತ್ರಧಾರಿ ಸ್ಟ್ಯಾಂಪ್ ವೆಂಕಟೇಶ್ ಮುಂದೆ ಪೇಲವವಾಗುತ್ತಾರೆ. ಅದಕ್ಕೆ ಕೃತಿ, ಪಾತ್ರಕ್ಕಿಂತ ಪಾತ್ರಧಾರಿಯ ಶರೀರ, ಶಾರೀರ ಕಾರಣವಿರಬಹುದು. +ಕಂಚುಕಿ ಪಾತ್ರಧಾರಿ ಮ.ನಾ.ಮೂರ್ತಿ ತಮ್ಮ ವಿಶಿಷ್ಟ ಹಾವಭಾವಭಿನಯಗಳಿಂದ ಗಮನ ಸೆಳೆಯುತ್ತಾರೆ. +ಸೀತೆ, ಊರ್ಮಿಳೆ ಪಾತ್ರಧಾರಿಗಳ ಬಗ್ಗೆ ಹೆಚ್ಚಿಗೆ ಹೇಳುವುದೇನಿಲ್ಲ. +ಹಿನ್ನೆಲೆ ಸಂಗೀತ ಎಲ್ಲಿಯೂ ತಾಳ ತಪ್ಪುವುದಿಲ್ಲ. ಪೌರಾಣಿಕ ನಾಟಕಗಳಿಗೆ ಅಗತ್ಯವಾದ ವಿಶೇಷ ರಂಗಸಜ್ಜಿಗೆ ಮನೋಹರವಾಗಿತ್ತು. ನೆರಳು, ಬೆಳಕಿನ ಸಂಯೋಜನೆ ಪಾತ್ರಧಾರಿಗಳ ಭಾವನೆಗಳನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಯಿತು. +ಕೆಂಪೇಗೌಡ ಜಯಂತ್ಯುತ್ಸವದ ಪ್ರಯುಕ್ತ ನೆಡೆದ ನಾಟಕೋತ್ಸವದಲ್ಲಿ ಸ್ವರ್ಣಮೂರ್ತಿ ನಾಟಕವನ್ನು ’ಹರಿಹರಸುತ ಕಲಾ ಮಂಡಲಿ’ ಯ ಕಲಾವಿದರು ಅಭಿನಯಿಸಿದರು. +ಕಾರ್ಯಕ್ರಮ :ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ +ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು +ದಿನಾಂಕ : ೨೯-೦೫-೨೦೦೬ +ವೇಳೆ : ಸಂಜೆ ೦೬-೩೦ +ಆಯೋಜನೆ : ’ರಮಾ’ +ಮಳೆಗಾಲದ ಸಂಜೆಗಳು ಸಾಮಾನ್ಯವಾಗಿ ಮನೆಯೊಳಗೇ ಕಳೆದು ಹೋಗುತ್ತವೆ. ಹೊರಗೆ ಮಳೆ ಬೀಳುತ್ತಿದ್ದರೆ ಎಲ್ಲಿಗಾದರೂ ಹೊರಡಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ ಆವತ್ತಿನ ಆ ಸಂಜೆ ಹಾಗಿರಲಿಲ್ಲ. ಹೊರಗೆ ಜಿಟಿ ಜಿಟಿ ಮಳೆಯಿದ್ದರೂ ರವೀಂದ್ರ ಕಲಾಕ್ಷೇತ್ರ ಸಂಗೀತಾಸಕ್ತರಿಂದ ತುಂಬಿ ಹೋಗಿತ್ತು.ಅದು ಕರ್ಣಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ಪ್ರಾಯೋಜಕತ್ವದ, ಬಿ.ವಿ.ಜಗದೀಶ್ ಕುಟುಂಬ ಪ್ರತಿಷ್ಠಾನದ ಸಹಯೋಗದೊಂದಿಗೆ ’ರಮಾ’(ರತ್ನಮಾಲ ಪ್ರಕಾಶ್ ಮತ್ತು ಮಾಲತಿ ಶರ್ಮ)ಆಯೋಜಿಸಿದ್ದ ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ. +ಕಾರ್ಯಕ್ರಮಕ್ಕೆ ಸಂಗೀತಲೋಕದ ದಿಗ್ಗಜ ಆರ್.ಕೆ.ಶ್ರೀಕಂಠನ್ ಅಧ್ಯಕ್ಷತೆ ವಹಿಸಿದ್ದರು. +ಹಿರಿಯ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಿ.ಅಶ್ವತ್, ಸಂಗೀತ ನಿರ್ದೆಶಕ ಹಂಸಲೇಖ, ರತ್ನಮಾಲ ಪ್ರಕಾಶ್, ಮಾಲತಿ ಶರ್ಮ,ಲಹರಿ ರೆಕಾರ್ಡಿಂಗ್ ಕಂಪನಿಯ ವೇಲು, ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ, ಬಿ.ವಿ.ಜಗದೀಶ್, ಐ.ಎ.ಎಸ್.ಅಧಿಕಾರಿ ಪೆರುಮಾಳ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. +ಆಹ್ವಾನಿತರಾಗಿ ಶ್ಯಾಮಲಾ ಭಾವೆ, ಆರ್.ಕೆ.ಪದ್ಮನಾಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಂ.ಶ್ರೀನಿವಾಸ, ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಷಿ, ಬೆ.ಮ.ಪಾ ದ ಜೈರಾಜ್, ’ಸಂಗೀತ ಗಂಗಾ’(ಜಿ.ವಿ.ಅತ್ರಿಯವರ)ದ ಹೇಮಾ ಪ್ರಸಾದ್ ಮುಂತಾದವರು ಬಂದಿದ್ದರು. +ಕಾರ್ಯಕ್ರಮ ಎಚ್.ಎಸ್.ವೆಂಕಟೇಶ ಮೂರ್ತಿಯವರ “ಸಾವಿರ ಬಳ್ಳಿ ನಸು ನಗುವ ಹೂಚೆಲ್ಲಿ ಗಾಳಿ ಬಯಲಲಿ ಗಂಧ ತೇಲುತಿರಲಿ” ಆಶಯ ಗೀತೆಯೊಂದಿಗೆ ಆರಂಭವಾಯಿತು. +ಬಿ.ವಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಗಮ ಸಂಗೀತ ಕ್ಷೇತ್ರದ ಪ್ರತಿಭಾನ್ವೇಷಣೆಗಾಗಿ ತಮ್ಮ ’ಜಗದೀಶ ಕುಟುಂಬ ಪ್ರತಿಷ್ಠಾನ’ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. +ಬಹುಕಲೆಗಳಲ್ಲಿ ಸಂಗೀತ ಕಲೆಯೇ ಶ್ರೇಷ್ಠ ಎಂದು ಸಾಹಿತಿ ಎಚ್.ಎಸ್.ವಿ.ಯವರು ಹೇಳಿದರು. ಸಾಹಿತ್ಯದಲ್ಲಿ ದೋಷಗಳಿರಬಹುದು; ಆದರೆ ಸಂಗೀತದಲ್ಲಿ ದೋಷವೆಂಬುದಿಲ್ಲ. ಸಂಗೀತ ಕಲೆ ಸಾತ್ವಿಕತೆಯನ್ನು ಎಚ್ಚರಿಸುತ್ತದೆ.ಸಂಗೀತಗಾರರು ಸರಸ್ವತಿಯ ಜಿಹ್ವಾ(ನಾಲಗೆ)ಸ್ವರೂಪರು.ಸುಗಮ ಸಂಗೀತ ಕ್ಷೇತ್ರದ ಹೊಸ ಪ್ರತಿಭೆಗಳು ಹಳೆ ನದಿಯ ಹೊಸ ಅಲೆಗಳಿದ್ದಂತೆ ಎಂದು ಅವರು ತಿಳಿಸಿದರು. +ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಎಂದಿನ ಪ್ರಾಸಬದ್ಧ ಶೈಲಿಯಲ್ಲಿ ಮಾತನಾಡಿ, ಜೀವನದಲ್ಲಿ, ಹಂಬಲ, ಅದನ್ನು ಸಾಧಿಸುವ ಛಲ, ಸಾಧಿಸಿದಾಗಿನ ಧನ್ಯತೆ ಪ್ರಮುಖ ಘಟ್ಟಗಳು, ಸಾಹಿತ್ಯವೆಂಬುದು ಜೀವನದ ಸ್ಥಿತಿಯನ್ನು ತೋರಿದರೆ ಸಂಗೀತ ಅದರ ಗತಿಯನ್ನು ತೋರುತ್ತದೆ ಎಂದರು. ಇಂದಿನ ಯಾಂತ್ರಿಕ ಗೊಂದಲದ ಪರಿಸ್ಥಿತಿಯಲ್ಲಿ ನಮ್ಮನ್ನು ಸಮಸ್ಥಿತಿಯಲ್ಲಿರಿಸಬಲ್ಲದ್ದು ಸಂಗೀತವೊಂದೇ ಎಂದು ಅವರು ತಿಳಿಸಿದರು. +ಸುಗಮ ಸಂಗೀತ ಕ್ಷೇತ್ರದ ಉಳಿವಿಗೆ ಯಾವುದೇ ಸಮಸ್ಯೆಗಳಿಲ್ಲ, ಇದ್ದರೆ ಅದು ಚಿತ್ರಸಂಗೀತಕ್ಕೆ ಮಾತ್ರ ಎಂದು ಎಸ್.ಪಿ.ಬಿ ಹೇಳಿದರು.ಮಹಾರಾಷ್ಟ್ರದಲ್ಲಿ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು ಸಿನಿಮಾ ಪ್ರಭಾವ ಇಲ್ಲದ ಕಾರ್ಯಕ್ರಮಗಳಿಗೂ ಕನ್ನಡದಲ್ಲಿ ಪ್ರೋತ್ಸಾಹವಿದೆ ಎಂಬುದಕ್ಕೆ ಅಶ್ವತ್‌ರವರ ’ಕನ್ನಡವೇ ಸತ್ಯ’ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು. ಗಾಯನ ವೃತ್ತಿಯ ಆರಂಭದ ದಿನಗಳನ್ನು ಜ್ಞಾಪಿಸಿಕೊಂಡ ಅವರು ಕರ್ನಾಟಕ ನನ್ನನ್ನು ದತ್ತು ಮಗನನ್ನಾಗಿ ಸ್ವೀಕರಿಸಿದೆ ಎಂದರು. ಪಾಶ್ಚಾತ್ಯ ಸಂಗೀತ ಪ್ರಭಾವದ ಬಗ್ಗೆ ಮಾತನಾಡಿದ ಅವರು ಯುವಜನತೆ ಇದರಿಂದ ಆಕರ್ಷಿತಗೊಂಡರೂ ಅದು ತಾತ್ಕಾಲಿಕ, ಭಾರತೀಯ ಸಂಗೀತ ನಮ್ಮ ಭಾವಗಳಲ್ಲಿ ಭದ್ರ ಬುನಾದಿ ಹಾಕಿಕೊಂಡು ಬೆಳೆಯುತ್ತಿದೆ. ನಮ್ಮ ಬಹಳಷ್ಟು ಸಂಗೀತ ಪರಿಕರಗಳು ವಿದೇಶಿಯಾದರೂ, ನಾವು ಅವುಗಳನ್ನು ನಮ್ಮ ಸಂಗೀತಕ್ಕೆ ಒಗ್ಗಿಸಿಕೊಳ್ಳುವುದರಲ್ಲಿ ಸಫಲರಾಗಿದ್ದೇವೆ ಎಂದು ಹೇಳಿದರು. +ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಸಂಗೀತವನ್ನು ಮಾಧ್ಯಮಗಳು ಮತ್ತು ಕಂಪ್ಯೂಟರ್‌ಗಳ ಸಹಾಯದಿಂದ ಸುಲಭವಾಗಿ ಅಭ್ಯಾಸ ಮಾಡಬಹುದು ಎಂದು ತಿಳಿಸಿದ ಅವರು ಆಕಾಶವಾಣಿಯಲ್ಲಿ ಸುಗಮ ಸಂಗೀತಕ್ಕೆ ಪ್ರಾಧಾನ್ಯತೆ ಕಡಿಮೆಯಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಶ್ವತ್‌ರವರ ಭಾವಗೀತೆ ಗಾಯನದಲ್ಲಿನ ತನ್ಮಯತೆಯನ್ನು ಎಸ್.ಪಿ.ಬಿಯವರು ಹೊಗಳಿದರು. +ಐ.ಎ.ಎಸ್ ಅಧಿಕಾರಿ ಪೆರುಮಾಳ್‌ರವರ ತಮಿಳು ಶೈಲಿಯ ಸ್ಪಷ್ಟ ಕನ್ನಡ ಭಾಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. +ಅಧ್ಯಕ್ಷೀಯ ಭಾಷಣ ಮಾಡಿದ ಆರ್.ಕೆ.ಶ್ರೀಕಂಠನ್‌ರವರು, ಕಲಾರಸಿಕರಿರುವವರೆಗೆ ಕಲೆ ಬೆಳೆಯುತ್ತಿರುತ್ತದೆ, ಕನ್ನಡನಾಡಿನ ಸಂಗೀತ ಕ್ಷೇತ್ರ ಬಹು ದೊಡ್ಡದು, ಸುಗಮ ಸಂಗೀತಕ್ಕೂ ತನ್ನದೇ ಆದ ಶಾರೀರ, ಶರೀರ ಧರ್ಮವಿದೆ ಎಂದು ಹೇಳಿದರು. ಸಿ.ಅಶ್ವತ್, ರತ್ನಮಾಲ, ಮಾಲತಿ ಶರ್ಮ ಮುಂತಾದವರು ಸುಗಮ ಸಂಗೀತ ಕ್ಷೇತ್ರದ ತಾರೆಗಳು ಎಂದ ಅವರು ಸುಗಮ ಸಂಗೀತ ಕ್ಷೇತ್ರ ಅತಿಶಯವಾಗಿ ಬೆಳೆಯಲಿ ಎಂದು ಹಾರೈಸಿದರು. +“ನಾ ಹಾಡುವೆನು ನಿಮಗಾಗಿ” ಸುಗಮ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂವರಿಗೆ(ಪ್ರಥಮ ಹೇಮ, ದ್ವಿತೀಯ ಚಿನ್ಮಯ ಆತ್ರೇಯ, ತೃತೀಯ ದಿವ್ಯ ಹನುಮಾನ್) ಬಹುಮಾನ ವಿತರಿಸಲಾಯಿತು. +ನಂತರ ನೆಡೆದ ಸಂಗೀತ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ, ’ನಮ್ಮೂರ ಮಂದಾರ ಹೂವೆ…”ಎಂಬ ಅಶ್ವತ್‌ರವರ ಸಂಗೀತದ ಹಾಡನ್ನು ಹಾಡಿದರು. ಅಶ್ವತ್‌ರವರು ’ಮುಕ್ತ’ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡಿದರು. ದಿವ್ಯ ಹನುಮಾನ್ ಕೆ.ಎಸ್.ನರಸಿಂಹಸ್ವಾಮಿಯವರ “ತವರ ಸುಖದೊಳೆನ್ನ ಮರೆತಿಹಳು ಎನ್ನನೆ” ಎಂಬ ಗೀತೆಯನ್ನು ಹಾಡಿದರು. ಗಾಯಕಿ ಸಂಗೀತಾ ಕಟ್ಟಿ ದ.ರಾ.ಬೇಂದ್ರೆ ರಚಿತ, ಸಿ.ಅಶ್ವತ್ ಸಂಗೀತದ “ಹಿಂದ ನೋಡದ ಗೆಳತಿ” ಗೀತೆಯನ್ನು ಹಾಡಿದರು. +ಕಾರ್ಯಕ್ರಮ ಮುಗಿದಾಗ ಮಳೆ ಬಂದು ನಿಂತ ಸ್ಥಿತಿಯಿತ್ತು.. ಮತ್ತು ಹೊರಗೆ ಮಳೆ ನಿಂತಿತ್ತು. +***** +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […] +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_736.txt b/Kannada Sahitya/article_736.txt new file mode 100644 index 0000000000000000000000000000000000000000..75f0f27617a6b484c0867c3d404a8cce8535ba46 --- /dev/null +++ b/Kannada Sahitya/article_736.txt @@ -0,0 +1,27 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು’ ಎಂದು ಆರಂಭವಾಗಿ ಅದು ಮುಂದಿನ ಸಾಲುಗಳಲ್ಲಿ ‘ಈ ಸಂಭ್ರಮ, ಈ ಕೃಷ್ಣನ ಕಾಟ, ಈ ಮಂತ್ರದ ಪಾಠ….’ಎಂದೆಲ್ಲ ಮುಂದುವರೆದು ಮತ್ತೂ ಮುಂದಿನ ಪ್ಯಾರಾದಲ್ಲಿ ‘ಭಾಷೆ ಈ ಭಾವನೆ ಈ ಕಾಮನೆ ಈ ಭೋಳೆ’ ಎಂಬಿತ್ಯಾದಿಯಾಗಿ ಬೆಳೆಯುತ್ತ, ತನ್ನ ಕಡೆಯ ಸಾಲಿನಲ್ಲಿ ‘ಈ ಮನೆಗಳು ಈ ಜನಗಳು ಈ ನರಕ ಈ ಪುಲಕ’-ಎಂದು ಮುಕ್ತಾಯವಾಗುತ್ತದೆ. ಇವತ್ತು, ‘ಇ- ಮೈಲು, ಇ- ಕಾಮರ್ಸು, ಇ- ಪುಸ್ತಕ, ಇ- ಆಡಳಿತ” ಮೊದಲಾದ ಪದಪುಂಜಗಳು ತುಂಬ ಬಳಕೆಗೆ ಬರುತ್ತಿರುವ ಕಾಲದಲ್ಲಿ, ಲಂಕೇಶರ ಈ ಪದ್ಯವನ್ನು ತುಂಬ ಹೊಸದಾದ ಒಂದು ‘ಇ- ಅರ್ಥ’ದಲ್ಲೇ ಓದಲಿಕ್ಕೆ ಸಾಧ್ಯವಿದೆ ಎಂದು ನನಗನ್ನಿಸಿತು. ‘ಈ-ಶಾವಾಸ್ಯಮಿದಂ ಸರ್ವಂ’ ಆಗಲಿಕ್ಕೆ ಇನ್ನು ಬಹಳ ದೂರವೇನೂ ಇಲ್ಲವೆನಿಸುವ ಇವತ್ತಿನ ಸಂದರ್ಭದಲ್ಲಿ, ಲಂಕೇಶರ ಪದ್ಯವು ಕೊಡುವ ಹೊಸ ಧ್ವನ್ಯರ್ಥಗಳೇನಿವೆ, ಅವುಗಳಿಂದ ಪ್ರೇರಿತವಾಗಿ ನಾನು ಈ ಬಾರಿಯ ಸ್ವಗತಕ್ಕೆ ತೊಡಗುತ್ತೇನೆ. +ನಾನು ಪ್ರಸ್ತಾಪಿಸುವ ಈ ‘ಇ- ಜಗತ್ತು’-ಅಂದರೆ ‘ಎಲೆಕ್ಟ್ರಾನಿಕ್ ಜಗತ್ತು’-ಎಷ್ಟು ವಿಚಿತ್ರವಾದದ್ದು ಎನ್ನುವುದಕ್ಕೆ ಒಂದು ಉದಾಹರಣೆಯಿಂದ ಪ್ರಾರಂಭಿಸುತ್ತೇನೆ. ಕಳೆದ ವರ್ಷ ಮೇ ೧೪ರಂದು ಕೇಸೀ ಸ್ವೆನ್‌ಸನ್ ಎಂಬ ೧೯ ವರ್ಷದ ಹುಡುಗಿಯು ಅಮೇರಿಕಾದ ಕೆನ್ಸಾಸ್ ಪ್ರಾಂತ್ಯದ ತನ್ನ ಮನೆಯಲ್ಲಿ ಪ್ರಾಣಬಿಟ್ಟಳು. ಈ ಸುದ್ದಿ ಅಲ್ಲಿ ಯಾಕೆ ಮುಖ್ಯವಾಯಿತೆಂದರೆ, ಆಕೆ ಹಲವು ವರ್ಷಗಳಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ತನ್ನ ದಿನಚರಿಯನ್ನು ಪ್ರತಿದಿನ ಅಂತರ್ಜಾಲದಲ್ಲಿ ಬರೆಯುತ್ತಿದ್ದಳು. ತನ್ನ ಆ ‘ಆನ್-ಲೈನ್ ಡೈರಿ’ಯಲ್ಲಿ ಆಕೆ ತನ್ನ ಕಷ್ಟಸುಖಗಳ ಬಗ್ಗೆ ಬರೆಯುತ್ತಿದ್ದುದನ್ನು ಬಹುಸಂಖ್ಯೆಯ ಜನ ಪ್ರತಿನಿತ್ಯ ಓದುತ್ತಿದ್ದರು; ಅವಳೊಂದಿಗೆ ಅಂತರ್ಜಾಲದಲ್ಲೇ ಸಂವಾದವನ್ನೂ ಮಾಡುತ್ತಿದ್ದರು. ನಿಶ್ಚಿತವಾದ ಸಾವನ್ನು ಎದುರಿಟ್ಟುಕೊಂಡೂ ಆಕೆ ಹೇಗೆ ಬ್ಯಾಸ್ಕೆಟ್‌ಬಾಲ್ ಆಟದಲ್ಲಿ ತನ್ನ ತೊಡಗಿಸಿಕೊಳ್ಳುತ್ತಿದ್ದಳು, ಹೇಗೆ ಕ್ಯಾನ್ಸರ್‌ನ ನೋವುಗಳನ್ನು ಆಕೆ ಲವಲವಿಕೆಯಿಂದಲೇ ಎದುರಿಸುತ್ತಿದ್ದಳು-ಎಂಬಿತ್ಯಾದಿಗಳೆಲ್ಲ ಹಲವರಿಗೆ ಅಚ್ಚರಿಯ ವಿಷಯವೂ ಮಾನವೀಯ ಛಲದ ಪ್ರತೀಕವೂ ಆಗಿ ಕಾಣುತ್ತಿತ್ತು. ಹಲವರು ಆಕೆಗೆ ಅಷ್ಟಿಷ್ಟು ಸಹಾಯವನ್ನೂ ಮಾಡಿದ್ದರು; ಅವಳಂತೆಯೇ ಕ್ಯಾನ್ಸರಿಗೆ ತುತ್ತಾದ ಕೆಲವರು ಅವಳ ದಿನಚರಿಯನ್ನು ಓದಿ ಸಾಂತ್ವನವನ್ನೂ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಅವಳ ಬದುಕು ಸಾವುಗಳೆರಡೂ ಈ-ಜಗತ್ತಿನ ಒಂದು ಪ್ರಮುಖ ವಿದ್ಯಮಾನವಾಗಿದ್ದವು. +ಕಥೆ ಇಲ್ಲಿಗೇ ನಿಂತಿದ್ದರೆ ಸಮಸ್ಯೆಯಿರಲಿಲ್ಲ. ಆದರೆ ಅದೇ ಮೇ ೩೧ರಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬಂದ ಒಂದು ವರದಿಯು ಈ ವಿದ್ಯಮಾನಕ್ಕೆ ವಿಚಿತ್ರ ತಿರುವನ್ನೇ ಕೊಟ್ಟಿತು. ಆ ವರದಿಯ ಪ್ರಕಾರ, ಆ ಇಡಿಯ ಕಥೆಯನ್ನು ಕಟ್ಟಿ, ಅದನ್ನು ಅಂತರ್ಜಾಲದಲ್ಲಿ ಎಲ್ಲರಿಗೂ ನಂಬಿಕೆ ಬರುವಂತೆ ಸ್ಥಾಪಿಸಿ-ಮುಂದುವರೆಸಿ, ಕಡೆಗೆ ಆ ಕಲ್ಪಿತ ಹುಡುಗಿಯ ಸಾವನ್ನೂ ಸೃಷ್ಟಿಸಿ ಅಲ್ಲಿಗೆ ಕಥನವನ್ನು ಪರಿಸಮಾಪ್ತಿಗೊಳಿಸಿದ್ದಳು! ಈ ವರದಿಯು ಅಮೇರಿಕಾದ ‘ಈ-ನಾಗರೀಕ’ರ ನಡುವೆ ಹೊಸದೊಂದು ಚರ್ಚೆಗೆ ಕಾರಣವಾಯಿತು. ಇದನ್ನು ವಿರೋಧಿಸಿದವರು ಸಾಂಪ್ರದಾಯಿಕ ಮಾಧ್ಯಮಗಳಿಗೆ ಒಂದು ನೈತಿಕತೆ ಇರಬೇಕಾದಂತೆ ಅಂತರ್ಜಾಲಕ್ಕೂ ಒಂದು ಈ-ನೈತಿಕತೆ ಇರಬೇಕೆಂದು ಪ್ರತಿಪಾದಿಸಿದರು. ಆದರೆ ಇದರ ಪರವಾಗಿಯೂ ಕೆಲವರು ವಾದಿಸಿ, ಇದರಿಂದ ಯಾರಿಗೂ‌ಅನ್ಯಾಯವಾಗಿಲ್ಲದಿರುವುದರಿಂದ ಇದರಲ್ಲಿ ಅನೈತಿಕವೇನೂ ಇಲ್ಲವೆಂದು ಸೂಚಿಸಿದರು. ಸ್ವತಃ ಈ ವಿದ್ಯಮಾನದ ಸೃಷ್ಟಿಕಾರ್ತಿ ಡೆಬಿಯ ಪ್ರಕಾರ, ಹಲವರು ಕ್ಯಾನ್ಸರ್ ರೋಗಿಗಳು ಇದರಿಂದ ಸಾಂತ್ವನವನ್ನೇ ಪಡೆದಿರುವುದರಿಂದ ಇದು ಸಮಾಜಕ್ಕೆ ಒಳಿತನ್ನೇ ಮಾಡಿತೆಂದೂ ಆಕೆ ಸಮರ್ಥಿಸಿಕೊಂಡಳು. ಇದನ್ನೆಲ್ಲ ನೋಡಿದ ಒಬ್ಬ ಅಂತರ್ಜಾಲಪ್ರಿಯ ಉದ್ಗರಿಸಿದನಂತೆ-‘ಆವ್ಯಕ್ತಿ ಸುಳ್ಳಿರಬಹುದು, ಆದರೆ ಆ ಬಗ್ಗೆ ಸೃಷ್ಟಿಯಾದ ನಮ್ಮೆಲ್ಲರ ಭಾವನೆಯೇನೂ ಸುಳ್ಳಲ್ಲವಲ್ಲ?!’ +ನಿಜ. ಇದರಿಂದ ಅಂಥ ಅನ್ಯಾಯವೇನೂ ಆಗಿರಲಿಕ್ಕಿಲ್ಲ. ಆದರೆ ಈ ದೃಷ್ಟಾಂತವು ಇವತ್ತಿನ ವಿದ್ಯುನ್ಮಾನ ಜಗತ್ತಿನ ಒಂದು ಪ್ರಮುಖ ಸಮಸ್ಯೆಯನ್ನು ನಮ್ಮೆದುರಿಗೆ ಬಿಚ್ಚುತ್ತದೆಯೆಂಬುದನ್ನೂ ನಾವಿಲ್ಲಿ ಮರೆಯಬಾರದು. ಯಾಕೆಂದರೆ, ಈ ಕೇಸಿಯ ಸಾವಿನ ಕಥಾನಕವು ಕೇವಲ ಒಂದು ಅಪ್ರಸ್ತುತ ಪ್ರಸಂಗವಲ್ಲ; ಅದು ಇವತ್ತಿನ ಮಾಹಿತಿ ತಂತ್ರಜ್ಞಾನವೂ ಮನರಂಜನೆಯ ಮಾಧ್ಯಮಗಳೂ ಬಳಸುವ ತಂತ್ರಗಾರಿಕೆಗೇ ಒಂದು ರೂಪಕವೂ ಹೌದು. ಉದಾಹರಣೆಗೆ, ಭಾರತದಲ್ಲಿ ನಡೆಯುವ ಕೋಮುಗಲಭೆಗಳನ್ನು ‘ವರದಿಮಾಡುವ’ ಮಾಧ್ಯಮಗಳನ್ನೇ ನೆನಪಿಸಿಕೊಳ್ಳಿ. ನಮ್ಮ ಅನುಭವಕ್ಕೇ ಕಂಡಿರುವಂತೆ, ಅವು ಕೇವಲ ಅಲ್ಲಿ ನಡೆದ ‘ಸತ್ಯ’ವನ್ನು ನಮಗೆ ತೋರಿಸುತ್ತಿರುವುದಿಲ್ಲ; ಅಲ್ಲಿ ಸಂಭವಿಸಿದ ಘಟನೆಗಳಲ್ಲಿ ‘ಆಯ್ದ ಕೆಲವನ್ನು’ ಚಿತ್ರೀಕರಿಸಿ ಅದನ್ನು ನಿರ್ದಿಷ್ಟ ಕ್ರಮದಲ್ಲಿ ‘ಸಂಕಲಿಸಿ’ ನಮ್ಮೆದುರಿಗೆ ಪ್ರಸ್ತುತಪಡಿಸುತ್ತಿರುತ್ತವೆ. ಹಾಗಾಗಿ, ಇಂಥ ವರದಿಗಳು ನಿಜವಾಗಿ ‘ವಾಸ್ತವ’ವಲ್ಲ; ಅವು ನಿರ್ದಿಷ್ಟ ಧೋರಣೆಯನ್ನಿಟ್ಟುಕೊಂಡು ಮಾಡಿರುವ ‘ಸೃಷ್ಟಿಗಳು. ಅಂದರೆ, ಕೇಸಿಯ ಕಥೆಯಂತೆ ಇಲ್ಲೂ ಒಂದು ‘ಭ್ರಮಾನಿರ್ಮಾಣ’ ಇದ್ದೇ ಇದೆ. ಮತ್ತು ಅಂಥ ಭ್ರಮಾನಿರ್ಮಾಣವನ್ನು ತಮ್ಮ ತಂತ್ರಗಾರಿಕೆಯಲ್ಲಿ ಸೇರಿಸಿಕೊಂಡಿರುವುದರಿಂದಲೇ ಇವತ್ತು ಮಾಧ್ಯಮವೆಂಬುದು ಉದ್ಯಮವೂ ಆಗಿದೆ. +ಮಾಧ್ಯಮಗಳ ಸರ್ವವ್ಯಾಪ್ತಿಯಿಂದಾಗಿ ಇವತ್ತಿನ ಜಗತ್ತಿನಲ್ಲಿ ಸೃಷ್ಟಿಯಾಗುವ ಇಂಥ ವಾಸ್ತವ-ಭ್ರಮೆಗಳ ನಡುವಿನ ಒಂದು ವಿಚಿತ್ರ ಸ್ಥಿತಿಯೇನಿದೆ, ಅದನ್ನೇ ಪಶ್ಚಿಮದ ಪೋಸ್ಟ್‌ಮಾಡರ್ನ್ ಪರಿಭಾಷೆಯಲ್ಲಿ ವಾಸ್ತವಾಭಾಸ-ಸಿಮ್ಯುಲೇಕ್ರಮ್-ಎಂದು ಗುರುತಿಸಲಾಗುತ್ತದೆ. ಮತ್ತು ಇಂಥ ವಾಸ್ತವಾಭಾಸವು ಇವತ್ತಿನ ಸಂದರ್ಭದ ಅನಿವಾರ್ಯ ವಿಧಿ ಎಂಬಂಥ ನಿರಾಶಾವಾದಿ ನಿಲುವನ್ನೂ ಈ ನವ್ಯೋತ್ತರ ಪಂಥದ ಕೆಲವರು ಸ್ವೀಕರಿಸುತ್ತಾರೆ. ಅವರ ಸಂದರ್ಭ ಹಾಗಿದ್ದೀತು. ಆದರೆ, ಪಶ್ಚಿಮದ ಈ-ಜಗತ್ತಿನ ಹೊರಗಿರುವ ನಮ್ಮಂಥವರಿಗೆ ಈ ಮಾಧ್ಯಮವ್ಯಾಪ್ತಿ ಜಗತ್ತು ಏಕಕಾಲದಲ್ಲಿ ಆಕರ್ಷಕವೂ ಆಕ್ರಮಣಕಾರಿಯೂ ಆಗಿರುವುದನ್ನು ಹೇಗೆ ಮರೆಯೋಣ? ಉದಾಹರಣೆಗೆ, ಈಚೆಗೆ ತಾಲಿಬಾನ್‌ನ್ನು ಅಮೇರಿಕಾವು ಸೋಲಿಸಿದಾಗ, ಟಿವಿಯಲ್ಲಿ ‘ಮುಸುಕು ತೆಗೆದು ನಗುತ್ತ ರಸ್ತೆಗಳಲ್ಲಿ ಓಡಾಡುವ’ ಹೆಂಗಸರ ಬಿಂಬಗಳನ್ನು ಕಂಡದ್ದೇ, ಇದು ನಾಗರಿಕತೆಯ ಮರುಸ್ಥಾಪನೆ’-ಎಂಬ ತೀರ್ಮಾನಕ್ಕೆ ನಾವು ಬಂದುಬಿಟ್ಟೆವಲ್ಲ, ಇದು ‘ವಾಸ್ತವ’ ‘ಭ್ರಮೆ’ಯೋ? ಇದು ಆಫ್ಘಾನಿಸ್ಥಾನದ ‘ನುಜಸ್ಥಿತಿ’ಯೋ ಅಥವಾ ಅಮೇರಿಕಾವು ಜಗತ್ತಿಗೆ ಕಾಣಿಸಲುಬಯಸುತ್ತಿರುವ ‘ಕಥಾನಕ’ವೋ? ಇವತ್ತಿನ ವಿದ್ಯುನ್ಮಾನ ಮಾಧ್ಯಮಗಳು ನಮಗೆ ಹಲವಾರು ಆಕರ್ಷಕ ಅನುಕೂಲಗಳನ್ನು ಮಾಡಿಕೊಡುತ್ತಲೇ ಇಂಥ ವಿಕೃತ ವ್ಯಾಖ್ಯಾನಗಳಿಗೂ ಕಾರಣವಾಗಿವೆಯಲ್ಲವೆ? +ಮತ್ತೆ ಲಂಕೇಶರ ಪದ್ಯಕ್ಕೆ ಮರಳಿ ಮುಗಿಸುತ್ತೇನೆ. ಈಗ ಸುಮಾರು ಐವತ್ತು ವರ್ಷಗಳ ಹಿಂದೆ, ಪುಟ್ಟ ಹಳ್ಳಿಯೊಂದರಿಂದ ಪೇಟೆಯ ಲೋಕಕ್ಕೆ ಪ್ರವೇಶಿಸಿದ್ದ ಲಂಕೇಶರಿಗೆ ಆ ಜಗತ್ತು ಒಂದು ಕಡೆ ‘ಈ ನರಕ’ವೂ ಇನ್ನೊಂದು ಕಡೆ ‘ಈ ಪುಲಕ ‘ವೂ’ ಆಗಿ ಕಂಡಿತ್ತು. ಅಂತೆಯೇ ಈಗ, ಹೊಸ ಈ-ಜಗತ್ತಿಗೆ ಪ್ರವೇಶಿಸುತ್ತಿರುವ ನನ್ನ ತಲೆಮಾರಿನವರಿಗೆ, ಇದು ಏಕಕಾಲಕ್ಕೆ ‘ಇ- ನರಕ’ವೂ ಹೌದು; ‘ಇ- ಪುಲಕ’ವೂ ಹೌದು. +***** +ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […] +ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […] +“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_737.txt b/Kannada Sahitya/article_737.txt new file mode 100644 index 0000000000000000000000000000000000000000..d29f32fb3df41796d233b490514e791d65ab67ce --- /dev/null +++ b/Kannada Sahitya/article_737.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ ಮಗಳು ಹೇಳಿದ್ದು. ಏನು ಎತ್ತ ಹೇಗೆ ಎಂಬುದನ್ನೆಲ್ಲ ಸುನೀತ ಕೇಳುವುದರೊಳಗೆ ಫೋನ್ ಇಟ್ಟೇ ಬಿಟ್ಟಿದ್ದಳು ಸ್ನೇಹಾಳ ಮಗಳು. ಹಾಗೆ ಚೂರುಪಾರು ಹೇಳಿ, ಮಾತಾಡದೇ ಇಡುವ ಹುಡುಗಿಯೇ ಅಲ್ಲ ಅದು. ತುಂಬ ಆತ್ಮೀಯವಾಗಿ ಒಳ್ಳೆಯ ಮಾತಾಡುವ ಹುಡುಗಿ. +ಮೊಮ್ಮಗು ಮಲಗಿತ್ತು. ಮನೆ ತುಂಬ ಆವರಿಸಿದ ಗಾಢ ಮೌನ, ಗೆಳತಿಯ ಅಗಲುವಿಕೆಯ ನೋವನ್ನು ಹೆಚ್ಚಿಸುತ್ತ, ಇರುವ ಮನೆಯೇ ಮಸಣವೇನೋ ಎಂಬ ಭಾವನೆ ಬರಿಸಿತು. ಕೆಲಸದವಳು ತೊಳೆದಿಟ್ಟು ಹೋಗಿದ್ದ ರಾಶಿ ಪಾತ್ರೆಗಳು ತಮ್ಮ ಜಾಗಕ್ಕೆ ಎತ್ತಿಡುವಂತೆ ಕರೆಯುತ್ತಿದ್ದರೂ ಸುನೀತಾಗೆ ಮೇಲೇಳಲಾಗಲಿಲ್ಲ. ಇನ್ನೂ ನಲವತ್ತೈದೂ ಆಗದ ಸ್ನೇಹ ಸತ್ತೇ ಹೋದಳು ಎಂಬ ಸುದ್ದಿ ಮೈ ಪೂರ್ತಿ ಆವರಿಸಿದ್ದರೂ, ಇನ್ನೂ ನಂಬಲಾಗುತ್ತಿಲ್ಲ ಅವಳಿಗೆ. ಹೋಗಬೇಕು ಅವಳ ಆ ಸತ್ತ ದೇಹವನ್ನು ನೋಡಿಯೇ ಖಚಿತಗೊಳಿಸಿಕೊಳ್ಳಬೇಕು. ಆದರೆ ಸುದ್ದಿ ಕೇಳಿದೊಡನೆ, ಚಪ್ಪಲಿ ಸಿಕ್ಕಿಸಿ ದಡದಡನೆ ಮೆಟ್ಟಿಲಿಳಿದು ಬಿಡಲು, ಅವಳು ಗಂಡಸಿನಷ್ಟು ಸ್ವತಂತ್ರಳಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಅವಳನ್ನು ಮನೆಗೆ ಬಂಧಿಸಿದ ಮೊಮ್ಮಗುವಿನ ಜವಾಬ್ದಾರಿಯ ಹಗ್ಗ ಬಿಗಿದಿದೆ. ಹನ್ನೆರಡಕ್ಕೆ ಊಟಕ್ಕೆ ಬಂದು ಎರಡು ಘಂಟೆ ವಿಶ್ರಾಂತಿ ತೆಗೆದುಕೊಂಡು ಪುನಃ ಕಛೇರಿಗೆ ಹೋಗುವ ಗಂಡನಿಗೆ ಅಡುಗೆ ಮಾಡುವ ಕೆಲಸವಿದೆ. ಒಳ ರೂಮಿನಲ್ಲಿ ಇನ್ನೊಂದು ವಾರ್ಡ್‌ರೋಬ್ ಹಾಕಲೆಂದು ಈ ದಿನವೇ ಬಡಗಿಯೊಬ್ಬ ಬರುವವನಿದ್ದಾನೆ. ಅವನಿಗೆ ನಾಳೆ ಬಾ ಎಂದು ಹೇಳಿ ಕಳಿಸಬೇಕು. ಗಂಡನ ಸ್ನೇಹಿತ ಊರಿಂದ ಬಂದು ಇಳಿಯುವ ಸಾಧ್ಯತೆ ಇದೆ. ಒಂದೊಂದಾಗಿ ಬಿಡಿಸಿಕೊಂಡು ಮಧ್ಯಾಹ್ನದ ಹೊತ್ತಿಗಾದರೂ ಸ್ನೇಹಳನ್ನು ಅರೆ ಘಳಿಗೆಯಾದರೂ ನೋಡಿ ಬರಬೇಕು. ಕೇವಲ ಹತ್ತು ನಿಮಿಷಗಳ ಕಾಲವಾದರೂ ಅವಳ ಮಕ್ಕಳ ಜೊತೆ ಇದ್ದು ಬಂದರೆ ಏನೋ ಸಮಾಧಾನ ಸಿಕ್ಕೀತು. ಆದರೆ ಮಲಗಿರುವ ಪಾಪುಗೆ ಜ್ವರ ಬೇರೆ ಇರುವುದರಿಂದ ಅದನ್ನು ನೋಡಿಕೊಳ್ಳಲೊಬ್ಬರು ಮನೆಗೆ ಬರುವ ತನಕ ಬಾಗಿಲು ದಾಟುವಂತಿಲ್ಲ. +ಮಿದುಳ ಗಂಟಿನಲ್ಲಿ ಕಟ್ಟಿಟ್ಟಿದ್ದ ನೆನಪುಗಳೆಲ್ಲ ಸ್ನೇಹಳ ಸಾವಿನ ಸುದ್ದಿಯ ಕತ್ತರಿಯಿ೦ದ ಕತ್ತರಿಸಿಕೊಂಡು ಉಂಡೆ ಉಂಡೆಯಾಗಿ ಉರುಳತೊಡಗಿದವು. “ಪ್ರಪಂಚವೆಂದರೆ ಬರೀ ಮನೆಯಷ್ಟೇ ಅಲ್ಲ. ಅದು ಅಗಾಧವಾದದ್ದು. ಎಷ್ಟು ತಿಳಿದರೂ ಸಾಯುವವರೆಗೆ ಏನೂ ತಿಳಿದಿಲ್ಲವೆನ್ನಿಸುವಂಥದು. ಇಷ್ಟನ್ನು ತಿಳಿಯಲಾದರೂ ಮನೆ ಬಿಟ್ಟು ಹೊರಗೆ ಬಾ. ಬರಬೇಕೆಂದು ನೀನು ಮನಸ್ಸು ಮಾಡಿದರೆ, ಬರುವುದಕ್ಕೆ ದಾರಿ ತಾನಾಗಿ ಕಾಣಿಸುತ್ತದೆ. ಅದು ಬೇರೆಯವರು ಮಾಡಿಕೊಡುವುದಲ್ಲ. ನೀನೇ ಮಾಡಿಕೊಳ್ಳಬೇಕಾಗಿರೋದು”, ಎಂದು ಸ್ನೇಹ ಎಷ್ಟೋ ವರ್ಷಗಳಿಂದ ಎಚ್ಚರಿಸುತ್ತಲೇ ಬಂದಿದ್ದಳು. ಆದರೆ ಸುನೀತಾಗೆ ಜೀವನವೆಂದರೆ ಮನೆ, ಗಂಡ ಮತ್ತು ಮಕ್ಕಳು ಅಷ್ಟೇ ಎನ್ನುವಂತಾಗಿದೆ. ರಾಜಕೀಯ, ಸಾಹಿತ್ಯ, ಸಿನಿಮಾ, ನಾಟಕ, ಕಂಪ್ಯೂಟರ್, ಸಂಶೋಧನೆ ಇತ್ಯಾದಿ ಯಾವುದರ ಇತಿಹಾಸವಾಗಲೀ, ವರ್ತಮಾನ ಮತ್ತು ಭವಿಷ್ಯಗಳಾಗಲೀ ಒಂದೂ ಗೊತ್ತಿಲ್ಲ. ಗೊತ್ತಿಲ್ಲವೆಂಬ ಹಿಂಜರಿಕೆ, ಕೀಳರಿಮೆಗಳು ಮಾತ್ರ ಇರುವುದರಿಂದಾಗಿ, ವಿದ್ವತ್ ಸಮಾರಂಭಗಳಿರಲಿ, ಮದುವೆ ಸಮಾರಂಭಗಳಿಗೆ ಹೋದರೂ ಹೆದರಿ ಹಿ೦ಜರಿದು ಇನ್ನಷ್ಟು ಹಿಂದುಳಿದವಳಾಗುತ್ತಿದ್ದಾಳೆ. +ಸ್ನೇಹಳ ಸಾವಿಗೆ ಕಾರಣ ಏನಿದ್ದೀತು ಎಂದು ತಿಳಿಯಲು ಅವಳ ಮನೆಗೆ ಎಷ್ಟು ಸಲ ಟ್ರೈ ಮಾಡಿದರೂ ಕನೆಕ್ಷನ್ನೇ ಸಿಗುತ್ತಿಲ್ಲ ಸುನೀತಾಗೆ. ಮೊನ್ನೆ ತಾನೇ ಊರಿನ ಸುದ್ದಿ ಹೇಳಲು ಫೋನ್ ಮಾಡಿದ್ದಳು. ಆರೋಗ್ಯವಾಗಿದ್ದವಳು ಇವೊತ್ತು ಆಗಲೇ ಇಲ್ಲವಾಗಿದ್ದಾಳೆ ಎಂದರೆ ಹಾರ್ಟ್ ಫೇಲೇ ಇರಬಹುದು. ಇವೊತ್ತಾದರೂ ಅವಳ ಮನೆಗೆ ಹೋಗಲೇ ಬೇಕು. ಪ್ರೌಢ ಶಾಲೆಯಲ್ಲಿ ಸಹಪಾಠಿಯಾಗಿದ್ದವಳು, ಮೂರು ವರ್ಷಗಳ ಹಿಂದೆ ಈ ಊರಿಗೆ ಬಂದು ತನ್ನ ಏಕೈಕ ಸ್ನೇಹಿತೆಯಾಗಿರುವವಳು ತೀರಿಕೊಂಡಾಗಲೂ ಮನೆಗೆ ಹೋಗದಿದ್ದರೆ ಸಮಾಧಾನವಿದ್ದೀತೆ”? ಯೋಚಿಸುತ್ತಲೇ ಮನವನ್ನು ಎಳೆದಾಡುತ್ತ ಎದ್ದು, ಪಾತ್ರೆಗಳನ್ನೆಲ್ಲ ತೆಗೆದು ಒರೆಸಿಟ್ಟಳು. ತನಗಿಂತ ಮೂರು ವರ್ಷ ಚಿಕ್ಕವಳಾದ ಸ್ನೇಹ ಯಾವ ಯಾವುದೋ ಸಂಘ, ಸಂಸ್ಥೆಗಳಿಗೆ ಅಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ, ಚಮತ್ಕಾರದ ಮತ್ತು ಬುದ್ಧಿವಂತಿಕೆಯ ಮಾತುಗಳಲ್ಲಿ ಜನಮನ ಗೆದ್ದ ವ್ಯಕ್ತಿಯಾಗಿ, ಒಳ್ಳೆಯ ಅಧ್ಯಾಪಕಿಯಾಗಿ, ಸಮಾಜದಲ್ಲಿ ಸಮಾನತೆ ತರಲು ಹೋರಾಡುವ ಸಮಾಜವಾದಿಯಾಗಿ, ಹೆಸರು ಗಳಿಸಿದವಳು, ದುಡಿದವಳು, ಇವೊತ್ತು ಎಲ್ಲ ಬಿಟ್ಟು ಹೊರಟೇ ಹೋದಳೇ? ಅದು ಹೇಗೆ ಮಾಡುತ್ತಿದ್ದಳೋ. ಯಾವಾಗ ಯಾವುದಕ್ಕೆ ಎಲ್ಲಿಂದ ಸಮಯ ಒದಗಿಸಿಕೊಳ್ಳುತ್ತಿದ್ದಳೋ? ಕೇಳಿದರೆ, “ಮನಸ್ಸಿದ್ದರೆ ಯಾವುದಕ್ಕೂ ಸಮಯ ಸಿಗುತ್ತದೆ. ಸಿಗದಿದ್ದರೆ ರಾತ್ರಿಯನ್ನು ಎಷ್ಟು ಬೇಕೋ ಅಷ್ಟಕ್ಕೆ ಹಗಲು ಮಾಡಿಕೊಂಡರಾಯ್ತು. ಅಷ್ಟೆ. ಹುಂ ಒಂದೆಂದರೆ ಹಾಗೆ ದುಡಿಯಲು ಸಾಮಾನ್ಯರಿಗಿಂತ ಒಂದಿಷ್ಟು ಹೆಚ್ಚು ಸಾಮರ್ಥ್ಯವಿರಬೇಕಾಗುತ್ತದೆನ್ನು”, ಎನ್ನುತ್ತಿದ್ದಳಲ್ಲ. ಈಗ ಅವಳ ಈ ಕೆಲಸಗಳನ್ನು ಯಾರು ಮಾಡುತ್ತಾರೆ.? +“ನನಗೆ ಮನೆಗೆಲಸದಿಂದ ಒಂದೇ ಒಂದು ಘಂಟೆಯ ಬಿಡುವು ಸಿಕ್ಕರೆ ಸಾಕು, ಅದನ್ನು ನನ್ನ ಹವ್ಯಾಸದ ಕೆಲಸಕ್ಕೆ ಬಳಸಿಕೊಂಡು ತೃಪ್ತಿ ಪಡೆಯುತ್ತೇನೆ. ಸ್ತೀ ಜಗತ್ತಿನಲ್ಲಿ ಬದಲಾವಣೆ ತರಬೇಕಾದರೆ, ಒಂದಿಷ್ಟು ಸಂಘರ್ಷ ಮತ್ತೊಂದಷ್ಟು ಶ್ರಮ ಹಾಗೂ ಸಾಧನೆಗಳಿಂದಲೇ ಸಾಧ್ಯ ಅಲ್ವಾ? ನಾವು ಈಗ ಕಷ್ಟ ಪಟ್ಟರೆ ಮುಂದಿನ ತಲೆಮಾರಿನ ಸ್ತೀಯರಿಗೆ ಸ್ವಲ್ಪ ಸಹಾಯವಾಗಲೂಬಹುದು ಎಂಬುದು ಭ್ರಮೆಯೊ ನಿಜವೊ ಗೊತ್ತಿಲ್ಲ” ಎಂದು” ಸ್ನೇಹ ಈಗ ತಾನೇ ಹೇಳಿದಂತೆನಿಸುತ್ತಿದೆ. +ಫೋನ್ ಟ್ರಿಣಗುಟ್ಟಿದಾಗ ಅತ್ತ ನಡೆದಳು ಸುನೀತ. ಹರಿದ್ವಾರ, ಗಯಾ, ಪ್ರಯಾಗಗಳಿಗೆಲ್ಲ ಹೋಗುವ ಟೂರ್ ಪ್ಯಾಕೇಜೊಂದರ ಬಗ್ಗೆ ವಿವರಣೆ ನೀಡಿದ ಅವಳ ಅಣ್ಣ, “ಬರುತ್ತೀಯ ಸುನೀತ. ಇನ್ನು ನಾಲ್ಕು ಸೀಟುಗಳಿವೆ. ನೀನು ಬರುವುದಾದರೆ ಬೇರೆ ಯಾರಿಗೂ ಹೇಳುವುದಿಲ್ಲ” ಎಂದ. ಹುಂ ಎನ್ನಲು ಅವಕಾಶವೇ ಇಲ್ಲದ ಸುನೀತ, “ಇಲ್ಲ ಅಣ್ಣ. ದೀಪ್ತಿಗೆ ರಜೆಯೇ ಇಲ್ಲವಂತೆ. ರವೀಗೆ ಈಗ ಕಾಲೇಜ್ ಶುರುವಾಗಿದೆ. ಇನ್ನು… ’..” ಬರುವುದಿಲ್ಲ ಎಂಬುದಕ್ಕೆ ಹಲವಾರು ಕಾರಣಗಳನ್ನು ನೀಡಿದಳು ಅವಳು. ಇದುವರೆಗೆ ತಾನು ಮನೆ ಬಿಟ್ಟು ಹೋಗಿರುವುದೆಂದರೆ ಒಂದು ತವರಿಗೆ ಇನ್ನೊಂದು ನಾದಿನಿ ಮತ್ತು ಅತ್ತಿಗೆಯರ ಊರುಗಳಿಗೆ. ಅದು ಬಿಟ್ಟು ಬೇರೆಲ್ಲಿಗೇ ಹೋಗಲೂ ಸಾಧ್ಯವೇ ಆಗಿಲ್ಲ. “ಸಾಯುವುದರೊಳಗೆ ಒಂದಿಷ್ಟು ತೀರ್ಥಯಾತ್ರೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಕೊಂಡಿದ್ದೆ. ಅತ್ತೆ ಮತ್ತು ನಾದಿನಿಯ ಹೊಣೆ, ಅವರಾದ ಮೇಲೆ ಮಕ್ಕಳ ಓದು, ಆನಂತರ ಮಗಳ ಮದುವೆ, ಎಲ್ಲ ಮುಗಿಯಿತು ಇನ್ನಾದರೂ ಎಲ್ಲಿಯಾದರೂ ಹೋಗಬೇಕು ಎಂದುಕೊಂಡರೆ, ಮಗಳ ಮಗುವನ್ನು ನೋಡಿಕೊಳ್ಳುವ ಜವಾಬುದಾರಿಯನ್ನೂ, ಏನೇನೋ ಕಾರಣಗಳಿಂದಾಗಿ ತಾನೇ ವಹಿಸಿಕೊಳ್ಳಬೇಕಾಯ್ತು. ಸ್ನೇಹ, ನನಗೆ ಮನೆ ಬಿಟ್ಟು ಹೋಗುವ ಅವಕಾಶ ಈ ಜನ್ಮದಲ್ಲಿ ಇಲ್ಲವೆಂದು ಕಾಣುತ್ತದೆ. ಎಷ್ಟು ಪಾಪ ಮಾಡಿದ್ದೇನೋ. ದೇವರ ಸೇವೆ ಮಾಡಿ ನಿವಾರಿಸಿಕೊಳ್ಳಲೂ ಆಗುತ್ತಿಲ್ಲ”, ಎಂದು ಕೊರಗಿ, ಅದನ್ನು ಮನಗೆ ಬಂದ ಸ್ನೇಹಾ ಮುಂದೆ ಹೇಳಿ ಅತ್ತಿದ್ದಳು ಸುನೀತ, ಹಿಂದೊಮ್ಮೆ. +ಅದಕ್ಕೆ ಅವಳು ಎಷ್ಟು ಒಳ್ಳೆಯ ಮಾತು ಹೇಳಿದ್ದಳಲ್ಲ.. “ಸರ್ವಜ್ಙ ಹೇಳಿರುವಂತೆ ಆ ದೇವರು ‘ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ ಎಲ್ಲಿ ನೋಡಿದರಲ್ಲಿ ಶಿವನಿರ್ಪ ಅವ ನಿನ್ನಲ್ಲಿಯೇ ಇರುವ” ಎಂಬುದನ್ನು ತಿಳಿದವರಿಗೆ ದೇವಸ್ಥಾನ, ತೀರ್ಥ ಯಾತ್ರೆ ಮಾಡುವುದೇಕೆ, ಕಲ್ಲು, ಮಣ್ಣು, ಲೋಹಗಳಿಗೆ ದೇವರ ಸ್ವರೂಪ ಕೊಟ್ಟು ಪೂಜಿಸುವ ಅಗತ್ಯವೂ ಬರುವುದಿಲ್ಲ. ಮನದೊಳಗೇ ಪೂಜಿಸಬಹುದು. ತೀರ್ಥ ಯಾತ್ರೆ ಮಾಡಬೇಕಾಗಿರೋದು ದೇವರ ಕೃಪೆ ಅಥವಾ ಸೇವೆಗಾಗಿ ಅಲ್ಲ ಸುನೀತ, ದೂರದ ಜನ, ಕಲೆ, ಕಲಾವಿದರ ಬಗ್ಗೆ ನಿನ್ನ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ, ನಿನ್ನ ಕುಟುಂಬದ ಸದಸ್ಯರೆಲ್ಲರಿಗೆ ಈ ನೆವಗಳಲ್ಲಿ ಅವರವರ ಜವಾಬ್ದಾರಿಗಳೇನು ಎಂಬುದನ್ನು ತಿಳಿಸುವುದಕ್ಕೆ, ನಿನ್ನ ಮೇಲೆ ಅವರು ಸಂಪೂರ್ಣ ಅವಲಂಬಿಸದಂತೆ ಎಚ್ಚರ ವಹಿಸುವುದಕ್ಕೆ””, ಎಂದಿದ್ದಳು ಆ ದಿನ ಇಲ್ಲೇ ಈ ಸೋಫಾ ಮೇಲೆ ಕುಳಿತು. ಅವಳ ಮಾತು ಕಾಶಿಗೆ ಹೋಗಿ ಬಂದಷ್ಟೇ ಸಮಾಧಾನ ಕೊಟ್ಟಿತ್ತು ಸುನೀತಾಗೆ ಆ ದಿನ. ಅಂಥ ಸಮಾಧಾನದ ದಾರಿ ತೋರುವ ಗೆಳತಿ ಅವಳಿಗೆ ಇನ್ನೊಬ್ಬಳಿಲ್ಲ. +ಹತ್ತು ತಿಂಗಳ ಪಾಪು ತೊಟ್ಟಿಲಲ್ಲೇ, ಅಳುವಿಗೆ ಶೃತಿ ತೆಗೆದುಕೊಳ್ಳುವಂತೆ ಕುಸುಕುಸು ಶಬ್ದ ಮಾಡುತ್ತಿರುವುದು ಕೇಳಿಸಿದಂತಾಗಿ ದಡಕ್ಕನೆ ಎದ್ದು ಓಡಿದಳು ಸುನೀತ. ಅರೆ ಈಗ ತಾನೇ ತೂಗಿದ ಹಗ್ಗ ಕೈ ಬಿಟ್ಟು ಬಂದಿದ್ದೇನಷ್ಟೆ. ಆಗಲೇ ಎದ್ದೇ ಬಿಟ್ಟಿತಾ ಈ ಮಗು. ಹುಂ. ಇದು ಎದ್ದಿತೆಂದರೆ ತನ್ನ ಯಾವ ಕೆಲಸವೂ ಮುಂದುವರಿಯುವುದಿಲ್ಲ. ಜ್ವರ ಬೇರೆ ಇರುವುದರಿಂದ ಸೊಂಟದಿಂದ ಕೆಳಗೇ ಇಳಿಯುವುದಿಲ್ಲ ಮಗು. ಇನ್ನೂ ರವಿಯ ಬಟ್ಟೆ ಇಸ್ತೀ ಮಾಡಬೇಕು. ದೀಪ್ತಿಯ ಕುರ್ತಾಗಳನ್ನು ಮಡಿಸಿಡಬೇಕು. ಕೆಲಸದವಳು ಒಗೆದ ಬಟ್ಟೆ ಹಿಂಡಿ ಹರವಬೇಕು, ಅಡಿಗೆ ಮಾಡಬೇಕು. ಪಾಪುಗೆ ರಾಗಿ ಅರಳ್ಹಿಟ್ಟು ತಯಾರಿಸಲು ರಾಗಿ ಹುರಿಯ ಬೇಕು. ಕೆಲಸ ಮುಗಿಯದಿದ್ದರೆ, ಗಂಡ ಮಕ್ಕಳು ಮನೆಯಲ್ಲಿರುತ್ತೇವೆಂದರೂ ತನಗೆ ಸ್ನೇಹಳ ಮನೆಗೆ ಹೋಗಲಾಗುವುದಿಲ್ಲ. ಹೇಗೆಂದರೆ ಹಾಗೆ ಮನೆಯನ್ನು ಬಿಟ್ಟು ಹೋಗುವುದು ತನ್ನ ಮನಸ್ಸಿಗೆ ಒಗ್ಗುವುದೇ ಇಲ್ಲ. ಅದಕ್ಕೇ ಅಲ್ಲವೇ ಸ್ನೇಹ ಹೇಳುತ್ತಿದ್ದುದು, “ಒಗ್ಗಿಸಿಕೊಳ್ಳಬೇಕು ಸುನೀ. ಯಾವಾಗ ಯಾವುದು ಮುಖ್ಯವೋ ಅದನ್ನು ಮೊದಲು ಮಾಡಬೇಕು. ಎಷ್ಟು ಅಗತ್ಯವೋ ಅಷ್ಟು ಮಾತ್ರ ಹಚ್ಚಿಕೊಳ್ಳಬೇಕು. ಉಳಿದವರಿಗೂ ಕೆಲಸ ಹೇಳಿ ಕೊಡಬೇಕು. ಮಕ್ಕಳಿಗೆ ಅನಾಥತನಕ್ಕೆ, ಗಂಡನಿಗೆ ವಿಧುರತನಕ್ಕೆ ಸಿದ್ಧಗೊಳಿಸುವ ಮಟ್ಟಕ್ಕೆ ಹೆಗುವುದು ಬೇಡ, ಕಡೆಯ ಪಕ್ಷ ಒಂದೆರಡು ದಿನ ಮನೆಯಲ್ಲಿ ನೀನಿಲ್ಲದಿದ್ದಾಗಲಾದರೂ ಅವರು ಸಮಸ್ಯೆ ಇಲ್ಲದೆ ಬದುಕು ನಡೆಸುವಷ್ಟಾದರೂ ಕಲಿಯ ಬೇಡವೇ? ಅಷ್ಟೇ ಬರದಿದ್ದರೆ ಜೀವನದ ಕಷ್ಟ-ನಷ್ಟಗಳನ್ನು ಎದುರಿಸಲು ಅವರು ಹೇಗೆ ಸಮರ್ಥರಾಗಬಲ್ಲರು ಹೇಳು? ಅಷ್ಟಿದ್ದರೆ ಹೇಗೆಂದರೆ ಹಾಗೆ ನೀನು ಮನೆಯನ್ನು ಬಿಟ್ಟು ಬಂದಿದ್ದರೂ, ನೀನು ಮತ್ತೆ ಮನೆಗೆ ಹಿಂತಿರುಗುವ ಹೊತ್ತಿಗೆ ನಿನ್ನಂತೆಯೇ ಮನೆಯನ್ನು ಅಂದವಾಗಿ ಇಡಬಲ್ಲರು”, ಎಂದು. +ಆದರೆ “ಊಹು ಸ್ನೇಹ ತನ್ನಂತಲ್ಲ. ಮಕ್ಕಳನ್ನು ತನ್ನಷ್ಟು ಮುದ್ದಿಸುವುದಿಲ್ಲ. ಅವುಗಳ ಕಡೆ ತಾನು ಕೊಡುವಷ್ಟು ಗಮನ ಕೊಡುವುದಿಲ್ಲ. ಮನೆಯಲ್ಲಿ ಯಾರಿಗೂ ತೊ೦ದರೆಯಾಗಲೀ ನೋವಾಗಲೀ ಕೊಡುವುದು ತನಗಿಷ್ಟವಿಲ್ಲ”” ಎಂದು ಸುನೀತಳ ಭಾವನೆ ಇದ್ದುದರಿಂದಲೋ ಏನೋ ಅವಳು ಸ್ನೇಹಳ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಅವಳ ಎರಡೂ ಮಕ್ಕಳೂ ಸುನೀತಳ ಮಕ್ಕಳಿಗಿಂತ ಒಂದೆರಡು ವರ್ಷ ಚಿಕ್ಕವೇ. “ಈಗ ಏನು ಮಾಡುತ್ತವೋ ಏನೋ ಪಾಪ. ಅವುಗಳನ್ನು ಸಂತೈಸಿ ಒಂದೆರಡು ಸಮಾಧಾನದ ಮಾತುಗಳನ್ನಾಡಿಯಾದರೂ ಬರಬೇಕು”, ಯೋಚಿಸುತ್ತಲೇ ತೊಟ್ಟಿಲು ತೂಗಿ, ಮಗುವಿಗೆ ಚೆನ್ನಾಗಿ ನಿದ್ದೆ ಹತ್ತಿದೆ ಎಂಬುದನ್ನು ಧೃಢ ಪಡಿಸಿಕೊಂಡು, ರವಿಯೊ ಅಥವಾ ಗಂಡನೋ ಬರುವದರೊಳಗೆ ಅಡುಗೆ ಮುಗಿಸಿ, ತಯಾರಾಗಿ ಕುಳಿತುಬಿಡಬೇಕೆಂದುಕೊಳ್ಳುತ್ತ, ತರಕಾರಿಗಳನ್ನು ಮುಂದೆ ಹಾಕಿಕೊಂಡಳು. ಈರುಳ್ಳಿ ಹುಳಿ ಮಾಡಿ, ತಿಳಿ ಸಾರು ಮಾಡಿಬಿಡುವುದೆಂದು, ಸರಸರನೆ ಈರುಳ್ಳಿ ಮತ್ತು ಸಾರಿಗೆ ಟೊಮ್ಯಾಟೊ ಹೆಚ್ಚಿ ಕುಕ್ಕರ್‌ಗೆ ಅಣಿ ಮಾಡಿಕೊಂಡಳು. ಸ್ನೇಹಾಳ ಶವವನ್ನು ಎಷ್ಟು ಹೊತ್ತಿಗೆ ತೆಗೆಯುತ್ತಾರೋ ಕೇಳಿಯೇ ಬಿಟ್ಟರೆ ಅಷ್ಟರೊಳಗೆ ಹೋಗಬಹುದೆನಿಸಿ, ಸ್ನೇಹಳ ಮನೆಗೆ ಫೋನ್ ಮಾಡಿದಳು. ಆದರೆ ನಾಲ್ಕು ಸಲ ಮಾಡಿದರೂ ಫೋನ್ ಎಂಗೇಜ್ ಇದ್ದುದರಿಂದ, ಸಹನೆ ಸಮಯ ಎರಡೂ ಇಲ್ಲದ ಅವಳು, ತನ್ನ ಕೆಲಸಗಳನ್ನು ಬೇಗ ಬೇಗನೆ ಮುಗಿಸುವ ಸಲುವಾಗಿ ಕೆಲಸದ ಕೈಗಳಿಗೆ ವೇಗ ತುಂಬಿದಳು. ಅಡುಗೆ ಮುಗಿಯುವ ಹಂತಕ್ಕೆ ಬಂದಾಗ ಹನ್ನೆರಡೂವರೆ ಆಗಿತ್ತು. ಪ್ರತಿದಿನ ಹನ್ನೆರಡಕ್ಕೇ ಬರುವ ಕಿರಿಮಗ ರವಿ ಕಾಲೇಜಿನಿಂದ ಇನ್ನೂ ಬರಲಿಲ್ಲವಲ್ಲ ಎಂದು ತಳಮಳಿಸಿದಳು. ಕೆನೆಯ ಮೇಲಿನ ಇರುವೆಯಂತೆ ದಾರಿ ತೋರದೇ ಚಡಪಡಿಸುತ್ತ ಬಾಗಿಲಿಗೆ ಬಂದು ಕಾಯುತ್ತ ನಿಂತಾಗ ಆ ದೂರದಲ್ಲಿ ಇಬ್ಬರು ಗೆಳೆಯರೊಂದಿಗೆ ರವಿಯ ಮುಖ ಕಾಣಿಸಿತು. ಒಳಗಿನ ತಳಮಳ ಜರ್ರನೆ ಇಳಿದು ಉಸಿರು ನಿರಾಳಗೊಂಡಿತು. ಸೀರೆ ಬದಲಿಸಲೆಂದು ಒಳಗೆ ಹೋದರೆ, ಮಲಗಿದ ಮಗು ಮತ್ತೆ ಎದ್ದಿತ್ತು. ಎದ್ದಿದ್ದೇನೆ ಎಂಬುದನ್ನು ತಾರಕ ಮಟ್ಟದ ತನ್ನ ಅಳುವಿನಲ್ಲಿ ತಿಳಿಸತೊಡಗಿತ್ತು. ಅದರ ಪುಟ್ಟ ಹೊಟ್ಟೆಗಾಗಿ ಸಿರಿಲ್ಯಾಕ್ ಬೆರೆಸುತ್ತ, ಮನೆಯೊಳಗೆ ಕಾಲಿಟ್ಟ ರವಿಗೆ ಆತುರದಲ್ಲಿ ಹೇಳಿದಳು ಸುನೀತ, “ರವೀ ಯಾಕೋ ಲೇಟ್ ಇವೊತ್ತು? ಸ್ನೇಹಾ ಆಂಟಿ ಹೋಗಿ ಬಿಟ್ರಂತೆ. ನಾನೊಂದರ್ಧ ಘಂಟೆ ಅವರ ಮನೆಗೆ ಹೋಗಿ ಬರಣಾಂತ ನಿಂಗೇ ಕಾಯ್ತಾ ಇದ್ದೆ”. ರವಿಯ ಮೌನಕ್ಕೆ ಅವಕಾಶ ಕೊಟ್ಟು ಮುಂದುವರಿಸಿದಳು ಅವಳು. “ಪಾಪು ಹೊಟ್ಟೆ ತುಂಬಿದರೆ ಹೆಚ್ಚು ಗಲಾಟೆ ಮಾಡಲಾರದು. ನಾನು ಬರುವವರೆಗೂ ಒಂಚೂರು ನೋಡಿಕೊಂಡಿರ್ತೀಯ””? +ರವಿಯ ಉತ್ತರ ಸಿಟ್ಟಿನಲ್ಲಿ ಸಿಡಿಯಿತು. “ಅಂದ್ರೆ ನೀನು ಪಾಪುನ್ನ ಕರ್ಕೊಂಡ್ ಹೋಗಲ್ವ? ನಾನು ಮನೆಯಲ್ಲಿರಲ್ಲಮ್ಮ. ನಂಗೆ ಕ್ರಿಕೆಟ್ ಮ್ಯಾಚ್‌ಗೆ ಪ್ರಾಕ್ಟೀಸ್ ಇದೆ. ಆಮೇಲೆ ಟೂರ್ನಮೆಂಟ್‌ಗಾಗಿ ಸೆಲೆಕ್ಷನ್ಸೂ ಇದೆ ಇವೊತ್ತು. ನಾನೀಗ ಊಟ ಮಾಡಿದ್ದೇ ಕಾಲೇಜ್‌ಗೆ ಹೋಗ್ಬೇಕು. ನಂದು ಸ್ಪೋರ್ಟ್ಸ್ ನಿಕ್ಕರ್ ಇಸ್ತಿ ಮಾಡಿದ್ಯಾ? ನನ್ನ ಸಾಕ್ಸ್ ಯಾವೊತ್ತು ಒಗೆಯಕ್ಕೆ ಹಾಕಿದ್ದು? ಇವೊತ್ತೊ ನಿನ್ನೇನೋ”?” +“ಇಲ್ಲ. ಬೆಳಿಗ್ಗೆಯಿಂದ ಮನಸ್ಸಿಗೇ ಸರಿ ಇಲ್ಲ. ಏನೂ ಮಾಡಿಲ್ಲ ನಾನು. ನೀನು ಈಗ ಪ್ರಾಕ್ಟೀಸ್‌ಗೆ ಹೋಗ್ಬೇಡ. ಸೆಲೆಕ್ಷನ್ ಟೈಂಗೆ ಹೋಗುವಿಯಂತೆ. ನೀನು ಊಟ ಮಾಡಿ ರೆಡಿ ಆಗೋದ್ರೊಳಗೆ ನಾನು ಬಂದು ಬಿಡ್ತೀನಿ ರವಿ”, ಎಂದು ನಾಲ್ಕು ಸಲ ಸುನೀತ ಮೆಲು ಮಾತಿನಲ್ಲಿ ಗೋಗರೆದಿದ್ದರೂ ಕೇಳಿಸಿಕೊಳ್ಳಲೂ ಇಚ್ಛಿಸದ ರವಿ ಸಿಡುಕಿ ತಿರಸ್ಕರಿಸಿದ್ದ. “ಎಲ್ರ ಮನೇಲಿ ಅಮ್ಮಂದಿರು ಮಕ್ಳಿಗೆ ಎಷ್ಟು ಎನ್ಕರೇಜ್ ಮಾಡ್ತಾರೆ. ನೀನು ಶುದ್ದ ಹಳ್ಳಿ. ಕ್ರಿಕೆಟ್‌ನ ಇಂಪಾರ್ಟೆಂಸೇ ಗೊತ್ತಿಲ್ಲ ನಿಂಗೆ. ಅಡುಗೆಮನೆ ಬಿಟ್ರೆ ಬೇರೆ ಪ್ರಪಂಚನೇ ಇಲ್ಲ ನಿಂಗೆ. ಹೋಗಿ ಹೋಗಿ ನಿನ್ನ ಮುಂದೆ ಹೇಳ್ತೀನಲ್ಲ ನಾನು”, ಎಂದು ಊಟವೂ ಮಾಡದೇ ಕಾಲು ದಪದಪನೆ ಬಡಿಯುತ್ತ ಹೊರಟೇ ಹೋದ. +ಸುನೀತ ಅಸಹಾಯಳಾಗಿ ಕುಸಿದು ಕುಳಿತಳು. “ಸುನೀ, ನೀನು ಅವರ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತ ಹೋಗುವವರೆಗೆ ಅವರ ಕೆಲಸಗಳನ್ನು ನೀನು ಮಾಡುತ್ತಿರುವೆ ಎನ್ನಿಸುವುದಿಲ್ಲ. ಬದಲಿಗೆ ಅದು ನಿನ್ನದೇ ಜವಾಬ್ದಾರಿ ಮತ್ತು ಕರ್ತವ್ಯ ಎನಿಸುತ್ತದೆ ಅವರಿಗೆ. ನಿನ್ನ ಉಸಿರೊಳಗೂ ಆಸೆ ಇದೆ. ನಿನ್ನ ಅಸ್ತಿತ್ವಕ್ಕೂ ಸಾರ್ಥಕತೆಯ ತೃಪ್ತಿ ಪಡೆವ ದಾರಿ ಬೇಕಿದೆ. ನಿನ್ನ ಇರುವಿಕೆ ಬರೀ ಇನ್ನೊಬ್ಬರಿಗಾಗಿಯೇ ಅಲ್ಲ ಎನ್ನುವುದನ್ನು ನಿನ್ನ ಕುಟುಂಬದ ಇತರರೆಲ್ಲರಿಗೂ ತಿಳಿಸಿಕೊಡಬೇಕು ನೀನು. ನಿನ್ನ ಆಸೆಯೊಂದಿಗೇ ಅವರ ಆಸೆಗಳನ್ನು ಬೆಳೆಸಬೇಕು. ನಿನ್ನ ಸಾಧನೆ-ಸೋಲುಗಳೊಂದಿಗೆ ಅವರ ಸಿದ್ಧಿ-ಸಾಧನೆಗಳನ್ನು ಬೆ೦ಬಲಿಸಬೇಕು. ಅವರದೆಲ್ಲವನ್ನೂ ನಿನ್ನದಾಗಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ ಸುನೀ”, ಸ್ನೇಹ ಕಳೆದ ವರ್ಷ ಬಂದಿದ್ದಾಗ ಇಂಥದೇ ಒಂದು ಪ್ರಸಂಗವನ್ನು ಕಣ್ಣಾರೆ ಕಂಡಾಗ, ತನಗೆ ಅನಿಸಿದ್ದನ್ನು ಹಲವಾರು ರೀತಿಯಲ್ಲಿ ಉಪದೇಶಿಸಿದ್ದಳು. ‘ಟ್ರಿಣ್ ‘ಟಿಣ್” ಕರೆಗಂಟೆ ಕೂಗಿತು. ’ ಕಾಗೆಗಳಂತೆ ತಲೆ ಕುಕ್ಕುತ್ತಿದ್ದ ಅನಿಸಿಕೆಗಳೆಲ್ಲ ಕರೆಗಂಟೆಯ ಸದ್ದಿಗೆ ಭರ್ರನೆ ಹಾರಿ ಹೋದವು. +ಮುಂಬಾಗಿಲಲ್ಲಿ ನಿಂತ ಜನಗಳ ಒಂದು ಪುಟ್ಟ ದಂಡು, ಅದರ ನಡುವೆ ಒಬ್ಬ ಧಡೂತಿ ವ್ಯಕ್ತಿಯನ್ನು ಕಂಡಿದ್ದೇ, ಯಾರು, ಯಾಕೆ ಬಂದಿದ್ದಾರೆ ಏನು ಎತ್ತ ಎಂಬುದೊಂದೂ ಅರ್ಥವಾಗದೆ ಅವಳ ಭಯ, ಝಲ್ಲನೆ ಮುಖಕ್ಕೇರಿ ಕಣ್ಣ ಮೂಲಕ ಹೊರ ಬರುವ ಮೊದಲೇ, ಅವರಲ್ಲೊಬ್ಬ ಮುಂದೆ ಬಂದು ಪಾಂಪ್ಲೆಟ್ ಒಂದನ್ನು ಇವಳ ಕೈಗಿಟ್ಟು ಹೇಳಿದ, “ದಯವಿಟ್ಟು ಇವರಿಗೇ, ಈ ಈಶ್ವರಪ್ಪನವರಿಗೇ ಓಟ್ ಮಾಡಬೇಕು ಮೇಡಂ. ನಿಮ್ಮ ಮನೆಯವರಿಗೆಲ್ಲ ಹೇಳಿ, ಅಂದಾಗ ಝಲ್ಲನೇರಿದ್ದ ಭಯ ಸೊರ್ರನೆ ಇಳಿದಿತ್ತು. “ದಯವಿಟ್ಟು ನಿಮ್ಮ ಓಟು ನಮಗೇ ಕೊಡಬೇಕು, ಬಂದ ಸ್ಪರ್ಧಿಯೂ ಕೈ ಮುಗಿದು ಇನ್ನೊಂದೆರಡು ಮಾತಾಡಿ ತನ್ನ ಹಿಂಬಾಲಕರೊಂದಿಗೆ ಮುನ್ನಡೆದ. ಅವರೆಲ್ಲ ಅತ್ತ ಹೋದ ಮೇಲೆ ತಲೆಯಲ್ಲಿ ಅಲೋಚನೆಗಳು ಝೇಂಕರಿಸಿದವು. “ಈಗ ಚುನಾವಣೆ ನಡೆಯಲಿದೆಯೇ? ಯಾವುದಕ್ಕೆ? ಮನೆಯಲ್ಲಿ ಗಂಡ-ಮಕ್ಕಳು ಯಾರೂ ಈ ಬಗ್ಗೆ ಮಾತಾಡಿದ್ಡೇ ಕೇಳಲಿಲ್ಲವಲ್ಲ. ಮೊಮ್ಮಗುವಿನ ಜವಾಬುದಾರಿಯೂ ಹೆಗಲೇರಿದ ಮೇಲೆ ಪೇಪರ್ ಓದುವುದೇ ಅಪರೂಪ ಆಗಿಬಿಟ್ಟಿದೆ. ತಿಂಗಳಲ್ಲಿ ಸರಾಸರಿ ನಾಲ್ಕು ದಿನವೂ ಆಗದ ಓದು. ವಿವರ ತಿಳಿಯಲು ಪಾಂಪ್ಲೆಟ್ ಮೇಲೆ ಕಣ್ಣಾಡಿಸಿದಳು. +ಮತ್ತೆ ಸ್ನೇಹಳ ಹಳೆಯ ಮಾತುಗಳ ಮೆರವಣಿಗೆ. “ ಇದು ಮಹಿಳಾ ಸಬಲೀಕರಣ ವರ್ಷ. ಗೊತ್ತಿದೆಯಾ ನಿನಗೆ? ಇಲ್ಲ. ಮಹಿಳೆಯರ ಪ್ರಗತಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಮೂಲಕ ದೇಶದ ಮುನ್ನಡೆಗಾಗಿ ಇಡೀ ಜಗತ್ತು ಸಜ್ಜುಗೊಳ್ಳುತ್ತಿದೆ. ನಾಟಕವೊ ನಿಜವೊ, ಸಮಾನತೆಗೆ ಸಮಂಜಸ ದಾರಿಗಳನ್ನು ಹುಡುಕುವ ಯೋಜನೆಗಳ೦ತೂ ತಲೆ ಎತ್ತುತ್ತಿವೆ. ಆದರೆ ನಿನ್ನಂಥ ಮಹಿಳೆಯರು, ನಿಮ್ಮ ಇಕ್ಕೆಲಕ್ಕೂ ರೆಕ್ಕೆಗಳನ್ನು ಹಚ್ಚಿದರೂ ತೆವಳುತ್ತ ಮನೆಯನ್ನೇ ತಬ್ಬಿಕೊಂಡಿರುತ್ತಿದ್ದರೆ ಯಾವುದೇ ಯೋಜನೆಗಳ ಸಫಲತೆ ಹೇಗೆ ಸಾಧ್ಯವೇ ಸುನೀ? ಸಮಾನತೆ ಮತ್ತು ಸ್ತೀ ಸ್ವಾತಂತ್ರ್ಯವನ್ನು ಇಡೀ ಸಮಾಜದಲ್ಲಿ ತರುವುದಕ್ಕಾಗಿ ಸೆಣಸುತ್ತಿರುವ ಸ್ತೀಯರಿಗೆ ನಿಮ್ಮಗಳ ಬೆಂಬಲವಾದರೂ ಬೇಡವೆ? ಇಲ್ಲವಾದರೆ ಅವರು ಮಾಡುವುದೆಲ್ಲ ಸಮಾಧಿಯೊಳಗಿನ ಚಟುವಟಿಕೆಗಳಂತೆಯೆ ಸರಿ”. +“ಸುನೀ. ಅಡುಗೆ ಏನು ಮಾಡಿದೀಯ? ಆಗಿದೆಯಾ ಇನ್ನೂ ಇಲ್ವಾ? ಎಂದಿಗಿಂತ ಬೇಗ ಮನೆಗೆ ಹಿಂತಿರುಗಿದ ಸುನೀತಳ ಗಂಡ, ಬಿಟ್ಟ ರೆಪ್ಪೆಯಲ್ಲಿ ಬಾಗಿಲತ್ತ ನೋಡುತ್ತಿದ್ದ ಸುನೀತಳನ್ನು ಕೇಳುತ್ತಲೇ ಒಳ ಬಂದ. ‘ಹಂ? ಎಚ್ಚರಗೊಳ್ಳಲು ಕೆಲಕ್ಷಣ ತೆಗೆದುಕೊಂಡು, ತಡವರಿಕೆಯ ಉತ್ತರ ಜೋಡಿಸಿದಳು. “ಸೊಪ್ಪಿನ ಹುಳಿ. ಮತ್ತೆ ಸಾರು. +“ಬಾತ್ ಯಾಕೆ ಮಾಡ್ಲಿಲ್ಲ? ಮೆಂತ್ಯೆಸೊಪ್ಪು-ಬಟಾಣಿ ಬಾತ್ ಮಾಡೂ೦ತ, ನಿನ್ನೆ ಅದಕ್ಕಾಗಿ ಆಪಿಸ್‌ನಿಂದ ಬಂದವನೇ ಮಾರ್ಕೆಟ್‌ಗೆ ಹೋಗಿ ಡೊಣ್ಣೆ ಮೆಣಸಿನಕಾಯಿ, ಆಲೂಗಡ್ಡೆ, ಸೊಪ್ಪು, ಎಲ್ಲ ತಂದಿದೀನಿ. ಅಂದ್ರೂ ಅದೇನು ಸೋಮಾರಿತನವೊ”, ಎಂದವನು, ಸ್ನೇಹಾಳ ಸಾವಿನ ಸುದ್ದಿ ತಿಳಿದು ಶಾಕ್ ಆಗಿ ಕೆಲವು ಕ್ಷಣಗಳ ಮೌನದ ನಂತರ “ಸ್ನೇಹಾ ಮನೆಗೆ ಇನ್ನೂ ಹೋಗಕ್ಕಾಗಿಲ್ವ? ಆದ್ರೆ ಹೇಗಿದ್ರೂ ಬೆಳಿಗ್ಗೆಯಿಂದ ಮನೇಲೆ ಕೂತಿದೀಯ, ಎಲ್ಲೂ ಹೋಗಿಲ್ಲ, ಬಾತ್ ಮಾಡಿದ್ದರೆ ಇಷ್ಟುಹೊತ್ತಿಗೆ ಆಗಿಯೇ ಹೋಗೋದಾ? ನಂಗೆ ಆ ಸಾರು, ಹುಳಿಗಳೆಲ್ಲ ಬೇಜಾರು”, ಎಂದು ಸ್ನೇಹಾ ಮತ್ತು ಸುನೀತಳ ಗೆಳೆತನದ ಗಾಢತೆ ಅರಿಯದ ಗಂಡ ಕೈಕಾಲು ತೊಳೆಯುತ್ತಲೇ ತನ್ನ ಅಸಮಾಧಾನವನ್ನು ನಿಧಾನದ ಪದಗಳಲ್ಲಿ ಬೇಸರದ ರಾಗದಲ್ಲಿ ಅವಳ ಮುಂದೆ ಸುರಿದ. “ಹೋಗಲಿ ರಾಯಿತ ಮಾಡಿ, ಸಂಡಿಗೆ ಕರಿದು ಬಿಡು. ಅದಕ್ಕೆಷ್ಟು ಮಹಾ ಟೈ೦ ಆಗತ್ತೆ ಅಲ್ವಾ? ನಾನೂ ಹೆಲ್ಪ್ ಮಾಡ್ತೀನಿ”, ಎಂದು ಒಳ್ಳೆಯ ಮಾತಿನಲ್ಲಿ ಕೇಳಿದಾಗ, ಈ ವರೆಗೆ ನೆನಪಿನ ಅಂಗಳದಿ೦ದ ಮೆರೆದುಹೋದ ಸ್ನೇಹಾಳ ಎಲ್ಲ ಮಾರ್ಗಸೂಚಿಗಳನ್ನು ಒಂದೆಡೆಗೆ ತಳ್ಳಿ, ಗ೦ಡ ಮಕ್ಕಳಿಗೆ ತೃಪ್ತಿ ಪಡಿಸಿ ಮನೆಯಲ್ಲಿ ನೆಮ್ಮದಿಯಾಗಿರುವುದೇ ಮುಖ್ಯವೆನಿಸಿ, ಗಂಡ ಹೇಳಿದುದನ್ನು ತಯಾರಿಸಲು ತೊಡಗಿದಳು ಸುನೀತ. ಈಗ ಅವನು ತೃಪ್ತಿಯಿಂದ ಸ್ನೇಹಾಳ ಸಾವಿನ ಸುದ್ದಿಯ ಹಿಂದುಮುಂದಿನ ವಿವರಗಳನ್ನೆಲ್ಲ ಕೇಳುತ್ತ ಅವಳಿಗೆ ಸಹಾಯ ಮಾಡಲೆಂದು ಎಣ್ಣೆಯನ್ನು ಕವರಿನಿಂದ ಬಾಂಡಲೆಗೆ ಸುರಿಯಲು ಹೋದ. ಸರಿಯಾಗಿ ಬರದೇ ಅರ್ಧ ನೆಲಕ್ಕೆ ಚೆಲ್ಲಿದ. ರಾಯಿತಕ್ಕೆ ಹಾಕಬೇಕಾದ ಸಾಮಗ್ರಿಗಳ ಬಗ್ಗೆ ಕೇಳಿ ಉಪ್ಪಿನ ಬದಲು ಸಕ್ಕರೆ ಹಾಕಿ ಲೊಚಗುಟ್ಟಿದ. ಕಾಯಿ ತುರಿದು ಕೊಟ್ಟು, “ನೋಡು ನಿಂಗೆ ಅಗತ್ಯವಿದ್ದಾಗ ತಿಳಿದುಕೊಂಡು ಹೀಗೆ ಹೆಲ್ಪ್ ಮಾಡುವಂಥ ಮನುಷ್ಯ ಸಿಕ್ಕಿದೀನಲ್ಲ ನಾನು, ಅದಿಕ್ಕೆ ಸಂತೋಷ ಪಟ್ಟುಕೋಬೇಕು ನೀನು”, ಎಂದವನು “ಚೆಲ್ಲಿದ್ದನೆಲ್ಲ ಸ್ನೇಹಾ ಮನೆಯಿಂದ ಬಂದ್ಮೇಲೆ ಕ್ಲೀನ್ ಮಾಡು” ಎಂದು ಬಹಳ ಉಪಕಾರದ ಮಾತೆಂಬಂತಹ ಶೈಲಿಯಲ್ಲಿ ಹೇಳಿದ. ‘ಗಂಡಸು ಒಂದೇ ಒಂದು ದಿನ ಮನೆಯಲ್ಲಿ ಒಂದು ಸಣ್ಣ ಕೆಲಸ ಮಾಡಿದರೆ ಗುಡ್ಡ ಒಡೆದನೆಂಬಂತೆ ಹೆಂಗಸರಾದ ನಾವು ಕೊಚ್ಚಿಕೊಳ್ಳುತ್ತೇವೆ. ಅದೇ ನಾವು ಗುಡ್ಡವೇ ಕೊರೆದರೂ, ಅದೇನು ಮಹಾ ದೊಡ್ಡ ಕೆಲಸ ಎನ್ನುತ್ತಾರೆ ಅವರುಗಳು. ಅವರು ಅನ್ನುವುದು, ಮಾಡುವುದು ಎಲ್ಲವೂ ದೊಡ್ಡದು ಎಂಬಂತೆ ನಾವು ಭಾವಿಸುತ್ತೇವೆ. ಅವರ ಸಹಾಯಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ ಕೆಲವು ಸಲ. ನಾವೂ ತಿಳಿಯಪಡಿಸಿದರೆ ತಾನೇ ಪ್ರತಿ ದಿನದ ನಮ್ಮ ಕೆಲಸ ಎಷ್ಟು ಮಹತ್ವದ್ದು ಎಂಬುದು ಯಾರಿಗಾದರೂ ಗೊತ್ತಾಗುವುದು”? ಎಂದ ಸ್ನೇಹಳ ಮಾತು ಹಾರಿ ಬಂದು, ಚೆಲ್ಲಿದ ಎಣ್ಣೆಯನ್ನು ನೋಡುತ್ತಿದ್ದವಳ ಕಿವಿಯಲ್ಲಿ ಕುಳಿತಿತು. +ಎಲ್ಲ ಮುಗಿದು, ಅವಳ ಗಂಡ ತಟ್ಟೆಯಲ್ಲಿ ಬಡಿಸಿಕೊಂಡ ಮೇಲೆ ದುಗುಡದೊಂದಿಗೇ ಆಟೋಕ್ಕಾಗಿ ಅರಸುತ್ತ ಮೆಟ್ಟಿಲಿಳಿದಳು ಅವಳು. “ಸ್ನೇಹಾಗೆ ಹಾರ್ಟ್ ಅಟ್ಯಾಕ್ ಅಷ್ಟೊಂದು ಜೋರಾಗಿತ್ತೇ? ಪಾಪ! ಅಲ್ಲಿ ಇಲ್ಲಿ ಸಂಶೋಧನೆ ಮಾಡುವುದರಲ್ಲೇ ದಡಗುಟ್ಟುವ ದಿನಗಳನ್ನು ಕಳೆದಳು. ಅರೆ ಬರೆ ಅಡುಗೆ, ಅರೆ ಬರೆ ಮಾತು. ಒತ್ತಡದಲ್ಲೇ ಸದಾ ಕೆಲಸ. ಒಂದಿಷ್ಟು ನೆಮ್ಮದಿ ಇಲ್ಲ. ತೃಪ್ತಿ-ಸಂತಸಗಳ ಮಾತಿಲ್ಲ. ಯಾಕಷ್ಟು ಒದ್ದಾಡಬೇಕೋ. ಮುದಿಯಾದ ಮೇಲೆ ಬರೀ ಮನೆಯೇ ತಾನೇ ಎನ್ನುತ್ತಿದ್ದವಳು, ಮುದಿತನದ ಮೊದಲ ಮೆಟ್ಟಲ ಮೇಲೆ ನಿಲ್ಲುವಾಗಲೇ ಕುಸಿದೇ ಬಿಟ್ಟಳಲ್ಲ”.. ಆಟೋ ಒಂದು ಸರ್ರನೆ ಕಣ್ಣ ಮುಂದೋಡಿದಾಗ, ಎಚ್ಚರಗೊಂಡು ಕೈ ಅಡ್ಡ ಹಿಡಿದಳು. ಎಲ್ಲಿಗೆ ಹೋಗಬೇಕಾಗಿದೆ ಎಂದು ಇವಳು ಹೇಳುವ ಮುನ್ನವೇ ಅವನೇ ಹೇಳಿದ. “ಬಸವೇಶ್ವರ ನಗರ ಬರ್ತೀರಾ”? ಅವಳು ಅಲ್ಲ ಎಂಬಂತೆ ಅಡ್ಡ ತಲೆ ಆಡಿಸಿದೊಡನೆ ಏನೂ ಹೇಳದೆ ಅಟೋ ಓಡಿಸಿದ ಅವನು. +“ಸುನೀ. ಪಾಪು ತಿಂದಿದ್ದೆಲ್ಲ ವಾಂತಿ ಮಾಡಿಕೊಂಡಿದೆ. ಹಾಸಿದ್ದು, ತೊಟ್ಟಿದ್ದು ಎಲ್ಲ ಒದ್ದೆ ಆಗಿದೆ. ನಂಗೆ ಕ್ಲೀನ್ ಮಾಡಕ್ಕೆ ಬರಲ್ಲ. ನೀನೇ ಮಾಡಿ ಹೋಗು ಬಾ”. ಮಗುವನ್ನು ಮನೆಯಲ್ಲೇ ಬಿಟ್ಟು, ಹಾರು ಹೊಡೆದ ಬಾಗಿಲನ್ನು ತೆರೆದಂತೆಯೇ ಬಿಟ್ಟು, ಸುನೀತ ನಿಂತಿದ್ದಲ್ಲಿಯೇ ಬಂದು ಕರೆದ ಅವಳ ಗಂಡ. “ಮಾಡಲ್ಲ ಅಥವಾ ಮಾಡಲು ಮನಸ್ಸಿಲ್ಲ, ಎನ್ನುವ ಬದಲು ಉಪಯೋಗಿಸುವ ಪದವೇ ‘ಬರಲ್ಲ’ ಎಂಬುದು””, ಎಂದು ಸ್ನೇಹ ಎಂದೋ ಹೇಳಿದ ಮಾತು, ಅವಳೊಂದಿಗೆ ಮನೆಯವರೆಗೂ ಹಿಂದೆ ಬಂದಿತು. “ಹೆಣ್ಣಿಗೆ ಹತ್ತಾದ ಕೂಡಲೇ ಹೆಜ್ಜೆ ಹೆಜ್ಜೆಗೆ ತಲೆಗೆ ಮಟ್ಟಿ ಮಾಡಿಸುವಂತೆಯೇ ಗಂಡಿಗೂ ಮಾಡಿಸಿದರೆ, ಅವರೂ ಮನೆಗೆಲಸದ ವಿಷಯಕ್ಕೆ ಸ್ವಾವಲಂಬಿಯಾದಾರು. ಹೆಂಗಸರ ಸಾಧನೆಗೂ ಅದು ನೆರವಾದೀತು” ಎನ್ನುತ್ತಿದ್ದ ಸ್ನೇಹಾಳ ಮಾತು ಮೊಟ್ಟ ಮೊದಲ ಬಾರಿಗೆ ನಿಜವೆನ್ನಿಸಿತು. ಮನೆಗೊಮ್ಮೆ ಅಂಟಿಬಿಟ್ಟರೆ ಬಿಡುಗಡೆಯೂ ಇಲ್ಲ, ನೆಮ್ಮದಿಯೂ ಇಲ್ಲ, ಎನ್ನುವುದೂ ಇಂದಿನ ಪರಿಸ್ಥಿತಿ ತಿಳಿಸಿತ್ತು. +ಮಗು ವಾಂತಿ ಮಾಡಿದೊಡನೆಯೇ ಏನು ಮಾಡಲೂ ತೋಚದ ಗಂಡ, ಅದನ್ನು ಇದ್ದಲ್ಲಿಯೇ ಬಿಟ್ಟು ರಸ್ತೆಗೆ ಓಡಿ ಬಂದಿದ್ದರಿಂದ ಅಳುತ್ತಲಿದ್ದ ಮಗು ಮ೦ಚದ ಅಂಚಿಗೆ ಬಂದು, ಸುನೀತ ಮನೆಯೊಳಗೆ ಕಾಲಿಡುವಾಗಲೇ ನೆಲಕ್ಕೆ ಬಿದ್ದಿತು. ಅದರ ಕಾಲಿಗೆ ಆದ ಗಾಯಕ್ಕೆ ಯಾವುದೋ ಎಣ್ಣೆ ಹಚ್ಚಿ, ಅದು ಅಳು ನಿಲ್ಲಿಸುವವರೆಗೆ ಅದನ್ನು ಸಮಾಧಾನಿಸಲು ಎತ್ತಿಕೊಂಡು ಮನೆತುಂಬ ಅಡ್ಡಾಡಿದಳು. ಆಗಲೇ ಎರಡು ಘಂಟೆಯಾಗಿತ್ತು. “ಸ್ನೇಹಾಗೆ ಹತ್ತಿರದ ಎಲ್ಲ ಸಂಬಂಧಿಗಳೂ ಇದೇ ಊರಲ್ಲಿರುವುದರಿಂದ ಶವ ಸಂಸ್ಕಾರಕ್ಕೆ ದೂರದಿಂದ ಯಾರನ್ನೂ ಕಾಯುವಂತಿಲ್ಲ. ತಾನು ಹೋಗುವುದರೊಳಗೆ ಮುಗಿದೇ ಹೋಗಬಹುದಾ”? ಯೋಚಿಸುತ್ತಲೆ, ಮಗುವನ್ನೂ, ಅದರ ಬಟ್ಟೆಗಳನ್ನೂ ಪೂರ್ತಿ ಸ್ವಚ್ಛಗೊಳಿಸಿ, ನೀರು ಕಾಯಿಸಿ ಬಿಸಿನೀರಿನಿಂದ ಮೈ ಒರೆಸಿ, ಆ ಬಟ್ಟೆಗಳನ್ನು ಒಂದು ಬಕೆಟ್‌ನಲ್ಲಿ ಒಗೆಯಲು ತುಂಬಿಟ್ಟು, ಮತ್ತೆ ಬಾಗಿಲಿಗೆ ಬಂದಾಗ ಮಗು ಅವಳ ಕೈ ಬಿಡದೆ ಅಳತೊಡಗಿತು. ಜ್ವರ ಬಂದ ಮಗು, ಅಜ್ಜಿಗೇ ಹೆಚ್ಚು ಅಂಟಿಕೊಂಡ ಮಗು ಅಜ್ಜನ ಹತ್ತಿರ ಹೋಗುವುದಕ್ಕೇ ಹಟ ಮಾಡಿತು. ಅವಳು ತನ್ನೆಲ್ಲ ಶಕ್ತಿಯನ್ನೂ, ಮಿದುಳನ್ನೂ ಉಪಯೋಗಿಸಿ, ಅದನ್ನು ಮತ್ತೊಮ್ಮೆ ನಿದ್ದೆಗೆ ಕೆಡಹುವ ಹೊತ್ತಿಗೆ ಅವನಿಗೆ ಕಛೇರಿಗೆ ಹೊರಡುವ ಹೊತ್ತಾಗಿತ್ತು. “ದೀಪ್ತಿಗೆ ಬೇಗ ಮನೆಗೆ ಬರೋದಕ್ಕೆ ಹೇಳು ಸುನೀ. ಅವಳು ಬಂದ ತಕ್ಷಣ ನೀನು ಹೊರಟು ಬಿಡು. ಸಂಜೆ ನಾನು ಫ್ರೆಂಡ್ಸ್ ಜೊತೆ ಯಾವುದೋ ಕಾರ್ಯಕ್ರಮಕ್ಕೆ ಹೋಗ್ಬೇಕಾಗಿರೋದ್ರಿ೦ದ ಬರೋದು ತಡವಾಗತ್ತೆ”, ಎಂದ ಅವನು ಹೋಗುವುದನ್ನೇ ನೊಡುತ್ತ ಮತ್ತೊಮ್ಮೆ ಕುಸಿದು ಕುಳಿತಳು. ಕೈಲಿದ್ದ ಮಗು ಜ್ವರದಿಂದ ಮುಲುಗುತ್ತಿತ್ತು. ಅವಳ ಮನಸ್ಸು ದುಗುಡದಿಂದ ತಳಮಳಿಸುತ್ತಿತ್ತು. “ಆಸೆ ಎಂದರೆ ಆಕಾಶಕ್ಕೆ ಹಾರುವುದು ಅಂತೇನಲ್ಲ ಸುನೀ. ಹಾಗೇನೆ ಸಾಧನೆ ಎಂದ ಕೂಡಲೇ ‘ನಕ್ಷತ್ರ ಕಿತ್ತು ತರುವುದೇ ಎಂದರ್ಥವಲ್ಲ. ನೀನು ಬಯಸಿದ ನೆಲದಲ್ಲಿ ಒಂದರ್ಧ ಘಂಟೆ ಓಡಾಡಿ ಬರಬೇಕೆಂಬುದೂ ಆಸೆಯೇ. ನಿನ್ನಿಷ್ಟದಂತೆ ಅರ್ಧ ತಾಸನ್ನು ನಿನ್ನ ಹಿಡಿತಕ್ಕೆ ತೆಗೆದುಕೊಳ್ಳುವುದೂ ಸಾಧನೆಯೇ”. ಸ್ನೇಹಾಳ ಎಷ್ಟೊಂದು ಮಾತುಗಳು ನೆನಪಿನ ಮನೆಯಿಂದ ಒಂದೊಂದಾಗಿ ಹೊರಬಂದು ಅವಳೊಳಗೇ ಓಡಾಡುತ್ತಿತ್ತು. +ಮಗುವನ್ನು ಬೆನ್ನಿನ ಮೇಲೆ ಹಾಕಿಕೊಂಡು ತಟ್ಟುತ್ತಲೇ ಮಗಳಿಗೆ ಫೋನ್ ಮಾಡಿದಳು. “ಅವಳು ಸೀಟಲ್ಲಿಲ್ಲ ಆಂಟೀ. ಇವೊತ್ತು ನಮ್ಮ ಕಲೀಗ್ ಒಬ್ಬರದು ವೆಡ್ಡಿಂಗ್ ಆನ್ನಿವರ್ಸರಿ. ಊಟಕ್ಕೇ೦ತ ಎಲ್ರೂ ಹೋಟೆಲ್‌ಗೆ ಹೋಗಿದಾರೆ. ಇನ್ನೂ ಬಂದಿಲ್ಲ. ನನಗೆ ಕಾಲು ನೋವಿರುವುದರಿಂದ ಉಳಿದಿದೀನಿ. ಆಫೀಸ್ ತುಂಬ ನಾನೊಬ್ಬಳೇ ಇರೋದು”, ಎಂದಿತು ಅತ್ತ ಕಡೆಯ ಬಾಯಿಯೊಂದು. +ಸುನೀತಳ ಚಡಪಡಿಕೆಯಲ್ಲಿ ಸಿಟ್ಟೂ ಶಾಮೀಲುಗೊಂಡಿತು ಈಗ. ಅರ್ಧ ಘಂಟೆ ಕಾದು ಮತ್ತೆ ಮಗಳಿಗೆ ಫೋನ್ ಮಾಡಿದಾಗ, ಆಗ ತಾನೆ ಸೀಟಿಗೆ ಬಂದಿದ್ದ ಮಗಳು “ಏನಮ್ಮ ಪಾಪು ಆರಾಮಾಗಿದೆ ತಾನೇ? ಯಾಕೆ ಮೇಲಿಂದ ಮೇಲೆ ಫೋನ್ ಮಾಡಿದ್ದು”? ಎಂದು ಕೇಳಿ, ಸ್ನೇಹಳ ಸಾವಿನ ಸುದ್ದಿ ತಿಳಿಯುವುದರ ಜೊತೆಗೆ, ‘ಮನೇಲಿ ಯಾರೂ ಇಲ್ಲಾಂತ ಪಾಪುನ್ನ ಆ ಸತ್ತಮನೆಗೆ ಕರ್ಕೊಂಡ್ ಹೋಗ್ಬೇಡಮ್ಮ. ನಾನು ಬಂದ್….‘ , ಎ೦ದು ಇನ್ನೂ ಫೂರ್ತಿ ಹೇಳುವ ಮೊದಲೇ ಕಟ್ಟಿಕೊಂಡ ಸಿಟ್ಟನ್ನ ಫೋನಿನಲ್ಲೇ ಸುರಿದಳು ಸುನೀತ. “ನೀವೆಲ್ಲ ಆರಾಮಾಗಿ ಆನ್ನಿವರ್ಸರಿ ಪಾರ್ಟಿ, ಕ್ರಿಕೆಟ್ಟು, ಕಾರ್ಯಕ್ರಮಾಂತ ಮಜಾ ಮಾಡ್ತಾ ಇರಿ. ನಾನು ಇಲ್ಲಿ ಸತ್ತವಳೊಬ್ಬಳನ್ನು ನೋಡಲೂ ಹೋಗಲಾಗದೆ ಮನೇಲೆ ಬಿದ್ದಿರ್ತೀನಿ. ನೀವೆಲ್ಲ ನನ್ನ ಏನು ಅಂದ್ಕೊಂಡಿದೀರಿ. ನೀನು ರಜಾ ಹಾಕಿಯಾದ್ರೂ ಸರಿ ಈಗ್ಲೇ ಮನೆಗೆ ಬಾ”. +ಆ ಕ್ಷಣ ಅವಳೊಳಗಿನ ದುಃಖ ಬೇಸರ ಮತ್ತು ಅಸಹಾಯಕತೆಗಳು ಅಳುವಾಗಿ ಹೊರ ಹರಿಯಲು ದಾರಿ ಹುಡುಕುತ್ತಿದ್ದವು. ಮಗು ಕೈಯ್ಯಲ್ಲೇ ನಿದ್ದೆ ಹೋದಾಗ, ಮನೆ ತುಂಬ ತುಂಬಿದ ಒಂಟಿತನ, ಒಳಗಿನ ಅಳುವನ್ನು ಹೊರಗೆಳೆಯಿತು. ಚಿಕ್ಕವಳಿದ್ದಾಗಿನಿಂದಲೂ ಅವಳಿಗೆ ತುಂಬ ಆಪ್ತನಾದವನೆಂದರೆ ಅವಳು ನಂಬಿ ನಿರ್ಮಿಸಿಕೊಂಡ ಅವಳ ದೇವರು. ಅವಳ ಒಳಗಿನ ತುಮುಲಗಳನ್ನು, ಅವ್ಯಕ್ತ ಭಾವನೆಗಳನ್ನು ಮೌನದಿಂದ ಆಲಿಸುವ ಏಕೈಕ ಶ್ರೋತೃ. ಅವಳ ಅಂತರಂಗದ ಆಪ್ತವ್ಯಕ್ತಿ. ದೇವರ ಪಟದ ಮುಂದೆ ಕುಳಿತು ಜೋರಾಗಿ ಅತ್ತಳು. ದುಃಖದ ದೊಡ್ಡ ಮೊತ್ತ ಅಳುವಾಗಿ ಹೊರ ಹರಿದು ಹಗುರವಾದಂತೆನಿಸಿದರೂ, ಅರ್ಥವಾಗದ ತಳಮಳವೊಂದು ಅಂತರ೦ಗದಲ್ಲೇ ಉಳಿದಿತ್ತು. ಅವಳಿಗೆ ಗೊತ್ತು, ಸ್ನೇಹಳ ಮನೆಗೆ ಹೋಗಿ ಅವಳ ಶವವನ್ನು ನೋಡುವವರೆಗೆ ಆ ತಳಮಳ ಕರಗುವುದಿಲ್ಲ. ಕಣ್ಣೀರು ಬತ್ತುವುದಿಲ್ಲ ಎಂದು. +ಪುನಃ ಮನೆಯ ಕರೆಘಂಟೆ ಯಾರೋ ಬಂದರೆಂಬುದನ್ನು ಹೇಳಿತು. ಸ್ನೇಹಾಳ ಮನೆಯಲ್ಲೇ ಬೆಳೆಯುತ್ತಿದ್ದ, ಅವಳ ತಂಗಿಯ ಮಗ ಭುವಿ ಬಾಗಿಲಲ್ಲಿ ನಿಂತಿದ್ದ. “ಆಂಟೀ ನೀವು ನಮ್ಮ ಮನೆಗೆ ಹೋಗಬೇಕಲ್ವ? ಹೋಗಿ ಬನ್ನಿ ನಾನು ನಿಮ್ಮ ಮನೆಯಲ್ಲಿರ್ತೀನಿ.”. ಬೇರೊಂದು ಮಾತು, ಪ್ರಶ್ನೆ, ಯಾವುದಕ್ಕೂ ಆಸ್ಪದ ಕೊಡದೆ, “ನೀವು ಮನೆಗೆ ಕೂಡಲೇ ಹೋಗಿ”, ಎಂದು ಅವಸರಿಸಿದ. “ಭುವೀ ನೀನು.. ನಿನಗೆ ಸಣ್ಣ ಮಗುವನ್ನು ಎತ್ತಿಕೊಳ್ಳಲಾದರೂ ಬರುತ್ತಾ”? ಸ್ನೇಹಳ ಬಳಿಗೆ ಓಡುವ ಆತುರದಲ್ಲಿದ್ದ ಅವಳು ಕೇಳಿದಳು. +“ನಮ್ಮ ಅಮ್ಮ ಅವಳ ಫ್ರೆಂಡ್ ಮಗುವನ್ನು ಕರ್ಕೊಂಡ್ ಬರ್ತಿತಾರೆ ಆಂಟೀ. ಅಭ್ಯಾಸ ಇದೆ ನನಗೆ. ಅಮ್ಮ ಹೇಳಿಕೊಡದ ಪಾಠವಿಲ್ಲ. ಮಾಡಿಸದ ಕೆಲಸವಿಲ್ಲ. ನಮಗೆ ಎಲ್ಲವನ್ನೂ ಕಲಿಸಿದ್ದಾರೆ. ಅಂಥ ಅಮ್ಮನ ಮನೆಯಲ್ಲಿರುವುದು ನಮ್ಮ ಪುಣ್ಯ. ನೀವು ಮನೆಗೆ ಹೋಗಿ ಬನ್ನಿ”. ಸ್ನೇಹಳನ್ನು ಅಮ್ಮ ಎಂದೇ ಕರೆಯುತ್ತಿದ್ದ ಭುವಿ ಕೈಲಿದ್ದ ಮಗುವನ್ನು ಎತ್ತಿಕೊಳ್ಳುತ್ತ ಉತ್ತರಿಸಿದ. ಅವನ ಕೈಗೆ ಕೊಟ್ಟು ದಡದಡನೆ ರಸ್ತೆಗಿಳಿದಳು ಸುನೀತ. ಅಲೊಚನೆಗಳು, ಅವಳೊಂದಿಗೆ ಹೆಜ್ಜೆ ಹಾಕಿದವು. “ತನ್ನ ಮಕ್ಕಳೂ ಕೇಳದ ಮಾತನ್ನು, ಸ್ನೇಹಳ ತಂಗಿಯ ಮಗ ಕೇಳುತ್ತಾನಲ್ಲ. ಶವ ಸಂಸ್ಕಾರಕ್ಕೆ ತಡವಾಗುತ್ತದೆಂದೇ, ಅಷ್ಟು ಅವಸರಿಸಿದನೇ? ಇರಬಹುದು ಎಂದಿತು, ಸುನೀತಳ ಮನಸ್ಸು. +ಮೌನ ಕವಿದ ಸ್ನೇಹಾಳ ಮನೆ ಸ್ಮಶಾನದಂತಿತ್ತು. ಸತ್ತ ಸ್ನೇಹಾಳ ಶವವನ್ನು ಒಳಗೇ ಹುಗಿದಿಟ್ಟುಕೊಂಡ೦ತಿತ್ತು. ಮಾತಿಲ್ಲ, ದನಿ ಇಲ್ಲ, ಯಾರ ಓಡಾಟವೂ ಇಲ್ಲ. ಉಳಿದ ಮಂದಿಯ ಉಸಿರಾಟವೂ ಇಲ್ಲ. ಇಡೀ ಮನೆ ವಿಚಿತ್ರವಾದ ನೀರವದೊಳಗೆ ಮುಳುಗಿದೆ. ಅಗಳಿ ಹಾಕದ ಬಾಗಿಲು ತಳ್ಳಿದರೆ ಒಳಗೆ ಯಾರೆಂದರೆ ಯಾರೂ ಇಲ್ಲ. ನೋಡಲೆಂದು ಬಂದಿರಬಹುದಾದ ಅವಳ ಅಣ್ಣ, ಅಮ್ಮ, ತಂಗಿ, ಎಲ್ಲರೂ ಶವ ಸಂಸ್ಕಾರಕ್ಕೆ೦ದು ಸ್ಮಶಾನಕ್ಕೆ ಹೋದರೇ? ತಾನು ಬಂದುದು ಛೆ ತುಂಬ ತಡವಾಯಿತು. ಗಾಢ ಮೌನ ತುಂಬಿದ ಮನೆಯಲ್ಲಿ ತಾನೊಬ್ಬಳೇ ಎಂಬ ಪ್ರಜ್ಙೆ ಮೂಡಿದಾಗ ಒಂದು ರೀತಿಯ ಭಯ ಆವರಿಸಿತು. ಸದ್ದಿಲ್ಲದ ಒಂದೊಂದೇ ಹೆಜ್ಜೆಗಳನ್ನು ಸರಿಸುತ್ತ, ಒಳಗಿನ ಮನೆ, ಅದರೊಳಗಿನ ಹಾಲು, ಅದರೊಳಗಿನ ರೂಮು ನೋಡುತ್ತ ಒಳಗೆ ಯಾರಿದ್ದಾರೆಂದು ಹುಡುಕುತ್ತ ಹೋದಳು. ಎಲ್ಲ ಎಷ್ಟು ಅಚ್ಚುಕಟ್ಟು. ತನ್ನ ಮನೆಯಷ್ಟೇ ಕ್ಲೀನಾಗಿದೆ. +ಪಕ್ಕದ ಮ೦ಚದ ಮೇಲೆ ಮಲಗಿದ್ದ ಒಂದು ದೇಹ ದುತ್ತನೆ ಅವಳ ದೃಷ್ಟಿಗೆ ಎಡವಿ ಜೋರಾಗಿ ಬೆಚ್ಚಿದಳು ಅವಳು. ಅವಳ ಹೃದಯ ಜೋರಾಗಿ ಬಡಿದುಕೊಳ್ಳುತ್ತ ಬಾಯಿಗೇ ಬಂದಿತು. ಉಫ್! ಸ್ನೇಹಳ ದೇಹ! ಇಲ್ಲೇ ಇದೆಯಲ್ಲ. ಇದು .. ಇಲ್ಲ.. ಇಲ್ಲ ಸಾಧ್ಯವೇ ಇಲ್ಲ. ಬೆಳಿಗ್ಗೆಯೇ ಸತ್ತು ಹೋದ ಅವಳ ದೇಹ ಹೀಗೆ ಅನಾಥವಾಗಿ ಹೇಳಕೇಳುವವರಿಲ್ಲದೆ ಮನೆಯ ತುಂಬ ತುಂಬಿಕೊ೦ಡಂತಿರಲು ಸಾಧ್ಯವೇ ಇಲ್ಲ. ಅವಳ ಮಕ್ಕಳು ಮತ್ತು ಗಂಡನಾದರೂ ಜೊತೆಗಿರುತ್ತಿದ್ದರು. ಆದರೆ ಅವರೆಲ್ಲ ಇವಳ ಭೌತಿಕ ದೇಹವನ್ನು ಮಣ್ಣಾಗಿಸಲು ಹೋಗಿದ್ದಾರೆ. ಇದು ಅವಳ ಅಂತರಾತ್ಮ? ಊಹೂ ಸುನೀತಳಿಂದ ಮುಂದೆ ಯೋಚಿಸಲಾಗಲಿಲ್ಲ. ಅವಳ ಶವವನ್ನು ನೋಡಲೆಂದೇ ಬಂದವಳು, ದೇಹದ ಮೇಲೆ ಬಿದ್ದು ಭೋರೆಂದು ಅತ್ತು ಹಗುರಾಗಲೆಂದು ಬಂದವಳು, ಅಳುವುದೇನು, ಉಸಿರನ್ನೂ ಕಟ್ಟಿ ಹಿಂತಿರುಗಿ ಓಡಬೇಕೆನಿಸಿದಂತೆ, ಪಟಪಟ ಹಾರುತ್ತಿರುವ ಹೃದಯವನ್ನು ಒತ್ತಿ ಹಿಡಿದು, ದಪದಪನೆ ಹೆಜ್ಜೆ ಹಾಕಿದಳು. ಎರಡೇ ಹೆಜ್ಜೆ. ಸ್ನೇಹಳ ತಲೆ ಬದಿಯಿಂದ ಕಾಲ ಬದಿಗೆ ಹಾರಿದ್ದಳಷ್ಟೆ. ಅವಳ ಕೈ, ಎದ್ದು ಎಳೆದುಕೊಂಡ ಸ್ನೇಹಳ ಕೈಯ್ಯಲ್ಲಿತ್ತು. ಆವ್! ಎಂಬ ಒ೦ದು ಸಣ್ಣ ಕಿರುಚಿನೊಂದಿಗೆ ಅವಳ ಉಸಿರಾಟ ನಿಂತೇ ಹೋಗಿತ್ತು. “ಯಾಕೆ ಸುನೀ, ಅಷ್ಟೊಂದು ಹೆದರಿಕೆ. ನನಗೆ ಗೊತ್ತಿತ್ತು. ಬೆಳಿಗ್ಗೆ ತಿಳಿಸಿದರೆ ನೀನು ಇಲ್ಲಿಗೆ ಬರೋದು ಮಧ್ಯಾಹ್ನವೇ ಅಂತ. ಮಧ್ಯಾಹ್ನ ದಾಟಿದ್ರೂ ನೀನು ಬರದೇ ಇದ್ದಿದ್ದು ನೋಡಿ ನಮ್ಮ ಭುವಿಯನ್ನ ಕಳಿಸ್ದೆ. ಎಷ್ಟೋ ವರ್ಷಗಳಿಂದ ನಾ ಹೇಳುತ್ತ ಬಂದ ಮಾತುಗಳಿಗೆ ಇವೊತ್ತು ಅರ್ಥ ಸಿಕ್ಕಿರಬೇಕಲ್ವ? ಆದರೂ ನೀನು ಸಿಡುಕಿಲ್ಲ ತಾನೇ? ಸಿಡುಕಬಾರ್‌ದು. ದೂರ ಸಿಡಿಯಲೂ ಬರದು. ಕುಟುಂಬದ ನಿರ್ವಹಣೆಯಲ್ಲಿ ನಿನ್ನ ಸ್ವಾತ೦ತ್ರವೂ ಒಂದಂಶವಾಗಬೇಕು. ನನ್ನ ಮನೆಯ ಅಚ್ಚುಕಟ್ಟು ನೋಡಿದೆಯಲ್ಲ? ಇದು ನನ್ನೊಬ್ಬಳಿಂದ ಆಗುವುದಲ್ಲ. ಎಲ್ಲರೂ ಸೇರಿ ಆಗಿಸುತ್ತಿರುವುದು. ಪ್ರತಿಯೊಬ್ಬರ ಮನೆಯೂ ಹೀಗೇ ಆಗಬೇಕು. ಅದು ನನ್ನ ಆಸೆ. ಕೂತ್ಕೊಳಲ್ವ ಸುನೀ. ಹುಂ. ಮೊಮ್ಮಗು ಅಳ್ತಾ ಇರುತ್ತೆ. ಅದನ್ನ ನೀನೇ ಸುಧಾರಿಸ್ಬೇಕು. ಕಿರೀ ಮಗ ಕಾಲೇಜಿನಿಂದ ಬರುವ ಹೊತ್ತಿಗೆ ತಿಂಡಿ ನೀನೇ ಮಾಡಬೇಕು. ಗಂಡ ಬರೋ ಹೊತ್ತಿಗೆ ತನು, ಮನೆ, ಮನಗಳನ್ನೆಲ್ಲ ಅಲಂಕರಿಸಿ ಅವರಲ್ಲಿ ಉತ್ಸಾಹ ತುಂಬಬೇಕು. ನಿನ್ನ್ನ ಜಗತ್ತಿನ ಆ ಸೇವಾಕ್ರಿಯೆಗಳಿಗೆ ತಡವಾಗಿ ಬಿಡುತ್ತೆ ಅಲ್ವ. ಹೋಗಿ ಬಾ. ಸದ್ಯ ಇಷ್ಟು ವರ್ಷಕ್ಕೆ ಒಮ್ಮೆಯಾದರೂ ಧಿಡೀರನೆ ಹೊರಟು ನಮ್ಮನೆಗೆ ಒಬ್ಬಳೇ ಬರುವ ಸ್ವಾತಂತ್ರ್ಯ ತೆಗೆದುಕೊಂಡೆಯಲ್ಲ. ನಾ ಹಾಕಿದ ಯೋಜನೆಗೆ ಅಷ್ಟು ಸಫಲತೆ ಸಾಕು. ಕತ್ತಲು ತುಂಬಿದ ನಿನ್ನ ದಾರಿಗೆ ಆರಂಭದ ಬೆಳಕಿಂಡಿ ಕಂಡಿದೆ. ಹೋಗಿ ಬಾ””. ಈ ಎಲ್ಲ ಮೆಲುಮಾತುಗಳು ಸ್ನೇಹಳ ಬಾಯಿಂದಲೇ ಬಂದವೇ. ಅಥವಾ ಅವಳ ಪರವಾಗಿ ತನ್ನದೇ ಮನದಿಂದೆದ್ದ ಅಲೋಚನೆಗಳೆ? ಇಲ್ಲ ಇಲ್ಲ. ಮಾತುಗಳು ಸ್ಪಷ್ಟವಾಗಿವೆ. ಸ್ನೇಹ ಕುಳಿತಿರುವುದು ಕಣ್ಣಿಗೆ ನಿಚ್ಚಳವಾಗಿದೆ. ಆದರೂ ಯಾಕೀ ಭಯ? ಸುರಿಯುತ್ತಿದ್ದ ಭಯದ ಬೆವರು, ಸುನೀತಳ ಪಾದಗಳನ್ನು ನೆಲಕ್ಕೆ ಅಂಟಿಸಿಬಿಟ್ಟಿತ್ತು. ಕಿತ್ತರೂ ಮೇಲೇಳದ ಹೆಜ್ಜೆ. +ಮಂಚದಿಂದ ಕೆಳಗಿಳಿದ ದೇಹ ಫ್ಯಾನ್ ಹಾಕುತ್ತಿದೆ ಎ೦ದೆನಿಸಿದ ಮರು ಕ್ಷಣ ಸುನೀತ ಹೊರ ಅಂಗಳಕ್ಕೆ ಜಿಗಿದಿದ್ದಳು. ಬೀದಿಯ ಕೊನೆಯವರೆಗೆ ಓಡು ನಡಿಗೆ ಹಾಕಿದ ಅವಳು ತಾನಿನ್ನು ಕ್ಷೇಮವೆಂಬ ನಿರಾಳತೆಯಲ್ಲಿ ಹಿಂತಿರುಗಿ ನೋಡಿದಾಗ, ಸ್ನೇಹಳೇ ಬಾಗಿಲಲ್ಲಿ ನಿಂತಂತೆನಿಸಿತು. “ಸದ್ಯ ನಿಮ್ಮನೆಯನ್ನು ಬಿಟ್ಟು ನಮ್ಮನೆಯವರೆಗೂ ಒಬ್ಬಳೇ ಬಂದೆಯಲ್ಲ. ನಾ ಹಾಕಿದ ಯೋಜನೆಗೆ ಅಷ್ಟು ಸಫಲತೆ ಸಾಕು”, ಎನ್ನುವ ಮಾತು ಕಿವಿಯೊಳಗಿದ್ದದ್ದು, ಮಿದುಳೊಳಗೆ, ಮನದೊಳಗೆ ಓಡಾಡಿ ನಿಜ ಅರ್ಥಗಳನ್ನು ಹುಡುಕತೊಡಗಿತು. ಸ್ನೇಹಾ ಸತ್ತಿಲ್ಲವೆ? ಸತ್ತ ಸುದ್ದಿ ನಾಟಕವೆ? ಹಿಂತಿರುಗಿ ಹೋಗಿ ನೋಡಲೇ? ಸ್ನೇಹಳ ದೇಹ ಕಂಡಾಗ, ಎದ್ದು ಕುಳಿತಾಗ, ಮಾತಾಡಿದಾಗ, ಆದ ಭಯದ ಅನುಭವ, ಮತ್ತೆ ಆದಂತಾಗಿ ಕಾಲುಗಳು ನಿಂತಲ್ಲೇ ಕಚ್ಚಿಕೊಂಡವು. ಬೇಡ ಒಬ್ಬಳೇ ಅವಳನ್ನು ಎದುರಿಸಲಾರೆ ಎಂದಿತು ಅವಳೊಳಗು. +ಮನೆಗೆ ಹೋದಾಗ ಭುವಿ ಮನೆ ಬಿಟ್ಟಿದ್ದ. ಹಿರಿ ಮಗಳು ದೀಪ್ತಿ ಅವಳ ಮಗುವಿನ ಕೈಗೆ ಬಿದ್ದ ಏಟಿನ ಬಗ್ಗೆ ತಾಕೀತು ಮಾಡಿದಳು. “ ಅಮ್ಮಾ, ಇದೇನಮ್ಮ ಇದು ಪಾಪು ಕಾಲಿಗೆ ಗಾಯ? ನೀನಿರಲಿಲ್ವ? ಅಪ್ಪನಿಗೇನು ಗೊತ್ತಾಗತ್ತಮ್ಮ, ನೀನು ಅವರ ಹತ್ರ ಮಗುನ ಬಿಡಲೇ ಬೇಡ”.” ಯಾರದೇ ನಡೆ, ನುಡಿ, ನೋಟ ಎಲ್ಲದರಲ್ಲೂ ಸುಖಸ್ಪರ್ಷ ಮತ್ತು ಬೆಚ್ಚಗಿನ ಭಾವನೆಗಳನ್ನೇ ಬಯಸುತ್ತ ಅದಕ್ಕಾಗಿ ತನ್ನನ್ನೇ ತೇಯುತ್ತಿದ್ದವಳಿಗೆ ಮಗಳ ಈ ಒಂದು ಸಣ್ಣ ಮಾತೂ ಮನದ ಕಡಲಲ್ಲಿ ಭಾವನೆಗಳ ಕೋಲಾಹಲ ಎಬ್ಬಿಸಿತು. “ಬಾಯಿ ಬಿಟ್ಟು ಹೇಳದಿದ್ದರೆ ಸ್ವಂತದ ಕಷ್ಟ-ನಷ್ಟಗಳ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಸುನೀ. ಕುಟುಂಬವೆಂದರೆ ಯಾರಿಗೂ ಬ೦ಧನವಾಗಬಾರದು. ಜ್ಞಾನದ ನದಿ ಮನೆಮನೆಗೂ ತಾನಾಗಿ ಹರಿದು ಬಂದು ಪಾತ್ರೆಗಳನ್ನು ತುಂಬುವುದಿಲ್ಲ. ಅಗತ್ಯ ಇರುವವರು, ಅದಿರುವಲ್ಲಿಗೇ ಹೋಗಿ ತುಂಬಿಕೊಳ್ಳಬೇಕು. ನೀನೂ ನಿನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಪಡದ ಹೊರತು, ಮಕ್ಕಳು ಮತ್ತು ಪುರುಷರೂ ಸೇರಿದಂತೆ ಇಡೀ ಸಮಾಜ, ನಿನ್ನನ್ನು ಪ್ರೀತಿ, ಒಳ್ಳೆತನ, ತಾಯಿತನ ಇತ್ಯಾದಿಗಳ ಪಾಲಿಷ್ ಹಚ್ಚಿ ಕುಟುಂಬದ ಅಕ್ಟೋಪಸ್ ಹಿಡಿತದೊಳಗಿಟ್ಟು ನಿನ್ನನ್ನು ಅಪ್ರಧಾನಳಾಗಿಯೇ ಉಳಿಸಿಬಿಡುತ್ತದೆ”, ಎಂದು ಸ್ನೇಹ ಹಿಂದೆ ನಿ೦ತು ಹೇಳಿದಂತೆನಿಸಿತು. +ಮಗಳಿಗೆ ಉತ್ತರ ಕೊಡದೆ, ಪುನಃ ಮನೆಯಿಂದ ಹೊರ ಹೊರಟ ಸುನೀತ ಒಂದೆರಡು ಘಂಟೆಗಳ ನಂತರ ಹಿಂತಿರುಗಿ ಬಂದವಳು ಮಗಳಿಗೆ ಹೇಳಿದಳು. “ನಾಳೆಯಿಂದ ಒಬ್ಬ ಹುಡುಗಿಗೆ ಮಗುವನ್ನು ನೋಡಿಕೊಳ್ಳಲೆಂದು ನೇಮಿಸಿ ಬಂದೆ ದೀಪ್ತಿ. ಮನೆಯಲ್ಲೇ ಇರಲು ಒಪ್ಪಿಕೊಂಡಿದ್ದಾಳೆ. ನನಗೆ ಬೇಕೆನಿಸಿದಾಗ ಅವಳ ಮೇಲೆ ಮನೆ ಬಿಟ್ಟು ಎಲ್ಲಿಗೆ ಬೇಕಾದರೂ ಹೋಗಿ ಬರಲು ದಾರಿ ಮಾಡಿಕೊಂಡಿದ್ದೇನೆ. ಇವೊತ್ತು ಆದ ಹಾಗೆ ಯಾವೊತ್ತೂ ಆಗಬಾರದು”,”ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಲೇ ಇದ್ದಳು ದೀಪ್ತಿ. +ಬಾಗಿಲಲ್ಲಿ ಮಗನೊಡನೆ ಬಂದು ನಿಂತು, ಸುನೀತ ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ ಗಂಡನಿಗೆ ಉದ್ದೇಶಿಸಿ, ಮುಂದುವರಿಸಿದಳು ಅವಳು, “ ಹ್ಞ. ನಿಮಗೆ ಇನ್ನೊಂದು ಮಾತು ಹೇಳಬೇಕು. ನಾನು ನಾಳೆಯಿಂದ ‘ಸಂಸ್ಕೃತ ಶ್ಲೋಕ ಝರಿ’ ತರಗತಿಗೆ ಸೇರಿಕೊಳ್ಳಲು ನಿರ್ಧರಿಸಿದ್ದೇನೆ. ಮಧ್ಯಾಹ್ನ ಹನ್ನೆರಡರಿಂದ ಮೂರರವರೆಗೆ ನಡೆಯುವ ಈ ತರಗತಿ, ನನ್ನ ಮನಸ್ಸಿಗೆ ಮುಖ್ಯವೆನಿಸಿದ ಶಾಖೆಯ ಜ್ಞಾನ ಸ೦ಪತ್ತನ್ನು ಹೆಚ್ಚಿಸಲು ನೆರವಾಗುತ್ತದೆ ನನಗೆ. ಅಡುಗೆ ಮುಗಿಸಿ ಹೋಗಿರುತ್ತೇನೆ. ನೀವು ಮತ್ತು ರವಿ ಬಡಿಸಿಕೊಂಡು ಊಟ ಮಾಡಿ, ಮೊದಲಿನಂತೆಯೇ ಕ್ಲೀನಾಗಿ ಮುಚ್ಚಿಟ್ಟು ಹೋಗಿ”. +“ನಮಗೆ ಬಡಿಸಿಕೊಂಡು ಅಭ್ಯಾಸವೇ ಇಲ್ಲವಲ್ಲ”, ಎಂದುಕೊಂಡರೂ ಸುನೀತಳ ಗಟ್ಟಿ ನಿರ್ಧಾರದ ಧೈರ್ಯ ಕಂಡು ಒಂದಿಷ್ಟು ತಬ್ಬಿಬ್ಬಾಗಿ ಸಾವರಿಸಿಕೊಂಡು, ‘ಹ್ಞ. ಹ್ಞ. ಅಭ್ಯಾಸವೇನು ಹುಟ್ಟಿನಿಂದ ಬರುವುದಲ್ಲವಲ್ಲ. ಯಾವತ್ತಾದರೂ ಒಂದು ಆರ೦ಭ ಮಾಡಲೇಬೇಕಲ್ಲ. ಹುಂ. ಮಾಡಿಕೊಳ್ಳುತ್ತೇವೆ ಬಿಡು”, ಎನ್ನುತ್ತ ಒಳಬಂದು ಹೆಂಡತಿಗೆ ಶುಭಾಶಯ ಕೋರಿದ ಅವಳ ಗಂಡ. +ಮತ್ತೊಮ್ಮೆ ಪ್ರಯತ್ನಿಸಿ, ಸ್ನೇಹಳ ಮನೆಗೆ ಫೋನ್ ಮಾಡಿ ನಿಜವಾದ ವಿವರ ತಿಳಿಯಲು, ರಿಸೀವರ್ ಕೈಗೆತ್ತಿಕೊಂಡಳು ಸುನೀತ. +***** +(ದಿನಾಂಕ ೧೬.೦೮.೨೦೦೧ರ ಸುಧಾ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾಗಿದೆ.) +ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […] +ಇವತ್ತು-ಸರ್ವೋತ್ತಮನನ್ನು ಅವನ ಮನೆಯಲ್ಲಿ ಹಿರಿಯರೆಲ್ಲ ತಮ್ಮನೆಂದು ಕರೆಯುತ್ತಿದ್ದರಾದರೆ ಕಿರಿಯರು ತಮ್ಮಣ್ಣನೆಂದು ಕರೆಯುತ್ತಿದ್ದರು. ಕಿರಿಯರು ಕರೆಯುತ್ತಿದ್ದ ಹೆಸರೇ ಊರ ಜನರ ಬಾಯಲ್ಲೂ ನಿಂತು ಅವನು ಎಲ್ಲರ ಪಾಲಿಗೆ ತಮ್ಮಣ್ಣನೇ ಆದ. ಈ ಹೆಸರು ಮುಂಬಯಿಯಲ್ಲಿ ಮಾತ್ರ […] +-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_738.txt b/Kannada Sahitya/article_738.txt new file mode 100644 index 0000000000000000000000000000000000000000..7406c55307d7875a592176c88359908d882e7277 --- /dev/null +++ b/Kannada Sahitya/article_738.txt @@ -0,0 +1,62 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅತ್ತೆ ಗಾಂಧಾರಿಯ +ದರುಶನಕೆಂದಿಂದು ಹೋದಾಗ +ಮತ್ತೆ ಕಂಡೆ (ನಾ) ಅವನನ್ನ +ಅವರ ಪಾದಕೆ ಮೈಮಣಿಯಲು, +ಅವನ ಪಂಚೆಯ ಅಂಚು ತಾಕಿ +ಮಿಂಚು ಹೊಡೆಯಿತು, +ನೂರ್ಮನ. +ಬೇಡವೆಂದರೂ +ತೆರೆತೆರೆದು ಹರಿದಾಡಿದವು +ಕಣ್ಗಳು +ಅವನೆದೆಯ ಬಯಲಲ್ಲಿ. +ಎಲ್ಲ ಕೇಳುವಂತೆ ಕೂಗಿಟ್ಟವು +ಆ ಭುಜಶೃಂಗಗಳನ್ನೇರಿ. +ದುಂಬಿಯಾದವು +ಕೊಳದಲಿ ನಳನಳಿಸುವ +ನೇತ್ರಕಮಲಗಳ ನೋಡಿ, +ಹಕ್ಕಿಯಾಗಿ ಹಾರಿದವು +ಕತ್ತಿನಡಿಗಿಳಿದ ಮೇಘಮೋಡಿಗೆ +ಭಾಸ್ಕರ ನಗುವ +ಆ ಆಗಸದ ಹಣೆಯ ನೋಡಿ. +ಎತ್ತ ಹೊರಳಿದರೂ ಚುಚ್ಚುತಿದೆ +ನನ್ನ ಹಸಿಮನದಲಿ ನೆಟ್ಟ +ಅವನ ಠೀವಿಯ ಹರಳು. +ಕಳೆಯಬಲ್ಲೆನೆ ನಾನು? +ಮಿಡಿವ ನೋವಿನೊಡನೆ +ಈ ಹಾಳು‌ಇರುಳು +ಅಂದು ಸ್ವಯಂವರದಿ, +ಸೂರ್ಯಪುತ್ರಕಳೆಯ ಅವನನು +ಸೂತಪುತ್ರನೆಂದೆನೆ ನಾನು? +ಅಣ್ಣನ ಸಂಜ್ಞೆಗೆ +ಅಪ್ಪನ ಬಿರುನೋಟದೀಟಿಗಂಜಿ +ಮನ ನುಡಿದ್ದನ್ನುಡಿಯದೇ +ಇನ್ನೇನೋ, ಏನೇನೋ +ಒದರಿತು ನಾಲಿಗೆ. +ಅವ್ವನ ಸೂಚನೆಯಂತೆ +ನಾಚಿಕೆಯಿಲ್ಲದೆ ಹಂಚಿಕೊಂಡರು +ಈ ನೀಚ ‘ಪಂಚ’ರು. +ಮನವಿಲ್ಲದೇ ಮೈಕೊಟ್ಟವಳಿಗೆ +-ಟುಕಲಾರನೆ? +ಮೈಮನಗಳೆರಡೂ ಬಯಸುವ +ಆ ಶ್ರೇಷ್ಠ ಷಷ್ಠಮನು. +೯ ಮಾರ್ಚ ೧೯೯೮ +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_739.txt b/Kannada Sahitya/article_739.txt new file mode 100644 index 0000000000000000000000000000000000000000..8394d7206b593c52c795c9d15d0ea18be05a46d1 --- /dev/null +++ b/Kannada Sahitya/article_739.txt @@ -0,0 +1,248 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ ಕೇಳಿದ…ಸತ್ತೆವ್ವ ನಾಚಿಗೊಂಡು ಒಳಗ ಹೋದಳು…ಹಂಗ ನಾಚಿಗೊಂಡು ಒಳಗ ಹೋಗತಿದ್ದ ತನ್ನ ಸೊಸಿನ್ನ ನೋಡಿಕೋತ ಬಸವ್ವ ಉಸ್…ಂತ ಉಸರು ಬಿಟ್ಟು ‘…ಇಕಿ ನಡ್ಯಾಕ ಬಂದು ಒಂದ ವರಸ ಆಗಾಕ ಬಂತ ಮಾವಾಣಿ…ಬಸರಾ ಬಯಕೀದು ಇನೂ ಯಾವ ಸುದ್ದೆನೂ ಇಲ್ಲ …ನನಗ ಇದಣಿ ಚಿಂತ್ಯಾಗಿ ಕುಂತೈತಿ ನೋಡು… ಖರೇವಂದರೂ ಹೇಳತನ ಮಾವಾಣಿ…ನಂಗ ಕೂಳ ಕಂಹೀ ಆಕ್ಕೊಂಡ ಕುಂತೈತಿ…’ ಅಂತ ಸ್ವಾಂವಜ್ಜನ ಮುಂದ ತನ್ನ ದುಃಖಾ ತೋಡಿಕೊಂಡಳು…ಸ್ವಾಂವಜ್ಜ ಕಪ್ಪಿನಿಂದ ಬಸಿಗೆ ಚಹಾ ಸುರಿವಿಕೊಂಡು -ಉಫ್ ಉಫ್ ಅಂತ ಊದಿ ಆರಿಸಿ – ಚಪ್ಪರಿಸಿಕೋತ ಕುಡೀತಿದ್ದಾಂವ ಬಸವ್ವನ ಮಾತು ಕೇಳಿ ‘ಛೀ ಹುಚ್ಚೀ…! ಅಲ್ಲ ತಗೀ ನಿಂದ ಇದಾ… ನಡ್ಯಾಕ ಬಂದು ಇನೂ ಒಂದ ವರಸ ಸೈತೇ ಆಗಿಲ್ಲ…ಚಿಂತೀ ಹಚಿಗೊಂಡ ಕುಂಡರೂ ಹಂತಾದ್ದು ಏನಾಗೇತಿ ?…ಮುಂದಿನ ತೇರಿನಷ್ಟೊತ್ತಿಗೆ ಮಮ್ಮಗಾ ಬಂದಿರತಾನ ತಗೋ…’ ಅಂತ ಸಮಾಧಾನ ಮಾಡಿ ಚಹಾದ ಕಡಿಯ ಗುಟಕನ್ನ ಕುಡದು ಕಪ್ಪೂ -ಬಸೀ ಕೆಳಗ ಇಟ್ಟ…ಬಸವ್ವ ಅಗದೀ ಸಂತೋಷದಿಂದ ‘ನಿನ್ನ ಬಾಯಿ ಹರಕೀಲೆ ಅಷ್ಟ ಆಗಲ್ಯೋ ಮಾವಾಣಿ…ಇಠ್ಠಲ ಸ್ವಾಮಿಗೆ ಕಣಬಟ್ಟ ಮಾಡಿಸಿ ಕೊಡತನು’ ಅಂತಂದಳು. ಸ್ವಾಂವಜ್ಜ ‘ಯಾ… ಇದ ಬಲೇ ಬೇಶಾತು ನೋಡವಾ!…ಹಾಂ!ಬಾಯಿ ಹರಕಿ ನಂದಾ…ಲಾಭ ನೋಡಿದರ ದೇವರಿಗಿ… ಅಂವಗ ದಾಗೀನಾ…!’ ಅಂತಂದು ಹಾಹ್ಹಾ… ಅಂತ ನಕ್ಕ. ಬಸವ್ವನೂ ನಕ್ಕೋತ ‘ನಿನ್ನ ಬಾಯಿಗೆ ಇದ್ದಣಿ ಐತೆಲಾ…ಸಕ್ಕರೀ!’ ಅಂತ ಹೇಳಿಕೋತ ಹೊಸ್ತಲಿಗೆ ರಂಗೋಲೀ ಬರೆಯುವುದನ್ನ ಮುಂದುವರಿಸಿದಳು… +ಅಷ್ಟೊತ್ತಿಗೆ ಸರಿಯಾಗಿ ವಿಠ್ಠಲ ದೇವರ ಪೂಜಾರಿ-ಛತ್ರೇರ ಮಾರೋತಿ ‘ಯಜ್ಜಾಣಿ…ನೀ ಇಲ್ಲಿ ಅದೀ…! ನಿಮ್ಮ ಮನಿಗೆ ಹೋಗಿನ್ನಿ…. ನೀ ಇಕಾಡೆನಣಿ ಹೋಗೀ ಅಂತ ಹೇಳಿದರು…ಅದಕ್ಕಣಿ ಇಕಾಡಿ ಬಂದನಿ…’ ಅಂತ ವಸ್ ವಸ್ ಅಂತ ತೇಕಿಕೋತ ಓಡಿ ಬಂದು ಹೇಳಿದ…ಅವನ ಮೋತೀಮ್ಯಾಲ ಗಾಬರಿ ಸುರೀತಿತ್ತು…ಸ್ವಾಂವಜ್ಜ – ಯಾಕಲೇ ಹಂಗ್ಯಾಕ ಓಡಿ ಬಂದಿ…ನಾನು ಗುಡೀ ಕಡೇನಣಿ ಹೊಂಟಿನ್ನಿ…ಯಾಕಣಿ ಏನಾತು…ಅಂತಿರಬೇಕಾದರ ಮಾರೋತಿ ‘ಯಜ್ಜಾ ಘಾತ ಆಗೇತಿ… ! ’ ಅಂತ ಅಲ್ಲೇ ಕಟ್ಟೀ ಮುಂದ -ರಸ್ತೇದಾಗಣಿ ಕುಂತು ಎದಿ ಎದೀ ಬಡಕೊಂಡ… +…ಸ್ವಾಂವಜ್ಜಗ ಸಂಶೇನ ಉಳೀಲಿಲ್ಲ…! ಅಂವ ಪೂರಾ ಗಾಬರ್‍ಯಾಗಿ- ‘ಯಾಕಲೇ…ದ್ಯಾವ್ಯಾನ ಖೂನೀ ಆಗೇತೀ…?’ ಅಂತ ಕೇಳಿದ.ಮಾರೋತಿ …ಅಲ್ಲ ಅಂತ ಅನ್ನುವಹಂಗ ಗೋಣು ಹಾಕಿ ಮತ್ತೆ -‘ಘಾತ ಆತೋ ಯಜ್ಜಾಣಿ…’ ಅಂತ ತನ್ನ ಹಳೇ ಮಂತ್ರಾನಣಿ ಹೇಳಿದ…ತಿರಗಾ ಮುರಗೀ ಘಾತ ಆತು -ಘಾತ ಆತು… ಅಂತನ್ನುವ ಮಾರೋತಿಯ ಮಾತು ಕೇಳಿ ಸ್ವಾಂವಜ್ಜನ ತೆಲೀ ಗಿಂವ್ ಅನ್ನಾಕತ್ತಿತು…ಸಿಟ್ಟೂ ಬಂತು… ಅಂವ ಬಗ್ಗಿ ಅವನ ರಟ್ಟೀ ಹಿಡದು ಮ್ಯಾಲಕ ಎಬ್ಬಿಸಿ ನಿಂದರಿಸಿಗೋತಣಿ – ‘ಏನಾತಲೇ ಸೂಳೀಮಗನಣಿ…ಬರೇ ಘಾತಾತು…ಘಾತಾತು ಅಂದರ ಏನ ತಿಳಕೋಬೇಕು? ಏನಾತ ಹೇಳು ’ ಅಂತ ದಬಾಯಿಸಿದ. +‘…ಸ್ವಾಮೀ ಗುಡೀ ಕಳವ ಆಗೇತೋ ಯಜ್ಜಾಣಿ…ಘಾತ ಆಗೇತಿ…’ ಅಂತನ್ನುವ ಮಾರುತಿಯ ಮಾತು ಕೇಳತಿದ್ದಂಗೇ ‘ಹ್ಹಾಂಣಿ…!’ ಅಂತನ್ನುವ ಉದ್ಗಾರ ಹೊಂಡಿಸಿದ ಸ್ವಾಂವಜ್ಜ ಹಂಗಣಿ ನಿಂತ ನಿಂತಲ್ಲೇ-ಅಲ್ಲಿ ರಸ್ತಾದೊಳಗೇ ಕುಸದು ಕುಂತ… ಬಸವ್ವ ಗಾಬರ್‍ಯಾಗಿ ‘ಏ ಮಾವಾಣಿ…’ ಅಂತ ಅಡರಾಯಿಸಿ ಅವನ ಕಡೇ ಓಡಿ ಬರುವಷ್ಟರೊಳಗೆ ಅಂವ ಸುಧಾರಿಸಿಕೊಂಡು -ಧಡಕ್ಕಂತ ಎದ್ದು ನಿಂತ…ಹಂಗ ಧಡಕ್ಕಂತ ಎದ್ದ ವನೇ -‘ಬಸವ್ವಾಣಿ…ನಿನ್ನ ಮಗ್ಗ ಸದ್ದೇಕ್ಕ ಗೋಕಾಂವಿಗೆ ಹೋಗೂದು ಬ್ಯಾಡಂತ ಹೇಳವಾ…ಹಿರ್‍ಯಾರಿಗೆ ಎಲ್ಲಾ ಸುದ್ದೀ ಮುಟ್ಟಿಸಿ ಅವರನೆಲ್ಲಾ ತಾಬಡ ತೋಬಡ ಗುಡೀ ಕಡೆ ಹೊಂಡಿಸಿಕೊಂಡು ಬರಾಕ ಹೇಳು…’ ಅಂತ ನುಡದವನೇ ‘ಮಾರ್‍ಯಾ…ನಡೀ…’ ಅಂತ ಗುಡಿಯ ಕಡೆ ಧಡಧಡಾ ಅಂತ ನಡದ…ಮಾರೋತಿ ದುಡು ದುಡೂ ಅಂತ ಅವನ ಹಿಂದಿಂದಣಿ ಹಿಂದಿಂದಣಿ ಓಡಿದ… +…ಇವರು ಹಿಂಗ ಭಡಾ ಭಡಾ ಹೋಗತಿರಬೇಕಾದರ ಬಸವ್ವನ ಮಗಾ – +ಬಾಳ್ಯಾ ಇವರ ಹಿಂದಿಂದ ವಸ್ ವಸ್ ಅಂತ ತೇಕಿಕೋತ ಓಡಿಬಂದು… ‘ಯಜ್ಜಾ…ಗರ್ಭದ ಗುಡಿಯೊಳಗ ಯಾರೂ ಹೋಗಬ್ಯಾಡ್ರಿ…ಪೋಲೀಸರು ತುಡಗರನ ಹಿಡಿಯೂ ನಾಯಿಗೋಳನ ತಗೊಂಡ ಬರತಾರು… ಅವು ತುಡಗರ ವಾಸನೀ ಹಿಡೀತಾವು…ಹೆಜ್ಜೀ ಗುರತಾ ಕೈಯ ಬೆಳ್ಳಿನ ಗುರತಾ ನೋಡತಾರು…ನೀವು ಬಾಗಲಾ-ಚಿಲಕಾ ಅದೂ ಏನೂ ಮುಟ್ಟಾಕ ಹೋಗಬ್ಯಾಡರಿ…ಹೊರಗಣಿ ಕುಂಡರ್ರಿ…ಒಳಗ ಯಾರನೂ ಬಿಡಬ್ಯಾಡ್ರಿ…’ ಅಂತ ತಾಕೀತು ಮಾಡಿದವನೇ ‘ ನಾನು ಲಗೂಟಣಿ ಹಿರ್‍ಯಾರನ ಎಲ್ಲಾ ಕರಕೊಂಡ ಬರತನು…’ ಅಂತ ಹೊಳ್ಳಿ ಓಡಿಹೋದ… ಇವರು ದುಡು ದುಡು ಅಂತ ಗುಡಿಗೆ ಬಂದರು… +ಗುಡಿಯ ಹೆಬ್ಬಾಗಲನ್ನ ದಾಟಬೇಕಾದರ ಸ್ವಾಂವಜ್ಜ ಮಾರೋತಿನ್ನ ಕೇಳಿದ – ‘ಮಾರ್‍ಯಾ…ನೀ ಗರ್ಭದ ಗುಡ್ಯಾಗ ಹೋಗಿದ್ದಿ ಏನ…?’ +‘ಇಲ್ಲೊ ಯಜ್ಜಾಣಿ…ಹರ್‍ಯಾಗ ಐದ ಗಂಟೇಕ್ಕಣಿ ಎದ್ದು ಹೊಳೀಗೆ ಹೋಗಿ ಜಳಕಾ ಮುಗಿಸಿಗೊಂಡಕ್ಯಾರ ದಣಿರ ದಿನದಂಗ ಒಂದ ಕೊಡಾ ನೀರ ತುಂಬಿಕೊಂಡು ಗುಡಿಗೆ ಬಂದಿನಿ…ಗುಡೀಗೆ ಬಂದು ಅಲ್ಲಿ ನೋಡಿದರ ಗರ್ಭ ಗುಡೀ ಬಾಗಲ ಹಾರ ಹೊಡದಿತ್ತು … ಕೀಲೀ ಮುರದ್ದಾರು !…ನನಗ ಗಾಬರಿ ಆಗಿ…ಹಂಗಿಂದ ಹಂಗಣಿ ಅಲ್ಲೇ ಹೊರಗಣಿ ಕೊಡಾ ಇಟ್ಟು ನಿಮ್ಮ ಮನಿಗೆ ಓಡಿ ಬಂದನಿ…’ ಅಂತ ಮಾರುತಿ ವಿವರ ಒಪ್ಪಿಸಿದ… +‘ಮಾರ್‍ಯಾಣಿ…ನೆಪ್ಪ ಮಾಡಿಕೋ…ನಿನ್ನೆ ರಾತ್ರೀ ಕೀಲೀ ಹಾಕಿದ್ಯೋ ಇಲ್ಲೋ ನೋಡು…’ +‘ಅಗದೀ ಪಕ್ಕಾ ನೆನಪ ಐತ್ಯೋ ಯಜ್ಜಾ…ನಿನ್ನೆ ರಾತ್ರೀ ದ್ಯಾವಪ್ಪ ಬರಾಂವ ಇದ್ದನಲಾಣಿ…ಅದಕ್ಕಣಿ ಬಾಳೊತ್ತನಕಾ ಗುಡ್ಯಾಗ ಕಾಕೊಂತ ಕುಂತಿದ್ದಿನಿ. ಬಾಳೊತ್ತಾದರೂ ಅಂವ ಬರದದ್ದಕ್ಕ ಸಿಂಪಿಗ್ಯಾರ ನಾರಾಯಣನ್ನ ನನ್ನ ಜೋಡೀ ಕುಂಡರಿಸಿಗೊಂಡಿನ್ನಿ …ಸರಹೊತ್ತು ಆದರೂ ದ್ಯಾವಪ್ಪ ಬರಲಿಲ್ಲ…ಆಗ-ಇನ್ನೇನ ಇಂದ ಅಂವ ಬರಾಣಿಲ್ಲ ತಗೋ…ನಡೀ ಮನಿಗೆ ಹೋಗೂಣೂ…ಅಂತ ನಾರಾಯಣ ಒಂದಣಿ ಸವನಣಿ ಗಂಟಣಿ ಬಿದ್ದ …ನನಗೂ ಅಂವ ಇನ್ನೇನ ಇವತ್ತ ಬರಾಕಿಲ್ಲ ಅಂತ ಅನಿಸಿತು…ಮತ್ತ ಹರ್‍ಯಾಗ ಲಗೂಟಣಿ ಬ್ಯಾರೇ ಏಳಬೇಕು ಅಂತ ಹೊಂಟು ಗರ್ಭದ ಗುಡೀ ಬಾಗಲಾ ಎಳದು ಕೀಲೀ ಹಾಕಿದಿನಿ…ಗುಡ್ಯಾನ ಲೈಟ ಆರಸೂಕಿಂತಾ ಮದಲ ದಣಿರ ದಿನದಗತೆ ಕೀಲೀ ಎಳದು ನೋಡಿದಿನಿ…ಎಷ್ಟ ಸರತೇ ಎಳದ ನೋಡತೀ ಬಿಡೋಪಾ ಅಂತ ನಾರಾಯಣ ನಗಿಚಾಟಿಕೀ ಸೈತ ಮಾಡಿದಾ !…ಬೇಕಾರ ನಾರಾಯಣನ್ನ ಕೇಳು…’ ಅಂತ ಮಾರುತಿ ನಿನ್ನಿನ ರಾತ್ರಿಯ ಪೂರಾ ಹಕೀಕತ್ತನ್ನ ಹೇಳಿದ. +ಸ್ವಾಂವಜ್ಜ ಮತ್ತೇನೂ ಮಾತಾಡಲಿಲ್ಲ…ಅಷ್ಟರಾಗಣಿ ಅವರು ಗುಡಿಯ ಮೆಟ್ಟಲಗಳ ಹತ್ತರ ಬಂದಿದ್ದರು…ರೂಢಿಯಂತೆ ಸ್ವಾಂವಜ್ಜ ಬಗ್ಗಿ ನೆಲಾ ಮುಟ್ಟಿ +ನಮಸ್ಕಾರ ಮಾಡಿ ಮೆಟ್ಟಲಗಳನ್ನ ಹತ್ತಿ ಗುಡಿಯೊಳಗೆ ಹೊಕ್ಕು…ಗರ್ಭಗುಡಿಯ ಬಾಗಲದಿಂದ ಒಂದು ಮಾರಿನಷ್ಟು ದೂರದಾಗೇ ನಿಂತು ಒಳಗಿನದನ್ನು ದಿಟ್ಟಿಸಿದ… ಗರ್ಭಗುಡಿಯಲ್ಲಿಯ ನೂರು ಕ್ಯಾಂಡಲ್ಲಿನ ಬಲ್ಬು ಝಗ ಝಗ ಅಂತ ಬೆಳಕು ಚಲ್ಲಿ – ಅಲ್ಲಿನ ಎಲ್ಲ ವಿವರಗಳನ್ನ ಢಾಳಾಗಿ ಕಾಣುವಹಂಗ ತೋರಿಸತಿತ್ತು…ಕೀಲೀ ಮುರದು ಬಾಗಲಾ ಹಾರು ಹೊಡದದ್ದನ್ನ ನೋಡಿ ಗಾಬರಿ ಆಗಿ ಓಡಿಬಂದಿದ್ದ ಮಾರೋತಿ ಈಗಲೇ ಗರ್ಭಗುಡಿಯೊಳಗಿನ ಪೂರಾ ಹಕೀಕತ್ತು ಕಂಡದ್ದು…ಅಂವ ಅಲ್ಲಿನ ದೃಶ್ಯವನ್ನ ನೋಡಿ ಪ್ರಲಾಪಿಸತೊಡಗಿದ : +…ಅಯ್ಯೋ ದೇವರಣಿ…ಸ್ವಾಮಿಯ ಕಿರೀಟ ಒಯ್ದಾರು… ರುಕುಮಾಯೀದೂ ಕಿರೀಟ ಇಲ್ಲ…ವಿಠ್ಠಲನ ಕಣಬಟ್ಟ ಕಿತಿಗೊಂಡಾರ ನೋಡೋ ಯಜ್ಜಾಣಿ…ಭುಜಕೀರ್ತೀ ಹೋಗ್ಯಾವು…ಸ್ವಾಮಿಯ ಎದಿಯ ಕವಚಾ ಉಡದಾರಾ ಹೋಗ್ಯಾವು…ಬಂಗಾರದ್ದೂ ! ತಾಯೀದೂ ಬಂಗಾರದ ಕಣಬಟ್ಟ ಕಿತಿಗೊಂಡಾರು… ಕಂಠೀ ಸರಾ ಇಲ್ಲ ಗುಳದಾಳಿ ಇಲ್ಲಾ !…ಬಂಗಾರದ ನಡಪಟ್ಟೆನೂ ಹೋಗೇತಿ… ಸ್ವಾಮೀದೂ ಮತ್ತ ತಾಯೀದೂ ಇಬ್ಬರದೂ ಬಂಗಾರದ ಪಾದಾ ಕಿತಿಗೊಂಡ ಹೋಗ್ಯಾರು…ಘಾತ ಆತೋ ಯಜ್ಜಾ…ದೇಸಾಯರು ಮಾಡಿಸಿದ ಕಿರೀಟ ಅದಾ!… ಅದರಾಗ ವಜ್ರ ಇದ್ದೂ ಅಂತ…! ಏನಿಲ್ಲಂದರೂ ನಾಕೈದ ಲಕ್ಷದ ದಾಗೀನಗೋಳು… ಎಲ್ಲಾ ಹೋದೂವಲ್ಲೋ ಯಜ್ಜಾಣಿ… +…ಮಾರೋತಿ ಹಿಂಗ ಪ್ರಲಾಪಿಸತಿದ್ದರೆ – ಸ್ವಾಂವಜ್ಜ ಒಳಗಿನ ದೃಶ್ಯವನ್ನ ನೋಡಿ ದಳ ದಳ ಅಂತ ಕಣ್ಣೀರು ಸುರಿಸಿಕೋತ ಪಿಟ್ಟಂತ ಒಂದಂದರೆ ಒಂದೂ ಮಾತಾಡದೇ…ಕಂಬ ನಿಂತಂಗೆ ನಿಂತಿದ್ದ …ವಿಠ್ಠಲ ಸ್ವಾಮಿ ಮತ್ತ ರುಕುಮಾಯಿ ಇಬ್ಬರೂ ಕಣ್ಣು ಕಳಕೊಂಡು ಕುರುಡರಾಗಿ ನಿಂತಾರೆ !…ಸ್ವಾಮಿಯ ಉಡದಾರ ಕಿತಿಗೊಂಡದ್ದರಿಂದ ಅಂವ ಉಟಗೊಂಡಿದ್ದ ರೇಶಿಮಿಯ ಮಡಿ ಉದುರಿ ಪೀಠದ ಕೆಳಗ ಬಿದ್ದಿತ್ತು…ರುಕುಮಾಯೀದೂ ನಡಪಟ್ಟಿ ಇಲ್ಲದ್ದಕ್ಕ ಆಕಿ ಉಟಗೊಂಡ ರೇಶಿಮಿಯ ಸೀರಿ ಸೈತ ಜಾರಿ ತೆಳಗ ಬಿದ್ದಿತ್ತು…ದೇವರಿಗೆ ಇಬ್ಬರಿಗೂ ಪಾದನಣಿ ಇಲ್ಲ…ವಿಠ್ಠಲ ಮತ್ತ ರುಕುಮಾಯಿ ಇಬ್ಬರೂ ಕಣ್ಣೂ -ಕಾಲೂ…ಕಿರೀಟಾ -ಭುಜಕೀರ್ತೀ… ಎದಿಯ ಕವಚಾ-ಹಾರ-ಸರಗೋಳನ ಎಲ್ಲಾ ಕಳಕೊಂಡು…ಈಗ ಅವರು ಬರೇ ಬತ್ತಲೇ ಆಗಿ…ಕರಿ ಕರೀ ಕಲ್ಲಿನ ಮೂರ್ತಿಗಳಾಗಿ ನಿಂತಾರೆ…!ಸ್ವಾಂವಜ್ಜ ‘ಅಯ್ಯೋ…ದೇವರಣಿ!’ ಅಂತ ಉಸರಿ -ಹಂಗೇ ನಿಂತ ನಿಂತಲ್ಲೇ ಕುಸದು ಕುಂತ… +ಮಾರೋತಿಗೆ ಗಾಬರಿ ಆತು…ವಯಸ್ಸಾದ ಮನಶಾ…ಎದೀ ಗಿದೀ ಒಡಕೊಂಡ ಗಿಡಕೊಂಡಾನು ಅಂತ ಅಂಜಿಕಿ ಬಂತು…ಅಂವ ದೇವರ ಅಭಿಷೇಕಕ್ಕಂತ ತಂದು ಅಲ್ಲೇ ಗರ್ಭಗುಡಿಯ ಬಾಗಲದಾಗ ಇಟ್ಟಿದ್ದ ಕೊಡದಾಗಿನ ನೀರನ್ನ ಚರಿಗ್ಯಾಗ ಬಾಗಿಸಿಕೊಂಡು,ಸ್ವಾಂವಜ್ಜನ ಮಗ್ಗಲಿಗೆ ಕುಂತು-‘…ಸಮಾಧಾನ ಮಾಡಿಕೋ ಯಜ್ಜಾಣಿ…ಸಮಾಧಾನ ಮಾಡಿಕೋ…ಪೋಲೀಸರು ನಾಯೀ ತಗೊಂಡ ಬರತಾರು… ತುಡುಗರು ಸಿಕ್ಕಣಿ ಸಿಗತಾರು…ಸ್ವಾಮಿಯ ದಾಗೀನು ಎಲ್ಲಾ ಸಿಕ್ಕಣಿ ಸಿಗತಾವು…’ ಅಂತ ಧೈರ್ಯೇ ಹೇಳಿ ‘…ಒಂದೀಟಣಿ ನೀರ ಕುಡೀ…’ ಅಂತ ಅವನ ಮುಂದ ಚರಿಗಿಯನ್ನ ಹಿಡಿದರೆ ಕಂಗೆಟ್ಟು ಕಣ್ಣೀರು ಸುರಿಸಿಕೋತ ಕೂತಿದ್ದ ಅಂವ ಏನೊಂದು ಮಾತಾಡದೇ ಗೋಣು ಹಾಕಿ …ಬ್ಯಾಡ ಎಂದು ಸೂಚಿಸಿದ… +* +* +* +ಮುಂದ ಹತ್ತ ಹದಿನೈದು ಮಿನಿಟಿನ್ಯಾಗ ಹಿರ್‍ಯಾರೂ -ಹುಡುಗೋರೂ ಗುಂಪು ಗುಂಪಾಗಿ ಬಂದು ಮುಕರಿದರು…ಒಂದೆರಡ ಹುಡಗೋರು ಬಂದವರನ್ನೆಲ್ಲಾ ಗರ್ಭಗುಡಿಯ ಬಾಗಲದಿಂದ ದೀಡ ಮಾರಿನಷ್ಟು ದೂರದಾಗೇ ನಿಂದರಿಸಿಕೊಂಡು – ಮುಂಬಯೀ ಪಟ್ಟಣಾ ನೋಡು – +ರಾಜಾನ ದರಬಾರ ನೋಡು … +ಅಂತ ಜಾತ್ರ್ಯಾಗ ಬರುವ ಡಬ್ಬೀ ಸಿನೇಮಾದ ಹಂಗ- +ಕಿರೀಟ ಹೋಗ್ಯಾವ ನೋಡು – +ಕಣಬಟ್ಟ ಕಿತ್ತಾರ ನೋಡು – +ಕವಚ ಹೋಗೇತಿ ನೋಡು… +ಉಡದಾರ ಹರದಾರ ನೋಡು – +ಪಾದಾ ಒಯ್ದಾರ ನೋಡೂ… +ಅಂತ ಒಂದೊಂದಾಗಿ ಹೇಳಿ ತೋರಸತಿದ್ದರೆ, ನೋಡತಿದ್ದ ಮಂದಿ -ಕಣ್ಣು – ಪಾದಗಳೂ ಮತ್ತು ದಾಗೀನುಗಳನ್ನ ಧರಿಸಿದ ದೇವರ ಚಿತ್ರಗಳನ್ನ ನೆನಪು ಮಾಡಿಕೊಂಡು -ದೇವರ ಈಗಿನ ಚಿತ್ರಗಳ ಜೋಡೀ ಹೋಲಿಸಿ – +‘ಯಾಣಿ…!’ +‘ಅಲಾ…ಸೂಳೀಮಕ್ಕಳು !’ +‘ಶಿವ ಶಿವಾ…!’ +…. +ಅಂತ ನಾನಾ ನಮೂನಿಯ ಉದ್ಗಾರಗಳನ್ನ ತೇಲಿಬಿಡತಿದ್ದರು… +….ಧರಮನಟ್ಟಿಯ ವಿಠ್ಠಲ ದೇವರ ಗುಡಿಯನ್ನುವದು ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಯ ಗುಡಿಯಷ್ಟೇ ದೊಡ್ಡದಾದರೂ ಈಗ ಅಲ್ಲಿ ಜಾಗಾ ಸಾಲದಷ್ಟು ಮಂದಿ ಕೂಡಿತು… ಗರ್ಭಗುಡಿಯ ಬಾಗಲದಿಂದ ಎರಡು ಮಾರಿನಷ್ಟು ದೂರದಲ್ಲೇ ಕೂಡಬೇಕೆನ್ನುವ ಒತ್ತಾಯ ಬ್ಯಾರೇ ಇತ್ತು… ಹಿಂಗಾಗಿ ಎಲ್ಲಾ ಮಂದಿ ಗುಡಿಯ +ಹೊರಗಣಿ ಬಂದು ಕೂತಿತು… +ಗರ್ಭಗುಡಿಯ ಕಾಮೆಂಟರಿ ಹೇಳತಿದ್ದ ಹುಡುಗೋರು ಮಾತ್ರ ಮಂದಿನ್ನ ಕಾಕೊಂತ ಅಲ್ಲೇ ನಿಂತವು…ಗುಡ್ಯಾಗಿನ ಗಂಡಸರ ಹಿಂಡೆಲ್ಲಾ ಹೊರಗೆ ಬಂದು ಕೂತಿತೆನ್ನುವ ಸೂಚು ಹೆಂಗಸರಿಗೆ ಅಧೆಂಗ ಮುಟ್ಟಿತೋ ಯಾರಿಗೆ ಗೊತ್ತು…ಊರಾಗಿನ ಹೆಂಗಸರೂ-ಹುಡಿಗಿಯರೂ ತಂಡೋಪತಂಡವಾಗಿ ಗುಡಿಯಕಡೆ ಹೊಂಟರು… ಹೆಣಮಕ್ಕಳು ಬರತಿದ್ದಂಗೇ ಗುಡಿಯ ಮೆಟ್ಟಲುಗಳ ಹತ್ತರ ಬಂದು ನಿಂತ ಉಡಾಳ ಚಂದ್ರ್ಯಾ ಮತ್ತ ಪೆದಣ್ಣಾರ ಈರ – ಆ ಹೆಂಗಸರನ್ನ ಮೆಟ್ಟಲುಗಳ ಕೆಳಗೇ ನಿಂದರಿಸಿ – +‘ನೋಡ್ರೆವಾಣಿ…ಯಾರ ಪಾವಡರ್ ಹಚಿಗೊಂಡದೀರ್‍ಯೋ ಅವರ ಯಾರೂ ಒಳಗ ಹೋಗಂಗಿಲ್ಲ…ಪೋಲೀಸ ನಾಯಿಗೋಳು ಬರೂವ ಅದಾವು… ಗುಡ್ಯಾಗ ಪಾವಡರ್ ವಾಸನಿ ಇಡಗಿತಂದರ…ಅವಕ್ಕ ತುಡಗರನ ಹಿಡಿಯೂದು ಕಠಿಣ ಆಕ್ಕೊಂಡ ಕುಂಡರತೈತಿ…ಆಮ್ಯಾಲ ಪಂಚೇತಿ ಆಕ್ಕತಿ ನೋಡ್ರಿ…ಆ ನಾಯಿಗೋಳು ತುಡಗರನ ಹಿಡಿಯೂದ ಬಿಟ್ಟು ನಿಮ್ಮನ್ನ ಹಿಡೀತಾವು…! ಆಮ್ಯಾಗ ಜೇಲಿನ ರೊಟ್ಟೀ ತಿನಬೇಕಾಗತೈತಿ…ಪಾವಡರ್ ಹಚಿಗೊಂಡವರು ಒಟ್ಟಣಿ ಯಾರೂ ಗುಡ್ಯಾಗ ಬರತಕ್ಕದ್ದಲ್ಲ…’ ಅಂತ ತಾಕೀತು ಮಾಡಿ ಅಂಜಿಸಿದ್ದಕ್ಕ…ಅಲ್ಲಿಗೆ ಬಂದ ಹರೇದ ಹುಡಿಗ್ಯಾರು ಯಾರೂ ಗುಡಿಯೊಳಗ ಹೋಗದಂಗಾಗಿ ಅವರು ಅಲ್ಲೇ ಹೊರಗಣಿ ನಿಂದರಬೇಕಾಯಿತು…ವಯಸ್ಸಾದ ಹೆಂಗಸರು ಮಾತ್ರ ಒಳಗ ಹೋಗಿ-ಅಲ್ಲಿ ಗರ್ಭಗುಡಿಯ ಬಾಗಲ ಮುಂದೆ ನಿಂತ -ಡಬ್ಬಿ ಸಿನೆಮಾದ -ಹುಡುಗೋರು ತೋರಿಸಿದ ದೃಶ್ಯವನ್ನು ನೋಡಿ – +‘ಅಯ್ಯಣಿ…!’ +‘ಅಯ್ ನನ ಶಿವನಣಿ…!’ +‘ಅಯ್ಯೋ ಭಗವಂತಾ!’ +…. +ಅಂತ ನಾನಾ ನಮೂನಿಯಾಗಿ ಉದ್ಗಾರ ತಗದು-ಹೊರಗೆ ಬಂದು-ಅಲ್ಲಿ ಕುತೂಹಲದಿಂದ ಕುದಿಯತ್ತಿದ್ದ ಹರೆಯದ ಹುಡಿಗಿಯರಿಗೆ ತಾವು ಕಂಡದ್ದನ್ನು ವಿವರಿಸಿದರು … +‘ಗರ್ಭದ ಗುಡೀ ನೋಡೀರೆಲ್ಲಾ ತಂಗಿಗೋಳರ್‍ಯಾ…ಆ ಗರ್ಭದ ಗುಡೀ ನೋಡಿದರ ಏನು ಐಭೋಗ ಇರೂದು…! ಈಗ ನೋಡಿದರಣಿ ಮಶಾನಾ ನೋಡಿಧಂಗ ಆಗತೈತಿ…! ಅಯ್ಯಣಿ ನನ ತಾಯಂದರ್‍ಯಾ…ಆ ದೇವರಗೋಳನ ನೋಡಿದರಣಿ ಎದೀ ಝಲ್ ಅಂತೈತಿ !…ಬೋಳ ಬತ್ತಲೇ ಆಗಿ ಬರೇ ಕರೇ ಕಲ್ಲ ಕಂಡಂಗ ಆಗತೈತಿ !…ಯವ್ವಗೋಳರ್‍ಯಾ ನೀವು ಒಳಗ ಬಂದು ನೋಡದದ್ದಣಿ ಪಾಡ ಆತು…ಬಾಳೇದೊಳಗಿನ ಕಷ್ಟಾ -ನಷ್ಟಾ ಎಲ್ಲಾ ನೋಡಿ ನೋಡಿ…ನಮ್ಮ ಎದೀ ಎಲ್ಲಾ +ಕಲ್ಲ ಆಗಿ ಕುಂತದಾವು…ಅದಕ್ಕಣಿ ಅಲ್ಲಿ ಗುಡ್ಯಾಗಿಂದು ನೋಡದ್ದಕ್ಕ ನಮಗ ಏನ ಆಗಲಿಲ್ಲ…! ನೀವೇನರ ಅಲ್ಲೀದು ನೋಡಿದ್ದರಣಿ ನಿಮ್ಮ ಎದ್ಯಾನ ಕಾಜ ಅನ್ನೂದು ಹಂಗಣಿ ಒಡದಣಿ ಹೋಗತಿತ್ತು…! ನೀವು ನೋಡದದ್ದಣಿ ಪಾಡಾತು ನಡೀರಿ…’ ಅಂತ ಸಮಾಧಾನ ಹೇಳಿ ತಿರಿಗಿ ಕರಕೊಂಡ ಹೋದರು…ಆ ಹುಡಿಗಿಯರು ಸಮಾಧಾನ – ಅಸಮಾಧಾನಗಳ ಗೊಂದಲದ ಭಾವವನ್ನ ಮುಖದ ಮ್ಯಾಲೆ ಮುಡಕೊಂಡು – ತಿರಿತಿರಿಗಿ ಗುಡಿಯ ಕಡೆ ಹೊಳ್ಳಿ ಹೊಳ್ಳಿ ನೋಡಿಕೋತ ತಮತಮ್ಮ ಮನಿಗಳಿಗೆ ಹೋದರು… +…ಎಲ್ಲಾರಹಂಗ ಲಗಮವ್ವನೂ ಗುಡೀ ತುಡಗ ಆಗೇತಿ ಅಂತ ತಿಳದ ಕೂಡಲೇ ‘ಅಯ್ ನನ ಶಿವನಣಿ…’ ಅಂತ ಅಡರಾಯಿಸಿ ಗುಡಿಯಕಡೆ ಓಡಿ ಬಂದಳು…ಓಡಿ ಬರತಿದ್ದ ಆಕಿಯನ್ನ ಗುಡಿಯಿಂದ ಹತ್ತು ಮಾರು ದೂರದಲ್ಲಿಯೇ ತರುಬಿದ ಚಂದ್ರ್ಯಾ – +‘ಏ…ನಾರೂ ಯಣ್ಣೀ -ಪಾವಡರ್ರಾಣಿ ಅದು ಹಚಿಗೊಂಡವರು ಯಾರೂ ಒಳಗ ಹೋಗಂಗಿಲ್ಲವಾಣಿ…ಒಳಗ ಹೋಗಬ್ಯಾಡಾ’ ಅಂತಂದ… +ಲಗಮವ್ವ ‘ನಾನು ಪಾವಡರ್ರೂ ಹಚಿಗೊಂಡಿಲ್ಲ -ನಾರೂ ಯಣ್ಣೀನೂ ಹಚಿಗೊಂಡಿಲ್ಲ …ನನ್ನೇನ ಒಳಗ ಹೋಗಧಂಗ ತರಬೂ ಕಾರಣ ಇಲ್ಲೇಳಪಾ…’ ಅಂತ ಹೇಳಿ ಆತನ್ನ ವಾರಿ ಮಾಡಿಕೊಂಡು…ದಾಟಿ ಮುಂದಕ ನಡದಳು…ಅಷ್ಟರೊಳಗೇ ಸರ ಸರ ಅಂತ ಮುಂದೆ ಬಂದ ಈರ ಆಕಿನ್ನ ತಡವಿ ನಿಂದರಿಸಿ – +‘ಏ ಲಗಮವ್ವಾಣಿ…ರಗತ ತಿಲಕದ ಸೇವಾದ ದ್ಯಾವಪ್ಪ ನಣಿ ಸ್ವಾಮೀ ಗುಡೀ ತುಡಗ ಮಾಡ್ಯಾನ ಅನ್ನೂ ಸಂಶೇ ಅದಾವು…ಅದಕ್ಕಣಿ ನೀ ಒಳಗ ಹೋಗಬ್ಯಾಡಾ…’ ಅಂದ.ಲಗಮವ್ವನಿಗೆ ದ್ಯಾವಪ್ಪನ ಹೆಸರು ಹೇಳಿ ಹೇಳಿ -ಯಾಂಸೀ ದೀಡೀ ಮಾತಾಡುವುದನ್ನ ಕೇಳಿ ಕೇಳಿ ಸಾಕಾಗಿತ್ತು…ಆಕಿ ರೌಸಿಗೆದ್ದು – +‘ ಯಾಕೋ ನನ ಹಾಟ್ಯಾನ ಮಗನಣಿ…ಯಾಂವನೋ ಬಾಡ್ಯಾ ತುಡಗ ಮಾಡಿದ್ದರ ನಾ ಯಾಕ ಗುಡೀ ಒಳಗ ಹೋಗಬಾರದು…? ಗುಡೀ ಒಳಗ ಹೋಗಬ್ಯಾಡ ಅಂತ ಹೇಳಾಂವ ನೀ ಯಾವ ಬಾಡ್ಯಾನ ಮಗಾಣಿ…ನಿನ್ನಣಿ…ನಿನ್ನ ಹೇಲಹಚ್ಚಿ ತಟ್ಟಲೀಲೇ ಹೊಡೀತನು…’ ಅಂತ ಗದ್ದಲಾ ಎಬ್ಬಿಸಿ ಈರನ ಮೈಮ್ಯಾಲಣಿ ಹೋದಳು…. ಗುಡೀ ಮುಂದ ಕುಂತ ಗಂಡಮ್ಯಾಳದೊಳಗ ಲಗಮವ್ವನ ಕಾಕಾನೂ ಇದ್ದ…ಅಂವ ಎದ್ದು ಓಡಿಬಂದು ಲಗಮವ್ವನ್ನ ‘ಏನು…ಏನಾತು?’ ಅಂತ ಕೇಳದ್ದಕ್ಕ ಆಕಿ – +‘ನೋಡ ಕಾಕಾಣಿ…ಈ ಪಿಸರ ಬಾಡ್ಯಾನ ಮಗಾ ತೇರಿನ ಗಾಲಿಗೆ ತೆಲೀ ಒಡಕೋ ಆ ದ್ಯಾವ್ಯಾನ ಕೂಟೇ ನನ ಸಮ್ಮಂದ ಹಚ್ಚಿ ಯಾಂಸೀ ದೀಡೀ ಮಾತಾಡತಾನೂ…’ ಅಂತ ಹೇಳಿ ಅಲ್ಲೇ ಕುಂತು ಮುಖಕ್ಕ ಸೆರಗ ಹಾಕೊಂಡು ಅಳಾಕತ್ತಳು…ಲಗಮವ್ವನ ಕಾಕಾ -ಭರಮಪ್ಪ – ರೌಸಿಗೆದ್ದು +‘ಏನೋ ನಿನ್ನೌನ…ಯಾರ ಮನಿತನಾ ತಗೀಬೇಕಂತ ಮಾಡೀದೀ…ನಿನ್ನ ಕೈಯ್ಯಣಿ ಕಡೀತನು ಬೋಸಡೀ ಮಗನಣಿ…’ ಅಂತ ಈರನ ಎದೀ ಹಿಡದು ನುಗಿಸಿದರೆ ಆ ಈರ ಅಂಬುವವ ಮೂರು ಮಾರು ದೂರ ಹೋಗಿ ಬಿದ್ದ… ಕೂಡಿದ ಮಂದ್ಯಾಗಿನ ಹತ್ತಾರು ಮಂದಿ ಬುದು ಬುದೂ ಅಂತ ಎದ್ದು ಓಡಿ ಬಂದು ಜಗಳಾ ಬಿಡಸತಿದ್ದರೆ, ಡೊಗಳೆ ಪೈಜಾಮಾ ಮತ್ತ ಬಿಳೀ ನೆಹರೂ ಶರ್ಟು ಹಾಕೊಂಡಿದ್ದ ಕಪ್ಪನೆಯ ಕುಳ್ಳಗಿನ ಆಸಾಮಿ -ಕುಂಬಾರ ರಾಯಾ – ಭರಮನ ಹತ್ತರ ಬಂದು -‘ಏಣಿ… ಈರ ಲಗಮವ್ವಗ ಹಂಗ ಅಂದದ್ದು ಹೆಂತಾ ಮಾತು !…ಇನ್ನ ಆ ಹುಡಿಗೀ ಮದಿವಿ ಆಗಿ ಬಾಳೇ ಮಾಡಾಕ ಆದೀತೂ…?’ ಅಂತ ಹೇಳಿದ್ದಕ್ಕ ಜಗಳಾ ಬಿಡಸಲಿಕ್ಕೆಂತ ಭರಮನ್ನ ಎಳಕೊಂಡು ನಿಂತಿದ್ದ ಮಂದ್ಯಾಗಿನ ಛತ್ರೇರ ಸಾತವೀರ ರಾಯಾನ್ನ ಫೈಲ ಮ್ಯಾಲ ತಗೊಂಡ… +‘ಏ ರಾಯಾಣಿ…ಹಿಂತಾ ಬುದ್ದೀ ಇನ್ನಾರ ಬಿಡು.ಮದಿವೀ ಆಗಿ ಬಾಳೇ ಮಾಡದಂಗ ಲಗಮವ್ವಗ ಏನ ಆಗೇತಿ…ಯಾಂವನೋ ಮಂಗ್ಯಾನಂತಾ ಹುಡಗ ಏನೋ ಅಂತ್ಯು ಅಂದರ ಅದನ್ನ ಎಲ್ಲಿಗೆ ಒಯ್ದ ಹಚ್ಚೂದು?…ನಿಮ್ಮಂತಾ ಮನಿಮುರಕ ಸೂಳೀಮಕ್ಕಳು ಅದಾರಂತಣಿ ದೇವರಗೋಳು ಊರ ಬಿಟ್ಟ ಹೊಂಟದಾವ ನೋಡು…’. +‘ಎಲಾ ಇವನೆಪ್ಪನ…ಅಲ್ಲದ ಮಾತಿಗೆ ಅಲ್ಲದ್ದು ಅಂತ ಹೇಳಿದರ ಇಂವ ನೋಡದಣಿ…ನನ್ನ ಮ್ಯಾಲಣಿ ತಪ್ಪ ಹಾಕತಾನು…ನಿಮ್ಮಂಥವರು ಕೂಡಿದರ ಬಗೀಹರೀತು…’ ಅಂತ ರಾಯಪ್ಪ ವಟಾ ವಟಾ ಅಂತ ಅನಕೋತ-ನುಗಿಸಿದ್ದಕ್ಕ ಮೂರು ಮಾರು ದೂರ ಹೋಗಿ ಬಿದ್ದು -ಎದ್ದು -ಮೈಮ್ಯಾಲಿನ ಅರಿವೀ ಎಲ್ಲಾ ಜಾಡಿಸಿಕೊಂಡು…ಗುಡಿಯ ಮೆಟ್ಟಲಿನ ಮ್ಯಾಲೆ ಹೋಗಿ ಕೂತಿದ್ದ ಈರನ ಹತ್ತರ ಹೋದ…ಅಲ್ಲಿ ಹೋಗಿ ಈರನಿಗೆ – +‘…ಅಲ್ಲೋಪಾಣಿ ನೀ ಏನ ಅನಬಾರದ ಅಂದಿ…? ವಾರಿಗೆವರು ನಗಿಚಾಟಿಕೀ ಮಾಡೂದಣಿ ಒಂದ ದೊಡ್ಡ ತಪ್ಪ ಆದಂಗ ಆತಲಾ…! ವಾರಿಗೀ ಹುಡಿಗಿ ಅಂತ ಒಂದ ಮಾತ ಅಂದದೀ…ಅದನ್ನಣಿ ಹಿಂಗ ದೀರ್ಗಕ್ಕ ಎಳದು ಎದೀ ಹಿಡದು ನುಗಸೂದಂದರ…? ಇಲ್ಲೇನ ಮೊಗಲಾಯಿ ಬಂದೈತೇನು…?ನೀ ಇದನ್ನ ಸುಮ್ಮನಣಿ ಬಿಡಬ್ಯಾಡಾ…’ ಅಂತ ಹೇಳಿದ. ರಾಯಾನ ಮಾತಿಗೆ ಈರ ಏನೂ ಹೇಳದ … ಸುಮ್ಮನಣಿ ಕೂತ…ಇಲ್ಲಿಯೂ ತನ್ನ ಮಾತಿಗೆ ಬೆಲೀ ಸಿಗದೇ ಅಂವ -ಮಂದಿಗೆ ಒಟ್ಟಣಿ ಅಭಿಮಾನನ್ನೂದಣಿ ಇಲ್ಲ ನೋಡು…ಅಂತ ವಟವಟ ಅನಕೋತ ಹೊಳ್ಳಿ ಬಂದು ತನ್ನ ಜಾಗಾದಾಗ ತಾನು ಕೂತ…. +ಸ್ವಾಂವಜ್ಜ ‘ಯಾಕಪಾ ರಾಯಾಣಿ… ಯಾಕೋ ಉರೀ ಹತ್ತಲಿಲ್ಲಲಾಣಿ?… ಹಸೀ ಹುಲ್ಲಿನ್ಯಾಗ ಉಚ್ಚೀ ಹೊಯ್ದಕ್ಯಾರ ಕಡ್ಡೀ ಗೀರಿ ಉರೀ ಹಚ್ಚೂ ಗಂಡಮಗಾ ನೀನು…ಇಂದ ಯಾಕೋ ಠುಸ್ ಅಂತಲಾ…’ ಅಂತ ಅಂದದ್ದಕ್ಕೆ ಹಣಿಮಿಕ್ಯಾರ ಮಲ್ಲ +‘ಯಜ್ಜಾ ಉರೀ ಹತ್ತಿಲ್ಲ ಅಂತ ಹಂಗ ಖಾತ್ರೀಲೇ ಹೇಳಬ್ಯಾಡಾ…ಸದ್ದೇಕ್ಕ ಶಾಂತ ಇದ್ದು ಆಮ್ಯಾಲ ಭುಗಲ್ಲಂತ ಹತಿಗೋಳೂ ಹಂತಾ ಇದ್ಯಾ ಐತಿ ಈ ರಾಯಾನ ಹಂತೇಕ…’ ಅಂತ ಹೇಳಿದ.ರಾಯಪ್ಪ ‘ಯಾಣಿ…ಏನ ಮಾತಂತ ಆಡತೀಯೋ ದೊಡಪ್ಪಾಣಿ…ನಾಯೇನ ಅಲ್ಲಿ ಜಗಳಾ ಹಚ್ಚಾಕ ಹೋಗಿನ್ನಿ ಏನು?…ಜಗಳಾ ಬಿಡಸಾಕ ಹೋಗಿನ್ನಿ . ಊರಿನ ಮರ್ಯಾದಿ ಹೋಗೂ ಯಾಳೇ ಬಂದ ಕುಂತೈತಿ.ಹಿಂತಾ ಯಾಳೇದಾಗ ಬಡದಾಟಕ ಬಿದ್ದದೀರಿ…ನಿಮಗೇನ ಬುದ್ಧಿಗಿದ್ದಿ ಐತಿಲ್ಲೋ ಅಂತ ಬೈದ ಬಂದಿನಿ…ಹಂತಾದ್ದ ತಗೊಂಡ ನೀವು ಏನೇನೋ ಅನ್ನಾಕತ್ತದೀರೆಪಾ…’ ಅಂತ ಹೇಳಿದಾಗ ಮಂದಿ- ಏ …ಹೌದ ಹೌದು…ನೀ ಖರೇನ ಮಾತಾಡತೀ ಬಿಡಪಾ… ಅಂತಂದಾಗ ನಗಲಿಕ್ಕೆ ಹೊಂಟ ಮಂದಿಗೆಲ್ಲಾ-ಹಿಂತಾ ಯಾಳೇದಾಗ ನಗೂದು ಯೋಗ್ಯವಲ್ಲ ಅಂತ ಅನಿಸಿ ಅವರೆಲ್ಲಾ ಒಮ್ಮಿಗೆಲೇ ಮೌನದಿಂದ ಗಂಭೀರರಾಗಿ ಕುಂತರು… +* +* +* +…‘ಸ್ವಾಂವಪ್ಪಾ ನೀ ಹಿಂಗ ಸುಮ್ಮನಣಿ ಕುಂತರ ಹೆಂಗ…? ನಾವೆಲ್ಲಾ ಊರಾಗ ಹಗಲೆಲ್ಲಾ ಮಾತಾಡಿಕೊಂತಿದ್ದಿವಿ…ನಮ್ಮ ಊರಾಗ ಎಲ್ಲಾದರಾಗ ತೆಲೀ ಇರಾಂವಾ ಮತ್ತ ಧೈರ್ಯೇವಂತ ಅಂದರ ನಮ್ಮ ಸ್ವಾಂವಪ್ಪ ಒಬ್ಬಣಿ ಅಂತ ! ಹಂತಾದ್ದರಾಗ ನೀನಣಿ ಇಂದ ಕಾಲ ಕಳಕೊಂಡವರಂಗ ಕುಂತರ ಹೆಂಗ…?ಈಗ ಮುಂದ ಹೆಂಗ ಮಾಡೂದಂತ ನೀನಣಿ ಹೇಳಬೇಕು…’ ಅಂತಿದ್ದಂಗಣಿ ಭೂತಗೋಳ ಲಸಮ್ಯಾ – +‘ಯಾಣಿ…ಇದೊಳ್ಳೇ ಪಾಡಾತು ನೋಡು.ಸ್ವಾಂವಜ್ಜ ಜಯ್ಯಾರಾಂವ… ಅಂವಗ ನಮ್ಮ ದೇವರ ಸ್ವಾಮಾನ ತುಡಗ ಆಗ್ಯಾವಂದರ ಒಳಗೊಳಗಣಿ ಸಂತೋಸನಣಿ ಆಗಿರಬೇಕು’ ಅಂತ ಅಂದುಬಿಟ್ಟ …ಸೊಲಿಗೀ ರಾಮ ಲಸಮ್ಯಾನ ಮಾತು ಕೇಳಿ ರೌಸಿಗೆದ್ದು ‘ಏನಂತ ಮಾತಾಡತೀಲೇ ತೆಲೀಮಾಸದ ಸೂಳೀಮಗನಣಿ…ಸ್ವಾಂವಜ್ಜಗ ಹಂತಾ ಮಾತ ಆಡಿದರ ನಾಲಿಗ್ಗೆ ಹುಳಾ ಬಿದ್ದಾವು…’ ಅಂತ ಹೇಳತಿದ್ದಂಗಣಿ ಕುಂಬಾರ ರಾಯಾ ‘ಯಾ…ಬಿಡೋಪಾ…ಈ ಊರಿನ ವಹಿವಾಟ ಎಲ್ಲಾನೂ ಸ್ವಾಂವಜ್ಜಗಣಿ ಬರದ ಕೊಟ್ಟದೀರೇನು…? ಯಂಗಸ್ಟರಗ ಲೀಡರಶಿಪ್ಪು ಕೊಡಬೇಕು…’ ಅಂದ…ಈ ರಾಯಾ ಒಂಭತ್ತನೇ ಕ್ಲಾಸಿನ ತನಕಾ ಸಾಲೀ ಬರದು ಅದನ್ನ ಬಿಟ್ಟು ಊರು ಸೇರಿದಂವ… ಅವನಿಗೆ ತಾನು ಸುಶಿಕ್ಷತ ನಾಗರೀಕ ಅನ್ನುವ ಹಮ್ಮು …ಇದರ ಜೋಡೀ ತನಗೆ ಎಮ್ಮೆಲ್ಲೇನ ಗುರ್ತು ಇದೆ ಅಂತನ್ನುವ ಜರ್ಬಿನಲ್ಲಿ ಹುಂಬ ಪುಢಾರಗಿರೀ ಮಾಡಿಕೋತ ಊರಿನ್ಯಾಗ ಆಗಾಗ ಜಗಳಗಳಲ್ಲಿ ಸಿಕ್ಕಿಹಾಕಿಕೊಂಡು – ವಾರ ಹದಿನೈದು ದಿನಗಳಿಗೊಮ್ಮೆ ಯಾರಿಂದಲಾದರೂ ಏಟು ತಿಂದು …ಪೋಲೀಸರಿಗೆ ನಿಯಮಿತವಾದ ಆದಾಯದ +ಮೂಲವಾದವನು…ಹಿಂಗಾಗಿ ಗೋಕಾಂವಿಯ ಪೋಲೀಸರಿಗೆ ಧರಮನಟ್ಟಿಯ ಈ ಕುಂಬಾರ ರಾಯಾ ಅಂದರೆ ಭಾಳ ಅಂದರ ಭಾಳ ಪ್ರೀತಿ….ರಾಯಾನ ಮಾತಿಗೆ ಈಗ ಲಗಮವ್ವನ ಕಾಕಾಣಿ-ಭರಮಪ್ಪ ರೌಸಿಗೆದ್ದ… ‘ಏ ಕೆಸರ ತುಳ್ಯಾಂವನಣಿ…ಸುಮ್ಮನ ಬಜಾ ನಾಯೀ ಹಂಗ ಕುಂಡರ್ರು…ನಿನಗ ತಿಳೀದ ಹ್ವಾರೇಕ್ಕ ಹೋಗಬ್ಯಾಡಾಣಿ…ನಿನ್ನ ಕೆಸರನ ಇಲ್ಲಿಗೆ ತರಬ್ಯಾಡಾ’ ಅಂತ ಗುಟುರು ಹಾಕಿದ… ‘ಏ ಭರಮಪ್ಪಾ …ಹುಶಾರೀಲೇ ಮಾತಾಡು…ಕೆಸರ ತುಳ್ಯಾಂವಾ ಗಿಳ್ಯಾಂವಾ ಅಂದರ ಪಾಡ ಆಗಾಕ್ಕಿಲ್ಲ…ನಿನಗ ರಾಜಕೀಯ ಗೊತ್ತ ಇಲ್ಲದಿರಕ ಸುಮ್ಮನಣಿ ಕುಂಡರಬೇಕು…ಈಗ ಪ್ರಜಾಪ್ರಭುತ್ವ ಐತಿ…ಹುಂಬಗುತಗೀ ಮಾತ ಆಡಬ್ಯಾಡ…’ ಅಂತ ರಾಯಾ ಮರುನುಡಿ ಆಡಿದ್ದಕ್ಕ ಭರಮಪ್ಪಗ ಮನಗಂಡಣಿ ಸಿಟ್ಟು ಬಂತು.ಅಂವ-‘ಏನೋ ನಿನ್ನೌನ ಕೆಸರ ನಾದಾವನಣಿ… ಪ್ರಜಾ -ಗಿಜಾ ಅಂತ ಆರೇಮಾತಿನ್ಯಾಗ ಬೇದು ದಕ್ಕಿಸಿಗೋತನಂತ ತಿಳಕೊಂಡದೀ ಏನು?…ಬೋಸಡೀಮಗನಣಿ…ನಿನ್ನ ನಾಲಿಗೀನಣಿ ಕಿತ್ತಿ ಇಡತನು…’ ಅಂತ ಅನಕೋತ ಎದ್ದು ರಾಯಾನ್ನ ಹೊಡೀಲಿಕ್ಕೆ ನುಗ್ಗಿದ…ಕೂಡಿದ ಮಂದಿ ಅಂವನ್ನ ಸಮಾಧಾನ ಮಾಡಿ ಕೂಡಸೂತನಕಾ ರಣಾ ರಂಪ ಆತು…ಮಂದಿ ಹಿಂಗ ಭರಮಪ್ಪನನ್ನ ಸಮಾಧಾನ ಮಾಡತಿದ್ದರೆ ರಾಯಾ ಪೆಚ್ಚಾಗಿ ಕೂತುಬಿಟ್ಟ…ಆಗ ಕೊಂಯ್ಕಗೋಳ ಈರಭದ್ರ -ಇಂವ ಮೂಡಲಗಿಯ ಜೂನಿಯರ್ ಕಾಲೇಜಿಗೆ ಹೋಗಿ ಒಂದನೇ ಪೀಯೂಸೀ ಕಲತು ಫೇಲಾಗಿ ಬಂದವ – ಇಂವ ಗಸಲ್ಲನೇ ಎದ್ದು ನಿಂತು , ಭಾಷಣ ಮಾಡವರ ಗತ್ತಿನೊಳಗ ಮಾತಾಡಲಿಕ್ಕತ್ತಿದ- ‘…ಈ ರಾಯಪ್ಪ ಕೆಸರ ತುಳ್ಯಾಂವಣಿ ಆಗಲೀ ಇಲ್ಲಾ ಮತ್ತೇನರ ನಾದಾಂವ ಆಗವಲ್ಲನ್ಯಾಕ…ಅದ ಮುಕ್ಯ ಅಲ್ಲ…ಮುಕ್ಯ ಏನಪಾ ಅಂದರ- ಡೆಮಾಕ್ರಸೀ!…ಅಂವ ಏನ ಪ್ರಜಾಪ್ರಬುತ್ವ ಅಂದನಲಾ ಅದು ಬ್ಯಾರೇ ಏನ ಅಲ್ಲ…ಅದ ಡೆಮಾಕ್ರಸೀ ಐತಿ…ಈ ಡೆಮಾಕ್ರಸಿ ಏನೈತಿ ಅದು ನಮಗ ಬಾಳ ಮುಕ್ಯ…ಡೆಮಾಕ್ರಸೀ ಏನ ಹೇಳತೈತೀ…? ಯಂಗಸ್ಟಾರಿಗಿ ಪವರ್ರು ಕೊಡಬೇಕೂ ಅನತೈತಿ…ಅದು ಮುಕ್ಯ…ರಾಯಪ್ಪಗ ಜಗತ್ತಿನ eನ ಐತಿ…ಹಿಂಗಾಗೀ ಅಂವ ಡೆಮಾಕ್ರಸೀದು ಬರಾಬ್ಬರೀ ಹೇಳಿದ…’ ಅಂತ ಈರಭದ್ರ ಇಲೆಕ್ಶನ್ನಿನ ಭಾಷಣದಂಗ…ಹಿಂಗಣಿ ಮಾತಾಡತಿದ್ದರ ಈರಭದ್ರನಣಿ ಹಿಂದಣಿ ಕೂತಿದ್ದ ಅವನ ಸ್ವಾದರಮಾವ – ಸೊಲಿಗೀ ರಾಮ -ಧಡಕ್ಕನಣಿ ಎದ್ದು ನಿಂತು – +‘ಭಾಡ್ಯಾನ ಮಗನಣಿ…’ ಅಂತನ್ನುವ ಒಂದು ಬೈಗುಳವನ್ನಲ್ಲದೆ ಮತ್ತೊಂದು ಮಾತಾಡದೆ, ಈರಭದ್ರನ ಕುತಿಗೀ ಹಿಡದು ಬಗ್ಗಿಸಿ -ಬೆನ್ನ ಮೇಲೆ ದಬಾ ದಬಾ ಅಂತ ಹೇರಲಿಕ್ಕೆ ಸುರು ಮಾಡಿದ…ಯಾರ ಒಬ್ಬರೂ ಅಂವನ್ನ ಬಿಡಸಲಿಕ್ಕೆ ಹೋಗಲಿಲ್ಲ… ಈರಭದ್ರನಿಗೆ ವಿಚಿತ್ರ ಅನಿಸಿತು…ಈರಭದ್ರನ ಪಾಲಿಟಿಕಲ್ಲಿನ ಲೆಕ್ಚರರ್ರು ಹಗಲೆಲ್ಲಾ ಡೆಮಾಕ್ರಸಿ -ಡೆಮಾಕ್ರಸಿ ಅಂತ ಅಂತಿದ್ದರಾದ್ದರಿಂದ ಅದು ಇವನ ಮನಸ್ಸಿನಲ್ಲಿ ಕೂತಿತ್ತು… ಇಲ್ಲಿ ರಾಯಪ್ಪ ಪ್ರಜಾಪ್ರಭುತ್ವ ಅಂತ ಹೇಳಿದ್ದನ್ನ ಬೈಗಳು ಅಂತ ತಪ್ಪು ತಿಳಕೊಂಡು ರೌಸಿಗೆದ್ದ ಭರಮಪ್ಪನನ್ನು ಕಂಡು-ಅeನಿಗಳಾದ ತನ್ನ ಜನರಿಗೆ ಈ ಪ್ರಜಾಪ್ರಭುತ್ವ ಅನ್ನುವದು ಮತ್ತೇನೂ ಅಲ್ಲ-ಅದು ಡೆಮಾಕ್ರಸಿ ಅಂತ ತಿಳಿಸಿ ಹೇಳಬೇಕೆಂದರೆ ತನ್ನ ಸ್ವಾದರ ಮಾವ ಡೊಗ್ಗಿಸಿ ಗದಮಿದ್ದು ಅವನಿಗೆ ವಿಚಿತ್ರ ಅನಿಸಿತು…ಹಂಗೆ ನೋಡಿದರೆ ಈರಭದ್ರನೇನೂ ಪೀಚು ಹುಡುಗನಲ್ಲ…ಓಕಳೀಮುಂದ ಕಲ್ಲು ಗುಂಡು ಎತ್ತಿ ಬೆಳ್ಳೀ ಖಡೇ ಗೆದ್ದ ಹುಡುಗ…!ಸ್ವಾದರ ಮಾವ ತನ್ನನ್ನ ಡೊಗ್ಗಿಸಿ ಗದಮತಿರಬೇಕಾದರೆ ಕೊಸರಿಕೊಂಡು ಅವನ ಎದೀ ಹಿಡಿದು ನುಗಸಬೇಕೆನ್ನುವ ಸಿಟ್ಟೂ – ಹ್ಯಾಂವಾ ಅವನೊಳಗ ತುಂಬಿ ಬಂದಿತ್ತು…ಆದರೆ ಸೊಲಗೀ ರಾಮ ಈರಭದ್ರನಿಗೆ ಬರೇ ಸ್ವಾದರಮಾವ ಮಾತ್ರ ಆಗಿರದೇ ಹೆಣ್ಣು ಕೊಡಲಿರುವ ಖಾಸಾ ಮಾವನೂ ಆಗಿದ್ದರಿಂದ- ಈರಭದ್ರ ಅವನಿಂದ ಗುದ್ದು ತಿಂದು ತೆಲೀ ತೆಳಗ ಹಾಕ್ಕೊಂಡು…ಸುಮ್ಮನೇ ಕೂತುಬಿಟ್ಟ. +ಈರಭದ್ರನ ಜೋಡೀ ಸಾಲಿಗೆ ಮಣ್ಣು ಹೊತ್ತ ಅವನ ವಾರಿಗಿಯ ಹುಡುಗರಿಗೆ ಅವನ ಲೀಡರಶಿಪ್ಪಿನಲ್ಲಿ ಭಾಳ ನಂಬಿಕಿ…ಯಾಕಂದರೆ ಅವನು ಜಾತಿವಂತ ಮತ್ತು ಬಳಗವಂತ… ಮುಂದೆ ಪಂಚಾಯತಿಯ ಇಲೆಕ್ಶನ್ನಿನೊಳಗೆ ಅವನನ್ನ ಚೇರಮನ್ನ ಕ್ಯಾಂಡಿಡೇಟು ಮಾಡಿಕೊಂಡು-ಚೇನು ಮಾಡಿಕೊಂಡು ಇಲೆಕ್ಶನ್ನಿನೊಳಗ ಗೆದ್ದು ಪವರ್ರು ಹಿಡಿಯಬೇಕೆನ್ನುವ ಹುನ್ನಾರವನ್ನ ಇವರೆಲ್ಲಾ ಇಟಗೊಂಡಿದ್ದರು…ಹಂತಾ ತಮ್ಮ ನಾಯಕ ಈರಭದ್ರನಿಗೆ ಅವಮಾನ ಮಾಡಿದ್ದನ್ನ ಈ ಹುಡುಗೋರ್‍ಯಾರೂ ಸಹಿಸಲಿಕ್ಕೆ ತಯಾರ ಇದ್ದಿದ್ದಿಲ್ಲ…ಆದರೆ ತಮ್ಮ ಲೀಡರನೇ ಗುದ್ದಿಸಿಕೊಂಡು ಸುಮ್ಮನೇ ಕೂತಾಗ ಅವರೆಲ್ಲಾ ಫ್ಯೂಜು ಕಳಕೊಂಡವರಂಗ ಆದರು…ಆದರೂ ತಮ್ಮ ಲೀಡರನನ್ನ ಅಪಮಾನ ಮಾಡಿದ್ದಕ್ಕೆ -ಅವರೆಲ್ಲಾ ಎದ್ದು ವಟ ವಟ ಅಂತ ಅನಕೋತ ಸಭಾತ್ಯಾಗ ಮಾಡಿದರು…ಆಮ್ಯಾಲೆ ಈರಭದ್ರನೂ ಎದ್ದು ಹೋದ… +…ತನಗೆ ಸಪೋರ್ಟು ಮಾಡಿದ ಈರಭದ್ರನಿಗೆ ಅಪಮಾನ ಆದದ್ದು ರಾಯಪ್ಪನಿಗೆ ಸಹಿಸಲಿಕ್ಕೆ ಆಗಲಿಲ್ಲ…ಈರಭದ್ರ ಎದ್ದು ಹೊಂಡತಿದ್ದಂಗೇ ಅಂವ ಘಸಲ್ಲನೇ ಎದ್ದು ನಿಂತು-ಪ್ರಜಾಪ್ರಭುತ್ವ ಅಂತ ಹೇಳಲಿಕ್ಕೆ -‘ಪ್ರ…’ ಅಂತ ಮಾತು ಸುರುಮಾಡಿದವನೇ -ಗೋಣು ಹಾಕಿ ತನ್ನ ಮಾತು ನುಂಗಿ – ಮತ್ತ ಬ್ಯಾರೇ ಮಾತು ಹೊಂದಿಸಿಕೊಂಡು ಮಾತಾಡಲಿಕ್ಕತ್ತಿದ ‘….ಈ ಕೂಡಿದ ಸಭಾ ಯಂಗ ಬ್ಲಡ್ಡಿಗೆ ಅಪಮಾನ ಮಾಡೇತಿ…ಅದಕ್ಕಣಿ ನಾ ಇದನ್ನ ಪ್ರೊಟೆಸ್ಟ ಮಾಡತನು…ನಾ ಧರಣೀ ಸತ್ಯಾಗ್ರಹ ಮಾಡತನು…’ ಅಂತ ನುಡಿದವನೇ ಗುಂಪಿನ್ಯಾಗಿಂದ ಎದ್ದು ಹೋಗಿ – ಅಲ್ಲೇ ಗುಂಪಿನಿಂದ ಒಂದು ಮಾರು ದೂರದಾಗ ಚಕ್ಕಾಮುಕಳಿ ಹಾಕೊಂಡು ಕುಂತ… ಅದೇನೋ ಪ್ರೊಟೆಸ್ಟ ಮಾಡತನೂ…ಅಂತ ಕೂಡಿದ ಮಂದ್ಯಾಗಿಂದ ಎದ್ದು ಹೊಂಟಿದ್ದ ರಾಯಾನನ್ನ -ಅಂವ ಏನೋ ಒಂದು ಘನಿಷ್ಟವಾದದ್ದನ್ನ ಮಾಡತಾನೆ ಅಂತ ಮಂದಿ ಎಲ್ಲಾ ಅಂಜಿ ಕುತೂಹಲದಿಂದ ನೋಡತಿದ್ದರಣಿ…ಅಂವ ಹೋಗಿ ಅಲ್ಲೇ ಗುಂಪಿನ ಮಗ್ಗಲದಾಗ ಕೂತದ್ದು ಕಂಡು ಅವರಿಗೆ ಭಯಂಕರ ನಿರಾಸೆ ಆತು…ಭರಮ ‘ಕೆಸರು ತುಳಿಯೂ ಸೂಳೀ ಮಗಾಣಿ…ಪೊಟೆಸ್ಟೊ ಏನೋ ಮಣ್ಣ ಮಾಡತನಂತ ಅಂದು…. ಇಲ್ಲಿ ನಮ್ಮ ನಡಕಿಂದ ಎದ್ದು ಹೋಗಿ ಅತ್ತಲಾಗ ಗುಂಪಿಂದ ಹೊರಗ ಹೋಗಿ ಕುಂತ…’ ಅಂತಂದು ಗಹಗಹಿಸಿ ನಕ್ಕ…ತಾವೆಲ್ಲಾ ನಗದೇ ಗಂಭೀರವಾಗಿ ಇರಬೇಕು ಎಂದು ಒಂದು ಅಘೋಷಿತ ನಿರ್ಧಾರ ತಗೊಂಡಿದ್ದ ಅಲ್ಲಿ ಕೂಡಿದ ಮಂದಿ ಎಲ್ಲಾ ಭರಮನತ್ತ ಬೆಕ್ಕಸಬೆರಗಾಗಿ ನೋಡತೊಡಗಿದರು… +…ಇಷ್ಟ ಎಲ್ಲಾ ನಾಟಕ ಆಗೂತನಕಾ ಸುಮ್ಮನಣಿ ಕುಂತಿದ್ದ ಸ್ವಾಂವಜ್ಜ ಈಗ ಸಾವಕಾಶವಾಗಿ ಎದ್ದು ನಿಂತು ‘ಹಾಂ…ನಾ ಬರತನ ಗೂಳಪ್ಪಣ್ಣಾ…’ ಅಂತ ನುಡದು ಹೊಂಡಲಿಕ್ಕೆ ತಯಾರಾದಾಗ ಗೂಳಪ್ಪಜ್ಜ -‘ಏಣಿ…ಯಾಕೋಪಾಣಿ…?’ ಅಂತ ಗಾಬರಿಯಿಂದ ಕೇಳಿದ. ಸ್ವಾಂವಜ್ಜ ಉಸ್..ಂತ ಉಸರು ಬಿಟ್ಟು – +‘…ಮತ್ತೇನಪಾಣಿ ನಾಯೇನ ಜಾತ್ಯಾಂವ ಅಲ್ಲಾ ಏನಲ್ಲಾ !…ಮತ್ತ ಈ ವಿಠ್ಠಲಸ್ವಾಮಿ ನನ್ನ ದೇವರೂ ಅಲ್ಲಲಾ!…ಇನ್ನ ಮ್ಯಾಗ ನಂದೇನ ದಗದ ಐತಿ ಇಲ್ಲೀ?’ ಅಂತಂದಾಗ ಗೂಳಪ್ಪಜ್ಜ ಒಮ್ಮಿಗೆಲೇ ಅವನ ಮ್ಯಾಲೆ ಕವಕ್ಕೆಂದ… +‘…ಕಡಿಕೂ ನಿನ್ನ ಜಾತೀ ಯಾಪಾರೀ ಬುದ್ಧೀ ತೋರಿಸೇ ಬಿಟ್ಟಿ ನೋಡು… ದೇವರ ದಾಗೀನದೂ ಎಲ್ಲಾ ಕಳವ ಆಗಿ ಕುಂತಾಗ ಆ ದೇವರು ನಿನಗ ಬ್ಯಾಡಾತೇನು!… ನಾ ಹೋಗತನೂ -ನಾ ಹೋಗತನೂ… ಅಂತ ಅನ್ನಾಕತ್ತದೀ…!’ ಅಂತ ಅನತಿದ್ದಂಗಣಿ ಜಂಗೀ ರಾಮಣ್ಣ -‘…ಯಜ್ಜಾ ಇಂದ ಬೀಜ ಮಾತ ಆಡಿದಿ ನೋಡ.ಈ ಸ್ವಾಂವಜ್ಜ ಅಂದರ ದೇವರಣಿ ಆಗಿ ಕುಂತಿದ್ದ ನಿಮಗ…ನಾ ಆವತ್ತಣಿ ಹೇಳಿನ್ನಿ…ರಗತ ಸೇವಾಕ್ಕ ಆ ದ್ಯಾವಗ ರೊಕ್ಕಾ ಕೊಡೂದ ಬ್ಯಾಡಂತ ಇಂವ ಏನ ಹೇಳಿದನಲಾ…ಆವತ್ತಣಿ ಹೇಳಿನ್ನಿ . ಈ ಸ್ವಾಂವಜ್ಜಗ ನಮ್ಮ ದೇವರಮ್ಯಾಗ ಬಗತೀ ಇಲ್ಲಾ ಅಂತ…ಆದರ ನೀವೆಲ್ಲಿ ಕೇಳಿದಿರಿ…?ಎಲ್ಲಾದಕ್ಕೂ ನಿಮಗ ಸ್ವಾಂವಜ್ಜನಣಿ ಬೇಕು! ನಮ್ಮ ಜಾತೀ ಹುಡುಗೋರಂದರ ನೀವು ಹಿರ್‍ಯಾರೆಲ್ಲಾ ಒಂದ ನಮೂನೀ ಟಿಸಿ ಟಿಸೀ ಮಾಡತೀರಿ… ಇವತ್ತ ಸುದ್ದೇ ಆ ಈರಭದ್ರ ಏನೋ ನಾಕ ತಿಳುವಳಿಕೀ ಮಾತು ಹೇಳಾಕ ಹೋದರಣಿ ಅದನ್ನ ಬೇದೂ ಬಡದೂ ಕಳಿಸಿದಿರಿ…ಊರಿನ ಅಧಿಕಾರನ್ನೂದನ್ನ ಈ ಸ್ವಾಂವಜ್ಜಗ ಬರದ ಕೊಟ್ಟಣಿತೇನು…?’ ಅಂತ ಅನತಿದ್ದಂಗಣಿ ಗುಂಪಿನ ಹೊರಗ ಧರಣೀ ಸತ್ಯಾಗ್ರಹಕ್ಕ ಕುಂತಿದ್ದ ರಾಯಪ್ಪ ಟಣ್ಣಂತ ಜಿಗದ ಎದ್ದು ನಿಂತು – +‘ನಾನೂ ಅದನ್ನಣಿ ಹೇಳಿದಿನಿ…’ ಅಂತ ಅನತಿದ್ದಂಗಣಿ ಭರಮಪ್ಪ – +‘ಏಣಿ ಮಂಗ್ಯಾ ಸೂಳೀಮಗನಣಿ…ರಾಜಕೀಯ ಮಾಡಿ ಊರ ಹೊಲಸ ಎಬ್ಬಸಾಕ ಹೋಗಬ್ಯಾಡಾ…’ ಅಂತ ಹೇಳಿಕೋತ ರಾಯಾನ ಕಡೆ ನುಗ್ಗಿ ಅವನ ಎದೀಹಿಡದು ನುಗಿಸಿದ…ಗುಂಪಿನ್ಯಾಗಿನ ನಾಕೈದು ಮಂದಿ ಎದ್ದು ಓಡಿಹೋಗಿ ಭರಮನ್ನ ಎಳದ ಹಿಡದು ಬಿಡಿಸಿದರು…ಇಲ್ಲಿ ಹಿಂಗ ಜಗಳ ಹತ್ತಿದ್ದು ಕಂಡು …ಅಲ್ಲೇ ಗುಡಿಯ ಮಹಾದ್ವಾರದ ಹತ್ತರ ನಿಂತಿದ್ದ ಈರಭದ್ರನ ಇಲೆಕ್ಶನ್ನಿನ ಚೇನಿನ +ಹುಡಗೋರು ಬುದು ಬುದೂ ಅಂತ ಓಡಿ ಬಂದವು…ಬುದು ಬುದೂ ಅಂತ ಓಡಿ ಬಂದು-ಅವರೊಳಗಿನ ಕಂಬ್ಯಾರ ಬಸೂ ಅನ್ನುವವನು-‘ಯಾಕೋ ಪಿಸಾಳ್ಯಾಣಿ…’ ಅಂತ ಭರಮನ ಎದೀಮ್ಯಾಲಿನ ಅಂಗೀ ಹಿಡದು ಕೇಳತಿದ್ದಂಗಣಿ-ಅದ್ಯಾವ ಮಾಯದೊಳಗೆ ಅಲ್ಲಿಗೆ ಬಂದಿದ್ದನೋ ಏನೋ…! ಯಾರೂ ಕಾಣದಹಂಗೆ ಅಲ್ಲಿಗೆ ಬಂದಿದ್ದ ಈರ -ಮರಮಾತಿಗೆ ಬಿದ್ದು ನಿಂತಿದ್ದ ಭರಮನ ಮೂಗಿಗೆ…ಮುಟಿಗೀ ಮಾಡಿ ರುಮ್ಮಂತ ಹೇರಿಯೇ ಬಿಟ್ಟ !…ಭರಮನ ಮೂಗಿನಿಂದ ಭರಂಡಿ ರಕ್ತ ಸೋರಲಿಕ್ಕತ್ತಿತು! ಕಂಬ್ಯಾರ ಬಸೂ ಗಾಬರ್‍ಯಾಗಿ…ಭರಮನ ಅಂಗೀ ಹಿಡದಂವ ಹಂಗಣಿ ಕೈಬಿಟ್ಟು ಹಿಂದಕ ಸರದ…ಭರಮನ್ನ ಹಿಡಕೊಂಡವರೂ ಅವನ್ನ ಬಿಟ್ಟು ಗಾಬರ್‍ಯಾಗಿ ನಿಂತರು…ಭರಮನ ಮೂಗಿನಿಂದ ಚಿಮ್ಮಿದ ರಕ್ತ ಅವನ ಮೋತೀ – ಮೈಮ್ಯಾಲಿನ ಅಂಗಿಯಮ್ಯಾಲೆ ವ್ಯಾಪಸತಿದ್ದಂಗೇ…ಅಂವ ಹಂಗೇ ಸಾವಕಾಶ ಸಾವಕಾಶಣಿ ಕವಚಿಕೊಂಡು…ಕುಸದು ನೆಲಕ್ಕೆ ಬಿದ್ದ….ಆಗ ಅಲ್ಲಿದ್ದ ಮಂದಿ -‘ಆಣಿ…’ ಅಂತ ಬಾಯಿ ತಗದು-ದನಿ ಹೋದವರಂಗ ಸ್ತಬ್ದವಾಗಿ…ನಿಂತೂ ಕುಂತೂ ಇರಬೇಕಾದರೆ…ಸ್ವಾಂವಜ್ಜ ಆ ಗುಂಪಿನಿಂದ ನಿಧಾನಕ್ಕೇ ನಡದು ಹೊರಟು ಹೊಂಟ…ಅಂವ ಹೋಗುವುದನ್ನ ಗೂಳಪ್ಪಜ್ಜ ಬಿಟ್ಟ ಕಣ್ಣಿನಿಂದ ದಿಟ್ಟಿಸಿ ನೋಡಿಕೋತಣಿ…ಯಾವ ಒಂದು ಮಾತನ್ನೂ ಆಡದೇ… ಮೂಕನಾಗಿ ಕುಂತುಬಿಟ್ಟ !… +…ಸ್ವಾಂವಜ್ಜ ಇನ್ನೂ ಗುಡಿಯ ಮಹಾದ್ವಾರವನ್ನ ದಾಟೂಕಿಂತಾ ಮೊದಲಣಿ ಒಂದು ಹುಡುಗ ‘ಪಿ..ಪೀಂ…’ ಅಂತ ತನ್ನ ಕಾರಗಾಡೇ ಬಿಟಗೊಂಡು ಓಡಿ ಬಂದು…‘ಪೋಲೀಸರ ಬಂದರೂ…ಪಿ..ಪೀಂ…ಪೋಲೀಸರ ಜೀಪ ಗಾಡೇ ಬಂತೂ…ಪಿ..ಪೀಂ…!’ ಅಂತ ಹೇಳಿದ್ದಣಿ ಮತ್ತ ಹೊಳ್ಳಿ ತನ್ನ ಕಾರಗಾಡೇ ಬಿಟಗೊಂಡು ಓಡಿಹೋತು…ಅಲ್ಲಿಂದ ಎದ್ದು ಹೊಂಟಿದ್ದ ಸ್ವಾಂವಜ್ಜ ಅಲ್ಲೇ ತಡೆದು ನಿಂತು ಗುಡಿಯಕಡೆ ತಿರಿಗಿದ…ಅಲ್ಲಿ ಕೂತಂಥಾ ಮಂದಿ ಎಲ್ಲಾ ‘ಆಣಿ…’ ಅಂತ ಬಾಯಿ ತಗದು… ಎದ್ದು ನಿಂತು ಗುಡಿಯ ಮುಂದಿನ ನೆಲದ ಮ್ಯಾಲೆ ಕುಸದು ಬಿದ್ದ ಭರಮನ ಕಡೆ ಗಾಬರಿಯಿಂದ ನೋಡತಿರಬೇಕಾದರೇ…ಆ ವಿಠ್ಠಲ ಸ್ವಾಮಿಯ ಗುಡಿಯ ಮಹಾದ್ವಾರದ ಹೊರಗೆ ಭರ್ರಂತ ಸದ್ದು ಮಾಡಿಕೋತ…ಪೋಲೀಸರಂಬುವವರ ಜೀಪಗಾಡೀ ಬಂದು ನಿಂತು ಅದರೊಳಗಿಂದ ಖಾಕೀ ಹಾಕೊಂಡ ಪೋಲೀಸರಂಬುವವರು ಧಡ ಧಡಾ ಅಂತ ಕೆಳಗ ಜಿಗದು ಬಂದರು…! +ಭಾಗ : ಆರು +…ನೂರಾ ಐವತ್ತನೇ ವರ್ಷದ ಧರಮನಟ್ಟಿಯ ರಥೋತ್ಸವ ಹಿಂಗ ಅಂತರಾಳಿಯಾಗಿ ನಿಂತಾಗ, ಸ್ವಾಂವಜ್ಜನಿಗೆ ಎರಡು ಸಮಾಧಾನದ ಮಾತುಗಳನ್ನ ಹೇಳಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ನಿರ್ಧರಿಸಿ…ಅವನ ಮನಿಗೆ ಹೋದರೆ ಅಲ್ಲಿ ಇಡೀ ಮನಿಗೆ ಲಕವಾ ಹೊಡದಂಗೆ…ಇಡೀ ಮನೀ ಸುಂದಾಗಿ ನಿಂತಿತ್ತು… ಹುಡುಗಾಟದ ಮೊಮ್ಮಕ್ಕಳಾದಿಯಾಗಿ ಮನಿ ಮಂದಿಯೆಲ್ಲ ಮಾತು ಕಳಕೊಂಡವರಂಗೆ ಮೂಕರಾಗಿ ಮುಖಾ ಇಳಿಬಿಟಕೊಂಡು ಕೂತಿದ್ದರು…ನನ್ನೊಂದಿಗೂ ಯಾರೂ ಮಾತಾಡಲಿಲ್ಲ …ಸ್ವಾಂವಜ್ಜನ ಹಿರಿಯ ಮಗ ನನ್ನ ಕಡೆ ನೋಡಿ -ಆಮೇಲೆ ಪಡಸಾಲಿಗೆ ಹೊಂದಿ ಇದ್ದ ಕೋಣಿಯಕಡೆ ನೋಡಿ -ನನಗೆ ಹೇಳಬೇಕಾದುದನ್ನು ಹೇಳಿದವನಂತೆ ಮತ್ತೆ ಮುಖಾ ಕೆಳಗೆ ಮಾಡಿಕೊಂಡು ಕೂತ…ಅಂವ ತೋರಿಸಿದ ಕೋಣಿಯೊಳಗೆ ಹೋಗಿ ನೋಡಿದರೆ…ಅಲ್ಲಿ …ಜಂತಿಯೊಳಗೆ ಕುಂತ ಯಾರೊಂದಿಗೋ ಮೌನ ಸಂಭಾಷಣೆ ನಡೆಸಿದವನಂತೆ…ಬಿಟ್ಟ ಕಣ್ಣಿನಿಂದ ದಿಟ್ಟಿಸಿಗೋತಣಿ… ಸ್ವಾಂವಜ್ಜ ಪಲ್ಲಂಗದ ಮ್ಯಾಲ ಅಂಗಾತಾಗಿ ಬಿದ್ದಿದ್ದ. ನನ್ನ ಕೆಮ್ಮಿನ ದನಿ ಕೇಳತಿದ್ದಂಗೇ ಬುದುಂಗನೆ ಎದ್ದು ಕುಂತು…ನನ್ನನ್ನ ದಿಟ್ಟಿಸಿ ನೋಡಿದ…ಪಲ್ಲಂಗದ ತುದಿಗೆ,ಅವನ ಎದುರಿಗೆ ಕೂತೆ. +ಗ್ವಾಡಿಗೆ ಆತು ಕೂತ ಸ್ವಾಂವಜ್ಜನ ಕಣ್ಣಿನಿಂದ ದಳ ದಳ ಅಂತ ಕಣ್ಣೀರು ಇಳಿದವು…ನನ್ನ ಮಾತುಗಳಂಬುವವು ತಮ್ಮ ಕಾಲು ಕಳಕೊಂಡು…ನಾಲಿಗೆ ಹೆಳವನಂತೆ ತೆವಳಿ…ದನಿಯೆಂಬುವುದು ಆರು ಆಳಗಳ ಕೆಳಗಿನ ಅಂಧಃಕಾರದ ಗವಿಯೊಳಗೆ ಹೂತು ಹೋತು…ನಾನು ಸರಕ್ಕಂತ ಮುಂದಕೆ ಸರದು ಆ ಅಜ್ಜನ ಹಸ್ತವನ್ನ ನನ್ನ ಹಸ್ತದೊಳಗೆ ತೆಗೆದುಕೊಂಡು…ಬಲ ಹಸ್ತದಿಂದ ನಿಧಾನ ನಿಧಾನವಾಗಿ ತಟ್ಟಿ ತಟ್ಟಿ…ಅವನನ್ನು ಸಮಾಧಾನ ಮಾಡಲಿಕ್ಕೆ ನೋಡಿದೆ…ನನ್ನೊಳಗೂ ಭಾವಾವೇಶದ ಸೆಲಿ ಒಡೆದು ಅದು ಹೊರಗೆ ಹರಿದೀತು ಅನ್ನುವ ಭಯ ಹುಟ್ಟಿ …ಅಸಹನೀಯ ಅನ್ನಿಸತೊಡಗಿತು!…ತನ್ನ ಹಸ್ತದ ಮೂಲಕ ನನ್ನ ಮನದೊಳಗೆ ಹುಟ್ಟಿದ ಅಸಹನೀಯತೆಯ ಭಾವವನ್ನು ತಿಳಿದವನಂತೆ ಸ್ವಾಂವಜ್ಜ ಸರಕ್ಕನೇ ನನ್ನ ಕೈಯಿಂದ ತನ್ನ ಹಸ್ತವನ್ನು ಎಳಕೊಂಡು… ಕಣ್ಣೀರು ಒರೆಸಿಕೊಂಡ…ಆಮೇಲೆ ಮುಖದ ಮ್ಯಾಲೆ ಒಂದು ನಮೂನಿಯ ನಿರ್ಜೀವ ಭಾವವನ್ನ ತಂದುಕೊಂಡು…ತನ್ನ ಕಣ್ಣುಗಳನ್ನ ನನ್ನ ಕಣ್ಣುಗಳಿಂದ ಬೇರ್ಪಡಿಸಿಕೊಂಡು- +‘…ಸಾಹೇಬರಣಿ ನಮ್ಮ ಕುಗ್ರಾಮದ ರೊಜ್ಜಿನ್ಯಾಗ ನಿಮ್ಮನ್ನ ಸುಮಸುಮ್ಮನಣಿ ಮೂರ ದಿನಾ ಇರೂಹಂಗ ಮಾಡಿದಿನಿ…ನಿಮ್ಮೂ ಏನೇನ ದಗದ ಇದ್ದೂವೋ ಯಾಂವ ಬಲ್ಲ…ನನ್ನ ಕ್ಷಮಾ ಮಾಡರಿ. ನೀವು ಬೆಂಗಳೂರಿಗೆ ಹೊಂಡಾವರಾದರ ಹೊಂಡರಿ…’ ಅಂತ ಹೇಳಿದವನೇ ಗ್ವಾಡಿಯ ಕಡೆ ಮುಖಾ ಮಾಡಿ ಹೋಳ ಮಗ್ಗಲು ಮಲಗಿ ಬಿಟ್ಟ…ಸ್ವಾಂವಜ್ಜನಿಗೆ ಆಗ ಮಾತುಗಳಂಬುವವು ಬ್ಯಾಡಾದಂಗ ಆಗಿತ್ತು.ನನಗೂ ಹಂಗಣಿ ಅನಸಲಿಕ್ಕತ್ತಿತ್ತು…ಅವನಿಗೆ ಸಮಾಧಾನ ಹೇಳುವ ಅವಶ್ಯಕತೆ ಮತ್ತು ಪ್ರಯೋಜನಗಳ ಬಗ್ಗೆ ನನಗೆ ಅನುಮಾನ ಹುಟ್ಟಿತು…ಏನೂ ಮಾತಾಡದೇ ಎದ್ದು ಬಂದೆ. ನಿರುತ್ಸಾಹದಲ್ಲಿಂi ಅ +ಧರಮನಟ್ಟಿಯಿಂದ ಗಂಟು ಗದಡಿ ಕಟಿಗೊಂಡು ಹೊಂಟದ್ದಾಯಿತು… +* +* +* +ಇದಾದ ಆರು ವರ್ಷಗಳ ತನಕಾ ನನಗೆ ಕುತೂಹಲವಿದ್ದರೂ ಧರಮನಟ್ಟಿಯ ಮಂದಿಯ ಯಾವ ಸುದ್ದಿಯೂ ತಿಳಿಯಲಿಲ್ಲ…ಹಾಂ…ದೇವಸ್ಥಾನದ ಕಳವಿನ ಬಗ್ಗೆ ಪೋಲೀಸು ಇಲಾಖೆಯವರ ಸುದ್ದಿಗಳು ಒಂದಿಷ್ಟು ದಿನಗಳ ಕಾಲ ಬಂದು ಆಮೇಲೆ ಅವೂ ನಿಂತು ಹೋದವು. ಅವರು ಮೊದಲು ದ್ಯಾವಪ್ಪನ ಮ್ಯಾಲೆಯೇ ಸಂಶಯವಿಟ್ಟು ತನಿಖೆ ಸುರು ಮಾಡಿದ್ದರು.ಆದರೆ ಅವರಿಗೆ ಸಿಕ್ಕ ಸಾಕ್ಷಿ ಪುರಾವೆಗಳೆಲ್ಲ ಅವರ ಥಿಯರಿಗೆ ವಿರುದ್ಧವಾಗಿದ್ದವು…ದ್ಯಾವಪ್ಪ ಆ ದಿನ ಉದಗಟ್ಟಿಯಿಂದ ಹೊಂಟಾಂವ…ಸಂಜಿಯ ನಾಕು ಘಂಟೇಕ್ಕ ಅಲ್ಲಿಂದ ಬಿಟ್ಟಾಂವ…ಐದು ಐದೂವರಿಯಷ್ಟೊತ್ತಿಗೆ ಘಟಪ್ರಭಾ ರೇಲ್ವೆ ಸ್ಟೇಶನ್ನಿಗೆ ಬಂದು ಅಲ್ಲಿ ಸ್ಟೇಶನ್ನಿನ ಹೊರಗಿನ ಒಂದು ಛಾದಂಗಡಿಯ ಮುಂದ ತನ್ನ ಫಟಫಟಿಯನ್ನ ನಿಲ್ಲಿಸಿ , ಆ ಚಹಾದಂಗಡಿಯ ಮಾಲಕನಿಗೆ – +‘ನಾನು ಅರ್ಜಂಟಾಗಿ ಮುಂಬಯಿಗೆ ಹೋಗಬೇಕಾಗೇತಿ.ಈ ಗಾಡೇದ ಕೀಲೀ ಕೈ ಇಟಗೋರಿ…ನಾಳೆ ಹರ್‍ಯಾಗ ಧರಮನಟ್ಟಿಂದ ಎರಡ ಹುಡಗೋರು ಬಂದು ನನ್ನ ಹೆಸರ ಹೇಳತಾರು…ಅವರ ಕಡೆ ಈ ಗಾಡೇದ ಕೀಲೀ ಕೈ ಕೊಡರಿ… ದಯಮಾಡಿ ಇಷ್ಟ ಅನುಕೂಲ ಮಾಡಿಕೊಡರಿ…’ ಅಂತ ಹೇಳಿ ದೈನಾಸ ಪಟ್ಟನಂತ.ಚಾದಂಗಡಿಯ ಮಾಲಕ ಅನುಮಾನಿಸಿ ಅನುಮಾನಿಸಿ…ಕಡಿಕ ಆಗಲಿ ಅಂತ ಒಪ್ಪಿ ಇವನ ಹೆಸರು ಕೇಳಿದ್ದಕ್ಕ-ಗೊಂಬೀರಾಮರ ದ್ಯಾವಪ್ಪ …ಸಾಕೀನ ಕಳ್ಳೀಗುದ್ದಿ ಅಂತ ಹೇಳಿದನಂತ… +ಮುಂದ ಒಂದ ವಾರ ಆದರೂ ಯಾರೂ ಬಂದು ಗಾಡಿಯ ಕೀಲೀ ಕೈ ಕೇಳಲಿಲ್ಲ… ಆದರ ಎಂಟನೇ ದಿನಾ ಗೋಕಾಂವಿಯ ಪೋಲೀಸರು ಬಂದು – ಈ ಫಟಫಟೀ ಇಲ್ಲಿ ಹೆಂಗ ಬಂತು? ಇದರ ಮಾಲಕ ನಿನಗ ಗೊತ್ತ ಏನೂ…? ಅವನಕೂಟೇ ನಿನಗ ಎಷ್ಟ ದಿನದಿಂದ ಸಂಪರ್ಕ ಐತೀ…? ಅಂತ ನೂರಾ ಎಂಟು ಪ್ರಶ್ನಾ ಕೇಳಿ ವಿಚಾರಣೀ ಮಾಡಿ… ಆಮ್ಯಾಲ ಅವನ್ನ ಮತ್ತ ದ್ಯಾವಪ್ಪನ ಫಟಫಟಿನ್ನ ಪೋಲೀಸ ಠಾಣೇಕ್ಕ ಒಯ್ದರಂತ… ನೀನೂ ಧರಮನಟ್ಟಿಯ ದೇವಸ್ಥಾನದ ತುಡಗಿನೊಳಗ ಶಾಮೀಲ ಅದೀ…ತುಡಗಿನ ಮಾಲು ಎಲ್ಲಿ ಮುಚ್ಚಿಟ್ಟದೀರಿ ಹೇಳು…ಅಂತ ಪೋಲೀಸರು ಆ ಚಾದಂಗಡಿಯ ಮಾಲಕನನ್ನ ತಮ್ಮ ಭಾಷಾದಾಗ ಮಾತಾಡಿಸಿ – ಅದೂ ಇದೂ ಸೇವಾ ಮಾಡಿ ಲಾಕಪ್ಪಿಗೆ ಹಾಕಿದರಂತ…ಅವನ ಮಕ್ಕಳು ಏನೆಲ್ಲಾ ಹಣಗಲಾ ಹಾಕಿ…ಲೋಕಲ್ ಎಮ್ಮೆಲ್ಲೇನ್ನ ಹಿಡಕೊಂಡು…ಅಂತೂ ಅವನ್ನ ಲಾಕಪ್ಪಿನಿಂದ ಬಿಡಿಸಿಕೊಂಡ ಬರಾಕ ಎಂಟ ದಿನಾ ಹಿಡದವು…ಮುಂದ ಆ ಚಾದಂಗಡಿಯ ಮಾಲಕ ಹೇಳಿದ ಮಜಕೂರದ ಪ್ರಕಾರ ತನಿಖಾ ಮಾಡಿದಾಗ ಅಂವ ಹೇಳಿದ್ದು ಖರೇ ಹಕೀಕತ್ತು ಅನ್ನುವುದು – ಮತ್ತ ದ್ಯಾವಪ್ಪ ಅಂದು ಸಂಜೀ ಯೋಳರ ಟ್ರೇನಿಗೇ ಮುಂಬಯಿಗೆ ಹೋದದ್ದು ಖರೇ ಅನ್ನುವುದು ಖಾತ್ರೀ ಆಗಿ…ಪೋಲೀಸರಿಗೆ ದ್ಯಾವಪ್ಪನ ಮ್ಯಾಲಿನ ಸಂಶಯ ಕ್ರಮೇಣ ಕಡಿಮಿ ಆತು.ಆದರೂ ಅವರು ದ್ಯಾವಪ್ಪನ್ನ ಹುಡುಕುವ ನೆವದಿಂದ ಹಗಲೆಲ್ಲಾ ಮುಂಬಯಿಗೆ ಹೋಗಿ ಬಂದು…ಮುಂಬಯಿಯ ಪ್ರವಾಸದ ಸುಖಾ ಮತ್ತು ಭತ್ತೇಗಳನ್ನ ಪಡಕೊಂಡರು…ಆಮ್ಯಾಲ ಮುಂದ ಪೋಲೀಸರು ಗುಡಿಯ ಪೂಜಾರಿನ್ನ ಎಳಕೊಂಡ ಹೋಗಿ ಹೊಡದೂ ಬೆದರಿಸೀ ಮಾಡಿ ಅವನ್ನೂ ಬಿಟ್ಟರಂತ….ಹಿಂಗಣಿ ಯಾರ್‍ಯಾರ ಮ್ಯಾಲೋ ಅನುಮಾನ ಮಾಡಿ ಹಿಡಕೊಂಡ ಹೋಗೂದೂ ಮತ್ತ ಆಮ್ಯಾಲ ಬಿಡೂದೂ…ಹಿಂಗ ನಡದ ಪೋಲೀಸರ ಪತ್ತೇದಾರೀ ಕೆಲಸ ಆಮ್ಯಾಲ ಆಮ್ಯಾಲ… ಕ್ರಮೇಣ ಸಾವಕಾಶೇ ಸಾವಕಾಶೇ ಆಕ್ಕೋತ…ಕಡೀಕ ಪೋಲೀಸ ಠಾಣೇದಾಗಿನ ಫೈಲಿನೊಳಗ ಮಾತ್ರ ಉಳಕೊಂಡಿತು… ಇಷ್ಟರ ನಡವ ಗೋಕಾಂವಿಯ ‘ಸಮದರ್ಶಿ’ ಅನ್ನುವ ಪತ್ರಿಕಾದೊಳಗ ಜಿಲ್ಲಾದ ದೊಡ್ಡ ದೊಡ್ಡ ರಾಜಕಾರಣಿಗಳು ಈ ಕಳವಿನ ಹಿಂದೆ ಇದ್ದಾರೆ…ನಾಕೈದು ಲಕ್ಷದ ದೇವರ ಆಭರಣಗಳು ಯಾರು ಯಾರೋ ದೊಡ್ಡ ದೊಡ್ಡ ಕುಳಗಳ ಹೆಂಡಂದಿರ ಕೊರಳುಗಳನ್ನ ಅಲಂಕರಿಸಲಿದ್ದಾವೆ…ಹಂಗೆ ಹಿಂಗೆ…ಅಂತ ಯಾರ್‍ಯಾರ ಮ್ಯಾಲೋ ಸಂಶಯ ಬರುವಹಂಗ ಸುದ್ದಿಯನ್ನ ಪ್ರಕಟಿಸಿ…ಅದು ಜಿಲ್ಲೆಯ ತುಂಬ ಗುಲ್ಲು ಗುಲ್ಲು ಆಯಿತು…ಆಮ್ಯಾಲ ಮುಂದ ಸಮದರ್ಶಿಯ ಸಂಪಾದಕನನ್ನ ಗೋಕಾಂವಿಯ ಹಳೇ ಬಸ್‌ಸ್ಟ್ಯಾಂಡಿನೊಳಗ ಯಾರೋ ಹಿಗ್ಗಾ ಮುಗ್ಗಾ ಹೊಡದು ಒಗದು ಹೋದರು…ಈ ಘಟನಾ ನಡದ ಮ್ಯಾಲಂತೂ ಧರಮನಟ್ಟಿಯ ದೇವಸ್ಥಾನದ ತುಡಗಿನ ಕೇಸಿನ ಪತ್ತೇದ ಕೆಲಸ ಇನಷ್ಟು ಸಾವಕಾಶೇ ಆಗಿ ಹೋತು… +ಧರಮನಟ್ಟಿಯ ವಿಠ್ಠಲ ದೇವರ ಗುಡಿಯ ತುಡುಗು ಆದ ಆರು ವರ್ಷಕ್ಕ +ನಾನು ರಿಟೈರ್ ಆದೆ…ಬೆಂಗಳೂರು ಬ್ಯಾಸರ ಬಂದಂಗಾಗಿತ್ತು…ನಮ್ಮ ಊರಾಗಣಿ ಇದ್ದುಬಿಡೂದು ಅಂತ ಮನಸ ಮಾಡಿ , ಬೆಂಗಳೂರಿನ ಫ್ಲಾಟನ್ನ ಬಂದಷ್ಟಕ್ಕೆ ಮಾರಿ ಊರಿಗೆ ಬಂದುಬಿಟ್ಟೆ . +* +* +* +ಊರಿಗೆ ಬಂದು ನಾಕೈದು ತಿಂಗಳು,ಅಲ್ಲಿ ನೆಲಿ ಊರಲಿಕ್ಕೆ ಕಳದವು… ಬೆಂಗಳೂರಿನ್ಯಾಗ ಇದ್ದವರು ವಾಪಸ್ಸು ಹಳ್ಳಿಗೆ ಬಂದು ನಿಲ್ಲುವುದರಲ್ಲಿ ಅದರದೇ ಆದ ಸಮಸ್ಯೆಗಳಿವೆ… ಬೆಂಗಳೂರಿನಿಂದ ನಮ್ಮೊಂದಿಗೆ ಇರಲು ಬಂದವರು ಅಂತ ಊರವರಿಗೆ ಏನೋ ಒಂದು ತರದ ಅಸಹನೆ ಮತ್ತು ಕುತೂಹಲ…ಅಲ್ಲಿಂದ ಬರುವಾಗ ಬುಟ್ಟಿಗಟ್ಟಲೆ ರೊಕ್ಕಾ ಕಟಿಗೊಂಡು ಬಂದಿರುತ್ತಾರೆನ್ನುವ ಭ್ರಮೆಯೊಳಗೆ ನಮ್ಮಿಂದ ಏನೇನೋ ಅಪೇಕ್ಷೆಗಳು…ಆಸೆಗಳು…ಸಣ್ಣಪುಟ್ಟ ಕೆಲಸಕ್ಕೆ ಕೂಲಿಗೆ ಕರೆದರೂ ಒಂದಕ್ಕೆ ಎರಡು ಮೂರು ಪಟ್ಟು ಕೇಳಿ ಗೋಳಾಡಿಸುವರು…ಯಾಕಾದರೂ ಹಳ್ಳಿಗೆ ಬಂದು ನೆಲೆಸುವ ವಿಚಾರ ಮಾಡಿದೆವೋ ಅನ್ನುವಂತೆ ಮಾಡಿದರು…ನಾವು ಕ್ರಮೇಣ ಅವರಿಗೆ ಹೊಂದಿಕೊಂಡು…ಅವರನ್ನು ಸಾಧು ಮಾಡಿಕೊಳ್ಳಲಿಕ್ಕೆ ನಾಕೈದು ತಿಂಗಳು ಬೇಕಾಯಿತು…ಅದಾದಮೇಲೆಯೇ ನನಗೆ ಧರಮನಟ್ಟಿ -ಕಳ್ಳೀಗುದ್ದಿ -ಉದಗಟ್ಟಿಗಳು ನೆನಪಿಗೆ ಬಂದವು…ಈ ಮೂರೂ ಊರುಗಳು ನಮ್ಮ ಊರಿನಿಂದ ದೂರವೇನೂ ಅಲ್ಲ…ಕಳ್ಳೀಗುದ್ದಿ ನಾಕು ಹರದಾರಿಯ ಹಾದಿಯಾದರೆ ಧರಮನಟ್ಟಿ ಆರೇಳು ಹರದಾರಿಯ ಹಾದಿ…ಇನ್ನು ಉದಗಟ್ಟಿಯಂತೂ ಬರೇ ದೀಡು-ಎರಡು ಹರದಾರಿಯ ಹಾದಿ… +ಮೊದಲಿಗೆ ಸ್ವಾಂವಜ್ಜನನ್ನು ನೋಡಬೇಕೆಂದು ಮನಸು ಹರಿಯಿತು. ನಸುಕಿನಲ್ಲಿಯೇ ಹೊರಟು ಹತ್ತರಷ್ಟೊತ್ತಿಗೆ ಸ್ವಾಂವಜ್ಜನ ಮನಿ ತಲುಪಿದೆ.ಹೊರಗಿನ ಕಟ್ಟಿಯ ಮ್ಯಾಲೆ ಸ್ವಾಂವಜ್ಜನ ಹೆಂಡತಿ ಪದ್ದವ್ವ ಸಾವಕಾರ್ತಿ ತನ್ನ ಮಗ್ಗಲಿಗೆ ಕೈಕೋಲನ್ನ ಇಟಗೊಂಡು ಗೂರಿಕೋತ ಕೂತಿದ್ದಳು…ಹತ್ತಿರಕ್ಕೆ ಹೋಗಿ – +‘ನಮಸ್ಕಾರ ಪದ್ದವ್ವ ಸಾವಕಾರ್ತಿಗೆ…’ ಅಂತ ಅಂದಾಗ ಆಕಿ ಘಸಲ್ಲನೇ ನನ್ನ ಕಡೆ ತಿರಿಗಿ…ಮುಖಾ ಮುಂದಕ ಚಾಚಿ,ಕಣ್ಣ ಮ್ಯಾಲ ಕೈ ಹಿಡದು…ಕಣ್ಣ ಕಿಸದು ದಿಟ್ಟಿಸಿ ನೋಡಿ…ಗುರತು ಹತ್ತದೇ ಗೊಂದಲಗೊಂಡು- +‘ಯಾರಾಣಿ…?’ ಅಂತ ನುಡದು… ದಾಪು ಹತ್ತಿ ತೇಕತೊಡಗಿದಳು. +‘ನಾನು…ಗುರತ ಹತ್ತಲಿಲ್ಲ ಏನ್ರಿ…ಬೆಂಗಳೂರಿನ ವರ್ತಮಾನ ಪತ್ರಿಕಾದಾಂವ…ಸ್ವಾಂವಜ್ಜ ಸಾವಕಾರು ನೂರಾ ಐವತ್ತನೇ ವರ್ಷದ ತೇರಿಗಂತ ನನ್ನನ್ನ ಕರಿಸಿಕೊಂಡಿದ್ದರ ನೋಡ್ರಿ…’ ಅಂತ ಹೇಳತಿದ್ದಂಗಣಿ ಆಕಿಗೆ ನನ್ನ ಗುರ್ತು ಹತ್ತಿತು. +‘ಅಯ್ಯಣಿ ನನ ಶಿವನಣಿ…ಏನ ಮಾಡೂದರೀ ಸಾಹೇಬರಣಿ…ಕಣ್ಣಿಗೆ ಪರೀ ಬರಾಕತ್ತಾವು.ಎಲ್ಲಾ ಮಸಕ ಮಸಕ ಕಂಡಂಗಾಗಿ ಗುರತು ಹತ್ತಲಿಲ್ಲ …ನೀವು ಬಂದನೂ ರಗಡ ದಿನಾ ಆಗಿ ಹ್ವಾದೂ ಅಲ್ಲರಿ…ನೀವ ಬಂದ ಹೋಗಿ ಈಗ ಆರು ವರ್ಷದ ಮ್ಯಾಗಣಿ ಆಗಿರಬೇಕಲ್ಲರೀ…?’ ಅಂತ ಹೇಳಿಕೋತ ಅಲ್ಲೇ ತನ್ನ ಮಗ್ಗಲದಾಗ ಕೂಡಲಿಕ್ಕೆ ಸನ್ನೀ ಮಾಡಿ…ಕೈಯಿಂದಲೇ ಅಲ್ಲಿಯ ಧೂಳು ಒರಿಸಿದಳು.ನಾನು ಆಕಿಯ ಮಗ್ಗಲಿಗೆ ಕೂತಾಗ ಆಕಿ ಇನ್ನೊಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಸ್ಪಷ್ಟ ಮಾಡಿಕೊಂಡಳು… +‘…ನಂದೂ ಪೆನ್ಶನ್ ಆತು.ಈಗ ಇಲ್ಲೇ ಬೆಟಗೇರಿಗೇ ಬಂದದನು… ಭಾಳ ದಿವಸದಿಂದ ಸ್ವಾಂವಜ್ಜನ್ನ ನೋಡಬೇಕೂ ನೋಡಬೇಕೂ ಅಂತ ಮನಸ ಹರೀತಿತ್ತು… ಅದಕ್ಕಣಿ ಇಂದ ಹರ್‍ಯಾಗ ಎದ್ದ ಕೂಡಲೇ ಹೊಂಟ ಬಿಟ್ಟನಿ…’ ಅಂದೆ.ಮುದಿಕಿ ಯಾವ ಮಾತೂ ಆಡದೇ ಸುಮ್ಮನೇ ಕುಂತಳು…ಆಕಿಗೆ ಕೇಳಸಲಿಲ್ಲ ಏನೋ ಅಂತ ತಿಳಕೊಂಡು ‘…ಸ್ವಾಂವಜ್ಜ ಊರಾಗ ಇಲ್ಲ ಏನರಿ…?’ ಅಂತ ಮತ್ತೊಮ್ಮೆ ಕೇಳಿದೆ. +‘ಇನ್ನೆಲ್ಲಿ ನಿಮ್ಮ ಸ್ವಾಂವಜ್ಜ ಸಾವಕಾರರೀ…ಅಂವ ಘಾತಾ ಮಾಡಿ ಹೋಗಿಬಿಟ್ಟ ರೀ…’ ಅಂತ ನುಡದ ಪದ್ದವ್ವ ಸಾವಕಾರ್ತಿ ಮೌನವಾಗಿ ರೋದಿಸತೊಡಗಿದಳು… ನನಗೆ ಆಘಾತವಾದಂಗಾಗಿ ‘ಹಾಂ…’ ಅಂತ ಉದ್ಗಾರ ತಗದು ಮೂಕನಾಗಿ ಕೂತು ಬಿಟ್ಟೆ… +ಪದ್ದವ್ವ ತನ್ನ ಅಳುವನ್ನ ತಹಬಂದಿಗೆ ತಂದುಕೊಂಡು…ಸೆರಗಿನಿಂದ ಕಣ್ಣು ಮೂಗುಗಳನ್ನ ಒರೆಸಿಕೊಂಡು ಹೇಳಲಿಕ್ಕೆ ಸುರುಮಾಡಿದಳು- +‘…ವಿಠ್ಠಲ ದೇವರೂ ವಿಠ್ಠಲ ದೇವರೂ ಅಂತ ಬಾಳ ಮೋಹಾ ಇಟಗೊಂಡಿದ್ದ ನಮ್ಮ ಸಾವಕಾರಾಣಿ…ನಾನು ಹಗಲೆಲ್ಲಾ – ಇದೆಲ್ಲೀ ವಿಠ್ಠಲ ವಿಠ್ಠಲ ಅಂತ ಮಿಥ್ಯಾ ದೇವರನ ಕಟಿಗೊಂಡೀ…ಅಂತ ನಗಿಚಾಟಿಕೀ ಮಾಡಿದರ ನನ್ನ ಮ್ಯಾಗಣಿ ಸಿಟ್ಟಿಗೇಳಾಂವ…ಕಡೀಕ ಅದಣಿ ವಿಠ್ಠಲ ದೇವರ ದಸಿಂದನಣಿ ಎದೀ ಒಡಕೊಂಡು ಜೀವಾ ಕಳಕೊಂಡಾ !…ದೇವರ ದಾಗೀನಗೋಳು ಕಳವ ಆದರ ತುಡಗ ಮಾಡಿದವರನ್ನ ಹಿಡಕೊಂಡ ಹೋಗಬೇಕರ್‍ಯೋ ಇಲ್ಲಾ ತುಡಗ ಮಾಡದವರನ್ನ ಹಿಡಕೊಂಡ ಹೋಗಬೇಕರ್‍ಯೋ!…ತುಡಗ ಮಾಡಿದವರನ್ನ ಬಿಟ್ಟು ಇಂವನ್ನಣಿ ಹಿಡಕೊಂಡ ಹೋಗಬೇಕೇನರೀ ಆ ಪೋಲೀಸರೂ…!ನಮ್ಮ ಹಿರ್‍ಯಾನ್ನ ಎರಡ ದಿನಾ ಪೋಲೀಸ ಠಾಣೇದಾಗ ಇಟಗೊಂಡು ಮೂರನೇ ದಿನಾ ಮನಿಗೆ ಕಳಿಸಿದರರೀ… ಅಂವ ಹೊಳ್ಳಿ ಮನಿಗೆ ಬಂದಾಗ ಅವನ ಮಖಾ ನೋಡಿದಿನರೀ…ಸಾಹೇಬರಣಿ ಖರೇ ಹೇಳತನೂ…ಆಗಣಿ…ಪೋಲೀಸ ಠಾಣೇದಿಂದ ಹೊಳ್ಳಿ ಬಂದಾಗನಣಿ ನಮ್ಮ ಸಾವಕಾರ ತೀರಿಕೊಂಡಿದ್ದನರಿ…!ಅಂವ ಉಸರಾಡಸೂ ಹೆಣಾ ಆಗಿದ್ದ !…ದೇವರು ಒಳ್ಳೇವರನ್ನ ಸತ್ವ ಪರೀಕ್ಷಾ ಮಾಡತಾನೂ…ಅದೂ ಇದೂ…ಅಂತ ನಾ ಅಂವಗ ನೂರಾ ಎಂಟು ಹೇಳಿ ಅಂವನ್ನ ಸಮಾಧಾನಾ ಮಾಡಾಕ ನೋಡಿನಿ… ಊಹೂಂ!…ಏನೂ ಉಪೇಗ +ಆಗಲಿಲ್ಲರಿ…ಠಾಣೇದಿಂದ ಬಂದ ಮರದಿವಸನಣಿ ಅರ್ಧಾಂಗವಾಯು ಹಾಯಿತು… ಬಲಭಾಗ ಪೂರಾ ಬಿದ್ದಹೋತು…ನಾಲಿಗಿ ಏನ ಹೋಗಿರಾಕಿಲ್ಲ…ಆದರ ಒಟ್ಟಣಿ ಮಾತಾಡೂದನ್ನಣಿ ನಿಂದರಿಸಿ ಬಿಟ್ಟ ! ಅರ್ಧಾಂಗವಾಯಿ ಹಾದ ಮೂರನೇ ದಿನಾರೀ ಅಂದ ಒಂದಣಿ ಒಂದು ಮಾತಾಡಿದ…ತನ್ನ ಕರಕೊಂಡು ಹೋಗಿ ವಿಠ್ಠಲ ಸ್ವಾಮಿಯ ದರಶನಾ ಮಾಡಿಸಿಕೊಂಡ ಬರ್ರೀ ಅಂತ !…ಜಳಕಾ ಮಾಡಿಸಿ ಮಡೀ ದೋತರಾ ಉಡಿಸಿ ಮಡಿಮಾಡಿದ ಅಂಗೀ ತೊಡಿಸಿ…ಚಕಡೀ ಹೂಡಿಕೊಂಡು ಗುಡಿಗೆ ಕರಕೊಂಡು ಒಯ್ದು ದೇವರ ದರಶನಾ ಮಾಡಿಸಿಕೊಂಡ ಬಂದರು…ನನಗೂ ಬಾ ಅಂತ ಕರದರ ಖರೇ ನಾಯೇನ ಹೋಗಲಿಲ್ಲ…ಗುಡಿಗೆ ಹೋಗಿ ಬಂದವನಣಿ ಅಂವ ಸಲ್ಲೇಖನ ಹಿಡದ ಬಿಟ್ಟಿದ್ದ !…ಒಂದ ತುತ್ತು ಉಣಲಿಲ್ಲ…ಎರಡ ದಿನಾ,ನೀರ ಹಾಕಾಕ ಹೋದರ ಯಾವಾಗರೇ ಒಮ್ಮೊಮ್ಮಿ ನೀರ ತಗೋಳಾಂವ…ಮುಂದ ಮೂರದಿನದ ಮ್ಯಾಗ ನೀರ ತಗೋದನ್ನೂ ಬಿಟ್ಟ …ನಾನು ಅತ್ತು ಗೋಳ್ಯಾಡಿ ಪರಿ ಪರಿಯಿಂದ ಬೇಡಿಕೊಂಡರೂ ಅಂವೇನ ಕರಗಲಿಲ್ಲರೀ…ಗುಡ್ಯಾನ ವಿಠ್ಠಲನಗತೇ ಇಂವನೂ ಕಲ್ಲ ಆಗಿ ಕುಂತಿದ್ದ ! ವಿಠ್ಠಲ ಸ್ವಾಮೀ ವಿಠ್ಠಲ ದೇವರೂ ಅಂತ ಆ ದೇವರ ಮ್ಯಾಗ ಭಕ್ತೀ ಮಾಡಿ ಈಗ ಈ ಸಲ್ಲೇಖನಾ ಅಧೆಂಗ ಹಿಡೀತೀ…? ಮಿಥ್ಯಾತ್ವಕ್ಕಣಿ ಮತ್ತ ಸಲ್ಲೇಖನಕ್ಕಣಿ ಅಧೆಂಗ ಹೊಂದಾಣಿಕಿ ಆಗತೈತಿ…? ನಿಂದು ಎಡಬಿಡಂಗೀ ರೀತಿ ಐತಿ ಇದಾ…ಇದನ್ನ ಬಿಡ ನೀನಾ…ಅಂತ ಬೈದು ಜಗಳಾಟಕ್ಕ ಎಳಿಯೂಣೂ ಅಂತಂದರ ಅಂವ ನನ್ನ ಮಾತಿಗೆ ಬರೇ ಒಂದ ಮುಗಳ ನಗೀ ನಕ್ಕು ಸುಮ್ಮಗಾದ !…ಅರ್ಧಾಂಗಿ ಹಾದು ಅದ್ರಗೊಂಡ ಸರೀರ ನೋಡ್ರೀ…ಬಾಳ ದಿನಾ ತಾಳಲಿಲ್ಲ…ನೀರ ಬಿಟ್ಟ ಎರಡನೇ ದಿನಕ್ಕಣಿ ಪ್ರಾಣಾ ಬಿಟ್ಟ….’. ಇಷ್ಟು ಹೇಳಿದ ಪದಮವ್ವಸಾವಕಾರ್ತಿ ಶೂನ್ಯವನ್ನ ದಿಟ್ಟಿಸಿಗೋತ ಕೂತುಬಿಟ್ಟಳು… +ಪದಮವ್ವ ಮಾತಾಡುವ ದನಿಯನ್ನ ಕೇಳಿದ ಆಕಿಯ ಇಬ್ಬರು ಸೊಸ್ತ್ಯಾರು ಒಮ್ಮೊಮ್ಮೆ ಬಾಗಿಲಿನೊಳಗಿಂದ ಹೊರಗೆ ಹಣಿಕಿ ನನ್ನನ್ನ ನೋಡಿ ನೋಡಿ ಒಳಗ ಹೋಗಿದ್ದರು…ಅವರಿಗೆ ನನ್ನ ಗುರುತು ಛಲೋತಂಗೆ ಇತ್ತು…ಸ್ವಾಂವಜ್ಜ ಇದ್ದಾಗ ನಾನು ಬಂದಾಗ ಅವರು ನನಗೆ ಕಾಲು ತೊಳಕೋಲಿಕ್ಕೆ ನೀರು ತಂದು ಕೊಟ್ಟು ನನ್ನೊಂದಿಗೆ ನಕ್ಕು ಕೆಲೆದು ಮಾತಾಡಿದ್ದರು…ಹಾಲು ಕಾಯಿಸಿ ತಂದು ಕೊಟ್ಟು ಉಪಚರಿಸಿದ್ದರು…ಈಗ ನನ್ನನ್ನು ನೋಡಿ ಒಳಗೆ ಹೋದವರು ಮತ್ತೆ ಹೊರಗೆ ಇಣುಕಲಿಲ್ಲ… +ಇತ್ತ ಪದಮವ್ವ ಶೂನ್ಯ ಲೋಕವನ್ನು ದಿಟ್ಟಿಸುತ್ತ ಮೂಕ ಸಂಭಾಷಣೆ ನಡೆಸುತ್ತ ಕೂತುಬಿಟ್ಟಾಗ ನನ್ನ ಅಂತಃಕರಣವೂ ಮಾತು ಕಳಕೊಂಡು ಮೂಕವಾಯಿತು…ಪದಮವ್ವ ಮುದುಕಿಯನ್ನ ಆಕಿಯ ಲೋಕದಲ್ಲಿಯೇ ಬಿಟ್ಟು ಯಾವುದೊಂದೂ ಮಾತಾಡದೆಯೇ ಅಲ್ಲಿಂದ ಎದ್ದು ಬಂದೆ… +ಧರಮನಟ್ಟಿಯಿಂದ ಬಂದಮ್ಯಾಲೆ ಎರಡು ದಿನಗಳ ಕಾಲ ಸ್ವಾಂವಜ್ಜನ ನೆನಪು ನನ್ನನ್ನು ಕಾಡಿಸಿತು…ಅಂವ ಧರಮನಟ್ಟಿಯ ಜನರ ವಿವೇಕ ಪ್ರಜ್ಞೆಯಂತಿದ್ದ…ಆದರೆ +ಧರಮನಟ್ಟಿಯ ಜನ ಯಾವತ್ತಿಗೂ ಅವನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ!…ನಿತ್ಯ ಸಂಶಯಕ್ಕೆ ಈಡಾದರೂ ಅಂವ ಮಾತ್ರ ಕಡಿತನಕ ಊರಿನ ಸಮುದಾಯದ ನಡೆಗೆ ತನ್ನ ವಿವೇಕದ ನೋಟವನ್ನು ನೀಡುತ್ತಲೇ ಬಂದ…ಈ ಸ್ವಾಂವಜ್ಜ ಜೈನನೋ… ವೈದಿಕನೋ…ಅವೈದಿಕನೋ…ಇಂಥದ್ದು ಒಂದು ಎಂದು ಪ್ರತ್ಯೇಕಿಸಿ ಹೇಳಲಿಕ್ಕೆ ಸಾಧ್ಯವಾಗುವುದೇ ಇಲ್ಲ…ಸಾಯುವ ನಿರ್ಧಾರ ಮಾಡಿದಕೂಡಲೇ ವಿಠ್ಠಲನ ದರ್ಶನಾ ಮಾಡಿಕೊಂಡು ಬಂದ ಮೇಲೆ ಸಲ್ಲೇಖನ ಹಿಡಿದ ! …ಪದಮವ್ವ ಮುದಿಕಿ ಸ್ವಾಂವಜ್ಜನ್ನ ಸರಿಯಾಗಿಯೇ ಕೇಳಿದ್ದಳು…ಮಿಥ್ಯಾತ್ವ ಮತ್ತು ಸಲ್ಲೇಖನ ಅಧೆಂಗ ಹೊಂದಾಣಿಕಿ ಆಗತಾವ ಅಂತ…ಆಕಿಯ ಈ ಮಾತಿಗೆ ಸ್ವಾಂವಜ್ಜ ಬರೇ ಒಂದ ಮುಗುಳ ನಗೀ ನಕ್ಕು ಸುಮ್ಮನಾದನಂತ…!? +* +* +* +ಧರಮನಟ್ಟಿಂದ ಬಂದು ಹದಿನೈದು ದಿನದ ಮ್ಯಾಲೆ ಕಳ್ಳೀಗುದ್ದಿಗೆ ಹೋದೆ…ಹಿಂದ…ಭಾಳ ದಿನಗಳ ಹಿಂದ ಕಳ್ಳೀಗುದ್ದಿಗೆ ಹೋಗಿದ್ದೆ…ಆಗ ಇನ್ನೂ ಈ ದ್ಯಾವಪ್ಪನ ಅಪ್ಪ ಕುಬೇರಪ್ಪ ಇದ್ದ…ಆಗ ನಾನು ಬರೇ ಒಂದೆರಡ ತಾಸು ಇದ್ದು ಈ ಗೊಂಬೀರಾಮರ ಮನಿತನಕ್ಕೆ ಧರಮನಟ್ಟೀ ದೇಸಾಯರು ಕೊಟ್ಟ ಸನದನ್ನ ನೋಡಿ ಹಂಗಿಂದ ಹಂಗಣಿ ಬೆಂಗಳೂರಿಗೆ ಹೋಗಿದ್ದೆ…ಊರಾಗಿನ ಯಾರದೂ ಪರಿಚಯ ಆಗಿರಲಿಲ್ಲ…ಬಸ್ಸು ಇಳಿದಮ್ಯಾಲೆ ಈಗ ಇಲ್ಲಿ ಯಾರನ್ನ ಮಾತಾಡಸೂದೂ ಅಂತ ಯೋಚನಾ ಮಾಡಿಕೋತ ಅತ್ತಿತ್ತ ನೋಡಿಕೋತ ಅಲ್ಲೇ ಇದ್ದ ಚಹಾದಂಗಡೀ ಹೊಕ್ಕೆ…ಗಲ್ಲೇದ ಮ್ಯಾಲ ಕೂತ ಮಾಲಕನ್ನ ಬಿಟ್ಟರೆ ಬೆಂಚಿನ ಮ್ಯಾಲೆ ಒಬ್ಬನೇ ಒಬ್ಬ ವಯಸ್ಸಾದ ಮನಶಾ ಕೂತಿದ್ದ…ನಾನು ಹೋಗಿ ಅವನ ಮಗ್ಗಲಿಗೆ ಕೂತು- +‘…ಈ ಊರಾಗ ಗೊಂಬೀರಾಮರ ದ್ಯಾವಪ್ಪ ಅಂತ ಇದ್ದ…ಅಂವ ಈಗ ಊರಾಗ ಇದ್ದಾನ ಏನು…?’ ಅಂತ ಕೇಳಿದೆ. +ಗಲ್ಲೇದ ಮ್ಯಾಲ ಕೂತಿದ್ದ ಚಾದಂಗಡಿಯ ಮಾಲಕ ಸಟಕ್ಕನೇ ನನ್ನನ್ನ ದಿಟ್ಟಿಸಿ ನೋಡಿ, ನನಗ ಛಾ-ಗೀ ಏನರೇ ಬೇಕ ಏನು ಅನ್ನುವುದನ್ನ ವಿಚಾರಿಸದೇ,ಸರಕ್ಕನೇ ಎದ್ದು ಹೊರಗೆ ನಡೆದು ಬಿಟ್ಟ….ನನ್ನ ಮಗ್ಗಲಿಗೆ ಕೂತ ವಯಸ್ಸಾದ ಮನಶಾ,ಆಕಡೆ ಈಕಡೆ ನೋಡಿ, ಅಗದೀ ಸಣ್ಣ ದನಿಯಿಂದ – +‘ಯಾಣಿ…ಅಂವ ಊರು ಬಿಟ್ಟು ಆರ ವರಸದ ಮ್ಯಾಗಣಿ ಆತಲ್ಲರೀ… ಅದೆಲ್ಯೋ ಆರೇ ನಾಡಿನ್ಯಾಗ ಅದಾನಂತರೆಪಾ…ಏ…ದ್ಯಾವಪ್ಪ ಅಗದೀ ಸಾತ್ವೀಕ ಹುಡಗಾ…ಅಂತಣಿ ಗೌಡನ ಜೋಡೀ ಅಂವಂದು ಹೊಂದಾಣಿಕಿ ಆಗಲಿಲ್ಲ… ಇಷ್ಟರಮ್ಯಾಗ ಈ ಗೌಡ ಅಂವಗ ಬಾಳ ತರಾಸಾ ನೋವಾ ಕೊಟ್ಟ ಬಿಡ್ರಿ… ಈಗ +ಆರೇನಾಡಿನೊಳಗ…ಅದೆಲ್ಯೋ ಗಾಂದಿ ಮಾತ್ಮಂದೋ ಇಲ್ಲಾ ಯಾವದೋ ಒಬ್ಬ ರುಸೀದೋ ಒಂದ ಮಠಾ ಐತೆಂತರೆಪಾ…ಆ ಮಠದಾಗ ಸಾಧೂ ಆಗ್ಯಾನಂತ…! ನನಗೂ ಹಿಂಗಣಿ ಗಾಳೀ ಸುದ್ದಿರೀ…ಈ ಊರಾಗ ಆ ದ್ಯಾವಪ್ಪಂದ ಹೆಚ್ಚಿಗೆ ಮಾತಾಡಂಗಿಲ್ಲರೀ…ನೀವು ನನ್ನ ಮಾತಾಡಿಸಿದಗಳೇ ಎದ್ದ ಹೊರಗ ಹ್ವಾದನಲಾ… ಈ ಚಾದಂಗಡಿಯ ಮಾಲಕಾ…ಅಂವ ಸೂಚನಾ ಕೊಡಾಕಣಿ ಹೋಗ್ಯಾನು…’ ಅಂತ ಹೇಳಿ ಹೊರಗ ನೋಡಿದ. +ನಾನು ಅವಸರದಿಂದ ‘ದ್ಯಾವಪ್ಪನ ಅವ್ವ ಇದ್ದಳಲಾಣಿ…ಆಕಿ ಈಗ ಎಲ್ಲಿ ಇರತಾಳು?’ ಅಂತ ಕೇಳಿದೆ. ಆ ಮನಶಾ ಇನಷ್ಟು ನನ್ನ ಹತ್ತಿರಕ್ಕೆ ಸರದು…ದನಿಯನ್ನ ಇನಷ್ಟು ಸಣ್ಣದು ಮಾಡಿ ನನ್ನ ಕಿಂವ್ಯಾಗಣಿ ಹೇಳವನಗತೆ ಬಗ್ಗಿ ಹೇಳಲಿಕ್ಕತ್ತಿದ- +‘ಸುಶಿಲವ್ವರೀ…?ಯಾಣಿ…ಆಕಿ ಸತ್ತಕ್ಯಾರ ಎಡ್ಡ ವರಸ ಆತಲ್ಲರೀ…ಗೌಡನ ತ್ವಾಟದ ಮನ್ಯಾಗಣಿ ಹರಾ ಅಂದಳ ಆಕಿ…ಏಣಿ ಬಾಳ ಅನ್ಯಾವಿನ್ನಿ ಆಗಿ ಸತ್ತಳರೆಪಾ… ಒಂದಣಿ ಸವನಣಿ ಬಿಳೀಸೆರಗ ಹೋಗೂದಂತ…ಹೀಣಿಂಗ ಒಂದ ಒಣಾ ಪತ್ತಲಾ ಉಟಗೊಂಡಳನ್ನೂದಕ್ಕ ಅದು ತೋದು ಒದ್ದಿ ಆಗೂದಂತ…ಗಾಂವಠೀ ಅಗಸುದ್ದೇ ಆತು ಸರ್ಕಾರೀ ಅಗಸುದ್ದೇ ಆತು…ಯಾವದೇನೂ ಪಟಾಯಿಸಲಿಲ್ಲರೀ…! ತೊಡಿಯಂಬೂವು ಸೆಲತು ಹುಣ್ಣ ಆಗಿ ಹುಳಾ ಬಿದ್ದಿದ್ದೂ ಅಂತರೀ…! ಮುಖಾ ಅಂಬೂದು ಬಿಳಿಚಿಕೊಂಡು ಈಬತ್ತೀ ಉಂಡಿ ಆದಂಗ ಆಗಿತ್ತು… ಆಕಿ…’ ಅಂತ ಅಂವ ಇನೂ ಏನೋ ಹೇಳತಿದ್ದಾಂವ ಹೊರಗ ನೋಡಿದ…ಹೊರಗ ನೋಡಿ ಗಾಬರ್‍ಯಾಗಿ ‘ಏಣಿ…ನಾ ಬರತನರೀ ’ ಅಂತ ನುಡದವನೇ…ಎದ್ದು ಸರಾ ಸರಾ ಅಂತ ಓಡಿಹೋಗುವವನಂಗ ನಡದು ಮರಿ ಆದ… +ನಾನೂ ಚಹಾದಂಗಡಿಯ ಹೊರಗ ನೋಡಿದೆ…ನಾಕು ಮಂದಿ ನನ್ನನ್ನಣಿ ನೋಡಿಕೋತ ನನ್ನ ಕಡೆ ಬರಲಿಕ್ಕತ್ತಿದ್ದರು…ಇಪ್ಪತ್ತೈದು ಮೂವತ್ತರ ನಡುವಿನ ಕಟ್ಟುಮಸ್ತು ಆಳುಗಳು…ಅವರ ಮೀಸಿಗಳು ಕಿಲಾರೀ ಹೋರಿಗಳ ಕೊಂಬಿನಂಗ ಇದ್ದವು…ದುರು ದುರು ಅಂತ ನೋಡಿಕೋತ ಬಂದ ಅವರು ನಾ ಕೂತ ಬೆಂಚಿನ ಮುಂದಿನ ಟೇಬಲ್ಲಿನ ಮ್ಯಾಲ ಕೈ ಊರಿ ನಿಂತರು…ಅವರೊಳಗಿನ ಒಬ್ಬ ಕೇಳಿದ- +‘…ಯಾರ ನೀ…?’ +ನನಗ ಒಳಗೊಳಗಣಿ ಅಧೈರ್ಯಾ ಮೂಡಿತಾದರೂ ಅಂವ ಕೇಳಿದ್ದು ಆಧ್ಯಾತ್ಮಿಕ ಪ್ರಶ್ನಾದಗತೆ ಅನಿಸಿ ನಗೀ ಬಂತು…ಆ ಮುಗುಳು ನಗಿ ಮುಂದುವರಿಸಿಕೊಂಡೇ ಹೇಳಿದೆ- +‘ನಾನೂ…?ನಾ ಬೆಂಗಳೂರಿಂದ ಬಂದೀನು…ಪ್ರೆಸ್ಸಿನವ ’. +ಆ ಆಳುಗಳ ಮುಖದ ಮ್ಯಾಲ ಒಮ್ಮಿಗೆಲೇ ಗೊಂದಲ ಮೂಡಿಧಂಗಾತು… ತಾನು ನನ್ನನ್ನು ಮಾತಾಡಿಸಿದ ಧಾಟೀ ಸರಿಯಾಗಲಿಲ್ಲವೇನೋ ಅಂತ ಅನಿಸಿದವನಂಗೆ +ಆ ಕಿಲಾರೀ ಮೀಸಿಯ ಹುಡುಗ +‘ಹಂಗಲ್ಲರೀ…ಕಳ್ಳೀಗುದ್ದಿಗೆ ಯಾವ ದಗದಕ್ಕ ಬಂದದೀರಂತ…?’ ಅಂತ ತೊದಲಿಸಿದ. +‘ನಾನೂ…?ಇಲ್ಲಿ ದ್ಯಾವಪ್ಪಂತ ಇದ್ದಲಾ…ಅಂವಂದು ಒಂದು ಫೀಚರ್ ಮಾಡಬೇಕಂತ ಮಾಡೀನಿ…ಅದಕ್ಕಣಿ ಅವನ ಬಗ್ಗೆ ಮಾಹಿತೀ ಸಂಗ್ರಹಿಸಲಿಕ್ಕೆ ಬಂದೀನು’.ಈಗ ಆ ಹುಡಗೋರು ಇನಷ್ಟು ಬಸವಳಿಧಂಗಾದವು… +‘ಹಂಗಲ್ಲರೀ…ನೀವು ನಮ್ಮ ಗೌಡರನ ಭೆಟ್ಟಿ ಆಗಿದ್ದರ ಪಾಡ ಆಗತಿತ್ತರೀ…’ ಅಂತ ಇನೊಬ್ಬ ಹುಡುಗ ಹೇಳಿದ. +‘ನಿಮ್ಮ ಗೌಡರಿಗೆ ದ್ಯಾವಪ್ಪನ ವಿಚಾರ ಛಲೋತಂಗೆ ಗೊತ್ತ ಅದಣಿ ಏನು…? ಹಂಗಿದ್ದರ ಅವರನ್ನ ಭೆಟ್ಟಯಾಗತೀನಿ…’ ಅಂದೆ. +‘ಹೂಂ…ಹೌದರೀ…ಆ ದ್ಯಾವಂದು ನಮ್ಮ ಗೌಡರಿಗೆ ಅಗದೀ ನಿವಳ ಗೊಂತ ಐತಿರೀ…’ ಅಂತ ಆ ಹುಡಗೋರು ನುಡದಾಗ +‘ಹೌದೂ…ಹಂಗರಣಿ ನಡೀರಿ…’ ಅಂತ ಎದ್ದು ಅವರ ಜೋಡೀ ನಡದೆ… +…ನನ್ನನ್ನ ಆ ನಾಕ ಆಳುಗಳು ಗೌಡನ ಮನಿಗೆ ಕರಕೊಂಡು ನಡದದ್ದನ್ನ ಊರಾಗಿನ ಮಂದಿ ಅಗದೀ ಕುತೂಹಲದಿಂದ ನೋಡಿ…ತಮ್ಮ ತಮ್ಮೊಳಗಣಿ ಪಿಸಿ ಪಿಸಿ ಅಂತ ಮಾತಾಡಿಕೊಂಡರು…ಈ ಊರಾಗ ಗೌಡನ ಜರ್ಬು ಜೋರ ಇದ್ದಂಗ ಅದ ಅಂತ ಅನಕೊಂಡೆ…ಅಷ್ಟರಾಗಣಿ ದೊಡ್ಡ ತಲಬಾಗಲಿನ ಮನಿ ಬಂತು…‘ಇದಣಿ ಗೌಡರ ಮನೀ…ಬರ್ರಿ’ ಅಂತ ನನ್ನ ಮಾರ್ಗದರ್ಶಕರು ಒಳಗ ನಡದರು. ನಾನು ಅವರ ಹಿಂದಿಂದಣಿ ಒಳಗ ಹೊಕ್ಕೆ… +ವಿಶಾಲವಾದ ಪಡಸಾಲಿ.ಅಲ್ಲಿ ಅದರ ಅಗ್ರಭಾಗದೊಳಗಿದ್ದ ಅಗಲವಾದ ಆರಾಮ ಕುರ್ಚಿಯೊಳಗ ಗೌಡ ಕುಂತಿದ್ದ…ಅಕಬಂದ ದೇಹ…ಚಚ್ಚೌಕಾದ ಮುಖದ ಮ್ಯಾಲ ಕಲ್ಲೀ ಮೀಸಿ…ಕರೀ ಬಿಳೀ ಬೆರತಿದ್ದವು…ಅಂವಗ ಆಗಿರುವ ವಯಸ್ಸಿನಕಿಂತಾ ಸಣ್ಣಾವ ಕಂಡಂಗ ಕಾಣತಿದ್ದ…ಗೌಡನ ಮುಂದ ನಿಂತ ನಾಕಾರು ಮಂದಿ ಅಂವ ಹೇಳತಿದ್ದದ್ದನ್ನ ತದೇಕ ಚಿತ್ತದಿಂದ ಕೇಳಿಕೋತ ಗೋಣು ಹಾಕಿಕೋತ ನಿಂತಿದ್ದರು…ಅಲ್ಲಿಗೆ ನನ್ನನ್ನ ಕರಕೊಂಡು ಈ ಆಳಗೋಳು ಹೋಗತಿದ್ದಂಗಣಿ ಆ ಮಂದಿ ಹಿಂದ ಸರದರು…ಗೌಡ ನನ್ನನ್ನ ತಲಿಯಿಂದ ಕಾಲಿನ ತನಕಾ ಎರಡ ಸರತೇ ನೋಡಿ , ನನ್ನನ್ನ ಅಲ್ಲಿಗೆ ಕರಕೊಂಡ ಹೋದ ಹುಡಗೋರನ ವಿಚಾರಿಸಲಿಕ್ಕೆಂತ ‘ಹ್ಹೂಂ…’ ಅಂತ ಹುಂಕರಿಸಿದ.ಚಾದಂಗಡ್ಯಾಗ ಮದಲು ನನ್ನನ್ನ ಮಾತಾಡಿಸಿದವನೇ ಈಗ ಹೇಳಿದ – +‘ಇವರು ಬೆಂಗಳೂರಿಂದ ಬಂದಾರಂತರೀ…ದ್ಯಾವ್ಯಾನ ಪಿಚ್ಚರ್ ಮಾಡತಾರಂತ!…ಇವರು ಕಾಶಪ್ಪಗೋಳ ಮುದಕನ ಹಂತೇಕ ದ್ಯಾವ್ಯಾನ ಹಕೀಕತ್ತು ಕೇಳಾಕತ್ತಿದ್ದರರಿ…ಚಾದಂಗಡೀ ಬಸಪ್ಪ ನಮಗ ಸೂಚನಾ ಕೊಟ್ಟನರೀ…ನಿಮ್ಮ ಹಂತೇಕ +ಕರಕೊಂಡ ಬಂದಿವು…’. +ಆ ಹುಡಗನ ಮಾತು ಕೇಳತಿದ್ದಂಗೇ ಗೌಡ ಒಮ್ಮಿಗೆಲೇ ಮೆತ್ತಗಾದವನಂಗ- +‘ಬರ್ರಿ ಬರ್ರಿ…ಏ ಅಲ್ಲಿ ಒಳಗ ಕೋಣ್ಯಾಗ ಕುರ್ಚೀ ಅದಾವು…ಇಲ್ಲಿ ಒಂದ ಕುರ್ಚೀ ತಗೊಂಬರ್ರಿ…’ ಅಂತ ಕೂಗಿದ…ಒಳಗಿಂದ ಒಂದ ಹೆಣ್ಣಾಳು ಒಂದ ಕುರ್ಚೀ ತಂದು ಇಡತಿರಬೇಕಾದರೆ ಆ ಗೌಡ – +‘…ಇಲ್ಲಿ ಹಾಕು ಇಲ್ಲಿ…’ ಅಂತ ತನ್ನ ಸನೇಕ ಇಡಿಸಿ ‘…ಹಾಂ ಬರ್ರಿ…ಕುಂಡರ ಬರ್ರಿ…’ ಅಂತ ಕರದ…ಹೋಗಿ ಕೂತೆ. +‘ಆ ದ್ಯಾವ್ಯಾಂದು ಪಿಕ್ಚರ್ ಮಾಡಾವರದೀರೀ…?’ +‘ಪಿಕ್ಚರ್ ಅಲ್ಲ…ಫೀಚರ್ ಮಾಡಬೇಕಂತ ಅನಕೊಂಡೀನು…ಅಂದರಣಿ ಅವನ ಫೋಟೋ ಹಾಕಿ ಅವನ ಜೀವನವನ್ನ ಪರಿಚಯ ಮಾಡುವಂಥಾ ಒಂದ ಲೇಖನಾ ಬರೀಬೇಕಂತ ಮಾಡೀನು…ಪೇಪರಿನ್ಯಾಗ ಛಾಪಸೂದು…’ +ಗೌಡ ಗಹ ಗಹಿಸಿ ನಕ್ಕ …ಹಂಗಣಿ ಆ ನಗಿಯೊಳಗಣಿ ಮಾತಾಡಿದ – +‘ಅಲ್ಲರೀ ಸಾಹೇಬರಣಿ…ಆ ಸೂಳೀ ಮಗಾ ಏನ ಗಾಂದೀನೋ ಗೋಡಸೇನೋ…! ಅವನ ಜೀವನದ ಕಥೀ ಬರೀತಿನಂತೀರಲ್ಲರೀ…?ಅವನ ಕಥೀ ಓದಿ ಯಾರು ಉದ್ಧಾರ ಆಗೂದೈತಿರೀ…’. +‘ಯಾಕಣಿ…ಹಿಂಗಂತೀರೆಲಾ…?ದ್ಯಾವಪ್ಪನ ಬದಿಕಿನ್ಯಾಗಿಂದು ತಿಳಕೋ ಹಂತಾದ್ದು ಏನೂ ಇಲ್ಲ ಅಂತೀರೇನು?’ ಅನ್ನುವ ನನ್ನ ಪ್ರಶ್ನಾಕ್ಕ ಗೌಡ ರೌಸಿಗೆದ್ದು ಮಾತಾಡಿದ – +‘ಅಲ್ಲರೀ ಸಾಹೇಬರಣಿ…ದೇವಸ್ಥಾನದ ದರೂಡೀ ಮಾಡಿ ಓಡಿ ಹೋದ ಮಗಾ ಅಂವ…’ +‘ಛೇ ಛೇ…ಇಲ್ಲ ಬಿಡ್ರಿ.ನಾನು ಪೋಲೀಸರ ಫೈಲ ಎಲ್ಲಾ ತಗಿಸಿ ಆ ಕೇಸಿನ ವಿಚಾರ ಸ್ಟಡೀ ಮಾಡೀನು…ದ್ಯಾವಪ್ಪ ಅದರಾಗ ಇನ್‌ವಾಲ್ವ್ ಆಗಿಲ್ಲ ಅನ್ನೂದು ಸ್ಪಷ್ಟ ಅದ’ ಅಂದೆ. +‘ಇದಣಿ ನೋಡರಿ…ಪೋಲೀಸರೇನರೀ…ನಾಕ ದುಡ್ಡ ಒಗದರ ಹಿಡದವರನ ಬಿಡತಾರು… ಮತ್ತ ನಾಕ ದುಡ್ಡು ಸಿಗತಾವ ಅನ್ನೂವಲ್ಲಿ ಹಿಡೀತಾರು…ನೀವು ಧರಮನಟ್ಯಾಗ ಅಡ್ಯಾಡರಿ… ಅಲ್ಲಿ ಮಂದಿ ಖರೇ ಹಕೀಕತ್ತ ಏನೈತಿ ಅಂತ ಹೇಳತಾರು…’. +…ನಾನು ಧರಮನಟ್ಟಿಗೆ ಹೋದಾಗ ದೇವಸ್ಥಾನದ ತುಡಿಗಿನ ವಿಚಾರದ ಬಗ್ಗೆ ಅಲ್ಲಿಯ ಮಂದಿಯ ಮಾತುಗಳನ್ನ ಕೇಳಿದ್ದೆ…ಅವರೂ ದ್ಯಾವಪ್ಪನಿಗೂ ಆ ತುಡುಗಿಗೂ ಸಂಬಂಧ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು…ಆ ಮಾತನ್ನ ಈ ಗೌಡನಿಗೆ ಹೇಳಿದರೆ ಈ ವಾದ ಹಿಂಗಣಿ ನಿರರ್ಥಕವಾಗಿ ಮುಂದುವರಿಯುತ್ತದೆ ಅನ್ನುವ ಕಾರಣಕ್ಕೆ ನಾನು +ಅದನ್ನು ಹೇಳಲಿಕ್ಕೆ ಹೋಗಲಿಲ್ಲ. ಬ್ಯಾರೇ ಮಾತು ತಗದೆ – +‘ಅದ ಹೋಗಲಿ ಬಿಡ್ರಿ…ಈ ತುಡಗಿನ ವಿಚಾರ ಬಿಟ್ಟು ಅವನ ಬಗ್ಗೆ ಬ್ಯಾರೇ ಏನರೇ ಗೊತ್ತಿದ್ದರ ಹೇಳ್ರಿ…’ +‘ಬ್ಯಾರೇ ಏನ ಬೇಕ ಹೇಳ್ರಿ…ಅಂವಂದ ಪೂರಾ ಎಳೀ ಎಳೀ ನನಗ ಗೊಂತ ಐತಿ…ದರೂಡಿ ಮಾಡಿದಮ್ಯಾಗ ಅಂವ ಇಲ್ಲಿಂದ ಆರೇನಾಡಿಗೆ ಓಡಿಹೋಗಿ ಅಲ್ಲಿ ಒಂದ ದರೂಡೀಕೋರರ ಗುಂಪು ಸೇರಿಕೊಂಡಾ…ಮುಂದ ಆ ಗುಂಪ ಬಿಟ್ಟು ಅತ್ತ ತೆಲಗ ನಾಡಿಗೆ ಹೋಗಿ ಅಲ್ಲಿ ನಕ್ಸಲಬಾರೀ ಗುಂಪು ಸೇರಿಕೊಂಡ…ಪೋಲೀಸರ ಗೋಲೀಬಾರಿನಾಗ ಸಿಕ್ಕು…ಕಾಲಿಗೆ ಗುಂಡ ಬಡದು…ಅಂವಂದ ಈಗ ಕಾಲು ಕತ್ತರಿಸ್ಯಾರಂತ…ಕಾಲ ಹೋದಮ್ಯಾಗ ಇಂವಗ ಬುದ್ಧಿ ಬಂದಂಗಾಗಿ ಪೋಲೀಸರ ಕಾಲ ಹಿಡಕೊಂಡನಂತ…ಕುಂಟ ಬಿದ್ದ ಈ ಮಗಾ ಇನ್ನೇನು ಕಿಸಿಯೂದೈತಿ ಅಂತ ಪೋಲೀಸರು ಕ್ಷಮಾ ಮಾಡಿ ಅಂವನ್ನ ಬಿಟ್ಟರಂತ…ಈಗ ಮತ್ತ ಹೊಳ್ಳಿ ಆರೇ ನಾಡಿಗೆ ಬಂದು ಅಲ್ಲಿ ತಿರಕೊಂಡು ಅದಾನಂತ…ಇಷ್ಟ ಸಾಕರ್‍ಯೋ ಇನೂ ಬೇಕರ್‍ಯೋ!… ಇಲ್ಲಿಂದ ಓಡಿಹೋಗೂಕಿಂತಾ ಮದಲಿಗೆ ಬೆಳಗಾಂವ್ಯಾಗ ಎಸ್‌ಟಿ ಸ್ಟ್ಯಾಂಡಿನ್ಯಾಗ ಕಿಸೇ ಕತ್ತರಸುವಾಗ ಪೋಲೀಸರ ಕೈಯಾಗ ಸಿಕ್ಕು ಒಂದ ವರ್ಷ ಜೇಲಿನ ರೊಟ್ಟೀ ತಿಂದ ಬಂದದಾನು…ಪರಶು ರಾಮನಗತೆ ತನ್ನ ಅವ್ವನ್ನಣಿ ಖೂನೀ ಮಾಡಾಕ ಹೋದಂಥಾ ಮಗಾ ಇಂವಾ…’. +‘ಹಾಂ…ಅಂದಂಗ ಅವರ ಅವ್ವ ಅದಾಳ ಏನ್ರಿ…?’ +‘ಆಕಿ ಎರಡ ವರ್ಷದ ಹಿಂದ ತೀರಿಕೊಂಡಳು…ಬಾಳ ಸಾತ್ವಿಕ ಜೀವ ಅದಾ…! ಮಗನ ಉರವಣಗೀ ಫಾಜೀಲತನದ ಸುದ್ದೀ ಕೇಳಿ ಕೇಳಿ …ನನ್ನ ಹೊಟ್ಯಾಗ ಹೆಂತಾ ಪಾಪದ ಪಿಂಡ ಹುಟ್ಟಿತೂ…ಅಂತ ಎದೀ ಒಡಕೊಂಡಳರೀ…ಅದಣಿ ಸಂಕಟದಾಗಣಿ ಹಾಸಿಗೀ ಹಿಡದು …ನವದ ನವದ ತೀರಿಕೊಂಡಳು…’ ಅಂತ ಹೇಳಿದಾಗ,ಕಳ್ಳೀಗುದ್ದಿಯ ಈ ಗೌಡ ,ದ್ಯಾವಪ್ಪಂದು ಒಂದು ಬ್ಯಾರೇನಣಿ ಪುರಾಣ ಕಟಿಗೊಂಡು ಕೂತಾನ ಅಂತ ಅನಿಸಿತು…ಹೆಚ್ಚು ಮಾತಾಡಿ ಉಪಯೋಗ ಇಲ್ಲ ಅನಿಸಿ- +‘ಆತರೀ…ನೀವು ದ್ಯಾವಪ್ಪನ ಬಗ್ಗೆ ಹೇಳಿದ್ದು ಛಲೋ ಆತು…ಇಲ್ಲಿಂದ ಓಡಿಹೋದ ಮ್ಯಾಲೆ ಅವನ ಬದುಕಿನ ಸಾಧ್ಯತಾಗೋಳು ಏನೇನ ಇದ್ದೂ ಅಂತ ತಿಳಧಂಗಾತು ! …ಬರತನರೀ ’ ಅಂತ ಹೇಳಿ ಎದ್ದು ಬಂದೆ…. +ನನ್ನ ಹಿಂದಿಂದಣಿ ಬಂದ ಗೌಡನ ಬಂಟರು ನಾನು ಬಸ್ಸು ಹತ್ತುವತನಕಾ ನನ್ನ ಮ್ಯಾಲ ಕಣ್ಣ ಇಟಗೊಂಡು ಕೂತಿದ್ದರು… +* +* +* +ಕಳ್ಳೀಗುದ್ದಿಗೆ ಹೋಗಿ ಬಂದ ಒಂದು ವಾರದ ನಂತರ, ಒಂದು ಮಂಗಳವಾರದ ದಿವಸ ಉದಗಟ್ಟಿಗೆ ಹೋದೆ…ಮಂಗಳವಾರ ಉದ್ದವ್ವನ ವಾರ. ಉದಗಟ್ಟಿಗೆ ಹೋದಂವ ನೆಟ್ಟಗೇ ಮೊದಲು ಉದ್ದವ್ವನ ಗುಡಿಗೇ ಹೋದೆ…ನಾ ಹೋಗುವಷ್ಟೊತ್ತಿಗಂದರ ಬೆಳಗಿನ ಪೂಜಿ ಮುಗದಿತ್ತು…ಉದ್ದವ್ವನಿಗೆ ವಿಶೇಷ ಅಲಂಕಾರ ಮಾಡಿದ್ದರು…ಪೂಜಾರಿ ಅಲ್ಲಿಯೇ ಪೌಳಿಯಲ್ಲಿ ಇದ್ದ …ನನ್ನನ್ನ ನೋಡಿದವ ಎದ್ದು ಬಂದು ಗರ್ಭಗುಡಿಯ ಒಳಗಿನ ಲೈಟ್ ಹಾಕಿದ.ನಾನು ಊರಿನಿಂದಲೇ ತಂದಿದ್ದ ತೆಂಗಿನಕಾಯಿಯನ್ನು ಕೊಟ್ಟೆ …ಮಂಗಳಾರತೀ ಮಾಡಿ ಕಾಯಿ ಒಡದು ಕೊಟ್ಟ…ಐದು ರುಪಾಯಿ ದಕ್ಷಿಣಾ ಇಟ್ಟೆ …ಅವನ ಮೋತಿ ಊರಗಲ ಆತು…ಅಂವ ಹೊರಗ ಬಂದು ನನ್ನ ಎದುರಿಗಿನ ಕಂಭಕ್ಕ ಆನಿಕೊಂಡು ಕೂತಗೋತ- +‘ಸಾಹೇಬರದ ಯಾವೂರರೀ…?’ ಅಂತ ಕೇಳಿದ. +‘ಬೆಟಗೇರಿ…’. +‘ಇಲ್ಲಿ ಯಾರರೇ ಹತಗಡೇದವರು ಅದಾರೇನರೀ…’. +‘ಹಾಂ…ಹತಗಡೇದವರಂದರ ಸಂಬಂಧಿಕರಂತಲ್ಲ…ಹಂಗಣಿ ಒಬ್ಬರನ ಭೆಟ್ಟಿ ಆಗೂದಿತ್ತು… ಕಳ್ಳೀಗುದ್ದಿಯ ಗೊಂಬೀರಾಮರ ದ್ಯಾವಪ್ಪಂತ ಅದಾನಲಾಣಿ… ಅದಣಿ ಧರಮನಟ್ಟಿಯ ತೇರಿನ ರಕ್ತ ತಿಲಕದ ಸೇವಾ ಮಾಡತಿದ್ದ ನೋಡು…ಅಂವ ಇಲ್ಲಿ ಒಬ್ಬಾಕಿನ್ನ ಲಗ್ನಾ ಮಾಡಿಕೊಂಡಾನಲಾ… ಆಕಿನ್ನ ಭೆಟ್ಟಿ ಆಗಬೇಕಾಗಿತ್ತು…’. +ಪೂಜಾರಿ ಮಿಕಿ ಮಿಕಿ ಅಂತ ನನ್ನ ಮುಖಾ ನೋಡಿದ…ಹಂಗ ನೋಡಿ ನನ್ನ ಬಗ್ಗೆ ಏನೋ ಒಂದು ನಿರ್ಧಾರಕ್ಕೆ ಬಂದವನಂಗೆ- +‘ಹಾಂ …! ಹಂಗರಣಿ ನೀವೂ ಆ ಡೊಂಬರ ಬಾಳವ್ವನ್ನ ಭೆಟ್ಟಿ ಆಗಾಕ ಬಂದದೀರೀ…! ಆ ದ್ಯಾವ್ಯಾ ಏನ ಇನ್ನೂ ಆಕಿನ್ನ ಲಗ್ನ ಆಗಿದ್ದಿಲ್ಲೇಳರಿ…ಉದ್ದವ್ವ ಅವರ ಮದಿವಿಗೆ ಅಪ್ಪಣೀನಣಿ ಕೊಡಲಿಲ್ಲ !…ಅದ ಏನಾರ ಆಗವಲ್ಲದ್ಯಾಕ ಬಿಡ್ರಿ…ಆಕಿನ್ಯಾಕ ಭೆಟ್ಟಿ ಆಗಾಕ ಬಂದದೀರೀ…? ಆ ಹೆಂಗಸಂದರ ಪಕ್ಕಾ ಮುಟ್ಟಿದರ ಮುನೀ ಜಾತೀದರೀ ಸಾಹೇಬರಣಿ!…ಈ ಪರಪಂಚದಾಗ ತಾನಣಿ ರಂಬಿ ಅಂತ ತಿಳಕೊಂಡದಾಳು…!ಆಕಿನ್ನ ಮಾತಾಡಸಾಕಂತ ಹೋದ ರಗಡ ಮಂದಿ ದೊಡ್ಡ ದೊಡ್ಡ ಗೌಡರನ ಮತ್ತ ಶ್ರೀಮಂತರನ್ನ ಆಕಿ ಮರುವಾದೀ ಕಳದು ಕಳಿಸ್ಯಾಳರಿ ! …ಅವರನ ಅಲ್ಲೇ ಹೊಸ್ತಲ ಹೊರಗಣಿ ನಿಂದರಿಸಿ ಥಡಾ ಥಡಾ ಅಂತ ಮಾತಾಡಿ …ಅವರ ಮಖಕ್ಕಣಿ ರಪ್ಪಂತ ಬಾಗಲಾ ಹಾಕೊಂಡು ಅಗದೀ ಅಸಂಹ್ಯ ಮಾಡಿ ಕಳಿಸ್ಯಾಳರೀ…!ಆಕಿಗೆ ತಿಂಗಳಾ ತಿಂಗಳಾ ಪೋಷ್ಟಿನ್ಯಾಗ ಆ ದ್ಯಾವ್ಯಾ ರೊಕ್ಕಾ ಕಳಸತಾನ ನೋಡ್ರಿ…ಹಿಂಗಾಗಿ ಆಕಿ ಸೊಕ್ಕಿಗೆ ಬಂದಾಳು…ಹಂತಾ ಆ ಕುಲಗೇಡಿ ಹೆಂಗಸನ್ನ ಭೆಟ್ಟಿ ಆಗಾಕ ಹೋಗಿ ನೀವ್ಯಾಕ +ಮರುವಾದೀ ಕಳಕೊಳ್ಳಾಕ ಹೋಗತಿದ್ದೀರೀ ಅಂತ…?’. +‘ಇಲ್ಲೇಳ…ನಾ ಏನ ಹಂತಾ ದಗದಕ್ಕ ಬಂದಾಂವ ಅಲ್ಲ…ನನ್ನ ಕೆಲಸನಣಿ ಬ್ಯಾರೆ…ಆಕಿ ನನಗೇನ ಹಂಗ ಮಾಡೂ ಕಾರಣಿಲ್ಲ…ಆಕೀ ಮನೀ ತೊರಸೂ ವ್ಯವಸ್ಥಾ ಅಷ್ಟ ಮಾಡು…’ ಅಂದೆ. ಪೂಜಾರಿ ಅಲ್ಲೇ ಗುಡಿಯ ಪಟಾಂಗಣದೊಳಗೆ ಆಡತಿದ್ದ ಹುಡಗೋರೊಳಗ ಒಂದ ಹುಡುಗನ್ನ ಒದರಿ ಕರದು ಅಂವಗ ಸೂಚನಾ ಕೊಟ್ಟು ನನ್ನ ಜೋಡೀ ಕಳಿಸಿದ….ಆ ಹುಡುಗ ನನ್ನನ್ನ ಒಂದ ಓಣ್ಯಾಗ ಕರಕೊಂಡ ಹೋಗಿ ಅಲ್ಲಿ ಒಂದು ತೆರದ ಬಾಗಲ ಮುಂದ ನಿಂದರಿಸಿ … +‘ಯಾರದೀರೀ…?’ ಅಂತ ಒದರಿತು +…ಎರಡು ಸಣ್ಣ ಖೋಲಿಯ ಆ ಮನಿಯೊಳಗಿಂದ ಮೂವತ್ತು ಮೂವತ್ತೈದರ ಒಬ್ಬಾಕಿ ಹೆಂಗಸು ಬರತಿದ್ದಂಗಣಿ ಆ ಹುಡುಗ ಅಲ್ಲಿಂದ ಓಟಾ ಹೊಡೀತು…ಆಕೆನಣಿ ಬಾಳವ್ವ ಅಂತ ಅನಿಸಿತು…ಮೊದಲ ಯಾವಾಗೂ ನೋಡಿದ್ದಿಲ್ಲ…ಅಲ್ಲಿ ಬಾಗಲದಾಗ ನಿಂತಿದ್ದ ನನ್ನನ್ನ ಆಕಿ ದುರು ದುರು ಅಂತ ನೋಡತಿರಬೇಕಾದರೆ – +‘…ನಾನು ಬೆಂಗಳೂರಿನ ವರ್ತಮಾನ ಪತ್ರದಾಗ ಕೆಲಸಾ ಮಾಡಾಂವ… ಇಲ್ಲೇ ಬೆಟಗೇರ್‍ಯಾಂವ…ದ್ಯಾವಪ್ಪ ನನಗ ಅಗದೀ ಗುರ್ತಿನಾಂವ…’ ಅಂತ ನಾನು ಹೇಳತಿದ್ದಂಗೇ ಆಕಿಯ ಮುಖದ ಮ್ಯಾಲಿನ ಭಾವವೇ ಬದಲ ಆತು…ಆಕಿ – ‘ಅಯ್ಯಣಿ…ಒಳಗ ಬರ್ರಿ…ನಿಮ್ಮ ಸುದ್ದೀ ಹಗಲೆಲ್ಲಾ ಅಂವ ಹೇಳತಿದ್ದ…ಬರ್ರಿ’ ಅಂತ ಕರದು ಧಡಾ ಬಡಾ ಓಡ್ಯಾಡಿ ಒಳಗಿನ ಕಟ್ಟೀ ಮ್ಯಾಲ ಕಂಬಳೀ ಹಾಸಿದಳು…ನಾನು ಕೂತಗೋತ +‘ಮಕ್ಕಳೂ…ಯಾವ್ಯಾವ ಕ್ಲಾಸಿನ್ಯಾಗ ಕಲೀತಾವ…?’ +‘ಹಿರ್‍ಯಾಂವ ಈ ವರ್ಷ ಗೋಕಾಂವೀ ಹಾಯಸ್ಕೂಲಿಗೆ ಹೋಗ್ಯಾನರೀ… ಅಲ್ಲೇ ಸರ್ಕಾರೀ ಬೋರ್ಡಿಂಗಿನ್ಯಾಗ ಇರತಾನು…ಸಣ್ಣಾಂವ ಇಲ್ಲೇ ಕನ್ನಡ ಸಾಲಿಗೆ ಹೋಗತಾನರೀ…’ +‘ನಿಮ್ಮ ಅತ್ತಿ…? ಎಲ್ಲಿ ಹೊರಗ ಹೋಗ್ಯಾಳೇನು?’ +‘…ಆಕಿ ಘಾತಾ ಮಾಡಿದಳಲ್ಲರೀ ಸಾಹೇಬರಣಿ…ಆಚೀ ವರ್ಷ ನನ್ನ ಒಬ್ಬಾಕಿನ್ನಣಿ ಇಲ್ಲಿ ಬಿಟಗೊಟ್ಟು ಹೋಗಿ ಬಿಟ್ಟಳರೀ…ಬರೇ ಎರಡ ದಿನಾ ಥಂಡೀ ಉರಿ ಬಂದದ್ದ ಒಂದ ನೆವಾ ಆತು…ಸಾಯೂಮಟಾ ಆಕಿ ಉದ್ದವ್ವನ್ನ ನಾನಾ ನಮೂನೀಲೇ ಬೈಯತಿದ್ದಳು…! ಆಕೀ ಆತಮ ಎಲ್ಲಿ ಹೋಗಿ ಬಿದ್ದೈತ್ಯೋ ಯಾಂವ ಬಲ್ಲರೀ…!’ ಅಂತ ಹೇಳಿದ ಆಕಿ ಕಣ್ಣು ಒರಿಸಿಕೊಂಡು ಉಸ್…ಅಂತ ಉಸರು ಬಿಟ್ಟಳು.ನಾನು ಆಕಿಗೆ ಸಂತಾಪ ಹೇಳಿ ಒಂದೆರಡು ಕ್ಷಣ ಮೌನವಾಗಿ ಕೂತೆ. ಆಮೇಲೆ – +‘ದ್ಯಾವಪ್ಪ…?…ಅಂವ ಎಲ್ಲಿ ಅದಾನವಾ?’ ಅಂದೆ. +‘ಅಂವರೀ…ಅಂವ ಇಲ್ಲೇ ಅದಾನಲ್ಲರೀ…’ ಅಂತ ಹೇಳಿದಾಗ ನಾನು ಅಡರಾಯಿಸಿ ಕೇಳಿದೆ – +‘ಹಾಂ…! ದ್ಯಾವಪ್ಪ ಇಲ್ಲೇ ಅದಾನಣಿ?…ಭಾಳ ನಿವಳ ಆತು…ಅವನ್ನ ಭೆಟ್ಟಿ ಆಗಬೇಕೂ ಅಂತ ಭಾಳ ದಿನದಿಂದ ಮನಸ ಹರೀಲಿಕ್ಕತ್ತಿತ್ತು …ಎಲ್ಲೆದಾನು?ಊರಾಗ ಇದ್ದಾನೋ ಏನ ಗೋಕಾಂವಿಗೆ ಹೋಗ್ಯಾನೋ…?’ +ಬಾಳವ್ವ ಮುಗುಳು ನಗಿ ನಕ್ಕು – +‘ಇಲ್ಲಿ…’ ಅಂತ ತನ್ನ ಎದಿ ಮುಟಿಗೊಂಡು ‘ಇಲ್ಲೆದಾನ ನೋಡ್ರಿ…’ ಅಂತ ಹೇಳಿ ನಿಟ್ಟುಸಿರು ಬಿಟ್ಟಳು…ನಾನು ಆವಾಕ್ಕಾಗಿ ಕೂತೆ…ಆಕೆನೂ ಮೌನವಾಗಿ ಕೂತು ಬಿಟ್ಟಳು…ಹಂಗಣಿ ಎಷ್ಟೊತ್ತು ಕೂತೆವೋ ಯಾರಿಗೆ ಗೊತ್ತು…! ಕಡಿಕ ನಾನಣಿ ಮೌನ ಮುರಿದೆ: +‘ಒಟ್ಟಣಿ ಅಂವಂದ ಏನೂ ಸುದ್ದೆನಣಿ ಇಲ್ಲೇನು…?ಎಲ್ಲಿದ್ದಾನಣಿ… ಹೆಂಗಿದ್ದಾನಣಿ…?’ +ನನ್ನ ಮಾತಿಗೆ ಬಾಳವ್ವ ಎದ್ದು ಹೋಗಿ ಅಲ್ಲೇ ದೇವರ ಮಾಡದಾಗ ಇಟ್ಟಿದ್ದ ಒಂದ ತಗಡಿನ ಡಬ್ಬಿಯನ್ನ ತಗೊಂಡಬಂದು,ಅದರೊಳಗಿಂದ ಪೆಂಡಿ ಪೆಂಡಿ ಮನಿಯಾರ್ಡರಿನ ಪಟ್ಟಿಗಳನ್ನ ತಗದು ನನ್ನ ಮುಂದ ಇಟ್ಟಳು…ಹಣ ಪಡೆಯುವವರಿಗೆ ಹಣ ಕಳಿಸುವವರು ಸುದ್ದಿ ಸೂಚನಾಗಳನ್ನು ಬರೆದು ತಿಳಿಸುವ ಭಾಗದ ಪಟ್ಟಿಗಳು…ಎಲ್ಲಾ ಖಾಲೀ ಖಾಲಿ…ಬಿಳಿ ಬಿಳಿಪಟ್ಟಿಗಳು! ಹೊಳ್ಳಿಸ್ಯಾಡಿ ನೋಡಿ ಆಕಿಯ ಮುಖ ನೋಡಿದೆ…ಆಕಿ ಹೇಳಿದಳು – +‘ಹಿಂಗಣಿ ತಿಂಗಳಾ ತಿಂಗಳಾ…ಒಮ್ಮೆನೂ ತಪ್ಪಸಧಂಗ ರೊಕ್ಕಾ ಕಳಿಸಿ ಈ ಮನಿಯ ಆರಾ ಭಾರಾ ಹಿಡದ್ದಾನ ನೋಡ್ರಿ…ಆದರ ತಾನು ಎಲ್ಲೆದನೂ ಹೆಂಗದನೂ ಅನ್ನೂ ಒಂದ ಮಾತನೂ ಬರೀಲಿಲ್ಲರೀ…ಮನಿಯಾರ್ಡರ ಬಂದಾಗೊಮ್ಮೆ ನಾನು ನನ್ನ ಹೊಟ್ಯಾನ ಸಂಕಟಾ ಕಳಕೋಳಿಕ್ಕೆ …ತರಾಸ ಮಾಡಿಕೊಂಡು ಎರಡ ದಿನಾ ಅತ್ತರ ನಮ್ಮ ಅತ್ತಿ ಅಂದ ಇಡೀ ದಿನಾ ಉದ್ದವ್ವನ್ನ ತಾರಾಮಾರಾ ಬೈಯ್ಯಾಕಿ…ಕಡಿಕ ಈಗೊಂದ ಎಂಟ್ಹತ್ತ ತಿಂಗಳ ಹಿಂದ ಪೋಷ್ಟ ಮಾಸ್ಟರಗ ಗಂಟ ಬಿದ್ದಿನರೀ… ಅವರೂ ನಿಮ್ಮಂಗ ಚಲೂ ಮನಸ್ಯಾರು…ಹೆಂಗರೇ ಮಾಡಿ ಅಂವ ಕಳಸೂ ಮನಿಯಾರ್ಡರಿನ ಮ್ಯಾಗ ಅಂವ ಎಲ್ಲೆದಾನ ಅನ್ನೂದನ್ನ ಪತ್ತೇ ಹಚ್ಚಿ ಕೊಡರೀ ಅಂತ ಅವರ ಕಾಲ ಕಟಿಗೊಂಡಿನರೀ… ಅವರು ತಪಾಸ ಮಾಡಿ – ಅದೆಲ್ಯೋ ಮರಾಸ್ಟ್ …ಅಂತ ಆರೇನಾಡ ಐತೆಂತ ನೋಡ್ರಿ… ಅಲ್ಲಿ ವರದಾ ಅಂತ ಊರೈತೆಂತರಿ…ಬಾಳ ದೊಡ್ಡ ಊರಂತರಿ!…ಇಲ್ಲೀ ಹಂಗ ಆ ಊರಿಗೆ ಒಂದಣಿ ಪೋಷ್ಟ ಕಚೇರಿ ಇಲ್ಲಂತ ! ಬಾಳಷ್ಟ ಪೋಷ್ಟ ಕಚೇರಿ ಅದಾವಂತ…! ಒಂದೊಂದ ತಿಂಗಳು ಒಂದೊಂದ ಪೋಷ್ಟ ಕಚೇರಿಂದ ಮನಿಯಾರ್ಡರ ಕಳಿಸ್ಯಾನೂ ಅಂತ ಹೇಳಿದರು…ಇನ್ನ ಹೆಂಗರೀ ಅಂತ ಗೋಳ ತೋಡಿಕೊಂಡಗಳಸೇ ಅವರು ವಿಚಾರ ಮಾಡಿ -ಆ ವರದಾ ಅಂಬೂ ಊರಾಗ ಒಂದ ಆಶ್ರೇಮ ಐತೆಂತರೀ… ಯಾವದೋ +ರುಸಿಗಳ ಆಶ್ರೇಮರಿ… ಬಾಳಮಾಡಿ ಆ ಆಶ್ರೇಮದಾಗ ಇದ್ದರೂ ಇದ್ದಿದ್ದಾನು ಅಂತ ಹೇಳಿದರು… ಹೆಂಗರಣಿ ಆಗವಲ್ಲದ್ಯಾಕ…ಅಂವ ಅಲ್ಲೇ ಇದ್ದರ ಅಂವಗ ಮುಟ್ಟತೈತಿ..ನಿಮ್ಮ ಕಾಲ ಬೀಳತನು…ಅಂವಗ ಒಂದ ಪತ್ತರಾ ಬರೀರಿ ಅಂತ ಗಂಟ ಬಿದ್ದು ಪತ್ತರಾ ಬರಿಸಿದಿನರಿ…ಹಿಂಗಿಂಗಣಿ…ಅತ್ತಿ ತೀರಿಕೊಂಡ ಒಂದ ವರಸ ಆಗಾಕ ಬಂತು…ಈಗೇನ ಉದ್ದವ್ವನ್ನ ಅಪ್ಪಣೀ ಕೇಳೂದು ಬ್ಯಾಡಾ…ನೀ ತಾಬಡ ತೋಬಡ ಹೊಂಟ ಬಾ…ನೀ ಬಂದಗಳಸೇ ತುರಂತ ಮದಿವೀ ಆಗೂಣೂ…ಮಕ್ಕಳು ಅಪ್ಪ ಎಲ್ಲಿ ಹೋದಾ ಅಪ್ಪ ಎಲ್ಲಿ ಹೋದಾ ಅಂತ ಹಗಲೆಲ್ಲಾ ನಿನ್ನ ನೆನಸತಾವು… ಲಗೂಟಣಿ ಹೊಳ್ಳಿ ಬಾ…ಅಂತ ಬರಿಸಿದಿನರೀ…’. +‘ಮುಂದಣಿ…? ದ್ಯಾವಪ್ಪಗ ಅದ ಮುಟ್ಟಿತೋ ಇಲ್ಲೋ…?ಏನರೇ ತಿಳೀತೇನು…?’ ಇಷ್ಟ ಕೇಳಬೇಕಾದರ ಯಾಕೋ ಏನೋ ನನಗ ತೇಕ ಹತ್ತಿದಂಗ ಆತು! +ಬಾಳವ್ವನ ಮೋತಿಯ ಮ್ಯಾಲ ಒಂದು ನಮೂನಿ ವಿಚಿತ್ರವಾದ ಶಾಂತ ಭಾವನಾ ಆವರಿಸಿಕೊಂಡಿತು…ಆಕಿ ಯಾವ ಉದ್ವೇಗವೂ ಇಲ್ಲದೇ – +‘ಹಾಂ…ಆ ಪತ್ತರಕ್ಕ ಉತ್ತರ ಬಂತರಿ…ಈಗ ಆರ ತಿಂಗಳ ಹಿಂದ ಈ ಪತ್ತರ ಬಂತ ನೋಡರಿ…’ ಅಂತ ಡಬ್ಬಿಯ ತಳದಾಗ ದ್ಯಾವಪ್ಪನ ಫೋಟೋದ ಕೆಳಗ ಇಟ್ಟಿದ್ದ ಒಂದು ಪೋಷ್ಟ್ ಪಾಕೀಟು ಹೊರಗ ತಗದು ನನ್ನ ಕೈಗೆ ಕೊಟ್ಟಳು.ಅದು ದ್ಯಾವಪ್ಪ ಬಾಳವ್ವನಿಗೆ ಬರೆದ ಪತ್ರ – ಅದನ್ನ ನಾನು ಓದಬೇಕೋ ಓದಬಾರದೋ ಅಂತನ್ನುವ ಯಾವ ಶಿಷ್ಟಾಚಾರವೂ ನನ್ನ ಮನಸಿಗೆ ಹೊಳೆಯಲೇ ಇಲ್ಲ…ಅವಸರ ಅವಸರವಾಗಿ ಪಾಕೀಟಿನೊಳಗಿನ ಪತ್ರವನ್ನು ತಗದು ಓದತೊಡಗಿದೆ… +………………. +ನನ್ನವಳಿಗೆ… +ನಾನು ಇಲ್ಲಿನ ಒಂದು ಆಶ್ರಮದಲ್ಲಿದ್ದೇನೆ.ನನ್ನ ಬದುಕು ಸಮಾಜಕ್ಕೆ ಉಪಯೋಗವಾಗುವ ನಾಲ್ಕು ಕೆಲಸಗಳಿಗೆ ಬಳಕೆಯಾಗಲಿ ಎಂದು ನಿರ್ಧರಿಸಿಯೇ ಇಲ್ಲಿಗೆ ಬಂದಿದ್ದೇನೆ.ಇಲ್ಲಿ ಬಾಬಾ ಆಮ್ಟೆ ಅಂತನ್ನುವ ಒಬ್ಬ ಸೇವಾಕರ್ತರಿದ್ದಾರೆ.ಅವರ ಮಾರ್ಗದರ್ಶನದಲ್ಲಿ ನನ್ನಿಂದ ಆಗುವ ಕೆಲಸಗಳನ್ನು ಮಾಡುತ್ತಿದ್ದೇನೆ.ನಿನ್ನ ಬಗ್ಗೆ ಅವರಿಗೆ ಹೇಳಿದ್ದೇನೆ. ನಿನಗೆ ಪ್ರತಿ ತಿಂಗಳೂ ಮನಿಯಾರ್ಡರು ಕಳಿಸಲು ಅನುಕೂಲ ಆಗುವ ಏರ್ಪಾಟು ಮಾಡಿಕೊಟ್ಟಿದ್ದಾರೆ. +ಅಲ್ಲಿಗೆ ಬರಲು – ಬಂದು ಮದುವಿಯಾಗಲು ಹೇಳಿದ್ದೀ.ನನ್ನ ನಿನ್ನ ಮದುವಿ ಇನ್ನೂ ಆಗಿಲ್ಲ ಎಂದು ನಿನಗೆ ಅನಿಸಿದೆಯೇ.ನನ್ನ ಪ್ರಕಾರ ನಮ್ಮಿಬ್ಬರ ಮದುವೆ +ಆಗಿ ಹೋಗಿದೆ.ಇನ್ನು ಮತ್ತೊಮ್ಮೆ ಮದಿವಿಯಾಗುವ ಅವಶ್ಯಕತೆ ಇಲ್ಲ. +ಮದುವಿಗೆ ಎರಡು ಮುಖಗಳಿವೆ.ಒಂದು ಗಂಡ-ಹೆಂಡತಿಯರ ಸಂಬಂಧದ-ಪ್ರೀತಿಯ, ಮನಸಿಗೆ ಸಂಬಂಧಪಟ್ಟ ಮುಖ ಮತ್ತು ಇನೊಂದು ಗಂಡು ಹೆಣ್ಣಿನ ಸಂಪರ್ಕದ , ದೇಹಕ್ಕೆ ಸಂಬಂಧಪಟ್ಟ ಮುಖ. +ನನ್ನ ನಿನ್ನ ಮದುವಿಗೆ, ಸಂಬಂಧದ ಮತ್ತು ಪ್ರೀತಿಯ-ಮನಸಿಗೆ ಸಂಬಂಧಪಟ್ಟ ಮುಖ ಮಾತ್ರ ಈ ಜನ್ಮದಲ್ಲಿ ಸಾಧ್ಯ. +ಐದಾರು ತಲಿಮಾರುಗಳಿಂದ ದೇವರ ತೇರಿಗೆ ರಕ್ತತಿಲಕದ ಸೇವಾ ಮಾಡಿಕೊಂಡು ಬಂದ ಮನಿತನದಲ್ಲಿ ಹುಟ್ಟು ಬೆಳೆದವನು ನಾನು. ಪುನರ್ಜನ್ಮ ಮತ್ತು ದೇವರು ಅನ್ನುವವು ಇದ್ದಾವೋ ಇಲ್ಲವೋ ಅನ್ನುವುದು ನನಗೆ ಅಖೈರಾಗಿ ಗೊತ್ತು ಆಗುತ್ತಿಲ್ಲ. ಯಾವತ್ತೂ ಸಂಶಯದೊಳಗೆ ಬೇಯುತ್ತಿದ್ದೇನೆ. ಪುನರ್ಜನ್ಮ ಇದೆ ಅನ್ನುವುದಾದರೆ ಅಲ್ಲಿ ನಮ್ಮ ಮದುವಿಯ ದೇಹ ಸಂಪರ್ಕದ ಮುಖವೂ ಸಾಧ್ಯ ಆಗುತ್ತದೆ. +ಇನ್ನು ದೇವರು ಅನ್ನುವದು ಇದ್ದರೆ ಅದರ ವಿರುದ್ಧ ನನ್ನ ಬಂಡಾಯವಿದೆ. ಅದರ ವಿರುದ್ಧ ನನ್ನ ಧಿಃಕಾರವಿದೆ ಮತ್ತು ಅದರ ವಿರುದ್ಧ ನನ್ನ ಸತ್ಯಾಗ್ರಹವಿದೆ. +ಆ ದೇವರ ವಿರುದ್ಧದ ಸತ್ಯಾಗ್ರಹದ ಸಲುವಾಗಿಯೇ ನನ್ನ -ನಿನ್ನ ಮದುವಿಯ ದೈಹಿಕ ಮುಖ ಈ ಜನ್ಮದಲ್ಲಿ ಸಾಧ್ಯ ಆಗುವುದಿಲ್ಲ . ದೇವರ ವಿರುದ್ಧದ ನನ್ನ ಬಂಡಾಯ ಇದು.ದೇವರು ಅನ್ನುವದು ಇದೆ ಅನ್ನುವದಾದರೆ ನನ್ನ ನಿನ್ನಂಥವರ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಯಾವ ಅರ್ಥವಿದೆ? ಇದು ಅವನಿಗೆ ತಿಳಿಯಬೇಕಲ್ಲವೆ? ಇದನ್ನು ಬಿಟ್ಟು ಬೇರೆ ಯಾವ ಹಾದಿಯಿಂದ ಆ ದೇವರಿಗೆ ತಿಳಿಸಲಿಕ್ಕೆ ಸಾಧ್ಯ? +ನಾನು ತೆಗೆದುಕೊಂಡಿರುವ ದೇವರ ವಿರುದ್ಧದ ಈ ಬಂಡಾಯದಲ್ಲಿ ನೀನೂ ಭಾಗಿಯಾಗುತ್ತೀ ಅಂತ ನಂಬಿದ್ದೇನೆ.ನಿನಗೆ ಕಷ್ಟ ಅನಿಸುವದಾದರೆ,ನಿನ್ನ ಶರೀರ ಒಪ್ಪದಿದ್ದರೆ, ಯೋಗ್ಯರು ಯಾರಾದರೂ ಸಿಕ್ಕು ನೀನು ಮದುವಿಯಾಗುತ್ತೀ ಅನ್ನುವದಾದರೆ ನನ್ನದೇನೂ ಅಭ್ಯಂತರ ಇಲ್ಲ. ಮದುವಿಯಾಗಿಬಿಡು. +ಕಾಯಾ ವಾಚಾ ಮನಸಾ ಸಾಧ್ಯವಾಗದ ಬಂಡಾಯ ನಿರರ್ಥಕವಾದದ್ದು. ಹಾಗೆ ನಿನ್ನ ಬದುಕು ನಿರರ್ಥಕವಾಗುವದು ಬೇಡ. +ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸು. ಹಣದ ಬಗ್ಗೆ ಚಿಂತೆ ಮಾಡುವದು ಬೇಡ. +ನನ್ನ ಮನಸ್ಸಿನಲ್ಲಿ ನೀನು ಇರುವಿ ಮತ್ತು ನಿನ್ನ ಮನಸ್ಸಿನಲ್ಲಿ ನಾನು ಇದ್ದೇನೆ. ಇದಕ್ಕಿಂತ ಬೇರೆ – ಪತ್ರ ಗಿತ್ರಗಳು ಬೇಕಾಗಿಲ್ಲ.ನಮ್ಮ ಬಂಡಾಯದ ವ್ರತದಲ್ಲಿ ಮನಸ್ಸು ಇಡೋಣ.ಮನಸ್ಸು ಚಂಚಲವಾಗಿಸುವದನ್ನ ದೂರ ಇಡೋಣ. ವಿಶೇಷವಾದದ್ದು ಏನಾದರೂ ಇದ್ದರೆ,ಅನಿವಾರ್ಯಗಳು ಇದ್ದರೆ ಜರೂರು ಪತ್ರ ಬರೆಸು.ಮಗನ ಮದುವಿಗೆ ಬರುತ್ತೇನೆ. +ಮಕ್ಕಳನ್ನು ಚನ್ನಾಗಿ ಜೋಪಾನ ಮಾಡು.ಸದ್ಗುಣಿಗಳನ್ನಾಗಿ ಮಾಡು. +ಅವರಿಗೆ ನನ್ನ ಆಶೀರ್ವಾದಗಳನ್ನು ತಿಳಿಸು. +ದೊಡವ್ವ ತೀರಿಕೊಂಡದ್ದು ತಿಳಿದು ಬಹಳ ಸಂತಾಪವಾಯಿತು.ಆದರೆ ಅನಿವಾರ್ಯ. ಸಾವು ಯಾರನ್ನು ಬಿಟ್ಟಿದೆ ? ಕಾಲ ತೀರಿದ ಮೇಲೆ ನಾನೂ ನೀನೂ ತೀರುವವರೇ ಅಲ್ಲವೆ? +ಬದುಕನ್ನ ನಿಷ್ಠೆಯಿಂದ ಸ್ವೀಕರಿಸು , ಎದುರಿಸು. +ಇಂತೀ +ನಿನ್ನವ +….ಉದ್ದವಾದ ಉಸಿರು ಬಿಟ್ಟು ತಲೆ ಎತ್ತಿ ಬಾಳವ್ವನ ಮುಖ ನೋಡಿದೆ….ನನ್ನ ಕಣ್ಣುಗಳನ್ನ ನೋಡುತ್ತಿದ್ದಂತೆಯೇ ಆಕಿಯ ಕಣ್ಣುಗಳಿಂದ ಚಿಲ್ಲಂತ ಕಣ್ಣೀರು ಚಿಮ್ಮಿದವು… ಆಕಿ ದನಿ ತಗಿಯದೇ ಮೌನವಾಗಿ ಬಿಕ್ಕಳಿಸಿದಳು… +‘ಸಮಾಧಾನ ಮಾಡಿಕೋವಾ…ಸಮಾಧಾನ ಮಾಡಕೋವಾ…’ಅಂತ ಬಡಬಡಿಸಿದೆ… +ಅತ್ತು ಅತ್ತು ತಹಬಂದಿಗೆ ಬಂದಮ್ಯಾಲೆ ಆಕಿ ಮಾತಾಡಿದಳು : +‘…ಪತ್ತರದಾಗ ಮದಲ ನಮ್ಮದ ಮದಿವಿ ಆಗೇ ಹೋಗೇತಿ ಅಂತ ಬರದಾಂವ ಆಮ್ಯಾಗ ಕಡೀಕ ಹೆಂಗ ಬರದ್ದಾನ ನೋಡಿದಿರೀ…?’ +‘…………….?’ +‘….ಅಂವನ್ನ ಬಿಟ್ಟು ನಾಣಿ ಬ್ಯಾರೇ ಯಾರನಾರಣಿ ಮದಿವೀ ಆಗಾಕಿದ್ದರ ಆಗಬೇಕಂತ…!’ +ಅಂತ ಅಂದಾಕೆನಣಿ ಬಾಳವ್ವ ಅಳುವಿನ ರಭಸದೊಳಗ ಸಿಕ್ಕು ಕೊಚ್ಚಿಕೊಂಡು ಹೋದಳು… +ನನ್ನ ಕಣ್ಣಲ್ಲಿಯೂ ನೀರು ಕಾಣಿಸಿಕೊಂಡಿತು… +ತೇರಿನ ಬೆನ್ನಿಗೆ … +ಗೆಳೆಯ ರಾಘವೇಂದ್ರ ಪಾಟೀಲರು ನಿಡುಗಾಲದಿಂದಲೂ ಸಾಹಿತ್ಯದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.ಕತೆ, ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅವರು ತನ್ನದೇ ಸ್ಥಾನವನ್ನ ಕಂಡುಕೊಂಡಿದ್ದಾರೆ. ಸದಭಿರುಚಿಯ ಪತ್ರಿಕೆಯನ್ನು ನಡೆಸಿಕೊಂಡು ಬರುವುದರ ಮೂಲಕ ಸೃಜನಶೀಲ ಸಾಹಿತ್ಯಕ್ಕೆ ಪೂರಕವಾದ ಒಂದು ವಾತಾವರಣವನ್ನೂ ಅವರು ಪ್ರತೀತಗೊಳಿಸುತ್ತಿದ್ದಾರೆ. ಅನಗತ್ಯವಾದ ವಾದ -ವಿವಾದಗಳಿಂದ ಸದಾ ದೂರ ಉಳಿದಿರುವ ಅವರು ಸಾಹಿತ್ಯದ ದೂರಗಾಮೀ ಪ್ರಭಾವಗಳ ಬಗೆಗೆ ಗಂಭೀರವಾಗಿ ಚಿಂತಿಸುತ್ತಲೇ ಬಂದಿದ್ದಾರೆ. ತಮ್ಮ ಪ್ರಕಾಶನದ ಮೂಲಕ ಅವರು ಪ್ರಕಟಿಸಿದ ವಿವಿಧ ಕೃತಿಗಳೂ ಕೂಡಾ ಪಾಟೀಲರ ಸೃಜನಶಿಳತೆಯ ಇನ್ನೊಂದು ಆಯಾಮವನ್ನು ಸಂಕೇತಿಸುತ್ತದೆ.ಸಾಹಿತ್ಯದ ವಾತಾವರಣ ಕಲುಷಿತಗೊಂಡಿರುವ ಇಂದಿನ ಸಂದರ್ಭದಲ್ಲಿ ಪಾಟೀಲರ ಹಾಗೆ ಅಕಲಂಕಿತರಾಗಿ ಉಳಿಯುವುದು ಒಂದು ದೊಡ್ಡ ಸಂಗತಿಯೇ ಆಗಿದೆ.ಸಮಕಾಲೀನ ಒತ್ತಡಗಳಿಂದ ಸಿಡಿದು ದೂರ ಉಳಿದಿರುವ ಪಾಟೀಲರು ಆ ಕಾರಣಕ್ಕೇನೇ ನನ್ನಂಥ ಅನೇಕರಿಗೆ ತುಂಬ ಇಷ್ಟವಾಗಿದ್ದಾರೆ. +* +* +* +ಪ್ರಸ್ತುತ ‘ತೇರು’ ಕಾದಂಬರಿಯು ಪಾಟೀಲರು ಸಾಹಿತ್ಯ ಕ್ಷೇತ್ರದಲ್ಲಿ ನಡೆಸುತ್ತಿರುವ ಸೃಜನಶೀಲ ಪ್ರಯೋಗಕ್ಕೆ ಇನ್ನೊಂದು ಉದಾಹರಣೆ. ತುಂಬ ಮನೋಹರವಾಗಿ ಆರಂಭಗೊಂಡು, ಲಲಿತವಾಗಿ ಬೆಳೆಯುತ್ತಾ ಹೋಗುವ ಈ ಕಾದಂಬರಿಯು ಮುಕ್ತಾಯವಾಗುವ ಹೊತ್ತಿಗೆ ಆರಂಭದ ರಮ್ಯ ಗುಣಗಳನ್ನು ಕಳಕೊಂಡು ಸಂಕೀರ್ಣವಾಗುತ್ತಾ ವಿಷಾದದ ಎಳೆಗಳನ್ನು ನೇಯುತ್ತಾ ಮನರಂಜನೆಯಾಚೆ ಸಾಗುತ್ತದೆ. ಈ ಅರ್ಥದಲ್ಲಿ ಇದು ಜಾನಪದದ ಅಂಶಗಳನ್ನು ಒಡಲಲ್ಲಿ ಇರಿಸಿಕೊಂಡೂ, ಕೇವಲ ಜಾನಪದವಾಗಿ ಉಳಿಯುವುದಿಲ್ಲ. ನಮ್ಮ ಕಾಲದ ಪತನ ಮುಖೀ ಮೌಲ್ಯಗಳಿಗೆ ಸಂಕೇತವಗಿ ಉಳಿಯುತ್ತದೆ. +ಕಾದಂಬರಿಯಲ್ಲಿ ನಾಲ್ಕಾರು ತಲೆಮಾರುಗಳ ಉಲ್ಲೇಖ ಬರುತ್ತದೆ.ಮೊದಲನೇ ತಲೆಮಾರಿನ ನಾಯಕ ದ್ಯಾವಪ್ಪ – ಧರಮನಟ್ಟಿಯ ವೈಭವದ ಕಾಲದಲ್ಲಿ ವಿಠ್ಠಲ ದೇವರ ತೇರಿಗೆ ನಡುವಿನ ಮಗನನ್ನು ಬಲಿಕೊಟ್ಟ ಬಡವ ಆತ.ಈ ಬಲಿ ಪ್ರಸಂಗವನ್ನು ಅತ್ಯಂತ ಸುಂದರವಾಗಿ ‘ಗೊಂದಲಿಗರ ಕಥನ ಶೈಲಿ’ಯ ಮೂಲಕ ಹೇಳಲಾಗಿದೆ.ಎಂಟೆಕರೆ ಭೂಮಿಗೆ ಮಗನನ್ನು ಬಲಿ ಕೊಟ್ಟ ಗೊಂಬೀ ರಾಮರ ದ್ಯಾವಪ +ಕಾಲಾಂತರದಲ್ಲಿ ಒಂದು ಪುರಾಣವಾಗಿ ಬಿಡುತ್ತಾನೆ. ಕಾದಂಬರಿಯಲ್ಲಿ ಮುಂದೆ ಬರುವ ಒಂದು ವಿವರಣೆಯು ಆತ ಪುರಾಣವಾದ ಬಗೆಗೆ ಅತ್ಯಂತ ಹೃದ್ಯವಾದ ಒಂದು ವಿವರಣೆಯನ್ನು ನೀಡುತ್ತದೆ – +“….ಮಗನನ್ನು ಸ್ವಾಮಿಯ ರಥಕ್ಕೆ ಬಲಿಕೊಟ್ಟ ಆ ದ್ಯಾವಪ್ಪ ಅಗದೀ ಥೇಟ್ ವಿಠ್ಠಲ ಸ್ವಾಮಿ ಇದ್ದಂಗಣಿ ಇದ್ದನಂತ ! …ನಮ್ಮ ಹಿರ್‍ಯಾರು ಹೇಳತಿದ್ದರು…ತೇರಿಗೆ ಬಲಿ ಕೊಡಾಕಂತ ಅಂವ ತನ್ನ ಮಗನ್ನ ತೆಕ್ಯಾಗ ಅವಚಿ ಹಿಡಕೊಂಡು – ತೇರಿನ ಗಾಲಿಯ ತೆಳಕ ಇಡಾಕ ಹೀಂಗ ತೆಳಗ ಬಗ್ಗತಿದ್ದಂಗಣಿ ತೇರಿನ್ಯಾಗಿನ ವಿಠ್ಠಲ ಸ್ವಾಮಿ ತೆಳಗ ಇಳದ ಬಂದು ದ್ಯಾವಪ್ಪನ ತೆಕ್ಯಾಗಿನ ಚಂದ್ರಾಮ ಅನ್ನುವ ಆ ಹುಡುಗನ್ನ ತನ್ನ ತೆಕ್ಕಿಗೆ ತಗೊಂಡನಂತ…ತನ್ನ ರಥಕ್ಕೆ ಬಲೀ ಆಗಲಿಕ್ಕೆ ಬಂದ ಆ ಕಂದನನ್ನ ತನ್ನ ತೆಕ್ಯಾಗ ಇಟಗೊಂಡು ವಿಠ್ಠಲ ಸ್ವಾಮಿ ಗರುಡ ಪಕ್ಸೀ ಮ್ಯಾಲ ಕುಂತಗೊಂಡು ಅಂತರಿಕ್ಸಾಕ್ಕ ಹಾರಿ…ಹಂಗಣಿ ಹಿರಿಹೊಳಿ ದಾಟಿ …ಆಕಾಸದಾಗೇ ಪಂಢರಾಪುರದ ಹಾದಿ ಹಿಡಿದನಂತ…”. +ಚಾರಿತ್ರಿಕ ಘಟನೆಯೊಂದು ಕಾಲಾಂತರದಲ್ಲಿ ಐತಿಹ್ಯವಾಗಿ ಕೊನೆಗೆ ಪುರಾಣವಾದ ಸಂದರ್ಭವಿದು. ದ್ಯಾವಪ್ಪನ ತೀರ್ಥ ಯಾತ್ರೆ ಮತ್ತಿತರ ವಿವರಗಳು ಇದಕ್ಕೆ ಪೂರಕವಾದ ವಿಚಾರಗಳಾಗಿವೆ.ಪಾಟೀಲರು ಉದ್ದೇಶಪೂರಕವಾಗಿ ತಂದ ‘ಗೊಂದಲಿಗರ ಕಥನಶೈಲಿ’ಯು ಇದಕ್ಕೊಂದು ತಾಂತ್ರಿಕ ಅಗತ್ಯವಾಗಿದ್ದು ಪುರಾಣ ಭೂಮಿಕೆಯನ್ನು ಅತ್ಯಂತ ಸಶಕ್ತವಾಗಿ ಮೂರ್ತಗೊಳಿಸುತ್ತದೆ. ದ್ಯಾವಪ್ಪನಿಗೆ ಪುರಾಣವಾಗುವ ಶಕ್ತಿಯಿದೆ, ಹಾಗೆಯೇ ಪಾಟೀಲರಿಗೆ ಪುರಾಣವನ್ನು ಪ್ರತೀತಗೊಳಿಸುವ ಪ್ರತಿಭೆಯಿದೆ. +ಮೂರು ತಲೆಮಾರುಗಳ ನಂತರದ ದ್ಯಾವಪ್ಪನ ಮರಿ ಮೊಮ್ಮಗ ಕುಬೇರಪ್ಪನ ಕಾಲಕ್ಕಾಗುವಾಗ ಪರಿಸ್ಥಿತಿ ಬದಲಾಗಿದೆ.ಪಾಟೀಲರಿಗೆ ಈ ತಲೆಮಾರನ್ನು ವಿವರಿಸುವ ಉತ್ಸಾಹವಿಲ್ಲ. ಧರಮನಟ್ಟಿಯಲ್ಲಿನ ಧರ್ಮ ಪತನಮುಖಿಯಾಗುವುದರಲ್ಲಿದೆ ಎಂಬ ಸೂಚನೆಯನ್ನು ಮಾತ್ರ ಅವರು ಕೊಡುತ್ತಾರೆ. ಆದರೆ ಕುಬೇರಪ್ಪನ ಮಗ ದ್ಯಾವಪ್ಪನ ಬಗೆಗೆ ಮಾತ್ರ ಅವರಿಗೆ ಇನ್ನಿಲ್ಲದ ಉತ್ಸಾಹ. ಪರಂಪರೆಯೊಡನೆ ತೀವ್ರ ಸಂಘರ್ಷಕ್ಕಿಳಿದಿರುವ ಈ ದ್ಯಾವಪ್ಪನು ತನ್ನ ಹಿರಿ ಮುತ್ತಜ್ಜನ ಹೆಸರನ್ನೇ ಹೊತ್ತಿದ್ದರೂ ಹಿಡಿದಿರುವ ಹಾದಿ ಮಾತ್ರ ಹೊಸತು. ‘ನವ ನಿರ್ಮಾಣ ಚಳುವಳಿ’, ‘ಜೈಲು’, ‘ಬದಲಾವಣೆ’ ಮತ್ತಿತರ ಪದಗಳ ನಡುವೆ ಬದುಕುವ ಆತನಿಗೆ ಗೊಂದಲಿಗರ ಪದ್ಯದ ಅಗತ್ಯವಿಲ್ಲವಾದ್ದರಿಂದ ಪಾಟೀಲರು ಆ ತಂತ್ರವನ್ನು ಕೈಬಿಟ್ಟಿದ್ದಾರೆ. ಪುರಾಣದ ಆಶಯಗಳೂ ಇಲ್ಲಿಲ್ಲ. ವ್ಯತಿರಿಕ್ತವಾಗಿ ಇಲ್ಲಿ ‘ವಿಠ್ಠಲನ ಕಣಬಟ್ಟು ಕಿತ್ತುಕೊಂಡ ’ , ‘ರುಕುಮಾಯಿಯ ಕಿರೀಟ ಕದ್ದು ಹೋದ ’, ಪುರಾಣ ಭಂಜನದ ವಿವರಗಳು +ಬರುತ್ತವೆ. ಮುಖ್ಯವಾದ ವಿಚಾರವೆಂದರೆ ಪಾಟೀಲರು ಈ ಬಗೆಯ ಪುರಾಣ ಭಂಜನವನ್ನು ವಿಷಾದದಲ್ಲಿ ವಿವರಿಸುತ್ತಿಲ್ಲ. ಏಕೆಂದರೆ ಅವರಿಗೆ ಹೊಸ ತಲೆಮಾರಿಗೆ ಸೇರಿದ ದ್ಯಾವಪ್ಪನ ಬಗೆಗೂ ಅನುಕಂಪೆಯಿದೆ.ಸ್ವಲ್ಪ ಹೆಚ್ಚು ಕಡಿಮೆಯಾದರೂ ನಮ್ಮ ಕಾಲದ ಧಾರ್ಮಿಕ ಮತಾಂಧರಿಗೆ ಖುಷಿ ಕೊಡಬಹುದಾದಂಥ ಕತೆಯನ್ನು ಪಾಟೀಲರು ಅತ್ಯಂತ ಸೂಕ್ಷ್ಮವಾಗಿ ಪತನಮುಖೀ ಧಾರ್ಮಿಕತೆಯಾಗಿ ಮಾರ್ಪಡಿಸಿ ತಮ್ಮ ಮಾನವೀಯತೆಯನ್ನೂ, ಪ್ರಗತಿಪರತೆಯನ್ನೂ ಜೊತೆ ಜೊತೆಯಾಗಿಯೇ ಮೆರೆದಿದ್ದಾರೆ. +* +* +* +ಈ ಕಾದಂಬರಿಯನ್ನು ಓದುತ್ತಿದ್ದಂತೆ ನಮಗೆ ಗೊಂದಲಿಗರ ಕಥನ ಶೈಲಿ ನೆನಪಿಗೆ ಬರುತ್ತದೆ. ಮಾಸ್ತಿಯವರ ಕತೆ ಹೇಳುವ ತಂತ್ರ ಕಣ್ಣ ಮುಂದೆ ಬರುತ್ತದೆ. ಪುರಾಣ ಕಾಲದ ಹರಿಶ್ಚಂದ್ರನೂ ಹಾದು ಹೋಗುತ್ತಾನೆ.ರಮ್ಯತೆಯೊಳಗಡೆ ವಿಷಾದವನ್ನು ದಾಖಲಿಸುವ ಬೇಂದ್ರೆ ಕಾವ್ಯ ಮನಸ್ಸಿನಲ್ಲಿ ಹಾದು ಹೋಗುತ್ತದೆ.ಮೂರು ತಲೆಮಾರಿನ ಕತೆ ಹೇಳಿದ ‘ಮರಳಿ ಮಣ್ಣಿಗೆ’ ಕಾದಂಬರಿಯ ಶಿವರಾಮ ಕಾರಂತರೂ ಪ್ರತ್ಯಕ್ಷರಾಗುತ್ತಾರೆ. ತೇರನೆಳೆಯಲಾರದ ಜನರನ್ನು ಕಂಡರಿಸಿದ ಖಾಸನೀಸರೂ ನೆನಪಾಗದಿರುವುದಿಲ್ಲ…ಇಷ್ಟೆಲ್ಲಾ ನೆನಪುಗಳ ನಡುವೆಯೇ ರಾಘವೇಂದ್ರ ಪಾಟೀಲರು ‘ಧರಮನಟ್ಟಿ’ಯ ಅನನ್ಯತೆಯನ್ನು ತೇರಿನ ಮೂಲಕ ಕಾಪಾಡಿಕೊಂಡು ಬಂದಿದ್ದಾರೆ.ಮೇಲಿನ ನೆನಪುಗಳ ಮೂಲಕ ಹೊಸ ನೆನಪೊಂದನ್ನು ಸೃಜಿಸಿದ್ದಾರೆ.ಕನ್ನಡದ ಮಹತ್ವದ ಬರಹಗಾರರೆಲ್ಲರ ರೀತಿಯಿದು. ಅವರು ಪರಂಪರೆಯಿಂದ ಸಿಡಿದು ದೂರ ಸಾಗಿ ಏಕಾಂಗಿಗಳಾಗಿ ಉಳಿಯುವವರಲ್ಲ. ತಮ್ಮ ವಿಶಿಷ್ಟ ಪ್ರತಿಭೆಯಿಂದ ಪರಂಪರೆಯ ಒಳಹೊಕ್ಕು, ಅಲ್ಲೇ ಸ್ಥಗಿತವಾಗದೇ, ಹೊರಬಂದು ಪರಂಪರೆಯ ನೆನಪಲ್ಲಿ ಹೊಸತನ್ನು ಕಟ್ಟುವವರು.ರಾಘವೇಂದ್ರ ಪಾಟೀಲರು ಅಂಥ ಬರಹಗಾರರು. ತೇರು ಅದಕ್ಕೆ ಅತ್ಯುತ್ತಮ ಉದಾಹರಣೆ. +ನವ ದೆಹಲಿ – ಪುರುಷೋತ್ತಮ ಬಿಳಿಮಲೆ +೦೧-೦೧-೦೩ +ಆನಂದಕಂದ ಗ್ರಂಥಮಾಲೆ +ಮಲ್ಲಾಡಿಹಳ್ಳಿ +***** +ಮುಗಿಯಿತು +ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […] +“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ […] +– ೬ – ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_74.txt b/Kannada Sahitya/article_74.txt new file mode 100644 index 0000000000000000000000000000000000000000..3e383293fe47575876fd5fae98e0b5172cb31e81 --- /dev/null +++ b/Kannada Sahitya/article_74.txt @@ -0,0 +1,172 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು ಅವೈಚಾರಿಕವಾದದ್ದು ಎಂಬುದನ್ನು ಈ ರಾಜಿಸೂತ್ರ ಸಿದ್ಧಪಡಿಸಿತು. ಈಗ ಒಪ್ಪಿತವಾಗಿರುವ ಸೂತ್ರದಲ್ಲಿರುವ ಸಂದಿಗ್ಧಗಳನ್ನು ನೋಡಿದರಂತೂ ಈ ಅಂಶ ಮತ್ತಷ್ಟು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ವಾಸ್ತವವಾಗಿ, ಈ ಸೂತ್ರದಲ್ಲಿ ಕನ್ನಡಿಗರು ಹಾಗೂ ಕನ್ನಡೇತರರಿಬ್ಬರಿಗೂ ಅನ್ಯಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ಇಲ್ಲಿಯ ಮೊದಲ ಸಮಸ್ಯೆ ಎಂದರೆ, ಕನ್ನಡೇತರ ಭಾಷಿಕರನ್ನು ಗುರುತಿಸುವುದಾದರೂ ಹೇಗೆ ಎಂಬುದು? ಇದನ್ನೇ ಬೇರೆ ಮಾತಲ್ಲಿ ಹೇಳುವುದಾದರೆ; ಕನ್ನಡ ಮಾತನಾಡುವ ಜನರೇ ಗ್ರೇಸ್ ಅಂಕಗಳ ಸಲುವಾಗಿ ತಾವು ಕನ್ನಡತೇತರ ಭಾಷಿಕರು ಎಂದು ಹೇಳುವುದನ್ನು ತಪ್ಪಿಸುವುದಾದರೂ ಹೇಗೆ? ಈಗ ಪ್ರತಿ ದಿನವೂ ಮೇಲು ಜಾತಿಯ ಜನ ಎಸ್.ಸಿ.ಎಸ್.ಟಿ, ಬಿ.ಸಿ. ಇತ್ಯಾದಿ ಸರ್ಟಿಫಿಕೇಟ್ ಪಡೆದು ಮೀಸಲಾತಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರಲ್ಲ. ಅದಕ್ಕಿಂತ ಇದು ಹೇಗೆ ಭಿನ್ನವಾಗುತ್ತದೆ? ಎರಡನೆಯ ಸಮಸ್ಯೆ ಎಂದರೆ, ಯಾರಾದರೂ ಒಬ್ಬ ನಿರ್ಧಿಷ್ಟ ವ್ಯಕ್ತಿ ಕನ್ನಡೆತರ ಭಾಷಿಕ ಎಂದು ಪರೀಕ್ಷಕನಿಗೆ ತಿಳಿದು ಬಂದಾಗ, ಆತ ಮೊದಲು ಅವನಿಗೆ ಕಡಿಮೆ ಅಂಕ ಹಾಕಿ, ನಂತರ ಈ ಗ್ರೇಸ್ ಅಂಕಗಳನ್ನು ಸೇರಿಸಲು ಸಾಧ್ಯವಿದೆಯಲ್ಲ. ಈ ಮಾಹಿತಿಗಳನ್ನು ಸಂಪೂರ್ಣವಾಗಿ ರಹಸ್ಯವಾಗಿಡಲು ಸಾಧ್ಯವಿದೆಯೇನು? ಮೂರನೆಯದಾಗಿ, ಗ್ರೇಸ್ ಅಂಕಗಳನ್ನು ಸೇರಿಸಲಾಗಿದೆ ಎಂಬ ಅಂಶವನ್ನು ಮಾರ್ಕ್ಸ್‌ಕಾರ್ಡಿನಲ್ಲಿ ಸೂಚಿಸಿಬಿಟ್ಟರೆ ಉನ್ನತ ವಿದ್ಯಾಭ್ಯಾಸ, ಉದ್ಯೋಗಗಳಿಗೆ ಹೋಗುವ ಅಭ್ಯರ್ಥಿಗಳು ಅನೇಕ ರೀತಿಯ ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಉದಾಹರಣೆಗೆ- ಸಂಬಂಧಪಟ್ಟ ಅಧಿಕಾರಿಗಳು ಈ ಗ್ರೇಸ್ ಅಂಕಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಉಂಟು. ಜೊತೆಗೆ, ಭಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪೂರ್ವಗ್ರಹಗಳು ಹೆಚ್ಚುತ್ತಲೇ ಹೋಗುತ್ತವೆ. ಇಂಥ ಸನ್ನಿವೇಶಗಳನ್ನು ಎದುರಿಸುವ ಬದಲು ಅಲ್ಪಸಂಖ್ಯಾತರು ಈ ಅವಕಾಶವನ್ನು ಬಿಟ್ಟು ಕೊಡುವ ಸಾಧ್ಯತೆಗಳು ಹೆಚ್ಚು. +ಗ್ರೇಸ್ ಅಂಕಗಳಿಂದಾಗಿ ಕನ್ನಡ ವಿದ್ಯಾರ್ಥಿಗಳು ಕನ್ನಡೆತರ ಭಾಷಿಕರ ಜೊತೆಗೆ ಸ್ಪರ್ಧಿಸಿ ರ್‍ಯಾಂಕು, ಮತ್ತಿತರ ದರ್ಜೆಗಳನ್ನು ಗಳಿಸುವ ಸಾಧ್ಯತೆಯೇ ಇಲ್ಲವಾಗಿ, ಅವರಿಗೆ ತೊಂದರೆಯಾಗುವುದಿಲ್ಲವೇನು? ಕರ್ನಾಟಕ ಪರಿಸರದಲ್ಲಿ ಬೆಳೆದ ಕನ್ನಡೆತರ ಭಾಷಿಕರು ಕನ್ನಡಿಗರಷ್ಟೇ ಸರಳವಾಗಿ, ಸಲೀಸಾಗಿ ಕನ್ನಡವನ್ನು ಓದಿ, ಬರೆಯಲು ಸಾಧ್ಯ ಎಂದು ನನ್ನ ನಂಬಿಕೆ. ಏಕೆಂದರೆ, ಕನ್ನಡದ ಅತಿ ದೊಡ್ಡ ಸಾಹಿತಿಗಳು- ಮಾಸ್ತಿ, ಗೊರೂರು, ಬೇಂದ್ರೆ, ಚಿತ್ತಾಲ- ಬೇರೆ ಭಾಷಿಕರಾಗಿದ್ದೂ ದೊಡ್ಡ ಸಾಹಿತಿಗಳಾಗಲು ಹೇಗೆ ಸಾಧ್ಯ? ಇಲ್ಲಿಯ ಇನ್ನೊಂದು ಸಮಸ್ಯೆ ಎಂದರೆ, ತುಳು ಮತ್ತು ಕೊಂಕಣಿ ಮಾತನಾಡುವವರನ್ನು ಏನೆಂದು ಗುರುತಿಸಬೇಕು? ಕನ್ನಡೆತರ ಭಾಷಿಕರೆಂದೇ? +ಕಾಳಜಿ ಇಲ್ಲ +ಆದರೆ ಹೋರಾಟದ ಕಣದಲ್ಲಿರುವ ಕನ್ನಡ ಸಾಹಿತಿಗಳು ಈ ಸಂದಿಗ್ಧಗಳ ಬಗ್ಗೆ, ಪ್ರಶ್ನೆಗಳ ಬಗ್ಗೆ, ಅನ್ಯಾಯಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡೇ ಇಲ್ಲ. ವಿಜಯೋತ್ಸವ ಆಚರಿಸಬೇಕೆಂಬ ಡಾ|| ರಾಜ್‌ರ ಸಲಹೆಯನ್ನು ಅತ್ತಕಡೆಗೆ ತಳ್ಳಿ, ಮುಕ್ತಾಯದ ಜಾಥಾವನ್ನು ಕನ್ನಡ ಹೋರಾಟದ ಪ್ರಾರಂಭವಂದಷ್ಟೆ ಪರಿಗಣಿಸಬೇಕೆಂದು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸತ್ತ ಮುಸ್ಲಿಮರ ಬಗೆಗಾಗಲೀ, ಕೋಲಾರದಲ್ಲಿ ಸತ್ತ ತಮಿಳರ ಬಗೆಗಾಗಲಿ ಈ ಸಾಹಿತಿಗಳಿಗೆ ಕಿಂಚಿತ್ತು ಕಾಳಜಿ ಇಲ್ಲ. “ಕನ್ನಡದ ನೆಲದಲ್ಲಿದ್ದೂ, ಕನ್ನಡದ ಅನ್ನ ತಿಂದೂ ಕನ್ನಡದ ವಿರುದ್ಧ ಚಳವಳಿ ಮಾಡಲು ಕನ್ನಡೆತರರಿಗೆಷ್ಟು ಧೈರ್‍ಯ” -ಇದು ನಮ್ಮ ಸಾಹಿತಿಗಳ ಮತ್ತು ಅವರ ಹಿಂಬಾಲಕರ ಪ್ರಶ್ನೆ. “ಈ ಜನ ಸಮಯ ಸಾಧಕ ರಾಜಕಾರಣಿಗಳಿಂದಾಗಿ ದಾರಿ ತಪ್ಪದೆ, ಮುಖ್ಯ ಧಾರೆಯನ್ನು ಸೇರಬೇಕು” -ಇದು ಅವರ ಪರಿಹಾರ. ರಾಜ್‌ಕುಮಾರ್ ಅಭಿಮಾನಿಯೂ, ಗೋಕಾಕ್ ಪರ ವ್ಯಕ್ತಿಯೂ ಆದ ಅರಸಪ್ಪನವರ ಸಾವಿನ ಬಗೆಗೆ ಮಾತ್ರ ಗಾಢ ಶೋಕವನ್ನು ಸಾಹಿತಿಗಳು ವ್ಯಕ್ತಪಡಿಸುತ್ತಾರೆ. ಈ ಬಡ ವ್ಯಕ್ತಿಯ ಕುಟುಂಬಕ್ಕೆ ಧನ ಸಹಾಯ ಮಾಡಿ ಎಂದು ಮನವಿ ಕೂಡಾ ಮಾಡುತ್ತಾರೆ ಹಾಗಾದರೆ, ಚಿತ್ರದುರ್ಗ, ಕೋಲಾರಗಳಲ್ಲಿ ಸತ್ತ ಜನ ಮನುಷ್ಯರಲ್ಲವೇನು? ಬಡವರಲ್ಲವೇನು? +ಆದರೆ, ಕೆ.ಜಿ.ಎಫ್ ಚಳವಳಿ, ಈಗಲೂ ಮುಂದುವರಿಯುತ್ತಿರುವ ಉತ್ತರ ಕರ್ನಾಟಕದ ಮರಾಠಿ ಭಾಷಿಕರ ಚಳವಳಿ. ಮುಕ್ತಾಯಜಾಥಾದ ಅದ್ಭುತ ಯಶಸ್ಸು, ಇವೆಲ್ಲಾ ಒಂದು ಮಹತ್ವದ ಸಂಗತಿಗಳನ್ನು ಸೂಚಿಸುತ್ತವೆ. ಈ ರೀತಿಯ ತಾತ್ವಿಕ ಧೋರಣೆಗಳು, ಇದರ ಪರಿಣಾಮವಾದ ಸಾಮಾಜಿಕ ಸಮಸ್ಯೆಗಳು, ಭಾಷಿಕ ಘರ್ಷಣೆಗಳು ಕರ್ನಾಟಕದಲ್ಲಿ ಇನ್ನೂ ದೀರ್ಘ ಪಾತ್ರವನ್ನು ವಹಿಸುತ್ತಲೇ ಹೋಗುತ್ತದೆ ಎಂಬುದು ಇದರಿಂದ ಸ್ಪಷ್ಟ. +ಇವೆಲ್ಲಾ ಮತ್ತೆ ನಾನು ಲೇಖನಿಯನ್ನೆತ್ತಿಕೊಳ್ಳಲು ಕಾರಣಗಳು. ಗೆಳೆಯರು ಬರೆಯಲು ಒತ್ತಾಯಿಸುತ್ತಲೇ ಇದ್ದರು ನಾನು ಹಿಂಜರಿಯುತ್ತಲೇ ಇದ್ದೆ. ಇದೊಂದು ಅತ್ಯಂತ ನೋವಿನ, ಒಂಟಿತನದ, ಕೆರಳಿಸುವ ಕೆಲಸ ಏಕೆಂದರೆ, ನನ್ನ ಮೊದಲ ಲೇಖನ “ಭಾಷೆ ಮತ್ತು ಪ್ರಜಾಪ್ರಭುತ್ವ”ದಿಂದಾಗಿ ನಾನು ಬಯಸದ ಕುಪ್ರಸಿದ್ಧಿ ಕರ್ನಾಟಕ ನಗರ ಪ್ರದೇಶಗಳಲ್ಲಿ ಬಂತು. “ಕನ್ನಡದ ಶತ್ರು”, ಇಂಗ್ಲಿಷ್ ರಕ್ಷಕ”, “ಕನ್ನಡ ವಿರೋಧಿ” ಹೀಗೆ ಎಷ್ಟೊಂದು ಹೆಸರುಗಳು! ಈ ಎಲ್ಲವುಗಳು ಪೋಸ್ಟರು, ಘೋಷಣೆ, ಭಾಷಣ, ಪ್ರದರ್ಶನ, ಬೇನಾಮಿ ಪತ್ರಗಳ ಮೂಲಕ ನನ್ನ ವಿರುದ್ಧ ನಡೆಯುತ್ತಿರುವ ದ್ವೇಷದ ಪ್ರಚಾರಕ್ಕೆ ತಳಹದಿಯನ್ನು ಒದಗಿಸಿದೆ. ನನ್ನ ಲೇಖನಗಳನ್ನು ಪ್ರಕಟಿಸಿದ ಪತ್ರಿಕೆಗಳನ್ನು ಮೊದಲು ಬುದ್ಧಿಜೀವಿಗಳು ಸಾಂಕೇತಿಕವಾಗಿ ಸುಟ್ಟರು. ನಂತರ, ಗೋಕಾಕ್ ಪರ ಜನರು ಹಂಚಿಕೆ ವಾಹನಗಳನ್ನು ಹಿಡಿದು ಸಾವಿರಾರು ಪತ್ರಿಕೆಗಳನ್ನು ಸುಟ್ಟರು. ನನ್ನ ಗೆಳೆಯರೊಬ್ಬರು ಹೇಳಿದ ಪ್ರಕಾರ, ಶೋಷಿತರ ಭಾಷೆಯಾದ ಕನ್ನಡದ ವಿರುದ್ಧವಾಗಿ ಶೋಷಕರ ಭಾಷೆಯಾದ ಇಂಗ್ಲಿಷನ್ನು ನಾನು ಸಮರ್ಥಿಸಿದೆನಂತೆ! ಇದರ ಜೊತೆಗೆ ಇನ್ನೊಂದು ಮಾತು ಕೇಳಿ ಬಂತು. ಅಷ್ಟೊಂದು ಉದಾರವಲ್ಲದ ಈ ಟೀಕಾಕಾರರ ಪ್ರಕಾರ, ನನ್ನ ಮಾತೃ ಭಾಷೆ ತೆಲುಗು; ಆದ್ದರಿಂದ ಕನ್ನಡ ವಿರುದ್ಧ ಬರೆದೆನಂತೆ. ಕನ್ನಡ ಸಾಹಿತ್ಯಿಕ ಬುದ್ಧಿಜೀವಿಗಳು ಬೈಗುಳ, ಅನೈಚಾರಿಕ ಭಾವುಕತೆ, ಬೆದರಿಕೆಗಳ ಮಟ್ಟದಿಂದ ವೈಚಾರಿಕ ನೆಲೆಗೆ ಇಳಿಯಲು ನಿರಾಕರಿಸಿಬಿಟ್ಟರು. (ಇದಕ್ಕೆ ಎರಡು ಅಪವಾದಗಳಿವೆ.) ಹೀಗಾಗಿ, ಇಂಥ ಸಾಮಾಜಿಕ ವಿದ್ವೇಷಕ್ಕೆ ಪಾತ್ರವಾದ ನನ್ನ ವೈಯಕ್ತಿಕ ನೋವು ಏನೇ ಇರಲಿ, ಈ ಏಕಪಕ್ಷೀಯ ವಾದವನ್ನು ಮುಂದುವರಿಸಲು ನಾನು ನಿರ್ಧರಿಸಿದ್ದೇನೆ. ಏಕೆಂದರೆ, ತಿಳಿಯಾದ ವೈಚಾರಿಕ ವಾತಾವರಣದ ನಿರ್ಮಾಣಕ್ಕೆ ಇರುವ ಮಾರ್ಗ ಇದೊಂದೆ. ಬಹುಶಃ ಕನ್ನಡ ಸಾಹಿತಿಗಳು ಎಂದಾದರೊಂದು ದಿನ ಸಾಕ್ಷ್ಯಸತ್ಯಗಳನ್ನು ಆಧರಿಸಿದ ಪ್ರತಿವಾದವೊಂದನ್ನು ಮಂಡಿಸಿಯಾರು. +ಇದರ ಜೊತೆಗೆ, ಈ ಲೇಖನದ ಹಿಂದಿನ ಇನ್ನೊಂದು ಪ್ರೇರಣೆಯನ್ನೂ ಹೇಳಬೇಕಾಗಿದೆ. ನನ್ನ ವಿಚಾರಗಳನ್ನು ಒಪ್ಪುವ ಜನರಲ್ಲಿ ಕೂಡಾ ಕೆಲವು ತಪ್ಪು ಕಲ್ಪನೆಗಳು ಹುಟ್ಟಿವೆ. ನನ್ನ ಮೊದಲಿನ ಲೇಖನದಿಂದಾಗಿ ಉಂಟಾದ ಈ ತಪ್ಪು ತಿಳುವಳಿಕೆಗಳನ್ನ ಹೋಗಲಾಡಿಸುವುದು ಇಲ್ಲಿಯ ಉದ್ದೇಶ. ಅವುಗಳು ಹೀಗಿವೆ: ಒಂದು, ನನ್ನ ಲೇಖನ ಬರೀ ಭಾಷಿಕ ಮತ್ತು ಮತೀಯ ಅಲ್ಪ ಸಂಖ್ಯಾತರ ಸಮರ್ಥನೆಯಾಗಿತ್ತು ಎನ್ನುವುದು. ಎರಡನೆಯದಾಗಿ: ನನಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯಲ್ಲಿ ಮತ್ತು ಕನ್ನಡಿಗರ ಪರವಾಗಿ ಹೋರಾಡಲು ಆಸಕ್ತಿ ಇಲ್ಲ ಎಂಬುದು. ಮೂರನೆಯ ಸಂಗತಿಯೆಂದರೆ: ನಾನು ನಿಜವಾಗಿಯೂ ಇಂಗ್ಲಿಷನ್ನು ಸಮರ್ಥಿಸಿದೆ ಎಂಬ ಗ್ರಹಿಕೆ. ನನ್ನ ಲೇಖನದ ರೂಪವೇ ಈ ಬಗೆಯ ತಪ್ಪು ತಿಳುವಳಿಕೆಗಳಿಗೆ ಕಾರಣವಾಯ್ತು. ಏಕೆಂದರೆ, ಇಂಗ್ಲಿಷ್ ಶಿಕ್ಷಿತ ಬುದ್ಧಿಜೀವಿವರ್ಗಕ್ಕೆ ಸೇರಿದ ನನಗೆ ಕನ್ನಡ ಬೌದ್ಧಿಕ ಪರಂಪರೆಯ ಶೈಲಿ, ತಾತ್ವಿಕತೆ, ಪ್ರಶ್ನಾವಿಧಾನಗಳ ಪೂರ್ಣ ಅರಿವಿರಲಿಲ್ಲ. ಅವಕ್ಕೆ ನಾನು ಸ್ಪಂದಿಸಿರಲೂ ಇಲ್ಲ. ಹೀಗಾಗಿ, ತಪ್ಪು ಕಲ್ಪನೆಗಳು ಹುಟ್ಟಿಕೊಂಡವು. ಈ ಕೊರತೆಯನ್ನ ಈ ಲೇಖನದಲ್ಲಿ ತುಂಬಲು ಯತ್ನಿಸಿದ್ದೇನೆ. +ಈ ಲೇಖನದ ಎರಡನೇ ಭಾಗದಲ್ಲಿ ಈ ಚಳವಳಿ, ಇದರ ಸೈದ್ಧಾಂತಿಕ ನೆಲೆಗಟ್ಟು, ಧೋರಣೆ ಇತ್ಯಾದಿಗಳು ಕನ್ನಡದ ದುಡಿಯುವ ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. (ಇದು ಕನ್ನಡೇತರ ಭಾಷಿಕರ ಮಟ್ಟಿಗೂ ನಿಜ) ಎಂಬುದನ್ನ ಮನದಟ್ಟು ಮಾಡಿಸಲು ಯತ್ನಿಸಿದ್ದೇನೆ. ಈ ಚಳವಳಿ ಕನ್ನಡ ಕಾರ್ಮಿಕ, ಕನ್ನಡ ಸಣ್ಣ ರೈತ, ಕೃಷಿ, ಕಾರ್ಮಿಕರ ಪರವಾಗಿರದೆ ಶೋಷಕ ವರ್ಗಗಳ ಪರವಾಗಿದ್ದು, ಬಂಡವಾಳಿಗರ, ಶ್ರೀಮಂತ ರೈತರ, ಭೂಮಾಲೀಕರ ಹಿತಾಸಕ್ತಿಗಳನ್ನ ಕಾಯುವಂಥದು ಎಂಬ ಅಂಶವನ್ನು ವಿವರಿಸಲು ಯತ್ನಿಸಿದ್ದೇನೆ. ಆದರೆ, ಕನ್ನಡ ಪರವಾದ, ಕನ್ನಡಿಗರ ಹಕ್ಕುಗಳ ಪರವಾದ ಚಳವಳಿಯೊಂದು ದುಡಿಯುವ ಕನ್ನಡ ಜನತೆಯ ವಿರುದ್ಧವಾಗಿ ಇರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಇಲ್ಲಿ ಏಳುತ್ತಿದೆ. ಈ ವಿರೋಧಾಭಾಸದ ವಿಶ್ಲೇಷಣೆಯನ್ನೆ ಪ್ರಸ್ತುತ ಲೇಖನದಲ್ಲಿ ಮಾಡಿದ್ದೇನೆ. +ನನ್ನ ಬಗೆಗಿನ ವೈಯಕ್ತಿಕ ವಿವರಣೆಯಿಂದಲೇ ಈ ಕೆಲಸವನ್ನು ಪ್ರಾರಂಭಿಸಬಹುದು. ನನ್ನ ತಾಯಿ ಭಾಷೆ ತೆಲುಗು, ನನ್ನ ಹಿರೀಕರು ಹಳೆಯ ಬಳ್ಳಾರಿ ಜಿಲ್ಲೆಯಿಂದ ಬಂದವರು ಎಂಬುದು ನಿಜ. ಶತಮಾನಗಳಿಂದ ನಾವು ಕರ್ನಾಟಕದಲ್ಲೇ ಬಾಳಿದವರು. ನಮ್ಮ ಮುತ್ತಜ್ಜ ಕೆ. ನೆಟ್ಟಕಲ್ಲಪ್ಪ ಬಳ್ಳಾರಿಯಿಂದ ಬೆಂಗಳೂರಿಗೆ ಬಂದರು. ಅಲ್ಲಿಂದಾಚೆಗೆ ನಮ್ಮ ಮನೆತನ ಬೆಂಗಳೂರಲ್ಲೇ ಬಾಳುತ್ತಿದೆ. ನಾನಂತೂ ಹುಟ್ಟಿದ್ದು, ಬೆಳೆದದ್ದು ಬೆಂಗಳೂರಲ್ಲಿಯೇ. ದೆಹಲಿಯಲ್ಲಿ ಓದುತ್ತಿದ್ದಾಗಿನ ಮೂರು ವರ್ಷ ಬಿಟ್ಟರೆ ಜೀವನದ ಈವರೆಗಿನ ಎಲ್ಲ ವರ್ಷಗಳನ್ನ ಇಲ್ಲೇ ಕಳೆದವನು. ನನ್ನ ಹೃದಯದಲ್ಲಿ ತೆಲುಗಿಗೊಂದು ವಿಶೇಷ ಸ್ಥಾನವಿದೆ. ಅದು ನಾನು ಮನೆ ಮಂದಿಯೊಂದಿಗೆ, ನೆಂಟರೊಂದಿಗೆ, ಕೆಲವು ಗೆಳೆಯರೊಂದಿಗೆ ಆಡುವ ಭಾಷೆ. ಇಷ್ಟನ್ನು ಬಿಟ್ಟರೆ ನನ್ನ ತೆಲುಗು ತೀರಾ ಬಡವಾದದ್ದೆ. ಕೊಂಚ ಮಾತಾಡಬಲ್ಲೆನೇ ಹೊರತು, ತೆಲುಗಿನಲ್ಲಿ ಓದಲಾರೆ, ಬರೆಯಲಾರೆ. ತೆಲುಗು ಸಾಹಿತ್ಯ, ಸಂಸ್ಕೃತಿಯ ಬಗೆಗಾಗಲೀ, ಆಂಧ್ರ ಸಮಾಜದ ಬಗೆಗಾಗಲೀ ನನಗೆ ಏನೂ ತಿಳಿಯದು. ಕನ್ನಡ ಪರಿಸರದಲ್ಲೇ ಬೆಳೆದದ್ದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತೇನೆ, ಓದಬಲ್ಲೆ. ಅಷ್ಟಿಷ್ಟು ಬರೆಯಬಲ್ಲೆ ಕೂಡಾ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನಾನು ಈಗ ಇಲ್ಲವಾಗಿರುವ ಸಾಮ್ರಾಜ್ಯಶಾಹಿಯ ಮೌಲ್ಯಗಳನ್ನು ಕಲಿತುಕೊಂಡೆ. ಇಂಗ್ಲಿಷ್ ಮಾತನಾಡುವ ಪ್ರತಿಷ್ಠಿತ ವರ್ಗದ ಸದಸ್ಯನಾಗಿಯೇ ಬೆಳೆದೆ. ಪಶ್ಚಿಮವನ್ನು ಕಂಡರೂ ಮೆಚ್ಚಿಗೆ ತುಂಬಿದ ಅಪಾರ ವಿಸ್ಮಯ. ಭಾರತೀಯ ಸಂಗತಿಗಳ ಬಗೆಗೆ ಅಜ್ಞಾನವಿತ್ತು. ಹೀಗೆ ಬೆಳೆದ ನಾನು ಈ ಮೌಲ್ಯಗಳನ್ನ ಕ್ರಮೇಣ ಬಿಟ್ಟುಕೊಡಬೇಕಾಯ್ತು. ಈ ಪ್ರಕ್ರಿಯೆ ಪ್ರಾರಂಭವಾದದ್ದು ಹೈಸ್ಕೂಲಿನಲ್ಲಿ. ರಾಷ್ಟ್ರೀಯ ರಾಜಕಾರಣ, ಅರ್ಥಶಾಸ್ತ್ರದ ಪರಿಚಯ, ನಿರ್ಗತಿಕರ ಬಗೆಗಿನ ಕಾಳಜಿ ಬೆಳೆಯುವುದರೊಂದಿಗೆ ಮೊದಲಿನ ಮೌಲ್ಯಗಳನ್ನು ತ್ಯಜಿಸಲಾರಂಭಿಸಿದೆ. ಈ ಆಸಕ್ತಿ ರಾಷ್ಟ್ರೀಯ ಚಳವಳಿ ಮತ್ತು ಅದರ ಮಹಾನ್ ನಾಯಕರ ವ್ಯಕ್ತಿತ್ವದ ಕಡೆಗೆ ಕರೆದೊಯ್ದಿತು. ಮೊದಲು ಜವಹಾರ್‌ಲಾಲ್ ನೆಹರು ನಂತರ ಗಾಂಧೀಜಿ, ಮತ್ತು ರಾಜಾಜಿ. ಆಮೇಲೆ ದಾದಾಬಾಯಿ ನವರೋಜಿ, ಗೋಖಲೆ, ಸುರೇಂದ್ರನಾಥ ಬ್ಯಾನರ್ಜಿ- ಹೀಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯ ಬಗೆಗೂ ಆಸಕ್ತಿ ಬೆಳೆಯಿತು. ಭಾರತೀಯಾಂಗ್ಲ ಸಾಹಿತ್ಯದ ಆರ್.ಕೆ. ನಾರಾಯಣ್, ರಾಜಾರಾವ್, ನಿಸ್ಸೀಮ್, ಎಜೇಕಿಲ್ ಇತ್ಯಾದಿ ಲೇಖಕರನ್ನು ಓದಿದೆ. ನಂತರ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಪ್ರಾಂತೀಯ ಭಾಷಾ ಸಾಹಿತ್ಯಗಳ ಓದೂ ನಡೆಯಿತು. ಇದರ ಜೊತೆಗೆ ಭಾರತೀಯ ಸಂಗೀತ, ಕಲೆ, ಚಲನಚಿತ್ರಗಳ ಪರಿಚಯವನ್ನು ಮಾಡಿಕೊಂಡೆ. +ನನ್ನ ದೆಹಲಿ ಶಿಕ್ಷಣದ ನಂತರ ಬೆಂಗಳೂರಿಗೆ ಬಂದಮೇಲೆ ಕನ್ನಡ ಸಾಹಿತ್ಯಕ ಸಂಸ್ಕೃತಿಯನ್ನು ಪರಿಚಯಮಾಡಿಕೊಳ್ಳುವ, ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಕನ್ನಡ ಸಿನಿಮಾ, ನಾಟಕ ಇತ್ಯಾದಿ ನೋಡಿದೆ. ಇಂಗ್ಲಿಷ್ ಅನುವಾದಗಳ ಅಧ್ಯಯನ, ವಿಚಾರಸಂಕಿರಣಗಳಿಗೆ ಹೋಗುವುದು- ಇವೂ ಸಾಹುತ್ತಾ ಬಂದವು. ನನ್ನ ಸ್ವಂತ ಶಕ್ತಿಗೆ ಸಾಧ್ಯವಾದ ಮಟ್ಟಿಗೆ ಮತ್ತು ನನ್ನ ನೇತೃತ್ವದ ವೃತ್ತಪತ್ರಿಕಾ ಸಂಸ್ಥೆಯ ಮೂಲಕ ಕನ್ನಡ ಸಾಹಿತ್ಯಕ ಸಂಸ್ಕೃತಿಯ ಅಭಿವೃದ್ಧಿಗೆ ಅನೇಕ ವಿಧಗಳಲ್ಲಿ ನೆರವು ನೀಡಲು ಯತ್ನಿಸಿದ್ದೇನೆ. ಉದಾಹರಣೆಗೆ ಕನ್ನಡದ ಸಾಕಷ್ಟು ಸಾಹಿತ್ಯಕ ಪತ್ರಿಕೆಗಳು ಜಾಹಿರಾತುಗಳ ಮೂಲಕವಾಗಿ ನಮ್ಮ ಸಂಸ್ಥೆಯಿಂದ ಧನ ಬೆಂಬಲ ಪಡೆದಿವೆ. ಜೊತೆಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅನೇಕ ಜನ ಕನ್ನಡ ಸಾಹಿತಿಗಳ ಕೃತಿಗಳನ್ನು ಭಾಷಾಂತರಿಸಿ ಪ್ರಕಟಿಸಲಾಯಿತು. ಕನ್ನಡ-ಸಂಸ್ಕೃತ ಭಾಷಾ ವಿವಾದದ ಹೊತ್ತಿನಲ್ಲಿ ಡೆಕ್ಕನ್ ಹೆರಾಲ್ಡ್‌ನ ಸಂಪಾದಕನಾಗಿ, ಕಡೇಪಕ್ಷ ಮೂರು ಸಾರಿ, ಸಂಸ್ಕೃತವನ್ನು ಶಾಲಾಹಂತದಲ್ಲಿ ಪ್ರಥಮ ಭಾಷಾ ಪಟ್ಟಿಯಲ್ಲಿ ಸೇರಿಸುವುದನ್ನು ವಿರೋಧಿಸಿದೆ. ಒಂದು ದಿನ, ಫೊಫೆಸರ್ ಚಿದಾನಂದ ಮೂರ್ತಿಯವರು ಫೋನಿನಲ್ಲಿ ನನ್ನನ್ನು ಗೋಕಾಕ್ ಸಮಿತಿಯ ಮುಂದೆ ಸಾಕ್ಷ್ಯ ನೀಡುವಂತೆ ಕೇಳಿದರು. ಇದಕ್ಕೆ ಕಾರಣ ಕನ್ನಡ ಪರವಾದ, ಸಂಸ್ಕೃತ ವಿರೋಧಿಗಳಾದ ಜನ ಸಾಕ್ಷ್ಯ ನೀಡಲು ತೀರಾ ಕಡಿಮೆ ಹೋಗುತ್ತಿದ್ದಾರೆ ಎಂಬುದು. ಆ ಸಮಿತಿಯ ಮುಂದೆ ಶಾಲಾ ಹಂತದಲ್ಲಿ ಸಂಸ್ಕೃತದ ವಿರುದ್ಧವಾಗಿ ಸಾಕ್ಷ್ಯ ನೀಡಿದ್ದಾಯ್ತು. ಇಷ್ಟಾದರೂ ಸಮಿತಿಯವರು ಕೇಳಿದ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರ ನೀಡಿದ್ದೆ : ಕನ್ನಡವೊಂದನ್ನೆ ಪ್ರಥಮ ಭಾಷೆಯನ್ನಾಗಿ ಇಡುವುದು ಭಾಷಿಕ ಅಲ್ಪ ಸಂಖ್ಯಾತರ ಹಿತಕ್ಕೆ ವಿರೋಧವಾದದ್ದು. ಆದ್ದರಿಂದ ಅಪೇಕ್ಷಣೀಯವಲ್ಲ ಎಂದು ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯಬೇಕೆ ಎಂಬ ಪ್ರಶ್ನೆಗೆ ಉತ್ತರ ಅದು ಪರಸ್ಪರ ತಿಳುವಳಿಕೆಯ ಮೂಲಕ ಸಾಧ್ಯವಾಗಬೇಕೆ ಹೊರತು ಬಲವಂತದಿಂದಲ್ಲ ಎಂದು. ಗೋಕಾಕ್ ಸಮಿತು ವರದಿಯನ್ನೊಪ್ಪಿಸಿದ ಮೇಲೆ ಸರ್ಕಾರ ಅದನ್ನು ಗುಟ್ಟಾಗಿಟ್ಟಿತ್ತು. ಮೊದಲಿಗೆ ಈ ವರದಿಯ ಕೆಲವು ಮೂಲವಿವರಗಳನ್ನು ಪ್ರಕಟಿಸಿದ್ದು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳೆ. ಸಂಸ್ಕೃತವನ್ನು ಪ್ರಥಮ ಭಾಷೆ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದಮೇಲೆ, ನಾನು ಈ ವರದಿಯ ಜಾರಿಗಾಗಿ ಸಂಪಾದಕೀಯವೊಂದರ ಮೂಲಕ ಒತ್ತಾಯಿಸಿದೆ. ಸರ್ಕಾರ ವರದಿಯನ್ನು ಮೂಲೆಗೆ ಹಾಕಿರುವ ಬಗ್ಗೆ ಟೀಕಿಸಿದೆ. ವರದಿಯನ್ನು ಒಪ್ಪಿಕೊಂಡಾದಮೇಲೂ ಸಂಪಾದಕೀಯದಲ್ಲಿ ಅದನ್ನು ಸ್ವಾಗತಿಸಿದೆ. +ಆದರೆ, ಕನ್ನಡವೊಂದನ್ನೇ ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂತು. ಆಗ ಇನ್ನೊಂದು ಸಂಪಾದಕೀಯ ಬರೆದು ಎಲ್ಲಾ ಮಾತೃ ಭಾಷೆಗಳಿಗೂ ಪ್ರಥಮಭಾಷೆಯ ಸ್ಥಾನ ಇರಬೇಕು; ಭಾಷಿಕ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಗೋಕಾಕ್‌ವರದಿಯಲ್ಲಿ ತಿದ್ದುಪಡಿಗಳಾಗಬೇಕು ಎಂದು ವಾದಿಸಿದೆ. ಕಡೆಗೆ, ಈ ವರದಿಯ ಜಾರಿಗಾಗಿ ಒಂದು ಪೂರ್ಣ ಪ್ರಮಾಣದ ಭಾಷಾ ದುರಭಿಮಾನಿ ಚಳವಳಿ ಶುರುವಾದಾಗ ವರದಿಯಲ್ಲಿಯ ಈ ಭಾಗ, ಜೊತೆಗೆ ಇದನ್ನು ಆಧರಿಸಿದ ಚಳವಳಿ ಎರಡನ್ನೂ ಮತ್ತೆ ಟೀಕಿಸಿದೆ. ಬಹುಸಂಖ್ಯಾತರ ಜನತೆ ರಾಜಕಾರಣದಲ್ಲಿ ಭಾಗಿಯಾಗಲು, ಸರ್ಕಾರವನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕೆಂದು ಅನೇಕ ಸಂಪಾದಕೀಯಗಳಲ್ಲಿ ಪ್ರತಿಪಾದಿಸಿದ್ದೇನೆ. ಜೊತೆಗೆ ಈ ಭಾಷಾ ಸಮಸ್ಯೆಯ ಸಾಮಾಜಿಕ ಆಯಾಮದ ಕಡೆಗೆ ಒತ್ತು ಯಾವಾಗಲೂ ಇದ್ದೇ ಇದೆ. ಕನ್ನಡದಿಂದ ಮಾತ್ರವೇ ಬಹುಸಂಖ್ಯಾತ ಅನಕ್ಷರಸ್ಥ ಕನ್ನಡ ಜನಸ್ತೋಮ ವಿದ್ಯಾವಂತರಾಗಲು ಸಾಧ್ಯ ಎನ್ನುವುದು ನನ್ನ ನಿಲುವು. ಇಲ್ಲಿಯ ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನು ಗಮನಿಸಬೇಕಾಗಿದೆ. ನಮ್ಮ ತತ್‌ಕ್ಷಣದ ಜ್ವಲಂತ ಸಮಸ್ಯೆಯಾದ ಅನಕ್ಷರತೆಯ ಬಗೆಗೆ ತಮ್ಮ ಕಾಳಜಿಯನ್ನು ಕನ್ನಡ ಸಾಹಿತಿಗಳು ಈ ಭಾಷಾ ಚರ್ಚೆಯಲ್ಲಿ ಎಲ್ಲೂ ಪ್ರಕಟಿಸಿಲ್ಲ. +ಈ ವೃತ್ತಪತ್ರಿಕಾ ಸಂಸ್ಥೆಯ ನೇತೃತ್ವವನ್ನು ನಾನು ವಹಿಸಿಕೊಂಡಾಗಿನಿಂದ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತಂತೆ “ಪ್ರಜಾವಾಣಿ” “ಡೆಕ್ಕನ್ ಹೆರಾಲ್ಡ್” ಪತ್ರಿಕೆಗಳೆರಡೂ ದುಡಿಯುವ ಜನತೆಯ ಪರವಾದ ನಿಲುವನ್ನೇ ತಳೆಯಲು ಪ್ರಯತ್ನಿಸಿವೆ. ಭಾಷೆಯನ್ನು ಮುಖ್ಯವಾಗಿ ಪರಿಗಣಿಸದೆ, ಶೋಷಕರ, ದಮನಕಾರರ ವಿರುದ್ಧವಾಗಿ ತನ್ನ ಶೋಧನಾತ್ಮಕ ವರದಿಗಳ, ಸಂಪಾದಕೀಯಗಳ, ಲೇಖನಗಳ ಮೂಲಕ ಕರ್ನಾಟಕದ ದುಡಿಯುವ ಜನತೆಯ ಪರವಾಗಿಯೇ ನಿಲ್ಲಲು ಯತ್ನಿಸಲಾಗಿದೆ. ನರಗುಂದದ ರೈತ ಚಳುವಳಿಯಾಗಲಿ, ಅಥವ ಉಳಿದ ಕಡೆಗಳಲ್ಲಿ ಸಂಭವಿಸಿದ ಕಾರ್ಮಿಕ ಹೋರಾಟಗಳು, ದಲಿತರ ಮೇಲಿನ ಶೋಷಣೆ, ದಬ್ಬಾಳಿಕೆ, ಪೋಲೀಸ್ ಅತ್ಯಾಚಾರ, ನಗರದ ಕೊಂಪೆ ನಿವಾಸಿಗಳ ಒಕ್ಕಲೆಬ್ಬಿಸುವಿಕೆ, ಕಳ್ಳಬಟ್ಟಿ, ಸರ್ಕಸ್ ದುರಂತಗಳ ಸಾಮಾಜಿಕ ಆಯಾಮಗಳು- ಹೀಗೆ ಅನೇಕ ಘಟನೆಗಳ ಮೇಲೆ ನಾವು ತಳೆದ ನಿಲುವನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಜೊತೆಗೆ, ಉಳಿದ ರಾಜ್ಯಗಳಲ್ಲಿ ಕನ್ನಡ ಭಾಷಿಕರ ಮೇಲಿನ ದಮನಗಳನ್ನು ಬೆಳಕಿಗೆ ತರಲಾಗಿದೆ. ಉದಾ.ಗೆ ಫೆಬ್ರವರಿ ೧೮, ೧೯೮೨ “ಪ್ರಜಾವಾಣಿ”, ಡೆಕ್ಕನ್ ಹೆರಾಲ್ಡ್‌ಗಳಲ್ಲಿ ಮೊದಲ ಪುಟದಲ್ಲೇ ಬಂದ ತಮಿಳುನಾಡು ಧರ್ಮಪುರಿಯಲ್ಲಿಯ ಕನ್ನಡ ರೈತರ ಮೇಲಿನ ಹಿಂಸೆಯ ವರದಿ. ಸುಮಾರು ೪೦ ವರ್ಷಗಳ ಹಿಂದೆ ತಮಿಳುನಾಡಿಗೆ ತೆರಳಿದ್ದ ಈ ರೈತರನ್ನು ಅಲ್ಲಿಯ ಭೂ ಮಾಲೀಕ-ಪೋಲೀಸ್-ಗೂಂಡಾಗಳ ಒಕ್ಕೂಟ ಹಿಂಸೆ, ಅತ್ಯಾಚಾರಗಳ ಮೂಲಕ ತುಳಿದು ಹಾಕಿತ್ತು. ಅವರಿಗೆ ಮತದಾನದ ಹಕ್ಕು ಮತ್ತು ರೇಷನ್ ಕಾರ್ಡ್‌ಗಳನ್ನು ಕೂಡಾ ಇಲ್ಲದಂತೆ ಮಾಡಿತ್ತು. ( ಈ ನಿರ್ಧಿಷ್ಟ ಅಂಶವನ್ನಂತೂ ಈ ಆತ್ಮರತ ಕನ್ನಡ ಸಾಹಿತಿ ವರ್ಗ ಪೂರಾ ಕಡೆಗಣಿಸಿ ಬಿಟ್ಟಿದೆ. ಅದು ತನಗಿಂತ ಬಡವರಾದ, ಹೆಚ್ಚು ತುಳಿತಕ್ಕೆ ಒಳಗಾಗಿರುವ ಜನತೆಯನ್ನು ಕುರಿತು ತಲೆಕೆಡಿಸಿಕೊಳ್ಳುವುದೇ ಕಡಿಮೆ) ರಾಜಕಾರಣದ ಬಗೆಗೂ ನಮ್ಮ ಪತ್ರಿಕೆಗಳ ನಿಲುವು ಈ ರೀತಿಯಾಗಿಯೇ ಇದೆ. ಗುಂಡೂರಾಯರ ನಕಲಿತನ, ಶುದ್ಧ ಅದ್ಯಕ್ಷತೆಗಳನ್ನು, ಖಾನರ ದುಸ್ಸಾಹಸಗಳನ್ನು, ಆರ್‍ಮುಗಂರ ಬ್ರಾಷ್ಟಾಚಾರವನ್ನು, ಡಾ|| ವಿಶ್ವನಾಥಯ್ಯನವರ ಜಾತೀಯತೆಯನ್ನು ಬಯಲಿಗೆಳೆಯುವುದರಲ್ಲಿ ಮೇಲಿನದೇ ರೀತಿಯ ನಿಲುವನ್ನು ತಳೆಯಲಾಗಿದೆ, ಇದು ಕರ್ನಾಟಕದ ಮಟ್ಟಿಗಾಯಿತು, ರಾಷ್ಟ್ರಮಟ್ಟದಲ್ಲೂ ಕೂಡಾ ಇಂದಿರಾಗಾಂಧಿಯವರ ಸರ್ವಾಧಿಕಾರತ್ವವನ್ನು, ಕಾಂಗ್ರೆಸ್ (ಐ) ಚೂರು ಚೂರಾಗುತ್ತಿರುವುದನ್ನು ಎತ್ತಿತೋರಿಸಿದೆ. ಮಧ್ಯೆ ವಾದೀ ವಿರೋಧ ಪಕ್ಷಗಳ ಬೇಜಾವಬ್ದಾರಿತನ, ಬಿ.ಜೆ.ಪಿ, ಆರ್.ಎಸ್.ಎಸ್., ಮುಂತಾದ ಹಿಂದೂ ಮತಾಂಧ ರಾಜಕೀಯ ಪಕ್ಷಗಳ ಬಗೆಗೆ, ಮುಸ್ಲಿಂ ಮತ್ತು ಸಿಖ್ ಮತಾಂಧ ಪಕ್ಷಗಳ ಬಗೆಗೆ, ಉತ್ತರ ಭಾರತದಲ್ಲಿ ರಾಜಕಾರಣಿ ಮತ್ತು ಢಕಾಯಿತರ ನಡುವೆ ಇರುವ ಸಖ್ಯದ ಬಗೆಗೆ- ಹೀಗೆ ಅನೇಕ ಸಂಗತಿಗಳನ್ನು ಎತ್ತಿ ಹೇಳುವಾಗಲೂ ಅದೇ ನಿಲುವನ್ನು ತಳೆದಿದ್ದೇವೆ. +ಆದರೆ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಯಲ್ಲಿ ನನ್ನ ಆಸಕ್ತಿ ತೀರಾ ಕಡಿಮೆ ಎಂದು ಜನ ಟೀಕಿಸಲು ಸಾಧ್ಯವಿದೆ. ಜೊತೆಗೆ, ಪತ್ರಿಕೆಗಳ ಮೂಲಕ ನಾನು ತಳೆದ ನಿಲುವು ಸಾಕಷ್ಟು ಪ್ರಗತಿಪರವಲ್ಲ. ಕರ್ನಾಟಕದ ದುಡಿಯುವ ಜನತೆಯ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಅಷ್ಟಾಗಿ ಬೆಳಕಿಗೆ ತಂದಿಲ್ಲ; ಅಧಿಕಾರಸ್ತರ ಅಕೃತ್ಯಗಳನ್ನು ಇನ್ನೂ ಎತ್ತಿ ಹೇಳಬೇಕಿತ್ತು ಎಂದೂ ಹೇಳಲು ಸಾಧ್ಯವಿದೆ. ಈ ವೈಫಲ್ಯಕ್ಕೆ ಮೂಲ ಕಾರಣ ನನಗೆ ದುಡಿಯುವ ಜನತೆಯ ಬಗೆಗೆ ಸಹಾನುಭೂತಿ ಇಲ್ಲದಿರುವುದು ಎಂದು ಕೆಲವರು ಗುರುತಿಸಲೂಬಹುದು. ಸ್ವತಃ ವಾಣಿಜ್ಯೋದ್ಯಮಿಯಾಗಿರುವುದರಿಂದ. ವೃತ್ತಪತ್ರಿಕೆಯೂ ಒಂದು ವಾಣಿಜ್ಯ ಸಂಸ್ಥೆಯಾದ್ದರಿಂದ ನಾವು ಆಳುವ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವುದು ಸಹಜ; ಹೀಗಾಗಿ ಇನ್ನಷ್ಟು ಕೆಚ್ಚಿನಿಂದ ಹೋರಾಡಲು ಧೈರ್‍ಯ ಸಾಲದು ಎಂಬ ವ್ಯಾಖ್ಯಾನಕ್ಕೂ ಅವಕಾಶವಿದೆ. ಈ ಎಲ್ಲಾ ಮಾತುಗಳಲ್ಲೂ ಸತ್ಯಾಂಶವಿದೆ. ಆದರೆ, ಕನ್ನಡ ಸಾಹಿತ್ಯಕ ಬುದ್ಧಿಜೀವಿ ವರ್ಗ ಈ ನೆಲೆಗಳಿಂದ ನನ್ನನ್ನು ದೋಷಿ ಎಂದು ಕರೆದಿಲ್ಲ. +ಹೀಗೆ ನಾನು ಇಷ್ಟೊಂದು ದೀರ್ಘ ರೀತಿಯಲ್ಲಿ ವಿನಯಹೀನನಾಗಿ, ಪ್ರದರ್ಶಕ ರೀತಿಯಲ್ಲಿ ನನ್ನ ಬಗ್ಗೆಯೇ ಹೇಳಿಕೊಂಡಿದ್ದಕ್ಕೆ ಕಾರಣವಿದೆ. ಏಕೆಂದರೆ, ಇವೆಲ್ಲಾ ಕನ್ನಡ ಸಾಹಿತ್ಯಕ ಬುದ್ಧಿ ಜೀವಿ ವರ್ಗದ ಈ ಚಳವಳಿಯ ನಿಲುವು. ತಾತ್ವಿಕತೆಗಳನ್ನು ಅರ್ಥಮಾಡಿಕೊಳ್ಳಲು ಬೆಳಕು ಚೆಲ್ಲುತ್ತವೆ ಎಂಬ ನಂಬಿಕೆ ನನ್ನದು. ಕನ್ನಡ ವಿರೋಧಿ, ಇಂಗ್ಲಿಷ್ ವ್ಯಾಮೋಹಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲದವನು- ಎಂದೆಲ್ಲಾ ಹೇಳುವಾಗ ಕನ್ನಡ ಲೇಖಕರ ಅರ್ಥವಾದರೂ ಏನು? ವೃತ್ತ ಪತ್ರಿಕೆಗಳು ಮೇಲಿನ ಸಾಮಾಜಿಕ, ರಾಜಕೀಯ ಸಮಸ್ಯೆಗಳನ್ನು ಎತ್ತಿ ಹೇಳಿದಾಗ ನಮ್ಮ ಕನ್ನಡ ಸಾಹಿತಿಗಳೇನು ಮಾಡುತ್ತಿದ್ದರು ಎಂದು ಕೇಳಬೇಕಾಗಿದೆ. ಇವುಗಳ ಬಗ್ಗೆ ಅವರು ಚರ್ಚೆ, ಸಾರ್ವಜನಿಕ ಸಭೆ, ಪ್ರದರ್ಶನಗಳನ್ನು ಸಂಘಟಿಸಿದರೇನು? ವಿವಿಧ ಸರ್ಕಾರಿಸಂಸ್ಥೆಗಳ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಬಂಧನಕ್ಕೊಳಗಾದರೇನು? ಉಳಿದ ರಾಜ್ಯಗಳಲ್ಲಿಯ ಕನ್ನಡಿಗರ ಬಗ್ಗೆ ಅಷ್ಟೊಂದು ಕಾಳಜಿ ತೋರುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡದ ದುಡಿಯುವ ಜನತೆಯ ಪರವಾಗಿ ಎಂದಾದರೂ ನಿರ್ಣಯ ಸ್ವೀಕರಿಸಿದ್ದಾರೇನು? +ಕನ್ನಡಿಗರೇ ಆದ ಕೈಗಾರಿಕೋದ್ಯಮಿಗಳು, ಪೋಲೀಸರು, ಸರ್ಕಾರ, ವಾಣಿಜ್ಯೋದ್ಯಮಿಗಳನ್ನು ಅವರ ಅಕೃತ್ಯಗಳಿಗಾಗಿ ಖಂಡಿಸಿದ್ದಾರೇನು? ಕನ್ನಡ ಶೋಷಿತರನ್ನು ಕನ್ನಡ ಶೋಷಕರೇ ತುಳಿಯುತ್ತಿದ್ದರೂ ಇವರು ಮೌನವಾಗಿದ್ದಾರೆ. ಅಧಿಕಾರಸ್ತ ರಾಜಕಾರಣಿಗಳ ಭ್ರಷ್ಟಾಚಾರ, ಎಲ್ಲ ಬಗೆಯ ಶ್ರೀಮಂತರ ದುರ್ವ್ಯವಹಾರ, ಅದಕ್ಷತೆಗಳ ವಿರುದ್ಧ ಇವರು ದನಿ ಎತ್ತಲೇ ಇಲ್ಲವಲ್ಲ. +-ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂದರೆ, ಉಳಿದ ವಿದ್ಯಾವಂತ ಮಧ್ಯಮ ವರ್ಗಗಳ ಹಾಗೆ ಕನ್ನಡ ಲೇಖಕರು ಕೂಡಾ ಈ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯದಿಂದ ಇದ್ದಾರೆ ಎನ್ನುವುದು. ಇಲ್ಲಿ ಕೆಲವು ಅಪವಾದಗಳೂ ಇವೆ ಎಂಬುದನ್ನು ನಾನು ಮರೆತಿಲ್ಲ) ಖಾಸಗಿಯಾಗಿ ನಮ್ಮ ಸಾಹಿತಿಗಳು ಪತ್ರಿಕೆಗಳ ಕೆಲಸವನ್ನು ಪ್ರಶಂಸಿಸುತ್ತಾರೆ. ಆಳುವ ವರ್ಗದ ಶೋಷಣೆ ಅಕೃತ್ಯಗಳ ಬಗ್ಗೆ ವಿಷಾದಿಸುತ್ತಾರೆ. ಆದರೆ, ಈ ಲೇಖಕರ ನೇತೃತ್ವದ ಕನ್ನಡ ಹೋರಾಟ ಬಹುಸಂಖ್ಯಾತ ಕನ್ನಡ ಜನತೆಯ ಈ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವಂಥದಲ್ಲ ಎನ್ನುವುದಾದರೆ ಈ ಚಳವಳಿಯ ಅರ್ಥವಾದರೂ ಏನು? +ಪ್ರಸ್ತುತ ಚಳವಳಿಯ ಅರ್ಥವನ್ನು ಹೀಗೆ ಸಂಗ್ರಹಿಸಬಹುದು. ಈ ಚಳವಳಿಯ ವಕ್ತಾರರು ಹೇಳುವ ಹಾಗೆ ಕನ್ನಡಕುಲಕೋಟಿಯೆಲ್ಲ ಒಂದು. ಇವರಿಗೆ ಕನ್ನಡೇತರರ ವಿರುದ್ಧವಾಗಿ ಪ್ರತ್ಯೇಕ ವ್ಯಕ್ತಿತ್ವವಿದೆ; ಹಿತಾಸಕ್ತಿಗಳಿವೆ. ಡಾ|| ರಾಜ್‌ಕುಮಾರ್ ಅಂತೂ ಕನ್ನಡಿಗರಲ್ಲಿ ಜಾತೀಯತೆ ಹೋಗಬೇಕು, “ಕನ್ನಡ ಕುಲವೊಂದೆ” ಎಂಬ ಭಾವನೆ ಹುಟ್ಟಬೇಕು ಎಂದು ಈ ಚಳವಳಿಯ ಸಂದರ್ಭದಲ್ಲಿ ಮತ್ತೆ ಮತ್ತೆ ಘೋಷಿಸಿದ್ದಾರೆ. ಇದರರ್ಥವೆಂದರೆ, ಕರ್ನಾಟಕದ ಪ್ರಭುತ್ವ, ನೆಲ, ಜಲ, ಕನ್ನಡ ಭಾಷಿಕರದು ಮಾತ್ರ ಎಂದು. ಆಗ, ಬೇರೆ ಭಾಷೆ ಮಾತಾಡುವ ಜನ ಪರಕೀಯರು ಇಲ್ಲವೆ ದ್ರೋಹಿಗಳಾಗುತ್ತಾರೆ. +ಕನ್ನಡ ಭಾಷಿಕರಲ್ಲೇ ಇರುವ ಬೇರೆ ಬೇರೆ ಐಡೆಂಟಿಟಿಗಳ, ಆಸಕ್ತಿಗಳ ನಡುವಣ ಘರ್ಷಣೆಯನ್ನು ಈ ಸಿದ್ಧಾಂತ ಕಡೆಗಣಿಸುತ್ತದೆ. ನಿರಾಕರಿಸುತ್ತದೆ. ಮೇಲೆ ಎದ್ದು ಕಾಣುವಂತೆ ಈ ಘರ್ಷಣೆಗಳ ಮರೆಮಾಚುವಿಕೆ, ನಿರಾಕರಣೆ ನಡೆಯದಿದ್ದರೂ ಈ ತರಿಕವಾಗಿ ಈ ಕೆಲಸ ನಡೆದೇ ಇರುತ್ತದೆ. ಇದನ್ನ ಬೇರೆ ರೀತಿಯಲ್ಲಿ ಹೀಗೆ ಹೇಳಬಹುದು: ಕನ್ನಡ ಕುಲವೆಲ್ಲ ಒಂದೇ ಎಂಬ ಸಿದ್ಧಾಂತ ಕನ್ನಡ ಬಂಡವಾಳಿಗ, ಕನ್ನಡ ಕಾರ್ಮಿಕರ ನಡುವೆ, ಕನ್ನಡ ಶ್ರೀಮಂತ ರೈತ, ಕೃಷಿಕಾರ್‍ಮಿಕರ ನಡುವೆ, ಮೇಲ್ ಜಾತಿಯ ಕನ್ನಡಿಗ, ಕನ್ನಡ ದಲಿತರ ನಡುವೆ, ಕನ್ನಡ ಚಿತ್ರನಟ, ನಿರುದ್ಯೋಗಿ ಕನ್ನಡಿಗರ ನಡುವೆ ಹೊಸ ಸೌಹಾರ್ದತೆಯನ್ನು, ಐಕ್ಯತೆಯನ್ನು ಬೆಳೆಸುತ್ತದೆ. ಈ ನಂಟಿಗೆ ಆಧಾರ ಎಂದರೆ ಭಾಷೆ. ಆಮೇಲೆ “ಹುಟ್ಟು” ಅಥವಾ “ರಕ್ತ” ನಂಟಿಗೆ ಆಧಾರವಾದರೂ ಆಗಬಹುದು. +ಈ ರೀತಿಯ ಸೌಹಾರ್ದತೆ, ಏಕತೆಯನ್ನು ಕೆಲವು ನಿರ್ಧಿಷ್ಟ ಸನ್ನಿವೇಶಗಳಲ್ಲಿ ಒಪ್ಪಬಹುದು. ಯಾವುದಾದರೂ ಒಂದು ಹೊರಗಿನ ಭಾಷಿಕ ಧಾರ್‍ಮಿಕ, ಸಾಮಾಜಿಕ ರಾಷ್ಟ್ರೀಯ ಗುಂಪು ಕನ್ನಡಿಗರನ್ನು ಶೋಷಿಸುತ್ತಿದ್ದರೆ ಈ ಏಕತೆಯನ್ನು ಒಪ್ಪಬಹುದಾಗಿತ್ತು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇಂಥ ಶೋಷಣೆ ಖಂಡಿತವಾಗಿಯೂ ಇತ್ತು. ಆಗ ಇಡೀ ಕನ್ನಡಿಗರ ಆಸಕ್ತಿಗಳು ಆಳುವವರ ವಿರುದ್ಧವೇ ಇದ್ದವು. ಆಗ ಕನ್ನಡಿಗರ ಹಿತ ಒಟ್ಟಾರೆಯಾಗಿ ಭಾರತದ ಹಿತದ ಜೊತೆಗೆ ಸೇರಿ ಹೋಗಿತ್ತು. ಈ ಕಾರಣಕ್ಕಾಗಿಯೇ, ಕನ್ನಡ ಭಾಷಿಕರು ರಾಷ್ಟ್ರೀಯ ಹೋರಾಟದ ಒಂದು ಭಾಗವಾಗಿದ್ದರು. ರಾಷ್ಟ್ರೀಯ ಚಳವಳಿಯ ನಾಯಕರಿಗೆ ಬಡತನ. ಭಾರತೀಯ ಸಮಾಜ ಎಲ್ಲ ರೀತಿಗಳಿಂದ ಹಿಂದುಳಿದಿರುವ ಸ್ಥಿತಿಯ ಬಗ್ಗೆ ಗಾಢ ಕಾಳಜಿ ಇತ್ತು. ರಾಷ್ಟ್ರೀಯ ಚಳವಳಿಯ ಮೊದಲ ಮಹತ್ವದ ಕೃತಿಯಾದ ದಾದಾಬಾಯಿ ನವರೋಜಿಯವರ “ಬಡತನ ಮತ್ತು ಬ್ರಿಟಿಷ್ ಆಳ್ವಿಕೆ” ಇದಕ್ಕೆ ಸಾಕ್ಷಿ. ಭಾರತದ ಸಂಪತ್ತು ಬ್ರಿಟನ್ನಿಗೆ ಹರಿದುಹೋಗುತ್ತಿದ್ದುದೆ ನಾಡಿನ ಬಡತನಕ್ಕೆ ಕಾರಣ ಎಂದು ಈ ಕೃತಿ ಹೇಳಿತು. ಮುಂದೆ, ದತ್, ರಾನಡೆ, ಜಿ. ಎಸ್. ಐಯರ್, ನೆಹರು, ಆಚಾರ್‍ಯ, ನರೇಂದ್ರದೇವ ಮುಂತಾದವರು ಬ್ರಿಟಿಷ್ ಆಳ್ವಿಕೆಯೇ ಭಾರತದ ಹಿಂದುಳಿದಿರುವಿಕೆಗೆ ಕಾರಣ ಎಂಬುದನ್ನು ಸಾಬೀತು ಪಡಿಸಿದರು. ಈ ದೃಷ್ಟಿಕೋನದ ಕಾರಣದಿಂದಾಗಿಯೇ ರಾಷ್ಟ್ರೀಯ ಹೋರಾಟದ ಮುಂದಿನ ತಲೆಮಾರುಗಳವರು, ರೈತ, ಕಾರ್‍ಮಿಕ, ಮಧ್ಯಮ ವರ್ಗಗಳ ನಡುವೆ ಸಂಘಟನಾ ಕಾರ್‍ಯಕ್ಕೆ ಇಳಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಟಕ್ಕೆ ಆ ವರ್ಗಗಳನ್ನು ಸಂಘಟಿಸಿದರು. ಆದರೆ, ಭಾರತೀಯ ಸಮಾಜದಲ್ಲಿಯ ಆಂತರಿಕ ಘರ್ಷಣೆಗಳ ಬಗೆಗೆ ಅವರು ಸಾಕಷ್ಟು ಸಾರಿ ಕುರುಡಾಗಿದ್ದರು ಎಂಬುದು ನಿಜ. ಅವರಿಗೆ ಮೊದಲ ಆಸಕ್ತಿ ಇದ್ದುದು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ. +ಮುಂದಿರುವ ಪ್ರಶ್ನೆ +ಈಗ ನಮ್ಮ ಮುಂದಿರುವ ಪ್ರಶ್ನೆ: +ಕರ್ನಾಟಕದಲ್ಲಿ ಈ ದಿನ ನಮ್ಮನ್ನು ಹೊರಗಿನ ಸಾಮ್ರಾಜ್ಯಶಾಹಿ ಶಕ್ತಿಯೊಂದು ಶೋಷಿಸುತ್ತಿದೆ ಎಂಬ ವಾದ ಸಾಧ್ಯವೆ ಎಂದು? ಒಟ್ಟಾರೆಯಾಗಿ ನಮ್ಮ ದೇಶದ ಜನತೆಯನ್ನು ಅಮೇರಿಕನ್ ಮತ್ತು ಯುರೋಪಿಯನ್ ಸಾಮ್ರಾಜ್ಯಶಾಹಿಗಳು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಶೋಷಿಸುತ್ತಿವೆ. ಈಗಿನ ಭಾರತ ಸರ್ಕಾರದ ನೀತಿ, ಐ‌ಎಮ್‌ಎಫ್ ಸಾಲದ ಷರತ್ತು ಮುಂತಾದುವುಗಳನ್ನು ನೋಡಿದರಂತೂ ಇವುಗಳ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ, ನಮ್ಮ ರಾಜ್ಯ, ದೇಶಗಳೆರಡೂ ನವ ವಸಾಹತು ಆದರೂ ಆಶ್ಚರ್‍ಯವೇನಿಲ್ಲ. ಆದರೆ, ಕನ್ನಡ ಸಾಹಿತಿಗಳಿಗೆ ಈ ಅಪಾಯದ ಬಗೆಗೆ ಕಾಳಜಿ ಇಲ್ಲ. ಅಲ್ಲದೆ ಕನ್ನಡ ಭಾಷಿಕರನ್ನು ಬೇರೆ ಯಾವುದಾದರೂ ದೇಶ ಅಥವಾ ಭಾರತೀಯ ಭಾಷಿಕ ಗುಂಪು ಶೋಷಿಸುತ್ತಿದೆ ಎಂಬುದಕ್ಕೂ ಅವರು ಯಾವ ಸಾಕ್ಷ್ಯಗಳನ್ನು ಮಂಡಿಸಿಲ್ಲ. ವಾಸ್ತವವಾಗಿ, ಈಗ ಭಾರತ ಒಕ್ಕೂಟದಲ್ಲಿ ಕರ್ನಾಟಕವಿರುವುದರಿಂದ, ರಾಜ್ಯಕ್ಕೆ ಅಪಾರ ಲಾಭವುಂಟಾಗಿದೆ. ಸಾಮಾಜಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಭಾರೀ ಬಂಡವಾಳ ಹೂಡಿಕೆ ಕರ್ನಾಟಕದಲ್ಲಿ ಇರುವುದು ನಾವು ಭಾರತ ಒಕ್ಕೂಟದ ಒಂದು ಭಾಗ ಎಂಬ ಕಾರಣಕ್ಕಾಗಿಯೇ. ವ್ಯವಸಾಯ, ಅದರಲ್ಲೂ ನೀರಾವರಿ ವ್ಯವಸಾಯ ಸಾಕಷ್ಟು ಗಮನಾರ್ಹ ಪ್ರಮಾಣದಲ್ಲಿ ಬೆಳೆದಿದೆ. ಕರ್ನಾಟಕದಲ್ಲಿ ಉಳಿದ ರಾಜ್ಯಗಳ ಜನರನ್ನು ಕಾಣುವ ಹಾಗೆಯೇ, ಕನ್ನಡಿಗರನ್ನು ಭಾರತದ ಬೇರೆ ರಾಜ್ಯಗಳಲ್ಲೂ ಕಾಣುತ್ತೇವೆ. ನಾವು ಭಾರತದ ಒಂದು ಭಾಗವಾಗಿ ಗಳಿಸಿರುವ ಲಾಭ ಸ್ಪಷ್ಟವಾಗಿ ತಿಳಿಯಬೇಕಾದರೆ, ನಮ್ಮ ರಾಜ್ಯವನ್ನು ಪಾಕಿಸ್ತಾನದ ಜೊತೆಗೂ, ಬಾಂಗ್ಲಾದೇಶದ ಜೊತೆಗೂ ಹೋಲಿಸಿ ನೋಡಬೇಕಾಗುತ್ತದೆ. +ಯಾವುದೇ ಒಳ ಅಥವಾ ಹೊರ ಜನಾಂಗ ಕನ್ನಡವನ್ನು, ಕನ್ನಡಿಗರನ್ನು ಶೋಷಿಸುತ್ತಿಲ್ಲ, ಬೆದರಿಸುತ್ತಿಲ್ಲ ಎನ್ನುವುದಾದರೆ ನಗರ ಕರ್ನಾಟಕದಾದ್ಯಂತ ಮಧ್ಯಮ ವರ್ಗದ ಕನ್ನಡಿಗರೇಕೆ ಬೆದರಿಕೆ ಮತ್ತು ದಬ್ಬಾಳಿಕೆಯ ತಲ್ಲಣವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ತೀರಾ ಸ್ವಾರಸ್ಯಕರ ಪ್ರಶ್ನೆ. ಪ್ರತಿಷ್ಠಿತ ಕಾರ್ಮಿಕ ವರ್ಗ ಕೂಡಾ ಇದೇ ರೀತಿಯ ಪ್ರಜ್ಞೆಯನ್ನು ಹೊಂದಿದೆ. ಇನ್ನೊಂದು ಕಡೆಗೆ, ಈ ಚಳವಳಿಯಲ್ಲಿಲ್ಲದ ಕನ್ನಡಿಗರು ಹಾಗೂ ಕನ್ನಡೇತರರಿಗೆ ಇನ್ನೊಂದು ರೀತಿಯ ಪ್ರಜ್ಞೆ ಕಾಡುತ್ತಿದೆ. ಈ ಚಳವಳಿ ಅಲ್ಪಸಂಖ್ಯಾತರ ಮೇಲೆ ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುವ ಪ್ರಯತ್ನ ಎಂದು ಇವರು ಹೇಳುತ್ತಾರೆ. ಇದೇಕೆ ಹೀಗೆ! ಈ ಎರಡೂ ಪ್ರಶ್ನೆಗಳಿಗೆ ಉತ್ತರ ಅತ್ಯಂತ ಸಂಕೀರ್ಣವಾದದ್ದೂ ಬಹುಮುಖಿಯೂ ಆಗಿರಬೇಕಾಗುತ್ತದೆ. +ಇದಕ್ಕೆ ಉತ್ತರ ಪಡೆವ ದಿಕ್ಕಿನಲ್ಲಿ, ಮೊದಲಿಗ ಕೆಲವು ಸಂಗತಿಗಳನ್ನು ಪರೀಕ್ಷಿಸಬಹುದು. ಇವುಗಳು: (೧) ತಮಿಳಿನ ಪ್ರಾಧಾನ್ಯ. ದುರಭಿಮಾನ: ಕ್ಯಾಥೊಲಿಕ್ ಚರ್ಚ್. ಸಾರ್ವಜನಿಕ ಉದ್ಯಮ. ಬೆಂಗಳೂರು ದಂಡು ಪ್ರದೇಶಗಳಲ್ಲಿ ಈ ತಮಿಳರ ದುರಹಂಕಾರ: (೨) ಬೆಂಗಳೂರಲ್ಲಿ ಕನ್ನಡ, ಮತ್ತು ಕನ್ನಡಿಗರ ಸ್ಥಾನಮಾನ (೩) ತಮಿಳುನಾಡು, ಮಹಾರಾಷ್ಟ್ರ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿಯ ಭಾಷಾ ದುರಭಿಮಾನವನ್ನು ತಮ್ಮ ಅನಿಸಿಕೆಗೆ ಬೆಂಬಲವಾಗಿ ಕನ್ನಡ ಸಾಹಿತಿಗಳು ತೆಗೆದುಕೊಳ್ಳುತ್ತಿರುವುದು. ಇದಾದ ನಂತರ, ಈ ಗ್ರಹಿಕೆ ಮತ್ತು ಭಾವನೆಗಳ ಸಾಮಾಜಿಕ, ಆರ್ಥಿಕ ಉಗಮದ ವಿಶ್ಲೇಷಣೆ. ನಂತರ, ಚಳವಳಿಯ ಹೊರಗೆ ಮತ್ತು ಕಾಡಿರುವ ಕೆಲವು ಪ್ರಶ್ನೆಗಳನ್ನು ವಿವರಿಸಲು ಯತ್ನಿಸುತ್ತೇನೆ. ಈ ಕೆಲವು ಪ್ರಶ್ನೆಗಳು ಹೀಗಿವೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಇದರ ನೇತೃತ್ವದ ಲಿಂಗಾಯಿತರಲ್ಲೇ ಈ ಚಳವಳಿ ಏಕೆ ಅತ್ಯಂತ ಬಲಶಾಲಿಯಾಗಿತ್ತು? ಕಳೆದ ವರ್ಷ ತಾನೇ ಕನ್ನಡೇತರ ಕಾರ್ಮಿಕರ ಜೊತೆಗೆ ಹೆಗಲೆಣೆಯಾಗಿ ನಿಂತು ಅಪಾರ ಒಗ್ಗಟ್ಟಿನಿಂದ ಹೋರಾಡಿದ ಸಾರ್ವಜನಿಕ ಉದ್ಯಮಗಳ ಕನ್ನಡ ಕಾರ್ಮಿಕರೇಕೆ ಈ ರೀತಿಯ ಹೋರಾಟಕ್ಕೆ ಇಳಿದಿದ್ದಾರೆ? ತಮ್ಮ ಬಂಧುಗಳ ಜೊತೆ ಏಕೆ ಈ ಕೆಲಸ, ಬಡ್ತಿ, ಪ್ರಭಾವ ಇತರ ಸಂಪನ್ಮೂಲಗಳಿಗಾಗಿ ಹೋರಾಡುತ್ತಿದ್ದಾರೆ? ಈ ಪ್ರಶ್ನೆಗಳನ್ನು ವಿಶ್ಲೇಷಿಸಿದ ನಂತರ ಮುಂದೆ ನಾನು ಈ ಚಳವಳಿಯಲ್ಲಿ ನಟರು, ನಿರ್ಮಾಪಕರು, ಹಂಚಿಕೆದಾರರ ಪಾತ್ರಕ್ಕೆ ಬರುತ್ತೇನೆ. ಕನ್ನಡ ಸಾಹಿತಿಗಳಲ್ಲಿ ಈ ಚಳವಳಿಗೆ ಗಮನಾರ್ಹ ವಿರೋಧವೇ ಇಲ್ಲದಿರುವಿಕೆ ಮುಂತಾದ ಪ್ರಶ್ನೆಗಳನ್ನು ನೋಡಿ ಕಡೆಗೆ, ಈ ಚಳವಳಿಯ, ಕನ್ನಡ ಸಾಹಿತಿಗಳ ಅತ್ಯಂತ ಪ್ರಧಾನ ತಾತ್ವಿಕತೆಯ ವಿಶ್ಲೇಷಣೆಗೆ ಬರುತ್ತೇನೆ. ಇದನ್ನು ಸಾಂಪ್ರದಾಯಿಕ ಏಕತಾವಾದ ಎಂದು ಕರೆಯಬಯಸುತ್ತೆನೆ. ಈ ತಾತ್ವಿಕತೆಯ ಉಗಮ, ಭಾಷಿಕ ರೂಪ, ಜನಾಕರ್ಷಣೆ, ಸರ್ವಾಧಿಕಾರತನ ಮುಂತಾದುವುಗಳ ವಿವರಣೆಯೂ ಇದೆ. ಈ ಅಂಶದ ಸಮಗ್ರ ವಿಶ್ಲೇಷಣೆಯ ಹಿನ್ನೆಲೆಯಲ್ಲಿಯೇ ನಾನು ಈ ಭಾಗದ ಮೊದಲಿಗೇ ಹಾಕಿದ ಪ್ರಶ್ನೆಗಳಿಗೆ ಉತ್ತರ ಇದೆ ಎಂದು ಭಾವಿಸಿದ್ದೇನೆ. +ಇದಿಷ್ಟು ಮುಂದಿನ ಬರಹದ ರೂಪದ ವಿವರಣೆ. +ತಮಿಳರ ಪ್ರಾಧಾನ್ಯ +ಬೆಂಗಳೂರಿನ ದುಂಡು ಪ್ರದೇಶದಲ್ಲಿ ತಮಿಳರ ಪ್ರಾಧಾನ್ಯ ಇದೆ ಎಂಬ ಮಾತು ನಿಜವಾದದ್ದು: ಹಾಗೆಯೇ, ಈ ಜನರಲ್ಲಿ ಒಂದು ಬಗೆಯ ದುರಹಂಕಾರ, ಕನ್ನಡ ಸಂಸ್ಕೃತಿಯ ಬಗ್ಗೆ ಅಲಕ್ಷ್ಯ ಇದೆ ಎಂಬುದೂ ನಿಜವಾದದ್ದೆ. ಆದರೆ, ತಮಿಳರನ್ನು ಬೆಂಗಳೂರಿಗೆ ತಂದವರು, ಅವರನ್ನು ಆಂಗ್ಲೊ ಇಂಡಿಯನ್ನರ ಜೊತೆಗೆ ಬೇರೆಯಾಗಿಯೇ ಉಳಿಸಿದವರು ಬ್ರಿಟಿಷರು. ತಮ್ಮ ಆಳ್ವಿಕೆಗಾಗಿ (ಅಂದರೆ ಮಹಾರಾಜರ, ಮಾರ್ಗದರ್ಶನ ಮತ್ತು ರಕ್ಷಣೆ) ಸ್ಥಾಪಿಸಿದ ಈ ಕಂಟೋನ್ಮೆಂಟ್ ಪ್ರದೇಶದಲ್ಲಿಯೇ ತಮ್ಮ ಜೆತೆಗೆ ತಮಿಳರನ್ನು ಉಳಿಸಿಕೊಂಡರು. ಬ್ರಿಟಿಷ್ ಮತ್ತು ಸ್ಥಳೀಯರ ನಡುವೆ ಒಂದು ರೀತಿಯ ತಡೆಯ ಹಾಗಿದ್ದೆ ತಮಿಳರ ಕನ್ನಡಿಗರನ್ನು ಕುರಿತು ಬ್ರಿಟಿಷರಿಂದ ಒಂದು ಬಗೆಯ ದುರಹಂಕಾರದ ನಿಲುವನ್ನು ಕಲಿತುಕೊಂಡರು. ಕನ್ನಡಿಗರಿಗೆ ಕಂಟೋನ್ಮೆಂಟ್‌ನಲ್ಲಿ ಕನ್ನಡ ಮಾತನಾಡಲು ಭಯವಿದ್ದರೆ, ಈ ಬಗೆಯ ಭಯವೇ ಬ್ರಿಟಿಷರಿಗೆ ಬೇಕಾಗಿದ್ದುದೂ ಕೂಡಾ. ಈಗಿನ ಕನ್ನಡ ಕ್ಯಾಥೊಲಿಕರ ಸಮಸ್ಯೆ ಈ ಪರಂಪರೆಗೆ ಸಂಬಂಧಿಸಿದ್ದೆ. ಕಂಟೊನ್ಮೆಂಟ್ ಪ್ರದೇಶದಲ್ಲಿ ಕ್ಯಾಥೊಲಿಕರು ಬಹುಮಟ್ಟಿಗೆ ತಮಿಳರೇ ಆಗಿದ್ದುದರಿಂದ ಕನ್ನಡ ಕ್ಯಾಥೊಲಿಕರಿಗೆ ಕೊಂಚ ಅನ್ಯಾಯವಾಯಿತು. ಇದು ನಡೆದದ್ದು ಕೆಲಸ, ಅಧಿಕಾರ, ಸಂಪನ್ಮೂಲಗಳ ನಿಯಂತ್ರಣ, ಕನ್ನಡ ಕ್ಯಥೊಲಿಕರ ಬಗೆಗಿನ ಅಲಕ್ಷ್ಯಗಳ ರೂಪದಲ್ಲಿ ಆದರೆ, ಕನ್ನಡ ಕ್ಯಾಥೊಲಿಕರ ಚಳವಳಿ ಮೈಸೂರು, ಬಳ್ಳಾರಿ, ದ.ಕನ್ನಡ ಮತ್ತು ಇನ್ನಿತರ ಪ್ರದೇಶಗಳಲ್ಲಿ ಕನ್ನಡ ಕ್ಯಥೊಲೊಕರ ಬೆಂಬಲ ಪಡೆಯಲಿಲ್ಲ. ಏಕೆಂದರೆ, ಬೆಂಗಳೂರಿನವರ ಸಮಸ್ಯೆಗಳು ಇವರದಾಗಿರಲಿಲ್ಲ. +೧೯೫೦ರಲ್ಲಿ ಸ್ಥಾಪಿತವಾದ ಕೇಂದ್ರಸರ್ಕಾರದ ಸಾರ್ವಜನಿಕರ ಉದ್ಯಮಗಳಲ್ಲಿ ತಮಿಳರ ಪ್ರಾದಾನ್ಯಕ್ಕೆ ಕಾರಣ ಭಾಗಶಃ ಬ್ರಿಟಿಷ್ ಆಳ್ವಿಕೆಯಲ್ಲೇ ಇದೆ. ಏಕೆಂದರೆ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಕೈಗಾರಿಕಾ ಬಂಡವಾಳದ ಅಭಿವೃದ್ಧಿಯ ಕಾರಣಕ್ಕೆ ಮೈಸೂರಿಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಮಿಕ ವರ್ಗವೊಂದು ಬೆಳೆದಿತ್ತು. ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳು ತಮಿಳುನಾಡು ಗಡಿಗೆ ಹತ್ತಿರವಿದ್ದು, ದ್ವಿಭಾಷಾ ಪ್ರದೇಶವಾದ್ದರಿಂದ ೧೯೫೦ರಲ್ಲಿ ಹೆಚ್ಚಾಗಿ ತಮಿಳು ಕಾರ್ಮಿಕರನ್ನೇ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಆದರೆ, ಕಳೆದೆರಡು ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಕಾರ್ಮಿಕರನ್ನು ತೆಗೆದುಕೊಂಡಿದ್ದು ಅವರಿಗೆ ಹೆಚ್ಚಿನ ಬಡ್ತಿ ಮತ್ತು ಇತರ ಸೌಲಭ್ಯಗಳು ಸಿಗುತ್ತಿವೆ. ಜೊತೆಗೆ, ಕಳೆದ ಕೆಲವು ವರ್ಷಗಳಿಂದ ತಮಿಳರು ಕೂಡಾ ಕನ್ನಡ ಸಂಸ್ಕೃತಿ, ಸಮಾಜದ ಬಗೆಗೆ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಚರ್ಚ್‌ಗಳಲ್ಲಿರುವ ತಮಿಳರ ಮಟ್ಟಿಗೂ ಈ ಮಾತು ನಿಜ. ತಮಿಳರ ಬಗೆಗಿನ ದೂರುಗಳೆಲ್ಲಾ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಮಾತ್ರ ಅನ್ವಯವಾಗುವಂಥದ್ದು. ಕರ್ನಾಟಕದ ಉಳಿದ ಭಾಗಗಳಲ್ಲಿ ಮತ್ತು ಬೆಂಗಳೂರಿನ ಇತರ ಪ್ರದೇಶಗಳಲ್ಲಿ ಕನ್ನಡಿಗರೊಂದಿಗೆ ತಮಿಳರು ಯಾವಾಗಲೂ ಬೆರೆತಿದ್ದಾರೆ; ಕನ್ನಡ ಕಲಿತಿದ್ದಾರೆ.ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಗೆ ಕಾಣಿಕೆ ಸಲ್ಲಿಸಿದ್ದಾರೆ; ಕನ್ನಡದ, ಕರ್ನಾಟಕದ ಜೆತೆಗೆ ಸಂಪೂರ್ಣ ತಾದಾತ್ಮ್ಯ ಸಾಧಿಸಿ ಸಾಕಷ್ಟು ಪ್ರಸಂಗಗಳಲ್ಲಿ ತಮ್ಮ ತಾಯಿ ನುಡಿಯನ್ನೇ ಬಿಟ್ಟುಕೊಟ್ಟು, ಕನ್ನಡವನ್ನೇ ಮಾತೃಭಾಷೆಯನ್ನಾಗಿ ಒಪ್ಪಿಕೊಂಡಿದ್ದಾರೆ. ಇಷ್ಟಾದರೂ, ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ದುರಭಿಮಾನ ಬೆಳೆಯುತ್ತಲೇ ಇದ್ದು, ಗೋಕಾಕ್ ಚಳವಳಿಯಲ್ಲಿ ಕೊನೆಗೊಂಡಿದೆ. ಹೀಗಾಗಿ, ತಮಿಳರು ದಿನೇ ದಿನೇ ತುಳಿತಕ್ಕೊಳಗಾದ ಅಲ್ಪಸಂಖ್ಯಾತರಾಗಿ ಪರಿವರ್ತಿತರಾಗುತ್ತಿದ್ದಾರೆ. +ಕನ್ನಡ ಸಾಹಿತಿಗಳು ಕೂಡಾ ಬೆಂಗಳೂರಿನ ಕಡೆಗೆ ಬೊಟ್ಟುಮಾಡಿ ತೋರಿಸುತ್ತಿದ್ದಾರೆ; ಬೇರೆ ರಾಜ್ಯಗಳಿಂದ ಅಪಾರವಾಗಿ ವಲಸೆಗಳು ಬರುತ್ತಲೇ ಇದೆ. ಇವರು ಕನ್ನಡ ಕಲಿಯುತ್ತಿಲ್ಲ, ಕನ್ನಡ ಸಂಸ್ಕೃತಿ ಮತ್ತು ಜನರ ಬಗ್ಗೆ ಅಲಕ್ಷ್ಯವನ್ನು, ತಿರಸ್ಕಾರ ಧೋರಣೆಯನ್ನು ತೋರಿಸುತ್ತಿದ್ದಾರೆ ಎಂದು ಅವರ ವಾದ. ಉಳಿದ ರಾಜ್ಯಗಳ ಕಡೆಗೆ ಕೈತೋರಿ, ಅಲ್ಲಿ ದುರಭಿಮಾನ ಬೆಳೆಯುತ್ತಲೇ ಇದೆ. ಅಲ್ಲಿಯ ಕನ್ನಡಿಗರು ಸ್ಥಳೀಯ ಭಾಷೆಯನ್ನು ಕಲಿಯಲೇಬೇಕಾಗಿ ಬಂದು ತುಳಿತಕ್ಕೊಳಗಾಗುತ್ತಿದ್ದಾರೆ ಎಂಬ ಮಾತುಗಳು ಅವರಿಂದ ಬರುತ್ತಿದೆ. ಸ್ವತಃ ಗೋಕಾಕ್ ವರದಿಯೇ ಕನ್ನಡಿಗರು ಒಳಗೂ ಹೊರಗೂ ತಮ್ಮ ಆಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಿಲ್ಲ ಎಂಬ ಅಂಶವನ್ನು ಹೇಳುತ್ತದೆ. ತಮ್ಮ ರಾಜ್ಯದೊಳಗೆ ಕನ್ನಡಿಗರು ಅಲ್ಪಸಂಖ್ಯಾತರ ಬಗೆಗೆ ಬಹಳ ಉದಾರಿಗಳಾಗಿದ್ದಾರೆ; ಹೊರಗಡೆಯಲ್ಲೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳದೆ ಅಲ್ಲಿಯ ಮುಖ್ಯ ಧಾರೆಯಲ್ಲಿ ಕರಗಿ ಹೋಗಿದ್ದಾರೆ. ಇದು ಗೋಕಾಕ್ ವರದಿಯ ನಿಲುವು. ಹೊರಗಡೆಗೆ ಕನ್ನಡಿಗರು ತಮ್ಮ ಸಾಮಾಜಿಕ ಹಿತ, ಸಾಂಸ್ಕೃತಿಕ ಸ್ವಂತಿಕೆಗಳನ್ನು ಉಳಿಸಿಕೊಳ್ಳಬೇಕು ಎಂಬುದು ಸರಿಯಾದರೆ, ಅದನ್ನೇ ಅಲ್ಪಸಂಖ್ಯಾತರು ಕರ್ನಾಟಕದಲ್ಲಿ ಮಾಡಿದರೆ ತಪ್ಪೇನು? ತಮ್ಮ ಹಿತಾಸಕ್ತಿಯ ದೃಷ್ಟಿಯಿಂದಲೇ ಅಲ್ಪಸಂಖ್ಯಾತರು ಕನ್ನಡಿಗರಾಗಬೇಕು ಎಂದು ಗೋಕಾಕ್ ವರದಿ ಹೇಳುತ್ತದಲ್ಲ ಹಾಗೇಕೆ ಅವರು ನಡೆಯಬೇಕು? ಈ ವಾದಗಳಲ್ಲಿಯ ಸ್ಪಷ್ಟ ಸ್ವಯಂ ವಿರೋಧ ಒಟ್ಟಾರೆಯಾಗಿ ಅಲ್ಪಸಂಖ್ಯಾತರ ದೃಷ್ಟಿಕೋನದಿಂದ ನೋಡಿದಾಗ ಎದ್ದು ಕಾಣುತ್ತದೆ. ಆದರೆ, ಈ ಹೇಳಿಕೆಗಳನ್ನು ಕನ್ನಡಿಗರ ನಾಡು-ನುಡಿಯ ಅಭಿಮಾನ, ಏಕತೆಯ ನೆಲೆಯಿಂದ ನೋಡಿದಾಗ ಈ ಸ್ವಯಂ ವಿರೋಧಗಳು ಕಾಣೆಯಾಗುತ್ತವೆ. ಮದ್ರಾಸ್, ಮುಂಬೈ, ಹೈದರಾಬಾದ್, ನವದೆಹಲಿ ಮುಂತಾದ ನಗರಗಳಿಗೆ ಆಯಾ ಪ್ರದೇಶಗಳ ನಿರ್ದಿಷ್ಟ ಪ್ರಾದೇಶಿಕ ಲಕ್ಷಣಗಳಿವೆ; ಇವಿ ಇಲ್ಲಿಯ ಪ್ರಾಂತೀಯ ಜನತೆಯ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯಿಂದ ಬಂದದ್ದು ಎಂಬ ಅಂಶವಂತೂ ನಿಜವಲ್ಲ. ಆ ನಗರಗಳು ಕೂಡಾ ಕಾಸ್ಮೊಪಾಲಿಟಿನ್ ನಗರಗಳೇ. ಅಲ್ಲಿ ಕೂಡಾ ಭಾರತದ ಎಲ್ಲೆಡೆಗಳಿಂದ ಬಂದ ಜನ ವಾಸಿಸುತ್ತಾರೆ. ಕೆಲವು ಸಾರಿಯಂತೂ ಈ ನಗರಗಳು ಬೆಂಗಳೂರಿಗಿಂತ ಹೆಚ್ಚಿನ ಕಾಸ್ಮೊಪಾಲಿಟಿನ್ ಗುಣಗಳನ್ನು ಹೊಂದಿರುತ್ತದೆ. ಉದಾ: ಮುಂಬೈ ಕೆಲವು ಸಾರಿ, ಕಾಸ್ಮೊಪಾಲಿಟಿನ್ ಗುಣಗಳನ್ನು ಕೊಂಚ ಕಡಿಮೆ ಹೊಂದಿರುತ್ತವೆ. ಉದಾ: ಕಲ್ಕತ್ತಾ, ಅಹಮದಾಬಾದ್ ಆದರೆ, ಹೆಚ್ಚಿನ ಬಂಡವಾಳಶಾಹಿ ಬೆಳವಣಿಗೆಯಿಂದಾಗಿ ಉಂಟಾಗಿರುವ ಅಖಿಲ ಭಾರತೀಯ ಚಲನೆಯಿಂದಾಗಿ ಇವು ಇನ್ನಷ್ಟು ಹೆಚ್ಚು ಕಾಸ್ಮೊಪಾಲಿಟಿನ್ ನಗರಗಳಾಗುತ್ತವೆ. ಜೊತೆಗೆ, ಉಳಿದ ರಾಜ್ಯಗಳಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತಮ್ಮ ಆಸಕ್ತಿ, ಹಿತಗಳನ್ನು, ಸ್ವಂತಿಕೆಗಳನ್ನು ಕನ್ನಡಿಗರು ಕಾಪಾಡಿಕೊಂಡಿಲ್ಲ ಎಂಬ ಹೇಳಿಕೆಯೂ ಸತ್ಯವಲ್ಲ. ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ಎಲ್ಲೆಲ್ಲಿದ್ದಾರೊ, ಆ ಎಲ್ಲ, ಭಾರತೀಯ ಊರು, ನಗರಗಳಲ್ಲಿ ಈ ಹೊತ್ತು ಕನ್ನಡ ಸಂಸ್ಥೆಗಳನ್ನು ಕಾಣುತ್ತೇವೆ. ಅಷ್ಟೇ ಅಲ್ಲದೆ, ನ್ಯೂಯಾರ್ಕ್, ಲಂಡನ್ ಮುಂತಾದ ಮುದುವರೆದ ಬಂಡವಾಳಶಾಹಿ ದೇಶಗಳ ನಗರಗಳಲ್ಲೂ ಇವುಗಳನ್ನು ಕಾಣುತ್ತೇವೆ. ಮುಂಬೈ ಉದಾಹರಣೆಯನ್ನು ಇನ್ನಷ್ಟು ವಿವರವಾಗಿ ನೋಡಬಹುದು. ಅಲ್ಲಿಯ ಕನ್ನಡಿಗರು ಮಧ್ಯಮವರ್ಗದಲ್ಲಿದ್ದು ದೊಡ್ಡ ಪ್ರಭಾವಶಾಲೀ ಸ್ಥಾನಗಳಲ್ಲಿದ್ದಾರೆ. ಇವರು ಮರಾಠಿಗರಾಗಿ ಪರಿವರ್‍ತಿತರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಬಹಳ ಜನರಿಗೆ ಮರಾಠಿ ಅಲ್ಪಸ್ವಲ್ಪ ಮಾತ್ರ ಬರುತ್ತದೆ; ಅಥವಾ ಬರುವುದೇ ಇಲ್ಲ. ಅಲ್ಲಿ ಶಿವಸೇನೆ ಕನ್ನಡಿಗರ(ದಕ್ಷಿಣ ಭಾರತೀಯರ)“ಪ್ರಾಧಾನ್ಯ”,“ದುರಹಂಕಾರ”ದ ವಿರುದ್ಧ ಹೋರಾಡುತ್ತಿದೆ ಎಂಬ ಅಂಶ ನಿಸ್ಸಂದೇಹವಾದದ್ದು. ಆದರೆ, ಇಲ್ಲಿ ಕನ್ನಡ ಸಾಹಿತಿಗಳು ಮಾಡಿದ ಹಾಗೆ ಅಲ್ಲಿ ಮರಾಠಿ ಸಾಹಿತಿಗಳು ಅದನ್ನು ಹುಟ್ಟು ಹಾಕುವುದಾಗಲೀ, ಅದಕ್ಕೆ ಬೆಂಬಲಿಸುವ ಕೆಲಸವನ್ನಾಗಲಿ ಮಾಡಲಿಲ್ಲ. ಹೀಗಿದ್ದಾಗ, ಭಾಷಾದುರಭಿಮಾನದಲ್ಲಿ ಶಿವಸೇನೆಯನ್ನು ಮೀರಿಸುವ ಮಾತಂತೂ ಏಳುವುದೇ ಇಲ್ಲ. ಆದರೆ, ಇಲ್ಲಿ ಕನ್ನಡ ಸಾಹಿತಿಗಳು ಈ ಚಳುವಳಿಯೊಂದನ್ನು ಹುಟ್ಟುಹಾಕಿದ್ದಾರೆ, ಬೆಳೆಸಿದ್ದಾರೆ; ಬೆಂಬಲ ನೀಡಿದ್ದಾರೆ, ಅಷ್ಟೇ ಅಲ್ಲ ಈಗ ಕನ್ನಡ ಪಕ್ಷ, ಕನ್ನಡ ಚಳವಳಿಗಾರರನ್ನು ಮೀರಿಸಿಬಿಟ್ಟಿದ್ದಾರೆ. ಕಾಸರಗೋಡಿನ ಇನ್ನೊಂದು ಉದಾಹರಣೆಯನ್ನೂ ಈಗ ನೋಡಬಹುದು. ಅಲ್ಲಿ ಕೂಡಾ ಕನ್ನಡಿಗರು ತಮ್ಮ ಸಂಸ್ಕೃತಿ, ಸ್ವಂತಿಕೆ, ಭಾಷೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಅವರು ಕರ್ನಾಟಕದ ಏಕೀಕರಣ ಸಮಿತಿಗೆ ವೋಟು ಹಾಕುವುದಿಲ್ಲ. ಅಥವಾ ಬೆಳಗಾಂ ಮರಾಠಿಗರ ಹಾಗೆ ನಿರಂತರವಾಗಿ ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾಗಬೇಕೆಂದು ಚಳವಳಿ ನಡೆಸುತ್ತಾ ಬಂದಿಲ್ಲ. ಇದೇಕೆ ಹೀಗೆ? ಇದಕ್ಕೆ ಕಾರಣ ಇಷ್ಟೇ. ಕಾಸರಗೋಡು ಕನ್ನಡಿಗರು ಕನ್ನಡವನ್ನಾಗಲೀ, ಕರ್‍ನಾಟಕವನ್ನಾಗಲೀ ಕಡಿಮೆ ಪ್ರೀತಿಸುವುದಿಲ್ಲ. (ಕೆಲವರು ಹೀಗೆ ಸೂಚಿಸುತ್ತಿದ್ದಾರೆ ಈಗ). ಆದರೆ, ಅಲ್ಪಸಂಖ್ಯಾತರಾಗಿ ಅವರಿಗೆ ಸಿಕ್ಕಿರುವ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸೌಲಬ್ಯಗಳು ಸಾಕಷ್ಟಿವೆ. ಅದರಲ್ಲೂ ಕರ್ನಾಟಕದಲ್ಲಿ ಮರಾಠಿಗರಿಗೆ ಸಿಕ್ಕಿರುವ ತುಳಿತದ ಉಪಕಾರ ಜೊತೆಗೆ ಹೋಲಿಸಿದರೆ ಅದು ಎದ್ದು ಕಾಣುತ್ತದೆ. ಇನ್ನು ಮುಂದೆ, ಕನ್ನಡ ಸಾಹಿತಿಗಳು ತಮಿಳುನಾಡಿನ ಕಡೆಗೆ ಕೈತೋರಿಸುತ್ತಾರೆ. ಡಿ.ಎಂ.ಕೆ ಸರ್ಕಾರದ ಸಮಯದಲ್ಲಿ ಅಲ್ಲಿಯ ರಸ್ತೆ, ಬಸ್ಸ್ ಫಲಕಗಳನ್ನು, ಇತ್ಯಾದಿಗಳನ್ನು ತಮಿಳಿನಲ್ಲೇ ಬರೆಸಲಾಯಿತು ಎಂದು ಹೇಳುತ್ತಾರೆ. ತಮಿಳುನಾಡಿಗೆ ಹೊರಗಿನಿಂದ ಬರುವವರ ಅನುಕೂಲಕ್ಕಾಗಿ ಇವು ಇಂಗ್ಲೀಷ್‌ನಲ್ಲಿ ಕೂಡ ತರಬೇಕು ಎಂದು ಇಲ್ಲಿ ವಾದಿಸಲು ಅವಕಾಶವಿದೆ. ಆದರೆ, ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ, ಅಲ್ಪಸಂಖ್ಯಾತರ, ಕನ್ನಡ ಆಡಳಿತ ಭಾಷೆಯಾಗುವುದನ್ನಾಗಲೀ, ನಾಮಫಲಕಗಳು ಕನ್ನಡದಲ್ಲಿ ಇರುವುದನ್ನಾಗಲೀ ವಿರೋಧಿಸಿಲ್ಲ. ಡಿ.ಎಂ.ಕೆ. ಎಂದೂ ಇಂಗ್ಲಿಷ್‌ನಲ್ಲಿದ್ದ ಖಾಸಗೀ ನಾಮಫಲಕಗಳಿಗೆ ಕಲ್ಲೆಸೆಯಲಿಲ್ಲ. ಅಲ್ಲಿ ತಮ್ಮ ಭಾಷೆ ಇರಬೇಕು ಎಂದು ಹೇಳಲಿಲ್ಲ. ಇದನ್ನು ಮೊದಲು ಕನ್ನಡ ಚಳವಳಿಕಾರರು ಮಾಡಿದ್ದರು. ಈಗ ಕನ್ನಡವೂ ಇರುವ ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಗೋಕಾಕ್ ಚಳವಳಿಗಾರರು ಅಳಿಸುತ್ತಿದ್ದಾರೆ. ತಮಿಳೇ ಕಾಣದಿರುವ ಬರಿ ಇಂಗ್ಲಿಷಲ್ಲೇ ಇರುವ ಬೋರ್ಡ್‌ಗಳನ್ನು ನಾವು ಈ ಹೊತ್ತಿಗೂ ಮದ್ರಾಸಿನಲ್ಲಿ ಕಾಣಬಹುದು. ಒಂದು ಪಕ್ಷ ಡಿ.ಎಂ.ಕೆ. ಎ‌ಐ‌ಎಡಿ‌ಎಂಕೆಗಳ ಅತಿರಂಜಿತ ತಮಿಳು ಸಂಸ್ಕೃತಿಯ ಕಲ್ಪನೆಯನ್ನು, ಅವರ ಪ್ರತ್ಯೇಕತಾ ಧೋರಣೆಯನ್ನು ಮೆಚ್ಚದಿದ್ದರೂ ಆ ಪಕ್ಷಗಳೆಂದೂ ಅಲ್ಪಸಂಖ್ಯಾತ ವಿರೋಧಿಗಳಾಗಲಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಪಸಂಖ್ಯಾತರ ಮೇಲೆ ತಮಿಳಿನ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರಹೋಗಿಲ್ಲ. “ಮಣ್ಣಿನ ಮಕ್ಕಳು” ವಾದ ಅವರಿಂದ ದೂರವೇ. “ಮುಖ್ಯಧಾರೆ ಸೇರಿರಿ” ಎಂಬ ಘೋಷಣೆಯನ್ನು ಅವರೆಂದೂ ಹಾಕಿಲ್ಲ. ಆದರೆ, ಕನ್ನಡ ಸಾಹಿತಿಗಳು ಒಂದು ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ಅಭಿವೃದ್ಧಿಗೂ ಮತ್ತು ಬೇರೆಯವರ ಮೇಲೆ ಕನ್ನಡ ಹೇರಿಕೆಗೂ ಇರುವ ವ್ಯತ್ಯಾಸವನ್ನು ತಿಳಿಯಲು ವಿಫಲರಾಗಿದ್ದಾರೆ, ಕನ್ನಡ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ, ಅಭಿವೃದ್ಧಿಗೆ ಅಲ್ಪಸಂಖ್ಯಾತರು ಎಂದೂ ವಿರೋಧಿಸಿಲ್ಲ. ಆದರೆ, ಡಿ.ಎಂ.ಕೆ ಮತ್ತಿತರ ರಾಜ್ಯಗಳ ಬಗೆಗೆ ನಾನು ಮಾತನಾಡುವಾಗ ಅಲ್ಲೆಲ್ಲೂ ಭಾಷಾ ದುರಭಿಮಾನ ಇಲ್ಲವೇ ಇಲ್ಲ ಎಂದು ಹೇಳುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ಯಜಮಾನಿಕೆಗಳನ್ನು ಹೇರುವ ಪ್ರಯತ್ನ ಬೇರೆ ಕಡೆಗಳಲ್ಲೂ ನಡೆದಿದೆ. ಕೆಲವು ಬಾರಿಯಂತೂ ಕರ್ನಾಟಕಕ್ಕಿಂತ ತೀವ್ರವಾದ ರೀತಿಯಲ್ಲೇ ನಡೆದಿದೆ. ಆದರೆ, ಕರ್ನಾಟಕ ಈ ಬಗೆಯ ಪ್ರಯತ್ನಗಳಿಂದ ಯಾವಾಗಲೂ ದೂರ. ನಾವು ಹೆಚ್ಚು ಉದಾರಿಗಳು ಎಂದು ಕೆಲವರು ಹೇಳುತ್ತಾರಲ್ಲ, ಆ ಮಾತು ಮಾತ್ರ ಸುಳ್ಳು. ಕೆಲವು ರಾಜ್ಯಗಳಲ್ಲಿ ಈ ಬಗೆಯ ದುರಭಿಮಾನ ಹೆಚ್ಚಿನ ಪ್ರಮಾಣದಲ್ಲಿದೆ. ಕೆಲವುಗಳಲ್ಲಿ ಕಡಿಮೆ ಇದೆ.(ಇದು ನಮಗೆ ನಂಬಲು ಕಷ್ಟ. ಆದರೂ ನಿಜ). ಬೇರೆ ಕಡೆಗಳಲ್ಲಿ ಪರಿಸ್ಥಿತಿ ಏನೇ ಇದ್ದರೂ. ಅಲ್ಲಿಯ ದುರಭಿಮಾನಕ್ಕೆ ಸಮರ್ಥನೆ ಆಗಕೂಡದು. ಎದು ಎಲ್ಲಿ ಹೇಗೆ ಕಂಡು ಬಂದರೂ ಅದರ ವಿರುದ್ಧ ಹೋರಾಡುವ ಅಗತ್ಯವಿದೆ. +ಅಸ್ಸಾಂ ಉದಾಹರಣೆ +ಆಗಾಗ ಕನ್ನಡ ಸಾಹಿತಿಗಳು “ಅಸ್ಸಾಂ ಮಾದರಿ”ಯ ಪ್ರಸ್ತಾಪ ಮಾಡುತ್ತಾರೆ. ಇಲ್ಲೂ ಕೂಡಾ “ಪರದೇಶಿ ವಿರೋಧಿ” ಚಳವಳಿ ಮಾಡುತ್ತೇವೆಂದು ಬೆದರಿಸುತ್ತಾರೆ. ಈ ಹೋಲಿಕೆಯಂತೂ ನಿಜಕ್ಕೂ ದಾರಿ ತಪ್ಪಿಸುವಂಥದು. ಅಸ್ಸಾಂ ಚಳವಳಿಯ ವಿಧಾನ, ಒತ್ತಾಯಗಳ ಬೆಗ್ಗೆ ಒಪ್ಪಿಗೆ ಇಲ್ಲದಿದ್ದರೂ ಕೆಲವು ಜನ ಅಸ್ಸಾಮಿಯರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಕಳೆದ ೧೦೦ ವರ್ಷಗಳಲ್ಲಿ ಅಸ್ಸಾಂನಲ್ಲಿ ಬಂದು ಇಳಿದಿರುವ ಅಪಾರ ಸಂಖ್ಯೆಯ ವಲಸಿಗರ ದಂಡು ಅಲ್ಲಿಯ ಮಧ್ಯಮವರ್ಗ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಹಿಡಿದು ಕೂತುಬಿಟ್ಟಿದೆ. ಅದರಲ್ಲೂ ವಿಶೇಷವಾಗಿ ಬಂಗಾಳಿಗಳು ಪ್ರತಿಷ್ಠಿತ ಸ್ಥಾನದಲ್ಲಿದ್ದಾರೆ. ಆರ್ಥಿಕ ಬೆಳವಣಿಗೆಯೂ ಆ ರಾಜ್ಯದಲ್ಲಿ ಕುಂಠಿತವಾಗಿಬಿಟ್ಟಿದೆ. ಇವೆಲ್ಲದರ ಜೊತೆಗೆ, ಅಲ್ಲಿ ಬಂಗಾಳಿ ಸಾಂಸ್ಕೃತಿಕ ಧಿಮಾಕೂ ಸೇರಿಬಿಟ್ಟಿದೆ. ಈ ಎಲ್ಲ ಬೆಳವಣಿಗೆಗಳೂ ಸಾಮಾಜಿಕ ಮತ್ತು ಚಾರಿತ್ರಿಕ ಕಾರಣಗಳಿವೆ. ಕಳೆದ ೨೦-೨೫ ವರ್ಷಗಳಿಂದ ಅಸ್ಸಾಮಿಯರ ಸ್ಥಿತಿ ಪರವಾ ಇಲ್ಲ. ಆದ್ದರಿಂದ, ಈ ಚಳವಳಿಯ, ಅದರ ತಾತ್ವಿಕತೆ ಬಗ್ಗೆ ನಮಗೆ ಒಪ್ಪೊಗೆ ಇರಲಿ ಇಲ್ಲದಿರಲಿ (ನನಗಂತೂ ಒಪ್ಪಿಗೆ ಇಲ್ಲ) ಅಸ್ಸಾಮನ್ನು ಕರ್ನಾಟಕದ ಜೊತೆಗೆ ಹೋಲಿಸುವುದು ನಿಲ್ಲುವಂಥದಲ್ಲ. ಏಕೆಂದರೆ, ಚಿಕ್ಕಮಗಳೂರು, ಕೊಡಗು, ಕೆ.ಜಿ.ಎಫ್ ಬಿಟ್ಟರೆ ಕರ್ನಾಟಕದಲ್ಲಿ ಕಳೆದ ನೂರು ವರ್ಷಗಳಲ್ಲಿ ವಲಸಿಗರು ಬಂದೇ ಇಲ್ಲ ಎನ್ನಬಹುದು. ಹಾಗೆ ಬಂದವರನ್ನು ಕರ್ನಾಟಕದ ಒಟ್ಟು ಜನಸಂಖ್ಯೆಯ ಜೊತೆ ಇಟ್ಟು ನೋಡಿದಾಗಲಂತೂ, ಅದು ಖಂಡಿತ ಗೌಣವೇ. ಆದರೆ, ಕರ್ನಾಟಕದಿಂದ ಹೊರಗೆ ಸಾಕಷ್ಟು ವಲಸೆ ಹೋಗಿದೆ. ಅಸ್ಸಾಂನಲ್ಲಿ ಹಾಗಲ್ಲ. ಹೈದರಾಬಾದ್ ಕರ್ನಾಟಕದಲ್ಲಿಯ ಉರ್ದು ಭಾಷಿಕರಾಗಲೀ ಅಥವಾ ಬೇರೆ ಜಿಲ್ಲೆಗಳ ಮರಾಠಿ, ತೆಲುಗು, ತಮಿಳು, ಮಲೆಯಾಳಂ ಭಾಷಿಕರು ಹಾಗೆ ನೋಡಿದರೆ ಆ ಪ್ರದೇಶಗಳಿಗೆ ಕನ್ನಡಿಗರಷ್ಟೇ ಹಳಬರು. ಅವರ ತಾಯ್ನಾಡು ಕರ್ನಾಟಕನೇ. ಗೋಕಾಕ್ ವರದಿ ಮತ್ತು ಅದರ ಚಳವಳಿಗಾರರು ಕೆಲವೊಮ್ಮೆ ಹೇಳುವ ಹಾಗೆ ಅವರು ಹೊರಗಿನವರಲ್ಲ. ತಮಿಳುನಾಡು, ಕೇರಳ, ಆಂದ್ರಪ್ರದೇಶ್ ಮಹಾರಾಷ್ಟ್ರಗಳ ಗಡಿಗಳಲ್ಲಿ ವಾಸಿಸುವ ಕನ್ನಡಿಗರಿಗೂ ಈ ಮಾತು ಅನ್ವಯಿಸುತ್ತದೆ. ಅಸ್ಸಾಂಗೆ ಹೋಲಿಸಿದಾಗ ಸ್ವಾತಂತ್ರ್ಯ ನಂತರ ನಮ್ಮ ಆರ್ಥಿಕ ಬೆಳವಣಿಗೆಯೂ ಸಾಕಷ್ಟು ದೊಡ್ಡದೇ. ಭಾರತದ ಅನೇಕ ರಾಜ್ಯಗಳಿಗಿಂತ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಗಮನಾರ್ಹ. ಸಾರ್ವಜನಿಕ ಉದ್ಯಮ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ದೊಡ್ದ ಪ್ರಮಾಣದ ಬಂಡವಾಳ ಹೊರಗಿನಿಂದ ಬಂದಿದೆ. ಕೃಷಿ ಅಭಿವೃದ್ಧಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಬೆಂಗಳೂರು ದಂಡು ಪ್ರದೇಶ ಬಿಟ್ಟರೆ(ಅಲ್ಲಿಯೂ ಸ್ವಾತಂತ್ರ್ಯ ಬಂದ ನಂತರ ಹದಿನೈದು ವರ್‍ಷಗಳ ತನಕ ಮಾತ್ರ)ಬೇರೆ ಎಲ್ಲಿಯೂ ಯಾವ ಭಾಷಿಕ ಅಥವಾ ಧಾರ್‍ಮಿಕ ಗುಂಪು ಪ್ರತಿಷ್ಠಿತ ಸ್ಥಾನದಲ್ಲಿರಲಿಲ್ಲ. ಆದರೆ ನಿರ್ಧಿಷ್ಟ ಜಾತಿಗಳು ಪ್ರತಿಷ್ಠಿತ ಸ್ಥಾನಗಳಲ್ಲಿ -ಒಕ್ಕಲಿಗರು, ಲಿಂಗಾಯಿತರು ಇದ್ದೇ ಇವೆ. ಅಲ್ಪಸಂಖ್ಯಾತರ, ಮುಸ್ಲಿಮರ ಮೇಲೆ ಕನ್ನಡಿಗರ ಪ್ರಾಧಾನ್ಯವೂ ಇದೆ. ಈ ಚಳವಳಿಯನ್ನು ಬೇರೆ ಯಾವುದಾದರೂ ಚಳವಳಿಯ ಜೊತೆಗೆ ಹೋಲಿಸಬೇಕೆಂದರೆ ಖಾಲಿಸ್ತಾನ ಚಳವಳಿಯ ಜತೆಗೆ ಹೋಲಿಸಲು ಸಾಧ್ಯವಿದೆ. ಈ ಧಾರ್ಮಿಕ ಜನಾಂಗ ರಕ್ಷಣಾದಳ, ನೌಕರಶಾಹಿ, ಹೊರಗೆ ವಲಸೆ ಹೋಗುವಲ್ಲಿ, ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸ್ವಾತಂತ್ರ್ಯಕ್ಕೆ ಮುಂಚೆ ಮತ್ತು ನಂತರ ಎರಡೂ ಕಾಲಗಳಿಗೂ ಈ ಮಾತು ಸಲ್ಲುತ್ತದೆ. ಮಹತ್ವದ ಅಭಿವೃದ್ಧಿ ಸಾಧಿಸಿರುವ ಈ ಪ್ರಾಂತ್ಯಕ್ಕೆ ಹೊರಗಿನಿಂದ ವಲಸೆ ತೀರಾ ತೀರಾ ಕಡಿಮೆ. ಆದರೆ ಗೋಕಾಕ್ ಚಳವಳಿಯ ಜೊತೆಗೆ ಖಾಲಿಸ್ತಾನ್ ಚಳವಳಿಗೆ ಕೆಲವು ಸಾಮ್ಯಗಳಿದ್ದರೂ, ಅದರ ಮೂಲ, ಪ್ರೇರಣೆ, ಚರಿತ್ರೆಗಳು ಬೇರೆಯೇ ಆಗಿವೆ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. +ಕೇವಲ ನೆಪ +ಈ ಉದಾಹರಣೆಗಳನ್ನು ನೋಡಿದಾಗ ನಮಗೆ ಸ್ಪಷ್ಟವಾಗುವುದು, ಕನ್ನಡಿಗರ ಏಕತೆಗೆ, ದುರಭಿಮಾನಕ್ಕೆ ಇವು ನೆಪ ಮಾತ್ರ ಎಂಬುದು. ಉಳಿದವರ ಮುಂದೆ ಯಜಮಾನಿಕೆ ಹೇರಲು ಈ ಹೋಲಿಕೆಗಳು ಬರೀ ಸಮರ್ಥನೆಗಳಷ್ಟೆ. ಕನ್ನಡ ಕ್ಯಾಥೊಲಿಕರ ಪ್ರಸಂಗ ನೋಡಿದರೆ, ಈ ಸತ್ಯ ಎದ್ದು ಕಾಣುತ್ತದೆ. ಕನ್ನಡ ಸಾಹಿತಿಗಳ ಬೆಂಬಲ ಸಿಕ್ಕಿರುವ ಇವರ ಬೇಡಿಕೆಗಳು ಬರೆ ತಮಿಳು ಕ್ಯಾಥೊಲಿಕರ ಮೇಲೆ ಕನ್ನಡದ ಯಜಮಾನಿಕೆಯನ್ನು ಹೇರುವ ಪ್ರಯತ್ನವಷ್ಟೇ ಅಲ್ಲ. ಉಳಿದ ಅಲ್ಪಸಂಖ್ಯಾತ ಕ್ಯಾಥೊಲಿಕರ ಮೇಲೂ ಅದು ಹರಿಹಾಯುತ್ತದೆ. ಕರ್ನಾಟಕದ ಉಳಿದ ಅಲ್ಪಸಂಖ್ಯಾತರುಗಳಾದ, ಆಂಗ್ಲೋ-ಇಂಡಿಯನ್ನರು, ತೆಲುಗರು, ಮುಸ್ಲಿಮರು, ಕ್ರಿಶ್ಚಿಯನ್ನರು, ಮರಾಠಿಗರ ಮೇಲೆ ಕಿರುಕುಳ, ಪಕ್ಷಪಾತ, ತುಳಿತ ನಡೆದಾಗ ಕನ್ನಡ ಸಾಹಿತಿಗಳು ಎಂದೂ ದನಿಯೆತ್ತಿಯೇ ಇಲ್ಲ. ಅವರ ದೃಷ್ಟಿ ಕೋನ ಮೂಲತಃ ನಗರದ ಮಧ್ಯಮವರ್ಗದ ಗ್ರಹಿಕೆಯಿಂದ ಬಂದದ್ದು. ಹೆಚ್ಚೆಂದರೆ, ದೊಡ್ಡ ಉದ್ಯಮಗಳಲ್ಲಿಯ ಪ್ರತಿಷ್ಠಿತ ಕಾರ್ಮಿಕ ವರ್ಗದ ದೃಷ್ಟಿಕೋನಗಳನ್ನು ಸೇರಿಸಿಕೊಳ್ಳುತ್ತದೆ. ಇನ್ನೊಂದು ಸ್ಪಷ್ಟ ಸಾಕ್ಷ್ಯವನ್ನು ನೀಡಬಹುದು. ಕೂಲಿ, ಜಾಡಮಾಲಿ, ಕೃಷಿಕಾರ್ಮಿಕ, ಕಕ್ಕಸ್ಸು ತೊಳೆಯುವ ಕೆಲಸಗಳೆಲ್ಲಾ, ಬರೀ ಕನ್ನಡೇತರರಿಗೆ (ಒಂದು ಪಕ್ಷ ಹಾಗಿದ್ದರೆ) ಸಿಕ್ಕಿವೆ; ಇದರಿಂದಾಗಿ ಈ ಜಾಗಗಳಲ್ಲೂ ಕನ್ನಡಿಗರಿಗೆ ಮೀಸಲಾತಿ, ಬಡ್ತಿ, ಮುಂತಾದುವು ಇರಬೇಕು ಎಂಬ ಮಾತನ್ನು ಅವರು ಹೇಳುವುದಿಲ್ಲ. ಇದು ಅವರ ಜಗತ್ತಿನಿಂದ ಹೊರತು. +ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಾಕಷ್ಟು ಬಲವಾಗಿ ಬೆಳೆದ ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್ಮಿಕ ವರ್ಗ ಏಕೆ ಇಷ್ಟು ಉಗ್ರವಾಗಿ ತಮ್ಮ ಅನ್ಯಭಾಷಿಕ ವರ್ಗ ಬಂಧುಗಳ ವಿರುದ್ಧವೇ ಕೆಲಸ. ಇತ್ಯಾದಿಗಳಿಗೆ ಹೋರಾಡುತ್ತವೆ? ಈ ಪ್ರಶ್ನೆಗೆ ಉತ್ತರ ಕಳೆದ ೨೫ವರ್ಷಗಳ ನಮ್ಮ ಆರ್ಥಿಕ ಸ್ಥಗಿತ ಅಥವಾ ಅವನತಿಯಲ್ಲಿದೆ. ಇದರ ಪರಿಣಾಮವಾಗಿ ದಿನೇ ದಿನೇ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ. ಬೆಲೆಗಳು ಸಿಕ್ಕಾಬಟ್ಟೆ ಏರಿವೆ. ಜನಸಂಖ್ಯಾ ಉಬ್ಬರದ ಹೊತ್ತಿನಲ್ಲಿನ ಜೀವನ ಮಟ್ಟದ ಇಳಿತ ಸ್ವಾತಂತ್ರ್ಯಾ ನಂತರ ೧೫ವರ್ಷ ಸಾಕಷ್ಟು ಲಾಭ ಉಂಡಿದ್ದ ಈ ವರ್ಗಗಳ ಮೇಲೆ ತೀವ್ರ ಪರಿಣಾಮವನ್ನೆ ಬೀರಿವೆ. +ಈ ಆರ್ಥಿಕ ಸ್ಥಗಿತ ಅಥವಾ ಇಳಿಮುಖ ಬಹುಸಂಖ್ಯಾತ ಜನತೆಯ ನಿರೀಕ್ಷೆ, ಆಸೆಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲೆ ಸಂಭವಿಸತೊಡಗಿದೆ. ಜನರಲ್ಲಿ ಆಶೋತ್ತರಗಳ ಏರಿಕೆಗೆ ಕಾರಣಗಳು ಹೀಗಿವೆ. +ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸುವಾಗ ಅವರಿಗೆ ನೀಡಿದ ಭರವಸೆಗಳು; ರಾಷ್ಟ್ರೀಯ ಸರ್ಕಾರ ಬಂದ ತಕ್ಷಣ ಇದು ಈಡೇರುತ್ತದೆ ಎಂಬ ನಿರೀಕ್ಷೆ. +ಕಳೆದ ೩೦ ವರ್ಷಗಳಲ್ಲಿ, ಅದರಲ್ಲೂ ಚುನಾವಣೆ ಸಮಯಗಳಲ್ಲಿ ಹೆಚ್ಚುತ್ತಾ ಹೋದ ಪ್ರಗತಿಪರ ಘೋಷಣೆಗಳು. +ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೃಷ್ಟಿಯಾದ ಹೆಚ್ಚಿನ ಸಂಪತ್ತು ಅವಕಾಶಗಳು ಸಹಜವಾಗಿ ಭರವಸೆಯ ದಿಗಂತಗಳನ್ನು ವಿಸ್ತರಿಸಿದ್ದು. +೧೯೪೭ರ ನಂತರ ಶಿಕ್ಷಣದಲ್ಲಿ. ಉನ್ನತ ಶಿಕ್ಷಣದಲ್ಲಿ ಕಂಡುಬಂದ ಏರಿಕೆ. +ಆದರೆ ೧೯೪೭ರ ನಂತರ ಆರ್ಥಿಕ ಅಭಿವೃದ್ಧಿಯ ಸಿಂಹಪಾಲು ನಗರ ಮತ್ತು ಹಳ್ಳಿಗರ ಶ್ರೀಮಂತರಿಗೆ ದಕ್ಕಿತು. ಇದರಲ್ಲಿ ಕೊಂಚ ಪಾಲು ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕ ವರ್ಗಕ್ಕೂ ಸಿಕ್ಕಿತು. ಹಳ್ಳಿ ಮತ್ತು ನಗರಗಳ ಬಡವರಿಗೆ ಈ ಕಡೆಗೆ ಹೇಳಿದ ವರ್ಗಗಳಿಗೆ ಸೇರಲು ಚೂರೇ ಚೂರು ಸಾಧ್ಯತೆಯೂ ಉಂಟಾಯಿತು. ಹೀಗಾಗಿ, ಸ್ಥಗಿತತೆ, ಅವಕಾಶಗಳ ಅವನತಿಯಿಂದಾಗಿ ತೀರಾ ಹೆಚ್ಚಿನ ಪೆಟ್ಟು ಬಿದ್ದುದು ನಗರ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕ ವರ್ಗಗಳಿಗೆ. ಕಳಕೊಳ್ಳಲು ಏನಾದರೂ ಇದ್ದುದು ಇವರಿಗೆಯೇ. ಹಳ್ಳಿಗಾಡಿನ ಮತ್ತು ನಗರಗಳ ಶ್ರೀಮಂತರಿಗೆ ಹೆಚ್ಚು ರಿಯಾಯಿತಿಗಳು, ಸೌಲಬ್ಯಗಳು ಈ ಸರ್ಕಾರದಿಂದ ಸಿಗತೊಡಗಿತ್ತು. ಕಾರ್‍ಮಿಕರ ಮತ್ತು ಕೃಷಿ ಕಾರ್‍ಮಿಕರ ನಿರೀಕ್ಷೆಗಳು ಹೆಚ್ಚಿನ ರಿಯಾಯಿತಿಯಲ್ಲಿದ್ದರೂ, ಇವರ ಅಗತ್ಯಗಳು ತೀರಾ ಮೂಲಭೂತ ಸ್ವರೂಪದವು. ಆದರೆ, ಅವರಿಗೆ ಕೂಡಾ ಸಾಮಾಜಿಕ ಶ್ರೇಣೀಕರಣದ ಮೇಲಿನ ಹಂತಗಳಿಗೆ ಹೋಗುವ ಅವಕಾಶ ಸ್ವಲ್ಪಮಟ್ಟಿಗೆ ಇರುವುದರಿಂದ ಅವರೂ ಕೂಡಾ ಸ್ವಲ್ಪಮಟ್ಟಿಗಿನ ಬೆಂಬಲವನ್ನು ಈ ಚಳವಳಿಗೆ, ಅದರ ಸಿದ್ಧಾಂತಕ್ಕೆ ತೋರಿಸುತ್ತಾರೆ. +ಆದರೆ ಈ ಅವನತಿಯ ಬಿಸಿ ಸಣ್ಣ ಮತ್ತು ಮಧ್ಯಮ ಬಂಡವಾಳಿಗ, ಶ್ರೀಮಂತ ರೈತ, ಈ ರೀತಿಯ ಮಧ್ಯವರ್‍ತಿ ಶ್ರೇಣೀಕರಣಗಳಿಗೂ ತಟ್ಟಿದೆ. ಏಕೆಂದರೆ, ತಮ್ಮವರು ಕೂಡಾ ಮಧ್ಯಮ ವರ್ಗಗಳೊಳಗೆ ಪ್ರವೇಶಿಸಬಹುದು ಎಂಬ ನಿರೀಕ್ಷೆ ಇವರದು. ಹೀಗಾಗಿ ನಗರದ ಮಧ್ಯಮವರ್ಗ ಮತ್ತು ಪ್ರತಿಷ್ಠಿತ ಕಾರ್‍ಮಿಕವರ್ಗಕ್ಕೆ ಈ ಚಳವಳಿಯಲ್ಲಿ ಇವರ ಬೆಂಬಲ ಕೂಡಾ ಇದೆ. +ಹಳ್ಳಿ ಮತ್ತು ನಗರಗಳ ಶ್ರೀಮಂತರು ಏಕೆ ಈ ಚಳವಳಿಗೆ ಬೆಂಬಲ ನೀಡುತ್ತಾರೆ ಎಂಬುದರ ಕಾರಣಗಳನ್ನು ಮುಂದೆ ನೋಡಬಹುದು. ಆದರೆ, ನಗರ ಮಧ್ಯಮವರ್ಗದ, ಬುದ್ಧಿಜೀವಿಗಳ ಒಂದು ವರ್ಗ ಸಾನ್ಯವಾಗಿ ಈ ರೀತಿಯ ಚಳವಳಿಗಳನ್ನು ಬೆಂಬಲಿಸುವುದಿಲ್ಲ. ಇಂಗ್ಲಿಷ್ ಬಳಸುವ ಮೇಲು ಮಧ್ಯಮ ವರ್ಗ ಮತ್ತು ಎಕ್ಸಿಕ್ಯೂಟಿವ್ ಜನರು ಇಂಗ್ಲಿಷ್ ಬಳಸುವ ಬುದ್ಧಿಜೀವಿ ವರ್ಗ, ಸಮಾಜ ವಿಜ್ಞಾನಿ, ವಿಜ್ಞಾನಿ, ವಕೀಲರು, ನ್ಯಾಯಾಧೀಶರು, ಡಾಕ್ಟರುಗಳು ಇತ್ಯಾದಿ ಜನ ಈ ಚಳವಳಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಅಖಿಲ ಭಾರತೀಯ ಚಲನೆ. ದೃಷ್ಟಿಕೋನ, ಆಸಕ್ತಿಗಳಿರುವುದು ಇದಕ್ಕೆ ಕಾರಣ. +ಮೇಲಿನ ವಿಷ್ಲೇಶಣೆಯ ಸ್ವರೂಪ ಮತ್ತೊಂದು ಮುಖ್ಯ ಪ್ರಶ್ನೆಯನ್ನು ಎದುರಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಚಳವಳಿ ಏಕೆ ತೀವ್ರವಾಗಿತ್ತು? ದಕ್ಷಿಣ ಕನ್ನಡದಲ್ಲಿ ಬಹುಮಟ್ಟಿಗೆ ಇರಲೇ ಇಲ್ಲವಲ್ಲ?-ಇವುಗಳಿಗೆ ನಾವು ಉತ್ತರ ಹುಡುಕಬೇಕಾಗಿದೆ. ದಕ್ಷಿಣ ಕನ್ನಡದ ಜನಕ್ಕೆ ಸಾಕಷ್ಟು ಕನ್ನಡ ಪ್ರೇಮ ಇಲ್ಲ ಎಂದು ಕೆಲವರು ಹೇಳುತ್ತಾರೆ. ಕಾಸರಗೋಡಿನ ಬಗೆಗೂ ಈ ಮಾತನ್ನು ಹೇಳುವುದುಂಟು. ಕಾರಣ, ಇಲ್ಲಿಯವರು ತುಳು ಮತ್ತು ಕೊಂಕಣಿಗಳನ್ನು ಮಾತನಾಡುತ್ತಾರೆ ಎಂದು ಅವರು ತರ್ಕಿಸುತ್ತಾರೆ. ಆದರೆ ಈ ಜನತೆ ಯಾವಾಗಲೂ ಕನ್ನಡವನ್ನೇ ಬರೆಯಲು ಬಳಸಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಾಕಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮನ್ನು ಕನ್ನಡಿಗರು ಎಂದೇ ಅವರು ಕರೆದುಕೊಂಡಿದ್ದಾರೆ. ಈ ವಾಸ್ತವಸ್ಥಿತಿಯ ಕಾರಣದಿಂದ, ಅವರ ಮೌನಕ್ಕೆ ನಾವು ಬೇರೆ ಕಾರಣಗಳನ್ನು ಹುಡುಕಬೇಕಾಗಿದೆ. ಮೊದಲಿಗೇ ಎದ್ದು ಕಾಣುವ ಕಾರಣವೆಂದರೆ, ಅವರು ಕರ್ನಾಟಕದ ಯಾವುದೇ ಭಾಗಕ್ಕಿಂತ ಹೊರಗೆ ಅತ್ಯಂತ ಹೆಚ್ಚು ವಲಸೆ ಹೋಗಿರುವ ಜನರು ಮುಂಬೈ, ಮದ್ರಾಸು, ಕೊಚ್ಚಿ ಇಷ್ಟೇ ಅಲ್ಲದೆ, ಪಾಶ್ಚಾತ್ಯ ರಾಷ್ಟ್ರಗಳಿಗೂ, ಅರಬ್ ದೇಶಗಳಿಗೂ ಅವರು ವಲಸೆ ಹೋಗಿದ್ದಾರೆ. ಅನುಕೂಲಸ್ಥ ಕಾರ್‍ಮಿಕವರ್ಗ, ನಗರದ ಮಧ್ಯಮವರ್ಗ, ಗಣ್ಯವೃತ್ತಿವರ್ಗ-ಮುಂತಾದವುಗಳಲ್ಲಿ ಅವರು ಗಮನಾರ್ಹ ಪ್ರಮಾಣದಲ್ಲಿದ್ದಾರೆ. ದೊಡ್ಡ ಕೈಗಾರಿಕಾ ಮತ್ತು ವಾಣಿಜ್ಯ ಸಂಖ್ಯೆಗಳಲ್ಲೂ ಉನ್ನತ ಹುದ್ದೆಗಳಲ್ಲಿದ್ದಾರೆ. ದೇಶದ ಎಲ್ಲಾ ಮೂಲೆಮೂಲೆಗಳಲ್ಲಿ, ಜಗತ್ತಿನ ಅನೇಕ ಭಾಗಗಳಲ್ಲಿ ಉಡುಪಿ ಹೋಟಲುಗಳ ಮೂಲಕವಾಗಿ ಕಾಣಿಸಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ಕೆನರಾ, ಸಿಂಡಿಕೆಟ್, ವಿಜಯಾ ಬ್ಯಾಂಕುಗಳು ದೇಶದಾದ್ಯಂತ, ಮುಖ್ಯವಾಗಿ ದಕ್ಷಿಣದಲ್ಲಿ ವ್ಯಾಪಕವಾಗಿ ಬೆಳೆದು, ಒಳ್ಳೆಯ ಕೆಲಸಗಳು ಮತ್ತು ಪ್ರಭಾವಗಳನ್ನು ಗಳಿಸಿಕೊಟ್ಟಿವೆ. ಇಂಥ ಉತ್ತಮ ಸಂಪರ್ಕ ಮತ್ತು ಭವಿಷ್ಯ ಇವರಿಗೆ ಇರುವುದರಿಂದ ಉದ್ಯೋಗಾವಕಾಶಗಳ ಅವನತಿ ಇವರ ಮೇಲೆ ಕಡಿಮೆ ಪರಿಣಾಮ ಬೀರಿದೆ. ಉಳಿದವರಿಗೆ ಹೋಲಿಸಿದಾಗ ಈ ಅಂಶ ಮನದಟ್ಟಾಗುತ್ತದೆ. ಇಲ್ಲಿಯ ಭಾಷಾದುರಭಿಮಾನ ಹೊರಗೆ ತಮ್ಮವರ ಮೇಲೆ ಖಂಡಿತ ತೊಂದರೆ ತರುತ್ತದೆ ಎಂಬುದು ದಕ್ಷಿಣ ಕನ್ನಡದ ಜನಕ್ಕೆ ಗೊತ್ತಿದೆ. ಬೇರೆ ಕಡೆಗಳಲ್ಲಿಯೂ ಪ್ರತಿದುರಭಿಮಾನ ಬೆಳೆದರೆ ಇವರ ಉದ್ಯೋಗಾವಕಾಶಗಳಿಗೆ ಸಂಚಕಾರ ಒದಗುತ್ತದೆ. ಆಮೇಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಲಸೆ ಬಂದಿರುವ ಹೊರಗಿನ ಜನ ಅಷ್ಟಾಗಿ ಇಲ್ಲ. ಕರ್ನಾಟಕವೂ ಸೇರಿದಂತೆ ಎಲ್ಲೆಡೆಗೆ ಅವರು ಎಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳು ಅವರಿಗೊಂದು ಅತ್ಮವಿಶ್ವಾಸ, ಸ್ವಂತಿಕೆ, ನೆಲದ ಅಭಿಮಾನ ತಂದುಕೊಟ್ಟಿದೆ. ಆದ್ದರಿಂದ ಉಳಿದ ಅನೇಕ ಕನ್ನಡ ಮಧ್ಯಮವರ್ಗದ ಮಂದಿಗೆ ಬುದ್ಧಿಜೀವಿಗಳಿಗೆ ಕಾಡುವ ಕೀಳಿರಿಮೆ ಅವರಲ್ಲಿ ಇಲ್ಲ. “ಬೆದರಿಕೆಯ ತಲ್ಲಣ” ಅವರಿಗಿಲ್ಲ. ಕರ್ನಾಟಕದಲ್ಲಿ ಕೂಡಾ ಅವರನ್ನು ಬಹಳ ಬುದ್ಧಿವಂತರೆಂದು ಪರಿಗಣಿಸಲಾಗಿದೆ. ಈ ಅಂಶ ಬಹಳ ಸಾರಿ ಅವರಿಗೆ ಒಂದು ಬಗೆಯ ಧಿಮಾಕನ್ನು ತಂದಿದೆ. +ಇದಕ್ಕೆ ವಿರುದ್ಧ ರೀತಿಯಲ್ಲಿ, ಉತ್ತರ ಕರ್ನಾಟಕದ ಪಟ್ಟಣಗಳಲ್ಲಿ ಈ ಚಳವಳಿಗೆ ಬೆಂಬಲ ದೊರಕಿದ್ದು ಧಾರವಾಡ, ಬೆಳಗಾಂ, ದಾವಣಗೆರೆ, ಶಿವಮೊಗ್ಗ, ಹಾಸನ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಚಳವಳಿ ತುಂಬ ಪ್ರಬಲವಾಗಿತ್ತು. +ಲಿಂಗಾಯತರು +ಈ ಚಳವಳಿಯ ನಾಯಕ ವರ್ಗದಲ್ಲಿಯ ಅತ್ಯಂತ ಗಟ್ಟಿಯಾದ, ರಾಜಿಗೆ ಒಲ್ಲದ ಸಾಹಿತಿಗಳು ಧಾರವಾಡದವರೇ ಆಗಿದ್ದಾರೆ. ಈ ಪ್ರದೇಶಗಳಲ್ಲಿ, ಇಲ್ಲಿಯ ನಾಯಕರುಗಳಲ್ಲಿ ಲಿಂಗಾಯತರು ಪ್ರಧಾನವಾಗಿದ್ದರಿಂದ ಅನೇಕ ಜನ ಪಿಸುಗುಟ್ಟುತ್ತಿದ್ದುದು ಕೇಳಿ ಬತು. ಲಿಂಗಾಯಿತರು ಮತ್ತೆ ರಾಜಕೀಯ ಶಕ್ತಿಯನ್ನು ಗಳಿಸಿಕೊಳ್ಳುತ್ತಿರುವ ಯತ್ನ ಇದು ಎಂದು. ದೇವರಾಜ ಅರಸರ ಹಿಂದುಳಿದ ವರ್ಗಗಳ ಪಡ್ಯಿಂದಾಗಿ ರಾಜಕೀಯ ಅಧಿಕಾರ ಕಳೆದುಕೊಂಡಿದ್ದ ಲಿಂಗಾಯಿತರ ರಾಜಕೀಯ ಪ್ರಯತ್ನ ಈ ಚಳವಳಿ ಎಂಬುದು ಈ ಮಾತಿನ ಹಿನ್ನೆಲೆ. ಈ ತೀರ್‍ಮಾನ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವೀಗ ನೋಡಬೇಕಾಗಿದೆ. ಲಿಂಗಾಯಿತರು ಈ ಚಳವಳಿಯ ಮುಂಚೂಣಿಯಲ್ಲಿದ್ದರು ಎಂಬ ಮಾತು ನಿಜ. ಅವರು ಬಹುಸಂಖ್ಯೆಯಲ್ಲಿಲ್ಲದ ಊರುಗಳ ಮತ್ಟಿಗೂ ಈ ಮಾತು ಸಲ್ಲುತ್ತದೆ. ಏಪ್ರಿಲ್ ೧೯ರ ಸರ್ಕಾರಿ ತೀರ್‍ಮಾನದ ನಂತರ ಬೆಂಗಳೂರಲ್ಲೂ ಚಳವಳಿಯ ಸೂತ್ರಧಾರಿಗಳು ಅವರೇ. ಚರಿತ್ರೆಯಲ್ಲಿ ಕೊಂಚ ಹಿಂದಕ್ಕೆ ಹೋಗಿ ನೋಡಿದರೆ, ಹಾವನೂರು ವರದಿ ವಿರುದ್ಧ ಪ್ರತಿಭಟಿಸಿ ಚಳವಳಿ ನಡೆಸಿದವರು ಲಿಂಗಾಯಿತರು. ಸರ್ಕಾರಿ ಕೆಲಸಗಳ ಹಂತದಲ್ಲಿ ಈ ವರದಿಯಿಂದಾಗಿ ಅತ್ಯಂತ ಹೆಚ್ಚಿನ ಪೆಟ್ಟು ಬಿದ್ದುದು ಈ ಜಾತಿಗೆ. ೧೯೮೦ರ ಜುಲೈನಲ್ಲಿ ಮಲಪ್ರಭಾದಲ್ಲಿ ಪ್ರಾರಂಭವಾದ ರೈತ ಚಳವಳಿಯ ನಾಯಕತ್ವ ಈ ಜನಾಂಗದ ಶ್ರೀಮಂತ ರೈತರದು(ಕಳೆದ ಎರಡು ವರ್ಷಗಳಲ್ಲಿ ಈ ರೈತ ಚಳವಳಿ ಶಿವಮೊಗ್ಗ, ಹಾಸನ ಜಿಲ್ಲೆಗಳಿಗೂ ಹಬ್ಬಿದೆ). ನೀರಾವರಿ ಜಿಲ್ಲೆಯಾದ, ಕಬ್ಬು ಬೆಳೆಯುವ ಮಂಡ್ಯದ ಶ್ರೀಮಂತ ಒಕ್ಕಲಿಗ ರೈತರು ಈ ಚಳವಳಿಗೆ ಧುಮುಕಲಿಲ್ಲ ಎಂಬುದು ಗಮನಾರ್ಹ. ಕಬ್ಬಿಗೆ ಹೆಚ್ಚಿನ ಬೆಲೆ, ಸರ್‍ಕಾರಿ ಸಾಲದ ರದ್ದು, ನೀರಿಗೆ ಕಡಿಮೆ ತೆರಿಗೆ-ಇತ್ಯಾದಿ ಒತ್ತಾಯಗಳೂ ಕೂಡ ಮಂಡ್ಯ ರೈತರನ್ನು ಆಕರ್ಷಿಸಲಿಲ್ಲ. ಜುಲೈ, ಸೆಪ್ಟಂಬರ್ ೧೯೮೦ದಿಂದಾಚೆಗೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಂದು ದೊಡ್ಡ ಹೋರಾಟ ಬೆಲೆ ಏರಿಕೆ ವಿರುದ್ಧ ನಡೆಯಿತು. ಇಲ್ಲಿಯ ನಾಯಕತ್ವ ಕೂಡಾ ಲಿಂಗಾಯಿತರೇ ಪ್ರಧಾನವಾಗಿದ್ದ ನಗರ ಮಧ್ಯಮ ವರ್ಗದ್ದು. ಈ ಎಲ್ಲ ಚಳವಳಿಗಳಲ್ಲಿ ಜಾತಿಯ ಅಂಶವೊಂದೇ ಪ್ರಧಾನ ಪಾತ್ರ ವಹಿಸಿದೆ ಎಂದು ನಾನು ಹೇಳುತ್ತಿಲ್ಲ. ಅಥವಾ ಮರಳಿ ಅಧಿಕಾರ ಪಡೆಯಲು ಲಿಂಗಾಯಿತರು ಒಳಸಂಚೊಂದನ್ನು ನಡೆಸಿದ್ದಾರೆ ಎಂದೂ ನಾನು ಹೇಳುತ್ತಿಲ್ಲ. ಈ ವಿಚಾರ ಕೆಲವು ನಾಯಕರ ತಲೆಯಲ್ಲಿ ಇರಲೂ ಬಹುದು. ನನ್ನ ವಾದದ ಒಟ್ಟು ಅರ್ಥ ಹೀಗಿದೆ. ಇಡಿ ವ್ಯವಸ್ಥೆಯ ಆರ್ಥಿಕ ಅವನತಿಯ ಸನ್ನಿವೇಶದಲ್ಲಿ ಅವಕಾಶಗಳು ಕುಗ್ಗುತ್ತಿರುವ ಹೊತ್ತಿನಲ್ಲಿ, ಈ ಬೆಲೆ ಏರಿಕೆಗಳ ಸಂದರ್ಭದಲ್ಲಿ ಇದೇ ಸಾಮಾಜಿಕ ಸ್ಥಿತಿಯ ಉಳಿದ ಜಾತಿಗಳಿಗಿಂತ ಹೆಚ್ಚಾಗಿ ಬಿಸಿ ತಗಲಿರುವುದು ನಗರಗಳ ಲಿಂಗಾಯಿತ ಮಧ್ಯಮವರ್ಗ ಮತ್ತು ಕಾರ್‍ಮಿಕ ವರ್ಗಕ್ಕೆ. ಸ್ವಲ್ಪಮಟ್ಟಿಗೆ ಅವರಲ್ಲಿಯ ಮಧ್ಯಮ ವ್ಯಾಪಾರಿ, ಶ್ರೀಮಂತ ರೈತರಿಗೂ ಆರ್ಥಿಕ ಕುಸಿತ ಪರಿಣಾಮ ಬೀರಿದೆ. ಅನೇಕ ಸರ್ಕಾರಿ ಕಾರ್ಯಕ್ರಮಗಳ ಲಾಭ ಇವರಿಗೂ ಸಿಕ್ಕಿತ್ತು. ನಗರ ವರ್ಗಗಳಿಗೆ ಸೇರುವ ಆಸೆಯಿಂದಿರುವ ಬಡ ಲಿಂಗಾಯಿತರೂ ಇಲ್ಲಿದ್ದಾರೆ. +ಸುಮಾರು ೧೬ ವರ್ಷಗಳ ಕಾಲ ರಾಜ್ಯದ ಆಳ್ವಿಕೆ ಇವರ ಕೈಲಿ ಇದ್ದುದರಿಂದ ಕೆಲಸಗಳು ಮತ್ತಿತರ ಸಂಪನ್ಮೂಲಗಳ ರೂಪದಲ್ಲಿ ಕೆಲವು ವಿಶೇಷ ಅನುಕೂಲಗಳನ್ನು ಪಡೆಯುತ್ತಿದ್ದರೆ. ಅದು ಈಗ ಇಲ್ಲವಾಗಿರುವುದರಿಂದ ಪದಚ್ಯುತ ಭಾವನೆ ಇನ್ನೂ ಹೆಚ್ಚಾಗಿರಬೇಕು. ಹೀಗಾಗಿ, ಕನ್ನಡದ ಘೋಷಣೆ ಅವರಿಗಿರುವ ಬೆದರಿಕೆ, ಅವಕಾಶ ಹೀನತೆಗಳನ್ನು ವ್ಯಕ್ತಪಡಿಸುತ್ತದೆ. ಜೊತೆಗೆ ಭಾಷಿಕ ಅಲ್ಪಸಂಖ್ಯಾತರು ಮತ್ತು “ಹೊರಗಿನವ”ರಿಂದ ಕೆಲಸ, ಸಂಪನ್ಮೂಲಗಳ ಪಾಲೊಂದನ್ನು ಪಡೆಯಲು ಈ ಘೋಷಣೆ ಸಹಾಯಕ ಕೂಡಾ. ಹಿಂದುಳಿದ ವರ್ಗಗಳು ತಮ್ಮಂಥ “ಮೇಲುಜಾತಿ” (ಇವರ ಜೊತೆಗೆ ಇಲ್ಲಿ ಬ್ರಾಹ್ಮಣರು ಮತ್ತು ಒಕ್ಕಲಿಗರು ಇವರ ಜೊತೆಗಾರರು)ಗಳಿಂದ ಕಿತ್ತುಕೊಂಡದ್ದನ್ನು ಇಲ್ಲಿ ತುಂಬಿಕೊಳ್ಳಲು ನೋಡಿದ್ದಾರೆ. ಇಲ್ಲಿ ಪ್ರಶ್ನೆಯೊಂದು ಏಳಲು ಸಾಧ್ಯವಿದೆ: ಎರಡು ವರ್ಷಗಳ ಹಿಂದಿನ ಸಂಸ್ಕೃತ ವಿರೋಧಿ ಚಳವಳಿಯಲ್ಲೂ ಉತ್ತರ ಕರ್ನಾಟಕದ ಕಡೆಗೆ ಲಿಂಗಾಯಿತ ಸಾಹಿತಿಗಳು ಮತ್ತು ಅವರ ಹಿಂಬಾಲಕರು ಉಗ್ರ ನ್ರೇತೃತ್ವ ನೀಡಿದ್ದರಲ್ಲ ಎಂದು. +ಸಂಸ್ಕೃತ-ಸಂಸ್ಕೃತಿ +ಇದಕ್ಕೆ ಉತ್ತರ ಹೀಗಿದೆ. ಉಳಿದ ಭಾಗದ ಸಾಹಿತಿಗಳು ಬಹುಪಾಲು ಜನ ಬ್ರಾಹ್ಮಣರು-ಇಲ್ಲವೇ ಬ್ರಾಹ್ಮಣ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಅವರು ಶಾಲಾ ಹಂತದಲ್ಲಿ ಸಂಸ್ಕೃತವನ್ನು ಎಷ್ಟೇ ವಿರೋಧಿಸಿದರೂ, ಅಂತರಾಳದಲ್ಲಿ ಅವರಿಗೆ ಸಂಸ್ಕೃತದ ಬಗೆಗೆ ಪ್ರೇಮ ಇದ್ದೇ ಇದೆ. ಅವರು ಸಂಸ್ಕೃತವನ್ನು ಪೂರ್ಣವಾಗಿ ಉಗ್ರವಾಗಿ ತಿರಸ್ಕರಿಸಲಾರರು. ಇವರಲ್ಲಿ ಈ “ಸಂಸ್ಕೃತಿ”ಇದ್ದೇ ಇದೆ. ಆದರೆ ಸಂಸ್ಕೃತ ಅಷ್ಟು ಮಹತ್ವದ ಪಾತ್ರವನ್ನು ಲಿಂಗಾಯಿತರಲ್ಲಿ ನಿರ್ವಹಿಸಿಲ್ಲ. ಬ್ರಾಹ್ಮಣರ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆಯ ಭಾಷೆಯನ್ನಾಗಿಯೇ ಲಿಂಗಾಯಿತರು ಸಂಸ್ಕೃತವನ್ನು ಕಂಡಿದ್ದಾರೆ. ಇಷ್ಟಾದರೂ ಕೂಡಾ, ಮೊದಲಿಗೆ ಸಂಸ್ಕೃತ ವಿರೋಧಿ ಚಳವಳಿಗೆ ಉತ್ತರ ಕರ್ನಾಟಕದಲ್ಲಿ ಕನ್ನಡ ಸಾಹಿತಿಗಳ ವಲಯದಿಂದಾಚೆಗೆ ಹೆಚ್ಚು ಬೆಂಬಲ ಸಿಗಲಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಲಿಂಗಾಯಿತ ಮಠಗಳು ಸಂಸ್ಕೃತಕ್ಕೆ ತಮ್ಮ ಬೆಂಬಲ ನೀಡಿದರು. ಬಸವಣ್ಣ ಮತ್ತು ಇತರ ಶರಣರು ಬ್ರಾಹ್ಮಣ ಧರ್ಮ ಮತ್ತು ಸಂಸ್ಕೃತಿಯ ವಿರುದ್ಧ ಬಂಡಾಯವೆದ್ದರೂ, ಕ್ರಮೇಣ ಲಿಂಗಾಯತರ ಚಳವಳಿ ಹಿಂದೂಧರ್ಮದ ಚೌಕಟ್ಟಿನೊಳಗೇ ಸೇರಿಕೊಂಡಿತು. ಲಿಂಗಾಯಿತ ಮಠಾಧಿಪತಿಗಳು ಸಂಸ್ಕೃತ ಓದಲು ಕಾಶಿಗೆ ಹೋಗುತ್ತಾರೆ. ಲಿಂಗಾಯಿತರು ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ತಮ್ಮ ಜಾತಿಯ ಹೆಸರನ್ನೇ ವೀರಶೈವ ಎಂದು ಬದಲಾಯಿಸಿಬಿಟ್ಟಿದ್ದಾರಲ್ಲ. ಇದರಿಂದಾಗಿ ಲಿಂಗಾಯಿತ ಮಠಾಧಿಪತಿಗಳು ಸಂಸ್ಕೃತಕ್ಕೆ ಬೆಂಬಲ ನೀಡಿದ್ದು ಸಹಜ. +ಕೇಂದ್ರ ಉದ್ಯಮದ ಕನ್ನಡಿಗರು +ಮುಂದೆ ಕೇಂದ್ರ ಸರ್ಕಾರದ ಬೃಹತ್ ಉದ್ಯಮಗಳಲ್ಲಿಯ ಕನ್ನಡಿಗರು ಈ ಹೋರಾಟದಲ್ಲಿ ಪಾಲುಗೊಂಡದ್ದೇಕೆ ಎಂಬ ಸಮಸ್ಯೆ ಬರುತ್ತದೆ.ಕಳೆದ ವರ್ಷ ತಾನೆ ಎಲ್ಲ ಕಾರ್ಮಿಕರೂ ಒಟ್ಟಾಗಿ ತಮ್ಮ ಬೇಡಿಕೆಗಳಿಗಾಗಿ ಮಹತ್ವದ ದೀರ್ಘ ಹೋರಾಟವನ್ನೇ ನಡೆಸಿದ್ದರು. ಆದರೆ ಈಗ ಅನ್ಯ ಭಾಷಿಕ ಬಂಧುಗಳ ವಿರುದ್ಧವಾಗಿ ಕೆಲಸ, ಬಡತಿ, ಇತ್ಯಾದಿಗಳಿಗಾಗಿ ಹೋರಾಡುತ್ತಿದ್ದಾರೆ. ಅನೇಕ ದಶಕಗಳ ಕಾಲ ಕಾರ್ಮಿಕ ಹೋರಾಟವನ್ನು ಕಟ್ಟಿದ ಕಾರ್ಮಿಕ ನಾಯಕರೇಕೆ ಈ ಬೆಳವಣಿಗೆಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ? ಕಾರ್ಮಿಕ ಸೌಹಾರ್ದತೆಯ ಯಶಸ್ವೀ ಚರಿತ್ರೆಯಿದ್ದೂ ಹೀಗಾಯಿತಲ್ಲ? ಈ ಬೆಳವಣಿಗೆಯನ್ನು ನಾವು ಅರ್ಥ ಮಾಡಿಕೊಳ್ಳಲು ಅನೇಕ ಸಂಗತಿಗಳನ್ನು ಗಮನಿಸುವ ಅಗತ್ಯವಿದೆ. ೧೯೭೦ ದಿಂದಾಚೆಗೆ ಕರ್ನಾಟಕದ ಉಳಿದ ಭಾಗಗಳಂತೆ ಈ ಕಾರ್ಮಿಕ ಸಂಘಗಳಲ್ಲಿ ಕೂಡಾ ಕನ್ನಡ ದುರಭಿಮಾನೀ ಭಾವನೆ ಮತ್ತು ಕನ್ನಡಿಗರ ಏಕತೆಯ ನಿಲುವು ಬಲಗೊಳ್ಳುತ್ತಾ ಬಂದಿದೆ. ಕಳೆದ ಐದು ವರ್ಷಗಳಿಂದಂತೂ ಈ ಭಾವನೆ ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. ಇದರ ಮಹಾನ್ ಸ್ಪೋಟ ನಡೆದದ್ದು ಈಗ. ಇದರಿಂದಾಗಿ ಒಂದು ಬಗೆಯ ಸೋಲಿನ ಮತ್ತು ಹತಾಶೆಯ ಧೋರಣೆ ಕಾರ್ಮಿಕ ಸಂಘಗಳಲ್ಲಿ ಕಾಣುತ್ತಿದೆ. +ಕಳೆದ ಮಹಾನ್ ಮುಷ್ಕರದ ಸೋಲು ಅದರ ನಾಯಕರನ್ನು ಹೀಗಳೆದಿದೆ. ಕಾರ್ಮಿಕರಿಗೆ ತಾವು ಮೋಸ ಹೋದಂತೆ ಅನಿಸುತ್ತಿದೆ. ಸೋಲನ್ನು ಸ್ವೀಕರಿಸಲು ಕಾರ್ಮಿಕರು ಸಿದ್ದರಿರಲಿಲ್ಲ. ಹೀಗಾಗಿ ಶೂನ್ಯವೊಂದು ನಿರ್‍ಮಾಣವಾಯಿತು. ಈ ಶೂನ್ಯವನ್ನು ಅಲ್ಲಿಯ ಕನ್ನಡ ಸಂಘಗಳು ತುಂಬಿದವು. ಇಲ್ಲಿ ತಮಿಳರಲ್ಲಿ ಕೂಡಾ ಏಕತೆಗೆ ದಾರಿ ತೋರಿಸಿತು. (ಕನ್ನಡ ಸಂಘಗಳಲ್ಲಿ ಕೂಡಾ ಉತ್ಕಟವಾದ ಜಾತಿ ಜಗಳಗಳಿವೆ) ಇಂಥ ಆರ್ಥಿಕ ಅವನತಿಯ ಸನ್ನಿವೇಶಗಳಲ್ಲಿ ತಮ್ಮ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಲು ಬೇರೆ ಯಾವ ದಾರಿಯೂ ಅವರಿಗೆ ಕಾಣಲಿಲ್ಲ. ಕಾರ್ಮಿಕರ ಈ ಆಂತರಿಕ ಜಗಳ ಜಾತಿ, ಧರ್ಮ ಭಾಷೆಯ ರೂಪವನ್ನು ಪಡೆಯಬಲ್ಲದು. ಇದು ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕೆ ಈಗ ಭಾಷೆಯ ರೂಪದಲ್ಲಿ ವ್ಯಕ್ತವಾಗಿದೆ. ಗೋಕಾಕ್ ಚಳವಳಿ ಈ ಆಂತರಿಕ ಹೋರಾಟಕ್ಕೆ ಸ್ಪಷ್ಟ ಬೆಂಬಲವನ್ನು ನೀಡಿತು. ಉಳಿದ ಮಧ್ಯಮ ವರ್ಗ, ಅನುಕೂಲಸ್ಥ ಕಾರ್ಮಿಕ ವರ್ಗಗಳಲ್ಲಿ ಇದು ಮುಚ್ಚು ಮರೆಯಲ್ಲಿ ವ್ಯಕ್ತವಾಗುತ್ತದೆ. ಪ್ರಾಂತೀಯ ಬುದ್ಧಿಜೀವಿವರ್ಗ, ರಾಜ್ಯಸರ್ಕಾರ, ದುರಭಿಮಾನೀ ಸಂಸ್ಥೆಗಳು, ರಾಜಕಾರಣಿಗಳು ಕೂಡಾ ಈ ಕಿತ್ತಾಟವನ್ನು ಬೆಂಬಲಿಸುತ್ತಾರೆ; ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸಲು ಮಾಲೀಕರೂ ಕೂಡಾ ಪ್ರೋತ್ಸಾಹ ನೀಡುವುದುಂಟು. ಇವೆಲ್ಲದರ ಜೊತೆಗೆ, ಕಾರ್ಮಿಕ ನಾಯಕರಲ್ಲಿ ರಾಜಕೀಯ ದೃಷ್ಟಿಕೋನ ಕೊನೆಮುಟ್ಟಿ, ಮುಂದೆ ಕಾಣದಂತಾಗಿ ಈ ವರ್ಗಕ್ಕೆ ಇಳಿಯುವುದುಂಟು. ದುಡಿಯುವ ವರ್ಗದ ಏಕತೆಯ ಮೂಲಕ, ಒಗ್ಗತ್ಟಿನ ರಾಜಕೀಯ ಕ್ರಿಯೆಗಳ ಮೂಲಕ, ಈ ಸ್ಥಿತಿಯಿಂದ ಹೊರಹೋಗಲು ಸಾಧ್ಯ ಎಂಬುದನ್ನು ಅನ್ಯರು ಕಾರ್ಮಿಕರಿಗೆ ತಿಳಿಸಿಕೊಡುವುದಿಲ್ಲ. ಈ ಆಂತರಿಕ ಹೋರಾಟದ ಬಿಕ್ಕಟ್ಟು ಅಷ್ಟಾಗಿ ಬಡ ಕಾರ್ಮಿಕರ ಮೇಲೆ ಪ್ರಭಾವ ಬೀರುವುದಿಲ್ಲ. ಏಕೆಂದರೆ ತೀರಾ ಮೂಲಭೂತ ಬೇಡಿಕೆಗಳಿರುವ ಇವರಿಗೆ, ತಮ್ಮ ಜೊತೆ ಕೆಲಸಗಾರರ ಜೊತೆಗೆ ಕಿತ್ತಾಡುವುದರಿಂದ ಏನೂ ಸಿಗುವುದಿಲ್ಲ. ಈ ದೇಶದಲ್ಲಿ ಅಂಥ ಸ್ಥಿತಿ ಇನ್ನೂ ಬಂದಿಲ್ಲ. +ಡಾ|| ರಾಜ್ ಪ್ರವೇಶ +ಡಾ|| ರಾಜ್‌ಕುಮಾರ್ ಪ್ರವೇಶದಿಂದಾಗಿ ಈ ಚಳವಳಿ ಸಾಮಾಜಿಕ ನೆಲೆಗಟ್ಟು ವಿಸ್ತರಿಸಿದೆ. ಡಾ|| ರಾಜ್ ಮತ್ತು ಇತರ ಚಿತ್ರನಟರ ಅಭಿಮಾನಿಗಳಾದ ಮಹಿಳೆಯರು ಹಳ್ಳಿ ನಗರಗಳ ಬಡವರು ಚಳವಳಿಯ ಚೌಕಟ್ಟಿನೊಳಗೆ ಪ್ರವೇಶಿಸಿದ್ದಾರೆ. ಬಹಳಷ್ಟು ಜನ ಬರುವುದೇ ಡಾ||ರಾಜ್‌ರನ್ನು ನೋಡಲು, ಹಿಂಬಾಲಿಸಲು, ಕನ್ನಡ ಚಿತ್ರಗಳಿಗೆ ಆಧ್ಯತೆ ನೀಡಬೇಕೆಂದು ಎಲ್ಲಾ ಕಡೆಗಳಲ್ಲೂ ಡಾ|| ರಾಜ್ ಒತ್ತಾಯಿಸಿದ್ದಾರೆ. “ಕರ್ನಾಟಕದಲ್ಲಿ ಮಾತ್ರ ಬೇರೆ ಭಾಷೆಯ ಚಿತ್ರಗಳನ್ನು ತೋರಿಸಲಾಗುತ್ತಿದೆ. ಆದರೆ, ಕನ್ನಡ ಚಿತ್ರಗಳು ಮಾತ್ರ ಹೊರಗೆಲ್ಲೂ ನೆಡೆಯುವುದಿಲ್ಲ” ಎಂಬ ಮಾತೂ ಕೇಳಿ ಬಂತು. ಈ ಹೇಳಿಕೆ ನಿಜವಲ್ಲವೆಂದು ಸುಲಭವಾಗಿ ತೋರಿಸಬಹುದು. ಅಲ್ಲದೆ ಈ ಚಳವಳಿಗೆ ಅವರು ಧುಮುಕಿದುದರ ಹಿಂದೆ ಸ್ವಂತ ಹಿತ ಎಷ್ಟಿದೆ ಎಂಬುದೂ ಇದರಿಂದ ವ್ಯಕ್ತವಾಗುತ್ತದೆ. ಆದರೆ, ಈ ಚಳವಳಿ ತೀವ್ರಗೊಂಡ ಮೇಲೆ ಮಧ್ಯೆ ಏಪ್ರಿಲ್‌ನಲ್ಲಿ ಅವರು ಧುಮುಕಿದರು ಎಂಬುದನ್ನು ಇಲ್ಲಿ ಹೇಳಬೇಕಾಗಿದೆ. ಏ. ಕೆ. ಸುಬ್ಬಯ್ಯ ಡಾ|| ರಾಜ್‌ಗೆ ಚಳವಳಿಗೆ ಧುಮುಕಲು ನಿರಂತರವಾಗಿ ಬಹಿರಂಗ ಆಹ್ವಾನ ನೀಡುತ್ತಲೇ ಇದ್ದರು. ನಂತರ ಧಾರವಾಡದ ಸಾಹಿತಿಗಳೂ ಆಮಂತ್ರಣ ನೀಡಿದರು. ಮೊದಲಿಗೆ ಚಳವಳಿಯನ್ನು ಬೆಂಬಲಿಸಿ ಡಾ||ರಾಜ್ ಹೇಳಿಕೆ ನೀಡಿದರು. ಧಾರವಾಡದ ಸಾಹಿತಿಗಳಿಗೆ ಇದು ಸಾಲದೆ ಹೋದದ್ದರಿಂದ, ನೇರವಾಗಿ ಚಳವಳಿಯಲ್ಲೇ ಧುಮುಕಿದರು. ಬಹುಶಃ ತಮ್ಮ ಹೆಸರಿನ ಬಗೆಗೆ ಕಾಳಜಿಯಾಗಿರಬೇಕು. ಇಂಥ ಚಳವಳಿಯೊಂದಕ್ಕೆ ಇಳಿಯಲಿಲ್ಲ ಎಂದು ಜನ ಮುಂದೆ ಕೈ ತೋರಿಸಿಯಾರು ಎಂಬ ಯೋಚನೆ. ಒಂದು ಸಾರಿ ಚಳವಳಿಗೆ ಇಳಿದ ಮೇಲೆ ಅದರ ಅನುಕೂಲಗಳು ತಿಳಿದವು. ಹಿಂದೀ ಮತ್ತಿತರ ಭಾಷಾ ಚಿತ್ರಗಳ ವಿರುದ್ಧ ಹೋರಾಡುವಾಗ ಇದು ಅಪಾರ ನೆರವಿಗೆ ಬರುತ್ತದೆ ಎಂಬುದು ಕಾಣದೇ ಹೋಗಲಿಲ್ಲ. ನಂತರ ಜನ ಏನನ್ನುತ್ತಾರೊ ಎಂಬ ಹೆದರಿಕೆಗೆ ಇನ್ನಷ್ಟು ಜನ ಚಿತ್ರ ತಾರೆಯರು ಬಂದರು. ಇವರಾದ ಮೇಲೆ ಈ ಅವಕಾಶವನ್ನು ನೋಡಿದ, ಕನ್ನಡ ಚಿತ್ರ ನಿರ್ಮಾಪಕರು, ಹಂಚಿಕೆದಾರರು ಇಳಿದರು. ಈಗಾಗಲೆ ಅವರಿಗೆ ಯಶಸ್ಸಿನ ರುಚಿ ಸ್ವಲ್ಪ ಸಿಕ್ಕಿದೆ. +ಸ್ವಾರಸ್ಯ +ಪ್ರಾಂತೀಯ ಬಂಡವಾಳಿಗರು ಅಖಿಲ ಭಾರತೀಯ ಮತ್ತು ಇತರ ಪ್ರದೇಶಗಳ ಬಂಡವಾಳಿಗರ ವಿರುದ್ಧ ಹೋರಾಡಲು ಭಾಷಾ ಸಮಸ್ಯೆಗಳನ್ನು ಉಪಯೋಗಿಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆಯಷ್ಟೆ. ಈ ಕನ್ನಡ ನಿರ್ಮಾಪಕರು ಹಂಚಿಕೆದಾರರೆಲ್ಲಾ ಕನ್ನಡ ಭಾಷಿಕರಲ್ಲ ಎಂಬುದೂ ಉಳಿದ ಭಾಷಾ ಚಿತ್ರಗಳ ಹಂಚಿಕೆದಾರರೆಲ್ಲರೂ ಕನ್ನಡೇತರರಲ್ಲ. ಇದು ಸ್ವಾರಸ್ಯಕರ ಸಂಗತಿ. ಇಲ್ಲಿ ಸಂಬಂಧಪಟ್ಟ ಜನ ಯಾವ ಭಾಷೆ ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ಅವರು ಯಾವ ಭಾಷೆ ಚಿತ್ರ ತಯಾರಿಸುತ್ತಾರೆ, ವಿತರಣೆ ಮಾಡುತ್ತಾರೆ ಎಂಬುದು ಮುಖ್ಯ. ಪ್ರಾಂತೀಯ ಬಂಡವಾಳಿಗರಿಗೆ ಉಳಿದ ಅಖಿಲಭಾರತೀಯ ಮತ್ತು ಇತರ ಪ್ರಾಂತೀಯ ಬಂಡವಾಳಿಗರ ಜೊತೆ ಯಾವ ರೀತಿಯ ಸಂಬಂಧವಿರುತ್ತದೆ ಎಂಬುದರ ಮೇಲೆ ಈ ರೀತಿಯ ಚಳವಳಿಗಳನ್ನು ಬೆಂಬಲಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಯಿತು. ಈ ಅಂಶಕ್ಕಿಂತ ಬೇರೆಯಾದ ಯಾವ ಸಾಕ್ಷ್ಯವೂ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕಾಣಿಸಿಕೊಂಡಿಲ್ಲ. +ಇನ್ನು ಕನ್ನಡ ಸಾಹಿತಿಗಳು ಈ ಚಳವಳಿಯಲ್ಲಿ ಪಾಲುಗೊಂಡಿದ್ದಕ್ಕೆ ನಾಯಕತ್ವ ವಹಿಸಿದ್ದಕ್ಕೆ ಅನೇಕ ಕಾರಣಗಳಿವೆ. ನಗರದ ಮಧ್ಯಮವರ್ಗದ ಸದಸ್ಯರಾಗಿ ಇವರ ಗ್ರಹಿಕೆ ಮತ್ತು ಸಮಸ್ಯೆಗಳನ್ನು ಇದಕ್ಕೊಂದು ಕಾರಣ ಎಂಬುದನ್ನು ಈ ಹಿಂದೆಯೇ ಗುರುತಿಸಲಾಗಿದೆ. ಇದರ ಜೊತೆಗೆ, ಅನೇಕ ಸೈದ್ಧಾಂತಿಕ ಕಾರಣಗಳೂ ಇವೆ. +ಚಳವಳಿಯಲ್ಲಿ ಭಾಗವಹಿಸಲು ಅವರನ್ನು ಪ್ರೇರೇಪಿಸಿದ ವೈಚಾರಿಕ ನೆಲೆಗಳನ್ನು ನಾನು ಸಾಮ್ಪ್ರದಾಯಿಕ ತಾತ್ವಿಕತೆಯ ಏಕತಾವಾದ ಎಮ್ದು ಕರೆಯುತ್ತೇನೆ. (ದಿ ಕನ್ಸ್‌ರ್ವೇಟಿವ್ ಫಿಲಾಸಫಿ ಆಫ್ ಇಂಟೆಗ್ರೇಶನ್) ಇದು ಕನ್ನಡ ಸಾಹಿತಿಗಳ ಮತ್ತು ಚಳವಳಿಯ ಪ್ರಧಾನ ಸಿದ್ಧಾಮ್ತ. ದುಡಿಯುವ ಜನತೆಯ ಮೇಲೆ ಪರಿಣಾಮ ಉಮ್ಟು ಮಾಡಿದ ಸಾಮಾಜಿಕ, ಆರ್ಥಿಕ, ರಾಜಕೀಯ ಸಮ್ಗತಿಗಳ ಕಡೆಗೇಕೆ ಇವರು ಕುರುಡಾಗಿದ್ದಾರೆ ಎಮ್ಬುದನ್ನು ಇದು ವಿವರಿಸಬಲ್ಲದು. ಎರಡನೆಯ ಸಮ್ಗತಿ ಎಮ್ದರೆ, ಕನ್ನಡ ಸಾಹಿತಿಗಳಿಗೆ ಭಾಷೆಯ ಬಗೆಗೆ ಹಿಡಿದಿರುವ ಗೀಳು, ಭಾಷೆ ಸಾರ್ವಭೌಮವಾದದ್ದು ಎಮ್ಬ ಗ್ರಹಿಕೆ ಇವರದು. ಸಮ್ಪ್ರದಾಯ ಶರಣರ ಭಾವೈಕ್ಯತಾವಾದ ಎಮ್ದಿನಮ್ತೆ ಬರದೆ ಇಲ್ಲಿ ಭಾಷೆಯ ರೂಪದಲ್ಲಿ ಬಂದಿರುವುದನ್ನು ಮತ್ತು ಅಲ್ಪಸಂಖ್ಯಾತರ ಬಗೆಗೆ ಇರುವ ಅಲಕ್ಷ್ಯವನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ. ಕನ್ನಡ ಸಾಹಿತಿಗಳಲ್ಲಿ ದುಡಿಯುವ ಜನತೆಯ ಸಮಸ್ಯೆಗಳ ಬಗೆಗೆ ಕಾಳಜಿ ಇರುವ ಸಾಹಿತಿಗಳೂ ಕೂಡಾ ಈ ಚಳವಳಿಗೇಕೆ ಇಳಿದರು ಎಂಬ ಅಂಶವನ್ನು ಕೂಡಾ ಈ ಭಾಷಾ ಧೋರಣೆ ವಿವರಿಸುತ್ತದೆ. ರಾಮಮನೋಹರ ಲೋಹಿಯಾರ ಅನುಯಾಯಿಗಳಾದ ಈ ಲೇಖಕರು ವ್ಯವಸ್ಥೆಗೆ ಸೇರದಿರುವ, ಅದಕ್ಕೆ ವಿರುದ್ಧವಾಗಿರುವ ಜನ. ಹೀಗಿದ್ದೂ ಈ ಗುಂಪು ಚಳವಳಿಗೆ ಇಳಿದಿರುವ ಕಾರಣವೆಂದರೆ, ದುಡಿಯುವ ಜನತೆಯ, ಅವರ ಸಂಘಟನೆಗಳ ವಾಸ್ತವ ಸಂಪರ್ಕ ಇಲ್ಲದಿರುವುದು. ರಾಜಕಾರಣದ ಆಳವಾದ ಗ್ರಹಿಕೆ ಮತ್ತು ಭಾಗವಹಿಸುವಿಕೆಗಳೆರಡೂ ಕಡಿಮೆಯಾದಗಲೂ ಹೀಗಾಗುತ್ತದೆ. ಅವರು ಯಾವಾಗಲೂ ಅವರ ಕಲ್ಪನೆಯ “ಪೋಷಕರ” ವಿರುದ್ಧ – ಇಂಗ್ಲಿಷ್, ಇಂಗ್ಲಿಷ್ ಕಲಿತವರ, ಮೇಲುಜಾತಿ, ಸಂಸ್ಕೃತ – ಭಾಷೆ ಮತ್ತು ಸಾಹಿತ್ಯದ ವಲಯಗಳಲ್ಲಿ ಮಾತ್ರ ಹೋರಾಟ ಮಾಡಿದವರು. ಗಾಂಧಿ ಉಪ್ಪು, ಚರಕ, ಖಾದಿಗಳಿಗೆ ನೀಡಿದ ಸಾಂಕೇತಿಕ ಶಕ್ತಿಗಳ ಹಾಗೆ ಲೋಹಿಯಾ ಕೂಡಾ ತಮ್ಮ ಪ್ರತಿಭಟನೆಯ ಸಂಕೇತಗಳನ್ನು ಕಲ್ಪಿಸಿಕೊಂಡಿದ್ದರು. ಇಂಗ್ಲಿಷ್, ಇಂಗ್ಲಿಷರ ಪ್ರತಿಮೆಗಳನ್ನು ಲೋಹಿಯಾ ಸಂಕೇತಿಸಿದ್ದು ಅತ್ಯಂತ ವಿಶಾಲವಾದ ರೀತಿಯಲ್ಲಿ. ಇವುಗಳನ್ನು ಇಲ್ಲಿ ಅಕ್ಷರಶಃ ಪಾಲಿಸಿ ಅವುಗಳ ವ್ಯಾಪ್ತಿಯನ್ನು ಕುಗ್ಗಿಸಲಾಯಿತು. ಪರಮೋಚ್ಚವೆಂಬಂತೆ ಅವನ್ನು ಸ್ವೀಕರಿಸಿದರು. ಹೀಗಾಗಿ, ಅವುಗಳ ಸಾಮಾಜಿಕ, ರಾಜಕೀಯ ಅರ್ಥವೇ ಹೊರಟುಹೋಯಿತು. ಲೋಹಿಯವಾದಿಗಳು ತಮ್ಮ ಭಾಷೆಯಾದ ಕನ್ನಡಕ್ಕೆ ಸಾರ್‍ವಭೌಮತ್ವ ನೀಡಿದ್ದರಿಂದ, ಅಲ್ಪಸಂಖ್ಯಾತರ ಬಗ್ಗೆ ಕುರುಡಾಗಿಬಿಟ್ಟರು. ಆದರೆ, ಕನ್ನಡ ಸಾಹಿತಿಗಳಲ್ಲಿ ಇದಕ್ಕೆ ವಿರೋಧ ಕೂಡಾ, ಅದು ಎಷ್ಟೇ ಸೀಮಿತವಾಗಿರಲಿ, ಲೋಹಿಯಾವಾದಿಗಳಿಂದಲೇ ಬಂದದ್ದು ಎಂಬುದನ್ನು ಕೂಡಾ ಇಲ್ಲಿ ದಾಖಲಿಸಬೇಕಾಗಿದೆ. ಈ ಚಳವಳಿಯ ಅತಿರೇಕದ ಮತ್ತು ಸಮೂಹ ಸನ್ನಿಯ ರೂಪಗಳಿಗೆ ಅವರು ವಿರೋಧ ಸೂಚಿಸಿದರು. ಶೋಷಿತ ಜನತೆಯ ಪರವಾಗಿರುವ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಗಳಲ್ಲೂ, ಈ ಚಳವಳಿಯಿಂದಾಗಿ ಭಿನ್ನಾಬ್ನ್ಹಿಪ್ರಾಯಗಳೊ, ಪ್ರತಿಭಟನೆಗಳು ಹುಟ್ಟಿಕೊಂಡವು. ಕೆಲವರು ಬಹಿರಂಗವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಆದರೆ, ಹೆಚ್ಚು ಜನ ಆ ಸಂಘಟನೆಗಳ ಒಳಗೇ ತಮ್ಮ ಭಿನ್ನಾಭಿಪ್ರಾಯ ತೋರಿಸಿದರು. ಈ ಎರಡೂ ಸಂಘಟನೆಗಳಲ್ಲಿ ಲೋಹಿಯಾವಾದಿಗಳು, ,ಮಾರ್ಕ್ಸಿಸ್ಟರು, ಇತತ ಎಡ ಪಂಥೀಯರು ಇದ್ದಾರೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ. +ಈ ಚಳವಳಿ, ಅದರ ಸಿದ್ಧಾಂತಗಳ ಬಗ್ಗೆ ಭಿನ್ನಾಭಿಪ್ರಾಯ, ಸ್ಪಷ್ಟ ವಿರೋಧವಿರುವ ಅನೇಕ ಜನ ಕನ್ನಡ ಲೇಖಕರೇಕೆ ಸಾರ್ವಜನಿಕವಾಗಿ ಮಾತನಾಡಲಿಲ್ಲ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಕೆಲವರಿಗೆ ಇಷ್ಟವಿಲ್ಲದಿದ್ದರೂ ಬಂಧನಕ್ಕೊಳಗಾಗುವಂತೆ ಕೇಳಲಾಯಿತು. ಮುಂದೆ ಜನ ತಮ್ಮನ್ನು ಬೆರಳು ತೋರಿಸಿಯಾರು ಎಂಬ ಭಯ.ತಮ್ಮ ಮಾನವೀಯ ಮತ್ತು ಬೌದ್ಧಿಕ ಹೊಣೆಯನ್ನು ಬಿಟುಕೊಟ್ಟ ಈ ಜನರನ್ನು ಹೇಡಿಗಳು ಎಂದೇ ಕರೆಯಬೇಕಾಗಿದೆ. ಹೀಗೆ ಭಿನಾಭಿಪ್ರಾಯವಿದ್ದ ಜನರೆಲ್ಲಾ ಧೈರ್‍ಯವಾಗಿ ತಮ್ಮ ವಿಚಾರವನ್ನು ಹೇಳಿದ್ದರೆ, ಚಳವಳಿಗೆ ಈಗ ಸಿಕ್ಕಿರುವ ಮಾನ್ಯತೆ ಇರುತ್ತಿರಲಿಲ್ಲ. +ಇವರೇ ಅಲ್ಲದೆ ಇನ್ನೂ ಕೆಲವು ಜನ ವಿಶ್ವಾಸಘಾತಕರೂ ಇಲ್ಲಿದ್ದಾರೆ. ಬೇರೆ ಭಾಷೆಗಳನ್ನು ಮಾತನಾದುವ ಜನರಾಗಿದ್ದೂ, ತಕ್ಷಣ ಚಳವಳಿಗೆ ಧುಮುಕಿ ಕನ್ನಡ ಭಾಷಿಕರಿಗಿಂತ ಉಗ್ರ ವೀರಾವೇಶವನ್ನು ತೋರಿಸಿದ ಜನ ಇವರು. ಕೆಲವರಂತು ಸಾರ್ವಜನಿಕವಾಗಿ ತಮ್ಮ ತಮ್ಮ ಮಾತೃಭಾಷೆಗಳನ್ನು ಬಿಟ್ಟಿದ್ದೇವೆಂದೂ (ಬಹ ಸಾರಿ ಇದು ಸುಳ್ಳು) ಕನ್ನಡ ಮುಖ್ಯ ಧಾರೆಗೆ ಸೇರಿದವರೆಂದೂ ಘೋಷಿಸಿದರು. ಕೆಲವು ಸಾರಿ ಈ ರೀತಿಯ ಧೋರಣೆ ನಿಜವಾದ ಅಭದ್ರತೆ, ಎಲ್ಲರೊಳಗೊಂದಾಗಿ ಒಪ್ಪಿಗೆ ಪಡೆಯಬೇಕೆಂಬ ಆಸೆಯಿಂದ ಹುಟ್ಟುತ್ತದೆ. ಆದರೆ, ಇದು ಸಾಕಷ್ಟು ಸಾರಿ, ತತ್ವಹೀನ ಸಮಯಸಾಧಕತನ, ಆರ್‍ಯಾಕರಣಕ್ಕೆ ಒಳಗಾಗಿ, ನಾಜಿ ಪಕ್ಷಕ್ಕೆ ಸೇರಿದ ಯಹೂದಿಗಳಿಗಾದ ದುರ್ಗತಿಯನ್ನು ಇವರು ಯೋಚಿಸಿದರೆ ಒಳ್ಳೆಯದು. ಕಡೆಯದಾಗಿ, ಅತಿರೇಕದ ಘೋಷಣೆಗಳನ್ನು ನೀಡುವಲ್ಲಿ ಕನ್ನಡ ಸಾಹಿತಿಗಳ ನಡುವೆ ನಡೆದ ಸ್ಪರ್ಧೆಯನ್ನು ಇಲ್ಲಿ ಹೇಳಲಾಗಿದೆ. ಬೇರೊಬ್ಬ ಇನ್ನೂ ಹೆಚ್ಚಿನ ಕನ್ನಡ ಪ್ರೇಮದ ಘೋಷಣೆ ಹಾಕಿ ಜನಪ್ರಿಯನಾಗಿಬಿಟ್ಟರೆ? ಈ ಆತಂಕವೇ ಪೈಪೋಟಿಯ ಪ್ರೇರಣೆ. +ಇಂಥ ಕ್ರಿಯೆಗಳ ಹಿನ್ನೆಲೆಯಲ್ಲಿದ್ದ ಈ ಏಕತಾವಾದದ ಸ್ವರೂಪವಾದರೂ ಏನು? ಅದು ಭಾಷೆಯ ರೂಪವನ್ನು ಪಡೆದಿದ್ದಾದರೂ ಏಕೆ? ಈ ಸಿದ್ಧಾಂತ ಜನತೆ, ಸಂಸ್ಕೃತಿ ಮತ್ತು ಪ್ರಭುತ್ವದ ಅಖಂಡ ಏಕತೆಯ ಕನಸು ಕಾಣುತ್ತದೆ. ಸಾಂಪ್ರದಾಯಿಕ ಸಂಸ್ಕೃತಿ, ಮೌಲ್ಯಗಳ ಪುನರ್ ಪ್ರತಿಷ್ಟಾಪನೆಯ ನೆಲೆಯ ಮೇಲೆ ಈ ಕಾರ್‍ಯ ನಿಂತಿರುತ್ತದೆ. ಹೀಗಾಗಿ, ಈ ಸಿದ್ಧಾಂತ ಎಲ್ಲ ಜನರ ಅಥವಾ ಭಾಷೆಯ ನೆಲೆಗಟ್ಟನ್ನು ಆಧರಿಸಿದ ಹೊಸ ಸೌಹಾರ್ದತೆಯನ್ನು ಕಟ್ಟಲು ಯತ್ನಿಸುತ್ತದೆ. ಸ್ವತಃ ಗೋಕಾಕ್ ವರದಿಯನ್ನೇ ಈ ಸಿದ್ಧಾಂತ ರೂಪಿಸಿದೆ. +ಸೌಹಾರ್ದ ಸೂತ್ರ +ಈ ಹೇಳಿಕೆಯ ಸಮರ್ಥನೆಗಾಗಿ ಗೋಕಾಕ್ ವರದಿಯ ಕೆಲವು ಭಾಗಗಳನ್ನೇ ನೋಡಬಹುದು. ಪ್ರಾದೇಶಿಕ ಭಾಷೆಯನ್ನು ಕುರಿತ ಭಾಗಗಳನ್ನೇ ನೋಡಬಹುದು. ಕರ್ನಾಟಕದಲ್ಲಿಯ ಭಾವೈಕ್ಯವನ್ನು ಕುರಿತು ಈ ಹೇಳಿಕೆ ಬರುತ್ತದೆ: ಒಂದು ಭಾಷೆಯನ್ನಾಡುವ ಜನ ಏಕಮೇವವಾದ ರಾಜ್ಯದ ಆಡಳಿತಕ್ಕೆ ಓಳಪಟ್ಟಾಗ ಆಡಳಿತ ಸುಗಮ ಹಾಗೂ ಪ್ರಗತಿಪರವಾಗಿ ಅದರಲ್ಲಿ ತುಂಬಾ ಹೊಂದಾಣಿಕೆಯಿರುತ್ತದೆಂಬುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹೊಂದಾಣಿಕೆಯನ್ನು ಇನ್ನಷ್ಟು ಪ್ರಬಲವಾಗಿಸಲು ಆ ಜನರ ಒಂದೇ ಆಡಳಿತದಲ್ಲಿ ಅಂತರ್ಗತವಾಗಿರುವ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸಗಳು ಬಹಳ ಸಹಾಯವಾಗುತ್ತವೆ”. ವರದಿ ಮುಂದುವರಿದು ಅಲ್ಪಸಂಖ್ಯಾತರ ಬಗ್ಗೆ ಹೀಗೆ ಹೇಳುತ್ತದೆ: “ಅಲ್ಪಸಂಖ್ಯಾತರು…. ಈ ತತ್ವಗಳನ್ನು ಪಾಲಿಸದೆ ಒಂದು ದ್ವೀಪದಂತೆ ಕನ್ನಡ ಜಲಾಶಯದಲ್ಲಿ ಇರಲು ಬಯಸಿದಾಗ ವಿರಸವೇಳುತ್ತದೆ; ಇದರಿಂದ ಸಹಜೀವನದ ಹಾಗೂ ಭಾವೈಕ್ಯತೆಯ ಬಲವು ಕುಗ್ಗುತ್ತದೆ. ….ಕರ್ನಾಟಕದಲ್ಲಿ ಬಂದು ನೆಲೆಸಿದ ಅಲ್ಪಸಂಖ್ಯಾತರು ………….. ಇನ್ನೂ ತಾವು ತಮ್ಮ ಭಾಷಾ ರಾಜ್ಯದಲ್ಲಿಯೇ ಇರುವಂತೆ ವ್ಯವಹರಿಸುತ್ತಾರೆ. ಇದು ಉಭಯತ್ರಯರಿಗೂ ಕ್ಷೇಮಕರವಲ್ಲ” “ರಾಜ್ಯದಲ್ಲಿ ನೆಲೆಸಿದ ಎಲ್ಲ ಜನಕ್ಕೆ ರಾಜ್ಯ ಭಾಷೆಯು ಕಡ್ಡಾಯವಾದ ಭಾಷೆಯಾಗಿ ಪಠ್ಯಕ್ರಮದಲ್ಲಿರುವುದು ಯುಕ್ತವೂ, ನ್ಯಾಯವೂ ಆಗಿದೆ….. ಕರ್ನಾಟಕ ರಾಜ್ಯದಲ್ಲಿ ನೆಲೆಸಿದವರು – ಅವರು ಎಲ್ಲಿಂದಲೇ ಬಂದಿರಲಿ – ಕನ್ನಡಿಗರಾಗುವುದು ಅವರ ದೃಷ್ಟಿಯಿಂದಲೇ ಅವಶ್ಯವಾಗಿದೆ. ಹತ್ತು ವರ್ಷಗಳಿಗಿಂತ ರಾಜ್ಯದಲ್ಲಿ ನೆಲೆಸಿದವರು ಕನ್ನಡಿಗರೆಂದೇ ಅರ್ಥ. ಅವರ ಭವಿಷ್ಯವೂ ಕನ್ನಡಿಗರ ಭವಿಷ್ಯವೇ ಆಗುತ್ತದೆ.” +ಭಾಷೆ – ರಾಜ್ಯ +ರಾಷ್ಟ್ರೀಯ ಏಕತೆಯನ್ನು ಕುರಿತು ಅದರ ನಿಲುವು ಹೀಗಿದೆ: “ರಾಷ್ಟ್ರದ ದೃಷ್ಟಿಯಿಂದ ಏಕತೆಯನ್ನು ಹೆಚ್ಚು ಸುಗಮವಾಗಿ ಸಾಧಿಸಲೆಂದು ಭಾರತದಲ್ಲಿ ಭಾಷಾ ರಾಜ್ಯಗಳ ನಿರ್ಮಾಣವಾಗಿದೆ. ತಮ್ಮದೇ ಆದ ಭಾಷೆ, ಸಂಸ್ಕೃತಿಯ ಪರಂಪರೆ, ಇತಿಹಾಸದ ಅನನ್ಯತೆ ಹೀಗೆ ಪ್ರತಿಯೊಂದು ಭಾಷಾ ರಾಜ್ಯವೂ ತನ್ನದೇ ವ್ಯಕ್ತಿತ್ವನ್ನು ಪಡೆದಿದೆ. ಇಂತಹ ಅನೇಕ ವ್ಯಕ್ತಿತ್ವಗಳು; ವಿವಿಧ ರಾಗಗಳು ಮೇಳದ ಸಂಗೀತದಲ್ಲಿ ಮಿಲಿತವಾಗುವಂತೆ ಭಾರತೀಯ ರಾಷ್ಟ್ರ ಪುರುಷನ ವ್ಯಕ್ತಿತ್ವದಲ್ಲಿ ಒಂದು ಸಮೃದ್ಧ ಏಕತೆಯನ್ನು ಪಡೆಯುತ್ತವೆ. ಈ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೇ ಭಾಷಾ ರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆ ಇದೆ. ಪ್ರಾಂತೀಯತೆಯ ಹೆಸರಿನಲ್ಲಿ ನಾವು ರಾಷ್ಟ್ರೀಯತೆಯನ್ನು ಸಂಕುಚಿತಗೊಳಿಸಬಾರದು. ಅದೇ ರೀತಿಯಲ್ಲಿ ರಾಜ್ಯದ ವ್ಯಕ್ತಿತ್ವವನ್ನೊಡೆದು ರಾಷ್ಟ್ರೀಯತೆಯ ಕಲ್ಪನೆಗೆ ಒಂದು ಕೃತಿಮ ವಿಶಾಲತೆಯನ್ನು ತಂದೊಡ್ಡುವವೆಂದು ತಿಳಿಯಬಾರದು” ರಾಜ್ಯ ಮತ್ತು ಭಾಷೆಗಳ ನಡುವಣ ಸಂಬಂಧವನ್ನು ಕುರಿತ ಮಾತುಗಳು ಇಲ್ಲಿವೆ: “ರಾಜ್ಯಭಾಷೆಗೆ ರಾಜ್ಯದಲ್ಲಿ ಪ್ರಭುತ್ವ ಕಲ್ಪಿಸಿ ಒಂದು ರಾಜ್ಯದ ವ್ಯಕ್ತಿತ್ವವನ್ನು ಪೋಷಿಸಿದಂತೆ. ದೇಶಕ್ಕೆ ಹಿಂದಿಯನ್ನು ಅಂತರರಾಜ್ಯ ಸಂಪರ್ಕ ಭಾಷೆಯನ್ನಾಗಿ ಮಾಡಿ ಮತ್ತು ಇಂಗ್ಲಿಷನ್ನು ಸಂಪರ್ಕ ಭಾಷೆಯನ್ನಾಗಿ ಮಾಡಿ ಕೇಂದ್ರ ಸರ್ಕಾರವು ದೇಶದ ಏಕಮೇವತೆಯನ್ನು ರಕ್ಷಿಸುವ ಪ್ರಯತ್ನದಲ್ಲಿದೆ. …… ಒಟ್ಟಾರೆ ಈ ವಿಷಯದಲ್ಲಿ ನಾವು ಅನುಸರಿಸಬೇಕಾದ ಧೋರಣವಿಷ್ಟು! ನಡುನಡುವೆ ಎತ್ತರದ ಗೋಡೆಗಳಿದ್ದು ದೇಶದ ಏಕತೆಗೆ ಭಂಗ ತಂದಿರಬಾರದು. ಅದರ ಜೊತೆಗೆ ಒಂದಿಲ್ಲೊಂದು ನೆವದಿಂದ ಒಂದು ರಾಜ್ಯದ ಭದ್ರತೆಗೆ ಘಾತುಕವಾಗುವ ಧೋರಣೆಗಳಾಗಲೀ, ವರ್ಗಗಳಾಗಲೀ ತಲೆಯೆತ್ತಿರಬಾರದು”. +ಬಹುಸಂಖ್ಯಾತರ ಭಾಷೆಯ ಮೂಲಕವಾಗಿ ಜನತೆ ಮತ್ತು ಸಂಸ್ಕೃತಿಯನ್ನು ಪ್ರಭುತ್ವದ ಜೊತೆಗೆ ಏಕಗೊಳಿಸುವ ಆಶಯವಾದರೂ ಏಕೆ? ಈ ಹಿನ್ನೆಲೆಯಲ್ಲಿ ಪ್ರಾಂತ ಮತ್ತು ರಾಷ್ಟ್ರಗಳ ಹಂತದಲ್ಲಿ ಬಹುಸಂಖ್ಯಾತ ಭಾಷೆಗಳಿಗೆ ಅಧಿಕೃತ ಭಾಷೆಗಳ – ಕನಡ ಮತ್ತು ಹಿಂದಿ – ಪಟ್ಟ ನೀಡಿ ಪ್ರಭುತ್ವದ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಈ ಆಶಯ ಮೂಲವನ್ನು ಹುಡುಕಬೇಕಾಗಿದೆ. +ಈ ಆಸೆಯ ಮೂಲ ಕಾರಣ ಇರುವುದು ಪ್ರಭುತ್ವ ಮತ್ತು ಸೆಂಟ್ರಸ್ಟ್ ರಾಜಕೀಯ ಪಕ್ಷಗಳು ತಮ್ಮ ನ್ಯಾಯ ಬದ್ಧತೆಯನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ. ಕಾಂಗೈ, ಲೋಕದಳ, ಭಾ.ಜ.ಪ., ಎ.ಡಿ.ಎಂ.ಕೆ. ಮತ್ತು ಇನ್ನಿತರ ಪಕ್ಷಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ದುಡಿಯುವ ಜನಕ್ಕೆ ತಮ್ಮ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ನಿರಕ್ಷರತೆ ಈ ರಾಜಕೀಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಪರಿಹಾರವಾಗುವುದಿಲ್ಲ ಎಂಬ ಅರಿವು ಮೂಡತೊಡಗಿರುವುದೇ ಈ ಮಾನ್ಯತೆಯ ನಾಶಕ್ಕೆ ಕಾರಣ. ರಾಷ್ಟ್ರೀಯ ರಾಜಕಾರಣಿಗಳು ನಾಡಿನ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಲ್ಲರು; ಜನತೆಯ ಕಷ್ಟವನ್ನು ಪರಿಹರಿಸಬಲ್ಲರು ಎಂಬ ೧೯೫೦ರ ಆಶೆ ನಾಶವಾಗತೊಡಗಿದೆ. ಈ ಬಂಡವಾಳಶಾಹಿ ಪಥದ ಫಲಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶ್ರೀಮಂತರಿಗೇಕೆ ಮಾತ್ರ ದಕ್ಕುತ್ತಿದೆ ಎಂಬ ಸತ್ಯ ಅವರಿಗೆ ತಿಳಿದು ಬಂದಿದೆ. ಈ ಶ್ರೀಮಂತ, ಆಸ್ತಿವಂತ ವರ್ಗಗಳು ಎಲ್ಲ ರೀತಿಯ ಕುತಂತ್ರಗಳಿಂದ ಅಪಾರ ತಪ್ಪು ಹಣ ಗಳಿಸುತ್ತಿದ್ದಾರೆ; ಪ್ರಖರ ವೈಭವದ, ಹೊಲಸಾದ ಜೀವನಕ್ರಮದಲ್ಲಿ ಬದುಕುತ್ತಿದ್ದಾರೆ. ಬಹುಸಂಖ್ಯಾತ ಜನತೆಯ ಸಮಸ್ಯೆಗಳಿಗೆ ಕುರುಡಾಗಿಬಿಟ್ಟಿದ್ದಾರೆ. ಈ ಕೆಲಸದಲ್ಲಿ ಸೆಂಟ್ರಸ್ಟ್ ರಾಜಕೀಯ ಪಕ್ಷಗಳು ಕೂಡಾ ಪಾಲುದಾರರೇ. ಶ್ರೀಮಂತರಿಗೆ ಬಿಳಿ ಮತ್ತು ಕಪ್ಪು ಎರಡೂ ರೀತಿಯ ಹಣ ಗಳಿಕೆಗೆ ಈ ಪಕ್ಷಗಳು ನೆರವಾಗುತ್ತಿವೆ. ಅದರಲ್ಲಿ ಕೊಂಚ ಪಾಲನ್ನು ಚುನಾವಣೆಗಳಿಗಾಗಿ, ಶಾಸಕರನ್ನು, ರಾಜಕಾರಣಿಗಳನ್ನು ಕೊಳ್ಳಲು ಮುಂತಾದ ಪಕ್ಷದ ಕೆಲಸಗಳಿಗೆ, ರಾಜಕೀಯಕ್ಕಾಗಿ ಪಡೆಯುತ್ತಾರೆ. ವೈಯಕ್ತಿಕವಾಗಿಯೂ ಸಾಕಷ್ಟು ಕಮಾಯಿಸುತ್ತಾರೆ. ಹೀಗಾಗಿ, ಈ ಪಕ್ಷಗಳ ಮಾನ್ಯತೆ ಇಳಿಮುಖವಾಗುತ್ತಿದ್ದಾಗ, ೬೦ರ ದಶಕದ ಕಡೇ ಭಾಗದಲ್ಲಿ, ಚುನಾವಣೆಗೆ ಗೆಲ್ಲಲು ಹೊಸದೊಂದು ತಂತ್ರವನ್ನು ಪ್ರಯೋಗಿಸಿದರು. ಮತ್ತೆ ಮ್ರ್ಯಾದೆ, ಮನ್ನಣೆಯನ್ನು ಗಳಿಸುವ ಪ್ರಯತ್ನ ಇದು. ಈ ಸಲದ ತಂತ್ರ ವ್ಯಕ್ತಿ ಪೂಜೆಯದು. ಈ ಪ್ರಸಂಗದಲ್ಲಿಯ ನಾಯಕಿ ಶ್ರೀಮತಿ ಇಂದಿರಾ ಗಾಂಧಿ. ಇದರ ಜೊತೆಗೆ, ಪ್ರಗತಿಪರ ಘೋಷಣೆಗಳು. ಈ ತಂತ್ರದ ಜೊತೆಗೆ ಧನಬಲವೂ ಕೂಡಿಕೊಂಡಿದ್ದರಿಂದ, ಈ ಸೂತ್ರ ಕೆಲಕಾಲ ಯಶಸ್ಸನ್ನು ಗಳಿಸಿತು. ಆದರೆ, ಈ ಪ್ರಗತಿಪರ ಘೋಷಣೆಗಳನ್ನು ಕಾರ್‍ಯರೂಪಕ್ಕೆ ಇಳಿಸಲು ವಿಫಲಗೊಂಡರು. ಜನಕಾಕರ್ಷಕ ಕಾರಣಕ್ಕಾಗಿ ಅಲ್ಲಲ್ಲಿ ಚೂರುಪಾರನ್ನು ಕಾರ್‍ಯಕ್ರಮಕ್ಕೆ ಇಳಿಸಿದರು. ರಾಜಕೀಯ ಸಂಕಲ್ಪಹೀನತೆ ಮತ್ತು ನಿಷ್ಠಾವಂತ ಕಾರ್‍ಯಕರ್ತರ ಕೊರತೆಯಿಂದಾಗಿ ಈ ಪರಿಸ್ಥಿತಿ ಉಂಟಾಯಿತು. ಈ ವೈಫಲ್ಯದ ಪರಿಣಾಮವೆಂದರೆ, ಚುನಾವಣೆಗಳಲ್ಲಿ ಹೋರಾಡಲು ಹಣಬಲವೇ ಮುಖ್ಯವಾಗಿ ಹೋಯಿತು. ಇದರಿಂದಾಗಿ, ಈ ಹಣ ನೀಡಿದ ಜನರಾದ ನಗರ ಮತ್ತು ಹಳ್ಳಿಗಳ ಶ್ರೀಮಂತರಿಗೆ ಹೆಚ್ಚು ಹೆಚ್ಚು ರಿಯಾಯಿತಿಗಳು ಸಿಗುತ್ತಾ ಹೋಯಿತು. ಅತ್ಯಂತ ಹೆಚ್ಚು ಕಪ್ಪುಹಣ ತರಬಲ್ಲ, ತಮ್ಮ ನಾಯಕಿಯ ವ್ಯಕ್ತಿತ್ವವನ್ನು ಮರೆಸಬಲ್ಲ ಜನರಿಗೆ ಮಾತ್ರ ಸಂಸತ್ತು ಶಾಸನಸಭಗಳಲ್ಲಿ, ಪಕ್ಷದಲ್ಲಿ ಸ್ಥಾನ ದೂರಾಯಿತು. ಇಂಥ ಬೆಳವಣಿಗೆ ಪ್ರಾಮಾಣಿಕತೆ ಹೊಂದಿದ್ದ ಜನರನ್ನು ಸಹಜವಾಗೇ ಹೊರಹಾಕಿತು. ಅಷ್ಟೇ ಅಲ್ಲದೆ ನಿಧಾನಕ್ಕೆ ಯಾವುದೇ ರಾಜಕೀಯ ಸಾಮರ್ಥ್ಯ ಮತ್ತು ಸಾಮಾಜಿಕ ನೆಲೆ ಹೊಂದಿದ್ದ ಜನರೂ ಹೊರಗುಳಿಯಬೇಕಾಯ್ತು. ಏಕೆಂದರೆ ಈ ರೀತಿಯ ಜನ ಬರೀ ಶ್ರೀಮತಿ ಇಂದಿರಾ ಗಾಂಧಿಯ ವ್ಯಕ್ತಿತ್ವವನ್ನೇ ಯಾವಾಗಲೂ ಮೆರೆಸುತ್ತಾರೆ ಎಂದು ಹೇಳಲಾಗುವುದಿಲ್ಲ. ಸ್ವಂತ ಸಾಮಾಜಿಕ ಅಡಿಪಾಯ ನಿರ್ಮಾಣವಾದರಂತೂ ರಾಜಕೀಯವಾಗಿ ಅವರು ನಿಜಕ್ಕೂ ಒಂದು ಅಪಾಯವೇ ತಾನೆ. ಇದು ಹಳೆಯ ನಾಯಕರು, ಕಾರ್‍ಯಕರ್ತರುಗಳ ನಿರ್ನಾಮ. ಇದರ ಜೊತೆಗೆ, ಪಕ್ಷದ ಸಘಟನೆ, ರಾಜಕೀಯ ಮೌಲ್ಯದ ವಿನಾಶದ ಕೆಲಸ ಪ್ರಾರಂಭವಾದದ್ದು ೧೯೬೯ರ ಅಧ್ಯಕ್ಷೀಯ ಚುನಾವಣೆಯಲ್ಲಿ “ಆತ್ಮಸಾಕ್ಷಿ”ಯ ಮತದ ರೂಪದಲ್ಲಿ ಅದು ಪ್ರಾರಂಭವಾಯಿತು. ಇಲ್ಲಿಂದಾಚೆಗೆ ಅದು ಅಧಿಕಾರದ, ಹಣದ ತತ್ವಹೀನ ಗಳಿಕೆಯಾಗಿ ಬೆಳೆದಿದೆ. ಮರ್ಯಾದೆ, ನಾಚಿಕೆ ಎಂಥದೂ ಇಲ್ಲದೆ ನಗ್ನವಾಗಿ ಇದು ವಿಜೃಂಭಿಸುತ್ತಿವೆ. ಕಾಂಗೈನ ಸಂಶ್ಥೆಯೊಳಗಿನ ಯಾವುದೇ ರೀತಿಯ ಶಿಸ್ತು, ಮೌಲ್ಯಗಳು ಇದಕ್ಕೆ ಅಡ್ಡಿಯಾಗಿಲ್ಲ. ಇವನ್ನು ಭಿನ್ನಮತೀಯರು ಎಂಬ ಸವಕಲುಪದದಲ್ಲಿ ಹಲವೊಮ್ಮೆ ಸೂಚಿಸಲಾಗಿದೆ. ಈ ರೀತಿಯ ರಾಜಕಾರಣಿಗಳು ಪ್ರಭುತ್ವ ಮತ್ತು ಜನತೆಯ ನಡುವೆ ಕಡೇ ಪಕ್ಷ ಮಧ್ಯವರ್‍ತಿಗಳಾಗಿ ಕೆಲಸ ಮಾಡಲು ಕೂಡಾ ವಿಫಲಗೊಂಡಿದ್ದಾರೆ. ಸಮರ್ಥ ಆಳ್ವಿಕೆ, ಕಾರ್‍ಯ ನಿರ್ವಹಣೆಗಳು ಕೂಡಾ ಇವರಿಗೆ ಸಂಪೂರ್ಣ ಅಸಾಧ್ಯವಾಗಿ ಬಿಟ್ಟಿದೆ. ಆದರೆ, ಮತ್ತೆ ಮಾನ್ಯತೆ ಪ್ರಭುತ್ವಕ್ಕೆ ಮರಳಿದ್ದರಿಂದ ಜನತೆಯ ಕೋಪಕ್ಕೆ ಇದೊಂದು ಸೇಪ್ಟಿ ವಾಲ್ವ್ ಆಗಿ ಪರಿಣಮಿಸಿಬಿಟ್ಟಿತೇನೋ ಎನಿಸುತ್ತದೆ. ಜನಗಳ ತೀವ್ರ ಹತಾಶೆಗೆ, ಸಿಟ್ಟಿಗೆ ಒಂದು ಹೊರದಾರಿ ಸಿಕ್ಕಿಬಿಟ್ಟಿತೇನೋ. +ದಿಕ್ಕು-ದೆಸೆಗೆಟ್ಟ ರಾಜಕೀಯ +ಇಲ್ಲಿಯ ತನ ವಿವರಿಸಿದ ಬೆಳವಣಿಗೆ ಕಾಂಗೈ ಪಕ್ಷವನ್ನು ಕುರಿತದ್ದಾದರೂ, ಉಳಿದ ಮಧ್ಯವಾದೀ ರಾಜಕೀಯ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ, ಜನ ಚಲಿಸ ತೊಡಗಿದ್ದಾರೆ. ತಮ್ಮ ಶೋಷಣೆಯ ಬಗ್ಗೆ ಅರಿವು ಬರತೊಡಗಿದೆ. ರಾಜಕಾರಣಿಗಳ, ಆಳುವವರ್ಗಗಳ ಭ್ರಷ್ಟಾಚಾರ ಹಾಗೂ ದಿವಾಳಿಕೋರತನಗಳ ಬಗ್ಗೆ ನಿಶ್ಚಳ ಪ್ರಜ್ಞೆ ಮೂಡತೊಡಗಿದೆ. ಇವುಗಳ ವಿರುದ್ಧ ಹೋರಾಡಲೇಬೇಕೆಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ಸಂಘಟಿತ, ಶಿಸ್ತಿನ ಪರ್‍ಯಾಯವೊಂದು ಇಲ್ಲದಿದ್ದಾಗ ಈ ರೀತಿಯ ವಿಘಟನೆ ಜನತೆ ತನ್ನೊಳಗೇ ಹೊಡೆದಾಡುವಂಥ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಧರ್‍ಮ, ಭಾಷೆ, ಜತಿ ಮುಂತಾದವುಗಳನ್ನು ಕುರಿತ ಘರ್ಷಣೆಗಳು ಪ್ರಾರಂಭವಾಗುತ್ತವೆ. ಜನ ತಮ್ಮೊಳಗೇ ಹೊಡೆದಾಡುತ್ತಾರೆ. ಇವೆಲ್ಲಾ ತಮ್ಮ ಒಳಿತಿಗೇ ಆಗಿರುವುದರಿಂದ ಆಡಳಿತ ವರ್ಗಗಳು ಇದನ್ನು ಪ್ರೋತ್ಸಾಹಿಸುತ್ತದೆ. ಆಳುವ ವರ್ಗಗಳು ಕೂಡಾ ತಮ್ಮೊಳಗೆ ತೀವ್ರವಾಗಿ ಹೊಡೆದಾಡುತ್ತವೆ. ದಿನೇ ದಿನೇ ತೀವ್ರಗೊಳ್ಳುತ್ತಿರುವ ಈ ವಿಘಟನೆಯಿಂದ, ಸಾಮಾಜಿಕ ಘರ್ಷಣೆಗಳಿಂದ ಪಾರಾಗಲು ಸೆಕ್ಯೂಲರ್ (ಜಾತ್ಯತೀತ) ಆದ ರಾಜಕೀಯ ಏಕತೆಯ ದಾರಿಯೊಂದಿತ್ತು. ಇದೇ ತುರ್ತು ಪರಿಸ್ಥಿತಿ. ಸಿವಿಲಿಯನ್ ಸರ್ವಾಧಿಕಾರ ಮತ್ತು ಪ್ರಗತಿಪರ ಘೋಷಣೆಗಳ ಮೇಳೈಸುವಿಕೆ ಆಧಾರದ ಮೇಲೆ ಇದು ಹುಟ್ಟಿಕೊಂಡಿರು. ಇದೂ ವಿಫಲವಾಯಿತು. ನಂತರ ಜನತಾ ಪಕ್ಷವೂ ವಿಘಟನೆ ಹೊಂದಿತು. ನಂತರ ಯಾವುದೇ ಪ್ರಗತಿಪರ ಘೋಷಣೆಗಳ ಹಂಗಿಲ್ಲದ ಸಂಜಯಗಾಂಧೀ ಶೈಲಿಯ ಸರ್ವಾಧಿಕಾರ ಬಂತು. ಬಂಡವಾಳಿಗರು ಮತ್ತು ಮಧ್ಯಮ ವರ್ಗದ ನಡುವೆ ಇದು ತನ್ನದೇ ಆದ ಆಕರ್ಷಣೆಯನ್ನು ಗಳಿಸಿಕೊಂಡಿತು. ಈ ಮಧ್ಯೆ ವ್ಯವಸ್ಥೆಯ ಚೂರು ಚೂರಾಗುವಿಕೆ ಮುಂದುವರಿಯಿತ್ತಲೇ ಇದೆ. ಈ ಪ್ರಕ್ರಿಯೆ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರದ ಮೂಲಕ ಪರಾಕಾಷ್ಠೆಯನ್ನು ತಲುಪಿದೆ. ಇಲ್ಲಿಯ ತನಕದ ಚರಿತ್ರೆಯಲ್ಲಿ ಇದೇ ಪರಮಾವಧಿ. ಈ ಸರಕಾರದ ಮುಖ್ಯ ಲಕ್ಷಣಗಳು ಹೀಗಿವೆ: +ರಾಜಕಾರಣ ಮತ್ತು ಆಡಳಿತಗಳಲ್ಲಿ ಸಂಪೂರ್ಣ ಅದಕ್ಷತೆ +ಈಡೇರದ ಭರ್ಜರಿ ಭರವಸೆಗಳು +ಸೌಲಭ್ಯಗಳ ಬೇಜವಾಬ್ದಾರಿ ಹಂಚಿಕೆ. ಉದಾ: ವಿದ್ಯಾಸಂಸ್ಥೆಗಳು, ಗಗನಚುಂಬಿ ಕಟ್ಟದಗಳು, ಕಾಡಿನ ಕಟಾವಿಗೆ ಲೈಸೆನ್ಸ್‌ಗಳು. ಇಂಥ ಕಡೆಗಳಲ್ಲಂತೂ ಎಲ್ಲ ರೀತಿಯ ಕಾನೂನು ನಿಯಮಗಳನ್ನು ಮುರಿಯಲಾಗಿದೆ. ಮಹಾ ಮೋಸಗಾರ ದುಸ್ಸಾಹಸಿಗಳಿಂದ ಹಣ ಪಡೆದು ಈ ಲೈಸೆನ್ಸ್‌ಗಳನ್ನು ನೀಡಲಾಗಿದೆ. ಇದರಿಂದಾಗುವ ಪರಿಣಾಮಗಳ ಬಗ್ಗೆ ಯೋಚನೆಯೇ ಇಲ್ಲ. +ಹೊಗಳುಭಟ್ಟರಿಗೆ, ಮೋಸಕ್ಕೆ, ಅಪ್ರಾಮಾಣಿಕ ಹಣ ಸಂಪಾದನೆಗೆ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳಲ್ಲಿಯ ಸ್ಥಾನ ಪಿಪಾಸೀ ಜನರಿಗೆ ಪ್ರೋತ್ಸಾಹ. +ಹಿಂದೆಂದೂ ಕಂಡಿರದಂಥ ಎತ್ತರಗಳಿಗೆ ಭ್ರಷ್ಟಾದಾರ ಹೋಗುತ್ತಿರುವ ಬಗ್ಗೆ ನಾಚಿಕೆ ಇಲ್ಲದ ಬಹಿರಂಗ ಒಪ್ಪಿಗೆ +ಇದೆಲ್ಲದರ ಪರಿಣಾಮವಾಗಿ, ಸರಕಾರಕ್ಕೆ ಒಂದು ದಿಕ್ಕುದೆಸೆಯೇ ಇಲ್ಲವಾಗಿಬಿಟ್ಟಿದೆ. ಅದು ಸರ್ಕಾರವೇ ಅಲ್ಲ ಎಂಬುದಾಗಿ ಅತ್ಯಂತ ಆಡ್‌ಹಾಕ್ ಮಾದರಿಯಂಲ್ಲಿ ನಡೆಯುತ್ತಿದೆ. ಇದರಿಂದ ಕಳೆದೆರಡೂ ವರ್ಷಗಳಲ್ಲಿ ಕರ್ನಾಟಕ ಅತ್ಯಂತ ತೀವ್ರ ರೀತಿಯ ಘರ್ಷಣೆಗಳನ್ನು, ಅಶಾಂತಿಗಳನ್ನು ಕಂಡದ್ದು ಕೇವಲ ಆಕಸ್ಮಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಗೋಕಾಕ್ ಚಳವಳಿ ಕೂಡಾ ಇಂಥ ಸಾಮಾಜಿಕ ಅಶಾಂತಿ, ಘರ್ಷಣೆಗಳ ಒಂದು ರೂಪ. ಆದರೆ, ಇದು ಜನತೆಯನ್ನು ಮತ್ತೆ ಪ್ರಭುತ್ವದೊಂದಿಗೆ ಮತ್ತೆ ಬೆಸೆಯುವ ಒಂದು ಪ್ರಯತ್ನ. ಈ ಪ್ರಯತ್ನಕ್ಕೆ ಹೊಸ ಸಾಮಾಜಿಕ ಮತ್ತು ಸೈದ್ಧಾಂತಿಕ ನೆಲೆಗಟ್ಟನ್ನು ಬಳಸಲಾಗಿದೆ. +ಹೊಸ ಮೌಲ್ಯ-ಹೊಸ ಜನ +ಈ ಏಕತಾವಾದ ಸಂಪ್ರದಾಯವಾದೀ ರೂಪವನ್ನಷ್ಟೇ ಏಕೆ ತಳೆಯುತ್ತದೆ ಎಂಬುದು ಮುಖ್ಯ ಪ್ರಶ್ನೆ. ಇದು ಸಾಮಾನ್ಯವಾ‌ಇ ಧಾರ್ಮಿಕ ನೆಲೆಗಟ್ಟನ್ನು ಅಥವಾ ಇಲ್ಲಾದಂತೆ ಭಾಷೆಯ ನೆಲೆಗಟ್ಟನ್ನು ಹೊಂದಿರುತ್ತದಲ್ಲ ಏಕೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ನಾವು ಭಾರತದಲ್ಲಿ ಬಂಡವಾಳಶಾಹೀ ಆರ್ಥಿಕ ಬೆಳವಣಿಗೆಯ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಬಂಡವಾಳಶಾಹೀ ಬೆಳವಣಿಗೆ ಅನೇಕ ಸಂಪ್ರದಾಯಿಕ ಜೀವನಕ್ರಮಗಳನ್ನು, ಮೌಲ್ಯಗಳನ್ನು, ವ್ಯಕ್ತಿತ್ವಗಳನ್ನು ಕರಗಿಸಿಹಾಕಿದೆ. ಹೊಸ ತಲ್ಲಣಗಳು, ಘರ್ಷಣೆಗಳು ಹುಟ್ಟಿಕೊಂಡಿವೆ. ಹೄದಯಹೀನವಾದ, ಸ್ಪರ್ಧಾತ್ಮಕವಾದ, ಸಿನಿಕ ಸಮಾಜವೊಂದನ್ನು ಇದು ಅಸ್ತಿತ್ವಕ್ಕೆ ತಂದಿದೆ. ಅನೇಕ ಸ್ಸಾಕ್ಷ್ಯಗಳಿಂದ ಈ ವಿವರಣೆಯನ್ನು ಸಮರ್ಥಿಸಲು ಸಾಧ್ಯ. ಉದಾಹರಣೆಗೆ, ವರದಕ್ಷಿಣೆ ಪದ್ಧತಿಯಲ್ಲೇ ಆಗಿರುವ ಬದಲಾವಣೆ. ಮೊದಲು ಅದು ಮದುವೆ ಹೊತ್ತಿನಲ್ಲಿ ಕೊಡುವ ಉಡುಗೊರೆಯಾಗಿತ್ತು. ಬದಲಾವಣೆ. ಮೊದಲು ಅದು ಮದುವೆಯ ಹೊತ್ತಿನಲ್ಲಿ ಕೊಡುವ ಉಡುಗೊರೆ. ಆದರೆ, ಈಗ ಅದು ಅತ್ಯಂತ ಕ್ರೂರ ರೀತಿ‌ಒಯಲ್ಲಿ ನಿರಂತರವಾಗಿ ಸೆಳೆಯುತ್ತಲೇ ಇರುವ ಒಂದು ಪದ್ಧತಿಯಾಗಿಬಿಟ್ಟಿದೆ. ಅನೇಕ ಸಾರಿ, ಇದರ ಕೊನೆ ಕೊಲೆ ಅಥವಾ ಆತ್ಮಹತ್ಯೆಯಲ್ಲಿ. ಈ ಬದಲಾವಣೆಯಂತೂ, ತಮ್ಮೆಲ್ಲ ಮಾನವೀಯತೆ, ಸಂಯಮ ಕಳೆದುಕೊಂಡ ಅತ್ಯಂತ ಮಹತ್ವಾಕಾಂಕ್ಷೀ ಹೊಸ ಮಧ್ಯಮವರ್ಗದಲ್ಲಿ ಪ್ರಖರವಾಗಿ ಕಾಣುತ್ತದೆ. ಪಾರಂಪರಿಕೆ ಸಂಸ್ಕೃತಿಯ ಎಲ್ಲ ಗುಣಗಳನ್ನು ಕಳೆದುಕೊಂಡಿರುವ, ಹಣ ಅಂತಸ್ತಿಗಾಗಿ ತಹತಹಿಸುವ ನಗರದ ಮಧ್ಯಮವರ್ಗದಲ್ಲಿ ಈ ಕರಾಳ ಬೆಳವಣಿಗೆ ಥಟ್ಟನೆ ಒಡೆದು ಕಾಣುತ್ತದೆ. ಇಂಥ ಇನ್ನೊಂದು ಉದಾಹರಣೆ, ಈಗ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧದ ಸ್ವರೂಪ. ಹೊಸಗಾಲದ ಹಸುಮಕ್ಕಳು ಈಗ ಹೊಸ ಮೌಲ್ಯಗಳ, ಹೊಸ ಅಗತ್ಯತೆಗಳ, ಹೊಸ ಗುರಿಗಳ ಜೊತೆಗೆ ಬೆಳೆಯುತ್ತಿದ್ದಾರೆ. ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಜೊತೆಗೆ ತಂದೆ ತಾಯಿಗಳನ್ನು ಕುರಿತ ಅವಿಧೇಯತೆ, ಅಗೌರವ, ನಿರ್ಲಕ್ಷ್ಯ ಕೂಡಾ ತಾನಾಗಿ ಬೆಳೆಯುತ್ತಾ ಹೋಗುತ್ತಿದೆ. ಮಕ್ಕಳಲ್ಲಿ ಈಗ ಸ್ವತಂತ್ರ ಮನೋಭಾವ ತೀವ್ರಗೊಳ್ಳುತ್ತಿದೆ. ಈ ಸಾಮಜಿಕ ಬದಲಾವಣೆ ಬಹಳ ಸಾರಿ ಸಾಂಪ್ರದಾಯಿಕ ಉಡುಪುಗಳ ಬಗ್ಗೆ ಅಲಕ್ಷ್ಯ, ತಿರಸ್ಕಾರದ ರೂಪದಲ್ಲೂ ಬರುತ್ತದೆ. ಈಗ ತರುಣಿಯರು ಸೆಕ್ಸೀ ಉಡುಪು ಧರಿಸುತ್ತಾರೆ. ಜೀವನ ಕ್ರಮಗಳು ಕೂಡಾ ಬದಲಾಗುತ್ತಿವೆ. ಅಪ್ಪ-ಅಮ್ಮಂದಿರಿಂದ ಬೇರೆಯಾಗಿ ಬದುಕ ಬಯಸುವ ಮಕ್ಕಳಿದ್ದಾರೆ. ಮದುವೆಯ ರೀತಿಗಳು ಕೂಡಾ ಬದಲಾಗುತ್ತಿವೆ. ತಮ್ಮ ಜಾತಿಯ ಧರ್ಮದ ಹೊರಗೆ ತಮ್ಮ ಇಷ್ಟದಂತೆ ಮದುವೆಯಾಗುವ ಯುವ ಜನಾಂಗವಿದೆ. ಜೊತೆಗೆ ಡೈವೋರ್ಸ್ ಬಯಸುವ ಜನ ಕೂಡಾ. ಈ ಬದಲಾವಣೆಗಳು ಒಂದು ಇಡೀ ಜೀವನಕ್ರಮದ ಮೇಲಾದ ಹಲ್ಲೆಗಳಂತೆ ಕಾಣುತ್ತವೆ. ಹೀಗಾಗಿ ಒಂದು ಬಗೆಯ ಬೆದರಿಕ್ಜೆಯ ಪ್ರಜ್ಞೆ ಕಾಣುತ್ತಿವೆ. ಇದರಿಂದಾಗಿ ನವವಸಾಹತು ಸಮಾಜದ ಹೊಲಸಿನ ಬಗ್ಗೆ ಗಾಢ ದ್ವೇಷವೂ ಬೆಳೆಯುತ್ತಾ ಬಂದಿದೆ. ಈ ದ್ವೇಷ ಆಧುನಿಕ ಬಂಡವಾಳಶಾಹೀ ಸಮಾಜದ ಇನ್ನು ಕೆಲವು ಅಂಶಗಳಾದ ಕೈಗಾರಿಕೀಕರಣ, ನಗರೀಕರಣ, ಜಾತ್ಯಾತೀತತೆ, ಆಧುನಿಕತೆ, ವೈಚಾರಿಕತೆ, ಇತ್ಯಾದಿಗಳನ್ನ ಕುರಿತೂ ಹಬ್ಬಿದೆ. ಇದೆಲ್ಲದರಿಂದಾಗಿ ಕಾಲ ಕೆಳಗೆ ಕುಸಿದು ಹೋಗುತ್ತಿರುವ ನೆಲದಲ್ಲಿ ನಿಂತ ವ್ಯಕ್ತಿಯ ಸ್ವಂತ ಗುರುತಿನ ಹುಡುಕಾಟ ಪ್ರಾರಂಭವಾಗಿದೆ. ಜೊತೆಗೆ, ಮರೆಯಾಗುತ್ತಿರುವ ಸಾಂಪ್ರದಾಯಿಕ ಸಂಸ್ಕೃತಿಯ ಬಗೆಗೆ ಹಳಹಳಿಕೆ ಕೂಡಾ. ಈ ಬೆಳವಣಿಗೆಗಳು ನಗರದ ಮಧ್ಯಮ ವರ್ಗಗಳನ್ನು ಅತ್ಯಂತ ಗಾಢವಾಗಿ ಕಲಕಿದೆ. ಈ ಜನ ಬದಲಾವಣೆಗಳಿಗೆ ತೀವ್ರವಾಗಿ ಪ್ರತಿಸ್ಪಂದಿಸುತ್ತಾ ಅತ್ಯಂತ ಅಭದ್ರರಾಗಿಬಿಟ್ಟಿದ್ದಾರೆ. ಉಳಿದ ವರ್ಗಗಳಿಗೆ ಹೋಲಿಸಿದಾಗ ಅತ್ಯಂತ ಹೆಚ್ಚು ವಲಸೆ ಹೋಗುವ ಜನರೆಂದರೆ ಇವರೆ. ಈ ಹೃದಯಹೀನ, ಸಿನಿಕ ವ್ಯಾಪಾರಿ ಸಂಸ್ಕೃತಿಯಲ್ಲೀಗ ಅವರು ಮೊದಲಿಗಿಂತ ಹೆಚ್ಚು ಉಗ್ರವಾಗಿ ಸ್ಪರ್ಧೆಗಳನ್ನು ಎದುರಿಸಬೇಕಾಗಿದೆ. ಅವರ ಆಶೋತ್ತರಗಳೂ ಹೆಚ್ಚಿವೆ. ನಗರದ ಶ್ರೀಮಂತರು, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ಬಂಡವಾಳಿಗರಿಗೆ ಹಣವಿರುವುದರಿಂದ ಹೆಚ್ಚಿನ ಭದ್ರತೆ ಇದೆ. ಆದರೆ ಅವರಿಗೂ ಬದಲಾವಣೆಯ ಬಿಸಿ ತಟ್ಟುತ್ತಿದೆ. ಸಂಪ್ರದಾಯಿಕ ಏಕತಾವಾದಕ್ಕೆ ಇವರುಗಳಿಗೆ ಬೇರೆ ಇನ್ನೊಂದು ಬೆಂಬಲದ ಮೂಲವೊ ಇದೆ. ಈಗಿ‌ಒರುವ ಸಾಮಾಜಿಕ ವ್ಯವಸ್ಥೆಗೆ ಮಾನ್ಯತೆಯನ್ನು ಅದು ಮರಳಿ ನೀಡುತ್ತದೆ. ಹೊಸ ಸಿದ್ಧಾಂತ, ಸಂಘಟನೆ, ಹೊಸ ಜನರ ಮೂಲಕ ಚೂರುಚೂರಾಗುತ್ತಿರುವ ಈ ವ್ಯವಸ್ಥೆಗೆ ಮತ್ತೆ ಮನ್ನಣೆ ದೊರೆಯುವಂತೆ ಯತ್ನಿಸುತ್ತಿದೆ. ಬದಲಾವಣೆಯ ಬಿಸಿ ಅಷ್ಟಾಗಿ ತಟ್ಟದ ಹಳ್ಳಿಗಾಡಿನ ಶ್ರೀಮಂತರ ಬೆಂಬಲವೂ ಇದೇ ರೀತಿಯದೇ. ಹಳ್ಳಿಗಾಡಿನ ರೈತಾಪ್ಯ ವರ್ಗಕ್ಕೆ ಈ ಬದಲಾವಣೆಗಳ ಬಿಸಿ ಅಷ್ಟಾಗಿ ತಟ್ಟಿಲ್ಲ. ಇನ್ನು ಭೂಹೀನ ಕೃಷ್ಬಿ ಕಾರ್ಮಿಕರ ಮೇಲಂತೂ ಅದರ ಪರಿಣಾಮ ತೀರಾ ಗೌಣ. ಆದರೆ, ನಗರದ ಕಾರ್ಮಿಕ ವರ್‍ಗದ ಮೇಲೆ ಆಳವಾದ ಪರಿಣಾಮ ಈ ಬದಲಾವಣೆ ಬೀರಿದ್ದರೂ, ಅದರ ಅಗತ್ಯತೆ, ಒತ್ತಾಯಗಳು ಅತ್ಯಂತ ಮೂಲಭೂತವಾದವುಗಳು; ಆರ್ಥಿಕಸ್ವರೂಪದವು. ಜೊತೆಗೆ ಬಡತನ ಇವುಗಳ ಬಗೆಗಿನ ಭಾವನೆ ಮತ್ತು ಪ್ರತಿಕ್ರಿಯೆಗಳಸ್ನೂ ಅದುಮಿ ಹಾಕುತ್ತದೆ. ಅನುಕೂಲಸ್ಥ ವರ್‍ಗಗಳು, ಅದರಲ್ಲೂ ಬಿಳಿ ಕಾಲರಿನ ಕೆಲಸಗಾರರು ಈ ಬದಲಾವಣೆಗಳಿಗೆ ಉತ್ಕಟವಾಗಿ ಪ್ರತಿಸ್ಪಂದಿಸುತ್ತಾರೆ. ನಗರ ಮಧ್ಯಮವರ್ಗದ ನೇತೃತ್ವವನ್ನು ಹಿಂಬಾಲಿಸುತ್ತಾರೆ. +ಈ ಹೊಸ ಸಿದ್ಧಾಂತ ಪಾಶ್ಚಾತ್ಯೀಕರಣ ಮತ್ತು ಆಧುನೀಕರಣವನ್ನು ಅವಳಿ ಜವಳಿಗಳಾಗಿ ನೋಡಿ, ಅವನ್ನು ತೀವ್ರವಾಗಿ ವಿರೋಧಿಸುತ್ತದೆ. ಇವೆರಡರ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಸಾಕಷ್ಟು ಬಾರಿ ಕಷ್ಟವೇ. ಇಲ್ಲಿ ಆಧುನಿಕೀಕರಣವೆಂದರೆ ನನ್ನ ಅರ್ಥ = ಆಧುನಿಕ ಬಂಡವಾಳಶಾಕಿಯ ಬೆಳವಣೀಗೆ ಮತ್ತು ಅದರ ಪರಿಣಾಮವಾದ ನಗರೀಕರಣ, ವ್ಯಕ್ತಿಯ ಬೆಳವಣೀಗೆ, ಆಧುನಿಕ ವಿಜ್ಞಾನ, ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಯೆಂದು. ಹಾಗೆಯೇ ಪಾಶ್ಚಾತ್ಯೀಕರನ ಎಂದರೆ ಪಾಶ್ಚಾತ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳ ಸ್ವೀಕಾರ. ಬಹಳ ಸಾರಿ ಇದು ಕಲೋನಿಯಲ್ ಅಥವಾ ನಿಯೋ ಕಲೋನಿಯಲ್ ರೂಪಗಳಲ್ಲಿ ಜರುಗುತ್ತದೆ (ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಧಿನಿಕ ಮಂಡನಾಳಶಾಹೀ ಸಂಸ್ಕೃತಿಗಳಲ್ಲಿಯ ಅಸಮಾನತೆ, ಅಮಾನವೀಯತೆಗಳನ್ನು ತೆಗೆದುಹಾಕುವ ಸಮಾಜವಾದೀ ಆಧುನಿಕೀಕರಣದ ಬಗ್ಗೆ ನಾನು ಮಾತನಾಡುವುದಿಲ್ಲ.) ಈ ರೀತಿಯ ಆಧುನಿಕತಾ ವಿರೋಧಿ, ಪಾಶ್ಚಾತ್ಯ ವಿರೋಧಿ ಸಾಂಪ್ರದಾಯಿಕ ಏಕತಾವಾದ ಸಾಮಾನ್ಯವಾಗಿ ಧಾರ್ಮಿಕ ರೂಪಗಳನ್ನು ತಳೆಯುತ್ತದೆ. ಉದಾ: ಹಿಂದೂ ಮತಾಂಧತೆ (ಹಿಂದೂ ಮಹಾಸಭೆ, ಆರ್ ಎಸ್ ಎಸ್, ಬಿ ಜೆ ಪಿ, ಎ ಬಿ ವಿ ಪಿ) ಮುಸ್ಲಿಂ ಮತಾಂಧತೆ (ಮುಸ್ಲಿಂ ಲೀಗ್, ಪಾಕ್ಸ್ತಾನ್) ಇಸ್ಲಾಂ ಮೂಲರೂಪೀ ವಾದ, (ಇರಾನ್, ಮತ್ತಿತರ ಇಸ್ಲಾಮಿಕ್ ದೇಶಗಳು) ಸಿಖ್ ಮತೀಯತೆ (ಖಾಲಿಸ್ತಾನ್) (ಕಾಂಪೂಚಿಯದ ಆಧುನಿಕತೆಯ ವಿರೋಧಿ, ಪಾಲ್ಪಾಟ್ ಆಳ್ವಿಕೆ ಹೆಚ್ಚು ಕಡಿಮೆ ಇದೇ ಬಗೆಯ ಮೂಲಗಳಿಂದ ಬಂದದ್ದು ಎಂದು ನನ್ನ ಗುಮಾನಿ. ಕೃಷೀ ವಿಕೇಂದ್ರೀಕರಣವನ್ನು ಬಯಸುವ ಈ ಆಳ್ವಿಕೆ ನಗರಿಕೀಕರಣ, ಕೈಗಾರಿಕಿ‌ಈಕರಣ ಮತ್ತು ಪಾಧ್ಚಿಮಾತ್ಯ ವಿರೋಧಿಯಾದದ್ದು). +ದೂರದ ಆಸೆ +ಆದರೆ ಈ ರೀತಿಯ ಚಳವಳಿಗಳು ಮತ್ತು ಗೋಕಾಕ್ ಚಳವಳಿಗಳ ನಡುವೆ ವ್ಯತ್ಯಾಸ ಇಲ್ಲ ಎಂದೇನಲ್ಲ. ವ್ಯತ್ಯಾಸಗಳು ಸಾಕಷ್ಟಿವೆ. ನನ್ನ ಗಮನ ಇಲ್ಲಿ ಬರೀ ಸಾಮ್ಯಗಳ ಕಡ್ಗೆ ಮಾತ್ರ. ಈ ಸಾಂಪ್ರದಾಯಿಕ ಏಕತಾವಾದಕ್ಕೆ ಭಾಷೆ, ವಾಹನ ಮತ್ತು ಸಂಕೇತ ಎರಡೂ ಆಗಬಲ್ಲದು. ಈ ರೀತಿಯ ಏಕತೆಗೆ ಒಂದು ಪ್ರಧಾನ ಭಾಶ್ಹೆ ಬೇಕು. ಅನೇಕ ಭಾಷೆಗಳಿದ್ದಷ್ಟು ಭಿನ್ನ ಪರಂಪರೆಗಳು ಹೆಚ್ಚಿ ಏಕತೆಗೆ ಅಡ್ಡಿ. ಧರ್ಮದ ಮಟ್ಟೀಗೂ ಈ ಮಾತು ನಿಜ. ಒಂದೇ ಒಂದು ಧರ್ಮ, ಅಥವಾ ಒಂದು ಪ್ರಧಾನ ಧರ್ಮ ಅನಿವಾರ್ಯವಾಗುತ್ತದೆ. ಆರ್ ಎಸ್ ಎಸ್, ಬಿ ಜೆ ಪಿ, ಹಿಂದೂ ಮಠಗಳು, ಬ್ರಾಹ್ಮಣರು, ಮೇಲುಜಾತಿಯ ಜನ, ಗೋಕಾಕ್ ಸಮಿತಿಯ ಬಹುಪಾಲು ಸದಸ್ಯರು ಮೊದಲು ಸಂಸ್ಕೃತದ ಪರವಾಗಿದ್ದವರು. ಕಡೆಗೆ ಕನಡ ಏಕಮಾತ್ರ ಪ್ರಥಮ ಭಾಷೆಯಾಗಬೇಕು ಎಂಬ ನಿಲುವನ್ನು ತಳದದ್ದನ್ನು ಈ ಹಿನ್ನೆಲೆಯಿಂದ ನೋಡಬೇಕು. ಬರೀ ಜನಪ್ರಿಯ ಅಭಿಪ್ರಾಯಕ್ಕೆ ತಾಳ ಹಾಕುವ ಧೋರಣೆಯಿದು ಎಂದಷ್ಟೇ ಹೇಳಲಾಗುವುದಿಲ್ಲ. ಉರ್ದುವಿನ ಪರ ಹೋರಾಡುತ್ತಿರುವ ಮುಸ್ಲಿಮರನ್ನು ದ್ರೋಹಿಗಳೂ, ಪರಕೀಯರೂ ಎಂದು ಬೆದರಿಸುವುದಷ್ಟೇ ಇದರ ಉದ್ದೇಶವಲ್ಲ. (ಬಿ ಜೆ ಪಿ, ಆರ್ ಎಸ್ ಎಸ್ ನವರಿಗೆ ಇದು ಒಳ್ಳೆಯ ಸಾಧನ ಎಂಬುದು ನಿಜ) ಕನ್ನಡವನ್ನು ಪೂರ್ಣ ಸಂಸ್ಕೃತೀಕರಿಸಬಹುದು ಎಂಬ ನಿಲುವು ಕೂಡಾ ಅವರ ಈ ಬದಲಾವಣೆಯ ಪೂರ್ಣ ಕಾರಣವಲ್ಲ. ಈ ಎಲ್ಲ ಅಂಶಗಳೂ ಕೊಂಚ ಅಡಗಿರಬಹುದು. ಆದರೆ, ಎಲ್ಲಿಯ ಮುಖ್ಯ ಸಂಗತಿಯೆಂದರೆ, ಸಂಸ್ಕೃತದ ನೆರವಿಲ್ಲದೆಯೂ ಕನ್ನಡ ಭಾಷೆ ಸಾಂಪ್ರದಾಯಿಕ ಮೌಲ್ಯಗಳನ್ನು ಪುನರ್‌ಪ್ರತಿಷ್ಟಾಪಿಸಲು ಸಾಧ್ಯವಿದೆ. ಆರ್ ಎಸ್ ಎಸ್-ಬ್ರಾಹ್ಮಣ-ಸಂಸ್ಕೃತ ಮುಕ್ಕೂಟವನ್ನು ಉಗ್ರವಾಗಿ ವಿರೋಧಿಸುವ ಕನ್ನಡ ಲೇಖಕರ ಕೆಲವು ಮಾತುಗಳಲ್ಲಿ ಇದನ್ನು ಕಾಣಬಹುದಾಗಿದೆ. “ಮಮ್ಮಿ-ಡ್ಯಾಡಿ ಸಂಸ್ಕೃತಿ” (ಇದು ಗೋಕಾಕ್ ವರದಿ ನುಡಿಗಟ್ಟು) ಇಂಗ್ಲೀಷ್ ಕಾನ್ವೆಂಟ್ ಶಾಲೆಗಳನ್ನು ಇಂಗ್ಲೀಷನ್ನು ಟೀಕಿಸುವಾಗ ಇದು ನುಸುಳಿ ಹೊರ ಬರುತದೆ. +ಡಾ||ರಾಜ್‌ಕುಮಾರ್ ಯಾವಾಗಲೂ ಕನ್ನಡವನ್ನು “ತಾಯಿ”, “ಭುವನೇಶ್ವರಿ” ಎಂದೇ ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಗೋಕಾಗ್ ವರದಿ ಇಂಗ್ಲಿಶನ್ನು ಆಧುನಿಕ ಜ್ಞಾನ, ತಂತ್ರಜ್ಞಾನ, ಸಂಸ್ಕೃತಿಗಳ ವಾಹವೆಂದು ಕರೆದರೂ ಅಂತಿಮವಾಗಿ ಕನ್ನಡದಲ್ಲೇ ವಿಜ್ಞಾನ ಸಾಹಿತ್ಯವನ್ನು ನಂತರ ಅನೇಕ ದೇಶಗಳ ಭಾಷಾಂತರಿಸಿಕೊಳ್ಳುತ್ತವೆ ಎಂಬ ನಂಬಿಕೆ ಇಲ್ಲಿದೆ. ಕಾಲಾನುಕ್ರಮೇಣ ಇಲ್ಲಿ ಇಂಗ್ಲಿಷ್‌ಗೆ ಯಾವ ಪಾತ್ರವೂ ಇಲ್ಲವಾಗೊ ಕಡೆಗೆ ಆಧುನಿಕ ವಿಜ್ಞಾನ, ಸಂಸ್ಕೃತಿಗಳ ವಿಕಾಸ ಸಾಂಪ್ರದಾಯಿಕ ಸಂಸ್ಕೃತಿ, ಮೌಲ್ಯಗಳ ಯಜಮಾನಿಕೆಯ ಕೆಳಗೇ ನಡೆಯುತ್ತದೆ ಎಂಬ ತರ್ಕ ಇದು. ಆ ಸಾಂಪ್ರದಾಯಿಕ ಮೌಲ್ಯ, ಸಂಸ್ಕೃತಿಗಳ ಪುನರ್ ಪ್ರತಿಷ್ಟಾಪನೆ ಕನ್ನಡ ಭಾಷೆ, ಸಂಸ್ಕೃತಿಯಲ್ಲಿ ನಡೆಯುತ್ತದೆ ಎಂಬ ದೂರಗಾಮೀ ಆಸೆ ಇದು. +ಕನ್ನಡ ಸಿದ್ಧಾಂತ ಪ್ರತ್ಯೇಕತಾ ಧೋರಣೆಯನ್ನು ತಳೆಯಬಲ್ಲದು. ಮತ್ತು ಈಗ ಅದು ಆ ಬಗೆಯ ನಿಲುವನ್ನು ತಳೆದಿದೆಯಾದರೂ ಅಖಿಲ ಭಾರತೀಯ ಹಂತದಲ್ಲಿ ಕೂಡಾ ಇದು ಏಕತೆಗೆ ನೆರವಾಗಬಲ್ಲದು. ಇದನ್ನು ಗೋಕಾಕ್ ವರದಿ ಮತ್ತು ಅದಕ್ಕೆ ಸಿಕ್ಕಿರುವ ಆರ್ ಎಸ್ ಎಸ್ ಮತ್ತು ರಾಷ್ಟ್ರೀಯವಾದಿ ಮಧ್ಯಮವರ್ಗದ ಹಿಂದೂಗಳ ಬೆಂಬಲ ಸಿದ್ಧಪಡಿಸಿದೆ. ಕರ್ನಾಟಕದಲ್ಲಿ ಕನ್ನಡವನ್ನು, ಮಹಾರಾಷ್ಟ್ರದಲ್ಲಿ ಮರಾಠಿಯನ್ನು, ತಮಿಳಿನಾಡಿನಲ್ಲಿ ತಮಿಳನ್ನು ಬೆಂಬಲಿಸುವ ಆರ್ ಎಸ್ ಎಸ್, ಬಿ ಜೆ ಪಿಗಳು ಬರೀ ಅನುಕೂಲ ಸಿಂಧು ರಾಜಕೀಯವನ್ನು ಮಾಡುತ್ತಿಲ್ಲ. ಇಲ್ಲಿ ಅದರ ದೃಷ್ಟಿಕೋನವೇ ಬೇರೆ. ಮೊದಲು ಪ್ರಾಂತೀಯ ಹಂತದಲ್ಲಿ ಭಾಷಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೂ ಮುಖ್ಯ ಧಾರೆಯೊಂದಿಗೆ ವಿಲೀನರಾಗಬೇಕು. ನಂತರ ಅಖಿಲ ಭಾರತೀಯ ಮುಖ್ಯ ಧಾರೆಯಲ್ಲಿ ವಿಲೀನ ಅಂದರೆ, “ರಾಷ್ಟ್ರಭಾಷೆ” ಧರ್ಮ, ಸಂಸ್ಕೃತಿಗಳಲ್ಲಿ ಇತ್ಯಾದಿಗಳಲ್ಲಿ ವಿಲೀನರಾಗಬೇಕು. +ಆದರೆ, ಸಾಂಪ್ರದಾಯಿಕ ಏಕತಾವಾದ ಭಾಷೆ ಮತ್ತು ಧರ್ಮದ ರೂಪಗಳಲ್ಲಿ ಬಂದಾಗ ಪ್ರತ್ಯೇಕತೆಗಳನ್ನು ಹೇಳುತ್ತದೆಯಾದ್ದರಿಂದ, ಪಾರಂಪರಿಕ ಸಂಸ್ಕೃತಿಯನ್ನು ಹೇಗೆ ಪ್ರತಿಷ್ಟಾಪಿಸಲು ಸಾಧ್ಯ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಏಕೆಂದರೆ, ಪಾರಂಪರಿಕ ಸಂಸ್ಕೃತಿ ಜೀರ್ಣಾಗ್ನಿ ಸ್ವರೂಪದ್ದು. ಎಲ್ಲವನ್ನೂ ಮೇಳೈಸಿಕೊಂಡು ಭಾಷೆ ಧಾರ್ಮಿಕ ಗುಂಪುಗಳ ವೈಶಿಷ್ಟ್ಯಗಳನ್ನು ಅದು ಕರಗಿಸಿಬಿಡುತ್ತದೆ. ಅದು ಏಕರೂಪೀ ರಚನೆಯಾಗಿರುವಂಥದ್ದು. ಇದಕ್ಕೆ ಉತ್ತರವೆಂದರೆ ಈ ಸಾಂಪ್ರದಯಿಕ ಏಕತಾವಾದ ಬಂಡವಾಳಶಾಹಿ ಸಮಾಜ ತನ್ನ ಅಧುನೀಕರಣದ ಸಂದರ್ಭದಲ್ಲಿ ಸಮಕಾಲೀನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೃಷ್ಟಿಯಾದದ್ದು. ಪರಂಪರೆಯ ಸಂಸ್ಕೃತಿಯಿಂದ ಇದು ತನಗೆ ಬೇಕಾದದ್ದನ್ನು ಆಯ್ದು, ಸಮಕಾಲೀನ ಅವಶ್ಯಕತೆಗಳಿಗೆ ತಕ್ಕಂತೆ ವ್ಯಾಖ್ಯಾನಿಸುತ್ತದೆ. ಅದು ಸಮಕಾಲೀನ ಸಮಾಜದಲ್ಲಿ ಉಳಿದಿರುವ ಹಳೆಯ ಮೌಲ್ಯಗಳ ಜೊತೆಗೆ ಸೇರುತ್ತದೆ. ನಮ್ಮ ಸಮಕಾಲೀನ ಸಮಾಜದಲ್ಲಿ ಉಳಿಸಿರುವ ಹಳೆಯ ಮೌಲ್ಯಗಳ ಜೊತೆಗೆ ಸೇರುತ್ತದೆ. ನಮ್ಮ ಸಮಕಾಲೀನ ಸಮಾಜ ಕೂಡಾ ಬ್ರಿಟಿಷ್ ಸಾಮ್ರಾಜ್ಯಶಾಹೀ ಮತ್ತು ನಂತರದ ಬಂಡವಾಳಶಾಹೀ ಬೆಳವಣಿಗೆಯ ಫಲವಾಗಿ ರೂಪಗೊಂಡದ್ದು. ಇದರಿಂದಾಗಿ ಪ್ರತ್ಯೇಕತಾವಾದ, ಹರಳುಗತ್ಟಿದ ಉಪರಾಷ್ಟ್ರೀಯತೆ, ವೈಯಕ್ತಿಕ ವ್ಯಕ್ತಿತ್ವ ಮತ್ತು ಇತರೆ ಸಾಮಾಜಿಕ, ಭಾಷಿಕ, ಧಾರ್ಮಿಕ, ಜಾತಿ ಗುಂಪುಗಳು ಬೆಳೆದವು. ಹೀಗಾಗಿ ಸಾಂಪ್ರದಾಯಿಕ ಏಕತಾವಾದ ಪ್ರತ್ಯೇಕತೆ ಮತ್ತು ಸಮಗ್ರತೆ ಎರಡೂ ಆಯಾಮಗಳಲ್ಲಿ ಪ್ರಕಟವಾಗುತ್ತದೆ. ತನ್ನ ಸಮಗ್ರತೆಯನ್ನು ಅದು ಕಾರ್ಯರೂಪಕ್ಕೆ ತರುವುದು ಅಲ್ಪಸಂಖ್ಯಾತರ ಮೇಲೆ ಎಲ್ಲ ಕ್ಷೇತ್ರಗಳಲ್ಲಿ ಯಜಮಾನಿಕೆಯನ್ನು ಹೇರುವಲ್ಲಿ. ಹೀಗಾಗಿ, ಅಲ್ಪಸಂಖ್ಯಾತರು ಎರಡನೇ ದರ್ಜೆ ನಾಗರಿಕರಾಗಿ ಪರಿವರ್ತಿತರಾಗುತ್ತಾರೆ. ಅವರನ್ನು ಹೊರಗಟ್ಟಲಾಗುತ್ತದೆ. ಕೆಲವೊಮ್ಮೆ ನಿರ್ನಾಮವೂ ಆಗುತ್ತಾರೆ. ಮುಖ್ಯ ಧಾರೆಯಲ್ಲಿ ಸೇರುವಂತೆ, ಅಂದರೆ ವಿಲೀನವಾಗುವಂತೆ ಒತ್ತಾಯಿಸಲಾಗುತ್ತದೆ. ಈ ಹೊತ್ತು ಶಿಯಾ ಅಳ್ವಿಕೆಯ ಇರಾನ್, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ನಡೆಯುತ್ತಿರುವುದು ಇದೇ. ಆರ್.ಎಸ್.ಎಸ್. ಬಿಜೆಪಿ. ಖಾಲಿಸ್ತಾನ್ ಮತ್ತು ಗೋಕಾಕ್ ಚಳವಳಿಯ ಸೈದ್ಧಾಂತಿಕ ನೆಲೆಗಟ್ಟು ಇದೇ. ಸಾಂಪ್ರದಾಯಿಕ ಏಕತಾವಾದಕ್ಕೆ ಚೂರು ಚೂರಾಗುತ್ತಿರುವ ಈ ಶೋಷಣಾತ್ಮಕ, ಈ ಸಾಮಾಜಿಕ ವ್ಯವಸ್ಥೆಯನ್ನು ರಕ್ಷಿಸಲು, ಉಳಿಸಲು ಇರುವ ದಾರಿ ಇದೊಂದೆ. ಆದ್ದರಿಂದಲೇ, ಸಾಂಪ್ರದಾಯಿಕ ಸಂಸ್ಕೃತಿಯ ಪರಿಭಾಷೆಯನ್ನು ಅಲ್ಪಸಂಖ್ಯಾತರು ಅನುಮಾನದಿಂದ ನೋಡುತ್ತಾರೆ. ಇದು ಅನೇಕ ಬಗೆಯ ಅನ್ಯಾಯಗಳನ್ನು ದಬ್ಬಾಳಿಕೆಗಳನ್ನು ಮುಚ್ಚಿ ಹಾಕುತ್ತದೆ. ಅಲ್ಪಸಂಖ್ಯಾತರ ಮೇಲಿನ ಅಧಿಪತ್ಯದ ಸಮರ್ಥನೆಗೆ ಅನೇಕ ವಾದಗಳನ್ನು ಒದಗಿಸುತ್ತದೆ. +ಒಳಭೀತಿ +ಸಾಂಪ್ರದಾಯಿಕ ಏಕತಾವಾದದ ಈ ಯಜಮಾನಿಕೆ ಹೆಚ್ಚು ಮುಂದುವರಿದ, ಅಲ್ಪಸಂಖ್ಯಾತರ ಸಮಾನತೆ ಒಪ್ಪಿರುವ, ಪ್ರಜಾಸತ್ತಾತ್ಮಕ ಸಮಾಜದಲ್ಲಿ ಬಂದಾಗ ಅದಕ್ಕೆ ಉಗ್ರವಾದ ಸರ್ವಾಧಿಕಾರತ್ವದ ಅವಶ್ಯಕತೆ ಬೀಳುತ್ತದೆ. ಈ ಸಮಾಜಗಳಲ್ಲಿ ಅಧುನಿಕೀಕರಣ, ಪಾಶ್ಚಾತ್ಯೀಕರಣ, ತುಂಬ ದೂರ ಹೋಗಿರುತ್ತವೆ. ವಿಘಟನೆಗೊಳ್ಳುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಉತ್ಕಟ ಸರ್ವಾಧಿಕಾರತ್ವವನ್ನು ಏಕತಾವಾದ ಬಯಸುತ್ತದೆ. ಈ ಸರ್ವಾಧಿಕಾರತ್ವ ಸಂವಾದ ಮತ್ತು ವೈಚಾರಿಕತೆಗಳ ನಿರಾಕರಣೆ ಮಾಡುತ್ತದೆ. ಕೊಂಚ ಬಿನ್ನಾಭಿಪ್ರಾಯವನ್ನು ಕೂಡಾ ಇದು ಸಹಿಸದು. ಇದರ ಜೊತೆಗೆ ಒಂದು ಬಗೆಯ “ಬೆದರಿಕೆ” ಯ ಪ್ರಜ್ಞೆಯೂ ಇರುತ್ತದೆ. ಆದರೆ ಯಾವ ಹೊರಗಿನ ಶತ್ರುವನ್ನು ಇದು ಗುರುತಿಸುವುದಿಲ್ಲ. ಖೋಮೈನಿ ಆಳ್ವಿಕೆ. ಖಾಲಿಸ್ತಾನ್ ಚಳುವಳಿಗಳಲ್ಲಿ ಈ ರೀತಿಯ ಮನಸ್ಥಿತಿಯನ್ನು ಕಾಣಬಹುದು. ಸಾರ್ವತ್ರಿಕ ವಿಘಟನೆ ಮತ್ತು ಅಧುನಿಕೀಕರಣ, ಪಾಶ್ಚಾತ್ಯೀಕರಣಗಳಿಗೆ ಪ್ರತಿಸ್ಪಂದಿಸಿ ಈ ತಲ್ಲಣ ಹುಟ್ಟುತ್ತದೆ. ಒಂದು ಇಡೀ ಜೀವನಕ್ರಮವನ್ನು ಸಂಸ್ಕೃತಿಯನ್ನು ಪಲ್ಲಟಮಾಡುವ ಪ್ರಕ್ರಿಯೆಗಳಿಂದಾಗಿ ಹುಟ್ಟುವ ಗಾಢ ಅಭದ್ರತೆ ಅದು. ಬಹಳ ಸಾರಿ ಈ ತಲ್ಲಣ ಅಲ್ಪಸಂಖ್ಯಾತರ ಮೇಲೊ ಅಥವಾ ಬಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೊ ತಿರುಗಿ ಬೀಳುತ್ತದೆ. ಬೇರೆ ಸಂದರ್ಭದಲ್ಲಿ ಯುರೋಪಿಯನ್ ಚರಿತ್ರಕಾರರು “ಮಹಾನ್ ಭಯ” ಎಂದು ವರ್ಣಿಸಿದ್ದು ಇದಕ್ಕೆ ಸಾಮ್ಯವಿರುವ ಸ್ಥಿತಿಯನ್ನೆ, ಇಂಗ್ಲಿಷ್ ಚರಿತ್ರಕಾರನೊಬ್ಬ ಈ ಭಯದ ಸಮಕಾಲೀನ ಇಂಗ್ಲಿಷ್ ರೂಪವನ್ನು ಅತ್ಯಂತ ಸಮರ್ಥವಾಗಿ ವರ್ಣಿಸುತ್ತಾನೆ. “ಅದು ಹೊಂದಿಕೊಳ್ಳಲು ವಿಫಲವಾದ ಸಂಸ್ಕೃತಿಯ ಬಿಕ್ಕಟ್ಟು. ಇಲ್ಲಿ ಒಂದು ಬಗೆಯ ವರ್ಗ ಭಯ, ಸನ್ನಿ ವೈಚಾರಿಕತೆಯನ್ನು ನುಂಗಿ ಹಾಕಿಬಿಟ್ಟಿದೆ. ಅದೊಂದು ಬಗೆಯ ಮಾನಸಿಕ-ಸಾಮಾಜಿಕ ಅವೈಚಾರಿಕತೆಯ ಸೆಳೆವು. ಹುಚ್ಚು ಮನುಷ್ಯನಲ್ಲಿ ಕಂಡು ಬರುವ ಭೀತಿಯ ಹಾಗೆ. ಅದು ಅನೇಕ ಬಲಿಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಇದರ ಮೊದಲ ಬಲಿ ಯಾವಾಗಲೂ ವೈಚಾರಿಕತೆಯೇ. ಇದು ನಮ್ಮನ್ನು ಒಂದು ಬಗೆಯ ಅಧಃಪಾತಾಳಕ್ಕೆ ತಳ್ಳುತ್ತದೆ. ಇಲ್ಲ ನಮ್ಮ ಸಮಾಜದ ಯಾವ ಮಾನವೀಯ ಸಂಯಮಗಳಿಗೂ ಉಳಿಯಲಾರವು”. +ಭಾಷೆ-ಗೀಳು +ಗೋಕಾಕ್ ಚಳುವಳಿಗಾರರ ಪ್ರಕಾರ ಬೆದರಿಕೆ ಈಗಿರುವುದು, “ಕನ್ನಡಕ್ಕೆ”. “ಕನ್ನಡ ಉಳಿಸಿ” ಎಂಬುದು ಅವರ ಕರೆ. ಈ ಹೋರಾಟದ ವಿರೋಧಿಗಳೆಲ್ಲರೂ “ಕನ್ನಡ ವಿರೋಧಿ”ಗಳು. ಕನ್ನಡ ಸಾಹಿತ್ಯಿಕ ಬುದ್ಧಿಜೀವಿ ವರ್ಗದ ಚಿಂತನೆಯ ವೈಖರಿ ಈ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಕನ್ನಡ ಉಳಿಸಿ (ಸಂಸ್ಕೃತದಿಂದ) “ಸಂಸ್ಕೃತ ಹೇಗೆ ತಾನೆ ಕನ್ನಡಕ್ಕೆ ಹಾನಿ ಮಾದುತ್ತದೆ”. “ಕನ್ನಡದ ಬೆಳವಣಿಗೆಗೆ ಸಂಸ್ಕೃತ ನೇರವಾಗಿದೆ”. “ಕನ್ನಡ ಹೇಗೆ ತಾನೆ ಉರ್ದುವಿಗೆ ಹಾನಿ ಮಾಡುತ್ತದೆ?”. ಇಂಗ್ಲಿಷಿನ ಪೂತನಿ ಕನ್ನಡವನ್ನು ಈಂಟುತ್ತದೆ”. ಉಳಿದ ಭಾರತೀಯ ಭಾಷೆಗಳು ಕನ್ನಡವನ್ನು ಕೊಲ್ಲುವುದಿಲ್ಲ”. +ಸಾಮಾನ್ಯವಾಗಿ ಈ ಮಾತುಗಳನ್ನು ಎಲ್ಲರೂ ಮಾತಿನ ಧಾಟಿಯೆಂದೂ, ಉಕ್ತಿ ವೈಚಿತ್ರ್ಯವೆಂದೂ ಭಾವಿಸುವುದುಂಟು. ಆದರೆ, ಈ ಉಕ್ತಿ ವೈಚಿತ್ರ್ಯವನ್ನು ವಾಸ್ತವ ಸತ್ಯ ಎಂದೇ ಭಾವಿಸುವ ತನಕ ಹೊರಟುಹೋಗಿದೆ. ಹೀಗಾಗಿ, ಈ ಅತಿರೇಕದ ವಿರುದ್ಧ ಕನ್ನಡಿಗ ಕಾರ್ಮಿಕ ನಾಯಕರೊಬ್ಬರು ಸಹಜವಾಗೇ ತಿರುಗಿಬಿದ್ದು ಸರಿಯಾಗಿ ಕೇಳಿದರು. “ಕನ್ನಡದ ಹಿತಾಸಕ್ತಿ ಎಂಬುದು ಹೇಗಿರಲು ಸಾಧ್ಯ? ಏನಿದ್ದರೂ ಇರುವುದು ಮನುಷ್ಯನ ಹಿತಾಸಕ್ತಿಗಳು ಮಾತ್ರ”. ಭಾಷೆಯೊಂದನ್ನು ಜೀವಂತ ವ್ಯಕ್ತಿಯನ್ನಾಗಿ ಮಾರ್ಪಡಿಸಿರುವ ಈ ಸಿದ್ಧಾಂತವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಾಗಿದೆ. ಈಗ ನಾವು “ಕನ್ನಡ ತಾಯಿ”, “ಕನ್ನಡ ನೆಲ”, “ಕನ್ನಡ ಜಲ”, “ಕನ್ನಡ-ರಾಜ್ಯ”, “ಕನ್ನಡದ ಅನ್ನ” ಮುಂತಾದ ಮಾತುಗಳನ್ನು ಕೇಳುತ್ತಿದ್ದೇವೆ. ಅಷ್ಟೇ ಏಕೆ, ಆಕೆ “ಶ್ರೀ ಭುವನೇಶ್ವರಿ” ಎಂಬ ದೇವತೆಯೂ ಆಗಿದ್ದಾಳೆ. ಡಾ|| ರಾಜ್‌ಕುಮಾರ್ ಈ ಚಳವಳಿಯ ಸಂದರ್ಭದಲ್ಲಿ ತಾವು ಶ್ರೀ ಭುವನೇಶ್ವರಿಯ ಸೇವೆಗೆ ಸಿದ್ಧ ಎಂದು ಅನೇಕ ಸಾರಿ ಹೇಳಿದ್ದಾರೆ. ಇದು ಭಾಷೆಯ ಅಮಾನವೀಕರಣ, ಅಸಮಾಜೀಕರಣದ ಅಂತಿಮರೂಪ. ಇಲ್ಲಿ ಮನುಷ್ಯ ತನ್ನ ಉಪಯೋಗಕ್ಕೆ ಸೃಷ್ಟಿಸಿಕೊಂಡ ಸಾಮಾಜಿಕ ಉಪಕರಣ ಭಾಷೆ ಎನ್ನುವುದೇ ಮರೆತುಹೋಗಿದೆ. ಭಾಷೆ, ಮಾನವರಿಗಿಂತ ಎತ್ತರದಲ್ಲಿರುವಂಥದೂ, ದೊಡ್ಡದೂ ಆಗಿಬಿಟ್ಟಿದೆ. ಆಕೆಯ ಸೇವೆಯನ್ನು ನಾವು ಮಾಡಬೇಕು ಎಂಬ ಧೋರಣೆ ಆವರಿಸಿದೆ. “ಕನ್ನಡದ ಹಿತಾಸಕ್ತಿ”ಯ ಹಿಂದೆ ಇರುವ ನಿಜವಾದ ಸಾಮಾಜಿಕ ಆಸಕ್ತಿಗಳನ್ನು ಈ ರೀತಿಯಿಂದ ಮಾತ್ರ ಮರೆಮಾಚಲು ಸಾಧ್ಯ. ಭ್ರಮನಿರಸನರಾಗಿ ವ್ಯವಸ್ಥೆಯಿಂದ ಸಿಡಿದುಬಿದ್ದಿರುವ ಜನತೆಯನ್ನು ಇದರಿಂದಾಗಿ ಮತ್ತೆ ಈ ಶೋಷಣಾತ್ಮಕ ವ್ಯವಸ್ಥೆಯ ಜೊತೆಗೆ ಬೆಸೆಯಲು ಸಾಧ್ಯ. ಈ ಕೆಲಸಕ್ಕೆ ಹೊಸ ಸಿದ್ಧಾಂತ, ಸಂಘಟನೆ, ಹೊಸ ನಾಯಕರು, ಹೊಸ ಸಂಸ್ಕೃತಿಯ ಅಗತ್ಯವಿದೆ. ಗೋಕಾಕ್ ಚಳವಳಿ ಈ ಹೊಣೆಯನ್ನೆ ಪೂರೈಸುವ ದಿಕ್ಕಿನಲ್ಲಿ ಒಂದು ಪ್ರಯತ್ನ. +ಈ ಇಡೀ ಪ್ರಕ್ರಿಯೆಯ ಮೂಲ ಇರುವುದು ಕನ್ನಡ ಸಾಹಿತಿಗಳ ಬುದ್ಧಿಜೀವ ವರ್ಗದ ಭಾಷಾ ಧೋರಣೆಯಲ್ಲಿ. ಭಾಷಾ ಎನ್ನುವುದು ಅವರಿಗೊಂದು ಗೀಳು. ಅದು ಇಂಗ್ಲಿಷ್, ಸಂಸ್ಕೃತ, ಕನ್ನಡ ಹೀಗೆ ಯಾವುದೇ ಆಗಿರಬಹುದು. ಅವರು ಎಲ್ಲವನ್ನು-ಸಂಸ್ಕೃತಿ, ರಾಜಕಾರಣ, ಸಮಾಜಿಕ ಘರ್ಷಣೆ, ಸಾಂಸ್ಕೃತಿಕ ಸ್ವಂತಿಕೆ, ದಬ್ಬಾಳಿಕೆ ಇತ್ಯಾದಿ-ಭಾಷೆಯ ಮೂಲಕವಾಗೇ ನೋಡುತ್ತಾರೆ. ಕೆಲವು ಸಾರಿ ಬೇರೆಯವರಿಗೆ ಕಾಣದಂತಹ ಕಲಿಯಬೇಕಾದ ಕೆಲವು ಒಳನೋಟಗಳು ಇವರಿಗೆ ಸಾಧ್ಯವೆಂಬುದು ನಿಸ್ಸಂದೇಹವಾಗಿ ನಿಜ. ಈ ಅಂಶವನ್ನು ಮುಂದೆ ನಾನು ಸಾಕಷ್ಟು ದೀರ್ಘವಾಗಿ ಚರ್ಚಿಸಿದ್ದೇನೆ. ಆದರೆ, ಅವರಿಗೆ ಭಾಷಾ ದೃಷ್ಟಿಕೋನಕ್ಕೆ ಇರುವ ಸೀಮಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಉದಾಹರಣೆಗೆ ಸಂಗೀತ, ಚಿತ್ರಲೇಖ, ಆಧುನಿಕ ವಿಜ್ಞಾನ, ಗಣಿತಶಾಸ್ತ್ರ ಇತ್ಯಾದಿ ಭೌದ್ಧಿಕ ಕ್ಷೇತ್ರಗಳಲ್ಲಿ ಭಾಷೆಯ ಪಾತ್ರ ಗೌಣ ಇಲ್ಲವೇ ಇಲ್ಲ. ಇನ್ನು ಜೀವನದ ಅನೇಕ ವಲಯಗಳಲ್ಲಿ-ಮದುವೆ, ಅಸ್ಪೃಶ್ಯತೆ, ದಲಿತರ ಮೇಲಿನ ದಬ್ಬಾಳಿಕೆ, ಕಾರ್ಮಿಕ ಹೋರಾಟಗಳಲ್ಲಿ ಭಾಷೆ, ಭಾಷೆಗಳ ನಡುವಣ ವ್ಯತ್ಯಾಸಗಳು ಯಾವ ಮಹತ್ವದ ಪಾತ್ರವನ್ನು ವಹಿಸುವುದಿಲ್ಲ. +ಪರ್‍ಯಾಯ ಇದ್ದಿದ್ದರೆ +ದುಡಿಯುವ ಜನತೆಗೆ ಇನ್ನೊಂದು ಎಡಪಂತೀಯ ಪರ್ಯಾಯವಿದ್ದಿದ್ದರೆ, ವರ್ಗ ರಾಜಕಾರಣದ ನೆಲೆಯಲ್ಲಿ ಅವರು ಸಂಘಟಿತರಾಗಿದ್ದರೆ ಬಹುಶಃ ಅವರು ಈ ದಾರಿಗೆ ಇಳಿಯುತ್ತಿರಲಿಲ್ಲ. ಆಗ ಭಾಷೆ ಶೋಷಕರ ವಿರುದ್ಧವಾಗಿ ಶೋಷಿತರನ್ನು ಸಂಘಟಿಸುವ ಸಾಧನವಾಗುತ್ತಿತ್ತು. ಅವರನ್ನು ಒಡೆವ ಅಸ್ತ್ರವಾಗುತ್ತಿರಲಿಲ್ಲ. ಮುಂದಿನ ಸಮಾಜವಾದೀ ಸಮಾಜದ ದರ್ಶನ ನೀಡುತ್ತಿತ್ತು. ಸಾಮಾಜಿಕ ಮತ್ತು ಸಾಮಾಜಿಕ ಸಂಸ್ಥೆಗಳ ಅರ್ಥೈಸುವಿಕೆಗೆ, ಪ್ರಜಾಸತ್ತಾತ್ಮಕ ಸಮಾಜವಾದೀ ಸಮಾಜದ ಕಡೆಗೆ ಕೈದೀವಿಗೆಯಾಗುತ್ತಿತ್ತು. ಆದರೆ, ಕರ್ನಾಟಕದಲ್ಲಿ ಈ ಹೊತ್ತು ಅಂಥ ಬುದ್ದಿಜೀವಿ ಅಥವಾ ಜನತೆಯ ಬೆಂಬಲವಿಲ್ಲ. ಇವಲ್ಲದೆ ಇರುವ ಇನ್ನೊಂದು ಪರ್‍ಯಾಯವೆಂದರೆ; ಭಾ.ಜ.ಪ ಮತ್ತು ಆರ್.ಎಸ್.ಎಸ್. ನಂತಹ ಸಂಘಟನೆಗಳು. ಕರ್ನಾಟಕದಲ್ಲಿ ಅವೂ ಕೂಡಾ ದುರ್ಬಲವಾಗಿವೆ. ಹೀಗಾಗಿ, ಸಾಂಪ್ರದಾಯಿಕ ಐಕ್ಯತಾವಾದ ಅತ್ಯಂತ ಸಂಕೀರ್ಣ ಶಕ್ತಿಗಳ ಆಕಸ್ಮಿಕ ಒಕ್ಕೂಟದ ರೂಪವನ್ನು ಪಡೆದಿದೆ. ಈ ಶಕ್ತಿಗಳು ರೂಪುಗೊಂಡದ್ದು ಭಾಷಾ ಸಿದ್ಧಾಂತ ಮತ್ತು ಸಣ್ಣ ಒತ್ತಾಯವೊಂದರ ಆಧಾರದ ಮೇಲೆ ತಮಗೆ ಸಿಕ್ಕಿದ ಜನತೆಯ ಬೆಂಬಲ ಕಂಡು ಕನ್ನಡ ಲೇಖಕರೇ ವಿಸ್ಮಯಗೊಂಡಿದ್ದಾರೆ. ಈ ಚಳವಳಿ ಸಂಘಟನೆ. ಶಿಸ್ತು, ನಿರ್ದಿಷ್ಟ ದಿಕ್ಕು ಇಲ್ಲದೆ ಬಂದದ್ದು. ಹಠಾತ್ತನೆ ಹುಟ್ಟಿರುವಂಥದು ಜನತೆಯನ್ನು ಕೆರಳಿಸುವಾಗ, ಅದರ ಮುಂದಿನ ಪರಿಣಾಮಗಳ ಬಗ್ಗೆ ಕನ್ನಡ ಲೇಖಕರು ಯೋಚಿಸಲೇ ಇಲ್ಲ. ಅದು ನಿಜವಾಗಿಯೂ ಬೇಜವಾಬ್ದಾರಿಯಾದದ್ದು. ಈ ಬೇಜವಾಬ್ದಾರಿ ಅನೇಕ ಸಾವುಗಳಿಗೂ ಕೂಡಾ ಕಾರಣವಾಯಿತು. ಈ ದೃಷ್ಟಿಯಿಂದ ಇದು ಈ ರೀತಿಯ ಉಳಿದ ಚಳುವಳಿಗಿಂತ ಭಿನ್ನ. ಉಳಿದ ಸಾಂಪ್ರದಾಯಿಕ ಏಕತಾ ಚಳವಳಿಗಳು ಸಾಮಾನ್ಯವಾಗಿ ಶಿಸ್ತಿನಿಂದ, ನಿಷ್ಟ ಕಾರ್‍ಯಕರ್ತರಿಂದ ಕೂಡಿರುತ್ತದೆ; ಪೂರ್ಣಸರ್‍ವಾಧಿಕಾರೀ ರೂಪದಲ್ಲಿರುವ ಇದನ್ನು ಯಾರೊ ಒಬ್ಬ ವ್ಯಕ್ತಿ ನಿರ್ದೇಶಿಸಿರುತ್ತಾರೆ. ಹೀಗಾಗಿ, ತನ್ನ ಮೂಲಭೂತ ತಾತ್ವಿಕತೇ ವಿರುದ್ಧವಾದ ರೀತಿಯಲ್ಲಿ ಅರಾಜಕತೆಯ ಕಡೆಗೆ ಈ ಚಳವಳಿ ಸಾಗುತ್ತಿದೆ. ಕರ್ನಾಟಕದಲ್ಲಿ ಸಂಘಟಿತ ಪರ್ಯಾಯವೊಂದರ ಗೈರು ಹಾಜರಿ ಇದಕ್ಕೆ ಕಾರಣ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. +ಈ ಭಾಗದ ಚರ್ಚೆಯ ತಿರುಳನ್ನು ಹೀಗೆ ಸಂಗ್ರಹಿಸಿ ಹೇಳಬಹುದು. ಇಲ್ಲಿ ಎಲ್ಲ ವಲಯಗಳ ವಿವಿಧ ಶಕ್ತಿಗಳು ಗೌಣವಾದ ಬೇಡಿಕೆಯೊಂದರ ಆಧಾರದ ಮೆಕೆ ಒಕ್ಕೂಟ ರಚಿಸಿಕೊಂದಿವೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ರಾಜಕೀಯ ವಲಯಗಳ ಈ ಶಕ್ತಿಗಳು ಬೇರೆ ಬೇರೆ ನೆಲೆಗಳಿಂದ ಬಂದಿದ್ದು, ಅನೇಕ ಹಂತಗಳಲ್ಲಿ ಬೇರೆ ಬೇರೆ ಆಸಕ್ತಿಗಳನ್ನೂ ಹೊಂದಿದೆ. ಜಾತಿ, ಕಾರ್ಮಿಕ ಸಂಘ, ಸರ್ಕಾರ ಮತ್ತಿತರ ವಲಯಗಳಲ್ಲಿ ಇವಕ್ಕೆ ತಮ್ಮದೇ ಆದ ಆಸಕ್ತಿಗಳಿವೆ. ಕೆಲವೊಮ್ಮೆ ಇವು ತಮ್ಮ ತಮ್ಮೊಳಗೆ ಹೊಡೆದಾಡುತ್ತವೆ ಕೂಡಾ. ಆದರೆ, ಈ ಚಳವಳಿ ಸಂದರ್ಭದಲ್ಲಿ ಮಾತ್ರ ಇವು ಏಕೀಕೃತ ಶಕ್ತಿಯಾಗಿ ಮಾರ್ಪಾಟಾದವು. ಈ ಒಕ್ಕೂಟದ ಕೆಲವು ಶಕ್ತಿಗಳ ಸ್ವರೂಪವನ್ನು ಸ್ಥೂಲವಾಗಿ ಚರ್ಚಿಸಿದ್ದೇನೆ. ಇವುಗಳ ಜೊತೆಗೆ ಈ ಚಳವಳಿಯಲ್ಲಿ ಭಾಗವಹಿಸಿದ ಇನ್ನಿತರ ಜಾತಿ, ವರ್ಗಗಳನ್ನು ಗುಂಪುಗಳನ್ನು ಅವುಗಳ ನಿರ್ಧಿಷ್ಟತೆಯಲ್ಲಿಯೇ ಅಧ್ಯಯನ ಮಾಡುವ ಅಗತ್ಯವಿದೆ. +ಅಭದ್ರತೆ +ಚರಿತ್ರೆಯಲ್ಲಿ ಕೊಂಚ ಹಿಂದಕ್ಕೆ ಹೋಗಿ ನೋಡುವುದಾದರೆ, ಈ ಬಗೆಯ ಕನ್ನಡ ಸಿದ್ಧಾಂತ ಮತ್ತು ದುರಭಿಮಾನ ೧೯೭೦ರ ಮೊದಲ ವರ್ಷಗಳಲ್ಲೆ ಪ್ರಕಟವಾದದ್ದು ತಿಳಿಯುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಈ ಭಾವನೆಗಳು ತೀವ್ರಗೊಂಡವು. ಸಾಮಾಜಿಕ ಜೀವನದ ಬೇರೆ ಬೇರೆ ವಲಯಗಳಲ್ಲಿ ದಿನ ನಿತ್ಯದ ಜೀವನದಲ್ಲಿ ಇದು ಬೇರೆ ಬೇರೆ ರೂಪುಗಳಲ್ಲಿ ಕಾಣಹತ್ತಿತು. ಗೋಕಾಕ್ ವರದಿ ಕಾಳ್ಗಿಚ್ಚನ್ನು ಎಬ್ಬಿಸಿದ ಒಂದು ಕಿಡಿ ಅಷ್ಟೆ, ಬಹುಶಃ ಯಾವಾಗಲೂ ಅತ್ಯಂತ ಗೌಣ ಸಂಗತಿಯೊಂದು ಮಹತ್ವದ ವಿರೋಧಗಳನ್ನು ಮರೆಮಾಡುತ್ತದೊ ಏನೊ. ಇಲ್ಲಿ ಎಲ್ಲರನ್ನೂ ಒಂದುಗೂಡಿಸಿರುವ ಸಿದ್ಧಾಂತವೆಂದರೆ ಕನ್ನಡದ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಪರಿಕಲ್ಪನೆ. ಈ ಪರಿಕಲ್ಪನೆಯನ್ನು ಒಟ್ಟಾರೆಯಾಗಿ ಎಲ್ಲರೂ ಒಪ್ಪುತ್ತಿದ್ದಾರೆಯೇ ಹೊರತು, ಇದರ ಅರ್ಥ ಮತ್ತು ಸ್ವರೂಪಗಳ ಬಗ್ಗೆ ಸಾಮಾನ್ಯ ಒಪ್ಪಿಗೆ ಇಲ್ಲ. ಆದರೆ, ಒಟ್ಟಾರೆಯಾಗಿ ಈ ಚಳವಳಿಯು ಹಿಂದಿನ ಮುಖ್ಯ ಪ್ರೇರಣೆಯನ್ನು ಈ ಮಾತುಗಳಲ್ಲಿ ಹಿಡಿದಿಡಬಹುದು: ನಗರದ ಮಧ್ಯಮ ವರ್ಗ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸೈದ್ಧಾಂತಿಕ ಕ್ಷೇತ್ರಗಳಲ್ಲಿ ಗಳಿಸಲು ಯತ್ನಿಸುತ್ತಿರುವ ಭದ್ರತೆಯ ಅಭಿವ್ಯಕ್ತಿ ಇದು. ಆಧುನಿಕೀಕರಣ, ಪಾಶ್ಚಾತ್ಯೀಕರಣ ಪ್ರಕ್ರಿಯೆಗಳು ತೀವ್ರಗೊಳ್ಳುತ್ತಿರುವ ಈ ಪರಿಸ್ಥಿತಿಯಲ್ಲಿ, ಕೆಲಸಗಳಿಗಾಗಿ, ಸಂಪನ್ಮೂಲಗಳಿಗಾಗಿ, ಸಾಂಸ್ಕೃತಿಕ ಸ್ವಂತಿಕೆಗಾಗಿ ಈ ಪ್ರಯತ್ನ ನಡೆದಿದೆ. ಇದರ ಹಿನ್ನೆಲೆಯಲ್ಲಿ ಆರ್ಥಿಕ ವಿಘಟನೆ ಒಳ ವಿದ್ಯುತ್ತಿನಂತೆ ಹರಿಯುತ್ತಿದೆ. ಭದ್ರತೆಗಾಗಿ ಒದ್ದಾಡುತ್ತಿರುವ ಈ ಪ್ರಯತ್ನ ಯಜಮಾನಿಕೆಯನ್ನ ಪಡೆಯಲು ಯತ್ನಿಸುತ್ತಿದೆ ಎಂಬುದು ಈ ಚಳವಳಿಯ ವ್ಯಂಗ್ಯಗಳಲ್ಲಿ ಒಂದು. +ಸಂಸ್ಕೃತದ ಪಾತ್ರ +ಆದರೆ. ಇಂಗ್ಲಿಷಿನ ಪಾತ್ರವೇನು? ಭಾರತೀಯ ವಾಸ್ತವತೆಗಳಿಗೆ ಕುರುಡಾದ, ನಿಯೊಕಲೊನಿಯಲ್ ಜನರ ಭಾಷೆಯಾದ ಅದು ಕನ್ನಡವೂ ಸೇರಿದಂತೆ ಉಳಿದ ಭಾರತೀಯ ಭಾಷಿಕರ ಮೇಲಿನ ದಬ್ಬಾಳಿಕೆಯ ಸಾಧನವಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಇದರ ಜೊತೆಗೇ ಸಂಸ್ಕೃತದ ನೆನಪೂ ಆಗುತ್ತದೆ. ಸಂಸ್ಕೃತ ಕೂಡಾ ಹಿಂದೂ ಮತಾಂಧರ ಅಸ್ತ್ರವಾಗಿದ್ದು, ಆ ಭಾಷೆ ಕೆಳ ಜಾತಿ ವರ್ಗಗಳ ಮೇಲಿನ ಬ್ರಾಹ್ಮಣ ಯಜಮಾನ್ಯಕ್ಕೆ ಸಾಧನವಲ್ಲವೆ? ಹೀಗಾಗಿ, ಇಂಗ್ಲಿಷ್-ಸಂಸ್ಕೃತದ ವಿರುದ್ಧ ದುಡಿಯುವ ಜನತೆಯ ಭಾಷೆಯೆಂದರೆ ಕನ್ನಡ ಮಾತ್ರವಲ್ಲವೆ? ಪೋಷಕರ ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೆ ಜನತೆಯ ಆಯುಧವಲ್ಲವೆ ಇದು? ರಾಷ್ಟ್ರಮಟ್ಟದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ, ಆಗ ಕನ್ನಡ-ಹಿಂದಿಗಳೆರಡು ಶೋಷಕರ ಭಾಷೆಗಳ ವಿರುದ್ಧ ಹೋರಾಡಬಹುದಲ್ಲ! ನಾವು ಏನೇ ಮಾಡಿದರೂ, ಅರೆಕೊರೆಯಾಗಿ ಕಲಿಯುತ್ತಿರುವ ಇಂಗ್ಲಿಷಿನ ಮೇಲೆ ಇಷ್ಟೊಂದು ಹಣವನ್ನು ವ್ಯರ್ಥವಾಗಿ ಸುರಿಯುತ್ತಿದ್ದೇವೆ. ಇದರಿಂದಾಗಿ ಬೇರೆ ವಿಷಯಗಳನ್ನು ಕಲಿಯಲು ಸಮಯ ಸಿಗುತ್ತಿಲ್ಲ. ಜೊತೆಗೆ ಇಂಗ್ಲಿಷ್‌ನ ಮರುಭೂಮಿಯಲ್ಲಿ ನಮ್ಮ ಬುದ್ಧಿಶಕ್ತಿ ಪ್ರತಿಭೆ ಇಂಗಿ ಹೋಗುತ್ತಿದೆ. ಬೌದ್ಧಿಕ ವ್ಯಕ್ತಿತ್ವದ ಪೂರ್ಣ ವಿಕಾಸ ಸಾಧ್ಯವಾಗುತ್ತಿಲ್ಲ. ಅದರಲ್ಲು ಬಡವರ ಮಕ್ಕಳ ವ್ಯಕ್ತಿತ್ವಗಳೆಷ್ಟು ಇಂಗ್ಲಿಷ್‌ನಿಂದಾಗಿ ಮುದುಟಿ ಹೋಗುತ್ತಿವೆ? ಇದು ಭಾಷಾ ವಿವಾದದಲ್ಲಿ ಕಾಣುವ ವಿಚಾರಗಳ ಒಂದು ಮುಖ. +ಇನ್ನೊಂದು ಮುಖ +ಆದರೆ, ಇನ್ನೊಂದು ಮುಖವೂ ಇದೆ. ಈ ಭಾಷಾ ಸಮಸ್ಯೆಗೆ, ಕೆಲವರ ಪ್ರಕಾರ, ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿಯ ಅಸಮಾನತೆ, ಜಾತೀಯತೆಗಳ ವಿರುದ್ಧ ಹೋರಾಡಲು ನಮಗಿರುವ ಆಯುಧವೆಂದರೆ ಇಂಗ್ಲಿಷ್ ಮಾತ್ರ. ಹಿಂದಿ ಯಜಮಾನಿಕೆಯ ವಿರುದ್ಧ ಹೋರಾಡಲು, ಪ್ರಾಂತೀಯ ಭಾಷೆಗಳಲ್ಲಿ ಪ್ರಕಟವಾಗುವ ಪ್ರತ್ಯೇಕತಾ ಪ್ರವೃತ್ತಿಗಳನ್ನು ತಡೆಗಟ್ಟಲು ರಾಷ್ಟ್ರೀಯ ಪ್ರಜ್ಞೆಯನ್ನು ಕೂಡಾ ಉದ್ದೀಪಿಸಲು ಇಂಗ್ಲಿಷ್ ಸಹಾಯವಾಗುತ್ತದೆ ಎಂಬ ತರ್ಕವೂ ಇದೆ. ಉಳಿದ ಪ್ರಾಂತೀಯ ಭಾಷೆಗಳಂತೆ ಕನ್ನಡ ಕೂಡಾ ಅಲ್ಪಸಂಖ್ಯಾತರ ಮೇಲೆ ತನ್ನ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುತ್ತಿದೆಯಲ್ಲ? ಆಧುನಿಕ ವಿಜ್ಞಾನ ಮತ್ತು ಸಂಸ್ಕೃತಿಯ ಏಕಮಾತ್ರ ವಾಹಕ ಇಂಗ್ಲಿಷಲ್ಲವೆ? ಈ ಎಲ್ಲ ವಾದಗಳಲ್ಲೂ ಸತ್ಯದ ಒಂದೊಂದು ಅಂಶವಿದೆ. ಇಲ್ಲಿ ಪ್ರಸ್ತಾಪವಾಗಿರುವ ಎಲ್ಲ ಭಾಷೆಗಳ ಸ್ವರೂಪ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪಾತ್ರವನ್ನು ಅವುಗಳ ಶಕ್ತಿ, ಮಿತಿಗಳನ್ನು ಮುಂದೆ ಚರ್ಚಿಸಲು ಪ್ರಯತ್ನಿಸುತ್ತೇನೆ. ಈ ಚರ್ಚೆಯ ಆಧಾರದ ಮೇಲೆ ಈ ಎಲ್ಲ ಭಾಷೆಗಳನ್ನು ಸಂಬಂಧಿಸಿದಂತೆ ಸಮಗ್ರ ಭಾಷಾ ನೀತಿಯೊಂದನ್ನು ಸೂಚಿಸುವ ಯತ್ನ ಮಾಡಿದ್ದೇನೆ. ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ವಲಯಗಳನ್ನು ಒಳಗೊಳ್ಳುವ ಈ ಭಾಷಾ ನೀತಿಯನ್ನು ಕಾರ್ಯರೂಪಕ್ಕೆ ತರುವ ಪ್ರಜಾಸತ್ತಾತ್ಮಕ ಕಾರ್ಯಕ್ರಮದ ರೂಪುರೇಶೆಗಳನ್ನು ಗುರುತಿಸುವ ಕೆಲಸವನ್ನು ಕಡೆಯಲ್ಲಿ ಮಾಡಿದ್ದೇನೆ. +ಮೊದಲಿಗೆ ಸಂಸ್ಕೃತ ಭಾಷೆಯ ಸ್ವರೂಪ ಮತ್ತು ಪಾತ್ರವನ್ನು ಕುರಿತು ವಿವೇಚಿಸಬಹುದು. ಭಾರತೀಯ ಚರಿತ್ರೆ ಮತ್ತು ಸಂಸ್ಕ್ರುತಿಯಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ ಎಂಬ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಸಾಮಾಜಿಕ ವಿಜ್ಞಾನ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಈ ಭಾಷೆಯ ಆಳವಾದ ಅಧ್ಯಯನ ನಿಜಕ್ಕೂ ಉಪಯುಕ್ತ. ಆದ್ದರಿಂದ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತದ ಅದ್ಯಯನಕ್ಕೆ ಖಂಡಿತ ಪ್ರೀತ್ಸಾಹ ನೀಡಬೇಕು. ಸಂಸ್ಕೃತ ಸಾಹಿತ್ಯದ ಕ್ರೂತಿಗಳನ್ನು ಅನುವಾದಗಳಲ್ಲಾದರೂ ವಿದ್ಯಾವಂತರು ಓದುವ ಅಗತ್ಯವಿದೆ. ಆದರೆ, ಸಂಸ್ಕೃತದ ಪರ ವಾದಿಗಳು ಭಾರತೀಯ ಚರಿತ್ರೆಯಲ್ಲಿ ಸಂಸ್ಕೃತಕ್ಕೆ ಅಧಿಪತ್ಯವಿತ್ತು ಎಂದೂ, ಅದೇ ರೀತಿಯ ಅಧಿಪತ್ಯ ಈಗಲೂ ಮುಂದುವರಿಯಬೇಕೆಂದೂ ಹೇಳುತ್ತಾರೆ. ಈ ಧೋರಣೆ ಸಂಸ್ಕೃತೇತರ ಪರಂಪರೆಗಳನ್ನು ಗೌಣವಾಗಿ, ಸಂಸ್ಕೃತದ ಅಡಿಯಾಳಾಗಿ ಕಾಣುತ್ತದೆ. ಈಗಿನ ಭಾರತ ಮತ್ತು ಕರ್ನಾಟಕದಲ್ಲಿ ಈ ವ್ಯಾಖ್ಯಾನದ ಅರ್ಥವೆಂದರೆ ಚರಿತ್ರೆಯ ಹಿಂದೂ ಬ್ರಾಹ್ಮಣ ದೃಷ್ಟಿಕೋನವನ್ನು ಒಪ್ಪೊಕೊಂಡ ಹಾಗೆ. ಹಿಂದೂ-ಬ್ರಾಹ್ಮಣ ಸಾಮಾಜಿಕ-ಸಾಂಸ್ಕೃತಿಕ ಯಜಮಾನಿಕೆಯನ್ನು ಮತ್ತೆ ಹೇರಲು ಈ ದೃಷ್ಟಿಕೋನವನ್ನು ಬಳಸಲಾಗುತ್ತಿದೆ. ಇದು ಮುಸ್ಲಿಮ್ ಮತ್ತು ಇತರ ಇತರ ಧಾರ್ಮಿಕ ಅಲ್ಪ ಸಂಖ್ಯಾತರನ್ನು “ಪರಕೀಯರು” ಅಥವಾ “ದ್ರೋಹಿ” ಗಳೆಂದು ಜರೆಯುತ್ತದೆ. ಶಾಲಾ ಹಂತದಲ್ಲಿ ಸಂಸ್ಕೃತದಲ್ಲಿ ಪ್ರಥಮ ಭಾಷೆಯ ಪತ್ಟಿಯಲ್ಲಿಡಬೇಕು ಎಂದು ಒತ್ತಾಯಿಸಿದ್ದರೆ ಹಿಂದೆ ಕೆಲಸ ಮಾಡಿರುವುದು ಈ ತರ್ಕವೇ. +ಕನ್ನಡ ಸಂಸ್ಕೃತೀಕರಣ +ಆದರೆ ಈ ದೃಷ್ಟಿಕೋನವನ್ನು “ಕನ್ನಡ ವಿರೋಧಿ” ಎಂದು ಕರೆಯುವುದು ಸರಿಯಲ್ಲ. ಏಕೆಂದರೆ, ಸಂಸ್ಕೃತಪರ ದೃಷ್ಟಿಕೋನಕ್ಕೆ ಕನ್ನಡ ಭಾಷೆ ಸಂಸ್ಕೃತೀಕರಣದ ಹಾದಿಯಲ್ಲಿ ಬೆಳೆಯುವುದು ಬೇಕಾಗಿದೆ. ಸಂಸ್ಕೃತದ ಮೌಲ್ಯಗಳ ಯಜಮಾನಿಕೆಯ ಕೆಳಗೆ ಕನ್ನಡ ಬೆಳೆಯಬೇಕಾಗಿದೆ. ಕನ್ನಡ ಪರವಾದ ಸಂಸ್ಕೃತವನ್ನು ಶಾಲಾಹಂತದಲ್ಲಿ ವಿರೋಧಿಸುವ ಜನರಲ್ಲಿ ಕೂಡಾ ಸಂಸ್ಕೃತೀಕರಣ ವಾದಿಗಳಿದ್ದಾರೆ. ಹೀಗಾಗಿ, ಸಂಸ್ಕೃತ ಪರ ವಾದಿಗಳನ್ನು “ಕನ್ನಡ ವಿರೋಧಿ” ಎಂದು ಕರೆಯುವುದು ದಾರಿ ತಪ್ಪಿಸುವ ಕೆಲಸವಾಗುತ್ತದೆ. ಈ ಎರಡೂ ರೀತಿಯ ಸಂಸ್ಕೃತೀಕರಣ ವಾದಿಗಳ ನಡುವೆ ಇರುವ ವ್ಯತ್ಯಾಸ ಕೇವಲ ಪ್ರಮಾಣಕ್ಕೆ ಸಂಬಂಧಿಸಿದ್ದು. ಶುದ್ಧ ಸಂಸ್ಕೃತವಾದಿಗಳು ಹೆಚ್ಚು ಸಂಪ್ರದಾಯ ಶರಣರಿರಬಹುದು, ಎರಡನೆಯದು ಕೊಂಚ ಅಧುನಿಕರಿರಬಹುದು ಅಷ್ಟೆ. ಅದೇನೇ ಇದ್ದರೂ, ಮೊದಲು ಸಂಸ್ಕೃತ ಪ್ರಥಮ ಭಾಷೆಯ ಸ್ಥಾನದಲ್ಲಿರಬೇಕು ಎಂದೂ ಆಮೇಲೆ ಕನ್ನಡದ ಏಕಮೇವ ಸ್ಥಾನಕ್ಕೆ ಹೋರಾಡಿದವರ ನಿಲುವಿನಲ್ಲಿ ಸ್ವಯ-ವಿರೋಧವಿಲ್ಲ ಎಂದೂ ಇದು ವಿವರಿಸುತ್ತದೆ. ಈ ರೀತಿಯ ದೃಷ್ಟಿಕೋನವೇ ಏಕಕಾಲಕ್ಕೆ ರಾಜ್ಯ ಮತ್ತು ರಾಷ್ಟ್ರದ ಹನ್ತಗಳಲ್ಲಿ ಹಿಂದೂಮತೀಯತೆಯನ್ನು ಆಧರಿಸಿದ ಸಾಂಪ್ರದಾಯಿಕ ಏಕತಾವಾದಕ್ಕೆ ತಳಹದಿಯನ್ನು ಒದಗಿಸುತ್ತದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗೆ ಸಂಸ್ಕೃತ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳುವ ಜನ(ಗೋಕಾಕ್ ವರದಿ ಕೂಡ ಇದನ್ನು ಹೇಳುತ್ತದೆ) ಅಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಮ್ಮ ವಾದಕ್ಕೆ ಸಮರ್ಥನೆ, ಸಾಕ್ಷ್ಯಗಳನ್ನು ಒದಗಿಸುವುದಿಲ್ಲ. ಮತ್ತೆ ಗೋಕಾಕ್ ವರದಿಯಂತೆ, ಅದೇ ಜನ ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಭಾಷೆ, ಯುರೋಪಿಯನ್ ಸಾಹಿತ್ಯಗಳ ಕೊಡುಗೆಯನ್ನು ಕಡೆಗಣಿಸುತ್ತಾರೆ. ಇಲ್ಲವೇ ಗೌಣವಾಗಿ ನೋಡುತ್ತಾರೆ. ತಮ್ಮ ವಿಮರ್ಶಾ ಬರಹಗಳಲ್ಲಿ ಕೂಡಾ ಹಳಗನ್ನಡ ಸಾಹಿತ್ಯ ಮತ್ತು ಹೊಸಗನ್ನಡ ಸಾಹಿತ್ಯಗಳ ನಡುವಣ ನಿರಂತರತೆ, ಸಂಬಂಧಗಳನ್ನು ಗುರುತಿಸಲು ಈ ಜನರಿಗೆ ಸಾಧ್ಯವಾಗಿಲ್ಲ. ನೀವು ಒತ್ತಾಯವಾಗಿ ಕೇಳಿದರೆ, ಸಂಸ್ಕೃತ ಹಿದೆ ಕೊಡುಗೆ ನೀಡಿದೆ. ಮುಂದೆಯೂ ಕನ್ನಡದ ಪದ ಸಂಪತ್ತಿಗೆ ಕಾಣಿಕೆ ನೀಡುತ್ತದೆ ಎಂದು ಉತ್ತರಿಸುತ್ತಾರೆ. ಅದರಲ್ಲೂ ತಾಂತ್ರಿಕ ಶಬ್ದಗಳಲ್ಲಿ ಸಂಸ್ಕೃತದ ಕೊಡುಗೆ ವಿಶೇಷವಾದದ್ದು ಎನ್ನುತ್ತಾರೆ. ಲ್ಯಾಟಿನ್ ಇಂಗ್ಲಿಷ್ ಭಾಷೆಗೆ ನೀಡಿದ ಕೊಡುಗೆಗೆ ಇದು ಹೋಲುತ್ತದೆ ಎಂಬುದು ನಿಜ. ಆದರೆ ಬಹಳ ಜನರಿಗೆ ಈ ಘೋಷಣೆ ಕನ್ನಡ ಭಾಷೆ ಮುಂದೆ ಹೇಗೆ ಬೆಳೆಯಬೇಕೆಂಬ ಅವರ ಆಸೆ ತೋರಿಸುತ್ತದೆ. ಅಂದರೆ ಕನ್ನಡ ಭಾಷೆ ಹೆಚ್ಚಿನ ಸಂಸ್ಕೃತೀಕರಣಕ್ಕೆ ಒಳಗಾಗಿ, ಆ ಮೂಲಕ ಸಾಂಪ್ರದಾಯಿಕ, ಹಿಂದೂ ಮೌಲ್ಯಗಳ ಪುನರ್ ಪ್ರತಿಷ್ಟಾಪನೆ ನಡೆಯಬೇಕು. ಈಗಿರುವ ಸಾಮಾಜಿಕ ವ್ಯವಸ್ಥೆಯ ಜೊತೆ ಜನ ಬೆಸೆದುಕೊಳ್ಳಬೇಕು. ಹಿಂದೂ-ಬ್ರಾಹ್ಮಣ ಸಾಮಾಜಿಕ-ಸಾಂಸ್ಕೃತಿಕ ಅಧಿಪತ್ಯದ ಕೆಳಗೆ ಬರಬೇಕು. ಇವು ಅವರ ಆಸೆಗಳು. ಈ ಸಿದ್ಧಾಂತದ ಹಿಂದಿನ ಸಾಮಾಜಿಕ ಶಕ್ತಿಗಳಿಗೂ, ಕನ್ನಡ ಸಿದ್ಧಾಂತದ ಹಿಂದಿನ ಶಕ್ತಿಗಳಿಗೂ ಸಾಮ್ಯಗಳಿವೆ. ಕೆವವೊಮ್ಮೆ ಪರಸ್ಪರ ಬೆರೆತುಹೋಗುತ್ತವೆ ಕೂಡಾ. ಆದರೆ ಸಂಸ್ಕೃತ ವಿರೋಧಿ ಬುದ್ಧಿಜೀವಿಗಳು ಈ ಸಮಸ್ಯೆಯನ್ನು ಇಷ್ಟೇ ಸಂಕುಚಿತವಾಗಿ ನೋಡುತ್ತಾರೆ. ತಮಿಳುನಾಡಿನಲ್ಲಿ ಆದಂತೆ ಬ್ರಾಹ್ಮಣ ವಿರೋಧಿ, ಸಂಸ್ಕೃತ ವಿರೋಧಿ ಸಿದ್ಧಾಂತಗಳು ಆಳವಾದ ಸಾಮಾಜಿಕ, ಸಾಂಸ್ಕೃತಿಕ ಪ್ರಾಭಾವವನ್ನು ಕರ್‍ನಾಟಕದಲ್ಲಿ ಬೀರಲಿಲ್ಲ. ತಮಿಳುನಾಡಿನಲ್ಲಿ ಬ್ರಾಹ್ಮಣ ವಿರೋಧಿ ಸಂಸ್ಕೃತದ ನಿರಾಕರಣೆ ಬಂದು ದೊಡ್ಡ ಸಾಮಾಜಿಕ ಚಳವಳಿ ಆಯಿತು. ಕನ್ನಡ ನವೋದಯದ ಮೊದಲ ತಲೆಮಾರಿನ ಲೇಖಕರು ಸಂಸ್ಕೃತದ ಸಂಸ್ಕೃತಿಯಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ಈಚಿಗಿನ ಬ್ರಾಹ್ಮಣೇತರ ಬರಹಗಾರರು ಅದರಲ್ಲೂ ಲೋಹಿಯಾ ವಾದಿಗಳು, ದಲಿತರು, ಲಿಂಗಾಯಿತರು, ಕನ್ನಡದ ಆಡುನುಡಿ ಶೂದ್ರ, ನುಡಿಯನ್ನು ಬಳಸಿದರು.ಈ ಭಾಷಾ ಬಳಕೆಯಲ್ಲಿ ಸಂಸ್ಕೃತವಲ್ಲದ ಬ್ರಾಹ್ಮಣೇತರ ಸತ್ವವಿದೆ. ಕರ್ಣಾಟಕದಲ್ಲಿ ಬ್ರಾಹ್ಮಣ ವಿರೋಧವೆಂದರೆ ಕೆಲಸ, ಅದಿಕಾರ, ಸಾಹಿತ್ಯಿಕ ಮನ್ನಣೆಗಳಿಗೆ ಮಾತ್ರ ಸೀಮಿತವಾದದ್ದು. ಆದರೆ, ಈಗಿನ ಹೊಸ ಬರಹಗಾರರು ಸಂಸ್ಕೃತವನ್ನು ಬ್ರಾಹ್ಮಣ ಸಂಸ್ಕೃತಿಯ ಮೌಲ್ಯಗಳ ಭಾಷೆ ಎಂದು ನಿರಾಕರಿಸುತ್ತಿದ್ದಾರೆ. ಇಲ್ಲವೇ ಅದರ ಪಾತ್ರಗಳನ್ನು ಗೌಣಗೊಳಿಸಿದ್ದಾರೆ. ಇದು ಹಿಂದೂ-ಬ್ರಾಹ್ಮಣ ವ್ಯಾಖ್ಯಾನದ ತಿರುಗುಮುರುಗು ರೂಪ. ಆದ್ದರಿಂದ ಅಶ್ಟೇ ಆತ್ಮತೃಪ್ತಿಯನ್ನು ಹುಟ್ಟಿಸುವಂಥದ್ದು. +ಇಂಗ್ಲಿಷಿನ ಸಮಸ್ಯೆ ಇದಕ್ಕಿಂತ ಸಂಕೀರ್ಣವಾದದ್ದು. ಇದು ಭಾರತಕ್ಕೆ ಬಂದದ್ದು ಬ್ರಿಟಿಷರಿಂದ. ಆದ್ದರಿಂದ ಸಹಜವಾಗಿ ಈ ಭಾಷೆ ಬ್ರಿಟನ್ ಸಾಮ್ರಾಜ್ಯಶಾಹಿಯ ಅರ್ಥ ಮತ್ತು ಸಂಸ್ಕೃತಿಯ ವಾಹಕವಾಯಿತು. ವಾಸ್ತವವಾಗಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ತೆರೆದ ಉದ್ದೇಶವನ್ನು ಈ ಮಾತುಗಳಲ್ಲಿ ಕಂಡುಕೊಳ್ಳಬಹುದು: “ನಮ್ಮ ಮತ್ತು ನಾವು ಆಳುವ ಕೋಟ್ಯಂತರ ಜನರ ನಡುವೆ ಭಾಷಾಂತರಕಾರರಾಗಿ ವರ್‍ತಿಸುವ ವರ್ಗವೊಂದನ್ನು ರೂಪಿಸಲು;ರಕ್ತ ಮತ್ತು ಬಣ್ಣದಲ್ಲಿ ಭಾರತೀಯರಾಗಿಲ್ಲದಿದ್ದರೂ ಅಭಿರುಚಿ, ಅಭಿಪ್ರಾಯ, ನೀತಿ, ಬೌದ್ಧಿಕತೆಗಳಲ್ಲಿ, ಇಂಗ್ಲಿಷರಾಗಿರುವ ಮಂದಿಯ ವರ್ಗವೊಂದನ್ನು ರೂಪಿಸಲು” ಇದು ಮೆಕಾಲೆಯ ಮಾತು. ಈ ವರ್‍ಗ ಅಧುನಿಕ ಪಾಶ್ಚಾತ್ಯ ಜ್ಞಾನ, ಸಂಸ್ಕೃತಿಯನ್ನು ಅದೇ ಕಾರಣಕ್ಕಾಗಿ ಬೆಳೆಸಿದ ಪ್ರಾದೇಶಿಕ ಭಾಷೆಗಳಲ್ಲಿ ತರುತ್ತದೆಂದು ಮೆಕಾಲೆ ನಿರೀಕ್ಷಿಸಿದ. ಇದಾದ ನಂತರ ಒಂದು ದಿನ ಭಾರತೀಯರು ಯುರೋಪಿಯನ್ ಸಂಸ್ಥೆಗಳನ್ನು ಬೇಡುತ್ತಾರೆಂದೇ ಆತ ನಿರೀಕ್ಷಿಸಿದ್ದ. ಅಷ್ಟೇ ಅಲ್ಲದೆ “ಅವರು ನಾಗರೀಕರ ಎಲ್ಲಾ ಸವಲತ್ತುಗಳನ್ನು ಬಯಸುವವರೂ ಅದಕ್ಕೆ ಅರ್ಹರೂ ಆಗುತ್ತಾರೆ” ಎಂಬ ಆಸೆಯೂ ಇತ್ತು. ಆದರೆ ಪಾಶ್ಚಿಮಾತ್ಯ ನಾಗರಿಕತೆಯ ಬಗ್ಗೆ ಅಪಾರ ಮೆಚ್ಚುಗೆ ತುಂಬಿದ್ದ ವಿಸ್ಮಯ ಆವರಿಸಿದ್ದ ಈ ವರ್‍ಗಕ್ಕೆ ತಾವು ಪಾಶ್ಚಾತ್ಯರಿಗೆ ಸಮಾನವಾಗುವ ಸಾಧ್ಯತೆಯಾದರೂ ಇದೆ ಎಂದು ಕಲ್ಪಿಸಿಕೊಳ್ಳಲಾಗಲೇ ಇಲ್ಲ. ಈ ವರ್‍ಗದ ಸಾಮಾಜಿಕ, ಸಾಂಸ್ಕೃತಿಕ ನೋಟ ಅವರಿಗೊಂದು ಕೀಳು ವ್ಯಕ್ತಿತ್ವವನ್ನು ನಿರ್ಮಿಸಿಬಿಟ್ಟಿತ್ತು. ಹೀಗಾಗಿ ಬ್ರಿಟಿಷರು ಇವರನ್ನು ಆದಳಿತ, ಸಾಮಾಜಿಕ, ಸೈದ್ಧಾಂತಿಕ, ಕ್ಷೆತ್ರಗಳಲ್ಲಿ, ಸಾಧನಗಳನ್ನಾಗಿ ಬಳಸಿಕೊಂಡರು. ಈ ವರ್‍ಗ ಮೆಕಾಲೆ ಮತ್ತು ಇಂಗ್ಲಿಷರಿಂದ ಭಾರತದ ಬಗ್ಗೆ ಗಾಢ ಅಜ್ಞಾನ ಮತ್ತು ತಿರಸ್ಕಾರವನ್ನು ಬೆಳೆಸಿಕೊಂಡಿತ್ತು. ಇಷ್ಟೇ ಪ್ರಮಾಣದಲ್ಲಿ ಪಾಶ್ಚಾತ್ಯದ ಬಗ್ಗೆ ಆರಾಧನಾ ಮನೋಭಾವ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಂಡಿದ್ದರೂ ಈವತ್ತಿಗೂ ಇಂಡಿಯಾದಲ್ಲಿ ಈ ವರ್‍ಗ ಆಸ್ತಿತ್ವದಲ್ಲಿದೆ. ಈಗ ಅದು ಏಕಕಾಲಕ್ಕೆ ಹೆಚ್ಚಿಗಿನ ಅಮೆರಿಕೀಕರಣಕ್ಕೂ ಭಾರತೀಕರಣಕ್ಕೂ ಒಳಗಾಗಿಬಿಟ್ಟಿದೆ. ಏಕೆಂದರೆ, ಒಂದುಕಡೆಗೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಯಜಮಾನಿಕೆ ಮತ್ತು ಸಂಸ್ಕೃತಿಯ ಪ್ರಭಾವ. ಇನ್ನೊಂದು ಕಡೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು, ರಾಷ್ಟ್ರೀಯತೆ ಅಧಿಕಾರಕ್ಕೆ ಬಂದಿದ್ದು, ಇದರ ಜೊತೆಗೆ ತಮ್ಮ ಹಳೆಯ ಧಣಿಗಳಾದ ಬ್ರಿಟನ್ ಸಾಮ್ರಾಜ್ಯಶಾಹಿಗಳ ಪ್ರತ್ಯೇಕ ಆಸ್ತಿತ್ವ ಇಲ್ಲದಿರುವುದೂ ಅವರಲ್ಲಿಯ ಈ ಬದಲಾವಣೆಗಳಿಗೆ ಕಾರಣವಾಗಿದೆ. +ವಸಾಹತು ಸಂಸ್ಕೃತಿ +ಈ ವಸಾಹತುಶಾಹಿ ಸಂಸ್ಕೃತಿಯ ಮಾಧ್ಯಮವಾಗಿ ಇಂಗ್ಲಿಷ್ ಒಂದೇ ಮುದುವರಿಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ವಸಾಹತುಶಾಹೀ ಸಂಸ್ಕೃತಿಯ ಪ್ರಾಧಾನ್ಯಕ್ಕೆ, ಮುಂದುವರಿಕೆಗೆ ಬೆಂಬಲವಾಗಿರುವ ಒಂದು ಇಡೀ ವ್ಯವಸ್ಥೆಯೇ ಈಗ ಭಾರತದಲ್ಲಿದೆ. ಉದಾಹರಣೆಗೆ ಶೈಕ್ಷಣಿಕ ಸಂಸ್ಥೆಗಳು, ನೌಕರಶಾಹಿ ಸಾಮಾಜಿಕ ಜೀವನದಲ್ಲಿಯ ಕೆಲವು ಸಂಸ್ಥೆಗಳು -ಕ್ಲಬ್, ಡಿಸ್ಕೊತೆ, ಪಾಶ್ಚಾತ್ಯ ಸಂಗೀತ, ಪಾರ್ಟಿಗಳೂ ನೃತ್ಯಗಳು ಇತ್ಯಾದಿ ವಸಾಹತು ಸಂಸ್ಕೃತಿಯ ಪೋಷಕ ಶಕ್ತಿಗಳಾಗಿವೆ. ಈ ಸಂಸ್ಕೃತಿಯನ್ನು ಈಗ ಜಾಹಿರಾತುಗಳಂಥಹ ದೃಶ್ಯ ಮಾಧ್ಯಮದಲ್ಲೂ ಕಾಣಬಹುದು. ಪ್ರಾದೇಶಿಕ ಭಾಷೆಗಳಲ್ಲೂ ಡಿಸ್ಕೊ ದಿವಾನಿಯಂತಹವು ಈಗ ಕಾಣುತ್ತಿದೆ. +ಐ.ಎ.ಎಸ್. ನೌಕರ ಶಾಹಿ +ಇವುಗಳಲ್ಲದೆ ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದ ಸಾಮಾಜಿಕ ಸಾಂಸ್ಕೃತಿಕ ಅಧಿಪತ್ಯಕ್ಕೆ ಕಾರಣವಾಗಿರುವ ಅನೇಕ ಸಾಮಾಜಿಕ ರಾಕೀಯ ಅಂಶಗಳು ಸಮಕಾಲೀನ ಭಾರತದಲ್ಲಿವೆ. ಇದಕ್ಕೆ ಉದಾಹರಣೆಯನ್ನಾಗಿ ಐ.ಎ.ಎಸ್. ನೌಕರರ ಶಾಹಿಯನ್ನೇ ನೋಡಬಹುದು. ಇವರಂತೂ ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದ ಶ್ರೇಷ್ಟ ಉದಾಹರಣೆಗಳು. ಸ್ವಾತಂತ್ರ್ಯಕ್ಕೆ ಮುಂಚೆ ಐ. ಸಿ. ಎಸ್. ಅಧಿಕಾರಿಗಳು ಪೂರ್ಣವಾಗಿ ಇಂಗ್ಲಿಷರಾಗಬೇಕಾಗುತ್ತಿತ್ತು. ಭಾರತೀಯರಿಂದ ಕೂಡಾ ಈ ವರ್ಗ ದೂರವಿರುತ್ತಿದ್ದು, ಮಹಾ ಧಿಮಾಕಿನಿಂದ ವರ್ತಿಸುತ್ತಿದ್ದರಾದರೂ ಇವರಿಗೆ ಸ್ವಂತವಾಗಿ ಅಂತ ದೊಡ್ಡ ಅದಿಕಾರವೇನೂ ಇರುತ್ತಿರಲಿಲ್ಲ…ಏಕೆಂದರೆ ಭಾರತೀಯ ಐ.ಸಿ.ಎಸ್ ಗಳೆಂದೂ ಅತ್ಯಂತ ಉನ್ನತ ಹುದ್ದೆಗಳಿಗೆ ಏರಲು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲಿಷರು ಇವರನ್ನೆಂದೂ ಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎರಡನೇ ದರ್ಜೆ ಮಂದಿಯನ್ನಾಗೇ ನೋಡುತ್ತಿದ್ದರು. ಸಂಪರ್ಕ ವ್ಯವಸ್ಥೆ ಹೆಚ್ಚಿದಂತೆ ಐ.ಸಿ.ಎಸ್ ಗಳ ಮೇಲೆ ಲಂಡನ್ನಿನ ಇಂಡಿಯಾ ಆಫೀಸಿನ ಹಿಡಿತ ಹೆಚ್ಚಾಯಿತು. ಇಂಗ್ಲೆಂಡಿನಿಂದಲೇ ನೀತಿ, ನಿರ್ದೇಶನಗಳು ಬರುತ್ತಿದ್ದುದರಿಂದ ಇವರಿಗೆ ಹೆಚ್ಚಿನ ಅಧಿಕಾರವೇ ಇರುತ್ತಿರಲಿಲ್ಲ. +ಅದರೆ ಸ್ವಾತಂತ್ರ್ಯ ಬಂದ ಮೇಲೆ ರಾಷ್ಟ್ರೀಯ ನಾಯಕತ್ವದ ಕೈಕೆಳಗೆ ನೌಕರಶಾಹಿಗಳು ಕೆಲಸ ಮಾಡಬೇಕಾಗಲು ಪ್ರಜಾತಾಂತ್ರೀಯ ಚೌಕಟ್ಟಿನ ಕಾರಣಕ್ಕಾಗಿ ಜನತೆಯ ಆಶೋತ್ತರಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕಾಗಿತ್ತು. ಬ್ರಿಟಿಷರ ಭೌತಿಕ ಗೈರು ಹಾಜರಿ, ರಾಷ್ಟ್ರೀಯ ಚಳವಳಿಯ ಸೈದ್ಧಾಂತಿಕ ನಾಯಕತ್ವಗಳು ಅನಿವಾರ್‍ಯವಾಗಿ ನೌಕರಶಾಹಿಯನ್ನು ಹೆಚ್ಚು ಭಾರತೀಕರಿಸಿದವು. ಅವರಲ್ಲಿ ಆಂಗ್ಲತೆ ಕಡಿಮೆಯಾಗಿ ತಮ್ಮ ನೋಟದಲ್ಲಿ ಹೆಚ್ಚು ರಾಷ್ಟ್ರೀಯನ್ನಾದರು. ಬಹಳ ಸಾರಿ ಈಗಿನ ಈ ನೌಕರಶಾಹಿ ಜನ ಭಾರತೀಯ ಭಾಷೆಗಳನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಸಾಹಿತ್ಯ ಕೂಡಾ ಗೊತ್ತಿರುತ್ತದೆ. ಆದರೆ ಅವರ ಧಿಮಾಕು, ಉಚ್ಚ ಪ್ರಾಜ್ಞೆ, ಸೌಜನ್ಯ ಹೀನತೆ, ಅತಿರಂಜಿತ ಆತ್ಮಪ್ರಾಮುಖ್ಯತೆ, ಬೌದ್ಧಿಕ ಚಟುವಟಿಕೆಗಳ ಬಗೆಗೆ ಹುಡುಗಾಟಿಕೆ-ಈ ಸಂಗತಿಗಳ ಮಟ್ಟಿಗೆ ಮಾತ್ರ ಅದೇ ಹಳೆಯ ನೌಕರಶಾಹಿಮಂದಿಯೇ ಆಗಿದ್ದಾರೆ. ಇವರಲ್ಲಿ ಏನಾದರೂ ಹೆಚ್ಚುಗಾರಿಕೆ ಇದ್ದರೆ ಅದು ಧಿಮಾಕು ಉಚ್ಚಪ್ರಜ್ಞೆಗಳಿಗೆ ಸಂಬಂಧಿಸಿದ್ದು ಮಾತ್ರ. ಇದಕ್ಕೆ ಕಾರಣವೆಂದರೆ, ನೌಕರಶಾಹಿಯ ಮೂಲಭೂತ ರಚನೆ ಬದಲಾಗಿಯೇ ಇಲ್ಲ ಎಂಬುದು. ಆದರೆ ಅವರ ಅಧಿಕಾರ ಮಾತ್ರ ಬಹಳ ಹೆಚ್ಚಾಗಿದೆ. ಈ ಬೆಳವಣಿಗೆಗೆ ಅನೇಕ ಕಾರಣಗಳಿವೆ. ಮೊದಲ ಕಾರಣವೆಂದರೆ, ನೆಹರು ತನ್ನ ಆಳ್ವಿಕೆಗಾಗಿ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ನೌಕರಶಾಹಿಯನ್ನೇ ಆಧರಿಸಿದ್ದು. ಅವರು ದಿನೇ ದಿನೇ ಎಲ್ಲ ಅಧಿಕಾರಿಗಳನ್ನು ಕೇಂದ್ರದಲ್ಲಿಯೇ , ಅಂದರೆ ತನ್ನಲ್ಲಿಯೇ ಕೇಂದ್ರೀಕರಿಸಿಕೊಳ್ಳುತ್ತಾ ಹೋದರು. ಇಂದಿರಾಗಾಂಧಿಯವರ ಆಳ್ವಿಕೆಯಲ್ಲಂತೂ ಇದು ಇನ್ನಷ್ಟು ಅಪಾರವಾಗಿ ಬೆಳೆದಿದೆ. ಪಕ್ಷದ ಸಂಘಟನೆಯನ್ನು ನಿಧಾನಕ್ಕೆ ಪೂರ್ಣವಾಗಿ ನಾಶಮಾಡುತ್ತ ಆಕೆ ಬಂದದ್ದರಿಂದ ಇದು ಅನಿವಾರ್‍ಯವಾಗಿ ಹೋಯಿತು. ಐ.ಎ.ಎಸ್.ಗಳ ಅಧಿಕಾರ ಹೆಚ್ಚಿದ್ದಕ್ಕೆ ಇನ್ನೊಂದು ಕಾರಣವೆಂದರೆ, ಸಾಮಾಜಿಕ ನೀತಿ ಮತ್ತು ಆರ್ಥಿಕ ಅಭಿವೃದ್ಧಿಗಳಲ್ಲಿ ಸರಕಾರದ ಪಾತ್ರ ಅಧಿಕವಾಗುತ್ತ ಬಂದದ್ದು. ಉದಾಹರಣೆಗೆ-ಭೂಸುಧಾರಣೆ, ಆರೋಗ್ಯ, ಶಿಕ್ಷಣ ಮುಂತಾದ ಖೇತ್ರಗಳಲ್ಲಿ ಐ.ಎ.ಎಸ್. ಅಧಿಕಾರಿಗಳೇ ಸೂತ್ರಧಾರಿಗಳಾಗಿರುತ್ತಾರೆ. +ತೀರಾ ಮಹತ್ವ +ರಾಜಕೀಯ ಸ್ವಾತಂತ್ರದ ಆಗಮನ ಮತ್ತು ಸಾಮ್ಯಾಜ್ಯಶಾಹೀ ಶಕ್ತಿಯೊಂದರ ನೇರ ಆಸ್ತಿತ್ವ ಇಲ್ಲದಿರುವುಕೆ ನೀತಿ ಮತ್ತಿ ತೀರ್‍ಮಾನಗಳ ವ್ಯಾಪ್ತಿ ವಿಸ್ತರಿಸಿತು. ಗಮನಾರ್ಹ ಆರ್ಥಿಕ ಬೆಳವಣಿಗೆಯ ಫಲ ಇದು. ದಿನನಿತ್ಯದ ಆಡಳಿತದ ಜೊತೆಗೆ ಸರ್ಕಾರದ ಎಲ್ಲಾ ಹಂತಗಳಲ್ಲೂ ಸರ್‍ಕಾರದ ಎಲ್ಲಾ ಹಂತಗಳಲ್ಲೂ ಐ.ಎ.ಎಸ್. ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತದೆ. ರಕ್ಷಣಾ ದಳ, ಪೋಲೀಸ್, ಆಂತರಿಕ ಮತ್ತು ವಿದೇಶೀ ಗೂಧಚರ್ಯೆ, ಇತ್ಯಾದಿಗಳನ್ನೂ ಇವರು ನಿಯಂತ್ರಿಸುತ್ತಾರೆ. ದಕ್ಷ ಮತ್ತು ಪ್ರಭಾವಶಾಲೀ ರಾಜಕಾರಣಿ, ಮಂತ್ರಿಗಳ ಗೈರು ಹಾಜರಿಯಲ್ಲಂತೂ ಅನೇಕ ಕ್ಷೇತ್ರಗಳಲ್ಲಿ-ರಕ್ಷನೆ, ಯೋಜನೆ, ವಿದೇಶಾಂಗ ವ್ಯವಹಾರ, ಶಿಕ್ಷಣ, ಕೃಷಿ, ಕೈಗಾರಿಕೆ ಸಾಮಾಜಿಕ ಹಣಕಾಸು ಇತ್ಯಾದಿ-ಐ.ಎ.ಎಸ್ ಅಧಿಕಾರಿಗಳ ಪಾತ್ರ ತೀರಾ ಮಹತ್ವದ್ದಾಗಿಬಿಡುತ್ತದೆ. ದೇಶ ಮತ್ತು ರಾಜ್ಯಗಳೆರಡೂ ಹಂತದಲ್ಲೂ ಈ ಮಾತು ನಿಜ. ಅತ್ಯಂತ ಉನ್ನತ ವಲಯಗಳಲ್ಲೂ ಅವರ ಪ್ರಭಾವ ಮಹತ್ವದು. ಶ್ರೀಮತಿ ಗಾಂಧಿಯವರ ಆಪ್ತ ಸಲಹೆಗಾರರು ಮತ್ತು ರಾಜ್ಯಪಾಲರುಗಳು ನಿವೃತ್ತ ಐ.ಎ.ಎಸ್.ಅಧಿಕಾರಿಗಳೇ. +ಕಡೆಯ ಕಾರಣವೆಂದರೆ, ನೌಕರಶಾಹಿಯಲ್ಲಿಯ ಅಧಿಕಾರ ಸ್ವರೂಪವೇ ಬದಲಗಿಲ್ಲ. ಬ್ರಿಟಿಷರು ಎಲ್ಲ ಅಧಿಕಾರಿಗಳನ್ನೂ ಐ.ಸಿ.ಎಸ್. ಅಧಿಕಾರಿಗಳ ಕೈಯಲ್ಲೇ ಅಂದರೆ ತಮ್ಮಲ್ಲೇ ಕೇಂದ್ರೀಕರಿಸಿಕೊಂಡಿದ್ದರು. ಭಾರತೀಯರು ತುಂಬಿದ್ದ ಕೆಳ ಶ್ರೇಣಿಗಳಲ್ಲಿ ಅಧಿಕಾರವೇ ಇರುತ್ತಿರಲಿಲ್ಲ. ಈವತ್ತಿಗೂ ಈ ಮಾತು ನಿಜ. ಹೊಸದಾಗಿ ಕೆಲಸಕ್ಕೆ ಬಂದ ಒಬ್ಬ ಅಸಿಸ್ಟೆಂಟ್ ಕಮಿಷರನಿಗೆ ಈ ದಿನ ಆಡಳಿತ, ನ್ಯಾಯಾಂಗ, ಪೋಲೀಸ್ ವಿಷಯಗಳಲ್ಲಿ ಇರುವ ಅಧಿಕಾರಿಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಹಳೇ ಪದ್ಧತಿಯ ಮುಂದುವರಿಕೆ ಇದು. ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಅನೇಕ ವಲಯಗಳಲ್ಲಿ ಈತನಿಕೆ ಅಪಾರ ಅಧಿಕಾರವಿದೆ. ಆತ ಅಧಿಕಾರದ ಏಣಿಯ ಮೆಟ್ಟಿಲುಗಳನ್ನು ಏರಿದಂತೆಲ್ಲಾ ಅದಿಕಾರ ಕೂಡಾ ಇಮ್ಮಡಿಸುತ್ತಾ ಹೋಗುತ್ತದೆ. +ಐ.ಎ.ಎಸ್. ಅದಿಕಾರಿಗಳಿಗೆ ಯಾವ ಒಳ್ಳೆಯ ಗುಣ, ಶಕ್ತಿಗಳೂ ಇಲ್ಲವೆಂದಲ್ಲ ನನ್ನ ಮಾತಿನ ಅರ್ಥ. ನನ್ನ ಈ ವಿಶ್ಲೇಷನೆಯ ಉದ್ದೇಶ ಎರಡು. +ಇಂಗ್ಲಿಷ್ ಮಾತನಾಡುವ ಪ್ರತಿಷ್ಟಿತ ವರ್ಗದಲ್ಲಿ ಉಂಟಾಗಿರುವ ಧೋರಣೆ, ದೃಷ್ಟಿಕೋನಗಳ ಬದಲಾವಣೆಯನ್ನು ಸೂಚಿಸುವುದು. +ಈ ಬದಲಾವಣೆಗಳು ಬಂದಿದ್ದರೂ, ಅವರು ಮೊದಲಿಗಿಂತ ಹೆಚ್ಚು ಅಧಿಕಾರವುಳ್ಳವರೂ, ಪ್ರತಿಷ್ಠಿತರೂ ಆಗಿದ್ದಾರೆ. ಭಾರತೀಯ ಭಾಷೆಗಲನ್ನು ಅವರು ಮಾತನಾಡಿದರೂ ಈ ಅಂಶಗಳು ನಿಜ ಎಂಬುದನ್ನು ತೋರಿಸುವುದು. +ಈ ಬದಲಾವಣೆಗಳ ಹಿಂದಿನ ಪ್ರೇರಣೆಗಳನ್ನು ಸಾಮಾಜಿಕ, ಆರ್ಥಿಕ, ಸೈದ್ಧಾಂತಿಕ ಶಕ್ತಿಗಳಲ್ಲಿ ಹುಡುಕಬೇಕೇ ಹೊರತು, ಇಂಗ್ಲಿಷ್ ಅಥವಾ ಇತರ ಭಾರತೀಯ ಭಾಷೆಗಳ ಪಾತ್ರದಲ್ಲಲ್ಲ. +ಇಂಗ್ಲಿಷ್ ರಾಷ್ಟ್ರೀಯತೆ +ಇರಲಿ, ಮತ್ತೆ ಇಂಗ್ಲಿಷಿನ ಪಾತ್ರಕ್ಕೆ ವಾಪಸು ಬರೋಣ. ಇಂಗ್ಲಿಷ್ ಬರೂ ಸಾಮ್ರಾಜ್ಯಶಾಹಿ ಸಂಸ್ಕೃತಿಯ ಸಾಧನವಲ್ಲ. ಅದು ಭಾರತೀಯ ರಾಷ್ಟ್ರೀಯತೆಯ ಭಾಷೆಯೂ ಹೌದು. ೧೮೮೧ರ ಕಾಂಗ್ರೇಸ್ ಸ್ಥಾಪನೆಯಿಂದ ಹಿಡಿದು ಸ್ವಾತಂತ್ರ್ಯ ಗಳಿಕೆಯ ತನಕ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನ ಕಾರ್‍ಯಕಲಾಪಗಳು ಇಂಗ್ಲಿಷ್‌ನಲ್ಲೇ ಇದ್ದವು. ತಮ್ಮ ಭಾಷಣ, ನಿರ್ಣಯ, ಲೇಖನ, ಪುಸ್ತಕ, ಪತ್ರ, ಇತ್ಯಾದಿಗಳಿಗೆ ರಾಷ್ಟ್ರೀಯ ನಾಯಕರು ಇಂಗ್ಲಿಷನ್ನೇ ಬಳಸಿದರು. ಇಂಗ್ಲಿಷ್ ವೃತ್ತ ಪತ್ರಿಕೆಗಳನ್ನು ಶುರು ಮಾಡಿದರು. ಉದಾ: ದಿ ಹಿಂದೂ, ದಿ ಫ್ರೀ ಪ್ರೆಸ್ ಜನರಲ್. ದಿ ಹಿಂದುಸ್ತಾನ್ ಟೈಂಸ್, ದಿ ಅಮೃತಬಜಾರ್ಪತ್ರಿಕಾ ಇತ್ಯಾದಿ. ಅವರಿಗೆ ಪ್ರಂತೀಯ ಭಾಷೆಗಳು ತಿಳಿದಿರಲಿಲ್ಲ: ಅಥವಾ ಅದರಲ್ಲಿ ಬರೆಯಲಿಲ್ಲ ಎಂದಲ್ಲ, ಆದರೆ ಇಡೀ ಭಾರತಕ್ಕಿದ್ದ ಸಾಮಾನ್ಯ ಭಾಷೆ ಎಂದರೆ ಇಂಗ್ಲಿಷೊಂದೆ. ಆದ್ದರಿಂದಲೇ ಇಂಗ್ಲಿಷನ್ನು ಬಳಸುವ ವರ್ಗಗಳು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವೃತ್ತಿತಜ್ಞರು, ನಗರದ ಮಧ್ಯಂ ವರ್ಗಗಳು-ಆಳವಾದ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದವರಾಗಿದ್ದು, ಪ್ರಾದೇಶಿಕದುರಭಿಮಾನಾ ಸಿದ್ಧಾಂತಗಳಿಗೆ ಅಷ್ಟು ಸುಲಭವಾಗಿ ಆಕರ್ಷಿತವಾಗುವುದಿಲ್ಲ. ಅವರ ಈ ಧೋರಣೆಯ ಹಿಂದೆ ಇನ್ನಷ್ಟು ಆಳವಾದ ಕೆಲವು ಸಾಮಾಜಿಕ ಶಕ್ತಿಗಳು ಕೆಲಸ ಮಾಡುತ್ತವೆ. ಬಂಡವಾಳವರ್ಗ, ಭೂ ಮಾಲೀಕರು, ಶ್ರೀಮಂತ ರೈತರಿಗೆ ಅಖಿಲ ಭಾರತೀಯ ಮಾರುಕಟ್ಟೆಯ ಅಗತ್ಯವಿದೆ. ಹಾಗೆಯೇ, ನಗರದ ಮಧ್ಯಮವರ್ಗ ಮತ್ತು ಮೇಲು ಮಧ್ಯಮವರ್ಗಗಳಿಗೆ ಅಖಿಲ ಭಾರತೀಯ ಚಾಲನೆ ಇದೆ: ಆಶೋತ್ತರಗಳಿವೆ. ಇಂಗ್ಲಿಷು ವಿದೇಶೀ ಕೆಲಸಗಳಿಗೆ, ಮನ್ನಣೆಗೆ ನೆರವಾಗುತ್ತದೆ. ಆದರೆ, ಇಂಗ್ಲಿಷ್ ಭಾಷಿಕ ಬುದ್ದಿಜೀವಿ ವರ್ಗದ ಅತ್ಯುತ್ಸಾಹದ ರಾಷ್ಟ್ರೀಯತೆ ಪ್ರಾದೇಶಿಕ ಸಂಸ್ಕೃತಿ ಮತ್ತು ಸಮಸ್ಯೆಗಳ ಬಗೆಗೆ ಅವರನ್ನು ಕುರುಡರನ್ನಾಗಿ ಮಾಡುತ್ತದೆ. ಕೆಲವೊಮ್ಮೆ ಇವರಿಗೆ ಆಳವಾದ ಪ್ರಾದೇಶಿಕ ಪ್ರಜ್ಞೆ ಪ್ರಾದೇಶಿಕ ವ್ಯಕ್ತಿತ್ವ ಇದ್ದರೂ ಈ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಕೆಲವು ಸಾರಿ. ಇಂಗ್ಲಿಷ್ ಬಳಸುವ ಬುದ್ದಿಜೀವಿಗಳಿಗೂ, ಪ್ರಾದೇಶಿಕ ಭಾಷೆಗಳ ಬುದ್ದಿಜೀವಿಗಳಿಗೂ ದೊಡ್ಡ ಕಂದರವೇ ಇರುತ್ತದೆ. ಇದು ಮುಖ್ಯವಾಗಿ ಸಾಹಿತ್ಯಿಕವಾದದ್ದು. ಇದಕ್ಕೆ ಕಾರಣವೆಂದರೆ , ಪ್ರಾದೇಶಿಕ ಭಾಷೆಗಳ ಸಾಹಿತ್ಯದ ಪರಿಚಯವೇ ಅವರಿಗಿರುವುದಿಲ್ಲ. ಹೀಗಾಗಿ, ಕೆಲವೊಮ್ಮೆ ಪ್ರಾದೇಶಿಕ ಬುದ್ದಿಜೀವಿಗಳ ಸಿದ್ಧಾಂತ, ಕ್ರಿಯೆ, ನಿಲುವ್ವುಗಳು ಅರ್ಥವಾಗದೇ ನಿಬ್ಬೆರಗಾಗುತ್ತಾರೆ. ಕೆಲಮೊಮ್ಮೆ ಇಂಗ್ಲಿಷ್ ಭಾಷಿಕ ಬುದ್ದಿಜೀವಿಗಳಿಗೆ ಈ ನ್ನಿಲುವು ದೊಡ್ಡಸ್ತಿಕೆ ಮತ್ತು ಅಪರಾಧ ಪ್ರಜ್ಞೆಯಿಂದ ಬಂದದ್ದು. +ಅಪರಾದ ಪ್ರಜ್ಞೆ ಏಕೆ – ತಾವು ತಮ್ಮ ಪ್ರಾದೇಶಿಕ ಭಾಷೆಗಳನ್ನು ಬಿಟ್ಟುಕೊಟ್ಟು ಪರದೇಶಿ ಭಾಷೆಯೊಂದನ್ನು ಬಳಸುತ್ತಿದ್ದೇನೆ; ಹೀಗಾಗಿ ಜನತೆ ಮತ್ತು ಅವರ ಸಂಸ್ಕ್ಳುತಿಯಿಂದ ದೂರವಾಗಿದ್ದೇವೆ ಎಂಬ ಚಿಂತನೆಯ ಕಾರಣಕ್ಕೆ ಬಹಳ ಸಾರಿ ಈ ಮಾನಸಿಕ ದೂರ ಉತ್ಪ್ರೆಕ್ಷಿತವಾದದ್ದು. ಇನ್ನು ದೊಡ್ಡಸ್ತಿಕೆ ಏಕೆಂದರೆ, ಇಂಗ್ಲೀಷು ಮತ್ತು ಆದುನಿಕ ಜ್ಝ್ನಾನದ ಸಂಪರ್ಕದಿಂದಾಗಿ ತಾವು ಪ್ರಾದೇಶಿಕ ಬುದ್ದಿ ಜೀವಿಗಳಿಗಿಂತ ಹೆಚ್ಚಿನವರು ಎಂಬ ದ್ದೋರನೆಯ ಕಾರನಕ್ಕೆ. ಆದರೆ, ಈ ಇಂಗ್ಲೀಷ್ ಭಾಷಿಕ ರಾಷ್ಟ್ರೀಯ ಬುದ್ದಿಜೀವಿ ವರ್ಗವನ್ನು ಅವರ ನಿಗೋಕಲೋನಿಯಲ್ ಸಹೋದ್ಯೊಗಿಗಳಿಗೆ ಹೋಲಿಸಿದಾಗ ಪಾಶ್ಚಾತ್ಯ ಸಂಸ್ಕ್ಳುತಿಯಿಂದಾಗಿ ಬಹಳ ಸಳವಿಗೇನೂ ಇವರು ಸಿಕ್ಕಿರುವುದಿಲ್ಲ. ರಾಷ್ಟ್ರೀಯ ಚಳವಳಿ ಮತ್ತು ನಂತರ ಭಾರತೀಯ ಸಮಾಜ ಸಂಸ್ಕ್ರುತಿ ಯೂರೊಪಿಗಿಂತ ದೊಡ್ಡದು ಎಂದೇ ಅವರು ಪ್ರತಿಪಾದಿಸಿದ್ದರು. ಈ ಚಿಂತನೆಯಲ್ಲಿ ಕೆಲವೊಮ್ಮೆ ಉತ್ಪ್ರೇಕ್ಷೆಯ ಎತ್ತರಗಳಿಗೆ ಕೂಡಾ ಹೋಗಿದ್ದರು. ಪಾಶ್ಚಾತ್ಯ ನಾಗರೀಕತೆ ಕಂಡರೆ ಅವರಿಗೆ ಅಂಥ ಮಹತ್ವದ ವಿಸ್ಮಯವೇನೂ ಇಲ್ಲ. ಇವರಲ್ಲಿ ಯುರೋಪಿನವರಷ್ಟೆ ಸಮಾನತೆ ಮತ್ತು ಸ್ವಂತ ಸಾದ್ಯತೆಗಳ ಕಲ್ಪನೆಗಳಿವೆ. ತಾವು ಯುರೋಪಿಗೆ ಸರಿಗಟ್ಟಬಲ್ಲವು ಎಂಬ ನಂಬಿಕೆ ಅವರ ಚಿಂತನೆ, ಭಾವನೆಗಳಲ್ಲಿ ಎದ್ದು ಕಾನುತ್ತದೆ. ಅದರ ಜೊತೆಗೆ ಬಾರತೀಯ ಸಮಾಜ ಮತ್ತು ಸಂಸ್ಕ್ಳುತಿಗಳ ದೌರ್ಬಲ್ಯ, ಸೀಮಿತಗಳ ಅರಿವೂ ಸ್ಪಷ್ಟವಾಗಿರುತ್ತದೆ. +ಇಂಗ್ಲೀಷು ಮಹತ್ವ +ಇಂಗ್ಲೀಷು ಆದುನಿಕ ಜ್ಝ್ನಾನ ಮತ್ತು ಸಂಸ್ಕ್ಳುತಿಗಳ ಬಾಷೆ ಕೂಡಾ ಹೌದು. ಬರೀ ರಾಷ್ಟ್ರೀಯ ಚಳವಳಿ, ರಾಷ್ಟ್ರೀಯ ಬುದ್ದಿಜೀವಿಗಳಲ್ಲದೆ, ಪ್ರಾಂತೀಯ ಸಾಹಿತ್ಯಕ ಬುದ್ದಿಜೀವಿ ವರ್ಗ ಕೂಡೀ ಇಂಗ್ಲೀಷ್ ಶಿಕ್ಷಣಗಳ ಸ್ರುಷ್ಟಿಯೇ. ಕನ್ನಡ ಸಾಹಿತ್ಯದ ಕೆಲವು ಅತ್ಯುತ್ತಮ ಕ್ರುತಿಗಳು ಇಂಗ್ಲೀಶ್ ಅದ್ಯಾಪಕರಿಂದ ಬಂದಿದೆ ಎಂಬುದು ಕೇವಲ ಆಕಸ್ಮಿಕವಲ್ಲ. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ. ಶಿಕ್ಷಣ ಸಾಂಪ್ರದಾಯಿಕ ರೀತಿಯಲ್ಲಿ ಭಾರತೀಯ ಭಾಷೆಗಳಲ್ಲಿರಬೇಕೂ ಅಥವಾ ಇಂಗ್ಳೀಷಿನಲ್ಲಿಯ ಆದುನಿಕ್ ಶಿಕ್ಷಣ ಬೇಕೋ ಎಂಬ ವಿವಾದ ಬಂಡಾಗ ರಾಂ ಮೋಹನ್ ರಾಯ್ ಮತ್ತಿತರರು ಇಂಗ್ಲೀಷ್ ಶಿಕ್ಷಣವನ್ನು ಬೆಂಬಲಿಸಿದ್ದು ಈ ಕಾರಣಕ್ಕಾಗಿಯೆ. +ಭಾಷೆ ಬೇಕು ಮಾಧ್ಯಮವಲ್ಲ +ರಾಷ್ಟ್ರೀಯವಾದಿಗಳ ಮೊದಲ ತಲೆಮಾರಿನವರು ಮತ್ತು ನವೋದಯದ ಮೊದಲ ಸಾಹಿತಿಗಳು ಇಂಗ್ಲೀಷಿನ ಪ್ರಬಲ ಪ್ರತಿಪಾದಕರಾಗಿದ್ದರು. ಈ ಹೊತ್ತಿಗೂ ಈ ವಾದವನ್ನು ಕೇಳಬಹುದು. ಆದರೆ ಈಗ ಕಾಲ ಬದಲಾಗಿದೆ. ಆಧುನಿಕ ವಿಜ್ಝಾನ, ತಂತ್ರಜ್ಝ್ನಾನ, ಆರ್ಥಿಕ ಅಭಿವ್ರುಧ್ದಿ ಸಂಸ್ಕ್ರುತಿ- ಈ ಕ್ಷೇತ್ರಗಳಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಹೀಗಾಗಿ ನಮಗೆ ಇಂದು ಇಂಗ್ಲೀಷ್ ಶಿಕ್ಷಣ ಮಾಧ್ಯಮವಾಗಿ ಬೇಕಾಗಿಲ್ಲ. ಬರೀ ಭಾಷೆಯಾಗಿ ಬೇಕು. ಇದು ಕೂಡಾ ಭಾಷಾಂತರದ ದುಬಾರಿ ಖರ್ಚನ್ನು ಮತ್ತು ಕಾಲ ವ್ಯಯವನ್ನು ತಪ್ಪಿಸಲು ಮಾತ್ರ. ಈ ಮಾತನ್ನು ನಾವು ಹೇಳುವಾಗ, ಆಧುನಿಕ ವಿಜ್ಝ್ನಾನ, ತಂತ್ರಜ್ಝ್ನಾನ, ಆರ್ಥಿಕ ಅಭಿವ್ಳುಧ್ದಿಗಳು ಭಾಷೆಯ ಮೇಲ್ವ್ ಅಷ್ಟಾಗಿ ಅವಲಂಬಿಸಿಲ್ಲ ಎಂಬ ಅಂಶದ ಮೇಲೆ ವಿಶೆಷ ಒತ್ತು ಹಾಕಬೇಕಾಗಿದೆ. ಇಂಗ್ಲೀಷು ಕೂಡಾ ಇದಕ್ಕೆ ಅಪವಾದವಲ್ಲ. ಆರ್ಥಿಕ ಬೆಳವಣಿಗೆ ಎನ್ನುವುದು ರಾಜಕೀಯ ನೀತಿ ಮತ್ತು ಸಾಮಾಜಿಕ ಶಕ್ತಿಗಳ ಸಂಕೀರ್ಣ ಮಿಲನದ ಫಲ. ಇಂಗ್ಲಿಷೇ ಇಲ್ಲದ ರಷ್ಯ, ಚೈನ, ಜಪಾನ್‌ಗ ಉಡಾಹರಣೆ ನಮ್ಮ ಕಣ್ಣೆದುರಿಗೇ ಇದೆ. +ಒಂದು ಸಾಧ್ಯ +ಕಡೆಯದಾಗಿ ಇಂಗ್ಲೀಷಿನ ಪರವಾಗಿ ಡಿ.ಕೆ.ಡೆ.ಎಂ.ಕೆ. ಮತ್ತು ಬ್ರಾಂಹಣ ವಿರೋಧಿ ಚಳವಳಿಯ ವಕ್ತರರು ನೀಡುವ ಇನ್ನೊಂದು ವಾದವನ್ನು ಪರೀಕ್ಷಿಸುವ ಅಗತ್ಯವಿದೆ. ಸಾಂಪ್ರದಾಯಿಕ ಸಮಾಜದ ಜಾತೀಯತೆ ಮತ್ತು ಇತರ ಕರಾಳ ಮೌಲ್ಯಗಳ ವಿರುದ್ದ ಹೋರಾಡಲು ಇಂಗ್ಲಿಷು ಒಂದು ಸಾಧನ; ಹೀಗಾಗಿ, ಜಾತ್ಯಾತೀತವಾದ, ಪ್ರಜಾಸತ್ತಾತ್ಮಕ ಸಮಾಜವೊಂದರ ನಿರ್ಮಾಣದ ಹೋರಾಟಕ್ಕೆ ಇಂಗ್ಲಿಷು ಕೂಡಾ ಒಂದು ಅಸ್ತ್ರವಗುತ್ತದೆ ಎಂಬ ಆಲೊಚನಾ ವಿಧಾನ ಇವರದು. ಅನ್ಯರ ಪ್ರಕಾರ ಭಾರತೀಯ ಪ್ರಾದೇಶಿಕ ಭಾಷೆಗಳ ಕೈಯ್ಯಲ್ಲಿ ಈ ಬದಲಾವಣೆಯ ಕೆಲಸ ಸಾಧ್ಯವಿಲ್ಲ. ಏಕೆಂದರೆ ಸಾಂಪ್ರದಾಯಿಕ ಸಂಸ್ಕ್ಳ್ತುತಿಯ ಅರ್ಥ, ಸಹಯೋಗಗಳ್ಯ್ ಈ ಭಾಷೆಗಳಲ್ಲಿ ಅಂತರ್ಗತವಾಗಿರುತ್ತದೆ. ಎಂದು ಇವರು ವಾದಿಸುತ್ತಾರೆ. ಈ ವಾದವನ್ನು ನಾವು ಒಪ್ಪಿಕೊಂಡರೆ, ಗಾಡಿಯನ್ನು ಕುದುರೆಯ ಮುಂದೆ ಕಟ್ಟಿದಂತೆ. ಇಂಗ್ಲಿಷ್ ಕೂಡಾ ತನ್ನ ಸಾಮಂತಶಾಹಿ ಮತ್ತು ಅಸಮಾನತೆಯ ಅರ್ಥಗಳನ್ನು ಕಳೆದುಕೊಂಡು ಬೆಳೆಯಿತು ಎಂಬುದು ಇಲ್ಲಿ ನೆನಪಾಗಬೇಕು. ಹಳೆಯ ಊಳಿಗಮಾನ್ಯ ಸಮಾಜದಿಂದ ಇನ್ನಷ್ಟು ಹೆಚ್ಚಿನ ಸಮಾನತೆ ಇರುವ ಪ್ರಜಾಸತ್ತಾತ್ಮಕ ಬಂಡವಾಳಶಾಹೀ ಸಮಾಜದ ಕಡೆಗೆ ನಡೆದಂತೆ ಆ ಹಳೆಯ ಸಂಗತಿಗಳು ಕ್ರಮೇಣ ಇಲ್ಲವಾದವು. ಈ ಇಂಗ್ಲಿಷ್ ಪರ ವಾದಕ್ಕೆ ಪ್ರತಿಯಾದ ಇನ್ನೊಂದು ಪ್ರಶ್ನೆ; ಇಂಗ್ಲೀಷ್ ಭಾಷಿಕರಾದ ಭಾರತೀಯರು ಕೂಡಾ ತಮ್ಮ ಜಾತಿಯ, ಪರಂಪರೆಯ ಮೌಲ್ಯಗಳನ್ನು ಆಚರಿಸುತ್ತಿದ್ದಾರೆ ಎಂಬುದು ಸತ್ಯ ತಾನೆ? +ಇನ್ನು ಹಿಂದಿಯನ್ನು ಕುರಿತು ನೋಡಬಹುದು. ರಾಷ್ಟ್ರೀಯ ಚಳವಳಿಯ ನಯಕರು ಹಿಂದಿಯನ್ನಿ ಅಖಿಲ ಭಾರತೀಯಭಾಷೆಯನ್ನಾಗಿ ಬಳಸಲು ಪ್ರಯತ್ನಪಟ್ಟ ಅಂಶ ಇಲ್ಲಿ ಎದುರಿಗೆ ನಿಲ್ಲುತ್ತದೆ. ಏಕೆಂದರೆ, ಅಖಿಲ ಭಾರತೀಯ ಭಾಷೆ ಎಂಬ ಸ್ಥಾನಕ್ಕೆ ಹತ್ತಿರವಿದ್ದ ಭಾಷೆ ಇದೊಂದೆ. ಇಂಗ್ಲೀಷಿನ ವಸಾಹತುಶಾಹಿ ಸಂಸ್ಕ್ಳುತಿಯ ವಿರುದ್ದ ಹೋರಾಡಲು ಇದೊಂದು ಸಾಧನ ಕೂಡಾ ಹೌದು ಎಂಬ ಅರಿವು ಅವರದು. ಆದರ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹಿಂದಿಯೇತರ ಬಾಷಿಕರ ಮೇಲೆ ಹೇರಲು ಪ್ರಯತ್ನಿಸಿದ, ಹಿಂದಿಯಾ “ಯಜಮಾನಿಕ” ವಾದಿಗಳು ಈ ಪರ್ಯಾಯವನ್ನು ನಾಶಮಾಡಿ ವಿಟ್ಟರು. ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿಯ ಸಾಮಾಜಿಕ, ಸಾಂಸ್ಕ್ಳುತಿಕ ಯಜಮಾನಿಕೆಯ ವಿರುದ್ದ ತೀವ್ರ ಪ್ರತಿಭಟನೆ ಹುಟ್ಟಿಕೊಂಡಿತು. ಈಗ ಕನ್ನಡ ಹೇರಿಕೆಯ ವಿರುದ್ದ ಅಲ್ಪ ಸಂಖ್ಯಾತರು ತೋರಿಸುತ್ತಿರುವ ಪ್ರಟಿಕ್ರಿಯೆಗೂ ಮೇಲಿನದಕ್ಕೂ ಸಾಂಯಗಳಿವೆ. ಏನೇ ಆದರೂ, ಹಿಂದಿ ಆಧುನಿಕ ಜ್ಝಾನದ, ಸಂಸ್ಕ್ರುತಿಯ ವಾಹಕ ವಾಬಲಾರದು. ಜೊತೆಗೆ, ಒಬ್ಬ ಭಾರತೀಯ ಎಷ್ಟು ಭಾಷೆಗಳನ್ನು ತಾನೆ ಕಲಿಯಬಲ್ಲ? +ಈ ಪ್ರಶ್ನೆ ನಮ್ಮನ್ನು ಕನ್ನಡದ ಬಳಿಗೆ ಕರೆತರುತ್ತದೆ. ಕನ್ನಡ ಮತ್ತು ಇತರ ಪ್ರಾಂತೀಯ ಭಾಷೆಗಳಲ್ಲಿ ನೀಡುವ ಶಿಕ್ಷ್ಣ ಭಾರತೀಯರಿಗೆ ತಮ್ಮ ಸಮಾಜದ ಸಂಸ್ಕ್ರುತಿಯ ಜೊತೆಗೆ ಹತ್ತಿರದ ಸಂಬಂಧವನ್ನು ನೀಡುತ್ತದೆ. ಇಂಗ್ಲಿಷ್ ಶಿಕ್ಷಣ ಬಹು ಮಟ್ಟಿಗೆ ಅವರನ್ನು ಭಾರತೀಯ ಸಮಾಗ ಮತ್ತು ಸಂಸ್ಕ್ರುತಿಗಳಿಂದ ದೂರ ತಳ್ಳುತ್ತದೆ. ಇನ್ನೂ ಮಂದೆ ಹೋಗಿ ಹೇಳುವುದಾದರೆ, ಕನ್ನಡ ಭಾಷೆ ರಾಷ್ಟ್ರೀಯ ಚಳವಳಿ ಮತ್ತು ಆದರೆ ತಾತ್ವಿಕತೆಯ ನಿಕಟ ಸಂಪರ್ಕವನ್ನು ತರುತ್ತದೆ. ಆಧುನಿಕ ಕನ್ನಡ ಸಾಹಿತ್ಯ, ಸಂಸ್ಕ್ರುತಿಗಳ ಜೊತೆಗೆ ಹತ್ತಿರದ ಸಂಬಂಧ ಉಂಟಾಗುತ್ತದೆ. ಆದರೆ ಕನ್ನಡ ಅನ್ಯಭಾಷಿಕರ ಬಗೆಗೆ ಒನ್ದು ಬಗೆಯ ಅಲಕ್ಷ್ಯವನ್ನು ಕೂಡಾ ಮೂಡಿಸಲು ಸಾಧ್ಯವಿದೆ. ಏಕೆಂದರೆ, ಕನ್ನಡ ಭೌಧ್ಧಿಕ ಪರಂಪರೆ ಬಹುಮಟ್ಟಿಗೆ ಸಾಹಿತ್ಯಕವಾದದ್ದು. ಮತ್ತು ಇಲ್ಲಿ ಭಾಷೆಯ ಪಾತ್ರವನ್ನು, ಅದರಲ್ಲೂ ಕನ್ನಡದ ಪಾತ್ರವನ್ನು ಸಾಮಾನ್ಯವಾಗಿ ಅತಿರ‌ಒಜಿಸಲಾಗುತ್ತದೆ. ಭಾಷಿಕವಲ್ಲದ ಇತರೆ ಗ್ರಹಿಕೆ , ಅಭಿವ್ಯಕ್ತಿ ಕ್ರಮಗಳನ್ನು, ಇನ್ನೂ ವಿಶಾಲವಾದ ಸಾಮಾಜಿಕ, ರಾಜಕೀಯ ಶಕ್ತೀಗಳನ್ನು ಅಲಕ್ಷ್ಯಮಾಡಲಾಗಿತೆ. ಇಲ್ಲವೀ ಇವುಗಾಳ ಪಾತ್ರವೀನಿದ್ದ್ಗೂ, ಕನ್ನಡಕ್ಕೆ ಹೋಲಿಸಿದಾಗ ಕೆಳಗಿನ ಹಂತದಲ್ಲಿರುವಂಥವೆ ಎಂಬ ನಿಲುವು ಕಾಣುತ್ತವೆ. ಇಂಗ್ಲೀಷ್ನ ಬಳಕೆ ಹೇಗೆ ಒಂದು ರೀತೆಯ ಉತ್ಪ್ರೇಕ್ಷೆಯ ದೂರವನ್ನು ನಿರ್ಮಿಸುತ್ತದೂ, ಹಾಗೆ ಕನ್ನಡತೆ ಬಳಕೆ ಜೊತೆಗೆ ಅಷ್ಟೇ ಉತ್ಪ್ರೇಕ್ಷಿತೆ ನಿಕಟತೆಯನ್ನು ಆರೋಪಿಸಬಲ್ಲುದು. ತಾವು ಕಲೋನಿಯಲ್ ಅಲ್ಲ ಎಂದೇ ಕನ್ನಡ ಸಾಹಿತಿಗಳು ಭಾವಿಸಿದ್ದಾರೆ. ಈ ಸಂಗತಿಯ ಸತ್ಯಾಸತ್ಯತೆ ತಿಳಿಯುವುದು ನಿರ್ದಿಷ್ಟ ಪ್ರಸನ್ಗಗಳನ್ನು ಚರ್ಚಿಸಿದಾಗ ಮಾತ್ರ. ಆಗ ಕಲೋನಿಯಲ್ ಸಿಧ್ಧಾಂತದ ಪ್ರಭವದ ಆಳ ಎಷ್ಟಿದೆ ಎಂಬುದು ತಿಳಿಯುತ್ತದೆ. +ಕನ್ನಡ ಸಾಹಿತ್ಯಿಕ ಬುದ್ಧಿಜೀವಿಗಳಿಗೆ ಕೀಳರಿಮೆ ಇದೆ. ಇದರ ಜೊತೆಗೆ, ಆಧುನಿಕ ಯೂರೋಪಿಯನ್ ಪರಂಪರೆಯ ಬಗೆಗೆ ಸಾಕಷ್ಟು ತಿಳುವಳಿಕೆ ಇಲ್ಲ. ಹೀಗಾಗಿ, ಆತ ಪಶ್ಚಿಮದ ಸಮಕಾಲೀನ ಬೌದ್ಧಿಕ, ಸೈದ್ಧಾಂತಿಕ, ಫ್ಯಾಶನ್‌ಗಳಿಗೆ ತಕ್ಷಣ ಮನಸೋತುಬಿಟ್ಟು ತನ್ನ ನೆಲೆಯನ್ನು ಕಳೆದುಕೊಂಡು ಬಿಡಬಲ್ಲ ಇಂಗ್ಲಿಷ್ ಬರೆವ ವ್ಯಕ್ತಿಗಿಂತ ಕನ್ನಡ ಸಾಹಿತಿಗೇ ಈ ಅಪಾಯ ಹೆಚ್ಚಿನ ರೀತಿಯಲ್ಲಿದೆ. ಈ ದಿಕ್ಕಿನಲ್ಲಿ ಪ್ರಬುದ್ಧ ವಿಮರ್ಶಾ ಪರಂಪರೆಯೊಂದರ ಗೈರು ಹಾಜರಿ ಕೂಡಾ ಸಾಕಷ್ಟು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇಂಥ ಸನ್ನಿವೇಶದಲ್ಲಿ ಭಾಷೆಯೇ ಮೌಲ್ಯಮಾಪನದ ಪ್ರಮುಖ ನೆಲೆಯಾಗುತ್ತದೆ. ಕನ್ನಡದಲ್ಲಿ ಯಾರು ಬರೆಯುತ್ತರೊ ಅವರು ಹೊಗಳಿಕೆಗೆ ಅರ್ಹರಾಗುತ್ತಾರೆ. ಇಂಗ್ಲಿಷ್ ಮತ್ತು ಇತರೆ ಪ್ರಾಂತೀಯ ಭಾಷೆಗಳಲ್ಲಿ ಬರೆಯುವವರನ್ನ ತಿರಸ್ಕರಿಸಲಾಗುತ್ತದೆ. ಇಲ್ಲಿ ಜಾತಿ ಕೂಡಾ ಸಾಕಷ್ಟು ಮುಖ್ಯವೆ. ಅಂದರೆ, ಬೌದ್ಧಿಕವಾಗಿ, ಮತ್ತು ಈಚೆಗೆ ಬಲಿಷ್ಠ ಬಹುಸಂಖ್ಯಾತ ಜಾತಿಗಳವರಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. +ಮೇಲಿನ ಎಲ್ಲಾ ಅಂಶಗಳು ಅತ್ಯಂತ ಉತ್ಪ್ರೇಕ್ಷಿತವಾದ ಸ್ವ-ಪ್ರತಿಮೆಯೊಂದನ್ನು ಕನ್ನಡ ಸಾಹಿತಿಗೆ ನೀಡಿದೆ. ತನ್ನ ಸಾಮರ್ಥ್ಯದ ಬಗ್ಗೆ, ತನ್ನ ಕೃತಿಗಳ ಬಗೆಗೆ ಅತಿರಂಜಿತ ಕಲ್ಪನೆ ಬಂದುಬಿಟ್ಟಿದೆ. ಹೀಗಾಗಿ, ಆತ ತಾನು ಪಾಶ್ಚಾತ್ಯರಿಗಿಂತ ಶ್ರೇಷ್ಟ ಎಂದು ಭಾವಿಸಿದ್ದಾನೆ. ಜಗತ್ತಿನಲ್ಲಿಯ ಯಾವುದೇ ಕೃತಿಯ ಜೊತೆಗೆ ತನ್ನ ಕೃತಿ ಸಾಟಿಯಾಗಬಲ್ಲದು; ಅಥವಾ ಒಂದಿ ಕೈ ಹೆಚ್ಚೇ ಎಂಬ ಕಲ್ಪನೆ ಕಾಣುತ್ತಿದೆ. ಒಬ್ಬ ಪ್ರಸಿದ್ಧ ಕನ್ನಡ ಲೇಖಕರಂತೂ ಈ ಹೇಳಿಕೆಯನ್ನು ನೀಡಿದರು: “ನಾನು ಶೇಕ್ಸ್‌ಪಿಯರ್ ಮತ್ತು ಟಾಲ್‌ಸ್ಟಾಯ್‌ಗಿಂತ ದೊಡ್ಡವನು”. ಅವರ ಅಭಿಮಾನಿಗಳು ಅದನ್ನು ಒಪ್ಪಿಕೊಂಡೂ ಇದ್ದಾರೆ. “ಕನ್ನಡದ ಒಬ್ಬ ನಿರ್ಧಿಷ್ಟ ಕವಿ ಶೆಲ್ಲಿ ಮತ್ತು ವರ್ಡ್ಸ್‌ವರ್ತಗಿಂತ ದೊಡ್ಡವರು”. ಈ ಮಾತನ್ನು ನನಗೆ ಕನ್ನಡ ಸಾಹಿತಿಗಳಲ್ಲಿ ಅತ್ಯಂತ ಪ್ರತಿಭಾವಂತ ಬುದ್ಧಿಜೀವಿಯೊಬ್ಬರು ಹೇಳಿದರು. ತನ್ನ ಕೃತಿಯ ಪರಿಕಲ್ಪನೆಯ ಬಗ್ಗೂ ಕನ್ನಡ ಸಾಹಿತಿ ಮಹತ್ವಾಕಾಂಕ್ಷಿ. ಈತ ನವವಸಾಹತುಶಾಹೀ ಇಂಗ್ಲಿಷ್ ಭಾಷಿಕರಂತೆ ಆಕೃತಿಯ ತಾಂತ್ರಿಕ ಪರಿಪೂರ್ಣತೆಗಾಗಿ ಕೆತ್ತುತ್ತಾ ಕೂರುವುದಿಲ್ಲ. ತನ್ನ ಕೃತಿಯ ದ್ರವ್ಯದಲ್ಲಿ ಅನುಕರಣೆಯ ಮೂಲಕ ಕನ್ನಡ ಸಾಹಿತಿ ಅತ್ಯಂತ ಮಹತ್ವದ ಶೋಧನೆಗಳನ್ನು ಮಾಡಲು ಯತ್ನಿಸುತ್ತಾನೆ. ದ್ರವ್ಯಕ್ಕೆ ಸಂಬಂಧಿಸಿದಂತೆ ಆಕೃತಿಯಲ್ಲೂ, ಆತ ಮಹತ್ವದ ಸಾಧನೆಗೆ ಪ್ರಯತ್ನಿಸುತ್ತಾನೆ. ಆದರೆ ಅಂಥ ತಾಂತ್ರಿಕ ಅನುಕರಣೆಯಾಗಲೀ, ಪರಿಪೂರ್ಣತೆಯಾಗಲೀ, ಈತನಲ್ಲಿಲ್ಲ. +ನೆಲೆಗಟ್ಟಿನ ಮೂಲ +ಈ ಸಮಕಾಲೀನ ಭಾರತದಲ್ಲಿ ಭಾಷೆಗಳು ಅತ್ಯಂತ ಸಂಕೀರ್ಣ ಹಾಗೂ ಬಹುಮುಖೀ ಪಾತ್ರಗಳನ್ನು ನಿರ್ವಹಿಸುತ್ತವೆ. ಎಂದು ಈ ಹಿನ್ನೆಲೆಯಲ್ಲಿ ನನಗೆ ಅನ್ನಿಸುತ್ತದೆ. ಆದರೆ ಕರ್ನಾಟಕದಲ್ಲಿ ಈ ಹೊತ್ತು, ವಿಶೇಷವಾಗಿ ಕನ್ನಡ ಸಾಹಿತಿಗಳಿಗೆ ಸಂಬಂಧಿಸಿದ ಹಾಗೆ ಇದರ ಪಾತ್ರವನ್ನು ಇನ್ನಷ್ಟು ಮಹತ್ವದ್ದಾಗಿಯೂ, ಸರಳವಾಗಿಯೂ ನೋಡಲಾಗುತ್ತಿದೆ. ಉಳಿದ ಅನೇಕ ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಶಕ್ತಿಗಳಂತೆ ಭಾಷೆ ಕೂಡಾ ಒಂದು ಶಕ್ತಿಯಷ್ಟೆ ಎಂಬುದನ್ನು ಮನದಟ್ಟು ಮಾಡಿಸುವುದು ಇಲ್ಲಿ ನನ್ನ ಉದ್ದೇಶ. ಒಂದೇ ಭಾಷೆ ಪರಸ್ಪರ ವಿರೋಧಿ ಅರ್ಥಗಳನ್ನು ಪರಸ್ಪರ ವಿರೋಧಿ ಪಾತ್ರಗಳನ್ನು ಹೊಂದಿರಲು ಸಾಧ್ಯ ಎಂಬುದನ್ನು ನಾವೀಗ ಗಮನಕ್ಕೆ ತಂದುಕೊಳ್ಳಬೇಕಾಗಿದೆ. ಭಾಷೆಯ ಪಾತ್ರ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಒಂದು ಭಾಷೆ ಅನೇಕ ಸಿದ್ಧಾಂತಗಳ, ಧೋರಣೆಗಳ ವಾಹಕವಾಗಿರಲು ಸಾಧ್ಯ. ಒಂದು ನಿರ್ಧಿಷ್ಟ ಸನ್ನಿವೇಶದಲ್ಲಿ ಯಾವ ಸಿದ್ಧಾಂತ, ಧೋರಣೆಯನ್ನು ಹೊಂದಿರುತ್ತದೆ ಎಂಬುದು ಆ ಭಾಷೆಯ ಸಾಮಾಜಿಕ ಸನ್ನಿವೇಶ, ಬೌದ್ಧಿಕ ಪರಂಪರೆ, ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೋಡಬಹುದು. ಉದಾ.ಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಗೊತ್ತಿರುವ ವ್ಯಕ್ತಿಯೊಬ್ಬ ಭಾಗಶಃ ನವವಸಾಹತುಶಾಹಿಯಾಗಿ, ಭಾಗಶಃ ರಾಷ್ಟ್ರೀಯ ವ್ಯಕ್ತಿಯಾಗಿರಲು ಸಾಧ್ಯ ಇದರ ಜೊತೆ, ಆತ ಕನ್ನಡ ಪ್ರಾದೇಶಿಕವಾದಿಯೂ ಆಗಿರಬಲ್ಲ. ಒಬ್ಬ ವ್ಯಕ್ತಿಯ ಸೈದ್ಧಾಂತಿಕ ನೆಲೆಗಟ್ಟನ್ನು ಅನೇಕ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ರೂಪಿಸುತ್ತವೆ. +ಮುಂದೆ ಯಾವ್ಯಾವ ಭಾಷೆಗಳು ಯಾವ್ಯಾವ ಪಾತ್ರ ವಹಿಸುತ್ತವೆ ಎಂಬುದನ್ನು ಈಗ ಭವಿಷ್ಯ ಹೇಳುವುದು ಸಾಧ್ಯವಿಲ್ಲ. ಅದರೆ ವಿವಿಧ ಭಾಷೆ, ಭಾಷಿಕರ ಬಗೆಗೆ ಪ್ರಜಾಸತ್ತಾತ್ಮಕ ನೀತಿಯೊಂದರ ರೂಪುರೇಖೆಗಳನ್ನು ಸ್ಥೂಲವಾಗಿ ಗುರುತಿಸಲು ಯತ್ನಿಸುತ್ತಿದ್ದೇನೆ. ಈ ರೀತಿಯ ನೀತಿಯೊಂದು ಶೋಷಣೆ ಇಲ್ಲದಿರುವ, ಸಮಾಜವಾದಿ ಸಮಾಜದ, ವ್ಯಕ್ತಿತ್ವದ ಪೂರ್ಣ ವಿಕಾಸ ಸಾಧ್ಯವಿರುವ ಸಮಾಜವೊಂದರ ನಿರ್ಮಾಣಕ್ಕೆ ಹೇಗೆ ನೆರವಾಗಬಲ್ಲದು ಎಂಬುದನ್ನು ಮುಂದೆ ವಿವೇಚಿಸುವ ಪ್ರಯತ್ನ ಮಾಡಿದ್ದೇನೆ. +ಏಕಮೇವ ಮಾನದಂಡವಲ್ಲ +ಭಾಷೆಯ ಸ್ಥಾನಮಾನಗಳ ಸಮಸ್ಯೆಯಿಂದಲೇ ಈ ಕೆಲಸವನ್ನು ಪ್ರಾರಂಭಿಸೋಣ. ಗೋಕಾಕ್ ಚಳವಳಿಯ, ಬೆಂಬಲಿಗರು ಅನೇಕ ಸಾರಿ ಹೀಗೆ ಮಾತು ಪ್ರಾರಂಭಿಸುತ್ತಾರೆ: “ನಾವು ಭಾಷಾವಾರು ಪ್ರಾಂತ್ಯಗಳನ್ನು ಒಪ್ಪಿಕೊಂಡ ಮೇಲೆ……” ಈ ಮಾತನ್ನು ಚರ್ಚೆಗಳಲ್ಲಿ ಅನೇಕ ಸಾರಿ ಕೇಳಿದ್ದೇನೆ. ೧೯೫೬ರ ರಾಜ್ಯ ವಿಂಗಡನೆಯ ಬಗೆಗಿನ ತಪ್ಪು ಭರವಸೆಯಿಂದ ಹೊರಡುವ ವಾದ ಇದು. ಒಂದೊಂದು ರಾಜ್ಯಕ್ಕೆ ಒಂದೊಂದು ಭಾಷೆ ಎಂಬ ತರ್ಕ ಇಲ್ಲಿದೆ. ಈ ಭರವಸೆಗೆ ಅನೇಕ ಭಾಷಾವಾರು ಪ್ರಾಂತ್ಯಗಳ ಬೆಂಬಲಿಗರು ಪೋಷಿಸಿದರು. ಕಾಂಗ್ರೆಸ್ಸಿನೊಳಗೆ, ಹೊರಗೆ, ಅಷ್ಟೇ ಏಕೆ ರಾಜಕೀಯ ವಲಯಗಳ ಹೊರಗೂ ಈ ರೀತಿಯ ಬೆಂಬಲಿಗರು ಧಂಡಿಯಾಗಿದ್ದರು. ರಾಜ್ಯಗಳ ಮರುವಿಂಗಡನೆಯ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಈ ಭರವಸೆ ಎಷ್ಟು ಪೊಳ್ಳಾದದ್ದು ಎಂಬುದು ತಿಳಿಯುತ್ತದೆ. ಹಾಗೆ ನೋಡಿದಾಗ ನಮಗೇನು ಕಾಣುತ್ತದೆ? ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಬಿಹಾರ, ರಾಜಸ್ಥಾನ-ಹಿಂದೀ ಇಷ್ಟೊಂದು ರಾಜ್ಯಗಳ ಭಾಷೆ. ಉ. ಪ್ರದೇಶವನ್ನೇ ಎರಡಾಗಿ ಒಡೆಯಬೇಕು ಎಂಬ ವಾದದ ನೆನಪೂ ಇಲ್ಲಿ ಬಂದಿದೆ. ಇದರಿಂದ ನಮಗೆ ಸ್ಪಷ್ಟವಾಗುವ ಸಂಗತಿಯೆಂದರೆ ಈ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸಿರಲಿಲ್ಲ ಎಂಬುದು. ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನೇಕ ಭಾಷೆಗಳಿವೆಯಲ್ಲ, ಅದು ಹೇಗೆ? ಒಂದೇ ರಾಜ್ಯದೊಳಗೆ ಮತ್ತು ಹೊರಗೆ ಅನೇಕ ಭಾಷೆಗಳಿವೆ. ಉದಾ. ಕೊಂಕಣಿ, ತುಳು, ಪಂಜಾಬಿ, ಉರ್ದು ಮತ್ತು ಸಿಂಧಿ, ಪ್ರಮುಖ ಭಾಷೆಗಳಾಗಿದ್ದು ಅವಕ್ಕೆ ತಮ್ಮದೇ ಆದ ರಾಜ್ಯಗಳಿಲ್ಲವಲ್ಲ. ಈ ಭಾಷೆಗಳನ್ನು ಮಾತನಾಡುವ ಜನರೂ ಎಲ್ಲೂ ಬಹುಸಂಖ್ಯಾತರಾಗಿಲ್ಲ. ಆದ್ದರಿಂದಲೇ ಅವರಿಗೆ ರಾಜ್ಯವಿಲ್ಲ. ಈ ಅಂಶಗಳ ಹಿಂದಿನ ಒಟ್ಟಾರೆ ತರ್ಕ ಇಷ್ಟೇ; ರಾಜ್ಯಗಳ ಮರು ವಿಂಗಡನೆಯಲ್ಲಿ ಭಾಷೆ ಕೇವಲ ಒಂದು ಮಾನದಂಡವೇ ಹೊರತು ಅದೇ ಏಕಮಾತ್ರ ಮಾನದಂಡವಲ್ಲ. ಆಡಳಿತದ ಅನುಕೂಲಕ್ಕಾಗಿ ಒಂದು ಭಾಷೆಯನ್ನು ಬಳಸಿದರೂ ಬೇರೆ ಭಾಷೆಗಳನ್ನು ಮಾತನಾಡುವ ಜನ, ವಿಶೇಷವಾಗಿ ಗಡಿ ಪ್ರದೇಶಗಳ ಜನರನ್ನು “ಪರಕೀಯರು” ಅಥವಾ “ದ್ರೋಹಿಗಳು” ಎಂದು ಕರೆಯಲಾಗದು. +ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ವಾದವನ್ನು ಮುಂದೊಡ್ಡಲಾಗುತ್ತಿತ್ತು. “ನಾವು ಒಂದು ರಾಷ್ಟ್ರ ಎಂದು ಭಾವಿಸುವುದಾದರೆ, ರಾಷ್ಟ್ರಭಾಷೆಯೊಂದನ್ನು ಕೂಡಾ ಒಪ್ಪಿಕೊಳ್ಳಬೇಕು” ಈ ವಾದದ ಮುಸುಕಿನೊಳಗೆ ಬೇರೆಯವರ ಮೇಲೆ ಹಿಂದಿಯ ಸಾಮಾಜಿಕ, ಸಾಂಸ್ಕೃತಿಕ ಯಜಮಾನಿಕೆ ಹೇರಲು ಪ್ರಯತ್ನಿಸಲಾಯಿತು. ಇದು ನಡೆಯಲಿಲ್ಲ: ಜನತಾ ಕಾಲದಲ್ಲಿ ಹಿಂದೀ ಯಜಮಾನಿಕೆ ಮತ್ತೆ ನುಸುಳಿ ಮೇಲೆ ಬರಲು ಯತ್ನಿಸಿತು. ಈಗ ಶ್ರೀಮತಿ ಗಾಂಧಿಯವರ ಕಾಲದಲ್ಲೂ ಸಣ್ಣಗೆ ಈ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಭಾರತದ ಸಂವಿಧಾನ ೧೪ ಭಾಷೆಗಳನ್ನು ರಾಷ್ಟ್ರಭಾಷೆಗಳೆಂದು ಪಟ್ಟಿಮಾಡಿದೆ. ಕೆಲವು ರಾಜ್ಯಗಳಲ್ಲಿ ಇದನ್ನು ಜಾರಿ ತರಲಾಗುತ್ತಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರ ಪ್ರದೇಶಗಳಲ್ಲಿ ಉರ್ದುವನ್ನು ಪ್ರಾಂತೀಯ ಭಾಷೆಗಳೊಂದಿಗೆ ಸೇರಿಸಿ ರಾಜ್ಯ ಭಾಷೆ ಎಂದು ಘೋಷಿಸಲಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನೇಪಾಳಿಯನ್ನು ಕೂಡಾ ಅಧಿಕೃತ ಭಾಷೆಯೆಂದು ಘೋಷಿಸಲಾಗಿದೆ. ನೇಪಾಳಿಯನ್ನು ರಾಷ್ಟ್ರಭಾಷೆಗಳಲ್ಲಿ ಒಂದನ್ನಾಗಿ ಪರಿಗಣಿಸಬೇಕೆಂದು ಪ. ಬಂಗಾಳ ರಾಜ್ಯ ಸರ್ಕಾರ ಸೂಚಿಸಿದೆ. ಪ. ಬಂಗಾಳದ ಎಡರಂಗದ ಸರಕಾರದ ಭಾಷಾನೀತಿಯ ಸೂತ್ರ ಇದು: “ಎಲ್ಲ ಅಲ್ಪಸಂಖ್ಯಾತ ಭಾಷೆಗಳ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನ” ಹೀಗಾಗಿ ಭಾರತ ದೇಶದ ಬಹುಭಾಷಾ ಸ್ವರೂಪವನ್ನು ರಾಜ್ಯಗಳ ಆಂತರಿಕ ಸನ್ನಿವೇಶದಲ್ಲೂ ಜಾರಿಗೆ ತರಲು ಯೋಚಿಸಲಾಗುತ್ತಿದೆ. ಆರ್ಥಿಕ ಅಭಿವೃದ್ಧಿ ಮತ್ತು ನಗರೀಕರಣ ಬೆಳೆದಷ್ಟು ವಲಸೆ ಹೆಚ್ಚುತ್ತಾ ಹೋಗುತ್ತದೆ; ಹಾಗೆಯೇ ರಾಜ್ಯಗಳು ಕೂಡಾ ಬಹುಭಾಷಾಮಯವಾಗುತ್ತಾ ಹೋಗುತ್ತವೆ. +ಪರಿಸ್ಥಿತಿ ಹೀಗಿದ್ದರೂ, ಗೋಕಾಕ್ ವರದಿ ಹೇಳುವ ಪ್ರತಿ ಭಾಷಾ ರಾಜ್ಯವು “ಒಂದು ಅನನ್ಯ ವ್ಯಕ್ತಿತ್ವ”ವನ್ನು ಹೊಂದಿರುತ್ತದೆ ಎಂಬ ಮಾತು ಸರಿಯಾದದ್ದೇ. ಇದಕ್ಕೆ ವಿಶಿಷ್ಟ ವ್ಯಕ್ತಿತ್ವವೊಂದು ಇದ್ದು ಅದು ರಾಷ್ಟ್ರೀಯ ಹಂತದಲ್ಲಿ ” ಒಂದು ಕೃತ್ರಿಮ ವಿಶಾಲತೆ”ಯ ಬೆಳವಣಿಗೆಗೆ ವಿರೋಧವಾದದ್ದೇ ಆಗಿರುತ್ತದೆ. ಗೋಕಾಕ್ ವರದಿ ಮುಂದುವರಿಯುತ್ತಾ ಈ ದಿಸೆಯಲ್ಲಿ ಸಮಂಜಸವಾದ ಮಾತನ್ನೇ ಹೇಳುತ್ತದೆ: …………ಹೀಗೆ ಪ್ರತಿಯೊಂದೂ ಭಾಷಾ ರಾಜ್ಯವೂ ತನ್ನದೇ ಆದ ವ್ಯಕ್ತಿತ್ವವನ್ನು ಪಡೆದಿವೆ……….ಈ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೂ ಭಾಷಾ ರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆಯಿದೆ.” ಆದರೆ ರಾಷ್ಟ್ರೀಯ ಮಟ್ಟದಲ್ಲಿ ಗೋಕಾಕ್ ಸಮಿತಿಗೆ ಬೇಕಾಗಿರುವ ವೈವಿಧ್ಯ, ಸಮೃದ್ಧಿ ಕರ್ನಾಟಕದ ಮಟ್ಟದಲ್ಲಿ ಮಾತ್ರ ಬೇಡವಾಗಿದೆ, ಕನ್ನಡ ಭಾಷೆ ಸಂಸ್ಕೃತಿ, ಸಾಹಿತ್ಯವನ್ನು ಬೆಸೆಯುವುದರ ಮೂಲಕ “ಕೃತ್ರಿಮ ವೈಶಾಲ್ಯವೊಂದನ್ನು” ಸೃಷ್ಟಿಸಲು ಅವರು ಪ್ರಯತ್ನಿಸಿದ್ದಾರೆ. ಕರ್ನಾಟಕದೊಳಗೆ ಇರುವ ವಿಶಿಷ್ಟ, ವೈವಿಧ್ಯಮಯ ಸಂಸ್ಕೃತಿಗಳನ್ನು ನಿರಾಕರಿಸುವುದರ ಮೂಲಕ ಈ ಕಾರ್ಯವನ್ನು ಅವರು ಸಾಧಿಸಬಯಸಿದ್ದಾರೆ. ಕನ್ನಡ ಸಮಾಜ, ಸಂಸ್ಕೃತಿಯೊಳಗಡೆಯೇ ಅನೇಕ ಭಿನ್ನತೆ, ವೈವಿಧ್ಯಗಳಿವೆ. ದಕ್ಷಿಣ ಕನ್ನಡ, ಧಾರವಾಡ, ಹೈದರಾಬಾದ್ ಕರ್ನಾಟಕ, ಹಳೆ ಮೈಸೂರು, ಕೊಡಗು ಇತ್ಯಾದಿ ಪ್ರದೇಶಗಳು ಪರಸ್ಪರ ಭಿನ್ನತೆಯನ್ನು ಹೊಂದಿವೆಯೆಂಬುದು ಈಗಾಗಲೇ ತಿಳಿದಿರುವ ಸಂಗತಿ. ಈ ಒಂದೊಂದು ಪ್ರದೇಶದೊಳಗೂ ಆಂತರಿಕ ವ್ಯತ್ಯಾಸಗಳಿವೆ ಎಂಬ ಮಾತು ಬೇರೆ. ಜಾತಿ ಜನಾಂಗಗಳೊಳಗೆ, ಮೇಲು ಜಾತಿ, ಕೆಳ ಜಾತಿಗಳೊಳಗೆ, ಮುಸ್ಲಿಂ, ಕ್ರೈಸ್ತರಲ್ಲಿ ವ್ಯತ್ಯಾಸಗಳಿವೆ. ಹಾಗೆಯೇ ಬೇರೆ, ಬೇರೆ ಭಾಷೆಗಳನ್ನು-ಕನ್ನಡ, ತೆಲುಗು, ಮರಾಠಿ, ತಮಿಳು ಮಲಯಾಳಂ, ಉರ್ದು, ಕೊಂಕಣಿ, ತುಳು-ಇತ್ಯದಿ ಮಾತನಾಡುವ ಜನರಲ್ಲೂ ವೈವಿಧ್ಯಗಳಿರುತ್ತವೆ. ಆದ್ದರಿಂದ ಗೋಕಾಕ್ ಸಮಿತಿಯ ವಾದವನ್ನೇ ಇಲ್ಲಿ ಅನ್ವಯಿಸಿ ಹೇಳುವುದಾದರೆ: ಈ ಎಲ್ಲ ಭಿನ್ನ, ವೈವಿಧ್ಯಮಯ ವ್ಯಕ್ತಿತ್ವಗಳು ವಿಶಿಷ್ಟವಾಗಿ ಉಳಿಯದಿದ್ದರೆ ಕರ್ನಾಟಕದ ಚೈತನ್ಯ ತನ್ನ ಭವ್ಯತೆ ಮತ್ತು ಬಹುಮುಖೀ ಉಜ್ವಲತೆಯನ್ನು ಉಳಿಸಿಕೊಳ್ಳಲಾರದು. +ಕರ್ನಾಟಕ ಸಾಹಿತ್ಯ ಪರಿಷತ್ತು +ಆದ್ದರಿಂದ ಪ್ರಜಾಸತ್ತಾತ್ಮಕ ಕಾರ್ಯಕ್ರಮದ ಮೊದಲ ಒತ್ತಾಯ ಇದು: ಗಮನಾರ್ಹ ಸಂಖ್ಯೆಯ ಜನ ಮಾತನಾಡುವ ಎಲ್ಲ ಭಾಷೆಗಳನ್ನೂ ಕರ್ನಾಟಕದ ರಾಜ್ಯ ಭಾಷೆಗಳೆಂದೇ ಪರಿಗಣಿಸಬೇಕು. ಆಗ ಕನ್ನಡದ ಜೊತೆಗೆ ಮರಾಠಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಕೊಂಕಣಿ ತುಳು, ಕೊಡಗು, ಇಂಗ್ಲಿಷ್ ಭಾಷೆಗಳು ಸೇರಿಕೊಳ್ಳುತ್ತವೆ. ಈ ಭಾಷೆಗಳ ಸಾಂಸ್ಕೃತಿಕ ಕಾರ್ಯಗಳಿಗೆ ಸರ್ಕಾರ ಸಹಾಯ ನೀಡಬೇಕು. ಕನ್ನಡ ಪರಿಷತ್ತು ತನ್ನ ಹೆಸರನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿಕೊಂಡು, ಈ ಎಲ್ಲ ಭಾಷೆಗಳ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಆದರೆ, ಕರ್ನಾಟಕದಲ್ಲಿ ಕನ್ನಡ ಬಹುಸಂಖ್ಯಾತ ಜನತೆಯ ಭಾಷೆಯಾದ್ದರಿಂದ ಅದಕ್ಕೆ ಹಣ ಮತ್ತು ಇತರ ರೂಪಗಳಲ್ಲಿ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಂಥ ನೀತಿ ಕರ್ನಾಟಕದಲ್ಲಿ ಬದುಕುವ, ದುಡಿಯುವ ಎಲ್ಲರಿಗೂ ಅವರು ಯಾವುದೇ ಭಾಷೆ ಮಾತನಾಡಲಿ, ಸಮಾನ ಮಾನ್ಯತೆ ಸಿಗುವಂತೆ ಮಾಡುತ್ತದೆ. ಕನ್ನಡವಾಗಲಿ ಅಥವ ಯಾವುದೇ ಪ್ರಾಂತೀಯ ಭಾಷೆಯಾಗಲೀ ಶಾಲಾ ಹಂತದಲ್ಲಿ ಕಡ್ಡಾಯವಾಗಿರಕೂಡದು. ಸಂಸ್ಕೃತಕ್ಕೆ ಮಾತ್ರ ಮೂರು ಭಾಷೆಗಳ ಪಟ್ಟಿಯಲ್ಲಿ ಎಲ್ಲಿಯೂ ಸ್ಥಾನವಿರಕೂಡದು. ಏಕೆಂದರೆ ಈ ಭಾಷೆ ಹಿಂದೂ-ಬ್ರಾಹ್ಮಣ ಮಾದರಿಯ ಸಾಂಪ್ರದಾಯಿಕ ಭಾವೈಕ್ಯದ ಅರ್ಥ ಮತ್ತು ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. +ಎರಡನೆ ಒತ್ತಾಯವೆಂದರೆ, ಆಡಳಿತ ಭಾಷೆ ಕನ್ನಡ ಆಗಬೇಕು. ಬಹುಸಂಖ್ಯಾತರ ಭಾಷೆ ಕನ್ನಡ ಎಂಬುದರ ಜೊತೆಗೆ ಅಲ್ಪಸಂಖ್ಯಾತರಿಗೂ ಈಗಾಗಲೇ ಆ ಭಾಷೆ ತಿಳಿದಿದೆ. ಕರ್ನಾಟಕದಲ್ಲಿಯ ಯಾವ ಭಾಷಾ ಅಲ್ಪಸಂಖ್ಯಾತರೂ ಈ ಮಾತನ್ನು ವಿರೋಧಿಸಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದರಿಂದಾಗಿ, ಆಡಳಿತಾಂಗ, ಶಾಸಕಾಂಗ, ನ್ಯಾಯಾಂಗಗಳು ನೀತಿಗಳನ್ನು ಜನತೆ ಅರ್ಥ ಮಾಡಿಕೊಳ್ಳಬಲ್ಲುದು; ವಿರ್ಮಶಿಸಬಲ್ಲದು. ತಮಗೆ ಬೇಕಾದ ಹಾಗೆ ಬದಲಿಸಿ ನಿಯಂತ್ರಿಸಬಲ್ಲರು. ಹೊರಗಿನವರಿಗೆ, ಹೊಸಬರಿಗೆ, ಅಖಿಲ ಭಾರತೀಯ ಉದ್ದೇಶಗಳಿಂದಾಗಿ ಇಂಗ್ಲಿಷನ್ನು ಎರಡನೆಯ ಭಾಷೆಯನ್ನಾಗಿ ಬಳಸಬಹುದು. ಈ ವ್ಯವಸ್ಥೆ ಎಲ್ಲಾ ರಾಜ್ಯಗಳೂ ಹಿಂದಿ ಬಳಕೆಗೆ ಒಪ್ಪುವ ತನಕ (ಒಂದು ಪಕ್ಷ ಒಪ್ಪಿದರೆ) ಮುಂದುವರೆಯಬೇಕಾಗುತ್ತದೆ. ಜಿಲ್ಲೆಯ ಹಂತದಲ್ಲಿ ಬಹು ಸಂಖ್ಯಾತ ಜನ ಮಾತನಾಡುವ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಈ ಕಡೇ ನೀತಿಯನ್ನು ಪ. ಬಂಗಾಳ ಎಡ ಸರ್ಕಾರ ಜಾರಿಗೆ ತಂದಿದೆ. +ಇಂಗ್ಲಿಷ್ ವ್ಯಾಮೋಹ +ಶೈಕ್ಷಣಿಕ ಹಂತದಲ್ಲಿ ಕೂಡಾ ಪ್ರಾಂತೀಯ ಭಾಷೆಗಳು ಕೆಳಗಿನಿಂದ ಹಿಡಿದು ಸ್ನಾತಕೋತ್ತರ ಮತ್ತು ಸಂಶೋಧನೆಗಳ ತನಕ ಶಿಕ್ಷಣ ಮಾಧ್ಯಮವಾಗಬೇಕು. ಈ ಪಟ್ಟಿಯಲ್ಲಿ ಇಂಗ್ಲಿಷ್ ಕೂಡಾ ಸೇರಬೇಕು. ಏಕೆಂದರೆ, ಅದು ಆಂಗ್ಲೋ-ಇಂಡಿನ್ನರೂ ಸೇರಿದಂತೆ ಅನೇಕರ ಮಾತೃಭಾಷೆಯಾಗಿದೆ. ಈ ಭಾಷಾ ನೀತಿಯಿಂದ ಮಾತ್ರ ಬಹು ಸಂಖ್ಯಾತ ಬಡ ಅನಕ್ಷರಸ್ಥರು ವಿದ್ಯಾವಂತರಾಗಲು ಸಾಧ್ಯ. ಈ ನಿಲುವಿನ ಹಿನ್ನೆಲೆಗಿರುವ ಇನ್ನೊಂದು ಕಾರಣವೆಂದರೆ ಇಂಗ್ಲಿಷಿನ ಮೇಲೆ ಎಷ್ಟೇ ಹಣ ಖರ್ಚು ಮಾಡಿದರೂ, ಅದು ವ್ಯರ್ಥವಾಗಿ ಆ ಭಾಷೆಯನ್ನು ಸರಿಯಾಗಿ ಕಲಿಸಲಾಗುತ್ತಲೇ ಇಲ್ಲ. ಈ ದೋಷಪೂರಿತ ಕಲಿಕೆಯ ಮರುಭೂಮಿಯಲ್ಲಿ ಜನರ ಚಿಂತನೆ, ಗ್ರಹಿಕೆ, ಅಭಿವ್ಯಕ್ತಿ ಸಾಮರ್ಥ್ಯಗಳು ಇಂಗಿಹೋಗುತ್ತಿವೆ. ಒಬ್ಬ ವ್ಯಕ್ತಿಗಿರುವ ಸಾಧ್ಯತೆಗಳು ಪೂರ್ಣವಾಗಿ ವಿಕಾಸಗೊಳ್ಳುತ್ತಿಲ್ಲ. ಇಷ್ಟಾದರೂ ಇಂಗ್ಲಿಷನ್ನು ಮಾಧ್ಯಮಿಕ ತರಗತಿಗಳಿಂದ ಕಾಲೇಜಿನ ತನಕ ಆಧುನಿಕ ವಿಜ್ಞಾನ ಮತ್ತು ಸಂಸ್ಕೃತಿಯ ಕಾರಣದಿಂದಾಗಿ ಕಲಿಸಬಹುದು. ಇದು ಭಾಷಾಂತರಗಳ ದುಬಾರಿ ಖರ್ಚನ್ನು ತಪ್ಪಿಸುತ್ತಿದೆ. +ಇಂಗ್ಲಿಷ್ ಮೋಹ ಏಕೆ? +ಆದರೆ ಈ ನಿಲುವನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಈ ಕಾರ್ಯಕ್ರಮದ ಜಾರಿಗಾಗಿ ಹೋರಾಡುವ ಪ್ರಜಾಸತ್ತಾತ್ಮಕ ಚಳವಳಿಯ ಸ್ವರೂಪ ಹೇಗಿರಬೇಕು? ಈ ಎರಡೂ ಪ್ರಶ್ನೆಗಳಿಗೆ ತಕ್ಷಣ ಉತ್ತರ ಹುಡುಕಬೇಕಾಗಿದೆ. ಏಕೆಂದರೆ ಕನ್ನಡಿಗ ಕನ್ನಡೇತರರಿಬ್ಬರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಕೆಳ ಮಧ್ಯಮವರ್ಗ ಮತ್ತು ಕಾರ್ಮಿಕ ವರ್ಗಗಳಲ್ಲೂ ಹಬ್ಬಿದೆ. ಅತ್ಯಂತ ಸಣ್ಣ ಊರುಗಳಿಗೂ ಈ ಮಾತು ಅನ್ವಯಿಸುತ್ತದೆ. ಇದಕ್ಕೆ ಕನ್ನಡ ಲೇಖಕರು ಕೊಡುವ ಕಾರಣ, ಇಂಗ್ಲಿಷಿಗೆ ಉನ್ನತ ಸಾಮಾಜಿಕ ಅಂತಸ್ತಿದೆ ಎಂದು. ಇದಕ್ಕೆ ಅವರು ಸೂಚಿಸುವ ಪರಿಹಾರ: ಕನ್ನಡಕ್ಕೆ ಹೆಮ್ಮೆಯ ಸ್ಥಾನ ನೀಡುವುದರಿಂದ, ಅಂದರೆ ರಾಜ್ಯ ಭಾಷೆ ಮಾಡುವುದರಿಂದ, ಕನ್ನಡವೊಂದನ್ನು ೧೫೦ ಅಂಕಗಳ ಪ್ರಥಮ ಭಾಷೆಯನ್ನಾಗಿ ಮಾಡುವುದರಿಂದ, ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ವಿಧಾನಗಳಿಂದ (ಗೋಕಾಕ್ ಚಳವಳಿ) ಕನ್ನಡಿಗರನ್ನು ಕನ್ನಡದ ಕಡೆಗೆ ಆಕರ್ಷಿಸಬಹುದು. ಇದರ ಜೊತೆಗೆ ಕನ್ನಡೇತರ ಭಾಷಿಕರನ್ನೂ ಕೂಡಾ ಇಂಗ್ಲಿಷ್‌ನಿಂದ ದೂರ ಸರಿಸಬಹುದು. ಈ ನಿಲುವಿನಲ್ಲಿ ಸತ್ಯಾಂಶವಿದೆ. +ಇಂಗ್ಲಿಷ್ ಭಾಷಿಕರು ಯಾವಾಗಲೂ ಪ್ರೋತ್ಸಾಹಿಸುವುದು ತಮ್ಮಂಥಹ ಜನಗಳನ್ನು ಮಾತ್ರ, ಮತ್ತು ಬೇರೆಯವರ ಬಗೆಗೆ ಅದು ಪೂರ್ವಾಗ್ರಹಗಳನ್ನು ಹೊಂದಿರುತ್ತದೆ. ಆದರೆ, ಇಂಗ್ಲಿಷ್ ಕಲಿಯಲು ನಡೆಯುತ್ತಿರುವ ಈ ತೀವ್ರಸ್ಪರ್ಧೆಯ ಹಿಂದೆ ಇರುವ ಇನ್ನೊಂದು ಕಾರಣವನ್ನು ಕನ್ನಡ ಲೇಖಕರು ಗಮನಿಸಿಲ್ಲ. ಅದು ನಿರುದ್ಯೋಗ, ಭವಿಷ್ಯದ ಬಗೆಗಿನ ಆತಂಕ. (ಸ್ವತಃ ಗೋಕಾಕ್ ಚಳವಳಿಗೆ ದೊರೆತ ಬೆಂಬಲದ ಹಿಂದಿನ ಮುಖ್ಯ ಕಾರಣ ಇದು). ಇಂಗ್ಲಿಷ್ ಕಲಿತ ಒಬ್ಬ ವ್ಯಕ್ತಿಗೆ ಬರೀ ಭಾರತದಲ್ಲಷ್ಟೇ ಅಲ್ಲ, ಅರಬ್ ದೇಶಗಳು ಮುಂತಾದ ಮೂರನೇ ಜಗತ್ತಿನ ಇತರ ದೇಶಗಳಲ್ಲೂ ಆತನಿಗೆ ಕೆಲಸ ಸಿಕ್ಕುವ ಸಾಧ್ಯತೆಗಳಿವೆ. ಅವನಿಗೆ ಅದೃಷ್ಟವಿದ್ದರೆ, ಪ್ರತಿಭೆಯಿದ್ದರೆ ಯುರೋಪ್, ಅಮೆರಿಕಾ, ಆಸ್ಟ್ರೇಲಿಯಗಳಲ್ಲೂ ಕೆಲಸ ಸಿಗಬಹುದು. ಜೊತೆಗೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿಯ ಶಿಕ್ಷಣದ ಗುಣಮಟ್ಟ ತೀರಾ ಕಡಿಮೆ. ಈ ಸಮಸ್ಯೆಗಳನ್ನು ಎದುರಿಸಲು ಚಳವಳಿ ನೇತಾರರಿಗೆ ಹೊಳೆದ ಮಾರ್ಗವೆಂದರೆ ಬಲವಂತದ ಕನ್ನಡ ಹೇರಿಕೆ. ಕನ್ನಡವನ್ನು ಎಲ್ಲರಿಗೂ ಕಡ್ಡಾಯ ವಿಷಯವನ್ನಾಗಿ ಮಾಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯ ಹಾಕಿದರು. ನಂತರ ನೂರಕ್ಕೂ ಹೆಚ್ಚು ಅಂಕಗಳನ್ನಿಟ್ಟು, ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಬೇಕೆಂದು ಹೇಳಿದರು. ಒಂದು ಪಕ್ಷ ಎಲ್ಲಾ ಮಾತೃಭಾಷೆಗಳಿಗೂ ಪ್ರಥಮ ಭಾಷೆಯ ಸ್ಥಾನ ಇರಬೇಕು ಎನ್ನುವುದಾದರೆ, ಇಂಗ್ಲಿಷ್ ಮಾತೃಭಾಷೆಯಲ್ಲದವರು ಅದನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಳ್ಳಲು ಅವಕಾಶವಿರಕೂಡದು ಎಂದರು. ಮಾತೃಭಾಷೆ ಇಂಗ್ಲಿಷ್ ಅಲ್ಲದವರಿಗೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಶಾಲೆಗಳನ್ನು ತೆರೆಯಲು ಅವಕಾಶ ಕೊಡಕೂಡದು ಎಂದು ಒತ್ತಾಯಿಸಿದರು. ಈ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಮತಗಳು ಸಾಕಷ್ಟು ಪ್ರಮುಖಸ್ಥಾನ ವಹಿಸುತ್ತವೆಯಾದ್ದರಿಂದ, ಜನಪ್ರಿಯವಲ್ಲದ ಈ ಸೂಚನೆಯನ್ನು ರಾಜಕಾರಣಿಗಳು ಒಪ್ಪಿಕೊಳ್ಳುವುದಿಲ್ಲ. ಆದರೆ, ಇದರ ನಿಜವಾದ ಅಪಾಯವಿರುವುದು ಈ ಸಲಹೆಯ ಎಲೀಟಿಸ್ಟ್ ಸ್ವರೂಪದಲ್ಲಿ. ಪ್ರೊ|| ಅನಂತಮೂರ್ತಿಯವರು ನೀಡಿರುವ ಇಂಥದೇ ಇನ್ನೊಂದು ಎಲೀಟಿಸ್ಟ್ ಸಲಹೆಯನ್ನು ಇಲ್ಲಿ ಪರೀಕ್ಷಿಸಬೇಕಾಗಿದೆ. ಹತ್ತನೆಯ ತರಗತಿಯಲ್ಲಿ ಮಾತ್ರ ಇಂಗ್ಲಿಷನ್ನು ನಾಲ್ಕನೆ ಭಾಷೆಯನ್ನಾಗಿ ಬೋಧಿಸಬೇಕೆಂದು ಅನಂತಮೂರ್ತಿಯವರು ಸಲಹೆ ನೀಡಿದ್ದಾರೆ. ವಿದೇಶ ಭಾಷೆಯನ್ನಾಗಿ ಇದನ್ನು ಒಂದು ವರ್ಷದಲ್ಲಿ ಚೆನ್ನಾಗಿ ಕಲಿಯಲು ಸಾಧ್ಯ ಎಂದು ಅವರ ವಾದ. ಆದರೆ, ಇದು ಕೂಡಾ ಜನರನ್ನು ಇಂಗ್ಲಿಷ್ ಕಲಿಕೆಯಿಂದ ದೂರವಿಡುವ ತಂತ್ರ. ಜನರಿಗೆ ಇಂಗ್ಲಿಷು ಬೇಕಿಲ್ಲ ಎಂಬ ನಿಲುವು ಇಲ್ಲಿಯದು. ಅನಂತಮೂರ್ತಿ ಮುಂದುವರೆದು ಇಂಗ್ಲಿಷ್ ಕನ್ನಡವನ್ನು ಕೊಲ್ಲಬಲ್ಲದು ಎಂದು ಹೇಳುವ ಮಾತಂತೂ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಉಳಿದ ಕನ್ನಡ ಸಾಹಿತಿಗಳ ಹಾಗೆ ಅನಂತಮೂರ್ತಿಯವರಲ್ಲೂ ಬೆದರಿಕೆಯ ಪ್ರಜ್ಞೆ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಈ ರೀತಿಯ ಇಂಗ್ಲಿಷ್ ವಿರೋಧಿ ಧೋರಣೆ ಬಂಗಾಳ, ತಮಿಳುನಾಡು, ಕೇರಳದ ಬುದ್ಧಿಜೀವಿಗಳಲ್ಲಿ ಅಷ್ಟು ವ್ಯಾಪಕವಾಗಿ ಇಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅಲ್ಲೂ ಕೂಡಾ ಸ್ವಭಾಷಾಭಿಮಾನ ಮತ್ತು ಸಾಹಿತ್ಯಭಿವೃದ್ಧಿ ಇದೇ ಮಟ್ಟದಲ್ಲಿದ್ದೂ ಆ ನಿಲುವು ಅಲ್ಲಿ ಹಬ್ಬಿಲ್ಲ. ಇಂಗ್ಲಿಷ್ ಅವರಿಗೆ ಮುಖ್ಯ ಬೆದರಿಕೆಯಂತೆ ಕಂಡಿಲ್ಲದಿರುವುದಕ್ಕೆ ಕಾರಣ ಹೆಚ್ಚಿನ ಸಾಂಸ್ಕೃತಿಕ ಅಭಿವೃದ್ಧಿಯಿಂದಾಗಿ ಉಂಟಾಗಿರುವ ಗಾಢ ಆತ್ಮವಿಶ್ವಾಸವಿರಬಹುದು. ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಕನ್ನಡ ಲೇಖಕರಿಗೂ ಈ ಬೆದರಿಕೆ ತಟ್ಟದಿರುವುದಕ್ಕೆ ಇದೇ ಕಾರಣವಿರಬಹುದು. ಏನೇ ಆಗಲಿ, ಕನ್ನಡ ಲೇಖಕರ ಈ ತಾತ್ವಿಕತೆ ಜನರನ್ನು ಸಮಾನವಾಗಿ ಕಂಡು, ಸಂವಾದ ಮತ್ತು ಮುಕ್ತ ಚರ್ಚೆಗಳಿಂದ ಒಲಿಸಿಕೊಳ್ಳಲು ಯತ್ನಿಸುವುದಿಲ್ಲ. ತಮಗೆ ಸರಿ ಅನ್ನಿಸಿದ್ದನ್ನು ಜನತೆ ಕೂಡಾ ಅನುಸರಿಸಬೇಕೆಂದು ಅವರು ಒತ್ತಾಯಿಸಲು ಬಯಸುತ್ತಾರೆ. +ಪ್ರತಿಭಟನೆ ಅನಿವಾರ್ಯ +ಆದರೆ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿಯೊಂದು ಜನತೆಯ ಕಡೆಗೆ ಮುಖ ಮಾಡುತ್ತದೆ; ಅವರೊದಿಗೆ ಸಂವಾದ ನಡೆಸುತ್ತದೆ. ಪರ್‍ಯಾಯ ಸಾಂಸ್ಕೃತಿಕ ಸಂಸ್ಥೆಗಳ ಸುತ್ತ-ಗ್ರಂಥಾಲಯ, ಚರ್ಚಾ ಗೋಷ್ಠಿ-ಜನರನ್ನು ಸಂಘಟಿಸಲು ಯತ್ನಿಸುತ್ತದೆ. ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾಷೆಗಳ ಮೂಲಕ ಶಾಲಾ ಕಾಲೇಜುಗಳಲ್ಲಿ ತನ್ನ ಕಾರ್‍ಯಕ್ರಮಗಳನ್ನು ನಡೆಸುತ್ತದೆ. ಬಹುಸಂಖ್ಯಾತ ಅನಕ್ಷರಸ್ಥ ಜನತೆಗಾಗಿ ಅಕ್ಷರ ಚಳವಳಿಯೊಂದನ್ನು ಸಂಘಟಿಸುತ್ತದೆ. ರಾಜ್ಯಭಾಷೆ, ಆಡಳಿತ ಭಾಷೆಗಳಾಗಿ ಪ್ರಾಂತೀಯ ಭಾಷೆ ಅಥವಾ ಭಾಷೆಗಳು ಇರಬೇಕೆಂದು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತದೆ. ಇಂಗ್ಲಿಷ್ ಮಾತನಾಡುವ ನವವಸಾಹತುಶಾಹೀ ಪ್ರತಿಷ್ಟಿತ ವರ್ಗಗಳ ಸಾಂಸ್ಕೃತಿಕ ಮೌಲ್ಯಗಳ ಮತ್ತು ಪೂರ್ವಾಗ್ರಹಗಳ ವಿರುದ್ಧದ ಹೋರಾಟವೂ ಈ ಬೃಹತ್ ಆಂದೋಲನದ ಒಂದು ಭಾಗ. ಆದರೆ, ಕನ್ನಡ ಸಾಹಿತ್ಯಕ ಬುದ್ಧಿಜೀವಿವರ್ಗದಲ್ಲೂ ಕಾಣುವ ನಿಯೊಕಲೋನಿಯಲ್ ತಾತ್ವಿಕತೆಯ ವಿರುದ್ಧವೂ ಹೋರಾಡುವ ಅಗತ್ಯವಿದೆ. ಯಾವುದೇ ಪ್ರಾಂತೀಯ ಭೌಗೋಳಿಕ ಪರಂಪರೆ, ಸಂಸ್ಕೃತಿಯಲ್ಲಿ ಕಾಣುವ ಈ ಅಂಶಗಳ ವಿರುದ್ಧ ಪ್ರತಿಭಟಿಸುವುದು ಅನಿವಾರ್‍ಯ. +ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿಯ ಸರ್‍ವಾಧಿಕಾರೀ ಧೋರಣೆ, ಅಸಮಾನತೆ, ಜಾತೀಯ ಅಂಶಗಳ ವಿರುದ್ಧ ಈ ಕಾರ್‍ಯಕ್ರಮ ಹೋರಾಡುತ್ತದೆ. ಆದರೆ, ಅಲ್ಲಿಯ ಮಾನವೀಯ ಅಂಶಗಳನ್ನು ಉಳಿಸಿಕೊಳ್ಳುತ್ತದೆ. ಆಧುನಿಕ ಬಂಡವಾಳಶಾಹೀ ಸಮಾಜದ ಸಿನಿಕ, ವ್ಯಾಪಾರೀ ಸ್ಪರ್ಧಾತ್ಮಕ, ಹೃದಯಹೀನ ಸ್ವರೂಪವನ್ನು ಪ್ರತಿಭಟಿಸುತ್ತದೆ. ಬಂಡವಾಳಶಾಹಿತನ ನಮ್ಮ ಸಮಾಜ, ಸಂಸ್ಕೃತಿಯ ಬಗೆಗೆ ಹೊಂದಿರುವ ತಿರಸ್ಕಾರ, ಹೊಲಸು ಕಲ್ಪನೆಗಳನ್ನು ಧಿಕ್ಕರಿಸುತ್ತದೆ. ಆದರೆ ಆ ಸಮಾಜದ ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ, ಸಮಾನತೆ, ವಿಜ್ಞಾನ, ಸಂಸ್ಕೃತಿಗಳನ್ನು ಮತ್ತು ಹಳೆಯ ಸಂಸ್ಕೃತಿಯ ಮಾನವೀಯ ಅಂಶಗಳನ್ನು ಹೊಸ ಮಾನವೀಯ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಮೇಳೈಸಿಕೊಳ್ಳುತ್ತದೆ. +ಈ ರೀತಿಯ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿ ಕರ್ನಾಟಕ ಸಂಸ್ಕೃತಿಯ ಅನನ್ಯತೆ ಮತ್ತು ವೈಶಿಷ್ಟ್ಯಗಳನ್ನು ಕಾಪಾಡುತ್ತದೆ. ಕರ್ನಾಟಕದೊಳಗೇ ಇರುವ ವಿವಿಧ ಭಾಷಿಕ ಪ್ರಾದೇಶಿಕ, ಸಾಮಾಜಿಕ ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ಉಳಿಸುತ್ತದೆ. ಇದು ಯಾವುದೇ ರೀತಿಯ ಕೃತಕ ರಾಷ್ಟ್ರೀಯ ಅಥವಾ ಅಂತರ ರಾಷ್ಟ್ರೀಯ ಚೈತನ್ಯ ಸೃಷ್ಟಿಗೆ ವಿರೋಧಿಯಾಗಿದ್ದು, ಅಖಿಲ ಭಾರತೀಯ ಮತ್ತು ಕರ್ನಾಟಕದ ಹಂತದಲ್ಲಿ ವಿಶ್ವಾತ್ಮಕ ಸತ್ವವನ್ನು ಉಳ್ಳದ್ದಾಗಿರುತ್ತದೆ.ಯಾವುದೇ ರೀತಿಯ ರಾಷ್ಟ್ರೀಯ, ಭಾಷಿಕ, ಸಾಮಾಜಿಕ, ಧಾರ್ಮಿಕ ಯಜಮಾನಿಕೆಯ ಹೇರಿಕೆ ವಿರುದ್ಧ ಉಗ್ರವಾಗಿ ಹೋರಾಡುತ್ತದೆ. ಯಾರೂ ಯಾರ ಮೇಲೂ ಮೇಲಿನ ಅಧಿಪತ್ಯಗಳನ್ನು ಹೇರಲು ಸಾಧ್ಯವಿರದಂಥ ವಾತಾವರಣದ ಸೃಷ್ಟಿಗಾಗಿ ಶ್ರಮಿಸುತ್ತದೆ. ತನ್ನ ಸ್ವಂತಿಕೆಯನ್ನು, ವ್ಯಕ್ತಿ ವಿಶಿಷ್ಟತೆಗಳನ್ನು ಕಳೆದುಕೊಳ್ಳದೆ ಎಲ್ಲ ದಿಕ್ಕುಗಳಿಂದ ಸಂಸ್ಕೃತಿ ಹರಿದು ಬರಲು ಅವಕಾಶ ನೀಡುತ್ತದೆ. ಉಳಿದ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಸಂಸ್ಕೃತಿಗಳ ಜೊತೆಗೆ ತನ್ನದೇ ಆದ ಪರಿಭಾಷೆಯ ಮೂಲಕ, ತನ್ನ ಪರಂಪರೆ, ಅನುಭವಗಳಿಂದ ರೂಪುಗೊಂಡ ನುಡಿಗಟ್ಟಿನ ಮೂಲಕ ಸಂವಾದ ನಡೆಸುತ್ತದೆ. +ರಾಜ್ಯ ಮತ್ತು ರಾಷ್ಟ್ರಗಳ ಹಂತದಲ್ಲಿ ಬಹು ಭಾಷಾನೀತಿಯ ಅಸ್ತಿತ್ವಕ್ಕಾಗಿ ಹೋರಾಡುವುದು ಈ ಪ್ರಜಾಸತ್ತಾತ್ಮಕ ಕಾರ್‍ಯಕ್ರಮದ ಒಂದು ಅಂಗ. ರಾಜಕಾರಣ ಮತ್ತು ಸಾಂಸ್ಕೃತಿಕ ಬದುಕು ಎರಡರಲ್ಲೂ ಈ ಬಹುಭಾಷಾಮಯತೆ ಸಾಧ್ಯವಾಗಬೇಕು. ಏಕಕಾಲದಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ಮತ್ತು ಎಲ್ಲ ಅಲ್ಪಸಂಖ್ಯಾತ ಭಾಷೆ, ಸಂಸ್ಕೃತಿಗಳ ಅಭಿವೃದ್ಧಿಗೆ ಹೋರಾಡುವುದಕ್ಕೆ ಈ ಕಾರ್‍ಯಕ್ರಮ ಪಣತೊಡುತ್ತದೆ. ಶಾಲಾ ಹಂತದಲ್ಲಿ ಕನ್ನಡ ಮತ್ತು ಅಥವಾ ಯಾವುದೇ ಪ್ರಾಂತೀಯ ಭಾಷೆಗಳನ್ನು ಕಡ್ಡಾಯವಾಗಿಡಕೂಡದು. ಸಂಸ್ಕೃತಕ್ಕೆ ಮೂರು ಭಾಷೆಗಳ ಪಟ್ಟಿಯಲ್ಲೆಲ್ಲೂ ಸ್ಥಾನ ನೀಡಕೂಡದು. ಮನುಷ್ಯ ತನ್ನ ಉಪಯೋಗಕ್ಕಾಗಿ ಭಾಷೆಯನ್ನು ಸೃಷ್ಟಿಸಿದ. ಆದ್ದರಿಂದ, ಇಲ್ಲಿ ಭಾಷೆಯ ಮಾನವೀಯ ಮತ್ತು ಸಾಮಾಜಿಕ ಆಯಾಮದ ಕಡೆಗೇ ಮಹತ್ವದ ಒತ್ತು. ಭಾಷೆ ಎಂಬುದು ಜೀವಂತ ವ್ಯಕ್ತಿ ಅಲ್ಲ. ಭೂಮಿ, ಪ್ರಭುತ್ವ, ದೇವತೆ ಯಾವುದೂ ಅಲ್ಲ. ಅದು ಮನುಷ್ಯನಿಗಿಂತ ಎತ್ತರದಲ್ಲಿರುವ, ಅವನಿಂದ ಸೇವೆ ಪಡೆಯುವ ಶಕ್ತಿ ಅಲ್ಲ. +ಕಡೆಯದಾಗಿ, ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾರೆ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಗಳ ಜೊತೆಗೆ ಹೊಂದಿಸಿ, ಸಾಂಪ್ರದಾಯಿಕ ಏಕತಾವಾದದ ಎಲ್ಲ ರೀತಿಯ, ಎಲ್ಲ ರೂಪಗಳ ಬೇರುಗಳನ್ನು ನಾಶ ಮಾಡಲು ಈ ಚಳವಳಿ ಹೋರಾಡುತ್ತದೆ. ಅಂದರೆ ಇದರರ್ಥ- ಈ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಚಳವಳಿ ಇಡೀ ವ್ಯವಸ್ಥೆಯನ್ನು ಬದಲಾಯಿಸಲು ಹೋರಾಡುವ ರಾಜಕೀಯ ಸಂಘಟನೆಯ ಚಳವಳಿಯ ಒಂದು ಭಾಗವಾಗಬೇಕು. +ಈ ಶೋಷಣಾತ್ಮಕ ಸಮಾಜವನ್ನು ಕಿತ್ತೆಸೆದು, ಹೊಸ ಪ್ರಜಾಸತ್ತಾತ್ಮಕ ಸಮಾಜವಾದೀ ಸಮಾಜವನ್ನು ತರುವಲ್ಲಿನ ಆ ಮಹಾನ್ ಬದಲಾವಣೆಯಲ್ಲಿ ಈ ಸಾಂಸ್ಕೃತಿಕ ಹೋರಾಟ ಕೂಡಾ ತನ್ನ ಕಾಣಿಕೆಯನ್ನು ಅರ್ಪಿಸುತ್ತದೆ. +***** +ಕೃಪೆ: ಪ್ರಜಾವಾಣಿ +ಕೀಲಿಕರಣ: ಸೀತಾಶೇಖರ್, ನಂದಿನಿ ಶೇಖರ್, ರೋಹಿತ್, ಶ್ರೀನಿವಾಸ್, ಶೀಲಾ ಸತೀಷ್, ಶ್ರೀನಿವಾಸ್ +ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […] +ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_740.txt b/Kannada Sahitya/article_740.txt new file mode 100644 index 0000000000000000000000000000000000000000..201f45fefcf9937ce2a5102af7c67119e868bba5 --- /dev/null +++ b/Kannada Sahitya/article_740.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೊದಲೊಂದು ಪಂಜರ ಬರಿ +ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. +ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ +ಏನನ್ನೋ ಪಂಜರದಲ್ಲಿ ಬಿಡಿಸು +ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. +ಮರದ ಹಿಂದೆ ಅಡಗಿಕೊ +ಅಲುಗಾಡಬೇಡ +ಸುಮ್ಮನೆ ಎಂದರೆ ಸುಮ್ಮನೆ ಇರು +ಕೆಲವೊಮ್ಮೆ ಪಕ್ಷಿ ಕೂಡಲೇ ಹಾಜರಾಗುವುದುಂಟು +ಅಥವಾ ಅದು ಆಗಮಿಸಲು ಬಹಳ ಕಾಲ ಕಾಯಬೇಕಾಗಬಹುದು +ಪಕ್ಷಿಗೂ ಮನಸ್ಸಾಗಬೇಕಲ್ಲ? +ಪಕ್ಷಿ ಬೇಗೆ ಬರೋದು, ತಡವಾಗಿ ಬರೋದು +ನಿನ್ನ ಚಿತ್ರದ ಯಶಸ್ಸಿಗೆ ಸಂಬಂಧಿಸಿದ್ದಲ್ಲ +ಪಕ್ಷಿ ಬರುವುದಾದರೆ +ಬಂದಾಗ! +ಮೌನವಾಗಿರು +ಅದು ಪಂಜರದ ಒಳಹೋಗುವ ತನಕ +ಆತುರಪಡದಂತೆ ಕಾದಿರು +ಹೊಕ್ಕ ಮೇಲೆ ಬ್ರಷ್‌ನಿಂದ ಒಂದೇ ಒಂದು ಗೆರೆ ಎಳೆದು +ಪಂಜರದ ಬಾಗಿಲನ್ನು ಮೃದುವಾಗಿ ಮುಚ್ಚು +ಆಮೇಲೆ ಪಂಜರದ ಸರಳುಗಳನ್ನು ಒಂದೊಂದಾಗಿ ಬಿಡಿಸು +ಬಿಡಿಸುವಾಗ ಪಕ್ಷಿಯ ಪುಕ್ಕ ಮುಟ್ಟದಂತೆ ಹುಷಾರಾಗಿರು +ಆಮೇಲೆ ಮರದ ಚಿತ್ರ ಬರಿ +ಅದರ ಅತ್ಯಂತ ಸುಂದರ ಕೊಂಬೆಯೊಂದನ್ನು ನಿನ್ನ ಪಕ್ಷಿಗಾಗಿ ಬಿಡಿಸು +ಹಸಿರಾದ ಎಲೆಗಳನ್ನು, ತಾಜಾಗಾಳಿಯನ್ನು, ಬಿರುಬಿಸಿಲಿನಲ್ಲಿ ಮಿನುಗುವ ಧೂಳನ್ನು +ಬಿಸಿಲಿನ ಬೇಗೆಯಿಂದಾಗಿ ಹುಲ್ಲಲ್ಲಿ ಅಡಗಿದ ಕೀಟಗಳ ಸದ್ದನ್ನು +ಆಮೇಲೆ ಬಿಡಿಸು +ಪಕ್ಷಿ ತನ್ನಷ್ಟಕ್ಕೆ ಹಾಡಿಕೊಳ್ಳುವುದನ್ನು ಆಲಿಸು +***** +(೮೦ರ ದಶಕದಲ್ಲಿ ಹಲವು ಐರೋಪ್ಯ ಕವಿಗಳನ್ನು ಓದುತ್ತಿದ್ದಾಗ ಗೀಚಿಕೊಂಡಿದ್ದ ಈ ಸಾಲುಗಳಿಗೆ ಪ್ರೇರಣೆ ಕೊಟ್ಟ ಕವಿಯ ಹೆಸರನ್ನು ಮರೆತಿದ್ದೇನೆ). +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […] +ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […] +ಸುರಗಿ ಹೂವಿನ ಕಂಪು ಮಳೆ ಮಣ್ಣಿನ ಕಂಪು ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು ಎಲ್ಲಿಂದ ಸುಳಿದಿತ್ತು ಈ ಕೆಂಪು, ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು. ಘಳಿಗೆಗೊಂದೊಂದು ವಾಸನೆ ಎಂದೋ ಎಲ್ಲೋ ಆಗಿದ್ದು ತಟ್ಟನೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_741.txt b/Kannada Sahitya/article_741.txt new file mode 100644 index 0000000000000000000000000000000000000000..9d8cc3240e418dc18eb616515ca6686941a59b4c --- /dev/null +++ b/Kannada Sahitya/article_741.txt @@ -0,0 +1,36 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು +ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು +ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು +ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು +ಕಣ್ಣ ದೃಷ್ಟಿಯ ಸಿಂಹ ಕಾವಲ ನಾಯಿಗೆ ಹೆದರದೆ ಮತ್ತೆ ರಕ್ತ ಹೀರಿತು +ನದಿಯ ನೀರು ಹರಿದು ದಡದ ಹುಲ್ಲು ಮತ್ತೆ ಚಿಗುರಿತು +ನಂದನದಲ್ಲಿ ಬೆಳಗಿನ ತಂಗಾಳಿ ಎಲ್ಲ ಕಡೆಗೆ +ಗುಲಾಬಿ ಮಲ್ಲಿಗೆ ಮಂದಾರಗಳ ಮೇಲೆ ಮತ್ತೆ ಬೀಸಿತು +ಚಿಕ್ಕ ತಪ್ಪಿಗಾಗಿ ಪ್ರೇಮ ನನ್ನನ್ನು ಹರಾಜು ಹಾಕಿತು +ಪ್ರೇಮದ ಹೃದಯ ಹೊತ್ತಿ ಉರಿದು ಮತ್ತೆ ನನ್ನನ್ನ ಕೊಂಡಿತು +ಮೊದಲು ನನ್ನ ಹೊರದಬ್ಬಿಯಾಗಿತ್ತು, ಉಕ್ಕಿ ಕರುಣೆ +ಮತ್ತೆ ಕರೆದೂ ಆಯ್ತು, ಪ್ರೀತಿಗೀಗ ದಯಾರ್ದ್ರ ನೋಟ +ಪ್ರೇಮಿಯ ಜತೆ ಮತ್ತೆ ನನ್ನ ಮಿಲನ, ಆಗದವರಿಗೆ ಅಸೂಯೆ +ಮತ್ತೆ ಕತ್ತಿ ಮಸೆತ, ಶತ್ರುತ್ವದ ಛಾಯೆ +ಅದೃಷ್ಟದ ಮೋಸದಾಟದಿಂದ ನನ್ನ ಹೃದಯ ಪರಾರಿ +ನನ್ನ ಹೃದಯಕ್ಕೀಗ ಮತ್ತೆ ಸಿಕ್ಕಿತು ಪ್ರೀತಿಯ ದಾರಿ +ಕಥೆ ಕಟ್ಟುವ ಮಂದಿಯ ಕಣ್ಣ ಹುಬ್ಬು ಮತ್ತೆ ಕೊಂಕು +ಮತ್ತೆ ನನಗೆ ಪ್ರಣಯದಾಹ್ವಾನ, ಹೃದಯವೀಗ ಸೃಷ್ಟಿಯಿಂದಲೆ ಪಲಾಯನ +ಜೀವಿಗಳು ಊರುಗೋಲಂತೆ, ದೃಷ್ಟಿ ಬಂದರೆ ಮತ್ತೇಕೆ ಕೋಲು? +ಜೀವಿಗಳು ಹಾಲಂತೆ, ಅನ್ನ ಅರಗಿದ ಮೇಲೆ ಮತ್ತೇಕೆ ಹಾಲು? +ನನ್ನ ಚೈತನ್ಯವೀಗ ಗರಿಗೆದರಿದ ಹದ್ದು, ದೊರೆಯ ದಮಡೀನಾದ ಕೇಳು +ಶ್, ಸಾಕು, ಶಬ್ದ ನಿನ್ನ ಸುತ್ತ ಮಾತಿನ ಮುಸುಕು ನೇಯುತ್ತಿದೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_742.txt b/Kannada Sahitya/article_742.txt new file mode 100644 index 0000000000000000000000000000000000000000..c4326d36896729dab87a6ca32e1be788a3232dac --- /dev/null +++ b/Kannada Sahitya/article_742.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ ಜುಲೈ ೪ ಹಾಗೂ ೫ ರಂದು ವೀರಶೈವ ಸಮಾಜ ಉತ್ತರ ಅಮೇರಿಕಾದವರ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಬರಲು ಆಹ್ವಾನವನ್ನು ಕೊಟ್ಟರು. ಕಾಲೇಜಿನ ದಿನಗಳ ಗೆಳೆಯ ಶ್ರೀ ಶಂಕರಶೆಟ್ಟಿಯವರು ಶ್ರೀ ಬಾಬು ಮೆಟ್‌ಗುಡ್‌ರವರ ಮೂಲಕ ಬರಲು ಒತ್ತಾಯಿಸಿದ್ದರು. +ಆಹ್ವಾನವೇನೋ ಬಂದಾಗಿತ್ತು. ಆದರೆ ಜೂನ್ ತಿಂಗಳಲ್ಲಿ ನಮ್ಮ ಉಪಮುಖ್ಯಮಂತ್ರಿಗ ಶ್ರೀ ಸಿದ್ಧರಾಮಯ್ಯನವರು, ಮುಖ್ಯಮಂತ್ರಿಗಳಾದ ಶ್ರೀ ಜೆ.ಹೆಚ್. ಪಟೇಲ್‌ರವರು, ಅಮೇರಿಕಾ ದೇಶಕ್ಕೆ ಅಧಿಕೃತ ಭೇಟಿ ಕೊಟ್ಟಿದ್ದರು. ಪತ್ರಿಕೆಗಳಲ್ಲಿ ವಿದೇಶಿ ಪ್ರವಾಸದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದಿದ್ದವು. ಇದರೊಂದಿಗೆ, ನಮ್ಮ ಜನತಾದಳದ ಮುಗಿಯದ ಒಳಜಗಳ, ಒಂದು ರಾಜಕೀಯ ಪಕ್ಷ ತನ್ನ ಮರ್ಯಾದೆಯನ್ನು, ಎಷ್ಟು ಹಾಳು ಮಾಡಿಕೊಳ್ಳಬಹುದೋ ಅಷ್ಟನ್ನೂ ಶ್ರೀ ಶರದ್ ಯಾದವ್ ಮಾಡುತ್ತಿದ್ದರು. ಯಾದವೀ ಕಲಹದಿಂದ, ಎಲ್ಲರ ನೆಮ್ಮದಿ ಹಾಳಾಗಿತ್ತು. ಪಕ್ಷ ಹರಿದು ಹಂಚಿ ಹೋಗುವ ಸ್ಥಿತಿ ತಲುಪಿತ್ತು. ಕಾರ್ಯಕರ್ತರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಸಮಯದಲ್ಲಿ ಸುಮಾರು ಮೂರು ವಾರಗಳ ಕಾಲ ದೇಶಬಿಟ್ಟು ಹೋಗುವುದು ಎಷ್ಟು ಸಮಂಜಸವೆಂದು ಆತಂಕಕ್ಕೆ ಒಳಗಾಗಿದ್ದೆ. ಮಕ್ಕಳ ಹಾಗೂ ಅಳಿಯಂದಿರ ಒತ್ತಡ ಹಾಗೂ ದಿನ ಬಿಟ್ಟು ದಿನ ಪ್ರೀತಿಯಿಂದ ಕರೆಯುತ್ತಿದ್ದ ಶ್ರೀ ಬಾಬು ರವರ ಆಹ್ವಾನ, ಹೊರಡುವುದಕ್ಕಿಂತ ಮುಂಚೆ-ಕೇವಲ ಕೆಲವೇ ದಿನಗಳಿಗಿಂತ ಮುಂಚೆ-ಹೊರಡಲು ನಿರ್ಧರಿಸಲು ಪ್ರೇರಕವಾಯಿತು. +ಇಷ್ಟೆಲ್ಲಾ ಪುರಾಣ ಒಂದು ಪೀಠಿಕೆ ಮಾತ್ರ. ನನ್ನ ಈ ಭೇಟಿ ಎಷ್ಟು ಖಾಸಗಿಯಾಗಿಡಬೇಕೆಂದು ಬಯಸಿದರೂ ಸಾಧ್ಯವಾಗಲಿಲ್ಲ. ನೂರಾರು ಅಭಿಮಾನಿಗಳು ಸದಾಶಯದ ಸುಖ ಪ್ರಯಾಣ ಕೋರಿದರು. ಮಾನ್ಯ ಮುಖ್ಯಮಂತ್ರಿಗಳು, ಹೋಗಿಬರಲು ಒಪ್ಪಿಗೆ ಕೊಡುತ್ತಾ ಪ್ರಯಾಣದ ವಿವರ ಹಾಗೂ ಏರ್ಪಾಡಿನ ಬಗ್ಗೆ ಕೇಳಿದರು. ಒಟ್ಟಿನಲ್ಲಿ ಎಲ್ಲರ ಶುಭಾಶಯ ಹೊತ್ತು ೩೦ ಜೂನ್/೧ಜುಲೈ ರಾತ್ರಿ ೨.೩೦ಘಂಟೆಗೆ ಏರ್ ಇಂಡಿಯಾದ ವಿಮಾನವನ್ನು ನಾನು, ನನ್ನ ಹೆಂಡತಿ ಏರಿಯೇಬಿಟ್ಟೆವು. ಮುಂಬೈನಲ್ಲಿ ವಿಮಾನ ಬದಲಿಸಬೇಕು. ಏರ್ ಇಂಡಿಯಾದ ಅಧಿಕಾರಿಗಳು ಎಕ್ಸಿಕ್ಯುಟಿವ್ ಕ್ಲಾಸಿನಲ್ಲಿ ನನ್ನನ್ನು ಮಾತ್ರ ಒಂದನೇ ತರಗತಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಹೆಂಡತಿ ಜೊತೆಗೆ ಹೊರಟಿರುವುದು ಗೊತ್ತಿದ್ದು, ಒಬ್ಬರಿಗೆ ಮಾತ್ರ ಸೌಜನ್ಯದ ಅನುಕೂಲವನ್ನು ನಾನು ನಿರಾಕರಿಸಿದೆ. ಆಶ್ಚರ್ಯದ ಸಂಗತಿಯೆಂದರೆ ನಮ್ಮ ವಿಮಾನಯಾನದ ಸಂಸ್ಥೆಯವರು ನಮ್ಮಿಬ್ಬರಿಗೆ ಲಂಡನ್‌ನಿಂದ, ನ್ಯೂಯಾರ್ಕ್‌ಗೆ ಪ್ರಯಾಣಿಸುವಾಗ ಮೇಲ್ದರ್ಜೆಗೆ ಏರಿಸಿ, ಹೆಚ್ಚಿನ ಸೌಕರ್ಯವನ್ನು ಕಲ್ಪಿಸಿಕೊಟ್ಟರು. +ಸುಮಾರು ೨೪ ತಾಸುಗಳಷ್ಟರ ಪ್ರಯಾಣ ನಮ್ಮನ್ನೇನು ಸುಸ್ತು ಮಾಡಲಿಲ್ಲ. ಸುಮಾರು ೮೦೦೦ ಕಿ.ಮೀಟರಿನಷ್ಟು ಅಂತರವನ್ನು ಸಕಲ ಸೌಲಭ್ಯಗಳೊಂದಿಗೆ ಸುಮಾರು ೩೦ ಸಾವಿರ ಅಡಿಗಳಿಗಿಂತ ಹೆಚ್ಚಿನೆತ್ತರದಲ್ಲಿ ಹಾರಾಡುತ್ತಾ ತಲಪುವ ವ್ಯವಸ್ಥೆ ಅದ್ಭುತ. ಮನುಷ್ಯನ ಅನ್ವೇಷಣಾ ಸಾಮರ್ಥ್ಯದ ದ್ಯೋತಕ. ನಮ್ಮೂರ ಬಸ್ ನಿಲ್ದಾಣದಂತೆ ಜನಜಂಗುಳಿಯಿಂದ ಕಿಕ್ಕಿರಿದು ತುಂಬಿರುವ ವಿಮಾನ ನಿಲ್ದಾಣಗಳು, ನಾಗರೀಕ ಪ್ರಪಂಚದ ನಾಗಾಲೋಟದ ಪ್ರತಿಬಿಂಬ. ನಮ್ಮ ಪ್ರಯಾಣದ ಸಂಗಾತಿಗಳು ಬಹಳಷ್ಟು ಮಂದಿ ಭಾರತೀಯ ಸಂಜಾತರೆ. ಕೆಲವರು ಲಂಡನ್ನಿನಲ್ಲಿ ಇಳಿದರೆ ಉಳಿದವರು, ನ್ಯೂಯಾರ್ಕಿನಲ್ಲಿ ಇಳಿದರು. ಸುಮಾರು ೪೦೦ಕ್ಕಿಂತ ಹೆಚ್ಚು ಜನ ಪ್ರಯಾಣಿಕರು, ಹುಡುಗರು, ಮುದುಕರು, ಯೌವ್ವನಿಗರು. ತರಾವರಿ ಜನ ವಿಭಿನ್ನ ವೇಷಭೂಷಣ. ಆದರೆ ಯಾರೂ ಪುಕ್ಕಟ್ಟೆಯಾಗಿ ಸಿಗುತ್ತದೆಂದು ಕುಡಿದು ಕುಪ್ಪಳಿಸಲಿಲ್ಲ. ಧೂಮಪಾನವನ್ನೂ ಸಹ ಮಾಡುತ್ತಿರಲಿಲ್ಲ. ಹಿಂದೆ ಬಹಳ ವರ್ಷಗಳ ಹಿಂದೆ, ಮಹಾರಾಷ್ಟ್ರದ ಮಂತ್ರಿ ಶ್ರೀ ರಾಮ್‌ರಾವ್ ಅಧಿಕರವರು ಹೆಚ್ಚು ಕುಡಿದು, ಗಗನಸಖಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಓದಿದ ನೆನಪು ಸುಳಿಯಿತು. ಎಲ್ಲಾ ಸೌಕರ್ಯಗಳು ಸಿಕ್ಕಾಗ ಮನುಷ್ಯ ಅದರ ದುರ್ಬಳಕೆಯನ್ನು ಮಾಡಲಾರ. ಆದರೆ ಪ್ರಯಾಣಿಕರಾರು ಮತ್ತೊಬ್ಬರೊಂದಿಗೆ ಮಾತನಾಡುವ ಕುತೂಹಲ ತೋರಿಸಲೇ ಇಲ್ಲ. ಎಲ್ಲಾ ಗಂಭೀರವಾದ ಪ್ರಯಾಣ. +೧ನೇ ತಾರೀಖು ಮದ್ಯಾಹ್ನ (ಅಮೇರಿಕಾದ ಸ್ಥಳೀಯ ವೇಳೆ) ೪ ಘಂಟೆಗೆ ಊಹಾತೀತವಾದ, ವಿಶಾಲವಾದ ನ್ಯೂಯಾರ್ಕ್ ನಗರದ ಜಾನ್ ಎಫ್.ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆವು. ಶ್ರೀ ಬಾಬು ನಮಗಾಗಿ ಕಾದಿದ್ದ. ಆತ ತನ್ನ ಸುಂದರವಾದ ಟೊಯೋಡೋ ಕಾರಿನಲ್ಲಿ ಅವರಿರುವ ಹತ್ತಿರತ್ತಿರ ೧೨೦ ಮೈಲುಗಳ ದೂರದ “ಮಾರಿಸ್‌ಟೌನ್”ಗೆ ಪಯಣಿಸಿದೆವು. ವಿಶಾಲವಾದ, ನಿಯಂತ್ರಿತವಾದ, ಇಕ್ಕೆಲಗಳಲ್ಲಿ ೬ ಸಾಲುಗಳಿರುವ ರಸ್ತೆಗಳು ಇಡೀ ಪ್ರಯಾಣ ಒಂದೂವರೆ ತಾಸಿನೊಳಗೆ ಮುಗಿಸಿದೆವು. ಒಬ್ಬನೇ ಒಬ್ಬ ವ್ಯಕ್ತಿ ನಡೆದುಕೊಂಡು ಹೋದದ್ದನ್ನಾಗಲೀ ಇಡೀ ಪ್ರಯಾಣದುದ್ದಕ್ಕು ದನಕರುಗಳನ್ನಾಗಲೀ ನೋಡಲಿಲ್ಲ. ರಸ್ತೆಗಳ ಇಕ್ಕೆಲಗಳಲ್ಲಿ ಕೊಳಕನ್ನು ಕಾಣಲಿಲ್ಲ. ತಿಂಘಳಿಗೆ ಕನಿಷ್ಟ ಎರಡು ಬಾರಿ ನಾನು ನಮ್ಮ ರಾಷ್ಟ್ರೀಯ ಹೆದ್ದಾರಿ ೪ರ ಮೇಲೆ ನಮ್ಮೂರಿಗೆ ಪಯಣಿಸುತ್ತೇನೆ. ನಮ್ಮ ಇಡೀ ಪ್ರಪಂಚವೇ ರಸ್ತೆಯ ಮೇಲಿರುತ್ತದೆ. ೫,೬ ತಾಸಿನ ಪ್ರಯಾಣದಲ್ಲಿ ಕನಿಷ್ಠ ೪,೫ ಅಪಘಾತದಿಂದ ನುಗ್ಗಾದ ವಾಹನಗಳು ಕಣ್ಣಿಗೆ ಕಂಡೇ ಕಾಣುತ್ತದೆ. ಇಲ್ಲಿ ಅಂತಹ ದೃಶ್ಯ ಅಪರೂಪ: ಇಲ್ಲವೇ ಇಲ್ಲವೆಂದರೂ ತಪ್ಪಲ್ಲ. +ಶ್ರೀ ಬಾಬುರವರ ಮನೆ ಸುಮಾರು ೧೨ ಎಕರೆ ಜಾಗದ ನಡುವೆಯಿದೆ. ದೊಡ್ಡ, ಸಕಲ ಸೌಲಭ್ಯಗಳ ಸುಂದರವಾದ ಮನೆ. ತುಂಬಾ ಶ್ರೀಮಂತ ಬಡಾವಣೆಯಲ್ಲಿ ರಸ್ತೆಯಿಂದ ಅನತಿ ದೂರದಲ್ಲಿರುವ ಮನೆಯ ಸುತ್ತ ನೀರವತೆ, ಮನೆಯ ಮುಂದೆ ಸುಂದರ ಮಾನವ ನಿರ್ಮಿತ ಕೊಳ, ಬಾತುಕೋಳಿಗಳ ವಾಸಸ್ಥಳ. ಮನೆ ಸುತ್ತಿನಲ್ಲಿ ಅಂದವಾದ ಸಿಂಗರಿಸಿದ, ಹುಲ್ಲುಗಾವಲು ಎತ್ತರದ ಮೇಪಿಲ್ ಮರಗಳ ತೋಪುಗಳು. ಸುತ್ತ ನೀರವತೆಯನ್ನು ಆಗಾಗ್ಗೆ ಅಣಕಿಸುವ, ನವಿಲುಗಳ ಕೇಕೆ, ಶ್ರೀ ಬಾಬುರವರ ಮನೆ ಅಂಗಳದಲ್ಲಿ ೧೪ಕ್ಕಿಂತ ಹೆಚ್ಚಾದ ಗಂಡು ಹೆಣ್ಣು, ನವಿಲು ಹಾಗೂ ಅವುಗಳ ಮರಿಗಳು. ನಾವೆಲ್ಲಾ ಬದುಕಬೇಕೆಂಬ, ಬಯಕೆಯ ತಾಣ, ಶುಭದಾ ಅವರ ಹೆಂಡತಿಯ ಪ್ರೀತಿಯ ಆಹ್ವಾನ, ಮುದ್ದಾದ ಎರಡು ಹೆಣ್ಣುಮಕ್ಕಳು ಪಲ್ಲವಿ, ಶಾಂಭವಿ. ಮನೆ ಒಳಗಡೆಯೆ ಈಜುಕೊಳದ ಆಚೆಗೆ, ಅತಿಥಿಗಳ ಎರಡು ಕೋಣೆಗಳು. ಅದರಲ್ಲಿ ಒಂದು ನಮ್ಮದು. ಕಾಫಿ ಬಿಸ್ಕತ್ತುಗಳ ನಂತರ ಪ್ರಯಾಣದ ಸುಸ್ತನ್ನು ಪರಿಹರಿಸಿಕೊಳ್ಳಲು ವಿದಾಯ. ಎಲ್ಲವನ್ನೂ ಮೌನವಾಗಿ ಅನುಭವಿಸುತ್ತಿದ್ದೆ. ಕುತೂಹಲದಿಂದ ನೋಡುತ್ತಿದ್ದೆ. ಒಬ್ಬರೇ ಒಬ್ಬ ಸಹಾಯಕರಿಲ್ಲದೆ, ಪರಿಚಾರಕರಿಲ್ಲದೆ ಮನೆಯನ್ನು ಒಪ್ಪ ಓರಣವಾಗಿಟ್ಟುಕೊಂಡ, ಮಹಿಳೆ ಶುಭದಳ ಬಗ್ಗೆ ಮೆಚ್ಚಿಗೆ, ನಿಜಕ್ಕೂ ರೂಪವಂತರಾದ ಗಂಡಹೆಂಡತಿ. ಸ್ವರ್ಗಕ್ಕೆ ಕಿಚ್ಚು ಹೆಚ್ಚುವ ಸರ್ವಜ್ಞನ ವಚನ ಜ್ಞಾಪಕಕ್ಕೆ ಬಂತು. ಚಪಾತಿ ಎರಡು ದಿನಿಸಿನ ಪಲ್ಯ, ಅನ್ನ, ಸಾರು, ಮೊಸರಿನ ಊಟ ಸ್ವಾದಿಷ್ಟ. ಹೊಟ್ಟೆ ತುಂಬ ಉಂಡು, ತಲೆದಿಂಬಿಗೆ ತಲೆಕೊಟ್ಟರೆ, ಎಚ್ಚರವಾದದ್ದು ಬೆಳಿಗ್ಗೆ ೫.೩೦ ಘಂಟೆಗೆ. ಬೇಸಿಗೆ ಕಾಲದಲ್ಲಿ ಇಲ್ಲಿ ಹಗಲುಗಳು ಬಹಳ ಉದ್ದ;ರಾತ್ರಿ ೭.೩೦ರವರೆಗೂ ಬೆಳಕಿತ್ತು. +ನಮ್ಮೂರಿನಲ್ಲಿ ಸೋಮಾರಿಯಾದ ನಾನು, ಇಲ್ಲಿ ಮಾತ್ರ ಎದ್ದವನೆ, ನನ್ನ ಲುಂಗಿಯ ಮೇಲೆ ನೆರೆಹೊರೆ ತಿಳಿಯಲು, ಊರನ್ನು ಕಾಣಲು ವಾಯುವಿಹಾರಕ್ಕೆ ಹೊರಟೆ. ಸುಮಾರು ೨ ಕಿ.ಮೀ. ನಷ್ಟು ಹೋದರೂ ಒಂದು ನರಪಿಳ್ಳೆಯಿಲ್ಲ. ವಿಶಾಲವಾದ ಹುಲ್ಲುಗಾವಲು, ಮರಗಿಡಗಳ ಹಿಂದೆ ಸುಂದರವಾದ ಮನೆಗಳು. ಯಾವ ಮನೆಗಳಿಗೂ ಅಂತಹ ಭದ್ರವಾದ ಆವರಣ ಗೋಡೆಗಳಿಲ್ಲ., ಹಾಗೆ ನೋಡಿದರೆ ಆವರಣಗೋಡೆಗಳಿಲ್ಲದ ಒಬ್ಬರಿಗಿಂತ ಮಿಗಿಲಾಗಿ ಒಬ್ಬರ ಸುಸಜ್ಜಿತ, ಒಪ್ಪ ಓರಣದ ವಿಶಾಲ ಹುಲ್ಲುಗಾವಲುಗಳು, ಸಾಲುಮರಗಳು, ಡಾಂಬರು ಒಳರಸ್ತೆಗಳು, ಡಾಂಬರು ರಸ್ತೆಯ ಹೊರಗಡೆ ಪ್ಲಾಸ್ಟಿಕ್ ಚೀಲದಲ್ಲಿ ಹೊಗೆದ ಪತ್ರಿಕೆಗಳು. ಜನಗಳು ಹೊರಗಿಟ್ಟಿದ್ದ ಡಸ್ಟ್‌ಬಿನ್‌ಗಳನ್ನು, ಒಬ್ಬ ಪಿಕಪ್ ವ್ಯಾನನ್ನು ತಂದು ತೆಗೆದುಕೊಂಡು ಹೋದ. ಮತ್ತೊಬ್ಬ ತನ್ನ ಮನೆ ಮುಂದಿನ ಹುಲ್ಲು ಹಾಸನ್ನು ಚಿಕ್ಕ ಟ್ರಾಕ್ಟರ್‌ನಂತ ಯಂತ್ರದಿಂದ ಕತ್ತರಿಸುತ್ತಿದ್ದ. ಇಡೀ ಒಂದು ತಾಸಿನ, ನನ್ನ ವಿಹಾರದಲ್ಲಿ ಕಂಡವರಿಬ್ಬರೆ. ಲುಂಗಿ ಉಟ್ಟುಕೊಂಡ ನನ್ನನ್ನು ಕುತೂಹಲದಿಂದಲೂ ಸಹ ಅವರು ನೋಡಲಿಲ್ಲ. ಬದಲು, ದೂರದಿಂದಲೆ ನಕ್ಕು ಕೈಯಾಡಿಸಿದರು. +ಗಡದ್ದಾದ ಒಳ್ಳೆಯ ಉಪಾಹಾರ ಮಾಡಿ, ನ್ಯೂಯಾರ್ಕ್ ನಗರ ನೋಡಲು ಹೊರಟೆವು. ಈಗ ಬೇರೊಂದು ರಸ್ತೆಯ ಮೂಲಕ ಪುರ ಪ್ರವೇಶ ಹಡ್ಸನ್ ನದಿಯ ಕೆಳಗೆ ಕೊರೆದ ಸುರಂಗದ ಮೂಲಕ ನ್ಯೂಯಾರ್ಕ್ ನಗರದ “ಮ್ಯಾನ್‌ಹಾಟನ್” ದ್ವೀಪಕ್ಕೆ ಹೋದೆವು. ಜನವೋ ಜನ. ರಸ್ತೆಯ ಇಕ್ಕೆಲಗಳಲ್ಲಿ ಗಗನಚುಂಬಿಗಳು. ತಾಂತ್ರಿಕ ಕೌಶಲ್ಯದ ಪ್ರತೀಕಗಳು. ತಿರುಗಾಡುತ್ತಿದ್ದ ಬಹಳ ಜನರಲ್ಲಿ ನೀಗ್ರೋಗಳು ತುಂಬಾ ಇದ್ದರು. ಇತರ ದೇಶ ಸಂಜಾತರನ್ನು ನನ್ನ ಹೆಂಡತಿ ಬಿಟ್ಟರೆ ಸೀರೆವುಟ್ಟ ಮೂರು ನಾಲ್ಕು ಮಹಿಳೆಯರನ್ನು ಕಂಡೆ. ಎಲ್ಲರೂ ನಡುಹರೆಯದವರು! +ಜನಗಳ ಮುಖ, ಹಾವಭಾವ, ಉಡುಪು ತೊದಪುಗಳನ್ನು ನೋಡಲು ಅದರ ಮೂಲಕ ಅವರ ಜನಜೀವನ ಅರಿಯಲು ನನಗೆ ಎಲ್ಲಿಲ್ಲದ ಆಶೆ/ಕುತೂಹಲ. ತುಂಬಿದ ಕೆನ್ನೆಯ, ದಷ್ಟಪುಷ್ಠ, ಜೀವಂತಿಕೆಯ ಜನ, ತರಹಾವಾರಿ ವೇಷಭೂಷಣ, ಮಧ್ಯವಯಸ್ಸಿನ ಬಹಳಷ್ಟು ಮಹಿಳೆಯರು ಸಿಗರೇಟು ಸೇದುತ್ತಿದ್ದರು. ಆದರೆ ಚಿಕ್ಕವರ ಬಾಯಿಯಲ್ಲಿ ಹೊಗೆ ಬರುವುದನ್ನು ನಾನು ನೋಡಲಿಲ್ಲ. ಇದು ಒಳ್ಳೆಯದಲ್ಲವೆ? +ನಮ್ಮಹರೆಯದ ದಿನಗಳ ತಾಂತ್ರಿಕ ಕೌಶಲ್ಯದ “ಎಂಪಯರ್ ಸ್ಟೇಟ್ ಕಟ್ಟಡ” (ಇmಠಿiಡಿe Sಣಚಿಣe ಃuiಟಜiಟಿg)ದ ಮುಂದೆ, ಎದುರು ಬದಿಯ ಪಾದಾಚಾರಿಗಳ ದಾರಿಯಲ್ಲಿ ನಿಂತು ಕತ್ತೆತ್ತಿ ನೋಡಿದೆ, ಕೊನೆ ಕಾಣಲೇ ಇಲ್ಲ. ವಿಶಾಲವಾದ ರಸ್ತೆಗಳ ಇಕ್ಕೆಲಗಳಲ್ಲಿ ನಿಂತ ಗಗನಚುಂಬಿಗಳು ದೇಶದ ಶ್ರೀಮಂತಿಕೆಯ, ತಾಂತ್ರಿಕ ಕೌಶಲ್ಯದ ಪ್ರತೀಕಗಳು. ಸುಮಾರು ೧೦ ನಿಮಿಷಗಳ ಕಾಲ ಅಂಗಡಿ ಸಾಲುಗಳನ್ನು ನೋಡುತ್ತಾ, ಒಳಗಡೆ ಹೋಗಲು ಭಯಪಟ್ಟು ತಿರುಗಾಡಿ ನಂತರ ಪ್ರಪಂಚದ ಅತಿ ಎತ್ತರದ ಕಟ್ಟಡವಾದ “Woಡಿಟಜ ಖಿಡಿಚಿಜe ಃuiಟಜiಟಿg”ಗೆ ಹೋದೆವು ಎತ್ತರದ ಎರಡು ಅವಳಿ ಜವಳಿ ಗಗನಚುಂಬಿಗಳು. ನಮ್ಮ ಹಂಪೆಯ ಅಕ್ಕತಂಗಿಯರ ಗುಡ್ಡಗಳಂತೆ ಜೊತೆಹೊತೆಗೆ ನಿಂತ ಅವಳಿ ಕಟ್ಟಡಗಳು. ಅಷ್ಟೊಂದು ಜನ ಈ ಕಟ್ಟಡಗಳಲ್ಲಿ ಬರೆ ಕೆಲಸ ಮಾಡುವವರಿದ್ದಾರೆಂದರೆ, ಆ ಕಟ್ಟಡಗಳ ಅಘಾದತೆಯನ್ನು ಕಲ್ಪಿಸಿಕೊಳ್ಳಬಹುದು. ೧೯ ರಲ್ಲಿ ಕೆಲವು ಮುಸ್ಲಿಮ್ ಸಂಪ್ರದಾಯವಾದಿ ಭಯೋತ್ಪಾದಕರು (ಮುಂಬೈನಲ್ಲಿ ಬಾಂಬು ಸ್ಪೋಟ ಮಾಡಿದಂತೆ) ಈ ಕಟ್ಟಡಗಳಲ್ಲಿ ಬಾಂಬನ್ನು ಸ್ಪೋಟಿಸಿದರಂತೆ, ಅಪಾರ ಕಷ್ಟನಷ್ಟಗಳನ್ನು ಜನ ಅನುಭವಿಸಿದ್ದರಿಂದ ಬಿಗಿ ಭದ್ರತೆ ಜಾಸ್ತಿಯಿದೆ. ಸಹಜವೂ ಕೂಡ. ಭಯೋತ್ಪಾದನೆಯ ಪಿಡುಗು ಎಲ್ಲಾ ದೇಶಗಳಲ್ಲೂ ಹರಡಿದೆ. ತಪ್ಪು ಕಲ್ಪನೆಗಳ, ವಿಕೃತ ಮನಸ್ಸಿನ ಕೆಲವು ಸಂಘಟನೆಗಳು, ಇಂತಹ ಅಪಾರ ಜೀವಹಾನಿಗೆ ಪ್ರಯತ್ನಿಸುತ್ತಿವೆ. ಇವುಗಳಿಗೆ ಕೆಲವು ರಾಷ್ಟ್ರ ಪ್ರೊತ್ಸಾಹ ಕೊಡುತ್ತಿರುವುದು ಖೇದದ ಹಾಗೂ ಖಂಡನೀಯ ಸಂಗತಿ. ಅಂತಸ್ತಿನ ಭಾಗದಲ್ಲಿ ನಿಂತರೆ, ಇಡೀ ಮ್ಯಾನ್‌ಟನ್ ದ್ವೀಪವನ್ನು ಅದರಾಚೆಯ ದ್ವೀಪಸಮೂಹಗಳನ್ನು ವೀಕ್ಷಿಸಬಹುದು. ಒಂದು ಅದ್ಭುತ, ಅಸಾಮಾನ್ಯ ದೃಶ್ಯ ನಿಮ್ಮ ಕಣ್ಣಿಗೆ ಗೋಚರಿಸುತ್ತದೆ. ೧೩ ರಾಜ್ಯಗಳು ಪ್ರತಿನಿದತ್ವವಿಲ್ಲದೆ ತೆರಿಗೆಯಿಲ್ಲವೆಂದು, ಸ್ವತಂತ್ರ ಘೋಷಿಸಿಕೊಂಡದರ ಪ್ರತೀಕವಾಗಿ “ಸ್ವತಂತ್ರ ದೇವತೆಯ” (Sಣಚಿಣue oಜಿ ಐibeಡಿಣಥಿ) ಬಹಳ ಸುಂದರವಾಗಿ ಅದರ ದ್ವೀಪ ಹಾಗೂ ಸುತ್ತಣ ದ್ವೀಪ ಸಮೂಹಗಳ ನಡುವೆ ಕಾಣಸಿಗುತ್ತದೆ. ಹೆಲಿಕಾಫ್ಟರ್‌ನ ಮೂಲಕ ಇಣುಕಿ ನೋಡಿದರೆ ಕಾಣುವಂತಹ ಅನುಭವ. ಇಲ್ಲಿ ಸೋವೇನೀರ್‌ಗಳನ್ನು ಮಾರುವ ಅಂಗಡಿಗಳಿವೆ. ಕಾಫಿ, ಟೀ, ತಿಂಡಿ ತಿನಿಸುಗಳನ್ನು ಮಾರುವ ಅಂಗಡಿಯಿದೆ. ನಮಗೆ ಬೇಕಾದ ತಿನಿಸನ್ನು ಆರಿಸಿಕೊಳ್ಳಬಹುದು. ಸಾಲಿನಲ್ಲಿ ನಿಂತು, ಅವುಗಳನ್ನು ಕೊಳ್ಳಲು ಹೋದಾಗ, ಒಬ್ಬ ಪಂಜಾಬಿ ಯುವಕ ಸಸ್ಯಾಹರಿ ದಿನಸುಗಳನ್ನು ಆಯ್ಕೆ ಮಾಡಲು ಸಹಾಯಮಾಡಿದ. ಹಿಂದಿಯಲ್ಲಿ ಮಾತನಾಡಿಸಿ ಅಭಿಮಾನದಿಂದ ಸಹಾಯ ಮಾಡಿದ. ಪಂಜಾಬಿ, ಸಿಂದಿ ಜನ ಸಾಹಸಿಗರು. ಕಡಲಾಚೆಯ ದೇಶಗಳು ಅವರ ಸಪ್ತನದಿಗಳ ನಾಡಿನಂತೆ. ಮಲೆಯಾಳಿ ಹಾಗೂ ತಮಿಳರನ್ನು ನಾನು ನೋಡಲಿಲ್ಲ. ಎಲ್ಲಾ ಕಡೆ ಪಂಜಾಬಿಗಳ ಕಾರುಬಾರು. ದಷ್ಟಪುಷ್ಟರ ಈ ಸುಂದರ ಜನ ದುಡಿಯಲು ನಿಸ್ಸೀಮರು. ಖಾಲಿಸ್ಥಾನದಂತಹ ದೇಶದ್ರೋಹಿ ಕಲ್ಪನೆಗಳ ಹುಚ್ಚಿನ ಕೆಲವು ಸಿಖ್ ಜನ ಅಮೆರಿಕಾ ಹಾಗೂ ಕೆನಡದಲ್ಲಿ ಬಹಳಯಿದ್ದಾರೆಂದು ಕೇಳಿ ಖೇದವಾಯಿತು. ನಮ್ಮಂತೆ, ನೋಡಲು ನಾಲ್ಕಾರು ಭರತೀಯ ಕುಟುಂಬಗಳು ಬಂದಿದ್ದವು. ಅವರು ಸ್ಥಳಿಯರಾಗಿರಬಹುದು. ಯಾರೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಅಲ್ಲಿ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಮತ್ತೆ ಕೆಳ ಅಂತಸ್ತಿಗೆ ಬಂದು, ಸಾಲುಸಾಲು ವಿವಿಧ ನಮೂನೆಯ ಸರಕುಗಳನ್ನು ಮಾರುವ ಅಂಗಡಿಗಳನ್ನು ಮಾರುವ ಅಂಗಡಿಗಳನ್ನು ನೋಡಿ ಮುದಗೊಂಡೆವು. ತಮಾಷೆಯೆಂದರೆ ಕೆಳ ಅಂತಸ್ತಿನ ಅಂಗಡಿ ಸಾಲುಗಳ ನಡುವೆ ‘ಸಾರ್ವಜನಿಕ ಮೂತ್ರಿ’ಗಳನ್ನು ಹುಡುಕುವುದೆ ಒಂದು ಸಾಹಸವಾಯಿತು. ಅವುಗಳನ್ನು ಜನ ಇಲ್ಲಿ “ವಿಶ್ರಾಂತಿ ಕೊಠಡಿ” (ಖesಣ ಖoomಯೆಂದು ಕರೆಯುತ್ತಾರೆ. ತುಂಬಾ ಶ್ರುಭ್ರವಾದ ತಾಣಗಳು. ನಮ್ಮ ಕೊಳಕುತವನ್ನು ಕಂಡು ಅಣಕಿಸುವಂತಹ ಇಂತಹ ಶೌಚಾಲಯಗಳು, ನಮ್ಮ ‘ನಿರ್ಮಲ ಕರ್ನಾಟಕ’ದ ಯೊಜನೆ ಇನ್ನು ಎಷ್ಟು ದೂರ ಸಾಗಬೇಕಿದೆಯೆನ್ನುವುದನ್ನು ಸಾರಿ ಹೇಳುತ್ತಿದ್ದವು ಒಂದೇ ಒಂದು ಹರಿದ ಕಾಗದ, ಬಿಸಾಕಿದ ಪ್ಲಾಸ್ಟಿಕ್ ಕಪ್ಪು ಅಲ್ಲಲ್ಲಿ ಬಿದ್ದದ್ದನ್ನು ನೋಡಲಿಲ್ಲ. ಉಗುಳುವ, ಸಿಂಬಳ ಸೀನುವ ಜನಗಳು ಇಲ್ಲವೇ ಇಲ್ಲ. ಅಂತಹ ಸಾರ್ವಜನಿಕ ಶಿಸ್ತು, ಸಂಯಮ, ತಮ್ಮ ಪರಿಸರ ನಿರ್ಮಲವಾಗಿರಬೇಕೆಂಬ ಬಯಕೆ ನಿಜಕ್ಕೂ ಅನುಕರಣೀಯ. ಪ್ರವೇಶಕ್ಕಾಗಿ ಒಬ್ಬೊಬ್ಬರಿಗೆ ೧೦ ಡಾಲರ್ ಕೊಟ್ಟಿದ್ದು ಸಾರ್ಥಕವೆಂದು ಸಂತೋಷಪಟ್ಟೆ. ಮತ್ತೆ ನಮ್ಮ ಮೆಟ್‌ಗುಡ್ಡರವರ ಮನೆಯ ಕಡೆ ಪಯಣಿಸಿದೆವು. ದಾರಿಯಲ್ಲಿ ಅವರು ಕಟ್ಟಿದ್ದು ಎರಡು ಸುಂದರ, ಸದೃಷ್ಟ ಕಬ್ಬಿಣದ ಸೆತುವೆಗಳನ್ನು ನೋಡಿದೆ. ನಮ್ಮ ಕನ್ನಡನಾಡಿನ ಇಂಜ್ಜಿನಿಯರ್‌ರವರ ಯಶಸ್ಸಿನ ಕಥೆಯ ಪ್ರತೀಕ. ಆ ಬಗ್ಗೆ ನಾನು ನಂತರ ಬರೆಯುವೆ. +ಸೆಂಟ್ ಜೋಸೆಫ್ ಕಾಲೇಜಿನ ಆ ದಿನಗಳ ಚರ್ಚಾಕೂಟದ ಗೆಳೆಯ ಶ್ರೀ ಜಯರಾಮರವರ ಮನೆಗೆ ರಾತ್ರಿ ಊಟಕ್ಕೆ ಹೋದೆವು. ಸಡಗರದ ಸ್ವಾಗತ ಸುಮಾರು ೩೫ ವರ್ಷಗಳ ನಂತರ ಭೇಟಿ ಆದೂ ಪರನಾಡಿನಲ್ಲಿ. ಒಬ್ಬರಿಗೊಬ್ಬರು ನೋಡದೇ ಹೋದರೂ, ಗೆಳೆಯರ ಮೂಲಕ ಪರಸ್ಪರರ ಕುಶಲ ತಿಳಿದುಕೊಂಡಿದ್ದೆವು. ನಾನು ಅವರು ಬಹುಮಾನ ಸ್ವೀಕರಿಸುತ್ತಿದ್ದ ಹಳೆಯ ಫೋಟೋಗಳ ಆಲ್ಬಂ ತೋರಿಸಿದ. ನನ್ನ ಗತಕಾಲದ ಚಿತ್ರ ಪರದೇಶದಲ್ಲಿ ನೋಡಿ ಯಾರಿಗೆ ಸಂತೋಷವಾಗಲಿಕ್ಕಿಲ್ಲ! ಅದಕ್ಕಿಂತ ಹೆಚ್ಚಾಗಿ ಇವುಗಳನ್ನೆಲ್ಲ ಜೋಪಾನವಾಗಿ ಕಾದಿರಿಸಿಕೊಂಡ ಜಯರಾಮರ ಒಪ್ಪು ಓರಣ ನನಗೆ ಪ್ರಿಯವಾಯಿತು. ಇದೇ ಅವರ ಯಶಸ್ಸಿನ ಗುಟ್ಟು ಆಗಿದೆ. ದೂರದ ನಾಡಿನಲ್ಲಿ ಯಶಸ್ವಿ ಕಂಪ್ಯೂಟರ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ಮದ್ರಾಸಿನಲ್ಲಿ ಸಹ ಒಂದು ಶಾಖೆಯಿದೆ. ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಒಂದು ಶಾಖೆ ತೆಗೆಯುವವನಿದ್ದಾನೆ. ಆತನ ಮಡದಿ ಮಕ್ಕಳು ಹಾಗೂ ಭಾವಮೈದುನರನ್ನು ಕಂಡು ಖುಷಿಗೊಂಡೆ. ಒಟ್ಟಿನಲ್ಲಿ ಬೆಚ್ಚನೆಯ ಪ್ರೇಮದ, ವಿಶ್ವಾಸದ, ನಾಡಿನ ಆಗುಹೋಗುಗಳ ಬಗ್ಗೆ ಮಾತನಾಡುತ್ತಾ ಊಟ ಮಾಡಿ ಅವರಿಗೆ ವಿದಾಯ ಹೇಳಿ ಮತ್ತೆ ನಮ್ಮ ಬೇಸ್ ಕ್ಯಾಂಪಿಗೆ ಮರಳಿದೆವು. +ಮೊದಲೆ ನಿರ್ಧರಿಸಿದಂತೆ, ನ್ಯೂಯಾರ್ಕ ನಗರದ ಮೇರಿಯಟ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಉತ್ತರ ಅಮೇರಿಕಾ ಬಂಟರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ. ನನ್ನ ಬೊಂಬಾಯಿ ವ್ಯಾಸಂಗದ ದಿನಗಳ ಗೆಳೆಯ ಶ್ರೀ ಶಂಕರಶೆಟ್ಟಿ ಒಬ್ಬ ಯಶಸ್ವೀ ಭಾರತೀಯ ಸಂಜಾತ. ಓದು ಮುಗಿಸಿಕೊಂಡು ಎರಡು ದಶಕಗಳ ನಂತರ ಇಂಗ್ಲೆಂಡ್‌ನ “ಮಾಂಚೆಸ್ಟರ್”ನಲ್ಲಿ ನಡೆದ ವಿಶ್ವ ಕನ್ನಡ ಮೇಳದಲ್ಲಿ ಅವರು ಮಾತನಾಡಲು ಸಿಕ್ಕಿದ್ದರು. ಆಗ ಅವರು ಇಂಗ್ಲೆಂಡಿನಲ್ಲಿದ್ದರು. ಸರಳ ಹಾಗೂ ಆತ್ಮೀಯ ಜೀವಿ. ನಾನು ಅವರು ಮುಂಬೈ ವಿಶ್ವವಿದ್ಯಾಲಯದ ಕಾರ್ಯದರ್ಶಿ ಸ್ಥಾನಕ್ಕೆ ಎದುರಾಲಿಗಳಾಗಿ ಸ್ಪರ್ಧಿಸಿದ್ದೆವು. ನಾನು ಗೆದ್ದಿದ್ದೆ. ಈ ವಿಷಯ ನಾನು ಮರೆತಿದ್ದರೂ ಅವರು ಸಹಜವಾಗಿ ನನ್ನನ್ನು ಪರಿಚಯಿಸಿದಾಗ ವಿಷಯ ಪ್ರಸ್ತಾಪಿಸಿ, ನಮ್ಮ ಕಳೆದುಹೋದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದರು. ಬಂಟರು ನಿಜವಾಗಿ ನಮ್ಮ ನಾಡಿನ ನಾಡವರು. ತುಂಬಾ ಸುಂದರರಾದ, ಮಣ್ಣಿನ ಮಕ್ಕಳಾದ ದಕ್ಶಿಣ ಕನ್ನಡ ಹಾಗೂ ಕಾಸರಗೋಡು ಭಾಗದ ಈ ಜನ, ಇಂದು ಪ್ರಪಂಚದಾದ್ಯಂತ ಇದ್ದಾರೆ. ಸಿನಿಮಾ, ವಿಶ್ವಸುಂದರಿಯರ ಸ್ಪರ್ಧೆ, ರಾಜಕಾರಣ, ಕ್ರೀಡೆ, ಬ್ಯಾಂಕ್, ಹೋಟೆಲ್ ಉದ್ಯಮ ಹೀಗೆ ಹಲವು ಹತ್ತಾರು ಉದ್ಯಮಗಳಲ್ಲಿ ಸ್ಪರ್ಧಿಸುತ್ತಾ, ಯಶಸ್ವಿಯಾದ ಜನ. ಅಲ್ಲಿ ಸೆರಿದ ಪುರುಷರು ಹಾಗೂ ಅವರ ಕುಟುಂಬದವರನ್ನು ಕಂಡಾಗ, ಅಮೆರಿಕವನ್ನು, ಅವರು ಮಂಗಳೂರಿನಂತೆ ಕಾಣುತ್ತಾರೆಂದು ಗೊತ್ತಾಯಿತು. ಅವರಿಗೆ ಶುಭ ಹಾರೈಸಿ ಬಂಟರ ಸಂಘದ ಅಧ್ಯಕ್ಷ ಶ್ರೀ ರೈಯವರಿಗೆ ವಂದಿಸಿ, ಅವಸರವಸರದಲ್ಲಿ “ಡೆಟ್ರಾಯಿಟ್”ನಗರ ತಲುಪಲು ವಿಮಾನ ನಿಲ್ದಾಣಕ್ಕೆ ಹೋದೆ. +೫ನೇ ತಾರೀಖು ‘ಉತ್ತರ ಅಮೇರಿಕಾದ ವೀರಶೈವ ಸಮಾಜ’ದ ಸಭೆಯಲ್ಲಿ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ತರಳಬಾಳು ಡಾಕ್ಟರ್ ಜಗದ್ಗುರುರವರು ಹಾಗೂ ತುಮಕೂರಿನ ದಾ|| ಶಿವಾನಂದ ಸ್ವಾಮಿಗಳು ಸಾನಿಧ್ಯವಹಿಸಿದ್ದರಿ. ಈ ಸಮ್ಮೇಳನದ ಅಧ್ಯಕ್ಷರು ಡಾ||ಶಿವಪ್ಪ ಹುಲ್ಲುಬಾನಿಯವರು, ನಮ್ಮ ಡಂಬಳದ ಯಶಸ್ವಿ ಡಾಕ್ಟರ್. ಗಂಡ ಹೆಂಡತಿ ಇಬ್ಬರೂ ವೈದ್ಯರು. ಸುಂದರವಾದ ಮನೆ ಕಟ್ಟಿದ್ದಾರೆ. ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ನಮ್ಮ ಹಡಗಲು ಹಿರೆಹಡಗಲಿ ಹಾಗೂ ಮುಂಡರಗಿ ಬಗ್ಗೆ ಬಹಳ ಅಭಿಮಾನವಿಟ್ಟುಕೊಂಡ ಪ್ರೀತಿಯ ಜೀವಿಗಳು. +ಧರ್ಮ ಹಾಗೂ ಅದರ ಆಚರಣೆ, ಜನರನ್ನು ಬೆಸೆಯುವ ಪ್ರಭಾವಿ ಅಂಟು, ತಾಯಿನಾಡಿನಿಂದ ದೂರದ ದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಈ ಜನ, ಅಂತರಾಳದಲ್ಲಿ ತಮ್ಮ ಬೇರುಗಳನ್ನು ಹಸಿಯಾಗಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಾರೆ.ತುಂಬಾ ಯಶಸ್ವಿಯಾಗಿ, ಆ ನಾಡು ಕೊಡುವ ಸಕಲ ಸಿರಿಸಂಪತ್ತುಗಳ ನಡುವೆ, ನಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಳ್ಳಲು ತಮ್ಮನ್ನು ತಾವು ಗಟ್ಟಿಯಾಗಿ ಗುರುತಿಸಿಕೊಳ್ಳಲು “ವೀರಶೈವ ಸಮಾಜ ಉತ್ತರ ಅಮೇರಿಕ” ಎರಡು ದಿನಗಳ ಸಮಾವೇಶವನ್ನು ಏರ್ಪಡಿಸಿತ್ತು. ಇಡೀ ಸಮಾವೇಶದಲ್ಲಿ ಚರ್ಚಿಸಬೇಲ್ಕಾಗಿದ್ದ ವಿಷಯ “ದಾಸೋಹ” ಇದರ ಪರಿಕಲ್ಪನೆಗಳ ವಿವಿಧ ಮಗ್ಗುಲುಗಳನ್ನು ಬೇರೆ ಬೇರೆ ಗೋಷ್ಠಿ ಗುಂಪುಗಳನ್ನಾಗಿ ಮಾಡಿ ಚರ್ಚಿಸಲಾಗಿತ್ತು. ದೂರದೂರದ ಮಡದಿ ಮಕ್ಕಳೊಂದಿಗೆ ಬಂದಿದ್ದ, ಸುಮಾರು ಸಾವಿರ ಜನರ ಈ ಸಮಾವೇಶ, ಪುಟ್ಟ ಕರ್ನಾಟಕವನ್ನು ಆಟೋ ನಗರಿ ಡೆಟ್ರಾಯ್‌ನಲ್ಲಿ ಸೃಷ್ಟಿಸಿತ್ತು. ಬಹಳ ಜನ ನನ್ನ ಪರಿಚಿತರೆ, ಮಹಾರಾಷ್ಟ್ರ ಹಾಗೂ ಆಂಧ್ರದ ವೀರಶೈವರು ಬಂದಿದ್ದರು. ಪೋರ್ಡ್ ಕಾರು ಕಂಪನಿಗೆ ಬಣ್ಣ (Pಚಿiಟಿಣ) ತಯಾರಿಸಿ ಮಾರುವ ಧೀಖಣೆಯೆನ್ನುವ ಮಹಾರಾಷ್ಟ್ರದ ವೀರಶೈವ, ಈ ಸಂಘಟನೆಯ ಮುಂಚೂಣಿಯಲ್ಲಿದ್ದ “ಮರಕ್ಕೆ ಬಾಯಿ ಬೇರೆಂದು ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡ” ಎಂದು ೮೦೦ ವರ್ಷಗಳ ಹಿಂದೆ ಶರಣರು, ನುಡಿದ ನುಡಿ ಎಷ್ಟು ಸಮಂಜಸ. ಬೇರಿಗೆ ನೀರೆರೆಯುವ ಕೆಲಸ ಅಲ್ಲಿ ನಡೆದಿತ್ತು. ಸ್ವಲ್ಪ ದಿನಗಳ ಹಿಂದೆ, “ಫಿಲಿಡೆಲ್ಫಿಯಾ ಡೆಯಿಲಿ”ಯೆನ್ನುವ ಪತ್ರಿಕೆಯಲ್ಲಿ ಒಂದು ಕುತೂಹಲದ ವರದಿಯನ್ನು ಓದಿದ್ದೆ. ಲಾರಮರ್ಫಿ “ಐಚಿuಡಿಚಿmuಡಿಠಿhಥಿ” ಎನ್ನುವ ಕರಿಯ ಮಹಿಳೆ, ತಾನು ಸೆನೆಟರ್ ಲಿವಿಂಗ್ ಸ್ಟೋನ್ (Seಟಿeಣoಡಿ ಐiviಟಿg Sಣoಟಿ) ನ ದಾಯಾದಿ (ಅousiಟಿ)ಯೆಂದು ಹೇಳಿಕೊಂಡಿದ್ದಳು. ಒಂದೆ ಮೂಲದ ಎರದು ಟೊಂಗೆಗಳೆಂದು ಆಕೆ ತನ್ನ ಕೌಟುಂಬಿಕ ಇತಿಹಾಸವನ್ನು ಅಧ್ಯಯನ ಮಾದಿ ಪ್ರತಿಪಾದಿಸಿದ್ದಳು. ಅಮೇರಿಕಾ ಸ್ವಾತಂತ್ರ್ಯವನ್ನು ಘೋಷಿಸಿದ ಮೂಲ ದಾಖಲೆಯಲ್ಲಿ ಸಹಿ ಮಾಡಿದ ಯಶಸ್ವಿ ನಾಯಕ ಲಿವಿಂಗ್ ಸ್ಟೋನ್ ಈ ಸೆನೆಟರ್ ಮೂಲಪುರುಷ. ವಾಷಿಂಗ್‌ಟನ್, ಥಾಮಸ್ ಜರ್ಫಸನ್ ಇವರೊಂದಿಗೆ ಸಹಭಾಗಿಯಾಗಿ ೧೩ ರಾಜ್ಯಗಳ ಸಂಯುಕ್ತ ರಾಷ್ಟ್ರವನ್ನು (ಅoಟಿಜಿeಜeಡಿಚಿಣioಟಿ oಜಿ Sಣಚಿಣes) ಕಟ್ಟಿದ ಹಿರಿಯ, ಅವರು ರಚಿಸಿದ ಸ್ವಾತಂತ್ರ್ಯ ಘೋಷಣೆಯಲ್ಲಿ “ಎಲ್ಲರೂ ಹುಟ್ಟಿನಿಂದ ಸುಮಾರು “(ಂಟಟ meಟಿ ಚಿಡಿe ಛಿಡಿeಚಿಣeಜ eqeಚಿಟ) ಯೆಂದು ಘೋಷಿಸಿದ್ದರು. ಆದರೆ ಜಫರ್‌ಸನ್ ಹಾಗೂ ಲಿವಿಂಗ್ ಸ್ಟೋನ್ ಇವರುಗಳಿಗೆ ಗುಲಾಮ ನೀಗ್ರೋಗಳ ಗುಂಪೆಯಿದ್ದಿತು. ಪ್ರಾಯಶಃ ಎಲ್ಲರೂ ಹುಟ್ಟಿನಿಂದ ಸಮಾನರು, ಸ್ವಲ್ಪ ಜನ ಹೆಚ್ಚು ಸಮಾನರೆಂದು ಭಾವಿಸಬೇಕು! (ಂಟಟ meಟಿ ಚಿಡಿe eqeಚಿಟ buಣ some ಚಿಡಿe moಡಿe) ಈ ಕರಿಯ ಮಹಿಳೆಯ ಪೂರ್ವಜರು ಲಿವಿಂಗ್ ಸ್ಟೋನ್ ಅನೈತಿಕ ಸಂಬಂಧದ ಕೊಡಿಗೆಗಳೆಂದು ಈಕೆ ದಾಖಲಾತಿಗಳ ಪ್ರಕಾರ ಪ್ರತಿಪಾದಿಸಿದ್ದಳು. ಸೆನೆಟರ್ ಲಿವಿಂಗ್ ಸ್ಟೋನ್ “ಇರಬಹುದೆಂದು” ಚಿಕ್ಕದಾಗಿ ಪ್ರತಿಕ್ರಿಯಿಸಿ ವಿವಾದಕ್ಕೆ ತೆರೆ ಎಳೆದಿದ್ದಳು. ಈ ಘಟನೆ, ಮನುಷ್ಯನ ಕುತೂಹಲದ ಬೇರುಗಳನ್ನು ಮತ್ತೆ ಮತ್ತೆ ಮುಟ್ಟಬೇಕು. ಹುಸಿಯಾಗಿಟ್ಟುಕೊಳ್ಳಬೇಕೆನ್ನುವ ಹಸಿವಿನ ಬಯಕೆಯ ಪ್ರತೀಕ, ಬಹಳ ವರ್ಷಗಳ ಹಿಂದೆ ನೀಗ್ರೋಗಳ ಕಥೆಯಾದ “ಖooಣs” ಕಾದಂಬರಿಯ ನೆನಪು ಸುಳಿದು ಹೋಯಿತು. +ಅಮೇರಿಕಾದಲ್ಲಿ ಏಷ್ಯಾ ಖಂಡದ ಭಾರತೀಯರೆಂದು, ಪಾಕಿಸ್ತಾನಿಗಳು, ಬಾಂಗ್ಲಾದೇಶದವರನ್ನು ಒಂದು ಮಾಡಿಕೊಂಡು, ಅಲ್ಲಿಯ ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಕೊಡುತ್ತಾ, ಯಶಸ್ವಿಯಾದ ಜನರು, ತಮ್ಮ ಉಪಸಂಸ್ಕೃತಿಗಳ ಅನೇಕತ್ವವನ್ನು (ಛಿuಟಣuಡಿಚಿಟ Pಟuಡಿಚಿಟiಣe) ಸಹಜವಾಗಿ ಪ್ರಕಟಿಸುತ್ತಿದ್ದವು. ತಾವುಗಳೆಲ್ಲ ಒಂದು ವಿಶಾಲ ಅರ್ಥದಲ್ಲಿ ಒಂದೇ ಕುಲ ಬಳ್ಳಿಗೆ ಸೇರಿದವರು (ಇಡಿhಟಿiಛಿ ಊomogeಟಿiಣಥಿ) ಯೆಂದು ಭಾವಿಸಿಕೊಳ್ಳುತ್ತಾ, ಒಟ್ಟಾಗುವ ತಮ್ಮ ವಿಭಿನ್ನತೆ ಹಾಗೂ ವೈಶಿಷ್ಟತೆ (homogiಟಿiಣಥಿ ಚಿಟಿಜ ಆisಣiಟಿಛಿಣiveಟಿes)ಯನ್ನು ಪೋಷಿಸಿಕೊಂಡು ಬರಲು ವೀರಶೈವ ಸಮ್ಮೇಳನ, ಬಂಟರ ಸಮ್ಮೇಳನ, ಕನ್ನಡಿಗರ ಕೂಟ, ಮೊದಲಾದುವು ಶ್ರಮಿಸುತ್ತಿರುವುದು. ಒಟ್ಟಿನಲ್ಲಿ ನಮ್ಮ ಈ ಸಾಹಸಿ ಜನರ ಹೋರಾಟ ಹಾಗೂ ಯಶಸ್ಸು, ಅನುಕರಣೀಯ, ಅವರ ತಾಯ್ನಾಡಿನ ಹಂಬಲ ಅಸದಳ ಹಾಗೂ ಪ್ರಶಂಸನೀಯ. +ಮಾರನೇ ದಿನ ಡೆಟ್ರಾಯನಲ್ಲಿರುವ ಫೋರ್ಡ್ ವಸ್ತು ಸಂಗ್ರಹಾಲಯ (ಜಿoಡಿಜ ಒuseum) ನೋಡಲು ಹೋದೆವು. ಬಹಳ ವರ್ಷಗಳ ಹಿಂದೆ ಆರ್ಥರ್ ಹೆಲಿ (ಂಡಿuಣhಚಿಡಿ hಚಿiಟಥಿ) ಯವರ “ವೀಲ್” (Wheeಟ) ಕಾದಂಬರಿ ಓದಿ, ಕಾರು ತಯಾರಿಕೆಯ ಆ ನಗರದ ಬಗ್ಗೆ ಆಕರ್ಷಿತನಾಗಿದ್ದೆ. ಆಶ್ಚರ್ಯದ ಸಂಗತಿಯೆಂದರೆ ಪೋರ್ಡ್ ಸ್ವಂತಹ್ ಸಂಶೋಧಕನಾಗಿರಲಿಲ್ಲ. ಸಂಶೋಧನೆಯ ಬಗ್ಗೆ ಆಸಕ್ತಿಯಿಮ್ದ ಓದಿ, ತಿಳಿದುಕೊಂಡು, ತನ್ನ ಕೌಶಲ್ಯದಿಮ್ದ ಯಂತ್ರಗಳನ್ನು ನಿರ್ಮಿಸುತ್ತಿದ್ದ. ಸಂಶೋಧಕರ ಕನಸಿನ ರಕ್ತ ಮಾಂಸ ತುಂಬುತ್ತಿದ್ದ. ಆತನ ಒಳ್ಳೆಯ ಗೆಳೆಯ ಥಾಮಸ್ ಎಡಿಸನ್ ಆಗಿದ್ದ. ಬಡಕುಟುಂಬದಿಂದ ಬಂದ ಥಾಮಸ್ ಆಲ್ವ ಎಡಿಸನ್ ಕಿವುಡನಾಗಿದ್ದ. ಅನೇಕನೇಕ ಸಂಶೋಧನೆಗಳಿಂದ, ನವನಾಗರೀಕ ಪ್ರಪಂಚವನ್ನು ಸೃಷ್ಟಿಸಿದ್ದ. ಆತ ಕಂಡು ಹಿಡಿದ ವಿದ್ಯುತ್ ಬಲ್ಬು (ಇಟeಛಿಣಡಿiಛಿಚಿಟ ಐighಣ) ಗ್ರಾಮಾಫೋನ್ (Phoಟಿegಡಿಚಿಠಿh) ಮೊದಲಾದುವು ಮನುಕುಲದ ಪ್ರಗತಿಗೆ ನಾಂದಿ ಹಾಡಿದವು. ಆತನ ಒಬ್ಬ ಪ್ರತಿಭಾವಂತ ಸಹಾಯಕ ವಿಲಿಯಂ ಡಿಕಸನ್ (ಗಿiಟಟiಚಿm ಆiಛಿಞsoಟಿ) ಆತನ ಹತ್ತಿರದ ಗೆಳೆಯ “ಫೋರ್ಡ್” (ಈoಡಿಜ) ಕೂಡಿಕೊಂಡು ಮೋಟಾರ್ ವಾಹನದ ಬಗ್ಗೆ ವಿವಿದೆಡೆಗಳಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದರು. ಅವುಗಳ ಸೂಕ್ಷ್ಮ ಚಲನೆಯನ್ನು ಅಭ್ಯಸಿಸಿ, ಫೋರ್ಡ್ ತನ್ನ ಕಾರ್ಯಾಗಾರದಲ್ಲಿ ಬಿಡಿಭಾಗಗಳನ್ನು ತಯಾರಿಸಿ, ಪ್ರಥಮ ೪ ಗಾಲಿಗಳ ಚಲಿಸುವ ಮೋಟಾರ್‌ವಾಹನವನ್ನು ತಯಾರಿಸಿದ ಅದನ್ನಾತ ಟ್ರೈಸಿಕಲ್ (ಣಡಿiಛಿಥಿಛಿಟe) ಯೆಂದು ಹೆಸರಿಸಿದ. ನೂರಾರು ಕಾರ್ಮಿಕರು, ಒಂದೊಂದೆ ಬಿಡಿ ಭಾಗಗಳನ್ನು ತಯಾರಿಸಿ ಅವುಗಳನ್ನು ಒಟ್ಟುಗೂಡಿಸುತ್ತಾ (ಂssembiಟiಟಿg) ಮೋಟಾರು ವಾಹನಗಳ ಸಾಲು ಸಾಲೆ, ಒಂದು ದಿನದಲ್ಲಿ ಕಾರ್ಖಾನೆಯಿಂದ ಹೊರಬರುವಂತೆ ಮಾಡಿದ. ಯಂತ್ರ ಮಾನವರಿಂದ ಅನೇಕ ಕೆಲಸಗಳನ್ನು ಮಾಡುವ ಕೆಲಸವು, ಅಲ್ಲಿ ಪ್ರಾರಂಭವಾಯಿತು. ಇಂತಹ ಸಂಶೋಧನೆಗಳಿಂದ ನಾಗರೀಕ ಪ್ರಪಂಚ ನಾಗಾಲೋಟದಿಂದ ಓಡುತ್ತಾ, ಚಂದ್ರಗ್ರಹವನ್ನು ತಲುಪಿ ಇಂದು ಮಂಗಳ (ಒಚಿಡಿs) ಗ್ರಹಕ್ಕೆ ಉಪಕರಣಗಳನ್ನು ಕಳಿಸಿದೆ. ಗಾಲಿ, ಒತ್ತುಗೋಲಿನಿಂದ ಹಿಡಿದು, ಸೈಕಲ್ಲು, ಮೋಟಾರ್ ವಾಹನ, ಉಗಿಬಂಡಿ, ಟ್ರಾಕ್ಟರ್, ಖಟಾವು ಮಾಡುವ ಯಂತ್ರಗಳು, ರೈಟರ್ ಬ್ರದರ್‍ಸ್‌ನ ಮೊದಲನೆ ವಿಮಾನದಿಂದ ಹಿಡಿದು ಅದರ ವಿವಿಧ ರೂಪಾಂತರಗಳು, ಬೋಯಿಂಗ್ ಹಾಗೂ ಜೆಟ್‌ಗಳವರೆಗಿನ, ವಿಮಾನಗಳು, ಗೃಹೋಪಯೋಗಿ ವಸ್ತುಗಳ ಸಂಶೋಧನೆ, ಹೊಲಿಗೆ ಯಂತ್ರ, ಅಡಿಗೆ ಮಾಡುವ ಯಂತ್ರಗಳು, ತಂತಿ ದೂರವಾಣಿ, ವಿದ್ಯುತ್ ಉತ್ಪಾದನಾ ಯಂತ್ರಗಳು, ಒಂದೆ ಎರಡೆ ಹೀಗೆ ಹಲವು ನೂರಾರು, ಸಂಶೋಧನೆಗಳನ್ನು ಜನಸಾಮಾನ್ಯನಿಗೆ ತೋರಿಸಲು, ಮಾಡಿರುವ ಪ್ರಯತ್ನ ಅಸಾಮಾನ್ಯ. ಹತ್ತಾರು ಪುಸ್ತಕಗಳಿಂದ ಕಲಿಯಬಹುದಾದ ತಿಳಿವಳಿಕೆಯನ್ನು ಈ ವಸ್ತುಸಂಗ್ರಹಾಲಯ, ಮನುಕುಲ ನಡೆದು ಬಂದ ಹಾದಿಯನ್ನು ಸವಿವರವಾಗಿ, ಬಿಚ್ಚಿ ತೋರಿಸುತ್ತದೆ/ಮನದಟ್ಟಾಗುವಂತೆ ಮಾಡುತ್ತದೆ. ಸುಮಾರು ನಾಲ್ಕು ತಾಸು ನೋಡಿದರೂ ಒಂದು ಭಾಗವನ್ನು ನೋಡಲು ಮಾತ್ರ ಸಾಧ್ಯವಾಯಿತು. ಅದೇ ಸಂಗ್ರಹಾಲಯದಿಂದ ಮತ್ತೊಂದು ಬದಿಗೆ ನಿರ್ಮಿಸಿದ, ಮಧ್ಯಕಾಲೀನ ಮನೆಗಳು, ಗ್ರಾಮಗಳು ಹಾಗೂ ಈಗ ಕಟ್ಟುತ್ತಿರುವ ಮನೆಗಳವರೆಗೆ ನಿರ್ಮಿಸಿದ ‘ಪೋರ್ಡ್ ಗ್ರಾಮ’ (ಈoಡಿಜ ಗಿiಟಟಚಿge)ಗೆ ಹೋಗಲು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಮಳೆ ಬರಲು ಪ್ರಾರಂಭಿಸಿದ್ದರಿಂದ ಮತ್ತು ನಮ್ಮ ಡಂಬಳದ ಡಾ||ಶಿವಪ್ಪ ಹುಲುಬನಿಯವರ ಮನೆಗೆ ಊಟಕ್ಕೆ ಹೋಗಬೇಕಾಗಿದ್ದರಿಂದ ನಿರಾಸೆಯಿಂದ ಹೋಟೆಲ್‌ಗೆ ಮರಳಿದೆವು. +ರಾತ್ರಿ ಡಾ||ಶಿವಪ್ಪನವರ ಮನೆಗೆ ಹೋದಾಗ ಆಗಲೆ ಅತಿಥಿಗಳು ಬಂದಿದ್ದರು. ಸಮ್ಮೇಳನಕ್ಕೆ ಬಂದಿದ್ದ ಡಾ||ನಾಗಾಲೋಟಿ ಮಠ ಹಾಗೂ ಶ್ರೀ ಬಳಿಗಾರ ಮತ್ತವರ ಕುಟುಂಬದವರಿದ್ದರು. ಆ ಊರಿನ ಕೆಲವು ಗೆಳೆಯರು, ಕುಟುಂಬದವರು ರಾತ್ರಿ ಕೂಟಕ್ಕೆ ಕಳೆ ತಂದಿದ್ದರು. ಕುಡಿಯಲು ವೈನ್ ಕೊಟ್ಟರು. ಆಶ್ಚರ್ಯದ ಸಂಗತಿಯೆಂದರೆ, ಡಾಕ್ಟರಾಗಿದ್ದ ಅವರ ಕುಟುಂಬ, ಒಬ್ಬರೆ ನಮ್ಮ ಉತ್ತರ ಬ್ಕರ್ನಾಟಕದ ಎಲ್ಲಾ ನಮೂನೆಯ, ರುಚಿಕರವಾದ ರೊಟ್ಟಿ, ಕಾಳು ಪಲ್ಯ, ಬದನೆಯ ಪಲ್ಯ, ಸೊಂಡಿಗೆ, ಶ್ಯಾವಿಗೆ ಪಾಯಸ, ಬೇಸನ್ ಉಂಡಿ, ಹೀಗೆ ಹಲವು ಹತ್ತಾರು ದಿನಿಸಿನ ಸ್ವಾದಿಷ್ಟ ಊಟವನ್ನು ಯಾರ ಸಹಾಯವಿಲ್ಲದೆ ತಯಾರಿಸಿದ್ದರು. ನಮ್ಮ ನೆರೆಮನೆಯ ಮಹಿಳೆಯಂತೆ ಒಬ್ಬ ಗೃಹಿಣ್ಣಿಯಾಗಿ, ಎಲ್ಲರ ಆದರಾತಿಥ್ಯಗಳನ್ನು ನೋಡಿಕೊಂಡರು. ಸಾವಿರಾರು ಡಾಲರ್‌ಗಳನ್ನೂ ಗಳಿಸುತ್ತಿದ್ದರು. ಡಾಕ್ಟರ್ ಆಗಿದ್ದ ಈ ಮಹಿಳೆಯ ಲವಲವಿಕೆ, ವಿನಯ ಹಾಗೂ ಆತಿಥ್ಯ ನಮ್ಮೆಲ್ಲರನ್ನು ಬೆರಗು ಮಾಡಿತ್ತು. “ತುಂಬಿದ ಕೊಡ ತುಳುಕುವುದಿಲ್ಲ”ವೆನ್ನುವ ಗಾದೆ ಮಾತು ಇವರನ್ನು ನೋಡಿಯೇ ರಚಿಸಿದಂತಿತ್ತು. ಡಾ||ಶಿವಪ್ಪವನರು ನಮ್ಮ ಸೀಮೆಯ ಗಂಡಿನಂತೆಯೇ ಉಳಿದುಬಿಟ್ಟಿದ್ದರು. ಅಷ್ಟು ವರ್ಷ ಅವರ ಅಮೇರಿಕಾ ವಾಸ ಅವರಲ್ಲಿ ಬದಲಾವಣೆಯನ್ನೇನೂ ತಂದಂತಿರಲಿಲ್ಲ. ಭಾರತೀಯ ಗಂಡಿನಂತೆ ಮನೆಯ ಯಜಮಾನ. ಎಲ್ಲಾ ದುಡಿಮೆಯಲ್ಲಿ (ಗೃಹಕೆಲಸಗಳಲ್ಲೂ ಸಹ) ಸಹ ಭಾಗಿಯಾಗಬೇಕೆಂದು ಬಯಸುವ, ಅಮೇರಿಕ ಬಿಳಿಮಹಿಳೆಯರ, ಒತ್ತಡ ಹಾಗೂ ಬಯಕೆಗಳಿಂದಾಗಿ, ಇತ್ತೀಚೆಗೆ ಅಮೆರಿಕಾ ಗಂಡುಗಳು, ಅವರ ವೈಯಕ್ತಿಕ ಸೌಕರ್ಯ ಹಾಗೂ ಸ್ವಾಸ್ಥ್ಯದ ಕಡೆಗೆ ಗಮನ ಕೊಟ್ಟು ಸೇವೆ ಮಾಡುವ, ಪ್ರಶ್ನೆ ಮಾಡದ ಭಾರತೀಯ ಹಾಗೂ ಪೌರಾತ್ಯ ಮಹಿಳೆಯರನ್ನು ಹೆಚ್ಚು ಬಯಸುತ್ತಿದ್ದಾರೆಂದು ತಿಳಿದುಬಂತು. ಒಂದು ಅಪ್ಪಟ ಕನ್ನಡ ಕುಟುಂಬದ ಆದರ ಆತಿಥ್ಯವನ್ನು ಸ್ವೀಕರಿಸಿ, ರಾತ್ರಿ ನಮ್ಮ ಹೋಟೆಲ್‌ಗೆ ಹಿಂತಿರುಗಿದೆವು. +ನಮ್ಮ ಬೇಸ್ ಕ್ಯಾಂಪ್ ನ್ಯೂಜರ್ಸಿಯಿಂದ ಫಿಲ್‌ಡೆಲ್ಫಿಯಾ ಅಮೇರಿಕಾದ ದೂರದ ಲೆಕ್ಕದಲ್ಲಿ ಹತ್ತಿರವೆ. ಕಾರಿನಲ್ಲಿ ಹೋಗುವಾಗ ಅಮೇರಿಕಾದ ರಾಷ್ಟ್ರಪಿತ ಜಾರ್ಜ್ ವಾಷಿಂಗ್‌ಟನ್ ಹಾಗೂ ಆತನ ಸಂಗಾತಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಕಾಲೇಜು ದಿನಗಳಲ್ಲಿ ಓದಿದ ಅಮೇರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ ಸ್ಮೃತಿ ಪಠಲದ ಮೇಲೆ ಹಾದುಹೋಯಿತು. “ಟಿo ಣಚಿxಚಿಣioಟಿ, ತಿiಣhouಣ ಡಿeಠಿಡಿeseಟಿಣಚಿಣioಟಿ” “ಪ್ರಾತಿನಿದ್ಯವಿಲ್ಲದೆ ತೆರಿಗೆ ಕೊಡುವುದಿಲ್ಲ” ವೆಂಬ ಸೀಮಿತ ಉದ್ದೇಶದಿಂದ ಕಲೆತ, ಹಿರಿಯರ ಗುಂಪು, ತನ್ನ ತಾಯ್ನಾಡಿನ ಅರಸನನ್ನೆ ಯುದ್ಧಕ್ಕೆ ಆಹ್ವಾನಿಸಿ, ಮನುಕುಲ ಮೆಚ್ಚುವಂತಹ “ಸ್ವತಂತ್ರ ಸಂಗ್ರಾಮದ ಘೋಷಣೆಯನ್ನು ಮಾಡಿತು. ಹೊಸನಾಡಿನಲ್ಲಿ ವಿವಿಧ ಸ್ವರ ಹಾಗೂ ಹಿನ್ನೆಲೆಯಿಂದ ಬಂದ, ಧೀಮಂತರು ಈ ಊರಿನಲ್ಲಿ ಕಲೆತು, ಚರ್ಚಿಸಿ, ದೃಢ ನಿರ್ಧಾರ ತೆಗೆದುಕೊಮ್ಡು ಸ್ವರಂತ್ರ ಘೋಷಿಸಿದರು. ಹುಟ್ಟಿನಿಂದ ಎಲ್ಲರೂ ಸಮಾನರೆಂದು ಸಾರಿದ ಘೋಷಣೆಗೆ, ಎಲ್ಲರೂ ಒಪ್ಪಿರಲಿಲ್ಲ. ೧೮೦೮ ನಂತರ ‘ಗುಲಾಮ’ರನ್ನು ಆಮದು ಮಾಡಿಕೊಳ್ಳಬಾರದೆಂಬುದಾಗಿ ಒಪ್ಪಂದವಾಯಿತೆ ವಿನಹಹ, ಗುಲಾಮಗಿರಿಯನ್ನು ರದ್ದುಮಾಡಲಿಲ್ಲ. ಆದ್ದರಿಂದ ಗುಲಾಮರಾಗಿ ಸರಪಳಿಗಳನ್ನು ಬಿಗಿಸಿಕೊಂಡು, ಕಬ್ಬು, ಹತ್ತಿಯ ಹೊಲಗಳಲ್ಲಿ ಜೀವಮಾನವೆಲ್ಲ ದುಡಿದಿದ್ದ, ಕರಿಯರ ಮಕ್ಕಳು, ಇಂದು ಅಮೇರಿಕಾದ ರಾಷ್ಟ್ರಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ಹಿರಿಯ ಹುದ್ದೆಗಳನ್ನು ಎಲ್ಲಾ ರಂಗಗಳಲ್ಲಿ ಅಲಂಕರಿಸಿದ್ದಾರೆ. ಅದರಲ್ಲೂ ಕ್ರೀಡೆ ಸಂಗೀತದಲ್ಲಿ ಅವರನ್ನು ಹಿಂದೆ ತಳ್ಳುವುದು ಆಗದ ಮಾತಾಗಿದೆ. ೩೦೦ ವರ್ಷಗಳ ಇತಿಹಾಸದ ಆ ದೇಶ, ಕೇವಲ ೨೦೦ ವರ್ಷಗಳಲ್ಲಿ ವರ್ಣಬೇಧವನ್ನು ಬಹುಮಟ್ಟಿಗೆ ನೀಗಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಐದು ಸಾವಿರ ವರ್ಷಗಳ ಇತಿಹಾಸವಿರುವ, ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್, ನಾನಕ, ಕಬೀರ, ಪರಮಹಂಸರನ್ನು ಪಡೆದಿದ್ದ, ಈ ನಾಡಿನ ಜಾತಿಬೇಧವನ್ನೂ ತೊಡೆದು ಹಾಕಲು ಸಾಧ್ಯವಾಗಿಲ್ಲ. ಆಳದಲ್ಲಿ ನಾವು ನಂಬಿದಂತೆ, ನುಡಿದಂತೆ ನಡೆಯುವವರಲ್ಲ ಅದಕ್ಕಾಗಿಯೇ ಈ ದ್ವಂದ್ವ. ಫಿಲಿಡೆಲ್ಫಿಯಾ ಸ್ಥಾಪನಾ ಹಿರಿಯರು ಕುಳಿತು ಚರ್ಚಿಸಿದ ಸಭಾಂಗಣವನ್ನು ಹಾಗೆಯೇ ಕಾದಿರಿಸಿದ್ದಾರೆ. ಮೇಜು, ಕುರ್ಚಿಗಳು, ಅಂದಿದ್ದಂತೆ, ಈಗಲೂ ಹಾಗೆ, ಇಡಲಾಗಿದೆ. ಲಾವ್ ಆಡಮ್ಸ್ ಸ್ಯಾಮುಯಿಲ್ ಆಡಮ್ಸ್, ಅಲೆಷಾಂದ್ರ, ಹ್ಯಾಮಿಲ್‌ಟನ್, ಜಾರ್ಜಮ್ಯಾಸನ್, ಜಾರ್ಜವಾಷಿಂಗ್‌ಟನ್, ಬೆಂಜಮಿನ್ ಫ್ರಾಂಕ್‌ಲಿನ್ ಮೊದಲಾದ ಹಿರಿಯರ ಭಿತ್ತಿಚಿತ್ರಗಳನ್ನು, ಅವರು ಕುಂತ ನಿಂತ ವಿವಿಧ ಭಂಗಿಗಳ ಚಿತ್ರಪಟ ನೋಡಿ ತುಂಬಾ ಸಂತೋಷಪಟ್ಟೆ. ಅಮೇರಿಕನ್ನರ ಇತಿಹಾಸ ತೀರ ಇತ್ತೀಚಿನದು. ಇರುವ ಇತಿಹಾಸವನ್ನೇ ಒಪ್ಪ ಓರಣವಾಗಿಟ್ಟುಕೊಂಡಿದ್ದಾರೆ. +ಆ ಕಾಲದಲ್ಲಿ ಚರ್ಚಿನಲ್ಲಿ ಬಾರಿಸುವ “ಘಂಟೆ” ಯನ್ನು, ಒಂದು ಚಿಕ್ಕ ಮೊಗಸಾಲೆಯಲ್ಲಿಟ್ಟಿದ್ದಾರೆ. ಬರೇ ಇದರ ಧ್ವನಿಯನ್ನು ಕೇಳಿ, ಇದರ ಸಂಗಾತಿಗಳಾಗಿದ್ದವರು ಸಹಸ್ರ, ಸಹಸ್ರ. ಇಡೀ ಪ್ರಪಂಚದ ಪೋಲೀಸನಂತೆ ಕೆಲಸ ಮಾಡುವ ಸಂಪದ್ಭರಿತ ರಾಷ್ಟ್ರವಾದ ಅಮೇರಿಕಾ, ಸ್ಥಾಪನಾ ಹಿರಿಯರ ಕನಸಿನ ಕೂಸಾಗಿತ್ತು. ಅವರ ಹೋರಾಟ ಹಾಗೂ ದೂರದೃಷ್ಟಿ ಅಸದಳ. ರಾಷ್ಟ್ರಸ್ಥಾಪನೆಯ ಹಿರಿಯ ಪಂಕ್ತಿಯಲ್ಲಿ ವಾಷಿಂಗ್‌ಟನ್, ಆಡಮ್ಸ್, ಜಫರಸನ್, ಮೆಡಿಸನ್, ಫ್ರಾಂಕಲಿನ್ ಮತ್ತು ಹ್ಯಾಮಿಲ್‌ಟನ್‌ರವರು ಅಗ್ರಗಣ್ಯರು. ಆದರೂ ಅವರೆಲ್ಲ ದೈವಸಂಭೂತರಾಗೇನೂ ಇರಲಿಲ್ಲ. ಅವರಿಗೆ ಅವರದೇ ಆದ ದೌರ್ಬಲ್ಯಗಳಿದ್ದವು. ವಾಷಿಂಗ್‌ಟನ್‌ರವರಿಗೆ ಭೂಮಿಯ ವ್ಯಾಮೋಹವಿತ್ತು. ಹಾನ್‌ಕಾಕ್‌ರವರು ಜಂಬದ ಕೋಳಿಯಾಗಿದ್ದರು. ಹ್ಯಾಮಿಲ್‌ಟನ್ ಅತಿ ಮಹತ್ವಾಕಾಂಕ್ಷಿ. ಆಡಮ್ಸ್ ಜಗಳಗಂಟಿ, ಜಫರ್‌ಸನ್ ಹಗೆ ಸಾಧಿಸುವವ, ಹೆನ್ರಿ ಕ್ರೂರಿ, ಹೀಗೆ ಇವರೆಲ್ಲರೂ ಒಂದಲ್ಲ ಒಂದು ದೌರ್ಬಲ್ಯಗಳನ್ನು ಹೊಂದಿದವರಾಗಿದ್ದರು. +ಸಂಯುಕ್ತ ರಾಷ್ಟ್ರ ಸ್ಥಾಪಿಸುವಾಗ ಅನೇಕ ರಾಜಿಗಳನ್ನು ಅವರು ಮಾಡಿಕೊಳ್ಳಬೇಕಾಗಿತ್ತು. ಹುಟ್ಟಿನಿಂದ ಎಲ್ಲರೂ ಸಮಾನರೆಂದು ಸಾರಿದರೂ ಜಾರ್ಜಿಯಾ ಹಾಗೂ ಕರೂಲಿನಿಸ್ ಪ್ರಾಂತದ ಪ್ರತಿನಿಧಿಗಳು, ಗುಲಾಮಗಿರಿ ಒಂದು ಸಹಜ ಹಕ್ಕೆಂದು ಪ್ರತಿಪಾದಿಸುತ್ತಿದ್ದರು. ಕೊನೆಗೆ ರಾಜಿ ಮಾಡಿಕೊಂಡು ೧೮೦೮ರ ನಂತರ ಯಾವ ಗುಲಾಮನನ್ನು ಆಮದು ಮಾಡಿಕೊಳ್ಳಬಾರದೆಂದು ನಿರ್ಧರಿಸಲಾಯಿತು. ಹಾಗೆಯೆ ಕಾನೂನಿನಲ್ಲಿ ಅಳವಡಿಸಲಾಯಿತು. ಹೀಗೆ ಒಂದು ರಾಷ್ಟ್ರದ ಹುಟ್ಟು ಹೋರಾಟ ಹಾಗೂ ಮಹತ್ತು ರೋಚಕ, ಹಾಗೂ ಉತ್ಪೋದಕ. ಈ ಎಲ್ಲಾ ವಿವರಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಫಿಲಿಡೆಲ್ಫಿಯ ನಗರ, ವಿಶ್ವವಿದ್ಯಾನಿಲಯಗಳ ನಗರವೂ ಕೂಡ. ಅನ್ಯರಾಷ್ಟ್ರಗಳಿಂದ ಬರುವ ಪ್ರವಾಸಿಗರಂತೆ ಅಮೇರಿಕಾದ ವಿವಿಧ ಪ್ರಾಂತಗಳ ಜನರು ಈ ಐತಿಹಾಸಿಕ ಪಟ್ಟಣವನ್ನು ನೋಡಲು ಇಲ್ಲಿಗೆ ಬಂದಿದ್ದರು. ಇದನ್ನೆಲ್ಲ ಅಭಿಮಾನದಿಂದ, ವಿವರಿಸಿ ಹೇಳುತ್ತಾ ತೋರಿಸಿದ ಗೆಳೆಯ ಮೆಟ್‌ಗುಡ್‌ರವರನ್ನು ನಾನು ನೆನೆಯಲೇ ಬೇಕು. +ಪ್ರಥಮ ಅಧ್ಯಕ್ಷನ ಹೆಸರನ್ನು ಹೊತ್ತಿರುವ ವಾಷಿಂಗ್‌ಟನ್‌ಗೆ, ಶ್ರೀ ಮೆಟ್‌ಗುಡ್‌ರವರ ಕುಟುಂಬದೊಮ್ದಿಗೆ ಹೋದೆವು. ವಾಟರ್ ಗೇಟ್ ಹೋಟೆಲ್‌ನಲ್ಲಿ ತಂಗಿದಾಗ, ವಾಟರ್‍ಗೇಟ್ ಪ್ರಕರಣ, ಅಂತಿಮವಾಗಿ ಅಧ್ಯಕ್ಷ ನಿಕ್ಸನ್ ರಾಜಿನಾಮೆ ಕೊಡಬೇಕಾದ ಪ್ರಸಂಗ, ಎಲ್ಲವನ್ನೂ ಮೆಲುಕು ಹಾಕುತ್ತಾ ನಿದ್ದೆ ಹೋದೆ. ತುಂಬಾ ಸುಂದರವಾದ ನಗರ, ಕರಿಯರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಸಂಜೆಯ ಸಮಯದಲ್ಲಿ ಒಬ್ಬೊಬ್ಬರೆ ಕಾಲುಹಾದಿಯಲ್ಲಿ ತಿ‌ಉಗಾಡುವುದು ಸುರಕ್ಷಿತವಲ್ಲವೆಂದು, ಎಲ್ಲರೂ ಪದೇ ಪದೇ ಹೇಳುತ್ತಿದ್ದರು. ಎಲ್ಲಾ ದೊಡ್ಡ ನಗರಗಳ ಹಣೆಬರಹಕ್ಕಿಂತ, ಇದು ಹೆಚ್ಚು ಕೆಟ್ಟಿದೆ. ಚೂರಿ ತೋರಿಸುವ, ಸಾಮಾನುಗಳನ್ನು ಕಸಿದುಕೊಂಡು ಹೋಗುವ ಅಡ್ಡಗತ್ಟಿ ಹಣ ವಸೂಲು ಮಾಡುವ ಪ್ರಕರಣಗಳು ವಿಪರೀತ. ರಾಷ್ಟ್ರದ ರಾಜಧಾನಿ ಇಂತಹ ಕಪ್ಪು ಹಣೆಪಟ್ಟಿಯನ್ನು ಹಚ್ಚಿಕೊಂಡಿತ್ತು. +***** +ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […] +ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […] +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_743.txt b/Kannada Sahitya/article_743.txt new file mode 100644 index 0000000000000000000000000000000000000000..77ec150809e59c5093af54db749e193e2f2a7cb2 --- /dev/null +++ b/Kannada Sahitya/article_743.txt @@ -0,0 +1,74 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. ಮೇಲಿನ ಜಾಗ ಕೂಡ ವಿಸ್ತಾರವಾದುದಲ್ಲ. ನಾಯಕರ ಒಂದೇ ಒಂದು ಭಾರೀ ಮನೆ. ಅವರ ಆಳು ಕಾಳುಗಳ ಒಂದೆರಡು ಮನೆಗಳು. ಒಂದು ಈಜು ಕೊಳ. ಟೆನ್ನಿಸ್ ಆಟದ ಬಯಲು. ಕಾರಿನ ಶೆಡ್ಡು ಇತ್ಯಾದಿ. ಕೆಳಗಿನಿಂದ ಮೇಲಕ್ಕೆ ಸುತ್ತಿಕೊಂಡು ಹೋಗುವ ಒಂದು ಟಾರು ರಸ್ತೆ. ಪ್ರಕೃತಿಯ ವೈಚಿತ್ರ್ಯ ಅನ್ನೋ ಹಾಗೆ ಈ ನಾಯಕರ ಬೆಟ್ಟ ಕಾಣುತ್ತಿತ್ತು. ಬೆಟ್ಟದ ತುದಿಯಲ್ಲಷ್ಟೇ ಒಂದೆರಡು ಮರಗಳಿದ್ದವು. ಕೆಳಗಿನಿಂದ ಮೇಲಿನವರೆಗೆ ಸಪೂರಾಗುತ್ತ ಹೋದ ಕುತುಬ್‌ಮಿನಾರಿನಂತೆ ಇದರ ಮೈ ಗೋಚರಿಸುತ್ತಿತ್ತು. ಇದರ ಮೇಲೆಲ್ಲ ಗಿಡಗಳು ಪೊದೆಗಳು ಹುಲ್ಲು ಬೆಳೆದಿತ್ತು. ದೂರದಿಂದ ಈ ಬೆಟ್ಟ ಹಚ್ಚಿಟ್ಟ ಹಸಿರು ಮೇಣದ ಬತ್ತಿಯ ಹಾಗೆ ಕಾಣುತ್ತಿತ್ತು. ಮೇಲಿನ ನಾಯಕರ ಮಹಡಿ ಮನೆ ಉರಿಯುತ್ತಿರುವ ಜ್ವಾಲೆಯಂತೆ ತೋರುತ್ತಿತ್ತು. +ಸುತ್ತಮುತ್ತಲಿನ ಬೆಟ್ಟ ಗುಡ್ಡಗಳು ಮಲಗಿರುವ ಮದ್ದಾನೆಯಂತೆ. ಕಾಡು ಕೋಣಗಳಂತೆ ಬಿದ್ದುಕೊಂಡಿರಲು ಇದೊಂದೇ ಹೀಗೆ ಧುತ್ತೆಂದು ಎದ್ದು ನಿಂತದ್ದು ದೇಶದ ಪ್ರಕೃತಿಪ್ರಿಯರಿಗೆ, ಪ್ರವಾಸಿಗಳಿಗೆ ಒಂದು ಆಕರ್ಷಣೆಯೇ ಆಗಿತ್ತು. ಆಕಾಶವನ್ನು ತಿವಿಯುವಂತೆ ನಿಂತ ಈ ಬೆಟ್ಟವನ್ನು ನೋಡಲು, ಅದರ ಸೊಬಗನ್ನು ಸವಿಯಲು ಸಾಕಷ್ಟು ಜನ ಬಂದು ಹೋಗುತ್ತಿದ್ದರು. ಈ ಬೆಟ್ಟದ ಸನಿಹದಲ್ಲೇ ಮೂರು ನಾಲ್ಕು ಕಡೆಗಳಲ್ಲಿ ಸರ್ಕಾರ ವೀಕ್ಷಕ ತಾಣಗಳನ್ನು ನಿರ್ಮಿಸಿ ಜನ ಇದನ್ನು ನೋಡುವಂತೆ ಅನುಕೂಲ ಕಲ್ಪಿಸಿಕೊಟ್ಟಿತ್ತು. +ಹಾಗೆಂದು ಈ ಬೆಟ್ಟದ ಮೇಲೆ ಹೋಗಲು ಬೇರೆ ಯಾರಿಗೂ ಅವಕಾಶವಿರಲಿಲ್ಲ. ಬೆಟ್ಟದ ಬುಡದಲ್ಲಿಯೇ ಒಂದು ಕಬ್ಬಿಣದ ಗೇಟು ರಸ್ತೆಗೆ ಅಡ್ಡಲಾಗಿ ಕಾಣುತ್ತಿತ್ತು. ಈ ಗೇಟಿನ ಬಳಿ ಸದಾ ಕಾವಲು ಕಾಯುವ ಆರಕ್ಷಕರು ಕೈಯಲ್ಲಿ ಬಂದೂಕು ಹಿಡಿದು ಗಸ್ತು ತಿರುಗುತ್ತಿದ್ದರು. ನಾಯಕರು ನಾಯಕರ ಪರಿವಾರ ಅವರಿಗೆ ಬೇಕಾದವರಿಗಷ್ಟೇ ಈ ಗೇಟಿನ ಮೂಲಕ ಒಳಗೆ ಹೋಗಲು ಅಪ್ಪಣೆ ದೊರೆಯುತ್ತಿತ್ತು. ಹೀಗಾಗಿ ಈ ಬೆಟ್ಟದ ಮೇಲಿನಿಂದ ಸುತ್ತಲಿನ ದೃಶ್ಯ ಹೇಗೆ ಕಾಣುತ್ತದೆಂದಾಗಲಿ, ಆ ಬೆಟ್ಟದ ಮೇಲೆ ಏನೇನಿದೆ ಎಂಬುದಾಗಲಿ ಹೆಚ್ಚು ಜನರಿಗೆ ತಿಳಿದಿರಲಿಲ್ಲ. +ಈ ಬೆಟ್ಟ ಈ ಸ್ಥಳದಲ್ಲಿ ಶತಮಾನಗಳಿಂದ ಇತ್ತು ಎಂಬ ಬಗ್ಗೆ ಸಂದೇಹವಿಲ್ಲ. ಹಿಂದೆ, ಬಹಳ ಹಿಂದೆ ಈ ಬೆಟ್ಟದ ಮೇಲೆ ವಿಜಯನಗರದ ಅರಸರು ವಿಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡಿದ್ದರಂತೆ. ಇದಕ್ಕೆ ಆಧಾರವಾಗಿ ಒಂದೆರಡು ಶಿಲಾಶಾಸನಗಳು ಈಗಲೂ ಇಲ್ಲಿ ಗಿಡ ಪೊದೆಗಳ ಮರೆಯಲ್ಲಿ ನಿಂತಿವೆ ಅನ್ನುತ್ತಾರೆ. ವಿಜಯನಗರದ ಅರಸರ ನಂತರ ಮೊನ್ನೆ ಮೊನ್ನೆ ಟಿಪ್ಪು ಸುಲ್ತಾನ ಕೂಡ ಇಲ್ಲಿ ಬಂದು ತಂಗುತ್ತಿದ್ದ ಅನ್ನುವುದಕ್ಕೆ ಆಧಾರವಾಗಿ ಮೂಲೆಯಲ್ಲಿ ಒಂದು ನಮಾಜಿನ ಮಂಟಪವಿರುವುದೇ ಸಾಕ್ಷಿ. ನಂತರ ಬ್ರಿಟಿಷರು ಈ ಗುಡ್ಡವನ್ನೇರಿದರು. ಇದಕ್ಕೆ ಆಧಾರವೆಂದರೆ ಬೆಟ್ಟದ ಮತ್ತೊಂದು ಮೂಲೆಯಲ್ಲಿರುವ ಶಿಲುಬೆ. ಇವರೆಲ್ಲರ ಕತೆ ಮುಗಿದ ಮೇಲೆ ಈ ಬೆಟ್ಟವನ್ನೇರಿದವರು ನಮ್ಮ ನಾಯಕರು. +ರಾಜಧಾನಿಗಿಂತ ಈ ಬೆಟ್ಟವೇ ಸುರಕ್ಷಿತ ಎಂದು ನಾಯಕರು ನಿರ್ಧರಿಸಿದರು. ಅಲ್ಲದೆ ಜನತೆಯ ಸಾವಿರಾರು ಸಮಸ್ಯೆಗಳನ್ನು ಬಿಡಿಸಲು, ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಜನತೆಯನ್ನು ಕಿತ್ತು ತಿನ್ನುತ್ತಿರುವ ಬಡತನ, ಅಜ್ಞಾನ, ರೋಗ, ಮೌಢ್ಯ, ಶೋಷಣೆ ಇತ್ಯಾದಿಗಳಿಂದ ಜನತೆಯನ್ನು ಪಾರುಮಾಡಲು ಪರಿಹಾರ ಶೋಧಿಸಲು ಇಂತಹ ತಾಣ ಬೇಕೇಬೇಕು ಎಂದು ನಾಯಕರಿಗೆ ಅನಿಸಿದ್ದರಿಂದ ನಾಯಕರು ತಮ್ಮ ವಾಸಕ್ಕೆ ಬೆಟ್ಟವನ್ನು ಆರಿಸಿಕೊಂಡರು. +ಹೀಗಾಗಿ ಕೂಡಲೇ ಈ ಬೆಟ್ಟಕ್ಕೆ ವಾಹನ ರಸ್ತೆಯಾಯಿತು. ಹಿಂದಿನ ಮೆಟ್ಟಿಲು ದಾರಿ ಕುದುರೆ ಏರಿಗಳನ್ನು ನಾಶಮಾಡಿ ಸುಂದರವಾದ ಟಾರುರಸ್ತೆಯನ್ನು ನಿರ್ಮಾಣ ಮಾಡಿದರು. ಸಿಕ್ಕವರೆಲ್ಲ ಒಳಗೆ ಬಂದು ಧಾಂದಲೆ ಮಾಡದಿರಲೆಂದು ಕೆಳಗೆ ಗೇಟು ಇರಿಸಿದರು. ಅದನ್ನು ಕಾಯಲು ಆರಕ್ಷಕ ಪಡೆ ಬಂದಿತು. ನಾಯಕರ ಬೆಟ್ಟವನ್ನು ನಾಯಕರ ಅಧಿಕೃತ ನಿವಾಸವೆಂದು ಸಾರಲಾಯಿತು. ಬೆಟ್ಟದ ಮೇಲಿನ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಬದಲಾವಣೆಗಳಾದವು. ಟಿಪ್ಪು, ಬ್ರಿಟಿಷರು ಮಾಡಿಕೊಂಡಿದ್ದ ಹಿಂದಿನ ವ್ಯವಸ್ಥೆಗಳನ್ನೆಲ್ಲ ಕಿತ್ತುಹಾಕಲಾಯಿತು. ನಾಯಕರು ತಮ್ಮ ಪರಿವಾರದವರೊಡನೆ, ಸ್ನೇಹಿತರೊಡನೆ ಈ ಬೆಟ್ಟದ ಮೇಲಿನ ಬಂಗಲೆಯಲ್ಲಿ ವಾಸಿಸುತ್ತ ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕತೊಡಗಿದರು. +ಈ ಕೆಲಸ ಆರಂಭವಾಗಿ ಕೆಲ ವರ್ಷಗಳಾಗಿವೆ ಅನ್ನುವಾಗ, ಆಗ ಈ ಕದ ಗಾಬರಿಯ ಸುದ್ದಿ ಬಂದಿವೆ. ನಾಯಕರ ಬೆಟ್ಟ ಕುಸಿಯುತ್ತಿದೆ. +ಈ ನಾಯಕರ ಬೆಟ್ಟದ ಕೆಳಗೆ ಒಂದು ಹಳ್ಳಿ ಇದೆ. ಬೆಟ್ಟದ ಹಳ್ಳಿ ಎಂದೇ ಅದರ ಹೆಸರು. ಬೆಟ್ಟದ ಬುಡಕ್ಕೆ ಅಂಟಿಕೊಂಡಂತೆ ಬೆಟ್ಟದ ಸುತ್ತಲೂ ಹತ್ತು ಮನೆಗಳಿವೆ. ಶತಮಾನಗಳಿಂದ ಈ ಹಳ್ಳಿ ಇಲ್ಲಿದೆ ಎಂದು ನಂಬಲು ಕೂಡ ಹಲವು ಆಧಾರಗಳಿವೆ. ವಿಜಯನಗರದ ಅರಸರ ಕಾಲದ ಒಂದು ಕೆರೆ, ಒಂದು ಹಾಳು ಗುಡಿ, ಫಿರಂಗಿಗಳು ಈ ಹಳ್ಳಿಯ ಬಳಿ ದೊರೆಯುತ್ತದೆ. ಈ ಹಳ್ಳಿ ಮನೆಗಳಲ್ಲಿ ವಾಸವಾಗಿರುವ ಜನ ಕೂಡ ತಾವು ಶತಮಾನಗಳಿಂದ ಇಲ್ಲಿ ಇದ್ದುದಾಗಿ ಹೇಳುತ್ತಾರೆ. ನಮ್ಮ ತಾತ ಮುತ್ತಾತ ಕೂಡ ಇಲ್ಲೇ ಇದ್ದು ಸತ್ತದ್ದು ಎನ್ನುತ್ತಾರೆ. +ಈ ಜನ ದರಿದ್ರರಲ್ಲಿ ದರಿದ್ರರು. ಇವರ ಮೈಯಲ್ಲಿ ನಾಲ್ಕು ಬೊಗಸೆ ರಕ್ತ ನಾಲ್ಕು ಕಂಟದಷ್ಟು ಮಾಂಸ ಸಿಕ್ಕರೆ ಹೆಚ್ಚು. ಗಾಳಿಯಲ್ಲಿ ತೇಲಾಡಿಕೊಂಡೇ ಈ ಜನ ಬದುಕುತ್ತಾರೆ. ಹೊಟ್ಟೆಗೆ ಕೂಡ ಇವರು ತಿನ್ನುವುದು ಗಾಳಿಯನ್ನೇ. ಮೈ ತುಂಬ ಬಟ್ಟೆಯನ್ನು ಕಂಡವರಲ್ಲ. ಗಂಡಸರಿಗೆಲ್ಲ ತೊಡೆ ಸಂದಿಯಲ್ಲಿ ತೂಗಾಡುವ ಒಂದೊಂದು ಲಂಗೋಟಿ. ಹೆಂಗಸರಿಗೆ ತುಂಡು ಸೀರೆ. ಮಕ್ಕಳಿಗೆ ಏನೂ ಇಲ್ಲ. ನೀರು ಕಂಡವರಲ್ಲ. ಮೈ ಸದಾ ಕೊಳೆತು ನಾರುತ್ತಿರುತ್ತದೆ. ಕಜ್ಜಿಯೇ ಮೊದಲಾದ ರೋಗಗಳು ಇವರಲ್ಲಿ ಸಾಮಾನ್ಯ. ದೊಡ್ಡವರಲ್ಲಿ ಹಲವರಿಗೆ ದಮ್ಮು, ಕೆಮ್ಮು, ಕ್ಷಯ, ವಾತ, ಪಿತ್ತ, ಮೂಲವ್ಯಾಧಿ, ಕುಷ್ಠ – ಹೀಗೆ ದೊಡ್ಡ ರೋಗಗಳು. ಬೆಟ್ಟದ ಹಳ್ಳಿಗೆ ಆಸ್ಪತ್ರೆ ಇಲ್ಲ. ರಸ್ತೆ ಇಲ್ಲ. ಮೋಟಾರು ಅಲ್ಲಿಗೆ ಬರೋದಿಲ್ಲ. ಹೊರಗಿನವರಿಗೆ ಯಾರಿಗೂ ಇಲ್ಲೊಂದು ಹಳ್ಳಿ ಇದೆ ಅನ್ನುವ ವಿಷಯವೇ ಗೊತ್ತಿಲ್ಲ. +ಹಿಂದೆಲ್ಲಾ ಈ ಹಳ್ಳಿಗೆ ರಾಜಗೌರವ ಇತ್ತಂತೆ. ಹೀಗೆಂದು ಹಳ್ಳಿಯ ಹಿರಿಯ ಫಕೀರಣ್ಣ ಆಗಾಗ್ಗೆ ಹೇಳುವುದುಂಟು. ಅವನ ಅಜ್ಜ ಹೇಳುತ್ತಿದ್ದುದನ್ನು ಈತ ಕನವರಿಸಿಕೊಳ್ಳುತ್ತಾನೆ. ವಿಜಯನಗರದ ಅರಸರು ಹಳ್ಳಿಯ ಜನರಿಗೆ ಪಡಿ ಹಂಚುತ್ತಿದ್ದರಂತೆ. ಬೊಕ್ಕಸದಿಂದ ಹಣ ಕೊಡುತ್ತಿದ್ದರಂತೆ. ಈಗ ಹಾಳುಬಿದ್ದಿರುವ ಕೆರೆಯನ್ನು ವಿಜಯನಗರದ ಮಂತ್ರಿ ಬೊಪ್ಪಣ್ಣ ಕಟ್ಟಿಸಿದ್ದು ಎಂದು ಹೇಳುತ್ತಾರೆ. ನಂತರ ಕೂಡ ಈ ಹಳ್ಳಿಯ ಜನರ ಸ್ಥಿತಿ ಅನುಕೂಲಕರವಾಗಿಯೇ ಇತ್ತಂತೆ. ಬ್ರಿಟಿಷರು ಕೂಡ ಈ ಹಳ್ಳಿಯನ್ನು ಮರೆತಿರಲಿಲ್ಲ. ಈಗ ಮಾತ್ರ ಹಳ್ಳಿಯ ಬಗ್ಗೆ ಯಾರಿಗೂ ಗಮನವಿಲ್ಲ. +ಹಳ್ಳಿ ಮನೆಗಳ ಎದುರು ಗೇಣಗಲ ಜಮೀನಿದೆ. ಈ ಜಮೀನಿನಲ್ಲಿ ಹಳ್ಳಿ ಜನ ನವಣೆ, ರಾಗಿ ಬೆಳೆದುಕೊಳ್ಳುತ್ತಾರೆ. ಕೆರೆ ಹೂಳುಬಿದ್ದಿದೆ. ಬಾವಿಯಲ್ಲಿ ನೀರಿಲ್ಲ. ಬೆಟ್ಟದ ಮೇಲಿನಿಂದ ಬರುವ ನೀರನ್ನೇ ಕುಡಿಯಲು ಈ ಜನ ಉಪಯೋಗಿಸಬೇಕು. +ಜೊತೆಗೆ ಈ ಜನರಿಗೆ ತಲೆತಲಾಂತರದಿಂದ ಬಂದ ಒಂದು ಕೆಲಸವಿದೆ. ಅದು ನಾಯಕರ ಬೆಟ್ಟಕ್ಕೆ ಮಣ್ಣು ಮೆತ್ತುವ ಕೆಲಸ. ಬೆಟ್ಟದ ಹಳ್ಳಿಯ ಹತ್ತು ಮನೆಗಳೂ ಬೆಟ್ಟದ ಬುಡಕ್ಕೆ ಅಂಟಿಕೊಂಡಿದೆ ಎಂದು ಹೇಳಿದೆವಲ್ಲ. ಈ ಮನೆಗಳ ಹಿಂಬದಿಯ ಗೋಡೆಯೇ ನಾಯಕರ ಬೆಟ್ಟದ ಬೆನ್ನು. ಈ ಬೆನ್ನಿಗೆ ಗೋಡೆ ಕುಸಿಯದ ಹಾಗೆ, ಬಿರುಕು ಬಿಡದ ಹಾಗೆ, ಬಿರಿಯದ ಹಾಗೆ, ಹಿಸಿದು ಬೀಳದ ಹಾಗೆ ಈ ಜನ ನೋಡಿಕೊಳ್ಳಬೇಕು. ಹೀಗೇನಾದರೂ ಬೆಟ್ಟದ ಬುಡ ಜರಿದರೆ ಕುಸಿದರೆ ತಮ್ಮ ಹಳ್ಳಿಯೇ ನಾಶವಾಗಿಬಿಡುತ್ತದೆ ಎಂಬುದು ಇವರ ಭೀತಿ. ಇದು ಸತ್ಯವೂ ಹೌದು. ಈ ಜನ ಬೆಟ್ಟದ ಬುಡ ಕುಸಿಯಲು ಅವಕಾಶ ಮಾಡಿಕೊಟ್ಟರೆ ಇಡೀ ಬೆಟ್ಟ ಈ ಹಳ್ಳಿಯ ಮೇಲೆ ಕವಚಿಕೊಳ್ಳುತ್ತದೆ. ಇಡೀ ಹಳ್ಳಿ ನಾಶವಾಗುತ್ತದೆ. ಹಾಗೆಂದೇ ಈ ಜನ ಯಾವ ಕೆಲಸ ಮರೆತರೂ ಬೆಟ್ಟದ ಬುಡಕ್ಕೆ ಮಣ್ಣು ಮೆತ್ತುವ ಕೆಲಸ ಬಿಡುವುದಿಲ್ಲ. +ಕುಡಿಯಲು, ಸ್ನಾನ ಮಾಡಲು, ತಿಕ ತೊಳೆಯಲು ನೀರಿಲ್ಲವಾದರೂ ಮಣ್ಣು ಕಲೆಸಲು ನೀರು ಹೊಂದಿಸಿಕೊಳ್ಳುತ್ತಾರೆ. ಗದ್ದೆಯ ಅಂಟು ಮಣ್ಣನ್ನೇ ಅಗೆದು, ಕಲೆಸಿ, ತುಳಿದು ಉಂಡೆಕಟ್ಟುತ್ತಾರೆ. ಹೀಗೆ ಕಟ್ಟಿದ ಉಂಡೆಗಳನ್ನು ತಂದು ಬೆಟ್ಟದ ಬುಡವನ್ನು ಭದ್ರಪಡಿಸುತ್ತಾರೆ. ಬುಡದ ಗೋಡೆಗೆ ಮೆತ್ತಿ ಮೆತ್ತಿ ಬೆಟ್ಟವನ್ನು ಗಟ್ಟಿಯಾಗಿಸುತ್ತಾರೆ. ಕೈಲಾಗದ ಫಕೀರಣ್ಣ, ಸೊಂಟ ಬಿದ್ದಿರುವ ಮಾರಜ್ಜ, ಪಾರ್ಶ್ವವಾಯು ಪೀಡಿತ ದಾಮಯ್ಯ, ಬಾವಿ ಕಟ್ಟೆ ಮರಿಯ, ಕೆರೆಕೋಡಿ ಹನುಮಜ್ಜ, ಬೇಲಿಗದ್ದೆ ಕಾಳಮ್ಮ, ತುಟಿಹರಕಿ ಕರಿಯಮ್ಮ ಹೀಗೆ ಎಲ್ಲ ಹತ್ತು ಮನೆಗಳವರು ಸದಾ ತಮ್ಮ ನೋಟವನ್ನು ಹಿಂಬದಿಯ ಗೋಡೆಯ ಮೇಲೆ ಇರಿಸಿಕೊಂಡೇ ಬದುಕುತ್ತಾರೆ. ಬೆಳಿಗ್ಗೆ ಎದ್ದಾಗೊಮ್ಮೆ ನಡುನೆತ್ತಿಗೆ ಸೂರ್ಯ ಬಂದಾಗೊಮ್ಮೆ ರಾತ್ರಿ ಮಲಗುವಾಗೊಮ್ಮೆ ಈ ಗೋಡೆಯನ್ನು ಅವರು ನೋಡಿಯೇ ನೋಡುತ್ತಾರೆ. ಹೀಗೆ ನೋಡಬೇಕೆಂದು ಹಿರಿಯರು ಶಾಸ್ತ್ರ ಬೇರೆ ಮಾಡಿದ್ದಾರೆ. ಗೋಡೆ ದೇವರು ಗೋಡೆ ದೇವರು ಈ ಗೋಡೆಯನ್ನವರು ಕರೆಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಈ ಗೋಡೆ ದೇವರಿಗೆ ಸುಣ್ಣ ಹಚ್ಚುತ್ತಾರೆ. ಮಾವಿನ ಎಲೆ, ಚೆಂಡು ಹೂವು ತಂದು ಈ ಗೋಡೆಯನ್ನು ಪೂಜಿಸುತ್ತಾರೆ. ಗೋಡೆ ಗೋಡೆ ದೇವರು ಬಿರುಕುಬಿಟ್ಟರೆ, ಗೋಡೆಯಿಂದ ಮಣ್ಣು ಉದುರಿದರೆ, ಹೆಂಟೆ ಬಿದ್ದರೆ ಗೋಡೆ ದೇವರ ಮೈಯಿಂದ ಕಲ್ಲು ಜರಿದು ಬಿದ್ದರೆ ಅಪಶಕುನ ಎಂದು ನಂಬುತ್ತಾರೆ. ಈ ಗೋಡೆಯನ್ನು ಇಲಿ ಹೆಗ್ಗಣ ಕೊರೆಯಬಾರದು, ಈ ಗೋಡೆಯ ಮೇಲೆ ಗಿಡ ಮರ ಬೆಳೆಯಬಾರದು, ಗೆದ್ದಲು ಹತ್ತಬಾರದು ಎಂಬ ನಂಬಿಕೆ ಬೇರೆ ಇದೆ. ಆಗಾಗ್ಗೆ ಹನ್ನೆರಡು ವರ್ಷಕ್ಕೊಂದು ಬಾರಿ ಈ ಗೋಡೆಗೆ ಸುಣ್ಣ ಬೆಲ್ಲ ಸುಟ್ಟ ಇಟ್ಟಿಗೆ ಇತ್ಯಾದಿ ಅರೆದು ಗಾರೆ ಮಾಡಿ ಹಚ್ಚಬೇಕು ಎಂಬ ನಂಬಿಕೆ ಕೂಡ ಜನರಲ್ಲಿದೆ. ಒಟ್ಟಿನಲ್ಲಿ ಈ ಹತ್ತು ಮನೆಗಳಲ್ಲಿಯ ಜನರ ಜೀವನದಲ್ಲಿ ಈ ನಾಯಕರ ಬೆಟ್ಟದ ಬುಡವನ್ನು ರಕ್ಷಿಸಿ ಇಡುವುದರಲ್ಲೇ ಸವೆದು ಹೋಗುತ್ತದೆ. +ಈ ವಿಷಯ ನಾಯಕರಿಗೆ ಗೊತ್ತಿಲ್ಲವೆಂದಲ್ಲ. ಅವರಿಗೂ ಗೊತ್ತಿದೆಯಂತೆ. ಹೀಗೆಂದು ಈ ಹಳ್ಳಿ ಜನರ ಅಭಿವೃದ್ಧಿಗಾಗಿ ಅವರು ಒಂದು ಯೋಜನೆಯನ್ನು ಸಿದ್ಧಪಡಿಸುತ್ತಿದ್ದಾರಂತೆ, ಈ ಯೋಜನೆ ಸಂಪೂರ್ಣವಾಗಿ ಸಿದ್ಧವಾದಾಗ ಈ ಹಳ್ಳಿ ಜನರ ಕಷ್ಟ ದೂರವಾಗುತ್ತದೆ. ಇವರ ರೋಗರುಜಿನಗಳೆಲ್ಲ ಓಡಿ ಹೋಗುತ್ತವೆ. ಎಲ್ಲರಿಗೂ ಶಿಕ್ಷಣ ದೊರೆಯುತ್ತದೆ. ಎಲ್ಲರಿಗೂ ಸಾಕಷ್ಟು ಹೊಲ ಗದ್ದೆಗಳು ಸಿಗುತ್ತದೆ. ಬಡತನವೆನ್ನುವುದೇ ಇರುವುದಿಲ್ಲ. ಹಳ್ಳಿಯಲ್ಲಿ ಹಾಲು ಹಯನು ಹರಿಯುತ್ತದೆ. ಹಳ್ಳಿಗೆ ಬಸ್ಸು ಬರುತ್ತದೆ. ಆಸ್ಪತ್ರೆ, ನಲ್ಲಿ, ವಿದ್ಯುತ್‌ದೀಪ, ಸಿನೀಮಾ, ರೇಡಿಯೋ ಎಲ್ಲ ಬರುತ್ತದೆ ಎಂದು ನಾಯಕರೇ ಹೇಳಿದ್ದಾರೆ. ಆದರೆ ಈ ಮಾತು ಹೇಳಿ ಆಗಲೇ ಮೂರು “ಐದು ವರ್ಷಗಳು” ಉರುಳಿಹೋಗಿವೆ. ಏನೂ ಆಗಿಲ್ಲ. ಏನೂ ಬಂದಿಲ್ಲ. ಜನ ಗೋಡೆ ದೇವರ ಪೂಜೆ ಮಾಡುತ್ತಾ ಬಡವರಾಗಿ ಮುದುಕರಾಗಿ ಹೋಗುತ್ತಿದ್ದಾರೆ. ಹಳಬರು ಸತ್ತು, ಹೊಸಬರು ಮುದುಕರಾಗುತ್ತಿದ್ದಾರೆ. +ಈ ಸಂದರ್ಭದಲೇ ಕೇಳಿ ಬಂದಿದೆ ಈ ಸುದ್ದಿ – ನಾಯಕರ ಬೆಟ್ಟ ಕುಸಿಯುತ್ತಿದೆಯಂತೆ! +ಈ ಬಗೆಯ ಮಾತು ಹಿಂದೆಂದೂ ಕಿವಿಗೆ ಬಿದ್ದಿರಲಿಲ್ಲ, ಹೀಗೆ ಆದೀತೆಂದು ಕೂಡ ಯಾರೂ ಅಂದುಕೊಂಡಿರಲಿಲ್ಲ. ಈ ಬಗೆಯ ಭಯಾನಕ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡುವುದು ಕೂಡ ಸಾಧ್ಯವಿರಲಿಲ್ಲ. ಆದರೂ ಕೂಡ ಈ ಮಾತು ಕೇಳಿ ಬಂದಿತ್ತು. ನಾಯಕರ ಗುಡ್ಡ ಕುಸಿಯಲಾರಂಭಿಸಿತ್ತು. ಇದಕ್ಕೆ ಕಾರಣ ಕೆರೆಕೋಡಿ ಹನುಮನ ಮಗ ದ್ಯಾವ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು. +ದ್ಯಾವ ಹಳ್ಳಿಯಲ್ಲಿ ಇದ್ದವನಲ್ಲ, ಅವನಿಗೆ ಎಂಟೋ ಒಂಬತ್ತೋ ವರ್ಷವಾಗಿದ್ದಾಗ ಅವನು ಹಳ್ಳಿಯಿಂದ ಓಡಿ ಹೋಗಿದ್ದ. ಕೆರೆಕೋಡಿ ಹನುಮನ ಮಗ ಓಡಿ ಹೋದನೆಂದು ಗೋಳಾಡಲಿಲ್ಲ. ಇಲ್ಲಿ ಸುಖವಾಗಿದ್ದರೆ ಮಗ ಓಡಿ ಹೋಗಿ ಏನು ಕಷ್ಟ ಅನುಭವಿಸಿದ್ದಾನೋ ಆತಂಕಪಡಬಹುದು. ಆದರೆ ಇಲ್ಲಿ ನಿತ್ಯ ನರಕ, ಓಡಿ ಹೋದ ಕಡೆಯಲ್ಲಾದರೂ ಅವರು ಸುಖವಾಗಿ ಇರಲಿ ಎಂದು ದ್ಯಾವ ಗೋಡೆ ದೇವರಿಗೆ ಕೈ ಮುಗಿದ. +ಹೀಗೆ ಓಡಿ ಹೋದ ದ್ಯಾವ ಅಷ್ಟು ಎತ್ತರಕ್ಕೆ ಬೆಳೆದಾಗ ತಿರುಗಿ ಬಂದ. ತುಟಿ ಮೇಲೆ ಚಿಗುರು ಮೀಸೆ. ಕಣ್ಣಿನಲ್ಲಿ ಹೊಳಪು, ತೋಳಿನಲ್ಲಿ ಪುಟಿದೇಳುವ ಮಾಂಸಖಂಡ, ಒಳ್ಳೆಯ ಅಂಗಿ ಪಂಚೆ, ಕಾಲಲ್ಲಿ ಮೆಟ್ಟು, ದ್ಯಾವನನ್ನು ನೋಡಿ ಹಳ್ಳಿ ಮಂದಿಗೆಲ್ಲ ಸಂತಸ ಸಂಭ್ರಮ. +ದ್ಯಾವ ಬಂದವನೇ ಮನೆ ಮನೆಗೆ ಹೋಗಿಬಂದ. ಜಗಲಿಯ ಮೇಲೆ ಕುಳಿತು ಫಕೀರಜ್ಜ, ಮಾರಣ್ಣ, ದಾಮಯ್ಯ, ಮರಿಯ, ಕಾಳಮ್ಮ, ಕರಿಯಮ್ಮರ ಹತ್ತಿರ ಮಾತನಾಡಿದ. ಕಜ್ಜಿ ಹತ್ತಿದ ಮಕ್ಕಳನ್ನು ಮಾತನಾಡಿಸಿದ. ರೋಗ ಪೀಡಿತರ ಬಳಿ ಹೋಗಿ ಕುಳಿತು ಕ್ಷೇಮ ಸಮಾಚಾರ ಕೇಳಿದ. ಹಿಂದಿನ ಅದೇನನ್ನೊ ನೆನಪಿಸಿಕೊಂಡವನ ಹಾಗೆ ಮನೆಗಳ ಒಳಹೊಕ್ಕು ಗೋಡೆಯ ಎದುರು ನಿಂತು ನೋಡಿದ. ಆ ಜನ ಬೆದರಿಕಂಗಾಲಾಗುವಂತೆ ಒಂದು ಪ್ರಶ್ನೆ ಹೇಳಿದ – “ಇದೇನು? ಈ ಗೋಡೆಗೆ ಮಣ್ಣು ಮೆತ್ತಿ ನೀವೇಕೆ ಭದ್ರಪಡಿಸಬೇಕು? ಇದನ್ನು ದೇವರೆಂದು ಏಕೆ ಪೂಜೆ ಮಾಡಬೇಕು?” ಜನ ಹೆದರಿದರು. “ಹೀಗೆ ಕೇಳಲುಂಟೆ ಮಗ?” ಎಂದು ಪ್ರಶ್ನಿಸಿದರು. ಇಲ್ಲ, ಇಲ್ಲ, ಇದರಲ್ಲಿ ಬೇರೆ ಏನೋ ಕರಾಮತ್ತಿದೆ ಎಂದು ತಲೆ ಕೊಡವಿಕೊಂಡು ಹೊರಟ. ಹೊರಟವ ಮತ್ತೆ ಆ ರಾತ್ರಿ ಹಳ್ಳಿಯಿಂದ ಕಾಣೆಯಾದ. ಹೀಗ ಕಾಣೆಯಾದವನು ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು ಮೂರನೇ ದಿನ. ಈ ಬಾರಿ ದ್ಯಾವ ವ್ಯಗ್ರನಾಗಿದ್ದ, ಉಗ್ರನಾಗಿದ್ದ. ಹಳ್ಳಿಗರ ಮೋರೆ ಮೂತಿ ನೋಡದೆ ಬೈಯುತ್ತಿದ್ದ, ಹಳಿಯುತ್ತಿದ್ದ. ಆ ರಾತ್ರಿ ಹಳ್ಳಿಯ ಎಲ್ಲರೂ ತನ್ನ ಮನೆ ಅಂಗಳದಲ್ಲಿ ನೆರೆಯಬೇಕೆಂದು ಹೇಳಿ ಕಳುಹಿಸಿದ. ದ್ಯಾವನ ಮೇಲೆ ಅದೇಕೋ ವಿಶ್ವಾಸ ಇರಿಸಿಕೊಂಡಿದ್ದ ಜನ ಬಂದರು. ಮುದುಕರು, ರೋಗಗ್ರಸ್ತರು, ಉಸುರಿಲ್ಲದವರು ತೆವಳಿಕೊಂಡು, ನಡೆದುಕೊಂಡು ಬಂದರು. ಹೆಂಗಸರು, ಗಂಡಸರು, ಬಾವಿಕಟ್ಟೆ ಕೆರೆದಂಡೆಯನ್ನು ಬಳಸಿಕೊಂಡುಬಂದರು. ಎದೆ ಬತ್ತಿ ಹೋದ ತರುಣಿಯರು, ಸೊಂಟದಲ್ಲಿ ಬಲವಿಲ್ಲದ ತರುಣರು ಬಂದರು. ತಲೆಯ ಮೇಲೆ ಕವಚಿಕೊಂಡ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿರಲು ತನ್ನ ಅಂಗಳದಲ್ಲಿ ನೆರೆದ ತನ್ನವರನ್ನು ಬಿಡಿಬಿಡಿಯಾಗಿ ದಿಟ್ಟಿಸಿ ನೋಡಿದ. ದ್ಯಾವ, ಎದೆಯ ಮೇಲೆ ಕಾಡುಹಂದಿ ದವಡೆಯೂರಿದ ಹಾಗೆ ನೋವಾಗಿ ಎದೆಯೊತ್ತಿಕೊಂಡ, ಕೊಂಚ ಸಾವರಿಸಿಕೊಂಡು ಮಾತನಾಡತೊಡಗಿದ. ವಿಷಯವನ್ನು ಗೋಡೆ ದೇವರಿಂದಲೇ ಆರಂಭಿಸಿದ. +“ಗೋಡೆ ಬಿರುಕು ಬಿಡ್ತು ಅಂದರೆ ಹೊಲದಾಗಿರೋ ಹಸೀಮಣ್ಣನ್ನು ಒಯ್ದು ಗೋಡೆಗೆ ಮೆತ್ತೀರ. ಆ ಗೋಡೇನ ದೇವ್ರು ಅಂತ ಕರ್‍ದು ದೈವ ಅಂತ ಕರ್ದು ಕೈ ಮುಗೀತೀರ – ಗುಡ್ಡ ಕುಸೀಬಾರ್‍ದು ಅಂತ ಇದೆಲ್ಲಾ ಮಾಡ್ತಿರಾ…. ನಿಮಗೆ ಉಡಾಕೆ ಬಟ್ಟೆ ಇಲ್ಲ…. ಉಣ್ಣಾಕೆ ಕೂಳಿಲ್ಲ…. ಕುಡಿಯಾಕೆ ನೀರಿಲ್ಲ…. ನೀವೆಲ್ಲ ಮನುಷ್ರು ಅನ್ನೋದೆ ನಿಮಗೆ ಮರೆತು ಹೋಗೈತೆ. ನಿಮ್ಮನ್ನೆಲ್ಲ ಈ ದುರವಸ್ಥೆಗೆ ತಳ್ಳಿ ನಿಮ್ಮಿಂದ ಈ ಬೆಟ್ಟಾನ ಭದ್ರಪಡಿಸಿಕೊಂಡು…. ಬುಡ ಘಟ್ಟಿಯಾಗೈತೆ ಅನ್ನೋ ನಂಬಿಕೇಲೆ ಬೆಟ್ಟದ ಮೇಲೆ ನಾಯಕರು ಏನ ಮಾಡ್ತಾವ್ರೆ ಗೊತ್ತ ನಿಮಗೆ…. ಗೊತ್ತ ನಿಮಗೆ….?” +ದ್ಯಾವ ತನ್ನವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಅವರ ಹೃದಯಗಳಲ್ಲಿ ಇಣುಕಿದ. ಪ್ರತಿಯೊಬ್ಬರ ಅಂತಃಕರಣಕ್ಕೆ ಕೈಹಾಕಿದ. +“ಏನು ಹೇಳು ಮಗ…. ಅದೂ ಕೇಳಿಬಿಡುವ ಹೇಳು….” +ಎಂದು ಫಕೀರಣ್ಣ ಕೇಳಿದ. ಉಳಿದವರು ದನಿಗೂಡಿಸಿದರು. +ದ್ಯಾವ ಹೇಳಲಾರಂಭಿಸಿದ, ತಾನು ಮನೆಬಿಟ್ಟು ನಾಯಕರ ಬೆಟ್ಟವನ್ನೇರಲು ಹೋದುದನ್ನು ವಿವರವಾಗಿ ಬಣ್ಣಿಸಲಾರಂಭಿಸಿದ. +ಬೆಟ್ಟದ ಬುಡದಲ್ಲಿಯೇ ಕಬ್ಬಿಣದ ಗೇಟು. ಗೇಟಿನ ಮುಂದೆ ಕಾವಲು ಕಾಯುವ ಆರಕ್ಷಕರು, ಅವರ ಕೈಯಲ್ಲಿ ಬಂದೂಕುಗಳು, ದ್ಯಾವ ಮರದ ಮರೆಯಲ್ಲಿ ನಿಂತು ಕಾದ. ಆರಕ್ಷಕರ ಪಹರೆ ಬಿಗಿಯಾಗಿತ್ತು. ಅವರ ಕಣ್ಣು ತಪ್ಪಿಸಿ ಒಳಗೆ ಹೋಗುವಂತಿಲ್ಲ. ಆದರೂ ಒಳಗೆ ಹೋಗಬೇಕು, ಮೇಲೆ ಹೊಗಿ ನೋಡಬೆಕು ಎಂಬ ಆಸೆ ಇವನಿಗೆ. ಗೇಟಿನ ಮೂಲಕ ಒಳಗೆ ಹೋಗಬೇಕೆಂಬ ಪ್ರಯತ್ನ ಕೈ ಬಿಟ್ಟ. ಗೇಟಿನಿಂದ ಕೊಂಚ ದೂರ ಸರಿದ. ಕಡಿದಾದ ಬೆಟ್ಟ ಕೊನೆಯದಾಗಿ ತುಟಿ ಹರಕಿ ಕರಿಯಮ್ಮನ ಮನೆ. ಅವಳ ಮನೆ ಹಿಂಬದಿಗೆ ಹೋದ. ಅಲ್ಲಿಂದ ಬೆಟ್ಟವನ್ನೇರತೊಡಗಿದ. ಗಿಡ ಬಳ್ಳಿ ಹಿಡಿದು ಹತ್ತಿದ. ನಡುವೆ ಕೆಳಗೆ ಜಾರಿಬಿದ್ದ. ಮಂಡಿ, ಕಾಲು ತರಚಿಕೊಂಡು ರಕ್ತ ತೊಟ್ಟಿಕ್ಕಿತು. ಆದರೂ ಹತ್ತಿದ. ಹಟ ಬಿಡಲಿಲ್ಲ. ಅರ್ಧ ಬೆಟ್ಟವನ್ನೇರಿದಾಗ ಸುತ್ತಿಕೊಂಡು ಮೇಲೇರುವ ಟಾರು ರಸ್ತೆ ಸಿಕ್ಕಿತು, ಈ ರಸ್ತೆ ಹಿಡಿದು ಸಾಗಿದ ಮೇಲೆ. +ಸ್ವರ್ಗವನ್ನು ಅವನು ನೋಡಿರಲಿಲ್ಲ. ಸ್ವರ್ಗದಲ್ಲಿ ಎಲ್ಲ ಇದೆ ಎಂದು ಕೇಳಿದ್ದ. ಜನ ಹೇಳುವ ಸ್ವರ್ಗ ಇದೇ ಇರಬಹುದು ಅನಿಸಿತು. ಕಣ್ಣು ಕುಕ್ಕುವ ಬಣ್ಣ ಬಣ್ಣದ ದೀಪಗಳು ಬಗೆ ಬಗೆಯ ಗಿಡಗಳಲ್ಲಿ ಬಣ್ಣದ ಅರಳಿದ ಹೂವುಗಳು, ಎಲ್ಲೆಲ್ಲೂ ಹೂದೋಟಗಳು, ಚಿಮ್ಮುವ ಕಾರಂಜಿಗಳು, ಲತಾಮಂಟಪಗಳು, ಮರಗಳಿಗೆ ತೂಗುಬಿದ್ದ ಉಯ್ಯಾಲೆಗಳು. +ದ್ಯಾವ ಕದ್ದು ನೋಡುತ್ತ ಸಾಗಿದ. ನಾಯಕ ಪರಿವಾರ ಮಕ್ಕಳು, ಸ್ನೇಹಿತರು, ಬಳಗದವರು, ಬೆಟ್ಟದಲ್ಲಿ ಎಲ್ಲೆಲ್ಲೂ ಅವರೆ. ಈಜುಕೊಳದಲ್ಲಿ ಅರೆನಗ್ನರಾಗಿ ಈಜುತ್ತಿರುವ ತರುಣಿಯರು, ಅವರಿಗೆ ತೆಕ್ಕೆಬಿದ್ದಿರುವ ಗಂಡಸರು. +ಆಟದ ಮೈದಾನದಲ್ಲಿ ಕೇಕೆ ಹಾಕುತ್ತ ಆಡುತ್ತಿರುವ ಜನ. +ಕ್ಲಬ್ಬಿನಲ್ಲಿ ಒಳಾಂಗಣ ಕ್ರೀಡೆಯಲ್ಲಿ ಮಗ್ನರಾಗಿರುವವರು. +ಸಣ್ಣ ಚಲನಚಿತ್ರ ಮಂದಿರದಲ್ಲಿ ಚಿತ್ರಾಸಕ್ತರು. +ಬಂಗಲೆಯಲ್ಲಿ ನಾಯಕರ ದರ್ಶನ. ನೆಲಕ್ಕೆ ಹಾಸಿದ ಅಮೃತಶಿಲೆಯ ಕಲ್ಲುಗಳು. ಗೋಡೆಗೆ ಇಳಿಬಿದ್ದಿರುವ ರೇಶಿಮೆಯ ಪರದೆಗಳೂ. ಗಾಳಿಯಲ್ಲಿ ತೇಲುತ್ತಿರುವ ಸುಗಂಧ, ಮಂಚದ ಮೇಲೆ ಮಲ್ಲಿಗೆಯ ರಾಶಿ, ಅಕ್ಕಪಕ್ಕದಲ್ಲಿ ಪೂರ್ಣ ನಗ್ನರಾಗಿರುವ ಮೈಕೈ ತುಂಬಿಕೊಂಡಿರುವ ಹುಡುಗಿಯರು, ನಡುವೆ ನಾಯಕರು: ಮುಂದೆ ಕಾಲು ಮೇಲೆತ್ತಿಕೊಂಡು ಮಲಗಿರುವ ಕೋಳಿ, ಪುಕ್ಕ ತೆಗೆದು ಮಸಾಲೆ ಹಾಕಿ ಬೇಯಿಸಿದ್ದರಿಂದ ಇನ್ನೂ ಹಬೆಯಾಡುತ್ತಿದೆ. ಕೋಳಿಯ ಮಗ್ಗುಲಲ್ಲಿ ನೊರೆ ಕಾರುತ್ತಿರುವ ತುಂಬಿದ ಗಾಜಿನ ಲೋಟ. ನಾಯಕರು ಹುಡುಗಿಯರನ್ನು ಅಪ್ಪಿ ಹಿಸುಕಿ ನಗುತ್ತಿದ್ದಾರೆ. ಕೋಳಿಯ ಎಳೆ ಮಾಂಸವನ್ನು ಒಂದು ಬಾರಿ ಕಿತ್ತು ತಿನ್ನುತ್ತಾರೆ. ಹಾಗೆ ನೊರೆಗೆ ಬಾಯಿ ಹಾಕುತ್ತಾರೆ. ಮತ್ತೆ ಹುಡುಗಿಯೊಂದನ್ನು ಹತ್ತಿರ ಎಳೆದುಕೊಳ್ಳುತ್ತಾರೆ. +ದ್ಯಾವ ನೋಡಿದ. ಕದ್ದು ನೋಡಿದ. +ಇಲ್ಲಿ ನಾಯಕರು. +ಅಲ್ಲಿ ನಾಯಕರ ಹೆಂಡತಿ. +ಮತ್ತೊಂದು ಕಡೆ ನಾಯಕರ ಮಗಳು. +ಇನ್ನೊಂದು ಕಡೆ ನಾಯಕರ ಮಗ. +ಮಗದೊಂದು ಕಡೆ ನಾಯಕರ ಪರಿವಾರ, ಬಳಗ! +ನಾಯಕರ ಬೆಟ್ಟದಲ್ಲೆಲ್ಲಾ ಮೋಜು, ಮಜ. ಸುಖದ ತೇಗು. ಸಂತಸದ ಹೂಂಕಾರ. ಆನಂದದ ನರಳಾಟ. ತೃಪ್ತಿಯ ಏದುಸಿರು. ವಿವಿಧ ಬಗೆಯ ಹೂಂಕಾರಗಳು ತ್ಕಾರಗಳು. +“ಅಯ್ಯೋ ನನ್ನ ಬಡಪಾಯಿ ಜನರೆ…. ನೀವಿಲ್ಲಿ ಬೆಟ್ಟದ ಬುಡಕ್ಕೆ ಮಣ್ಣು ಮೆತ್ತಿ ಬೆಟ್ಟಾನ ಗಟ್ಟಿ ಮಾಡ್ತಿದೀರ…. ಅಲ್ಲಿ ನಾಯಕರು ಅವರ ಬಳಗ ಅವರ ಪರಿವಾರ ಅವರ ಸ್ನೇಹಿತರು ಏನು ಮಾಡ್ತಿದಾರೆ ನೋಡಿ…. ನೋಡಿ….” +ದ್ಯಾವ ಕೂಗಿ ಹೇಳಿದ. ತನ್ನ ತಲೆಗೂದಲನ್ನು ಕಿತ್ತುಕೊಂಡ. +ಫಕೀರಣ್ಣ ನಡುವೆ ಬಾಯಿ ಹಾಕಿದ. +“ದ್ಯಾವ…. ಮಗಾ…. ನಮಗೋಸ್ಕರ ಏನೋ ಮಾಡ್ತೀವಿ ಅಂತಾನೆ ನಾಯಕರು ಹೇಳ್ತವ್ರೆ….” +“ಹೇಳಿದ್ದು ಯಾವಾಗ…. ಎಷ್ಟೋರ್ಷ ಆಯಿತು…. ಮೂರು ಐದು ವರ್ಷ….” ದ್ಯಾವ ನಕ್ಕ. ವ್ಯಂಗ್ಯವಾಗಿ ನಕ್ಕ. +“ಇಂತಹ ಐದು ವರ್ಷಗಳು ಮೂರಲ್ಲ…. ಆರು ಕಳೆದುಹೋದರು ಅವರು ನಿಮಗಾಗಿ ಏನೂ ಮಾಡೋದಿಲ್ಲ…. ನೆನಪಿರಲಿ – ನೀವು ಎಲ್ಲೀ ತನಕ ಬುಡಕ್ಕೆ ಮಣ್ಣು +ಮೆತ್ತಿ ನಾಯಕರ ಬೆಟ್ಟಾನ ಭದ್ರವಾಗಿ ಕಾಪಾಡ್ತಾ ಇರ್ತಿರೋ ಅಲ್ಲಿ ತನಕ…. ನಾಯಕರು ಅಲ್ಲಿ ಸುಖವಾಗಿರ್ತಾರೆ…. ನೀವಿಲ್ಲಿ ಹೀಗೆ ಈವತ್ತಿನ ಹಾಗೇ ಊಟ ಬಟ್ಟೆಗೆ ಗತಿ ಇಲ್ದೆ ಸಾಯ್ತಿರತೀರಿ….” +“ಹಾಗಾದ್ರೆ…. ಹಾಗಾದ್ರೆ…. ನಾವು ಏನು ಮಾಡಬೇಕು ಮಗ…. ಅದಾರ ಹೇಳು….” ಥಟ್ಟನೆದ್ದು ನಿಂತ ದ್ಯಾವ. +“ನಾನು ಹೇಳಿದ ಹಾಗೆ ಮಾಡ್ತೀರಾ….” +“ಓ ಹೇಳು ಮಗ…. ಹೇಳು….” +ದ್ಯಾವ ತನ್ನವರೆಲ್ಲರನ್ನು ವಿಶ್ವಾಸದಿಂದ ಪ್ರೀತಿಯಿಂದ ಆತ್ಮೀಯತೆಯಿಂದ ನೋಡುತ್ತ ಹೇಳಲಾರಂಭಿಸಿದ. ಅವರು ಕೇಳುತ್ತ ಕುಳಿತರು. +ಇದಾದ ನಂತರವೇ ಆ ಸುದ್ದಿ ಹೊರಟಿದ್ದು. ನಾಯಕರ ಬೆಟ್ಟ ಕುಸಿಯುತ್ತಿದೆ ಎಂಬ ಸುದ್ದಿ. +ಬೆಟ್ಟದ ಮೇಲೆ ಯುವತಿಯರ ನಡುವೆ ಮೈ ಮರೆತು ಮಲಗಿದ್ದ ನಾಯಕರು ದಡಬಡಿಸಿ ಎದ್ದು ಕಿಟಕಿಯಿಂದ ಹೊರಗೆ ನೋಡುತ್ತಾರೆ. ನಿಜಕ್ಕೂ ಬೆಟ್ಟ ಕುಸಿಯುತ್ತಿದೆ. ದೇವರೇ ದೇವರೇ ಎಂದು ಅವರು ಕಚ್ಚಿಕೊಂಡ ಯುವತಿಯನ್ನು ತಳ್ಳಿ ಬಟ್ಟೆ ಹುಡುಕಿಕೊಂಡು ಹೊರಡುತ್ತಾರೆ. ಅಷ್ಟು ಹೊತ್ತಿಗೆ ಅರಮನೆ ಬಿರುಕು ಬಿಡುತ್ತದೆ. ಈಜುಕೊಳ ಒಡೆಯುತ್ತದೆ. ಟಾರು ಇಬ್ಛಾಗವಾಗುತ್ತದೆ. ನಾಯಕರು ದೇವರೇ ದೇವರೇ ಎಂದು ಕೂಗುತ್ತಾರೆ. ಅವರ ಪರಿವಾರ, ಬಳಗ, ಸ್ನೇಹಿತರು ದನಿಗೂಡಿಸುತ್ತಾರೆ, ದೇವರೆ…. ದೇವ…. ದೇ…. +***** +[೧೯೮೨] +ಕೀಲಿಕರಣ ದೋಶ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_744.txt b/Kannada Sahitya/article_744.txt new file mode 100644 index 0000000000000000000000000000000000000000..572c10b638b1ff5ce414bf08a416d2a990594c33 --- /dev/null +++ b/Kannada Sahitya/article_744.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾಂಬಿನ ಗೋತ್ರ +ದ ಆನೆ ವಿಶೇಷಣದ +ಚೋಟುದ್ದದ ಸೊರಗು ದೇಹ- +ನಾನೂ ಕಿರಿ ಮಗನ ಕಣ್ಣುಗಳ ಬೆರಗೂ +ಏಕಾಗ್ರ ವೀಕ್ಷಿಸಿ ಕಾದಿರಲು +ಊದು ಬತ್ತಿಯ ತುದಿ +ತಾಕಿದ್ದೇ ತಡ +ಫರ್ಲಾಂಗು ಗಾತ್ರ +ಶಬ್ದ +ಹೊಮ್ಮಿ, ಅರ್ಧದಲ್ಲೇ ಮೈಗರೆದು +ಕ್ಷಣಾರ್ಧದಲ್ಲಿ +ಸ್ತಬ್ಧ. +***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. ***** +ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_745.txt b/Kannada Sahitya/article_745.txt new file mode 100644 index 0000000000000000000000000000000000000000..5f2b1be7a7e7b989231d9133be7040f6ade361e6 --- /dev/null +++ b/Kannada Sahitya/article_745.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹನ್ನೆರಡು ಅಂಕಿಗಳ ಮಂಡಲದಲ್ಲಿ +ಹಿಡಿದಿಟ್ಟ +ಹಗಲು ರಾತ್ರಿಗಳು +ಕತ್ತಲೆ ಬೆಳಕು +ನೆನ್ನೆ ನಾಳೆಗಳಿಗೆ +ಅವಕಾಶ ಗೋಲಾಕಾರ +ಸಮಯ ಕಾಲಾತೀತ. +ಡಿಜಿಟಲ್ ಗಡಿಯಾರದಲ್ಲಿ +ಕಾಲಕ್ಕೆ ರೂಪವೇ ಬೇರೆ. +***** +ಹೀಗೆ, ಆಳೆಯ ಮೇಲೆ ಹಾಡು ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ……..ಹಾಡು! ಈಗ ಹಾಳೆಯ ಮೇಲೆ ಹಾಡು – […] +ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […] +ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು ಹಲ್ಲು ಮೊಲೆ ಮೂಗು ಕೈಕಾಲುಗಳಿಗು. ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ. ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ ಮೈಕಡಿದರೆ ಅದಕ್ಕೊಂದು ಕ್ರೀಮು, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_746.txt b/Kannada Sahitya/article_746.txt new file mode 100644 index 0000000000000000000000000000000000000000..e80186a75c34d344c3a070fa22d37a1c6260186a --- /dev/null +++ b/Kannada Sahitya/article_746.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೃಹದಾಕಾರ +ಆದದ್ದನ್ನು +ಅದ್ಭೂತ +ಎನ್ನಬಹುದಲ್ಲವೆ? +***** +ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ ***** +ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. ***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_747.txt b/Kannada Sahitya/article_747.txt new file mode 100644 index 0000000000000000000000000000000000000000..442c85f2ccf917ed0ce38c9b46293aa29bf746c6 --- /dev/null +++ b/Kannada Sahitya/article_747.txt @@ -0,0 +1,100 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕುರಿಗಳು, ಸಾರ್, ಕುರಿಗಳು +ಕುರಿಗಳು, ಸಾರ್, ಕುರಿಗಳು +ಕುರಿಗಳು, ಸಾರ್, ಕುರಿಗಳು: +ಸಾಗಿದ್ದೇ +ಗುರಿಗಳು. +ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ +ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ +ದನಿ ಕುಗ್ಗಿಸಿ, ತಲೆ ತಗ್ಗಿಸಿ +ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು, ನೀವು, +ಕುರಿಗಳು, ಸಾರ್, ಕುರಿಗಳು; +ನಮಗೊ ನೂರು ಗುರಿಗಳು. +ಎಡದಿಕ್ಕಿಗೆ, ಬಲದಿಕ್ಕೆಗೆ, ಒಮ್ಮೆ ದಿಕ್ಕುಪಾಲಾಗಿ, +ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು +ಹೇಗೆ ಹೇಗೋ ಏಗುತಿರುವ, +ಬರೀ ಕಿರುಚಿ ರೇಗುತಿರುವ, +ನೊಣ ಕೂತರೆ ಬಾಗುತಿರುವ, +ತಿನದಿದ್ದರು ತೇಗುತಿರುವ, +ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ +ಅವರು, ಇವರು, ನಾವುಗಳು +ಕುರಿಗಳು, ಸಾರ್, ಕುರಿಗಳು. +ಮಂದೆಯಲ್ಲಿ ಎಲ್ಲವೊಂದೆ ಆದಾಗಲೇ ಸ್ವರ್ಗ ಮುಂದೆ; +ಅದಕಿಲ್ಲವೆ ನಾವುತ್ತರ? +ಮೆದುಳಿನಲ್ಲಿ ತಗ್ಗೆತ್ತರ, +ಹಿರಿದು, ಕಿರಿದು ಮಾಯಿಸಿ, +ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ +ಇಡಿ ಮಂದೆಗೆ ಹಾಯಿಸಿ, +ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ +ತಲೆಬೆಲೆಯ ಸುಧಾರಿಸಿ, +ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ, +ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ, +ಕೆಂಬಣ್ಣವನೊಂದೆ ಪೂಸಿ, +ಅದರ ಬಾಲ ಇದು, ಮತ್ತೆ ಇದರ ಬಾಲ ಅದು ಮೂಸಿ +ನಡೆವ ನಮ್ಮೊಳೆಲ್ಲಿ ಬಿರುಕು? +ನಮ್ಮ ಕಾಯ್ವ ಕುರುಬರು: +ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು, +ಶಾನುಭೋಗ ಗೀಚಿದಕ್ಕೆ ಹೆಬ್ಬೆಟ್ಟನು ಒತ್ತುವವರು, +ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ +ಮೆಚ್ಚಿ, ಮಸೆದ ಮಚ್ಚ ಹಿರಿದಿ ಕಚಕ್ಕೆಂದು ಕೊಚ್ಚಿ ಕತ್ತ, +ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ +ಕಿಸೆಗೆ ಹಸಿರುನೋಟು ತುರುಕಿ, ನಡಿಗೆ ಬೆಣ್ಣೆ ಹಚ್ಚುವವರು. +ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು +ಮಾತು, ಮಾತು, ಮಾತು, ಮಾತು +ಮಾತುಗಳ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು. +ನಮ್ಮ ಮೈಯ ತುಪ್ಪಟವ ರವಷ್ಟು ಬಿಡದಹಾಗೆ ಸವರಿ +ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು. +ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು, +ಬೆಟ್ಟ ದಾಟಿ ಕಿರುಬ ನುಗ್ಗಿ, ನಮ್ಮೊಳಿಬ್ಬರನ್ನ ಮುಗಿಸಿ +ನಾವು ‘ಬ್ಯಾ, ಬ್ಯಾ’ ಎಂದು ಬಾಯಿಬಾಯಿ ಬಡಿದುಕೊಂಡು +ಬೊಬ್ಬೆ ಹಾಕುತ್ತಿದ್ದರೂ +ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು +ನಮ್ಮ ಕಾಯ್ವ ಗೊಲ್ಲರು. +ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ, +ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ; +ದೀಪದ ದೌಲತ್ತು ಇಲ್ಲ, +ಗಾಳಿಯ ಗಮ್ಮತ್ತು ಇಲ್ಲ. +ಕಿಂಡಿಯಿಂದ ತೆವಳಿಬಂದ ಗಾಳಿ ಕೂಡ ನಮ್ಮದೇನೆ; +ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪು ಸವರಿ +ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆ ವಾಸನೆ, +ಇರಿಯುತಿಹುದು ಮೂಗನೆ! +ಕೊಬ್ಬಿರುವೀ ಮಬ್ಬುನಲಿ, ಮೈ ನಾತದ ಗಬ್ಬಿನಲಿ +ಇದರ ಉಸಿರು ಅದು, ಮತ್ತೆ ಅದರ ಉಸಿರು ಇದು ಮೂಸಿ +ಹೇಸಿದರು ನಿಭಾಯಿಸಿ, +ತಾಳ್ಮೆಯನೆ ದಬಾಯಿಸಿ, +ನಮ್ಮ ನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಂಡೊ, +ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು +ಕುರಿಗಳು, ಸಾರ್, ಕುರಿಗಳು. +ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ! +ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ! +ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ, +ಒಳಗೊಳಗೇ ಜಂಗಾಗಿ +ಕಣ್ಣುಕುಕ್ಕಿ, ಸೊಕ್ಕಿರುವ; ಹೋಗಿಹೋಗಿ ನೆಕ್ಕಿರುವ; +ಕತ್ತನದಕೆ ತಿಕ್ಕಿರುವ, +ನಾವು, ನೀವು, ಅವರು, ಇವರು +ಕುರಿಗಳು, ಸಾರ್, ಕುರಿಗಳು! +ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳದ ಕಿಚ್ಚಿನಲ್ಲಿ +ಮನೆ ಮಾಡಿವೆ ಹುಚ್ಚಿನಲ್ಲಿ +ನಮ್ಮೆಲ್ಲರ ಗುರಿಗಳು! +ಕುರಿಗಳು, ಸಾರ್, ಕುರಿಗಳು….. +***** +ಕೀಲಿಕರಣ: ಶ್ರೀನಿವಾಸ +ನಾನು, ಅವನು, ಮಳೆಯಲ್ಲಿ ನಿಂತಿದ್ದೇವೆ ಮೈಗೆ ಮೈ ಬೆಸೆದ ಅಂತರದಲ್ಲಿ ನೆನೆಯುತ್ತಾ ಅವನ ದೇಶದ ಕಾಡುಗಳನ್ನ. ಆಳೆತ್ತರ ಮರಗಳು ಅಲ್ಲಿ ಟೊಂಗೆ ಟೊಂಗೆಗಳಲ್ಲಿ ಗೂಡು ಕಟ್ಟಿದೆ ಪ್ರೀತಿ. ಮೆಲ್ಲಗೆ ನುಡಿಯುತ್ತಾನೆ, ‘ಅಲ್ಲೂ ಹೀಗೇ ಮಳೆ’. […] +ಒಂದೊಂದು ಸಲ ನನಗೂ ನಿನಗೂ ನಡುವೆ ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು ಕೂತು, ಕೂತಲ್ಲಿಯೇ ನಮ್ಮನ್ನು ಹೂತು ಸುತ್ತಲೂ ಗೋಡೆ ಕಟ್ಟುತ್ತವೆ. ಎದ್ದ ಗೋಡೆಯ ತುಂಬ ಕೆಂಗಣ್ಣು […] +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_748.txt b/Kannada Sahitya/article_748.txt new file mode 100644 index 0000000000000000000000000000000000000000..66f2a8e674048daad9819246b6947b80148d012e --- /dev/null +++ b/Kannada Sahitya/article_748.txt @@ -0,0 +1,84 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು ದಣಿದಂತೆ ಒಮ್ಮೊಮ್ಮೆ ಗಾಳಿಯಲ್ಲಿ ಸುಂಯ್ ಎಂದು ನಿಟ್ಟುಸಿರು ಬಿಡುವ ಅರಳೀಮರ ಮೊದಲು ಸಿಗುತ್ತದೆ. ಮರದ ಕೆಳಗೆ ಎಲ್ಲ ಕಾಲದಲ್ಲಿಯೂ ಏನಾದರೊಂದು ಹಣ್ಣಿನ ಬುಟ್ಟಿ ಇಟ್ಟುಕೊಂಡು ಕುಳಿತುಕೊಳ್ಳುವ ಬೂಬಮ್ಮನ ಹಿಂದಿನಿಂದ ಅಂಗಡಿಗಳ ಸಾಲು ಶುರುವಾಗುತ್ತದೆ. ಮೊದಲಿಗೆ ಒಂದು ಬಳೆ ಅಂಗಡಿ.. ಅದಕ್ಕಂಟಿ ಚಿಕ್ಕ ಚಪ್ಪಲಿ ಅಂಗಡಿ.. ಅದರ ಬೆನ್ನಿಗೆ ಒಂದು ಚಾದಂಗಡಿ.. ನಂತರ ಒಂದು ಸಲೂನು, ಒಂದು ಟೈಲರ್ ಅಂಗಡಿ, ಮೆಡಿಕಲ್ ಶಾಪ್.. ಹೀಗೆ ಎಲ್ಲ ಅಂಗಡಿಗಳೂ ಒಂದಕ್ಕೊಂದು ಎಂತಹದೋ ಆಸರೆಗೆಂಬಂತೆ ಅಂಟಿಕೊಂಡು ನಿಂತಿವೆ. +ನಂತರ ಯಾರೂ ಬಾಡಿಗೆಗೆ ಇರದೆ ಬಾಗಿಲು ಮುಚ್ಚಿ ಜೇಡರಬಲೆ, ಧೂಳು ಅಂಟಿಸಿಕೊಂಡು ಹಳೆಯ ಸ್ಮಾರಕದ ಫೋಸಿನಲ್ಲಿ ನಿಂತ ದೊಡ್ಡ ಹಳೆಯ ಮನೆ.. ಒಳ್ಳೆಯ ರೇಟು ಗಿರಾಕಿ ಬಂದರೆ ಮಾರಿ ಬಿಡುವ ವಿಚಾರವಿದೆ ಎಂದು ಎಲ್ಲರ ಬಳಿ ಟಾಂಟಾಂ ಹೊಡೆಯುತ್ತ ಎಂದಾದರೊಮ್ಮೆ ಅದೃಷ್ಟ ಖುಲಾಯಿಸುತ್ತದೆ ಎಂಬ ಆಸೆಯಲ್ಲಿ ಹಳೆಯ ಲಾಟರಿ ಟಿಕೆಟ್‌ನಂತಿದ್ದ ಅದನ್ನು ಇಟ್ಟುಕೊಂಡು ಡ್ರಾ ಡೇಟ್‌ಗೆ ಕಾಯುತ್ತಿರುವ ಅದರ ಹರಳೆಣ್ಣೆ ಮುಖದ ಮಾಲೀಕ ಬೇರೆ ಊರಿನಲ್ಲಿ ಕೆಲಸದಲ್ಲಿದ್ದ. ಸದಾ ಚಟುವಟಿಕೆಯಿಂದಿರುವ ಆ ಅಂಗಡಿಗಳ ಸಾಲು ಮತ್ತು ತನ್ನೊಳಗೆ ಜಡವಾಗಿರುವ ಕಾಲವನ್ನು ಸ್ತಬ್ಧವಾಗಿ ಹಿಡಿದಿಟ್ಟುಕೊಂಡಂತೆ ನಿಶ್ಚಲವಾಗಿ ನಿಂತಿರುವ ಆ ಹಳೆಯ ಮನೆ.. ನಡುವೆ ಆ ಅಂತರವನ್ನು ತೋರಿಸುವ ಖಾಲಿಜಾಗದಲ್ಲಿ ಎರಡರ ನಡುವೆ ಕೊಂಡಿಯಂತಿದ್ದೂ ಎರಡಕ್ಕೂ ಅಂಟಿಕೊಂಡಿಲ್ಲದ ರೀತಿಯಲ್ಲಿ ದಿವಾಕರನ ಪುಟ್ಟ ಪಾನ್‌ಶಾಪ್ ಉಂಟು. ಕಳೆದ ಐದಾರು ವರ್ಷಗಳಿಂದ ಬೆಂಕಿಪೊಟ್ಟಣದಂತಹ ಆ ಅಂಗಡಿಯಲ್ಲಿ ಇಷ್ಟೇ ಜಾಗದಲ್ಲಿ ನೇರ ನಿಂತು ದಿವಾಕರ ಎಷ್ಟು ಜನರಿಗೆ ಎಷ್ಟು ಪಾನ್ ಕಟ್ಟಿಸಿಕೊಟ್ಟು ಅವರ ಬಾಯ್ದುಟಿಗಳನ್ನು, ಹಲ್ಲುಗಳನ್ನು, ತನ್ಮೂಲಕ ಆ ಕ್ಷಣಕ್ಕೆ ಹೊರಬೀಳುವ ಮಾತುಗಳನ್ನು ಎಷ್ಟರಮಟ್ಟಿಗೆ ಕೆಂಪಾಗಿಸಿದ ಎನ್ನುವುದು ಸರಳವಾಗಿ ಲೆಕ್ಕಕ್ಕೆ ಸಿಗುವಂತಹುದು ಅಲ್ಲ. +ಇಲ್ಲಿ ಪಾನ್‌ಶಾಪ್ ತೆರೆಯುವದಕ್ಕಿಂತ ಮುಂಚೆ ದಿವಾಕರ ಬಸ್‌ಸ್ಯಾಂಡ್ ಹ್ತತಿರ ಅಂಗಡಿಯಿಟ್ಟಿದ್ದ. ಅಲ್ಲಿ ಜನರ ಗಲಾಟೆ, ಗಜಿಬಿಜಿಗಿಂತ ಹೆಚ್ಚಾಗಿ ಸ್ವಲ್ಪ ಮಳೆ ಬಂದರೂ ಜಗತ್ತಿನ ಕೆಸರು ಕೊಳಕು ಇಲ್ಲಿಯೇ ತೇಲಿ ಬಂದಿದೆ ಎನ್ನಿಸುವ ಅಲ್ಲಿಯ ಗಲೀಜು ಹೊಲಸು ವಾಸನೆ ಮಾತ್ರ ಅವನಿಗೆ ಸಹಿಸಲಾಸಾಧ್ಯವಾಗಿತ್ತು. ಅದಕ್ಕೆಂದೆ ಎರಡು ಮೂರು ವರ್ಷಗಳಿಂದ ಆಯಕಟ್ಟಿನ ಜಾಗಕ್ಕಾಗಿ ಹುಡುಕಿ, ಹಂಬಲಿಸಿ ಕಡೆಗೆ ಈ ಜಾಗವನ್ನು ಆರಿಸಿಕೊಂಡಿದ್ದ. ಆ ಹಳೆಮನೆಯಿಂದ ಬಲಕ್ಕಿದ್ದ ಚಿಕ್ಕ ರಸ್ತೆಯಲ್ಲಿ ಸ್ವಲ್ಪ ದೂರ ಹೋದರೆ ಎರಡು ಕೋಣೆಯ ದಿವಾಕರನ ಪುಟ್ಟ ಬಾಡಿಗೆ ಮನೆ ಸಿಗುತ್ತದೆ. ಮನೆಯ ಮುಖ್ಯ ಭಾಗದಲ್ಲಿ ಮೊದಲು ಮನೆಯ ಮಾಲೀಕನೇ ಇದ್ದ. ಅವನಿಗೆ ಬೇರೆಡೆಗೆ ವರ್ಗವಾದ ನಂತರ ಔಟ್‌ಹೌಸ್‌ನಲ್ಲಿದ್ದ ದಿವಾಕರನಿಗೆ ಪ್ರತಿ ತಿಂಗಳ ಬಾಡಿಗೆ ಹಣವನ್ನು ತನ್ನ ಅಕೌಂಟ್‌ಗೆ ಜಮಾ ಮಾಡುವುದರಿಂದ ಹಿಡಿದು ಅಲ್ಲಿದ್ದ ತುಸುವೇ ಜಾಗದಲ್ಲಿ ಹಸಿರಾಗಿದ್ದ ಒಂದಿಷ್ಟು ಗಿಡಗಳ ಆರೈಕೆಯನ್ನೂ ಒಪ್ಪಿಸಿ ನಿರಾಳವಾಗಿಬಿಟ್ಟಿದ್ದ. ಮಾಲೀಕ ಎರಡು ಮೂರು ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದುದು ದಿವಾಕರನಿಗೆ ಏನಂತಹ ವ್ಯತ್ಯಾಸವನ್ನು ಉಂಟು ಮಾಡಿರದಿದ್ರೂ ಬಾಡಿಗೆಯವನಿಗೆ ಮಾತ್ರ ಮನೆಯ ಗೋಡೆಗೆ ಮೊಳೆ ಹೊಡೆಯುವಾಗ ಬಾಗಿಲುಗಳನ್ನು ಧಡ್ ಧಡಲ್ ಎಂದು ಮುಚ್ಚುವಾಗ, ಖಡಲ್ ಎಂದು ಗೇಟು ಹಾಕುವಾಗ ಯಾರದೂ ದರಕಾರ ಇಲ್ಲದೆ ಒಟ್ಟಾರೆ ಮನೆ ಮಾಲೀಕನ ಕಿರಿಕಿರಿ ಇಲ್ಲ ಎಂಬುದೇ ಖುಷಿಯ, ಮಹತ್ವದ ಸಂಗತಿಯಾಗಿತ್ತು. +ಈಗಿದ್ದ ಮನೆ ಮತ್ತು ಈ ಅಂಗಡಿ ಮಾತ್ರ ದಿವಾಕರನಲ್ಲಿ ವಿಚಿತ್ರ ಪರಿಚಿತ ಭಾವ.. ತನ್ನದಲ್ಲದೆ ಇದು ಬೇರೆ ಯಾರದ್ದಾದ್ರೂ ಆಗಿರುತ್ತೆ ಎಂದು ಕಲ್ಪಿಸಿಕೊಳ್ಳಲೇ ಅಸಾಧ್ಯವಾದಂತಹ ಭಾವವನ್ನು ಹುಟ್ಟಿಸಿಬಿಟ್ಟಿತ್ತು. ಈ ಮೊದಲು ಇದ್ದ ಶಾಪೇಟಿ ಗಲ್ಲಿಯ ಒಂದೇ ಕೋಣೆಯ ಮನೆ ಅಥವ ಬಸ್‌ಸ್ಯಾಂಡ್‌ನ ಅಂಗಡಿ ಇಂತಹ ಭಾವ ಹುಟ್ಟಿಸ್ತಾ ಇರಲಿಲ್ಲ. ಕೊಳಕು, ಕಸಕಡ್ಡಿ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ರಸ್ತೆಗಳು, ಸದಾ ಕೀಸರಿಡುವ ಹಂದಿಗಳು, ಹನಿ ನೀರಿಗೆ ಬೋರ್‌ವೆಲ್ ಬಳಿ ಜಗಳ ಕಾಯುವ ಹೆಂಗಸರು… ಕುಡಿದು ಬಂದು ಒದರಾಡುವುದೇ ತಮ್ಮ ಪೌರುಷ ಎಂದು ತಿಳಿದಿರುವ ಗಂಡಸರು… ಸದಾ ಗಲಾಟೆಯಲ್ಲಿ ಇನ್ನಿಲ್ಲದ ಗಡಿಬಿಡಿಯಲ್ಲಿದ್ದಂತೆ ತೋರುವ ಶಾಪೇಟಿಗಲ್ಲಿಯ ಕಿಷ್ಕಿಂದೆಯಂತಹ ರೂಮಿನಲ್ಲಿ ದಿವಾಕರ ರಾತ್ರಿ ಮತ್ತು ಬೆಳಗುಗಳಲ್ಲಿ ಅಶಾಂತನಂತೆ ಇರುತ್ತಿದ್ದ. ಮೊದಲು ಐದಾರು ವರ್ಷ ಬಸ್‌ಸ್ಯಾಂಡ್ ಅಂಗಡಿಯಲ್ಲಿ ಎಲೆಗೆ ಸುಣ್ಣ ಹಚ್ಚುವಾಗ ಮನದಲ್ಲಿ ಮಿಂಚಿ ಮರೆಯಾಗುವ ಬೆಳ್ಳಿಗೆರೆ… ಸಾದಾ ಪಾನ್ ಮೆಲ್ಲುವವನ ಬಾಯಿಯಲ್ಲಿ ಆಗೀಗ ನೀರೂರಿಸುವ ಕಲ್ಕತ್ತಾ ಪಾನ್‌ನಂತೆ ಒಂದು ಒಳ್ಳೆ ಮನೆ, ಅಂಗಡಿಯನ್ನು ಹಿಡಿಯಲು ಬೇಕಾಗುವ ಡಿಪಾಸಿಟ್ ದುಡ್ಡನ್ನು ಹೇಗಾದರೂ ಮಾಡಿ ಉಳಿಸಬೇಕು ಎನ್ನುವುದು. ಹಾಗಂತ ದಿವಾಕರನಿಗೆ ಜನ ಪರಿಚಯದವರಿಲ್ಲ, ಸಾಲ ಕೊಡುವುದಿಲ್ಲ ಎಂದಲ್ಲ.. ಯಾರಿಂದಲಾದ್ರೂ ಸಾಲ ಪಡೆಯುವುದೆಂದರೆ ಅವನಿಗಾಗದು. ನಾಳೆ ಆ ಸಾಲ ಸರಿಯಾದ ಸಮಯಕ್ಕೆ ತೀರಿಸಲಾಗದಿದ್ರೆ ಮುಂದೆ ಅಂತ ನೆನೆದೇ ಮೈ ಜುಮ್ ಎನ್ನುತ್ತವನಿಗೆ. +ದಿವಾಕರನಿಗೆ ಈಗ ಇರುವ ಮನೆಯ ಮಾಲೀಕ ಪರಿಚಯವಾದದ್ದೂ ಪಾನ್‌ಶಾಪ್‌ನಲ್ಲಿಯೇ. ಸ್ವಲ್ಪ ಪರಿಚಯವಾಗುತ್ತಿದ್ದಂತೆ ತನ್ನ ಮನೆ ಸುದ್ದಿಯಿಂದ ಹಿಡಿದು ಆಫೀಸಿನ ಸುದ್ದಿಯವರೆಗೆ ಏನೆಲ್ಲ ಹರಟುವ ಆತನಿಗೆ ಹೆಚ್ಚು ಮಾತಾಡದ, ವೈಯಕ್ತಿಕ ಬದುಕಿನ ಒಂದೇ ಒಂದು ಎಳೆಯನ್ನು ಎಲ್ಲಿಯೂ ಜೋತಾಡಲು ಬಿಟ್ಟುಕೊಡದ ದಿವಾಕರ ಒಗಟಿನಂತೆ ಕಂಡಿದ್ದ. ವಯಸ್ಸಿನಲ್ಲಿ ದೊಡ್ಡವನಾಗಿದ್ದ ಸಲಿಗೆಯಿಂದ ಅವನು ಕೇಳಿದ್ದ ನಾಲ್ಕಾರು ಪ್ರಶ್ನೆಗಳಿಗೆ ದಿವಾಕರ ಹೂಂ, ಊಹೂಂ, ಮತ್ತೆ ಕೆಲವಕ್ಕೆ ಏನೂ ಉತ್ತರಿಸದೇ ನಕ್ಕಂತೆ ಮಾಡಿ ಸುಮ್ಮನಾಗಿದ್ದು ನೋಡಿ ಸುಮಾರಾಗಿ ಹೀಗೆ ಕಲ್ಪಿಸಿಕೊಂಡಿದ್ದ.. ದಿವಾಕರನಿಗೆ ಹತ್ತಿರದವಾರ್‍ಯಾರು ಇಲ್ಲ, ಉತ್ತರಕನ್ನಡ ಜಿಲ್ಲೆಯ ಕಡೆಯ ಯಾವುದೋ ಹಳ್ಳಿಯಿರಬೇಕು, ಮನೆಬಿಟ್ಟು ಇತ್ತ ಕಡೆ ಹೇಗೋ ಸೇರಿಕೊಂಡಿದ್ದಾನೆ, ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲದ ಕುಳ್ಳ ದಿವಾಕರನಿಗೆ ಮದುವೆ ಗಿದುವೆಯಾಗುವ ಮನಸ್ಸಿದ್ದಂತಿಲ್ಲ.. ಹೀಗೇ . +ಹಾಗಂತ ಶಾಪೇಟಿ ಗಲ್ಲಿಯ ಜನರಿಗಾಗಲೀ ಬಸ್‌ಸ್ಟ್ಯಾಂಡ್‌ನ ಅತ್ತ ಇತ್ತ ಇರುವ ಅಂಗಡಿಯವರಿಗಾಗಲೀ ಅಥವ ಈಗಿದ್ದ ಮನೆಯ ಅಂಗಡಿಯ ಸುತ್ತುಮುತ್ತುಲಿನವರಿಗಾಗಲೀ ಬೇರೆಯವರ ಖಾಸಗಿ ಬದುಕಿನ ಕುರಿತು ಕುತೂಹಲವಿಲ್ಲವೆಂದಲ್ಲ. ಬೇರೆಯವರ ವೈಯಕ್ತಿಕ ವಿಷಯಗಳನ್ನು ಕೆದಕಿ, ಎಲ್ಲ ವಿವರಗಳನ್ನು ತಿಳಿದುಕೊಂಡು, ಅವರ ಖಾಸಗಿ ಬದುಕಿನ ಕುರಿತು ಹಾಗಂತೆ ಹೀಗಂತೆ ಎಂದು ತಿರ್ಮಾನ ಕೊಟ್ಟುಬಿಡುವುದರಲ್ಲಿ ಆ ಊರಿನ ಜನರಿಗಿದ್ದ ಕುತೂಹಲ ತಾಳ್ಮೆ ತನ್ನನ್ನು ತಾನು ತಿಳಿಯುವುದರಲ್ಲಿ ಇರಲಿಲ್ಲ. ಆದರೆ ಶಾಪೇಟಿ ಗಲ್ಲಿಯ ಜನರು ಮಾತ್ರ ಒಂಟಿ ರೂಮಿನಲ್ಲಿರುತ್ತಿದ್ದ ಇವನ ಬಗ್ಗೆ ತಲೆಕೆಡಿಸಿಕೊಳ್ಳಲು ಪುರಸೊತ್ತು ಇಲ್ಲದವರಂತೆ, ಇವನೊಂದು ಹುಳ ಎಂಬಂತೆ ಇವನತ್ತ ನಿರ್ಲಕ್ಷ್ಯದ ನೋಟ ಎಸೆದು ಸುಮ್ಮನಾಗಿಬಿಟ್ಟಿದ್ದರು. ಈಗಿದ್ದ ಮನೆಯ ಸುತ್ತುಮುತ್ತಲಿನವರಿಗೆ ಮನೆಯ ಮಾಲೀಕ ದಿವಾಕರನ ಕುರಿತು ಕಲ್ಪಸಿಕೊಂಡು ಹೇಳಿದ್ದ ವಿವರಗಳು ಅವನ ಬಗ್ಗೆ ತಿಳಿದುಕೊಳ್ಳಲು ಸಾಕೆನ್ನಿಸಿಬಿಟ್ಟಿತ್ತು. ಎಷ್ಟೋ ಸಲ ದಿವಾಕರನಿಗೂ ಅನ್ನಿಸಿದ್ದಿದೆ.. ಬೆಳಿಗ್ಗೆಯಿಂದ ರಾತ್ರಿಯವರೆಗೆ ಯಾರ್‍ಯಾರದೋ ಬದುಕಿನ ಏನೇನೋ ವೈಯಕ್ತಿಕ ಸಂಗತಿಗಳನ್ನು ಗಾಳಿಯಲ್ಲಿ ಕೇಳುತ್ತ ತನ್ನೊಳಗೆ ಅಡಗಿಸಿಕೊಳ್ಳುವ, ಎಲ್ಲರನ್ನೂ ವಿಚಾರಿಸಿಕೊಳ್ಳುವ ಹಕ್ಕು ತನಗಿದೆ ಎಂದು ವರ್ತಿಸುವ ಈ ಊರು ತನ್ನ ಬಗ್ಗೆ ಯಾಕೋ ಜಡವಾಗಿದೆಯಲ್ಲ ಎಂದು. ಇದೇನು ಅಸಡ್ಡೆಯೋ… ನಿಸ್ಸೀಮ ನಿರ್ಲಕ್ಷ್ಯವೋ… ಅಥವ ನಿನ್ನೊಳಗಿನದು ನನಗೆಲ್ಲ ಅರಿವಿದೆ, ನೀನು ನನ್ನವನೇ ಎಂಬ ಭಾವವೋ ತಿಳಿಯದೇ ಗೊಂದಲಗೊಳ್ಳುತ್ತಿದ್ದ. ಮೊದಲು ಇಲ್ಲಿಗೆ ಬಂದಾಗ ಇಲ್ಲಿಯ ಸ್ಮಾರಕಗಳ ಕುರಿತು ಇದ್ದ ವ್ಯಾಮೋಹ ಕಡಿಮೆಯಾಗುತ್ತ ಸುತ್ತಲಿನ ಗಲೀಜು, ಎಲ್ಲವನ್ನೂ ಹಾಳುಗೆಡುವುದೇ ತಮ್ಮ ಪರಮ ಕರ್ತವ್ಯ ಎಂಬಂತಿದ್ದ ಜನರು, ಭ್ರಷ್ಟ ಸರ್ಕಾರಿ ಅಧಿಕಾರಿಗಳು, ಪಡ್ಡೆ ಹುಡುಗರು ಹೀಗೆ ಎಲ್ಲದರ ಕುರಿತು ಅವನಲ್ಲಿ ಅಸಹನೆ ಬೆಳೆದಿತ್ತು. ಎರಡು ಮೂರು ವರ್ಷ ಎಲ್ಲದರ ಮೇಲೆ ಒಳಗೊಳಗೇ ಸಿಟ್ಟಾಗ್ತಿದ್ದ. ಆದ್ರೆ ಬರಬರುತ್ತ ಯಾಕೆಂದೇ ತಿಳಿಯದೇ ಅವನು ತನ್ನೊಳಗೇ ಮೆತ್ತಗಾಗಿದ್ದ. ಏನನ್ನೇ ನೋಡಿದರೂ ತಾನಿಲ್ಲಿಯೇ ಇರೋದ್ರಿಂದ ಇದು ತನಗೆ ಸಂಬಂಧಿಸಿದ್ದು ಎಂಬಂತಹದೊಂದು ಭಾವನೆ ಹುಟ್ಟಿ ಕ್ರಮೇಣ ಅಲ್ಲಿಯ ಧೂಳು, ಗಲೀಜು ಎಲ್ಲದರ ಮಧ್ಯೆಯೇ ಆ ಹಳೆಯ ಸ್ಮಾರಕಗಳು, ಊರನ್ನು ಸುತ್ತುವರೆದಿದ್ದ ಶಿಥಿಲಗೊಂಡ ಕೋಟೆ ಗೋಡೆಗಳು ಹಳೆಯ ಬಾವಿಗಳು ಎಲ್ಲ ಆಪ್ತ ಎನ್ನಿಸತೊಡಗಿತ್ತು. ವಿಚಿತ್ರ ಆತ್ಮೀಯತೆಯ ಬಳ್ಳಿಯೊಂದು ತನ್ನೊಳಗೆ ಹುಟ್ಟಿ ಗಾಳಿಗೆ ಅಲ್ಲಾಡಿದಂತೆ ಅನ್ನಿಸಿ ಕೆಲವೊಮ್ಮೆ ಪುಳಕಗೊಳ್ಳುತ್ತಿದ್ದ. +ಬೆಳಿಗ್ಗೆ ಏನಾದರೂ ತಾನೇ ತಯಾರಿಸಿದ ತಿಂಡಿ ತಿಂದು ಮನೆಯ ಕಿಟಕಿ ಬಾಗಿಲು ಮುಚ್ಚಿ ಬೀಗ ಹಾಕಿ ಬಂದ ನಂತರ ಮನೆಯೊಳಗುಳಿಯುವ ಕತ್ತಲು ಮತ್ತು ಅಂಗಡಿ ಮುಚ್ಚಿದ ನಂತರ ಒಳಗುಳಿಯುವ ಕತ್ತಲು ಎರಡೂ ತಾನು ಬಾಗಿಲು ತೆರೆದ ನಂತರ ಒಳ ತೂರಲಿರುವ ಬೆಳಕಿನ ಮೊದಲ ಕಿರಣಕ್ಕಾಗಿಯೇ ಕಾಯ್ದು ಕೂತಂತೆ ಅನ್ನಿಸಿ ಬಾಗಿಲು ತೆರೆದ ನಂತರ ಅರೆಕ್ಷಣ ಸ್ತಬ್ಧನಾಗಿ ನಿಲ್ಲುತ್ತಿದ್ದ. ಇಲ್ಲಿಯವರೆಗೆ ಒಳಗಿದ್ದ ಕತ್ತಲು ’ನಿನ್ನ ವಸ್ತುಗಳೆಲ್ಲ ಜೋಪಾನವಾಗಿವೆ… ಅವ್ಯಾವುದೂ ಒಂಟಿಯಾಗಿರಲಿಲ್ಲ.. ಇಷ್ಟೂ ಹೊತ್ತೂ ನಾವಿದ್ದೆವು ಜತೆಯಾಗಿ’ ಎಂದೆಲ್ಲ ಪಿಸುಗುಟ್ಟಿ ತನ್ನನ್ನು ಸ್ಪರ್ಶಿಸಿದಂತೆ, ಇದೀಗ ಒಳತೂರಿ ಬಂದ ಬೆಳಕಿನ ಕಿರಣ ಎಲ್ಲ ವಸ್ತುಗಳನ್ನು ತಡಕಿ ತಡಕಿ ’ಎಲ್ಲ.. ಎಲ್ಲವೂ ಇದೆ ಹಾಗೆಯೇ ಮೊದಲಿನಂತೆಯೇ… ನಿನ್ನೊಂದಿಗೆ ಇನ್ನು ನಾನಿದ್ದೇನೆ ಎಂದಂತೆ ಭಾಸವಾಗಿ ಒಂದು ಪರಿಚಿತತೆಯ ಜತೆಗಿರುವ ಭಾವವನ್ನು ಹುಟ್ಟಿಸಿದ್ದು ಕತ್ತಲೆಯೋ ಅಥವ ಬೆಳಕಿನ ಕಿರಣವೋ ತಿಳಿಯದೇ ಬಹುಶಃ ಎರಡೂ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತಿದ್ದ. +ಕೌಳಿಗೇಟಿನ ಬಳಿಯಲ್ಲಿ ಅಂಗಡಿ, ಹತ್ತಿರದಲ್ಲಿ ಮನೆ ಹಿಡಿದ ಮೇಲೆ ದಿವಾಕರ ತುಸು ನಿರಾಳವಾಗಿದ್ದ ಎಂದೇ ಹೇಳಬೇಕು. ಸಾಧ್ಯವಾದರೆ ತಾನು ಇದ್ದ ಬಾಡಿಗೆ ಮನೆಯನ್ನೇ ಅಥವ ಇಂತಹದೇ ಚಿಕ್ಕ ಮನೆಯೊಂದನ್ನು ಕೊಳ್ಳಬೇಕು ಎಂಬ ಕನಸಿನ ಗೆರೆಯೊಂದು ಆಗೀಗ ಕಣ್ಣಿವೆಗಳ ಮಧ್ಯೆ ಕಾಮನಬಿಲ್ಲಿನಂತೆ ಮೂಡಿ ಅಷ್ಟೇ ವೇಗವಾಗಿ ಮರೆಯಾಗುತ್ತಿತ್ತು. ತನಗೊಂದು ಸ್ವಂತದ ಮನೆಯಾದ್ರೂ ಯಾಕೆ ಬೇಕು.. ಉಸಿರಿರುವರೆಗೆ ತಾನೆ ಇರಲಿಕ್ಕೊಂದು ಗೂಡು ಬೇಕಾಗಿರುವುದು ತನಗೆ ಬಾಡಿಗೆ ಮನೆಯೇ ಸರಿ ಎಂಬ ವಾಸ್ತವಿಕ ಸತ್ಯವನ್ನು ಮನಸ್ಸು ಎಂದೋ ಒಪ್ಪಿಕೊಂಡಿದ್ದರಿಂದ ಕನಸು ಅರೆಕ್ಷಣ ಮಿಂಚಿ ಮತ್ತೆ ನೀಲಾಕಾಶದಂತೆ ನಿರಭ್ರವಾಗಿರುತ್ತಿತ್ತು ದಿವಾಕರನ ಮನಸ್ಸು. +ಅವನ ವಯಸ್ಸಿನ ಎಲ್ಲರಿಗಿರುವಂತೆ ದಿವಾಕರನಿಗೂ ಕೆಲವೊಂದು ಅಭ್ಯಾಸಗಳಿದ್ದವು. ಮನಸ್ಸು ತೀರಾ ಪ್ರಕ್ಷುಬ್ದವಾಗಿದ್ದ ಗಳಿಗೆಯಲ್ಲಿ ಆ ನೆವದಲ್ಲಿ ಆಗೊಂದು ಈಗೊಂದು ಸಿಗರೇಟು ಎಳೆಯುವುದು ಬೇಸರವಾದಾಗ ರಾತ್ರಿ ಬಿಯರ್ ಕುಡಿಯುವುದು ಹೀಗೆ. ಕೆಲವು ಸಲ ಒಬ್ಬನೇ ಹೋಗುವುದಿತ್ತು, ಒಮ್ಮೊಮ್ಮೆ ಮೆಡಿಕಲ್ ಶಾಪ್‌ನ ರಾಜಾನೊಂದಿಗೆ. ಆದರೆ ಬಿಯರ್ ಗಂಟಲಲ್ಲಿ ಇಳಿದು ನಂತರ ತುಸು ತಲೆಗೇರಿದಾಗಲೂ ರಾಜಾನೊಂದಿಗೆ ವರ್ತಮಾನದ ವಿಚಾರಗಳಲ್ಲದೆ ಭೂತದ ವಿವರಗಳನ್ನು ನುಸುಳದ ಹಾಗೆ ನೋಡಿಕೊಳ್ಳುವಷ್ಟು ಎಚ್ಚರ ದಿವಾಕರನಲ್ಲಿರುತ್ತಿತ್ತು. ಕುಡಿದಾಗ ಏನಾದ್ರೂ ಬಾಯಿ ಬಿಡುತ್ತಾನೆ ಎಂದು ನಿರೀಕ್ಷಿಸಿರುತ್ತಿದ್ದ ರಾಜಾನಿಗೆ ನಿರಾಸೆಯಾಗುತ್ತಿತ್ತು. ಬಿಲ್ ಶೇರ್ ಮಾಡುವುದು ಎಂದು ನಿರ್ಧರಿಸಿಯೇ ಹೋಗಿರುತ್ತಿದ್ದರೂ ದಿವಾಕರ ಕೆಲವೊಮ್ಮೆ ತಾನೇ ಬಿಲ್ ಕೊಡುತ್ತಿದ್ದರಿಂದ ರಾಜಾ ಅವನು ಕರೆದಾಗ ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ. ದಿವಾಕರನಿಗಿದ್ದ ಇನ್ನೊಂದು ಹವ್ಯಾಸವೆಂದರೆ ಆಗೀಗ ಪೆನ್ಸಿಲ್‌ನಿಂದ ರೇಖಾಚಿತ್ರಗಳನ್ನು ಬಿಡಿಸುವುದು. ರಾತ್ರಿ ಬಾಗಿಲು ಮುಚ್ಚಿ ದೀಪ ಆರಿಸಿ ಮಲಗಲು ಸಿದ್ಧನಾದಗ ತಟ್ಟನೆ ತನ್ನ ಮೇಲೆ ಮೌನ ಬೋರಲು ಬಿದ್ದಂತೆ ನಡುರಾತ್ರಿ ಎಲ್ಲಾದ್ರೂ ಎಚ್ಚರವಾದ್ರೆ ಬೇರೆ ಯಾರ ಉಸಿರಾಟವೂ ಕೇಳದೆ ಇಡೀ ಕೋಣೆಯಲ್ಲಿ ತನ್ನೊಬ್ಬನದೇ ಉಸಿರಾಟ ತುಂಬಿಕೊಂಡಂತೆ… ಹುಷಾರಿಲ್ಲದೆ ಮಲಗಿದಾಗ ಹಣೆ ಮೇಲೆ ಯಾರೂ ಬೆರಳಾಡಿಸದೇ, ಯಾರ ಗಂಧಗಾಳೀ ಸ್ಪರ್ಶವೂ ತನ್ನನ್ನ ಆವರಿಸಿಕೊಳ್ಳದೇ, ನೆತ್ತಿಸುಡುವ ಸೂರ್ಯ, ಅಂಗಾಲ ಸುಡುವ ಮರಳಿನ ಮರಳುಗಾಡಿನಲ್ಲಿ ತಾನೊಬ್ಬನೇ ಹನಿನೀರನ್ನು ಅರಸುತ್ತ ನಡೆಯುತ್ತಿರುವಂತೆ… ನಿಂತ ಹಾಗೇ ಭೂಮಿ ಕುಸಿದು ಕಾಲು ಕೆಳ ಹೋಗುತ್ತಿರುವಂತೆ ಏನೋ ಒಂದು ಅಸ್ಪಷ್ಟ ಹೆದರಿಕೆಯೊಂದು ಮೈಯಿಡೀ ಹರಿದಾಡಿದಂತೆ ಹೀಗೆ ಏನೇನೋ ಭ್ರಮೆಗಳು ಕನವರಿಕೆಗಳು ಮೈಮನಸ್ಸನ್ನು ಆವರಿಸಿಕೊಂಡು ಅಲ್ಲಾಡಿಸಿದಾಗ ಏನೋ ಹುಡುಕುವಂತೆ ಅವನ ಪೆನ್ಸಿಲ್‌ನ ಗೆರೆಗಳು ಹಾಳೆಯನ್ನು ತಡಕಾಡುವುದಿತ್ತು. +ಮಧ್ಯಾಹ್ನ ಅಂಗಡಿಯಿಂದ ಬಂದು ಕುಕ್ಕರ್ ಇಟ್ಟುಕೊಂಡು ಒಂದು ಅನ್ನ ಎಂಥದೋ ಸಾರು ಒಟ್ಟಾರೆಯಾಗಿ ರುಚಿಯಾಗಿ ಅಡಿಗೆ ಮಾಡಿಕೊಳ್ಳುವುದರಲ್ಲಿ ದಿವಾಕರ ಪಳಗಿದ್ದ. ಅವನಿಗೆ ಈ ಮನೆ ಹಿಡಿಸಲು ಇನ್ನೊಂದು ಕಾರಣ ಎಂದರೆ ಎರಡೇ ಚಿಕ್ಕ ಕೋಣೆಗಳಿದ್ದರೂ ಅಚ್ಚುಕಟ್ಟಾಗಿ ನೀಟಾಗಿದ್ದದ್ದು. ಬೋರ್‌ವೆಲ್ ಕೂಡ ಇದ್ದಿದ್ದರಿಂದ ನೀರಿನ ಕೊರತೆ ಇರಲಿಲ್ಲ. ಅಡಿಗೆ ಮನೆಯಲ್ಲಿದ್ದ ದೊಡ್ಡ ವಾಷ್ ಬೇಸಿನ್ ಅಂತೂ ದಿನಕ್ಕೊಂದು ಬಾರಿ ಪಾತ್ರೆ ತಿಕ್ಕುವ ಅವನ ಕೆಲಸವನ್ನು ಆರಾಮದಾಯಕ ಮಾಡಿತ್ತು. ಒಂದೇ ಕಿರಿಕಿರಿ ಎಂದರೆ ಬಚ್ಚಲು ಮನೆ ಹಿತ್ತಲಿನಲ್ಲಿದ್ದದ್ದು ಹಾಗೂ ಆ ಹಿತ್ತಲನ್ನು ಮುಂದಿದ್ದ ಬಾಡಿಗೆಯವರೂ ಉಪಯೋಗಿಸುತ್ತಿದ್ದು. ಹಾಗಾಗಿ ಹಿಂದಿನ ಬಾಗಿಲು ಮುಚ್ಚಿ ಕುಳಿತಾಗ ಮಾತ್ರ ಅವನಿಗೆ ಆ ಎರಡು ಕೋಣೆ ಅತ್ಯಂತ ಖಾಸಗಿಯಾಗೂ ಆಪ್ತವಾಗಿಯೂ ತೋರುತ್ತಿತ್ತು. ಇವನು ಅಡಿಗೆ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಜುಲೇಖಾ ಬಾಡಿಗೆಯವರ ಪಾತ್ರೆ ತಿಕ್ಕಲು ಬರುತ್ತಿದ್ದಳು. ಜುಲೇಖಾ ಅಂತ ಪೂರ್ತಿ ಕರೆದರೆ ಕೆಸದವಳನ್ನು ಕರೆದ ಹಾಗೆ ಆಗುವುದಿಲ್ಲ ಎಂಬುದಕ್ಕೋ ಏನೋ ಎಲ್ಲರೂ ಅವಳಿಗೆ ಜಿಲ್ಲಿ ಎಂದೇ ಕರೆಯುತ್ತಿದ್ದರು. ಅವಳೂ ಈ ಹೆಸರಿಗೆ ಎಷ್ಟು ಒಗ್ಗಿಹೋಗಿದ್ದಳೆಂದರೆ ಯಾರಾದ್ರೂ ತಪ್ಪಿ ಬಾಯ್ತುಂಬ ಜುಲೇಖಾ ಎಂದರೆ ಫಕ್ಕನೆ ಓಗುಡುತ್ತಲೇ ಇರಲಿಲ್ಲ. +ಬಾಡಿಗೆಮನೆಯ ಹೆಂಗಸು ಪಾತ್ರೆ ಹೊರಗಿಟ್ಟು ಹಿತ್ತಲು ಬಾಗಿಲು ಜಡಿದು ಟಿವಿಯಲ್ಲಿನ ಮಧ್ಯಾಹ್ನದ ಧಾರಾವಾಹಿಗಳನ್ನು ನೋಡುತ್ತ ಆಕಳಿಸುತ್ತ ಕುಳಿತಳೆಂದ್ರೆ ಜಿಲ್ಲಿ ಕುಡಿಯಲು ನೀರು ಬೇಕೆಂದೋ ಇನ್ನೇನೋ ಬೇಕೆಂದೋ ಒದರಿದರೂ ಅವಳಿಗೆ ಕೇಳಿಸುತ್ತಲೇ ಇರಲಿಲ್ಲ. ಆಗೆಲ್ಲ ಜಿಲ್ಲಿ ದಿವಾಕರನನ್ನೆ ಕೇಳುತ್ತಿದ್ದಳು. ಎಷ್ಟೋ ಬಾರಿ ಮುಚ್ಚಿದ ಬಾಗಿಲಿಗೆ ಒರಗಿ ಕುಳಿತು ಜಿಲ್ಲಿ ದಿವಾಕರನೊಟ್ಟಿಗೆ ಅದೂ ಇದೂ ಮಾತಾಡುವುದಿತ್ತು. +ಅವನಿಗೆ ಪಾತ್ರೆ ಬಟ್ಟೆ ತೊಳೆಯುವ ಕೆಲಸ ಮಾಡಿಕೊಟ್ಟರೆ ಒಂದೇ ಕಡೆ ಎರಡು ಮನೆ ಕೆಲಸವಾದಂತೆ ಆಗಿ ತನ್ನ ಗಳಿಕೆಯೂ ಹೆಚ್ಚುತ್ತದೆ ಎಂದು ಜಿಲ್ಲಿಗನ್ನಿಸಿದ್ರೂ ದಿವಕರನೊಂದಿಗೆ ಕೇಳುವ ಧೈರ್ಯವಾಗಿರಲಿಲ್ಲ. ತನ್ನ ಯಾವುದೇ ಕೆಲಸಕ್ಕೂ ಯಾರದ್ದೂ ಅವಶ್ಯಕತೆಯಿಲ್ಲ, ಎಲ್ಲ ಒಬ್ಬನೇ ನಿಭಾಯಿಸಿಕೊಳ್ಳಬಲ್ಲೆ ಎಂಬಂತಿದ್ದ ದಿವಾಕರ ರೊಕ್ಕ ಬಿಚ್ಚಂಗಿಲ್ಲ ಎನ್ನಿಸಿ ಸುಮ್ಮನಾಗಿದ್ದಳು. +ಆ ದಿನ ಮಾತ್ರ ದಿವಾಕರನಿಗೆ ಕೆಂಡಂದಂತಹ ಜ್ವರ. ಹಿಂದಿನ ರಾತ್ರಿ ಅಂಗಡಿ ಮುಚ್ಚಿ ಎರಡೆರಡು ಬಾರಿ ಕೀಲಿ ಜಗ್ಗಿ ಬೀಗ ಸರಿಯಾಗಿ ಕೂತಿದೆಯೇ, ಇಲ್ಲವೇ ಎಂದು ಪರೀಕ್ಷಿಸಿ ಮನೆಯತ್ತ ಹೊರಟಾಗ ಯಾಕೋ ಮೈಕೈ ಎಲ್ಲ ಭಾರವಾದಂತೆ.. ಮಧ್ಯಾಹ್ನ ಬೆಡ್‌ಶೀಟ್ ಚಾದರ ಎಲ್ಲ ಒಮ್ಮೆಗೇ ತೆಗೆದುಕೊಂಡು ಒಗೆದಿದ್ದಕ್ಕಿರಬೇಕು ಎಂದುಕೊಂಡ. ಇವನು ಒಗೆಯುವಾಗಲೇ ಬಂದಿದ್ದ ಜಿಲ್ಲಿ ಹತ್ತು ರೂಪಾಯಿ ಕೊಟ್ಟಿದ್ರೆ ನಾನೇ ಒಗೆದುಕೊಡ್ತಿದ್ದನಲ್ಲ ಎಂಬ ಭಾವದಲ್ಲಿ “ನೀವೇ ಒಗಿಲಾಕಹತ್ತೀರಲ್ಲ” ಎಂದಿದ್ದಳು. ಅವಳಿಗೆ ಮರುಪ್ರಶ್ನೆ ಹಾಕದೆ ’ಒಂದ್ಹತ್ತು ರೂಪಾಯಿ ಕೊಡ್ತೀನಿ ಒಗೀತೀಯ’ ಎಂದು ಕೇಳಿದ್ರೆ ಈಗ ಮೈಕೈ ನೋವು ಬರ್‍ತಿರಲಿಲ್ಲವೇನೋ ಎಂದು ತನ್ನೊಳಗೇ ನಸುನಗುತ್ತ ಊಟ ಮುಗಿಸಿದವನೇ ಫೋರ್ಟ್‌ಬಲ್ ಟಿವಿಯಲ್ಲಿ ಬರುತ್ತಿದ್ದ ಮುಗಿಯದ ಗೋಳಿನಂತಿದ್ದ ಧಾರಾವಾಹಿ ಹಾಕಿದವನು, ಅದನ್ನೂ ನೋಡಲು ಬೇಸರವಾಗಿ, ಕ್ರೋಸಿನ್ ಇದೆಯೇ ಎಂದು ಹುಡುಕಿ, ತಾನು ತಂದಿಡದೆ ಹೇಗೆ ಸಿಗುತ್ತದೆ ಎಂದುಕೊಂಡು ಕಡೆಗೆ ತುಂಬ ಹೊಚ್ಚಿಕೊಂಡು ಮಲಗಿಬಿಟ್ಟಿದ್ದ. ಮರುದಿನ ಬೆಳಿಗ್ಗೆ ದಿನದಂತೆ ಆರುಘಂಟೆಗೆ ಎಚ್ಚರವಾದ್ರೂ ಯಾಕೋ ಏಳಲಿಕ್ಕೆ ಆಗ್ತಿಲ್ಲ ಎನ್ನಿಸಿ ಕಣ್ಣುಮುಚ್ಚಿ ಮಲಗಿದವನಿಗೆ ಅರೆ ಎಚ್ಚರ ಅರೆ ನಿದ್ದೆಯಲ್ಲಿ ಏನೇನೋ ಕನವರಿಕೆ.. ಕನಸುಗಳು. ಮತ್ತೆ ಯಾವಾಗಲೋ ಪೂರ್ಣ ಎಚ್ಚರವಾದಾಗ ಎದ್ದು ಹೋಗಿ ಹಾಲು ತರಲೂ ಬೇಸರವಾಗಿ ಇದ್ದ ಸ್ವಲ್ಪ ಹಾಲಿನಲ್ಲಿಯೇ ಟೀ ಮಾಡಿಕೊಂಡು ಕುಡಿದು ಮತ್ತೆ ಮಲಗಿಬಿಟ್ಟಿದ್ದ. ಬಿಸಿಲೇರಿದಂತೆ ಜ್ವರ ಏರುತ್ತಲೇ ಹೋಗಿತ್ತು. ಮತ್ತೊಮ್ಮೆ ಎದ್ದು ಟಾಯ್ಲೆಟ್‌ಗೆ ಹೋಗಬೇಕೆಂದುಕೊಂಡವನಿಗೆ ಮೈಯೆಲ್ಲ ನಡುಗುತ್ತಿದೆಯೆನ್ನಿಸಿ ಶಾಲು ಹೊದ್ದುಕೊಂಡೇ ಹೋಗಿದ್ದ. ಅದೇ ಬಂದು ಪಾತ್ರೆ ತಿಕ್ಕುತ್ತಿದ್ದ ಜಿಲ್ಲಿ ಇವನನ್ನು ಇದೇ ಮೊದಲ ಬಾರಿ ಈ ಅವತಾರದಲ್ಲಿ ಕಂಡಿದ್ದೇ “ಹುಷಾರಿಲ್ಲೇನ್ರೀ ಅಣ್ಣಾರೆ” ಅಂತ ತುಸು ಗಾಭರಿಯಿಂದ ಕೇಳಿದ್ದಕ್ಕೂ ಉತ್ತರಿಸುವ ತ್ರಾಣವಿಲ್ಲದಂತೆ ಬರಿದೇ ತಲೆಯಲ್ಲಾಡಿಸಿ ಒಳಹೊಕ್ಕು ಬಾಗಿಲು ಮುಂದೆ ಮಾಡಿ ಮತ್ತೆ ಹೋಗಿ ಮಲಗಿದ್ದ. +ಕೆಲಸ ಮಾಡಿ ಹೊರಟಿದ್ದ ಜಿಲ್ಲಿಗೆ ಏನೆನ್ನಿಸಿತೋ ಏನೋ.. ಮುಚ್ಚಿದ ಬಾಗಿಲು ಸರಿಸಿ ದಿವಾಕರ ರಾತ್ರಿ ತಿಕ್ಕಲಿಕ್ಕಾಗದೆ ವಾಷ್‌ಬೇಸಿನ್‌ನಲ್ಲಿ ಒಟ್ಟಿದ್ದ ಪಾತ್ರೆಗಳೆನ್ನೆಲ್ಲ ಹೊರತಂದು ಇಟ್ಟುಕೊಳ್ಳತೊಡಗಿದಳು. ಆ ಸದ್ದಿಗೆ ಯಾರು ಎಂದು ಕ್ಷೀಣವಾಗಿ ಮಲಗಿದಲ್ಲಿಂದಲೇ ಕೇಳಿದ ದಿವಾಕರನಿಗೆ ’ಜಿಲ್ಲಿ’ ಎಂದಷ್ಟೇ ಉತ್ತರಿಸಿದವಳು ಪಾತ್ರೆಗಳನ್ನೆಲ್ಲ ಲಕಲಕನೆ ತಿಕ್ಕಿ ತೊಳೆದು ಅಡಿಗೆ ಮನೆ ಕಟ್ಟೆ ಒರೆಸಿ ವಾಷ್‌ಬೇಸಿನ್ ತೊಳೆದು ಪಾತ್ರೆಗಳೆನ್ನೆಲ್ಲ ತನಗೆ ತಿಳಿದಂತೆ ಜೋಡಿಸಿಟ್ಟಾಗಿತ್ತು. ಅವನೇನೂ ಅಡಿಗೆ ಮಾಡಿಕೊಂಡಂತಿಲ್ಲ ಎಂದು ಜಿಲ್ಲಿಗೆ ಸುಲಭವಾಗಿ ಹೊಳೆದಿತ್ತು. +ಜ್ವರದ ಮಂಪರಿನಲ್ಲಿದ್ದ ದಿವಾಕರನಿಗೆ ಕಿಟಕಿ ಬಳಿ ಏನೋ ಸದ್ದಾದಂತೆ ಎನ್ನಿಸಿ ಕಣ್ಣು ತೆರೆದು ನೋಡಿದರೆ ಉದ್ದ ಗಾಜಿನ ಲೋಟದಲ್ಲಿ ಟೀ ಜೊತೆ ಬ್ರೆಡ್ ಪುಡಿಕೆ ಇಡುತ್ತಿದ್ದ ಜಿಲ್ಲಿ ಕಾಣಿಸಿದ್ದಳು. ’ಬ್ರೆಡ್ ತಿಂದು ಈ ಚಾ ಕುಡೀರಿ. ಆಮ್ಯಾಲೆ ಈ ಗುಳಿಗಿ ತಗೋರಿ’ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಸೆರಗಿನ ಗಂಟಿನಲ್ಲಿದ್ದ ನಾಲ್ಕು ಮಾತ್ರೆ ಕಿಟಕಿ ಮೇಲಿಟ್ಟು ಅರೆ ಎಚ್ಚರದಲ್ಲಿಯೇ ದಿವಾಕರ ಸಂಕೋಚದಿಂದ ಮತ್ತಷ್ಟು ಮುದುಡಿ ಮಲಗಿದಾಗ ಜಿಲ್ಲಿಗೆ ಮತ್ತೇನು ಮಾಡಲು ತಿಳಿಯದೇ ಹೊರಹೋಗಿಯಾಗಿತ್ತು. ಹಿಂದಿನ ಬಾಗಿಲು ಮುಚ್ಚಿದ ಸದ್ದು ಕೇಳಿದ ನಂತರವೇ ಪೂರ್ಣ ಎಚ್ಚರವಾಗಿ ದಿವಾಕರ ಎದ್ದು ಕುಳಿತಿದ್ದ. ಎದ್ದು ವಾಷ್ ಬೇಸಿನನಲ್ಲಿಯೇ ಬಾಯಿ ಮುಕ್ಕಳಿಸಿ, ಬಿಸಿ ಬಿಸಿ ಚಾದಲ್ಲಿ ಬ್ರೆಡ್ ಅದ್ದಿ ಹೊಟ್ಟೆ ತುಂಬ ತಿಂದು ಯಾವ ಮಾತ್ರೆ ಅಂತಲೂ ನೊಡದೆ ಒಂದೇ ಬಾರಿ ಎರಡು ಮಾತ್ರೆ ನುಂಗಿ ಮತ್ತೆ ಮಲಗಿದ ದಿವಾಕರನಿಗೆ ಸಂಜೆಯವರೆಗೆ ಜೋರು ನಿದ್ದೆ. ಸಂಜೆ ನಿದ್ದೆ ತಿಳಿದೆದ್ದಾಗ ಮೈಯೆಲ್ಲ ಹಗುರವಾದಂತೆ, ಬೆವರು ಬಿಟ್ಟು ಜ್ವರ ಕಡಿಮೆಯಾದಂತೆ ಅನ್ನಿಸಿದರೂ ಅಂಗಡಿಗೆ ಹೋಗಲಿಕ್ಕೆ ಮನಸ್ಸಾಗದೆ ಅನ್ನ ಮಾಡಿಕೊಂಡು ಉಂಡು ಮತ್ತೆ ಜಿಲ್ಲಿಯಿಟ್ಟಿದ್ದ ಮಾತ್ರೆ ನುಂಗಿ ಮಲಗಿದ್ದ. +ಮರುದಿನ ಜಿಲ್ಲಿ ಹನ್ನೆರಡಕ್ಕೆ ಬಂದಾಗ ಜ್ವರ ಕಡಿಮೆಯಾಗಿದ್ದರಿಂದ ದಿವಾಕರನೂ ಅಂಗಡಿಗೆ ಹೋಗಿ ಬಂದು ಕುಕ್ಕರ್ ಇಡತೊಡಗಿದ್ದ. ಜಿಲ್ಲಿ ಈಗ ಮಾತ್ರ ಅವನನ್ನು ಈ ಕುರಿತು ವಿಚಾರಿಸುವ ಅವಶ್ಯಕತೆಯೇ ಇರದಂತೆ “ದಿನಾ ಪಾತ್ರೆ ಬಟ್ಟೆ ತೊಳೀತೀನ್ರೀ.. +ಎಷ್ಟ ಕೊಡ್ತೀರ ಕೊಡ್ರೀ” ಎಂದವಳೇ ಚೌಕಾಶಿಗೆ ಅವಕಾಶವೇ ಇರದಂತೆ ಬೇಸಿನ್‌ನಲ್ಲಿದ್ದ ನಾಲ್ಕಾರು ಪಾತ್ರೆ ಎತ್ತಿಕೊಂಡು ಹೋಗಿ ತಿಕ್ಕತೊಡಗಿದ್ದಳು. ಅನ್ನಕ್ಕಿಟ್ಟ ಕುಕ್ಕರ್ ಕೂಗುವುದರಲ್ಲಿ ಅಡಿಗೆ ಮನೆಯನ್ನು ಒರೆಸಿ ಹಿತ್ತಲಿನಲ್ಲಿದ್ದ ಬಟ್ಟೆ ಕಲ್ಲಿನ ಮೇಲೆ ಕುಳಿತು ಇದೀಗ ಕೊಟ್ಟ ಟೀ ಹೀರುತ್ತ ಕುಳಿತವಳನ್ನು ಸೂಕ್ಷ್ಮವಾಗಿ ದಿವಾಕರ ಗಮನಿಸತೊಡಗಿದ. +ಕಂದು ಮಿಶ್ರಿತ ಬಿಳಿಬಣ್ಣದ ಒಣಹುಲ್ಲಿನ ಕಂತೆಯೊಂದನ್ನು ತಲೆಯ ಮೇಲೆ ತಟ್ಟಿದಂತೆ ಕಾಣುತ್ತಿದ್ದ, ಎಣ್ಣೆ ಕಾಣದೆ, ಸರಿಯಾಗಿ ಬಾಚಿಕೊಳ್ಳದೆ ಎಷ್ಟೋ ದಿನಗಳಾದಂತಿದ್ದ ಗಾಳಿಗೆ ಸಿಕ್ಕು ಒರಟಾಗಿದ್ದ ಅವಳ ಕೂದಲು ನೋಡಿದ್ದೇ ಯಾವುದೋ ನೆನಪಿನಿಂದ ಫಕ್ಕನೆ ಕಸಿವಿಸಿಗೊಂಡ. ತಟ್ಟನೆ ಒಳಹೋದ ದಿವಾಕರ ಕೊಬ್ಬರಿ ಎಣ್ಣೆಯ ಬಾಟಲಿಯೊಂದಿಗೆ ಹೊರಬಂದಿದ್ದ. “ಹಿಡಿ” ಎಂದವನ ಮುಂದೆ ಅಂಗೈ ಚಾಚಿದ ಜಿಲ್ಲಿಗೆ ಮಾತ್ರ ಅತೀವ ಅಚ್ಚರಿಯಾಗಿತ್ತು. ಬಗ್ಗಿ ನೆಲ ಒರೆಸುವಾಗ ಕಾಣುವ ಬತ್ತಿದ ಮೊಲೆಗಳನ್ನೇ ಆಸೆಗಣ್ಣಿಂದ ದಿಟ್ಟಿಸುವ, ಸೀರೆ ಮೇಲೆತ್ತಿ ಸಿಕ್ಕಿಸಿ ಬಟ್ಟೆ ಒಗೆಯುವಾಗ ಕನ್ನಡಕದ ಸಂಧಿಯಿಂದ ನೋಡುವವರಿಂದ ಹಿಡಿದು ಸಂತೆಯ ದಿನ ಜನಸಂದಣಿಯಲ್ಲಿ ತುಸು ಮೈಮುಟ್ಟಲು ಕೈತಟ್ಟಲು ಕಾತರಿಸುವ ಗಂಡಸರವರೆಗೆ ಎಂತೆಂತೆಹ ಗಂಡಸರನ್ನು ನೋಡಿದ್ದಳಾಕೆ? ಆದರೆ ಹೀಗೆ ಒಣ ಕೂದಲಿಗೆ ತೊಟ್ಟು ಎಣ್ಣೆ ಕೊಡಲು ಬಂದ ದಿವಾಕರ… ಆ ಎಣ್ಣೆ ಬಾಟಲಿಯಿಂದ ಚೊರ್‌ಚೊರ್ ಎಂದು ಅಂಗೈ ತುಂಬ ಎಣ್ಣೆ ಬಿಡುತ್ತ ನಿಂತ ದಿವಾಕರ ಮಾತ್ರ ಎಲ್ಲರಿಗಿಂತ ಬೇರೆಯೇ ಅನ್ನಿಸಿಬಿಟ್ಟಿದ್ದ. ಅದೇ ಅಚ್ಚರಿಯಲ್ಲಿ ಅವನನ್ನೇ ದಿಟ್ಟಿಸುತ್ತ ಕುಳಿತವಳನ್ನು ದಿವಾಕರನೇ ಎಣ್ಣೆ ಕೆಳಗೆ ಸೋರ್‍ತಿದೆ ಎಂದು ಎಚ್ಚರಿಸಿದ್ದ. ಅಯ್ಯಾ ಎಂದು ಉದ್ಗರಿಸಿದವಳೇ ಅಂಗೈಯನ್ನು ನೆತ್ತಿಗೆ ತಪ್ ಅಂತ ಬಡಿದು ಕೈಯಲ್ಲೇ ಜೊಂಪೆ ಕೂದಲನ್ನು ಒಟ್ಡುಗೂಡಿಸಿ ಗಂಟು ಹಾಕಿಕೊಂಡು ಅಂಗೈಗೆ ಹತ್ತಿದ್ದ ಎಣ್ಣೆಯನ್ನು ಕೈಗೆ ಮುಖಕ್ಕೆ ಸವರಿಕೊಂಡು ಎದ್ದು ಹೊರಟ ಜಿಲ್ಲಿ ಮತ್ತು ಏಕಾ‌ಏಕಿ ಹೀಗೆ ಎಣ್ಣೆ ಬಾಟಲಿ ಹಿಡಿದು ನಿಲ್ಲುವ ಹುಕಿ ತನಗೆ ಯಾಕೆ ಬಂದಿತು ಎಂದುಕೊಳ್ಳುತ್ತ ಬಾಟಲಿ ಒಳಗಿಡಲು ಹೊರಟ ದಿವಾಕರ ಎರಡು ಬಿಂದುಗಳಂತೆ ಇದ್ದರು. +ಅಂದೇ ಪೆನ್ಸಿಲ್ ತಗೊಂಡ ಮಗು ಎರಡು ಸಣ್ಣ ಸಣ್ಣ ಚುಕ್ಕಿ ಇಟ್ಟು ನಂತರ ಆ ಚುಕ್ಕಿ ಕೂಡಿಸಿ ತೆಳ್ಳನೆಯ ರೇಖೆಯೊಂದನ್ನು ಎಳೆದು ಅರೆ ಇದು ತಾನು ಎಳೆದಿದ್ದೇ ಎಂಬ ಅಚ್ಚರಿಯಲ್ಲಿ ಅದನ್ನೇ ದಿಟ್ಟಿಸುತ್ತಿರುವಂತೆ ಅವರ ನಡುವೆ ಗೆರೆಯೊಂದು ಮೂಡಿತ್ತು ಮತ್ತು ಇಬ್ಬರಲ್ಲೂ ಇದು ಸಾಧ್ಯವಾಗಿಬಿಟ್ಟಿತಲ್ಲ ಎಂಬ ಒಂದು ನೆಮ್ಮದಿಯಿಂದೊಡಗೂಡಿದ ಅಚ್ಚರಿಯಿತ್ತು. +ನಂತರದ ದಿನಗಳಲ್ಲಿ ಜಿಲ್ಲಿ ಸರಿಯಾಗಿ ಹನ್ನೆರಡಕ್ಕೆ ಪಾತ್ರೆ ತಿಕ್ಕಲು ಬರುವುದು, ಅಡಿಗೆ ಮಾಡಿಕೊಳ್ಳುತ್ತಲೇ ಜಿಲ್ಲಿಯ ವಟವಟಕ್ಕೆ ದಿವಾಕರ ಹೂಂಗುಡುವುದು ಸಾಮಾನ್ಯವಾಗಿತ್ತು. ಮೊದಮೊದಲು ಅವರ ಮನೆಯಲ್ಲಿ ಸೊಸೆಗೆ ಹೆರಿಗೆ ಆಯ್ತು, ಇವರ ಮನೆಯಲ್ಲಿ ಹುಡುಗಂಗೆ ಹುಷಾರಿಲ್ಲ, ಇಂತಹ ಏನಾದ್ರೂ ಸುದ್ದಿಯ ತುಣುಕನ್ನು ನ್ಯೂಸ್ ಹೆಡ್‌ಲೈನ್ ಹೇಳುವವರ ತರಹ ನಗುಮೊಗದಿಂದ ನಿರ್ವಿಕಾರ ಭಾವದಿಂದ ಹೇಳುತ್ತಿದ್ದ ಜಿಲ್ಲಿ ಸಲಿಗೆ ಹೆಚ್ಚಾದಂತೆ ತಮ್ಮ ಓಣಿಯ ಸುದ್ದಿಗಳನ್ನು ಹೇಳಲು ಶುರು ಮಾಡಿದ್ದಳು. ದಿವಾಕರನಿಗೆ ಅವಳೊಂದು ಆಕಾಶಕ್ಕೆ ತೆರೆದುನಿಂತ ಗವಾಕ್ಷಿಯಂತೆ ಅನ್ನಿಸಿ ಆ ಗವಾಕ್ಷಿಯಾಚೆ ಕಾಣುವ ಕ್ಷಿತಿಜ ಮಾತ್ರ ಹೊಸದೇ ಅನ್ನಿಸಿ ಬೆರಗುಗೊಳ್ಳುತ್ತಿದ್ದ. ಯಾರೋ ಕಸದ ತೊಟ್ಟಿ ಹತ್ತಿರ ಬಿಟ್ಟು ಹೋಗಿದ್ದ ಹಸುಗೂಸನ್ನು ಮಕ್ಕಳಿಲ್ಲದ ಜುಬೇದಾ ತಂದು ಸಾಕಿಕೊಂಡದ್ದನ್ನು, ಗಂಡ ಬಿಟ್ಟು ಓಡಿಹೋದ ಬಸುರಿ ಹೆಂಗಸನ್ನು ಹೆರಿಗೆ ಸಮಯದಲ್ಲಿ ತಮ್ಮ ಓಣಿಯವರೇ ಕೂಡಿ ಸರಕಾರಿ ದವಾಖಾನೆಗೆ ಸೇರಿಸಿದ್ದನ್ನು ಜಾತ್ರೆ ಸಮಯದಲ್ಲಿ ಅಪ್ಪ ಅಮ್ಮನಿಂದ ತಪ್ಪಿಸಿಕೊಂಡು ಅಳುತ್ತಿದ್ದ ಚಿಕ್ಕ ಹುಡುಗನನ್ನು ತಮ್ಮ ಓಣಿ ಮಂದಿ ತಂದು ಸಾಕಿಕೊಂಡಿದ್ದನ್ನು ಎರಡು ತಿಂಗಳ ನಂತರ ಪತ್ತೆ ಹಚ್ಚಿ ಬಂದ ಆ ಹುಡುಗನ ಅಪ್ಪ ಅಮ್ಮ ಅವನನ್ನು ಕರೆದೊಯ್ಯುವಾಗ ತಮಗೆಲ್ಲ ತೆಕ್ಕೆ ಬಡಿದು ಮಗು ಅತ್ತಿದ್ದನ್ನು ಹೀಗೆ ಜಿಲ್ಲಿ ವರ್ಣನೆ ಮಾಡಿ ಹೇಳುತ್ತಿದ್ದರೆ ದಿವಾಕರ ಮುಂದೆ ಆಮೇಲೆ ಎನ್ನುತ್ತ ಅಡಿಗೆಯನ್ನು ಅಲ್ಲಿಗೇ ಬಿಟ್ಟು ನಿಲ್ಲುತ್ತಿದ್ದ. +ಜಿಲ್ಲಿ ಆಗೀಗ ಹೇಳದೆ ಕೇಳದೆ ಒಂದು ದಿನ ಎರಡು ದಿನ ಕೈಕೊಡುವುದಿತ್ತು. ಕುದುರೆ ನೋಡ್ತಿದ್ದ ಹಾಗೆ ನಡೆಯಲಿಕ್ಕೆ ಕಾಲು ನೋವು ಬರುವಂತೆ ದಿವಾಕರನಿಗೆ ಅವಳು ಬರದಿದ್ದಾಗ ರಾಶಿ ಬಿದ್ದಿರುವ ಪಾತ್ರೆಗಳನ್ನು ನೋಡಿ ತೊಳೆದುಕೋಳ್ಳಲು ಸೋಮಾರಿತನವಾಗುತ್ತಿತ್ತು. ’ಹೇಳದೆ ಕೇಳದೆ ಕೈಕೊಡುವುದ್ಯಾಕೆ, ಹೇಳಿ ಹೋಗಲಿಕ್ಕೇನು ಧಾಡಿ’ ಎಂದು ಸ್ವಲ್ಪ ಬೈಯಬೇಕು, ತಾನು ಅವಳಿಗೆ ಸಲಿಗೆ ಕೊಟ್ಟಿದ್ದು ಜಾಸ್ತಿಯಾಯಿತು ಎಂದುಕೊಳ್ಳುತ್ತಿದ್ದ ದಿವಾಕರ ಮರುದಿನ ಕೇಳುವ ಮೊದಲೇ ಜಿಲ್ಲಿ ಬರದೇ ಇದ್ದುದಕ್ಕೆ ಇಷ್ಟುದ್ದದ ಸಕಾರಣಗಳ ಪಟ್ಟಿ ಮುಂದಿಡುತ್ತಿದ್ದಳು. ಯಾರೋ ಸತ್ತರೆಂದು ಮಣ್ಣಿಗೆ ಹೋದೆ, ದವಾಖಾನಿಗೆ ಒಬ್ಬರ ಜತೆಗೆ ಯಾರೂ ಇರಲಿಲ್ಲ ಅವರನ್ನ ಕರ್‍ಕೊಂಡು ತಪಾಸು ಮಾಡಿಸಲಿಕ್ಕೆ ಹೋದೆ ಯಾರದೋ ಮದುವೆಗೆ ಸಂತೆ ತರುವುದಿತ್ತು ಮತ್ಯಾರ ಮನೆಯಲ್ಲೋ ಸುಣ್ಣ ಹಚ್ಚುವುದಿತ್ತು.. ಇಷ್ಟೇ ಅಲ್ಲ ಹತ್ತಿರದಲ್ಲಿ ಎಲ್ಲಾದ್ರೂ ಭಾರೀ ಆಕ್ಸಿಡೆಂಟಾಗಿದ್ರೆ ಗಾಯಾಳುಗಳನ್ನು ಸೇರಿಸಿದ್ದ ಸರಕಾರಿ ದವಾಖಾನೆಗೂ ಅವಳು ಭೇಟಿ ನೀಡುವವಳೇ.. ಯಾರ ಕಾಲು ಮುರಿದಿತ್ತು, ಕೈ ಮುರಿದಿತ್ತು, ತಲೆಗೆ ಪೆಟ್ಟಾಗಿತ್ತು ಹೀಗೆ ಎಲ್ಲದರ ವರ್ಣನೆ ಎಷ್ಟು ಚೆನ್ನಾಗಿ ಮಾಡ್ತಿದ್ದಳೆಂದ್ರೆ ಬೈಯಬೇಕೆಂದು ರಿಹರ್ಸಲ್ ಮಾಡಿಕೊಂಡ ದಿವಾಕರನೂ ಕಡೆಗೆ ’ಹೌದಾ.. ನಂಗೆಂಥ ಗೊತ್ತಿತ್ತು’ ಎಂದು ಲೊಚ್‌ಗುಟ್ಟಿ ಸುಮ್ಮನಾಗುತ್ತಿದ್ದ. +ಎಲ್ಲೆಲ್ಲಿಯದೋ ಏನೆಲ್ಲ ರಂಗಿನ ಸುದ್ದಿಗಳನ್ನು ಸೊಂಟಕ್ಕೆ ಸಿಕ್ಕಿಸಿದ್ದ ಸೆರಗಿನಲ್ಲಿಟ್ಟುಕೊಂಡವಳಂತೆ ಓಡಾಡುವ ವೃತ್ತ ಪತ್ರಿಕೆಯಂತೆ ತೋರುವ ಅವಳು ಎಂದಾದರೊಮ್ಮೆ ಸುಮ್ಮನಿದ್ರೆ ದಿವಾಕರ “ರೇಡಿಯೋ ಬಂದ್ ಆಗಿದೆಯಲ್ಲ ಇವತ್ತು” ಎಂದು ಚೇಷ್ಟೆ ಮಾಡುತ್ತಿದ್ದ. “ಜೀಂವಾ ಬ್ಯಾಸರ ಬಂದದರೀ” ಎಂದು ಆಗೆಲ್ಲ ಜಿಲ್ಲಿ ಗೋಡೆಗೊರಗಿ ನಿಟ್ಟುಸಿರು ಬಿಡುತ್ತಿದ್ದಳು. ಅವಳು ಹೀಗೆನ್ನುವುದೂ ಯಾವಾಗಲಾದರೊಮ್ಮೆ ಮಾತ್ರ. ದಿವಾಕರ “ಯಾಕೆ ಜಿಲ್ಲಿ ಆರಾಮಿಲ್ವಾ” ಎಂದು ಕಾಳಜಿ ಮಾಡಿದರೆ “ನಾ ಆರಾಮ ಅದೀನ್ರೀ… ಅಂವಂಗ ಮುದುಕಂಗ ಮತ್ತ ಜಡ್ಡು ಬಂದದ. ದವಾಖಾನಿಗಿ ಸೇರಿಸೀನ್ರೀ” ಎಂದು ಜಿಲ್ಲಿ ಇನ್ನಿಲ್ಲದ ಬೇಸರದಲ್ಲಿ ಉತ್ತರಿಸುತ್ತಿದ್ದಳು. ಮೊದಮೊದಲು ಅವಳು ಮುದುಕ ಎಂದಾಗ ದಿವಾಕರ ಅವಳಪ್ಪ ಅಥವ ಮಾವ ಎಂದುಕೊಂಡಿದ್ದ. ವಯಸ್ಸಾದ ಗಂಡನಿಗೆ ಅವಳು ಮುದುಕ ಎನ್ನುವುದು ಎಂದು ಗೊತ್ತಾದಾಗ ನಗು ಬಂದರೂ ಒಂದು ರೀತಿ ವಿಷಾದವೂ ಸುಮ್ಮನಾಗಿದ್ದ. +ಜಿಲ್ಲಿ ಅವನಿಗೆ ಎರಡನೆಯ ಹೆಂಡತಿ. ಮೊದಲನೆಯ ಹೆಂಡತಿ ಅವನ ಕುಡಿತ ನಂತರದ ಹೊಡೆತ ತಾಳಲಾರದೆ ಓಡಿಹೋಗಿ ಬೇರೆ ಮದುವೆಯಾಗಿ ಅವಳಿಗೆ ಮಕ್ಕಳಾಗಿ ಈಗ ಸೊಸೆಯಂದಿರು ಮೊಮ್ಮಕ್ಕಳೂ ಇದ್ದಾರೆಂದು ನಿರ್ವಿಕಾರವಾಗಿ ಹೇಳುವ ಜಿಲ್ಲಿ “ಅಂದ್ರ ಅಂವಂಗ ಏಸ ವರ್ಷ ಆಗೈತಿ ನೀವೇ ಹೇಳ್ರೀ.. ಮುದುಕ ಆಗ್ಯಾನ್ರೀ.. ಏನೂ ಉಳಿದಿಲ್ಲ” ಎಂದು ಜೋಡಿಸುತ್ತಿದ್ದಳು. ವರ್ಷದಲ್ಲೊಂದೆರಡು ಮೂರು ಸಲ ಆತ ಜಡ್ಡಿಗೆ ಬೀಳುತ್ತಿದ್ದ. ಸರಕಾರಿ ದವಾಖಾನೆಗೆ ಅವನನ್ನು ಸೇರಿಸಿ ದವಾಖಾನೆಗೆ, ಮನೆಗೆ ಜತೆಗೆ ತಾನು ಕೆಲಸ ಮಾಡುವ ಮನೆಗಳಿಗೆ ಓಡಾಡುವುದರಲ್ಲಿ ಸುಸ್ತಾಗಿಬಿಡುತ್ತಿದ್ದಳು. ತನ್ನ ದುಡಿಮೆಯಿಂದಲೇ ತಾನೇ ಬಸಿರು ಬಾಣಂತನಗಳನ್ನು ನಿಭಾಯಿಸಿಕೊಂಡೆನೆಂದೂ ಕಡೆಗೆ ಸಾಕಾಗಿ ಮೂರನೇ ಹುಡುಗಿ ಹುಟ್ಟುತ್ತಿದ್ದಂತೆ ಆಪರೇಶನ್ ಮಾಡಿಸಿಕೊಂಡೆನೆಂದೂ ಹೇಳುತ್ತಿದ್ದಳು. ಇಲ್ಲಿಯವರೆಗೆ ಒಂದೇ ಒಂದು ಬಳೆಯನ್ನೂ ತನಗೆ ತಂದುಕೊಡದವನಿಗೆ ತಾನು ಇಷ್ಟೆಲ್ಲ ಸೇವೆ ಮಾಡಬೇಕಾಗಿ ಬಂದಿರುವುದು ತನ್ನ ಕರ್ಮವೆಂದು ಹಣೆಗಂಟಿಕ್ಕಿ ಹೇಳುತ್ತಿದ್ದ ಜಿಲ್ಲಿ ಕಡೆಗೆ ಹಣೆ ಮೇಲೆ ಬೆರಳಿಟ್ಟು ಎಲ್ಲ ನಾವು ಪಡಕಂಡು ಬಂದಂಗ ಇರ್‍ತದ ಎಂದು ಮಾತು ಮುಗಿಸುತ್ತಿದ್ದಳು. ಅವನಿಗೆ ಶಕ್ತಿಯಿದ್ದಾಗಿನ ದಿನಗಳಲ್ಲಿ ಕುಡಿದು ಬಮದು ಗಲಾಟೆ ಮಾಡುತ್ತಿದ್ದನ್ನು, ಹೊಡೆಯುತ್ತಿದ್ದದ್ದನ್ನು ಒಂದೆರಡು ಬಾರಿ ತಾನು ಮನೆ ಬಿಟ್ಟು ತವರಿಗೆ ಹೋಗಿ, ಮತ್ತೆ ತವರು ಮನೆಯವರು ಇಲ್ಲಿಗೇ ಕರೆತಂದು ಬಿಟ್ಟಿದ್ದನ್ನು ಜಿಲ್ಲಿ ಎಷ್ಟು ನಿರ್ಲಿಪ್ತಳಾಗಿ ವರ್ಣಿಸುತ್ತಿದ್ದಳೆಂದರೆ ಭಜಿಗೆ ಸುತ್ತಿದ್ದ ಎಣ್ಣೆಯಂಟಿದ್ದ ಪೇಪರ್ ಚೂರಿನಲ್ಲಿ ಸಿಕ್ಕ ಯಾರದೋ ಸುದ್ದಿಯನ್ನು ವರದಿ ಮಾಡುವಂತಿರುತ್ತಿತ್ತು. ಬದುಕು ಅರ್ಥಪೂರ್ಣವೋ ಅರ್ಥಹೀನವೋ ಯಾಕೆ ಏನು ಎಂಬ ಪ್ರಶ್ನೆಗಳಿಲ್ಲದೇ ಮಾಗಿಯ ಹಿತವಾದ ಗಾಳಿಯೋ ಬೇಸಿಗೆಯ ಬಿಸಿಗಾಳಿಯೋ ಆಷಾಡದ ಧೂಳು ತುಂಬಿದ ಗಾಳಿಯೋ ಒಟ್ಟು ಮುಖವೊಡ್ಡಿ ನಿಂತಂತೆ, ಇದ್ದದ್ದನ್ನು ಇದ್ದ ಹಾಗೆ ಅನುಭವಿಸುವವಳಂತೆ ಇರುವ ಜಿಲ್ಲಿ ದಿವಾಕರನಲ್ಲಿ ಒಂದು ಬಗೆಯ ಅಚ್ಚರಿ ಹುಟ್ಟಿಸಿಬಿಟ್ಟಿದ್ದಳು. +ಜಿಲ್ಲಿ ದಿವಾಕರನ ಮನೆಕೆಲಸ ಮಾಡಿಕೊಡುತ್ತ ವರ್ಷವಾಗ್ತ ಬಂದಿತ್ತು. ಒಂದಿನ ಕೆಲಸ ಮುಗಿಸಿ ಇನ್ನೂ ಹೋಗದೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಳಿತ ಜಿಲ್ಲಿಯನ್ನು ಮತ್ತೇನು ಎಂಬಂತೆ ನೋಡಿದ. ಜಿಲ್ಲಿ ಹಾಗೆ ಕುಳಿತಳೆಂದ್ರೆ ಏನೋ ಕೇಳಲಿಕ್ಕಿದೆ ಎಂದೇ ಅರ್ಥ. +“ಪಂಚಮಿಗಿ ಬಳಿ ಇಟ್ಟುಕೊಳ್ಳಾಕ ರೊಕ್ಕ ಕೊಡಂಗಿಲ್ಲೇನ್ರೀ..?” ಜಿಲ್ಲಿ ಜಾತ್ರೆಗೆ ಹೊರಟ ಚಿಕ್ಕ ಹುಡುಗಿಯ ಹಠದಲ್ಲಿದ್ದಂತಿತ್ತು. ಪಂಚಮಿ ಹಬ್ಬ ತಾನೂ ಆಚರಿಸುವುದಿಲ್ಲ, ಅವಳೂ ಆಚರಿಸುವುದಿಲ್ಲ, ಆದರೆ ಪಂಚಮಿ ಬಳೆಗೆ ತಾನು ಜಿಲ್ಲಿಗೆ ರೊಕ್ಕ ಕೊಡಬೇಕು.. ಯಾಕೋ ಅವಳು ಕುಳಿತು ಕೇಳಿದ ರೀತಿ ಒಟ್ಟಾರೆ ಸನ್ನಿವೇಶ ತಮಾಶೆಯಾಗಿದೆ ಎನ್ನಿಸಿ ಜೊರಾಗಿ ನಕ್ಕನಾತ. ಜಿಲ್ಲಿಗೆ ತುಸು ಅವಮಾನವೆನ್ನಿಸಿತೋ ಏನೋ “ಬ್ಯಾಡ ಬಿಡ್ರೀ” ಎಂದು ಹೊರಟಳು. +ನಗು ನಿಲ್ಲಿಸಿ “ಇರವ್ವಾ” ಎಂದು ಒಳಹೋದವನಿಗೆ ಎಷ್ಟು ದುಡ್ಡು ಕೊಡಬೇಕೆನ್ನುವುದು ಬೇಗ ಹೊಳೆಯಲಿಲ್ಲ. ಅಸಲು ಬಳೆ ಈಗ ಯಾವ ರೇಟಿನಲ್ಲಿ ಸಿಗುತ್ತದೆ ಎಂಬುದೇ ಅವನಿಗೆ ಗೊತ್ತಿರಲಿಲ್ಲ. ಫಕ್ಕನೆ ಮನಸ್ಸಿನಲ್ಲೊಂದು ಬಳೆಚೂರು ಕೊರೆದ ಹಾಗೆ…. ಶಿರಸಿಯ ಮಾರಿಜಾತ್ರೆಯಲ್ಲಿ ಆಗೆಲ್ಲ ನಾಲ್ಕೈದು ರೂಪಾಯಿಗೆ ಡಝನ್ ಬಳೆ ಸಿಗ್ತಿತ್ತು. ಅಮ್ಮ ಒಮ್ಮೆ ಆಸೆಪಟ್ಟು ಒಂದೂವರೆ ಡಝನ್ ಇಟ್ಟುಕೊಂಡಿದ್ದಳಲ್ಲ… ಸಂಕ ದಾಟುವಾಗ ಕಾಲು ಜಾರಿಬಿದ್ದಿದ್ದೇ… ಬಳೆ ಫಳ್ ಫಳ್ ಗುಟ್ಟಿ ಚೂರು ಚೂರಾಗಿ… ಅದೇ ನೆವವಾಗಿ ಮಲಗಿದವಳು… ಮತ್ತೆ ಬಳೆಯವನ ಮುಂದೆ ಕುಳಿತುಕೊಳ್ಳಲೇ ಇಲ್ಲ. ಆಗ ಕೆಳೆಗೆ ಬಿದ್ದ ಬಳೆಯ ಚೂರುಗಳು ಈಗಲೂ ತನ್ನದೆಯಲ್ಲಿ ನೆಟ್ಟಿರುವಂತೆ ಅನ್ನಿಸಿದ್ದೇ ದಿವಾಕರ ಮೆಲ್ಲನೆ ’ಅಮ್ಮಾ’ ಅಂತ ಉಸುರಿದ. +“ಅಣ್ಣಾರೆ ತಡ ಆಕ್ಕ್ಯೆತ್ರೀ” ಹೊರಗೆ ಜಿಲ್ಲಯ ಧ್ವನಿ. +ಹೂಂ ಎಂದು ಗಡಬಡಿಸಿ ಹೊರ ಬಂದವನ ಕೈಯಲ್ಲಿ ಐವತ್ತು ರೂಪಾಯಿಯ ನೋಟಿತ್ತು. ಹೆಚ್ಚೆಂದರೆ ಹತ್ತೋ ಇಪ್ಪತ್ತೋ ಕೊಡಬಹುದು ಎಂದೆಣಿಸಿದ ಜಿಲ್ಲಿ +“ಚಿಲ್ರೆ ಇಲ್ರೀ. ನೀವೇ ಚಿಲ್ರೆ ಮಾಡ್ಸಿ ಕೊಡ್ರೀ” ಕೈ ಒಡ್ಡದೇ ಹೇಳಿದಳು. +“ಇರಲಿ.. ತಗೋ ಜೆಲ್ಲಿ” ಎಂದಷ್ಟೇ ಹೇಳಿ ಒಳ ಹೋದ ದಿವಾಕರನ ಕಣ್ಣುಗಳಲ್ಲಿ ಮಾತ್ರ ಬಳೆ ಚೂರಿನದೇ ಚಿತ್ರವಿತ್ತು. +ದಿವಾಕರನಿಗೆ ಮಧ್ಯಾಹ್ನ ಊಟವೂ ರುಚಿಸದೆ ಮೂರು ಘಂಟೆಯ ಸುಮಾರಿಗೇ ಮತ್ತೆ ಪಾನ್‌ಶಾಪ್‌ನತ್ತ ಹೋಗಿಯಾಗಿತ್ತು. ಶನಿವಾರವಾಗಿದ್ದರಿಂದಲೋ ಏನೋ ಹೆಚ್ಚು ಗಿರಾಕಿಗಳೂ ಇರಲಿಲ್ಲ. ದಿವಾಕರನಿಗೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಚೂಪಗೆ ಕುಳಿತು ಒಳಗೆ ದುಡ್ಡು ಕೇಳಿದ ಜಿಲ್ಲಿಯ ಮುಖವೇ ಕಣ್ಣಿಗೆ ಕಟ್ಟಿದಂತಾಗಿತ್ತು. ಮನೆಯಿಂದ ಬರುವಾಗ ಚಡಪಡಿಸುತ್ತಿದ್ದ ಮನಸ್ಸು ಹಳೆಯ ಡ್ರಾಯಿಂಗ್ ಪ್ರಸ್ತಕವನ್ನು ಕೈಗೆತ್ತಿ ಕೊಂಡುಬರುವಂತೆ ಪ್ರೇರೇಪಿಸಿತ್ತು. ತುಂಬ ದಿನಗಳ ನಂತರ ಪೆನ್ಸಿಲ್ ತಗೊಂಡು ಗೀಚಲಾರಂಭಿಸಿದ್ದ. ಎಂದಿನಷ್ಟೂ ಮಾತನಾಡದೆ ತಲೆಬಗ್ಗಿಸಿ ಏನು ಮಾಡ್ತಿದಾನಿವ ಅಂತ ಕುತೂಹಲದಿಂದ ಮೆಡಿಕಲ್ ಶಾಪ್‌ನ ರಾಜಾ ಸುಪಾರಿ ತಿನ್ನುವ ನೆವ ಮಾಡಿ ಇವನ ಅಂಗಡಿಯತ್ತ ಬಂದವನು ದಿವಾಕರ ಪೆನ್ಸಿಲ್‌ನಲ್ಲಿ ಸ್ಕೆಚ್ ಹಾಕ್ತಿರೋದನ್ನು ನೋಡಿ ’ಅರೆ’ ಎಂದು ನೋಡುತ್ತ ನಿಂತ. +“ಎಷ್ಜ್ ಛಲೋ ಬಿಡಿಸೀಯಲ್ಲಪ್ಪಾ” ಎಂದು ಶಾಭಾಷ್‌ಗಿರಿ ನೀಡಿದವನು ಅದನ್ನು ಮತ್ತೆ ಹತ್ತಿರದಿಂದ ನೋಡಿದವನು “ಈಕಿ ಜಿಲ್ಲಿ ಹೌದಿಲ್ಲೋ” ಎಂದು ಕೇಳಿದಾಗ ದಿವಾಕರನಿಗೆ ತುಸು ಸಂಕೋಚವಾಗ ತೊಡಗಿತ್ತು. ಮುಚ್ಚಿ ಕೆಳಗಿಟ್ಟು ಬಿಡಬೇಕು ಎನ್ನುವಷ್ಟರಲ್ಲಿ ರಾಜ ಆ ಹಳೆಯ ಡ್ರಾಯಿಂಗ್ ಪುಸ್ತಕವನ್ನು ಕ್ಯೆಗೆತ್ತಿಕೊಂಡವನೇ ಟೈಲರ್ ಅಂಗಡಿ, ಕಾಕಾನ ಚಾದ ಅಂಗಡಿ ಎಲ್ಲೆಡೆ ತೋರಿಸಲಾರಂಭಿಸಿದ್ದ ಸ್ವಲ್ಪ ಜಿಪುಣ, ಸ್ವಲ್ಪ ಸೊಕ್ಕು, ಮಂದ್ಯಾಗ ಇದ್ದವನಲ್ಲ ಈತ, ನಾಕು ಮಂದ್ಯಾಗ ಮಾತನಾಡಕ್ಕೂ ಬರಂಗಿಲ್ಲ ಎಂದೆಲ್ಲ ಇವನ ಬಗ್ಗೆ ತಮ್ಮ ತಮ್ಮ ಪಾಲಿನ ನಿರ್ಣಯ ಕೊಟ್ಟುಕೊಂಡಿದ್ದ ಅವರು ಆ ಗೆರೆಗಳು ದಿವಾಕರನ ಕುರಿತು ಬೇರೆಯೇ ಹೇಳ್ತಿದ್ದಂತೆ ಅನ್ನಿಸಿ ಬೆರಗಾಗಿದ್ದರು. ಕೋಟೆ ಗೋಡೆಗಳು, ಸ್ಮಾರಕಗಳು, ಚಿಕ್ಕ ಹುಡುಗರು, ಸೈಕಲ್‌ಗೆ ಸ್ಕೂಲಿನ ಬ್ಯಾಗು ತೂಗಿಸಿಕೊಂಡ ಹುಡುಗರು, ಸೈಕಲ್ ಮೇಲೇ ನಿಂತು ಪೇಪರ್ ಎಸೆಯುತ್ತಿರುವ ಹುಡುಗ, ಅಮ್ಮನ ಬಗಲಲ್ಲಿ ಬೆಚ್ಚಾಗಿ ನಿದ್ರಿಸಿದ ಮಗು… ಹೀಗೆ ಏನೆಲ್ಲದರ ಚಿತ್ರಗಳು ಇದ್ದ ಆ ಪುಸ್ತಕದಲ್ಲಿ ಎಲ್ಲಾದ್ರೂ ತಮ್ಮ ಚಿತ್ರ ಇದೆಯೇ ಎಂದು ಒಬ್ಬರು ಮತ್ತೊಬ್ರಿಗೆ ತಿಳಿಯದಂತೆ ಹುಡುಕಲಾರಂಭಿಸಿದ್ದರು. ಅವರೆಲ್ಲರಿಗೂ ನಿರಾಸೆಯೇ ಕಾದಿತ್ತು. ದಿವಾಕರ ಗೆರೆಗಳಲ್ಲಿ ಅವರ್‍ಯಾರನ್ನು ಮೂಡಿಸಿರೆಲೇ ಇಲ್ಲ. +ತಮ್ಮ ಮುಖ ಚಹರೆಯ ಚಿತ್ರವನ್ನು ಬಿಡಿಸಿಕೊಡು ಎಂದು ದಿವಾಕರನಿಗೆ ಕೇಳಬೇಕೆಂದುಕೊಂಡರೂ ಸಂಕೋಚ ಮತ್ತು ತಮ್ಮನ್ನು ತಾವು ಹೀಗಿದ್ದೀವಿ ಅಂತ ಆ ಗೆರೆಯಲ್ಲಿ ಕಂಡುಕೊಳ್ಲುವುದರ ಜೊತೆಗೆ ದಿವಾಕರ ಕೂಡ ಕಂಡುಕೊಂಡು ಅದನ್ನಾತ ಎಲ್ಲರಿಗೂ ತೋರಿಸಿಬಿಡುತ್ತಾನಲ್ಲ ಎಂಬ ಭಾವನೆ… ಎರಡೂ ಕೂಡಿ ಯಾರೂ ಬಾಯಿಬಿಟ್ಟು ಕೇಳಲೇ ಇಲ್ಲ. ಆದರೆ ಜಿಲ್ಲಿಯ ಚಿತ್ರ ನೋಡಿದಾಗಿನಿಂದ ಅವರು ದಿವಾಕರನೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಮಾತ್ರ ಸ್ವಲ್ಪ ಬದಲಾಗಿ ಅದರಲ್ಲೊಂದು ಎಚ್ಚರ ತುಂಬಿದಂತಿತ್ತು. ಅಷ್ಟೇ ಅಲ್ಲ… ಎಲ್ಲರೂ ತಮ್ಮ ತಮ್ಮ ಗಿರಾಕಿಗಳೊಂದಿಗೆ ವ್ಯವಹರಿಸುತ್ತಿದ್ದ ನಡವಳಿಕೆಯಲ್ಲೂ ಸ್ವಲ್ಪ ಸುಧಾರಣೆಯಾಗಿತ್ತು. ಬೇಸರ, ಆಲಸಿತನ ಮಿಂಚುತ್ತಿದ್ದ ಮುಖದಲ್ಲಿ ಸದಾ ತೋರಿ ಬರುತ್ತಿದ್ದ ಒರಟುತನವನ್ನು ಸುಧಾರಿಸಿಕೊಳ್ಳುತ್ತ, ಗಿರಾಕಿಗಳೊಂದಿಗೆ ನಗುಮೊಗದಿಂದ ಮಾತನಾಡುತ್ತ ಒಟ್ಟಾರೆ ಒಳ್ಳೆಯತನದ ಛಾಪೊತ್ತಲು ಹಾತೊರೆಯುತ್ತಿದ್ದಂತಿತ್ತು. ಸ್ಟೇಫ್ರೀ, ಕೇರ್‌ಫ್ರೀ ಕೇಳಲು ಬರುವ ಹುಡುಗಿಯರತ್ತ ಒಂದು ಪೋಲಿನಗು ಎಸೆದು, ತುಂಬ ಮುತುವರ್ಜಿಯಿಂದೆಂಬಂತೆ ಅದನ್ನು ಪೇಪರ್‌ನಲ್ಲಿ ಸುತ್ತಿಕೊಡುವ ನೆವದಲ್ಲಿ ಸ್ವಲ್ಪ ಹೊತ್ತು ಅವರನ್ನು ನಿಲ್ಲಿಸಿಕೊಂಡು, ಚಿಲ್ಲರೆ ಕೊಡುವಾಗ ಸಹಜವಾಗಿ ಎಂಬಂತೆ ಕ್ಯೆಮುಟ್ಟಸಿ ಸುಖಿಸುತ್ತಿದ್ದ ರಾಜಾನಿಗೆ ಅದೆಲ್ಲಾದರೂ ದಿವಾಕರನ ಗಮನಕ್ಕೆ ಬಂದು ತನ್ನ ಮುಖದಲ್ಲಿ ಪೋಲಿನಗು ಮಿಂಚುತ್ತಿದ್ದ ಹಾಗೆ ಗೆರೆಯೆಳೆದು ಬಿಟ್ಟರೆ ಏನ್ನಿಸಿದ್ದೇ ತನ್ನ ಉಢಾಳತನದ ಫೋಸನ್ನು ಸ್ವಲ್ಪ ಮರೆಮಾಚಿ ಸಭ್ಯನಂತೆ ಕಾಣಿಸಲು ಪ್ರಯತ್ನಿಸ ತೊಡಗಿದ. ’ಲೇಡಿಜ ಸ್ಪೆಶಾಲಿಸ್ಟ್’ ಎಂಬ ಬೋರ್ಡ್ ಇಟ್ಟುಕೊಂಡ ಟೈಲರ್ ಕೃಷ್ಣಪ್ಪ. ಹುಡುಗಿಯರು, ಅದೇ ಮದುವೆಯಾದ ಹೆಂಗಸರು ಬಟ್ಟೆ ಕೊಡಲು ಬಂದಾಗ ’ಮೈಯಳತೆ ತಗೋರಿ’ ಎಂದು ಬಿಟ್ರೆ ಸಾಕು.. ಅಂಕಿ ಕಾಣದಂತಿದ್ದ ಹಳೆಯ ಟೇಪನ್ನು ಎದೆ ಸುತ್ತ, ಸೊಂಟದ ಸುತ್ತ, ತೋಳಿನ ಸುತ್ತ ಹಿಡಿಯತ್ತ ನಿಧಾನವಾಗಿ ಅಳತೆ ತಗೋತ ಸ್ವರ್ಗ ಸುಖ ಅನುಭವಿಸುತ್ತಿದ್ದವನು… ಈಗ ದಿವಾಕರನ ಪೆನ್ಸಿಲ್ ತನ್ನ ಮುಖದನ್ನು ಹೇಗೆ ಅಳೆಯುತ್ತೋ ಎಂಬ ದಿಗಿಲಿನಲ್ಲಿ ಅಳತೆ ತಗೊಳ್ಳುವ ಕೆಲಸವನ್ನು ಬೇಗ ಬೇಗ ಮುಗಿಸಿ ಬೆವರೊರಿಸಿಕೊಳ್ತಿದ್ದ. ಚಾದಂಗಡಿಯ ಕಾಕಾ ತನ್ನಲ್ಲಿ ಕೆಲಸಕ್ಕಿದ್ದ ಇಬ್ಬರು ಹುಡುಗರಿಗೆ ಬೈಯುವುದನ್ನು ಸ್ವಲ್ಪ ಕಡಿಮೆ ಮಾಡಿಬಿಟ್ಟಿದ್ದ. ಹೀಗೆ ಅವರೆಲ್ಲ ತಾವು ಒಳ್ಳೆಯವರಂತೆ ಕಾಣಿಸಿಕೊಳ್ಳುತ್ತ ದಿವಾಕರನ ಪೆನ್ಸಿಲ್‌ನಲ್ಲಿ ಯಾವ ಕ್ಷಣಕ್ಕೆ ಹೇಗೆ ಮಾಡಿ ಬಿಡುತ್ತೇವೆಯೋ ಎಂಬ ಆತಂಕದಿಂದ ಆಗಾಗ ಅವನತ್ತ ಕಳ್ಳ ನೋಟ ಬೀರುವುದಿತ್ತು. ಜತೆಗೇ ಎಂದಾದರೂ ಒಂದು ದಿನ ಜಿಲ್ಲಿಯ ಚಿತ್ರ ತೆಗೆದಂತೆ ತಮ್ಮದನ್ನೂ ತೆಗೆದು ನೋಡಿ ಎಂಬಂತೆ ಹಿಡಿದು ಬಿಡುತ್ತಾನೇನೋ ಎಂಬ ಕಾತರದ ಎಳೆಯೂ ಅವರಲ್ಲಿ ಆಗೀಗ ಅಲುಗಾಡುತ್ತಿತ್ತು. ದಿವಾಕರನಿಗೆ ಅವರ ನಡವಳಿಕೆ ಬದಲಾದ ಸುಳಿವು ಹತ್ತಿದರೂ ಯಾಕೆ ಅಂತ ಮಾತ್ರ ಅರ್ಥವಾಗಿರಲಿಲ್ಲ. +ದಿವಾಕರ ತನ್ನದೇ ಕಿರಿಕಿರಿಯಲ್ಲಿದ್ದ. ಜಿಲ್ಲಿಗೆ ದುಡ್ಡು ಕೊಟ್ಟು ಮೂರು ನಾಲ್ಕುದಿನಗಳ ನಂತರ ಪಾತ್ರೆ ತಿಕ್ಕುತ್ತಿದ್ದ ಅವಳ ಕೈಯತ್ತ ಅಚಾನಕ್ ಗಮನ ಹೋಗಿ. ಎರಡು ಮೂರು ಹಳೆಯ ಬಳೆಗಳನ್ನಷ್ಟೇ ನೋಡಿ “ಅರೆ.. ಬಳೆ ತಗೊಂಡಿಲ್ಲೇನವ್ವಾ” ಅಂತ ಸಲಿಗೆಯಿಂದ ಕೇಳಿದ್ದ. “ಇಲ್ರೀ ಅಣ್ಣಾರೆ… ಮನಿಗಿ ಹೋಗೂದ್ರಾಗ ಮುದುಕಂಗ ಜ್ವರ ಜಾಸ್ತಿಯಾಗಿತ್ರೀ… ದವಾಖಾನಿಗಿ ಖರ್ಚ ಆದುವ್ರೀ” ಎಂದಿದ್ದಳು. ’ದುಡ್ಡನ್ನು ಬೇರೆಯದಕ್ಕೆ ಬಳಸಿಕೊಂಡ ಮಜುಗರದಿಂದ ಸಣ್ಣದಾಗಿ ಉತ್ತರಿಸಿದ್ದಳಾಕೆ. ದಿವಾಕರನಿಗೆ ಮತ್ತೆ ಎದೆಯಲ್ಲಿ ಗೀರಿದ ಬಳೆಯ ಚೂರು… ಒಳಹೋಗಿ ಇಪ್ಪತ್ತು ರೂಪಾಯಿ ತಂದು ಅವಳ ಕೈಗಿಡಲು ಹೋದರೆ ” ಐ.. ಬ್ಯಾಡ್ರೀ.. ಬ್ಯಾಡ್ರೀ” ಎನ್ನುತ್ತ ಜಿಲ್ಲಿ ಹೋಗಿಯೇ ಬಿಟ್ಟಿದ್ದಳು. ಮತ್ತೆ ಎರಡು ಮೂರು ದಿನ ಇವನೊಂದಿಗೆ ಹೆಚ್ಚು ಮಾತೇ ಆಡಿರಲಿಲ್ಲ. ಅವಳ ಅಭಿಮಾನಕ್ಕೆ ಭಂಗ ಬರುವ ಹಾಗೆ ತಾನು ನಡೆದುಕೊಂಡುಬಿಟ್ಟೆನೇನೋ… ಅವಳಿಗಾದ್ರೂ ಅದೆಂತಹ ಹಠ.. ಯಾಕೆ ದುಡ್ಡು ಬೇಡವೆನ್ನಬೇಕಿತ್ತು… ಇದೇ ಕೊರೆಯುತ್ತಿತ್ತು ಅವನೊಳಗೆ. +ಒಬ್ಬ ಬಿಕ್ಷುಕ ವಾರದಲ್ಲಿ ಒಂದೆರಡು ಬಾರಿಯಾದರೂ ಆ ರಸ್ತೆಯಲ್ಲಿ ಇವರ ಅಂಗಡಿಗಳ ಮುಂದೆ ಹಾಯುತ್ತಿದ್ದ. ಆ ದಿನ ರಾಜಾನ ಕೌಂಟರ್ ಮುಂದೆ ನಿಂತು ಕೈ ಮಾಡಿದ ಅವನಿಗೆ ಎಂದಿನಂತೆ ಎಂಟಾಣೆ ನಾಣ್ಯ ಕೊಡಬೇಕು ಎಂದು ರಾಜಾ ಗಲ್ಲೇ ಒಳಗೆ ಕೈ ಹಾಕುತ್ತಿದ್ದಂತೆ “ರೊಕ್ಕ ಬ್ಯಾಡ್ರಿಯಪ್ಪಾ ……. ಯಾಡ್ ಜ್ವರದ ಗುಳಿಗಿ ಇದ್ರ ಕೊಡ್ರಿ” ಎಂದು ದೀನನಾಗಿ ಬೇಡಿಕೊಂಡಿದ್ದ. ಅಲ್ಲಲ್ಲಿ ಹರಿದು ತೇಪಹಚ್ಚಿದ್ದ ಬಟ್ಟೆಯಲ್ಲಿದ್ದ ಆ ಅಜ್ಜ ನಖಶಿಖಾಂತ ಜ್ವರದ ತಾಪದಿಂದ ನಡುಗುತ್ತಿದ್ದ. “ಜ್ವರ ಜೋರ ಅದಾವೇನಜ್ಜ” ಅಂತ ರಾಜಾ ಕೇಳುವುದಕ್ಕೂ ಟೈಲರ್ ಕೃಷ್ಣಪ್ಪ ಅಲ್ಲಿಗೆ ಬಂದಿದ್ದ. “ಭಾಳ ನಡಗಾಕ ಹತ್ಯಾನಲ್ಲೋ. ಛಲೋ ಅರಿಬೀನೂ ತೊಟ್ಟಿಲ್ಲ” ಎಂದವನಿಗೆ ಏನನ್ನಿಸಿತೋ ಏನೋ… ತನ್ನ ಇಸ್ತ್ರಿ ಮಾಡುವ ಟೇಬಲ್ ಮೇಲೆ ಹಾಸಿದ್ದ ಎರಡು ಬೆಡ್‌ಶೀಟ್‌ಗಳಲ್ಲಿ ಒಂದು ತಂದು “ಇದ ಹೊಚ್ಕೋ ಯಜ್ಜಾ” ಎಂದು ಕೊಟ್ಟ. “ಈ ಗುಳಿಗಿ ಹಿಡಿ… ಕೂಡಿಲ್ಲೇ” ಎನ್ನುತ್ತ ಕೌಂಟರ್‌ನಿಂದ ಬಗ್ಗಿ ಈಚೆ ಬಂದ ರಾಜಾ “ನೀರ ತರ್‍ತೀನಿ ಕುಂದ್ರು” ಎಂದವನೇ ಕಾಕಾನ ಚಾದಂಗಡಿಗೆ ಹೋಗಿ ನೀರಿನೊಂದಿಗೆ ಚಾದ ಗ್ಲಾಸ್‌ನ್ನು ಹಿಡಿದು ಬಂದಿದ್ದ. ಚಾದಂಗಡಿಯ ಕಾಕಾ ಕೂಡ ಬಂದು ನಿಂತಿದ್ದ. ಅವರ್‍ಯಾರಿಗೂ ದಿವಾಕರನ ಪೆನ್ಸಿಲ್ ಆಗಲೀ ಗೆರೆಗಳಾಗಲೀ ಏನೂ ನೆನಪಿರಲಿಲ್ಲ. ಹತ್ತು ನಿಮಿಷ ಅಜ್ಜನ ಬಗ್ಗೆ, ಜ್ವರದ ಬಗ್ಗೆ, ಒಮ್ಮೆಲೆ ಥಂಡಿಗಾಳಿ ಬಿಟ್ಟು ಎಲ್ಲರ ಆರೋಗ್ಯ ಕೆಡುತ್ತಿರುವುದರ ಬಗ್ಗೆ ಮಾತನಾಡಿ, ಕಡೆಗೆ ಅಲ್ಲಿಂದೆದ್ದು ಹೊರಟ ಅಜ್ಜನಿಗೆ ರಾಜಾ ಇನ್ನೊಂದೆರಡು ಗುಳಿಗೆಯನ್ನೂ. ಚಾದಂಗಡಿಯ ಕಾಕಾ ಖರ್ಚಾಗದೇ ಉಳಿದಿದ್ದ ಬ್ರೆಡ್‌ನ ಪುಡಿಕೆಯನ್ನೂ ಕೈಗಿಟ್ಟು ಕಳಿಸಿಯಾಗಿತ್ತು. ನಂತರ ತಮ್ಮ ತಮ್ಮ ಅಂಗಡಿಯ ಒಳಹೊಕ್ಕ ಅವರು ಇದೀಗ ನಡೆದಿದ್ದನ್ನು ಮರೆತೇ ಬಿಟ್ಟಿದ್ದರು. +ಮೂರು ನಾಲ್ಕು ದಿನಗಳ ನಂತರ ರಾಜಾನಿಗೆ ದಿವಾಕರ ಕೊಟ್ಟ ಅಗಲ ಹಾಳೆಯನ್ನು ತೆರೆದು ನೋಡಿದರೆ ಅವರ್‍ಯಾರು ಊಹಿಸದ ರೀತಿಯಲ್ಲಿ ಅವನು ತೆಗೆದ ಚಿತ್ರವಿತ್ತು. ಅದೇ… ಕಟ್ಟೆಯ ಮೇಲೆ ಕುಳಿತ ಅಜ್ಜ, ಬಲಪಕ್ಕದಲ್ಲಿ ರಾಜಾನ ಮುಖ, ಈಚೆ ಟೈಲರ್ ಕೃಷ್ಣಪ್ಪ, ಚಾದಂಗಡಿಯ ಕಾಕಾ… ಬರೀ ಪೆನ್ಸಿಲ್‌ನ ತೆಳುವಾದ ರೇಖೆಗಳಿದ್ದ ಚಿತ್ರ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ ರಾಜಾ ದಂಗು ಬಡಿದು ನಿಂತವ ಆಮೇಲೆ ಉಳಿದವರಿಗೂ ತೋರಿಸಿ, ಯಾರು ಇಟ್ಟುಕೊಳ್ಳಬೇಕೆಂಬ ಚರ್ಚೆಯಾಗಿ, ಕಡೆಗೆ ತಾವೆಲ್ಲ ಜೆರಾಕ್ಸ್ ಮಾಡಿಸಿಕೊಂಡು ಒರಿಜಿನಲ್ ದಿವಾಕರನ ಬಳಿಯೇ ಇರಲಿ ಎಂದು ತೀರ್ಮಾನಿಸಿಕೊಂಡರು. ಅವರಿಗೆ ತಾವು ಇರುವುದಕ್ಕಿಂತಲೂ ದಿವಾಕರನ ಚಿತ್ರದಲ್ಲಿ ಏನೋ ಬೇರೆ ಬಗೆಯಾಗಿ, ವಿಶಿಷ್ಠವಾಗಿ ಕಾಣ್ತಿದೇವೆ ಎಂಬ ಸಂಗತಿ ತುಸು ರೋಮಾಂಚನವನ್ನು ತುಸು ಅಚ್ಚರಿಯನ್ನು ಮಾಡಿಸಿತ್ತು. ಇವರೆಲ್ಲರಿಗಿಂತ ಚಿಕ್ಕವನಾದ ರಾಜಾನಿಗೆ ಎಲ್ಲರೊಡನೆ ಹುಡುಗತನದ ಸಲಿಗೆಯಿದ್ದದ್ದರಿಂದ, ಅದೇ ಸಲಿಗೆ ದಿವಾಕರನಲ್ಲೂ ತುಸು ಹೆಚ್ಚಿದ್ದರಿಂದ ಕೇಳಿಯೇ ಬಿಟ್ಟ. ದಿವಾಕರನಿಗೂ ಹಾಗನ್ನಿಸಿತ್ತು. ಇದಷ್ಟೇ ಅಲ್ಲ… ಪ್ರತಿಯೊಂದು ಚಹರೆಯೂ ಅವನ ಗೆರೆಗಳಲ್ಲಿ ಮೂಡಿದಾಗ ಅದರಷ್ಟಕ್ಕೆ ಅದೇ ಅಸಾಮಾನ್ಯವಾಗುದ್ದಂತೆ ಇರುತ್ತಿತ್ತು. ತನ್ನ ಕಣ್ಸೆರೆಗೆ ಸಿಕ್ಕ ಆ ಕ್ಷಣವೇ ಅಸಾಮಾನ್ಯವಾಗಿರುತ್ತಿತ್ತೋ… ಅಥವಾ ಆ ಯಾವುದೋ ಕ್ಷಣದಲ್ಲಿ ಅಸಾಮಾನ್ಯವಾದುದೇನೋ ತನ್ನ ಕಣ್ಸೆರೆಗೆ ಸಿಗುತ್ತಿತ್ತೋ ತಿಳಿಯದೇ ಗೊಂದಲಗೊಳ್ಳುತ್ತಿದ್ದ. ತನಗೆ ಅರ್ಥವಾಗದ್ದನ್ನು ರಾಜಾನಿಗೆ ಹೇಗೆ ವಿವರಿಸಲಿ ಅಂತ ತಿಳಿಯದೆ “ಆ ದಿನ ನೀವು ಆ ಅಜ್ಜಂಗೆ ಅಷ್ಟೆಲ್ಲ ಮಾಡಿದ್ರಲ್ಲ… ಅದೆಲ್ಲ ಯಾರನ್ನೋ ಮೆಚ್ಚಿಸಲಿಕ್ಕೆ ಮಾಡಿದ್ದಲ್ಲ… ಏನೋ ಉದ್ದೇಶ ಇಟ್ಟುಕೊಂಡು ಅಥವ ಯಾರೋ ಹೇಳಿ ಮಾಡಿದ್ದಲ್ಲ. ನೀವು ನೀವಾಗೆ ಮಾಡಿದ್ದು… ಅದ್ರಲ್ಲಿ ಬರೀ ಮಾನವೀಯತೆ ಮಾತ್ರ ಇತ್ತು. ಒಂದು ನಿರುದ್ದಿಶ್ಯ ಸಹಜ ನಡವಳಿಕೆಯಾಗಿತ್ತು ಅಲ್ಲವಾ” ಎಂದಷ್ಟೇ ಹೇಳಿದ. ಅವನೆಷ್ಟು ಗಂಭೀರವಾಗಿ ಹೇಳಿದ ಅಂದ್ರೆ ರಾಜಾನಿಗೆ ಅವನ ಗೆರೆಗಳಲ್ಲಿ ತಮ್ಮ ಚಹರೆ ಬೇರೆಯಾಗಿ ಕಂಡಂತೆ ಅವನ ಭಾಷೆ ಕೂಡ ಬೇರೆಯಾಗಿ ಕಂಡು ಸುಮ್ಮನಾದ. ಆದರೆ ತದ ನಂತರ ತಾವಿನ್ನು ಒಳ್ಳೆಯದರಂತೆ ಫೋಸು ಕೊಡಬೇಕಾದ ಅವಶ್ಯಕತೆ ಇಲ್ಲ ಎಂಬುದರ ಸುಳಿವು ಹತ್ತಿದಂತೆ ಅವರೆಲ್ಲ ಸಹಜವಾಗಿದ್ದರು. ಈ ಘಟನೆಯ ನಂತರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥೈಸಿಕೊಂಡ ಭಾವನೆ – ಅದೊಂದು ವ್ಯಾವಹಾರಿಕ ಸಂಬಂಧವೇ ಆಗಿದ್ರೂ – ಅವರನ್ನು ಆವರಿಸಿಕೊಂಡಿತ್ತು. +* +* +* +ದಿವಾಕರನ ಒಳಗೊಳಗಿನ ಚಡಪಡಿಕೆಗಳು ಮಾತ್ರ ಹೆಚ್ಚುತ್ತಲೇ ಇತ್ತು. ಹೆಚ್ಚೇನೂ ವ್ಯತ್ಯಾಸವಿಲ್ಲದೆ ಸಾಗುತ್ತಿರುವ ದಿನಚರಿ ಇದ್ದಕ್ಕಿದ್ದ ಹಾಗೆ ಅರ್ಥಹೀನವಾಗ್ತಿದೆ ಎಂಬ ಅನ್ನಿಸಿಕೆ. ಒಮ್ಮೊಮ್ಮೆ ಆಳದಿಂದ ಒದ್ದುಕೊಂಡು ಬರುವ ನಿರಾಸೆ, ಬೇಸರ, ಎಲ್ಲ ನೀರಸವಾದಂತೆ, ನಿಶ್ಯಬ್ಧ ಮೌನವೊಂದು ಬದುಕಲ್ಲಿ ತುಂಬಿಕೊಂಡಂತೆ… ಎಲ್ಲಕ್ಕಿಂತ ಹೆಚ್ಚು ನೀರವ ಕತ್ತಲಲ್ಲಿ ಕತ್ತಲೂ ಕೂಡ ಸ್ವರ್ಶಿಸದಂತೆ ಒಬ್ಬನೇ ನಿಂತುಬಿಟ್ಟಿರುವ ಭಾವನೆ ಆಗೀಗ ತೀವ್ರವಾಗಿ ಕಾಡುವುದಿತ್ತು. ಅದು ಆಳದ ಒಂಟಿತನದ ಭಯವೋ ಅಥವಾ ಅಭದ್ರತೆಯ ಭಯವೋ ಅವನಿಗೆ ಅರ್ಥವಾಗಿರಲಿಲ್ಲ. +ದಿವಾಕರ ವಾರದಲ್ಲಿ ಒಂದು ದಿನ ಬೆಳಿಗ್ಗೆ ಮಾತ್ರ ಅಂಗಡಿಗೆ ರಜೆ ಮಾಡುತ್ತಿದ್ದ. ಅಂಗಡಿಗೆ ಮನೆಗೆ ಬೇಕಾದ ಸಾಮಾನು ತಂದು ಕೊಳ್ಳುವುದು, ಅಂಗಡಿಯನ್ನು ಸ್ವಚ್ಛಗೊಳಿಸುವುದು, ಇಸ್ತ್ರಿಯಂಗಡಿಗೆ ಬಟ್ಟೆ ಕೊಡುವುದು ಇಂತಹ ಎಲ್ಲ ಕೆಲಸಗಳನ್ನು ಆ ದಿನ ಮುಗಿಸುತ್ತಿದ್ದ. ರಜೆಯ ದಿನ ಬುಧವಾರ ಬೇಗ ಎದ್ದವನೇ ಅಂಗಡಿಯ ಮುಂದೆ ಹಾದುಕೊಂಡು ಮುಲ್ಕ್ ನೈದಾನ ತೋಪಿನ ಪಕ್ಕದ ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತ ಉಪ್ಪಲಿ ಬುರುಜಿನ ಹತ್ತಿರ ಬರುತ್ತಿದ್ದ. ಮೂರು ನಾಲ್ಕು ಶತಮಾನಗಳಿಂದ ಏನೆಲ್ಲ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡು, ಏನೆಲ್ಲ ನೋಡಿಯೂ ಧೃತಿಗೆಡದೆ ತನ್ನ ನಿರ್ಲಿಪ್ತತೆ, ನಿಶ್ಚಲತೆಯಲ್ಲಿಯೇ ಏನೋ ಒಂದು ಚೈತನ್ಯವನ್ನಿಟ್ಟುಕೊಂಡಂತೆ ತೋರುವ ಉಪ್ಪಲಿಬುರುಜಿನ ದೊಡ್ಡ ದೊಡ್ಡ ಕಲ್ಲಿನ ಮೆಟ್ಟಿಲನ್ನು ಮೆಲ್ಲನೇರಿ ಹೋಗುತ್ತಿದ್ದ. ಚುಮುಚುಮು ಬೆಳಗಿನಲ್ಲಿ ಮೇಲೆ ಕುಳಿತಾಗ ಪ್ರತಿಬಾರಿ “ಅರೆ… ಮೆಟ್ಟಿಲೆಣಿಸುವುದೇ ಮರೆತೆನಲ್ಲ… ಮುಂದಿನ ವಾರ ಬಂದಾಗ ಖಂಡಿತಾ ಎಣಿಸಬೇಕು” ಎಂದು ಚಿಕ್ಕ ಹುಡುಗನ ಮುಗ್ಧತೆಯಲ್ಲಿ ಹೇಳಿಕೊಳ್ಳುತ್ತಿದ್ದ. ಬುರುಜಿನ ಕೆಳಗೆ ಚಕ್ಕ ಕಂದರ… ಕಂದರದಾಚೆ ಸ್ಲಂ ಎಂದು ಕರೆಯಬಹುದಾದ ಚಿಕ್ಕ ಚಿಕ್ಕ ಗುಡಿಸಲುಗಳು ಗುಂಪು…ಜಿಲ್ಲಿಯ ಮನೆಯೂ ಅಲ್ಲಿಯೇ ಅಲ್ಲೋ ಇತ್ತು. ಜೆಲ್ಲಿ ಹೇಳುತ್ತಿದ್ದ ಕತೆ ಯಾವುದಾದ್ರೂ ನೆನಪಾಗಿ ಕೆಳಗೆ ಕಾಣಿಸುವ ಮನೆಗಳಲ್ಲಿ ಯಾವುದೋ ಹಸುಳೆಗೆ ಆಶ್ರಯ ಕೊಟ್ಟ ಮನೆ, ಯಾವುದೋ ಬಸುರಿಯನ್ನು ದವಾಖಾನೆಗೆ ಸೇರಿಸಿದವರ ಮನೆ, ಹೆತ್ತವರಿಂದ ತಪ್ಪಿಸಿಕೊಂಡು ಅಳುತ್ತಿದ್ದ ಯಾವುದೋ ಹುಡುಗನ ಕಂಬನಿ ಒರೆಸಿದವರ ಮನೆ ಯಾವುದಿರಬಹುದು ಎಂದು ಹುಡುಕುತ್ತ ಕುಳಿತುಕೊಳ್ಳುತ್ತಿದ್ದ. ಆಗಲೋ ಈಗಲೋ ಬೀಳುವಂತಿದ್ದ ಗೋಡೆಗಳ, ಜೋರಾಗಿ ಗಾಳಿ ಬೀಸಿದರೆ ಮೇಲಿನ ಪತ್ರಾಸು ಹಾರಿಕೊಂಡು ಹೋಗುವಂತಿದ್ದ ಹಳೇ ಬೆಂಕಿಪೊಟ್ಟಣದಂತಹ ಆ ಮನೆಗಳಲ್ಲಿ ಸದಾ ತುಡಿಯುವ ಹೃದಯವಿದ್ದ ಹಾಗೆ, ಅದಮ್ಯ ಚೈತನ್ಯದ ಅಲೆಯಿದ್ದ ಹಾಗೆ ಅವನಿಗೆ ಅನ್ನಿಸುತ್ತಿತ್ತು. +ದಿವಾಕರನಿಗೆ ಜಿಲ್ಲಿ ಹೇಳಿದ ಎಲ್ಲ ಸುದ್ದಿಗಳಲ್ಲಿ ತೀವ್ರವಾಗಿ ತಟ್ಟಿದ್ದು ಆರೇಳು ತಿಂಗಳ ಹಿಂದೆ ಅಚಾನಕ್ ಜಿಲ್ಲಿಯ ಕೈಗೆ ಸಿಕ್ಕುಬಿದ್ದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಹೆಂಗಸಿನದು. ಜಿಲ್ಲಿ ಆಗೀಗ ಸಂಜೆಗಳಲ್ಲಿ ಜಾಲಿಕಟ್ಟಿಗೆಯನ್ನು, ಪುರುಳೆಗಳನ್ನು ಆಯ್ದುಕೊಂಡು ಬರಲು ಊರ ಹೊರಗಿನ ತೊರವಿಯಾಚೆಗಿನ ಖಿಲ್ಲೆಯ ಕಡೆ ಹೋಗುವುದಿತ್ತು. ಅಲ್ಲೊಂದು ಆದಿಲ್‌ಶಾಹಿ ಕಾಲದ್ದೆಂದು ಹೇಳಲಾಗುವ ಹಳೆಯ ಬಾವಿಯೂ ಇತ್ತು. ಆ ದಿನ ಜಿಲ್ಲಿ ಕಟ್ಟಿಗೆ ಹೊತ್ತುಕೊಂಡು ಬಾವಿ ಈಚೆಯಿಂದ ಹಾದುಕೊಂಡು ಬರುವಾಗ ನಸುಗತ್ತಲಲ್ಲಿ ಬಾವಿ ಹತ್ತಿರ ಹೆಂಗಸೊಬ್ಬಳು ಬಗ್ಗಿ ನಿಂತಂತೆ ಅನ್ನಿಸಿದ್ದೆ ಸದ್ದಿಲ್ಲದೆ ಕಟ್ಟಿಗೆ ಹೊರೆ ಇಳಿಸಿ ಹಿಂದಿನಿಂದ ಹೋಗಿ ಆ ಹೆಂಗಸನ್ನು ಹಿಡಿದು “ಬಿಡು.. ಬಿಡು” ಎಂದು ಕೊಸರಿಕೊಳ್ಳುತ್ತಿದ್ದವಳನ್ನು ಬಾವಿಯ ಅಂಚಿನಿಂದ ಎಳೆದು ತಂದವಳೇ ಕೆನ್ನೆಗೊಂದು ರಪ್ ಎಂದು ಬಾರಿಸಿದ್ದಳು. ಬಿಕ್ಕಿ ಬಿಕ್ಕಿ ಅಳ ತೊಡಗಿದವಳನ್ನು ತಬ್ಬಿಕೊಂಡು “ಯಾಕವ್ವಾ… ಜೀಂವಾ ಒಜ್ಜೆಯಾಗೂ ಹಂಗ ನಿಂಗೇನಾತವ್ವಾ” ಅಂತ ಸಂತೈಸುತ್ತ ತಾನೂ ಗಳಗಳನೆ ಅತ್ತಿದ್ದಳು. ಏನೂ ಹೇಳದೆ ಬಾಯಿ ಹೊಲೆದುಕೊಂಡಂತಿದ್ದವಳನ್ನು ಯಾರು, ಎತ್ತ ಏನೂ ವಿಚಾರಿಸದೆ ತನ್ನ ಮನೆಗೆ ಕರೆ ತಂದುಬಿಟ್ಟಿದ್ದಳು. +ದಿವಾಕರನಿಗೆ ಇದನ್ನು ಹೇಳಿದಾಗ “ನಿಂದೇ ನಿಂಗೆ ನೆಲಿಯಿಲ್ಲ. ಬೇರೆಯವ್ರ ಉಸಾಬರಿ ನಿಂಗ್ಯಾಕೆ ಬೇಕಿತ್ತು. ನಿನ್ನ ಮಕ್ಳಿಗೇ ಅರೆ ಹೊಟ್ಟೆ ಮಾಡ್ತೀಯ.. ಇನ್ನು ಅವಳಿಗೆಲ್ಲಿಂದ ತಂದು ಹಾಕ್ತೀಯ” ಅಂತ ಬ್ಯೆಯ್ದಿದ್ದ. “ಆಕಿಗೂ ಎಲ್ಲಾರ ನಾಕ ಛಲೋ ಮನಿ ಕೆಲಸ ಹಚ್ಚಿಕೊಡ್ತೀನಿ ಬಿಡ್ರೀ. ನೀವೆಲ್ಲ ಇರೂ ತನಾ ನನಗ ಮತ್ತ ಯಾವ ನೆಲಿ ಬೇಕ್ರೀ” ಅದು ಯಾವುದೂ ಸಮಸ್ಯೆಯೇ ಅಲ್ಲವೆಂಬಂತೆ ಜಿಲ್ಲಿಯ ಸರಳ ಉತ್ತರ ಸಿದ್ದವಾಗಿತ್ತು. ಮತ್ತೊಂದು ಹದಿನೈದು ದಿನದ ನಂತರ ಆ ಹೆಂಗಸು ಎರಡು ತಿಂಗಳ ಬಸುರಿ ಅಂತ ಗೊತ್ತಾದ ಮೇಲೆಯೂ ಜಿಲ್ಲಿ ಅವಳ ಪೂರ್ವಾಪರ ಏನೂ ವಿಚಾರಿಸದೇ “ಮದುವೆಯಾಗ್ತೀನಿ ಅಂತ್ಹೇಳಿ ಕೈಕೊಟ್ಟು ಹೋಗಿರಬೇಕು” ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದಳು. ದಿವಾಕರನ ಮುಂದೆ ಮಾತ್ರ ಒಂದೆರಡು ಸಲ “ಯಾವನೋ ಬಾಂಚೋದ್… ಕೈಕೊಟ್ಟು ಓಡಿ ಹೋಗ್ಯಾನ. ಸುಖ ಪಡಿಯೂ ಮುಂದ ಖಬರಿರಲಿಲ್ಲೇನ ಕೈಲಾಗದ ಹೇಡಿ” ಅಂತ ಬೈದಿದ್ದಳು. ಜಿಲ್ಲಿ ಯಾರಿಗಾದರೂ ಕೆಟ್ಟದಾಗಿ ಬೈಯ್ದಿದ್ದನ್ನು ಅವತ್ತಿನವರಿಗೆ ನೋಡಿರದ ದಿವಾಕರ ಬಹುಶಃ ಜಿಲ್ಲಿಗೆ ಸಿಟ್ಟು ಬಂದಿದೆ ಎಂದುಕೊಂಡಿದ್ದ. ಜಿಲ್ಲಿ ಆಗೀಗ ಅವಳ ಕುರಿತು ಹೇಳುವುದಿತ್ತು. ಅವು ಬರಿಯ ಸುದ್ದಿಯಾಗಿರದೆ, ಜೀವಂತ ವಿವರಗಳಿಂದ ಕೂಡಿದಂತೆ ಅನ್ನಿಸಿದ್ದಕ್ಕೊ ಏನೋ ದಿವಾಕರನ ಮನಸ್ಸಿನಲ್ಲಿ ಒಂದು ಪುಟ್ಟ ಅನಾಥ ಬಸುರಿಯ ಚಿತ್ರ ಮೂಡಿಬಿಟ್ಟಿತ್ತು. ಈ ಊರು ಹೀಗೆ ಎಷ್ಟು ಅನಾಥರಿಗೆ ನೆಲೆ ನೀಡಿದೆಯೋ ಎಂದುಕೊಳ್ಳುವಾಗ ತಟ್ಟನೆ ಮನದಲ್ಲಿ ಬಸ್‌ಸ್ಟ್ಯಾಂಡಿನಲ್ಲಿ ನಾಲ್ಕುದಿನ ಅರೆಹೊಟ್ಟೆ ಕುಳಿತ ಹದಿನೆಂಟರ ಹುಡುಗನ ಚಿತ್ರ ಮೂಡುತ್ತಿತ್ತು. +ಆ ಬಸುರಿ ಯಾಕೆ ಓಡಿ ಬಂದಿರಬಹುದು ಎಂದು ಕಾರಣಗಳ, ಆ ಪರಿಸ್ಥಿತಿಯ ಊಹೆಯ ಬೆನ್ನಟ್ಟಿ ಹೋದವನು ಬಂದು ನಿಲ್ಲುತ್ತಿದ್ದುದು ಮಾತ್ರ ಹದಿನೆಂಟರ ಹುಡುಗ ಮನೆಬಿಟ್ಟು ಓಡಿಹೋದ ಪ್ರಸಂಗಕ್ಕೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಿಂಗಳಿರುವಾಗ ಅಮ್ಮ.. ಅವನ ಪ್ರೀತಿಯ ಅಮ್ಮ ಒಂದು ಬೆಳಿಗ್ಗೆ ಇವನು ಕರೆದಾಗ ಓಗುಡದೇ ಮೌನದಲ್ಲಿ ಮೌನವಾಗಿ, ಅನಂತ ಶೂನ್ಯದಲ್ಲೊಂದು ನಿಶ್ಯಬ್ಧದ ಹನಿಯಾಗಿ ಕರಗಿ ಹೋಗಿದ್ದಳು. ವರ್ಷವಾಗುವಷ್ಟರಲ್ಲಿ ಅಪ್ಪ ಮತ್ತೆ ಮದುವೆಯಾಗಿದ್ದ. ಅಪ್ಪನ ಮುಂದೆ, ಅಪ್ಪನಿಗೆ ಮದುವೆ ಮಾಡಿಸಿದರವರ ಮುಂದೆ ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ಮನೆ ಸಂಭಾಳಿಸಲಿಕ್ಕೆ ಹೆಣ್ಣೊಂದು ಬೇಕೆಂಬ ನೆವವಿತ್ತು. ಚಿಕ್ಕಮ್ಮನನ್ನು ಧಾರೆಯೆರೆದು ಕೊಡಲಿಕ್ಕೆ ಅವಳ ಬಡ ಅಪ್ಪನಿಗೆ ಕನ್ಯಾಸೆರೆ ಬಿಡಿಸಿಕೊಳ್ಳುವ ನೆವವಿತ್ತು. “ಇನ್ನು ಮದುವೆಯಾಗಿಲ್ಲ, ಪಾಪ” ಎಂಬ ವಾಕ್ಯವನ್ನು ನಾಲ್ಕಾರು ವರ್ಷಗಳಿಂದ ಕೇಳಿಕೇಳಿ ಒಣಗಿದ್ದ ಆ ಇಪ್ಪತ್ತಾರ ಹುಡುಗಿಗೆ ಇಷ್ಟು ದೊಡ್ಡ ಮಕ್ಕಳಿಗೆ ತಾಯಿಯಾಗುವ ಮಜಬೂರಿ ಇತ್ತು. ಆದರೆ ಅಮ್ಮನನ್ನು ಅತಿಯಾಗಿ ಹಚ್ಚಿಕೊಂಡಿದ್ದ ದಿವಾಕರ ಮಾತ್ರ ಯಾವುದನ್ನೂ ಒಪ್ಪಿಕೊಳ್ಳಲಾಗದೆ, ಅಡಿಗೆಮನೆಯಲ್ಲಿ ಅಮ್ಮನ ಹೊರತಾಗಿ ಬೇರೆ ಹೆಂಗಸನ್ನೇ ಕಲ್ಪಿಸಿಕೊಳ್ಳಲಾರದಂತಹ ಮನಸ್ಥಿತಿಯಲ್ಲಿದ್ದ. ನಲವತ್ತು ದಾಟಿದ್ದ ಅಪ್ಪ ಹರೆಯದವನಂತೆ ವರ್ತಿಸುವುದನ್ನು ನೋಡಿದಾಗೆಲ್ಲ ಮೈಯುರಿಯುತ್ತಿತ್ತು. +ನಾಲ್ಕು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಂಡಯಾತ್ರೆ ಮಾಡಿ “ತಲೇಲಿ ಮಣ್ಣು ತುಂಬಿದೆ ನಿಂಗೆ” ಎಂಬ ಮೂದಲಿಕೆ ಕೇಳಿ ಕೇಳಿ ತೋಟದ ದಾರಿ ಹಿಡಿದಿದ್ದವನಿಗೆ ಬಾಂಬೆಯಲ್ಲಿ ಛಲೋ ಬಿಸಿನೆಸ್ ಮಾಡ್ಕೊಂಡಿದೀನಿ ಎಂದು ಬಂದಾಗೆಲ್ಲ ಕೊಚ್ಚಿಕೊಳ್ಳುವ ಸುಬ್ಬಣ್ಣ ದಿವಾಕರನ ಕಣ್ಣಂಚಿನಲ್ಲಿ ಮಾಯಾಮೃಗದ ಛಾಯೆಯನ್ನು ಮಿಂಚಿಸಿಬಿಟ್ಟಿದ್ದ. ಅವನ ಮಾತು ಕೇಳಿ ಮನೆಯಿಂದ ಮೂರು ಸಾವಿರ ಕದ್ದು ಓಡಿಬಂದಿದ್ದ. ಆಗ ಮೂರು ಸಾವಿರವೆಂದರೆ ಕಡಿಮೆಯೇನಲ್ಲ. “ನಾನು ಇವತ್ತು ಹೋಗಿರ್‍ತೆ. ಹುಬ್ಬಳಿಯಲ್ಲಿ ಚೂರು ಕೆಲಸ ಇದೆ. ನಾಡಿದ್ದು ಸಂಜೆಗೆ ನಾಲ್ಕಕ್ಕೆ ಬಿಡುತ್ತಲ್ಲ… ಆ ಬಸ್ಸಿಗೆ ಬಾ ತಿಳೀತಾ. ಯಾರಿಗೂ ಸುಳಿವು ಕೊಡಬೇಡ. ಇನ್ನೆರೆಡೇ ವರ್ಷ ನೋಡು… ಆಮೇಲೆ ನೀ ಹ್ಯಾಗೆ ತಯಾರಾಗ್ತೆ ಅಂತ. ನಿನ್ನ ಅಪ್ಪಂಗೆ ಸಡ್ಡು ಹೊಡೆದು ನಿಲ್ಲಬಹುದು” ದಿವಾಕರನ ಒಳಗೊಳಗಿನ ಬೆಂಕಿಗೆ ತುಪ್ಪಹಾಕಿದ್ದ. +ಎರಡುದಿನ ಬಿಟ್ಟು ಸುಬ್ಬಣ್ಣನ ಮಾತು ನಂಬಿ ಅವ ಹೇಳಿದಂತೆ ಸಂಜೆ ಹುಬ್ಬಳ್ಳಿಯ ಬಸ್‌ಸ್ಯಾಂಡ್‌ನಲ್ಲಿ ನಿಂತಾಗಿತ್ತು. ಹಾಗೆ ನಿಂತಾಗಲೂ ಇಬ್ಬರು ತಮ್ಮಂದಿರ, ತಂಗಿಯ ನೆನಪಾಗಿದ್ದೇ ವಾಪಾಸು ಮನೆಗೆ ಹೋಗಿಬಿಡಲೇ ಎಂಬ ಸೆಳೆತವು ಇತ್ತು. ಸುಬ್ಬಣ್ಣ ಹತ್ತುನಿಮಿಷ ತಡವಾಗಿ ಸಿಕ್ಕದ್ದರೆ ಹೋಗಿ ಶಿರಸಿಯ ಬಸ್ಸು ಹತ್ತಿ ಕುಳಿತಿರುತ್ತಿದ್ದನೋ ಏನೋ…ಆದರೆ ಸುಬ್ಬಣ್ಣ ಹಿಡಿದೇ ಬಿಟ್ಟಿದ್ದ. ಇವನಿಗೇ ತಿಳಿಯದ ದೌರ್ಬಲ್ಯದ ಎಳೆಯೊಂದನ್ನು ತನ್ನ ಚಾಲಾಕುತನಕ್ಕೆ ಗಂಟು ಹಾಕಿಕೊಂಡು ಬಿಟ್ಟಿದ್ದ ಅವನು. ರಾತ್ರಿ ಬಾಂಬೆ ಬಸ್ ಅಂತ ಹತ್ತಿಸಿ, ಇವನಿಗೆ ನಿದ್ದೆ ಹತ್ತಿದಾಗ ನಡುವೆ ಎಲ್ಲೋ ಇಳಿದೇ ಹೋಗಿದ್ದ. ಬೆಳೆಗ್ಗೆ ಇವನು ಕಣ್ಣು ಬಿಟ್ಟಾಗ ಪಕ್ಕದಲ್ಲಿ ಸುಬ್ಬಣ್ಣ ಇರಲಿಲ್ಲ… ಅದು ಬಾಂಬೆ ಬಸ್ಸಾಗಿರಲಿಲ್ಲ. ಇವನಿಳಿದಿದ್ದು ಬಿಜಾಪುರದಲ್ಲಾಗಿತ್ತು. ಮೂರುಸಾವಿರದ ಕಳ್ಳಗಂಟನ್ನು ಜೋಪಾನವಾಗಿ ಇಟ್ಟುಗೊಳ್ತೆ ತಾ ಎಂದು ಜೋಪಾನವಾಗಿ ಇಟ್ಟುಕೊಂಡವನು ಹೊರಟೇ ಹೋಗಿದ್ದ. +ದಿವಾಕರನಿಗೆ ತಾನಿದ್ದ ಪರಿಸ್ಥಿತಿಯ ಅರಿವಾಗಲು ಸುಮಾರು ಹೊತ್ತು ಹಿಡಿದಿತ್ತು. ಇದ್ದ ಪುಡಿಗಾಸಿನಲ್ಲಿ ನಾಲ್ಕು ದಿನ ಅರೆಹೊಟ್ಟೆ ತಿಂದು; ಅಲ್ಲಯೇ ಮಲಗಿ… ನರಕ ಯಾತನೆಯ ಹಿಂಸೆ ಅನುಭವಿಸಿದವನು ಏನಾದ್ರೂ ದಾರಿ ಹುಡುಕಲೇ ಬೇಕು ಎಂದು ಹಲ್ಲು ಕಚ್ಚಿ ಎದ್ದವನು ಎರಡು ದಿನ ಅಲೆದು ಕಡೆಗೆ ಉಡುಪಿ ಹೋಟಲೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಪ್ಲೇಟೆತ್ತುವ, ತೊಳೆಯುವ ಕೆಲಸದಿಂದ ಹಿಡಿದು ಸಪ್ಲ್ಯೆಯರ್ ಹಂತಕ್ಕೆ ಏರುವವರೆಗೆ ದಿವಾಕರನ ಕಣ್ಣು ಹೊರಗಿನ ಪಾನ್‌ಶಾಪ್ ಮೇಲೆ ನೆಟ್ಟಿರುತ್ತಿತ್ತು. ವಿಚಿತ್ರ ಆಕರ್ಷಣೆ… ಕಣ್ಣಂಚಿನ ಆಗಿನ ಗುರಿ… ಸ್ವಲ್ಪ ಸ್ವಲ್ಪ ದುಡ್ಡು ಉಳಿಸಿ ಆರೇಳು ವರ್ಷದ ನಂತರ ತಾನೇ ಒಂದು ಪಾನ್ ಶಾಪ್‌ನಿಟ್ಟಿದ್ದ . ಏನೆಲ್ಲ ತಲ್ಲಣ, ತಳಮಳವನ್ನು ಒಂಟಿಯಾಗಿ ಎದುರಿಸಿ, ಯಾರೂ ಹತ್ತಿರಕ್ಕೆ ಹಾಯದಂತೆ ಸುತ್ತ ಗೂಡು ಕಟ್ಟಿಕೊಂಡು ಈಗ ಗೂಡೊಳಗಿನ ಒಂಟಿ ಹಕ್ಕಿಯಂತಾಗಿಬಿಟ್ಟಿದ್ದ. +ಉಪ್ಪಲಿ ಬುರುಜಿನ ಮೇಲೆ ಹತ್ತಿ ಕುಳಿತ ಬೆಳಗುಗಳಲ್ಲಿ ಆಗೀಗ ಇದೆಲ್ಲ ನೆನಪಾಗುವುದಿತ್ತು. ತಾನು ಹಾಗೆ ಓಡಿಬರಲು ಕಾರಣವಾದರೂ ಏನಿತ್ತು ಎಂದು ಹುಡುಕ ಹೊರಟವನಿಗೆ ಯಾವುದೂ ಅಷ್ಟು ದೊಡ್ಡದಲ್ಲ, ಮಹತ್ವದಲ್ಲ ಎನ್ನಿಸಿಬಿಡುತ್ತಿತ್ತು. ಯಾವ ಕಾರಣವಾಗಿದ್ದರೆ ಈಗಲೂ ಸಮರ್ಥನೀಯವೆನ್ನಿಸುತ್ತಿತ್ತು ಹಾಗಿದ್ರೆ ಎಂದು ಗೊಂದಲಗೊಳ್ಳುತ್ತಿದ್ದ. ಹೀಗೆಲ್ಲ ಯೋಚಿಸುತ್ತ ಕುಳಿತಾಗ ಕೆಲವು ಬಾರಿ ಹೊತ್ತೇರಿ, ಅಲ್ಲಿಂದ ಕಾಣುವ ಮುಲ್ಕ್ ಮೈದಾನದಲ್ಲಿರುವ ಎರಡು ನುಣ್ಣನೆಯ ಕರೀ ತೋಪುಗಳ ಮೇಲೆ ಬಿಸಿಲು ಬಿದ್ದು ಅದು ಫಳ ಫಳನೆ ಹೊಳೆಯುವಾಗ ದಿವಾಕರ ಥಟ್ಟನೆ ಅಲ್ಲಂದೆದ್ದು ಕೆಳಗಿಳಿದು ಬರುತ್ತಿದ್ದ. +ಅಂಗಡಿಗೆ ರಜೆಯಿದ್ದ ಒಂದು ದಿನ ಜಿಲ್ಲಿಯ ಬದಲು ಅವಳ ಚಿಕ್ಕ ಮಗಳು ಬಂದಿದ್ದಳು. ಊರಲ್ಲಿ ಯಾರೋ ತೀರಿಕೊಂಡಿದ್ದಾರೆಂದು ಓಣಿಯ ಏಳೆಂಟು ಹೆಣ್ಣು ಮಕ್ಕಳೊಡನೆ ತನ್ನವ್ವನೂ ಹೋಗಿದ್ದಾಳೆಂದೂ. ಎರಡು ದಿನ ಬಿಟ್ಟು ಬರುತ್ತಾಳೆಂದೂ ತಿಳಿಸಿ ಪಾತ್ರೆ ತಿಕ್ಕಿಟ್ಟು ಹೋದಳು. ಅದೇ ದಿನ ಸಂಜೆ ಆರರ ಸುಮಾರಿಗೆ ದಿವಾಕರ ಅಂಗಡಿಯಲ್ಲಿದ್ದಾಗಲೇ ಆ ಹುಡುಗಿ ಮತ್ತೆ ಬಂದಳು. ಆ ಬಸುರಿ ಹೆಂಗಸಿಗೆ ಹುಷಾರಿಲ್ಲವೆಂದೂ, ಸರಕಾರಿ ದವಾಖಾನೆಗೆ ಹೋಗಿದ್ದಾಳೆಂದೂ, ಸ್ವಲ್ಪ ದುಡ್ಡು ಬೇಕಾಗಿದೆಯೆಂದೂ ಕೇಳತೊಡಗಿದಳು. ಹುಡುಗಿ ಗಾಭರಿಯಲ್ಲಿದ್ದಂತಿತ್ತು. ಒಂದಿಬ್ಬರು ಗಿರಾಕಿಗಳಿದ್ದದ್ದರಿಂದ ದಿವಾಕರನೂ ಹೆಚ್ಚೇನೂ ವಿಚಾರಿಸದೇ ಇನ್ನೂರು ರೂಪಾಯಿ ಕೊಟ್ಟು ಕಳಿಸಿದ. ಗಿರಾಕಿಗಳು ಕಡಿಮೆಯಾಗಿ ಒಬ್ಬನೇ ಉಳಿದ ನಂತರವೇ ದಿವಾಕರನಿಗೆ ಯೋಚನೆಗಿಟ್ಟುಕೊಂಡಿದ್ದು. ಹುಷಾರಿಲ್ಲ ಎಂದರೇನರ್ಥ.. ಅವಳಿಗೆ ಎರಡು ತಿಂಗಳಾಗಿದೆ ಅಂತ ಜಿಲ್ಲಿ ಹೇಳಿದ್ದು ಆರೇಳು ತಿಂಗಳ ಹಿಂದೆ… ಅಂದರೆ ಈಗ ಹೆಚ್ಚು ಕಡಿಮೆ ಒಂಬತ್ತು ತಿಂಗಳೇ… ದಿವಾಕರನ ಕಣ್ಣಲ್ಲಿ ಮತ್ತೆ ತೂಗಿದ ಪುಟ್ಟ ಬಸುರಿಯ ಚಿತ್ರ. ಧಡಕ್ಕೆನೆದ್ದು ಪ್ಯಾಂಟು ಜೋಬಿನಲ್ಲಷ್ಟು ದುಡ್ಡು ಇಟ್ಟುಕೊಂಡು ಸಿಟಿಬಸ್‌ಗೆ ಕಾಯುವ ವ್ಯವಧಾನವೂ ಇಲ್ಲದೆ ಆಟೋ ಹಿಡಿದು ಸರಕಾರಿ ದವಾಖಾನೆಗೆ ಬಂದು ಡೆಲಿವರಿ ವಾರ್ಡ್ ಎಲ್ಲಿ ಅಂತ ಕೇಳಿ ಅತ್ತ ಧಾವಿಸಿದವನಿಗೆ ಜಿಲ್ಲಿಯ ಮಗಳು ಕಾಣಿಸಿದಳು. ಅವಳ ಜೊತೆ ಜನರಲ್ ವಾರ್ಡಿನತ್ತ ಹೊರಟ ದಿವಾಕರನಿಗೆ ಸುತ್ತ ನೋಡಿಯೇ ಬೆವರು ಕಿತ್ತು ಬರಲಾರಂಭಿಸಿತ್ತು. ಬರೀ ಬಸುರಿಯರು, ಬಾಣಂತಿಯರು… ಕೆಲವರ ಪಕ್ಕದಲ್ಲಿ ಮಗು.. ಒಂದಿಬ್ಬರ ಪಕ್ಕದಲ್ಲಿ ಖಾಲಿ ತೊಟ್ಟಿಲು… ಆಪರೇಶನ್ ಮಾಡಿಸಿಕೊಂಡ ಹೆಂಗಸರು…ನೋವು ತಿನ್ನುತ್ತ ಚೀರುತ್ತಿದ್ದ ಬಸುರಿಯರು. ದಿವಾಕರನ ಎದೆಯಲ್ಲಿ ಒಂದೇ ಸದ್ದು ಚಳಚಳಕ್… ಸಂಕದಿಂದ ಕಾಲು ಜಾರಿದ ಸದ್ದು… ನಂತರ ಫಳ್ ಫಳಾರ್… ಬಳೆ ಚೂರಾದ ಸದ್ದು. +ಜಿಲ್ಲಿಯ ಮಗಳು ಇವನ ಕೈಹಿಡಿದು ಆ ಹೆಂಗಸಿನ ಪಕ್ಕ ನಿಲ್ಲಿಸಿದಳು. ನೋವಿನಿಂದ ಮುಲುಗುಟ್ಟುತ್ತಿದ್ದ ಹಿಂಡಿದಂತಿದ್ದ ಮುಖ ದಿವಾಕರ ಕಲ್ಪಿಸಿಕೊಂಡಿದ್ದಕ್ಕಿಂತ ಬೇರೆಯಾಗಿಯೇನೂ ಇರಲಿಲ್ಲ. ದಿವಾಕರ ಒಂದು ರೀತಿ ದಿಗ್ಭ್ರಮೆಗೆ ಒಳಗಾದಂತೆ ನಿಂತಿದ್ದ. ಎಲ್ಲ ಮಂಚದ ಹತ್ತಿರ ಬಸುರಿಯರ, ಬಾಣಂತಿಯರ, ಅಮ್ಮಂದಿರು, ಅಕ್ಕಂದಿರು, ಅಣ್ಣಂದಿರು, ಗಂಡಂದಿರು, ಅಪ್ಪಂದಿರು… ಹೀಗೆ ಒಬ್ಬರಲ್ಲ ಒಬ್ಬರಿದ್ದರು. ಈ ಅನಾಥ ಪುಟ್ಟ ಬಸುರಿಯ ಪಕ್ಕದಲ್ಲಿ ಇಷ್ಟೂ ಹೊತ್ತು ಜಿಲ್ಲಿಯ ಮಗಳು ಮಾತ್ರವಿದ್ದಳು. ಅಲ್ಲಿಯ ಚೀರಾಟ, ನರಳಾಟ, ಕೂಸುಗಳು ಅಳುವುದು ನೋಡಿ ಜಿಲ್ಲಿಯ ಮಗಳು ಗಾಭರಿಯಾದಂತಿತ್ತು. “ನಾ ಮನಿಗಿ ಹೋಕ್ಕೀನಿ” ಎಂದವಳೇ ಕೈ ಕೊಸರಿಕೊಂಡು ಬಾಗಿಲವರೆಗೆ ಹೋದವಳು ಮತ್ತೆ ಕೈಯಲ್ಲಿದ್ದ ಹಣ ನೆನಪಾಗಿ ಓಡುನಡಿಗೆಯಲ್ಲಿ ವಾಪಾಸು ಬಂದವಳೇ ದಿವಾಕರ ಕೊಟ್ಟ ಇನ್ನೂರು ರೂಪಾಯಿಯನ್ನು ಅವನ ಕೈಯಲ್ಲಿಟ್ಟಳು. ಜೊತೆಗೆ ಇನ್ನೊಂದು ಕೈಯಲ್ಲಿ ಮಡಚಿ ಹಿಡಿದಿದ್ದ ಬೆವರಿನಿಂದ ಹಸಿಯಾಗಿದ್ದ ಹತ್ತು ರೂಪಾಯಿಯ ನಾಲ್ಕಾರು ಹಳೆಯ ನೋಟುಗಳನ್ನು ಕೊಟ್ಟು “ನಮ್ಮವ್ವ ಕೊಟ್ಟಿದ್ಲು” ಎಂದವಳೇ ದಿವಾಕರ “ಬೇಡ, ನೀನಿಟ್ಟುಕೋ” ಎಂದು ಹೇಳಲೂ ಹೊಳೆಯದೇ ನಿಂತಿರುವಾಗ ಹೊರಟೇ ಹೋಗಿದ್ದಳು. ಕತ್ತಲಾಗಿದೆ, ಹ್ಯಾಗೆ ಹೋಗ್ತಾಳೋ ಎಂದು ಅವಳು ಅಲ್ಲಿಂದ ಹೋದ ಐದು ನಿಮಿಷದ ಮೇಲೆಯೇ ದಿವಾಕರನಿಗನ್ನಿಸಿದ್ದು. +ದಿವಾಕರನಿಗೆ ಆ ಹೆಂಗಸಿನೊಂದಿಗೆ ಏನೂ ಮಾತನಡಲು ತೋಚದೆ ಹಾಗೇ ನಿಂತಿದ್ದ . ಜಿಲ್ಲಿಯ ಹೊರತಾಗಿ ಮತ್ಯಾವ ಹೆಣ್ಣು ಮಕ್ಕಳೊಂದಿಗೂ ಹೆಚ್ಚು ಮಾತನಾಡದವನು, ಮೊದಲ ಬಾರಿ ಜನರಲ್ ಡೆಲಿವರಿ ವಾರ್ಡಿನಲ್ಲಿ ನಿಂತವನು, ಸಂಕೋಚದಿಂದ, ತುಸು ಗಾಭರಿಯಿಂದ ದೇಹ ಹಿಡಿಯಾಗಿಸಿಕೊಂಡು ನಿಂತಿದ್ದ. ಅವಳು ಆಗೀಗ ಎರಡೂ ಕೈಗಳಿಂದ ಹಾಸಿಗೆ ಒತ್ತಿ ಹಿಡಿದು ಕಾಲು ಬಿಗಿಹಿಡಿದು ತುಟಿಕಚ್ಚಿ ಆ ಆ ಅಂತ ಸಣ್ಣದಾಗಿ ಚೀರುತ್ತಿದ್ದಳು. ನೋವು ತೀವ್ರವಾದ ಒಂದೆರಡು ನಿಮಿಷ ಹಾಗೇ… ಮತ್ತೆ ಮೈ ಸಡಿಲಿಸಿ, ಕೈ ಚಾಚುತ್ತಿದ್ದಳು. ಮುಖದ ತುಂಬ ಬೆವರು ಬಿಟ್ಟಿರುತ್ತಿತ್ತು. ದಿವಾಕರನಿಗೆ ಅವಳ ಹಣೆಗಂಟದ ಕೂದಲನ್ನು ಹಿಂದೆ ಸರಿಸಿ ಬೆವರು ಒರೆಸಿ “ತುಂಬ ತ್ರಾಸಾಗ್ತಿದೆಯೇ” ಅಂತ ಕೇಳಿಬಿಡಲೇ ಅಂತ ತೀವ್ರವಾಗಿ ಅನ್ನಿಸಿತೊಮ್ಮೆ. ಇವನು ಕೇಳ ಬೇಕೆಂದುಕೊಳ್ಳುವಷ್ಟರಲ್ಲಿ ನರ್ಸ್ ಒಬ್ಬಳು ಬಂದಿದ್ದಳು. ಹೊಟ್ಟೆಯ ಮೇಲೊಮ್ಮೆ ಕೈಯಾಡಿಸಿ, ಮತ್ತೆ ಮತ್ತೆ ಮುಟ್ಟಿ “ಬೆಳಗಿನ ತನಕ ಜಗ್ಗೂ ಹಂಗ ಕಾಣ್ತದ” ಎಂದು ಗೊಣಗುಟ್ಟಿದಳು. +ದಿವಾಕರನನ್ನು ಒಮ್ಮೆ ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ಆ ನರ್ಸ್ “ಮನಿಗೆ ಹೋಗ್ತಿದ್ರೆ ಹೋಗಿ ಬರ್ರಿ. ಬೆಳಗಿನ ತನಕ ಆಗಂಗ ಕಾಣಂಗಿಲ್ಲ” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದವಳೇ ಯಾರಿಗೋ ಔಷದಿಯೋ, ಇಂಜೆಕ್ಷನ್ನೋ ಕೊಡುವುದು ನೆನಪಾದವಳಂತೆ ವೇಗವಾಗಿ ಸರಿದು ಹೋದಳು. ದಿವಾಕರ ಅಲ್ಲಿಂದ ಮೆಲ್ಲನೆ ಹೊರಟ. ಹಸಿವೆಯಾಗತೊಡಗಿತ್ತು. ದವಾಖಾನೆಯ ಹೊರಬಂದವನು ಅಲ್ಲೇ ಹೊರಗೆ ಕೈಗಾಡಿಯಲ್ಲಿ ಸಿಗುತ್ತಿದ್ದ ಆಮ್ಲೆಟ್, ಬ್ರೆಡ್ ತಿಂದು ಚಾ ಕುಡಿದ. ಅವಳಿಗೇನಾದ್ರೂ ತಿನ್ನಲು ಕುಡಿಯಲು ಬೇಕಿತ್ತೇನೋ… ಏನೂ ಕೇಳಲೇ ಇಲ್ಲವಲ್ಲ ಛೇ.. ಎನ್ನಿಸಿದ್ದೇ ಕಸಿವಿಸಿಗೊಂಡ. ಏನಾದರಾಗಲಿ ಎಂದುಕೊಂಡು ಉದ್ದ ಗಾಜಿನ ಲೋಟದಲ್ಲಿ ಚಾ ತೆಗೆದುಕೊಂಡು ಮತ್ತೆ ಅವಳ ಬಳಿ ಬಂದ. ಇವನು ಹೋಗುವಾಗ ಬಾಗಿಲ ಕಡೆ ನೋಡುತ್ತ ಮಲಗಿದ್ದಂತೆಯೇ ಮಲಗಿದ್ದಳು. ತಾನು ವಾಪಾಸು ಬರಲಿಕ್ಕಿಲ್ಲ ಎಂದು ಅವಳಿಗನ್ನಿಸಿರಬಹುದೇನೋ ತಾನು ಬಂದಿದ್ದೇ ಒಳ್ಳೆಯದಾಯ್ತು ಎಂದುಕೊಂಡ ದಿವಾಕರ ಅವಳನ್ನು ಎಬ್ಬಿಸಿ ಕೂಡಿಸಬೇಕೆ ಅಥವಾ ಅವಳೇ ಎದ್ದು ಕುಳಿತುಕೊಳ್ಳಬಹುದೇ ಎಂಬ ಅನುಮಾನದಲ್ಲಿರುವಾಗ ಅವಳು ನೀರು ಬೇಕೆಂದು ಉಸುರಿ ಮಂಚದ ಕೆಳಗಿನ ಬಾಸ್ಕೆಟ್‌ನ್ನು ತೋರಿಸಿದಳು. ಒಂದಿಷ್ಟು ಹಳೆ ಬಟ್ಟೆಗಳೊಂದಿಗಿದ್ದ ನೀರಿನ ಬಾಟಲಿಯನ್ನು ದಿವಾಕರ ತಡಕಾಡಿ ತೆರೆಯುವಷ್ಟರಲ್ಲಿ ಅವಳು ಮೆಲ್ಲನೆದ್ದು ಕುಳಿತಿದ್ದಳು. ನೀರು ಕುಡಿದು, ಟೀ ಗುಟುಕರಿಸಿ ಗ್ಲಾಸ್ ಇವನ ಕೈಗಿತ್ತವಳೇ ಮತ್ತೆ ಮುಲುಗುಡುತ್ತ ಹೊಟ್ಟೆ ಹಿಡಿದು ಮಲಗಿದ್ದಳು. ಆಚೆ ಈಚೆಗಿನ ಮಂಚದ ಬಳಿ ಈಗ ಗಂಡಸರ್‍ಯಾರು ಇರಲಿಲ್ಲ. +ಬಸುರಿ, ಬಾಣಂತಿಯರ ಜತೆಗಿದ್ದ ಹೆಂಗಸರು ಈಗ ಕೆಳಗೆ ಹಾಸಿಕೊಂಡು ಮಲಗುವ ಗಡಿಬಿಡಿಯಲ್ಲಿದ್ದರು. ರಕ್ತ, ಫಿನಾಯಿಲ್, ಔಷದಿಗಳು ಎಲ್ಲದರ ಸಂಮಿಶ್ರಣದ ವಾಸನೆ, ಅಲ್ಲೊಂದು ಇಲ್ಲೊಂದು ಮಗುವಿನ ಅಳು, ಬಸುರಿಯರ ಚೀರಾಟ, ಅಂತಹುದುರಲ್ಲಿಯೇ ಮನೆವಾರ್ತೆ ಹರಟುವ ಹೆಂಗಸರ ಕಲಕಲ ಮಾತುಗಳು… ಇಲ್ಲಿಯವರೆಗೆ ಕಂಡೇ ಇರದಿದ್ದ ಅದ್ಭುತ, ಅಪರಿಚಿತ ಲೋಕವೊಂದರಲ್ಲಿ ನಿಂತಂತೆ ದಿವಾಕರ ಬೆರಗಿನಿಂದ ನೋಡುತ್ತಲೇ ಇದ್ದ. ನಿಂತು ನಿಂತು ಕಾಲು ನೋಯಲಾರಂಭಿಸಿತ್ತು. +ರಾತ್ರಿ ಹನ್ನೊಂದಾಗ ತೊಡಗಿತ್ತು. ರೌಂಡ್ಸ್‌ಗೆ ಬಂದ ರಾತ್ರಿ ಪಾಳಿಯ ನಗುಮೊಗದ ಡಾಕ್ಟರ್ ಇವಳ ಹತ್ತಿರವೂ ಬಂದು ಹೊಟ್ಟೆ ಮುಟ್ಟಿ ಒತ್ತಿ ನೋಡಿದರು. “ಯಾರೂ ಇಲ್ಲೇನವ್ವಾ ಜತಿಗಿ” ಎಂದವರಿಗೆ ದಿವಾಕರ ನಿಂತಿದ್ದು ಗಮನಕ್ಕೆ ಬಂದೊಡನೆ “ಗಂಡಸರು ಹೊರಗೇ ಕೂಡ್ರಬೇಕ್ರೀ. ನಸುಕಿನಾಗ ಹಡೀಬಹುದು” ಎಂದರು. ದಿವಾಕರ ತಲೆಯಲ್ಲಾಡಿಸಿದ. ಮತ್ತೆ ಆ ಪುಟ್ಟ ಬಸುರಿಗೆ ಅಭಯ ತುಂಬುವಂತೆ “ಬ್ಯಾನಿ ತಿನ್ನೂ ಮುಂದ ತಡ್ಕೋಬೇಕವ್ವಾ.. ಜೋರಾಗಿ ಒಮ್ಮಿ ಬ್ಯಾನಿ ಕೊಡು.. ಕೂಸು ಕಡೀಕ್ಕಾಗ್ತೈತಿ.. ಇನ್ನೊಂದು ಮೂರು ನಾಕು ತಾಸು ಅಷ್ಟೇ ತ್ರಾಸು ಆಮೇಲೆ ಎಲ್ಲ ಸರಳ ಆಕೈತಿ.. ಧೈರ್ಯ ತಗೋಬೇಕವ್ವಾ..” ಎನ್ನುತ್ತ ಮತ್ತೊಮ್ಮೆ ಹೊಟ್ಟೆ ಮುಟ್ಟಿ ನೋಡಿ ನರ್ಸ್‌ಗೆ ಏನೋ ತಗ್ಗಿದ ಧ್ವನಿಯಲ್ಲಿ ಹೇಳಿ ಹೋದರು. ಪ್ರತಿದಿನ ಎಷ್ಟೋ ಬಸುರಿಯರಿಗೆ ಧೈರ್ಯ ತುಂಬುವ, ಹೆರಿಗೆ ಮಾಡಿಸುವ ಚೈತನ್ಯ ತನಗುಂಟು ಎಂಬಂತೆ ಆ ವಯಸ್ಸಾದ ಡಾಕ್ಟರ್ ಕಣ್ಣುಗಳಲ್ಲಿ ನಗು, ಎಲ್ಲರೆಡೆಗೆ ಒಂದು ವಾತ್ಸಲ್ಯದ ನಗು ತಾನೇ ತಾನಾಗಿ ಮಿಂಚುತ್ತಿತ್ತು. +ಅವರತ್ತ ಹೋದ ಐದು ನಿಮಿಷದ ನಂತರ ದಿವಾಕರ ಹೊರಗೆ ಕುಳಿತುಕೊಳ್ಳುವ ಎಂದುಕೊಂಡು ಅತ್ತ ಹೊರಳುವುದರಲ್ಲಿದ್ದ. ಅಷ್ಟರಲ್ಲಿಯೇ “ಆ.. ಅಮ್ಮಾ” ಸಣ್ಣನೆಯ ಚೀತ್ಕಾರ… ನೋವು ತಡೆಯಲಾರದೆ ಮಂಚಕ್ಕೆ ಕೈ ಊರಿದಳೇನೋ… ಮುಂಗೈವರೆಗೆ ಬಂದಿದ್ದ ಬಳೆಯೊಂದು ಒಡೆಯಿತು. ಮತ್ತೆ ಫಳ್‌ಫಳಾರ್ ಸದ್ದು.. ಪಟ್ಟನೆ ಹಿಂತಿರುಗಿದ ದಿವಾಕರ ಅವಳ ಕೈಗಂಟಿದ್ದ ಬಳೆಚೂರನ್ನು ತೆಗೆದು ಮಂಚದ ಕೆಳಗೆ ಹಾಕಿದ. ನಂತರ ಮೃದುವಾಗಿ ಅವಳ ಕೈ ಮುಟ್ಟಿದ. ಸಣ್ಣಗೆ ಕಂಪಿಸುತ್ತಿದ್ದ ಬೆರಳುಗಳು.. ತಟ್ಟನೆ ಕೈ ಒತ್ತಿದ. ಒಂದು ಬಾರಿ ಅವಳ ಹೊಟ್ಟೆಯ ಮೇಲೆ ಕೈಯಾಡಿಸಲೇ ಅನ್ನಿಸಿದ್ದೇ ಮೆಲ್ಲನೆ ಹೊಟ್ಟೆಯ ಮೇಲೆ ಅಂಗೈ ಇಟ್ಟ. ಹಳೆಯ ಹತ್ತಿ ಸೀರೆಯ ನೆರಿಗೆಗಳ ಕೆಳಗೆ ಏನೋ ಅಲುಗಿದಂತೆ.. ಒಳಗೊಂದು ಪುಟ್ಟ ಜೀವ ಮಿಸುಗಾಡುತ್ತಿರುವಂತೆ… ಆ ಅಲುಗಾಟ ಮಿಸುಗಾಟ ಬೆರಳಿಗನುಭವವಾಗಿದ್ದೇ ಎಂಥದೋ ಪುಳಕವೊಂದು ಇಡೀ ಮೈಯನ್ನು ಹಬ್ಬಿದಂತೆ ಅನ್ನಿಸಿ ದಿವಾಕರ ಖುಷಿಯಾದ. “ನಾನಿದ್ದೇನೆ ಜತೆಗೆ… ಹೆದರಬೇಡ..” ಎಂಬಂತೆ ಮತ್ತೆ ಮೆಲ್ಲನೆ ಹೊಟ್ಟೆಯ ಮೇಲೆ ಬೆರಳಾಡಿಸಿದ. ಇವನನ್ನೇ ಸುಸ್ತಾದ ಕಣ್ಣುಗಳಿಂದ ದಿಟ್ಟಿಸುತ್ತಿದ್ದಳಾಕೆ. ಹೊಟ್ಟೆಯ ಮೇಲಿಂದ ಕೈ ತೆಗೆದು ಅವಳ ಭುಜವನ್ನೊಮ್ಮೆ ಒತ್ತಿ “ನಾನಿಲ್ಲೇ ಹೊರಗಿರ್‍ತೀನಿ.. ಏನಾದ್ರೂ ಬೇಕಾದ್ರೆ ಹೇಳಿ ಕಳ್ಸು ಆಯ್ತಾ..” ಎಂದು ಅಲ್ಲಿಂದ ಹೊರಟ. ಬರಿದೇ ತಲೆಯಲ್ಲಾಡಿಸಿದ. ಅವಳು ಆ ನೋವಿನಲ್ಲೂ ನಸು ನಕ್ಕಳು. +ಹೊರಬಂದ ದಿವಾಕರ ಅಲ್ಲಿದ್ದ ಮುರುಕು ಬೆಂಚಿನ ಮೇಲೆ ಕುಳಿತ. ಒಂದು ಘಂಟೆ.. ಎರಡು ಘಂಟೆ.. ದಿವಾಕರನಿಗೆ ಈ ರಾತ್ರಿ ಎಂದೆಂದೂ ಮುಗಿಯದ ಅನಂತ ನರಳಿಕೆಯ ರಾತ್ರಿಯಂತೆ ಅನ್ನಿಸಿ ಕೂತಲ್ಲೇ ಬೇಸರದಿಂದ ಚಡಪಡಿಸತೊಡಗಿದ್ದ. ಚಾ ಆದ್ರೂ ಕುಡಿದು ಬರುವ ಅಂದುಕೊಂಡು ಹೊರಹೋದರೆ ಕೈ ಗಾಡಿಯವನು ಪಾತ್ರೆ ಎಲ್ಲ ಬೋರಲು ಹಾಕಿ ಗ್ಲಾಸುಗಳನ್ನೆಲ್ಲ ಬಕೆಟ್ ನೀರಿನಲ್ಲಿದ್ದಿಟ್ಟು ಕೆಳಗೆ ಹಾಸಿಕೊಂಡು ಮಲಗಿಬಿಟ್ಟಿದ್ದ. ಬೆಳಗಿನ ಜಾವದಿಂದ ’ಭರ್‌ಭರ್’ ಎಂದು ಒರಗುಡುತ್ತಿದ್ದ ಸ್ಟೌವ್ ಕೂಡ ಅವನಂತಹದೇ ಸುಖ ನಿದ್ದೆಯಲ್ಲಿದ್ದಂತಿತ್ತು. ಮತ್ತೆ ಒಳ ಬಂದು ಕುಳಿತ. ಕಾರಿಡಾರಿನಲ್ಲಿಯ ಮಬ್ಬು ಬೆಳಕಿನಲ್ಲಿ ನೀರವ, ನಿಶ್ಯಬ್ದ ರಾತ್ರಿಯಲ್ಲಿ ಆಗೀಗ ಕೇಳುವ ಎದೆಝಲ್ಲೆನ್ನೆಸುವ ಚೀತ್ಕಾರ… ’ಅಯ್ಯೋ ಅಮ್ಮಾ” ’ಸಾಕಪ್ಪಾ ಸಾಕು’, ’ದೇವ್ರೇ ನನ್ನ ಕೈಲಿ ಆಗಲ್ಲಪ್ಪಾ’ ನರಳಿಕೆಗಳು.. ಅದರಲ್ಲಿ ಅವಳ ಧ್ವನಿಯೂ ಬೆರೆತಿತ್ತು. ’ದೇವ್ರೇ.. ಎಲ್ಲ ಸರಳವಾಗಿ ಸಸೂತ್ರವಾಗಿ ಮುಗಿಯಲಿ.. ಈ ನರಳಿಕೆಗಳ ಕೊನೆಯಲ್ಲೊಂದು ಮಗುವಿನ ಅಳುವಿರಲಿ’ ದಿವಾಕರ ತನ್ನೊಳಗೇ ಹೇಳಿಕೊಳ್ಳುತ್ತಿದ್ದ. ಎಷ್ಟೋ ಹೊತ್ತಿನ ನಂತರ ದಿವಾಕರನಿಗೆ ಕುಳಿತಲ್ಲೇ ಜೊಂಪು ಹತ್ತಿಬಿಟ್ಟಿತ್ತು. ಯಾರೋ ಕರೆದ ಹಾಗನ್ನಿಸಿ ಧಡಬಡಿಸಿ ಕಣ್ಣು ತೆರೆದರೆ ಎದುರಿಗೆ ಅದೇ ನರ್ಸ್ “ಮಗಳು ಹುಟ್ಯಾಳ್ರೀ” ಯಾರನ್ನು ಕುರಿತು ಹೇಳ್ತಿದ್ದಾಳೆಂದು ಗಾಭರಿಗೊಂಡ ದಿವಕರನಿಗೆ ಅವಳು ತನಗೇ ಹೇಳ್ತಿರೋದು ಎಂದು ಅರ್ಥವಾಗುವಷ್ಟರಲ್ಲಿ “ಇನ್ನೊಂದು ಅರ್ಧ ತಾಸು.. ಹೊರಗೆ ತರ್‍ತಾರೆ.. ಈ ಗುಳಿಗಿ, ಇಂಜೆಕ್ಷನ್ ತರ್ರಿ” ಎಂದವಳೇ ಚೀಟಿ ಕೈಯಲ್ಲಿಟ್ಟು ಒಳ ನಡೆದಿದ್ದಳು. +ಹುಷ್ ಎಂದು ಉಸಿರು ಬಿಟ್ಟ ದಿವಾಕರ ನಿರಾಳವಾದ. ಕೈಯಲ್ಲಿ ಚೀಟಿ ಹಿಡಿದು ಹೊರ ಬಂದರೆ ಆಗಲೇ ಚುಮುಚುಮು ಬೆಳಗಾಗತೊಡಗಿತ್ತು. “ಅರೆ.. ತನಗಿದೆಂಥ ನಿದ್ದೆ ತಗೊಂಡಿತ್ತು… ಅವಳ ನರಳಾಟ ಕೇಳಿಸದಂತೆ.. ನೋವು ತಟ್ಟದಂತೆ… ಹೀಗೆ ಕೂಸು ಹುಟ್ಟುವ ಗಳಿಗೆಯಲ್ಲಿಯೇ.. ಛೇ” ಎಂದುಕೊಳ್ತ ಅದೇ ತೆರೆದಿದ್ದ ಮೆಡಿಕಲ್ ಶಾಪ್‌ನಲ್ಲಿ ಇದೀಗ ನರ್ಸ್ ಕೊಟ್ಟ ಚೀಟಿ ಕೊಟ್ಟು ಔಷದಿ ಕೊಂಡ. ಕೈ ಗಾಡಿಯತ್ತ ಬಂದಾಗ ಸ್ಟೌವ್‌ನ ಭರ್‌ಭರ್ ಸದ್ದನ್ನೂ ಮೀರಿಸುವಂತೆ ಹಾಡೊಂದನ್ನು ಗುನುಗಿಕೊಳ್ಳುತ್ತಿದ್ದ ಅಂಗಡಿಯವನು ತನಗೆ ಬೆಳಗಾಗಿ ತುಂಬ ಹೊತ್ತಾಯಿತು ಎನ್ನುವಂತೆ ಮಸಿ ಹಿಡಿದಿದ್ದ, ದೇವರ ಚಿಕ್ಕ ಕ್ಯಾಲೆಂಡರ್ ಮುಂದೆ ಊದಿನಕಡ್ಡಿಯನ್ನೂ ಹಚ್ಚಿಟ್ಟಾಗಿತ್ತು. ಟೀ ಕುಡಿಯುತ್ತ ನಿಂತ ದಿವಾಕರನಿಗೆ ನರ್ಸ್ ಹೇಳಿದ್ದು ನೆನಪಿಗೆ ಬಂದಿದ್ದೇ ಗಲಿಬಿಲಿಗೊಂಡ. ’ಮಗಳು ಹುಟ್ಟಿದಳು.. ಅಂದ್ರೆ ತನಗೇ…’ +ನಿನ್ನೆಯವರೆಗೆ ಬರಿಯ ಜಿಲ್ಲಿಯ ಮಾತುಕತೆಗಳಿಂದ ಅವಳು ಹೇಳುವ ವಿವರಗಳ ಮೇಲಿನಿಂದ ಕಣ್ಣಲ್ಲಿ ಅನಾಥ ಬಸುರಿಯ ಚಿತ್ರ ತುಂಬಿಕೊಂಡು, ಒಂದು ಆಪ್ತ ಪರಿಚಿತ ಭಾವನೆ ಮಾತ್ರ ಇಟ್ಟುಕೊಂಡಿದ್ದ ದಿವಾಕರನನ್ನು ನರ್ಸ್ ಯಾವುದರ ಅಗತ್ಯವೇ ಇರದಂತೆ ಬರೀ ರಾತ್ರಿಯಿಂದ ನೋಡಿದ್ದೇ ಸಾಕೆಂಬಂತೆ ತನ್ನ ಕಣ್ಣಿನಲ್ಲಿ ಅಪ್ಪನ ಚಿತ್ರ ಬರೆದು ’ಇದು ನೀನೇ’ ಎಂಬಂತೆ ಇವನೆದುರಿಗೆ ಹಿಡಿದು ಬಿಟ್ಟಿದಳು. ದಿವಾಕರನೊಳಗೆ ರೋಮಾಂಚನ ಹುಟ್ಟಿಸಿದ್ದು ಇದೇ ಸಂಗತಿ. ನರ್ಸ್ ಹೇಳುವವರೆಗೂ ಅಂಥದೊಂದು ಸಾಧ್ಯತೆಯ ಕುರಿತು ಊಹೆ, ಕಲ್ಪನೆ ಕೂಡ ಮಾಡಿರದ ದಿವಾಕರನಿಗೆ ಆ ಸಾಧ್ಯತೆಯನ್ನು ಎಷ್ಟು ಸರಳವಾಗಿ ನರ್ಸ್ ಹೇಳಿಬಿಟ್ಟಳಲ್ಲ ಎಂಬುದು ಮಾತ್ರ ಗಂಟಲಲ್ಲಿ ಅಡ್ಡ ಸಿಕ್ಕಿಕೊಂಡ ಮಾತ್ರೆಯಂತಾಗಿತ್ತು. ಅರ್ಧಗಂಟೆಯ ನಂತರ ಚಾ ಕಪ್ ಹಿಡಿದು ಕೈಯಲ್ಲೊಂದು ಬಿಸ್ಕೆಟ್ ಪುಡಿಕೆ ಮತ್ತು ಔಷದಗಳನ್ನು ಹಿಡಿದು ಡೆಲಿವರಿ ವಾರ್ಡ್‌ನತ್ತ ಹೊರಟ ದಿವಾಕರನಿಗೂ ಅತ್ತ ಕಡೆಯೇ ಅವಸರದಲ್ಲಿ ಸಾಗುತ್ತಿರುವ ಇನ್ನಿತರ ಗಂಡಸರಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. +ದಿವಾಕರ ಒಳ ಹೋಗುವಷ್ಟರಲ್ಲಿ ಅವಳನ್ನು ಮತ್ತೆ ಅದೇ ಮಂಚದ ಮೇಲೆ ತಂದು ಮಲಗಿಸಿದ್ದರು. ಗಾಳಿ ಹೋದ ಬಲೂನಿಂತೆ ತೆಳ್ಳಗಾದ ಹೊಟ್ಟೆ… ಬಾಗಿಲೆಡೆಗೇ ನೆಟ್ಟ ದಣಿದ ಕಣ್ಣುಗಳು.. ಖಾಲಿ ತೊಟ್ಟಿಲನ್ನು ನೋಡಿದ ದಿವಾಕರ ತಟ್ಟನೆ “ಮಗು” ಎಂದು ಇನ್ನಿಲ್ಲದ ಆತಂಕದಲ್ಲಿ ಕೇಳಿದ. “ಸ್ನಾನ ಮಾಡಿಸಲಿಕ್ಕ ಹತ್ಯಾರ” ಅನುಭವಿ ನರ್ಸ್ ನಕ್ಕಳು. ಅಲ್ಲಿದ್ದ ತುಸು ತುಕ್ಕು ಹಿಡಿದಿದ್ದ ಸ್ಟೂಲಿನ ಮೇಲೆ ಟೀ ಕಪ್, ಬಿಸ್ಕೆಟ್ ಪುಡಿಕೆ ಎಲ್ಲ ಇಟ್ಟು ಕೆಳಗಿನಿಂದ ಬಾಸ್ಕೆಟ್ ಈಚೆ ಎಳೆದು ನೀರು ತೆಗೆದಿರಿಸಿದ. ಬಿಸ್ಕೆಟ್ ಪುಡಿಕೆ ತೆರೆಯತೊಡಗಿದ ದಿವಾಕರ ಆಗಿನಂತೆ ತಾನೆ ಎದ್ದು ಕುಳಿತುಕೊಳ್ಳುತ್ತಾಳೆ ಎಂದುಕೊಂಡ. ಅವಳು ಇವನನ್ನೇ ನೆಟ್ಟನೋಟದಿಂದ ನೋಡುತ್ತಿದ್ದಳು. ’ಇದೀಗ ಹೆರಿಗೆಯಾಗಿದೆ.. ಬಹುಶಃ ತಾನೇ ಏಳಲಿಕ್ಕೆ ಆಗಲಿಕ್ಕಿಲ್ಲ’ ಎಂಬುದು ದಿವಾಕರನಿಗೆ ನಿಧಾನವಾಗಿ ಹೊಳೆದೊಡನೆ “ಛೆ.. ತಾನೆಂಥ ಹೆಡ್ಡ” ಅಂದುಕೊಂಡು ಮೆಲ್ಲನೆ ಅವಳ ಭುಜ ಬಳಸಿ ಹಿಡಿದು ಎತ್ತಿ ಕುಳ್ಳಿರಿಸಿದ. ಒಂದು ಕೈಯಲ್ಲಿ ಅವಳನ್ನು ಬಳಸಿ ಹಿಡಿದೇ ಟೀ ಕಪ್ ಬೀಳದಂತೆ ಜಾಗರೂಕತೆಯಿಂದ ಸ್ಟೂಲನ್ನು ಹತ್ತಿರಕ್ಕೆ ಎಳೆದ, ಅವಳಿಗೆ ಅದೆಲ್ಲ ಕೊಟ್ಟು, ಇದೀಗ ನರ್ಸ್ ಹೇಳಿದ್ದ ಮಾತ್ರೆಯೊಂದನ್ನು ಕೊಟ್ಟ. ವಿಪರೀತ ಸುಸ್ತಾದವಳಂತೆ ಇದ್ದಳಾದರೂ ಹೆರಿಗೆ ಸುರಳೀತ ಆಯಿತೆಂಬ ನೆಮ್ಮದಿಯಲ್ಲವಳು ದಿವಾಕರನಿಗೆ ಒರಗಿಕೊಂಡಂತಿತ್ತು. ದಿವಾಕರ ಅವಳನ್ನು ಮಲಗಿಸಿ ಕಮಟು ಹಿಡಿದ ಆಸ್ಪತ್ರೆಯ ಚಾದರವನ್ನು ಹೊದಿಸಲನುವಾದ. ಮುಂಗಾಲುಗಳ ಮೇಲೆ, ಹೊಟ್ಟೆಯ ಪಕ್ಕ ರಕ್ತದ ತೆಳ್ಳನೆಯ ಕಲೆಗಳು… ಕೈಕಾಲು ಅಲ್ಲಾಡಿಸಲೂ ಶಕ್ತಿ ಇಲ್ಲದವಂತೆ ಬಿಳುಚಿಕೊಂಡು ನಿಸ್ತೇಜವಾಗಿದ್ದ ಅವಳು… ಪಟ್ಟನೆ ಅವಳ ಸೆರಗು ಸರಿಪಡಿಸಿದವನೇ ಚಾದರವನ್ನು ಎದೆಯವರೆಗೆ ಹೊಚ್ಚಿದ. +ಒಬ್ಬರಿಗೊಬ್ಬರು ಹೆಚ್ಚು ಮಾತಾಡುವುದರ ಅಗತ್ಯವೇ ಇರದಂತೆ… ಐದಾರು ತಿಮಗಳಿಂದ ಜಿಲ್ಲಿಯ ಮಾತುಕತೆಗಳಲ್ಲಿಯೇ ಪರಿಚಿತರಾದಂತೆ ಮೌನದಲ್ಲಿಯೇ ಒಂದು ಅರ್ಥಪೂರ್ಣ ಸಂಬಂಧ ತಾನೇ ತಾನಾಗಿ ಇದ್ದುಬಿಟ್ಟಿರುವಂತೆ ಅವನಿಗನ್ನಿಸಿತು. ಅಷ್ಟರಲ್ಲಿಯೇ ನರ್ಸ್ ಹಳೇ ಸೀರೆಯ ತುಂಡಿನಲ್ಲಿ ಸುತ್ತಿದ್ದ ಕುಸುಕುಸು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಳು. ನರ್ಸ್ ಮಗುವನ್ನು ತೋರಿಸಿದ್ದೇ ಅವಳು ಅವಳು ಪುಟ್ಟ ನಸು ನಗು ಮಿಂಚಿಸಿದವಳು.. ನಿಸ್ತೇಜವಾದ ತನ್ನ ಕೈಯನ್ನೊಮ್ಮೆ ಚಾದರದಿಂದ ಹೊರತೆಗೆದು ಮಗುವನ್ನು ಮೆಲ್ಲನೆ ಸವರಿದಳು. ಮಗು ಅರೆಗಣ್ಣು ಮಾಡಿ ಇನ್ನೂ ಅಳುತ್ತಿತ್ತು. ಬಟ್ಟೆಯ ಹೊರಗಿಣುಕುತ್ತಿದ್ದ ಅದರ ಗುಲಾಬಿ ಪಾದಗಳನ್ನೇ ದಿವಾಕರ ಕಣ್ಣೆವೆ ಪಿಳುಕಿಸದೇ ನೋಡುತ್ತಿದ್ದ. ಪಾದಗಳನ್ನು ತಡಕುತ್ತ ಪುಳಕಗೊಂಡ ದಿವಾಕರ ಆಯಾಚಿತವಾಗಿ ಕೈ ಚಾಚಿದ. “ಇನ್ನ ಮಗಳನ್ನ ಸಂಭಾಳಿಸ್ರೀ” ಎಂದು ಚೇಷ್ಟೆಯಿಂದ ಹೇಳಿ, ಮಗುವನ್ನು ಸಾವಕಾಶ ಇವನಿಗೆ ಕೊಟ್ಟ ನರ್ಸ್ “ಗುಳಿಗಿ ತಗೊಂಡೀರಲ್ಲ.. ಇನ್ನ ಆರಾಮ ನಿದ್ದಿ ಮಾಡವ್ವ” ಎಂದು ಅವಳಿಗೆ ಹೇಳಿ ಹೋದಳು. ಕೈಕಾಲು ಬಡಿಯುತ್ತ ಕುಸುಕುಸು ಮಾಡುತ್ತಿದ್ದ ಮಗುವನ್ನು ಎದೆಗೆ, ಕೆನ್ನೆಗೆ ಒತ್ತಿಕೊಳ್ಳುತ್ತ, ಮುದ್ದು ಮಾಡುತ್ತ ಅದರ ಎಳೆಯ ರೇಶ್ಮೆ ಚರ್ಮದ ಸ್ಪರ್ಶದ ಸುಖವನ್ನು ಉತ್ಕಟವಾಗಿ ಅನುಭವಿಸುತ್ತಿರುವಂತೆ ಇವನ ಕೈಗಳಲ್ಲೇ ಮಗು ನಿದ್ರಿಸಿಬಿಟ್ಟಿತ್ತು. +ಇದೀಗ ಕಣ್ಣುಬಿಟ್ಟ ಬೆಳಗಿನ ಅಲೌಕಿಕ ಸೌಂದರ್ಯವೆಲ್ಲ ಇಲ್ಲೇ ಘನೀಭವಿಸಿದೆಯೇನೋ ಅನ್ನಿಸುವಂತಿದ್ದ, ನಿದ್ರಿಸುತ್ತಿದ್ದ ಮಗಳನ್ನು ಅವಳಿಗೆ ತೋರಿಸಬೇಕೆಂದು ಅತ್ತ ತಿರುಗಿದರೆ ರಾತ್ರಿಯಿಡೀ ನಿದ್ದೆಗೆಟ್ಟು ನೋವು ತಿಂದು ವಿಪರೀತ ದಣಿವಾದ, ಮೈ ಕೈ ಎಲ್ಲ ಜಜ್ಜಿದಂತಾಗಿದ್ದ ಅವಳು ನಿಶ್ಚಿಂತೆಯಾಗಿ ಮಲಗಿಬಿಟ್ಟಿದ್ದಳು. ನೀನಿದ್ದೀಯಲ್ಲ ಜತೆಗೆ ಎಂಬಂಥ ಭಾವದಲ್ಲಿ, ಎಂಥದೋ ಅಭಯದಲ್ಲಿ ಅನುಮಾನಗಳಿಲ್ಲದ ನಿಶ್ಚಿಂತ ನೆಮ್ಮದಿಯಲ್ಲಿ ಬಾಣಂತಿ ಮಗು ನಿದ್ರಿಸಿದ್ದರು. ಒಂದು ಬಗೆಯ ಸುರಕ್ಷಿತ ಬಾವನೆ, ತನ್ನಲ್ಲಿಯೂ ಈ ಮಗುವನ್ನು ಅವುಚಿ ಹಿಡಿದ ಕ್ಷಣದಲ್ಲಿ ಹುಟ್ಟಿಕೊಂಡಿದೆ ಎನ್ನುವುದು ದಿವಾಕರನಿಗೆ ಮೆಲ್ಲನೆ ಹೊಳೆಯತೊಡಗಿತು. ವರ್ಷಗಳ ಹಿಂದಿನ ಬಳೆಚೂರಿನ ಸದ್ದನ್ನು ತನ್ನ ಅವಳ ನಡುವಿನ ಮೌನವು ಮೆಲ್ಲನಡಗಿಸಿದಂತೆ.. ಪೆನ್ಸಿಲ್‌ನ ಗೆರೆಗಳಲ್ಲಿ ಇಷ್ಟು ದಿನ ಹುಡುಕಾಡುತ್ತಿದ್ದುದ್ದಕ್ಕೆ ಉತ್ತರವೆಂಬಂತೆ ಕೈಯೊಳಗೆ ನಿದ್ರಿಸಿದ ಮಗುವಿತ್ತು. +’ಎಲ್ಲ… ಎಲ್ಲವೂ ಇರಲಿ ಹೀಗೇ.. ಒಂದು ನೆಮ್ಮದಿಯಲ್ಲಿ.. ಒಂದು ನಿಶ್ಚಿಂತೆಯಲ್ಲಿ.. ಒಬ್ಬರಿಗೊಬ್ಬರು ಜತೆಯಾಗಿ ಸಾಗುವ ಅಭಯದಡಿಯಲ್ಲಿ. ಈ ಮಗುವಿನ ಎದೆಯಲ್ಲಿ ಎಂದೂ ನೆಡದಿರಲಿ ಬಳೆಚೂರು.. ರಾತ್ರಿ ಬಾಗಿಲು ಮುಚ್ಚಿದ ನಂತರ ಒಳಗುಳಿಯುವ ಕತ್ತಲ ಮೌನವನ್ನು ತುಂಬಿಕೊಳ್ಳಲಿ ಈ ಮಗುವಿನ ಅಳುವಿನ ಸದ್ದು. ಬೆಳಗು ಗಿಡಗಂಟೆಗಳಲಿ ರೆಕ್ಕೆ ಬಡಿದಂತೆ ಕೈಕಾಲು ಬಡಿದು ಕೇಕೆ ಹಾಕಿ ನಗಲಿ ಈ ಮಗಳು. ತನ್ನಂತವನಿಗೆ, ಇವಳಂತವರಿಗೆ ತಬ್ಬಿಕೊಂಡು ಒಡಲಲ್ಲಿ ನೆಲೆಕೊಟ್ಟು ಬದುಕಿ ಬಾಳಿಸುತ್ತಿರುವ ಈ ಊರು.. ಆ ಜಿಲ್ಲಿಯಂತಹವರು ಇರಲಿ ಇಂದಿನಂತೆಯೇ ಮುಂದೂ ಕೂಡ’ +ಆತ್ಮದ ಆಳದಿಂದ ಎದ್ದ ಪುಟ್ಟ ಆರ್ತ ಪ್ರಾರ್ಥನೆಯು ಅವನ ಒಳಹೊರಗನ್ನು ಹಬ್ಬಿದಂತೆ.. ನಿದ್ರಿಸಿದ್ದ ಮಗುವನ್ನು ಕೈಗಳಲ್ಲಿ ಅವುಚಿ ಹಿಡಿದು ದಿವಾಕರ ನಿಂತೇ ಇದ್ದ. ರಾತ್ರಿಯಿಡೀ ಅರೆ ಎಚ್ಚರ, ಅರೆ ನಿದ್ದೆಯಲ್ಲಿ ಕಳೆದು, ಇದೀಗ ಮೈಮುರಿಯುತ್ತ, ಆಕಳಿಸುತ್ತ ಎದ್ದಂತಿದ್ದ ದವಾಖಾನೆ ತನ್ನ ಎಂದಿನ ಚಟುವಟಿಕೆಗಳಿಗೆ ಯಾವುದೋ ಚೈತನ್ಯದಿಂದೆಂಬಂತೆ ಲವಲವಿಕೆಯಿಂದ ಸಜ್ಜಾಗುತ್ತಿತ್ತು. +***** +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_749.txt b/Kannada Sahitya/article_749.txt new file mode 100644 index 0000000000000000000000000000000000000000..ddd977df2603572dd9976a5a02278914b0be56e8 --- /dev/null +++ b/Kannada Sahitya/article_749.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ ಹೋಗಲಿ ತಾನೊಬ್ಬ ಉದ್ಧಾರವಾದರೆ ಸಾಕು ಎನ್ನುವವರು, ದುಡ್ಡು ಬಾಚುವುದು ಸಾಧ್ಯವಾದಲ್ಲಿ ರಿಮೇಕೇನು-ಸ್ವಮೇಕೇನು ಎಲ್ಲಕ್ಕೂ ‘ಸೈ’ ಎನ್ನುವವರು, ಅಶ್ಲೀಲ-ಅಸಂಬದ್ಧ-ಅಸಡ್ಡಾಳ ಚಿತ್ರಗಳನ್ನು ಎಗ್ಗಿಲ್ಲದೆ ಚಿತ್ರಿಸುವವರು, ರೀಮೇಕು ರೈಟ್ಸ್ ಕೊಳ್ಳಲು ಹಿಮಾಲಯದೆತ್ತರ ಹಣ ಸುರಿಯುವವರು, ಚಿತ್ರದಲ್ಲಿ ಏನೇನೂ ಸ್ಟಫ್ ಇಲ್ಲದಿದ್ದರೂ ಪ್ರಚಾರದ ಗಿಮಿಕ್ಸ್‌ನಿಂದ ಚಿತ್ರ ಪ್ರಚಂಡ ಯಶಸ್ಸು ಗಳಿಸೀತು ಎಂಬ ಭ್ರಮಾಧೀನರು ಪ್ರತಿವಾರ ಸಿನಿಮಾ ಪುಟಗಳಲ್ಲಿ ರಂಗುರಂಗಾಗಿ ರಾರಾಜಿಸುತ್ತಿರುತ್ತಾರೆ. +ಸಿನಿಮಾ ಪುಟಗಳನ್ನು ಜನತೆಯ ರಂಜನೆಗಾಗಿ ತುಂಬಲೇ ಬೇಕಾದ ಪ್ರಸಂಗವಿರುವುದರಿಂದ ಗ್ಲಾಮರ್‍ ಜಗತ್ತಿನ ಮಂದಿ ಕೂತದ್ದು, ನಿಂತದ್ದು ಕೆಮ್ಮಿದ್ದು ಎಲ್ಲ ವಾರವಾರ ಸುದ್ದಿಯಾಗುತ್ತಲೇ ಇರುತ್ತದೆ. +ತಮ್ಮ ಹೇಳಿಕೆಗಳು ತುಂಬ ಜವಾಬ್ದಾರಿಯುತವಾಗಿರಬೇಕೆಂದು ಬಯಸುವ ನಿರ್ಮಾಪಕ, ನಿರ್ದೇಶಕ, ನಟ-ನಟಿಯರೂ ಇದ್ದಾರೆ. ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತ ಮಾತೆತ್ತಿದರೆ ಕೋಟಿ ಕೋಟಿ ಎಂದು ಬೊಬ್ಬೆ ಹೊಡಯುತ್ತ ಬಂದಿರುವುದನ್ನೂ ನಾವಿಂದು ಕಾಣಬಹುದು. +ಮೂರು ಕಾಸು ಕೊಟ್ಟರೆ ಮಾವನ ಕಡೆ, ಆರು ಕಾಸು ಕೊಟ್ಟರೆ ಅತ್ತೆ ಕಡೆ ಎನ್ನುವಂಥವರೇ ಈಗ ಎಲ್ಲೆಲ್ಲೂ ತುಂಬಿ ತುಳುಕಿದ್ದಾರೆ. +ಸಂಘಟನೆಗೆ ಬೆಲೆ ಎಂಬುದನ್ನು ತುಂಬ ತಡವಾಗಿಯಾದರೂ ಅರ್ಥ ಮಾಡಿಕೊಂಡ ಮಂದಿ ಈಗ ಒಂದಾಗತೊಡಗಿದ್ದಾರೆ. ಒಂದಾದ ನಂತರ ಬಾಯಿ ಬಂದ್ ಮಾಡಿಕೊಂಡಿದ್ದವರೂ ಅಬ್ಬರಿಸತೊಡಗಿದ್ದಾರೆ. ನಿರ್ಮಾಪಕರು-ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶಕರು ಹೀರೋಗಳಾಗುತ್ತಿದ್ದಾರೆ. ಹಳೆಯ ಹೀರೋಗಳು ತಮ್ಮ ಮಕ್ಕಳ ಪಾಲಿಗೆ ಗಾಡ್‌ಫಾದರ್‌ಗಳಾಗುತ್ತಿದ್ದಾರೆ. ಮದರ್‌ಗಳು ಗಾಡ್‌ಮದರ್‌ಗಳಾಗುತ್ತಿದ್ದಾರೆ. +ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳು ಬೇಕು. ಹಾಗೆ ಪರಿಚಯಿಸುವಾಗ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಬೇಕು ಅವರಿಗೆ ಗಾಡ್‌ಫಾದರ್‌ಗಳಿಲ್ಲದಿದ್ದರೂ. ಈಗ ಎಲ್ಲ ರವಿಚಂದ್ರನ್, ಎಷ್ಣು, ಉಪೇಂದ್ರ ಆಗಬಯಸುವವರೇ ಹೆಚ್ಚಾಗಿದ್ದಾರೆ. +ಜನಸಮೂಹದ ಮೇಲೆ ತುಂಬ ಪರಿಣಾಮ ಬೀರುವ ಸಿನಿ ಮಾಧ್ಯಮಕ್ಕೊಂದು ಜವಾಬ್ದಾರಿ ಇದೆ ಎಂಬುದನ್ನೇ ಬಹುಮಂದಿ ಅರಿತಂತಿಲ್ಲ. +ಚಿತ್ರರಂಗ ಇಂದು ತಾಂತ್ರಿಕವಾಗಿ ತುಂಬಾ ಎತ್ತರಕ್ಕೆ ಬೆಳೆದಿದೆ. ಗ್ರಾಫಿಕ್ಸ್‌ನ ಚಮತ್ಕಾರದಿಂದ ಜನರನ್ನು ಎಚ್ಚರಿಸುವ ಅವರ ಸಾಮಾಜಿಕ ಪ್ರಜ್ಞೆ ಹೆಚ್ಚಿಸುವ ಪ್ರಯತ್ನವೇನೂ ಮಾಡದೆ ಮೂಢನಂಬಿಕೆಗಳನ್ನು ಬಿತ್ತುವುದಕ್ಕೆ ಈ ತಂತ್ರ ಬಳಸುವುದನ್ನು ನಾವಿಂದು ಕಾಣುತ್ತಿದ್ದೇವೆ. +ಜವಾಬ್ದಾರಿಯುತ ಮಂದಿ ಹೀಗೆ ಮಾಡುವುದೆಷ್ಟು ಸರಿ ಎಂದು ಅವರೇ ಚಿಂತಿಸಬೇಕು. ಹೀಗಾಗಿ ಸುಮಾರು ೫೦-೬೦ ವರ್ಷ ಹಿಂದೆ ಬರಬಹುದಾಗಿದ್ದ ಚಿತ್ರಗಳು ಇಂದು ಬರಲಾರಂಭಿಸಿವೆ. ಜೀತಪದ್ಧತಿಯ ವಿಜೃಂಭಣೆಗೆ, ಹಾಸ್ಯದ ಹೆಸರಿನಲ್ಲಿ ಅಶ್ಲೀಲತೆ, ಅಂಡರ್‍ ವರ್ಲ್ಡ್‌ನ ಕಥಾನಕಗಳು ಯುವ ಜನಾಂಗಕ್ಕೆ ಮಾದರಿ ಆದೀತೆ? ಹೆಣ್ಣು ಗಂಡಿನ ಅಡಿಯಾಳು. ಅವನಿಗೆ ಎದುರುಮಾತು ಹೇಳುವಂತಿಲ್ಲ. ಎಂಥ ಕೆಟ್ಟ ಗಂಡನೇ ಆಗಿರಲಿ ಅವನ ಪಾದ ತೊಳೆದು ನೀರು ಕುಡಿಯಬೇಕು. ಅಡಿಗೆ ಮನೆಯಲ್ಲಿ ಅಡಿಗೆಯಾಳಾಗಿ ಜೀವ ಸವೆಸಬೇಕು ಎಂಬಂಥ ಚಿತ್ರ ಬಂದಾಗಲೂ ತಮ್ಮ ಜವಾಬ್ದಾರಿ ತೋರದೆ ತೆಪ್ಪಗಿರುವ ‘ವಿಮೋಚನಾ’ದಂಥ ಸಂಸ್ಥೆಗಳನ್ನು ನಾವಿಂದು ನೋಡುತ್ತಿದ್ದೇವೆ. +ಇಂಥ ವೇಳೆ ತುಂಬ ಜವಾಬ್ದಾರಿ ಹೊರಬಹುದಿದ್ದಂಥ ಸಿನಿ ಪತ್ರಕರ್ತರ ಪರಿಷತ್ತು ಮತ್ತು ವೇದಿಕೆ ಸಹ ತೆಪ್ಪಗಿದ್ದು ನಿರ್ಮಾಪಕ, ನಿರ್ದೇಶಕ, ನಟ-ನಟಿಯರ ಗ್ರಾಂಡ್ ಪಾರ್ಟಿಗಳಲ್ಲಿ ಅವರು ಹೇಳಿದ್ದನ್ನು ಬರೆಯಲು ಡಿಕ್ಟೇಶನ್ ತೆಗೆದುಕೊಳ್ಳುವಂಥ ಪರಿಸ್ಥಿತಿ ನಾವು ಕಾಣುತ್ತಿದ್ದೇವೆ. ಇದರಿಂದಾಗಿ ವಾರ್ತಾ ಸಚಿವರಿಗೆ ಹಲವು ಮಾಜಿಗಳು ಮಾತ್ರ ಧೂಳಿನಂಥೆ ಕಣ್ಣಿಗೆ ಬೀಳುತ್ತಿರುತ್ತಾರೆ. ಹಾಗಾಗಿ ಅವರೇ ಎಲ್ಲ ಕಮಿಟಿಗಳಲ್ಲಿರುವಂತಾಗಿದೆ. ಇಂಥ ಪರಿಸ್ಥಿತಿ ತಪ್ಪಿಸಲು ಈಗ ನಾವೆಲ್ಲರೂ ಒಂದಾಗಬೇಕು ಎಂಬ ಉತ್ಸಾಹ ಸಿನಿ ಪತ್ರಕರ್ತರಲ್ಲಿ ಬಂದಿರುವುದು ಶುಭ ಸೂಚನೆ. ಎಲ್ಲ ಅವರವರ ಜವಬ್ದಾರಿ ಅಂದಾಗ ಸಭೆ-ಸಮಾರಂಭ, ಚರ್ಚೆ, ಸಂವಾದ ಅರ್ಥಪೂರ್ಣವಾದೀತು. +ಸಿನಿ ಮಾಧ್ಯಮಕ್ಕೊಂದು ಜವಾಬ್ದಾರಿ ಇದೆ. ರಂಜನೆಯ ಜೊತೆ ಜೊತೆಗೆ ಗಂಭೀರ ವಿಚಾರ ಪ್ರತಿಪಾದಿಸುವ ಅರ್ಥಪೂರ್ಣ ಚಿತ್ರಗಳು ಬರುವಂತಾಗಬೇಕು ಎಂಬ ಮಾತನ್ನು ರಾಜ್ಯಪಾಲೆ ರಮಾದೇವಿಯವರು ‘ಧರ್ಮಪುರುಷ’ ಮೂಹೂರ್ತದಂದು ಹೇಳಿ ಆ ಕಥೆಯ ಅಂತ್ಯದಲ್ಲಿ ನಾಯಕನ ಸೋಲು ಮತ್ತು ಸಾವು ವಿಹಿತವಲ್ಲ. ಆದರ್ಶ ವ್ಯಕ್ತಿತ್ವ ರೂಪಿಸಿ ಕಡೆಗೆ ಆತ ಸಾಯುವಂತೆ ಮಾಡುವುದು ಏನನ್ನು ಹೇಳುತ್ತದೆ ಎಂಬುದನ್ನು ಚಿಂತಿಸಬೇಕು, ದಯಮಾಡಿ ಕೊನೆ ಬದಲು ಮಾಡಿ ಎಂದಿದ್ದಾರೆ. +ಮುಹೂರ್ತದಂದು ಈಗೀಗ ಕತೆಯನ್ನೇ ಹೇಳುವುದಿಲ್ಲ. ಸಸ್ಪೆನ್ಸ್ ಎಂದು ತೇಲಿಸಿ ಬಿಡುತ್ತಾರೆ. ಆದರೆ, ಒಬ್ಬ ಜವಾಬ್ದಾರಿ ನಿರ್ಮಾಪಕ-ನಿರ್ದೇಶಕರ ಹೊಣೆಯೇನು ಎಂಬುದನ್ನು ಹಿಂದೆ ಪತ್ರಕರ್ತೆಯೂ ಆಗಿದ್ದ ರಮಾದೇವಿ ಬಿಚ್ಚುಮಾತಿನಿಂದ ತಿಳಿಸಿದ್ದಾರೆ. +ನಿಜಕ್ಕೂ ತುಂಬ ಗಂಭೀರವಾಗಿ ಚಿಂತಿಸಬೇಕಾದ ವಿಷಯವಿದು. +***** +(೭-೯-೨೦೦೧) +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_75.txt b/Kannada Sahitya/article_75.txt new file mode 100644 index 0000000000000000000000000000000000000000..460e74ba5c7f69043c1d2f41c6df93a884f7da3f --- /dev/null +++ b/Kannada Sahitya/article_75.txt @@ -0,0 +1,55 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು ವರ್ಷ ತುಂಬಿದ ಇಪ್ಪತ್ತೈದರ ಮಾಲತಿ ಅಂದು ಬೆಳಿಗ್ಗೆ ಏಳರ ಹೊತ್ತಿಗೆ ಎದ್ದಿದ್ದಳು. ಅವಳ ಎರಡೂವರೆ ವರ್ಷದ ಹಸೀ ತುಂಟ ಮಗ ವಿವೇಕ ರಾತ್ರಿ ಮೂತ್ರ ಮಾಡಿದ್ದ ಗೊದಡಿಯನ್ನು ತೊಳೆಯಲೆಂದು ಹೊರತಂದಾಗ, ನಲ್ಲಿಯ ಇದಿರು ವಾರಕ್ಕೊಮ್ಮೆ ಬರುವ ಚಾಳಿನ ಜನರಿಂದ ‘ಕುಡಿಯುವ ನೀರು’ ಎಂದೇ ಕರೆಸಿಕೊಳ್ಳುವ ಮುನ್ಸಿಪಾಲಿಟಿ ನೀರಿಗಾಗಿ ಬಿಸಿಲಿಗೆ ಬಣ್ಣಗೆಟ್ಟ ಕೊಡಗಳ ದೊಡ್ಡ ಕ್ಯೂ ಇತ್ತು. ಮತ್ತೊಂದೆಡೆಯಲ್ಲಿ ಆಗ ಮಾತ್ರ ಎದ್ದು ತಮ್ಮದೇ ಬಾಗಿಲುಗಳ ಮುಂದೆ ಆಕಳಿಸುತ್ತ ನಿಂತಿದ್ದ ತಂತಮ್ಮ ಮಾಲಿಕರ ಸುಪರ್ದಿಯಲ್ಲಿ ಪ್ಲಾಸ್ಟಿಕ್ ಮಗ್ಗುಗಳನ್ನು ತೇಲಿಸಿ ಕೊಂಡು ಬೋರ್‍ವೆಲ್ ನೀರು ತುಂಬಿ ಕೂತ ಪುಟ್ಟ ಪುಟ್ಟ ನೀಲಿ ಕೆಂಪು ಬಾಲ್ದಿಗಳ ಸಣ್ಣ ಕ್ಯೂ ಪಾಯಿಖಾನೆಯ ಎತ್ತರದ ಮೆಟ್ಟಿಲುಗಳ ಮೇಲೆ ಸೇರಿಕೊಂಡಿತ್ತು. +ತನ್ನದೂ ಒಂದೆರಡು ಕೊಡಗಳನ್ನು ನಲ್ಲಿ ಬಳಿಯ ಕ್ಯೂದಲ್ಲಿಟ್ಟು ಬಂದ ಮಾಲತಿ, ಗೊದಡಿಯನ್ನು ಒಂದೆರಡು ಬಾರಿ ಖಾಲಿ ನೀರಿನಲ್ಲಿ ಅದ್ದಿ ತೆಗೆದಳು. ಮೂಸಿ ನೋಡುತ್ತ ಮೂತ್ರದ ಪರಿಮಳ ಹೊರಟು ಹೋಗಿದೆಯೆಂದು ಖಾತ್ರಿಪಡಿಸಿಕೊಂಡಳು. ಮಜ್ಜೆಯಾಗಿದ್ದ ಹಸಿ ಗೊದಡಿಯನ್ನು ಒಂದು ಟೀ ಚಮಚದಷ್ಟು ಹಳದೀ ನಿರಮಾ ಪೌಡರ ಗರಡಿದ ಅಗಲ ಟಬ್ಬಿನಲ್ಲಿ ಅದ್ದಿಟ್ಟಳು. ಒಳಗಡೆ ಮೋರಿಯ ಮೂಲೆಯ ನಳದಲ್ಲೇ ತುಂಬಿಟ್ಟ ಜಿನ್ ತಗಡಿನ ಡ್ರಮ್ಮಿನಿಂದ ನೀರು ಅಚ್ಚಿ ಹೊರತಂದಳು. ಆಗ ಮಾಲತಿ ಕಂಕುಳಲ್ಲಿ ಹೊಲಿಗೆ ಬಿಟ್ಟಿದ್ದ ನಲವತ್ತೈದು ರೂಪಾಯಿಯ ನೈಟಿಯಲ್ಲಿದ್ದಳು. ಚೂರು ಕೈ ಎತ್ತಿದರೂ ಅಲ್ಲಲ್ಲೇ ಸುಳಿದಾಡುವ ಚಾಳಿನ ಮಂದಿಗೆ ಎಲ್ಲಿ ತನ್ನ ಬ್ರಹ್ಮಾಂಡದ ತುಂಡು ಕಂಡುಬಿಡುತ್ತದೊ ಎಂಬ ಹುಷಾರಿಯೊಂದಿಗೆ ಹಾಗಾಗೇ ಮುದುಡಿಕೊಳ್ಳುತ್ತ ಮಾಲತಿ, ಹೊಟ್ಟೆಯ ಭಾಗದ ನೈಟಿಯನ್ನೆತ್ತಿ ಒಳ ಧರಿಸಿದ ಲಂಗದ ಕಟ್ಟಿಗೆ ತುಸುವೇ ಸಿಕ್ಕಿಸಿಕೊಂಡಳು. +ಆ ಚಾಳು ಮನೆಗಳ ಮುಂದೆಯೇ ಪುಟ್ಟ ಕಾಲುವೆಯಂತಿರುವ ಗಟಾರದಲ್ಲಿ ಮೋರಿಯ ನೀರಷ್ಟೇ ಹರಿಯುತ್ತಿತ್ತು. ಅಲ್ಲೇ ಅದರಂಚಿಗೇ ವಸ್ತ್ರ ಒಗೆಯಲೆಂದು ಹಾಕಿಸಿದ್ದ, ಮಧ್ಯದಲ್ಲಿ ಸರೀ ಎರಡು ಭಾಗವಾಗಿ ಸೀಳಿಕೊಂಡ ಎರಡು ಎರಡು ಅಡಿಗಳ ಹುರುಬುರುಕಾದ ಕಪ್ಪು ಪರ್ಸಿಕಲ್ಲಿನ ಮೇಲೆ ಅಮ್ಮನ ಹದಿನೆಂಟು ಮೊಳದ ಕಾಟನ್ ಸೀರೆಯ ದಪ್ಪ ಗೊದಡಿಯನ್ನು ಕುಸುಬುತ್ತ ಕೂತುಬಿಟ್ಟಿದ್ದಳು ಮಾಲತಿ. +ಎರಡೇ ಚಾ ಪಾತ್ರೆ ಹಿಡಿದೊ ಇಲ್ಲವೇ ರಾತ್ರಿ ಬಳ್ಳಿಗೆ ಒಣ ಹಾಕಿದ ಬಟ್ಟೆಯನ್ನು ಎಳೆದೊಯ್ಯಲೆಂದೊ ಹೊರಬಂದ ಹೆಂಗಸರೆಲ್ಲ ‘ನಮ್ಮ ಪುಟ್ಟ ಹೇಗಿದ್ದಾನೆ? ಆರಾಮು ಇದ್ದಾನೊ? ಮಲಗಿದ್ದಾನೊ?’ ಎಂದೆಲ್ಲ ಪ್ರಶ್ನಿಸಿ ಮರೆಯಾಗುತ್ತಿದ್ದರು. ಮಾಲತಿ ಎಲ್ಲರ ಜತೆ ಹಲ್ಲು ಗಿಂಜಿ ತಲೆಯಾಡಿಸುತ್ತ ಆಗಾಗ ನಲ್ಲಿಯೆಡೆ ಕಿವಿಗೊಟ್ಟು ನೀರು ಬರುವ ಶಬ್ದಕ್ಕಾಗಿ ಆಲಿಸುತ್ತಿದ್ದಳು. ಆದರೂ ರಾತ್ರಿಯಿಂದ ಅವಳ ತಲೆಯಲ್ಲಿ ಹೊಕ್ಕಿ ಕೂತ ಟ್ರಂಕಿನ ಹುಳು ಮತ್ತೆ ತನ್ನದೇ ಕೊರೆತ ಶುರುಮಾಡಿಬಿಟ್ಟಿತ್ತು. +ಅಷ್ಟರಲ್ಲೇ ಮೈ ಮುರಿಯುತ್ತ ಹೊರ ಬಂದು ತನ್ನದೂ ಒಂದು ಬಾಲ್ದಿಯನ್ನು ಪಾಯಿಖಾನೆಯ ಕ್ಯೂನಲ್ಲಿ ಇಟ್ಟು ಬಂದ ನೀಲಿ ಗೇರೆ ಗೇರೆಯ ಪಾಯಿಜಾಮ-ಬಿಳೀ ಸ್ಲಿವ್ ಲೆಸ್ ಬನಿಯನ್ನು ಧರಿಸಿದ್ದ ಹೆಡ್ ಪೋಸ್ಟ್ ಆಫೀಸಿನಲ್ಲಿ ಡಿಸ್‌ಪ್ಯಾಚರ್ ಆಗಿರುವ ಸಪೂರಕ್ಕಿದ್ದ ಅನಂತಮೂರ್ತಿ. ಅವರ ಈ ಮುದ್ದಿನ ಮಡದಿ ಮಾಲತಿ, ಇಂದು ಬೆಳಿಗ್ಗೆ-ಬೆಳಿಗ್ಗೆಯೇ ಎದ್ದು ವಸ್ತ್ರ ತೊಳೆಯಲು ಕೈ ಹಾಕಿ ಕೂತದ್ದು ಅವನ ಮನಸ್ಸಿಗೆ ಕಿರಿಕಿರಿ ಎನ್ನಿಸಿ ಎಲ್ಲಿಂದಲೋ ಕೋಪ ಉಕ್ಕಿ ಬಂದುಬಿಟ್ಟಿತು. ಬಾಯಲ್ಲಿ ತುಂಬಿದ್ದ ಎಂಜಲನ್ನು ಗಟಾರದಲ್ಲಿಯೇ ಪಚ್ ಅಂತ ಉಗುಳಿದ ತೆಂಕಣಕೇರಿಯ ಈ ಅನಂತಮೂರ್ತಿ ಅಂಕೋಲೆಕರ ‘ಏನು? ಹೊತ್ತಲ್ಲದ ಹೊತ್ತಲ್ಲಿ ಈವತ್ತು ವಸ್ತ್ರ ಹಿಡಿದು ಕೂತುಬಿಟ್ಟಿ, ಬುದ್ದಿ-ಗಿದ್ದಿ ಉಂಟೋ ನಿಂಗೆ?’ ಎಂದು ವಿನಾಕಾರಣ ಮುಖ ಗಂಟಿಕ್ಕಿ ತನ್ನ ಕುರುಚಲು ದಾಡಿ ಕೆರೆಯುತ್ತ ಸಿಡುಕಿಬಿಟ್ಟ. ಆ ವೇಳೆಯಲ್ಲಿ ಹೊರಗಡೆ ಇದ್ದ ಚಾಳಿನ ಕೆಲ ಮಂದಿಯೆಲ್ಲ ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ ಇದ್ದುಬಿಟ್ಟರು. +ಅಷ್ಟೇ ಹೊತ್ತಿಗೆ ಹತ್ತಿರದ ಕಹಿ ಬೇವಿನ ಮರದ ಮೇಲೆ ಕಾಗೆ-ಗುಬ್ಬಿಗಳಾದಿಯಾಗಿ ಹೊರಡಿಸಿದ ಇಂಚರಗಳಿಗೆ ಜೀವದಾನ ಪಡೆದವನಂತೆ ಅಲ್ಲಿಯೇ ಒಳಗಡೆ ಚಾಪೆಗೆ ಮೋರೆಯೊತ್ತಿ ಎದೆಗೆ ಅಂಗಿಯೊಂದನ್ನೇ ತೊಟ್ಟು ಮಲಗಿದ, ಅನಂತನ ಕುಮಾರ ಕಂಠೀರವ ವಿವೇಕ ಮಗ್ಗಲು ಬದಲಿಸುತ್ತಿದ್ದ. ತುಂಬಿಕೊಂಡು ಹೊಳೆಯುವ ಗುಲಾಬಿ ಬಣ್ಣದ ಆತನ ಬಲಗೆನ್ನೆಯ ಮೇಲೆ ಚಾಪೆಯ ವತ್ತುಗೆರೆಗಳು ಮುದ್ದಾಗಿ ಮೂಡಿದ್ದವು. +ರಾತ್ರಿ ಮೂತ್ರ ಮಾಡುತ್ತಿದ್ದ ಕಾರಣದಿಂದ ನೆಲಕ್ಕೆ ಚಾಪೆಯ ಮೇಲೆ ಗೊದಡಿ ಹಾಸಿಕೊಂಡು ವಿವೇಕನನ್ನು ಮಲಗಿಸಿಕೊಂಡು ಒರಗಿದ್ದಳು ಮಾಲತಿ. ಮೇಲೆ ಮಂಚದ ಗಾದಿಯಲ್ಲಿ ಅನಾಥನಂತೆ ಬಿದ್ದುಕೊಂಡ ಅನಂತ ‘ಪುಟ್ಟನಿಗೆ ನಿದ್ದೆ ಹತ್ತಿದ ನಂತರ ಮೇಲೆ ಬಾ’ ಎಂದು ನವಿರಾಗಿ ಸೊಂಟ ತಿವಿದು ಹೇಳಿದ್ದು ಮರೆತೇ ಹೋಗಿ ಟ್ರಂಕು ಕೈಬಿಟ್ಟು ಹೋದ ಬಗ್ಗೆಯೇ ಯೋಚಿಸುತ್ತ ಯಾವಾಗ ನಿದ್ದೆಗೆ ಜೋತು ಬಿದ್ದಳೊ ಅವಳಿಗೇ ಗೊತ್ತಾಗಲಿಲ್ಲ. +ಅನಂತನ ಈ ನಸುಕಿನ ಸಿಡುಕಿಗೆ ಕಾರಣವೇನೆಂದು ಮಾಲತಿಗೆ ಥಟ್ಟನೆ ಹೊಳೆದು ಹೋದರೂ ಅದನ್ನೆಲ್ಲ ಯೋಚಿಸಲು ವೇಳೆಯೇ ಇಲ್ಲದಂತೆ ಅವಳ ಮನಸ್ಸಿನ ತುಂಬೆಲ್ಲ ಆ ಟ್ರಂಕಿನ ರೂಪವೇ ತುಂಬಿಕೊಂಡು ಬಿಟ್ಟಿತ್ತು. ಮದುವೆಯಲ್ಲಿ ಅಪ್ಪ ಕೊಟ್ಟ ಅಜ್ಜನ ಕಾಲದ ಗಟ್ಟಿ-ಮುಟ್ಟಾದ ಟ್ರಂಕಾಗಿತ್ತದು. ಅದೀಗ ಗಜಾಕೋಶ್ ಚಾಳಿನ ಈ ಮನೆಗೆ ಪ್ರವೇಶ ಪಡೆದ ಮೇಲೆ ಸಂಸಾರದ ಹೊಸ ಬಟ್ಟೆಗಳನ್ನೆಲ್ಲ ಡಾಂಬರು ಗುಳಿಗೆಯ ಘಮದೊಂದಿಗೆ ಬಚ್ಚಿಟ್ಟು ಕಾಯ್ದುಕೊಂಡ ಟ್ರಂಕಾಗಿತ್ತದು. ಹೊಸದಾಗಿ ಮನೆ ಮಾಡಿದಾಗ ಅದರ ಮೇಲೆಯೇ ಬೆಡ್ ಶೀಟು ಹಾಸಿ ಎಷ್ಟೋ ದಿನಗಳವರೆಗೆ ಖುರ್ಚಿಯ ಹಾಗೆ ಕೂತುಕೊಳ್ಳಲು ಬಳಸುತ್ತಿದ್ದ ಟ್ರಂಕಾಗಿತ್ತದು. ಇದೀಗ ಅದು ಕೆಲಸದ ಬೂಬುವಿನ ಪಾಲಾಗಿ ಹೋಗಿತ್ತು. +ಪಾಯಿಖಾನೆಯ ಪ್ರಮುಖ ಕೆಲಸ ಮುಗಿಸಿ ಒಳಬಂದ ಅನಂತ ಮೋರಿಯ ಮೂಲೆಗೆ ಬಾಲ್ದಿ ಜರಿದು ರಿನ್ ಸೋಪಿನಿಂದ ಕೈ-ಕಾಲು ತೊಳಕೊಳ್ಳುತ್ತಲೇ ತಣ್ಣೀರಿನ ಸ್ನಾನಕ್ಕಿಳಿದುಬಿಟ್ಟ. ತೆಂಕಣಕೇರಿಯಿಂದಲೇ ಮಾಡಿಸಿ ತಂದ ಈಳಿಗೆ ಮಣೆಯ ಮೇಲೆ ಕೂತು ಉಪ್ಪಿಟ್ಟಿಗೆ ಈರುಳ್ಳಿ ಹಸಿ ಮೆಣಸು ಹೆಚ್ಚುತ್ತಿದ್ದ ಮಾಲತಿ ತಡೆಯಲಾರದೇ ‘ಅಷ್ಟು ಛೊಲೋ ಟ್ರಂಕೂ’ ಎಂದೇಬಿಟ್ಟಳು. ಡ್ರಮ್ಮಿನಲ್ಲಿಯ ತಣ್ಣೀರನ್ನು ಅಚ್ಚಿ-ಅಚ್ಚಿ ಸುರಿದುಕೊಳ್ಳುತ್ತ ಕಣ್ಣು ಮುಚ್ಚಿ ‘ಅಹಹಾ’ ಎಂದುಲಿಯುತ್ತ ತೆಂಕಣಕೇರಿಯ ಬಾವಿಕಟ್ಟೆಯ ತೆಂಗಿನ ಗಿಡದ ಅಡಿಯಲ್ಲಿ ನಿಂತು ಮೀಯುತ್ತಿರುವಂತೆ ಭ್ರಮಿಸುತ್ತಿದ್ದ ಅನಂತನಿಗೆ ಒಮ್ಮೆಲೇ ಚಾಳಿನ ಕೃತಿಮ ಲೋಕ ತೆರೆದುಕೊಂಡುಬಿಟ್ಟಂತೆನಿಸಿತು. ‘ಟ್ರಂಕಿನ ಕಾಳಜಿ ನಿಲ್ಲಿಸಿ ವಿವೇಕನ ಕಾಳಜಿ ಮಾಡು, ಮೊನ್ನೆ ಏನಾದರೂ ತುಸು ಹೆಚ್ಚು-ಕಮ್ಮಿಯಾಗಿದ್ದರೆ, ಊರಲ್ಲಿದ್ದ ಅವನ ಅಜ್ಜ-ಅಜ್ಜಿಗೆ ಏನು ಉತ್ತರ ಕೊಡಬೇಕಿತ್ತು ನಾನು’ ಎಂದು ಬಿರುಸಾಗಿ ಅಂದುಬಿಟ್ಟ ಅನಂತ. +ತಪ್ಪೆಲ್ಲ ತನ್ನ ಕರಾಮತ್ತಿನಿಂದಲೇ ಘಟಿಸಿದ್ದರಿಂದ ಮಾಲತಿ ಈತ ಏನು ಅಂದರೂ ಅನ್ನಿಸಿಕೊಳ್ಳಬೇಕು ಎಂಬಂತೆ ಈರುಳ್ಳಿಗಾಗಿ ಕಣ್ಣೀರು ಸುರಿಸುತ್ತ ಅರ್ಧ ಕಣ್ಣು ತೆರೆದು ಪುಟ್ಟ ಚಡ್ಡಿ ತೊಟ್ಟು ಗೊಮ್ಮಟನಂತೆ ಮೀಯುತ್ತಿರುವ ಗಂಡನನ್ನೇ ಮಿಕಿ-ಮಿಕಿ ನೋಡುತ್ತ ಸುಮ್ಮನಾಗಿಬಿಟ್ಟಳು. ಉಪ್ಪಿಟ್ಟು ತಿಂದವನೇ ಅನಂತ ಡ್ರೆಸ್ಸು ಹಾಕಿಕೊಂಡ. ನೆಲಕ್ಕೆ ಬಿದ್ದ ಮಗನ ಪಾದಗಳನ್ನು ಚಾಪೆಯಲ್ಲಿ ಎತ್ತಿಡುತ್ತ ಗೋಡೆಗೆ ಗೀಚಿಟ್ಟ ಮಗನ ನವ್ಯಕಲೆಯನ್ನೊಮ್ಮೆ ಹಸ್ತದಲ್ಲಿ ನೇವರಿಸಿ ಚಪ್ಪಲಿ ಮೆಟ್ಟಿ ಹೊರಟ. ಆ ಕೂಡಲೇ ಒಂಟಿಯಾದ ಮಾಲತಿಗೆ ಆ ದಿನ ನಡೆದದ್ದೆಲ್ಲ ದಿನಮಡಚಿ ಬಿದ್ದಂತೆ ಚಿತ್ರಗಳು ಕಣ್ಣ ಮುಂದೆಯೇ ತೆರೆದುಕೊಂಡು ವಿಚಿತ್ರವಾಗಿ ಹೃದಯ ನಡುಗಿಸಿಬಿಟ್ಟಿತು. +ಚಾಳಿನ ಎಲ್ಲ ಮನೆಗಳ ಪೈಕಿ ಐದನೇ ಮನೆಯ ಕಲವೇಕರ ಮೌಸಿಯ ಮನೆಯಲ್ಲಿ ಮಾತ್ರ ಒಂದು ಪೊರ್ಟೆಬಲ್ ಟೀವಿ ಇತ್ತು. ಮಾಲತಿಗೊ ಚಿಕ್ಕಂದಿನಿಂದ ರಾಜಕುಮಾರನ ಸಿನೆಮಾಗಳ ಹುಚ್ಚು. ಅಂದು ಅದೇ ಟಿವಿಯಲ್ಲಿ ರಾಜಕುಮಾರನ ‘ಬಂಗಾರದ ಮನುಷ್ಯ’ ಪ್ರಸಾರವಾಗಲಿತ್ತು. ಮಾಲತಿ ಆಗಷ್ಟೇ ಮಲಗಿ ಬಿಟ್ಟಿದ್ದ ವಿವೇಕನನ್ನು ಹೊತ್ತೊಯ್ಯಲಾರದೇ ಸಿನೆಮಾವನ್ನು ಬಿಡಲಾರದೇ ಧರ್ಮ ಸಂಕಟಕ್ಕೆ ಸಿಲುಕಿಬಿಟ್ಟಳು. ಅನಂತನೊ ಭಾನುವಾರದ ಸ್ನೇಹಿತರನ್ನು ಹುಡುಕಿಕೊಂಡು ಹೊರಗೆ ನಡೆದುಬಿಟ್ಟಿದ್ದ. ವಿವೇಕನನ್ನು ಮಂಚದಲ್ಲಿಯೇ ಬಿಟ್ಟು ಇನ್ನೊಂದೆರಡು ಚಾದರ ದಪ್ಪವಾಗಿ ಹೊದೆಸಿ, ಬೀಳದಂತೆ ಗಾದಿ ಯಡಿ ತಲೆದಿಂಬನ್ನಿಟ್ಟು ಕೀಲಿ ಹಾಕಿಯಾದರೂ ಈವತ್ತು ಸಿನೆಮಾ ನೋಡಲೇಬೇಕೆಂದುಕೊಂಡಳು. +ಬಹು ದಿನಗಳಿಂದ ಟ್ರಂಕು ಶುದ್ಧಿ ಮಾಡುವ ಕಾರ್ಯಕ್ರಮವನ್ನು ಮುಂದೂಡುತ್ತ ಬಂದು, ಅಂದೇ ಬೆಳಿಗ್ಗೆ ಅದರಲ್ಲಿದ್ದ ಬಟ್ಟೆಗಳನ್ನೆಲ್ಲ ಹಳೇ ದೋತರವೊಂದರಲ್ಲಿ ಗಂಟು ಕಟ್ಟಿ, ಜಿರಲೆಯ ಮನೆಯಾಗಿರುವ ಟ್ರಂಕಿನ ಹೊಲಸನ್ನೆಲ್ಲ ತೊಳೆದು ಬಾಗಿಲು ಹೊರಗೆ ಬಿಸಿಲಲ್ಲಿಟ್ಟದ್ದು ಕಣ್ಣಿಗೆ ಬಿದ್ದು ಅದನ್ನು ಹಾಗೇ ಎತ್ತಿ ಒಳಗಿಟ್ಟು ಮತ್ತೂ ಚೂರು ಗಾಳಿಗೆ ಆರಲಿ ಎಂದು ಮುಚ್ಚಳ ತೆರೆದು ಗೋಡೆಗೆ ಆನಿಸಿಟ್ಟು ಸದ್ದು ಮಾಡದೇ ಬಾಗಿಲು ಜಗ್ಗಿ ಕೀಲಿ ಹಾಕಿ ಎದ್ದಿದ್ದಾನೊ ಮತ್ತೆ? ಎಂದು ಎರಡೆರಡು ಬಾರಿ ಬಾಗಿಲಿಗೆ ಕಿವಿ ಹಚ್ಚಿ ಆಲಿಸಿ ನಿಶ್ಚಿಂತೆಯಿಂದ ನಡೆದಿದ್ದಳು ಮಾಲತಿ. ಮಾಲತಿಯೊಬ್ಬಳನ್ನೇ ಕಂಡ ಕಲವೇಕರ ಮೌಸಿ ‘ಪುಟ್ಟನನ್ನು ಅವನ ಬಾಬನ ಜತೆ ಬಿಟ್ಟು ಬಂದಿದ್ದಿಯೇನು?’ ಎಂದು ಕೇಳಿದರೂ ಮಾಲತಿಯೇನೂ ಹಾಗೆಲ್ಲ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. +ಇಲ್ಲಿ ತಾಯಿ ಬಂಗಾರದ ಮನುಷ್ಯನ ಸಾಮ್ರಾಜ್ಯದಲ್ಲಿ ಒಂದಾಗಿ ತೇಲ ಹತ್ತಿದ್ದೇ ತಡ, ಅಲ್ಲಿ ತಡೆಯಲಾರದ ಸೆಖೆಯಿಂದ ವಿವೇಕ ಎದ್ದು ಕೂತು ಬಿಟ್ಟ. ಆಯಿಯನ್ನು ಕಾಣದೇ ಕ್ಷಣ ಕಣ್ಣು ತಿಕ್ಕಿ ಅತ್ತಂತೆ ನಟಿಸಿದ. ನಿಧಾನ ಬೀಳದಂತೆ ಮಂಚವಿಳಿದು ಒಳಗೆ ಅಡಿಗೆ ಖೋಲಿಯಲ್ಲೆಲ್ಲ ಆಯಿಗಾಗಿ ಹುಡುಕಿದ. ಬಹಳ ಹೊತ್ತು ಆಯಿ ಸಿಗದೇ ಈಗ ನಿಜಕ್ಕೂ ಗಾಬರಿಯಾದ ವಿವೇಕ ಹತ್ತು ನಿಮಿಷ ಬಾಗಿಲು ಬಡಿಯುತ್ತ ನಿಂತು ಅತ್ತ. ಆಯಿಯ ಸುಳಿವೇ ಇಲ್ಲದೇ, ಅವನಿಗೆ ರಾಶಿ ಹೊತ್ತು ಬರೀ ‘ಹ್ಞೂ…ಹ್ಞೂ’ ಎಂದು ಅಳುವುದೂ ಸಹ ಬೇಸರ ತರಿಸಿಬಿಟ್ಟಿತು. ದೇವರ ಮುಂದೆ ಗುಪ್ಪೆಯಾಗಿದ್ದ ಬಾಳೆಹಣ್ಣು ಆಗಲೇ ಹಸಿದಿದ್ದ ವಿವೇಕನ ಕಣ್ಣಿಗೆ ರಾಚಿ ಅನಾಥಪ್ರಜ್ಞೆಯಲ್ಲೂ ಪುಟ-ಪುಟನೆ ಓಡಿ ಧೈರ್ಯದಿಂದ ಒಂದೆರಡು ಬಾಳೆಹಣ್ಣು ಕಿತ್ತು ಸಿಪ್ಪೆ ಸಮೇತ ಅರ್ಧಂಬರ್ಧ ತಿಂದು ಅಲ್ಲಲ್ಲಿ ಬಿಸಾಕಿ ನೆಲಕ್ಕೆ ತಿಕ್ಕಿ-ತಿಕ್ಕಿ ಆಟವಾಡತೊಡಗಿದ. +ಹೊಟ್ಟೆಯ ಬದಿ ಸ್ವಲ್ಪ ತಂಪೆನಿಸಿದ ಕೂಡಲೇ ಅತ್ತು ಏನೂ ಪ್ರಯೋಜನವಿಲ್ಲವೆಂದು ತಿಳಿದಂತೆ ಸುಮ್ಮನಾದವನಿಗೆ ಹೊಸ ಆಟಿಕೆಯಂತೆ ಬಾಯಿ ತೆರೆದು ಕೂತ ಟ್ರಂಕು ಮನಸ್ಸಿಗೆ ಮುದ ಕೊಟ್ಟುಬಿಟ್ಟಿತು. ಟ್ರಂಕಿನ ಬಳಿ ಹೋಗಿ ಕೂತು ಮುಚ್ಚಳ ಹಾಕುವುದು ತೆಗೆವುದು ಮಾಡಿ ಆಟವಾಡತೊಡಗಿದ. ಸ್ವಲ್ಪ ಹೊತ್ತು ಮುಚ್ಚಳ ಇಳಿಸಿ ಟ್ರಂಕಿನ ಮೇಲೆ ‘ಎಬಿ‌ಎಬಿ’ ಎನ್ನುತ್ತ ಆಯಿ ಹೇಳಿಕೊಡುತ್ತಿದ್ದ ಶೈಲಿಯಲ್ಲೇ ಹೇಳಿಕೊಳ್ಳುತ್ತ ಬರೆಬರೆದು ಹಣ್ಣಿನ ತುದಿಗೆ ಬಡಿದುಕೊಂಡ ಗೋಡೆ ಸುಣ್ಣವನ್ನು ಕಣ್ಣರಳಿಸಿ ನೋಡುತ್ತ ಬಾಯಿಗೆ ತುರುಕಿದ. ಆ ಆಟವೂ ಬೋರೆನಿಸಿಬಿಟ್ಟಿತವನಿಗೆ. ಈಗ ಟ್ರಂಕು ಇಳಿದು ನಿಂತು ಮುಚ್ಚಳ ತೆರೆದ. ಕೈಯಲ್ಲಿ ಚೂರು ಬಾಳೆಹಣ್ಣು ಹಿಡಿದುಕೊಂಡೇ ಆಯಿಯನ್ನೇ ಮರೆತು ಶಿಸ್ತು ಟ್ರಂಕಿನೊಳಗೇ ಇಳಿದು ಕೂತುಬಿಟ್ಟ. ಒಂದೂವರೆ ಅಡಿ ಅಗಲದ ಎರಡೂವರೆ ಅಡಿ ಉದ್ದದ ಆಯತಾಕಾರದ ಟ್ರಂಕು ಮಾಟವಾಗಿ ತನಗೇ ನಿರ್ಮಿಸಿದ ಮನೆಯಂತೆ ಭಾಸವಾಗುತ್ತ ಹೋದ ಹಾಗೆ ಆ ದುಃಖದಲ್ಲೂ ಕ್ಷಣ ನಕ್ಕು ಅದರೊಳಗೇ ಕಾಲು ಮಡಚಿ ಮೇಲ್ಮುಖ ಮಾಡಿ ಮಲಗಿ, ತೆರೆದು ನಿಂತ ಮುಚ್ಚಳಕ್ಕೆ ಕಾಲಿನಿಂದ ಧಡಾ-ಭಡಾ ಒದೆಯತೊಡಗಿದ. ಒದೆದ ಹೊಡೆತಕ್ಕೆ ಟ್ರಂಕಿನ ಮುಚ್ಚಳ ಮುಚ್ಚಿಕೊಂಡು ಗ ಆಕಾರದ ಮುಚ್ಚಳದ ಕೊಂಡಿ ಕೆಳಗಿನ ಭಾಗದ ಕೊಂಡಿಗೆ ಬಿದ್ದು, ಪ್ಯಾಕ್ ಆಗಿಬಿಟ್ಟಿತು. +ಒಮ್ಮೆಲೇ ಒಳಗೆ ಆವರಿಸಿಕೊಂಡ ಕಗ್ಗತ್ತಲೆಗೆ ಮತ್ತು ಕೈ ಕಾಲು ವತ್ತಿ ಹಿಡಿದು ತುಂಬಿದ ಹಾಗೆ ಬಂಧಿಯಾದ ಮಾತೇ ಬರದ ಪುಟ್ಟ ವಿವೇಕ ಭಯಭೀತನಾಗಿ ಟ್ರಂಕಿನೊಳಗಿಂದಲೇ ಮತ್ತೆ ದಡ-ಬಡ ಬಡಿದುಕೊಳ್ಳ ಹತ್ತಿದ. ಆ ತುಂಟ ಪೋರನಿಗೆ ಏನಾಯಿತಿದು ಏನಾಗುತ್ತಿದೆಯಿದು ಎಂದೇ ತಿಳಿಯಲಿಲ್ಲ. ಇತ್ತ ಮಾಲತಿ ಬಂಗಾರದ ಮನುಷ್ಯನಲ್ಲಿ ಎಂಥ ಪರಿ ಮುಳುಗಿಹೋಗಿದ್ದಳೆಂದರೆ ಹಾಡು ಹತ್ತಿದಾಗ ಮಾತ್ರ ಕೊಂಚ ಮಗನ ನೆನಪಾಯಿತವಳಿಗೆ. ಮಲಗಿದ್ದಾನು ಬಿಡು ಎಂಬ ಹುಂಬ ಧೈರ್ಯ ಬಂದರೂ ಓಡಿ ಹೋಗಿ ಬಾಗಿಲಿಗೆ ಕಿವಿ ಹಚ್ಚಿ ಆಲಿಸಿ ಎದ್ದಿಲ್ಲ ಎಂದು ಖಾತ್ರಿಪಡಿಸಿಕೊಂಡು ಮತ್ತೆ ಟೀವಿ ಪೆಟ್ಟಿಗೆಯಲ್ಲೇ ಲೀನವಾಗಿಬಿಟ್ಟಳು. +ಅತ್ತ ವಿವೇಕ ಅಷ್ಟಷ್ಟು ಹೊತ್ತಿಗೆ ಕೈ-ಕಾಲು ಹಂದಾಡಿಸುತ್ತ ಸುಸ್ತಾದ ಮೇಲೆ ದನಿ ತೆಗೆಯಲೂ ಶಕ್ತಿ ಉಳಿಯದೇ ಸುಮ್ಮನೇ ಗೋಣು ಅಡ್ಡ ಹಾಕಿ ಮಲಗಿಬಿಟ್ಟವನಿಗೆ ಉಸಿರಾಡಲೂ ತ್ರಾಸಾಗಿ ಪ್ರಜ್ಞೆ ತಪ್ಪಿ ಹೋಗುವ ಹೊತ್ತಿಗೆ ಸಿನೆಮಾ ಮಧ್ಯೆಯೇ ಜಾಹಿರಾತು ಶುರುವಾಗಿಬಿಟ್ಟು ಎಂಥದೋ ಅವ್ಯಕ್ತ ಕಳವಳ ಆವರಿಸಿಕೊಂಡಿತ್ತು ಮಾಲತಿಗೆ. ಅಲ್ಲಿ ಕೂಡಲಾರದವಳಂತೆ ಓಡಿ ಬಂದವಳೇ ಗಡಬಡಿಸಿ ಬಾಗಿಲು ತೆರೆದಳು. ಏಳಲಿಲ್ಲಪ್ಪ ಸಧ್ಯ ಅನ್ನಿಸಿದರೂ ಯಾಕಿವತ್ತು ಇಷ್ಟೊತ್ತು ಮಲಗಿಬಿಟ್ಟ ಎಂದುಕೊಳ್ಳದಿರಲಿಲ್ಲ. +ಮಂಚದ ಬಳಿ ಓಡಿದವಳಿಗೆ ವಿವೇಕನ ಸುಳಿವೇ ಕಾಣದೇ ಎದೆ ಧಸಕ್ಕೆಂದಿತು. ಮಂಚದಿಂದ ಕೆಳಗೆಲ್ಲಾದರೂ ಬಿದ್ದುಗಿದ್ದನೊ, ಖುರ್ಚಿಗಳ ಬುಡದಲ್ಲೇನಾದರೂ ಆಡುತ್ತ ಮತ್ತೆ ಮಲಗಿಬಿಟ್ಟಿದ್ದಾನೊ ಎಂದು ಯೋಚಿಸುತ್ತ ಒಳಗೆ ಗ್ಯಾಸು ಕಟ್ಟಿ ಹಾಗೇ ಮೋರಿಯ ಮೂಲೆಯಲ್ಲೆಲ್ಲಾ ಕಣ್ಣಾಡಿಸುತ್ತ ಮಾಲತಿ ಗಾಬರಿಗೊಂಡಳು. ಬಾಳೆಹಣ್ಣಿನ ತುಂಡುಗಳು ಅಲ್ಲಲ್ಲಿ ಬಿದ್ದು ನೆಲಕ್ಕೆ ತಿಕ್ಕಿ ಆಡಿದ ಹಾಗಿತ್ತು. ಅವನಿಗೆ ಹೊದಿಸಿದ್ದ ಚಾದರು ಮಾತ್ರ ನೆಲದಲ್ಲಿ ಉದ್ದಕ್ಕೆ ಹಾವಿನಂತೆ ಚಾಚಿಕೊಂಡು ಬಿದ್ದಿತ್ತು. ‘ವಿವೇಕ..ಚಿಂಟೂ.. ಪಾಪು… ಚಿನ್ನಾ’ ಎಂತೆಲ್ಲ ಬಡಬಡಿಸುತ್ತ ಮನೆಯೆಲ್ಲ ಒಂದು ಮಾಡಿ ಮಳ್ಳಿಯಂತೆ ಓಡಾಡಿದ ಮಾಲತಿಗೆ ಒಮ್ಮೆಲೇ ದುಃಖ ಉಮ್ಮಳಿಸಿ ಬಂದು ಬಾಗಿಲ ಬಳಿ ಓಡಿ ಆಚೀಚೆ ಮನೆಯವರನ್ನು ಕೂಗಿಕೊಂಡಿದ್ದಳು. ಅವರೆಲ್ಲ ಬರುವುದರೊಳಗೆ ಹಿಂತಿರುಗಿದ ಮಾಲತಿಗೆ ತಾನು ಬಾಗಿಲ ಕೀಲಿ ಹಾಕಿ ಹೋಗುವಾಗ ಟ್ರಂಕಿನ ಮುಚ್ಚಳ ತೆಗೆದಿಟ್ಟು ಹೋದದ್ದು ನೆನಪಾಗಿಬಿಟ್ಟಿತು. ಊಹಿಸಲಾರದ ಭಯಕ್ಕೆ ಎದೆಕೊಟ್ಟವಳಂತೆ ನಡುಗುವ ಕೈಗಳಿಂದ ಟ್ರಂಕಿನ ಚಿಲಕ ತೆಗೆದು ಮುಚ್ಚಳ ಮೇಲಕ್ಕೆ ತಳ್ಳಿ ಹೃದಯ ವಿದ್ರಾವಕವಾಗಿ ಹಸಿರುಗಟ್ಟಿದ ಮಗನನ್ನು ನೋಡಲಾರದೇ ಅಯ್ಯೋ ಎಂದು ಕಿರುಚುತ್ತ ತಲೆ ತಿರುಗಿ ಬಿದ್ದುಬಿಟ್ಟಳು. +ಅಷ್ಟರೊಳಗೆ ಚಾಳಿನ ಗಂಡಸರೆಲ್ಲ ಸೇರಿ ಆಗಿರುವುದನ್ನು ಊಹಿಸಿ ಮಗು ನಿಧಾನ ಉಸಿರಾಡುತ್ತಿದ್ದುದನ್ನು ಗಮನಿಸಿದವರೇ ಒಬ್ಬರು ಹಸ್ತ ತಿಕ್ಕುತ್ತ ಇನ್ನೊಬ್ಬರು ಪಾದ ತಿಕ್ಕುತ್ತ ಕೊನೇ ಮನೆಯ ಫಡ್ನೀಸನ ಲೂನಾ ಬಿಟ್ಟುಕೊಂಡು ಹಿಂದೊಬ್ಬರು ವಿವೇಕನನ್ನೆತ್ತಿ ಕೂತು ಸುಂಯನೆ ಹೋದಾಗ ಮಾಲತಿ ಮನುಷ್ಯರ ಅವಸ್ಥೆಯಲ್ಲೇ ಇರಲಿಲ್ಲ. +ಶಿವಾಜಿಮೂರ್ತಿಯ ಕೆಳಗಿನ ಸಿಮೆಂಟು ಕಟ್ಟೆಯ ಮೇಲೆ ಗೆಳೆಯರ ಜತೆ ಹರಟೆ ಹೊಡೆದು ಮುಗಿಸಿ ಆಗಲೇ ಸಾವಕಾಶ ಮನೆಯ ಬದಿ ಹೆಜ್ಜೆ ಹಾಕುತ್ತಿದ್ದ ಅನಂತ ಸುದ್ದಿ ಕೇಳಿದವನೇ ಶಾಕ್ ಟ್ರೀಟ್‌ಮೆಂಟ್ ಕೊಟ್ಟವರಂತೆ ಹೌಹಾರಿದ. ಒಂದೇ ಉಸಿರಲ್ಲಿ ಆಸ್ಪತ್ರೆಗೆ ನಡೆದುಬಿಟ್ಟ. ಅವನ ಬೆನ್ನಿಗೇ ಮಾಲತಿ ರಸ್ತೆಯಲ್ಲಿ ಹೆಜ್ಜೆಯನ್ನೂ ಊರದೇ ತೇಲಾಡುತ್ತಲೇ ಆಸ್ಪತ್ರೆ ಮುಟ್ಟಿದಳು. ಆಗಲೇ ವಿವೇಕನಿಗೆ ಉಸಿರಾಟ ಸರಾಗವಾಗುವಂತೆ ಚಿಕಿತ್ಸೆ ನೀಡಿ ಸಲೈನ್ ಹಚ್ಚಿ ಮಲಗಿಸಿದ್ದ ದಿವೇಕರ ಡಾಕ್ಟರು ‘ಇನ್ನು ಸ್ವಲ್ಪ ಹೊತ್ತು ಲೇಟಾಗಿದ್ದರೆ ಮಗುವಿನ ಪ್ರಾಣಕ್ಕೇ ಅಪಾಯವಿತ್ತು’ ಎನ್ನುತ್ತ ದೊಡ್ಡವರ ಈ ರೀತಿಯ ನಿಷ್ಕಾಳಜಿಗೆ ಬೇಸರ ಪಟ್ಟುಕೊಂಡರು. ಡಾಕ್ಟರು ಔಷಧಿ-ಇಂಜೆಕ್ಷನ್ನುಗಳ ಚೀಟಿ ಬರೆದುಕೊಟ್ಟದ್ದನ್ನು ಫಡ್ನೀಸನೇ ಹಳಿಯಾಳದ ತುಂಬ ಲೂನಾ ಓಡಿಸಿ ಚೀಟಿಯಲ್ಲಿರುವ ಪ್ರತಿಯೊಂದನ್ನೂ ಹುಡುಕಾಡಿ ಅನಂತನ ಕೈಯಲ್ಲೇ ತಂದುಕೊಟ್ಟಾಗ ಅನಂತ ತನ್ನ ಕಿಸೆ ಮುಟ್ಟಿ ನೋಡಿಕೊಳ್ಳುತ್ತ ‘ನಂತರ ಕೊಡ್ತೇನೆ’ ಎಂದುಸುರಿದ. ದಿನವೂ ಪಾಯಿಖಾನೆಗೆ ಕ್ಯೂ ನಿಂತಾಗ ಪರಸ್ಪರ ಒಂದೂ ಮಾತಾಡದೇ ಬಗ್ಗಿ ಬಗ್ಗಿ ಲುಂಗಿಯ ತುದಿಗೆ ಸಿಂಬಳ ತೆಗೆದುಕೊಳ್ಳುತ್ತ ನಿಲ್ಲುತ್ತಿದ್ದ ಕೊನೇ ಮನೆಯ ಈ ಫಡ್ನೀಸನೇ ದೇವರಂತೆ ಒದಗಿ ಬಂದು ಮಗನ ಪ್ರಾಣ ಉಳಿಸುತ್ತಾನೆಂದು ಅನಂತನಿಗೆ ಕನಸು-ಮನಸಿನಲ್ಲೂ ಅನ್ನಿಸಿರಲಿಲ್ಲ. +‘ನಿನ್ನಿಂದಲೇ ಇಷ್ಟೆಲ್ಲಾ ಆದದ್ದು’ ಎಂದು ಮಡದಿಯನ್ನು ಬೈದುಬಿಡಬೇಕೆನ್ನಿಸಿದರೂ ಅವಳ ಸ್ಥಿತಿಯನ್ನೇ ನೋಡಿ ಕಂಗಾಲಾಗಿ ಮತ್ತೆ ಅವಳನ್ನೇ ಸಂತೈಸುತ್ತ ಅನಂತ ಸುಮ್ಮನುಳಿದ. ಎಚ್ಚರ ಬಂದವರಂತೆ ವಿವೇಕ ಸಣ್ಣ ದನಿ ತೆಗೆದು ನರಳಿದಾಗ ಚಾಳಿನ ಗಂಡಸರೆಲ್ಲ ನಿಟ್ಟುಸಿರು ಬಿಟ್ಟು ಮನೆಗೆ ಹೊರಡಲನುವಾದರು. ಡಾಕ್ಟರು ಕೂತ ಸ್ಥಳದ ಮೇಲ್ಭಾಗದಲ್ಲಿ ಗೋಡೆಗೆ ‘ನಾನು ಬರಿ ಚಿಕಿತ್ಸಕ ಮಾತ್ರ, ಗುಣಪಡಿಸುವವ ಅವನೇ’ ಎಂದು ಬರೆದುಕೊಂಡ ಬೋರ್ಡು ಗಾಳಿಗೆ ನೇತಾಡುತ್ತಿತ್ತು. +ಇತ್ತ ಚಾಳಿನ ಹೆಂಗಸರೆಲ್ಲ ರಸ್ತೆಯಲ್ಲೇ ಒಟ್ಟಾಗಿ ನಿಂತು ದೇವರಲ್ಲಿ ಮೊರೆಯಿಡುತ್ತ ವಿವೇಕನ ತುಂಟತನವನ್ನೆಲ್ಲ ಬಿಂಬಿಸುವ ವರ್ಣಮಯ ಚಿತ್ರವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಬಾಗಿಲಿಗೆ ಹಾಕಿದ ಗೇಟನ್ನು ಆ ಕಡೆಯಿಂದ ಹತ್ತಿ ಈ ಕಡೆ ಇಳಿದು ಗಟಾರ ದಾಟಿ ಸೀದಾ ರಸ್ತೆಗೆ ಓಡುತ್ತಿದ್ದವನನ್ನು ಒಮ್ಮೆ ತಾವ್ಯಾರೋ ಹಿಡಿದು ತಂದದ್ದು, ಪ್ರತಿ ಸಾರಿ ಪಾಳಿಗಿಟ್ಟ ಕೊಡಗಳನ್ನು ಹಿಂದಿನದು ಮುಂದೆ, ಮುಂದಿನದು ಹಿಂದೆ ಮಾಡಿಟ್ಟು ಆಟವಾಡುತ್ತಿದುದು, ಪಕ್ಕದ ಕುಷ್ಟಗಿ ಅಂಕಲ್ ಸಾಕಿದ ನಾಯಿಮರಿ ಸಿಕ್ಕರೆ ಅದನ್ನು ಗಟ್ಟಿಯಾಗಿ ಹಿಡಿದು ಕೂತು ಅದರ ಬಾಯಲ್ಲೆಲ್ಲ ಕೈ ಹಾಕಿ ತನ್ನ ಬಿಸ್ಕೀಟು ತಿನ್ನಿಸುತ್ತ ಅದನ್ನು ಹಿಂಡಿ-ಕಿವಿಚಿ ಸತಾಯಿಸುತ್ತಿದುದು- ಒಂದೇ ಎರಡೇ. +‘ಎಲ್ಲ ಆರಾಮು’ ಎಂದು ತಲೆಯಾಡಿಸುತ್ತ ಮನೆಗೆ ತಿರುಗಿ ಬಂದ ಅವರವರ ಗಂಡಂದಿರ ಬಳಿ ಹೆಂಗಸರೆಲ್ಲ ಪಿಸು-ಪಿಸು ಸುದ್ಧಿ ಕೇಳಿಕೊಳ್ಳುತ್ತಿರುವಾಗಲೇ ‘ಮನೆಯಲ್ಲಿರುವ ಹಾಲು-ಬ್ರೆಡ್ಡು ತರ್‍ತೇನೆ’ ಎಂದು ಚಾಳಿನ ಗಂಡಸರ ಹಿಂದೆಯೇ ಬಂದು ಮನೆ ಹೊಕ್ಕ ಮಾಲತಿ ಅಲ್ಲಿಯೇ ನಿಂತಿದ್ದ ಬೂಬುವನ್ನು ಕರೆದು ‘ನನ್ನ ಮಗನನ್ನೇ ತಿಂದು ಕೂಡಲು ಮಾಡಿತ್ತಿದು, ಇದು ನನಗೆ ಬೇಡಾ….’ ಎಂದು ದೊಡ್ಡದಾಗಿ ಅಳುತ್ತ ಟ್ರಂಕನ್ನೆತ್ತಿ ಅಳುತ್ತ ರಾದ್ಧಾಂತ ಮಾಡಿಬಿಟ್ಟಳು. ಚಾಳಿನ ಹೆಂಗಸರ ಸಮಾಧಾನಕ್ಕೂ ಬಗ್ಗದೇ ಪುನಃ ಪುನಃ ಅದನ್ನೇ ಆವೇಶದಿಂದ ಹೇಳತೊಡಗಿದಾಗ ಬೂಬುವಿಗೆ ಎಂಥದೂ ಅರ್ಥವಾಗದೇ ಟ್ರಂಕನ್ನೆತ್ತಿಕೊಂಡು ನಿಧಿ ಸಿಕ್ಕವಳಂತೆ ಹೋಗಿಬಿಟ್ಟಳು. +ಮನೆಯ ಬಿಳೀ ಗೋಡೆಯ ಕೆಳಭಾಗದ ತುಂಬ ವಿವೇಕನ ಪುಟ್ಟ ಧೂಳು ಪಾದದ ಅಚ್ಚಿನ ಜತೆ ಸಿಕ್ಕ ಸಿಕ್ಕ ಕಡೆ ಪೆನ್ನು ಪೆನ್ಸಿಲ್ಲುಗಳಿಂದ ಬಿಡಿಸಿದ್ದ ಚಿತ್ತಾರದ ಗೆರೆಗಳು ಪೂರ್ತಿಯಾಗದೇ ಇದೀಗ ಪ್ರಾರಂಭದ ಹಂತದಲ್ಲಿರುವಂತೆ ಉಳಿದು ಪೂರ್ತಿಗೊಳ್ಳಲು ಕಾದು ಕೂತಂತೆ ಕಾಣುತ್ತಿದ್ದವು. ಗೋಡೆ ಚಿತ್ತಾರಗಳ ನಂಟೋ ಎಂಬಂತೆ ನಡೆದದ್ದೆಲ್ಲ ಸುಳ್ಳು ಮಾಡಿ ಬಹುಬೇಗ ವಿವೇಕ ಮೊದಲಿನಂತಾಗಿ ಮನೆಗೆ ಬಂದಿದ್ದ. +೮ +ಕಾಟಿನ ಅಡಿಯಲ್ಲಿ ಕಟ್ಟಿಟ್ಟ ಬಿಳೀ ದೋತಿಯ ಹೊಸ ಬಟ್ಟೆಗಳ ದೊಡ್ಡ ಗಂಟು ಕೂತಲ್ಲೇ ಅಣಕಿಸಿದಂತಾಗಿ ಮಾಲತಿಗೆ ಎಲ್ಲಿಲ್ಲದ ಧೈರ್ಯ ಬಂದುಬಿಟ್ಟಿತು. ಈ ಬಗ್ಗೆ ಕಲವೇಕರ ಮೌಸಿಗೆ ಕೇಳಿ ನೋಡಿದಾಗ ‘ನೀನೇ ಕೈ ಎತ್ತಿ ಕೊಟ್ಟದ್ದನ್ನು ಮತ್ತೆ ಯಾವ ಮುಖದಿಂದ ಕೇಳಲು ಹೋಗ್ತಿ?’ ಅಂದುಬಿಟ್ಟಳು. +ಮಧ್ಯಾಹ್ನ ಊಟಕ್ಕೆ ಬಂದ ಅನಂತನಿಗೆ ‘ಗಂಟಿನಲ್ಲಿ ಹೊಸ ವಸ್ತ್ರವೆಲ್ಲ ಹಾಳಾಗ್ತ ಬಿದ್ದಿದೆ ಈಗ’ ಎಂದು ಪಾತ್ರೆ ಕುಟ್ಟಿ ಬಡಿಸಿದಳು ಮಾಲತಿ. ವಿವೇಕ ಈಗ ಮುದ್ದು ಮುದ್ದಾಗಿ ಬಾಬನ ಹತ್ತಿರ ಎರಡು ತುತ್ತು ಉಂಡು ಅನ್ನದಗುಳನ್ನು ಗದ್ದಕ್ಕೆ ಬಡಿದುಕೊಂಡೇ ಕಾಟಿನ ಕೆಳಗೆ ಹೊಕ್ಕಿ ವಸ್ತ್ರದ ಗಂಟಿನ ಮೇಲೆ ಬಿದ್ದು ಉರುಳಾಡುತ್ತಿದ್ದ. ‘ಟ್ರಂಕೇನಾದರೂ ಪರತ್ತು ಕೇಳಲು ಹೋದರೆ ಕಾಲು ಮುರೀತೇನೆ ಕಾಲು’ ಎಂದು ದೊಡ್ಡ ಕಣ್ಣು ಬಿಟ್ಟು ಮಾಲತಿಯನ್ನೊಮ್ಮೆ ಹೆದರಿಸಿದವನೇ ಅನಂತ ಪೋಸ್ಟಿಗೆ ತೆರಳಿದ. ‘ನನ್ನ ಅಪ್ಪ ಕೊಟ್ಟದ್ದದು, ನನಗೆ ಬೇಕು’ ಎಂಬ ಮೊಂಡು ಯೋಚನೆ ಹತ್ತಿದ ಮಾಲತಿ ವಿವೇಕನನ್ನು ಎತ್ತಿಕೊಂಡೇ ಚಾಳಿನ ಹಿಂದೆ ಇಳಿದು ಬೂಬುವಿನ ಜೋಪಡಿಗೆ ಹೋಗಿ ‘ನಮ್ಮ ಟ್ರಂಕು… ನಮ್ಮ ಟ್ರಂಕೂ…’ ಎಂದು ಬಡಬಡಿಸಿದವಳಿಗೆ ಬೂಬು, ‘ಮತ್ತೆ… ನೀವೂ… ಆ ದಿನ…’ ಎಂದೆಲ್ಲ ಬೆ.ಬೆ…ಬೆ… ಮಾಡಿದ್ದಕ್ಕೆ ಮಾಲತಿಗೆ ಸಿಟ್ಟು ಜರ್ರನೆ ಏರಿ ಕೂತಿತ್ತು. +ಮತ್ತದೇ ಆವೇಶದಲ್ಲಿ ‘ಬೇಸರದಿಂದ ಆ ಹೊತ್ತಿನಲ್ಲಿ ಆಡಿದ್ದೆಲ್ಲ ಸತ್ಯವೇನು? ನೀನೇ ಟ್ರಂಕು ಕದ್ದಿದ್ದಿ ಅಂತ ಪೊಲೀಸು ಕಂಪ್ಲೆಂಟು ಕೊಡ್ತೇವೆ’ ಎಂದು ಎಲ್ಲಿಂದಲೋ ಒತ್ತರಿಸಿದ ಧಿಮಾಕಿನಿಂದ ಗದರಿಯೇ ಬಿಟ್ಟಳು. ಆದರೆ ತನ್ನ ಬಾಯಲ್ಲಿ ಬಂದಂತಹ ‘ಪೊಲೀಸು-ಕಂಪ್ಲೆಂಟು’ ಎಂಬ ಬಹು ಎತ್ತರದ ಪದಗಳಿಗೆ ತಾನೇ ಭಯಭೀತಳಾಗಿ ಸರಸರನೆ ನಡುಗುವ ಕಾಲುಗಳಲ್ಲಿ ಚಾಳಿಗೆ ಓಡಿ ಬಂದಿದ್ದಳು. +ಅನಂತ ದಿನಾ ಬರುವುದಕ್ಕಿಂತ ಅಂದು ಅರ್ಧ ತಾಸು ತಡವಾಗಿ ಬಂದ. ಅವನ ಹಿಂದಿಯೇ ಪೆಚ್ಚು ಮುಖ ಮಾಡಿ ಟ್ರಂಕು ಹೊತ್ತು ಬಂದ ಬೂಬುಳನ್ನು ನೋಡಿ ಲೆಕ್ಕ ಹಾಕಿದ ಅನಂತ, ಮಾಲತಿಯ ಮೈಮೇಲೆ ಏರಿಯೇ ಹೋದವನಂತೆ ‘ಕತ್ತೆ, ಮನುಷ್ಯಳೇ ನೀನು?’ ಎಂದು ಬೂಬುವಿನ ಮುಂದೆಯೇ ಹೆಂಡತಿಯನ್ನು ಝಾಡಿಸಿಬಿಟ್ಟ. ಇದು ಅನಂತನ ಕೋಪದ ಪರಮಾವಧಿ ಎಂದು ಅರ್ಥ ಮಾಡಿಕೊಂಡ ಮಾಲತಿಗೆ ಅಳುವೇ ಬಂದುಬಿಟ್ಟಿತು. ಬೂಬು ಕಕ್ಕಾಬಿಕ್ಕಿಯಾಗಿ ನಿಂತೇ ಇರುವಾಗಲೇ ರಸ್ತೆಯಲ್ಲಿ ಚಕ್ಕಡಿಯೊಂದು ಐದು ಅಡಿ ಸೈಜಿನ ನೀಲಿ ಬಣ್ಣದ ಸುಂದರ ಕಬ್ಬಿಣದ ಕಪಾಟನ್ನು ಇಳಿಸುತ್ತಿತ್ತು. ‘ನಿನ್ನ ಹೊಸ ಬಟ್ಟೆ ಗಂಟು ಹೊರಲು ಈಗ ಕಪಾಟು ಬಂದಿದೆ ಇಡ್ಲಿಕ್ಕೆ ಜಾಗ ಮಾಡು ಜಾಗಾ’ ಎನ್ನುತ್ತ ಅನಂತ ಮಾಲತಿಯನ್ನೇ ಸಂತೈಸಿ ರಸ್ತೆಯತ್ತ ಓಡಿದ. ಚಾಳಿನ ಗಂಡಸರನೇಕರು ಕರೆಯದಿದ್ದರೂ ಲುಂಗಿ ಮೇಲಕ್ಕೆ ಕಟ್ಟಿಕೊಳ್ಳುತ್ತ ಬಂದು ಕಪಾಟು ಒಳತರಲು ಕೈ ಹಚ್ಚಿದರು. +ಹೆಂಗಸರೆಲ್ಲ ತಂತಮ್ಮ ಮನೆಯ ಬಾಗಿಲ ಮುಂದೆ ಬಳ್ಳಿಗೆ ಹಾರಾಡುವ ಒಣಗಿದ ಬಟ್ಟೆಗಳನ್ನು ಬರ್ರನೆ ಎಳೆದುಕೊಂಡು ಪುಟ್ಟ ರಥವನ್ನು ನಿಂತು ನೋಡುವಂತೆ ನೋಡಿದರು. ಎಷ್ಟೇ ಪ್ರಯಾಸ ಪಟ್ಟರೂ ಕಪಾಟಿನ ಒಂದು ಮೂಲೆ ಗಟಾರದ ಕೊಚ್ಚೆಗೆ ತಾಗಿಯೇ ಬಿಟ್ಟದ್ದನ್ನು ಕಂಡು ನೆರೆಯ ಶಿರ್ಶಿಕರ ವೈನಿಯೇ ಒಂದು ಚಂಬು ನೀರು ತಂದು ಕಪಾಟಿನ ಮೂಲೆ ತೊಳೆದಳು. ಮಾಲತಿಗೊ ಲಾಟರಿ ಹೊಡೆದಷ್ಟು ಖುಷಿ. ಮಕ್ಕಳಂತೆ ಕುಣಿದಾಡಿ ಹೊಸ ಜೀವವೊಂದನ್ನು ತನ್ನ ಸನಿಹದ ಬದುಕಿಗೆ ಬರಮಾಡಿಕೊಳ್ಳುವಂತೆ ಇದ್ದಲ್ಲೇ ಉಲ್ಲಸಿತಳಾದಳು. ಬೂಬೂನೇ ಕಪಾಟು ಇಡುವ ಜಾಗೆ ಗುಡಿಸಿ ವರೆಸಿದಳು. ಚಿಕ್ಕ ನೀಲ ಕಪಾಟು ಈಗ ಹೊರಕೋಣೆಯಲ್ಲಿಯೇ ಕಾಟಿನ ಬಾಜು ತನ್ನೆರಡೂ ಗಿಡ್ಡ ಕಾಲುಗಳೂರಿಕೊಂಡು ಚೌಕ ಮನುಷ್ಯನ ಹಾಗೆ ಚಾಳಿನ ಆಕರ್ಷಣೆಯ ಕೇಂದ್ರವಾಗಿಬಿಟ್ಟಿತು. ಕಪಾಟಿನ ಹಿಂದೆ ಗೋಡೆಗೆ ಬರೆದ ವಿವೇಕನ ಬಣ್ಣದ ಪೆನ್ಸಿಲ್ಲಿನ ಗೋಲ ಗೋಲ ಚಿತ್ರ ಮಾತ್ರ ಚೂರು ಚೂರೇ ಹಣಕಿ ಹಾಕಿದಂತೆ ಅಲ್ಲಷ್ಟು ಇಲ್ಲಷ್ಟು ಕಾಣುತ್ತಿತ್ತು. +‘ಮೊದಲು ಇದಕ್ಕೆ ಡಾಂಬರು ಗುಳಿಗೆ ತಂದು ಹಾಕಿ’ ಎಂದು ಒಬ್ಬರೆಂದರೆ ‘ಲಕ್ಷ್ಮಣ ರೇಖೆ ಎಳೆದುಬಿಡಿ’ ಅಂದರು ಇನ್ನೊಬ್ಬರು. ಡ್ರಾವರು ಮತ್ತು ಲಾಕರಿನ ಚಾವಿಗಳಲ್ಲಿ ಒಂದರ ಚಾವಿ ಇನ್ನೊಂದಕ್ಕೆ ಹಾಕುತ್ತ ತೆಗೆಯಲು ಬರದೇ ಅನಂತ ಗಡಿಬಿಡಿಗೆ ಬಿದ್ದ. ನಂತರ ಅಲ್ಲಿದ್ದ ನಂಬರು ಓದಿಕೊಂಡು ‘ಓಹೋ! ನಂಬರು ಬೇರೆ ಉಂಟು’ ಎಂದು ನಕ್ಕು ಸರಿಯಾದ ಚಾವಿ ಹಾಕಿ ತೆರೆದು, ಆಭರಣ ಇಡುವ ಜಾಗ, ಮಹತ್ವದ ಕಾಗದಪತ್ರ ಇಡುವ ಭಾಗವನ್ನೆಲ್ಲ ಹೆಮ್ಮೆಯಿಂದ ತೋರಿಸಿದ. ‘ಮಾಲತಿಗೆ ತೋರಿಸಿ ಮೊದಲು’ ಎಂದು ಹಿಂದೆ ಸರಿದು ನಿಂತರು ಕಲವೇಕರ ಮೌಸಿ. +‘ಪ್ಯಾಂಟು ಉದ್ದಕ್ಕೆ ತೂಗಿ ಬಿಡಲು ಜಾಗೆ ಚಿಕ್ಕದು’ ಎಂದೆಲ್ಲ ಅನ್ನುತ್ತಿದ್ದವರಿಗೆ ‘ಹೇಳಿ ಮಾಡಿಸಿದರೆ ಹೌದು ಹಾಗೇ ಮಾಡಿಸಬಹುದಿತ್ತು’ ಎಂದು ಕುರುಬಿದ ಅನಂತ. ಗುಂಪಿನಲ್ಲಾರೊ ‘ಚಾವಿ ಈ ತುಂಟನ ಕೈಗೆ ಸಿಗುವ ಹಾಗೆ ಇಡಬೇಡಿ’ ಅಂದುಬಿಟ್ಟರು. ಅದೇ ಅಚ್ಛಾ ಸಂದರ್ಭವೆಂಬಂತೆ ಹೇಗೊ ತಪ್ಪಿಸಿಕೊಂಡು ಹೊರ ಹೋಗಿ ಬೂಬು ತಂದಿಟ್ಟ ಟ್ರಂಕಿನ ಮೇಲೆ ಹತ್ತಿ ಕೂತು ಪ್ರಾಣಮಿತ್ರನಂತೆ ಅವಚಿ ಹಿಡಿದು ಬಡಬಡ ಸದ್ದು ಮಾಡುತ್ತಿರುವ ವಿವೇಕನನ್ನು ಎತ್ತಿಕೊಂಡೇ ಒಳಬಂದ ಫಡ್ನೀಸನ ಹೆಂಡತಿ ‘ಈ ಕಿಲಾಡಿ ಕಪಾಟಿನಲ್ಲೂ ಜಾಗ ಹುಡುಕಿ ಕೂತು ಬಿಡಲು ತಯಾರಿ’ ಅಂದಿದ್ದಕ್ಕೆ ‘ಹೆ… ಹೆ… ಇಲ್ಲ ಇಲ್ಲ’ ಎಂದು ಎಲ್ಲ ನಕ್ಕುಬಿಟ್ಟರು. ಅರಿಸಿಣ ಕುಂಕುಮ ಹಚ್ಚಿ ಕಪಾಟಿಗೆ ಊದಿನಕಡ್ಡಿ ಬೆಳಗಲಾಯಿತು. ಅಲ್ಲಿ ನಿಂತವರಿಗೆಲ್ಲ ಸಕ್ಕರೆ ಹಂಚುತ್ತಿದ್ದಾಗ ‘ಬರೀ ಸಕ್ಕರೆಯಲ್ಲಿ ಮುಗಿಸಿ ಬಿಡಬೇಡಿ, ನಮಗೆ ಪಾರ್ಟಿ ಬೇಕು ಪಾರ್ಟಿ’ ಎಂದು ಎಲ್ಲಿಂದಲೋ ಒಂದು ದನಿ ಹುಟ್ಟಿಬಿಟ್ಟಿತು. +ಎಲ್ಲ ಒಬ್ಬೊಬ್ಬರಾಗಿ ಕರಗಿ ಹೋದ ಮೇಲೆ ಕೊನೆಯದಾಗಿ ಹೊರಟು ನಿಂತ ಬೂಬುವಿಗೆ ಅನಂತ ‘ಈ ಟ್ರಂಕು ನಿನಗೇ ಇರ್‍ಲಿ’ ಎಂದು ತಾನೇ ಎತ್ತಿ ಅವಳ ಮೇಲೆ ಹೊರಿಸಿಬಿಟ್ಟ. ಅದಾಗಲೇ ಮಾಲತಿ ಗಂಟು ಬಿಚ್ಚಿ ಕೂತು ತನ್ನೆಲ್ಲ ಹೊಸ ಸೀರೆಗಳನ್ನು ಬೇರೆ-ಬೇರೆ ಖಾನೆಯಲ್ಲಿ ಪೇರಿಸಿಡುತ್ತಿದ್ದಳು. ಬಾಗಿಲು ಮುಂದೆ ಮಾಡಿ ಅನಂತ ಏಕಾಂತದಲ್ಲಿ ಕಪಾಟಿನ ಅಸ್ತಿತ್ವವನ್ನು ಆನಂದಿಸುತ್ತ ದೂರದಲ್ಲೇ ನಿಂತು ಬೇರೆ ಬೇರೆ ಕೋನದಿಂದ ಅಳೆದ. +ಖೋಲಿಗೇ ಈಗ ಒಂದು ಹೊಸ ಕಳೆ ಬಂದಂತೆನಿಸಿದ ಮಾಲತಿಗೆ ಆನಂದಾತಿರೇಕದಿಂದ ಏನು ಹೇಳಬೇಕೆಂದೇ ತಿಳಿಯದೇ ‘ಟ್ರಂಕಾದರೆ ಕಾಟಿನಡಿ ಹಿಡೀತಿತ್ತು, ಇದು ನೋಡಿ ರೂಮು ಚಿಕ್ಕದಾಗುವ ಹಾಗೆ ಎಷ್ಟು ಜಾಗ ತಿಂದು ಕೂತಿದೆ’ ಎಂದು ಮುಟ್ಟಿ ಮುಟ್ಟಿ ನೋಡಿದಳು. ಹೀಗೆ ಬಾಯಿಬಿಟ್ಟ ಮಡದಿಯನ್ನು ಅನಂತ ದೊಡ್ಡ ದೊಡ್ಡ ಕಣ್ಣು ಬಿಟ್ಟು ತಿಂದುಬಿಡುವವನಂತೆ ನೋಡಿದ. +ಹೊಸ ವಸ್ತ್ರದ ರಾಶಿಯ ಮೇಲೆಯೇ ಕೂತು ಆಡುತ್ತಿರುವ ಮಗನನ್ನು ‘ಕಪಾಟಿನಲ್ಲೂ ಹೊಕ್ಕಿ ಕೂಡುವುದಿದೆಯೋ ಬಡ್ಡೀ ಮಗನೇ’ ಎನ್ನುತ್ತ ಮುದ್ದಿನಿಂದ ಮೇಲೆತ್ತಿ ಅನಂತ ಅವನನ್ನು ಕಪಾಟಿನ ನೆತ್ತಿಯ ಮೇಲೆಯೇ ಕೂಡಿಸಿಬಿಟ್ಟ. ಆಗ ಕೇಕೆ ಹಾಕಿ ನಕ್ಕ ವಿವೇಕ ಆಯಿ-ಬಾಬಾರಿಗಿಂತ ಎತ್ತರದಲ್ಲಿರುವ ತನ್ನನ್ನು ತಾನೇ ಒಮ್ಮೆ ನೋಡಿಕೊಂಡು ಬೆಚ್ಚಿ ಬಿದ್ದು ತೀರ್ಥ ಪ್ರೋಕ್ಷಣೆ ಮಾಡಿದಂತೆ ಮೂತ್ರ ಮಾಡಿಬಿಟ್ಟ. ಕಪಾಟಿನ ಎರಡೂ ಬಾಗಿಲುಗಳ ಮೇಲೆ ಉದ್ದಕ್ಕೆ ಕೆಳಗಿಳಿಯುತ್ತಿದ್ದ ಮುದ್ದಾದ ಮುತ್ತಿನ ಹನಿಯ ಗೆರೆಗಳು ಕಪಾಟೇ ನಿಂತು ಕಣ್ಣೀರಿಡುತ್ತಿದ್ದಂತೆ ಕಾಣುತ್ತಿತ್ತು. +***** +ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ಇದುವರೆಗೂ ಬೇರೆ ಯಾರ ಜೊತೆಯೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_750.txt b/Kannada Sahitya/article_750.txt new file mode 100644 index 0000000000000000000000000000000000000000..2c655cd64f5b1289b4d7cceacb2048ed9fbf9db7 --- /dev/null +++ b/Kannada Sahitya/article_750.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು +ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; +ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು +ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ +ಅಲ್ಲೊಂದು ಇಲ್ಲೊಂದು ಚಿಕ್ಕೆ ಕುತೂಹಲದಿ ಕಣ್ಣು ತೆರೆದಾಗ +ಬೆಳ್ಳಗೆ ಮಂಜುಮುಸುಕಿನಲಿ ಬಂತು ದೀಪಾವಳಿ. +೨ +ಗೋದಿಸಸಿ ನಾಟಿ ಜೋಳದ ತುಂಬುತೆನೆ ತಲೆದೂಗಿ +ಹುಚ್ಚೆಳ್ಳು ಹಚ್ಚಹಸುರಿಗೆ ಅಚ್ಚ ಬಂಗಾರದಂತಾಗಿ; +ದನಕರುಗಳೆಲ್ಲ ಮೇದು ಮೆಲುಕಾಡಿಸುತ ಬರುವಾಗ +ಕೆರೆಯಂಚಿನಲ್ಲಿ ಸಾಲಾಗಿ ಕುಳಿತ ಬೆಳ್ಳಕ್ಕಿ ಬಾನಿಗೆ ಹಾರಿ, +ನಸುಗಪ್ಪಿನಲಿ ತೊಗಲಬಾವಲಿ ಹಿಂಡ ಹಿಂಬಾಲಿಸುತ +ಮನೆಮನೆಯ ಶಿವನಬುಟ್ಟಿಗೆ ಇಳಿದು ಬಂತು ದೀಪಾವಳಿ. +೩ +ನೆಲದ ಹುಲ್ಲಿನ ಮೇಲೆ ಮುಗಿಲ ಮಲ್ಲಿಗೆ ಜಗುಳಿ, +ಹೊನ್ನವರೆ, ಅಡಿಕೆ, ಗೊರಟಿಗೆ, ಚೆಂಡು ದುಂಡಗೆ ಅರಳಿ, +ಬೇಲಿಗುಂಟ ಬಿಳಿ, ಹಳದಿ, ಕೆಂಪು, ಚಾಂಬಳಿ, ನೀಲಿ ಹೂಗಳ ಮೇಲೆ +ಕುಳಿತ ಪಾತರಗಿತ್ತಿ ಬೆಂಬತ್ತಿ ಮಕ್ಕಳಾಡಿರಲು, +ನೂರುಸಲ ಗುಬ್ಬಿ ಗೂಡಿಗೆ ಮರಳು ಗುಟುಕಿಡಲು +ಅಕ್ಕರತೆಯಲಿ ಮರಿಗೆ ರೆಕ್ಕೆ ಮೂಡಿಸಿ ಬಂತು ದೀಪಾವಳಿ. +೪ +ಸಂದಿಗೊಂದಿಯ ಕಸ-ಧೂಳಿ-ಜೊಂಡಿಗ-ಜೇಡಬಲೆ ಗುಡಿಸಿ +ಸುಣ್ಣ ಬಣ್ಣವ ಹಚ್ಚಿ, ಹಳೆಯ ತಲೆದಿಂಬಿಗೆ ಹೊಸ ಚೀಲ ತೊಡಿಸಿ, +ಹರಕು ಮುರುಕು ಸಾಮಾನುಗಳ ಗಂಟುಕಟ್ಟಿ ಮೂಲೆಗೆ ಇರಿಸಿ, +ಸ್ನೇಹಿತರ ಬಳಗಕ್ಕೆ ರೆಡಿಮೇಡ್ ಶುಭಾಶಯವ ಕಳಿಸಿ, +ವಿಶೇಷ ಸಂಚಿಕೆಯ ಮುಖಪುಟದಲ್ಲಿ ಹೆಣ್ಣಿನ ವಿಚಿತ್ರ ಭಂಗಿ ಕಂಡಾಗ +ಮುಸಿಮುಸಿ ನಕ್ಕು, ಇದ್ದುದರಲ್ಲೆ ಖುಷಿಯಾಗಿ ಬಂತು ದೀಪಾವಳಿ. +೫ +ಹೊಲ, ಗದ್ದೆ, ಗಿರಣಿ, ಕಚೇರಿ, ಕಾರ್ಖಾನೆಯಲಿ ಬೆವರು ಸುರಿಸಿ, +ಸಂಪು, ಹರತಾಳ, ಕೊಲೆ, ಸುಲಿಗೆ, ಅಪಘಾತ ರಕ್ತ ಕುಂಕುಮವಿರಿಸಿ, +ವಿಧಾನಸಭೆಯ ವಿಧಿಯಿರದ ಗೊಂದಲದೊಳಗೆ ಸಿಕ್ಕಿ ಪಾರಾಗಿ, +ಪಕ್ಷಾಂತರಕ್ಕೆ ಮನಸೋಲದೆ ತನ್ನ ಹಾದಿಯ ತಾನು ಹಿಡಿದು- +ಕಲ್ಲಿನೇಟಿಗೆ ಎಲ್ಲ ವಿದ್ಯುದ್ದೀಪ ಒಡೆದು ಚೂರಾಗಿರಲು +ಹಣತೆಗಳ ಹುಡುಹುಡುಕಿಕೊಂಡು ಬಂತು ದೀಪಾವಳಿ. +೬ +ಹಲವಾರುಸಲ ಮಾವನ ಮನೆಗೆ ಬಂದ ಅಳಿಯನಂತೆ +ಭೆಟ್ಟಿಯಾದಾಗೊಮ್ಮೆ ‘ಚಹಾ ಕುಡಿಸಪಾ’ ಎನ್ನುವ ಗೆಳೆಯನಂತೆ +ದಿನದಿನವು ಪತ್ರಿಕೆಯಲ್ಲಿ ಬರುವ ವಾಚಕರ ಪತ್ರಗಳ ದೂರಿನಂತೆ +ಹೊಸ್ತಿಲ ತೊಳೆವ ಮೊದಲೆ ಬಾಗಿಲಲಿ ಸಪ್ಪಳಾಗುವ ಹಾಲಿನ ಬಾಟ್ಲಿಯಂತೆ +ಬಹುದಿನದ ಮೇಲೆ ಬಂದ ಕವನ ಸಂಕಲನದ ತಿದ್ದಿದೆರಡನೆಯ ಆವೃತ್ತಿಯಂತೆ +ಬರುವ ಕಾಲಕ್ಕೆ ಬಂತು ದೀಪಾವಳಿ. +***** +೧೯೭೪ +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +ಈ ದಿನ ಭಾನುವಾರ- ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ ನನ್ನ ದಡದಲ್ಲಿರುವ ಗಿಡಮರ ಬಳ್ಳಿ ಪ್ರತಿಫಲಿಸಿ, ಏನೋ ಸಮಾಧಾನ. ಅಂಥ ಅವಸರವಿಲ್ಲ, ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು. ಬೆಳೆದಿರುವ ಗಡ್ಡ ಇನ್ನೂ ಒಂದೆರಡು […] +ಚನ್ನವೀರ ಕಣವಿ ಕೊಡೆ ಹಿಡಿಯುತ್ತೇವೆ: ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು ಸಿಡಿಸುವ ಕೊಳೆಗೆ, ಆಗದವರು ಎದುರಿಗೆ ಬಂದಾಗ ಮರೆಗೆ- ಹೊತ್ತು ಬಂದಂತೆ. ಮತ್ತೊಬ್ಬರ ತಲೆಗೆ ನೆರಳು ಮಾಡುವ ಉಸಾಬರಿಗೆ ಹೋಗಿ ಚುಚ್ಚುತ್ತೇವೆ; ಮೆಚ್ಚುತ್ತೇವೆ: ಹೆಣ್ಣು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_751.txt b/Kannada Sahitya/article_751.txt new file mode 100644 index 0000000000000000000000000000000000000000..e6cfd39be54f085530dbf56c01a22e287028bde0 --- /dev/null +++ b/Kannada Sahitya/article_751.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-ಕುಮಾರ್ ವೆಂಕಟ್ (ಕನ್ನಡಕ್ಕೆ ಸುದರ್ಶನ್ ಪಾಟೀಲ್ ಕುಲಕರ್ಣಿ) +ನಮ್ಮ ಸಾಮಾಜಿಕ ಸಮಸ್ಯೆಗಳ ಕೇಂದ್ರ ಬಿಂದುಗಳಾಗಿರುವ, ಜಗತ್ತಿನ ಮೂಲೆಮೂಲೆಯಲ್ಲೂ ಅವಿತು ಕೂತಿರುವ, ತೀವ್ರ ಬಡತನ ಹಾಗೂ ಜನ ಸಮುದಾಯದಲ್ಲಿನ ಕೆಳವರ್ಗಗಳ ಅವಕಾಶಹೀನತೆ ಇತ್ಯಾದಿಗಳ ನಿವಾರಣೆ ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಶಕ್ತಿಗಳಿಂದ ಮಾತ್ರ ಸಾಧ್ಯವೆಂದೇ ನಾವೆಲ್ಲಾ ನಂಬಿದಂತಿದೆ. ಹೇಗಾದರೂ ಸರಿ, ಈಗಿರುವ ಡಿಜಿಟಲ್ ಕಂದರವನ್ನು ಮುಚ್ಚಲೇಬೇಕೆನ್ನುವ ತುಡಿತ ನಮ್ಮ ಇಂದಿನ ಎಲ್ಲಾ ಪ್ರಮುಖ ಬಡತನ ನಿವಾರಣಾ ಪ್ರಯತ್ನಗಳ ತಿರುಳೇ ಆಗಿರುತ್ತದೆ. +ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಬೇಡಿಕೆಗಳನ್ನು ಬಹುತೇಕವಾಗಿ ತುಂಬಿಸಿರುವ ಮಾಹಿತಿ ತಂತ್ರಜ್ಞಾನ ಕೈಗಾರಿಕಾ ಸಂಸ್ಥೆಗಳು ಸಹಜವಾಗಿಯೇ ಪ್ರಪಂಚದ ಇತೆರೆಡೆಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಲಿವೆ. ಇತ್ತ ಬಡತನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿರುವ ಅಭಿವೃಧ್ಧಿಶೀಲ ದೇಶಗಳ ರಾಜಕೀಯ ನಾಯಕರು, ತಮ್ಮ ಜನತೆಯ ಜೀವನ ಮಟ್ಟವನ್ನು ಎತ್ತರಿಸುವ ಕೊನೆಯ ಆಧಾರಗಳೆಂದು ಹೊಸ ತಂತ್ರಜ್ಞ್ಯಾನ ಮತ್ತು ಜಾಗತಿಕ ಮಾರುಕಟ್ಟೆಗಳ ಮೊರೆಹೋಗ ಹತ್ತಿದ್ದಾರೆ. ಪರಿಣಾಮವಾಗಿ, ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ವ್ಯಾಪಾರಿಗಳು, ವಿಶ್ವಬ್ಯಾಂಕ್ ಹಾಗೂ ವಿಶ್ವ ಮಾರುಕಟ್ಟೆ ಸಂಸ್ಥೆಗಳ ಬೆಂಬಲದಿಂದ ಸಮಸ್ಯೆಯ ನಿವಾರಣೆಯಲ್ಲಿ ಒಂದೇ ಪಕ್ಷವಹಿಸಿದಂತಾಗಿದೆ. +ತಂತ್ರಜ್ಞಾನದಿಂದ ವಾಸ್ತವದಲ್ಲಿ ನಾವು ಏನನ್ನು ಸಾಧಿಸಬಹುದೆಂಬುದರ ಬಗ್ಗೆ ಸರಿಯಾದ ತಿಳುವಳಿಕೆಯೊಂದು ನೀತಿನಿಯಮಾವಳಿಗಳ ಹೇಳಿಕೆಗಳಿಂದಲೂ, ವ್ಯಾಪಾರೀ ಪ್ರಣಾಳಿಕೆಗಳಿಂದಲೂ, ಬಡತನ ನಿವಾರಣಾ ಸಲಹಾ ಪಟ್ಟಿಗಳಿಂದಲೂ, ಸದಾ ಮಾಯವಾಗಿಯೇ ಬಿಟ್ಟಿರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಕಂದರಗಳು, ಈ ಡಿಜಿಟಲ್ ಕಂದರಕ್ಕೆ ಮೂಲಕಾರಣಗಳೋ, ಅಥವಾ ಅವು ಇದರದ್ದೇ ತತ್ಪರಿಣಾಮಗಳೋ ಎಂಬುದು ಇಂದಿನ ಒಂದು ಬಹುಮುಖ್ಯ ಪ್ರಶ್ನೆಯಾಗಿಯೇ ಉಳಿದಿದೆ. +ಬಡತನ ನಿರ್ಮೂಲನೆಗೆಂದಿರುವ ಪ್ರಮುಖ ಅಂತರ್‌ರಾಷ್ಟ್ರೀಯ ಸಂಸ್ಥೆ, ಸಂಯುಕ್ತರಾಷ್ಟ್ರಾಭಿವೃದ್ಧಿ ಕಾರ್ಯಕ್ರಮ(ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೊಗ್ರಾಂ), ತನ್ನ ೨೦೦೧ನೇ ಸಾಲಿನ ಮಾನವ ಅಭಿವೃದ್ಧಿ ವರದಿ ಪತ್ರದಲ್ಲಿ, ‘ತಂತ್ರಜ್ಞಾನದ ಕಂದರ, ಆರ್ಥಿಕ ಕಂದರವನ್ನೇನೂ ಅನುಸರಿಸಬೇಕಿಲ್ಲ’ ಎಂಬಂತೆ ಹೇಳಿಕೆ ಕೊಟ್ಟಿದೆ. ಆದರೆ ಈ ಹೇಳಿಕೆಗಳಿಗೆ ತದ್ವಿರುದ್ಧವಾಗಿ, ಈವರೆಗಿನ ಸಾಕ್ಷ್ಯಾಧಾರಗಳು ಮಾತ್ರ, ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಈ ತಂತ್ರಜ್ಞಾನ ವಿಭಜನೆಯೆಂಬುದು, ಆದಾಯ ವಿಭಜನೆಯನ್ನು ಯಾವತ್ತೂ ನಿಯಮಿತವಾಗಿಯೇ ಅನುಸರಿಸಿಕೊಂಡು ಬಂದಿದೆ ಎಂದೇ ತೋರಿಸುತ್ತವೆ. ಅಂತರ್ಜಾಲಕ್ಕೆ ಸಂಪರ್ಕಿಸಲ್ಪಟ್ಟ ಶೇ.೯೬ರಷ್ಟು ಗಣಕಯಂತ್ರಗಳಿರುವುದು, ವಿಶ್ವ ಜನಸಂಖ್ಯೆಯ ಶೇ.೧೫ರಷ್ಟು ಜನರಿಗೆ ಮಾತ್ರ ಮನೆಯಾಗಿರುವ ಸಂಪದ್ಭರಿತ ರಾಷ್ಟ್ರಗಳಲ್ಲಿ. ಅಮೇರಿಕೆಯ ಶೇ.೬೦ ಜನರಿಗೆ ಮಾತ್ರ ಅಂತರ್ಜಾಲದ ಜೊತೆ ಯಾವುದಾದರೊಂದು ಬಗೆಯಲ್ಲಿ ಸಂಪರ್ಕವಿದ್ದು, ಈ ಅಂಕಿ‌ಅಂಶಗಳು ಮನೆಯ ವಾರ್ಷಿಕ ಆದಾಯಕ್ಕೆ ಅತ್ಯಂತ ನಿಕಟವಾಗಿ ಸಂಬಂಧಪಟ್ಟಿವೆ. ಭಾರತದಲ್ಲಿ ಬರೀ ಶೇ ೦.೫ರಷ್ಟು ಅಂದರೆ ನೂರು ಕೋಟಿ ಜನಸಂಖ್ಯೆಯ ದೇಶದಲ್ಲಿ ಉನ್ನತ ಆದಾಯಮಟ್ಟ, ಶಿಕ್ಷಣ ಮತ್ತು ಗಣಕಯಂತ್ರ ಬಳಕೆಯಲ್ಲಿ ಕುಶಲತೆ ಹೊಂದಿದ ಬರೀ ೫೦ ಲಕ್ಷ ಜನರಿಗೆ ಮಾತ್ರ ಅಂತರ್ಜಾಲ ಕೈಗೆಟಕುತ್ತಿದೆ. +ಉಳ್ಳವರೇ ಪಡೆವವರು +ಹೀಗಾಗಿ ತಂತ್ರಜ್ಞಾನ ಲಭ್ಯತೆ ಮತ್ತದರ ಪರಿಣಾಮಗಳತ್ತ ಲಕ್ಶ್ಯ ವಹಿಸುವುದು ಇಂದು ಅತ್ಯವಶ್ಯವಾಗಿದೆ. ಅಮೇರಿಕೆಯ ಇತ್ತೀಚಿನ ಆರ್ಥಿಕ ಉಲ್ಬಣತೆ ಬಹುಪಾಲು ಹೊಸ ತಂತ್ರಜ್ಞಾನದಿಂದಲೇ ಆದದ್ದು. ಇಷ್ಟೆಲ್ಲಾ ತಂತ್ರಜ್ಞಾನ ಮತ್ತು ಸಿರಿತನವಿದ್ದಾಗಲೂ ಆ ದೇಶದ ರಾಷ್ಟ್ರೀಯ ಬಡತನ ದರ ಮಾತ್ರ, ೧೯೭೦ರ ಮಧ್ಯದ ಕಂಪ್ಯೂಟರ್ ಕ್ರಾಂತಿಗಿಂತ ಮೊದಲು ಎಷ್ಟಿತ್ತೊ, ಅಂದರೆ ಶೇ. ೧೧ ಕ್ಕಿಂತಲೂ ಅಧಿಕದಷ್ಟಿದೆ. ಸುಮಾರು ನಾಲ್ಕು ಕೋಟಿ ಅಮೇರಿಕನ್ನರು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದರೆ, ಶೇ.೧೫ರಷ್ಟು ಮಕ್ಕಳು ಬಡತನದಲ್ಲಿ ಬೆಳೆಯುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಮಾರುಕಟ್ಟೆ ಶಕ್ತಿಗಳು ಅಮೇರಿಕೆಯ ಬಡತನ ಸಮಸ್ಯೆಯನ್ನು ಎದುರಿಸುವಲ್ಲಿ ವಿಫಲವಾಗಿವೆ ಎಂಬುದು ಇದರಿಂದ ಸ್ಪಷ್ಟವಾಗಿಯೇ ಸಾಬೀತಾಗುತ್ತದೆ. ಅಷ್ಟೇ ಅಲ್ಲ, ಈ ಶಕ್ತಿಗಳು ತಮಗೆ ಎಲ್ಲಿ ಲಾಭವಿಲ್ಲವೋ ಅತ್ತ ನೋಡುವುದೇ ಇಲ್ಲ ಎಂಬುದೂ, ನಮಗೆ ಇಲ್ಲಿ ಕಂಡುಬರುತ್ತದೆ. +ಅಲ್ಲದೇ, ಅಮೇರಿಕೆಯ ಶ್ರೀಮಂತ ಹಾಗೂ ಬಡವನ ನಡುವಿನ ಆದಾಯದ ಅಂತರ ಕಳೆದ ಕಾಲು ಶತಮಾನದಲ್ಲಿ ಶೇ.೫೦ರಷ್ಟು ಅಧಿಕಗೊಂಡಿದೆ. ಇದರರ್ಥವಿಷ್ಟೇ. ಮಾರುಕಟ್ಟೆಯ ಶಕ್ತಿಗಳು ಹೊಸ ತಂತ್ರಜ್ಞಾನವನ್ನು ಹರಡಿದಂತೆಲ್ಲಾ, ಈಗಾಗಲೇ ಉತ್ತಮವಾಗಿರುವವರು ಮಾತ್ರ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಇದ್ದು, ಈಗಾಗಲೇ ಕಾಲಾಂತರದಿಂದ ಇರುವ ಆರ್ಥಿಕ ಅಸಮಾನತೆಯನ್ನು ಇದು ಹೋಗಲಾಡಿಸುವ ಬದಲು ಮತ್ತಷ್ಟು ಬಲಪಡಿಸುತ್ತದೆ. +ಅಮೇರಿಕೆಯಂತೂ “ಉತ್ತಮ”ರಲ್ಲಿನ ಉದಾಹರಣೆ. ಇನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಡತನ ಸಮಸ್ಯೆಯನ್ನಂತೂ ಕೇಳುವುದೇ ಬೇಡ. ಅದು ಇನ್ನಷ್ಟು ಹರವಾದದ್ದು ಮತ್ತು ಆಳವಾದದ್ದು. ದಿನವೊಂದಕ್ಕೆ ಒಂದು ಡಾಲರಿಗಿಂತಲೂ ಕಡಿಮೆ ಆದಾಯ ಪಡೆವ ೧೩೦ ಕೋಟಿ ಜನರಲ್ಲಿ ಬಹುಪಾಲಿನವರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಾರೆ. ಅಮೇರಿಕೆಯಂಥ ದೇಶ ತಾನು ತನ್ನ ಅತ್ಯುತ್ತಮ ಆರ್ಥಿಕ ಸ್ಥಿತಿಯಲ್ಲಿರುವಾಗಲೇ, ತನ್ನ ಸೀಮೆ ಮಾತ್ರದಲ್ಲಿಯೇ ಬಡತನವನ್ನು ನಿವಾರಿಸದೇ ಹೋಗಿರುವ ಪಕ್ಷದಲ್ಲಿ, ಅಭಿವೃದ್ಧಿಶೀಲ ದೇಶಗಳು ತಂತ್ರಜ್ಞಾನ ಹಾಗೂ ಮಾರುಕಟ್ಟೆಗಳೆಂಬ ಇವೇ ಸಲಕರಣೆಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಗಾತ್ರದಲ್ಲಿರುವ ಈ ಸಮಸ್ಯೆಯನ್ನು ನಿರ್ಮೂಲನ ಮಾಡಿಯಾವು ಎಂದು ನಾವು ಬಯಸುವುದು ಸಾಧುವೆ? +ಸಂಯುಕ್ತ ರಾಷ್ಟ್ರ ಅಭಿವೃದ್ಧಿ ಕಾರ್ಯಕ್ರಮದ ವರದಿ ಪತ್ರ, ಕನಿಷ್ಠ ಪಕ್ಷ ತಂತ್ರಜ್ಞಾನ ಸೃಷ್ಟಿಸಲ್ಪಡುವುದು ಬಡವರ ಬೇಡಿಕೆಗಾಗಿ ಅಲ್ಲ ಎಂತಲೂ, ಬದಲು ಮಾರುಕಟ್ಟೆಯ ಒತ್ತಡಗಳಿಂದಾಗಿ ಎಂತಲಾದರೂ ಒಪ್ಪಿಕೊಳ್ಳುತ್ತದೆ. ಇತ್ತ ಮಾರುಕಟ್ಟೆಗಳು, ಶ್ರೀಮಂತ ವರ್ಗದವರ ಬಂಡವಾಳ ಹಾಗೂ ಬಳಕೆ ಪ್ರವೃತ್ತಿಯಿಂದಲೂ ನಿರ್ದೇಶಿಸಲ್ಪಡುತ್ತವೆ. ಬಹಳಷ್ಟು ಕಡೆಗಳಲ್ಲಿ ಮರುದಿನದ ಊಟದ ಯೋಚನೆಯಿಲ್ಲದವರ ಅಥವಾ ವೈದ್ಯಕೀಯ ಚಿಕಿತ್ಸೆಗಳಿಗೆ ಚಿಂತಿಸಪಡಬೇಕಾಗಿಲ್ಲದವರ ಜೀವನವನ್ನು ಇನ್ನಷ್ಟು ಅನುಕೂಲಕರವೂ ಮತ್ತು ಆರಾಮದಾಯಕವೂ ಮಾಡಬೇಕೆಂದೇ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿರುವುದನ್ನು ನಾವು ಕಾಣುತ್ತೇವೆ. ಬಡತನ ನಿವಾರಣೆಯ ಹೆಚ್ಚಿನ ಲಕ್ಷ್ಯ ಮನುಷ್ಯನ ಮೂಲಭೂತ ಬೇಡಿಕೆಗಳೇ ಇನ್ನೂ ನೀಗದೇ ಇರುವ ಸ್ಥಿತಿಯಲ್ಲಿ ಇತರೇ ಹೆಚ್ಚಿನ ಅನುಕೂಲಕ್ಕಾಗಿ ಈ ತಂತ್ರಜ್ಞಾನಗಳನ್ನು ಬಳಸುವುದನ್ನು ನಾವು ಕಾಣುತ್ತೇವೆ. +ಇದರರ್ಥ, ಬಡದೇಶಗಳ ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಏನೂ ಉಪಯೋಗವಿಲ್ಲ, ಅಥವಾ ಮಾರುಕಟ್ಟೆ ಆಧಾರಿತ ಮಾರ್ಗಗಳನ್ನು ಬಳಸುವುದರಿಂದ ಬಡತನದ ಮೇಲಿನ ದೊಡ್ಡ ಬೀಸಿನ ಆಕ್ರಮಾಣದಲ್ಲಿ ಅವುಗಳಿಗೆ ಯಾವ ಪಾತ್ರವೂ ಇಲ್ಲ, ಅಂತಲ್ಲ. ಜಗತ್ತಿನ ಅತ್ಯಂತ ಬಡದೇಶಗಳಲ್ಲಿ ಒಂದಾದ ಬಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕು ಸಾವಿರಾರು ಗ್ರಾಮಗಳಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸಲು “ಮೈಕ್ರೋ-ಕ್ರೆಡಿಟ್” (ಅಲ್ಪ-ಸಾಲ) ಎಂಬ ವಿಧಾನವನ್ನು ಬಳಸುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ, ಒಬ್ಬ ಉದ್ಯಮಿ ಸೆಲ್ಯುಲರ್ ಫೊನಿನ ಸೇವೆಯನ್ನು ಬ್ಯಾಂಕಿನ ಸಬ್ಸಿಡಿದಾರನೊಬ್ಬನಿಂದ ಖರೀದಿಸಿ “ಕರೆಗೊಂದು ದರ”ದಂತೆ ನಡೆಸುತ್ತಾನೆ. ಪರಿಣಾಮವಾಗಿ ಇಡೀ ಹಳ್ಳಿಯೊಂದು ದೂರವಾಣಿ ಜಾಲಕ್ಕೆ ಸೇರಿದಂತಾಗುತ್ತದೆ. ಈ ಸಣ್ಣ ಗಾತ್ರದ ಉದ್ಯಮಗಳು ಸಾಲ ಮರುಪಾವತಿಯ ದರ ಅಧಿಕವಾಗಿದ್ದಾಗಲೂ ಲಾಭಗಳಿಸುವಲ್ಲಿ ಸಫಲವಾಗಿವೆ. +ಈ ಕಾರ್ಯಕ್ರಮ ವ್ಯಾಪ್ತಿಯಲ್ಲಿ ಸಣ್ಣದಾದರೂ, “ಅಲ್ಪ-ಸಾಲ” ಪದ್ಧತಿ ಬಡದೇಶಗಳಲ್ಲಿ, ಕೆಲವೇ ನೂರು ಡಾಲರುಗಳ ಮಟ್ಟದಲ್ಲಿ ಪರಿಣಾಮಕಾರಿಯಾಗಬಲ್ಲದೆಂದು ಗ್ರಾಮೀಣ ಬ್ಯಾಂಕಿನ ಅನುಭವದಿಂದ ನಮಗೆ ತಿಳಿದುಬರುತ್ತದೆ. ಇಂಥ ಸೃಜನಶೀಲ ಬಗೆಗಳನ್ನು ಇನ್ನೂ ದೊಡ್ಡಗಾತ್ರದಲ್ಲಿ, ಹೊಸ ತಂತ್ರಜ್ಞಾನ ಮತ್ತು ಜಾಗತೀಕರಣದ ಸುತ್ತ ಹರಡಿರುವ ಠೊಳ್ಳುಗಳಲ್ಲಿ ಸಿಲುಕಿಕೊಳ್ಳದೇ ಬಳಸುವುದರಲ್ಲಿ ಹೊಸ ಸವಾಲುಗಳು ಅಡಗಿವೆ. +ಅಲ್ವಿನ್ ಟೋಫ್ಲರ್ ಎಂಬ ಭವಿಷ್ಯತ್ಕಾರ ಈ “ಮೈಕ್ರೊ ಕ್ರೆಡಿಟ್” (ಅಲ್ಪ ಸಾಲ)ದ ಯೋಜನೆಯನ್ನು “ಮೈಕ್ರೊ-ಟ್ರೇಡ್” (ಸಣ್ಣ-ಮಾರಾಟ)ದೊಡನೆ ಸಂಯೋಜಿಸುವಂತೆ ಕರೆ ನೀಡಿದ್ದಾನೆ. ಸಣ್ಣ ಹಳ್ಳಿಗಳಲ್ಲಿರುವ ಬಡಜನರು ಅಂತರ್ಜಾಲವನ್ನು, ಸಣ್ಣ ಪ್ರಮಾಣದಲ್ಲಿ ಕೃಷಿಪದಾರ್ಥಗಳು ಹಾಗೂ ಕರಕುಶಲ ವಸ್ತುಗಳಿಗಾಗಿ ಸಹಸ್ರಾರು ಮೈಲಿ ದೂರದಲ್ಲಿರುವ ಮಾರುಕಟ್ಟೆಗಳನ್ನು ಗುರುತಿಸಲು ಬಳಸುವ ಕನಸನ್ನು ಆತ ಕಾಣುತ್ತಾನೆ. +ನಿಸ್ಸಂಶಯವಾಗಿ, ಇಲ್ಲಿರುವ ಸಮಸ್ಯೆ ಏನೆಂದರೆ ಇಂಥದಕ್ಕೆ, ಜನ ದೂರದ ಸ್ಥಳಗಳಿಗೆ ಮಾರಾಟ ಮಾಡಲಾಗಲಿ, ಗ್ರಾಹಕರನ್ನು ಉತ್ತೇಜಿಸಲಾಗಲಿ, ಕಂಪ್ಯೂಟರಿನಲ್ಲಿ ಆಸ್ಥೆಯಿರುವ ಮಾತಿರಲಿ ಅಕ್ಷರ ಕಲಿತವರೂ ಆಗಿರುವುದಿಲ್ಲ. ಅಲ್ಲದೇ, ಅಂತರ್ಜಾಲದ ಮೂಲಕ ಮಾಹಿತಿಯನ್ನು ಕಳುಹಿಸುವುದು ಅನುಕೂಲಕರವಾಗಿದ್ದರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ವಸ್ತುಗಳನ್ನು ಎಲ್ಲೆಡೆಗೆ, ಅದೂ ಸಾಗಾಣಿಕೆಯ ವ್ಯವಸ್ಥೆಯ ಮೂಲಹಂದರವೂ ಇರದ ಸಣ್ಣ ಹಳ್ಳಿಯಿಂದ ಸಾಗಿಸುವುದು, ಕಠಿಣವೂ ಅದಕ್ಷವೂ ಆದ ಕ್ರಮವಾಗಿರುತ್ತದೆ. +ಮಾಜಿ ವ್ಯಾಪಾರಿ ಮತ್ತು ಇಂದು ಭಾರತದಲ್ಲಿ ಬಂಡವಾಳ ಹೂಡಿಕೆದಾರನೂ ಆಗಿರುವ ಗುರುಚರಣ್‌ದಾಸ್ ತನ್ನ ಇತ್ತೀಚಿನ “ಇಂಡಿಯಾ ಅನ್‌ಬೌಂಡ್” ಎಂಬ ಕೃತಿಯಲ್ಲಿ, ವಿಶ್ವ ಮಾರುಕಟ್ಟೆ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಜಾಗತಿಕ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಭಾರತದಂಥ ಅಭಿವೃದ್ಧಿ ಶೀಲ ದೇಶಗಳು ತಾವು ಯಾವುದರಲ್ಲಿ ಸಮರ್ಥರೋ ಅವನ್ನು ಮಾತ್ರ ಉತ್ಪಾದಿಸಿ, ಉಳಿದದ್ದನ್ನು ಆಯಾತಮಾಡಿಕೊಳ್ಳಬೇಕು ಎನ್ನುತ್ತಾನೆ. ಉದಾಹರಣೆಗಾಗಿ, ಸಣ್ಣ ತಂತ್ರಾಂಶವೊದು ದೊಡ್ಡ ಪ್ರಮಾಣದಲ್ಲಿ ಉಕ್ಕಿನಂಥ ಸಾಮಾನ್ಯ ವಸ್ತುವೊಂದನ್ನು ಖರೀದಿಸಬಲ್ಲದು ಎನ್ನುತ್ತಾನೆ. ಹಾಗಾದಲ್ಲಿ ಈಗಾಗಲೇ ಇತರ ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಈ ಮಾರಾಟ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದಂಥವರ ಪಾಡೇನು? ಜಾಗತಿಕ ವ್ಯಾಪಾರವೆಂಬುದು ಸ್ಥಳೀಯ, ವೈವಿಧ್ಯಮಯ ಮತ್ತು ಆರೋಗ್ಯಕರ ಅರ್ಥವ್ಯವಸ್ಥೆಗಳಿಗೆ ಪರ್ಯಾಯವಾಗಲಾರದು. +ಬಡವರು ವ್ಯಾಪಾರೀ ಅವಕಾಶಗಳೆ? +ಕೋಟ್ಯಾಂತರ ಜನರು ಇವರುಗಳು ತಯಾರಿಸಿದ ವಸ್ತುಗಳನ್ನು ಖರೀದಿಸಲಾರದೇ ಹೋಗುತ್ತಿರುವುದರಿಂದ ತಂತ್ರಜ್ಞಾನ ಸಂಸ್ಥೆಗಳಿಗೂ ಈ ಡಿಜಿಟಲ್ ಕಂದರವೆಂಬುದು ಒಂದು ದೊಡ್ಡ ಕಾಳಜಿಯೇ ಆಗಿದೆ. ಬಡತನವನ್ನು, ಬಗೆಹರಿಸಲೇಬೇಕಾದ ಗಂಭೀರ ಸಮಸ್ಯೆಯೆಂಬಂತೆ ಪರಿಗಣಿಸದೇ, ಕೈಗಾರಿಕೆಗಳು ಈ ಮಾರುಕಟ್ಟೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲಾರರು. ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕರೂ, ಅಧ್ಯಕ್ಷರೂ ಆಗಿರುವ ಬಿಲ್ ಗೇಟ್ಸ್‌ರವರು ಅಭಿವೃದ್ಧಿಶೀಲ ದೇಶಗಳಲ್ಲಿರುವ ಬಡಜನರು ಗಣನೀಯ ವ್ಯಾಪಾರೀ ಅವಕಾಶಗಳೇನೂ ಅಲ್ಲವೆಂದು ಸ್ಪಷ್ಟವಾಗಿ ಸಾರ್ವಜನಿಕವಾಗಿಯೇ ಹೇಳಿದ್ದಾರೆ. +ಹ್ಯುಲೆಟ್ ಪ್ಯಾಕರ್ಡ್ ಸಂಸ್ಥೆ ಮಾತ್ರ, ತಾನು “ಬೆಳೆಯುವ ಗತಿಯಲ್ಲೇ, ಇನ್ನೂ ಉತ್ತಮನೂ ಆಗಬಹುದು” ಎಂದುಕೊಳ್ಳುತ್ತಾ‌ಈ ವಿಷಯದಲ್ಲಿ ಹೆಚ್ಚು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇವರ, ಸಕಲರನ್ನೂ ವಿದ್ಯುನ್ಮಾನ ತಂತ್ರಜ್ಞಾನದಡಿಯಲ್ಲಿ ತರಲೆಂಬ ಮಹತ್ವಾಕಾಂಕ್ಷೆಯ ವರ್ಲ್ಡ್ ಇ-ಇನ್‌ಕ್ಲುಜನ್ ಎಂಬ ಕಾರ್ಯಕ್ರಮ, ಮನೆಯಿಂದಲೇ ದೂರದ ಕೆಲಸ ನಿರ್ವಹಿಸಲ್ಪಡಲು ಸಾಧ್ಯವಾಗಿಸುವ ಟೆಲಿಕಮ್ಯೂಟಿಂಗ್, ವಿ-ವಾಣಿಜ್ಯ ಮತ್ತಿತರ ಹಣಕಾಸಿಗೆ ಸಂಬಂಧಪಟ್ಟ ಸೇವೆ, ಇಂಥ ಕ್ಷೇತ್ರಗಳಲ್ಲಿ, ಸ್ಥಳೀಯ ಸಹವರ್ತಿಗಳೊಡನೆ ತಕ್ಕುದಾದ ತಂತ್ರಾಂಶಗಳ ಮೇಲೆ ಕೆಲಸ ಮಾಡುವ ಯೋಜನೆಯಾಗಿದೆ. ಈ ತಂತ್ರಾಶಗಳ ಆಯ್ಕೆಯಲ್ಲಿ ವಾಸ್ತವದ ಒತ್ತಡಗಳು ಯಾವ ರೀತಿಯ ಪ್ರಭಾವ ಬೀರಬಹುದೆಂಬುದು ಕಾದು ನೋಡಬೇಕಾದ ವಿಷಯವಾಗಿದೆ. ಅದರಲ್ಲೂ ಈ ಸಂಸ್ಥೆ ಹೆಚ್ಚು ಆಸ್ಥೆವಹಿಸಿರುವ, ಜಗತ್ತಿನ ಯಾವುದೇ ಮೂಲೆಯಲ್ಲೂ ಕುಳಿತು ಇನ್ನಾವುದೋ ಮೂಲೆಯಲ್ಲಿನ ಕೆಲಸ ಮಾಡಬಹುದಾದ ಅನುಕೂಲ ಕಲ್ಪಿಸುವ “ಇ-ಜಾಬ್ಸ್” ನಂತಹ ತಂತ್ರಾಂಶಗಳು ಹೆಚ್ಚಿನ ಶಿಕ್ಷಣ ಮತ್ತು ಕುಶಲತೆಯನ್ನು ಪಡೆದವರಿಗೆ ಮಾತ್ರ ಸಮರ್ಪಕವಾಗಿರುವಂತೆ ಕಾಣುತ್ತವೆ. +ತಂತ್ರಜ್ಞಾನ ನಿರ್ಮಿಸಿರುವ ಕಂದರ, ಈಗಾಗಲೇ ಮೂಲಭೂತ ಆವಶ್ಯಕತೆಗಳನ್ನು ಹೊಂದಿದ, ಆದರೆ ತಂತ್ರಜ್ಞಾನ ಕೈಗೆಟುಕದೇ ಹಿಂದುಳಿದವರ ಪಾಲಿಗೆ ಹೆಚ್ಚು ನಿಜವಾಗಿದೆ. ಈ ಕಂದರದ ನಿವಾರಣೆ, ಅಂಥ ವರ್ಗದ ಜನಸಮುದಾಯದಕ್ಕೆ ಒಂದು ದೊಡ್ಡ ವ್ಯತ್ಯಾಸವನ್ನೂ, ಟೆಕ್ನಾಲಜಿ ಕಂಪನಿಗಳಿಗೆ ಹೊಸ ಆದಾಯವನ್ನೂ ಉಂಟುಮಾಡಬಹುದು. +ಇನ್ನೊಂದೆಡೆ, ಸರಿಯಾದ ಪೌಷ್ಟಿಕ ಆಹಾರ, ಪ್ರಾಥಮಿಕ ಆರೋಗ್ಯ, ಮೂಲಭೂತ ಶಿಕ್ಷಣ, ಶುದ್ಧ ನೀರು, ಮತ್ತು ವಾಸಕ್ಕೆ ಶುಚಿಯಾದ ವಾತಾವರಣದ ಕೊರತೆಯಿರುವ ಲಕ್ಷಾಂತರ ಜನರ ಪಾಲಿಗೆ ಈ ಡಿಜಿಟಲ್ ಕಂದರವೆಂಬುದೊಂದು ಯಾವ ಅರ್ಥವೂ ಇಲ್ಲದ ಪದವಷ್ಟೆ. ಏಕಕಾಲದಲ್ಲಿ ಈ ಅವಶ್ಯಕತೆಗಳು ಪೂರ್ಣಗೊಳ್ಳದೆ, ಮಾಹಿತಿ ತಂತ್ರಜ್ಞಾನವನ್ನು ಕೊಡುವುದು ಉಪಯುಕ್ತವಾಗಲಾರದು. ಹಳ್ಳಿಯೊಂದರ ಪ್ರಾಥಮಿಕ ಶಾಲೆ, ಕಂಪ್ಯೂಟರಿನ ಸೌಲಭ್ಯ ಪಡೆದರೂ, ದಿನನಿತ್ಯದ ಬದುಕು ಬದುಕಲು ಸೆಣಸುತ್ತಿರುವ ತಂದೆತಾಯಿಗಳನ್ನು ಪಡೆದ, ಮೂಲ ವೈದ್ಯಕೀಯ ಚಿಕಿತ್ಸೆಯೂ ಸಿಗದ, ಪೌಷ್ಟಿಕತೆಯ ಕೊರತೆಯಿರುವ, ಮಗುವೊಂದು ಅದರಿಂದ ಏನನ್ನೂ ಪಡೆಯಲಾರದು. +ಇಂಥ ಆಳವಾಗಿರುವ ಮತ್ತು ತೀವ್ರವಾಗಿರುವ ಬಡತನದ ಸಮಸ್ಯೆಗೆ ಗಂಭೀರವಾದ ಪರಿಹಾರವೊಂದು ಡಿಜಿಟಲ್ ಕಂದರವೆಂಬುದರ ಆಚೆಗೆ, ಆಳಡಿಯಲ್ಲಿ ಅಡಗಿರುವ ಸಾಮಾಜಿಕ ಅಸಮಾನತೆಗಳಾನ್ನು ಎದುರಿಸುವಂತಹದ್ದಾಗಿರಬೇಕು. ಏನೇ ಆದರೂ ಸಮಸ್ಯೆಗೆ ತಕ್ಕಂತೆ ಸಮಾಧಾನವನ್ನು ಕಂಡುಕೊಳ್ಳಬೇಕು. ಬಡತನದಂತಹ ಕಾಲಾಂತರದ ಸಮಸ್ಯೆ, ಮನುಕುಲದ ಬೇಡಿಕೆ ಮತ್ತು ಆಶಯಗಳನ್ನು ತಲುಪುವ, ಸಮರ್ಪಕವಾದ ಮತ್ತು ಸ್ಥಿರವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಟ್ಟಿದ ಜನಕೇಂದ್ರಿತ ಬಗೆಯೊಂದನ್ನು ಬೇಡುತ್ತದೆ. ಸಮಾಜ, ಭೂರಹಿತ ಕಾರ್ಮಿಕರಿಗೆ, ಗ್ರಾಮೀಣ ವಿಭಾಗದ ಬಡ ರೈತರಿಗೆ, ಅಲ್ಪ-ಕೂಲಿ ಪಡೆವ ನಗರದ ಕೊಳೆಗೇರಿಯ ಕೆಲಸಗಾರರಿಗೆ, ಬದುಕಲು ತಕ್ಕುದಾದ ಆದಾಯವನ್ನು ಪಡೆಯಲು ಮತ್ತು ತಮ್ಮ ಬೇಡಿಕೆಗಳನ್ನು ಇನ್ನೂ ಹೆಚ್ಚಿನ ಆತ್ಮ ಗೌರವದಿಂದ ಪೋರೈಸಿಕೊಳ್ಳಲು ತಕ್ಕ ಮಾರ್ಗಗಳನ್ನು ಹುಡುಕಬೇಕು. +ಇಂದಿನ ಮಾಹಿತಿ ತಂತ್ರಜ್ಞಾನ ಹಾಗೂ ಜಾಗತೀಕರಣದ ಈ ಯುಗದಲ್ಲಿ ನಾವು ಬಡತನವನ್ನು ನೋಡುವ ಮತ್ತದನ್ನು ಪರಿಹರಿಸುವ ಬಗೆಯೊಂದು, ಸಂಪೂರ್ಣ ವಿಭಿನ್ನ ದೃಷ್ಟಿಮಟ್ಟವನ್ನೇ ಬೇಡುತ್ತಿದೆ, ಎಂಬುದರಲ್ಲಿ ಎರಡು ಮಾತಿಲ್ಲ. +ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೇ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲಿಗಳಿಂದ ದೊರೆಗಳು, ಸೇನಾನಿಗಳು ಬಂದು ಈಶನನ್ನು […] +ಕಡೆಗೂ ಸರ್ಕಾರ ಒಂದು ಕಡೆಗೆ ವಿರೋಧ ಪಕ್ಷಗಳ ಜೊತೆಗೆ, ಇನ್ನೊಂದು ಕಡೆಗೆ ಕನ್ನಡ ಸಾಹಿತಿಗಳು ಮತ್ತು ಅವರ ಹಿಂಬಾಲಕರ ಜೊತೆಗೂ ಅಂತಿಮ ರಾಜಿಯೊಂದನ್ನು ಮಾಡಿಕೊಂಡಿತು. ಈ ಚಳವಳಿ, ಅದರ ಒತ್ತಾಯಗಳು, ಹಿನ್ನೆಲೆಯ ಸಿದ್ಧಾಂತ-ಇವೆಲ್ಲ ಎಷ್ಟು […] +೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಬೀದರ. ೨೭ ಮತ್ತು ೨೮ ಜನವರಿ ೨೦೦೬ ನುಡಿ ನಮನ : ಪಾತಾಳದಿಂದತ್ತ ಮಾತ ಬಲ್ಲವರಿಲ್ಲ ಗಗನದಿಂದ ಮೇಲೆ ಅನುಭಾವ ತಾನಿಲ್ಲ ಒಳಗಣ ಜ್ಯೋತಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_752.txt b/Kannada Sahitya/article_752.txt new file mode 100644 index 0000000000000000000000000000000000000000..c6d1b8ebd8d53acca6c502af1198ffd5ff84db47 --- /dev/null +++ b/Kannada Sahitya/article_752.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ ತೇಲಿ ಬರುವ ಘಮಘನಿಸುವ ದುಂಡುಮಲ್ಲಿಗೆ ಕಂಪು. ಕಿಟಕಿಯ ಅಂಚಿನಿಂದ ಕಣ್ಣಂಚನ್ನು ಸೇರುವ ಗಗನದ ಅಪಾರ ಶುಭ್ರ ನೀಲಿ… ತುಂಬಿದ ಬದುಕು- ತುಳುಕುವ ಬೆಳಕು- ಘಮಿಸುವ ಕಂಪು-ಗರಿಯಾಡಿಸುವ ಕನಸು-ಗಗನದ ಅನಂತತೆ-ನಡುವೆ ಸಾವು. ಎಲ್ಲವುದರ ಅನಿತ್ಯತೆಯನ್ನೂ ಸಾರುವ ಸಾವು. ಆನಂದನ ಎದೆ ನೋವಿನಿಂದ ತಳಮಳಗೊಂಡಿತು. ಎಳೆಯ ಬಿಸಿಲಿನಲ್ಲಿ ಗುಯ್‌ಗುಡುವ ದುಂಬಿಯೊಂದು ಹಾಸಿಗೆಯ ಬಳಿ ಸುಳಿದು ಅವನನ್ನು ಸೌಂದರ್ಯದ ಸಂದೇಶದಿಂದ ಪೀಡಿಸಿತು.ಅನಂತತೆಯ ನಡುವೆ ಈ ಮರ್ತ್ಯತೆ…ಮಣ್ಣು! ಮಣ್ಣು! ಕೊನೆಗೆಲ್ಲವೂ ಹಿಡಿಮಣ್ಣು! ಕೆಮ್ಮು ಎದೆ ಸೀಳಿ ಬಂದಿತು. ಸಾವರಿಸಿಕೊಂಡು ಸುತ್ತಲೂ ಬೆದರಿದವನಂತೆ ನೋಡಿದ. ನಸುಬಿಸಿಲಿನ ಕಿರಣಗಳು ಅತ್ತಿಗೆಯ ಕಣ್ಣಂಚು, ಮೂಗುಬಟ್ಟುಗಳ ಮೇಲೆ ಮಿನುಗುತ್ತಿದ್ದವು. ಸುಖಸ್ವಪ್ನ ಅವಳ ಕಣ್ಣಿಂದ ಜಾರಿತು. ಕೈಯ ಕಸೂತಿ ಯಾಂತ್ರಿಕವಾಗಿ ನಿಂತಿತು. ಏನನ್ನೋ ಮರೆಯಲೆತ್ನಿಸುವಂತೆ ಅಣ್ಣ ಕೊಠಡಿ ಬಿಟ್ಟು ತೆರಳಿದ. ಅತ್ತಿಗೆಯ ಕಣ್ಣೋಟ ಕನಲುತ್ತಿತ್ತು: ಈ ಇಪ್ಪತ್ತೈದು ವರ್ಷದ ತುಂಬು ಜೀವವೂ ಸಾವಿಗೆ ತುತ್ತೆ? ಬದುಕಿನ ಪಿಂಡ ಗರ್ಭದಲ್ಲಿ- ಸಾವನ್ನು ಕುರಿತು ಅವಳ ಕಣ್ಣಲ್ಲಿ. ತನ್ನ ಪಾಡಿನಿಂದ ಈ ಪುಟ್ಟ ಸಂಸಾರವನ್ನು ಕವಿದಿದ್ದ ದುಃಖವನ್ನು ಮರೆಮಾಚಲೆತ್ನಿಸಿ ಆನಂದ ನಸುನಕ್ಕ. ಅವನ ಕಣ್ಣುಗಳಲ್ಲಿ ನಗೆ ಮಿಂಚಿದಾಗ ತುಟಿ ಬಿಗಿದು ಮುಸುಕಿದ್ದ ಸಾವೂ ಅಂಜಿತು- ಎಂತಹ ನಿಮಿಷವದು. “ಅತ್ತಿಗೆ ಮಗುವಿಗೇನು ಹೆಸರಿಡುತ್ತಿ?” ಕಂದನ ಮಾತು ಸುಳಿದೊಡನೆ ಅತ್ತಿಗೆಯ ಮೊಗ್ಗು ಮುಖ ಅರಳಿತು : “ನಿನ್ನ ಹೆಸರು: ಗಂಡಾದರೆ ಆನಂದ, ಹೆಣ್ಣಾದರೆ ಆನಂದಿ” ಆಡಿ ತುಂಟ ನಗೆ ನಕ್ಕಳು. ಆನಂದ ಕಣ್ಣುಮುಚ್ಚಿ ಕೆಟ್ಟ ಯೋಚನೆ ಮರೆಯಲೆತ್ನಿಸಿ ಎಂದ : “ಅವನು ತುಂಬಿ ಬಾಳಿ ಬದುಕಲಿ- ಈ ನನ್ನ ಹೆಸರೇಕೆ?” ಅತ್ತಿಗೆಗೆ ಕರುಳು ಕಿವುಚಿದಂತಾಯ್ತು. ಜೀವಪಿಂಡವನ್ನು ತನ್ನ ಗರ್ಭದಲ್ಲಿ ನೇಯುತ್ತಿದ್ದ ತಾಯಿಗೆ ಆನಂದನ ಸಾವು ಸನಿಯದಲ್ಲಿದೆ ಎಂದು ನೆನೆಯುವುದು ಅಸಾಧ್ಯವಾಗಿತ್ತು. ಸತ್ತವರು ಎಂದೆಂದಿಗೂ ಈ ಲೋಕದಿಂದ ಅಗಲುವರೆ? ಇಷ್ಟು ಪ್ರೀತಿ ಈ ಬದುಕನ್ನು ತಬ್ಬಿರುವಾಗ ಅದು ಹೇಗೆ ಸಾಧ್ಯ? ಏನು ಬೆಳಕು ತುಂಬಿದೆ ಈ ಲೋಕದಲ್ಲೀಗ. ಇಲ್ಲ- ಆನಂದ ಹೋಗಲಾರ- ಹೋದರೂ ಬರುವನು.ಬಂದೇ ಬರುವನು. ಆದರೆ ಯಾವ ರೂಪದಲ್ಲೋ? ಬಂದರೂ ಎಲ್ಲಿ ಹಿಂದಿನ ನೆನಪುಳಿದೀತು? ಇಲ್ಲಿಂದ ಅಗಲಿದವನು ಮುಗಿಲ ಸೇರಿ ನಕ್ಷತ್ರವಾಗಿ ಸ್ವರ್ಗ ಸುಖ ಅನುಭವಿಸುತ್ತಾನೆ…ಮುಗಿದ ಮೇಲೆ ನೆಲದ ಮೇಲಿನ ತನ್ನವರ ನೆನಪಾಗುತ್ತದೆ…ನೀಲಿಯಂಚಿನಿಂದ ಮತ್ತೆ ಪ್ರೀತಿಯ ಬಾಂಧವರ ಹೊಟ್ಟೆಯಲ್ಲಿ ಜನಿಸಲು ಪ್ರಯಾಣ ಬೆಳೆಸುತ್ತಾನೆ. ಆದರೆ ಹಿಂದಿನ ಜನ್ಮದ ಎಲ್ಲ ನೆನಪೂ ಆ ಬೆಳಕು ಕರಗಿದಂತೆಲ್ಲಾ ಮಾಯವಾಗುತ್ತದೆ… ಪುನರಪಿ ಜನನಂ- ಪುನರಪಿ ಮರಣಂ| ಪುನರಪಿ ಜನನೀ ಜಠರೇ ಶಯನಂ… ಎಂದೋ ಹೇಳಿದ ಕಥೆ. ಆದರೆ ನೆನಪು ಉಳಿಯದಿದ್ದರೆ ಬಂದರೇನು? ಬಾರದಿದ್ದರೇನು? ಎಲ್ಲ- ಎಲ್ಲ ಒಂದೇ. -ಅತ್ತಿಗೆ ಕಣ್ಣೀರೊರೆಸಿಕೊಂಡು ಕಿಟಿಕಿಯ ಕಡೆ ನೋಡಿದಳು… ಆನಂದ ಸಂತೈಕೆಯ ಧ್ವನಿಯಲ್ಲಿ ಅತ್ತಿಗೆಯಲ್ಲಿ ಗೆಲುವು ತುಂಬಲು ಹೇಳಿದ : “ಹಾಗೇ ಕರಿ ಅತ್ತಿಗೆ… ನಾನಾಗ ನಿನ್ನ ‘ಅಮ್ಮಾ’ ಎಂದು ಕರೆಯುತ್ತೇನೆ…ತುಂಟಾಟದಲ್ಲಿ ಎಲ್ಲವನ್ನು ಎಲ್ಲಿ ಮರೆತಿರುತ್ತೇನೊ? ಆಗ ನೀನು ಕೋಪಿಸಿಕೊಳ್ಳದೆ ಎಲ್ಲವನ್ನೂ ನೆನಪು ಮಾಡಿಕೊಡು- ಆಯಿತಾ?…” ಅತ್ತಿಗೆ ಮಾತ್ರ ಮುಗ್ಧಳಂತೆ ತಲೆಯಾಡಿಸಿ, ಆನಂದನಿಗೆ ಕುಡಿಯಲು ಏನಾದರೂ ಮಾಡಿ ತರೋಣವೆಂದು ಒಳಹೋದಳು… ಆನಂದ ಮತ್ತೆ ಹುಟ್ಟುತ್ತಾನೆ. ಈ ಸಂಸಾರದಲ್ಲಿಯೇ ಬೆಳೆಯುತ್ತಾನೆ. ಎಲ್ಲ ನಾಟಕವೂ ಮೊದಲಿನಿಂದ ಪ್ರಾರಂಭವಾಗುತ್ತದೆ… ತೊದಲ್ನುಡಿ… ಅಂಬೆಗಾಲು…ಪ್ರೇಮ…ಮಮತೆ… -ಸುಖಮಯವಾದ ಯೋಚನೆ ಸಾವಿನ ಸಾನಿಧ್ಯದಲ್ಲಿ +* +* +* +ಕನಸುಗಳ ನಡುವೆ ತೂರಿಬಂದು ಎದೆಯನ್ನು ಹಿಂಡುತ್ತವೆ ಆ ನೆನಪುಗಳು! ಕಾಹಿಲೆ ಉಲ್ಬಣವಾಗುವ ಚಿಹ್ನೆ ಕಂಡುಬಂದಾಗ ಆನಂದ ಸುಶೀಗೆ ತಿಳಿಸದಂತೆ ಹೊರಟು ಬಂದಿದ್ದಾನೆ… ಅವಳು ಎಲ್ಲವನ್ನೂ ಮರೆಯಬಲ್ಲಳೆ? ಆ ಬೆಳದಿಂಗಳ ರಾತ್ರಿ, ಮದವೇರಿದ ತೇನೆಯ ಆ ಕೂಗು! ಕೈಯಲ್ಲಿ ಕೈಯಿಟ್ಟು ತುಟಿಗೆ ತುಟಿಯಿಟ್ಟು ಕಳೆದ ಅಮೃತ ಘಳಿಗೆಗಳು! ಮರೆಯಬಲ್ಲಳೆ?… ತಾಯಿ ಹೆರಳು ಹಾಕುವಾಗ ತಾನಾಡಿದ ಸವಿಮಾತನ್ನು ನೆನೆದು ನಾಚಿ ನಗುತ್ತಿದ್ದುದು ತಾಯಿಗೆ ಅರ್ಥವಾಗದೆ ಮಗಳಿಗೆ ಹುಚ್ಚು ಹಿಡಿಯಿತೆಂದು ಗೊಣಗುಟ್ಟಿದುದನ್ನು ಮರೆಯಬಲ್ಲಳೆ? ಸುಶೀ ಮರೆಯಬಲ್ಲಳೆ?… ಹೊರಗೆಲ್ಲೋ ಓಲಗದ ಧ್ವನಿ. ಯಾರದೋ ಮದುವೆ. ಈ ದಿನದಲ್ಲಿ ತನ್ನದೂ ಆಗಬೇಕಿತ್ತು. ಹಾಗೆಯೇ ಸುಶೀ ಜೊತೆ ವಾಙ್ನಿಶ್ಚಯವೂ ಆಗಿತ್ತು. ಆದರೆ ಈಗ ಏನಾಗಿ ಹೋಯಿತು? ಪ್ರೇಮದ ಮೊದಲ ಹುಚ್ಚಿನಲ್ಲಿ ಕಿಟಿಕಿಯ ಕಂಡಿಗಳಲ್ಲಿ ಕದ್ದು ಆಡಿದ ಮಾತುಗಳು, ಆ ಕಣ್ಣೋಟಗಳು, ಆ ಪ್ರೇಮಪತ್ರಗಳು, ಅನಂತತೆಯನ್ನು ಸವಿದ ಆ ಘಳಿಗೆಗಳು…ಏನು ಏನು ನಡೆದು ಹೋಯಿತು? ಯಾವ ದೇವರ ಪ್ರೀತಿಗೆ ನಡೆಯಿತು? ? ಮತ್ತೆ ತನ್ನ ಮರ್ತ್ಯತೆಯ ನೆನಪು ಬಂದಾಗ ಎನಿಸಿದ ಆ ನೋವು- ತಾರೆಗಳಂತೆ ಎಂದೆಂದೂ ಬದುಕಬೇಕೆಂದು, ಅವಳ ಉಸಿರ ಛಂದಕ್ಕೆ ಹಿತವಾಗಿ ತೂಗಾಡುವ ಮೃದು ಎದೆಯ ಮೇಲೊರಗಿ ಆ ಜೊಂಪಿನ ನಡುವಿನ ಹಿತವಾದ ಎಚ್ಚರಗಳಲ್ಲಿ ಸುಖ ಸ್ವಪ್ನ ನೇಯಬೇಕೆಂದು ಆಸೆ ಕಟ್ಟಿದ ಆ ದಿನಗಳು… ಎಲ್ಲ ಎಲ್ಲ ಏನಾಗಿ ಹೋಯಿತು? ಸುಶೀ ಮರೆತಾಳೆ?… ಜೀವನದ ಕರೆ ಮರೆಸದೆ ಇದ್ದೀತೆ? ? ಮತ್ತೆ ನೆನಪುಗಳು- ಆ ಹಿರಿಯ ಹಂಬಲದ ನೆಮಪುಗಳು. ಜನತೆಯ ವಾಣಿಯಾಗಬೇಕೆಂದು, ನಾಡಿನ ಕವಿಯಾಗಬೇಕೆಂದು ನಾನು ಪಟ್ಟ ಆಸೆ… ಆ ಬರೆಯುವ ಹುಚ್ಚು… ಬರೆದುದನ್ನು ಗೆಳೆಯರ ನಡುವೆ ಓದುತ್ತಿದ್ದಾಗ ಕಳೆದ ರಸನಿಮಿಷಗಳು…ತನಗೆ ಪ್ರಿಯರಾದವರು ತನ್ನಲ್ಲಿ ಒಬ್ಬ ಮಹಾಕವಿಯ ಶಕ್ತಿ ಕಂಡುದು. ಆ ಹಿರಿಯ ಕಲೆಗಾಗಿಯೇ ಇಷ್ಟು ದಿನ ಬದುಕಿದುದು… ಎಲ್ಲ ಎಲ್ಲ ಯಾರ ಲಾಲಿಗೆ?- ಮಣ್ಣು! ಮಣ್ಣು! ಹಿಡಿ ಮಣ್ಣೂ ಈ ಬದುಕು!! ಗಗನದ ನೀಲಿಯಲ್ಲಿ ಮುಗಿಲ ಸಂಕೇತಗಳಲ್ಲಿ ದೇವರು ಬರೆದ ಪ್ರಕೃತಿಯ ಅಮರ ಕಾವ್ಯವನ್ನು ಗುರುತಿಸುವ ತನಕವೂ ಬದುಕು ಉಳಿಯಲಿಲ್ಲ… ಈಗ ಉಳಿದಿರುವುದೊಂದೇ. ಗಗನದಂಚನ್ನು ನಿಟ್ಟಿಸಿ ನೋಡುತ್ತ,ದೃಷ್ಟಿ ಸೂನ್ಯವಾಗುವವರೆಗೂ ನೋಡುತ್ತ,,,ಗೌರವ ಪ್ರೇಮ ಹಿರಿಯ ಹಂಬಲ‌ಎಲ್ಲವೂ ಶೂನ್ಯತಮದಲ್ಲಿ ಕರಗುವವರೆಗೂ ನೋಡುತ್ತ…ಹಾಗೆಯೇ… ವಿಶ್ವನಾಥ ಆನಂದನ ಮಗ್ಗುಲಲ್ಲಿ ಬಂದು ಕೂತ. ಗೆಳೆಯನ ಬೇಸರವನ್ನು ದೂರ ಮಾಡಲು ಏನಾದರೂ ಓದಿ ಹೇಳುವುದು ಅವನ ಪದ್ಧತಿ… “ಏನಾದರೂ ಓದಲೇ?” ಆನಂದ ಬೇಡವೆಂದು ತಲೆಯಾಡಿಸಿದ. ಹಾಸಿಗೆಯ ದಿಂಬಿನಡಿ ಇದ್ದ ಚಿಕ್ಕ ಸೀಸೆಯೊಂದನ್ನು ಕೈಗೆ ತೆಗೆದುಕೊಂಡ. ಎದೆಯಲ್ಲಿನ ಅಸಾಧ್ಯ ನೋವನ್ನು ಪರಿಹರಿಸಲು ಯಾರಿಗೂ ತಿಳಿಯದಂತೆ ಅದರಲ್ಲಿನ ಮಾತ್ರೆಗಳನ್ನು ನುಂಗಿ ನಿದ್ದೆ ಹೋಗುವುದು ಆನಂದನ ಈಚಿನ ಅಭ್ಯಾಸವಾಗಿತ್ತು. ವಿಶ್ವನಾಥ ಗೆಳೆಯನ ಕೈಯಲ್ಲಿನ ಸೀಸೆಯನ್ನು ಕಿತ್ತುಕೊಳ್ಳಲು ಕೈಯೊಡ್ಡಿದ. ಆದರೆ ಆನಂದನು ಆಡಿದ ಮಾತಿನಿಂದ ಅವನಿಗೆ ತುಂಬಾ ಆಶ್ಚರ್ಯವಾಯಿತು. “ಎದೆಯಲ್ಲಿ ಎಷ್ಟು ನೋವಾದರೂ ಇನ್ನು ಇದನ್ನು ತಿನ್ನುವುದಿಲ್ಲ- ವಿಶ್ವ” ವಿಶ್ವನಾಥ ಏನೋ ಭಾರ ಕಳೆದಂತೆ ನಿಟ್ಟುಸಿರುಬಿಟ್ಟ. ಆನಂದ ಸ್ವಲ್ಪ ಗುಣಮುಖನಾಗಿರಬಹುದೆ? “ನೋವನ್ನು ಮರೆಯಲೆತ್ನಿಸುವ ಅವಶ್ಯಕತೆ ಇನ್ನಿಲ್ಲ. ಎಲ್ಲಿಯಾದರೂ ಅದನ್ನು ಹುಗಿದು ಬಾ” -ವಿಶ್ವನಿಗೆ ಅರ್ಥವಾಗಲಿಲ್ಲ. “ಸಾವು ಬರಲಿ, ಸಂತೋಷ. ನಿರ್ಲಿಪ್ತನಾಗಿ ಕೊನೆಯನ್ನು ಎದುರಿಸುತ್ತೇನೆ.” ಏನನೋ ಹೇಳಲು ಬಾಯ್ದೆರೆದ ವಿಶ್ವ. ಆನಂದನ ಗಂಭೀರ ಮುಖ ಮುದ್ರೆಯನ್ನು ನೋಡಿ ಸುಮ್ಮನಾದ. ನಿಮಿಷಗಳು ನಿಧಾನವಾಗಿ ಸರಿಯುತ್ತಿದ್ದವು. ಯಾವ ಭಾವಾತಿರೇಕಕ್ಕೂ ಎಡೆಗೊಡದೆ ನಿರ್ಧರ, ಕ್ಷೀಣ ಸ್ವರದಲ್ಲಿ ಆನಂದನೆಂದ: ಸುಶೀ ನನ್ನ ಸಾವನ್ನು ಕೇಳಿ ದುಃಖಿಸುವುದು ಬೇಡ. ಎಲ್ಲವನ್ನೂ ಮರೆಯಲಿ ನಾನು ಬರೆದ ಕಾಗದಗಳನ್ನೆಲ್ಲಾ ಸುಟ್ಟು ಬೂದಿ ಮಾಡಲಿ. ಅವಳಿಗೆ ತಕ್ಕವನನ್ನು ನೋಡಿ ಮದುವೆಯಾಗಲಿ, ಇದೇ ನನ್ನ ಕೊನೆಯ ಆಸೆ. ಖಂಡಿತಾ ತಿಳಿಸುವುದು ನಿನ್ನ ಕರ್ತವ್ಯ…ನೆರವೇರಿಸು…” ಉದ್ವೇಗದಿಂದ ವಿಶ್ವ ಉಸಿರಾಡುತ್ತಿದ್ದ. ಆದರೆ ಆನಂದ ಮಾವಿನ ಮರದ ಚಿಗುರೆಲೆಗಳ ಶ್ರೀಮಂತ ಸೌಂದರ್ಯವನ್ನು ದಿಟ್ಟಿಸಿ ನೋಡುತ್ತ ನಿಶ್ಚಲನಾಗಿ ಮುಂದುವರಿದ: “ದುಃಖಿಸುವ ಕಾರಣವಿಲ್ಲ- ಈ ಮರಣದಿಂದ ಬಹುಶಃ ನನ್ನ ಕೊನೆಯಾಗಲಾರದು. ಹುಟ್ಟಿದವರಿಗೆಲ್ಲಾ ಸಾವು ಖಂಡಿತ. ಆದರೆ ಆನಂದ ಬದುಕುತ್ತಾನೆ. ನಡಿನ ಕವಿಗಳ ನಡುವೆ ಬರುವ ಕಾಲಕ್ಕೆ ನನ್ನ ಹೆಸರೂ ಸೇರೀತು. ಆದರೆ ವಿಧಿ ಮಾತ್ರ ನನ್ನ ಹೆಸರನ್ನು ನೀರಿನ ಮೇಲೆ ಬರೆಯಿತು. ಸಣ್ಣ ಗಾಳಿ ಬೀಸುತ್ತಿತ್ತು. ಒಣಗಿದೆಲೆ ಉದುರುತ್ತಿತ್ತು. ಚಿಗುರೆಲೆ ಕುಣಿಯುತ್ತಿತ್ತು. ಇಬ್ಬರೂ ಬಹಳ ಹೊತ್ತು ಮೌನವಾಗಿದ್ದರು. ಒಳಗೆ ಅತ್ತಿಗೆ ಹಗಲುಗನಸು ಕಾಣುತ್ತ ಮನಸ್ಸಿನಲ್ಲಿಯೇ ಜೋಗುಳ ಹಾಡುತ್ತಿದ್ದಳು. ಇನ್ನುಳಿದ ಘಳಿಗೆಗಳನ್ನು ಎಣಿಸುತ್ತಿದ್ದ ಆನಂದ ಕ್ಷೀಣ ಸ್ವರದಲ್ಲಿ ಹೇಳಿದ. “ವಿಶ್ವ- ಎಲ್ಲಿ ಆ ಗೀತೆಯ ಶ್ಲೋಕವನ್ನು ಮತ್ತೊಮ್ಮೆ ಓದು” ವಿಶ್ವನಾಥ ಸುಶ್ರಾವ್ಯ ಗಂಭೀರ ಧ್ವನಿಯಲ್ಲಿ ಓದತೊಡಗಿದ: “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ “ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ” -ಕನಸು ನೇಯುತ್ತಿದ್ದ ಅತ್ತಿಗೆ ಶ್ಲೋಕದ ಗಂಭೀರ ಧ್ವನಿಯನ್ನು ಕೇಳಿ ಬಾಗಿಲಲ್ಲಿ ಬಂದು ನಿಂತಳು. +* +* +* +ಆ ದಿನ ಕಳೆಯಿತು. ಮಾರನೆಯ ಬೆಳಗಾಯಿತು. ಇದೇ ತನ್ನ ಪಾಲಿಗುಳಿದ ಕೊನೆಯ ಇನವೆಂದು ಆನಂದ ನಿಶ್ಚಯಗೊಂಡ. ವಿಶ್ವನಾಥನನ್ನು ಗುಟ್ಟಾಗಿ ಕರೆದು ಹೇಳಿದ: “ನನ್ನ ಪರಿಸ್ಥಿತಿ ತೀರಾ ಉಲ್ಬಣಗೊಂಡಿದೆ. ಎಲ್ಲೂ ಹೋಗಬೇಡ…” ಬೆಳಗಿನಿಂದ ಅತ್ತಿಗೆ ಈ ಕಡೆ ಸುಳಿದಿಲ್ಲ. ಪ್ರಸವ ವೇದನೆ ಶುರುವಾಗಿರಬೇಕು. ಈ ಹೊತ್ತಿನಲ್ಲಿ ಮನೆಯವರಿಗೆ ತನ್ನಿಂದ ಏನೂ ತೊಂದರೆಯಾಗಬಾರದೆಂದು ಆನಂದನ ಆಸೆ. ವಿಶ್ವನಿಗೆ ಎಚ್ಚರಿಕೆಯ ಮಾತು ಕೊಟ್ಟ: “ಅಣ್ಣ ಅತ್ತಿಗೆಗೆ ನನ್ನ ವಿಷಯ ಏನೂ ಗೊತ್ತಾಗದಂತೆ ನೋಡಿಕೊ. ನಾನೆಂದೂ ತೀರಿಸಲಾರದ ಮಹದುಪಕಾರ ಮಾಡಿದಂತಾಗುತ್ತೆ. ನನ್ನಿಂದ ಈ ಹೊತ್ತಿಗೆ ನೋವು ತಟ್ಟಬಾರದು. ಈ ಮನೆಗೆ ಇದು ಶುಭ ಮಹೂರ್ತ. ನಮ್ಮ ಕುಲ ವರ್ಧಿಸುವ ದಿನ.” ಪರೀಕ್ಷೆ ಮಾಡಿ ಹೋಗಲು ದಿನದಂತೆ ಡಾಕ್ಟರರು ಬಂದರು. ಆನಂದನ ಮುಖದಲ್ಲಿ ಏನೋ ಗೆಲುವು. ಕಣ್ಣಿನಲ್ಲಿ ಏನೋ ತೀಕ್ಷ್ಣತೆ. ಮಾತಿನಲ್ಲಿ ತುಂಬಿ ತುಳುಕುವ ಆತ್ಮೀಯತೆ. ಡಾಕ್ಟರರೂ ಮೋಸ ಹೋದರು. ನೊಂದುವ ದೀಪಕ್ಕೆ ಹೆಚ್ಚು ಪ್ರಕಾಶವೆಂದು ಯಾರಿಗೆ ತಾನೇ ತಿಳಿದೀತು? ಅತ್ತಿಗೆಯ ಪರೀಕ್ಷೆಯೂ ನಡೆಯಿತು. ಹೆರಿಗೆಯಾಗುವುದು ನಡುರಾತ್ರೆಯಾಗಬಹುದೆಂದು ಎಲ್ಲರ ನಿರೀಕ್ಷೆ. ಚೊಚ್ಚಲ ಬಸುರು. ವೇದನೆ ಸ್ವಲ್ಪ ಹೆಚ್ಚಾಗಬಹುದು. ಆದರೆ ಏನೂ ಭಯವಿಲ್ಲ ಎಂದು ಡಾಕ್ಟರರು ಹೇಳಿದರು. ಆನಂದನಿಗೆ ಏನೇನೋ ಯೋಚನೆಗಳು: ಕೊನೆಯ ದಿನಗಳನ್ನು ಹೇಗೆ ಕಳೆಯುವುದೆಂಬುದು ಅರ್ಥವಾಗಲೊಲ್ಲದು. ಮಗ್ಗುಲಿನ ಕೋಣೆಯಿಂದ ಅತ್ತಿಗೆಯ ನರಳುವಿಕೆಯ ಕ್ಷೀಣಸ್ವರ. ತಾಯಿಗೆ ಅದು ಸುಮಧುರಯಾತನೆ. ಕುಲವರ್ಧಕ ಇಂದು ಈ ಮನೆಗೆ ಬರುತ್ತಾನೆ. ಅಣ್ಣ ಎಲ್ಲಿಲ್ಲದ ಗಡಿಬಿಡಿಯಿಂದ ಅತ್ತಿಂದಿತ್ತ ತಿರುಗುತ್ತಿದ್ದಾನೆ. ಹೊಸ ಬದುಕಿನ ಸ್ವಾಗತಕ್ಕೆ ಏನೇನೋ ಸನ್ನಾಹಗಳು ನಡೆಯಬೇಕು. ಇದರ ಜೊತೆ ಆನಂದ ಬರಲಿರುವ ಸಾವಿಗೂ ಸನಾಹ ಮಾಡಿಕೊಳ್ಳಬೇಕು. ಹೀಗೆ ಘಳಿಗೆಗಳು ಸಾವು ಜೀವಗಳ ನಡುವೆ ಜೋಕಾಲಿಯಾಡುತ್ತ ಕಳೆಯುತ್ತಿದ್ದವು-ನಿಧಾನವಾಗಿ. ವಿಪರೀತವಾದ ನೋವು ಮಿಂಚು ಹೊಯ್ದಂತೆ ನರನರಗಳನ್ನೂ ಹಿಂಡುತ್ತಿತ್ತು. ಆನಂದ ತುಟಿಪಿಟಕ್ಕೆನ್ನದೆ ಸಹಿಸುತ್ತಿದ್ದ. ಅತ್ತಿಗೆಯ ವೇದನೆಯಂತೆ ಇದೂ ವೆದನೆಯೆ. ಆದರೆ ತಾಯಿಯದು ಸುಮಧುರಯಾತನೆ. ಹೊಸಹುಟ್ಟಿಗಾಗಿ ಆ ನೋವು . ಆದರೆ ಇದು?… ಎಂದಿನಂತೆಯೇ ಈ ದಿನವೂ ಕೋಣೆಯ ತುಂಬ ಬೆಳಕು ತುಂಬಿದೆ. ಮಾವಿನ ಮರದ ರೆಂಬೆಗಳು ಜೋಕಾಲಿಯಾಡುತ್ತಿವೆ. ಆನಂದನಿಗೆ ಒಂದೇ ಯೋಚನೆ: ದೇವರ ದಯೆಯಿಂದ ತಾನು ಮಗುವುನ ಜನನವಾಗುವವರೆಗಾದರೂ ಬದುಕಿದರೆ ಲೇಸು. ಅಲ್ಲದೆ ಕೊನೆಯದಾಗಿ ಒಂದು ಆಸೆ ಉಳಿದಿದೆ. ಈ ರಾತ್ರಿ ಬೆಲದಿಂಗಳಿರುತ್ತದೆ. ಅದನ್ನು ನೋಡಿ ಸಾಯಬೇಕು. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಬೆಳದಿಂಗಳ ರಾತ್ರಿಯೇ ಹುಟ್ಟಿದ್ದ. ಅದೇ ಹೊತ್ತಿಗೆ ಕೊನೆ ಸಮೀಪಿಸಿದರೆ ಎಂತಹ ಅದೃಷ್ಟ! ಕವಿ ಜೀವಕ್ಕೆ ಅದಕ್ಕಿಂತ ಹೆಚ್ಚಿನ ಸುಖ ಸಿಕ್ಕೀತೆ? ಒಂದು ದಿನದ ಸೌಂದರ್ಯವನ್ನೆಲ್ಲಾ ಆರಾಧಿಸಿ ಸಾಯುವುದಕ್ಕಿಂತ ಹೆಚ್ಚಿನ ಪುಣ್ಯ ಮರ್ತ್ಯರೆಲ್ಲಿಗೆ ದೊರೆತೀತು? ಇನ್ನು ಆನಂದನ ಪಾಲಿಗೆ ಕಳೆದ ದಿನಗಳನ್ನು ನೆನೆಯುವುದೊಂದೇ ಉಳಿದಿದೆ. ನೋಟ ಹರಿಸಿದಾಗ ಗೋಚರಿಸುವ ಮೂಲೆ ಮೂಲೆಯೂ ನೂರು ನೆನಪಿನ ಆಗರಗಳು. ಈಗವನು ಮಲಗಿದೆಡೆಯಲ್ಲೇ ಅವನಿಗೆ ತಾಯಿ ಜನ್ಮವಿತ್ತದು. ಆ ಮಾವಿನ ಮರದ ಅಡಿಯಲ್ಲಿಯೇ ಕೂತು ನೂರಾರು ಕನಸುಗಳನ್ನು ಹೆಣೆದುದು. ಅಲ್ಲಿಯೇ ಸುತ್ತಾಡುತ್ತಾ ಕುಮಾರವ್ಯಾಸನ ಕಾವ್ಯವನ್ನು ಸವಿದುದು. ಆ ಹೊಸ್ತಿಲನ್ನು ಬಾಲನಾಗಿದ್ದಾಗ ದಾಟಿದಾಗ ಬಲು ದೊಡ್ಡ ಹಬ್ಬ ನಡೆಯಿತಂತೆ… ಈ ನೆಲದ ಮೇಲೆಲಾ ಎಷ್ಟು ದಿನ ಅಂಬೆಗಾಲಿಕ್ಕಿ ಆಡಿದ್ದನೋ… ದೂರದಿಂದ ಕೇಳಿಬರುವ ತುಂಗೆಯ ಜೋಗುಳಕ್ಕೆ ಕಿವಿಗೊಟ್ಟು ಮಲಗಿ ಎಷ್ಟು ದಿನ ಮಲಗಿ ನಿದ್ದೆ ಮಾಡಿದ್ದನೊ. ಈ ಎಲ್ಲ ನೆನಪುಗಳ ಆಗರವಾದ ಜೀವ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲಿ ಹೋಗಿಬಿಡುವುದೋ! ಬದುಕೆಲ್ಲ ಒಂದು ಹೋರಾಟ. ಸಾವಿನ ಕರಿಯ ಛಾಯೆಯನ್ನು ಸುಶೀ ಜೊತೆ ಆನಂದಮಯನಾಗಿದ್ದಾಗ ಕಂಡ ಮೊದಲಿನಿಂದ ಒಂದೇ ಸಮನೆ ಹೃದಯದಲ್ಲಿ ಏನೋ ಕಳಕಳಿ… ಈ ಆಸೆಗಳಿಗೆ. ಈ ಪ್ರೇಮಕ್ಕೆ, ಈ ಜೀವಕ್ಕೆ ಇದೇ ಕೊನೆಯೆ? ಉಳಿಯುವುವೆ? ನೆನಪೂ ಉಳಿಯುವುವೆ? ಒಮ್ಮೆ ತೆರಳಿದ ಮೇಲೆ ಮತ್ತೆಲ್ಲಿ ಮರಳುತ್ತೇವೆ? ಎಷ್ಟು ಅಲ್ಪವಾದ ಮರ್ತ್ಯವಾದ ಸುಖ!… ಆನಂದ ಫಕ್ಕನೆ ಎಚ್ಚೆತ್ತ, ವಿಶ್ವ ಮೆಲುದನಿಯಲ್ಲಿ ಗೆಳೆಯನ ನೋವು ಹಗುರವಾಗಲಿ ಎಂದು ಅನ್ನುತ್ತಿದ್ದ- “ನೈನಂ ಛಿಂದಂತಿ ಶಸ್ತ್ರಾಣಿ- ನೈನಂ ದಹತಿ ಪಾವಕಃ’ +’ +* +* +ದಿನ ಮೆಲ್ಲಮೆಲ್ಲನೆ ಸರಿದು ಸಂಜೆಯಾಯಿತು. ಆನಂದ ಸ್ವಲ್ಪ ಹೊತ್ತಿನ ಬದುಕಿಗಾಗಿ ಸವನ್ನು ಬಹುಕಷ್ಟದಿಂದ ದೂರ ತಳ್ಳುತ್ತ ಮಲಗಿದ್ದ. ವಿಶ್ವ ಮಂಕು ಕವಿದವನಂತೆ ಕೂತಿದ್ದ. ಚಳಿ ಹೆಚ್ಚಾಗುತ್ತಿದೆಯೆಂದು ಕಿಟಿಕಿಯ ಬಾಗಿಲನ್ನು ಮುಚ್ಚಿ ಬಂದ. ಆನಂದ ತನ್ನ ಪಾಲಿನ ಕೊನೆಯ ಸಂಜೆಯ ಶಾಂತಿಯನ್ನು ಉಣ್ಣುತ್ತ ಏನೋ ಧ್ಯಾನಿಸಿದ. ಅಣ್ಣನ ತಿರುಗಾಟ ಈಗ ಹೆಚ್ಚಾಗಿದೆ. ಅತ್ತಿಗೆಯ ವೇದನೆಯೂ ಹೆಚ್ಚಾಗಿ ಇರಬೇಕು. ಇನ್ನೂ ನಾಲ್ಕೈದು ಘಂಟೆಗಳೂ ಬೇಕಾಗಬಹುದೋ ಏನೋ! ಆಮೇಲೆ ಆನಂದ ಹುಟ್ಟುತ್ತಾನೆ. ಇಲ್ಲೆಲ್ಲಾ ಅಂಬೆಗಾಲಿಟ್ಟು ಆಡುತ್ತಾನೆ. ಹೊಸಲು ದಾಟುತ್ತಾನೆ., ಮತ್ತೆ ದೊಡ್ಡ ಹಬ್ಬ ನಡೆಯುತ್ತದೆ…. ಎಲ್ಲ ನಾಟಕವೂ ಮತ್ತೆ ಪ್ರಾರಂಭ… ಅನಂತವಾದ ಜೀವನ ನಾಟಕ… ಹೋದ ವರ್ಷ ಇದೇ ದಿನ… ಚೈತ್ರಮಾಸದ ಒಂದು ಬೆಳದಿಂಗಳ ರಾತ್ರಿ… ದೇಹದಲ್ಲಿ ಇನ್ನೂ ಸ್ವಲ್ಪ ಹೆಚ್ಚು ಶಕ್ತಿ ಇತ್ತು. ಆದರೆ ಮನಸ್ಸಿನಲ್ಲಿ ಮಾತ್ರ ನಿರಂತರ ಹೋರಾಟ. ಸೌಂದರ್ಯ ಪ್ರೇಮಗಳ ಆರಾಧನೆಯಲ್ಲಿ ತೊಡಗಿದ್ದ ಜೀವನವನ್ನು ಕ್ಷಯ ಇಣುಕಿ ನೋಡಿತ್ತು. ಅದು ಸುಂದರವಾದ ರಾತ್ರೆ… ಶ್ರೀ ವಿಷ್ಣು ಜಗನ್ಮೋಹಕ ರೂಪತಾಳಿ ಮರ್ತ್ಯರಿಗೆ ಅಮೃತವನ್ನು ಬಡಿಸುತ್ತಿದ್ದಾನೆಯೋ ಎನ್ನಿಸುವಂತೆ ನಿರ್ಮಲವಾದ ಬೆಳದಿಂಗಳು; ನೀಲಿಯನ್ನೇರಿದ ದುಂಡು ಚಂದ್ರ… ಆದರೆ ಮನಸ್ಸು ಮಾತ್ರ ಬದುಕಿನ ಮರ್ತ್ಯತೆಯನ್ನು ಕುರಿತು ಚಿಂತಿಸುತ್ತಿತ್ತು-ನಡುವೆ ಪಕ್ಕನೆ ಕೋಗಿಲೆಯೊಂದು ಹಾಡಿತು- ತಾನು ಕುಳಿತಿದ್ದ ಬಳಿಯ ಮಾವಿನ ಮರದ ನೆತ್ತಿಯಿಂದ… ಮೈನಿಮಿರ್ನಿಂತಿತು. ಅಮರತ್ವದ ಸಂದೇಶ ನಾದಮಯವಾಗಿ ಬೆಳದಿಂಗಳಿನಲ್ಲಿ ತೇಲಿ ಬಂದು ತನ್ನನ್ನು ಕರುಣಿಸಿತ್ತು… ‘ಕುಹೂ… ಕುಹೂ…’ ಮತ್ತೆ ಈ ಸಂಜೆ ಕೋಗಿಲೆ ಹಾಡುತ್ತಿದೆ. ರೋಮಾಂಚಕಾರೀ ಅನುಭವ!… ಸಾವು ತನ್ನ ಕೊನೆಯ ತುತ್ತಿಗಾಗಿ ಎದೆಯಲ್ಲಿ ಕೈಹಾಕಿದಾಗಲೂ ಅಮರತೆಯ ಸಂದೇಶ ಕಿಟಿಕಿಯಿಂದ ತೂರಿಬರುತ್ತಿದೆ. “ಕುಹೂ…… ಕುಹೂ… ಕ್ಯುಹೂ’ ಅಮೃತ ಸಂದೇಶ ಅಲೆ‌ಅಲೆದು ದೂರದಲೆಲ್ಲೋ ಮಾಯವಾಯಿತು… ಅಂಗಾಂಗಗಳೆಲ್ಲವೂ ಬೆವತು ಬಿಟ್ಟವು. ಈಷ್ಟು ಅಸಾಧ್ಯವಾದ ನೋವು ಎದೆಯಲ್ಲಿ… ಮತ್ತೆ ಮತ್ತೆ ಬಂದು ನೋದುತ್ತಿದ್ದ ಅಣ್ಣನಿಗೆ ಅರ್ಥವೇ ಆಗಲಿಲ್ಲ. ಆನಂದ ತುಂಬ ಶ್ರಮವಹಿಸಿ ಬಚ್ಚಿಟ್ಟ. ವಿಶ್ವ ಸಂಜೆ ಇಳಿಮುಖವಾಗುತ್ತಿದ್ದಂತೆ ಆನಂದನ ಇಚ್ಛೆಯ ಮೇರೆಗೆ ಸಾಕ್ರಟೀಸನ ಮರಣ ವೃತ್ತಾಂತವನ್ನು ನಿಧಾನವಾಗಿ ಓದಿ ಹೇಳಿದ. ಹೆಮ್ಲಾಕನ್ನು ನಿರ್ವಿಕಾರನಾಗಿ ಕುಡಿದ ಸಾಕ್ರಟೀಸನ ಭವ್ಯ ಚಿತ್ರ ಆನಂದನ ಸುತ್ತ ಸುಳಿದು ಅವನನ್ನು ಸಂತೈಸಿತು. ಸಾಕ್ರಟೀಸ್… ಎಂತಹ ಅಚಲ ನಂಬಿಕೆ!… ಸಾವನ್ನೂ ಸ್ವಾಗತಿಸುವಾಗ. “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ” +* +* +* +ಸಂಜೆ ಕಳೆಯಿತು. ಹಕ್ಕಿಗಳೆಲ್ಲವೂ ಗೂಡು ಸೇರಿದವು. ಪೂರ್ಣ ಚಂದ್ರನ ರಾಜ್ಯ ಇನ್ನು ಪ್ರಾರಂಭ… ಅತ್ತಿಗೆಯ ಬೇನೆ ಹೆಚ್ಹ್ಚುತ್ತಿರಬೇಕು. ತುಂಬಾ ನರಳುವಿಕೆ ಕೇಳಿಬರುತ್ತಿದೆ. ಇನ್ನು ಸ್ವಲ್ಪ ಹೊತ್ತಿನಲ್ಲೆ ಜನನವಾಗಬಹುದು. ಸುಮಧುರಯಾತನೆ ಮುಗಿಯಬಹುದು. ತನ್ನ ಮಧುರಯಾತನೆಯೂ ಕೊನೆಯಾಗಬಹುದು. ಯಾವ ಹೊಸ ಹುಟ್ಟಿಗಾಗಿಯೊ! ಘಳಿಗೆಗಳು ನಿಧಾನವಾಗಿ ಜಾರುತ್ತಿವೆ…… ಹೊರಗೆಲ್ಲ ಸರಸರನೆ ತಿರುಗಾಡುತ್ತಿದ್ದಾರೆ… ಆನಂದ ಧ್ಯಾನಮಗ್ನನಾಗಿ ಕಣ್ಣುಮುಚ್ಚುತ್ತಾನೆ…ಬದುಕಿನಲ್ಲಿ ಎಷ್ಟೋ ರೀತಿಯಿಂದ ತನಗಾದವರನ್ನು ಇನ್ನು ನೆನೆಯಬೇಕು. ಅವರಿಗೆಲ್ಲ ಕೊನೆಯ ವಂದನೆಗಳನ್ನು ಅರ್ಪಿಸಬೇಕು. ಉಳಿದ ಕರ್ತವ್ಯವಿಷ್ಟು. …ಜನ್ಮವಿತ್ತ ತಾಯಿತಂದೆ…ಪ್ರೇಮದ ಅಮೃತವಿತ್ತ ಸುಶೀಲೆ, ಎಷ್ಟೋ ರಸನಿಮಿಷಗಳಿಗೆ ಕಾರಣರಾದ ಗೆಳೆಯರು, ಬಾಳಿಗೊಂದು ಆದರ್ಶವಿತ್ತ ಕವಿಗಳು, ಅಣ್ಣ, ಅತ್ತಿಗೆ, ಎಷ್ಟು ಕನ, ಓಹ್ ಎಷ್ಟು ಜನ ತನ್ನ ಬಾಳಿಗಾದವರು… ಎಂತಹ ಪುಣ್ಯವಂತ… ಅವರೆಲ್ಲರಿಗೂ ಹೇಗೆ ಋಣ ಸಲ್ಲಿಸುವುದು? ಹೃದಯ ತುಂಬಿ ಬಂದಿತು, ಮೆಲ್ಲನೆ ಪಕ್ಕದಲ್ಲಿ ಕುಳಿತಿದ್ದ ವಿಶ್ವನ ಬೆನ್ನು ಸವರಿ ಶಾಂತ ಸ್ವರದಲ್ಲಿ ಎಂದ: “ವಿಶ್ವ ಹೋಗಿ ಬರುತ್ತೇನೆ. ದುಃಖಿಸಬೇಡಿ. ನಿನ್ನ ಕರುಣೆಯನ್ನು ಈ ಜನ್ಮದಲ್ಲಿನ್ನು ತೀರಿಸಲಾರೆ. ಅದರೆ ಇದು ಕೊನೆಯಲ್ಲ… ಇನ್ನು ಮೇಲೆ ನಿಜವಾದ ಪ್ರಾರಂಭ..” ತನ್ನ ಆ ಕೊನೆಯ ಮಾತು ಮುಗಿಸಿ ಬಾಗಿಲು ತೆರೆಯುವಂತೆ ವಿಶ್ವನಿಗೆ ಸನ್ನೆ ಮಾಡಿದ. ಬಲು ಕಷ್ಟದಿಂದ ಅಳುವನ್ನು ಒತ್ತಿ ಹಿಡಿದು ವಿಶ್ವನಾಥ ಎಲ್ಲ ಬಾಗಿಲನ್ನೂ ತೆರೆದು, ಆನಂದನ ಮಗ್ಗುಲಿಗೆ ಬಂದು ಕುಳಿತ. ಆನಂದ ಕಷ್ಟದಿಂದ ಬಲಪಕ್ಕಕ್ಕೆ ಹೊರಳಿ ನೋಡಿದ- ಎಂತಹ ಅಮೃತ ಘಳಿಗೆಯಿದು! ದೂರದಲ್ಲಿ ಮಿನುಗುವ ಆ ವಿಶಾಲ ಸೈಕತರಾಶಿ. ಈ ಬೆಳದಿಂಗಳಿಗೆ ಮೈಯೊಡ್ಡಿ ಅಲ್ಲಲ್ಲಿ ಧ್ಯಾನಮಗ್ನವಾಗಿ ನಿಂತ ಮರಗಳು, ಎರಡು ಚಿಕ್ಕ ಕಣ್ಣುಗಳನ್ನೂ ಅದಾವ ಮಾಯೆಯಿಂದಲೋ ಸೇರಬಲ್ಲ ಅಪಾರವಾದ ಗಗನದ ಈ ಶುಭ್ರನೀಲಿ. ಸತತ ಶ್ರವಣದಿಂದ ಮನೋಗತವಾಗಿ ಮೌನದ ಶ್ರೀಮಂತಿಕೆಯನ್ನೂ ಮೀರಿ, ವೈಕುಂಠದ ಸಂದೇಶ ತರುವ ತುಂಗೆಯ ಈ ಗಂಭೀರಧ್ವನಿ. ಶ್ರೀ ಕೃಷ್ಣ ರಾಸಲೀಲೆಯಾಡಿದ ಹೊತ್ತು. ಎಂತಹ ಮಾಯೆ. ಹುಚ್ಚೇರಿತೇನೆಯೊಂದೀಗ ಕಿರುಲಿತು. ಆಹ್! ಕಿರುಲಿ ಕಿರುಲಿ ಏರಿತು- ಏರಿ ಏರಿ ಕಿರುಲಿತು, ಜೀವಬಿಟ್ಟು ಕೋಗಿಲೆ ‘ಕುಹೂ… ಕುಹೂ…’ ಎಂದಿತು. ಯಾವ ಅಮರಾವತಿಯ ಮೋಡಿ ಇದು? ಅಬ್ಬ! ಒಂದು ಕ್ಷಣದಲ್ಲಿ ಎಂತಹ ದರ್ಶನ! ಆನಂದ ತಟ್ಟನೆ ಎದ್ದು ಕೂತ. ಏನೋ ಶಕ್ತಿ ಸಂಚಲನೆಯಾಯಿತು ನರನರಗಳಲ್ಲೂ. ಏನೋ ಮಧುರಯಾತನೆ ಮಂಥಿಸಿತು ಎದೆಯನ್ನು. ತೇನೆಯೊಡನೆ ಕಿರುಲ ಬೇಕೆನ್ನಿಸಿತು ‘ಜೀವಹಂಸ’ಕ್ಕೆ… ಮೈ ನಡುಗಿತು. ಒಂದೇ ಕ್ಷಣದಲ್ಲಿ ಮಿಂಚಿನಂತೆ ಮಹತ್ ದರ್ಶನ ಒಂದು ಜೀವವನ್ನು ಅಲ್ಲಾಡಿಸಿ ಹಾಯ್ದಿತು. ‘ಈ ತೇನೆ ನಾನು. ಈ ಬೆಳದಿಂಗಳು ನಾನು. ಈ ನೀಲಿ ಗಗನದ ಅನಂತತೆ ನಾನು ಇಲ್ಲ- ನನಗೆ ಸಾವಿಲ್ಲ- ನನಗೆ ಸಾವಿಲ್ಲ…’ ‘ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ” …ವಿಶ್ವನಾಥ ಗಂಭೀರವಾದ ಧ್ವನಿಯಲ್ಲಿ ಓದುತ್ತಿದ್ದ. ಆನಂದನ ಶರೀರ ಮೆಲ್ಲನೆ ಅವನ ಮೈಮೇಲೊರಗಿತು… …ವಿಶ್ವದ ಚೆಲುವಿಗೆ ಪೌರೋಹಿತ್ಯ ನಡೆಸಿದ್ದ ಕವಿಯ ಪಂಚೇಂದ್ರಿಯಗಳೂ ನಿಧಾನವಾಗಿ ತಮ್ಮ ಚೇತನವನ್ನು ಕಳೆದುಕೊಂಡವು… ದೀರ್ಘನಿಟ್ಟುಸಿರೊಂದು ತಪ್ಪಿಸಿಕೊಂಡಿತು. ಆನಂದನ ತೆರೆದ ಕಣ್ಣುಗಳನ್ನು ಮುಚ್ಚಿ, ಬಿಳಿಯ ವಸ್ತ್ರ ಒಂದನ್ನು ಹೊದೆಸಿ ವಿಶ್ವ ಕೈಮುಗಿದನು- ಒಳಗಿನಿಂದ ಮಗು ಅಳುವ ಧ್ವನಿ ಕೇಳಿತು! +***** +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ […] +ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […] +ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_753.txt b/Kannada Sahitya/article_753.txt new file mode 100644 index 0000000000000000000000000000000000000000..e63940c28d3484a5ccbf44c947773dd8df125893 --- /dev/null +++ b/Kannada Sahitya/article_753.txt @@ -0,0 +1,163 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು ಮಲಗಿದ್ದೆಂದರೆ ಕೇವಲ ಇಪ್ಪತ್ತು ದಿನಗಳು. ಸಾಯುವಾಗ ಅವರಿಗೆ ಬೇಕಾದವರೆಲ್ಲ ಅವರ ಬಳಿಯೇ ಇದ್ದರು. ದೆಹಲಿಯಿಂದ ಅಪ್ಪನ ಖಾಹಿಲೆ ಕೇಳಿ ಬಂದಿದ್ದ ಮಗ, ಅವನ ಸಂಸಾರ, ನಲವತ್ತು ವರ್ಷಗಳಿಂದ ಮುಖ ನೋಡದೇ ಇದ್ದ ಯೌವ್ವನದ ಗೆಳೆಯ- ಕೇರಳದ ಕಮ್ಯುನಿಸ್ಟ್ ಗೋವಿಂದನ್ ನಾಯರ್,-ಹೆಂಡತಿ, ವಿಧವೆಯಾಗಿ ಮನೆ ಸೇರಿದ ಮಗಳು ಮತ್ತು ಅವಳ ಹನ್ನೆರಡು ವರ್ಷದ ಮಗ. ಮುಖ್ಯವಾಗಿ ಅವರ ಈ ಇಪ್ಪತ್ತು ವರ್ಷಗಳ ಪ್ರೇಯಸಿ, ಗಂಗೂಬಾಯಿ ಕೂಡ. ಅವಳು ಶಿವಮೊಗ್ಗದವಳು. ಆಚಾರ್ಯರಿಗೆ ಖಾಹಿಲೆಯೆಂದು ಕೇಳಿದವಳೇ ಹಿಂದು ಮುಂದು ನೋಡದೆ ಬಂದವಳು. ಅವಳೊಬ್ಬಳು ಅವರಿಗೆ ಇದ್ದಾಳೆಂಬುದು ಜನಜನಿತವಾಗಿದ್ದರೂ ಅವಳು ಹೀಗೆ ಪ್ರತ್ಯಕ್ಷವಾಗಿದ್ದು ಈಗಲೇ. ಅವಳು ಬಂದಾಗ ಆಚಾರ್ಯರು ಬೇಡವೆನ್ನಲಿಲ್ಲ. ಹೆಂಡತಿ ರುಕ್ಮಿಣಿಯಮ್ಮ ಒಳಗಿಂದೊಳಗೇ ಮಗಳ ಹತ್ತಿರ, ಮಡಿ-ಮೈಲಿಗೆ, ಮಾನ-ಮರ್ಯಾದೆಯೆಂದು ರಂಪಮಾಡಿದರು. ಆದರೆ ಗಂಡನ ಪರಿಸ್ಥಿತಿಯಿಂದಾಗಿ, ‘ಯಾವ ಜನ್ಮದ ಋಣವೋ ತೀರಬೇಕಲ್ಲ’ ಎಂದು ಬಾಯಿ ಮುಚ್ಚಿಕೊಂಡಿದ್ದರು. ಎಲ್ಲರನ್ನೂ ನಗುಮುಖದಿಂದ ಮಾತಾಡಿಸುತ್ತ ಗಂಗೂಬಾಯಿ ಮೌನವಾಗಿ ಆಚಾರ್ಯರ ಶುಶ್ರೂಷೆಯನ್ನು ವಹಿಸಿಕೊಂಡಳು. ಅವರನ್ನು ಮಲಗಿಸಿದ್ದ ಹಾಸಿಗೆ ಗಂಟು ಗಂಟಾಗಿರುವುದನ್ನು ಕಂಡು ಹೊಸದಾದ ಮೆತ್ತನೆಯ ಹಾಸಿಗೆ ಮಾಡಿಸಿದಳು. ಬೆಡ್‌ಶೀಟ್‌ಗಳನ್ನು ಶುಭ್ರವಾಗಿ ಒಗೆದು ಕೆಂಡದ ಇಸ್ತಿಇಸ್ತ್ರಿಪೆಟ್ಟಿಗೆಯಲ್ಲಿ ಅವನ್ನೆಲ್ಲ ಗರಿಗರಿಯಾಗಿ ಇಸ್ತಿಇಸ್ತ್ರಿ ಮಾಡಿ ನಿತ್ಯ ಬದಲಾಯಿಸಿದಳು….. “ಹಾಲಿನ ವ್ಯಾಪಾರವನ್ನು ಯಾರು ನೋಡಿಕೊಳ್ಳುತ್ತಾರೆ”, ಎಂದು ಆಚಾರ್ಯರು ರಗಳೆ ಮಾಡಿಕೊಂಡಾಗ ತನಗೆ ವ್ಯವಹಾರ ಗೊತ್ತಿಲ್ಲವೆ? ಅದಕ್ಕೆಲ್ಲ ತಕ್ಕ ಏರ್ಪಾಡು ಮಾಡಿ ಬಂದಿದ್ದೇನೆ ಎಂದಳು. “ಸ್ಕೂಲಿಗೆ ಎಷ್ಟು ದಿನ ರಜ ಹಾಕಿದೀಯ?” ಎಂದಿದ್ದಕ್ಕೆ “ನಿಮಗೆ ಹುಷಾರಾಗೋ ತನಕ” ಎಂದು ನಕ್ಕು ಬಿಟ್ಟಿದ್ದಳು. ಅವಳು ಪ್ರೈಮರಿ ಸ್ಕೂಲಲ್ಲಿ ಮೇಡಂ ಎಂದು ಗೊತ್ತಾದ ಮೇಲೆ ಆಚಾರ್ಯರ ವಿಧವೆಯಾದ ಮಗಳು ಸಾವಿತ್ರಿಯ ಮುಜುಗರ ಕಡಿಮೆಯಾದ್ದು. ಹೆಂಡತಿಯ ಹತ್ತಿರ ಅವಳ ಇರವಿನ ಬಗ್ಗೆ ಮುಕ್ತವಾಗಿ ಯಾವತ್ತೂ ಮಾತಾಡದಿದ್ದ ಆಚಾರ್ಯರು ಈ ದಿನಗಳಲ್ಲಿ ಅವಳೂ ತನ್ನ ಮನೆಯ ಒಂದು ಭಾಗವೆಂಬಂತೆ ಸಂಕೋಚವಿಲ್ಲದೆ ನಡೆದುಕೊಂಡದ್ದು ಕಂಡರೆ ಅವರಿಗೆ ತಾನು ಸಾಯಬಹುದೆಂಬ ಅರಿವು ಮೂಡಿದ್ದಿರಬಹುದೆ ಎಂದು ಅವರ ಮಗ ಕೃಷ್ಣಮೂರ್ತಿಗೆ ಅನುಮಾನವಾಗುತ್ತದೆ. ಇಲ್ಲದಿದ್ದಲ್ಲಿ ನಲವತ್ತು ವರ್ಷಗಳ ಹಿಂದಿನ ಗೆಳೆಯನಿಗೆ ಯಾಕೆ ಕಾಗದ ಹಾಕುತ್ತಿದ್ದರು? ಖಾಹಿಲೆ ಬೀಳುವ ಮುಂಚೆ ಅವನನ್ನು ಆಗ ಈಗ ನೆನೆಸಿಕೊಂಡಿದ್ದೇವೆ. ಪೇಪರಿನಲ್ಲಿ ಅವನ ಸುದ್ದಿ ಓದಿದಾಗೆಲ್ಲ ಗೆಳೆಯನ ಹಿಂಸಾತ್ಮಕ ಚಟುವಟಿಕೆಗಳ ಬಗ್ಗೆ ಅಸಮಧಾನಅಸಮಾಧಾನದಿಂದ ಮಗನ ಬಳಿ ಮಾತಾಡಿದ್ದಿದೆ. ಐದು ವರ್ಷಗಳ ಹಿಂದೊಂದು ನಡೆದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಕಾಫಿ ತೋಟದ ಕೆಲಸಗಾರರ ಬೋನಸ್ ಬಗ್ಗೆ ಮಂತ್ರಿಯೊಬ್ಬನನ್ನು ಭೇಟಿ ಮಾಡಲು ನಾಯರ್ ಹೋಗಿದ್ದನಂತೆ. ಮಂತ್ರಿಯ ಹೇಳಿಕೆ ಪ್ರಕಾರ, ಮಾತಿಗೆ ಮಾತು ಬೆಳೆದು ನಾಯರ್ ಚೀಲದಿಂದ ಒಂದು ಆಸಿಡ್ ಬಾಂಬ್ ತೆಗೆದು ಹೊಡೆಯಲು ಬಂದನಂತೆ. ನಾಯರ್ ಕೋರ್ಟಿನಲ್ಲಿ ಕೊಟ್ಟ ಹೇಳಿಕೆ ಪ್ರಕಾರ, ಆಸಿಡ್ ಬಾಂಬ್‌ನಲ್ಲಿ ಮಂತ್ರಿಯನ್ನವನು ಕೊಲ್ಲಬೇಕಿತ್ತು; ಆದರೆ ದುರದೃಷ್ಟವಶಾತ್ ಮಂತ್ರಿಯನ್ನು ಮೆಟ್ಟಿನಲ್ಲಿ ಹೊಡೆಯುವುದು ಮಾತ್ರ ಅವನಿಗೆ ಸಾಧ್ಯವಾದದ್ದು. ಹೊಡೆಯಲು ಹೋದಾಗ ಟೇಬಲ್ಲಿನ ಮೇಲೆ ಮಂತ್ರಿ ಮುಗ್ಗರಿಸಿ ಬಿದ್ದು ಹಣೆಗೆ ಗಾಯವಾಗಿತ್ತು. ನಾಯರ್ ಐದು ವರ್ಷ ಜೈಲಲ್ಲಿದ್ದು ಹೊರಗೆ ಬಂದವನು ಭ್ರಷ್ಟಾಚಾರದ ಜನವೈರಿಗಳನ್ನು ಕೊಲ್ಲುವುದೇ ತನ್ನ ಮುಂದಿನ ಯೋಜನೆಯೆಂದು ಹೇಳಿಕೆ ಕೊಟ್ಟಿದ್ದ. ಆಗಲೇ ಆಚಾರ್ಯರಿಗೆ ಅವನಿಗೆ ಬರೆದು ಅವನ ಚಟುವಟಿಕೆಯನ್ನು ಖಂಡಿಸಬೇಕೆನಿಸಿತ್ತು. ತನ್ನ ಜೀವನ ಕ್ರಮದಿಂದ ಯದ್ವಾತದ್ವ ಬೇರೆಯಾಗಿಬಿಟ್ಟಿದ್ದ ಈ ಯೌವ್ವನದ ಗೆಳೆಯನಿಗೆ ಹೇಗೆ ಏನು ಬರೆಯಬೇಕು ತಿಳಿಯದೆ ಆಗ ಸುಮ್ಮನಾಗಿಬಿಟ್ಟಿರಬಹುದು. ಅಥವಾ ಸುಮ್ಮನಾಗಲು ಅದೊಂದೇ ಕಾರಣವೂ ಇರಲಾರದು. ಊರಿನ ಶ್ರೀಮಂತರ ಮನೆಗಳ ಪಾಲು, ಪತ್ರದ ವ್ಯವಹಾರದಲ್ಲೆ, ಅವರಿವರಿಗಾಗಿ ಕೋರ್ಟುಗಳನ್ನು ಅಲೆಯುವುದರಲ್ಲೆ ಸದಾ ಮಗ್ನರಾಗಿರುತ್ತಿದ್ದ ತನ್ನ ತಂದೆಗೆ ತಾತ್ತ್ವಿಕ ಕಾರಣಕ್ಕಾಗಿ ಜೀವವನ್ನು ಕೊಡಲು ಕೊಲ್ಲಲು ತಯಾರಾಗಿದ್ದ ಹಿಂದಿನ ಗೆಳೆಯನ ಮನಸ್ಸನ್ನು ಅರಿಯುವ ವ್ಯವಧಾನ ಕೂಡ ಇರಲಿಲ್ಲವೇನೊ. +ಈ ಘಟನೆ ನಂತರ ನಾಯರ್ ಬಗ್ಗೆ ವಾರಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಇವನು ಇಂತಹ ಮನುಷ್ಯನಾಗುತ್ತಾನೆಂಬುದು ದೆಹಲಿಯಲ್ಲಿ ರೈಲ್ವೆ ಸರ್ವಿಸ್ಸಿಗೆ ಇಬ್ಬರೂ ಒಟ್ಟಿಗೆ ಸೇರಿದಾಗ ತನ್ನ ತಂದೆಗೆ ಗೊತ್ತಾಗುವುದು ಸಾಧ್ಯವಿತ್ತೆ? ಒಂದೇ ರೂನಿನಲ್ಲಿರೂಮಿನಲ್ಲಿ ಇಬ್ಬರ ವಾಸವಂತೆ. ತನ್ನ ಒಳಜೀವನದ ಗುಟ್ಟುಗಳನ್ನೆಲ್ಲ ನಾಯರ್‌ಗೆ ಹೇಳಿಕೊಂಡಿದ್ದರಂತೆ. ಆಚಾರ್ಯರು ಬ್ರಾಹ್ಮಣರಾದ್ದರಿಂದ ಅವರೇ ಅಡಿಗೆ ಮಾಡುವುದು, ನಾಯರ್ ತರಕಾರಿ ಹೆಚ್ಚಿಕೊಡುವುದು, ಅಂಗಡಿಗೆ ಹೋಗಿ ವ್ಯಾಪಾರ ಮಾಡುವುದು, ಆಚಾರ್ಯರು ಒಲೆ ಹೊತ್ತಿಸಿ ಅಡಿಗೆ ಮಾಡುತ್ತಿರುವಾಗ ನಾಯರ್ ಬೀಡಿ ಸೇದುತ್ತ ಯಾವುದಾದರೂ ಕಥೆಯ ಪುಸ್ತಕವನ್ನು ಗಟ್ಟಿಯಾಗಿ ಓದುವುದು. ಆಗ ಇಬ್ಬರಿಗೂ ಪ್ರಿಯವಾಗಿದ್ದ ಕಥೆಗಳೆಂದರೆ ಗೋಲ್ಡ್‌ಸ್ಮಿತ್ ಮತ್ತು ರೇನಾಲ್ಡ್ಸ್ ಬರೆದವು. ನಾಯರ್ ಸುಖವನ್ನು ಬಯಸುತ್ತಿದ್ದವನೆಂದೇ ಆಚಾರ್ಯರ ನೆನಪು. ಸುಖಬಯಸುತ್ತಿದ್ದ ಗೆಳೆಯ ಆ ಸುಖಗಳನ್ನು ರಕ್ಷಿಸುವ ವ್ಯವಸ್ಥೆಯನ್ನೇ ಬುಡಮೇಲು ಮಾಡಬೇಕೆಂಬ ಮನುಷ್ಯ ಯಾಕಾದ? +ಆಚಾರ್ಯರು ಮೆಡಿಕಲ್ ಪರೀಕ್ಷೆಯಲ್ಲಿ ಪಾಸಾಗಲಾರದೆ ಕೆಲಸ ಕಳೆದುಕೊಂಡರು. ಮಲೆನಾಡಿನ ಮಲೇರಿಯಾದಲ್ಲಿ ಪಡೆದ ಜ್ವರಗೆಡ್ಡೆ ಡಾಕ್ಟರರ ಒತ್ತುವ ಕೈಗೆ ಗಟ್ಟಿಯಾಗಿ ಸಿಕ್ಕಿ ಕೆಲಸ ಹೋದದ್ದು. ಆಮೇಲೆ ಅಂಗಡಿಗಳಲ್ಲಿ ಲೆಕ್ಕ ಬರೆಯಲು ಆಚಾರ್ಯರು ಶುರುಮಾಡಿದರು. ಎರಡು ವರ್ಷಗಳ ನಂತರ ಇದೂ ಸಾಕಾಗಿ, ತಾನು ಕಟ್ಟಿಕೊಂಡ ಮೈನೆರೆಯದ ಎಳೆಯ ಹೆಂಡತಿ, ಅಪ್ಪ, ಅವರ ಪೂಜೆಯ ದೇವಸ್ಥಾನ- ಇವೆಲ್ಲ ನೆನಪಾಗಿ ದೆಹಲಿ ಬಿಟ್ಟು ಬಂದದ್ದು….. +ಸ್ವಾತಂತ್ರ್ಯ ಬಂದನಂತರದ ಸ್ಟ್ರೈಕ್‌ನಲ್ಲಿ ಭಾಗವಹಿಸಿ ನಾಯರ್‌ನೂ ಕೆಲಸ ಕಳಕೊಂಡ. ಆಮೇಲೆ ಕೇರಳದ ಸ್ವಂತ ಊರಿಗೆ ಹೋಗಿ ರೈತರ ಜೊತೆ ಕೆಲಸಮಾಡಲು ಪ್ರಾರಂಭಿಸಿ ಕಮ್ಯುನಿಸ್ಟ್ ಆದ. ನಂತರ ತನ್ನ ಪಕ್ಷ ರಷ್ಯಾದ ಮಾತು ಕೇಳಿ ದೇಶದ್ರೋಹಿ ಕಾಂಗ್ರೇಸ್ಕಾಂಗ್ರೆಸ್ ಜೊತೆ ಕೆಲಸ ಮಾಡಲು ಪ್ರಾರಂಭಿಸಿತೆಂದು ಪಕ್ಷಕ್ಕೆ ರಾಜಿನಾಮೆ ಕೊಟ್ಟು ಏಕಾಂಗಿಯಾದ. ಆದರೆ ಕಮ್ಯುನಿಸ್ಟ್ ಆಗಿಯೇ ಮುಂದುವರಿದ. ಅವನ ಜೀವನ ಕ್ರಮವನ್ನು ಪತ್ರಿಕೆ ರಸವತ್ತಾಗಿ ಬಣ್ಣಿಸಿತ್ತು. ಯಾರಾದರೊಬ್ಬರ ಚಾವಡಿಯಲ್ಲಿ ಅವನು ಮಲಗಿ, ಅವರ ಹಿತ್ತಲಿನ ಕೊಳದಲ್ಲಿ ಬಟ್ಟೆಯೊಗೆದು ಸ್ನಾನ ಮಾಡಿ ಹೊರಗೆ ಹೊರಡುವುದು. ಎಕ್ಸರ್‌ಸೈಸ್ ಪುಸ್ತಕದ ರಟ್ಟುಗಳನ್ನು ಮಕ್ಕಳಿಂದ ಪಡೆದು, ಅವುಗಳನ್ನು ಬೀಸಣಿಗೆ ಮಾಡಿ, ಸೀದ ಆಸ್ಪತ್ರೆಗೆ ಹೋಗಿ ಅಲ್ಲಿದ್ದ ರೋಗಿಗಳ ಕ್ಷೇಮವನ್ನು ವಿಚಾರಿಸಿ, ಅವರಿಗೆ ಗಾಳಿ ಹಾಕಿಕೊಳ್ಳಲು ಈ ಬೀಸಣಿಕೆಗಳನ್ನು ಕೊಡುವುದು. ಮದ್ಯಾಹ್ನ ಮಧ್ಯಾಹ್ನ ಊರಿನ ನಡುವಿದ್ದ ಹೋಟೆಲಲ್ಲಿ ಕೂತಿರುವುದು. ಅಲ್ಲಿ ಚಹಾ ಕುಡಿಯಲು ಬಂದ ಕೂಲಿಕಾರರಿಗೋ ರೈತರಿಗೋ ಅವರ ಕೆಲಸಗಳನ್ನು ಮಾಡಿಕೊಟ್ಟು ಅವರು ಕೊಡಿಸಿದ್ದನ್ನು ತಿಂದು, ಚಹಾ ಕುಡಿದು ಬೀಡಿ ಸೇದಿ ಊರಲ್ಲಿ ಓಡಾಡಿಕೊಂಡಿರುವುದು. ರೇಷನ್ ಶಾಪು, ಕಛೇರಿ, ಪೋಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ಅಲ್ಲಿ ಬಡಬಗ್ಗರ ಪರವಾಗಿ ಅಧಿಕಾರಿಗಳ ಜೊತೆ ಜಗಳ ಮಾಡಿ ಕೆಲಸ ಮಾಡಿಸಿಕೊಡುವುದು. ಸಂಜೆ ಮತ್ತೆ ಹೊಟೆಲಲ್ಲಿಕೂತು ಬರೆದುಗಿರಿದು ಕೊಡುವುದನ್ನು ಮಾಡಿ, ಅವರು ಕೊಡಿಸಿದ್ದನ್ನು ತಿಂದು, ಇನ್ನೊಂದು ಚಾವಡಿ ಮೇಲೆ ಮಲಗುವುದು. ಮಾರನೇ ದಿನದ ಖರ್ಚಿಗೆಂದು ಒಂದು ನಯಾ ಪೈಸೆ ಜೇಬಲ್ಲಿ ಇಟ್ಟುಕೊಂಡಿದ್ದಿಲ್ಲ. ಬಡವರಿಗೆ ಕೆಲಸ ಮಾಡಿಕೊಡುವಾಗ, ಶೋಷಣೆ, ಕ್ರಾಂತಿ, ಹೊಸ ಸಮಾಜ ಇತ್ಯಾದಿ ಬಗ್ಗೆ ಅವರಿಗೆ ತಿಳಿಯ ಹೇಳುವುದು- ಇದು ನಾಯರ್‌ನ ದಿನಚರಿ. ಜನರ ಶತ್ರುಗಳಿಗೆ ಆತ ಮೆಟ್ಟಲ್ಲಿ ಹೊಡೆದದ್ದು ಅದು ಮೊದಲ ಸಲವಲ್ಲ. ಅವನಿಂದ ಏಟು ತಿಂದದ್ದು ಮಂತ್ರಿಯಾದ್ದರಿಂದ ಅದೊಂದು ದೊಡ್ಡ ಸುದ್ದಿಯಾಯಿತು- ಅಷ್ಟೆ. +ಕೂದಲು ಬೆಳೆದ ಕಿವಿಯಲ್ಲೊಂದು ಪೆನ್ಸಿಲ್ ಸಿಕ್ಕಿಸಿಕೊಂಡು, ಮುಂಡು ಉಟ್ಟು, ಕೈಯಲ್ಲಿ ರಟ್ಟುಗಳನ್ನು ಹಿಡಿದು ಚುರುಕಾಗಿ ಓಡಾಡುವ ಈ ಬಿಳಿ ಬಟ್ಟೆಯುಟ್ಟ ಮನುಷ್ಯನನ್ನು ಊರಿನ ಜನ ಕರೆಯೋದು ‘ಮಾಸ್ತರ್’ ಎಂದು. ತನ್ನಂತೆಯೇ ಪರರಿಗೆ ಬದುಕುವಾತ; ಆದರೆ ಎಷ್ಟು ವ್ಯತ್ಯಾಸ. +ಆಚಾರ್ಯರು ಲೇಖನ ಓದಿ ಕೈಯಲ್ಲಿ ಚಿಟಿಕೆ ನಸ್ಯ ಹಿಡಿದು ತುಂಬ ಯೋಚಿಸಿದ್ದರು. ದೆಹಲಿಯಿಂದ ಬಂದಿದ್ದ ಮಗನಿಗೆ ಲೇಖನ ಓದುಸಿಓದಿಸಿ, ಏನೋ ಹೇಳಲು ಹೋಗಿ, ಮಾತನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇವೆಲ್ಲ ಅವರ ಮಗ ಕೃಷ್ಣಮೂರ್ತಿಗೆ ಅಪ್ಪ ಸತ್ತ ಮೇಲೆ ನಿಗೂಢವೆನ್ನಿಸಿದ್ದವು. +ಖಾಹಿಲೆ ಬಿದ್ದೊಡನೆಯೇ, ವಿಳಾಸವಿಲ್ಲದ ನಾಯರ್‌ಗೆ- ಅದೇ ಲೇಖನದ ತಲೆಬರಹವಾಗಿತ್ತು-ಆಚಾರ್ಯರು ಊರಿನ ಹೆಸರು ಮಾತ್ರ ಬರೆದು ಬಾ ಎಂದು ಒಂದು ಕಾಗದ ಹಾಕಿದ್ದರು. ಗಂಗೂಬಾಯಿಗೆ ಮಾತ್ರ ಖಾಹಿಲೆಯೆಂದು ಬರೆದ್ದಿದ್ದರೇ ವಿನಹ ಮಗನಿಗೂ ನಾಯರ್‌ಗೂ ಬರೆದಂತೆ ಬಾ ಎಂದು ಬರೆದಿರಲಿಲ್ಲ. ಆದರೆ ನಾಯರ್ ಕಾಫಿ ತೋಟದ ಕೆಲಸಗಾರರ ಮುಷ್ಕರದಲ್ಲಿ ತೊಡಗಿದ್ದರಿಂದ ಆಚಾರ್ಯರು ಸಾಯುವ ಹಿಂದಿನ ಮದ್ಯಾಹ್ನ ಮಧ್ಯಾಹ್ನ ಬಂದ. +* +* +* +ತನ್ನ ಅಪ್ಪನ ಹೆಸರನ್ನು ಮೊಟುಕುಮಾಡುವುದು ಅಸಾಧ್ಯವೆಂದೇ ಕೃಷ್ಣಮೂರ್ತಿ ತಿಳಿದಿದ್ದ. ಆದರೆ ನಾಯರ್ ಅವರನ್ನು ಇಂಗ್ಲೀಷಿನಲ್ಲಿ ‘ಏನು ಜಯ’ ಎಂದು ಆಪ್ತವಾಗಿ ಸಲೀಸಾಗಿ ಕರೆದು, ಬಗಲಿಗೆ ಸಿಕ್ಕಿಸಿಕೊಂಡು ಬಂದ ಅವನ ಸರ್ವಸ್ವವನ್ನೂ ತುರುಕಿದ್ದ ಚೀಲವನ್ನು ಕೆಳಗಿಟ್ಟು, ಹಾಸಿಗೆ ಬಳಿ ಕೂತಾಗ ಅವನು ತಬ್ಬಿಬ್ಬಾದ. ನಿನ್ನೆ ತಾನೆ ಗೆಳೆಯನನ್ನು ಬಿಟ್ಟು ಹೋದದ್ದು ಎನ್ನಿಸುವಂತೆ ನಾಯರ್ ಆಚಾರ್ಯರು ತೆಗೆದುಕೊಳ್ಳುತ್ತಿದ್ದ ಔಷಧಗಳನ್ನೆಲ್ಲ ಪರೀಕ್ಷಿಸಿ, ಬಾಕುಬಾವು ಬಂದ ಕಾಲುಗಳನ್ನು ಒತ್ತಿ ನೋಡಿದ. ಕೇರಳದವನಲ್ಲವೆ? ಅಪ್ಪನಂತೆ ಅವನೂ ಆಯುರ್ವೇದದ ಪ್ರೇಮಿಯಾಗಿದ್ದ. ನಾಡಿ ಪರೇಕ್ಷೆ ಮಾಡಿ, ಬಾಯಿ ಕಳೆಸಿ ನಾಲಗೆ ನೋಡಿ, ಕಣ್ಣುಗಳನ್ನು ಬಿಡಿಸಿ, ನಿಟ್ಟುಸಿರಿಟ್ಟು, ಚೀಲದಿಂದ ಭಸ್ಮ ತೆಗೆದು ಜೇನುತುಪ್ಪದಲ್ಲಿ ಕಲೆಸಿ ನೆಕ್ಕಿಸಿದ. ಅಲೋಪತಿ ಹೇಗೆ ದೇಶೀಯ ಪದ್ದತಿಯನ್ನು ಪದ್ಧತಿಯನ್ನು ನಾಶಮಾಡಿತು. ಇದು ಹೇಗೆ ನಿಯೋಕಲೋನಿಯಲ್ ವ್ಯವಸ್ಥೆಯಲ್ಲಿ ಅನಿವಾರ್ಯ, ಈ ದೃಷ್ಟಿಯಿಂದ ನೆಹರೂ ಹೇಗೆ ದೇಶ ದ್ರೋಹಿ ಇತ್ಯಾದಿಗಳನ್ನು ಅವಸರವಾಗಿ ಹೇಳಿ, ಚೀಲದಿಂದ ತಾನು ಬರೆದು ಪ್ರಕಟಿಸಿದ್ದ ಒಂದು ಪ್ಯಾಂಪ್ಲೆಟ್ಟನ್ನು ಅಪ್ಪನ ಕೈಯಲ್ಲಿ ಕೊಟ್ಟು- ಅಪ್ಪನ ಖಾಹಿಲೆಗೆ ಕೂಡ ಎಲ್ಲೋ ನೆಹರೂನೇ ಕಾರಣವೆಂಬಂತೆ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೃಷ್ಣಮೂರ್ತಿ ಕೆಲಸ ಮಾಡುತ್ತಿರುವುದೆಂದು ಕೇಳಿ ವಿಷಾದದಿಂದ ನಕ್ಕು “ನೀವೆಲ್ಲ ಒಂದೋ ರಷ್ಯಾದ ದಾಸರು, ಅಥವಾ ಅಮೇರಿಕಾದ ದಾಸರು. ಈ ದೇಶದ ವಿದ್ಯಾವಂತರಲ್ಲಿ ದೇಶಪ್ರೇಮಿಗಳೇ ಉಳಿದಿಲ್ಲ” ಎಂದ. +ಅವನ ತತ್ಪರತೆ ಕೃಷ್ಣಮೂರ್ತಿಗೆ ಪ್ರಾರಂಭದಲ್ಲಿ ಹಾಸ್ಯಾಸ್ಪದವೆನ್ನಿಸಿ ಕ್ರಮೇಣ ಒಗಟಾಯಿತು. ಮೈ ಮುಖಗಳೆಲ್ಲ ಬಾತುಕೊಂಡಿದ್ದ ರೋಗಿಯಾದ ಸ್ನೇಹಿತನನ್ನು ಹೆಣ್ಣಿನಂತೆ ಮೃದುವಾಗಿ ಹಣೆ ಸವರಿ ಸಂತೈಸುತ್ತ, ಒರಟಾದ ಶಬ್ದಗಳಲ್ಲಿ ಇಡೀ ವ್ಯವಸ್ಥೆಯನ್ನು ಜರೆಯುತ್ತ ಕೂತ ಈ ನಾಯರ್‌ನನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ತಿಳಿಯಲಿಲ್ಲ. ಈ ನಲವತ್ತು ವರ್ಷ ಏನು ಮಾಡಿಕೊಂಡಿದ್ದಿ ಇತ್ಯಾದಿ ಒಂದು ಮಾತೂ ಕೇಳಬಾರದೆ? ಅಪ್ಪನಿಗಂತೂ ಮೈಯಲ್ಲಿ ಸ್ವಸ್ಥವಿಲ್ಲದೆ ಮಾತಾಡಲಿಲ್ಲ-ಸರಿ, ಹೀಗಾಗಿ ಅಪ್ಪ ಏನನ್ನು ಕೇಳಬೇಕೆಂದು, ಅಥವಾ ಹೇಳಬೇಕೆಂದು ನಾಯರ್‌ನನ್ನು ಕರೆಸಿದ್ದು ಎಂಬುದು ಬಗೆಹರಿಯಲೇ ಇಲ್ಲ. ಪಥ್ಯದಲ್ಲಿದ್ದ ಅಪ್ಪನಿಗೆ, “ರಾತ್ರೆ ನಿನಗೆ ಇಷ್ಟವಾದದ್ದು ತಿನ್ನು” ಎಂದು ನಾಯರ್ ಹೇಳಿದ್ದು ನೋಡಿದರೆ ಅಪ್ಪ ಸಾಯಬಹುದೆಂದು ನಾಯರ್‌ಗೂ ಅನ್ನಿಸಿರಬಹುದೆ? “ಬಾಯಿ ರುಚಿಯೇ ಇಲ್ಲ” ಎಂದರು ಅಪ್ಪ. ನಲವತ್ತು ವರ್ಷದ ಹಿಂದಿನದನ್ನು ನೆನೆಸಿಕೊಂಡು ನಾಯರ್, “ದೆಹಲಿಯಲ್ಲಿ ಮಾವಿನ ಹಣ್ಣಿನ ಗೊಜ್ಜೆಂದು ಹಾತೊರೆಯುತ್ತಿದ್ದಿಯಲ್ಲ” ಎಂದಾಗ ಅಪ್ಪ ನಕ್ಕರು. ಅವರು ಹಾಗೆ ಮುಗುಳ್ನಕ್ಕದ್ದನ್ನು ಕೃಷ್ಣಮೂರ್ತಿ ನೋಡಿದ್ದೇ ಕಡಿಮೆ- ಖಾಹಿಲೆ ಬಿದ್ದ ಮೇಲಂತೂ ಹಾಗೆ ನಕ್ಕಿದ್ದೇ ಇಲ್ಲ. ಬೆಪ್ಪಾಗಿ ಸೂರಿನ ಜಂತಿಯನ್ನು ನೋಡುತ್ತ, ಆಗೀಗ ಪಂಚಾಂಗವನ್ನೊ, ಆಯುರ್ವೇದದ ಅಷ್ಟಾಂಗ ಹೃದಯವನ್ನೊ ಓದುತ್ತ ಮಲಗಿರುತ್ತಿದ್ದರು. “ಮಾವಿನ ಗೊಜ್ಜು ಪಿತ್ತವಲ್ಲವೆ?” ಎಂದು ಅಪ್ಪ ಅನುಮಾನಿಸುತ್ತ ಹೇಳಿದ್ದಕ್ಕೆ ನಾಯರ್ “ಅದಕ್ಕೆ ನನ್ನಲ್ಲಿ ಮದ್ದಿದೆ” ಎಂದ. +ಆಮೇಲಿಂದ ನಾಯರ್ ಪಕ್ಕದಲ್ಲೆ ಕೂತಿದ್ದು ತಾನು ಬರೆದ ಪ್ಯಾಂಪ್ಲೆಟ್ಟನ್ನು ಓದಿದ- ಅಪ್ಪನ ಪ್ರತಿಕ್ರಿಯೆಯನ್ನೆ ಆಶಿಸದವನಂತೆ. ರಾತ್ರಿಯಾದ ಬಳಿಕ ಗಂಗೂಬಾಯಿ ಆಚಾರ್ಯರನ್ನು ಹಿಡಿದು ಕೂರಿಸಿದಳು. ಮಗಳು ಕಲೆಸಿ ಕೊಟ್ಟ ಗೊಜ್ಜಿನ ಅನ್ನವನ್ನು ಎರಡು ತುತ್ತು ತಿಂದು ‘ಸೇರುವುದಿಲ್ಲ’ ಎಂದು ಮಲಗುತ್ತ ನಾಯರ್‌ನನ್ನು “ಮುಂದೇನು” ಎಂದರು. ಆ ಪ್ರಶ್ನೆಯನ್ನು ಅವರು ಕೇಳಿದ ಕ್ರಮ, ಅದನ್ನು ಅರ್ಥ ಮಾಡಿಕೊಂಡು ನಾಯರ್ ಕೊಟ್ಟ ಉತ್ತರಗಳನ್ನು ಅವರು ಸಾಯುವ ಹಿಂದಿನ ರಾತ್ರಿಯಾಗಿದ್ದರಿಂದ ಕೃಷ್ಣಮೂರ್ತಿಗೆ ಮುಖ್ಯವೆನಿಸುತ್ತವೆ. ಬೀಡಿಗೆ ಬೆಂಕಿಕಡ್ಡಿ ಗೀರುತ್ತ ಶಾಂತವಾಗಿ ನಾಯರ್ ಹೇಳಿದ: +“ನನ್ನ ಮಟ್ಟಿಗೆ ಮುಂದೇನು ಅನ್ನುತ್ತೀಯ? ನಾನೊಂದು ಬೀಜದಂತೆ ಫಲವತ್ತಾದ ಮಣ್ಣು ಹುಡುಕಿ ಬೀಳಬೇಕೆಂದಿದ್ದೇನೆ. ನನ್ನ ಡೈರಿಯಲ್ಲಿ ಬರುವ ಮುಂಚೆ ಬರೆದಿದ್ದೇನೆ- ಇಕೊ ನೋಡು” ಎಂದು ಡೈರಿ ಬಿಚ್ಚಿ ಓದಿದ: “ನನ್ನ ಮಾತು ಕೇಳುತ್ತಿದ್ದ ಕಾಫಿತೋಟದ ಕೆಲಸಗಾರರು ಆಸೆಬುರುಕರಾಗಿ ನನ್ನ ಕೈಬಿಟ್ಟರು. ಕೇರಳದ ರಾಜಕೀಯದ ಅತ್ಯಂತ ದೊಡ್ಡ ಫಟಿಂಗನಾದ ಎಂ.ವಿ. ವಾರಿಯರ್‌ನಿಂದ ಮೋಸ ಹೋದರು. ಅವನನ್ನು ನಡುಬೀದಿಯಲ್ಲಿ ನಿಲ್ಲಿಸಿ ಚೂರಿ ಹಾಕಿ ಕೊಲ್ಲಬೇಕೆಂದಿದ್ದೇನೆ” ಡೈರಿಯನ್ನು ಮುಚ್ಚಿ ಚೀಲದಲ್ಲಿಡುತ್ತ ನಾಯರ್ ಹೇಳಿದ- ಕೊನೆ ಮಾತೆಂಬಂತೆ: “ಇವನ್ನೆಲ್ಲ ಇಗೋ ಬರೆದಿಟ್ಟು ಇಲ್ಲಿ ಬಂದೆದ್ದೇನೆ. ನಾಳೆ ಹೋಗುತ್ತೆನೆ…ಬಂದಿದ್ದೇನೆ. ನಾಳೆ ಹೋಗುತ್ತೇನೆ…” +ಅಪ್ಪ ಕೇಳಿದ ಪ್ರಶ್ನೆಗೆ ಉತ್ತರವಾಗಿ ಇಡೀ ದೇಶದ ಬಗ್ಗೆ ಮಾತಾಡಿದ ಈ ಆಸಾಮಿ ಎಂಥವನು? ಅಪ್ಪ ಮಾತಾಡಲಿಲ್ಲ. ಯಾಕೆ ಮಾತಾಡಲಿಲ್ಲ? ತಿಳಿಯದೆಯೋ? ಅಥವಾ ನಿತ್ರಾಣದಿಂದಲೋ? ಅವರ ಮನಸ್ಸಿನಲ್ಲಿ ಏನು ನಡೆದಿರಬಹುದು ಊಹಿಸುವುದು ಕಷ್ಟ. ನಾಯರ್ ಕೃತಿಯ ಫಲ ತಿಳಿಯಲೂ ಅಪ್ಪ ಉಳಿಯಲಿಲ್ಲ, ನಾಯರ್ ಹೇಳಿದಂತೆಯೇ ಮಾಡಿದ,ನಡುಬೀದಿಯಲ್ಲಿ ಜನರ ಸಮಕ್ಷಮ ಎಂ. ವಿ. ವಾರಿಯರ್‌ನನ್ನು ನಿಲ್ಲಿಸಿ ತನ್ನ ಉದ್ದೇಶವನ್ನು ಗಟ್ಟಿಯಾಗಿ ಹೇಳಿ ಚೂರಿಯನ್ನು ಹೊರಗೆ ತೆಗೆದ. ಪರಿಣಾಮ ಯಾರಾದರೂ ಮೊದಲೇ ಊಹಿಸುವಂತೆ ಆಗಿತ್ತು. ಎಂ. ವಿ. ವಾರಿಯರ್ ಹಿಮ್ಮೆಟ್ಟಿ ಓಡಿದ. ಅಟ್ಟಿಸಿಕೊಂಡು ಓಡಿದ ನಾಯರ್‌ನನ್ನು ಜನರು ಹಿಡಿದು ಚೂರುಚೂರಿ ಇಸಕೊಂಡರು. ಕೊಲೆಯ ಯತ್ನದ ಆಪಾದನೆ ಮೇಲೆ ಅವನನ್ನು ಬಂಧಿಸಲಾಯಿತು. +ಅರವತ್ತು ವರ್ಷ ವಯಸ್ಸಿನ ನಾಯರ್ ನಿಜವಾಗಿಯೂ ನಲವತ್ತರ ಹರೆಯದ ವಾರಿಯರ್‌ನನ್ನು ಕೊಲ್ಲುತ್ತೇನೆಂದು ತಿಳಿದಿದ್ದನೊ? ಅವನ ಉದ್ದೇಶ ಎಷ್ಟು ಗಂಭೀರವಾಗಿತ್ತು, ಅದೊಂದು ನಾಟಕವಲ್ಲವೆ?-ಎಂದು ಮುಂದೆ ಕೃಷ್ಣಮೂರ್ತಿ ಯೋಚಿಸಿದ್ದಿದೆ. ಯಾಕೆಂದರೆ ನಾಯರ್‌ನ ಭೆಟ್ಟಿ ಕೃಷ್ಣಮೂರ್ತಿಯ ಜೀವನ ಕ್ರಮಕ್ಕೂ ಸವಾಲಾಗಿ ಪರಿಣಮಿಸಿತ್ತು. ಅಪ್ಪ ಸತ್ತದ್ದೇ ಹೊರಟು ನಿಂತ ನಾಯರ್ ಹೇಳಿದ್ದ: “ನಿನ್ನ ಅಪ್ಪ ಮೂರ್ಖನಂತೆ ಬದುಕಿ ಸತ್ತ. ನೀನೂ ಅವನ ಹಾದಿ ಹಿಡಿದಂತೆ ಕಾಣುತ್ತೆ” +“ಶವಸಂಸ್ಕಾರ…” ಕೃಷ್ಣಮೂರ್ತಿ ತಡವರಿಸುತ್ತ ಹೇಳಿದ. +ನಾಯರ್ ಮಾತಿನಲ್ಲಿದ್ದ ಕ್ರೌರ್ಯ ಕಣ್ಣಲ್ಲಿರಲಿಲ್ಲವೆಂಬುದು ನಿಜ. ಆದರೂ ಅವನ ಮಾತಿನ ನಿರ್ದಯ ಕೃಷ್ಣಮೂರ್ತಿಯನ್ನು ಅಲುಗಿಸಿತ್ತು. +“ಉಳಿದಿರೋದು ಏನು? ಹೂತರೆ ಒಳ್ಳೆ ಗೊಬ್ಬರ. ಆದರೆ ನೀವು ಬ್ರಾಹ್ಮಣರು ಸುಡುತ್ತೀರಿ…ಗೆಳೆಯ ಕರೆದನೆಂದು ನನ್ನ ಕೆಲಸವನ್ನೆಲ್ಲ ಬಿಟ್ಟು ಬಂದೆ. ಆದರೆ ಇನ್ನು ಸಮಯ ಹಾಳು ಮಾಡಲಾರೆ. ನನ್ನ ದಾರಿ ಖರ್ಚನ್ನೀಗ ನೀನು ಕೊಡಬೇಕು. ಒಂದು ದಿವಸದ ಊಟ ಮತ್ತು ಬಸ್ಸಿನ ಖರ್ಚು ಒಟ್ಟು ಇಪ್ಪತ್ತೈದಾಗುತ್ತೆ.” +ಸ್ವಲ್ಪ ಹೆಚ್ಚು ಹಣ ಕೊಡೋಣವೆ ಎನ್ನಿಸಿತ್ತು. ಆದರೆ ಭಯವಾಗಿತ್ತು. ಮೊದಲೇ ಪೊದೆ ಹುಬ್ಬು, ಕೂದಲು ಬೆಳೆದ ಕಿವಿಗಳು, ಅದಕ್ಕೆ ಸಿಕ್ಕಿಸಿದ ಪೆನ್ಸಿಲ್ ಇತ್ಯಾದಿಗಳಿಗಾಗಿ ನಾಯರ್‌ನನ್ನು ದ್ವೇಷಿಸಿದ್ದ ಕೃಷ್ಣಮೂರ್ತಿಯ ಹೆಂಡತಿ ಮೀರಾ ಅವನು ಹೋದದ್ದೆ, ‘ಅಸಭ್ಯ’ ಎಂದು ಗೊಣಗಿದಳು. ಸಾಯುವ ಮನುಷ್ಯನ ಪಕ್ಕದಲ್ಲಿ ಕೂತಿದ್ದು ಬೀದಿ ಭಾಷಣ ಮಾಡುವುದೆ? ಹೊರಟಾಗ ಹೀಗೆ ಅನ್ನುವುದೆ? ಕೃಷ್ಣಮೂರ್ತಿಗೂ ನಾಯರ್‌ನ ವರ್ತನೆಯಿಂದ ಕಷ್ಟವಾಗಿದ್ದರೂ ಹೆಂಡತಿಯನ್ನು ಗದರಿಸಿದ್ದ: +“ನಿನಗೆ ತಿಳಿಯದ ವಿಷಯಗಳಲ್ಲಿ ತಲೆಹಾಕಬೇಡ” +ಯಾಕೆ ಇಂಥ ನಾಯರ್‌ನನ್ನು ಅಪ್ಪ ನಲವತ್ತು ವರ್ಷಗಳ ನಂತರ ನೋಡಲು ಬಯಸಿದ್ದು? ತನ್ನ ಹೆಂಡತಿ, ದೆಹಲಿ, ತಾನು ಮಾಡುವ ‘ಪಂಚವಾರ್ಷಿಕ ಯೋಜನೆ ಮತ್ತು ಗೇಣಿಶಾಸನ’ ಎಂಬುವ ಮೌಲ್ಯರಹಿತ ರಿಸರ್ಚು-ಈ ಎಲ್ಲವೂ ಬೇಸರ ತರಿಸಿದಾಗ ನಾಯರ್ ಮತ್ತು ಅಪ್ಪನ ಸಂಬಂಧ ಮತ್ತು ಕೊನೆಯ ಬೇಟಿಗಳಭೇಟಿಗಳ ಸಂದಿಗ್ಧ ಕುರಿತು ಹೀಗೆ ಕೃಷ್ಣಮೂರ್ತಿ ತಲೆಕೆಡಿಸಿಕೊಳ್ಳುವುದುಂಟು. +ಹೀಗೆ ಅವನು ಯೋಚಿಸುವುದಕ್ಕೆ ಇನ್ನೂ ಒಂದು ಘಟನೆ- ಅಪ್ಪ ಸಾಯುವ ಮುಂಚಿನದು- ಕಾರಣವೆನ್ನಬಹುದು. ಗಂಗೂಬಾಯಿ ಬಂದಾಗ ಊರಲೆಲ್ಲ ಮಹಾ ಮರ್ಯಾದಸ್ಥರೆನ್ನಿಸಿಕೊಂಡ ಅಪ್ಪ ಮುಜುಗರ ಪಡದೇ ಇದ್ದದ್ದು ಕೃಷ್ಣಮೂರ್ತಿಗೆ ಆಶ್ಚರ್ಯವನ್ನುಂಟುಮಾಡಿದಂತೆಯೇ, ಅಪ್ಪನ ಕೊನೆಗಾಲದ ಮನಸ್ಥಿತಿಯನ್ನು ತಿಳಿಯಲು ಅಗತ್ಯವೆನ್ನಿಸಿತ್ತು. +* +* +* +ದತ್ತಿಗೆ ಸಂಬಂಧಿಸಿದ ವಿಷ್ಣುಮೂರ್ತಿಯ ವ್ಯವಹಾರವನ್ನು ಈ ಹತ್ತು ವರ್ಷಗಳಿಂದ ನಡೆಸಿಕೊಡುತ್ತ ಬಂದದ್ದು ಆಚಾರ್ಯರು. ವಿಷ್ಣುಮೂರ್ತಿಯನ್ನು ದತ್ತಿಗೆ ಪಡೆದುಕೊಂಡ ನರಸಿಂಹಭಟ್ಟರು ಸತ್ತಮೇಲೆ ಅವರ ಹೆಂಡತಿ ಸಾಕುಮಗನ ಜೊತೆಯಲ್ಲಿ ಇದ್ದು ಅವನನ್ನು ಬೆಳೆಸಿದರು.ಅವರಿಗೆ ಒಬ್ಬ ತಮ್ಮನಿದ್ದ-ಪ್ರೀತಿಯ ತಮ್ಮ. ಅವನಿಗೊಬ್ಬ ಗಂಡುಮಗುವಾದೊಡನೆ ಅವರ ಪ್ರೀತಿ ಆ ಹುಡುಗನ ಕಡೆ ಹರಿಯಿತು. ಅಷ್ಟು ಹೊತ್ತಿಗಾಗಲೇ ಮೈನರ್ ಅವಸ್ಥೆ ದಾಟಿದ್ದ ವಿಷ್ಣುಮೂರ್ತಿಗೆ ಅವನ ತಂದೆತಾಯಿಯರು ಆಸ್ತಿಯ ಬಗ್ಗೆ ಎಚ್ಚರಿಕೆ ಹೇಳಿ ಬಂಗಾರವನ್ನಿಟ್ಟಿದ್ದ ತಿಜೋರಿಗೆ ಇನ್ನೊಂದು ಬಲವಾದ ಬೀಗ ಹಾಕಿಸಿದರು. ಅಲ್ಲಿಂದ ಶುರುವಾಯ್ತು ವ್ಯಾಜ್ಯ. ವಿಷ್ಣುಮೂರ್ತಿ ಹೊಡೆದು ಬಡಿದು ಸಾಕುತಾಯಿಯನ್ನು ಮನೆಯಿಂದ ಅಟ್ಟಿದ. ಆಕೆ ಈತ ನಿಜವಾಗಿಯೂ ತನ್ನ ದತ್ತಲ್ಲ., ಆ ಬಗ್ಗೆ ಆದ ರಿಕಾರ್ಡುಗಳು ನಿಜವಲ್ಲ, ತನ್ನ ಆಸ್ತಿ ತನಗೇ ಸೇರತಕ್ಕದೆಂದು ಕೇಸ್ ಹಾಕಿದರು. ತನ್ನ ತಮ್ಮನನ್ನೂ ಉಳಿದ ಬಳಗವನ್ನೂ ಸೇರಿಸಿಕೊಂಡು ಮನೆಗೆ ಧಾಳಿಯಿಟ್ಟರು. ಇಷ್ಟರಲ್ಲಿ ವಿಷ್ಣುಮೂರ್ತಿ ತಿಜೋರಿಗೆ ಸಾಕುತಾಯಿ ಹಾಕಿದ್ದ ಬೀಗ ಒಡೆಸಿ, ಅದರಲ್ಲಿದ್ದ ಬಂಗಾರವನ್ನೆಲ್ಲ ಒಂದು ಟ್ರಂಕಿಗೆ ತುಂಬಿ ಜಯತೀರ್ಥ ಆಚಾರ್ಯರ ಮನೆಯಲ್ಲಿ ತಂದಿಟ್ಟಿದ್ದ. ಜಯತೀರ್ಥ ಆಚಾರ್ಯರು ಲಾಯರನ್ನು ಇಡಿಸಿ ಹೆಜ್ಜೆ ಹೆಜ್ಜೆಗೂ ಏನು ಮಾಡತಕ್ಕದೆಂದು ವಿಷ್ಣುಮೂರ್ತಿಗೆ ದಾರಿತೋರಿಸುವವರಾಗಿದ್ದರು. ಆಚಾರ್ಯರ ಮನೆಗೆ ವರ್ಷಕ್ಕೊಮ್ಮೆ ಬೇಕಾದ ಅಕ್ಕಿ ವಿಷ್ಣುಮೂರ್ತಿಯಿಂದ ಸರಬರಾಜಾಗುತ್ತಿತ್ತು. +ವಿಷ್ಣುಮೂರ್ತಿ ಎಲ್ಲರಿಗೂ ತಿಳಿದಂತೆ ಮಹಾ ಮಿಣ್ಣನೆಯ ಮನುಷ್ಯ. ಸಿಲ್ಕ್‌ನ ಅಂಗಿ, ಗ್ಯಾಬರ್‌ಡೀನ್ ಕೋಟು, ಅಡ್ಡ ಉಟ್ಟ ಮಲ್ಲಿನ ಬಿಳಿ ಪಂಚೆ, ತಲೆಮೇಲೊಂದು ಕಪ್ಪು ಟೊಪ್ಪಿ ಧರಿಸಿ ನಾಜೂಕಾಗಿ ಬರುತ್ತಿದ್ದ ವಿಷ್ಣುಮೂರ್ತಿಯನ್ನು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮ ಬಹು ಗೌರವದಿಂದ ಉಪಚರಿಸುವುದು. ಎಲ್ಲರಿಗೂ ಅನ್ನ ಕಾಣಿಸುತ್ತಿದ್ದ ಮನುಷ್ಯನಲ್ಲವೆ? ಆದರೆ ವಿಷ್ಣುಮೂರ್ತಿಯ ಸ್ವಾರ್ಥ ಕ್ರೌರ್ಯಗಳು ಆಚಾರ್ಯರಿಗೆ ಗೊತ್ತಿರಲಿಲ್ಲವೆಂದಲ್ಲ. ಸಾಕುತಾಯಿಯನ್ನು ಹಿಂಸೆ ಮಾಡಿ ಅವನು ಹೊರಹಾಕಿದ್ದ ಬಗೆ ಅವರಿಗೆ ತಿಳಿದದ್ದೇ. ಆದರೆ ಅಲ್ಲೊಂದು ಕಾನೂನಿನ ಪಾಯಿಂಟನ್ನೂ ಸಾಕುತಾಯಿಯ ಮೋಸವನ್ನೂ ಕಂಡಿದ್ದ ಆಚಾರ್ಯರು ಅದನ್ನು ಕಾನೂನು ಬಾಹಿರವೆಂದು ತಿಳಿದಿರಲಿಲ್ಲ. ಎಲ್ಲ ನೈತಿಕ ಮೌಲ್ಯಗಳನ್ನೂ ಕಾನೂನಿನ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದ ಅಪ್ಪನಿಗೆ ವಿಷ್ಣುಮೂರ್ತಿಯ ಒಂದು ಕ್ರಿಯೆ ಮಾತ್ರ ಬಹಳ ಧರ್ಮಸಂಕಟವನ್ನುಂಟುಮಾಡಿತ್ತು. +ವೆಂಕಟಪ್ಪನಾಯಕ ಎನ್ನುವ ಹಳೇ ಪೈಕದವನೊಬ್ಬ ವಿಷ್ಣೂಮೂರ್ತಿಯವಿಷ್ಣುಮೂರ್ತಿಯ ಹತ್ತಿರ ಕೆಲಸಕ್ಕಿದ್ದ. ಕಟ್ಟುಮಸ್ತಾದ ಕರಿಮೈಕಟ್ಟಿನ ಆಳು. ವಿಷ್ಣೂಮೂರ್ತಿವಿಷ್ಣುಮೂರ್ತಿಗೆ ಆಪ್ತ ಬೇರೆಯಾದ್ದರಿಂದ ಮನೆಯ ಒಳಗುಟ್ಟೆಲ್ಲ ಬಲ್ಲವ. ಸಾಹುಕಾರರ ಕಮಾನುಗಾಡಿಯನ್ನು ಹೊಡೆಯುವ ಕೆಲಸ ಅವನದ್ದು. ಅದರ ಎತ್ತುಗಳೆಂದರೆ ವಿಷ್ಣುಮೂರ್ತಿಗೆ ತುಂಬ ಜಂಬ. ಅಷ್ಟು ಎತ್ತರ, ಅಷ್ಟು ಲಕ್ಷಣ ಅವು. ನಂಬಿಕೆಯ ಆಳೆಂದು ಅವನಿಗೆ ವಿಷ್ಣುಮೂರ್ತಿ ತನಗೆ ಸೇರಿದ ಗದ್ದೆಯಲ್ಲಿ ಎರಡೆಕರೆಯನ್ನು ಬಿಟ್ಟುಕೊಟ್ಟಿದ್ದ- ಚಾಲಗೇಣಿಗೆ. +ಈ ವೆಂಕಪ್ಪನಾಯ್ಕನಿಗೆ ವಿಷ್ಣುಮೂರ್ತಿಯ ಹೆಂಡತಿಯ ತಂಗಿಯ ಮೇಲೆ ಮನಸಾಯಿತೋ, ಅಥವಾ ವಿಧವೆಯಾಗಿ ಅಕ್ಕನ ಮನೆಗೆ ಬಾಣಂತನ ಮಾಡಲು ಬಂದ ಮೈಕೈತುಂಬಿಕೊಂಡ ಈ ಹುಡುಗಿಗೇ ಅವನ ಮೇಲೆ ಮನಸಾಯಿತೋ- ಈಗ ಹೇಳುವವರು ಉಳಿದಿಲ್ಲ. ವಿಧವೆ ಬಸುರಾದಳು, ವೆಂಕಪ್ಪನಾಯಕನ ಕೊಲೆಯಾಯಿತು. ಬಸುರು ತೆಗೆಸಿಕೊಂಡ ವಿಧವೆ ಬಾಯಿ ಮುಚ್ಚಿಕೊಂಡಿದ್ದಳು. ಕೊಲೆಯಾದ್ದು ಹೀಗೆ-ವೆಂಕಪ್ಪನಾಯಕನಿಗೆ ಚಿಕ್ಕಂದಿನಿಂದ ವೈರಿಯಾಗಿದ್ದ ಅವನ ದಾಯಾದಿಯೊಬ್ಬ ಕಾಡಿನಲ್ಲಿ ಅವನನ್ನು ಸಿಗಿದು ಹೂಳಿಬಂದ. ಕೇಸಾಯಿತು. ವಿಷ್ಣುಮೂರ್ತಿಯ ಬಗ್ಗೆಯೂ ಗುಮಾನಿ ಬಂತು. ವಿಷ್ಣುಮೂರ್ತಿ ಆಚಾರ್ಯರ ಕೈಕಾಲು ಕಟ್ಟಿಕೊಂಡ. ಸುದ್ದಿ ಆಚಾರ್ಯರ ಕಿವಿಯನ್ನೂ ತಲ್ಪಿತ್ತು. ಅದರಿಂದ ಅವರಿಗೆ ಧರ್ಮಸಂಕಟವಾಗಿದ್ದರೂ ವಿಷ್ಣುಮೂರ್ತಿಯನ್ನವರು ಸತ್ಯಕ್ಕಾಗಿ ಒತ್ತಾಯಪಡಿಸಲಿಲ್ಲ. ತನಗೇನೂ ತಿಳಿಯದೆಂದೂ, ತಾನು ನಿರಪರಾಧಿಯೆಂದೂ, ಕೊಲೆಮಾಡಿದ ದಾಯಾದಿಯನ್ನು ವೆಂಕಪ್ಪನಾಯಕ ಮೊದಲು ಹೊಡೆಯಲು ಹೋದದ್ದೆಂದೂ, ಅವನ ಮೈಮೇಲೆ ಗಾಯಗಳಾಗಿವೆಯೆಂದೂ, ಆತ್ಮರಕ್ಷಣೆಗಾಗಿ ಈ ಕೊಲೆ ಸಂಭವಿಸಿದ್ದೆಂದೂ ವಿಷ್ಣುಮೂರ್ತಿ ಹೇಳಿದ್ದನ್ನು ಪ್ರಯತ್ನಪಟ್ಟು ನಂಬಿಯೇ ಬಿಟ್ಟರು. ಬೇರೆಯವರು ನಂಬುವಂತೆಯೂ ದಾಯಾದಿಗಳಿಗೆ ಹಿಂದಿನಿಂದಿದ್ದ ಜಗಳಗಳ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ತಯಾರುಮಾಡಿ, ಒಬ್ಬ ಅತ್ಯುತ್ತಮ ಕ್ರಿಮಿನಲ್ ಲಾಯರನ್ನು ಗೊತ್ತು ಮಾಡಿ ವಿಷ್ಣುಮೂರ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಅಂತೂ ಕೇಸನ್ನು ಗೆಲ್ಲಿಸಿಕೊಟ್ಟರು. ವಿಷ್ಣುಮೂರ್ತಿ ನಿರಪರಾಧಿಯೆಂದೂ, ದಾಯಾದಿ ಆತ್ಮರಕ್ಷಣೆಗೆ ಕೊಲೆ ಮಾಡಿದ್ದೆಂದೂ, ಹೆಣ ಹುಗಿದು ಮುಚ್ಚಿಟ್ಟಿದ್ದು ಭಯದಿಂದ ಎಂದೂ ಕೋರ್ಟಲ್ಲಿ ಪ್ರೂವಾಯ್ತು. ಇಸ್ಟೆಲ್ಲಇಷ್ಟೆಲ್ಲ ಆದಮೇಲೆ ಮಗನ ಹತ್ತಿರ ಮಾತ್ರ ಆಚಾರ್ಯರು ಗುಟ್ಟಾಗಿ ಹೇಳಿದ್ದರು: “ನರಕಾಂತ ಇದ್ದರೆ ಈ ವಿಷ್ಣು ಅದರಲ್ಲಿ ಸತ್ತಮೇಲೆ ನರಳ್ತಾನೆ ಕಣಯ್ಯಾ ಕಿಟ್ಟು. ಮಹಾ ಕ್ರೂರ ಮನುಷ್ಯ.” +“ಆದರೆ ನೀವೇ ಅವರನ್ನು ಬಚಾವು ಮಾಡಿಸಿದಿರಲ್ಲ” “ಛೇ- ಅದು ಕಾನೂನಿಗೆ ಬಿಟ್ಟಾದ್ದು.ಬಿಟ್ಟಿದ್ದು. ಕಾನೂನಿನ ಪ್ರಕಾರ ಒಬ್ಬ ಗಿಲ್ಟಿಯಾದ ಮನುಷ್ಯ ತಪ್ಪಿಸಿಕೊಂಡರೂ ಚಿಂತೆಯಿಲ್ಲ. ಆದರೆ ಒಬ್ಬ ಇನ್ನೋಸೆಂಟ್ ಸಫರ್ ಆಗಕೂಡದು. ಪೋಲೀಸ್ ಕೇಸ್ ತುಂಬ ವೀಕಾಗಿತ್ತು. ಅದಕ್ಕೇ ವಿಷ್ಣು ಬಚಾವಾದ.” +ಅಪ್ಪ ಈ ಮಾತುಗಳನ್ನು ಪ್ರಾಮಾಣಿಕವಾಗಿಯೇ ಆಡಿದ್ದರು. ಇದರಿಂದ ಕೃಷ್ಣಮೂರ್ತಿ ಆಶ್ಚರ್ಯಪಟ್ಟಿದ್ದ-ಕಾನೂನಿಗೆ ಅಪ್ಪ ಕೊಟ್ಟಿದ್ದ ಪ್ರಾಶಸ್ತ್ಯ ಕಂಡು. ಯಾವ ನೈತಿಕ ಪ್ರಶ್ನೆಯೂ ಬಾಧಿಸದಂತೆ ಕಾನೂನು ಅವರಿಗೆ ವಜ್ರಕವಚವಾಗಿದ್ದಿರಬಹುದು- ಪ್ರಾಯಶಃ ಸಾಯುವ ತನಕ? ತಾನು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಡುತ್ತಿದ್ದ ಕೆಲಸದ ಬಗ್ಗೆಯೂ ನಾಯರ್ ಇದೇ ಬಗೆಯ ಅಭಿಪ್ರಾಯದ ಮಾತಾಡಿದ್ದ. ಇಂಥ ವಾದ ಕೂಡ-ಸೋಶಿಯಲ್ ಸೈನ್ಸ್ ರಿಸರ್ಚ್ ವ್ಯಾಲೂವ್ಯಾಲ್ಯೂ ಫ್ರೀಯಾಗಲು ಸಾಧ್ಯವೆ ಇತ್ಯಾದಿ- ಕೃಷ್ಣಮೂರ್ತಿಗೇನೂ ಹೊಸದಲ್ಲ. ಆದರೆ ದಿಗಿಲಾಗುತ್ತದೆ-ಶ್ರೀಮಂತರ ಚಾಕರಿಯಲ್ಲಿ ಸತ್ತ ಅಪ್ಪನನ್ನು ನೆನೆದರೆ. +ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ. ವಿಷ್ಣುಮೂರ್ತಿಯನ್ನು ದತ್ತು ತೆಗೆದುಕೊಂಡ ಪ್ರಶ್ನೆ ಇನ್ನೂ ಬಗೆಹರಿದಿರಲಿಲ್ಲ. ಹೈಕೋರ್ತಿನೆದುರುಹೈಕೋರ್ಟಿನೆದುರು ಕೇಸಿತ್ತು. ಈ ಮಧ್ಯೆ ದತ್ತಿನ ಮೂಲಕ ಬಂದ ಅವನ ಜಮೀನಿನ ಬಗ್ಗೆಯೂ ಹೊಸ ಗೇಣಿ ಶಾಸನಗಳಿಂದ ಅನೇಕ ಸಂದಿಗ್ಧಗಳು ಎದ್ದಿದ್ದವು. ಒಳ್ಳೆ ಫಲಕೊಡುವ ತೋಟವೊಂದನ್ನು ಅವನ ಸಾಕುತಾಯಿಯ ತಮ್ಮ ಗೇಣಿಗೆ ಹಿಡಿದಿದ್ದ. ಅದನ್ನು ಅವನಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ವಿಷ್ಣುಮೂರ್ತಿಯ ಪುಂಡಾಟಗಳಿಗೆ ನೂರರಷ್ಟು ಹೆಚ್ಚಿನ ಗುಂಡಾಗಿರಿ ಈ ತಮ್ಮನದು. ಈ ಮಧ್ಯೆ ವಿಷ್ಣುಮೂರ್ತಿ ಕಾಪಾಡಲೆಂದು ಸುಮಾರು ಒಂದು ಲಕ್ಷ ಬೆಲೆಬಾಳುವ ನಗನಾಣ್ಯಗಳನ್ನು ಆಚಾರ್ಯರಲ್ಲಿ ಬಚ್ಚಿಟ್ಟಿದ್ದನೆಂದು ಹೇಳಿದೆಯಷ್ಟೆ. ಆಚಾರ್ಯರಿಗೆ ಆರೋಗ್ಯವಿಲ್ಲೆಂದು ತಿಳಿದಿದ್ದೇ ವಿಷ್ಣುಮೂರ್ತಿಗೆ ಈ ನಗನಾಣ್ಯಗಳ ಬಗ್ಗೆ ಕಾತರ ಉಂಟಾಗಿರಬೇಕು. ಸಿಲ್ಕ್ ಅಂಗಿ, ಗ್ಯಾಬರ್ಡಿನ್ ಕೋಟ್, ಮಲ್ ಪಂಚೆಯುಟ್ಟು ಬಂಗಾರದಿಂದ ಕಟ್ಟಿದ ಹಲ್ಲುಗಳನ್ನು ತೋರಿಸುತ್ತ, ಆರೋಗ್ಯ ವಿಚಾರಿಸಿಕೊಳ್ಳುತ್ತ ಕೂತ ವಿಷ್ಣುಮೂರ್ತಿಗೆ ಮುಖಕ್ಕೆ ಮುಖ ಕೊಡದೆ ಅಪ್ಪ ಹೂ ಹೂ ಎಂದಷ್ಟೆ ಉತ್ತರ ಹೇಳಿದ್ದರು. ತಾಯಿ ರುಕ್ಮಿಣಿಯಮ್ಮ ಬೆಳ್ಳಿ ಬಟ್ಟಲಲ್ಲಿ ಸ್ಪೆಶಲ್ ಆಗಿ ಮಾಡಿ ತಂದುಕೊಟ್ಟ ಬಿಸಿ ಬಿಸಿ ಕಾಫಿಯನ್ನು ಉತ್ತರೀಯದಿಂದ ಹಿಡಿದು ಹೀರುತ್ತ, “ಆಚಾರ್ಯರೆ ಶಿವಮೊಗ್ಗದಿಂದ ಡಾಕ್ಟರನ್ನು ಕರಕೊಂಡು ಬರಲ? ಮದ್ದೇನಾದರೂ ಬೇಕಿದ್ದರೆ ತಂದುಕೊಡುವೆ ಶಿವಮೊಗ್ಗದಿಂದ. ನನ್ನ ಹತ್ತಿರ ನಿಮಗೆ ದಾಕ್ಷಿಣ್ಯಬೇಡ- ಏನು?” ಎಂದು ಪೀಠಿಕೆ ಹಾಕಿದ. ಇವನು ಹಾಕುತ್ತಿರುವುದು ಪೀಠಿಕೆಯೆಂದು ಅಪ್ಪನಿಗೆ ಗೊತ್ತಾಗಿರಬೇಕು. +“ಏನು ಬಂದದ್ದು ಹೇಳು. ನನಗೆ ಮೈಯಲ್ಲಿ ನಿತ್ರಾಣ. ಹೆಚ್ಚು ಮಾತಾಡಲಾರೆ,” ಎಂದು ಬಿಗಿಯಾಗಿ ಹೇಳಿದರು. +“ಅಂಥದ್ದೇನೂ ವಿಶೇಷವಿಲ್ಲ, ಆಚಾರ್ರೆ, ನಿಮ್ಮ ಆರೋಗ್ಯ ಸರಿಯಿಲ್ಲವೆಂದು ಕೇಳಿದೆನಲ್ಲ… ಹಾಗೆಯೇ ಶಿವಮೊಗ್ಗದಲ್ಲಿ ಬ್ಯಾಂಕಲ್ಲಷ್ಟು ಕೆಲಸವಿತ್ತು. ನನ್ನ ಇವಳಿಗೆ ನೋಡಿ ಕತ್ತಿನ ಮೇಲೊಂದು ಬಾಕು ಎದ್ದಿದೆ. ಆಪರೇಶನ್ ಮಾಡಿಸಬೇಕು. ಖರ್ಚು ಈ ಕೋರ್ಟಿಗೆ ಅಲೆಯೋದರಲ್ಲಿ, ನಿಮಗೆ ಗೊತ್ತಲ್ಲ, ಕೈಯಲ್ಲಿ ನಾಲ್ಕು ಕಾಸೂ ಉಳಿದಿಲ್ಲ. ಸ್ವಲ್ಪ ನಗಾನ್ನ ತಗೊಂಡು ಹೋಗಿ ಬ್ಯಾಂಕಲ್ಲಿಟ್ಟು…” +“ಇವಳೇ” ಎಂದು ಆಚಾರ್ಯರು ಹೆಂಡತಿಯನ್ನು ಕೂಗಿದರು. ಮನೆಗೆ ಅಕ್ಕಿ ಸಪ್ಲೈ ಮಾಡುವ ವಿಷ್ಣುಮೂರ್ತಿಯನ್ನು ಯಾವಾಗಲೂ ಸಂತೋಷಪಡಿಸಲು ಪ್ರಯತ್ನಿಸುವ ಹೆಂಡತಿ ಲಗುಬಗೆಯಿಂದ ಬಂದು ಮೂಗುಬಟ್ಟನ್ನು ತಿರುವುತ್ತ ನಿಂತದ್ದು ಕಂಡು ಆಚಾರ್ಯರಿಗೆ ರೇಗಿತು. ಸಿಟ್ಟಿನ ಧ್ವನಿಯಲ್ಲಿ “ಆ ಟ್ರಂಕನ್ನು ತಂದು ಕೊಡು,” ಎಂದರು. ದೊಡ್ಡದೊಂದು ಮರದ ಪೆಟಾರಿಗೆ ಬೀಗ ಹಾಕಿ ಅದರೊಳಗೆ ಬಚ್ಚಿಟ್ಟ ಈ ಟ್ರಂಕನ್ನು ಹೊರಗೆ ತೆಗೆಯುವುದು, ಅದರ ಬೀಗವನ್ನು ವಿಷ್ಣುಮೂರ್ತಿ ಬಿಚ್ಚಿದಾಗ ಎಷ್ಟು ಬೇಡವೆಂದರೂ ನೋಡಬೇಕೆನ್ನಿಸುವ ಅದರ ಒಳಗಿನ ಬಂಗಾರದ ನಗನಾಣ್ಯಗಳ ಮೇಲೆ ಕಣ್ಣುಹಾಯಿಸುವುದು ರುಕ್ಮಿಣಿಯಮ್ಮನಿಗೊಂದು ಹಬ್ಬವಿದ್ದಂತೆ. ಕೈಯಲ್ಲೆರಡು ಬಳೆ ತಾಳಿಗಳ ಹೊರತಾಗಿ ಬೇರೇನೂ ಬಂಗಾರ ಉಳಿಸಿಕೊಳ್ಳಲಾರದೆ ಹೋದ ಅವಳಿಗೆ ಈ ಟ್ರಂಕು ತನ್ನ ಸುಫರ್ದಿನಲ್ಲಿದೆಯೆಂಬುದೇ ಒಂದು ಹೆಮ್ಮೆಯ ಸಂಗತಿ. +“ಇಲ್ಲಿ ತರೋದು ಬೇಡ, ನಾನೇ ಬರ್ತೇನೆ?” ಎಂದು ವಿಷ್ಣುಮೂರ್ತಿ ಎದ್ದು ನಿಂತ. +“ವಿಷ್ಣು, ನನಗೆ ಖಾಹಿಲೆ ನೋಡು, ಹೇಗೋ ಏನೋ ಹೇಳಕ್ಕೆ ಆಗಲ್ಲ. ಆ ಟ್ರಂಕನ್ನ ತಗೊಂಡು ಹೋಗು. ಪ್ರತಿವರ್ಷ ಇನ್ನು ಮುಂದೆ ನೀನು ಅಕ್ಕಿ ಕಳಿಸೋದು ಬೇಡ. ಆರೋಗ್ಯವಾದ ಮೇಲೆ ನಾವೆಲ್ಲ ದೆಹಲೀಲಿ ಮಗನ ಜೊತೆ ಹೋಗಿರುತ್ತೀವಿ.” +ಆಚಾರ್ಯರ ಕಟುಧ್ವನಿ ಕೇಳಿ ವಿಷ್ಣುಮೂರ್ತಿ, +“ಛೆ ಛೆ ಆಚಾರ್ಯರೆ ಹಾಗೆಲ್ಲ ನೀವು ಅನ್ನಬಾರದು. ನನ್ನ ತಂದೆ ಸಮಾನ ನೀವು..” ಎಂದ. “ದುಡ್ಡಿನ ವಿಷಯಕ್ಕೆ ಬಂದಾಗ ನೋಡು ವಿಷ್ಣು. ಅಪ್ಪನೂ ಇಲ್ಲ, ಅಮ್ಮನೂ ಇಲ್ಲ, ಮಗನೂ ಇಲ್ಲ. ಹಣವಂತರಿಗಾಗಿ ನಡೆಸಿದ ಚಾಕರಿ ಜೀವನ ನನಗೆ ಸಾಕುಸಾಕಾಗಿದೆ.” +ಎಂದು ಆಚಾರ್ಯರು ಹೇಳಿ ಇನ್ನು ಹೆಚ್ಚು ಮಾತು ಬೇಕಿಲ್ಲವೆನ್ನುವಂತೆ ಕಣ್ಣು ಮುಚ್ಚಿ ಮಗ್ಗುಲಾದರು. +ವಿಷ್ಣುಮೂರ್ತಿ ಟ್ರಂಕಿನ ಸುತ್ತ ಒಂದು ಕಂಬಳಿ ಸುತ್ತಿ ಮೂಟೆಯಂತೆ ಕಟ್ಟಿಸಿಕೊಂಡು, ಇನ್ನೊಂದೂ ಮಾತಾಡದೆ ಕಾರಿನ ಬೂಟಿನಲ್ಲದನ್ನು ಇಟ್ಟುಕೊಂಡು ಕಳ್ಳನಂತೆ ಹೊರಟುಹೋದ. +* +* +* +ವಾರಿಯರ್ ಕೊಲೆಯತ್ನದ ಆಪಾದನೆ ಮೇಲೆ ನಾಯರ್ ವಿಚಾರಣೆ ನಡೆಯುತ್ತಿದ್ದಾಗ ಕೃಷ್ಣಮೂರ್ತಿ ಅವನಿಗೊಂದು ಕಾಗದ ಬರೆದ. ಅದರಲ್ಲಿ ಈ ಮೇಲಿನ ಘಟನೆ ವಿವರಿಸಿ ಬರೆದಿದ್ದ: “….ಆದ್ದರಿಂದ ನನ್ನ ಅಪ್ಪನನ್ನು ಮೂರ್ಖನೆನ್ನುವುದು ಸಾಧ್ಯವಿಲ್ಲ. ಅವರೂ ಈ ಧನವಂತರ ಸಂಪರ್ಕದಿಂದ ಹೇಸಿದ್ದರು. ಆದರೂ ತುಂಬು ಜೀವನ ನಡೆಸಿ ಸತ್ತ ಅವರಿಗೆ ನಿಮ್ಮನ್ನು ಹೋಲಿಸಿದರೆ ನೀವೊಬ್ಬ ತೀರಾ ಸರಳ ಮನಸ್ಸಿನ ನಾಟಕೀಯ ವ್ಯಕ್ತಿ ಎನ್ನಿಸುತ್ತದೆ.” +ಅದಕ್ಕೆ ನಾಯರ್ ದುಂಡಗಿನ ಅಕ್ಷರಗಳಲ್ಲಿ “ಕ್ರಾಂತಿಕಾರೀ ಶುಭಾಶಯಗಳು” ಎಂದು ಇಂಗ್ಲೀಷಿನಲ್ಲಿ ಪ್ರಾರಂಭಿಸಿ ಬರೆದಿದ್ದ. +“ಶ್ರೀಮಂತರಿಂದ ಅವರ ಹಿತಕ್ಕಾಗಿ ಮಾತ್ರ ನಿಯಂತ್ರಿತವಾದ ಈ ಸಮಾಜವನ್ನು ನಾನು ಅತ್ಯಂತ ತೀವ್ರವಾಗಿ ದ್ವೇಷಿಸುತ್ತೇನೆ. ಒಂದು ಪ್ರಮುಖ ಪ್ರಸಂಗದಿಂದ ಜಾಗೃತನಾಗಿ, ಮಾರ್ಕ್ಸ್ ಹೇಳುವ ‘ಗ್ರಾಮೀಣ ಬದುಕಿನ ಈಡಿಯಸಿ’ಯಿಂದ ತಪ್ಪಿಸಿಕೊಳ್ಳಲೆಂದು ನಲವತ್ತು ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದ ನಿನ್ನ ಅಪ್ಪನ ಜೀವನದ ಸಂಭ್ರಮವನ್ನೆಲ್ಲ ನಾಶಮಾಡಿದ್ದು ಈ ಶ್ರೀಮಂತರ ಚಾಕರಿ ಅಲ್ಲವೆ? ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಪ್ರೀತಿಯ ಸಂಬಂಧಗಳು- ಈ ಎಲ್ಲವನ್ನೂ ಬಂಡವಾಳಶಾಹಿ ಪದ್ದತಿಯ ಮೂಲವಿಗ್ರಹವಾದ ಹಣ ನಾಶ ಮಾಡುತ್ತದೆ. ನನ್ನಂಥವರ ಹೋರಾಟದಿಂದ ಮಾತ್ರ ಮಾರ್ಕ್ಸ್ ಕಂಡ ಮಾರ್ಗದಲ್ಲಿ ಮನುಷ್ಯ ಮತ್ತೆ ತನ್ನ ನೈಜ ಮನುಷ್ಯತ್ವವನ್ನು ಪಡೆದಾನು. ನನ್ನ ಜೀವನವೇ ಒಂದು ವಿಚಾರವಾಗಲೆಂದು ನಾನು ಮಾಡುತ್ತಿರುವ ಕ್ರಿಯೆಗಳು ನಿನಗೆ ಬರಿಯ ನಾಟಕವಾಗಿ ಕಂಡಲ್ಲಿ ಅದಕ್ಕಿಂತ ಉತ್ತಮವಾದ್ದನ್ನು ತಿಳಿಸು. ಅದನ್ನೇ ನಾನು ಅನುಸರಿಸುತ್ತೇನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೊಬ್ಬಿದ ಹಂದಿಗಳನ್ನು ನನಗೆ ಕೊಲ್ಲಬೇಕೆನ್ನಿಸುವುದೇನೂ ಖಂಡಿತ ನಾಟಕವಲ್ಲ. ನಿನ್ನ ತಂದೆಯ ಜೀವನದಂತೆ ನಿನ್ನದೂ ವ್ಯರ್ಥ ಆಗಬಾರದೆಂದು ಆಶಿಸುತ್ತೇನೆ. ಸಾಯುವಾಗ ಬರುವ ಅರಿವಿಗೆ ನಾನು ಮಹತ್ವ ಕೊಡುವುದಿಲ್ಲ-ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆ ನನಗೆ ಮುಖ್ಯ. ಕ್ರಾಂತಿಗೆ ಜಯವಾಗಲಿ” +ನಾಯರ್ ಬರೆದ ಪ್ರಣಯ ಪ್ರಸಂಗ ಯಾವುದೆಂದು ಕೃಷ್ಣಮೂರ್ತಿಗೆ ಗೊತ್ತಿರಲಿಲ್ಲ. ಆ ಬಗ್ಗೆ ಗೊತ್ತಿದ್ದವಳೆಂದರೆ, ಆಚಾರ್ಯರ ಸಾವಿನ ದಿನಗಳಲ್ಲಿ ಅದನ್ನೇ ಕುರಿತು ಯೋಚಿಸುತ್ತಿದ್ದವಳೆಂದರೆ, ಗಂಗೂಬಾಯಿ ಮಾತ್ರ. +* +* +* +ಜಯತೀರ್ಥ ಆಚಾರ್ಯರ ಕಾಲು ಮಡಿಸಿ, ಖಾಲಿನೆಲದ ಮೇಲೆ ಮಲಗಿಸಿ, ಮೇಲೊಂದು ಕೆಳಗೊಂದು ತೆಂಗಿನಕಾಯಿ ಚಿಪ್ಪಲ್ಲಿ ದೀಪವನ್ನು ಹತ್ತಿಸಿಟ್ಟ ನಂತರ, ಗೋವಿಂದನ್ ನಾಯರ್ ಹೊರಟುಹೋದದ್ದು. ಗಂಡನ ಪಾದಗಳಿಗೆ, ನೆತ್ತಿಗೆ, ಕೊನೆಯ ಶುಶ್ರೂಷೆಯಾಗಿ ಎಣ್ಣೆಯನ್ನು ಹಚ್ಚುತ್ತ ಅಳುತ್ತ ಕೂತಿದ್ದ ರುಕ್ಮಿಣಿಯಮ್ಮನಿಗೆ ಈ ನಾಯರ್ ಹೋದದ್ದರಿಂದ ಸಮಾಧಾನವೇ ಆಯಿತೆನ್ನಬಹುದು. ಅವಳಿಗೆ ಈ ಸಾವಿನಿಂದ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ಅವರು ಮಂಡಿ ಮತ್ತು ಬ್ಯಾಂಕುಗಳಲ್ಲಿ ಎಷ್ಟು ಸಾಲ ಮಾಡಿದ್ದಾರೋ ಏನು ಕಥೆಯೋ ಯಾರಿಗೆ ಗೊತ್ತು? ಅಷ್ಟೊಂದು ಜರ್ಬಿನಿಂದ ಬದುಕಿ ಸತ್ತರು. ಇನ್ನು ಮಗ- ಅವನಿಗೆ ಕೊರಳಲ್ಲಿ ಜನಿವಾರ ಉಂಟೋ ಇಲ್ಲವೋ ತಿಳಿಯದು. ಪುರೋಹಿತರು ಏನೆಂದುಕೊಂಡಾರು? ಹೆತ್ತವರ ಮಾತುಕೇಳದೆ ಅವಳನ್ನು ಕಟ್ಟಿಕೊಂಡ- ಉತ್ತರ ದೇಶದವಳನ್ನ. ಯಾವ ಜಾತಿಯೋ ಯಾವ ಭಾಷೆಯೋ. ಆ ಕೊರಗಿನಲ್ಲೇ ಅರ್ಧ ಇವರು ಸತ್ತದ್ದು. ಅವನಿಗಾಗಲೀ ಅವಳಿಗಾಗಲೀ ಮಡಿ ಮೈಲಿಗೆಯೆಂದರೆ ತಿಳಿಯದು. ಸಿಟ್ಟಿನಲ್ಲಿವರು ಹೇಳಿಬಿಟ್ಟರು-ವಿಷ್ಣುಮೂರ್ತಿಗೆ, ಆದರೆ ಮಗನ ಜೊತೆ ದೆಹಲಿಯಲ್ಲಿ ಹೋಗಿ ಇರುವುದು ಸಾಧ್ಯವಿತ್ತೆ? ಅದೂ ವಿಧವೆಯಾಗಿದ್ದ ತನ್ನ ಮಗಳು ಮತ್ತು ಮೊಮ್ಮಗನನ್ನು ಒಟ್ಟಿಗೆ ಇಟ್ಟುಕೊಂಡು? ಮಗಳು ಸಾವಿತ್ರಿ ಕೈಸನ್ನೆ ಬಾಯಿಸನ್ನೆ ಮಾಡಿ ಸೊಸೆಗೆ ಮಡಿ ಮೈಲಿಗೆ ತಿಳಿಸಬೇಕು. ‘ಹೆಂಡತಿಗೆ ಬುದ್ಧಿ ಹೇಳೊ’ ಎಂದರೆ ಕೃಷ್ಣಮೂರ್ತಿ ರೇಗುವನು. ಈ ಮಧ್ಯೆ ಶನಿಯಂತೆ ಶಿವಮೊಗ್ಗದಿಂದ ಈ ವಯ್ಯಾರಿ ಗಂಗೂಬಾಯಿ ಬೇರೆ ವಕ್ಕರಿಸಿದ್ದಾಳೆ. ಸತ್ತವರ ಮುಖದರ್ಶನಕ್ಕೆ ಬಂದವರೂ ಅವಳನ್ನು ಕುತೂಹಲದಿಂದ ನೋಡುತ್ತಾರೆ. +ವಿಷ್ಣುಮೂರ್ತಿ ಕಾರಿನಿಂದಿಳಿದು ಬಂದದ್ದು ರುಕ್ಮಿಣಿಯಮ್ಮನಿಗೆ ಹಗುರೆನ್ನಿಸಿತು. ಇವರು ಸಾಯುವ ಮುಂಚೆ ಅವನ ಮೇಲೆ ರೇಗಿದ್ದರೂ ಅವನು ಈ ವಿಶೇಷ ಖರ್ಚುಗಳ ಹೊತ್ತಲ್ಲಿ ತನ್ನ ಕೈಬಿಡಲಾರ. ಮೈಮೇಲೊಂದು ಬಿಳಿಯ ಶಲ್ಯ ಹೊದ್ದು ಬಂದ ವಿಷ್ಣುಮೂರ್ತಿ ಕೈಗಳನ್ನು ಕಟ್ಟಿಕೊಂಡು ಮೂಲೆಯಲ್ಲಿ ನಿಂತ. ಅವನ ಸರೀಕರಾರೂ ಇನ್ನೂ ಬಾರದಿದ್ದನ್ನು ಕಂಡು ಅಳುವಿನ ಧ್ವನಿಯಲ್ಲಿ ಕೃಷ್ಣಮೂರ್ತಿಗೆ ಹೇಳಿದ: +“ನಿಮ್ಮ ತಂದೆಯ ಸಮಾನರು ಈ ಪ್ರಾಂತದಲ್ಲಿ ಯಾರೂ ಇಲ್ಲ, ಮಹರಾಯರೆ, ಅವರಿಗೆ ಗೊತ್ತಿಲ್ಲದ ಕಾನೂನು ಇರಲಿಲ್ಲ. ಅವರೊಬ್ಬರಿಂದ ಈ ಪ್ರಾಂತದ ನನ್ನಂಥವರು ಈ ಕೆಟ್ಟ ಕಾಲದಲ್ಲಿ ಅಷ್ಟಿಷ್ಟು ಜಮೀನು ಮನೆ ಉಳಿಸಿಕೊಂಡು ಹೀಗೆ ಮರ್ಯಾದೇಂತ ಬದುಕೋದು ಸಾಧ್ಯವಾದ್ದು. ಮೊನ್ನೆ ನಾನು ಬಂದಾಗ ಮಾರಾಯರೇ ಹೀಗಾಗತ್ತೆ ಅಂತ ಕನಸುಮನಸಲ್ಲಿ ನಾನು ತಿಳಿದಿರಲಿಲ್ಲ. ಆಯಿತ? ನಮ್ಮನ್ನೆಲ್ಲ ಪರದೇಶಿ ಮಾಡಿ ಹೋಗಿಬಿಟ್ಟರು- ಪುಣ್ಯಾತ್ಮರು.” +ಕೊನೆಯ ಮಾತಿನಿಂದಾಗಿ ರುಕ್ಮಿಣಿಯಮ್ಮನಿಗೆ ದುಃಖ ಉಮ್ಮಳಿಸಿ ಬಂತು. ಮಗಳು ಸಾವಿತ್ರಿ ಬಂದು ಅವಳನ್ನು ಎಬ್ಬಿಸಿಕೊಂಡು ಹೋದಳು. ಸಂತೈಸಲೆಂದು ವಿಷ್ಣುಮೂರ್ತಿಯೂ ಒಳಗೆ ಹೋದ. ಮುಖದರ್ಶನಕ್ಕೆ ಬಂದಿದ್ದ ಸುತ್ತಮುತ್ತಲಿನ ಹಳ್ಳಿಯವರು ಒಂದು ಚೂರೂ ಅಳದೆ ಗಂಭೀರವಾಗಿ ನಿಂತಿದ್ದ ಕೃಷ್ಣಮೂರ್ತಿಗೆ ಏನು ಸಂತೈಕೆ ಹೇಳಬೇಕು ತಿಳಿಯದೆ ನಿಂತಿದ್ದರು. +ಶಾಂತವಾಗಿ ಮಲಗಿದ್ದಂತೆ ಕಂಡ ಅಪ್ಪನಿಗೆ ಈ ಶೋಕ ಪ್ರದರ್ಶನದಿಂದ ಅವಮಾನವೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತಿತ್ತು. ಅಪ್ಪ ಅತ್ತಿದ್ದನ್ನು ಅವನು ಕಂಡದ್ದಿಲ್ಲ. ಸ್ವಾಭಿಮಾನಿಯಾಗಿ ಅವರು ಬದುಕಿದ್ದು., ಸತ್ತದ್ದು. ನಾಯರ್ ಇಂಥದನ್ನು ನೋಡಲು ಇಷ್ಟಪಡದೇ ಹೋದದ್ದಿರಬೇಕು. ಅಪ್ಪನ ಪ್ರೀತಿಯ ಕ್ರಮ ಅವನಿಗೂ ಗೊತ್ತಿರಬಹುದು. ತಾನು ಮೈಸೂರಲ್ಲಿ ಓದುತ್ತಿದ್ದಾಗ ಒಮ್ಮೆ ಜೋರು ಗಂಟಲು ನೋವಾಗಿ ಮಾತೇ ನಿಂತು ಹೋಗಿ ಜ್ವರ ಬಂತು. ರೂಮಿನಲ್ಲಿ ಒಬ್ಬನೇ. ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಅಪ್ಪ ಹಾಜರಾದರು. ಅವರ ಕಪ್ಪು ವ್ಯಾಸಕೋಟಿನ ಜೇಬಲ್ಲಿ ಹೊಸದಾಗಿ ಕೊಂಡು ತಂದ ಥರ್ಮಾಮೀಟರು. “ನಿನಗೆ ಜ್ವರ ಬಂದಿರಬಹುದೆಂದು ಯಾಕೋ ಇದ್ದಕ್ಕಿದ್ದಂತೆ ಅನ್ನಿಸಿತು. ಸೀದಾ ಥರ್ಮಾಮೀಟರನ್ನು ಕೊಂಡುಕೊಂಡು ಬಂದುಬಿಟ್ಟೆ ನೋಡು.” ಎಂದು ಪಕ್ಕದಲ್ಲಿ ಕೂತು ಥರ್ಮಾಮೀಟರನ್ನು ಬಾಯಲ್ಲಿಟ್ಟರು. ಎರಡು ದಿನವಿದ್ದು ಶುಶ್ರೂಷೆ ಮಾಡಿದರು. ಮುಸಂಬಿಯಮೂಸಂಬಿಯ ತೊಳೆ ಬಿಡಿಸಿಕೊಡುತ್ತ, ಅವರಿಗೆ ಪ್ರಿಯವಾಗಿದ್ದ ಅಸ್ಟ್ರಾನಮಿಯ ಬಗ್ಗೆ ಮಾತಾಡುತ್ತ ತನ್ನ ಆಯಾಸವನ್ನು ಹಗುರ ಮಾಡಿದ್ದರು. +ಈ ಅಸ್ಟ್ರಾನಮಿಯ ನಡುವೆ ಆಸ್ತಿಗೆ ಸಂಬಂಧಿಸಿದ ಕಾನೂನುಗಳ ಸೂಕ್ಷ್ಮರೂಪವನ್ನು‌ಊಸೂಕ್ಷ್ಮರೂಪವನ್ನು ತನಗವರು ಹೇಳಬೇಕು. ಈ ಕಾನೂನು ಪ್ರಪಂಚವೂ ಆಕಾಶದ ನಕ್ಷತ್ರಲೋಕದಷ್ಟೇ ಅವರಿಗೆ ಸೋಜಿಗವಾಗಿ ಕಾಣುತ್ತಿದ್ದುದು ಕೃಷ್ಣಮೂರ್ತಿಗೆ ವಿಪರ್ಯಾಸವೆಂದು ಯಾವಾಗಲೂ ಅನ್ನಿಸುತ್ತಿತ್ತು. ಹಳ್ಳಿಯ ಸಾಹುಕಾರರ ದಯೆಯ ಮೇಲೆ ಬದುಕುತ್ತಿದ್ದ ಅವರಿಗೆ ಸ್ವತಃ ದುಡ್ಡಿನ ಮೇಲೇನೂ ಆಸೆಯಿದ್ದಿರಲಿಲ್ಲ. ಆದರೆ ಉಳಿದವರ ಆಸ್ತಿಯನ್ನು ಉಳಿಸುವುದೊಂದು ಜೀವನ ತನಗೊಡ್ಡಿದ ದೊಡ್ಡ ಸವಾಲು ಎಂಬಂತೆ ತಿಳಿದ ಅಪ್ಪ ನಾಯರ್ ಹೇಳಿದಂತೆ ಮೂರ್ಖನೇ ಇರಬೇಕು ಅನ್ನಿಸುತ್ತದೆ. +ತನ್ನ ಮದುವೆ ಅವರಿಗೆ ದೊಡ್ಡ ಆಘಾತವೇ ಆಗಿರಬೇಕು. ಮದುವೆಗೆ ಮುಂಚೆ ದೇವ ಋಣ ಪಿತೃ‌ಋಣಗಳ ಮಾತೆತ್ತಿದರು. ಯಾವತ್ತೂ ತನ್ನ ಭಾವನೆಗಳನ್ನು ಹೇಳಿಕೊಳ್ಳದವರು “ನನ್ನ ಶ್ರಾದ್ಧ ಮಾಡಲು ಇಷ್ಟವಿಲ್ಲದಿದ್ದರಿಂದ ನೀನು ಹೀಗೆ ಜಾತಿಯ ಹೊರಗೆ ಮದುವೆಯಾಗುತ್ತಿರೋದು” ಎಂದು ಗುಡುಗಿ ಬರೆದರು. ಆಮೇಲೆ ತಾನು ಕಳಿಸುತ್ತಿದ್ದ ಹಣವನ್ನವರು ಮುಟ್ಟುತ್ತಿರಲಿಲ್ಲವಾದ್ದರಿಂದ ತಾಯಿಗೆ ಮನಿಯಾರ್ಡರ್ ಕಳಿಸಲು ಪ್ರಾರಂಭಿಸಿದ. ಮೊಮ್ಮಗ ಹುಟ್ಟಿದ ಮೇಲೆ ಮಗನನ್ನೂ ಸೊಸೆಯನ್ನೂ ಕರೆಸಿಕೊಂಡು ಎಲ್ಲವನ್ನೂ ಮರೆತವರಂತೆ ವ್ಯವಹರಿಸಿದರು. ಸಾಯುವ ಮುಂಚೆ ವಿಷ್ಣುಮೂರ್ತಿ ಹತ್ತಿರ ತಾನು ದೆಹಲಿಯಲ್ಲಿ ಹೋಗಿ ಇರುತ್ತೇನೆ ಎಂದದ್ದು, ನಾಯರ್‌ನನ್ನು ಕರೆಸಿಕೊಂಡದ್ದು, ಗಂಗೂಬಾಯಿಯನ್ನು ಮನೆಯವಳಂತೆಯೇ ಒಪ್ಪಿಕೊಂಡದ್ದು ನೋಡಿದರೆ ತನ್ನ ಮದುವೆಯ ಕಹಿಯನ್ನವರು ಸಂಪೂರ್ಣ ಜೀರ್ಣಿಸಿಕೊಂಡರೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತದೆ. ಆದರೆ ದೆಹಲಿಯಲ್ಲಿ ತಾನು ಬಂದಿರುತ್ತೇನೆ ಎಂದು ಅಪ್ಪ ಹೇಳಿದಾಗ ಅವನಿಗೆ ಸಂತೋಷದ ಜೊತೆ ದಿಗಿಲೂ ಆಗಿತ್ತು. ಒಂದು ಸಣ್ಣ ಪ್ಲ್ಯಾಟಿನಲ್ಲಿ ಎಲ್ಲರೂ ಒಟ್ಟಿಗಿರುವುದು ಸಾಧ್ಯವೇ? ಹೆಂಡತಿ ಮೀರಾ ಇದನ್ನು ಒಪ್ಪುವಳೆ? +ಅಪ್ಪನ ಕಾಲುಬುಡದಲ್ಲಿ ಉರಿಯುತ್ತಿದ್ದ ದೀಪವನ್ನೂ, ಅಂಗಳದಲ್ಲಿ ದೆಬ್ಬೆಗಳನ್ನು ಜೋಡಿಸಿ ಕಟ್ಟುತ್ತಿದ್ದ ಚಟ್ಟವನ್ನೂ ನೋಡುತ್ತ ನಿಂತಿದ್ದ ತನ್ನ ಗಮನ ಸೆಳಯಲು ಮೀರ ಪ್ರಯತ್ನಿಸುತ್ತಿರುವುದು ಕಾಣಿಸಿತು. ಪ್ಲ್ಯಾಸ್ಟಿಕ್‌ನಲ್ಲಿ ಮಾಡಿದ ಹಳದಿ ಪಾಟ್‌ನ ಮೇಲೆ ಕಕ್ಕಸ್ಸಿಗೆ ಕೂರಲು ಚಂಡಿ ಹಿಡಿದಿದ್ದ ಮಗ ಶ್ರೀನಾಥನ ಜೊತೆ ಅವಳ ಯಥಾಪ್ರಕಾರದ ನಿತ್ಯದ ಹೋರಾಟ ನಡೆದಿತ್ತು. ಅದಕ್ಕೆ ಗಂಡನ ಸಹಾಯ ಅವಳಿಗೆ ಬೇಕಿತ್ತು. ಇಂಥ ಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವುದರಿಂದ ತಾನು ತಾಯಿಗೂ ಅಕ್ಕನಿಗೂ ಹೆಣ್ಣಿಗನಂತೆ ಕಾಣುತ್ತೇನೆಂದು ಅವನಿಗೆ ಮುಜುಗರ. ಈ ಹೊತ್ತಲ್ಲಿ ತಾನು ಶವದ ಬಳಿಯಿಂದ ಹೊರಟು ಹೋಗುವುದು ಸರಿಯೇ ತಪ್ಪೇ ತಿಳಿಯದೆ ನಿಂತೇ ಇದ್ದ. ಈ ಸೂಕ್ಷ್ಮಗಳಿಗೆ ಪರಕೀಯಳಾದ ಮೀರಾ ಮುನಿಸಿನಿಂದ ಗಂಡನನ್ನು ದುರುಗುಟ್ಟಿ ನೋಡುತ್ತ ಮಗನ ಕೈಹಿಡಿದು ಜಗ್ಗುತ್ತಿದ್ದಳು. +ಹೊರಡುವಾಗ ನಾಯರ್ ಅಪ್ಪನ ಬಗ್ಗೆ ಹೇಳಿದ್ದನ್ನೇ ಕೃಷ್ಣಮೂರ್ತಿ ಚಿಂತಿಸುತ್ತ ಚಂಡಿ ಹಿಡಿದ ಮಗನನ್ನು ಎತ್ತಿಕೊಂಡು ಅಂಗಳಕ್ಕೆ ಹೋದ. ಅಂಗಳದಲ್ಲಿ ಕಟ್ಟಿಹಾಕಿದ ಎತ್ತುಗಳು ಹುಲ್ಲನ್ನು ನಿಧಾನವಾಗಿ ಮೇಯುತ್ತ ಬುಸುಗುಟ್ಟುತ್ತಿದ್ದವು. ನಾಯಿಯೊಂದು ಬಿಸಿಲಿಗೆ ಮೈಚಾಚಿ ಮಲಗಿತ್ತು. ಅಂಗಳದಲ್ಲಿ ಅಲ್ಲಿ ಇಲ್ಲಿ ಇನ್ನೂ ತೆಗೆಯದ ಸಗಣಿ, ಅಪ್ಪ ಸತ್ತದ್ದರಿಂದ ಬೆಳಗಿನ ಯಥಾಪ್ರಕಾರದ ಗುಡಿಸುವ ಸಾರಿಸುವ ಕೆಲಸಗಳು ನಡೆದಿರಲಿಲ್ಲ. ಬಲಭಾಗಕ್ಕೆ ದೂರದಲ್ಲಿ ಕೊಟ್ಟಿಗೆ. ಕೊಟ್ಟಿಗೆಯ ಪಕ್ಕದಲ್ಲಿ ಗೊಬರ್‌ಗ್ಯಾಸ್ಗೋಬರ್‌ಗ್ಯಾಸ್ ಸಿಲೆಂಡರ್ ಅಪ್ಪನ ಅಧುನಿಕತೆಗೆ ಸಾಕ್ಷಿಯಾಗಿ ಗ್ಯಾಸ್ ತುಂಬಿ ಎದ್ದು ನಿಂತಿತ್ತು. ಇವತ್ತು ಒಲೆ ಹಚ್ಚಿಲ್ಲ. ಕೊಟ್ಟಿಗೆಯಲ್ಲಿ ದನಗಳನ್ನು ಹಾಲುಕರೆಸಿ ಬಿಟ್ಟಿರಲಿಲ್ಲವಾದ್ದರಿಂದ ಅವು ಹಗ್ಗ ಜಗ್ಗುತ್ತಿದ್ದವು. ಸಾವಿತ್ರಿಯಕ್ಕ ದನಗಳ ಕೊರಳಿನ ಕಣ್ಣಿಯನ್ನು ಕಳಚುತ್ತಿರುವುದು ಕಂಡಿತು. ಹೀಗೆ ಹಾಲು ಕರೆಸದ ದನಗಳನ್ನು ಅಮ್ಮ ಯಾವತ್ತೂ ಈ ಮನೆಯಲ್ಲಿ ಹೊರಗೆ ಬಿಟ್ಟಿದ್ದು ಇಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ದನಗಳ ಹಾಲುಕರೆದು ಹೊರಗಟ್ಟಿಯಾದ ಮೇಲೆ, ಕಲಗಚ್ಚು ಕುಡಿದು ಹುಲ್ಲು ತಿಂದಾದ ಕರುಗಳ ಮೂತಿಗೆ ಅಮ್ಮ ಮುಳ್ಳಿನ ಬುಟ್ಟಿಯನ್ನು ಕಟ್ಟುವುದು. ಈ ಕ್ರೌರ್ಯವನ್ನು ಮಗ ಪ್ರತಿಭಟಿಸಿದಾಗ ಅಮ್ಮ ನಕ್ಕು “ನಿಂಗೇನು ಗೊತ್ತು? ಪೇಟೆಮಂಗನಾಗಿದಿನೀನು. ಅವು ಹಾಲನ್ನೆಲ್ಲ ಕದ್ದುಮುಚ್ಚಿ ಕುಡಿದುಬಿಡುತ್ತವೆ. ಆ ಗೌರಿಯಂತೂ ಕಣ್ಣು ತಪ್ಪಿಸಿ ಬಂದು ಹಾಲನ್ನು ಕುಡಿಸಿಬಿಡುತ್ತೆ” ಎನ್ನುವರು. ಇವತ್ತು ಆ ಯಾವ ನಿಗವನ್ನೂ ವಹಿಸದಿದ್ದರಿಂದ ಕರುಗಳಿಗೆ ಹಬ್ಬ. +ಪ್ಲಾಸ್ಟಿಕ್ ಪಾಟಿಯನ್ನು ಕೊಳೆಯಾಗದ ಅಂಗಳದ ಮೂಲೆಯಲ್ಲಿಟ್ಟು ಒಲ್ಲದ ಮಗನನ್ನು ಬಲತ್ಕಾರವಾಗಿ ಅದರ ಮೇಲೆ ಕೂರಿಸಲು ಕೃಷ್ಣಮೂರ್ತಿ ಪ್ರಯತ್ನಿಸಿದ. ದೆಹಲಿಯ ಸಿಮೆಂಟ್ ಲೋಕದಲ್ಲಿ ಬೆಳೆದ ಮಗು ಈ ಅಂಗಳಕ್ಕೆ ಹೇಸಿಕೊಂಡಿತ್ತು. ಮೀರಾಗೂ ಈ ಮನೆಗೆ ಬರುವುದೆಂದರೆ ಮುಜುಗರ. ಅಮ್ಮನ ಮಡಿ ಮೈಲಿಗೆಗಳ ಕಾಟ ಮತ್ತು ಬಿದಿರು ಕಟ್ಟಿದ, ಬಾಗಿಲಿಲ್ಲದ ಕಕ್ಕಸ್ಸಿನಲ್ಲಿ ಕೂರುವ ಭಯಗಳೇ ಇದಕ್ಕೆ ಕಾರಣವೆನ್ನಬಹುದು. +ಮಗನಿಗೆ ಏನೇನೋ ಆಸೆ ತೋರಿಸಿ ಗದರಿಸಿ ಪಾಟಿಯ ಮೇಲೆ ಕೂರಿಸಿದ್ದಾಯಿತು. ಆಪ್ತನಾಗಿ ಸಿಕ್ಕ ಗಂಡನಿಗೆ ಏನೋ ಹೇಳಲು ಮೀರಾ ಪ್ರಯತ್ನಿಸಿರುವಂತಿತ್ತು. ಬಿಸಿಲಲ್ಲಿ ಮಲಗಿದ್ದ ನಾಯಿ ಎದ್ದು ನಿಂತಿತು. ಕೊಟ್ಟಿಗೆಯಿಂದ ಮುದಿ ದನ, ಗಂಗ, ಎತ್ತುಗಳು ತಿನ್ನುತ್ತಿದ್ದ ಒಣಹುಲ್ಲಿಗೆ ಬಾಯಿಹಾಕಲು ಬಂದಾಗ, ಎತ್ತುಗಳು ಹಾಯುವಂತೆ ಮಾಡಿ ಜಗಿಯುತ್ತಲೇ ಉಸಿರಾಡುತ್ತಿದ್ದವು. ಅಂಗಳದ ಎಡಭಾಗದಲ್ಲಿ ಚಟ್ಟಕಟ್ಟುವವರು ಹಗ್ಗದಿಂದ ಬಿದಿರುಗಳನ್ನು ಬಿಗಿಯುತ್ತಿದ್ದರು. ಮುದಿದನ ಎತ್ತುಗಳ ಕಣ್ಣುತಪ್ಪಿಸಿ, ಒಂದು ಬಾಯಿ ಹುಲ್ಲನ್ನು ಸಂಪಾದಿಸಿಕೊಂಡು ದೂರ ನಿಂತು ತಿನ್ನಲು ಶುರುಮಾಡಿತು. ಮಗ ಪಾಟಿಯಲ್ಲಿ ದಯಪಾಲಿಸುತ್ತಿದ್ದಾನೆಂಬುದನ್ನು ವಾಸನೆಯಿಂದ ಗ್ರಹಿಸಿ ಮೀರ ಒಳಗಿಂದ ಹರ್ಷಪಡುತ್ತಿರುವುದು, ಸೊಂಟದ ಮೇಲೆ ಕೈಯಿಟ್ಟು, ಬಾಬ್‌ಕೂದಲನ್ನು ಟೇಪಿನಿಂದ ಬಿಗಿದು ನಿಂತ ಅವಳ ಮುಖಭಾವದಿಂದಲೇ ತಿಳಿಯುವಂತಿತ್ತು. ಕೊಟ್ಟಿಗೆಯಿಂದ ಸಾವಿತ್ರಿಯಕ್ಕ ಕೃಷ್ಣಮೂರ್ತಿಗೆ ಕೈಸನ್ನೆ ಮಾಡಿ ಕರೆಯುತ್ತಿದ್ದಾಗ ಅವನಿಗೆ ಅನ್ನಿಸಿತು: ಹೀಗೆ ಒಂದು ಯಃಕಶ್ಚಿತ್ತಾದ ಸಾಮಾನ್ಯ ಬೆಳಿಗ್ಗೆ ತನ್ನ ಅಪ್ಪ ಸತ್ತಿರುತ್ತಾನೆ ಎಂದು ಅವನು ಎಂದೂ ಭಾವಿಸಿರಲಿಲ್ಲ. ಸಹಸ್ರಾರು ಕಾಲಿನ ಚಕ್ಕಲಿ ಹುಳ ಮಿಣ್ಣಗೆ ಕಾಲುಬುಡದ ಕಡೆ ಹರಿದು ಬರುತ್ತಿದ್ದುದನ್ನು ಕಂಡು ಪಾಟಿಯಿಂದ ಹೆದರಿ ಎದ್ದ ಮಗನನ್ನು ಮತ್ತೆ ಕುಳ್ಳಿರಿಸಿ, ಮೀರ ಕಾಲಿನ ತುದಿಯಿಂದ ಅದನ್ನು ಮುಟ್ಟಿದಳು. ಅದು ಚಕ್ಕಲಿಯಂತೆ ಸುತ್ತಿಕೊಂಡಿತು. ಕೃಷ್ಣಮೂರ್ತಿ ಅದನ್ನು ಕಡ್ಡಿಯಿಂದ ಎತ್ತಿ ಎಸೆದದ್ದರಿಂದ ಮಗನಿಗೆ ಸಮಾಧಾನವಾಯಿತು. +ನಾಯರ್ ಅಪ್ಪನ ಒಟ್ಟು ಜೀವನದ ಬಗ್ಗೆ ಹೇಳಿದ್ದು ಮತ್ತೆ ನೆನಪಾಗಿ ಕೃಷ್ಣಮೂರ್ತಿ ‘ಬಂದೆ’ ಎಂದು ಅಕ್ಕ ಕರೆಯುತ್ತಿದ್ದ ಕೊಟ್ಟಿಗೆಗೆ ಹೋಗುವಾಗ ‘ಇಲ್ಲ-ಅಪ್ಪ ಮೂರ್ಖನಾಗಿ ಸಾಯಲಿಲ್ಲ. ಹಚ್ಚಿಕೊಂಡ ಉಪದ್ವ್ಯಾಪಗಳನ್ನೆಲ್ಲ ಕೈಬಿಟ್ಟು ದೆಹಲಿಗೆ ತನ್ನ ಜೊತೆ ಬರುವ ನಿರ್ಧಾರ ಮಾಡಿದ್ದರು., ಎಂದುಕೊಂಡ. ಬರಿದಾದ ಕೊಟ್ಟಿಗೆಯಲ್ಲಿ ಮುರವನ್ನು ಬೇಯಿಸುವ ಒಲೆಯ ಹತ್ತಿರ ಅಕ್ಕ ಅವನನ್ನು ಕರೆದುಕೊಂಡು ಹೋದಳು. ಯಾರೂ ನೋಡಲಾರದ ಜಾಗಕ್ಕೆ ಅವಳು ಯಾಕೆ ತನ್ನ ಕರೆದಿರಬಹುದೆಂದು ಕುತೂಹಲದ ಜೊತೆಗೇ ಇದ್ದಕ್ಕಿದ್ದಂತೆ ಮತ್ತೊಂದು ಅನ್ನಿಸಿತು. ಅವರ ಇಷ್ಟದಂತೆ ತಾನು ಮದುವೆಯಾಗಿದ್ದಲ್ಲಿ, ಅವರು ಆಸ್ತಿವಂತರ ಚಾಕರಿಯಿಂದ ನಿವೃತ್ತರಾಗಿ ತನ್ನ ಜೊತೆ ಬಂದು ಇರುವ ಕನಸನ್ನು ಮೊದಲಿಂದ ಕಂಡಿದ್ದರು. ಜೀವನದ ಉದ್ದಕ್ಕೂ ಅವರಿಗಿದ್ದ ಆಸೆಯಾದ ಖಗೋಳಶಾಸ್ತದಖಗೋಳಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ದೆಹಲಿಯಲ್ಲಿ ಕೂತು ಓದಬೇಕೆಂದಿದ್ದರು. ಅಥವಾ ತಾಯಿಯನ್ನೂ ಅಕ್ಕನನ್ನೂ ತನಗೊಪ್ಪಿಸಿ ಗಂಗೂಬಾಯಿ ಜೊತೆ ಬದುಕಬೇಕೆಂದೂ ಅವರಿಗಿದ್ದಿರಬಹುದು. ಅವರ ಖಾಹಿಲೆ ಸುದ್ದಿ ಕೇಳಿ ಅವನು ದೆಹಲಿಯಿಂದ ಬಂದ ದಿನವೇ ಎತ್ತಲಾರದ ಕಾಲುಗಳನ್ನು ಮಡಚಿ ಗಂಗೂಬಾಯಿ ತಂದಿಟ್ಟ ದಿಂಬುಗಳಿಗೆ ಒರಗಿ, +“ಇಕೋ ಬಂದೆಯಲ್ಲ- ವಿಮಾನದಲ್ಲಿ ಬಂದಿರಬೇಕು- ತುಂಬ ಖರ್ಚಲ್ಲವ?- ಹೋಗಲಿ ಬಿಡು- ಅಂತೂ ಬಂದೆಯಲ್ಲ.” ಎಂದು ಏನೇನೋ ಬಡಬಡಿಸಿ, “ನಾಯರ್‌ಗೂ ಬರಲು ಬರೆದಿದ್ದೇನೆ ಕಣಯ್ಯ. ಈಗ ಎಷ್ಟೋ ವಾಸಿ,” ಎಂದು ತಾವು ವಾರದ ಕೆಳಗೆ ಓದಿದ ವಿಷಯವೊಂದರ ಬಗ್ಗೆ ಬೆರಗಿನಿಂದ ಮಾತಾಡಿದ್ದರು. +ಆಕಾಶದಲ್ಲಿರುವ ಕಪ್ಪುರಂದ್ರರಂಧ್ರಗಳ ಬಗ್ಗೆ. “ಇವು ನಕ್ಷತ್ರಗಳಂತಯ್ಯ, ಅಗಾಧವಾದ ನಕ್ಷತ್ರಗಳಂತೆ. ಕುಸಿಯುತ್ತಿದ್ದಾವಂತೆ. ಕುಸಿಯುವಾಗ ಅವುಗಳ ಅಪಾರ ಗುರುತ್ವಾಕರ್ಷಣ ಶಕ್ತಿಯಿಂದಾಗಿ ಬೆಖಕಿನಬೆಳಕಿನ ಒಂದೇ ಒಂದು ಕಿರಣವೂ ಹೊರಹೋಗದಂತೆ ಎಲ್ಲವನ್ನೂ ತಮ್ಮೊಳಗೆ ಹೀರುತ್ತ ಹೀರುತ್ತ ಇರುತ್ತವಂತೆ. ಈ ರಾಕ್ಷಸ ನಕ್ಷತ್ರಗಳು. ಇಲ್ಲಿ ಕಾಲ ಚಲಿಸುವುದಿಲ್ಲವಂತೆ, ಎಷ್ಟು ಅದ್ಭುತವಯ್ಯ! ನೋಡು ಕಿಟ್ಟು, ಅದಕ್ಕೇ ಹೇಳೋದು, ಶಂಕರಾಚಾರ್ಯರಂತೆ ಈ ಜಗತ್ತೇ ಸುಳ್ಳು ಎಂದವನು ಈ ಅದ್ಭುತಗಳನ್ನು ಸುಲಭವಾಗಿ ಪರಿಹರಿಸಿಕೊಂಡುಬಿಡುತ್ತಾನೆ. ಆದರೆ ನಮ್ಮ ಆನಂದತೀರ್ಥರಿಗೆ ಈ ಜಗತ್ತು ನಿಜ, ಸತ್ಯಂ ಜಗತ್, ಬೇಧಗಳೆಲ್ಲಭೇದಗಳೆಲ್ಲ ನಿಜ, ಆದ್ದರಿಂದಲೇ ಈ ಜಗತ್ತನ್ನು ಕಂಡು ಬೆರಗಾಗೋದು ಸಾಧ್ಯ. ಇದು ನಿಜವಾದ್ದರಿಂದ ಇದನ್ನು ತಿಳಿಯೋದರಲ್ಲೂ ಅರ್ಥವಿದೆ ಎಂದ ಹಾಗಾಗತ್ತೆ, ಅಬೇಧಅಭೇದ ಹೇಳಲಿಕ್ಕೆ ಹೊರಟರೆ ಆವಾಗ…” +ಅಪ್ಪ ಆ ಪಾಯಿಂಟಿಂದ ಆಸ್ತಿ ಪಾಸ್ತಿ ಸಮಾನತೆ ಇತ್ಯಾದಿಗಳ ಖಂಡನೆಗೆ, ಕಾನೂನಿನ ಪ್ರಾಮುಖ್ಯತೆಗೆ ಬಂದುಬಿಟ್ಟಿದ್ದರು. ಅಂದರೆ ಅರ್ಥ?- ಕೃಷ್ಣಮೂರ್ತಿ ಇವನ್ನೆಲ್ಲ ಯೋಚಿಸುತ್ತಿರುವಾಗ ಅಕ್ಕ ಸೀರೆಯ ಸೆರಗಿನ ಗಂಟಿನಿಂದ ಏನನ್ನೋ ಬಿಚ್ಚುತ್ತಿದ್ದವಳು, +“ಅಂಗಿ ಬಿಚ್ಚು” ಎಂದಳು. +“ಯಾಕೆ?” ಅಂದ ಕೃಷ್ಣಮೂರ್ತಿ, +“ಇದನ್ನ ಹಾಕ್ಕೊಳ್ಳಕ್ಕೆ” +ಅಕ್ಕ ತನ್ನ ಮಸಿ ಕೈಗಳಲ್ಲಿ ಹೊಸ ಜನಿವಾರವನ್ನು ತಿಕ್ಕುತ್ತಿದ್ದಳು. ಅದು ತಮ್ಮನ ಕೊರಳಲ್ಲಿ ಹಳೆಯದಂತೆ ಕಾಣಲಿ ಎಂದು. +“ನನಗೆ ಈ ನಾಟಕ ಇಷ್ಟವಿಲ್ಲ.” +“ಇಲ್ಲಾಂದರೆ ಬ್ರಾಹ್ಮಣ ಅಲ್ವ? ಅಪ್ಪನ ದಿನಕರ್ಮ ಮಾಡೋದಿಲ್ವ?” +“ಅಪ್ಪನಿಗೂ ಈ ನಾಟಕವೆಲ್ಲ ಇಷ್ಟವಾಗ್ತಿರ್ಲಿಲ್ಲ ಅಕ್ಕ, ನೋಡು ಆ ಗಂಗೂಬಾಯಿ ಜೊತೆ…” “ಅವೆಲ್ಲ ಋಣಾನುಬಂಧ. ಯಾರ ಕೈಯಿಂದಲೂ ತಪ್ಪಿಸಿಕೊಳ್ಳೊಕೆ ಆಗಲ್ಲ. +” ಅಕ್ಕ ಮರೆಯಾಗಿ ನಿಂತಿದ್ದಳು. ಕೃಷ್ಣಮೂರ್ತಿ ಅಂಗಿಯನ್ನು ಬಿಚ್ಚಿ ಜನಿವಾರವನ್ನು ಹಾಕಿಕೊಂಡ. “ಅಕ್ಕ, ಅಪ್ಪ ಸಾಯೋಕೆ ಮುಂಚೆ ಈ ಹಾಳು ಜಮೀಂದಾರ ಸೂಳೇಮಕ್ಕಳ ಚಾಕರಿಗೆ ಬೇಸತ್ತಿದ್ದರು. ಅದಕ್ಕೆ ನಾಯರನ್ನ ಕರೆಸಿಕೊಂಡರು. ಅವನು ಗೊತ್ತ- ಶ್ರೀಮಂತರನ್ನೆಲ್ಲ ಕೊಲ್ಲಬೇಕೂಂತ ಹೊರಟವನು. ಹಾಗೇನೇ ಅವರಿಗೆ ಈ ಮಡಿ ಮೈಲಿಗೇಂದರೆ ನಿಜವಾಗ್ಯೂ ನಂಬಿಕೆ ಇರಲಿಲ್ಲ. ಇದ್ದಿದ್ರೆ ಗಂಗೂಬಾಯಿ ಜೊತೆ…” +ಸಾವಿತ್ರಿಗೆ ಆ ವಿಷಯ ಮಾತಾಡಲು ಇಷ್ಟವಿರಲಿಲ್ಲ. +“ಇವೆಲ್ಲ ನಮ್ಮ ಕೈಯಲ್ಲಿರೋದೂಂತ ನೀನು ಹೇಳ್ತಿರೋದ? ಋಣಾನುಬಂಧ ಬಡಲ್ಲಾಂತ ಅದಕ್ಕೇ ನಾನು ಹೇಳೋದು. ಈಗ ನೀನು ಮದುವೆಯಾದದ್ದೇ ನೋಡು, ನಮ್ಮ ಮೇಲೆಲ್ಲ ಎಷ್ಟೊಂದು ಜೋರು ಹೊಡಕೊಂಡು ಇದ್ದ ನೀನು ಈಗ ಹೇಗಾದಿ ನೋಡು..” +ಅಕ್ಕನಿಗೆ ಕೊಂಕು ಮಾತಾಡುವ ಉದ್ದೇಶವಿಲ್ಲದಿದ್ದರೂ ಬಾಯಿತಪ್ಪಿ ಅಂದಿದ್ದಳು. ಈ ಘಟನೆಯನ್ನು ಮುಂದೆ ಕೃಷ್ಣಮೂರ್ತಿ ದೆಹಲಿಯ ತನ್ನ ಪ್ಲ್ಯಾಟಿನಲ್ಲಿ ಒಂದು ಭಾನುವಾರ ಊಟದ ಹೊತ್ತಿಗೆ ಜ್ಞಾಪಿಸಿಕೊಳ್ಳಬೇಕಾಯಿತು. ಅಪ್ಪ ತನ್ನ ಜೊತೆ ಬಂದಿರಬೇಕೆಂದು ಯೋಚಿಸಿದ್ದರೆಂದು ಅವರು ಸಾಯುವಾಗ ಸಂತೋಷಪಟ್ಟಿದ್ದರೂ ಕ್ರಮೇಣ ಅದು ಹೇಗೆ ಅಸಾಧ್ಯವಾಗುತ್ತೆಂಬುದೂ ಅವನಿಗೆ ಮನದಟ್ಟಾಗಿತ್ತು. ಬಂದಿರುವುದು ಇರಲಿ- ಅಪ್ಪ ಬಿಟ್ಟು ಹೋದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವೇ ತನ್ನ ಜೀವನದ ಸಂತೋಷವನ್ನೆಲ್ಲ ಬತ್ತಿಸಿತ್ತು. ತಿಂಗಳಿಗೆ ಐನೂರು ರೂಪಾಯಿಗಳನ್ನು ಈ ಸಾಲ ತೀರಿಸಲು ಕಟ್ಟಬೇಕಾಗಿ ಬಂದಿದ್ದರಿಂದ ಮಗನನ್ನು ಒಳ್ಳೆಯ ಸ್ಕೂಲಿಂದ ತಪ್ಪಿಸಿ ಸಾಮಾನ್ಯ ಸ್ಕೂಲಿಗೆ ಹಾಕಬೇಕಾಯಿತು. ಸಂಸಾರದ ಜೊತೆಗೆ ವಾರಕ್ಕೆರಡು ಸಿನಿಮಾ ನೋಡಿ ಹೊರಗೆ ಊಟ ಮಾಡುತ್ತಿದ್ದುದನ್ನು ನಿಲ್ಲಿಸಬೇಕಾಯಿತು. ಈ ಮಧ್ಯೆ ಹೆಂಡತಿಗೆ ತಿಳಿಯದಂತೆ ತಿಂಗಳಿಗೆ ಇನ್ನೂರು ರೂಪಾಯಿಗಳನ್ನಾದರೂ ತಾಯಿಗೆ ಕಳಿಸಬೇಕಾಗಿತ್ತು. ‘ಅಪ್ಪ ನೋಡು, ಎಷ್ಟು ಶ್ರೀಮಂತರ ಚಾಕರಿ ಮಾಡಿದರೂ ಅವರಿಂದ ದುಡ್ಡು ತಗೊಳ್ಳುತ್ತಿರಲಿಲ್ಲ. ತುಂಬ ಮಾನವಂತ. ಆದ್ದರಿಂದಲೇ ಸಾಲವಾದ್ದು; ನನ್ನನ್ನು ಓದಿಸಲೆಂದು ತ್ಯಾಗಮಾಡಿದರು. ಅವರೊಬ್ಬ ದೊಡ್ಡ ಅಸ್ಟ್ರಾನಮರ್ ಆಗಬಹುದಿತ್ತು. ಸುಪ್ರೀಂಕೊರ್ಟಿನ ವಕೀಲರಾಗಬಹುದಿತ್ತು. ಇತ್ಯಾದಿಗಳನ್ನು ಪ್ರತಿತಿಂಗಳೂ ಗಟ್ಟಿಯಾಗಿ ಹೇಳುತ್ತ, ಇದನ್ನು ಕೇಳಿಸಿಕೊಳ್ಳುವಾಗ ಹೆಂಡತಿ ಮೀರ ಮೌನವಾಗಿ ತನ್ನ ಅಸಹನೆಯನ್ನು ವ್ಯಕ್ತಪಡಿಸುವುದೂ ನ್ಯಾಯವಾದ್ದೇ ಎಂದು ತಿಳಿಯುತ್ತ ಮುಂದಿನ ದಿನಗಳಲ್ಲಿ ಕೃಷ್ಣಮೂರ್ತಿ ಅಪ್ಪನ ನೆನಪಿನ ಜೊತೆ ಗುದ್ದಾಡಬೇಕಾಗಿ ಬಂದಿತ್ತು. ಅಂಥ ಇಂದು ಬಾನುವಾರದಭಾನುವಾರದ ಮದ್ಯಾಹ್ನ ಊಟ ಮಾಡುತ್ತಿದ್ದಾಗ ಹೆಂಡತಿ ಕಟುವಾಗಿ “ಹಾಸಿಗೆಯಿದ್ದಷ್ಟು ಕಾಲು ಚಾಚೋದು ಸರಿ” ಎಂದಾಗ ಕೃಷ್ಣಮೂರ್ತಿ ಜೈಲಿನಲ್ಲಿ ಕೊಳೆಯುತ್ತಿದ್ದ ನಾಯರ್ ಮಾತ್ರ ಇವನ್ನೆಲ್ಲ ಮೀರಿದವನು, ನಮ್ಮನ್ನೂ ಮೀರಿಸಬಲ್ಲವನು, ಅವನು ನನ್ನ ತಂದೆಯ ಪ್ರಾಣಸ್ನೇಹಿತನಾಗಿದ್ದ ಎಂದು ಒಣಗಿದ ಗಂಟಲಲ್ಲಿ ವಾದಿಸಿದ್ದ. ಅವತ್ತು ಸಿನಿಮಾಕ್ಕೆ ಕರೆದುಕೊಂಡು ಹೋಗಲಿಲ್ಲೆಂದು ಬುಸುಗುಡುತ್ತ ಮೀರ ಹೇಳಿದ್ದಳು! +“ಯಾಕೆ ಮಾತಿನಲ್ಲಿ ತೀಟೆ ತೀರಿಸ್ಕೋತೀರಿ? ನೀವೂ ಒಂದು ಚೂರಿ ಹಿಡಿದು ಹೊರಡಿರಿ ಹಾಗಾದರ.ಹಾಗಾದರೆ.” +ಕೃಷ್ಣಮೂರ್ತಿ ಮಂಕಾಗಿ ಯೋಚಿಸಿದ್ದ. ಗಂಗೂಬಾಯಿ, ನಾಯರ್‌ನಂಥವರ ಸ್ನೇಹ, ಆಕಾಶದ ಕಾಳರಂಧ್ರಗಳು- ಈ ಎಲ್ಲವೂ ಹಣಕ್ಕಾಗಿ ಪರದಾಡುವುದರ ಆಯಾಸವನ್ನು ಕೆಲವು ಕ್ಷಣ ಮರೆಸುವ ಸಾಧನಗಳೋ ಏನೋ. ಮದುವೆಗೆ ಮುನ್ನ ಸುಂದರವೂ ಕೋಮಲವೂ ಆಗಿದ್ದ ಮೀರಳ ಮುಖದಲ್ಲಿ ಈಗ ಸಿಟ್ಟು ಸ್ಥಾಯೀಭಾವವಾಗಿ ನಿಂತು ಗೆರೆಗಳನ್ನು ಕೊರೆಯುತ್ತಿವೆ. ಈ ಗೆರೆಗಳಲ್ಲೂ ಅವನು ಅಪ್ಪನ ಜೀವನ ಕ್ರಮದ ಅರ್ಥಹೀನತೆಯನ್ನು ಅರಿಯಲು ಪ್ರಯತ್ನಿಸುತ್ತಾನೆ. ನಿರ್ದಯವಾದ ಮಾತಾಡುವಾಗಲೂ ಕರುಣೆಯಿಂದ ನಗುವ ನಾಯರ್‌ನ ಮುಖವನ್ನು ನೆನೆಯುತ್ತಾನೆ. ಆದರೆ ಅವನೊಬ್ಬ ಹಾಸ್ಯಾಸ್ಪದನಾದ ಎಕ್ಸೆಂಟ್ರಿಕ್ ಕೂಡ ಎಂದೂ ಅವನಿಗೆ ಅನ್ನಿಸುವುದರಿಂದ- ಅವನ ಪ್ರಶ್ನೆಗಳು ಗಂಟುಗಂಟಾಗುತ್ತ ಹೋಗುತ್ತವೆ. ಅನೇಕ ಸಾಧ್ಯತೆಗಳಿದ್ದ ಅಪ್ಪನ ಜೀವನ ಬರಡಾಯಿತೆ? ಯಾಕೆ? ನಾನೂ ಅವರ ಹಾದಿಯಲ್ಲಿ ಇದ್ದೇನೆಯೆ? ತಿಳಿಯುವುದಿಲ್ಲ. +* +* +* +ಪಂಚಭೂತಗಳಿಂದ ಪ್ರಾಪ್ತವಾದ ಈ ನಶ್ವರ ಶರೀರವನ್ನು ಮತ್ತೆ ಪಂಚಭೂತಗಳಿಗೆ ಒಪ್ಪಿಸಲೆಂದು ನದಿಯಲ್ಲಿ ಮುಳುಗು ಹಾಕಿ, ಪಾಣಿಪಂಚೆಯುಟ್ಟು, ಹೊಳೆಯ ದಡದಲ್ಲಿ ಕಟ್ಟಿಗೆಯ ಮಂಚದ ಮೇಲೆ ನೀರಲ್ಲಿ ತೊಳೆದು ಮಲಗಿಸಿದ್ದ ದೇಹಕ್ಕೆ ತೂತು ಮಡಿಕೆಯಲ್ಲಿ ನೀರು ತುಂಬಿಸಿಕೊಂಡು ಸುತ್ತು ಬಂದು ಆ ಮಡಿಕೆಯನ್ನು ಇಡೆಯುವಂತೆಒಡೆಯುವಂತೆ ಬೆನ್ನಿಂದ ಹಿಂದಕ್ಕೆ ಬಿಸಾಕಿ, ಸೀಮೆ ಎಣ್ಣೆ ಸುರಿದ ದೇಹಕ್ಕೆ ಬೆಂಕಿಹೊತ್ತಿಸಿ ಬಣ್ಣಬಣ್ಣದ ನೆಗೆಯುವ ಜ್ವಾಲೆಯನ್ನು ನೋಡುತ್ತ ಕೃಷ್ಣಮೂರ್ತಿ ಕೂತ. ಬೆಂಕಿ ಕ್ರಮೇಣ ಹರಡಿ, ಕ್ರಮೇಣ ಒಟ್ಟಾಗಿ, ವಟಗುಟ್ಟುತ್ತ ಮೊಗ್ಗಿನಂತೆ, ಹೂವಿನಂತೆ ಉರಿಯಿತು. ತಲೆಯ ಬುರುಡೆಗೆ ಅದರ ಸರ್ವಶಕ್ತನಾಲಗೆಗಳು ಅಮರಿಕೊಂಡವು. ತನಗಿನ್ನಷ್ಟು ಸಮಾಧಾನವಾಗಲೆಂದು ಜ್ವರದಲ್ಲಿದ್ದ ಬೆಳಿಗ್ಗೆ ಅವರು ಥರ್ಮಾಮೀಟರು ತಂದಿದ್ದನ್ನು ಇಷ್ಟಪಟ್ಟು ನೆನೆಸಿಕೊಳ್ಳುತ್ತಿದ್ದಾಗ, ಶವದ ಸುತ್ತಲೂ ಕೂತಿದ್ದ ಅಪ್ಪನ ಅಸಂಖ್ಯ ಸ್ನೇಹಿತರೂ ಹಿತೈಷಿಗಳೂ ತಮ್ಮ ಸಮಾಧಾನಕ್ಕಾಗಿ ಗಟ್ಟಿಯಾಗಿ ಮಾತಾಡಿಕೊಳ್ಳುತ್ತಿದ್ದರು.ಶವಸಂಸ್ಕಾರ ಹೇಗೊಂದು ಪಿಕ್ನಿಕ್ ಆಗಿಬಿಡುತ್ತದೆಂಬುದು ಸೋಜಿಗದ ಸಂಗತಿ ಎಂದು ಕೃಷ್ಣಮೂರ್ತಿಗೆ ಅನ್ನಿಸಿತು.ಯಾರೋ ಗಟ್ಟಿಯಾಗಿ ಹೇಳುತ್ತಿದ್ದರು. ಉಳಿದವರನ್ನು ಆಡಿಯನ್ಸ್ ಮಾಡಿಕೊಂಡು. ‘ಆಚಾರ್ಯರು ಬಹಳ ಜಾಣರು, ನಿಜವಾದ ಲೌಕಿಕರು. ಗೇಣಿಶಾಸನ ಬರುತ್ತದೆಂದು ಮೊದಲೇ ಅವರಿಗೆ ಗೊತ್ತಿತ್ತು. ರೈತ ಸಂಘ ಸ್ಥಾಪನೆಯಾಯ್ತಲ್ಲ, ಆ ಪೂಜಾರಿ ಜಾತಿಯ ವೆಂಕನಾಯ್ಕ ಶುರು ಮಾಡಿದನಲ್ಲ, ಉಳುವವನೇ ಹೊಲದೊಡೆಯ ಅಂತ, ಆಗಲೇ ಆಚಾರ್ಯರು ನಮ್ಮನ್ನೆಲ್ಲ ಕರೆಸಿ ಹೇಳಿದರು. ಈಗಲೇ ನಿಮ್ಮ ಮನೆಯ ಪಾಲು ಪಂಚಾಯ್ತಿ ಮಾಡಿಕೊಂಡು ಬಿಡಿ. ನಿಮಗೆ ನಿಜವಾಗಿ ಸಲ್ಲತಕ್ಕಷ್ಟನ್ನು ಇಟ್ಟುಕೊಂಡು ಎಷ್ಟು ಬೆಲೆ ಬರುತ್ತೊ ಅಷ್ಟಕ್ಕೆ ಉಳಿದದ್ಡನ್ನು ಮಾರಿಬಿಡಿ. ಪಾಪ ನಿಮ್ಮ ರೈತನೇ ಕೊಂಡುಕೊಳ್ಳಲು ಇಷ್ಟಪಟ್ಟ ಎನ್ನಿ, ಅವನು ಬೆವರು ಸುರಿಸಿ ಬೆಳದದ್ದಲ್ಲವೆ- ಅವನಿಗೇ ಮಾರಿಬಿಡಿ. ಸ್ವಲ್ಪ ಕಡಿಮೆ ಬೇಕಾದರೂ ಅವ ಕೊಡಲಿ, ಕಂತಲ್ಲಾದರೂ ಕೊಡಲಿ- ಅವನಿಗೆ ಮಾರಿಬಿಡಿ. ಅವಕ್ಕೆ ಕೃತಜ್ಞತೆ ಇಲ್ಲಬಿಡಿ- ಆ ಮಾತು ಬೇರೆ. ಇಲ್ಲವಾದರೆ ರಕ್ತಪಾತವಾಗುತ್ತೆ ಅಂದರು. ಅವರ ಮಾತು ಕೇಳಿದ ನಾವು ಬದುಕಿದೆವು. ಉಳಿದವರು ಇದ್ದದ್ದನ್ನೆಲ್ಲ ಕಳೆದುಕೊಂಡರು. ಎಂಥೆಂಥ ಫಟಿಂಗರನ್ನೂ ಅವರು ಕಾನೂನು ಜ್ಞಾನದಿಂದ ಬದುಕಿಸಿದ್ಡಾರೆಂದರೆ, ಅವರಿಲ್ಲದಿದ್ದರೆ ಈ ರೈತಸಂಘದ ಪುಂಡಾಟಿಕೇಲಿ ನಾವು ಉಳಿಯೋದು ಸಾಧ್ಯವಿತ್ತ ಹೇಳಿ… +ಅಪ್ಪನ ತಲೆ ಬುರುಡೆ ತೆಂಗಿನಕಾಯಿಯ ಕರಟದಂತೆ ಬಣ್ಣಬಣ್ಣವಾಗಿ ಉರಿದು ಸಿಡಿಯುವುದನ್ನು ನೋಡುತ್ತಿದ್ದ ಕೃಷ್ಣಮೂರ್ತಿಗೆ ‘ಇಷ್ಟು ನಿಜವಲ್ಲ’ ‘ಇಷ್ಟೇ ನಿಜವಲ್ಲ’ ಎಂದು ಕಿರುಚಿಕೊಳ್ಳಬೇಕೆನಿಸುತ್ತಿತ್ತು. ಇದನ್ನೂ ದೆಹಲಿಯ ಪ್ಲ್ಯಾಟಿನಲ್ಲವನು ನೆನಸುತ್ತಾನೆ. ಈ ಅರಿವು ಇತ್ಯಾದಿ ಬಗ್ಗೆ ಅವನ ಲೆಫ್‌ಟಿಸ್ಟ್ ಮಿತ್ರರ ಜೊತೆ ಚರ್ಚಿಸಿ ಚರ್ಚಿಸಿ ಅತೃಪ್ತನಾಗಿಯೇ ಉಳಿಯುತ್ತಾನೆ. +* +* +* +ಶವವನ್ನು ಸಂಸ್ಕಾರಕ್ಕೆ ಕೊಂಡೊಯ್ದು ನಂತರ ಕೊಟ್ಟಿಗೆಯ ಆಚೆಗಿದ್ದ ಹಲಸಿನ ಮರ ಒಂದರ ಬುಡದಲ್ಲಿ ಹೋಗಿ ಗಂಗೂಬಾಯಿ ಕೂತಳು. ತನ್ನ ತೆಳ್ಳಗೆ ಬೆಳ್ಳಗೆ ಇದ್ದ ಉದ್ದನೆಯ ಮೈಯಿ, ಹಣೆಮೇಲಿನ ಕುಂಕುಮ, ವಯಸ್ಸು ನಲವತ್ತಾದರೂ ಸುಕ್ಕುಗಟ್ಟದೇ ಇದ್ದ ಮುಖ- ಇವು ಆಚಾರ್ಯರು ತನ್ನಿಂದ ಪಡೆದ ಸುಖವನ್ನು ಉಳಿದ ಹೆಂಗಸರು ಯೋಚಿಸುವಂತೆ ಮಾಡೀತೆಂದು ಅವಳಿಗೆ ಸಂಕೋಚವಾಗಿತ್ತು. ತಾನಿಲ್ಲದಿದ್ದರೆ ಹೆಂಗಸರು ನಿರ್ಭಿಡೆಯಿಂದ ಅತ್ತಾರು, ಅಳಲಿ; ಆಚಾರ್ಯರನ್ನು ಮುಕ್ತ ಕಂಠದಿಂದ ಹೊಗಳುವುದು ಸಾಧ್ಯವಾಗಲಿ; ತನ್ನಿಂದ ಕಳಂಕ ತಟ್ಟುವುದು ಬೇಡ ಎಂದು ಅವಳಿಗೆ ಅನ್ನಿಸಿತ್ತು. +ಅವಳಿಗೆ ಆಚಾರ್ಯರ ಬಾಲ್ಯ ಜೀವನ ಗೊತ್ತು. ಅವರು ಆಕೆಗೆ ಹೇಳದೇ ಇದ್ದ ಸಂಗತಿಯಿಲ್ಲ. ಆಕಾಶದ ಬಗ್ಗೆ ಅವಳ ಹತ್ತಿರ ಮಾತಾಡಬೇಕು. ಕಾನೂನಿನ ಬಗ್ಗೆ ಮಾತಾಡಬೇಕು. ಒಂದಲ್ಲ-ಎರಡಲ್ಲ. +ಇಪ್ಪತ್ತು ವರ್ಷಗಳ ಸಹವಾಸ ಪ್ರಾರಂಭವಾದ್ದು ಶಿವಮೊಗ್ಗದಲ್ಲಿ ತನ್ನ ತಾಯಿಯಿಟ್ಟಿದ್ದ ಹೋಟೆಲಿನ ಮಹಡಿ ಮೇಲೆ ಅವರೊಂದು ಕಛೇರಿ ಸ್ಥಾಪಿಸಿದಾಗ. ಅದರ ಹೆಸರು ‘ಭೂಮಾಲೀಕರ ಸಂಘ’. ಆಚಾರ್ಯರು ಅದರ ಕಾರ್ಯದರ್ಶಿ. ಆಮೇಲೆ ಅದರ ಹೆಸರು ‘ಮಲೆನಾಡು ಬೆಳೆಗಾರರ ಸಂಘ’ ವೆಂದು ಬದಲಾಯ್ತು. ಪ್ರೈಮರಿಶಾಲೆಯ ಉಪಾಧ್ಯಾಯಿನಿಯಾಗಿ ಆಗತಾನೇ ಸೇರಿದ್ದ ತಾನು ಮನೆಯನ್ನು ದೀಡು ಮಾಡಿಕೊಡುವುದಕ್ಕೆ ಅಗತ್ಯವಾದ ಪತ್ರವನ್ನು ಬರೆಸಲೆಂದು ಮೊದಲು ಆಚಾರ್ಯರನ್ನು ಭೆಟ್ಟಿಯಾದ್ದು. ತನಗೆ ಆಗ ಮದುವೆಯಾಗಿತ್ತು. ಆದರೆ ತಾಯಿಗೆ ತನ್ನ ಮಗಳನ್ನು ಯಾವನೋ ಒಬ್ಬ ಕ್ರೂರಿಗೆ ಎರಡನೇ ಸಂಬಂಧವಾಗಿ ಮಾಡಿಕೊಡುತ್ತಿದ್ದೇನೆಂಬ ಅರಿವು ಇರಲಿಲ್ಲ. ಗಂಡನ ಮನೆಯ ಹಿಂಸೆ ತಾಳಲಾರದೆ ಓಡಿ ಬಂದು ಶಾಲೆಯ ಉಪಾಧ್ಯಾಯಿನಿಯಾಗಿ ಸೇರಿದ್ದು. ಆಮೇಲಿಂದ ಆಚಾರ್ಯರು ತನಗೆ ಡೈವೋರ್ಸ್ ಪಡೆಯುವ ಉಪಾಯಗಳನ್ನೂ ಹೇಳಿಕೊಟ್ಟರು. ತಂದೆಯಿಲ್ಲದೆ ಅನಾಥೆ ಇಲ್ಲವಾದಲ್ಲಿ ಗಂಡನ ಮನೆಯ ಕೀಳು ಕೆಲಸದವಳಾಗಿ ಗೆಯ್ದುಕೊಂಡಿರಬೇಕಾಗಿ ಬರುತ್ತಿತ್ತು. +ಆಗಲೇ ಈ ಸಂಬಂಧ ಶುರುವಾದ್ದು. ತಾಯಿ ಸತ್ತಮೇಲೆ ಹೋಟೆಲನ್ನು ಮುಚ್ಚಬೇಕಾಯಿತು. ಆಚಾರ್ಯರ ಸಹಾಯವನ್ನು ಪಡೆದು, ಇದ್ದಬದ್ದದುಡ್ಡೆಲ್ಲವನ್ನೂ ಕೂಡಿಸಿಕೊಂಡುಹಸುಗಳನ್ನು ಸಾಕಿ ಹಾಲುಮಾರಲು ಆಮೇಲಿಂದ ಪ್ರಾರಂಭ. ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಿನವರಾದರು ಆಚಾರ್ಯರು. ಅವರಿಗೆ ಆಗುತ್ತಿರುವುದಕ್ಕಿಂತ ಹೆಚ್ಚಿನ ಅವಮಾನ ಆಗದೇ ಇರಲೆಂದು ಗಂಗೂಬಾಯಿ ಮಗು ಬೇಡವೆಂದು ಎರಡು ಸಾರಿ ಬಸಿರಿಳಿಸಿಕೊಂಡದ್ದು. ಸಾಯುವಾಗ ಸಂಕೋಚಪಡದೆ ತನ್ನನ್ನು ಒಪ್ಪಿಕೊಂಡರಲ್ಲ- ಅದರಿಂದ ಧನ್ಯಭಾವ ಬಂದಂತಾಗಿದೆ. +ಅವರದೊಂದು ಸಾಹಸದ ಜೀವನ. ಅವರ ಅಪ್ಪ ರಾಮದೇವರ ಒಂದು ದೇವಸ್ಥಾನದ ಪೂಜಾರಿ. ಮನೆಯಲ್ಲೇ ಮಗನಿಗೆ ಮಂತ್ರ ತಂತ್ರಗಳ ವಿದ್ಯಾಭ್ಯಾಸ. ಈ ದೇವಸ್ಥಾನವಿದ್ದದ್ದು ಇಪ್ಪತ್ತು ಬ್ರಾಹ್ಮಣ ಮನೆಗಳಿದ್ದ ತುಂಗಾನದೀ ತೀರದ ಒಂದು ಹಳ್ಳಿಯಲ್ಲಿ. ವರ್ಷಕ್ಕೊಮ್ಮೆ ನಡೆಯುವ ಈ ದೇವಸ್ಥಾನದ ರಥೋತ್ಸವ ಆಸುಪಾಸಿನಲ್ಲೆಲ್ಲ ಹೆಸರಾದ್ದು. ಮನೆಯಲ್ಲಿ ಮಂತ್ರ ತಂತ್ರ ಕಲಿಯುತ್ತ , ಅವರಿವರ ಮನೆಗೆ ವ್ರತಗಿತ ಮಾಡಿಸಲು ಹೋಗುತ್ತ ಆಚಾರ್ಯರ ಬಾಲ್ಯ ಕಳೆಯಿತು. ಒಟ್ಟಿನಲ್ಲಿ ಅಪ್ಪನಿಗೆ ಸಹಾಯ ಮಾಡುವುದು ಈ ಏಕಮಾತ್ರ ಪುತ್ರನ ಕೆಲಸವಾಗಿತ್ತು.ಆಚಾರ್ಯರು ಮೊದಲಿಂದಲೂ ಅತೃಪ್ತರು. ಆಹಾಶದಆಕಾಶದ ನಕ್ಷತ್ರಗಳನ್ನೆಲ್ಲ ಹೆಸರು ಹಿಡಿದು ಗುರುತಿಸುತ್ತಿದ್ದ ಅವರು ಇಡೀ ರಾತ್ರೆ ಒಮ್ಮೊಮ್ಮೆ ದೇವಸ್ಥಾನದ ಅಂಗಳದಲ್ಲಿ ಚಾಪೆ ಹಾಸಿ ಕೆಂಡಸಂಪಿಗೆ ಮರದಡಿಯಲ್ಲಿ ಕಣ್ಣುಬಿಟ್ಟು ಮಲಗಿರುತ್ತಿದ್ದುದು ಉಂಟು. ಒಂದಾನೊಂದು ದಿನ ಸತ್ಯನಾರಾಯಣ ವ್ರತ ಮುಗಿಸಿಕೊಂಡು ಹಳ್ಳಿ ದಾರಿಯಲ್ಲಿ ನಡೆದು ಬರುತ್ತಿದ್ದ ಆಚಾರ್ಯರಿಗೆ ಸೈಕಲ್ ಮೇಲೆ ಬರುತ್ತಿದ್ದ ಪಾದ್ರಿಯೊಬ್ಬ ಇಂಗ್ಲೀಷ್ ಬಾಷೆ ಕಲಿಯಬೇಕೆನ್ನುವ ಹುಚ್ಚು ಹಿಡಿಸಿದನಂತೆ. ಆಕಾಶದ ಹುಚ್ಚಿನ ಜೊತೆ ಈ ಹುಚ್ಚೂ ಸೇರಿ ದೇವಸ್ಥಾನದ ಕಂಬವೊಂದರ ಕೆಳಗೆ ಕೂತು ಗಂಧವನ್ನು ತೇಯುತ್ತ ಆಚಾರ್ಯರು ಏನೇನೋ ಕನಸು ಕಾಣಲು ಪ್ರಾರಂಭಿಸಿದರು. ದೂರದೂರದ ಊರುಗಳಿಂದ ಪೂಜೆ ಮಾಡಿಸಲು ಬರುತ್ತಿದ್ದ ವಿದ್ಯಾವಂತ ಆಸ್ತಿಕರಿಂದ ಇಂಗ್ಲಿಷ್ ಅಕ್ಷರ ಕಲಿತರು. ಓದುವುದಕ್ಕೆ ಹೇಳಿಸಿಕೊಂಡರು. ಇಂಗ್ಲಿಷ್ ಕನ್ನಡ ಸ್ವಯಂಬೋಧಿನಿ ತರಿಸಿಕೊಂಡು ಬರೆಯುವಷ್ಟು ಕಲಿತರು. ದೂರದ ಊರುಗಳಿಗೆ ಹೋಗಬೇಕೆಂಬ ಹಂಬಲ ಬೆಳೆಸಿಕೊಂಡರು. +ಆಚಾರ್ಯರಿಗೆ ಹದಿನಾರು ವಯಸ್ಸಿದ್ದಾಗಲೇ ಎಂಟು ವರ್ಷ ವಯಸ್ಸಿನ ರುಕ್ಮಿಣಿಯಮ್ಮನ ಜೊತೆ ಮದುವೆಯಾಗಿತ್ತು. ಹೆಣ್ಣು ನೋಡಲೆಂದು ಅವರ ಅಪ್ಪ ಆಕೆಯ ಊರಿಗೆ ಹೋದಾಗ ಆಕೆ ಮಾವಿನ ಮರ ಒಂದನ್ನು ಹತ್ತಿ ಕೂತಿದ್ದಳಂತೆ. ಆಕೆಯ ತಂದೆ ‘ ಗೋಪಾಲಾಚಾರ್ಯರಮನೆ ದಾರಿ ಎಲ್ಲಿ?’ ಎಂದು ಕೇಳಿದಾಗ ಮಾವಿನ ಹಣ್ಣು ತಿನ್ನುತ್ತ ಮರದ ಮೇಲೆ ಕೂತ ಈ ಹುಡುಗಿಯೇ ‘ಅಕೋ ಅಲ್ಲಿ’ ಎಂದು ತೋರಿಸಿದ್ದಂತೆ. ಈಗ ಅಂಥ ಸಂತೋಷಗಳೇ ಇರದಿದ್ದ ಹೆಂಗಸಿನಂತೆ ಅವರು ಕಾಣುತ್ತಾರೆ. +ಮೈನೆರೆಯದ ಹುಡುಗಿಯಲ್ಲವೆ? ಮದುವೆಯಾದ ಮೇಲೆ ಐದಾರು ವರ್ಷ ಆಕೆ ತೌರಲ್ಲೆ ಉಳಿದಳು. ಮದುವೆಯಾದ್ದರಿಂದ ಆಚಾರ್ಯರಿಗೆ ವಿವಾಹದ ಪೌರೋಹಿತ್ಯಗಳೂ ಸಿಗುವಂತಾಗಿ ವರಮಾನ ಹೆಚ್ಚಾಯಿತು. +ಈ ನಡುವೆ ಆಚಾರ್ಯರ ಜೀವನದಲ್ಲೊಂದು ಮಹತ್ತರವದಮಹತ್ತರವಾದ ಘಟನೆ ನಡೆಯಿತು. ಆ ಹಳ್ಳಿಯಲ್ಲೆಲ್ಲ ತುಂಬ ಶ್ರೀಮಂತ ಬ್ರಾಹ್ಮಣರ ಮನೆಯೊಂದಿತ್ತು- ದೇಶಸ್ಥ ಜಾತಿಯವರದ್ದು. ರಾಮದೇವಸ್ಥಾನದ ಯಜಮಾನರೆಂದರೆ ಅವರೇ. ಮೊದಲು ಅವರಿಗೇ ತೀರ್ಥವಾಗಬೇಕು. ಆ ಮಹಾಶಯನ ಹೆಂಡತಿ ಕುರುಡಿಯಾಗಿ ಬಿಟ್ಟಿದ್ದಳಂತೆ. ಅವರಿಗೆ ತುಂಬ ಚೆಲುವಿಯಾದ ಒಬ್ಬಳೇ ಮಗಳು- ಗಂಡುಮಕ್ಕಳಿಲ್ಲ. ಆದ್ದರಿಂದಲೇ ಏನೋ ಮಗಳು ಒಳಗೇ ಉಳಿಯಲಿ ಎಂದು ಅವಳ ಸೋದರ ಮಾವನಿಗೇ ಕೊಟ್ಟು ಮದುವೆ ಮಾಡಿದ್ದು. +ಹತ್ತು ವರ್ಷ ಗಂಡನ ಮನೆಯಲ್ಲಿದ್ದು ಬೇಸತ್ತು ಅವಳ ತಂದೆಯ ಮನೆಗೇ ಬಂದು ಬಿಟ್ಟಳು. ಅವಳಿಗೆ ಮಕ್ಕಳಾಗದ್ದು ನೋಡಿದರೆ ಗಂಡನೇನಾದರೂ ಷಂಡನೋ ಎಂದು ಊರಲ್ಲಿ ಎಲ್ಲರಿಗೂ ಅನುಮಾನ. ತಂದೆ ಬಹಳ ವ್ಯಥೆಪಟ್ಟು ಕೊರಗಿ ಕಣ್ಣುಮುಚ್ಚಿಯಾದ ಮೇಲೆ ಆ ದೊಡ್ಡ ಅರಮನೆಯಂಥ ಮನೆಗೆಲ್ಲ ಇಬ್ಬರೇ ಆದರು: ಕುರುಡಿಯಾದ ತಾಯಿ ಮತ್ತು ಮಗಳು. ಮತ್ತೆ ಆ ಮೂಲೆ ಈ ಮೂಲೆ ಹಿಡಿದು ಕೂತಿರುವ ಅಡುಗೆ ಮಾಡಲು ಸೇರಿಕೊಂಡ ಅನಾಥ ವಿಧವೆಯರು ಮತ್ತು ಚಾವಡಿಯಲ್ಲಿ ಮಲಗಿರುತ್ತಿದ್ದ ಉಂಡು ಹೋಗಲು ಬರುವ ಸಂಭಾವನೆಯವರು, ದೇವಸ್ಥಾನದ ಅರ್ಚನೆಗೆ ಬರುವ ಪಟ್ಟಣದ ಶ್ರೀಮಂತರು- ಹೀಗೆ ಹೊರಗಿನವರೇ ಆ ಮನೆಯಲ್ಲಿ ಇರುತ್ತಿದ್ದುದು. ದೊಡ್ಡ ದೊಡ್ಡ ದೇವರ ಪಠಗಳನ್ನು ಹಾಕಿದ , ಬೆಳ್ಳಿಕಟ್ಟಿದ ಮಣೆಗಳನ್ನು ಒರಗಿಸಿಟ್ಟ, ಉಯ್ಯಾಲೆಗಳಿದ್ದ ಎತ್ತರವಾದ ಮನೆ ಅದು. +ಆಚಾರ್ಯರಿಗಿಂತ ಈ ಹುಡುಗಿ ನಾಲ್ಕು ವರ್ಷವಾದರೂ ದೊಡ್ಡವಳು. ಅಲಕಾದೇವಿ ಎಂದು ಅವಳ ಹೆಸರು. ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಅವರ ಮನೆದೇವರ ಪೂಜೆಗೆ ನೈವೇದ್ಯಕ್ಕೆ ಆಚಾರ್ಯರು ಹೋಗಬೇಕು. ಆಚಾರ್ಯರಿಗೆ ಹದಿನೆಂಟೋ ಹತ್ತೊಂಬತ್ತೋ ವಯಸ್ಸು. ಅಲಕಾದೇವಿ ಯಾವತ್ತೂ ರೇಷ್ಮೆಯ ಪತ್ತಲ ಉಟ್ಟು, ಆಗಿನ ಕಾಲಕ್ಕೆ ಫ್ಯಾಶನ್ ಆದ ವಾರೆಬೈತಲೆ ತೆಗೆದು, ಉಬ್ಬಿದ ತೋಳುಗಳ ಕುಪ್ಪಸ ತೊಟ್ಟಿರುವುದು. ಅಲಕಾದೇವಿಗೂ ಅಷ್ಟಿಷ್ಟು ಇಂಗ್ಲೀಷ್ ಓದಲು ಬರುತ್ತಿತ್ತು.- ಮುದ್ದಿನ ತಂದೆ ಕಲಿಸಿಕೊಟ್ಟದ್ದು. ಆಕೆ ತಂದೆಯ ಲೈಬ್ರರಿಯಿಂದ ಡ್ಯೂಮಾ, ಸ್ಕಾಟ್, ಗೋಲ್ಡ್‌ಸ್ಮಿತ್ ಇತ್ಯಾದಿ ಪುಸ್ತಕಗಳನ್ನು ಆಚಾರ್ಯರಿಗೆ ಓದಲು ಕೊಡುವುದು. ಅವನ್ನು ಆಚಾರ್ಯರು ಇಂಗ್ಲಿಷೆಂದರೆ ಮೈಲಿಗೆಯೆಂದು ತಿಳಿದ ಅಪ್ಪನಿಗೆ ಗೊತ್ತಾಗದಂತೆ ಓದುವುದು. ಓದಿದ್ದನ್ನು ಮೊದಲು ಹೆದರುತ್ತ ಆಮೇಲೆ ಉಯ್ಯಾಲೆ ಮೇಲೆ ಕೂತು ತೂಗಿಕೊಳ್ಳುವುದು ಅಲಕಾವತಿಗೆ ನಿರ್ಭಿಡೆಯಿಂದ ವಿವರಿಸುತ್ತ ಅವಳ ಕಣ್ಣುಗಳು ಬೆರೆಗಿನಲ್ಲಿಬೆರಗಿನಲ್ಲಿ ತೆರೆಯುವಂತೆ ಮಾಡುವುದು. ಹೀಗೆ ಆ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ರಾಮದೇವರ ಮೌನ ಸಾನ್ನಿಧ್ಯಾದಲ್ಲಿಸಾನ್ನಿಧ್ಯದಲ್ಲಿ ಅಲಕಾದೇವಿ ಅವರ ಕನಸಿನ ರಾಣಿಯಂತೆ ಬೆಳೆಯುತ್ತ ಹೋದಳು. +ತಾವಿಬ್ಬರೂ ಈ ಅದ್ಭುತ ಕಥೆಗಳ ಪಾತ್ರಗಳೆಂಬಂತೆ ಅಲಕಾವತಿ ವರ್ತಿಸುವುದು. ಕಚ್ಚೆಹಾಕಿ ಪಂಚೆಯುಟ್ಟು ಮೈಮೇಲೆ ಬಿಳಿ ಧೋತ್ರ ಹೊದ್ದು, ದೊಡ್ಡ ಜುಟ್ಟನ್ನು ಗಂಟು ಕಟ್ಟಿ ಮನೆಗೆ ಬರುತ್ತಿದ್ದ ಆಚಾರ್ಯರನ್ನು ಅವಳು ಛದ್ಮವೇಶದಲ್ಲಿದ್ದಛದ್ಮವೇಷದಲ್ಲಿದ್ದ ರಾಜಕುಮಾರನೆಂದೋ ಯೋಧನೆಂದೊ ತಿಳಿದಿದ್ದಳು. ಇಪ್ಪತ್ತೆರಡು ವರ್ಷದ ಈ ಚೆಲುವೆಯ ತಾಯಿ ಕುರುಡಿಯಲ್ಲವೆ? ಈ ಶ್ರೀಮಂತಳಿಗೆ ಹೇಳುವವರು ಯಾರು ಕೇಳುವವರು ಯಾರು? ದಿನಕ್ಕೊಂದು ಪತ್ತಲವುಟ್ಟು ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತ ಪಂಜರದಲ್ಲಿಟ್ಟ ಗಿಣಿಯನ್ನು ಮಾತಾಡಿಸುತ್ತ ಅಲಕಾದೇವಿ ಆಚಾರ್ಯರು ತರುವ ತೀರ್ಥಕ್ಕೆ ಕಾಯುವುದು. ತೀರ್ಥ ಕುಡಿದು ಪ್ರಸಾದವನ್ನು ಮುಡಿದಾದ ಮೇಲೆ, ಆಚಾರ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವಳ ವಿಶಾಲವಾದ ಕೊಠಡಿಯಲ್ಲಿ ತೂಗಿಕೊಳ್ಳುತ್ತ ದೇಶಾಂತರದ ವಿಷಯಗಳನ್ನು ಮಾತನಾಡುವುದು. +ಈ ಘಳಿಗೆಗಾಗಿ ಆಚಾರ್ಯರು ಇಡೀ ದಿನ ಕಾದಿರುತ್ತಿದ್ದರು. ವ್ರತ ಮಾಡಿಸಲೋ ಮದುವೆ ಮಾಡಿಸಲೋ ಬೇರೆ ಊರಿಗೆ ಹೋಗಬೇಕಾಗಿ ಬಂದರೆ ಅವರಿಗೆ ತುಂಬ ಬೇಸರವಾಗಿ ಬಿಡುತ್ತಿತ್ತು. ಅಲಕಾವತಿಗೆ ಸಿಟ್ಟುಬಂದು ಬಿಡುತ್ತಿತ್ತು. “ನಿಮಗೊಂದು ಕುದುರೆ ಕೊಡಿಸುತ್ತೇನೆ” ಎಂದೂ ಅವಳು ಅಂದದ್ದು ಇದೆಯಂತೆ- ಎಲ್ಲಿ ಹೋದರೂ ಬೇಗ ಹಿಂದಕ್ಕೆ ಬರಲು ಸಾಧ್ಯವಾಗಲಿ ಎಂದು. +ಅವರಿಬ್ಬರ ಸಂಬಂಧ ಎಲ್ಲ ನಮೂನೆಯ ಹಂತಗಳಲ್ಲೂ ಬೆಳೆಯಿತು. ಒಡತಿ ಮತ್ತು ಆಪ್ತಸೇವಕ, ರಾಣಿ ಮತ್ತು ಯೋಧ, ದೇವಿ ಮತ್ತು ಭಕ್ತ, ಕಾದಂಬರಿಯ ನಾಯಕಿ ಮತ್ತು ನಾಯಕ- ಹೀಗೆ. ಸಾಯಂಕಾಲ ಹಸುಗಳು ಕೊರಳಿನ ಗಂಟೆ ಸದ್ದು ಮಾಡುತ್ತ ಹಿಂದಕ್ಕೆ ಬರುವಾಗ, ಬೆಳದಿಂಗಳಿನ ರಾತ್ರೆ ತೇನೆ ಮೈಮರೆತು ಕೂಗುವಾಗ, ಡಿಸೆಂಬರಿನ ಚಳಿಯಲ್ಲಿ ಮಾವಿನ ಮರಗಳೆಲ್ಲ ಹೂಬಿಟ್ಟಾಗ, ಮೌನದ ನಡುರಾತ್ರಿಯಲ್ಲಿ ತುಂಗೆ ಹರಿಯುವ ಶಬ್ದ ಕೇಳಿಸುವಾಗ ಆಚಾರ್ಯರು ಒಂದು ಬಗೆಯ ಅಲೌಕಿಕ ಬೇಗೆಯಿಂದ ಒದ್ದಾಡುವರು. ಅವರ ಈ ಬೇಗೆಗೆ ಕಾರಣ: ಅಲಕಾದೇವಿ ಮತ್ತು ಆಕಾಶವನ್ನು ತಿಳಿಯುವ ಹಸಿವು ಆಗಿದ್ದವು. +ತನ್ನ ಕಿರಿಬೆರಳು ಅವಳಿಗೆ ತಾಕಿದರೂ ತಾನು ಉರಿದುಹೋಗಿಬಿಡುವೆ ಎಂದು ಆಚಾರ್ಯರು ಹೆದರುತ್ತಿದ್ದರಂತೆ. ಅಲಕಾದೇವಿ ಅವರಿಗೆ ಸೂಚ್ಯವಾಗಿ ಎಲ್ಲ ಹೇಳಿದ್ದಳು. ತನ್ನ ಗಂಡನಿಗೆ ಪುರುಷತ್ವ ಸಾಲದ್ದರಿಂದ ತಾನು ಅಕ್ಷತ ಕನ್ನೆಯಾಗಿಯೇ ಉಳಿದಿದ್ದೇನೆ ಎಂದೂ ಹೇಳಿದ್ದಳು. ಪುರುಷತ್ವ ಕಡಿಮೆ ಎಂದರೆ ಏನು ಅರ್ಥವೆಂದು ಆಚಾರ್ಯರು ತುಂಬ ದಿಗಿಲು ಪಟ್ಟಿದ್ದರಂತೆ. +ಒಂದು ದಿನ ಮದ್ಯಾಹ್ನಮಧ್ಯಾಹ್ನ ಯಥಾಪ್ರಕಾರ ತೀರ್ಥ ತೆಗೆದುಕೊಂಡು ಮಹಡಿ ಹತ್ತಿ ಅಲಕಾವತಿಯ ಕೋಣೆಗೆ ಹೋದಾಗ ಅವಳು ತನ್ನ ದೊಡ್ಡ ಕಣ್ಣುಗಳನ್ನು ತೆರೆದು, +“ನನಗೊಂದು ಉಪಕಾರ ಮಾಡುತ್ತೀರ?” ಎಂದಳಂತೆ. +ಆಚಾರ್ಯರು ಆಗಲಿ ಎನ್ನುವಂತೆ ತಟ್ಟೆಯ ತೀರ್ಥ ಹಿಡಿದು ನಿಂತಿದ್ದಾಗ +“ನನ್ನನ್ನು ಮುಟ್ಟಿದರೆ ಈಗ ನೀವು ಮತ್ತೆ ಸ್ನಾನ ಮಾಡಬೇಕ?” ಎಂದಳಂತೆ. “ಮಾಡಿದರಾಯಿತು” +“ಹಾಗಾದರೆ ತಟ್ಟೆಯನ್ನು ಅಲ್ಲಿಟ್ಟು ಗಂಧವನ್ನು ತನ್ನಿ. ನನ್ನ ಬೆನ್ನಿನ ಮೇಲೊಂದು ಕುರ ಎದ್ದಿದೆ. ಅದಕ್ಕೆ ಗಂಧ ಹಚ್ಚುತ್ತೀರ?” +ಆಚಾರ್ಯರು ಕೆಂಪಾದರು. “ಆಗಲಿ” ಎಂದರು. ಅವರ ಮುಖ ನೋಡಿ ಅಲಕಾವತಿ ನಗುತ್ತ, “ನೀವು ಒಳ್ಳೆಯವರಲ್ಲವ? ನನ್ನ ಬೆನ್ನನ್ನು ನೋಡದಂತೆ ಕಣ್ಣುಮುಚ್ಚಿಕೊಂಡು ಹಾಗಾದರೆ ಹಚ್ಚುತ್ತೀರಲ್ಲ?” ಎಂದು ಬೆನ್ನು ತಿರುಗಿಸಿ ಸೆರಗನ್ನು ಇಳಿಬಿಟ್ಟು ರವುಕೆಯ ಗುಂಡಿ ಬಿಚ್ಚಿದಳು. ಹಾಲಿನ ಬಣ್ಣದ ಚರ್ಮದ ಬೆನ್ನಿನ ಬಲ ಮೂಲೆಯಲ್ಲಿ ಕೆಂಪಗಿದ್ದ ಒಂದು ಗುಳ್ಳೆಯಿತ್ತು, ಆಚಾರ್ಯರು ನಡುಗುತ್ತಿದ್ದ ಕೈಯಿಂದ ಅದಕ್ಕೆ ಗಂಧವನ್ನು ಮೃದುವಾಗಿ ಹಚ್ಚುತ್ತಿದ್ದಾಗ ಅಲಕಾವತಿ ಥಟ್ಟನೆ ತಿರುಗಿ ಅವರ ಮುಖವನ್ನು ತನ್ನ ಎರಡು ಕೈಗಳಿಂದಲೂ ಅದೊಂದು ಮಗುವಿನ ಮುಖವೆಂಬಂತೆ ಹಿಡಿದು, +“ನಾನು ಕೆಟ್ಟವಳು ಅಲ್ಲವಾ? ಎಂದಳು. ಆಗ ಅವಳ ಮುಖ ಗೆಲುವಿನಿಂದ ನಗುತ್ತಿತ್ತಂತೆ. ಆಚಾರ್ಯರಿಗೆ ಮೈಯೆಲ್ಲ ಬೆವತಂತಾಗಿಬೆವೆತಂತಾಗಿ, ಅವಳ ತೋಳುಗಳನ್ನು ಹಿಡಿದು ನಿಲ್ಲಿಸಿ, ತಾವೂ ಅವಳ ಎದುರು ನಿಂತರಂತೆ. ಮುಂದೇನು ತಿಳಿಯುವುದರ ಒಳಗೆ ಅವಳನ್ನು ತಬ್ಬಿದ್ದರಂತೆ. ಆಗ ಮೃದುವಾಗಿ ತನ್ನನ್ನು ಒತ್ತಿಕೊಂಡು ಅಲಕಾವತಿಯ ದೇಹದಲ್ಲಿ ತಾನು ಕರಗಿ ಹೋಗುತ್ತಿದ್ದಂತೆ ಭಾಸವಾಗಿ, ಇಡೀ ಮೈಯೆಲ್ಲ ಕಂಪಿಸಿ ಅವರ ಮೈ ಇಳಿದುಬಿಟ್ಟಿತಂತೆ, ಪುಣ್ಯದಿಂದ ಇದು ಅಲಕಾವತಿಗೆ ತಿಳಿಯದಿರಬಹುದು ಎಂದು ಕೊಂಡು ಉಯ್ಯಾಲೆ ಮೇಲೆ ಕುಸಿದು ಕೂತರಂತೆ. ಅಲಕಾವತಿ ಅವರ ಕಾಲು ಬುಡದಲ್ಲಿ ಬಂದು ಕೂತಳಂತೆ. +ಅಲ್ಲಿಂದ ಪ್ರಾರಂಭವಾಯಿತು ಅವಳ ಬಗ್ಗೆ ಅದಮ್ಯ ಬಯಕೆ, ಜೊತೆಗೇ ಭಯ, ಮಾರನೇ ದಿನ ತೀರ್ಥ ಕೊಡಲು ಬಂದಾಗ ಸಂಪೂರ್ಣ ಸೆರಗು ಹೊದ್ದು ತಾನೊಬ್ಬ ಪುಟ್ಟ ಹುಡುಗಿ ಎಂದು ಭಾಸವಾಗುವಂತೆ, ಅಕ್ಕರೆ ಹುಟ್ಟಿಸುವಂತೆ ಮುದುಡಿ ಕೂತಿದ್ದಳು. ನಡುಗುವ ಕೈಯಿಂದ ಆಚಾರ್ಯರು ಅವಳಿಗೆ ತೀರ್ಥ ಮತ್ತು ಕೆಂಡಸಂಪಿಗೆ ಹೂಗಳನ್ನು ಕೊಟ್ಟು ಏನು ಮಾತಾಡಲೂ ತೋಚದೆ ಹಿಂದಕ್ಕೆ ಬಂದರು. ಇಡೀ ದಿನ ಅವಳನ್ನು ಕೂಡುವ ಬಯಕೆ ಆಚಾರ್ಯರಲ್ಲಿ ಬೆಳೆಯುತ್ತ ಹೋಯಿತು. ರಾತ್ರೆ ದೇವಸ್ಥಾನದ ಅಂಗಳದಲ್ಲಿ, ಕೆಂಡಸಂಪಿಗೆ ಮರದ ಬುಡದಲ್ಲಿ, ಚಂದ್ರನಿಲ್ಲದ ನಕ್ಷತ್ರಗಳಿಂದ ಉಕ್ಕುವ ಕಪ್ಪಾದ ಆಕಾಶ ನೋಡುತ್ತ ದೆವ್ವ ಬಡಿದವರಂತೆ ಮಲಗಿದ್ದಾಗ ಅಲಕಾವತಿಯನ್ನು ಕೂಡುವ ಬಯಕೆ ತಡೆಯದಾಗಿ ಎದ್ದು ಕೂತರು. ಕತ್ತಲೆಯಲ್ಲಿ ಆವೇಶದಲ್ಲಿ ಬುಸುಗುಡುತ್ತ ಅವಳ ಮನೆಕಡೆ ನಡೆದರು. ಅರ್ಧರಾತ್ರೆಯಾದ್ದರಿಂದ ಒಂದು ನರಹುಳ ಹೊರಗಿರಲಿಲ್ಲ. ಅಲಕಾವತಿಯ ಮನೆಮುಂದೆ ನಿಂತರು. ಹೆಬ್ಬಗಿಲನ್ನುಹೆಬ್ಬಾಗಿಲನ್ನು ತಟ್ಟಿ ತ್ರೆಸುವಂತಿಲ್ಲ. ಹಿಂದಿನ ದಿನ ಸುಣ್ಣ ಹೊಡೆಯುತ್ತಿದ್ದವರು ಮನೆಯ ಹಿಂದೆ ಇಟ್ಟಿದ್ದ ಏಣಿಯನ್ನು ಹತ್ತಿ ಬಟ್ಟೆ ಒಣಗಿ ಹಾಕುವ ಅಟ್ಟದಲ್ಲಿ ಇಳಿದರು. ಅಲ್ಲಿಂದ ಮೆತ್ತನೆಯ ಹೆಜ್ಜೆಗಳನ್ನಿಡುತ್ತ, ಹೊಡೆದುಕೊಳ್ಳುತ್ತಿದ್ದ ಎದೆಯನ್ನು ಶಲ್ಯದಿಂದ ಒತ್ತಿ ಹಿಡಿದು, ಮಹಡಿಯನ್ನು ಬಳಸಿ ಅಲಕಾವತಿ ಮಲಗುವ ಕೋಣೆಗೆ ಬಂದರು. +ಅವಳು ಮಂಚದ ಮೇಲೆ ಮಲಗಿದ್ದಳು. ಪಕ್ಕದಲ್ಲಿ ಲಾಟೀನು ಉರಿಯುತ್ತಲೇ ಇತ್ತು. ಅವಳ ಎದೆಯ ಮೇಲೊಂದು ಓದುತ್ತಿದ್ದ ಪುಸ್ತಕ ಬಿಡಿಸಿಕೊಂಡಿತ್ತು. ಪಂಜರದಲ್ಲಿದ್ದ ಗಿಣಿ ರೆಕ್ಕೆಯನ್ನು ಬಡಿದು ಸದ್ದು ಮಾಡಿತು. ಆಚಾರ್ಯರು ಅಲಕಾವತಿಯ ಶತವಾದ ಮುಖವನ್ನೆ ನೋಡುತ್ತ ಎಷ್ಟೋ ಹೊತ್ತು ನಿಂತೇ ಇದ್ದರು. ಮೆತ್ತಗೆ ಅಲಕಾವತಿ, ಅಲಕಾವತಿ ಎಂದು ಕರೆದರು. ಅವಳಿಗೆ ಎಚ್ಚರಿಲ್ಲದಿದ್ದಾಗ ಅವಳ ಮೈಯನ್ನು ಮುಟ್ಟಿ ಎಬ್ಬಿಸುವುದು ಸರಿಯಲ್ಲವೆನ್ನಿಸಿತು. ದೇವರ ನಾಮಸ್ಮರಣೆ ಮಾಡುವಂತೆ ನೂರುಬಾರಿಯಾದರೂ ಅವರು ಅಲಕಾವತಿ ಅಲಕಾವತಿ ಎಂದು ಕರೆದಿರಬೇಕು. ಅಲಕಾವತಿ ಮೆಲ್ಲನೆ ಕಣ್ಣುತೆರೆದು, ಎದುರಿಗಿದ್ದವರನ್ನು ಗಾಬರಿಪಟ್ಟುಕೊಳ್ಳದೆ ಗುರುತಿಸಿ, ಈ ಪೂಜೆ ತನಗೆ ಸಲ್ಲತಕ್ಕದ್ದು ಎಂಬಂತೆ ಆಚಾರ್ಯರ ಕೈಯನ್ನು ಹಿಡಿದು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡಳು. ಆಚಾರ್ಯರು ಆಗ ಮೈಮೇಲೆ ಬಂದವರಂತೆ ಇದ್ದರೇ ವಿನಹ ಮನುಷ್ಯರಾಗಿರಲಿಲ್ಲ. ಬುಸುಗುಡುತ್ತ ನಿಸ್ಸಹಾಯಕರಂತಿದ್ದ ಅವರನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮೈತಡವಿ ಸಂತೈಸುತ್ತ ಹೇಳಿದಳಂತೆ: “ನಿಮ್ಮನ್ನು ನಾನು ಮನಸ್ಸಿನಲ್ಲಿ ವರಿಸಿದ್ದೇನೆ ಆದರೆ ಮೈಯಲ್ಲಿ ವರಿಸಲಾರೆ” ಅಂತ. ಪಕ್ಕದಲ್ಲಿ ಮಲಗಿದ್ದ ಆಚಾರ್ಯರು ಅದಕ್ಕಿಂತ ಮುಂದಿನದನ್ನು ಬಯಸಲಾರದಷ್ಟು ತೀವ್ರ ತುದಿಯನ್ನು ಮುಟ್ಟಿಬಿಟ್ಟಿದ್ದರು. ಆದರೆ ಮಾರನೇ ದಿನ ಹೀಗೆಯೇ ಅರ್ಧರಾತ್ರಿಯ ನಂತರ ಹೋದವರು ಅವಳ ಮೈಯನ್ನು ಕೂಡುವುದನ್ನೂ ಬಯಸಿದರು. ಅಲಕಾವತಿ ಮೃದುವಾಗಿ ಅವರನ್ನು ಬೇಡವೆಂದು ತಳ್ಳಿದಳು. ಅದರ ಮಾರನೇ ದಿನ ಮದ್ಯಾಹ್ನಮಧ್ಯಾಹ್ನ ತೀರ್ಥ ಕೊಡಲು ಹೋದವರೇ ಅವಳನ್ನು ಗಟ್ಟಿಯಾಗಿ ಅಪ್ಪಿ ತನ್ನನ್ನು ಕೂಡುವಂತೆ ಬೇಡಿಕೊಂಡರು. ಅವಳು “ಮುಂದೆ ಏನೆಂದು” ಕಾತುರಳಾಗಿ ಕೇಳಿದಳು. ಆಚಾರ್ಯರು ‘ ಮದುವೆಯಾಗೋಣ’ ಎಂದರು. ಅಲಕಾವತಿ “ಅದೆಲ್ಲಿ ಸಾಧ್ಯ?” ಎಂದು ನಿಟ್ಟುಸಿರಿಟ್ಟಳು. ಅವಳು ಹೇಳಿದಂತೆ ಅದು ಸಾಧ್ಯವಿರಲಿಲ್ಲ. ಆಚಾರ್ಯರು ದೇವಸ್ಥಾನದ ಪೂಜಾರಿ, ಮದುವೆಯಾದವರು, ಅದಕ್ಕೂ ಮಿಗಿಲಾಗಿ ಅಲಕಾವತಿ ವಿವಾಹಿತ ಹೆಣ್ಣು, ಅವರಿಗಿಂತ ವಯಸ್ಸಾದವಳು. ಆಚಾರ್ಯರು ಆಮೇಲಿಂದ ಭ್ರಾಂತರಂತೆ ಆಗಿಬಿಟ್ಟರು. ಸಮಯ ಸಿಕ್ಕಾಗಲೆಲ್ಲ ಹೋಗಿ ಅಲಕಾವತಿಯನ್ನು ಅಂಗಲಾಚಲು ಶುರುಮಾಡಿದರು. ಅವಳು ಅವರನ್ನು ಮುದ್ದಿಸುತ್ತಿದ್ದಳಂತೆ. ಆದರೆ ಅವರು ತನ್ನಲ್ಲಿ ಪರವಶರಾಗುತ್ತಾ ಹೋದಂತೆ ಹಿಂದೆ ಸರಿದುಬಿಡುತ್ತಿದ್ದಳಂತೆ. ಹೀಗೆ ಎರಡು ತಿಂಗಳು ಕಳೆದ ಆಚಾರ್ಯರು ಸೊರಗುತ್ತ ಹೋದರಂತೆ. ಒಂದು ದಿನ ಅಲಕಾವತಿಯೇ +ಆಚಾರ್ಯರಿಗೆ “ನೀವು ಈ ಊರು ಬಿಟ್ಟು ಹೋಗಿ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಿ. ಆಮೇಲೆ ನನ್ನನ್ನು ಕರೆಸಿಕೊಳ್ಳಿ” ಎಂದಳಂತೆ. ಆಚಾರ್ಯರಿಗೆ ಅದು ಸರಿ ಎನ್ನಿಸಿತು. ಊರುಬಿಟ್ಟು ತಾನು ಓಡಿಹೋಗುವ ದಿನವನ್ನು ನಿರ್ಧರಿಸುತ್ತಿದ್ದಂತೆಯೇ ಅಲಕಾವತಿ ಅವರನ್ನು ಪೀಡಿಸಲು ಶುರುಮಾಡುತ್ತಿದ್ದಳಂತೆ. “ನನ್ನಿಂದ ದೂರವಾಗಲು ನೀವು ಹೋಗುತ್ತಿರೋದು. ಆಮೇಲೆ ಮರೆತು ಬಿಡುತ್ತೀರಿ” ಎಂದು ಆಚಾರ್ಯರು “ಹೋಗಲ್ಲ- ಬೇಡ” ಎಂದು. ಅವಳನ್ನು ಕೂಡುವ ಬಯಕೆ ವ್ಯಕ್ತ ಪಡಿಸಿದಾಗ “ನಿಮಗೆ ಬೇಕಾಗಿರೋದು ಈ ನನ್ನ ಮೈಮಾತ್ರ ಅಲ್ಲವ?” ಎನ್ನುತ್ತಿದ್ದಳಂತೆ. +ಒಂದು ದಿನ ಆಚಾರ್ಯರು ಹಳ್ಳಿಯನ್ನು ತೊರೆದು ಹೊರಟೇ ಹೋದರು. ಅಲಕಾವತಿ ಅವರ ಪ್ರಯಾಣದ ಖರ್ಚಿಗೆ ಬೇಕಾದ ಹಣವನ್ನು ಕೊಟ್ಟಿದ್ದಳು. ತನ್ನನ್ನು ಬೇಗ ಕರೆಸಿಕೊಳ್ಳಿರೆಂದು ಅತ್ತು ಕರೆದಿದ್ದಳು. ಹೊರಡುವ ಹಿಂದಿನ ರಾತ್ರೆ ಕೂಡುವ ಬಯಕೆಯನ್ನೂ ತೋರಿಸಿದ್ದಳು. ಆದರೆ ಅವಳನ್ನು ತಾನೆಷ್ಟು ಪ್ರೀತಿಸುತ್ತೇನೆ ಎಂಬುದು ಅವಳಿಗೆ ಗೊತ್ತಾಗಲೆಂದು ಆಚಾರ್ಯರೆ ಕೂಡುವುದು ಬೇಡವೆಂದಿದ್ದರು. +ದೆಹಲಿಯಲ್ಲಿ ನಾಯರ್ ಸಹವಾಸದಲ್ಲಿ ಎರಡುವರ್ಷವಿದ್ದು, ಕೆಲಸಗಳನ್ನು ಕಳೆದುಕೊಂಡು ಹಿಂದೆ ಬಂದು ನೋಡಿದಾಗ ಅಲಕಾವತಿ ಬದಲಾಗಿದ್ದಳು. ಸಣಕಲು ದೇಹದ ತನ್ನ ಗಂಡನನ್ನು ಕರೆಸಿಕೊಂಡಿದ್ದಳು. ಅವಳ ಗಂಡನದ್ದು ಗೋಟುತಲೆ, ಸೋಡಾಬಾಟ್ಳು ಕನ್ನಡಕ, ಒಟ್ಟಿನಲ್ಲಿ ಹ್ಯಾಪನಾದ ಮನುಷ್ಯ. ಆಚಾರ್ಯರ ಹೆಂಡತಿಯೂ ಮೈನೆರೆದು ಗಂಡನ ಮನೆಗೆ ಬಂದಿದ್ದಳು. ಮಗ ಓದಿ ವಿದ್ಯಾವಂತನಾಗಿ ಹಿಂದಕ್ಕೆ ಬಂದನೆಂದು ಅವರ ಅಪ್ಪನಿಗೂ ಖುಷಿಯಾಗಿತ್ತು. ಅಲಕಾವತಿ ಈಗ ರೇಷ್ಮೆಯ ಪತ್ತಲಗಳನ್ನುಡುವುದಿಲ್ಲ. ಕುರುಡಿಯಾಗಿದ್ದ ತಾಯಿ ಸತ್ತಿದ್ದಳು. ಸಾದಾ ಸೀರೆಯನ್ನುಟ್ಟು ತೀರ್ಥಕ್ಕಾಗಿ ದೇವಸ್ಥಾನಕ್ಕೇ ಬರುತ್ತಿದ್ದಳು. ಮನೆ ದೇವರನ್ನು ಗಂಡನೇ ಪೂಜಿಸುತ್ತಿದ್ದ. ಸ್ದೊಂದುಅದೊಂದು ಬಿಟ್ಟು ಬೇರೆ ಯಾವ ಕೆಲಸವೂ ಅವನ ಕೈಯಿಂದ ಆಗದು. +ಆಚಾರ್ಯರಿಗೆ ನಿರಾಸೆಯಾಗಿತ್ತು. ಈ ಹಳ್ಳಿಯನ್ನು ಬಿಡುವುದೆಂದು ನಿರ್ಧರಿಸಿದರು. ಅಲಕಾವತಿ ತನ್ನ ಸಾಧ್ವಿತನವನ್ನು ಮನದಟ್ಟು ಮಾಡುವವಳಂತೆ ದೇವಸ್ಥಾನಕ್ಕೆ ಬಂದಾಗ ಆಚಾರ್ಯರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ದಿನ ಅವಳು ಒಂಟಿಯಾಗಿರುವುದನ್ನು ಕಾದು ಅವಳ ಮನೆಗೆ ಹೋದರು. ಆಚಾರ್ಯರು ಆಗ ಕ್ರಾಪು ಬಿಟ್ಟಿದ್ದರು. ಅಂಗಿಯನ್ನು ಹಾಕುತ್ತಿದ್ದರು. ನಾನು ಊರು ಬಿಡುತ್ತಿದ್ದೇನೆ ಎಂದಾಗ ಅಲಕಾವತಿ ಮುಖ ಎತ್ತದೆ ಮೌನವಾಗಿ ಅಳುತ್ತಿರುವುದನ್ನು ಆಚಾರ್ಯರು ಗಮನಿಸಿ, ಅವಳ ಕೈಯನ್ನು ಹಿಡಿದು ಮೃದುವಾಗಿ ‘ಬೇರೇನು ಸಾಧ್ಯ? ಎಂದರು. “ ನಾನು ಈಗ ನಿಮಗೆ ಬೇಕಿಲ್ಲ ಅಲ್ಲವೆ” ಎಂದಳು. ಅಲಕಾವತಿ ಕೈಗಳನ್ನು ಬಿಡಿಸಿಕೊಂಡು. ಆಚಾರ್ಯರಿಗೆ ಅವಳನ್ನು ಕೂಡುವ ಬಯಕೆ ಈ ಮಾತಿನಿಂದ ಕುದುರಿತು. ಅವಳನ್ನು ಅಪ್ಪಿದರು. ಅಲಕಾವತಿ ಅವರ ಎದೆಯ ಮೇಲೆ ಮುಖ ಮುಚ್ಚಿಕೊಂಡು ಅತ್ತಳು. +ಆಚಾರ್ಯರು ತಮ್ಮ ಹಳ್ಳಿಯ ಹತ್ತಿರದಲ್ಲಿದ್ದ ಪೋಸ್ಟ್ ಆಫಿಸ್‌ನಲ್ಲಿಆಫೀಸ್‌ನಲ್ಲಿ ಪೋಸ್ಟ್ ಮಾಸ್ತರರಾದರು. ಅಲಕಾವತಿ ಎಷ್ಟು ಉಪಾಯಗಾರಳೆಂಬುದು ಅವರಿಗೆ ಕ್ರಮೇಣ ತಿಳಿಯುತ್ತ ಹೋಯಿತು. ತನ್ನ ಗಂಡನಿಗೆ ವ್ಯವಹಾರ ಜ್ಞಾನ ಸಾಲದೆಂದು ಆಚಾರ್ಯರನ್ನು ತನ್ನ ಎಸ್ಟೇಟಿನ ರೈಟರ್ ಆಗಿ ನೇಮಿಸಿದಳು. ಎಸ್ಟೇಟಿನ ಮೇಲಿದ್ದ, ಕಾಡಿನಿಂದ ಆವೃತವಾದ ಒಂದು ಗುಡ್ಡದಲ್ಲಿ ಒಂದು ಆಫೀಸನ್ನು ಕಟ್ಟಿಸಿದಳು. ಪೋಸ್ಟ್ ಆಫೀಸಿನ ಕೆಲಸ ಮುಗಿಸಿಕೊಂಡು ಆಚಾರ್ಯರು ಆ ಆಫಿಸಿಗೆಆಫೀಸಿಗೆ ಹೋಗುವುದು; ಅಲ್ಲಿ ಅವರನ್ನು ಸಂಜೆ ಅಲಕಾವತಿ ಭೆಟ್ಟಿಯಾಗುವುದು. ಊರಿನ ದೊಡ್ಡ ಶ್ರೀಮಂತಳಲ್ಲವೆ- ಜನರು ಎದುರು ಆಡಿಕೊಳ್ಳಲು ಹೆದರುತ್ತಿದ್ದರು. ಪರಸ್ಪರ ಸಂಧಿಸುವ ನೂರಾರು ಉಪಾಯಗಳನ್ನು ಹುಡುಕುವುದರಲ್ಲೇ ಇಬ್ಬರ ಬುದ್ಧಿಶಕ್ತಿಯೂ ವ್ಯಯವಾಗುತ್ತಾ ಹೋಯಿತು. ಪ್ರಚಂಡ ಬಯಕೆಯಾಗಿ ಆಚಾರ್ಯರನ್ನು ಕಾಡಿದ್ದು ಕ್ರಮೇಣ ಮೈಮನಸ್ಸುಗಳನ್ನು ತಣಿಸುವ ದೈನಿಕ ಅಗತ್ಯವಾಯಿತು. ಆಕೆಯ ಎಸ್ಟೇಟಿನ ಸಂಬಂಧಪಟ್ಟ ವ್ಯಾಜ್ಯಗಳ ನಿರ್ವಹಣೆಯಲ್ಲಿ ಅವರ ಕಾನೂನಿನ ಚಟವೂ ಹುಟ್ಟಿಕೊಂಡದ್ದು. +ಅವರ ಹೆಂಡತಿಯ ಚಿಕ್ಕ ಪ್ರಾಯದ ಗುಂಡಗಿನ ಮುಖದಲ್ಲಿ ಮಾತ್ರ ಒಂದು ಬಗೆಯ ಅತೃಪ್ತಿ ಮತ್ತು ದುಗುಡ ಬೇರೂರಿತು. ಆಚಾರ್ಯರಿಗೆ ಎಲ್ಲಾದರೂದೇಶಾಂತರ ಹೋಗಿಬಿಡಬೇಕೆಂದು ಅನ್ನಿಸುತ್ತಿತ್ತು-ಈ ಕಪಟನಾಟಕದಿಂದ ಬೇಸರವಾದಾಗ. ಆದರೆ ಅಲಕಾವತಿ ತನ್ನ ಮೈಯ ರುಚಿಯನ್ನು ಹೆಚ್ಚಿಸುತ್ತ, ಅದು ಗುಪ್ತ ಲಭ್ಯವಾದ್ದರಿಂದ ಆ ಸುಖವನ್ನು ಇನ್ನಷ್ಟು ಕಟುವಾಗಿಸುತ್ತ ಆಚಾರ್ಯರನ್ನು ಇನ್ನಷ್ಟು ಬಿಗಿಯಾಗಿ ಹಿಡಿಯುತ್ತ ಹೋದಳು. +ಕ್ರಮೇಣ ಆಚಾರ್ಯರಿಗೆ ತನ್ನ ಸ್ವಮರ್ಯಾದೆ ನಷ್ಟವಾಗುತ್ತಿದೆ ಎಂಬ ಭಾವನೆ ಬೆಳೆಯಲು ಶುರುವಾಯಿತು. ಈ ಭಾವನೆ ಗಮನಿಸಿದ ಅಲಕಾವತಿ ಇನ್ನಷ್ಟು ಹೆಚ್ಚು ತನ್ನ ಸಂಗದ ಸುಖ ಅವರಿಗೆ ಬೆಳೆಯುವಂತೆ ಪ್ರಣಯದ ಕಲೆಯಲ್ಲಿ ನಿಷ್ಣಾತಳಾಗುತ್ತ ಹೋದಳು. ಪ್ರತಿದಿನ ಅವರಿಗೆ ಅವಳು ಹೊಸಬಳೆನ್ನುವಂತೆ ಮೈಯನ್ನು ಕೊಟ್ಟಳು. ಈ ಮೈಯಿ ಅಕ್ಷಯವಾಗಿ ಪರಸ್ಪರ ಸಂಗದಲ್ಲಿ ಬಿಚ್ಚಿಕೊಳ್ಳಬಹುದೆಂದು ತೋರಿಸಿ, ಅವರನ್ನು ಬೆರಗಿನಲ್ಲೇ ಉಳಿಸಿದಳು. +ಎರಡು ವರ್ಷಗಳು ಹೀಗೇ ಕಳೆದವು. ಅಲಕಾವತಿ ಬಸುರಾದಳು. ಅವಳ ಗಂಡ ಬಾಯಿ ಮುಚ್ಚಿಕೊಂಡಿದ್ದು ಅದು ತನ್ನಿಂದಲೇ ಎಂಬುವಂತೆ ಸಂಭ್ರಮದಿಂದ ತಿರುಗಿದ. ಅವನ ದೈನ್ಯದಿಂದ ಆಚಾರ್ಯರಿಗೆ ತುಂಬ ಅಸಹ್ಯವಾಗುತ್ತಿತ್ತು. ಅಲಕಾವತಿ ಮಾತ್ರ ನೀತಿ ನಿಯಮಗಳಿಂದ ಅಬಾಧಿತಳಾಗಿದ್ದಳು. ಬಸುರಿಯಾದವಳು ಕಣ್ಣಿಗೆ ಹೊಳೆಯುವ ದೇವಿಯಂತಿದ್ದಳು. ಮತ್ತೆ ಅವಳ ರೇಷ್ಮೆಯ ಪತ್ತಲಗಳನ್ನೆಲ್ಲ ಉಟ್ಟು ವಜ್ರದ ಓಲೆ‌ಉ‌ಅನ್ನುಓಲೆಯನ್ನು ಧರಿಸುತ್ತಿದ್ದಳು. ಅವರಿವರು ಕಂಡಾರೆಂಬ ಸಂಕೋಚವಿಲ್ಲದೆ ಇದು ತನಗೆ ಸಲ್ಲತಕ್ಕದೆಂಬಂತೆ ಆಚಾರ್ಯರ ಜೊತೆ ಆಪ್ತವಾಗಿರುತ್ತಿದ್ದಳು. ಅವರ ಹೆಂಡತಿಗೆ ಒಡವೆ ವಸ್ತಗಳು ಕಡಿಮೆಯಾಗದಂತೆ ಕೇಳಿದಷ್ಟು ಹಣವನ್ನು ಆಚಾರ್ಯರಿಗೆ ಕೊಡುತ್ತಿದ್ದಳು. ಬಸಿರು ಬೆಳೆದಂತೆ ಅವಳ ಮೈ ಮೊಗ್ಗಯಿತುಮೊಗ್ಗಾಯಿತು. ತನ್ನಲ್ಲೆ ಅಡಕವಾಯಿತು; ಗುಪ್ತವಾಯಿತು. ಆಚಾರ್ಯರು ಇದರಿಂದ ಬಿಡುಗಡೆಯ ನಿಟ್ಟುಸಿರಿಟ್ಟು ತನ್ನ ಕಾನೂನು ಮತ್ತು ಆಕಾಶಗಳ ಅಧ್ಯಯನದಲ್ಲಿ ನಿರತರಾದರು. +ಬಸಿರಾಗಿದ್ದ ಅಲಕಾವತಿ ಹೆರುವಾಗ ಹೊಟ್ಟೆಯಲ್ಲಿ ಮಗು ಸತ್ತು ಪ್ರಾಣಬಿಟ್ಟಳು. ಆಚಾರ್ಯರು ತಬ್ಬಿಬ್ಬಾದರು. ಹೆಂಡತಿಗೆ ಹತ್ತಿರವಾಗಲು ಪ್ರಯತ್ನಿಸಿ ಸೋತರು. ಕೊನೆಗೊಂದು ದಿನ ಹಳ್ಳಿಯನ್ನು ತೊರೆದು ಈ ಗ್ರಾಮಕ್ಕೆ ಬಂದು ಬಿಟ್ಟರು. +ಅಲಕಾವತಿಯನ್ನು ಮರೆಯಲು ಆಚಾರ್ಯರು ತಮ್ಮ ಕೋರ್ಟುವ್ಯಾಜ್ಯಗಳ ಚಟ ಬೆಳೆಸಿಕೊಂಡರೋ, ಶ್ರೀಮಂತ ಚಾಕರಿ ಅಗತ್ಯವಾಗಿ ಅದನ್ನವರು ಬೆಳೆಸಿಕೊಂಡರೋ, ಅಥವಾ ಚಟವೇ ಮೂಲವಾಗಿ ಶ್ರೀಮಂತರು ಅದಕ್ಕೆ ನೆವವಾದರೋ, ಅಂತೂ ತಾನೊಬ್ಬಳು ಈ ಇಪ್ಪತ್ತು ವರ್ಷ ಅವರಿಗೊಬ್ಬಳು ನೆಮ್ಮದಿಯ ದೀಪವಾಗಿದ್ದೆ. ಮುದ್ದಿನ ಮಗನ ಮದುವೆಯ ಅಘಾತವನ್ನವರು ಸಹಿಸುವುದು ಸಾಧ್ಯವಾದ್ದೂ ತನ್ನಿಂದಲೇ ಪ್ರಾಯಶಃ +* +* +* +ಆಚಾರ್ಯರ ಬೌತಿಕ ಶರೀರವೆಲ್ಲ ಸುಟ್ಟು ಭಸ್ಮವಾದ ನಂತರ ಎಲ್ಲರೂ ಸ್ನಾನ ಮಾಡಿ ಹಿಂದೆ ಬರುತ್ತಿರುವುದನ್ನು ನೋಡಿದ ಗಂಗೂಬಾಯಿ ಮರದ ಬುಡದಿಂದ ಎದ್ದು ಮನೆಗೆ ಬಂದಳು. ತನ್ನ ಪೆಟ್ಟಿಗೆಯಿಂದ ಐದುಸಾವಿರ ರೂಪಾಯಿಗಳನ್ನು ತೆಗೆದು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮನಿಗೆ ಕೊಟ್ಟಳು. ರುಕ್ಮಿಣಿಯಮ್ಮ ಇದರಿಂದ ಚಕಿತಳಾಗಿ ಬೇಡವೆಂದಳು. +“ಅವರ ಶುಶ್ರೂಷೆಗೆಂದು ಇದನ್ನು ತಂದೆ. ಇದು ಅವರಿಗೇ ಸೇರಬೇಕಾದ್ದು. ಅವರ ದಿನ ಕರ್ಮಗಳಿಗೆ ಇದನ್ನು ಖರ್ಚು ಮಾಡಿ ನನಗಷ್ಟು ಪುಣ್ಯ ಸಿಗುವಂತೆ ನೀವು ಮಾಡಬೇಕು.” +ಗಂಗೂಬಾಯಿ ಅಳುತ್ತ ಹೇಳಿದಳೂ.ಹೇಳಿದಳು. ಮನೆಯಲ್ಲಿ ಹಣವಿರಲಿಲ್ಲ.; ಮಗನ ಹತ್ತಿರ ಇದೆಯೋ ಇಲ್ಲವೋ, ವಿಷ್ಣುಮೂರ್ತಿಗಳನ್ನು ಕೇಳುವುದು ಹೇಗೆ ಎಂದು ಒದ್ದಾಡುತ್ತಿದ್ದ ರುಕ್ಮಿಣಿಯಮ್ಮ ಬೇಡ ಬೇಡವೆಂದು ಕೊನೆಗೂ ಆ ಹಣವನ್ನು ತೆಗೆದುಕೊಂಡರು. +“ನಾನೀಗ ಶಿವಮೊಗ್ಗೆಗೆ ಹೋಗುತ್ತೇನೆ. ಅವರ ವೈಕುಂಠ ಸಮಾರಾಧನೆಗೆ ಪ್ರಸಾದ ಪಡೆಯಲು ಮತ್ತೆ ಬರುತ್ತೇನೆ” +ಎಂದು ಗಂಗೂಬಾಯಿ ಹೇಳಿದಾಗ ರುಕ್ಮಿಣಿಯಮ್ಮ ಕಣ್ಣು ಒರೆಸಿಕೊಂಡು ಎಂದರು. “ಋಣಾನುಬಂಧ, ನೀನೂ ಇಲ್ಲೇ ಇರಬಹುದಲ್ಲ” +ಸ್ಕೂಲಿಗೆ ರಜವಿಲ್ಲೆಂದು ನೆವ ಹೇಳಿ ಗಂಗೂಬಾಯಿ ಸಂಜೆಯ ಬಸ್ಸು ಹಿಡಿದು ಶಿವಮೊಗ್ಗೆಗೆ ಹೊರಟು ಹೋದಳು. +* +* +* +ಈ ಘಟನೆಯಾದ ಎರಡು ವರ್ಷಗಳ ನಂತರ ದೆಹಲಿಯಲ್ಲಿ ಒಂದು ಬೇಸಿಗೆಯ ಸಂಜೆ ಕೃಷ್ಣಮೂರ್ತಿ ಆರಾಮಕುರ್ಚಿಯ ಮೇಲೆ ಕೂತು ಗಾಳಿ ಹಾಕಿಕೊಳ್ಳುತ್ತಿದ್ದ. ಹಗಲೆಲ್ಲ ಅಸಹನೀಯವಾದ ಬಿಸಿಲು ಕಾದಿತ್ತು. ಪಕ್ಕದಲ್ಲಿ ಹೆಂಡತಿ ಕೂತು ಮಗನ ಅಂಗಿಗೆ ಗುಂಡಿ ಹೊಲಿಯುತ್ತಿದ್ದಳು. ಬಹಳ ದಿನಗಳ ನಂತರ ಕೃಷ್ಣಮೂರ್ತಿಗೊಂದು ಬಗೆಯ ನೆಮ್ಮದಿ ಸಿಕ್ಕಿತ್ತು. ಇದಕ್ಕೆ ಕಾರಣವೆಂದರೆ ಡಿಫ್ತೀರಿಯಾದಲ್ಲಿ ಸತ್ತು ಬಿಡುತ್ತಾನೆಂದು ಹೆದರಿದ್ದ ಅವನ ಮಗ ಅಪಾಯದಿಂದ ಪಾರಾಗಿ ಬದುಕಿ ಉಳಿದದ್ದು. ಮಗನ ಹಾಸಿಗೆಯ ಬುಡದಲ್ಲಿ ನಿದ್ದೆ ಆಹಾರಗಳಿಲ್ಲದೆ ಕಾದು ಕೂತ ಗಂಡಹೆಂಡಿರು ಈಗ ಅನ್ಯೋನ್ಯವಾಗಿದ್ದರು ಮಗನಿಂದಾಗಿ ಹತ್ತಿರವಾಗಿದ್ದರು. ಹಣಕಾಸಿನ ಜಂಜಡಗಳೆಲ್ಲ ಇಬ್ಬರಿಗೂ ಕ್ಷುಲ್ಲಕವೆನಿಸಿತ್ತು. ಜೊತೆಗೆ ಕೃಷ್ಣಮೂರ್ತಿ ಇಡೀ ಮೂರು ಪುಸ್ತಕವನ್ನು ಬೇರೆ ಹೆಸರಿಟ್ಟುಕೊಂಡು ಬರೆದು ಹದಿನೈದು ಸಾವಿರ ರೂಪಾಯಿ ಗಳಿಸಿ ತಂದೆಯಿಂದಾದ ಋಣವನ್ನೆಲ್ಲ ಪರಿಹರಿಸಿಕೊಂಡಿದ್ದ. ಇಂಥ ಒಂದು ಗೈಡನ್ನು ಬರೆಯಬೇಕಾಗಿ ಬಂತೆಂದು ಅವನು ಅವಮಾನಿತನಾಗಿದ್ದರೂ ಒಟ್ಟಾಗಿ ಸಿಕ್ಕ ಹಣದಿಂದ ಅವನ ನೂರೆಂಟು ತಾಪತ್ರಯಗಳ ನಿವಾರಣೆಯಾಗಿತ್ತು. +ಇದ್ದಕ್ಕಿದ್ದಂತೆ ಕೃಷ್ಣಮೂರ್ತಿಗೆ ಅನ್ನಿಸಿತು. ಅಪ್ಪ ಮೂರ್ಖನಾಗಿ ಸತ್ತರೋ, ಅಥವಾ ಸಾಯುವಾಗ ಅವರಿಗೆ ಅರಿವು ಮೂಡಿತ್ತೋ ಹೇಳುವುದು ಹೇಗೆ? ಅವರು ಸಾಯುವ ಮುಂಚೆ ಆಡಿದ್ದ ಒಂದು ಮಾತು ಈವರೆಗೂ ಅವನಿಗೆ ಅಷ್ಟು ಮಹತ್ವದ್ದೆಂದು ಅನ್ನಿಸಿದ್ದಿಲ್ಲ. ಈಗ ಯಾಕೋ ಅನ್ನಿಸುತ್ತದೆ. ನಾಯರ್ ಹತ್ತಿರ ಮಾತಾಡುತ್ತಿದ್ದವರು ನಿದ್ದೆ ಹೋದರು. ಮಧ್ಯರಾತ್ರೆಯೋ ಏನೋ, ಕೃಷ್ಣಮೂರ್ತಿ ಅರ್ಧ ನಿದ್ರೆಯಲ್ಲಿದ್ದ. ಅಪ್ಪ ಮಲಗಿರುತ್ತಿದ್ದ ಕೋಣೆಗೆ ಹೊದಿಸಿದ ಮರದ ಹಲಗೆಗಳ ಅಟ್ಟದಲ್ಲೊಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಿದೆಯೆಂದು ಅಕ್ಕನ ಮಗ ಹರಿಕುಮಾರ ಅಟ್ಟವನ್ನು ಹತ್ತಿ ಬೆಕ್ಕಿನ ಮರಿಗಳಿದ್ದ ಬುಟ್ಟಿಯನ್ನು ಎತ್ತಲು ಹೋದ, ಆಗ ಬೆಕ್ಕು ಅವನನ್ನು ಕಚ್ಚಿ ಪರಚಲು ಎಗರಿ ಬಂದು ಕೂಗಿತು. ಮಲಗಿದ್ದ ಅಪ್ಪ ನರಳುತ್ತ ಹೇಳಿದರು: +“ಏ ಹರಿ, ಪಾಪ ಆ ಬೆಕ್ಕನ್ನ ಯಾಕೆ ಗೋಳು ಹೊಯ್ತಿಯೊ. ಅಲ್ಲೇ ಇರಲಿ ಬಿಡು ಅದು.” +ಅದೇ ಅವರು ಆಡಿದ್ದ ಕೊನೆಯ ಮಾತು. ದಯೆಯಿಂದ ಗದ್ಗದವಾಗಿತ್ತು ಅದು. ಆದರೆ ಅಷ್ಟೇ ಸಾಲದೆಂದು ತಾನು ಯಾಕೆ ಹೀಗೆ ಪರಿತಪಿಸುತ್ತಿದ್ದೇನೆ? +ಕೀ ಇನ್ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ +೦೮-೧೨-೨೦೦೫ +ಬದಿಕಿಬದುಕಿ ಸತ್ತರೋ, ಅಥವಾ ಸಾಯುವಾಗ ಅವರಿಗೆ ಅರಿವು ಮೂಡಿತ್ತೋ ಹೇಳುವುದು ಹೇಗೆ? ಅವರು ಸಾಯುವ ಮುಂಚೆ ಆಡಿದ್ದ ಒಂದು ಮಾತು ಈವರೆಗೂ ಅವನಿಗೆ ಅಷ್ಟು ಮಹತ್ವದ್ದೆಂದು ಅನ್ನಿಸಿದ್ದಿಲ್ಲ. ಈಗ ಯಾಕೋ ಅನ್ನಿಸುತ್ತದೆ. ನಾಯರ್ ಹತ್ತಿರ ಮಾತಾಡುತ್ತಿದ್ದವರು ನಿದ್ದೆ ಹೋದರು. ಮಧ್ಯರಾತ್ರೆಯೋ ಏನೋ, ಕೃಷ್ಣಮೂರ್ತಿ ಅರ್ಧ ನಿದ್ರೆಯಲ್ಲಿದ್ದ. ಅಪ್ಪ ಮಲಗಿರುತ್ತಿದ್ದ ಕೋಣೆಗೆ ಹೊದಿಸಿದ ಮರದ ಹಲಗೆಗಳ ಅಟ್ಟದಲ್ಲೊಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಿದೆಯೆಂದು ಅಕ್ಕನ ಮಗ ಹರಿಕುಮಾರ ಅಟ್ಟವನ್ನು ಹತ್ತಿ ಬೆಕ್ಕಿನ ಮರಿಗಳಿದ್ದ ಬುಟ್ಟಿಯನ್ನು ಎತ್ತಲು ಹೋದ, ಆಗ ಬೆಕ್ಕು ಅವನನ್ನು ಕಚ್ಚಿ ಪರಚಲು ಎಗರಿ ಬಂದು ಕೂಗಿತು. ಮಲಗಿದ್ದ ಅಪ್ಪ ನರಳುತ್ತ ಹೇಳಿದರು: +“ಏ ಹರಿ, ಪಾಪ ಆ ಬೆಕ್ಕನ್ನ ಯಾಕೆ ಗೋಳು ಹೊಯ್ತಿಯೊ. ಅಲ್ಲೇ ಇರಲಿ ಬಿಡು ಅದು.” +ಅದೇ ಅವರು ಆಡಿದ್ದ ಕೊನೆಯ ಮಾತು. ದಯೆಯಿಂದ ಗದ್ಗದವಾಗಿತ್ತು ಅದು. ಆದರೆ ಅಷ್ಟೇ ಸಾಲದೆಂದು ತಾನು ಯಾಕೆ ಹೀಗೆ ಪರಿತಪಿಸುತ್ತಿದ್ದೇನೆ? +***** +ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ […] +ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ […] +ಭಾಗ: ಒಂದು ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_754.txt b/Kannada Sahitya/article_754.txt new file mode 100644 index 0000000000000000000000000000000000000000..6f5c555427828741ecf01f2daa24091d5cf1f32a --- /dev/null +++ b/Kannada Sahitya/article_754.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) +ಕ್ಷೀರ ಸಾಗರವ ಸುಮನಸ ವೃಂದ +ಬಾನಿಂ ಕಟ್ಟಿರೆ ಸಡಲಿತೆ ಬಂಧ? +ಓಹೋ ತಪ್ಪಿದೆ ತಪ್ಪಿದೆನಲ್ಲ +ದೈವಶಕ್ತಿಗನುಮಾನವೆ ಸಲ್ಲ. +ರಾಧೆಯು ಹೊತ್ತಿರೆ ಬಿಂದಿಗೆ ಹಾಲ +ಕೃಷ್ಣನು ಅಲ್ಲಿಗೆ ಹೊಡೆದನೆ ಕಲ್ಲ? +ಆದರೆ ಸಂದೇಹವು ಬಂತಲ್ಲ +ಕಾಣದು ರಾಧೆಯ ಕೆಂಪಿನ ಗಲ್ಲ! +ದೇವಧೇನುವಿನ ಕೆಚ್ಚಲ ಹಾಲೆ? +ಸಟೆ; ನಿಲ್ಲಳು ಅವಳೊಂದೆಡೆಯಲ್ಲೇ. +ರತ್ನಗರ್ಭನಿಗೆ ಅಮೃತದ ಪಾಲೆ? +ಕತೆಯದು ಮುಗಿದುದು ಕೃತಯುಗದಲ್ಲೇ. +ಉಪ್ಪಿನ ರಾಜಗೆ ಸಕ್ಕರೆ ಹಾಲೆ? +ಪ್ರಕೃತಿಯ ಪುತ್ರಿಗೆ ತಾಯ್ಮೊಲೆವಾಲೆ? +ಆವ ಹಾಲಿನದು ಈ ಘನ ಶರಧಿ? +ಕವಿಯ ಕಲ್ಪನೆಗದೆಲ್ಲಿದೆ ಪರಿಧಿ? +***** +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […] +ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_755.txt b/Kannada Sahitya/article_755.txt new file mode 100644 index 0000000000000000000000000000000000000000..24cb4d4a451fe3f3a35e8cce6a72e165f69d133c --- /dev/null +++ b/Kannada Sahitya/article_755.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವನ ಉದ್ದವಾದ ಗಡ್ಡ, ಹೆಗಲಮೇಲೆ ಚೆಲ್ಲಿದ ಕೂದಲು, ಅವನು ಉಟ್ಟು ಹೊದೆಯುವ ಸಾದಾ ಬಿಳಿ ಪಂಚೆ, ಅವನ ಶಾಂತವಾದ ಕಣ್ಣುಗಳು – – ಥೇಟು ಒಬ್ಬ ಋಷಿ ಕುಮಾರನವು ಎನ್ನಿಸುತ್ತಿತ್ತು. ಇವನು ಯಾರ ಮಗನೂ ಅಲ್ಲ, ದೇವರ ಮಗ ಎಂದುಕೊಂಡು ನಾನು ಶಾಂತನಾದೆ. “ಆದರೆ ಇವತ್ತು ಬೆಳಿಗ್ಗೆ ಎಲ್ಲ ಬದಲಾಗಿ ಬಿಟ್ಟಿತು. ಪ್ರಸಾದ ತಾಯಿಯ ಎದುರು ಹೋಗಿ. ನಿಂತು, ’ನಾನು ಯಾರು?’ ಎಂದನಂತೆ. “ಋಷಿಯಂತೆ ಕಂಡ ಮಗನಿಗೆ ಸುಳ್ಳು ಹೇಳಲಾರದೆ, ಸತ್ಯವನ್ನು ಹೇಳಲೊಲ್ಲದೆ ಗಂಗೂ ಕಣ್ಣು ತುಂಬಿ ಬಂದು ಸುಮ್ಮನಿದ್ದಳಂತೆ. ಅವನು ನನ್ನ ಮಗನೆಂದು ಎಲ್ಲರೂ ಹೀಯಾಳಿಸಿದ್ದನ್ನು ಕೇಳಿದ್ದ ಪ್ರಸಾದನಿಗೆ ಯಾಕೆ ಸಂಶಯ ಹುಟ್ಟುಬಿಟ್ಟಿತೊ? ಎಂದು ತಾಯಿ ಕಂಗಾಲಾಗಿದ್ದಳು. ಆದರೆ ಒಂದು ಕ್ಷಣದಲ್ಲಿ ಅವಳಿಗೆ ತಿಳಿದಿತ್ತು. ಪ್ರಸಾದ ತನ್ನನ್ನು ಆ ಪ್ರಶ್ನೆ ಕೇಳಿದ್ದಲ್ಲ. ತನಗೇ ಕೇಳಿಕೊಂಡದ್ದು. ’ನಾನು ಯಾರು?’ ಎಂದು ಮತ್ತೆ ಅಂದವನು, ’ಅಮ್ಮ ಇದನ್ನು ತಿಳಿಯಲು ನಾನು ಸಂನ್ಯಾಸ ತೆಗೆದುಕೊಳ್ಳಬೇಕೆಂದಿದ್ದೇನೆ. ನಾನು ನಿನ್ನಲ್ಲಿ ಅಂಕುರಿಸಿದ ಹರಿದ್ವಾರಕ್ಕೇ ಹೋಗಿ ನನ್ನ ಸಂಗೀತದ ಉಪಾಸನೆ ಮುಂದುವರೆಸುತ್ತೇನೆ. ಇದಕ್ಕೆ ನಿನ್ನ ಅಪ್ಪಣೆ ಬೇಕು. ಆದರೆ ಸುಲಭವಾಗಿ ಸಂಸಾರದ ಮೋಹ ಯಾರನ್ನೂ ಬಿಡದು. ಜೊತೆಗೆ ಅಪ್ಪಯ್ಯನನ್ನೂ ಕರೆದುಕೊಂಡು ಹೋಗುತ್ತೇನೆ. ಅವರು ನನ್ನನ್ನು ಅತಿಯಾಗಿ ಹಚ್ಚಿಕೊಂಡಂತಿದೆ’ ಎಂದು ಗಂಗೂಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟನಂತೆ. ಚಂದ್ರಪ್ಪನನ್ನು ಅವನು ಅಪ್ಪಯ್ಯನೆಂದು ಕರೆಯೋದು. “ಗಂಗೂ ಈಗ ಕಂಗಾಲಾಗಿದ್ದಾಳೆ. ಇರುವ ಒಬ್ಬನೇ ಮಗನನ್ನು ಕಳಕೊಂಡರೆ ತನ್ನ ಪಾಡೇನು ಎಂದು ದುಃಖಿಯಾಗಿ ಬಿಟ್ಟಿದ್ದಾಳೆ. “ಮಗನನ್ನು ಉಳಿಸಿಕೊಳ್ಳಲು ಏನೇನೋ ಉಪಾಯಗಳನ್ನು ಹುಡುಕುತ್ತ ನನಗೆ ಹೇಳಿದಳು: ಮಗನಿಗೆ ಅವನ ಹುಟ್ಟಿನ ನಿಜವನ್ನು ತಿಳಿಸಿಬಿಡುವುದು. ಅಂದರೆ ನಿನ್ನ ಬಗ್ಗೆಯೂ ಹೇಳಿಬಿಡುವುದು. ಎಲ್ಲ ಯೋಗಾಯೋಗವೆನ್ನಿಸುತ್ತದೆ – ನೀನು ಈ ಸಮಯದಲ್ಲೇ ಇಲ್ಲಿಗೆ ಬಂದುಬಿಟ್ಟಿದ್ದೀಯ. ತನ್ನ ಸತ್ಯದಿಂದ ಮಗ ಮನೆಯಲ್ಲೇ ಉಳಿಯುತ್ತಾನೆಂದು ಗಂಗೂಗೆ ಒಂದು ಭ್ರಮೆ. ಇನ್ನೊಂದು ಭ್ರಮೆಯೆಂದರೆ ನನ್ನಿಂದ ದೇವರ ಎದುರು ಒಂದು ತಾಳಿ ಕಟ್ಟಿಸಿಕೊಂಡು ಬಿಟ್ಟರೆ ಮಗನ ಚಿತ್ತಕ್ಷೆ‌ಊ?ಭೆಗೆ ಶಮೆ ದೊರಕುತ್ತದೆ ಎಂದು. “ಒಂದಕ್ಕೊಂದು ಏನು ಸಂಬಂಧವೋ ತಿಳಿಯದು. ನನ್ನ ಲಾಯರ್ ತಲೆಗೆ ಅಂಥವು ಹೊಳೆಯಲ್ಲ. ನಾನಿದಕ್ಕೆ ಒಪ್ಪಿಬಿಟ್ಟೆ. ಆದರೆ ನನ್ನ ಆಸೆಬುರುಕ ಮಗನದೇ ನನಗೆ ಚಿಂತೆ. ಎಲ್ಲಿ ಆಸ್ತಿ ಪಾಲಾಗಿ ಬಿಡಬೇಕಾಗುತ್ತದೋ ಎಂದು ಅವನು ಕಿರುಚಾಡಿ ನನ್ನನ್ನು ಕೊಲ್ಲಲು ಬಂದರೂ ಬಂದನೆ. ಅವನ ರಾಜಕೀಯ ನಾನು ಕಂಡಿಲ್ಲವ? ಗೂಂಡಾಗಳನ್ನು ಬಿಟ್ಟು ತನ್ನ ಎದುರಾಳಿಗಳನ್ನು ಅವನು ಹೊಡೆಸಿದ್ದಿದೆ”. ನಾರಾಯಣನ ಮಾತು ಥಟ್ಟನೆ ಲಾಯರುಗಿರಿಯ ತಿರುವು ತೆಗೆದುಕೊಂಡಿತು: “ನನ್ನ ಪ್ರಸಾದನಿಗೆ ವೈರಾಗ್ಯವಲ್ಲವೆ? ನನ್ನ ಆಸ್ತಿಯನ್ನೆಲ್ಲ ನನ್ನ ಮಗನಿಗೇ ಮಾಡಿ ಪತ್ರವನ್ನು ರಿಜಿಸ್ಟರ್‍ಡ್ ಮಾಡಿಬಿಡುತ್ತೇನೆ. ನನ್ನದು ಹೆಚ್ಚಾಗಿ ಸ್ವಯಾರ್ಜಿತವೇ. ಗಂಗೂ ಆಸ್ತಿಯನ್ನು ಹೇಗೂ ಅವಳ ಹೆಸರಿಗೇ ರಿಜಿಸ್ಟರ್‍ಡ್ ಮಾಡಿಬಿಟ್ಟಿದ್ದೇನೆ. ಅವಳ ಸಂಪಾದನೆ ಅವಳಿಗೆ ಸಾಕು. ನನಗೆ ಇರುವ ಒಂದೇ ಚಿಂತೆಯೆಂದರೆ ಅಮ್ಮನದು. ಅವಳು ಖಂಡಿತ ಗಂಗೂಗೆ ನಾನು ತಾಳಿಕಟ್ಟುವುದನ್ನು ಒಪ್ಪುತ್ತಾಳೆಂದು ನನಗೆ ಗೊತ್ತು. ಒಂದು ದಿನ ಚಿಂತೆಯಲ್ಲಿರುವ ನನ್ನನ್ನು ಕಂಡು ಅರ್ಥಗರ್ಭಿತವಾಗಿ ಹೇಳಿದ್ದಳು – ’ನಿನ್ನ ಮಗನಿಗೊಂದು ಹೆಣ್ಣು ನೋಡಿ ಮದುವೆ ಮಾಡಿಬಿಡೋ. ಅವನು ತನ್ನ ಸಂಸಾರ ಮಾಡಿಕೊಂಡು ಬೇರೆಯಾಗಿ ಇರಲಿ. ಮಾಣಿಗೂ ಜವಾಬ್ದಾರಿ ಗೊತ್ತಾದಂತೆ ಆಗುತ್ತದೆ. ನೀನೂ ಆಗ ನಿನಗೆ ಸರಿಕಂಡದ್ದನ್ನು ಮಾಡಬಹುದು’ ಎಂದಮೇಲೆ ಅವಳು ಪಿಸುಗುಟ್ಟುವಂತೆ ನನ್ನ ಕಿವಿಯಲ್ಲಿ ಇನ್ನೊಂದು ಮಾತು ಹಾಕಿ ನನ್ನನ್ನು ಚಕಿತಗೊಳಿಸಿಬಿಟ್ಟಳು.” ನಾರಾಯಣ ಮಾತು ನಿಲ್ಲಿಸಿ ಕಾರಿನ ಬಾಗಿಲು ತೆರೆದು ದಿನಕರನನ್ನು ಕೂರಿಸಿಕೊಂಡು ಸ್ಟಾರ್‍ಟ್ ಮಾಡಿ ಹೇಳಿದ: “ಅಮ್ಮ ಏನು ಹೇಳಿದಳು ಗೊತ್ತ?” ದಿನಕರ ’ಏನು’ ಎಂದ. ಕಾರನ್ನು ಬಿಡುತ್ತ ನಾರಾಯಣ ಗೌರವದ ಧ್ವನಿಯಲ್ಲಿ ಹೇಳಿದ: “ನನ್ನ ಅಮ್ಮನಿಗೆ ಮಾತ್ರ ಇನ್ನೊಂದು ಜನ್ಮವೆತ್ತುವ ಅಗತ್ಯ ಬೀಳದು ಎನ್ನಿಸುತ್ತೆ ನನಗೆ. ಅವರು ಈ ಭವದಲ್ಲಿದ್ದೂ ಈ ಭವದಿಂದ ಮುಕ್ತರು”. ಇನ್ನಷ್ಟು ಹೊತ್ತು ಕಳೆದು ಕಂಪಿಸುವ ಧ್ವನಿಯಲ್ಲಿ ಹೇಳಿದ: “ಗಂಗೂ ಕೂಡ ನನಗೆ ಬಳಗದವಳಂತೆಯೇ’ ಎಂದು ಅಮ್ಮ ಅಂದುಬಿಟ್ಟಿದ್ದಳು. ವರ್ಷದ ಹಿಂದಿನ ಮಾತು ಇದು. ಗಂಗೂಗೆ ಅಮ್ಮ ಅಂದದ್ದು ಹೇಳಿದೆ. ಅದಕ್ಕವಳು ’ಅಮ್ಮನ ಆ ಮಾತಿನಿಂದಾಗಿ ನಾನು ನಿಮ್ಮ ಹೆಂಡತಿಯಾಗಿ ಬಿಟ್ಟಂತೆಯೇ’ ಎಂದಿದ್ದಳು.” ದಿನಕರ ಈ ಮಾತು ಕೇಳಿ ಕುಸಿದುಬಿಟ್ಟ. ನಾರಾಯಣನ ಜೀವನದಲ್ಲಿ ತಾನು ಪಾಲುದಾರ, ಆದರೆ ಅವನ ಬಿಡುಗಡೆಯಲ್ಲಿ ತನಗೆ ಯಾವ ಪಾತ್ರವೂ ಇಲ್ಲ. ನಾರಾಯಣನಿಗೆ ಸಂಸಾರದ ಒಂದು ಚೌಕಟ್ಟಿದೆ; ಆದರೆ ತನಗೆ ಇಲ್ಲ. ಅವನಿಗೆ ಹೇಳಿ ಕೇಳುವವರೂ ಇದ್ದಾರೆ. ಸಮಾಜದ ಭಯವಿದೆ., ಅಲ್ಲೊಂದು ಅವನಿಗೆ ನಿಶ್ಚಿತ ಪಾತ್ರವಿದೆ; ಆದರೆ ತನಗೆ ಇಲ್ಲ. ಅವನಿಂದ ನೋಯುವವರೂ ಇದ್ದಾರೆ; ನಿರೀಕ್ಷಿಸುವವರೂ ಇದ್ದಾರೆ; ಆದರೆ ತನಗೆ ಇಲ್ಲ. ಪ್ರಸಾದ ನಾರಾಯಣನಿಗೆ ಇದ್ದಾನೆ; ತನಗೆ ಇಲ್ಲ. ತನ್ನಿಂದ ಅವನು ಹುಟ್ಟಿರಬಹುದು, ಇಲ್ಲದೇ ಇರಬಹುದು – ಆದರೆ ತಾನು ಆ ಬಗ್ಗೆ ಏನು ಮಾಡುವುದೂ ಉಳಿದಿಲ್ಲ. ದಿಗ್ಭ್ರಮೆ ಮಾತ್ರ ತನ್ನ ಪಾಲಿಗೆ. ಈ ದೇಹ ಅಂಥ ದಿಗ್ಭ್ರಮೆಯನ್ನು ಹೆಚ್ಚು ಕಾಲ ಧಾರಣ ಕೂಡ ಮಾಡಲಾರದು. ತನ್ನಂಥ ಅತಂತ್ರನಿಗೆ ಸಂಸಾರವೂ ಇಲ್ಲ, ಸಂನ್ಯಾಸವೂ ಇಲ್ಲ. ತನಗೆ ನೆಲೆಯೇ ಇಲ್ಲ. ತಾನು ಯಾರೆಂದು ಹುಡುಕಿದರೂ ಏನೂ ಸಿಗುವುದಿಲ್ಲ. +ಅಧ್ಯಾಯ ೭ +ನಾರಾಯಣ ತಂತ್ರಿ ಮುಖ್ಯ ರಸ್ತೆಯಿಂದ ಕಾರನ್ನು ತಿರುಗಿಸಿ ಏನೋ ಹೇಳಿದ. ದಿನಕರನಿಗೆ ಕೇಳಿಸಲಿಲ್ಲ. ಒಂದು ಒಂಟಿಯಾಗಿದ್ದ ಹೆಂಚಿನ ಮನೆಯ ಎದುರು ನಿಲ್ಲಿಸಿದ. “ನನಗೊಂದು ಡ್ರಿಂಕ್ ಬೇಕೆನ್ನಿಸಿದಾಗ ಇಲ್ಲಿಗೆ ನಾನು ಬರುವುದಿದೆ” ಎಂದು ದಿನಕರನಿಗೆ ಕೊಂಚ ಆಶ್ಚರ್ಯವಾಗುವಂತೆ ಮಾಡಿದ. ಮನೆಯ ಒಳಕ್ಕೆ ಅದು ತನ್ನ ಸ್ವಂತದ್ದೆಂಬಂತೆ ಅವನು ಹೋಗುವಾಗ, ಮನೆಯ ಹೊರಗೆ ಬರಿ ಮೈಮೇಲೆ ಟವಲು ಹೊದ್ದವನೊಬ್ಬ “ರಂಗಮ್ಮಾ, ಲಾಯರು ಬಂದ್ದಿದ್ದಾರೆ” ಎಂದು ಗಟ್ಟಿಯಾಗಿ ಹೇಳುತ್ತಾ ಎದ್ದು ನಿಂತಾಗ ಡಿನಕರನಿಗೆ ಗುಮಾನಿಯಾಯಿತು. ‘ತನ್ನಂಥವನೇ ಈ ನಾರಾಯಣ. ಇವನಿಗೂ ದೀರ್ಘಕಾಲದ ತೀವ್ರ ಭಾವವನ್ನು ಧಾರಣೆ ಮಾಡುವ ಶಕ್ತಿಯಿಲ್ಲ’ ಎಂದು ಕೊಂಡ. ಎಲೆಯಡಿಕೆ ಮೆಲ್ಲುತ್ತಿದ್ದ ಆಕರ್ಷಕಳಾದ ಕಪ್ಪು ಹೆಂಗಸೊಬ್ಬಳು ಮೋರೆ ತೋರಿಸಿ, ಬಂದಿರ? ಎಷ್ಟು ದಿನವಾಗಿ ಬಿಟ್ಟಿತು ಬಂದು” ಎಂದು ಉಪಚರಿಸಿದಳು. ನಾರಾಯಣ ಮತ್ತೇನೂ ಹೇಳಬೇಕಾದ್ದು ಉಳಿದಿರಲಿಲ್ಲ.ಒಂದು ಬಾಟಲು ವ್ಹಿಸ್ಕಿ ಮತ್ತು ಜಗ್ಗಿನಲ್ಲಿ ನೀರನ್ನು ಅವಳೇ ತಂದು ಎದಿರಿಟ್ಟಿದ್ದಳು. ದಿನಕರ, “ನಾನು ಕುಡಿಯುವುದು ಬಿಟ್ಟಿದ್ದೇನೆ, ಕೊನೆಯ ಪಕ್ಷ ಈ ಬಟ್ಟೆಯನ್ನು ತೊಟ್ಟಿರುವ ತನಕ” ಎಂದ. ಆದರೆ ನಾರಾಯಣ ಸುರಿದುಕೊಂಡ ವ್ಹಿಸ್ಕಿಯ ವಾಸನೆಗೆ ತನ್ನ ದೆಹಲಿಯ ಲೋಲುಪತೆಯ ದಿನಗಳು ನೆನಪಾಗಿ ಆಸೆಯಾಗದೆ ಇರಲಿಲ್ಲ. ತಾನು ಮತ್ತೆ ಅದಕ್ಕೆ ಮರಳುವವನೇ ಎಂದುಕೊಳ್ಳುತ್ತಿದ್ದಾಗ ದಿನಕರನಿಗೆ ಏನೇನೂ ಅರ್ಥವಾಗದ ತುಳುವಿನಲ್ಲಿ ನಾರಾಯಣ ರಂಗಮ್ಮನಿಗೆ ಹೇಳಿದ: “ಇವರು ನನ್ನ ದೆಹಲಿಯಲ್ಲಿರುವ ಸ್ನೇಹಿತರು. ಬಹಳ ದೊಡ್ಡವರು. ಸದ್ಯ ವ್ರತದಲ್ಲಿದ್ದಾರೆ. ಇವರಿಗೆ ಲಿಂಬೆ ಹಣ್ಣಿನ ಶರಬತ್ತು ಮಾಡಿಕೊಡು. ಬೇರೆ ಕಾರ್ಯಕ್ರಮ ಇವರಿಗೂ ಬೇಡ, ನನಗೂ ಬೇಡ.” ರಂಗಮ್ಮ ವೈಯಾರ ಮಾಡುತ್ತ ಒಳಹೋದ್ದನ್ನು ಕಂಡು ’ಈ ನಾರಾಯಣನ ಪಾಡೇ ಇಷ್ಟು. ಸಮಾಧಾನಗಳನ್ನೆಲ್ಲ ಇಟ್ಟುಕೊಂಡೇ ನರಳುತ್ತಿರುತ್ತಾನೆ. ನರಳಿ ಏನೂ ಪ್ರಯೋಜನವಿಲ್ಲ ಎಂದು ತಿಳಿದು ವೇದಾಂತಿಯೂ ಆಗಿರುತ್ತಾನೆ. ಇವನೂ ಹೊರಳಿಕೊಂಡು ಹೊಸಬನಾಗುವುದಿಲ್ಲ. ನಾನೂ ಹೊರಳಿಕೊಂಡು ಹೊಸಬನಾಗುವುದಿಲ್ಲ’ಎಂದು ಕೊಂಡಿದ್ದ. ಆದರೆ ಈಗ ನಿಜವಾಗಿಯೂ ದುಃಖದಲ್ಲಿದ್ದು ಗಂಗಿಯನ್ನು ರಾಜಾರೋಷವಾಗಿ ಮದುವೆಯಾಗಿ ಬಿಡಲು ತಯಾರಾದವನನ್ನು ತಾನು ಯಾಕೆ ರಂಗಿಯ ವಯ್ಯಾರ ಕಂಡು ಸಂಶಯ ಪಡುತ್ತಿದ್ದೇನೆಂದು ತನ್ನ ಬಗ್ಗೆ ನಾಚಿಕೆ ಆಯಿತು. ತಾನು ಎಂದೆಂದೂ ಮುಗ್ಧ ಸ್ಥಿತಿಯಲ್ಲಿ ಇದ್ದುದೇ ಇಲ್ಲ.ಸರಳನಾಗದೇ ಮುಕ್ತಿಯಿಲ್ಲ, ಸರಳನಾಗುವುದು ಈ ಪ್ರಪಂಚದಲ್ಲಿ ಇರುವ ತನಕ ತನಗೆ ಸಾಧ್ಯವಿಲ್ಲ. ಪರಮಹಂಸರು ಕಾಳಿಯ ಎದುರು ನೈವೇದ್ಯವಿಟ್ಟು, ತಾಯೀ ಇದನ್ನು ನೀನು ತಿನ್ನಲೇಬೇಕು ಎಂದು, ತಾಯಿ ಅಕ್ಷರಶಃ ನ್ಯೆವೇದ್ಯ ತಿನ್ನುವಳೆಂದು ನಂಬಿದ್ದರಾಗಿ, ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ಕಪ್ಪು ಬೆಕ್ಕೊಂದು ಬಂದು ನ್ಯೆವೇದ್ಯವನ್ನು ತಿಂದಿತ್ತಂತೆ. ಆ ಕಪ್ಪು ಬೆಕ್ಕೇ ಕಾಳಿಯೆಂದು ಪರಮಹಂಸರು ತಿಳಿದುಬಿಟ್ಟರಂತೆ. ತಾನಾದರೋ ಅದನ್ನು ಒಂದು ಬೆಕ್ಕೆಂದೇ ಅಂದುಕೊಳ್ಳುತ್ತಿದ್ದೆ. ಹಾಗೆ ಅಂದುಕೊಳ್ಳುತ್ತಿದ್ದೆ ಎಂದು ತನಗೆ ಗಾಢವಾದ ವಿಷಾದವೂ ಇಲ್ಲ. ಯಾಕೆಂದರೆ ನಿಜವಾಗಿಯೂ ಅದೊಂದು ಕಪ್ಪಾದ ಬೆಕ್ಕೇ. ಇಲಿಯನ್ನು ಕಂಡಿದ್ದರೆ ಅದನ್ನೂ ಹಿಡಿದು ತಿನ್ನುತ್ತಿದ್ದ ಬೆಕ್ಕು. ನಾರಾಯಣನ ಹಾಗೆ, ತನ್ನಹಾಗೆ ತಿಳಿದುಬಿಟ್ಟವರಿಗೆ ಸರಳತೆಯಿಲ್ಲ, ದರ್ಶನವಿಲ್ಲ, ಬೆರಗಿಲ್ಲ, ಮಗುಚಿಕೊಳ್ಳುವುದು ಸಾದ್ಯವಿಲ್ಲ, ಸಂಸಾರದಲ್ಲಿ ತೃಪ್ತಿಯೂ ಇಲ್ಲ, ಪ್ರಪಂಚಕ್ಕೆ ಅತೀತವಾದ್ದನ್ನು ಪ್ರಪಂಚದವನಾಗಿದ್ದೇ ತಿಳಿಯಬೇಕೆಂಬ ಆ‌ಅಸೆ ಪಡದಂತೆ ಇರುವುದೂ ಸಾಧ್ಯವಿಲ್ಲ. ಅಂದರೆ ತನಗೆ ಸ್ವರ್ಗವೂ ಇಲ್ಲ, ನರಕವೂ ಇಲ್ಲ. ಇರುವುದೆಂದರೆ ಗೋಳು ಮಾತ್ರ. ನಾರಾಯಣ ವ್ಹಿಸ್ಕಿಯನ್ನು ಸೇವಿಸುತ್ತ ಧಾರಾಳವಾಗಿ ಅರಳಿಕೊಳ್ಳಲು ತೊಡಗಿದ್ದ: “ಈ ವ್ಯಸನವನ್ನು ಮಾತ್ರ ನಾನು ಅಮ್ಮನಿಂದ ಬಚ್ಚಿಟ್ಟಿದ್ದೇನೆ ಎಂದು ತಿಳಿದಿದ್ದೇನೆ. ಅಥವಾ ಹಾಗೆ ನಾನು ತಿಳಿದುಕೊಂಡಿರಲಿ ಎಂದು ಅಮ್ಮ ನಟಿಸುತ್ತಾರೆ. ನಾವು ಹೀಗೆಲ್ಲ ಆಗಿ ಬಿಟ್ಟಿದ್ದೀವಿ ಎಂದು ವ್ಯಸನಪಟ್ಟು ಪ್ರಯೋಜನವೂ ಇಲ್ಲವೋ, ದಿನಕರ. ಸುಮ್ಮನಿದ್ದು ಬಿಡಬೇಕು. ಸುಮ್ಮನಾಗಿ ಬಿಟ್ಟವರಿಗೆ ದೇವರ ಕೃಪೆ ತನ್ನಿಂದ ತಾನಾಗಿಯೇ ಒದಗಿ ಬಿಡುವುದು ಉಂಟಂತೆ. ಅದು ಇರಲಿ – ಶಾಸ್ತಿಗಳನ್ನು ನೋಡು. ಬಂಗಾರದಂಥ ಒಂದು ಹೆಂಡತಿಯನ್ನು ಹೊಡೆದೂ ಬಡೆದೂ ಅವಳೊಬ್ಬ ಮಲಯಾಳಿ ಪಂಡಿತರ ಜೊತೆ ಓಡಿ ಹೋಗುವಂತೆ ಮಾಡಿದರು. ಒಂದು ಪೆಟ್ಟಿಗೆಯ ತುಂಬ ಬಂಗಾರ ತುಂಬಿಕೊಂಡು ಅವಳು ಪರಾರಿಯಾಗಿಬಿಟ್ಟಳಂತೆ. ಆದರೆ ಅವಳಿಗೂ ಒಂದು ಸೂಳೆಯಿದೆ. ಹಿಂದಿನಿಂದ ಇದ್ದದ್ದು ಅದು. ತುಂಬ ಒಳ್ಳೆಯವಳು ಅವಳು ಅನ್ನು. ಅವಳ ಮಾತು ಕೇಳಿ ಇನ್ನೊಂದು ಮದುವೆಯಾದರು. ಹುಟ್ಟಿದ ಮಗಳೂ ಅಪ್ಪನ ಕಾಠಿಣ್ಯಕ್ಕೆ ಹೇಸಿ ಯಾರನ್ನೋ ಕಟ್ಟಿಕೊಂಡು ಓಡಿಹೋದಳು. ಹೀಗಾಗಿ ಶಾಸ್ತಿಗಳು ಈಗ ಪುರಾಣ ಪ್ರವಚನ ಮಾಡಿಕೊಂಡು ಅಲೀತಾರೆ. ಕರ್ಮ ಹೀಗೆ ಸವೆಯುತ್ತೆ ಅಂತ ತಿಳಿದಿದಾರೆ. ಹುಚ್ಚು ಬ್ರಾಹ್ಮಣ. ಹುಟ್ಟಿದ ಗುಣ ಸುಟ್ಟರೂ ಹೋಗಲ್ಲ ಅಂತ ಅದಕ್ಕೇ ಗಾದೆಯಿರೋದು. ಜನ ಕೂಡ ಅಂಥವರನ್ನು ಅವರು ಬದಲಾದರೂ ನಂಬದು. ಅವರೇ ಹೆಂಡತೀನ್ನ ಹೊಡೆದು ಸಾಯಿಸಿದ್ದು ಅಂತಾರೆ ಅವಳನ್ನು ಹುಗಿದ ಹೊಂಡದಲ್ಲಿ ನೆಟ್ಟ ಹಲಸಿನ ಮರದಲ್ಲಿ ಆ ಕಾರಣದಿಂದಾಗಿ ಫಲವಾಗಿಲ್ಲ ಎಂದು ಈ ಪ್ರಾಂತ್ಯದಲ್ಲೆಲ್ಲ ಪ್ರತೀತಿಯಿದೆ. ಬಂಗಾರವನ್ನು ಬಚ್ಚಿಟ್ಟು ಆಷಾಢಭೂತಿಯಾಗಿದ್ದಾನೆಂದೂ ಹೇಳುವ ಜನ ಇದ್ದಾರೆ – ಎನ್ನು.” ನಾರಾಯಣ ಮಾತಿನ ಗುಂಗಿನಲ್ಲೇ ಇದ್ದ. ಗಂಗೂವನ್ನು ಹೊಗಳಲು ತೊಡಗಿದ. “ನಾನು ಡ್ರಿಂಕ್ ತಗೋಳ್ತ ಇದ್ದದ್ದು ಗಂಗೂ ಮನೇಲೆ. ಚೀಟೀಲಿ ಬರೆದು ಕೊಟ್ಟರೆ ಸಾಕು, ಪಾಪ ಚಂದ್ರಪ್ಪ ವ್ಹಿಸ್ಕಿಯನ್ನೂ, ಐಸನ್ನೂ ತಂದುಬಿಡುತ್ತಿದ್ದ. ನಾನು ಗಂಗಿ ಮನೇಲಿ ಒಂದು ಫ್ರಿಜ್ಜನ್ನೂ ತಂದು ಇಟ್ಟೆ. ನಮ್ಮನೇಲಿ ಅಮ್ಮ ಫ್ರಿಜ್ಜು ಬೇಡವೇ ಬೇಡ ಅಂದರು. ಅಮ್ಮನಿಗೆ ಮುಸುರೆ ಮಡೀಲಿ ನಂಬಿಕೆ. ಆಯಿತ? ಗಂಗೂ ಮಗನಿಗೆ ನಾನಲ್ಲಿ ಹೋಗಿ ವ್ಹಿಸ್ಕಿ ಕುಡಿಯೋದು ಸರಿಕಾಣಲಿಲ್ಲಾಂತ ಕಾಣುತ್ತೆ. ಗಂಗೂ ತನ್ನಲ್ಲಿ ಬಂದು ಕುಡಿಯಬಾರದೆಂದು ಕಾಲು ಹಿಡಿದು ಅತ್ತುಬಿಟ್ಟಳು. ಆಯಿತಾ? ಕುಡಿಯೋದು ಬಿಟ್ಟ ಮೇಲೆ, ಅವಳ ಹತ್ತಿರ ಹೋಗಿ ಬರೋದು ನಿಂತಿತು. ಇಲ್ಲಿಗೆ ಬಂದು ಹೋಗುವ ಚಟ ಹತ್ತಿಕೊಂಡಿತು. ಇದನ್ನೇ ಸಂಸಾರ ಅನ್ನೋದು. ನಿನ್ನ ವಿಷಯ ನಾನು ಕೇಳಲೇ ಇಲ್ಲ. ಆದರೆ ಗಂಗೂ ಕೇಳಿದಳು. ಅವಳಿಗೇನು ಉತ್ತರ ಕೊಟ್ಟಿರಬಹುದು ನಾನು ಊಹಿಸು. ಅವನ ಹಾಗಿನ ಆರ್ಟಿಸ್ಟ್‌ಗಳು ಮದುವೆ ಗಿದುವೆ ಆಗದೆ ಆರಾಮಾಗಿ ಇದ್ದುಬಿಡ್ತಾರೇಂತ ಅಂದೆ.‘ ಪಾಪ ಅವರೂ ಏನೋ ದುಃಖದಲ್ಲಿದಾರೆ ಅಂತ ಗಂಗೂ ಅಂದು ಬಿಟ್ಟಳು.” ನಾರಾಯಣ ನಗಲು ತೊಡಗಿದ್ದ. ಅವನ ಒಳಮನಸ್ಸಿನ ಆಯಾಸವೆಲ್ಲವೂ ಪರಿಹಾರವಾದಂತೆ ಕಂಡಿತ್ತು. +ಅಧ್ಯಾಯ ೮ +ಶಾಸ್ತಿಗಳು ಬಂದು ಕಾಯುತ್ತಿದ್ದರು. ತನಗೆ ಊಟಬೇಡವೆಂದು ನಾರಾಯಣ ತನ್ನ ಮಲಗುವ ಕೋಣೆಗೆ ಸೀದ ಹೋಗಿಬಿಟ್ಟ – ತಾಯಿಗೆ ತನ್ನ ಬಾಯಿವಾಸನೆ ಗೊತ್ತಾಗದೆ ಇರಲೆಂದು. ಆದರೆ ತಾಯಿ ಅವನಿಗಾಗಿ ಕುಟ್ಟವಲಕ್ಕಿಯನ್ನು ಮೊಸರಿನಲ್ಲಿ ಕಲಿಸಿ ಅವನು ಮಲಗಿದ್ದ ಕೋಣೆಗೇ ಕಳಿಸಿದರು. ಯಾಕೆ೦ದರೆ ಬೇಯಿಸಿದ ಮುಸುರೆಯನ್ನು ಅವರು ಕಲಿಸುವ೦ತಿರಲಿಲ್ಲ. ಆದರೆ ಮಗನನ್ನು ಉಪವಾಸದಲ್ಲಿ ಮಲಗಲು ಬಿಡುವುದು ಸಧ್ಯವೂ ಇರಲಿಲ್ಲ. ಶಾಸ್ತಿಗಳೂ ತಾವು ರಾತ್ರೆ ಹೊತ್ತು ಫಲಹಾರ ಮಾತ್ರ ಮಾಡುವುದು ಎಂದಾಗ, ಅವರಿಗೂ ಕುಟ್ಟವಲಕ್ಕಿ ಮೊಸರು ಕೊಟ್ಟು, ದಿನಕರನಿಗೂ ಮೊಮ್ಮಗ ಗೋಪಾಲನಿಗೂ ಅವರು ಮಾಡಿದ ಭಕ್ಷ್ಯಭೋಜ್ಯಗಳನ್ನೆಲ್ಲ ಬಡಿಸಿದರು. ಮಧ್ಯಾಹ್ನದ ಊಟಕ್ಕಿಂತ ಇದು ಬೇರೆಯಾಗಿತ್ತು. ಎಲೆಯ ಸುತ್ತಲೂ ಹಲವು ಪಲ್ಯಗಳು, ಕೋಸಂಬರಿ, ಹಪ್ಪಳ, ಸಂಡಿಗೆ, ಕೀರು, ತೊವ್ವೆ ಈ ವಸ್ತುಗಳನ್ನು ಶೃಂಗಾರವಾಗಿ, ಊಟದ ಮುನ್ಸೂಚನೆಯ ಪದಾರ್ಥಗಳಾಗಿ ಬಾಡಿಸಿದ ಕುಡಿ ಎಲೆ ಪಡೆದಿತ್ತು. ಮೊದಲು ತೋರದ ಪದಾರ್ಥಗಳೂ ಆಮೇಲೆ ಪ್ರತ್ಯಕ್ಷವಾಗಲಿದ್ದವು. ಸೀತಮ್ಮನಿಗೆ ಪ್ರಿಯವಾಗಲೆಂದು ಅವರ ಮೊಮ್ಮಗನಂತೆಯೇ ಎಲೆಯ ಸುತ್ತಲೂ ಪರಿಸಂಚನೆ ಕಟ್ಟಿ, ಆಪೋಶನ ತೆಗೆಡುಕೊಂಡು ಊಟ ಶುರುಮಾಡಿದ. “ನಿಮ್ಮ ಕಡೆಯ ಬ್ರಾಹ್ಮಣರಲ್ಲೂ ಈ ಪದ್ಧತಿಯಿದೆಯಲ್ಲವೆ?” ಎಂದು ಸೀತಮ್ಮ ಕೇಳಿದ್ದು ಅರ್ಥವಾಗದೆ ಗೋಪಾಲನ ಕಡೆ ನೋಡಿದ. ಗೋಪಾಲ ಪ್ರಶ್ನೆಯನ್ನು ವಿವರಿಸಿದ. ದಿನಕರ ಸೀತಮ್ಮನಿಗೆ ಹೂಂಗುಟ್ಟಿ ಶಾಸ್ತಿಗಳ ಕಡೆ ತಿರುಗಿ, “ನನಗೆ ಕುಟ್ಟವಕ್ಕಿ ಗೊತ್ತಾದ್ದು ಈ ಅಮ್ಮನಿಂದಲೇ, ನನ್ನ ಅಮ್ಮನೂ ಈ ಕಡೆಯವರು ಆದದ್ದು ಹೌದೆ ಆದರೆ, ನನಗೂ ಅವರದನ್ನು ತಿನ್ನಿಸಿರಬಹುದು” ಎಂದು ಹೇಳಿದ್ದ. ತನಗೆ ಪ್ರಿಯವೆಂದು ಈ ಭಕ್ಷ್ಯಭೋಜ್ಯಗಳ ನಡುವೆ ಕುಟ್ಟವಲಕ್ಕಿಯನ್ನು ಕೇಳಿದ್ದ. “ಅದರಿಂದಲೇ ಹೊಟ್ಟೆ ತುಂಬಿಸಿಕೊಂಡು ಬಿಡಬೇಡ. ವ್ರತ ಹಿಡಿದ ಮುದುಕರ ಫಲಹಾರ ಅದು” ಎಂದು ಒಂದು ಚೂರೇ ರುಚಿಗೆಂದು ದಿನಕರನಿಗೆ ಬಡಿಸಿದ್ದರು. ಶಾಸ್ತಿಗಳು ದಿನಕರ ಕುಟ್ಟವಲಕ್ಕಿ ತಿನ್ನುವುದನ್ನೇ ಮತ್ತೆ ನೋಡತೊಡಗಿದ್ದರು. “ಅದು ಯಾಕೆ ಆ ಮಾಣಿಯನ್ನ ತಿಂದುಹಾಕಿ ಬಿಡುವಂತೆ ನೋಡ್ತಾ ಇದೀರಿ?” ಎಂದು ಸೀತಮ್ಮ ನಗೆಯಾಡಿದ್ದು ಕೇಳಿ ಶಾಸ್ತಿಗಳು ಗಾಬರಿಗೊಂಡರು. ’ದೇವೀ, ಭಗವತೀ ನನ್ನ ಕಾಪಾಡು’ ಎಂದು ಜಪ ಮಾಡಿದರು. ’ಇವನನ್ನು ನೋಡಿದರೆ ಅವನ ಮುಖದಲ್ಲಿ ಪಂಡಿತನ ವರ್ಚಸ್ಸೇ ಕಂಡಂತಾಗುತ್ತದಲ್ಲ. ಅವನ ಕಣ್ಣುಗಳು ತಾಯಿಯದರ ಹಾಗಿವೆ. ಆದರೆ ಅವನ ಚೂಪಾದ ಮೂಗು, ಮುಖದ ಬಣ್ಣ, ಬಾಯಿ ಮುಚ್ಚಿಕೊಂಡ್ಡಿದ್ದಾಗ ಅವನ ತುಟಿಗಳು ಬಿಗಿ ಮುದ್ರೆಯಲ್ಲಿರುವಂತೆ ಕಾಣುವ ಅದರ ಗಡಸು ಎಲ್ಲ ಪಂಡಿತನ ಥರ ಹಾಗೆಯೇ ಇವೆಯಲ್ಲ. ಸಂಗೀತ ಕೇಳುತ್ತ ಆ ಪಂಡಿತ ಹಾಗೆಯೇ ಕೂತಿರುತ್ತಿದ್ದ. ಅವನಿಗೇ ಹುಟ್ಟಿದನೇ ಇವನು?’ ಎಂದು ಬಂಗಾರದ ಜೊತೆ ಪರಾರಿಯಾದ ಪಂಡಿತನ ಮೇಲಿನ ದ್ವೇಷ ಅಸೂಯೆಗಳನ್ನು ಮತ್ತೆ ಅನುಭವಿಸುತ್ತ ನೋಡಿದರು. ಇಲ್ಲ ಈ ಪುಟಾಣಿ ನನ್ನ ಮಗನೇ, ನಾನು ಈಳಿಡುತ್ತ ಹುಟ್ಟಿಸಿದವನು. ಆದರೆ ಕೋಮಲವಾದ ಅಂತಃಕರಣವನ್ನು ಯಾವ ಮಾಯೆಯಲ್ಲೋ ಪಡೆದವನು. ನನ್ನವನು, ಆದರೆ ನನ್ನವನಲ್ಲ. ನನ್ನ ವಂಶೋದ್ಧಾರಕ, ಆದರೆ ನನ್ನವನು ಆಗಲಾರ ಎಂದೆಲ್ಲ ಅಂದುಕೊಳ್ಳುತ್ತ ಈ ಅನುಮಾನಗಳಿಗೆ ಮುಕ್ತಾಯವೇ ಇಲ್ಲವೆ ಎಂದು ಹಲುಬತೊಡಗಿದ್ದರು. ನನ್ನ ನರಕಕ್ಕೆ ನಾನೊಬ್ಬನೇ ಹೋಗುವೆ. ಅಲ್ಲಿ ಅನಂತಕಾಲದವರೆಗೆ ಊಳಿಡುತ್ತಲೇ ಇರುವೆ. ಇದು ನನ್ನ ಕರ್ಮ ಎಂದು ನಿಟ್ಟುಸಿರಿಟ್ಟರು. ಈ ಮುದುಕನಿಗೆ ದಾರಿ ತೋರಿಸು ಭಗವತಿ, ನನ್ನ ಹೃದಯದಲ್ಲಿರುವ ಪಂಡಿತನ ಮೇಲಿನ ದ್ವೇಷವನ್ನು ಇಂಗಿಸು. ಪಾರು ಮಾಡು ಎಂದು ಜಪಿಸುತ್ತ ತಮ್ಮ ಫಲಾಹಾರ ಮುಗಿಸಿ ತನ್ನ ನಾಳೆಯನ್ನು ಎದುರುಗೊಳ್ಳಲು ರಾತ್ರೆಯೆಲ್ಲ ಕಾದರು. ಇವನನ್ನು ತನ್ನ ಪ್ರೇತಕಳೆಯ ಮನೆಗೆ ಕರೆದುಕೊಂಡು ಹೋಗಬೇಕೋ, ಬಾರದೋ ಎಂಬ ಸಂದಿಗ್ಧದಲ್ಲಿ ಅವರು ನಿದ್ದೆ ಮಾಡಲೇ ಇಲ್ಲ. ಮಾರನೇ ದಿನ ಅವನು ಎದ್ದವನೇ, “ಕೇರಳದಿಂದ ಹಿಂದಕ್ಕೆ ಬರುವಾಗ ನಿಮ್ಮಲ್ಲಿದ್ದು ಹೋಗುವೆ, ಆಗದಾ ಚಿಕ್ಕಪ್ಪ?” ಎಂದುಬಿಟ್ಟ. ಯಾಕೆ ಹಾಗೆ ಥಟ್ಟನೆ ಅವನಿಗೆ ಅನ್ನಿಸಬಿಡಬೇಕೋ? ಆದರೆ ಶಾಸ್ತಿಗಳ ಮನಸ್ಸು ಇದರಿಂದ ಹಗುರಾಯಿತು. “ದೇವಿಯ ಇಚ್ಛೆ ಹಾಗಿರಬೇಕು. ಮಗನನ್ನು ಮನೆಗೆ ಕರೆದೊಯ್ಯಲು ನನ್ನಲ್ಲಿ ಯೋಗ್ಯತೆ ಹುಟ್ಟಲು ಕಾಯಬೇಕು” ಎಂದುಕೊಂಡು ತಾನು ಬಂದಿದ್ದ ಕಾರಿನಲ್ಲಿ ಬೆಳಗಿನ ಫಲಹಾರ ಮುಗಿಸಿ ಹೊರಟುಹೋದರು. ತಾನು ಇನ್ನೂ ಹೆಚ್ಚುದಿನ ಬದುಕುವುದಿಲ್ಲ, ಬದುಕುವ ಆಸೆ ಕಳಕೊಳ್ಳುತ್ತಿದ್ದೇನೆ ಎಂದುಕೊಂಡು ರಾಧೆಯ ಮನೆಗೆ ಹೋದರು. ಯಾರು ನನ್ನ ಶ್ರಾದ್ಧ ಮಾಡುವುದು ಎಂದು ತನಗೇ ಕೇಳಿಕೊಂಡರು. ಸತ್ಯವಿದ್ದಂತೆ ಆಗಲಿ ಎಂದು ಪ್ರಶ್ನೆಯನ್ನು ದೇವರಿಗೆ ಬಿಡಲು ಪ್ರಯತ್ನಿಸಿದರು. +ಅಧ್ಯಾಯ ೯ +ರಾತ್ರೆ ತನ್ನ ಕೋಣೆಗೆ ಹೋದ ದಿನಕರನಿಗೆ ನಿದ್ದೆ ಬರಲಿಲ್ಲ. ಎದ್ದು ಕೂತ. ವಾಕ್‌ಮನ್‌ನಿಂದ ಸಂಗೀತ ಕೇಳಿಸಿಕೊಳ್ಳಲು ಪ್ರಯತ್ನಿಸಿದ. ರುಚಿಸಲಿಲ್ಲ, ಟಿಬೆಟನ್ನರ ಪ್ರಾರ್ಥನೆ ಕೃತಕವೆನ್ನಿಸಿತ್ತು. ತನ್ನ ಹೃದಯದಲ್ಲಿ ಅದಕ್ಕೆ ಸ್ಪಂದನವಿರದೇ ಹೋಗಿತ್ತು. ಕಾಗದಗಳನ್ನು ಬರೆಯುವುದು ಎಂದುಕೊಂಡ. ಆದರೆ ತನ್ನ ಮೊದಲನೆಯ ಕಾಗದವನ್ನು ಅದನ್ನು ಎಂದೆಂದೂ ಓದದ ಮಹಾಮಾತೆಗೇ ಬರೆಯಬೇಕಾಗಿತ್ತು. ಹೀಗೆ ತನಗಾಗಿ ಒಂದು ಪತ್ರವನ್ನು ತನ್ನಿಂದಲೇ ಮಹಾಮಾತೆಯಾಗಿಬಿಟ್ಟು ಓದಲಾರದ ಇನ್ನೊಬ್ಬಳಿಗೆ ಬರೆಯುವುದೇ ತನ್ನ ಅಬ್ಸರ್ಡಿಟಿಗೆ ಸೂಚಕವಾಗಿತ್ತು. ಈ ಪತ್ರವನ್ನು ಇಂಗ್ಲಿಷಿನಲ್ಲೇ ಬರೆಯಲು ಹೊರಟು ’ಡಿಯರ್ ಶ್ರೀಮತಿ ಮಹಾಮಾತೆ’ ಎಂದು ಶುರು ಮಾಡಿ, ನಕ್ಕು, ಹೊಡೆದುಹಾಕಿ ’ಡಿಯರ್ ಮಹಾಮಾತೆ’ ಎಂದು ಇನ್ನೊಮ್ಮೆ ಇನ್ನೊಂದು ಕಾಗದದ ಮೇಲೆ ಶುರುಮಾಡಿದ. ಮೇಲೆ ಮಹಾಮಾತೆಗೆ ಪ್ರಿಯವಾಗಲೆಂದು ’ಓಂ ನಮೋ ಭಗವತಿ’ ಎಂದು ದೇವನಾಗರಿಯಲ್ಲಿ ಬರೆದ. +‘ಡಿಯರ್ ಮಹಾಮಾತೆ’, ನನ್ನ ಕಷ್ಟದ ಕಾಲದಲ್ಲಿ ನಾನು ನಿನ್ನನ್ನೂ ಗಂಗೂನನ್ನು ನನ್ನ ಮನಸ್ಸಿನಲ್ಲೇ ಹುಡುಕಲು ತೊಡಗಿದ್ದಾಗ, ನಿನ್ನ ಬಗ್ಗೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿ ಬಂದಿದ್ದ ವೃತ್ತಾಂತವನ್ನು ಓದಿದೆ. ಅದು ನೀನೇ ಇರಬೇಕೆಂದು ಖಚಿತವಾಗಿಬಿಟ್ಟಿತು. ಯಾಕೆಂದರೆ ಆ ವೃತ್ತಾಂತ ಹೀಗೆ ಶುರುವಾಗಿತ್ತು: ಒಂದು ರಾತ್ರೆ ರೈಲಿನಲ್ಲಿ ನೀನು ಕಾಶಿಗೆ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ನಿನಗೆ ಕಾಣುವಂತೆ ಮಲಗಿದ್ದ ಒಬ್ಬ ಸ್ಫುರದ್ರೂಪಿ ಯುವಕನನ್ನು ನೋಡಿದಿ. ಆಗ ನಿನಗೆ ನಿನ್ನ ಹಿ೦ದಿನ ಜನ್ಮದಲ್ಲಿ ರಾಧೆಯಗಿ ಹುಟ್ಟಿದ್ದು ನೆನಪಾಗಿಬಿಟ್ಟಿತು. ದಿವ್ಯಪ್ರೇಮ ನಿನ್ನಲ್ಲಿ ಇದ್ದಕ್ಕಿದ್ದ೦ತೆ ಸ್ಫುರಿಸಿಬಿಟ್ಟಿತು. ನೀನು ನಿಸ್ಸಹಾಯಕಳಾಗಿ ಬಿಟ್ಟೆ. ಭವದ ನಿನ್ನ ಶರೀರಕ್ಕೆ ಅದನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ನಿನ್ನ ಜೊತೆಯಲ್ಲಿ ತಂದೆಯಿದ್ದಾರೆಂಬುವುದನ್ನೂ ಮರೆತುಬಿಟ್ಟೆ. ಯಾವುದೋ ನಿಲ್ದಾಣದಲ್ಲಿ ಒಂದು ಕ್ಷಣ ನಿಂತಿದ್ದ ರೈಲಿನಿಂದ ನೀನು ಉಟ್ಟಬಟ್ಟೆಯಲ್ಲೇ ಇಳಿದುಬಿಟ್ಟೆ. ಪರಿವ್ರಾಜಕೆಯಂತೆ ಅಲೆಯಲು ತೊಡಗಿದಿ. ಹೀಗೆ ಅಲೆಯುತ್ತಲೇ ಇದ್ದಾಗ ಒಂದು ಅರಳಿಮರದ ಕೆಳಗೆ ಬಳಲಿ ಕೂತಿದ್ದಿ. ಕೊಳಲೂದುತ್ತಿದ್ದ ಒಬ್ಬ ಗೊಲ್ಲನನ್ನು ಕಂಡಿ. ಅವನು ಕೂಡ ನೀನು ರೈಲಿನಲ್ಲಿ ಕಂಡವನಂತೆಯೇ ನಿನ್ನ ಭವಾವಳಿಯಿಂದ ನಿನ್ನನ್ನು ಬಿಡುಗಡೆ ಮಾಡಲು ಕಾಣಿಸಿಕೊಂಡ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಆಗಿದ್ದ. ನೀನು ಅವನ ಕೊಳಲನಾದ ಕೇಳುತ್ತ ಇಹದಿಂದ ಮುಕ್ತಳಾಗಿ ಸಾಕ್ಷಾತ್ ರಾಧೆಯಾಗಿಯೇ ಬಿಟ್ಟೆ. ಹೀಗೆ ನಿನ್ನ ವೃತ್ತಾಂತ ಅದರಲ್ಲಿತ್ತು. ಜೊತೆಗೇ ಅದರಲ್ಲಿ ನಿನ್ನ ಸದ್ಯದ ರೂಪದ ಚಿತ್ರಗಳು ಕೂಡ ಇದ್ದವು. ನನಗೆ ಮಾತ್ರ ನಿನ್ನ ಕಣ್ಣುಗಳಲ್ಲಿ ಇನ್ನೂ ಉಳಿದೇ ಬಿಟ್ಟಿದ್ದ ಹಿಂದಿನ ತುಂಟತನ ಕಂಡುಬಿಟ್ಟಿತು. ಡಿಯರ್ ಮಹಾಮಾತೆ, ಈ ಭವದಲ್ಲಿ ನೀನು ಪ್ರಥಮ ಪ್ರಣಯದ ಅನುಭವ ಪಡೆದದ್ದು ಕೃಷ್ಣನನ್ನು ಕಂಡು ಅಲ್ಲ – ಈಗ ಕಳವಳದಲ್ಲಿ ತೊಳಲಾಡುತ್ತಿರುವ ಈ ನನ್ನನ್ನು ನೋಡಿಯೇ. ನೆನಪಿಸುವೆ, ಕೇಳಿಸಿಕೋ. ಇಪ್ಪತ್ತನಾಲ್ಕು ವರ್ಷಗಳ ಕೆಳಗೆ ನೀನು ಹದಿನೆಂಟು ವರ್ಷದ ಹುಡುಗಿಯಿದ್ದಿರಬೇಕು. ಅಂದು ನಾನು ಅಕಸ್ಮಾತ್ ಎರಡನೇ ದರ್ಜೆಯಲ್ಲಿ ಪ್ರಯಾಣ ಮಾಡಬೇಕಾಗಿ ಬಂದಿತ್ತು. ನೀನು ಮೇಲಿನ ಸೀಟಿನಲ್ಲಿ ಮಲಗಿದ್ದೆ. ನಿನ್ನ ತಂದೆ ಕೆಳಗಿನದರಲ್ಲಿ ಮಲಗಿದ್ದರು. ಆಮೇಲೆ ನೀನೇ ನನಗೆ ಹೇಳಿದಂತೆ ಗಂಡನ ಜೊತೆ ಬಾಳ್ವೆ ಮಾಡಲಿಲ್ಲವೆಂದು ಹಠ ಹಿಡಿದ ನಿನ್ನ ಗ್ರಹಚಾರ ಕಳೆಯಲಿ ಎಂದು ಕಾಶಿಗೆ ನಿನ್ನ ತಂದೆ ನಿನ್ನನ್ನು ಕರೆದುಕೊಂಡು ಬಂದಿದ್ದರು. (ಕಾಲೇಜು ಓದುತ್ತಿದ್ದ ಹುಡುಗಿಯಾದ್ದರಿಂದ ನೀನು ನನಗೆ ಇದನ್ನೆಲ್ಲ ನಿನ್ನ ಮುದ್ದಾದ ಹರಕು ಮುರುಕು ಇಂಗ್ಲೀಷಿನಲ್ಲೇ ಹೇಳಿದ್ದಿ.) ಮುಖ್ಯ ವಿಷಯಕ್ಕೆ ಬರುವೆ. ನೀನು ನನಗೆ ಕಾಣುವಂತೆ ಕಿಟಿಕಿಯ ಪಕ್ಕದ ಸೀಟಿನಲ್ಲಿ ನಾನು ಮಲಗಿದ್ದೆ. ನೀನು ಮಲಗಿದ್ದ ಅಪ್ಪರ್ ಬರ್ತಿನ ಸರಪಳಿಯ ಕೊಂಡಿಯನ್ನು ಸರಿಯಾಗಿ ಸಿಕ್ಕಿಸಿರಲಿಲ್ಲವೆಂಬ ನನ್ನ ಆತಂಕ ನಿನ್ನನ್ನು ಚೆನ್ನಾಗಿ ನೋಡಲು ನೆವವಾಯಿತು. ನೀನು ಕೂಡ ಎರಡು ಕಣ್ಣುಗಳಲ್ಲೂ ನನ್ನನ್ನು ತುಂಬಿಕೊಳ್ಳುವಂತೆ ನೋಡಲು ತೊಡಗಿದ್ದಿ. ನಿನ್ನ ಅಪ್ಪ ನನ್ನನ್ನು ಸಂಶಯದಲ್ಲಿ ನೋಡುತ್ತ ಮಲಗಿದ್ದರೆಂಬುದು ನಿನಗೆ ಗೊತ್ತಿರಲಿಲ್ಲ. ಬಾಯನ್ನು ಅಲ್ಲಾಡಿಸುತ್ತ ತುಟಿಗಳನ್ನು ಮೃದುವಾಗಿ ಕಡೆದುಕೊಳ್ಳತೊಡಗಿದಿ – ಸುಳ್ಳು ಸುಳ್ಳೇ ಏನನ್ನೋ ತಿನ್ನುತ್ತಿರುವ ನೆವದಲ್ಲಿ. ನಿನ್ನ ಮೊಲೆಗಳು ನಿನಗೇ ಭಾರವೆಂಬಂತೆ ನಿನ್ನ ಕೈಗಳಿಂದ ಅವುಗಳನ್ನು ತುಸು ಎತ್ತುವಂತೆ ನಟಿಸಿದಿ. ಹೊದಿಕೆಯ ಒಳಗೆ ಕೈ ಹಾಕಿ ಸೆಖೆ ಎಂಬಂತೆ ಫ್ಯಾನಿನ ಕಡೆ ನೋಡುತ್ತ ನಿನ್ನ ಕುಪ್ಪಸದ ಗುಂಡಿಗಳನ್ನು ಬಿಚ್ಚಿದಿ. ತಲೆಗೂದಲನ್ನು ನೇವರಿಸಿದಿ. ನಿನ್ನ ತುಟಿಗಳನ್ನು ನನಗೆ ಕಡಿಯಬೇಕೆಂದೆನಿಸಿದ್ದು ನಿನಗೆ ಗೊತ್ತಾದಂತೆ ಕಣ್ಣನ್ನು ಮಿಟುಕಿಸಿಯೇಬಿಟ್ಟಿ. ಬಹಳ ತುಂಟು ಕಣ್ಣು ನಿನ್ನದು. ತನ್ನಷ್ಟಕ್ಕೆ ನಗುವ ಕಣ್ಣು ನಿನ್ನದು. ಇವತ್ತೂ ನಿನ್ನ ಕಣ್ಣುಗಳು ಹಾಗೇ ಇವೆ. ಒಂದು ವರ್ಷದ ಹಿಂದೆ ಗಂಗೂ ಎಂಬ ಒಬ್ಬ ಹುಡುಗಿಯನ್ನು ದೇಹಗಳು ಬೆರೆತು ಕರಗಿಹೋಗುವಂತೆ ನಾನು ಪ್ರೀತಿಸಿದ್ದರ ನೆನಪು ಮರುಕಳಿಸಿತ್ತು. ನಿನ್ನನ್ನು ತಿಂದುಬಿಡುವಂತೆ ನೋಡುತ್ತ, ನಿನ್ನ ಬರ್ತ್ ಕೊಂಡಿಯಿಲ್ಲದೆ ಕಳಚೀತೆಂಬ ನನ್ನ ಆತಂಕವೇ ಕಾರಣವೆಂಬಂತೆ, ನಾನು ಎದ್ದು ನಿಂತು ನಿನ್ನ ತೊಡೆಗಳನ್ನು ಮುಟ್ಟುವಂತೆ ನನ್ನ ಎಡಗೈ ಸೋಕಿಸಹೋದಾಗ, ನೀನೂ ನನ್ನ ಕೈಗಳಿಂದ ಮುಟ್ಟಿಸಿಕೊಳ್ಳುವಂತೆ ಮಗ್ಗುಲಾಗಿ ನಿನ್ನ ಬಲತೊಡೆಯನ್ನು ನನ್ನ ಎಡಗೈಗೆ ಒತ್ತಿದಿ. ನೀನು ಮಲಗಿದ್ದ ಬರ್ತ್‌ನ್ನು ಎದ್ದುನಿಂತು ಮೇಲಕ್ಕೆ ಎತ್ತಿ ಕೊಂಡಿಸಿಕ್ಕಿಸುತ್ತಿದ್ದ ನನ್ನನ್ನು ನಿನ್ನ ಅಪ್ಪ ’ಏಯ್’ ಎಂದು ಹೊದಿಕೆ ಎಸೆದು ಎದ್ದುನಿಂತು ಹೊಡೆದು ಕಿರುಚಾಡತೊಡಗಿದರು. ಆತಂಕದಲ್ಲಿ ನಿನ್ನ ಬರ್ತನ್ನೆತ್ತಿ ಕೊಂಡಿ ಸಿಕ್ಕಿಸುತ್ತಿದ್ದವನೊಬ್ಬನ (ಆಧುನಿಕ ಆಕರ್ಷಕ ವೇಷದವನೊಬ್ಬನಾದ ನನ್ನಂಥವನ) ಈ ಅಪರೂಪದ ಪರೋಪಕಾರಿ ಭಾವವನ್ನು ಮೆಚ್ಚಿಕೊಂಡಿದ್ದ ಇತರ ಪ್ರಯಾಣಿಕರು ಸದಾ ಉರಿಮುಖದವರಾಗಿದ್ದ ನಿನ್ನ ಅಪ್ಪನಿಗೆ ಛೀಮಾರಿ ಹಾಕಿದರು. ಇದನ್ನೆಲ್ಲ ತುಂಟತನದಿಂದ ನೋಡುತ್ತಿದ್ದ ನೀನು ಮಾತಿಲ್ಲದೆ ನನ್ನ ಜೊತೆ ಒಂದು ಒಪ್ಪಂದಕ್ಕೆ ಬಂದಿದ್ದಿಯೆಂದು ನನಗೆ ಗೊತ್ತಾಗಿಬಿಟ್ಟಿತ್ತು. ಸ್ತೀಹೃದಯ ತಿಳಿಯುವುದರಲ್ಲಿ ಈ ನನ್ನ ಈಗಿನ ಅಯ್ಯಪ್ಪ ವೇಷದಲ್ಲೂ ನಾನು ನಿಷ್ಣಾತ. ಇರಲಿ. ನಾನು ವಿನಾಕಾರಣ ನಿನ್ನ ಅನಾಗರಿಕ ತಂದೆಯಿಂದ ಅವಮಾನಿತನಾದವನಂತೆಯೂ, ಆದರೆ ನಿನ್ನ ಮೂರ್ಖ ಅಪ್ಪನನ್ನು ಕ್ಷಮಿಸಿದವನಂತೆಯೂ ನಟಿಸಿದ್ದೆ. ಎಲ್ಲರೂ ದೀಪವಾರಿಸಿದ ಮೇಲೆ ನೀನು ಮೆತ್ತಗೆ ಎದ್ದು ಹೋದಿ. ನೀನು ಎಲ್ಲಿಗೆ ಹೋಗಿದ್ದಿಯೆಂಬುದನ್ನು ಊಹಿಸಿದ್ದ ನಾನೂ ಎದ್ದುಹೋಗಿ ಸೀದ ಟಾಯ್ಲೆಟ್ಟಿನ ಬಾಗಿಲು ತಳ್ಳಿದೆ. ಅದರೊಳಗೆ ಇದ್ದ ನೀನು ನನ್ನನ್ನು ತಬ್ಬಿಕೊಂಡೆ. ನೀನು ನಿನ್ನ ಕುಪ್ಪಸದ ಗುಂಡಿಗಳನ್ನು ಮಾತ್ರ ತೆರೆದದ್ದಲ್ಲ; ಟಾಯ್‌ಲೆಟ್ಟಿನಲ್ಲಿ ಅದೆಷ್ಟು ವೇಗವಾಗಿ ನಿನ್ನ ಮೊಲೆಕಟ್ಟನ್ನೂ ಬಿಚ್ಚಿ ಸೊಂಟಕ್ಕೆ ಸಿಕ್ಕಿಸಿದ್ದಿ. ಅಲ್ಲಿನ ಉಚ್ಚೆ ವಾಸನೆಯನ್ನು ನಾವಿಬ್ಬರೂ ಗಮನಿಸಲೇ ಇಲ್ಲ. ನಾನು ನಿನ್ನ ತುಟಿಗಳನ್ನು ಕಚ್ಚತೊಡಗಿದ್ದೆ. ನೀನು ಬಿಡಿಸಿಕೊಂಡು ನನ್ನ ಕಿವಿಯನ್ನೂ ಮುಖವನ್ನೂ ಕಚ್ಚುತ್ತ, ನಿನ್ನ ಎದೆಗೆ ನನ್ನ ಕೈಗಳನ್ನು ಇಟ್ಟುಕೊಂಡು ನನಗೆ ಹೇಳಿದಿ. ಹೀಗೆ: ನೀನು ಕಾಲೇಜು ಓದುವ ಹುಡುಗಿಯಾಗಿದ್ದಿ. ನಿನಗೆ ಒತ್ತಾಯದಿಂದ ಮಾಡಿದ್ಡ ಮದುವೆ ನಿನಗೆ ಇಷ್ಟವಿರಲಿಲ್ಲ. ನನ್ನ ಜೊತೆ ಕರೆದಲ್ಲಿಗೆ ಬಂದು ಬಿಡುವಿ ಎಂದಿ. ಪ್ರೇಮದ ಉತ್ಕರ್ಷದ ನಿನ್ನ ಮೂರ್ಖತನದಲ್ಲಿ ನೀನು ದೇವಿಯಂತೆ ನನಗೆ ಕಂಡಿ. ರೈಲು ಯಾವುದೋ ಸ್ಟೇಶನ್ನಿನಲ್ಲಿ ಬಂದು ನಿಲ್ಲುವಂತೆ ಸ್ಲೋ ಆಗುತ್ತ ಹೋಯಿತು. ಇಲ್ಲೇ ನಾವಿಬ್ಬರೂ ಇಳಿದು ಪರಾರಿಯಾಗೋಣ ಎಂದಿ. ನಿನ್ನನ್ನು ಮೋಹಿಸಿದ್ದರೂ ನನಗೆ ಅಂಥ ಧೈರ್ಯವಿರಲಿಲ್ಲ. ಆದರೆ ಅದೂ ಒಂದು ಪ್ರಣಯಕೇಳಿಯ ಪೂರ್ವಭಾವಿ ಸಿದ್ಧತೆಯೆಂದುಕೊಂಡು ’ಆಗಬಹುದು’ ಎಂದು ನಿನ್ನನ್ನು ತಡಕಾಡತೊಡಗಿದ್ದೆ. ನೀನು ಮಾತ್ರ ಹುಚ್ಚು ಹುಡುಗಿ. ಇಳಿದೇಬಿಟ್ಟೆ. ಕ್ಷಣ ಮಾತ್ರ ನಿಂತಿದ್ದ ರೈಲು ಹೊರಟುಬಿಟ್ಟಿತು. ಆಮೇಲೆ ನಿನ್ನನ್ನು ಕಾಣದೆ ನಿನ್ನ ಅಪ್ಪ ಗೋಳಾಡುತ್ತ ಗಂಟುಮೂಟೆ ಹೊತ್ತು ಮುಂದಿನ ಸ್ಟೇಶನ್ನಿನಲ್ಲಿ ಇಳಿದುಬಿಟ್ಟಾಗ ನನಗೇನು ಮಾಡಬೇಕು ತೋಚದೆ ನಾನು ಸುಮ್ಮನಾಗಿಬಿಟ್ಟೆ. ಗಂಗೂ ನಂತರ ನನ್ನ ಎರಡನೇ ಸೋಲು ಇದು. ನಾನು ಯಾರನ್ನೂ ಪ್ರೀತಿಸಲಾರೆನೇನೋ ಎಂದು ನನ್ನ ಆತ್ಮರತವಾದ ವ್ಯಕ್ತಿತ್ವದ ಬಗ್ಗೆಯೇ ಈ ಘಟನೆಯ ನಂತರ ಅನುಮಾನ ಪಟ್ಟು ನರಳತೊಡಗಿದೆ. ಈಗಲೂ ಅದೇ ನರಳಾಟದಿಂದ ಪಾರಾಗದ ನಾನು ನಿನಗೆ ಈ ಪತ್ರ ಬರೆಯುತ್ತಿದ್ದೇನೆ. ಬಹಳ ವರ್ಷಗಳಾದ ಮೇಲೆ ನಾನೊಬ್ಬ ಖ್ಯಾತ ವ್ಯಕ್ತಿಯಾದೆ. ಹಲವು ಪ್ರಣಯಗಳ ನಂತರ ಒಬ್ಬಳನ್ನು ಮದುವೆಯಾದೆ. ಆಮೇಲೆ ನಾನಿಲ್ಲದಾಗ ಇನ್ನೊಬ್ಬನ ತೋಳಿನಲ್ಲಿ ನನ್ನ ತೋಳಿನಲ್ಲಿರುವುದಕ್ಕಿಂತ ಹೆಚ್ಚಿನ ಸುಖ ಗಿಟ್ಟಿಸಿಕೊಳ್ಳುತ್ತಿದ್ದ ನನ್ನ ಹೆಂಡತಿಯ ಘಾತುಕತನದಿಂತ ಕ್ರುದ್ಧನಾಗಿ, ಅವಮಾನಿತನಾದೆ. ಅವಳಿಗೆಷ್ಟು ನನ್ನ ಬಂಗಾರ ಕೊಟ್ಟರೆ ಅವಳು ನನ್ನನ್ನು ಬಿಟ್ಟಾಳು ಎಂಬ ವ್ಯವಹಾರದಲ್ಲಿ ನಮ್ಮ ಜಗಳ ಬೆಳೆಯುತ್ತ ಹೋದಂತೆ ಹೇಸಿದೆ. ಹೇಸಿದೆ ಮಾತ್ರ – ಹೊರಳಲಿಲ್ಲ. ಯಾಕೆಂದರೆ ನನ್ನ ಹೆಂಡತಿ ನನ್ನ ಆಸ್ತಿಗಾಗಿ ನನ್ನನ್ನು ಮದುವೆಯಾಗಿ ಇನ್ನೊಂದು ಸಂಬಂಧ ಇಟ್ಟುಕೊಂಡಂತೆಯೇ, ಗ್ಲಾಮರ್ ವರ್ಲ್ಡ್‌ನ ನಾನು ಗ್ಲಾಮರ್ ವರ್ಲ್ಡ್‌ನ ಅವಳನ್ನು ಮದುವೆಯಾಗಿ ಇನ್ನೂ ಹಲವು ಲಘು ಸಂಬಂಧಗಳನ್ನೂ ಸರ್ಕಸ್ಸಿನ ಟೈಟ್‌ರೋಪ್ ವಾಕರ್‍ನಂತೆ ನಿರ್ವಹಿಸಿದ್ದೆ. ನಾನು ಯಾರು, ನನ್ನ ಸತ್ಯವೇನು? ಎಂದು ತಿಳಿಯದ್ದರಿಂದಲೇ ಈ ಭವದ ದಿಗ್ಬಂಧನಗಳ ಭ್ರಮೆಗೆ ನಾನು ಒಳಗಾಗಿರುವುದು ಎಂದು ನೀನು ಹೇಳೀಯ. ಅದು ನನಗೆ ಗೊತ್ತು. ಆದರೆ ಈ ಸತ್ಯ ಸದಾ ನನಗೆ ತಿಳಿದಿದ್ದರೂ ಭ್ರಮೆಯಲ್ಲಿರುವ ತರಳೆ ನನಗೆ ಪ್ರಿಯಕರವಾಗಿಯೂ ಇತ್ತು. ಇವಳಿಗೆ ಕೊಟ್ಟ ಹೊತ್ತನ್ನು ಮರೆತು ಇನ್ನೊಬ್ಬಳಿಗೆ ಅದೇ ಹೊತ್ತನ್ನು ಗೊತ್ತು ಮಾಡುವುದು, ಇವಳ ಕೋಪ ಶಮನವಾಗಲೆಂದು ಅವಳಿಗೆ ಮೋಸ ಮಾಡುವುದು, ಇಂಥ ಕೋಪಾವೇಶಗಳನ್ನು ಉಂಟುಮಾಡುತ್ತ ಕಾಮಕೇಳೀಯ ವಿಧವಿಧದ ಸೊಗಸುಗಳ ಅನುಭವಕ್ಕೆ ವಿರಹತಾಪವನ್ನು ಒಗ್ಗರಣೆ ಮಾಡಿಕೊಳ್ಳುವುದು ನನ್ನ ಹವ್ಯಾಸವಾಗಿತ್ತು. ಅದರಿಂದ ನನ್ನಲ್ಲಿ ಉಂಟಾಗುತ್ತಲೇ ಹೋದ ಸುಸ್ತು, ನನ್ನ ಒಳಗಿಂದ ಇನ್ನೊಂದು ನಾದವನ್ನು ಕ್ಷೀಣವಾಗಿ ಕೇಳಿಸುವಂತೆಯೂ ಮಾಡಿತ್ತು. ನನ್ನ ಹೆಂಡತಿಯ ಜೊತೆ ಇರಲಾರದೆ, ಬಿಡಲೂ ಆರದೆ ಒಂದು ದಿನ ಸಜ್ಜನಿಕೆಯಲ್ಲಿ ಅವಳ ಜೊತೆ ತಾಜ್ ಕಾಂಟಿನೆಂಟಲ್‌ನಲ್ಲಿ ಸೊಗಸಾದ ಅರೋಮಾದ ಡಾರ್ಜೆಲಿಂಗ್ ಚಹಾ ಕುಡಿಯುತ್ತಿದ್ದವನು ಸೀದಾ ಬ್ಯಾಂಕಿಗೆ ಹೋಗಿ ಸೇಫ್ ಡಿಪಾಸಿಟ್ಟಿನಿಂದ ನನ್ನ ತಾಯಿ ಬಿಟ್ಟುಹೋದ ಬಂಗಾರದ ಕೆಲವು ಗಟ್ಟಿಗಳನ್ನು ಎತ್ತಿತಂದು ಸುಮಾರು ಇಪ್ಪತ್ತು ಲಕ್ಷಗಳು ಬೆಲೆಬಾಳುವ ಬಂಗಾರವನ್ನು ಅವಳಿಗೆ ಆಶ್ಚರ್ಯವಾಗುವಂತೆ ಕೊಟ್ಟುಬಿಟ್ಟೆ. ಅವಳ ಮುಖ ಅರಳಿದ್ದನ್ನು ಯಾವತ್ತೂ ಮರೆಯಲಾರೆ. ಮುಗ್ಧ ಮಗುವಿನ ಖುಷಿಯನ್ನು ಅವಳಲ್ಲಿ ಕಂಡೆ. ಬಂಗಾರ ಅವಳಲ್ಲಿ ಹೀಗೆ ಉಂಟು ಮಾಡಿದ ಭ್ರಮೆಯ ವಿಲಾಸಕಂಡು ನನ್ನ ಕರುಳು ಮಿಡಿಯಿತು. ಅವಳ ಮೇಲಿದ್ದ ದ್ವೇಷವೆಲ್ಲ ಕಳೆದುಹೋಯಿತೆನ್ನಿಸಿತ್ತು. ಆದರೆ ಮೊದಲ ಬಾರಿ ಅವಳ ಪ್ರಣಯ ಕೇಳಿಯನ್ನು ಖುದ್ದು ಕೇಳಿಸಿಕೊಂಡಿದ್ದು ನೆನಪಾದಾಗಲೆಲ್ಲಾ ಮತ್ತೆ ಆ ದ್ವೇಷ ಮರುಕಳಿಸಿದ್ದಿದೆ. ನಾನು ನನ್ನ ಫ್ಲಾಟಿನ ಬಾಗಿಲನ್ನು ನನ್ನ ಕೀನಿಂದ ತೆರೆದು ಡ್ರಾಯಿಂಗ್ ರೂಮಿನಲ್ಲಿ ಸದ್ದಿಲ್ಲದೆ ನಿಂತಾಗ ಸಂಜೆಹೊತ್ತು ಅವಳು ಪರಮ ಸುಖದಲ್ಲಿ ನರಳುತ್ತಿದ್ದಳು. ಅವಳ ಮಿಂಡ, ಒಬ್ಬ ಯಃಕಶ್ಚಿತ್ ಎಂಜಿನಿಯರು. ಇಬ್ಬರೂ ಗದ್ಗದವಾದ ಗಂಟಲಿನಲ್ಲಿ ಪಶುವಿನ ವಿಚಿತ್ರ ಸ್ವರವನ್ನು ಹೊರಡಿಸುತ್ತ ತಣಿಯುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದಂತೆ, ನಾನು ಇನ್ನು ತಾಳಲಾರೆ, ಅವಳನ್ನು ಅಡಿಗೆಮನೆಯ ಚಾಕುವಿನಿಂದ ನುರಿದು ಸಾಯಸಬೇಕು ಎನ್ನಿಸಿತ್ತು. ತನ್ನ ಹೆಣ್ಣು ಇನೊಬ್ಬನಿಂದ ತಾನು ಮಾಡಿದ್ದನ್ನೇ ಮಾಡಿಸಿಕೊಳ್ಳುತ್ತಾಳೆ ಎಂಬುದು ಮಹಾ ಕಾಮುಕರಿಗೂ ಬೆರಗಿನ ವಿಷಯವಾಗಿರುತ್ತದೆ. ಈ ಬೆರಗಿನಲ್ಲೂ ಬಿಡುಗಡೆ ಸಾಧ್ಯವಾಗಬಹುದಲ್ಲವೆ? ಅಂತೂ ಅವಳು ಬಂಗಾರದ ಭ್ರಮೆಯಲ್ಲಿ ಹಿಗ್ಗಿದ ದೃಶ್ಯದಲ್ಲಿ ನನ್ನ ಬಿಡುಗಡೆಯ ಮುನ್ಸೂಚನೆ ಕಂಡಂತಾಗಿ ನಾನು ವ್ರತದ ಈ ವೇಷವನ್ನು ತೊಟ್ಟು, ನನ್ನ ಕೆಲಸಗಳನ್ನೆಲ್ಲ ಮುಂದೆ ಹಾಕಿ, ಮೂರು ತಿಂಗಳಿಂದ ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಅಲೆಯುತ್ತ, ಮನಸ್ಸು ತಣಿಯದಿದ್ದಾಗ, ನಿನ್ನ ಬಗ್ಗೆ ವರದಿ ಓದಿದ್ದೆ. ಮತ್ತೇನೋ ಬಿಡುಗಡೆಯ ಭರವಸೆ ಹುಟ್ಟಿತ್ತು. ನೀನು ಆಶ್ರಮ ಮಾಡಿಕೊಂಡು ಇರುವ ಜಗತ್ಪ್ರಸಿದ್ದವಾದ ಮದ್ರಾಸಿನ ಹತ್ತಿರದ ನಿನ್ನ ಹಳ್ಳಿಗೆ ಒಂದು ವಾರದ ಹಿಂದೆ ಬಂದೆ. ಅದೆಷ್ಟು ಜನ. ಅದೇನು ಸಂಭ್ರಮ. ಎಲ್ಲೆಲ್ಲೂ ನಿನ್ನ ಬಣ್ಣ ಕಟ್ಟಿದ ಚಿತ್ರಗಳು, ನಿನ್ನ ಚಿತ್ರಗಳಿದ್ದ ಬಟ್ಟೆಗಳು, ನಿನ್ನ ಚಿತ್ರಗಳಿದ್ದ ಸ್ಟಿಕರ್‍ಸ್, ನಿನ್ನ ಚಿತ್ರಗಳಿದ್ದ ತಟ್ಟೆಗಳು – ನಿನ್ನ ಆಶ್ರಮದ ಹೊರವಲಯ ಒಂದು ಅಧುನಿಕ ಸೂಪರ್ ಮಾರ್ಕೆಟ್ಟಾಗಿ ಕಂಡಿತು. ನಿರಾಸೆಯಾಯಿತು. ಕುತೂಹಲವೂ ಆಯಿತು. ನಿನ್ನನ್ನು ನೋಡಬಂದವರಿಗೆ ಅವರವರ ಅಂತಸ್ತಿಗೆ ತಕ್ಕಂತಹ ಛತ್ರದ ರೂಮುಗಳೂ ಇದ್ದವು. ಆದರೆ ನಿನ್ನ ಮಹತ್ವದಿಂದಾಗಿಯೇ ಸಮುದ್ರ ತೀರದ ಆ ಹಳ್ಳಿಯಲ್ಲಿ ಎದ್ದುನಿಂತ ಟೂರಿಸ್ಟ್ ಹೋಟೆಲೊಂದರಲ್ಲಿ ಇಳಿದುಕೊಂಡೆ. ನನ್ನಂತೆಯೇ ನಿನ್ನನು ನೋಡಲು ಬಂದ ಹಲವು ಫಾರಿನ್ ಟೂರಿಸ್ಟರೂ ಅಲ್ಲಿ ಉಳಿದಿದ್ದರು. ನೀನು ಒಂದು ನಿಮಿಷ ಕಾಲ ಪ್ರತಿಯೊಬ್ಬನನ್ನೂ ಖಾಸಗಿಯಾಗಿ ನೋಡುವುದೆಂದರೂ, ಹತ್ತು ಗಂಟೆಗಳ ಕಾಲ ನೀನು ನನ್ನ ಮಂದಾಸನದಲ್ಲಿ ಭಗವತಿಯಂತೆ ಕೂತಿದ್ದರೆ ಸುಮಾರು ಆರುನೂರು ಜನರನ್ನು ಮಾತ್ರ ನೋಡಬಹುದು. ನನ್ನ ಟೀವಿ ಖ್ಯಾತಿಯನ್ನು ಎಲ್ಲರಿಂದ ಮುಚ್ಚಿಟ್ಟುಕೊಂಡ ನಾನು ನಿನ್ನ ಅಧಿಕಾರಿಗಳಿಗೆ ಮಾತ್ರ ಹೇಳಿಕೊಂಡು ಮೂರುದಿನಗಳ ನಂತರದ ಭೇಟಿ ಮಾಡುವ ಭಾಗ್ಯವಂತನಾದೆ. ಅರ್ಧ ನಿಮಿಷದ ದರ್ಶನದ ಒಂದು ಕಿಲೋಮೀಟರಿನ ಕ್ಯೂ ಮುಗಿದ ನಂತರದ, ವಿ‌ಐಪಿಗಳಿಗಾಗಿ ಇದ್ದ ಒಂದು ನಿಮಿಷ ದರ್ಶನದ ಪುಟ್ಟ ಕ್ಯೂನಲ್ಲಿ ನಿಂತು, ನನ್ನ ನೆವದಲ್ಲಿ ಬಿಡುಗಡೆ ಪಡೆದ ನಿನ್ನ ಮುಖದರ್ಶನ ಮಾಡಲು ಮತ್ತೆ ಕಾದೆ. ನಿರೀಕ್ಷೆಯಲ್ಲಿ, ಆತಂಕದಲ್ಲಿ, ಅನುಮಾನದಲ್ಲಿ. ಅರ್ಧ ನಿಮಿಷದ ಕ್ಯೂನವರು ನಿನ್ನ ಸ್ವಹಸ್ತದಿಂದ ತಲೆ ಮುಟ್ಟಿಸಿಕೊಳ್ಳುವಷ್ಟು ಮಾತ್ರ ಭಾಗ್ಯಶಾಲಿಗಳು. ಆದರೆ ಒಂದು ನಿಮಿಷದ ಕ್ಯೂನವರು ನಿನ್ನಿಂದ ಅಪ್ಪಿಸಿಕೊಳ್ಳುವಷ್ಟು ಪುಣ್ಯವಂತರು. ಅಲ್ಲಿರುವ ಯಾತ್ರಿಕರ ಬೆರಗಿನ ಕಥೆಗಳಿಂದ ನಾನೊಂದು ಮಾತು ಕೇಳಿದ್ದೆ. ಯಾರ ಭಕ್ತಿ ಪರಿಶುದ್ಧವಾಗಿರುತ್ತದೋ, ಯಾರು ಭವದ ಕಲ್ಮಶ ಕಳೆದುಕೊಳ್ಳುವಷ್ಟು ಕರ್ಮವನೆಲ್ಲ ಸವೆಸಿಬಿಟ್ಟು ಬಿಡುಗಡೆಯ ತುದಿಗಾಲಲ್ಲಿ ನಿಂತಿರುತ್ತಾರೋ, ಅವರನ್ನು ನೀನು ತಬ್ಬಿದಾಗ ನಿನ್ನ ಮೊಲೆಯಲ್ಲಿ ಹಾಲು ಕಾಣಿಸಿಕೊಳ್ಳುವುದಂತೆ. ಅದನ್ನು ನೀನವರ ಕಣ್ಣಿಗೆ ಒತ್ತುತ್ತೀಯಂತೆ. ಸುಪ್ರೀಂ ಕೋರ್ಟಿನ ಮುದಿ ಜಡ್ಜ್ ಒಬ್ಬರಿಗೆ ನಿನ್ನ ಎದೆ ಹಾಲು ದೊರೆತು, ಅವರು ಎಲ್ಲವನ್ನೂ ಬಿಟ್ಟುಕೊಟ್ಟು ನಿನ್ನ ಸಂಸ್ಥೆಯ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿ ಬಿಟ್ಟಿದ್ದಾರಂತೆ. ನನ್ನ ಎದುರಿನವರ ನಿಮಿಷ ನಿಮಿಷ ದರ್ಶನದ ಭಾಗ್ಯವನ್ನು ವಾಚು ನೋಡಿಕೊಂಡು ಎಣಿಸುತ್ತ, ನನ್ನ ಸರದಿಗಾಗಿ ತವಕಿಸುತ್ತ, ಹತ್ತಿರವಾಗುತ್ತ, ಆಗುತ್ತ, ನಿನ್ನನ್ನು ಇಣುಕಿಯಾದರೂ ನೋಡುತ್ತಿರಬೇಕೆಂದುಕೊಂಡರೆ ತೀರ ಹತ್ತಿರವಾಗುವ ತನಕ ನೀನು ಕಾಣಿಸದಂತೆ ವಕ್ರವಾದ ರೇಖೆಗಳಲ್ಲಿ ಈ ಕ್ಯೂವನ್ನು ನಿನ್ನ ಅಧಿಕಾರಿಗಳು ನಿಲ್ಲಿಸಿರುತ್ತಾರೆ. ನಿನ್ನನ್ನು ಕಾಣುವುದೊಂದು ಹಠಾತ್ತನೆ ದೊರಕುವ ಅನುಭವದಂತಿರಬೇಕೆಂಬುದು ಅವರ ಯೋಜನೆಯೆಂದು ಕಾಣುತ್ತದೆ. ಟೀವಿಯಲ್ಲಿ ಏನನ್ನು, ಯಾವಾಗ, ಎಷ್ಟು ಹಠಾತ್ತನೆ ಎಂಬಂತೆ ತಂದು ಪ್ರೇಕ್ಷಕರ ಆಸಕ್ತಿ ಉಳಿಸಿಕೊಳ್ಳಬೇಕೆಂಬುದರಲ್ಲಿ ನಿಷ್ಣಾತನಾದ ನಾನು ಕ್ರಮೇಣ ನನ್ನ ಆಸಕ್ತಿ ಕಳೆದುಕೊಂಡಿದ್ದೆ. ಇಂಥ ಉಪಾಯಗಳಿಂದ ನಾನು ರೋಸಿ ಹೋಗಿ ನಿನ್ನನ್ನು ಹುಡುಕಿಕೊಂಡು ಬಂದದ್ದಲ್ಲವೆ? ಕಾಮಕೇಳಿಯಲ್ಲಿ ಕಲಾವಿದರಾಗಿ ಬಿಟ್ಟವರೂ ಕೂಡ ಈ ಹಂತ ಹಂತದ ಆಕ್ರಮಣದ ಕಲೆಯನ್ನು ಡೆಲಿಬರೇಟಾಗಿ ಬಳಸುತ್ತಾರಲ್ಲವೆ? ನಿನ್ನನ್ನು ಸುಮ್ಮನೆ ನೋಡಿದೆ. ಅಷ್ಟು ಜನರನ್ನು ಮುಟ್ಟಿ ತಬ್ಬಿದರೂ ನೀನು ಸುಸ್ತಾಗಿದ್ದಂತೆ ಕಾಣಲಿಲ್ಲವೆಂಬುದು ಬೆರಗಾಯಿತು. ನನ್ನನ್ನೂ ತಬ್ಬಿದಿ. ಆದರೆ ನಿನ್ನ ಮೊಲೆಯಲ್ಲಿ ಹಾಲು ಬರಿಸುವಷ್ಟು ಪುಣ್ಯವಂತ ನಾನಾಗಿರಲಿಲ್ಲ. ನಿನ್ನ ಕಣ್ಣುಗಳಲ್ಲಿ ಆ ಹಿಂದಿನ ತುಂಟತನ ಉಳಿದುಬಿಟ್ಟಿದ್ದನ್ನು ಕಂಡಿದ್ದೆನಲ್ಲವೆ? ; ಆದರೂ ನೀನು ಹೊರಳಿಬಿಟ್ಟೆಯಾ? ; ಹೇಗೆ? ; ಹೊರಳಿಕಂಡ ಮೇಲೂ ನಮ್ಮ ನಮ್ಮ ಭವದಲ್ಲಿ ನಾವು ಇರುವುದಲ್ಲವೆ? ; ನೀನು ಇನ್ನೂ ಉಚ್ಚೆ ಹೊಯ್ಯುತ್ತಿ ಅಲ್ಲವೆ? ; – ಹೀಗೆ ಏನೇನೋ ನಾನು ಅನುಮಾನಿಸುತ್ತಿದ್ದಾಗ ನೀನು ನನ್ನ ತಬ್ಬಿದಿ. ದಿವ್ಯವಾದ, ಎಷ್ಟು ಮುಟ್ಟಿದರೂ ಹಳಸದ ಪ್ರೇಮದಲ್ಲಿ ನನ್ನನ್ನು ತಬ್ಬಿದಿ. ಇದರಿಂದ ನನಗೆ ಬೆರಗಾಯಿತು. ಮತ್ತೆ ನನ್ನ ಬೆನ್ನಿಗಿದ್ದ ಇನ್ನೊಬ್ಬನನ್ನೂ ಹಾಗೆಯೇ ತಬ್ಬಿದಿ. ಆದರೆ ನಾನು ಮಾತ್ರ ನಿನಗಿರುವುದೆಂದು ನಾನು ಆ ಕ್ಷಣದಲ್ಲಿ ಭಾವಿಸುವಂತೆ ಮಾಡಿದ್ದಿ. ಅವನು ಮಾತ್ರ ನಿನಗಿರುವುದೆಂದು ಅವನು ಭಾವಿಸುವಂತೆಯೂ ಮಾಡಿದ್ದಿ. ಇದು ಕೂಡ ಹೇಗೆ ನಿನಗೆ ದಿನ ದಿನವೂ ಬೇಸರ ತರದಂತೆ ಉಳಿದ ಕಲೆಯಾಗಿರಬಹುದು ಎಂದು ಮತ್ತೆ ಯೋಚಿಸಿದೆ. ಇರಲಿ. ಕೂತೇ ಇರಬೇಕಾಗಿಬಂದ ನೀನು, ಪಾಪ, ನಿನ್ನ ವಯಸ್ಸಿಗೂ ಹೆಚ್ಚಾಗಿ ತೋರವಾಗಿ ಬಿಟ್ಟಿದಿ ಎಂದೂ ಎನ್ನಿಸಿತ್ತು. ನಿನ್ನನ್ನು ನೋಡಿಯಾದ ಮೇಲೆ ನನಗೆ ಅಮ್ಮನಂತಾಗಿಬಿಟ್ಟಿದ್ದ ಸೀತಮ್ಮನನ್ನೂ, ನಾನು ವೈರಾಗ್ಯದಲ್ಲಿ ದಂಡಿಸಲು ಪ್ರಯತ್ನಿಸುತ್ತಿರುವ ಈ ದೇಹಕ್ಕೆ ತನ್ನ ರುಚಿಯೇನು ಎಂಬುದನ್ನು ಗುಪ್ತವಾಗಿ ತೋರಿಸಿಕೊಟ್ಟವಳಾದ ಗಂಗೂಬಾಯಿ ಎಂಬುವಳನ್ನೂ ನೋಡಲೆಂದು ಹೊರಟವನಿಗೆ ಶಾಸ್ತಿಗಳೆಂಬ ವೃದ್ಧರ ಪರಿಚಯವಾಯಿತು. ಕುಟ್ಟವಲಕ್ಕಿ ತಿನ್ನಿಸಿ ಅವರು ನನಗೆ ಯಾವುದೋ ಪೂರ್ವ ಜನ್ಮದ ಬಂಧುವಿನಂತಾಗಿಬಿಟ್ಟರು. ಪ್ರಿಯ ಮಹಾಮಾತೆ, ನಾನೂ ನಾರಾಯಣನೂ ಒಟ್ಟಾರೆ ಪ್ರೀತಿಸಿದ್ದ ಗಂಗೂಗೆ ಹುಟ್ಟಿದ ಮಗ ನನ್ನವನೋ? ಅವನು ವೈರಾಗ್ಯವಶನಾಗಿ ಸರ್ವಸಂಗ ಪರಿತ್ಯಾಗದ ಹವಣಿಕೆಯಲ್ಲಿದ್ದಾನಂತೆ – ಈಗ ನಾನೇನು ಮಾಡಬೇಕು? ಹೇಳು. ಈ ಭವದಿಂದ ನನಗೆ ಮುಕ್ತಿಯಿದೆಯೆ ಹೇಳು? ಅಥವಾ ಅಂಥ ಮುಕ್ತಿಯ ಬಯಕೆ ಹುಟ್ಟಾ ಅನುಮಾನಿಯಾದ ನನಗೆ ಕೇವಲ ಕುತೂಹಲದ್ದೋ ಹೇಳು. ನಿನಗೆ ನನ್ನಿಂದ ಆದದ್ದು ನಿಜವಾದರೆ, ನನಗೆ ಯಾಕೆ ಅದು ನಿನ್ನಿಂದ ಆಗಲಿಲ್ಲ? ಹೇಳು. ಪ್ರಿಯ ಮಹಾಮಾತೆ, ಜಗತ್ತಿನ ಉದ್ಧಾರದ ಹವಣಿಕೆಯ ನಿನಗೆ ಇಂಥ ಪ್ರಶ್ನೆಗೆ ಉತ್ತರ ಕೊಡಲು ಎಲ್ಲಿ ಸಮಯ ಸಿಕ್ಕೀತು, ಹೇಳು. ನನ್ನ ಹೆಸರನ್ನು ತೊರೆದು ಸದ್ಯ ಸ್ವಾಮಿಯಾದ ನನ್ನ ತಾಯಿಯ ಪುಟಾಣಿ- ಎಂದು ಕಾಗದ ಮುಗಿಸಿದ. ಸುಸ್ತಾಗಿತ್ತು. ನಿದ್ದೆ ಹೋದ. +ಅಧ್ಯಾಯ ೧೦ +ಮಂಗಳೂರಿನಲ್ಲಿ ತನ್ನ ಮೂರನೆ ದಿನದ ಬೆಳಿಗ್ಗೆ ಬಹುಬೇಗ ಎದ್ದಿದ್ದೇನೆಂದು ತಿಳಿದು ಹೊರಬಂದ ದಿನಕರ ತನಗಿಂತಲೂ ಬೇಗ ಎದ್ದು ಬಿಟ್ಟಿದ್ದ ಅಮ್ಮ ಅಂಗಳವನ್ನು ಗುಡಿಸಿ, ಸಾರಿಸಿ, ರಂಗೋಲೆಯಿಕ್ಕಲು ತಯಾರಾಗಿದ್ದುದನ್ನು ಕಂಡ. “ನಿದ್ದೆ ಮಾಡಿದೆಯಾ? ಕುರ್ಚಿತಂದು ಕುಳಿತುಕೋ. ಇವತ್ತು ಏನು ಬಿಡಿಸುತ್ತೇನೆ ನೋಡು. ನಿನ್ನ ಕೊರಳಿನ ತಾಯಿತದಲ್ಲಿ ಇರೋ ಶ್ರೀಚಕ್ರಾನ್ನ ಇಡೀ ಅಂಗಳ ತುಂಬುವ ಹಾಗೆ ಬಿಡಿಸುತ್ತೇನೆ. ಅದು ನಿನ್ನ ತಾಯಿಯ ರಕ್ಷೆಯಲ್ಲವ? ನಿನ್ನನ್ನು ಕಾಪಾಡಿಕೊಂಡು ಬಂದಿದ್ದಲ್ಲವ?” ಎಂದು ಬಿಡಿಸಲು ತೊಡಗಿದರು. ಅವರು ಶ್ರೀಚಕ್ರ ಎಂದದ್ದು ಅವನಿಗೆ ಮಾತ್ರ ಅರ್ಥವಾಗಿತ್ತು. ಆದರೆ ನೋಡು ನೋಡುತ್ತ, ಅರಿಶಿನ, ಕುಂಕುಮಗಳಲ್ಲಿ ಅಂಗಳದ ಮೇಲೆ ಏಳುತ್ತ ಹೋದದ್ದನ್ನು ಚೂರು ಚೂರಾಗಿ ಗ್ರಹಿಸುತ್ತ, ಅದು ಪೂರ್ಣ ಎದ್ದಮೇಲೆ ಕಣ್ಣುತುಂಬುವಂತೆ ನೋಡಿದ. ಹೀಗೆ ನೋಡುವಾಗ ಫ್ರೆಶ್ಶಾದ ಕಾಫಿಯನ್ನು ಸೇವಿಸುತ್ತಿದ್ದ. ಒಂಬತ್ತು ತ್ರಿಕೋಣಗಳು ಒಂದರಲ್ಲಿನ್ನೊಂದು ಸಂಗಮವಾಗಿ, ಸಂಗಮಗೊಂಡದ್ದು ತನ್ನ ಪರಿಧಿಯಲ್ಲಿ ಚಕ್ರವಾಗಿ, ಚಕ್ರವಾದ್ದು ಹೂವಿನ ದಳಗಳಾಗಿ, ಇಡೀ ಹೂವು ಚೌಕಾಕಾರದಲ್ಲಿ ಒಳಗೊಂಡ ಆಕಾರವಾಗಿ, ನಾಲ್ಕು ದಿಕ್ಕುಗಳಿಗೆ ಚಾಚಿ ದ್ಯಾವಾಪೃಥವಿಗಳ ಸೃಷ್ಟಿ ಚೈತನ್ಯವನ್ನು ತನ್ನಲ್ಲಿ ಗರ್ಭಿಸಿಕೊಂಡಿತ್ತು. ಅಮ್ಮನ ಧ್ಯಾನದಲ್ಲಿದು ರೂಪ ಪಡೆದಿತ್ತು. ನೋಡುವವನ ಕಣ್ಣುಗಳು ಯೋನಿ ಲಿಂಗಗಳ ಸತತ ಸಂಯೋಗದಲ್ಲಿ ತತ್ಪರವಾಗುತ್ತ, ಕುಂಕುಮ ಮತ್ತು ಅರಿಶಿನದ ಬಣ್ಣಗಳಲ್ಲಿ ತಂಗುತ್ತ, ಚಲಿಸುತ್ತ ಕೇಂದ್ರದ ಬಿಂದುವಿನಲ್ಲಿ ಏಕಾಗ್ರಗೊಳ್ಳುವಂತಿತ್ತು. ಕಾಫಿ ಕುಡಿದು ಮುಗಿಸಿ ಮನಸ್ಸು ಪ್ರಸನ್ನವಾದಂತಾಗಿ ಮಹಡಿ ಮೇಲಿನ ತನ್ನ ರೂಮಿಗೆ ಹೋಗಿ ಮತ್ತೆ ಬರೆಯುತ್ತ ಕೂತ. ಈಗ ತಾನು ಬಿಟ್ಟಿಹೊರಟಿದ್ದ ಹೆಂಡತಿಗೆ: ಪ್ರಿಯ ರಂಜನ, ಅವತ್ತು ನನಗೆ ಅನ್ನಿಸಿದ ತೀವ್ರವಾದ ದ್ವೇಷ ಮತ್ತು ಅಸೂಯೆಯಲ್ಲೇ ನನ್ನ ಬಿಡುಗಡೆಯ ಮುನ್ಸೂಚನೆಯಿದ್ದೀತು. ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ನಿನ್ನನ್ನು ನುರಿದು ಸಾಯಿಸಬೇಕು ಎನ್ನಿಸಿತ್ತು. ಹಾಗೆಯೇ ರಂಡೆಯಾಗಿ ಬಿಟ್ಟ ನಿನಗೂ ಕೂಡ ನಿನ್ನ ಬಿಡುಗಡೆ ಅವನಿಂದ ಜಡಿಸಿಕೊಳ್ಳುವಾಗ ಇದ್ದೀತು. ನೀನು ಅವನಿಗೆ ತೆರೆದುಕೊಳ್ಳುತ್ತ ತೆರೆದುಕೊಳ್ಳುತ್ತ ನಿನ್ನ ಎಲ್ಲ ಸಂಧಿ ಮೂಲೆಗಳಲ್ಲೂ ಅವನನ್ನು ಪಡೆದ ಸುಖದ ಉತ್ಕಟತೆಯಿಂದ ನರಳುತ್ತಿದ್ದುದನ್ನು ಈಗ ಅಸೂಯೆಯಿಲ್ಲದಂತೆ ನೆನಪು ಮಾಡಿಕೊಳ್ಳಲು ನಾನು ಹೆಚ್ಚು ಹೆಚ್ಚು ಸಮರ್ಥನಾಗುತ್ತ ಹೋದಂತೆ ಹಾಗೆ ನನಗೆ ತಿಳಿಯಲು ತೊಡಗಿದೆ. ಸತ್ತುಬಿಡುತ್ತಿದ್ದೇನೆ ಎನ್ನುವಷ್ಟು, ತಾಳಿಕೊಳ್ಳಲಾರದಷ್ಟು ನಿನಗೊಂದು ಅಪೂರ್ವ ಸುಖದ ಅನುಭವವಾದಾಗಲೂ ಅದು ಸಾಧ್ಯ. ಉಪಾಯಗಾರಳಾದ ರಂಡೆಯಾಗಿಯೇ ನೀನು ಉಳಿದುಬಿಟ್ಟರೆ ನೀನು ಹೊರಳಿಕೊಳ್ಳುವಷ್ಟು ಪರಾಧೀನೆಯಾಗಲಾರೆ. ಪ್ರೇಮೋತ್ಕಟತೆಯಲ್ಲಿ ನನ್ನಿಂದ ಮುಟ್ಟಿಸಿಕೊಂಡ ಹುಡುಗಿಯೊಬ್ಬಳು ಮಹಾಮಾತೆಯಾಗಿರುವುದನ್ನು ನೋಡಿ ಈ ಮಾತನ್ನು ನಾನು ಆಡುತ್ತಿರುವುದು. ಹಾಗೆಯೇ ನಾನು ಕೊಟ್ಟ ಬಂಗಾರವನ್ನು ನೋಡುತ್ತ ಅದರ ಭ್ರಮೆಯಲ್ಲಿ ನಿನ್ನ ಮುಖ ಅರಳಿದ್ದನ್ನು ನೆನೆದಾಗಲೂ ನೀನು ಪಟ್ಟ ಭ್ರಮೆಯ ಉತ್ಕಟತೆಯೇ ನಿನ್ನಲ್ಲಿ ವೈರಾಗ್ಯವನ್ನೂ ಅರಳಿಸಬಹುದೆಂಬ ಭರವಸೆ ನನಗಿದೆ. ಇದು ಯಾವತ್ತು ಆಗುವುದೋ ಹೇಳಲಾರೆ. ಆದರೆ ಆದಾಗ, ಅದೆಷ್ಟು ಸುಲಭದ್ದು, ಯಾವತ್ತಾದರೂ ನನಗೆ ಅದು ಅನ್ನಿಸಬಹುದಾಗಿತ್ತು ಎಂದು ನಿನಗೆ ಗೊತ್ತಾಗುತ್ತದೆ. ಒಳ್ಳೆಯದಾಗಲಿ. ಆದರೆ ನಾನು ನಿನ್ನನ್ನು ನಿಜವಾಗಿ ಮುಟ್ಟಿ ಪಡೆದಿದ್ದಿಲ್ಲ. ನೀನು ನನ್ನನ್ನು ನಿಜವಾಗಿ ಮುಟ್ಟಿ ಕಂಡಿದ್ದಿಲ್ಲ. ನಿನ್ನ ತೊಡೆಯ ಮೇಲಿನ ಆ ಮಚ್ಚೆಯನ್ನು ಅವನು ಸವರುತ್ತಾನೆಂದು ಆಗೀಗ ನನಗಾಗುವ ಅಸೂಯೆ ತಮಾಷೆಯಾಗಿ ನನಗೆ ಕಾಣಬಹುದೆಂಬ ಭರವಸೆಯಲ್ಲಿ ನಾನಿರುತ್ತೇನೆ. ಇರಲಿ. ಎಂಜಲು ಬುರುಕನಾದ ಒಬ್ಬ ಹಲ್ಕಾನಿಂದ ಅದು ಯಾಕೆ ಹಾಗೆ ಜಡಿಸಿಕೊಳುತ್ತೀಯೊ ನನಗೆ ತಿಳಿಯದಾಗಿದೆ. ನನ್ನ ಫ್ಲ್ಯಾಟನ್ನು ಎಷ್ಟು ದಿವಸಗಳು ಬೇಕಾದ್ರೂ ಇಟ್ಟುಕೋ. ನಾನು ಥಟ್ಟನೆ ಅಲ್ಲಿ ಪ್ರತ್ಯಕ್ಷನಾಗಿ ಬಿಡಬಹುದೆಂಬ ಭಯವೂ ನಿನಗೆ ಬೇಡ. ನನಗೆ ಅಂಥ ಪ್ರಲೋಭನೆಯೂ ಹುಟ್ಟುವುದು ಬೇಡವೆಂದು ರಿಜಿಸ್ಟರ್‍ಡ್ ಪೋಸ್ಟಿನಲ್ಲಿ ನನ್ನ ಕೀ ಕಳಿಸುತ್ತಿದ್ದೇನೆ. ಮರೆತ್ತಿದ್ದೆ. ಮದುವೆಯಾಗಿ ಒಂದು ವರ್ಷದ ಕಾಲ ನೀನು ಆಸೆಪಟ್ಟು ನನ್ನಿಂದ ಪಡೆದ ಮನೆಯ ಎಲ್ಲ ವಸ್ತುಗಳೂ ನಿನ್ನವೇ ನಿನ್ನಿಂದ ಬಳಲಿ ದ್ವೇಷದಿಂದ ಮುಕ್ತನಾಗಲಾರದೆ ದಾರಿ ಹುಡುಕುತ್ತಿರುವ ದಿನಕರ.ತನ್ನ ಎಲ್ಲ ಪ್ರೇಯಸಿಯರನ್ನೂ ನೆನೆದುಕೊಂಡು ಒಂದೊಂದಾಗಿ ಪುಟ್ಟ ಪುಟ್ಟ ಪತ್ರಗಳನ್ನು ಬರೆದ.ಪ್ರಿಯ ಸುದರ್ಶಿನಿ,ನಿನ್ನನ್ನು ನಾನು ಮನಸಾರೆ ಪ್ರೀತಿಸಲಿಲ್ಲ. ನೀನೂ ನನ್ನನ್ನು ಪ್ರೀತಿಸಲಿಲ್ಲ. ಆದರೆ ಪರಸ್ಪರ ಆಕ್ರಮಣಕ್ಕೆ ಹಾತೊರೆದೆವು. ಒಂದು ದಿನ ನೀನು ನಿನಗೇ ಗುನುಗಿಕೊಳ್ಳುತ್ತ ಏಕಾಕಿಯಾಗಿ ಒಳಗಣ್ಣಾಗಿ ಕೂತಿದ್ದನ್ನು ನೋಡಿದ್ದು ನೆನಪಾಗುತ್ತದೆ. ಭವದಿಂದ ನೀನು ಬಿಡುಗಡೆ ಪಡೆಯುವ ಸಾಧ್ಯತೆ ಅದರಲ್ಲಿ ನನಗೆ ಕಾಣುತ್ತದೆ. ಹೀಗೆ, ದಿನಕರಪ್ರಿಯ ಪ್ರೀತಿ,ಯೌವನ ಕಳೆಯುತ್ತಿದೆ ಎಂಬ ದಿಗಿಲಿನಲ್ಲಿ ನನ್ನನ್ನು ನೀನು ಕೂಡಬಯಸಿದ್ದು, ಯಾವ ಹೆಣ್ಣೆಂದರೂ ಪ್ರಾರಂಭದ ಕುತೂಹಲದ ನಾನು ನಿನ್ನನ್ನು ಕೂಡಿದ್ದು. ಆಮೇಲೆ ನಿನ್ನಿಂದ ತಪ್ಪಿಸಿಕೊಳ್ಳಲು ನಾನು ಏನೇನೋ ಉಪಾಯಗಳನ್ನು ಹುಡುಕತೊಡಗಿದೆ. ಪ್ರೀತಿಯ ಭ್ರಮೆಯಲ್ಲಿ ನಿನ್ನನ್ನು ಉಳಿಸಿಕೊಂಡೇ ಇದ್ದೆ. ಯಾಕೆಂದರೆ ಯಾವತ್ತು ನಿನ್ನಂತೆ ನಾನೂ ಏಕಾಕಿಯೆ. ನನ್ನಿಂದ ಸುಖ ಕಾಣದಿದ್ದಾಗಲೂ ಕೂಡಿದಾಗ ನೀನು ನಿನಗೇ ಮೋಸ ಮಾಡಿಕೊಳ್ಳಲು ನನಗೆ ಹಿತವೆನ್ನಿಸಲೆಂದು ನರಳುತ್ತಿದ್ದಿ. ಅದನ್ನು ನಂಬಿದವನಂತೆ ನಟಿಸುತ್ತಿದ್ದ ನನ್ನ ಮೋಸವನ್ನು ಕ್ಷಮಿಸಿಬಿಡು. ಒಂದು ದಿನ ನೀನು ಮುಡಿದ ಹೂವನ್ನು ಎಷ್ಟು ಜೋಪಾನವಾಗಿ ಹೆರಳಿನಿಂದ ತೆಗೆದು ಎಲೆಯ ಮೇಲಿಟ್ಟು ಅದನ್ನು ನಿನ್ನ ಬೆರಳುಗಳಿಂದ ನೀರು ಚಿಮುಕಿಸಿ, ಬೇಕೆನ್ನುವಷ್ಟು ಮಾತ್ರ ಒದ್ದೆ ಮಾಡಿ ಅಕ್ಕರೆಯಲ್ಲಿ ಅದನ್ನು ನೀನು ನೋಡಿದ ನೆನಪಾಗುತ್ತದೆ. ನಾನು ಅದನ್ನು ಬೆರಗಿನಲ್ಲಿ ನೋಡುತ್ತಿದ್ದೇನೆಂಬ ಪರಿವೆ ನಿನಗಿರಲಿಲ್ಲ. ನಮಗೆ ಒಳ್ಳೆಯದಾಗುತ್ತದೆ ಎಂದು ಇದರಿಂದ ಭರವಸೆ ಹುಟ್ಟುತ್ತದೆ. ವೈರಾಗ್ಯಕ್ಕಾಗಿ ಬಯಸಿ, ಬಯಸುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲೆಂದು ತಿಳಿದಿರುವ ಇತಿ ನಿನ್ನ +ದಿನಕರಪ್ರಿಯ ಮಮತಾ,ನಿನ್ನನ್ನು ಬೆತ್ತಲೆ ನೋಡಲು ನೀನು ಬಿಟ್ಟಿದ್ದೇ ಇಲ್ಲ. ಆದರೆ ಒಂದು ದಿನ ಅವಸರದಲ್ಲಿ ನೀನು ಬಟ್ಟೆ ಬಿಚ್ಚಿ ಹೊದಿಕೆಯ ಒಳಗೆ ಸೇರುವಾಗ ನಿನ್ನ ತೊಡೆಯ ಮೇಲೆ ಅಗಲವಾದ ಬಿಳಿಯ ಲುಕೊಡರ್ಮಾ ಕಲೆಯನ್ನು ಕಂಡೆ. ಅದು ಲೆಪ್ರಸಿಯಲ್ಲವೆಂದು ನನಗೆ ಗೊತ್ತು. ಹಾಗೆ ನಾನು ತಿಳಿದೇನೆಂದು ನಿನಗೆ ಭಯ. ನನ್ನನ್ನು ಮೆಚ್ಚಿಸಲು ನೀನು ಮಾಡದ ತ್ಯಾಗವಿಲ್ಲ. ನನ್ನ ಎಲ್ಲ ಪ್ರೇಯಸಿಯರನ್ನೂ ಅಸೂಯೆಯಿಲ್ಲದಂತೆ ನೀನು ಕಂಡಿ. ತೊಡೆಯಿಂದ ಕ್ರಮೇಣ ನಿನ್ನ ಮೈಯನ್ನೆಲ್ಲ ಆವರಿಸಿ ಬಿಡಬಹುದಾದ ನಿನ್ನ ಲುಕೊಡರ್ಮಾ ರೋಗದಲ್ಲೇ ನಿನ್ನ ಮುಕ್ತಿಯಿದ್ದೀತು. ದೇವರು, ನಿನಗೆ ಅದನ್ನು ಎದುರಿಸುವ ಧೈರ್ಯಕೊಡಲಿ. ನಿನ್ನಿಂದ ನಾನು ನಿಜವಾಗಿ ಉದ್ರೇಕಗೊಂಡದ್ದಿಲ್ಲ. ಕನಿಕರದಿಂದ ಮಾತ್ರ ನಿನ್ನನ್ನು ಕೂಡುತ್ತಿದ್ದುದು. +ಇತಿ +ನಿನಗಾಗಿ ಪ್ರಾರ್ಥಿಸುವ +ದಿನಕರ ನಾಳೆಯೆದ್ದು ಲಕ್ನೋದವಳಿಗೆ, ಅಲಹಾಬಾದಿನವಳಿಗೆ, ಲಂಡನ್ನಿನ್ನಲ್ಲಿರುವವಳಿಗೆ, ತಾನು ಕೂಡಲು ಹೊಂಚುತ್ತಿದ್ದ, ಆದರೆ ವಿಳಂಬಿಸಿ ತನ್ನಲ್ಲಿ ಆಸೆಯನ್ನು ಬೆಳೆಸುತ್ತಿದ್ದ, ದೆಹಲಿ ಪತ್ರಿಕೆಯೊಂದರ ಒಬ್ಬ ವರದಿಗಾರಳಿಗೆ ಬರೆಯುವುದು ಎಂದುಕೊಂಡು, ಬರೆದ ಕಾಗದಗಳನ್ನೆಲ್ಲ ಕವರಿಗೆ ಹಾಕಿದ. ಮಹಾಮಾತೆಗೆ ಬರೆದಿದ್ದನ್ನು ಮಾತ್ರ ಅಂಚೆಗೆ ಹಾಕಿ ಪ್ರಯೋಜನವಿಲ್ಲ. ಅವಳಿಗೆ ಉಸಿರಾಡಲೂ ಪುರುಸೋತ್ತಿಲ್ಲ ಎಂದುಕೊಂಡ. ಟಪ್ಪಾಲು ಪೆಟ್ಟಿಗೆ ಹುಡುಕಿಕೊಂಡು ಮನೆಯಿಂದ ಹೊರಗೆ ಹೊರಟ. “ವಾಕಿಂಗ್ ಮುಗಿಸಿ ಬಂದವನೇ ಸ್ನಾನ ಮಾಡಿ ತಿಂಡಿ ತಿನ್ನು. ಇವತ್ತು ನಿನಗೆ ಇಷ್ಟವಾಗಬಹುದೆಂದು ದೋಸೆ ಹಿಟ್ಟು ಕಲಿಸಿಟ್ಟಿದ್ದೇನೆ. ನನ್ನ ಮಗರಾಯ ಏಳುವುದು ಎಷ್ಟು ಹೊತ್ತೋ? ಇವತ್ತು ಅವನಿಗೆ ಕೋರ್ಟಿದೆ ಬೇರೆ” ಎಂದು ಸೀತಮ್ಮ ಕರೆದು ಹೇಳಿದರು. ಅವರ ಮಾತು ಅರ್ಥವಾಗದಿದ್ದರೂ ಅವರ ಆರ್ತತೆ ಹಿತವಾಗಿತ್ತು. +ಅಧ್ಯಾಯ ೧೧ +ಸ್ನಾನಕ್ಕೆಂದು ಹೊರಡಲೆಂದಿದ್ದ ನಾರಾಯಣ ತನ್ನ ರೂಮಿಗೆ ಬಂದು ಬಾಗಿಲು ಹಾಕಿಕೊಂಡ. “ನನಗೇನು ಮಾಡುವುದು ಹೊಳೆಯುತ್ತಿಲ್ಲ” ಎಂದು ಮಾತಿಗೆ ಶುರು ಮಾಡಿದ. ಹಿಂದಿನ ರಾತ್ರೆ ಕುಡಿದು ಬಂದವನು ಮಗನನ್ನು ಎಬ್ಬಿಸಿ ತನ್ನ ನಿರ್ಧಾರ ಹೇಳ್ದನಂತೆ. ಆಸ್ತಿಯನ್ನೆಲ್ಲ ನಿನಗೆ ಮಾತ್ರ ಬರೆದಿಡುತ್ತೇನೆಂದು ಕೂಡ ಹೇಳಿದ್ದನಂತೆ. ಆದರೆ ಮಗರಾಯ ರೋಷಾವೇಶದಲ್ಲಿ ಕುಣಿದಾಡಿ, ಇಂಥ ಅಪ್ಪನ ಮಗ ತಾನಾಗಿ ಯಾಕೆ ಹುಟ್ಟಿದೆನೆಂದು ಗೋಳಾಡಿ, ತನ್ನನ್ನು ಎತ್ತಿ ಸಾಕಿದ ಗಂಗೂವನ್ನು ಆಸೆಬುರುಕ ಸೂಳೆಮುಂಡೆಯೆಂದು ಬೈದಾಡಿ, ಪ್ರಸಾದನನ್ನು ಕಪಟ ಸನ್ಯಾಸಿಯೆಂದು ಹೀಯಾಳಿಸಿ ತನ್ನ ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತ, ತಾನು ಈ ಮನೆಯಲ್ಲಿ ಇರುವುದಿಲ್ಲ, ಇರುವುದಿಲ್ಲ ಎಂದು ಕಿರುಚಿದ್ದನಂತೆ. ಮಹಡಿ ಮೇಲಿನ ದಿನಕರನ ಕಿರುಕೋಣೆಯಲ್ಲಿ ಈ ರಾದ್ಧಾಂತ ಕೇಳಿಸಿರಲಿಲ್ಲ. ಕಡಿದುಬಿಟ್ಟ ಧೈರ್ಯದಲ್ಲಿ ನಾರಾಯಣ ಮಗನ ಹತ್ತಿರ ಮಾತು ಎತ್ತಿರಬೇಕು.ಈ ರಾದ್ಧಾಂತ ಸೂಕ್ಷ್ಮವಾದ ಕಿವಿಯ ತಾಯಿಗೆ ಕೇಳಿಸಿತ್ತಂತೆ. ಅವರು ಎದ್ದು ಹೋಗಿ ಮೊಮ್ಮಗನನ್ನು ಸಮಾಧಾನ ಮಾಡಿ, “ಮೊದಲು ಈ ಮಾಣಿಗೊಂದು ಮದುವೆ ಮಾಡಿಬಿಡೋ, ಇಲ್ಲವಾದರೆ ಅವನಿಗೆ ಯಾರೂ ಹೆಣ್ಣು ಕೊಡದೆಹೋದಾರು ಅಂತ ಮಾಣಿಗೆ ಭಯವಿರಬಹುದು. ಅಲ್ಲದೆ ಅವನ ಎಲೆಕ್ಷನ್ನಿನ ಹುಚ್ಚೂ ಇಳಿದುಬಿಡಲಿ ಬಿಡು. ಎಷ್ಟಾದರೂ ನಿನ್ನ ಮಗನಲ್ಲವ? ಅಪ್ಪನ ಹಾಗೆ ತಾನೂ ಮುನಿಸಿಪಾಲಿಟಿ ಪ್ರೆಸಿಡೆಂಟಾಗಬೇಕು, ಆಗಿ ಮೆರೀಬೇಕು ಅಂತ ಬಯಸತ್ತೆ” ಎಂದಿದ್ದರಂತೆ. ಅರೆ – ಈ ರಾದ್ಧಾಂತದ ಸುಳುವೂ ಕೂಡ ಕೊಡದಂತೆ ಅಮ್ಮ ರಂಗೋಲೆಯಿಕ್ಕುತ್ತ ಇದ್ದರಲ್ಲ ಎಂದು ದಿನಕರ ಬೆರಗಾಗಿ, “ನಿನ್ನ ತಾಯಿಯೇ ನಿಜವಾಗಿ ಮಹಾಮಾತೆ. ಈ ಪ್ರಪಂಚದಲ್ಲಿದ್ದು ಎಲ್ಲರನ್ನೂ ಪಾಲನೆಮಾಡುತ್ತ ಎಲ್ಲವನ್ನೂ ಬಿಟ್ಟಿರುವಂತೆಯೂ ಇದ್ದಾರೆ” ಎಂದ. ನಾಲ್ಕು ದೋಸೆಗಳನ್ನು ಹೊಯ್ಯಬಲ್ಲ ಒಲೆಯ ಮೇಲಿನ ಕಾವಲಿ ಮೇಲೆ ದೋಸೆಗಳನ್ನು ಚುಂಯ್ ಎಂದು ಹರಡುತ್ತ, ದೋಸೆಗಳ ಮೇಲೆ ತುಪ್ಪ ಸವರಿ ಅದನ್ನು ಗರಿ ಗರಿಯಾಗುವಂತೆ ಮಗಚುತ್ತ, ಹದಗೊಂಡದ್ದರ ಮೇಲೆ ತುಸು ಕೆಂಪು ಚಟ್ನಿಯನ್ನೂ ಸವರಿ, ಈರುಳ್ಳಿ ಆಲೂಗಡ್ಡೆಯ ಪಲ್ಯವನ್ನು ತುಂಬಿ, ಮಡಿಸಿ, ಸಟ್ಟಗದಿಂದ ನೀಟಾಗಿ ಎತ್ತಿ ಎಲೆಯ ಮೇಲೆ ಬಡಿಸಿ, ಇನ್ನೊಂದಷ್ಟು ಹಸಿ ಮೆಣಸಿನ ಕಾಯಿ ಚಟ್ನಿಯನ್ನು ಪಕ್ಕದಲ್ಲಿ ಬಡಿಸುತ್ತ ಸೀತಮ್ಮ ತನ್ನ ಕಾಯಕದಲ್ಲಿ ಮಗ್ನರಾಗಿದ್ದರು. ಶ್ರೀಯಂತ್ರದ ಒಂಬತ್ತು ತ್ರಿಕೋಣಗಳನ್ನು ದೈವಿಕ ಸಂಯೋಗದಲ್ಲಿ ಕೂಡುವಂತೆ ಮಾಡಿದ್ದ ಅವರ ಕೈಚಳಕವೇ ಅವರ ದೋಸೆಗಳ ಹದದಲ್ಲೂ ದಿನಕರನಿಗೆ ಕಂಡಿತ್ತು. ಇಂಗ್ಲಿಷಿನಲ್ಲಿ ಹೇಳಿದರೆ ತನ್ನ ಗೋಳು ಅಮ್ಮನಿಗೆ ಗೊತ್ತಾಗದೆಂದು ದಿನಕರನಿಗೆ ನಾರಾಯಣ ಹೇಳಿದ: “ನನಗೇ ಹುಟ್ಟಿದ್ದೆಂದು ಖಾತ್ರಿಯಿರುವ ಈ ಮಗ, ನನ್ನ ಲೀಗಲ್ ಹಕ್ಕುದಾರ ನನ್ನ ಮಗನೇ ಅಲ್ಲವೆನಿಸುತ್ತದೆ…” ಮುಂದಿನ ಮಾತನ್ನು ಹೇಳಲು ಹೋದರೆ ಅತಿಥಿಯಾದ ಗೆಳೆಯನಿಗೆ ನೋವಾಗುತ್ತದೆಂದು ಸಜ್ಜನಿಕೆಯಲ್ಲಿ ಮಾತು ತಿರುಗಿಸಿದ. ದೇಶಕ್ಕೆಲ್ಲ ಒಂದೇ ಪರ್ಸನಲ್ ಲಾ ಇರಬೇಕೆಂದು ತನ್ನ ರಾಜಕೀಯ ಧೋರಣೆಗಳನ್ನು ವಿವರಿಸುತ್ತ ದಿನಕರನ ಅಭಿಪ್ರಾಯಕ್ಕಾಗಿ ಕಾದ. ದಿನಕರ ಒತ್ತಾಯದ ಎರಡು ಮಸಾಲೆ ದೋಸೆಗಳನ್ನು ತಿಂದು, ಇನ್ನಷ್ಟು ಒತ್ತಾಯದ ಸಾದಾ ಗರಿಗರಿ ದೋಸೆ ತಿನ್ನುತ್ತಿದ್ದಾಗ, “ಅಮ್ಮ” ಎಂದು ಕರೆಯುವ ಚಂದ್ರಪ್ಪನ ಧ್ವನಿ ಕೇಳಿಸಿತು. ಮಗನಿಗೆ ಬಡಿಸಲಿದ್ದ ದೋಸೆಯನ್ನು ಎಲೆಯ ಮೇಲೆ ಹಾಕಿಕೊಂಡು ಹಿತ್ತಲಿನಲ್ಲಿದ್ದ ಚಂದ್ರಪ್ಪನಿಗೆ ಬಡಿಸಿ ಒಳಬಂದು ಕೇಳಿದರು: “ನೋಡಲು ಇಲ್ಲಿಗೆ ಬರುವುದೋ, ಪೇಟೆಯ ಕಛೇರಿಗೆ ಬರುವುದೋ ಎಂದು ಚಂದ್ರಪ್ಪ ಕೇಳಿದ. ದೋಸೆಯನ್ನು ಗಂಗೂಗೆ ಕೊಡಬಹುದಲ್ಲ ಎಂದು ಅವಳು ಸ್ನಾನ ಮಾಡದಿದ್ದರೂ ಸರಿಯೆ, ಒಂದು ಕ್ಷಣಕ್ಕಾದರೂ ಇಲ್ಲೇ ಬಂದು ಹೋಗಲಿ ಎಂದೆ. ಅವಳಿಗೆ ರಜಾ ಅಲ್ಲವ? ಅವಳು ಎಲ್ಲರಿಗೂ ಮನೇಲಿ ಗಂಜಿ ಮಾಡಿ ಬಡಿಸಬಹುದಲ್ಲವ? ಗಂಜಿಯೂಟ ಮಾಡಲು ಹೇಗೂ ಹೊತ್ತಾಗುತ್ತೆ ಅಂತ ಇಲ್ಲಿಗೇ ಬರಲು ಹೇಳಿದೆ. ನಿನ್ನದೇನು ಅವಸರ? ಇದ್ದದ್ದೇ. ಅರ್ಧಗಂಟೆ ತಡವಾಗಿ ಪೇಟೆ ಕಛೇರಿಗೆ ಹೋದರಾಯಿತು. ಮೊಮ್ಮಗ ಮಹಾರಾಯ ಇನ್ನೂ ಯಾಕೆ ತಿಂಡಿಗೆ ಬರಲಿಲ್ಲವೋ? ಹಾಳು ಫೋನನ್ನು ಮಾಡಿಕೊಂಡು ಊಟತಿಂಡಿ ಮರೆತುಬಿಡುತ್ತೆ ಮಾಣಿ”. ಎಂದು ಸಡಗರದಲ್ಲಿ ಮಾತಾಡುತ್ತ ಗಂಗೂಗು ಆಗುವಷ್ಟು ದೋಸೆ ಹಿಟ್ಟಿದೆಯೆ ಎಂದು ನೋಡಿ, ಒಲೆಯುರಿಯನ್ನು ಸಣ್ಣ ಮಾಡಿ, “ನಿನಗಿನ್ನೊಂದು ಬಡಿಸಲ?” ಎಂದು ಕೇಳಿ, ತೇಗಿ ತನ್ನ ತೃಪ್ತಿ ತೋರಿಸಿದ ಮಗನಿಂದ ಸಮಾಧಾನಗೊಂಡು ಸೀತಮ್ಮ ಚಂದ್ರಪ್ಪನ ಜೊತೆ ಮಾತಾಡಲು ಹಿತ್ತಲಿಗೆ ಹೋದರು. ಆದರೆ ಚಂದ್ರಪ್ಪ ಕಾಯದೆ, ಕೈಯಲ್ಲೇ ಹಿಡಿದು ತಿಂದ ಮುಸುರೆಯ ಎಲೆಯನ್ನು ಹಿತ್ತಲಿನ ತೊಟ್ಟಿಯಲ್ಲಿ ಹಾಕಿ, ಹೋಗಿಬಿಟ್ಟಿದ್ದ. +ಅಧ್ಯಾಯ ೧೨ +ಇವತ್ತು ಇನ್ನೊಂದು ಚೆಲುವಾದ ಸೀರೆಯುಟ್ಟು ಅದಕ್ಕೊಪ್ಪುವ ಗಾಜಿನ ಬಳೆಗಳನ್ನು ತೊಟ್ಟು, ಹೆರಳಿನಲ್ಲಿ ಮಲ್ಲಿಗೆ ಮುಡಿದು, ಸ್ನಾನ ಮಾಡಿಯೇಬಂದತಿದ್ದ ಗಂಗೂನನ್ನು ಸೀತಮ್ಮ ಅಡಿಗೆ ಮನೆ ಪಕ್ಕದಲ್ಲಿ ಶ್ರೋತ್ರೀಯರಲ್ಲದ ನಾರಾಯಣನ ಕೋರ್ಟಿನ ಸ್ನೇಹಿತರಿಗಾಗಿ ಇದ್ದ ಬೇರೊಂದು ಊಟದ ಮನೆಯಲ್ಲಿ ಕೂರಿಸಿ ದೋಸೆ ಬಡಿಸಿದರು. ತಿಂಡಿ ಮುಗಿಸಿ, ಎಲೆಯನ್ನು ಬಿಸಾಕಿ, ‘ಡೈನಿಂಗ್ ಹಾಲಾದ’ ಈ ಊಟದ ಮನೆಯಲ್ಲಿ ಅದು ಅನಗತ್ಯವೆಂದರೂ ಕೇಳದೆ ತಾನು ಕೆಳಗೆ ಕೂತು ತಿಂದಲ್ಲಿ ಗೋಮಯದ ಶಾಸ್ತ ಮಾಡಿ, ಗಂಗೂ ನಾರಾಯಣನನ್ನು ನೋಡಲು ಮಹಡಿ ಹತ್ತಿ ಹೋದಳು. ನಾರಾಯಣನೂ ಮಾತು ಮುಗಿದಾದ ಮೇಲೆ ಕಪ್ಪು ಕೋಟು ಧರಿಸಿ, ಬಿಳಿಯ ಪ್ಯಾಂಟ್ ಹಾಕಿಕೊಂಡು, ಬಿಳಿಯಂಗಿಯ ಗರಿಗರಿ ಕಾಲರಿಗೆ ಲಾಯರ್ ಟೈ ಧರಿಸಿ, ಕೈಯಲ್ಲೊಂದು ಗೌನನ್ನೂ ಕೇಸುಗಳ ಕಟ್ಟನ್ನೂ ಹಿಡಿದು ಅವಳ ಜೊತೆಯೇ ಕೆಳಗಿಳಿದಿದ್ದ. ಅವನ ಬೆನ್ನ ಹಿಂದೆ ಬಂದ ಗಂಗೂ ದಿನಕರನಿಗೆ ನಮಸ್ಕರಿಸಿ ಎದ್ದು, “ನಿಮ್ಮ ಪ್ರಸಾದ ನಿಮ್ಮನ್ನು ನೋಡಬೇಕೆಂದು ಕೇಳಿದ. ಸಂಜೆ ಬರುತ್ತೀರ” ಎಂದು ಹಿಂದಿಯಲ್ಲಿ ಕೇಳಿದಳು. ಅವಳು ಸ್ಕೂಲಲ್ಲಿ ಕಲಿತಿದ್ದ ಹಿಂದಿಯನ್ನು ಎಷ್ಟು ಚೆನ್ನಾಗಿ ಬಳಸುತ್ತಾಳೆ ಎಂದು ಗಮನಿಸಿ “ಆಗಲಿ” ಎಂದ ದಿನಕರ. “ಇಲ್ಲೇ ಹತ್ತಿರದಲ್ಲೇ ಗಂಗೂ ಮನೆಯಿರೋದು. ನೇರ ಮನೆಯೆದುರಿನ ರೋಡಿನಲ್ಲಿ ಬಲಕ್ಕೆ ತಿರುಗಿ ಹೋದರೆ ಟಪಾಲು ಪೆಟ್ಟಿಗೆ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಒಂದು ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸಿಗುತ್ತದೆ. ಸಿಂಡಕೇಟ್ ಬ್ಯಾಂಕ್‌ಗೆ ಎದುರಾಗಿ ನಿಂತರೆ ನಿನ್ನ ಎಡಕ್ಕೇ ಒಂದು ಸಣ್ಣ ಬೀದಿಯಿದೆ. ಆ ಬೀದಿಯಲ್ಲಿ ಐದನೇ ಮನೆ ಇವಳದು. ಋಷಿಕೇಶವೆಂದು ಮನೆಯ ಹೆಸರು. ಪ್ರಸಾದನಿಗೆ ಒಪ್ಪುವ ಹೆಸರು”ಎಂದು ನಾರಾಯಣ ನಗೆಯಾಡಿದ. ದಿನಕರನಿಗೆ ಋಷಿಕೇಶದ ಶಿವಾನಂದರ ಆಶ್ರಮದಲ್ಲಿ ತಾವು ಇಳಿದುಕೊಂಡದ್ದು ನೆನಪಾಯಿತು. ಹಠ ಹಿಡಿದಿದ್ದ ಗೋಪಾಲನನ್ನು ನಾರಾಯಣನೇ ಎತ್ತಿಕೊಂಡು ತಾಯಿಯ ಜೊತೆ ಸೇತುವೆ ದಾಟಿ ಹೋಗಿದ್ದ. ಅದೊಂದು ಏಕಾಂತದ ಅಪೂರ್ವ ಸಂದರ್ಭವಾಗಿತ್ತು. ಗಂಗೂ ಈಗ ಮಾತ್ರ ನಿರ್ಭಾವದಲ್ಲಿ ನಿಂತಿದ್ದಳು. “ಬೇಡ ಗಂಗೂ, ಚಂದ್ರಪ್ಪನನ್ನೇ ಕಳಿಸಿಬಿಡು. ದಿನಕರನಿಗೆ ದಾರಿ ತಪ್ಪುವುದು ಬೇಡ” ಎಂದು ನಾರಾಯಣ ಗೆಲುವಾಗಿ ಹೇಳಿ, ” ಸ್ವಲ್ಪ ಬಾ ಮಾತಾಡಬೇಕು. ನನ್ನ ಕಛೇರಿಗೆ ಬಾ. ಕಾರಲ್ಲಿ ಹಿಂದಕ್ಕೆ ಕಳಿಸುವೆ” ಎಂದು ದಿನಕರನನ್ನು ಕೈ ಹಿಡಿದು ಕರೆದುಕೊಂಡು ಹೋದ. ಗಂಗೂ ಅಮ್ಮನ ಜೊತೆ ಸ್ವಲ್ಪ ಕಷ್ಟಸುಖ ಹೇಳಿಕೊಳ್ಳುವುದೆಂದು ನಿಂತಳು. ರಸ್ತೆಯಲ್ಲಿ ಕಾರು ನಡೆಸುತ್ತ ನಾರಾಯಣ ಒಂದು ಆಪತ್ತಿನಿಂದ ಪಾರಾದವನಂತೆ ಮಾತಾಡಲು ತೊಡಗಿದ್ದ. ಬೆಳಿಗ್ಗೆ ಎದ್ದು ಮುಂಡನ ಮಾಡಿಸಿಕೊಂಡು ಬಂದ ಪ್ರಸಾದನನ್ನು ಕಂಡು ಗಂಗೂ ಹೆದರಿದ್ದಳಂತೆ. ಆದರೆ ಪ್ರಸಾದ ತನ್ನ ಸಂಗೀತದ ಪ್ರಾಕ್ಟೀಸು ಮುಗಿಸಿ ತಾಯಿಗೆ ಬಂದು ಕಾಲೆರಗಿ ನಿಂತ. ನಾರಾಯಣ ತಂತ್ರಿಗಳು ಮನೆಗೇ ಬಂದು ಹೋಗಲಿ, ಅಮ್ಮ ನಾನು ಇಲ್ಲೇ ಇರುತ್ತೇನೆ; ಅಲೆದಾಡಿಕೊಂಡು ಇರುತ್ತೇನೆ ಎಂದುಬಿಟ್ಟ. ಸನ್ಯಾಸದ ಕಾವಿ ವೇಷದ ಹಂಗೂ ನನಗೆ ಬೇಡ, ಎಂದ. ಗೊತ್ತಾಯಿತ ದಿನಕರ? ಪ್ರಸಾದ ನನ್ನನ್ನು ಹೆಸರು ಹಿಡಿದು ಕರೆದದ್ದು ಇದೇ ಮೊದಲು. ಗಂಗೂಗೆ ಆಶ್ಚರ್ಯವಾಗಿಬಿಟ್ಟಿತು. ಪ್ರಸಾದ ತುಂಬ ಸಮಾಧಾನದಿಂದ ಅಕ್ಕರೆಯಿಂದ ಮಾತಾಡಿದ್ದ. ನನ್ನ ಮೇಲಿನ ದ್ವೇಷದಿಂದ ಕಳಚಿಕೊಂಡಿದ್ದ. ಗಂಗೂಗೆ ಕಣ್ಣಲ್ಲಿ ನೀರು ಬಂದಿತು ಮಗನೇ ಸರ್ವತ್ಯಾಗಿಯಾಗಿ ಆದಿಶಂಕರನಂತೆ ಎದುರು ನಿಂತು ಅಭಯದ ಮೂರ್ತಿಯಂತೆ ಕಂಡಾಗ ಜನ್ಮವಿತ್ತ ತಾಯಿಗೇ ಇನ್ನೊಂದು ಜನ್ಮ ಪಡೆದಂತೆ ಆಗದೆ ಇರುತ್ತದೆಯೇ? ನೀವು ನನಗೆ ಶಾಸ್ತೋಕ್ತವಾಗಿ ತಾಳಿ ಕಟ್ಟಿ ಸಮಾಜದ ಕಣ್ಣೊರೆಸುವುದು ಬೇಡ ಎಂದುಬಿಟ್ಟಳು. ಅದೊಂದು ದಿವ್ಯ ಮುಹೊರ್ತವೆನ್ನಿಸಿದ್ದರಿಂದ ನಿನ್ನ ಸಂಗತಿಯನ್ನೂ ಮಗನಿಂದ ಮುಚ್ಚಿಡದೆ ಅವಳು ಹೇಳಿಬಿಟ್ಟಾಗಿದೆ. ಆದ್ದರಿಂದ ನೀನು ಮನೆಗೆ ಹೋಗಿ ಪ್ರಸಾದನನ್ನು ಆಶೀರ್ವದಿಸಿ ಬಿಡಲಿ ಎಂದಳು ಗಂಗು. ಆದಕ್ಕೇ ನಿನ್ನನ್ನು ಬರಲು ಕರೆದದ್ದು ಅವಳು. ಗಂಗೂ ತುಂಬ ದೊಡ್ಡ ಹೆಂಗಸು ದಿನಕರ” ಎಂದು ಭಾವೋದ್ರೇಕದಿಂದ ನಾರಾಯಣ ಮಾತಾಡುತ್ತಿರುವುದು ಕೇಳಿ ದಿನಕರನಿಗೆ ಕಸಿವಿಸಿಯಾಯಿತು. ಒಂದು ದೊಡ್ಡ ಮುಜುಗರದಿಂದ ಪಾರಾಗಿ ಬಿಟ್ಟವನ ನಿರಂಬಳ ಭಾವ ಅವನ ಮಾತಿನಲ್ಲೂ ಹಾವಭಾವದಲ್ಲೂ ಇತ್ತು. ಆದರೆ ನಾರಾಯಣನಂತೆ ಸಂಸಾರದಲ್ಲಿದ್ದು ಆಪತ್ತುಗಳನ್ನು ಎದುರಿಸಿದವನ ಔದಾರ್ಯವನ್ನೂ ಸಮಾಧಾನವನ್ನೂ ಉಪಾಯಗಾರಿಕೆಯನ್ನೂ ತಾನು ತಿಳಿಯಲಾರೆ. ತನ್ನಂಥವನು ಯಾವ ದೊಡ್ಡಸ್ತಿಕೆಯ ನೈತಿಕ ಭಾವನೆಗೂ ಅರ್ಹನಲ್ಲವೆಂದುಕೊಂಡು ದಿನಕರ ವಿನಯದಲ್ಲಿ ನಾರಾಯಣನನ್ನ ಅವನ ಕಛೇರಿಗೆ ಹಿಂಬಾಲಿಸಿದ. ಮಂಗಳೂರಿನ ಸಣ್ಣ ಸೆಖೆ ಚಳಿಗಾಲದಲ್ಲೂ ತೋರತೊಡಗಿತ್ತು. ಹಲವು ಕ್ಲರ್ಕುಗಳ, ಕಪಾಟು ತುಂಬ ದಪ್ಪ ದಪ್ಪ ಪುಸ್ತಕಗಳ ಭರ್ಜರಿಯಾದ ತನ್ನ ಆಫೀಸನ್ನು ಅಭಿಮಾನದಿಂದ ನಾರಾಯಣ ತೋರಿಸಿದ್ದನ್ನು ಮೆಚ್ಚಿ ಸ್ನೇಹದಲ್ಲಿ ಕೈಕುಲುಕಿದ. ಹೋಗಿ ಬರುತ್ತೇನೆ ಎಂದ. ನಾರಾಯಣನ ಕ್ಲಾರ್ಕ್ ಒಬ್ಬನಿಂದ ಡ್ರೈವ್ ಮಾಡಿಸಿಕೊಂಡು ದಿನಕರ ಮನೆಗೆ ಹಿಂದಕ್ಕೆ ಬಂದ. ‘ಹುಷಾರಿಲ್ಲವ’ ಎಂದು ಅಮ್ಮ ಕೇಳಿದರು. ಮಧ್ಯಾಹ್ನದ ಊಟಕ್ಕೆ ತಯಾರಿ ನಡೆದಿತ್ತು. ಉಣ್ಣುವುದಕ್ಕೆ ಕೈ ಮಾಡಿ ತೋರಿಸಿ ‘ಇವತ್ತು ಪತ್ರಡೆ ಮಾಡ್ತೇನೆ’ ಎಂದಿದ್ದರು. +ಭಾಗ : ೩ +ಅಧ್ಯಾಯ ೧ +ಎಲ್ಲೂ ನಿಲ್ಲಲಾರದಂತೆ ಚಡಪಡಿಸುತ್ತಿದ್ದ ಶಾಸ್ತಿಗಳು ರಾಧೆ ಮಲ್ಲಿಗೆಯನ್ನು ಬಾಳೆಯ ನಾರಿನಲ್ಲಿ ಹೆಣೆಯುವುದನ್ನು ನೋಡಿ, ” ಸರೋಜ ಮಲ್ಲಿಗೆ ಕಟ್ಟುವಾಗ ಅದೆಷ್ಟು ಮಗ್ನಳಾಗಿ ಇರುತ್ತಿದ್ದಳು. ಹಾಡುವಾಗಂತೂ ಅವಳು ಸಾಕ್ಷತ್ ದೇವಿಯಂತೆ ಕಾಣುತ್ತಿದ್ದಳು” ಎಂದು ನಿಟ್ಟುಸಿರಿಟ್ಟರು. ಮತ್ತೆ ಅಂಗಳದಲ್ಲಿ ಸುತ್ತಾಡುತ್ತ “ಮಹಾದೇವಿಗೆ ತನ್ನ ಮಗಳನ್ನು ಕಂಡು ಮನಸ್ಸು ತಣಿದರೆ ಸಾಕೆನ್ನಿಸುತ್ತೆ” ಎಂದರು. ರಾಧೆ ಹೂವು ಕಟ್ಟುವುದನ್ನು ನಿಲ್ಲಿಸಿ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸತೊಡಗಿದಳು: ‘ಭಗವಂತ, ನಾನು ಕಾಯುತ್ತಿದ್ದ ಕ್ಷಣ ಈಗಲೆ ಬಂದು ಬಿಡಲಪ್ಪ’. ಆ ದಿನ ಪ್ರಾತಃಕಾಲದ ಎಳೆಬಿಸಿಲು ಆಗ ಈಗ ಕಾಣಿಸಿಕೊಳ್ಳುತ್ತ ಹವಾ ಹಿತವಾಗಿತ್ತು. ಸೂರ್ಯನ ಸವಾರಿ ಮುಗಿಲಿನ ಮೇಲೆ ನಡೆದಿತ್ತು. ಗುಡಿಸಿ ಸಾರಿಸಿದ ಅಂಗಳ ತಂಪಾಗಿತ್ತು. ಶಾಸ್ತಿಗಳು ಮತ್ತೆರಡು ಸುತ್ತು ಬಂದು ” ರಾಧೆ ” ಎಂದರು. ಸ್ವಲ್ಪ ಸುಮ್ಮನಿದ್ದು ತನ್ನ ಕೈಯನ್ನು ಬೆನ್ನಿಗೆ ಕಟ್ಟಿ ನಿಂತು, “ಅವನು ನನ್ನ ಮಗನ? ನನ್ನ ಮಗ ಆದರೂ ಅವನು ನನ್ನನ್ನು ಅಪ್ಪ ಎಂದುಕೊಳ್ಳುವವನ? ಅವನು ತನ್ನ ತಂದೆಯನ್ನು ದೇವರಲ್ಲಿ ಹುಡುಕುತ್ತಿರುವ ಸಾಧಕನಂತೆ ಕಾಣುತ್ತಾನೆ. ಅವನು ಹುಡುಕುವುದು ಸಿಗಲಿ ಎಂದು ತಂದೆಯೆಂದುಕೊಂಡ ನಾನು ದೇವರಲ್ಲಿ ಪ್ರಾರ್ಥಿಸ ಬಹುದು ಅಷ್ಟೆ. ಅವನು ನನ್ನ ಮಗ ಹೌದೋ ಅಲ್ಲವೊ? ಅಂತೂ ಅವನು ನನಗೆ ಇನೊಂದು ಜನ್ಮ ಕೊಡುವವನಂತೆ ಕಾಣುತ್ತಾನೆ. ದೇವರ ಕೃಪೆಯಿಂದ ನಾನು ಮತ್ತೆ ಹುಟ್ಟಿದಂತೆ ಎನ್ನಿಸಿ ನನ್ನ ಒಳಗಿನ ಚೀರಾಟ ನಿಂತೀತು”. +ರಾಧೆ ಗಳಗಳನೆ ಅಳುತ್ತ ತಾನು ಬಚ್ಚಿಟ್ಟಿದ್ದ ಸತ್ಯವನ್ನು ಹೇಳುತ್ತ ಶಾಸ್ತಿಗಳನ್ನು ಅರಳಿಸುತ್ತ ಹೋದಳು. +ಅಧ್ಯಾಯ ೨ +ಶಾಸ್ತಿಗಳು ಶ್ರೀಮಂತ ಜಮೀನುದಾರರಾದ್ದರಿಂದ ಮಗಳನ್ನು ಮಂಗಳೂರಿನ ಕಾಲೇಜೊಂದರಲ್ಲಿ ಓದಲು ಬಿಟ್ಟಿದ್ದರು. ಓದಿನಲ್ಲಿ ಜಾಣೆಯಾದ ಹುಡುಗಿ, ಒಳ್ಳೆಯ ಕಾಲೇಜಲ್ಲೇ ಓದಲಿ ಎಂದು ಅವರ ಆಶಯ. ಯಾರಾದರೂ ಸಂಬಂಧಿಗಳ ಮನೆಯಲ್ಲಿ ಬಿಡಬೇಕು ಎಂಬ ಮಗಳ ಶೀಲ ಕಾಯುವ ತಾಯಿಯ ಅತಂಕವನ್ನು ಶಾಸ್ತಿಗಳು ಒರಟಾಗಿ ಧಿಕ್ಕರಿಸಿದ್ದರು. ಅದಕ್ಕೆ ಕಾರಣ ತನ್ನವರು ಎಂದುಕೊಳ್ಳಬಹುದಾದ ಯಾವ ಸಂಬಂಧಿಯೂ ಶಾಸ್ತಿಗಳಿಗೆ ಇರಲಿಲ್ಲ. ಹಾಗಾಗಿ ಮಗಳನ್ನು ಹಾಸ್ಟೆಲಲ್ಲಿ ಬಿಟ್ಟಿದ್ದರು. ಈ ಸ್ವಾತಂತ್ರ್ಯದ ಪರಿಣಾಮ: ಅವಳಿಗೆ ಡಿಬೇಟುಗಳಲ್ಲಿ ಸೊಗಸಾಗಿ ಮಾತಾಡುವ ಹುಡುಗನೊಬ್ಬ ಸ್ನೇಹಿತನಾಗಿಬಿಟ್ಟದ್ದು. ಅವಳೂ ಡಿಬೇಟುಗಳಲ್ಲಿ ನಿಷ್ಣಾತಳಾದ ದಿಟ್ಟ ಹುಡುಗಿಯೇ. ಡಿಬೇಟಿನ ಹುಚ್ಚಿನಲ್ಲೇ ಅವಳಿಗೆ ರಾಜಕೀಯ ಸಂಗತಿಗಳ ಹುಚ್ಚೂ ಹಿಡಿದದ್ದು. ಬಡವರ ಮನೆಯಲ್ಲಿ ಹುಟ್ಟಿ ಸ್ಕಾಲರ್‍ಶಿಪ್ ಪಡೆಯುವಷ್ಟು ಜಾಣನಾಗಿ ಎಂಜಿನಿಯರಿಂಗ್ ಓದುತ್ತಿದ್ದ ಈ ಹುಡುಗ ಜಾತಿಯಲ್ಲಿ ಮಲೆನಾಡು ಕಡೆಯ ಹಳೆಪೈಕದವನಾಗಿದ್ದ. ಗಡ್ಡ ಬೆಳಸಿ ಜುಬ್ಬ ಪೈಜಾಮದಲ್ಲಿರುತ್ತಿದ್ದ ಸ್ಪುರದ್ರೂಪಿಯಾದ ಹುಡುಗ ಅವನು . ತನ್ನ ಹೆಸರನ್ನು ತಿಮ್ಮಯ್ಯ ಎನ್ನುವುದರಿಂದ ಚಾರ್ವಾಕ ಎಂದು ಬದಲಾಯಿಸಿಕೊಂಡು ಎಲ್ಲರ ಗಮನಕ್ಕೂ ಅವನು ಪಾತ್ರನಾಗಿದ್ದ. ತನ್ನನ್ನು ಎಲ್ಲರೂ ಗಮನಿಸಲೇಬೇಕಾದಂತೆ ವರ್ತಿಸುವುದು ಅವನಿಗೆ ಚಟವಾಗಿ ಬಿಟ್ಟಿತ್ತು. ಜಮೀಂದಾರಿಕೆಯ ಖಂಡನೆ, ಜಾತಿಪದ್ಧತಿಯ ಖಂಡನೆ ಇತ್ಯಾದಿಗಳನ್ನು ಅವನು ಹೊಸ ಶಬ್ದಗಳಲ್ಲಿ ಮಾಡಬಲ್ಲವನಾಗಿದ್ದ. ರಾಧೆಗೆ ಅದನ್ನೆಲ್ಲ ವಿವರಿಸಲು ತಿಳಿಯದು. ಅವನು ಕಮ್ಯುನಿಸ್ಟಾಗಿಬಿಟ್ಟು ಅದಕ್ಕೂ ಮುಂದೆ ಹೋಗಿಬಿಟ್ಟಿದ್ದ ಎಂದವಳಿಗೆ ಮಂಗಳೆಯಿಂದಲೇ ಗೊತ್ತಾದ್ದು. ಶಾಸ್ತಿಗಳ ಮಗಳು ಮಂಗಳೆಗೆ ಅವನ ವಿಚಾರಗಳು ಆಕರ್ಷಕವಾಗಿದ್ದವು. ತನ್ನ ತಂದೆಯ ಬಗ್ಗೆ ಅವಳಲ್ಲಿ ಬೆಳೆಯುತ್ತ ಹೋಗಿದ್ದ ಅಸಮಾಧಾನಕ್ಕೆ ಚಾರ್ವಾಕನ ವಿಚಾರಗಳಿಂದ ಒಂದು ಹೊಸ ಆಯಾಮ ಸಿಕ್ಕಂತಾಗಿತ್ತು. ಮನೆಗೆ ಬಂದಾಗ ತಾಯಿ ಒತ್ತಾಯಿಸಿದರೂ ಅವಳು ದೇವರಿಗೆ ನಮಸ್ಕಾರ ಮಾಡಳು. ಬ್ರಾಹ್ಮಣರೆಲ್ಲರೂ ಜಿಗಣೆಗಳು ಇದ್ದಂತೆ ಎಂದು ವಾದಿಸುವಳು. ಅವಳ ವಿಚಾರಗಳು ತಂದೆಗೆ ಗೊತ್ತಾಗದಂತೆ ಮಹಾದೇವಿಯೂ, ರಾಧೆಯೂ ನೋಡಿಕೊಂಡಿದ್ದರು. ಮಂಗಳೆಯ ಮನಸ್ಸಿನಲ್ಲಾಗುತ್ತಿದ್ದ ಪರಿವರ್ತನೆಯಿಂದಾಗಿ ಅವಳು ರಾಧೆಗೆ ಹತ್ತಿರವಾಗುತ್ತ ಹೋದಳು. ರಾಧೆಯ ಮನೆಯಲ್ಲಿ ತಾನು ಗಂಜಿಯನ್ನು ಯಾಕೆ ಉಣ್ಣಬಾರದೆಂದು ಹಠ ಹಿಡಿಯುವಳು. ರಾಧೆ ಅದಕ್ಕೆ ಒಲ್ಲಳು. ಆದರೆ ಒಲ್ಲೆ ಎಂದೂ ಹೇಳಲಾರಳು. ಮಂಗಳೆ ತನ್ನ ಪ್ರೇಮವನ್ನು ರಾಧೆಗೆ ಹೇಳಿಕೊಂಡಿದ್ದಳು. ‘ನಮಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾವಿಬ್ಬರೂ ಒಟ್ಟಾಗಿ ಗುಪ್ತವಾಗಿ ಜನರನ್ನು ಸಂಘಟಿಸಿ ಕ್ರಾಂತಿ ಮಾಡುತ್ತೇವೆ’ ಎಂದು ಮಂಗಳೆ ಹೇಳಿದರೆ, ಮೊದಮೊದಲು ರಾಧೆ ನಂಬಿರಲಿಲ್ಲ. ಆದರೆ ಹುಚ್ಚು ಹುಡುಗಿ ನಿಜವಾಗಿಯೂ ತನ್ನ ವಿಚಾರಕ್ಕೇ ಗಂಟು ಬಿದ್ದಿದ್ದಾಳೆ ಎಂದವಳಿಗೆ ಮನದಟ್ಟಾಗತೊಡಗಿತು. ಮಂಗಳೂರಿನ ಎಲ್ಲ ಹುಡುಗಿಯರಂತೆ ಅವಳು ಇರಲಿಲ್ಲ; ಅವಳಿಗೆ ಒಡವೆ, ವಸ್ತಗಳಲ್ಲಿ ಏನೇನೂ ಆಸೆಯಿರಲಿಲ್ಲ. ಆಸೆಪಟ್ಟವರನ್ನು ಅವಳು ಹೀಯಾಳಿಸುತ್ತಿದ್ದಳು. ರಾಧೆಗೆ ಅವಳ ಎದುರು ಬಂಗಾರದ ಬಳೆ ತೊಟ್ಟಿರುವುದೂ ಅವಮಾನಕರವೆಂಬಂತೆ ಮಾಡಿದ್ದಳು. ಅವಳು ಉಡುತ್ತಿದ್ದುದು ಸಾದಾ ಬಿಳಿ ಸೀರೆ, ಬಿಳಿಯ ಕುಪ್ಪಸ. ಕತ್ತಿನಲ್ಲಿ ಒಂದು ಸರವನ್ನಾಗಲೀ, ಕಿವಿಯಲ್ಲಿ ಬೆಂಡೋಲೆಯನ್ನಾಗಲೀ ಅವಳು ತೊಡಳು. ಒಂದು ದಿನ ವಾದಕ್ಕೆ ವಾದ ಬೆಳೆದು, “ಬಸುರಿಯಾಗಿದ್ದ ತನ್ನ ಹೆಂಡತಿಯನ್ನು ಜಪ್ಪಿ ಸಾಯಿಸಿದ ನನ್ನ ಕೊಲೆಗಡುಕ ತಂದೆಯ ಜೊತೆ ಯಾಕೆ ಸಂಬಂಧವಿಟ್ಟುಕೊಂಡಿದ್ದೀರಿ. ಮೊದಲು ನಿಮ್ಮಂಥವರ ಬಿಡುಗಡೆಯಾಗಬೇಕು” ಎಂದು ನಿಷ್ಠುರವಾಗಿ ಅವಳು ಅಂದು ಬಿಟ್ಟಿದ್ದಳು. ಅಪ್ಪನ ಹಾಗೆಯೇ ಮಗಳು ಮಹಾನಿಷ್ಠುರಿ, ಕೆಟ್ಟ ನಾಲಗೆಯ ಹಠಮಾರಿ ಎಂದುಕೊಂಡು ರಾಧೆ ಸುಮ್ಮನಾಗಿ ಬಿಟ್ಟಿದ್ದಳು. ಅವಳು ಅಂದದ್ದನ್ನು ದುಡುಕು ಮನುಷ್ಯನಾದ ಶಾಸ್ತಿಗಳಿಗೆ ಹೇಳದೆ ಹೊಟ್ಟೆಯಲ್ಲಿಟ್ಟುಕೊಂಡಿದ್ದಳು. ತನಗೆ ದಾತಾರರಾದವರ ಮನೆಯಲ್ಲಿ ರಾಧೆಗೆ ಯಾರು ಬೇಕು? ಯಾರು ಬೇಡ? ಇಬ್ಬರೂ ಕಾಲೇಜನ್ನು ತೊರೆದು ಓಡಿಹೋಗಿಯಾದಮೇಲೆ ಆರು ತಿಂಗಳ ಕಾಲ ಎಲ್ಲೆಲ್ಲಿ ಇದ್ದರೊ? ಅದೇನು ಕಡಿದರೊ ತಿಳಿಯದು. ಚಾರ್ವಾಕ ಶಿವಮೊಗ್ಗೆಗೆ ಬಂದು ಒಂದು ಗ್ಯಾರೇಜಿನಲ್ಲಿ ಕಾರುಗಳನ್ನು ರಿಪೇರಿ ಮಾಡುವ ಕೆಲಸಕ್ಕೆ ನಿಂತ. ತಮ್ಮ ಹೊಟ್ಟೆಗೆ ಅವನ ದುಡಿಮೆ ಏನೇನೂ ಸಾಲದಾಗಿ ಹೋದಾಗ ಮಂಗಳೆ ರಾಧೆಗೆ ಕಾಗದ ಬರೆದಿದ್ದಳು .‘ನಾವು ಎಲ್ಲಿದ್ದೇವೆ ತಂದೆಗೆ ತಿಳಿಸಬೇಡ. ಶೂದ್ರನೆಂದು ನನ್ನ ಗಂಡನನ್ನು ಅವರು ಕೊಂದರೂ ಕೊಂದರೆ. ನಿನಗೆ ಇಷ್ಟವಾದರೆ, ಕಷ್ಟವಾಗದಿದ್ದರೆ ನನಗೆ ಒಂದಷ್ಟು ಹಣ ಕಳುಹಿಸು. ಕ್ರಾಂತಿ ಚಿರಾಯುವಾಗಲಿ’ ಎಂದು. ರಾಧೆ ಪ್ರತಿ ತಿಂಗಳೂ ಒಂದು ಸಾವಿರಕ್ಕೆ ಕಡಿಮೆಯಿಲ್ಲದಂತೆ ಹಣ ಕಳುಹಿಸಲು ತೊಡಗಿದಳು. ಕೆಲವು ತಿಂಗಳುಗಳಾದ ಮೇಲೆ ಒಡಕು ಸ್ವರದ ಪತ್ರಗಳು ಬರಲು ತೊಡಗಿದವು. ಎಲ್ಲ ಗಂಡಹೆಂಡಿರ ಸಹಜ ವಿರಸದಂತೆ ರಾಧೆಗೆ ಅದು ಕಂಡಿತು. ಆದರೆ ಮಂಗಳೆಗೆ ‘ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ’ ಎಂದು ಕಾಣಿಸಲಿಲ್ಲ. ಎಲ್ಲ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಅಂತರ್ಗತವಾದ ಬಿಕ್ಕಟ್ಟಾಗಿ – ಅದು ಕಂಡಿತ್ತು. ತನಗೆ ಅಂಥ ಮಾತುಗಳು ಅರ್ಥವಾಗದಿದ್ದರೂ, ತನಗೆ ಎಂಥ ಮಾತುಗಳನ್ನಾದರೂ ಹೇಳಬೇಕೆಂಬ ಮಂಗಳೆಯ ಆರ್ತತೆಯಿಂದ ರಾಧೆಗೆ ಖುಷಿಯಾಗಿತ್ತು. ‘ಚಾರ್ವಾಕ ಹೊತ್ತಿಗೆ ಸರಿಯಾಗಿ ಮನೆಗೆ ಬರುವುದಿಲ್ಲ. ಕುಡಿಯಲಿಕ್ಕೆ ಕಲಿತುಬಿಟ್ಟಿದ್ದಾನೆ. ನಿನ್ನಂಥ ಒಂದು ಹೆಣ್ಣನ್ನು ಕಟ್ಟಿಕೊಂಡು ಸಂಸಾರಿಯಾಗಬೇಕಾಗಿ ಬಂದು ತನ್ನ ಕ್ರಾಂತಿಗೆ ಅವಕಾಶವಾಗದೇ ಹೋಯಿತೆಂದು ಜಗಳವಾಡುತ್ತಾನೆ. ಆದರೆ ಅವನು ಕ್ರಾಂತಿಯ ನಿಜ ಸ್ವರೂಪ ತಿಳಿದಂತಿಲ್ಲ. ಗೃಹಿಣಿಯಾದ ಹೆಂಗಸಿಗೆ ಮಾತ್ರ ಕ್ರಾಂತಿಯ ನಿಜವಾದ ಅರ್ಥ ತಿಳಿದೀತು’ ಎಂದು ಮಂಗಳೆ ಬರೆದದ್ದಕ್ಕೆ ‘ನಿನ್ನ ಗಂಡನನ್ನು ಒಲಿಸಿಕೊಂಡು ಬಸುರಿಯಾಗಿಬಿಡು. ಆಗ ಎಲ್ಲ ಸರಿಹೋಗುತ್ತದೆ’ ಎಂದು ಇಂಥ ವಿಷಯಗಳಲ್ಲಿ ಘಾಟಿಯಾದ ರಾಧೆ ಬರೆದಿದ್ದಳು. ತನ್ನ ಕ್ರಾಂತಿಕಾರತೆಯ ವಿಚಾರ ಕೈಬಿಡದಂತೆ ಮಂಗಳೆ ರಾಧೆಯ ಹಿತವಚನ ಕೇಳಿರಬೇಕು. “ಈಗ ನಿಮ್ಮ ಮಗಳು ಏಳು ತಿಂಗಳ ಬಸುರಿ. ನಿಮ್ಮ ಅಪ್ಪಣೆಯಾದರೆ ಕರೆದುಕೊಂಡು ಬಂದುಬಿಡುತ್ತೇನೆ. ತಾಯಿಯ ಮನೆಯಲ್ಲೇ ಅವಳಿಗೆ ಹೆರಿಗೆಯಾಗಿ ಬಿಡಲಿ. ಸಹಾಯಕ್ಕೆ ನಾನಿದ್ದೇನಲ್ಲವೇ?” ಎಂದು ತೋರಿಕೆಗೆ ಸಡಗರಪಡುತ್ತ, ಆದರೆ ಆತಂಕದಲ್ಲಿ ಕೇಳಿದಳು. “ನಿಮಗೆ ನಿಮ್ಮ ಅಳಿಯ ಬ್ರಾಹ್ಮಣನಲ್ಲವೆಂದು ಮಗಳನ್ನೇನೂ ದೂರಮಾಡಬೇಕಿಲ್ಲವಲ್ಲ. ಅಲ್ಲದೆ ಹುಟ್ಟಲಿರುವ ಕೂಸು ಅರಿಯದ್ದು. ಅದಕ್ಕೆ ಯಾವ ಜಾತಿ?” ಎಂದಳು. “ನಾನು ಶೂದ್ರಳಲ್ಲವ?” ಎಂದು ಕಿಚಾಯಸಿದ್ದಳು. ಶಾಸ್ತಿಗಳು ಗಂಭೀರವಾಗಿ ಹೇಳಿದರು: “ಕರೆದುಕೊಂಡು ಬಾ”. ತನ್ನ ಮನಸ್ಸು ರಾಧೆಯ ಕೃಪೆಯಿಂದ ಸ್ಥಿಮಿತದಲ್ಲಿ ಉಳಿಯಲಿ ಭಗವತೀ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ ತನ್ನ ಶಾಪ ಕಳೆಯುವುದನ್ನು ನಿರೀಕ್ಷಿಸುತ್ತ, “ಆ ದರಿದ್ರ ಹುಡಗನಿಗೂ ಉಡುಪಿಯಲ್ಲಿ ಒಂದು ಗ್ಯಾರೇಜು ತೆಗೆಸಿಕೊಟ್ಟರಾಯಿತು. ನನ್ನ ಮಗಳು ದೂರವಿದ್ದುಬಿಟ್ಟರೆ ಯಾವ ಅಂಕೆ ಅಣತಿಯಿಲ್ಲದ ಅವನು ಕುಡಿದು ಕೆಟ್ಟುಹೋದಾನು” ಎಂದರು. +ಬಹಳ ಖುಷಿಯಲ್ಲೇ ಮಹಾದೇವಿಗೆ ಇದನ್ನೆಲ್ಲ ಹೇಳಿ, ಮೊಮ್ಮಗುವನ್ನು ತಮ್ಮ ಮನೆಯಲ್ಲಿ ಪಡೆಯಲು ಅಣಿ ಮಾಡುವುದೆಂದುಕೊಂಡು ಮನೆಗೆ ಬರುತ್ತಿದ್ದ ಶಾಸ್ತಿಗಳಿಗೆ ಹಠಾತ್ತನೆ ಹೀಗೂ ಎನ್ನಿಸಿತ್ತು: ‘ದಿನಕರ ನನ್ನ ಮಗನಲ್ಲದಿದ್ದರೆ ಆ ಟ್ರಂಕಿನಲ್ಲಿದ್ದ ಬಂಗಾರವೆಲ್ಲ ನನ್ನದೇ, ನನ್ನ ಮಗಳ ಮಗುವಿಗೆ ಸೇರಬೇಕಾದ ಆಸ್ತಿ ಅದು’. ‘ಹಾಗೆಲ್ಲ ನನಗೆ ಯೋಚನೆ ಬಾರದಂತೆ ನೋಡಿಕೋ ಭಗವತಿ’ ಎಂದು ಪ್ರಾರ್ಥಿಸುತ್ತ ಮನೆಯನ್ನು ಹೊಕ್ಕಿದ್ದೆ ಎಂಬುದನ್ನು ತಮ್ಮ ಮನೋಕ್ಲೇಶದಿಂದ ಮುಂದೆ ಉಂಟಾಗುತ್ತಿದ್ದ ತಳಮಳಗಳಲ್ಲಿ ಶಾಸ್ತಿಗಳು ನೆನೆಯುತ್ತಿದ್ದರು. +ಅಧ್ಯಾಯ ೩ +ಅಯ್ಯಪ್ಪ ದರ್ಶನಕ್ಕಾಗಿ ಶಬರಿಮಲೆ ಬೆಟ್ಟ ಹತ್ತಿ ಇಳಿದದ್ದು ತನಗೊಂದು ಕೇವಲ ಪಕ್ನಿಕ್‌ನಂತಾಗಿ ಬಿಟ್ಟಿತೆಂದು ದಿನಕರನಿಗೆ ಆಶ್ಚರ್ಯವಾಗಿರಲಿಲ್ಲ. ಇಳಿದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದವನು ಉದ್ದೇಶಪೂರ್ವಕವಾದ ಸಾಧನೆಗೆ ಸಿಗುವುದಲ್ಲ ಅದು ಎಂದು ತನಗೇ ಹೇಳಿಕೊಂಡಿದ್ದ. ತಣ್ಣೀರು ಮಿಂದಿದ್ದ ತನ್ನ ಮೈಯನ್ನು ಖುಷಿಯಲ್ಲಿ ಒರೆಸಿಕೊಂಡು ಬೆಟ್ಟ ಹತ್ತುವ ಮುಂಚೆಯೇ ತಾನು ಕೊಂಡಿದ್ದ ಕೇರಳದ ಅಗಲವಾದ ಕೆಂಪು ಅಂಚಿನ ಪಂಚೆಯನ್ನುಟ್ಟು, ಖಾದಿಯ ಬಿಳಿ ಅಂಗಿಯನ್ನು ತೊಡುತ್ತಿದ್ದಾಗ ನೆನಪಾಗಿತ್ತು. ತನ್ನನ್ನು ಅಲ್ಲಾಡಿಸಿಬಿಟ್ಟಿದ್ದ ಮಂಗಳೂರಿನ ಚಳಿಗಾಲದ ಆ ಸಂಜೆ ಮುಂದಿನ ದಿನಗಳ ಕಳವಳಗಳಲ್ಲಿ ಮತ್ತೆ ಮತ್ತೆ ನೆನಪಾಗುವುದು ಇತ್ತು. ಕೈಯಲ್ಲಿ ತಂಬೂರಿ ಮೀಟುತ್ತ ಪದ್ಮಾಸನ ಹಾಕಿ ಹಾಡುತ್ತ ಪ್ರಸಾದ ಕೂತಿದ್ದ. ತನ್ನ ತಂದೆ ಯಾರು, ತಾಯಿ ಯಾರು ಎಂದು ಕಂಡರಿಯದ ತನಗೆ ಅವನನ್ನು ಕಂಡಕ್ಷಣದಲ್ಲಿ ಇವನು ನನ್ನ ಮಗನಿರಬಹುದೆ ಎಂಬ ಕುತೂಹಲ ಹುಟ್ಟಿತ್ತು. ಆದರೆ ತನ್ನನ್ನು ಕ್ರಮೇಣ ಆವರಿಸುತ್ತ ಹೋದ ಭಾವ: ಅವನ ನೀಳವಾದ ಕಣ್ಣುಗಳು ಅರ್ಧ ನಿದ್ರೆಯಲ್ಲಿ ಎಂಬತೆ ಅರೆ ಮುಚ್ಚಿ ತನ್ಮಯವಾಗಿದ್ದವು ಎಂಬುದು. ಸಪುರವಾದ, ಆದರೆ ಬಲವಾದ ಸ್ನಾಯುಗಳ ಅವನ ದೇಹ ನೆಟ್ಟಗೆ ಧ್ಯಾನಸ್ಥವಾಗಿತ್ತು. ಸಂಜೆಯ ಕೋಮಲವಾದ ನೆರಳಿನಲ್ಲಿ, ಆಕಾಶಕ್ಕೆ ತೆರೆದುಕೊಂಡಿದ್ದ ಹೊರಾಂಗಣದಲ್ಲಿ ಕೂತವನು ಹರೆಯದ ಮುನಿಕುಮಾರನಂತೆ ಕಂಡಿದ್ದ. ಅವನನ್ನು ತನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ತಾನು ತುಸು ದೂರ ನಿಂತು ನೋಡಿದ್ದೆ. ತಲೆಯ ಉದ್ದವಾದ ಕೂದಲನ್ನೂ ಮುಖದ ಗಡ್ಡವನ್ನೂ ಇಂದು ತಾನೆ ಮುಂಡನ ಮಾಡಿಸಿಕೊಂಡಿರಬೇಕು. ಮುಂಡನ ಮಾಡಿಸಿಕೊಂಡ ಜಾಗ ಪೇಲವವಾಗಿ ಬಹಳ ಕಾಲ ಸೂರ್ಯನ ಬಿಸಿಲಿನಿಂದ ಮುಚ್ಚಿಕೊಂಡಿತ್ತೆಂದು ತಿಳಿಯುವಂತಿತ್ತು. ಗಾಳಿಗೂ ಬಿಸಿಲಿಗೂ ಒಡ್ಡಿಕೊಂಡು ತಿರುಗಿದ ಅವನ ಮೈ ಬಣ್ಣ ನಿಷ್ಕಳಂಕವಾಗಿತ್ತು. ಗೋಪಿಯರಿಗೆ ಮತ್ತು ಬರಿಸಿದ್ದ ಶ್ಯಾಮ ವರ್ಣ ಅವನದು. +ಬಿಳಿಯ ಒಂದು ಧೋತ್ರವನ್ನು ಸೊಂಟಕ್ಕೆ ಸುತ್ತಿ, ಬಿಳಿಯ ಇನ್ನೊಂದು ಧೋತ್ರವನ್ನು ಹೆಗಲಿನ ಮೇಲೆ ಮೈ ಪರಿವೆಯಿಲ್ಲದಂತೆ ಚೆಲ್ಲಿಕೊಂಡಿದ್ದ. ಅವನ ಮೂಗು ತುಸು ಬಾಗಿ ನೀಳವಾದ್ದು, ಗದ್ದ ಧೃಡವಾದ್ದು, ಹಣೆ ವಿಶಾಲವಾದ್ದು ಎಂದು ಗಮನಿಸಿದ. ಅವನ ಕಿವಿಗಳು ಖಂಡಿತ ನಾರಾಯಣನದಂತೆ ಅಲ್ಲ – ತಾಯದರಂತೆ ಅವು. ಒಂಟಿಯನ್ನು ಹಾಕಿದ್ದರೆ ಎದ್ದು ಕಾಣಿಸಬಹುದಿತ್ತು. ಅವನ ಒಟ್ಟು ಮುಖದ ಲಾವಣ್ಯ ಹೆಂಗಸರನ್ನು ಮರುಳುಗೊಳಿಸಬಹುದಾದ್ದು. ಹೀಗೆ ಅನ್ನಿಸಿದಾಗ ತನ್ನ ಕಾಮುಕ ಚರಿತ್ರೆ ನೆನಪಾಗಿತ್ತು. ಅವನ ಮುಖ ಲಕ್ಷಣವನ್ನು ಹಾಗೆ ಪರಿಭಾವಿಸುವ ತನ್ನ ಗುಪ್ತ ಉದ್ದೇಶದಿಂದ ನಾಚಿಕೆಯೂ ಆಗಿತ್ತು. ಆದರೆ ಯಾಕೆ ನಾಚಬೇಕು?ಎಂದು ಅವನ ಸಂಗೀತದಿಂದ ಉತ್ತೇಜಿತನಾಗಿ ಯೋಚಿಸಿದ. ಬ್ರಹ್ಮ ಸೂತ್ರಕ್ಕೆ ಭಾಷ್ಯ ಬರೆಯುತ್ತಿದ್ದ ಆದಿಶಂಕರರು ಕಾಣಲು ಇವನಂತೆಯೇ ಇದ್ದಿರಬೇಕು. ಬಾಲ ಸನ್ಯಾಸಿಯಾಗಿದ್ದೂ ಅವರು ಗಾಢವಾದ ರತಿಜ್ಞಾನವಿದ್ದವರನ್ನು ಮೀರಿಸುವಂತೆ ದೇವಿಯನ್ನು ನಖಶಿಖಾಂತ ವರ್ಣಿಸಿದ್ದರು. ಚಂದ್ರಪ್ಪ ಕೇವಲ ಒಂದು ಚಡ್ಡಿಯನ್ನೂ ಬನೀನನ್ನೂ ಧರಿಸಿ, ಅಗೆಯುತ್ತಿದ್ದ ಹಾರೆಯನ್ನು ಪಕ್ಕದಲ್ಲಿರಿಸಿಕೊಂಡು, ಬಾಯಿ ತೆರೆದ ಬೆರಗಿನಲ್ಲಿ ಕೈಗಂಟಿದ ಕೆಸರನ್ನು ಲೆಖ್ಖಿಸದೆ ಪ್ರಸಾದ ಹಾಡುವುದನ್ನು ಕೇಳಿಸಿಕೊಳ್ಳುತ್ತಿದ್ದ. ತಾನು ಬಂದು ಸುಮ್ಮನೆ ಮನೆಯೆದುರಿನ ನಂದಬಟ್ಟಲ, ದಾಸವಾಳ, ಪಾರಿಜಾತ, ಸಂಪಿಗೆ ಮರಗಳ ತೋಟದ ನೆರಳಿನಲ್ಲಿ ನಿಂತಿದ್ದೆ. ಚಂದ್ರಪ್ಪನ ಶ್ರಮದ ಫಲವಾಗಿ ಹೂವುಗಳ ಸುಗಂಧ ಇಡೀ ತೋಟವನ್ನು ಆವರಿಸಿತ್ತು. ಮಗನನ್ನು ತಾನು ವಾತ್ಸಲ್ಯದಿಂದ ನೋಡುತ್ತಿರುವುದನ್ನು ಗಂಗೂ ಕಂಡಿರಬೇಕು. ಬೆಳ್ಳೀಬಟ್ಟಲಿನಲ್ಲಿ ಬಿಸಿ ಹಾಲನ್ನು ಹೊರಾಂಗಣದ ಚಿಟ್ಟೆಯ ಮೇಲಿಟ್ಟು, ‘ಬಂದಿರಾ’ ಎಂದು ಉಪಚರಿಸಿ, ಚಿಟ್ಟೆಯ ಮೇಲೆ ಬರುವಂತೆ ಕರೆದಿದ್ದಳು. ತಲೆಯ ಮೇಲೆ ಸೆರಗು ಹೊದ್ದು ಹಣೆಗೆ ಗಂಧವನ್ನಿಟ್ಟ ಗಂಗೂ ಋಷಿಪತ್ನಿಯಂತೆ ಕಂಡಿದ್ದಳು. ಚಿಟ್ಟೆ ಹತ್ತಿ ತಾನು ಕೂತೇ ಇದ್ದೆ – ಅದೆಷ್ಟು ಹೊತ್ತೋ ತಿಳಿಯದಂತೆ. ನೆರಳುಗಳು ಉದ್ದವಾಗಿ ದೀಪ ಹಚ್ಚುವ ಸಮಯವಾಗತೊಡಗಿತ್ತು. ಪ್ರಸಾದ ತನಗೇ ಹಾಡಿಕೊಳ್ಳುತ್ತಲೇ ಇದ್ದ – ನಿಶ್ಚಲನಾಗಿ ಕೂತು. ಯಾವ ಹಾವಭಾವವೂ ಇಲ್ಲದಂತೆ. ಅವನ ಆಲಾಪ ಅಲೆ‌ಅಲೆಯಾಗಿ ಅಲೆದು, ತಾನು ಹೊರಹೊಮ್ಮಿದ ಮೂಲ ಶೃತಿಗೆ ಮತ್ತೆ ಮತ್ತೆ ಬಂದು, ತಣಿದು, ಇಗೋ ಸರಳವಾಗಿ ಬಿಡುತ್ತ, ಇಗೋ ಮತ್ತೆ ಬಿಗಿಯಾಗಿ ಬಿಡುದ್ದ ಏರಿಳಿಯುವ ಸೋಜಿಗದಲ್ಲಿ ಪ್ರಸಾದ ತಾನು ಮುಟ್ಟಬೇಕಾದ್ದನ್ನು ಮುಟ್ಟಿದವನಂತೆ ಕಂಡಿದ್ದ. ತಾನು ಹುಡುಕುತ್ತಿರುವ ‘ಅದೃಷ್ಟ’ ಇವನು ಈಗ ಪಡೆದುಕೊಂಡ ಹಾಗೇ ಇರುತ್ತದೆ ಎನ್ನಿಸಿತ್ತು. ಚಲನೆಯಲ್ಲಿದ್ದೂ ಅದು ನಿಶ್ಚಲ. ನಿರಾಯಾಸವಾಗಿ ಚಲಿಸುವುದರಿಂದಲೇ ಅದು ನಿಶ್ಚಲ. ಆದರೆ ತನ್ನಂಥವರಿಗೆ ಅದು ಕ್ಷಣಿಕ. ತನ್ನ ಮಗನೇ ಅವನಾಗಿದ್ದರೂ ಏನು? ಆಗದಿದ್ದರೂ ಏನು? ತಾನು ಇನ್ನೂ ಮುಟ್ಟದ್ದನ್ನು ಅವನು ಮುಟ್ಟಿಬಿಟ್ಟಿದ್ದಾನೆ ಎನ್ನಿಸಿತ್ತು. ಆಗೀಗ ತನಗೆ ಹೊಳೆದಂತೆ ಮಾತ್ರ ಆಗುವುದನ್ನು ಅವನು ನಿಗಾ ಇಟ್ಟು ನೋಡಿರಬೇಕು. ಅವನ ಒಟ್ಟು ಶಾಂತವಾದ ಭಾವ ಹಾಗಿದೆ – ಭವದಲ್ಲಿದ್ದೂ ಭವದ ಎಗ್ಗಿಲ್ಲದಂತೆ ಇರುವುದು ಸಾಧ್ಯವೆಂದು ಅನ್ನಿಸುತ್ತಾನೆ. ಹೀಗೆ ಗುರುಭಾವದಿಂದ ತಾನು ಅವನನ್ನು ನೋಡಿದ್ದೆ. ಅದೊಂದು ಮಹೂರ್ತ. ತಾನು ಅವನ ತಂದೆಯಾದರೇನು? ಅಲ್ಲವಾದರೇನು? ಅವನ ಕಾಲನ್ನು ಮುಟ್ಟಿ ನಮಸ್ಕರಿಸಬೇಕು ಎನ್ನಿಸಿತು. ಹೀಗೆ ತನಗೆ ಅನ್ನಿಸುತ್ತಿದ್ದಂತೆಯೇ ಸ್ಥಿತಪ್ರಜ್ಞನಂತಿದ್ದ ಪ್ರಸಾದ ತನ್ನ ಸ್ವಪ್ನಸ್ಥವಾದ ಕಣ್ಣುಗಳನ್ನು ತೆರೆದಿದ್ದ. ಇವನು ಅಪ್ಪನೋ ಅಲ್ಲವೋ ಎನ್ನುವ ಅನುಮಾನವಾಗಲೀ, ಕುತೂಹಲವಾಗಲೀ, ಆತಂಕವಾಗಲೀ ಅವನಿಗೆ ಪ್ರಸ್ತುತವೇ ಅಲ್ಲವೆನ್ನುವಂತೆ ತನ್ನನ್ನು ಅವನ ಕಣ್ಣುಗಳಲ್ಲಿ ಇಡಿಯಾಗಿ ತಂದುಕೊಳ್ಳುವಂತೆ ನೋಡಿದ್ದ. ನಿರ್ವಿಕಾರದ ದಿವ್ಯವಾದ ಅವನ ನೋಟಕ್ಕೆ ವಶವಾಗಿ ತಾನೂ ಒಂದು ಕ್ಷಣ ಆಸೆಯಿಲ್ಲದಂತೆ ತೆರೆದುಕೊಂಡಿರಬೇಕು. ತಂಬೂರಿಯನ್ನು ಕಣ್ಣಿಗೆ ಒತ್ತಿಕೊಂಡು ಪ್ರಸಾದ ಥಟ್ಟನೇ ಎದ್ದು ನಿಂತಿದ್ದ. ಎಷ್ಟು ಸುಂದರನಾದ ಉದ್ದನೆಯ ಕೋಮಲ ಸ್ವಭಾವದ ಹುಡುಗ ಎಂದು ತನಗೆ ಆ ಕ್ಷಣದಲ್ಲಿ ಅವನ ಮೇಲೆ ಪುತ್ರ ವಾತ್ಸಲ್ಯ ಹುಟ್ಟಿಬಿಟ್ಟಿತು. ಮೋಹಕವೆಂದು ತನಗೆ ಕಾಣತೊಡಗಿದ್ದ ಪ್ರಸಾದನ ಕಣ್ಣುಗಳು ನಿಧಾನ ಮುಚ್ಚಿಕೊಂಡವು. ಆಮೇಲೆ ಕೈ ಮುಗಿದು ನಿಂತು, ದೇವರಿಗೆ ಎಂಬಂತೆ ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದ. ತಾನು ಹೊರಳಿಬಿಟ್ಟಂತೆನಿಸಿ ಆಶೀರ್ವಾದದ ಮಾತು ಹೊಳೆಯದೆ ಸೋಜಿಗವಾಗಿತ್ತು. ಅವನ ತಲೆಯನ್ನು ಮುಟ್ಟಿದ್ದೆ. ಮತ್ತೆ ಅವನ ಕೆನ್ನೆ ಹಿಡಿದು ನೆತ್ತಿಯನ್ನು ಮೂಸಿದ್ದೆ. ಇದನ್ನು ದೂರದಿಂದ ನೋಡುತ್ತ ನಿಂತಿದ್ದ ಗಂಗೂಗೆ ಕಣ್ಣು ತುಂಬಿಬಂದ್ದಿತ್ತು. ಅವಳಿಗೂ ಇದು ಮುಹೂರ್ತವೆಂದು ಕಾಣಿಸಿರಬೇಕು. ದೀಪ ಹಚ್ಚಿ ತನಗೇ ಎನ್ನುವಂತೆ ಹೇಳಿಕೊಂಡಳು: “ಇನ್ನು ಮುಂದೆ ನನ್ನ ಮಗ ಸನ್ಯಾಸಿ. ಯಾರಿಗೂ ಅವನು ನಮಸ್ಕಾರ ಮಾಡುವಂತಿಲ್ಲ. ಅವನೇ ಶ್ರೀಪಾದನಾಗಿಬಿಟ್ಟ.” ಆಮೇಲೆ ಸೆರಗಿನಿಂದ ಕಣ್ಣೊರೆಸಿಕೊಂಡಿದ್ದಳು. ಅವನ ಮೇಲಿನ ತಾಯ್ತನದ ಹಂಬಲಗಳನ್ನೆಲ್ಲ ಇನ್ನು ಬಿಟ್ಟುಕೊಡಬೇಕಾಗಿ ಬಂದ ತನ್ನ ಸ್ಥಿತಿಯನ್ನು ದುಃಖದಲ್ಲಿ ಅವಳು ಎದುರುಗೊಳ್ಳುತ್ತಲೇ ತನ್ನನ್ನು ‘ಹೋಗಿಬನ್ನಿ’ ಎಂದು ಉಪಚರಿಸಿ, ಗೇಟಿನ ತನಕ ಬಂದು ಕಳುಹಿಸಿದ್ದಳು. +ಮುಗಿಯಿತು +“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್ +ಹದ್ದುಗಳನ್ನು ಓಡಿಸಿದ ಬ್ರಾಹ್ಮಣರು ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, […] +ಮಠ ಬಿಟ್ಟು ನಿರಾಶರಾಗಿ ಗರುಡಾಚಾರ್ಯ ಲಕ್ಷ್ಮಣಾಚಾರ್ಯ ಇತ್ಯಾದಿ ಬ್ರಾಹ್ಮಣರು ಹರಿ ಹರಿ ಎಂದು ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ ಅಗ್ರಹಾರಕ್ಕೆ ಬಂದರು. ಅಲ್ಲಿ ಬಂದು ನೋಡುವಾಗ ಪದ್ಮನಾಭಾಚಾರ್ಯನಿಗೆ ಧ್ಯಾಸ ತಪ್ಪಿಹೋಗಿತ್ತು. ಅಗ್ರಹಾರದ ಬ್ರಾಹ್ಮಣನೊಬ್ಬ ಪದ್ಮನಾಭಾಚಾರ್ಯನ […] +ನೆನಕೆಗಳು… ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ – ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_756.txt b/Kannada Sahitya/article_756.txt new file mode 100644 index 0000000000000000000000000000000000000000..99f71085f57ac3c4e6af7a17bece9eea8cd64118 --- /dev/null +++ b/Kannada Sahitya/article_756.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲೆ ಎಲೆಯೆ +ನಿನ್ನ ಹಸಿ ಹಸಿದ ಹಸಿ +ರು ಮೈಗುಂಟ +ಸರಾಗ ಕೊರೆಯುತ್ತವೆ +ನರಗಳ ದೌರ್‍ಬಲ್ಯ. +ಹಾದಿಗಳೆಲ್ಲ ಕಾಲು ಚಾಚಿ +ಮಲಗಿವೆ ಅಲ್ಲಲ್ಲಿ ಇತಿಹಾಸ +ಹೆಕ್ಕುತ್ತ ಸಂಚರಿಸುವ +ಬಾಧೆಗಳು ತೊಲಗಿವೆ +ಹಸಿರುಗಚ್ಚುತ್ತಿರುವ ಕೋಶಗಳೆದುರೂ +ಮೈ ಕಳಚಿ ಮೆರೆದಿವೆ +ಹತ್ತಾರು ಕಾಮನಬಿಲ್ಲು. ತಿಳಿದೆಯಾ +ಹುಳಿ ಹಳದಿ ಹಳಸುತ್ತಿರುವ +ಕಂಪನಗಳ ಹೆಸರಲ್ಲಿ +ಏಯ್ +ನಿನ್ನ ಮೈ ನಿರಿಗೆಗಟ್ಟುತ್ತಿದೆ +ಕೊನೆಗೊಮ್ಮೆ ನೀ ತಟ್ಟನೆ +ತೊಟ್ಟು ಕಳಚಿ +ತೂರಿ ಬೀಳುವದುಂಟಲ್ಲ +ಆಗಿನ +ಆ ಕ್ಷಣದ +ನಿನ್ನ ತೇಲುಬೀಳಿನ +ಅನಿವಾರ್‍ಯನೀರವದಲ್ಲಿ +ಇನ್ನೂ ಇನ್ನೂ ನೀನು +ಉಸಿರಾಡುತ್ತಿರುವ ಸದ್ದು +ನನಗಿಲ್ಲಿ ಕೂತಲ್ಲಿ +ಕೇಳಿಸುತ್ತದೆ. ಕಳೆದೆಯಾ +***** +ದೂರ ದೂರದ ತನಕ ದಾರಿ ಕಾಯುವ ಹುಡುಗಿ ಏನು ಹೇಳೆ ನಿನ್ನ ಮನದ ಅಳಲು. ಯಾವ ಊರಿನ ಅವನು! ಯಾವ ಊರಿನ ಇವಳು! ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ […] +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […] +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_757.txt b/Kannada Sahitya/article_757.txt new file mode 100644 index 0000000000000000000000000000000000000000..1316392c6578b4aafb5b4a378d3f283692887f07 --- /dev/null +++ b/Kannada Sahitya/article_757.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ +ಚಿಲಿಪಿಲಿಸುತಿಹುದಾವ ನಿಮಿಷದಲ್ಲು; +ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ +ದನಿಗೂಡಿ ಹಾಡುತಿದೆ ಕನಸಿನಲ್ಲು! +ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು +ನೋವು ನರಳಾಟಗಳ ವಿಷಮ ಬಿಂದು; +ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ +ಹುಡುಕುತಿಹುದಾವುದನೊ ಮರೆಗೆ ನಿಂದು. +ಎದೆಗುದಿಯೊ, ಹದಗೆಟ್ಟ ಮುದಗೆಟ್ಟ ದನಿಯೊ +ಒಲವಿನಲೆಯಲೆಯಿಂದ ತೂರ್ವ ಸೀರ್ಪನಿಯೊ +ಹಲವಾರು ಕೊರತೆ-ಕೊರಕಲಿನ ಸೀಳ್ದನಿಯೊ +ಒಳದನಿಯೆ ಇವಕ್ಕೆಲ್ಲ ಉಸಿರಾದುದೇನೊ. +***** +ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […] +ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […] +ಒಮ್ಮೊಮ್ಮೆ ಏನೂ ಹೊಳೆಯುವುದಿಲ್ಲ ಸಂಕಲ್ಪವೊಂದೇ ಮೋಡ; ಶಾಖ ಮರೆ, ಬರೆದರೆ ಬರೀ ಅಕ್ಷರಗಳ ಹೊರೆ; ಕಾಡು ಹೂವೊಂದರ ಮೈಲಿಗಳ ಯಾಂತ್ರಿಕತನ. ಕೂತರೆ ಅಡ್ಡಾಡಿಸಿ, ಅಡ್ಡಾಡಿದರೆ ಒರಗಿಸಿ ಒರಗಿದರೆ ಬರೆಯಿಸುವ ಅದೃಢತೆ; ಹೊರಗಾಗುವುದು ಕವಿತೆ. ಒಮ್ಮೊಮ್ಮೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_758.txt b/Kannada Sahitya/article_758.txt new file mode 100644 index 0000000000000000000000000000000000000000..306f758c7561652cc4091e26617087f9c52accbc --- /dev/null +++ b/Kannada Sahitya/article_758.txt @@ -0,0 +1,247 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದಿನಾಂಕ ೧, ಜೂನ್ ೧೯೮೯ +ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ ಶ್ರೀನಗರಕ್ಕೆ ಹೋಗಲು ಎಲ್ಲಿ ವಿಚಾರಿಸಲಿ…ಯೋಚಿಸುತ್ತಲೇ ಸುತ್ತಲೂ ನೋಡಿದೆ. ಎದುರಿಗೆ ಕಂಡ ನಲ್ಲಿಯ ಬಳಿಗೆ ಹೋದೆ, ದಿಲ್ಲಿಯಿಂದ ಹೊರಟದ್ದು- ಇಡೀ ರಾತ್ರಿಯ ಪ್ರಯಾಣ ಕಣ್ಣು ತುಂಬಾ ಆಯಾಸವಾಗಿ ಕುಳಿತಿತ್ತು. ತಣ್ಣನೆಯ ನೀರು ಪದೇ ಪದೇ ಮುಖಕ್ಕೆ ಎರಚಿಕೊಂಡೆ. ಸ್ವಲ್ಪ ‘ಫ್ರೆಶ್’ ಆದಂತೆನ್ನಿಸಿ ಟವೆಲ್‌ನಿಂದ ಮುಖ ಒರೆಸುತ್ತಲೇ ಸ್ಟೇಶನ್‌ನಿಂದ ಹೊರಬಿದ್ದೆ. ‘ಇಲ್ಲಿ ಶ್ರೀನಗರಕ್ಕೆ ಹೋಗೊ ಬಸ್ಸುಗಳು ಎಲ್ಲಿ ಸಿಗುತ್ತೆ?’ ಯಾರೊ ಹಾದವನ್ನು ಹಿಡಿದು ಹಿಂದಿಯಲ್ಲಿ ಕೇಳಿದೆ. ‘ ಇಲ್ಲೇ ಸ್ಟೇಶನ್ ಪಕ್ಕ…’ ಅಂದವನು ಲಗುಬಗೆಯಿಂದ ಜೊತೆಗೇ ಬಂದು ಟಿಕೆಟ್ ಕೊಡೋ ಕೌಂಟರ್ ತೋರಿಸಿ ಹೋದ. ಕೌಂಟರ್ ಎದುರೇ ಒಂದಿಷ್ಟು ಬಸ್ಸುಗಳು ‘ಶ್ರೀನಗರ’ದ ಫಲಕ ಅಂಟಿಸಿಕೊಂಡು ನಿಂತಿದ್ದವು. ಟಿಕೆಟ್ ಕೊಡಲು ಇನ್ನೂ ಅರ್ಧ ಗಂಟೆ ಇತ್ತು. ಹೊಟ್ಟೆ ಚುರುಗುಟ್ಟಿತು. ಎದುರಿಗೆ ಕಂಡ ಧಾಬಾಗೆ ನುಗ್ಗಿದೆ. ಬಿಸಿಬಿಸಿ ಚೋಲೆ-ಬಠೂರದ ತಟ್ಟೆ ಹಿಡಿದುಕೊಂಡು ಹೊರಗೆ ಹಾಕಿದ್ದ ತುಕ್ಕು ಬಡಿದ ಕುರ್ಚಿಯ ಮೇಲೆ ಏರ್‌ಬ್ಯಾಗ್ ಒಗೆದು, ಇನ್ನೇನು ತಿನ್ನಬೇಕು….. ಅಷ್ಟರಲ್ಲಿ ‘ಹಲೋ ಮೇಡಂ, ಏನು ನೀವಿಲ್ಲಿ?’ ಅಚ್ಚ ಕನ್ನಡದ ದನಿ! +ಬಾಯಿಗೆ ಹೊರಟ ತುತ್ತು ಹಾಗೆಯೇ ನಿಂತು ಬಿಟ್ಟಿತು. ಸರಕ್ಕನೆ ಹಾಗೆ ತಿರುಗಿದೆ. ಅಜಯ್ ನಿಂತಿದ್ದ. ನಾ ಕೈಯಲ್ಲಿ ಹಿಡಿದ ತುತ್ತನ್ನೂ ಮರೆತು ವಿಚಿತ್ರವಾಗಿ ಅವನನ್ನೇ ನೋಡಿದೆ. ಪ್ರತಿಯಾಗಿ ‘ಹಲೋ’ ಕೂಡಾ ಹೇಳಲಾಗಲಿಲ್ಲ. +‘ನನ್ನನ್ನಿಲ್ಲಿ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ನಾವು ಕರ್ನಾಟಕದ ಹೊರಗೆ ಭೇಟಿಯಾಗುವ ಪ್ರತಿಜ್ಞೆ ಮಾಡಿದಂತಿದೆ’ ನಕ್ಕ ಮುಖದ ತುಂಬಾ…..ಮನದ ತುಂಬ ಹರಡಿ ಹಬ್ಬುವಂತಹ ಎಳೆಬಿಸಿಲ ನಗೆ. +ನಾ ತಡವರಿಸುತ್ತಾ- +‘ಹಲೋ, ನಿಮ್ಮನ್ನಿಲ್ಲಿ ನೋಡಿ ನಿಜಕ್ಕೂ ಅಚ್ಚರಿ ಆಗ್ತಾ ಇದೆ. ಬನ್ನಿ ಛೋಲೆ ತಗೊಳ್ತೀರಾ?’ ಮತ್ತೊಂದು ಪ್ಲೇಟಿಗೆ ಹೇಳಿದೆ. +‘ಖಂಡಿತಾ…..’ ಎಂದವನು ಆ ಪ್ಲೇಟ್ ಬರುವುದಕ್ಕೂ ತಡೆಯದೆ ಸಲೀಸಾಗಿ ನನ್ನ ತಟ್ಟೆಗೆ ಕೈ ಹಾಕಿ, ಅರ್ಧ ಬಠೂರ ಹರಿದುಕೊಂಡು ಛೋಲೆಗದ್ದಿ ಬಾಯುಗಿಟ್ಟ ! ಅಜಯ್…ಕ್ಷಣದಲ್ಲಿ ಆತ್ಮೀಯನಾಗುವ, ನಿಮಿಷದಲ್ಲಿ ಸ್ನೇಹದ ಸಲಿಗೆ ವಹಿಸುವ, ಹಿಡಿಹಿಡಿ ಮಾತನಾಡುವ, ಅರೆಗಳಿಗೆಯಲ್ಲಿ ಹೊಸಿಲು ದಾಟಿ ಒಳಗೆ ನುಗ್ಗೇ ಬಿಡುವ, ಮನದ ಅಂಗಳದ ತುಂಬಾ ಬೆಳದಿಂಗಳ ಚೆಲ್ಲಿಬಿಡುವ…. ತುಂಬು ಪ್ರೀತಿಯ ಹುಡುಗ. +ಅಜಯನ ತಟ್ಟೆ ಬಂತು. ಏರ್‌ಬ್ಯಾಗ್ ಎತ್ತಿ ಕೆಳಗಿಟ್ಟು ನಾ ಕುಳಿತೆ. ಅವನೂ ಒಂದು ಕುರ್ಚಿ ಎಳೇದುಕೊಂಡು ಕುಳಿತ. +‘ಅಂದಹಾಗೆ ನೀವಿಲ್ಲಿ ಬಂದಕಾರಣ?’ ಕೇಳಿದ. ಕಣ್ಣಲ್ಲೇಕೋ ಕೀಟಲೆಯ ನಗೆ ಇತ್ತು. +‘ಶ್ರೀನಗರದಲ್ಲಿ ಎರಡು ದಿನ ಕಾನ್‌ಫರೆನ್ಸ್ ಇದೆ. ‘ರೀಸೆಂಟ್ ಡೆವೆಲಪ್‌ಮೆಂಟ್ ಇನ್ ಹೈಡ್ರಾಲಿಕ್ಸ್ ಎಂಡ್ ಇರಿಗೇಶನ್’ ಬಗ್ಗೆ ನಾ ಒಂದು ಪ್ರಬಂಧ ಮಂಡಿಸ್ತಾ ಇದ್ದೇನೆ…ನೀವು?’ ಕೇಳಿದೆ. +‘ಅದೇ ಜೆ ಎಂಡ್ ಕೆ ಇನ್‌ಸ್ಟಿಟ್ಯೂಟ್‌ದು ತಾನೆ?’ ನಕ್ಕ. ‘ಕೊಡೀ ಕೈ ನಾನೂ ಅಲ್ಲಗೆ ಡೆಲಿಗೇಟ್ ಆಗಿ ಬರ್ತಾ ಇರೋದು.’ ಅಂದ. +ಢಾಬಾದ ಸರ್ದಾರ್ಜಿಗೆ ದುಡ್ಡು ಕೊಟ್ಟು, ಬಲಗೈಲಿ ತನ್ನ ಸೂಟ್‌ಕೇಸ್ ಎತ್ತಿಕೊಂಡವನು, ಎಡಗೈಗೆ ನನ್ನ +ಏರ್‌ಬ್ಯಾಗ್ ಏರಿಸಿದ. +‘ಇರಲಿ ಕೊಡಿ. ನಾನೇ ತರ್ತೇನೆ…’ ಹೇಳಿದೆ. +‘ಬನ್ನಿ ನೀವು ಬಸ್ಸಲ್ಲಿ ಕುಳಿತುಬಿಡಿ. ನಾ ಟಿಕೆಟ್ ಕೊಂಡು ಬರ್ತೀನಿ.’ +ನನ್ನ ಖಾಲಿ ನಿಂತ ಬಸ್ಸಿಗೆ ಹತ್ತಿಸಿ, ಏರ್‌ಬ್ಯಾಗ್ ಮೇಲೆತ್ತಿಟ್ಟು ಕೆಳಗಿಳಿದು ಹೋದ. +ಒಮ್ಮೆಗೆ, ನಿನ್ನೆ ರಾತ್ರಿಯ ಪ್ರಯಾಣದ ಆಯಾಸ, ಮುಂದೆ ಮಲಗಿರುವ ಹದಿಮೂರು ಗಂಟೆಗಳ ಶ್ರೀನಗರದ ಹಾದಿ ಎಲ್ಲ ಮರೆಯಾಗಿ, ಸ್ವಪ್ನಲೋಕಕ್ಕೆ ಹೊರಟು ನಿಂತ ಪುಷ್ಪಕ ವಿಮಾನವಾಯಿತು ನಾ ಕುಳಿತ ಬಸ್ಸು. ಕೈಚೀಲದಿಂದ ಪುಟ್ಟ ಕನ್ನಡಿ ಹೊರಗೆಳೆದೆ. ಕೆದರಿದ ತಲೆ ಕಂಡು ಕೆಡುಕೆನಿಸಿತು. ಮೆಲ್ಲನೆ ಸಿಕ್ಕಿ ಬಿಡಿಸಿ, ಎರಡೂ ಬದಿಗೆ ಪಿನ್ ಏರಿಸಿ, ಬೆನ್ನ ತುಂಬಾ ಹರವಿ ಬಿಟ್ಟೆ. +ಏಕೆ ಈ ಸಿಂಗಾರ…? ತಟ್ಟನೆ ಅರ್ಥವಾಗಲಿಲ್ಲ.. ಇಲ್ಲ ಅರ್ಥವಾಯಿತು. +ದೇವರೆ, ನಮ್ಮೊಳಗೆ ನಾವು ಪ್ರಾಮಾಣಿಕರಾಗಿರುವುದು ಇಷ್ಟು ಕಷ್ಟವೆ? ಎಂತಹ ಪುಳಕ ಇದು…ಪ್ರಥಮ ಆಕರ್ಷಣೆಯ ಪುಳಕ…ಪ್ರೀತಿ ಪ್ರೇಮವೆಂಬ ಅಮೂರ್ತ ಪದಗಳು ಈಗಲೇ ಬೇಡ…ಪ್ರಥಮ ಪುಳಕ…ನನ್ನ ಇಪ್ಪತ್ತೆಂಟನೆ ವಯಸ್ಸಿನಲ್ಲಿ! ಐದು ವರ್ಷದ ವಿವಾಹ, ಮೂರು ವರ್ಷದ ಮಗುವಿನ ಚರಿತ್ರೆ ಬಿಟ್ಟು ಬಂದಿದ್ದೇನೆ, ಮೂರು ಸಾವಿರ ಮೈಲಿಗಳಾಚೆ ಬೆಂಗಳೂರಿನಲ್ಲಿ! +ಕನ್ನಡಿಯನ್ನು ಚೀಲದೊಳಗೆ ತೂರಿಸಿ, ಸೀಟಿಗೆ ತಲೆಯಾನಿಸಿ ಕಣ್ಣು ಮುಚ್ಚಿದೆ. ಗೋವಾದ ಬೆಳ್ಳಿ ಮರಳ ಸಮುದ್ರ ದಂಡೆ ಕಣ್ ಮುಂದೆ ಹಾದು ಹೋಯಿತು. ಅಜಯನನ್ನು ಮೊದಲಿಗೆ ನೋಡಿದ್ದು ಗೋವಾದಲ್ಲೇ, ಆರು ತಿಂಗಳ ಹಿಂದೆ. ಅಲ್ಲೂ ಯಾವುದೋ ಕಾನ್‌ಫರೆನ್ಸ್, ಮೂರು-ಮೂರು ದಿನ ಪಂಜಿಮ್‌ನಲ್ಲಿ ಉಳಿದಿದ್ದೆ. ಎರಡನೆ ದಿನ ಅಜಯ್ ಬಂದಿದ್ದ. ಯಾವುದೋ ಪೇಪರ್ ನಡುವೆ, ನಾ ಏಕೋ ಎಡಕ್ಕೆ ತಿರುಗಿದಾಗ ಆತ ನನ್ನನ್ನೇ ನೋಡುತ್ತಿದ್ದ, ನನಗೆಲ್ಲೋ ನೋಡಿದ ಮುಖ…ಹೆಸರಿಸಲಾರದೆ, ನೆನಪೆಲ್ಲ ಅಗೆದಗೆದು ಹುಡುಕಿದೆ. +ಊಟದ ಹೊತ್ತಿಗೆ ಹೊರಗೆ ಬಂದಾಗ ಆತ ನೇರ ನನ್ನ ಬಳಿ ಬಂದ… +‘ನೀವು ಡಾ|| ಅನು ಅಲ್ವ?’ ಕೇಳಿಯೇ ಬಿಟ್ಟ. +‘ಹೌದು, ನಿಮ್ಮನ್ನೆಲ್ಲೋ ನೋಡಿದ ನೆನಪು’ ತಡವರಿಸಿದೆ. +‘ನೋಡಬಹುದಿತ್ತೇನೋ, ನೀವು ಅವಕಾಶವೇ ಕೊಡಲಿಲ್ಲ.’ ಎಂದು ನಕ್ಕ. ನಾ ಮತ್ತೂ ಅರ್ಥವಾಗದೆ ಅವನ ಮುಖದಲ್ಲಿ ಪರಿಚಯದ ಕಳೆಗಾಗಿ ತಡಕಾಡಿದೆ. +‘ಬಿಡಿ, ಅದೆಲ್ಲ ಐದು ವರ್ಷದ ಕತೆ…ಜೀವನ ಪೂರಾ ನನ್ನ ನೋಡಬಹುದಾದಂಥ ಅಮೋಘ ಅವಕಾಶ ಕಳೆದುಕೊಂಡಿರಿ. ನನ್ನ ಪತ್ರ ಸೀದಾ ಕಸದ ಬುಟ್ಟಿಗೆ ಹೋಗಿರಬೇಕಿಲ್ಲ…?’ +ತಟ್ಟನೆ ನೆನಪಾಯಿತು, ಮಿಂಚು ಹೊಳೆದಂತೆ ಬೆಳಕಾಯಿತು. ಐದು ವರ್ಷಗಳ ಹಿಂದೆ- ಆಗ ನಾ ಕವನ ಬರೆಯುತ್ತಿದ್ದೆ. ಅವು ಕವನಗಳೆ ಇರಬೇಕು. ತುಂಡು ತುಂಡು ಸಾಲಿನಲ್ಲಿ ಪ್ರೀತಿಸದೇ ಬಿಟ್ಟ ನನ್ನ ಕನಸುಗಳ ಲೆಕ್ಕ ಸಿಗುತ್ತಿತ್ತು. ನನ್ನ ಮದುವೆ ಕಿರಣ್ ಜೊತೆ ನಿಶ್ಚಯವಾಗಿತ್ತು. ಪತ್ರಿಕೆಯೊಂದರ ವಿಳಾಸಕ್ಕೆ ಬಂದ ನನ್ನ ಲಕೋಟೆಯೊಂದು ರಿಡೈರೆಕ್ಟ ಆಗಿ ನನ್ನ ಕೈ ಸೇರಿತ್ತು. +ಪ್ರಿಯ ಅನು ಅವರೆ, +ಬಹಳ ದಿನದಿಂದ ನಿಮ್ಮ ಕವನಗಳೆ ಇಲ್ಲ.ಏಕೆ, ಕನಸುಗಳು ಖಾಲಿಯಾದವೇನು? ನನ್ನದೊಂದಿಷ್ಟು ಕನಸುಗಳಿವೆ. ನಿಮ್ಮೊಡನೆ ಉಳಿದಷ್ಟು ಬದುಕನ್ನು ಕಳೆದು ಬಿಡುವ ಕನಸು. ನೀವು ಮೂಲತಃ ವಿಜ್ಞಾನಿ ಎಂದು ಗೊತ್ತು. ಮೈಸೂರಿನಲ್ಲಿ ಓದಿದ್ದು, ಬಾಂಬೆಯಲ್ಲಿ ಪಿ‌ಎಚ್.ಡಿ ತಗೊಂಡಿದ್ದು….ನಿಮ್ಮ ಪೂರಾ ಬಯೋ-ಡಾಟ ನನ್ನ ಬಳಿ ಇದೆ. ಸ್ವತಃ ನನ್ನನ್ನು ಏನು ಅಂತ ವರ್ಣಿಸಿಕೊಳ್ಳಲಿ? ಕವಿತೆಗಳನ್ನು, ಕವಿತೆ ಬರೆದವರನ್ನು ಗಾಢವಾಗಿ ಪ್ರೀತಿಸಬಲ್ಲೆ. ಕೊಳಳುವಿರಾ ಹೇಳಿ. ನನ್ನ ಚಿತ್ತಾರದ ಕನಸುಗಳ ಬದುಕು ಪೂರಾ…’ ಇಷ್ಟೆ, ಕೇವಲ ಅರ್ಧ ಪೇಜಿನ ಪತ್ರ. ಜೊತೆಗೊಂದು ಫೋಟೊ ಇತ್ತು. ಪತ್ರ ಎರಡು ಮೂರು ಬಾರಿ ಓದಿದೆ. ಅಪರಿಚಿತ ಅಪರಿಚಿತ ವ್ಯಕ್ತಿಗೆ ಬರೆದ ಮೊಟ್ಟಮೊದಲ ಪ್ತರದಂತೆ ಇರಲೇ ಇಲ್ಲ. ವರ್ಷಗಟ್ಟಲೆಯ ಸ್ನೇಹದಲ್ಲಿ, ಮಧ್ಯೇ ಎಲ್ಲೋ ಕೆಲವು ದಿನದ ಮೌನವಾಗಿ , ಸ್ನೇಹದ ಹಕ್ಕಿನಲ್ಲಿ ಬರೆದಂಥಾ ಆತ್ಮೀಯ ಪತ್ರ.ಎರಡೆರಡು ಬಾರಿ ಓದಿದ್ದೆ. ನನ್ನ ಕವನದಲ್ಲಷ್ಟ ಜನಿಸಿ-ಮರಣಿಸಿದ ಪ್ರೀತಿಯ ಝರಿಯೊಂದು ಜುಳುಜುಳು ಸದ್ದು ಮಾಡಿತು. +ಏಕೋ ನಾ ಸಿದ್ಧವಿರಲಿಲ್ಲ. ಈ ಪ್ರೀತಿಯ ಹುಡುಗನ ಪತ್ರದ ಬೆನ್ನೇರಲು. ಕಿರಣ್ ಕಾದಿದ್ದ. ಅಪ್ಪ ಹುಡುಕಿದ ಗಂಡು, ಅಪ್ಪನ ಮುಷ್ಟಿಯಲ್ಲಿ ನಾನೀಗ ಇರಲಿಲ್ಲ ನಿಜ. ರೆಕ್ಕೆ ಕಟ್ಟಿ ಹಿಡಿದ ಹಕ್ಕಿಗೆ ಬಂಧನ ಬಿಟ್ಟಿತ್ತು. ಆದರೆ ಹಾರುವುದು ಬೇಕಿರಲಿಲ್ಲ. +ನಾನಂದು ಹೆಚ್ಚೇನೂ ಮಾಡಿರಲಿಲ್ಲ. ಪತ್ರ ಹರಿಯಲೆಂದು ಹೊರಟವಳು ಏಕೋ ತಡೆದೆ. ನನ್ನ ಡೈರಿಯೊಳಗೆ ತೂರಿಸಿದೆ. ಅಲ್ಲಿಗೆ ಈ ಪೂರಾ ಐದು ವರ್ಷಗಳಲ್ಲಿ ಮರೆತುಬಿಟ್ಟೆ. +ಗೋವಾದಲ್ಲಿ ಉಳಿದೆರಡು ದಿನ. ಗುಂಪಿನೊಡನೆಯೇ ಬೀಚು, ಚರ್ಚ್, ಕತೀಡ್ರಲ್ ಎಂದೆಲ್ಲ ಓಡಾಡಿದೆ. ಆ ಗುಂಪಿನ ನಡುವೆಯೂ ಅಜಯ್ ಬೇರೆಯೇ ನಿಂತಿದ್ದ. ಕೆಲ ವ್ಯಕ್ತಿಗಳು ತಟ್ಟನೆ ಉದ್ಭವಿಸಿ, ಕ್ಷಣದಲ್ಲಿ ನಮ್ಮ ಗೆದ್ದು ದಿಗ್ವಿಜಯ ಪತಾಕೆ ಹಾರಿಸಿಬಿಡುವುದೇಕೆ? ನನ್ನಿಷ್ಟು ದಿನದ ಸ್ತಿಮಿತತೆಯನ್ನು ಇಪ್ಪತ್ತೆಂಟು ವರ್ಷಗಳ ಅಘಟಿತ ಜೀವನದ ಸಮತೋಲನವನ್ನು ಪಲ್ಲಟಗೊಳಿಸಿದ್ದು ಹೇಗೆ? ಅವ ನನ್ನ ಬದುಕನ್ನು ಹಂಚಿಕೊಳ್ಳಲು ಬಂದಾಗ ನಾ ಇಂಥಾ ನಿತ್ಯ ಸಂತಸದ ನಿತ್ಯ ವಸಂತವನ್ನು ನಿರಾಕರಿಸಿದೆ ಎಂದು ತಿಳಿದಿತ್ತೆ? ಕಾಲದ ಮುಳ್ಳು ಜಗ್ಗಿ ಹಿಡಿದು ಐದು ವರ್ಷ ಹಿಂದಕ್ಕೆ ಹೋಗುವ ತೀವ್ರ ಆಸೆ. ನಾ ಗೋವಾದಿಂದ ಹಿಂತಿರುಗಿದ ಮೇಲೂ ಅವ ಕಾಡತೊಡಗಿದ. ಬದುಕಿನ ಆ ಒಂದು ತಿರುವಿನಲ್ಲಿ ನಾ ತಿರುಗಿಬಿಟ್ಟಿದ್ದರೆ ರೆ…? ಮತ್ತೆ ಮತ್ತೆ ನೆನಪಿನಲ್ಲಿ ಹಿಂದ್ಹಿಂದೆ ಹಾಯ್ದು – ಅಲ್ಲಿ ಅವನ ಪತ್ರ ಹಿಡಿದು ಮತ್ತೆ ಮತ್ತೆ ಉತ್ತರಿಸಿದೆ. ಬೆಳಗ್ಗೆ ಏಳುವಾಗ ಮಾತ್ರ ನಾ ಕಿರಣನ ಹೆಂಡತಿಯಾಗಿರುತ್ತಿದ್ದೆ? ಪುಟ್ಟಿಯ ತಾಯಿಯಾಗಿದ್ದೆ. +ಬೀಚಿನಲ್ಲಿ ಗುಂಪಿನಿಂದ ಒಂದಿಷ್ಟು ಬಿಡುವು ಕಂಡಾಗ ಅಜಯ್ ಕೇಳಿದ್ದ– +‘ಏಕೆ ನೀವು ಮತ್ತೆ ಕವನ ಬರೆಯಲೇ ಇಲ್ಲ…’ +‘ಓಹ್, ತುಂಬಾ ವರ್ಷಗಳಾಯ್ತು…’ ಗಾಳಿಗೆ ಕೈ ಚೆಲ್ಲಿ ಹೇಳಿದೆ. +‘ಹೌದು ಐದು ವರ್ಷಗಳಾದವು…’ ಅವ ಲೆಕ್ಕ ಇಟ್ಟಿದ್ದ. ಐದು ವರ್ಷಗಳು…ನನ್ನ ಇಪ್ಪತ್ಮೂರನೆ ವಯಸ್ಸಿಗೆ ನಿಲ್ಲಿಸಿದ್ದೆ. ನನ್ನ ವಿವಾಗವಾದ ವರ್ಷ. ಕಾವ್ಯನಾಮದಡಿ ಅಡಗಿದ್ದ ಕಿಶೋರದ ಕನಸುಗಳೆಲ್ಲ ತಣ್ಣನೆ ಅನುಭವದ ಅಡುಯಲ್ಲಿ ನಿಸ್ಸಾರವಾದ ವರ್ಷ. +ಈ ಗೋವಾದಿಂದ ಹಿಂತಿರುಗಿ ವಂದೆ. ಮತ್ತೆ ಕವನ ಬರೆದೆ, ಐದು ವರ್ಷಗಳ ನಂತರ! +ಒಮ್ಮೆ ಕಾಲದ ಕೈ ಹಿಡಿದು ಜಗ್ಗುವ ಬಯಕೆ. +ಉತ್ತರಿಸದ ಪತ್ರಗಳಿಗೆಲ್ಲ ಪಾರಿವಾಳವ ಹಾರಿಬಿಡುವ ಬಯಕೆ. +ಆಯ್ದ ಬದುಕು ಸುಗಮವಿತ್ತು. ಆದರೂ ಬೇರೊಂದು ಆಯಾಮದಲ್ಲಿ ಉಳಿದುಬಿಟ್ಟ ಸಾಧ್ಯತೆಗಳು ಕಾಡತೊಡಗಿದವು. ಮತ್ತೆ ಕನಸುಗಳು ರೆಕ್ಕೆ ಪುಕ್ಕ ಮೊಳೆತು ಕವನಗಳಾದವು. ಬಯಕೆಗಳು, ಸಾಧ್ಯತೆಗಳು, ಅವನೊಡನೆ ಹಂಚಿಕೊಳ್ಳಲಾರದ, ಹಂಚಿಕೊಳ್ಳಲೇಬೇಕಾದ ನನ್ನ ಅನಿಸಿಕೆಗಳು ಕವನವಾದವು. ಐದು ವರ್ಷಗಳ ನಂತರ ನಾ ಮತ್ತೆ ಹೊತ್ತಿದ್ದೆ – ಕವನದ ಕೂಸನ್ನು- ಮನದ ಒಳಗೆಲ್ಲ ಹಿತವಾಗಿ ಮಿಸುಕಾಡಿ ಬಹಾವನೆಯ ಬಸಿರೊಡೆದು ಹೊರಬಿದ್ದವು. ರಾಶಿ ರಾಶಿಯಾಗಿ. +ಈ ಆರು ತಿಂಗಳು ನಾ ಸತತ ಬರೆದೆ. ಹೊಸದೇನೋ ಹೇಳುವುದಿತ್ತು. ‘ನನ್ನ ಯೌವನಕ್ಕೊಂದಿಷ್ಟು ಕನಸುಗಳ ಕೊಟ್ಟ ಗೆಳೆಯನೆ, ಧನ್ಯವಾದ..’ ಬರೆದಿದ್ದೆ. ‘ಉತ್ತರಿಸದೆ ಬಿಟ್ಟ ಪತ್ರಗಳ’ ಬಗ್ಗೆ ಬರೆದೆ. ‘ಬಿಟ್ಟು ಬಂದ ಮರಳಿನಲ್ಲಿ, ಬಿತ್ತಿ ಬಂದ ಬಯಕೆಗಳ’ ಬಗ್ಗೆ ಬರೆದೆ. ನನ್ನ ಕವನಗಳಿಗೆ ಅವ ಗುರಿಯಾಗಿದ್ದನೋ, ಅವನಿಗೆ ನನ್ನ ಕವನಗಳು ಗುರಿಯಾಗಿದ್ದವೋ ಗೊತ್ತಿಲ್ಲ. ಸಾಧ್ಯತೆಗಳ ಬಗ್ಗೆ ಕವನಗಳು ಹೆಣದುಕೊಂಡವು. ದಟ್ಟವಾಗಿ, ನನ್ನೊಳಗಿನ ಸಂಭಾಷಣೆಗಳಿಗೆ ಅಜಯ್ ದಿಕ್ಕಾದ. ನನ್ನೆಲ್ಲವನ್ನೂ ನಾ ಅವನ ಅದೃಶ್ಯ ಇರುವಿನೊಡನೆ ಹಂಚಿಕೊಳ್ಳತೊಡಗಿದೆ. ಬಹಾರವಾದ ಬಾಲ್ಯ ಯೌವನಗಳ ಬಿಚ್ಚಿಕೊಳ್ಳ ತೊಡಗಿದೆ- ಮೊಡ್ಡ ಮೊದಲಿಗೆ. +* +* +* +‘ಉತ್ತರಿಸಿದ ಪತ್ರಗಳೆಲ್ಲ ಕವನಗಳಾದುವಾ?’ ನೇರ ನನ್ನ ಕಣ್ಣು ಹಿಡಿದಿಟ್ಟು ಕೇಳಿದ, ಮುಖದ ತುಂಬ ತುಂಟತನವಿತ್ತು. +‘ಇಲ್ಲ, ದಿಕ್ಕುಗಾಣದ ಪಥಭ್ರಷ್ಟ ಪ್ರೀತಿ, ಬದುಕದೇ ಬಿಟ್ಟ ಬಾಲ್ಯ, ಕಿಶೋರ, ಬದುಕಬಹುದಿದ್ದ ಸಾಧ್ಯತೆಗಳು, ಸಂಭವಗಳು….’ ವಾಚ್ಯವಾದ ನನ್ನ ಭಾವನೆಗಳಿಗೆ ನಾನೇ ಬೆರಗಾದೆ. ನಾ ಮಾತು ಕಲಿತದ್ದೆಂದು…ಐದು ವರ್ಷದ ದಾಂಪತ್ಯದಲ್ಲಿ ಅಭಿವ್ಯಕ್ತಿಸಲಾರದೆ ನನ್ನ ಪ್ರೀತಿ ಪ್ರಯಾಸಪಡುವಾಗ, ಇದಕ್ಕಿದ್ದಂತೆ ಈ ಬೇರೊಂದು ಆಯಾಮದಲ್ಲಿ ಮಡಿವಂತಿಕೆ ಕಳಕೊಂಡ ನಾ ನಗ್ನವಾಗುತ್ತಿರುವುದ್ಹೇಗೆ? ನಾ ತಟ್ಟನೆ ಅಗೋಚರವಾಗಿದ್ದೆ ಮತ್ತುಳಿದ ಆ ಜಗತ್ತಿಗೆ… ಸಮಯದಲ್ಲೊಂದು ಬಿಂದುವಾಗಿ ಘನವಾಗತೊಡಗಿದ್ದೆ. +‘ಏಕೆ, ಅಷ್ಟು ಸೀರಿಯಸ್ ಆಗ್ತೀರಾ….’ ಅಜಯ್ ಮೆಲ್ಲನೆ ಕೈ ಒತ್ತಿದ. ಕಣ್ಣಲ್ಲಿನ್ನೂ ನಗು ಇತ್ತು. +ಬಸ್ಸು ಹೊರಟಿತು, ಕಣಿವೆಯತ್ತ. ನನ್ನ ಕೈ ಇನ್ನೂ ಅವನ ಬೆಚ್ಚನೆಯ ಹಿಡಿತದಲ್ಲಿತ್ತು…. +(‘ರಾಜೂ… ರಾಜೂ… ನಂಗೆ ಭಯವಾಗುತ್ತೆ ಕಣೋ, ಕೈ ಹಿಡಕೊಳ್ಳೋ.’ ಬಿಗಿಯಾಗಿ ಹಿಡಿದೆಳೆದೆ ರಾಜುವಿನ ಕೈಯ. +‘ಒಳ್ಳೆ ಹೆದರುಪುಕ್ಕಲೀನೆ ನೀನು… ಮತ್ಯಾಕೆ ಭೂತ ನೋಡೋಕೆ ನಾನೂ ಬರ್ತೀನಿ ಅಂತ ಕುಣಿದೆ.’ +‘ನಿಜವಾಗ್ಲೂ ಅಲ್ಲಿ ಭೂತ ಇದೆಯಾ…?’ ಕಣ್ಣರಳಿಸಿದೆ. ಪಾಳುಬಿದ್ದ, ಬಿದಿರುಮೆಳೆ ಬೆಳೆದು ನಿಂತ ಆ ಮುರುಕು ಬಂಗಲೆಯ ಕಾಂಪೌಂಡ್ ಹಾರಿ ಒಂದೊಂದೇ ಹೆಜ್ಜೆ ಇಡುತ್ತಾ. +‘ಹುಂ ಮತ್ತೆ…ಆದ್ರೆ ನೀನೇನೂ ಹೆದರಬೇಡ’ ಹತ್ತಿರ ಬಂದ. ಹತ್ತು ವರ್ಷದ ಭಾರೀ ಎದೆಗಾರ… ನನ್ನ ಕೈ ಭದ್ರವಾಗಿ ಹಿಡಿದ. +‘ಬಲಗೈಲಿ ಚಪ್ಪಲಿ ಇಟ್ಟುಕೋ ಭೂತ ಇದ್ರೆ ಹೆದರಿ ಓಡಿ ಹೋಗುತ್ತೆ. ಬಾಯಲ್ಲಿ ಓಂ ಗಣೇಶ ಹೇಳ್ತಾ ಇರು…’ ಅವನ ಆದೇಶದಂತೆ ಒಂದು ಕೈಲಿ ಚಪ್ಪಲಿ, ಮತ್ತೊಂದರಲ್ಲಿ ರಾಜುವಿನ ಕೈ ಹಿಡಿದು, ಬಾಯಲ್ಲಿ ಪಿಟಿಪಿಟಿ ಅನ್ನುತ್ತಾ, ಅವನ ಹಿಂಬಾಲಿಸಿದೆ… +ಒಂದೊಂದೇ ಕೋಣೆ ಇಣುಕುವಾಗ ಅದೆಂಥ ಎದೆಬಡಿತ, ಕಿವಿಯಲ್ಲಿ ತಮಟೆಯ ಸದ್ದು, ಭಯ…ಆದರೂ ವಿಚಿತ್ರ ಕುತೂಹಲ. ಖುಶಿ… ಆದರೂ ಎಂಥದ್ದೋ ಆತಂಕ. +‘ಕೊನೇ ಕೋಣೆಯಲ್ಲಿ ದೊಡ್ಡ ನಿಧಿ ಇದೆಯಂತೆ. ಅದನ್ನ ಕಾಯೋಕೆ ದೊಡ್ಡ ಸರ್ಪ ಇದೆಯಂತೆ…’ ಎಲ್ಲ ಬಲ್ಲವನ ಗತ್ತಿನಲ್ಲಿ ರಾಜು ಹೇಳಿದ. +ಒಂದೊಂದೇ ಕೋಣೆ… ಅದೆಷ್ಟು ಕೋಣೆಗಳು ಆ ಬಂಗಲೆಗೆ-ತಪ್ಪನೆ ಮೇಲಿಂದ ಬಿದ್ದು, ಭರ ಭರನೆ ಎರಡು ಬಾವಲಿಗಳು ಕುರುಡಾಗಿ ಹಾರಿ ಮುಖಕ್ಕೆ ಬಡಿದವು. +ಚಪ್ಪಲಿಯನ್ನು ಅಲ್ಲೇ ಎಸೆದು ಗಾಬರಿಯಿಂದ ‘ಅಯ್ಯಮ್ಮೋ…’ ಕಿರುಚುತ್ತಾ ಓದಿದ ರಾಜುವಿನ ಕೈ ಬಿಡದೇ ನಾನೂ ಒಂದೇ ಉಸಿರಿಗೆ ಓಡಿದೆ. ಏದುಸಿರು ಬಿಡುತ್ತ ಓಡಿ ಬಂದವಳು ಇನ್ನೂ ರಾಜುವಿನ ಕೈ ಹಿಡಿದೇ ಇದ್ದೆ. ಮೈಯೆಲ್ಲ ನಡುಗಿತ್ತು. ಅಂಗಳದಲ್ಲಿ ಬಿಸಿಲು ಕಾಯಿಸುತ್ತಾ ಪೇಪರ್ ಓದುತ್ತಿದ್ದ ಅಪ್ಪ ಕನ್ನಡಕ ತೆಗೆದು ನನ್ನತ್ತ ಒಮ್ಮೆ ನೋಡಿದರು- +‘ಅಪ್ಪ…ಅಪ್ಪ.. ಅಲ್ಲಿ ಆ ಬಂಗಲೇನಲ್ಲಿ…’ ಅಪ್ಪ ನನ್ನ ಏದುಸಿರು ಸ್ವರವನ್ನು ಅರ್ಧಕ್ಕೆ ತುಂಡರಿಸಿ- +‘ಬಿಡು ಅವನ ಕೈನ…ಎಷ್ಟು ಸಾರಿ ಹೇಳ್ಬೇಕು, ಗಂಡು ಹುಡುಗರ ಜೊತೆ ತಿರುಗಬೇಡ ಅಂತ…’ ಅಪ್ಪನ ಗುದುಗಿನ ಗಡಸು ಸ್ವರ ಪ್ರತಿಧ್ವನಿಸಿತು.) +ಸರಕ್ಕನೆ ಕೈ ಎಳೆದುಕೊಂಡೆ, ಅಜಯನ ಬೆಚ್ಚನೆಯ ಮುಷ್ಟಿಯಿಂದ. ನನಗಾಗ ಎಂಟು ವರ್ಷ. +ಈಗ..ಇಪ್ಪತ್ತೆಂಟು. +* +* +* +ಮತ್ತೆ ಕಿಟಕಿಯಾಚೆ ನೋಡುತ್ತಾ ಕುಳಿತೆ. ಸುತ್ತಲಿನ ನಿಸರ್ಗ ನನ್ನ ಬೇರೊಂದೇ ಲೋಕದ ಭ್ರಮೆಗೆ ಒಡ್ಡಿತ್ತು. ಆಳದ ಕಣಿವೆ, ಹಾದಿಯ ನಡುವೆ ಜುಳು ಜುಳನೆ ಹರಿದು ಹಾಯ್ದ ನೂರಾರು ಸಣ್ಣ ಝರಿಗಳು. ಬಿಸಿಲಿನ ಪ್ರಥಮ ಸ್ಪರ್ಶಕ್ಕೆ ಅರಳಿ ನಿಂತ ಬಣ್ಣ ಬಣ್ಣದ ಹೂಗಳು. ನಾ ಬಿಟ್ಟು ಬಂದ ಪ್ರಯೋಗಾಲಯ, ಹ್ಯಾಂಗರ್‌ಗೆ ಜೋತು ಬಿದ್ದ ಬಸ್ಸುಗಳು, ಮುಗಿಲೆತ್ತರದಿಂದ ಫ್ಲಾಟ್‌ಗಳ ನಡುವೆ ತುಂಡು ತುಂಡಾದ ಆಕಾಶ…ಎಲ್ಲ ಅಸತ್ಯವೆನಿಸಿತು. ಕಡೆಗೆ ಕಿರಣ್, ಪುಟ್ಟಿ ಕೂಡ ಬೇರೊಂದೇ ಜನುಮದ ಸಂಬಂಧಗಳಂತೆ ಮಬ್ಬಾದರು. +ಸಂಜೆ ಕತ್ತಲು ಕಣಿವೆಗೆ ತಡೆದು ಬಂದಿತ್ತು. ಯಾವಾಗ ನನಗೆ ಮಂಪರು ಕವಿದು ನಿದ್ದೆ ಆವರಿಸಿತೋ ಗೊತ್ತಿಲ್ಲ. ಉಹುಂ… ಪೂರ್ಣ ನಿದ್ರೆಯಿಲ್ಲ… ಎಚ್ಚರವೂ ಇಲ್ಲ… ಹೊರಗಿನೆಲ್ಲ ಆಗುಹೋಗುಗಳ ಅರಿವಿದ್ದಂತೇ, ಒಂದು ಬೆರಳನ್ನೂ ಎತ್ತಲಾರದ ಅಲಸ್ಯದ ಮಂಪರು. ಕಣಿವೆಗಳಷ್ಟೆ ಭಾರವಾಗಿ ಮುಚ್ಚಿದ್ದವು. ಪಕ್ಕದಲ್ಲಿ ಅಜಯನ ಭದ್ರ ಇರುವು ಆಪ್ಯಾಯಮಾನವಾಗಿ ಅಮಲಿನಂತೆ. ಅಲ್ಲಿ ಜಮ್ಮುವಿನಲ್ಲಿ ಬಿಟ್ಟು ಬಂದ ಬಿಸಿಲಿನ ಧಗೆಯ ನೆನಪು ಇನ್ನೂ ಆರುವ ಮೊದಲೇ, ಕತ್ತಲೆಯ ರಾತ್ರಿಯೊಳಕ್ಕೆ ಬಸ್ಸು ನುಗ್ಗುತ್ತಿದ್ದಂತೆ, ಈ ಜೂನ್ ತಿಂಗಳ ಬೆಸಿಗೆಯಲ್ಲೂ ಕಣಿವೆಯ ಚಳಿ ಮೆಲ್ಲನೆ ಮೈ ಮುದುರಿತು. ಅಜಯ್ ಸೂಟ್‌ಕೇಸ್ ತೆರೆದ ಸದ್ದು. ಮರುಕ್ಷಣ ಅವನ ಎರಡೂ ಬಾಹುಗಳು ನನ್ನ ಸುತ್ತಿ ಬಳಸಿ ಶಾಲು ಹೊದಿಸಿದವು. ನಾ ಶಾಲಿನೊಳಗೆ ಬೆಚ್ಚನೆಯ ಕನಸಿಗಳಲ್ಲಿ ಮೈ ಮರೆತೆ. ಮೆಲ್ಲನೆ ತೂಕಡಿಸಿದೆ. ನನ್ನ ಬಳಸಿದ ಕೈಗಳು ತನ್ನ ಹೆಗಲಿಗೆ ನನ್ನ ತಲೆ ಅನಿಸಿತು. ಬೆಚ್ಚನೆಯ ಹಿಡಿತದಲ್ಲಿ ಮತ್ತೆಲ್ಲ ಮರೆತಿತ್ತು. ಈ ಕಣಿವೆಯ ಹಾದಿಯಲ್ಲಿ ಎಂಥಹದೋ ಮಾಂತ್ರಿಕ ಶಕ್ತಿ ಇತ್ತು. ಅಜಯ್‌ನಲ್ಲೂ ಕೂಡಾ, ಅವನ ಅಗಲ ಹಸ್ತ ಬಿಗಿಯಾಗಿ ಆದರೆ ಸಭ್ಯವಾಗಿ ನನ್ನ ಭುಜ ಹಿಡಿದಿತ್ತು. ನಾ ಮತ್ತೆ ಏಳ ಬಯಸಲಿಲ್ಲ. ಮಧ್ಯೆ ಹಾದಿಗೆ ಜೊತೆಯಾಯಿತು ಝೇಲಮ್ ನದಿ. ಕೆಳಗೆ ಆಳದಲ್ಲಿ ಹಾದಿಗೆ ಜೊತೆ ಜೊತೆಯಾಗಿ ಹರಿದಿತ್ತು. ರಾತ್ರಿಯ ನೀರವತೆಯಲ್ಲಿ ಎಂಥಾ ಸಶಬ್ದ ಸಡಗರದ ಸ್ವಾಗತ. +(‘ರಾಜೂ… ರಾಜೂ…’ ನನ್ನ ಎಂಟು ವರ್ಷದ ಪುಟಾಣಿ ಹೆಜ್ಜೆಗಳು ಆ ವಿಶಾಲವಾದ ಅಂಗಳದ ತುಂಬಾ ರಾಜುವನ್ನು ಹುಡುಕಿದವು. ರಾಜೂ ವಠಾರದಲ್ಲೆಲ್ಲೂ ಕಾಣಲಿಲ್ಲ. +‘ರಾಜೂ… ರಾಜೂ…’ ಬುಡಬುಡನೆ ಮೆಟ್ಟಿಲೇರಿದೆ. ಸುರುಳಿ ಸುರುಳಿ ಸುತ್ತಿದ ಮೆಟ್ಟಲುಗಳ ಹಾರಿ ತಾರಸಿಗೆ ಬಂದೆ. ರಾಜು ತಾರಸಿಯ ಮೂಲೆಯಲ್ಲಿ ಕುಳಿತು, ಜೇಬಿನಿಂದ ಒಂದೊಂದೇ ಗೋಲಿ ತೆಗೆದು ಎಣಿಸುತ್ತಿದ್ದ. ಬನ್ಣಬಣ್ಣದ ಗೋಲಿಗಳು…. ಕೆಂಪು… ಹಳದಿ… ಹಸಿರು… ನೀಲಿ… +ಮೆಲ್ಲನೆ ಬಳಿ ಸರುದು ಕುಳಿತೆ- +‘ನಂಗೆ ಕೊಡೋ…’ ಗೋಗರೆದೆ. +‘ಹೋಗೇ ನೀನ್ಯಾಕೆ ಬಂದೆ? ನಂಜೊತೆ ಆಡಿದ್ರೆ ನಿಮ್ಮಪ್ಪ ಹೊಡೀತಾರೆ…’ +ಅದು ಮರೆತೇ ಹೋಗಿತ್ತು, ನಿನ್ನೆ ತಾನೆ ಏಟು ತಿಂದ ಬಿಸಿ. ಬಾಲ್ಯಕ್ಕೆ ನೆನಪೆಷ್ಟು ಪುಟ್ಟದು. +‘ಅನೂ… ಏಯ್ ಅನು…’ ಅಪ್ಪನ ದನಿ. +‘ಬಂದೇ… ಬಂದೇ…’ ತಡಬಡಿಸಿ ಎದ್ದು ದುಡದುಡನೆ ಮೆಟ್ಟಿಲು ಇಳಿದೆ. +‘ಮತ್ತೆ ರಾಜೂ ಜೊತೆ ಹೋಗಿದ್ದೆಯಾ… ಹುಡುಗರೊಡನೆ ಮತ್ತೆ ಆಡಿದ್ರೆ ನೋಡು…’ +ಅಪ್ಪನ ಕೈ ಮೇಲೆದ್ದೇ ಬಿಟ್ಟಿತು… ಅಗಲಿಸಿ ಬಿಟ್ಟ ಕೆಂಡದುಂಡೆಯ ಕಣ್ಣುಗಳು…) +ತಟ್ಟನೆ-ಎದ್ದು ನೇರ ಕುಳಿತೆ. +ಅಜಯ್ ತಡವರಿಸಿದ. +‘ಮಲಕ್ಕೊಳ್ಳಿ… ಇನ್ನೂ ತುಂಬಾ ದೂರ ಇದೆ…’ ಮೃದುವಾಗಿ ಹೇಳಿದ. ನಾ ಮೆಲ್ಲನೆ ಅವನ ಮಡಿಲಲ್ಲಿ ತಲೆ ಊರಿದೆ. ಅಪ್ಪನ ಮುಖವನ್ನು ಸರಿಸಲೆತ್ನಿಸಿದೆ. ರಾಜೂ… ಅವನ ಬಣ್ಣದ ಗೋಲಿಗಳ ಎಣಿಸತೊಡಗಿದೆ. ಭೂತ ಬಂಗಲೆಯಲ್ಲಿ ನೋಡದೆ ಬಿಟ್ಟ ಕೋಣೆಗಳ ಲೆಕ್ಕ ಇಡಲು ಪ್ರಯತ್ನಿಸಿದೆ. ಅವನ ಮಡಿಲ ಬಿಸಿಯಲ್ಲಿ ನನ್ನ ಬಾಲ್ಯ ನಚ್ಚಗೆ ಬಿಚ್ಚಿಕೊಳ್ಳತೊಡಗಿತು-ಹುಸಿ ಸತ್ಯವೆಂಬಂತೆ. +(ಅಪ್ಪನ ಪುತ್ರಕಾಮೇಷ್ಟಿ ಯಾಗದ ಫಲವಾಗಿ ನನ್ನ ಮೇಲೆ ಆರು ಜನ ಅಕ್ಕಂದಿರು. ವರ್ಷ ವರ್ಷ ಒಂದಲ್ಲ ಒಂದು ಅಕ್ಕನ ಬಸಿರು, ಬಾಣಂತಿತನ. ನಿವೃತ್ತರಾದಾಗಲಿಂದ ಅಪ್ಪ ವೆರಾಂಡಾದಲ್ಲೋ, ಇಲ್ಲ ಹೊರಗೆ ಕಲ್ಲು ಬೆಂಚಿನ ಮೇಲೋ ಕುಳಿತು ವೇದಾಂತ ಹೇಳುತ್ತಲೋ, ಕಂಠಪಾಠವಾದ ಶ್ಲೋಕಗಳ ಉದಾಹರಿಸುತ್ತಲೋ, ಮಹಾತ್ಮರ ನುಡಿಕಟ್ಟುಗಳ ಒಪ್ಪಿಸುತ್ತಲೋ, ಪುರಾಣದ ಪುಣ್ಯ ಕಥೆಗಳ ಅಂತರಾರ್ಥ ಬಣ್ಣಿಸುತ್ತಾ, ಆದರ್ಶ ಜೀವನ, ನಿಷ್ಕಾಮ ಜೀವನಗಳ ಬಗ್ಗೆ ಕೊರೆಯುವಾಗೆಲ್ಲ, ಈ ಅಪ್ಪ ನಾವು ಏಳು ಜನರ ಹುಟ್ಟಿಸಿದ್ಹೇಗೆ ಅನಿಸಿಬಿಡುತ್ತಿತ್ತು. ನಾವು ಹೈಸ್ಕೂಲಿನಲ್ಲಿದ್ದ ಸಮಯ. ಮೊಟ್ಟಮೊದಲಿಗೆ ಕನ್ನಡ ಪತ್ರಿಕೆಯೊಂದು ಅರೆ ಎದೆ ತೆರೆದ ಹೆಣ್ಣಿನ ಮುಖಪುಟ ಹಾಕಿದ್ದು ನೋಡಿದಾಗ, ಅಪ್ಪ ಪೂರಾ ಐದು ನಿಮಿಷ ಮುಖಪುಟವನ್ನೇ ದುರುಗುಟ್ಟಿ ನೋಡಿ, ಕಂಡಾಬಟ್ಟೆ ಕೆಂಡ ಕಾರಿ ‘ನಮ್ಮ ಸಂಸ್ಕೃತಿ ಯಾವ ಮಟ್ಟಕ್ಕಿಳೀತು…’ ಎಂದು ಉಗಿದು ದೂರ ಉಗಿದದ್ದೂ, ಅದೇ ಪತ್ರಿಕೆ ‘ಗುಪ್ತ ಸಮಾಲೋಚನೆ’ಗಳನ್ನು ಆರಂಭಿಸಿದ್ದೇ ತಡ ಆ ಪತ್ರಿಕೆಗೆ ನಮ್ಮನೆಯಲ್ಲಿ ಬಹಿಷ್ಕಾರ ಬಿದ್ದದ್ದೂ, ಏಕೋ, ನಿನ್ನೆ ಮೊನ್ನೆ ನಡೆದಂತೆ ನೆನಪಾಗುತ್ತದೆ. ಅಪ್ಪಿತಪ್ಪಿ ನನ್ನ ಕಿಶೋರದ ಕುತೂಹಲಕ್ಕೆ ಲಲ್ಲಿ ಮನೆಯಿಂದ ಪುಸ್ತಕ ಕದ್ದು ತಂದು ಓದುವಾಗ ಅಕ್ಕಂದಿರು ತರಾಟೆಗೆ ತೆಗೆದುಕೊಂಡು ‘ಅಪ್ಪಂಗೆ ಹೇಳ್ತೀನಿ’ ಹೆದರಿಸಿದ್ದು ನೆನಪಾದಾಗಲೆಲ್ಲ, ಈ ಅಕ್ಕಂದಿರಿಗೆ ವರ್ಷಾ ವರ್ಷಾ ಮಕ್ಕಳು ವರಪ್ರಸಾದದಿಂದಲೇ ಹುಟ್ಟುತ್ತವೇನೋ ಅನಿಸಿಬಿಡುತ್ತಿತ್ತು. +ಕಡೆಗೆ ನಾ ಬದುಕಿನ ಬಗ್ಗೆ ಕಲಿತದ್ದಾದರೂ ಹೇಗೆ- +ಏಳು ಹೆತ್ತ ಅಮ್ಮನಿಂದಲ್ಲ. ಎಡಬಿಡದೆ ಬಾಣಂತಿ ಕೋಣೆ ತುಂಬಿದ ಅಕ್ಕಂದಿರಿಂದಲ್ಲ. ಅಲ್ಲೆಲ್ಲ ಮುಟ್ಟದೇ ಹುಟ್ಟಿದ್ದ ದಿವ್ಯ ಮಡಿವಂತಿಕೆ ಇತ್ತು. ನಾ ಬದುಕಿನ ಬಗ್ಗೆ ಕಲಿತದ್ದೇ, ಇಂಥಾ ಪತ್ರಿಕೆಗಳಿಂದ- ವಿಷಮ ಸಂಬಂಧಗಳಿಗೆ ಉತ್ತರ ಬಯಸಿದ ಪ್ರಶ್ನೆಗಳ ಅಂಕಣದಿಂದ. ಸತ್ಯವೋ ಕಲ್ಪಿತವೋ ಆದ ಪತ್ರಿಕೆಗಳ ಪ್ರೇಮ-ಕಾಮದ ವಿಕೃತ ಚಿತ್ರದಿಂದಲೇ ನನ್ನ ಯೌವ್ವನದ ಕ್ಯಾನ್‌ವಾಸ್ ತುಂಬಿತು. ಯಾರೊಂದಿಗೂ ಹೇಳಬಾರದ, ಹಂಚಲಾರದ ಒಳಗೊಳಗೇ ಅನುಮಾನವಾಗಿ, ಆತಂಕವಾಗಿ, ಅಸಹ್ಯವಾಗಿ ಘನವಾದ ಗಂಡು-ಹೆಣ್ಣಿನ ಸಂಬಂಧಗಳು. +ಇಂಥಾ ಅಪ್ಪ… ಎಂಟು ವರ್ಷದ ರಾಜುವಿನೊಡನೆ ಆಡಗೊಡದ ಅಪ್ಪ, ಗೆಳತಿಯರ ಅಣ್ಣಂದಿರೊಡನೆ ಬಸ್ ಸ್ಟಾಪಿನಲ್ಲಿ ಮಾತನಾಡಿದ್ದನ್ನೇ ದೊಡ್ಡ ರಾದ್ಧಾಂತ ಮಾಡಿದ ಅಪ್ಪ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನೆಲ್ಲ ಕಪಾಟಿನ ತುಂಬಾ ತುಂಬಿ ಧೂಳು ಹಿಡಿಸಿದ ಅಪ್ಪ, ಗಂಡಿನ ನೆರಳು ಕೂಡ ಸುಳಿಯದಂತೆ ಏಳು ಜನ ಪುತ್ರಿಯರನ್ನು ಸರ್ಪಕಾವಲಾಗಿ ಕಾದ ಅಪ್ಪ-ಶುದ್ಧ ಅಪರಿಚಿತ ಗಂಡಿನೊಡನೆ ನನ್ನ ತಳ್ಳಿ ಅಗಳಿ ಇಟ್ಟರು-ಆತನೊಡನೆ ನನ್ನ ವಿವಾಹ ಆಯಿತು, ಎಂಬುದೊಂದೇ ಕ್ಷುಲ್ಲಕ ಕಾರಣಕ್ಕೆ. ಆ ಗಂಡಸಿನೊಡನೆ ನಾ ಹೇಗೆ ವರ್ತಿಸಬೇಕು ಎಂದು ಊಹಿಸಿದ್ದರೋ ದೇವರಿಗೇ ಗೊತ್ತು.) +ಶ್ರೀನಗರ ತಲುಪಿದಾಗ ರಾತ್ರಿ ಮೂರು ಗಂಟೆ. ಕಣಿವೆಯ ಚಳಿ ಜೂನ್ ತಿಂಗಳಲ್ಲೂ ಮೈ ನಡುಗಿಸಿತು. ಬಸ್ಸಿಂದ ಇಳಿದು, ನಡು ಹಾದಿಯಲ್ಲಿ ನಿಂತೆವು. ಸುತ್ತಲೂ ಗಿಡಗಂಟಿಗಳು, ಎದುರು ‘ಟೂರಿಸ್ಟ್ ಸೆಂಟರ್’. ಇಳಿದದ್ದೇ ತಡ ‘ಆ ಜಾವೋ ಸಾಬ್, ಹಮಾರಾ ಯಹಾ ಡಬಲ್ ಬೆಡ್ ಕಮರಾ ಹೈ…’ ಅಂತ ನಮ್ಮ ಹಿಂದೆ ಮುಂದೆ ಸುಳಿದಾಡಿದ ವಿಲಕ್ಷಣ ವ್ಯಕ್ತಿಗಳನ್ನು ತಡೆಯುತ್ತಾ, ನೇರ ಟೂರಿಸ್ಟ್ ಸೆಂಟರ್ ಅತ್ತ ನಡೆದೆ. ಎಲ್ಲ ಮುಚ್ಚಿ ರಾತ್ರಿಯ ಕೊರೆವ ಚಳಿಯಲ್ಲಿ ತಣ್ಣಗೆ ಮಲಗಿದ್ದವು. ‘ಬನ್ನಿ ಸಾಬ್ ಸೊಗಸಾದ ಹೌಸ್ ಬೋಟ್ ಇದೆ. ಬಿಸಿನೀರು, ಕಾಫಿ, ಟೀ, ನಾಷ್ಟಾ ಎಲ್ಲಾ ಸಿಗುತ್ತೆ…’ಬಡಬಡಿಸುತ್ತಲೇ ಇದ್ದ ಆ ಎತ್ತರದ ಕಾಶ್ಮೀರಿ ತರುಣ. ಅಜಯ್ ನನ್ನತ್ತ ಒಮ್ಮೆ ನೋಡಿ, ಮತ್ತೆ ಗತ್ಯಂತರವೇ ಇಲ್ಲದೆ, ಆ ವ್ಯಕ್ತಿಯ ಹಿಂಬಾಲಿಸಿ ರಿಕ್ಷಾ ಏರಿದ. ರಿಕ್ಷಾ ಹೊರಟಿತು, ವಿಶಾಲ ರಸ್ತೆಗಳನ್ನು ದಾಟಿ ಗಲ್ಲಿಗಳಿಗೆ ನುಗ್ಗಿತು. ಎಡಬದಿಗೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿಡಗೆಂಟೆ, ಪೊದೆ…ಬಲಕ್ಕೆ ಅಂಥಹುದೇ ಗಿಡ, ಮರ ಸಂದಿಗಳ ನಡುವೆ ಮೆಲ್ಲ ಮೆಲ್ಲನೆ ಮಿರುಗಿದ ಝೇಲಂನ ನಿಶ್ಯಬ್ದ ನೀರು. ಇಲ್ಲಿ ಮನುಷ್ಯರ ಸುಳಿವೇ ಇಲ್ಲವೆಂಬಂಥಾ ಕಾನನ ಮೌನ. ರಾತ್ರಿಯ ಸೆರಗಿನಲ್ಲಿ ಅಪರಿಚಿತ ನಗರಗಳು ಎಷ್ಟು ಭಯಂಕರವಾಗಿ ಕಾಣುತ್ತವೆ. ಈ ತಿರುವಿನಲ್ಲಿ. ಆ ತಿರುವಿನಲ್ಲಿ ಭಯದ ಭೂತಗಳು ಉದ್ದುದ್ದದ ನೆರಳಾಗಿ ಓಲಾಡುತ್ತವೆ, ನನ್ನ ಬಾಲ್ಯದ ಭೂತಗಳಂತೆ. ಅಂಥದ್ದೇ ಗಲ್ಲಿಯೊಂದರ ನಡುವೆ ಆಟೋ ನಿಂತಿತು. ಸುತ್ತ ಮುತ್ತಲೂ ಜನ ಸಂಚಾರವಗಲೀ, ಬೀದಿ ದೀಪಗಳಾಗಲೀ ಇಲ್ಲದ ಕತ್ತಲ ಹಾದಿ. ಕೆಳಗಿಳಿದು ನೋಡಿದೆ. ಒಂದಿಷ್ಟು ಅರೆಬರೆ ಮೆಟ್ಟಿಲುಗಳು. ತೀರದಿಂದೊಂದಿಷ್ಟು ದೂರದಲ್ಲಿ ನೀರಿನ ಮೇಲೆ ನವಿರಾಗಿ ಹೊಯ್ದಡುತ್ತಿದ್ದ ಹೌಸ್‌ಬೋಟ್. ಅದರೊಳಗಿಂದ ಮೆಲ್ಲನೆ ಮಿಣುಕಿದ ಸಣ್ಣ ದೀಪಗಳು. ಈ ವಿಲಕ್ಷಣ ರಾತ್ರಿಯಲ್ಲಿ, ಕಪ್ಪು ನೀರಿನ ನಡುವೆ ಒಂಟಿ ತೇಲಿದ ಆ ಹೌಸ್‌ಬೋಟ್ ನಾ ಪುಸ್ತಕದಲ್ಲಿ ಓದಿದ ಕಾಶ್ಮೀರಿ ಶಿಕಾರಿಗಳ ರಮ್ಯ ಚಿತ್ರವಂತೂ ಖಂಡಿತಾ ಆಗಿರಲಿಲ್ಲ. ವಿಧಿ ಇಲ್ಲದೆ, ಈ ರಾತ್ರಿ ಹೇಹಾದರೂ ಮುಗಿದರೆ ಸಾಕೆಂದು ಅಜಯನ ಹಿಂಬಾಲಿಸಿದೆ. ದಡದಿಂದ ದೋಣಿಗೆ ಒಂದು ಕಿರಿದಾದ ಹಲಗೆ ಹಾಕಲ್ಪಟ್ಟಿತ್ತು. ಅಜಯ್ ತಟ್ಟನೆ ನನ್ನ ಕೈ ಹಿಡಿದು ಲಡಾಬಡಾಗುಟ್ಟಿದ ಹಲಗೆಯನ್ನು ದಾಟಿಸಿದ. ಒಳಗೆ ವೆರಾಂಡಾ, ಒಂದಿಷ್ಟು ಓಣಿ, ನಂತರ ಡಬಲ್ ಬೆಡ್‌ಗಳ ಕೊಠಡಿ. +‘ಗರಮ್ ಪಾನಿ ಮಿಲೇಗ ಸಾಬ್, ಬಾತ್‌ರೂಮ್ ಅಟ್ಯಾಚ್‌ಡ್ ಹೈ ಸಾಬ್…’ ಅವ ಮತೊಮ್ಮೆ ಒಪ್ಪಿಸಿ ‘ಗುಡ್‌ನೈಟ್ ಸಾಬ್’ ಎಂದು ಹೊರನಡೆದ. ಕೋಣೆ ನನ್ನ ಊಹೆಗೂ ಮೀರಿ ವಿಶಾಲವಾಗಿಯೇ ಇತ್ತು. ಮರದ ಗೋಡೆಗಳ ಹಳೆಯ ಹಲಗೆಗಳ ಮಂಕುಬಣ್ಣ ಕಣದಂತೆ ಕಾಶ್ಮೀರದ ವಿವಿಧ ಪೋಸ್ಟರ್‌ಗಳನ್ನು ಬಲವಾಗಿ ಮೆತ್ತಲಾಗಿತ್ತು. ಒಂದು ಮೂಲೆಗೆ ದೊಡ್ಡ ಕನ್ನಡಿ. ಮಧ್ಯೆ ಎರಡು ಹಾಸಿಗೆಗಳು, ಕಾಶ್ಮೀರಿ ಕಡಾಯಿ ಹಾಕಲಾಗಿದ್ದ ಬಣ್ಣ ಬಣ್ಣದ ದಪ್ಪ ಹೊದಿಕೆ. ಸ್ವಲ್ಪ ದೂರಕ್ಕೆ ಒಂದು ಸೋಫಾ, ಸಣ್ಣ ಮೇಜು. ತಟ್ಟನೆ ಎಲ್ಲಿಯೋ ಕೈದಿಯಾದಂತೆ ಹಾಸಿಗೆಯ ಮೇಲೆ ಕುಳಿತೆ. ಸಣ್ಣ ಕಿಟಿಕಿಗಳಾಚೆ ಬರೀ ಕತ್ತಲು. ಕೆಳಗೆ ಝೇಲಮ್‌ನ ಜುಳುಜುಳು ಸದ್ದು ಮಾತ್ರ ಅತಿ ನವಿರಾಗಿ ತೇಲುತ್ತಿದ್ದ ನಮ್ಮ ರಾತ್ರಿಯನ್ನು ನೆನಪಿಸುತ್ತಿತ್ತು. ನನ್ನ ಆತಂಕ ಇಳಿದೇ ಇರಲಿಲ್ಲ… ಈ ನಡು ರಾತ್ರಿಯಲ್ಲಿ ವಿಲಕ್ಷಣ ಗಲ್ಲಿಯಲ್ಲಿ, ತೇಲುತ್ತಿರುವ ನಾಜೂಕು ಕೋಣೆಯಲ್ಲಿ ಅಜಯನೊಡನೆ… +( ಇಂಥಹುದೇ ಒಂದು ರಾತ್ರಿ ಇತ್ತು. ಮಲಗಿದರೆ ಸಾಕೆಂಬ ರಾತ್ರಿ… ಕಿರಣನೊಡನೆ… +ಅದು ಕೂಡಾ, ಮದುವೆಯ ಮುಂದುವರೆದ ಸಂಪ್ರದಾಯ. ಕೋಣೆ ಹೊಕ್ಕಾಗ ಎರಡು ಮಂಚ, ಒಂದಿಷ್ಟು ಸಿಹಿ ತಿಂಡಿ, ಗಂಧದ ಕಡ್ಡಿ, ಹಾಲಿನ ಲೋಟ ಕರಾರುವಕ್ಕಾಗಿ, ನಿರ್ಲಿಪ್ತವಾಗಿ ಜೋಡಿಸಲ್ಪಟ್ಟಿದ್ದವು. ಇದ್ದದ್ದು ಇಷ್ಟೇ ಅಲ್ಲ. ಗೋಡೆಯ ಮೇಲೆ ಮಂಚದತ್ತಲೇ ದುರುಗುಟ್ಟಿ ನೋಡುತ್ತಿದ್ದ ತಾತ-ಅಜ್ಜಿಯರ ೧ ೧/೨ ಇಂಟು ೨ ಅಡಿಯ ಕಟ್ಟು ಹಾಕಿದ ಚಿತ್ರ. ಪಕ್ಕಕ್ಕೆ ಲಕ್ಷ್ಮಿ, ಸರಸ್ವತಿ ಗಣೇಶರ ಹೂ ಏರಿಸಿದ ದೊಡ್ಡ ಪಟ. ಬಾಗಿಲ ಹೊರಗೇ, ಮನೆ ತುಂಬಾ ತುಂಬಿ ನಿಂತಿದ್ದ ಅಕ್ಕಂದಿರು, ಭಾವಂದಿರು, ತಲಾ ಎರಡೆರಡು ಪಿಳ್ಳೆಗಳು, ನಿಲ್ಲದ ನಿರರ್ಗಳ ಗದ್ದಲ, ಗಲಾಟೆ. ವಾಹ್ ಎಂಥ ರೊಮಾಂಟಿಕ್ ರಾತ್ರಿ! ಕಿರಣ್ ನನ್ನ ಕೈ ಸ್ಪರ್ಷಿಸುವುದಕ್ಕಿಲ್ಲ ‘ಪ್ಲೀಸ್…’ ಎಂದು ಕೊಸರಿದೆ. ಏಕೆ ಎಂಬಂತೆ ನೋಡಿದ. ‘ತಾತ-ಅಜ್ಜಿ ನೋಡ್ತಾ ಇದ್ದಾರೆ’ ಫೋಟೋದತ್ತ ಕೈ ತೋರಿಸಿ ಹೇಳಿದೆ. ಕಿರಣ್ ಗಹಗಹಿಸಿ ನಕ್ಕ. ಹೊರಗೆ ಕೇಳಿಸೀತೆಂದು ನಾನು ಅವನ ಬಾಯಿ ಮುಚ್ಚಿದೆ. ಮೆಲುವಾಗಿ ನನ್ನ ಕೈ ಹಿಡಿದ. ‘ಹೆದರಬೇಡ, ನಮ್ಮ ಬೆಂಗಳೂರ ಫ್ಲಾಟಿನಲ್ಲಿ ತಾತ-ಅಜ್ಜಿ, ಲಕ್ಷ್ಮಿ, ಗಣಪತಿಯರ ಭಯ ಇಲ್ಲ’ ಅಂದ. ಮತ್ತೆ ‘ತುಂಬಾ ಸುಸ್ತಾಗಿದ್ದೀಯ, ಬೆಳಗ್ಗಿಂದಾ ಹೊಗೆ ಕುಡಿದು, ಮಲಗು’ ಎಂದು ದೀಪವಾರಿಸಿದ. +ಭಯವಿತ್ತು…ಬೆಂಗಳೂರಿನ ಫ್ಲಾಟಿನಲ್ಲಿಯೂ. ನಾ ಭಯವನ್ನು ಜೊತೆಗೇ ತಂದಿದ್ದೆ ಬಾಲ್ಯದಿಂದ. ಬಿದಿರು ಮೆಳೆಗಳ ಭೂತಬಂಗಲೆಯಿಂದ. ಅಪ್ಪನ ಕೆಂಡದುಂಡೆಯ ಕನ್ಣುಗಳು ಅಗಳಿ ಇಟ್ಟ ನಮ್ಮ ಬೆಡ್‌ರೂಮಿನ ಒಳಗೂ ನುಗ್ಗಿಬಿಡುತ್ತಿದ್ದವು.) +ಈ ಕಪ್ಪು ರಾತ್ರಿಯಲ್ಲಿ ಕೆಂಡದುಂಡೆಯ ಕಣ್ಣುಗಳೆರಡು ಅತ್ಯಂತ ನಿಷ್ಠುರವಾಗಿ ನಮ್ಮನ್ನು ಕಾಯುತ್ತಿದ್ದಂತೆ ಅನಿಸಿ, ಎದ್ದು ನೇರ ಕುಳಿತೆ. +‘ನೀವು ಮಲಗಿ ಅನು…’ ಅಜಯನ ದನಿ ಕೇಳಿ ಎಚ್ಚೆತ್ತೆ. ‘ನನಗಂತೂ ನಿದ್ದೆ ಹಾರಿ ಹೋಗಿದೆ. ಆಗಲೇ ಮೂರೂವರೆ ಗಂಟೆ, ಬೆಳಗಾಗಲಿ ಬೇರೆ ಕಡೆ ನೋಡೋಣ. ನಮ್ಮ ಕಾನ್‌ಫರೆನ್ಸ್ ವ್ಯವಸ್ಥಾಪಕರೇ ಸಿದ್ಧತೆ ಮಾಡಬಹುದು’ ಅಂದ. +‘ನೀವೂ ಮಲಗಿಬಿಡಿ, ಸುಸ್ತಾಗಿದ್ದೀರ…’ ಅವ ಸೋಫಾದ ಮೆಲೆ ಹಾಗೇ ಉರುಳಿದ. ನಾ ಬೆಡ್‌ಶೀಟ್ ತೆಗೆದುಕೊಟ್ಟೆ. ನಾನಿನ್ನೂ ಕುಳಿತೇ ಇರುವುದನ್ನು ನೋಡಿ- +‘ನೀವು ಬಟ್ಟೆ ಬದಲಿಸಬೇಕಾ… ನಾ ಬೇಕಾದರೆ ಹೊರಗೆ ಹೊಗುತ್ತೇನೆ…’ ಏಳಲು ಹೊರಟ. +‘ಇಲ್ಲ.. ಇಲ್ಲ.. ಹೀಗೆ ಇರಲಿ, ಇನ್ನೇನು ಎರಡು ಮೂರು ಗಂಟೆ ತಾನೆ…’ ನಾ ಸೀರೆ ಬದಲಿಸದೆ ಹಾಗೇ ಹಾಸಿಗೆಯ ಮೇಲೆ ಉರುಳಿದೆ. ದೀಪ ಉರಿಯುತ್ತಲೇ ಇತ್ತು. ಆಯಾಸದಿಂದ ಕಣ್ಣುಗಳು ಮುಚ್ಚಿದರೂ ವಿಚಿತ್ರ ಭಯ. ಯಾರೋ ನಾಲ್ವರು ಧಾಂಡಿಗರು ಬಾಗಿಲು ಒದ್ದುಕೊಂಡು ಬಂದಂತೆ… ಧಡಾ ಧಡಾ ಬಡಿದಂತೆ… ದುಃಸ್ವಪ್ನಗಳ ನಡುವೆಯೇ ನಿದ್ದೆ ಆವರಿಸಿತ್ತು. +* +* +* +ದಿನಾಂಕ ೨, ಜೂನ್, ೧೯೮೯ +ಮರುದಿನ, ಸೂರ್ಯ ಕಿರಣ ಕೆನ್ನೆಯ ಮೇಲೆ ಚುರುಗುಟ್ಟಿದಾಗ ಕನ್ಣುಬಿಟ್ಟೆ. ಪಕ್ಕಕ್ಕೆ ತಿರುಗಿದೆ. ಸೋಫಾ ಖಾಲಿಯಾಗಿತ್ತು. ಒಳಗೆ ಬಚ್ಚಲಲ್ಲಿ ನಲ್ಲಿ ನೀರಿನ ಸದ್ದು. ಮೆಲ್ಲನೆ ಎದ್ದು ಕುಳಿತೆ. ಕಿಟಿಕಿಯ ಪರದೆ ಸರಿಸಿ ಹೊರಗಿಣುಕಿದೆ. ‘ಮೈ ಗಾಡ್…’ ನನಗರಿವಿಲ್ಲದೆ ಹೊರಟ ಉದ್ಗಾರ. ಬಾಗಿಲು ತೆರೆದು ಹೌಸ್‌ಬೋಟಿನ ಹೊರ ಆವರಣಕ್ಕೆ ಓಡಿ ಬಂದೆ. ರಾತ್ರಿಯ ಕತ್ತಲಲ್ಲಿ ದುಃಸ್ವಪ್ನವಾಗಿ ಕಾಡಿದ ಅಪರಿಚಿತ ನಗರಿ, ಮುಂಜಾನೆಯ ಹೊಗಿರಣದಲ್ಲಿ ಫಳ ಫಳ ಹೊಳೆದ ಝೇಲಮ್‌ನ ಬಂಗಾರದ ಬಣ್ಣದಲ್ಲಿ, ಹಸಿರ್ಹಸಿರಾಗಿ ತೂಗಾಡಿದ ಗಿಡಮರಗಳ ನಡುವೆ, ರಾಶಿ ರಾಶಿ ಬಳ್ಳಿ ಗುಲಾಬಿ, ಹೆಸರಿಸದ ಹೂ ಗೊಂಚಲ ಮಡಿಲಲ್ಲಿ. ಕಾಶ್ಮೀರದ ಸ್ವರ್ಗೀಯ ಬೆಳಗು ಕಣ್ಣು ಬಿಡುತ್ತಿತ್ತು. ಇರುಳ ನೆರಳುಗಳೆಲ್ಲ ಚೆದುರಿ ಚೆಲ್ಲಾಪಿಲ್ಲಿಯಾಗಿ, ಸುತ್ತಲೂ ಕಣ್ಣು ಹಾಯಿಸಿ ನಿಂತೆ. ದಡದಿಂದ ಕೊಂಚವೇ ದೂರದಲ್ಲಿ ತಗಡಿನ ಮನೆಯ ಒಳಗಿನಿಂದ ಮಕ್ಕಳ ಚಿಲಿಪಿಲಿ ಸದ್ದು, ಮುರುಕು ಕಿಟಿಕಿಯ ಕಸೂತಿ ಹಾಕಿದ ಹರಕು ಪರದೆ ಸರಿಸಿ, ಕೆಂಪು ಫೆರೆನ್ ಏರಿಸಿದ ಸುಂದರ ಹೆಂಗಸು ಹೊರಗಿಣಿಕಿ- +‘ಕಾಫಿ, ಚಾಯ್, ಕಾವಾ… ಏನು ಬೆಕು ಮೇಮ್‌ಸಾಬ್…’ ಕೂಗಿದಳು. ರಾತ್ರಿ ಕರೆತಂದ ಆತನ ಹೆಂಡತಿ ಇರಬೇಕು. ತಲೆ ಆಡಿಸಿದೆ. ಒಳಗಿಂದ ಮುಖ ತೊಳೆದು ಹೊರಬಂದ ಅಜ್ಯ್. +‘ಗುಡ್ ಮಾರ್ನಿಂಗ್…’ ಎಂದು ಮುಗುಳ್ನಕ್ಕ. +‘ಎಷ್ಟು ಸುಂದರವಾಗಿದೆ…’ ನಾ ಪೂರಾ ಮೈಮರೆತು ಹೇಳಿದೆ. ರಾತ್ರಿ ಇದೇ ಸ್ಥಳ ಎಷ್ಟು ಭಯಂಕರವಾಗಿ ಕಂಡಿತ್ತು. ಈಗ ಊಹಿಸುವುದೂ ಹಾಸ್ಯಾಸ್ಪದವಾಗಿತ್ತು. +‘ನಾನೂ ಮುಖ ತೊಳೆದು ಬರ್ತೇನೆ….’ ಬಾತ್‌ರೂಂ ಹೊಕ್ಕೆ. ನೇರ ನಿಂತ ನಲ್ಲಿ ತಿರುಗಿಸಿದೆ. ಧಾರಾಳ ನೀರು ಸುರಿಯಿತು. ಆಚೆಗೆ ಒಂದು ರಂದ್ರ-ನೇರ ತಳದ ಝೇಲಮ್‌ಗೆ… ಇಸ್ಸಿ ಎನಿಸಿ ಹೇಗೋ ಹಲ್ಲುಜ್ಜಿ ಮುಖ ತೊಳೆದು ಹೊರ ಬಂದೆ. +‘ಸ್ನಾನಕ್ಕೆ ಬಿಸಿ ನೀರು ತರಿಸಲೆ?’ ಅಜಯ್ ಕೇಳಿದ. +‘ಬೇಡ… ಇಲ್ಲಿ ಹಿಡಿಸೋಲ್ಲ. ಯಾವುದಾದರೂ ನೆಲದ ಮೇಲಿರೋ ಕೋಣೆ ಹಿಡಿಯೋಣ…’ ಅಂದೆ. +‘ಓ. ಕೆ. ಹಾಗಾದ್ರೆ ತಯಾರಾಗಿ…’ +ಏಳೂವರೆಗೆಲ್ಲ ಸಿದ್ಧವಾಗಿ ಹೊರಟು ನಿಂತಾಗ, ಆತ ಓಡೋಡಿ ಬಂದ-‘ಏಕೆ ಸಾಬ್… ಇಲ್ಲಿ ಎಲ್ಲ ವ್ಯವಸ್ಥೆ ಇದೆ. ಗರಮ್ ಪಾನಿ…’ ಮತ್ತೊಮ್ಮೆ ಪ್ರಾರಂಭಿಸಿದ. +‘ಹಮೆ ಜಾನಾ ಹೈ…’ ಎಂದಶ್ಟೆ ಹೇಳಿದೆ. ೧೫೦ ರೂಪಾಯಿ ಹಾಕಿದ ಬಿಲ್ ಕೈಗಿಟ್ಟ. ಅಜಯ್ ಜೇಬಿಗೆ ಕೈ ಹಾಕಿದ. ನಾ ತಡೆದು, ಪರ್ಸ್‌ನಿಂದ ಎಣಿಸಿ ಕೊಟ್ಟೆ. ಅಜಯ್ ಅಭ್ಯಂತರ ಹೇಳಲಿಲ್ಲ. ಸುಮ್ಮನೆ ನಕ್ಕ. ಏರ್‌ಬ್ಯಾಗ್ ಹಿಡಿದು ನಡೆದೆ. +ತೆರೆದು ನಿಂತ ಕಾಶ್ಮೀರದ ಬಾಹುಗಳಲ್ಲಿ ಎಂಥವುದೋ ಮಾಂತ್ರಿಕ ಶಕ್ತಿ ತುಂಬಿತ್ತು. ಪುಟ್ಟ ಪುಟ್ಟ ಮನೆಗಳು, ನದಿಯ ಎರಡೂ ಬದಿಗೆ ಬಣ್ಣ ಬಣ್ಣದ ಹೌಸ್ ಬೋಟುಗಳು. ಪ್ರಕೃತಿಯ ಅಮಾಲಿನ್ಯ ಸಹಜತೆ. ಹಾದಿಬದಿಯ ಗುಲಾಬಿ ಕಿತ್ತು ಅಜಯ್ ನನ್ನ ಕೈಗಿಟ್ಟ. ಕಣ್ಣೆತ್ತಿ ನೋಡಿದೆ. ತೆರೆದ ನೀಲಿ ಆಗಸ. ಸುತ್ತ ಬೆಟ್ಟಗಳ ಸರಹದ್ದು. ಮುಗಿಲಿಗೆ ಮುತ್ತಿಟ್ಟು ನಿಂತ ಚಿನಾರ್ ವೃಕ್ಷಗಳು. ಬೆಂಗಳೂರಿನ ಫ್ಲಾಟ್‌ಗಳ ನಡುವೆ ಇಣುಕಿದ ಹರಕು ಮುರುಕು ಆಗಸವಲ್ಲ. ಫ್ಯಾಕ್ಟರಿ ಸೈರನ್ನಿಗೆ ಕೀಲಿ ಕೊಟ್ಟ ಜೀವಂತ ರೊಬಾಟ್‌ಗಳ ತಡಬಡಿಸಿದ ಓಡಾಟವಿಲ್ಲ. ಒಳಗೆಲ್ಲೋ ಉದ್ಭವಿಸಿ ಚಿಮ್ಮುವ ಪ್ರೇಮ-ಕಾಮಗಳಿಗೆ ಹೊದಿಸಿ ಮುದುರಿಡುವ ಪಟ್ತಣದ ಪ್ರಾಯಾಸವಿಲ್ಲ. ಅಜಯ್ ಕೈ ನೀಡಿದ. ಕ್ಷಣ ಕೂಡಾ ಅಳುಕದೆ, ಅವನ ಬಿಸಿ ಹಸ್ತದಲ್ಲಿ ಕೈ ಇಟ್ಟು ನಡೆದುಬಿಟ್ಟೆ. +ನಮ್ಮ ನಡುವೆಯೊಂದು ಕಿಡಿ ಇತ್ತು. ಹೊತ್ತಿ ಉರಿಯಲು ಭುಗಿಲೆದ್ದು ಆಸ್ಪೋಟಿಸಲು ಕಾದಿದ್ದ ಕಿಡಿ. ನನಗೆ ಆ ಆಸ್ಪೋಟ ಮುಖ್ಯವಿರಲಿಲ್ಲ. ಆ ಸಾಧ್ಯತೆಯ ಅರಿವಷ್ಟೇ ಸಾಕಿತ್ತು ಖುಶಿ ಕೊಡಲು. ತಣ್ಣಗೆ ಮಲಗಿದ್ದ ನನ್ನೊಳಗಿನ ಅಗ್ನಿಪರ್ವತದ ಮೊಟ್ಟ ಮೊದಲ ಅನುಭವವಾಗಿತ್ತು. ಅಪ್ಪ ಹಾಕಿದ ಬೇಲಿ ಅಲ್ಲೆಲ್ಲೊ ಬೆಂಗಳುರಲ್ಲೆ ಕೊನೆಯಾಗಿರಬೇಕು. ಈ ಕಣಿವೆ ಆ ಸರಹದ್ದಿನಾಚೆ ಮೈ ಚಾಚಿದೆ ಎಂದುಕೊಂಡೆ. +ಕೊಂಚ ದೂರವಿದ್ದ ಲಾಡ್ಜ್‌ನಲ್ಲಿ ಅಕ್ಕಪಕ್ಕದ ಕೋಣೆ ಹಿಡಿದೆವು. +‘ನೀವು ಸ್ನಾನ ಮಾಡಿ ತಯಾರಾಗಿ, ಒಂಬತ್ತಕ್ಕೆ ಹೊರಡೋಣ. ಹತ್ತಕ್ಕೆ ಕಾನ್‌ಫರೆನ್ಸ್ ಸುರು ಆಗುತ್ತೆ…’ ಅಂದ. ಏರ್‌ಬ್ಯಾಗ್ ಹಾಸಿಗೆಯ ಮೇಲೆಸೆದು ಕಿಟಿಕಿಯ ಪರದೆ ಸರಿಸಿದೆ. ಅಂಗಳದ ಚಿನಾರ್ ವೃಕ್ಷಗಳ ಸಂದಿನಲ್ಲಿ ಸೂರ್ಯ ಕಣ್ಣು ಮಿಟುಕಿಸಿದ. +ಒಂಬತ್ತಕ್ಕೆಲ್ಲ ತಿಂಡಿ ಮುಗಿಸಿ, ಇನ್‌ಸ್ಟಿಟ್ಯೂಟಿನ ವಿಳಾಸ ಹುಡುಕಿ ಹೊರಟೆವು. ಆಗಲೇ ವ್ಯವಸ್ಥಾಪಕರು ಗಡಿಬಿಡಿಯಿಂದ ನೊಂದಾಣಿಸಲು ತಯಾರಾಗಿ ನಿಂತಿದ್ದರು. ನನ್ನ ಅಫಿಶಿಯಲ್ ಪೇಪರ್ಸ್ ತೆಗೆಯುತ್ತಾ, ನೊಂದಾಣಿಸಿ, ಎದೆಗೊಂದು ಹೆಸರಿನ ಫಲಕ ತಗುಲಿಸಿಕೊಂಡು ಹೊರಬಂದೆ. +‘ಒಳಗೆ ಹೋಗೋಣ ನಡೀರಿ…’ ಅಜಯ್ ಹೇಳಿದ. ಉದ್ಘಾಟನೆಗೆನೋ ಮುಖ್ಯಮಂತ್ರಿಗಳು ಬರುವುದಿದ್ದ ಕಾರಣ ಎಲ್ಲಿಲ್ಲದ ಸಿದ್ಧತೆ ಇತ್ತು. ಒಬ್ಬೊಬ್ಬರ ಕೈಚೀಲಗಳನ್ನು ಪರಿಶೀಲಿಸಿ ಅಂಗುಷ್ಟದಿಂದ ನೆತ್ತಿಯವರೆಗೆ ಮೆಟಲ್ ಡಿಟೆಕ್ಟರ್ ಹಾಯಿಸಿ ಒಳಬಿಟ್ಟರು. ನನ್ನ ಪಕ್ಕಕ್ಕೇ ಕುಳಿತ ಅಜಯ್ ತುಸು ಬಾಗಿ- +‘ಅಂದ ಹಾಗೆ ಅನು, ನೀವು ಪ್ರೆಸೆಂಟ್ ಮಾಡ್ತಾ ಇರೋದೇನು?’ ನನಗೆ ಒಮ್ಮೆಗೇ ನಗು ಬಂತು. ಇಲ್ಲಿಯವರೆಗೂ ನಾ ಕಣಿವೆಗೆ ಬಂದ ಕಾರಣ ಕೂಡಾ ಮರೆತು ಹೋಗಿತ್ತು. ನನಗೇಕೋ ಈಗಲೂ ಅನುಮಾನವಿತ್ತು. ಜಮ್ಮುವಿನಲ್ಲಿ ಅಜಯ್ ಸಿಕ್ಕಾಗಲಿಂದ ನಾ ಕಣಿವೆಗಿಳಿದಿದ್ದು ಈ ಪೇಪರ್ ಓದಲು ಅಲ್ಲವೇ ಅಲ್ಲ ಅನಿಸಿತ್ತು. ಅನ್ವೇಷಿಸದೇ ಉಳಿದ ಬಾಲ್ಯ-ಯೌವನಗಳನ್ನು, ತೆರೆದುಕೊಳ್ಳದೆ ಅದುಮಿಟ್ಟ ಪ್ರೀತಿ-ಸ್ನೇಹಗಳನ್ನು, ಬೇರೊಂದು ಆಯಾಮದಲ್ಲಿ ಪರಿಶೋಧಿಸದೆ ಬಿಟ್ಟ ಸಂಬಂಧಗಳನ್ನು ಹುಡುಕಿ ಹೊರಟಂತಿತ್ತು. ನನ್ನ ಸುತ್ತಲ ವಿಜ್ಞಾನಿಗಳು, ವೇದಿಕೆ ಮೇಲಿನ ಮೇಧಾವಿಗಳು, ಮುಖ್ಯಮಂತ್ರಿಗಳ ಭಾಷಣ, ಈ ಕಣಿವೆಯ ಅಗಾಧ ಸೌಂದರ್ಯದ ನಡುವೆ, ಅಗೋಚರ ಪ್ರೀತಿಯ ನಡುವೆ, ಎಷ್ಟೊಂದು ಅಸಹಜವಾಗಿ ಅಸಂಬಧವಾಗಿ ಕಾಣಹತ್ತಿತ್ತು. +‘ವಾಟರ್ ಲಾಗಿಂಗ್ ಬಗ್ಗೆ…’ ಮೆಲ್ಲಗೆ ಅಜಯ್‌ಗೆ ಹೇಳಿದೆ. +‘ಫೀಲ್ಡ್ ವರ್ಕ್ ಮಾಡಿದ್ದೀರಾ…’ ಕೇಳಿದ. +‘ಹೂಂ…. ಪೂರಾ ಕರ್ನಾಟಕದ ಡಾಟಾ ಸಂಗ್ರಹಿಸಿದ್ದೆನೆ. ಒಂದು ರೀತಿ ನನ್ನ ಮಃತ್ವಾಕಾಂಕ್ಷೆಯ ಪ್ರಬಂಧ, ಎರಡು ವರ್ಷಗಳ ಪರಿಶ್ರಮ. ಹಾಗಾಗೇ ಇಷ್ಟು ದೂರವಾದರೂ ಬಂದು ಓದುವ ಉತ್ಸಾಹ ಇತ್ತು…’ +‘ಏಕೆ, ಈಗ ಇಲ್ಲವಾ…? +‘ಗೊತ್ತಿಲ್ಲ. ನಾ ಬಂದ ಕಾರಣಗಳೇ ಕಲಸುಮೇಲೋಗರ ಆಗ್ತಾ ಇದೆ…’ ಅಜಯ್ ನಕ್ಕ. ಎಲ್ಲ ಬಲ್ಲ ನಗು ಅದು. +‘ನೀವು ಏನು ಮಾಡ್ತಾ ಇದ್ದೀರಾ ಅಜಯ್?’ ಕೇಳಿದೆ. +‘ಸಂಶೋಧನೆಯೇ ಉದ್ಯೋಗವಾದಾಗ ಏನಾದರೊಂದು ಇರಲೇ ಬೇಕಲ್ಲ. ಆದ್ರೆ ನಾ ಈ ಕಣಿವೆಗೆ ಬಂದದ್ದು ವಾಟರ್ ಲಾಗಿಂಗ್, ಜಲಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿಗಲ್ಲ…’ +‘ಮತ್ತೆ ಕಾಶ್ಮೀರ ನೋಡಲು…’ +‘ಅದೂ ಅಲ್ಲ….’ಎಂದವನು ಕೊಂಚ ತಡೆದು ನಂತರ ‘ಆಮಂತ್ರಣ ಪತ್ರದಲ್ಲಿ ನಿಮ್ಮ ಹೆಸರು- ಪ್ರಬಂಧ ನೋಡಿದೆ…’ ಅಂದ. ನಾ ಅರ್ಥವಾಗದೆ ಅವನನ್ನೇ ದಿಟ್ಟಿಸಿದೆ. ಅವ ಸುಮ್ಮನೆ ನಕ್ಕ, ಮತ್ತೇನೂ ಹೇಳಲಿಲ್ಲ್…. ಹೇಳಬೇಕಾಗಿರಲಿಲ್ಲ. ಪ್ರೀತಿಯನ್ನು ಇಷ್ಟೊಂದು ಸಹಜವಾಗಿ ತೆರೆದಿಡಲು ಅಜಯ್‌ಗೆ ಮಾತ್ರ ಸಾಧ್ಯವೇನೊ. ನನ್ನೊಳಗಿನ ಸಂಕೋಚಗಳನ್ನು ಹೊರಗಟ್ಟಿ ಭಾವನೆಗಳಿಗೆ ಬಾಯಿಕೊಡಲು ಇಲ್ಲಿ ಕಣಿವೆಯಲ್ಲಿ ಮಾತ್ರ ಸಾಧ್ಯ. ಈ ಏರಿ ನಿಂತ ಬೆಟ್ಟಗಳಾಚಿನ ಜಗತ್ತಿಗೆ ನಮ್ಮ ಈ ಸ್ವರಗಳು ಕೇಳದೆಂಬ ಧೈರ್ಯವೇ ನಮಗೆ? ಈ ಕಣಿವೆಯಾಚಿನ ಬದುಕು ಸದ್ಯಕ್ಕೆ ಅಗೋಚರವೆಂದೆ? +ಆ ದಿನ ಕಳೆದದ್ದು ತಿಳಿಯಲಿಲ್ಲ. ಏನೇನೋ ಪ್ರಬಂಧಗಳು, ಚರ್ಚೆಗಳು. ಈ ಮಧ್ಯೆ ಏರಿಳಿದ ನನ್ನ ಒಳತೋಟಿಯ ನಡುವೆಯೂ ವೃತ್ತಿಗೆ ಅಭ್ಯಾಸವಾದ ಆತ್ಮವಿಶ್ವಾಸದಲ್ಲಿ ನನ್ನ ಪ್ರಬಂಧ ಮಂಡಿಸಿದ್ದೆ. ಒಂದಿಷ್ಟು ಪ್ರಶ್ನೆ-ಉತ್ತರ. ಚರ್ಚೆ ಮುಗಿದಿತ್ತು. ನಾ ಪ್ರಯತ್ನಪೂರ್ವಕವಾಗಿ ಅಜಯನ ಕಣ್ಣುಗಳನ್ನು ತಪ್ಪಿಸಿ ಮಾತನಾಡಿದೆ. +* +* +* +ಸಂಜೆ ಸೆಮಿನಾರ್ ಮುಗಿದೊಡನೆ ಹಾಗೇ ಶಾಲಿಮಾರ್ ಉದ್ಯಾನದತ್ತ ಆಟೋ ಹಿಡಿದೆವು. ಬಹಳ ಹೊತ್ತು ನಮ್ಮ ನಡುವೆ ವಿಚಿತ್ರ ಮೌನ. ನಂತರ ಒಮ್ಮೆಗೇ ಅಜಯ್ ಮತ್ತೆ ಮಾತಿಗೆ ಆರಂಭಿಸಿದ. ಅಲ್ಲಿಯವರೆಗೂ ಅವ ಹೇಳಿದ್ದೆಲ್ಲ ಕೀಟಲೆಯೇನೋ ಎಂಬಂಥ ಪುಂಡ ಹುಡುಗನ ನಗುವಿತ್ತು. ಈ ಹುಡುಗ ಬದುಕನ್ನು ಪೂರಾ ಪೂರಾ ಬದುಕಲು ಹೊರಟವನು. ಯಾರ ನಿರ್ಬಂಧನೆ, ನಿರಾಕರಣೆಯೂ ಇವನ ಜೀವನೋತ್ಸಾಹಕ್ಕೆ ಕಟ್ಟೆ ಹಾಕಲಾರವು. +ಉದ್ಯಾನದ ಎದುರು ಆಟೋ ನಿಂತಿತು. ಮೆಟ್ಟಿಲು ಏರಿ ಮೇಲೆ ಹೋದೆವು. ಬೆಟ್ಟದ ಹಿನ್ನೆಲೆಯಲ್ಲಿ ಹರಿದು ಬಂದ ನೀರು, ಸುತ್ತ ಹಸಿರು ಹಾಸು. ಚಳಿ ಕಳೆದ ಬೇಸಗೆಯ ಚಿತ್ತಾರದ ಹೂಗಳು. ಹರಿವ ನೀರಿನ ನಡುವೆ ಹಾಕಿದ ಕಲ್ಲು ಹಾಸಿನ ಮೇಲೆ ಕುಳಿತು ನೀರಿಗೆ ಕಾಲು ಇಳಿಬಿಟ್ಟೆವು. ಅಜಯ್ ಅದೂ ಇದೂ ಹರಟುತ್ತಿದ್ದ. +‘ನೀವೂ ಬರೀತೀರಾ ಅಜಯ್… ಕತೆ…ಕವನ…’ ಬೇರೇನು ಕೇಳಲು ತಿಳಿಯದೆ ಕ್ಲೀಷೆಯಾದ ಪ್ರಶ್ನೆ ಹಾಕಿದೆ. +‘ಇಲ್ಲ, ಕವಿತೆಯಾಗಿ ಗಂಟು ಕಟ್ಟಿ ಇಡೋಕೆ ಏನೂ ಉಳಿಸಿಕೊಂಡಿಲ್ಲ. ಎಲ್ಲ ವದರಿಕೊಂಡು ಬಿಡುವ ನನ್ನ ಸ್ವಭಾವಕ್ಕೆ ಸಾಹಿತ್ಯವೂ ಅಂಟೋಲ್ಲ. ನಿಮ್ಮ ಕವನ ನೋಡಿದ್ದೆ. ತಟ್ಟನೆ ಏಕೋ ಆಪ್ತವಾದುವು. ಬಹುಶಃ ಆ ಪದಗಳಲ್ಲಿ ಅಷ್ಟೆಲ್ಲ ಸಾಮರ್ಥ್ಯ ಇತ್ತೋ ಇಲ್ಲವೋ ಗೊತ್ತಿಲ್ಲ, ಅವಕ್ಕೆ ನಾ ಕೊಟ್ಟ ಅರ್ಥಗಳೇ ಸತ್ಯವಾದುವು. ಹೇಳಿ, ಹಾಯಾಗಿ ನಿಮ್ಮ ಹೈಡ್ರಾಲಿಕ್ಸ್ ಹಿಡಿದು ನೀರನ್ನು ಅಳೆದುಕೊಂಡಿರೋ ಬದಲು ಈ ಕವಿತೆಗಳ ಗೊಂದಲಕ್ಕೇಕೆ ಬಿದ್ದಿರಿ? ಸಾಹಿತ್ಯ ಸೇವೆ ಅಂತೆಲ್ಲ ಆರಂಭಿಸಬೇಡಿ ಪ್ಲೀಸ್, ಎಲ್ಲ ಕಾವ್ಯಕ್ಕೂ ಅತ್ಯಂತ ವೈಯಕ್ತಿಕ ಕಾರಣಗಳಿರುತ್ತೆ ಅಂತಲೇ ನನ್ನ ನಂಬುಗೆ, ನಿಜಾನಾ?’ ನನಗೆ ಉತ್ತರ ಹೊಳೆಯಲಿಲ್ಲ. ಹೊಳೆದ ಉತ್ತರ ಹೇಳುವುದೋ ಬೇಡವೋ ಹಿಂಜರಿದೆ. +‘ನೀವು ಹೇಗೇ ಬರೆದಿದ್ರೂ ಅಲ್ಲೊಂದಿಷ್ಟು ಪ್ರಾಮಾಣಿಕತೆ ಇದೆ ಅನು. ನೀವು ಇಷ್ಟ ಪಡುವುದಕ್ಕಿಂತ ಹೆಚ್ಚೇ ಅವು ಹೇಳಿಬಿಡುತ್ತವೆ ನಿಮ್ಮ ಬಗ್ಗೆ…’ ಅವನ ಮುಗುಳ್ನಗೆಯ ನೇರ ಕಣ್ಣುಗಳಿಗೆ ನಾ ಪಾರದರ್ಶಕವಾದಂತೆ ಅನಿಸತೊಡಗಿತು. +ಬದುಕಿನಲ್ಲಿ ಪ್ರಾಮಾಣಿಕಳಾಗದ ನಾನು ಕವಿತೆಗಳಲ್ಲಿ ಅಪ್ಪಟ ಸತ್ಯಗಳನ್ನು ಹೇಳಿದ್ದೆ. ರೊಮಾನ್ಸ್‌ಗಳನ್ನು ಓದದ, ಸಿನಿಮಾಗಳಿಗೆ ತಿರುಗದ, ಗಂಡು ಹುಡುಗರು-ಹುಚ್ಚು ಪ್ರೇಮಗಳು ತನಗೆ ಸಂಬಂಧವೇ ಇಲ್ಲವೆಂಬಂತೆ ನಟಿಸಿದ ಅನು ಎಂಬ ಈ ಹುಡುಗಿ, ಬಾಲ್ಯದಲ್ಲಿ ಅಪ್ಪ ಹೇರಿದ ಗಂಭೀರತೆಯ ಶಿಲುಬೆಯನ್ನು ಕಾಲೇಜಿಗೂ ಹೊತ್ತು ಹೊರಟಿದ್ದಳು. ಅದರಾಚಿನ ಸಂಶೋಧನೆ ಉದ್ಯೋಗಕ್ಕೂ, ಕಡೆಗೆ ಮದುವೆ-ಬೆಡ್‌ರೂಮಿಗೂ. ‘ಅನು ಬಹಳ ಗಂಭೀರ ಹುಡುಗಿ…’ ‘ಡಾ. ಅನು ತುಂಬಾ ರಿಸರ್‌ವ್ಡ್…’ ಈ ಬಿರುದುಗಳ ಬಿರುಕಿನಲ್ಲಿ ಬದುಕಿನ ಬಣ್ಣಗಳೆಲ್ಲ ಸೋರಿ ಹೋದದ್ದು, ಕ್ಯಾನ್‌ವಾಸ್ ಖಾಲಿಯಾದದ್ದು ತಿಳಿದಾಗ ತಡವಾಗಿತ್ತು, ಸಾಕಷ್ಟು ತಡವಾಗಿತ್ತು. ನಾ ಬದುಕಲಾರದ ಬದುಕನ್ನು ಬದುಕ ಹೊರಟೆ ಕವನಗಳಲ್ಲಿ. ನನಗಾದರೂ ಸಾಹಿತ್ಯದ ಗಂಧವೆಲ್ಲಿತ್ತು? ಕಾವ್ಯದ ನೀತಿ ನಿಯಮಗಳನ್ನು ಛಂದಸ್ಸು ಮಾತ್ರೆಗಳನ್ನು ಕಲಿತದ್ದೆಲ್ಲಿ ಬಂತು? ಬರೆಯಲೇ ಬೇಕಾದ ಒತ್ತಡಗಳನ್ನು, ಹಂಚಿಕೊಳ್ಳಲೇ ಬೇಕಾದ ಭಾವನೆಗಳನ್ನು ಹೊರಗಟ್ಟಲಿಕ್ಕೆ ನನಗಿದ್ದ ಒಂದೇ ರಂಧ್ರ-ಕವನ. ಕಾವ್ಯನಾಮದಡಿಯ ಸುರಕ್ಷಣೆಯಲ್ಲಿ ಬರೆದೆ, ಗೆಳತಿಯ ವಿಳಾಸ ಕೊಟ್ಟು. ನನ್ನ ಕವನಗಳೆಲ್ಲ ಆ ಕ್ಷಣದ ಗುರಿ ‘ಅವನಾಗಿದ್ದ’. ನನ್ನ ಅವನ ನಡುವೆ ನಿಂತ ಅಪ್ಪ-ಅಮ್ಮ-ಅಕ್ಕಂದಿರು ನಿರ್ಮಿಸಿದ ಕೊರಕು ಕಂದರಕ್ಕೆ ಹಾಕಿ ನಿಂತ ಹಲಗೆಯಾಗಿತ್ತು ನನ್ನ ಕವನ. ಅವ ಅವನ್ನು ಓದಬೇಕು, ಅವನಿಗಷ್ಟು ನನ್ನೊಳಗಿನ ಅನಿಸಿಕೆಗಳು ಮುಟ್ಟಬೇಕು. ಅವನಿಗವು ತಲುಪಬೇಕು ಎಂಬ ಒಂದೇ ಗುರಿಯಾಗಿ ಬರೆದೆ. ಕವನ ನನ್ನ ಅತ್ಯಂತ ವೈಯಕ್ತಿಕ ಅನಿಸಿಕೆಗಳ ಬಹಿರಂಗ ಪ್ರದರ್ಶನವಾಗಿತ್ತು. ಅವನೊಬ್ಬನಿಗೇ ಹೇಳಲಾರದ ಮಾತುಗಳು, ಜಗತ್ತಿಗೇ ಸಾರಿತ್ತಿದ್ದೆ- ಈ ಊರ ತಮಟೆಯಾದರೂ ಅವನ ಕಿವಿಗೆ ಬಿದ್ದೀತೆಂದು. ಇಲ್ಲಿ ಭಯವಿರಲಿಲ್ಲ-ಪ್ರೇಮಪತ್ರ ಬರೆದಂಥಾ ಕಳ್ಳ ಭಯ! ಕಾವ್ಯದ ಬಿಸಿಲುಮಚ್ಚು ಇತ್ತು, ಸಾಹಿತ್ಯದ ದೊಡ್ದ ದೊಡ್ಡ ಪದಗಳ ಸುರಕ್ಷಿತ ಛಾವಣಿ ಇತ್ತು. ಅಪ್ಪನ ಬಾಲ್ಯದ ಕಟ್ಟಪ್ಪಣೆಗಳು ಬಿಗಿ ಕಳೆದುಕೊಂಡಿದ್ದರೂ, ನಾ ಅದಕ್ಕೆ ಒಗ್ಗಿ ಹೋಗಿದ್ದೆ. ಅವನ್ನು ಸಮರ್ಥಿಸಲೂ ತೊಡಗಿದ್ದೆ. ತಲೆ ತಗ್ಗಿಸಿ, ಸೆರಗು ಹೊದ್ದು, ಕ್ಲಾಸಿಗೇ ಫಸ್ಟ್ ನಿಲ್ಲುವ ಗಂಭೀರ ಹುಡುಗಿಯ ಕಿರೀಟ ತಲೆಗೇರಿತ್ತು. ನನ್ನಂಥವರೇ ನಾಲ್ಕು ಜನ ಜೊತೆಯಾದರು. ಉಳಿದೆಲ್ಲ ಹುಡುಗಿಯರು, ಹುಡುಗರೊಡನೆ ಮಾತನಾಡಿದ್ದರಿಂದಲೇ ಅಸ್ಪೃಶ್ಯರಾದರು. ‘ನಮಗೆ ಹಾಗೆಲ್ಲ ಅನಿಸೋದೇ ಇಲ್ಲ’ ಎಂದೇ ಸಾಧಿಸಿದೆವು. ರಾತ್ರಿ ಮಾತ್ರ ದಿಂಬಿನಡಿಯ ಡೈರಿತೆಗೆದು ಕವನ ಬರೆದೆ-ಎದುರು ಮನೆಯ ಹುಡುಗನ ಬಗ್ಗೆ, ತರಗತಿಯಲ್ಲಿ ಜಾಗವಿಲ್ಲವೆಂದು ಪಕ್ಕ ಬಂದು ಕುಳಿತ ಸಹಪಾಠಿಯ ಬಗ್ಗೆ. ನನ್ನ ಅದೃಶ್ಯ ಬಂಧನದ ಉಪ್ಪರಿಗೆಯಿಂದ ನಾ ಕವನಗಳನ್ನು ಹಾರಬಿಟ್ಟೆ ಅವು ಅವನನ್ನು ಸ್ಪರ್ಶಿಸಲೆಂದು. ಭಯವಿರಲಿಲ್ಲ, ಯಾರಾದರೂ ಓದಿಯಾರೆಂದು. ನನ್ನ ಕವನಗಳ ಗುರಿ ಕೇವಲ ಪ್ರೀತಿಯಾಗಿತ್ತು. ಅದರ ಅಭಿವ್ಯಕ್ತಿಯಾಗಿತ್ತು. ಕಡೆಗೆ ಕುತ್ತಿಗೆಗೇ ಬಂದರೆ, ನನ್ನ ಕವನದ ‘ಆ ಅವನು’ ಅವನೇ ಆಗಬೇಕಿಲ್ಲ, ಯಾರಾರೂ ಆಗಿರಬಹುದಲ್ಲ ಎಂಬ ವಾದದ ಗುರಾಣಿ ಸಿದ್ಧವಿತ್ತು. +ನಿಜ, ಬರೆದದ್ದು ಬರೀ ಪ್ರೇಮ ಕವನಗಳನ್ನಲ್ಲ. ಅಮ್ಮನ ಏಳು ಬಸಿರುಗಳ ಬಗ್ಗೆ ಬರೆದೆ. ಅಕ್ಕಂದಿರ ಎರಡೆಳೆ ಸರ ನಾಲ್ಕು ಜರಿ ಸೀರೆಯ ತೃಪ್ತ ಬದುಕಿನ ಬಗ್ಗೆ ಬರೆದೆ. ದೆವ್ವದ ಬಂಗಲೆಯಲ್ಲಿ ಬೀಸಿ ಬಂದ ಬಾವಲಿಗಳ ಬಗ್ಗೆ ಬರೆದೆ. ರಾಜುವಿನ ಮುಷ್ಟಿಯಲ್ಲೇ ಉಳಿದು ಬಿಟ್ಟ ಕೆಂಪು-ಹಸಿರು-ಹಳದಿ ಗೋಲಿಗಳ ಬಗ್ಗೆ ಬರೆದೆ. ಆದರೆ ಅವೆಲ್ಲವನ್ನೂ ‘ಅವನೊಡನೆ’ ಹಂಚಿಕೊಳ್ಳಲು ಬರೆದಿದ್ದೆ. ಆ ‘ಅವನು’ ಕಾಲ ಕಾಲಕ್ಕೆ ನನ್ನ ಮನಸ್ಸು-ವಯಸ್ಸು-ಪ್ರಬುದ್ಧತೆಯೊಡನೆ ಬದಲಾದ, ಬೆಳೆದ. ಕಡೆಗೆ, ಎದುರು ಮನೆಯ ಹುಡುಗ, ಪಕ್ಕ ಕುಳಿತ ಸಹಪಾಠಿ. ‘ಅವನಾರೂ’ ಆಗಿರಲೇ ಇಲ್ಲ. ಅವನು ಅಲ್ಲೆಲ್ಲೋ ಹೊರಗಿನ ಜನ ಸಮೂಹದಲ್ಲಿ ನನಗಾಗಿಯೇ ಕಾಯುತ್ತಾ ನಿಂತವನಾಗಿದ್ದ. +ನನ್ನ ಇಂಥಾ ಕವನಗಳು ಓದುಗರಿಗೆ, ವಿಮರ್ಶಕರಿಗೆ ಹೇಗೆ ಮೆಚ್ಚುಗೆಯಾದವೋ ಭಗವಂತನೇ ಬಲ್ಲ. ನನಗೂ ಹೊಳೆಯದ ಅರ್ಥಗಳನ್ನು, ನನ್ನ ಪದಗಳ ಅಂತರಾರ್ಥಗಳನ್ನು ಬಿಡಿಸಿ ಹೇಳುವಾಗ, ಒಂದಿಷ್ಟು ನನ್ನ ಹೆಸರು ತುತ್ತೂರಿ ಊದಿದಾಗ, ನಂಬಲಾರದ ಅಚ್ಚರಿ ಆವರಿಸಿತ್ತು. ನನ್ನ ಕವನಗಳು ನಾ ಉದ್ದೆಶಿಸಿದ ಅವನೊಬ್ಬನನ್ನು ಬಿಟ್ಟು ಮತ್ತೆಲ್ಲರನ್ನೂ ತಲುಪಿದ್ದವು. ಆ ಮಟ್ಟಿಗೆ ನನ್ನ ಕವನಗಳ ಸೋಲನ್ನು ನಾ ಒಪ್ಪಲೇ ಬೇಕಿತ್ತು. +ನನ್ನ ವಿವಾಹದ ದಿನ ತಟ್ಟನೆ ‘ಅವ’ ಮಾಯವಾದ. ಕಂಡ ಕನಸುಗಳಿಗೂ ವಿವಾಹದ ವಾಸ್ತವತೆಗೂ ನಂಟಿರಲಿಲ್ಲ. ನನಗೀಗ ಹೇಳಬೇಕಾದ್ದು ಏನೂ ಇರಲಿಲ್ಲ. ನನ್ನ ಕವಿತೆಗಳು ನಿಂತವು. ಆಗಾಗ ನನ್ನ ಹಿಂದಿನ ಇತಿಹಾಸ ಹಿಡಿದು ಸಂಪಾದಕರಿಂದ ಕವನ ಬರೆಯಲು ಆಹ್ವಾನ ಇರುತ್ತಿತ್ತು. ಒತ್ತಡಗಳು ಬರೆಸದ ಕವನ ಬರೆಯ ಹೊರಟೆ. ಹಿಂದಿನ ನಾಮಬಲದಿಂದಲೇ ಪ್ರಕಟವಾದವು ಮತ್ತೆ ಓದುವಾಗ ಅಸಹ್ಯವಾದುವು. ಪದಗಳೊಡನೆಯ ನನ್ನ ಸರ್ಕಸ್ ಹಾಗೇ ನಡೆಯುತ್ತಿತ್ತೇನೋ. ಕವನಗಳು ನಾ ಕರೆದಾಗ ನಿಲ್ಲದೆ, ಕಾದಾಗ ಬಾರದೆ, ಮುಸಿ ಮುಸಿ ನಕ್ಕು ನಡೆದೇ ಬಿಟ್ಟವು, ಹಿಂದೆ ಕೂಡಾ ನೋಡದೆ. +ಅಂತಹುದೇ ಯಾವುದೋ ಕವಿಗೋಷ್ಠಿಯಲ್ಲಿ ಕರೆದರೆಂದು ರಾತ್ರಿ ಕುಳಿತು ಹೊಸೆದ ಕವನ ಅಂಗೈಯಲ್ಲಿ ಹಿಡಿದು ಕುಳಿತಿದ್ದೆ. ಇದ್ದಕ್ಕಿದ್ದಂತೆ ಆ ವೇದಿಕೆ, ಮುಂದೆ ಕುಳಿತ ಪ್ರೇಕ್ಷಕರು, ರಾತ್ರಿ ಹೊಸೆದ ಪದಗಳು ಎಲ್ಲ ವಿಲಕ್ಷಣವಾಗಿ ಕಂಡು, ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವಿಲೋಮವಾಗಿ ನಿಂತವು. ಏನೋ ನೆಪ ಹೇಳಿ ವೇದಿಕೆಯಿಂದ ಇಳಿದು ಬಂದೆ. ಹೊರಗೆ ಹೆಜ್ಜೆ ಹಾಕಿದ್ದೇ ತಡ ಹಾಳೆ ಹರಿದು ಹಾಕಿದೆ. ಅದೇ ಕಡೆ ನಾ ‘ಬರೆಯದ’ ಕವನಗಳ ಹೊಸೆಯ ಹೋದದ್ದು. ಸಾಹಿತ್ಯಜಗತ್ತು ಮರೆತುಬಿಟ್ಟಿತು-ಒಂದು ಸಂಕಲನದಲ್ಲಿ ಮಿಂಚಿ ಮಾಯವಾದ ಅಚ್ಚರಿ ಎಂಬಂತೆ. ಆಗಾಗ ‘ ಮಹಿಳಾ ಸಾಹಿತ್ಯ’ದ ಹಣೆಪಟ್ಟಿ ಬಂದಾಗ ಸ್ತ್ರೀವಾದ, ಸ್ತ್ರೀತ್ವಗಳಿಗೆ ನನ್ನ ಹೆಸರೂ ಒಂದಿಷ್ಟು ಎಳೆದಾದಲ್ಪಟ್ತಿತು. ಸ್ತ್ರೀತ್ವ ನನಗಿನ್ನೂ ಸ್ಪಷ್ಟವಾಗದ ಗೊಂದಲದ ಪದ. ಆದರೆ ಒಳಗೆಲ್ಲೋ ಅಪ್ಪನ ಅಂಕುಶದಡಿಯಲ್ಲಿ ಅದುಮಿಟ್ಟ ನನ್ನ ಹೆಣ್ಣೂತನ ಮುಲುಕುತ್ತಿತ್ತು. ಅಮ್ಮನ ಅರಿಶಿನ ತಿಂಬಿದ ಕೆನ್ನೆ ಗುಳಿಯಲ್ಲಿ ಕಾಣೆಯಾದ ಹೆಣ್ತನದ ಅವಶೇಷಗಳಿತ್ತು. ವರ್ಷ ವರ್ಷ ಬಾಣಂತನದ ನಡುವೆಯೂ ಹೆಣ್ಣಾಗದ ಅಕ್ಕಂದಿರ ಬದುಕಿನ ನೀಲಿ ನಕಾಶೆ ಹರಡಿತ್ತು. ನಾವು ಮಗಳಾದೆವು, ಹೆಂಡತಿಯಾದೆವು, ತಾಯಾದೆವು- ಹೆಣ್ಣಾಗದೇ! ಬಿಸಿಗೆ ಕರಗದೆಯೇ ಫಲಿಸಿದೆವು. ಬಯಕೆಗಳ ಅದುಮಿಟ್ಟು ಬದುಕಿದೆವು. ಬರೀ ಕನಸಿನಲ್ಲಷ್ಟೇ ಬಿಸಿಯೇರಿ, ಸ್ಪರ್ಷಕ್ಕೆ ತಣ್ಣಗಾದೆವು. ಕೇವಲ ಕವನಗಳಲ್ಲಿ ಸ್ಖಲಿಸಿದೆವು, ವಾಸ್ತವದಲ್ಲಿ ಹಿಮಗಟ್ಟಿದೆವು. ನಾವು ಭಾರತೀಯರು, ಅಪ್ಪಟ ಭಾರತೀಯರು… ಮನೆತುಂಬಾ ಮಕ್ಕಳನ್ನು ಹೆತ್ತರೂ, ಅಪ್ಪಟ ಕನ್ಯೆಯರೇ….ತನು-ಮನಗಳ ಸ್ಪರ್ಷಿಸದ ಗಂಡಂದಿರು. ಇಲ್ಲಿ ‘ಫ್ರಿಜಿಟಿಡಿ’ ರೋಗವಲ್ಲ, ಅಸಹಜವಲ್ಲ: ಹೆಣ್ಣಿನ ಸಹಜ ಸ್ಥಿತಿ ಎಂಬಂತೆ ಸಲೀಸಾಗಿ ಸ್ವೀಕರಿಸಿದ್ದು. ಅದಕ್ಕೆ ಚಿಕಿತ್ಸೆ ಬೇಕಿಲ್ಲ. ಅಭಿವ್ಯಕ್ತಿ ಬೇಕಿಲ್ಲ. ಮುಸುಕಿನಡಿಯಲ್ಲಿ, ಮೇಲೆ ಹೇರಿಕೊಂಡ ನಾಲ್ಕೆಳೆ ಸರ, ಜರತಾರಿ ಸೀರೆಗಳಲ್ಲಿ, ಮಡಿಲು ತುಂಬುವ ಕಂದಮ್ಮಗಳಲ್ಲಿ, ಅರೆಬದುಕು, ಹುಸಿ ಸಂತೋಷಗಳು ಮುಚ್ಚಿಹೋಗುತ್ತವೆ. ಅನುಭವಕ್ಕೇ ಬಾರದ ಅನಿಸಿಕೆಗಳನ್ನು ಕಳಕೊಳ್ಳುವುದೆಲ್ಲಿಂದ ಬಂತು? ಹೇಳಿಕೊಳ್ಳುವುದೆಲ್ಲಿಂದ? +* +* +* +ದಿನಾಂಕ ೩ ಜೂನ್ ೧೯೮೯ +ಮರುದಿನವೂ ಕಾನ್ಫರೆನ್ಸ್ ಹಾಲ್‌ನಲ್ಲೇ ಮುಗಿಯಿತು. ಒಂದಿಷ್ಟು ಮನಸ್ಸು ಹತೋಟಿಗೆಳೆದು ಮಂಡಿಸಿದ ಪ್ರಬಂಧಗಳ ಆಲಿಸಿದೆ. ಗುರುತು ಹಾಕಿಕೊಂಡೆ. ಅದೇ ಕಡೆಯ ದಿನವಾದ ಕಾರಣ ಒಂದಿಷ್ಟು ಜನರ ಪರಿಚಯ, ವಿಳಾಸ ವಿನಿಮಯ ಆಗಿತ್ತು. ಎಲ್ಲಾ ಮುಗಿದು ಲಾಡ್ಜ್‌ಗೆ ಬಂದಾಗ ಸಂಜೆ ಆರೂವರೆ. +“ನಡೀರಿ ಒಂದಿಷ್ಟು ಅಡ್ಡಾಡಿ ಬರೋಣ…” ಅಜಯ್ ಹೇಳಿದ. +“ಒಂದ್ನಿಮಿಷ ಮುಖ ತೊಳೆದು ಬರ್ತೇನೆ…” ರೂಮಿನ ಬೀಗ ತೆರೆದು ಒಳಹೊಕ್ಕೆ. +ಬಚ್ಚಲಲ್ಲಿ ಮುಖ ತೊಳೆದು ಬಟ್ಟೆ ಬದಲಿಸಲು ಹೊರಬಂದೆ. ಕಾನ್ಫರೆನ್ಸ್ ಗೆ ಹಾಕಿದ ಸಣ್ಣ ಹೂಗಳ ಸೌಮ್ಯ ಸೀರೆ ಈ ಸಂಜೆಯ ಬಣ್ಣಗಳಲ್ಲಿ ತೀರ ‘ಡಲ್’ ಎನಿಸಿತು. ನಿನ್ನೆ ಯಾವುದೋ ಗುಂಗಿನಲ್ಲಿ ದಲ್ ಸರೋವರದ ದಡದಲ್ಲಿ ಅಡ್ಡಾಡುವಾಗ. ‘ಎಲ್ಲಾ’ ಕಸೂತಿಯ ಕಾಶ್ಮೀರಿ ಫೆರನ್‌ನಂಥಾ ಸಲವಾರ್‌ಕಮೀಜ್ ನೋಡಿ ಕೊಂಡು ಬಿಟ್ಟಿದ್ದೆ. ಸೀರೆಯ ಹೊರತು ಬೇರೇನೂ ಹಾಕದ ನಾನು, ಅದರ ಹೊಳಪು ಬಣ್ಣಗಳಿಗೇ ಮಾರು ಹೋಗಿದ್ದೆ. ಬಹಳ ಹೊತ್ತು ಕನ್ನಡಿಯೆದುರು ಹಾಕಲೋ ಬೇಡವೋ ಯೋಚಿಸುತ್ತಾ ಕಡೆಗೇಕೋ ಕಿಟಕಿಯಾಚೆ ಚೆಲ್ಲಿದ ಬೇಸಗೆಯ ಬಣ್ಣಗಳಿಗೆ ಈ ಗಾಢ ವರ್ಣಗಳು ಎಷ್ಟು ಹೊಂದುತ್ತವೆನಿಸಿ ತೊಟ್ಟು ನಿಂತೆ. ಇಲ್ಲಿ ಸ್ವಲ್ಪ ಸಡಿಲಾಯಿತೇನೋ, ಅಲ್ಲಿ ನನ್ನ ಹಿಂಭಾಗ ಹಿಗ್ಗಿ ಕಾಣುವುದೇನೋ, ಸೆರಗಿಲ್ಲದೆ ಎದೆ ಬೇರೆ! ಆತ್ಮವಿಶ್ವಾಸವಿಲ್ಲದೆ…ಅಳುಕುತ್ತಾ ಹೊರಬಂದೆ. ಅಜಯ್ ಆಗಲೇ ಪೋರ್ಟಿಕೋದಲ್ಲಿ ನಿಂತು ಕಾಯುತ್ತಿದ್ದ. ನನ್ನ ನೋಡಿದವನೇ ಹುಬ್ಬೇರಿಸಿ ‘ಹೇ ಯು ಲುಕ್ ಗ್ರೇಟ್…’ ಎಂದ. ನಾ ಗಲಿಬಿಲಿಗೊಂಡೆ, ಪ್ರಶಂಸೆಗೆ ಹೇಗೆ ಪ್ರತಿಕ್ರಿಯಿಸಬೇಕು, ಹೇಗೆ ಸ್ವೀಕರಿಸಬೇಕು ಎಂದು ತಿಳಿಯದೆ ಮುಜುಗರದಲ್ಲಿ. +(ಅಪ್ಪ ವೆರಾಂಡದ ಕಿಟಕಿಗೆ ಸಿಗಿಸಿದ್ದ ಸಣ್ಣ ಕನ್ನಡಿಯಲ್ಲಿ ಮುಖವಿಕ್ಕಿ ಕೆನ್ನೆಗೆ ಬ್ಲೇಡ್ ತೀಡುತ್ತಿದ್ದರು. ನಾ ಪುಟಿಯುತ್ತಾ ಮೆಟ್ಟಿಲು ಹಾರಿ ಒಳಗೆ ಬಂದಿದ್ದೆ. ಅಪ್ಪ ಬೋಳಿಸುವುದ ನಿಲ್ಲಿಸಿ, ನನ್ನ ಸ್ವಲ್ಪ ಹೊತ್ತು ಹೆಚ್ಚೇ ಕಣ್ಣಿಟ್ಟು ನೋಡಿದರು, ಹುಬ್ಬು ಬಿಗಿಯಾಗಿತ್ತು. +‘ಅನುಗೆ ಎಷ್ಟಾಯ್ತು ವಯಸ್ಸು…’ ಅಪ್ಪನ ಸ್ವರ. +‘ಈ ಶ್ರಾವಣಕ್ಕೆ ಹದಿನೈದು ತುಂಬುತ್ತಲ್ಲ…’ ಅಮ್ಮನ ಉತ್ತರ. +‘ಇನ್ನೂ ಲಂಗ ಹಾಕ್ಕೊಂಡು ಕುಣಿಯುತ್ತಾ ಹೋಗ್ತಾಳಲ್ಲ…’ +ಅಂದೇ ಅಮ್ಮ ನನಗೆ ಸೀರೆ ಉಡಲು ಹೇಳಿದ್ದಳು. +‘ಹೋಗಮ್ಮಾ ಈ ಸೀರೆ ನೆರಿಗೆ ಯಾರು ಸಂಭಾಳಿಸೋರು…’ ಜಾರಿ ಜಾರಿ ಇಳಿಯುತ್ತಿದ್ದ ನೈಲೆಕ್ಸ್ ಸೀರೆಯ ಹಿಡಿದು ಕೇಳಿದ್ದೆ. +‘ಇಲ್ಲ ಹೀಗೇ ಎದೆ ಬಿಟ್ಟುಕೊಂಡು ನೆಗೀತಾ ಇರು…’ ಅಮ್ಮ ಅಸಹನೆಯಿಂದ ವದರಿ, ನೆರಿಗೆಗಳ ಹಿಡಿದು ಗುಪ್ಪೆ ಮಾಡಿ ಪಿನ್ ಸಿಕ್ಕಿಸಿದಳು. +ಅತ್ಯಂತ ಮುಜುಗರವಾಗಿತ್ತು. ಹಾಗಾದರೆ ಅಪ್ಪ ಗಮನಿಸಿದ್ದು…ಯೋಚಿಸಲೂ ನಾಚಿದೆ. ಆ ಕ್ಷಣದಿಂದಲೇ ನಾ ಸಂಕೋಚಿಸತೊಡಗಿದ್ದೆ – ಉಬ್ಬುತ್ತಿದ್ದ ಯೌವನದ ಬಗ್ಗೆ, ರೂಪುಗೊಳ್ಳುತ್ತಿದ್ದ ತಿರುವುಗಳ ಬಗ್ಗೆ, ಹರಡುತ್ತಿದ್ದ ಕೆನ್ನೆ ಕೆಂಪಿನ ಬಗ್ಗೆ, ಕಣ್ಣ ಹೊಳಪಿನ ಬಗ್ಗೆ. +ಅಪ್ಪ-ಭಾವಂದಿರ ಮುಂದೆ ಈಗ ಎಲ್ಲಿಲ್ಲದ ಮುಜುಗರ. ಸೆರಗು ಜಗ್ಗಿ ಜಗ್ಗಿ ಎಳೆದೆ. ಅವರೆಲ್ಲ ನನ್ನನ್ನೇ ಗಮನಿಸುತ್ತಿದ್ದಾರೆಂಬ ವಿಚಿತ್ರ ಅನಿಸಿಕೆ. ತಟ್ಟನೆ ಏಕಾ‌ಏಕಿ ಉದ್ಭವಿಸಿದ ಅಮೃತ ಕಳಶಗಳ ಮುಚ್ಚುವ ಪ್ರಯತ್ನದಂತೆ ತುಸು ಬೆನ್ನು ಬಾಗಿಸಿ, ಭುಜ ಜೋಲಿಸಿ ನಡೆಯ ಹತ್ತಿದೆ. ನನ್ನ ದೇಹದ ಮಾರ್ಪಾಟುಗಳ ಬಗ್ಗೆ ಎಂಥದ್ದೋ ಸಿಟ್ಟು. +‘ಸೆರಗು ಸರಿಯಾಗಿ ಹೊದಿ…’ +‘ಇಷ್ಟು ತೆಳು ಸೀರೆ ಉಡಬೇಡ. ಮೈ ಎಲ್ಲ ಕಾಣುತ್ತೆ…’ +‘ಅದೇನು ಕುತ್ತಿಗೆ ಅಷ್ಟು ಡೀಪ್ ಹೊಲೆಸಿದ್ದಿ…’ +ನನ್ನ ಪ್ರತಿ ಅಂಗುಲವೂ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟಂತೆ ಎದ್ದು ಕಾಣುವಾಗ, ಬದಲಾಗುತ್ತಿದ್ದ ನನ್ನ ದೇಹವನ್ನೇ ದ್ವೇಷಿಸಿದ್ದೆ. ನಾನೆಂದೂ ನನ್ನ ದೇಹವನ್ನು ಮತ್ತೆ ಪ್ರೀತಿಸಲಿಲ್ಲ, ಪ್ರೀತಿಸಬೇಕಾದ ರೀತಿಯಲ್ಲಿ. ಅದರೊಳಗಿನ ಆಸೆ ಆಕಾಂಕ್ಷೆಗಳ ಸ್ವೀಕರಿಸಲು ಸಾಧ್ಯವಾಗಲೇ ಇಲ್ಲ. +ಅಂಥ ಮುಚ್ಚಿ ಮುದುರಿಟ್ಟ ದೇಹವನ್ನು ಮದುವೆಯ ಹಂದರದಲ್ಲಿ ತಕ್ಷಣ ತೆರೆದಿಡುವುದ್ಹೇಗೆ? +ಕಿರಣ್ ದೀಪ ಆರಿಸಿದ್ದ – ನಾ ಸಮಾಧಾನದ ನಿಟ್ಟುಸಿರು ಬಿಟ್ಟೆ.) +‘ಎಲ್ಲಿ ಕಳೆದು ಹೋದಿರಿ, ಐ ರಿಯಲಿ ಮೀನ್ ಇಟ್. ಈ ಡ್ರೆಸ್ ನಿಮಗೆ ಒಪ್ಪುತ್ತೆ…’ ಅಜಯ್ ಮತ್ತೊಮ್ಮೆ ಹೇಳಿದ. ನನ್ನಿಂದ ಥ್ಯಾಂಕ್ಸ್ ಕೂಡ ಬಾರದಾಗ, ’ನೀವು ಒಂದು ಪುಟ್ಟ ಪ್ರಶಂಸೆಗೂ ಏಕೆ ಗಲಿಬಿಲಿಗೊಳ್ತೀರಾ. ನಿಮಗಾವ ಹುಡುಗನೂ ಈ ಮೊದಲು ಹೇಳಿರಲಿಲ್ಲವೆ…’ ತುಂಟತನದಲ್ಲಿ ಕೇಳಿದ. ಈಗ ಜೋರಾಗಿ ನಕ್ಕು ಬಿಟ್ಟೆ. ಅಜಯ್ ಹೊರಗಿನವನೆನಿಸಲೇ ಇಲ್ಲ – ’ಹೇಳುವಂಥಾ ಸಂದರ್ಭಗಳ ಸೃಷ್ಟಿಸಲೇ ಇಲ್ಲ ಅಜಯ್. ಬಸ್ಸಲ್ಲಿ ಪಕ್ಕ ಹುಡುಗ ಕುಳಿತರೆ ನೆಗೆದೆದ್ದು ನಿಲ್ಲುತ್ತಿದ್ದೆವು. ಕಾಫಿಗೆ ಕರೆದವರ ಕೀಚಕನಂತೆ ಕಂಡೆವು, ಸ್ಕೂಟರ್ ನಿಲ್ಲಿಸಿ ’ಡ್ರಾಪ್ ಮಾಡಲಾ’ ಎಂದ ಸಹಪಾಠಿಯನ್ನು ಕೌಶಿಕ ಮುನಿಯಂತೆ ದುರುಗುಟ್ಟಿ ನೋಡಿದೆವು. ಅವನ ಪಿಲಿಯನ್ ಸ್ಪರ್ಶದಿಂದಲೇ ನಮ್ಮ ಪಾತಿವ್ರತ್ಯ ಕರಗಿ ಬಿಡುವುದೆಂಬಂತೆ. ‘ನಮಗೆಲ್ಲ ಅದು ಸೇರೋಲ್ಲ, ಹಾಗೆಲ್ಲ ಅನಿಸೋದೇ ಇಲ್ಲ…’ ಎಂಬ ಅಖಂಡ ನಟನೆಯ ಹಿಂದೆ, ನಮ್ಮೊಳಗಿನ ಕಳ್ಳ ಬಯಕೆಗಳಿಗೆಲ್ಲ ದಪ್ಪ ಪರದೆ ಜಗ್ಗಿ, ಕಾಲೇಜಿನ ಅತ್ಯಂತ ಸಭ್ಯ ಹುಡುಗಿಯರೆಂಬ ಬಿರುದನ್ನು ಪಾರಿತೋಷಕದಂತೆ ಗಿಟ್ಟಿಸಿದೆವು…’ ನಾ ಹೇಳಿದೆ. ಅಜಯ್ ನನ್ನನ್ನೇ ಕ್ಷಣ ವಿಚಿತ್ರವಾಗಿ ನೋಡಿ – +‘ಅನು ಬಾಲ್ಯದ ನೆರಳುಗಳ ಬೆಳೆದ ಮೇಲೂ ಬಗಲಲ್ಲಿಟ್ಟುಕೊಂಡು ತಿರುಗಾಡೋದೇಕೆ? ಬಿಟ್ಟು ಬಿಡಿ ಅವನ್ನು ಅಲ್ಲಿಯೇ ಭೂತದಲ್ಲಿ’ ಅಂದ. ಮತ್ತೆ ತುಸು ಬಾಗಿ ‘ಒಂದು ಗುಟ್ಟು ಹೇಳಲೇ?’ ಅವನ ಕಣ್ಣಿಗೆ ಕೀಟಲೆಯ ಬಣ್ಣ ಬಂದಿತ್ತು. +‘ಹೂಂ ಹೇಳಿ’ ಅಂದೆ. +‘ನಮ್ಮಪ್ಪನಿಗೆ ಈ ಬಾಬ್ಬಿ, ಜೂಲಿಯಂಥಾ ಪಿಚ್ಚರ್ ನೋಡಿದರೆ, ಓದೋ ಹುಡುಗರು ಕೆಟ್ಟು ಹೋಗ್ತಾರೆ ಅಂತ ಭದ್ರ ನಂಬುಗೆ ಇತ್ತು. ಅಪ್ಪ ತಾವೇ ಸ್ವತ: ಸಂಸಾರ ಸಮೇತರಾಗಿ ‘ಲವಕುಶ’ ‘ಸಂಪೂರ್ಣ ರಾಮಾಯಣ’ಗಳಿಗೆ ಕರೆದುಕೊಂಡು ಹೋಗ್ತಾ ಇದ್ದರು. ಏನಾಯ್ತು ಗೊತ್ತೆ…’ ಕಣ್ಣು ಕಿರಿದಾಗಿಸಿ ಮೋಜಿನಿಂದ ಹೇಳಿದ. +‘ಹೂ…ಏನಾಯ್ತು?’ +‘ಡಿಂಪಲನ್ನೋ, ಜೂಲಿಯನ್ನೋ ಪ್ರೀತಿಸುವ ಬದಲು ನಾ ಪಂಡರೀಬಾಯಿಯನ್ನೇ ಗಟ್ಟಿಯಾಗಿ ಲವ್ ಮಾಡಿಬಿಟ್ಟೆ…’ +ನಾ ಜೋರಾಗಿ ನಕ್ಕೆ, ಅಜಯ್ ಆ ದಿನಗಳ ಸವಿಸವಿದು ಭಾರೀ ಮೋಜಿನಿಂದ ಹೇಳತೊಡಗಿದ. +ಅರೆ, ನನಗೆ ನೋವಾಗಬಲ್ಲ ಬಾಲ್ಯ ಇವನಿಗಿಷ್ಟು ಹಾಸ್ಯವಾಗಬಲ್ಲುದಾದರೆ, ಬಹುಶಃ ನಾ ನನ್ನ ಬಾಲ್ಯದಾಚೆಗೆ ಜಿಗಿಯಲು ಪ್ರಯತ್ನಿಸಲೇ ಇಲ್ಲವೆ? ಮೊಟ್ಟ ಮೊದಲಿಗೆ ಪ್ರಶ್ನೆ ಕಾಡಿತು. ಸಂಜೆ ಬಹಳ ಹೊತ್ತು ಮಾತನಾಡಿದೆವು. ಹೊರಗೆ ಚಿನಾರ್ ಮರದ ಕೆಳಗಿದ್ದ ಕಲ್ಲು ಬೆಂಚಿನ ಮೇಲೆ ಅರ್ಧ ರಾತ್ರಿಯೇ ಕಳೆಯಿತು. + +ದಿನಾಂಕ ೪ ಜೂನ್ ೧೯೮೯ +ಉಳಿದದ್ದೊಂದೇ ದಿನ! +ಬೆಳಗ್ಗೆ ಬೇಗನೇ ಎದ್ದಿದ್ದೆ. ನಿನ್ನೆಯೇ ನಿಶ್ಚಯಿಸಿದಂತೆ ಇಂದು ಪೆಹಲ್‌ಗಾವ್‌ಗೆ ಹೋಗಿ ಪೂರಾ ದಿನ ಅಲ್ಲಿ ಕಳೆದು ಬಿಡುವುದು. ನಾಳೆ ಬೆಳಿಗ್ಗೆ ಅಲ್ಲಿಂದ ಹೊರಟು, ಹಿಂತಿರುಗಿ, ದಿಲ್ಲಿಗೆ ಫ್ಲೈಟ್ ಹಿಡಿಯುವುದು. ದಿಲ್ಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಸೀಟ್ ಬುಕ್ ಆಗಿಯೇ ಇದೆ. +ಏಳು ಗಂಟೆಗೆಲ್ಲ ಅಜಯ್ ಟ್ಯಾಕ್ಸಿ ತಂದಿದ್ದ. ಇದ್ದ ಮೂರು ದಿನಗಳಲ್ಲಿ ಇಡೀ ಕಣಿವೆಯನ್ನೇ ಕಣ್ಣಿವೆಗಳಲ್ಲಿ ಸೆರೆ ಹಿಡಿದು ಹೊರಡಲಿದ್ದೆ. ಟ್ಯಾಕ್ಸಿ ಪೆಹಲ್‌ಗಾವ್ ಕಡೆಗೆ ತಿರುಗಿತು. ದಾರಿಯಲ್ಲಿ ಕಂಡ ಅವಂತಿಪುರದ ಅವಶೇಷಗಳ ಬಳಿ ಒಂದಿಷ್ಟು ಹೊತ್ತು ಕರು ನಿಂತಿತು. ಒಂಭತ್ತನೇ ಶತಮಾನದ ಇತಿಹಾಸದ ಪುಟಗಳು, ಯುಗ ಯುಗದ ಗಾಳಿ ತೀಡಿ ಮುರಿದು ಬಿದ್ದ ವಿಷ್ಣು ದೇಗುಲ. ಮುಕ್ಕಾಗಿ, ಮಬ್ಬಾಗಿ ಕುಸಿದ ಶಿಲೆಯಲ್ಲೂ ಮುತ್ತಿಟ್ಟ ಮಿಥುನಗಳೆಷ್ಟು! +ದಾರಿಯುದ್ದಕ್ಕೂ ಕೈ ಬೀಸಿ ಸ್ವಾಗತಿಸಿದ ಪ್ರಕೃತಿ, ಬಿಸಿಲ ಹೊಸ ಉಡುಗೆ ಉಟ್ಟು ನಿಂತಿದ್ದಳು. ಹಾದಿಯ ಜೊತೆಗೇ ಹರಿದ ನದಿ, ಸುತ್ತ ವೃಕ್ಷಗಳ ಹಿನ್ನೆಲೆಯಲ್ಲಿ ಪರ್ವತಗಳ ಅಂಚು. ತುದಿಯಲ್ಲೊಂದಿಷ್ಟು ಹಿಮ ಹೊತ್ತು ಸೂರ್ಯ ಕಿರಣಕ್ಕೆ ಬೆಳ್ಳಿಯಾಗಿ ಹೊಳೆದಿದ್ದ ಪರ್ವತ ಶಿಖರಗಳು. ಬೆಳ್ಳಿ ಬೆಟ್ಟದ ಸಲು, ಹಸಿರು ಪೈನ್ ವೃಕ್ಷಗಳು, ಬಣ್ಣದ ಪೋಸ್ಟರುಗಳಿಂದ ಹೊರಗಿಳಿದ ಜೀವಂತ ಚಿತ್ರ. +ನನ್ನ ಮನಸ್ಸು ಹಗುರವಾಗಿತ್ತು. ಕತ್ತಲೆಯ ಕೋಣೆಯಲ್ಲಿ ಅವಿತು ಕುಳಿತ ಭೂತಗಳನ್ನೆಲ್ಲ ಉಚ್ಛಾಟಿಸಿದ್ದೆ. ನಮ್ಮ ಫ್ಲಾಟ್‌ನ ಒಂಭತ್ತು ಬೈ ಒಂಭತ್ತು ಅಡಿ ಕೋಣೆಗಳಲ್ಲಿ ನನ್ನ ಚಿಂತನೆಗಳೆಲ್ಲ ಕಿಟಕಿಯಾಚೆಗೆ ಹಾರಲಾರದೆ ಗೋಡೆಗೆ ಢಿಕ್ಕಿ ಹೊಡೆದು ಕಾಲು ಮುರಿದು ಬೀಳುತ್ತಿದ್ದವು. ಮತ್ತೇನೂ ಯೋಚಿಸಲಾರದ ಒಳಗೊಳಗೇ ಪರಿಭ್ರಮಿಸಿ ಹಾದಿ ತಪ್ಪಿದ ಚಿಂತನೆಗಳು. ಇಲ್ಲಿ ಕಣ್ಣನೋಟದಾಚೆಗೂ ಚಾಚಿ ನಿಂತ ಅನಂತತೆ, ನನ್ನ ಒಳಗಿನದೆಲ್ಲ ಹೊರ ಹಾಕಿ, ನನ್ನೊಳಗೆ ತುಂಬಿಕೊಳ್ಳುತ್ತಿತ್ತು. ಅಜಯನ ತುಂಬು ನಗು, ಮೋಜಿನಿಂದ ಹಂಚಿಕೊಳ್ಳುವ ಕಲೆ, ನನಗೆ ಸ್ನೇಹದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಗಂಡು ಸ್ನೇಹದ ಪುಳಕವಷ್ಟೇ ಅಲ್ಲ, ಬಿಚ್ಚಿಕೊಳ್ಳಬಲ್ಲ ಸ್ನೇಹ, ನನ್ನೊಳಗಿನ ಭಾವನೆಗಳನಡು ಬೀದಿಯಲ್ಲಿ ಬೆತ್ತಲೆ ಓಡಿಸಬಲ್ಲ ಸಾಧ್ಯತೆಯೇ ಮುದ ಕೊಟ್ಟಿತು. ಜಗತ್ತಿನ ಅರ್ಧ ಜನರಿಂದ ನಾ ದೂರವಿದ್ದೆ. ಅವರು ಗಂಡಸರು ಎಂಬ ಕಾರಣಕ್ಕೆ. ಗಂಡು-ಹೆಣ್ಣಿನ ಸಂಬಂಧದ ನೂರು ಸಾಧ್ಯತೆಗಳಲ್ಲಿ ಅಪ್ಪ ನನಗೆ ಮನವರಿಕೆ ಮಾಡಿಕೊಟ್ಟಿದ್ದು ಒಂದನ್ನೇ. ಬಾಲ್ಯದಿಂದ ಒಂದೆರಡು ದಶಕಗಳಾಚೆ ನಿಂತರೂ ನನ್ನ ಕಾಡುವ ಈ ಪೂರ್ವಾಶ್ರಮ ಇವೆಂಥದ್ದು? ಅವರಿವರು ತುಂಬಿದ್ದ ಪೂರ್ವಾಗ್ರಹಗಳ ತೊಗಲ ಚೀಲವಾಗಿದ್ದೆ. ಅಪ್ಪ ನೆಟ್ಟ ಬೇಲಿ ಕಿತ್ತು ಹೋಗಿದ್ದರೂ ಕಲ್ಪಿತ ಸೀಮಾ ರೇಖೆಯೊಳಗೇ ಪರಿಭ್ರಮಿಸಿದ್ದೆ. ಕಡೆಗೆ ಅವೆಲ್ಲ ಅಮ್ಮ-ಅಪ್ಪ, ಸಮಾಜ ಹಾಕಿದ ನಿರ್ಬಂಧನಗಳೇ ಅಲ್ಲ, ನನಗೆ ನಾನೇ ಎಳೆದುಕೊಂಡ ಲಕ್ಷ್ಮಣ ರೇಖೆ ಎನಿಸಿತ್ತು. ಅವರೆಲ್ಲರ ನಿರೀಕ್ಷೆಗೆ ಹೊಂದಿ ನಿಂತು ಮಾದರಿಯಾಗುವ ಬಯಕೆ, ವಿಚಿತ್ರ ಕುಣಿಕೆಯಾಗಿತ್ತು. +* +* +* +ಪೆಹಲ್‌ಗಾವ್‌ಗೆ ಬಂದು ಇಳಿದಾಗ ಸೂರ್ಯ ಸಾಕಷ್ಟು ಮೇಲೆ ನಿಂತಿದ್ದ. ಪ್ರಕೃತಿಯ ಗರ್ಭದಲ್ಲೊಂದು ಕೈ ಕಾಲು ಚಾಚಿ ನಿಂತ ಪುಟ್ಟ ಊರು. ಊರಿಗಿಡೀ ಒಂದೇ ರಾಜ ಬೀದಿ. ಎರಡೂ ಬದಿಗೂ ಢಾಬಾಗಳು. ಕಸೂತಿ ಹಾಕಿದ ಉಡುಪಿನಂಗಡಿಗಳು. +‘ಏನಾದರೂ ಒಂದಿಷ್ಟು ತಿಂದು ತಿರುಗೋಕೆ ಹೋಗೋಣ….’ ಅಜಯ್ ಹೇಳಿದ್ದಕ್ಕೆ ತಲೆ ಆಡಿಸಿದೆ. ಸ್ವಲ್ಪ ಚಂದ ಕಂಡ ಹೋಟಲಿಗೆ ನುಗ್ಗಿ ಒಂದಿಷ್ಟು ಆಲೂ ಪರೋಠಾ, ಒಂದಿಷ್ಟು ದಾಲ್-ಚಾವಲ್ ತಿಂದಿದ್ದಾಯ್ತು. +‘ಕುಡಿಯೋಕೆ?’ ಅಜಯ್ ಕೇಳಿದ. +‘ಮಾಮೂಲು, ಚಾಯ್…’ ಎಂದೆ. +‘ಅನು, ನೀವು ಹೊಸದೇನನ್ನೂ ಸವಿಯೋಕೆ ಸಿದ್ಧವಿಲ್ಲ. ಇಷ್ಟು ದೂರ ಬಂದು ಕಶ್ಮೀರಿ ಕಾವಾ ಕುಡಿಯದೆ ಹೋಗೋದಾ?’ ಅಂದ. +‘ಚೆ, ಅದು ಬೇಡ ಹಾಲಿಲ್ಲದ ಕರಿ ಕಾವ…’ ಮುಖ ತಿರುವಿದೆ. +‘ಮೇಡಂ, ಕಾವಾ ಬಗ್ಗೆ ನಿಮ್ಮಪ್ಪ ಏನಾದರೂ ನಿರ್ಬಂಧನೆ ಹಾಕಿರಲಿಲ್ಲ ತಾನೆ?’ ಜೋರಾಗಿ ನಕ್ಕೆ. ಈ ಮೂರು ದಿನದಲ್ಲಿ ಅಜಯ್ ನನ್ನ ಇತಿಹಾಸವೆಲ್ಲ ಬಲ್ಲ ಬಾಲ್ಯ ಸ್ನೇಹಿತನಾಂತಾಗಿ ಬಿಟ್ಟಿದ್ದ. ನಕ್ಕುಬಿಟ್ಟೆ. ಏಕೋ ಇದೀಗ ಅಪ್ಪನ ಮೇಲೆ ಸಿಟ್ಟು ಬರಲಿಲ್ಲ. ಅಪ್ಪನ ಕೋಟೇಗಳೆಲ್ಲ ದಾಟಬಹುದಾದಷ್ಟು ಕುಬ್ಜವಾಗಿದ್ದವು. ಅವರನ್ನು ಅವರ ಪರಿಸರದ, ಅವರ ಹಿನ್ನೆಲೆಯ ಫಲಿತಾಂಶವಾಗಿ ಅರ್ಥೈಸಲೂ ಸಾಧ್ಯವಾಗಿತ್ತು. +‘ಸರಿ, ಕಾವಾನೇ ತರಿಸಿ…’ ಕೈ ಚೆಲ್ಲಿ ಕುಳಿತೆ. +ಹೊಳೆಯುತ್ತಿದ್ದ ಬೆಳ್ಳಿ ಬಣ್ಣದ ಸುಂದರ ಸಮಾವಾರ ಪಾತ್ರೆಯಲ್ಲಿ ಬಿಸಿ ಬಿಸಿ ಕಾವ ತಂದು ಲೋಟಗಳಿಗೆ ಬಗ್ಗಿಸಿದ. ಸಣ್ಣ ದಾಲ್ಚಿನ್ನಿ, ಏಲಕ್ಕಿ, ಗೋಡಂಬಿಯ ಚೂರುಗಳು ಮೇಲೆ ತೇಳುತ್ತಿದ್ದವು. ನವಿರಾದ ಸವಿಗಂಪು. +‘ಹೇಳಿ, ಈ ಕಂಪು, ಈ ಶ್ರೀಮಂತಿಕೆ ನಿಮ್ಮ ಬಡ ಚಾಯ್‌ಗುಂಟೆ?’ ಕಾವಾ ಹೀರುತ್ತಾ ಅಜಯ್ ಕೇಳಿದ. +ಒಂದು ಗುಟುಕು ಕುಡಿದೆ. ರುಚಿ ಇತ್ತು.ಬದುಕಿನಲ್ಲಿ ಎಷ್ಟೆಲ್ಲ ಸವಿಯದೆ ಬಿಟ್ಟಿದ್ದೆ. ಸ್ನೇಹವನ್ನು, ಪ್ರೀತಿಯನ್ನು, ಕಡೆಗೆ ಕಿರಣನ ಸ್ಪರ್ಶವನ್ನೂ, ಕರ್ತವ್ಯದಂತೆ ಸಹಿಸುತ್ತಾ, ಮನಸ್ಸಿಲ್ಲದ ಮೈ ಒಡ್ಡುತ್ತಾ, ನನಗಲ್ಲದೆ ಅವನಿಗೂ ಹಿಂಸೆಯಾಗಿದ್ದೆ. ನನ್ನ-ಕಿರಣನ ಐದು ವರ್ಷಗಳ ದಾಂಪತ್ಯದಲ್ಲೂ ಎಷ್ಟೊಂದು ಖಾಲಿತನ ಉಳಿದುಬಿಟ್ಟಿದೆ. ಕರ್ತವ್ಯವಾದ ಪ್ರೀತಿಗೆ ಒಂದಿಷ್ಟು ಬಯಕೆಯ ಬಿಸಿ ತಾಗಿಸಬೇಖು. ಕಣಿವೆಯ ಸಾಧ್ಯತೆಗಳ ಬೆಂಗಳೂರಿಗೂ ಕೊಂಡೊಯ್ಯಬೇಕು. +‘ಹೊರಡೋಣವಾ…?’ ಅಜಯ್ ಕೇಳಿದ. +ಹೊರಗೆ ಬಂದು ಒಂದಿಷ್ಟು ದೂರ ನಡೆದು, ಸುತ್ತಲೆಲ್ಲ ಸುತ್ತಿ ಬರಲು ಎರಡು ಕುದುರೆ ಹಿಡಿದು ಏರಿದೆವು. ನಾ ಅಜಯನತ್ತ ತಿರುಗಿ ಹಲ್ಲು ಕಿರಿದೆ, ಒಳ್ಳೆ ಹಿಂದಿ ಸಿನೆಮಾದ ನಾಯಕ-ನಾಯಕಿಯರಂತೆ ಭಾಸವಾಗಿತ್ತು. ಹರಿವ ಝೇಲಮ್‌ನ ಮೇಲೆ ಹಾದ ಕಟ್ಟಿಗೆಯಂತೆ ಸೇತುವೆ ದಾಟಿ, ಎತ್ತರದ ಪೈನ್ ವೃಕ್ಷಗಳ ನಡುವೆ ಕುದುರೆಗಳು ಪರಿಚಿತ ಹೆಜ್ಜೆ ಹಾಕಿದ್ದವು. +ಶಿವಲಿಂಗವಿದ್ದ ಸಣ್ಣ ದೇವಾಲಯದ ಮುಂದೆ ಕುದುರೆ ನಿಲ್ಲಿಸಿ ಇಳಿದೆವು. ಎದುರಿಗೇ ಸ್ವಚ್ಛ ಚಿಲುಮೆಯ ನೀರು. ಅತ್ತ ಪಕ್ಕದ ಹಸಿರು ಹರವಿನಲ್ಲಿ ಒಂದಿಬ್ಬರು ಕ್ಯಾಮರಮೆನ್‌ಗಳ ಗಲಾಟೆ. ಕಶ್ಮೀರಿ ಫೆರನ್, ಕಶ್ಮೀರಿ ಒಡವೆಗಳ ಅಲ್ಲೇ ಹುಲ್ಲಿನ ಮೇಲೆ ಹರಡಿಕೊಂಡು ‘ಬನ್ನಿ ಸಾಬ್, ಕಶ್ಮೀರಿ ಉಡುಪಲ್ಲಿ ನೀವೂ ಫೋಟೋ ಹಿಡಿಸಿ’ ಎಂದು ಅಲ್‌ಬಮ್ ತೋರಿಸುತ್ತಾ ದುಂಬಾಲು ಬಿದ್ದರು. ಅಜಯ್ ತಮಾಷೆಯಾಗಿ ನನ್ನತ್ತ ನೋಡುತ್ತಾ, +‘ಬನ್ನಿ ನೀವೂ ಒಂದು ಫೆರನ್ ಏರಿಸಿ’ ಅಂದ. ನಾ ಪೂರಾ ನಚಿ, +‘ಚೆ, ಬೇಡ…ಬೇಡ…’ಎಂದೆ. +‘ಅರೆ ಬನ್ನಿ, ಇಂಥ ಸಣ್ಣ ಖುಷಿಗಳನ್ನೆ ನಾವು ಬಾಚಿ ಹೆಕ್ಕಿಕೊಳ್ಳಬೇಕಾದ್ದು. ಮತ್ತೆ ನೀವು ಕಾಶ್ಮೀರಕ್ಕೆ ಬರೋದು ಯಾವಾಗ…’ +ಮತ್ತೆ ನಾ ಬದುಕಿಗೆ ಬರುವುದು ಯಾವಾಗ? +ಅಜಯ್ ಹುಲ್ಲಿನ ಮೇಲೆ ಹರಡಿದ ಫೆರನ್ ಎತ್ತಿ, ತಲೆಗೆ ಕೆಂಪು ಬಣ್ಣದ ಚುನರಿ ಆರಿಸಿ, ಕೊರಳಿಗೆ ಬೆಳ್ಳಿ ತಗಡಿನ ಆಭರಣ ಎತ್ತಿ ಕೊಟ್ಟ. ಹಾಕಿದ ಉಡುಪಿನ ಮೇಲೇ ದೊಗಲೆ ಫೆರನ್ ಏರಿಸಿ ಒಂದೆರಡು ಫೋಟೋ ಹಿಡಿಸಿದೆ. +ಆ ದಿನವೆಲ್ಲ ಇಂಥಹುದೇ ಸಣ್ಣ ಸಣ್ಣ ಘಟನೆಗಳು. ಬಹಳಷ್ಟು ಸುತ್ತಾಡಿದೆವು. ಏರು ತಗ್ಗಿನ ಗುಡ್ಡಗಳ ಮೇಲೆ, ಗೋಲ್ಫ್ ಕೋರ್ಸಿನ ಹಸಿರು ಹಾಸಿನ ಮೇಲೆ, ತೂಗಿ ನಿಂತ ಸೇತುವೆಗಳ ಮೇಲೆ…ವರ್ಷ ವರ್ಷಗಳ ಸ್ನೇಹಿತರಾಗಿ. +* +* +* +ಸಂಜೆ ಆಗಿತ್ತು. ಈ ರಾತ್ರಿ ಉಳಿಯಲು ಗೆಸ್ಟ್ ರೂಂ ವ್ಯವಸ್ಥೆ ಇತ್ತು. ಝೇಲಮ್‌ನ ಬದಿಗೇ ಕಟ್ಟಿದ ಎರಡು ಕೋಣೆಗಳ ಅತಿಥಿ ಗೃಹ. ರಾತ್ರಿ ಊಟ ಮುಗಿಸಿ ಹೊರಬಂದೆವು. ಎಷ್ಟು ಹತ್ತಿರವಿದ್ದವು ಹಿಮವತ್ಪರ್ವತಗಳು, ಬೆಳ್ಳಿ ಶಿಖರಗಳು ಬೆನ್ನಿಗೇ ಆತು ನಿಂತಿದ್ದವು. +ತಣ್ಣಗೆ ಝೇಲಮ್ ಹರಿಯುತ್ತಿತ್ತು. ಸಶಬ್ದವಾಗಿ ಸಂಭಾಷಿಸುತ್ತಾ ಮೇಲೆ ಶಿವನ ನೆತ್ತಿಯಿಂದ ಕರಗಿ ಹರಿದ ಹಿಮದ ಧಾರೆ. ಮತ್ತೂ ಬಿಗಿಯಾಗಿ ಶಾಲು ಹೊದ್ದೆ. ಅರೆ ಚಂದ್ರನ ಬೆಳದಿಂಗಳಿತ್ತು. ತಿಳಿಯಾಗಿ, ತುಂತುರಾಗಿ ಹರಿದ ನೀರನ್ನೇ ನೋಡಿದೆ. ‘ವಾಟರ್ ಲಾಗಿಂಗ್…’ ನೆಲದಲ್ಲಿ ಹೀರಲಾರದೆ, ಹರಿಯಲಾರದೆ, ಮೇಲೇರಿ ಮಡುವಾಗುವ ಬಗ್ಗೆ ಎಷ್ಟು ವರ್ಷಗಳ ಸಂಶೋಧನೆ…ನನ್ನ ಪೆ.ಎಚ್.ಡಿ ಥೀಸೀಸ್ ಇದೇ ಆಗಿತ್ತು. ನೀರನ್ನು ನಿಯಂತ್ರಿತ ಪ್ರಯೋಗಾಲಯದಲ್ಲಿ ಹಿಡಿದು ಕಟ್ಟಿ ಅಧ್ಯಯಿಸುವುದಕ್ಕೂ, ಇಲ್ಲಿ ಶಿಖರಗಳಲ್ಲಿ ಕರಗಿ ರಭಸದಲ್ಲಿ ಹರಿದು ಭೋರ್ಗರೆವ ಈ ನೀರಿಗೂ ಎಷ್ಟು ಅಂತರ. ಹೈಡ್ರಾಲಿಕ್ ಲ್ಯಾಬ್‌ನಲ್ಲಿ ನೀರನ್ನು ಕಟ್ಟಿ, ಬಂಧಿಸಿ, ಲೆಕ್ಕ ಹಾಕಿ ಹರಿಯಬಿಡುತ್ತಾ, ಗುಲ್ಬರ್ಗ, ನಾರಾಯಣಪುರ ಎಂದೆಲ್ಲ ಅಲೆದು ನೆಲದ ನೀರ ಅಂಕಿ-ಸಂಖ್ಯೆ ಸಂಗ್ರಹಿಸುತ್ತಾ ಅಲೆದ ನನ್ನ ವಿಜ್ಞಾನಿ ಕಣ್ಣುಗಳಿಗೀಗ ಝೇಲಮ್‌ನ ಮುಕ್ತ ಭೋರ್ಗರೆತದಲ್ಲಿ, ಹುರುಪು, ಹುಮ್ಮಸ್ಸಿನಲ್ಲಿ ಬೇರೊಂದೇ ಸತ್ಯದ ಅರಿವಾಗಿತ್ತು. ನಾ ಈ ನೀರಿಗೆ ಕಟ್ಟೆ ಹಾಕಬೇಕಿಲ್ಲ, ಲೆಕ್ಕ ಹಾಕಬೇಕಿಲ್ಲ, ಹರಿಯಬಿಡುತ್ತೇನೆ…ಮೈ ಮನಗಳ-ಹಸಿಯಾಗಿಸಲು, ಹಸಿರಾಗಿಸಲು. +ಮತ್ತೂ ಬಿಗಿಯಾಗಿ ಶಾಲು ಹೊದ್ದೆ. ಮೇಲೆ ಶುಭ್ರ ಆಕಾಶ, ಸುತ್ತ ಕಪ್ಪಾಗಿ ಮುಗಿಲೆತ್ತರಕ್ಕೆ ನಿಂತ ಪೈನ್ ವೃಕ್ಷಗಳು. ಅಜಯ್ ಮೃದುವಾಗಿ ಕೈ ಒತ್ತಿದ. ಬೆಚ್ಚನೆಯ ಸ್ನೇಹದ ಒತ್ತು ಅಂಗೈಯ್ಯಲ್ಲಿ. ಎಲ್ಲ ಸರಹದ್ದುಗಳ ಮೀರಿ ಹಾರಿತ್ತು. ಕಪ್ಪು ಆಗಸದಲ್ಲಿ ಚುಕ್ಕಿ ಸಾವಿರವಿತ್ತು, ಬಿಗಿದ ಮುಷ್ಠಿಯ ಒಳಗೆ ಮಿಕ್ಕ ಪ್ರೀತಿಯು ಒಂದೇ. ಜಗತ್ತಿನೆಲ್ಲ ಪ್ರೀತಿಯ ಈ ಕ್ಷಣ ಬೊಗಸೆಯಲ್ಲಿ ಹಿಡಿದಿದ್ದೆ, ಸೋರಬಿಡದೆ. ಕಾಶ್ಮೀರದ ಈ ಕಣಿಯೆಯಲ್ಲಿ ‘ಸಮಯ’ ಸ್ತಬ್ಧವಾಯಿತು. ಭೂತ-ಭವಿಷ್ಯಗಳಿಗೆ ಮುಚ್ಚಿ ಬಾಗಿಲನ್ನು, ವರ್ತಮಾನವಷ್ಟೆ ಸತ್ಯವಾಗಿತ್ತು. ಅರಳದೆ, ಉಳಿದು ಬಿಟ್ಟ ದೇಹದ ಪಕಳೆ-ಪಕಳೆಗಳು ಬಿರಿದು ನಿಂತವು. ಮೆಲ್ಲಗೆ ಅವನ ಕೈ ಸರಿಸಿದೆ. ಈ ಕ್ಷಣ ಕರಗುವುದು ಬೇಕಿರಲಿಲ್ಲ.. ಈ ಕ್ಷಣ ಸ್ಖಲಿಸುವುದು ಬೇಕಿರಲಿಲ್ಲ. ಈ ಕ್ಷಣದ ಸಾಧ್ಯತೆಗಳಷ್ಟೆ ಮುಖ್ಯವಾಗಿತ್ತು. ಅಸಾಧ್ಯವಾಗಿ, ಅಸಂಭವವಾಗಿ ಮತ್ತೊಂದು ಆಯಾಮದಲ್ಲೇ ಉಳಿದುಬಿಡಲಿದ್ದ ಅನುಭವವೊಂದು ಮೈ ತುಂಬಿತ್ತು. ನನ್ನ ನಿತ್ಯ ಕನಸುಗಳಿಗೆ, ಮತ್ತೆ ಬರೆವ ಕವನಗಳಿಗೆ ವಸ್ತುವಾಗಲಿತ್ತು. ಇನ್ನು ಅವು ಕಪ್ಪು-ಬಿಳುಪು ಕವನಗಳಲ್ಲ, ಕಣಿವೆಯ ರಂಗಿನಲ್ಲಿ, ಈ ನಿಸರ್ಗದ ಬಣ್ಣಗಳಲ್ಲಿ ಅದ್ದಿ ಬರೆಯಬಲ್ಲೆ. ಈ ಬಣ್ಣಗಳನ್ನಿಷ್ಟು ಕೊಂಡೊಯ್ಯಬಲ್ಲೆ, ಬೆಂಗಳೂರಿನ ನೆಲಕ್ಕೂ. +ನಾಳಿನ ಫ್ಲೈಟ್ ಬುಕ್ ಆಗಿತ್ತು. ಈ ರಾತ್ರಿ ಹರಿದು ಹೋಗದಂತೆ ಅಣೆಕಟ್ಟು ಏರಿಸುವ ತವಕ ಕ್ಷಣ ಕಾಡಿತು. ಈ ಮೂರೇ ದಿನಗಳಲ್ಲಿ ನಾ ಎಷ್ಟು ಹಗುರಾಗಿದ್ದೆ. ಹೇಳಿಕೊಂಡೆ, ಹಂಚಿಕೊಂಡೆ. ನಡುಬೀದಿಯಲ್ಲಿ ನಗ್ನವಾದಂತೆ ದಿವ್ಯ ನಿರ್ಲಜ್ಜೆಯಲ್ಲಿ ನಿಂತಿದ್ದೆ. ಏಕೋ ಸಂಕೋಚವಾಗಲಿಲ್ಲ, ಮುಜುಗರವಾಗಲಿಲ್ಲ. ಒಳಗೊಳಗೇ ಮಸೆದು, ಹೊಗೆಯೆದ್ದು, ಆಸ್ಫೋಟಿಸಬಯಸಿದ ನೆನಪುಗಳನ್ನೆಲ್ಲ ಹೇಳುತ್ತಾ ಹೇಳುತ್ತಾ ಉಚ್ಛಾಟಿಸಿದೆ. ಥಿಯರಿಗಳ ಹುಡುಕಾಡಿದೆ. ಸಮೀಕರಣಗಳ ಜೋಡಿಸಿದೆ. ನನ್ನದಲ್ಲದ ಕತೆಯೆಂಬಂತೆ ದೂರ ನಿಂತು ಮೋಜಿನಿಂದ ವೀಕ್ಷಿಸಿದೆ.ಏಕೋ ಅಪ್ಪನ ಮೇಲೆ ಕೂಡ ಈಗ ಸಿಟ್ಟು ಬರುತ್ತಲೇ ಇಲ್ಲ. +ಮುಗುಯಲಿತ್ತು ಆ ರಾತ್ರಿ. ಅಜಯ್ ತಟ್ಟನೆ ಕೇಳಿದ. +‘ಅನು, ನೀವು ಖುಷಿ ಇದ್ದೀರಾ ನಿಮ್ಮ ವಿವಾಹದಲ್ಲಿ…’ +ನಕ್ಕುಬಿಟ್ಟೆ, ಪೆಚ್ಚಾದ. +‘ಅಜಯ್, ಪ್ರೀತಿಗೆ ನೆಪಗಳ ಹುಡುಕುವುದು ಬೇಡ…’ಅಂದೆ. ಅವ ತಣ್ಣಗಾದ. +‘ಕಾರಣಗಳಲ್ಲಿ ಹುಟ್ಟುವುದಿಲ್ಲ ಈ ಆಕರ್ಷಣೆ. ಬದುಕಿನ ಈ ಬದಿಗಿದ್ದ ಸಾಧ್ಯತೆಗಳ ನಾ ಎಂದಾದರೂ ಅನ್ವೇಷಿಸಲೇ ಬೇಕಿತ್ತು. ಈ ಆಕಾಶದಡಿಯ ಯಾವೊಂದು ಅನುಭವ ಉಳಿಸಿ ಹೋಗುವುದು ನನಗೆ ಬೇಕಿರಲಿಲ್ಲ…’ +ಮತ್ತೆ ಆತ ಏನೂ ಹೇಳಲಿಲ್ಲ. ನಮ್ಮ ನಡುವೆ ಮಾತುಗಳು ಉಳಿದಿರಲಿಲ್ಲ, ನಿರೀಕ್ಷೆಗಳಿರಲಿಲ್ಲ, ಭವಿಷ್ಯವಿರಲಿಲ್ಲ. ಈ ಕ್ಷಣ ಸೊಗಸಿತ್ತು. ಆದರೆ ನಮ್ಮದೇ ಬದುಕೊಂದು ಕಾದಿತ್ತು ದೂರದಲ್ಲಿ. ಭೂತ-ಭವಿಷ್ಯಗಳಿಗೆ ಕದ ಹಾಕಿ ವರ್ತಮಾನದ ಒಂದೆರಡು ಕ್ಷಣಗಳ ತುಂಬಿ ನಿಂತಿದ್ದೆವು. ಅವನ ಹೆಂಡತಿ, ಮಕ್ಕಳ ಬಗ್ಗೆ ಕೇಳಬೇಕು ಅಂದುಕೊಂಡೆ. ಏಕೋ ಕೇಳಲೇ ಇಲ್ಲ. ಈ ಕ್ಷಣಕ್ಕೆ ನಮ್ಮಿಬ್ಬರಾಚಿನ ದಿಕ್ಕುಗಳನ್ನೆಲ್ಲ ಎಳೆದು ತರುವುದು ಬೇಡ ಅನಿಸಿತು. +ಈ ಸಾಂಗತ್ಯದ ಒಂದಿಷ್ಟು ರಂಗನ್ನು, ರಂಯತೆಯನ್ನು ಕೊಂಡೊಯ್ಯುತ್ತಿದ್ದೆವು. ಒಂದು ಸ್ನೇಹದ ಸಿಹಿ ಸುಖವನ್ನು, ಪ್ರಖರ ಪ್ರಭೆಯನ್ನು. +ನಾ ನಕ್ಕೆ…ಬದುಕಿನತ್ತ ತುಂಟ ನಗೆ ಬೀರಿ, ಬದುಕು ನನ್ನನ್ನಲ್ಲೇ ನಿಲ್ಲಿಸಿ, ‘ಬೈಪಾಸ್’ ಮಾಡಲಿತ್ತು, ಗಕ್ಕನೆ ನಾ ವೇಗ ಹೆಚ್ಚಿಸಿದ್ದೆ. ಬದುಕನ್ನಿಷ್ಟು ಹಿಡಿದು ನಿಲ್ಲಿಸಿದ್ದೆ. ತುಂಬಿಕೊಂಡಿದ್ದೆ ಮಡಿಲ ತುಂಬಾ ಝೇಲಮ್‌ನ ಅನಿಯಂತ್ರಿತ ಹರಿವನ್ನು, ಬೆನ್ನು ಬಾಗಿಸದೆ ನಿಂತ ಪೈನ್ ವೃಕ್ಷಗಳ ನಿಲುವನ್ನು, ಕಣಿವೆಯಲ್ಲಿನ ಅಕೃತಕ ಪ್ರೀತಿಯನ್ನು! +* +* +* +ದಿನಾಂಕ ೫ ಜೂನ್ ೧೯೮೯ +ಮರುದಿನ ಶ್ರೀನಗರದ ವಿಮಾನ ನಿಲ್ದಾಣ ತಲುಪಿದಾಗ ತುಸು ತಡವಾಗಿತ್ತು. ಸೂಟ್‌ಕೇಸ್‌ಗಳ ತಳ್ಳಿ, ವ್ಯಾನಿಟಿ ಬ್ಯಾಗಿಗೆ ಕ್ಯಾಬಿನ್ ಲಗ್ಗೇಜ್, ಫಲಕ ಸಿಗಿಸಿಕೊಂಡು ಹೊರಟೆ. ನನ್ನ-ಅಜಯನ ಸೀಟು ಈ ಬಾರಿ ಒಟ್ಟಿಗೇ ಸಿಕ್ಕಿರಲಿಲ್ಲ. ಅಜಯ್ ನನ್ನ ಕಿಟಕಿ ಪಕ್ಕಕ್ಕೆ ಕೂರಿಸಿ, ತಾ ಮುಂದಿನ ಸಾಲಿಗೆ ಹೋಗಿ ಕುಳಿತ. +ಏಕೋ ನೋವಾಗಲಿಲ್ಲ. +ವಿಮಾನ ಮೇಲೇರಿತು. ಕೆಳಗೆ ನೋಡಿದೆ. ಕಣಿವೆ ಏನೆಲ್ಲ ಕಲಿಸಿತ್ತು. ನಾ ಬಹಳಷ್ಟು ಪಡೆದಿದ್ದೆ. ಮತ್ತೆ ಬರೆವ ನನ್ನ ಕವನಗಳಿಗೆ ಬೀಜಾಣುಗಳು ದೊರೆತಿತ್ತು. ನಾ ಮೊಟ್ಟಮೊದಲಿಗೆ ಪ್ರೀತಿಸತೊಡಗಿದ್ದೆ ನನ್ನನ್ನೇ…ಅದರೆಲ್ಲ ಏರು-ತಗ್ಗುಗಳೊಡನೆ, ಅದರೆಲ್ಲ ಚಂಚಲತೆಯೊಡನೆ, ಅವನ್ನೆಲ್ಲ ಅತ್ಯಂತೆ ಸಹಜವಾಗಿ ಸ್ವೀಕರಿಸಲು ಸಾಧ್ಯವಾಗಿತ್ತು. ಸಂಬಂಧಗಳಲ್ಲಿ ಎಷ್ಟೊಂದು ಹೇಳದೇ ಉಳಿದು ಬಿಡಿತ್ತವೆ – ವೈವಾಹಿಕ ಸಂಬಂಧದಲ್ಲೂ. ಹತ್ತಿರವಾಗುತ್ತೇವೆ, ಕತ್ತಲಲ್ಲಿ. ಬೆಳಕಲ್ಲಿ ಶುದ್ಧ ಅಪರಿಚಿತರು. ಬೆಳಕಿಗೊಡ್ಡಬೇಕು ನಮ್ಮ ಪ್ರೀತಿಗಳ. ಹೇಳದೆ ಉಳಿದ ಮಾತುಗಳೆಲ್ಲ ಹಿಂಸೆಯಾಗುತ್ತವೆ. ಬರೆಯದೆ ಬಿಟ್ಟ ಕವನಗಳಂತೆ ಭಾರವಾಗುತ್ತವೆ. ತೆರೆದುಕೊಳ್ಳಬೇಕು, ಪಾರದರ್ಶಕವಾಗಬೇಕು, ಬರೀ ಪದಗಳಲ್ಲಲ್ಲ, ಬದುಕಿನಲ್ಲೂ. ಏಕೋ ಅಜಯ್ ಈ ಕ್ಷಣಕ್ಕೆ ದೂರಾದ-ಕೇವಲ ನೆಪವಾದ-ಮುಂದಿನ ಸಾಲಲ್ಲೇ ಕುಳಿತಿದ್ದೂ, ದೂರ ಕಣಿವೆಯ ನೆನಪು ಮಾತ್ರವಾದ. ಕಾಲದ ನಡುವೆ ಹಿಂದು-ಮುಂದಿಲ್ಲದೆ ಘನವಾದ. ಒಂದು ಅನುಭವದ ಬಿಂದುವಾದ. +ಹೊರಗೆ ನೋಡಿದೆ. ನೆಲಮುಗಿಲ ನಡುವೆ ತಟಸ್ಥ ನಿಂತ ಮೋಡಗಳು. ಮನಸ್ಸು ಮುದಗೊಂಡಿತು. ಎಂಥಹುದೋ ವಿಚಿತ್ರ ಉತ್ಸಾಹ. ಅಂತರಗಂಗೆಯಾಗಿ ಸುಳಿದಾಡಿದ ನನ್ನ ಪ್ರೇಮಕಾಮಗಳಿಗೆಲ್ಲ ಅಭಿವ್ಯಕ್ತಿ ದೊರೆತಿತ್ತು. ಗುಪ್ತಗಾಮಿನಿಯಾಗಿ ಹರಿದ ಬಯಕೆಗಳಷ್ಟು ಚಿಲುಮೆಯಾಗಿದ್ದವು. ನನ್ನ ಕವನಗಳು ಕಡೆಗೂ ತಲುಪಿದವು., ತಲುಪಬೇಕಿದ್ದ ಕನಸಿನಾಚೆಯ ದಡಕ್ಕೆ, ಶಿಖರದಿಂದಿಳಿದು ಕಾಡು, ಮೇಡು, ಬಯಲುಗಳಲ್ಲಿ ಹರಿದು, ಕಡೆಗೂ ತಲುಪಿದವು, ಕಣಿವೆಯಾಚಿನ ವಾಸ್ತವಕ್ಕೆ. +* +* +* +ಬೆಂಗಳೂರಿಗೆ ಹೊರಟ ಕರ್ನಾಟಕ ಎಕ್ಸ್‌ಪ್ರೆಸ್ ಹೊರಡಲು ಐದು ನಿಮಿಷ ಮಾತ್ರ ಉಳಿದಿತ್ತು. ಅಜಯ್ ಸ್ತೇಷನ್ವರೆಗೂ ಬಂದಿದ್ದ. ನಮ್ಮ ನಡುವೆ ಹೆಚ್ಚು ಮಾತಿರಲಿಲ್ಲ. ದಿಲ್ಲಿಯ ಜನ ಸಮೂಹ ನಡುವೆ ಗೋಡೆಯಾಗಿತ್ತು, ಗದ್ದಲವಾಗಿತ್ತು. ಇನ್ನೇನು ರೈಲು ಹೊರಡಲಿತ್ತು. +‘ಬರೀತಿರಿ…’ ಅಂದ. ಅವನು ಹೇಳಿದ್ದು ಪತ್ರವನ್ನೋ, ಕವನಗಳನ್ನೋ ಗೊತ್ತಾಗಲಿಲ್ಲ. ಬರೀ ’ಹೂಂ’ ಎಂದೆ. ಹಸಿರು ದೀಪ-ರೈಲು ಹೊರಟಿತು. ರವಿ ಬಾಗಿ ಕೈ ನೀಡಿದ. ಬೆಚ್ಚಗೆ ಕ್ಷಣ ಹಿಡಿದ. ಅವನ ಬಿಗಿ ಮುಷ್ಠಿಯಲ್ಲಿ ಸಿಕ್ಕ ನನ್ನ ಹಸ್ತವನ್ನು ಕಿತ್ತುಕೊಂಡು ರೈಲು ಹೊರಟಿತು – ಕನಸಿನಾಚೆಗಿನ ವಾಸ್ತವದತ್ತ – ಹೊಸತೇನೋ ಭರವಸೆಯ ಹೊತ್ತು. +***** +ಕೀಲಿಕರಣ: ಪ್ರೀತಿ ಬಿ ನಾಗರಾಜ್, ಸೀತಾಶೇಖರ್ +ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […] +ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […] +ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_759.txt b/Kannada Sahitya/article_759.txt new file mode 100644 index 0000000000000000000000000000000000000000..1d5127e2032a37ce595d962e2b716b99f7b6e7e4 --- /dev/null +++ b/Kannada Sahitya/article_759.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಿಂಡಾಗುಲಿವ ಮಳೆ +ತಗಡು ತತ್ತರಿಸುವ +ಶಾಲೆ ಮಾಡು……. +ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ +ಕೆಂಪು ವರಾಂಡದ ತುಂಬ +ಜಿಟಿ ಜಿಟೀ ಪರೆ +ಗಾಳಿಕೊಡೆ +***** +ನೀ ಜಾತ್ರೆಯ ನೂಹ್ಯದನಂತದಲ್ಲಿ ಕದ್ದು ತೊಟ್ಟಿಕ್ಕಿದರೆ ನಾ ಬರೇ ಕರೆ ಗುಂಪೇ ಬೇರೆ ***** +ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. ***** +ರವಿ ಕೂತಿದ್ದಾನೆ ಪಡುವಣದ ಅಂಗಡಿಯಲ್ಲಿ ಸೀರೆಗಳ ಹ ರವಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_76.txt b/Kannada Sahitya/article_76.txt new file mode 100644 index 0000000000000000000000000000000000000000..0abb3561b18266e38d8b31e4af8b83cf9815f3e0 --- /dev/null +++ b/Kannada Sahitya/article_76.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಜ್ಜನನಿದ್ದರೆ ಖೂಳರ ಕೆಳೆಯಲಿ +ಅವನುದ್ಧಾರವದೆಲ್ಲಿ? +ಚಂದನ ಸೇರಿರೆ ಸೌದೆಯ ಹೊರೆಯಲಿ +ಒಲೆಗದು ಉರಿಯುವ ಕೊಳ್ಳಿ. +ಭವಿಗಳ ಮೇಲಿರೆ ಅನುಭಾವಿಯ ಕೃಪೆ +ಕಳ್ಳಿಯೂ ಮಲ್ಲಿಗೆ ಬಳ್ಳಿ. +ಚಂದ್ರನ ಕಿರಣದ ನೆರವೊಂದಿದ್ದರೆ +ಕೊಚ್ಚೆಯ ಜಲವೂ ಬೆಳ್ಳಿ. +***** +ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. ***** +ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ ***** +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_760.txt b/Kannada Sahitya/article_760.txt new file mode 100644 index 0000000000000000000000000000000000000000..73fc1cc2efc716c1543c817196e029cd6aee354c --- /dev/null +++ b/Kannada Sahitya/article_760.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮುಳುಗುತಿಹ ನೇಸರನು ಮುದಿಸಿಂಹನಂತಾಗಿ +ಪಶ್ಚಿಮಾದ್ರಿಯ ಗವಿಯ ಸೇರುತಿಹನು; +ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ +ಲೋಗರೆಡೆ ಕೆಕ್ಕರಿಸಿ ನೋಡುತಿಹನು! +ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ +ಕಪ್ಪು ಬಾವುಟವತ್ತಿ ತೋರಿಸಿಹುದು- +ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ +ಹಾಡಿ ಜಯಜಯಕಾರ ಗೈಯುತಿಹುದು. +ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ +ಪಡುವ ಕಡಲಿನ ಹಡಗವೇರುತಿರಲು +ಸಂಧ್ಯಾ ಸಮೀರನದೂ ಸ್ವಾತಂತ್ರ್ಯ ಸಂದೇಶ +ಹೊತ್ತು ನಾಲ್ದೆಸೆಗಳಲಿ ಹರಡುತಿಹನು. +ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ +ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ- +ವ್ಯಕ್ತಿ-ಶಕ್ತಿಯ ಗುಣವಿಕಾಸ ಪ್ರಕಾಶದಲಿ +ಜಗವ ಬೆಳಗುವುದದರ ಮೂಲತತ್ತ್ವ. +ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ +ಮಂತ್ರಿ ಮಂಡಲವನ್ನು ನಿರ್ಮಿಸಿಹುದು; +ಬುಧ ಬ್ರಹಸ್ಪತಿ ಶುಕ್ರ ಶನಿ ಮಂಗಳಾದ್ಯರನು +ವಿವಿಧ ಮಂತ್ರಿಗಳಾಗಿ ನೇಮಿಸಿಹುದು. +ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು +ರಾಜಕೀಯದ ಪಕ್ಷಪಂಗಡವೆನೆ +ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ +ಮುಖ್ಯಮಂತ್ರಿಯು ಚಂದ್ರನಾಗಿರುವನೆ? +ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು +ಶಾಂತಿ ಸಮದರ್ಶಿತ್ವ ತಂಪಿನಿರುಳು- +ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು +ಸರ್ವರಿಗೂ ಸಮಪಾಲು ಬೆಳದಿಂಗಳು. +***** +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […] +೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_761.txt b/Kannada Sahitya/article_761.txt new file mode 100644 index 0000000000000000000000000000000000000000..e798ede8d0280ed2a8d9dc16a6100ba4fafca940 --- /dev/null +++ b/Kannada Sahitya/article_761.txt @@ -0,0 +1,148 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +(ಈಕೆ) +ಹೂ. +ಹಸಿ ಹೂ. +(ದತ್ತ ಹೇಳಿಧಾಂಗ) +ಇದೀಗ ಬಿಸಿಯಾಗುತ್ತಿರುವ, +ಸಸಿಯ ಹೂ, +ಹಗುರು, ನವಿರು. +ಆತ +ಮಧ್ಯಕಾಲೀನ ಪುರುಷ. +ಎಳಸು. +ಮುಖವಾಡದವ. +ಸೋಕಿತವನ +ದುರಾಸೆಯ +ನಖ! +ನಿಗಿಕೆಂಡದಿ ಕಾದ +ಸಲಾಕೆಯ ಮುಖ! +ನಂಜು!! +ಕಾರ್ಖಾನೆಯ +ನಿಗರಿ ನಿಂತ +ನಳಿಕೆಯ +ಹೊಗೆ, ಧಗೆ!! +(ಈಕೆ) +ಇನ್ನೇನು ಘಮ್ಮೆಂದು +ಬಿರಿಯುವ ಮೊದಲೇ +ಕಂದು, ಮಂಕು. +(ಈಕೆ) +ಹೊಳೆ, +ಇನ್ನೂ ಎಳೆ. +(ಅದೇ ದತ್ತ ಹೇಳಿಧಾಂಗ) +ತೂರಾಡೋ ವಾಲಿ, +ನಂದಿಸಿ ಸಜ್ಜಿ ಸಾಲಿ, +ಧುಮ್ಮಿಕ್ಕುವ ಮದ. +ದೈತ್ಯ ರಾವಣನ, +ಭಾಕ್ರ-ಸರ್ದಾರನ ತೋಳು, +ತೀಟೆ. +ಮುಳ್ಳು-ರೆಂಬೆ, ಬಿರುಸುಗಲ್ಲು, +ಆಣೇಕಟ್ಟಿನ ಏಟು!! +ಹಣೆ, +ಹಸಿ ಕುಂಕುಮ ಒರೆಸಿಟ್ಟ +ಜಿನುಗು. +(ಈಕಿ) +ರಾಗರತಿ +(ಮತ್ತದೇ ದತ್ತ ಹೇಳಿಧಾಂಗ) +ಅರಳು ಮಲ್ಲಿಗಿಯ ಇರುಳ ಜಡಿ, +ಮಳ್ಳಗಾಳಿಯ ಸುಳಿಗೆ ಸೆರಗು +ಸರಿಯಾಗಿಸುತ್ತ ಬಿಸಿಯಾಗಿ, +ಕೂಡಲು ಕಾದ ಗರತಿ. +(ಆತ) +ಅತ್ಯಾಧುನಿಕ ವಿಕಾರಪುರುಷ +ಆ ಕಿರಣ, ಈ ಕಿರಣ +ಕ್ಷಕಿರಣ ಹಾಯಿಸಿ, +ವಿಕಿರಣವಾಗಿಸಿ, +ಅವಳದ್ದನ್ನು ಇವಳಿಗೋ, +ಇವಳದ್ದನ್ನು ಇನ್ಯಾರಿಗೋ +ಕೂಡಿಸಿ ಕಳೆದು +ವೀರ್ಯವಿಲ್ಲದೇ ಅಂಡ ಬೆಳೆಸಿ +ಹಿಟ್ಲರುಗಳ +ಪ್ರತಿರೂಪ ಸೃಷ್ಟಿಸಿ, +ಬೇಸರವೆನೆಸಿದರೆ ಸಾಯಿಸಿ, +ತನಗೆತಾನೇ ಲಿಂಗಪೂಜೆ +ಗೇಲಿಮಾಡಿ +ಅಪ್ರಸ್ತುತ ಷಂಡ! ಮುಖೇಡಿ!! +(ಈಕಿ) +ವಸುದೇವನಿಗೆ ಬಸಿರಾದ ದೇವಕಿ +ಕಾದು ನಿಂತದ ಇಡೀ ದ್ವಾರಕಿ +(ಅದ ದತ್ತನ ಧಾಟಿಯೊಳಗ) +(ಆತ) +ಅತ್ತ +ವೇದ ಅವೇದ್ಯವಾಗಿ, +ಕುರಾನು ಕದರಿಲ್ಲದೇ +ಸದರಾಗಿ ಇತ್ತ +ರಾಕೆಟ್ಟೂ ಹಾರಿಸದೇ, +ಹಾರಲು ಬರದ +ಕಂಗಾಲು ಕ್ರೂರಕಂಸ! +ರೈಲು, ದ್ವಾರಕಾ, ಅಹ್ಮದಾಬಾದು +ಬರಬಾದು! +“ಮಾರೋ ಇಸ್‌ಕೋ, ಪೀಟೋ ಉಸ್‌ಕೋ +ಢಮ್! ಢಮಾರ್! +ಠಣ್!! ಠಣಾರ್!! +ನವಮಾಸವಿನ್ನೂ ತುಂಬಿಲ್ಲ +ಚೊತೋ ಉಸ್‌ಕೋ!” +-೨- +ಬಾಡಿ ತೊಟ್ಟು ಕಳಚುವ ಮೊದಲೇ +ಬಿಳಚಿ ಬತ್ತುವ ಮೊದಲೇ, +ಅಂಡಾಂಶ ವಿಧ್ವಂಸವಾಗುವ ಮೊದಲೇ, +ಅಷ್ಟಪುತ್ರನೂ ನಷ್ಟನಾಗುವ ಮೊದಲೇ, +ಅವರೆಲ್ಲಾ ಸೇರಿ +ಋಷಿಪಂಚಿಮೆಯ ವ್ರತ ಹಿಡಿಸುವ ಮೊದಲೇ, +ಆಕೆ +ತಂತ್ರಾಂಶಗಳ ಮಂತ್ರ +ಉದ್ಘೋಷಿಸುವ ಪುರೋಹಿತೆ. +ಕಟ್ಟಿದ ತುರುಬಿಗೆ, +ತೊಟ್ಟ +ನೀಲಿ ಜೀನಿಗೆ, +ಸರ್ದಾರನ ಸೊಕ್ಕು, +ಮುಕ್ಕುವ ಈ ಹಕ್ಕಿಗೆ +ತಕ್ಕ- +ತಲೆ‌ಏತ್ತಿದ ನಿಲುವಿನ +ಆ ನರ್ಮದೆ +ಯಂತ್ರಗಳ ಕಿರಿದಾಗಿಸಿ, +ಸರ್ಕೀಟಿನಲಿ +ಎಲೆಕ್ಟ್ರಾಣುಗಳ ಊದಿ +ಅಲೆ‌ಅಲೆಗಳ ಚದುರಿಸಿ +ಅರಿವು ಮೂಡಿಸುವ +ವೀರ +ಕಟ್ಟೆಗಳ ಕೆಡವಿ +ಪುಟ್ಟ ಪಾತಿ ತೋಡುವ +ತಕ್ಕ- +ಪ್ರಗಲ್ಭತೆಯ +ನವ-ಮೋಹನನೋರ್ವನ +ರಮಿಸಿ, +ಹಿಗ್ಗಿ, ತೂರಾಡಿ +ಮಧುವುಕ್ಕಿಸಿ, +ಅವನ +ಒಳಸೆಳೆದು, +ಮುಖಜ ಭೂಮಿಯ ಮೇಲೆ, +ಚೆಲ್ಲಾಟವಾಡಿ +ಮತ್ತಷ್ಟು +ಅಂಥವನ +ಬೀಜ +ಚೆಲ್ಲಾಡಬೇಕೀಕೆ. +ಅದೇ +ಅವರೊಳೊತಿಗಾಗಿ ಅವಗೆ ಅವಳು +ಅವಳಿಗೆ ಅವನು +ತಿಳಿಹೇಳಬೇಕಾದ ನಿಯಮ!! +***** +ಏಪ್ರಿಲ್, ೨೦೦೩ +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […] +ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_762.txt b/Kannada Sahitya/article_762.txt new file mode 100644 index 0000000000000000000000000000000000000000..d25eee4fe4aaab5522d5a95dedea2c2a07ec60b5 --- /dev/null +++ b/Kannada Sahitya/article_762.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? +ಮಾತಾಡೋದು ಬಿಡಲ್ಲವೆ? +ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ +ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? +ಅದೇ ಆಗ್ರಹದ ಗಾಂಧಿಗೆ +ದೇಶವೇ ಊರು ಅಂತ ಅನ್ನಿಸಿ +ಊರೇ ಮನೆಯಾಗಿಬಿಟ್ಟು +ಚರಿತ್ರೆ ಅಂದರೆ ಸಂಸಾರದ ಒಳಗಿನ ಕಳವಳ ಸಿಟ್ಟು ಸಿಡುಕು +ಕೆಲವೊಮ್ಮೆ ಕೋಲಾಹಲಗಳಂತೆಯೂ +ಕಂಡರೆ, +ಎಂಟನೇ ಹೆನ್ರಿ ಎನ್ನುವ ಬ್ರಿಟಿಷ್ ಪ್ರಭುವಿಗೆ +ತಾನೇ ದೇಶವೆನ್ನಿಸಿ +ದೇಶ ಉಳಿಯೋದೇ ತನ್ನ ಬೀಜದಿಂದ ಹುಟ್ಟುವ ಮಗನಿಂದ ಎನ್ನಿಸಿ +ಈ ಮಗರಾಯನನ್ನು ಪಡೆಯೋಕೆ ಅರ್‍ಹವಾದ ಯೋನಿ ಹುಡುಕುತ್ತ +ಸರದಿ ಮೇಲೆ ಮದುವೆಯಾಗಿ +ಗಂಡು ಹೆರಲಾರದ ಯೋನಿಗಳು ದೇಶದ್ರೋಹಿಗಳಾಗಿ ಕಂಡು +ಸರದಿ ಮೇಲೆ ಮದುವೆಯಾದವರನ್ನು ಸರದಿ ಮೇಲೆ ಕೊಂದು +ಆಳೋದು ಎಂಟನೇ ಹೆನ್ರಿಗೆ +ದೈವ ಸಂಕಲ್ಪವೇ ತನ್ನ ಮೂಲಕ ಈಡೇರಿ ಒಂಬತ್ತನೇ ಹೆನ್ರಿಯನ್ನು +ಹಡೆಯುವ ಚರಿತ್ರೆ +***** +ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […] +ಮುಖದ ಎಡಬಲಕ್ಕೆರಡು ಚೂಪಾದ ಚಿಮುಟ ಬಾಲಕ್ಕೆ ವಿಷದ ಮುತ್ತನ್ನೆತ್ತಿ ಮೆರೆಯುವ ಕೊಂಡಿ. ಮೆಲ್ಲಗೆ ಗೋಡೆ ಬದಿ ಹಿಡಿದು ಹೊರಟಾಗ ತಟ್ಟನೆ ಕಂಡು ಮೆಟ್ಟಿ ಬೀಳುತ್ತೇವೆ. ಈ ಭಯೋತ್ಪಾದಕನೆಲ್ಲಿ ಅಡಗಿದ್ದ? (ಶಿಲಾಬಾಲಿಕೆಯ ಸೀರೆಯ ನಿರಿಗೆಯಲ್ಲೀ ಇದ್ದ.) […] +ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_763.txt b/Kannada Sahitya/article_763.txt new file mode 100644 index 0000000000000000000000000000000000000000..3f9e3bcf71e4e0be89e3068b4625ef62760534e8 --- /dev/null +++ b/Kannada Sahitya/article_763.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ, +ನಿನ್ನ ನಲ್ಮೆಯ ನೆಳಲನೀವ ಮಾವು: +ನಿನ್ನೊಲವನಪ್ಪಿ ತೋರುವ ಕೊಳದ ತಳ ಕೆಸರು- +ಇಲ್ಲಾಡುವುದು-ಇದೇ ಹೊಸ ಠರಾವು(ಕೂಪ ಮಂಡೂಕ)-ಗೋಪಾಲಕೃಷ್ಣ ಅಡಿಗ +ಆರ್ಥಿಕ ರಂಗದಲ್ಲಿ ‘ಜಾಗತೀಕರಣ’ ಇಂದು ಎಲ್ಲಾ ಸರ್ಕಾರಗಳ ಮೂಲಮಂತ್ರ. ಅದಕ್ಕೆ ಪೂರಕವಾಗಿರುವುದು ಮಾಹಿತಿ ತಂತ್ರಜ್ಞಾನ ಜಗತ್ತಿನಾದ್ಯಂತ ಹನೆದಿರುವ ಅತ್ಯದ್ಬುತವಾದ ಜಾಲ-ಇಂಟರ್‌ನೆಟ್. ಇವೆಲ್ಲಾ ಸಾಂಸ್ಕೃತಿಕವಾಗಿ ಉಂಟುಮಾಡುವ ಪರಿಣಾಮಗಳೇನು ಎಂಬುದು ನಮ್ಮ ಇಂದಿನ ಮುಖ್ಯ ಕಾಳಜಿಗಳಲ್ಲಿ ಒಂದು. +ನಿರಂತರವಾಗಿ ಅರಸುವ ಮನುಷ್ಯನ ಮನಸ್ಸೇ ಮಾನವ ಸಂಸ್ಕೃತಿಯ ಜೀವಾಳ. ಆ ತಳಹದಿಯ ಮೇಲೆ ನಾವು ಅನೇಕ ವಿವರಗಳನ್ನು ನಿರ್ಮಿಸಿಕೊಂಡಿದ್ದೇವೆ. ಪರಿಸರ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಗಳು ಬೇರೆ. ನಿರಂತರವಾದ ಈ ಶೋಧನೆಯ ಕ್ರಮಗಳೂ ಬೇರೆ. +ಅನುಷ್ಯ ಅರಿಯುವ ಒಂದು ರೀತಿ-ತಾನು ಇರುವ ತಾಣವೇ ಸಮಸ್ತ ಲೋಕವೂ ಇರುವ ತಾಣವೆಂದು ತಿಳಿದು ಶೋಧಿಸುವುದು. ಇನ್ನೊಂದು ಪ್ರಪಂಚವಿಡೀ ಸುತ್ತಿ, ಹುಡುಕಿ ಅರಸಿ ಕಾಣಲು ಹೊರಡುವುದು. ಇದನ್ನೊಂದು ಪೌರಾಣಿಕ ಉದಾಹರಣೆಯಿಂದ ಹೇಳುವುದಾದರೆ ಪ್ರಪಂಚ ಪ್ರದಕ್ಷಿಣೆ ಮಾಡು ಎಂದರೆ ಗಣಪತಿ, ತನ್ನ ತಾಯಿ ತಂದೆಯರಿಗೆ ಒಂದು ಸುತ್ತು ಬರುತ್ತಾನೆ. ಷಣ್ಮುಖನಾದರೋ ಪಕ್ಷಿವಾಹನನಾಗಿ ಭೂ ಪ್ರದಕ್ಷಿಣೆ ಮಾಡುತ್ತಾನೆ. +ಈ ಗಣಪತಿ ಹಾಗೂ ಸುಬ್ರಹ್ಮಣ್ಯರ ಗಮನ ಆದಿಯಿಂದಲೂ ಮನುಷ್ಯ ನಿರಂತರವಾಗಿ ಅರಸುತ್ತಾ ಬಂದ ಎರಡು ಸಾಧ್ಯತೆಗಳನ್ನು ಸೂಚಿಸುತ್ತದೆ. ಒಂದು ಇರುವಲ್ಲೆ ಇದ್ದು ಕಾಣಬಹುದಾದ್ದು. ಮತ್ತೊಂದು ಭೂ ಪ್ರದಕ್ಷಿಣೆಯಲ್ಲಿ ಪಡೆಯಬಹುದಾದ್ದು. ತೀರ್ಥಯಾತ್ರೆಗೆ ಎದುರಾಗಿ ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ ಎಂದು ತನ್ನ ಮನೆ ಬಾವಿಯ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಕ್ರಮದಂತೆ. ಇವೆರಡೂ ಪ್ರತ್ಯೇಕವಾದ ಎರಡು ಸಾಧ್ಯತೆಗಳನ್ನು ನಿರಂತರವಾಗಿ ತೋರಿಸುತ್ತಾ ಬಂದಿವೆ. ನಾವು ಟೆಕ್ನಾಲಜಿ (ಖಿeಛಿhಟಿoಟogಥಿ) ಎನ್ನುವ ಇಂದಿನ ಯಂತ್ರಕಲಾ ಶಾಸ್ತ್ರವು ಬಹುಶಃ ಈ ಎರಡೂ ಸಾಧ್ಯತೆಗಳನ್ನು ಒಂದಾಗಿ ನೀಡಲು ಪ್ರಯತ್ನಿಸುತ್ತಿದೆಯೇನೋ ಎಂದು ಅನಿಸುತ್ತಿದೆ. +ಇಂದಿನ ಇಂಟರ್‌ನೆಟ್ ಟೆಕ್ನಾಲಜಿ-ಒಂದು ರೀತಿಯಲ್ಲಿ ಗಣಪತಿ ಹಾಗೂ ಸುಬ್ರಹ್ಮಣ್ಯರನ್ನು ಒಟ್ಟಿಗೆ ಕೊಡಬಲ್ಲ ಜಾಲ. ಇರುವ ತಾಣದಲ್ಲೇ ಇದ್ದರೂ ಜಗತ್ತಿನ ನಂಟಿನ ನೇರ ಸಂಪರ್ಕ. ಒಂದನ್ನು ಇನ್ನೊಂದಕ್ಕೆ ಹೆಣೆಯುವ ಈ ಬಂಧ ಇದ್ದಲ್ಲೇ ಇದ್ದೂ ನಿಜವಾದ ಪ್ರಪಂಚ ಪ್ರದಕ್ಷಿಣೆಯನ್ನು ಒದಗಿಸಿಕೊಡುವಂತಹದ್ದು. +ಅನಾದಿಯಿಂದ ಇಂದಿನವರೆಗೆ ಮನುಷ್ಯನ ಮುಖ್ಯ ಸಂಕ್ರಮಣ ಹಂತಗಳನ್ನು ಗುರುತಿಸಿ ಉದ್ಯೋಗದ ಸಂಸ್ಕೃತಿ ಹಾಗೂ ಅದಕ್ಕೆ ಬೇಕಾದ ಆಡಳಿತ ತಂತ್ರದ ಬದಲಾವಣೆಗಳನ್ನು ನಾವು ಸುಲಭವಾಗಿ ಪಟ್ಟಿ ಮಾಡಬಹುದು. ಮರದಿಂದ ಇಳಿದ ಕಾಡು ಮನುಷ್ಯ ಒಂದು ಕಡೆ ನೆಲೆ ನಿಲ್ಲಲು ಕಲಿತದ್ದು. ನಂತರದ ಹಂತಗಳು ಕೃಷಿ, ಕೈಗಾರಿಕಾ ಕ್ರಾಂತಿ. ಮುಂದಿನ ಹಂತವಾದ ಕಂಪ್ಯೂಟರ್ ಮೂಲದಿಂದ ಇಂಟರ್‌ನೆಟ್ ವ್ಯವಸ್ಥೆ ಬೆಳೆದಂತೆ ನಮ್ಮ ಉತ್ಪಾದನೆ ಹಾಗೂ ಕೆಲಸದ ಕ್ರಮದಲ್ಲಿ-ಮುಖ್ಯವಾಗಿ ಕೆಲಸದ ಜಾಗಗಳ ವಿಕೇಂದ್ರೀಕರಣ ಆಗುತ್ತದೆ. ಹಾಗೆಯೇ ಈ ವಿಕೇಂದ್ರೀಕರಣದ ನಿಯಂತ್ರಣವೂ ಕೇಂದ್ರೀಕರಣಕ್ಕೆ ಒಳಗಾಗುತ್ತದೆ. +ನೇರವಾದ ಎಂಜಿನಿಯರಿಂಗ್ ಉತ್ಪಾದನೆ, ಗಣಿಗಾರಿಕೆ ಮುಂತಾದುವನ್ನು ಬಿಟ್ಟರೆ, ಇತರ ವಾಣಿಜ್ಯ ವ್ಯವಹಾರದ ಕೆಲಸದ ಜಾಗಕ್ಕೆ ಕಛೇರಿಗಳೇ ಬೇಕಾಗಿಲ್ಲ. ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲಿದ್ದರೂ ಇಂಟರ್‌ನೆಟ್ ಸಂಪರ್ಕದ ಮೂಲಕ ಕೆಲಸ ಮಾಡುತ್ತಾ ಇರಬಹುದು. ಕೆಲಸಕ್ಕಾಗಿ ಹೋಗಬೇಕಾಗಿಯೇ ಇಲ್ಲ. ನಾನು ಈಗ ಕೆಲಸ ಮಾಡುತ್ತಿರುವ ಸಿಸ್ಕೋ ಸಿಸ್ಟಮ್ಸ್ ಕಂಪೆನಿ ಭಾರತದಲ್ಲೇ ಇಂತಹ ಸಾಧ್ಯತೆಗಳ ಸೂಕ್ಷ್ಮ ರೂಪಗಳನ್ನು ತೋರಿಸುತ್ತಾ ಇದೆ. ಸಿಸ್ಕೋ ಸಿಸ್ಟಮ್‌ನ ಮುಂಬಯಿ ಕಛೇರಿಯಲ್ಲಿ ಒಬ್ಬ ಉದ್ಯೋಗಿಗೆ ಆಫೀಸಿನಲ್ಲಿ ನಿಶ್ಚಿತವಾದ ಮೇಜು ಕುರ್ಚಿ, ಜಾಗ ಇಲ್ಲ. ಆಫೀಸಿಗೆ ಬಂದಾಗ ಖಾಲಿ ಇದ್ದ ಮೇಜು ಕುರ್ಚಿಯಲ್ಲಿ ಕುಳಿತು ತನ್ನ ಲ್ಯಾಪ್‌ಟಾಪ್ ಕಂಪ್ಯೂಟರ್‌ನಿಂದ ಅಲ್ಲಿರುವ ಇಂಟ್ರನೆಟ್ ಮೂಲಕ ಮೇಜಿನ ಫೋನು. ಧ್ವನಿ ರೆಕಾರ್ಡಿಂಗ್ ಎಲ್ಲವೂ ಸಂಪರ್ಕಕ್ಕೆ ಬಂದು ತಾನು ಇರುವ ತಾಣದಲ್ಲೇ ಕೆಲಸದ ಕಛೇರಿ ಸಿದ್ಧವಾಗುತ್ತದೆ. ಇದು ಸಿಸ್ಕೊ ಕಂಪನಿಯ ಓeತಿ Woಡಿಟಜ ಔಜಿಜಿiಛಿe. ಮುಂದೆ ಇದೇ ಟೆಕ್ನಾಲಜಿಯ ಬಳಕೆ ಹೆಚ್ಚಾದಾಗ ಅದಕ್ಕೆ ಆಫೀಸು, ಮನೆ, ಯಾವ ವ್ಯತ್ಯಾಸಗಳೂ ಇಲ್ಲ. ಬರೆಯುವ ಪೇಪರುಗಳ ಅಗತ್ಯವೇ ಇಲ್ಲ. +ಇಂತಹ ಟೆಕ್ನಾಲಜಿ ಕೆಲಸಕ್ಕೆ ವಿಕೇಂದ್ರೀಕೃತ ವ್ಯವಸ್ಥೆ ಮಾಡಿದಂತೆಯೇ, ಇಡೀ ಜಗತ್ತಿಗೇ ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ಸಮರ್ಥವಾಗಿ ಅದೇ ಇಂಟರ್‌ನೆಟ್ ಟೆಕ್ನಾಲಜಿ ಮೂಲಕ ನಿರ್ಮಿಸಿಕೊಡಬಲ್ಲದು. ಇಂತಹ ಟೆಕ್ನಾಲಜಿ ಸಂಸ್ಕೃತಿಯ ಮೇಲೆ ಬೀರುವ ಪ್ರಭಾವ ಈ ಹೊಸ ರಚನೆಯಲ್ಲೇ ಅಡಗಿದೆ. +ಸಾಫ್ಟ್‌ವೇರ್ ಕಂಪನಿಯ ಕೆಲಸಗಾರರು ನಿತ್ಯ ತಮ್ಮ ಮೇಜಿನ ಮೇಲಿರುವ ಕಂಪ್ಯೂಟರ್ ಹಾಗೂ ಇಂಟರ್‌ನೆಟ್‌ನಿಂದಾಗಿ ಪ್ರಪಂಚದಾದ್ಯಂತ ತಮ್ಮದೇ ಒಂದು ಗುಂಪನ್ನು ಅದರದ್ದೇ ನೀತಿ ನಿಯಮಗಳನ್ನು ಹೊಂದಿರುತ್ತಾನೆ. ನಾನು ಕೆಲಸ ಮಾಡುವ ಕಂಪನಿ ಸಿಸ್ಕೊ ಸಿಸ್ಟಮ್ಸ್ ಭಾರತದಲ್ಲೇ ಬಹುದೊಡ್ಡದಾದ ಸಂಪರ್ಕಜಾಲ ಹೊಂದಿದೆ. ಕೆಲಸದ ಕಛೇರಿಯಲ್ಲಿ ನನ್ನ ಮೇಜಿನ ಮೇಲೆ ಸದಾ ಇರುವ ೪೮ ಎಂ.ಬಿ.ಪಿ.ಎಸ್.(ಒಂದು ಸೆಕೆಂಡಿಗೆ ನೀಡಬಲ್ಲ ೪೮ ಮೆಗಾಬಿಟ್ಸ್ ಕಂಪ್ಯೂಟರ್ ಇಂಟರ್‌ನೆಟ್ ಜಾಲ ಸಂಪರ್ಕ) ಇಂಟರ್‌ನೆಟ್ ಸಂಪರ್ಕ ಅನೇಕ ಟೆಕ್ನಾಲಜಿ ವಿಚಾರಗಳನ್ನು ಒಂದು ಸಾಧಾರಣ, ಸಾಮಾನ್ಯ ವಿಚಾರವೆನ್ನಿಸುವಂತೆ ಮಾಡಿದೆ. ಆದರೆ ಭಾರತದಲ್ಲಾಗಲಿ, ಅಮೆರಿಕಾ ದೇಶದಲ್ಲೇ ಆಗಲಿ ಕಂಪ್ಯೂಟರ್ ಕಂಪನಿಗಳಿಂದ ಹೊರಗೆ ಕೆಲಸ ಮಾಡುವವರ ಜೊತೆ ವ್ಯವಹರಿಸುವಾಗ, ಈ ಟೆಕ್ನಾಲಜಿ ನನ್ನಲ್ಲಿ ಉಂಟು ಮಾಡಿದ ಮನಸ್ಥಿತಿ ಬಹಳ ಸಂಕಷ್ಟಗಳನ್ನು ಒಡ್ಡುತ್ತದೆ. +ಈಗ ಐದಾರು ವರುಷಗಳ ಹಿಂದೆ, ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ವಸ್ತುಗಳ ತಯಾರಿಕಾ ಸಂಸ್ಥೆಯಾದ ಎಚ್.ಎಮ್.ಟಿ. ಕಂಪನಿಯ ಕೆಲಸ ಬಿಟ್ಟು ಅಮೆರಿಕಾದ ಪ್ರಖ್ಯಾತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ನಾವ್ಹೆಲ್ ಸಾಫ್ಟ್‌ವೇರ್ ಸಂಥೆಯ ಟೆಕ್ನಾಲಜಿ ಕಮ್ಯುನಿಕೇಷನ್ ಮುಖ್ಯ ಅಧಿಕಾರಿಯಾಗಿ ನಾನು ಸೇರಿಕೊಂಡಾಗ ಅದು ಸಾರ್ವಜನಿಕ ಸಂಪರ್ಕ ವಲಯದಲ್ಲಿ ಬೆಂಗಳೂರು ನಗರದೊಳಗೆ ಎಲ್ಲರೂ ಗಮನಿಸಿದ ಸುದ್ದಿಯಾಯಿತು. ಬಹಳ ಜನ ಖಾಸಗಿ ಕಂಪನಿಗಳ ಅಪೇಕ್ಷಿತರು ಆ ಹುದ್ದೆಗೆ ಆಯ್ಕೆಯಾಗದೇ ಇದ್ದಾಗ ಸರ್ಕಾರಿ ಒಡೆತನದ ಸಾರ್ವಜನಿಕ ಸ್ವಾಮ್ಯದ ಕಂಪನಿಯೊಂದರ ಉದ್ಯೋಗಿಯಾಗಿದ್ದ ನನ್ನ ಆಯ್ಕೆಗೆ ಇದ್ದ ವಿಶೇಷತೆ ಏನು ಎಂಬುದು ಅನೇಕರಿಗೆ ಆಶ್ಚರ್ಯ ಉಂಟಾಗಲು ಕಾರಣ. ಯಾವುದೇ ಪ್ರಭಾವಕ್ಕು ಒಳಗಾಗದೆ ಇಂತಹ ಅಂತರಾಷ್ಟ್ರೀಯ ಕಂಪನಿಗಳ ಆಯ್ಕೆ ನಡೆಯುವುದರಿಂದ ಈ ಆಯ್ಕೆಯ ಕಾರಣದ ಕುತೂಹಲ ಹೆಚ್ಚಿರುತ್ತದೆ. +ನನ್ನ ಆಯ್ಕೆಗೆ ಕಾರಣವಾದ ಬಯೋಡೇಟ ನೀಡುವುದು ಇಲ್ಲಿ ನನ್ನ ಉದ್ದೇಶವಲ್ಲ. ಸಾಂಸ್ಕೃತಿಕ ಗಮನ ಎಲ್ಲಾ ಕಡೆ ಹೇಗೆ ಅನಿವಾರ್ಯ ಎಂಬುದನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಮಾತು. ಬಹು ದಿರ್ಘವಾಗಿ ನಡೆದ ಅನೇಕ ಸುತ್ತಿನ ಸಂದರ್ಶನಗಳ ಕೊನೆಯಲ್ಲಿ ನಾವ್ಹೆಲ್‌ನ ಆಡಳಿತ ನಿರ್ದೇಶಕರು ನನಗೆ ಕೇಳಿದ ಪ್ರಶ್ನೆ. ‘ಒಂದೇ ವಾಕ್ಯದಲ್ಲಿ ಹೇಳಬೇಕಾದರೆ, ಸಂಪರ್ಕದ ಮುಖ್ಯಾಧಿಕಾರಿಯಾಗಿ ನಿನ್ನ ಕೆಲಸವನ್ನು ಹೇಗೆ ಸಂಗ್ರಹಿಸುತ್ತಿ’ ನಾನು ನೀಡಿದ ಉತ್ತರ ಸಾಂಸ್ಕೃತಿಕ ನೆಲೆಯಿಂದ ಬಂದುದಾಗಿತ್ತು. ನಾನು ಹೇಳಿದ ಒಂದೇ ವಾಕ್ಯ ‘I ತಿಚಿಟಿಣ ಣo bಡಿeಚಿಞ mಚಿಟಿ ಚಿಟಿಜ mಚಿಛಿhiಟಿe ಡಿeಟಚಿಣioಟಿshiಠಿ ಣo esಣಚಿbಟish ಡಿeಟಚಿಣioಟಿshiಠಿ ತಿiಣhiಟಿ ಚಿಟಿಜ ouಣsiಜe’ ನನಗಿದ್ದ ಇತರ ಎಲ್ಲಾ ಅರ್ಹತೆಗಳಿಗಿಂತ ಹೆಚ್ಚಾಗಿ ಈ ಒಂದು ಮಾತು, ನನಗೆ ಕೆಲಸ ಸಿಕ್ಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. +ಸಾಫ್ಟ್‌ವೇರ್ ಹಾಗೂ ಕಂಪ್ಯೂಟರ್ ಕಂಪನಿಗಳೊಳಗೆ ಮನುಷ್ಯ ಮತ್ತು ಯಂತ್ರದ ಸಂಬಂಧಗಳ ಬಗ್ಗೆ ಅನೇಕ ಸಾವಿರ ಹಾಸ್ಯ ಚಟಾಕಿಗಳಿವೆ. ಅವೆಲ್ಲದರ ಹಿಂದೆ ಮನುಷ್ಯ ಪರಸ್ಪರ ಹೆಚ್ಚು ಹೆಚ್ಚು ಅಪರಿಚಿತನಾಗುವ ಬಗ್ಗೆ, ಪರಕೀಯನಾಗುತ್ತಾ ಹೋಗುವ ಬಗ್ಗೆ ಆತಂಕ ತುಂಬಿದೆ. ಕಂಪನಿಯೊಳಗಿನ ಅಂತರ್ಜಾಲದ (ಇನ್‌ಟ್ರಾನೆಟ್)ನೋಟೀಸು ಬೋರ್ಡಿನಲ್ಲಿ ನೋಡಿ, ತನ್ನಿಂದ ನಾಲ್ಕು ಮೇಜು ಆಕಡೆ ಇರುವವನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿ ಒಂದು ಇ-ಮೈಲ್ ಕಳುಹಿಸುತ್ತಾರೆ. ಐದು ನಿಮಿಷಗಳ ಬಳಿಕ ಆತ ಎದುರು ಸಿಕ್ಕಾಗ ಹುಟ್ಟುಹಬ್ಬದ ಶುಭಾಶಯ ಹೇಳುವುದಿಲ್ಲ. ಇದೊಂದು ಪುಟ್ಟ ಉದಾಹರಣೆ ಮಾತ್ರ. ಆದರೆ ಪರಿಣಾಮವೆಂದರೆ ಪರಸ್ಪರ ಮಾತನಾಡುವ ಅವಶ್ಯಕತೆಯನ್ನೂ ಮನುಷ್ಯ ಕಂಪ್ಯೂಟರ್ ಯಂತ್ರಗಳ ಮೂಲಕವೇ ಪೂರೈಸುತ್ತಿದ್ದಾನೆ. ಇದು ದೂರವಾಣಿಯಂತೆ ಕನಿಷ್ಠಮಾತಿನ ಧ್ವನಿಯ ಅವಶ್ಯಕತೆಯನ್ನೂ ಹೊಂದಿಲ್ಲ. ಹುಟ್ಟುಹಬ್ಬದ ಶುಭಾಶಯಕ್ಕೆ, ಆಟೋಮೆಟಿಕ್ ಆದ ‘ಕೃತಜ್ಞತೆಗಳು’ ಇ-ಮೈಲ್ ಉತ್ತರವನ್ನು ನಮ್ಮ ಕಂಪ್ಯೂಟರ್ ಸ್ವತಂತ್ರವಾಗಿ ಕಳುಹಿಸುವಂತೆ ಪ್ರೋಗ್ರಾಂ ಮಾಡಬಹುದು. ಅದೇ ರೀತಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕಂಪ್ಯೂಟರ್ ಸ್ವತಂತ್ರವಾಗಿ ಇನ್ನೊಂದು ವಿಳಾಸಕ್ಕೆ ಕಳುಹಿಸಬಹುದು. ಅಂದರೆ ಒಬ್ಬ ತೊಡಗಿಕೊಳ್ಳದೆ, ಸಹಜ ಸಂಪರ್ಕದಲ್ಲಿ ಆಪ್ತವಾಗಬೇಕಿದ್ದ ಒಂದು ಅಭಿವ್ಯಕ್ತಿಯನ್ನು, ಮಾನವ ಸಂಪರ್ಕದ ಯಾವುದೇ ತೊಡಗುವಿಕೆ ಇಲ್ಲದೆಯೇ ಕೃತಕವಾಗಿ ಮಾಡಿ ಮುಗಿಸಬಹುದು. +ನಿರಂತರವಾಗಿ ಮೌಖಿಕ ಸಂವಹನದಲ್ಲಿ ಸಾವಿರಾರು ವರ್ಷಗಳ ಕಾಲ ಬೆಳೆದು ಬಂದ ಭಾರತದಂತಹ ದೇಶಗಳ ಸಾಂಸ್ಕೃತಿಕ ಸಂದರ್ಭದಲ್ಲಿ ಇದು ಬಹಳ ಅಘಾತಕಾರಿ. ಅದನ್ನು ತಡೆದುಕೊಳ್ಳುವ ಸಲುವಾಗಿ ಕಂಪ್ಯೂಟರ್ ಎದುರಿರುವವರು ಅತ್ಯಂತ ಹೆಚ್ಚು ಪಿಕ್‌ನಿಕ್ ಚಾರಣ, ಟ್ರೆಕ್ಕಿಂಗ್‌ಗಳಲ್ಲಿ ಭಾಗವಹಿಸುವವರಾಗಿರುತ್ತಾರೆ. ಸಾಕಷ್ಟು ಜನ ಉದ್ಯೋಗಿಗಳು, ಸಂಗೀತ, ಸಾಹಿತ್ಯ, ಚಿತ್ರಕಲೆ ಹೀಗೆ ಯಾವುದಾದರೊಂದು ಆಸಕ್ತಿ ಕುದುರಿಸಿಕೊಳ್ಳಲು ಹೆಣಗುತ್ತಾ ಇರುತ್ತಾರೆ. ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಹೋಲಿಸಿದರೆ, ಕಂಪ್ಯೂಟರ್ ಕಂಪನಿಗಳಲ್ಲಿ ಇಂತಹ ಪ್ರಮಾಣ ಹೆಚ್ಚು. ಇದು ಸಾಂಸ್ಕೃತಿಕವಾಗಿ ಕಳೆದುಕೊಳ್ಳುತ್ತಿರುವುದನ್ನು ಇನ್ನೆಲ್ಲೋ ಪಡೆಯಲು ಪ್ರಯತ್ನಿಸುವ ಯತ್ನದಂತೆ ನನಗೆ ಒಮ್ಮೊಮ್ಮೆ ತೋರುತ್ತದೆ. +ಕಂಪ್ಯೂಟರ್ ಸಂಪರ್ಕ ಸಂಸ್ಕೃತಿ ಬೆಳೆಸುತ್ತಿರುವ ಹೊಸದಾದೊಂದು ಆಸಕ್ತಿ ಕ್ರಮೇಣ ಹೊಸದಾದ ಒಂದು ಸಾಂಸ್ಕೃತಿಕ ನೆಲೆಯಾಗಿ ಬೆಳೆಯುತ್ತಿರುವುದನ್ನು ನಾವು ಗಮನಿಸಬೇಕು. ಇದನ್ನೊಂದು ವೈಯಕ್ತಿಕ ಉದಾಹರಣೆಯಿಂದ ಹೇಳಬಹುದು. ಬಾಯಿಂದ ಬಾಯಿಗೆ ಬಂದು ಕೇಳಿದ ಕತೆಗಳು, ಆಡುಮಾತಿನ ಉದಾಹರಣೆ, ಇನ್ನೆಲ್ಲೋ ಕೇಳಿದ ಸಂಗತಿ-ಇವುಗಳಿಂದಲೇ ತನ್ನ ವಿಚಾರಗಳನ್ನು ನನ್ನ ಅಜ್ಜ ಮಂಡಿಸುತ್ತಿದ್ದರು. ಬಾಯಿ ಮಾತಿನಿಂದ ಕೇಳಿದ ಜ್ಞಾನದ ಮೂಲಕವೇ ಕ್ರಿಮಿನಲ್ ಹಾಗೂ ಸಿವಿಲ್ ಕಾನೂನಿನ ದೊಡ್ಡ ತಿಳುವಳಿಕೆಯನ್ನೇ ಅವರು ಹೊಂದಿದ್ದರು. ಅವರ ಜ್ಞಾನದ ಮೂಲ ಆಕರ ಮಾತು. ಇಂಗ್ಲಿಷ್ ಅಕ್ಷರಗಳೇ ಅವರಿಗೆ ತಿಳಿದಿರಲಿಲ್ಲ. ಅವರು ಕಳೆದ ಶತಮಾನದ ಆದಿಯಲ್ಲಿ ಜನಿಸಿದವರು. +ಅವರಿಂದ ೩೨ ವರುಷಗಳ ನಂತರ ಹುಟ್ಟಿದ ನನ್ನ ತಂದೆಯವರಿಗೆ ಪ್ರಿಂಟಾದ ಪುಸ್ತಕಗಳೇ ಜ್ಞಾನದ ಮೂಲ ಆಕರ. ಒಂದೋ ಎರಡೋ ಪತ್ರಿಕೆಗಳು ಅವರಿಗೆ ಸುದ್ದಿಯ ಅವಶ್ಯಕತೆಗಾಗಿ ಮಾತ್ರ. ಅಲ್ಲಿಂದ ಮೂವತ್ತು ವರುಷಗಳ ಬಳಿಕ ಜನಿಸಿದ ನನಗೆ ಯಾವ ಪತ್ರಿಕೆಯ ಮೂಲೆಯಿಂದಲೂ ಮಾಹಿತಿ ಸಂಗ್ರಹ ಸಾಮಾನ್ಯ ವಿಚಾರ. ಈಗ ನನ್ನ ಮಗ ಶಾಲೆಯ ಪ್ರಾಜೆಕ್ಟ್ ಮಾಡಬೇಕೆಂದರೆ ಮೊದಲು ಹೊರಡುವುದು ಇಂಟರ್೬ನೆಟ್‌ನಲ್ಲಿ ಏನಿದೆಯೆಂದು ನೋಡಲು. ಪುಸ್ತಕ ಬಿಡಿಸುವ ಬದಲು ಸಿ.ಡಿ.ಯಲ್ಲಿ ಹುಡುಕುವುದು. +ಅಂದರೆ ಕಾಲಕಾಲಕ್ಕೆ ಯಂತ್ರಗಳ, ಕೈಗಾರಿಕೆಗಳ ಬೆಳವಣಿಗೆ ಆಗುತ್ತಾ ಬಂದಂತೆ, ನಾವು ವರ್ತಿಸುವ, ಚಿಂತಿಸುವ, ಅನುಭವಿಸುವ, ಆ ಮೂಲಕ ನಾವು ಬದುಕುವ ರೀತಿ ಬದಲಾಗುತ್ತಾ ಬಂದಿದೆ. ಅದನ್ನು ಬಳಸಿಕೊಳ್ಳುವವರಲ್ಲಿ ಕೆಲವು ಸೃಜನಶೀಲರು ಕಲಾ ಪ್ರೌಡಿಮೆಯನ್ನು ಸಾಧಿಸಿದರೆ, ಇತರ ಅನೇಕರು ಅದರ ಪ್ರಯೋಜನದ ಬಗ್ಗೆ ಮಾತ್ರ ಆಸಕ್ತರಾಗಿದ್ದಾರೆ. ಸಂಸ್ಕೃತಿಯ ಮೇಲಾಗುವ ಪರಿಣಾಮದಲ್ಲಿ ಈ ಎರಡೂ ಅಂಶಗಳು ಮುಖ್ಯವಾಗುತ್ತವೆ. +ಇದು ದಿನ ನಿತ್ಯದ ಪರಿಣಾಮದ ಸಾಮಾನ್ಯ ನೆಲೆಗಳು. ಆದರೆ ನಾವಿದನ್ನು ಮೇಲು ಮೇಲಿನ ಸಾಮಾನ್ಯ ನೆಲೆಗಳಲ್ಲಿ ಗ್ರಹಿಸಿದರೆ ದೊಡ್ಡದೇನೂ ಹೇಳಿದಂತಲ್ಲ. ಇಂದಿನ ಜಾಗತೀಕರಣ ಹಾಗೂ ಅದರೊಳಗೆ ಹಾಸು ಹೊಕ್ಕಂತಿರುವ ಟೆಕ್ನಾಲಜಿಯ ಅವಿನಾ ಸಂಬಂಧ ಸಾಂಸ್ಕೃತಿಕ ನೆಲೆಗಳ ಮೇಲೆ ಮಾಡುವ ಪರಿಣಾಮದ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕು. +ಇಂದಿನ ಜಾಗತೀಕರಣ ವಿಶ್ವ ಭ್ರಾತೃತ್ವ ಮುಂತಾದ ಉದಾತ್ತ ಆದರ್ಶಗಳ ತಳಹದಿಯಲ್ಲಿ ನಿಂತಿರುವುದಲ್ಲ. ಅಥವಾ Wiಣheಡಿiಟಿg ಚಿತಿಚಿಥಿ oಜಿ sಣಚಿಣe ನ ತಾತ್ವಿಕ ಭಿತ್ತಿಯೂ ಅಲ್ಲ. ಅದು ಇಡೀ ಜಗತ್ತನ್ನೇ ಅಡೆ ತಡೆಗಳಿಲ್ಲದ ಒಂದೇ ಮಾರುಕಟ್ಟೆಯನ್ನಾಗಿ ಮಾಡುವ ವಿಧಾನ. ಈ ಮಾರುಕಟ್ಟೆಯೊಳಗೆ ಯಾರು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು. ಇದರಲ್ಲಿ ಗೆಲ್ಲುವುದಕ್ಕೆ ಅನೇಕ ಕಾರಣಗಳಿವೆ. ಇಂತಹ ಮಾರುಕಟ್ಟೆ, ಅವು ಕುದುರಿಸುವ ಆಸಕ್ತಿಗಳು, ಮಾನವನ ವೈವಿದ್ಯವನ್ನು ಎಷ್ಟು ಮೊಟಕಾಗಿಸಬಲ್ಲದು ಎಂಬುದು ಇಂದಿನ ಪ್ರಶ್ನೆ. ಅದರ ಪರ ಹಾಗೂ ವಿರೋಧವಾದ ಅನೇಕ ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಾ ಇವೆ. ಅದನ್ನು ಇಲ್ಲಿ ಚರ್ಚಿಸುವುದು ಈ ಬರಹದ ಉದ್ದೇಶವಲ್ಲ. (ಡಾ.ಯು.ಆರ್. ಅನಂತಮೂರ್ತಿಯವರ ನೂತನ ಕಾದಂಬರಿ ‘ದಿವ್ಯ’-ಜಾಗತೀಕರಣಕ್ಕೆ ಧ್ಯಾನಸ್ಥ ಲೇಖಕನ ಸೃಜನಶೀಲ ಪ್ರತಿಕ್ರಿಯೆ ಎಂಬ ನನ್ನ ಲೇಖನವೊಂದರಲ್ಲಿ ಈ ಕೆಲವು ಅಂಶಗಳನ್ನು ಈಗಾಗಲೇ ಚರ್ಚಿಸಿದ್ದೇನೆ.) +ಇಂದು ಬರುವ ಟೆಕ್ನಾಲಜಿಯನ್ನು, ಸಮೂಹ ಮಾಧ್ಯಮಗಳನ್ನು ಮನುಷ್ಯ ಯಾವ ರೀತಿ ಬಳಸಲು ಕಲಿಯುತ್ತಾನೆ ಎಂಬುದು ಸಂಸ್ಕೃತಿಯ ಮೇಲೆ ಅದು ಮಾಡುವ ಪರಿಣಾಮವನ್ನು ನಿರ್ಣಯಿಸುತ್ತದೆ. ಪ್ರಿಂಟಿಂಗ್ ಟೆಕ್ನಾಲಜಿಯ ಆವಿಷ್ಕಾರವಾದ ಬಳಿಕ ಅದರ ಅನೇಕ ರೀತಿಯ ಬಳಕೆ ನಾವು ಬದುಕುವ, ಚಿಂತಿಸುವ ಕ್ರಮದ ಮೇಲೆ ಪರಿಣಾಮ ಬೀರಿವೆ. ಪತ್ರಿಕಾ ಮಾಧ್ಯಮವೇ ಸೃಷ್ಠಿಯಾಗಿದೆ. ಅದು ಸಾಂಸ್ಕೃತಿಕವಾಗಿ ಮಾಡಿದ ಪರಿಣಾಮವೂ ಅಗಾಧ. ಹೀಗೆ ಪ್ರತಿಯೊಂದು ಟೆಕ್ನಾಲಜಿಯ ಆವಿಷ್ಕಾರವೂ ಮನುಷ್ಯ ಜೀವನದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಇಂದಿನ ಕಂಪ್ಯೂಟರ್ ಟೆಕ್ನಾಲಜಿಯನ್ನು ಮನುಷ್ಯ ಮುಂದೆ ಬೆಳೆಸಿ ಬಳಸಿಕೊಳ್ಳುತ್ತಾನೆ ಎಂಬುದು ಸಾಂಸ್ಕೃತಿಕ ಪರಿಣಾಮಗಳನ್ನು ನಿರ್ಣಯಿಸುವಂತಹದ್ದು. ಉದಾಹರಣೆಗೆ, ನಾನು ಮಾಡುವ ಯಾವುದೇ ಅಧ್ಯಯನಕ್ಕೆ ಪೂರಕವಾಗು ಇಂಟರ್‌ನೆಟ್‌ನ್ನೂ, ಟಿ.ವಿ. ಚಾನೆಲ್‌ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದು ನನ್ನ ಅರಿವಿಗೆ ಬಂದ ಕ್ಷಣ ಆ ಮಾಧ್ಯಮಗಳು ನನ್ನ ಓದಿನ ಆಸಕ್ತಿಗೆ ಅಡ್ಡ ಬರಲೇ ಇಲ್ಲ. +ಆದರೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಹೊಸ ಟೆಕ್ನಾಲಜಿ ಜಗತ್ತಿಗೆ ಒಂದು ಕೇಂದ್ರೀಕರಣದ ನಿಯಂತ್ರಣ ನೆಲೆಯನ್ನೂ ನೀಡುತ್ತದೆ. ಮೈಕ್ರೋಸಾಫ್ಟ್ ಕಂಪನಿ ನೂರಕ್ಕೂ ಅಧಿಕ ದೇಶಗಳಲ್ಲಿದ್ದರೂ ಅಮೆರಿಕಾದಲ್ಲಿ ತನ್ನ ಕೇಂದ್ರ ನಿಯಂತ್ರಣವನ್ನು ಹೊಂದಿದೆ. ಅವರ ಸ್ವಂತದ ಇಂಟರ್‌ನೆಟ್ ಜಾಲದ ಮೂಲಕ ಪ್ರತಿಯೊಂದು ವಿಚಾರವನ್ನು ಕ್ಷಣ ಕ್ಷಣದ ಹಿಡಿತದಲ್ಲಿಟ್ಟು ಇಡೀ ಜಗತ್ತಿನ ವ್ಯವಹಾರವನ್ನು ಒಂದು ಪುಟ್ಟ ಊರಿನೊಳಗೆ ವ್ಯಾಪಾರದಂತೆ ನಿಯಂತ್ರಿಸುವ ಶಕ್ತಿಯನ್ನು ಕೇಂದ್ರ ಕಛೇರಿಗೆ ಇಂತಹ ಟೆಕ್ನಾಲಜಿ ನೀಡುತ್ತದೆ. ಇದು ವ್ಯಾಪಾರದ ಲಾಭದ ದೃಷ್ಟಿಯಿಂದ ಅನೇಕ ಪ್ರೋತ್ಸಾಹಗಳನ್ನು ನೀಡಬಹುದು. ಆದರೆ ಸಂಸ್ಕೃತಿಯ ಮೇಲೆ ಅದು ಮಾಡುವ ಪರಿಣಾಮ ಏನು? ಜಗತ್ತಿನ ವೈವಿಧ್ಯವನ್ನು ಅದು ಹೇಗೆ ಸ್ವೀಕರಿಸುತ್ತದೆ ಎಂಬುದೇ ಮುಖ್ಯ. ಜಾಗತಿಕ ವ್ಯಾಪಾರದ ಅವಶ್ಯಕತೆ ವೈವಿಧ್ಯಗಳ ಸಂಕಷ್ಟಗಳನ್ನು ಬಯಸುವುದಿಲ್ಲ. ದರ್ಜಿಯ ಬಳಿ ಹೋಗಿ ಬಟ್ಟೆ ಹೊಲಿಸುವ ಕಾಲದಲ್ಲಿ ಮೈಯಳತೆಗೆ ಹೊಂದಿಕೆಯಾಗಿವ ದಿರಿಸು ಫ್ಯಾಷನ್. ಅಂದರೆ ಪ್ರಪಂಚದಾದ್ಯಂತ ಮಾರುವ ಬ್ರಾಂಡ್‌ಗಳ ರೆಡಿಮೇಡ್ ಬಟ್ಟೆಗಳು ಬಂದಾಗ, ಎಲ್ಲರೂ ಹಾಕಬಲ್ಲ ಸ್ವಲ್ಪ ದೊಗಳೆಯಾದ ಅಂಗಿಗಳೇ ಫ್ಯಾಷನ್ ಆದವು. ಮಾರುಕಟ್ಟೆ ವಿಸ್ತರಣೆಯಾಯಿತು. ವೈವಿಧ್ಯ ನಾಶವಾಯಿತು. ಅಭಿರುಚಿ ಫ್ಯಾಷನ್ ಹೆಸರಲ್ಲಿ ನಿಯಂತ್ರಣಕ್ಕೊಳಗಾಯಿತು. +ಇಂದಿನ ಟೆಕ್ನಾಲಜಿ ತಾನಿರುವ ತಾಣದಲ್ಲೆ ಸಕಲ ಲೋಕದ ವೈವಿಧ್ಯಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ. ತನ್ನ ಗರ್ಭದೊಳಗೆ ಉದ್ಯೋಗದ ವಿಕೇಂದ್ರೀಕರಣದ ಕೆಲಸದ ತಾಣಗಳನ್ನು ಮತ್ತು ಅದರ ನಿಯಂತ್ರಣಕ್ಕೆ ಕೇಂದ್ರೀಕರಣದ ಸಾಧ್ಯತೆಯನ್ನು ಜೊತೆಜೊತೆಯಾಗಿ ಒದಗಿಸಿಕೊಡುತ್ತದೆ. ನಾಸ್‌ಡ್ಯಾಕ್‌ನಂತಹ ಷೇರು ಮಾರುಕಟ್ಟೆ ಪ್ರಪಂಚದಾದ್ಯಂತ ವ್ಯವಹಾರವನ್ನು ಟೆಕ್ನಾಲಜಿ ಮೂಲಕ ಹಬ್ಬಿಸಲು ಆಕರಗಳನ್ನು ಹೊಂದಿದೆ. ಹೀಗೆ ಭೂಗೋಲ ಒಂದು ಅಂಗೈಯೊಳಗಿನ ವಸ್ತುವಾದಾಗ ನಮ್ಮ ರಾಜಕೀಯ ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಚಿಂತನೆಗಳು ಟೆಕ್ನಾಲಜಿಯ ವೈರುದ್ಯಗಳನ್ನು ಹದ್ದುಬಸ್ತಿನಲ್ಲಿಡಲು ಬಹಳ ಸಹಕಾರಿ. +ಕಂಪ್ಯೂಟರ್ ಟೆಕ್ನಾಲಜಿಯ ಇಂಟರ್‌ನೆಟ್ ವ್ಯವಸ್ಥೆ ತನ್ನ ಒಳಗೇ ಜನಭಿಪ್ರಾಯವನ್ನು ರೂಪಿಸಬಲ್ಲ ಅನಿಯಂತ್ರಿತ ವ್ಯವಸ್ಥೆಯನ್ನು ಬೆಳೆಸಬಲ್ಲ ಒಂದು ಸ್ವತಂತ್ರ ಅಭಿವ್ಯಕ್ತಿಯ ಸಾಧ್ಯತೆಯನ್ನು ಹೊಂದಿದೆ. ಅದನ್ನು ಅನೇಕ ಹಂತಗಳಲ್ಲಿ ನಿಯಂತ್ರಣಕ್ಕೆ ಒಳಪಡಿಸುವ ಸೂಕ್ಷ್ಮವಾದೊಂದು ಪ್ರಯತ್ನವೂ ನಡೆಯುತ್ತಿದೆ. ಈ ಟೆಕ್ನಾಲಜಿಯ ಕಟ್ಟಿ ಹಾಕುವ ಶಕ್ತಿಯೊಡನೆಯೇ ಅದರ ಬಿಡುಗಡೆಯ ಸ್ವಾತಂತ್ರ್ಯ ಶಕ್ತಿಯೂ ಇದೆ. ಅಂತಹ ಬಿಡುಗಡೆಯ ಅಂತರ್ಗತ ಶಕ್ತಿಗಳನ್ನು ಟೆಕ್ನಾಲಜಿ ಸಮುದಾಯ ಜತನದಿಂದ ಕಾಪಾಡಿಕೊಳ್ಳುವುದೇ ಒಂದು ಅಂತರ್ಗತ ರಕ್ಷಣಾ ವ್ಯವಸ್ಥೆಯಾಗಿ ಬೆಳೆಯಬೇಕು. +ಈ ರೀತಿಯ ಜಾಗೃತ ಪ್ರಯತ್ನಗಳು ಮನುಷ್ಯನ ಎಚ್ಚರಿಕೆಯ ಪ್ರವೃತ್ತಿಯಿಂದ ಉದ್ದಿಪನಗೊಳ್ಳುತ್ತಾ ಇರುತ್ತದೆ. ಅದು ಮನುಷ್ಯನ ಸ್ವಾತಂತ್ರ್ಯ ಪ್ರಜ್ಞೆಯ ನಿರಂತರ ಎಚ್ಚರಿಕೆಯ ಜಾಗೃತ ಸ್ಥಿತಿ. ಇಂತಹ ಪ್ರಯತ್ನಗಳು ಸುಕ್ಷ್ಮ ಚಿನ್ಹೆಗಳನ್ನು ನಾವು ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ, ಟೆಕ್ನಾಲಜಿಯಲ್ಲಿ ‘ಪೇಟೆಂಟ್’ ಎಂಬುದು ಬಹಳ ಶಕ್ತಿಯುತವಾದ ಕಾನೂನು. ಸಾಫ್ಟ್‌ವೇರ್ ಟೆಕ್ನಾಲಜಿಯಲ್ಲಿ ‘ಪೇಟೆಂಟ್’ ಬಹಳ ಮುಖ್ಯವಾದೊಂದು ನಿಯಂತ್ರಣ. ಈಗ ಅಮೆರಿಕಾದಲ್ಲಿ ಅನೇಕರು ಸಾಫ್ಟ್‌ವೇರ್‌ನಲ್ಲಿ ಪೇಟೆಂಟ್ ನಿಯಂತ್ರಣ ಇರಕೂಡದು ಎಂಬ ವಾದ ಮಂಡಿಸತೊಡಗಿದ್ದಾರೆ. ( ಇವರಲ್ಲಿ ಭಾರತ ಮೂಲದ ಕೆಲವು ವಕೀಲರು ಮಂಚೂಣಿಯಲ್ಲಿದ್ದಾರೆ.) ಇದಕ್ಕೆ ವಿರುದ್ಧವಾಗಿ ‘ಪೆಟೆಂಟ್’ ೨೫ ವರುಷಗಳಿಗೆ ಇದ್ದರೆ ಸಾಲದು, ಬದಲಾಗಿ ಅದು ‘೭೫’ವರುಷಗಳಿಗೆ ವಿಸ್ತರಿಸಬೇಕೆಂದು ಪ್ರತಿವಾದ ಹೂಡಿದ ವಿರೋಧ ಚಳವಳಿಯೂ ಇದೆ. +ಇಂದು ಇಂಟರ್‌ನೆಟ್ ಮೂಲಕ ಒಂದು ಹೊಸ ಸಮಾಜ ವ್ಯವಸ್ಥೆಯ ನಿರ್ಮಾಣ ನಡೆಯುತ್ತಿದೆ. ಇದು ಕೈಗಾರಿಕಾ ಕ್ರಾಮ್ತಿಯ ನಾಗರಿಕತೆಯ ಮುಮ್ದಿನ ಹಂತ. ಇಲ್ಲೂ ಸಾಂಸ್ಕೃತಿಕವಾಗಿ ಜವಾಬ್ದಾರಿ ಉಳ್ಳವರ ಕರ್ತವ್ಯ ಎಂದರೆ-ನಮ್ಮ ಸ್ವಾತಂತ್ರ್ಯವನ್ನು, ಚಿಂತನೆ ಅಭಿವ್ಯಕ್ತಿಯ ಮೂಲಗುಣಗಳನ್ನು ಉಳಿಸಿಕೊಳ್ಳುವತ್ತ ನಿರಂತರ ಜಾಗೃತವಾಗಿರುವುದು. ಮನುಷ್ಯನ ಬದುಕಿನ ಸ್ವಾತಂತ್ರ್ಯದ ಮೂಲ ಸೆಲೆಗೆ, ಜೀವ ಪ್ರೀತಿಗೆ ಒತ್ತು ನೀಡುವ ಇಂತಹ ನಿರಂತರ ಎಚ್ಚರಕ್ಕೆ ಸಾಂಸ್ಕೃತಿಕ ವೈವಿಧ್ಯತೆ ಪೂರಕವಾಗುತ್ತದೆ. ಇಂತಹ ವೈವಿಧ್ಯವನ್ನು ನಿವಾಳಿಸುವಂತೆ ಬ್ಳೆಯುತ್ತಿರುವ ಟೆಕ್ನಾಲಜಿ ಒಳಗೆ ಮನುಷ್ಯನ ಕಲಾವಂತಿಕೆ, ಸ್ವಾತಂತ್ರ್ಯ ಹಾಗೂ ಸಹನೆಗಳು ಮಾತ್ರ ಅಂತಹ ವೈವಿಧ್ಯವನ್ನು ಬೆಳೆಸಬಲ್ಲವು. ಗೋಪಾಲಕೃಷ್ಣ ಅಡಿಗರು ತಮ್ಮ ‘ಕೂಪ ಮಂಡೂಕ’ ಕವನದಲ್ಲಿ ಹೇಳಿದಂತೆ ‘ಇಲ್ಲಾಡುವುದು-ಇದೇ ಹೊಸ ಠರಾವು’. +-ಸೆಪ್ಟಂಬರ್ ೨೦೦೧ +***** +ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು […] +‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ […] +‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_764.txt b/Kannada Sahitya/article_764.txt new file mode 100644 index 0000000000000000000000000000000000000000..eb9684c30251aca58fabf06ef46fb8abe7059e64 --- /dev/null +++ b/Kannada Sahitya/article_764.txt @@ -0,0 +1,29 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ ಭಾರತದ ಸಮಸ್ಯೆಗಳಿಗೆ ಉತ್ತರವಾಗಿ ಕಾಣಿಸುತ್ತದೆ. ಆದರೆ ಅದೇ ವಿದ್ಯಾರ್ಥಿ ಭಾರತಕ್ಕೆ ಹಿಂದಿರುಗಿ ಉದ್ಯೋಗ ಹಿಡಿದ ಮೇಲೆ ಪರಂಪರಾಗತ ವಿಚಾರಧಾರೆಯ ಅವನ ಸಂಸಾರ, ಪರಿಸರ ಅವನನ್ನು ಒಳಗೆ ಸೆಳೆದುಕೊಳ್ಳುತ್ತದೆ; ಅಥವಾ ಇವನೇ ತಾನಾಗಿ ಒಳಪಡುತ್ತಾನೆ. +ಭಾರತದಲ್ಲಿ ಬೂರ್ಜ್ವಾ ಒಬ್ಬನ ಸಿಟ್ಟು ಅವನಿನ್ನೂ ವಿಶೇಷ ಸೌಲಭ್ಯಗಳನ್ನು ಅಯಾಚಿತವಾಗಿ ಪಡೆಯುವ ವರ್ಗಕ್ಕೆ ಸೇರಿದವನಾದ್ದರಿಂದ ನಿಜವಾದದ್ದಲ್ಲ. ಹದಿನೈದು ವರ್ಷಗಳ ಹಿಂದೆ ಒಬ್ಬ ಕಾಲೇಜು ಅಧ್ಯಾಪಕನಿಗೆ ಸಿಗುತ್ತಿದ್ದುದು ನೂರು ರೂಪಾಯಿ ಮತ್ತು ಬಹಳ ಸಣ್ಣ ಮೊತ್ತದ ತುಟ್ಟಿಭತ್ಯ. ಈಗ ಅದು ಕಮ್ಮಿಯೆಂದರೆ ನಾಲ್ಕರಷ್ಟು ಹೆಚ್ಚಾಗಿದೆ. ಆದರೆ ಮೈಸೂರಿನ ಒಬ್ಬ ಟಾಂಗವಾಲ ಬಾಡಿಗೆಯನ್ನು ದ್ವಿಗುಣಗೊಳ್ಳಲು ಪ್ರತಿನಿತ್ಯ ಚೌಕಾಸಿ ಮಾಡಬೇಕು. ಕ್ಷೌರಿಕ ವರ್ಗದ ಸಂಪಾದನೆಯಂತೂ-ಅವರು ಕುಶಲ ಕರ್ಮಿಗಳೂ, ಸಂಗೀತಗಾರರೂ ಆಗಿದ್ದರೂ ಸಹ- ಎರಡರಷ್ಟು ಕೂಡ ಹೆಚ್ಚಾಗಿಲ್ಲ. ಸ್ವಂತ ಅನುಭವದಲ್ಲಿ ಬೇರುಗಳಿಲ್ಲದ, ಅವ್ಯಕ್ತದಲ್ಲಷ್ಟೇ ಅನುಭವಿಸಿದ ನಮ್ಮ ಸಿಟ್ಟು ಎಷ್ಟು ನಿಜವಾಗುವುದು ಸಾಧ್ಯ? ನೆಹರೂ ಯುಗ ಮತ್ತು ಇಂದಿರಾಯುಗ ಎರಡೂ ಮಧ್ಯಮ ವರ್ಗದ ಬಗ್ಗೆ ಉದಾರವಾಗಿ ನಡೆದುಕೊಂಡಿವೆ; ಮತ್ತು ನಮ್ಮ ಲೇಖಕರು, ರಾಜಕಾರಣಿಗಳು, ಅಧ್ಯಾಪಕರು ಬಂದಿರುವುದು ಈ ಮಧ್ಯಮ ವರ್ಗದಿಂದ, ಹೀಗಾಗಿ ನಮ್ಮ ಪ್ರತಿಭಟನೆ ಮತ್ತು ಸಿಟ್ಟು ಒಂದೋ ರೊಮ್ಯಾಂಟಿಕ್ ಲೋಲುಪತೆಯಾಗುತ್ತದೆ; ಇಲ್ಲದೇ ನಾವು ಪಟ್ಟಭದ್ರರನ್ನು ಹೆದರಿಸಿ ನಮ್ಮ ಬೆಲೆಯೇರಿಸಿಕೊಳ್ಳಲು ಉಪಯೋಗಿಸುವ ಬಹುಸೂಕ್ಷ್ಮ ತಂತ್ರಗಳಾಗುತ್ತವೆ. +ಅಂದರೆ ನಾನು ಹೇಳುತ್ತಿರುವುದರ ಅರ್ಥ ಪರದೇಶದಲ್ಲಿದ್ದಾಗ ಅಥವಾ ಭಾರತದಲ್ಲೇ ಯಾವುದಾದರೂ ಶ್ರೀಮಂತ ಕಾಲೇಜಿನಲ್ಲಿ ಓದುತ್ತಿರುವಾಗ ಭಾರತೀಯ ವಿದ್ಯಾರ್ಥಿಗೆ ಬರುವ ಸಿಟ್ಟು ಅಪ್ರಾಮಾಣಿಕವಾದದ್ದು ಅಥವಾ ಸುಳ್ಳು ಎಂದಲ್ಲ; ಇದು ಅವನನ್ನು ಎಲ್ಲಿಗೂ ಮುಟ್ಟಿಸುವುದಿಲ್ಲ ಎಂದು. ಹಾರತದ ಮಟ್ಟಿಗೆ ಒಂದು ಭಯಾನಕ ಸತ್ಯವೆಂದರೆ ಪರದೇಶದಲ್ಲಿದ್ದಾಗ ನಮ್ಮನ್ನು ಗೊಂದಲಗೊಳಿಸುವ ವಾಸ್ತವಗಳಿಗೆ ನಾವು ಭಾರತದಲ್ಲಿ ನೆಲೆಯೂರಿದ ಮೇಲೆ ಒಗ್ಗಿ ಹೋಗುತ್ತೇವೆ. ಡಾಸ್ಟವಸ್ಕಿ ತನ್ನ ಕಾದಂಬರಿಗಳಲ್ಲಿ ಚಿತ್ರಿಸುವಷ್ಟು ಆಳವಾಗಿ ಬಡತನವನ್ನು ಚಿತ್ರಿಸುವ ಕಾದಂಬರಿಗಳು ಕನ್ನಡದಲ್ಲಿ ಬಹು ಕಡಿಮೆ. ಭಾರತೀಯ ಲೇಖಕ ತನ್ನೆದುರೇ ಕಾಣುವ ಭಯಾನಕತೆಯ ಸತ್ಯ ಸ್ವರೂಪಕ್ಕೆ ಜಡವಾಗಿದ್ದಾನೆ. ನಾವು ಪ್ರತಿಕ್ರಿಯೆ ವ್ಯಕ್ತಪಡಿಸುವುದು ಅಸ್ಪಷ್ಟಗಳಲ್ಲಿ; ವಿಶೇಷಣಗಳ ಸರಮಾಲೆಯಲ್ಲಿ ಅಥವಾ ದೆಹಲಿಯ ಇಂಪೀರಿಯಲ್ ಹೋಟೆಲ್‌ನ ಏರ್‌ಕಂಡೀಷನ್ಡ್ ಬಾರ್ ರೂಮಿನಲ್ಲಿ ಕುಳಿತು ಸಾಹಿತ್ಯದ ಕಾಲ ಮುಗಿದು ಹೋಗಿದೆ ಎಂದು ಅಪ್ಪಣೆ ಕೊಡಿಸಿದ ಭಾರತೀಯಾಂಗ್ಲ ಲೇಖಕರೊಬ್ಬರ ಹಾಗೆ ರೆಟರಿಕ್ಕಿನ ಗತ್ತಿನಲ್ಲಿ. ಅಥವಾ ನ್ಯಾಶನಲ್ ಬುಕ್ ಟ್ರಸ್ಟ್‌ನವರು ಏರ್ಪಡಿಸಿದ್ದ ಒಂದು ಸಭೆಯಲ್ಲಿ ತಾವು ಸಮಾಜವಾದ, ದೇಶದ ಏಕತೆ ಇತ್ಯಾದಿಗಳಲ್ಲಿ ನಂಬಿಕೆಯುಳ್ಳವರೆಂದು ಹೇಳುತ್ತಾ (ಒಬ್ಬರು ಮಂತ್ರಿಗಳು ಅಲ್ಲಿ ಉಪಸ್ಥಿತರಿದ್ದರು.) ತಾವು ಸಾಮಾಜಿಕ ಅನ್ಯಯವನ್ನು ಖಂಡಿಸಿ ಬರೆದು ಒಂದು ಕಾದಂಬರಿ ಏಳು ಸಾವಿರದ ಐನೂರು ರೂಪಾಯಿಗಳ ಬಹುಮಾನ- ತೆರಿಗೆ ವಿನಾಯ್ತಿ ಸಮೇತ (ಆವರದ್ದೇ ಮಾತು)- ಪಡೆಯಿತೆಂದು ಪರಿಚಯ ಮಾಡಿಕೊಂಡಾಗ ತಾನು ಮಾರಾಟಕ್ಕಿದ್ದೇನೆ ಎಂದು ಪಟ್ಟಭದ್ರರೆದುರು ಜಾಹೀರು ಮಾಡಿಕೊಳ್ಳುತ್ತಿದ್ದಾನೆಂದು ಯಾರಿಗಾದರೂ ತಿಳಿಯುವಂತಿತ್ತು. +ಮಧ್ಯಮ ವರ್ಗದ ಒಬ್ಬ ಲೇಖಕ ಪ್ರತಿಭಟನೆಯ ಸಾಹಿತ್ಯ ಬರೆಯುವುದು ಸಾಧ್ಯವೇ ಅಂಬ ಅತಂಕ ನನಗಿದೆ. ನಮ್ಮಲ್ಲಿ ಹೆಚ್ಚಿನವರು ಮಾಡಬಹುದಾದ್ದೆಂದರೆ ನಮ್ಮ ಓದುಗರಿಗೆ- ಇವರೂ ಮಧ್ಯಮ ವರ್ಗದವರೇ ಆಗಿರುತ್ತಾರೆ- ತಮ್ಮ ಸ್ಥಿತಿಯ ಬಗ್ಗೆ ಸ್ವಲ್ಪವಾದರೂ ನಾಚಿಕೆಯುಂಟಾಗುವ ಅಪಮಾನ ಸಾಹಿತ್ಯ ಬರೆಯುವುದು. ನಾವು ಮಾಡಬಹುದಾದ ಅತ್ಯತ್ತಮ ಕೆಲಸವೆಂದರೆ ನಮ್ಮ ಆತ್ಮವಂಚನೆಯನ್ನು, ನಮ್ಮ ಮಾತಿಗೂ ಕ್ರಿಯೆಗೂ ಇರುವ ಕಂದಕವನ್ನು, ನಮಗೂ ಇಲ್ಲಿನ ಬಡಜನರಿಗೂ ಇರುವ ಸಾಮಾನ್ಯ ಅದೃಷ್ಟದ ಬಗ್ಗೆ ನಮ್ಮ ನಿರ್ಲಕ್ಷತೆಯನ್ನು ಆಳವಾಗಿ ಕೆದಕಿ ಬರೆಯುವುದು. ನಾವು ಸಾಚಾ ಆಗುವುದು ನಮ್ಮ ಮಿತಿಗಳ ಬಗ್ಗೆ ಜಾಗೃತರಾಗುವುದು ಎಂದರೆ ನಮ್ಮ ವರ್ಗಗಳ ಮಿತಿಗಳ ಬಗ್ಗೆ ಜಾಗೃತರಾಗುವುದು ಕೂಡಾ. +ಸಾಚಾ ಆದ ಪ್ರತಿಭಟನೆಯ ಸಾಹಿತ್ಯವನ್ನು ಬರೆಯಲು ಸಾಧ್ಯವಾಗುವುದು ಬ್ಲೇಕ್ ಮತ್ತು ಲಾರೆನ್ಸ್‌ನಂಥ ಲೇಖಕರಿಗೆ, ಇವರು ದಾರ್ಶನಿಕರೂ ಹೌದು ಎಂಬುದನ್ನು ನೆನಪಿನಲ್ಲಿಡಬೇಕು. ಲಾರೆನ್ಸ್ ಮತ್ತು ಬ್ಲೇಕ್ ನಾವು ಈಗ ಏನಾಗಿದ್ದೇವೆ ಎನ್ನುವ ವಾಸ್ತವವನು ಮತ್ತು ಏನಾಗಬೇಕು ಎನ್ನುವ ಸಾಧ್ಯತೆಯನ್ನು ಒಟ್ಟಿಗೇ ಗ್ರಹಿಸಿ ಹಿಡಿದಿಟ್ಟವರು. ನಾವು ಏನಾಗಿದ್ದೇವೆ ಎಂಬುದರ ಬಗ್ಗೆ ಮಾತ್ರ ಹೇಳುವ ಸಾಹಿತ್ಯ ಡಾಕ್ಯುಮೆಂಟರಿಯಾಗುತ್ತದೆ; ಎನಾಗಬೇಕು ಎನ್ನುವುದರ ಬಗ್ಗೆ ಮಾತ್ರ ಬರೆದಾಗ ಅದು ಪ್ರಚಾರದ ರೆಟರಿಕ್ಕಾಗುತ್ತದೆ. ನಿಜವಾದ ಲೇಖಕ ವಾಸ್ತವ ಮತ್ತು ಆದರ್ಶಗಳ ಡಯಲೆಕ್ಟನ್ನು ಒಟ್ಟಿಗೇ ಗ್ರಹಿಸಿ ಹಿಡಿದಿಡುವುದು ಸಾಧ್ಯವಾಗಬೇಕು. ಆಗ ಮಾತ್ರ ಅದು ನಿಜವಾಗ ಬಲ್ಲದು. +ನಾವು ಬೌದ್ಧಿಕ ಮಟ್ಟದಲ್ಲಿ ಮಾತ್ರ ಗ್ರಹಿಸಿದ್ದು ಸಚಾ ಸಾಹಿತ್ಯವನ್ನು ಕೊಡುವುದು ಸಾಧ್ಯವಿಲ್ಲ; ಭಾರತೀಯಾಂಗ್ಲ ಕವಿಯೊಬ್ಬರು ಉಳಿದ ಲೇಖಕರ ಮುಂದೆ ಸಾಹಿತ್ಯವನ್ನು ಬಿಟ್ಟು ನಿಜವಾದ ಪ್ರತಿಭಟನೆಯಲ್ಲಿ ತೊಡಗಿ ಎಂದು ಸ್ಫೂರ್ತಿಯುತವಾದ ಭಾಷಣ ಕೊಡುತ್ತಿದ್ದಾಗ ಯಾರೊಬ್ಬರೂ ಅವರನ್ನು ನಿಮಗೆ ಭಾರತೀಯ ಭಾಷೆಯಲ್ಲಿ ಬರೆದು ಜನರನ್ನು ಕ್ರಿಯೆಗೆ ಎಚ್ಚರಿಸುವಲ್ಲಿ ಯಾಕೆ ತೊಡಗಬಾರದು ಎಂದು ಯಾಕೆ ಕೇಲಲಿಲ್ಲವೆಂದು ನನಗೆ ಅನ್ನಿಸಿತು. ಹೆಚ್ಚಿನ ಎಲ್ಲರೂ ಅವರ ರೆಟರಿಕ್ಕನ್ನು ಮೆಚ್ಚುತ್ತಾ ಕುಳಿತಿದ್ದರು; ಒಂದಿಬ್ಬರು ಕಮಲಾದಾಸರಂಥ ಕವಿಯ ಪದ್ಯಗಳನ್ನು ಅಷ್ಟು ಬೇಗ ತೆಗೆದು ಹಾಕುವಂತಿಲ್ಲವೆಂದು ಸಣ್ಣ ಧ್ವನಿಯಲ್ಲಿ ಪ್ರತಿಭಟಿಸಿದರು. ಯಾವುದೋ ಅಸ್ಪಷ್ಟ ಆದರ್ಶಕ್ಕೆ ನಮ್ಮನ್ನು ಕೊಟ್ಟುಕೊಂಡಾಗ ನಾವು ಯೋಚಿಸುವ ಮತ್ತು ಅಭಿವ್ಯಕ್ತಿಸುವ ಕ್ರಮದಲ್ಲಿ ಕೃತಕತೆ ತಲೆದೋರುತ್ತದೆ. ಬಸವಣ್ಣ, ಅಕ್ಕ, ಕಬೀರರಂಥ ಅನುಭಾವಿ ಕವಿಗಳ ಕಾವ್ಯದಲ್ಲಿ ನನಗೆ ಪ್ರಾಮಾಣಿಕವಾದ ಪ್ರತಿಭಟನೆಯ ಸಾಹಿತ್ಯ ಸಿಕ್ಕುತ್ತದೆ. ಈ ಕವಿಗಳಿಂದ ತಾವು ಪಡೆದ ಮೌಲ್ಯ ಮಾಪನದಿಂದ ಕಂಡುಕೊಳ್ಳುತ್ತಾರೆ. ಅದೇ ವೈಚಾರಿಕರ ಪ್ರತಿಭಟನೆ ಅವ್ಯಕ್ತವಾಗಿಯೂ ಅಸ್ಪಷ್ಟವಾಗ್ಯೂ ಉಳಿದು ಕೊಂಡಿದೆ. +ನಮ್ಮ ಸಾಮಾಜಿಕ ಪ್ರತಿಭಟನೆಗಳು ಆಳವಾದದ್ದಾದರೆ ಅದು ತಾತ್ವಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಯಾವುದೇ ತಾತ್ವಿಕವಾದ ಪ್ರತಿಭಟನೆಗೂ, ಅದು ಜೀವನದಲ್ಲಿ ಬೇರು ಬಿಟ್ಟಿದ್ದಾದರೆ, ಸಾಮಾಜಿಕ, ಆರ್ಥಿಕ ತಳಹದಿಗಳು ಇರಬೇಕಾಗುತ್ತದೆ. ಭಾರತೀಯರು ಸಾಹಿತ್ಯರಂಗದಲ್ಲಿ ಯಾವ ರೀತಿಯ ಪ್ರತಿಭಟನೆ ಅಗತ್ಯ ಮತ್ತು ನಿಜ ಎನ್ನುವುದರ ಬಗ್ಗೆ ಮಾರ್ಕ್ಸ್‌ವಾದಗಳಿಗೂ ನವ್ಯಪಂಥದವರಿಗೂ ಸುಳ್ಳು ಚರ್ಚೆ ನಡೆಯುತ್ತಿರುವುದರಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. +ಸೃಷ್ಟಿಶೀಲ ಸಾಹಿತ್ಯ ಮುಖ್ಯವಾಗಿ ಯೋಚಿಸುವುದಕ್ಕೆ ನೀಡುವ ಆಹ್ವಾನ; ಅದು ನಮ್ಮನ್ನು ಕ್ರಾಂತಿಕಾರಿ ರಾಜಕೀಯ ಕ್ರಿಯೆಗೆ ಉದ್ದೀಪಿಸುವುವಂಥದಲ್ಲ.ಲೆನಿನ್ ಹಾಗೆ ಕ್ರಿಯೆಯಲ್ಲಿ ತೊಡಗುವುದು ಸಾಧ್ಯವಿದ್ದರೆ ಸೃಷ್ಟಿಶೀಲ ಸಾಹಿತ್ಯ ರಚಿಸುವುದನ್ನು ಆರಿಸಬೇಕಾಗಲಿಕ್ಕಿಲ್ಲ. ಒಂದು ಸ್ಲೋಗನ್ ಪದ್ಯಕ್ಕಿಂತ ಹೆಚ್ಚು ಪರಿಣಾಮಕಾರಿ ಆಯುಧವಾಗಿರಬಹುದು. ಒಳ್ಳೆಯ ಪ್ರತಿಭಟನೆ ಒಳ್ಳೆಯ ಸಾಹಿತ್ಯವಾಗಬೇಕೆಂದಿಲ್ಲ. ನನಗೆ ನನ್ನ ಸಮಾಜದ ಕೆಡುಕಗಳಿಂದ ನಿಜವಾಗಿ ಸಿಟ್ಟು ಬಂದಿದ್ದರೆ ಸಾಹಿತ್ಯಕ್ಕಿಂತ ಹೊರತಾದ ಉಳಿದ ವಿಧಾನಗಳ ಮೂಲಕ ಪ್ರಿಣಾಮಕಾರಿಯಾಗಿ ನಾನು ಕ್ರಿಯೆಯಲ್ಲಿ ತೊಡಗಬೇಕಾಗಬಹುದು. ನನ್ನ ಅಸ್ತಿತ್ವ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ಅದರ ವಿರುದ್ಧ ಹೋರಾಡುವ ಅಗತ್ಯದ ಬಗ್ಗೆ ಪೂರ್ಣ ಅಗತ್ಯದ ಬಗ್ಗೆ ಪೂರ್ಣ ಎಚ್ಚೆತ್ತಿದ್ದರೆ ನನ್ನ ಸೃಷ್ಟಿಶೀಲ ಬರವನಿಗೆಯಲ್ಲಿ- ಅದು ಪ್ರೇಮಗೀತವೇ ಆಗಿದ್ದರೂ- ಕ್ರಾಂತಿಕಾರಿ ಸಮಾಜಿಕ ಪ್ರಜ್ಞೆ ಮೂಡಬಹುದು. ಆದರೆ ಒಬ್ಬ ಕ್ರಾಂತಿಕಾರಿ ರಾಜಕಾರಣಿ ತನ್ನ ಕ್ಶೇತ್ರದಲ್ಲಿ ಸಾಧಿಸುವಷ್ಟು ತತ್‌ಕ್ಷಣದ ಪ್ರೈಣಾಮವನ್ನು ನನ್ನ ಬರವಣಿಗೆ ಮಾಡದೆ ಇರಬಹುದು. ಅಥವಾ ನಾನು ಬರೆಯುತ್ತಿರುವುದು ಜನರ ಭಾವಿಸುವ ಮತ್ತು ಕ್ರಿಯೆಯ ಕ್ರಮವನ್ನು ಬದಲಾಯಿಸಬಹುದಾದ್ದರಿಂದ ಭವಿಷ್ಯತ್ತಿನಲ್ಲಿ ಅದು ರಾಜಕಾರಣಿಯ ಕ್ರಿಯೆಗಿಂತ ಹೆಚ್ಚು ಪರಿಣಾಮಕಾರಿಯಾಗಲೂಬಹುದು. ಆದರೆ ಸಾಹಿತ್ಯ ಅದನ್ನು ಮಾಡುವುದು ಸಾಹಿತ್ಯವಾಗಿದ್ದಾಗ ಮಾತ್ರ; ಅಂದರೆ ಅದು ಯೋಚನೆಗೆ ಆಹ್ವಾನವಾಗಿದ್ದಾಗ; ಕ್ರಿಯೆಗೆ ಕರೆಯುವ ರೆಟರಿಕ್ಕಿನ ಅಬ್ಬರವಲ್ಲದೆ ಹೋದಾಗ. +1972 Weekly Round Table- June 4, 1972 ( ಇಂಗ್ಲಿಷಿನಿಂದ ಅನುವಾದ: ರಾಮಚಂದ್ರ ದೇವ) +ಧನ್ಯತೆಯ ಧ್ಯಾಸ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ […] +ಸದ್ಯಕ್ಕೆ ನಮ್ಮನ್ನು ಗಾಢವಾಗಿ ಕಾಡುತ್ತಿರುವ ವಿಷಯಗಳಲ್ಲಿ ಕನ್ನಡದ ಅಳಿವು, ಉಳಿವು, ವ್ಯಾಪ್ತಿ ಮುಖ್ಯವಾದುವು. ’ಶಿಕ್ಷಣ ಮಾಧ್ಯಮದಲ್ಲಿ ಕನ್ನಡ’ ಈ ಚಿಂತನೆಯ ಒಂದು ಭಾಗವೂ ಆಗಿದೆ, ಕೆಲವು ರೀತಿಗಳಲ್ಲಿ ಅದಕ್ಕಿಂತಾ ಮಿಗಿಲಾದ ವಿಷಯವೂ ಆಗಿದೆ. ಇಂದು […] +ಸಾಗರ, ಎಲ್ಲ ರೀತಿಯ ಜಾತಿ, ಮತ, ವರ್ಗ, ಬೇಧಗಳನ್ನು ಒಳಗೊಂಡಂಥ ಊರು. ಮಂಜಿ ಎಂಬ ಮುದುಕಿಯಬ್ಬಳು ಊರ ತುಂಬ ಅಡ್ಡಾಡಿಕೊಂಡಿರುತ್ತಿದ್ದಳು. ಅವಳ ನಿಜವಾದ ಹೆಸರು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಿದ್ದಹಾಗೆ ಕಾಣೆ. ಅವಳನ್ನು ಎಲ್ಲರೂ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_765.txt b/Kannada Sahitya/article_765.txt new file mode 100644 index 0000000000000000000000000000000000000000..a7bb6ce69a50b1101289d5c91ec032965234cc57 --- /dev/null +++ b/Kannada Sahitya/article_765.txt @@ -0,0 +1,67 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ ತಾಕತ್ತಿಲ್ಲ ಅವನಿಗೆ. ಹಾಗೆ ನೋಡಿದರೆ ನಿಜವಾದ ರಸಿಕರೆಂದರೆ ಪ್ರಾಣೇಶಾಚಾರ್ಯರು. ಸಾವಿರಕ್ಕೊಂದು ಜನ ಅಂಥವರು. ಅವರು ನಿತ್ಯ ಸಂಜೆ ಪುರಾಣವನ್ನೋದುತ್ತ ಆ ಶ್ಲೋಕಗಳಿಗೆ ರಮ್ಯವಾಗಿ ಅರ್ಥ ಹೇಳುವ ಗತ್ತು ಕೇಳಿದರೆ ಎಂತಹ ಮಹಾಮಹಾ ಭಾಗವತನಿಗೂ ನಾಚಿಕೆಯಾಗಬೇಕು. ಎಂತಹ ನಯವಾದ ಮಾತು, ಮೃದುವಾದ ನಗು, ಕಣ್ಣಿಗೆ ಕಟ್ಟುವ ರೂಪು. ಜುಟ್ಟು, ಅಂಗಾರ, ಅಕ್ಷತೆ, ಜರೀ ಶಾಲು ಒಪ್ಪುವುದೆಂದರೆ ಅವರಿಗೊಬ್ಬರಿಗೇನೇ. ಅಷ್ಟಮಠಗಳಲ್ಲಿ ದಕ್ಷಿಣದ ಮಹಾಪಂಡಿತರ ಜೊತೆ ವಾದಿಸಿ ಗೆದ್ದುಬಂದ ಅವರಲ್ಲಿ ಹದಿನೆದು ಜರೀ ಶಾಲುಗಳಿವೆಯಂತೆ. ಆದರೆ ಅವರು ಕೊಚ್ಚಿಕೊಳ್ಳುವವರಲ್ಲ. ಪಾಪ ಅವರ ಹೆಂಡತಿ ನಿತ್ಯರೋಗಿ-ಮಕ್ಕಳಿಲ್ಲ ಮರಿಯಿಲ್ಲ. ಅಷ್ಟೊಂದು ರಮ್ಯವಾಗಿ ಕಾಳಿದಾಸನ ಸ್ತೀವರ್ಣನೆಗಳನ್ನು ವಿವರಿಸುತ್ತಾರಲ್ಲ ಅವರಿಗೆ ಸ್ವತಃ ಆಸೆಯಾಗುವುದಿಲ್ಲವೆ? ತಾನು ಪ್ರಥಮ ಬಾರಿಗೆ ಹೊಳೆಗೆ ನೀರಿಗೆಂದು ಬಂದಿದ್ದ ಬೆಳ್ಳಿಯನ್ನು ಸಂಭೋಗಿಸಿದ್ದು ಆಚಾರ್ಯರು ಓದಿದ ಶಾಕುಂತಲ ಕೇಳಿ. ತಡೆಯಲಾರದೇ ಎದ್ದು ಹೋದೆ. ಮಡಕೆಯಲ್ಲಿ ನೀರು ತುಂಬಿ ತಲೆಯ ಮೇಲೆ ಹೊತ್ತು, ಉಟ್ಟ ತುಂಡಿನ ಸೆರಗು ಜಾರಿ ಬೆಳದಿಂಗಳಿನಲ್ಲಿ ಮಣ್ಣಿನ ಬಣ್ಣದ ಮೊಲೆಗಳನ್ನು ಕುಣಿಸುತ್ತ ಹೆಜ್ಜೆ ಹಾಕಿದವಳು ಶಕುಂತಲೆಯಂತೆ ಕಂಡಳು. ಆಚಾರ್ಯರ ವರ್ಣನೆಯನ್ನು ಖುದ್ದು ಆಸ್ವಾದಿಸಿದ್ದಾಯಿತು. ಶ್ರೀಪತಿ ಒಳದಾರಿಯಿಂದ ಸೀದ ಗುಡ್ಡದ ಮೇಲಿದ್ದ ಹೊಲೆಯರ ಗುಡ್ಡಗಳ ಕಡೆ ನಡೆದ. ಅಮಾಸೆ ಎದುರಿನ ಕಡುಕಪ್ಪು ರಾತ್ರೆಯಲ್ಲಿ ಒಂದು ಗುಡಿಗೆ ಬೆಂಕಿ ಹತ್ತಿ ಉರಿಯೋದು ಕಂಡಿತು. ಅದರ ಬೆಳಕಿನ ಆವೃತ್ತದಲ್ಲಿ ಮಸಿ ಮಸಿ ರೂಪಗಳು. ದೂರದಲ್ಲಿ ನಿಂತು ನೋಡಿದ, ಆಲಿಸಿದ. ಯಾರೂ ಗುಡಿಗೆ ಹತ್ತಿದ ಬೆಂಕಿಯನ್ನು ಆರಿಸುವ ಯತ್ನದಲ್ಲಿದ್ದಂತೆ ಕಾಣಿಸಲಿಲ್ಲ. ಆಶ್ಚರ್ಯಪಟ್ಟು ಒಂದು ಮೊಟ್ಟಿನ ಸಂದಿ ನಿಂತು ಕಾದ. ಬಿದಿರಿನ ಗಳದಿಂದ ಕಟ್ಟಿ ಚಾಪೆ ಹೊದಿಸಿ, ಸೋಗೆ ಹಚ್ಚಿದ ಗುಡಿ ಬೇಸಗೆಯಾದ್ದರಿಂದ ಕ್ಷಣದಲ್ಲಿ ಧಗಧಗ ಉರಿದು ನೆಲಸಮವಾಯಿತು. ಮಸಿರೂಪಗಳು ತಮ್ಮ ಗುಡಿಗಳಿಗೆ ಮರಳಿದವು. ಎದ್ದ ಬೆಂಕಿಯ ಝಳಕ್ಕೆ ಗೂಡುಗಳನ್ನು ಬಿಟ್ಟು ಕಾತರದಿಂದ ಕೂಗಿದ ಹಕ್ಕಿಗಳು ಮರಳಿ ಗೂಡು ಸೇರಿದವು. ಶ್ರೀಪತಿ ಮೆಲ್ಲಗೆ ಹೆಜ್ಜೆಯಿಟ್ಟು ಹೋಗಿ, ಬೆಳ್ಳಿಯ ಗುಡಿಯಿಂದ ಸ್ವಲ್ಪ ದೂರ ನಿಂತು ಚಪ್ಪಾಳೆ ತಟ್ಟಿದ. ತಲೆಗೆ ಬಿಸಿನೀರು ಸ್ನಾನ ಮಾಡಿ, ಸೆರಗಿನಲ್ಲಿ ಬರಿಯ ತುಂಡುಟ್ಟು, ಸೊಂಟದ ಮೇಲೆ ಬತ್ತಲೆಯಾಗಿ, ಕಪ್ಪು ಕೂದಲಿನ ರಾಶಿಯನ್ನು ಬೆನ್ನಿನ ಮೇಲೆ ಮುಖದ ಮೇಲೆ ಚೆಲ್ಲಿಕೊಂಡಿದ್ದ ಬೆಳ್ಳಿ ಮೆತ್ತಗೆ ಗುಡಿಯಿಂದ ಹೊರಬಂದು, ಸದ್ದು ಮಾಡದೆ ದೂರದಿಂದ ಪೊದರಿನ ಸಂದಿ ಮರೆಯಾದಳು. ಅವಳು ಮರೆಯಾಗುವವರೆಗೆ ಮರವೊಂದರ ಹಿಂದೆ ನಿಂತು ಕಾದ ಶ್ರೀಪತಿ ಅತ್ತ ಇತ್ತ ಕಣ್ಣುಹರಿಸಿ ನೋಡಿ, ಯಾರೂ ಸುಳಿದಾಡುತ್ತಿಲ್ಲವೆಂದು ಖಚಿತ ಮಾಡಿಕೊಂಡು, ಬೆಳ್ಳಿ ಅಡಗಿದ ಮೊಟ್ಟಿಗೆ ಹೋಗಿ ಬ್ಯಾಟರಿ ಹಾಕಿ-ಆರಿಸಿ-ಅವಳನ್ನು ತಬ್ಬಿ ಆತುರದಿಂದ ಉಸಿರಾಡಿದ. “ಅಯ್ಯ, ಇವತ್ಟು ಬ್ಯಾಡವಯ್ಯ” ಬೆಳ್ಳಿ ಹೀಗೆ ನುಡಿದದ್ದೇ ಇಲ್ಲ. ಶ್ರೀಪತಿಗೆ ಆಶ್ಚರ್ಯವಾಯಿತು. ಆದರೆ ಅವಳ ಮಾತನ್ನು ಲೆಕ್ಕಕ್ಕೆ ತರದೆ ಸೊಂಟಕ್ಕೆ ಸುತ್ತಿದ್ದ ಅವಳ ತುಂಡನ್ನು ಬಿಚ್ಚಿದ. “ಪಿಳ್ಳ ಮತ್ತು ಆತನ ಹೊಲತಿ ದೆಯ್ಯ ಮೆಟ್ಟಿಯೋ ಏನು ಕತೆಯೋ ಸತ್ತವು ಅಯ್ಯ ಇವತ್ತು” ಶ್ರೀಪತಿಗೆ ಈಗ ಮಾತು ಬೇಡ. ದುಂಡಗೆ ನಿಂತಿದ್ದವಳನ್ನು ನೆಲಕ್ಕೆಳೆದ. “ಎಲ್ಡೂ ಸತ್ತುಬಿಟ್ಟವೆಂದು ಶವಾನ್ನ ಅಲ್ಲೇ ಬಿಟ್ಟು ಗುಡಿಗೇ ಬೆಂಕಿ ಕೊಟ್ಟು ಬಿಟ್ಟವು. ಜರಾ ಬಂದು ಸತ್ತವು. ಮುಚ್ಚಿದ್ದ ಕಣ್ಣು ಬಿಚ್ಚಲಿಲ್ಲ” ಶ್ರೀಪತಿಗೆ ಅಸಹನೆ. ಏನೋ ಆಡುತ್ತಿದ್ದಾಳೆ. ಏಲ್ಲಿಯೋ ಇದ್ದಾಳೆ. ಅಷ್ಟೊಂದು ಕಾತರಿಸಿ ಬಂದರೆ ಯಾರೋ ಸತ್ತವೆಂದು ಹರಟುತ್ತಿದ್ದಾಳೆ. ಈ ಸಮಯ ಹೀಗೆ ಮಾತನಾಡುವವಳೇ ಅಲ್ಲ ಅವಳು. ಬೀಳುವ ಮಳೆಗೆ ಬಾಗುವ ಪೆರಿನಂತೆ ಇವಳು… ಬೆಳ್ಳಿ ತುಂಡುಟ್ಟುಕೊಳ್ಳುತ್ತ- “ಅಯ್ಯ, ಒಂದು ವಿಶ್ಯ. ಅಂಥದೊಂದು ಆಶ್ಚರ್ಯ ನಾ ಕಂಡೇ ಇಲ್ಲ. ನಮ್ಮ ಗುಡೀಗೆ ಏನುಣ್ಣಕ್ಕಿರುತ್ತೇಂತ ಇಲಿ ಹೆಗ್ಗಣ ಬರಬೇಕು? ಬ್ರಾಂಬ್ರ ಮನೇಲಿ ಇದ್ದ ಹಾಗೇನು ನಮ್ಮ ಗುಡಿ? ಈಗ ನೆಂಟರ ಹಾಗೆ ಬಂದು ನೆಲಸಲಿಕ್ಕೆ ಹತ್ತಾವೆ. ಸೂರಿನಿಂದ ತಪತಪ ಉದುರಿ ಗಿರಗಿರ ಸುತ್ತಿ ಸಾಯಕ್ಕೆ ಹತ್ತಾವೆ. ಬೆಂಕಿಬಿದ್ದ ಗುಡೀಂದ ಪ್ರಾಣ ಹಿಡಿದು ಓಡೋರಂಗೆ ಕಾಡು ಬಿದ್ದು ಓಡಲಿಕ್ಕೆ ಹತ್ತಾವೆ. ಇಂಥಾ ಪಾಡು ನಾ ಕಂಡಿಲ್ಲ. ದೆಯ್ಯದವನನ್ನ ಗಣಾ ಬರಿಸಿ ಕ್ಯಾಳಬಾಕು. ಹೊಲೇರ ಗುಡಿಗೆ ಇಲಿ ಬರೋದೇನು, ಹೊಲೆಯ ಕಟ್ಟಿಗೆ ಮುರಿದಂತೆ ಲಕ್ಕ ಸಾಯೋದುಂದ್ರೇನು-ಕ್ಯಾಳಬಾಕು. ” ಶ್ರೀಪತಿ ಪಂಚೆಯುಟ್ಟು, ಅಂಗಿ ತೊಟ್ಟು, ಕಿಸೆಯಿಂದ ಬಾಚಣಿಗೆ ತೆಗೆದು ಕ್ರಾಪು ಬಾಚಿ, ಬ್ಯಾಟರಿ ಹತ್ತಿಸಿ ನೋಡುತ್ತ ಅವಸರದಲ್ಲಿ ಓಡಿ ಬಿಟ್ಟ. ಬೆಳ್ಳಿ ಮಲಗಲಿಕ್ಕೆ ಸರಿಯೇ ಹೊರ್ತು ಮಾತಾಡಲಿಕ್ಕಲ್ಲ. ಬಾಯಿ ಬಿಟ್ಟರೆ ಅವಳದ್ದು ಗಣ, ದೆಯ್ಯ. ನಾರಣಪ್ಪನನ್ನು ನೋಡುವ ಅವಸರದಿಂದ ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಗುಡ್ಡವನ್ನಿಳಿದ. ಸರಾಯಿ ಕುಡಿದು ಇವತ್ತು ರಾತ್ರೆ ಅಲ್ಲೇ ಮಲಗೆ ಬೆಳಗ್ಗೆ ಎದ್ದು ಪಾರಿಜಾತಪುರದ ನಾಗರಾಜನ ಮನೆಗೆ ಹೋದರೆ ಸರಿ. ಮೆತ್ತಗೆ ನಾರಣಪ್ಪನ ಮನೆಯ ಬಾಗಿಲಿನ ಎದುರು ನಿಂತು ಬಾಗಿಲನ್ನು ತಳ್ಳಿದ. ಅಗಳಿ ಹಾಕಿರಲಿಲ್ಲ. ಇನ್ನೂ ಎದ್ದಿರಬೇಕು ಅವ ಎಂದು ಖುಷಿಯಾಗಿ ಒಳಗೆ ಹೋದ. ಬ್ಯಾಟರಿ ಹಾಕಿ, ’ನಾರಣಪ್ಪ, ನಾರಣಪ್ಪ’ ಎಂದು ಕರೆದ. ಉತ್ತರವಿರಲಿಲ್ಲ. ಕೆಟ್ಟನಾತ ಬಂದ ಹಾಗಾಯಿತು; ಹೊಟ್ಟೆ ತೊಳೆಸಿ ಬರುವಂತಹ ಕೊಳೆಯುವ ನಾತ. ಉಪ್ಪರಿಗೆ ಹತ್ತಿ ಬಾಗಿಲು ತಟ್ಟಿ ನೋಡುವುದೆಂದು ಕತ್ತಲಿನಲ್ಲೇ ತನಗೆ ಪರಿಚಿತವಾದ ಮೆಟ್ಟಲುಗಳ ಕಡೆ ನಡೆದ. ಮೂಲೆ ತಿರುಗುವಲ್ಲಿ ಬರಿಗಾಲಿನಲ್ಲಿ ಮೆತ್ತಗೆ ತಣ್ಣಗೆ ಇದ್ದುದೊಂದನ್ನ ಪಿಚಕ್ಕನೆ ತುಳಿದಂತಾಗಿ ಹೌಹಾರಿ ಬ್ಯಾಟರಿ ಹಾಕಿ ನೋಡಿದ. ಇಶ್ಶಿ! ಇಲಿ. ಕಾಲು ಮೇಲೆ ಮಾಡಿ ಅಂಗಾತನೆ ಸತ್ತು ಬಿದ್ದ ಇಲಿ. ಅದರ ಮೇಲೆ ಕೂತ ನೊಣ ಬ್ಯಾಟರಿ ಬೆಳಕಿಗೆ ಗುಯ್ಯೆಂದು ಎದ್ದವು. ದಿಡಿದಿಡಿ ಮೆಟ್ಟಲು ಹತ್ತಿ ಉಪ್ಪರಿಗೆಗೆ ಹೋಗಿ ಬ್ಯಾಟರಿ ಹಾಕಿದ. ನೆಲದ ಮ್ಯಾಲೆ ಯಾಕೆ ಹೀಗೆ ಮುಸುಕೆಳೆದು ನಾರಣಪ್ಪ ಮಲಗಿದ್ದಾನೆ-ಮೂಗಿನ ಮಟ್ಟ ಹಾಕ್ಕೊಂಡಿರ ಬೇಕೆಂದು ನಸುನಗುತ್ತ ಮುಸುಕೆಳೆದು ’ನಾರಣಪ್ಪ, ನಾರಣಪ್ಪ’ ಎಂದು ಅಲುಗಿಸಿದ. ಮತ್ತೆ ಇಲಿಯನ್ನು ತುಳಿದಾಗಿನಂತೆ ತಣ್ಣಗಿನ ಸ್ಪರ್ಶವಾಗಿ ಸಟ್ಟನೆ ಕೆಯೆಳೆದುಕೊಂಡು ಬ್ಯಾಟರಿ ಹತ್ತಿಸಿದ. ಮೇಲಕ್ಕೆ ಸಿಕ್ಕಿದ ದೃಷ್ಟಿಯಿಲ್ಲದ ರೆಪ್ಪೆ ತೆರೆದ ಕಣ್ಣುಗಳು. ಬ್ಯಾಟರಿಯ ಬೆಳಕಿನ ವೃತ್ತದಲ್ಲಿ ನೊಣ, ನುಸಿ, ನಾತ. +ಅಧ್ಯಾಯ : ಆರು +ಅಗ್ರಹಾರದಲ್ಲೆ ಹಿರಿಯವಳಾದ ಅರವತ್ತು ದಾಟಿ ದಶಕ ಕಳೆದ ಅಜ್ಜಿ ಲಕ್ಷ್ಮೀದೇವಮ್ಮ, ಹೆಬ್ಬಾಗಿಲನ್ನು “ಢರ್ರೋ” ಎಂದು ತೆಗೆದು “ಹೇಂii” ಎಂದು ತೇಗಿದಳು. ಅಗ್ರಹಾರದ ಬೀದಿಗಿಳಿದು, ಕೋಲೂರಿ ನಿಂತು, ಇನ್ನೊಮ್ಮೆ “ಹೋಂii” ಎಂದು ತೇಗಿದಳು. ನಿದ್ದೆ ಬರದಿದ್ದ ಪಕ್ಷದಲ್ಲಿ, ಅಥವಾ ಮನಸ್ಸು ವ್ಯಾಗ್ರಗೊಂಡಾಗ ಹೀಗೆ ಅವಳು ರಾತ್ರಾನುರಾತ್ರೆ ಅಗ್ರಹಾರದ ಬೀದಿಗೆ ಬಂದು, ಮೂರು ಸರ್ತಿ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಅಲೆದು, ಗರುಡಾಚಾರ್ಯನ ಮನೆಯ ಎದುರು ನಿಂತು, ಅವನ ಪುತ್ರ-ಪೌತ್ರ-ಪಿತೃಗಳನ್ನೆಲ್ಲ ಕರೆದು, ದೆವ-ದೇವತೆಗಳನ್ನೆಲ್ಲ ಸಾಕ್ಷಿಗೆಳೆದು, ಹಿಡಿಹಿಡಿ ಶಾಪ ಹಾಕಿ, ತಿರುಗಿ ತನ್ನ ಮನೆಗೆ ಬಂದು “ಢರ್ರೋ” ಎಂದು ಮರದ ಹೆಬ್ಬಾಗಿಲನ್ನು ಎಳೆದುಕೊಂಡು ಮಲಗುವುದು ಪದ್ಧತಿ. ಅದರಲ್ಲೂ ಅಮಾಸೆ ಹುಣ್ಣಿಮೆಗಳು ಹತ್ತಿರವಾದಂತೆ ಅವಳ ಶಪಿಸುವ ಚಟ ಉಬ್ಬರಕ್ಕೇರುತ್ತದೆ. ಅಗ್ರಹಾರದಲ್ಲಿ ಪ್ರಸಿದ್ಧವಾದ ವಿಷಯ : ಅವಳ ಬಾಗಿಲು, ಅವಳ ತೇಗು. ಏರಡೂ ಈ ತುದಿಯಿಂದ ಆ ತುದಿಗೆ ಕೇಳುತ್ತವೆ. ಅವಳ ಕೀರ್ತಿ ನಾಲ್ಕು ದಿಕ್ಕಿನಲ್ಲಿರುವ ಎಲ್ಲ ಬ್ರಾಹ್ಮಣ ಅಗ್ರಹಾರಗಳಲ್ಲೂ ಹಬ್ಬಿತ್ತು. ಬಾಲವಿಧವೆಯಾದ ಅವಳನ್ನು ಕೆಲವರು ಅವಲಕ್ಷಣದ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಅವಳು ಎದುರಾದರೆ ನಾಲ್ಕು ಹೆಜ್ಜೆ ಹಿಂದಕ್ಕೆ ನಡೆದು ಮತ್ತೆ ಪ್ರಯಾಣದಲ್ಲಿ ತೊಡಗುವ ತುಂಟ ಹುಡುಗರನ್ನು ಮತ್ತು ಬ್ರಾಹ್ಮಣರನ್ನು ಅವಳು ಕೋಲು ಬೀಸಿ ಅಟ್ಟುತ್ತಾಳೆ. ಶಾಪ ಹಾಕುತ್ತಾಳೆ. ಆದರೆ ಅವಳ ಮಾತನ್ನು ಯಾರೂ ಎಗ್ಗಿಗೆ ತೆಗೆದುಕೊಳ್ಳುವುದಿಲ್ಲ. ಹುಡುಗರು ಇವಳನ್ನು ಹುಳಿತೇಗಿನ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಆದರೆ ಪ್ರಸಿದ್ಧವಾದ ಅವಳ ಹೆಸರು ಅರೆಮರುಳು ಲಕ್ಷ್ಮೀದೇವಮ್ಮನೆಂದು. ಅವಳದ್ದೊಂದು ಪುರಾಣವೆ : ಎಂಟರ ಹುಡುಗಿಗೆ ಮದುವೆ. ಹತ್ತರಲ್ಲಿ ಪತಿ ವಿಯೋಗ. ಹದಿನೆದರಲ್ಲಿ ಅತ್ತೆ-ಮಾವ ಸತ್ತರು. ಅನಿಷ್ಟದ ನಕ್ಷತ್ರದವಳೆಂದು ಅಗ್ರಹಾರ ಜರಿಯಿತು. ಅವಳಿಗಿಪ್ಪತ್ತು ತುಂಬುವುದರೊಳಗೆ ಅವಳಪ್ಪ ಅಮ್ಮನೂ ’ಗುಟುP’ ಎಂದು ಬಿಟ್ಟರು. ಆಯಿತ? ಆಮೇಲೆ ಅವಳಿಗಿದ್ದ ಒಂದಿಷ್ಟು ಆಸ್ತಿ, ನಗ, ಗರುಡಾಚಾರ್ಯನ ತಂದೆ ವಹಿಸಿಕೊಂಡ. ತನ್ನ ಮನೆಗೇ ಅಜ್ಜಿಯನ್ನು ಕರೆಸಿಕೊಂಡು ಸಾಕಿದ. ಅವನದ್ದೆಲ್ಲ ಇಂಥದೇ ಕಾರುಭಾರು. ನಾರಣಪ್ಪನ ತಂದೆಗೆ ವಿವೇಕ ಅಷ್ಟಷ್ಟರಲ್ಲೇ ಎಂದು ಅವನ ಆಸ್ತಿಯ ವಹಿವಾಟನ್ನೂ ಹೀಗೆಯೇ ನಡೆಸಿದ್ದ. ಹೀಗೆ ಇಪ್ಪತ್ತೆದು ವರ್ಷ ಲಕ್ಷ್ಮೀದೇವಮ್ಮ ಕಾಲಯಾಪನ ಮಾಡಿದಳು. ಆಮೇಲೆ ತಂದೆ ಸತ್ತ ಮೇಲೆ ಗರುಡನ ಕಾರುಭಾರು ಪ್ರಾರಂಭವಾಯಿತು. ಅವನ ಹೆಂಡತಿಯೋ : ಅರೆಹೊಟ್ಟೆ ಊಟ ಹಾಕುವ ಜಿಪುಣಿ. ಲಕ್ಷ್ಮೀದೇವಮ್ಮನಿಗೂ ಅವಳಿಗೂ ಕಟಿಪಿಟಿ ಹತ್ತಿ ಕೆ ಕೆಯೂ ಆಯಿತು. ಗಂಡ ಹೆಂಡತಿ ಸೇರಿ ಲಕ್ಷ್ಮೀದೇವಮ್ಮನನ್ನು ಹೊರಗೆ ಹಾಕಿದರು. ಹಾಳುಬಿದ್ದ ಅವಳ ಗಂಡನ ಮನೆಗೆ ತಳ್ಳಿದರು. ಅಂದಿನಿಂದ ಒಂಟಿಯಾಗಿ ಅಲ್ಲಿ ಲಕ್ಶ್ಮೀದೇವಮ್ಮನ ವಾಸ, ವಸತಿ. ಪ್ರಾಣೇಶಾಚಾರ್ಯರ ಹತ್ತಿರ ಲಕ್ಷ್ಮೀದೇವಮ್ಮ ದೂರು ಒಯ್ದಳು. ಅವರು ಗರುಡನನ್ನು ಕರೆಸಿ ಬೋಧಿಸಿದರು. ಆಮೇಲಿನಿಂದ ಅವ ಅವಳಿಗೆ ತಿಂಗಳಿಗೊಂದು ರೂಪಾಯಂತೆ ಕೊಡುತ್ತ ಬಂದ. ಆ ದುಡ್ಡು ಅವಳಿಗೆ ಯಾವ ಮೂಲೆಗೂ ಸಾಲದು. ಹೀಗಾಗಿ ತನ್ನ ನಗ ನಾಣ್ಯವನ್ನು ನುಂಗಿದವನ ಮೇಲೆ ವಿಷವಾದಳು. ಪ್ರಾಣೇಶಾಚಾರ್ಯರು ಆಗಾಗ್ಗೆ ಅಗ್ರಹಾರದ ಬ್ರಾಹ್ಮಣರಿಗೆಲ್ಲ ಬುದ್ಧಿ ಹೇಳಿ ಅವಳಿಗಿಷ್ಟು ಅಕ್ಕಿ ಕೊಡಿಸುತ್ತಾರೆ. ಆದರೂ ಲಕ್ಷ್ಮೀದೇವಮ್ಮನಿಗೆ ವಯಸ್ಸಾಗುತ್ತ ಬಂದಂತೆ ಮಾನವ ದ್ವೇಷ ನಂಜಿನಂತೆ ಏರುತ್ತ ಹೋಯಿತು. ಲಕ್ಷ್ಮೀದೇವಮ್ಮ ತೇಗುತ್ತ ಗರುಡಾಚಾರ್ಯನ ಮನೆಯ ಮುಂದೆ ನಿಂತು ನಿಯತಿಯಂತೆ ತನ್ನ ಬೆಗಳನ್ನು ಪ್ರಾರಂಭಿಸಿದಳು: “ನಿನ್ನ ಮನೆ ಹಾಳಾಗ; ನಿನ್ನ ಕಣ್ಣು ಹೊಟ್ಟಿ ಹೋಗ; ಊರು ಹಾಳು ಮಾಡಿದವನೇ, ನಾರಣಪ್ಪನ ತಂದೆಯ ಮೇಲೆ ಮಾಟಮಾಡಿಸಿದ ಮುಂಡೇಗಂಡಾ. ಮರ್ಯಾದೆ ಇದ್ದರೆ ಎದ್ದು ಬಾರೊ. ಬಡಮುಂಡೆಯ ನಗನಾಣ್ಯವನ್ನು ನುಂಗಿದೆಯಲ್ಲ? ದಕ್ಕುತ್ತೆಂದು ತಿಳಿದ್ಯಾ? ಸತ್ತಮೇಲೆ ಭೂತವಾಗಿ ನಿನ್ನ ಮನೆ ಮಕ್ಕಳನ್ನ ಕಾಡುವವಳು ನಾನು-ತಿಳೀತ?” ಉಸಿರೆಳೆದು ತೇಗಿ ಮತ್ತೆ ಪ್ರಾರಂಭಿಸಿದಳು : “ನಿನ್ನ ಕೃತ್ರಿಮದಿಂದ ಬಂಗಾರದಂಥ ನಾರಣಪ್ಪ ಚಾಂಡಾಲನಾದ. ಸೂಳೇನ ಕಟ್ಟಿಕೊಂಡ. ನಾವು ಬ್ರಾಹ್ಮಣರು ನಾವು ಬ್ರಾಹ್ಮಣರು ಅಂತ ಹೇಳತಿರೋರೆಲ್ಲ ಈಗ ಅವನ ಹೆಣಾನ್ನ ತೆಗೀದೇ ಕೂತಿದೀರಲ್ಲೋ. ಎಲ್ಲಿಗೆ ಹೋಯಿತೋ ನಿಮ್ಮ ಬ್ರಾಹ್ಮಣ್ಯ? ಚಾಂಡಾಲರ-ರೌರವ ನರಕಕ್ಕೆ ನೀವು ಬಿದ್ದು ಸಾಯ್ತೀರಿ, ತಿಳೀತ? ಈ ಅಗ್ರಹಾರದಲ್ಲೆ ನಾನು ಕಂಡ ಹಾಗೆ ಒಂದು ಹೆಣವನ್ನು ರಾತ್ರೆಯೆಲ್ಲ ಸಂಸ್ಕಾರಮಾಡದೆ ಇಟ್ಟು ಕೊಂಡದ್ದು ಉಂಟ? ರಾಮ ರಾಮಾ! ಕಾಲ ಕೆಟ್ಟಿತಪ್ಪ ಕೆಟ್ಟಿತು. ಬ್ರಾಹ್ಮಣ್ಯ ನಾಶವಾಯಿತು. ತಲೆ ಬೋಳಿಸಿಕೊಂಡು ಮುಸಲ್ಮಾನರಾಗಿರಿ. ನಿಮಗ್ಯಾಕೆ ಬ್ರಾಹ್ಮಣ್ಯ?” ಎಂದು ಕೋಲನ್ನು ನೆಲಕ್ಕೆ ಕುಟ್ಟಿ ಮತ್ತೆ ಉಸಿರೆಳೆದು ’ಹೇಂii’ ಎಂದು ತೇಗಿದಳು.ಅಯ್ಯಯ್ಯೋ ಎಂದು ಶ್ರೀಪತಿ ನಾರಣಪ್ಪನ ಮನೆ ಜಗುಲಿಯಿಂದ ಬಾಗಿಲನ್ನು ಹಾಕಿಕೊಳ್ಳಲೂ ಮರೆತು, ಜಿಗಿದು ಬೀದಿಯಲ್ಲಿ ಓಡಿದ. ಙ್ನ ನೋಡಿರೋ ನೋಡಿರೋ ನೋಡಿರೋ ನಾರಣಪ್ಪನ ಪ್ರೇತ, ಪ್ರೇತ ಎಂದು ಅರೆಮರುಳು ಲಕ್ಷ್ಮೀದೇವಮ್ಮ ಪ್ರತಿಮನೆಯ ಕದ ತಟ್ಟಿ ಸಾರುತ್ತ ಕೋಲೂರಿಕೊಂಡು ಓಡಿದಳು. ಜೀವವನ್ನು ಕೆಯಲ್ಲಿ ಹಿಡಿದು ಹೊಳೆ ಹಾಯ್ದು ಶ್ರೀಪತಿ ಪಾರಿಜಾತಪುರದ ನಾಗರಾಜನ ಮನೆಗೆ ಓಡಿದ. ಓಡಿಹೋದವ ಶ್ರೀಪತಿಯೆಂದು ತಿಳಿದವಳೆಂದರೆ ಪ್ರಾಣೇಶಾಚಾರ್ಯರ ಜಗುಲಿಯ ಮೇಲೆ ಮಲಗಿದ್ದ ಚಂದ್ರಿ. ಹಸಿವಿನಿಂದ ಅವಳಿಗೆ ನಿದ್ದೆ ಹತ್ತಿರಲಿಲ್ಲ. ಅವಳು ಜನ್ಮೇಪಿ ಉಪವಾಸ ಮಾಡಿದವಳಲ್ಲ; ಒಂಟಿಯಾಗಿ ಜಗಲಿ ಮೇಲೆ ಮಲಗಿದವಳಲ್ಲ; ಕೊಂದಾಪುರದ ಮನೆ ಬಿಟ್ಟು ನಾರಣಪ್ಪನನ್ನು ಕೂಡಿದಮೇಲೆ , ಸದಾ ಊದುಬತ್ತಿಯಿಂದ ಗಮಗಮಿಸುವ ಕೋಣೆಯಲ್ಲಿ ಸುಪ್ಪತ್ತಿಗೆ ಮೇಲೆ ಸುಖಿಸಿದವಳು. ಈಗ ಹಸಿವು ತಾಳಲಾರದೆ ಎದ್ದು ಹಿತ್ತಲಿನ ದಾರಿಯಿಂದ ತಮ್ಮ ತೋಟಕ್ಕೆ ಹೋದಳು. ಹಣ್ಣಾಗಲೆಂದು ಅವಿತಿಟ್ಟಿದ್ದ ರಸಬಾಳೆಗೊನೆಯನ್ನು ತೆಗೆದು ಹೊಟ್ಟೆ ತುಂಬುವಷ್ಟು ತಿಂದಳು. ನದಿಗೆ ಹೋಗಿ ನೀರು ಕುಡಿದಳು. ತನ್ನ ಮನೆಗೆ ಹೋಗಲು ಭಯವಾಯಿತು-ಅವಳು ಹುಟ್ಟಿದಮೇಲೆ ಶವದ ಮುಖ ನೋಡಿದವಳಲ್ಲ. ಒಂದು ವೇಳೆ ನಾರಣಪ್ಪನ ಶವದ ಸಂಸ್ಕಾರವಾಗಿಬಿಟ್ಟಿದ್ದರೆ ಅವನ ಮೇಲಿದ್ದ ಎಲ್ಲ ಪ್ರೀತಿಯೂ ಉಕ್ಕೇರಿಬಂದು ಮನಸಾರೆ ಅತ್ತುಬಿಡುತ್ತಿದ್ದಳು. ಈಗ ಭೀತಿಯೊಂದೇ ಅವಳ ಹೃದಯದಲ್ಲಿ. ಭೀತಿ ಮತ್ತು ಕಳವಳ. ನಾರಣಪ್ಪನಿಗೆ ಉಚಿತ ರೀತಿಯಲ್ಲಿ ಶವಸಂಸ್ಕಾರವಾಗದಿದ್ದರೆ ಅವನು ಪ್ರೇತವಾಗಿಬಿಡಬಹುದು. ಅಲ್ಲದೆ ಅವನ ಕೂಡ ಹತ್ತು ವರ್ಷದ ಸುಖವುಂಡು ಈಗ ಅವನ ಶವಕ್ಕೆ ತಕ್ಕ ಸಂಸ್ಕಾರ ಮಾಡಿಸದಿದ್ದರೆ…ಮನಸ್ಸು ಒಪ್ಪುವುದಿಲ್ಲ. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟ-ನಿಜ. ಮುಸಲ್ಮಾನರ ಜೊತೆ ಊಟಮಾಡಿದ. ತಾನೂ ಮಾಡಿದೆ. ಆದರೆ ತನಗೆ ಅಡ್ಡಿಯಿಲ್ಲ, ದೋಷತಟ್ಟುವುದಿಲ್ಲ. ಸೂಳೆಯಾಗಿ ಹುಟ್ಟಿದ ತಾನು ಈ ನಿಯಮಕ್ಕೆಲ್ಲ ವಿನಾಯಿತಿ; ವೆಧವ್ಯವಿಲ್ಲದ ನಿತ್ಯಮುತ್ತೆದೆ. ಹರಿಯುವ ಹೊಳೆಗೆ ದೋಷವುಂಟೆ? ಬಾಯಾರಿಕೆಗೂ ಸೆ, ಮೆಯ ಮಲ ತೊಳೆಯಲಿಕ್ಕೂ ಸೆ, ದೇವರ ತಲೆಯ ಅಭಿಷೇಕಕ್ಕೂ ಸೆ, ಎಲ್ಲದಕ್ಕೂ ’ಹೂ’; ’ಊಹೂ’ ಎಂಬೋದೇ ಇಲ್ಲ, ನನ್ನ ಹಾಗೆ. ಬತ್ತುವುದಿಲ್ಲ; ಬಾಡುವುದಿಲ್ಲ. ಎರಡು ಹೆತ್ತರೆ ಸಾಕು; ಬಚ್ಚುಗಲ್ಲದ ಗುಳಿಕಣ್ಣಿನ ಬ್ರಾಹ್ಮಣ ಹೆಂಗಸರಂತೆ ತನ್ನ ಮೊಲೆ ಜೋತುಬಿದ್ದಿಲ್ಲ. ತಾನು ಬತ್ತದ, ಬಾಡದ, ಬಳಲದ, ಜಳಜಳ ತುಂಗೆ. ಹತ್ತು ವರ್ಷ ಮಗುವಿನಂತೆ ಉಂಡ. ಜೇನಿನ ಗೂಡಿಗೆಂದು ಬರುವ ಆಸೆಬುರುಕ ಕರಡಿಯಂತೆ ಹರಿದು ಉಂಡ. ಕೆಲವೊಮ್ಮೆ ರೋಷದ ಪಟ್ಟೆಹುಲಿಯ ಹಾಗೆ ಕುಣಿದ. ಈಗ ಅವನಿಗೊಂದು ಸಂಸ್ಕಾರವಾಗಿಬಿಡಲಿ ಸಾಕು, ಕುಂದಾಪುರಕ್ಕೆ ಹೊರಟು ಹೋಗುತ್ತೇನೆ. ಅಲ್ಲಿ ಕೂತು ಮನಸಾರೆ ಅತ್ತುಬಿಡುತ್ತೇನೆ. ಈ ಬ್ರಾಹ್ಮಣರ ಕೆಯಿಂದಲೇ ಮಾಡಿಸಬೇಕು. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಿತೆ? ಕಡುಕೋಪಿ, ಹತವಾದಿ, ಹುಚ್ಚ-ಬಹಿಷ್ಕಾರ ಹಾಕಿಸಿದರೆ ಮುಸಲ್ಮಾನನಾಗಿ ಬಿಡುತ್ತೇನೆಂದು ಲಾಗಹಾಕಿ ಕುಣಿದವ. ಆಂತರ್‍ಯದಲ್ಲಿ ಏನಿತ್ತೋ-ನಾನು ತಿಳಿಯೆ. ಎಷ್ಟೇ ಕುಣಿಯಲಿ, ತನ್ನ ಜೊತೆ ಪ್ರಾಣೇಶಾಚಾರ್ಯರೊಬ್ಬರನ್ನು ಅವನು ನೀಚ ಮಾತಲ್ಲಿ ಹಳಿದಿದ್ದಿಲ್ಲ. ದುಡುಕಿ ಅವತ್ತು ಮಾತಾಡಿದ್ದು ನಿಜ. ಆದರೆ ಒಳಗೊಳಗೇ ನಡುಗಿದ್ದ. ಈಗ ಜಗಳವಾಡಿ ಆಮೇಲೆ ಮರೆತುಬಿಡುವ, ಅಸೂಯೆಯೊಂದೇ ಗಟ್ಟಿಯಾದ ಭಾವವಾದ ತನ್ನಂತಹ ಹೆಂಗಸಿಗೆ ಈ ದ್ವೇಷದ ಆಳ ಯಾವ ಗರುಡಪಾತಾಳಿಗೂ ಸಿಗುವಂಥದಲ್ಲ. ಅವನನ್ನು ಬಂದು ಕೂಡಿದ ಮೊದಮೊದಲು ಬೇಡಿಕೊಂಡೆ: ನನ್ನ ಕೆಯಡಿಗೆ ಊಟ ಮಾಡಬೇಡಿ, ಮಾಂಸ ತಿನ್ನಬೇಡಿ-ನಾ ಬೇಕಾದರೂ ಬಿಟ್ಟುಬಿಡುವೆ; ಹಾಗೆ ಮನಸ್ಸಾದರೆ ಶೆಟ್ಟರ ಮನೆಗೆ ಹೋಗಿ ಮೀನು ತಿಂದು ಬರುವೆ; ಅಗ್ರಹಾರದಲ್ಲಿ ಬೇಡ. ಕೇಳುವ ಮನುಷ್ಯನೋ ಅವ? ಹಟಾಂದರೆ ಹಟ. ಭ್ರಾಂತಿ ಹಿಡಿದ ಅವನ ಹೆಂಡತಿ ಎಂದೂ ಅವನ ಹಟವನ್ನು ತಾಳಿ ತನ್ನ ಹಾಗೆ ಬಾಳುವ ಸಾಹಸವಿದ್ದವಳಲ್ಲ. ತೌರಿಗೆ ಹೋಗಿ, ತನಗೆ ಶಾಪ ಹಾಕಿ ಸತ್ತಳು. ಇನ್ನು ಯಾರಿಗೆ ಬೇಕು ಈ ಗೊಂದಲ? ಸಂಸ್ಕಾರವಾದರೆ ಸಾಕು, ನಮಸ್ಕಾರ ಹಾಕಿ ಹೋಗಿಬಿಡುವೆ. ವಿಚಿತ್ರವೆಂದರೆ, ತನ್ನನ್ನೀಗ ಕೊರೆಯುತ್ತಿರೋ ವಿಷಯವೆಂದರೆ, ಒಂದು ದಿನ ಸಹಿತ ಒಂದು ದೇವರಿಗೂ ಕೆಮುಗಿಯದ ನಾರಣಪ್ಪ ಜ್ವರ ನೆತ್ತಿಗೆ ಏರಿದ್ದೇ ಹೇಗೆ ಹಲುಬಲು ಪ್ರಾರಂಭಿಸಿದ! ಜ್ಞಾನ ತಪ್ಪುವತನಕ ’ಅಮ್ಮ ಭಗವಂತ ರಾಮಚಂದ್ರ ನಾರಾಯಣ’ ಎನ್ನುತ್ತಿದ್ದ. ’ರಾಮಾ ರಾಮಾ’ ಎಂದು ಕಿರುಚಿದ. ಪಾಪಿಯ ಬಾಯಲ್ಲಿ, ಚಾಂಡಾಲನ ಬಾಯಲ್ಲಿ ಬರುವ ಮಾತಲ್ಲ ಅದು. ಅವನ ಒಳಗೆ ಗುಪ್ತವಾಗಿ ಏನು ಇತ್ತೋ ಏನು ಕತೆಯೋ ನನ್ನ ಆಳಕ್ಕೆ ತಿಳಿಯಲಿಲ್ಲ. ಈಗ ಶಾಸ್ತೋಕ್ತ ವಿಧಿಯಾಗದಿದ್ದಲ್ಲಿ ಖಂಡಿತ ಪ್ರೇತವಾಗುತ್ತಾನೆ. ಅವನ ಉಪ್ಪುಂಡ ನಾನು… ಎಲ್ಲ ಪ್ರಾಣೇಶಾಚಾರ್ಯರ ಮೇಲೆ ನಿಂತಿದೆ. ಎಂತಹ ಸೌಮ್ಯ, ಕರುಣೆ. ಮೇಳದವರ ಆಟದಲ್ಲಿ ದ್ರೌಪದಿ ಕರೆದಾಗ ನಗುನಗುತ್ತ ಬರುವ ಶ್ರೀಕೃಷ್ಣನಂತೆ ಏನು ರೂಪ, ಏನು ನಿಲುವು, ಏನು ತೇಜ. ಪಾಪ ಅವರಿಗೆ ಮೆಸುಖವೇನೆಂದು ಗೊತ್ತೇ ಇರಲಿಕ್ಕಿಲ್ಲ. ಒಣಗಿದ ಕಟ್ಟಿಗೆ ಹಾಗೆ ಬಿದ್ದಿರುತ್ತಾರೆ ಅವರ ಹೆಂಡತಿ-ಪುಣ್ಯಾತಗಿತ್ತಿ. ಆದರೂ ಏನು ತಾಳ್ಮೆ, ಏನು ವರ್ಚಸ್ಸು, -ಒಂದು ದಿನ ತನ್ನನ್ನ ಕಣ್ಣೆತ್ತಿ ನೋಡಿದವರಲ್ಲ. ಅಮ್ಮ ಹೇಳುತ್ತಿದ್ದಳಲ್ಲ-ಗರ್ಭದಾನಾನ ಸೂಳೆಯರು ಎಂಥವರಿಂದ ಮಾಡಿಸಿಕೋಬೇಕು ಅಂತ-ಅಂತಹ ರೂಪ ಗುಣ ವರ್ಚಸ್ಸು ಆಚಾರ್ಯರದ್ದು. ಪಡೆದು ಬಂದಿರಬೇಕು ಅಷ್ಟೆ, ಅಂಥಾದ್ದು ಒದಗಿಬರೋಕ್ಕೆ…. ರಸಬಾಳೆಯ ಹಣ್ಣನ್ನು ಹೊಟ್ಟೆತುಂಬ ತಿಂದಿದ್ದರಿಂದ ಚಂದ್ರಿಗೆ ಕಣ್ಣು ಬಾಡಿ, ನಿದ್ದೆ ಹತ್ತಿರ ಹತ್ತಿರ ಸುಳಿದು, ಹಾರಿ, ಸುಳಿದು, ಹಾರಿ, ಆಟವಾಡತೊಡಗಿತು. ಪ್ರಾಣೇಶಾಚಾರ್ಯರು ಇನ್ನೂ ಎಚ್ಚರವಾಗಿದ್ದು ನಡುಮನೆಯಲ್ಲಿ ಓಡಾಡುವುದು, ಮಂತ್ರಗಳನ್ನು ಗಟ್ಟಿಯಾಗಿ ಓದುವುದು ನಡುನಡುವೆ ಕಿವಿಗೆ ಬಿದ್ದು-ಅವರು ಎಚ್ಚರವಾಗಿದ್ದಾಗ ತಾನೇನು ನಿದ್ದೆಮಾಡುವುದೆಂದು – ಸೆಳೆಯುವ ನಿದ್ದೆಯನ್ನು ದೂಡುತ್ತ, ಚಿಂತಿಸುತ್ತ, ಚಾವಡಿಯ ಮೇಲೆ ತಲೆಗೆ ಕೆದಿಂಬುಮಾಡಿ, ನಾಚಿಕೆಯಲ್ಲಿ ತೊಡೆಗಳನ್ನು ಹೊಟ್ಟೆಗೆ ಮಡಿಸಿ ಮುದುರಿ ಸೆರಗೆಳೆದು ಮಲಗಿದಳು.ಎಲ್ಲ ತಾಳೆಗರಿ-ಗ್ರಂಥಗಳನ್ನೂ ಆಮೂಲಾಗ್ರ ಶೋಧಿಸಿದ್ದಾಯಿತು: ತನ್ನ ಅಂತರಂಗಕ್ಕೆ ಒಪ್ಪಿಗೆಯಾಗುವಂತಹ ಉತ್ತರ ಮಾತ್ರ ಇಲ್ಲ. ಧರ್ಮಶಾಸ್ತದಲ್ಲಿ ಈ ಸಂದಿಗ್ಧಕ್ಕೆ ತನಗೆ ಸಂಪೂರ್ಣ ಸಮರ್ಪಕವೆನ್ನಿಸುವಂತಹ ಉತ್ತರವಿಲ್ಲವೆಂದು ಒಪ್ಪಿಕೊಳ್ಳಲು ಪ್ರಾಣೇಶಾಚಾರ್ಯರಿಗೆ ಭಯ. ಮಠದ ಉಳಿದ ಪಂಡಿತರು ನಿಮಗೆ ತಿಳಿದಿರೋದು ಇಷ್ಟೇಯೊ ಎಂದು ಮೂದಲಿಸಿದರೆ ಎನ್ನುವ ಅಂಜಿಕೆಯೂ ಅವರನ್ನು ಸುಳಿಯದೇ ಇರಲಿಲ್ಲ. ಸುಧಾ ಪಾಠವಾದ ನಿನ್ನ ಜ್ಞಾನ ಇಷ್ಟೆಯೋ ಎಂದರೆ ಏನು ಹೇಳಬೇಕು. ಏನು ಹೋದರೂ ಮಾನ ಹೋಗಬಾರದು, ಹೋದ ಮಾನ ಹಿಂದಕ್ಕೆ ಬರದು-ಎಂದು ಯೋಚಿಸುತ್ತ ಕೂತು ಮತ್ತೆ ತನ್ನ ಯೋಚನೆಗೆ ನಾಚಿದರು. ಇಂತಹ ಪರಿಸ್ಥಿತಿಯಲ್ಲೂ ನನ್ನ ಖ್ಯಾತಿಯ ಬಗ್ಗೆಯೇ ನಾನು ಯೋಚಿಸುತ್ತಿದ್ದೇನಲ್ಲ, ನನ್ನ ಅಹಂಕಾರಕ್ಕಷ್ಟು ಬೆಂಕಿಯಿಟ್ಟಿತು ಎಂದು ಭಕ್ತಿಯಲ್ಲಿ ಮತ್ತೆ ತಾಳೆಗರಿ-ಗ್ರಂಥಗಳನ್ನು ಬಿಚ್ಚಿ, ಕಣ್ಣು ಮುಚ್ಚಿ ಧ್ಯಾನಿಸಿ ಒಂದು ಓಲೆಯನ್ನು ಭಕ್ತಿಯಿಂದ ಎತ್ತಿ ಓದಿದರು. ಇಲ್ಲ. ಇನ್ನೊಮ್ಮೆ ಕಣ್ಣು ಮುಚ್ಚಿ ಇನ್ನೊಂದು ಓಲೆಯನ್ನು ಹಾಗೆ ಎತ್ತಿದರು. ಇಲ್ಲ. ಅಡಿಗೆಮನೆಯಲ್ಲಿ ಮಲಗಿದ್ದ ಹೆಂಡತಿ ನರಳಿದಳು. ಎದ್ದು ಹೋಗಿ ಆಕೆಯನ್ನು ಎಬ್ಬಿಸಿ ಮೆಗಾನಿಸಿಕೊಂಡು ನಿಂಬೆಹೆಣ್ಣಿನ ರಸದ ಎರಡು ಗುಟುಕನ್ನು ಕುಡಿಸಿದರು. “ನಾರಣಪ್ಪನ ಬದಲು ನಾನೇ ಯಾಕೆ ಕಣ್ಣು ಮುಚ್ಚಬಾರದಿತ್ತೊ! ನನಗೇ ಯಾಕೆ ಸಾವು ಬರಬಾರದೊ! ಮುತ್ತೆದೆಯಾಗಿ…” ಎಂದು ಕೊರಗಿದ ಹೆಂಡತಿಗೆ ’ಒಳಿತು’ ಎನ್ನು ಎಂದು ಸಮಾಧಾನಿಸಿ ಮತ್ತೆ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಆರ್ತರಾಗೆ ಕುಳಿತರು. ಸನಾತನ ಧರ್ಮದಲ್ಲಿ ಉತ್ತರವಿಲ್ಲವೆಂದರೆ ನಾರಣಪ್ಪನೇ ಗೆದ್ದಂತೆ, ತಾವು ಸೋತಹಾಗೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಬದುಕಿದ್ದಾಗ ಅವನಿಗೆ ತಾವು ಬಹಿಷ್ಕಾರ ಹಾಕಿಸಲಿಲ್ಲ ಎಂಬುವುದು. ಅದಕ್ಕೆ ಕಾರಣ ಅವನು ಹಾಕಿದ ಬೆದರಿಕೆ. ಆ ಬೆದರಿಕೆಗೆ ಜಗ್ಗಿದಾಗಲೆ ಧರ್ಮಶಾಸ್ತವನ್ನು ಧಿಕ್ಕರಿಸಿದಂತಾಗಿಬಿಟ್ಟಿತು. ಬ್ರಾಹ್ಮಣರ ತಪಃಶಕ್ತಿ ಜಗತ್ತನ್ನು ಆಳುತ್ತಿದ್ದ ಕಾಲದಲ್ಲಿ ಅಂತಹ ಬೆದರಿಕೆಗೆ ಜಗ್ಗಬೇಕಾಗಿರಲಿಲ್ಲ. ಕಾಲ ಕೆಡುತ್ತ ಬಂದಿದ್ದರಿಂದ ತಾನೇ ಇಂತಹ ಸಂದಿಗ್ಧಗಳು ಪ್ರಾಪ್ತವಾಗಿರೋದು…… ಹಾಗೆ ನೋಡಿದರೆ ತಾನು ಮುಸಲ್ಮಾನನಾಗುತ್ತೇನೆಂದು, ಮುಸಲ್ಮಾನನಾಗಿ ಅಗ್ರಹಾರದಲ್ಲಿ ಉಳಿಯುತ್ತೇನೆಂದು ಅವನು ಹಾಕಿದ ಬೆದರಿಕೆಯೊಂದೇ ಕಾರಣವೇ ಬಹಿಷ್ಕಾರ ಹಾಕಿಸದೇ ಇದ್ದುದಕ್ಕೆ? ಇಲ್ಲ. ಮರುಕವೂ ಅದರಲ್ಲಿತ್ತು. ತನ್ನ ಹೃದಯದಲ್ಲಿರುವ ಅಪಾರವಾದ ಕರುಣ… ಎಂಬ ಯೋಚನೆ ಹೊಳೆಯುತ್ತಿದ್ದಂತೆ ಪ್ರಾಣೇಶಾಚಾರ್ಯರು ’ಛೆ, ಛೆ’ ಇದು ಆತ್ಮವಂಚನೆಯೆಂದು ತನ್ನನ್ನು ಜರಿದುಕೊಂಡರು. ಅದು ನಿಷ್ಕಲ್ಮಷ ಮರುಕವಲ್ಲ. ಅದರ ಹಿಂದೆ ಭಯಂಕರವಾದ ಹಟವೂ ಇತ್ತು. ನಾರಣಪ್ಪನ ಹಟಕ್ಕೇನೂ ಬಿಟ್ಟುಕೊಡುವಂತಹ ಹಟವಲ್ಲ ತನ್ನದು : ಅವನನ್ನು ದಾರಿಗೆ ತಂದೇ ತರುತ್ತೇನೆ – ನನ್ನ ಪುಣ್ಯಶಕ್ತಿಯಿಂದ, ತಪಃಶಕ್ತಿಯಿಂದ, ವಾರದಲ್ಲಿ ಮಾಡುವ ಎರಡು ದಿನಗಳ ಒಪ್ಪತ್ತುಗಳಿಂದ, ಅವನನ್ನು ವಿವೇಕಕ್ಕೆಳೆದೇ ಎಳೆಯುತ್ತೇನೆ ಎನ್ನುವ ನನ್ನ ಅದಮ್ಯ ಹಟ. ಈ ಹಟ ತಾಳಿದ ರೂಪ : ನನ್ನ ಪ್ರೇಮದಿಂದ, ಮರುಕದಿಂದ, ತಪಃಶಕ್ತಿಯಿಂದ ನಿನ್ನನ್ನು ದಾರಿಗೆ ಹಚ್ಚುತ್ತೇನೆ ಎನ್ನುವ ಸಂಕಲ್ಪ. ಹಟವೆಷ್ಟು ಪಾಲು, ಕರುಳಿನ ಮರುಕವೆಷ್ಟು ಪಾಲು ಈ ಸಂಕಲ್ಪದಲ್ಲಿ? ತನ್ನ ಸ್ವಭಾವದ ಮೂಲಧರ್ಮ ಮರುಕವೆಂದು ಅನಿಸುತ್ತದೆ. ಈ ದೇಹ ಜರಾಜೀರ್ಣವಾದ ಬಳಿಕ ಕಾಮ ಇದನ್ನು ಬಿಟ್ಟುಹೋಗುತ್ತದೆ. ಆದರೆ ಮರುಕ ಬಿಡುವುದಿಲ್ಲ. ಆದುದರಿಂದ ಮರುಕ ಮಾನವನಿಗೆ ಕಾಮಕ್ಕಿಂತಲೂ ಪ್ರಜ್ವಲವಾದ ಬೇರು ಬಿಟ್ಟ ಪ್ರವೃತ್ತಿ. ಮರುಕ ಹೀಗೆ ಆಳವಾಗಿ ನನ್ನಲ್ಲಿಲ್ಲದಿದ್ದರೆ ಮದುವೆಯಾದಾಗ್ಗಿನಿಂದ ಹಾಸಿಗೆಹಿಡಿದ ಹೆಂಡತಿಯ ಬಗ್ಗೆ ಪಿರಿಪಿರಿ ಎನ್ನಿಸಿ ಪರನಾರೀ ಮೋಹಕ್ಕೆ ಬಲಿಯಾಗದೇ ಇರುತ್ತಿದ್ದೆನೆ? ಇಲ್ಲ. ಮರುಕವೇ ನನ್ನ ಮಾನವ್ಯದ ಬ್ರಾಹ್ಮಣ್ಯದ ರಕ್ಷಣೆ ಮಾಡಿದೆ. ಮರುಕ-ಧರ್ಮ-ಮಾನವ್ಯ-ಬ್ರಾಹ್ಮಣ್ಯ ಎಲ್ಲ ಕಗ್ಗಂಟಾಗಿ ಕಾಡುತ್ತದೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಯಾಕೆ ಹುಳಿಯಾದ, ವಿಷವಾದ? ಪೂರ್ವಜನ್ಮದ ಪುಣ್ಯವಿಲ್ಲದೆ ಬ್ರಾಹ್ಮಣ್ಯ ಪ್ರಾಪ್ತವಾಗುವುದಿಲ್ಲವೆನ್ನುತ್ತದೆ ಶಾಸ್ತ. ಹಾಗಿದ್ದರೆ ಯಾಕೆ ನಾರಣಪ್ಪ ಕೆಯಾರೆ ತನ್ನ ಬ್ರಾಹ್ಮಣ್ಯವನ್ನ ಚರಂಡಿಗೆ ಎಸೆದ? ಇದು ಆಶ್ಚರ್ಯ. ಕೊನೆಗೂ ನಮ್ಮ ಸ್ವಭಾವಕ್ಕೆ ನಾವು ಶರಣು. ಋಗ್ವೇದದ ಕತೆಯೊಂದು ಪ್ರಾಣೇಶಾಚಾರ್ಯರಿಗೆ ನೆನಪಾಗುತ್ತದೆ: ಆ ಬ್ರಾಹ್ಮಣನಿಗೆ ಜೂಜಿನ ಮೋಹ. ತನ್ನ ಸ್ವಭಾವವನ್ನವನು ಏನಕೇನ ಮೀರಲಾರ. ಒಮ್ಮೆ ಒಂದು ಯಜ್ಞಶಾಲೆಯೊಳಕ್ಕೆ ಕುಲೀನ ಬ್ರಾಹ್ಮಣರು ಯಾರೂ ಅವನನ್ನು ಬಿಡಲಿಲ್ಲ. ಛೀ ಛೀ ಎಂದು ಅಟ್ಟಿಬಿಟ್ಟರು-ನಾಯಿಯನ್ನು ಹೊರಕ್ಕೆ ಅಟ್ಟುವ ಹಾಗೆ. ಅವನು ದೇವದೇವತೆಗಳನ್ನು ಕರೆದು ಅತ್ತ : ದೇವರೇ, ಯಾಕೆ ನನ್ನನ್ನು ನೀನು ಜೂಜುಗಾರನನ್ನಾಗಿ ಮಾಡಿದಿ? ಯಾಕೆ ಇಂತಹ ಮೋಹವನ್ನು ನನಗೆ ಕೊಟ್ಟೆ? ಅಷ್ಟದಿಕ್ಪಾಲಕರೇ ಉತ್ತರ ಹೇಳಿ. ಇಂದ್ರ ಯಮ ವರುಣಾದಿಗಳೇ ಬನ್ನಿ, ಉತ್ತರ ಹೇಳಿ. ಇತ್ತ ಯಜ್ಞಶಾಲೆಯಲ್ಲಿ ಹವಿಸ್ಸನ್ನು ಹಿಡಿದು ದ್ವಿಜರು ಅಗ್ನಿ, ಇಂದ್ರ, ಯಮ, ವರುಣಾದಿಗಳನ್ನು ಕರೆದರು: ಬನ್ನಿ, ನಮ್ಮ ಹವಿಸ್ಸನ್ನು ಸ್ವೀಕರಿಸಿ. ಆದರೆ ದೇವತೆಗಳು ಹೋದದ್ದು ಆ ಜೂಜುಗಾರ ಕರೆದಲ್ಲಿಗೆ. ಆಗ ತಮ್ಮ ಬ್ರಾಹ್ಮಣ್ಯದ ಹಮ್ಮು ತೊರೆದು ದ್ವಿಜರೆಲ್ಲರೂ ಅಲ್ಲಿಗೇ ಧಾವಿಸಬೇಕಾಯಿತು-ಅಧಮನ ಬಳಿಗೆ. ಧರ್ಮದ ಆಂತರ್ಯ ತಿಳಿಯೋದು ಕಠಿಣ. ಮತ್ತೆ ಆ ಮಹಾಪಾಪಿ ಚಾಂಡಾಲ, ಸಾಯುವಾಗ ’ನಾರಾಯಣಾ’ ಎಂದು ಪರಮಪದ ಮುಕ್ತಿಯನ್ನು ಗಿಟ್ಟಿಸಿಕೊಂಡ. ಏಳು ಜನ್ಮಭಕ್ತರಾಗಿ ಹುಟ್ಟುತ್ತೀರೋ, ಮೂರು ಜನ್ಮ ವೆರಿಗಳಾಗಿ ನನ್ನನ್ನು ಬಂದು ಸೇರುತ್ತೀರೋ ಎಂದರೆ ಜಯ-ವಿಜಯರು ವೆರಿಗಳಾಗಿ ಬೇಗ ಪರಮಪದ ಸೇರಲು ಆಶಿಸಿದರಂತೆ. ಪೂಜೆ ಪುನಸ್ಕಾರಾದಿ ಕರ್ಮಗಳಲ್ಲಿ ಗಂಧದ ಹಾಗೆ ತೇಯುವ ನಮ್ಮಂತಹವರ ಬಾಳಿಗೆ ಮುಕ್ತಿ ದೊರೆಯಲು ಜನ್ಮದ ಮೇಲೆ ಜನ್ಮ. ಧರ್ಮದ ಅಂತರಾರ್ಥ ತಿಳಿಯುವುದಿಲ್ಲ. ನಾರಣಪ್ಪನ ಅಂತಃಪ್ರಾಣ ಯಾವ ಸಾಧನೆಯಲ್ಲಿ ತೊಡಗಿತ್ತೋ! ಕುಣಿದು ಕುಪ್ಪಳಿಸಿ ’ಲP’ ಎಂದು ಪ್ರಾಣಬಿಟ್ಟ. ಈ ಸಂದಿಗ್ಧದಲ್ಲಿ ಆಪದ್ಧರ್ಮವೇನೆಂದು ತಿಳಿಯುವ ಶಕ್ತಿಯನ್ನು ದೇವರು ನನಗೆ ಕೊಟ್ಟರೆ… ಪ್ರಾಣೇಶಾಚಾರ್ಯರಿಗೆ ಥಟ್ಟನೆ ಅವ್ಯಕ್ತದಿಂದ ಒಂದು ಸನ್ನೆ ಕಾಣಿಸಿಕೊಂಡ ಹಾಗೆ ಒಂದು ಯೋಚನೆ ಹೊಳೆದು ರೋಮಾಂಚಿತರಾದರು. ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ ಹೋಗಿ ಮಾರುತಿಯನ್ನು ಕೇಳುವುದು : ವಾಯುಪುತ್ರ, ಏನು ಸರಿ ಇಂತಹ ಸಂದಿಗ್ಧದಲ್ಲಿ? ಗೆಲುವಾಗಿ ಒಳಮನೆಯಲ್ಲಿ ಅತ್ತಿಂದಿತ್ತ ತಿರುಗಿದರು. ಛೆ, ಪ್ರಾಯದ ಹೆಣ್ಣುಮಗಳೊಬ್ಬಳು ಚಾಪೆ ಇಲ್ಲದೆ ಚಾವಡಿಯಲ್ಲಿ ಮಲಗಿದ್ದಾಳಲ್ಲ ಎಂದು ಮರುಕವಾಗಿ ಒಂದು ಹೊದಿಕೆ, ಚಾಪೆ, ದಿಂಬನ್ನು ತಂದು ಹೊರಗೆ ಬಂದು ’ಚಂದ್ರೀ’ ಎಂದರು. ತನ್ನ ತಾಯಿ ಹೇಳಿದ್ದ ಮಾತನ್ನು ನೆನೆಯುತ್ತಿದ್ದ ಚಂದ್ರಿ ಧಿಗ್ಗನೆ ಎದ್ದು ಕೂತು, ನಾಚಿಕೆಯಿಂದ ತಲೆಯ ಮೇಲೆ ಸೆರಗೆಳೆದುಕೊಂಡಳು. ಕತ್ತಲೆಯಲ್ಲಿ ಹೀಗೆ ಹೆಣ್ಣೊಬ್ಬಳ ಎದುರು ನಿಂತಿರುವುದು ಅಸಮಂಜಸವೆನ್ನಿಸಿ ಪ್ರಾಣೇಶಾಚಾರ್ಯರು ’ಈ ಚಾಪೆ ದಿಂಬುಗಳನ್ನು ತಗೊ’ ಎಂದು ತಿರುಗಿದರು. ಚಂದ್ರಿಗೆ ಮಾತೇ ಬರಲಿಲ್ಲ. ಹೊಸ್ತಿಲು ದಾಟುತ್ತಿದ್ದ ಪ್ರಾಣೇಶಾಚಾರ್ಯರು ನಿಂತು, ಕೆಯಲ್ಲಿ ಹಿಡಿದಿದ್ದ ಲಾಟೀನಿನ ಬೆಳಕಿನಲ್ಲಿ ಮೊಗ್ಗಿನ ಹಾಗೆ ಸಂಕೋಚದಿಂದ ಕೂತ ಹೆಣ್ಣನ್ನು ಕಂಡು, ಮಾರುತಿಯ ಅಪ್ಪಣೆ ಪಡೆಯುವ ತಮ್ಮ ನಿರ್ಧಾರವನ್ನು ಗೆಲುವಿನಿಂದ ತಿಳಿಸಿ ನಡುಮನೆಗೆ ಹೋದರು. ಒಳಗೆ ಬಂದಾಕ್ಷಣ ಥಟ್ಟನೆ ಇನ್ನೊಂದು ಯೋಚನೆ ಅವರಿಗೆ ಹೊಳೆಯಿತು. ಚಂದ್ರಿ ಬಿಚ್ಚಿಕೊಟ್ಟಿದ್ದ ಆಭರಣಗಳ ಗಂಟನ್ನು ಮತ್ತೆ ಹೊರಗೆ ತಂದು ’ಚಂದ್ರೀ’ ಎಂದರು. ಚಂದ್ರಿ ಮತ್ತೆ ಚಂಗನೆ ತವಕದಿಂದ ಎದ್ದು ಕೂತಳು. “ಇಕೊ ಚಂದ್ರಿ, ನಿನ್ನ ಔದಾರ್ಯದಿಂದ ಶವಸಂಸ್ಕಾರದ ಪ್ರಶ್ನೆ ಇನ್ನಷ್ಟು ಕಠಿಣವಾಗಿಬಿಟ್ಟಿತು. ಆಪದ್ಧರ್ಮದ ಪ್ರಕಾರ ನಡೆದುಕೊಳ್ಳೋದು ಬ್ರಾಹ್ಮಣರ ಕರ್ತವ್ಯ. ಈ ಬಂಗಾರ ನಿನ್ನಲ್ಲೆ ಇರಲಿ. ಅವನು ತೀರಿಹೋದ ಮೇಲೆ ಪಾಪ ನಿನ್ನ ಜೀವನವೂ ಸಾಗಬೇಕಲ್ಲ” ಎಂದು ಅವಳ ಸನಿಯ ಲಾಟೀನು ಹಿಡಿದು ನಿಂತು, ಬೆಳಕಿನಲ್ಲಿ ಬಾಗಿ, ತಮ್ಮ ಮುಖದ ಕಡೆ ಆರ್ತತೆಯಿಂದ ಎತ್ತಿದ ವಿಶಾಲವಾದ ಕಪ್ಪಾದ ಅವಳ ಕಣ್ಣುಗಳನ್ನು ಕರುಣೆಯಿಂದ ನೋಡಿ, ಬಂಗಾರವನ್ನು ಅವಳ ಕೆಮೇಲೆ ಇಟ್ಟು ಒಳಗೆ ಹೋದರು. +ಅಧ್ಯಾಯ : ಏಳು +ದಾಸಾಚಾರ್ಯ ಹಸಿವೆ ತಾಳಲಾರದೆ ಸಂಕಟದಿಂದ ನಾರಾಯಣ ನಾರಾಯಣ ಎನ್ನುತ್ತ, ಉ ಉ ಎಂದು ಹೊಟ್ಟೆಯುಜ್ಜಿಕೊಳ್ಳುತ್ತ, ಹಾಸಿಗೆಯಲ್ಲಿ ಹೊರಳಿದ. ಅವನ ಮಗ ನಿದ್ದೆ ಬರದೆ ತಾಯನ್ನ ಎಬ್ಬಿಸಿದ. ’ಅಮ್ಮ ದುರ್‍ನಾತ, ದುರ್‍ನಾತ’ ಎಂದ. ಹಸಿವಿನ ಸಂಕಟದಲ್ಲಿದ್ದ ದಾಸಾಚಾರ್ಯನಿಗೆ ಯಾವ ನಾತವೂ ಬರಲಿಲ್ಲ. ಆದರೆ ಅವನ ಹೆಂಡತಿ ’ಹೌದಲ್ಲ’ ಎಂದಳು. ’ಇವರೇ, ದುರ್ನಾತ’ ಎಂದು ಗಂಡನನ್ನು ತಟ್ಟಿ ತಟ್ಟಿ ಹೇಳಿದಳು. ’ಬೇಸಗೆ- ಹೆಣ ಕೊಳೆತು, ನಾತ ಇಡೀ ಅಗ್ರಾಹಾರಕ್ಕಡರುತ್ತಿದೆ’ ಎಂದಳು. ಅರೆಮರಳು ಲಕ್ಷ್ಮೀದೇವಮ್ಮ ’ನಾರಣಪ್ಪನ ಪ್ರೇತ ಪ್ರೇತ’ವೆಂದು ಕೂಗಿದ್ದು ಕೇಳಿ ಕಿಟಾರನೆ ಕಿರುಚಿಕೊಂಡಳು. ಶವದ ಪ್ರೇತವೇನಾದರೂ ಅಡ್ಡಾಡುತ್ತ ದುರ್ನಾತ ಹರಡುತ್ತಿದೆಯೋ ಎಂದು ಕಂಪಿಸಿದಳು.ಗುಡಿಯಲ್ಲಿ ದುರ್ನಾತವಾಗಿ ಬೆಳ್ಳಿಗೆ ನಿದ್ದೆ ಬರದೆ ಎದ್ದು ಕೂತಳು. ಕಪ್ಪು ಕತ್ತಲಲ್ಲಿ ಏನೂ ಕಾಣದು. ಹೊರಗೆ ಬಂದಳು. ಹೊಲೆಯ ಹೊಲತಿಯರನ್ನು ಬೆಂಕಿ ಕೊಟ್ಟು ಗುಡಿ ಸುಟ್ಟು ಬೂದಿಯಾಗಿ ಬೂದಿಯಲ್ಲಿ ಬೆಂಕಿಯ ಕಿಡಿ ಗಾಳಿಗೆ ಮಿನುಗುತ್ತಿತ್ತು. ದೂರದ ಪೊದೆಯಲ್ಲೊಂದು ರಾಶಿ ಮಿಣುಕು ಹುಳುಗಳು ಮಿನುಗುತ್ತಿದ್ದುದನ್ನು ಕಂಡು ಮೆತ್ತಗೆ ಅವುಗಳ ಬಳಿ ಹೋಗಿ, ಉಟ್ಟ ತುಂಡನ್ನು ಬಿಚ್ಚಿ, ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಬೆತ್ತಲೆ ನಿಂತು, ತುಂಡನ್ನು ಜೋಕೆಯಾಗಿ ಬೀಸಿ, ಮಿಣP ಮಿಣಕ್ಕೆಂದು ಬೆಳಕನ್ನು ಚಿಮ್ಮುವ ಮಿಂಚುಹುಳುಗಳನ್ನು ತುಂಡಿನಲ್ಲಿ ಹಿಡಿದು, ದಿಡ ದಿಡ ಓಡಿ ತನ್ನ ಗುಡಿಗೆ ಬಂದು, ಗುಡಿಯಲ್ಲಿ ಅವನ್ನು ಕೊಡವಿದಳು. ಮಿಣP ಮಿಣP ಎಂದು ಅವು ಗುಡಿಯಲ್ಲಿ ಅಸ್ಪಷ್ಟವಾದ ಬೆಳಕನ್ನು ಮಾಡುತ್ತ ಹಾರಾಡಿದುವು. ಬೆಳ್ಳಿ ಕೆಯಲ್ಲಿ ನೆಲವನ್ನು ಪರದಾಡುತ್ತ ಹುಡುಕಿದಳು. ನರಳುತ್ತಿದ್ದ ಅವಳ ಅಪ್ಪ ಅಮ್ಮ ಬೆಳ್ಳಿಯ ಬಳಚುವ ಕೆ ತಗಲಿ ’ಇಶ್ಶಿ! ಈ ಹೊತ್ತಲ್ಲಿ ಈ ಕುರ್ದೆಯೇನು ಮಾಡ್ತಿದೆ’ ಎಂದು ಗೊಣಗಿದರು. ’ಇಲಿ ಸತ್ತು ದುರ್ನಾತ-ಇಶ್ಶಿ’ ಎಂದು ಬೆಳ್ಳಿ ತಡಕಾಡಿ, ಮೂಲೆಯಲ್ಲಿ ತಣ್ಣನೆ ಕೊರೆಯುತ್ತಿದ್ದ ಇಲಿಯನ್ನು ಮಿಣುಕುಹುಳುಗಳ ಬೆಳಕಲ್ಲಿ ಕಂಡು-’ಅಯಯ್ಯಪಾ’ ಎಂದು ಒದರಿ, ಬಾಲದಿಂದ ಅದನ್ನೆತ್ತಿ ಹೊರಗೆಸೆದು ಬಂದು : “ಈ ಪಾಡು ಓಡಲಿಕ್ಕೆ ಸಾಯಲಿಕ್ಕೆ ಏನಾಗಿವೆಯೋ ಈ ಇಲಿಗಳಿಗೆ ರಂಡೆ ಕುರ್ದೆಗಳು”-ಎಂದು ಶಪಿಸಿ, ತುಂಡುಟ್ಟು, ನೆಲಕ್ಕೊರಗಿ ಮಲಗಿ, ನಿದ್ದೆಹೋದಳು.ಹೊಟ್ಟೆಯಲ್ಲಿ ತಪತಪವೆನ್ನುವ ಹಸಿವಿನಿಂದ ನಿದ್ದೆ ಬರದೆ ಕೆಂಗಣ್ಣಾದ ದಾಸಾಚಾರ್ಯ, ವೆಂಕಟರಮಣಾಚಾರ್ಯ, ಶ್ರೀನಿವಾಸಾಚಾರ್ಯ, ಗುಂಡಾಚಾರ್ಯ, ಹನುಮಂತಾಚಾರ್ಯ, ಲಕ್ಷ್ಮಣಾಚಾರ್ಯ, ಗರುಡಾಚಾರ್ಯ, ದುರ್ಗಾಭಟ್ಟ ಬೆಳಿಗ್ಗೆ ಎದ್ದು ಮುಖ ತೊಳೆದು ಅಗ್ರಹಾರಕ್ಕೆಂತಹ ಅನಿಷ್ಟ ಬಂತಪ್ಪ ಎಂದು ನಾರಣಪ್ಪನನ್ನು ಶಪಿಸುತ್ತ ಚಾವಡಿಗೆ ಬಂದರು. ಮನೆಯೊಳಗೆ ದುರ್ನಾತವೆಂದು ಮಕ್ಕಳು ಅಂಗಳದಲ್ಲಿ, ಹಿತ್ತಲಿನಲ್ಲಿ, ಕುಣಿಯುತ್ತಿದ್ದರು. ಹೆಂಗಸರಿಗೆ ಭೀತಿ : ಬೀದಿಯಲ್ಲಿ ಅಲೆಯುವ ನಾರಣಪ್ಪನ ಪ್ರೇತ ಮಕ್ಕಳನ್ನೆಲ್ಲಾದರೂ ಮೆಟ್ಟಿದರೆ ಏನು ಗತಿ? ಒಳಗೆ ಬರಲೊಪ್ಪದ ಮಕ್ಕಳಿಗೆ ಎರಡೆರಡು ಬಾರಿಸಿ ಒಳಕ್ಕೆ ನೂಕಿ ಬಾಗಿಲು ಹಾಕಿದ್ದಾಯಿತು. ಹೀಗೆ ಹಾಡುಹಗಲಿನಲ್ಲಿ ಮನೆಯ ಬಾಗಿಲನ್ನು ಎಂದೂ ಮುಚ್ಚಿದ್ದಿಲ್ಲ. ಹೊಸಲಿಗೆ ರಂಗವಲ್ಲಿಯಿಲ್ಲದೆ, ಅಂಗಳಕ್ಕೆ ಸಗಣಿನೀರಿಲ್ಲದೆ, ಬೆಳಗಾದರೂ ಅಗ್ರಹಾರ ಬೆಳಗಾದಂತೆ ಕಾಣುತ್ತಿರಲಿಲ್ಲ. ಬಿಕೋ ಎನ್ನುತ್ತಿತ್ತು. ಪ್ರತಿ ಮನೆಯ ಕತ್ತಲೆ ಕೋಣೆಯಲ್ಲೆಲ್ಲೊ ಒಂದು ಶವವಿದ್ದಂತೆ ಭಾವ. ಚಾವಡಿಯ ಮೇಲೆ ತಲೆಮೇಲೆ ಕೆ ಹೊತ್ತು ಕೂತ ಬ್ರಾಹ್ಮಣರಿಗೆ ಏನು ಮಾಡಲೂ ಕಾಲೇ ಬಾರದು. +ವೆಂಕಟರಮಣಾಚಾರ್ಯನ ತುಂಟ ಮಕ್ಕಳು ಮಾತ್ರ ತಾಯಿಯ ಆಜ್ಞೆಯನ್ನು ಧಿಕ್ಕರಿಸಿ ಹಿತ್ತಲಿನಲ್ಲಿ ನಿಂತು, ಗುಡುಗುಡು ಎಂದು ಉಗ್ರಾಣದಿಂದ ಹಿತ್ತಲಿಗೆ ಜಿಗಿಯುತ್ತಿದ್ದ ಇಲಿಗಳನ್ನು ಎಣಿಸುತ್ತ ಚಪ್ಪಾಳೆಯಿಡುತ್ತ ಕುಣಿದರು. ಕೊಳಗದಲ್ಲಿ ಅಪ್ಪಯ್ಯ ಭತ್ತವನ್ನು ಅಳೆಯುವಾಗ ಎಣಿಸುವ ಮರ್ಜಿಯಲ್ಲಿ ಅವರ ಲೆಕ್ಕ ನಡೆದಿತ್ತು! +ಲಾಭ ಲಾಭ +ಎರಡೋ ಎರಡು… +ಮೂರೋ ಮೂರು… +ನಾಲ್ಕೋ ನಾಲ್ಕು… +ಐದೋ ಐದು… +ಆರೋ ಆರು… +ಮತ್ತೊಂದೋ ಮತ್ತೊಂದು… +ಬರಲು ತೆಗೆದುಕೊಂಡು ಬಾರಿಸಲು ಬಂದ ತಾಯಿಗೆ “ನೋಡಮ್ಮ ನೋಡು, ಎಂಟೋ ಎಂಟು, ಒಂಬತ್ತೋ ಒಂಬತ್ತು, ಹತ್ತೋ ಹತ್ತು, ಹತ್ತು” ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತ, “ನೋಡಮ್ಮ ನೋಡು, ಹತ್ತು ಇಲಿ” ಎಂದು ಕೇಕೆಹಾಕಿದರು. +ತಾಯಿ ಅದಕ್ಕೆ ಕುಪಿತಳಾಗಿ : +“ತಿಂದ ಅನ್ನ ನಿಮಗೆ ನೆತ್ತಿಗೇರಿದೆ ಅಲ್ಲವ? ಪ್ರಾರಬ್ಧ ಇಲಿಗಳನ್ನೇನು ಎಣಿಸೋದು? +ಒಳಗೆ ನಡೀರಿ-ಇಲ್ಲವೆ ಬಾಸುಂಡೆ ಬರುವಂತೆ ಥಳಿಸಿ ಬಿಡುತ್ತೇನೆ. ಉಗ್ರಾಣದ ತುಂಬ ಇವೆ ಅನಿಷ್ಟದವು. ಅಕ್ಕಿ ಬೇಳೆಯಲ್ಲೆಲ್ಲ ಅವುಗಳ ಹಿಕ್ಕೆ ತುಂಬಿರುತ್ತದೆ” +ಎಂದು ಗೊಣಗುತ್ತ ಮಕ್ಕಳನ್ನು ಅಟ್ಟಿ ಒಳಗೆ ತಳ್ಳಿ ಕೂಡಿದಳು. ಒಳಗೊಂದು ಇಲಿ ತಟ್ಟನೆ ಪ್ರತ್ಯಕ್ಷವಾಗಿ, ಮಕ್ಕಳು ಆಟದಲ್ಲಿ ಮಾಡುವ ಹಾಗೆ ಸುತ್ತಸುತ್ತ ಸುತ್ತಿ, ಅಂಗಾತ್ತನೆ ಒರಗಿದ್ದನ್ನು ಕಂಡು ಹುಡುಗರು ಹಿರಿಹಿರಿ ಹಿಗ್ಗಿದರು.ಮೆಲ್ಲನೆ ಬ್ರಾಹ್ಮಣರು ತಮ್ಮ ತಮ್ಮ ಚಿಟ್ಟೆಯಿಂದಿಳಿದು, ಮೂಗು ಮುಚ್ಚಿಕೊಂಡು ಪ್ರಾಣೇಶಾಚಾರ್ಯರ ಮನೆಯತ್ತ ನಡೆದರು. ದುರ್ಗಾಭಟ್ಟ ಎಲ್ಲರನ್ನೂ ನಿಲ್ಲಿಸಿ, “ಅರೆಮರುಳು ಅಜ್ಜಿ ಕೂಗಿದ್ದು ನಿಜವಿರಲಿಕ್ಕೂ ಸಾಕಲ್ಲವೇ, ಆಚಾರ್ಯರೇ” ಎಂದ. ಬ್ರಾಹ್ಮಣರೆಲ್ಲ ಅದಕ್ಕೆ ಪುಕ್ಕಾಗಿ ’ಏನೋ ನೋಡುವ’ ಎಂದು ಮೆಲ್ಲಗೆ ನಾರಣಪ್ಪನ ಮನೆಯೆದುರು ಬಂದು ನಿಂತು ತೆರೆದ ಹೆಬ್ಬಾಗಿಲನ್ನು ನೋಡಿ ಭಯಗ್ರಸ್ತರಾದರು. ಅವನ ಹೆಣ ಪ್ರೇತದಂತೆ ಅಲೆಯುತ್ತಿರೋದು ಖಡಾಖಂಡಿತ. ಅವನಿಗೆ ಸಂಸ್ಕಾರವಾಗದಿದ್ದಲ್ಲಿ ಅವ ಬ್ರಹ್ಮರಾಕ್ಷಸನಾಗಿ ಅಗ್ರಹಾರವನ್ನು ಕಾಡೋದು ನಿಶ್ಚಯ. ದಾಸಾಚಾರ್ಯ ನೀರ್ದುಂಬಿದ ಕಣ್ಣುಗಳಿಂದ ಬ್ರಾಹ್ಮಣರನ್ನು ದೂರುತ್ತ ಅಂದ : +“ಬಂಗಾರದ ಆಸೇಲಿ ನಾವು ಕೆಟ್ಟೆವಪ್ಪ. ಹೇಳಲಿಲ್ಲವ ನಾನು? ಅದು ಬ್ರಾಹ್ಮಣ ಶವ, ವಿಧಿಯುಕ್ತ ಶ್ರಾದ್ಧವಾಗದ ಹೊರತು ಪ್ರೇತವಾಗುತ್ತೆ ಅಂತ. ಬಡವನ ಮಾತು ಯಾರ ಎಗ್ಗಿಗೆ ಬರಬೇಕು ಹೇಳಿ. ಈ ಬೇಸಗೇಲಿ ಅದು ಕೊಳೆತು ನಾರದೇ ಇರುತ್ತದ? +ಎಷ್ಟು ದಿನಾಂತ ಉಪವಾಸ ಮಾಡಿ ನಮಗೆ ಸಾಯಲಿಕ್ಕೆ ಸಾಧ್ಯ-ಹೆಣವನ್ನಿಟ್ಟುಕೊಂಡು…” +ಹಸಿವಿನಿಂದ ಕುಪಿತರಾದ ದುರ್ಗಾಭಟ್ಟರು ಅಂದರು : +“ಏನು ಮಾಧ್ವರೋ ನೀವು? ಏನು ಆಚಾರವೋ ನಿಮ್ಮದು? ಇಂತಹ ಸಂದರ್ಭದಲ್ಲೊಂದು ನಿಮ್ಮ ತಲೆಗೆ ಉಪಾಯ ಹೊಳೆಯದೇ ಹೋಯಿತಲ್ಲ.” +ಮೆತ್ತಗಾದ ಗರುಡ : +“ನನ್ನದೇನೂ ಅಡ್ಡಿಯಿಲ್ಲಪ್ಪ, ಪ್ರಾಣೇಶಾಚಾರ್ಯರು ಸೆ ಎಂದರಾಯಿತು, ಏನು. ಬಂಗಾರದ ಪ್ರಶ್ನೆ ಒತ್ತಟ್ಟಿಗಿಟ್ಟುಬಿಡುವ. ಏನು. ಮೊದಲು ಹೆಣವನ್ನ ಸ್ಮಶಾನಕ್ಕೆ ಸಾಗಿಸಿಬಿಡುವ…ಏನು…ನಮ್ಮ ಬ್ರಾಹ್ಮಣ್ಯಾನ ಪ್ರಾಣೇಶಾಚಾರ್ಯರು ರಕ್ಷಿಸಿ ಬಿಟ್ಟರೆ ಸರಿ…” ಎಂದ. +ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರಲ್ಲಿಗೆ ಹೋಗಿ ನಡುಮನೆಯಲ್ಲಿ ದೆನ್ಯದಿಂದ ನಿಂತರು. ಆಚಾರ್ಯರು ಹೆಂಡತಿಯನ್ನು ಎತ್ತಿ ಹಿತ್ತಲಿಗೆ ಒಯ್ದು ಮೂತ್ರ ಹೊಯ್ಯಿಸಿ, ಮುಖ ತೊಳೆಸಿ, ಔಷಧಿ ಕುಡಿಸಿ ಹೊರಬಂದರು. ನೆರೆದಿದ್ದ ಬ್ರಾಹ್ಮಣರನ್ನು ಕಂಡು ತಾವು ರಾತ್ರೆ ಮಾಡಿದ ನಿರ್ಧಾರವನ್ನು ವಿವರಿಸಿದರು. ಗರುಡ ಆರ್ತಸ್ವರದಿಂದ-“ನಮ್ಮ ಬ್ರಾಹ್ಮಣ್ಯ ತಮ್ಮ ಕೆಯಲ್ಲಿದೆಯಪ್ಪ. ಹೆಣವನ್ನು ತೆಗೆಯಲಿಲ್ಲ ಎಂದೋ, ಏನು, ಅಥವಾ ತೆಗೆದುಬಿಟ್ಟರು ಎಂದೋ, ಏನು, ಒಟ್ಟಿನಲ್ಲಿ ನಮ್ಮ ಮೇಲೆ ಅಪವಾದ ಬರದಂತೆ ರಕ್ಷಿಸಬೇಕು. ಮಾರುತಿಯ ಅಪ್ಪಣೆ ತಾವು ತರೋವರೆಗೆ ನಾವಿಲ್ಲಿ ಕಾದಿರುತ್ತೇವೆ” ಎಂದು ಬ್ರಾಹ್ಮಣರೆಲ್ಲರ ಅಭಿಪ್ರಾಯವನ್ನು ನಿವೇದಿಸಿದ. ಆಚಾರ್ಯರು ಹೊರಟು-“ಮಕ್ಕಳಿಗೆ ಅಡ್ಡಿಯಿಲ್ಲ, ಊಟ ಮಾಡಬಹುದು. ಗೊತ್ತು ತಾನೆ?” ಎಂದರು. +ಕೆಯಲ್ಲಿ ಬುಟ್ಟಿ ಹಿಡಿದು ಅಗ್ರಹಾರದ ವೃಕ್ಷಗಳಿಂದ ಪಾರಿಜಾತ, ಮಲ್ಲಿಗೆ, ಸಂಪಿಗೆ ಹೂಗಳನ್ನು ಕೊಯ್ದು ತುಂಬಿಸಿದರು. ಬುಟ್ಟಿ ತುಂಬ ತುಳಸಿಯನ್ನು ತುಂಬಿಕೊಂಡರು. ಹೊಳೆಯಲ್ಲಿ ಸ್ನಾನಮಾಡಿ, ಒದ್ದೆವಸ್ತ ಉಟ್ಟು, ಯಜ್ಞೋಪವೀತವನ್ನು ಬದಲಾಯಿಸಿ ಕೊಂಡರು. ಹೊಳೆ ದಾಟಿ, ಕಾಡು ಹೊಕ್ಕು ನಡೆದು, ಎರಡು ಮೆಲಿಯಾಚೆ ಅರಣ್ಯದ ಮೌನದಲ್ಲಿ ಪ್ರಶಾಂತವಾಗಿದ್ದ ಮಾರುತಿಯ ಗುಡಿಗೆ ಬಂದರು. ಗುಡಿಯ ಬಾವಿಯಿಂದ ನೀರು ಸೇದಿ, ದಾರಿಯಲ್ಲೆಲ್ಲಾದರೂ ಮೆಲೆಗೆ ತಟ್ಟಿರಬಹುದೆಂದು ಎರಡು ಕೊಡ ನೀರನ್ನು ಸುರಿದುಕೊಂಡರು. ಇನ್ನೊಂದು ಕೊಡ ನೀರೆತ್ತಿಕೊಂಡು ಹೋಗಿ, ಆಳೆತ್ತರದ ಮಾರುತಿಯ ವಿಗ್ರಹದ ಮೇಲಿದ್ದ ಒಣಗಿದ ತುಳಸಿ ಪುಷ್ಪಗಳನ್ನು ತೆಗೆದು, ನೀರಿನಿಂದ ಶುಭ್ರವಾಗಿ ತೊಳೆದರು. ನಂತರ ಕೂತು ಒಂದು ಗಂಟೆಕಾಲ ಮಂತ್ರೋಚ್ಚಾರಣೆ ಮಾಡುತ್ತ ಗಂಧವನ್ನು ತೇದರು. ತೇದ ಗಂಧವನ್ನು ಮಾರುತಿಯ ಮೆಗೆ ಹಚ್ಚಿ, ಹೂವು ತುಳಸಿಗಳಿಂದ ಇಡಿಯ ವಿಗ್ರಹವನ್ನು ಶೃಂಗರಿಸಿದರು. ಕಣ್ಣು ಮುಚ್ಚಿ ಧ್ಯಾನಿಸಿ, ತಮ್ಮ ಮನಸ್ಸಿನ ಸಂಕಟಗಳನ್ನೆಲ್ಲ ನಿವೇದಿಸಿ-“ಆಗಲಿ ಎಂದು ನಿನ್ನ ಆಜ್ಞೆಯಾದರೆ ಬಲಗಡೆಯ ಪ್ರಸಾದವನ್ನು ನೀಡಪ್ಪ; ಶವಸಂಸ್ಕಾರ ನಿಷೇಧವಾದರೆ ಎಡಗಡೆಯ ಪ್ರಸಾದವನ್ನು ದಯಪಾಲಿಸಪ್ಪ. ಅಲ್ಪಮತಿಯಾದ್ದರಿಂದ ಆಪದ್ಧರ್ಮವೇನೆಂದು ಅರಿಯದೆ ನಿನ್ನ ಬಳಿ ಬಂದೆ” ಎಂದು ಕಣ್ಣುಮುಚ್ಚಿದವರು ಭಕ್ತಿಯಿಂದ ಸಂಕಲ್ಪಿಸಿಕೊಂಡು, ನೀಲಾಂಜನದ ಬೆಳಕಿನಲ್ಲಿ ಮಾರುತಿಯನ್ನು ನೋಡುತ್ತ ಕುಳಿತರು. +ಬೆಳಿಗ್ಗೆ ಹತ್ತು ಗಂಟೆಯ ಒಳಗೇ ಭಯಂಕರ ಬಿಸಿಲಾದ್ದರಿಂದ ಗುಡಿಯ ಕತ್ತಲಿನಲ್ಲೂ ಸೆಖೆಯಾಗಿ, ಬೆವರಿ, ಆಚರ್ಯರು ಮತ್ತೊಂದು ಕೊಡ ನೀರು ಸುರಿದುಕೊಂಡು ಒದ್ದೆಮೆಯಲ್ಲಿ ಕೂತರು. “ನಿನ್ನ ಅಪ್ಪಣೆಯಾಗುವವರೆಗೆ ನಾನು ಏಳುವುದಿಲ್ಲ” ಎಂದರು. +ಪ್ರಾಣೇಶಾಚಾರ್ಯರು ಮನೆ ಬಿಟ್ಟ ಕ್ಷಣ, ಉಳಿದ ಬ್ರಾಹ್ಮಣರ ಸಿಡುಕು ಮುಖಗಳನ್ನು ನೋಡಲು ಅಂಜಿದ ಚಂದ್ರಿ, ತಿರುಗಿ ತೋಟಕ್ಕೆ ಹೋಗಿ ಮಡಿಲಿನ ತುಂಬ ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಹೊಳೆಯಲ್ಲಿ ಶುಭ್ರವಾಗಿ ಸ್ನಾನಮಾಡಿ, ತನ್ನ ಕಪ್ಪು ನುಣುಪು ಕೂದಲಿನ ರಾಶಿಯನ್ನು ಒದ್ದೆಯಾದ ಮೆಮೇಲೆ ಇಳಿಬಿಟ್ಟು, ಮೆಗೆ ಹತ್ತಿದ ಒದ್ದೆ ಸೀರೆಯಲ್ಲಿ ನಡೆದು ಮಾರುತಿಯ ಗುಡಿಯಿಂದ ಸ್ವಲ್ಪ ದೂರದಲ್ಲೊಂದು ಮರಕ್ಕೊರಗಿ ಕೂತಳು. ದೂರದ ಗುಡಿಯಿಂದ ಆಚಾರ್ಯರು ಬಾರಿಸಿದ ಗಂಟೆ ಕಿವಿಗೆ ಬಿದ್ದಿತು. ಗುಡಿಯ ಗಂಟೆಯ ಪವಿತ್ರ ಧ್ವನಿಯಿಂದಾಗಿ ಹಿಂದಿನ ರಾತ್ರೆ ತನ್ನನ್ನು ಅವಾಕ್ಕಾಗಿ ಮಾಡಿದ ಅನುಭವ ಮರುಕೊಳಿಸಿತು. ತನ್ನ ಅಮ್ಮ ಹೇಳಿದ ಮಾತನ್ನು ತಾನು ನೆನೆಯುತ್ತಿರುವಾಗಲೆ ಕತ್ತಲೆಯಲ್ಲಿ ಲಾಟೀನು ಹಿಡಿದು, ಚಾಪೆ ದಿಂಬುಗಳನ್ನು ತಂದು, ಆಚಾರ್ಯರು ಮೃದುವಾಗಿ ’ಚಂದ್ರೀ’ ಎಂದು ಕರೆಯಬೇಕೆ? ಮತ್ತೆ ಥಟ್ಟನೆ ತನಗೀಗ ಮೂವ್ವತ್ತು ತುಂಬಿದೆ, ನಾರಣಪ್ಪನ ಜೊತೆ ಹತ್ತು ವರ್ಷ ಬಾಳಿಯೂ ಸಂತಾನ ಪ್ರಾಪ್ತವಾಗಲಿಲ್ಲ ಎಂದು ಕೊರಗಿದಳು. ಮಗನಿದ್ದಿದ್ದರೆ ಅವನನ್ನೊಬ್ಬ ದೊಡ್ಡ ಸಂಗೀತಗಾರನನ್ನಾಗಿ ಮಾಡಬಹುದಿತ್ತು. ಮಗಳಿದ್ದಿದ್ದರೆ ಭರತನಾಟ್ಯ ಕಲಿಸಬಹುದಿತ್ತು-ಎಲ್ಲ ಇದ್ದೂ ತನಗೆ ಏನೂ ಇಲ್ಲವಾಯಿತು ಎಂದು ಮರಗಳ ಮೇಲೆ ಪುg ಎಂದು ಹಾರಿ ಬಂದು ಕೂತ ಪುಟ್ಟಪುಟ್ಟ ಹಕ್ಕಿಗಳನ್ನು ನೋಡುತ್ತ ಕೂತಳು. +ಅಧ್ಯಾಯ : ಎಂಟು +ದಾಸಾಚಾರ್ಯನಿಗೆ ತಾನಿನ್ನು ಊಟ ಮಡದಿದ್ದರೆ ಸತ್ತುಬಿಡಬಹುದೆಂದು ಭಯವಾಯಿತು. ಉರಿಯುವ ಬೆಂಕಿಗೆ ಹೊಯ್ದ ತುಪ್ಪದ ಹಾಗೆ ಮಕ್ಕಳಿಗೆಂದು ಬೇಯಿಸುತ್ತಿದ್ದ ಗಂಜಿಯ ವಾಸನೆ ಬೇರೆ. ಬಾಯಲ್ಲಿನ ಉಗುಳನ್ನು ತುಪ್ಪಿದ, ನುಂಗಿದ-ಕೊನೆಗೆ ಸಹಿಸಲಾರದೆ ಎದ್ದು ಹೊರಟ. ಯಾರ ಕಣ್ಣಿಗೂ ಬೀಳದಂತೆ ಬಿಸಿಲಿನ ಉರಿಯಲ್ಲಿ ತುಂಗಾನದಿಗೆ ಇಳಿದು ಸ್ನಾನ ಮಾಡಿ, ಪಾರಿಜಾತಪುರಾಭಿಮುಖನಾಗಿ ನಡೆದ. ಸಾಹುಕಾರ ಮಂಜಯ್ಯನ ಚಪ್ಪರದ ನೆರಳಿನಲ್ಲಿ ನಿಂತ. ಹೇಗೆ ಬಾಯಾರ ಹೇಳಿಕೊಳ್ಳೋದು? ಜನ್ಮಾಪಿ ಅವನು ಈ ಅಡ್ಡಪಂಕ್ತಿಯವರ ಮನೆಗಳಲ್ಲಿ ನೀರು ಮುಟ್ಟಿದವನಲ್ಲ. ತತ್ರಾಪಿ ತಾನು ಬ್ರಾಹ್ಮಣಾರ್ಥದಿಂದ ಹೊಟ್ಟೆ ಹೊರೆಯಬೇಕಾದ ಬ್ರಾಹ್ಮಣ. ಉಳಿದವರಿಗೆ ತಿಳಿದರೆ ಏನು ಗತಿ? ಆದರೆ ಯೋಚನೆಗಿಂತ ಶೀಘ್ರವಾಗಿ ಅವನ ಕಾಲುಗಳು ಅವನನ್ನು ಅವಲಕ್ಕಿ ಉಪ್ಪಿಟ್ಟು ತಿನ್ನುತ್ತಿದ್ದ ಮಂಜಯ್ಯನ ಎದುರು ತಂದು ನಿಲ್ಲಿಸಿತು. +“ಓಹೋಹೋ ಬರೋಣಾಗಲಿ, ಆಚಾರ್ಯರೆ. ಏನು ಇತ್ತ ಕಾಲು ಬೆಳಸಿದಿರಲ್ಲ? ಪ್ರಾಣೇಶಾಚಾರ್ಯರೇನಾದರೂ ಒಂದು ನಿರ್ಧಾರಕ್ಕೆ ಬಂದರ-ಏನು ಕತೆ? ಪಾಪ, ಅವನ ಶವ ತೆಗೆಯದ ಹೊರ್ತು ನಿಮಗೆ ಯಾರಿಗೂ ಊಟವಿಲ್ಲ, ಅಲ್ಲವೆ? ಕೂರೋಣಾಗಲಿ, ಆಯಾಸ ಪರಿಹಾರ ಮಾಡಿಕೊಳ್ಳೋಣವಾಗಲಿ. ಇವಳೇ, ಆಚಾರ್ಯರಿಗೆ ಮಣೆ ಹಾಕೇ” +ಎಂದು ಮಂಜಯ್ಯ ಉಪಚರಿಸಿದರು. +ಉಪ್ಪಿಟ್ಟನ್ನೇ ನೋಡುತ್ತ ಧ್ಯಾಸವಿಲ್ಲದವನಂತೆ ದಾಸಾಚಾರ್ಯ ನಿಂತುಬಿಟ್ಟ. ಮಂಜಯ್ಯ ಅವನನ್ನು ಕರುಣೆಯಿಂದ ನೋಡಿದರು: +“ತಲೆ ಸುತ್ತುತ್ತಿದೆಯೆ, ಆಚಾರ್ಯರೇ. ಸ್ವಲ್ಪ ಪಾನಕ ಮಾಡಿಸಲೆ?” +ದಾಸಾಚಾರ್ಯ ಹೂ ಎನ್ನದೆ ಊಹೂ ಎನ್ನದೆ, ಹಾಕಿದ ಮಣೆಯ ಮೇಲೆ ಕುಕ್ಕುರುಗಾಲಿನಲ್ಲಿ ಕೂತು ಯೋಚಿಸಿದ. ಹೇಗೆ, ಹೇಗೆ, ಬಾಯಾರೆ ಕೇಳುವುದು? ಧೆರ್ಯ ತಂದು ಸುತ್ತಿಸುತ್ತಿ ಮಾತಾಡಲು ಪ್ರಾಂಭಿಸಿದ. ಮಂಜಯ್ಯನವರು ಉಪ್ಪಿಟ್ಟನ್ನು ತಿನ್ನುತ್ತ ಕೇಳಿಸಿಕೊಂಡರು. +“ನಿನ್ನೆ ನಮ್ಮವರು ಇಲ್ಲಿ ಆಡಿದ ರೀತಿ ನನಗಂತೂ ಸರಿಬರಲಿಲ್ಲ ಮಂಜಯ್ಯ.” +“ಛೆ ಛೆ ಛೆ, ಹಾಗೆನ್ನಬಾರದು ನೀವು” ಎಂದರು ಮಂಜಯ್ಯ, ವಿನಯಕ್ಕಾಗಿ. +“ಹಾಗೆ ನೋಡಿದರೆ ಈ ಕಲಿಯುಗದಲ್ಲಿ ನಿಜವಾದ ಬ್ರಾಹ್ಮಣರು ಎಷ್ಟು ಜನರಿದ್ದಾರೆ ಹೇಳಿ ಮಂಜಯ್ಯ?” +“ಒಪ್ಪಿದೆ, ಒಪ್ಪಿದೆ ಆಚಾರ್ಯರೇ, ಕಾಲ ಕೆಟ್ಟುಹೋಯಿತು-ನಿಜ.” +“ಯಾಕೆಂದೆನೆಂದರೆ-ನೇಮ-ನಿಷ್ಠೆಯಲ್ಲಿ ಯಾವ ಬ್ರಾಹ್ಮಣರಿಗೆ ನೀವು ಕಡಿಮೇಂತ ನಾನು ಕೇಳೋದು, ಮಂಜಯ್ಯನವರೆ. ಕಾಸು ಕೊಳ್ಳದೆ ಸಂಸ್ಕಾರ ಮಾಡ್ತೀನಿ ಅಂತ ತಾವು ಅಂದರೆ, ನಮ್ಮ ಅಗ್ರಹಾರದ ಗರುಡ, ಲಕ್ಷ್ಮಣ ಕಾಗೆಗಳ ಹಾಗೆ ಬಂಗಾರಕ್ಕೆಂದು ಜಗಳವಾಡುತ್ತಾರೆ…” +“ಅಯ್ಯೊ ಅಯ್ಯೊ, ಅಲ್ಲವೆ?” ಎಂದು ಯಾರ ನಿಷ್ಠುರವನ್ನೂ ಕಟ್ಟಿಕೊಳ್ಳಲು ಆಶಿಸದ ಮಂಜಯ್ಯ ತೇಲಿಸಿ ಆಡಿದರು. +“ಗುಟ್ಟಾಗಿ ನಿಮ್ಮ ಹತ್ತಿರ ಮಾತ್ರ ಒಂದು ಮಾತು, ಮಂಜಯ್ಯ : ಎಲ್ಲಾ ಅಂಬೋದು ಏನು ಅಂದರೆ ಗರುಡ ಮಾಟ ಮಾಡಿಸಿ ಹಾಗೆ ನಾರಣಪ್ಪ ದಾರಿಗೆಟ್ಟ ಅಂತ. ಅದರ ಫಲವಾಗಿ ಈಗ ಅವನ ಸ್ವಂತ ಮಗನೇ ಮಿಲಿಟರಿ ಸೇರಿಬಿಟ್ಟ ಅಂತ. ಆ ಪಾಪದ ಲಕ್ಷ್ಮೀದೇವಮ್ಮನ ನಗನಾಣ್ಯವನ್ನೂ ಮುಟ್ಟುಗೋಲು ಹಾಕಿಬಿಟ್ಟನಲ್ಲ…” +ಮಂಜಯ್ಯನವರಿಗೆ ಸಂತೋಷವಾದರೂ ಮಾತಾಡಲಿಲ್ಲ. +“ಈಗ ಯಾರು ನಿಜವಾದ ಬ್ರಾಹ್ಮಣರಿದ್ದಾರೆ ಎಂಬೋದಕ್ಕೆ ಈ ಮಾತನ್ನಾಡಿದನೆ ಹೊರತು ಗರುಡನ ಮೇಲೇನೂ ನನಗೆ ದ್ವೇಷವಿಲ್ಲ. ವರ್ಷಕ್ಕೊಮ್ಮೆ ಗುರುಗಳ ಹತ್ತಿರ ಪಂಚಮುದ್ರಾಧಾರಣೆ ಮಾಡಿಸಿಕೊಂಡ ಕ್ಷಣ ಎಲ್ಲ ಪಾಪವೂ ಸುಟ್ಟುಬಿಡುತ್ತದ? ತಾವು ಮಾಡದ ಕೆಲಸವನ್ನ ನಿಮ್ಮ ಹತ್ತಿರ ಮಾಡಿಸಬೇಕೆಂದು ಅವರು ಬಗೆದದ್ದು ನನಗೆ ಸರ್ವಥಾ ಒಪ್ಪಿಗೆಯಾಗಲಿಲ್ಲ. ನೀವು ಏನೇ ಹೇಳಿ ಮಂಜಯ್ಯ, ನಿಜವಾದ ಬ್ರಾಹ್ಮಣರೆಂದರೆ ನಮ್ಮ ಪ್ರಾಣೇಶಾಚಾರ್ಯರು. ಅದೇನು ತೇಜಸ್ಸು! ಅದೇನು ತಪಸ್ಸು! ತು, ತು, ತು, ತು…” +***** +ಮುಂದುವರೆಯುವುದು +ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್ +‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […] +ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_766.txt b/Kannada Sahitya/article_766.txt new file mode 100644 index 0000000000000000000000000000000000000000..7056cfa131583dd3fa555f884d0159a7051ee518 --- /dev/null +++ b/Kannada Sahitya/article_766.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಾನಪದ ಜೀವನದ ಸಂಗೀತಕೆದೆಯೋತು +ಹೂವು ಹೂವಿನ ಜೇನು ತೊಳೆಯ ಬಿಡಿಸಿ +ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ +ಸುಗ್ಗಿ ಮಾಡಿದಿರಂದು ನಾಡನಲಿಸಿ! +ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು +ಆಡಿಹವು ನಿಮೂರ ನವಿಲಹೆಜ್ಜೆ! +ಕಾಳರಾತ್ರಿಯು ಬೆಳಗು ಬೈಗುಗಳು ದಾಟಿದವು +ಕಂಡೆ ನಾ ನಿಸ್ಸಿಮ ನಯದ ಓಜೆ! +ದೇಹ ಮೊಂಬತ್ತಿಯೋಲು ಮುಡಿದ ಬೆಳಕಿನ ಕುಡಿಗೆ +ಕರಗಿ ಮಿದುವಾಗಿತ್ತು ಅಂತರಂಗ ; +ಬೆಳ್ಮುಗಿಲ ಕನಸುಗಳು ಸಚ್ಚಿದಾಕಾಶದಲಿ +ದೇವತಾಪೃಧಿವಿ ಮೈದಡವಿದಾಗ ! +ಹರಿಗಡಿದ ಬಾಳಿನೊರತೆಯ ತೋಡೆ ಪ್ರೀತಿ ಜಲ +ಸೆಲೆಯೊಡೆದು ಬರೆ ಮಧುರಗೀತವಾಗಿ +ಹಲವನೆಲ್ಲವನುಳಿದು ಹಾಡಿ ಮೀಸಲುಗವಿತೆ +ಚೆಲುವನಲ್ಲಿಯೆ ಬೆರೆತೆ ಬಯಕೆ ಮಾಗಿ ! +“ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ”- +ಮೌನ ಕೋಗಿಲೆಯದನೆ ಧ್ಯಾನಿಸಿತ್ತು ! +ಸೂರ್ಯಕಾಂತಿಯ ಚಿತ್ತವದರ ಸುಳಿವಿಗೆ ಹೊರಳಿ +ಬೆಳಗಿನೊಳಗಿನ ಬೆಳಕು ಹೀರುತಿತ್ತು ! +ಇಲ್ಲಿ ಊರಿದ ಬೀಜವಲ್ಲಿ ಹಣ್ಣಾಗಿತ್ತು +ಆಕಾಶದಡವಿಯಲಿ ಕೊಂಬೆ ಚಾಚಿ ! +ಮರದ ನೆರಳಲಿ ತನ್ನ ನೆರಳನರಸಲು ಬಹುದೆ ? +ಅರಿತವರಿಗಂತದುವೆ ಆತ್ಮಸೂಚಿ ! +ತನುವು ನಿಸದಿಗೆಗಲ್ಲು ಮನವು ಮಾಸತಿಕಲ್ಲು +ನಿಮ್ಮ ಸಾಧನೆಯೊಂದು ವೀರಗಲ್ಲು ! +ಭಾವ ದೇವಾಲಯದಿ ನಿತ್ಯ ನಂದಾದೀಪ +ಶರಣು ಶರಣೆಂಬುದೇ ಕೊನೆಯ ಸೊಲ್ಲು ! +***** +ಕೀಲಿಕರಣ: ಎಂ ಎನ್ ಎಸ್ ರಾವ್ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್‍ ಚಂದ್ರ +೧ ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ ಆಶೆ ಬೀಜಗಳೆನಿತೊ ಮಡಿಲೊಳಿರಿಸಿ ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ ಹೊತ್ತು ನಿಂತಿಹಳಮಿತ ವೃಕ್ಷರಾಶಿ. ೨ ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು ಹುಣಿಸೆ […] +ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […] +ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿಹುರಿನಿಂತ ಛಲದಲ್ಲಿ ದುರುಗುಟ್ಟಿತು,ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿಗೆದ್ದ ಭಮೆ ಕಲಕೊಂಡು ಕವಿಯಾಯ್ತುಅನ್ಯಕೆ ಎಡೆಯಿರುವ ವಿನಯವಾಯ್ತು ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇತನ್ನಷ್ಟೆ ತಾನಾಗಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_767.txt b/Kannada Sahitya/article_767.txt new file mode 100644 index 0000000000000000000000000000000000000000..cb0dfb11b6247d2f5fb41118dcf569d7efc1c8a6 --- /dev/null +++ b/Kannada Sahitya/article_767.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನುಭವ ಇಲ್ಲದ ಕವಿತೆ ತಿಂಗಳು +ತುಂಬದ ಕೂಸು ಅವಸರವಸರದಿಂದ +ಉಸಿರಿಗಾಗಿ ವಿಲಿವಿಲಿಸುತ್ತ +ಹೊರ ಬರುತ್ತದೆ ಬಿಸಿಲಿಗೆ +ರಾತ್ರಿ ಅಂಗಡಿ ಮುಚ್ಚಿ +ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ +ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ +ತಪ್ಪಿ ಊಹಾತೀತಗಳ ಪರಸ್ಪರ ಧೈರ್ಯದ ಮೇಲೆ +ಸಂಪರ್ಕ ತಪ್ಪಿದ ವಿಮಾನದಂತೆ ಅಂತರಾಳದಲ್ಲಿ +ಚಡಪಡಿಸುತ್ತದೆ +ಹಳೆಮನೆಯ ಚೆಕ್ಕೆಗಳ ಒಡಕು ಹೆಂಚುಗಳ +ಒರಲೆ ಹತ್ತಿ ಲಡ್ಡಾದ ಜಂತಿಗಳ ತಂತಿಗಳ +ರಾಶಿ ರಾಶಿ ಅವಶೇಷಗಳ ನಡುವೆ ಹುಳು +ಹುಳಿಸಿ ಬೇಯುವ ಇಲಿಯ ಥರ +ಕವಿತೆ ರಕ್ತಕ್ಕಾಗಿ ನೋಯುತ್ತದೆ ತಿವಿದಂತೆ +ಮಾಂಸಕ್ಕಾಗಿ ಕೋಶಕ್ಕಾಗಿ ನರಮಂಡಲಕ್ಕಾಗಿ +ಕಾಯುತ್ತದೆ ಕಾಣದೆ ಹೆದರಿ ಬೆವರುತ್ತದೆ. +ಒಂದೆರಡು ಕಣ್ಣುಗಳ ಕುಕ್ಕಿ ಹೆಸರೆತ್ತಿ +ಅರಚಿ ಕೆಲವರ ಹೊಂದಿಸಿ ಹೊತ್ತಿಸಿ +ತರಕಾರಿ ಪಲ್ಯದಂತೆ ತವೆಯಲ್ಲಿ +ಸುಟ್ಟು ಸೀದು ಮಲೆನಾಡ ಘಟ್ಟ +ದ ದಾರಿಯ ಮೈಲಿಗಲ್ಲಂತೆ ಒಂಟಿ +ಯಾಗಿ ನಿಲ್ಲುತ್ತದೆ +ಹಾಯುವ ವಾಹನದ ಸದ್ದೆ ಈಗ +ಅದರ ಉಸಿರು +ಕಾಣದ ಊರೆ ಹೆಸರು +***** +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […] +ನೆನಪಿನಾಳದಿಂದ ಘಂ ಎಂದಿತ್ತು ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ ಬಟ್ಟಲಲಿ ಕಾದ ಕೇಸರಿ ಹಾಲು….. ಹನಿ ಹನಿ ಮಳೆ ಬಿದ್ದು […] +ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_768.txt b/Kannada Sahitya/article_768.txt new file mode 100644 index 0000000000000000000000000000000000000000..db5ead80ec400400d33a38c9dae7a4bf5876598c --- /dev/null +++ b/Kannada Sahitya/article_768.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಭೈರವಿ ತಾಳ — ರೂಪಕ +ನಾನು ನೀನು ಎನ್ನದಿರೋ ಹೀನಮಾನವ | +ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| +ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ | +ಅನ್ನದಿಂದ ಬಂದ ಕಾಮ ನೊನ್ನದೇನೆಲೊ || +ರ್ಣದಿಂದ ಬರುವ ಘೋಷ ನಿನ್ನದೇನೆಲೊ | +ನಿನ್ನ ಬಿಟ್ಟುಹೋದ ಜೀವ ನಿನ್ನದೇನೆಲೊ ||೧|| +ಹಲವು ಜನ್ಮದಿಂದ ಬಂದಿರುವನು ನೀನೆಲೊ | +ಮಲದ ಗರ್ಭದಲ್ಲಿ ನಿಂದಿರುವನು ನೀನೆಲೊ || +ಜಲದ ದಾರಿಯಲ್ಲಿ ಬಂದಿರುವನು ನೀನೆಲೊ | +ಕೆಲವು ಜಾತಿ – ಗೋತ್ರಗಳುಳ್ಳವನು ನೀನೆಲೊ ||೨|| +ಕಾಲ – ಕರ್ಮ ಶೀಲ – ನೇಮ ನಿನ್ನದೇನೆಲೊ | +ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ || +ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೊ | +ಲೋಲ ಆದಿಕೇಶವನ ಭಕ್ತನಾಗೆಲೊ ||೩|| +ರಾಗ — ಶಂಕರಾ‌ಅಭರಣ ತಾಳ — ಏಕ ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| ಹುತ್ತದೊಳಾಡುವ ಸರ್ಪ ಮತ್ತ […] +ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […] +ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_769.txt b/Kannada Sahitya/article_769.txt new file mode 100644 index 0000000000000000000000000000000000000000..fecd1386883d842ad6f0529cef4e1995816ae559 --- /dev/null +++ b/Kannada Sahitya/article_769.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ ಘಟನೆಗಳಿಗೆ ತರ್ಕ ಕುತರ್ಕಗಳ ಚೌಕಟ್ಟು ಹಾಕಿ ಕೊಳೆತ ಹಲ್ಲು, ಮೂಗುಗಳಿಂದ ಕೆಟ್ಟದಾಗಿ ನೆಗಾಡಿಕೊಳ್ಳುತ್ತಿದ್ದರು. ಅವರು ದುಃಖಿಸಲು ಸುಖಿಸಲು ಹಾಡಲು ಯೋಚಿಸಲು ಬೇಕಾದಷ್ಟು ಸಮಸ್ಯೆಗಳಿರುತ್ತಿದ್ದವು. ಆದರೆ ಯಾರೂ ಅಂತಹದ್ದಕ್ಕೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅಲ್ಲಿ, ಊರಲ್ಲಿ ಭಯಂಕರ ಸಾವುಗಳಿದ್ದವು. ಸತ್ತವರ ದುಃಖಗಳು ಜಗತ್ತನ್ನು ಸುಡಬಲ್ಲಂತಾಗಿದ್ದವು. ಹಸುಳೆಗಳ ಎಳೆ ಕನಸುಗಳ ಹಿಚುಕುವ ಕ್ರೂರತೆಗಳಿದ್ದವು. ಬೆನ್ನು ಮೂಳೆಯ ಸವೆಸುವ ಕುಯುಕ್ತಿಗಳಿದ್ದವು. ಮನುಷ್ಯನ ಎಲ್ಲ ನೀಚತನಗಳನ್ನು ಧ್ವಂಸಮಾಡಬಹುದಾದವೆಲ್ಲ ಚೈತನ್ಯವೂ ಅಲ್ಲಿ ಅವರಲ್ಲಿ ಎಲ್ಲವೂ ಇತ್ತು. ಇದ್ದರೂ ಅವೆಲ್ಲ ಉಪಯೋಗಕ್ಕೆ ಬರುತ್ತಿರಲಿಲ್ಲ, ಯಾವುದಕ್ಕೆ ದುಃಖಿಸಬೇಕೋ ಅದಕ್ಕೆ ನಗುತ್ತಿದ್ದರು, ಯಾವುದಕ್ಕೆ ನಗಬೇಕೋ ಅದಕ್ಕೆ ವ್ಯಗ್ರರಾಗುತ್ತಿದ್ದರು. ಮನುಷ್ಯ ತನ್ನ ದುಃಖಕ್ಕೆ ಸೋಲಿಗೆ ಕಾರಣ ಕಂಡುಕೊಳ್ಳದೇ ಹೋದಾಗ ಏನೆಲ್ಲ ಆಗಬಹುದೋ ಅಂತಹದೆಲ್ಲ ಸರಾಗವಾಗಿ ಊರಲ್ಲಿ ಜರುಗುತ್ತಿತ್ತು. +ಇಂಥ ವೇಳೆಯಲ್ಲಿ ನಾಯಿತಲೆ ಕಾಳಣ್ಣ ರೇಗಿ ಹೋಗಿ `ಈ ಕಲ್ಲಿಪಿಲ್ಲಿ ಹೈಕ್ಳು ತಾವೂ ಮಾನ್ವಾಗಿರ್ದೆ, ನಮ್ನೂ ಬೀದಿರಂಗುಕ್ ತಂದು ಕೋಡಂಗಿ ಮಾಡ್ಬುಡ್ತವೆ ಬಡ್ಡೆತ್ತವು’ ಎಂದು ಬೇಸರದ ಮಾತುಗಳಿಗೆಲ್ಲ ಅವನದೇ ರಂಗು ನೆಲೆಯ ತಾತ್ವಿಕತೆಯನ್ನು ಕೊಡುತ್ತ ಎದುರು ಕುಳಿತ ಮುದುಕರಿಂದ `ಸೈ’ ಎನ್ನಿಸಿಕೊಳ್ಳುತ್ತಿದ್ದ. ಊರಿನ ಗುಂಡೇಗೌಡರು ಸೈಕಲ್ ಮೇಲಿಂದ ಬಿದ್ದು ಫಜೀತಿಯಾದುದರ ಬಗ್ಗೆ ಕೇರಿಯ ಆ ಜನರೆಲ್ಲ ಆಗಾಧವಾಗಿ ಚರ್ಚಿಸುತ್ತಿದ್ದರು. ಸಮಸ್ಯೆಗೆ ಕಾರಣವೆಂದು ತಿಳಿದ ಹುಡುಗರು ಈಗ ಎದುರಿಗೆ ಬಂದರೆ ತಿಕದ ಮೇಲೆ ಸಮಾ ನಾಲ್ಕು ಬಾರಿಸಬೇಕೆಂದು ಕೆಲವರು ಕಾದರು. ಗುಂಡೇಗೌಡರು ಆ ಮುಂಜಾವದಲ್ಲೇ ಸೈಕಲ್ ಬೆಂಡ್ ತೆಗೆಸಿ, ತೆಂಗಿನೆಣ್ಣೆಯಲ್ಲಿ ಹೊಳಪುಗೊಳಿಸಿ ಥಳಥಳ ಮಿನಿಗುವ ರಿಮ್ ಮತ್ತು ಕಡ್ಡಿಗಳಲ್ಲಿ ಸುಖವಾಗಿ ತುಳಿಯುತ್ತಾ ಬರುವಾಗ ಆಗ ಬಾರದ್ದೆಲ್ಲ ಆಗಿಹೋಗಿತ್ತು. ಹಾಗೆ ಸೈಕಲ್ ಮೇಲೆ ಬರುವಾಗ ಆ ಹಡೆಬೀ ಹೆಂಗಸರು ಥೇಟ್ ಬೆದೆ ಎಮ್ಮೆಯ ಹಾಗೆ ಕಾಣಿಸಿಕೊಳ್ಳಬಾರದಿತ್ತೆಂದು ಶಪಿಸಿಕೊಂಡರು. ಈ ವಿಷಯದಲ್ಲಿ ಯಾರಿಗೆ ಶಿಕ್ಷೆ ವಿಧಿಸುವುದೆಂದು ಗೊಂದಲಗೊಂಡರು. ಆ ಮೊಂಡು ಅಗಸನಿಗೆ ಹೇಳಿ ಹೇಳಿ ಗೌಡರಿಗೆ ಸಾಕಾಗಿತ್ತು. ನಿನ್ನ ಕತ್ತೆಗಳನ್ನು ಕಟ್ಟಿಕೊಂಡು ಸಾಕು ಎಂದು ಹೇಳಿದ್ದಾಗ, “ಅದೆಂಗಾದ್ದು ಗೌಡ್ರೆ. ಕತ್ತೆಗಳ ಗೂಟುಕ್ ಕಟ್ಟಿ ಸಾಕೂಕೆ ಅದೇನು ಎತ್ತೊ ಎಮ್ಮೆಯೋ, ಆಯ್ಕನ್‌ಪಾಯ್ಕಂಡು ಏನಾರ ತಿಂದ್ ಬಿದ್ಕುವಾ ಕಟ್ಟಾಕುದ್ರೆ ಆದದೆ.” ಎಂದು ಬಿಟ್ಟಿದ್ದ. ಆದರೆ ಗೌಡರಿಗೆ ಈಗ ಮಾತ್ರ ಅಗಸನ ಬಗೆಗೂ ಅವನ ಕತ್ತೆಗಳ ಬಗೆಗೂ ಅಸಾಧ್ಯ ಸಿಟ್ಟು ಏರಿತ್ತು. +ಜನ ಸಾಂಗವಾಗಿ ಆಕಳಿಕೆ ಮೈಮುರಿಕೆಗಳಿಂದಲೂ, ಜೊಂಪು ಮೈಮನಗಳಿಂದಲೂ ಏನೇನೋ ಮಾತನಾಡುತ್ತಾ ಸದ್ಯದ ಗೌಡರ ಫಜೀತಿಯ ಬಗ್ಗೆ ಗೋಷ್ಠಿಯೊಂದನ್ನು ಹಮ್ಮಿಕೊಂಡಿದ್ದರು. +ಗುಂಡೇಗೌಡರು ಇವತ್ತು ಹೊಲಗೇರಿಯ ಹುಡುಗರಿಂದಲೂ, ಅಗಸರ ಕತ್ತೆಗಳಿಂದಲೂ ಎಲ್ಲರ ಎದಿರೂ ತಿಪ್ಪೆಗಳ ಮೇಲೆ ಬಿದ್ದು ಅಪಮಾನಕ್ಕೀಡಾಗಿದ್ದರು. ಬಿದ್ದು ಮಂಡಿ ಮೊಳಕೈ ಪರಚಿಕೊಂಡು, ಪಿಲ್ಲೆ ಪಂಚೆಯೆಲ್ಲ, ಬೂದಿ, ತೊಪ್ಪೆ ಏಲು, ಕಸಗಳಿಂದಾಗಿ ಗಲೀಜಾಗಿಬಿಟ್ಟಿತ್ತು. ಬೇಸಿಗೆಯ ರಜವಾದ್ದರಿಂದ ಹೊಲಗೇರಿಯ ಸಣ್ಣ ಹುಡುಗರು ಎರಡು ಕತ್ತೆಗಳನ್ನು ಉಪಾಯದಿಂದ ಹಿಡಿದು ಅವುಗಳ ಸೊಂಟಕ್ಕೆ ಟಿನ್ನುಗಳ ತಗಟನ್ನು ಭದ್ರವಾಗಿ ಕಟ್ಟಿ, ಕಲ್ಲು ಜಲ್ಲಿಯ ರಸ್ತೆ ಮೇಲೆ ಬಿಟ್ಟು ಕೂಗಾಡಿ ಕಿರುಚಿದ್ದರು. ಅವರ ರಾಕ್ಷಸ ಕರ್ಕಶ ಶಬ್ದಕ್ಕೂ, ಸೊಂಟದಲ್ಲಿ ಗಂಟು ಬಿದ್ದು ಸಾವಿನ ಗಂಟೆಯಂತೆ ಶಬ್ದ ಸೃಷ್ಟಿಸಿದ ಟಿನ್ನುಗಳ ದೆಸೆಯಿಂದಲೂ, ಆ ಕತ್ತೆಗಳು ಸತ್ತಿವೋ ಕೆಟ್ಟಿವೋ ಎಂಬಂತೆ ಅಸಾಧ್ಯ ವೇಗದಲ್ಲಿ ಯಾವ ಅಥ್ಲೆಟನ್ನೂ ಮೀರಿಸುವಂತೆ ಓಡತೊಡಗಿದ್ದವು. ಕಾಕತಾಳೀಯ ಎಂಬಂತೆ ಆಗಲೇ ಎದುರಿಂದ ಬಡಕಲಾದ ಬಸ್ಸೊಂದು ವರ್ರೋ ಎನ್ನುತ್ತ ಬರುತ್ತಿತ್ತು. ಕತ್ತೆಗಳ ಓಟ ಕಂಡ ಡ್ರೈವರ್ ಬ್ರೇಕ್ ಹಾಕಿ ಇನ್ನೊಂದು ದೊಡ್ಡ ಹಾರನ್ ಮಾಡಿದ. ಕತ್ತೆಗಳು ದಿಕ್ಕು ತೋಚದೆ ಇದ್ದ ಅಡ್ಡದಾರಿಗೆ ತಕ್ಷಣವೇ ನುಗ್ಗಿದವು. ದುರಂತವೆಂದರೆ ಹಾಗೆ ಕತ್ತೆ ನುಗ್ಗಿದ್ದೇ ತಡ ಗೌಡರು ಕತ್ತೆಗಳಿಗೆ ಮುಖಾಮುಖಿಯಾಗಿ ಯಾವ ತಡೆಯೂ ಇಲ್ಲದೆ ಡಿಕ್ಕಿ ಹೊಡೆದು ಸ್ಥೂಲ ದೇಹವನ್ನು ಸೈಕಲ್‌ನಿಂದ ಜಂಪ್ ಮಾಡಿಸಿಬಿಟ್ಟಿದ್ದರು. ಜಂಪ್ ಮಾಡುವಾಗ ಪಕ್ಕ ಏನಿದೆಯೆಂದು ಯೋಚಿಸಿ ನಂತರ ಬೀಳೋಣ ಎಂಬ ದಡ್ಡತನಕ್ಕೆ ಗೌಡರು ಹೋಗಿರದೆ, ಏಕದಂ ಬಿದ್ದಿದ್ದರು. ಅಲ್ಲಿ ಸಾಲಾಗಿ ಹೊಲೆಯರ ತಿಪ್ಪೆಗಳು ಕುಳಿತಿದ್ದವು. ಆಯಾಯ ತಿಪ್ಪೆಗಳಲ್ಲಿ ಆಯಾಯ ಮನೆಯವರು, ಉಳಿದವರೂ ಬಂದು ಕಕ್ಕಸ್ಸು ಮಾಡುತ್ತಿದ್ದರು. ಕೋಳಿಗಳು ಅವನ್ನೆಲ್ಲ ಕೆರೆದು ತಿಪ್ಪೆಯ ತುಂಬ ಹರಡಿರುತ್ತಿದ್ದವು. ಗೌಡರು ಬಿದ್ದ ತಕ್ಷಣ ಮೇಲೆದ್ದು ಮೈ ಕೈ ಒರೆಸಿಕೊಂಡು ನಿಂತು ಸುತ್ತಮುತ್ತ ನೋಡಿದರು. ಹಾಳಾದ ಬೇವರ್ಸಿ ಹೊಲೆಯರು ಗೌಡರು ಈಗ ಬೀಳುತ್ತಾರೆ ಎಂದು ಕನಸು ಕಂಡಿದ್ದವರಂತೆ ಅಲ್ಲಿ ಬಂದು ನಿಂತದ್ದನ್ನು ಕಂಡು ಅಪಮಾನವಾಗಿ ರೋಸಿಹೋದರು. ಕತ್ತೆಗಳು ಎಲ್ಲೋ ಮಾಯವಾಗಿದ್ದವು. ಅಷ್ಟರಲ್ಲೇ ಯಾರೋ ಕತ್ತೆಗಳಿಗೆ ಡಿಕ್ಕಿ ಹೊಡೆದು ಬಿದ್ದರೆಂದು ಹುಡುಗರು ಓಡಿಬಂದು ನೋಡಿದರು. ಈ ಹುಡುಗರೇ ಇದಕ್ಕೆಲ್ಲ ಕಾರಣವೆಂದು `ಥೂ ಲುಚ್ಚಾ ನನ್ ಮಕ್ಕಳಾ, ನಿಮ್ಮೊದೀರ್ ತಿಕುಕ್ ಕಟ್ಟುರ್ಲಾ ಟಿನ್ನಾ’ ಎಂದು ಗೌಡರು ಕೂಗಾಡಿದರು. ಹುಡುಗರು ಮಾಯವಾದರು. ಸೈಕಲ್ ನಿಶ್ಪಾಪಿಯಂತೆ ಬಿದ್ದಿತ್ತು. ಹೊಲಗೇರಿಯವರು ಗೌಡರ ಈ ಬಣ್ಣದವೇಷ, ಅವತಾರ ಕಂಡು ನಕ್ಕುನಕ್ಕು ಸುಸ್ತಾಗಿ ಕೊನೆಗೆ ಹೆದರಿ ತೆಪ್ಪಗಾದರು. ಸೈಕಲ್ ಹತ್ತಿ `ಇರ್ಲಿ; ಸರಯಾಗ್ ಬುದ್ದಿ ಕಲಿಸ್ತೀನಿ’ ಎಂದು ಹೊರಟರು. ಯಾವುದೋ ಹುಂಜ ಕೋಳಿಯೊಂದನು ಮೆಟ್ಟಲು ಅಟ್ಟಿಸಿಕೊಂಡು ಅಡ್ಡ ಬಂತು. ತಕ್ಷಣ ಗೌಡರು ಬ್ರೇಕ್ ಹಾಕಿದರು. ಅಲ್ಲಿ ಬ್ರೇಕೇ ಇರಲಿಲ್ಲ. ಸೈಕಲ್ ರಿಪೇರಿ ಮಾಡಿದ್ದವನು ಗಡಿಬಿಡಿಯಲ್ಲಿ ಇದ್ದುದರಿಂದಲ್, ಅವನ ಎದುರೇ ಮಾವಿನ ಹಣ್ಣು ಮಾರುತ್ತ ಕುಳಿತಿದ್ದ ಭದ್ರಿಯ ಮೊಲೆಗಳ ಮತ್ತಲ್ಲಿ ಬ್ರೇಕನ್ನು ಸೈಕಲ್ಲಿಗೆ ಸರಿಯಾಗಿ ಜೋಡಿಸುವುದನ್ನೇ ಮರೆತಿದ್ದ. ಗೌಡರು ದಾರಿಯಲ್ಲಿ ಬರುವಾಗ ಈ ಹಿಂದೆ ಬ್ರೇಕ್ ಹಾಕುವ ಪ್ರಮೇಯವೇ ಬಂದಿರಲಿಲ್ಲ. ಕತ್ತೆಗಳಿಗೆ ಡಿಕ್ಕಿ ಹೊಡೆವ ಮುನ್ನ ಅವರು ಬ್ರೇಕ್ ಹಾಕಿದ್ದು ನಿಜ. ಆದರೆ, ಆ ಸಂದರ್ಭದಲ್ಲಿ ಬ್ರೇಕ್ ಕೈಕೊಟ್ಟಿದೆ ಎಂಬ ಅರಿವು ಬಂದಿರಲಿಲ್ಲ. ಈಗ ಸತ್ಯದ ಅರಿವಾದಂತೆ ಬೆಚ್ಚಿದರು. ದಾರಿಯ ಉದ್ದಕ್ಕೂ ಜನರು ಗೌಡರು ಈ ಬಗೆಗೆ ವಿವರ ಕೇಳಿ ಕೇಳಿ ಅವರು ಹೇಳಿ ಹೇಳಿ ಬೇಸರ, ಸಿಟ್ಟು, ಅಪಮಾನಗಳು ಹಿಂಡಾಗಿ ಅವರ ಸುಲಿದು ಇದೆಲ್ಲ ಹೀಗಾಗಲು ಒಬ್ಬ ಇಬ್ಬರಲ್ಲ ಕಾರಣ. ಇಡಿಯಾಗಿ ಊರೇ ತನ್ನ ಈ ಸ್ಥಿತಿಗೆ ಜವಾಬ್ದಾರವಾಗಿದೆ ಎಂದುಕೊಂಡು ಮನೆಗೆ ಬಂದರು! +ಈ ಹಾಳು ಕತ್ತೆಗಳು, ಹುಡುಗರೋ, ಬೈಸಿಕಲ್ ಬ್ರೇಕೋ, ಇಲ್ಲವೇ ರಿಪೇರಿ ಮಾಡಿದವನೋ ಅಥವಾ ಭದ್ರಿಯ ಮೊಲೆಗಳೋ, ಗೌಡರ ತಲೆಯಲ್ಲೂ ನಲಿದ ಆ ಹಡಬೇ ಬೆದೆ ಎಮ್ಮೆ ಹೆಂಗಸರೋ, ಆ ಫಜೀತಿಗೆ ನಕ್ಕು ಸುಸ್ತಾದ ಹೊಲಗೇರಿಯ ನಗೆಗಳೋ, ಮನುಷ್ಯನ ಕ್ಷುದ್ರತೆಗಳೋ – ಒಟ್ಟಿನಲ್ಲಿ ಯಾವುದೂ ಗೊತ್ತಾಗದಂತೆ ಇವಿಷ್ಟೇ ಆ ಊರ ಜನರ ಮಹತ್ವದ ಸಮಸ್ಯೆಗಳಂತೆ ಸವಾಲುಗಳಂತೆ ಏರ್ಪಟ್ಟು, ಈಗ ಹೊಲಗೇರಿಯ ಜನರಿಗೆ ಗೌಡರಿಂದ ಶಿಕ್ಷೆಗಳು ವಿಧಿಸಲ್ಪಟ್ಟವು. ಹೊಲಗೇರಿಯಲ್ಲಿ ತೋಡಿದ್ದ ಮುತ್ತಾತಂದಿರ ಕಾಲದ ಬಾವಿಗಳು ಮುಚ್ಚಿ ಜಲ ಬತ್ತಿ ಹೋಗಿ ನೀರಿಲ್ಲದಾಗಿತ್ತು. ಸರ್ಕಾರ ಕೂರಸಿದ್ದ ಒಂದೇ ದರಿದ್ರ ಬೋರ್‌ವೆಲ್ ಹಲವಾರು ಹುಡುಗರು ಢಣಾರ್ ಢಣಾರ್ ಎಂದು ಅತಿ ಅನವಶ್ಯಕವಾಗಿ ನೀರೂರುತ್ತಿದ್ದರಿಂದ ಮುರಿದುಬಿದ್ದಿತ್ತು ಹಾಗಾಗಿ ಹೊಲೆಯರು ಗೌಡರ ತೋಟದ ಮಿಷನ್ ಬಾವಿ ನೀರನ್ನೇ ಎಲ್ಲದಕ್ಕೂ ಬಳಸಿಕೊಳ್ಳುವಂತಾಗಿತ್ತು. ವ್ಯವಸಾಯಕ್ಕೆ ಮಾತ್ರ ತೋಡಿಸಿದ್ದ ಬಾವಿ ಅದಾಗಿದ್ದರಿಂದ, ಆ ಬಾವಿನೀರು ತೆಗೆದುಕೊಳ್ಳುವುದಕ್ಕೆ ಯಾವ ಜಾತಿ ಆಡ್ಡಿಯನ್ನೂ ಗೌಡರು ತಂದೊಡ್ಡಿರಲಿಲ್ಲ. ಈಗ ಮಾತ್ರ ತಿಪ್ಪೆಗಳ ಮೇಲೆ ಬಿದ್ದನಂತರ ಹೊಲೆಯರು ತನ್ನ ಬಾವಿ ನೀರಿಗೆ ಬರಬಾರದೆಂತಲು, ಬಂದರೆ ಅವರನ್ನು ಅಲ್ಲೇ ಕೊಂದು ಬಾವಿಗೆ ತಳ್ಳಿಸುತ್ತೇನೆ ಎಂತಲೂ ಹಮ್ಮುರಬಿ ಕಾನೂನನ್ನು ಜಾರಿಗೊಳಿಸಿಬಿಟ್ಟಿದ್ದರು. ಕೇರಿಯ ಜನ ಈ ಕ್ಷಣವೇ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕೆಂದು ಪ್ರಯತ್ನಿಸುವ ಬದಲು ಒಂದು ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಡುವಂತೆ ನಾನಾ ಬಗೆಯ ಶೋಧನೆ, ಆರೋಪ, ಪರಾಮರ್ಷೆಗಳ ಪರಿಕಲ್ಪನೆಗಳಲ್ಲಿ ಬಿದ್ದು ಹುಳುಗಳ ಹಾಗೆ ವಿಲಿವಿಲಿಸತೊಡಗಿದರು. ಕೆಲವರು ದುಃಖಿಗಳ ಹಾಗೆ ಪರಿತಪಿಸಿ ಕೈಕಟ್ಟಿ ಹಣೆಬರಹದ ಜೊತೆ ಯುದ್ಧ ಸಾರಿ ಕುಳಿತವರು. ಇನ್ನಾರೋ ಡಬ್ಬ ಕಟ್ಟಿದ ಹುಡುಗರನ್ನು ಮನಸೋ ಇಚ್ಛೆ ಬೈಯುತ್ತಾ ಲೈಂಗಿಕ ಶಬ್ದ ಭಂಡಾರಗಳ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. +ಇದೆಲ್ಲ ಹೀಗೆ ಆಗುತ್ತಿರುವ ಹೊತ್ತಿಗೆ ಗೌಡರು ಬಿಸಿ ನೀರಿನ ಸ್ನಾನ ಮಾಡಿ ದೇವರಿಗೆ ಕಡ್ಡಿ ಹಚ್ಚಿ, ಹೊಲೆಯರ ತಿಪ್ಪೆಗಳಿಗೆ ಬಿದ್ದದ್ದು ಎಲ್ಲದಕ್ಕಿಂತಲೂ ಕೀಳಾದ ಸ್ಥಿತಿ ಎಂದು ನಂಬಿ – ಏನೆಲ್ಲಾ ಯೋಚಿಸುತ್ತಾ ಊರಿನ ಒಂದೊಂದು ಮುಖಗಳನ್ನು ಎದುರಿಗೆ ತಂದುಕೊಂಡರು. ನಾಯಿ ತಲೆ ಕಾಳಣ್ಣನೂ ಅವರ ಎದಿರು ಬಂದ. ಕಾಳಣ್ಣನಿಗೆ ಗೊತ್ತಿದ್ದೋ ಗೊತ್ತಿಲ್ಲದಂತೆಯೋ, ಗೌಡರ ಫಜೀತಿಯ ವ್ಯೂಹದೊಳಗೆ ಆತನೂ ಸಿಲುಕಿದ್ದ. ಕೆಲವು ದಿನಗಳ ಹಿಂದೆ ಕಡ್ಲೆಪೊಪ್ಪು ಖರ್ಜೂರ ಮಾರುವ ಸಾಬಿಯ ಬಳಿ ತಗಾದೆ ತೆಗೆದು ಆತ ಎಲ್ಲೋ ಪಡೆದು ಬಂದಿದ್ದ ಎಂಟು ಟಿನ್ನುಗಳನ್ನು ಕಾಳಣ್ಣ ವಶ ಪಡಿಸಿಕೊಂಡಿದ್ದ. ಆಗ ಆತನ ಹೆಂಡತಿ ಏನೋ ವ್ಯಾಪಾರ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಸಾಬಿಯನ್ನು ಹಿಡಿದು ತನ್ನ ಹೆಂಡತಿಯ ಜೊತೆ ಗುಟ್ಟು ಸಂಬಂಧ ಹೊಂದಿದ್ದಾನೆಂದು ಮುಸುಡಿಯ ಮೇಲೆ ನಾಲ್ಕು ಬಾರಿಸಿಬಿಟ್ಟಿದ್ದ. ಇದು ಯಾವ ಗ್ರಾಚಾರವೋ ಎಂದು ಆತ ಅಲ್ಲಾನ ಹೆಸರೇಳಿ ಟಿನ್ನುಗಳನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ನಂತರಕ್ಕೆ ಆ ಟಿನ್ನುಗಳನ್ನು ಉಪಯೋಗಿಸದೆ ಒಂದೆಡೆ ಬಿಸಾಡಿದ್ದಾಗ ಕೆಲವು ಹುಡುಗರು ಬಂದು ಆ ಟಿನ್ನುಗಳನ್ನು ಕೇಳಿ, ತಮಗೆ ತಮಟೆ ಬಡಿಯಲು ಬಾರದೆಂತಲೂ, ಟಿನ್ನುಗಳನ್ನು ಕೊಟ್ಟರೆ ಅವನ್ನೇ ತಮಟೆಯಾಗಿಸಿಕೊಂಡು ಪ್ರಾರಂಭಿಕ ಗಸ್ತಿಗಳನ್ನು ಹಾಕಿ ಕಲಿಕೆಯ ಪ್ರಯೋಗ ಮಾಡುತ್ತೇವೆಂದು ಬೇಡಿಕೊಂಡಿದ್ದರು. ಈ ಚಿಕ್ಕ ಹುಡುಗರಿಗೆ ಚರ್ಮದ ತಮಟೆಗಳನ್ನು ದೊಡ್ಡವರು ಕೊಡುತ್ತಲೂ ಇರಲಿಲ್ಲ. ಕಾಳಣ್ಣನಿಗೆ ಹುಡುಗರ ಬುದ್ಧಿಗೆ ಮನಸ್ಸು ನಲಿದಾಡಿತು. ಕಾಲೇಜು ಓದುತ್ತಿರುವ ತಮ್ಮ ಜಾತಿಯ ಪುಂಡು ಹುಡುಗರು ತಮಟೆಯನ್ನು ಕಂಡರೆ ಹುಲಿ ಕಂಡಂತೆ ಓಡಿ ಅವನ್ನು ತೂತು ಮಾಡಿ; ನಮ್ಮ ಜಾತಿಯನ್ನೆಲ್ಲ ತಮಟೆ ಮೂಲಕ ಹರಾಜು ಹಾಕುತ್ತೀರಿ ಎಂಬ ಗದ್ದಲವೆಬ್ಬಿಸಿದ್ದನ್ನು ನೆನೆಸಿಕೊಂಡು – ಹುಡುಗರಿಗೆ ಕರುಣೆ ತೋರಿ ಭರ್ಜರಿಯಾದ ಮೂರು ಟಿನ್ನುಗಳನ್ನು ಕೊಟ್ಟುಬಿಟ್ಟಿದ್ದ. ಆ ಟಿನ್ನುಗಳನ್ನು ಹಿಡಿದು ಮೊದಲು ಹುಡುಗರು ಮನೆಗಳ ಹಿತ್ತಲಿನಲ್ಲಿ ಮನಸೋ ಇಚ್ಛೆ ಬಡಿದು, ಸಾವಿರಾರು ತಮಟೆ ನಗಾರಿಯ ಗಸ್ತಿಗಳನ್ನು ಕಲಿತವರಂತೆ ಹೊಡೆದು ಜನರ ಕಿವಿಗಳನ್ನು ಧ್ವಂಸಮಾಡಿದ್ದರು. ಬೇಸತ್ತವರು ಬಂದು ಹುಡುಗರನ್ನು ಹಿಡಿದು ಬೈದು `ಲುಚ್ಚಾ ನನ್ನ ಮಕ್ಳಾ’ ಯಾವ್ ಗಸ್ತಿಯೂ ನೀವ್ ಕಲಿಯೋದು; ಮೌನವಾಗಿ ಇಸ್ಕೂಲ್‌ಗೋಗೋದು ಬುಟ್ಟು’ – ಎಂದು ಹೇಳಿ; ಇನ್ನೊಮ್ಮೆ ಈ ಟಿನ್ನುಗಳನ್ನು ಕಂಡರೆ ನಿಮ್ಮ ಕೈಗಳನ್ನೇ ತುಂಡರಿಸಿ ಬಿಡುತ್ತೇವೆಂದು ಹೆದರಿಸಿಬಿಟ್ಟರು. ಹೀಗಾಗಿ ಹುಡುಗರು ಬೇಸರಗೊಂಡು ಅಸಹಾಯಕರಾಗಿ ನೊಂದು ಸಿಟ್ಟಾಗಿ, ಈ ಟಿನ್ನುಗಳ ಸಹವಾಸವೇ ತಮಗೆ ಬೇಡ ಎಂದುಕೊಂಡು ಇನ್ನೆಂದೂ ಈ ಟಿನ್ನುಗಳು ನಮ್ಮ ಕೈಗೆ ಸಿಗದಿರಲಿ ಎಂಬ ವ್ಯಾಕುಲದಿಂದ ಬಂದು; ಆ ಹುಡುಗರು ಎಲ್ಲೋ ಎರಡು ಉದ್ದ ಸಣ್ಣ ತಂತಿಗಳ ತಂದು ಕಾಳಣ್ಣ ಕೊಟ್ಟಿದ್ದ ಟಿನ್ನುಗಳ ರಂಧ್ರಕ್ಕೆ ಹಾಕಿ ನುಲಿದು ಕೊನೆಗೆ ಕತ್ತೆಗಳ ಸೊಂಟಕ್ಕೆ ಬಿಗಿಯಾಗಿ ಫಿಚಂಡಿ ಕಟ್ಟಿನಂತೆ ಕಟ್ಟಿಬಿಟ್ಟಿದ್ದರು. ಎಷ್ಟೋ ದೂರ ಕತ್ತೆಗಳು ಎಲ್ಲೆಲ್ಲೋ ಓಡಿದ ಮೇಲೆ ಆ ಡಬ್ಬಗಳು ತಮಗೂ ಉಳಿದವರಿಗೂ ಯಾರ ಕೈಗೂ ಸಿಗಿದಂತಾಗಿ ಎಲ್ಲೋ ಬೀಳುತ್ತವೆಂದು ಹುಡುಗರು ನಂಬಿ ಈ ಕೆಲಸ ಮಾಡಿದ್ದರು. +ಹೀಗೆ ಆ ಸಾಬಿಯ ಟಿನ್ನುಗಳು ಕಾಳಣ್ಣನನ್ನು ಸೇರಿ, ಅಲ್ಲಿಂದ ಆ ಹುಡುಗರನ್ನು ತಲುಪಿ ಮತ್ತೆ ಅವು ಕತ್ತೆಗಳ ಸೊಂಟಕೂಡಿ, ಈಗ ಕೊನೆಗೆ ಗೌಡರ ಸಿಟ್ಟಿನ ಶಬ್ದವಾಗಿ ವ್ಯಗ್ರವಾಗಿ ಊರಿನ ನಗೆ ವಿಷಾದದ ದುರಂತದಂತೆ ಹಬ್ಬಿ; ಹೊಲಗೇರಿಯ ಜನರ ಬಾಯಿಗೆ ಗೌಡರ ತೋಟದ ಸಿಹಿನೀರು ತಪ್ಪಿಹೋಗುವಂತೆ ಆಗಿದ್ದವು. ಕೊಬ್ಬು ಹೆಚ್ಚಿರುವ ಕೇರಿಯವರಿಗೆ ಬುದ್ಧಿ ಕಲಿಸಲು ಇದು ಒಳ್ಳೆಯ ಸಮಯ ಎಂದು ಗೌಡರು ಆಲೋಚಿಸುತ್ತಾ, ಅವರು ತಿಪ್ಪೆಯ ಮೇಲೆ ಬಿದ್ದಾಗ ಉಂಟಾದ ರೇಜಿಗೆ ನೆನಪಾದಂತೆಲ್ಲಾ ಹೊಸ ಹೊಸ ದಂಡನೆಗಳನ್ನು ಹೇರುತ್ತಾ ಹೋದರು. ಕೇರಿಯ ಜನರು ಕಸ ಬೂದಿ ಇತ್ಯಾದಿಗಳನ್ನು ಹಾಕಲು ಸ್ವಂತ ಸ್ಥಳವಿಲ್ಲದ್ದರಿಂದ, ಗೌಡರ ತೋಟದ ಬೇಲಿಸಾಲಿನಲ್ಲೇ, ಬೇಲಿಯನ್ನೂ ಒಳಗೂಂಡಂತೆ ಕಸ ಸುರಿದುಕೊಳ್ಳುತ್ತಿದ್ದರು. ಇಂತಹ ಒಂದು ತಿಪ್ಪೆಯ ಮೇಲೆ ಗೌಡರು ಬಿದ್ದಿದ್ದಾಗಿತ್ತು. ಹಿಂದುಮುಂದು ತರ್ಕಿಸದೆ – `ಆ ಬೊಡ್ಡಿ ಹೈಕಳು ಅಲ್ಲೇನಾರ ಕಕ್ಕಸ್‌ಗಂತ ಚೆಡ್ಡಿ ಬಿಚ್‌ಕತ ಕುಂತ್ರೆ ಕಾಯಿಸಿದ್ ಕಬ್ಬಿಣವ ತಗಂಡೋಗಿಡ್ರಲಾ’ ಎಂತಲೂ `ಆ ತಿಪ್ಪೆ ಗೊಬ್ರೆನೆಲ್ಲ ತೋಟಕ್ ತುಂಬಿ ಜಾಗ ಕಾಲಿ ಮಾಡ್ಸಿ’ ಎಂತಲೂ ಹೇಳಿ ತಿಪ್ಪೆಗಳಿಗೂ ಅವರು ಬಾರದಂತೆ ಆಜ್ಞೆ ಹೊರಡಿಸಿದರು. ಒಂದಾದ ಮೇಲೊಂದರಂತೆ ಸಿಟ್ಟು ಹೇರಿ ಅಪಮಾನ ರಂಗಾದಂತೆಲ್ಲ ಅಸ್ವಸ್ಥರಾಗುತ್ತ, ಏನೇನೋ ಹೇಳುತ್ತ ಕೊನೆಗೆ ರಾಗಿನಾಟ ಹಣವನ್ನು ಕೇರಿಯ ಕೆಲವು ಹೆಂಗಸರಿಗೆ ಕೊಡಬೇಕಾಗಿದ್ದನ್ನು ಕೊಡುವುದಿಲ್ಲಾ ಎಂತಲೂ ಯಾರ ಕೈಲೋ ಹೇಳಿಕಳಿಸಿದರು. ಇದಕ್ಕೆಲ್ಲ ಇಡೀ ಕೇರಿ ಜನರೇ ಕಾರಣ ಎಂದು ಕುಣಿದಾಡಿದರು. ಈ ಎಲ್ಲ ನಿರ್ಣಯಗಳು ಕೇರಿಯಲ್ಲಿ ಬಿಸಿ ಹುಟ್ಟಿಸಿದವು. ಗಂಭೀರವಾಗಿ ಇದನ್ನೆಲ್ಲ ಸ್ವೀಕರಿಸಿದ ಕೆಲವರು ಹಾಸ್ಯಾಸ್ಪದವಾಗಿ ದೊಡ್ಡ ಗೋಷ್ಠಿಯನ್ನಾಗೇ ವಿಸ್ತರಿಸುತ್ತಾ ಮಾತನಾಡುತ್ತಲೇ ಬೀಡಿ ಮೋಟುಗಳನ್ನು ಮತ್ತೆ ಮತ್ತೆ ಸುಡುತ್ತಿದ್ದರು. +ಕತ್ತೆಗಳ ಪತ್ತೆಯಿರಲಿಲ್ಲ. ಈ ಘಟನೆಯಾದ ಮೇಲೆ ಕತ್ತೆಗಳನ್ನು ಅಗಸರ ಮಾದಪ್ಪ ಹುಡುಕಾಡಿಕೊಂಡು ಹೊರಟಿದ್ದ. ಡಬ್ಬ ಕಟ್ಟಿ ಬಿಟ್ಟವರನ್ನು ಬಾಯಿಗೆ ಬಂದಂತೆಲ್ಲ ಬೈಯುತ್ತಾ, ಆ ಎಲ್ಲ ಬೈಗಳನ್ನೂ ಹೊಲಗೇರಿಗೆ ಸಾರ್ವತ್ರೀಕರಣಗೊಳಿಸುತ್ತಾ ತನ್ನ ಕತ್ತೆಗಳು ಈಗ ಸಿಗದೇ, ಎಲ್ಲಿಯಾದರೂ ಓಡುವಾಗ ಬಿದ್ದು ಪೆಟ್ಟು ಆಗಿದ್ದರೆ, ಅದಕ್ಕೆಲ್ಲ ದಂಡವನ್ನು ಹೊಲೆಯರು ಕಟ್ಟಬೇಕೆಂತಲು, ಆಗಲಿಲ್ಲಾ ಎಂದರೆ – ಸಮಸ್ಯೆ ಕೈ ಮೀರಿದರೆ, ತನ್ನ ಕತ್ತೆಗಳೆಲ್ಲವನ್ನೂ ಹೊಲೆಯರು ಹೀಗೆ ಪ್ರತಿಬಾರಿಯು ಡಬ್ಬಗಳನ್ನು ಕಟ್ಟಿ ಓಡಾಡಿಸಿ ಸಾಯುವಂತೆ ಮಾಡಿದರು ಎಂತಲೂ, ಇದು ತನ್ನ ಕುಲಕಸುಬಿಗೆ ಮಾಡುತ್ತಿರುವ ಅನ್ಯಾಯ, ಅಪಮಾನ ಎಂತಲೂ ಪೋಲಿಸರ ಬಳಿ ಕೇಸು ಕೊಡುತ್ತೇನೆಂದು ಆ ಬಿಸಿಲಲ್ಲಿ ಬೆವರು ಇಳಿಸಿ ಬೈಯುತ್ತಾ ಹುಡುಕಾಡತೊಡಗಿದ್ದ. ಕತ್ತೆಗಳು ಓಡುವಾಗ ಉಳಿಸಿದ್ದ ಹೆಜ್ಜೆ ಜಾಡುಗಳನ್ನು ಹಿಂಬಾಲಿಸಿ ಅಸ್ಪಷ್ಟಕ್ಕೀಡಾಗುತ್ತಿದ್ದ. ಅಗಸನ ಸಿಟ್ಟು ಜೋರು ಬೈಗಳಿಗೆ ಕೇರಿಯ ಕೆಲವು ಪುಂಡು ಹುಡುಗರು ಸಿಟ್ಟಾಗಿ `ವಲಿಸಾಲೆ ವಗುದಕೊಡ ಅಗ್ಸುನ್‌ಗೇ ಇಷ್ಟ್ ಕ್ವಾಪ ಬರೊದಾದ್ರೆ ನಮಗಿನ್ನೆಷ್ಟಿರಬೇಕು’ ಎಂದುಕೊಂಡರು. +ಇಷ್ಟೆಲ್ಲ ಆಗುತ್ತಿರುವ ವೇಳೆಗೆ ಸಂಜೆಯಾಗುತ್ತಿತ್ತು. ಕೇರಿಜನ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕೆಂದು ನೆನಪು ಮಾಡಿಕೊಳ್ಳುತ್ತಿದ್ದರು. ನೀರಿಗೆ ಹೋಗಿದ್ದ ಹೆಂಗಸರು ಬಾಗಿಲುಹಾಕಿದ್ದು ಕಂಡು ಖಾಲಿ ಕೊಡಗಳ ಸಹಿತ ದುಃಖ ಹೊತ್ತು ಹಿಂತಿರುಗಿ ಬಂದಿದ್ದರು. ಇದಕ್ಕೆಲ್ಲ ಹುಡುಗರೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ನಾಯಿತಲೆ ಕಾಳಣ್ಣ ಮಾತ್ರ ಈ ಕಾರಣ ಒಪ್ಪದೆ – “ಇದೆಲ್ಲಾ ಯಾರೋ ದೊಡ್ಡವರು ಹೇಳಿ ಮಾಡಿಸಿಕೊಟ್ಟಿರುವುದೇ ಆಗಿದೆ, ಎಂತಲು, ಆ ಅಗಸರು ವರ್ಷೊಂಬತ್ ಕಾಲ್ದಲ್ಲೂ ನಮ್ ಹಿತ್ಲುಗೊಳಲಿ ಕತ್ತುಗಳ ಬಿಟ್‌ಬುಟ್ಟು ನಮ್ಮ ತಲೆಗೊಂದ್ ಕಂಟಕ ಕಟ್ಟುಬುಟ್ರು” ಎಂದು ವಿಷಯಾಂತರ ಮಾಡುತ್ತಿದ್ದ. ತಾನು ಹುಡುಗರಿಗೆ ಟಿನ್ನುಗಳನ್ನು ಕೊಟ್ಟಿದ್ದೇ ಈ ರಾದ್ಧಾಂತಕ್ಕೆ ಕಾರಣ ಎಂದು ಯಾರಾದರೂ ತಪ್ಪಿನ ಪಾಲನ್ನು ತನಗೂ ಹಚ್ಚುತ್ತಾರೆಂದು ಹೆದರಿ ಹೀಗೆ ಹೇಳಿದ್ದ. ಟಿನ್ನುಗಳನ್ನು ಕಟ್ಟಿದ್ದ ಹುಡುಗರು ತಾವೇ ಆ ಕಳ್ಳರು ಎಂದು ಗೊತ್ತಾಗಿ ಬಿಟ್ಟರೆ ತಮ್ಮ ಚರ್ಮ ಸುಲಿದು ತಮಟೆ ನಗಾರಿ ಮಾಡಿ ಸಾಯಬಡಿಯುತ್ತಾರೆಂದು ಹೆದರಿ ತಮಗೂ ಈ ಸಮಸ್ಯೆಗೂ ಸಂಬಂಧ ಇಲ್ಲ ಎನ್ನುವವರಂತೆ ಮಾತನಾಡಿ – ತಾವು ಆ ಟಿನ್ನುಗಳನ್ನು ನೋಡೇ ಇಲ್ಲವೆಂತಲೂ, ದೊಂಬರು ಹಾಕಿದ್ದ ಗುಡಿಸಲು ಕಡೆಯಿಂದ ಕತ್ತೆಗಳು ಓಡಿ ಬಂದವೆಂತಲೂ ಹೇಳಿದರು. ಹುಡುಗರ ಮಾತು ಸತ್ಯವಿರಬಹುದೆಂದು ಕೆಲವರು ನಂಬಿರಬಹುದು; ಈ ಹಲ್ಕಟ್ ದೊಂಬ್‌ನನ್‌ಮಕ್ಳು ಇದೂ ಒಂದು ವರೆಸ ಸರ್ಕಸ್ಸು ಅಂತ ಮಾಡಿದ್ರೂ, ಮಾಡಿರ್‌ಬೋದು’ ಎಂದು ದೊಂಬರೇ ಇದಕ್ಕೆಲ್ಲ ಕಾರಣವೆಂದು ಗೌಡರಿಗೆ ಇದನ್ನು ತಿಳಿಸಿ ಕುಯ್ಯೋವರ್ರೋ ಎನ್ನುವಂತೆ ಬಿಡಿಸಬೇಕೆಂದು, ಸುಂಡಣ್ಣ ಕುಣಿದಾಡಿದನು. ಹುಡುಗರು ಇದೇ ಸರಿಯಾದ ಸಮಯ ಎಂಬಂತೆ ಆ ಟಿನ್ನುಗಳನ್ನು ಮೊನ್ನೆ ಸಂಜೆಯೇ ದೊಂಬರ ಗುಡಿಸಲ ಬಳಿ ಬಿಸಾಡಿ ಬಂದಿದ್ದೆವೆಂದು ಸಮರ್ಥಿಸಿಕೊಂಡರು. ಸುಂಡಣ್ಣನ ಈ ಬಗೆಯ ದೊಂಬರ ಮೇಲಿನ ಕುಣಿದಾಟಕ್ಕೆ ಹಿನ್ನೆಲೆಯಿತ್ತು. ದೊಂಬರ ಸುಂದರಿಗೆ ಆತ ಕೈಹಾಕಿದ್ದು, ಅದು ದೊಂಬರ ಯಜಮಾನನಿಗೆ ತಿಳಿದು ಆತ ಊರ ಹಿರಿಯನಿಗೆ ತಿಳಿಸಿ ಛೀಮಾರಿ ಹಾಕಿಸಿ ಎಚ್ಚರಿಕೆ ಕೊಡಿಸಿದ್ದ. ಇದರಿಂದಾಗಿ ದೊಂಬರ ಮೇಲೆ ಈ ನೆಪವಾಗಿ ಕೆಂಡ ಕಾರತೊಡಗಿದ. ಕತ್ತೆಗಳು ಇನ್ನೂ ಹಿಂತಿರುಗಿ ಬಂದಿರಲಿಲ್ಲ. +ಕುಡಿಯಲು ನೀರಿಲ್ಲದ ಮಕ್ಕಳು ಕಿರುಚಾಡತೊಡಗಿದ್ದರು. ಗಂಡಸರು ಅಯ್ನೋರ್ ಹೋಟಲಲ್ಲಿ ಒಂಟೆಗಳ ಹಾಗೆ ನೀರು ಹೀರುತ್ತಿದ್ದರು. ಹೆಂಗಸರಿಗಂತು ಇಡೀ ಗಂಡಸರ ಬಗ್ಗೆ ಅಸಾಧ್ಯ ಸಿಟ್ಟು ಬಂದು, ತಮ್ಮ ಮಕ್ಕಳನ್ನು ಸಣ್ಣಪುಟ್ಟ ಕಾರಣಗಳಿಗೆಲ್ಲ ಉಗುದು, ಬೈಯ್ದು, ಬಾರಿಸಿ ಅನುಮಾನಾಸ್ಪದವೆನಿಸಿದ ಮನೆಗಳ ಹುಡುಗರನ್ನು ಬೈಯತೊಡಗಿದರು. ಆ ಬೈಗಳು ನೇರವಾಗಿ ಅವರನ್ನು ಹೆತ್ತ ಅವ್ವಂದಿರನ್ನೇ ಕುರಿತದ್ದಾಗಿ, ಆ ಬೈಗಳು ಸೂಚಿಸುವ ಸಾಂಕೇತಿಕ ಅರ್ಥವನ್ನು ಗ್ರಹಿಸಿದ ಕೆಲವು ಹೆಂಗಸರು `ಗರ್ತಿ ಮಕ್ಕಳುಗೆ ಗಾಳಿ ಬತ್ತು. ಅದ್ರುಗಿತ್ತಿ ಮಕ್ಕಳ್‌ಗೆ ದೇವುರ್ ಬಿತ್ತು’ ಅನ್ನುವಂಗಾಯ್ತು ಎನ್ನುತ್ತಿದ್ದರು. ಇನ್ನಾರೋ `ಯಾವ್‌ನನ್ ಸವುತೆತ್ ಮಕ್ಕಳು ಇಂಗ್ಮಾಡುದ್ರೊ ಕಾಣನಲ್ಲಾ, ಅವುಕೇನ ಮೊಲ್ಲಾಗ್ರು ಬಂದಿತ್ತು’ ಎಂದು ಶಾಪ ಹಾಕುತ್ತಿದ್ದರು. ಇನ್ನಾವಳೋ ಆ ಬೈಗಳ ತನ್ನ ಮಕ್ಕಳಿಗೇ ಹೇಳುತ್ತಿರುವುದಾಗಿದೆ ಎಂದುಕೊಂಡು `ಅದ್ಯಾಕಮ್ಮಿ ಅಂಗಾಡ್ತಿಯಲ್ಲಾ ಯಾರುಗ್ ನೀ ಬೋಯ್ತಿರುದು’ ಎನ್ನುತ್ತಾ `ನಿನ್ನಿಚ್ಛೆಗೆ ನೀ ಬೈಯ್ಕೊವಂಗಿದ್ರೆ ಮನೆವೊಳಾಕೋಗಿ ವಟ್ ತುಂಬ ಬೈಯ್ಕೊ. ನಿನ್ ಮಕ್ಕಳು ತಾನೆ ಅಂತಾ ಕೆಲ್ಸ ಮಾಡೊದು’ ಎಂದು ಕೊಂಕಿಸಿದಳು. ಹಾಗೆ ಹೇಳಿದ್ದೇ ತಡ ಅವರವರು ಮಾತಿನ ಮಲ್ಲಯುದ್ಧದಲ್ಲಿ ಇಡೀ ಹೊಲಗೇರಿಯ ಸಂಬಂಧಗಳ ದುರಂತಗಳನ್ನು ಆರೋಪಾಲಂಕಾರಿಕವಾಗಿ ಜಳಪಿಸಿ ತಮ್ಮತಮ್ಮ ಅಸಹಾಯಕತೆ ಸಿಟ್ಟುಗಳನ್ನೆಲ್ಲ ಕಕ್ಕಿಕೊಳ್ಳ ತೊಡಗಿದರು. ಪ್ರತಿಯೊಂದು ದುರಂತವೂ ಅನಿಷ್ಠವೂ ಒಂದೊಂದು ಸಮಯದ ಆಳದ ಕಾರಣದ ಒಳಗೇ ಬಲಿತಿದ್ದು ಇನ್ನೊಂದೋ ಚಿಮ್ಮಿ ಹಿಡಿಯಾಗಿ ಎಲ್ಲರ ಕತ್ತನ್ನು ಹಿಸುಕುತ್ತದೆ ಎಂಬುದು ಅವರಾರಿಗೂ ಗೋಚರವಾಗಲಿಲ್ಲ. ಗೌಡರು ಅಪಮಾನದಿಂದ ಬುಸುಗುಡುತ್ತಿದ್ದರು. ಊರಿನ ರಾಜಕೀಯದಲ್ಲಿ ಓಟುಹಾಕಿ ಗೆಲ್ಲಿಸುತ್ತೇವೆಂದು ಹೊಲೆಯರು ಮಾತುಕೊಟ್ಟು, ಬಾಡು ತಿಂದು ಹೆಂಡ ಕುಡಿದು ಕೈಕೊಟ್ಟು ಮತ್ತೊಬ್ಬ ಗೌಡನನ್ನು ಗೆಲ್ಲಿಸಿದ್ದರು. ತನ್ನ ಸೋಲಿಗೆ ಹೊಲೆಯರೇ ಪ್ರಧಾನ ಕಾರಣವೆಂದು ಸೇಡಿಗಾಗಿ ಗೌಡರು ಕಾಯದೇ ಇದ್ದರೂ ಕೂಡ, ಅದು ಈಗ ನೆನಪಾಗಿ ಬಲಿತು ಇದ್ದಕ್ಕಿದ್ದಂತೆ ಏನೆಲ್ಲ ಹಮ್ಮುರಬಿ ಕಾನೂನುಗಳು ಚಲಾವಣೆಗೆ ಬರುವಂತಾಗಿತ್ತು. ಆದರೆ ಅಷ್ಟೇ ಲಘುವಾಗಿ ಹಾಸ್ಯಾಸ್ಪದವಾಗಿ ಕೇರಿಯ ಕೆಲವರು ಈ ಸಮಸ್ಯೆಯನ್ನು ಇನ್ನೂ ತರ್ಕಿಸುತ್ತಲೇ ಕುಳಿತಿದ್ದರು. +ಕೇರಿಯ ಕೆಲವು ಪುಂಡು ಹುಡುಗರು ಕತ್ತಲಾದ ಮೇಲೆ ಅಷ್ಟಿಷ್ಟು ಹುಳಿ ಹೆಂಡವನ್ನು ಪೇಟೆಯಲ್ಲಿ ಕುಡಿದಾದಮೇಲೆ ತೂರಾಡಿಕೊಂಡು ಬಂದು ಸರ್ಕಲ್‌ನ ಬಳಿ ಅದೂಇದೂ ಮಾತನಾಡುತ್ತಾ ಕುಳಿತರು. ಇವರೆಲ್ಲ ತಮ್ಮ ಅಪ್ಪಂದಿರ ಎದೆ ಬೆವರ ದುಡಿಮೆಯಲ್ಲಿ ಮುದ್ದೆ ತಿಂದು ಅಲೆಯುತ್ತಾ ಕಾಲೇಜು ಮೆಟ್ಟಿಲು ಏರಲಾರದೆ ಅಪಾಪೋಲಿಯಾಗಿ ಉಳಿದಿದ್ದರು. ಗೌಡರ ನಿಸೂರುಗಳಿಗೆ ಸೊಪ್ಪು ಹಾಕದೆ ಸಣ್ಣಪುಟ್ಟ ತಾಲೂಕು ರಾಜಕೀಯದಲ್ಲಿ ಪ್ರವೇಶ ಪಡೆಯುತ್ತಿದ್ದರು. ಈಗ ಕುಡಿದ ಇವರ ಬಾಯಲ್ಲಿ ಅಗಸರ ಮಾದಪ್ಪನ ತೆಗಳಿಕೆ ಮಾತುಗಳು ಮೈದಾಳಿ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಮಧ್ಯಾಹ್ನ ಕತ್ತೆಗಳ ಹುಡುಕಿಕೊಂಡು ಬೈಯುತ್ತಾ ಹೋಗಿದ್ದೊಂದೇ ಅವರ ಈಗಿನ ಚರ್ಚೆ, ಸಿಟ್ಟುಗಳಿಗೆ ಕಾರಣವಾಗಿತ್ತು. ಮಾದಪ್ಪ ಅವರ ಕೈಗಿನ್ನೂ ಸಿಕ್ಕಿರಲಿಲ್ಲ. ಹೀಗೆ ವಟಗುಟ್ಟುತ್ತಾ ಮತ್ತಲ್ಲಿ ಮದಸಿದ್ದವರ ಎದಿರು ವೆಂಕಟೇಗೌಡ ಕಂಡರು. ಆ ಪುಂಡರು ವೆಂಕಟೇಗೌಡನ ಪರವಹಿಸಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆತನ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿ; ಗುಂಡೇಗೌಡರ ಕಾನೂನುಗಳನ್ನು ಮುರಿಸುವ ಪ್ರಯತ್ನಪಟ್ಟರು. ಆದರೆ ವೆಂಕಟೇಗೌಡರು ಸಿಜರ್ ಸಿಗರೇಟಿನ ಅಸಾಧ್ಯ ಹೊಗೆಯನ್ನು ಬಾಯಲ್ಲಿ ತುಂಬಿಕೊಂಡು, `ವೋಗ್ರೋ ವೋಗ್ರೋ; ಇದ್ಯಾವ್ ಜುಜುಬಿ ಕೇಸು. ನಾಳೆ ವತಾರಕೇ ಇನ್ನೊಂದ್ ಬೋರ್‌ವೆಲ್ ಆಕ್ಸುದ್ರಾಯ್ತು. ನೀವ್ಯಾಕ್ ಯದುರ್ಕಂದಿರಿ’ ಎಂದು ಹೇಳುತ್ತಾ ರೈಲಿನ ಹಾಗೆ ಹೊಗೆ ಕಕ್ಕುತ್ತಾ ಬಡಬಡಾ ಎಂದು ನಿಲ್ಲದೇ ತನಗೆ ಯಾವುದೋ ಅರ್ಜೆಂಟ್ ಕೆಲಸವಿದೆ ಎಂದು ವೆಂಕಟೇಗೌಡರು ಅಲ್ಲಿಂದ ಮರೆಯಾದರು. ಹಾಗೆ ಈತ ಮರೆಯಾಗುವಷ್ಟರಲ್ಲೇ ಗುಂಡೇಗೌಡರ ಕಡೆಯ ನಾಲ್ಕು ಗಂಡಾಳುಗಳು ಬಂದರು. ಈ ಗಂಡಾಳುಗಳು ಗುಂಡೇಗೌಡರ ಮಾತಿನ ಪ್ರಕಾರ ಬಂದಿದ್ದರು. ವೆಂಕಟೇಗೌಡನೇ ತಾನು ಕತ್ತೆಗಳ ಮೇಲೂ ಏಲು ತಿಪ್ಪೆಯ ಮೇಲೂ ಬೀಳಲು ಕಾರಣವೆಂತಲೂ ಅದಕ್ಕೆ ಬೆಂಬಲ ಹೊಲೆಯರು ಎಂತಲೂ ನಿರ್ಧರಿಸಿ, ಸರ್ಕಲ್ ಬಳಿ ಕುಳಿತಿರಬಹುದಾದ ವೆಂಕಟೇಗೌಡನ ಬಳಿ ಜಗಳ ತೆಗೆದು ಸಿಕ್ಕಸಿಕ್ಕವರಿಗೆಲ್ಲ ಬಾರಿಸಿಬನ್ನಿ ಎಂದು ಹಾಗೆ ಕಳಿಸಿದ್ದರು. ಗುಂಡೇಗೌಡರ ಕಡೆಯವರು ವೆಂಕಟೇಗೌಡ ಮರೆಯಾಗಿಬಿಟ್ಟದ್ದನ್ನು ಕಂಡು `ಲೌಡಿ ಮಗ ಬೀಜ ಬಿತ್‌ಬಿಟ್ಟು ಕದ್ದೋಡೋದ ನೋಡು’ ಎಂದು ಪುಂಡು ಹುಡುಗರ ಬಳಿ ಬಂದರು. ಆ ಹುಡುಗರು ತಮ್ಮ ಕೋಪ ಕಾರಿಕೊಳ್ಳಲು ಯಾರೂ ಸಿಗಲಿಲ್ಲವಲ್ಲಾ ಎಂದು ಅವರವರ ವೈಯಕ್ತಿಕ ವಿಷಯಗಳನ್ನು ಊರಿನ ಸದ್ಯದ ರಾಜಕೀಯಕ್ಕೆ ಬೆರೆಸಿ ಮಾತನಾಡಿಕೊಳ್ಳುತ್ತಿದ್ದರು. ಗುಂಡೇಗೌಡರ ಕಡೆಯವರು, ಈ ಹುಡುಗರಿಗೇ ನಾಲ್ಕು ಬಾರಿಸಿದರಾಯಿತೆಂಬಂತೆ ಕಾಲುಕೆರೆಯಲು ಅಲ್ಲೇ ಕುಳಿತರು. ಎರಡೂ ಕಡೆಯವರು ಈಗ ಮಾತು ನಿಲ್ಲಿಸಿ ಶೀತಲ ಯುದ್ಧಕೆ ಸಜ್ಜಾದರು. ಅಗಸರ ಮಾದಪ್ಪನ ಕತ್ತೆಗಳು ಇನ್ನೂ ಹಿಂತಿರುಗಿ ಬಂದಿರಲಿಲ್ಲ. ಹಾಗಾಗಿ ಅವುಗಳೇನಾದರೂ ಸರ್ಕಲಿನ ಬಳಿ ಬೀಲುವ ಬಾಳೆಹಣ್ಣಿನ ಸಿಪ್ಪೆಯ ಆಸೆಗೂ ಹಳೆ ಕಾಗದ ಕಸಗಳ ಬಾಯಿರುಚಿಗೂ ಇಲ್ಲಿಗೆ ಬಂದೇ ಬರುತ್ತದೆಂದುಕೊಂಡು ಮಾದಪ್ಪ ಈಗ ಅವರೆಲ್ಲ ಕುಳಿತಿದ್ದ ಕಡೆಗೆ ಬಂದ. ಪುಂಡ ಹುಡುಗರು ಇವನನ್ನೇ ಕಾಯುತ್ತಿದ್ದವರ ಹಾಗೆ; ಯಾವ ಪೀಠಿಕೆಯನ್ನೂ ಹಾಕದೆ, `ಅಲ್ಲಪ್ಪಾ, ಕೋತಿ ಮೊಸುರ್ ತಿಂದು ಬಿಟ್ಟು, ಮ್ಯಾಕೆ ಬಾಯ್‌ಗೊರುಸ್ತು’ ಅನ್ನುವಂಗೆ ಮಾಡ್‌ಬುಟ್ಟು, ನಂ ತಲೆಗೀಗ ಕಂಟಕಾ ತಂದ್ ಮಡುಗ್ ಬುಟ್ನಲ್ಲಾ ಇದ್ಸರಿಯೇ?’ ಎಂದರು ಸಿಟ್ಟಿನಿಂದ. ಕತ್ತೆಗಳನ್ನು ಹುಡುಕಿ ಹುಡುಕಿ ಸಾಕಾಗಿ ನಿರಾಶನಾಗಿ ಸಿಟ್ಟಿದ್ದವನಿಗೆ ಅವರ ಮಾತಿನಿಂದ ಪಿತ್ತ ನೆತ್ತಿಗೇರಿ `ವೋಗ್ರೋ ಬಡ್ಡೆತ್ತವಾ, ಎಲ್ ಬುಟ್ಟಿರಿ ನಿಮ್ ಜಾತಿ ಬುದ್ಧಿಯಾ’ ಮೌನವಾಗಿ ನಾಕಕ್ಷರ ಕಲ್ತಕಂಡು ಬಾಳಾಟ ಮಾಡ್ವಾ ಅನ್ನುದ್ ಬುಟ್ ಬುಟ್ಟು, ಏನೋ ಸಾಚಾಸುಬ್ರಾ ಅಂತ ಕುಂತವರೆ’ ಎಂದು ಅಬ್ಬರಿಸಿದ. ಹುಡುಗರಿಗೆ ಅಪಮಾನವಾದಂತಾಗಿ; ಈಗ ತಾವು ಐದತ್ತಾರು ಬಾರಿ ಎಸ್. ಎಸ್. ಎಲ್. ಸಿ. ಫೇಲು ಮಾಡಿಕೊಂಡಿದ್ದನ್ನು ಆಡಿ ಹಂಗಿಸುತ್ತಿದ್ದಾನೆಂತಲೂ, ಜಾತಿಯನ್ನು ಬೈಯುತ್ತಿದ್ದಾನೆಂತಲೂ ವಿಪರೀತ ಅಪಮಾನವಾದಂತಾಗಿ; `ಅಯ್ಯೋ ಹಲ್ಲಿಡದ್ ಮಾತಾಡು, ತಿಕಾ ಗಾಣ್‌ಚಾಲಿ ಮಾಡಿದ್ರೆ, ನಿನ್ನ ತಿಕ್ಕೇ ಟಿನ್‌ಕಟ್ಟಿ ಊರಿಂದಾಚೆಗೆ ವೋಡಿಸ್ ಬೇಕಾಯ್ತದೆ’ ಎಂದು ಅವನ ಬಳಿ ನುಗ್ಗಿದರು. ಊರಿಗೆ ಇದ್ದ ಒಬ್ಬನೇ ಅಗಸನಿಗೆ ಹೆದರಿಕೆ ಉಂಟಾಗಿ; ಆದರೂ ಬಿಡದೆ `ಏನ್ರುಲಾ, ವಡ್ದೀರಾ, ಬರ್ಲಾ ವಡೀರಿ ಅದೆಷ್ಟು ಮಡ್ಗಿದ್ದೀರಿ ತಾಕತ್ತಾ’ ಎಂದು ಅವರ ಮುಂದೆ ಬಗ್ಗಿನಿಂತ. `ಹೂ ವಡೀರ್ಲಾ, ನೋಡ್ತೀನಿ ಮಂತೆ. ನಿಮ್ಮಪ್ಪದೀರ್‌ಗೆ ನೀವ್ ವುಟ್ಟಿದ್ರೆ ವಡೀರಿ……’ ಎಂದು ಸವಾಲು ಹಾಕಿದ. ಪುಂಡು ಹುಡುಗರ ಹುಟ್ಟನ್ನೇ ಪ್ರಶ್ನಿಸಿದ್ದರಿಂದ, ಅವರಲ್ಲೊಬ್ಬ ಅತಿ ವ್ಯಗ್ರನಾಗಿ `ಹೂ ತಗೋ’ ಎಂದು ಬಗ್ಗಿದವನ ತಿಕದ ಮೇಲೆ ಜಾಡಿಸಿ ವದ್ದ. ವದ್ದ ತಕ್ಷಣವೇ ಆತ ಲಾಗ ಹೊಡೆದವರಂತೆ ಉರುಳಿಬಿದ್ದ. ಇವರ ಪುಂಡಾಟ ಮೀರಿದ್ದನ್ನು ಕಂಡು – ಎದುರೇ ಕಾಯುತ್ತಿದ್ದ – ಗುಂಡೇಗೌಡರು ಗಂಡಸರು ಅಗಸರ ಮಾದಪ್ಪನ ಪರ ವಹಿಸಿ ಕೇರಿಯವರ ಜೊತೆ ಜಗಳಕ್ಕೇ ನಿಂತರು. `ವೋಗ್ರಯ್ಯೋ ನೀವ್ಯಾರ್ ಇದಾ ಕೊಂಡೋಕ್ ಬರುಕೆ. ಅಗುಸುನ್‌ಗೂ ವಲೇರ್‌ಗೂ ಜಗಳ ಆದ್ರೆ ನಿನಗೇನ್ ತಿಕ ನೊಂದದಾ’ ಎಂದು ಅವಾಚ್ಯವಾಗಿ ಬೈಯ್ಯತೊಡಗಿದರು. ಪುಂಡು ಹುಡುಗರು ಗಟ್ಟಿಯಾಗಿಯೂ, ಸಂಖ್ಯೆಯಲ್ಲಿ ಜಾಸ್ತಿಯಾಗಿಯೂ ಇದ್ದಿದ್ದರಿಂದ ಗುಂಡೇಗೌಡರ ಕಡೆಯವರು ಮೊದಲು ಸ್ವಲ್ಪ ಅಂಜಿ ನಂತರ ಮೈಚಳಿ ಬಿಟ್ಟು ಭಯಂಕರ ರೋಸ ತೋರುವಂತೆ ಮಾತಿನ ಗಲಭೆ ಜಗಳವನ್ನು ಸೃಷ್ಟಿಸಿದರು. ಅಗಸರವನು ಮಾರಾಮಾರಿ ಬೈಯುತ್ತಾ ತನಗೆ ಬೆಂಬಲ ಸಿಕ್ಕಿತೆಂದು ಎಗರಾಡುತ್ತಿದ್ದ. ಕತ್ತೆಗಳಿಗೆ ಡಬ್ಬ ಕಟ್ಟಿದ ಹುಡುಗರು ಈಗ ಯಾರೂ ಕಾಣಿಸಿಕೊಳ್ಳಲಿಲ್ಲ. ಸರ್ಕಲ್‌ನ ಬಳಿ ದೊಡ್ಡ ಶಬ್ದ ಉಂಟಾದ್ದನ್ನು ಕೇಳಿಸಿಕೊಂಡ ಹಲವಾರು ಜನ ಕುತೂಹಲದಿಂದಲೂ, ಮನರಂಜನೆ ಕೊಡುವ, ಪಡೆವ ಕಾರಣದಿಂದಲೂ ಮತ್ತು ಜಗಳ ಬಿಡಿಸುವಲ್ಲಿ ಖ್ಯಾತಿ ಪಡೆದಿದ್ದ ಇನ್ನೂ ಕೆಲವರು ಈಗ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆರೆದರು. ದೊಂಬರವನೇ ಕಾರಣ ಎಂದು ಹೇಳಿದ್ದು ಸುಂಡಣ್ಣನ ಮಾತು ಸತ್ಯ ಅಲ್ಲ ಎಂದು ದೊಂಬನನ್ನು ವಿಚಾರಣೆ ಮಾಡಿದ್ದಮೇಲೆ ಆತನನ್ನು ಕೈಬಿಟ್ಟಿದ್ದರು. ಜನ ಜಮಾಯಿಸಿದ್ದರಿಂದ ಎರಡೂ ಗುಂಪುಗಳಲ್ಲಿ ಹುಮ್ಮಸ್ಸು, ರೋಷ, ಬೆಂಬಲ ಎಲ್ಲವೂ ಒಟಿಗೇ ಏರಿದಂತಾಗಿ ಜಗಳ ಕೈಕೈ ಮಿಲಾಯಿಸಿ ಕುತ್ತಿಗೆ ಪಟ್ಟಿ ಹಿಡಿದು, ಹಳೆಯ ಬೆವರಿಡಿದ ಅಂಗಿ ಬಟ್ಟೆ, ಬನಿಯನ್ನುಗಳೆಲ್ಲ ಚಿಂದಿಚಿಂದಿಯಾದವು. ಅಷ್ಟರಲ್ಲಾಗಲೇ ದೊಂಬರವನು, ಸೈಕಲ್ ರಿಪೇರಿ ಮಾಡಿದ್ದ ಉಳ್ಳಾಡಿ; ಹಡಬೇ ಎಮ್ಮೆಯಂತಹ ಹೆಂಗಸರು, ಡಬ್ಬ ಕಟ್ಟಿ ಅವಿತುಕೊಂಡಿದ್ದ ಪುಟ್ಟ ಹುಡುಗರು ಸುಂಡಣ್ಣ, ಕಾಳಣ್ಣ ಎಲ್ಲರೂ ಕೂಡಿದ್ದರು. ದೊಂಬರವನು ಕೈಕಟ್ಟಿ ನೋಡುತ್ತಾ, ಈ ಜಗಳದ ರಮಾರಮಿ ಫೈಟಿಂಗ್‌ಗಳಲ್ಲಿ ತನ್ನ ಚಮತ್ಕಾರದ ಸರ್ಕಸ್ಸುಗಳಿಗೆ ಏನಾದರೂ ತಾಂತ್ರಿಕ ಲಾಭಗಳು ಸಿಗಬಹುದೆಂದು ಕುತೂಹಲ ಭಯ ಎರಡರಿಂದಲೂ ನೋಡುತ್ತ ನಿಂತಿದ್ದ. ಯಾವ ಕಾರಣಕ್ಕೆ ಈಗ ಇವರೆಲ್ಲ ಜಗಳವಾಡುತ್ತಿದ್ದಾರೆ ಎಂಬುದೇ ಅಲ್ಲಿ ಮರೆತುಹೋಯಿತು. ಎಂದೆಂದಿನದೋ ಮಾತುಕತೆಗಳೆಲ್ಲ ಅವರ ಮಿಸುಕಾಟಗಳಲ್ಲಿ ಸಮ್ಮೇಳನಗೊಂಡವು. ಜಗಳ ಬಿಡಿಸುವ ಖ್ಯಾತಿಯವರು ಒಳನುಗ್ಗಿ, ಅವರೂ ಕೂಡ ಜಗಳದಲ್ಲಿ ಐಕ್ಯಗೊಂಡು ತಾರಾಮಾರ ಎರ್ರಾಬಿರ್ರಿ ಎಳೆದಾಟಗಳಲ್ಲಿ ಸಂಗಮಗೊಂಡರು. ಅವರ ತುಳಿದಾಟ ಎಳೆದಾಟಗಳಲ್ಲಿ ಧೂಳೆದ್ದು ಇಡೀ ಊರನ್ನೇ ನುಂಗುವಂತಾಗಿ ಈಗ ಅವರೆಲ್ಲ ದೊಡ್ಡ ಹೊಗೆಗೂಡಿನ ಒಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದಾರೆಂಬಂತೆ ಇಡೀ ವಾತಾವರಣ ಏರ್ಪಟ್ಟಿತು. ಕುಯ್ಯೋಮರ್ರೋ ಎಂಬ ಶಬ್ದಗಳು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡವು. ಕತ್ತೆಗಳ ಪತ್ತೆಯೇ ಇರಲಿಲ್ಲ. ಗೌಡರ ಕಡೆಯವರು ತಾವೂ ಪೆಟ್ಟುತಿಂದು ಪುಂಡರ ಹುಡುಗರ ಮುಸುಡಿಗಳು ಊದಿಕೊಳ್ಳುವಂತೆ ಜಜ್ಜಿದರು. ಜಗಳದ ನಡುವೆ ಒಬ್ಬ ಇದೆಲ್ಲಕ್ಕೂ ಕಾರಣ ಅಗಸನೇ ಎಂದುಕೊಂಡು ದಬದಬಾ ಎಂದು ಆತನಿಗೆ ಚಚ್ಚಿದನು. ಇಂತಹ ವಾತಾವರಣವನ್ನೇ ಕಾದಿದ್ದ ಸುಂಡಣ್ಣ ದೊಂಬರವನನ್ನು ಕಂಡು `ಬಡ್ಡೀ ಮಗ್ನೇ. ಎಲ್ಲಾನು ಮಾಡ್‌ಬುಟ್ಟು, ಕೈಕಟ್ಟಿ ನಿಂತಿದ್ದೀಯಾ’ ಎಂದು ಅವನ ಮೈಮೇಲೆಲ್ಲಾ ಬಾರಿಸಿದನು. ಆ ದೊಂಬ ಸತ್ತೆನೋ ಕೆಟ್ಟೆನೋ ಎಂಬಂತೆ ಓಡಿಹೋದ. ಈ ಬೀದಿಜಗಳ ನಿಲ್ಲದೆ ಇಡೀ ಊರಿನ ದುರಂತವೆಂಬಂತೆ ಹಂಚಿಕೆಯಾಗಿಬಿಟ್ಟಿತು. ಯಾವುದಕ್ಕೆ ಕಿತ್ತಾಡಬೇಕೋ ಅದಕ್ಕೆ ಕೊಂಚವೂ ಕಿತ್ತಾಡದೆ, ಇನ್ನವುದೋ ಘಟನೆಯ ಮೇಲೆ ತಮ್ಮ ಮತ್ಸರ, ಸಿಟ್ಟು ಸಂಕಟಗಳನ್ನು ಪ್ರದರ್ಶಿಸುತ್ತಿದ್ದರು. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ದೊಳ್ಳ ಊರೂಪ್ ಜಾನ್ ಎಂಬ ಹೊಲೆಯರ ಪಿಯುಸಿ ಹುಡುಗ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದವನು, ಅತ್ಯಂತ ಸುಖದಿಂದಲೂ ಹಾಗೂ ಕತ್ತೆಗಳಿಗೂ, ಕ್ರಿಸ್ತನಿಗೂ ಇದ್ದ ಕತೆ ನೆನಪಾಗಿ ದುಃಖವಾಗಿಯೂ ನಿಂತಿದ್ದ. ಮತ್ತೆಮತ್ತೆ ಜಗಳ ಬಿಡಿಸುವುದು. ಮಾತು ಏರುವುದು ನಡೆಯುತ್ತಿತ್ತು. ಜಗಳವೆಲ್ಲ ಅವರ ರೋಗದಂತೆ ಏರ್ಪಟ್ಟು ಸಾಂಕ್ರಾಮಿಕವಾಗಿ ಅವರನ್ನು ಹಿಸುಕತೊಡಗಿತು. +ಇದೆಲ್ಲ ಸಾಂಗವಾಗಿ ಸರಾಗವಾಗಿ ಸಾಗಿರುವಾಗ, ಆ ಕತ್ತೆಗಳು ಸೊಂಟದಲ್ಲಿ ಟಿನ್ನು ಹೊತ್ತುಕೊಂಡು ಎಲ್ಲೆಲ್ಲೋ ಎಷ್ಟೋದೂರ ಓಡಾಡಿ ಹೆದರಿ ಸುಸ್ತಾಗಿ ಬೇಸತ್ತು ಇನ್ನು ಯಾವ ದರಿಯೂ ಕಾಣದೆ ವಾಪಸ್ಸು ಮನೆ ಸೇರುವುದೇ ಸರಿ ಎಂಬ ಇಚ್ಛೆಯಲ್ಲಿ ತಿರುಗಿ ಬರುತ್ತಿದ್ದವು. ಟಿನ್ನುಗಳನ್ನು ಸೊಂಟದಿಂದ ಕಳಚಿಕೊಂಡೇ ಇರಲಿಲ್ಲ. ಆ ಶಬ್ದ ಅವುಗಳ ಬೆಂಬತ್ತಿದ್ದರಿಂದ ಅವು ಕೊನೆಗೆ ಹೊಂದಿಕೊಂಡು, ಹಾಗು ಅನುಮಾನದಿಂದ ನರಳುತ್ತಾ, ಈ ಊರಿನವರು ನಮ್ಮ ಸೊಂಟಕ್ಕೆ ಅದಾವ ಭೀತಿಯನ್ನೂ, ಭಾದೆಯನ್ನೂ, ನರಕವನ್ನೂ ಕಟ್ಟಿದ್ದಾರೋ ಎಂಬ ದುಃಖದಲ್ಲಿ ಯೋಚಿಸುತ್ತಾ ಕೊನೆಗೆ, `ಶಬ್ದಕ್ಕಂಜಿದೊಡೆಂತಯ್ಯ’ ಎಂಬಂತೆ ಅವು ಮತ್ತೆ ಆ ಮನುಷ್ಯರನ್ನೇ ಕೂ ಕೊಳ್ಳಲು ಬಂದವು. ವಿಶೇಷವೆಂದರೆ ಆ ಜನ ಈಗ ಸೇರಿದ್ದ ಸರ್ಕಲ್ ಬಳಿಯೇ ಆಯ್ದು ಅಗಸನ ಮನೆ ತಲುಪಬೇಕಾದ ಅನಿವಾರ್ಯತೆ ಇತ್ತು. ಬೇರೆ ಹಾದಿಯಿಂದ ಬರಲು ದಾರಿಯಿರಲಿಲ್ಲ. ಕತ್ತೆಗಳು ಜನರ ಆ ಗದ್ದಲ, ಗುಂಪುಗಳನ್ನು ಒಮ್ಮೆ ವೀಕ್ಷಿಸಿ ಆದದ್ದು ಆಗಿ ಹೋಗಲಿ; ಇಂಥಾ ಟಿನ್ನುಗಳ ಭಯಾನಕತೆಯನ್ನೇ ಸಹಿಸಿದ ನಾವು ಇವರನ್ನು ಸಹಿಸದೆ ಹೋದರೆ ಹೇಗೆ – ಎಂದುಕೊಂಡು ಬಂದವು. ಬಂದೇ ಬಂದವು ಅವರ ಹತ್ತಿರವೇ ಬಂದುಬಿಟ್ಟವು. `ಢರಢರ್ರಾ’ ಎಂಬ ಟಿನ್ನುಗಳ ಸದ್ದು ಜಗಳವಾಡುತ್ತಿದ್ದವರಿಗೆ ಕೇಳಿಸಿದ್ದೇ ತಡ, ಕತ್ತೆಗಳ ಕಂಡದ್ದೇ ಸಾಕು, ಎಲ್ಲರೂ ಸ್ತಬ್ಧರಾಗಿ ನಿಂತುಬಿಟ್ಟರು. ಅಗಸರ ಮಾದಪ್ಪ ಕತ್ತೆಗಳ ಕಂಡು ಸ್ವರ್ಗಸಿಕ್ಕಿದಂತಾಗಿ ಓಡಿಹೋಗಿ ಅವನ್ನು ಹಿಡಿದುಕೊಳ್ಳಲು ಬಂದ. ಕತ್ತೆಗಳು ಇಡೀ ಊರಿನ ಜನರ ಎಲ್ಲ ಕ್ರಿಯೆಗಳಿಗೂ ಮೌನಸಾಕ್ಷಿಯಾಗಿ ನಿಂತವು. ಎಲ್ಲರೂ ಕತ್ತೆಗಳನ್ನು ಕಂಡು, ಅವು ಯಾವ ಕೇರೂ ಮಾಡದಂತೆ ಬಂದು ನಿಂತದ್ದನ್ನು ಕಂಡು ಜಗಳದವರು ಸಿಟ್ಟಾದರು. ಕತ್ತೆಗಳು ಮತ್ತೆ ಹೆದರಿ; ಏನೋ ಒಂದು ಬಗೆಯ ಶಬ್ದವನ್ನು ಹೊರಡಿಸಿ ಮಾತನಾಡಿಕೊಂಡವು. ಇವರೆಲ್ಲ ಸೇರಿ ಮತ್ತೆ ನಮ್ಮನ್ನು ಹಿಡಿದು ಬಡಿದು ತೊಂದರೆ ಕೊಡುತ್ತಾರೆಂದು ಬೇಸರವಾಗಿ, ದುಃಖ ಮತ್ತು ಪ್ರತಿಭಟನೆ ಎರಡನ್ನೂ ಮುಖದಲ್ಲಿ ತಂದುಕೊಂಡವು. +ಅಲ್ಲಿದ್ದವರೆಲ್ಲ; ಈ ಇಡೀ ಘಟನೆಗೆ ಈ ಕತ್ತೆಗಳೇ ಕಾರಣ ಎಂದುಕೊಂಡು ಕತ್ತೆಗಳ ಮೇಲೆ ಎರಗಿ `ಇವುಗಳ್‌ರತ್ತನಾಕೇಯೆ ಕತ್ತೆಗಳಿಂದ್ಲೇ ಇಷ್ಟೆಲ್ಲಾ ಆದುದ್ದು’ ಎಂದು ಅವುಗಳಿಗೆ ಸಮಾ ಬಡಿಯಲು ಅಬ್ಬರಿಸಿ ಧಡಾರ್ ಬಡಾರ್ ಎಂದು ಸೈನಿಕರಂತೆ ನುಗ್ಗಿದರು. ಕತ್ತೆಗಳು ಇದನ್ನು ಕಂಡು ರೊಚ್ಚಿನಿಂದ ಅತಿಭಯಂಕರ ರಭಸವಾಗಿ ಬಂದ ದಾರಿಯಲ್ಲೇ ಹಿಂತಿರುಗಿ ಓಡತೊಡಗಿದವು. ಅವುಗಳು ದೆವ್ವದ ಕಾಟದ ಹಾಗೆ ಕೆಲವರಿಗೆ ಕಂಡು ದೊಣ್ಣೆ ಹೊತ್ತುಕೊಂಡು ಅಟ್ಟಿಸಿಕೊಂಡು ಕತ್ತೆಗಳನ್ನು ಹಿಂಬಾಲಿಸಿದರು. ಅವರೆಲ್ಲ ಓಡಿದರು, ಬಿದ್ದರು, ನುಗ್ಗಿದರು, ಅಬ್ಬರಿಸಿದರು. ಕತ್ತೆಗಳ ಹೆಜ್ಜೆಮೇಲೆ ಹೆಜ್ಜೆ ಹಾಕಿ ಊರ ಹೊರವಲಯದ ತನಕ ಬೆಂಬತ್ತಿ ಬಂದರು. ಕತ್ತೆಗಳು ಇನ್ನಿಲ್ಲದ ವೇಗದಲ್ಲಿ ಕುದುರೆಗಳ ಹಾಗೆ ಹಾರುತ್ತಿದ್ದವು. ಆ ಕತ್ತೆಗಳು ಆ ಊರಿನ ಎಲ್ಲ ತರದ ಎಲ್ಲರ ದುಃಖಗಳ, ಆಳಧ್ವನಿಯ ಲಯವನ್ನು ಸೊಂಟಕ್ಕೆ ಬಿಗಿದುಕೊಂಡೇ ಟಿನ್ನುಗಳಿಂದ ಆ ಸದ್ದನ್ನು ಸೃಷ್ಟಿಸುತ್ತಾ, ಅವರೆಲ್ಲರಿಗೂ ಆ ವಿಷಾದ ಅಳಲಿನ ವಿಪರ್ಯಾಸಗಳ ವಿವರಿಸುವಂತೆ – ಜಿಗಿಜಿಗಿದು ಓಡುತ್ತಲೇ ಇದ್ದವು. ಅಂತಹದ್ದನ್ನೆಲ್ಲ ಈಗವರು ಗ್ರಹಿಸುವ ಸ್ಥಿತಿಯಲ್ಲಿ ಉಳಿದಿರಲ್ಲಿಲ್ಲ. ಕತ್ತೆಗಳನ್ನು ಕಂಡವರು ದುಷ್ಟಶಕ್ತಿಯನ್ನು ಕಂಡಂತೆ ಆಗಿದ್ದರು. ಕತೆಗಳು ಬಾಯಲ್ಲಿ ಓಡಿದ ದಣಿದ ಸುಸ್ತು, ಸಿಟ್ಟು, ಸಂಕಟ, ನೋವು ಎಲ್ಲವೂ ಒತ್ತರಗೊಂಡು ಜೊಲ್ಲು ಬಾಯಿಂದ ಉಕ್ಕಿ ಉಕ್ಕಿ ಬರುತ್ತಿತ್ತು. ರಕ್ತ ಕಾರಿಕೊಂಡು ಸತ್ತರೂ ಸರಿಯೇ ಇನ್ನು ಈ ಜನರ ಈ ಊರ ಸಹವಾಸ ಬೇಡ ಎಂಬಂತೆ ಅವು ಓಡುತ್ತಲೇ ಇದ್ದವು. ಸುಸ್ತಾದವರು ಅಲ್ಲಲ್ಲೇ ನಿಂತರು. ಮತ್ತೆ ಕೆಲವರು ಹೋಗುತ್ತಲೇ ಇದ್ದರು. ಹೋಗುತ್ತ, ಓಡುತ್ತ, ಅಟ್ಟಹಾಸದಲ್ಲಿ ಮೆರೆಯುತ್ತಾ ಅವರೆಲ್ಲ ಆ ಕತ್ತಲೆಯಲ್ಲಿ ಮುಳುಗಿಹೋದರು. ಅಗಸ ಮಾತ್ರ ದಣಿವಾಗದಂತೆ ಓಡುತ್ತಾ, ಎಲ್ಲ ಹೊಲೆಯರೂ, ದಕ್ಷಬ್ರಹ್ಮನ ವಿಷಕುಂಟೆಯಿಂದ ಸತ್ತು; ಕೊನೆಗೊಬ್ಬನೇ ಪುಟ್ಟ ಹೊಲೆಯ ಹುಡುಗ ಉಳಿದಿದ್ದಾಗ ಆತನನ್ನು ರಕ್ಷಿಸಿ ಇವನೇ ತನ್ನ ಮಗ ಎಂದು ದಕ್ಷನಿಗೆ ಹೇಳಿ ಜೊತೆಯಲ್ಲೆ ಬಾಳೆಎಲೆಯಲ್ಲಿ ಉಂಡಂತೆ…… ಕತ್ತೆಗಳ ಉಳಿಸಿಕೊಂಡೇ ಉಳಿಸಿಕೊಂಡು ಹಿಡಿದು ತರುತ್ತೇನೆ ಎಂಬಂತೆ ಓಡುತ್ತಲೇ ಇದ್ದ. ಇಡೀ ಊರು ಕತ್ತಲೆಯಲ್ಲಿ ಕರಗಿಹೋಗುತ್ತಿತ್ತು. +***** +ಕೀಲಿಕರಣ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ +ಸಾಯಂಕಾಲ ಐದೂವರೆ ಹೊತ್ತಿಗೆ ಸೋಂಪಗೌಡರ ಮನೆಯ ಸೈರನ್ ಕಿವಿ ತೂತಾಗುವಂತೆ ‘ಕೊಂಯ್ಯೋ…’ಎಂದು ಕೂಗತೊಡಗಿದಾಗ ಕಾಡೆಮನೆ ಲಿಂಗಪ್ಪಣ್ಣನ ಮನಸ್ಸು ವ್ಯಗ್ರವಾಗಿ ಸಿಟ್ಟು ಏರುತ್ತಾ ಏರುತ್ತಾ ತಾರಕಕ್ಕೆ ಮುಟ್ಟಿ ಮುಖ ಕೆಂಪೇರಿ ಗಂಟಲುಬ್ಬಿತು! ಸೈರನ್ ಕೂಗಿನಿಂದ ಸ್ಪೂರ್ತಿ […] +ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು […] +ಅನೂಪನ ಒತ್ತಾಯವಿರದಿದ್ದಲ್ಲಿ ನಾನು ಈ ರಿಯೂನಿಯನ್ನಿಗೆ ಬರುತ್ತಿರಲಿಲ್ಲವೇನೋ. ಐದು ದಿನಗಳ ತಮಾಷೆ. ಮೋಜೇ ಮೋಜು ಹೊರತು – ಬೇರೇನಿಲ್ಲ. ಎರಡನೆಯ ಹಗಲಿನ ಕೊನೆಗಾಣಿಸುವುದೇ ನನಗೆ ಇಷ್ಟು ದುಸ್ತರವೆನಿಸುತ್ತಿರುವಾಗ, ಇನ್ನು ಮೂರು ಸಂಜೆಗಳವರೆಗೆ ಮನಸ್ಸನ್ನು ಒತ್ತಾಯದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_77.txt b/Kannada Sahitya/article_77.txt new file mode 100644 index 0000000000000000000000000000000000000000..f3d7202d72a4adb0e5706a1ee83e084951069d90 --- /dev/null +++ b/Kannada Sahitya/article_77.txt @@ -0,0 +1,318 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ +ಕನ್ನಡಕ್ಕೆ: ಎ. ಎನ್. ಪ್ರಸನ್ನ +ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ ಸಂಪ್ರದಾಯವಾದಿ ಜನರಲ್ ಹೊಸೆ ರಾಕೆಲ್ ಮೊಂಕಾದ. ಮೊಂಕಾದ, “ಈ ಅವ್ರೇಲಿಯಾನೋ ಸಂಪ್ರದಾಯವಾದಿ ಆಗಿಲ್ಲವಲ್ಲ, ಏನನ್ಯಾಯ” ಎಂದ. ಅವನು ಅವನನ್ನು ಮೆಚ್ಚಿಕೊಂಡಿದ್ದ. ಅನೇಕ ಸಂಪ್ರದಾಯವಾದಿ ಪ್ರಜೆಯಂತೆ ಹೊಸೆ ರಾಕೆಲ್ ಮೊಂಕಾದ ತನ್ನ ಪಾರ್ಟಿಯ ರಕ್ಷಣೆಗಾಗಿ ಯುದ್ಧದಲ್ಲಿ ಭಾಗಿಯಾಗಿದ್ದ ಮತ್ತು ಅವನು ಮಿಲಿಟರಿ ವೃತ್ತಿಯವನಲ್ಲದಿದ್ದರೂ ರಣರಂಗದಲ್ಲಿ ಜನರಲ್ ಪದನಾಮ ಪಡೆದಿದ್ದ. ಅದಕ್ಕೆ ವಿರುದ್ಧವಾಗಿ ಪಾರ್ಟಿಯ ಇತರೆ ಅನೇಕ ಸದಸ್ಯರಂತೆ ಅವನು ಮಿಲಿಟರಿ ವಿರೋಧಿಯಾಗಿಯಾಗಿದ್ದ. ಮಿಲಿಟರಿಯವರು ತತ್ವಹೀನರು, ಅತಿ ಹೆಚ್ಚಿನದಕ್ಕೆ ಯೋಜನೆ ರಚಿಸುವವರು, ವ್ಯವಸ್ಥೆ ಕುಸಿದಾಗ ತಮ್ಮ ಏಳಿಗೆಗಾಗಿ ಸಾಮಾನ್ಯರನ್ನು ಕನಿಷ್ಠರನ್ನಾಗಿ ಕಾಣುವುದಲ್ಲದೆ, ಹುಂಜದ ಚಪಲ ಮತ್ತು ಅದರ ಕಾದಾಟವನ್ನು ನೋಡಲು ಬಯಸುವರೆಂದು ಪರಿಗಣಿಸಿದ್ದ. ಅವನು ಒಂದು ಕಾಲದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಭಯ ಹುಟ್ಟಿಸಿದ ಕಟ್ಟಾ ವಿರೋಧಿಯಾಗಿದ್ದ. ಅವನು ಸಮುದ್ರ ತೀರದ ವಿಸ್ತಾರವಿದ್ದ ಅಧಿಕಾರಿಗಳ ಅಭಿವೃದ್ಧಿಯ ಮೇಲೆ ತನ್ನ ಅಧಿಕಾರ ಹೇರುವುದರಲ್ಲಿ ಯಶಸ್ವಿಯಾಗಿದ್ದ. ಒಂದು ಸಲ ಅವನು ಶಕ್ತಿಯುತ ಸ್ಥಳವೊಂದನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ದಳಕ್ಕೆ ಬಿಟ್ಟುಕೊಡಬೇಕಾದ ಸಂದರ್ಭದಲ್ಲಿ, ಅವನಿಗಾಗಿ ಎರಡು ಕಾಗದಗಳನ್ನು ಬರೆದಿಟ್ಟು ಹೋಗಿದ್ದ. ಒಂದು, ಯುದ್ಧವನ್ನು ಮತ್ತಷ್ಟು ಮಾನವೀಯವಾಗಿ ಮಾಡಬೇಕೆನ್ನುವ ಹೋರಾಟದಲ್ಲಿ ತನ್ನ ಜೊತೆ ಸೇರಬೇಕೆಂಬ ಆಹ್ವಾನ. ಮತ್ತೊಂದು, ಉದಾರವಾದಿ ಪ್ರಾಂತದಲ್ಲಿದ್ದ ತನ್ನ ಹೆಂಡತಿಗಾಗಿ ಮತ್ತು ಅವನು ಅದನ್ನು ನಿರ್ಧರಿತ ಸ್ಥಳಕ್ಕೆ ತಲುಪಿಸಬೇಕೆನ್ನುವ ವಿನಂತಿಯಿತ್ತು. ಅಲ್ಲಿಂದ ಮುಂದೆ ರಕ್ತ ಕೋಡಿ ಹರಿದ ಯುದ್ಧದಲ್ಲಿಯೂ ಪರಸ್ಪರ ಖೈದಿಗಳ ವಿನಿಮಯಕ್ಕಾಗಿ ಯುದ್ಧ ವಿರಾಮವನ್ನು ಇಬ್ಬರು ದಳಪತಿಗಳು ಏರ್ಪಾಡು ಮಾಡಿಕೊಳ್ಳುತ್ತಿದ್ದರು. ಅವು ಕೆಲವು ಹಬ್ಬದ ವಾತಾವರಣದ ಬಿಡುವುಗಳಾಗಿರುತ್ತಿದ್ದವು. ಜನರಲ್ ಮೊಂಕಾದ ಅಂಥವನ್ನು ಉಪಯೋಗಿಸಿಕೊಂಡು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಚೆಸ್ ಆಡುವುದನ್ನು ಹೇಳಿಕೊಟ್ಟ, ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಅವರು ಪರಸ್ಪರ ಪಾರ್ಟಿಯಲ್ಲಿ ಇರುವ ಜನಪ್ರಿಯ ಅಂಶಗಳನ್ನು ಹೊಂದಿಸುವ ಮಿಲಿಟರಿಯವರು ಮತ್ತು ವೃತ್ತಿಪರ ರಾಜಕಾರಣಿಗಳ ಪ್ರಭಾವದಿಂದ ದೂರವಾದ ಒಡಂಬಡಿಕೆ ರೂಪಿಸುವ ಸಾಧ್ಯತೆಯ ಬಗ್ಗೆ ಕೂಡ ಯೋಚಿಸಿದ್ದರು. ಅಲ್ಲದೆ ಎರಡರ ಒಳ್ಳೆಯ ಅಂಶಗಳನ್ನು ಒಳಗೊಂಡ ಮಾನವೀಯ ಆಳ್ವಿಕೆಯನ್ನು ಸ್ಥಾಪಿಸುವುದನ್ನು ಕೂಡ ಯುದ್ಧ ಮುಗಿದ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಶಾಶ್ವತವಾಗಿ ಬುಡಮೇಲು ಮಾಡಬೇಕೆನ್ನುವ ಸಣ್ಣ ವಲಯದಲ್ಲಿ ಮಚ್ಚುಮರೆಯಲ್ಲಿ ಓಡಾಡಿಕೊಂಡಿದ್ದರೆ ಜನರಲ್ ಮೊಂಕಾದ ಮಕೋಂದೋದ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ. ಅವನು ಜನಸಾಮಾನ್ಯರ ಉಡುಪು ತೊಟ್ಟು, ಸೈನಿಕರ ಬದಲಿಗೆ ಶಸ್ತ್ರಧಾರಿಗಳಲ್ಲದ ಪೋಲೀಸರನ್ನು ನೇಮಿಸಿ ಕ್ಷಮಾದಾನ ಶಾಸನವನ್ನು ಜಾರಿಗೆ ತಂದ ಮತ್ತು ಯುದ್ಧದಲ್ಲಿ ಸತ್ತ ಕೆಲವು ಉದಾರವಾದಿಗಳ ಸಂಸಾರಕ್ಕೆ ಸಹಾಯ ಮಾಡಿದ. ಅವನು ಮಕೋಂದೋವನ್ನು ಮುನಿಸಿಪಾಲಿಟಿ ದರ್ಜೆಗೆ ಏರಿಸುವುದರಲ್ಲಿ ಯಶಸ್ವಿಯಾದ ಮತ್ತು ಅದಕ್ಕಾಗಿ ಅವನು ಅದರ ಮೊದಲ ಮೇಯರ್ ಆದ. ಅವನು ಮಕೋಂದೋದ ಜನರಿಗೆ ಯುದ್ಧ ಎನ್ನುವುದು ಕಳೆದು ಹೋದ ಅಸಂಗತವಾದ ದುಃಸ್ವಪ್ನ ಎಂದು ಭಾವಿಸುವಂತೆ ಮಾಡುವ ವಾತಾವರಣವನ್ನು ಸೃಷ್ಟಿಸಿದ. ಶ್ವಾಸಕೋಶದ ಕಾಯಿಲೆಯಿಂದ ಸತ್ತ ಫಾದರ್ ನಿಕನೋರ್ ಸ್ಥಾನಕ್ಕೆ ‘ಪಪ್‘ ಎಂದು ಕರೆಯಲ್ಪಡುತ್ತಿದ್ದ ಮೊದಲನೆ ಸಂಯುಕ್ತವಾದಿಗಳ ಯುದ್ಧದ ಅನುಭವಿ ಫಾದರ್ ಕಾರೊನೆಲ್ ಬಂದ. ಆಂಪೆರೋ ಮೊಸ್ಕೋತೆಯನ್ನು ಮದುವೆಯಾಗಿದ್ದ ಬ್ರುನೋ ಕ್ರೆಪ್ಸಿಯ ಆಟದ ಮತ್ತು ಸಂಗೀತ ವಾದ್ಯಗಳ ಅಂಗಡಿ ಅಭಿವೃದ್ಧಿಗೊಂಡಿತಲ್ಲದೆ ಅವನು ಸ್ಪೇನಿನ ಕಂಪನಿಗಳು ಪಟ್ಟಿಯಲ್ಲಿ ಸೇರಿಸಿದ್ದಂಥ ಥಿಯೇಟರ್ ಒಂದನ್ನು ಕಟ್ಟಿಸಿದ. ಅದಕ್ಕೆ ಮರದ ಬೆಂಚುಗಳು, ಗಿಣಿ ಮುಖವಾಡಗಳ ವೆಲ್‌ವೆಟ್ ಕರ್ಟನ್ನುಗಳಿದ್ದ ಭಾರಿ ಹಜಾರವಿತ್ತು ಮತ್ತು ಸಿಂಹದ ತಲೆಗಳ ಆಕಾರದಲ್ಲಿದ್ದ ಮೂರು ಬಾಕ್ಸ್‌ಗಳ ಮೂಲಕ ಟಿಕೆಟ್‌ಗಳನ್ನು ಕೊಡಲಾಗುತ್ತಿತ್ತು. ಸುಮಾರು ಅದೇ ಸಮಯದಲ್ಲಿ ಸ್ಕೂಲನ್ನು ಮತ್ತೆ ಕಟ್ಟಲಾಯಿತು. ಅದನ್ನು ದಾನ್ ಮೆಲ್‌ಚರ್ ಎಸ್ಕಲೋನ ಎಂಬ ಜೌಗು ಪ್ರದೇಶದಿಂದ ಕರೆದು ತಂದ ಹಳೆಯ ಅಧ್ಯಾಪಕರ ಸುಪರ್ದಿಗೆ ಬಿಡಲಾಯಿತು. ಅವನು ಸೋಮಾರಿ ವಿದ್ಯಾರ್ಥಿಗಳಿಗೆ ಅಂಗಳದಲ್ಲಿ ಹರವಿದ ಕಾದ ಸಣ್ಣದ ಮೇಲೆ ಮಂಡಿಯ ಮೇಲೆ ನಡೆಯುವಂತೆ ಮಾಡುತ್ತಿದ್ದ ಮತ್ತು ಕ್ಲಾಸ್ ರೂಮಿನಲ್ಲಿ ಮಾತಾಡುತ್ತಿದ್ದವರಿಗೆ ಅವರ ತಂದೆ ತಾಯಿಯ ಒಪ್ಪಿಗೆ ಪಡೆದು ಸುಡುಮೆಣಸಿನಕಾಯಿ ತಿನ್ನುವಂತೆ ಮಾಡುತ್ತಿದ್ದ. ಸಾಂತ ಸೋಫಿಯಾ ದೆಲಾ ಪಿಯಾದೆಸ್ ಅವಳ ಮಕ್ಕಳಾದ ಅವ್ರೇಲಿಯಾನೋ ಸೆಗುಂದೋ ಮತ್ತು ಹೊಸೆ ಅರ್ಕಾದಿಯೋ ಸೆಗುಂದೋ ಸ್ಲೇಟು, ಬಳಪ ಮತ್ತು ತಮ್ಮ ಹೆಸರು ಬರೆದ ಅಲ್ಯುಮಿನಿಯಮ್ ಬೋಗುಣಿ ಜೊತೆ ಕ್ಲಾಸ್ ರೂಮಿನಲ್ಲಿ ಕುಳಿತ ಮೊದಲಿಗರು. ತನ್ನ ತಾಯಿಯ ರೂಪವನ್ನು ಬಳುವಳಿ ಪಡೆದಿದ್ದ ರೆಮಿದಿಯೋಸ್ ಸುಂದರಿ ರೆಮಿದಿಯೋಸ್ ಎಂದು ಹೆಸರು ಗಳಿಸಲು ಪ್ರಾರಂಭಿಸಿದಳು. ಕಾಲ ಉರುಳುತ್ತಿದ್ದರ ಜೊತೆಗೆ, ಒಂದರ ಹಿಂದೆ ಮತ್ತೊಂದು ದುರಂತ ಸೇರಿದ ವ್ಯಥೆ ಇದ್ದರೂ, ಉರ್ಸುಲಾ ಮುದಿಯಾಗುವುದನ್ನು ನಿರೋಧಿಸಿದ್ದಳು. ಸಾಂತ ಸೋಫಿ ದೆಲಾ ಪಿಯಾದಾದ್‌ಳ ಬೆಂಬಲದಿಂದ ಉರ್ಸುಲಾ ತನ್ನ ಕೋಳಿ ಮಾಂಸ ಮಾರಾಟದ ಉದ್ಯಮದಲ್ಲಿ ಹೊಸ ಉಮೇದಿನಿಂದ ತೊಡಗಿಕೊಂಡಳು ಮತ್ತು ಕೆಲವೇ ವರ್ಷಗಳಲ್ಲಿ, ಅವಳ ಮಗ ಯುದ್ಧದಲ್ಲಿ ಕಳೆದ ಸಂಪತ್ತೆಲ್ಲವನ್ನೂ ಮರು ಪಡೆದಳಷ್ಟೇ ಅಲ್ಲದೆ, ಬೆಡ್‌ರೂಮಿನಲ್ಲಿ ಹೂತಿಟ್ಟ ಸೋರೆ ಬುರುಡೆಯಲ್ಲಿ ಮತ್ತೆ ಅಪ್ಪಟ ಬಂಗಾರವನ್ನು ತುಂಬಿ ಇಟ್ಟಳು. ಅವಳು, “ಎಲ್ಲಿ ತನಕ ನಂಗೆ ಜೀವ ಇರುತ್ತೋ ಈ ತಲೆ ಕೆಟ್ಟ ಮನೇಲಿ ಸಂಪತ್ತಿರತ್ತೆ” ಎನ್ನುತ್ತಿದ್ದಳು. ಅವ್ರೇಲಿಯಾನೋ ಹೊಸೆ ನಿಕರಾಗುವಾದಲ್ಲಿ ಜರ್ಮನಿಯ ನೌಕೆಯೊಂದರಲ್ಲಿ ಅದರ ಸಿಬ್ಬಂದಿ ಎಂದು ಸಹಿ ಮಾಡಿ ಒಡಂಬಡಿಕೆಯ ಸೈನ್ಯವನ್ನು ತ್ಯಜಿಸಿದ ಸಮಯದಲ್ಲಿ ಮತ್ತು ಇಂಡಿಯನ್‌ನ ಹಾಗೆ ಕಪ್ಪಾಗಿ ಉದ್ದ ಕೂದಲು ಬಿಟ್ಟುಕೊಂಡು, ಕುದುರೆಯಷ್ಟು ಬಲಿಷ್ಠನಾಗಿ ಹಾಗೂ ಅಮರಾಂತಳನ್ನು ಮದುವೆಯಾಗಬೇಕೆಂಬ ಒಳನಿರ್ಧಾರದಿಂದ ಅಡುಗೆ ಮನೆಯಲ್ಲಿ ಕಾಣಿಸಿಕೊಂಡಾಗ ವಸ್ತುಸ್ಥಿತಿ ಹಾಗೆಯೇ ಇತ್ತು. +ಅಮರಾಂತ ಅವನು ಒಳಗೆ ಬಂದದ್ದನ್ನು ನೋಡಿದಾಗ ಅವನೇನೂ ತಿಳಿಸದಿದ್ದರೂ ಅವೇಳೆಗೆ ತಕ್ಷಣ ಹಿಂತಿರುಗಿ ಬಂದಿದ್ದು ಏಕೆಂದು ಗೊತ್ತಾಯಿತು. ಆದರೆ ಒಂದು ಎರಡು ವಾರದ ನಂತರ, ಉರ್ಸುಲಾಳ ಜೊತೆಗಿದ್ದ ಅಮರಾಂತಳ ಕಡೆ ನೋಡಿ ಅವನು, “ನಾನು ಯಾವಾಗ್ಲೂ ನಿನ್ನ ಯೋಚ್ನೇಲೆ ಇದ್ದೆ” ಎಂದ. ಅವಳು ಅವನ ಕಣ್ಣು ತಪ್ಪಿಸಿದಳು. ಅವಳು ಆಕಸ್ಮಿಕ ಭೇಟಿಗೆ ಅವಕಾಶ ಕೊಡಲಿಲ್ಲ, ಉರ್ಸುಲಾ ಸುಂದರಿ ರೆಮಿದಿಯೋಸ್‌ಳಿಂದ ದೂರವಿರದಂತೆ ನೋಡಿಕೊಂಡಳು. ಅವಳ ಸಂಬಂಧಿ, “ಎಷ್ಟು ದಿನ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿರಬೇಕೆಂದು ಮಾಡಿದೀಯ” ಎಂದು ಕೇಳಿದ ದಿನ ತನಗೆ ಲಜ್ಜೆ ಆವರಿಸಿದ್ದಕ್ಕಾಗಿ ಅವಳಿಗೆ ನಾಚಿಕೆಯಾಗಿತ್ತು. ಏಕೆಂದರೆ ಅದನ್ನು ಅವಳು ತನ್ನ ಕನ್ಯತ್ವ ಕುರಿತದ್ದೆಂದು ತಿಳಿದುಕೊಂಡಳು. ಅವನು ಬಂದ ಹೊಸದರಲ್ಲಿ ಅವಳು ತನ್ನ ಬೆಡ್‌ರೂಮಿನ ಬಾಗಿಲನ್ನು ತೆಗೆಯುತ್ತಿರಲಿಲ್ಲ. ಆದರೆ ಪಕ್ಕದ ರೂಮಿನ ಅನೇಕ ರಾತ್ರಿ ಅವನ ಶಾಂತ ಉಸಿರಾಟ ಕೇಳಿಸುತ್ತಿದ್ದರಿಂದ ಅವಳು ಎಚ್ಚರಿಕೆ ತೆಗೆದುಕೊಳ್ಳುವುದನ್ನು ಕೈಬಿಟ್ಟಳು. ಒಂದು ದಿನ ಬೆಳಿಗ್ಗೆ, ಊರಿಗೆ ಬಂದು ಎರಡು ತಿಂಗಳಾದ ನಂತರ ಅವನು ತನ್ನ ಬೆಡ್‌ರೂಮಿಗೆ ಬಂದದ್ದನ್ನು ಕೇಳಿಸಿಕೊಂಡಳು. ಅವಳು ಭಾವಿಸಿದ್ದಂತೆ ಓಡಿ ಹೋಗುವ ಅಥವಾ ಕೂಗುವ ಬದಲು ತನ್ನೊಳಗೆ ಮೃದು ಭಾವ ತುಂಬಲು ಬಿಟ್ಟಳು. ಅವನು ಚಿಕ್ಕ ಹುಡುಗನಾಗಿದ್ದಾಗ ಯಾವಾಗಲೂ ಮಾಡಿದಂತೆ ಸೊಳ್ಳೆ ಪರದೆಯ ಒಳಗೆ ನುಸುಳಿ ಬಂದದ್ದು ಅವಳಿಗೆ ಗೊತ್ತಾಯಿತು. ಅವನು ಸಂಪೂರ್ಣ ಬೆತ್ತಲಾಗಿದ್ದಾನೆಂದು ತಿಳಿದಾಗ ಅವಳಿಗೆ ತಣ್ಣನೆಯ ಬೆವರು ಮತ್ತು ಹಲ್ಲುಗಳ ಕಟಕಟವನ್ನು ತಡೆಯಲಾಗಲಿಲ್ಲ ಅವಳು ಕುತೂಹಲದಿಂದ ಉಸುರುಗಟ್ಟಿ, “ಹೊರಟು ಹೋಗು, ಇಲ್ದಿದ್ರೆ ಕೂಗಿಕೊಳ್ತೀನಿ” ಎಂದು ಪಿಸುಗುಟ್ಟಿದಳು. ಆದರೆ ಆಗ ಅವ್ರೇಲಿಯಾನೋ ಹೊಸೆಗೆ ಏನು ಮಾಡಬೇಕೆಂದು ತಿಳಿದಿತ್ತು. ಏಕೆಂದರೆ ಅವನು ಚಿಕ್ಕ ಹುಡುಗನಾಗಿರದೆ ದಂಡಿನ ಪಾಳೆಯದ ಪ್ರಾಣಿಯಾಗಿದ್ದ. ಆ ರಾತ್ರಿಯಿಂದ ಮಂಕಾದ, ಪರಿಣಾಮವಿರದ ಘರ್ಷಣೆಗಳು ಮತ್ತೆ ಪ್ರಾರಂಭವಾದವು. ಇದೇ ರೀತಿ ಮುಂಜಾವಿನ ತನಕ ಮುಂದುವರಿಯುತ್ತಿತ್ತು. ಅಮರಾಂತ ಸುಸ್ತಾಗಿ, “ನಾನು ನಿನ್ನ ಚಿಕ್ಕಮ್ಮ… ಹೆಚ್ಚು ಕಮ್ಮಿ ತಾಯಿಯ ಹಾU. ಕೇವಲ ವಯಸ್ನಿಂದ ಅಲ್ಲ. ಆದ್ರೆ ನಾನು ನಿನ್ನ ಬೆಳೆಸಿದ್ದೀನಿ. ಅದೊಂದನ್ನೇ ನಾನು ಮಾಡಿರೋದು” ಎಂದು ಮುಲುಗುಟ್ಟುತ್ತಿದ್ದಳು. ಅವ್ರೇಲಿಯಾನೋ ಬೆಳಿಗ್ಗೆ ಹರಿಯುತ್ತಲೆ ಎದ್ದು ಹೋಗುತ್ತಿದ್ದ ಮತ್ತು ಮಾರನೆ ದಿನ ಬೆಳಿಗ್ಗೆ ಬೇಗ ಬರುತ್ತಿದ್ದ. ಅವಳು ಬಾಗಿಲು ಹಾಕಿಕೊಂಡಿರದ ಪುರಾವೆಯಿಂದ ಅವನು ಪ್ರತಿ ಬಾರಿ ಹೆಚ್ಚು ಉತ್ಸುಕನಾಗಿರುತ್ತಿದ್ದ. ಅವನು ಅವಳನ್ನು ಬಯಸುವುದನ್ನು ಒಂದು ಕ್ಷಣ ನಿಲ್ಲಿಸಿರಲಿಲ್ಲ. ಅವನು ವಶಪಡಿಸಿಕೊಂಡ ಊರುಗಳ ಕತ್ತಲ ಕೋಣೆಗಳಲ್ಲಿ, ಮುಖ್ಯವಾಗಿ ತುಚ್ಛವಾದ ಸ್ಥಳಗಳಲ್ಲಿ ಮತ್ತು ಗಾಯಾಳುಗಳ ಬ್ಯಾಂಡೇಜಿನ ಒಣಗಿದ ರಕ್ತದ ವಾಸನೆಯಲ್ಲಿ, ಸಾವಿನ ಹಠಾತ್ ಭೀಕರತೆಯ ಕ್ಷಣದಲ್ಲಿ, ಎಲ್ಲ ವೇಳೆ ಮತ್ತು ಸ್ಥಳದಲ್ಲಿ ಅವಳನ್ನು ಕಂಡಿದ್ದ. ಅವನು ಅವಳ ನೆನಪನ್ನು ತೊಡೆದು ಹಾಕಲು ಅವಳಿಂದ ದೂರ ಹೋಗಿದ್ದ. ಕೇವಲ ಅಂತರದಿಂದಲ್ಲದೆ ದಿಗ್ಬ್ರಮೆಗೊಳಿಸುವ ಆದೇಶದಿಂದ ಅವನ ಸಂಗಾತಿಗಳು ಅದನ್ನು ಸಾಹಸವೆಂದು ತಿಳಿದುಕೊಂಡರು. ಆದರೆ ಯುದ್ಧದ ಹೊಲಸಿನಲ್ಲಿ ಹೊರಳಾಡುತ್ತಿದ್ದಷ್ಟ್ಟೂ, ಅಮರಾಂತಳ ಕಲ್ಪನೆ ಹೆಚ್ಚಾಗುತ್ತಿತ್ತು. ಇಡೀ ಯುದ್ಧ ಅಷ್ಟೇ ಹೆಚ್ಚಾಗಿ ಅಮರಾಂತಳನ್ನು ಹೋಲುತ್ತಿತ್ತು, ಹಾಗಾಗಿ ಅವನು ತನ್ನ ಸಾವಿನಿಂದ ಅವಳನ್ನು ಕೊಲ್ಲುವ ಮಾರ್ಗವನ್ನು ಹುಡುಕುತ್ತ ತಲೆ ತಪ್ಪಿಸಿಕೊಂಡು ಯಾತನೆ ಪಡುತ್ತಿದ್ದ. ಆಗ ಅವನಿಗೆ ಯಾವನೋ ಮುದುಕ ಸಂಬಂಧಿಯಾದ ತನ್ನ ಚಿಕ್ಕಮ್ಮನನ್ನೇ ಮದುವೆಯಾಗಿ, ಅವನ ಮಗನೇ ಮೊಮ್ಮಗನಾಗಿ ಕೊನೆಗೊಂಡ ಕಥೆಯನ್ನು ಹೇಳಿದ್ದು ತಿಳಿದು ಬಂತು. +ಅವನು ದಿಗ್ಭ್ರಮೆಗೊಂಡು, “ಯಾರೇ ಆದ್ರೂ ಅವನ ಚಿಕ್ಕಮ್ಮನ್ನ ಮದ್ವೆ ಆಗ್ಬಹುದಾ?” ಎಂದು ಕೇಳಿದ. +ಒಬ್ಬ ಸೈನಿಕ, “ಅವ್ನು ಹಾಗೇ ಮಾಡಿದ್ದು. ಅಷ್ಟೇ ಅಲ್ಲ, ನಾವು ಈ ಯುದ್ಧಾನ ಯಾರೇ ಆಗ್ಲಿ ಅವ್ನ ತಾಯಿಯನ್ನೇ ಮದ್ವೆ ಆಗ್ಬಹುದು ಅನ್ನೋದಕ್ಕೆ, ಪಾದ್ರಿಗಳ ವಿರುದ್ಧ ಹೋರಾಡ್ತೊರೋದು” ಎಂದು ಉತ್ತರಿಸಿದ. +ಎರಡು ವಾರಗಳ ನಂತರ ಅವನು ಅದನ್ನು ತೊರೆದು ಬಂದ. ಅಮರಾಂತ ಅವನ ನೆನಪಿಗಿಂತಲೂ ಹೆಚ್ಚಾಗಿ ಸೊರಗಿದ ಹಾಗೆ, ಹೆಚ್ಚು ನಾಚಿಕೆ ಹಾಗೂ ದುಃಖಿತಳಾಗಿ ಮತ್ತು ನಿಜವಾಗಲೂ ತನ್ನ ಪ್ರಬುದ್ಧತೆಯ ಕೊನೆಯ ತಿರುವಿನಲ್ಲಿರುವಂತೆ, ಆದರೆ ಬೆಡ್‌ರೂಮಿನ ಕತ್ತಲಲ್ಲಿ ಎಂದಿಗಿಂತಲೂ ಹೆಚ್ಚು ತಾಪಗೊಂಡವಳಂತೆ, ಅಲ್ಲದೆ ಅವಳ ಪ್ರತಿರೋಧದಲ್ಲಿ ಉಗ್ರತೆ ಹೆಚ್ಚಾದಂತೆ ಅವನಿಗೆ ಕಂಡಿತು. ಅಮರಾಂತ ಅವನಿಗೆ, “ನೀನೊಬ್ಬ ರಾಕ್ಷಸ” ಎಂದು ಅವನ ಕೆರಳುವಿಕೆಯಿಂದ ಕಿರುಕುಳಗೊಂಡು ಹೇಳುತ್ತಿದ್ದಳು. ಜೊತೆಗೆ, “ನೀನು ಪೋಪ್‌ನ ಒಪ್ಪಿಗೆ ಇಲ್ದೆ ನಿನ್ನ ಚಿಕ್ಕಮ್ಮಂಗೆ ಹೀಗೆಲ್ಲ ಮಾಡೋ ಹಾಗಿಲ್ಲ” ಎಂದಳು. ಅವ್ರೇಲಿಯಾನೋ ಹೊಸೆ ಅವಳು ಸಹಕರಿಸುವುದಕ್ಕಾಗಿ, ತನ್ನ ಮಂಡಿಯ ಮೇಲೆ ನಡೆದುಕೊಂಡು ಯೂರೋಪಿಗೆ ಹೋಗಿ, ಪಾದ್ರಿಗಳ ಚಪ್ಪಲಿಗಳಿಗೆ ಮುತ್ತಿಕ್ಕುವುದಾಗಿ ಮಾತು ಕೊಟ್ಟ. +ಅಮರಾಂತ, “ಅದಷ್ಟೇ ಅಲ್ಲ, ಮಕ್ಕಳು ಹುಟ್ಟಿದ್ರೂ, ಅವಕ್ಕೆ ಹಂದಿ ಬಾಲ ಇರತ್ತೆ” ಎಂದು ತಿರುಗೇಟು ಹಾಕಿದಳು. +ಅವನು ಅವಳ ಎಲ್ಲ ವಾದಕ್ಕೂ ಕಿವುಡನಾಗಿದ್ದ. +ಅವನು, “ಅವು ಬರಿ ಮೂಳೆ ಇಟ್ಕೊಂಡು ಹುಟ್ಟಿದರೂ ನಾನು ಯೋಚ್ನೆ ಮಾಡಲ್ಲ” ಎಂದ. +ಒಂದು ದಿನ ಬೆಳಿಗ್ಗೆ ತಡೆ ಹಿಡಿದ ಗಂಡಸುತನದ ಅಸಾಧ್ಯ ನೋವಿಗೆ ತುತ್ತಾಗಿ ಅವನು ಕತಾವುರೆಯ ಸ್ಟೋರಿಗೆ ಹೋದ. ಅವನಿಗೆ ವಿಶ್ವಾಸದಿಂದ ಕಮ್ಮಿ ದುಡ್ಡಿಗೆ ಜೋತು ಬಿದ್ದ ಮೊಲೆಗಳ ಹೆಂಗಸೊಬ್ಬಳು ಕಂಡು ಅವಳು ಅವನ ಹೊಟ್ಟೆಯೊಳಗಿನ ಉರಿಯನ್ನು ಸ್ವಲ್ಪ ಕಾಲ ಶಮನಮಾಡಿದಳು. ಅವನು ಅಮರಾಂತಳ ಬಗ್ಗೆ ನಿರ್ಲಕ್ಷ ತೋರಿಸುವ ಪ್ರಯೋಗ ಮಾಡಿದ. ಅವಳು ಹೊರಾಂಗಳದಲ್ಲಿ, ಹೊಲಿಗೆ ಯಂತ್ರದಲ್ಲಿ ಮೆಚ್ಚತಕ್ಕ ನಿಪುಣತೆಯನ್ನು ಕೆಲಸ ಮಾಡುವುದನ್ನು ನೋಡುತ್ತಿದ್ದ. ಆದರೆ ಅವಳ ಜೊತೆ ಮಾತನಾಡುತ್ತಿರಲಿಲ್ಲ. ಅಮರಾಂತ ತಾನು ಬದುಕಿದೆ ಎಂದುಕೊಂಡಳು. ತಾನೇಕೆ ಈಗ ಮತ್ತೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕುರಿತು ಯೋಚಿಸುತ್ತಿದ್ದೇನೆ ಅಲ್ಲದೆ ಮಧ್ಯಾಹ್ನದಲ್ಲಿ ಆಡುತ್ತಿದ್ದ ಚೀನೀಯರ ಚದುರಂಗವನ್ನು ನೋವಿನಿಂದ ನೆನಪಿಸಿಕೊಳ್ಳುತ್ತಿರುವುದು ಏಕೆ ಎಂದು ಅವಳಿಗೇ ಅರ್ಥವಾಗಿರಲಿಲ್ಲ. ಜೊತೆಗೆ ತನ್ನ ಬೆಡ್‌ರೂಮಿನಲ್ಲಿ ಅವನನ್ನು ಬಯಸುತ್ತಿರುವುದು ಏಕೆ ಎನ್ನುವುದು ಕೂಡ. ಅವ್ರೇಲಿಯಾನೋ ಹೊಸೆಗೆ ತನ್ನ ನಿರ್ಲಕ್ಷದ ತೋರಿಕೆಯಿಂದ ರಾತ್ರಿಯ ಸಮಯದಲ್ಲಿ ಕಳೆದುಕೊಂಡದ್ದು ಎಷ್ಟೆಂದು ಅರಿವಾಗಲಿಲ್ಲ. ಅವನು ಮತ್ತೆ ಅಮರಾಂತಳ ರೂಮಿಗೆ ಹೋದ. ಅವಳು ಯಾವುದೇ ಮುಲಾಜಿಲ್ಲದೆ ಖಡಾಖಂಡಿತವಾಗಿ ಅವನನ್ನು ನಿರಾಕರಿಸಿದಳು ಮತ್ತು ಬೆಡ್‌ರೂಮಿನ ಬಾಗಿಲನ್ನು ಮತ್ತೆಂದೂ ಹಾಕದೆ ಇರಲಿಲ್ಲ. +ಅವ್ರೇಲಿಯಾನೋ ಹೊಸೆ ಹಿಂತಿರುಗಿ ಬಂದು ಕೆಲವು ತಿಂಗಳ ನಂತರ ಮಲ್ಲಿಗೆ ಸುವಾಸನೆ ದ್ರವವನ್ನು ಹಚ್ಚಿಕೊಂಡು ಚುರುಕಾಗಿದ್ದ ಹೆಂಗಸೊಬ್ಬಳು, ಐದು ವರ್ಷದ ಹುಡುಗನ ಜೊತೆ ಮನೆಯ ಮುಂದೆ ಕಾಣಿಸಿಕೊಂಡಳು. ಆ ಹುಡುಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಗನೆಂದು ಮತ್ತು ಅವನಿಗೆ ಹೆಸರಿಡಲು ಉರ್ಸುಲಾ ಳಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದಳು. ಹೆಸರಿಲ್ಲದ ಆ ಹುಡುಗನ ಹುಟ್ಟಿನ ಮೂಲವನ್ನು ಯಾರೂ ಅನುಮಾನಿಸಲಿಲ್ಲ. ಏಕೆಂದರೆ ಅವನು ಮೊಟ್ಟ ಮೊದಲ ಐಸ್ ನೋಡಲು ಹೋದ ಸಮಯದಲ್ಲಿ ಕರ್ನಲ್ ಇದ್ದ ಹಾಗೆಯೇ ಇದ್ದ. ಆ ಹುಡುಗ ಕಣ್ಣು ತೆರೆದುಕೊಂಡೇ ಹುಟ್ಟಿದನೆಂದೂ, ಜನರ ಕಡೆ ದೊಡ್ಡವರಂತೆ ಅಳೆಯುವ ಹಾಗೆ ನೋಡುತ್ತಾನೆಂದೂ ಮತ್ತು ವಸ್ತುಗಳ ಕಡೆ ಕಣ್ಣು ಮಿಟುಕಿಸದೆ ನೋಡುವ ರೀತಿಯಿಂದ ತನಗೆ ಭಯವಾಗಿದೆಯೆಂದು ಆ ಹೆಂಗಸು ಹೇಳಿದಳು. ಉರ್ಸುಲಾ, “ಅವನ ಹಾಗೆಯೇ ಇದಾನೆ. ಒಂದೇ ವ್ಯತ್ಯಾಸ ಅಂದ್ರೆ, ಸುಮ್ನೆ ನೋಡ್ತಿದ್ದ ಹಾಗೆ ಕುರ್ಚಿಗಳನ್ನ ಅವನು ಅಲ್ಲಾಡಿಸ್ತಿದ್ದ ಹಾಗೆ, ಇವನ್ಗೆ ಆಗ್ತಿಲ್ಲ ಅಷ್ಟೆ” ಎಂದಳು. ಅವನಿಗೆ ಅವ್ರೇಲಿಯಾನೋ ಹೆಸರಿನೊಂದಿಗೆ ಅವನ ತಾಯಿಯ ಹೆಸರನ್ನು ಕೊನೆಯಲ್ಲಿ ಸೇರಿಸಿದರು. ಏಕೆಂದರೆ ತಂದೆಯಾದವನು ಬಂದು ಅವನನ್ನು ಗುರುತು ಹಿಡಿಯುವ ತನಕ ಅವನ ಹೆಸರನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಕಾನೂನು ನಿಷೇಧಿಸಿತ್ತು. ಜನರಲ್ ಮೊಂಕಾದ ಅವನ ಜವಾಬ್ದಾರಿ ವಹಿಸಿಕೊಂಡ. ಅಮರಾಂತ ಅವನು ಹೋಗಲಿ, ತಾನು ಅವನು ಬೆಳೆಯುವುದನ್ನು ನೋಡಿಕೊಳ್ಳುವುದಾಗಿ ಒತ್ತಾಯಿಸಿದರೂ, ಅವನ ತಾಯಿ ಒಪ್ಪಲಿಲ್ಲ. +ಉರ್ಸುಲಾಗೆ ಆ ಸಮಯದಲ್ಲಿ ಕೋಳಿಗಳನ್ನು ಒಳ್ಳೆಯ ತಳಿಗೆಂದು ಬಿಡುವ ಹಾಗೆ ಯೋಧರ ಬೆಡ್‌ರೂಮಿಗೆ ಕನ್ಯೆಯರನ್ನು ಕಳಿಸಿಕೊಡುವ ಪದ್ಧತಿ ಇರುವುದು ಗೊತ್ತಿರಲಿಲ್ಲ. ಆದರೆ ಒಂದು ವರ್ಷದ ಅವಧಿಯಲ್ಲಿ ಅವಳಿಗೆ ಅದು ಗೊತ್ತಾಯಿತು. ಆ ವರ್ಷದಲ್ಲಿ ಹೆಸರಿಡಬೇಕೆಂದು ಇನ್ನೂ ಒಂಬತ್ತು ಜನ ಹುಡುಗರನ್ನು ಅವಳ ಮನೆಗೆ ಕರೆದುಕೊಂಡು ಬಂದರು. ಎಲ್ಲರಿಗಿಂತ ಹೆಚ್ಚು ವಯಸ್ಸಾದ ವಿಚಿತ್ರ ಕಪ್ಪಗೆ ಹಸಿರುಗಣ್ಣಿನ ತಂದೆಯ ಹಾಗೆ ಸ್ವಲ್ಪವೂ ಇರದ ಹುಡುಗನಿಗೆ, ಹತ್ತು ವರ್ಷಕ್ಕಿಂತ ಹೆಚ್ಚಾಗಿತ್ತು. ಎಲ್ಲ ವಯಸ್ಸಿನ, ಎಲ್ಲ ಬಣ್ಣದ ಮಕ್ಕಳನ್ನು ಕರೆದುಕೊಂಡು ಬಂದರು ಮತ್ತು ಎಲ್ಲರಲ್ಲಿ ಇರದ ನಿಸ್ಸಂಗತ್ವ ಗುಣ ಅವರ ಸಂಬಂಧದ ಬಗ್ಗೆ ಯಾವುದೇ ಅನುಮಾನ ಬರದಂತೆ ಮಾಡಿತ್ತು. ಕೇವಲ ಇಬ್ಬರು ಮಾತ್ರ ವಿಶೇಷವಾಗಿದ್ದರು. ವಯಸ್ಸಿಗಿಂತ ಹೆಚ್ಚಿಗೆ ಬೆಳೆದಿದ್ದವನೊಬ್ಬ ಚೀನೀ ಹೂವಿನ ಕುಂಡಗಳನ್ನು ಪುಡಿಪುಡಿ ಮಾಡುತ್ತಿದ್ದ. ಏಕೆಂದರೆ ಅವನ ಕೈಗಳಿಗೆ ಏನನ್ನಾದರೂ ಮುಟ್ಟಿದರೆ ಒಡೆಯುವ ಗುಣವಿದ್ದಂತೆ ಕಾಣುತ್ತಿತ್ತು. ಇನ್ನೊಬ್ಬನಿಗೆ ಕೆಂಗೂದಲಿನ ಅವನ ತಾಯಿಯ ಹಾಗೆ ಕಾಂತಿಯುಕ್ತ ಕಣ್ಣುಗಳಿತ್ತು ಮತ್ತು ಆಕೆಯ ಹಾಗೆ ಕೂದಲನ್ನು ಉದ್ದವಾಗಿ, ಹೆಂಗಸಿನ ಹಾಗೆ ಗುಂಗುರು ಗುಂಗುರಾಗಿ ಬೆಳೆಯುವಂತೆ ಬಿಟ್ಟಿದ್ದ. ಅವನು ಅಲ್ಲಯೇ ಇದ್ದು ಮನೆಗೆ ತೀರ ಪರಿಚಿತನಾದವನಂತೆ ಒಳಗೆ ಬಂದ ಮತ್ತು ನೇರವಾಗಿ ಉರ್ಸುಲಾಳ ಬೆಡ್‌ರೂಮಿಗೆ ಹೋಗಿ, “ನಂಗೆ ಬೇಕು . .ಕುಣಿಯೋ ಹುಡುಗಿ ಬೇಕು” ಎಂದು ಹಠ ಹಿಡಿದ. ಉರ್ಸುಲಾ ನಿಬ್ಬೆರಗಾದಳು. ಅವಳು ಕಪಾಟು ತೆಗೆದು, ಮೆಲ್‌ಕಿಯಾದೆಸ್‌ನ ಕಾಲದಿಂದ ಅಲ್ಲಿ ಬಿದ್ದಿದ್ದ ಹಳೆಯ ಧೂಳು ಹಿಡಿದ ವಸ್ತುಗಳಲ್ಲಿ ಹುಡುಕಿ, ಉದ್ದನೆ ಕಾಲು ಚೀಲದಲ್ಲಿ ಸುತ್ತಿದ್ದ ಪಿಯತ್ರೋ ಕ್ರೆಪ್ಸಿ ಹಿಂದೆ ಮನೆಗೆ ತಂದಿದ್ದ ಯಾಂತ್ರಿಕ ಹುಡುಗಿಯನ್ನು ಪತ್ತೆ ಮಾಡಿದಳು. ಅದನ್ನು ಎಲ್ಲರೂ ಮರೆತು ಬಿಟ್ಟಿದ್ದರು. ಹನ್ನೆರಡು ವರ್ಷಗಳ ಒಳಗೆ ಕರ್ನಲ್ ಯುದ್ಧದಲ್ಲಿ ಮುಳುಗಿದ್ದಾಗ ಹುಟ್ಟಿಸಿದ ಹದಿನೇಳು ಗಂಡು ಮಕ್ಕಳಿಗೆ, ಅವ್ರೇಲಿಯಾನೋ ಮತ್ತು ಅವರವರ ತಾಯಂದಿರ ಹೆಸರುಗಳನ್ನು ಜೋಡಿಸಿ ಹೆಸರಿಟ್ಟರು. ಪ್ರಾರಂಭದಲ್ಲಿ ಉರ್ಸುಲಾ ಅವರ ಪಾಕೆಟ್ಟುಗಳಿಗೆ ದುಡ್ಡು ತುಂಬುತ್ತಿದ್ದಳು ಮತ್ತು ಅಮರಾಂತ ಅಲ್ಲೇ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಳು. ಆದರೆ ಕೊನೆಗೆ ಅವರಿಗೆ ಕೊಡುಗೆಗಳನ್ನು ಕೊಡುತ್ತ ಮತ್ತು ಜವಾಬ್ದಾರಿ ವಹಿಸಿಕೊಳ್ಳುವುದರಷ್ಟಕ್ಕೆ ಮಿತಿಗೊಳಿಸಿದರು. ಉರ್ಸುಲಾ, “ಅವರಿಗೆ ಹೆಸರಿಟ್ಟು ನಮ್ಮ ಕರ್ತವ್ಯ ನಾವು ಮಾಡಿದೀವಿ” ಎಂದು ಒಂದು ಖಾತೆಯಲ್ಲಿ ಮಕ್ಕಳ ತಾಯಿ, ಅವು ಹುಟ್ಟಿದ ಸ್ಥಳ ಮತ್ತು ತಾ;ರೀಖನ್ನು ಬರೆದಿಡುತ್ತ, “ಅವ್ರೇಲಿಯಾನೋಗೆ ಎಲ್ಲ ಚೊಕ್ಕವಾಗಿಡ್ಬೇಕು, ಯಾಕೆಂದರೆ ಅವನ್ಗೆ ವಾಪಸು ಬಂದ ಮೇಲೆ ನಿರ್ಧಾರ ಮಾಡಕ್ಕಾಗುತ್ತೆ” ಎಂದು ಹೇಳುತ್ತಿದ್ದಳು. ಊಟ ಮಾಡುವಾಗ ಒಮ್ಮೆ ಅವಳು, ಜನರಲ್ ಮೊಂಕಾದಗೆ, ಹೊಂದಾಣಿಕೆ ಇಲ್ಲದೆ ಸಂತಾನ ಹೆಚ್ಚುತ್ತಿರುವುದರ ಬಗ್ಗೆ ಟೀಕೆ ಮಾಡುತ್ತ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬೇಗ ಹಿಂತಿರುಗಿ ಬಂದು ಅವನ ಎಲ್ಲ ಮಕ್ಕಳನ್ನು ಮನೆಯಲ್ಲಿ ಒಗ್ಗೂಡಿಸಬೇಕೆಂಬ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದಳು. +ಜನರಲ್ ಮೊಂಕಾದ, “ನೀವೇನೂ ಯೋಚ್ನೆ ಮಾಡ್ಬೇಡಿ. ನೀವು ಅಂದುಕೊಂಡಿರೋದಕ್ಕಿಂತ್ಲೂ ಮುಂಚೆ ಬರ್‍ತಾನೆ” ಎಂದು ಗುಟ್ಟು ಬಿಡದೆ ಹೇಳಿದ. +ಜನರಲ್ ಮೊಂಕಾದಾಗೆ ಗೊತ್ತಿದ್ದರೂ ಊಟದ ಸಮಯದಲ್ಲಿ ಹೊರಗೆಡವದ ವಿಷಯವೆಂದರೆ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಲ್ಲಿಯ ತನಕ ಪ್ರಾರಂಭಿಸಿದ ಕ್ರೂರವಾದ ದಂಗೆಗಿಂತ ಹೆಚ್ಚು ದೀರ್ಘವಾz, ತೀವ್ರ ಸುಧಾರಣವಾದದ್ದರ ನೇತೃತ್ವವನ್ನು ವಹಿಸಿಕೊಳ್ಳುವ ಮಾರ್ಗದಲ್ಲಿದ್ದಾನೆ, ಎಂದು. +ಮೊದಲ ಯುದ್ಧದ ಮುಂಚಿನಂತೆಯೇ ಮತ್ತೆ ವಾತಾವರಣ ಬಿಗಿಯಾಯಿತು. ಸ್ವತಃ ಮೇಯರ್ ವ್ಯವಸ್ಥೆಗೊಳಿಸಿದ ಹುಂಜದ ಕಾಳಗವನ್ನು ನಿಷೇಧಿಸಲಾಯಿತು. ಕಾವಲು ಪಡೆಯ ದಂಡನಾಯಕನಾದ ಕರ್ನಲ್ ಅಕ್ವಿಲಿಸ್ ರಿಕಾದೊ ಮುನಿಸಿಪಲ್ ಅಧಿಕಾರದ ಚಲಾವಣೆಯನ್ನು ವಹಿಸಿಕೊಂಡ. ಉದಾರವಾದಿಗಳು ಅವನನ್ನು ಹುಚ್ಚೆಬ್ಬಿಸುವ ಮನುಷ್ಯನಂತೆ ಭಾವಿಸಿದರು. ಉರ್ಸುಲಾ ಅವ್ರೇಲಿಯಾನೋ ಹೊಸೆಗೆ, “ಏನೋ ಅನಾಹುತ ಆಗೋದ್ರಲ್ಲಿದೆ. ಸಾಯಂಕಾಲ ಆರು ಗಂಟೆ ಆದ ಮೇಲೆ ರಸ್ತೆಗೆ ಹೋಗ್ಬೇಡ” ಎಂದಳು. ಹೇಳಿದ್ದೆಲ್ಲ ವ್ಯರ್ಥವಾಯಿತು. ಅವ್ರೇಲಿಯಾನೋ ಹೊಸೆ, ಹಿಂದೆ ಅರ್ಕಾದಿಯೋ ಇದ್ದ ಹಾಗೆ ಅವಳಿಂದ ದೂರವಾಗಿದ್ದ. ಅವನು ಮನೆಗೆ ಹಿಂತಿರುಗಿ ಬಂದ ಮೇಲೆ ದಿನನಿತ್ಯದ ಅಗತ್ಯಗಳಿಗೆ ಕಾಳಜಿ ಇಲ್ಲದಂತಾಗಿ, ಅವನ ಚಿಕ್ಕಪ್ಪ ಹೊಸೆ ಅರ್ಕಾದಿಯೋನಂತೆ ಸೋಮಾರಿಯಾಗುವ ಹಾಗೆ ಮಾಡಿತ್ತು. ಅವನಿಗೆ ಅಮರಾಂತಳ ಕಡೆ ಇದ್ದ ವ್ಯಾಮೋಹ ಯಾವುದೇ ಗಾಯ ಮಾಡದೇ ಮಾಯವಾಗಿತ್ತು. ಅವನು ಎಲ್ಲಂದರಲ್ಲಿ ತಿರುಗುತ್ತ, ಆಟವಾಡುತ್ತ, ಆಗೀಗ ಹೆಂಗಸರ ಜೊತೆ ಕಳೆದು ಏಕಾಂತವನ್ನು ಕಡಿಮೆ ಮಾಡಿಕೊಳ್ಳುತ್ತ, ಉರ್ಸುಲಾ ದುಡ್ಡನ್ನು ಎಲ್ಲೋ ಗುಟ್ಟಾಗಿಟ್ಟು ಮರೆತಿರುವ ಜಾಗಗಳನ್ನು ಹುಡುಕುತ್ತಿದ್ದ. ಕೊನೆಗೆ ಅವನು ಬಟ್ಟೆ ಬದಲಾಯಿಸುವುದಕ್ಕೆ ಮಾತ್ರ ಮನೆಗೆ ಬರುವ ಹಾಗಾದ. ಉರ್ಸುಲಾ ಗೊಣಗುತ್ತ, “ಅವರೆಲ್ಲ ಒಂದೇ ರೀತಿ… ಮೊದ್ಲು ಒಳ್ಳೆಯವರಾಗಿ ಹೇಳಿದ ಹಾಗೆ ಕೇಳ್ಕೊಂಡು, ಒಂದು ನೋಣನೂ ಹೊಡೆಯಲಿಕ್ಕೆ ಆಗಲ್ಲವೇನೋ ಅನ್ನೋ ಹಾಗಿರ್‍ತಾರೆ. ಆದ್ರೆ ಗಡ್ಡ ಮೀಸೆ ಬಂದ ಕೂಡ್ಲೆ ಹಾಳಾಗಿ ಹೋಗ್ತಾರೆ” ಹೇಳಿದಳು. ತನ್ನ ತಂದೆ ಯಾರು ಎಂದು ತಿಳಿಯದೇ ಇದ್ದ ಅರ್ಕಾದಿಯೋನ ಹಾಗಲ್ಲz, ತಾನು ಪಿಲರ್ ಟೆರ್‍ನೆರಾಳ ಮಗನೆಂದು, ಹಾಸಿಗೆಯನ್ನು ಅವಳ ಮನೆಗೆ ತೆಗೆದುಕೊಂಡು ಹೋಗಿ ಹಾಕಿದ. ತಾಯಿ ಮತ್ತು ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಪರಸ್ಪರ ಏಕಾಂತದಲ್ಲಿ ಸಹಭಾಗಿಗಳಾಗಿದ್ದರು. ಪಿಲರ್ ಟೆರ್‍ನೆರಾ ಎಲ್ಲ ಆಸೆಗಳನ್ನು ಬಿಟ್ಟಿದ್ದಳು. ಅವಳ ಧ್ವನಿ ಉಡುಗಿತ್ತು, ಕೊನೆಯಿಲ್ಲದ ನೇವರಿಕೆಯಿಂದ ಅವಳ ಮೊಲೆಗಳು ಜೋತು ಬಿದ್ದಿದ್ದವು. ಅವಳ ಹೊಟ್ಟೆ ಮತ್ತು ತೊಡೆಗಳು ಹಂಚಿಕೊಂಡ ಹೆಂಗಸಿನ ಗತಿ ಕಾಣದ ದುರ್ವಿಧಿಗೆ ಒಳಗಾಗಿತ್ತು. ಆದರೆ ಅವಳ ಹೃದಯ ಕಹಿ ಇಲ್ಲದೆ ಬೆಳೆಯಿತು. ದಡೂತಿಯಾದ, ವಾಚಾಳಿಯಾದ, ಅವಮಾನಿತಳಾದ, ಸೂಲಗಿತ್ತಿಯಂತಿದ್ದ ಅವಳು ತನ್ನ ಕಾರ್ಡುಗಳ ಬಗ್ಗೆ ಇದ್ದ ಗೌರವವನ್ನು ಕೈಬಿಟ್ಟಳು ಮತ್ತು ಇತರರ ಜೀವನದಲ್ಲಿರುವ ಪ್ರೀತಿಯಲ್ಲಿ ಶಾಂತಿಯನ್ನು ಕಂಡುಕೊಂಡಳು. ಅವ್ರೇಲಿಯಾನೋ ಮಧ್ಯಾಹ್ನ ನಿದ್ದೆ ಮಾಡುತ್ತಿದ್ದ ಮನೆಯಲ್ಲಿ ಅಕ್ಕಪಕ್ಕದಲ್ಲಿದ್ದ ಹುಡುಗಿಯರು, ತಮ್ಮ ಪ್ರೇಮಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಅವರು ಮನೆಯ ಒಳಗಡೆಯೇ ಬಂದು, “ಪಿಲರ್ ನಿನ್ನ ರೂಮನ್ನ ಸ್ವಲ್ಪ ಕೊಡು” ಎಂದು ಸಲೀಸಾಗಿ ಕೇಳುತ್ತಿದ್ದರು. ಅವಳು, “ಅದಕ್ಕೇನೀಗ” ಎಂದು ಒಪ್ಪಿ, ಅಲ್ಲಿ ಬೇರೆ ಇನ್ನು ಯಾರಾದರೂ ಇದ್ದರೆ, “ಜನರು ಹಾಸಿಗೇಲಿ ಖುಷಿಯಾಗಿರ್‍ತಾರಲ್ಲ ಅಂತ ನಂಗೆ ಸಂತೋಷ” ಎಂದು ಹೇಳುತ್ತಿದ್ದಳು. +ಅವಳು ಮಾಡಿ ಕೊಡುತ್ತಿದ್ದ ಅನುಕೂಲಕ್ಕೆ ಅವರಿಂದ ಕಾಸು ವಸೂಲು ಮಾಡುತ್ತಿರಲಿಲ್ಲ. ಯೌವನದ ದಿನಗಳಲ್ಲಿ ಅವಳನ್ನು ಬಳಸಿಕೊಂಡು ಆಗೀಗ ಕೊಂಚ ಸಂತೋಷ ಬಿಟ್ಟರೆ, ದುಡ್ಡು ಕೊಡದೆ ಪ್ರೀತಿಯನ್ನೂ ಕೊಡದೆ ಹೋದ ಲೆಕ್ಕವಿಲ್ಲದಷ್ಟು ಜನರನ್ನು ಹೇಗೆ ನಿರಾಕರಿಸಲಿಲ್ಲವೋ, ಅದೇ ರೀತಿಯಲ್ಲಿ, ಉಪಕಾರ ಮಾಡುವುದನ್ನು ನಿರಾಕರಿಸಲಿಲ್ಲ. ಅವಳು ಐದು ಜನ ಹೆಣ್ಣು ಮಕ್ಕಳು ಹದಿವಯಸ್ಸಿನಲ್ಲಿ ಜೀವನದ ಕವಲು ದಾರಿಯಲ್ಲಿ ಕಳೆದು ಹೋದರು. ಅವಳು ಬೆಳೆಸಲು ಸಾಧ್ಯವಾದ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸೈನ್ಯದಲ್ಲಿ ಹೋರಾಡುತ್ತ ಸತ್ತ ಮತ್ತು ಇನ್ನೊಬ್ಬ ಹದಿನಾಲ್ಕನೇ ವಯಸ್ಸಿನಲ್ಲಿ ಜೌಗು ಪ್ರದೇಶದ ಊರೊಂದರಲ್ಲಿ ಕೋಳಿಗಳ ಬುಟ್ಟಿಯನ್ನು ಕದಿಯುತ್ತಿದ್ದಾಗ ಗಾಯಗೊಂಡಿದ್ದ. ಒಂದು ವಿಧದಲ್ಲಿ ಕಪ್ಪಗೆ ಎತ್ತರವಿದ್ದ ಅವನಿಗೆ, ಕಾರ್ಡುಗಳಿಂದ ಅರ್ಧ ಶತಮಾನದ ಆಶ್ವಾಸನೆ ಕೊಡಲಾಗಿತ್ತು ಮತ್ತು ಕಾರ್ಡುಗಳು ತಿಳಿಸಿದ ಎಲ್ಲ ಜನರ ಹಾಗೆ, ಅವಳಲ್ಲಿ ಪ್ರೇಮದ ಭಾವನೆ ಹುಟ್ಟಿದಾಗ, ಅವನ ಮೇಲೆ ಆಗಲೆ ಸಾವಿನ ಮುದ್ರೆ ಬಿದ್ದಿತ್ತು. ಅವಳು ಅದನ್ನು ಕಾರ್ಡುಗಳಲ್ಲಿ ಕಂಡಳು. +ಅವಳು, “ಇವತ್ತು ರಾತ್ರಿ ಹೊರಗೆ ಹೋಗ್ಬೇಡ. ಇಲ್ಲೇ ಮಲಕ್ಕೋ. ಏಕೆಂದರೆ ನಿನ್ನ ರೂಮಿಗೆ ಕಳಿಸು ಅಂತ ಕಾಮೆಲಿಟಾ ಮೊಂತಿಯಲ್ ನನ್ನನ್ನ ಸಾಕಷ್ಟು ಸಲ ಕೇಳಿದಾಳೆ” ಎಂದಳು. +ಅವಳು ಕೇಳಿಕೊಂಡಿದ್ದರಲ್ಲಿ ಇದ್ದ ಭಾವತೀವ್ರತೆ ಅವನಿಗೆ ತಿಳಿಯಲಿಲ್ಲ. +ಅವನು “ಅವಳಿಗೆ ಇವತ್ತು ರಾತ್ರಿ ನಂಗೋಸ್ಕರ ಕಾಯಕ್ಕೆ ಹೇಳು” ಎಂದ. +ಅವನು ಥಿಯೇಟರ್‌ಗೆ ಹೋದ. ಅಲ್ಲಿ ಸ್ವಾನಿಷ್ ಕಂಪನಿಯೊಂದು ‘ಡ್ಯಾಗರ್ ಆಫ್ ದ ಫಾಕ್ಸ್\’ ಎಂಬ ನಾಟಕವನ್ನು ಕ್ಯಾಪ್ಟನ್ ಆಕೈಲಿನ್ ರಿಕಾರ್ಡೋನ ಅಪ್ಪಣೆಯಂತೆ ಹೆಸರನ್ನು ಬದಲಾಯಿಸಿ ಪ್ರದರ್ಶಿಸುವವರಿದ್ದರು. ಏಕೆಂದರೆ ಉದಾರವಾದಿಗಳು ಸಂಪ್ರದಾಯವಾದಿಗಳನ್ನು ಅನಾಗರಿಕರು ಎಂದು ಕರೆದಿದ್ದರು. ಅವ್ರೇಲಿಯಾನೋ ಹೊಸೆ ಬಾಗಿಲಲ್ಲಿ ಟಿಕೆಟ್ ಕೊಟ್ಟಾಗಲೆ ಅವನಿಗೆ ಕ್ಯಾಪ್ಟನ್ ಆಕ್ವಿಲಿಸ್ ರಿಕಾರ್ಡೋ ಮತ್ತು ಬಂದೂಕು ಹೊಂದಿದ್ದ ಇಬ್ಬರು ಸೈನಿಕರು ಪ್ರೇಕ್ಷಕರಲ್ಲಿ ಹುಡುಕುತ್ತಿದ್ದಾರೆಂದು ತಿಳಿದದ್ದು. +ಅವ್ರೇಲಿಯಾನೋ ಹೊಸೆ, “ಹುಷಾರಾಗಿರು ಕ್ಯಾಪ್ಟನ್ … ನನ್ನ ಮೇಲೆ ಕೈ ಮಾಡೋನು ಇನ್ನೂ ಹುಟ್ಟಿಲ್ಲ” ಎಂದ. ಕ್ಯಾಪ್ಟನ್ ಬಲವಂತವಾಗಿ ಅವನ ತಪಾಸಣೆಗೆ ಪ್ರಯತ್ನಿಸಿದ ಮತ್ತು ಆಯುಧವಿರದ ಅವ್ರೇಲಿಯಾನೋ ಹೊಸೆ ಓಡಲು ಪ್ರಾರಂಭಿಸಿದ. ಗುಂಡು ಹೊಡಿಯಬೇಡಿರೆಂದು ಮಾಡಿದ ಅಪ್ಪಣೆಯನ್ನು ಸೈನಿಕರು ಪಾಲಿಸಲಿಲ್ಲ. ಅವರಲ್ಲೊಬ್ಬ, “ಅವನೊಬ್ಬ ಬ್ಯುಂದಿಯಾ” ಎಂದ. ರೋಷಗೊಂಡ ಕ್ಯಾಪ್ಟನ್ ಬಂದೂಕನ್ನು ಕಿತ್ತುಕೊಂಡು ರಸ್ತೆಯ ಮಧ್ಯೆ ಬಂದು ಗುರಿ ಹಿಡಿದ. +ಅವನು, “ಹೇಡಿಗಳು, ಅವ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಗಿರ್‍ಲಿ ಅಂದ್ಕೊಳ್ತೀನಿ” ಎಂದು ಕೂಗಿದ. +ಇಪ್ಪತ್ತು ವರ್ಷದ ಕನ್ಯೆ ಕಾರ್ಮೆಲಿಟ ಮೊಂತಿಯಲ್ ಕಿತ್ತಲೆ ಹಣ್ಣು ಮಿಶ್ರಿತ ನೀರಿನಲ್ಲಿ ಸ್ನಾನ ಮಾಡಿ, ಪಿಲರ್ ಟೆರ್‍ನೆರಾಳ ಹಾಸಿಗೆಯ ಮೇಲೆ ಗುಲಾಬಿ ಪಕಳೆಗಳನ್ನು ಸಿಂಪಡಿಸುತ್ತಿದ್ದಾಗ ಗುಂಡಿನ ಶಬ್ದ ಕೇಳಿಸಿತು. ಅಮರಾಂತ ಕೊಡದ ಸುಖವನ್ನು ಅವ್ರೇಲಿಯಾನೋ ಹೊಸೆ ಅವಳಲ್ಲಿ ಪಡೆಯಬೇಕಿತ್ತು. ಆದರೆ ಅವನ ಬೆನ್ನಲ್ಲಿ ಹೊಕ್ಕ ಗುಂಡು ಎದೆಯನ್ನು ಸೀಳಿತ್ತು, ಕಾರ್ಡುಗಳ ವ್ಯಾಖ್ಯಾನದ ರೀತಿ ತಪ್ಪಾಗಿತ್ತು. ಆ ರಾತ್ರಿ ನಿಜವಾಗಿಯೂ ಸಾಯಬೇಕಾಗಿದ್ದ ಕ್ಯಾಪ್ಟನ್ ಆಕ್ವಿಲಿಸ್ ರಿಕಾರ್ಡೋ, ಅವ್ರೇಲಿಯಾನೋ ಹೊಸೆಗಿಂತ ನಾಲ್ಕು ಗಂಟೆ ಮುಂಚಿತವಾಗಿ ಸತ್ತ. ಗುಂಡಿನ ಶಬ್ದ ಕೇಳಿದ ಕೂಡಲೆ ಎಲ್ಲಿಂದ ಬಂದದ್ದೆಂದು ತಿಳಿಯದ ಎರಡು ಗುಂಡುಗಳು ಅವನನ್ನು ಉರುಳಿಸಿದವು ಮತ್ತು ಅನೇಕ ಧ್ವನಿಗಳು ರಾತ್ರಿಯನ್ನು ನಡುಗಿಸಿತು. +“ಉದಾರವಾದಿಗಳು ಚಿರಕಾಲ ಬಾಳಲಿ! ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚಿರಾಯುವಾಗಲಿ” +ಹನ್ನೆರಡು ಗಂಟೆಗೆ, ಅವ್ರೇಲಿಯಾನೋ ಹೊಸೆ ರಕ್ತ ಸುರಿದು ಸತ್ತ ಮತ್ತು ಕಾರ್ಮೆಲಿಟ ಮೊಂತಿಯಲ್‌ಗೆ ಕಾರ್ಡುಗಳು ತನ್ನ ಭವಿಷ್ಯ ಶೂನ್ಯ ಎಂದು ತೋರಿಸುತ್ತಿದೆ ಎಂದು ಅರಿತಾಗ ನಾನೂರಕ್ಕೂ ಹೆಚ್ಚು ಜನರು ಥಿಯೇಟರ್‌ನಿಂದ ಆಚೆಗೆ ಓಡಿ, ಬಿಟ್ಟೋಡಿದ್ದ ಕ್ಯಾಪ್ಟನ್ ಆಕ್ವಿಲಿಸ್ ಕಾರ್ಡೋನ ದೇಹದೊಳಗೆ ತಮ್ಮ ರಿವಾಲ್ವರುಗಳ ಗುಂಡುಗಳನ್ನು ಖಾಲಿ ಮಾಡಿದರು. ಕಾವಲು ದಳದವರು ಸೀಸ ತುಂಬಿದ ಮತ್ತು ನೀರಿನಿಂದ ತೊಯ್ದ ಬ್ರೆಡ್ಡಿನಂತೆ ಪುಡಿಯಾದ ಆ ದೇಹವನ್ನು ತೆಗೆದುಕೊಂಡು ಹೋಗಲು ಕೈಮಂಚವನ್ನು ಉಪಯೋಗಿಸಬೇಕಾಯಿತು. +ಸೈನ್ಯದಲ್ಲಿ ಉಂಟಾಗುತ್ತಿದ್ದ ಕೋಪಾವೇಶದಿಂದ ವ್ಯಗ್ರನಾದ ಜನರಲ್ ಹೊಸೆ ರಾಕೆಲ್ ಮೊಂಕಾದ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕತ್ವವನ್ನು ವಹಿಸಿಕೊಂಡ. ತನ್ನ ದೃಷ್ಟಿಕೋನದಿಂದ ಅನಿವಾರ್ಯವಾದದ್ದನ್ನು ತಡೆ ಹಿಡಿಯುತ್ತದೆ ಎನ್ನುವುದನ್ನು; ನಿರೀಕ್ಷಿಸಲಿಲ್ಲ. ಸೆಪ್ಟೆಂಬರ್‌ನಲ್ಲಿ ಬಂದ ಸುದ್ದಿ ವ್ಯತಿರಿಕ್ತವಾಗಿತ್ತು. ಇಡೀ ದೇಶದಲ್ಲಿ ನಿಯಂತ್ರಣವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಿಸಿದರೂ ಆಂತರಿಕ ಭಾಗಗಳಲ್ಲಿ ಸೈನಿಕರ ದಂಗೆಗಳಾಗುತ್ತವೆ ಎನ್ನುವ ಗುಪ್ತ ವಾರ್ತೆ ಉದಾರವಾದಿಗಳಿಗೆ ಬರುತಿತ್ತು. ಆಡಳಿತ ನಡೆಸುತ್ತಿದ್ದವರು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಸಾವೇ ಗತಿ ಎನ್ನುವ ಕಟ್ಟಳೆಯನ್ನು ಮಿಲಿಟರಿ ನ್ಯಾಯಾಲಯದಲ್ಲಿ ಅವನ ಗೈರು ಹಾಜರಿಯಲ್ಲಿ ಘೋಷಿಸುವ ತನಕ, ಯುದ್ಧದ ಪರಿಸ್ಥಿತಿ ಇದೆ ಎಂದು ಒಪ್ಪಿಕೊಳ್ಳಲು ಸಿದ್ಧವಾಗಿರಲಿಲ್ಲ. ಅವನನ್ನು ಸೆರೆ ಹಿಡಿದ ಮೊದಲನೆ ತಂಡಕ್ಕೆ ದಂಡನೆಯನ್ನು ಜಾರಿ ಮಾಡುವ ಅಪ್ಪಣೆ ಕೊಟ್ಟರು. ಜನರಲ್ ಮೊಂಕಾದಗೆ ಉರ್ಸುಲಾ ಸಂತೋಷದಿಂದ, “ಹಾಗಾದ್ರೆ ಅವ್ನು ವಾಪಸು ಬಂದಿದ್ದಾನೆ” ಎಂದಳು. ಆದರೆ ಅವನಿಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. +ವಾಸ್ತವವಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ದೇಶದಲ್ಲಿದ್ದ. ಅವನು ಒಂದೇ ಕಾಲದಲ್ಲಿ ದೂರದ ಸ್ಥಳಗಳಲ್ಲಿ ಇದ್ದಾನೆಂಬ ವದಂತಿಗಳು ಬರುತ್ತಿದ್ದವು ಮತ್ತು ಜನರಲ್ ಮೊಂಕಾದ ಕೂಡ, ಅವನು ತೀರ ಪ್ರದೇಶದ ಎರಡು ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾನೆಂದು ಅಧಿಕೃತವಾಗಿ ಪ್ರಕಟವಾಗುವ ತನಕ, ಅವನು ವಾಪಸು ಬರುವುದನ್ನು ನಂಬಿರಲಿಲ್ಲ. ಅವನು ಉರ್ಸುಲಾಗೆ ಟೆಲಿಗ್ರಾಂ ತೋರಿಸುತ್ತ, “ಅಭಿನಂದನೆಗಳು … ಅವ್ನು ನಿಮಗೆ ಇಲ್ಲೇ ಸಿಗ್ತಾನೆ” ಎಂದ. ಮೊಟ್ಟ ಮೊದಲ ಬಾರಿಗೆ ಉರ್ಸುಲಾ ಚಿಂತೆಗೀಡಾದಳು. ಅವಳು, “ನೀವೇನು ಮಾಡ್ತೀರಿ” ಎಂದು ಕೇಳಿದಳು. ಜನರಲ್ ಮೊಂಕಾದ ಅದೇ ಪ್ರಶ್ನೆಯನ್ನು ತನಗೆ ತಾನೆ ಅನೇಕ ಸಲ ಕೇಳಿಕೊಂಡಿದ್ದ. +ಅವನು, “ಅವನ ಥರಾನೇ … ನನ್ನ ಕರ್ತವ್ಯ ನಾನು ಮಾಡ್ತೀನಿ” ಎಂದ. +ಅಕ್ಟೋಬರ್ ಒಂದರಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಂದು ಸಾವಿರ ಆಯುಧ ಹೊಂದಿದವರಿಂದ ಮಕೋಂದೋ ಮೇಲೆ ದಾಳಿ ಮಾಡಿದ. ರಕ್ಷಣಾ ಪಡೆಯವರಿಗೆ ಕೊನೆಯ ತನಕ ನಿಗ್ರಹಿಸಲು ಅಪ್ಪಣೆಯಾಯಿತು. ನಡುಮಧ್ಯಾಹ್ನ ಜನರಲ್ ಮೊಂಕಾದ ಉರ್ಸುಲಾಳ ಜೊತೆ ಊಟ ಮಾಡುತ್ತಿರುವಾಗ ದಂಗೆಯವರ ಫಿರಂಗಿ ಹೊಡೆತ ಇಡೀ ಊರಿನಲ್ಲಿ ಪ್ರತಿಧ್ವನಿಸಿ, ಮುನಿಸಿಪಾಲಟಿ ಟ್ರಜರಿಯ ಮುಂಭಾಗವನ್ನು ನೆಲಸಮ ಮಾಡಿತು. ಜನರಲ್ ಮೊಂಕಾದ, “ಅವ್ರ ಹತ್ರಾನೂ ನಮ್ಮಲ್ಲಿ ಇರೋವಷ್ಟೇ ಒಳ್ಳೆಯ ಆಯುಧಗಳಿವೆ … ಅಲ್ದೆ ಅವ್ರು ಇಷ್ಟಪಟ್ಟು ಹೊಡೆದಾಡ್ತಾ ಇದಾರೆ” ಎಂದ. ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಎರಡೂ ಕಡೆಯ ಗುಂಡಿನ ಕಾಳಗದಿಂದ ಭೂಮಿ ಅದುರುತ್ತಿದ್ದಾಗ, ತಾನು ಸೋಲುವ ಯುದ್ಧದಲ್ಲಿ ತೊಡಗಿರುವುದು ನಿಶ್ಚಿತ ಎಂದುಕೊಂಡು ಉರ್ಸುಲಾಳಿಗೆ ವಿದಾಯ ಹೇಳಿ ಹೊರಟ. +ಅವನು, “ದೇವರ ದಯದಿಂದ ಅವ್ರೇಲಿಯಾನೋ ಇವತ್ತು ಮನೇಲಿ ಇರದಿದ್ರೆ ಸಾಕು. ಒಂದು ಪಕ್ಷ ಅವನು ಬಂದ್ರೆ ನಾನು ಕೇಳಿದೆ ಅಂತ ಹೇಳಿ. ಏಕೆಂದರೆ ನಾನು ಅವನ್ನ ಮತ್ತೆ ನೋಡ್ತೀನಿ ಅಂತ ಕಾಣಲ್ಲ” ಎಂದ. +ಅವನು ಆ ರಾತ್ರಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾU, ತಮ್ಮಿಬ್ಬರಲ್ಲಿ ಇರುವ ಯುದ್ಧದಲ್ಲಿ ಮಾನವೀಯತೆಯ ಗುರಿಯನ್ನು ನೆನಪಿಸಿ, ಮಿಲಿಟರಿಯವರಲ್ಲಿನ ಭ್ರಷ್ಟತೆ ಮತ್ತು ಎರಡೂ ಪಾರ್ಟಿಯ ರಾಜಕಾರಣಿಗಳ ಮಹತ್ವಾಕಾಂಕ್ಷೆಯ ವಿರುದ್ಧ ಉದ್ದನೆ ಕಾಗದ ಬರೆದ. ಅವನಿಗೆ ಜಯ ಹಾರೈಸಿದ ನಂತರ ಮಕೋಂದೋದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸೆರೆ ಸಿಕ್ಕ. ಮಾರನೆಯ ದಿನ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ಜೊತೆ ಉರ್ಸುಲಾಳ ಮನೆಯಲ್ಲಿ ಊಟ ಮಾಡಿದ. ಕ್ರಾಂತಿಕಾರಿ ಮಿಲಿಟರಿ ನ್ಯಾಯಾಲಯ ಅವನ ಹಣೆ ಬರಹವನ್ನು ನಿರ್ಧರಿಸುವ ತನಕ ಅವನನ್ನು ಅವಳ ಮನೆಯಲ್ಲೇ ಇಡಲಾಗಿತ್ತು. ಅದೊಂದು ಸ್ನೇಹ ಕೂಟವಾಗಿತ್ತು. ಪರಸ್ಪರ ಶತ್ರುಗಳು ಹಿಂದಿನದನ್ನು ನೆನಪಿಸಿಕೊಳ್ಳಲು ಯುದ್ಧವನ್ನು ಮರೆತಿದ್ದರೆ, ಸಪ್ಪಗಿದ್ದ ಉರ್ಸುಲಾಗೆ ತನ್ನ ಮಗನೇ ಹೊರಗಿನವನು ಎಂಬ ಭಾವನೆ ಮೂಡಿತ್ತು. ಅವಳಿಗೆ ಅಬ್ಬರದ ಮಿಲಿಟರಿ ರಕ್ಷಣೆಯಲ್ಲಿ ಅವನು ಬಂದು, ಬೆಡ್‌ರೂಮಿನ ತಳಬುಡ ಶೋಧಿಸಿ, ಯಾವ ಅಪಾಯವಿಲ್ಲವೆಂದು ಮನದಟ್ಟು ಮಾಡಿಕೊಂಡಾಗಿನಿಂದಲೂ ಆ ಭಾವನೆ ಇತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನೆಲ್ಲ ಒಪ್ಪಿಕೊಂಡಿದ್ದ ಮತ್ತು ಅವನ ರಕ್ಷಣಾ ದಳದವರು ಮನೆಯ ಸುತ್ತಲೂ ಕಾವಲು ನಿಲ್ಲಿಸುತ್ತಿದ್ದರೆ ಉರ್ಸುಲಾಳನ್ನೂ ಸೇರಿದಂತೆ ಯಾರೂ ಅವನಿಗೆ ಹತ್ತು ಅಡಿಗಿಂತ ಹತ್ತಿರ ಬರುವಂತಿರಲಿಲ್ಲ. ಅವನು ವಿಶೇಷ ಲಾಂಛನಗಳಿಲ್ಲದ, ಸಾಮಾನ್ಯ ಡೆನಿಮ್ ಸಮವಸ್ತ್ರ ತೊಟ್ಟು, ಕೊಚ್ಚೆಯಾದ ಮತ್ತು ಒಣಗಿದ ರಕ್ತ ಮೆತ್ತಿದ ಉದ್ದನೆ ಹಿಮ್ಮಡಿಯ ಶೂ ಹಾಕಿಕೊಂಡಿದ್ದ. ಸೊಂಟಕ್ಕೆ ಪಿಸ್ತೂಲು ಸಿಕ್ಕಿಸಿಕೊಂಡು, ಕೈಯನ್ನು ಅದರ ಕುದುರೆಯ ಮೇಲೆ ಇಟ್ಟುಕೊಂಡಿದ್ದ. ನೋಟದಲ್ಲಿ ಅದೇ ತೀಕ್ಷ್ಣತೆ ಮತ್ತು ದೃಢತೆಯಿತ್ತು. ಅಲ್ಲಲ್ಲಿ ಸಾಕಷ್ಟು ಕೂದಲು ಕಡಿಮೆಯಾಗಿದ್ದ ಅವನ ತಲೆಯನ್ನು ಓವನ್‌ನಲ್ಲಿ ಕಾಯಿಸಿ ಹದ ಮಾಡಿದಂತಿತ್ತು. ಅವನ ಮುಖ ಕ್ಯಾರಿಬಿಯಾದ ಉಪ್ಪುಪ್ಪಾದ ವಾತಾವರಣದಲ್ಲಿ ಬಣ್ಣ ಕಳೆದುಕೊಂಡು ಲೋಹದ ಗಡುಸಾಗಿತ್ತು. ತನ್ನ ಒಳಗಿನ ಶೀತಲತೆಗೆ ಒಂದು ರೀತಿಯಲ್ಲಿ ಸಂಬಂಧವಿದ್ದ ಚೈತನ್ಯದಿಂದ ತಲೆದೋರಲಿದ್ದ ಮುದಿತನದ ವಿರುದ್ಧ ಕಾಪಾಡಿಕೊಂಡಿದ್ದ. ಅವನು ಅಲ್ಲಿಂದ ಹೊರಟಾಗ ಇದ್ದದ್ದಕ್ಕಿಂತ ಎತ್ತರವಾಗಿದ್ದ, ಸಪ್ಪೆಯಾಗಿದ್ದ ಮೂಳೆಮೂಳೆಯಾಗಿದ್ದ. ಅವನು ಹಳೆಯದಕ್ಕೆಲ್ಲ ಪ್ರತಿರೋಧಿಸಿದ ವ್ಯಕ್ತಪಡಿಸಿದ್ದನ್ನು ಕಂಡು ಉರ್ಸುಲಾ, “ದೇವರೇ, ಅವನೀಗ ಏನು ಬೇಕಾದ್ರೂ ಮಾಡಬಲ್ಲ” ಎಂದು ತನಗೆ ತಾನೇ ಹೇಳಿಕೊಂಡಳು. ಹೌದು. ಅವನು ಹಾಗೆಯೇ ಇದ್ದ. ಅವನು ಅಮರಾಂತಳಿಗೆ ತಂದ ಆಜ್ಟ್‌ಕ್ ಶಾಲು, ಊಟದ ಸಮಯದಲ್ಲಿ ಹಳೆಯ ನೆನಪುಗಳನ್ನು ಕುರಿತು ಮಾತಾಡುತ್ತಿದ್ದದ್ದು ಮತ್ತು ತಮಾಷೆಯ ಕಥೆಗಳನ್ನು ಹೇಳುತ್ತಿದ್ದದ್ದೆಲ್ಲ, ಇನ್ನೂ ಉಳಿದ್ದಿದ್ದ ಯಾವುದೋ ಕಾಲದ ಹಾಸ್ಯ ಚಟಾಕಿಗಳಂತಿದ್ದವು. ಸತ್ತವರೆಲ್ಲರನ್ನು ಒಟ್ಟಾಗಿ ಹೂಳುವ ಅಪ್ಪಣೆ ಜಾರಿಯಾದ ನಂತರ ಕರ್ನಲ್ ರೋಕ್ ಕಾರ್ನಿಸಿರೋಗೆ ಮಿಲಿಟರಿ ನ್ಯಾಯಾಲಯವನ್ನು ವ್ಯವಸ್ಥಿಸುವ ಕೆಲಸ ವಹಿಸಿಕೊಟ್ಟ ಮತ್ತು ಅವನು ಸಾಂಪ್ರದಾಯಿಕ ಆಳ್ವಿಕೆಯ ಎಲ್ಲವನ್ನು ಮರುವ್ಯವಸ್ಥೆಗೊಳಿಸಿ, ಆಮೂಲಾಗ್ರ ಸುಧಾರಣೆಯನ್ನು ಕಾರ್ಯರೂಪಕ್ಕೆ ಬರುವಂತೆ ಮಾಡುವ, ಮೈಕೈ ನುಜ್ಜಾಗುವ ಕೆಲಸದಲ್ಲಿ ತೊಡಗಿದ. ಅವನು ತನಗೆ ನೆರವು ನೀಡುತ್ತಿದ್ದವರಿಗೆ, “ನಾವು ಪಾರ್ಟಿ ರಾಜಕಾರಣಿಗಳಿಗಿಂತ ಮುಂದಿರ್‍ಬೇಕು. ಅವರು ವಾಸ್ತವಕ್ಕೆ ಕಣ್ಣು ತೆರೆಯೋ ಹೊತ್ತಿಗೆ ಎಲ್ಲ ಮಾಡಿ ಪೂರೈಸಿರ್‍ಬೇಕು” ಎಂದು ಹೇಳುತ್ತಿದ್ದ. ಆಗಲೆ ಅವನು ಒಂದು ನೂರು ವರ್ಷಗಳ ಹಿಂದಿನಿಂದಲೂ ಇರುವ ಭೂಮಿಯ ಶಿರೋನಾಮೆಯ ಪರಿಷ್ಕರಣವನ್ನು ಮಾಡಲು ನಿರ್ಧರಿಸಿದ್ದು ಮತ್ತು ಆಗ ಅವನಿಗೆ ಹೊಸೆ ಅರ್ಕಾದಿಯೋನ ನ್ಯಾಯನಿಂದನೆಗಳು ಕಂಡು ಬಂತು. ಅವನು ಒಂದೇ ಸಲಕ್ಕೆ ಆ ದಾಖಲಾತಿಗಳನ್ನು ಅನೂರ್ಜಿತಗೊಳಿಸಿದ. ಅವನು ಅದೆಲ್ಲ ವ್ಯವಹಾರಗಳನ್ನು ಒಂದು ಗಂಟೆಕಾಲ ಬದಿಗಿಟ್ಟು, ಸೌಜನ್ಯವೆಂಬಂತೆ ರೆಬೇಕಳನ್ನು ಭೇಟಿಯಾಗಿ ತಾನು ಮಾಡಲು ಉದ್ದೇಶಿಸಿರುವುದನ್ನು ತಿಳಿಸಿದ. +ಆ ಮನೆಯ ನೆರಳುಗಳಲ್ಲಿ, ಈಗ ಒಂಟಿ ವಿಧವೆಯಾಗಿ, ಹಿಂದೆ ಅವನ ಒತ್ತಿಟ್ಟ ಪ್ರೇಮಗಳನ್ನು ತಿಳಿಸುವ ವಿಶ್ವಾಸದ ವ್ಯಕ್ತಿಯಾಗಿದ್ದ ಮತ್ತು ಬಿಡದೆ ಪಟ್ಟು ಹಿಡಿದಿದ್ದರಿಂದ ಅವನ ಜೀವವನ್ನು ಉಳಿಸಲು ಸಾಧ್ಯವಾದ ವಿಷಯ, ಗತಕಾಲದ ಸಂಗತಿಯಾಗಿತ್ತು. ಮಂಡಿಯ ತನಕ ಇಳಿಬಿಟ್ಟ ಕಪ್ಪು ಗೌನ್ ತೊಟ್ಟು ಹೃದಯವನ್ನು ಹಿಡಿಬೂದಿ ಮಾಡಿಕೊಂಡ ಅವಳಿಗೆ ಯುದ್ಧದ ಬಗ್ಗೆ ಏನೂ ಗೊತ್ತಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವಳ ಶಿಥಿಲ ಮೂಳೆಯ ಕೆಟ್ಟ ವಾಸನೆ ಚರ್ಮದಿಂದಾಚೆಗೂ ಹರಡುತ್ತಿದ್ದದ್ದು ಕಂಡಿತು ಮತ್ತು ಅವಳು ಸಂತ ಎಲ್‌ಮೋ ಅಗ್ನಿಕುಂಡದ ಸುತ್ತಮುತ್ತ ನಡೆಯುತ್ತಿರುವಂತೆ ಕಾಣಿಸಿತು. ಅಲ್ಲಿಯ ಗಾಳಿಯಲ್ಲಿ ಯಾರೇ ಆದರೂ ಸಿಡಿಮದ್ದಿನಂತಿರುವ ವಾಸನೆಯನ್ನು ಗ್ರಹಿಸಬಹುದಾಗಿತ್ತು. ಅವನು ಅವಳಿಗೆ ಶೋಕಾಚರಣೆಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ತಿಳಿಸಿ ಹೇಳುವುದರಿಂದ ಪ್ರಾರಂಭಿಸಿ, ಮನೆಗೆ ಗಾಳಿ ಬೆಳಕು ಬರುವಂತೆ ಮಾಡಿಕೊಳ್ಳುವುದಲ್ಲದೆ, ಹೊಸೆ ಅರ್ಕಾದಿಯೋನ ಸಾವಿಗೆ ಕಾರಣವಾದ ಜಗತ್ತನ್ನು ಕ್ಷಮಿಸಬೇಕೆಂದು ಹೇಳಿದ. ಆದರೆ ರೆಬೇಕಗೆ ಯಾವುದೇ ಪ್ರತಿಷ್ಠೆ ಇರಲಿಲ್ಲ. ಅದನ್ನು ಅವಳು ಮಣ್ಣು ತಿನ್ನುವುದರಲ್ಲಿ, ಪಿಯತ್ರೋ ಕ್ರೆಪ್ಸಿಯ ಸುಗಂಧ ಲೇಪಿತ ಕಾಗದಗಳಲ್ಲಿ, ಗಂಡನ ಜೊತೆ ಸುಖದ ಅಮಲಿನ ಹಾಸಿಗೆಯಲ್ಲಿ ಹುಡುಕಿದ ನಂತರ, ನೆನಪುಗಳು ಭಾವೋಕ್ಕರ್ಷದಿಂದ ಸಾಕಾರಗೊಂಡು, ಮನುಷ್ಯರ ಹಾಗೆ ಒಂಟಿ ರೂಮಿನಲ್ಲಿ ಓಡಾಡುತ್ತ ಇರುವುದರಲ್ಲಿ ಶಾಂತಿಯನ್ನು ಕಂಡುಕೊಂಡಿದ್ದಳು. ಹಗ್ಗದ ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತು, ಕಳೆದ ದಿನಗಳ ಭೂತದಂತೆ ಕಾಣುತ್ತಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ನೋಡುತ್ತ, ಹೊಸೆ ಅರ್ಕಾದಿಯೋನ ಹೆಸರಿನಲ್ಲಿದ್ದ ಭೂಮಿಯನ್ನು ಮತ್ತೆ ಅವುಗಳ ಮೊದಲಿನ ಒಡೆಯರಿಗೆ ಹಿಂತಿರುಗಿಸುತ್ತಾರೆಂಬ ಸುದ್ದಿಯಿಂದ ಅವಳು ಕೊಂಚ;ವೂ ವಿಚಲಿತಗೊಂಡಿರಲಿಲ್ಲ. +ಅವಳು, “ನೀವು ಏನು ನಿರ್ಧಾರ ಮಾಡ್ತೀರೋ ಅದನ್ನ ನಾನು ಮಾಡ್ತೀನಿ” ಎಂದು ನಿಟ್ಟುಸಿರಿಟ್ಟು, “ಯಾವಾಗ್ಲೂ ನೀನು ಒಂದು ತತ್ವಾನ ಬಿಟ್ಟು ಮತ್ತೊಂದನ್ನ ಹಿಡಿತೀಯ ಅಂತ ಅಂದ್ಕೊಂಡಿದ್ದೆ, ಅದಕ್ಕೀಗ ಪುರಾವೆ ಸಿಕ್ಕಿದೆ” ಎಂದಳು. +ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅಧ್ಯಕ್ಷತೆಯಲ್ಲಿ ಮಿಲಿಟರಿ ವಿಚಾರಣೆ ನಡೆದು ಕ್ರಾಂತಿಕಾರಿಗಳು ಖೈದಿಗಳನ್ನಾಗಿ ತೆಗೆದುಕೊಂಡ ಮಾಮೂಲು ಸೈನ್ಯದ ಎಲ್ಲ ಅಧಿಕಾರಿಗಳಿಗೆ ಮರಣದಂಡನೆ ವಿಧಿಸುವಲ್ಲಿ ಮುಕ್ತಾಯವಾದ ಸಮಯದಲ್ಲಿಯೇ ಭೂಮಿ ಪತ್ರಗಳ ಶಿರೋನಾಮೆಯ ಪರಿಷ್ಕರಣೆ ನಡೆಯಿತು. ಹೊಸೆ ರಾಕೆಲ್‌ನದೇ ಮಂಕಾದೋದಲ್ಲಿ ನಡೆದ ಕೊನೆಯ ಮಿಲಿಟರಿ ವಿಚಾರಣೆ. ಉರ್ಸುಲಾ ಮಧ್ಯೆ ಬಾಯಿ ಹಾಕಿ “ಮಕೋಂದೋದಲ್ಲಿ ಇದ್ದ ಎಲ್ಲ ಸರ್ಕಾರಗಳ ಪೈಕಿ ಅವನ್ದೇ ಒಳ್ಳೇದಿತ್ತು” ಎಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಹೇಳಿದಳು. ಅಲ್ಲದೆ, “ಅವ್ನ ಒಳ್ಳೇತನದ ಬಗ್ಗೆ, ನಮ್ಮಲ್ಲಿಟ್ಟಿದ್ದ ವಿಶ್ವಾಸದ ಬಗ್ಗೆ ನಾನೇನು ನಿಂಗೆ ಹೇಳ್ಬೇಕಾಗಿಲ್ಲ. ಯಾಕೆಂದರೆ ನಿಂಗೇ ಅದು ಚೆನ್ನಾಗಿ ಗೊತ್ತಿದೆ . .” ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನೊಪ್ಪದೆ ಅವಳ ಕಡೆ ನೋಡಿದ. +ಅವನು, “ನಾನು ತೀರ್ಪು ಕೊಡೋ ಕೆಲ್ಸ ಮಾಡಕ್ಕಾಗಲ್ಲ. ನಿಂಗೇನಾದ್ರೂ ಹೇಳೋದಿದ್ರೆ ಮಿಲಿಟರಿ ವಿಚಾರಣೆಯವರಿಗೆ ಹೇಳು” ಎಂದ. +ಉರ್ಸುಲಾ ಹಾಗೆ ಮಾಡಿದಳಷ್ಟೇ ಅಲ್ಲದೆ ಮಕೋಂದೋದಲ್ಲಿದ್ದ ಕ್ರಾಂತಿಕಾರಿ ಅಧಿಕಾರಿಗಳ ಹೆಂಡತಿಯರನ್ನೂ ಅದನ್ನು ಹೇಳಲು ಕರೆದುಕೊಂಡು ಬಂದಳು. ಒಬ್ಬೊಬ್ಬರಾಗಿ ಆ ಊರನ್ನು ಕಟ್ಟಿದ ವಯಸ್ಸಾದ ಹೆಂಗಸರು, ಪರ್ವತಗಳನ್ನು ದಾಟುವುದರಲ್ಲಿ ಧೈರ್ಯವಹಿಸಿ ಪಾಲ್ಗೊಂಡವರಲ್ಲಿ ಕೆಲವರು, ಜನರಲ್ ಮೊಂಕಾದನ ಗುಣಗಳನ್ನು ಹೊಗಳಿದರು. ಅವರ ಸಾಲಿನಲ್ಲಿ ಉರ್ಸುಲಾ ಕೊನೆಯವಳಾಗಿದ್ದಳು. ಅವಳ ಗಂಭೀರ ಮುಖಮುದ್ರೆ, ಅವಳ ಹೆಸರಿಗಿದ್ದ ಶಕ್ತಿ, ಒಪ್ಪಿಗೆಯಾಗುವಂಥ ಖಂಡತುಂಡವಾದ ಅವಳ ಹೇಳಿಕೆ, ನ್ಯಾಯದ ತಕ್ಕಡಿಗೆ ಇರುಸುಮುರುಸು ಉಂಟುಮಾಡಿತು. ಅವಳು ನ್ಯಾಯಾಲಯದ ಸದಸ್ಯರಿಗೆ, “ನೀವು ಈ ದರಿದ್ರ ಆಟಾನ ತುಂಬ ಗಂಭೀರವಾಗಿ ತೊಗೊಂಡಿದೀರಿ. ಅಲ್ದೆ ನೀವು ನಿಮ್ಮ ಕರ್ತವ್ಯ ಮಾಡ್ತಿರೋದ್ರಿಂದ ಚೆನ್ನಾಗೇ ಮಾಡ್ತಿದೀರಿ. ಆದರೆ ದೇವ್ರು ಎಲ್ಲೀ ತನಕ ನಮ್ಗೆ ಜೀವ ಕೊಟ್ಟಿರ್‍ತಾನೋ ಅಲ್ಲೀ ತನಕ ನಾವು ತಾಯಂದಿರೇ ಆಗಿರ್‍ತೀವಿ. ನೀವೆಷ್ಟೇ ಕ್ರಾಂತಿಕಾರಿಗಳಾಗಿದ್ರೂ ನಮ್ಗೆ ಅಗೌರವ ತೋರಿಸಿದ ಮೊದಲ್ನೇ ಸಲಕ್ಕೇ ನಿಮ್ಮ ಚಡ್ಡಿ ಎಳೆದು, ಕುಂಡಿ ಮೇಲೆ ಬಾರಿಸೋ ಹಕ್ಕಿದೆ ನಮ್ಗೆ” ಎಂದಳು. ಆ ಮಾತುಗಳು ಸೈನಿಕ ಸ್ಥಳವಾಗಿ ಮಾರ್ಪಟ್ಟ ಸ್ಕೂಲ್‌ನಲ್ಲಿ ಪ್ರತಿಧ್ವನಿತವಾಗುತ್ತಿದ್ದ ಹಾಗೆ ನ್ಯಾಯಾಲಯ ವಿಚಾರಣೆಯನ್ನು ನಿಲ್ಲಿಸಿತು. ಮಧ್ಯ ರಾತ್ರಿಯ ಹೊತ್ತಿಗೆ ಕರ್ನಲ್ ಹೊಸೆ ರಾಕೆಲ್ ಮೊಂಕಾದಗೆ ಮರಣದಂಡನೆ ವಿಧಿಸಲಾಯಿತು. ಉರ್ಸುಲಾ ಇನ್ನಿಲ್ಲದಂತೆ ಕೂಗಿ, ಅರಚಿ ಕೇಳಿದರೂ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವರಿಗೆ ಹೇಳಲು ನಿರಾಕರಿಸಿದ. ಬೆಳಗಿನ ಜಾವ ದಂಡನೆಗೆ ಗುರಿಯಾದವನನ್ನು ರೂಮಿನಲ್ಲಿ ಭೇಟಿಯಾದ. +ಅವನು, “ನೀನು ನನ್ನ ಹಳೆ ಸ್ನೇಹಿತ. ಆದ್ರೆ ನೆನಪಿಟ್ಟುಕೋ, ನಾನು ನಿನ್ನ ಶೂಟ್ ಮಾಡ್ತಿಲ್ಲ. ಕ್ರಾಂತಿ ನಿನ್ನನ್ನ ಶೂಟ್ ಮಾಡ್ತಿದೆ” ಎಂದ. +ಜನರಲ್ ಮೊಂಕಾದ ಅವನು ಬರುತ್ತಿರುವುದನ್ನು ಕಂಡಾಗ ಮಂಚದ ಮೇಲಿಂದ ಏಳಲೂ ಇಲ್ಲ. +“ಹಾಳಾಗಿ ಹೋಗು” ಎಂದು ಉತ್ತರಿಸಿದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಾಪಸು ಬಂದಾಗಿನಿಂದ ಅವನನ್ನು ಗಮನವಿಟ್ಟು ನೋಡಿರಲಿಲ್ಲ. ತುಂಬ ವಯಸ್ಸಾಗಿ ನಡುಗುತ್ತಿದ್ದ ಅವನ ಕೈಗಳನ್ನು ಕಂಡು ಅವನಿಗೆ ಆಶ್ಚರ್ಯವಾಯಿತು ಮತ್ತು ಅವನು ಸಾವನ್ನು ಗೌರವಪೂರ್ಣ ಅನುಸರಣೆಯೊಂದಿಗೆ ಎದುರು ನೋಡುತ್ತಿದ್ದ ರೀತಿಗಾಗಿ. ಅನಂತರ ಅವನಿಗೆ ತನ್ನ ಮೇಲೆಯೇ ಜಿಗುಪ್ಸೆ ಉಂಟಾಗಿ ಕ್ರಮೇಣ ಮರುಕ ಹುಟ್ಟಿಕೊಂಡಿತು. +ಅವನು, “ನನಗಿಂತ ನಿಂಗೇ ಚೆನ್ನಾಗಿ ಗೊತ್ತಿದೆ. ಎಲ್ಲಾ ಮಿಲಿಟರಿ ವಿಚಾರಣೆ ಒಂದು ತಮಾಷೆ. ಅಲ್ದೆ, ಬೇರೆ ಯಾರೋ ಮಾಡಿದ ತಪ್ಪಿಗೆ ನೀನು ಬಲಿಯಾಗ್ತಿದೀಯ ಅಂತ. ಯಾಕೆಂದರೆ ಈ ಸಲ ನಾವು ಗೆದ್ದೇ ಗೆಲ್ತೀವಿ. ನನ್ನ ಜಾಗದಲ್ಲಿ ನೀನಿದ್ರೂ ಹೀಗೇ ಮಾಡ್ತಿರ್‍ಲಿಲ್ವ?” +ಜನರಲ್ ಮೊಂಕಾದ ತನ್ನ ದಪ್ಪ ಕನ್ನಡಕದ ಗಾಜನ್ನು ಶರಟಿನ ಅಂಚಿನಿಂದ ಒರೆಸಲು ಎದ್ದು ನಿಂತ. ಅವನು, “ಇರ್‍ಬೋದು. ಆದ್ರೆ ನಂದೇನು ಯೋಚ್ನೆ ಅಂದ್ರೆ, ನೀನು ನನ್ನ ಶೂಟ್ ಮಾಡ್ತೀಯ ಅಂತ ಅಲ್ಲ. ಯಾಕೆ ಅಂದ್ರೆ ನನ್ನಂಥೋರಿಗೆ ಇದು ಸಹಜವಾದ ಸಾವು” ಎಂದ. ಅವನು ಕನ್ನಡಕವನ್ನು ಹಾಸಿಗೆಯ ಮೇಲಿಟ್ಟು ವಾಚ್ ಮತ್ತು ಚೈನ್ ತೆಗೆದ. ಅವನು ಮುಂದುವರಿದು, “ಅಲ್ಲ, ಮಿಲಿಟರಿಯವರ ಬಗ್ಗೆ ಅಷ್ಟೊಂದು ದ್ವೇಷ ಇದ್ದು, ಅಷ್ಟೊಂದು ಅವರ ವಿರುದ್ಧ ಹೋರಾಟ ಮಾಡ್ತಿದ್ದ, ಯೊಚ್ನೆ ಮಾಡ್ತಿದ್ದ ನೀನು, ಕೊನೆಗೆ ಅವರಷ್ಟೇ ಕೆಟ್ಟವನಾಗಿಬಿಟ್ಟೆಯಲ್ಲ ಅಂತ. ಜೀವನದ ಯಾವುದೇ ಆದರ್ಶಾನೂ ಇಷ್ಟೊಂದು ನೀಚನಾಗೋದಕ್ಕೆ ಬಿಡಲ್ಲ” ಎಂದ. ಅವನು ಮದುವೆಯ ಉಂಗುರ ಮತ್ತು ವರ್ಜಿನ್ ಆಫ್ ಹೆಲ್ಪ್ ಮೆಡಲನ್ನು ತೆಗೆದು ಕನ್ನಡಕ ಮತ್ತು ವಾಚಿನ ಪಕ್ಕದಲ್ಲಿಟ್ಟ. +ಅವನು, “ನೀನು ಮಾಡ್ತಾ ಇರೋ ರೀತೀನ ನೋಡಿದ್ರೆ ನಮ್ಮ ಇತಿಹಾಸದಲ್ಲೇ ಇರದಂಥ ಅತ್ಯಂತ ಕ್ರೂರ ಮತ್ತು ರಕ್ತ ಪಿಪಾಸಿನ ಸರ್ವಾಧಿಕಾರಿಯಾಗ್ತಿಯ. ಅಲ್ದೆ, ನಿಂಗೆ ಸಮಾಧಾನ ಸಿಗೋ ಪ್ರಯತ್ನದಲ್ಲಿ ನನ್ನ ಆಪ್ತಳಾದ ಉರ್ಸುಲಾಳನ್ನೂ ಶೂಟ್ ಮಾಡ್ತೀಯ” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಲ್ಲೇ ಅಲುಗಾಡದೆ ನಿಂತ. ಅನಂತರ ಜನರಲ್ ಮೊಂಕಾದ ಅವನಿಗೆ ಕನ್ನಡಕ, ಮೆಡಲ್, ವಾಚ್ ಮತ್ತು ಉಂಗುರವನ್ನು ಕೊಟ್ಟು, ಧ್ವನಿ ಬದಲಿಸಿ, “ಆದರೆ ನಿಂಗೆ ಹೇಳಿ ಕಳಿಸಿದ್ದು ನಿನ್ನನ್ನ ಬೈಯಬೇಕು ಅಂತಲ್ಲ. ಇವನ್ನೆಲ್ಲ ನನ್ನ ಹೆಂಡತಿಗೆ ಕಳಿಸಿಕೊಡೋ ಉಪಕಾರ ಮಾಡು ಅಂತ ಕೇಳೋದಕ್ಕೆ” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವುಗಳನ್ನೆಲ್ಲ ಜೇಬಿಗೆ ಹಾಕಿಕೊಂಡ. +“ಅವರಿನ್ನೂ ಮನಾರೇಲೆ ಇದಾರ?” +“ಅಲ್ಲೆ ಇದಾರೆ, ನೀನು ಕಾಗದ ಕಳಿಸಿದ್ದ ಚರ್ಚ್ ಹಿಂದಿನ ಮನೇಲಿ” ಎಂದ ಜನರಲ್ ಮೊಂಕಾದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನಾನು ಅದನ್ನ ಮಾಡ್ತೀನಿ, ಹೊಸೆ ರಾಕೆಲ್” ಎಂದ. +ಅವನು ಹೊರಗೆ ಮಂಜಿನ ನೀಲಿ ಗಾಳಿಯ ಮಧ್ಯೆ ಹೋದ ಮೇಲೆ ಹಿಂದಿನ ಇತರ ಮುಂಜಾವಿನಂತೆ ಅವನ ಮುಖ ತೇವಗೊಂಡಿತು. ತೀರ್ಪನ್ನು ಸ್ಮಶಾನದ ಗೋಡೆಯಲ್ಲದೆ ಅಂಗಳದಲ್ಲಿಯೇ ಜಾರಿಗೊಳಿಸಬೇಕೆಂದು ತಾನು ಅಪ್ಪಣೆ ಕೊಟ್ಟಿದ್ದು ಅವನಿಗೆ ಅರಿವಿಗೆ ಬಂದದ್ದು ಆಗಲೇ. ಬಾಗಿಲಿಗೆ ಎದುರಾಗಿ ನಿಂತ ಗುಂಡಿಕ್ಕುವ ತಂಡದವರು ಅವನಿಗೆ ರಾಷ್ಟ್ರ ಗೌರವ ಸೂಚಿಸಿದರು. +ಅವನು, “ಅವರನ್ನೀಗ ಕರ್‍ಕೊಂಡು ಬನ್ನಿ” ಎಂದು ಅಪ್ಪಣೆ ಕೊಟ್ಟ. +೯ +ಯುದ್ಧದ ಖಾಲಿತನದ ಬಗ್ಗೆ ಮೊದಲು ಪರಿಕಲ್ಪಿಸಿದವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್. ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕನಾದ ಅವನು ವಾರಕ್ಕೆ ಎರಡು ಬಾರಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಜೊತೆ ತಂತಿ ಸಂಭಾಷಣೆ ನಡೆಸುತ್ತಿದ್ದ. ಪ್ರಾರಂಭದಲ್ಲಿ ಅವು ಯುದ್ಧದ ದಿಕ್ಕನ್ನು ನಿರ್ಧರಿಸುತ್ತಿದ್ದವು. ಯಾವುದೇ ಗೊತ್ತಾದ ವೇಳೆ ಹಾಗೂ ಸ್ಥಳದಲ್ಲಿ ಅವುಗಳ ಸ್ವರೂಪವನ್ನು ಮತ್ತು ಮುಂದಿನ ದಿಕ್ಕನ್ನು ತಿಳಿಸುತ್ತಿದ್ದವು. ತನ್ನ ತೀರ ಆತ್ಮೀಯ ಗೆಳೆಯರಿಗೂ ನಂಬಿಕೆಯ ನೆಲೆಗೆ ಸೆಳೆಯಲು ಅವಕಾಶ ಕೊಡದಿದ್ದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆಪ್ತ ಧಾಟಿಯನ್ನು ತಂತಿಯ ಇನ್ನೊಂದು ತುದಿಯಲ್ಲಿರುವವರು ಗುರುತಿಸಬಹುದಾಗಿತ್ತು. ಅದೆಷ್ಟೋ ಸಲ ಅವನು ನಿರೀಕ್ಷಿತ ಮಿತಿಗಳನ್ನು ದಾಟಿ, ಕೌಟುಂಬಿಕ ವಿಷಯಗಳ ಬಗ್ಗೆ ವ್ಯಾಖ್ಯಾನ ಮುಂದುವರಿಸುತ್ತಿದ್ದ. ನಿಧಾನವಾಗಿ, ಯುದ್ಧದ ಸಾಂದ್ರತೆ ಮತ್ತು ವಿಸ್ತಾರ ಹೆಚ್ಚಿದಂತೆ, ಅವನ ಇಡೀ ದೃಷ್ಟಿಕೋನ ಅವಾಸ್ತವ ಜಗತ್ತಿನ ಕಡೆ ಜಾರಿ ಹೋಗುತ್ತಿತ್ತು. ಅವನ ಮಾತಿನ ಶೈಲಿ ಹೆಚ್ಚು ಹೆಚ್ಚು ಅನಿರ್ದಿಷ್ಟವಾಗಿ, ಎಲ್ಲ ಅರ್ಥಗಳನ್ನು ಕಳೆದುಕೊಂಡ ಕೇವಲ ಪದಪುಂಜಗಳಾಗುತ್ತಿತ್ತು. ಆಗ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಕೇಳುವಷ್ಟಕ್ಕೆ ಮಾತ್ರ ತನ್ನನ್ನು ಮಿತಿಗೊಳಿಸಿಕೊಳ್ಳುತ್ತಿದ್ದನಲ್ಲದೆ, ಬೇರೆ ಯಾವುದೋ ಪ್ರಪಂಚದ ಅಪರಿಚಿತನೊಡನೆ ತಂತಿ ಸಂಭಾಷಣೆಯಲ್ಲಿ ತೊಡಗಿರುವಂತೆ ಭಾವಿಸುತ್ತಿದ್ದ. +ಅವನು, “ನಂಗೆ ಅರ್ಥವಾಗತ್ತೆ ಅವ್ರೇಲಿಯಾನೋ, ಉದಾರವಾದಿ ಪಾರ್ಟಿ ಚಿರಾಯುವಾಗಲಿ” ಎಂದು ಹೇಳಿ ಮುಗಿಸುತ್ತಿದ್ದ. +ಕೊನೆಗೆ ಅವನು ಯುದ್ಧದೊಂದಿಗೆ ಎಲ್ಲ ಸಂಪರ್ಕವನ್ನು ಕಳೆದುಕೊಂಡ. ಹಿಂದೆಂದೋ ವಾಸ್ತವ ಸಂಗತಿಯಾಗಿದ್ದು, ಹರೆಯದಲ್ಲಿ ತಡೆಯಲಾಗದ ಉತ್ಸಾಹವಾಗಿತ್ತೋ ಅದು ಈಗ ದೂರದ ಖಾಲಿತನವನ್ನು ಸೂಚಿಸುವ ವಿಷಯವಾಯಿತು. ಅವನಿಗೆ ಆಶ್ರಯ ಪಡೆಯಲು ಇದ್ದ ಸ್ಥಳವೆಂದರೆ ಅಮರಾಂತಳ ಹೊಲಿಗೆ ರೂಮು. ಪ್ರತಿದಿನ ಮಧ್ಯಾಹ್ನ ಅಲ್ಲಿಗೆ ಹೋಗುತ್ತಿದ್ದ. ಆ ಯಂತ್ರವನ್ನು ಸುಂದರಿ ರೆಮಿದಿಯೋಸ್ ಚಾಲನೆಯಲ್ಲಿ ಇಡುತ್ತಿದ್ದಂತೆ, ಪೆಟಿಕೋಟಿನ ಬಟ್ಟೆಗೆ ಅದರಲ್ಲಿ ಮಡಿಕೆಗಳನ್ನು ಮೂಡಿಸುತ್ತಿದ್ದ ಅವಳ ಬೆರಳುಗಳನ್ನು ನೋಡಲು ಅವನಿಗೆ ಇಷ್ಟವಾಗುತ್ತಿತ್ತು. ಅವರು ಅನೇಕ ಗಂಟೆಗಳನ್ನು ಒಬ್ಬರಿಗೊಬ್ಬರು ಮಾತಾಡಿ ಪರಸ್ಪರ ಸಹವಾಸದಿಂದ ತ;ಪ್ತರಾಗಿ ಕಳೆಯುತ್ತಿದ್ದಾU, ಅವನೊಳಗಿದ್ದ ಆರಾಧನಾ ಭಾವವನ್ನು ಜ್ವಲಂತವಾಗಿಟ್ಟಿರುವುದಕ್ಕೆ ಅಮರಾಂತಳಿಗೆ ಒಳಗೊಳಗೇ ಸಂತೋಷವಾದರೂ ಅವನಿಗೆ ಅವಳ ಒಳಗಿನ ವೇದನೆ ಅರಿವಾಗುವುದು ಅಸಾಧ್ಯವಾಗುತ್ತಿತ್ತು. ಅವನು ಹಿಂತಿರುಗಿ ಬರುವುದರ ಸುದ್ದಿ ತಲುಪಿದಾಗ ಅವಳು ಆತಂಕದಿಂದ ಮೆತ್ತಗಾಗಿದ್ದಳು. ಆದರೆ ರಕ್ಷಣಾ ದಳದವರ ಮಧ್ಯೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಗದ್ದಲದ ಮನೆಯಲ್ಲಿ ನೋಡಿದಾಗ ಮತ್ತು ಕಠಿಣವಾದ ಪರದೇಶವಾಸ ಅವನನ್ನು ಎಷ್ಟು ಕೆಟ್ಟದಾಗಿ ಪ್ರಭಾವಿಸಿತ್ತೆಂದು ತಿಳಿದಾಗ, ವಯಸ್ಸು ಹೆಚ್ಚಾಗಿ ವಿಸ್ಮೃತಿ ಮುತ್ತಿ, ಮೈಯಲ್ಲ ಧೂಳು ಹಿಡಿದ ಬೆವರಿನಿಂದ ಕೊಳಕಾಗಿ, ಕೆಟ್ಟ ವಾಸನೆ ಹೊರಡಿಸುತ್ತ, ಎಡಗೈಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕಿಕೊಂಡಿದ್ದ ಅವನನ್ನು ನೋಡಿದಾಗ ಭ್ರಮನಿರಸಗೊಂಡ ಅವಳಿಗೆ ಪ್ರಜ್ಞೆ ತಪ್ಪುವಂತಾಗಿತ್ತು. ಅವಳು, “ಅಯ್ಯೋ, ನಾನು ಕಾಯತ್ತ ಕುಳಿತೋನು ಇವನಲ್ಲ” ಎಂದುಕೊಂಡಳು. ಆದರೆ ಮಾರನೆಯ ದಿನ ಅವನು ಶುಭ್ರವಾಗಿ, ಶೇವ್ ಮಾಡಿಕೊಂಡು, ಮೀಸೆಗೆ ಸುಗಂಧ ಹಚ್ಚಿಕೊಂಡು, ಕೈ ಕಟ್ಟಿದ್ದ ರಕ್ತದ ಲೇಪವಿದ್ದ ದಾರ ಬಿಚ್ಚಿ ಹಾಕಿ ಬಂದಿದ್ದ. ಅವಳಿಗೆ ಮುತ್ತುಗಳಿಂದ ರಟ್ಟು ಹಾಕಿದ ಪುಸ್ತಕವೊಂದನ್ನು ಪ್ರಾರ್ಥಿಸುವ ಸಲುವಾಗಿ ತಂದಿದ್ದ. +ಅವಳು, “ಈ ಗಂಡಸ್ರು ಎಷ್ಟು ವಿಚಿತ್ರ. ಇಡೀ ಜೀವನ ಪಾದ್ರಿಗಳ ವಿರುದ್ಧ ಹೋರಾಡ್ತಾ ಕಳೀತಾರೆ. ಆ ಮೇಲೆ ಪ್ರಾರ್ಥನೆ ಮಾಡಲಿಕ್ಕೆ ಪುಸ್ತಕಾನ ಉಡುಗೊರೆ ಕೊಡ್ತಾರೆ” ಎಂದು ಬೇರೆ ಏನೂ ಹೊಳೆಯದೆ ಹೇಳಿದಳು. +ಆ ಸಮಯದಿಂದ ಯುದ್ಧದ ಅತ್ಯಂತ ಆತಂಕದ ದಿನಗಳಲ್ಲಿಯೂ ಕೂಡ, ಅವನು ಪ್ರತಿ ದಿನ ಮಧ್ಯಾಹ್ನ ಅವಳನ್ನು ಭೇಟಿಯಾಗುತ್ತಿದ್ದ. ಅನೇಕ ಬಾರಿ ಸುಂದರಿ ರೆಮಿದಿಯೋಸ್ ಇರದಿದ್ದಾಗ ಹೊಲಿಗೆ ಯಂತ್ರದ ಚಕ್ರವನ್ನು ಅವನೇ ತಿರುಗಿಸುತ್ತಿದ್ದ. ಅಮರಾಂತಳಿಗೆ ಅಷ್ಟೊಂದು ಅಧಿಕಾರ ಹೊಂದಿದ ಅವನ ತಗ್ಗಿ ನಡೆವ, ಪಟ್ಟು ಹಿಡಿದ ವರ್ತನೆಯಿಂದ ಮನೋಸ್ತಿಮಿತ ಕಳೆದುಕೊಳ್ಳುತ್ತಿದ್ದಳು. ಇಷ್ಟಿದ್ದರೂ ಅವನು ಹೊಲಿಗೆ ಇರುವ ರೂಮಿಗೆ ಆಯುಧವಿಲ್ಲದೆ ಹೋಗಲು, ಪಕ್ಕದಲ್ಲಿ ಸಿಕ್ಕಿಸಿಕೊಳ್ಳುವ ಆಯುಧಗಳನ್ನು ಹಜಾರದಲ್ಲಿ ತೆಗೆದಿಡುತ್ತಿದ್ದ. ನಾಲ್ಕು ವರ್ಷಗಳ ಕಾಲ ಅವಳಿಗೆ ತನ್ನ ಪ್ರೇಮದ ಬಗ್ಗೆ ಮತ್ತೆ ಮತ್ತೆ ಹೇಳುತ್ತಿದ್ದರೂ ಅವನನ್ನು ನೋಯಿಸದೆ ಅದನ್ನು ತಿರಸ್ಕರಿಸಲು ಅವಳು ಯಾವುದಾದರೊಂದು ಕಾರಣ ಹುಡುಕುತ್ತಿದ್ದಳು. ಏಕೆಂದರೆ ಅವಳಿಗೆ ಅವನನ್ನು ಪ್ರೇಮಿಸಲು ಸಾಧ್ಯವಾಗದಿದ್ದರೂ ಅವನಿಲ್ಲದೆ ಬದುಕಲಾಗುತ್ತಿರಲಿಲ್ಲ. ಸುಂದರಿ ರೆಮಿದಿಯೋಸ್‌ಗೆ ಎಲ್ಲದರ ಬಗ್ಗೆ ಅಲಕ್ಷವಿದ್ದರೂ ಮತ್ತು ಅವಳನ್ನು ಬುದ್ಧಿ ಮಾಂದ್ಯಳೆಂದು ಭಾವಿಸಲಾಗುತ್ತಿದ್ದರೂ, ಅವನ ಬಗ್ಗೆ ಸೂಕ್ಷ್ಮರಹಿತಳಾಗಿ ಇರುವುದಕ್ಕೆ ಸಾಧ್ಯವಾಗಲಿಲ್ಲ. ಅವಳು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಪರವಾಗಿ ಆಸಕ್ತಿ ವಹಿಸಿದಳು. ಅಮರಾಂತಳಿಗೆ, ಈಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ, ತಾನು ಬೆಳೆಸಿದ ಹುಡುಗಿ, ಇಡೀ ಮಕೋಂದೋ ಅಲ್ಲಿಯ ತನಕ ಕಂಡ ಅತ್ಯಂತ ಸುಂದರಿಯಾಗಿದ್ದಾಳೆ ಎನ್ನುವುದು ತಕ್ಷಣವೇ ಅರಿವಾಯಿತು. ರೆಬೇಕಳ ವಿಷಯದಲ್ಲಿ ಆ ದಿನಗಳಲ್ಲಿ ಉಂಟಾಗುತ್ತಿದ್ದ ತೀವ್ರ ದ್ವೇಷ ಮರುಹುಟ್ಟು ಪಡೆದಂತೆ ಅವಳಿಗೆ ಭಾಸವಾಯಿತು. ಅವಳ ಸಾವನ್ನು ಬಯಸದಿರುವಂತಾಗಲಿ ಎಂದು ದೇವರನ್ನು ದೀನಳಾಗಿ ಪ್ರಾರ್ಥಿಸುತ್ತಿದ್ದಳು. ಮತ್ತು ಅವಳನ್ನು ಹೊಲಿಗೆ ರೂಮಿನಿಂದ ಹೊರಗಿಟ್ಟಳು. ಆ ದಿನಗಳಲ್ಲಿಯ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಯುದ್ಧದಿಂದ ತಲೆ ಚಿಟ್ಟು ಹಿಡಿದಂತಾಗಿತ್ತು. ಅವನು ಪಟ್ಟು ಹಿಡಿಯಲು ತನ್ನೊಳಗಿನ ಎಲ್ಲದನ್ನೂ ಒಗ್ಗೂಡಿಸಿದ. ಅಮರಾಂತಳಿಗಾಗಿ ತನ್ನ ಜೀವಮಾನದ ಮಹತ್ವದ ವರ್ಷಗಳ ತ್ಯಾಗದಿಂದ ಲಭಿಸಿದ್ದ ಘನತೆಯನ್ನು ಬಿಟ್ಟುಕೊಡಲು ಸಿದ್ಧನಿದ್ದ. ಆದರೆ ಅವಳನ್ನು ಒಪ್ಪಿಸಲು ಅವನಿಗೆ ಸಾಧ್ಯವಾಗಲಿಲ್ಲ. ಆಗಸ್ಟ್ ತಿಂಗಳ ಒಂದು ಮಧ್ಯಾಹ್ನ ಅಮರಾಂತ ತನಗಾಗಿ ಹಂಬಲಿಸಿದವನಿಗೆ ಕಟ್ಟ ಕಡೆಯ ಉತ್ತರ ಕೊಟ್ಟು, ತನ್ನ ಹಠಮಾರಿತನದ ಭಾರಕ್ಕೆ ಕುಸಿದು, ಸಾಯುವ ತನಕ ಒಂಟಿಯಾಗಿರಬೇಕಾದುದಕ್ಕೆ ಕಣ್ಣೀರಿಟ್ಟಳು. +ಅವಳು ಅವನಿಗೆ, “ನಾವು ಇದನ್ನು ಎಂದೆಂದಿಗೂ ಮರ್‍ತು ಬಿಡೋಣ, ಇಂಥದೆಲ್ಲ ಯೋಚ್ನೆ ಮಾಡಕ್ಕೆ ಆಗದಷ್ಟು ನಮ್ಗೆ ವಯಸ್ಸಾಗಿದೆ”. ಎಂದಳು. +ಆ ದಿನ ಮಧ್ಯಾಹ್ನ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ತಂತಿಯ ಕರೆ ಬಂತು. ಅದೊಂದು ಎಂದಿನ ಮಾತುಕಥೆಯಂತಾಗಿ ಯುದ್ಧಕ್ಕೆ ಅಡೆತಡೆ ಉಂಟಾಗುವಂತಿರಲಿಲ್ಲ. ಕೊನೆಯಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ವಿಷಣ್ಣನಾಗಿ ರಸ್ತೆಯ ಕಡೆ, ಅಲ್ಲಿದ್ದ ಬಾದಾಮಿ ಮರದಲ್ಲಿದ್ದ ನೀರ ಹನಿಗಳ ಕಡೆ ನೋಡಿz. ಅವನಿಗೆ ತನ್ನನ್ನು ತಾನು ಏಕಾಂತದಲ್ಲಿ ಮುಳುಗಿಸಿದಂತಾಯಿತು. +ಅವನು ಬೇಸರದಿಂದ ಕೀ ಅದುಮುತ್ತ, “ಅವ್ರೇಲಿಯಾನೋ, ಮಕೋಂದೋದಲ್ಲಿ ಮಳೆ ಬರ್‍ತಿದೆ” ಎಂದು ಹೇಳಿದ. +ಆ ಕಡೆ ಲೈನ್‌ನಲ್ಲಿ ದೀರ್ಘಕಾಲ ಮೌನ ಆವರಿಸಿತು. ಇದ್ದಕ್ಕಿದ್ದ ಹಾಗೆ ಆ ಉಪಕರಣ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ಸಾಕಷ್ಟು ಭಾವರಹಿತ ಒಕ್ಕಣೆಯನ್ನು ರವಾನಿಸಿತು. +“ಮುಟ್ಠಾಳನ ಥರ ಆಡ್ಬೇಡ ಗೆರಿನೆಲ್ಡೊ…. ಆಗಸ್ಟ್‌ನಲ್ಲಿ ಮಳೆ ಬರೋದು ತೀರ ಸಹಜ” ಎಂದು ಸಂದೇಶಗಳು ತಿಳಿಸಿದವು. +ಅವರಿಬ್ಬರು ಬಹಳ ದಿನಗಳಿಂದ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಹೀಗಾಗಿ ಗೆರಿನೆಲ್ಡೊ ಮಾರ್ಕೆಜ್‌ಗೆ ಅವನ ಧೋರಣೆಯಿಂದ ಮನಸ್ಸು ಕಲಕಿತು. ಎರಡು ತಿಂಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಂದಾಗ ಅವನ ಕ್ಷೆಭೆ ನಿಬ್ಬೆರಗಾಗಿ ಬದಲಾಯಿತು. ಉರ್ಸುಲಾಳಿಗೂ ಅವನೆಷ್ಟು ಬದಲಾಗಿದ್ದಾನೆಂದು ಆಶ್ಚರ್ಯವಾಯಿತು. ಅವನು ಯಾವುದೇ ಅಬ್ಬರವಿಲ್ಲದೆ, ರಕ್ಷಣಾ ದಳದವರಿಲ್ಲದೆ, ಆ ಬಿರು ಬೇಸಿಗೆಯಲ್ಲಿಯೂ ಕೋಟು ಹಾಕಿಕೊಂಡು ಪ್ರೇಯಸಿಯರ ಜೊತೆ ಬಂದಿದ್ದ. ಅವರನ್ನು ಆ ಮನೆಯಲ್ಲಿಯೇ ಇರಲು ಬಿಡಲಾಗಿತ್ತು. ಅವನು ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲಿ ಮಲಗಿಕೊಂಡೇ ಕಳೆಯುತ್ತಿದ್ದ. ಮಾಮೂಲು ಕಾರ್ಯಾಚರಣೆಯನ್ನು ಕಳಿಸುತ್ತಿದ್ದ ಟೆಲಿಗ್ರಾಫ್ ಸಂದೇಶವನ್ನು ಓದುತ್ತಲೇ ಇರಲಿಲ್ಲ. ಒಂದು ಸಂದರ್ಭದಲ್ಲಿ ಗೆರಿನೆಲ್ಡೊ ಮಾರ್ಕೆಜ್, ಅಂತರ ರಾಷ್ರ್ಟೀಯ ಘರ್ಷಣೆಯ ಅಪಾಯವಿರುವ ಸ್ಥಳದಿಂದ ತೆರವು ಮಾಡುವುದರ ಬಗ್ಗೆ ಅವನ ಸಲಹೆಯನ್ನು ಕೇಳಿದ. +ಅವನು, “ಇಂಥ ಪುಟಗೋಸಿ ವಿಷಯಗಳನ್ನೆಲ್ಲ ಕೇಳಿ ತಲೆ ಕೆಡಿಸಬೇಡಿ… ಅದೆಲ್ಲ ದೈವ ನಿಯಾಮಕ” ಎಂದ. +ಬಹುಶಃ ಅದು ಯುದ್ಧದ ಅತ್ಯಂತ ಸಂದಿಗ್ಧ ಸಮಯ. ಪ್ರಾರಂಭದಲ್ಲಿ ಕ್ರಾಂತಿಯನ್ನು ಬೆಂಬಲಿಸಿದ್ದ ಉದಾರವಾದಿ ಭೂ ಮಾಲೀಕರು, ಸಂಪ್ರದಾಯವಾದಿ ಭೂ ಮಾಲೀಕರ ಜೊತೆ, ಗುಪ್ತ ಆಸ್ತಿ ಶಿರೋನಾಮೆಯ ಪರಿಷ್ಕರಣದ ಬಗ್ಗೆ, ರಹಸ್ಯ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರು. ಯುದ್ಧಕ್ಕಾಗಿ ಪರದೇಶಗಳಿಂದ ಹಣ ಒದಗಿಸುತ್ತಿದ್ದ ರಾಜಕಾರಣಿಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಗುರಿಯನ್ನು ಸಾರ್ವಜನಿಕವಾಗಿ ಖಂಡಿಸುತ್ತಿದ್ದರು. ಅಲ್ಲದೆ ಪ್ರಮಾಣೀಕರಿಸುವುದನ್ನು ಹಿಂತೆಗೆದುಕೊಂಡಿದ್ದೂ ಕೂಡ, ಅವನನ್ನು ಕಾಡಿದ ಹಾಗೆ ಕಾಣಲಿಲ್ಲ. ಅವನು ಕಾವ್ಯವನ್ನು ಮತ್ತೆ ಓದಲು ತೊಡಗಲಿಲ್ಲ. ಐದು ಗ್ರಂಥಗಳಲ್ಲಿದ್ದ ಅವು ಮರೆವಿಗೆ ಒಳಗಾಗಿ ಟ್ರಂಕಿನ ತಳ ಸೇರಿದ್ದವು. ರಾತ್ರಿಯಲ್ಲಿ ಅಥವಾ ಮಧ್ಯಾಹ್ನ ಮಲಗುವ ಸಮಯದಲ್ಲಿ, ಅವನು ಯಾರಾದರೊಬ್ಬ ಹೆಂಗಸರನ್ನು ಹಾಸಿಗೆಗೆ ಕರೆಯುತ್ತಿದ್ದ ಮತ್ತು ತೆವಲು ತೀರಿಸಿಕೊಂಡು ಖುಷಿಪಡುತ್ತಿದ್ದ. ಅನಂತರ ಕಲ್ಲಿನ ಹಾಗೆ, ಕಿಂಚಿತ್ ಯೋಚನೆ ಇಲ್ಲದೆ ಮಲಗಿ ಬಿಡುತ್ತಿದ್ದ. ಆದರೆ ಆ ಸಮಯದಲ್ಲಿ ಗೊಂದಲಕ್ಕೆ ಸಿಕ್ಕಿಕೊಂಡ ಆ ಹೃದಯಕ್ಕೆ, ಎಂದೆಂದಿಗೂ ಅನಿಶ್ಚಿತವಾಗಿರುವುದೇ ಗತಿ ಎನ್ನುವುದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು. ಮೊದಮೊದಲು ಹಿಂತಿರುಗಿ ಬಂದದ್ದರ ಖ್ಯಾತಿಯ ನಿಶೆಯಲ್ಲಿ ತನ್ನ ಅದ್ಭುತ ಜಯಭೇರಿಯಿಂದ ದೊಡ್ಡಸ್ಥಿಕೆಯ ಕೂಪದಲ್ಲಿದ್ದ. ಅವನಿಗೆ ಬಲಗೈಯಲ್ಲಿ, ತನಗೆ ಯುದ್ಧದಲ್ಲಿ ಮಹಾನ್ ಗುರುವಾದ ಮತ್ತು ಚರ್ಮದ ವೇಷಭೂಷಣ ಹಾಗೂ ಹುಲಿಯುಗುರುಗಳಿಂದ ದೊಡ್ಡವರಲ್ಲಿ ಗೌರವವನ್ನು ಮತ್ತು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿದ್ದ, ‘ಮಾರ್ಲ್‌ಬರೋದ ರಾಜ\’ನನ್ನು ಇಟ್ಟುಕೊಂಡಿರಲು ಸಂತೋಷವೆನಿಸುತ್ತಿತ್ತು. ಆಗಲೇ ಅವನು ಯಾವ ನರಪ್ರಾಣಿಯೂ – ಉರ್ಸುಲಾ ಕೂಡ – ಹತ್ತು ಅಡಿಗಿಂತ ಒಳಗೆ ಅವನ ಹತ್ತಿರಕ್ಕೆ ಬರಬಾರದೆಂದು ನಿರ್ಧರಿಸಿದ. ಅವನ ಬೆಂಬಲಿಗರು ಅವನು ಎಲ್ಲಿ ನಿಂತರೆ ಅಲ್ಲಿ ಬರೆದ ಸುಣ್ಣದ ಸುತ್ತಿನ ಮಧ್ಯದಲ್ಲಿ ನಿಂತು ಮರುಮನವಿಗೆ ಅವಕಾಶವಿರದೆ, ಪ್ರಪಂಚದ ವಿಧಿಯನ್ನು ನಿರ್ಧರಿಸುವ ಚುಟುಕಾದ ಅಪ್ಪಣೆಗಳನ್ನು ಕೊಡುತ್ತಿದ್ದ. ಜನರಲ್ ಮೊಂಕಾದನನ್ನು ಗುಂಡಿಕ್ಕಿದ ಮೇಲೆ ಮೊದಲ ಸಲ ಅವನು ಮನಾರೆಯಲ್ಲಿದ್ದಾಗ, ಸತ್ತವನ ಕೊನೆಯ ಆಸೆಯನ್ನು ಪೂರೈಸಲು ಹೋದ. ಆತನ ವಿಧವೆ ಕನ್ನಡಕ, ಮೆಡಲು, ವಾಚು ಹಾಗೂ ಉಂಗುರವನ್ನು ತೆಗೆದುಕೊಂಡಳು. ಆದರೆ ಅವನನ್ನು ಬಾಗಿಲಿಂದ ಒಳಗೆ ಬರಲು ಬಿಡಲಿಲ್ಲ. +ಅವಳು, “ಕರ್ನಲ್, ನೀವು ಒಳಗೆ ಬರೋ ಹಾಗಿಲ್ಲ. ನೀವು ನಿಮ್ಮ ಯುದ್ಧದ ಸೇನಾಧಿಪತಿ ಇರಬಹುದು. ಆದರೆ ನನ್ನ ಮನೆ ನನ್ನ ಆಧಿಪತ್ಯದಲ್ಲಿದೆ” ಎಂದಳ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯಾವುದೇ ರೀತಿಯ ಕೋಪವನ್ನು ವ್ಯಕ್ತಪಡಿಸಲಿಲ್ಲ. ಆದರೆ ಅವನ ರಕ್ಷಣಾ ದಳದವರು ಮನೆಯನ್ನು ಕೆಡವಿ, ಬೂದಿ ಮಾಡಿದ ಮೇಲೆ ಅವನಿಗೆ ಸಮಾಧಾನವಾಯಿತು. ಆಗ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್, “ನಿನ್ನೊಳಗೆ ನೊಡ್ಕೋ ಅವ್ರೇಲಿಯಾನೋ……. ಜೀವಂತವಾಗಿದ್ದೇ ಕೊಳೆತು ಹೋಗ್ತಿದೀಯ” ಎಂದು ಹೇಳುತ್ತಿದ್ದ. ಅದೇ ವೇಳೆಗೆ ಪ್ರಮುಖ ಕ್ರಾಂತಿಕಾರಿ ಸೇನಾಧಿಕಾರಿಗಳ ಎರಡನೆ ಸಭೆಯನ್ನು ಕರೆದ. ಅದರಲ್ಲಿ ಎಲ್ಲ ರೀತಿಯವರಿದ್ದರು: ಆದರ್ಶವಾದಿಗಳು, ಮಹತ್ವಾಕಾಂಕ್ಷಿಗಳು, ಸಾಹಸಿಗಳು, ಸಾಮಾಜಿಕ ವ್ಯವಸ್ಥೆಯ ಟೀಕೆದಾರರು ಅಲ್ಲದೆ ಕ್ರಿಮಿನಲ್‌ಗಳು. ಅವರಲ್ಲೊಬ್ಬ ತನ್ನ ಮೇಲಿರುವ ಹಣ ದುರುಪಯೋಗದ ತೀರ್ಪಿನಿಂದ ತಪ್ಪಿಸಿಕೊಳ್ಳಲು ದಂಗೆಯಲ್ಲಿ ಆಶ್ರಯಪಡೆದ ಸಂಪ್ರದಾಯವಾದಿ ಕಾರ್ಯಾಚರಣೆಯವನೊಬ್ಬನಿದ್ದ. ಬಹಳಷ್ಟು ಜನರಿಗೆ ತಾವೇಕೆ ಹೋರಾಡುತ್ತಿರುವುದು ಎನ್ನುವುದೇ ಗೊತ್ತಿರಲಿಲ್ಲ. ಆ ಗುಂಪಿನ ವಿವಿಧ ಬಗೆಯ ಜನರ ಮೌಲ್ಯಗಳಲ್ಲಿದ್ದ ವ್ಯತ್ಯಾಸ, ಆಂತರಿಕ ಸಿಡಿತದ ಮಟ್ಟವನ್ನು ತಲುಪಿತ್ತು. ಅವರ ಪೈಕಿ ಎದ್ದು ಕಾಣುತ್ತಿದ್ದವನೆಂದರೆ ಸಪ್ಪೆ ಮುಖದ ಜನರಲ್ ಟೋಫಿಲೋ ವಾರ್ಗಾಸ್. ಅವನೊಬ್ಬ ಅನಕ್ಷರಸ್ಥನಾದ, ಪಳಗದಿರುವ ಮೈ ತುಂಬಿಕೊಂಡ ಇಂಡಿಯನ್. ಅವನಲ್ಲಿ ಕುಯುಕ್ತಿಯಿತ್ತು ಮತ್ತು ಉದ್ಧಾರಕ್ಕಾಗಿ ಅವತರಿಸಿದ್ದಾನೆ ಎಂಬ ಹುಚ್ಚು ನಂಬಿಕೆ, ಅವನ ದುರಭಿಮಾನಿ ಜನರಲ್ಲಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ರಾಜಕಾರಣಿಗಳ ಪಿತೂರಿಯ ವಿರುದ್ಧ, ಕ್ರಾಂತಿಯನ್ನು ಒಟ್ಟಾಗಿಸುವ ಗುರಿಯಿಂದ ಸಭೆಯನ್ನು ಕರೆದಿದ್ದ. ಆಗ ಕೆಲವೇ ಗಂಟೆಗಳಲ್ಲಿ ಜನರಲ್ ಟೋಫಿಲೋ ವಾರ್ಗಾಸ್ ತನ್ನ ಉದ್ದೇಶಗಳಿಂದ ಪ್ರಭಾವ ಬೀರಿದ. ಅವನು ಆಗಲೇ ಇದ್ದ ಉತ್ತಮ ಸೇನಾಧಿಪತಿಯ ಹೊಂದಾಣಿಕೆಯನ್ನು ಧೂಳೀಪಟಮಾಡಿ ಪ್ರಧಾನ ಸೇನಾಧಿಪತಿ ಸ್ಥಾನವನ್ನು ವಹಿಸಿಕೊಂಡ. ಆಗ ಕರ್ನಲ್ ಬ್ಯುಂದಿಯಾ, “ಅವರೇನು ಮಾಡ್ತಾರೆ ಅಂತ ನೋಡೋಣ . . ಅವ್ರು ನಮ್ಮ ಯುದ್ಧ ಮಂತ್ರಿಗಿಂತ ಅಪಾಯಕಾರಿ” ಎಂದು ತನ್ನ ಅಧಿಕಾರಿಗಳಿಗೆ ಹೇಳಿದ. ಆಗ ಯಾವಾಗಲೂ ಮೆತ್ತಗಿರುತ್ತಿದ್ದ ಯುವ ಅಧಿಕಾರಿ ಜಾಗರೂಕತೆಯ ಸೂಚನೆ ಕೊಟ್ಟ. +ಅವನು “ಕರ್ನಲ್, ಅದು ಬಹಳ ಸರಳ…. ಅವನನ್ನ ಕೊಂದು ಹಾಕ್ಬೇಕು ಅಷ್ಟೆ” ಎಂದು ಸಲಹೆ ಕೊಟ್ಟ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವನ ತಣ್ಣನೆಯ ಕೊರೆಯುವ ಸಲಹೆಯಿಂದ ಆಶ್ಚರ್ಯವಾಗಲಿಲ್ಲ. ಆದರೆ ಅರೆಕ್ಷಣದಲ್ಲಿ ತನ್ನ ಯೋಚನೆಯನ್ನೇ ಮುಂಚಿತವಾಗಿ ನಿರೀಕ್ಷಿಸಿದಂತಾಯಿತು. ಅವನು, “ನಾನು ಆ ರೀತಿ ಆರ್ಡರ್ ಕೊಡ್ಲಿ ಅಂತ ಕಾಯ್ತಿರ್‍ಬೇಡಿ” ಎಂದ. +ಅವನು ಹಾಗೆ ಆರ್ಡರ್ ಕೊಡಲಿಲ್ಲ. ಆದರೆ ಎರಡು ವಾರಗಳ ನಂತರ ಜನರಲ್ ಟೋಫಿಲೋ ವಾರ್ಗಾಸ್ ಹೊಡೆದಾಟದಲ್ಲಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪ್ರಧಾನ ಸೇನಾಧಿಪತಿಯಾದ. ಕ್ರಾಂತಿಕಾರಿ ಸೇನಾಧಿಪತಿಗಳಿಂದ ಅವನ ಅಧಿಕಾರ ಅಂಗೀಕೃತವಾದ ಅದೇ ರಾತ್ರಿ ಅವನು ಬೆಚ್ಚಿಬಿದ್ದು ಎಚ್ಚರಗೊಂಡು ಬೆಚ್ಚಗಿನ ಹೊದಿಕೆಯನ್ನು ಕೇಳಿದ. ಒಳಗಿನ ಕೊರೆತ ಅವನ ಮೂಳೆಗಳನ್ನು ಹಿಡಿದು ಹಿಪ್ಪೆ ಮಾಡಿ ಅದೇ ಅಭ್ಯಾಸವಾಗುವ ತನಕ ಅನೇಕ ತಿಂಗಳುಗಳ ಕಾಲ ಅವನಿಗೆ ನಿದ್ದೆ ಮಾಡಲು ಬಿಡಲಿಲ್ಲ. ಅನೇಕ ಮುಜುಗರಗಳ ಅಲೆಯಲ್ಲಿ ಅಧಿಕಾರದ ಅಮಲು ಚೂರಾಗಲು ಪ್ರಾರಂಭಿಸಿತ್ತು. ಒಳಗಿನ ಮಂಜಿನಿಂದ ಗುಣಮುಖನಾಗಲು ಹುಡುಕುತ್ತಿದ್ದಾಗ, ಜನರಲ್ ಟೋಫಿಲೋ ವಾರ್ಗಾಸ್‌ನನ್ನು ಗುಂಡಿಕ್ಕಲು ಸೂಚಿಸಿದ ಯುವ ಅಧಿಕಾರಿ ಜೊತೆಗಿದ್ದ. ಅವನ ಆರ್ಡರ್‌ಗಳನ್ನು, ಅವುಗಳನ್ನು ಕೊಡುವುದಕ್ಕೆ ಮುಂಚೆಯೇ, ಯೋಚಿಸುವ ಮುಂಚೆಯೇ ಜಾರಿಗೊಳಿಸಲಾಗುತ್ತಿತ್ತು ಮತ್ತು ಯಾವಾಗಲೂ ಅವನು ಜಾರಿಗೊಳಿಸಬೇಕೆಂದು ಧ್ಯೆರ್ಯ ವಹಿಸುತ್ತಿದ್ದಕ್ಕಿಂತ ಸಾಕಷ್ಟು ಅಧಿಕವಾಗಿರುತ್ತಿತ್ತು. ಏಕಾಂತತೆಯ ಅಗಾಧ ಅಧಿಕಾರದಲ್ಲಿ ಮುಳುಗಿ ಹೋಗಿ ಅವನಿಗೆ ದಿಕ್ಕು ತಪ್ಪಿತು. ಅವನಿಗೆ ಅಕ್ಕಪಕ್ಕದ ಹಳ್ಳಿಯವರ ಜೈಕಾರ ಹಿಂಸೆಯಾಗುತ್ತಿತ್ತು ಮತ್ತು ಅವರು ಶತ್ರುಗಳಿಗೆ ಹಾಕುತ್ತಿದ್ದದ್ದೂ ಅದೇ ಜೈಕಾರವೆಂದು ಕಲ್ಪಿಸಿಕೊಂಡ. ಎಲ್ಲಂದರಲ್ಲಿ ತನ್ನನ್ನೇ ಕಾಣುತ್ತಿದ್ದ, ತಾನು ಅಪನಂಬಿಕೆಯಿಂದ ಅವರಿಗೆ ಒಳ್ಳೆಯದನ್ನು ಹಾರೈಸಿದಂತೆ ತನಗೂ ಹಾರೈಸುತ್ತಿದ್ದ ಮತ್ತು ತನ್ನ ಮಕ್ಕಳೆಂದು ಹೇಳಿಕೊಳ್ಳುತ್ತಿದ್ದ ಹದಿವಯಸ್ಸಿನವರನ್ನು ಭೇಟಿಯಾಗುತ್ತಿದ್ದ. ಅವನಿಗೆ ಎಂದಿಗಿಂತಲೂ ಹೆಚ್ಚು ಚದುರಿಹೋದಂತೆ, ಬಹುವಿಧವಾದಂತೆ ಮತ್ತು ಹೆಚ್ಚು ಏಕಾಂತದಲ್ಲಿರುವಂತೆ ಭಾಸವಾಗುತ್ತಿತ್ತು. ಅವನಿಗೆ ತನ್ನ ಅಧಿಕಾರಿಗಳೇ ತನಗೆ ಸುಳ್ಳು ಹೇಳುತ್ತಿದ್ದಾರೆಂದು ಖಚಿತವಾಯಿತು. ಅವನು ಮಾರ್ಲ್‌ಬರೋ ರಾಜನೊಂದಿಗೆ ಸೆಣೆಸಾಡಿದ. ಆಗ ಅವನು ಹೇಳಿದ್ದು, “ಯಾರಿಗೇ ಆಗಲಿ, ಈಗಷ್ಟೇ ಸತ್ತವನು ಎಲ್ಲರಿಗಿಂತ ಒಳ್ಳೆಯ ಸ್ನೇಹಿತ” ಎಂದ ಅವನು ಅನಿಶ್ಚಯತೆಯಿಂದ, ಯಾವಾಗಲೂ ಇದ್ದಲ್ಲೆ ಇರುವಂತೆ ಕಾಣುತ್ತಿದ್ದ, ಎಂದೆಂದೂ ಮುಗಿಯದ ಯುದ್ಧದ ವಿಷವರ್ತುಲದಿಂದ ರೋಸಿಹೋಗಿದ್ದ. ಆದರೆ ಅವನು ಯಾವಾಗಲೂ ಹಿರಿಯನಾಗಿ, ನೊಂದವನಾಗಿ, ಇದ್ದ ಸ್ಥಾನದಲ್ಲಿ ಏಕೆ ಹೇಗೆ ಮತ್ತು ಯಾವಾಗ ಎಂದು ಅರಿಯದೆ ಮತ್ತಷ್ಟು ತಳವೂರಿ ಇರುತ್ತಿದ್ದ. ಜೊತೆಗೆ ಸುಣ್ಣದ ಸುತ್ತಿನ ಆಚೆ ಯಾವಾಗಲೂ ಒಬ್ಬನಿರುತ್ತಿದ್ದ. ಹಣದ ಅಗತ್ಯದವನೊಬ್ಬ, ಬಿಡಲಾರದ ಕೆಮ್ಮಿರುವ ಮಗ ಇರುವನೊಬ್ಬ ಅಥವಾ ಯುದ್ಧದ ಈ ಅಸಹ್ಯ ಮಲವನ್ನು ಬಾಯಲ್ಲಿ ಇಟ್ಟುಕೊಳ್ಳಲಾಗದೆ, ಎಲ್ಲೋ ಹೋಗಿ ಮತ್ತೆ ಎದ್ದೇಳದಂತೆ ಮಲಗಬೇಕು ಎನ್ನುವನೊಬ್ಬನಿದ್ದರೂ ಕೂಡ, “ಕರ್ನಲ್ ಪ್ರತಿಯೊಂದೂ ಸಹಜ ಸ್ಥಿತಿಯಲ್ಲಿದೆ” ಎಂದು ತಿಳಿಸಲು ಸೆಟೆದು ನಿಲ್ಲುತ್ತಿದ್ದ. ಸಹಜ ಸ್ಥಿತಿಯೇ ನಿರಂತರ ಯುದ್ಧದಲ್ಲಿ ಎಲ್ಲಕ್ಕಿಂತ ಭಯಾನಕವಾದ ಅಂಶವಾದರೂ ಹಾಗೆ ಎಂದೂ ಆಗಲಿಲ್ಲ. ಏಕಾಂಗಿಯಾಗಿ, ಮುನ್ಸೂಚನೆಗಳು ಕೈ ಬಿಟ್ಟು ಹೋಗಿ, ಸಂಗಾತಿಯಾಗಲಿದ್ದ ಚಳಿಯಿಂದ ದೂರ ಹೋಗುತ್ತ, ಕೊನೆಗೆ ಮಕೋಂದೋದಲ್ಲಿ ಅತ್ಯಂತ ಬೆಚ್ಚನೆಯ ಹಳೆಯ ನೆನಪುಗಳಲ್ಲಿ ಆಶ್ರಯ ಪಡೆದ. ಅವನ ಸೋಮಾರಿತನ ಎಷ್ಟು ತೀವ್ರವಾಗಿತ್ತೆಂದರೆ, ಯುದ್ಧ ಇತ್ಯರ್ಥವಾಗದಿರುವುದನ್ನು ಚರ್ಚಿಸಲು ಅವನ ಪಾರ್ಟಿಯವರು ಅಧಿಕೃತವಾಗಿ ರಚಿಸಿದ ಆಯೋಗದವರು ಬ ರುವರಿದ್ದಾರೆ ಎಂದು ಅವರು ಪ್ರಕಟಿಸಿದಾಗ, ಅವನು ಎದ್ದೇಳದೆ ಹಾಸಿಗೆಯಲ್ಲಿ ಹೊರಳಿ, “ಅವರನ್ನ ಸೂಳೆಯರ ಹತ್ರ ಕರ್‍ಕೊಂಡು ಹೋಗಿ” ಎಂದ. +ಅವರು ಫ್ರಾಕು ಕೋಟು ಮತ್ತು ಹ್ಯಾಟ್ ಹಾಕಿಕೊಂಡು ನವಂಬರ್‌ನ ತೀವ್ರ ಸೆಖೆಯನ್ನು ಸಂಯಮದಿಂದ ತಾಳಿಕೊಂಡ ಆರು ಜನ ಲಾಯರುಗಳಾಗಿದ್ದರು. ಉರ್ಸುಲಾ ಅವರನ್ನು ಮನೆಯಲ್ಲಿರಲು ಅನುವು ಮಾಡಿ ಕೊಟ್ಟಳು. ಅವರು ದಿನದ ಬಹುಭಾಗವನ್ನು ಬೆಡ್‌ರೂಮಿನಲ್ಲಿ ರಸತಂತ್ರದ ಮಾತುಕಥೆಯಲ್ಲಿ ಕಳೆದು ಸಂಜೆಯಾಗುತ್ತಲೆ ಕೆಲವು ಅಕಾರ್ಡಿನ್ ನುಡಿಸುವವರ ಜೊತೆ ಹೋಗಿ ಕತಾವುರೆ ಅಂಗಡಿಯನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡಿ. ಇನ್ನೇನಿದೆ, ಅವರಿಗೆ ಏನು ಬೇಕು ಅಂತ ನಂಗೊತ್ತು” ಎಂದು ಅಪ್ಪಣೆ ಕೊಟ್ಟ. ಡಿಸೆಂಬರ್‌ನ ಪ್ರಾರಂಭದಲ್ಲಿ ಎಂದಿಗೂ ಮುಗಿಯುತ್ತದೆಯೋ ಇಲ್ಲವೋ ಎಂದು ಭಾವಿಸಿದ್ದ ತುಂಬ ದಿನದಿಂದ ಕಾದಿದ್ದ ಭೇಟಿ, ಒಂದು ಗಂಟೆಗೂ ಕಡಿಮೆಯ ಅವಧಿಯಲ್ಲಿ ಇತ್ಯರ್ಥವಾಯಿತು. +ಸುಡುತ್ತಿದ್ದ ನಡುಮನೆಯಲ್ಲಿ, ಬಿಳಿಯ ಹೊದಿಕೆ ಹೊದಿಸಿದ ಪಿಯಾನೋ ಪಕ್ಕದಲ್ಲಿ ಅವನ ಬೆಂಬಲಿಗರು ಹಾಕಿದ ಸುಣ್ಣದ ಸುತ್ತಿನ ಮಧ್ಯದಲ್ಲಿ ಆ ಬಾರಿ ಕುಳಿತುಕೊಳ್ಳಲಿಲ್ಲ, ಅವನ ರಾಜಕೀಯ ಸಲಹೆಗಾರರ ನಡುವೆ ಕುರ್ಚಿಯಲ್ಲಿ ಉಲನ್ ಹೊದಿಕೆ ಹೊದ್ದುಕೊಂಡು ಕುಳಿತು, ಮೌನವಾಗಿ, ಚುಟುಕಾಗಿ ಹೇಳಿದ ಬಂದವರ ಸೂಚನೆಗಳನ್ನು ಕೇಳಿದ. ಅವರು ಮೊದಲು ಉದಾರವಾದಿ ಭೂಮಾಲೀಕರ ಬೆಂಬಲ ಪಡೆಯಲು ಭೂಮಿ ಶಿರೋನಾಮೆಯನ್ನು ಕೈ ಬಿಡಲು ಹೇಳಿದರು. ಎರಡನೆಯದಾಗಿ ಕ್ಯಾಥೊಲಿಕ್ ಸಮುದಾಯದ ಬೆಂಬಲ ಪಡೆಯಲು ಪಾದ್ರಿಗಳ ಪ್ರಭಾವದ ವಿರುದ್ಧ ಹೋರಾಡುವುದನ್ನು ಕೈ ಬಿಡಬೇಕೆಂದರು. ಕೊನೆಯದಾಗಿ ನ್ಯಾಯಸಮ್ಮತವಾಗಿ ಹುಟ್ಟಿದ ಮಕ್ಕಳಿಗೂ ಮತ್ತು ಹಾದರಕ್ಕೆ ಹುಟ್ಟಿದ ಮಕ್ಕಳಿಗೂ, ಸಮಾನ ಹಕ್ಕುಗಳನ್ನು ನೀಡುವ ಗುರಿಯನ್ನು, ಸಂಸಾರದ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಕೈ ಬಿಡಲು ಹೇಳಿದರು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಹಾಗಾದ್ರೆ ನಾವು ಹೋರಾಡ್ತಿರೋದು ಯಾತಕ್ಕೆಂದರೆ, ಅಧಿಕಾರಕ್ಕೆ ಮಾತ್ರ” ಎಂದು ಅವರು ಓದಿ ಮುಗಿಸಿದ ನಂತರ ನಗುತ್ತ ಹೇಳಿದ. +ಒಬ್ಬ ಪ್ರತಿನಿಧಿ, “ಇವೆಲ್ಲ ಜಾಣತನದ ಬದಲಾವಣೆಗಳು. ಈಗ ಮುಖ್ಯವಾದ ವಿಷಯ ಅಂದ್ರೆ, ಯುದ್ಧದ ಜನಪ್ರಿಯ ಬುನಾದಿಯನ್ನು ವಿಸ್ತಾರಗೊಳಿಸೋದು. ಉಳಿದದ್ದನ್ನ ಮತ್ತೊಮ್ಮೆ ಯೋಚಿಸಿದರಾಯ್ತು” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ರಾಜಕೀಯ ಸಲಹೆಗಾರರಲ್ಲೊಬ್ಬ ತಕ್ಷಣವೇ ಬಾಯಿ ಹಾಕಿದ. +ಅವನು, “ಅದು ಒಂದಕ್ಕೊಂದು ವಿರೋಧವಾಯ್ತು. ಈ ಬದಲಾವಣೆಗಳು ಸರಿ ಇದೆ ಅಂದ್ರೆ, ಸಂಪ್ರದಾಯವಾದಿಗಳ ಆಡಳಿತ ಚೆನ್ನಾಗಿದೆ ಅಂತ ಆಯ್ತು. ನೀವು ಹೇಳೋ ಹಾಗೆ, ಅವರನ್ನೆಲ್ಲ ಜೊತೆಗೆ ಸೇರಿಸ್ಕೊಂಡು, ಜನಪ್ರಿಯ ಬುನಾದೀನ ಹೆಚ್ಚಿಸೋದ್ರಲ್ಲಿ ನಾವು ಯಶಸ್ವಿಯಾಗ್ಬೇಕು. ಅದರರ್ಥ, ಅವ್ರ ಆಳ್ವಿಕೇಗೆ ಜನಪ್ರಿಯ ಬುನಾದಿ ಇದೆ ಅಂತ. ಇದನ್ನು ಸ್ವಲ್ಪದರಲ್ಲಿ ಹೇಳೋದಾದ್ರೆ, ಸುಮಾರು ಇಪ್ಪತ್ತು ವರ್ಷದಿಂದ ನಾವು ದೇಶದ ಜನರ ಭಾವನೆಗಳನ್ನ ತಿಳೀದೆ ಹೋರಾಡ್ತಿದೀವಿ ಅಂತ”ಎಂz. +ಅವನು ಮಾತು ಮುಂದುವರಿಸುವುದರಲ್ಲಿದ್ದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೈ ಸನ್ನೆ ಮಾಡಿ ನಿಲ್ಲಿಸಿದ. ಅವನು, “ಸಮಯ ಹಾಳು ಮಾಡ್ಬೇಡಿ. ಮುಖ್ಯವಾದ ವಿಷಯ ಅಂದ್ರೆ ಇನ್ಮೇಲೆ ನಾವು ಕೇವಲ ಅಧಿಕಾರಕ್ಕೆ ಮಾತ್ರ ಹೋರಾಡೋದು” ಎಂದ. ಇನ್ನೂ ನಗುತ್ತಿದ್ದ ಅವನು, ಪ್ರತಿನಿಧಿಗಳು ಕೊಟ್ಟ ದಾಖಲೆ ಪತ್ರಗಳನ್ನು ತೆಗೆದುಕೊಂಡು ಸಹಿ ಮಾಡಲು ತಯಾರಾದ. +ಅವನು, “ಅದು ಹಾಗೇ ಇರೋದ್ರಿಂದ ಒಪ್ಪಿಕೊಳ್ಳಲಿಕ್ಕೆ ನಮ್ದೇನೂ ಅಭ್ಯಂತರವಿಲ್ಲ” ಎಂದು ಮುಕ್ತಾಯಗೊಳಿಸಿದ. +ಅವನು ಸುತ್ತಲಿದ್ದವರು ನಂಬದಂತೆ ಪರಸ್ಪರ ಮುಖ ನೋಡಿಕೊಂಡರು. +ಕರ್ನಲ್ ಗೆರಿನೆಲ್ಡೊ ಮಾರ್ಕೆಜ್, “ಕ್ಷಮಿಸಿ ಕರ್ನಲ್, ಇದು ದ್ರೋಹ ಬಗೆದ ಹಾಗೆ” ಎಂದು ಮೃದುವಾಗಿ ಹೇಳಿದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನನ್ನು ಹಾಗೆಯೇ ಗಾಳಿಯಲ್ಲಿ ಎತ್ತಿ ಹಿಡಿದು ತನ್ನ ಅಧಿಕಾರದ ಬಲವನ್ನು ಅವನ ಮೇಲೆ ಹೇರಿದ. +ಅವನು, “ನಿಮ್ಮ ಆಯುಧಗಳನ್ನು ಒಪ್ಪಿಸಿ” ಎಂದು ಆರ್ಡರ್ ಮಾಡಿದ. +ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಎದ್ದು ನಿಂತು ಆಯುಧಗಳನ್ನು ಟೇಬಲ್ಲಿನ ಮೇಲೆ ಇಟ್ಟ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಸೈನಿಕರ ಸ್ಥಳಕ್ಕೆ ಹೋಗಿ, ಕ್ರಾಂತಿಕಾರಿ ನ್ಯಾಯಾಲಯಕ್ಕೆ ಒಪ್ಪಿಸಿಕೊಳ್ಳಿ” ಎಂದು ಅಪ್ಪಣೆ ಕೊಟ್ಟ. +ಅನಂತರ ಅವನು ಹೇಳಿಕೆಗಳಿಗೆ ಸಹಿ ಮಾಡಿ ಪ್ರತಿನಿಧಿಗಳಿಗೆ ಕಾಗದ ಪತ್ರಗಳನ್ನು ಕೊಟ್ಟು, “ಪತ್ರಗಳು ಇಲ್ಲಿವೆ. ಇದರಿಂದ ನೀವು ಸ್ವಲ್ಪ ಪ್ರಯೋಜನ ಪಡೀತೀರಿ ಅಂತ ನಿರೀಕ್ಷಿಸ್ತೀನಿ” ಎಂದು ಹೇಳಿದ. +ಎರಡು ದಿನಗಳ ನಂತರ ರಾಷ್ಟ್ರದ್ರೋಹಿ ಎಂದು ಆಪಾದಿತನಾದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಮರಣದಂಡನೆ ವಿಧಿಸಲಾಯಿತು. ಹಾಸಿಗೆಯಲ್ಲಿ ಮೈಚಾಚಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕ್ಷಮಾದಾನದ ಮನವಿಗಳಿಗೆ ಕಿವುಡನಾಗಿದ್ದ, ದಂಡನೆಗೆ ಮುಂಚೆ ಯಾರೂ ತೊಂದರೆ ಕೊಡಬಾರದು ಎಂದು ವಿಧಿಸಲಾಗಿದ್ದನ್ನು ಪಾಲಿಸದೆ ಉರ್ಸುಲಾ ಅವನ ರೂಮಿಗೆ ಹೋದಳು. ಕಪ್ಪು ಬಟ್ಟೆ ಹಾಕಿಕೊಂಡು, ಗಂಭೀರಳಾಗಿ, ಮೂರು ನಿಮಿಷಗಳ ಭೇಟಿಯ ಕಾಲದಲ್ಲಿ, ಅವನ ಮುಂದೆ ನಿಂತಿದ್ದಳು. ಅವಳು ತೀರ ಸಮಾಧಾನದಿಂದ, “ನಂಗೊತ್ತು ನೀನು ಗೆರಿನೆಲ್ಡೊನ ಶೂಟ್ ಮಾಡ್ತೀಯ ಅಂತ. ಅದನ್ನ ತಪ್ಪಿಸಕ್ಕೆ ನಾನೇನೂ ಮಾಡಕ್ಕಾಗಲ್ಲ. ಆದ್ರೆ ನಾನು ನಿಂಗೊಂದು ಎಚ್ಚರಿಕೆ ಕೊಡ್ತಾ ಇದೀನಿ. ಅವನ ದೇಹಾನ ನೋಡ್ತಿದ್ದ ಹಾಗೇನೆ, ನನ್ನ ಅಪ್ಪ ಅಮ್ಮಂದಿರ ಮೇಲೆ ಆಣೆಯಿಟ್ಟು, ಹೊಸೆ ಅರ್ಕಾದಿಯೋ ಬ್ಯುಂದಿಯಾನ ನೆನಪಿನ ಮೇಲೆ ಆಣೆಯಿಟ್ಟು, ದೇವರ ಮೇಲೆ ಆಣೆಯಿಟ್ಟು, ನೀನೆಲ್ಲೇ ಬಚ್ಚಿಟ್ಟುಕೊಂಡಿದ್ರೂ ಎಳೆದು, ನನ್ನ ಕೈಯಿಂದ್ಲೇ ನಿನ್ನ ಕೊಲ್ತೀನಿ ಅಂತ ಪ್ರಮಾಣ ಮಾಡ್ತೀನಿ” ಎಂದಳು. ಅವಳು ಮುಂದುವರೆದು, ಅವನ ಪ್ರತಿಕ್ರಿಯೆಗೆ ಕಾಯದೆ, “ನೀನು ಹಂದಿ ಬಾಲ ಇಟ್ಕೊಂಡು ಹುಟ್ಟಿದ್ರೂ ಅಷ್ಟೇನೆ” ಎಂದು ಮುಗಿಸಿದಳು. +ಆ ಕೊನೆಯಿರದ ರಾತ್ರಿಯಲ್ಲಿ ಕರ್ನಲ್ ಗೆರಿನೆಲ್ಡೊ ಅಮರಾಂತಳ ಹೊಲಿಗೆ ರೂಮಿನಲ್ಲಿ ಕಳೆದ ನಿರ್ಜೀವ ಮಧ್ಯಾಹ್ನಗಳನ್ನು ಕುರಿತು ಯೋಚಿಸಿದರೆ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದೆಷ್ಟೋ ಹೊತ್ತು ಕೂದಲು ಕಿತ್ತುಕೊಂಡು, ಏಕಾಂತದ ಭಾರವನ್ನು ನಿವಾರಿಸಿಕೊಳ್ಳಲು ನೋಡಿದ. ಹಿಂದೆಂದೋ ಐಸ್ ನೋಡಲು ಅವನ ತಂದೆ ಕರೆದುಕೊಂಡು ಹೋಗಿದ್ದ, ಒಂದೇ ಒಂದು ಸಂತೋಷದ ಕ್ಷಣಗಳ ನಂತರ ಮತ್ತೆ ಅದು ಉಂಟಾಗಿದ್ದು, ಅವನ ಬೆಳ್ಳಿಯ ವರ್ಕ್‌ಶಾಪಿನಲ್ಲಿ ಬಂಗಾರದ ಮೀನುಗಳನ್ನು ಒಟ್ಟೊಟ್ಟಿಗೆ ಇಡುತ್ತಿದ್ದಾಗ. ಅವನು ನಲವತ್ತು ವರ್ಷಗಳ ನಂತರ ಸರಳ ಜೀವನದ ಅನುಕೂಲತೆಗಳನ್ನು ಕಂಡು ಹಿಡಿಯಲು ಮೂವತ್ತೆರಡು ಯುದ್ಧಗಳನ್ನು ಮಾಡಬೇಕಾಯಿತು ಹಾಗೂ ಸಾವಿನೊಡನೆ ಮಾಡಿಕೊಂಡ, ಎಲ್ಲ ರಾಜಿಯನ್ನು ಮುರಿಯಬೇಕಾಯಿತು ಮತ್ತು ಖ್ಯಾತಿಯ ಸಗಣಿ ತಿಪ್ಪೆಯಲ್ಲಿ ಹಂದಿಯ ಥರ ಹೊರಳಾಡಬೇಕಾಯಿತು. +ಅವನು ಹಿಂಸೆಪಟ್ಟುಕೊಳ್ಳುತ್ತ ಎಚ್ಚರಿಕೆಯಿಂದ ಇದ್ದದ್ದಕ್ಕೆ ಸುಸ್ತಾಗಿ, ಬೆಳಿಗ್ಗೆ ದಂಡನೆ ಜಾರಿಗೊಳಿಸುವುದಕ್ಕೆ ಒಂದು ಗಂಟೆ ಮುಂಚೆ ಸೆಲ್‌ಗೆ ಬಂದ. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ, “ನಾಟ್ಕ ಎಲ್ಲ ಮುಗೀತು ಗೆಳೆಯ. ಇಲ್ಲಿರೋ ಸೊಳ್ಳೆಗಳು ನಮ್ಮನ್ನ ಮುಗಿಸೋಕಿಂತ ಮೊದಲು ಇಲ್ಲಿಂದ ಹೊರಟು ಹೋಗೋಣ” ಎಂದು ಹೇಳಿದ. ಆ ಮಾತಿನಲ್ಲಿದ್ದ ಅಸಡ್ಡೆಯನ್ನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ತಡೆದುಕೊಳ್ಳಲಾಗಲಿಲ್ಲ. +ಅವನು, “ಬೇಡ ಅವ್ರೇಲಿಯಾನೋ.. ನೀನು ಅಳತೆಗೆಟ್ಟ ಕ್ರೂರಿಯಾಗಿ ಬದಲಾಗೋದನ್ನು ನೋಡಕ್ಕಿಂತ, ನಾನು ಸಾಯೋದು ಒಳ್ಳೇದು” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನೀನು ಅದನ್ನ ನೋಡಲ್ಲ. ಶೂ ಹಾಕ್ಕೊ. ಈ ಗಬ್ಬು ಯುದ್ಧದಿಂದ ಹೊರಗೆ ಬರಲಿಕ್ಕೆ ಸಹಾಯ ಮಾಡು” ಎಂದ. +ಅವನು ಆ ಮಾತು ಹೇಳಿದಾಗ ಯುದ್ಧ ಶುರು ಮಾಡುವುದು ಅದನ್ನು ನಿಲ್ಲಿಸುವುದಕ್ಕಿಂತ ಸುಲಭsವೆಂದು ಗೊತ್ತಿರಲಿಲ್ಲ. ಕ್ರಾಂತಿಕಾರಿಗಳಿಗೆ ಅನುಕೂಲವಾಗುವಂಥ ಸೂಚನೆಗಳನ್ನು ಕೂಡಲು ಸರ್ಕಾರವನ್ನು ಒತ್ತಾಯಿಸುವುದಕ್ಕೆ ಅವನಿಗೆ ಸುಮಾರು ಒಂದು ವರ್ಷದ ತೀವ್ರವಾದ ಹೋರಾಟ ಬೇಕಾಯಿತು. ಜೊತೆಗೆ ಅದನ್ನು ಒಪ್ಪುವಂತೆ ತಮ್ಮ ಪಾರ್ಟಿಯವರಿಗೆ ಮನದಟ್ಟು ಮಾಡಲು ಮತ್ತೊಂದು ವರ್ಷ ಬೇಕಾಯಿತು. ಅವನ ಪಾರ್ಟಿಯಲ್ಲೆ ತಿರುಗಿ ಬಿದ್ದವರನ್ನು ಅಡಗಿಸುವುದಕ್ಕೆ ಯೋಚನೆ ಮಾಡಲಿಕ್ಕೂ ಅಸಾಧ್ಯವಾದಂಥ ಕ್ರೂರ ಕ್ರಮಗಳನ್ನು ಕೈಗೊಂಡ ಮತ್ತು ಕೊನೆಗೆ ಅವರನ್ನು ತಹಬಂದಿಗೆ ತರುವುದಕ್ಕೆ ಶತ್ರುಗಳ ಸೇನೆಯನ್ನು ಅವಲಂಬಿಸಬೇಕಾಯಿತು. ಅವನು ಆ ಅವಧಿಯಲ್ಲಿ ಎಂದೂ ಉತ್ತಮ ಯೋಧನಾಗಿರಲಿಲ್ಲ. ಕೊನೆಗೆ ತನ್ನ ಬಿಡುಗಡೆಗಾಗಿ ಹೋರಾಟ ಮಾಡುತ್ತಿರುವುದಲ್ಲದೆ, ಯಾವುದೇ ಅಮೂರ್ತ ಆದರ್ಶಕ್ಕಾಗಲಿ, ಸಂದರ್ಭಕ್ಕೆ ತಕ್ಕಂತೆ ಎಡಕ್ಕೂ ಬಲಕ್ಕೂ ತಿರುಚುವ ರಾಜಕಾರಣಿಗಳ ಘೋಷಣೆಗಳಿಗಲ್ಲವೆಂದು ಖಚಿತವಾಗಿ, ಅವನಲ್ಲಿ ಇನ್ನಿಲ್ಲದ ಉತ್ಸಾಹ ತುಂಬಿತು. ಹಿಂದೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಗೆಲ್ಲುವುದಕ್ಕಾಗಿ ಯಾವ ನಂಬಿಕೆ ಮತ್ತು ನಿಷ್ಠೆಯಿಂದ ಹೋರಾಡಿದ್ದನೋ ಅದೇ ರೀತಿ ಸೋಲುವುದಕ್ಕಾಗಿ ಹೋರಾಡುತ್ತಿದ್ದು, ಅವನ ಕೆಲಸಕ್ಕೆ ಬಾರದ ದುಡುಕಿಗಾಗಿ ತೆಗಳಿದ. ಅವನು, “ನೀನೇನೊ ಯೋಚ್ನೆ ಮಾಡ್ಬೇಡ. ಸಾಯೋದು ಹೀಗೆ ಅಂತ ಊಹಿಸಿಕೊಳ್ಳೋದಕ್ಕಿಂತ ಕಷ್ಟ” ಎಂದು ನಗುತ್ತ ಹೇಳುತ್ತಿದ್ದ. ಅವನಿಗೆ ಸಂಬಂಧಪಟ್ಟಂತೆ ಅದು ನಿಜವಾಯಿತು. ದಿನವನ್ನು ಗೊತ್ತುಪಡಿಸಿದ್ದು ಖಚಿತವಾದಾಗ, ಅದು ಅವನಿಗೆ ನಿಗೂಢವಾದ ರಕ್ಷಣೆಯನ್ನು ಹಾಗೂ ಒಂದು ನಿಶ್ಚಿತ ಅವಧಿಗೆ ಯುದ್ಧದ ಅಪಾಯಗಳಿಗೆ ಸಿಕ್ಕಿ ಬೀಳದ ಹಾಗೆ ಅಮರತ್ವವನ್ನು ತಂದುಕೊಟ್ಟಿತು. ಕೊನೆಯಲ್ಲಿ ಗೆಲುವಿಗಿಂತ ಹೆಚ್ಚು ದುಬಾರಿಯಾದ, ಕಷ್ಟಕರವಾದ, ರಕ್ತ ಹರಿಸಿದ ಸೋಲನ್ನು ಪಡೆಯಬೇಕಾಯಿತು. +ಸುಮಾರು ಇಪ್ಪತ್ತು ವರ್ಷಗಳ ಯುದ್ಧದ ಅವಧಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ಮನೆಗೆ ಅನೇಕ ಸಲ ಹೋಗಿದ್ದ. ಆದರೆ ಪ್ರತಿ ಸಲ ಬಂದಾಗಲೂ ಇರುತ್ತಿದ್ದ ಅವಸರ, ಯಾವಾಗಲೂ ಅವನ ಜೊತೆಗಿರುತ್ತಿದ್ದ ಮಿಲಿಟರಿ ಪರಿವಾರ ಮತ್ತು ಉರ್ಸುಲಾಳಿಗೂ ಗೊತ್ತಿದ್ದಂತೆ, ಅವನು ಇದ್ದ ಕಡೆ ಹಬ್ಬಿರುತ್ತಿದ್ದ ಅವನ ಜೀವನಗಾಥೆಯ ಪ್ರಭೆ, ಕೊನೆಗೆ ಅವನನ್ನು ಅಪರಿಚಿತನನ್ನಾಗಿ ಮಾಡಿತು. ಅವನು ಕಳೆದ ಬಾರಿ ಮಕೋಂದೋದಲ್ಲಿ ಇದ್ದಾಗ, ಮೂರು ಜನ ಇಟ್ಟುಕೊಂಡವರಿಗೆ ಒಂದು ಮನೆಯನ್ನು ಮಾಡಿದ್ದ ಮತ್ತು ಎರಡು ಮೂರು ಸಂದರ್ಭಗಳಲ್ಲಿ ಮಾತ್ರ ಮನೆಯಲ್ಲಿ ಊಟಕ್ಕೆ ಬರಬೇಕೆಂದು ಕೇಳಿಕೊಂಡಾಗ ಬಂದಿದ್ದ. ಯುದ್ಧದ ದಿನಗಳ ಮಧ್ಯ ಭಾಗದಲ್ಲಿ ಹುಟ್ಟಿದ ಸುಂದರಿ ರೆಮಿದಿಯೋಸ್ ಮತ್ತು ಅವಳಿ ಮಕ್ಕಳಿಗೆ ಅವನು ಗೊತ್ತೇ ಇರಲಿಲ್ಲ. ಅಮರಾಂತಳಿಗಂತೂ ಹದಿವಯಸ್ಸಿನಲ್ಲಿ ಬಂಗಾರದ ಮೀನುಗಳನ್ನು ಮಾಡುತ್ತಿದ್ದ ತನ್ನ ಸೋದರನಿಗೂ ಮತ್ತು ಈಗ ಎಲ್ಲ ಮನುಷ್ಯರನ್ನು ತನ್ನಿಂದ ಹತ್ತು ಅಡಿ ದೂರ ಇಟ್ಟಿರುವ ದಂತಕಥೆಯಂಥ ಯೋಧನಾದವನಿಗೂ, ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ಯುದ್ಧ ವಿರಾಮ ಹತ್ತಿರವಾಗುತ್ತಿದೆ ಎಂದು ತಿಳಿದಾಗ ಮತ್ತೆ ಮಾನವನಾಗಿ ಬದಲಾಗಿ, ಕೊನೆಗೂ ತನ್ನ ಜನರ ಹೃದಯಗಳಿಗೆ ಲಭ್ಯವಾಗುತ್ತದೆ. ಅದುವರೆಗೂ ಹುದುಗಿದ್ದ ಸಂಸಾರದ ಭಾವನೆಗಳಿಗೆ, ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿ ಮರುಹುಟ್ಟು ಪಡೆದು ಬರುತ್ತಾನೆಂದು ಭಾವಿಸಿದರು. +ಉರ್ಸುಲಾ, “ಕೊನೆಗೂ ಮನೇಲಿ ಒಬ್ಬ ಗಂಡಸು ಅನ್ನೋನು ಇರ್‍ತಾನೆ‘ ಎಂದಳು. +ಅವನನ್ನು ತಾವು ಎಂದೆಂದಿಗೂ ಕಳೆದುಕೊಂಡಿದ್ದೇವೆ ಎಂದು ಅನುಮಾನಿಸಿದವರಲ್ಲಿ ಅಮರಾಂತ ಮೊದಲಿಗಳು. ಯುದ್ಧ ವಿರಾಮಕ್ಕೆ ಒಂದು ವಾರ ಮುಂಚೆ ಯಾವ ರಕ್ಷಣಾ ದಳದವರೂ ಇಲ್ಲದೆ ಮನೆಗೆ ಬಂದಾಗ ಅವನ ಜೊತೆಗಿದ್ದ ಇಬ್ಬರು ಬರಿಗಾಲಿನ ಸೇವಕರು ಹೇಸರಗತ್ತೆಯ ಜೀನನ್ನು ಮತ್ತು ಅವನ ಹಿಂದಿನ ವೈಭವದ ಸಾಮಾನುಗಳಲ್ಲಿ ಒಂದು ಕವನಗಳಿರುವ ಟ್ರಂಕನ್ನು ಅಂಗಳದಲ್ಲಿ ತಂದಿಟ್ಟರು. ಅವನು ಹೊಲಿಗೆ ರೂಮನ್ನು ಹಾದು ಹೋಗುವಾಗ ಅವಳು ಅವನನ್ನು ಕರೆದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವಳನ್ನು ಗುರುತಿಸುವುದು ಕಷ್ಟವಾಯಿತು. +ಅವನು ಹಿಂತಿರುಗಿ ಬಂದದ್ದಕ್ಕೆ ಸಂತೋಷಗೊಂಡು, ನಗು ಬೆರೆಸಿ, “ನಾನು ಅಮರಾಂತ” ಎಂದು ಹೇಳಿ ಕಪ್ಪು ಪಟ್ಟಿ ಕಟ್ಟಿಕೊಂಡ ಕೈ ತೋರಿಸಿ, “ನೋಡು ಇದನ್ನು” ಎಂದಳು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮರಣದಂಡನೆಗೆ ಗುರಿಯಾಗಿ ಮಕೋಂದೋಗೆ ಬಂದ ಬೆಳಿಗ್ಗೆ ಕಪ್ಪು ಪಟ್ಟಿ ಕಟ್ಟಿಕೊಂಡ ಅವಳನ್ನು ಮೊದಲ ಬಾರಿ ನಕ್ಕು ನೋಡಿದ ಹಾಗೆಯೇ ಈಗಲೂ ಮಾಡಿದ. +ಅವನು, “ಅಲ್ಲ! ದಿನಗಳು ಹೇಗೆ ಕಳೆದು ಹೋಗತ್ತೆ!” ಎಂದ. +ಎಂದಿನ ಸೈನ್ಯದ ತುಕಡಿ ಅವನ ಮನೆಯನ್ನು ಕಾಯಬೇಕಾಯಿತು. ಅವನು ಅವಮಾನಗಳ ನಡುವೆ, ಉಗಿಸಿಕೊಂಡು, ಹೆಚ್ಚಿನ ಬೆಲೆಗೆ ಮಾರುವ ಉದ್ದೇಶದಿಂದ ಯುದ್ಧದ ಗತಿಯನ್ನು ಹೆಚ್ಚಿಸಿದನೆಂಬ ಆಪಾದನೆಗೊಳಗಾಗಿ ಬಂದಿದ್ದ. ಅವನು ಜ್ವರ ಮತ್ತು ಚಳಿಯಿಂದ ನಡುಗುತ್ತಿದ್ದ. ಅಲ್ಲದೆ ಅವನ ಕಂಕುಳಲ್ಲಿ ಮತ್ತೆ ಬೊಬ್ಬೆಗಳಾಗಿದ್ದವು. ಆರು ತಿಂಗಳ ಮುಂಚೆ ಉರ್ಸುಲಾ ಯುದ್ಧ ವಿರಾಮದ ಸುದ್ದಿ ಕೇಳಿದಾಗ, ಅವಳು ಮದುವಣಗಿತ್ತಿಯ ಕೋಣೆಯನ್ನು ತೆರೆದು, ಕಸಗುಡಿಸಿ, ಅವನಿಗೆ ರೆಮಿದಿಯೋಸ್‌ಳ ಧೂಳು ತುಂಬಿದ ಗೊಂಬೆಗಳ ಸಂಗಡ ನಿಧಾನವಾಗಿ ವಯಸ್ಸಾಗುವುದೆಂದು ಭಾವಿಸಿ, ಮೂಲೆ ಮೂಲೆಗಳಲ್ಲಿ ಸಾಂಬ್ರಾಣಿ ಹೊಗೆಯನ್ನು ಹರಡಿದ್ದಳು. ಆದರೆ ಕಳೆದ ಎರಡು ವರ್ಷಗಳಲ್ಲಿ ಅವನು ವಯಸ್ಸಾಗುವುದನ್ನೂ ಸೇರಿದಂತೆ ತನ್ನ ಜೀವದ ಕೊನೆಯ ಬಾಕಿಯನ್ನು ತೀರಿಸಿದ್ದ. ಅವನು ಉರ್ಸುಲಾ ತೀವ್ರ ಶ್ರದ್ಧೆಯಿಂದ ಸಿದ್ಧಗೊಳಿಸಿದ್ದ ಬೆಳ್ಳಿ ಅಂಗಡಿಯನ್ನು ಹಾದು ಹೋಗುವಾಗ, ಅದರ ಬೀಗದಲ್ಲಿಯೇ ಬೀಗದ ಕೈಗಳಿವೆ ಎನ್ನುವುದನ್ನು ಗಮನಿಸಿರಲಿಲ್ಲ. ಅವನು ಕಾಲ ಮನೆಯನ್ನು ಹಾಳುಗೆಡವಿದ್ದರ ಸೂಕ್ಷ್ಮಗಳನ್ನು ಗಮನಿಸಲಿಲ್ಲ ಮತ್ತು ಅಷ್ಟು ದೀರ್ಘ ಅವಧಿ ಅಲ್ಲಿ ಇರದೆ, ಅದರ ನೆನಪುಗಳನ್ನು ಉಳಿಸಿಕೊಂಡ ಯಾರಿಗೇ ಆದರೂ ಅದೊಂದು ದುರಂತವಾಗಿ ಕಾಣುತ್ತಿತ್ತು. ಅವನಿಗೆ ಮಾಸಲು ಬಿಳಿ ಬಣ್ಣದ ಗೋಡೆಗಳ ಚಕ್ಕಳಗಳಿಂದಾಗಲಿ ಅಥವಾ ಧೂಳು ತುಂಬಿದ ಮೂಲೆಗಳಲ್ಲಿದ್ದ ಜೇಡರ ಬಲೆಗಳಿಂದಾಗಲಿ, ಗೆದ್ದಲು ಹತ್ತಿದ ತೊಲೆಗಳಾಗಲಿ ಅಥವಾ ತುಕ್ಕು ಹಿಡಿದ ಬಾಗಿಲ ಕೀಲುಗಳಾಗಲಿ ಮತ್ತು ಹಳೆಯ ನೆನಪು ತೆರೆದಿಟ್ಟ ಯಾವುದರಿಂದಾಗಲೀ ನೋವಾಗಲಿಲ್ಲ. ಬೂಟುಗಳನ್ನು ಹಾಕಿಕೊಂಡಿದ್ದಂತೆಯೇ ಅವನು ಅಂಗಳದಲ್ಲಿ ಹೊದಿಕೆ ಹೊದ್ದುಕೊಂಡು, ಪ್ರತಿಯೊಂದೂ ಸ್ವಷ್ಟವಾಗುವುದಕ್ಕೆ ಕಾಯುತ್ತಿರುವಂತೆ ಕುಳಿತಿದ್ದ ಮತ್ತು ಇಡೀ ದಿನ ಬೆಗೋನಿಯಾ ಗಿಡಗಳ ಮೇಲೆ ಮಳೆ ಸುರಿಯುವುದನ್ನು ನೋಡುತ್ತ ಕಳೆದ. ಅವನು ತಮ್ಮೊಂದಿಗೆ ಬಹಳ ಕಾಲ ಇರುವುದಿಲ್ಲವೆಂದು ಉರ್ಸುಲಾಗೆ ಆಗಲೇ ಗೊತ್ತಾಯಿತು. ಅದು ಯುದ್ಧ ಅಲ್ಲದಿದ್ದರೆ ಸಾವು ಮಾತ್ರ ಆಗಿರಲು ಸಾಧ್ಯ ಎಂದು ಯೋಚಿಸಿದಳು. ಅದೊಂದು ಊಹೆ ಎಷ್ಟು ಸ್ಪಷ್ಟವಾಗಿತ್ತು ಮತ್ತು ನಂಬಿಕೆ ಬರುವಂತಿತ್ತು ಎಂದರೆ ಅವಳು ಅದನ್ನು ಮುನ್ಸೂಚನೆ ಎಂದುಕೊಂಡಳು. +ಅಂದು ರಾತ್ರಿ ಊಟ ಮಾಡುವಾಗ ಅವ್ರೇಲಿಯಾನೋ ಸೆಗುಂದೋ ಎಂದು ಇದ್ದವನು ಬ್ರೆಡ್ಡನ್ನು ಬಲಗೈಯಿಂದ ಹೊಡೆದು ಸೀಳಿದ ಮತ್ತು ಸೂಪನ್ನು ಎಡಗೈಯಿಂದ ಕುಡಿದ. ಅವನ ಸೋದರ ಹೊಸೆ ಅರ್ಕಾದಿಯೋ ಸೆಗುಂದೋ ಎಂದು ಇದ್ದವನು ಬ್ರೆಡ್ಡನ್ನು ಎಡಗೈಯಿಂದ ಹೊಡೆದು ಸೀಳಿದ ಮತ್ತು ಸೂಪನ್ನು ಬಲಗೈಯಲ್ಲಿ ಕುಡಿದ. ಅವರಿಬ್ಬರಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಅವರು ಒಬ್ಬರ ಎದುರು ಮತ್ತೊಬ್ಬರು ಕುಳಿತ ಹಾಗಿರಲಿಲ್ಲ. ಆದರೆ ಕನ್ನಡಿಯ ಬಿಂಬದಂತಿದ್ದರು. ತಾವಿಬ್ಬರೂ ಪರಸ್ಪರ ಸಮ ಎಂದು ಅರಿವಾದ ನಂತರ ಅವರು ಈ ಪ್ರಯೋಗವನ್ನು ಹೊಸದಾಗಿ ಬಂದವರ ಗೌರವಾರ್ಥವಾಗಿ ಸಿದ್ಧಪಡಿಸಿದ್ದರು. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಗಮನಿಸಲಿಲ್ಲ. ಅವನು ಎಲ್ಲದಕ್ಕೂ ಎಷ್ಟು ಹೊರತಾಗಿದ್ದನೆಂದg, ಸುಂದರಿ ರೆಮಿದಿಯೋಸ್ ಬೆತ್ತಲೆಯಾಗಿ ತನ್ನ ಬೆಡ್‌ರೂಮಿಗೆ ಹಾದು ಹೋದದ್ದನ್ನು ಅವನು ಗಮನಿಸಲಿಲ್ಲ. ಕೇವಲ ಉರ್ಸುಲಾ ಮಾತ್ರ ಅವನ ಅನ್ಯಮನಸ್ಕತೆಯನ್ನು ದೂರ ಮಾಡುವ ಧೈರ್ಯ ವಹಿಸಿದಳು. +ಅವಳು ಊಟ ಮಾಡುವಾಗ, “ನೀನು ಮತ್ತೆ ಹೋಗಲೇ ಬೇಕಾಗಿದ್ರೆ, ನಾವು ಹೇಗಿದ್ವಿ ಅನ್ನೋದನ್ನ ನೆನಪು ಮಾಡಿಕೋ” ಎಂದಳು. +ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಶ್ಚರ್ಯಗೊಳ್ಳಲಿಲ್ಲ. ತನ್ನ ಯಾತನೆಗಳನ್ನು ಅರ್ಥಮಾಡಿಕೊಂಡ ಒಬ್ಬಳೇ ಮನುಷ್ಯಳೆಂದರೆ ಉರ್ಸುಲಾ ಎಂದು ಅರಿವಾಯಿತು ಮತ್ತು ಅದೆಷ್ಟೋ ವರ್ಷಗಳಾದ ಮೇಲೆ ಅವಳ ಮುಖವನ್ನು ಗಮನವಿಟ್ಟು ನೋಡಿದ. ಅವಳ ಚರ್ಮ ಸುಕ್ಕುಗಟ್ಟಿತ್ತು. ಹಲ್ಲುಗಳು ಸವೆದು ಹೋಗಿದ್ದವು, ಕೂದಲು ಬಣ್ಣಗೆಟ್ಟು ಮಾಸಿತ್ತು ಮತ್ತು ಅವಳ ನೋಟ ಗಾಬರಿಗೊಳಿಸಿತು. ಅವನು ಕುದಿಯುತ್ತಿದ್ದ ಸಾರಿನ ಪಾತ್ರೆ ಟೇಬಲ್‌ನಿಂದ ಕೆಳಗೆ ಬೀಳುತ್ತೆಂದು ಮುನ್ಸೂಚನೆ ಕೊಟ್ಟ ಆ ದಿನದ ಮಧ್ಯಾಹ್ನದ ಅವಳ ಅತ್ಯಂತ ಹಳೆಯ ನೆನಪಿನೊಂದಿಗೆ ಅವಳನ್ನು ಹೋಲಿಸಿದಾಗ ಚಿಂದಿಯಾದಂತೆ ಕಂಡಳು. ಒಂದು ಕ್ಷಣದಲ್ಲಿ ಐವತ್ತು ವರ್ಷಗಳ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿದ್ದ ಕಲೆಗಳನ್ನು, ಗೀರುಗಳನ್ನು, ಗಾಯದ ಗುರುತುಗಳನ್ನು, ಉಬ್ಬುಗಳನ್ನು ಕಂಡ ಮತ್ತು ಆ ಕುಂದಿದ ಸ್ಥಿತಿ ತನ್ನಲ್ಲಿ ಮರುಕದ ಭಾವನೆಯನ್ನು ಹುಟ್ಟಿಸಲಿಲ್ಲ ಎನ್ನುವುದನ್ನು ಮನಗಂಡ. ಅವನು ತನ್ನಲ್ಲಿದ್ದ ಪ್ರೀತಿಯ ಭಾವನೆ ಎಲ್ಲಿ ಕೊಳೆತು ಹೋಯಿತು ಎಂದು ಅವನ ಹೃದಯದಲ್ಲಿ ಹುಡುಕಲು ಪ್ರಯತ್ನಿಸಿದ. ಆದರೆ ಅವನಿಗೆ ಸಿಗಲಿಲ್ಲ. ಇನ್ನೊಂದು ಸಂದರ್ಭದಲ್ಲಿ, ಉರ್ಸುಲಾಳ ವಾಸನೆ ಅವನ ಚರ್ಮದ ಮೇಲೆ ಕಂಡು ಬಂದಾಗ ಅವನಿಗೆ ಗೊಂದಲ ಮುತ್ತಿ, ನಾಚಿಕೆ ಉಂಟಾಗಿತ್ತು. ಮತ್ತು ಅನೇಕ ಸಲ ಅವಳ ಆಲೋಚನೆಗಳು ಅವನ ಆಲೋಚನೆಗಳ ಮಧ್ಯದಲ್ಲಿ ತಲೆ ಹಾಕುತ್ತಿದ್ದವು. ಆದರೆ ಇವೆಲ್ಲ ಯುದ್ಧದಿಂದ ಅಳಿಸಿಹೋಗಿತ್ತು. ಆ ಕ್ಷಣದಲ್ಲಿ ಅವನ ಹೆಂಡತಿ ರೆಮಿದಿಯೋಸ್ ಕೂಡ, ಅವನ ಮಗಳಾಗಿರಬಹುದಾದಷ್ಟು ಮಸುಕಾದ ಚಿತ್ರವಾಗಿತ್ತು. ಪ್ರೇಮದ ಮರಳುಗಾಡಿನಲ್ಲಿ ಪರಿಚಿತರಾದ ಲೆಕ್ಕವಿಲ್ಲದಷ್ಟು ಹೆಂಗಸರು ಮತ್ತು ಸಮುದ್ರ ತೀರದ ಉದ್ದಕ್ಕೂ ಅವನ ಬೀಜವನ್ನು ಬಿತ್ತಿಸಿಕೊಂಡ ಅವರು, ಅವನಲ್ಲಿ ಯಾವುದೇ ರೀತಿಯ ಕಿಂಚಿತ್ ಭಾವನೆಯನ್ನು ಬಿಟ್ಟು ಹೋಗಿರಲಿಲ್ಲ. ಬಹಳಷ್ಟು ಜನರು ಕತ್ತಲಲ್ಲಿ ಅವನ ರೂಮಿಗೆ ಬರುತ್ತಿದ್ದರು ಮತ್ತು ಬೆಳಗಾಗುವ ಮುಂಚೆ ಹೋಗುತ್ತಿದ್ದರು ಮತ್ತು ಮಾರನೆಯ ದಿನ ಅವನ ಮೈಯ ದಣಿವಿಗೆ ನೆನಪಾದವರಲ್ಲದೆ ಬೇರೇನೂ ಆಗಿರಲಿಲ್ಲ. ಈ ಅವಧಿ ಮತ್ತು ಯುದ್ಧವನ್ನು ಮೀರಿ ಉಳಿದುಕೊಂಡ ವಿಶ್ವಾಸವೆಂದರೆ ಅದು ಅವನ ಸೋದರ ಹೊಸೆ ಅರ್ಕಾದಿಯೋ ಬಗ್ಗೆ. ಅದು ಅವರು ಹುಡುಗರಾಗಿದ್ದಾಗ ಇದ್ದದ್ದು ಮತ್ತು ಅದಕ್ಕೆ ಪ್ರೀತಿ ಆಧಾರವಾಗಿರಲಿಲ್ಲ. ಆದರೆ ಅನೇಕ ಕೆಲಸಗಳಲ್ಲಿ ಭಾಗಿಯಾದದ್ದರಿಂದ ಉಂಟಾದದ್ದು. +ಅವನು ಉರ್ಸುಲಾಳ ಮಾತಿಗೆ, “ಈ ಯುದ್ಧ ಪ್ರತಿಯೊಂzನ್ನೂ ಮುಗಿಸಿಬಿಟ್ಟಿದೆ” ಎಂದ. +ಅನಂತರದ ಕೆಲವು ದಿನಗಳಲ್ಲಿ ಅವನು ಈ ಪ್ರಪಂಚದಲ್ಲಿ ಜರುಗಿದ ತನ್ನ ಎಲ್ಲ ಕುರುಹುಗಳನ್ನು ನಾಶಮಾಡುವುದರಲ್ಲಿ ಉದ್ಯುಕ್ತನಾದ. ಅವನು ಬೆಳ್ಳಿಯ ಅಂಗಡಿಯನ್ನು ವೈಯಕ್ತಿಕವಲ್ಲದ ವಸ್ತುಗಳನ್ನು ಬಿಟ್ಟು ಉಳಿದದ್ದನ್ನು ಧ್ವಂಸ ಮಾಡಿದ. ತನ್ನ ಬಟ್ಟೆಗಳನ್ನು ಸೇವಕರಿಗೆ ಕೊಟ್ಟ. ತನ್ನ ಆಯುಧಗಳನ್ನು, ತನ್ನ ತಂದೆ ಪ್ರುಡೆನ್ಸಿಯೋ ಅಗಿಲಾರ್‌ನನ್ನು ಕೊಂದ ಭರ್ಜಿಯನ್ನು ಹೂತ ಜಿಗುಪ್ಸೆಯ ಭಾವನೆಯಿಂದಲೇ ಹೂತು ಹಾಕಿದ. ಅವನು ಒಂದೇ ಗುಂಡು ಇರುವ ಪಿಸ್ತೂಲನ್ನು ಇಟ್ಟುಕೊಂಡ. ಉರ್ಸುಲಾ ಅವನಿಗೆ ಅಡ್ಡ ಬರಲಿಲ್ಲ. ಅವನನ್ನು ತಡೆಯಲು ಮಾಡಿದ ಒಂದೇ ಕೆಲಸವೆಂದರೆ ಅವನು ನಡುಮನೆಯಲ್ಲಿ ದೀಪ ಹಚ್ಚಿ ಬೆಳಗಿಸಿದ ರೆಮಿದಿಯೋಸ್‌ಳ ಭಾವಚಿತ್ರವನ್ನು ನಾಶ ಮಾಡುವುದರಲ್ಲಿದ್ದಾಗ ಅವಳು, “ಆ ಚಿತ್ರ ನಿಂಗೆ ಸಂಬಂಧವಿಲ್ಲದೇ ಹೋಗಿ ಬಹಳ ಕಾಲವಾಯ್ತು. ಅದು ಸಂಸಾರದ ಅವಶೇಷ” ಎಂದಳು. ಯುದ್ಧ ವಿರಾಮದ ಮುಂಚೆ ಅವನು ನೆನಪಿಸಿಕೊಳ್ಳುವಂಥ ಯಾವ ವಸ್ತು ಕೂಡ ಮನೆಯಲ್ಲಿ ಇಲ್ಲದಿದ್ದಾಗ, ಅವನು ಕವನಗಳನ್ನು ತುಂಬಿದ ಟ್ರಂಕನ್ನು ತೆಗೆದುಕೊಂಡು ಸಾಂತ ಸೋಫಿ ದೆಲಾ ಪಿಯದಾದ್ ಒಲೆ ಹೊತ್ತಿಸುವುದಕ್ಕೆ ಸಿದ್ಧಪಡಿಸುತ್ತಿದ್ದ ಬೇಕರಿಗೆ ಹೋದ. +ಅವನು ಅವಳಿಗೆ, “ಇದರಿಂದ ಬೆಂಕಿ ಹಚ್ಚು” ಎಂದು ಹಳದಿ ಬಣ್ಣದ ಕಾಗದಗಳ ಮೊದಲನೆ ಸುರುಳಿಯನ್ನು ಕೊಟ್ಟ. ಇದು ಚೆನ್ನಾಗಿ ಉರಿಯತ್ತೆ. ಯಾಕೆಂದರೆ ಬಹಳ ಹಳೇದು” ಎಂದ. +ಸದಾ ಮೌನಿಯಾಗಿರುತ್ತಿದ್ದ, ತಗ್ಗಿ ನಡೆಯುತ್ತಿದ್ದ ತನ್ನ ಮಕ್ಕಳನ್ನೂ ಸೇರಿದಂತೆ ಯಾರನ್ನೂ ವಿರೋಧಿಸದ. ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅದು ಮಾಡಬಾರದ ಕೆಲಸ ಎನ್ನಿಸಿತು. +ಅವಳು, “ಅವು ಮುಖ್ಯವಾದ ಕಾಗದಗಳು” ಎಂದಳು. +ಕರ್ನಲ್, “ಹಾಗೇನಿಲ್ಲ… ಅವು ನನಗೆ ನಾನೇ ಬರೆದುಕೊಂಡದ್ದು” ಎಂದ. +ಅವಳು, “ಹಾಗಿದ್ರೆ ಕರ್ನಲ್, ನೀವೇ ಅವನ್ನು ಸುಟ್ಟು ಬಿಡಿ” ಎಂದಳು. +ಅವನು ಹಾಗೆ ಮಾಡಿದ್ದಷ್ಟೇ ಅಲ್ಲದೆ ಸುತ್ತಿಗೆಯಿಂದ ಟ್ರಂಕನ್ನು ತುಂಡು ತುಂಡು ಮಾಡಿ ಅದನ್ನೂ ಬೆಂಕಿಗೆ ಹಾಕಿದ. +ಕೆಲವು ಗಂಟೆಗಳ ಮುಂಚೆ ಪಿಲರ್ ಟೆರ್‍ನೆರಾ ಅವನನ್ನು ಭೇಟಿ ಮಾಡಲು ಬಂದಿದ್ದಳು. ಎಷ್ಟೋ ವರ್ಷಗಳಿಂದ ಅವಳನ್ನು ನೋಡಿರದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವಳೆಷ್ಟು ವಯಸ್ಸಾಗಿ ಮತ್ತು ದಡೂತಿಯಾಗಿದ್ದಾಳೆಂದು ಮತ್ತು ತನ್ನ ನಗುವಿನ ಮೋಹಕತೆಯನ್ನು ಕಳೆದುಕೊಂಡಿದ್ದಾಳೆ ಎಂದು ಕಂಡು ದಿಗ್ಭ್ರಮೆಯಾಯಿತು. ಅಲ್ಲದೆ ಅವಳು ಕಾರ್ಡುಗಳನ್ನು ಓದುವುದರಲ್ಲಿ ಸಾಧಿಸಿರುವುದನ್ನು ಕಂಡು ಸೋಜಿಗವಾಯಿತು. ಅವಳು, “ನಿನ್ನ ಬಾಯಿ ಬಗ್ಗೆ ಹುಷಾರು” ಎಂದು ಹೇಳಿದ್ದಳು ಮತ್ತು ಅವನು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಹಾಗೆ ಹೇಳಿದ್ದು ಆಶ್ಚರ್ಯಕರವಾದ ವಿಧಿ ನಿಯಾಮಕವನ್ನು ನಿರೀಕ್ಷಿಸಿದ ದೂರ ದೃಷ್ಟಿಯಿಂದಲ್ಲವೇ ಎಂದುಕೊಂಡ. ಸ್ವಲ್ಪ ಸಮಯದ ನಂತರ ಅವನ ಡಾಕ್ಟರ್ ಹುಣ್ಣುಗಳನ್ನು ಒರೆಸುತ್ತಿದ್ದಾಗ, ಯಾವುದೇ ಆಸಕ್ತಿ ತೋರಿಸದೆ ತನ್ನ ಹೃದಯ ಇರುವುದು ಎಲ್ಲಿ ಎಂದು ಕೇಳಿದ. ಡಾಕ್ಟರ್ ಸ್ಟೆಥಸ್ಕೋಪಿನಿಂದ ಕೇಳಿಸಿಕೊಂಡ ನಂತರ, ಹತ್ತಿಯನ್ನು ಐಯೋಡಿನ್‌ನಲ್ಲಿ ಅದ್ದಿ, ಅವನ ಎದೆಯ ಮೇಲೆ ಒಂದು ವೃತ್ತ ಬಳಿದ. +ಯುದ್ಧ ವಿರಾಮದ ಮಂಗಳವಾರ ಬೆಳಿಗ್ಗೆ ಧಗೆ ಮತ್ತು ಮಳೆಯನ್ನು ತಂದಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬೆಳಗಿನ ಜಾವ ಐದು ಗಂಟೆಗೆ ಮೊದಲೇ ಅಡುಗೆ ಮನೆಯಲ್ಲಿ ಕಾಣಿಸಿಕೊಂಡು, ಸಕ್ಕರೆಯಿಲ್ಲದ ಬ್ಲಾಕ್ ಕಾಫಿ ಕುಡಿದ. ಉರ್ಸುಲಾ ಅವನಿಗೆ, “ಇಂಥದೊಂದು ದಿನ ನೀನು ಹುಟ್ಟಿದೆ… ನೀನು ಕಣ್ಣು ಬಿಟ್ಟುಕೊಂಡಿದ್ದರಿಂದ ಪ್ರತಿಯೊಬ್ರಿಗೂ ಆಶ್ವರ್ಯವಾಗಿತ್ತು” ಎಂದು ಹೇಳಿದಳು. ಅವನು ಅದರ ಕಡೆ ಗಮನ ಕೊಡಲಿಲ್ಲ. ಏಕೆಂದರೆ ಅವನು ಸೈನಿಕರು ಗುಂಪಾಗುತ್ತಿದ್ದ ರೀತಿಯನ್ನು, ಕಹಳೆಯ ಶಬ್ದವನ್ನು ಕೇಳಿಸಿಕೊಳ್ಳುತ್ತಿದ್ದ ಮತ್ತು ‘ಅಧಿಕಾರ ವಾಣಿಗಳ‘ ಶಬ್ದ ಬೆಳಗನ್ನು ಆಕ್ರಮಿಸುತ್ತಿದ್ದವು. ಅನೇಕ ವರ್ಷಗಳ ಯುದ್ಧದ ಕಾರಣ ಆ ಶಬ್ದಗಳು ಅವನಿಗೆ ರೂಢಿಗತವಾಗಿರಬೇಕಾಗಿದ್ದರೂ ಕೂಡ, ಈ ಸಲ ಅದು ಅವನಿಗೆ ಯೌವನದಲ್ಲಿ ಬೆತ್ತಲೆ ಹೆಂಗಸಿನ ಎದುರು ಉಂಟಾದಂತೆ, ಮಂಡಿಯಲ್ಲಿ ನಡುಕ ಮತ್ತು ಮೈ ನವಿರೇಳುವಂತೆ ಮಾಡಿತು. ಅವನಿಗೆ ಗೊಂದಲ ಉಂಟಾಗಿ ಕೊನೆU, ಅವಳನ್ನು ಮದುವೆಯಾಗಿದ್ದರೆ ತಾನು ಯುದ್ಧವರಿಯದ ಮನುಷ್ಯನಾಗಿ ಮತ್ತು ಖ್ಯಾತಿ ಇಲ್ಲದೆ, ಹೆಸರಿಲ್ಲದ ಕಸುಬುದಾರನಾಗಿ, ಸಂತೋಷದಿಂದಿರುವ ಪ್ರಾಣಿಯಾಗಿರುತ್ತಿದ್ದೆ ಎಂಬ ಮನೋವ್ಯಥೆಯಲ್ಲಿ ಮುಳುಗಿದ. ಅವನ ಮುಂದಾಲೋಚನೆಯಲ್ಲಿ ಕಾಣಿಸಿಕೊಳ್ಳದೆ ಹೋದ ಆ ನಡುಕ ಬೆಳಗಿನ ಉಪಹಾರವನ್ನು ಕಹಿಯಾಗಿಸಿತು. ಬೆಳಿಗ್ಗೆ ಏಳು ಗಂಟೆಗೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನನ್ನು ಕರೆದುಕೊಂದು ಹೋಗಲು ಬಂದಾಗ, ಕ್ರಾಂತಿಕಾರಿ ಅಧಿಕಾರಿಗಳ ಜೊತೆಯಲ್ಲಿ ಎಂದಿಗಿಂತ ಹೆಚ್ಚು ಆಲೋಚನಾ ಮಗ್ನನಾದಂತೆ, ಮಿತಭಾಷಿಯಂತೆ ಮತ್ತು ಒಂಟಿಯಾದವನಂತೆ ಕಂಡ. ಉರ್ಸುಲಾ ಅವನ ಭುಜದ ಮೇಲೆ ಬಟ್ಟೆ ಹೊದಿಸಲು ಪ್ರಯತ್ನಿಸಿದಳು. ಅವಳು, “ಸರ್ಕಾರ ಏನು ತಿಳ್ಕೊಳತ್ತೆ? ನಿಂಗೊಂದು ಬಟ್ಟೆ ಕೂಡ ಕೊಂಡುಕೊಳ್ಳಲಿಕ್ಕೆ ಆಗಲ್ಲ ಅಂತ ಶರಣಾಗಿದ್ದೀಯ ಅಂದ್ಕೋತಾರೆ” ಎಂದಳು. ಆದರೆ ಅದನ್ನು ಅವನು ಒಪ್ಪಲಿಲ್ಲ. ಅವನು ಬಾಗಿಲ ಹತ್ತಿರ ಹೋದಾಗ ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಹಳೆಯ ಹ್ಯಾಟನ್ನು ತಲೆಯ ಮೇಲೆ ಇಟ್ಟಾಗ ಸುಮ್ಮನಿದ್ದ. +ಆಗ ಉರ್ಸುಲಾ ಅವನಿಗೆ, “ಅವ್ರೇಲಿಯಾನೋ, ಅಲ್ಲಿಗೆ ಹೋದ ಮೇಲೆ ಇದು ಕೆಟ್ಟ ಗಳಿಗೆ ಅನ್ನಿಸಿದ್ರೆ ಅಮ್ಮನ್ನ eಪಿಸಿಕೊಳ್ತೀನಿ ಅಂತ ಮಾತು ಕೊಡು” ಎಂದಳು. +ಅವನು ಬೆರಳುಗಳನ್ನು ನೆಟ್ಟಗೆ ಮಾಡಿ ಕೈಯೆತ್ತಿ ಅವಳ ಕಡೆ ಸಣ್ಣ ನಗು ತೂರಿದ. ಒಂದು ಮಾತನ್ನೂ ಆಡದೆ ಮನೆಯಿಂದ ಹೊರಟ ಮತ್ತು ಊರು ಬಿಡುವ ತನಕ ಕೂಗಾಟ ಅವಹೇಳನ ಮತ್ತು ನಿಂದನೆಗಳನ್ನು ಕೇಳಬೇಕಾಯಿತು. ಇಡೀ ಜೀವಮಾನ ತೆಗೆಯುವುದಿಲ್ಲವೆಂದು ನಿರ್ಧರಿಸಿ ಉರ್ಸುಲಾ ಬಾಗಿಲಿಗೆ ಅಡ್ಡಪಟ್ಟಿ ಹಾಕಿದಳು. ಅವಳು, “ನಾವು ಇಲ್ಲಿ ಗಂಡಸರಿಲ್ಲದೇ ಕೊಳೆತು ಹೋಗ್ತೀವಿ. ಗಂಡಸರಿಲ್ಲದೇ ಈ ಮನೇಲಿ ಬೂದಿಯಾಗ್ತೀನಿ. ಆದರೆ ಈ ದರಿದ್ರ ಊರಿಗೆ ನಾವು ಅಳೋದನ್ನ ಕಂಡು ಖುಷಿಪಡಕ್ಕೆ ಬಿಡಲ್ಲ.” ಎಂದು ಯೋಚಿಸಿದಳು. ಅವಳು ತನ್ನ ಆಳದ ಮೂಲೆಯಲ್ಲಿ ಅಡಗಿದ ನೆನಪಿನಲ್ಲಿ ತನ್ನ ಮಗನನ್ನು ಹುಡುಕಲು ಇಡೀ ಮುಂಜಾನೆ ಪ್ರಯತ್ನಿಸಿದಳು. ಆದರೆ ಅವಳಿಗೆ ಸಾಧ್ಯವಾಗಲಿಲ್ಲ. +ಇಡೀ ಸಮಾರಂಭ ಮಕೋಂದೋದಿಂದ ಹದಿನೈದು ಮೈಲಿಗಳಾಚೆ ಅಗಾಧವಾದ ಸೀಬೆ ಮರದ ಕೆಳಗೆ ಮುಂದೆ ಅದರ ಸುತ್ತಮುತ್ತ ನೀರ್ಲಾಂದಿಯಾ ಎಂಬ ಊರು ಹುಟ್ಟಿದ ಸ್ಥಳದಲ್ಲಿ ನೆರವೇರಿತು. ಸರ್ಕಾರದ, ಪಾರ್ಟಿಯ ಮತ್ತು ಶರಣಾಗತರಾಗುವ ಕ್ರಾಂತಿಕಾರಿಗಳ ನಿಯೋಗದವರಿಗೆ ಮಳೆಯಿಂದ ಬೆದರಿದ ಬಾತುಕೋಳಿಗಳ ಗುಂಪಿನಂತೆ ಕಂಡ ಬಿಳಿಯುಡುಗೆಯನ್ನು ತೊಟ್ಟ ಹೊಸಬರ ಗುಂಪು, ಗದ್ದಲ ಮಾಡುತ್ತ ಉಪಚರಿಸಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೊಳಕಾದ ಚಿಂದಿ ಬಟ್ಟೆಯಲ್ಲಿ ಬಂದ. ಅವನು ಶೇವ್ ಮಾಡಿಕೊಂಡಿರಲಿಲ್ಲ. ತನ್ನ ಕನಸು ನುಚ್ಚು ನೂರಾಗಿದ್ದಕ್ಕಿಂತ ಹೆಚ್ಚಾಗಿ, ಹುಣ್ಣುಗಳ ನೋವಿನಿಂದ ಹೆಚ್ಚು ಹಿಂಸೆಗೊಳಗಾಗಿದ್ದ. ಏಕೆಂದರೆ ಅವನು ಎಲ್ಲ ಆಸೆಗಳ ಕೊನೆಯನ್ನು ಮೀರಿದ ಖ್ಯಾತಿಯನ್ನು ಮತ್ತು ಖ್ಯಾತಿಯ ಮನೋವ್ಯಥೆಯನ್ನು ತಲುಪಿದ್ದ. ಅವನು ವ್ಯವಸ್ಥೆಗೊಳಿಸಿದ ಹಾಗೆ ಯುದ್ಧ ವಿರಾಮದ ದುಃಖ ಸೂಚಕ ಗುಣವನ್ನು ಬದಲಿಸದಂತೆ ಯಾವುದೇ ಹಾಡು, ಪಟಾಕಿಗಳ ಸಿಡಿತ, ಗಂಟೆಗಳ ಶಬ್ದ, ಜಯಭೇರಿಯ ಅಬ್ಬರ ಅಥವಾ ಮತ್ತಾವುದೂ ಇರಲಿಲ್ಲ. ಅಲ್ಲಿಯೇ ಸುತ್ತುತ್ತಿದ್ದ ಫೋಟೋಗ್ರಾಫರ್‌ನೊಬ್ಬ ಫೋಟೋ ತೆಗೆz. ಸಂಗ್ರಹಿಸಲು ಸಾಧ್ಯವಾಗಬಹುದಾಗಿದ್ದ ಅವನ ಒಂದೇ ಒಂದು ಚಿತ್ರವನ್ನು ಪರಿಷ್ಕರಿಸಲಾಗದಂತೆ ಅದನ್ನು ಬಲವಂತವಾಗಿ ಚಚ್ಚಿ ಹಾಕಲಾಯಿತು. +ಇಡೀ ಸಮಾರಂಭ ಪ್ರಮಾಣ ಪತ್ರಗಳಿಗೆ ಸಹಿ ಮಾಡುವ ಅವಧಿಯಷ್ಟು ಮಾತ್ರ ನಡೆಯಿತು. ಸರ್ಕಸ್ ಟೆಂಟಿನ ಮಧ್ಯದಲ್ಲಿ ಇಟ್ಟಿದ್ದ ಟೇಬಲ್ ಸುತ್ತಲೂ ಕುಳಿತ ಪ್ರತಿನಿಧಿಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ವಿಧೇಯರಾಗಿದ್ದ ಕೊನೆಯ ಅಧಿಕಾರಿಗಳಾಗಿದ್ದರು. ಸಹಿ ತೆಗೆದುಕೊಳ್ಳುವುದಕ್ಕೆ ಮುಂಚೆ ಗಣತಂತ್ರದ ಅಧ್ಯಕ್ಷರ ಆಪ್ತ ಪ್ರತಿನಿಧಿ ಶರಣಾಗತಿಯ ವಿಧೇಯಕವನ್ನು ಗಟ್ಟಿಯಾಗಿ ಓದಲು ಪ್ರಯತ್ನಿಸಿದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದಕ್ಕೆ ವಿರೋಧಿಯಾಗಿದ್ದ. ಅವನು, “ಔಪಚಾರಿಕ ವಿಷಯಗಳಲ್ಲಿ ಸಮಯವನ್ನ ಹಾಳು ಮಾಡೋದು ಬೇಡ” ಎಂದು ಹೇಳಿದ ಮತ್ತು ಅವುಗಳನ್ನು ಓದದೇ ಸಹಿ ಮಾಡಲು ಸಿದ್ಧನಾಗಿದ್ದ. ಟೆಂಟ್‌ನಲ್ಲಿ ಮುತ್ತಿದ್ದ ಮೌನವನ್ನು ಅಧಿಕಾರಿಯೊಬ್ಬ ಮುರಿದ. +ಅವನು, “ಕರ್ನಲ್, ದಯವಿಟ್ಟು ನೀವು ಮೊದಲು ಸಹಿ ಮಾಡದೆ ನಮಗಷ್ಟು ಉಪಕಾರ ಮಾಡಿ” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಪ್ಪಿಕೊಂಡ. +ಪ್ರಮಾಣ ಪತ್ರಗಳನ್ನು ಟೇಬಲ್ಲಿನ ಸುತ್ತಲೂ ಕಳಿಸಿದಾಗ ಅಲ್ಲಿ ಎಷ್ಟು ಮೌನ ಆವರಿಸಿತ್ತೆಂದರೆ ಕಾಗದದ ಮೇಲೆ ಪೆನ್ನು ಮೂಡಿಸುವ ಕರಕರ ಶಬ್ದದಿಂದ ಸಹಿಗಳನ್ನು ಗೊತ್ತುಮಾಡಿಕೊಳ್ಳಬಹುದಿತ್ತು. ಮೊದಲನೆಯ ಪ್ರತಿ ಇನ್ನೂ ಖಾಲಿ ಇತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಭರ್ತಿ ಮಾಡಲು ಸಿದ್ಧನಾದ. +ಇನ್ನೊಬ್ಬ ಅಧಿಕಾರಿ, “ಕರ್ನಲ್, ಎಲ್ಲಾ ಸರಿಹೋಗಕ್ಕೆ ಇನ್ನೂ ಸಮಯ ಇದೆ.” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮುಖಮುದ್ರೆಯನ್ನು ಬದಲಿಸದೆ ಮೊದಲ ಪ್ರತಿಯಲ್ಲಿ ಸಹಿ ಮಾಡಿದ. ಅವನು ಕೊನೆಯದರಲ್ಲಿ ಸಹಿ ಮಾಡಿ ಮುಗಿಸಿರಲಿಲ್ಲ. ಆಗ ಕ್ರಾಂತಿಕಾರಿ ಕರ್ನಲ್ ಒಬ್ಬ ಹಂದಿಯ ಮೇಲೆ ಎರಡು ಪೆಟ್ಟಿಗೆಯನ್ನು ಹೇರಿಕೊಂಡು ಬಾಗಿಲ ಹತ್ತಿರ ಕಾಣಿಸಿಕೊಂಡ. ಅವನು ಹದಿಹರೆಯದವನಾಗಿದ್ದರೂ ಕಳೆ ಇರದೆ ತಾಳ್ಮೆಯಿಂದಿದ್ದ. ಕ್ರಾಂತಿಯಲ್ಲಿ ಮಕೋಂದೋ ಪ್ರದೇಶದ ಖಜಾಂಚಿಯಾಗಿದ್ದ ಅವನು ಯುದ್ಧ ವಿರಾಮದ ಸಂದರ್ಭಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕೆಂದು ಆರು ದಿನಗಳ ಕಾಲ ಪ್ರಯಾಣ ಮಾಡಿ ಹಸಿವಿನಿಂದ ಸಾಯುತ್ತಿದ್ದ ಹಂದಿಯನ್ನು ಎಳೆದುಕೊಂಡು ಬಂದಿದ್ದ. ಅವನು ಅತ್ಯಂತ ಎಚ್ಚರಿಕೆಯಿಂದ ಪೆಟ್ಟಿಗೆಗಳನ್ನು ಕೆಳಗಿಳಿಸಿ, ತೆಗೆದು, ಒಂದಾದ ಮೇಲೆ ಒಂದರಂತೆ ಎಪ್ಪತ್ತೆರಡು ಬಂಗಾರದ ಇಟ್ಟಿಗೆಗಳನ್ನು ಟೇಬಲ್ಲಿನ ಮೇಲಿಟ್ಟ. ಆ ಸಂಪತ್ತಿನ ಬಗ್ಗೆ ಎಲ್ಲರೂ ಮರೆತು ಬಿಟ್ಟಿದ್ದರು. ಕಳೆದ ವರ್ಷದ ಅವ್ಯವಸ್ಥೆಯಲ್ಲಿ ಆe ಕೇಂದ್ರ ಕುಸಿದು ಬಿದ್ದಾಗ ಮತ್ತು ಪರಸ್ಪರ ಕಟ್ಟಾ ವಿರೋಧಿ ನಾಯಕರಾಗುವ ಮಟ್ಟಿಗೆ ಕ್ರಾಂತಿ ದುರ್ಬಲಗೊಂಡಾಗ, ಯಾವುದೇ ಜವಾಬ್ದಾರಿಯನ್ನು ನಿರ್ಧರಿಸಲು ಅಸಾಧ್ಯವಾಗಿತ್ತು, ಕ್ರಾಂತಿ ಕಾಲದ ಬಂಗಾರ ಕರಗಿಸಿ ಇಟ್ಟಿಗೆಗಳನ್ನಾಗಿ ಮಾಡಿ ಅನಂತರ ಸುಟ್ಟ ಮಣ್ಣಿನಿಂದ ಮುಚ್ಚಿದ ಮೇಲೆ, ಅದು ಎಲ್ಲ ನಿಯಂತ್ರಣದಿಂದ ತಪ್ಪಿಸಿಕೊಂಡಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಸ್ತುಗಳ ಪಟ್ಟಿಯಲ್ಲಿ ಎಪ್ಪತ್ತೆರಡು ಬಂಗಾರದ ಗಟ್ಟಿಗಳನ್ನು ಸೇರಿಸಿದ ಮತ್ತು ಇಡೀ ಸಮಾರಂಭವನ್ನು ಯಾವುದೇ ಭಾಷಣಗಳಿಲ್ಲದೆ ಮುಗಿಸಿದ. ಕೊಳಕಾಗಿದ್ದ ಆ ಹುಡುಗ ಅವನಿಗೆದುರಾಗಿ ನಿಂತು ಶಾಂತವಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಇನ್ನೇನಾದರೂ ಇದ್ಯಾ” ಎಂದು ಅವನನ್ನು ಕೇಳಿದ. +ಯುವ ಕರ್ನಲ್ ತುಟಿ ಬಿಗಿ ಹಿಡಿದು, “ರಸೀತಿ” ಎಂದ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಕೈಯಿಂದಲೇ ಅದನ್ನು ಬರೆದು ಕೊಟ್ಟ. ಅನಂತರ ಅವನು ಹುಡುಗರು ಆಚೀಚೆ ಕಳಿಸುತ್ತಿದ್ದ ಒಂದು ಗ್ಲಾಸ್ ಶರಬತ್ ಮತ್ತು ಒಂದು ತುಂಡು ಬಿಸ್ಕತ್ ತೆಗೆದುಕೊಂಡ. ಅವನು ಒಂದು ಪಕ್ಷ ವಿಶ್ರಾಂತಿ ಪಡೆಯಲು ಬಯಸಿದರೆ ಇರಲೆಂದು ಸಿದ್ದಪಡಿಸಿದ್ದ ಆಚೆಯ ಟೆಂಟ್‌ಗೆ ಹೋದ. ಅಲ್ಲಿ ಅವನು ಶರಟು ತೆಗೆದು, ಕುರ್ಚಿಯಲ್ಲಿ ಕುಳಿತುಕೊಂಡ ಮತ್ತು ಮಧ್ಯಾಹ್ನ ಮೂರೂ ಹದಿನೈದಕ್ಕೆ ಪಿಸ್ತೂಲು ತೆಗೆದುಕೊಂಡು, ಅವನ ಡಾಕ್ಟರು ಎದೆಯ ಮೇಲೆ ಗುಂಡಗೆ ಬಣ್ಣ ಬಳಿದಿದ್ದಲ್ಲಿ ಇಟ್ಟುಕೊಂಡು, ಹಾರಿಸಿಕೊಂಡ. ಅದೇ ವೇಳೆಗೆ ಉರ್ಸುಲಾ ಸ್ಟೋವ್ ಮೇಲೆ ಇಟ್ಟಿದ್ದ ಹಾಲಿನ ಪಾತ್ರೆಯ ಮುಚ್ಚಳ ತೆಗೆದು, ಅದು ಕುದಿಯಲು ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿರುವುದು ಏಕೆ ಎಂದುಕೊಳ್ಳುತ್ತ, ಅದರ ತುಂಬ ಹುಳುಗಳನ್ನು ಕಂಡಳು. +ಅವಳು, ” ಅವ್ರು ಅವ್ರೇಲಿಯಾನೋನ ಕೊಂದಿದ್ದಾರೆ” ಎಂದು ಕೂಗಿದಳು. +ಅವಳು ಏಕಾಂತದಲ್ಲಿದ್ದ ರೂಢಿಯಂತೆ ಅಂಗಳದ ಕಡೆ ನೋಡಿದಳು. ಅವಳಿಗೆ ಮಳೆಯಲ್ಲಿ ತೊಯ್ದು ಹೋಗಿ, ದುಃಖಿತನಾಗಿ ಮಳೆಯಲ್ಲಿ ನಿಂತ ಮತ್ತು ಸತ್ತಾಗ ಇದ್ದದ್ದಕ್ಕಿಂತ ಹೆಚ್ಚಿಗೆ ವಯಸ್ಸಾದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಂಡ. ಅವಳು ಹೆಚ್ಚು ನಿಖರವಾಗಿ, “ಅವನಿಗೆ ಬೆನ್ನಲ್ಲಿ ಗುಂಡು ಹಾಕಿದರು. ಅಲ್ದೆ ಅವನ ಕಣ್ಣನ್ನ ಮುಚ್ಚುವಷ್ಟು ಯಾರಿಗೂ ಮನಸ್ಸಾಗ್ಲಿಲ್ಲ” ಎಂದಳು. ಸಾಯಂಕಾಲ ಕಣ್ಣೀರಿನ ಮೂಲಕ, ಆಕಾಶದ ಅಗಲಕ್ಕೂ ಆವಿಯಂತೆ ಓಡುವ, ಮಿನುಗುವ ವೃತ್ತಗಳನ್ನು ಕಂಡಳು ಮತ್ತು ಅವಳು ಅದನ್ನು ಸಾವಿನ ಸಂಕೇತವೆಂದು ತಿಳಿದುಕೊಂಡಳು. ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ತಂದಾಗ ಅವಳಿನ್ನೂ ಗಂಡನ ಮಂಡಿಯ ಬಳಿ ಬಾದಾಮಿ ಮರದ ಕೆಳಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವನಿಗೆ ಹೊದಿಸಿದ್ದ ಹೊದಿಕೆ ಒಣಗಿದ ರಕ್ತದಿಂದ ಬಿಗಿಯಾಗಿತ್ತು ಮತ್ತು ರೋಷದಿಂದ ಕಣ್ಣು ತೆರೆದುಕೊಂಡಿತ್ತು. +ಅವನು ಅಪಾಯದಿಂದ ಪಾರಾಗಿದ್ದ. ಗುಂಡು ಅವನಲ್ಲಿ ಯಾವ ರೀತಿಯ ಮಾರ್ಗ ಅನುಸರಿಸಿತ್ತೆಂದರೆ, ಐಯೋಡಿನ್‌ನಲ್ಲಿ ತೋಯಿಸಿದ ದಾರವನ್ನು ಎದೆಯೊಳಗೆ ಹಾಕಿ ಬೆನ್ನಿನಿಂದ ಅದನ್ನು ಹೊರಗೆಳೆಯಲು ಡಾಕ್ಟರ್‌ಗೆ ಸಾಧ್ಯವಾಯಿತು. ಅವನು ಸಂತೃಪ್ತಿಯಿಂದ “ಇದು ನನ್ನ ಅತ್ಯಂತ ಒಳ್ಳೆಯ ಕೆಲಸ. ಯಾವುದೇ ಮುಖ್ಯವಾದ ಭಾಗಕ್ಕೆ ಹಾನಿಯಾಗದ ಹಾಗೆ ಹೋಗಕ್ಕೆ ಇದ್ದದ್ದು ಅದೊಂದೇ ಜಾಗ” ಎಂದ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ, ತನ್ನ ಆತ್ಮ ಸ್ಥಿರವಾಗಿದ್ದದ್ದಕ್ಕೆ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಿದ್ದ ಸುತ್ತುವರಿದಿದ್ದ ಹುಡುಗರು ಕಂಡರು. ಅನಂತರ ಅವನಿಗೆ ತನ್ನ ಬಾಯಲ್ಲಿ ಗುಂಡು ಹೊಡೆದುಕೊಳ್ಳದಿರುವುದಕ್ಕೆ ಖೇದವೆನಿಸಿತು. ಏಕೆಂದರೆ ಅವನು ಅದನ್ನು ಪಿಲರ್ ಟೆರ್‍ನೆರಾ ಮುನ್ಸೂಚನೆ ಕೊಟ್ಟಿದ್ದನ್ನು ಅಣಕು ಮಾಡಲು ಮಾತ್ರ ಮಾಡಲು ಯೋಚಿಸಿದ್ದ. +ಅವನು ಡಾಕ್ಟರ್‌ಗೆ, “ನಂಗಿನ್ನೂ ಅಧಿಕಾರ ಇದ್ದಿದ್ದಿದ್ರೆ ಶೂಟ್ ಮಾಡಿಸಿ ಬಿಡ್ತಿದ್ದೆ. ನನ್ನ ಜೀವಾನ ಉಳಿಸಿದ್ದಕ್ಕಲ್ಲ, ನನ್ನನ್ನ ಮೂರ್ಖನನ್ನಾಗಿ ಮಾಡಿದ್ದಕ್ಕೆ” ಎಂದ. +ಅವನು ಸಾಯದೇ ಹೋದದ್ದು ಕೆಲವೇ ಗಂಟೆಗಳಲ್ಲಿ ಕಳೆದು ಹೋದ ಅವನ ಘನತೆಯನ್ನು ವಾಪಸು ತಂದು ಕೊಟ್ಟಿತು. ಯುದ್ಧವನ್ನು ಬಂಗಾರದ ಇಟ್ಟಿಗೆಗಳ ರೂಮಿಗಾಗಿ ಮಾರಿಕೊಂಡನೆಂದು ಕಥೆ ಕಟ್ಟಿದ ಅದೇ ಜನ ಅವನ ಆತ್ಮಹತ್ಯೆಯ ಪ್ರಯತ್ನವನ್ನು ರಾಷ್ಟ್ರಭಕ್ತಿ ಎಂದು ಘೋಷಿಸಿದರು. ಅನಂತರ ಅವನು ಗಣತಂತ್ರದ ಅಧ್ಯಕ್ಷರ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ತಿರಸ್ಕರಿಸಿದಾಗ, ಅವನ ಅತ್ಯಂತ ಕಟ್ಟಾ ವಿರೋಧಿಗಳು ಕೂಡ ಅವನ ರೂಮಿಗೆ ಕಾಲಿಟ್ಟು, ಯುದ್ಧ ವಿರಾಮ ಮನ್ನಣೆಯನ್ನು ಹಿಂತೆಗೆದುಕೊಂಡು ಮತ್ತೆ ಯುದ್ಧ ಶುರು ಮಾಡಲು ಕೇಳಿಕೊಂಡರು. ಮಾಡಿದ ತಪ್ಪನ್ನು ಸರಿತೂಗಲು ಎನ್ನುವಂತೆ ಮನೆಯ ತುಂಬ ಕೊಡುಗೆಗಳಿಂದ ತುಂಬಿ ಹೋಯಿತು. ಕೊನೆಗೆ ತನ್ನ ಜೊತೆಗಿದ್ದ ಹಿಂದಿನ ಸಹವರ್ತಿಗಳಿಂದ ದೊರೆತ ಅಗಾಧ ಬೆಂಬಲ ಅವನ ಮೇಲೆ ಪರಿಣಾಮ ಬೀರಿ, ಅವನು ಅವರನ್ನು ಮೆಚ್ಚಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ. ಅದಕ್ಕೆ ಪ್ರತಿಯಾಗಿ ಒಂದು ಸಂದರ್ಭದಲ್ಲಿ ಹೊಸ ಯುದ್ಧದ ಬಗ್ಗೆ ಎಷ್ಟು ಉತ್ಸುಕನಾಗಿದ್ದನೆಂದg, ಅವನು ಯಾವುದಾದರೊಂದು ನೆಪಕ್ಕಾಗಿ ಕಾಯುತ್ತಿರುವುದಾಗಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಕಂಡಿತು. ಅಂಥದೊಂದು ನೆಪ, ಗಣತಂತ್ರದ ಅಧ್ಯಕ್ಷರು ಹಿಂದಿನ ಹೋರಾಟಗಾರರಿಗೆ, ಉದಾರವಾದಿಗಳಾಗಿರಲಿ ಸಂಪ್ರದಾಯವಾದಿಗಳಾಗಿರಲಿ, ಪ್ರತಿಯೊಂದು ಕೇಸನ್ನು ನಿಯೋಗ ಪರೀಕ್ಷಿಸಿ ಕಾಂಗ್ರೆಸ್ ಒಪ್ಪಿಗೆ ನೀಡುವ ತನಕ ಯಾವುದೇ ವಿಧವಾದ ಮಿಲಿಟರಿ ನಿವೃತ್ತಿ ವೇತನವನ್ನು ಕೊಡಲು ತಿರಸ್ಕರಿಸಿದಾಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಅವ್ರು ಕಾಗದ ಬರೋದಕ್ಕೆ ಕಾಯ್ತಾ, ಕಾಯ್ತಾ, ಸತ್ತು ಹೋಗ್ತಾರೆ” ಎಂದು ಅಬ್ಬರಿಸಿದ. ಅವನು ವಿಶ್ರಾಂತಿ ಪಡೆಯುವುದಕ್ಕಾಗಿ ಉರ್ಸುಲಾ ತಂದಿದ್ದ ತುಯ್ದಾಡುವ ಕುರ್ಚಿಯಿಂದ ಮೊದಲ ಬಾರಿಗೆ ಎದ್ದು, ಬೆಡ್‌ರೂಮಿನಲ್ಲಿ ಅತ್ತಿತ್ತ ಓಡಾಡುತ್ತ, ಗಣತಂತ್ರದ ಅಧ್ಯಕ್ಷರಿಗೆ ಒಂದು ಕಾಗದಕೆ ಉಕ್ತ ಲೇಖನ ಕೊಟ್ಟ. ಸಾರ್ವಜನಿಕ ಮಾಡದ ಆ ಟೆಲಿಗ್ರಾಂನಲ್ಲಿ ನೀರ್ಲಾಂದಿಯಾ ಒಪ್ಪಂದವನ್ನು ಮೊದಲ ಸಲ ಮೀರಿದ್ದನ್ನು ದೂಷಿಸಿದ್ದ ಮತ್ತು ಎರಡು ವಾರದ ಒಳಗೆ ನಿವೃತ್ತಿ ವೇತನ ಕೊಡುವುದನ್ನು ತೀರ್ಮಾನಿಸದಿದ್ದರೆ, ಸಾಯುವ ತನಕ ಯುದ್ಧ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅವನ ಧೋರಣೆ ಎಷ್ಟು ನ್ಯಾಯ ಸಮ್ಮತವಾಗಿತ್ತೆಂದರೆ ಹಿಂದಿನ ಸಂಪ್ರದಾಯವಾದಿ ಹೋರಾಟಗಾರರ ಬೆಂಬಲ ಕೂಡ ದೊರಕುವುದೆಂಬ ಆಸೆಗೆ ಕಾರಣವಾಯಿತು. ಸರ್ಕಾರದಿಂದ ಬಂದ ಒಂದೇ ಉತ್ತರದಲ್ಲಿ ಅವನು ರಕ್ಷಿಸಬೇಕೆಂಬ ನೆಪದಿಂದ ಅವನ ಮನೆಯ ಬಾಗಿಲ ಬಳಿ ಒದಗಿಸಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಚ್ಚಿಸುವುದಾಗಿ ತಿಳಿಸಲಾಗಿತ್ತು ಮತ್ತು ಎಲ್ಲ ಬಗೆಯ ಭೇಟಿಗೆ ನಿಷೇಧವಿತ್ತು. ಇಡೀ ದೇಶದಲ್ಲಿ, ಕಣ್ಣಿಡಲಾಗಿದ್ದ ಇತರ ನಾಯಕರಿಗೂ ಇದೇ ವಿಧಾನವನ್ನು ಅನುಸರಿಸಲಾಗಿತ್ತು. ಆ ಕಾರ್ಯಾಚರಣೆ ಎಷ್ಟು ಸಮಯಯುಕ್ತ ಮತ್ತು ಯಶಸ್ವಿಯಾಗಿತ್ತೆಂದರೆ, ಯುದ್ಧ ವಿರಾಮದ ಎರಡು ತಿಂಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚೇತರಿಸಿಕೊಂಡ ಮೇಲೆ, ಅವನಿಗೆ ಅತ್ಯಂತ ಸಮೀಪವರ್ತಿಗಳಾಗಿದ್ದ ಬೇಹುಗಾರರು ಸತ್ತಿದ್ದರು ಅಥವಾ ತಲೆ ತಪ್ಪಿಸಿಕೊಂಡಿದ್ದರು ಅಥವಾ ಸಾರ್ವಜನಿಕ ಆಡಳಿತದೊಳಕ್ಕೆ ಎಂದೆಂದಿಗೆಂದು ಸೇರಿಸಿಕೊಳ್ಳಲಾಗಿತ್ತು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಡಿಸೆಂಬರ್‌ನಲ್ಲಿ ರೂಮಿನಿಂದ ಹೊರಗೆ ಹೊರಟ ಮತ್ತು ಯುದ್ಧದ ಬಗ್ಗೆ ಯೋಚಿಸದಿರುವುದಕ್ಕೆ ಅವನಿಗೆ ಕೈಸಾಲೆಯ ಕಡೆ ನೋಡುವುದು ಸಾಕಾಗಿತ್ತು. ಆ ವಯಸ್ಸಿಗೆ ಅಸಾಧ್ಯವೆಂದು ತೋರುತ್ತಿದ್ದ ಚೈತನ್ಯದಿಂದ ಉರ್ಸುಲಾ ಮನೆಗೆ ಮತ್ತೆ ಮರುಜೀವ ಕೊಟ್ಟಿದ್ದಳು. ತನ್ನ ಮಗ ಬದುಕಿರುತ್ತಾನೆ ಎಂದು ತಿಳಿದ ಬಳಿಕ ಅವಳು, “ನಾನೇನು ಅಂತ ಅವ್ರಿಗೆ ಗೊತ್ತಾಗತ್ತೆ. ಇದಕ್ಕಿಂತ ಚೆನ್ನಾಗಿರೋ, ಮುಕ್ತವಾಗಿರೋ, ತಲೆಕೆಟ್ಟ ಮನೆ ಇಡೀ ಪ್ರಪಂಚದಲ್ಲೇ ಯಾವುದೂ ಇರಲ್ಲ” ಎಂದಳು. ಅವಳು ಅದನ್ನು ತೊಳೆಸಿ ಬಣ್ಣ ಬಳಿಸಿ, ಪೀಠೋಪಕರಣ ಬದಲಾಯಿಸಿ, ಉದ್ಯಾನವನದಲ್ಲಿ ಹೊಸ ಹೂ ಗಿಡಗಳನ್ನು ನೆಡಿಸಿ ಮರು ಸ್ಥಾಪಿಸಿದಳು. ಕಿಟಕಿ ಬಾಗಿಲುಗಳನ್ನು ಬೇಸಿಗೆಯ ಬೆಳಕು ಬೆಡ್‌ರೂಮಿಗೂ ಹಬ್ಬಲೆಂದು ತೆರೆದಿಟ್ಟಳು. ಅವಳು ಹೇರಿಕೊಂಡಿದ್ದ ಅನೇಕ ಸೂತಕದ ಅವಧಿಗಳಿಗೆ ಮಂಗಳಹಾಡುವ ಅಪ್ಪಣೆ ಮಾಡಿದಳು. ಅವಳೇ ತನ್ನ ತಾತನ ಕಾಲದ ಗೌನುಗಳನ್ನು ಬದಲಾಯಿಸಿ ಹರೆಯ ಬಿಂಬಿಸುವ ಬಟ್ಟೆಗಳನ್ನು ಹಾಕಿಕೊಂಡಳು. ಪಿಯಾನೋ ಸಂಗೀತ ಮತ್ತೆ ಮನೆಯೊಳಗೆ ಮುದ ತಂದಿತು. ಅದನ್ನು ಕೇಳಿದಾಗ ಅಮರಾಂತಳಿಗೆ ಸಂಜೆಯ ಬಿಳಿಯ ಹೂಗಳ ಸುವಾಸನೆಯಲ್ಲಿ ಪಿಯತ್ರೋ ಕ್ರೆಪ್ಸಿಯ ಅವನ ಸಹವಾಸ ಮತ್ತು ಅವನು ಬಳಿದುಕೊಳ್ಳುತ್ತಿದ್ದ ಪರಿಮಳದ ನೆನಪಾಯಿತು. ಆದರೆ ಕಾಲನ ಪ್ರಭಾವದಿಂದ ಅವಳ ಬಾಡಿದ ಹೃದಯದಲ್ಲಿ ಕೇವಲ ದ್ವೇಷ ಮನೆಮಾಡಿತ್ತು. ಒಂದು ದಿನ ಮಧ್ಯಾಹ್ನ ಅವಳು ನಡುಮನೆಯನ್ನು ಚೊಕ್ಕವಾಗಿಡಲು ಪ್ರಯತ್ನಿಸುತ್ತಿದ್ದಾಗ ಮನೆಯ ರಕ್ಷಣೆಯಲ್ಲಿದ್ದ ಸೈನಿಕನ ಸಹಾಯ ಕೇಳಿದಳು. ಆತನ ಕಮಾಂಡರ್ ಅದಕ್ಕೆ ಅನುಮತಿ ಕೊಟ್ಟ. ಉರ್ಸುಲಾ ಕ್ರಮೇಣ ಅವರಿಗೆ ಮನೆಗೆಲಸಗಳನ್ನು ಕೊಟ್ಟಳು. ಅವರನ್ನು ಊಟಕ್ಕೆ ಕರೆದಳು, ಅವರಿಗೆ ಬಟ್ಟೆ ಹಾಗೂ ಶೂಗಳನ್ನು ಕೊಟ್ಟಳು ಮತ್ತು ಅವರಿಗೆ ಓದಲು, ಬರೆಯಲು ಹೇಳಿಕೊಟ್ಟಳು. ಸರ್ಕಾರ ರಕ್ಷಣೆಯಲ್ಲಿದ್ದವನನ್ನು ಹಿಂತೆಗೆದುಕೊಂಡಾಗ ಇನ್ನೊಬ್ಬ ಅವರ ಮನೆಯಲ್ಲಿ ವಾಸ ಮಾಡುವುದನ್ನು ಮುಂದುವರಿಸಿದ ಮತ್ತು ಅವಳ ಸೇವೆಯಲ್ಲಿ ಅನೇಕ ವರ್ಷಗಳಿದ್ದ. +ಹೊಸ ವರ್ಷದ ದಿನ, ಸುಂದರಿ ರೆಮಿದಿಯೋಸ್ ತಿರಸ್ಕರಿಸಿದ್ದರಿಂದ ಹುಚ್ಚನಂತಾದ ರಕ್ಷಣಾ ದಳದ ಯುವ ಕಮಾಂಡರ್ ಕಿಟಕಿಯ ಪಕ್ಕದಲ್ಲಿ ಸತ್ತು ಬಿದ್ದದ್ದು ಕಾಣಿಸಿತು. +೧೦ +ಅನೇಕ ವರ್ಷಗಳ ನಂತರ ಸಾಯುವ ಸ್ಥಿತಿಯಲ್ಲಿ ಮಲಗಿದ್ದ ಅವ್ರೇಲಿಯಾನೋ ಸೆಗುಂದೋ ಅದೊಂದು ಜೂನ್ ತಿಂಗಳ ಮಧ್ಯಾಹ್ನ ತನ್ನ ಮಗನನ್ನು ನೋಡಲು ಬೆಡ್‌ರೂಮಿಗೆ ;ದದ್ದು ನೆನಪಾಯಿತು. ಮಗು ನಿತ್ರಾಣಗೊಂಡು ಅಳುತ್ತಿದ್ದು ಬ್ಯುಂದಿಯಾನೆನ್ನುವ ಯಾವ; ಕುರುಹೂ ಇಲ್ಲದಿದ್ದರೂ ಅವನಿಗೆ ಹೆಸರಿಡಲು ಅವನು ಹೆಚ್ಚು ಯೋಚಿಸುವುದೇ ಬೇಕಾಗಿರಲಿಲ್ಲ. +ಅವನು, “ಇವನಿಗೆ ಹೊಸೆ ಅರ್ಕಾದಿಯೋ” ಎಂದು ಕರೆಯೋಣ ಎಂದ. +ಅವನು ಕಳೆದ ವರ್ಷ ಮದುವೆಯಾಗಿದ್ದ ಚಲುವೆ ಫೆರ್ನಾಂಡ ಡೆಲ್ ಕಾರ್ಪಿಯೋ ಒಪ್ಪಿದಳು. ಆದರೆ ಉರ್ಸುಲಾಗೆ ಬಂದ ಅಸ್ಪಷ್ಟ ಅನುಮಾನವನ್ನು ಮುಚ್ಚಿಡಲಾಗಲಿಲ್ಲ. ಅವರ ಸಂಸಾರದ ವಂಶವೃಕ್ಷದಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದ ಹೆಸರುಗಳಿಂದ ಅವಳಿಗೆ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗಿತ್ತಲ್ಲದೆ ಅವು ಖಚಿತವಾಗಿ ಕಾಣುತ್ತಿದ್ದವು. ಅವ್ರೇಲಿಯಾನೋಗಳು ಅಂತರ್ಮುಖಿಯಾಗಿದ್ದ ಸರಳ ಮನಸ್ಸಿನವರಾದರೆ ಹೊಸೆ ಅರ್ಕಾದಿಯೋಗಳು ಹಠಾತ್ ಮತ್ತು ಸಾಹಸ ಪ್ರವೃತ್ತಿಯವರಾದರೂ ಅವರಿಗೆ ದುರಂತದ ನಂಟಿತ್ತು. ಹಾಗೆ ಪ್ರತ್ಯೇಕಿಸಲು ಸಾಧ್ಯವಾಗದವರೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಅವ್ರೇಲಿಯಾನೋ ಸೆಗುಂದೋ. ಅವರಿಬ್ಬರಿಗೂ ಚಿಕ್ಕಂದಿನಲ್ಲಿ ಎಷ್ಟು ಹೋಲಿಕೆ ಮತ್ತು ತುಂಟತನವಿತ್ತೆಂದರೆ ಬೇರೆ ಬೇರೆ ಇದ್ದಾಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೂ ಕೂಡ ಯಾರೆಂದು ಹೇಳಲು ಆಗುತ್ತಿರಲಿಲ್ಲ. ಅವರಿಗೆ ಹೆಸರಿಟ್ಟ ದಿನ, ಅಮರಾಂತ ಅವರಿಬ್ಬರ ಹೆಸರಿರುವ ಪಟ್ಟಿಗಳನ್ನು ಹಾಕಿ, ಇಬ್ಬರಿಗೂ ಬೇರೆ ಬೇರೆ ಬಣ್ಣದ ಇನಿಷಿಯಲ್‌ಗಳಿರುವ ಬಟ್ಟೆಗಳನ್ನು ತೊಡಿಸಿದಳು. ಆದರೆ ಅವರು ಸ್ಕೂಲ್‌ಗೆ ಹೋಗಲು ಪ್ರಾರಂಭಿಸಿದಾಗ, ಅವರು ಪಟ್ಟಿಗಳನ್ನೂ ಬಟ್ಟೆಗಳನ್ನೂ ಅದಲು ಬದಲು ಮಾಡಿಕೊಳ್ಳಲು ನಿಶ್ಚಯಿಸಿದರು ಮತ್ತು ಹೆಸರನ್ನು ಬದಲಿಸಿ ಕರೆದುಕೊಂಡರು. ಹೊಸೆ ಅರ್ಕಾದಿಯೋ ಸೆಗುಂದೋ ಹಸಿರು ಬಣ್ಣದ ಶರಟು ಹಾಕಿಕೊಂಡಿರುತ್ತಿದ್ದದ್ದು ಗೊತ್ತಿದ್ದ ಅವರ ಉಪಾಧ್ಯಾಯರಾದ ಮೆಲ್‌ಚರ್ ಎಸ್ಕಲೋನನಿಗೆ, ಅವನು ಅವ್ರೇಲಿಯಾನೋ ಸೆಗುಂದೋನ ಪಟ್ಟಿ ಹಾಕಿಕೊಂಡಿದ್ದು ನೋಡಿ ಗೊಂದಲ ಉಂಟಾಯಿತು ಮತ್ತು ಬಿಳಿಯ ಶರಟು ಮತ್ತು ಹೊಸೆ ಅರ್ಕಾದಿಯೋ ಸೆಗುಂದೋವಿನ ಪಟ್ಟಿ ಹಾಕಿಕೊಂಡಿದ್ದವನು ತನ್ನ ಹೆಸರನ್ನು ಅವ್ರೇಲಿಯಾನೋ ಸೆಗುಂದೋ ಎಂದು ಹೇಳಿದ. ಅಂದಿನಿಂದ ಅವನಿಗೆ ಇಬ್ಬರಲ್ಲಿ ಯಾರು ಯಾರು ಎಂದು ಖಚಿತವಾಗಿ ತಿಳಿಯುತ್ತಿರಲಿಲ್ಲ. ಅವರು ದೊಡ್ಡವರಾದ ಮೇಲೆ ಕೂಡ ಉರ್ಸುಲಾಗೆ, ಅವರಾಗಿಯೇ ಗೊಂದಲದ ಕ್ಷಣಗಳಲ್ಲಿ ತಪ್ಪುಮಾಡಿರಲಾರರ ಮತ್ತು ಎಂದಿಗೂ ಬದಲಾಗಿಯೇ ಬಿಟ್ಟರೇ ಎಂದುಕೊಂಡಳು. ಹರೆಯಕ್ಕೆ ಮುಂಚೆ ಅವರು ಒಬ್ಬರಿಗೊಬ್ಬರು ಅನುರೂಪವಾದ ಯಂತ್ರಗಳಂತಿದ್ದರು. ಒಂದೇ ಸಮಯಕ್ಕೆ ಏಳುತ್ತಿದ್ದರು, ಕಕ್ಕಸ್ಸಿಗೆ ಹೋಗುವ ಒತ್ತಡ ಒಂದೇ ಹೊತ್ತಿಗೆ ಉಂಟಾಗುತ್ತಿತ್ತು, ಆರೋಗ್ಯದಲ್ಲಿ ಒಂದೇ ವಿಧವಾದ ಏರುಪೇರು ಉಂಟಾಗಿ ಯಾತನೆ ಅನುಭವಿಸುತ್ತಿದ್ದರು ಮತ್ತು ಒಂದೇ ವಿಷಯದ ಬಗ್ಗೆ ಕನಸುಗಳನ್ನು ಕಾಣುತ್ತಿದ್ದರು. ಮನೆಯಲ್ಲಿ ಗೊಂದಲ ಉಂಟುಮಾಡುವ ಒಂದೇ ಉದ್ದೇಶದಿಂದ ಕೆಲಸ ಕಾರ್ಯಗಳನ್ನು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಎನ್ನುವ ತಿಳುವಳಿಕೆ ಇತ್ತು. ಆದರೆ ಒಂದು ದಿನ ಸಾಂತ ಸೋಫಿಯಾ ದೆಲಾ ಪಿಯದಾದ್ ಅವರಲ್ಲೊಬ್ಬನಿಗೆ ನಿಂಬೆ ಹಣ್ಣಿನ ಪಾನಕವನ್ನು ಕೊಡುವ ತನಕ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಮತ್ತು ಅವನು ಅದರ ರುಚಿ ನೋಡಿದ ಕೂಡಲೆ ಮತ್ತೊಬ್ಬ ಅದಕ್ಕೆ ಸಕ್ಕರೆ ಹಾಕಿಲ್ಲ, ಎಂದ. ಸಕ್ಕರೆ ಹಾಕುವುದನ್ನು ಮರೆತಿದ್ದ ಸಾಂತ ಸೋಫಿಯಾ ದೆಲಾ ಪಿಯದಾದ್ ಈ ವಿಷಯವನ್ನು ಉರ್ಸುಲಾಗೆ ಹೇಳಿದಳು. ಉರ್ಸುಲಾ ಆಶ್ವರ್ಯಗೊಳ್ಳದೆ, “ಅವ್ರು ಹಾಗೇ ಇರೋದು, ಹುಟ್ಟಿದಾಗಿಂದ್ಲೂ ಅಷ್ಟೆ” ಎಂದಳು. ಕಾಲ ಕಳೆದಂತೆ ಎಲ್ಲವೂ ವ್ಯವಸ್ಥಿತವಾಗತೊಡಗಿದವು. ಗೊಂದಲಮಯ ಆಟದಿಂದ ಅವ್ರೇಲಿಯಾನೋ ಸೆಗುಂದೋ ಎಂದು ಹೊರಬಂದವನು ಅವನ ಅಜ್ಜನ ಹಾಗೆ ಆಜಾನುಬಾಹುವಾಗಿ ಬೆಳೆದ ಮತ್ತು ತನ್ನ ಹೆಸರನ್ನು ಹೊಸೆ ಅರ್ಕಾದಿಯೋ ಸೆಗುಂದೋ ಎಂದಿಟ್ಟುಕೊಂಡವನು ಕರ್ನಲ್‌ನ ಹಾಗೆ ಸಪೂರನಾದ. ಅಲ್ಲದೆ ಅವರಿಬ್ಬರಲ್ಲಿ ಇದ್ದ ಸಮಾನ ಅಂಶವೆಂದರೆ ಮನೆತನದ ಏಕಾಂತತೆ. ಬಹುಶಃ ಅವರಿಬ್ಬರ ಆಕಾರ, ಹೆಸರು ಮತ್ತು ಸ್ವಭಾವ ಅದಲು ಬದಲಾಗುತ್ತಿದ್ದ ರೀತಿ ಉರ್ಸುಲಾಗೆ ಚಿಕ್ಕಂದಿನಿಂದಲೂ ಅವರಿಬ್ಬರು ಕಾರ್ಡಿನ ಹಾಗೆ ಒಬ್ಬರಿಂದೊಬ್ಬರಿಗೆ ವಿಂಗಡಿಸುತ್ತಿದ್ದರು ಎಂದು ಅನುಮಾನಿಸಲು ಕಾರಣವಾಗಿತ್ತು. +ಯುದ್ಧದ ಮಧ್ಯದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಮರಣ ಡಂಡನೆ ವಿಧಿಸುವುದನ್ನು ನೋಡುವ ಅವಕಾಶ ಕೊಡಬೇಕೆಂದು ಕೇಳಿದಾಗ, ಅವರಿಬ್ಬರಲ್ಲಿದ್ದ ಮಹತ್ವಪೂರ್ಣ ವ್ಯತ್ಯಾಸ ಬೆಳಕಿಗೆ ಬಂತು. ಉರ್ಸುಲಾಳ ಹೆಚ್ಚು ಯುಕ್ತವಾದ ಅಭಿಪ್ರಾಯದ ವಿರುದ್ಧವಾಗಿ ಅವನ ಅಪೇಕ್ಷೆಯನ್ನು ಪೂರೈಸಲಾಯಿತು. ಇದಕ್ಕೆ ವಿರುದ್ಧವಾಗಿ ಅವ್ರೇಲಿಯಾನೋ ಸೆಗುಂದೋ ಮರಣ ದಂಡನೆಯನ್ನು ವಿಧಿಸುವುದನ್ನು ನೋಡುವುದರ ಆಲೋಚನೆಯಿಂದಲೇ ನಡುಕ ಹುಟ್ಟಿ, ಮನೆಯಲ್ಲಿಯೇ ಉಳಿದ. ಅವನು ಹನ್ನೆರಡನೆ ವಯಸ್ಸಿನಲ್ಲಿ ಉರ್ಸುಲಾಗೆ ಬೀಗ ಹಾಕಿರುವ ರೂಮಿನಲ್ಲಿ ಏನಿದೆ ಎಂದು ಕೇಳಿದ. ಅವಳು, “ಪೇಪರುಗಳಿವೆ, ಮೆಲ್‌ಕಿಯಾದೆಸ್‌ನ ಪುಸ್ತಕಗಳಿವೆ, ಅಲ್ದೆ ಅವನ ಕೊನೆಗಾಲದಲ್ಲಿ ಬರೆದ ಏನೇನೊ ವಿಚಿತ್ರಗಳಿವೆ” ಎಂದಳು. ಅವಳ ಉತ್ತರ ಅವನನ್ನು ಸುಮ್ಮನಾಗಿಸುವ ಬದಲು ಕುತೂಹಲ ಹುಟ್ಟಿಸಿತು. ತಾನು ಅಲ್ಲಿರುವುದನ್ನು ಹಾಳು ಮಾಡುವುದಿಲ್ಲವೆಂದು ಮಾತುಕೊಟ್ಟು, ಮತ್ತೆ ಮತ್ತೆ ಪೀಡಿಸಿದಾಗ ಉರ್ಸುಲಾ ಅದರ ಬೀಗದ ಕೈ ಕೊಟ್ಟಳು. ಮೆಲ್‌ಕಿಯಾದೆಸ್‌ನ ದೇಹವನ್ನು ಅಲ್ಲಿಂದ ತೆಗೆದ ನಂತರ ಯಾರೂ ಆ ರೂಮಿಗೆ ಹೋಗಿರಲಿಲ್ಲ, ಅದಕ್ಕೆ ಹಾಕಿದ ಬೀಗದ ಭಾಗಗಳು ತುಕ್ಕು ಹಿಡಿದು ಒಂದಕ್ಕೊಂದು ಮೆತ್ತಿಕೊಂಡಿದ್ದವು. ಆದರೆ ಅವ್ರೇಲಿಯಾನೋ ಸೆಗುಂದೋ ಕಿಟಕಿಯನ್ನು ತೆಗೆದಾಗ ಪ್ರತಿ ದಿನವೂ ರೂಮನ್ನು ಬೆಳಗುತ್ತಿದ್ದಂತೆ ಕಂಡ ಪರಿಚಿತವಾದ ಬೆಳಕು ಪ್ರವೇಶಿಸಿತು. ಅಲ್ಲಿ ಕಿಂಚಿತ್ ಧೂಳು, ಇಲ್ಲಣಗಳಿರಲಿಲ್ಲ. ಪ್ರತಿಯೊಂದು ಶುಭ್ರ, ಸ್ವಚ್ಛವಾಗಿತ್ತು. ಇಂಕ್ ಬಾಟಲ್‌ನಲ್ಲಿನ ಇಂಕ್ ಒಣಗಿರಲಿಲ್ಲ, ರಾಸಾಯನಿಕ ಕ್ರಿಯೆ ಲೋಹಗಳ ಮೇಲಿನ ಮಿರುಗನ್ನು ಕಡಿಮೆ ಮಾಡಿರಲಿಲ್ಲ. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪಾದರಸವನ್ನು ಆವಿ ಮಾಡುತ್ತಿದ್ದಾಗ ಉಪಯೋಗಿಸುತ್ತಿದ್ದ ನೀರಿನ ಪೈಪಿನ ಕೆಳಗಿದ್ದ ನಸುಕೆಂಡದ ಕಾವು ಕಡಿಮೆಯಾಗಿರಲಿಲ್ಲ. ಶೆಲ್ಫ್‌ನಲ್ಲಿ ಕಾರ್ಡ್‌ಬೋರ್ಡ್‌ನಂಥ, ಪೇಲವವಾಗಿದ್ದ, ಹದಮಾಡಿದ ಮನುಷ್ಯನ ಚರ್ಮದಂತಿದ್ದ ವಸ್ತವಿನಿಂದ ರಟ್ಟು ಹಾಕಿದ ಪುಸ್ತಕಗಳಿದ್ದವು ಮತ್ತು ಹಸ್ತಪ್ರತಿಗಳು ಸುಸ್ಥಿತಿಯಲ್ಲಿದ್ದವು. ಅನೇಕ ವರ್ಷಗಳ ಕಾಲ ಆ ರೂಮಿನ ಬಾಗಿಲು ಹಾಕಿದ್ದರೂ ಅದರೊಳಗಿನ ಗಾಳಿ ಮನೆಯ ಇತರ ಕಡೆಗಳಿಗಿಂತ ಚೇತೋಹಾರಿಯಾಗಿತ್ತು. ಎಲ್ಲವೂ ನವೀನವಾಗಿದ್ದು, ಕೆಲವು ವಾರಗಳ ನಂತರ ಉರ್ಸುಲಾ ಅಲ್ಲಿಗೆ ನೀರು ಮತ್ತು ಬ್ರಷ್‌ನಿಂದ ನೆಲವನ್ನು ಸಾರಿಸಲು ಹೋದಾಗ, ಅವಳಿಗೆ ಮಾಡಲು ಏನೂ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ಪುಸ್ತಕವೊಂದನ್ನು ಓದುವುದರಲ್ಲಿ ಮಗ್ನನಾಗಿದ್ದ. ಅದಕ್ಕೆ ಹೊದಿಕೆ ಮತ್ತು ಎಲ್ಲೂ ಹೆಸರು ಇರಲಿಲ್ಲವಾದರೂ ಅವನಿಗೆ ಟೇಬಲ್ ಮೇಲಿದ್ದ ಪಿನ್‌ನಿಂದ ಎತ್ತಿಕೊಳ್ಳುತ್ತಿದ್ದ, ಅನ್ನದ ಕಾಳನ್ನು ಬಿಟ್ಟು ಬೇರೆ ಏನನ್ನೂ ತಿನ್ನದಿದ್ದ ಹೆಂಗಸೊಬ್ಬಳ ಕಥೆ ಖುಷಿ ಕೊಟ್ಟಿತ್ತು. ಜೊತೆಗೆ ಮೀನು ಹಿಡಿಯುವವನ ಕಥೆಯಲ್ಲಿ, ಪಕ್ಕದವರಿಂದ ಬಲೆಗೆ ಭಾರವೊಂದನ್ನು ಸಾಲವಾಗಿ ಪಡೆದು ನಂತರ ಅದರ ಬಾಬ್ತಿಗಾಗಿ ಕೊಟ್ಟ ಮೀನಿನ ಹೊಟ್ಟೆಯಲ್ಲಿ ವಜ್ರ ಇದ್ದ ಕಥೆ ಹಾಗೂ ಇಷ್ಟಾರ್ಥಗಳನ್ನು ಪೂರೈಸುವ ದೀಪ ಅಲ್ಲದೆ ಹಾರುವ ಜಮಖಾನ. ಅವನು ಆಶ್ಚರ್ಯದಿಂದ ಉರ್ಸುಲಾಗೆ ಅದೆಲ್ಲ ನಿಜವೇ ಎಂದು ಕೇಳಿದಾಗ, ಅವಳು ಹೌದೆಂದು ಹೇಳಿ, ಜಿಪ್ಸಿಗಳು ಅನೇಕ ವರ್ಷಗಳ ಹಿಂದೆ ಮಾಯಾ ದೀಪ ಮತ್ತು ಹಾರುವ ಜಮಖಾನಗಳನ್ನು ಮಕೋಂದೋಗೆ ತಂದಿದ್ದರು ಎಂದಳು. +ಅವಳು ನಿಟ್ಟುಸಿರು ಬಿಡುತ್ತ, “ಈಗೇನಾಗ್ತಿದೆ ಅಂದ್ರೆ, ನಿಧಾನವಾಗಿ ಪ್ರಪಂಚ ಕೊನೆಯಾಗ್ತಿದೆ. ಅಲ್ದೆ, ಅವೆಲ್ಲ ಇಲ್ಲಿ ಮತ್ತೆ ಬರಲ್ಲ” ಎಂದಳು. +ಅವನು ಪುಸ್ತಕದಲ್ಲಿ ಹಾಳೆಗಳು ಹರಿದಿದ್ದರಿಂದ, ಮುಕ್ತಾಯವಿರದ ಅನೇಕ ಕಥೆಗಳನ್ನು ಓದಿ ಮುಗಿಸಿದ ಮೇಲೆ, ಅವ್ರೇಲಿಯಾನೋ ಸೆಗುಂದೋ ಹಸ್ತಪ್ರತಿಗಳಲ್ಲಿ ಏನಿದೆ ಎಂದು ಬಗೆದು ನೋಡಲು ಪ್ರಾರಂಭಿಸಿದ. ಅದು ಸಾಧ್ಯವಾಗಲಿಲ್ಲ. ಅಕ್ಷರಗಳು ಹಗ್ಗದ ಮೇಲೆ ಒಣಗಲು ನೇತು ಹಾಕಿದ ಬಟ್ಟೆಗಳಂತೆ ಕಂಡಿತು ಮತ್ತು ಬರವಣಿಗೆಗಿಂತ ಹೆಚ್ಚಾಗಿ ಸಂಗೀತದ ಚಿಹ್ನೆಗಳಂತೆ ಕಾಣಿಸಿತು. ಒಂದು ಸುಡುತ್ತಿದ್ದ ದಿನದ ಸುಮಾರು ಮಧ್ಯಾಹ್ನದ ವೇಳೆಗೆ ಹಸ್ತಪ್ರತಿಗಳನ್ನು ತಿರುವಿ ಹಾಕುತ್ತಿರುವಾಗ, ಅವನಿಗೆ ರೂಮಿನಲ್ಲಿ ತಾನೊಬ್ಬನೇ ಇಲ್ಲ ಎಂದು ಭಾಸವಾಯಿತು. ಕಿಟಕಿಯಿಂದ ಬಿದ್ದ ಬೆಳಕಿಗೆ ಎದುರಾಗಿ, ತನ್ನ ಎರಡು ಕೈಗಳನ್ನು ಮಂಡಿಯ ಮೇಲೆ ಇಟ್ಟುಕೊಂಡು ಕುಳಿತಿದ್ದವನು ಮೆಲ್‌ಕಿಯಾದೆಸ್ ಆಗಿದ್ದ. ನಲವತ್ತು ವರ್ಷದೊಳಗಿದ್ದ ಅವನು ಅದೇ ಹಳೇ ರೀತಿಯ ಅರ್ಧ ಕೋಟು ಮತ್ತು ಹಕ್ಕಿಯ ರೆಕ್ಕೆಯ ಹಾಗಿದ್ದ ಹ್ಯಾಟ್ ಹಾಕಿಕೊಂಡಿದ್ದ. ಅವ್ರೇಲಿಯಾನೋ ಮತ್ತು ಹೊಸೆ ಅರ್ಕಾದಿಯೋ ಹುಡುಗರಾಗಿದ್ದಾಗ ನೋಡಿದ್ದಂತೆ ಅವನ ಹಣೆಯ ಮೇಲೆ ಇದ್ದ ಗ್ರೀಸ್, ಬಿಸಿಲಿಗೆ ಕರಗಿ ಕೂದಲಿಂದ ಇಳಿದು ಜಿನುಗಿತ್ತು. ಅವ್ರೇಲಿಯಾನೋ ಸೆಗುಂದೋ ಅವನನ್ನು ತಕ್ಷಣವೇ ಗುರುತು ಹಿಡಿದ, ಏಕೆಂದರೆ ವಂಶಪಾರಂಪರ್‍ಯವಾಗಿ ಬಂದ ನೆನಪು ತಲೆಮಾರಿನಿಂದ ತಲೆಮಾರಿಗೆ ರವಾನಿಸಲ್ಪಟ್ಟು ಅವನ ಅಜ್ಜನ ಮೂಲಕ ಅವನಿಗೆ ತಲುಪಿತ್ತು. +ಅವ್ರೇಲಿಯಾನೋ ಸೆಗುಂದೋ, “ಹಲ್ಲೊ” ಎಂದ. +ಮೆಲ್‌ಕಿಯಾದೆಸ್, “ಹಲ್ಲೊ” ಎಂದ. +ಅಂದಿನಿಂದ ಅನೇಕ ವರ್ಷಗಳವರೆಗೆ ಅವರಿಬ್ಬರೂ ಪ್ರತಿ ಮಧ್ಯಾಹ್ನ ಒಬ್ಬರನ್ನೊಬ್ಬರು ಕಾಣುತ್ತಿದ್ದರು. ಮೆಲ್‌ಕಿಯಾದೆಸ್ ಅವನ ಜೊತೆ ಪ್ರಪಂಚದ ಬಗ್ಗೆ ಮಾತನಾಡಿದ, ತನ್ನ ಪುರಾತನ eನದಿಂದ ಉತ್ತೇಜಿಸಲು ಪ್ರಯತ್ನಿಸಿದ. ಆದರೆ ಹಸ್ತಪ್ರತಿಗಳನ್ನು ಅನುವಾದ ಮಾಡಲು ನಿರಾಕರಿಸಿದ. ಅವನು, “ಯಾರಿಗೇ ಆಗಲಿ ನೂರು ವರ್ಷವಾಗುವ ತನಕ ಅವುಗಳ ಅರ್ಥ ತಿಳಿಯುವುದು ಬೇಡ” ಎಂದು ವಿವರಿಸಿದ. ಅವ್ರೇಲಿಯಾನೋ ಆ ಭೇಟಿಗಳನ್ನು ಎಂದೆಂದಿಗೂ ಗುಪ್ತವಾಗಿಟ್ಟ. ಒಂದು ಸಂದರ್ಭದಲ್ಲಿ ಅವನ ಖಾಸಗಿ ಪ್ರಪಂಚ ಕಡಿದು ಬಿತ್ತೆ ಹೇಗೆ ಎಂದು ಆತಂಕಗೊಂq. ಏಕೆಂದರೆ ಮೇಲ್‌ಕಿಯಾದೆಸ್ ಅವನ ರೂಮಿನಲ್ಲಿದ್ದಾಗ ಉರ್ಸುಲಾ ಅಲ್ಲಿಗೆ ಬಂದಿದ್ದಳು. ಆದರೆ ಅವನನ್ನು ನೋಡಲಿಲ್ಲ. +ಅವಳು, “ನೀನು ಯಾರ ಹತ್ರ ಮಾತಾಡ್ತಿದ್ದದ್ದು” ಎಂದು ಕೇಳಿದಳು. +ಅವ್ರೇಲಿಯಾನೋ ಸೆಗುಂದೋ, “ಯಾರಿಲ್ಲ” ಎಂದ. +ಉರ್ಸುಲಾ, “ನಿಮ್ಮ ಮುತ್ತಜ್ಜ ಮಾಡ್ತಿದ್ದದ್ದೂ ಇದನ್ನೇ… ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ತಿದ್ದ” ಎಂದಳು. +ಈ ಮಧ್ಯೆ ಹೊಸೆ ಅರ್ಕಾದಿಯೋ ಸೆಗುಂದೋ ಶೂಟ್ ಮಾಡುವುದನ್ನು ನೋಡುವ ತನ್ನ ಅಪೇಕ್ಷೆಯನ್ನು ಪೂರೈಸಿಕೊಂಡ. ಒಂದೇ ಬಾರಿಗೆ ಆರು ಗುಂಡುಗಳ ಹೊಡೆತವನ್ನು, ಬೆಟ್ಟಗಳಿಂದ ಹೊರಟ ಪ್ರತಿಧ್ವನಿ, ಗುಂಡು ಹೊಡೆಸಿಕೊಂಡ ಮನುಷ್ಯನ ವಿಚಿತ್ರ ನಗು, ಗಲಿಬಿಲಿಗೊಂಡ ಕಣ್ಣುಗಳು, ರಕ್ತ ಸೋರಿ ಅವನ ಶರಟು ತೊಯ್ದ ಹೋಗಿದ್ದರೂ ನೆಟ್ಟಗೆ ನಿಂತಿದ್ದು, ಕಂಬದಿಂದ ಬಿಚ್ಚಿಟಾಗಲೂ ಇನ್ನೂ ನಗುತ್ತಿದ್ದದ್ದು ಮತ್ತು ಅವನನ್ನು ಸುಣ್ಣ ತುಂಬಿದ ಪೆಟ್ಟಿಗೆಯಲ್ಲಿ ಇಟ್ಟಿದ್ದನ್ನು ತನ್ನ ಇಡೀ ಜೀವನ ನೆನಪಿಟ್ಟುಕೊಳ್ಳುವಂತಾಯಿತು. ಅವನು, “ಅವನಿನ್ನೂ ಬದುಕಿದಾನೆ . . ಬದುಕಿದ್ದ ಹಾಗೇ ಅವನ್ನ ಹೂತು ಬಿಡ್ತಾರೆ” ಎಂದುಕೊಂಡ. ಅದು ಅವನ ಮೇಲೆ ಎಂತಹ ಪ್ರಭಾವ ಬೀರಿತೆಂದರೆ ಅಂದಿನಿಂದ ಮಿಲಿಟರಿ ಅಭ್ಯಾಸಗಳು ಮತ್ತು ಯುದ್ಧವನ್ನು ದ್ವೇಷಿಸತೊಡಗಿದ. ಏಕೆಂದರೆ ಮರಣದಂಡನೆ ವಿಧಿಸುವುದಕ್ಕಲ್ಲ. ಆದರೆ ಬದುಕಿದ್ದ ದುರ್ದೈವಿಗಳನ್ನು ಹೂಳುವ ಭಯಾನಕವಾದ ಪದ್ಧತಿಯಿಂದ. ಅವನು ಪ್ರಾರ್ಥನಾ ಸಭೆಯಲ್ಲಿ ಚರ್ಚಿನ ಗಂಟೆಗಳನ್ನು ಬಾರಿಸಿ, ಫಾದರ್ ಆಂಟೋನಿಯೋ ಇಸಬೆಲ್‌ಗೆ ನೆರವಾಗುವುದನ್ನು ಮತ್ತು ಅವನು ಪಾದ್ರಿಗಳ ಮನೆಯ ಅಂಗಳದಲ್ಲಿ ನಡೆಯುವ ಹುಂಜದ ಕಾಳಗದ ಉಸ್ತುವಾರಿಯನ್ನು ಯಾವಾಗ ಪ್ರಾರಂಭಿಸಿದನೆಂದು ಯಾರಿಗೂ ತಿಳಿದಿರಲಿಲ್ಲ. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಇದು ಗೊತ್ತಾದಾಗ ಉದಾರವಾದಿಗಳು ದ್ವೇಷಿಸುವ ಕೆಲಸವನ್ನು ಮಾಡುತ್ತಿರುವುದಕ್ಕಾಗಿ ಅವನನ್ನು ಕಟುವಾಗಿ ಬೈದ. ಅದಕ್ಕವನು, “ಈಗ ಆಗಿರೋದೇನು ಅಂದ್ರೆ, ನಾನು ಸಂಪ್ರದಾಯವಾದಿಯಾಗಿ ಬದಲಾಗಿದೀನಿ” ಎಂದ. ಅದು ವಿಧಿ ನಿಯಾಮಕವೇನೋ ಎನ್ನುವಂತೆ ಅದನ್ನು ನಂಬಿದ್ದ. ಅವಮಾನಿತನಾದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಉರ್ಸುಲಾಗೆ ಅದರ ಬಗ್ಗೆ ಹೇಳಿದ. +ಅವಳು, “ಹಾಗಾಗೋದೇ ಒಳ್ಳೇದು. ಕೊನೆಗೆ ಅವ್ನು ಪಾದ್ರಿಯಾಗಿ ಅದರಿಂದ ಈ ಮನೆಗೆ ದೇವರು ಬರ್‍ತಾನೆ ಅಂತ ಆಸೆ ಇಟ್ಕೋಳ್ಳೋಣ” ಎಂದಳು. +ಫಾದರ್ ಆಂಟೋನಿಯೋ ಅವನನ್ನು ಮೊದಲನೆ ಸಂಸರ್ಗಕ್ಕೆ ಸಿದ್ಧಪಡಿಸುತ್ತಿದ್ದಾನೆಂದು ಬಹಳ ಬೇಗನೆ ಗೊತ್ತಾಯಿತು. ಕೋಳಿಗಳ ಕತ್ತನ್ನು ಶೇವ್ ಮಾಡುವಾಗ ಅವನಿಗೆ ಪ್ರಶ್ನೋತ್ತರ ಪಾಠ ಹೇಳಿಕೊಡುತ್ತಿದ್ದ. ಸರಳ ಉದಾಹರಣೆಗಳ ಮೂಲಕ ಅವನು ಕಾವು ಕೊಡುವ ಕೋಳಿಗಳನ್ನು ಗೂಡಿನಲ್ಲಿ ಇಡುತ್ತಿದ್ದಾಗ ಸೃಷ್ಟಿಯ ಎರಡನೆ ದಿನ ದೇವರಿಗೆ ಮೊಟ್ಟೆಯಲ್ಲಿ ಕೋಳಿ ಮರಿ ಆಗುವುದು ಹೇಗೆಂದು ಹೊಳೆದದ್ದನ್ನು ವಿವರಿಸಿದ. ಆ ಸಮಯದಿಂದ ಅವನು ಅರಳು ಮರಳಿನ ಚಿಹ್ನೆಗಳನ್ನು ತೋರಿಸಿದ. ಕೆಲವು ವರ್ಷಗಳ ನಂತರ ಮೋಸಮಾಡಿ, ತಾನು ಯಾರು ಎನ್ನುವುದನ್ನು ತೋರಿಸಿಕೊಳ್ಳದೆ, ಬಹುಶಃ ದೇವರ ವಿರುದ್ಧ ದೆವ್ವ ಜಯ ಸಾಧಿಸಿರಬೇಕೆಂದು ಹೇಳುವುದಲ್ಲದೆ, ನಿಜವಾಗಿಯೂ ಸ್ವರ್ಗದ ಸಿಂಹಾಸನದ ಮೇಲೆ ಕುಳಿತಿದ್ದಾಗಿ ಹೇಳಿದ. ತನ್ನ ಗುರು ಪಟ್ಟು ಹಿಡಿದಿದ್ದರಿಂದ ಉತ್ಸಾಹಗೊಂಡ ಹೊಸೆ ಅರ್ಕಾದಿಯೋ ಸೆಗುಂದೋ ಕೆಲವು ತಿಂಗಳುಗಳಲ್ಲಿ ಹುಂಜದ ಕಾಳಗದಲ್ಲಿನ ಉಪಾಯಗಳಲ್ಲಿ ಎಷ್ಟು ನಿಷ್ಣಾತನಾಗಿದ್ದನೋ ದೆವ್ವಗಳಿಗೆ ಗೊಂದಲ ಉಂಟುಮಾಡುವ ಸೂತ್ರ, ಮೀಮಾಂಸೆಯ ವಿಷಯದಲ್ಲೂ ಅಷ್ಟೇ ತಯಾರಾದ. ಅಮರಾಂತ ಅವನಿಗೆ ಹತಿಯ ಬಟ್ಟೆಯ ಸೂಟ್ ಹಾಗೂ ಕಾಲರ್, ಟೈ ಸಿದ್ಧಪಡಿಸಿ ಮತ್ತು ಜೊತೆಗೆ ಒಂದು ಜೊತೆ ಬಿಳಿಯ ಶೂ ತಂದುಕೊಟ್ಟಳು. ಅಲ್ಲದೆ ಕ್ಯಾಂಡಲ್‌ನ ರಿಬ್ಬನ್ ಮೇಲೆ ಮಿರುಗುವ ಅಕ್ಷರದಿಂದ ಅವನ ಹೆಸರನ್ನು ಮೂಡಿಸಿದಳು. ಮೊದಲನೆ ಸಂಸರ್ಗಕ್ಕೆ ಎರಡು ರಾತ್ರಿಗಳ ಮುಂಚೆ ಫಾದರ್ ಆಂಟೋನಿಯೋ ಪಾಪಗಳ ನಿಘಂಟಿನ ಸಹಾಯದಿಂದ ಅವನ ತಪ್ಪೊಪ್ಪಿಗೆಯನ್ನು ಕೇಳಲು ಚರ್ಚ್‌ನ ಉಗ್ರಾಣದಲ್ಲಿ ಕೂರಿಸಿಕೊಂಡ. ಆ ಪಟ್ಟಿ ಎಷ್ಟು ಉದ್ದವಾಗಿತ್ತೆಂದರೆ, ಸಾಮಾನ್ಯವಾಗಿ ಆರು ಗಂಟೆಗೆ ಮಲಗುವ ಅಭ್ಯಾಸವಿದ್ದ ಸಾಕಷ್ಟು ಮಯಸ್ಸಾಗಿದ್ದ ಆ ಪಾದ್ರಿ, ಆದು ಮುಗಿಯುವ ಮೊದಲೇ ಕುರ್ಚಿಯಲ್ಲೆ ನಿದ್ದೆ ಹೋದ. ಆ ಪ್ರಶ್ನಾವಳಿ ಹೊಸೆ ಅರ್ಕಾದಿಯೋ ಸೆಗುಂದೋಗೆ ಹೊಸ ಅರಿವಿಗೆ ಕಾರಣವಾಯಿತು. ಹೆಂಗಸರೊಂದಿಗೆ ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದೀಯಾ ಎಂದು ಪಾದ್ರಿ ಕೇಳಿದ್ದಕ್ಕೆ ಅವನಿಗೆ ಆಶ್ಚರ್ಯವಾಗಿರಲಿಲ್ಲ ಮತ್ತು ಅವನು ಪ್ರಾಮಾಣಿಕವಾಗಿ ಇಲ್ಲವೆಂದು ಉತ್ತರಿಸಿದ್ದ. ಆದರೆ ಅವನಿಗೆ ಪ್ರಾಣಿಗಳ ಜೊತೆ ಏನಾದರೂ ಮಾಡಿದ್ದೀಯಾ ಎಂದು ಕೇಳಿದ್ದರಿಂದ ರೇಗಿತು. ಕುತೂಹಲದಿಂದ ಹಿಂಸೆಗೊಳಗಾಗಿದ್ದ ಅವನು ಮೇ ತಿಂಗಳ ಮೊದಲನೆ ಶುಕ್ರವಾರ ಸಂಸರ್ಗವನ್ನು ಸ್ವೀಕರಿಸಿದ. ಅನಂತರ ಅವನು ಚರ್ಚ್‌ನ ಕಾಗದ ಪತ್ರಗಳ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಘಂಟಾಗೋಪುರದಲ್ಲಿ ವಾಸಮಾಡುತ್ತಿದ್ದ ಮತ್ತು ಅವರಿವರು ಹೇಳಿದಂತೆ ಬಾವಲಿಗಳನ್ನು ತಿಂದು ಜೀವಿಸುತ್ತಿದ್ದ ಪಿಯತ್ರೋನಿಯೋನನ್ನು ಅದರ ಬಗ್ಗೆ ಕೇಳಿದ. ಅದಕ್ಕೆ ಅವನು, “ಕೆಲವು ಭ್ರಷ್ಟ ಕ್ರಿಶ್ಚಿಯನ್ನರು ಹೆಣ್ಣು ಕತ್ತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡ್ತಾರೆ” ಎಂದ. ಹೊಸೆ ಅರ್ಕಾದಿಯೋ ಸೆಗುಂದೋ ಅದೆಷ್ಟು ಕುತೂಹಲ ವ್ಯಕ್ತಪಡಿಸಿದನೆಂದರೆ ಮತ್ತು ಎಷ್ಟೊಂದು ಪ್ರಶ್ನೆ ಕೇಳಿದನೆಂದರೆ ಪಿಯತ್ರೋನಿಯೋ ತಾಳ್ಮೆ ಕಳೆದುಕೊಂಡ. +ಅವನು, “ನಾನು ಪ್ರತಿ ಮಂಗಳವಾರ ಹೋಗ್ತೀನಿ” ಎಂದು ಒಪ್ಪಿಕೊಂಡವನು, “ನೀವು ಯಾರಿಗೂ ಹೇಳಲ್ಲ ಅಂದ್ರೆ ಮುಂದಿನ ಮಂಗಳವಾರ ನಿನ್ನನ್ನ ಕರ್‍ಕೊಂಡು ಹೋಗ್ತೀನಿ” ಎಂದ. +ನಿಜವಾಗಿಯೂ ಆ ನಂತರದ ಮಂಗಳವಾರ ಗೋಪುರದ ಕಟ್ಟಡದಿಂದ, ಅಲ್ಲಿಯ ತನಕ ಹೇಗೆ ಉಪಯೋಗಿಸಬೇಕೆಂದು ಯಾರಿಗೂ ತಿಳಿಯದಿದ್ದ ಸ್ಟೂಲೊಂದನ್ನು ತೆಗೆದುಕೊಂಡು ಬಂದ ಮತ್ತು ಹೊಸೆ ಅರ್ಕಾದಿಯೋ ಸೆಗುಂದೋನನ್ನು ಹತ್ತಿರದ ಗೋಮಾಳಕ್ಕೆ ಕರೆದುಕೊಂಡು ಹೋದ. ಅಲ್ಲಿ ರಾತ್ರಿ ನಡೆಯುವ ಚಟುವಟಿಕೆಗಳಿಂದ ಆ ಹುಡುಗನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ, ಬಹಳ ದಿನಗಳಾದ ಮೇಲೆ ಅವನು ಕತಾವುರೆಯ ಅಂಗಡಿನಲ್ಲಿ ಕಾಣಿಸಿಕೊಂಡ. ಅವನು ಹುಂಜದ ಕಾಳಗದ ಮನುಷ್ಯನಾz. ಅವನು ಮೊದಲನೆಯ ಸಲ ಕಾದಾಡುವ ಅವುಗಳನ್ನು ಮನೆಗೆ ತಂದಾಗ ಉರ್ಸುಲಾ, “ಅವನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗು. ಅವು ಈ ಮನೆಗೆ ಸಾಕಷ್ಟು ಅನಾಹುತ ಮಾಡಿವೆ. ನೀನು ತಂದು ಇನ್ನೂ ಹೆಚ್ಚಾಗೋದು ಬೇಡ” ಎಂದಳು. ಹೊಸೆ ಅರ್ಕಾದಿಯೋ ಸೆಗುಂದೋ ಏನೂ ಮಾತಾಡದೆ ತೆಗೆದುಕೊಂಡು ಹೋದ ಮತ್ತು ಅವನ ಅಜ್ಜಿ ಪಿಲರ್ ಟೆರ್‍ನೆರಾಳ ಮನೆಯಲ್ಲಿ ಅವುಗಳನ್ನು ಬೆಳೆಸಲು ಮುಂದುವರಿಸಿದ. ಅವಳು ಅವನು ತನ್ನ ಮನೆಯಲ್ಲಿ ಇರುವುದಕ್ಕಾಗಿ ಅವನಿಗೆ ಅಗತ್ಯವಾದದ್ದನ್ನೆಲ್ಲ ಕೊಟ್ಟಳು. ಅವನು ಬೇಗನೆ ಫಾದರ್ ಆಂತೋನಿಯೋ ಇಸಬೆಲ್ ಕಲಿಸಿಕೊಟ್ಟದ್ದನ್ನು ಹುಂಜದ ಕಾಳಗದಲ್ಲಿ ಪ್ರದರ್ಶಿಸಿದ ಮತ್ತು ಅವನು ಅವುಗಳನ್ನು ವೃದ್ಧಿಸುವುದಕ್ಕೆ ಹಾಗೂ ಸಮಾಧಾನವಾಗುವಷ್ಟು ಬೇಕಾಗುವಷ್ಟು ಹಣವನ್ನು ಸಂಪಾದಿಸಿದ. ಆ ಸಮಯದಲ್ಲಿ ಉರ್ಸುಲಾ ಅವನನ್ನು ಅವನ ಸೋದರನೊಂದಿಗೆ ಹೋಲಿಸಿದಳು ಮತ್ತು ಅವಳಿಗೆ ಚಿಕ್ಕಂದಿನಲ್ಲಿ ಒಂದೇ ತೆರನಾಗಿ ಕಂಡಿದ್ದ ಅವಳಿ ಮಕ್ಕಳು, ಕೊನೆಗೆ ಹಾಗೆ ವ್ಯತ್ಯಾಸಗೊಂಡದ್ದು ಹೇಗೆ ಎಂದು ಅರ್ಥವಾಗಲಿಲ್ಲ. ಅವಳ ಅನುಮಾನ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಬಹಳ ಬೇಗ ಅವ್ರೇಲಿಯಾನೋ ಸೆಗುಂದೋ ಸೋಮಾರಿತನದ ಹಾಗೂ ಹಾಳಾಗುವ ಸೂಚನೆಗಳನ್ನು ತೋರಿಸಲು ಪ್ರಾರಂಭಿಸಿದ. ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಇರುವಾಗ ಅವನು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹರೆಯದಲ್ಲಿ ಮಾಡಿದಂತೆ ತನ್ನಷ್ಟಕ್ಕೆ ತಾನು ಇದ್ದು ಬಿಡುತ್ತಿದ್ದ. ಆದರೆ ನೀರ್ಲಾಂದಿಯ ಒಪ್ಪಂದವಾದ ಸ್ವಲ್ಪ ಸ;ಮಯದಲ್ಲಿಯೇ ಒಂದು ಘಟನೆ ತನ್ನಷ್ಟಕ್ಕೆ ತಾನಿದ್ದ ಅವನನ್ನು ಹೊರಗೆಳೆದು, ಪ್ರಪಂಚದ ವಾಸ್ತವವನ್ನು ಎದುರಿಸುವಂತೆ ಮಾಡಿತು. ಅಕಾರ್ಡಿಯನ್ ಗೆಲ್ಲುವುದಕ್ಕೊಸ್ಕರ ಲಾಟರಿ ಟಿಕೇಟುಗಳನ್ನು ಮಾರುತ್ತಿದ್ದ ಹುಡುಗಿಯೊಬ್ಬಳು ತುಂಬ ಆತ್ಮೀಯತೆಯಿಂದ ಅವನನ್ನು ಸ್ವಾಗತಿಸಿ ಮಾತನಾಡಿಸಿದಳು. ಸಾಮಾನ್ಯವಾಗಿ ತನ್ನ ಸೋದರನೆಂದು ಭಾವಿಸುತ್ತಿದ್ದರಿಂದ ಅವ್ರೇಲಿಯಾನೋ ಸೆಗುಂದೋಗೆ ಆಶ್ಚರ್ಯವಾಗಲಿಲ್ಲ. ಅವಳು ಅವನನ್ನು ಪ್ರಭಾವಿಸಲು ಉಮ್ಮಳಿಸಿದರೂ ಅವನು ಉಂಟಾದ ತಪ್ಪನ್ನು ಬಗೆಹರಿಸಲಿಲ್ಲ. ಕೊನೆಗೆ ಅವಳು ಅವನನ್ನು ರೂಮಿಗೆ ಕರೆದುಕೊಂಡು ಹೋದಳು. ಅವಳು ಅವನನ್ನು ಮೊದಲನೆ ಬಾರಿಗೆ ಎಷ್ಟು ಇಷ್ಟಪಟ್ಟಳೆಂದರೆ ಅಕಾರ್ಡಿಯನ್ ಗೆಲ್ಲಲು ಅಗತ್ಯವಾದ ಸಿದ್ಧತೆ ಮಾಡಿದಳು. ಎರಡು ವಾರದ ಕೊನೆಯಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಆ ಹೆಂಗಸು ತನ್ನನ್ನ ಮತ್ತು ತನ್ನ ಸೋದರನನ್ನು ಒಬ್ಬನೇ ವ್ಯಕ್ತಿ ಎಂದುಕೊಂಡು ಇಬ್ಬರ ಜೊತೆಗೂ ಮಲಗುತ್ತಿದ್ದಾಳೆ ಎಂದು ಗೊತ್ತಾಯಿತು. ಅವನು ಪರಿಸ್ಥಿತಿಯನ್ನು ನಿವಾರಣೆ ಮಾಡುವುದರ ಬದಲು ಅದನ್ನೇ ಮುಂದುವರಿಸುವುದಕ್ಕೆ ಏರ್ಪಾಡು ಮಾಡಿಕೊಂಡ. ಅವನು ಮೇಲ್‌ಕಿಯಾದೆಸ್‌ನ ರೂಮಿಗೆ ವಾಪಸಾಗಲಿಲ್ಲ. ಅವನು ಅಂಗಳದಲ್ಲಿ ಮಧ್ಯಾಹ್ನದ ಹೊತ್ತು ಉರ್ಸುಲಾ ಕೂಗಾಡುತ್ತಿದ್ದರೂ ಬಿಡದೆ ಕಿವಿಯ ಹತ್ತಿರ ಇಟ್ಟುಕೊಂಡು ಅಕಾರ್ಡಿಯನ್ ಕಲಿಯುತ್ತಿದ್ದ. ಅವಳು ಸೂತಕವಿದ್ದದ್ದರಿಂದ ಮನೆಯಲ್ಲಿ ಸಂಗೀತವನ್ನು ನಿಷೇಧಿಸಿದ್ದಳಲ್ಲದೆ ಅಕಾರ್ಡಿಯನ್ ವಾದ್ಯವನ್ನೆ ಇಷ್ಟಪಡz, ಅದು ಫ್ರಾನ್ಸಿಸ್ಕೋನ ಅಲೆಮಾರಿ ಸಂತತಿಯವರಿಗೆ ಮಾತ್ರ ಯೋಗ್ಯ ಎಂದು ಪರಿಗಣಿಸಿದ್ದಳು. ಆದರೂ ಅವ್ರೇಲಿಯಾನೋ ಸೆಗುಂದೋ ಅಕಾರ್ಡಿಯನ್ ನುಡಿಸುವುದರಲ್ಲಿ ನಿಪುಣನಾz. ಅಲ್ಲದೆ ಮದುವೆಯಾಗಿ ಮಕ್ಕಳಾದರೂ ಹಾಗೆಯೇ ಇದ್ದ ಮತ್ತು ಮಕೋಂದೋದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದ. +ಸುಮಾರು ಎರಡು ತಿಂಗಳ ಕಾಲ ಅವನು ತನ್ನ ಸೋದರನ ಜೊತೆಗೆ ಅವಳನ್ನು ಹಂಚಿಕೊಂಡ. ರಾತ್ರಿ ಹೊತ್ತು ತನ್ನ ಅವಳಿ ಸೋದರ ತಮ್ಮಿಬ್ಬರಿಗೂ ಇದ್ದ ಒಬ್ಬಳೇ ಪ್ರೇಯಸಿಯ ಬಳಿಗೆ ಹೋಗುವುದಿಲ್ಲವೆಂದು ಸರಿಯಾಗಿ ಗಮನಿಸಿ, ಖಚಿತಪಡಿಸಿಕೊಂಡು, ಅವಳ ಜೊತೆ ಮಲಗುತ್ತಿದ್ದ. ಅದೊಂದು ದಿನ ಅವನಿಗೆ ಕಾಯಿಲೆಯಾಗಿರುವುದನ್ನು ಕಂಡ. ಎರಡು ದಿನಗಳ ನಂತರ ಅವನ ಸೋದರ ಬಚ್ಚಲು ಮನೆಯ ಕಂಬವನ್ನು ಹಿಡಿದುಕೊಂಡು, ಬೆವರಿನಿಂದ ತೊಯ್ದು ಹೋಗಿ ಕಣ್ಣೀರಿಡುತ್ತಿದ್ದುದು ಕಾಣಿಸಿತು. ಅದು ಅನಂತರ ಅವನಿಗೆ ಅರ್ಥವಾಯಿತು. ಆಯಸ್ಸು ಕಡಿಮೆ ಆಗುವಂಥ ಕಾಯಿಲೆ ಕೊಟ್ಟಿದ್ದಾನೆಂದು ತಿಳಿದ ಆ ಹೆಂಗಸು, ಅವನನ್ನು ಕಳಿಸಿಬಿಟ್ಟಳೆಂದು ಅವನ ಸೋದರ ಹೇಳಿದ. ಅಲ್ಲದೆ ಪಿಲರ್ ಟೆರ್‍ನೆರಾ ಅವನನ್ನು ಗುಣಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾಳೆಂದೂ ಹೇಳಿದ. ಅವ್ರೇಲಿಯಾನೋ ಸೆಗುಂದೋ ರಹಸ್ಯವಾಗಿ ರಾಸಾಯನಿಕದ ಮತ್ತು ಹೆಚ್ಚು ಉಚ್ಚೆ ಹೊಯ್ಯುವಂತೆ ಮಾಡುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದ. ಮೂರು ತಿಂಗಳ ಗುಪ್ತ ಯಾತನೆಯ ನಂತರ ಇಬ್ಬರೂ ಪ್ರತ್ಯೇಕವಾಗಿ ಗುಣ ಹೊಂದಿದರು. ಹೊಸೆ ಅರ್ಕಾದಿಯೋ ಸೆಗುಂದೋ ಮತ್ತೆ ಆ ಹೆಂಗಸನ್ನು ನೋಡಲಿಲ್ಲ. ಅವ್ರೇಲಿಯಾನೋ ಸೆಗುಂದೋ ಅವಳ ಕ್ಷಮೆ ಕೇಳಿ ಸಾಯುವ ತನಕ ಅವಳ ಜೊತೆಗಿದ್ದ. +ಅವಳ ಹೆಸರು ಪೆತ್ರಾ ಕೊತೆಸ್. ಅವಳು ಆಕಸ್ಮಿಕವಾಗಿ ದೊರಕಿದ ಲಾಟರಿ ವ್ಯಾಪಾರದ ಗಂಡನ ಜೊತೆ ಯುದ್ಧದ ಮಧ್ಯದಲ್ಲಿ ಮಕೋಂದೋಗೆ ಬಂದಿದ್ದಳು ಮತ್ತು ಅವನು ಸತ್ತಾಗ ವ್ಯಾಪಾರವನ್ನು ಮುಂದುವರಿಸಿದ್ದಳು. ಅವಳು ಐರೋಪ್ಯ ಮತ್ತು ನೀಗ್ರೋದ ಮಿಶ್ರ ಸಂತಾನದ ಯುವತಿಯಾಗಿದ್ದಳು. ಹಳದಿ ಬಾದಾಮಿ ಆಕಾರದ ಅವಳ ಕಣ್ಣುಗಳು ಅವಳ ಮುಖಕ್ಕೆ ಚಿರತೆಯ ರೌದ್ರತೆಯನ್ನು ಕೊಟ್ಟಿತ್ತು. ಅವಳು ವಿಶಾಲ ಹೃದಯಿಯಾಗಿದ್ದಳು ಹಾಗೂ ಪ್ರಣಯಕ್ಕೆ ಅದ್ಭುತವಾದ ಪ್ರೇರಣೆ ಕೊಡುವಂಥವಳಾಗಿದ್ದಳು. ಹೊಸೆ ಅರ್ಕಾದಿಯೋ ಸೆಗುಂದೋ ಹುಂಜದ ಕಾಳಗದ ಮನುಷ್ಯನಾಗಿ ಮತ್ತು ಅವ್ರೇಲಿಯಾನೋ ಸೆಗುಂದೋ ಅವನು ಇಟ್ಟುಕೊಂಡವಳ ಮನೆಯ ಗದ್ದಲದ ಪಾರ್ಟಿಗಳಲ್ಲಿ ಅಕಾರ್ಡಿಯನ್ ನುಡಿಸುತ್ತಿದ್ದಾನೆಂದು ಉರ್ಸುಲಾಗೆ ಅರಿವಾದಾಗ, ಅವಳು ತನಗೆ ಹುಚ್ಚು ಹಿಡಿಯುತ್ತದೆ ಎಂದುಕೊಂಡಳು. ಸಂಸಾರದ ಯಾವ ಸುಗುಣಗಳಿಲ್ಲದೆ ದುರ್ಗುಣಗಳು ಮಾತ್ರ ಅವರಲ್ಲಿ ತುಂಬಿಕೊಂಡಂತಿತ್ತು. ಅವಳು ಆಗ ಯಾರಿಗೂ ಅವ್ರೇಲಿಯಾನೋ ಅಥವಾ ಹೊಸೆ ಅರ್ಕಾದಿಯೋ ಎಂದು ಹೆಸರಿಡುವುದಿಲ್ಲವೆಂದು ನಿರ್ಧರಿಸಿದಳು. ಆದರೆ ಅವ್ರೇಲಿಯಾನೋ ಸೆಗುಂದೋಗೆ ಮೊದಲ ಗಂಡು ಮಗುವಾದಾಗ ಅವನ ಇಚ್ಛೆಯ ವಿರುದ್ಧ ಹೋಗಲು ಧೈರ್ಯವಾಗಲಿಲ್ಲ. +ಅವಳು, “ಆಗಲಿ ಆದರೆ ಒಂದು ಷರತ್ತು: ಅವನನ್ನ ನಾನು ಬೆಳೆಸ್ತೀನಿ” ಎಂದಳು. +ಅವಳಿಗೆ ಆಗಲೆ ನೂರು ವರ್ಷವಾಗಿ ಕಣ್ಣಿನ ಪೊರೆಯಿಂದ ಕುರುಡಾಗುವ ಹಂತಕ್ಕೆ ಬಂದಿದ್ದರೂ ಇನ್ನೂ ದೈಹಿಕ ಸಾಮರ್ಥ್ಯ, ಸದೃಢ ಸ್ವಭಾವ ಮತ್ತು ಮನಸ್ಥಿತಿ ಸ್ತಿಮಿತವಾಗಿತ್ತು. ಸಂಸಾರದ ಘನತೆಯನ್ನು ಮರುಸ್ಥಾಪಿಸುವ ಯಾವ ಗುಣವಂತನಿಗೇ ಆಗಲಿ ಅವಳಿಗಿಂತ ಚೆನ್ನಾಗಿ ಯುದ್ಧದ ಬಗ್ಗೆ, ಕಾದಾಡುವ ಹುಂಜದ ಬಗ್ಗೆ, ಕೆಟ್ಟ ಹೆಂಗಸರ ಬಗ್ಗೆ ಅಥವಾ ಅತಿರೇಕದ ಕೆಲಸಗಳ ಬಗ್ಗೆ, ವಿಪತ್ತುಗಳ ಬಗ್ಗೆ, ಎಂದೂ ಕೇಳಿರದ ಹಾಗೆ ರೂಪುಕೊಡಲು ಸಾಧ್ಯವಾಗುತ್ತಿರಲಿಲ್ಲ ಆ ವಿಪತ್ತುಗಳೆ ಅವರು ದಾರಿ ತಪ್ಪಲು ಕಾರಣವಾಗಿದ್ದವು. ಅವಳು ಭರವಸೆಯಿಂದ, “ಇವನೊಬ್ಬ ಪಾದ್ರಿಯಾಗ್ತಾನೆ” ಎಂದವಳು ಗಂಭೀರಳಾಗಿ, “ದೇವರು ನಂಗೆ ಆಯಸ್ಸು ಕೊಟ್ರೆ ಅವನೊಂದು ದಿನ ಪೋಪ್ ಆಗೋದನ್ನ ನೋಡ್ತೀನಿ” ಎಂದಳು. ಅವಳು ಹಾಗೆ ಹೇಳಿದ್ದನ್ನು ಕೇಳಿ ರೂಮಿನಲ್ಲಿ ಇದ್ದವರಷ್ಟೇ ಅಲ್ಲ ಮನೆಯೊಳಗೆಲ್ಲ ಸೇರಿದ್ದ ಅವ್ರೇಲಿಯಾನೋ ಸೆಗುಂದೋನ ರೌಡಿ ಸ್ನೇಹಿತರೂ ಕೂಡ ನಕ್ಕರು. ಹಳೆಯ ನೆನಪುಗಳ ಅಟ್ಟಕ್ಕೆ ಸೇರಿಸಿದ್ದ ಯುದ್ಧವನ್ನು ಶಾಂಪೇನ್ ಬಾಟಲುಗಳ ಮುಚ್ಚಳ ಎಗರಿಸುವುದರೊಂದಿಗೆ ಮತ್ತೆ ನೆನಪಿಸಿಕೊಂಡರು. +ಅವ್ರೇಲಿಯಾನೋ ಸೆಗುಂದೋ, “ಪೋಪ್‌ನ ಆರೋಗ್ಯಕ್ಕಾಗಿ” ಎಂದು ಗ್ಲಾಸ್ ಎತ್ತಿದ. ಅತಿಥಿಗಳು ಅವನ ಜೊತೆ ದನಿಗೂಡಿಸಿದರು. ನಂತರ ಮನೆಯಾತ ಆಕಾರ್ಡಿಯನ್ ನುಡಿಸಿದ, ಪಟಾಕಿಗಳನ್ನು ಹಚ್ಚಿದರು ಮತ್ತು ಇಡೀ ಊರಿನಲ್ಲಿ ಡೋಲು ಬಾರಿಸಿ ಸಂಭ್ರಮಿಸಿದರು. ಕಂಠಮಟ್ಟ ಶಾಂಪೇನ್ ಕುಡಿದ ಅತಿಥಿಗಳು ಬೆಳಿಗ್ಗೆ ಆರು ಹಸುಗಳನ್ನು ಬಲಿಕೊಟ್ಟರು ಮತ್ತು ಅವುಗಳನ್ನು ನೆರೆದವರೆಲ್ಲ ತೆಗೆದುಕೊಂಡು ಹೋಗಲೆಂದು ರಸ್ತೆಯಲ್ಲಿ ಇಟ್ಟರು. ಯಾರಿಗೂ ಬೇಸರವಾಗಲಿಲ್ಲ. ಅವ್ರೇಲಿಯಾನೋ ಸೆಗುಂದೋ ಮನೆಯನ್ನು ನೋಡಿಕೊಳ್ಳುವುದಕ್ಕೆ ಪ್ರಾರಂಭಮಾಡಿದ ಸಮಯದಿಂದ ಅಂಥ ಸಮಾರಂಭಗಳು ‘ಪೋಪ್\’ ಹುಟ್ಟಿದನೆಂಬ ರೀತಿಯ ಸಮಂಜಸವಾದ ಕಾರಣದಿಂದ ಸಾಮಾನ್ಯವಾಗಿದ್ದವು. ಅವನು ಕೆಲವೇ ವರ್ಷಗಳಲ್ಲಿ ಕೇವಲ ಅದೃಷ್ಟದಿಂದ, ಅಲೌಕಿಕವಾದ ಪ್ರಾಣಿಗಳ ಸಂತಾನಾಭಿವೃದ್ಧಿಯ ಫಲವಾಗಿ, ಆ ಜೌಗು ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಆಸ್ತಿವಂತರಲ್ಲಿ ಒಬ್ಬನಾದ. ಅವನ ಹೆಣ್ಣು ಕುದುರೆಗಳು ಮೂರಕ್ಕೆ ಜನ್ಮ ಕೊಡುತ್ತಿದ್ದವು. ಕೋಳಿಗಳು ದಿನಕ್ಕೆ ಎರಡು ಸಲ ಮೊಟ್ಟೆ ಇಡುತ್ತಿದ್ದವು. ಮಾಟ ಮಾಡುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದ ವಿವರಿಸಲು ಸಾಧ್ಯವಾಗದ ಹಾಗೆ, ಅವನ ಹಂದಿಗಳು ಎರ್ರಾ ಬಿರ್ರಿ ವೇಗವಾಗಿ ಮೈಯಿನ ಕೊಬ್ಬು ಹೆಚ್ಚಿಸಿಕೊಳ್ಳುತ್ತಿದ್ದವು. ಉರ್ಸುಲಾ ತನ್ನ ಮೊಮ್ಮಗನಿಗೆ, “ಈಗ ಒಂದಿಷ್ಟನ್ನು ಉಳಿತಾಯ ಮಾಡು, ಈ ಅದೃಷ್ಟ ಇಡೀ ಜೀವಮಾನ ಇರಲ್ಲ” ಎಂದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅವಳ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅವನು ಅವನ ಸ್ನೇಹಿತರಿಗೆ ಶಾಂಪೇನ್ ಕುಡಿಸಿದಷ್ಟು ಅವನ ಪ್ರಾಣಿಗಳು ಹೆಚ್ಚು ಹೆಚ್ಚು ಮರಿ ಹಾಕುತ್ತಿದ್ದವು ಮತ್ತು ತನ್ನ ಅದೃಷ್ಟಕ್ಕೆ ತಾನು ನಡೆಸುತ್ತಿದ್ದಕ್ಕಿಂತಲೂ, ಇಟ್ಟುಕೊಂಡಿದ್ದ ಪೆತ್ರಾ ಕೊತೆಸ್‌ಳ ಪ್ರೇಮಕ್ಕೆ, ಸಹಜ ಪ್ರಕೃತಿಯನ್ನೇ ತೀವ್ರಗೊಳಿಸುವ ಪ್ರಭಾವವಿದೆ ಎಂದು ಅವನು ನಂಬಿದ್ದ. ತನ್ನ ಸಂಪತ್ತಿಗೆ ಅದೇ ಮೂಲ ಎಂದು ಅವನೆಷ್ಟು ನಂಬಿದ್ದನೆಂದರೆ ಅವನು ಸಂತಾನೋತ್ಪತ್ತಿಯ ಸ್ಥಳದಿಂದ ಪಿಯತ್ರೋ ಕೊತೆಸ್‌ಳನ್ನು ಎಂದೂ ದೂರವಿಡಲಿಲ್ಲ. ಅವನಿಗೆ ಮದುವೆಯಾಗಿ ಮಕ್ಕಳಾದರೂ ಫೆರ್‍ನಾಂಡಳ ಒಪ್ಪಿಗೆಯಿಂದ ಅವಳ ಸಂಗ ಹೊಂದಿದ್ದ. ಅವನ ಅಜ್ಜಂದಿರ ಹಾಗೆ ಭಾರಿ ಮೈಕಟ್ಟಿನ ಮತ್ತು ಅವರಿಗೆ ಇರದಿದ್ದ ಹಾಸ್ಯ ಮನೋಭಾವವನ್ನು ಹೊಂದಿದ್ದ ಅವ್ರೇಲಿಯಾನೋ ಸೆಗುಂದೋಗೆ ಪ್ರಾಣಿಗಳನ್ನು ನೋಡಿಕೊಳ್ಳಲು ಏನೂ ಸಮಯವಿರಲಿಲ್ಲ. ಅವನಿಗೆ ಪ್ರಾಣಿಗಳ ಸಂತಾನೋತ್ಪತ್ತಿ ಸ್ಥಳಕ್ಕೆ ಪಿಯತ್ರೋ ಕೊತೆಸ್‌ಳನ್ನು ಕರೆದುಕೊಂಡು ಹೋಗಿ, ಅತಿ ಸಂತಾನೋತ್ಪತ್ತಿಗಾಗಿ ಪ್ರತಿಯೊಂದು ಪ್ರಾಣಿಯ ಮೇಲೆ ಗುರುತು ಮಾಡಿಸುವುದಷ್ಟೆ ಕೆಲಸವಾಗಿತ್ತು. +ಅವನ ದೀರ್ಘ ಜೀವನದಲ್ಲಿ ಸಂಭವಿಸಿದ ಒಳ್ಳೆಯ ಸಂಗತಿಗಳಂತೆ ಅವನ ಆಗಾಧ ಸಂಪತ್ತಿನ ಮೂಲ ದೊರಕಿದ ಅವಕಾಶದಲ್ಲಾಗಿತ್ತು. ಯುದ್ಧ ಮುಗಿಯುವ ತನಕ ಲಾಟರಿಯಿಂದ ಬಂದ ವರಮಾನದಿಂದ ಪೆತ್ರಾ ಕೊತೆಸ್ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದಳು ಮತ್ತು ಅವ್ರೇಲಿಯಾನೋ ಸೆಗುಂದೋ ಕಾಲಕಾಲಕ್ಕೆ ಉರ್ಸುಲಾಳ ಉಳಿತಾಯವನ್ನು ಕಬಳಿಸುತ್ತಿದ್ದ. ಅವರು ತಿಳಿಗೇಡಿಗಳಾಗಿದ್ದು, ನಿಷಿದ್ಧವಾದ ದಿನಗಳೂ ಸೇರಿದಂತೆ, ಪ್ರತಿದಿನವೂ ಒಟ್ಟಿಗೆ ಮಲಗುವುದನ್ನು ಬಿಟ್ಟರೆ, ಬೇರೆ ಯಾವ ಪೇಚಾಟವೂ ಇರಲಿಲ್ಲ. ಉರ್ಸುಲಾ, “ನೀನು ಹಾಳಾಗಕ್ಕೆ ಆ ಹೆಂಗಸೇ ಕಾರಣ” ಎಂದು ನಿದ್ದೆಯಲ್ಲಿ ನಡೆಯುವನಂತೆ ಮನೆಗೆ ಬರುತ್ತಿದ್ದ ತನ್ನ ಮರಿಮಗನನ್ನು ನೋಡಿ ಹೇಳುತ್ತಿದ್ದಳು. ಅಲ್ಲದೆ, “ಅವ್ಳು ನಿಂಗೆ ಮೋಡಿ ಹಾಕ್ಬಿಟ್ಟಿದಾಳೆ. ಹೀಗೇ ಆದ್ರೆ ಕಾಡುಗಪ್ಪೆ ಹೊಕ್ಕವರ ಹಾಗೆ ಹೊಟ್ಟೆ ನೋವಿಂದ ಒದ್ದಾಡಬೇಕಾಗತ್ತಷ್ಟೆ” ಎಂದಳು. ತನಗೆ ಮೋಸವಾಗಿದೆಯೆಂದು ತಿಳಿದುಕೊಳ್ಳಲು ಬಹಳ ಸಮಯ ತೆಗೆದುಕೊಂಡ ಹೊಸೆ ಅರ್ಕಾದಿಯೋ ಸೆಗುಂದೋಗೆ ತನ್ನ ಸೋದರನ ಮೋಹ ಅರ್ಥವಾಗಲಿಲ್ಲ. ಅವನಿಗೆ ಗೊತ್ತಿದ್ದಂತೆ ಪೆತ್ರಾ ಕೊತೆಸ್ ಒಬ್ಬ ಸಾಧಾರಣ ಹೆಂಗಸು. ಹಾಸಿಗೆಯಲ್ಲಿ ಸಾಕಷ್ಟು ಸೋಮಾರಿ ಮತ್ತು ಪ್ರಣಯದಲ್ಲಿ ಹೊಸ ಬಗೆಯ ಕಲ್ಪನೆ ಇಲ್ಲದವಳು. ಉರ್ಸುಲಾಳ ಕೂಗಾಟಕ್ಕೆ ಮತ್ತು ಅವನ ಸೋದರನ ಕೀಟಲೆಗೆ ಕಿವುಡಾಗಿ ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೋತಸ್‌ಳಿಗೆ ಒಂದು ಮನೆಮಾಡಿಕೊಟ್ಟು, ಅದನ್ನು ನಿಭಾಯಿಸುವಂಥ ವ್ಯಾಪಾರವನ್ನು ಹುಡುಕುವುದಷ್ಟೇ ಕೆಲಸವಾಗಿತ್ತು ಮತ್ತು ಒಂದು ದಿನ ಕಾಮದ ಜ್ವರದಲ್ಲಿ ಅವಳ ಮೇಲೋ ಅಥವಾ ಕೆಳಗೋ ಸಾಯುವುದಷ್ಟೇ ಮನಸ್ಸಿನಲ್ಲಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವರ್ಕ್‌ಶಾಪನ್ನು ಮತ್ತೆ ತೆರೆದಾಗ ಅವನ ಹೆಚ್ಚಿನ ವಯಸ್ಸಿನ ಪ್ರಶಾಂತತೆಯ ಸೊಬಗಿಗೆ ಮಾರು ಹೋಗಿ, ಅವ್ರೇಲಿಯಾನೋ ಸೆಗುಂದೋಗೆ ಸಣ್ಣ ಬಂಗಾರದ ಮೀನುಗಳನ್ನು ಮಾಡುವ ಉದ್ಯೋಗವೇ ಒಳ್ಳೆಯದೆಂದು ಭಾವಿಸಿದ. ಕರ್ನಲ್ ಲೋಹದ ಶೀಟುಗಳ ಸಂಗಡ ಭ್ರಾಂತಿಯುಕ್ತನಾಗಿ ತಾಳ್ಮೆಯಿಂದ ಕೆಲಸ ಮಾಡಿ ಅವು ನಿಧಾನವಾಗಿ ಬಂಗಾರದ ಹೆಕ್ಕಳಗಳಾಗುತ್ತಿದ್ದನ್ನು ಅನೇಕ ಗಂಟೆಗಳ ಕಾಲ ನೋಡಿದ. ಅವನಿಗೆ ಆ ಕೆಲಸ ಶ್ರಮ ವಹಿಸಬೇಕಾದದ್ದೆಂದು ಕಂಡಿತು ಮತ್ತು ಪಿಯತ್ರೋ ಕೊತೆಸ್‌ಳ ಬಗ್ಗೆ ಆಲೋಚನೆ ಎಷ್ಟು ಮೇಲಿಂದ ಮೇಲೆ ಒತ್ತಡ ಹೇರಿತ್ತೆಂದರೆ ಮೂರು ವಾರದ ನಂತರ ಅವನು ವರ್ಕ್‌ಶಾಪ್‌ನಿಂದ ಕಾಣೆಯಾದ. ಆ ಅವಧಿಯಲ್ಲಿಯೇ ಪೆತ್ರಾ ಕೊತೆಸ್‌ಗೆ ಮೊಲಗಳ ಲಾಟರಿ ಬಗ್ಗೆ ಹೊಳೆದದ್ದು. ಅವುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆ ತೀರ ಹೆಚ್ಚಿನ ಗತಿಯಲ್ಲಿದ್ದು, ಲಾಟರಿ ಟಿಕೆಟ್ಟುಗಳನ್ನು ಮಾರುವುದಕ್ಕೇ ಸಮಯ ಸಿಗುತ್ತಿರಲಿಲ್ಲ. ಪ್ರಾರಂಭದಲ್ಲಿ ಅವ್ರೇಲಿಯಾನೋ ಸೆಗುಂದೋ ಅವುಗಳ ಸಂತಾನೋತ್ಪತ್ತಿಯ ಅಗಾಧ ಪ್ರಮಾಣವನ್ನು ಗಮನಿಸಲಿಲ್ಲ. ಒಂದು ರಾತ್ರಿ ಊರಿನಲ್ಲಿ ಯಾರೂ ಮೊಲದ ಲಾಟರಿ ಬಗ್ಗೆ ಇನ್ನು ಕೇಳುವುದಕ್ಕೆ ಇಷ್ಟವಿರದಿದ್ದಾಗ, ಅಂಗಳದ ಬಾಗಿಲಲ್ಲಿ ಸದ್ದೊಂದು ಅವನಿಗೆ ಕೇಳಿಸಿತು. ಪೆತ್ರಾ ಕೊತೆಸ್, “ಏನೂ ಯೋಚ್ನೆ ಮಾಡ್ಬೇಡಿ, ಅವು ಮೊಲ” ಎಂದಳು. ಅವುಗಳ ಕೂಗಾಟದಿಂದ ಅವರಿಗೆ ಮಲಗಲಾಗಲಿಲ್ಲ. ಅವ್ರೇಲಿಯಾನೋ ಬೆಳಿಗ್ಗೆ ಬಾಗಿಲು ತೆಗೆದಾಗ ಬೆಳಗಿನ ಬೆಳಕಲ್ಲಿ ನೀಲಿಯ ಮೊಲಗಳು ಇಡೀ ಅಂಗಳದಲ್ಲಿ ಹರಡಿರುವುದನ್ನು ಕಂಡ. ಹುಚ್ಚಾಪಟ್ಟೆ ನಗುತ್ತ ಪೆತ್ರಾ ಕೊತೆಸ್ ಅವನನ್ನು ರೇಗಿಸಿ, “ಅವೆಲ್ಲ ನಿನ್ನೆ ರಾತ್ರಿ ಹುಟ್ಟಿದ್ದು” ಎಂದಳು. +“ಅಯ್ಯೊ ದೇವರೇ, ನೀನ್ಯಾಕೆ ಹಸುಗಳ ಲಾಟರಿ ಮಾಡಲ್ಲ” ಎಂದು ಕೇಳಿದ. +ಕೆಲವು ದಿನಗಳ ನಂತರ ಅಂಗಳವನ್ನು ಸ್ಚಚ್ಛಗೊಳಿಸಬೇಕೆಂದು ಮೊಲಗಳನ್ನು ಕೊಟ್ಟು ಹಸುವೊಂದನ್ನು ಅದಲುಬದಲು ಮಾಡಿಕೊಂಡಳು. ಅದು ಎರಡು ತಿಂಗಳಲ್ಲಿ ತ್ರಿವಳಿಗಳನ್ನು ಹಾಕಿತು. ಅದು ಶುರುವಾದದ್ದು ಹಾಗೆ. ಅಲ್ಲದೆ ರಾತ್ರೋರಾತ್ರಿ ಅವ್ರೇಲಿಯಾನೋ ಭೂಮಿಯ ಮತ್ತು ಪ್ರಾಣಿಗಳ ಒಡೆಯನಾದ ಹಾಗೂ ಉಕ್ಕೇರುತ್ತಿದ್ದ ಉಗ್ರಾಣವನ್ನು ದೊಡ್ಡದು ಮಾಡುವುದಕ್ಕೂ ಸಮಯವಿರಲಿಲ್ಲ. ಅಷ್ಟೊಂದು ಎಣೆ ಇಲ್ಲದ ಅಭಿವೃದ್ಧಿ ಅವನಿಗೂ ಕೂಡ ನಗು ತರಿಸಿತ್ತು. ಅವನು ತನ್ನ ಹಾಸ್ಯ ಪ್ರವೃತ್ತಿಯನ್ನು ತಣಿಸಲು ಹುಚ್ಚಾಟ ಮಾಡುವುದನ್ನು ತಡೆಯಲಾಗಲಿಲ್ಲ. ಅವನು, “ಹಸುಗಳಿದ್ದು ಬಿಟ್ಟು ಬಿಡು ಸಾಕು. ಬದುಕು ಅರೆಗಳಿಗೆ” ಎಂದು ಕೂಗಾಡುತ್ತಿದ್ದ. ಅವನು ಏನಾದರೂ ತೊಡಕಿಗೆ ಸಿಕ್ಕಿಹಾಕಿಕೊಂಡಿದ್ದಾನೋ, ಕಳವು ಮಾಡುತ್ತಿದ್ದಾನೋ, ಹೇಗೆ ಎಂದು ಯೋಚಿಸಿದಳು ಮತ್ತು ಪ್ರತಿಬಾರಿ ಅವನು ಕೇವಲ ಖುಷಿಗಾಗಿ ಶಾಂಪೇನ್ ಬಾಟಲಿಯ ಮುಚ್ಚಳ ಎಗರಿಸಿ, ಅದರ ಬುರುಗನ್ನು ನೆತ್ತಿಯ ಮೇಲೆ ಹಾಕಿಕೊಳ್ಳುತ್ತಿದ್ದಾಗ, ಹಣ ವ್ಯರ್ಥ ಮಾಡುತ್ತಿರುವುದಕ್ಕೆ ಕೂಗಾಡಿ ಬೈಯುತ್ತಿದ್ದಳು. ಅದರಿಂದ ಅವನಿಗೆ ಎಷ್ಟು ಸಿಟ್ಟು ಬಂತೆಂದರೆ ಒಂದು ದಿನ ಸಂತೋಷದ ಲಹರಿಯಲ್ಲಿದ್ದಾಗ ದುಡ್ಡಿನ ಒಂದು ಪೆಟ್ಟಿಗೆ, ಅಂಟು, ಬ್ರಶ್ ಹಿಡಿದುಕೊಂಡು ಬಂದು ಇಡೀ ಮನೆಯ ಒಳಗೆ-ಹೊರಗೆ ಮೇಲಿನಿಂದ ಕೆಳಕ್ಕೆ ಒಂದು ಪೇಸೋ ಬ್ಯಾಂಕ್ ನೋಟುಗಳನ್ನು ಫ್ರಾನ್ಸಿಸ್ಕೋನ ಹಳೆಯ ಹಾಡುಗಳನ್ನು ಗಟ್ಟಿಯಾಗಿ ಹಾಡುತ್ತ, ಅಂಟಿಸಿದ. ಅವರು ಪಿಯಾನೊವನ್ನು ತಂದ ಮೇಲೆ ಆ ಹಳೆ ಬಂಗಲೆಗೆ ಬಿಳಿ ಬಣ್ಣ ಬಳಿದದ್ದು ಈಗ ವಿಚಿತ್ರವಾದ ಮಸೀದಿಯ ಹಾಗೆ ಕಂಡಿತು. ಮನೆಯವರ ಉತ್ಸಾಹ, ಉರ್ಸುಲಾಳ ಅವಮಾನ, ದುಂದುತನದ ಪರಾಕಾಷ್ಠೆಯನ್ನು ನೋಡಲು ಸಂತೋಷದಿಂದ ನೆರೆದ ಜನರ ನಡುವೆ ಅವ್ರೇಲಿಯಾನೋ ಸೆಗುಂದೋ ಮನೆಯ ಮುಂದುಗಡೆಯಿಂದ ಬಚ್ಚಲು ಮನೆ, ಬೆಡ್‌ರೂಮುಗಳನ್ನು ಸೇರಿದಂತೆ ಅಡುಗೆ ಮನೆಗೂ ನೋಟುಗಳನ್ನು ಅಂಟಿಸುವುದನ್ನು ಮುಗಿಸಿದ ಮತ್ತು ಉಳಿದದ್ದನ್ನು ಅಂಗಳಕ್ಕೆ ಎಸೆದ. +ಕೊನೆಗೆ ಅವನು, “ಈಗ, ಈ ಮನೇಲಿ ಎಂದೂ, ಯಾರೂ ನನ್ನ ಹತ್ರ ದುಡ್ಡಿನ ಬಗ್ಗೆ ಮಾತಾಡಲ್ಲ ಅಂದ್ಕೊಳ್ತೀನಿ” ಎಂದ. +ಆಗಿದ್ದು ಅದು. ಉರ್ಸುಲಾ ಗೋಡೆಗೆ ಮೆತ್ತಿಕೊಂಡಿದ್ದ ನೋಟುಗಳನ್ನು ಕೀಳಿಸಿದಳು ಮತ್ತು ಮನೆಗೆ ಮತ್ತೊಂದು ಸಲ ಬಿಳಿ ಬಣ್ಣ ಹೊಡೆಯಲಾಯಿತು. ಅವಳು, “ದೇವರೇ, ನಾವು ಈ ಊರನ್ನ ಹುಟ್ಟಿ ಹಾಕಿದಾಗ ಬಡವರಾಗಿದ್ದಂತೆ ಈಗ್ಲೂ ಮಾಡು. ಯಾಕೆಂದರೆ ಮುಂದಿನ ಜನ್ಮದಲ್ಲಿ ಈ ರೀತಿ ದುಂದುಗಾರಿಕೇಗೆ ನೀನು ದಂಡ ವಸೂಲು ಮಾಡೋದು ಬೇಡ” ಎಂದು ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗೆ ವಿರುದ್ಧವಾದ ಪ್ರತಿಫಲ ಸಿಕ್ಕಿತು. ನೋಟುಗಳನ್ನು ಕೀಳುತ್ತಿದ್ದ ಕೆಲಸಗಾರ ಪ್ಲಾಸ್ಟರ್‌ನ ಸಂತ ಜೋಸಫ್ ಮೂರ್ತಿಗೆ ಡಿಕ್ಕಿ ಹೊಡೆದ. ಅದನ್ನು ಕಳೆದ ವರ್ಷದ ಯುದ್ಧದಲ್ಲಿ ಯಾರೋ ಬಿಟ್ಟು ಹೋಗಿದ್ದರು. ಒಳಗೆ ಟೊಳ್ಳಾಗಿದ್ದ ಆ ವಿಗ್ರಹ ಬಿದ್ದು ಚೂರು ಚೂರಾಗಿ ನೆಲದ ಮೇಲೆ ಬಿತ್ತು. ಬಂಗಾರದ ನಾಣ್ಯಗಳನ್ನು ಅದರೊಳಗೆ ಒತ್ತಿಡಲಾಗಿತ್ತು. ಮನುಷ್ಯನಾಕಾರದ ಆ ವಿಗ್ರಹವನ್ನು ಯಾರು ತಂದಿಟ್ಟರೆಂಬ ನೆನಪು ಯಾರಿಗೂ ಇರಲಿಲ್ಲ. ಅಮರಾಂತ, “ಮೂರು ಜನ ಅದನ್ನು ತಂದಿದ್ದರು. ಮಳೆಗಾಲ ಮುಗಿಯುವ ತನಕ ಇಲ್ಲಿರಲಿ. ಅಂತ ಕೇಳಿಕೊಂಡರು. ನಾನು ಯಾರೂ ಅದಕ್ಕೆ ಡಿಕ್ಕಿ ಹೊಡಿಬಾರ್‍ದು ಅಂತ ಆ ಮೂಲೇಲಿ ಇಡಲಿಕ್ಕೆ ಹೇಳಿದ್ದೆ. ಅವ್ರು ಅದನ್ನ ಹುಷಾರಾಗಿ ಅಲ್ಲಿಟ್ಟರು. ಅದು ಅವತ್ತಿಂದ ಅಲ್ಲಿದೆ. ಯಾಕೆಂದರೆ ಯಾರೂ ಅದನ್ನು ವಾಪಸು ತೊಗೊಂಡು ಹೋಗಲಿಕ್ಕೆ ಬರ್‍ಲಿಲ್ಲ” ಎಂದು ವಿವರಿಸಿದಳು. ಆ ಮೇಲೆ ಉರ್ಸುಲಾ ಅದರ ಮೇಲೆ ಕ್ಯಾಂಡಲ್‌ಗಳನ್ನು ಇಟ್ಟಿದ್ದಳು ಮತ್ತು ತಿಳಿಯದೆ, ಸಂತನಿಗೆ ಬದಲಾಗಿ ಸುಮಾರು ನಾನೂರು ಪೌಂಡ್‌ಗಿಂತ ಹೆಚ್ಚು ಬಂಗಾರಕ್ಕೆ ಬಾಗಿ ನಮಸ್ಕಾರ ಮಾಡುತ್ತಿದ್ದಳು. ನಿಜವಾದ ದೇವರನ್ನು ಪೂಜಿಸದೆ ಇರುವುದಕ್ಕೆ ದೊರೆತ ಸಾಕ್ಷಿಯಿಂದ ಅವಳ ಮನಸ್ಸು ಮತ್ತಷ್ಟು ಕಲಕಿ ಹೋಯಿತು. ಅವಳು ನಾಣ್ಯದ ಗುಪ್ಪೆಯ ಮೇಲೆ ಉಗಿದು, ಮೂರು ಕ್ಯಾನ್‌ವಾಸ್ ಚೀಲದಲ್ಲಿ ತುಂಬಿ, ಯಾವಾಗಲಾದರೂ ಆ ಮೂರು ಜನ ಬಂದು ಕೇಳುತ್ತಾರೆಂದು ಗುಟ್ಟಾದ ಸ್ಥಳದಲ್ಲಿ ಹೂತುಬಿಟ್ಟಳು. ಬಹಳ ಕಾಲವಾದ ಮೇಲೆ ಅವಳು ಸಾಕಷ್ಟು ಜೀರ್ಣವಾದ ಅವಧಿಯಲ್ಲಿ, ಮನೆಯ ಬಳಿ ಬರುತ್ತಿದ್ದ ಅನೇಕ ಪ್ರಯಾಣಿಕರ ಸಂಭಾಷಣೆಯಲ್ಲಿ ಮಧ್ಯೆ ಪ್ರವೇಶಿಸಿ ಅವರೇನಾದರೂ ಮಳೆಗಾಲ ಮುಗಿಯುವ ತನಕ ನೋಡಿಕೊಳ್ಳಲು ಯುದ್ಧದ ಸಮಯದಲ್ಲಿ ಸಂತ ಜೋಸಫ್‌ನ ವಿಗ್ರಹವನ್ನು ಬಿಟ್ಟು ಹೋಗಿದ್ದುಂಟೆ ಎಂದು ಕೇಳುತ್ತಿದ್ದಳು. +ಆ ದಿನಗಳಲ್ಲಿ ಉರ್ಸುಲಾಗೆ ಗಾಬರಿ ಹುಟ್ಟಿಸುವಂಥ ಸಂಗತಿಗಳು ಸಾಮಾನ್ಯವಾಗಿದ್ದವು. ಮಕೋಂದೋಗೆ ಸಂಪತ್ತು ಒಟ್ಟಿಗೆ ಬಂತು. ಸಂಸ್ಥಾಪಕರ ಮನೆಗಳು ಮರದ ತೊಲೆಗಳಿರುವ, ಸಿಮೆಂಟ್ ನೆಲದ ಇಟ್ಟಿಗೆ ಮನೆಗಳಾಗಿ ಬದಲಾದವು. ಇದರಿಂದ ಉಸಿರುಗಟ್ಟಿಸುತ್ತಿದ್ದ ಮಧ್ಯಾಹ್ನ ಎರಡು ಗಂಟೆಯ ಬಿಸಿಲನ್ನು ಸಹಿಸಿಕೊಳ್ಳುವುದು ಸ್ವಲ್ಪ ಸುಲಭವಾಯಿತು. ಆ ಸಮಯದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಆ ಪುರಾತನ ಹಳ್ಳಿಯಲ್ಲಿ ಕಷ್ಟಗಳ ಸಂದರ್ಭವನ್ನು ಎದುರಿಸಲು ಉಳಿದದ್ದು, ಧೂಳು ಮೆತ್ತಿದ ಬಾದಾಮಿ ಮರಗಳು ಮತ್ತು ಹೊಸೆ ಅರ್ಕಾದಿಯೋ ಸೆಗುಂದೋ ಚಾನಲ್ ತೆಗೆದು ದೋಣಿಯ ಸಂಪರ್ಕವನ್ನು ಏರ್ಪಡಿಸಲು ಹೊರಟಾಗ, ಇತಿಹಾಸಪೂರ್ವ ಕಲ್ಲುಗಳಿದ್ದ ತಿಳಿನೀರಿನ ನದಿ ಮಾತ್ರ. ಅದೊಂದು ಮುತ್ತಜ್ಜನಿಗೆ ಹೋಲಿಸಬಹುದಾದ ಹುಚ್ಚು ಕನಸು. ಏಕೆಂದರೆ ಬಂಡೆಗಳಿದ್ದ ಮತ್ತು ಅನೇಕ ಸೆಳವುಗಳಿದ್ದ ನದಿ ಮಕೋಂದೋಯಿಂದ ಸಮುದ್ರಕ್ಕೆ ನೌಕಾಯಾನವನ್ನು ತಡೆಹಿಡಿದಿದ್ದವು. ಆದರೆ ಯಾರೂ ಕಾಣದ ಹುಚ್ಚು ಸಾಹಸದಿಂದ ಹೊಸೆ ಅರ್ಕಾದಿಯೋ ಸೆಗುಂದೋ ತನ್ನ ಯೋಜನೆಯಲ್ಲಿ ನಿರತನಾದ. ಅಲ್ಲಿಯ ತನಕ ಅವನು ಬೇರೆ ಯಾವುದೇ ಕಲ್ಪನೆಯ ಕುರುಹನ್ನು ತೋರಿಸಿರಲಿಲ್ಲ. ಪಿಯತ್ರೋ ಕೊತೆಸ್‌ನೊಂದಿಗೆ ನಡೆಸಿದ ಸೂಕ್ಷ್ಮವಾದ ಸಾಹಸವನ್ನು ಬಿಟ್ಟರೆ ಅವನಿಗೆ ಬೇರೆ ಯಾವ ಹೆಂಗಸಿನ ಸಂಗವಿರಲಿಲ್ಲ. ಇಡೀ ಸಂಸಾರದಲ್ಲಿ ಅಲ್ಲಿಯವರೆಗೆ ಇರದ ಅತ್ಯಂತ ಸೌಮ್ಯ ಸ್ವಭಾವದ, ಹುಂಜದ ಕಾಳಗದ ಉಸ್ತುವಾರಿಯನ್ನು ಕೂಡ ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಉರ್ಸುಲಾ ಪರಿಗಣಿಸಿದ್ದಳು, ಅವನಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸಮುದ್ರದಿಂದ ಸುಮಾರು ಎಂಟು ಮೈಲಿ ದೂರದಲ್ಲಿರುವ ಸ್ಪೇನಿನ ದೊಡ್ಡ ಹಡಗು ಹಾಗೂ ಯುದ್ಧದಲ್ಲಿ ತಾನು ಇದ್ದಲಿನ ಚೌಕಟ್ಟನ್ನು ನೋಡಿದ್ದಾಗಿ ಹೇಳಿದಾಗ, ಅನೇಕ ಜನರಿಗೆ ಅದ್ಭುತವಾಗಿ ತೋರಿದ ಆ ಕಥೆ, ಹೊಸೆ ಅರ್ಕಾದಿಯೋ ಸೆಗುಂದೋಗೆ ಒಂದು ರೀತಿಯಲ್ಲಿ ಅರಿವು ಮೂಡಿಸಿತು. ಅವನು ಅತಿ ಹೆಚ್ಚು ಹಣ ಕೊಡುತ್ತೇನೆಂದು ಹೇಳಿದವರಿಗೆ ಕೋಳಿಗಳನ್ನು ಮಾರಿ, ಜನರನ್ನು ನೇಮಿಸಿಕೊಂಡು, ಸಲಕರಣೆಗಳನ್ನು ಖರೀದಿಸಿದ ಮತ್ತು ಕಲ್ಲುಗಳನ್ನು ಒಡೆಯುವ, ಕಾಲುವೆಗಳನ್ನು ತೋಡುವ, ಸೆಳವುಗಳನ್ನು ಅತ್ತ ಸರಿಸುವ ಅಲ್ಲದೆ ಜಲಾಶಯಗಳನ್ನು ಉಪಯೋಗ ಮಾಡುವ ಕಷ್ಟಕರ ಕೆಲಸದಲ್ಲಿ ತೊಡಗಿದ. ಉರ್ಸುಲಾ, “ನಂಗಿದೆಲ್ಲ ಬಾಯಿಪಾಠವಾಗಿದೆ. ಇದೆಲ್ಲ ಕಾಲ ಹಿಂದಕ್ಕೋಡಿ ನಾವೆಲ್ಲ ಮೊದಲಿದ್ದ ಥರ ಆದ ಹಾಗೆ” ಎಂದು ಕೂಗಿದಳು. ಅವನಿಗೆ ನದಿಯಲ್ಲಿ ಯಾನ ಮಾಡಬಹುದೆಂದು ಹೊಳೆದಾಗ ತನ್ನ ಸೋದರನಿಗೆ ಆ ಯೋಜನೆಯ ಬಗ್ಗೆ ವಿಸ್ತೃತವಾಗಿ ತಿಳಿಸಿದ ಮತ್ತು ಅವನು ಅದಕ್ಕೆ ಅಗತ್ಯವಾದ ಹಣವನ್ನು ಕೊಟ್ಟ. ಅನಂತರ ಅವನು ಬಹಳ ಸಮಯ ನಾಪತ್ತೆಯಾದ. ಅದೆಲ್ಲ ಅವನ ದೋಣಿ ಕೊಳ್ಳದ ಯೋಜನೆ ಸೋದರನಿಂದ ಹಣ ದೋಚುವ ಸನ್ನಾ, ಎಂದು ಜನರು ಆಡಿಕೊಳ್ಳುತ್ತಿದ್ದಾಗ ವಿಚಿತ್ರವಾದ ಒಂದು ದೋಣಿ ಊರಿನ ಹತ್ತಿರ ಬರುತ್ತಿದೆ ಎಂಬ ಸುದ್ದಿ ಹರಡಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅದ್ಭುತವಾದ ಕಾರ್ಯಗಳನ್ನು ಮರೆತು ಹೋಗಿದ್ದ ಮಕೋಂದೋ ವಾಸಿಗಳು ನದಿಯ ದಂಡೆಗೆ ಓಡಿದರು ಮತ್ತು ನಂಬದೆ ಬಿಟ್ಟ ಕಣ್ಣು ಬಿಟ್ಟುಕೊಂಡು ಅಲ್ಲಿಗೆ ಬಂದು ನಿಂತ ಮೊದಲನೆ ಮತ್ತು ಕೊನೆಯದಾದ ದೋಣಿಯನ್ನು ನೋಡಿದರು. ಅದು ದಡದಲ್ಲಿದ್ದ ಇಪ್ಪತ್ತು ಜನರಿಂದ ಎಳೆಯಲ್ಪಡುತ್ತಿದ್ದ ಭಾರಿ ಗಾತ್ರದ ಮರದ ದಿಮ್ಮಿಯಾಗಿತ್ತು. ಮುಂದುಗಡೆ ಸಮಾಧಾನದಿಂದ ಕಣ್ಣು ಹೊಳೆಸುತ್ತಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ಕಷ್ಟಕರವಾದ ಆ ಕೆಲಸವನ್ನು ನಿರ್ದೇಶಿಸುತ್ತಿದ್ದ. ಅವನ ಜೊತೆ ಬಂದಿದ್ದ ಅನೇಕ ಹೆಂಗಸರು ಉರಿಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಬಣ್ಣ ಬಣ್ಣದ ಛತ್ರಿ ಹಿಡಿದುಕೊಂಡಿದ್ದರು. ಅಲ್ಲದೆ ಭುಜದ ಮೇಲೆ ಸಿಲ್ಕಿನ ಕರ್ಚೀಫ್‌ಗಳನ್ನು ಇಳಿಬಿಟ್ಟುಕೊಂಡು, ಮುಖಕ್ಕೆ ಬಣ್ಣದ ಕ್ರೀಮ್ ಹಚ್ಚಿಕೊಂಡು, ಹೂ ಮುಡಿದುಕೊಂಡು, ಕೈಗೆ ಬಂಗಾರದ ಹಾವುಗಳು ಹಾಗೂ ಹಲ್ಲುಗಳಿಗೆ ವಜ್ರದ ಲೇಪ ಹೊಂದಿದವರಾಗಿದ್ದರು. ಹೊಸೆ ಅರ್ಕಾದಿಯೋ ಸೆಗುಂದೋಗೆ ಅಗಾಧ ಗಾತ್ರದ ಮರದ ದಿಮ್ಮಿಯನ್ನು ಒಮ್ಮೆ ಮಾತ್ರ ಮಕೋಂದೋಗೆ ತರಲು ಸಾಧ್ಯವಾಗಿತ್ತು. ಆದರೆ ಅದು ತನ್ನ ಸಾಹಸದ ಸೋಲು ಎಂದು ಪರಿಗಣಿಸಿರಲಿಲ್ಲ ಮತ್ತು ತಾನು ಮಾಡಿದ್ದನ್ನು ತನ್ನ ಸಂಕಲ್ಪ ಶಕ್ತಿಯ ವಿಜಯವೆಂದು ಸಾರಿದ. ಅವನ ಸೋದರನಿಗೆ ಚಾಚೂ ತಪ್ಪದೆ ಲೆಕ್ಕ ಕೊಟ್ಟು ಮತ್ತೆ ಎಂದಿನ ಹುಂಜದ ಕಾಳಗಗಳಲ್ಲಿ ತೊಡಗಿದ. ಅವನ ಹುಚ್ಚು ಸಾಹಸದಿಂದ ಉಳಿದದ್ದು, ಫ್ರಾನ್ಸ್‌ನಿಂದ ಆ ಹೆಂಗಸರು ತಂದ ಹೊಸತನದ ಗಾಳಿ. ಅವರ ಅದ್ಭುತವಾದ ಕಲಾವಂತಿಕೆ, ಸಾಂಪ್ರದಾಯಿಕ ಪ್ರೇಮದ ಶೈಲಿಯನ್ನು ಪರಿವರ್ತಿಸಿತು ಮತ್ತು ಅವರ ಸಾಮಾಜಿಕ ಹಿತ, ಹಳತಾದ ಕತಾವುರೆಯ ಅಂಗಡಿಯನ್ನು ಮುಚ್ಚುವಂತೆ ಮಾಡಿ ಇಡೀ ರಸ್ತೆಯನ್ನು ಜಪಾನಿನ ದೀಪಗಳು ಮತ್ತು ಪಳಿಯುಳಿಕೆಯ ವಾದ್ಯಗಳು, ಬಜಾರ್ ಮಾಡಿತು. ಮಕೋಂದೋವನ್ನು ಮೂರು ದಿನಗಳ ಕಾಲ ಉನ್ಮಾದದಲ್ಲಿ ಮುಳುಗಿಸಿದಂಥ ಆ ಜಾತ್ರೆಯನ್ನು ವ್ಯವಸ್ಥೆಗೊಳಿಸಿದ್ದು ಅವರೇ. ಅದರಿಂದ ಉಂಟಾದ ದೀರ್ಘಕಾಲದ ಪರಿಣಾಮವೆಂದರೆ ಹೊಸೆ ಅರ್ಕಾದಿಯೋ ಸೆಗುಂದೋಗೆ ಫೆರ್ನಾಂಡ ಡೆಲ್ ಕಾರ್ಪಿಯೋಳನ್ನು ಭೇಟಿಯಾಗುವ ಅವಕಾಶ ತಂದುಕೊಟ್ಟಿತು. +ಸುಂದರಿ ರೆಮಿದಿಯೋಸ್ ಘೋಷಿತ ಸುಂದರಿಯಾಗಿದ್ದಳು. ಮಾತಿಲ್ಲದಂತೆ ಮಾಡುವಷ್ಟು ಅವಳ ಸೌಂದರ್ಯವಿದ ತನ್ನ ಮರಿಮಗಳ ಆಯ್ಕೆಯನ್ನು ಉರ್ಸುಲಾಗೆ ತಡೆಯಲಾಗಲಿಲ್ಲ. ಅಲ್ಲಿಯ ತನಕ ಅಮರಾಂತಳ ಜೊತೆ ಸಾಮೂಹಿಕ ಪ್ರಾರ್ಥನೆಗೆ ಹೋಗುವುದಕ್ಕೆ ಬಿಟ್ಟರೆ ಅವಳನ್ನು ರಸ್ತೆಯಲ್ಲಿ ಓಡಾಡದಿರುವಂತೆ ಮಾಡಲು ಅವಳು ಯಶಸ್ವಿಯಾಗಿದ್ದಳು. ಆದರೆ ಈಗ ಅವಳು ಮುಖಕ್ಕೆ ಕಪ್ಪು ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ ಮಾಡಿದಳು. ಅತ್ಯಂತ ಅಧಾರ್ಮಿಕರಾದ ಕತಾವುರೆ ಅಂಗಡಿಯಲ್ಲಿ, ಅಪವಿತ್ರ ಪ್ರಾರ್ಥನೆ ನಡೆಸಿಕೊಡುವ ಪಾದ್ರಿಗಳಂತೆ ವೇಷ ಮರೆಸಿಕೊಳ್ಳುತ್ತಿದ್ದವರು, ಒಂದು ಕ್ಷಣದ ಮಟ್ಟಿಗಾದರೂ ಆ ಪ್ರದೇಶದಲ್ಲೆಲ್ಲ ಹೆಸರುವಾಸಿಯಾಗಿದ್ದ ಸುಂದರಿ ರಿಮಿದಿಯೋಸ್‌ಳ ಮುಖವನ್ನು ನೋಡುವ ಉದ್ದೇಶದಿಂದ ಚರ್ಚ್‌ಗೆ ಹೋಗುತ್ತಿದ್ದರು. ಅವರಿಗದು ಸಾಧ್ಯವಾಗಲು ಬಹಳ ಸಮಯ ಕಾಯಬೇಕಾಯಿತು ಮತ್ತು ಅವರಿಗೆ ಸಾಧ್ಯವಾಗದಿದ್ದರೆ ಒಳ್ಳೆಯದಾಗುತ್ತಿತ್ತು. ಏಕೆಂದರೆ ಶಾಂತವಾಗಿ ಮಲಗುವ ಅವರ ಅಭ್ಯಾಸವನ್ನು ಅವರು ಮರಳಿ ಪಡೆಯಲಿಲ್ಲ. ಅಂಥವನೊಬ್ಬ ಪರದೇಶದವನು, ಎಂದೆಂದಿಗೂ ಸ್ತಿಮಿತ ಕಳೆದುಕೊಂಡು, ಯಾತನೆ ಅನುಭವಿಸಿದ ಮತ್ತು ವರ್ಷಗಳ ನಂತರ ರೈಲು ಹಳಿಗಳ ಮೇಲೆ ಮಲಗಿ ತುಂಡು ತುಂಡಾಗಿದ್ದ. ಚರ್ಚ್‌ಗೆ ಬಂದ ಕ್ಷಣದಿಂದ ಅವನನ್ನು ನೋಡಿದವರು ಅವನು ಬಹಳ ದೂರದಿಂದ ಬಹುಶಃ ದೇಶದ ಹೊರಗಿನ ಪಟ್ಟಣವೊಂದರಿಂದ ಸುಂದರಿ ರೆಮಿದಿಯೋಸ್‌ಳ ಮಾಂತ್ರಿಕ ಸೌಂದರ್ಯದಿಂದ ಆಕರ್ಷಿತನಾಗಿ ಬಂದವನೆನ್ನುವುದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅವನೆಷ್ಟು ಚೆಲುವನಾಗಿ, ನಾಜೂಕಿನ, ಗೌರವಪೂರ್ಣವಾಗಿದ್ದನೆಂದರೆ ಪಿಯತ್ರೋ ಕ್ರೆಪ್ಸಿ ಅವನ ಎದುರು ಸಪ್ಪೆ ಎನ್ನಿಸುತ್ತಿದ್ದ ಮತ್ತು ಅನೇಕ ಹೆಂಗಸರು, ನಿಜವಾಗಿಯೂ ಮುಖಕ್ಕೆ ಪರದೆ ಹಾಕಿಕೊಂಡು ಓಡಾಡಬೇಕಾದವನು ಅವನು ಎಂದು ಪಿಸುಗುಟ್ಟಿಕೊಳ್ಳುತ್ತಿದ್ದರು. ಅವನು ಮಕೋಂದೋದಲ್ಲಿ ಯಾರ ಜೊತೆಯೂ ಮಾತನಾಡಲಿಲ್ಲ. ದಂತಕಥೆಯ ರಾಜಕುಮಾರನಂತೆ ಭಾನುವಾರ ಬೆಳಿಗ್ಗೆ ಜೀನಿಗೆ ಬೆಳ್ಳಿ ಪಟ್ಟಿಗಳಿಂದ ಕಟ್ಟಿದ್ದ ಮತ್ತು ವೆಲ್ವೆಟ್ ಹೊದಿಕೆಯಿದ್ದ ಕುದುರೆ ಸವಾರಿ ಮಾಡಿಕೊಂಡು ಒಂದು ಸಾಮೂಹಿಕ ಪ್ರಾರ್ಥನೆಯಾದ ಕೂಡಲೆ ಊರು ಬಿಟ್ಟು ಹೊರಟ. +ಅವನು ಮೊದಲ ಬಾರಿ ಚರ್ಚ್‌ಗೆ ಬಂದಾಗಿನಿಂದಲೂ ಅಲ್ಲಿ ಇರುತ್ತಿದ್ದರಿಂದ ಅದರ ಪ್ರಭಾವ ಎಷ್ಟು ಹೆಚ್ಚಿತ್ತೆಂದರೆ ಅವನು ಮತ್ತು ಸುಂದರಿ ರೆಮಿದಿಯೋಸ್‌ಳ ನಡುವೆ ಒಂದು ಮೌನ ಯುದ್ಧ ನಡೆದಿದೆ ಎಂದು ಪ್ರತಿಯೊಬ್ಬರೂ ತಿಳಿದುಕೊಂಡಿದ್ದರು ಮತ್ತು ಪ್ರೇಮದಲ್ಲಿ ಮಾತ್ರವಲ್ಲದೆ ಸಾವಿನಲ್ಲಿ ಕೂಡ ಸಮಾಪ್ತಿಯಾಗುವ ರಹಸ್ಯವಾದ ಒಪ್ಪಂದ ಇದೆ ಎಂದು ಭಾವಿಸಿದ್ದರು. ಅದೊಂದು ಭಾನುವಾರ ಅವನು ಕೈಯಲ್ಲಿ ಹಳದಿ ಗುಲಾಬಿಯೊಡನೆ ಕಂಡ. ಅವನು ಯಾವಾಗಿನಂತೆ ನಿಂತುಕೊಂಡೇ ಪ್ರಾರ್ಥನೆ ಕೇಳಿಸಿಕೊಂಡ ಮತ್ತು ಅದು ಮುಗಿದಾಗ ಅವನು ಸುಂದರಿ ರೆಮಿದಿಯೋಸ್‌ಳ ಮುಂದೆ ಹೋಗಿ, ಗುಲಾಬಿ ಹೂ ಕೊಟ್ಟ. ಅವಳು ಅದಕ್ಕೆ ಸಿದ್ಧವಾಗಿದ್ದಳು ಎನ್ನುವ ಹಾಗೆ ಸಹಜವಾಗಿ ಸ್ವೀಕರಿಸಿದಳು ಮತ್ತು ಮುಖದ ಪರದೆ ಸರಿಸಿ ನಸುನಕ್ಕು ಕೃತಜ್ಞತೆ ವ್ಯಕ್ತಪಡಿಸಿದಳು. ಅವಳು ಅಷ್ಟೇ ಮಾಡಿದ್ದು. ಅದು ಅವನೊಬ್ಬನಿಗೇ ಅಲ್ಲ, ಅವಳನ್ನು ಕಾಣುವ ದೌರ್ಭಾಗ್ಯವಿದ್ದ ಗಂಡಸರಿಗೆಲ್ಲ ಅದೊಂದು ಮರೆಯಲಾಗದ ಕ್ಷಣವಾಗಿತ್ತು. +ಅದಾದ ನಂತರ ಅವನು ಸುಂದರಿ ರೆಮಿದಿಯೋಸ್‌ಳ ಕಿಟಕಿಯ ಪಕ್ಕದಲ್ಲಿ ಕೆಲವು ಸಲ ಬೆಳಗಿನ ತನಕ ವಾದ್ಯಗೋಷ್ಠಿಯನ್ನು ವ್ಯವಸ್ಥೆಗೊಳಿಸಿದ್ದ. ಅವ್ರೇಲಿಯಾನೋ ಸೆಗುಂದೋ ಮಾತ್ರ ಅವನ ಬಗ್ಗೆ ಮರುಕ ವ್ಯಕ್ತಪಡಿಸಿದ್ದ ಮತ್ತು ಹಿಡಿದ ಪಟ್ಟಿನಿಂದ ಬಿಡಿಸಲು ಪ್ರಯತ್ನ ಪಟ್ಟ. ಅದೊಂದು ರಾತ್ರಿ ಅವನು, “ಈ ಮನೆ ಹೆಂಗಸರೆಲ್ಲ ಹಂದಿಗಳಿಗಿಂತ ಅತ್ತತ್ತ” ಎಂದ. ಅವನಿಗೆ ತನ್ನ ಸ್ನೇಹಿತನಾಗಿರಲು ಕರೆದ ಮತ್ತು ಶಾಂಪೇನ್‌ನಲ್ಲಿ ಮುಳುಗುವಂತೆ ಆಹ್ವಾನಿಸಿದ. ತನ್ನ ಮನೆಯ ಹೆಂಗಸರು ಬಂಡೆಗಲ್ಲಿನಂಥವರು ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಅವನ ಹಠವನ್ನು ಕಡಿಮೆ ಮಾಡಲಾಗಲಿಲ್ಲ. ಅವನ ಕೊನೆಯಿರದ ವಾದ್ಯಗೋಷ್ಠಿಗಳಿಂದ ಕೆರಳಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಅವನ ವ್ಯಥೆಯನ್ನು ಒಂದೆರಡು ಪಿಸ್ತೂಲು ಗುಂಡುಗಳಿಂದ ಗುಣಪಡಿಸುತ್ತೇನೆಂದು ಬೆದರಿಸಿದ. ಅವನ ತುಂಬಿದ ಆತ್ಮ ಸ್ಥ್ಯೆರ್ಯವನ್ನು ಬಿಟ್ಟರೆ ಯಾವುದೂ ಅವನನ್ನು ತಡೆಯಲಾಗಲಿಲ್ಲ. ಅಚ್ಚುಕಟ್ಟಾಗಿ ಬಟ್ಟೆ ಹಾಕಿಕೊಂಡಿರುತ್ತಿದ್ದವನು ಕೊಳಕಾಗಿ, ಅವಲಕ್ಷಣವಾಗಿ ಬದಲಾದ. ಅವನ ಮೂಲ ಯಾವುದೆಂದು ಸರಿಯಾಗಿ ಗೊತ್ತಿರದಿದ್ದರೂ ದೂರದ ದೇಶದಲ್ಲಿದ್ದ ಅಧಿಕಾರ ಮತ್ತು ಸಂಪತ್ತನ್ನು ತೊರೆದು ಬಂದಿದ್ದಾನೆಂದು ಮಾತನಾಡಿಕೊಳ್ಳುತ್ತಿದ್ದರು. ಅವನು ವೃಥಾ ಚರ್ಚೆಗಿಳಿಯುತ್ತಿದ್ದ. ಅಲ್ಲದೆ ಕುಡಿದು ಕಾದಾಡುವಂಥವನಾದ ಮತ್ತು ಕತಾವುರೆಯ ಅಂಗಡಿನಲ್ಲಿ ತನ್ನ ಕೊಳಕಿನಲ್ಲಿ ತಾನೆ ಹೊರಳಾಡುತ್ತಿದ್ದ. ಈ ಘಟನೆಯ ಅತ್ಯಂತ ದುಃಖಪೂರ್ಣ ಸಂಗತಿಯೆಂದರೆ ಚರ್ಚ್‌ನಲ್ಲಿ ಅವನು ರಾಜಕುಮಾರನಂತೆ ಸಿಂಗರಿಸಿಕೊಂಡು ಬಂದರೂ ಕೂಡ ಅವಳು ಅವನನ್ನು ಗಮನಿಸಲಿಲ್ಲ. ಅವಳು ಹಳದಿ ಗುಲಾಬಿ ಹೂವನ್ನು ಯಾವ ದುರುದ್ದೇಶವಿಲ್ಲದೆ, ತಮಾಷೆ ಎನ್ನುವಂತೆ ಹಾಗೆ ಮಾಡಿದ ಧೈರ್ಯಕ್ಕಾಗಿ ಸ್ವೀಕರಿಸಿದ್ದಳು ಮತ್ತು ಅವನ ಮುಖ ಸರಿಯಾಗಿ ನೋಡಬೇಕೆಂದಲ್ಲದೆ ತನ್ನ ಮುಖವನ್ನು ತೋರಿಸುವುದಕ್ಕೆಂದು ಪರದೆಯನ್ನು ಸರಿಸಿರಲಿಲ್ಲ. +ನಿಜಕ್ಕೂ ಸುಂದರಿ ರೆಮಿದಿಯೋಸ್ ಈ ಪ್ರಪಂಚದವಳಾಗಿರಲಿಲ್ಲ. ಅವಳು ಖುತುಮತಿಯಾಗಿ ಬಹಳ ಕಾಲವಾಗಿದ್ದರೂ ಸಾಂತ ಸೋಫಿಯಾ ದೆಲಾ ಪಿಯದಾದ್ ಅವಳಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಬೇಕಾಗಿತ್ತು. ಅವಳು ತನ್ನನ್ನು ತಾನು ನೋಡಿಕೊಳ್ಳಲು ಸಾಧ್ಯವಾದಾಗಲೂ, ಗೋಡೆಯ ಮೇಲೆ ಪ್ರಾಣಿಗಳನ್ನು ಚಿತ್ರಿಸದಿರುವಂತೆ ಅವಳ ಮೇಲೆ ಕಣ್ಣಿಡಬೇಕಾಗಿತ್ತು. ಓದು ಬರಹ ಕಲಿಯದೆ ಅವಳಿಗೆ ಇಪ್ಪತ್ತು ವರ್ಷವಾಗಿತು. ಟೇಬಲ್ ಮೇಲಿನ ಬೆಳ್ಳಿಯ ಸಲಕರಣೆಗಳನ್ನು ಉಪಯೋಗಿಸಲು ಬರುತ್ತಿರಲಿಲ್ಲ ಮತ್ತು ಎಲ್ಲ ರೀತಿಯ ನಡವಳಿಕೆಯನ್ನು ತಿರಸ್ಕರಿಸಿದ್ದ ಸ್ವಭಾವದಿಂದಾಗಿ ಅವಳು ಮನೆಯಲ್ಲಿ ಬೆತ್ತಲೆ ಓಡಾಡುತ್ತಿದ್ದಳು. ರಕ್ಷಣೆಗಳಿರದ ಯುವ ಕಮಾಂಡರ್ ಅವಳ ಬಗ್ಗೆ ತನ್ನ ಪ್ರೇಮವನ್ನು ತಿಳಿಸಿದಾU, ಅವಳು ಅವನನ್ನು ನಿರಾಕರಿಸಿದಳು. ಏಕೆಂದರೆ ಅವನ ಅವಿವೇಕ ಅವಳಿಗೆ ಗಾಬರಿ ಹುಟ್ಟಿಸಿತ್ತು. ಅವಳು ಅಮರಾಂತಳಿಗೆ, “ನೋಡು, ಅವನೆಷ್ಟು ಸರಳ ವ್ಯಕ್ತಿ. ಅವ್ನು ನನ್ನಿಂದಾಗಿ ಸಾಯ್ತಾನಂತೆ, ನಾನು ವಿಷ ಅನ್ನೋ ಹಾಗೆ” ಎಂದಳು. ಅವನು ನಿಜವಾಗಿಯೂ ಅವಳ ಕಿಟಕಿಯ ಹತ್ತಿರ ಸತ್ತು ಬಿದ್ದದ್ದನ್ನು ಅವರು ಕಂಡ ಮೇಲೆ, ಸುಂದರಿ ರೆಮಿದಿಯೋಸ್ ಅವನ ಬಗ್ಗೆ ಇದ್ದ ಮೊದಲಿನ ಅಭಿಪ್ರಾಯವನ್ನು ಸ್ಥಿರಗೊಳಿಸಿದಳು. +ಅವಳು, “ಹೇಳಿದ್ನಲ್ಲ, ಅವನು ನಿಜವಾಗ್ಲೂ ಸರಳ ಮನುಷ್ಯ” ಎಂದಳು. ಅವಳಿಗೆ ಹೊರಗಿನ ನಡವಳಿಕೆಯ ಆಚೆಗಿನ ವಾಸ್ತವತೆಯನ್ನು ಕಾಣಲು ತೂರಿ ಬಂದ ಬೆಳಕೊಂದು ಅವಕಾಶವನ್ನು ದೊರಕಿಸಿ ಕೊಟ್ಟಹಾಗಾಯಿತು. ಕನಿಷ್ಠ ಪಕ್ಷ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ದೃಷ್ಟಿಕೋನ ಅದಾಗಿತ್ತು. ಏಕೆಂದರೆ ಅವನಿಗೆ ಎಲ್ಲರೂ ತಿಳಿದ ಹಾಗೆ ಸುಂದರಿ ರೆಮಿದಿಯೋಸ್ ಬುದ್ಧಿಮಾಂದ್ಯೆಯಲ್ಲ ಆದರೆ ಅದಕ್ಕೆ ವ್ಯತಿರಿಕ್ತವಾದವಳು ಎಂದು ಭಾವಿಸಿದ್ದ. ಅವನು, “ಇದೊಂದು ರೀತೀಲಿ ಇಪ್ಪತ್ತು ವರ್ಷದ ಯುದ್ಧದಿಂದ ವಾಪಸು ಬಂದ ಹಾಗೆ” ಎನ್ನುತ್ತಿದ್ದ. ಉರ್ಸುಲಾ ಮಾತ್ರ ಇಡೀ ಸಂಸಾರಕ್ಕೆ, ಅತ್ಯಂತ ಪರಿಶುದ್ಧವಾದವಳನ್ನು ಕೊಟ್ಟಿದ್ದಕ್ಕೆ ತನ್ನಷ್ಟಕ್ಕೆ ದೇವರನ್ನು ವಂದಿಸಿದಳು. ಆದರೆ ಅದೇ ಸಮಯದಲ್ಲಿ ಅವಳ ಸೌಂದರ್ಯದಿಂದ ವಿಚಲಿತಗೊಂಡಿದ್ದಳು. ಏಕೆಂದರೆ ಅದು ಅವಳ ಮುಗ್ಧತೆಯ ಕೇಂದ್ರದಲ್ಲಿದ್ದ ಪೈಶಾಚಿಕ ಬಲೆಯಂತೆ ಕಂಡಿತ್ತು. ಅದಕ್ಕಾಗಿಯೇ ಅವಳನ್ನು ಹೊರ ಜಗತ್ತಿನಿಂದ ದೂರವಿಡಲು ಪ್ರಪಂಚದ ಎಲ್ಲ ಪ್ರಲೋಭನೆಗಳಿಂದ ರಕ್ಷಿಸಲು ನಿರ್ಧರಿಸಿದ್ದಳು. ಆದರೆ ಅವಳಿಗೆ ಸುಂದರಿ ರೆಮಿದಿಯೋಸ್, ಅವಳ ತಾಯಿಯ ಗರ್ಭದಲ್ಲಿರುವಾಗಲೇ ನೀತಿ ಭ್ರಷ್ಟತೆಯಿಂದ ಸುರಕ್ಷಿತವಾಗಿದ್ದಳು ಎನ್ನುವುದರ ಅರಿವಿರಲಿಲ್ಲ. ಅವಳನ್ನು ಗೊಂದಲದ ಜಾತ್ರೆಯ ಸುಂದರಿ ಎಂದು ಆರಿಸುವರೆಂದು ಅವಳಿಗೆ ಹೊಳೆಯಲೇ ಇಲ್ಲ. ಆದರೆ ಹುಲಿಯ ವೇಷ ಹಾಕಿ ವಿಚಿತ್ರವಾಗಿ ವರ್ತಿಸಬಹುದೆಂಬ ಉತ್ಸಾಹದಿಂದ ಜಾತ್ರೆ ಎಂದರೆ ಅವಳು ಭಾವಿಸಿದ್ದಂತೆ ಸೌಂದರ್ಯ ಸ್ವರ್ಧೆ ಅಲ್ಲವೆಂದೂ, ಅದೊಂದು ಕ್ಯಾಥೊಲಿಕ್ ಸಂಪ್ರದಾಯವೆಂದೂ ಅವಳಿಗೆ ಮನದಟ್ಟು ಮಾಡಿಸಲು ಫಾದರ್ ಆಂಟೋನಿಯೋ ಇಸಬಲ್‌ನನ್ನು ಮನೆಗೆ ಕರೆದುಕೊಂಡು ಬಂದ. ಕೊನೆಗೆ ಮನಸ್ಸಿಲ್ಲದೆ ಕಿರೀಟಧಾರಣೆಗೆ ಒಪ್ಪಿಗೆ ಕೊಟ್ಟಳು. +ರೆಮಿದಿಯೋಸ್ ಬ್ಯುಂದಿಯಾ ಹಬ್ಬದ ಸ್ವತಂತ್ರ ಆಡಳಿತ ವಹಿಸುತ್ತಾಳೆನ್ನುವ ಸುದ್ದಿ ಕೆಲವೇ ಗಂಟೆಗಳಲ್ಲಿ ಆ ಪ್ರದೇಶವನ್ನು ದಾಟಿ, ಅವಳ ಸೌಂದರ್ಯದ ಹಿರಿಮೆ ಗೊತ್ತಿರದ ದೂರದ ಸ್ಥಳಗಳಿಗೆ ತಲುಪಿತು ಅವಳನ್ನು ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಕೇತವೆಂದು ಇನ್ನೂ ತಿಳಿದವರಲ್ಲಿ ಆತಂಕವನ್ನು ಹುಟ್ಟಿಸಿತು. ಆದರೆ ಅವರ ಆತಂಕಕ್ಕೆ ಕಾರಣವಿರಲಿಲ್ಲ. ಆ ಸಮಯದಲ್ಲಿ ಯಾರಾದರೂ ಅಪಾಯವಿಲ್ಲದ ಮನುಷ್ಯನಿದ್ದಿದ್ದರೆ, ಅದು ದೇಶದ ವಾಸ್ತವದೊಡನೆ ಎಲ್ಲ ಸಂಪರ್ಕಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದ, ವಯಸ್ಸಾಗುತ್ತಿದ್ದ ಹಾಗೂ ಭ್ರಮನಿರಸನಗೊಂಡ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ. ವರ್ಕ್‌ಶಾಪ್‌ನಲ್ಲಿ ಸೇರಿಹೋಗಿದ್ದ ಅವನಿಗೆ ಉಳಿದ ಪ್ರಪಂಚದ ಜೊತೆ ಇದ್ದ ಸಂಬಂಧ, ಬಂಗಾರದ ಸಣ್ಣ ಮೀನುಗಳ ತಯಾರಿಕೆ ಮಾತ್ರ. ಶಾಂತಿಯ ಮೊದಲ ದಿನಗಳಲ್ಲಿ ಅವನ ಮನೆಯ ರಕ್ಷಣೆಗಿದ್ದ ಸೈನಿಕರಲ್ಲೊಬ್ಬ ಆ ಪ್ರದೇಶದ ಹಳ್ಳಿಗಳಲ್ಲಿ ಅವುಗಳನ್ನು ಮಾರುತ್ತಿದ್ದ ಮತ್ತು ನಾಣ್ಯ ಹಾಗೂ ಸುದ್ದಿಗಳ ಜೊತೆ ವಾಪಸು ಬರುತ್ತಿದ್ದ. ಸಂಪ್ರದಾಯವಾದಿಗಳ ಸರ್ಕಾರ ಉದಾರವಾದಿಗಳ ಬೆಂಬಲದಿಂದ ಒಂದು ಸೂಚಿಪಟ್ಟಿ ರೂಪಿಸಿ ಅದರ ಪ್ರಕಾರ ಪ್ರತಿಯೊಬ್ಬ ಅಧ್ಯಕ್ಷನೂ ನೂರು ವರ್ಷ ಅಧಿಕಾರದಲ್ಲಿ ಇರುವಂತೆ ಮಾಡುತ್ತದೆ ಎಂದು ಅವನು ಹೇಳುತ್ತಿದ್ದ. ಪೂಜ್ಯ ಪೀಠದ ಜೊತೆ ಹೊಂದಾಣಿಕೆಗೆ ಕೊನೆಗೆ ಸಹಿ ಬಿದ್ದಿದ್ದಾಗಿಯೂ, ರೋಮ್‌ನಿಂದ ವಜ್ರಗಳ ಕಿರೀಟ ಮತ್ತು ಬಂಗಾರದ ಸಿಂಹಾಸನದ ಜೊತೆ ಧರ್ಮಾಧ್ಯಕ್ಷನೊಬ್ಬ ಬಂದಿರುವುದಾಗಿಯೂ ಮತ್ತು ಮಂಡಿಯೂರಿ ಕುಳಿತ ಉದಾರವಾದಿಗಳು ಅವನ ಉಂಗುರಕ್ಕೆ ಮುತ್ತಿಡುವ ಫೋಟೋಗಳನ್ನು ತೆಗೆಸಿಕೊಂಡಿದ್ದಾಗಿಯೂ ತಿಳಿಸಿದ. ಜೊತೆಗೆ ರಾಜಧಾನಿಯ ಮುಖಾಂತರ ಹಾದು ಹೋಗುತ್ತಿದ್ದ ಸ್ಪ್ಯಾನಿಷ್ ಕಂಪನಿಯ ಪ್ರಮುಖ ಮಹಿಳೆಯನ್ನು, ಮುಸುಕು ಹಾಕಿಕೊಂಡಿದ್ದ ದಾರಿಹೋಕರು ಎತ್ತಿಕೊಂಡು ಹೋದರು ಮತ್ತು ಅನಂತರದ ಭಾನುವಾರ ಗಣತಂತ್ರದ ಅಧ್ಯಕ್ಷರ ಬೇಸಿಗೆ ಮನೆಯಲ್ಲಿ, ಅವಳು ಬೆತ್ತಲೆ ನರ್ತಿಸಿದಳೆಂದು ಹೇಳಿದ. ಕರ್ನಲ್ ಅವನಿಗೆ, “ನಂಗೆ ರಾಜಕೀಯದ ಬಗ್ಗೆ ಹೇಳ್ಬೇಡ ನಮ್ಮ ಕೆಲ್ಸ ಸಣ್ಣ ಮೀನುಗಳನ್ನು ಮಾರೋದಷ್ಟೆ” ಎಂದು ಹೇಳುತ್ತಿದ್ದ. ಅವನು ವರ್ಕ್‌ಶಾಪ್‌ನಿಂದ ಸಿರಿವಂತನಾಗುತ್ತಿದ್ದರಿಂದಲೇ ದೇಶದ ಪರಿಸ್ಥಿತಿಯ ಬಗ್ಗೆ ಕೇಳಿಸಿಕೊಳ್ಳಲು ಇಷ್ಟಪಡದಿರುವುದಕ್ಕೆ ಕಾರಣ, ಎಂಬ ಗಾಳಿಮಾತು ಉರ್ಸುಲಾಳ ಕಿವಿಗೆ ಬಿದ್ದಾಗ, ಅವಳು ನಕ್ಕಳು. ವ್ಯವಹಾರ eನ ಹೆಚ್ಚಿಗೆ ಇದ್ದ ಅವಳಿಗೆ ಕರ್ನಲ್‌ನ ಉದ್ದಿಮೆ ಸರಿ ಕಾಣಲಿಲ್ಲ. ಏಕೆಂದರೆ ಅವನು ಬಂಗಾರದ ನಾಣ್ಯಗಳಿಗಾಗಿ ಸಣ್ಣ ಮೀನನ್ನು ಕೊಡುತ್ತಿದ್ದ ಮತ್ತು ಬಂಗಾರದ ನಾಣ್ಯಗಳನ್ನು ಸಣ್ಣ ಮೀನುಗಳಾಗಿ ಪರಿವರ್ತಿಸುತ್ತಿದ್ದ. ಇದು ಹೀಗೆಯೇ ಮುಂದುವರೆಯುತ್ತಿತ್ತು. ಇದರಿಂದಾಗಿ ಅವನು ಹೆಚ್ಚಿಗೆ ಮಾರಿದಷ್ಟೂ ಆ ವಿಷವೃತ್ತವನ್ನು ಸಮಾಧಾನ ಪಡಿಸಲು, ಇನ್ನೂ ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡಬೇಕಾಗಿತ್ತು. +ಆದರೆ ನಿಜವಾಗಲೂ ಅವನಿಗೆ ಆಸಕ್ತಿ ಇದ್ದದ್ದು ತಯಾರಿಕೆಯಲ್ಲಲ್ಲ, ಕೆಲಸ ಮಾಡುವುದರಲಿ. ಅವನಿಗೆ ಈಜುರೆಕ್ಕೆಗಳನ್ನು ಹೊಂದಿಸಲು, ಕಣ್ಣಿಗೆ ಮಾಣಿಕ್ಯ ಜೋಡಿಸಿಡಲು, ಪುಪ್ಫಸಗಳಿಗೆ ಮಿರುಗು ಕೊಡಲು ಮತ್ತು ಪೊರೆಗಳನ್ನಿಡಲು, ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದ್ದರಿಂದ ಯುದ್ಧದ ಭ್ರಮನಿರಸನ ತುಂಬಲು ಖಾಲಿಯಿದ್ದ ಅರೆಕ್ಷಣವೂ ಇರಲಿಲ್ಲ. ಅದರೆ ಕಲಾವಂತಿಕೆ ಎಷ್ಟು ಸೂಕ್ಷ್ನವಾಗಿತ್ತೆಂದರೆ, ಯುದ್ಧದ ಅಷ್ಟೂ ವರ್ಷಗಳಲ್ಲಿ ವಯಸ್ಸಾದಕ್ಕಿಂತ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿಗೆ ವಯಸ್ಸಾದವನಂತಾದ ಮತ್ತು ಅವನು ಕುಳಿತುಕೊಳ್ಳುವ ಭಂಗಿ ಬೆನ್ನನ್ನು ಬಾಗಿಸಿತ್ತು, ಸೂಕ್ಷ್ಮ ಗಮನ ಕಣ್ಣನ್ನು ದಣಿಸಿತ್ತು. ಆದರೆ ಮನಸ್ಸನ್ನು ತೀವ್ರವಾಗಿ ಕೇಂದ್ರಿಕರಿಸುತ್ತಿದ್ದದ್ದು, ಅವನಿಗೆ ಪ್ರಶಾಂತ ಭಾವನೆಯನ್ನು ತಂದುಕೊಟ್ಟಿತ್ತು. ಅವನು ಕೊನೆಯ ಬಾರಿಗೆ ಯುದ್ಧಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಆಸಕ್ತಿ ತೋರಿಸಿದ್ದು ಯಾವಾಗೆಂದರೆ ಜೀವನಾದ್ಯಂತದ ನಿವೃತ್ತಿ ವೇತನಕ್ಕಾಗಿ ಎರಡೂ ಪಾರ್ಟಿಯ ಹಳಬರು ಅವನ ಬೆಂಬಲವನ್ನು ಅಪೇಕ್ಷಿಸಿದಾಗ. ಅದರ ಬಗ್ಗೆ ಮುಂಚೆಯಿಂದಲೂ ವಾಗ್ದಾನವಿತ್ತು ಮತ್ತು ಇನ್ನೇನು ಅದು ಕಾರ್ಯರೂಪಕ್ಕೆ ಬರುವುದರಲ್ಲಿತ್ತು. ಅವನು ಅವರಿಗೆ, “ಅದನ್ನು ಮರ್‍ತು ಬಿಡಿ…. ಸಾಯುವ ದಿನದ ತನಕ ಅದಕ್ಕಾಗಿ ಕಾಯುವ ಹಿಂಸೆಯಿಂದ ತಪ್ಪಿಸಿಕೊಳ್ಳೋದಕ್ಕೆ, ಪೆನ್ಷನ್‌ನ ನಾನು ಕಣ್ಣೆತ್ತಿ ನೋಡೋದಿಲ್ಲ” ಎಂದ. ಪ್ರಾರಂಭದಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಸಾಯಂಕಾಲ ಬರುತ್ತಿದ್ದ ಮತ್ತು ಅವರಿಬ್ಬರೂ ಮುಂಬಾಗಿಲಲ್ಲಿ ಕುಳಿತುಕೊಂಡು ಹಳೆಯ ದಿನಗಳ ಬಗ್ಗೆ ಮಾತಾಡುತ್ತಿದ್ದರು. ಆದರೆ ಬೋಳಾದ ತಲೆಯ, ಅಕಾಲ ವೃದ್ಧಾಪ್ಯಕ್ಕೆ ಜಾರುತ್ತಿದ್ದ ಆ ಮನುಷ್ಯ ತನ್ನಲ್ಲಿ ಹುಟ್ಟಿಸುತ್ತಿದ್ದ ನೆನಪುಗಳನ್ನು, ಅಮರಾಂತಳಿಗೆ ತಡೆದುಕೊಳ್ಳಲಾಗಲಿಲ್ಲ. ಅವನನ್ನು ಇರಿತದ ಮಾತುಗಳಿಂದ ಯಾತನೆಗೆ ಗುರಿಪಡಿಸಿ, ವಿಶೇಷ ಸಂದರ್ಭಕ್ಕಲ್ಲದೆ ಮತ್ತೆ ಬಾರದಿರುವಂತೆ ಮಾಡಿದಳು. ಅವನು ಕೊನೆಗೆ ಪಾರ್ಶ್ವವಾಯುವಿನಿಂದ ಕಣ್ಮರೆಯಾದ. ಮಿತಭಾಷಿಯಾಗಿ, ಮೌನವಾಗಿ, ಇಡೀ ಮನೆಯನ್ನು ಅಲ್ಲಾಡುವಂತೆ ಮಾಡುತ್ತಿದ್ದ, ಸಂವೇದನೆ ರಹಿತನಾಗಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಒಳ್ಳೆಯ ವೃದ್ಧಾಪ್ಯದ ಗುಟ್ಟು, ಏಕಾಂತದ ಜೊತೆ ಗೌರವಯುತವಾದ ಒಪ್ಪಂದ ಎನ್ನುವುದು ಮಾತ್ರ ಅರ್ಥವಾಗುತ್ತಿತ್ತು. ಅವನು ಸಣ್ಣ ನಿದ್ದೆಯ ನಂತರ ಬೆಳಗಿನ ಜಾವ ಐದು ಗಂಟೆಗೆ ಎದ್ದು ಅಡುಗೆ ಮನೆಯಲ್ಲಿ ಎಂದಿನಂತೆ ಒಂದು ಮಗ್ ಕಹಿ ಕಾಫಿ ಕುಡಿದು ಬಾಗಿಲು ಹಾಕಿಕೊಂಡು ವರ್ಕ್‌ಶಾಪ್‌ನಲ್ಲಿ ಇದ್ದು ಬಿಡುತ್ತಿದ್ದ. ಮಧ್ಯಾಹ್ನ ನಾಲ್ಕಕ್ಕೆ ಸ್ಟೂಲ್ ಎಳೆದುಕೊಂಡು ಗುಲಾಬಿ ಪೂದೆಗಳ ಝಳಪನ್ನು ಗಮನಿಸದೆ ಅಥವಾ ಆ ಸಮಯದ ಸಂಭ್ರಮದ ಬೆಳಕನ್ನು ಅಥವಾ ಸಾಯಂಕಾಲ ಸ್ವಷ್ಟವಾಗಿ ಗೋಚರಿಸುತ್ತಿದ್ದ ಕುದಿಯುವ ಪಾತ್ರೆಯಂಥ ವೇದನೆಯನ್ನು ಗಮನಿಸದೆ, ಅಂಗಳಕ್ಕೆ ಹೋಗಿ ಸೊಳ್ಳೆಗಳು ಮುತ್ತುವ ತನಕ ಮುಂಬಾಗಿಲಲ್ಲಿ ಕುಳಿತಿರುತ್ತಿದ್ದ. ಒಮ್ಮೆ ಯಾರೋ ಒಬ್ಬರು ಅವನನ್ನು ಏಕಾಂತದಿಂದ ಕದಲಿಸುವ ಧೈರ್ಯ ಮಾಡಿದರು. +ಅವರು, “ಹೇಗಿದ್ದೀರಿ, ಕರ್ನಲ್?” ಎಂದು ಲೋಕಾಭಿರಾಮವಾಗಿ ಕೇಳಿದರು. +ಅವನು ಅದಕ್ಕೆ, “ಇಲ್ಲೆ ಕೂತ್ಕೊಂಡಿದೀನಿ. ನನ್ನ ಶವಯಾತ್ರೆ ಹಾದು ಹೋಗೋದಕ್ಕೆ ಕಾಯ್ತಾ ಇದೀನಿ” ಎಂದ. +ಇದರಿಂದ ಕಿರೀಟ ಧಾರಣೆಗೆ ಸಂಬಂಧಿಸಿದಂತೆ ಅವನ ಮನೆತನದ ಹೆಸರು ಮತ್ತೆ ಕಾಣಿಸಿಕೊಂಡದ್ದರಿಂದ ಉಂಟಾದ ಆತಂಕಕ್ಕೆ ಕಾರಣವಿರಲಿಲ್ಲ. ಆದರೂ ಬಹಳ ಜನ ಆ ರೀತಿಯಲ್ಲಿ ಯೋಚನೆ ಮಾಡಿರಲಿಲ್ಲ. ಆ ಅನಾಹುತದ ಸರಳತೆ ಆ ಭೀತಿಯನ್ನು ಹುಟ್ಟಿಸಿತ್ತು. ಇಡೀ ಊರು ಮುಖ್ಯ ಚೌಕದ ಬಳಿ ಸಂತೋಷ, ಸಡಗರದಿಂದ ನೆರೆದಿತ್ತು. ಜಾತ್ರೆ ತನ್ನ ಹುಚ್ಚಿನ ಪರಮಾವಧಿಯನ್ನು ಮುಟ್ಟಿತ್ತು ಮತ್ತು ಅವ್ರೇಲಿಯಾನೋ ಸೆಗುಂದೋ ಹುಲಿಯ ವೇಷ ಹಾಕಬೇಕೆಂಬ ಬಹಳ ದಿನಗಳ ಕನಸನ್ನು ಪೂರೈಸಿಕೊಂಡ ಮತ್ತು ಕೇಕೆ ಹಾಕುತ್ತಿದ್ದ ಜನ ಸಮುದಾಯದ ಮುಂದೆ ನಡೆದ ಹಾಗೂ ತುಂಬ ಹೆಚ್ಚು ಗರ್ಜಿಸಿ ಗಂಟಲು ಅವನ ಕಟ್ಟಿತು. ಆಗ ಹೊರಗೆ ರಸ್ತೆಯಲ್ಲಿ, ಕಲ್ಪಿಸಿಕೊಳ್ಳಲು ಸಾಧ್ಯವಾಗುವ ಅತ್ಯಂತ ಸುಂದರವಾದ ಹೆಣ್ಣನ್ನು ಬಂಗಾರದ ಲೇಪದ ಡೋಲಿಯಲ್ಲಿ ಅನೇಕ ಜನರು ಹೊತ್ತು ತರುತ್ತಿದ್ದರು. ಮಕೋಂದೋ ವಾಸಿಗಳು ಪಚ್ಚೆಗಳಿದ್ದ ಕಿರೀಟ ಧರಿಸಿ ಚರ್ಮದ ಜುಬ್ಬ ತೊಟ್ಟು ಮಿರುಗುತ್ತಿದ್ದವಳನ್ನು ಸರಿಯಾಗಿ ನೋಡಬೇಕೆಂದು ತಮ್ಮ ಮುಖವಾಡಗಳನ್ನು ತೆಗೆದರು. ಅವಳಿಗೆ ನೈತಿಕವಾದ ಅಧಿಕಾರವಿದ್ದಂತಿತ್ತು ಮತ್ತು ಶ್ರೇಷ್ಠವಾದ ಬಳೆ ಮತ್ತು ಕ್ರೇಪ್ ಪೋಷಾಕಿನವಳಾಗಿರಲಿಲ್ಲ. ಸಾಕಷ್ಟು ಒಳಗಿನ ವಿಷಯವನ್ನು ತಿಳಿದವರು ಅದೊಂದು ಪ್ರಚೋದನೆಯ ಅಂಶವೆಂದು ಅನುಮಾನಿಸಿದರು. ಆದರೆ ಅವ್ರೇಲಿಯಾನೋ ಸೆಗುಂದೋ ತಬ್ಬಿಬ್ಬಾದದ್ದನ್ನು ನಿಯಂತ್ರಿಸಿಕೊಂಡು ಮತ್ತು ಹೊಸದಾಗಿ ಬಂದವರನ್ನು ಗೌರವಪೂರ್ಣ ಅತಿಥಿಗಳೆಂದು ಘೋಷಿಸಿದ ಮತ್ತು ಬುದ್ಧಿವಂತಿಕೆಯಿಂದ ಸುಂದರಿ ರೆಮಿದಿಯೋಸ್ ಹಾಗೂ ಆಗಮಿಸಿದ್ದ ರಾಣಿಯನ್ನು ಒಂದೇ ವೇದಿಕೆಯ ಮೇಲೆ ಕೂಡಿಸಿದ. ಮಧ್ಯ ರಾತ್ರಿಯ ತನಕ ಅರಬ್ಬೀಗಳ ಹಾಗೆ ಮರೆಮಾಚಿಕೊಂಡವರು ಸಂಭ್ರಮದಲ್ಲಿ ಪಾಲುಗೊಂಡರು ಮತ್ತು ಪಟಾಕಿ ಹೊಡೆದು, ದೊಂಬರಾಟದಿಂದ ಜಿಪ್ಸಿಗಳನ್ನು ನೆನಪಿಗೆ ತಂದು, ಹೆಚ್ಚು ಸೊಬಗನ್ನು ಒದಗಿಸಿಕೊಟ್ಟರು. ಇದ್ದಕ್ಕಿದ್ದಂತೆ ಸಮಾರಂಭದ ಉತ್ತುಂಗದಲ್ಲಿ ಯಾರೋ ಒಬ್ಬ ಪರಿಸ್ಥಿತಿಯನ್ನು ಏರುಪೇರು ಮಾಡಿದ. +ಅವನು, “ಉದಾರವಾದಿ ಪಾರ್ಟಿ ಚಿರಾಯುವಾಗಲಿ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚಿರಾಯುವಾಗಲಿ” ಎಂದು ಕೂಗಿದ. +ಬಂದೂಕಿನ ಗುಂಡಿನ ಶಬ್ದಗಳು ಪಟಾಕಿಯ ಸಂಭ್ರಮದ ಶಬ್ದವನ್ನು ಮುಳುಗಿಸಿದವು ಮತ್ತು ಆರ್ತನಾದ ಸಂಗೀತವನ್ನು ಮುಳುಗಿಸಿತು ಹಾಗೂ ಸಂತೋಷ ಗಾಬರಿಯಾಗಿ ಮಾರ್ಪಟ್ಟಿತು. ಅನೇಕ ವರ್ಷಗಳ ನಂತರವೂ ಆಗಮಿಸಿದ ರಾಣಿಯ ರಾಜರಕ್ಷಣಾ ದಳದವರು ತಮ್ಮ ವಿಚಿತ್ರ ಉಡುಪಿನೊಳಗೆ ಸರ್ಕಾರ ಕೊಟ್ಟ ಬಂದೂಕುಗಳನ್ನು ಅಡಗಿಸಿಟ್ಟುಕೊಂಡ ಆಯುಧಧಾರಿ ಸೈನಿಕರೆಂದೇ ಹೇಳುವವರಿದ್ದರು. ಸರ್ಕಾರ ವಿಶೇಷ ಹೇಳಿಕೆಯೊಂದರಿಂದ ಅದನ್ನು ಅಲ್ಲಗಳೆಯಿತು ಮತ್ತು ಆ ಘೋರ ಘಟನೆಯ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಲು ವಾಗ್ದಾನ ಮಾಡಿತು. ಆದರೆ ಸತ್ಯ ಸಂಗತಿ ಬೆಳಕಿಗೆ ಬರಲಿಲ್ಲ ಮತ್ತು ಯಾವಾಗಲೂ ದೊರೆತ ವಿವರಣೆಯೆಂದರೆ ರಾಜರಕ್ಷಣಾ ದಳದವರು ಯಾವ ಬಗೆಯ ಪ್ರಚೋದನೆಯೂ ಇಲ್ಲದೆ, ಅವರ ಕಮಾಂಡರ್‌ನ ಸೂಚನೆಯ ಮೇರೆಗೆ ಆಯಕಟ್ಟು ಸ್ಥಳಗಳಲ್ಲಿ ನಿಂತುಕೊಂಡು, ಗುಂಪಿನ ಮೇಲೆ ಯಾವುದೇ ಕರುಣೆಯಿಲ್ಲದೆ ಗುಂಡು ಹಾರಿಸಿದರು. ಎಲ್ಲವೂ ಮತ್ತೆ ಶಾಂತ ಸ್ಥಿತಿಗೆ ಬಂದ ಮೇಲೆ ಒಬ್ಬನೇ ಒಬ್ಬ ಸುಳ್ಳು ಅರಬ್ಬೀ ವೇಷದವನೂ ಊರಿನಲ್ಲಿ ಇರಲಿಲ್ಲ. ಚೌಕದಲ್ಲಿ ಸತ್ತವರು, ಗಾಯಾಳುಗಳು ಅನೇಕರಿದ್ದರು: ಒಂಬತ್ತು ವಿದೂಷಕರು, ನಾಲ್ವರು ಸ್ಥಳೀಯರು, ಹದಿನೇಳು ಪ್ಲೇಯಿಂಗ್ ಕಾರ್ಡ್ ರಾಜರು, ಒಬ್ಬ ಭೂತದ ವೇಷದವನು, ಮೂವರು ಸಹಾಯಕರು, ಫಾನ್ಸ್‌ನ ಇಬ್ಬರು ಶ್ರೀಮಂತರು ಮತ್ತು ಮೂವರು ಜಪಾನಿನ ರಾಜಕುಮಾರಿಯರು. ಆ ಗಾಬರಿಯ ಗೊಂದಲದಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಸುಂದರಿ ರೆಮಿದಿಯೋಸ್‌ಳನ್ನು ರಕ್ಷಿಸಲು ಅವಕಾಶ ಮಾಡಿಕೊಂಡ ಮತ್ತು ಅವ್ರೇಲಿಯಾನೋ ಸೆಗುಂದೋ ಬಟ್ಟೆ ಹರಿದ, ಚರ್ಮದ ಜುಬ್ಬಕ್ಕೆ ರಕ್ತ ಅಂಟಿದ್ದ ಆಗಂತುಕ ರಾಣಿಯನ್ನು, ತನ್ನ ಕೈಯಲ್ಲಿ ಹೊತ್ತುಕೊಂಡು ಮನೆಗೆ ಹೋದ. ಅವಳ ಹೆಸರು ಫೆರ್ನಾಂಡ ದೆಲ್ ಕಾರ್ಪಿಯೋ. ಅವಳನ್ನು ಆ ಪ್ರದೇಶದ ಐದು ಸಾವಿರ ಸುಂದರಿಯರಲ್ಲಿ ಅತ್ಯಂತ ಸುಂದರಿ ಎಂದು ಆರಿಸಲಾಗಿತ್ತು ಮತ್ತು ಅವರು ಅವಳನ್ನು ಮಡಗಾಸ್ಕರ್‌ನ ರಾಣಿಯೆಂದು ಹೆಸರಿಸುವುದಾಗಿ ಮಾತುಕೊಟ್ಟು, ಮಕೋಂದೋಗೆ ಕರೆದುಕೊಂಡು ಬಂದಿದ್ದರು. ಉರ್ಸುಲಾ ಅವಳನ್ನು ತನ್ನ ಸ್ವಂತ ಮಗಳಂತೆ ನೋಡಿಕೊಂಡಳು. ಊರಿನವರು ಅವಳ ಮುಗ್ಧತೆಯನ್ನು ಅನುಮಾನಿಸುವುದಕ್ಕಿಂತ, ಅವಳ ಅವಸ್ಥೆಗೆ ಮರುಕ ತೋರಿಸಿದರು. ಹತ್ಯಾಕಾಂಡ ನಡೆದು ಆರು ತಿಂಗಳ ನಂತರ ಗಾಯಾಳುಗಳು ಗುಣವಾದ ಮೇಲೆ ಮತ್ತು ಸಾಮೂಹಿಕ ಗೋರಿಯ ಮೇಲಿನ ಹೂಗಳು ಹುಡಿಯಾದ ಮೇಲೆ, ಅವ್ರೇಲಿಯಾನೋ ಸೆಗುಂದೋ ತನ್ನ ತಂದೆಯ ಜೊತೆ ದೂರದ ಪಟ್ಟಣದಲ್ಲಿ ಇದ್ದ ಅವಳನ್ನು ಕರೆದುಕೊಂಡು ಬರಲು ಹೋದ ಮತ್ತು ಇಪ್ಪತ್ತು ದಿನ ನಡೆದ ಗದ್ದಲದ ಸಮಾರಂಭದಲ್ಲಿ ಮಕೋಂದೋದಲ್ಲಿ ಮದುವೆಯಾದ. +೧೧ +ಮದುವೆಯಾದ ಎರಡು ತಿಂಗಳ ನಂತರ ಅದು ಮುರಿದು ಬೀಳುವ ಹಂತಕ್ಕೆ ಬಂದಿತ್ತು. ಏಕೆಂದರೆ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್‌ಗೆ ಸಮಾಧಾನ ಮಾಡುವ ಪ್ರಯತ್ನದಲ್ಲಿ ಅವಳಿಗೆ ಮಡಗಾಸ್ಕರ್‌ನ ರಾಣಿಯ ಹಾಗೆ ಉಡುಪು ತೊಡಿಸಿ ಒಂದು ಫೋಟೋ ತೆಗೆಸಿದ್ದ. ಈ ಸಂಗತಿ ಫೆರ್ನಾಂಡಳಿಗೆ ತಿಳಿದಾಗ ಮದುವಣಗಿತ್ತಿಯ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಯಾರಿಗೂ ಹೇಳದೆ ಕೇಳದೆ ಮಕೋಂದೋ ಬಿಟ್ಟು ಹೊರಟಳು. ಅವ್ರೇಲಿಯಾನೋ ಸೆಗುಂದೋ ಧಾವಿಸಿ ಹೋಗಿ, ಊರಾಚೆಯ ದಾರಿಯಲ್ಲಿ ತಡೆದ. ಅನೇಕ ರೀತಿಯಲ್ಲಿ ಕೇಳಿಕೊಂಡು ಮತ್ತು ತಾನು ಸುಧಾರಿಸುವುದಾಗಿ ಮಾತು ಕೊಟ್ಟ ಮೇಲೆ, ಅವಳನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ಸಾಧ್ಯವಾಯಿತು ಮತ್ತು ಇಟ್ಟುಕೊಂಡವಳನ್ನು ಕೈ ಬಿಟ್ಟ. +ತನ್ನ ಶಕ್ತಿಯ ಬಗ್ಗೆ ಅರಿವಿದ್ದ ಪೆತ್ರಾ ಕೊತೆಸ್ ಯಾವುದೇ ರೀತಿಯ ಆತಂಕವನ್ನು ವ್ಯಕ್ತಪಡಿಸಲಿಲ್ಲ. ಅವಳು ಅವನನ್ನು ಗಂಡಸನ್ನಾಗಿ ಮಾಡಿದ್ದಳು. ವಿಚಿತ್ರ ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡ ಅವಳು ಅವನನ್ನು ಮೆಲ್‌ಕಿಯಾದೆಸ್‌ನ ರೂಮಿನಿಂದ ಸೆಳೆದಾಗ ಅವನಿನ್ನೂ ಚಿಕ್ಕವನಾಗಿದ್ದ ಮತ್ತು ವಾಸ್ತವದ ಜೊತೆ ಸಂಪರ್ಕದ ಕೊರತೆ ಇತ್ತು. ಅವಳು ಅವನಿಗೆ ಈ ಪ್ರಪಂಚದಲ್ಲಿ ಒಂದು ಸ್ಥಾನವನ್ನು ದೊರಕಿಸಿಕೊಟ್ಟಿದ್ದಳು. ಸ್ವಭಾವತಃ ಅವನು ತನ್ನಷ್ಟಕ್ಕೆ ಅಂತರ್ಮುಖಿಯಾಗಿದ್ದು ಏಕಾಂತದ ಕಡೆ ಒಲವಿತ್ತು. ಅವಳು ಅದಕ್ಕೆ ವಿರುದ್ಧವಾದ ಮುಖ್ಯವಾದ, ಮುಕ್ತವಾದ ಸ್ವಭಾವವನ್ನು ಅವನಲ್ಲಿ ಮೈಗೂಡಿಸಿದಳು ಮತ್ತು ಬದುಕಲು ಉತ್ಸಾಹವನ್ನು ತುಂಬಿದ್ದಳು. ತಾನು ಹುಡುಗಿಯಾಗಿದ್ದಾಗಿನಿಂದಲೂ ಕಲ್ಪಿಸಿಕೊಂಡ ಹಾಗೆ ಅವನನ್ನು ವ್ಯಯಮಾಡುವ, ಸಂಭ್ರಮಿಸುವ ಮನುಷ್ಯನನ್ನಾಗಿ ಪರಿವರ್ತಿಸಿದ್ದಳು. ಕಾಲಕ್ರಮೇಣ ಎಲ್ಲರೂ ಮದುವೆಯಾಗುವ ಹಾಗೆ ಅವನೂ ಮದುವೆಯಾದ. ಅವಳಿಗೆ ಆ ಸುದ್ದಿಯನ್ನು ಹೇಳಲು ಅವನಿಗೆ ಧೈರ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಅವನು ಸಿಟ್ಟು, ಸೆಡವುಗಳ ಹುಡುಗುತನದ ಧೋರಣೆ ತಳೆದ. ಇದರಿಂದ ಪೆತ್ರಾ ಕೊತೆಸ್ ಸಂಬಂಧ ಮುರಿಯುತ್ತಾಳೆ ಎಂದುಕೊಂಡ. ಒಂದು ದಿನ ವಿನಾಕಾರಣ ಅವಳನ್ನು ಬೈದ ಹಾಗೆ ಮಾಡಿದಾಗ ಅವಳು ಅದರ ಉದ್ದೇಶ ಸಫಲವಾಗಲು ಬಿಡದೆ ನಿಜಾಂಶ ತೆರೆದಿಟ್ಟಳು, +“ಇದರರ್ಥ ಏನಂದ್ರೆ, ನೀವು ರಾಣೀನ ಮದ್ವೆ ಆಗ್ಬೇಕು,ಅಲ್ವ” ಎಂದಳು. +ಅವ್ರೇಲಿಯಾನೋ ಸೆಗುಂದೋ ರೋಷ ಉಕ್ಕಿದವನ ಹಾಗೆ ತೋರಿಸಿಕೊಂಡು ತನ್ನನ್ನು ತಪ್ಪು ತಿಳಿದುಕೊಂಡಿದ್ದಾಗಿ ಮತ್ತು ಅವಮಾನ ಮಾಡಿದ್ದಾಗಿ ಹೇಳಿ ಮತ್ತೆ ಅವಳ ಬಳಿಗೆ ಹೋಗಲಿಲ್ಲ. ಆದರೆ ಪೆತ್ರಾ ಕೊತೆಸ್ ಒಂದು ಕ್ಷಣವೂ ತನ್ನ ಸ್ತಿಮಿತ ಕಳೆದುಕೊಳ್ಳದೆ ಮದುವೆಯ ಸಂಗೀತ, ಪಟಾಕಿ ಸಿಡಿತ ಮತ್ತು ಸಂಭ್ರಮದ ಅಬ್ಬರಗಳನ್ನು, ಅವ್ರೇಲಿಯಾನೋ ನಡೆಸುತ್ತಿರುವ ಯಾವುದೋ ಹೊಸ ತುಂಟತನದ ರೀತಿಯೆಂದು ಕೇಳಿಸಿಕೊಂಡಳು. ಅವಳ ಬಗ್ಗೆ ಮರುಕ ತೋರಿಸಿದವರಿಗೆ ಮುಗುಳ್ನಕ್ಕು, “ಏನೂ ಯೋಚ್ನೆ ಮಾಡ್ಬೇಡಿ. ರಾಣಿ ನಂಗೋಸ್ಕರ ತಪ್ಪು ಮಾಡ್ತಾಳೆ” ಎಂದಳು. ನೆರಮನೆಯ ಹೆಂಗಸೊಬ್ಬಳು ಅವಳಿಗೆ ತನ್ನ ಪ್ರಿಯತಮನ ಚಿತ್ರದ ಎದುರು ಹಚ್ಚಿಡಲೆಂದು ಕ್ಯಾಂಡಲ್‌ಗಳನ್ನು ತಂದು ಕೊಟ್ಟಾಗ, “ಅವ್ರು ವಾಪಸು ಬರೋ ಹಾಗೆ ಮಾಡುವ ಕ್ಯಾಂಡಲ್ ಯಾವಾಗ್ಲೂ ಉರೀತಿರತ್ತೆ” ಎಂದು ನಿಗೂಢ ಭದ್ರ್ರತೆಯಿಂದ ಹೇಳಿದಳು. +ಅವಳು ನಿರೀಕ್ಷಿಸಿದ ಹಾಗೆ ಅವ್ರೇಲಿಯಾನೋ ಸೆಗುಂದೋ ಹನಿಮೂನ್ ಮುಗಿದ ಕೂಡಲೆ ಅವಳ ಬಳಿಗೆ ಹೋದ. ಅವನು ತನ್ನೊಂದಿಗೆ ಎಂದಿನ ಹಳೆಯ ಸ್ನೇಹಿತ, ತಿರುಗಾಟದ ಛಾಯಾಚಿತ್ರಗಾರನನ್ನು ಮತ್ತು ಜಾತ್ರೆಯಲ್ಲಿ ಫೆರ್ನಾಂಡ ತೊಟ್ಟುಕೊಂಡು, ರಕ್ತದ ಕಲೆಗಳಿದ್ದ ಗೌನ್ ಮತ್ತು ಪ್ರಾಣಿಯ ಚರ್ಮದ ಹೊದಿಕೆ ತಂದಿದ್ದ. ಅಂದಿನ ಸಾಯಂಕಾಲದ ಸಂತೋಷದ ತೀವ್ರತೆಯಲ್ಲಿ ಅವನು ಪೆತ್ರಾ ಕೊತೆಸ್‌ಗೆ ರಾಣಿಯ ಹಾಗೆ ಉಡುಪು ತೊಡಿಸಿ, ಜೀವನ ಪರ್‍ಯಂತ ಮಡಗಾಸ್ಕರ್‌ನ ರಾಣಿಯೆಂದು ಸಾರಿ ಕಿರೀಟ ಹಾಕಿದ ಮತ್ತು ಅದರ ಭಾವಚಿತ್ರಗಳನ್ನು ಸ್ನೇಹಿತರಿಗೆ ಕೊಟ್ಟ. ಅವಳು ಹಾಗೆಯೇ ಆಟದಲ್ಲಿ ಮುಂದುವರಿದಿದ್ದಲ್ಲದೆ, ಒಳಗೊಳಗೆ ಅವನ ಬಗ್ಗೆ ಮರುಗುತ್ತ, ಇಷ್ಟೊಂದು ಅದ್ದೂರಿಯ ರೀತಿಯಲ್ಲಿ ಸಮಾಧಾನ ಪಡಿಸಲು ಅವನು ನಿಜಕ್ಕೂ ಭಯಗೊಂಡಿರಬೇಕೆಂದು ಯೋಚಿಸಿದಳು. ಸಾಯಂಕಾಲ ಏಳು ಗಂಟೆಗೆ ಅವಳಿನ್ನೂ ರಾಣಿಯ ತೊಡುಗೆಯಲ್ಲಿ ಇರುವಂತೆಯೋ ಅವನನ್ನು ಹಾಸಿಗೆಯಲ್ಲಿ ಜೊತೆಗೂಡಿದಳು. ಅವನಿಗೆ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿರಲಿಲ್ಲ ಆದರೆ ಹಾಸಿಗೆಯಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂದು ಅವಳಿಗೆ ತಕ್ಷಣವೇ ಅರಿವಾಯಿತು ಮತ್ತು ತನ್ನ ದ್ವೇಷ ತೀರಿಸಿಕೊಂಡ ಸಂತೋಷ ಸಿಕ್ಕಿತು. ಆದರೆ ಎರಡು ದಿನಗಳ ನಂತರ, ಮಧ್ಯವರ್ತಿಯೊಬ್ಬನನ್ನು ಪರಸ್ಪರ ಬೇರ್ಪಡಲು ನಿಯಮಾವಳಿಗಳನ್ನು ಸಿದ್ಧಪಡಿಸಲು ಕಳಿಸಿದಾಗ ತಾನು ಭಾವಿಸಿದ್ದಕ್ಕಿಂತ ಹೆಚ್ಚಿನ ತಾಳ್ಮೆ ಬೇಕಾಗುತ್ತದೆ, ಏಕೆಂದರೆ ಅವನು ತೋರಿಕೆಗಾಗಿ ತನ್ನನ್ನು ತಾನೆ ತ್ಯಾಗಮಾಡುವ ಹಾಗಿದ್ದಾನೆ ಎಂದು ಅವಳಿಗೆ ಮನವರಿಕೆಯಾಯಿತು. ಅವಳು ಆಗ ಕಳವಳಗೊಳ್ಳಲಿಲ್ಲ. ಆದರೆ ಮತ್ತೊಮ್ಮೆ, ಅವಳೊಂದು ದರಿದ್ರ ಪಿಶಾಚಿ ಎಂದು ಸಾಮಾನ್ಯವಾಗಿ ಇದ್ದ ನಂಬಿಕೆಯನ್ನು ಬೆಂಬಲಿಸುವಂತೆ ನಡೆದುಕೊಂಡಳು ಮತ್ತು ಅವ್ರೇಲಿಯಾನೋ ಸೆಗುಂದೋನ ನೆನಪಿನ ಕಾಣಿಕೆಯಾಗಿ ಅವನ ಚರ್ಮದ ಒಂದು ಜೊತೆ ಬೂಟುಗಳನ್ನು ಮಾತ್ರ ಇಟ್ಟುಕೊಂಡಳು. ಅವನೇ ಹೇಳುತ್ತಿದ್ದ ಹಾಗೆ, ಅವನು ಅವುಗಳನ್ನು ತನ್ನ ಶವದ ಪೆಟ್ಟಿಗೆಯಲ್ಲಿ ಮಾತ್ರ ತೊಟ್ಟುಕೊಳ್ಳಲು ಬಯಸಿದ್ದ. ಅವಳು ಅವುಗಳನ್ನು ಬಟ್ಟೆಯಲ್ಲಿ ಸುತ್ತಿ ಟ್ರಂಕಿನ ಕೆಳಗಿಟ್ಟಳು ಮತ್ತು ಯಾವುದೇ ಹತಾಶೆಯಿಲ್ಲದೆ ಕಾಯುತ್ತ, ನೆನಪುಗಳ ಮೇಲೆ ಜೀವಿಸಿರಲು ಅಣಿಯಾದಳು. +ಅವಳು, “ಅವ್ನು ಈ ಶೂಸ್ ಹಾಕ್ಕೊಳ್ಳೋಕಾದ್ರೂ ಇವತ್ತಲ್ಲ ನಾಳೆ ಬಂದೇ ಬರ್‍ತಾನೆ” ಎಂದು ತನ್ನಷ್ಟಕ್ಕೆ ಹೇಳಿಕೊಂಡಳು. +ಅವಳು ತಾನು ಕಲ್ಪಿಸಿದ ಸಮಯದ ತನಕ ಕಾಯಬೇಕಾಗಿರಲಿಲ್ಲ. ವಾಸ್ತವವಾಗಿ ಅವ್ರೇಲಿಯಾನೋ ಸೆಗುಂದೋಗೆ ಮದುವೆಯಾದ ರಾತ್ರಿಯಿಂದಲೇ ಪೆತ್ರಾ ಕೊತೆಸ್ ಬಳಿಗೆ ಚರ್ಮದ ಶೂ ಹಾಕಿಕೊಳ್ಳಬೇಕಾಗುವ ಬಹಳಷ್ಟು ಮುಂಚೆಯೇ ಹಿಂತಿರುಗುತ್ತೇನೆಂದು ಭಾಸವಾಗಿತ್ತು. ಫೆರ್ನಾಂಡ ಈ ಪ್ರಪಂಚದಲ್ಲಿ ದಿಕ್ಕೆಟ್ಟ ಹೆಂಗಸಾಗಿದ್ದಳು. ಅವಳು ಹುಟ್ಟಿ ಬೆಳೆದದ್ದು ಆರು ನೂರು ಮೈಲಿಗಳಾಚೆಯ, ಗಾಬರಿ ಹುಟ್ಟಿಸುವ ರಾತ್ರಿಗಳಲ್ಲಿ. ಈಗಲೂ ವೈಸ್‌ರಾಯ್‌ಗಳ ವಾಹನಗಳು ಅಲುಗಾಡಿ ಶಬ್ದಮಾಡುತ್ತ ರಸ್ತೆಗಳಲ್ಲಿ ಚಲಿಸುವ ಮಂಕು ಬಡಿದ ಪಟ್ಟಣವೊಂದರಲ್ಲಿ. ಮೂವತ್ತೆರಡು ಘಂಟಾಗೋಪುರಗಳು ಬೆಳಿಗ್ಗೆ ಆರು ಗಂಟೆಗೆ ಸ್ಮಶಾನಗೀತೆ ಮೊಳಗುವ, ಗೋಪುರದಂತೆ ಜೋಡಿಸಿದ ಚಪ್ಪಡಿಗಳ ಆ ಹೆಂಗಸಿನ ಮನೆಯಲ್ಲಿ, ಎಂದೂ ಸೂರ್ಯನ ಪ್ರವೇಶವಿರಲಿಲ್ಲ ಅಂಗಳದ ಮೂಲೆಗಳಲ್ಲಿ, ಬೆಡ್‌ರೂಮಿನ ಮಂಕು ಗೂಡುಗಳಲ್ಲಿ, ಕಳೆಗೆಟ್ಟ ಕೈತೋಟದ ತೊಟ್ಟಿಕ್ಕುವ ಕಮಾನುಗಳಲ್ಲಿ ಗಾಳಿ ಸತ್ತು ಹೋಗಿತ್ತು. ದೊಡ್ಡವಳಾಗುವ ತನಕ ಫೆರ್ನಾಂಡಗೆ, ಹತ್ತಿರದ ಮನೆಯೊಂದರಲ್ಲಿ ವರ್ಷಗಟ್ಟಲೆ, ಮಧ್ಯಾಹ್ನದ ನಿದ್ದೆಯನ್ನು ಮಾಡಬಾರದೆಂಬ ಹಠದ ಮನುಷ್ಯನೊಬ್ಬನ ಪಿಯಾನೋದ ಜೋಬದ್ರ ಕ್ಲಾಸುಗಳನ್ನು ಬಿಟ್ಟರೆ, ಅವಳಿಗೆ ಪ್ರಪಂಚದ ಬಗ್ಗೆ ಬೇರೆ ಯಾವ ಪರಿeನವಿರಲಿಲ್ಲ. ಅವಳ ಕಾಯಿಲೆಯ ತಾಯಿ ಇದ್ದ, ಕಿಟಕಿಯ ಬಾಗಿಲಿನ ಪುಡಿಯಿಂದ ಉಂಟಾದ ಹಸಿರು, ಹಳದಿ ಬೆಳಕು ಹರಡಿದ ರೂಮಿನಲ್ಲಿ, ಗೊತ್ತಾದ ಕ್ರಮದ, ಪಟ್ಟು ಹಿಡಿದ ಹೃದಯಹೀನ ಧ್ವನಿಯ ಏರಿಳಿತಗಳನ್ನು ಕೇಳಿಸಿಕೊಳ್ಳುತ್ತಿದ್ದಳು ಮತ್ತು ಪ್ರಪಂಚದಲ್ಲಿ ಸಂಗೀತವಿz, ಆದರೆ ತನಗೆ ಮಾತ್ರ ಶವಸಂಸ್ಕಾರಕ್ಕೆ ಹೂವಿನ ಹಾರ ಹೆಣೆಯುವ ಕೆಲಸ ಕೊಟ್ಟಿದ್ದಾರೆಂದು ಅವಳು ತಿಳಿದಳು. ಅವಳ ತಾಯಿ, ಜ್ವರದ ತಾಪದಿಂದ ಐದು ಗಂಟೆಗೆ ಬೆವರು ಸುರಿಸುತ್ತ ಗತಕಾಲದ ವೈಭsವವನ್ನು ಹೇಳುತ್ತಿದ್ದಳು. ಅವಳು ಚಿಕ್ಕ ಹುಡುಗಿಯಾಗಿದ್ದಾಗ ಒಮ್ಮೆ, ಹುಣ್ಣಿಮೆಯ ರಾತ್ರಿಯಲ್ಲಿ ಬಿಳಿಯ ಉಡುಗೆ ತೊಟ್ಟ ಸುಂದರಿಯೊಬ್ಬಳು ಕೈತೋಟದಿಂದ ಆರಾಧನಾ ಮಂದಿರದ ಕಡೆಗೆ ಹೋದದ್ದನ್ನು ನೋಡಿದಳು. ಅವಳನ್ನು ಹೆಚ್ಚಾಗಿ ಕಾಡಿದ್ದೇನೆಂದರೆ ಹಾದು ಹೋದ ದೃಶ್ಯದಲ್ಲಿ ಆಕೆ, ಇಪ್ಪತ್ತು ವರ್ಷಗಳ ನಂತರ ತಾನಿರಬಹುದಾದ ಹಾಗೆ ಇದ್ದಳು, ಎಂದು. ಅವಳ ತಾಯಿ, ಕೆಮ್ಮುವುದನ್ನು ತಡೆ ಹಿಡಿದು, “ಅವಳು ರಾಣಿ, ನಿನ್ನ ಮುತ್ತಜ್ಜಿ, ಹಾರವನ್ನು ತುಂಡು ಮಾಡುವಾಗ ಅದೆಂಥದೋ ಕೆಟ್ಟದ್ದನ್ನು ಕುಡಿದು ಸತ್ತಳು” ಎಂದಳು. ಅನೇಕ ವರ್ಷಗಳ ನಂತರ ಮುತ್ತಜ್ಜಿಯಂತೆ ತಾನಿರುತ್ತೇನೆ ಎಂಬ ಭಾವನೆ ಬಂದು ಫೆರ್ನಾಂಡ, ತಾನು ಚಿಕ್ಕಂದಿನಲ್ಲಿ ಕಂಡದ್ದನ್ನು ಅನುಮಾನಿಸಿದಾಗ ಅವಳ ತಾಯಿ, “ನಾವು ಭಾರಿ ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಒಂದಿನ ನೀನೂ ರಾಣಿಯಾಗ್ತೀಯ” ಎಂದು ಅವಳ ಅಪನಂಬಿಕೆಗಾಗಿ ಬೈದಳು. +ಅವರು ಹತ್ತಿ ಬಟ್ಟೆಯ ಟೇಬಲ್ ಕ್ಲಾತ್ ಹಾಕಿದ್ದ ಉದ್ದನೆ ಟೇಬಲ್‌ನ ಬಳಿ ಕುಳಿತಿದ್ದರೂ ಅವಳು ಅದನ್ನು ನಂಬಿದಳು. ಎದುರಿಗೆ ಬೆಳ್ಳಿ ತಟ್ಟೆಯಲ್ಲಿ ನೀರಲ್ಲಿ ನೆನೆಸಿದ ಚಾಕಲೇಟ್ ಮತ್ತು ಸಿಹಿ ಬನ್ ಇತ್ತು. ಅವಳ ತಂದೆ ದಾನ್ ಫೆರ್ನಾಂಡೋ ಮದುವಣಗಿತ್ತಿಯ ವಸ್ತ್ರಾಭರಣಗಳನ್ನು ಕೊಳ್ಳುವುದಕ್ಕೆ ಮನೆಯನ್ನು ಅಡವಿಡಬೇಕಾಗಿ ಬಂದರೂ ಅವಳು ಮದುವೆಯ ದಿನದ ತನಕ ಐತಿಹ್ಯಗಳ ಸಾಮ್ರಾಜ್ಯವೊಂದರ ಕನಸು ಕಾಣುತ್ತಿದ್ದಳು. ಅದು ಮುಗ್ಧತೆಯಿಂದಲ್ಲ ಅಥವಾ ವೈಭವದ ಮೋಹದಿಂದಲ್ಲ. ಅವರು ಅವಳನ್ನು ಬೆಳೆಸಿದ್ದು ಹಾU. ಅವಳಿಗೆ ವಿಚಾರ ಶಕ್ತಿ ಇದ್ದದ್ದರಿಂದ ಮನೆತನದ ಲಾಂಛನವಿದ್ದ ಬಂಗಾರದ ಪಾತ್ರೆಯಲ್ಲಿ ತನ್ನ ಕರ್ತವ್ಯವನ್ನು ನೇರವೇರಿಸಿದ್ದಾಗಿ ಅವಳಿಗೆ ನೆನಪಿತ್ತು. ಅವಳು ಹನ್ನೆರಡು ವರ್ಷದವಳಾಗಿದ್ದಾಗ, ಮನೆಯಿಂದ ಹೊರಗೆ ಮೊಟ್ಟ ಮೊದಲ ಸಲ ಕುದುರೆ ಗಾಡಿಯಲ್ಲಿ ಎರಡು ಬ್ಲಾಕುಗಳ ದೂರದಲ್ಲಿದ್ದ ಕಾನ್ವೆಂಟ್‌ಗೆ ಹೋಗಿದ್ದಳು. ಅವಳು ಪ್ರತ್ಯೇಕವಾಗಿ ಕ್ಲಾಸ್‌ನಲ್ಲಿ ಎತ್ತರದ ಹಿಂಭಾಗವಿದ್ದ ಕುರ್ಚಿಯಲ್ಲಿ ಕುಳಿತಾಗ ಅವಳ ಸಹಪಾಠಿಗಳಿಗೆ ಆಶ್ಚರ್ಯವಾಗಿತ್ತು. ಅಲ್ಲದೆ ಅವಳು ವಿರಾಮದ ವೇಳೆಯಲ್ಲಿ ಅವರಿವರ ಜೊತೆ ಬೆರೆಯುತ್ತಿರಲಿಲ್ಲ. ನನ್‌ಗಳು, “ಅವ್ನು ಬೇರೆ ಥರ… ಅವಳು ರಾಣಿಯಾಗ್ತಾಳೆ” ಎಂದು ಹೇಳುತ್ತಿದ್ದರು. ಅವಳ ಸಹಪಾಠಿಗಳು ಅದನ್ನು ನಂಬಿದರು. ಏಕೆಂದರೆ ಅವಳಾಗಲೇ ಅವರು ಅಲ್ಲಿಯ ತನಕ ಕಾಣದ ಅತ್ಯಂತ ರೂಪವತಿಯಾದ, ವಿಶಿಷ್ಟವಾದ ವಿವೇಚನೆಯುಳ್ಳ ಹುಡುಗಿಯಾಗಿದ್ದಳು. ಎಂಟು ವರ್ಷಗಳ ನಂತರ ಲ್ಯಾಟಿನ್ ಕಾವ್ಯ, ಪಿಯಾನೋ ನುಡಿಸುವುದು, ಮತ್ತು ಗಣ್ಯರ ಜೊತೆ ಡೇಗೆ ಸಾಕಣೆಯ ವಿಷಯ, ಆರ್ಚ್ ಬಿಷಪ್ ಜೊತೆ ಪಶ್ಚಾತ್ತಾಪ ಸೂಚಕ, ಪರದೇಶವನ್ನು ಆಳುವವರ ಜೊತೆ ದೇಶಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಹಾಗೂ ಪೋಪ್ ಬಳಿ ದೇವರ ವಿಷಯ ಮಾತಾಡುವುದನ್ನು ಕಲಿತು, ತಂದೆ ತಾಯಿಯ ಮನೆಗೆ ಹಿಂತಿರುಗಿದ ನಂತರ ಅವಳು ಶವಸಂಸ್ಕಾರದ ಹಾರಗಳನ್ನು ಹೆಣೆಯುವುದರಲ್ಲಿ ನಿರತಳಾದಳು. ಅದು ಸುಲಿಗೆ ಮಾಡುವ ಕೆಲಸವೆಂದು ಅವಳಿಗೆ ಗೊತ್ತಾಯಿತು. ಮನೆಯಲ್ಲಿ ತೀರ ಅಗತ್ಯವಾದ ಪೀಠೋಪಕರಣ ಮಾತ್ರ ಉಳಿದಿತ್ತು. ಕ್ಯಾಂಡಲ್‌ಗಳ ಬೆಳ್ಳಿ ಬುಡ, ಟೇಬಲ್ ಮೇಲಿನ ಸಲಕರಣೆಗಳು, ದಿನನಿತ್ಯದ ಪಾತ್ರೆ ಪಡಗಗಳು ಒಂದಾದ ಮೇಲೋಂದನ್ನು ಅವಳ ವಿದ್ಯಾಭ್ಯಾಸಕ್ಕೆಂದು ಮಾರಲಾಗಿತ್ತು. ಅವಳ ತಾಯಿ ಜ್ವರಕ್ಕೆ ತುತ್ತಾಗಿದ್ದಳು. ಬಿಗಿ ಕಾಲರಿನ ಕಪ್ಪನೆ ಉಡುಪು ತೊಟ್ಟು ಬಂಗಾರದ ವಾಚ್ ಚೈನ್ ಹಾಕಿಕೊಂಡು ಅವಳ ತಂದೆ ದಾನ್ ಫೆರ್ನಾಂಡೋ ಪ್ರತಿ ಸೋಮವಾರ ದೈನಂದಿನ ಖರ್ಚಿಗೆಂದು ಅವಳಿಗೆ ಒಂದು ಬೆಳ್ಳಿಯ ನಾಣ್ಯ ಕೊಟ್ಟು, ಕಳೆದ ವಾರ ಸಿದ್ಧಪಡಿಸಿದ್ದ ಶವಸಂಸ್ಕಾರದ ಹೂವಿನ ಹಾರಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನು ಹೆಚ್ಚಿನ ಸಮಯವನ್ನು ತನ್ನ ಅಭ್ಯಾಸದ ಕೋಣೆಯಲ್ಲಿ ಕಳೆಯುತ್ತಿದ್ದ ಮತ್ತು ಕೆಲವು ಸಲ ಹೊರಗೆ ಹೋದ ಮೇಲೆ ಅವಳ ಜೊತೆ ಪ್ರಾರ್ಥನಾವಳಿಗಳನ್ನು ಹೇಳಲು ಹಿಂತಿರುಗುತ್ತಿದ್ದ. ಅವಳಿಗೆ ಯಾರ ಜೊತೆಗೂ ಆತ್ಮೀಯ ಸ್ನೇಹ ಇರಲಿಲ್ಲ. ಇಡೀ ದೇಶದಲ್ಲಿ ರಕ್ತ ಹರಿಸುತ್ತಿದ್ದ ಯುದ್ಧದ ಬಗ್ಗೆ ಎಂದೂ ಕಿವಿಗೆ ಬೀಳಿಸಲಿಲ್ಲ. ಅವಳು ಮಧ್ಯಾಹ್ನ ಮೂರು ಗಂಟೆಯ ತನ್ನ ಪಿಯಾನೋ ಪಾಠಗಳನ್ನು ಮುಂದುವರಿಸಿದ್ದಳು. ಅವಳು ಇನ್ನೇನು ತಾನು ರಾಣಿಯಾಗಬೇಕೆಂಬ ಭ್ರಮೆಯನ್ನು ಕಳೆದುಕೊಳ್ಳುವುದರಲ್ಲಿದ್ದಾಗ, ಅದು ಲಭ್ಯವಾಯಿತು ಎನ್ನುವ ಹಾಗೆ ಎರಡು ಬಾರಿ ಬಾಗಿಲು ಬಡಿತವಾಯಿತು ಮತ್ತು ಕೆನ್ನೆಯ ಮೇಲೆ ಗಾಯದ ಗುರುತ್ತಿದ್ದ, ಅಂದವಾದ ಶಿಷ್ಟಾಚಾರದ ಮಿಲಿಟರಿ ಅಧಿಕಾರಿಯೊಬ್ಬನಿಗೆ ಬಾಗಿಲು ತೆಗೆದಳು. ಅವನು ಅವಳ ತಂದೆಯ ಜೊತೆ ಅವನ ಅಭ್ಯಾಸದ ಕೋಣೆಯೊಳಗೆ ಹೋದ. ಎರಡು ಗಂಟೆಯ ನಂತರ ಅವಳ ತಂದೆ ಹೊಲಿಗೆಯ ರೂಮಿನಲ್ಲಿ ಅವಳಿದ್ದ ಕಡೆ ಬಂದು, “ಸಾಮಾನೆಲ್ಲ ಜೋಡಿಸಿಕೋ…..ನೀನು ಬಹಳ ದೂರ ಟ್ರಿಪ್ ಹೋಗ್ಬೇಕು” ಎಂದು ಹೇಳಿದ. ಅವಳನ್ನು ಅವರು ಮಕೋಂದೋಗೆ ಕರೆದುಕೊಂಡು ಹೋದದ್ದು ಹೀಗೆ. ಅದುವರೆಗೂ ಅವಳಿಂದ ಅವಳ ತಂದೆತಾಯಿ ಮುಚ್ಚಿಟ್ಟಿದ್ದ ಕಟು ವಾಸ್ತವತೆಯನ್ನು ಕಪಾಳಕ್ಕೆ ಹೊಡೆದ ಹಾಗೆ ಒಂದೇ ದಿನದಲ್ಲಿ ತೆರೆದಿಟ್ಟಿತು. ವಾಪಸು ಬಂದ ಮೇಲೆ ಅವಳು ತನ್ನ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಅತ್ತಳು ಮತ್ತು ದಾನ್ ಫೆರ್ನಾಂಡೋನ ಮನವಿಗಳಿಗೆ ಮತ್ತು ಅದರಿಂದ ಉಂಟಾದ ಕಹಿ ಗುರುತುಗಳನ್ನು ಅಳಿಸಲು ಮಾಡಿದ ಪ್ರಯತ್ನಗಳಿಗೆ ಪ್ರತಿಕ್ರಿಯಿಸಲಿಲ್ಲ. ಅವಳು ತಾನು ಸಾಯುವ ತನಕ ಬೆಡ್‌ರೂಮಿನಿಂದ ಹೊರಗೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದಾಗಲೆ ಅವ್ರೇಲಿಯಾನೋ ಸೆಗುಂದೋ ಅವಳನ್ನು ಕರೆದುಕೊಂಡು ಹೋಗಲು ಬಂದ. ಅದೊಂದು ಅಸಾಧ್ಯವಾದ ವಿಧಿಯ ಆಟ. ಏಕೆಂದರೆ ಅವಳು ರೋಷದಿಂದಾದ ಗೊಂದಲದಲ್ಲಿ, ಅವಮಾನದ ಉರಿಯಲ್ಲಿ, ಅವನಿಗೆ ತನ್ನ ನಿಜ ಸ್ಧಿತಿ ತಿಳಿಯದಿರಲಿ ಎಂದು ಸುಳ್ಳು ಹೇಳಿದ್ದಳು. ಅವಳನ್ನು ಹುಡುಕಲು ಹೊರಟಾಗ ಅವ್ರೇಲಿಯಾನೋ ಸೆಗುಂದೋಗೆ ಇದ್ದ ನಿಜವಾದ ಸೂಚನೆಯೆಂದರೆ, ತಪ್ಪು ಮಾಡಲಾರದಂಥ ಅವಳ ಮಾತಿನ ವಿಶಿಷ್ಟ ರೀತಿ ಮತ್ತು ಅವಳ ಶವಸಂಸ್ಕಾರದ ಹೂವಿನ ಹಾರದ ಕೆಲಸ. ಅವನು ಅವಳನ್ನು ಎಡಬಿಡದೆ ಹುಡುಕಿದ. ಹುಚ್ಚು ಸಾಹಸದಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪರ್ವತಗಳನ್ನು ದಾಟಿ ಮಕೋಂದೋವನ್ನು ಸ್ಥಾಪಿಸಿದ ಹಾಗೆ, ಕುರುಡು ಹಮ್ಮಿನಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಿಫಲ ಯುದ್ಧಗಳಲ್ಲಿ ನಿರತನಾದ ಹಾಗೆ, ಎಣೆಯಿಲ್ಲದ ಜಿಗುಟಿನಿಂದ ಉರ್ಸುಲಾ ಉಳಿದವರ ಉಸ್ತುವಾರಿ ಮಾಡಿದ ಹಾಗೆ, ಅವ್ರೇಲಿಯಾನೋ ಸೆಗುಂದೋ ಫೆರ್ನಾಂಡಳನ್ನು ಒಂದು ಕ್ಷಣವೂ ವಿಶ್ರಾಂತಿಯಿಲ್ಲದೆ ಹುಡುಕಿದ. ಅವನು ಶವಸಂಸ್ಕಾರದ ಹೂವಿನ ಹಾರ ಎಲ್ಲಿ ಸಿಗುತ್ತೆಂದು ಕೇಳಿದಾಗ ಅವರು ಚೆನ್ನಾಗಿರುವುದನ್ನು ಆರಿಸಿಕೊಳ್ಳಲೆಂದು ಮನೆಯಿಂದ ಮನೆಗೆ ಕರೆದುಕೊಂಡು ಹೋದರು. ಅವನು ಭೂಮಿಯ ಮೇಲೆ ಕಂಡಿರದ ಅತ್ಯಂತ ಸುಂದರಿಯನ್ನು ಕೇಳಿದಾಗ ಅವರು ತಮ್ಮ ತಮ್ಮ ಹೆಣ್ಣು ಮಕ್ಕಳನ್ನು ಕರೆತಂದರು. ಅವನು ಮಂಜು ಮುಸುಕಿದ ದಾರಿಗಳಲ್ಲಿ, ಅನೇಕ ವೇಳೆ ವಿಸ್ಮೃತಿಯಲ್ಲಿ ಹಾಗೂ ನಿರಾಶೆಯ ಕಗ್ಗಂಟಿನಲ್ಲಿ ಕಳೆದು ಹೋದ. ಅವನು ಆಲೋಚನೆಗಳು ಪ್ರತಿಧ್ವನಿತವಾಗುವ ಹಳದಿ ಹರಹುಗಳನ್ನು ಮತ್ತು ಆತಂಕಗಳು ಮುಂದಾಗುವುದರ ಸೂಚನೆಯ ಬಿಸಿಲುಗುದುರೆಗಳ ತಾಣವನ್ನು ದಾಟಿದ. ಪೇಲವ ವಾರಗಳ ನಂತರ, ಅವನು ಎಲ್ಲ ಗಂಟೆಗಳು ಸ್ಮಶಾನಗೀತೆ ಧ್ವನಿಸುತ್ತಿದ್ದ ಅರಿಯದ ಊರೊಂದಕ್ಕೆ ಬಂದ. ಅವನು ಅಲ್ಲಿಯ ತನಕ ನೋಡಿರದಿದ್ದರೂ ಮತ್ತು ಯಾರೂ ವಿವರಿಸದಿದ್ದರೂ, ಮಾಸಲು ಬಡಿದ ಗೋಡೆಗಳನ್ನು, ಬೀಳುವಂತಿದ್ದ ಗೂಸಲು ಹಿಡಿದ ಮರದ ಬಾಲ್ಕನಿಗಳನ್ನು, ಹೊರಗಿನ ಬಾಗಿಲಿಗೆ ಮೊಳೆ ಹೊಡೆದಿದ್ದ ಮಳೆ ನೀರಿನಿಂದ ಅಳಿಸಿ ಹೋಗಿದ್ದ, ಪ್ರಪಂಚದಲ್ಲೆ ಅತ್ಯಂತ ಜೋಲು ಮುಖದ ಕಾರ್ಡ್ ಬೋರ್ಡ್‌ನ ನಾಮ ಫಲಕ ‘ಶವಸಂಸ್ಕಾರದ ಹೂವಿನ ಹಾರಗಳು ಮಾರಾಟಕ್ಕಿವೆ‘ ಎನ್ನುವುದನ್ನು ತಕ್ಷಣವೇ ಗುರುತಿಸಿದ. ಆ ಕ್ಷಣದಿಂದ ಫೆರ್ನಾಂಡ ಕೊರೆಯುವ ಚಳಿಯ ಬೆಳಿಗ್ಗೆ, ಮದರ್ ಸುಪೀರಿಯರ್ ಜೊತೆ ಹೊರಡುವ ತನಕ ಮದುವಣಗಿತ್ತಿಯ ವಸ್ತ್ರಾಭರಣಗಳನ್ನು ಸಿದ್ಧಗೊಳಿಸಲು ಕ್ರೈಸ್ತ ಸನ್ಯಾಸಿಯರಿಗೆ ಸಮಯವೇ ಇರಲಿಲ್ಲ. ಅವರು ಆರು ಟ್ರಂಕುಗಳಲ್ಲಿ ಮೇಣದ ಬತ್ತಿಯ ಪೀಠ, ಬೆಳ್ಳಿಯ ಸಲಕರಣೆ ಮತ್ತು ಬಂಗಾರದ ಪಾತ್ರೆಯನ್ನು ಮತ್ತು ಎರಡು ಶತಮಾನದ ಸಾಂಸಾರಿಕ ದುರಂತದಲ್ಲಿನ ಕೆಲಸಕ್ಕೆ ಬಾರದ ವಸ್ತುಗಳನ್ನು ತುಂಬಿದರು. ಜೊತೆಗೆ ಬರಬೇಕೆಂದು ಕೇಳಿದ ಮನವಿಯನ್ನು ದಾನ್ ಫೆರ್ನಾಂಡೋ ಒಪ್ಪಲಿಲ್ಲ. ತನ್ನ ವಿಷಯಗಳೆಲ್ಲ ಬಗೆಹರಿದ ಮೇಲೆ ಬರುವುದಾಗಿ ಮಾತುಕೊಟ್ಟ. ತನ್ನ ಮಗಳಿಗೆ ಆಶೀರ್ವಾದ ಮಾಡಿದ ಗಳಿಗೆಯಿಂದ ಅವನು ವ್ಯಾಸಂಗ ಕೋಣೆಯಲ್ಲಿ ಮತ್ತೆ ಬಾಗಿಲು ಹಾಕಿಕೊಂಡು, ಚಿತ್ರಗಳ ಸಮೇತ ದುಃಖಸೂಚಕ ಹೇಳಿಕೆಗಳನ್ನು ಹಾಗೂ ಮನೆತನದ ಬಿರುದಾವಳಿಗಳ ಲಾಂಛನವನ್ನು ಬರೆಯುವುದಕ್ಕೆ ಕುಳಿತ. ಇದು ಫೆರ್ನಾಂಡ ಮತ್ತು ಅವನ ತಂದೆ ಇತರೆ ಮನುಷ್ಯರ ಜೊತೆ ಅವರ ಇಡೀ ಜೀವನದಲ್ಲಿ ಪಡೆದ ಮೊದಲನೆ ಸಂಪರ್ಕ. ಅದು ಅವಳ ನಿಜವಾದ ಹುಟ್ಟಿದ ದಿನ. ಅವ್ರೇಲಿಯಾನೋ ಸೆಗುಂದೋಗೆ ಅದು ಹೆಚ್ಚು ಕಡಿಮೆ ಏಕಕಾಲಕ್ಕೆ ಸಂತೋಷದ ಪ್ರಾರಂಭ ಮತ್ತು ಮುಕ್ತಾಯವಾಗಿತ್ತು. +ಫೆರ್ನಾಂಡ ಒಂದು ಸೂಕ್ಷ್ಮವಾದ ಬಂಗಾರದ ಕೀಗಳಿದ್ದ ಒಂದು ಸೂಚಿಪಟ್ಟಿ ತಂದಿದ್ದಳು. ಅದರಲ್ಲಿ ಅವಳ ಆಧ್ಯಾತ್ಮಿಕ ಸಲಹೆಗಾರ ನೇರಳೆ ಬಣ್ಣದ ಇಂಕ್‌ನಲ್ಲಿ ಸಂಭೋಗ ವರ್ಜನೆಯನ್ನು ನಮೂದಿಸಿದ್ದ. ಪವಿತ್ರವಾದ ವಾರ, ಭಾನುವಾರಗಳು, ನಿರ್ಬಂಧಿತವಾದ ಪವಿತ್ರ ದಿನಗಳು, ಮೊದಲ ಶುಕ್ರವಾರಗಳು, ನಿಸ್ಸಂಗತ್ವ ದಿನಗಳು, ಬಲಿದಾನಗಳು ಮತ್ತು ಆವರ್ತದ ಆಡಚಣೆಗಳು, ಇವುಗಳನ್ನು ಬಿಟ್ಟರೆ ಅವಳ ವಾಸ್ತವವಾದ ವರ್ಷ ನೇರಳೆ ನೇಯ್ಗೆಯಲ್ಲಿ ಹರಡಿದ ನಲವತ್ತೆರಡು ದಿನಗಳಿಗೆ ಇಳಿಯುತ್ತಿತ್ತು. ಅಂಥದೊಂದು ಬಿಗಿ ಬಂಧವನ್ನು ಕಾಲ ತುಂಡರಿಸುತ್ತದೆ ಎಂಬ ನಂಬಿಕೆಯಿಂದ ಅವ್ರೇಲಿಯಾನೋ ಸೆಗುಂದೋ, ಮದುವೆಯ ಸಮಾರಂಭವನ್ನು ನಿರೀಕ್ಷಣೆಗಿಂತ ಹೆಚ್ಚಿನ ಅವಧಿಗೆ ಮುಂದುವರಿಸಿದ. ಮನೆಯನ್ನು ಗಲೀಜು ಮಾಡುತ್ತಾರೆಂದು ಬ್ರಾಂದಿ ಮತ್ತು ಶಾಂಪೇನ್ ಬಾಟಲಿಗಳನ್ನು ಹೊರಗೆಸೆದು ಉರ್ಸುಲಾ ಸುಸ್ತಾದಳು ಮತ್ತು ಅದೇ ವೇಳೆಗೆ ಹೊಸದಾಗಿ ಮದುವೆಯಾದವರು ಪಟಾಕಿಗಳ ಸಿಡಿತ, ಮೊಳಗುತ್ತಿದ್ದ ಸಂಗೀತ ಮತ್ತು ದನಕರುಗಳನ್ನು ಕಡಿಯುವುದು ಜರುಗುತ್ತಿರುವಾಗ, ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೂಮಿನಲ್ಲಿ ಮಲಗುತ್ತಿದ್ದರಿಂದ ಸಂದಿಗ್ಧಗೊಂಡಿದ್ದಳು. ಅವಳು ಫೆರ್ನಾಂಡ ಏನಾದರೂ ಶೀಲದ ಬೆಲ್ಟ್ ಕಟ್ಟಿಕೊಂಡಿದ್ದಾಳೆಯೋ ಹೇಗೆಂದು ಅನುಮಾನಿಸಿದಳು ಹಾಗೂ ಬಹಳ ಬೇಗನೆ ಊರಿನಲ್ಲಿ ತಮಾಷೆ ಹುಟ್ಟಿಸಿ ಅನಾಹುತಕ್ಕೆ ಕಾರಣವಾಗುತ್ತದೆ ಎಂದುಕೊಂಡಳು. ಆದರೆ ಫೆರ್ನಾಂಡ ಗಂಡನ ಸಂಪರ್ಕಕ್ಕೆ, ಎರಡು ವಾರ ಕಳೆಯಲಿ ಎಂದು ಕಾದಿರುವುದಾಗಿ ಅವಳಿಗೆ ಹೇಳಿದಳು. ನಿಜವಾಗಲೂ ಅವಳು ಆ ಅವಧಿ ಕಳೆದ ನಂತರ ಪ್ರಾಯಶ್ಚಿತ್ತಕ್ಕೆ ಸಿಲುಕಿದ ವ್ಯಕ್ತಿಯ ಭಾವನೆಯಿಂದ ತನ್ನ ಬೆಡ್ ರೂಮನ್ನು ತೆರೆದಳು. ಅವ್ರೇಲಿಯಾನೋ ಸೆಗುಂದೋ ಭಯ ಬೆರೆತ ಕಣ್ಣುಗಳ, ಪ್ರಪಂಚದಲ್ಲೆ ಅತ್ಯಂತ ಸುಂದರಿಯನ್ನು ನೋಡಿದ. ಅವಳ ತಾಮ್ರದ ಬಣ್ಣದ ಕೂದಲು ತಲೆದಿಂಬಿದ ಅಗಲಕ್ಕೂ ಹರಡಿತ್ತು. ತಾನು ಕಂಡದ್ದರಿಂದ ಅವನೆಷ್ಟು ಮೋಹಗೊಂಡಿದ್ದನೆಂದರೆ ಫೆರ್ನಾಂಡ ಮಂಡಿಯ ತನಕ ಇಳಿಬಿದ್ದಿದ್ದ ಗೌನ್ ರೀತಿಯದೇನನ್ನೋ ಹಾಕಿಕೊಂಡಿದ್ದಾಳೆಂದು ಗಮನಿಸಲು ಕೆಲವು ಕ್ಷಣಗಳೇ ಬೇಕಾಯಿತು. ಅದಕ್ಕೆ ಉದ್ದ ತೋಳುಗಳು, ಹೊಟ್ಟೆಯ ಮಟ್ಟದಲ್ಲಿದ್ದ ಸೂಕ್ಷ್ಮವಾಗಿ ಕತ್ತರಿಸಿದ ದೊಡ್ಡ ದುಂಡನೆಯ ಒಳ‌ಉಡುಪಿತ್ತು. ಅವ್ರೇಲಿಯಾನೋ ಸೆಗುಂದೋಗೆ ಒತ್ತರಿಸಿಕೊಂಡು ಬಂದ ನಗುವನ್ನು ತಡೆಯಲಾಗಲಿಲ್ಲ. +ಅವನು, “ನನ್ನ ಇಡೀ ಜೀವನದಲ್ಲಿ ಇಷ್ಟು ಅಸಹ್ಯವಾದದ್ದನ್ನ ನೋಡಿಲ್ಲ” ಎಂದು ಇಡೀ ಮನೆಗೆ ಕೇಳಿಸುವಷ್ಟು ನಕ್ಕು, “ನಾನೊಳ್ಳೆ ಗೌರಮ್ಮನ್ನ ಮದ್ವೆ ಆದೆ ಅಂತ ಕಾಣತ್ತೆ” ಎಂದು ಹೇಳಿದ. +ಒಂದು ತಿಂಗಳು ಕಳೆದರೂ ಅವಳಿಂದ ಗೌನನ್ನು ತೆಗೆಸಲು ಅಸಮರ್ಥನಾದ ನಂತರ ಅವನು ಪೆತ್ರಾ ಕೊತೆಸ್‌ಗೆ ರಾಣಿಯಂತೆ ಉಡುಗೆ ತೊಡಿಸಿ ಭಾವಚಿತ್ರ ತೆಗೆಸಿದ. ಅನಂತರ ಫೆರ್ನಾಂಡಳನ್ನು ಮತ್ತೆ ಮನೆಗೆ ಕರೆತರಲು ಅವನು ಯಶಸ್ವಿಯಾದಾಗ ಅವಳು ಅವನ ಒಪ್ಪಂದದ ಅಪೇಕ್ಷೆಗಳಿಗೆ ಮಣಿದಳು. ಆದರೆ ಮೂವತ್ತೆರಡು ಸ್ಮಶಾನಗೀತೆಯನ್ನು ಮೊಳಗುವ ಗಂಟೆಗಳ ಪಟ್ಟಣಕ್ಕೆ ಅವಳನ್ನು ಕರೆತರಲು ಹೋದಾಗ, ಅವನು ಕಲ್ಪಿಸಿದಂಥ ಪರಿಹಾರವನ್ನು ಕೊಡಲಿಲ್ಲ. ಅವ್ರೇಲಿಯಾನೋಗೆ ಅವಳಲ್ಲಿ ಆಳವಾಗಿ ನೆಲೆಯೂರಿರುವ ಅನಾಥ ಭಾವನೆ ಇರುವಂತೆ ಕಂಡು ಬಂತು. ಅವರಿಗೆ ಮೊದಲ ಮಗು ಹುಟ್ಟುವ ಸ್ವಲ್ಪ ದಿನಗಳ ಮುಂಚಿನ ರಾತ್ರಿ ಫೆರ್ನಾಂಡಗೆ, ತನ್ನ ಗಂಡ ಗುಟ್ಟಾಗಿ ಪೆತ್ರಾ ಕೊತೆಸ್ ಸಂಗಕ್ಕೆ ಹಿಂತಿರುಗಿದ್ದಾನೆಂದು ತಿಳಿಯಿತು. ಅವನು, “ಅದಾಗಿದ್ದಾದರೂ ಹೀಗೆ” ಎಂದು ಅದನ್ನು ಒಪ್ಪಿಕೊಂಡು,”ನಾನು ಹಾಗೆ ಮಾಡ್ಲೇ ಬೇಕಾಗಿತ್ತು ಯಾಕೆಂದರೆ ಪ್ರಾಣಿಗಳು ಹೆಚ್ಗೆ ಮರಿ ಹಾಕ್ಬೇಕಾ;ಗಿತ್ತಲ್ಲ, ಅದಕ್ಕೆ” ಎಂದು ವಿನೀತನಾಗಿ ವಿವರಣೆ ಕೊಟ್ಟ. +ಅವನಿಗೆ ಅಂಥ ಒಂದು ಸಂಗತಿಯ ಮೇಲೆ ನಂಬಿಕೆ ಬರುವಂತೆ ಮಾಡಲು ಸ್ವಲ್ಪ ಸಮಯ ಬೇಕಾಯಿತು. ಆದರೆ ಕೊನೆಗೆ ಅವನು ತಗಾದೆ ಮಾಡದಂಥ ಆಧಾರಗಳನ್ನು ಒದಗಿಸಲು ಸಮರ್ಥನಾದ ಮೇಲೆ ಫೆರ್ನಾಂಡ ಅವನಿಂದ ಒತ್ತಾಯಿಸಿದ ಒಂದೇ ವಾಗ್ದಾನವೆಂದರೆ, ಅವನು ಇಟ್ಟುಕೊಂಡವಳ ಹಾಸಿಗೆಯಲ್ಲಿ ಸಾಯುವಂಥ ಸ್ಥಿತಿಗೆ ಹೋಗಬಾರದು ಎಂದು. ಈ ರೀತಿಯಲ್ಲಿ ಒಬ್ಬರು ಮತ್ತೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೂವರೂ ಬದುಕು ಮುಂದುವರಿಸಿದರು. ಕಾಲನಿಷ್ಠೆ ಮತ್ತು ಇಬ್ಬರನ್ನೂ ಪ್ರೀತಿಸುತ್ತ ಅವ್ರೇಲಿಯಾನೋ ಸೆಗುಂದೋ, ರಾಜಿಯ ಚೌಕಟ್ಟಿನಲ್ಲಿ ಪೆತ್ರಾ ಕೊತೆಸ್ ಮತ್ತು ಸತ್ಯವನ್ನು ಅರಿಯದಂತೆ ತೋರ್ಪಡಿಸುತ್ತಿದ್ದ ಫೆರ್ನಾಂಡ ಹೊಂದಾಣಿಕೆಯಲ್ಲಿದ್ದರು. +ಫೆರ್ನಾಂಡಳನ್ನು ಸಂಸಾರದಲ್ಲಿ ಒಂದುಗೂಡಿಸಿಕೊಳ್ಳುವಷ್ಟು ಈ ಒಡಂಬಡಿಕೆ ಯಶಸ್ವಿಯಾಗಲಿಲ್ಲ. ಅವಳಿಗೆ ಪ್ರಣಯದಾಟದ ನಂತರ ಏಳುವಾಗ ಧರಿಸುತ್ತಿದ್ದ ಉಣ್ಣೆಯ ಕೊರಳಸುತ್ತನ್ನು ತೆಗೆಯಲು ಉರ್ಸುಲಾ ಮಾಡಿದ ಒತ್ತಾಯ ವಿಫಲವಾಯಿತು. ಅದು ಸುತ್ತಮುತ್ತಲಿನವರ ಪಿಸುಮಾತಿಗೆ ಕಾರಣವಾಯಿತು. ಅವಳಿಗೆ ಬಾತ್ ರೂಮನ್ನು ಅಥವಾ ಕಕ್ಕಸ್ಸನ್ನು ಉಪಯೋಗಿಸಬೇಕೆಂದು ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಬಂಗಾರದ ಉಚ್ಚೆ ಪಾತ್ರೆಯನ್ನು ಬಂಗಾರದ ಮೀನುಗಳನ್ನಾಗಿ ಪರಿವರ್ತಿಸುವಂತೆ ಮಾಡದಿರುವಂತೆ ಮನದಟ್ಟು ಮಾಡಲಾಗಲಿಲ್ಲ. ಅವಳ ಮಾತಿನಲ್ಲಿನ ತಪ್ಪು ಉಚ್ಚಾರಣೆ ಮತ್ತು ಯಾವಾಗಲೂ ಅಸ್ವಷ್ಟವಾಗಿ, ತಪ್ಪು ತಪ್ಪಾಗಿ ಮಾತಾಡುತ್ತ್ತಿದ್ದರಿಂದ ಅಮರಾಂತಳಿಗೆ ಮುಜುಗರವಾಗಿತ್ತು. +ಅವಳು, “ಫವಳು ಏಫನು ಬೇಕಫಂತ ಹೇಳಕಾಪ್ಪದೇ ಇರೋವೋತವ್ಳು” ಎಂದು ಹೇಳುತ್ತಿದ್ದಳು. +ಅದೊಂದು ದಿನ ಅಣಕಿಸಿದ್ದರಿಂದ ರೇಗಿದ ಫೆರ್ನಾಂಡಳಿಗೆ ಅಮರಾಂತ ಹೇಳುತ್ತಿರುವುದು ಏನು ಎಂದು ತಿಳಿದುಕೊಳ್ಳಬೇಕೆಂದು ಇಷ್ಟವಾಯಿತು. ಅವಳು ಉತ್ತರ ಹೇಳಲು ತಪ್ಪು ತಪ್ಪು ಉಚ್ಚಾರಣೆ ಮಾಡಲಿಲ್ಲ. +ಅವಳು, “ನಾನು ಹೇಳ್ತಾ ಇದ್ದೆ . . ನೀನು ಕುಡಿ ಮತ್ತು ಕುಂಡಿ ಅನ್ನೋದನ್ನ ಒಂದಕ್ಕೊಂದು ಸೇರಿಸುವಂಥವರಲ್ಲಿ ಒಬ್ಬಳು ಅಂತ” ಎಂದಳು. +ಅಂದಿನಿಂದ ಅವರು ಮತ್ತೆ ಪರಸ್ಪರ ಮಾತನಾಡಲಿಲ್ಲ. ಅಂತಹ ಸಂದರ್ಭ ಬಂದಾಗ ಚೀಟಿಗಳಲ್ಲಿ ಬರೆದು ಕಳಿಸುತ್ತಿದ್ದರು. ಮನೆಯಲ್ಲಿ ಎದ್ದು ಕಾಣುವಷ್ಟು ದ್ವೇಷವಿದ್ದರೂ ಫೆರ್ನಾಂಡ ತನ್ನ ಮನೆತನದವರ ಪದ್ಧತಿಗಳನ್ನು ಒತ್ತಾಯದಿಂದ ಹೇರುವ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಯಾರಿಗೇ ಹಸಿವಾದರೂ ಅಡುಗೆ ಮನೆಯಲ್ಲಿ ತಿನ್ನುವುದನ್ನು ನಿಲ್ಲಿಸಿದಳು. ಒಂದು ಗೊತ್ತಾದ ವೇಳೆಯಲ್ಲಿ ಡೈನಿಂಗ್ ರೂಮಿನಲ್ಲಿ ಟೇಬಲ್ ಕ್ಲಾತ್ ಹರಡಿದ ಟೇಬಲ್ಲಿನ ಮೇಲೆ ಬೆಳ್ಳಿಯ ಬುಡದ ಕ್ಯಾಂಡಲ್‌ಗಳು ಮತ್ತು ಇತರ ಸಲಕರಣೆಗಳ ಜೊತೆ ಊಟ ಮಾಡುವಂತೆ ಒತ್ತಾಯಿಸಿದಳು. ವೈಭವಯುತವಾಗಿ ಕಂಡ ಈ ಕ್ರಿಯೆ ಉರ್ಸುಲಾಗೆ ದೈನಂದಿನ ಜೀವನದಲ್ಲಿ ಅತ್ಯಂತ ಸರಳ ಎಂದು ತೋರಿದರೂ ಬಿಗಿಯಾದ ವಾತಾವರಣವನ್ನು ಉಂಟು ಮಾಡಿ, ಅದರ ವಿರುದ್ಧ ಎಲ್ಲರಿಗಿಂತ ಮೊದಲು ಮೌನಿಯಾಗಿರುತ್ತಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ತಿರುಗಿಬಿದ್ದ. ಆದರೆ ಅದನ್ನು ಊಟದ ಮುಂಚೆ ಪ್ರಾರ್ಥನಾ ವಿಧಿಗಳನ್ನು ಹೇಳುವ ರೀತಿಯಲ್ಲಿ ಹೊರೆಸಲಾಯಿತು. ಇದು ಸುತ್ತಮುತ್ತಲಿನವರ ಗಮನ ಸೆಳೆದು ಬ್ಯುಂದಿಯಾ ಮನೆಯವರು ಎಲ್ಲ ಮನುಷ್ಯರಂತೆ ಸುಮ್ಮನೆ ಟೇಬಲ್ ಮೇಲಿಟ್ಟುಕೊಂಡು ಊಟಮಾಡುವುದಿಲ್ಲ, ಅವರು ತಿನ್ನುವುದನ್ನು ಸಾಮೂಹಿಕ ಪ್ರಾರ್ಥನೆಯಂತೆ ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತು. ಸಂಪ್ರದಾಯವಲ್ಲದೆ ಕೇವಲ ಸಮಯ ಸ್ಫೂರ್ತಿಯಿಂದ ಹೊರಡುತ್ತಿದ್ದ ಉರ್ಸುಲಾಳ ಮೂಢನಂಬಿಕೆಗಳೂ ಸಹ ಫೆರ್ನಾಂಡಳಿಗೆ, ತಮ್ಮ ತಂದೆ-ತಾಯಿಯಿಂದ ಪಡೆದ ಮತ್ತು ಪ್ರತಿಯೊಂದನ್ನೂ ವಿವರಿಸಿ ಮತ್ತು ಪಟ್ಟಿ ಮಾಡಿದವುಗಳ ಜೊತೆ ತಾಕಲಾಡುತ್ತಿದ್ದವು. ಉರ್ಸುಲಾಗೆ ಶಕ್ತಿ ಇರುವ ತನಕ ಹಳೆಯ ಪದ್ಧತಿಗಳು ಉಳಿದಿದ್ದವು ಮತ್ತು ಅವಳು ಕುರುಡಾಗಿ, ವಯಸ್ಸಾಗಿ, ಮನೆಯ ಮೂಲೆ ಸೇರಿದ ಮೇಲೆ ಗಡಸು ನಿಲುವನ್ನು ಬಂದ ಗಳಿಗೆಯಿಂದಲೇ ಪ್ರಾರಂಭಿಸಿದ ಫೆರ್ನಾಂಡ, ಕೊನೆಗೆ ಪೂರ್ಣಗೊಳಿಸಿದಳು. ಮನೆಯ ಆಗುಹೋಗುಗಳನ್ನು ಅವಳಲ್ಲದೆ ಬೇರೆ ಯಾರೂ ನಿರ್ಧರಿಸುತ್ತಿರಲಿಲ್ಲ. ಉರ್ಸುಲಾಳ ಅಪೇಕ್ಷೆಯಂತೆ ಸಾಂತ ಸೋಫಿಯಾ ದೆಲಾ ಪಿಯದಾದ್ ನಡೆಸುತ್ತಿದ್ದ ಮಾಂಸದ ತಿನಿಸುಗಳ ಉದ್ದಿಮೆ ಅಯೋಗ್ಯವಾದದ್ದೆಂದು ಫೆರ್ನಾಂಡ ಪರಿಗಣಿಸಿದಳು ಮತ್ತು ಅದನ್ನು ತಕ್ಷಣವೇ ನಿಲ್ಲಿಸಿದಳು. ಬೆಳಿಗ್ಗೆಯಿಂದ ರಾತ್ರಿ ಮಲಗುವ ಸಮಯದ ತನಕ ತೆರೆದಿರುತ್ತಿದ್ದ ಮನೆಯ ಬಾಗಿಲುಗಳನ್ನು, ಮಧ್ಯಾಹ್ನದ ಮಲಗುವ ಹೊತ್ತಿನಲ್ಲಿ ಬೆಡ್ ರೂಮುಗಳ ಧಗೆ ಹೆಚ್ಚಿಸುತ್ತವೆಂಬ ಕಾರಣದಿಂದ ಹಾಕಲಾಯಿತು ಮತ್ತು ಕೊನೆಗೆ ಅವುಗಳನ್ನು ಮುಚ್ಚಿಡಲಾಯಿತು. ಬಾಗಿಲ ಮೇಲೆ ಸಂಸ್ಥಾಪನೆಯ ಕಾಲದಿಂದಲೂ ತೂಗಾಡುತ್ತಿದ್ದ ಬಳ್ಳಿ ಮತ್ತು ಬ್ರೆಡ್ ತುಂಡುಗಳಿಗೆ ಬದಲಾಗಿ, ಸೇಕ್ರೆಡ್ ಹಾರ್ಟ್ ಆಫ್ ಕ್ರೈಸ್ಟ್ ಇರುವ ಪ್ರತಿಮೆಯನ್ನು ಇಡಲಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಹೇಗೋ ಬದಲಾವಣೆಗಳ ಅಂದಾಜು ಸಿಕ್ಕಿತು ಮತ್ತು ಅದರ ಪರಿಣಾಮವನ್ನು ಮುಂದಾಲೋಚಿಸಿದ. ಅವನು, “ನಾವು ಮೇಲ್ಮಟ್ಟದವರಾಗ್ತಿದೀವಿ. ಹೀಗೇ ಇದ್ರೆ ನಾವು ಮತ್ತೆ ಸಂಪ್ರದಾಯವಾದಿ ಆಳ್ವಿಕೆ ವಿರುದ್ಧ ಹೋರಾಡ್ಬೇಕಾಗತ್ತೆ. ಆದ್ರೆ ಈ ಸರ್‍ತಿ ರಾಜನ್ನ ಕೂಡಿಸಬೇಕಾಗತ್ತೆ” ಎಂದು ವಿರೋಧ ವ್ಯಕ್ತಪಡಿಸಿದ. ತುಂಬ ಚಾಲೂಕಿನಿಂದ ಫೆರ್ನಾಂಡ ಅವನ ದಾರಿಗೆ ಅಡ್ಡ ಬರದಂತೆ ಪ್ರಯತ್ನಿಸಿದಳು. ಒಳಗೊಳಗೇ ಅವಳಿಗೆ ಅವನ ಸ್ವತಂತ್ರ ಧೋರಣೆ, ಎಲ್ಲ ರೀತಿಯ ಸಾಮಾಜಿಕ ಬಿಗಿತಕ್ಕೆ ಪ್ರತಿರೋಧ ಇದ್ದದ್ದರ ಬಗ್ಗೆ ಚಿಂತೆಯಿತ್ತು. ಅವನಿಗೆ ಬೆಳಿಗ್ಗೆ ಐದು ಗಂಟೆಗೆ ಕಾಫಿ ಚೆಂಬುಗಳು, ವರ್ಕ್‌ಶಾಪಿನ ಅವ್ಯವಸ್ಥೆ, ಅವನ ಮೇಲು ಹೊದಿಕೆ ಮತ್ತು ಸಾಯಂಕಾಲ ಮುಂಬಾಗಿಲಲ್ಲಿ ಕುಳಿತುಕೊಳ್ಳುವ ಅಭ್ಯಾಸ, ಇವುಗಳಿಂದ ತಲೆ ಚಿಟ್ಟು ಹಿಡಿದು ಹೋಗಿತ್ತು. ಇಡೀ ಸಂಸಾರದ ಮೆಷಿನ್‌ನಲ್ಲಿದ್ದ ಆ ಒಂದು ಸಡಿಲ ವಸ್ತುವನ್ನು ಅವಳು ಸಹಿಸಿಕೊಳ್ಳಬೇಕಾಗಿತ್ತು. ಏಕೆಂದರೆ ಕರ್ನಲ್ ಅನೇಕ ವರ್ಷಗಳಿಂದ ಪಳಗಿಸಿದ ಮತ್ತು ನಿರಾಶೆಗೊಂಡ ಪ್ರಾಣಿಯೆಂದೂ ಹಾಗೂ ಅವನು ನಿರರ್ಥಕ ದಂಗೆಯಿಂದ ಇಡೀ ಸಂಸಾರದ ಅಡಿಪಾಯವನ್ನೇ ಬುಡಮೇಲು ಮಾಡುವುದಕ್ಕೆ ಶಕ್ತನಾಗಿದ್ದಾನೆಂದು ಅವಳಿಗೆ ಖಚಿತವಾಗಿತ್ತು. ಅವರ ಮೊದ ಮಗನಿಗೆ, ಅವಳ ಗಂಡ, ಅವನ ಮುತ್ತಜ್ಜನ ಹೆಸರಿಡಲು ನಿರ್ಧರಿಸಿದಾಗ ಅವಳಿಗೆ ಅದನ್ನು ವಿರೋಧಿಸುವ ಧೈರ್ಯವಾಗಲಿಲ್ಲ. ಏಕೆಂದರೆ ಅವಳು ಅಲ್ಲಿಗೆ ಬಂದು ಒಂದು ವರ್ಷವಷ್ಟೇ ಆಗಿತ್ತು. ಆದರೆ ಮೊದಲ ಹೆಣ್ಣು ಮಗುವಾದಾಗ, ಅವಳು ಅದಕ್ಕೆ ತನ್ನ ತಾಯಿ ರೆನಾಟಳ ಹೆಸರಿಡಬೇಕೆಂದು ನಿರ್ಧರಿಸಿಕೊಂಡಿದ್ದಾಗಿ ಹೇಳಿದಳು. ಉರ್ಸುಲಾ ಅವಳನ್ನು ರೆಮಿದಿಯೋಸ್ ಎಂದು ಕರೆಯಬೇಕೆಂದಿದ್ದಳು. ಅವ್ರೇಲಿಯಾನೋ ಸೆಗುಂದೋ ಇಬ್ಬರ ಮಧ್ಯೆ ಸೂತ್ರಧಾರನಂತೆ ನಡೆದುಕೊಂಡ. ಬಿಸಿ ಬಿಸಿ ಚರ್ಚೆಯ ನಂತರ ಅವಳಿಗೆ ರೆನಾಟಾ ರೆಮಿದಿಯೋಸ್ ಎಂದು ಹೆಸರಿಟ್ಟಳು. ಫೆರ್ನಾಂಡ ಅವಳನ್ನು ಕೇವಲ ರೆನಾಟ ಎಂದು ಕರೆಯಲು ತೊಡಗಿದರೆ, ಅವಳ ಗಂಡನ ಮನೆಯವರು ಮತ್ತು ಊರಿನವರು ಅವಳನ್ನು ರೆಮಿದಿಯೋಸ್‌ಳ ಅಡ್ಡ ಹೆಸರಿಂದ ಮೆಡಮ್ ಎಂದು ಕರೆದರು. +ಪ್ರಾರಂಭದಲ್ಲಿ ಫೆರ್ನಾಂಡ ತನ್ನ ಮನೆಯ ಬಗ್ಗೆ ಮಾತನಾಡುತ್ತಿರಲಿಲ್ಲ ಆದರೆ ಕ್ರಮೇಣ ತನ್ನ ತಂದೆಯನ್ನು ಆದರ್ಶ ಪಾಲಿಸಲು ಪ್ರಾರಂಭಿಸಿದಳು. ಟೇಬಲ್‌ನಲ್ಲಿ ಕುಳಿತಾಗ ಅವನು ಎಲ್ಲ ರೀತಿಯ ಅಹಂಕಾರ ತೊರೆದ ವಿಶಿಷ್ಟ ವ್ಯಕ್ತಿ ಮತ್ತು ಸಂತನಾಗುವ ಪ್ರಕ್ರಿಯೆಯಲ್ಲಿ ಇದ್ದಾನೆಂದು ಹೇಳಿದಳು. ತನ್ನ ಮಾವನನ್ನು ವೈಭವೀಕರಿಸುವುದರಿಂದ ಚಕಿತನಾಗಿ, ತನ್ನ ಹೆಂಡತಿಯ ಬೆನ್ನ ಹಿಂದೆ ಅದರ ತಮಾಷೆ ಮಾಡುವ ಇರಾದೆಯನ್ನು ತಡೆಯಲಾಗಲಿಲ್ಲ. ಮನೆಯಲ್ಲಿ ಉಳಿದವರು ಅದನ್ನೇ ಅನುಸರಿಸಿದರು. ಸಂಸಾರದ ಸಾಂಗತ್ಯವನ್ನು ಕಾಪಾಡಿಕೊಂಡು ಬರುವುದರಲ್ಲಿ ತೀರ ಜಾಗರೂಕಳಾಗಿದ್ದ ಮತ್ತು ಸಾಂಸಾರಿಕ ಘರ್ಷಣೆಗಳಿಂದ ತನ್ನಷ್ಟಕ್ಕೆ ನೊಂದಿದ್ದ ಉರ್ಸುಲಾ ಕೂಡ, ಒಮ್ಮೆ ತನ್ನ ಮರಿ ಮಗನಿಗೆ ಅದ್ಭುತವಾದ ಭವಿಷ್ಯವಿದೆ, ಏಕೆಂದರೆ ಅವನು ಸಂತನೊಬ್ಬನ ಮೊಮ್ಮಗ ಮತ್ತು ರಾಣಿಯೊಬ್ಬಳ ಮಗ ಹಾಗೂ ಆಚಾರ್ಯ ಧೋರಣೆ ಹೊಂದುವ ಭವಿಷ್ಯವಿದೆ, ಎಂದು ಹೇಳುವ ಸಲಿಗೆ ವಹಿಸಿದಳು. ಇಷ್ಟೆಲ್ಲ ನವಿರಾದ ನಗುವಿನ ನಡುವೆಯೂ ತಮ್ಮ ಅಜ್ಜ, ಕಾಗದಗಳಲ್ಲಿ ಸಾತ್ವಿಕ ಕವನಗಳನ್ನು ಬರೆಯುವ, ಪ್ರತಿ ಕ್ರಿಸ್‌ಮಸ್‌ನಲ್ಲಿ ಹೊರಬಾಗಿಲು ಹಿಡಿಸಲು ಕಷ್ಟವಾದ ಪೆಟ್ಟಿಗೆಯಲ್ಲಿ ಉಡುಗೊರೆ ಕಳಿಸುವ, ಐತಿಹ್ಯಪೂರ್ಣ ಮನುಷ್ಯನೆಂದು ಆ ಮಕ್ಕಳು ಭಾವಿಸುವುದು ಸಾಮಾನ್ಯವಾಯಿತು. ವಾಸ್ತವವಾಗಿ ಅವು ಅವನಲ್ಲಿ ಪರಂಪಾಗತವಾಗಿ ಬಂದಿದ್ದ ವೈಭವದ ಅವಶೇಷಗಳು. ಅವರು ಅದನ್ನು ಮಕ್ಕಳ ಬೆಡ್‌ರೂಮಿನ ಮನುಷ್ಯಾಕಾರದ ಸಂತರ ಪವಿತ್ರ ಸ್ಥಾನವನ್ನಾಗಿ ನಿರ್ಮಿಸಲು ಉಪಯೋಗಿಸಿದರು. ಸಂತರಿಗೆ ಗಾಜಿನ ಕಣ್ಣುಗಳಿದ್ದದ್ದರಿಂದ, ಅವಕ್ಕೆ ಜೀವವಿರುವಂತೆ ತೋರುತ್ತಿತ್ತು ಹಾಗೂ ಉಡುಪು ಕಲಾಪೂರ್ಣವಾಗಿ ಕಸೂತಿ ಮಾಡಿದ ಬಟ್ಟೆಗಳಾಗಿದ್ದು, ಮಕೋಂದೋದಲ್ಲಿ ಯಾವುದೇ ವ್ಯಕ್ತಿ ತೊಟ್ಟಿದ್ದಕ್ಕಿಂತ ಚೆನ್ನಾಗಿದ್ದವು. ಕ್ರಮೇಣ ಪುರಾತನ ಮತ್ತು ಹಿಮಮಯವಾದ ಸಾವಿನ ನರ್ತನವಿದ್ದ ಆ ಬಂಗಲೆ, ಬ್ಯುಂದಿಯಾರ ವೈಭವದ ಮನೆಯಾಯಿತು. ಒಂದು ದಿನ ಅವ್ರೇಲಿಯಾನೋ ಸೆಗುಂದೋ, “ಅವರಾಗಲೇ ಹುಲ್ಲು ಕಡ್ಡೀನೂ ಬಿಡದೆ, ಮನೇಲಿದ್ದ ಎಲ್ಲವನ್ನೂ ಕಳಿಸೀದಾರೆ. ಈಗ ಉಳಿದಿರೋದು ಕಣ್ಣೀರಿರುವ ದಿಂಬುಗಳು, ಗೋರಿಕಲ್ಲುಗಳು ಮಾತ್ರ” ಎಂದ. ಮಕ್ಕಳು ಆಡಿಕೊಳ್ಳುವಂಥ ಯಾವುದೂ ಪೆಟ್ಟಿಗೆಯಲ್ಲಿ ಬರದಿದ್ದರೂ ಅವರು ಡಿಸೆಂಬರ್ ತನಕ ಕಾಯುತ್ತಿದ್ದರು. ಏಕೆಂದರೆ ಆಗಲೆ ಹಳೆಯ ಹಾಗೂ ಅನಿರೀಕ್ಷಿತ ಉಡುಗೊರೆಗಳು ಮನೆಗೆ ಹೊಸದಾಗಿರುತ್ತಿದ್ದವು. ಹತ್ತನೆಯ ಕ್ರಿಸ್‌ಮಸ್ ದಿನ ಚಿಕ್ಕವನಾದ ಹೊಸೆ ಅರ್ಕಾದಿಯೋ ಸ್ಕೂಲಿಗೆ ಹೋಗಲು ಸಿದ್ಧನಾಗುತ್ತಿದ್ದಾಗ, ಎಂದಿಗಿಂತ ಮುಂಚಿತವಾಗಿ ಅವನ ಅಜ್ಜನಿಂದ ಭಾರಿ ಪ್ರಮಾಣದ ಪೆಟ್ಟಿಗೆಯೊಂದು ಬಂತು. ಅದರ ಮೇಲೆ ಗೊತ್ತಾದ ಅಂತರದಲ್ಲಿ ಮೊಳೆಗಳಿಂದ ಹೊಡೆದಿತ್ತು ಮತ್ತು ಅಡ್ಡಾದಿಡ್ಡಿ ಅಕ್ಷರದಲ್ಲಿ ಶ್ರೀಮತಿ ದೋನ್ಯಾ ಫೆರ್ನಾಂಡ ದೆಲ್ ಕಾರ್ಪಿಯೋ ಬ್ಯುಂದಿಯಾ ಎಂಬ ವಿಳಾಸ ಬರೆದಿತ್ತು. ಅವಳು ಕಾಗದವನ್ನು ಓದುತ್ತಿದ್ದಂತೆ ಮಕ್ಕಳು ಪೆಟ್ಟಿಗೆಯನ್ನು ತೆಗೆಯಲು ಹೊರಟರು. ಎಂದಿನಂತೆ ಅವರ ಜೊತೆ ಅವ್ರೇಲಿಯಾನೋ ಸೆಗುಂದೋ ಸೇರಿಕೊಂಡು ಸೀಲುಗಳನ್ನು ಒಡೆದರು. ಕವರ್ ತೆಗೆದು ರಕ್ಷಣೆಗಿದ್ದ ಮರದ ಹೊಟ್ಟನ್ನು ಹೊರಕ್ಕೆ ತೆಗೆದರು. ಅವರಿಗೆ ತಾಮ್ರದ ಬೋಲ್ಟ್‌ಗಳನ್ನು ಹಾಕಿದ ಉದ್ದನೆಯ ಪೆಟ್ಟಿಗೆ ಕಂಡಿತು. ಮಕ್ಕಳು ತಾಳ್ಮೆಗೆಟ್ಟು ನೋಡುತ್ತಿದ್ದಂತೆ ಅವ್ರೇಲಿಯಾನೋ ಸೆಗುಂದೋ ಎಂಟು ಬೋಲ್ಟ್‌ಗಳನ್ನು ತೆಗೆದ. ಅವನು ಸೀಸದ ಕವರನ್ನು ತೆಗೆದಾಗ ಮಕ್ಕಳನ್ನು ಪಕ್ಕಕ್ಕೆ ತಳ್ಳಿ ಕೂಗಲೂ ಕಾಲಾವಕಾಶವಿರಲಿಲ್ಲ. ಅವನು ಕಂಡದ್ದು ಕಪ್ಪು ಉಡುಗೆಯಲ್ಲಿದ್ದ, ಎದೆಯ ಮೇಲೆ ಶಿಲುಬೆಯಿದ್ದ ಮಾರಕ ಗಾಯಗಳಿದ ಸುರುಟಿ ಹೋದ ಚರ್ಮವಿದ್ದ, ಕುದ್ದು ಬೇಯುತ್ತ ಜೀವಂತ ಹರಳುಗಳಂತೆ ನೀರ್ಗುಳ್ಳೆಗಳಿದ್ದ ದೋನ್ಯಾ ಫೆರ್ನಾಂಡನನ್ನು. +ಮಗಳು ಹುಟ್ಟಿದ ಸ್ವಲ್ಪ ಕಾಲದ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗಾಗಿ ಉತ್ಸವ ಆಚರಿಸಲು ಸರ್ಕಾರ ಆಜ್ಞೆ ಹೊರಡಿಸಿದ ಮೇಲೆ, ನಿರ್ಲಾಂದಿಯಾ ಒಪ್ಪಂದದ ಉತ್ಸವವನ್ನು ಆಚರಿಸಲು ಮತ್ತೊಂದು ಘೋಷಣೆ ಹೊರಡಿಸಲಾಯಿತು. ಅದು ಅಧಿಕೃತ ರೀತಿಗೆ ತೀರ ಹೊರತಾದದ್ದರಿಂದ, ಕರ್ನಲ್ ಅದರ ವಿರುದ್ಧ ವ್ಯಗ್ರವಾಗಿ ಹೇಳಿ ಗೌರವಾರ್ಪಣೆಯನ್ನು ನಿರಾಕರಿಸಿದ. ಅವನು, “ನಾನು ಆಚರಣೆ ಅನ್ನೋದನ್ನ ಮೊದಲ್ನೆ ಸಲ ಕೇಳ್ತಿದೀನಿ. ಅದರರ್ಥ ಏನೇ ಇದ್ರೂ, ಅದರಲ್ಲೇನೋ ಕುತಂತ್ರ ಇದೆ” ಎಂದ. ಅವನ ಬಂಗಾರದ ಅಂಗಡಿ ಪ್ರತಿನಿಧಿಗಳಿಂದ ತುಂಬಿ ಹೋಯಿತು. ವಯಸ್ಸಾಗಿ, ಗೌರವಪೂರ್ಣವಾಗಿ, ಈ ಮೊದಲು ಕರ್ನಲ್ ಸುತ್ತ ಕಾಗೆಗಳ ಥರ ಮುತ್ತುತ್ತಿದ್ದ, ಕಪ್ಪು ಬಟ್ಟೆ ಧರಿಸಿದ ಲಾಯರುಗಳು ಮತ್ತೆ ವಾಪಸಾದರು. ಹಿಂದೊಂದು ಕಾಲದಲ್ಲಿ ಯುದ್ಧವನ್ನು ನಿಲ್ಲಿಸಲು ಬಂದ ಅವರು ಮತ್ತೆ ಕಾಣಿಸಿಕೊಂಡಾಗ, ಅವರ ಹೊಗಳಿಕೆಯಲ್ಲಿನ ಕಪಟವನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟಿರಲು ಅವರಿಗೆ ಹೋಗುವಂತೆ ಹೇಳಿದ. ಅವರು ಹೇಳಿದಂತೆ ತಾನು ದೇಶದ ಪ್ರಖ್ಯಾತ ವೀರನಲ್ಲ, ಆದರೆ ತಾನೊಬ್ಬ ವಿಸ್ಮೃತಿಯಲ್ಲಿ ಮತ್ತು ಬಂಗಾರದ ಸಣ್ಣ ಮೀನುಗಳ ಗೋಳಾಟದಲ್ಲಿ ಸಾಯಬೇಕೆಂಬ ಒಂದೇ ಕನಸು ಕಾಣುತ್ತಿರುವ ನೆನಪುಗಳಿಲ್ಲದ, ಕುಶಲಕರ್ಮಿ ಎಂದು ಹೇಳಿದ. ಅವನಿಗೆ ಅತ್ಯಂತ ರೋಷ ಉಂಟು ಮಾಡಿದ ಪದವೆಂದರೆ ಅವನಿಗೆ ಆರ್ಡರ್ ಆಫ್ ಮೆರಿಟ್‌ನಿಂದ ಅಲಂಕೃತಗೊಳಿಸಲು, ಮಕೋಂದೋದಲ್ಲಿ ಗಣತಂತ್ರದ ಅಧ್ಯಕ್ಷರು ಖುದ್ದಾಗಿ ಹಾಜರಿರಲು ಉದ್ದೇಶಿಸಿದ್ದಾರೆ ಎನ್ನುವುದು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪದಕ್ಕೆ ಪ್ರತಿ ಪದ ತಿಳಿಸುವಂತೆ ಹೇಳಿ, ತಾನು ಚಿಂದಿಯಾಗಿದ್ದರೂ, ಯೋಗ್ಯಪೂರ್ಣವಾದ ಆ ಸಮಾರಂಭದಲ್ಲಿ ಅವನಿಗೆ ಗುಂಡು ಹೊಡೆಯುವುದಕ್ಕೆ ಕಾಯುವುದಾಗಿ ಯೋಚಿಸಿದ. ಹೀಗೆ ಮಾಡುವುದು ಮನಸ್ಸಿಗೆ ಬಂದಂಥ ಮತ್ತು ಕಾಲ ವಿರೋಧಿ ನಡವಳಿಕೆಯ ಆಳ್ವಿಕೆಗೆ ತಿರುಗೇಟಲ್ಲವಾದರೂ, ಯಾರಿಗೂ ಏನೂ ತೊಂದರೆ ಮಾಡದ ಮುದುಕನೊಬ್ಬನಿಗೆ ತೋರಿಸಿದ ಅಗೌರವಕ್ಕಾಗಿ ಎಂದು ಹೇಳಿದ. ಅವನು ಉಂಟುಮಾಡಿದ ಬೆದರಿಕೆ ಎಷ್ಟು ಆವೇಶಪೂರಿತವಾಗಿತ್ತೆಂದg, ಗಣತಂತ್ರದ ಅಧ್ಯಕ್ಷರು ಪ್ರವಾಸವನ್ನು ಕೊನೆಗಳಿಗೆಯಲ್ಲಿ ರದ್ದುಗೊಳಿಸಿದರು ಮತ್ತು ಆ ಕೆಲಸವನ್ನು ಮಾಡಲು ಆಪ್ತ ಪ್ರತಿನಿಧಿಯನ್ನು ಕಳಿಸಿದರು. ಪಾರ್ಶ್ವವಾಯು ಪೀಡಿತನಾಗಿದ್ದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ತನ್ನ ಹಳೆಯ ಚಾಂಪಿಯನ್ನನ ಮನವೊಲಿಸಲು ಹಾಸಿಗೆಯಿಂದ ಎದ್ದು, ಹರೆಯದವನಾಗಿದ್ದ ಕಾಲದಿಂದ ತನ್ನ ಅನೇಕ ವಿಜಯಗಳಲ್ಲಿ ಮತ್ತು ಸೋಲುಗಳಲ್ಲಿ ಸಹಭಾಗಿಯಾಗಿದ್ದ. ಗಾಲಿ ಕುರ್ಚಿಯಲ್ಲಿ ದಿಂಬುಗಳ ಮಧ್ಯೆ ಕುಳಿತ ಅವನನ್ನು ನಾಲ್ಕು ಜನ ಹೊತ್ತು ತರುತ್ತಿದ್ದನ್ನು ನೋಡಿದ ಕರ್ನಲ್‌ಗೆ ತನಗೆ ಸಹಮತ ತೋರಿಸಲು ಹೀಗೆ ಪ್ರಯತ್ನಿಸುತ್ತಿದ್ದಾನೆ ಎನ್ನುವುದರ ಬಗ್ಗೆ ಕಿಂಚಿತ್ ಅನುಮಾನವಿರಲಿಲ್ಲ. ಆದರೆ ಅವನ ಭೇಟಿಯ ನಿಜವಾದ ಉದ್ದೇಶವನ್ನು ಅರಿತ ಮೇಲೆ ಅವನನ್ನು ವರ್ಕ್‌ಶಾಪ್‌ನಿಂದ ಹೊರಗೆ ತೆಗೆದುಕೊಂಡು ಹೋಗುವಂತೆ ಹೇಳಿದ. +ಅವನು, “ನಂಗೆ ತುಂಬ ತಡವಾಗಿ ಮನದಟ್ಟಾಗ್ತಿದೆ…… ಅವ್ರು ನಿಂಗೆ ಗುಂಡಿಟ್ಟು ಸಾಯಿಸಲು ಬಿಟ್ಟಿದ್ದರೆ ಒಳ್ಳೇದಾಗ್ತಿತ್ತು” ಎಂದ. +ಇದರಿಂದ ಮನೆಯವರು ಯಾರೂ ಪಾಲ್ಗೊಳ್ಳದೆ ಉತ್ಸವ ಆಚರಿಸಲ್ಪಟ್ಟಿತು. ಕಾಕತಾಳೀಯವೆಂಬಂತೆ ಜಾತ್ರೆ ಅದೇ ವಾರವಿತ್ತು. ಆದರೆ ಕ್ರೌರ್ಯದ ಅಣಕನ್ನು ಹೆಚ್ಚಿಸುವ ಸಲುವಾಗಿಯೆ ಕಾಕತಾಳೀಯವನ್ನು ಸರ್ಕಾರ ಮುಂದಾಲೋಚಿಸಿತ್ತು ಎಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ತಲೆಯಲ್ಲಿ ಗಟ್ಟಿಯಾಗಿ ಬೇರೂರಿದ್ದನ್ನು ಯಾರಿಗೂ ಹೊರದೂಡಲಾಗಲಿಲ್ಲ. ಒಬ್ಬಂಟಿಯಾಗಿದ್ದ ಅವನ ವರ್ಕ್‌ಶಾಪಿನಿಂದಲೇ ಮಿಲಿಟರಿ ಸಂಗೀತ, ತುಪಾಕಿಗಳ ವಂದನೆಗಳು, ದೇವರ ಪ್ರಾರ್ಥನೆ ಮತ್ತು ಅವರು ರಸ್ತೆಗೆ ಅವನ ಮನೆ ಎದುರು ನಿಂತು ರಸ್ತೆಗೆ ಅವನ ಹೆಸರಿಡುತ್ತ ಮಾಡುತ್ತಿದ್ದ ಭಾಷಣದ ಕೆಲವು ಮಾತುಗಳು ಅವನಿಗೆ ಕೇಳಿಸುತ್ತಿತ್ತು. ಕೈಲಾಗದ ಕೋಪವುಕ್ಕಿ ಅವನ ಕಣ್ಣುಗಳು ರೋಷದಿಂದ ಮಂಜಾಯಿತು ಮತ್ತು ಸೋತ ನಂತರ ಮೊದಲ ಬಾರಿಗೆ ಸಂಪ್ರದಾಯವಾದಿಗಳ ಆಳ್ವಿಕೆಯನ್ನು ನೆಲಸಮ ಮಾಡುವಂಥ ರಕ್ತಸಿಕ್ತ ಯುದ್ಧವನ್ನು ಪ್ರಾರಂಭಿಸುವುದಕ್ಕೆ, ಹರೆಯದಲ್ಲಿದ್ದ ಶಕ್ತಿ ಇರದೇ ಹೋದದ್ದಕ್ಕೆ ಅತೀವ ನೋವುಂಟಾಯಿತು. ಗೌರವಾರ್ಪಣೆಗಳ ಪ್ರತಿಧ್ವನಿಗಳು ಇನ್ನೂ ಮುಗಿಯುವ ಮುಂಚೆಯೇ, ಉರ್ಸುಲಾ ವರ್ಕ್‌ಶಾಪಿನ ಹತ್ತಿರ ಬಂದು ಬಾಗಿಲು ಬಡಿದಳು. +ಅವನು, “ಯಾರ್‍ಗೂ ತೊಂದರೆ ಕೊಡ್ಬೇಡಿ. ನಾನು ಕೆಲಸ ಮಾಡ್ತಿದೀನಿ” ಎಂದ. ಉರ್ಸುಲಾ, “ಬಾಗಿಲು ತೆಗಿ. ಈ ಸಮಾರಂಭಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ” ಎಂದು ಸಹಜ ಧ್ವನಿಯಲ್ಲಿ ಹೇಳಿದಳು. +ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಡ್ಡ ಪಟ್ಟಿ ಕೆಳಗಿಳಿಸಿದ ಮತ್ತು ಬಾಗಿಲ ಹತ್ತಿರ ಬೇರೆ ಬೇರೆ ರೀತಿ ಕಾಣುತ್ತಿದ್ದ, ಎಲ್ಲ ಬಗೆಯ ಹಾಗೂ ಬಣ್ಣದ ಹದಿನೇಳು ಹುಡುಗರನ್ನು ಕಂಡ. ಅವರೆಲ್ಲರಲ್ಲೂ ಪ್ರಪಂಚದ ಯಾವುದೇ ಭಾಗದಲ್ಲೂ ಗುರುತು ಹಿಡಿಯಬಹುದಾದ ಒಂಟಿತನದ ಅಂಶವಿತ್ತು. ಅವರು ಅವನ ಮಕ್ಕಳಾಗಿದ್ದರು. ಯಾವುದೇ ಪೂರ್ವಸಂಪರ್ಕವಿರದೆ, ಒಬ್ಬರಿಗೊಬ್ಬರು ಪರಿಚಯವಿರದೆ, ದೂರದ ಮೂಲೆಗಳಿಂದ ಗೌರವಾರ್ಪಣೆಯ ಮಾತುಗಳಿಗೆ ಮಾರು ಹೋಗಿ ಬಂದಿದ್ದರು. ಅವರು ತುಂಬ ಹೆಮ್ಮೆಯಿಂದ ಅವ್ರೇಲಿಯಾನೋ ಹೆಸರು ಮತ್ತು ತಮ್ಮ ತಾಯಿಯ ಹೆಸರನ್ನು ಕೊನೆಯಲ್ಲಿ ಇಟ್ಟುಕೊಂಡಿದ್ದರು. ಉರ್ಸುಲಾಳ ಸಮಾಧಾನಕ್ಕಾಗಿ ಮತ್ತು ಫೆರ್ನಾಂಡಳ ಗೌರವಕ್ಕೆ ಹಾನಿಯಾಗಿ, ಮೂರು ದಿನ ಆ ಮನೆಯಲ್ಲಿ ಅವರು ಇದ್ದದ್ದು ಒಂದು ರೀತಿಯ ಯುದ್ಧದ ವಾತಾವರಣದಲ್ಲಿ. ಅಮರಾಂತ ಹಳೆಯ ಕಾಗದಗಳ ನಡುವೆ ಎಲ್ಲರ ಹೆಸರು ಹುಟ್ಟಿದ ತಾರೀಖುಗಳನ್ನು ಉರ್ಸುಲಾ ಬರೆದಿಟ್ಟಿದ್ದ ಪುಸ್ತಕವನ್ನು ಹುಡುಕಿದಳು ಮತ್ತು ಅವರವರ ಹೆಸರಿನ ಮುಂದಿನ ಸ್ಥಳದಲ್ಲಿ ಈಗಿನ ವಿಳಾಸವನ್ನು ಬರೆದಳು. ಇಪ್ಪತ್ತು ವರ್ಷಗಳ ಯುದ್ಧವನ್ನು ಮತ್ತೆ ನೆನಪು ಮಾಡಿಕೊಳ್ಳುವುದಕ್ಕೆ ಆ ಪಟ್ಟಿ ಸಾಧನವಾಗಿತ್ತು. ಅದರಿಂದ ಕರ್ನಲ್ ಆ ಮುಂಜಾನೆ, ಇಪ್ಪತ್ತೊಂದು ಜನರ ಮುಂದಾಳಾಗಿ ಮಕೋಂದೋವನ್ನು ಬಿಟ್ಟು ದಂಗೆ ಏಳಲು ಹೊರಟ ದಿನದಿಂದ, ಕೊನೆಯಲ್ಲಿ ಅವನು ಒಣಗಿದ ರಕ್ತದ ಕಲೆಗಳ ಹೊದಿಕೆ ಹೊದ್ದು ವಾಪಸು ಬರುವ ತನಕ, ರಾತ್ರಿಯ ವೇಳೆಯಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗಳನ್ನು ಮತ್ತೆ ಸೃಷ್ಟಿಸಬಹುದಿತ್ತು. ಅವ್ರೇಲಿಯಾನೋ ಸೆಗುಂದೋ ತನ್ನ ಸೋದರ ಸಂಬಂಧಿಗಳಿಗೆ, ಶಾಂಪೇನ್ ಮತ್ತು ಅಕಾರ್ಡಿಯನ್ ಔತಣಕೊಡಲು ಸಿಕ್ಕ ಅವಕಾಶವನ್ನು ಕೈ ಬಿಡಲಿಲ್ಲ. ಗೌರವಾರ್ಪಣೆಯ ಕಾರಣದಿಂದ ಅವಲಕ್ಷಣವಾಗಿ ಕಂಡ ಅದನ್ನು, ಜಾತ್ರೆಯ ಲೆಕ್ಕವನ್ನು ಸರಿಪಡಿಸುವುದಕ್ಕಾಗಿ ಮಾಡಿದ್ದು ಎಂದು ಕೆಲವರು ಮಾತಾಡಿಕೊಂಡರು. ಅವರು ಅರ್ಧದಷ್ಟು ಪಾತ್ರೆಗಳನ್ನು ಒಡೆದು ಹಾಕಿದರು. ಕಟ್ಟಿ ಹಾಕಲು ಉದ್ದೇಶಿಸಿದ್ದ ಹೋರಿಯನ್ನು ಅಟ್ಟಿಸಿಕೊಂಡು ಹೋಗಿ ಗುಲಾಬಿ ಪೊದೆಗಳನ್ನು ಹಾಳ; ಮಾಡಿದರು, ಕೋಳಿಗಳಿಗೆ ಗುಂಡಿಕ್ಕಿ ಕೊಂದರು, ಅಮರಾಂತಳನ್ನು ಪಿಯತ್ರೋ ಕ್ರೆಪ್ಸಿಯ ವಿಷಾದಪೂರ್ಣ ವಾಲ್ಜ್‌ಗೆ ನರ್ತಿಸುವಂತೆ ಮಾಡಿದರು, ಸುಂದರಿ ರೆಮಿದಿಯೋಸ್ ಗಂಡಸರ ಪ್ಯಾಂಟ್ ತೊಟ್ಟು ಗ್ರೀಸ್ ಹಚ್ಚಿದ ಏಣಿಯನ್ನು ಹತ್ತುವಂತೆ ಮಾಡಿದರು ಮತ್ತು ಊಟದ ಮನೆಯಲ್ಲಿ ಉಪ್ಪು ಹಚ್ಚಿದ ಹಂದಿ ಮಾಂಸವನ್ನು ಅಡ್ಡಾದಿಟ್ಟಿ ತೆಗೆದುಕೊಂಡು ಹೋಗುವಾಗ ಅದು ಫೆರ್ನಾಂಡಳ ಮುಂದೆ ಕೆಳಗೆ ಬಿತ್ತು. ಆದರೆ ಯಾರೂ ಹೀಗೆ ಹಾಳುಗೆಡವಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳಲಿಲ್ಲ. ಏಕೆಂದರೆ ಇಡೀ ಮನೆ ಆರೋಗ್ಯಪೂರ್ಣ ಅಬ್ಬರದಾಟದಿಂದ ಅಲ್ಲಾಡಿಹೋಗಿತ್ತು. ಮೊದಲು ಅಪನಂಬಿಕೆಯಿಂದ ಅವರನ್ನು ಬರಮಾಡಿಕೊಂಡು, ಕೆಲವರಿಗೆ ತಾನು ತಂದೆ ಎನ್ನುವುದನ್ನೂ ಅನುಮಾನಿಸಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಅವರ ಹುಚ್ಚಾಟದಿಂದ ಖುಷಿಗೊಂಡ ಮತ್ತು ಅವರು ಹೊರಡುವ ಮುಂಚೆ ಪ್ರತಿಯೊಬ್ಬರಿಗೂ ಬಂಗಾರದ ಸಣ್ಣ ಮೀನೊಂದನ್ನು ಕೊಟ್ಟ. ಅಂತರ್ಮುಖಿಯಾಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈಗ ವಿನಾಶದಲ್ಲಿ ಕೊನೆಗೊಳ್ಳುವ ಹಂತದಲ್ಲಿದ್ದ ಮಧ್ಯಾಹ್ನದ ಹುಂಜದ ಕಾಳಗವನ್ನು ನೋಡಲು ಆಮಂತ್ರಿಸಿದ. ಏಕೆಂದರೆ ಅದರ ಅಖಾಡದಲ್ಲಿ ಈಗ ಅವ್ರೇಲಿಯಾನೋಗಳೆಲ್ಲ ಎಷ್ಟು ಪರಿಣತರಾಗಿದ್ದರೆಂದರೆ, ಅವರು ಫಾದರ್ ಇಸೆಬಲ್‌ನ ತಂತ್ರಗಳನ್ನು ತಕ್ಷಣವೇ ಕಂಡು ಹಿಡಿದು ಬಿಡುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ಆ ಸಂಬಂಧೀಕರ ಹುಚ್ಚಾಟಗಳಲ್ಲಿ ಮಿತಿಯಿಲ್ಲದ ಸಾಧ್ಯತೆಗಳನ್ನು ಕಂಡು, ಅವರೆಲ್ಲ ಅಲ್ಲಿಯೆ ಇದ್ದು ತನಗಾಗಿ ಕೆಲಸ ಮಾಡಬೇಕೆಂದು ಇಷ್ಟಪಟ್ಟ. ಅದನ್ನು ಒಪ್ಪಿಕೊಂಡವನು ಮಿಶ್ರ ಸಂತಾನದವನಾದ ಭಾರಿ ಆಕಾರದ ಉತ್ಸಾಹವಿದ್ದ ಮತ್ತು ಅಜ್ಜನ ಪರಿಶೋಧಕ ಗುಣ ಹೊಂದಿದ್ದ ಅವ್ರೇಲಿಯಾನೋ ಟ್ರೀಸ್ತೆ. ಅವನು ಅರ್ಧ ಪ್ರಪಂಚದಲ್ಲೆಲ್ಲ ತನ್ನ ಅದೃಷ್ಟ ಪರೀಕ್ಷೆ ಮಾಡಿದ್ದ ಮತ್ತು ಅವನಿಗೆ ಇರುವ ಸ್ಥಳ ಮುಖ್ಯವಾಗಿರಲಿಲ್ಲ. ಉಳಿದವರು ಮದುವೆಯಾಗಿರದಿದ್ದರೂ ಸಹ ಹಣೆಬರಹವಿದ್ದಂತೆ ಗುತ್ತದೆ ಎಂದುಕೊಂಡಿದ್ದರು. ಅವರೆಲ್ಲ ಕುಶಲಕರ್ಮಿಗಳಾಗಿದ್ದರು. ಗಂಡಸಾಗಿ ಮನೆಯನ್ನು ನಿಭಾಯಿಸುತ್ತಿದ್ದರು, ಶಾಂತಿ ಪ್ರಿಯರಾಗಿದ್ದರು. ಬೂದಿ ಬುಧವಾರ ಅವರು ದಂಡೆಯಲ್ಲಿ ತಿರುಗಾಡಲು ಹೋಗುವ ಮುಂಚೆ ಅಮರಾಂತ ಅವರಿಗೆ ಭಾನುವಾರದ ಉಡುಪು ಹಾಕಿಕೊಳ್ಳುವಂತೆ ಮಾಡಿ ತನ್ನ ಜೊತೆ ಚರ್ಚ್‌ಗೆ ಬರುವಂತೆ ಮಾಡಿದಳು. ಶ್ರದ್ಧೆಯಿಂದಲ್ಲದೆ ತಮಾಷೆಗಾಗಿ ಫಾದರ್ ಆಂಟೋನಿಯೋ ಇಸೆಬಲ್ ಅವರ ಹಣೆಯ ಮೇಲೆ ಬೂದಿಯಿಂದ ಶಿಲುಬೆಯಾಕಾರದಲ್ಲಿ ಮಾಡಿದ ಪವಿತ್ರ ಸ್ಥಾನಕ್ಕೆ ತಮ್ಮನ್ನು ಕರೆದುಕೊಂಡು ಹೋಗಲು ಒಪ್ಪಿದರು. ವಾಪಸು ಬಂದ ಮೇಲೆ ಅವರಲ್ಲಿ ಎಲ್ಲರಿಗಿಂತ ಚಿಕ್ಕವನು ಹಣೆಯನ್ನು ಒರೆಸಿಕೊಂಡಾಗ ಆ ಚಿಹ್ನೆಯನ್ನು ಅಳಿಸಲಾಗುವುದಿಲ್ಲ ಎಂದು ಗೊತ್ತಾಯಿತು ಮತ್ತು ಅವನ ಸೋದರರಿಗೂ ಇದೇ ರೀತಿ ಆಯಿತು. ಅವರು ಸೋಪಿನಿಂದ ತೊಳೆಯಲು ಪ್ರಯತ್ನಿಸಿದರು, ಮಣ್ಣು ಹಚ್ಚಿ ಬ್ರಷ್‌ನಿಂದ ಉಜ್ಜಿದರು. ಅಲ್ಲದೆ ಕೊನೆಯಲ್ಲಿ ಸ್ಪಂಜಿನ ರೂಪದ ಕಲ್ಲಿನಿಂದ ಉಪ್ಪು ನೀರು ಹಾಕಿ ತಿಕ್ಕಿದರು. ಆದರೆ ಶಿಲುಬೆಯಾಕಾರವನ್ನು ತೆಗೆಯಲಾಗಲಿಲ್ಲ. ಆದರೆ ಸಾಮೂಹಿಕ ಪ್ರಾರ್ಥನೆಗೆ ಹೋದ ಅಮರಾಂತ ಮತ್ತು ಇತರರು ಯಾವುದೇ ತೊಂದರೆ ಇಲ್ಲದೆ ಅದನ್ನು ಅಳಿಸಿ ಹಾಕಿದರು. ಉರ್ಸುಲಾ ಅವರಿಗೆ ವಿದಾಯ ಹೇಳುತ್ತ, “ಹಾಗಿದ್ರೇ ಒಳ್ಳೇದು, ಇನ್ಮೇಲೆ ನೀವು ಯಾರು ಅಂತ ಎಲ್ಲರಿಗೂ ಗೊತ್ತಾಗತ್ತೆ” ಎಂದಳು. ಅವರು ಸೈನಿಕರಂತೆ ಕೂಡಿ, ವಾದ್ಯ ವೃಂದ ಮತ್ತು ಪಟಾಕಿಗಳ ಸದ್ದುಗಳ ಜೊತೆ ಹೊರಟರು ಮತ್ತು ಬ್ಯುಂದಿಯಾ ಸಂತತಿ ಅನೇಕ ಶತಮಾನಗಳ ತನಕ ಇರುತ್ತದೆ ಎಂಬ ಭಾವನೆ ಅವರಲ್ಲಿ ನೆಲೆಯೂರುವಂತೆ ಮಾಡಿದರು. ಹಣೆಯ ಮೇಲೆ ಬೂದಿಯ ಶಿಲುಬೆಯಾಕಾರವಿದ್ದ ಅವ್ರೇಲಿಯಾನೋ ಟ್ರೀಸ್ತೆ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಆವಿಷ್ಕಾರಗಳ ವಿಭ್ರಾಂತಿಯಲ್ಲಿ ಕನಸು ಕಂಡ ಹಾU, ಊರಿನ ಅಂಚಿನಲ್ಲಿ ಐಸ್ ಫ್ಯಾಕ್ಟರಿ ಶುರು ಮಾಡಿದ. +ಅವನು ಬಂದು ಕೆಲವು ತಿಂಗಳಾದ ಮೇಲೆ ಸಾಕಷ್ಟು ಪ್ರಸಿದ್ಧಿ ಮತ್ತು ಜನಾನುರಾಗ ಪಡೆದಾಗ ಅವ್ರೇಲಿಯಾನೋ ಟ್ರೀಸ್ತೆ ತನ್ನ ತಾಯಿ ಮತ್ತು ಮದುವೆಯಾಗದ ಸೋದರಿಯನ್ನು (ಅವಳು ಕರ್ನಲ್‌ನ ಮಗಳಲ್ಲ) ಕರೆದುಕೊಂಡು ಬರಲು ಮನೆಯೊಂದನ್ನು ಹುಡಕಲು ತೊಡಗಿದ ಮತ್ತು ಜೌಕದ ಮೂಲೆಯಲ್ಲಿದ್ದ ತೊರೆದು ಬಿಟ್ಟಂತಿದ್ದ ಭಾರಿ ಮನೆಯ ಬಗ್ಗೆ ಆಸಕ್ತಿ ವಹಿಸಿದ. ಆ ಮನೆಯ ಯಾರದು ಎಂದು ವಿಚಾರಿಸಿದ. ಯಾರೋ ಒಬ್ಬ, ಅದು ಯಾರಿಗೂ ಸೇರಿಲ್ಲವೆಂದೂ ಹಿಂದೊಮ್ಮೆ ಅಲ್ಲಿ ಬರಿ ಮಣ್ಣು ಮತ್ತು ಗೋಡೆಯ ಹೆಕ್ಕಳ ತಿಂದು ಬದುಕುತ್ತಿದ್ದ ವಿಧವೆಯೊಬ್ಬಳು ವಾಸವಾಗಿದ್ದಳೆಂದೂ ಮತ್ತು ಅವಳ ಅಂತಿಮ ವರ್ಷಗಳಲ್ಲಿ, ಕೇವಲ ಎರಡು ಸಲ, ಕೃತಕ ಹೂಗಳಿರುವ ಹ್ಯಾಟ್ ಹಾಕಿಕೊಂಡು ಹಳೆಯ ಬಿಳಿ ಬಣ್ಣದ ಶೂ ತೊಟ್ಟುಕೊಂಡು ಬಿಷಪ್‌ಗೆ ಕಾಗದ ಹಾಕಲು, ಜೌಕವನ್ನು ದಾಟಿ ಪೋಸ್ಟಾಫೀಸಿಗೆ ಹೋಗಲು ರಸ್ತೆಯಲ್ಲಿ ಕಾಣಿಸಿಕೊಂಡಳೆಂದು ಹೇಳಿದ. ಅವನಿಗೆ ಹಲವರು ಅವಳಿಗಿದ್ದ ಒಬ್ಬಳೇ ಸಂಗಾತಿಯೆಂದರೆ ಒಬ್ಬಳೇ ಸೇವಕಿಯೆಂದೂ ಮತ್ತು ಅವಳು ಮನೆಗೆ ನುಗ್ಗಿದ ನಾಯಿ, ಬೆಕ್ಕು ಮತ್ತು ಯಾವುದೇ ಪ್ರಾಣಿಯನ್ನು ಕೊಂದು ಅದರ ಕೊಳೆತ ಮಾಂಸ ಕಂಡು ಜನರಿಗೆ ಸಿಟ್ಟು ತರಿಸಲು, ರಸ್ತೆಯ ಮಧ್ಯಕ್ಕೆ ಸತ್ತ ಪ್ರಾಣಿಗಳನ್ನು ಎಸೆಯುತ್ತಿದ್ದಳೆಂದು ತಿಳಿಸಿದರು. ಸೂರ್ಯನ ಉರಿ ಬಿಸಿಲಿನ ಶಾಖ ಅಂಥ ಕೊನೆಯ ಪ್ರಾಣಿಯ ಚರ್ಮದ ಮೇಲೆ ಬಿದ್ದು ಎಷ್ಟು ದಿನಗಳಾಯಿತೆಂದರೆ, ಪ್ರತಿಯೊಬ್ಬರಿಗೂ ಆ ಮನೆಯ ಒಡತಿ ಮತ್ತು ಸೇವಕಿಯರಿಬ್ಬರೂ ಯುದ್ಧ ಮುಗಿಯುವ ಬಹಳ ಮುಂಚೆಯೇ ಸತ್ತು ಹೋಗಿದ್ದಾರೆ ಎಂದು ತಮ್ಮಷ್ಟಕ್ಕೆ ಭಾವಿಸಿದರು. ಆ ಮನೆ ಇನ್ನೂ ಉಳಿದುಕೊಂಡಿರುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಂಥ ಭಾರಿ ಮಳೆಯಾಗಲಿ ಅಥವಾ ಬಿರುಗಾಳಿ ಬೀಸಿಲ್ಲ ಎಂದರು. ಬಾಗಿಲ ತಿರುಗಣಿಗಳಲ್ಲಿ ತುಕ್ಕು ಹಿಡಿದು ಮರುಟಿದ್ದವು, ಬಾಗಿಲುಗಳು ತಿರುಗಣಿಗಳ ಆಧಾರದಿಂದ ನಿಂತಿದ್ದವು, ತೇವದಿಂದ ಬೆಸೆದುಕೊಂಡಿದ್ದವು, ಹುಲ್ಲು ಗಿಡ ಬೆಳೆದು ನೆಲ ಸೀಳು ಬಿಟ್ಟಿತ್ತು ಮತ್ತು ಸೀಳುಗಳಲ್ಲಿ, ಹಲ್ಲಿ ಮತ್ತಿತರ ಜಂತುಗಳು ಮನೆ ಮಾಡಿಕೊಂಡಿದ್ದವು. ಇವೆಲ್ಲದರಿಂದ ಆ ಮನೆಯಲ್ಲಿ ಕೊನೆಯ ಪಕ್ಷ ಐವತ್ತು ವರ್ಷ ಯಾವ ನರಪ್ರಾಣಿ ಅಲ್ಲಿರಲಿಲ್ಲವೆಂಬ ಭಾವನೆಯನ್ನು ಉಂಟುಮಾಡುತ್ತಿತ್ತು. ಆದರೆ ಹಠಾತ್ ಪ್ರವೃತ್ತಿಯವನಾದ ಅವ್ರೇಲಿಯಾನೋ ಟ್ರೀಸ್ತೆಗೆ ಮುಂದುವರೆಯಲು ಅವೆಲ್ಲ ಆಧಾರಗಳು ಬೇಕಿರಲಿಲ್ಲ. ಅವನು ಮುಂಬಾಗಿಲನ್ನು ಭುಜದಿಂದ ತಳ್ಳಿದಾಗ ಹುಳು ತಿಂದು ಮರದ ಚೌಕಟ್ಟು ಕಟ್ಟಿದ್ದ ಇಲ್ಲಣಗಳ ನಡುವೆ ಧೂಳೆಬ್ಬಿಸಿ, ನಿಶ್ಯಬ್ದವಾಗಿ ಕೆಳಗೆ ಬಿತ್ತು. ಅವ್ರೇಲಿಯಾನೋ ಟ್ರೀಸ್ತೆ ಧೂಳು ಕರಗಿ ತಿಳಿಯಾಗುವ ತನಕ ಹೊರಗಡೆಯೇ ನಿಂತಿದ್ದ. ಅನಂತರ ಅವನು ರೂಮಿನ ಮಧ್ಯದಲ್ಲಿ ಕೊಳಕಾದ, ಕಳೆದ ಶತಮಾನದ ಉಡುಗೆ ತೊಟ್ಟಿದ್ದ, ತಲೆ ಮೇಲೆ ಅಲ್ಪ ಸ್ವಲ್ಪ ಹಳದಿ ಕೂದಲುಗಳಿದ್ದ ಬೋಳಾಗಿದ್ದ ಮತ್ತು ಇನ್ನೂ ಸುಂದರವಾಗಿದ್ದು ಆಸೆ ಕಳೆದುಕೊಂಡಿದ್ದ ಎರಡು ದೊಡ್ಡ ಕಣ್ಣುಗಳಿದ್ದ, ಹಾಗೂ ಏಕಾಂತದ ಭಾರದಿಂದ ಮುಖದ ಚರ್ಮ ಸುಕ್ಕಾಗಿದ್ದ ಹೆಂಗಸನ್ನು ಕಂಡ ಮತ್ತು ಅವಳ ಬೇರೆ ಯಾವುದೋ ಪ್ರಪಂಚದ ನೋಟವನ್ನು ಕಂಡದ್ದರಿಂದ ಅಲ್ಲಾಡಿ ಹೋದ. ಅವ್ರೇಲಿಯಾನೋ ಟ್ರೀಸ್ತೆ ಆ ಹೆಂಗಸು ಪುರಾತನ ಕಾಲದ ಪಿಸ್ತೂಲಿನಿಂದ ತನ್ನ ಕಡೆ ಗುರಿ ಹಿಡಿದುಕೊಂಡಿರುವುದನ್ನು ಗಮನಿಸಲಿಲ್ಲ. +ಅವನು “ದಯವಿಟ್ಟು ಕ್ಷಮಿಸಿ” ಎಂದು ಮೆಲುದನಿಯಲ್ಲಿ ಹೇಳಿದ. +ನಾಜೂಕಿನ ಪೀಠೋಪಕರಣಗಳು ತುಂಬಿದ್ದ ಆ ರೂಮಿನ ಮಧ್ಯೆ ಅಲ್ಲಾಡದೆ ಇದ್ದ ಅವಳು, ಭಾರಿ ಅಗಲದ ಭುಜದ ಮತ್ತು ಹಣೆಯ ಮೇಲೆ ಬೂದಿಯ ಹಚ್ಚೆಯಿದ್ದ ಮನುಷ್ಯನ ಪ್ರತಿ ಇಂಚಿಂಚನ್ನು ಪರೀಕ್ಷಿಸಿದಳು ಮತ್ತು ಧೂಳಿನ ಕಣಗಳ ಮೂಲಕ ಇತರೆ ವಸ್ತುಗಳ ಜೊತೆ ಅವನ ಭುಜದ ಮೇಲಿದ್ದ ಡಬಲ್ ಬ್ಯಾರಲ್ ಗನ್ ಹಾಗೂ ಕೈಯಲ್ಲಿ ಮೊಲಗಳ ಸರವನ್ನು ನೋಡಿದಳು. +ಅವಳು ಕೆಳದನಿಯಲ್ಲಿ “ದೇವರೇ ….. ಈಗ ಅವರು ಆ ನೆನಪುಗಳನ್ನು ಹೊತ್ತು ತರೋದು ಸರಿಯಲ್ಲ” ಎಂದಳು. +ಅವ್ರೇಲಿಯಾನೋ ಟ್ರೀಸ್ತೆ, “ನಾನು ಮನೇನ ಬಾಡಿಗೆಗೆ ತೊಗೋ ಬೇಕೂಂತ ಇದೀನಿ” ಎಂದ. +ಆಗ ಹೆಂಗಸು ಪಿಸ್ತೂಲನ್ನು ಮೇಲೆತ್ತಿ ಬೂದಿಯ ಕ್ರಾಸ್‌ಗೆ ಬಿಗಿ ಮುಂಗೈಯಿಂದ ಗುರಿ ಹಿಡಿದಳು ಮತ್ತು ಅದರ ಕುದುರೆಯ ಮೇಲೆ ನಿರ್ಧಾರದಿಂದ ಬೆರಳಿಟ್ಟಳು. +ಅವಳು, “ಹೊರಟು ಹೋಗು” ಎಂದು ಅಬ್ಬರಿಸಿದಳು. +ಆ ರಾತ್ರಿ ಅವ್ರೇಲಿಯಾನೋ ಟ್ರೀಸ್ತೆ ಮನೆಯವರಿಗೆ ಆ ಘಟನೆಯ ಬಗ್ಗೆ ಹೇಳಿದ. ಆಗ ಉರ್ಸುಲಾ ದಿಗ್ಭ್ರಾಂತಳಾಗಿ ಅತ್ತಳು. ಅವಳು, “ದೇವರೇ, ಅವಳಿನ್ನೂ ಬದುಕಿದ್ದಾಳೆ” ಎಂದು ತಲೆ ಹಿಡಿದುಕೊಂಡು, ಆಶ್ಚರ್ಯದಿಂದ ಹೇಳಿದಳು. ಕಾಲ, ಯುದ್ಧ ಮತ್ತು ಲೆಕ್ಕವಿಲ್ಲದಷ್ಟು ಅನಾಹುತಗಳು ರೆಬೇಕಳನ್ನು ಮರೆಯುವಂತೆ ಮಾಡಿದ್ದವು. ಆ ಬಿಲದಲ್ಲೇ ಕೊಳೆಯುತ್ತಿದ್ದಾ, ಅವಳಿನ್ನೂ ಬದುಕಿದ್ದಾಳೆ ಎನ್ನುವುದನ್ನು ಒಂದು ನಿಮಿಷವೂ ಮರೆಯದೆ ಇದ್ದ ಒಂದೇ ವ್ಯಕ್ತಿ ಎಂದರೆ, ಅತ್ಯಂತ ಕಠೋರಳಾದ ಮತ್ತು ವಯಸ್ಸಾಗುತ್ತಿದ್ದ ಅಮರಾಂತ. ಅವಳ ಮಂಜಿನ ಹೃದಯ, ಏಕಾಂತದಲ್ಲಿದ್ದ ಅವಳನ್ನು ಜಾಗೃತಗೊಳಿಸಿದಾಗ, ಸಂಜೆ ಅವಳ ಬಗ್ಗೆ ಯೋಚಿಸಿದ್ದಳು ಮತ್ತು ಜೋತು ಬಿದ್ದ; ಮೊಲೆಗಳನ್ನು ತೆಳು ಹೊಟ್ಟೆಯನ್ನು ಸೋಪಿನಿಂದ ತೊಳೆದುಕೊಳ್ಳುವಾಗ, ಗಂಜಿ ಹಾಕಿದ ಒಳಲಂಗವನ್ನು ತೊಟ್ಟುಕೊಳ್ಳುವಾಗ, ವಯಸ್ಸಾದವರ ಒಳಕುಪ್ಪಸವನ್ನು ಹಾಕಿಕೊಳ್ಳುವಾಗ ಮತ್ತು ಘೋರ ಪ್ರಾಯಶ್ಚಿತ್ತದ ಕೈಯಿನ ಕಪ್ಪು ಬ್ಯಾಂಡೇಜನ್ನು ಬದಲಾಯಿಸುವಾಗ, ಅವಳ ಬಗ್ಗೆ ಯೋಚಿಸಿದ್ದಳು. ಯಾವಾಗಲೂ ಪ್ರತಿಕ್ಷಣವೂ, ನಿದ್ದೆಯಲ್ಲಿ, ಎಚ್ಚರದಲ್ಲಿ, ಅತ್ಯಂತ ಮೇಲ್ಮಟ್ಟದ ಮತ್ತು ತುಚ್ಛವಾದ ಆಲೋಚನೆಗಳಲ್ಲಿ, ಅಮರಾಂತ ಅವಳ ಬಗ್ಗೆ ಯೋಚಿಸುತ್ತಿದ್ದಳು. ಏಕೆಂದರೆ ಏಕಾಂತ ಅವಳ ನೆನಪಿನಲ್ಲೊಂದು ಆಯ್ಕೆಯನ್ನು ಮಾಡಿತ್ತು ಮತ್ತು ಜೀವನ ಅವಳ ಹೃದಯದಲ್ಲಿ ಸೇರಿಸಿಟ್ಟ ಮನೋವ್ಯಥೆಯ ಕಂತೆಯನ್ನು ಸುಟ್ಟು ಹಾಕಿತ್ತು ಹಾಗೂ ಪರಮ ನೋವು ಕೊಟ್ಟ ಇತರರನ್ನು ಪರಿಶುದ್ಧವಾಗಿಸಿ, ವಿಸ್ತೃತಗೊಳಿಸಿ, ಸದಾ ಇರುವಂತೆ ಮಾಡಿತ್ತು. ಸುಂದರಿ ರೆಮಿದಿಯೋಸ್‌ಗೆ ರೆಬೇಕ ಬದುಕಿರುವ ಬಗ್ಗೆ ಅವಳಿಂದ ತಿಳಿದಿತ್ತು. ಪ್ರತಿ ಬಾರಿ ಅವರು ಆ ಹಾಳು ಬಿದ್ದ ಮನೆಯನ್ನು ಹಾದು ಹೋಗುವಾಗ, ಅವಳು ಆ ಕಹಿ ಘಟನೆಯ ಬಗ್ಗೆ, ದ್ವೇಷದ ಕಥೆಯ ಬಗ್ಗೆ ಹೇಳುತ್ತಿದ್ದಳು. ಆ ಮೂಲಕ ಲಂಬಿತ ಮತ್ಸರವನ್ನು ಹಂಚಿಕೊಳ್ಳಲು ಮತ್ತು ಸತ್ತ ನಂತರವೂ ಅದನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಳು. ಆದರೆ ಅವಳ ಯೋಜನೆ ಫಲಕಾರಿಯಾಗಲಿಲ್ಲ. ಏಕೆಂದರೆ ರೆಮಿದಿಯೋಸ್ ಯಾವುದೇ ರೀತಿಯ ತೀವ್ರವಾದ ಆವೇಶವನ್ನು ಸ್ವೀಕರಿಸಲು ಸಿದ್ಧಳಿರಲಿಲ್ಲ, ಅದರಲ್ಲೂ ಮತ್ತೊಬ್ಬರಿಗೆ ಸಂಬಂಧಪಟ್ಟಿದ್ದನ್ನು. ಇನ್ನೊಂದು ಕಡೆ ಉರ್ಸುಲಾ, ಅಮರಾಂತಳಿಗೆ ವಿರುದ್ಧವಾದ ಯಾತನೆಗೆ ಒಳಗಾಗಿದ್ದಳು ಮತ್ತು ರೆಬೇಕಳನ್ನು ಅವಗುಣಗಳಿಂದ ಮುಕ್ತವಾದ ನೆನಪುಗಳಿಂದ ಪರಿಭಾವಿಸುತ್ತಿದ್ದಳು. ಏಕೆಂದರೆ ತಮ್ಮ ವಂಶವೃಕ್ಷಕ್ಕೆ ಸಂಬಂಧಿಸಿದಂತೆ ಅಯೋಗ್ಯವಾದ ಕೆಲಸ ಮಾಡಿದ್ದನ್ನೂ, ಚೀಲದಲ್ಲಿ ತನ್ನ ತಂದೆ ತಾಯಿಯ ಮೂಳೆಗಳನ್ನು ತಂದ ಶೋಚನೀಯ ಸ್ಥಿತಿಯಲ್ಲಿದ್ದ ಚಿಕ್ಕ ಹುಡುಗಿಯ ನೆನಪು ಅವಳಿಗಿತ್ತು. ಅವ್ರೇಲಿಯಾನೋ ಸೆಗುಂದೋ ಅವಳನ್ನು ಮನೆಗೆ ಕರೆದುಕೊಂಡು ಬರಬೇಕೆಂದು ನಿರ್ಧರಿಸಿದ. ಆದರೆ ಅವನ ಉದ್ದೇಶ ರೆಬೇಕಳ ತೀವ್ರ ವಿರೋಧದಿಂದ ನೆರವೇರಲಿಲ್ಲ. ಏಕೆಂದರೆ ಅನೇಕ ವರ್ಷಗಳ ಯಾತನೆ ಮತ್ತು ದುಃಖ, ಅವಳಿಗೆ ಏಕಾಂತವನ್ನು ಪಡೆಯಲು ಅಗತ್ಯವಾಗಿತ್ತು ಮತ್ತು ಅವಳು ಅದನ್ನು ಮುದುಕಿಯೊಬ್ಬಳಿಗೆ ದಾನವಾಗಿ ದೊರಕುವ ಸುಳ್ಳು ಆಕರ್ಷಣೆಗೆ ಬದಲಾಗಿ ಕಳೆದುಕೊಳ್ಳಲು ಇಷ್ಟವಿರಲಿಲ್ಲ. +ಫೆಬ್ರವರಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಇನ್ನೂ ಬೂದಿಯ ಶಿಲುಬೆಯಾಕಾರವಿದ್ದ ಹದಿನಾರು ಗಂಡು ಮಕ್ಕಳು ಹಿಂತಿರುಗಿದಾಗ ಅವ್ರೇಲಿಯಾನೋ ಟ್ರೀಸ್ತೆ ಅವರಿಗೆ ರೆಬೇಕಳ ಬಗ್ಗೆ ಉತ್ಸಾಹದಿಂದ ಹೇಳಿದ. ಅವರು ಅರ್ಧ ದಿನದಲ್ಲಿ ಮನೆಯ ಲಕ್ಷಣವನ್ನೆ ಮರುಸ್ಥಾಪಿಸಲು ಕಿಟಕಿ, ಬಾಗಿಲುಗಳನ್ನು ಬದಲಾಯಿಸಿ ಮನೆಯ ಮುಂಭಾಗಕ್ಕೆ ಸಂತೋಷ ತರಿಸುವ ಬಣ್ಣ ಬಳಿದರು. ಗೋಡೆ ಮತ್ತು ನೆಲಕ್ಕೆ ಸಿಮೆಂಟಿನಿಂದ ಹಸನುಗೊಳಿಸಿದರು. ಆದರೆ ಅವರಿಗೆ ಮನೆಯ ಒಳಗಡೆ ಕೆಲಸ ಮುಂದುವರಿಸಲು ಯಾವುದೇ ಅಧಿಕೃತ ಪರವಾನಗಿ ಸಿಗಲಿಲ್ಲ. ರೆಬೇಕ ಬಾಗಿಲ ಹತ್ತಿರ ಕೂಡ ಬರಲಿಲ್ಲ. ಅವರು ಉಸಿರುಗಟ್ಟಿ ಮಾಡುತ್ತಿದ್ದ ಬದಲಾವಣೆಯ ಕೆಲಸ ಮುಗಿಸಲು ಅವಳು ಅನುವು ಮಾಡಿಕೊಟ್ಟಳು. ಅನಂತರ ಅವಳು ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿದಳು ಮತ್ತು ಅವಳ ಸೇವಕಿಯಾಗಿದ್ದ ವಯಸ್ಸಾದ ಆರ್ಗೆನಿಡಾಳ ಜೊv, ಕೊನೆಯ ಬಾರಿ ಯುದ್ಧವಾದ ಮೇಲೆ, ಚಲಾವಣೆಯನ್ನು ನಿಲ್ಲಿಸಿದ್ದ ಒಂದು ಬೊಗಸೆ ನಾಣ್ಯವನ್ನು ಅವರಿಗೆ ಕಳಿಸಿದಳು. ರೆಬೇಕ ಅವುಗಳಿಗಿನ್ನೂ ಸಾಕಷ್ಟು ಬೆಲೆ ಇದೆ ಎಂದೇ ತಿಳಿದಿದ್ದಳು. ಆಗಲೇ ಅವರಿಗೆ ಪ್ರಪಂಚದಿಂದ ಅವಳು ಬೇರ್ಪಡೆಯಾಗಿರುವ ಬಗ್ಗೆ ಅರಿವಾಯಿತು ಮತ್ತು ಸಧ್ಯದ ಸ್ಥಿತಿಯಿಂದ, ಅವಳ ಉಸಿರು ಇರುವ ತನಕ, ಮೊಂಡುತನದ ಸ್ವಭಾವದಿಂದ ಅವಳನ್ನು ರಕ್ಷಿಸುವುದು ಅಸಾಧ್ಯವೆಂದು ಅವರಿಗೆ ಗೊತ್ತಾಯಿತು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳು ಎರಡನೆ ಬಾರಿ ಮಕೋಂದೋಗೆ ಭೇಟಿ ಕೊಟ್ಟ ಕಾಲದಲ್ಲಿ ಅವರಲ್ಲಿ ಅವ್ರೇಲಿಯಾನೋ ಸೆಂಟೆಂದೋ ಎನ್ನುವನೊಬ್ಬ ಅವ್ರೇಲಿಯಾನೋ ಟ್ರೀಸ್ತೆಯ ಜೊತೆ ಕೆಲಸ ಮಾಡಲು ಉಳಿದುಕೊಂಡ. ನಾಮಕರಣಕ್ಕಾಗಿ ಅವರ ಮನೆಗೆ ಕರೆತರಲಾದವರಲ್ಲಿ ಅವನು ಮೊದಲಿಗನಾಗಿದ್ದ. ಉರ್ಸುಲಾ ಮತ್ತು ಅಮರಾಂತ ಅವನನ್ನು ಬಹಳ ಚೆನ್ನಾಗಿ ನೆನಪಿಟ್ಟುಕೊಂಡಿದ್ದರು. ಏಕೆಂದರೆ ಕೆಲವೇ ಗಂಟೆಗಳಲ್ಲಿ ಅವನ ಕೈಗೆ ಸಿಕ್ಕು ಒಡೆಯಬಹುದಾಗಿದ್ದ ಎಲ್ಲವನ್ನೂ ಧ್ವಂಸಮಾಡಿದ್ದ. ಶೀಘ್ರವಾಗಿ ಬೆಳೆಯುವ ಅವನ ಪ್ರವೃತ್ತಿಯನ್ನು ಕಾಲ ತಹಬಂದಿಗೆ ತಂದಿತ್ತು ಮತ್ತು ಅವನು ಸಿಡುಬಿನ ಕಲೆಗಳ ಸಾಮಾನ್ಯದ ಎತ್ತರದವನಾಗಿದ್ದ. ಆದರೆ ಎಲ್ಲವನ್ನೂ ಹಾಳುಗೆಡಿಸುವ ಅವನ ಅಸಾಧ್ಯ ಶಕ್ತಿ ಹಾಗೆಯೇ ಇತ್ತು. ಅವನು ಮುಟ್ಟಲಿಕ್ಕೂ ಹೋಗದೆ ಅದೆಷ್ಟೋ ಪ್ಲೇಟುಗಳನ್ನು ಒಡೆದನೆಂದರೆ ಫೆರ್ನಾಂಡ ತನ್ನ ಬಳಿ ಇದ್ದ ಕೊನೆಯ ಕೆಲವು ಬೆಲೆ ಬಾಳುವ ಚೈನಾದ ಪಾತ್ರೆಗಳನ್ನು ಅವನು ಒಡೆಯುವ ಮೊದಲು ಲೋಹದ ಪಾತ್ರೆ ಪಡಗಗಳನ್ನು ಕೊಳ್ಳಲು ನಿರ್ಧರಿಸಿದಳು ಮತ್ತು ಆ ಲೋಹದ ಪ್ಲೇಟುಗಳೂ ಕೂಡ ಆಂಕುಡೊಂಕಾದವು, ನುಗ್ಗಾದವು. ಆ ಅಸಾಧ್ಯ ಶಕ್ತಿಯನ್ನು ಸರಿದೂಗಿಸುವಂಥ ಸೌಜನ್ಯಪೂರ್ಣ ನಡವಳಿಕೆ ಅವನಲ್ಲಿ ಇದ್ದದ್ದರಿಂದ ಇತರರ ವಿಶ್ವಾಸವನ್ನು ಗಳಿಸಿಕೊಟ್ಟಿತ್ತು. ಅಲ್ಲದೆ ಅವನಲ್ಲಿ ಕೆಲಸ ಮಾಡುವ ಅಗಾಧ ಸಾಮರ್ಥ್ಯವಿತ್ತು. ಸ್ವಲ್ಪ ಕಾಲದಲ್ಲಿಯೇ ಅವನು ಐಸ್ ಉತ್ಪಾದನಾ ಪ್ರಮಾಣವನ್ನು ಎಷ್ಟು ಹೆಚ್ಚಿಸಿದನೆಂದರೆ ಸ್ಥಳೀಯ ಮಾರುಕಟ್ಟೆಗೆ ಅದು ತೀರ ಹೆಚ್ಚಾಯಿತು. ಅವ್ರೇಲಿಯಾನೋ ಟ್ರೀಸ್ತೆ ತನ್ನ ಉದ್ದಿಮೆಯನ್ನು ಆ ಪ್ರದೇಶದ ಇತರೆ ಊರುಗಳಿಗೂ ವಿಸ್ತರಿಸುವ ಸಾಧ್ಯತೆಯನ್ನು ಯೋಚಿಸಬೇಕಾಯಿತು. ಆಗಲೇ ಅವನು ನಿರ್ಧಾರಿತ ಕ್ರಮದ ಬಗ್ಗೆ ಆಲೋಚಿಸಿದ್ದು. ಅದು ಕೇವಲ ಅವನ ಉದ್ದಿಮೆಯನ್ನು ನವೀಕರಿಸುವುದಕ್ಕೆ ಮಾತ್ರವಲ್ಲದೆ ಪ್ರಪಂಚದ ಉಳಿದ ಕಡೆ ಆ ಊರಿನ ಸಂಪರ್ಕವನ್ನು ಕಲ್ಪಿಸುವುದಾಗಿತ್ತು. +ಅವನು, “ನಾವಿಲ್ಲಿ ರೈಲು ಮಾರ್ಗ ಹಾಕ್ಬೇಕು” ಎಂದ. +ಮಕೋಂದೋದಲ್ಲಿ ಎಂದೂ ಕೇಳದ ಆ ಪದ ಕೇಳಿ ಬಂದದ್ದು ಅದೇ ಮೊದಲು. ಅವ್ರೇಲಿಯಾನೋ ಟ್ರೀಸ್ತೆ ಟೇಬಲ್ ಮೇಲೆ ಹಾಕಿದ ನಕ್ಷೆ, ಹೊಸೆ ಅರ್ಕಾದಿಯೋ ಬ್ಯುಂದಿಯಾ ತಯಾರಿಸಿದ್ದ ಸೌರಶಕ್ತಿ ಯೋಜನೆಯ ನೇರ ಅಳವಡಿಕೆಯಾಗಿ ಉರ್ಸುಲಾಗೆ ಕಂಡು, ಕಾಲ ವೃತ್ತಾಕಾರವಾಗಿ ಕ್ರಮಿಸುತ್ತಿದೆ ಎಂಬ ಅವಳ ಭಾವನೆಯನ್ನು ಸಮರ್ಥಿಸಿತು. ಆದರೆ ಅವನಂತೆ ಅವ್ರೇಲಿಯಾನೋ ಟ್ರೀಸ್ತೆ ನಿದ್ದೆಗೆಡಿಸಿಕೊಳ್ಳಲಿಲ್ಲ, ಊಟ ಬಿಡಲಿಲ್ಲ ಅಥವಾ ಅತಿರೇಕಗಳಿಂದ ಯಾರಿಗೂ ಹಿಂಸೆ ಕೊಡಲಿಲ್ಲ. ಅದನ್ನು ಅತ್ಯಂತ ತ್ವರಿತ ಸಾಧ್ಯತೆಗಳ ಯೋಜನೆಯೆಂದು ಪರಿಗಣಿಸಿ, ಖರ್ಚು-ವೆಚ್ಚ ಹಾಗೂ ಅವಧಿಯ ಬಗ್ಗೆ ಯುಕ್ತಾಯುಕ್ತವಾಗಿ ಲೆಕ್ಕಾಚಾರಮಾಡಿದ ಮತ್ತು ಯಾವುದೇ ಉದ್ರೇಕವಿಲ್ಲದೆ ಪೂರೆಸಿದ. ಒಂದು ಪಕ್ಷ ಅವ್ರೇಲಿಯಾನೋ ಸೆಗುಂದೋನಲ್ಲಿ ಮುತ್ತಜ್ಜನ ಸ್ವಲ್ಪ ಅಂಶವಿದ್ದು ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಲ್ಲಿ ಇರದಿದ್ದ ಸ್ವಲ್ಪ ಅಂಶವೆಂದg, ಅದು ಅವಹೇಳನದ ಬಗ್ಗೆ ಇದ್ದ ನಿರ್ಲಕ್ಷ. ಅವನು ರೈಲುದಾರಿಯನ್ನು ತರುವುದಕ್ಕೆಂದು ಸೋದರನ ನೌಕಾಯಾನದ ಅಸಂಗತ ಯೋಜನೆಗೆ ಹಗುರ ಮನಸ್ಸಿನಿಂದ ದುಡ್ಡು ಕೊಟ್ಟ ರೀತಿಯಿಂದಲೇ ದುಡ್ಡು ಕೊಟ್ಟ. ಅವ್ರೇಲಿಯಾನೋ ಟ್ರೀಸ್ತೆ ಋತುಕ್ರಮವನ್ನು ಪರ್‍ಯಾಲೋಚಿಸಿ ಆ ನಂತರದ ಬುಧವಾರ ಮಳೆಗಾಲ ಕಳೆದ ಮೇಲೆ ಹಿಂತಿರುಗುವ ಅಂದಾಜಿನಿಂದ ಹೊರಟ. ಆ ಮೇಲೆ ಅವನಿಂದ ಹೆಚ್ಚಿನ ಸುದ್ದಿ ಇರಲಿಲ್ಲ. ಫ್ಯಾಕ್ಟರಿಯ ಉತ್ಪಾದನೆಯಿಂದ ಉತ್ತೇಜಿತನಾದ ಅವ್ರೇಲಿಯಾನೋ ಸೆಂಟಿನೋ, ನೀರಿನ ಬದಲಾಗಿ ಹಣ್ಣುಗಳ ಸರಕು ಹೊಂದಿದ ಪಾಸ್ ತಯಾರಿಸುವ ಪ್ರಯೋಗವನ್ನು ಪ್ರಾರಂಭಿಸಿದ್ದ ಮತ್ತು ಗೊತ್ತಿಲ್ಲದೆಯೇ ಅಥವಾ ಯೋಚಿಸದೆಯೋ ಅವನು ಶರಬತ್ತನ್ನು ತಯಾರಿಸುವ ಮೂಲ ಅಂಶಗಳನ್ನು ಆಯೋಜಿಸಿದ್ದ. ಆ ರೀತಿಯಲ್ಲಿ ಅವನು ತನ್ನದೆಂದು ಪರಿಗಣಿಸಿದ್ದ ಉದ್ದಿಮೆಯ, ಬೇರೆ ರೀತಿಯ ಉತ್ಪಾದನೆಯನ್ನು ಮಾಡಲು ಯೋಜಿಸಿದ. ಏಕೆಂದರೆ ಮಳೆಗಾಲ ಕಳೆದರೂ ಅವನ ಸೋದರ ಹಿಂತಿರುಗುವ ಸೂಚನೆ ಇರಲಿಲ್ಲ ಮತ್ತು ಅವನಿಂದ ಯಾವುದೇ ಸುದ್ದಿ ಇರದೆ, ಬೇಸಿಗೆ ಕಾಲವೂ ಪೂರ್ತಿಯಾಗಿ ಕಳೆಯಿತು. ಆದರೆ ಇನ್ನೊಂದು ಮಳೆಗಾಲದ ಪ್ರಾರಂಭದಲ್ಲಿ ಮಧ್ಯಾಹ್ನದ ಉರಿಬಿಸಿಲಿನಲ್ಲಿ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಂಗಸೊಬ್ಬರು ಊರಿನ ಮುಖ್ಯ ರಸ್ತೆಯಲ್ಲಿ ಆಶ್ಚರ್ಯದಿಂದ ಕಿರುಚುತ್ತಾ ಓಡಿ ಬಂದಳು. +ಕೊನೆಗೆ ಅವಳು ವಿವರಿಸಿ ಹೇಳಿದ್ದು, “ಅದು ಬರ್‍ತಾ ಇದೆ… ಭೂತಾಕಾರದ್ದು, ಇಡೀ ಹಳ್ಳಿನ ಎಳ್ಕೊಂಡು ಬರ್‍ತಿರೋ ಅಡುಗೆ ಮನೆ ಥರ” ಎಂದು, +ಆ ಕ್ಷಣದಲ್ಲಿ ಭಾರಿಯಾದ ಏದುಸಿರಿನ ಜೊತೆಗೆ ಭಯ ಹುಟ್ಟಿಸುವ ಶಿಳ್ಳೆಯ ಪ್ರತಿಧ್ವನಿಯಿಂದ ಇಡೀ ಊರು ನಡುಗಿತು. ಕೆಲವು ವಾರಗಳ ಹಿಂದೆ ಗುಂಪು ಗುಂಪು ಜನರು ಹಳಿಗಳನ್ನು ಜೋಡಿಸಿ ಹೊಡೆದು ಬಿಗಿಯುತ್ತಿದ್ದದ್ದನ್ನು ಅವರು ನೋಡಿದ್ದರೂ ಯಾರೂ ಅವರ ಕಡೆ ಗಮನ ಕೊಟ್ಟಿರಲಿಲ್ಲ. ಏಕೆಂದರೆ ಅದು ನಗಾರಿ ಮತ್ತು ಶಿಳ್ಳೆ ಹಾಕುತ್ತ ವಾಪಸು ಬರುವ ಜಿಪ್ಸಿಗಳ ಹೊಸ ತಂತ್ರವಿರಬೇಕೆಂದು ತಿಳಿದುಕೊಂಡರು. ಅಲ್ಲದೆ ಹಾದಿ ಹೋಕರು ಜರೂಸಲಂನ ಅಧಿದೇವತೆಯ ಬಗ್ಗೆ ಸೃಷ್ಟಿಸಿದ್ದ ಹಳೆಯ ಹೂರಣವಿಲ್ಲದ ಹಾಡು ಕುಣಿತ ಜೊತೆಗಿದೆ ಎಂದು ತಿಳಿದರು. ಆದರೆ ಅವರು ಶಿಳ್ಳೆಗಳ ಮತ್ತು ಏದುಸಿರಿನ ಶಬ್ದದಿಂದ ತಹಬಂದಿಗೆ ಬಂದ ಮೇಲೆ, ಊರಿನ ಜನರೆಲ್ಲ ಓಡಿದರು ಮತ್ತು ಉಗಿಬಂಡಿಯಲ್ಲಿದ್ದ ಅವ್ರೇಲಿಯಾನೋ ಟ್ರೀಸ್ತೆ, ಕೈ ಬೀಸುವುದನ್ನು ಕಂಡರು ಹಾಗೂ ಎಂಟು ತಿಂಗಳು ತಡವಾಗಿ ಬಂದ ಹೂವಿನಿಂದ ಅಲಂಕೃತವಾದ ರೈಲನ್ನು ನೋಡಿದರು. ಹಳದಿ ಬಣ್ಣದ ಮುಗ್ಧವಾಗಿ ಕಾಣುತ್ತಿದ್ದ ರೈಲು, ಅದೆಷ್ಟೋ ಅಸ್ಪಷ್ಟವಾದ ಮತ್ತು ಖಚಿತವಾದವುಗಳನ್ನು, ಅದೆಷ್ಟೋ ಹಿತವಾದ ಮತ್ತು ಅಹಿತವಾದ ಕ್ಷಣಗಳನ್ನು, ಅದೆಷ್ಟೋ ಬದಲಾವಣೆಗಳನ್ನು, ಅನಾಹುತಗಳನ್ನು ಮತ್ತು ಮನೋವ್ಯಥೆಗಳನ್ನು ಮಕೋಂದೋಗೆ ತರುವುದಿತ್ತು. +೧೨ +ಅಷ್ಟೊಂದು ಅಮೋಘ ಆವಿಷ್ಕಾರಗಳಿಂದ ನಿಬ್ಬೆರಗಾದ ಮಕೋಂದೋದ ಜನರಿಗೆ ಸೋಜಿಗ ಶುರುವಾದದ್ದು ಎಲ್ಲಿಂದ ಎಂದು ತಿಳಿಯಲಿಲ್ಲ. ಎರಡನೆ ಬಾರಿ ರೈಲು ಬಂದಾಗ ಅವ್ರೇಲಿಯಾನೋ ಟ್ರೀಸ್ತೆ ತಂದ ಸ್ಥಾವರ ಒದಗಿಸಿದ ಶಕ್ತಿಯಿಂದ ಮಂಕಾಗಿ ಉರಿಯುವ ಬಲ್ಬುಗಳನ್ನು ಇಡೀ ರಾತ್ರಿ ನೋಡುತ್ತ ಕಳೆದರು. ಮತ್ತು ಅದರ ಟಾಮ್-ಟಾಮ್ ಶಬ್ದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲ ಹಿಡಿಯಿತು. ಅವರು ಬ್ರುನೋ ಕ್ರೆಸ್ಪಿ ಸಿಂಹದ ತಲೆಯ ಆಕಾರದ ಟಿಕೆಟ್ ಕೊಡುವ ಕಿಟಕಿಗಳಿದ್ದ ಥಿಯೇಟರ್‌ನಲ್ಲಿ ಚಲಿಸುವ ಸಜೀವ ರೀತಿಯ ಚಿತ್ರಗಳನ್ನು ನೋಡಿ ರೋಷಗೊಂಡರು. ಏಕೆಂದರೆ ಚಲನ ಚಿತ್ರವೊಂದರಲ್ಲಿ ಸತ್ತ ನಂತರ ಹೂಳಿದ್ದಕ್ಕೆ ಮತ್ತು ಅದರ ದುರದೃಷ್ಟಕ್ಕಾಗಿ ಕಣ್ಣೀರು ಸುರಿಸಿದ ನಂತರ ತಂತ್ರವೊಂದರಿಂದ ಅದು ಮತ್ತೆ ಕಾಣಿಸಿಕೊಂಡು, ಮತ್ತೊಂದರಲ್ಲಿ ಅರಬನಾಗಿ ಪರಿವರ್ತಿತಗೊಳ್ಳುತ್ತಿತ್ತು. ನಂತರ ಕಷ್ಟಕೋಟಲೆಯಲ್ಲಿ ಪಾಲುಗೊಳ್ಳಲು ಎರಡು ಸೆಂಟ್ ಕೊಡುತ್ತಿದ್ದ ಪ್ರೇಕ್ಷಕರು ಈ ಬಗೆಯ ಸಾರಾಸಗಟು ಮೋಸವನ್ನು ಸಹಿಸಲಾರದೆ ಸೀಟುಗಳನ್ನು ಹರಿದು ಕಿತ್ತರು. ಬ್ರುನೋ ಕ್ರೆಪ್ಸಿಯ ಕೋರಿಕೆಯ ಮೇರೆಗೆ ಮೇಯರ್ ಜನರಿಗೆ ಸಿನಿಮಾ ಎಂದರೆ ವಿಭ್ರಾಂತಿಯನ್ನು ಹುಟ್ಟಿಸುವ ಒಂದು ಮೆಷಿನ್ ಎಂದು ಮತ್ತು ಪ್ರೇಕ್ಷಕರಿಗೆ ಅಂಥ ಭಾವಾವೇಶ ಅಸಂಗತವೆಂದು ಹೇಳಿಕೆ ಕೊಟ್ಟ. ಪ್ರೋತ್ಸಾಹದಾಯಕವಲ್ಲದ ಅಂಥ ಹೇಳಿಕೆಯಿಂದ ಬಹಳಷ್ಟು ಜನರಿಗೆ ಜಿಪ್ಸಿಗಳ ಕೋರಿಕೆ ರೀತಿಯ ಹೊಸದೊಂದರಿಂದ ಮೋಸ ಹೋದ ಭಾವನೆ ಉಂಟಾಗಿ ಸಿನಿಮಾ ನೋಡಲು ಹೋಗಬಾರದೆಂದು ತೀರ್ಮಾನಿಸಿದರು. ಏಕೆಂದರೆ ಕಲ್ಪಿತ ಜೀವಿಗಳ ದುರದೃಷ್ಟದ ಅತಿರೇಕದ ಅಭಿನಯಕ್ಕಾಗಿ ಅಳುವುದಕ್ಕಿಂತ ತಮಗಾಗಲೇ ಸಾಕಷ್ಟು ತೊಂದರೆಗಳಿವೆ ಎಂದು ಭಾವಿಸಿದರು. ಹೆಚ್ಚು ಕಡಿಮೆ ಇದೇ ರೀತಿ ಹಳೆಯ ವಾದ್ಯಗಳಿಗೆ ಬದಲಾಗಿ ಚಲ್ಲಾಟದ ಹೆಂಗಸರು ಫ್ರಾನ್ಸ್‌ನಿಂದ ತಂದ ಧ್ವನಿಲೇಖಕ್ಕೂ ಉಂಟಾಯಿತು ಮತ್ತು ಸ್ವಲ್ಪ ಕಾಲ ವಾದ್ಯಗೋಷ್ಠಿಯವರ ಜೀವನಾಧಾರದ ಮೇಲೆ ಗಂಭೀರವಾದ ಪರಿಣಾಮ ಬೀರಿತು. ಪ್ರಾರಂಭದಲ್ಲಿ ಆ ನಿಷೇಧಿತ ರಸ್ತೆಗೆ ಕುತೂಹಲದ ಕಾರಣದಿಂದ ಹೋಗಿ ಬರುವವರು ಹೆಚ್ಚಾಗಿದ್ದರು ಮತ್ತು ಮರ್ಯಾದಸ್ಥ ಹೆಂಗಸರೂ ಕೂಡ ಕಾರ್ಮಿಕರಂತೆ ಮರೆಮಾಚಿಕೊಂಡು ಧ್ವನಿಲೇಖದ ಹೊಸತನವನ್ನು ಖುದ್ದಾಗಿ ಕಾಣಲು ಹೋಗಿದ್ದರೆಂಬ ಮಾತು ಹಬ್ಬಿತ್ತು. ಆದರೆ ಸಾಕಷ್ಟು ಹಾಗೂ ಬಹಳ ಸಮೀಪದ ನೋಟದಿಂದ ಅದು ಎಲ್ಲರೂ ಭಾವಿಸಿದ ಹಾಗೆ ಮತ್ತು ಆ ಹೆಂಗಸರು ಹೇಳಿದ ಹಾಗೆ ಮನೋಲ್ಲಾಸಕಾರಕ ಘಟಕವಲ್ಲವೆಂದು ಕಂಡುಕೊಂಡರು. ಅದೊಂದು ಯಾಂತ್ರಿಕ ತಂತ್ರವಾಗಿದ್ದು ಮನ ಕರಗಿಸುವ, ಮಾನವೀಯವಾದ ದೈನಂದಿನ ಸತ್ಯ ತುಂಬಿದ್ದ ವಾದ್ಯಗೋಷ್ಠಿಗೆ ಹೋಲಿಸುವಂತಿಲ್ಲವೆಂಬ ತೀರ್ಮಾನಕ್ಕೆ ಬಂದರು. ಅದೊಂದು ತೀರ ನಿರಾಶೆಯ ವಿಷಯವಾಯಿತು. ಏಕೆಂದರೆ ಧ್ವನಿಲೇಖ ತುಂಬ ಜನಪ್ರಿಯವಾದಾಗ ಪ್ರತಿಯೊಂದು ಮನೆಯಲ್ಲೂ ಅದು ವಯಸ್ಕರಿಗೆ ಮನರಂಜನೆ ಒದಗಿಸುವಂಥದಲ್ಲ ಆದರೆ ಮಕ್ಕಳು ಭಾಗವಹಿಸಿ ಅವಕ್ಕೆ ಉಪಯೋಗವಾಗುವಂಥದ್ದು ಎಂದು ಭಾವಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಊರಿನ ಯಾರಿಗೇ ಆದರೂ ರೈಲ್ವೆ ಸ್ಟೇಷನ್‌ನಲ್ಲಿ ವ್ಯವಸ್ಥಿಸಲಾಗಿದ್ದ ಟೆಲಿಫೋನಿನ ವಾಸ್ತವತೆಯನ್ನು ಪರೀಕ್ಷಿಸುವ ಅವಕಾಶ ಒದಗಿದ್ದರೆ, ಅದೊಂದು ತೀರ ಪ್ರಾಥಮಿಕ ಹಂತದಲ್ಲಿರುವ ಯಾಂತ್ರಿಕ ವಸ್ತುವಾದ ಧ್ವನಿಲೇಖವೆಂದು ಪರಿಗಣಿಸಿದ್ದರೂ ಅದನ್ನು ನಂಬದವರೂ ಕೂಡ ಕ್ಷೆಭೆಗೊಂಡಿದ್ದರು. ಮಕೋಂದೋ ಜನರು ಅಚ್ಚರಿಗೊಳ್ಳುವ ಸಾಮರ್ಥ್ಯದ ಬಗ್ಗೆ ದೇವರು ಪರೀಕ್ಷೆ ಮಾಡುತ್ತಿದ್ದಾನೆಯೋ ಎನ್ನುವಂತೆ ಅವರನ್ನು ಸದಾಕಾಲ ಉದ್ವೇಗ ಮತ್ತು ನಿರಾಶೆ, ಸಂದೇಹ ಮತ್ತು ಮನವರಿಕೆಯ ಹೊಯ್ದಾಟದಲ್ಲಿ ಎಷ್ಟರ ಮಟ್ಟಿಗೆ ಇಟ್ಟಿದ್ದನೆಂದರೆ ಯಾರಿಗೂ ವಾಸ್ತವದ ಮಿತಿಗಳೇನು ಎನ್ನುವುದು ಖಚಿತವಾಗಿ ತಿಳಿದಿರಲಿಲ್ಲ. ಅದು ಸತ್ಯ ಮತ್ತು ಭ್ರಮೆಯ ಕಗ್ಗಂಟಾಗಿ ಬಾದಾಮಿ ಮರದ ಕೆಳಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಭೂತವನ್ನು ಕಲಕಿತು ಮತ್ತು ಹಗಲಿನಲ್ಲೇ ಮನೆಯಲ್ಲೆಲ್ಲ ಓಡಾಡುವಂತೆ ಮಾಡಿತು. ರೈಲು ಸಂಚಾರ ಅಧಿಕೃತವಾಗಿ ಉದ್ಘಾಟನೆಯಾದ ಕಾಲದಿಂದ ಮತ್ತು ಅದು ಪ್ರತಿ ಬುಧವಾರ ಹನ್ನೊಂದು ಗಂಟೆಗೆ ಬರುವುದು ವಾಡಿಕೆಯಾಯಿತು. ಅಲ್ಲಿ ಹಳೆಯ ಮರದ ಸ್ಟೇಷನ್‌ನಲ್ಲಿ ಡೆಸ್, ಟೆಲಿಫೋನ್ ಮತ್ತು ಟಿಕೀಟ್ ಕೊಡುವ ಸ್ಥಳವನ್ನು ನಿರ್ಮಿಸಲಾಯಿತು. ಜೊತೆಗೆ ಮಕೋಂದೋದ ರಸ್ತೆಗಳಲ್ಲಿ ದಿನನಿತ್ಯದ ಸಾಮಾನ್ಯ ಪದ್ಧತಿ ಹಾಗೂ ಸಾಮಾನ್ಯ ನಡವಳಿಕೆಗಳ ಗಂಡಸರು, ಹೆಂಗಸರು ಕಂಡರೂ ಕೂಡ ಅವರು ಯಾವುದೋ ಸರ್ಕಸ್ಸಿನವರಂತೆ ಕಾಣುತ್ತಿದ್ದರು. ಜಿಪ್ಸಿಗಳ ತಂತ್ರಗಳ ಆಘಾತಕ್ಕೆ ಸಿಕ್ಕು ನುಜ್ಜಾದ ಆ ಊರಿನಲ್ಲಿ ಶಿಳ್ಳೆ ಹೊಡೆಯುವ ಕೆಟಲ್ ಮತ್ತು ಏಳನೆ ದಿನಕ್ಕೆ ಆತ್ಮೋದ್ಧಾರ ಖಚಿತವಾದ ದೈನಂದಿನ ವಿಧಿಗಳನ್ನು ತಿಳಿಸಿಕೊಡುತ್ತೇವೆಂದು ನಾಚಿಕೆಗೆಟ್ಟು ಹೇಳುವ ವಾಣಿಜ್ಯದ ದೊಂಬರಾಟಕ್ಕೆ ಯಾವುದೇ ಭವಿಷ್ಯವಿರಲಿಲ್ಲ. ಅವರನ್ನು ನಂಬಿದ ಕೆಲವರಿಂದ ಮತ್ತು ಯಾವಾಗಲೂ ಖಚಿತ ನಿಲುವಿಲ್ಲದವರಿಂದ ತುಂಬ ಹೆಚ್ಚು ಅನುಕೂಲ ಪಡೆದರು. ನಾಟಕದವರಂತೆ ಚಡ್ಡಿ ಹಾಕಿಕೊಂಡು, ಮಂಡಿಯ ತನಕ ಕಾಲುಕಾಪು ತೊಟ್ಟಿದ್ದ, ತಲೆಗೆ ಟೋಪಿ ಮತ್ತು ಸ್ಟೀಲಿನ ಕನ್ನಡಕ ಹಾಕಿಕೊಂಡಿದ್ದ, ನೀಲಿ ಕಣ್ಣು ಮತ್ತು ಕೋಳಿ ಚರ್ಮದ ರೀತಿಯ ಮನುಷ್ಯನೊಬ್ಬ ಮಕೋಂದೋಗೆ ಒಂದು ಬುಧವಾರ ಬಂದ. ಅವನು ಬ್ಯುಂದಿಯಾರ ಮನೆಯಲ್ಲಿ ಊಟ ಮಾಡುತ್ತಿದ್ದ ಮಿಸ್ಟರ್ ಹರ್ಬಟ್. +ಅವನು ಮೊದಲ ಬಾಳೆಗೊಂಚಲನ್ನು ತಿನ್ನುವವರೆಗೂ ಟೇಬಲ್‌ನಲ್ಲಿ ಇರುವುದನ್ನು ಯಾರೂ ಗಮನಿಸಿರಲಿಲ್ಲ. ಹರಕು ಮುರುಕು ಸ್ವ್ಯಾನಿಷ್‌ನಲ್ಲಿ ಹೊಟೆಲ್ ಜಾಕೊಬ್‌ನಲ್ಲಿ ರೂಮುಗಳಿಲ್ಲ ಎಂದು ಕೂಗಾಡುತ್ತಿದ್ದಾಗ ಆಕಸ್ಮಾತ್ತಾಗಿ ಅವ್ರೇಲಿಯಾನೋ ಸೆಗುಂದೋಗೆ ಕಂಡ. ಅವನು ಅಪರಿಚಿತರಿಗೆ ಆಗಾಗೆ ಮಾಡುತ್ತಿದ್ದ ಹಾಗೆ ಅವನನ್ನು ಮನೆಗೆ ಕರೆದುಕೊಂಡು ಹೋದ. ಅವನು ಹಾರಾಡುವ ಬಲೂನಿನ ವ್ಯಾಪಾರಿಯಾಗಿದ್ದು ಅದಕ್ಕಾಗಿ ಅರ್ಧ ಪ್ರಪಂಚ ಸುತ್ತಿ ತುಂಬ ಲಾಭ ಮಾಡಿಕೊಂಡಿದ್ದ. ಆದರೆ ಮಕೋಂದೋದಲ್ಲಿ ಯಾರೊಬ್ಬರನ್ನೂ ಹಾರಾಟಕ್ಕೆ ಕರೆದುಕೊಂಡು ಹೋಗುವುದರಲ್ಲಿ ವಿಫಲನಾಗಿದ್ದ. ಏಕೆಂದರೆ ಜಿಪ್ಸಿಗಳ ಹಾರಾಡುವ ಜಮಖಾನಗಳನ್ನು ನೋಡಿ ಹಾಗೂ ಅದರ ಮೇಲೆ ಏರಿದ ಅವರಿಗೆ ಆ ಆವಿಷ್ಕಾರ ಹಳೆಯದೆಂದು ತೋರಿತು. ಅದರಿಂದಾಗಿ ಅವನು ಮುಂದಿನ ರೈಲಿನಲ್ಲಿ ಹೊರಡುವವನಿದ್ದ. ಹುಲಿಯ ಪಟ್ಟಿಯ ರೀತಿಯ ಬಾಳೆ ಗೊಂಚಲನ್ನು ಡೈನಿಂಗ್ ರೂಮಿನಲ್ಲಿ ಅವರು ಅಭ್ಯಾಸದಂತೆ ತೂಗು ಬಿಟ್ಟಿದ್ದ ಗೊನೆಯಿಂದ ತಂದಾಗ, ಅವನು ಮೊದಲನೆ ಹಣ್ಣನ್ನು ಹೆಚ್ಚಿನ ಉತ್ಸಾಹವಿಲ್ಲದೆ ತೆಗೆದುಕೊಂಡ. ಅವನು ಅದನ್ನು ಮಾತನಾಡುತ್ತ, ಅಗಿಯುತ್ತ, ರುಚಿನೋಡುತ್ತ, ಖುಷಿಯಿಂದ ತಿನ್ನುವವನಂತಲ್ಲದೆ ಜಾಣನೊಬ್ಬನಿಗೆ ಉಂಟಾದ ಚಿತ್ತಭ್ರಮಣೆಯಿಂದ ತಿಂದ. ಅವನು ಮೊದಲನೆ ಗೊಂಚಲನ್ನು ಮುಗಿಸಿದ ಮೇಲೆ ಅವರಿಗೆ ಮತ್ತೊಂದನ್ನು ತರುವಂತೆ ಹೇಳಿದ. ಅನಂತರ ಅವನು ತನ್ನೊಂದಿಗೆ ಯಾವಾಗಲೂ ತೆಗೆದುಕೊಂಡು ಹೋಗುತ್ತಿದ್ದ ಸಲಕರಣೆಗಳ ಪೆಟ್ಟಿಗೆಯಿಂದ ವಜ್ರದ ವ್ಯಾಪಾರಿಗಿರುವ ಸಂಶಯಾತ್ಮಕ ಗಮನದಿಂದ ಬಾಳೆಹಣ್ಣನ್ನು ಆಮೂಲಾಗ್ರವಾಗಿ ಪರೀಕ್ಷಿಸಿದ. ಅವನು ಅದನ್ನು ವಿಶೇಷ ಚೂರಿಯಿಂದ ಕತ್ತರಿಸಿ ಅದರ ಚೂರುಗಳನ್ನು ಔಷಧಿಗಳನ್ನು ಅಳೆಯುವ ತಕ್ಕಡಿಯಲ್ಲಿಟ್ಟು ತೂಕ ಮಾಡಿದ ಮತ್ತು ಅದರ ಅಗಲವನ್ನು ಸಲಕರಣೆಯೊಂದರಿಂದ ಅಳೆದ. ಅನಂತರ ಇನ್ನೊಂದು ಪೆಟ್ಟಿಗೆಯಿಂದ ತೆಗೆದ ಉಪಕರಣಗಳಿಂದ ವಾತಾವರಣದ ಉಷ್ಣಾಂಶ, ತೇವಾಂಶ ಮತ್ತು ಬೆಳಗಿನ ಸಾಂದ್ರತೆಯನ್ನು ಅಳೆದ. ಇದೆಲ್ಲ ತೀರ ವಿಸ್ತೃತವಾದ ಕಾರ್ಯವಾದ್ದರಿಂದ ಯಾರೂ ನೆಮ್ಮದಿಯಿಂದ ಊಟ ಮಾಡಲಿಲ್ಲ ಏಕೆಂದರೆ ಪ್ರತಿಯೊಬ್ಬರೂ ಮಿಸ್ಟರ್ ಹರ್ಬಟ್ ಅರಿವು ಮೂಡಿಸುವಂಥ ಕೊನೆಯ ಮಾತನ್ನು ಹೇಳಲಿ ಎಂದು ಕಾದಿದ್ದರು. ಆದರೆ ಅವನು ಯಾರೇ ಆಗಲಿ ಅವನ ಉದ್ದೇಶವನ್ನು ಊಹಿಸಲು ಸಾಧ್ಯವಾಗುವಂಥ ಏನನ್ನೂ ಹೇಳಲಿಲ್ಲ. +ಅನಂತರದ ದಿನಗಳಲ್ಲಿ ಅವನು ಊರ ಹೊರಗೆ ಚಿಟ್ಟೆಗಳನ್ನು ಹಿಡಿಯುವುದಕ್ಕೆ ಒಂದು ಸಣ್ಣ ಬುಟ್ಟಿ, ಬಲೆ ಇಟ್ಟುಕೊಂಡು ಓಡಾಡುತ್ತಿದ್ದದ್ದು ಕಾಣಿಸಿತು. ಬುಧವಾರ ಎಂಜಿನಿಯರುಗಳು, ಕೃಷಿ ತಜ್ಞರು, ಜಲಧರ್ಮ ಪರಿಣಿತರು, ಭೂ ಪ್ರದೇಶದ ನಕ್ಷೆ ಬರೆಯುವವರು ಮತ್ತು ಸರ್‍ವೆ ಮಾಡುವವರ ಗುಂಪು ಬಂದು ಹರ್ಬಟ್ ಚಿಟ್ಟೆಗಳನ್ನು ಹಿಡಿಯಲು ಓಡಾಡಿದ ಸ್ಥಳಗಳನ್ನು ಪರೀಕ್ಷಿಸಿದರು. ಅನಂತರ ಹಳದಿ ರೈಲಿಗೆ ಅಳವಡಿಸಿದ ಬೆಳ್ಳಿಯ ಲೇಪ ಮಾಡಿದ, ವೆಲ್‌ವೆಟ್ ಆಸೀನವಿದ್ದ, ನೀಲಿ ಬಣ್ಣದ ಗಾಜಿನ ತಾರಸಿಯಿದ್ದ ವಿಶೇಷ ಬೋಗಿಯಲ್ಲಿ ಮಿಸ್ಟರ್ ಜಾಕ್ ಬ್ರೌನ್ ಬಂದ. ಅದೇ ವಿಶೇಷ ಬೋಗಿಯಲ್ಲಿ ಮಿಸ್ಟರ್ ಬ್ರೌನ್ ಜೊತೆಯಲ್ಲಿ ಕಪ್ಪು ಕೋಟು ಧರಿಸಿದ ಮಿಸ್ಟರ್ ಬ್ರೌನ್‌ನ ಸುತ್ತಮುತ್ತ ಓಡಾಡಿಕೊಂಡಿದ್ದ ಇಬ್ಬರು ಲಾಯರು ಬಂದರು. ಹಿಂದೊಮ್ಮೆ ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹೋದ ಕಡೆಯಲ್ಲೆಲ್ಲ ಜೊತೆಗಿದ್ದರು. ಇದರಿಂದ ಜನರಿಗೆ ಕೃಷಿ ತಜ್ಞರು ಜಲಧರ್ಮ ಪರಿಣತರು ಭೂಪ್ರದೇಶಗಳ ನಕ್ಷೆ ಹಾಕುವವರು, ಸರ್‍ವೆಯವರು ಮತ್ತು ಹಾರಾಡುವ ಬಲೂನುಗಳ ಮಿಸ್ಟರ್ ಹರ್ಬಟ್ ಹಾಗೂ ರುದ್ರ ವೈಭವದ ವಿಸ್ಟರ್ ಬ್ರೌನ್ ಅಲ್ಲದೆ ರೌದ್ರ ರೂಪದ ಜರ್ಮನ್ ಶೆಪರ್ಡ್ ನಾಯಿಗಳು – ಇವೆಲ್ಲ ಕೊಂಚ ಯುದ್ಧಕ್ಕೆ ಸಂಬಂಧಪಟ್ಟವು ಎಂದು ಯೋಚಿಸುವಂತಾಯಿತು. ಆದರೆ ಅವರಿಗೆ ಯೋಚಿಸಲು ಹೆಚ್ಚು ಸಮಯವಿರಲಿಲ್ಲ. ಏಕೆಂದರೆ ಸಂದೇಹ ಹೊಂದಿದ ಮಕೋಂದೋ ವಾಸಿಗಳು ಇದೇನಾಗುತ್ತಿದೆ ಎಂದು ಅಚ್ಚರಿ ಪಡುವಷ್ಟರಲ್ಲಿ, ಊರು ಪರದೇಶಿಗಳ ಜಿಂಕ್ ಶೀಟು ತಾರಸಿ ಹೊಂದಿದ ಮರದ ಮನೆಗಳ ಬೀಡಾಗಿತ್ತು. ಅವರು ಅರ್ಧ ಪ್ರಪಂಚದ ಎಲ್ಲಾ ಕಡೆಯಿಂದ ರೈಲಿನ ಸೀಟಿನಲ್ಲಿ ಕುಳಿತು, ಅಷ್ಟೇ ಏಕೆ ಬೋಗಿಯ ಮೇಲೆ ಕುಳಿತು ಬಂದಿದ್ದರು. ಅವರು ಅನಂತರ ಮಸ್ಲಿನ್ ಬಟ್ಟೆ ಧರಿಸಿದ ಮತ್ತು ದೊಡ್ಡ ಹ್ಯಾಟ್ ಇಟ್ಟುಕೊಂಡಿದ್ದ ತಮ್ಮ ಜೋಬದ್ರ ಹೆಂಡತಿಯರನ್ನು ಕರೆದು ತಂದು ರೈಲ್ವೆ ಹಳಿಗಳ ಪಕ್ಕದಲ್ಲಿ ಹೊಸ ಊರನ್ನು ನಿರ್ಮಿಸಿದರು. ಅದರಲ್ಲಿ ತೆಂಗಿನ ಮರಗಳನ್ನು ನೆಟ್ಟರು, ಮನೆಯ ಕಿಟಕಿಗಳಿಗೆ ಪರದೆಗಲನ್ನು ಇಳಿಬಿಟ್ಟರು, ಟೆರೇಸಿನಲ್ಲಿ ಸಣ್ಣ ಬಿಳಿಯ ಟೇಬಲ್‌ಗಳನ್ನಿಟ್ಟರು, ತಾರಸಿಯಲ್ಲಿ ಫ್ಯಾನುಗಳನ್ನು ಹೊಂದಿಸಿದರು. ನವಿಲು ಹಾಗೂ ಲಾವಕ್ಕಿಗಳಿರುವ ಹುಲ್ಲು ಹಾಸುಗಳನ್ನು ನಿರ್ಮಿಸಿದರು. ಆ ಭಾಗಕ್ಕೆ ವಿದ್ಯುತ್ ಹರಿಯುವ ಲೋಹದ ಬೇಲಿಯಿದ್ದು ಅದು ಬೇಸಿಗೆ ತಂಪಾದ ಬೆಳಗಿನ ಹೊತ್ತಿನಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ಅವರಿಗೇನು ಬೇಕೆಂದು ಯಾರಿಗೂ ಗೊತ್ತಿರಲಿಲ್ಲ ಅಥವ ಅವರು ನಿಜವಾಗಿ ಜನೋಪಕಾರಿಗಳಾಗಿರಬಹುದೇ ಹೇಗೆ, ಎಂದು ತಿಳಿದಿರಲಿಲ್ಲ. ಅವರಾಗಲೇ ಹಳೆಯ ಜಿಪ್ಸಿಗಳಿಗಿಂತಲೂ ಹೆಚ್ಚಿನ ಮಹತ್ವದ ಏರುಪೇರು ಉಂಟುಮಾಡಿದ್ದರು, ಅವು ಬಹಳಷ್ಟು ಕಾಯಂ ಆದ, ಅರ್ಥವಾಗುವಂಥವು. ಹಿಂದಿನ ಕಾಲದಲ್ಲಿ ದೈವ ನಿಯಾಮಕವೆಂದು ಪರಿಗಣಿಸುತ್ತಿದ್ದ ರೀತಿಯಲ್ಲಿ ಅವರು ಮಳೆಯ ರೂಪರೇಷೆಗಳನ್ನು ಬದಲಿಸಿದರು, ಸುಗ್ಗಿಯ ಆವರ್ತಗಳನ್ನು ತ್ವರಿತಗೊಳಿಸಿದರು ಅಲ್ಲದೆ ಇದ್ದ ಸ್ಥಳದಿಂದ ನದಿಯನ್ನು ಬದಲಿಸಿ ಅದರೊಳಗೆ ಬಿಳಿಯ ಕಲ್ಲುಗಳನಿಟ್ಟು, ತಣ್ಣೀರು ಝರಿಯನ್ನು ಊರಿನ ಮತ್ತೊಂದು ಭಾಗದಲ್ಲಿ, ಸ್ಮಶಾನದ ಹಿಂದೆ ವ್ಯವಸ್ಥಿಸಿದರು. ಆ ಸಮಯದಲ್ಲಿ ಅವರು ಹೊಸೆ ಅರ್ಕಾದಿಯೋನ, ಮಾಸಿದ ಬಣ್ಣದ ಸಮಾಧಿಯ ಮೇಲೆ ಹೆಣದ ಪೌಡರಿನ ವಾಸನೆ, ನೀರನ್ನು ಕಲುಷಿತಗೊಳಿಸದಿರಲೆಂದು ಕಾಂಕ್ರೀಟಿನ ರಕ್ಷಣಾ ಕಟ್ಟಡವನ್ನು ನಿರ್ಮಿಸಿದರು. ಪ್ರಿಯತಮೆಯರನ್ನು ಕರೆದುಕೊಂಡು ಬರದಿದ್ದ ವಿದೇಶಿಯರಿಗಾಗಿ ಫ್ರಾನ್ಸ್‌ನ ಹೆಂಗಸರ ರಸ್ತೆಯನ್ನು ಮೊದಲಿದ್ದದ್ದಕ್ಕಿಂತ ವೈಭವದ ಸ್ಥಳವಾಗಿ ಪರಿವರ್ತಿಸಿದರು ಮತ್ತು ಅಲ್ಲಿಗೆ ಒಂದು ಅಮೋಘ ಬುಧವಾರ ಇಡೀ ರೈಲು ಭರ್ತಿ ವಿಚಿತ್ರ ಸೂಳೆಯರನ್ನು ತಂದರು. ನೀತಿಗೆಟ್ಟ ಹೆಂಗಸರಾದ ಅವರು ಪುರಾತನ ಕಾಲದ ರೀತಿಯ ಮತ್ತು ಎಲ್ಲ ವಿಧದ ಕಾಮಕೇಳಿಯಲ್ಲಿ ನಿಷ್ಣಾತರಾಗಿದ್ದರು ಮತ್ತು ಉದ್ರೇಕಗೊಳ್ಳದವರನ್ನು ಪ್ರಚೋದಿಸುವ, ಅಧೈರ್ಯವಂತರಿಗೆ ಧೈರ್ಯ ತುಂಬುವ, ಸಂಪನ್ನರನ್ನು ಹೊಗಳುವ, ಮತ್ತೆ ಮತ್ತೆ ಬರುವವರಿಗೆ ಪಾಠ ಕಲಿಸುವ ಮತ್ತು ಒಂಟಿಬಡಕರನ್ನು ಸರಿಪಡಿಸುತ್ತಿದ್ದರು. ಟರ್ಕಿಗಳ ರಸ್ತೆ ಹೊರದೇಶದ ವಸ್ತುಗಳಿಂದ ತುಂಬಿ ಜಗಮಗಿಸುವ ದೀಪದ ಅಲಂಕಾರ ಹೊಂದಿತ್ತು ಮತ್ತು ಹಳೆಯ ಅಂಗಡಿಗಳು ಮಿರುಗುವ ಬಣ್ಣಗಳಿಂದ ಬದಲಾಗಿತ್ತು. ಅಲ್ಲಿ ಶನಿವಾರದ ರಾತ್ರಿ ಸಾಹಸ ಪ್ರವೃತ್ತಿಯ ಗುಂಪುಗಳ ಜನರು ಜೂಜಾಟದ ಟೇಬಲ್ಲುಗಳಿಗೆ, ಶೂಟ್ ಮಾಡುವ ಪ್ರದರ್ಶನಗಳಿಗೆ, ಭವಿಷ್ಯ ಸೂಚಿಸುವ ಹಾಗೂ ಕನಸುಗಳನ್ನು ವ್ಯಾಖ್ಯಾನಿಸುವ ಸ್ಥಳಗಳಿಗೆ ಮತ್ತು ತಿನಿಸುಗಳು ಹಾಗೂ ಕುಡಿಯಲು ಸಿಗುವ ಕಡೆ ನುಗ್ಗುತ್ತಿದ್ದರು. ಅನೇಕ ವೇಳೆ ಭಾನುವಾರ ಬೆಳಿಗ್ಗೆಯೇ ಹಲವರು ಕಂಠ ಮಟ್ಟ ಕುಡಿದು ಬಿದ್ದಿರುತ್ತಿದ್ದರು. ಮತ್ತೆ ಮತ್ತೆ ಕುಡಿಯುತ್ತ ಸುಮ್ಮನೆ ನೋಡುತ್ತಿದ್ದವರಲ್ಲಿ ಗುಂಡು ಹೊಡೆಸಿಕೊಂಡವರು, ಮುಷ್ಟಿ, ಚಾಕುಗಳ ಸೆಣಸಾಟದಲ್ಲಿ ಬಿದ್ದವರು ಇರುತ್ತಿದ್ದರು. ಅದೆಷ್ಟು ಕೋಲಾಹಲವಾದ ಮತ್ತು ಮಿತಿಮೀರಿದ ಆಕ್ರಮಣವೆಂದರೆ ಅದರ ಪ್ರಾರಂಭದ ದಿನಗಳಲ್ಲಿ ಪೀಠೋಪಕರಣ ಮತ್ತು ಟ್ರಂಕುಗಳು ಹರಡಿದ ರಸ್ತೆಯಲ್ಲಿ ನಡೆಯುವುದೇ ಕಷ್ಟವಾಗಿತ್ತು. ಅಲ್ಲಿ ಯಾರ ಅನುಮತಿ ಪಡೆಯದೆ ಯಾವುದೇ ಖಾಲಿಯಿಂದ ಜಾಗದಲ್ಲಿ ಮನೆಗಳನ್ನು ಕಟ್ಟುತ್ತಿದ್ದ ಮರಗೆಲಸದ ಶಬ್ದ ಕೇಳಿಸುತ್ತಿತ್ತು. ಅಲ್ಲದೆ ಬಾದಾಮಿ ಮರಗಳಿಗೆ ಹಾಸಿಗೆ ಕಟ್ಟಿಕೊಂಡು, ಹಾಡೆಹಗಲಿನಲ್ಲೇ ಎಲ್ಲರಿಗೂ ಕಾಣುವಂತೆ ಗಂಡು ಹೆಣ್ಣುಗಳು ಕಾಮಕೇಳಿಯಲ್ಲಿ ತೊಡಗುತ್ತಿದ್ದರು. ಶಾಂತಿ ಪ್ರಿಯ ವೆಸ್ಟ್ ಇಂಡಿಯನ್ ನೀಗ್ರೋಗಳು ನಿರ್ಮಿಸಿದ್ದ ಮೂಲೆಯೊಂದೇ ಪ್ರಶಾಂತವಾಗಿದ್ದು, ಅವರು ಪಕ್ಕದ ರಸ್ತೆಯಲ್ಲಿ ದಿಮ್ಮಿಗಳ ಮೇಲೆ ಮರದ ಮನೆಗಳನ್ನು ಕಟ್ಟಿ ಸಾಯಂಕಾಲ ಅವರು ಬಾಗಿಲು ಬಳಿ ಕುಳಿತು ವಿಷಾದಪೂರ್ಣ ಹಾಡುಗಳನ್ನು ತಮಗೆ ತೋಚಿದಂತೆ ಗುನುಗುನಿಸುತ್ತಿದ್ದರು, ಅತ್ಯಂತ ಕಡಿಮೆ ಸಮಯದಲ್ಲಿ ಅಷ್ಟೊಂದು ಬದಲಾವಣೆಗಳಾಗಿ ಮಿಸ್ಟರ್ ಹರ್ಬಟ್ ಅಲ್ಲಿಗೆ ಬಂದು ಎಂಟು ತಿಂಗಳಾದ ಮೇಲೆ, ಅಲ್ಲಿನ ಹಳಬರಿಗೆ ತಮ್ಮ ಊರನ್ನು ಗುರುತು ಹಿಡಿಯುವುದೇ ಕಷ್ಟವಾಯಿತು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನಮ್ದೆಂಥ ನಾಯಿಪಾಡಾಗಿದೆ ನೋಡಿ” ಎಂದು ಆ ವೇಳೆಯಲ್ಲಿ ತಿಳಿಸಿ, “ಇದೆಲ್ಲ ಯಾವನೋ ತಲೆ ತಿರುಕನನ್ನ ಬಾಳೆಹಣ್ಣನ್ನ ತಿನ್ನಕ್ಕೆ ಕರೆದದ್ದಕ್ಕೆ” ಹೇಳಿದ. +ಇದಕ್ಕೆ ವ್ಯತಿರಿಕ್ತವಾಗಿ ಅವ್ರೇಲಿಯಾನೋ ಸೆಗುಂದೋಗೆ ವಿದೇಶಿಗಳ ಪ್ರವಾಹದಿಂದ ಉಂಟಾದ ಸಂತೋಷವನ್ನು ತಡೆಹಿಡಿಯಲಾಗಲಿಲ್ಲ. ಇದ್ದಕ್ಕಿದ್ದ ಹಾಗೆ ಮನೆ ಅಪರಿಚಿತ ಅತಿಥಿಗಳಿಂದ, ಮಿತಿಮೀರಿ ಕುಡಿಯುವವರಿಂದ ತುಂಬಿ ಹೋಗಿತ್ತು ಮತ್ತು ನಡುಮನೆಯ ಆಚೆ ಒಂದಿಷ್ಟು ಬೆಡ್‌ರೂಮುಗಳನ್ನು ಸೇರಿಸುವ, ಡೈನಿಂಗ್ ರೂಮುಗಳನ್ನು ದೊಡ್ಡದು ಮಾಡುವ ಅಗತ್ಯವುಂಟಾಯಿತು. ಹಳೆಯ ಟೇಬಲ್‌ಗೆ ಬದಲಾಗಿ ಹದಿನಾರು ಜನರು ಕೂಡುವ ಜೊತೆಗೆ ಮತ್ತು ಬೆಳ್ಳಿಯ ಸಲಕರಣೆಗಳಿದ್ದರೂ ಪಾಳಿಯ ಮೇಲೆ ಊಟ ಮಾಡಬೇಕಾಗಿತ್ತು. ಫೆರ್ನಾಂಡ ತನ್ನ ಆಕ್ಷೇಪಣೆಗಳನ್ನು ನುಂಗಿಕೊಳ್ಳಬೇಕಾಗಿತ್ತು ಮತ್ತು ತಮ್ಮ ಬೂಟುಗಳಿಂದ ಅಂಗಳವನ್ನು ಗಲೀಜು ಮಾಡುವ ಕೈತೋಟದಲ್ಲಿ ಉಚ್ಚೆ ಹೂಯ್ಯುವ, ಎಲ್ಲಂದರಲ್ಲಿ ಮಧ್ಯಾಹ್ನದ ನಿದ್ದೆ ಮಾಡಲು ಚಾಪೆ ಹಾಸುವ ಮತ್ತು ಹೆಂಗಸರ ಬಗ್ಗೆ ಯಾವ ಸೂಕ್ಷ್ಮತೆಯೂ ಇಲ್ಲದೆ ಮಾತನಾಡುವ ಅಥವಾ ಗಣ್ಯರಂತೆ ನಡೆದುಕೊಳ್ಳುದ ಕಳಪೆ ದರ್ಜೆಯ ಅತಿಥಿಗಳನ್ನು ಸತ್ಕರಿಸಬೇಕಾಗಿತ್ತು. ಅಮರಾಂತಳಿಗೆ ಸಂಸ್ಕೃತಿಹೀನ ಜನರ ಆಕ್ರಮಣದಿಂದ ಜಿಗುಪ್ಸೆ ಉಂಟಾಗಿ ಹಿಂದಿನ ದಿನಗಳಂತೆ ಅಡುಗೆ ಮನೆಯಲ್ಲಿ ಊಟ ಮಾಡಲು ಶುರು ಮಾಡಿದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ತನ್ನನ್ನು ವರ್ಕ್‌ಶಾಪಿನಲ್ಲಿ ಕಾಣಲು ಬರುವ ಹೆಚ್ಚಿನ ಜನರು ತಾನೊಂದು ಐತಿಹಾಸಿಕ ಅವಶೇಷ ಅಥವಾ ಮ್ಯೂಸಿಯಂನ ವಸ್ತುವಿನಂತೆ ಕುತೂಹಲದಿಂದ ಇರುವ ಹಾಗೆ ಮಾಡುತ್ತಾರಲ್ಲದೆ ಗೌರವದಿಂದಾಗಲಿ ಅಥವಾ ಮರುಕದಿಂದಾಗಲಿ ಅಲ್ಲವೆಂದು ಮನವರಿಕೆಯಾಗಿತ್ತು. ಇದರಿಂದಾಗಿ ಅವನು ಬಾಗಿಲು ಹಾಕಿಕೊಂಡು ಬಿಡುತ್ತಿದ್ದ ಮತ್ತು ಆಗೀಗ ಅಪರೂಪದ ಸಂದರ್ಭಗಳಲ್ಲಿ ಮುಂಬಾಗಿಲಲ್ಲಿ ಕುಳಿತುಕೊಂಡಿರುತ್ತಿದ್ದನ್ನು ಬಿಟ್ಟರೆ ಉಳಿದಂತೆ ಅವನು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕಾಲನ್ನು ಎಳೆದು ಹಾಕುತ್ತ ಮತ್ತು ಗೋಡೆಯನ್ನು ಹಿಡಿದುಕೊಂಡು ನಡೆಯುತ್ತಿದ್ದ ಉರ್ಸುಲಾ, ರೈಲು ಬರುವ ಸಮಯವಾಗುತ್ತಿದ್ದಂತೆ ಉತ್ಸಾಹಭರಿತಳಾಗುತ್ತಿದ್ದಳು. ನಾಲ್ವರು ಅಡುಗೆ ಮಾಡುವವರಿಗೆ, “ನಾವು ಒಂದಿಷ್ಟು ಮಾಂಸ ಮತ್ತು ಮೀನಿಂದ ಮಾಡ್ಬೇಕು” ಎಂದು ಹೇಳುತ್ತಿದ್ದಂತೆ ಅವರು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಆದೇಶದಂತೆ ಎಲ್ಲವನ್ನು ಸಿದ್ಧಪಡಿಸಿಕೊಳ್ಳಲು ತೊಡಗುತ್ತಿದ್ದರು. ಅವಳು, “ನಾವು ಎಲ್ಲಾನೂ ಮಾಡ್ಬೇಕು. ಯಾಕೆಂದರೆ ಗೊತ್ತಿಲ್ಲದೋರು ಬತ್ತಾರೆ, ಅವರೇನು ಇಷ್ಟ ಪಡ್ತಾರೆ ಅಂತ ಹೆಂಗೊತ್ತಿರತ್ತೆ” ಎಂದು ಒತ್ತಾಯಿಸುತ್ತಿದ್ದಳು. ದಿನದ ತೀರ ಹೆಚ್ಚು ಶೆಖೆ ಇರುವ ಸಮಯದಲ್ಲಿ ಟ್ರೈನ್ ಬರುತ್ತಿತ್ತು. ಊಟದ ಸಮಯದಲ್ಲಿ ಮನೆ ಮಾರ್ಕೆಟ್ಟಿನ ಚಟುವಟಿಕೆಯ ರೀತಿಯಲ್ಲಿತ್ತು ಮತ್ತು ಬೆವರಿಳಿಯುತ್ತಿದ್ದ ಅತಿಥಿಗಳು _ ತಮ್ಮ ಅತಿಥೇಯರು ಯಾರು ಎಂದು ಕೂಡ ತಿಳಿಯದದ್ದವರು, ಟೇಬಲ್ ಬಳಿ ಒಳ್ಳೆಯ ಸ್ಥಾನಗಳಲ್ಲಿ ಕುಳಿತುಕೊಳ್ಳುವುದಕ್ಕೆ ಧಾವಿಸುತ್ತಿದ್ದರು. ಆಗ ಅಡುಗೆಯವರು ದೊಡ್ಡ ಪಾತ್ರೆಗಳಲ್ಲಿ ಸೂಪ್, ಮಾಂಸವನ್ನು ಮತ್ತು ಬೋಗುಣಿಗಳಲ್ಲಿ ಪಲ್ಯ, ಅನ್ನ ತೆಗೆದುಕೊಂಡು ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವಂತೆ ಓಡಾಡುತ್ತಿದ್ದರು. ಅಲ್ಲದೆ ಪೀಪಾಯಿಗಟ್ಟಲೆ ಪಾನಕವನ್ನು ಕಳಿಸುತ್ತಿದ್ದರು. ಅಲ್ಲಿ ಎಷ್ಟು ಅವ್ಯವಸ್ಥೆ ಇತ್ತೆಂದರೆ ಫೆರ್ನಾಂಡಳಿಗೆ ಅನೇಕರು ಎರಡು ಸಲ ಊಟ ಮಾಡುತ್ತಿದ್ದಾರೆಂಬ ಅನುಮಾನ ಬಂತು ಮತ್ತು ಒಂದೆರಡು ಬಾರಿ ತರಕಾರಿ ಮಾರುವರಂತೆ ಕೂಗಾಡುವುದರಲ್ಲಿದ್ದಳು. ಏಕೆಂದರೆ ಟೇಬಲ್‌ನಲ್ಲಿ ಕುಳಿತ ಯಾವನೋ ಗೊಂದಲದಲ್ಲಿ ಸಿಕ್ಕವನೊಬ್ಬ ಅವಳಿಗೆ ಚೆಕ್ ಕೇಳಿದ. ಮಿಸ್ಟರ್ ಹರ್ಬಟ್ ಬಂದು ಹೋಗಿ ಒಂದು ವರ್ಷ ಕಳೆದಿತ್ತು ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಪುಷ್ಕಳ ಜಮೀನಿನಲ್ಲಿ ಬಾಳೆ ತೋಟ ಬೆಳೆಸಲು ಅವರು ಉದ್ದೇಶಿಸಿದ್ದಾರೆಂದು ತಿಳಿಯಿತು. ಅವನ ಸಂಗಡಿಗರು ಆವಿಷ್ಕಾರಗಳ ಹುಡುಕಾಟದಲ್ಲಿ ದೂರ ಪ್ರದೇಶಗಳಿಗೆ ಹೋಗಿದ್ದಾರೆಂದು ಗೊತ್ತಾಯಿತು. ಹಣೆಯ ಮೇಲೆ ಶಿಲುಬೆಯ ಬೂದಿಯಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಇಬ್ಬರು ಮಕ್ಕಳು ಭಾರಿ ತುಪಾಕಿಗಳ ಶಬ್ದಗಳಿಂದ ಆಕರ್ಷಿತರಾಗಿ ಬಂದರು ಮತ್ತು ಅವರು ತಮ್ಮ ಸಮರ್ಥನೆಗೆ ಎಲ್ಲರ ಕಾರಣಗಳನ್ನು ವಿವರಿಸುವ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಹೇಳಿದರು. +“ನಾವು ಬಂದ್ವು, ಯಾಕೆಂದರೆ ಎಲ್ರೂ ಬರ್‍ತಿದಾರೆ.” ಸುಂದರಿ ರೆಮಿದಿಯೋಸ್ ಮಾತ್ರ ಬಾಳೆ ಮೋಡಿಯಿಂದ ಪ್ರಭಾವಿತಳಾಗದೆ ಇದ್ದವಳು. ಅವಳು ಚೆಂದದ ಬಾಲ್ಯಾವಸ್ಥೆಯ ಶಾಂತತೆಯಲ್ಲಿದ್ದು, ಔಪಚಾರಿಕ ಸಂಗತಿಗಳಿಗೆ ಹೆಚ್ಚು ಹೆಚ್ಚು ಹೊರತಾಗಿದ್ದಳು. ಅಸೂಯೆ ಮತ್ತು ಅನುಮಾನಗಳನ್ನು ಹೆಚ್ಚು ಹೆಚ್ಚು ನಿರ್ಲಕ್ಷಿಸಿ ತನ್ನದೇ ಆದ ಸರಳ ವಾಸ್ತವದಲ್ಲಿ ಸಂತೋಷವಾಗಿದ್ದಳು. ಅವಳಿಗೆ ಹೆಂಗಸರು ಏತಕ್ಕಾಗಿ ಒಳಕುಪ್ಪಸ ಮತ್ತು ಒಳಲಂಗದಿಂದ ತಮ್ಮ ಜೀವನವನ್ನು ಗೋಜಲು ಮಾಡಿಕೊಂಡಿದ್ದಾರೆಂದು ಅರ್ಥವಾಗಲಿಲ್ಲ. ಅದರಿಂದ ಅವಳು ಒರಟು ಬಟ್ಟೆಯನ್ನು ತಾನೇ ಹೊಲಿದುಕೊಂಡು ತೊಟ್ಟುಕೊಂಡಳು ಮತ್ತು ಹೆಚ್ಚಿನ ತೊಂದರೆ ಇಲ್ಲದೆ ಉಡುಪಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡಳು. ಇದರಿಂದ ಅವಳಿಗೆ ಬೆತ್ತಲೆಯಾಗಿರುವ ಭಾವನೆಯನ್ನು ಬಿಟ್ಟುಕೊಡದಂತೆ ಮನೆಯಲ್ಲಿ ಹಗುರವಾದದ್ದರಿಂದ ಮಾತ್ರ ಮನೆಯಲ್ಲಿ ಲಕ್ಷಣವಾಗಿರಲು ಸಾಧ್ಯವಾಯಿತು. ಅವರು ಅವಳ ಜಫನದ ತನಕ ಆಗಲೇ ಬೆಳೆದ ಕೂದಲ ರಾಶಿಯನ್ನು ಕತ್ತರಿಸಿಕೊಳ್ಳಬೇಕೆಂದು ಮತ್ತು ಬಾಚಣಿಕೆಯಿಂದ ಸುರುಳಿ ಸುತ್ತಿ ಜಡೆ ಹಾಕಿ ರಿಬ್ಬನ್‌ನಿಂದ ಕಟ್ಟಿಕೊಳ್ಳಬೇಕೆಂದು ಎಷ್ಟು ಗೋಳು ಹುಯ್ದುಕೊಂಡರೆಂದರೆ, ಅವಳು ಸುಮ್ಮನೆ ತಲೆ ಬೋಳಿಸಿಕೊಂಡಳು ಮತ್ತು ಆ ಕೂದಲಿಂದ ಸಂತರಿಗೆ ಕೃತಕ ಕೂದಲು ಮಾಡುವುದಕ್ಕೆ ಉಪಯೋಗಿಸಿದಳು. ಎಲ್ಲವನ್ನೂ ಸರಳಗೊಳಿಸುವ ಅವಳ ಸಹಜ ಪ್ರವೃತ್ತಿಯ ಆಶ್ಚರ್ಯಕರ ಸಂಗತಿಯೆಂದರೆ ಅವಳು ಅನುಕೂಲದ ಕಾರಣಕ್ಕೆ ಫ್ಯಾಷನ್ ತೊರೆದರೂ ಮತ್ತು ಪರಂಪರಾಗತವಾಗಿ ನಡೆದುಕೊಂಡು ಬಂದದ್ದನ್ನು ಬಿಟ್ಟು ಸ್ವಯಂ ಪ್ರೇರಣೆಗೆ ತಕ್ಕುದಾಗಿರುತ್ತಿದ್ದರಿಂದ ಅವಳ ಸೌಂದರ್ಯ ಗಂಡಸರಿಗೆ ಮತ್ತಷ್ಟು ಮನಕದಡುವ ಹಾಗಾಯಿತು ಮತ್ತು ಇನ್ನಷ್ಟು ಪ್ರಚೋದಕವಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳು ಮೊದಲ ಸಲ ಮಕೋಂದೋಗೆ ಬಂದಾಗ ಉರ್ಸುಲಾಗೆ ಅವರ ಮೈಯಲ್ಲೂ ತನ್ನ ಮರಿಮಗಳ ರೀತಿಯ ರಕ್ತ ಹರಿಯುತ್ತಿದೆ ಎನ್ನುವುದು ನೆನಪಾಯಿತು ಅಲ್ಲದೆ ಅವಳಿಗೆ ಮರೆತು ಹೋಗಿದ್ದ ವಿಷಯದಿಂದ ಮೈ ನಡುಗಿತು, ಅವಳು, “ನಿನ್ನ ಹುಷಾರಲ್ಲಿ ನೀನು ಇರು” ಎಂದು ಎಚ್ಚರಿಸಿ, “ಅವರು ಯಾರಿಂದ್ಲೇ ಆಗ್ಲಿ ಹೆಚ್ಚು ಕಮ್ಮಿ ಆದ್ರೆ ನಿಂಗೆ ಹಂದಿ ಬಾಲ ಇರೋ ಮಕ್ಕಳು ಹುಟ್ಟತ್ವೆ” ಎಂದಳು. ಆ ಹುಡುಗಿ ಅದಕ್ಕೆ ಕಿಂಚಿತ್ ಗಮನ ಕೊಡಲಿಲ್ಲ ಮತ್ತು ಗಂಡಸರಂತೆ ಬಟ್ಟೆ ಹಾಕಿಕೊಂಡು, ಗ್ರೀಸ್ ಹಚ್ಚಿದ ಕಂಬಿಯ ಮೇಲೆ ಹತ್ತಲು ಮರಳಲ್ಲಿ ಹೊರಳಾಡಿದಳು. ಆ ನೋಟ ತಡೆಯಲು ಅಸಾಧ್ಯವಾದದ್ದರಿಂದ ಹುಚ್ಚು ಹಿಡಿದ ಆ ಹದಿನೇಳು ಜನರಲ್ಲಿ ಅವಳು ಭಯಂಕರವಾದ ಅಪಾಯವನ್ನು ತರುವಂತಾದಳು. ಇದರಿಂದಾಗಿ ಊರಲ್ಲಿದ್ದಾಗ ಅವರಲ್ಲಿ ಯಾರೂ ಮನೆಯಲ್ಲಿ ಮಲಗುತ್ತಿರಲಿಲ್ಲ. ಅಲ್ಲೆ ಇದ್ದ ನಾಲ್ವರು ಉರ್ಸುಲಾಳ ಒತ್ತಾಯದಿಂದ ಬಾಡಿಗೆ ರೂಮಿನಲ್ಲಿದ್ದರು. ಆದರೆ ಸುಂದರಿ ರೆಮಿದಿಯೋಸ್‌ಗೆ ಆ ಹಿತರಕ್ಷಣೆಯ ಬಗ್ಗೆ ತಿಳಿದಿದ್ದರೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದಳು. ಈ ಭೂಮಿಯ ಮೇಲಿನ ಕೊನೆ ಕ್ಷಣದ ತನಕ ಅವಳಿಗೆ ಅನಾಹುತ ಉಂಟುಮಾಡುವಂಥ, ಬದಲಿಸಲಾಗದ ವಿಧಿ ತನ್ನ ದಿನನಿತ್ಯದ ಪಾಡು ಎನ್ನುವ ಅರಿವು ಅವಳಿಗಿರಲಿಲ್ಲ. ಉರ್ಸುಲಾಳ ಅಪ್ಪಣೆಗೆ ವಿರುದ್ಧವಾಗಿ ಪ್ರತಿಬಾರಿ ಅವಳು ಡೈನಿಂಗೆ ರೂಮಿಗೆ ಬಂದಾಗ ಹೊರಗಿನವರಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುತ್ತಿದ್ದಳು. ಅವಳು ಒರಟು ರಾತ್ರಿ ಉಡುಪಿನ ಒಳಗೆ ಸಂಪೂರ್ಣ ಬೆತ್ತಲಾಗಿರುವುದು ಎಲ್ಲರಿಗೂ ಸಲೀಸಾಗಿ ತಿಳಿಯುತ್ತಿತು. ಅವಳ ಬೋಳು ತಲೆ ಅದೇ ರೀತಿಯ ಸವಾಲಲ್ಲವೆಂದು ಅರ್ಥವಾಗುವಂತಿರಲಿಲ್ಲ. ಅಲ್ಲದೆ ತೊಡೆಗಳನ್ನು ಅವಳು ಧೈರ್ಯದಿಂದ ತೆರೆಯುತ್ತಿದ್ದದ್ದು ಪ್ರಚೋದಿಸುವ ಕಾರಣವಾಗಿರಲಿಲ. ಚೊತೆಗೆ ಊಟವಾದ ಮೇಲೆ ಬೆರಳು ಚೀಪುವ ಅವಳ ಅಭ್ಯಾಸವೂ ಕೂಡ. ಮನೆಯವರಿಗೆ ತಿಳಿಯದಿದ್ದ ಸಂಗತಿಯೆಂದರೆ, ಸುಂದರಿ ರೆಮಿದಿಯೋಸ್ ಗೊಂದಲಗೊಳಿಸುವಂಥ ಉಸಿರು ಹೊರಡಿಸುವುದನ್ನು ಹೊರಗಿನವರು ಗಮನಿಸುವುದಕ್ಕೆ ಬಹಳ ಕಾಲ ತೆಗೆದುಕೊಳ್ಳಲಿಲ್ಲ ಎನ್ನುವುದು. ಅವಳು ಬಂದು ಹೋಗಿ ಅನೇಕ ಗಂಟೆಗಳಾದ ಮೇಲೆ ಕೂಡ, ಚಿತ್ರಹಿಂಸೆಗೆ ಗುರಿಪಡಿಸುವ ಗಾಳಿಯಿಂದ, ಪ್ರೇಮದ ವಿಷಯದಲ್ಲಿ ಯಾತನೆಗೆ ಒಳಗಾದವರು, ಪ್ರಪಂಚದೆಲ್ಲ ಕಡೆ ಪ್ರೇಮದ ವಿಷಯದಲ್ಲಿ ನೋವನ್ನು ಅನುಭವಿಸಿರುವವರು, ಸುಂದರಿ ರೆಮಿದಿಯೋಸ್‌ಳ ಸಹಜ ವಾಸನೆಯಿಂದ ಉಂಟಾದ ಆತಂಕಕ್ಕೆ ಸಮಾನವಾದ ಯಾತನೆಯನ್ನು ಎಂದೂ ಅನುಭವಿಸಿಲ್ಲವೆಂದು ಹೇಳಿದರು. ಬೆಗೋನಿಯಾ ಗಿಡಗಳಿರುವ ಹೊರಗಿನ ಅಂಗಳದಲ್ಲಿ ನಡುಮನೆಯಲ್ಲಿ ಮತ್ತು ಮನೆಯ ಯಾವುದೇ ಭಾಗದಲ್ಲಿ ಅವಳು ಬಂದು ಹೋದ ಸ್ಥಳ ಯಾವುದು ಮತ್ತು ಅವಳು ಅಲ್ಲಿಂದ ಹೋಗಿ ಎಷ್ಟು ಸಮಯ ಆಗಿದೆ ಎಂದು ಗೊತ್ತುಪಡಿಸಲು ಸಾಧ್ಯವಾಗಿತ್ತು. ಅದು ಖಚಿತವಾಗಿತ್ತು. ಮತ್ತು ಮನೆಯಲ್ಲಿರುವ ಯಾರಿಗೂ ಅದನ್ನು ಪ್ರತ್ಯೇಕಿಸಲು ಸಾಧ್ಯವಾಗದಿದ್ದದ್ದು ಏಕೆಂದರೆ ಅದು ಬಹಳ ಕಾಲದಿಂದ ದೈನಂದಿನ ವಾಸನೆಯಲ್ಲಿ ಸೇರಿ ಹೋಗಿತ್ತು. ಆದರೆ ಹೊರಗಿನವರು ಅದನ್ನು ತಕ್ಷಣವೇ ಗುರುತಿಸುತ್ತಿದ್ದರು. ಆದ್ದರಿಂದ ರಕ್ಷಣಾ ದಳದ ಯುವ ಕಮಾಂಡರ್ ಪ್ರೇಮದಿಂದ ಸತ್ತದ್ದು ಹೇಗೆ ಮತ್ತು ದೂರನಾಡಿನವನೊಬ್ಬ ತೀವ್ರ ನಿರಾಸೆಗೆ ತುತ್ತಾದದ್ದು ಹೇಗೆ ಎನ್ನುವುದು ಅರ್ಥವಾಗುವಂತಿತ್ತು. ಕಳವಳದ ವೃತ್ತದಲ್ಲಿ ಅರಿಯದೆ ಚಲಿಸುತ್ತಿದ್ದ ಅವಳಿಗೆ ತಾನು ಕಾಲಿಟ್ಟ ಕಡೆ ತಕ್ಷಣ ಭರಿಸಲಾಗದಂಥ ಅನಾಹುತವನ್ನು ಹುಟ್ಟು ಹಾಕುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ಸುಂದರಿ ರೆಮಿದಿಯೋಸ್ ಗಂಡಸರ ಬಗ್ಗೆ ಸ್ವಲ್ಪವೂ ದ್ವೇಷವಿಲ್ಲದೆ ನಡೆದುಕೊಳ್ಳುತ್ತಿದ್ದಳು. ಅವರನ್ನು ಸೌಜನ್ಯಪೂರ್ಣ ಉಪಚಾರದಿಂದ ತಬ್ಬಿಬ್ಬು ಮಾಡುತ್ತಿದ್ದಳು. ಉರ್ಸುಲಾ ಅಮರಾಂತಳ ಜೊತೆ ಹೊರಗಿನವರು ಕಾಣದಿರಲೆಂದು ಅವಳು ಅಡುಗೆ ಮನೆಯಲ್ಲಿ ಊಟ ಮಾಡುವಂತೆ ಒತ್ತಾಯಿಸಿದಾಗ ಅವಳಿಗೆ ಇನ್ನೂ ಅನುಕೂಲವಾದಂತೆ ಕಂಡಿತು. ಏಕೆಂದರೆ ಅವಳು ಎಲ್ಲ ಶಿಸ್ತಿಗೂ ಹೊರತಾಗಿದ್ದಳು. ವಾಸ್ತವವಾಗಿ ಅವಳಿಗೆ ಎಲ್ಲಿ ಯಾವಾಗ ತಿಂದರೂ ವ್ಯತ್ಯಾಸವಿರಲಿಲ್ಲ. ಆದರೆ ಅವಳಿಗೆ ತೋಚಿದ ಹಾಗೆ, ಹಸಿವಾದಾಗ ತಿನ್ನುತ್ತಿದ್ದಳು. ಕೆಲವು ಸಲ ಅವಳು ಬೆಳಗಿನ ಜಾವ ಮೂರು ಗಂಟೆಗೆ ಊಟ ಮಾಡಲು ಏಳುತ್ತಿದ್ದಳು, ಇಡೀ ದಿನ ಮಲಗುತ್ತಿದ್ದಳು. ಅವಳು ಯಾವುದಾದರೊಂದು ಸಾಮಾನ್ಯ ಘಟನೆ ಅವಳನ್ನು ವ್ಯವಸ್ಥೆಗೆ ವಾಪಸು ತರುವ ತನಕ ಹಲವಾರು ತಿಂಗಳುಗಳನ್ನು ಮೂರಾಬಟ್ಟೆಯಾದ ವೇಳಾಕ್ರಮದಲ್ಲಿ ಕಳೆಯುತ್ತಿದ್ದಳು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಅವಳು ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದು ಬಾತ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡು ಎರಡು ಗಂಟೆಯ ತನಕ ಚೇಳುಗಳನ್ನು ಕೊಲ್ಲುತ್ತ ಬೆತ್ತಲಾಗಿರುತ್ತಿದ್ದಳು. ಅನಂತರ ಚೊಂಬಿನಿಂದ ತೊಟ್ಟಿಯಲ್ಲಿರುವ ನೀರನ್ನು ಹುಯ್ದುಕೊಳ್ಳುತ್ತಿದ್ದಳು. ಅದು ಎಷ್ಟು ದೀರ್ಘವಾದ, ಅಚ್ಚುಕಟ್ಟಾದ, ವೈಭವಪೂರ್ಣವಾದ ಕ್ರಿಯೆ ಆಗಿರುತ್ತಿತ್ತು ಎಂದರೆ ಅವಳು ಗೊತ್ತಿರದ ಯಾರಿಗೇ ಆದರೂ ಅವಳು ತನ್ನ ದೇಹವನ್ನು ತಾನೇ ಆರಾಧಿಸುತ್ತಿದ್ದಾಳೆ ಎನ್ನುವ ಆಲೋಚನೆ ಬರುತ್ತಿತ್ತು. ಆದರೆ ಅವಳಿಗೆ ಅದು ಎಲ್ಲ ಸಂವೇದನೆಯನ್ನು ತೊರೆದ ಏಕಾಂತದ ವಿಷಯವಾಗಿತ್ತು ಮತ್ತು ಹಸಿವಾಗುವ ತನಕ ಹೊತ್ತು ಕಳೆಯುವ ಹವ್ಯಾಸವಾಗಿತ್ತು. ಒಂದು ದಿನ ಅವಳು ಸ್ನಾನ ಮಾಡಲು ಶುರು ಮಾಡಿದಾಗ ಅಪರಿಚಿತನೊಬ್ಬ ತಾರಸಿಯಿಂದ ಹೆಂಚೊಂದನ್ನು ತೆಗೆದ. ಅವಳು ಅವಳ ಅದ್ಭುತವಾದ ಬೆತ್ತಲೆ ರೂಪವನ್ನು ನೋಡಿ ಉಸಿರುಗಟ್ಟಿತು. ಅವಳಿಗೆ ಮುರಿದ ಹೆಂಚುಗಳ ಮೂಲಕ ಅವನ ಕಂಗೆಟ್ಟ ಕಣ್ಣುಗಳನ್ನು ನೋಡಿದಳು. ಅವಳಿಗೆ ನಾಚಿಕೆಯಾಗಲಿಲ್ಲ. ಆದರೆ ಬೆಚ್ಚಿ ಬಿದ್ದಳು. +ಅವಳು, “ಹುಷಾರು, ಬಿದ್ದುಬಿಡ್ತೀಯ” ಎಂದು ಕಣ್ಣರಳಿಸಿದಳು. +ಅವನು, “ನಾನು ನಿನ್ನನ್ನ ನೋಡಬೇಕೂಂತ ಇದ್ದೆ” ಎಂದು ಮುಲುಗುಟ್ಟಿದ. +ಅವಳು, “ಸರಿ, ಸರಿ…. ಆದ್ರೆ ಹುಷಾರು. ಆ ಹೆಂಚುಗಳು ಜೀರ್ಣವಾಗಿವೆ” ಎಂದಳು. +ಅಪರಿಚಿತನ ಮುಖದಲ್ಲಿ ಅತೀವ ವೇದನೆ ಮೂಡಿ ಅವನು ಪ್ರಾಥಮಿಕ ಸಹಜ ಪ್ರವೃತ್ತಿಗಳ ವಿರುದ್ಧ ಮೌನವಾಗಿ ಸೆಣೆಸಾಡುತ್ತಿರುವುದು ಕಂಡು ಬಂತು. ಸುಂದರಿ ರೆಮಿದಿಯೋಸ್ ಹೆಂಚುಗಳು ತುಂಡಾಗಬಹುದೆಂದು ಅವನಿಗೆ ಹೆದರಿಕೆಯಾಗಿದೆ ಎಂದು ಭಾವಿಸಿದಳು. ಅವನಿಗೆ ಅಪಾಯ ಆಗದಿರಲಿ ಎಂದು ಎಂದಿಗಿಂತ ಬೇಗನೆ ಸ್ನಾನ ಮಾಡಲು ತೊಡಗಿದಳು. ನೀರನ್ನು ಹುಯ್ದುಕೊಳ್ಳುತ್ತ ತಾರಸಿ ಆ ಸ್ಥಿತಿಯಲ್ಲಿ ಇರುವುದಕ್ಕೆ ಅದರ ತೊಲೆಗಳ ಬುಡ ಮಳೆ ನೀರಿನಿಂದ ಕೊಳೆತು ಹೋಗಿದೆ ಮತ್ತು ಅದರಿಂದಾಗಿ ಬಾತ್‌ರೂಮಿನಲ್ಲಿ ಚೇಳುಗಳು ತುಂಬಿವೆ ಎಂದು ಹೇಳಿದಳು, ಆ ಮಾತುಗಳು ಸೌಜನ್ಯದಿಂದ ಕೂಡಿದ್ದಾಗಿ ಅಪರಿಚಿತನಿಗೆ ಕಂಡಿದ್ದರಿಂದ ಅವಳು ಸೋಪು ಹಚ್ಚಿಕೊಳ್ಳುವುದಕ್ಕೆ ಪ್ರಾರಂಭಿಸಿದಾಗ ಅದರಿಂದ ಪ್ರಚೋದನೆ ಹೊಂದಿ ಮತ್ತಷ್ಟು ಮುಂದುವರಿದ. +ಅವನು, “ನಾನು ನಿಮ್ಗೆ ಸೋಪ್ ಹಚ್ತೀನಿ” ಎಂದು ಮುಲುಗಿದ. +ಅವಳು, “ಅದೇನೋ ಸರಿ. ಆದ್ರೆ ಅದಕ್ಕೆ ನನ್ನ ಎರಡು ಕೈಯೇ ಸಾಕು” ಎಂದಳು. +ಅಪರಿಚಿತ, “ಕೊನೇ ಪಕ್ಷ ಬೆನ್ನಾದರೂ ಸರಿಯೆ” ಎಂದು ಅಂಗಲಾಚಿದ. +ಅವಳು, “ಇದೇನು ಅಪದ್ಧ. ಯಾರೂ ಬೆನ್ನಿಗೆ ಸೋಪು ಹಚ್ಕೊಳ್ಳೋದಿಲ್ಲ” ಎಂದಳು. +ಅನಂತರ ಅವಳು ಒರೆಸಿಕೊಳ್ಳುತ್ತಿರುವಾಗ ಕಣ್ಣಲ್ಲಿ ಹನಿಗೂಡಿಸಿಕೊಂಡು ಅವನನ್ನು ಮದುವೆಯಾಗಲು ಗೋಗರೆದ. ಅವಳು ಊಟವನ್ನು ಮಾಡz, ಒಂದು ಗಂಟೆ ಸಮಯವನ್ನು ಸ್ನಾನ ಮಾಡುತ್ತಿರುವ ಹೆಂಗಸನ್ನು ನೋಡಲು ವ್ಯರ್ಥ ಮಾಡುವಷ್ಟು ಸರಳವಾಗಿರುವ ಮನುಷ್ಯನನ್ನು ತಾನು ಮದುವೆಯಾಗುವುದಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದಳು. ಕೊನೆಗೆ ಅವಳು ಬಟ್ಟೆ ಹಾಕಿಕೊಂಡ ಮೇಲೆ ಎಲ್ಲರೂ ಅನುಮಾನಿಸುತ್ತಿದ್ದ ಹಾಗೆ ಅವಳು ಯಾವುದೇ ಒಳ ಉಡುಪು ಹಾಕಿಕೊಳ್ಳದಿರುವುದಕ್ಕೆ ಸಿಕ್ಕ ಸಮರ್ಥನೆಯನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ಆ ಗುಟ್ಟು ರಟ್ಟಾಗಿ ಕಾದ ಕಬ್ಬಿಣ ಗುರುತು ತನ್ನ ಮೇಲೆಯೇ ಬಿದ್ದಂತಾಯಿತು. ಆ ಮೇಲೆ ಅವನು ಕೆಳಗೆ ಧುಮುಕುವ ಸಲುವಾಗಿ ಇನೆರಡು ಹೆಂಚುಗಳನ್ನು ತೆಗೆದ. +ಅವಳು, “ಅದು ತುಂಬ ಮೇಲಿದೆ. ನೀನು ಸತ್ತು ಹೋಗ್ತೀಯ ಅಷ್ಟೆ” ಎಂದು ಎಚ್ಚರಿಕೆ ಕೊಟ್ಟಳು. +ಲೊಡ್ಡಾಗಿದ್ದ ಹೆಂಚುಗಳು ಪಟಪಟನೆ ಮುರಿದವು ಮತ್ತು ಭಯದಿಂದ ಕೂಗಲೂ ಅವಕಾಶವಿರದೆ ಕೆಳಗೆ ಬಿದ್ದ ಅವನ ತಲೆ ಹೋಳಾಯಿತು ಮತ್ತು ಸಿಮೆಂಟ್ ನೆಲದ ಮೇಲೆ ಬಿದ್ದು ಸತ್ತ. ಆ ಶಬ್ದ ಡೈನಿಂಗ್ ರೂಮಿನಲ್ಲಿದ್ದ ವಿದೇಶಿಯರಿಗೆ ಕೇಳಿಸಿತು ಮತ್ತು ಅವರು ಆ ದೇಹವನ್ನು ತೆರವು ಮಾಡುತ್ತಿದ್ದಾಗ ಅವನ ಚರ್ಮದ ಮೇಲೆ ಉಸಿರುಗಟ್ಟಿಸುವ ಸುಂದರಿ ರೆಮಿದಿಯೋಸ್‌ಳ ವಾಸನೆಯನ್ನು ಗಮನಿಸಿದರು. ಅದು ಅವನ ದೇಹದಲ್ಲಿ ಎಷ್ಟು ಆಳವಾಗಿತ್ತೆಂದರೆ ಸೀಳಿದ ತಲೆಯಿಂದ ರಕ್ತ ಹೊರಬರz, ಬಂಗಾರದ ಬಣ್ಣದ ನಿಗೂಢಭರಿತ ಸುಗಂಧ ಪೂರಿತ ಎಣ್ಣೆಯನ್ನು ಸೂಸುತ್ತಿತ್ತು. ಅನಂತರ ಅವರಿಗೆ ಸುಂದರಿ ರೆಮಿದಿಯೋಸ್‌ಳ ವಾಸನೆ, ಗಂಡಸರಿಗೆ ಸಾವಿನಾಚೆಗೂ ಮೂಳೆಗಳು ಹುಡಿಯಾಗುವ ತನಕ ಚಿತ್ರಹಿಂಸೆ ಕೊಡುವುದೆಂದು ಅರ್ಥವಾಯಿತು. ಆದರೂ ಕೂಡ ಆ ಘೋರ ಆಕಸ್ಮಿಕವನ್ನು ಸುಂದರಿ ರೆಮಿದಿಯೋಸ್‌ಳ ಕಾರಣದಿಂದ ಸತ್ತ ಇನ್ನಿಬ್ಬರಿಗೆ ಸಂಬಂಧ ಕಲ್ಪಿಸಲಿಲ್ಲ. ಹೊರಗಿನವರು ಮತ್ತು ಮಕೋಂದೋದ ಹಳೆಯ ವಾಸಿಗಳಿಗೆ ಸುಂದರಿ ರೆಮಿದಿಯೋಸ್ ಹೊರಡಿಸುತ್ತಿರುವುದು ಪ್ರೇಮದ ಉಸಿರಾಟವಲ್ಲದೆ ಸಾವಿನದು ಎಂಬ ಪ್ರಗಾಥೆಯಲ್ಲಿ ನಂಬಿಕೆ ಹೊಂದಲು ಬಲಿಪಶುವೊಂದು ಇನ್ನೂ ಬೇಕಾಗಿತ್ತು. ಅನೇಕ ತಿಂಗಳಾದ ಮೇಲೆ ಒಂದು ಮಧ್ಯಾಹ್ನ ಸುಂದರಿ ರೆಮಿದಿಯೋಸ್ ತನ್ನ ಗೆಳತಿಯರ ಜೊತೆ ಗಿಡಗಳನ್ನು ಹುಡುಕಲು ಹೊರಟಾಗ ಅದರ ಸಮರ್ಥನೆಗೆ ಸಂದರ್ಭ ಒದಗಿ ಬಂತು. ಮಕೋಂದೋದ ಹುಡುಗಿಯರಿಗೆ ಆ ನವೀನವಾದ ಆಟ ನಗಲು, ಅಚ್ಚರಿಪಡಲು, ಹೆದರಲು ಮತ್ತು ತಮಾಷೆ ಮಾಡಲು ಒಂದು ಕಾರಣವಾಗಿತ್ತು. ಅಲ್ಲದೆ ರಾತ್ರಿಯ ಹೊತ್ತಿನಲ್ಲಿ ತಾವು ನಡೆದಾಡುತ್ತಿದ್ದನ್ನು ಕನಸಿನಲ್ಲಾದ ಅನುಭವ ಎನ್ನುವಂತೆ ಮಾತನಾಡಿಕೊಳ್ಳುತ್ತಿದ್ದರು. ಆ ಮೌನದ ಘನತೆ ಎಷ್ಟಿತ್ತೆಂದರೆ ಉರ್ಸುಲಾಗೆ ಸುಂದರಿ ರೆಮಿದಿಯೋಸ್‌ಗೆ ಆ ಸಂತೋಷ ಸಿಗದಂತೆ ಮಾಡಲು ಮನಸ್ಸು ಒಪ್ಪಲಿಲ್ಲ. ಅವಳು ಒಂದು ಮಧ್ಯಾಹ್ನ ಅವಳೊಂದು ಹ್ಯಾಟ್ ಮತ್ತು ಲಕ್ಷಣವಾದ ಬಟ್ಟೆ ಹಾಕಿಕೊಳ್ಳ್ಳಲು ಒಪ್ಪಿದ ಮೇಲೆ ಹೋಗಲು ಬಿಟ್ಟಳು. ಗೆಳತಿಯರೆಲ್ಲ ಗಿಡಗಳಿರುವ ಸ್ಥಳವನ್ನು ತಲುಪಿದಾಗ ಗಾಳಿಯಲ್ಲಿ ಸಾವಿನ ಪರಿಮಳ ತುಂಬಿಕೊಂಡಿತು. ಸಾಲು ಗಿಡಗಳಲ್ಲಿ, ಕೆಲಸ ಮಾಡುತ್ತಿದ್ದ ಗಂಡಸರಿಗೆ ವಿಚಿತ್ರವಾದ ಸೆಳೆತ ಮುತ್ತಿಕೊಂಡಂತಾಯಿತು ಮತ್ತು ಅದರಲ್ಲಿ ಕಾಣದ ಅಪಾಯದ ಸೂಚನೆಯಿತ್ತು. ಅವಳಲ್ಲಿ ಕೆಲವರು ತಕ್ಷಣವೇ ಅಳುವುದಕ್ಕೆ ಪ್ರಾರಂಭಿಸಿದರು. ಸುಂದರಿ ರೆಮಿದಿಯೋಸ್ ಮತ್ತು ಗೆಳತಿಯರಿಗೆ ಗಾಬರಿಯಾಗಿ ಕೆಲವು ಭಯಂಕರವಾದ ಗಂಡಸರ ಕೀಟಲೆಯಿಂದ ತಪ್ಪಿಸಿಕೊಳ್ಳಲು ಅವರು ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಸ್ವಲ್ಪ ಸಮಯವಾದ ಮೇಲೆ ನಾಲ್ವರು ಅವ್ರೇಲಿಯಾನೋ ಅವರನ್ನು ರಕ್ಷಿಸಿ ಕರೆದುಕೊಂಡು ಹೋದರು. ಅವರ ಹಣೆಯ ಮೇಲಿನ ಬೂದಿಯ ಶಿಲುಬೆ ಅದೊಂದು ಜಾತಿಯ ಹಾಗೂ ಅಭೇದ್ಯದ, ಗುರುತು ಎನ್ನುವ ಪೂಜ್ಯ ಗೌರವವನ್ನು ತಂದುಕೊಟ್ಟಿತ್ತು. ಆ ಗೊಂದಲದ ಅನುಕೂಲವನ್ನು ಪಡೆದು ಅವರಲ್ಲೊಬ್ಬ ತನ್ನ ಹೊಟ್ಟೆಯನ್ನು ಅವುಚಿ ಹಿಡಿದು, ಜೋತು ಬಿದ್ದ ಪ್ರಾಣಿಯಂತೆ ಹಿಡಿದನೆಂದು ಸುಂದರಿ ರೆಮಿದಿಯೋಸ್ ಯಾರಿಗೂ ಹೇಳಲಿಲ್ಲ. ಅವಳು ಕ್ಷಣವೊಂದರಲ್ಲಿ ಆಕ್ರಮಣಕಾರನನ್ನು ಎದುರಿಸಲು ಮತ್ತು ಅವನ ಕಣ್ಣುಗಳಲ್ಲಿ ತೀವ್ರ ಅಸಮಾಧಾನವನ್ನು ಕಂಡಳು. ಅವು ಅವಳ ಹೃದಯದಲ್ಲಿ ಉರಿವ ಕಲ್ಲಿದ್ದಲಿನ ಮರುಕದಂತೆ ನೆಲೆಯೂರಿತು. ಆ ರಾತ್ರಿ ಟರ್ಕಿಗಳ ರಸ್ತೆಯಲ್ಲಿ ಕುದುರೆಯೊಂದು ಅವನ ಎದೆಯನ್ನು ತುಳಿಯುವ ಕೆಲವೇ ನಿಮಿಷಗಳ ಮುಂಚೆ ಆ ಮನುಷ್ಯ ತನ್ನ ಧೈರ್ಯ ಮತ್ತು ಅದೃಷ್ಟವನ್ನು ಕೊಚ್ಚಿಕೊಂಡಿದ್ದ. ಅವನು ರಸ್ತೆಯ ಮಧ್ಯದಲ್ಲಿ ರಕ್ತಕಾರಿ ಸತ್ತದ್ದನ್ನು ಸುತ್ತ ನೆರೆದ ಗುಂಪು ನೋಡಿತು. +ಸುಂದರಿ ರೆಮಿದಿಯೋಸ್ ಸಾಯಿಸುವ ಶಕ್ತಿ ಹೊಂದಿದ್ದಾಳೆ ಎನ್ನುವುದು ನಾಲ್ಕು ಸಂದೇಹವಿಲ್ಲದ ಘಟನೆಗಳಿಂದ ಹುಟ್ಟಿತು. ಉಡಾಫೆ ಹೊಡೆಯುವ ಕೆಲವರು ಅಂತಹ ರತಿಯಂಥ ಹೆಣ್ಣಿನ ಜೊತೆ ಒಂದು ರಾತ್ರಿ ಕಳೆದರೂ ಜೀವವನ್ನು ಬಲಿ ಕೊಡುವುದು ಸಾರ್ಥಕ ಎಂದು ಹೇಳಿದರು. ಸತ್ಯ ಸಂಗತಿಯೆಂದರೆ ಯಾರೂ ಹಾಗೆ ಮಾಡಲು ಪ್ರಯತ್ನಿಸಲಿಲ್ಲ. ಬಹುಶಃ ಅವಳನ್ನು ಪಡೆಯುವುದಷ್ಟೇ ಅಲ್ಲದೆ ಅವಳ ಅಪಾಯವನ್ನೂ ದೂರ ಮಾಡುವುದಕ್ಕೆ ಬೇಕಾಗಿದ್ದ ಒಂದೇ ಅಗತ್ಯವೆಂದರೆ ಬಹು ಪುರಾತನವಾದ ಮತ್ತು ಅತಿ ಸರಳವಾದ ಪ್ರೇಮದ ಭಾವನೆ. ಆದರೆ ಇದೊಂದು ಸಂಗತಿ ಮಾತ್ರ ಯಾರಿಗೂ ಹೊಳೆಯಲಿಲ್ಲ. ಉರ್ಸುಲಾ ಅವಳ ಹಾಗೆ ಯೋಚಿಸುವುದನ್ನು ಬಿಟ್ಟು ಬಿಟ್ಟಿದ್ದಳು. ಬೇರೆ ಸಂದರ್ಭದಲ್ಲಿ, ಅವಳನ್ನು ಈ ಭೂಮಿಗಾಗಿ ಉಳಿಸುವ ಆಲೋಚನೆಯನ್ನು ಮಾಡಿದ್ದಳು. ಅವಳು, “ಗಂಡಸರು ನೀನು ಅಂದ್ಕೊಂಡಿರೋದಕ್ಕಿಂತ ಹೆಚ್ಗೆ ಅಪೇಕ್ಷೆ ಪಡ್ತಾರೆ” ಎಂದು ನಿಗೂಢವಾಗಿ ಹೇಳಿ, “ಸಾಕಷ್ಟು ಅಡುಗೆ ಕೆಲ್ಸ ಇರತ್ತೆ, ಕಸ ಗುಡಿಸೋದು ಅಲ್ದೆ, ಸಣ್ಣ ಸಣ್ಣ ವಿಷಯಕ್ಕೆ ನೀನು ಯೋಚಿಸೋದಕ್ಕಿಂತ ಕಷ್ಟಪಡೋದು ಇರತ್ತೆ” ಎಂದು ತಿಳಿಸಿದಳು. ಅವಳನ್ನು ಸಂಸಾರದ ಸಂತೋಷಕ್ಕೆ ತರಬೇತಿ ಕೊಡುವ ಪ್ರಯತ್ನ ಮಾಡುತ್ತ ತನಗೇ ಮೋಸ ಮಾಡಿಕೊಳ್ಳುತ್ತಿದ್ದಳು. ಏಕೆಂದರೆ ಈ ಪ್ರಪಂಚದಲ್ಲಿ ತನ್ನ ಮೋಹ ನೀಗಿದ ಮೇಲೆ ಒಂದೇ ಒಂದು ದಿನದ ನಿರ್ಲಕ್ಷವನ್ನು ಸಹಿಸಿಕೊಳ್ಳುವ ಗಂಡಸು ಇರುವುದಿಲ್ಲ ಎನ್ನುವುದು ಅವಳಿಗೆ ಮನದಟ್ಟಾಗಿತ್ತು ಮತ್ತು ಅದು ಹೀಗೆ ಎಂದು ಅವಳಿಗೆ ಅರ್ಥವಾಗಿರಲಿಲ್ಲ. ಹೊಸೆ ಅರ್ಕಾದಿಯೋ ಹುಟ್ಟಿದ ಮೇಲೆ ಮತ್ತು ಅವನನ್ನು ಪೋಪ್ ಆಗುವಂತೆ ಬೆಳೆಸಬೇಕೆಂಬ ಅವಳ ಅಚಲ ನಿರ್ಧಾರ ತನ್ನ ಮರಿ ಮೊಮ್ಮಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವಂತೆ ಮಾಡಿತು. ಈಗಲ್ಲದಿದ್ದರೆ ಮುಂದೆ ಯಾವುದೋ ಪವಾಡ ಉಂಟಾಗುತ್ತದೆ ಎಂದು ನಂಬಿ ಅವರನ್ನು ಅವರ ಹಣೆಬರಹಕ್ಕೆ ಬಿಟ್ಟು ಬಿಟ್ಟಳು. ಅಲ್ಲದೆ ಎಲ್ಲವೂ ಇರುವ ಈ ಪ್ರಪಂಚದಲ್ಲಿ ಅವಳನ್ನು ಸಹಿಸಿಕೊಳ್ಳುವ ಗಂಡನೊಬ್ಬ ಇರುತ್ತಾನೆ ಎಂದು ನಂಬಿದಳು. ಅವಳು ಸಾಮಾನ್ಯ ಹೆಂಗಸಾಗಲೆಂದು ಪ್ರಯತ್ನಪಡುತ್ತಿದ್ದ ಅಮರಾಂತ, ಅದನ್ನು ಕೈಬಿಟ್ಟು ಸಾಕಷ್ಟು ಕಾಲವಾಗಿತ್ತು. ಹಿಂದೆ ಅವಳಿಗೆ ಆ ಮಧ್ಯಾಹ್ನಗಳಲ್ಲಿ ಹೊಲಿಗೆ ಯಂತ್ರದ ಹಿಡಿಕೆಯನ್ನು ತಿರುಗಿಸಲು ಯಾವ ಆಸಕ್ತಿ ಇರದಿದ್ದದ್ದು ಮರೆತು ಹೋದ ಮೇಲೆ ಅವಳು ಸರಳ ಮನಸ್ಸಿನವಳು ಎಂಬ ತಿರ್ಮಾನಕ್ಕೆ ಬಂದಿದ್ದಳು. ಗಂಡಸರ ಮಾತುಗಳು ಅವಳಿಗೆ ನಾಟದೇ ಹೋಗುತ್ತಿದ್ದರಿಂದ ತಬ್ಬಿಬ್ಬಾಗಿ ಅವಳು, “ನಾವು ನಿನ್ನ ಹರಾಜು ಹಾಕಿ ಬಿಡ್ತೀವಿ ಅಷ್ಟೆ” ಎನ್ನುತ್ತಿದ್ದಳು. ಅನಂತರ ಸುಂದರಿ ರೆಮಿದಿಯೋಸ್ ಮುಸುಕು ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಹೋಗಬೇಕೆಂದು ಉರ್ಸುಲಾ ಒತ್ತಾಯ ಮಾಡಿದಾಗ ಅಂತಹ ಒಂದು ನಿಗೂಢ ವಿಧಾನ ಎಷ್ಟು ಪ್ರಚೋದಕವಾಗಿತ್ತೆಂದರೆ ಅವಳ ಹೃದಯದಲ್ಲಿನ ದೌರ್ಬಲ್ಯವನ್ನು ಅರಿತುಕೊಳ;ವ ಗಂಡಸೊಬ್ಬ ಬೇಗನೆ ಬರುತ್ತಾನೆ ಎಂದು ಅಮರಾಂತ ಯೋಚಿಸಿದಳು. ಆದರೆ ಅವಳು ಅನೇಕ ಕಾರಣಗಳಿಗಾಗಿ ರಾಜಕುಮಾರನ ಹಾಗಿರುವವನನ್ನು ಮೂರ್ಖತನದಿಂದ ತಿರಸ್ಕರಿಸಿದಾಗ ಎಲ್ಲ ಆಸೆಗಳನ್ನು ಕೈ ಬಿಟ್ಟಳು. ಫೆರ್ನಾಂಡ ಅವಳನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಅವಳು ಸುಂದರಿ ರೆಮಿದಿಯೋಸ್, ರಕ್ತ ಹರಿದ ಜಾತ್ರೆಯಲ್ಲಿ ರಾಣಿಯ ಹಾಗೆ ಉಡುಪು ತೊಟ್ಟಾಗ ಅವಳು ಒಂದು ವಿಶೇಷ ಪ್ರಾಣಿಯ ಹಾಗೆ ಕಂಡಳು. ಆದರೆ ತನ್ನ ಕೈಯಿಂದ ಊಟ ಮಾಡುತ್ತಿದ್ದ ಅವಳು, ಸರಳತನದ, ಪವಾಡವಲ್ಲದ ಒಂದು ಉತ್ತರವನ್ನು ಕೊಡಲು ಸಾಧ್ಯವಿಲ್ಲದೇ ಹೋದದ್ದನ್ನು ಕಂಡಾಗ, ಅವಳಲ್ಲಿ ಸುಳಿದ ಒಂದೇ ಯೋಚನೆಯೆಂದರೆ, ಆ ಸಂಸಾರದಲ್ಲಿ ಮೂರ್ಖರು ಬಹಳ ಕಾಲ ಬದುಕುತ್ತಾರೆ ಎಂಬ ಸಂಗತಿ. ನಿಜವಾಗಲೂ ಸುಂದರಿ ರೆಮಿದಿಯೋಸ್ ತನಗೆ ಗೊತ್ತಿರುವ ಅತ್ಯಂತ ಸರಳವಾದ ವ್ಯಕ್ತಿಯೆಂದೂ ಮತ್ತು ಅವಳು ಅದನ್ನು ಪ್ರತಿ ಕ್ಷಣವೂ ಪ್ರತಿಯೊಬ್ಬರ ಮೇಲೆ ಬೀರುವ ಪ್ರಭಾವದಿಂದ ತೋರ್ಪಡಿಸುವ ಸಾಮರ್ಥ್ಯ ಹೊಂದಿದ್ದಾಳೆಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮನಸಾರೆ ನಂಬಿದ್ದ ಮತ್ತು ಹಾಗೆಂದು ಮತ್ತೆ ಮತ್ತೆ ಹೇಳುತ್ತಿದ್ದರೂ ಅವರು ಅವಳನ್ನು ಅವಳ ದಾರಿಗೆ ಬಿಟ್ಟು ಬಿಟ್ಟಿದ್ದರು. ಸುಂದರಿ ರೆಮಿದಿಯೋಸ್ ಏಕಾಂತದ ಮರಳುಗಾಡಲ್ಲಿ ಓಡಾಡುತ್ತ, ಬೆನ್ನ ಮೇಲೆ ಯಾವ ಗುರುತಿರದೆ, ದುಃಸ್ವಪ್ನಗಳಿಲ್ಲದ ಕನಸುಗಳಲ್ಲಿ ಪ್ರಬುದ್ಧಳಾಗುತ್ತ, ಅವಳ ಮುಗಿಯದ ಸ್ನಾನಗಳಲ್ಲಿ, ಕಾಲ ನಿಯಮವಿಲ್ಲದ ಊಟದಲ್ಲಿ, ಅದೊಂದು ದಿನ ಮಾರ್ಚ್ ತಿಂಗಳ ಮಧ್ಯಾಹ್ನ ಫೆರ್ನಾಂಡ ಕೈತೋಟದಲ್ಲಿ ಅವಳ ತಾಳೆಮರದ ಶೀಟುಗಳನ್ನು ಮಡಿಸಲು ಇಷ್ಟ ಪಟ್ಟು ಮನೆಯ ಹೆಂಗಸರನ್ನು ಸಹಾಯಕ್ಕಾಗಿ ಕೇಳುವ ತನಕ ಅವಳು ಆಳವಾದ ಹಾಗೂ ದೀರ್ಘವಾದ ಮೌನದಲ್ಲಿದ್ದಳು. ಅವಳು ಆಗಷ್ಟೇ ಶುರುಮಾಡುತ್ತಿದ್ದಂತೆ ಸುಂದರಿ ರೆಮಿದಿಯೋಸ್ ತೀರ ಸಪ್ಪೆಯಾಗಿರುವುದನ್ನು ಅಮರಾಂತ ಗಮನಿಸಿದಳು. +ಅವಳು, “ಹುಷಾರಿಲ್ವ?” ಎಂದು ಕೇಳಿದಳು. +ಇನ್ನೊಂದು ತುದಿಯಲ್ಲಿ ಶೀಟನ್ನು ಹಿಡಿದುಕೊಂಡಿದ್ದ ಸುಂದರಿ ರೆಮಿದಿಯೋಸ್, “ಅದರ ವಿರುದ್ಧ … ನಾನು ಎಂದೂ ಇಷ್ಟು ಆರಾಮಾಗಿ ಇದ್ದದ್ದಿಲ್ಲ್ಲ” ಎಂದಳು. +ಅವಳು ಅದನ್ನು ಹೇಳಿ ಮುಗಿಸುತ್ತಿದ್ದಂತೆ ಫೆರ್ನಾಂಡಳಿಗೆ ಸೂಕ್ಷ್ಮವಾದ ಬೆಳಕಿನ ಕಿರಣಗಳ ಗುಂಪೊಂದು ಒಂದು ಕೈಯಲ್ಲಿದ್ದ ಶೀಟನ್ನು ಎಳೆದು ಹರಡಿದ ಹಾಗೆ ಭಾಸವಾಯಿತು. ಅಮರಾಂತಳಿಗೆ ಅವಳ ಒಳಲಂಗದ ಲೇಸುಗಳು ನಿಗೂಢವಾಗಿ ನಲುಗಿದಂತಾಯಿತು ಮತ್ತು ಸುಂದರಿ ರೆಮಿದಿಯೋಸ್ ಎದ್ದೇಳುತ್ತಿದ್ದ ಕ್ಷಣದಲ್ಲಿ ಶೀಟು ಕೆಳಗೆ ಬೀಳದ ಹಾಗೆ ಹಿಡಿದುಕೊಳ್ಳಲು ಪ್ರಯತ್ನಿಸಿದಳು. ಆ ವೇಳೆಗೆ ಹೆಚ್ಚು ಕಡಿಮೆ ಕುರುಡಿಯಾಗಿದ್ದ ಉರ್ಸುಲಾ ಮಾತ್ರ ತಾಳ್ಮೆಯಿಂದಿದ್ದು, ಆ ನಿರ್ಧಾರಿತ ಬೆಳಕಿನ ಕಿರಣಗಳ ಗುಣವನ್ನು ಗುರುತಿಸಿದಳು ಮತ್ತು ಶೀಟುಗಳು ಕಿರಣಗಳ ಇಷ್ಟದಂತೆ ಆಡುತ್ತಿದ್ದದ್ದನ್ನು ಹಾಗೂ ಸುಂದರಿ ರೆಮಿದಿಯೋಸ್ ವಿದಾಯ ಹೇಳುತ್ತಿದ್ದಂತೆ ಅವಳ ಜೊತೆ ಶೀಟಿನ ಮಡಿಕೆಗಳು ಎದ್ದೇಳುತ್ತಿದ್ದನ್ನು ನೋಡಿದಳು. ಅವು ಸುತ್ತಲಿದ್ದ ಜೀರುಂಡೆ ಮತ್ತು ಡೇಲಿ ಗಿಡಗಳನ್ನು ಬಿಟ್ಟು, ಅವಳ ಜೊತೆ ಮಧ್ಯಾಹ್ನದ ನಾಲ್ಕು ಗಂಟೆಯ ಗಾಳಿಯಲ್ಲಿ ತೂರಿ ಕೊನೆಯಾದವು ಮತ್ತು ಅವಳೊಂದಿಗೆ ಮೇಲಿನ ವಾತಾವರಣದಲ್ಲಿ, ಅತ್ಯಂತ ಎತ್ತರದಲ್ಲಿ ಹಾರುವ ನೆನಪಿನ ಪಕ್ಷಿಗಳು ಅವಳನ್ನು ತಲುಪದ ಹಾಗೆ ಎಂದೆಂದಿಗೂ ಕಾಣೆಯಾದವು. +ಹೊರಗಡೆಯವರು ಮಾತ್ರ ಸುಂದರಿ ರೆಮಿದಿಯೋಸ್ ಕೊನೆಗೆ ರಾಣಿ ಜೇನಿನ ರೀತಿಯ ಬದಲಿಸಲಾಗದ ವಿಧಿ ಲಿಖಿತಕ್ಕೆ ಒಪ್ಪಿಸಿಕೊಂಡಳೆಂದು ತಿಳಿದುಕೊಂಡರು ಮತ್ತು ಅವಳ ಗೌರವವನ್ನು ಕಾಪಾಡುವುದಕ್ಕಾಗಿ ಅವಳ ಸಂಸಾರ ಅಂಥ ಹುರುಳಿಲ್ಲದ ಕತೆ ಕಟ್ಟುತ್ತಿದ್ದಾರೆಂದು ಭಾವಿಸಿದರು. ಮತ್ಸರದಿಂದ ಕುದಿಯುತ್ತಿದ್ದ ಫೆರ್ನಾಂಡ ಕೊನೆಗೆ ಆ ಪವಾಡವನ್ನು ಒಪ್ಪಿಕೊಂಡಳು ಮತ್ತು ದೀರ್ಘ ಕಾಲದ ತನಕ ತನ್ನ ಶೀಟುಗಳನ್ನು ವಾಪಸು ಕಳಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಬಹಳಷ್ಟು ಜನರು ಪವಾಡವನ್ನು ನಂಬಿದರಲ್ಲದೆ ಕ್ಯಾಂಡಲ್‌ಗಳನ್ನು ಹಚ್ಚಿ ಆಚರಿಸಿದರು. ಆದರೆ ಅವ್ರೇಲಿಯಾನೋಗಳ ಅತ್ಯಂತ ಘೋರ ಸಾವು ಅಚ್ಚರಿಗೆ ಬದಲಾಗಿ ಭಯ ಉಂಟುಮಾಡಿರದಿದ್ದರೆ ಅದನ್ನು ಬಿಟ್ಟು ಬೇರೆ ಮಾತು ಇರುತ್ತಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಅಪಶಕುನವೆಂದು ಭಾವಿಸಿರದಿದ್ದರೂ ಒಂದು ರೀತಿಯಲ್ಲಿ ತನ್ನ ಮಕ್ಕಳ ದುರ್ಮರಣದ ಮುನ್ಸೂಚನೆ ಎಂದು ಅರಿತಿದ್ದ. ಅವ್ರೇಲಿಯಾನೋ ಸೆರೇಡರ್ ಮತ್ತು ಅವ್ರೇಲಿಯಾನೋ ಆರ್ಕಯಾ ಸಮಾರಂಭದ ಸಮಯದಲ್ಲಿ ಬಂದು ಮಕೋಂದೋದಲ್ಲೆ ನೆಲೆಸುವ ಇಚ್ಛೆ ತೋರಿದಾಗ ಅವರ ತಂದೆ ಅವರನ್ನು ತಡೆಯಲು ಪ್ರಯತ್ನಿಸಿದ. ರಾತ್ರೋರಾತ್ರಿ ಅಪಾಯಕರವಾಗಿ ಬದಲಾದ ಊರಿನಲ್ಲಿ ಅವರು ಏನು ಮಾಡುತ್ತಾರೆಂದು ಅವನಿಗೆ ತಿಳಿಯಲಿಲ್ಲ. ಆದರೆ ಅವ್ರೇಲಿಯಾನೋ ಶೆಂಬೆನೋ ಮತ್ತು ಅವ್ರೇಲಿಯಾನೋ ಟ್ರೀಸ್ತೆ ಹಾಗೂ ಅದನ್ನು ಬೆಂಬಲಿಸಿದ ಅವ್ರೇಲಿಯಾನೋ ಸೆಗುಂದೋ ಅವರಿಗೆ ತಮ್ಮ ಉದ್ದಿಮೆಯಲ್ಲಿ ಕೆಲಸ ಕೊಟ್ಟ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವರಿನ್ನೂ ಗೊಂದಲದಲ್ಲಿದ್ದಾರೆ ಎಂದು ತಿಳಿಯಲು ಕಾರಣಗಳಿದ್ದವು. ಮಿಸ್ಟರ್ ಬ್ರೌನ್ ಮೊದಲನೆ ಮೋಟಾರಿನಲ್ಲಿ ಮಕೋಂದೋ ತಲುಪಿದಾಗ ಅದರ ಹಾರನ್ ಶಬ್ದ ನಾಯಿಗಳನ್ನು ಬೆದರಿಸುತ್ತಿತ್ತು. ಜನರ ಹುಚ್ಚೆದ್ದ ಉತ್ಸಾಹ ಕಂಡು ಹಳೆಯ ಯೋಧನಿಗೆ ಸಿಟ್ಟು ಬಂತು ಮತ್ತು ಹಳೆಯ ಕಾಲದಲ್ಲಿ ಹೆಗಲ ಮೇಲೆ ಬಂದೂಕು ಹೇರಿಕೊಂಡು ಹೆಂಡತಿ ಮಕ್ಕಳನ್ನು ಬಿಟ್ಟು ಯುದ್ಧಕ್ಕೆ ಹೊರಡುತ್ತಿದ್ದ ಗಂಡಸರ ರೀತಿಗಿಂತ ಈಗಿನವರ ರೂಪದಲ್ಲೇ ಏನೋ ಬದಲಾವಣೆಯಾಗಿದೆ ಎಂದು ಅವನಿಗೆ ಮನವರಿಕೆಯಾಗಿತ್ತು. ನಿರ್ಲಾಂದಿಯಾ ಕದನ ವಿರಾಮ ಘೋಷಣೆಯ ನಂತರ ಸ್ಥಳೀಯ ಆಧಿಕಾರಿ ವರ್ಗದವರು, ಯಾವುದಕ್ಕೂ ಮುಂದಾಗದವರು ಮೇಯರ್‌ಗಳಾದರು ಹಾಗೂ ಶಾಂತಿಯಿಂದಿದ್ದ ಮತ್ತು ಸುಸ್ತು ಹೊಡೆದಿದ್ದ ಸಂಪ್ರದಾಯವಾದಿಗಳಿಂದ ಅಲಂಕಾರ ನ್ಯಾಯಾಧೀಶರನ್ನು ಆರಿಸಲಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ದೊಣ್ಣೆ ಹಿಡಿದುಕೊಂಡು ಬರಿಗಾಲಲ್ಲಿರುವ ಪೋಲೀಸರನ್ನು ನೋಡಿ, “ಇದೊಂದು ದರಿದ್ರ ಸರ್ಕಾರ. ನಾವು ಅಷ್ಟೆಲ್ಲ ಯುದ್ಧಗಳನ್ನು ಮಾಡಿದ್ದು ಮತ್ತದೆಲ್ಲ, ಕೇವಲ ನಮ್ಮ ಮನೆಗಳಿಗೆ ನೀಲಿ ಬಣ್ಣ ಬಳೀಬಾರ್‍ದು ಅಂತ ಅಷ್ಟೆ” ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ. ಆದರೆ ಬಾಳೆತೋಟದ ಕಂಪನಿ ಬಂದಾಗ ಸ್ಥಳಿಯ ಕಾರ್ಯ ನಿರ್ವಾಹಕರು ಮಿಸ್ಟರ್ ಬ್ರೌನ್ ಕರೆದುಕೊಂಡು ಬಂದಿದ್ದ ಸರ್ವಾಧಿಕಾರಿ ವಿದೇಶಿಯರಿಂದ ಬದಲಾಯಿಸಲಾಯಿತು. ಅವನು ವಿವರಿಸದ ಹಾಗೆ ಅವರು ಘನತೆಗೆ ತಕ್ಕ ಹಾಗೆ ಊರೊಳಗಿನ ಇತರೆ ಕೊರತೆ, ಸೊಳ್ಳೆ ಮತ್ತು ಶೆಖೆಯಿಂದ ದೂರವಾಗಿ ವಿದ್ಯುತ್ ಬೇಲಿಯೊಳಗೆ ಆನಂದದಿಂದ ವಾಸಿಸುವಂತೆ ವ್ಯವಸ್ಥೆಮಾಡಿದ. ಹಳೆಯ ಪೋಲಿಸರನ್ನು ಮಾರಕಾಸ್ತ್ರಗಳನ್ನು ಹೊಂದಿದ ಕೊಲೆಗಡುಕರಿಂದ ಬದಲಾಯಿಸಲಾಯಿತು. ಬಾಗಿಲು ಹಾಕಿಕೊಂಡು ತನ್ನ ವರ್ಕ್‌ಶಾಪ್‌ನಲ್ಲಿ ಕುಳಿತ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆ ಬದಲಾವಣೆಗಳ ಬಗ್ಗೆ ಯೋಚಿಸಿದ ಮತ್ತು ಅವನ ಏಕಾಂತದ ಶಾಂತ ವರ್ಷಗಳಲ್ಲಿ ಮೊದಲ ಬಾರಿಗೆ ಯುದ್ಧವನ್ನು, ಅದರ ಅಂತಿಮ ನಿರ್ಣಯದ ತನಕ ಮುಂದುವರಿಸದಿದ್ದದ್ದು ತಪ್ಪಾಯಿತೆಂಬ ತೀರ ಖಚಿತವಾದ ಭಾವನೆಯಿಂದ ತೀವ್ರ ಹಿಂಸೆಗೆ ಒಳಗಾದ. ಆ ಸಮಯದಲ್ಲಿ ಮರೆತು ಹೋಗಿದ್ದ ಕರ್ನಲ್ ಮ್ಯಾಗ್ನಿಫಿಕೋ ವೀಸ್‌ಬಾಲ್‌ನ ಸೋದರನೊಬ್ಬ, ತನ್ನ ಏಳು ವರ್ಷದ ಮೊಮ್ಮಗನಿಗೆ ತಳ್ಳುವ ಗಾಡಿಯಲ್ಲಿದ್ದ ಪಾನೀಯವನ್ನು ಕೊಡಿಸಲು ಕರೆದುಕೊಂಡು ಹೋಗುತ್ತಿದ್ದ. ಆ ಹುಡುಗ ಆಕಸ್ಮಿಕವಾಗಿ ಪೊಲೀಸ್ ಚೌಕಕ್ಕೆ ಡಿಕ್ಕಿ ಹೊಡೆದಾಗ ಪೋಲೀಸ್‌ನ ಸಮಸ್ತ್ರದ ಮೇಲೆ ಪಾನೀಯ ಚಲ್ಲಿತು. ಅದಕ್ಕೆ ರಾಕ್ಷಸನಂತೆ ಅವನು ಆ ಹುಡುಗನನ್ನು ಮಚ್ಚಿನಿಂದ ತುಂಡು ತುಂಡು ಮಾಡಿ ಅದನ್ನು ತಡೆಯಲು ಬಂದ ತಾತನ ತಲೆಯನ್ನು ಒಂದೇ ಹೊಡೆತದಿಂದ ಕತ್ತರಿಸಿ ಹಾಕಿದ. ಒಂದು ಗುಂಪು ಜನರು ತಲೆ ಕತ್ತರಿಸಿ ಹೋದ ಮನುಷ್ಯನನ್ನು ಅವನ ಮನೆಗೆ ಎತ್ತಿಕೊಂಡು ಹೋದದ್ದನ್ನು ಮತ್ತು ಕತ್ತರಿಸಿದ ತಲೆಯ ಕೂದಲನ್ನು ಹಿಡಿದು, ಜೊತೆಗೆ ಹುಡುಗನ ತುಂಡುಗಳನ್ನು ಹಾಕಿದ ಚೀಲವನ್ನು ಹೆಂಗಸೊಬ್ಬಳು ಎಳೆದುಕೊಂಡು ಹೋದದ್ದನ್ನು ಇಡೀ ಊರು ನೋಡಿತು. +ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ತಾಳ್ಮೆಯ ಮಿತಿಯಾಗಿತ್ತು. ಹದಿಹರೆಯದಲ್ಲಿ ಅವನಿಗೆ ಹುಚ್ಚು ನಾಯಿ ಕಡಿದಿದೆ ಎಂಬ ಕಾರಣಕ್ಕಾಗಿ ಹೆಂಗಸೊಬ್ಬಳನ್ನು ಹೊಡೆದು ಸಾಯಿಸಿದಾಗ ಉಂಟಾದ ಅಷ್ಟೇ ಸಿಟ್ಟು ಮರುಕಳಿಸಿತು. ಅವನು ಮನೆಯ ಮುಂದೆ ನಿಂತಿದ್ದ ಜನರನ್ನು ನೋಡಿ, ತನ್ನ ಬಗ್ಗೆಯೇ ಅತೀವ ಜಿಗುಪ್ಸೆಯಿಂದ ಹೊರಟ. ಹಳೆಯ ಸಿಂಹ ಕಂಠದ ಧ್ವನಿಯಲ್ಲಿ ಹೃದಯದಲ್ಲಿ ಇರಿಸಿಕೊಳ್ಳಲಾಗದ ದ್ವೇಷವನ್ನು ಹೊರಗೆ ಹಾಕಿದ. +ಅವನು, “ಈ ರಾಕ್ಷಸರಿಂದ ತಪ್ಪಿಸಿಕೊಳ್ಳಕ್ಕೆ ಇಷ್ಟರಲ್ಲೆ ನಾನು ನನ್ನ ಹುಡುಗರನ್ನ ತಯಾರು ಮಾಡ್ತೀನಿ” ಎಂದು ಕೂಗಿದ. +ಆ ವಾರದ ಅವದಿ;ಯಲ್ಲಿ, ತೀರದ ಬೇರೆ ಬೇರೆ ಸ್ಥಳಗಳಲ್ಲಿ ಅವನ ಹದಿನೇಳು ಮಕ್ಕಳನ್ನು ಮೊಲಗಳ ಹಾಗೆ ಬೆನ್ನು ಹತ್ತಿ ಕಾಣದ ಪಾತಕಿಗಳು ಅವರ ಹಣೆಯ ಮೇಲಿನ ಬೂದಿಯ ಶಿಲುಬೆಯ ಮಧ್ಯಕ್ಕೆ ಗುರಿ ಇಟ್ಟು ಹೊಡೆದರು. ಅವ್ರೇಲಿಯಾನೋ ಟ್ರೀಸ್ತೆ ಸಾಯಂಕಾಲ ಏಳು ಗಂಟೆಗೆ ತನ್ನ ತಾಯಿಯ ಜೊತೆ ಮನೆಯಿಂದ ಹೊರಗೆ ಬರುತ್ತಿದ್ದಾಗ ಕತ್ತಲಿಂದ ಬಂದೂಕಿನ ಗುಂಡು ಅವನ ಹಣೆಯನ್ನು ಸೀಳಿತು. ರೂಢಿಯಂತೆ ಫ್ಯಾಕ್ಟರಿಯಲ್ಲಿ ಮಲಗುತ್ತಿದ್ದ ಅವ್ರೇಲಿಯಾನೋ ಶೆಂಟೆಂಟೋ ಕಂಡದ್ದು, ಹಾಸಿಗೆಯಲ್ಲಿಯೇ ಹುಬ್ಬುಗಳ ಮಧ್ಯೆ ಚೂಪು ಗುದ್ದಲಿಯಿಂದ ಹಿಂಬದಿಯ ತನಕ ತೂತು ಕೊರೆದ ಸ್ಥಿತಿಯಲ್ಲಿ. ಅವ್ರೇಲಿಯಾನೋ ಸೆರೇಸರ್ ಸಿನಿಮಾಕ್ಕೆ ಕರೆದುಕೊಂಡು ಹೋದ ಗೆಳತಿಯನ್ನು ಅವಳ ತಂದೆತಾಯಿಯ ಮನೆಗೆ ಬಿಟ್ಟು ಟರ್ಕಿಗಳ ರಸ್ತೆಯಲ್ಲಿ ವಾಪಸಾಗುತ್ತಿದ್ದಾಗ, ಗುಂಪಿನೊಳಗಿದ್ದ ಯಾರೆಂದು ತಿಳಿಯದವನು ಹೊಡೆದ ಗುಂಡಿಗೆ ಹಂದಿಯ ಮಾಂಸ ಕುದಿಯುತ್ತಿದ್ದ ಕಡಾಯಿಯಲ್ಲಿ ಬಿದ್ದ. ಕೆಲವು ನಿಮಿಷಗಳ ನಂತರ ಯಾರೋ ಒಬ್ಬ ಹೆಂಗಸಿನ ಜೊತೆಗಿದ್ದ ಅವ್ರೇಲಿಯಾನೋ ಆಕೆಯಾಗೆ ಬಾಗಿಲು ಬಡಿದು, “ಬೇಗ ಬನ್ನಿ, ಅವ್ರು ನಿಮ್ಮ ಅಣ್ಣತಮ್ಮಂದಿರನ್ನ ಕೊಲ್ತಿದಾರೆ” ಎಂದು ಕೂಗಿ ಹೇಳಿದ. ಅವನ ಜೊತೆಗಿದ್ದ ಹೆಂಗಸು ಅನಂತರ ಹೇಳಿದ್ದೇನೆಂದರೆ ಅವ್ರೇಲಿಯಾನೋ ಆರ್ಕೆಯಾ ಹಾಸಿಗೆಯಿಂದ ದಿಢೀರನೆದ್ದು ಬಾಗಿಲು ತೆಗೆಯುತ್ತಿದ್ದ ಹಾಗೆ ಬಂದೂಕಿನ ಗುಂಡು ಅವನ ತಲೆಯನ್ನು ಸೀಳಿತು. ಆ ದಿನ ರಾತ್ರಿ ನಾಲ್ಕು ಹೆಣಗಳನ್ನು ಇಟ್ಟುಕೊಂಡು ಎಚ್ಚರವಾಗಿರುವುದಕ್ಕೆ ಸಿದ್ಧವಾಗುತ್ತಿದ್ದಾಗ, ಫೆರ್ನಾಂಡ ಅವ್ರೇಲಿಯಾನೋ ಸೆಗುಂದೋನನ್ನು ಹುಡುಕುತ್ತ ಹುಚ್ಚಿಯ ಹಾಗೆ ಊರೆಲ್ಲ ಹುಡುಕುತ್ತಿದ್ದ ಪೆತ್ರಾ ಕೊತೆಸ್, ಕರ್ನಲ್‌ನ ಹೆಸರನ್ನು ಇಟ್ಟುಕೊಂಡಿರುವವರನ್ನೆಲ್ಲ ಮುಗಿಸಬೇಕೆಂಬ ಆರ್ಡರ್‌ನಲ್ಲಿ ಅವ್ರೇಲಿಯಾನೋ ಸೆಗುಂದೋ ಕೂಡ ಸೇರಿದ್ದಾನೆ ಎಂದುಕೊಂಡು, ಅವನನ್ನು ರೂಮಿನಲ್ಲಿ ಬೀಗ ಹಾಕಿ ಇರಿಸಿಕೊಂಡಿದ್ದಳು. ನಾಲ್ಕು ದಿನಗಳ ತನಕ ಅವನನ್ನು ಹೊರಗೆ ಬಿಡಲಿಲ್ಲ. ಆಗ ತೀರದ ಬೇರೆ ಬೇರೆ ಸ್ಥಳಗಳಿಂದ ಬಂದ ಟೆಲಿಗ್ರಾಂಗಳಿಂದ ಬೂದಿಯ ಶಿಲುಬೆ ಇರುವ ಸೋದರರ ವಿರುದ್ಧ ಮಾತ್ರ ಕಾಣದ ಶತ್ರುಗಳ ಆಕ್ರೋಶವಿದ್ದದ್ದು ಸ್ವಷ್ಟವಾಗಿತ್ತು. ಅಮರಾಂತ ಅವರೆಲ್ಲರ ಹೆಸರುಗಳನ್ನು ಬರೆದಿದ್ದ ಪುಸ್ತಕದಲ್ಲಿ ಟೆಲಿಗ್ರಾಂಗಳು ಬರುತ್ತಿದ್ದ ಹಾಗೆ ಹೆಸರುಗಳನ್ನು ಕಾಟು ಹೊಡೆಯುತ್ತಿದ್ದಾಗ ಉಳಿದದ್ದು ಎಲ್ಲರಿಗಿಂತ ಹಿರಿಯ ಮಾತ. ಅವನಿಗೆ ಕಪ್ಪು ಬಣ್ಣ ಮತ್ತು ಹಸಿರು ಕಣ್ಣುಗಳಿದ್ದದ್ದರಿಂದ ಚೆನ್ನಾಗಿ ನೆನಪಿಟ್ಟುಕೊಂಡಿದ್ದರು. ಪರ್ವತದ ತಪ್ಪಲಿನ ಹಳ್ಳಿಯೊಂದರಲ್ಲಿ ಅಡಗಿ ಬಡಗಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದ ಅವನ ಹೆಸರು ಅವ್ರೇಲಿಯಾನೋ ಅಮೆದೋರ್. ಅವನ ಸಾವಿನ ಟೆಲಿಗ್ರಾಂ ಬರುತ್ತೆಂದು ಎರಡು ವಾರ ಕಾದ ನಂತರ, ಅವನಿಗೆ ತನಗಿರುವ ಅಪಾಯದ ಬಗ್ಗೆ ತಿಳಿಯದು ಎಂದು ಭಾವಿಸಿದ ಅವ್ರೇಲಿಯಾನೋ ಸೆಗುಂದೋ ಎಚ್ಚರಿಕೆ ಕೊಡುವುದಕ್ಕೆ ದೂತನನ್ನು ಕಳಿಸಿದ. ಅವನು ಅವ್ರೇಲಿಯಾನೋ ಅಮೆದೋರ್ ಕ್ಷೇಮದಿಂದ ಇದ್ದಾನೆಂಬ ಸುದ್ದಿಯೊಡನೆ ಹಿಂತಿರುಗಿದ. ಕೊಲೆ ಮಾಡುತ್ತಿದ್ದ ಆ ರಾತ್ರಿ ಅವನನ್ನು ಮುಗಿಸಲು ಇಬ್ಬರು ಅವನ ಮನೆಗೆ ಹೋಗಿದ್ದರು ಮತ್ತು ಅವರು ಹೊಡೆದ ಗುಂಡುಗಳು ಬೂದಿಯ ಶಿಲುಬೆಗೆ ಬೀಳದೆ ತಪ್ಪಿ ಹೋದವು. ಅವ್ರೇಲಿಯಾನೋ ಅಮೆದೋರ್ ಅಂಗಳದ ಗೋಡೆ ಹಾರಿ ಪರ್ವತಗಳ ತಿರುವುಗಳಲ್ಲಿ ಮರೆಯಾದ. ಆ ಪ್ರದೇಶ ಅವನಿಗೆ ಅಂಗೈಯೊಳಗಿನ ವಸ್ತುವಿನಷ್ಟು ಚಿರಪರಿಚಿತವಾಗಿತ್ತು. ಅನಂತರ ಅವನ ಬಗ್ಗೆ ಯಾವ ಸುದ್ದಿ ಕೇಳಿ ಬರಲಿಲ್ಲ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವು ಕರಾಳ ದಿನಗಳಾಗಿದ್ದವು. ಗಣ ತಂತ್ರದ ಅಧ್ಯಕ್ಷ ಅವನಿಗೆ ಸಂತಾಪ ಸೂಚಕ ಟೆಲಿಗ್ರಾಂನ್ನು ಕಳಿಸಿ ಆಮೂಲಾಗ್ರ ವಿಚಾರಣೆ ನಡೆಸುವುದಾಗಿ ತಿಳಿಸಿದ್ದ ಮತ್ತು ಸತ್ತವರಿಗೆ ಗೌರವಾರ್ಪಣೆ ಮಾಡಿದ್ದ. ಅವನ ಆಜ್ಞೆಯ ಪ್ರಕಾರ ಶವಪೆಟ್ಟಿಗೆಗಳ ಮೇಲೆ ಇಡುವುದಕ್ಕಾಗಿ ನಾಲ್ಕು ಶವ ಸಂಸ್ಕಾರದ ಹೊಗೊಂಚಲುಗಳ ಸಮೇತ ಮೇಯರ್ ಬಂದಿದ್ದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವುಗಳನ್ನು ಬೀದಿಗೆಸೆಯಲು ಹೇಳಿದ. ಶವಸಂಸ್ಕಾರವಾದ ನಂತರ ಗಣತಂತ್ರದ ಅಧ್ಯಕ್ಷನಿಗೆ ಉಗ್ರವಾದ ಟೆಲಿಗ್ರಾಂವೊಂದನ್ನು ತಾನೆ ಬರೆದನಾದರೂ ಅದನ್ನು ಕಳಿಸಲು ಟೆಲಿಗ್ರಾಂ ಮಾಡುವವನು ನಿರಾಕರಿಸಿದ. ಅನಂತರ ಅದನ್ನು ಅವನ ಮೇಲೆ ಆಕ್ರಮಣಕಾರಿ ರೀತಿಯಲ್ಲಿ ಉದ್ದವಾಗಿ ಬರೆದು, ಕವರೊಂದರಲ್ಲಿ ಹಾಕಿ ಟಪಾಲಿಗೆ ಹಾಕಿದ. ಅವನ ಹೆಂಡತಿ ಸತ್ತಾಗ ಆದಂತೆ, ಯುದ್ಧದ ಕಾಲದಲ್ಲಿ ಅವನ ಅನೇಕ ಆಪ್ತ ಸ್ನೇಹಿತರು ಸತ್ತಾಗ ಆದಂತೆ ಅವನಿಗೆ ಯಾವುದೇ ರೀತಿಯ ದುಃಖವಿರಲಿಲ್ಲ. ಆದರೆ ಕುರುಡಾದ, ದಿಕ್ಕು ಕಾಣದ ರೋಷ ಹಾಗೂ ಷಂಡತನದ ಭಾವನೆ ಇತ್ತು. ಅವನು ತನ್ನ ಮಕ್ಕಳಿಗೆ ಅಳಿಸಲಾಗದ ಬೂದಿಯಿಂದ ಗುರುತು ಹಾಕಿ ಶತ್ರುಗಳಿಗೆ ಪತ್ತೆಯಾಗುವಂತೆ ಮಾಡಿದ್ದಕ್ಕೆ ಫಾದರ್ ಆಂಟೋನಿಯೋ ಇಸಬಲ್‌ನನ್ನೂ ಇದರಲ್ಲಿ ಭಾಗಿಯಾಗಿರುವುದಾಗಿ ದೂಷಿಸಿದ. ವಯಸ್ಸಾಗಿದ್ದ ಪಾದ್ರಿಗೆ ಆ ವಿಷಯಗಳನ್ನು ಪರಸ್ಪರ ಹೊಂದಿಸಲಾಗಲಿಲ್ಲ. ಉಪದೇಶ ವೇದಿಕೆಯಿಂದ ತನ್ನ ಆಡಳಿತ ವಲಯಕ್ಕೆ ಬರುವವರಿಗೆ ಅತಿರೇಕದ ವ್ಯಾಖ್ಯಾನ ಮಾಡುತ್ತಿದ್ದವನು ಒಂದು ಮಧ್ಯಾಹ್ನ ಆ ಬುಧವಾರ ಬೂದಿಯನ್ನು ತಯಾರಿಸಿದ ಬೋಗುಣಿಯನ್ನು ಹಿಡಿದುಕೊಂಡು ಅವರ ಮನೆಗೆ ಬಂದ ಮತ್ತು ಅದನ್ನು ನೀರಿನಿಂದ ತೊಳೆಯಬಹುದು ಎಂದು ಮನೆಯವರಿಗೆಲ್ಲ ಮನವರಿಗೆ ಮಾಡಿಕೊಡುವ ಹಾಗೆ ಪ್ರಯತ್ನಿಸಿ ಒಳ್ಳೆಯ ಮಾತುಗಳನ್ನಾಡಿದ. ಆದರೆ ಇಡೀ ದುರಂತದ ಭಯ ಅವರಲ್ಲಿ ಎಷ್ಟು ಆಳವಾಗಿ ಬೇರೂರಿತ್ತೆಂದರೆ ಫೆರ್ನಾಂಡ ಕೂಡ ತನ್ನ ಮೇಲೆ ಆ ಪ್ರಯೋಗ ನಡೆಸಲು ಬಿಡಲಿಲ್ಲ. ಅನಂತರ ಬೂದಿ ಬುಧವಾರದ ದಿನ ಎಂದಿಗೂ ಬ್ಯುಂದಿಯಾನೊಬ್ಬ ಪವಿತ್ರ ಸ್ಥಾನದ ಮುಂದೆ ಮಂಡಿಯೂರಲಿಲ್ಲ. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಹಳ ಕಾಲದ ತನಕ ತನ್ನ ಶಾಂತ ಸ್ಥಿತಿಯನ್ನು ಮರಳಿ ಪಡೆಯಲಿಲ್ಲ. ಅವನು ಚಿಕ್ಕ ಮೀನುಗಳ ತಯಾರಿಕೆಯನ್ನು ನಿಲ್ಲಿಸಿದ. ಕಷ್ಟದಿಂದ ಊಟ ಮಾಡುತ್ತಿದ್ದ. ನಿದ್ದೆಯಲ್ಲಿ ಓಡಾಡುವನಂತೆ ಹೊದಿಕೆಯನ್ನು ಎಳೆದುಕೊಂಡು ರೋಷದಿಂದ ಅವುಡುಗಚ್ಚಿ ಮನೆಯಲ್ಲೆಲ್ಲ ಓಡಾಡುತ್ತಿದ್ದ. ಮೂರು ತಿಂಗಳಾಗುತ್ತಿದ್ದಂತೆ ಅವನ ಕೂದಲೆಲ್ಲ ಬೂದಿ ಬಣ್ಣವಾಗಿತ್ತು, ಅವನ ಮೇಣ ಳಿದಿದ್ದ ಮೀಸೆ ಬಣ್ಣರಹಿತ ತುಟಿಗಳ ಪಕ್ಕಕ್ಕೆ ಇಳಿದಿತ್ತು. ಆದರೆ ಕಣ್ಣುಗಳು ಮಾತ್ರ, ಅವನು ಹುಟ್ಟಿದಾಗ ನೋಡಿದವರು ಬೆದರಿದಂತಿದ್ದ, ಉರಿಯುವ ಕಲ್ಲಿದ್ದಲಿನ ಹಾಗಿತ್ತು. ಬೇರೆ ದಿನಗಳಾಗಿದ್ದರೆ ಅವನು ಸರಳ ನೋಟದಿಂದಲೇ ಕುರ್ಚಿಗಳು ನಲುಗುವಂತೆ ಮಾಡುತ್ತಿದ್ದ. ಅವನ ಚಿತ್ರ ಹಿಂಸೆಯ ರೋಷದಲ್ಲಿ ಹರೆಯದಲ್ಲಿ ನಿರ್ಜನವಾದ ಪಾಳುಭೂಮಿಯಲ್ಲಿ ಮಾರ್ಗದರ್ಶನ ನೀಡಿದ ಮುಂಗಾಣಿಕೆಗಳನ್ನು ಮತ್ತೆ ಉದ್ದೀಪನಗೊಳಿಸಲು ವ್ಯರ್ಥ ಪ್ರಯತ್ನ ಮಾಡಿದ. ಅವನಲ್ಲಿ ಯಾವುದೂ ಮತ್ತು ಯಾರೊಬ್ಬರೂ ಕೊಂಚವೂ ವಿಶ್ವಾಸ ಹುಟ್ಟಿಸದೆ ಆ ವಿಚಿತ್ರ ಮನೆಯಲ್ಲಿ ಅವನು ಎಲ್ಲೋ ಕಳೆದು ಹೋದ. ಒಂದು ಸಲ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ, ಯುದ್ಧದ ಹಿಂದಿನ ದಿನಗಳ ಕುರುಹುಗಳನ್ನು ಹುಡುಕುತ್ತಿರುವಾಗ, ಅವನಿಗೆ ಇಷ್ಟು ವರ್ಷಗಳ ನಿರ್ಲಕ್ಷದಿಂದಾಗಿ ಅಲ್ಲಿ ಕೇವಲ ರದ್ದಿ, ಹರಡಿ ಬಿದ್ದಿದ್ದ ಕಸ ಕಡ್ಡಿ ಕಂಡು ಬಂತು. ಮತ್ತೊಂದು ಸಲ ಯಾರೂ ಓದದಿದ್ದ ಪುಸ್ತಕಗಳ ಹೊದಿಕೆಗಳ ನಡುವೆ ತೇವಗೊಂಡ ಹಳೆ ಹಾಳೆಯಲ್ಲಿ ನೀಲಿ ಛಾಯೆಯ ಹೂವೊಂದು ಬೆಳೆದಿತ್ತು. ಆ ಮನೆಯಲ್ಲಿನ ಪರಿಶುದ್ಧ ಗಾಳಿ ಮತ್ತು ಅತ್ಯಂತ ಹೆಚ್ಚಿನ ಪ್ರಕಾಶದಲ್ಲಿ ಸಹಿಸಲಾಗದ ಕೊಳೆತ ನೆನಪುಗಳು ತೇಲುತ್ತಿದ್ದವು. ಒಂದು ದಿನ ಬೆಳಿಗ್ಗೆ ಉರ್ಸುಲಾ ಬಾದಾಮಿ ಮರದ ಬುಡದಲ್ಲಿ ತನ್ನ ಗಂಡನ ಮಂಡಿಗೊರಗಿ ಅಳುತ್ತಿದ್ದದ್ದು ಅವನಿಗೆ ಕಾಣಿಸಿತು. ಮನೆಯಲ್ಲಿದ್ದವರಲ್ಲಿ ಐವತ್ತು ವರ್ಷಗಳಿಂದ ಗಾಳಿ ಮಳೆಗೆ ಹುಡಿಯಾಗದ ಶಕ್ತಿವಂತ ಮುದುಕನನ್ನು ಇನ್ನೂ ಕಾಣದಿರುತ್ತಿದ್ದ ಒಬ್ಬನೇ ವ್ಯಕ್ತಿಯೆಂದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ. ಉರ್ಸುಲಾ ಅವನಿಗೆ, “ನಿನ್ನಪ್ಪನನ್ನು ಮಾತಾಡಿಸು” ಎಂದಳು. ಅವನು ಒಂದು ಕ್ಷಣ ಬಾದಾಮಿ ಮರದ ಎದುರು ನಿಂತ ಮತ್ತು ಎದುರಿಗಿದ್ದ ಖಾಲಿ ವಿಸ್ತಾರ ಅವನಲ್ಲಿ ಯಾವ ಭಾವನೆಯನ್ನೂ ಉಂಟುಮಾಡಲಿಲ್ಲ. +ಅವನು, “ಅವನೇನು ಹೇಳ್ತಾನೆ” ಎಂದು ಕೇಳಿದ. +ಉರ್ಸುಲಾ, “ಅವನ್ಗೆ ನೀವು ಸಾಯ್ತೀರಾ ಅಂತ ಬೇಜಾರಾಗಿದೆ” ಎಂದಳು. +ಕರ್ನಲ್ ನಗುತ್ತ, “ಅವನ್ಗೆ ಹೇಳು, ಯಾರೇ ಆಗ್ಲಿ ಸಾಯ್ಬೇಕಾದಾಗ ಸಾಯಲ್ಲ, ಸಾಧ್ಯವಾದಾಗ ಸಾಯ್ತಾರೆ, ಅಂತ” ಎಂದ. +ಅವನ ಹೃದಯದಲ್ಲಿ ಸತ್ತ ಅಪ್ಪನ ಶಕುನ ಅಳಿದುಳಿದ ಅಭಿಮಾನವನ್ನು ಹೊಡೆದೆಬ್ಬಿಸಿತು. ಆದರೆ ಅವನು ಅದನ್ನು ಒಗ್ಗೂಡಿದ ಶಕ್ತಿಯೆಂದು ತಪ್ಪು ತಿಳಿದ. ಅದೇ ಕಾರಣಕ್ಕಾಗಿ ಅವನು ಉರ್ಸುಲಾಗೆ ಸಂತ ಜೋಸೆಫ್‌ನ ಪ್ಲಾಸ್ಟಿಕ್ ವಿಗ್ರಹದಲ್ಲಿ ದೊರೆತ ಬಂಗಾರದ ನಾಣ್ಯಗಳನ್ನು ಅಂಗಳದಲ್ಲಿ ಹೂತಿಟ್ಟಿರುವ ಸ್ಥಳ ಯಾವುದು ಎಂದು ಕೇಳಿ ಪೀಡಿಸುತ್ತಿದ್ದ. ಹಳೆಯದರಿಂದ ಪಾಠ ಕಲಿತ ಅವಳು, “ಅದು ನಿಂಗೆಂದೂ ಗೊತ್ತಾಗಲ್ಲ” ಎಂದು ಅಚಲವಾದ ಧ್ವನಿಯಲ್ಲಿ ಹೇಳಿ ಮುಂದುವರೆದು, “ಒಂದಿನ ಆ ಸಂಪತ್ತಿನ ಯಜಮಾನ ಬರ್‍ತಾನೆ, ಅವ್ನು ಮಾತ್ರ ಅದನ್ನ ಅಗೆದು ತೆಗೀತಾನೆ..” ಯಾವಾಗಲೂ ತೀರ; ಉದಾರವಾಗಿರುತ್ತಿದ್ದ ಮನುಷ್ಯ ಹಣದ ವಿಷಯದಲ್ಲಿ ಅಷ್ಟೊಂದು ಆತಂಕಗೊಳ್ಳಲು ಶುರುವಾದದ್ದು ಏಕೆಂದು ಯಾರಿಗೂ ತಿಳಿಯಲಿಲ್ಲ. ತುರ್ತು ಸುಧಾರಣೆಗೆ ಸಾಧಾರಣ ಮೊತ್ತ ಸಾಕಾಗದೆ ಅಗಾಧ ಪ್ರಮಾಣದ ಸಂಪತ್ತು ಬೇಕಾಗಿತ್ತು. ಅದನ್ನು ತಿಳಿದ ಅವ್ರೇಲಿಯಾನೋ ಸೆಗುಂದೋ ಆಶ್ಚರ್ಯ ಚಕಿತನಾದ. ಅವನ ಪಾರ್ಟಿಯ ಹಳೆಯ ಸ್ನೇಹಿತರನ್ನು ಸಹಾಯ ಕೇಳುವುದಕ್ಕೆ ಹೋದಾಗ ಅವನನ್ನು ನೋಡಬಾರದೆಂದು ತಪ್ಪಿಸಿಕೊಂಡರು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಅವನು, “ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳಿಗಿರುವ ಒಂದೇ ವ್ಯತ್ಯಾಸವೆಂದರೆ ಉದಾರವಾದಿಗಳು ಐದು ಗಂಟೆಗೆ ಸಾಮೂಹಕ ಪ್ರಾರ್ಥನೆಗೆ ಹೋಗುತ್ತಾರೆ, ಸಂಪ್ರದಾಯವಾದಿಗಳು ಎಂಟಕ್ಕೆ” ಎಂದು ಹೇಳಿದ್ದು. ಆದರೂ ಅವನೆಷ್ಟು ಹಠದಿಂದ ಒತ್ತಾಯಿಸಿದನೆಂದರೆ, ಹೇಗೆ ಕೇಳಿಕೊಂಡನೆಂದರೆ, ತನ್ನ ಘನತೆಯನ್ನು ಯಾವ ಮಟ್ಟಕ್ಕೆ ತಂದುಕೊಂಡನೆಂದರೆ, ಎಲ್ಲ ಕಡೆಯಿಂದಲೂ ಸಹಾಯ ಒಗ್ಗೂಡಿ, ಎಂಟು ತಿಂಗಳಲ್ಲಿ ಉರ್ಸುಲಾ ಹೂತಿಟ್ಟಿದ್ದಕ್ಕಿಂತ ಹೆಚ್ಚು ಹಣ ಪಡೆದ. ಆಗ ಅವನು ಕಾಯಿಲೆ ಬಿದ್ದಿದ್ದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಸಂಪೂರ್ಣ ಯುದ್ಧಕ್ಕೆ ಅವನು ಸಹಾಯ ಮಾಡುತ್ತಾನೆಂದು ಭೇಟಿಯಾದ. +ಒಂದು ಕಾಲದಲ್ಲಿ ಪಾರ್ಶ್ವವಾಯು ಬಡಿದ ಅವಧಿಯಲ್ಲಿ ಕುರ್ಚಿಯಲ್ಲಿದ್ದರೂ ಬಂಡಾಯದ ಎಳೆಗಳನ್ನು ಕಲೆಹಾಕಲು ಸಾಧ್ಯವಿದ್ದವನು ಅವನೊಬ್ಬನೇ. ನೀರ್ಲಾಂದಿಯಾ ಕದನ ವಿರಾಮ ಘೋಷಣೆಯ ನಂತರ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಂಗಾರದ ಸಣ್ಣ ಮೀನುಗಳನ್ನು ಮಾಡುವುದರಲ್ಲಿ ತೊಡಗಿ ಸೋಲುವ ತನಕ ವಿಧೇಯರಾಗಿದ್ದ ಕ್ರಾಂತಿಯ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟಿಕೊಂಡಿದ್ದ. ಅವನು ಅವರೊಂದಿಗೆ ದಿನನಿತ್ಯದ ಅವಮಾನದ, ಕೋರಿಕೆಗಳ ಮತ್ತು ಅಹವಾಲುಗಳ, ಮತ್ತು ನಾಳೆ ಬನ್ನಿ, ಯಾವುದೇ ಸಮಯವಾದರೂ ಸರಿ, ಈಗ, ನಾವು ಗಮನವಿಟ್ಟು ನಿಮ್ಮ ವಿಷಯವನ್ನು ಅಭ್ಯಸಿಸುತ್ತಿದ್ದೇವೆ ಎಂದು ಹೇಳುತ್ತಿದ್ದವರ ವಿರುದ್ಧ ಬೇಸರದಿಂದ ಹೋರಾಟ ನಡೆಸಿದ್ದ. ಆದರೆ ಜೀವನ ಪರ್ಯಂತದ ಪೆನ್ಷನ್‌ಗಾಗಿ ‘ನಿಮ್ಮ ಅತ್ಯಂತ ವಿಧೇಯ\’ ಎಂದು ಸಹಿ ಮಾಡಬೇಕಿದ್ದ ಮತ್ತು ಎಂದಿಗೂ ಸಹಿ ಮಾಡುವವರ ನಡುವೆ ಹೋರಾಟ ಹೀನಾಯವಾಗಿ ಸೋಲು ಕಂಡಿತ್ತು. ಮತ್ತೆ ಮತ್ತೆ ಕೊನೆಯಿಲ್ಲದೆ ಮುಂದೆ ಹಾಕುವ ಈ ಹೋರಾಟ ಉಂಟುಮಾಡಿದ ಅನಾಹುತವನ್ನು, ಇಪ್ಪತ್ತೊಂದು ವರ್ಷ ನಡೆದ ಆ ಇನ್ನೊಂದು ರಕ್ತ ಹರಿದ ಯುದ್ಧ ಉಂಟುಮಾಡಲಿಲ್ಲ. ತನ್ನ ಜೀವದ ಮೇಲೆ ಮೂರು ಪ್ರಯತ್ನದಿಂದ ಪಾರಾದ, ಐದು ಗಾಯಗಳಿಂದ ಉಳಿದುಕೊಂಡು, ಅನೇಕ ಯುದ್ಧಗಳಿಂದ ಅತೀವ ಅಪಾಯವಿಲ್ಲದೆ ಹೊರಬಂದ ಕರ್ನಲ್ ಗೆರಿನೆಲ್ಟೋ ಮಾರ್ಕೆಜ್ ಕೂಡ, ಕಾಯುವ ದೌರ್ಜನ್ಯಕ್ಕೆ ಒಪ್ಪಿಸಿಕೊಂಡ ಮತ್ತು ಬಾಡಿಗೆ ಮನೆಯಲ್ಲಿ ಬೆಳಕಿನ ಕೋಲು ಮೂಡಿಸಿದ ಹೊಳಪಲ್ಲ್ಲಿ ಅಮರಾಂತಳನ್ನು ಕುರಿತು ಯೋಚಿಸುತ್ತ ಕರುಣಾಜನಿಕವಾದ ವೃದ್ಧಾಪ್ಯದ ಸೋಲಿನಲ್ಲಿ ಮುಳುಗಿ ಹೋದ. ತಾನು ಸಂಪರ್ಕ ಇಟ್ಟುಕೊಂಡಿದ್ದವರು ವೀರರಲ್ಲಿ ಹಲವರು ಗಣತಂತ್ರದ ಅನಾಮಧೇಯ ಅಧ್ಯಕ್ಷ ಕೊಟ್ಟಿದ್ದ, ಅವನಿಗೆ ಇಷ್ಟವಾದ ಅಲಂಕಾರ ಗುಂಡುಗಳನ್ನು ತಮ್ಮ ಎದೆಯ ಮೇಲೆ ಸಿಕ್ಕಿಸಿಕೊಂಡು, ವೃತ್ತ ಪತ್ರಿಕೆಯೊಂದರಲ್ಲಿ ಅವನ ಪಕ್ಕದಲ್ಲಿ ನಾಚಿಕೆ ಇಲ್ಲದೆ ತಲೆ ಎತ್ತಿಕೊಂಡು ನಿಂತಿದ್ದ ಭಾವಚಿತ್ರ ಪ್ರಕಟವಾಗಿತ್ತು. ಅವನು ಅವರಿಗೆ ಸಿಡಿಮದ್ದಿನಿಂದ ಕಲೆಯಾಗಿ, ಧೂಳು ಹಿಡಿದು ರಕ್ತ ಸಿಕ್ತವಾಗಿದ್ದ ಧ್ವಜವನ್ನು ಅವರ ಶವಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಲು ಹಿಂತಿರುಗಿಸಿದ್ದ. ಕೆಲವರು, ಹೆಚ್ಚು ಗೌರವಾನ್ವಿತರು, ಸಾರ್ವಜನಿಕ ಅನುಕಂಪದ ಫಲದಿಂದ ಅಂಥ ಕಾಗದ ಬರಬಹುದೆಂದು ಹಸಿವಿನಿಂದ ಸಾಯುತ್ತ, ರೋಷದಿಂದ ಬದುಕುತ್ತ, ವೈಭವದ ಹೇಸಿಗೆಯಲ್ಲಿ ವೃದ್ಧಾಪ್ಯದಲ್ಲಿ ಕೊಳೆಯುತ್ತ ಇನ್ನೂ ಕಾಯುತ್ತಿದ್ದರು. ಇದರಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಜೀವನದ ಹಂಗು ತೊರೆದು, ಭ್ರಷ್ಟಾಚಾgದ ಆಳ್ವಿಕೆಯ ಎಲ್ಲ ಗುರುತುಗಳನ್ನು ನಿರ್ನಾಮಮಾಡಿ ಮತ್ತು ವಿದೇಶಿಯರು ಬೆಂಬಲಿಸಿದ ಹಗರಣಗಳನ್ನು ಅಳಿಸಿ ಹಾಕುವ ಹೋರಾಟವನ್ನು ಪ್ರಾರಂಭಿಸಲು ಕರೆದಾಗ, ಕರ್ನಲ್ ಗೆರಿನೆಲ್ಟೋ ಮಾರ್ಕೆಜ್‌ಗೆ ಮರುಕದ ನಡುಕವನ್ನು ತಡೆಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. +ಅವನು, “ಅಯ್ಯೋ, ಅವ್ರೇಲಿಯಾನೋ, ನಿಂಗೆ ವಯಸ್ಸಾಗಿದೆ ಅಂತ ಗೊತ್ತಿತ್ತು. ಆದ್ರೆ ನಂಗೆ ಈಗ ತಿಳೀತಿದೆ. ನೀನು ಕಾಣೋದಿಕ್ಕಿಂತ ಹೆಚ್ಚು ಮುದುಕನಾಗಿದ್ದಿ ಅಂತ” ಎಂದು ನಿಟ್ಟುಸಿರು ಬಿಟ್ಟ. +೧೩ +ತನ್ನ ಅಂತಿಮ ವರ್ಷಗಳ ಗೊಂದಲದಲ್ಲಿ ಉರ್ಸುಲಾಗೆ ಹೊಸೆ ಅರ್ಕಾದಿಯೋ ಪೋಪ್ ಪದವಿಯ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡುವುದಕ್ಕೆ ಅಗತ್ಯವಾದ ಬಿಡುವಿನ ಸಮಯವಿರಲಿಲ್ಲ. ಅವನು ಸ್ಕೂಲಿಗೆ ಹೋಗಬೇಕಾದ ಸಮಯ ಬಂದೇ ಬಿಟ್ಟಿತು. ಫೆರ್ನಾಂಡಳ ಜಿಗುಟುತನ ಮತ್ತು ಅಮರಾಂತಳ ದ್ವೇಷದ ನಡುವೆ ಅವನು ತನ್ನ ಸಮಯ ಕಳೆಯುತ್ತಿದ್ದ. ಅವನ ಸೋದರಿ ಮೆಮೆ ಅದೇ ಸಮಯಕ್ಕೆ ಕ್ರ್ಯೆಸ್ತ ಸನ್ಯಾಸಿಗಳ ಸ್ಕೂಲಿಗೆ ಕಳಿಸಬೇಕಾದ ವಯಸ್ಸಿನವಳಾದಳು. ಅಲ್ಲಿ ಅವರು ಅವಳನ್ನು ಪಿಯಾನೋ ರೀತಿಯ ವಾದನದಲ್ಲಿ ನಿಪುಣೆಯನ್ನಾಗಿ ಮಾಡುವರಿದ್ದರು. ಮುಖ್ಯ ಬಿಷಪ್ ಆಗಲಿರುವವನ ಅಂತರಾತ್ಮಕ್ಕೆ ಪರಿಣಾಮಕಾರಿಯಾಗಿ ರೂಪುಕೊಡುತ್ತಿರುವುದರ ಬಗ್ಗೆ ಉಂಟಾದ ತೀವ್ರ ಅನುಮಾನದಿಂದ ಹಿಂಸೆಗೊಳಗಾದರೂ, ಉರ್ಸುಲಾ ಅದಕ್ಕೆ ತನ್ನ ಮುದಿತನವನ್ನು ಹಳಿದುಕೊಳ್ಳಲಿಲ್ಲ. ಆದರೆ ತಾನೇ ನಿಜಕ್ಕೂ ಹೇಳಲಾಗದ ಮತ್ತು ಕಾಲಾನುಕ್ರಮದಲ್ಲಿ ಉಂಟಾದ ವಿಘಟನೆಗಳನ್ನು ನಿಂದಿಸಿದಳು. ಅವಳು, “ಹಳೆಯ ಕಾಲದ ಹಾಗೆ ಈಗ ವರ್ಷಗಳು ಉರುಳೋದಿಲ್ಲ” ಎಂದು ಎಲ್ಲವೂ ಕೈಯಿಂದ ಜಾರಿಹೋಗುತ್ತಿರುವ ಭಾವದಿಂದ ಹೇಳುತ್ತಿದ್ದಳು. ಹಿಂದಿನ ಕಾಲದಲ್ಲಿ ಮಕ್ಕಳು ಬೆಳೆಯಲು ಬಹಳ ಕಾಲ ಹಿಡಿಯುತ್ತಿತ್ತು ಎಂದು ಅವಳಿಗೆ ಅನ್ನಿಸುತ್ತಿತ್ತು. ಹಿರಿಯ ಹೊಸೆ ಅರ್ಕಾದಿಯೋ ಜಿಪ್ಸಿಗಳ ಜೊತೆ ಹೊರಟು ಹೋದ ಮೇಲೆ ಮತ್ತು ಹಾವಿನ ಹಾಗೆ ಮೈಗೆಲ್ಲ ಬಣ್ಣ ಹಚ್ಚಿಕೊಂಡು, ಖಗೋಳ ಶಾಸ್ತ್ರಜ್ಞನಂತೆ ಮಾತಾಡುತ್ತ ಹಿಂತಿರುಗುವ ತನಕ, ಅಮರಾಂತ ಹಾಗೂ ಅರ್ಕಾದಿಯೋ ಇಂಡಿಯನ್‌ರ ಭಾಷೆಯನ್ನು ಮರೆತು ಬಿಟ್ಟು ಸ್ಪ್ಯಾನಿಷ್ ಭಾಷೆಯನ್ನು ಕಲಿತುಕೊಳ್ಳುವುದಕ್ಕೆ ಮುಂಚೆ, ಮನೆಯಲ್ಲಿ ನಡೆದ ಸಂಗತಿಗಳನ್ನು ನಡೆದದ್ದನ್ನು ಯಾರೇ ಆಗಲೀ ನೆನಪಿಟ್ಟುಕೊಳ್ಳಬೇಕಾಗಿತ್ತಷ್ಟೆ. ಬಿಸಿಲು ಮತ್ತು ಮಳೆಯಲ್ಲಿ ದಿನಗಳನ್ನು ಬಾದಾಮಿ ಮರದ ಕೆಳಗೆ ನೂಕುತ್ತಿದ್ದ ಪಾಪದ ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅವನು ಸತ್ತ ಮೇಲೆ ಶೋಕಾಚರಣೆಗೆ ಬೇಕಾದ ಸಮಯವನ್ನು ಮತ್ತು ಸಾಯುವ ಸ್ಥಿತಿಯಲ್ಲಿದ್ದ ಹೊಸೆ ಅವ್ರೇಲಿಯಾನೋ ಬ್ಯುಂದಿಯಾನನ್ನು ಕರೆತರುವ ತನಕ ಬೇಕಾದ ಸಮಯವನ್ನು ಮಾತ್ರ ನೆನಪಿಸಿಕೊಳ್ಳಬೇಕಾಗಿತ್ತು. ಅಷ್ಟೊಂದು ಯುದ್ಧಗಳನ್ನು ಮಾಡಿದ ಮತ್ತು ಅಷ್ಟೊಂದು ಯಾತನೆಗೆ ಗುರಿಯಾದ ಅವನಿಗೆ ಇನ್ನೂ ಐವತ್ತು ವರ್ಷವಾಗಿರಲಿಲ್ಲ. ಬೇರೆ ಕಾಲದಲ್ಲಿ ಇಡೀ ದಿನ ಮಾಂಸದ ತಿನಿಸನ್ನು ಮಾಡುತ್ತಿದ್ದ ಅವಳಿಗೆ ಮಕ್ಕಳನ್ನು ನೋಡಿಕೊಳ್ಳಲು ಅಲ್ಲದೆ ಅವರ ಕಣ್ಣುಗಳಲ್ಲಿ ಬಿಳಿ ಪಿಸಿರಿದ್ದರೆ ಕ್ಯಾಸ್ಟರ್ ಎಣ್ಣೆ ಕುಡಿಸಬೇಕೆಂದು ತಿಳಿಯುವಷ್ಟು ವ್ಯವಧಾನವಿರುತ್ತಿತ್ತು. ಈಗ ಮಾಡುವುದಕ್ಕೆ ಏನೂ ಇಲ್ಲದೆ ಬೆಳಿಗ್ಗೆಯಿಂದ ಸಂಜೆಯ ತನಕ ಹೊಸೆ ಅರ್ಕಾದಿಯೋನನ್ನು ಸೊಂಟದ ಮೇಲೆ ಏರಿಸಿಕೊಂಡು ತಿರುಗಾಡುತ್ತಿದ್ದರಿಂದ ಆ ಕೆಲಸವನ್ನೇ ಅರ್ಧಂಬರ್ಧ ಮಾಡುವಂತೆ ಕಾಣುತ್ತಿತ್ತು. ನಿಜವಾದ ಸಂಗತಿಯೆಂದರೆ ತನಗೆ ವಯಸ್ಸೆಷ್ಟು ಎಂದು ಲೆಕ್ಕ ತಪ್ಪಿದ ಮೇಲೆ ಅವಳು ವಯಸ್ಸಾಗುವುದನ್ನು ನಿಗ್ರಹಿಸಿದ್ದಳು ಮತ್ತು ಎಲ್ಲದರಲ್ಲೂ ಮೂಗು ತೂರಿಸುತ್ತ ಎಲ್ಲರಿಗೂ ಕಿರಿಕಿರಿ ಉಂಟುಮಾಡುತ್ತಿದ್ದಳು. ಅವಳು ಅಪರಿಚಿತರಿಗೆ, “ನೀವೇನಾದರೂ ಯುದ್ಧದ ಕಾಲದಲ್ಲಿ ಸಂತ ಜೋಸಫ್‌ನ ವಿಗ್ರಹವನ್ನು ಮಳೆಗಾಲ ಕಳೆಯುವ ತನಕ ಇಟ್ಟುಕೊಳ್ಳಲು ಕೊಟ್ಟಿದ್ದೀರಾ” ಎಂದು ಕೇಳಿ ಗಲಿಬಿಲಿ ಉಂಟುಮಾಡುತ್ತಿದ್ದಳು. ಅವಳ ಕಣ್ಣಿನ ದೃಷ್ಟಿ ಕ್ಷೀಣಿಸತೊಡಗಿದ್ದು ಯಾವಾಗಿನಿಂದ ಎಂದು ಯಾರಿಗೂ ತಿಳಿದಿರಲಿಲ್ಲ. ಅವಳ ಕೊನೆಯ ದಿನಗಳಲ್ಲಿ ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲೂ ಅವಳು ಮುಪ್ಪಡರಿ ಕುಗ್ಗಿದಳೇ ಹೊರತು ಕುರುಡಿಯೆಂದು ಯಾರೂ ಕಂಡು ಹಿಡಿಯಲಿಲ್ಲ. ಅವಳು ಹೊಸೆ ಅರ್ಕಾದಿಯೋ ಹುಟ್ಟುವ ಮೊದಲೇ ಅದನ್ನು ಗಮನಿಸಿದ್ದಳು. ಪ್ರಾರಂಭದಲ್ಲಿ ಅವಳು ಅದನ್ನು ಹೀಗೆ ಬಂದು ಹಾಗೆ ಹೋಗುವ ಕೊರತೆ ಎಂದುಕೊಂಡಿದ್ದಳು ಮತ್ತು ಗುಟ್ಟಾಗಿ ಎಲುಬಿನ ನೆಣದ ಕಷಾಯ ತೆಗೆದುಕೊಂಡು ಕಣ್ಣಿಗೆ ಜೇನು ತುಪ್ಪ ಹಾಕಿಕೊಳ್ಳುತ್ತಿದ್ದಳು. ಆದರೆ ಬಹಳ ಬೇಗನೆ ಅವಳಿಗೆ ತಾನು ಹಿಂತಿರುಗಿಬಾರದಂಥ ಕತ್ತಲ ಕೂಪದಲ್ಲಿ ಕುಸಿಯುತ್ತಿದ್ದೇನೆ ಎಂದು ಮನವರಿಕೆಯಾಯಿತು. ಅದು ಯಾವ ಮಟ್ಟವೆಂದರೆ ಅವಳಿಗೆ ಬೆಳಗುವ ಎಲೆಕ್ಟ್ರಿಕ್ ಬಲ್ಬ್ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಬಲ್ಬುಗಳನ್ನು ಬೆಳಗಿಸಿದಾಗ ಅದನ್ನು ಹೊತ್ತಿಸಿದ್ದು ಮಾತ್ರ ಅವಳ ಅರಿವಿಗೆ ಬರುತ್ತಿತ್ತು. ಅವಳು ಅದರ ಬಗ್ಗೆ ಯಾರಿಗೂ ಹೇಳಲಿಲ್ಲ. ಏಕೆಂದರೆ ಅವಳು ಉಪಯೋಗಕ್ಕೆ ಬಾರದವಳೆಂದು ಸಾರ್ವಜನಿಕವಾಗಿ ಗುರುತಿಸಲ್ಪಡುತ್ತಿದ್ದಳು. ಅವಳು ವಸ್ತುಗಳ ಅಂತರ ಮತ್ತು ಜನರ ಧ್ವನಿಗಳ ಬಗ್ಗೆ ಮೌನವಾಗಿ ಗ್ರಹಿಸತೊಡಗಿದಳು. ಇದರಿಂದ ನೆರಳುಗಳಾಗಿಸುವ ಕ್ಯಾಟರಾಕ್ಸ್‌ನಿಂದ ನೋಡಲು ಸಾಧ್ಯವಿಲ್ಲದ್ದನ್ನು ತನ್ನ ನೆನಪಿನಿಂದ ಅವಳು ನೋಡುತ್ತಿದ್ದಳು. ಅನಂತರ ತಾನು ನಿರೀಕ್ಷಿಸಿರದ ವಾಸನೆಗಳ ಸಹಾಯದಿಂದ ನೆರಳುಗಳಲ್ಲಿ ಗಾತ್ರ ಮತ್ತು ಬಣ್ಣಕ್ಕೂ ಮಿಗಿಲಾಗಿ ನಿರ್ಧರಿಸುವ ಸಾಮರ್ಥ್ಯವಿರುವುದನ್ನು ಕಂಡುಕೊಂಡಳು. ಇದು ಅವಳಿಗೆ ಕೊನೆಗೆ ಸೋಲನ್ನು ಒಪ್ಪಿಕೊಳ್ಳುವುದನ್ನು ತಪ್ಪಿಸಿತು. ಕತ್ತಲಲ್ಲೂ ಸಹ ಅವಳಿಗೆ ಸೂಜಿಗೆ ದಾರ ಪೋಣಿಸಲು, ಗುಂಡಿ ಹೊಲಿಯಲು ಸಾಧ್ಯವಾಗಿತ್ತು ಮತ್ತು ಹಾಲು ಯಾವಾಗ ಉಕ್ಕುತ್ತೆಂದು ತಿಳಿಯುತ್ತಿತ್ತು ಅವಳಿಗೆ ಪ್ರತಿಯೊಂದು ವಸ್ತು ಇರುವ ಸ್ಥಳ ಎಷ್ಟೊಂದು ಖಚಿತವಾಗಿತ್ತೆಂದರೆ ಕೆಲವು ಸಲ ತಾನು ಕುರುಡಿ ಎನ್ನುವುದೂ ಕೂಡ ಮರೆತು ಹೋಗುತ್ತಿತ್ತು. ಒಂದು ಸಲ ಫೆರ್ನಾಂಡ ತನ್ನ ಮದುವೆಯ ಉಂಗುರ ಕಳೆದು ಹೋಯಿತೆಂದು ಮನೆಯವರನ್ನೆಲ್ಲ ಬೇಸರಪಡಿಸಿದ್ದಳು. ಅದನ್ನು ಉರ್ಸುಲಾ ಮಕ್ಕಳ ಬೆಡ್‌ರೂಮಿನ ಶೆಲ್ಫ್‌ನಲ್ಲಿ ಹುಡುಕಿದಳು. ಉಳಿದವರೆಲ್ಲ ಸುಮ್ಮನೆ ಅತ್ತಿತ್ತ ಓಡಾಡುತ್ತಿರುವಾಗ ಅವಳು ಅವರನ್ನು ತನ್ನ ನಾಲ್ಕು ಇಂದ್ರಿಯಗಳಿಂದ ಗಮನಿಸುತ್ತಿರುವುದನ್ನು ಅವರು ವಿಶೇಷವಾಗಿ ತೆಗೆದುಕೊಂಡಿರಲಿಲ್ಲ. ಸ್ವಲ್ಪ ಸಮಯದ ನಂತರ ಮನೆಯಲ್ಲಿನ ಪ್ರತಿಯೊಬ್ಬರೂ ಅವರಿಗೇ ತಿಳಿಯದೆ ಹಾಗೆ ಒಬ್ಬರು ಅನುಸರಿಸಿದ್ದನ್ನೇ, ಮಾಡಿದ್ದನ್ನೇ ಪ್ರತಿ ದಿನ ಇತರರೂ ಅದೇ ರೀತಿ ಅನುಸರಿಸುತ್ತಿದ್ದರು, ಮಾಡುತ್ತಿದ್ದರು. ಅಲ್ಲದೆ ಹೆಚ್ಚು ಕಡಿಮೆ ಅದೇ ಮಾತುಗಳನ್ನು ಅದೇ ವೇಳೆಯಲ್ಲಿ ಆಡುತ್ತಿದ್ದರು. ಅವರು ದಿನನಿತ್ಯದ ಕ್ರಮವನ್ನು ಬದಲಾಯಿಸಿದಾಗ ಮಾತ್ರ ಏನಾದರೊಂದನ್ನು ಕಳೆದುಕೊಳ್ಳುತ್ತಿದ್ದರು. ಆದ್ದರಿಂದ ಅವಳಿಗೆ ಉಂಗುರ ಕಳೆದುಕೊಂಡಿದ್ದರಿಂದ ಫೆರ್ನಾಂಡ ಅತಿಯಾಗಿ ತಲೆಕೆಡಿಸಿಕೊಂಡಿದ್ದಾಳೆಂದು ತಿಳಿದಾಗ, ಆ ದಿನ ಅವಳು ಮಾಡಿದ ಒಂದೇ ವ್ಯತ್ಯಾಸದ ಕೆಲಸವೆಂದರೆ ಮೆಮೆ ತನ್ನ ಹಾಸಿಗೆಯಲ್ಲಿ ಹಿಂದಿನ ದಿನ ರಾತ್ರಿ ತಿಗಣೆ ಕಂಡಿದ್ದಕ್ಕಾಗಿ ಅದನ್ನು ಬಿಸಿಲಲ್ಲಿ ಇರಿಸಿದ್ದು ಎಂದು ಉರ್ಸುಲಾ ನೆನಪಿಸಿಕೊಂಡಳು. ಹೊಗೆ ಹಾಕುವ ಸಮಯದಲ್ಲಿ ಮಕ್ಕಳು ಇದ್ದದ್ದರಿಂದ ಫೆರ್ನಾಂಡ ಅವಕ್ಕೆ ಸಿಗಲಾರದ ಒಂದೇ ಜಾಗದಲ್ಲಿ ಅದನ್ನಿಟ್ಟಿದ್ದಳು. ಅದು ಶೆಲ್ಫ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಫೆರ್ನಾಂಡ ದಿನಚರಿಯ ಮಾರ್ಗವನ್ನು ಅನುಸರಿಸುತ್ತ ವೃಥಾ ಹುಡುಕಿದ್ದಳು. ಅವಳಿಗೆ ಕಳೆದು ಹೋದ ವಸ್ತುಗಳು ದಿನನಿತ್ಯದ ಅಭ್ಯಾಸಕ್ಕಿಂತ ಬೇರೆಯಾಗಿರುತ್ತದೆ ಮತ್ತು ಅದರಿಂದಾಗಿ ಅವುಗಳನ್ನು ಹುಡುಕುವುದು ಕಷ್ಟ ಎನ್ನುವುದು ತಿಳಿದಿರಲಿಲ್ಲ. +ಹೊಸೆ ಅರ್ಕಾದಿಯೋವನ್ನು ನೋಡಿಕೊಳ್ಳುವ ಕೆಲಸದಿಂದ ಮನೆಯಲ್ಲಿನ ಸಣ್ಣ ಬದಲಾವಣೆಯೂ ಉರ್ಸುಲಾಗೆ ತಿಳಿಯುತ್ತಿತ್ತು. ಅಮರಾಂತ ಬೆಡ್‌ರೂಮಿನಲ್ಲಿ ಸಂತರ ಪ್ರತಿಮೆಗಳಿಗೆ ಉಡುಪು ಬದಲಾಯಿಸುತ್ತಿದ್ದಾಳೆಂದು ಗೊತ್ತಾದಾಗ ಆ ಹುಡುಗನಿಗೆ ಬಣ್ಣಗಳಲ್ಲಿನ ವ್ಯತ್ಯಾಸ ತೋರಿಸುವ ನೆಪ ಹೂಡಿದಳು. +ಅವಳು, “ಈಗ್ನೋಡೋಣ, ಆರ್ಚೆಂಜಲ್ ರ್‍ಯಾಫಲ್ ಯಾವ ಬಣ್ಣದ ಬಟ್ಟೆ ಹಾಕ್ಕೊಂಡಿದಾನೆ ಹೇಳು ಮತ್ತೆ?” ಎಂದು ಅವನನ್ನು ಕೇಳುತ್ತಿದ್ದಳು. +ಈ ರೀತಿಯಲ್ಲಿ ಅವಳ ಕಣ್ಣುಗಳಿಂದ ತಿಳಿಯಲಾಗದ ವಿಷಯವನ್ನು ಆ ಹುಡುಗ ತಿಳಿಸುತ್ತಿದ್ದ. ಅವನು ಸ್ಕೂಲಿಗೆ ಹೊರಟು ಹೋಗುವುದಕ್ಕೆ ಬಹಳ ಕಾಲ ಮುಂಚೆಯೇ ಉರ್ಸುಲಾಗೆ ಸಂತರ ಬಟ್ಟೆಗಳ ಬಣ್ಣವನ್ನು ಅವುಗಳ ನುಣುಪಿನಿಂದಲೇ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿತ್ತು. ಕೆಲವು ಸಲ ಅನಿರೀಕ್ಷಿತ ಅಪಘಾತಗಳಾಗುತ್ತಿದ್ದವು. ಒಂದು ಸಲ ಬೆಗೋನಿಯಾ ಗಿಡಗಳಿದ್ದ ಅಂಗಳದಲ್ಲಿ ಅಮರಾಂತ ಕಸೂತಿ ಹಾಕುತ್ತ ಕುಳಿತಿದ್ದಾಗ ಉರ್ಸುಲಾ ಅವಳಿಗೆ ಡಿಕ್ಕಿ ಹೊಡೆದಳು. +ಅಮರಾಂತ, “ಅಯ್ಯೋ ದೇವರೆ, ನೀನೇನು ಮಾಡ್ದೆ ನೋಡು” ಎಂದು ರೇಗಿದಳು. ಉರ್ಸುಲಾ, “ಅದು ನಿನ್ನ ತಪ್ಪು. ನೀನು ಎಲ್ಲಿ ಕೂತಿರ್‍ಬೇಕೋ ಅಲ್ಲಿ ಕೂತಿಲ್ಲ” ಎಂದಳು. +ಅವಳಿಗೆ ಖಾತ್ರಿಯಿತ್ತು. ಆದರೆ ವರ್ಷ ಉರುಳುತ್ತಿದ್ದಂತೆ ಗೊತ್ತಾಗದ ರೀತಿಯಲ್ಲಿ ಸೂರ್ಯ ಸ್ಥಳ ಬದಲಾವಣೆ ಮಾಡುತ್ತಾನೆಂದು ಯಾರೂ ಗಮನಿಸದಿದ್ದ ಅಂ, ಆ ದಿನ ಅವಳಿಗೆ ಅರಿವಾಯಿತು. ಅಲ್ಲದೆ ಅಂಗಳದಲ್ಲಿ ಕುಳಿತುಕೊಳ್ಳುವವರು ತಮಗೇ ತಿಳಿಯದ ಹಾಗೆ ಕೊಂಚ ಕೊಂಚವಾಗಿ ಜಾಗ ಬದಲಾಯಿಸಬೇಕಾಗಿತ್ತು. ಅದಾದ ನಂತರ ಉರ್ಸುಲಾ, ಅಮರಾಂತ ಎಲ್ಲಿ ಕುಳಿತುಕೊಳ್ಳುತ್ತಾಳೆಂದು ತಿಳಿದುಕೊಳ್ಳಲು ದಿನಾಂಕಗಳನ್ನು ನೆನಪಿಟ್ಟುಕೊಳ್ಳಬೇಕಾಗಿತ್ತು. ಅವಳ ನಡುಗುವ ಕೈಗಳು ಹೆಚ್ಚು ಹೆಚ್ಚು ಕಾಣಿಸುವಂತಿದ್ದರೂ ಮತ್ತು ಕಾಲಿನ ಭಾರ ಅತಿಯಾಗಿದ್ದರೂ ಅವಳ ಸಣ್ಣ ಆಕೃತಿ ಅನೇಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವಳು ಹೆಚ್ಚು ಕಡಿಮೆ ಇಡೀ ಮನೆಯ ಭಾರವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡ ರೀತಿಯಲ್ಲಿಯೇ ಇದ್ದಳು. ಆದರೂ ಸಹ ಅವಳ ಭೇದಿಸಲಾಗದ ಮುದಿತನದ ಏಕಾಂತತೆಯಲ್ಲಿ ಸಂಸಾರದ ತೀರ ನಿಕೃಷ್ಟ ಘಟನೆಗಳನ್ನು ವಿಶ್ಲೇಷಿಸುತ್ತ, ತನ್ನ ಹಿಂದಿನ ತರಾತುರಿಯ ಜೀವನ ಕಾಣದಂತೆ ಮಾಡಿದ್ದ ಸತ್ಯಗಳನ್ನು, ಮೊದಲ ಬಾರಿಗೆ ಸ್ವಷ್ಟವಾಗಿ ಕಾಣುವಷ್ಟು ಪರಿeನ ಅವಳಿಗಿತ್ತು. ಸುಮಾರು ಅದೇ ಸಮಯಕ್ಕೆ ಅವರು ಹೊಸೆ ಅರ್ಕಾದಿಯೋನನ್ನು ಸ್ಕೂಲಿಗೆ ಕಳಿಸಲು ಸಿದ್ಧರಾಗುತ್ತಿದ್ದಂತೆ, ಅವಳು ಆಗಲೇ ಮಕೋಂದೋ ಸ್ಥಾಪನೆಯಾದ ನಂತರ ಮನೆಯಲ್ಲಿ ಜರುಗಿದ ಘಟನೆಗಳ ವಿವರಗಳ ಸಾರಾಂಶವನ್ನು ನೆನಪುಮಾಡಿಕೊಳ್ಳುತ್ತಿದ್ದಳು ಮತ್ತು ತಲೆಮಾರಿನವರ ಬಗ್ಗೆ ಇದ್ದ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಳು. ಅವಳು ಮೊದಲು ತಿಳಿದಂತೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಕಾರಣ ನಿರಾಶನಾಗಿ ಮನೆಯ ಬಗ್ಗೆ ಪ್ರೀತಿ ಕಳೆದುಕೊಳ್ಳಲಿಲ್ಲ. ಅವನು ಯಾವಾಗಲೂ ಯಾರನ್ನೂ, ತನ್ನ ಹೆಂಡತಿ ರೆಮಿದಿಯೋಸ್‌ಳನ್ನು ಅಥವಾ ಅವನ ಜೀವನದಲ್ಲಿ ಬಂದು ಹೋದ ಲೆಕ್ಕವಿಲ್ಲದಷ್ಟು ಒಂದು ರಾತ್ರಿಯ ಹೆಂಗಸರನ್ನೂ, ಅಷ್ಟೇಕೆ ತನ್ನ ಮಕ್ಕಳನ್ನೂ ಸಹ ಪ್ರೀತಿಸಲಿಲ್ಲ ಎನ್ನುವುದು ಅವಳಿಗೆ ಅರಿವಾಯಿತು. ಅವನು ಎಲ್ಲರೂ ತಿಳಿದುಕೊಂಡಿರುವಂತೆ ಅಷ್ಟೊಂದು ಯುದ್ಧಗಳನ್ನು ಆದರ್ಶಕ್ಕಾಗಿ ಮಾಡಲಿಲ್ಲ ಅಥವಾ ಕೆಲವೊಂದು ಗೆಲವುಗಳನ್ನು ದಣಿವಿನಿಂದ ಬಿಟ್ಟುಕೊಡಲಿಲ್ಲ. ಆದರೆ ಅವನು ಗೆದ್ದದ್ದು ಮತ್ತು ಸೋತದ್ದು ಒಂದೇ ಕಾರಣಕ್ಕಾಗಿ: ಅಪ್ಪಟವಾದ ಮತ್ತು ಪಾಪದ ಪ್ರತಿಷ್ಠೆಗಾಗಿ ಎಂದು ತೋರಿತು. ಯಾರಿಗಾಗಿ ತನ್ನ ಜೀವವನ್ನೇ ಕೊಡಲು ತಯಾರಾಗಿದ್ದಳೋ, ಆ ಮಗ ಪ್ರೀತಿ ಮಾಡದಂಥ ಮನುಷ್ಯ ಎಂಬ ನಿರ್ಧಾರಕ್ಕೆ ಬಂದಳು. ಅದೊಂದು ರಾತ್ರಿ ಅವನಿನ್ನೂ ಹೊಟ್ಟೆಯಲ್ಲಿ ಇರುವಾಗಲೇ ಅಳುತ್ತಿರುವುದು ಕೇಳಿಸಿತ್ತು. ಅದು ಎಷ್ಟು ಖಚಿತವಾದ ರೋದನವಾಗಿತ್ತೆಂದರೆ ಪಕ್ಕದಲ್ಲಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಚ್ಚರಗೊಂಡ ಮತ್ತು ತನ್ನ ಮಗ ಧ್ವನಿಗಾರುಡಿಗನಾಗುತ್ತಾನೆಂದು ಸಂತೋಷಗೊಂಡ. ಬೇರೆಯವರು ಅವನೊಬ್ಬ ಭವಿಷ್ಯ ಹೇಳುವವನಾಗುತ್ತಾನೆ ಎಂದು ಹೇಳಿದರು. ಅದಕ್ಕೆ ವ್ಯತಿರಿಕ್ತವಾಗಿ ಅವಳು ದೀರ್ಘವಾದ ಮುಲುಗುವಿಕೆ ಖಚಿತವಾಗಿ ಹಂದಿಯ ಬಾಲ ಇರುವುದರ ಪ್ರಾಥಮಿಕ ಸೂಚನೆ ಎನ್ನುವುದರಿಂದ ನಡುಗಿದಳು. ಅಲ್ಲದೆ ಹೊಟ್ಟೆಯಲ್ಲಿಯೇ ಮಗು ಸತ್ತು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದಳು. ಆದರೆ ಈಗ ಇಳಿವಯಸ್ಸಿನ ಸರಳತೆಯಲ್ಲಿ ಅವಳು ತಾಯಂದಿರ ಗರ್ಭದಲ್ಲಿರುವ ಮಕ್ಕಳ ಅಳು ಧ್ವನಿಗಾರುಡಿಗತನವನ್ನು ಅಥವಾ ಭವಿಷ್ಯಕಾರನಾಗುವುದನ್ನು ಸೂಚಿಸುವುದಿಲ್ಲ: ಅಂಥವು ಪ್ರೀತಿ ಮಾಡಲು ಅಸಮರ್ಥವಾಗಿರುತ್ತವೆ ಎಂದು ಎಷ್ಟೋ ಸಲ ಹೇಳಿದ್ದಳು. ತನ್ನ ಮಗನ ಬಗ್ಗೆ ಇದ್ದ ಗೌರವ ಕಡಿಮೆಯಾದ್ದರಿಂದ ಅವಳಿಗೆ ಒಂದೇ ಸಲಕ್ಕೆ ಅವನ ಮೇಲೆ ಮೀಸಲಾಗಿದ್ದ ಅಂತ:ಕರಣವೆಲ್ಲ ತುಂಬಿ ಬಂತು. ತನ್ನ ಹೃದಯದ ಕಠೋರತೆಯಿಂದ ಭಯ ಮೂಡಿಸಿ, ಒಂದೇ ನಿಟ್ಟಿನ ನಿಷ್ಠುರದಿಂದ ಅಹಿತವೆನಿಸಿದ್ದ ಅಮರಾಂತ ಅಂತಿಮ ವಿಶ್ಲೇಷಣೆಯಲ್ಲಿ ಎಂದೂ ಇರದಂಥ ಸೂಕ್ಷ್ಮವಾದ ಹೆಂಗಸೆಂದು ಸ್ಪಷ್ಟವಾಯಿತು ಮತ್ತು ಎಲ್ಲರೂ ತಿಳಿದಂತೆ ನ್ಯಾಯವಲ್ಲದ ಚಿತ್ರಹಿಂಸೆಗೆ ಪಿಯತ್ರೋ ಕ್ರೆಸ್ಪಿಯನ್ನು ಅವನ ಮೇಲಿನ ಸೇಡಿಗೆ ಗುರಿಪಡಿಸಿದ್ದಲ್ಲ ಹಾಗೂ ಎಲ್ಲರೂ ತಿಳಿದಂತೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಜೀವನವನ್ನು ವಿಕ್ಷಿಪ್ತಗೊಳಿಸಿ, ಹುತಾತ್ಮನಾಗುವಂತೆ ಅವನ ಮೇಲಿನ ನಿಷ್ಠುರತೆ ನಿರ್ಧರಿಸಿದ್ದಲ್ಲ ಎನ್ನುವ ಸಂಗತಿ. ಆದರೆ ಇವೆರಡೂ ಕ್ರಿಯೆಗಳಲ್ಲಿ ಅಳತೆ ಮೀರಿದ ಪ್ರೀತಿ ಮತ್ತು ಗೆಲ್ಲಲಾಗದ ಹೇಡಿತನಗಳ ನಡುವಿನ ಸಂಘರ್ಷವೇ ಕಾರಣವಾದದ್ದಲ್ಲದೆ ಅಮರಾಂತ ಯಾವಾಗಲೂ ತನ್ನ ಹೃದಯದಲ್ಲಿ ಮೂಡಿಸಿಕೊಂಡಿದ್ದ ಅಸಂಬದ್ಧ ಭಯವೇ ಕೊನೆಗೆ ಗೆದ್ದದ್ದು ಎಂದು ಅವಳಿಗೆ ಅರ್ಥವಾಯಿತು. ಅದೇ ಸಮಯದಲ್ಲಿ ಉರ್ಸುಲಾ ರೆಬೇಕಳ ಬಗ್ಗೆ ಮಾತನಾಡುತ್ತ ಅದರ ಜೊತೆಗೆ ಕಾಲಮೀರಿದ ಪಶ್ಚಾತ್ತಾಪದಿಂದ ಮತ್ತು ದಿಢೀರ್ ಮೆಚ್ಚುಗೆಯಿಂದ ಉಕ್ಕಿ ಬಂದ ಪ್ರೀತಿಯನ್ನು ನೆನಪಿಸಿಕೊಳ್ಳುತ್ತ, ತನ್ನ ಹಾಲು ಕುಡಿಯದೆ ಕೇವಲ ಆ ನೆಲದ ಮಣ್ಣು ಮತ್ತು ಗೋಡೆಯ ಹೆಕ್ಕಳ ತಿನ್ನುತ್ತ, ರಕ್ತನಾಳಗಳಲ್ಲಿ ತನ್ನದೇ ರಕ್ತ ಹರಿಯದೆ, ಗೋರಿಯಲ್ಲಿ ಟೆ;ಳಗುಟ್ಟುವ ಮೂಳೆಗಳ ಅಪರಿಚಿತರ ರಕ್ತ ಹರಿಯಲು ಬಿಟ್ಟಿರುವುದನ್ನು ಅರ್ಥಮಾಡಿಕೊಳ್ಳುತ್ತಿದ್ದಳು. ಅಶಾಂತವಾದ ಹೃದಯ ಮತ್ತು ರೋಷ ಭರಿತ ತೀಕ್ಷ್ಣತೆ ಹೊಂದಿದ, ಕಿಂಚಿತ್ ಕದಲದ ಧೈರ್ಯದ ರೆಬೇಕ ಒಬ್ಬಳೇ ತನ್ನೊಂದಿಗಿರಲಿ ಎಂದು ಉರ್ಸುಲಾ ಬಯಸಿದಳು. +ಗೋಡೆಗಳ ಮೇಲೆ ಕೈ ಆಡಿಸುತ್ತ, “ರೆಬೇಕ ನಿಂಗೆ ನಾವೆಷ್ಟು ಅನ್ಯಾಯ ಮಾಡಿದ್ದೀವಿ” ಎಂದು ಅವಳು ಹೇಳುತ್ತಿದ್ದಳು. +ಅವಳು ವಿಶೇಷವಾಗಿ ಆರ್ಚೆಂಜಲ್ ಗಾಬ್ರಿಯಲ್‌ನಂತೆ ಬಲಗೈ ಮೇಲೆತ್ತಿಕೊಂಡು ಓಡಾಡಲು ಶುರು ಮಾಡಿದಾಗ ಮನೆಯವರು ಅವಳ ಮನಸ್ಸು ಎಲ್ಲೆಲ್ಲೋ ತಿರುಗಾಡುತ್ತಿದೆ ಎಂದು ತಿಳಿದುಕೊಂಡರು. ಆದರೆ ಫೆರ್ನಾಂಡಳಿಗೆ ಆ ತಿರುಗಾಟದ ನೆರಳುಗಳಲ್ಲಿ, ಉರ್ಸುಲಾ ಮನೆಯಲ್ಲಿ ಕಳೆದ ವರ್ಷ ಮಾಡಿದ ಖರ್ಚನ್ನು ಯಾವ ಅನುಮಾನವೂ ಇಲ್ಲದೆ ಹೇಳುತ್ತಿದ್ದರಿಂದ, ಬುದ್ಧಿ ತೀಕ್ಷ್ಣವಾಗಿದೆ ಎಂದು ತಿಳಿದುಕೊಂಡಳು. ಒಂದು ದಿನ ತನ್ನ ತಾಯಿ ಪಾತ್ರೆಯಲ್ಲಿದ್ದ ರಸವನ್ನು ಕಲಕುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ತಾನು ಕೇಳಿಸಿಕೊಳ್ಳುತ್ತಿದ್ದೇನೆಂದು ತಿಳಿಯದೆ ಹೊಸೆ ಅರ್ಕಾದಿಯೋ ಪ್ರಪಂಚದ ಸುತ್ತ ಅರವತ್ತು ನಾಲ್ಕು ಬಾರಿ ಸುತ್ತುವ ಮುಂಚೆ, ಮೊದಲ ಬಾರಿಗೆ ಬಂದ ಜಿಪ್ಸಿಗಳಿಂದ ಕೊಂಡುಕೊಂಡಿದ್ದ ಕಾಳು ಪುಡಿ ಮಾಡುವ ಗ್ರೈಂಡರ್ ಇನ್ನೂ ಪಿಲರ್ ಟೆರ್‍ನೆರಾಳ ಮನೆಯಲ್ಲಿ ಇದೆ ಎಂದು ಹೇಳಿದ್ದನ್ನು ಅಮರಾಂತ ಕೇಳಿದಾಗ, ಅವಳಿಗೂ ಇದೇ ರೀತಿಯ ಆಲೋಚನೆ ಬಂತು. ಸುಮಾರು ನೂರು ವರ್ಷವಾಗಿದ್ದು, ಹಿಂದೊಮ್ಮೆ ಬಾತುಕೋಳಿಗಳಿಗೆ ತನ್ನ ನಗುವಿನಿಂದ ಹೆದರಿಕೆ ಹುಟ್ಟುವಂತೆ, ಈಗ ಮಕ್ಕಳಿಗೆ ಹೆದರಿಕೆ ಉಂಟುಮಾಡುವಷ್ಟು ದಪ್ಪಗಿದ್ದರೂ, ಆರೋಗ್ಯ ಮತ್ತು ಲವಲವಿಕೆಯಿಂದ ಇದ್ದ ಪಿಲರ್ ಟೆರ್‍ನೆರಾಳಿಗೂ ಉರ್ಸುಲಾ ಹೇಳಿದ್ದು ಸರಿ ಎಂದು ತೋರಿತು. ಏಕೆಂದರೆ ಜಾಗೃತವಾಗಿರುವ ಮುದಿತನ, ಕಾರ್ಡುಗಳಿಗಿಂತ ಪರಿಣಾಮಕಾರಿ ಆಗಿರಬಹುದೆಂದು ಅವಳಿಗೆ ಅನುಭವ ತಿಳಿಸಲು ಪ್ರಾರಂಭಿಸಿತ್ತು. +ಉರ್ಸುಲಾಗೆ ಹೊಸೆ ಅರ್ಕಾದಿಯೋನನ್ನು ನೋಡಿಕೊಳ್ಳುವುದಕ್ಕೆ ತನಗೆ ಬೇಕಾಗುವಷ್ಟು ಸಮಯ ಸಿಗುವುದಿಲ್ಲವೆಂದು ಅರಿವಾದಾಗ ತಳಮಳಗೊಂಡಳು. ಅವಳು ತನ್ನ ಅಂತ:ದೃಷ್ಟಿಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದ ವಿಷಯಗಳ ಬಗ್ಗೆ ತಪ್ಪು ಮಾಡಲು ಪ್ರಾರಂಭಿಸಿದಳು. ಒಂದು ದಿನ ಅವಳು ಪನ್ನೀರು ಎಂದುಕೊಂಡು ಬಾಟಲಿಯಲ್ಲಿದ್ದ ಇಂಕನ್ನು ಹುಡುಗನ ತಲೆಯ ಮೇಲೆ ಸುರಿದಳು. ಪ್ರತಿಯೊಂದರಲ್ಲೂ ಭಾಗಿಯಾಗಬೇಕೆನ್ನುವ ಅವಳ ಒತ್ತಾಯದಿಂದ ಅವಳು ಎಷ್ಟು ಎಡತಾಕುತ್ತಿದ್ದಳೆಂದರೆ ಅದರಿಂದ ಉಂಟಾಗುತ್ತಿದ್ದ ನಗೆಪಾಟಲಿಗೆ ಬೇಸರಗೊಳ್ಳುತ್ತಿದ್ದಳು ಮತ್ತು ಅವಳು ನೆರಳುಗಳು ಉಂಟುಮಾಡುತ್ತಿದ್ದ ಗೋಜಲನ್ನು ತೊಡೆದು ಹಾಕಲು ಪ್ರಯತ್ನಿಸಿದಳು. ಆಗ ಅವಳಿಗೆ, ತನ್ನ ವಿಕಾರ ತಾನು ಜೀರ್ಣಗೊಂಡಿದ್ದರ ಹಾಗೂ ಮುತ್ತಿದ ಕತ್ತಲೆಯ ಮೊದಲ ಗೆಲುವಲ್ಲವೆಂದೂ ಅದು ಕಾಲ ನೀಡಿದ ತೀರ್ಪು ಎಂದು ಅರಿವಾಯಿತು. ಹಿಂದೆ ಟರ್ಕಿಗಳು ತಿಂಗಳು ಮತ್ತು ವರ್ಷಗಳನ್ನು ಗ್ರಹಿಸಲು ಬಳಸುತ್ತಿದ್ದದ್ದು, ದೇವರು ಬಳಸುತ್ತಿದ್ದದ್ದಕ್ಕಿಂತ ಬೇರೆಯಾಗಿತ್ತೆಂದು ಅವಳಿಗನ್ನಿಸಿತು. ಈಗ ಮಕ್ಕಳು ಬಹಳ ಬೇಗ ಬೆಳೆಯುವುದಷ್ಟೇ ಅಲ್ಲ ಭಾವನೆಗಳು ರೂಪುಗೊಳ್ಳುವುದೂ ಬೇರೆ ರೀತಿಯಲ್ಲಿ ಎಂದುಕೊಂಡಳು. ದೇಹ ಮತ್ತು ಆತ್ಮಗಳ ಸಮೇತ ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋದ ನಂತರ ಫೆರ್ನಾಂಡ ತನ್ನ ಹಚ್ಚಡ ಹೋಗಿದ್ದಕ್ಕಾಗಿ ಗೊಣಗಿಕೊಂಡು ಓಡಾಡುತ್ತಿದ್ದಳು. ಅವ್ರೇಲಿಯಾನೋಗಳ ದೇಹಗಳು ಗೋರಿಯೊಳಗೆ ತಣ್ಣಗಾಗುತ್ತಿದ್ದಂತೆಯೇ, ಅವ್ರೇಲಿಯಾನೋ ಸೆಗುಂದೋ ಮತ್ತೆ ಮನೆಯಲ್ಲಿ ದೀಪ ಬೆಳಗಿಸಿ, ಅಕಾರ್ಡಿಯನ್ ನುಡಿಸುವ ಕುಡುಕರಿಂದ ತುಂಬಿ, ಸತ್ತವರು ಕ್ರೈಸ್ತರಲ್ಲ, ನಾಯಿಗಳು ಎನ್ನುವಂತೆ ಅವಳಿಗೆ ಸಾಕಷ್ಟು ತಲೆನೋವು ತಂದ ಹುಚ್ಚರ ಸಂತೆಯಾದ ಮತ್ತು ಸಿಹಿ ಮಾಂಸದ ತಿನಿಸುಗಳಿಗೆ ವೆಚ್ಚ ಮಾಡಿಸಿದ ಆ ಮನೆ, ಅಧೋಗತಿಯ ಗುಪ್ಪೆಯಾಯಿತು. ಹೊಸೆ ಅರ್ಕಾದಿಯೋನ ಟ್ರಂಕನ್ನು ಸಿದ್ಧಪಡಿಸುತ್ತಿದ್ದ ಉರ್ಸುಲಾ ಅದೆಲ್ಲವನ್ನು ನೆನಪಿಸಿಕೊಳ್ಳುತ್ತ, ಸತ್ತು ಗೋರಿಯಲ್ಲಿ ಮಣ್ಣು ಮುಚ್ಚಿಸಿಕೊಳ್ಳುವುದು ಒಳ್ಳೆಯದಲ್ಲವೇ ಎಂದುಕೊಂಡಳು. ನಿಜವಾಗಲೂ ಜನರು ಅಷ್ಟೊಂದು ತೊಂದರೆ, ಸಂಕಷ್ಟಗಳನ್ನು ಸಹಿಸಿಕೊಳ್ಳಲು ತಮ್ಮನ್ನು ಕಬ್ಬಿಣದಿಂದ ಮಾಡಿದ್ದಾನೆ ಎಂದು ನಂಬಿದ್ದಾರೆಯೇ ಎಂದು ಯಾವ ಅಂಜಿಕೆಯಿಲ್ಲದೆ ದೇವರಲ್ಲಿ ಕೇಳಿದಳು. ಮತ್ತೆ ಮತ್ತೆ ಅದನ್ನೇ ಕೇಳುತ್ತ ಗೊಂದಲಗೊಂಡ ಅವಳಿಗೆ ಪರದೇಶಿಯ ಹಾಗೆ ದೂರ ಓಡಿ ಹೋಗಬೇಕೆಂಬ ತಡೆಯಲಾರದಷ್ಟು ಅಪೇಕ್ಷೆಯುಂಟಾಯಿತು. ಅದೆಷ್ಟೋ ಬಾರಿ ಮತ್ತೆ ಮತ್ತೆ ಮುಂದಕ್ಕೆ ಹಾಕಿದ, ತನ್ನೆಲ್ಲ ಸಮಾಧಾನಗಳನ್ನು ಪಕ್ಕಕ್ಕೆ ತಳ್ಳಿ ಒಂದೇ ಒಂದು ಕ್ಷಣ ಬಂಡಾಯವೇಳುವ ಅವಕಾಶಕ್ಕೆ ಹಾತೊರೆದಳು. ಒಂದೇ ಸಲಕ್ಕೆ ಎಲ್ಲದಕ್ಕೂ ಭೂತ ಬಿಡಿಸಿ, ಶತಮಾನದ ಕಾಲದಿಂದ ಎದೆಯೊಳಗೆ ಬಲವಂತವಾಗಿ ನುಂಗಬೇಕಾಗಿದ್ದ ಎಲ್ಲ ಕೆಟ್ಟ ಮಾತುಗಳನ್ನು ಹೊರಗೆ ಹಾಕಬೇಕೆಂದು ಮನಸ್ಸಾಯಿತು. +“ದರಿದ್ರವೇ ” ಎಂದು ಕೂಗಿದಳು. +ಬಟ್ಟೆಗಳನ್ನು ಟ್ರಂಕಿನೊಳಗೆ ಹಾಕುತ್ತಿದ್ದ ಅಮರಾಂತ ಅವಳಿಗೆ ಚೇಳು ಕಡಿಯಿತು ಎಂದುಕೊಂಡಳು. +“ಎಲ್ಲಿದೆ ಅದು” ಎಂದು ಬೆಚ್ಚಿ ಕೇಳಿದಳು. +“ಏನು?” +“ತಿಗಣೆ!” ಎಂದಳು ಅಮರಾಂತ. +ಉರ್ಸುಲಾ ತನ್ನ ಎದೆಯ ಮೇಲೆ ಕೈ ಇಟ್ಟುಕೊಂಡು, “ಇಲ್ಲಿದೆ” ಎಂದಳು. +ಗುರುವಾರ ಮಧ್ಯಾಹ್ನ ಎರಡು ಗಂಟೆಗೆ ಹೊಸೆ ಅರ್ಕಾದಿಯೋ ಸ್ಕೂಲಿಗೆ ಹೊರಟ. ಉರ್ಸುಲಾ ತಾಮ್ರದ ಗುಂಡಿಗಳಿದ್ದ ಸೂಟ್ ಮತ್ತು ಕತ್ತಿನ ಸುತ್ತ ಗಂಜಿಹಾಕಿದ ಬೋ ಟೈ ಕಟ್ಟಿಕೊಂಡು ರಾಚುವ ಶೆಖೆಯಲ್ಲಿ ಬೆವರುತ್ತ ಗಂಭೀರವಾಗಿ ನಿಂತ ಅವನಿಗೆ, ಒಂದು ಹನಿ ಕಣ್ಣೀರು ಹಾಕದೆ, ಅವನಿಗೂ ಹೇಳಿ ಕೊಡವ ಹಾಗೆ ವಿದಾಯ ಹೇಳುತ್ತಿದ್ದದ್ದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದಳು. ಅವನು ಹೋದ ದಾರಿ ತಿಳಿಯಲೆಂದು ಅವಳು ಅವನ ತಲೆಯ ಮೇಲೆ ಪನ್ನೀರನ್ನು ಸಿಂಪಡಿಸುತ್ತಿದ್ದಳು. ಬೀಳ್ಕೊಡುವ ಮುಂಚೆ ಊಟ ಮಾಡುತ್ತಿದ್ದಾಗ ಮನೆಯವರು ತಮಗೆ ಉಂಟಾಗುತ್ತಿದ್ದ ಗಲಿಬಿಲಿಯನ್ನು ಹಬ್ಬದ ಗೆಲುವು ವ್ಯಕ್ತಪಡಿಸುವುದರ ಮೂಲಕ ಅಡಗಿಸಿಕೊಂಡರು ಮತ್ತು ಅವರು ಫಾದರ್ ಆಂಟೋನಿಯೋ ಇಸಬಲ್ ಹೇಳಿದ್ದನ್ನು ಕೇಳಿ ಅತಿಯಾಗಿ ಉತ್ಸಾಹಗೊಂಡು ಸಂಭ್ರಮಿಸಿದರು. ಆದರೆ ಮೂಲೆಯಲ್ಲಿ ಬೆಳ್ಳಿಯ ಎಳೆಯಿದ್ದ ವೆಲ್‌ವೆಟ್ ಬಟ್ಟೆಯಿಂದ ಸುತ್ತಿದ ಟ್ರಂಕನ್ನು ಹೊರಗೆ ತೆಗೆದುಕೊಂಡು ಹೋಗುವಾಗ ಶವಪೆಟ್ಟಿಗೆಯನ್ನು ಮನೆಯಿಂದ ಹೊರಗೆ ತೆಗೆದಂತೆ ಅವರಿಗೆ ಭಾಸವಾಯಿತು. ಆ ಸಮಾರಂಭದಲ್ಲಿ ಭಾಗವಹಿಸಲು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮಾತ್ರ ನಿರಾಕರಿಸಿದ. +ಅವನು “ನಮ್ಗೆ ಬೇಕಾಗಿರೋದಷ್ಟೆ. ಒಬ್ಬ ಪೋಪ್!” ಎಂದು ಗೊಣಗುಟ್ಟಿದ. +ಮೂರು ತಿಂಗಳಾದ ಮೇಲೆ ಅವ್ರೇಲಿಯಾನೋ ಸೆಗುಂದೋ ಮತ್ತು ಫೆರ್ನಾಂಡ ಮೆಮೆಳನ್ನು ಸ್ಕೂಲಿಗೆ ಕರೆದುಕೊಂಡು ಹೋದರು ಮತ್ತು ಪಿಯಾನೋದಂತಿರುವುದನ್ನು ತಂದರು. ಅದೇ ಸಮಯದಲ್ಲಿ ಅಮರಾಂತ ತಾನು ಉಪಯೋಗಿಸುವ ಮುಸುಕನ್ನು ತಾನೇ ಹೊಲಿದುಕೊಳ್ಳುವುದಕ್ಕೆ ಪ್ರಾರಂಭಿಸಿದ್ದಳು. ಕ್ರಮೇಣ ಬಾಳೆತೋಟದ ಉಮೇದು ಕಡಿಮೆಯಾಗಿತ್ತು. ಊರಿನ ಹಳಬರಿಗೆ ಸುತ್ತಮುತ್ತಲೂ ಹೊಸಬರು ಇರುವುದು ಕಂಡು ಬಂದು ತಮ್ಮ ತಮ್ಮ ಹಳೆಯ ದಿನಗಳ ಶ್ರಮಪೂರಿತ ವರಮಾನಕ್ಕಷ್ಟೆ ಅಂಟಿಕೊಂಡಿದ್ದರು. ಆದರೆ ಅವರಿಗೆ ಹಾಳಾಗುವುದರಿಂದ ಬಚಾವಾಗಿದ್ದೇವೆಂಬ ಸಮಾಧಾನವಿತ್ತು. ಮನೆಯಲ್ಲಿ ಇನ್ನೂ ಊಟಕ್ಕೆ ಅತಿಥಿಗಳು ಬರುತ್ತಿದ್ದರು ಮತ್ತು ಒಂದು ವರ್ಷದ ನಂತರ ಬಾಳೆ ತೋಟದವರು ಹೊರಟು ಹೋಗುವ ತನಕ, ಹಳೆಯ ದಿನಚರಿ ನಿಜಕ್ಕೂ ಮತ್ತೆ ಸ್ಥಾಪನೆಯಾಗಲಿಲ್ಲ. ಆದರೂ ಸತ್ಕರಿಸುವುದರಲ್ಲಿ ಪರಂಪಾರಗತವಾಗಿ ಬಂದದ್ದಕ್ಕಿಂತ ಸಾಕಷ್ಟು ಬದಲಾವಣೆಗಳಾಗಿದ್ದವು. ಏಕೆಂದರೆ ಈ ನಿಯಮಗಳನ್ನು ವಿಧಿಸುತ್ತಿದ್ದವಳು ಫೆರ್ನಾಂಡ. ಉರ್ಸುಲಾ ಹಿಂದೆ ಸರಿದ ಮೇಲೆ ಮತ್ತು ಅಮರಾಂತ ಬಟ್ಟೆ ಹೊಲಿಯುವುದರಲ್ಲಿ ನಿರತಳಾದಾಗ, ಮಾಜಿ ರಾಣಿ, ಅತಿಥಿಗಳನ್ನು ಆರಿಸಿಕೊಳ್ಳುವ ಮತ್ತು ತನ್ನ ತಂದೆ ಕಲಿಸಿಕೊಟ್ಟ ಹಾಗೆ ಅಚ್ಚುಕಟ್ಟು ಕ್ರಮಗಳನ್ನು ವಿಧಿಸುವ ಸ್ವಾತಂತ್ರ್ಯ ಪಡೆದಿದ್ದಳು. ಸುಲಭವಾಗಿ ಲಭಿಸಿದ ಸಂಪತ್ತನ್ನು ತೋಚಿದಂತೆ ಅಸಹ್ಯ ರೀತಿಯಲ್ಲಿ ವ್ಯಯಮಾಡಿದ ಹೊರಗಿನವರಿಗೆ ಆ ಮನೆ, ಅವಳ ಕಠೋರತೆಯಿಂದ ಪುರಾತನ ಸಂಪ್ರದಾಯದ್ದಾಗಿ ಕಂಡಿತು. ಅವಳಿಗೆ ಹೆಚ್ಚಿಗೆ ಪ್ರಶ್ನೆಗಳನ್ನು ಕೇಳದ ಬಾಳೆತೋಟದ ಕಂಪನಿಗೆ ಸಂಬಂಧವಿರದವರು ಹೆಚ್ಚು ಹಿತ ಎನಿಸಿದ್ದರು. ಅವಳ ಭಾವ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೂಡ ಅವಳ ಮತ್ಸರಕ್ಕೆ ಕಾರಣವಾಗಿದ್ದ. ಏಕೆಂದರೆ ಅವನು ಪ್ರಾರಂಭದ ದಿನಗಳಲ್ಲಿ ಹುಂಜದ ಕಾಳಗದ ಬಗ್ಗೆ ಅತ್ಯಂತ ಉತ್ಸಾಹಗೊಂಡಿದ್ದವನು ಅದನ್ನು ಬಿಟ್ಟು ಬಾಳೆತೋಟದ ಕಂಪನಿಯಲ್ಲಿ ಫೋರ್‌ಮನ್ ಆಗಿ ಕೆಲಸಕ್ಕೆ ಸೇರಿಕೊಂಡ. +ಫೆರ್ನಾಂಡ, “ಅವನು ಎಲ್ಲಿ ತನಕ ಆ ಪರದೇಶಿಗಳ ಉಪ್ಪು ತಿಂತಿರ್‍ತಾನೋ ಅಲ್ಲಿ ತನಕ ಈ ಮನೆಗೆ ಬರೋ ಹಾಗಿಲ್ಲ” ಎಂದಳು. +ಮನೆಯಲ್ಲಿ ಅಷ್ಟೊಂದು ಬಿಗಿಯಾದ ವಾತಾವರಣವಿದ್ದರಿಂದ ಅವ್ರೇಲಿಯಾನೋ ಸೆಗುಂದೋಗೆ ಪೆತ್ರ್ರಾ ಕೊತೆಸ್ ಮನೆಯೇ ಹೆಚ್ಚು ಹಿತವಾಗಿ ಕಂಡಿತು. ಮೊದಲು ತನ್ನ ಹೆಂಡತಿಗೆ ಕೆಲಸದ ಹೊರೆ ತಪ್ಪಿಸುವ ನೆಪದಿಂದ ಅವನು ಪಾರ್ಟಿಗಳನ್ನು ಅಲ್ಲಿಗೆ ರವಾನಿಸಿದ. ಅನಂತರ ಪ್ರಾಣಿಗಳು ಫಲವಂತಿಕೆಯನ್ನು ಕಳೆದುಕೊಳ್ಳುತ್ತಿವೆ ಎನ್ನುವುದಕ್ಕಾಗಿ ತನ್ನ ಕಣಜ ಮತ್ತು ಕುದುರೆ ಲಾಯವನ್ನು ಅಲ್ಲಿಗೆ ಸ್ಥಳಾಂತರಿಸಿದ. ಕೊನೆಗೆ ಅವಳ ಮನೆ ಹೆಚ್ಚು ತಂಪಾಗಿರುತ್ತದೆ ಎನ್ನುವ ಕಾರಣದಿಂದ ತನ್ನ ಉದ್ಯೋಗದ ಸಣ್ಣ ಕಛೇರಿಯನ್ನು ಕೂಡ. ಗಂಡನಿದ್ದೂ ತಾನು ವಿಧವೆ ಎಂದು ಫೆರ್ನಾಂಡಳಿಗೆ ಅರಿವಾಗುವ ಹೊತ್ತಿಗೆ ಹಿಂದಿನ ಸ್ಥಿತಿಗೆ ಬರಲಾರದಷ್ಟು ತಡವಾಗಿತ್ತು. ಅವ್ರೇಲಿಯಾನೋ ಸೆಗುಂದೋ ಮನೆಯಲ್ಲಿ ಊಟಮಾಡುತ್ತಿದ್ದದ್ದು ಕಡಿಮೆ ಮತ್ತು ಹೆಂಡತಿಯ ಜೊತೆ ಮಲಗುವುದಕ್ಕಾಗಿ ಬರುತ್ತಿದ್ದದ್ದು ಯಾರಿಗೂ ಸಮಾಧಾನ ತಂದಿರಲಿಲ್ಲ. ಒಂದು ರಾತ್ರಿ ಅವನು ಅಜಾಗರೂಕತೆಯಿಂದ ಪೆತ್ರಾ ಕೊತೆಸ್ ಬಳಿ ಕಳೆದ. ಫೆರ್ನಾಂಡ ನಿರೀಕ್ಷೆಗೆ ವಿರುದ್ಧವಾಗಿ ಸ್ವಲ್ಪವೂ ಸಿಟ್ಟು ಮಾಡಿಕೊಳ್ಳಲಿಲ್ಲ. ಆದರೆ ಅವಳು ಅದೇ ದಿನ ಅವನು ಇಟ್ಟುಕೊಂಡವಳ ಮನೆಗೆ ಎರಡು ಟ್ರಂಕ್‌ನಲ್ಲಿ ಅವನ ಬಟ್ಟೆಗಳನ್ನು ತುಂಬಿ ಕಳಿಸಿ ಕೊಟ್ಟಳು. ಅವಳು ಅವುಗಳನ್ನು ಹಾಡೆಹಗಲಿನಲ್ಲಿಯೇ ಕಳಿಸಿಕೊಟ್ಟಿದ್ದಲ್ಲದೆ ದಾರಿತಪ್ಪಿದ ತನ್ನ ಗಂಡ, ಅವಮಾನವನ್ನು ತಡೆಯಲಾಗದೆ ಅವನು ಮತ್ತೆ ತಲೆ ತಗ್ಗಿಸಿ ಹಿಂತಿರುಗುತ್ತಾನೆಂದು ಭಾವಿಸಿ ರಸ್ತೆಯ ಮಧ್ಯದಲ್ಲಿ ಎಲ್ಲರಿಗೂ ಕಾಣುವಂತೆ ಹೋಗಬೇಕೆಂದು ಸೂಚನೆ ಕೊಟ್ಟಿದ್ದಳು. ಆದರೆ ಆ ಎದೆಗಾರಿಕೆಯ ಕ್ರಿಯೆಯಿಂದ ಪಾಪದ ಫೆರ್ನಾಂಡಳಿಗೆ ಅವಳ ಗಂಡನ ಸ್ವಭಾವ ಎಂಥಾದ್ದು ಎಂದು ತಿಳಿದಿಲ್ಲ ಎನ್ನುವುದು ಅವಳ ತವರು ಮನೆಯ ರೀತಿಗೂ ಈ ಮನೆತನದವರ ಸ್ವಭಾವದಕ್ಕೂ ಏನೂ ತಾಳಮೇಳವಿಲ್ಲ ಎನ್ನುವುದಕ್ಕೆ, ಇನ್ನೊಂದು ಪುರಾವೆ ಒದಗಿಸಿತ್ತು. ಏಕೆಂದರೆ ಆ ಟ್ರಂಕುಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅವರ ಸಂಬಂಧ ಗೊತ್ತಿದ್ದರಿಂದ ಅದು ಸಹಜವಾದ ರೀತಿ ಎಂದು ಹೇಳಿದರು. ಜೊತೆಗೆ ಅವ್ರೇಲಿಯಾನೋ ಸೆಗುಂದೋ ತನಗೆ ದೊರೆತ ಸ್ವಾತಂತ್ರ್ಯವನ್ನು ಮೂರು ದಿನಗಳ ಪಾರ್ಟಿ ಮಾಡಿ ಸಂಭ್ರಮಿಸಿದ. ಅವನ ಹೆಂಡತಿ ತನಗೆ ಅನಾನುಕೂಲವಾಗುವಂತೆ ಉದ್ದನೆಯ ಮಂಕಾದ ಉಡುಪು ಧರಿಸಿ ಪ್ರಬುದ್ಧಳಾಗಿ ಕಾಣುತ್ತ, ಹಳೆಯ ಮಾದರಿಯ ಒಡವೆಗಳೊಂದಿಗೆ ಪ್ರತಿಷ್ಠೆ ಕುಂದಿದವಳಂತೆ ಕಂಡು ಬಂದರೆ ಅವನು ಇಟ್ಟುಕೊಂಡವಳು ಎರಡನೆ ಹರೆಯ ಹೊಕ್ಕವಳಂತೆ ಬೀಗುತ್ತ ಬಣ್ಣ ಬಣ್ಣದ ಸಿಲ್ಕ್ ಡ್ರೆಸ್ ಹಾಕಿಕೊಂಡು ಹುಲಿಗಣ್ಣನ್ನು ಹೊಳೆಸುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ಮೊದಲಿನಂತೆ ಎಳೆಯನ ಹುರುಪಿನಿಂದ ಅವಳಿಗೆ ತನ್ನನ್ನು ತಾನೇ ಅರ್ಪಿಸಿಕೊಂಡ. ಹಿಂದೆ ಪೆತ್ರಾ ಕೊತೆಸ್ ಅವನನ್ನು ಅವಳಿ ಸೋದರನೊಂದಿಗೆ ಗೊಂದಲಿಸಿಕೊಂಡು ಅವನನ್ನಾಗಿಯೇ ಪ್ರೀತಿಸಿರಲಿಲ್ಲ. ಏಕೆಂದರೆ ಅವಳು ಇಬ್ಬರ ಜೊತೆಗೂ ಒಂದೇ ಅವಧಿಯಲ್ಲಿ ಮಲಗುತ್ತ, ದೇವರು ಇಬ್ಬರಂತೆ ಪ್ರೀತಿಸುವ ಒಬ್ಬನನ್ನೇ ದೊರಕಿಸಿಕೊಟ್ಟಿದ್ದಾನೆಂದು ತಿಳಿದಿದ್ದಳು. ಅವರಿಗೆ ಮರುಕಳಿಸಿದ ಕಾಮೋದ್ರೇಕದ ಒತ್ತಡ ಎಷ್ಟಿತ್ತೆಂದರೆ ಅನೇಕ ಬಾರಿ ಅವರು ಊಟ ಮಾಡಲು ಕುಳಿತು ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಣ್ಣಿಟ್ಟು ಹಾಗೆಯೇ ಏನೂ ಮಾತಾಡದೆ ಪ್ಲೇಟುಗಳನ್ನು ಮುಚ್ಚಿಟ್ಟು, ಉತ್ಕಟತೆಯಿಂದ ಮತ್ತು ಪ್ರೀತಿಯಿಂದ ಹಂಬಲಿಸುತ್ತ ಬೆಡ್‌ರೂಮಿಗೆ ಹೋಗುತ್ತಿದ್ದರು. ಅವನು ಹೋಗುತ್ತಿದ್ದ ಫ್ರೆಂಚ್ ಹೆಂಗಸರಿಂದ ಸ್ಫೂರ್ತಿಗೊಂಡು ಪೆತ್ರಾ ಕೊತೆಸ್‌ಗೆ ಆರ್ಚ್ ಬಿಷಪ್ ಉಪಯೋಗಿಸುವ ರೀತಿಯ ಹಾಸಿಗೆಯನ್ನು ತಂದು ಕೊಟ್ಟ. ಕಿಟಕಿಗಳಿಗೆ ವೆಲ್‌ವೆಟ್ ಕರ್ಟನ್‌ಗಳನ್ನು ಹಾಕಿದ ಮತ್ತು ಬೆಡ್‌ರೂಮಿನ ಚಾವಣಿಗೆ ಹಾಗೂ ಗೋಡೆಗೆ ಭಾರಿ ಗಾತ್ರದ ಕನ್ನಡಿಗಳನ್ನು ಹಾಕಿಸಿದ. ಅದೇ ಸಮಯದಲ್ಲಿ ಅವನು ಮೊದಲಿಗಿಂತ ಹೆಚ್ಚು ದುಂದುವೆಚ್ಚ ಮಾಡುತ್ತಿದ್ದ. ಪ್ರತಿ ದಿನ ಹನ್ನೊಂದು ಗಂಟೆಗೆ ಬರುವ ರೈಲಿನಲ್ಲಿ ಹೆಚ್ಚು ಹೆಚ್ಚು ಶಾಂಪೇನ್ ಮತ್ತು ಬ್ರಾಂದಿ ಕೇಸುಗಳನ್ನು ತರಿಸುತ್ತಿದ್ದ. ಸ್ಟೇಷನ್‌ನಿಂದ ವಾಪಸು ಹೋಗುವಾಗ ಅವನು ಹೊಟ್ಟೆಗಿಲ್ಲದವರನ್ನು, ಊರಿನವರು, ಹೊರಗಿನವರು, ಪರಿಚಿತರು, ಅಪರಿಚಿತರು ಎನ್ನುವ ಯಾವ ಭೇದವಿಲ್ಲದೆ ಜನರಿಗೆಲ್ಲ ಕಾಣುವಂತೆ ಜೊತೆಗೆ ಎಳೆದುಕೊಂಡು ಹೋಗುತ್ತಿದ್ದ. ಯಾರಿಗೂ ಅರ್ಥವಾಗದ ರೀತಿಯಲ್ಲಿ ಮಾತನಾಡುತ್ತಿದ್ದ ಮಿಸ್ಟರ್ ಬ್ರೌನ್ ಕೂಡ ಅವ್ರೇಲಿಯಾನೋ ಸೆಗುಂದೋ ಬೀರುತ್ತಿದ್ದ ಆಮಿಷಕ್ಕೆ ಒಳಗಾದ. ಅನೇಕ ಸಲ ಅವನು ಪೆತ್ರ್ರಾ ಕೊತೆಸ್‌ಳ ಮನೆಯಲ್ಲಿ ಯದ್ವಾ ತದ್ವಾ ಕುಡಿದದ್ದಲ್ಲದೆ, ಅವನ ಜೊತೆ ಎಲ್ಲ ಕಡೆಗೂ ಹೋಗುತ್ತಿದ್ದ ಜರ್ಮನ್ ನಾಯಿಗಳನ್ನು ಕೂಡ ತಾನು ಗುಣಗುಣಿಸುವ ಟೆಕ್ಸಾಸ್ ಹಾಡುಗಳಿಗೆ ಅಕಾರ್ಡಿಯನ್ ವಾದ್ಯಕ್ಕೆ ಅನುಸಾರವಾಗಿ ಡ್ಯಾನ್ಸ್ ಮಾಡುವಂತೆ ಮಾಡುತ್ತಿದ್ದ. +ಪಾರ್ಟಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅವ್ರೇಲಿಯಾನೋ ಸೆಗುಂದೋ, “ಖಾಲಿ ಮಾಡಿ, ಖಾಲಿ, ಯಾಕೆ ಅಂದ್ರೆ ಜೀವನ ಕ್ಷಣಿಕ” ಎಂದು ಕೂಗುತ್ತಿದ್ದ. +ಅವನು ಹಿಂದೆಂದೂ ಅಷ್ಟು ಚೆನ್ನಾಗಿ ಕಾಣುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಲಭಿಸಿರಲಿಲ್ಲ ಅಲ್ಲದೆ ಪ್ರಾಣಿಗಳು ಅಷ್ಟೊಂದು ಮರಿಗಳನ್ನು ಹಾಕಿರಲಿಲ್ಲ. ಕೊನೆಯಿರದ ಪಾರ್ಟಿಗಳಿಗಾಗಿ ಲೆಕ್ಕವಿಲ್ಲದಷ್ಟು ಹಸು, ಹಂದಿ, ಕೋಳಿಗಳನ್ನು ಕೊಚ್ಚಿ ಹಾಕಿದ್ದರಿಂದ ಅಂಗಳದ ನೆಲವೆಲ್ಲ ವಿಪರೀತ ರಕ್ತದಿಂದ ಕಪ್ಪುಗಟ್ಟಿ ಮಣ್ಣುಮಣ್ಣಾಗಿತ್ತು. ಅದು ಮೂಳೆಗಳನ್ನು ಮತ್ತು ಒಳಗಿನ ಭಾಗಗಳನ್ನು ಕೊನೆಯಿರದೆ ಕತ್ತರಿಸುವ ಸ್ಥಳವಾಗಿ, ಅಳಿದುಳಿದದ್ದನ್ನು ಹಾಕುವ ಮಣ್ಣಿನ ಗುಂಡಿಯಾಗಿತ್ತು. ಪಕ್ಷಿಗಳು ಅತಿಥಿಗಳ ಕಣ್ಣುಗಳನ್ನು ಕುಕ್ಕದಿರುವಂತೆ ಪದೇ ಪದೇ ಡೈನಮೈಟ್ ಬಾಂಬುಗಳನ್ನು ಸಿಡಿಸುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ದಡೂತಿಯಾಗಿ, ನೇರಳೆ ಬಣ್ಣಕ್ಕೆ ತಿರುಗಿ ಆಮೆಯಾಕಾರದವನಾದ. ಏಕೆಂದರೆ ಇಡೀ ಪ್ರಪಂಚವನ್ನು ಸುತ್ತಿ ವಾಪಸು ಬಂದ ಹೊಸೆ ಅರ್ಕಾದಿಯೋಗೆ ಇದ್ದ ಹಸಿವಿಗೆ ಅವನದನ್ನು ಹೋಲಿಸಬಹುದಾಗಿತ್ತು. ಅವನ ಮಾತುಗಾರಿಕೆ, ದುಂದುಗಾರಿಕೆ ಸತ್ಕಾರಗಳು ಜೌಗು ಪ್ರದೇಶದ ಎಲ್ಲೆಯನ್ನು ಮೀರಿ ಹಬ್ಬಿತ್ತು ಮತ್ತು ಕಡಲ ತೀರದ ಉದ್ದಕ್ಕೂ ಇರುವ ಹೊಟ್ಟೆಬಾಕರನ್ನು ಆಕರ್ಷಿಸಿತ್ತು. ಎಲ್ಲ ಕಡೆಯಿಂದ ಆಗಾಧ ಹೊಟ್ಟೆಬಾಕರು ಬಂದು ಪೆತ್ರಾ ಕೋತಸ್‌ಳ ಮನೆಯಲ್ಲಿ ಆಯೋಜಿಸಲಾಗುತ್ತಿದ್ದ ತಿನ್ನುವ ಶಕ್ತಿಯ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ದುರದೃಷ್ಟದ ಆ ಶನಿವಾರ ‘ಆನೆ\’ ಎಂದು ಇಡೀ ಪ್ರದೇಶದಲ್ಲಿ ಕರೆಯುತ್ತಿದ್ದ ಕಮೀಲಿಯ ಸಗಸ್ತುಮೆ ಎಂಬ ಹೆಂಗಸು ಬರುವ ತನಕ ಅವ್ರೇಲಿಯಾನೋ ಸೆಗುಂದೋನನ್ನು ತಿನ್ನುವುದರಲ್ಲಿ ಯಾರೂ ಸೋಲಿಸದೆ ಅಜೇಯನಾಗಿದ. ಅವರಿಬ್ಬರ ಪರಸ್ಪರ ದ್ವಂದ್ವ ಮಂಗಳವಾರ ಬೆಳಗಿನ ತನಕ ಮುಂದುವರೆಯಿತು. ಮೊದಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮರಗೆಣಸು, ಕರುವಿನ ಮಾಂಸದ ಊಟ ಮತ್ತು ಹುರಿದ ಬಾಳೆ ಹಾಗೂ ಎರಡೂವರೆ ಕೇಸ್ ಶಾಂಪೇನನ್ನು ಮುಗಿಸಿದ ಅವ್ರೇಲಿಯಾನೋ ಸೆಗುಂದೋ ಗೆಲುವಿನ ಬಗ್ಗೆ ಖಚಿತವಾಗಿದ್ದ. ಅವನು ವಿಚಲಿತಗೊಳ್ಳದೆ ಇದ್ದ ತನ್ನ ಪ್ರತಿಸ್ಪರ್ಧಿಗಿಂತ ಹೆಚ್ಚು ಉತ್ಸಾಹದಿಂದಿದ್ದ. ಆದರೆ ಅವಳಿಗೆ ಎದ್ದು ಕಾಣುವ ವೃತ್ತಿಪರತೆಯಿತ್ತು. ಆದರೆ ಮನೆಯಲ್ಲಿ ತುಂಬಿದ್ದ ಜನರ ಗುಂಪಿಗೆ ಭಾವ ತೀವ್ರತೆಗೆ ಅವಕಾಶ ಕಡಿಮೆಯಿತ್ತು. ಅವ್ರೇಲಿಯಾನೋ ಸೆಗುಂದೋ ಗೆಲ್ಲುವೆನೆಂಬ ನಿರೀಕ್ಷೆಯಿಂದ ಹೆಚ್ಚು ಹೆಚ್ಚಿಗೆ ಅಗಿಯುತ್ತಿದ್ದರೆ ‘ಆನೆ\’ ಸರ್ಜನ್ನಿನ ಕಲಾವಂತಿಕೆಯಂತೆ, ಇಷ್ಟಿಷ್ಟೆ ಸೀಳಿ ಸಂತೋಷದಿಂದ ಅವಸರವಿಲ್ಲದೆ ತಿನ್ನುತ್ತಿದ್ದಳು. ಅವಳು ಭಾರಿ ಗಾತ್ರದವಳಾಗಿ ಶಕ್ತಿಯುತವಾಗಿದ್ದರೂ ಅವಳ ಆಕಾರವನ್ನು ಮೀರಿ ಹೆಣ್ಣಿನ ಮಾಧುರ್ಯ ಮೆರೆದಿತ್ತು. ಅಲ್ಲದೆ ಅವಳ ಮುಖ ಎಷ್ಟು ಸುಂದರವಾಗಿ ಕೈಗಳು ಎಷ್ಟು ಕೋಮಲವಾಗಿದ್ದವೆಂದರೆ, ಅವಳ ವೈಯಕ್ತಿಕ ಸೊಬಗಿನ ಪರಿ ತಡೆಯಲಾರದೆ, ಅವಳು ಮನೆಯೊಳಗೆ ಬಂದಾಗ ಅವ್ರೇಲಿಯಾನೋ ಸೆಗುಂದೋ, ಪಂದ್ಯ ಟೇಬಲ್ಲಿನ ಮೇಲಲ್ಲದೆ ಹಾಸಿಗೆಯಲ್ಲಿ ಇದ್ದಿದ್ದರೆ ಒಳ್ಳೆಯದಿತ್ತು ಎಂದು ಮೆಲುದನಿಯಲ್ಲಿ ಹೇಳಿದ್ದ. ಆ ಮೇಲೆ ಅವಳು ನಿಯಮಗಳಿಗೆ ಯಾವುದೊಂದೂ ಕುಂದು ಬಾರದ ಹಾಗೆ ಎಳೆಗರುವಿನ ಮಾಂಸದ ಒಂದು ಭಾಗದ ಕೆಲಸವನ್ನು ಮುಗಿಸಿದ ನಂತರ, ಅಂಥ ಸೂಕ್ಷ್ಮವಾದ ಸ್ವಭಾವ ಮತ್ತು ನೀಳ ಮೂಗು ಇರುವುದು ಆದರ್ಶ ಹೆಣ್ಣಿನ ರೀತಿ ಎಂದು ಅವನು ಗಂಭೀರವಾಗಿ ಹೇಳಿದ. ಹೌದು ಅವನು ತಪ್ಪಾಗಿ ಭಾವಿಸಿರಲಿಲ್ಲ. ಆ ‘ಆನೆ\’ಗೆ ಈ ಮೊದಲು ಎಲುಬುಗಳನ್ನು ನುಚ್ಚುನೂರು ಮಾಡುವಾಕೆ ಎಂದು ಬಂದ ಹೆಗ್ಗಳಿಕೆಗೆ ಯಾವ ಆಧಾರವಿರಲಿಲ್ಲ. ಅವನಿಗೆ ಹೇಳಿದ್ದಂತೆ ಅವಳು ದನದ ಮಾಂಸ ತಿನ್ನುವಳಾಗಿರಲಿಲ್ಲ ಅಥವಾ ಗ್ರೀಕ್ ಸರ್ಕಸ್ಸಿನವಳಂತೆ ಗಡ್ಡ ಬೆಳೆಸಿದವಳಾಗಿರಲಿಲ್ಲ. ಅವಳು ಹಾಡಿನ ಸ್ಕೂಲಿನ ನಿರ್ದೇಶಕಿಯಾಗಿದ್ದಳು. ಅವಳು ತಿನ್ನುವುದಕ್ಕೆ ಕಲಿತಿದ್ದು ಗೌರವಯುತ ಸಂಸಾರವೊಂದರಲ್ಲಿ ತಾಯಿಯಾದ ಮೇಲೆ. ತನ್ನ ಮಕ್ಕಳಿಗೆ ಚೆನ್ನಾಗಿ ತಿನ್ನಲು, ಹಸಿವು ಹೆಚ್ಚಾಗಲು, ಕೃತಕ ವಿಧಾನಗಳ ಬದಲು ಅವರ ಅಂತರಂಗದ ಅಪೇಕ್ಷೆಯ ಸಂಪೂರ್ಣ ಶಾಂತಸ್ಥಿತಿಯಿಂದ ಉಂಟಾಗಬೇಕು ಎನ್ನುವುದಕ್ಕೆ ದಾರಿಯನ್ನು ಹುಡುಕುತ್ತಿದ್ದಳು. ಅವಳ ಸಿದ್ಧಾಂತದ ಪ್ರಕಾರ, ಅದನ್ನು ಜಾರಿ ಮಾಡಿ ತೋರಿಸಿದಂತೆ, ಎಲ್ಲ ವಿಷಯಗಳನ್ನು ಪ್ರeಪೂರ್ವಕವಾಗಿ ಚೊಕ್ಕ?ಜಜಿ;ಗಿ ನಿಭಾಯಿಸುವ ವ್ಯಕ್ತಿ ದಣಿವು ಮೆಲುಗೈ ಪಡೆಯುವ ತನಕ ತಿನ್ನಬಲ್ಲವನಾಗಿರುತ್ತಾನೆ, ಎಂದು. ಅವಳು ನೈತಿಕ ಕಾರಣಗಳಿಗಾಗಿ ಮತ್ತು ಕ್ರೀಡೆಯಲ್ಲಿನ ಆಸಕ್ತಿಯಿಂದ ಇಡೀ ದೇಶದಲ್ಲಿ ಯಾವುದನ್ನೂ ಲೆಕ್ಕಿಸದೆ ತಿನ್ನುವುದರಲ್ಲಿ ಪ್ರಸಿದ್ಧನಾದವನ ಜೊತೆ ಸ್ಪರ್ಧಿಸಬೇಕೆಂದು ಸ್ಕೂಲನ್ನು ಮತ್ತು ಮನೆಯನ್ನು ಬಿಟ್ಟು ಬಂದಿದ್ದಳು. ಅವಳು ಅವ್ರೇಲಿಯಾನೋ ಸೆಗುಂದೋನನ್ನು ನೋಡಿದ ತಕ್ಷಣ ಅವನು ತಿನ್ನುವ ಬದಲು, ಸ್ವಭಾವದಿಂದ ಸೋಲುತ್ತಾನೆ ಎಂದುಕೊಂಡಳು. ಮೊದಲನೆ ದಿನ ರಾತ್ರಿ ಮುಗಿದಾಗ “ಆನೆ” ಇನ್ನೂ ಧೈರ್ಯದಿಂದ ತಿನ್ನುತ್ತಿದ್ದರೆ ಅವ್ರೇಲಿಯಾನೋ ಸೆಗುಂದೋ ಅತಿಯಾದ ಮಾತು ಮತ್ತು ನಗುವಿನಿಂದ ಸುಸ್ತಾಗಿದ್ದ. ಅವರು ನಾಲ್ಕು ಗಂಟೆ ನಿದ್ದೆ ಮಾಡಿದರು. ಎದ್ದ ಮೇಲೆ ಇಬ್ಬರೂ ನಲವತ್ತು ಕಿತ್ತಲೆ ಹಣ್ಣಿನ ರಸ, ಎಂಟು ಬಟ್ಟಲು ಕಾಫಿ, ಮತ್ತು ಮೂವತ್ತು ಕೋಳಿ ಮೊಟ್ಟೆಗಳನ್ನು ಮುಗಿಸಿದರು. ಎರಡನೆ ದಿನ ಬೆಳಿಗ್ಗೆ ಸಾಕಷ್ಟು ಗಂಟೆಗಳನ್ನು ನಿದ್ದೆ ಇಲ್ಲದೇ ಕಳೆದದ್ದಲ್ಲದೆ ಎರಡು ಹಂದಿಗಳನ್ನು, ಬಾಳೆ ಗೊಂಚಲನ್ನು ಹಾಗೂ ನಾಲ್ಕು ಶಾಂಪೇನ್ ಕೇಸುಗಳನ್ನು ಮುಗಿಸಿದ್ದರು. ಅವ್ರೇಲಿಯಾನೋ ಸೆಗುಂದೋ ಅವನಿಗೇ ಗೊತ್ತಿಲ್ಲದಂತೆ ತನ್ನ ರೀತಿಯನ್ನು ಸಾಂಗತ್ಯವಿಲ್ಲದ ಬೇಜವಾಬ್ದಾರಿಯ ಮಾರ್ಗದಲ್ಲಿ ಕಂಡುಕೊಂಡಿದ್ದಾನೆ ಎಂದು “ಆನೆ”ಗೆ ಅನುಮಾನ ಬಂತು. ಅದಕ್ಕಾಗಿ ತಾನು ಭಾವಿಸಿದ್ದಕ್ಕಿಂತಲೂ ಅವನು ಹೆಚ್ಚು ಅಪಾಯಕಾರಿ ಎಂದು ಅವಳಿಗೆ ಭಾಸವಾಯಿತು. ಆದರೂ ಪೆತ್ರಾ ಕೊತೆಸ್ ಎರಡು ಸುಟ್ಟ ಟರ್ಕಿ ಕೋಳಿಗಳನ್ನು ಟೇಬಲ್ಲಿಗೆ ತಂದಾಗ ಅವ್ರೇಲಿಯಾನೋ ಸೆಗುಂದೋ ಉಸಿರುಗಟ್ಟುವ ಸ್ಥಿತಿಗಿಂತ ಸ್ವಲ್ಪ ಹಿಂದಿದ್ದ. +“ಆನೆ” ಅವನಿಗೆ, “ನಿಮ್ಮ ಕೈಲಿ ತಿನ್ನಲಿಕ್ಕೆ ಆಗದಿದ್ರೆ, ಇಬ್ರೂ ಸಮಸಮ ಅಂತ ಹೇಳ್ಬಿಡೋಣ” ಎಂದಿತು. +ತನಗೂ ಕೂಡ ಇನ್ನೊಂದು ಚೂರು ಏನನ್ನೂ ತಿನ್ನಲು ಸಾಧ್ಯವಿಲ್ಲ ಎಂದು ಅರಿತ ಅವಳು ತನ್ನ ಪ್ರತಿಸ್ವರ್ಧಿಯ ಸಾವಿಗೆ ಕಾರಣಳಾಗಬಾರದೆಂದು ಹಾಗೆ ಮನಸಾರೆ ಹೇಳಿದ್ದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅದನ್ನು ಸವಾಲೆಂದು ಪರಿಗಣಿಸಿ ಅವನ ಶಕ್ತಿಗೆ ಮೀರಿ ಅದನ್ನು ಒಳಗಿಳಿಸಿದ. ಕೂಡಲೆ ಅವನಿಗೆ ಪ್ರಜ್ಞೆ ತಪ್ಪಿತು. ಮೂಳೆ ಚೂರುಗಳಿದ್ದ ಪ್ಲೇಟ್‌ನಲ್ಲಿ ಮುಖ ಹಾಕಿ ನಾಯಿಯ ಹಾಗೆ ಶಬ್ದ ಮಾಡುತ್ತ ನೋವಿನಿಂದ ನರಳುತ್ತಿದ್ದ, ಅವನಿಗೆ ಕತ್ತಲಲ್ಲಿ ಗೋಪುರದೆತ್ತರದಿಂದ ತಳವಿರದ ಗುಂಡಿಯೊಳಗೆ ಎಸೆಯುತ್ತಿದ್ದಂತೆ ಭಾಸವಾಯಿತು ಮತ್ತು ಪ್ರಜ್ಞೆ ಇದ್ದ ಕೊನೆಯ ಕ್ಷಣದಲ್ಲಿ ಸಾವು ಕಾದಿದೆ ಎನ್ನುವುದು ಅರಿವಾಯಿತು. +ಅವನಿಗೆ, “ನನ್ನನ್ನ ಫೆರ್ನಾಂಡ ಹತ್ತಿರ ಕರೆದುಕೊಂಡು ಹೋಗಿ” ಎಂದು ಹೇಳುವುದಕ್ಕಷ್ಟೇ ಸಾಧ್ಯವಾಯಿತು. +ಅವನ ಸ್ನೇಹಿತರು ತಾನು ಇಟ್ಟುಕೊಂಡವಳ ಮನೆಯಲ್ಲಿ ಸಾಯುವುದಿಲ್ಲ ಎಂದು ಅವನು ಹೆಂಡತಿಗೆ ಮಾತುಕೊಟ್ಟಿದ್ದನ್ನು ಉಳಿಸಿಕೊಳ್ಳಲು ಸಹಾಯ ಮಾಡಿದ್ದೇವೆ ಎನ್ನುವ ಭಾವನೆಯಿಂದ ಅವನನ್ನು ಮನೆಗೆ ತಲುಪಿಸಿದರು. ಪೆತ್ರಾ ಕೊತೆಸ್ ಆಗಲೇ ಅವನು ಶವಪೆಟ್ಟಿಗೆಯಲ್ಲಿ ಹಾಕಿಕೊಳ್ಳಲು ಬಯಸಿದ್ದ ಚರ್ಮದ ಶೂಗಳನ್ನು ಪಾಲೀಶ್ ಮಾಡಿ ಅದನ್ನು ತೆಗೆದುಕೊಂಡು ಹೋಗಲು ಯಾರಾದರೂ ಬರುತ್ತಾರೆ ಎಂದು ಕಾದಿದ್ದಾಗ ಯಾರೋ ಬಂದು ಅವ್ರೇಲಿಯಾನೋ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು. ಅದೇ ರೀತಿ ಅವನು ಒಂದು ವಾರದಲ್ಲಿ ಚೇತರಿಸಿಕೊಂಡ ಮತ್ತು ಎರಡು ವಾರಗಳ ನಂತರ ತಾನು ಬದುಕಿ ಉಳಿದದ್ದನ್ನು ಹಿಂದೆಂದೂ ಇಲ್ಲದಷ್ಟು ರೀತಿಯಲ್ಲಿ ಸಂಭ್ರಮದಿಂದ ಆಚರಿಸಿದ. ಅವನು ಪೆತ್ರಾ ಕೊತೆಸ್ ಜೊತೆಯಲ್ಲಿಯೇ ಇರಲು ಮುಂದುವರಿಸಿದ. ಆದರೆ ಪ್ರತಿ ನಿತ್ಯ ಫೆರ್ನಾಂಡಳನ್ನು ಭೇಟಿ ಮಾಡುತ್ತಿದ್ದ ಹಾಗೂ, ಹಲವು ಸಂದರ್ಭಗಳಲ್ಲಿ ವಿಧಿ ಪರಿಸ್ಥಿತಿಯನ್ನು ಅದಲು ಬದಲು ಮಾಡಿ, ಅವನು ಇಟ್ಟುಕೊಂಡವಳನ್ನು ಹೆಂಡತಿಯನ್ನಾಗಿಸಿ ಹೆಂಡತಿಯನ್ನು ಪ್ರೇಯಸಿಯಾಗಿಸಿದೆ ಎನ್ನುವಂತೆ, ಕೆಲವು ಸಂದರ್ಭಗಳಲ್ಲಿ ಅವನು ಮನೆಯವರ ಜೊತೆ ಊಟ ಮಾಡುವ ತನಕ ಅಲ್ಲೆ ಇರುತ್ತಿದ್ದ. +ಫೆರ್ನಾಂಡಳಿಗೆ ಇದರಿಂದ ಬಿಡುವು ದೊರಕಿತು. ಮನಸ್ಸಿಗೆ ಬೇಸರವಾದಾಗ ಮಧ್ಯಾಹ್ನದ ಮಲಗುವ ಸಮಯದಲ್ಲಿ ಪಿಯಾನೋದಂಥ ವಾದ್ಯವನ್ನು ನುಡಿಸುವುದು ಮತ್ತು ಮಕ್ಕಳಿಂದ ಬರುತ್ತಿದ್ದ ಕಾಗದಗಳಷ್ಟೇ ಅವಳಿಗೆ ಆಸರೆಯಾಗಿದ್ದವು. ಅವಳು ಎರಡು ವಾರಕ್ಕೊಮ್ಮೆ ಕಳಿಸುತ್ತಿದ್ದ ಸುದೀರ್ಘ ಉತ್ತರದಲ್ಲಿ ಒಂದು ವಾಕ್ಯವೂ ಸತ್ಯವಾದದ್ದು ಇರುತ್ತಿರಲಿಲ್ಲ. ಅವಳು ತನ್ನ ಕಷ್ಟಗಳನ್ನು ಅವರಿಂದ ಮುಚ್ಚಿಟ್ಟಳು. ಬೆಗೋನಿಯಾ ಗಿಡಗಳ ಮೇಲೆ ಬೆಳಕು ಬಿದ್ದಿದ್ದರೂ, ಮಧ್ಯಾಹ್ನ ಎರಡು ಗಂಟೆ ತಲೆ ಭಾರ ಎನಿಸಿದರೂ, ಮನೆಯಿಂದಾಚೆ ಮತ್ತೆ ಮತ್ತೆ ಹಬ್ಬದುತ್ಸವಗಳ ಸದ್ದು ತೇಲಿ ಬರುತ್ತಿದ್ದರೂ, ಬಂಗಲೆಯಂತಿದ್ದ ತನ್ನ ತಂದೆಯ ಮನೆಯ ವಿಷಾದಪೂರ್ಣ ಸಂಗತಿಯನ್ನು ಮುಚ್ಚಿಟ್ಟಳು. ಫೆರ್ನಾಂಡ ಒಬ್ಬಳೇ ಮೂವರು ಜೀವಂತ ಭೂತಗಳ ಮಧ್ಯೆ ಓಡಾಡಿಕೊಂಡಿದ್ದಳು. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಭೂತ ಹಲವೊಮ್ಮೆ ಅವಳು ಪಿಯಾನೋದಂಥದನ್ನು ನುಡಿಸುತ್ತಿರುವಾಗ ಪ್ರಶ್ನಾರ್ಥಕ ಗಮನದಿಂದ ನಡುಮನೆಯ ಅರೆಬೆಳಕಿನಲ್ಲಿ ಬಂದು ಕುಳಿತುಕೊಳ್ಳುತ್ತಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೇವಲ ಒಂದು ನೆರಳಾಗಿದ್ದ. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಯಾವ ಭವಿಷ್ಯವೂ ಇರದ ಯುದ್ಧದ ಪ್ರಸ್ತಾಪ ಮಾಡುವುದಕ್ಕೆಂದು ಕಳೆದ ಬಾರಿ ರಸ್ತೆಗಿಳಿದು ಹೋದ ಮೇಲೆ ಅವನು ವರ್ಕ್‌ಶಾಪನ್ನು ಬಿಟ್ಟು ಹೋದದ್ದು ಬಾದಾಮಿ ಮರದ ಕೆಳಗೆ ಉಚ್ಚೆ ಹೊಯ್ಯುವುದಕ್ಕೆ ಮಾತ್ರ. ಅವನು ಮೂರು ವಾರಕೊಮ್ಮೆ ಹಜಾಮನನ್ನಲ್ಲದೆ ಬೇರೆ ಯಾರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲ. ಅವನು ಉರ್ಸುಲಾ ತಂದು ಕೊಡುವ ಏನನ್ನಾದರೂ ತಿನ್ನುತ್ತಿದ್ದ ಮತ್ತು ಹಿಂದಿನಷ್ಟೇ ಉತ್ಸಾಹದಿಂದ ಚಿನ್ನದ ಸಣ್ಣ ಮೀನುಗಳನ್ನು ಮಾಡುತ್ತಿದ್ದ. ಆದರೆ ಅದನ್ನು ಜನರು ಆಭರಣಗಳೆಂದು ಪರಿಗಣಿಸದೆ ಪುರಾತನ ವಸ್ತುವಿನಂತೆ ಕೊಂಡುಕೊಳ್ಳುತ್ತಾರೆಂದು ಗೊತ್ತಾದ ಮೇಲೆ ಅವುಗಳನ್ನು ಮಾರುವುದನ್ನು ನಿಲ್ಲಿಸಿದ. ಮದುವೆಯಾದ ಕಾಲದಿಂದಲೂ ಬೆಡ್ ರೂಮನ್ನು ಸಿಂಗರಿಸಿದ್ದ ರೆಮಿದಿಯೋಸ್‌ಳ ಬೊಂಬೆಗಳನ್ನು ಒಟ್ಟುಮಾಡಿ ಅಂಗಳದಲ್ಲಿಟ್ಟು ಬೆಂಕಿ ಹಚ್ಚಿದ. ಎಲ್ಲವನ್ನು ಗಮನಿಸುತ್ತಿದ್ದ ಉರ್ಸುಲಾಗೆ ಅವನು ಏನು ಮಾಡುತ್ತಿದ್ದಾನೆ ಎಂದು ತಿಳಿದರೂ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. +ಅವಳು ಅವನಿಗೆ, “ನೀನು ಕಲ್ಲು ಹೃದಯದೋನು” ಎಂದಳು. +ಅವನು, “ಅದು ಹೃದಯದ ಪ್ರಶ್ನೆಯಲ್ಲ. ರೂಮ್ ತುಂಬ ನುಸಿಹುಳು ಇದೆ” ಎಂದ. +ಅಮರಾಂತ ಮುಸುಕನ್ನು ಹೆಣೆಯುತ್ತಿದ್ದಳು. ಮೆಮೆಗೆ ಆಗಾಗ ಕಾಗದ ಬರೆಯುವುದಲ್ಲದೆ ಉಡುಗೊರೆಗಳನ್ನು ಕೂಡ ಕಳಿಸುವ ಅವಳು ಏಕೆ ಹೊಸೆ ಅರ್ಕಾದಿಯೋ ಬಗ್ಗೆ ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುವುದು ಅವಳಿಗೆ ಆರ್ಥವಾಗಲಿಲ್ಲ. ಉರ್ಸುಲಾ ಮೂಲಕ ಅವಳಿಗೆ ಅದನ್ನು ಕೇಳಿಸಿದಾಗ ಅವಳು, “ಸತ್ತರೂ ಅವಳಿಗೆ ಅದು ತಿಳಿಯಲ್ಲ” ಎಂದು ಅಮರಾಂತ ಹೇಳಿದಳು ಮತ್ತು ಆ ಉತ್ತರ ಫೆರ್ನಾಂಡಾಳಲ್ಲಿ ಬಗೆಹರಿಸಲಾಗದ ನಿಗೂಢತೆಯನ್ನು ಉಂಟುಮಾಡಿತು. ಯಾವಾಗಲೂ ಲೇಸ್‌ಗಳಿರುವ ಒಳಲಂಗಗಳನ್ನು ಹಾಕಿಕೊಂಡು, ಅಗಲ ಭುಜಗಳ ಧಿಮಾಕಿನ ಅಮರಾಂತ, ಹಣೆಯ ಮೇಲೆ ಕನ್ಯತ್ವದ ಬೂದಿಯ ಕ್ರಾಸನ್ನು ಇಟ್ಟುಕೊಂಡವಳಂತಿದ್ದಳು. ಆದರೆ ವಾಸ್ತವದಲ್ಲಿ ಅವಳು ಅದನ್ನು ಕೈಗೆ ಸುತ್ತಿದ ಕಪ್ಪು ಬ್ಯಾಂಡೇಜ್‌ನಲ್ಲಿ ಇಟ್ಟುಕೊಂಡಿದ್ದಳು ಹಾಗೂ ಅವಳು ಅದನ್ನು ತೆಗೆದಿಡದೆ ತಾನೇ ಒಗೆದು ಇಸ್ತ್ರಿ ಮಾಡುತ್ತಿದ್ದಳು. ಅವಳ ಜೀವನವೆಲ್ಲ ತನಗಾಗಿ ಮುಸುಕು ಹೆಣೆದುಕೊಳ್ಳುವುದರಲ್ಲಿ ಕಳೆದುಹೋಗುತ್ತಿತ್ತು. ಅವಳು ಹಗಲಿನಲ್ಲಿ ಹೆಣೆದದ್ದನ್ನು ರಾತ್ರಿ ಬಿಚ್ಚುತ್ತಾಳೆ ಎಂದು ಹೇಳಬಹುದಾಗಿತ್ತು ಮತ್ತು ಅವಳು ಹಾಗೆ ಮಾಡುತ್ತಿದ್ದದ್ದು ಏಕಾಂತವನ್ನು ನೀಗಬೇಕೆಂದಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಅದನ್ನು ಘೋಷಿಸುವುದಕ್ಕಾಗಿ. +ಫೆರ್ನಾಂಡಳಿಗೆ ತಿರಸ್ಕಾರಕ್ಕೆ ಒಳಗಾದ ವರ್ಷಗಳಲ್ಲಿದ್ದ ದೊಡ್ಡ ಆಲೋಚನೆಯೆಂದರೆ ಮೆಮೆ ತನ್ನ ಮೊದಲ ರಜೆಯನ್ನು ಕಳೆಯಲೆಂದು ಬಂದಾಗ, ಮನೆಯಲ್ಲಿ ಅವ್ರೇಲಿಯಾನೋ ಸೆಗುಂದೋ ಇಲ್ಲದ ಸಂಗತಿ ಅವಳಿಗೆ ಗೊತ್ತಾಗುವುದಲ್ಲ, ಎಂದು. ಅವಳ ಭಯಕ್ಕೆ ಅವನ ಅತಿಯಾದ ಚಟುವಟಿಕೆ ಪರಿಹಾರ ಒದಗಿಸಿತು. ಮೆಮೆ ವಾಪಸು ಬಂದಾಗ ಅವ್ರೇಲಿಯಾನೋ ಸೆಗುಂದೋ ಆಗಲೂ ಮನೆಗಂಟಿಕೊಂಡ ಗಂಡನೆಂದು ಮತ್ತು ಅವಳಿಗೆ ಮನೆಯ ವಿಷಾದ ಪರಿಸ್ಥಿತಿಯನ್ನು ಗಮನಿಸದಿರದಂತೆ, ಅವಳ ತಂದೆ ತಾಯಿ ಒಂದು ವ್ಯವಸ್ಥೆಯನ್ನು ರೂಪಿಸಿದರು. ಪ್ರತಿ ವರ್ಷ ಎರಡು ತಿಂಗಳು ಅವ್ರೇಲಿಯಾನೋ ಸೆಗುಂದೋ ಇನ್ನಿಲ್ಲದ ಗಂಡನ ಹಾಗೆ ವರ್ತಿಸಿದ ಮತ್ತು ಐಸ್‌ಕ್ರೀಮ್ ಹಾಗೂ ಕುಕೀಸ್‌ಗಳ ಪಾರ್ಟಿಗಳನ್ನು ಏರ್ಪಡಿಸುತ್ತಿದ್ದನ್ನು, ಆ ಹುರುಪಿನ ಗೆಲುವಿನ ಹುಡುಗಿ ಪಿಯಾನೋದಂಥದನ್ನು ನುಡಿಸಿ ಆನಂದಿಸುತ್ತಿದ್ದಳು. ಅದಾದ ಮೇಲೆ ಅವಳಲ್ಲಿ ತಾಯಿಯ ಸ್ವಭಾವವನ್ನು ಕೊಂಚವೂ ಬಳುವಳಿ ಪಡೆದಿರಲಿಲ್ಲವೆನ್ನುವುದು ತಾನೇ ತಾನಾಗಿ ಕಾಣುತ್ತಿತ್ತು. ಅವಳು ದ್ವೇಷವನ್ನು ಕಾಣದ ಮುಂಚಿನ, ಹಾಗೂ ಪಿಯತ್ರೋ ಕ್ರೆಸ್ಪಿಯ ಮೇಲಿನ ಮೋಹ ಅವಳ ಹೃದಯದ ದಿಕ್ಕನ್ನು ಬದಲಿಸಿದ ಮುಂಚಿನ, ತನ್ನ ಹನ್ನೆರಡು ಅಥವಾ ಹದಿನಾಲ್ಕನೇ ವಯಸ್ಸಿಗೇ ನೃತ್ಯದ ಹೆಜ್ಜೆಗಳಿಂದ ಇಡೀ ಮನೆಗೆ ಪುಳಕ ತರುತ್ತಿದ್ದ ಅವಳು, ಎರಡನೆ ಅಮರಾಂತಳ ಹಾಗೆ ಕಾಣುತ್ತಿದ್ದಳು. ಆದರೆ ಅಮರಾಂತಳ ಹಾಗಿರದೆ, ಉಳಿದವರ ಹಾಗೆಯೂ ಇರದೆ, ಮೆಮೆ ಇಡೀ ಸಂಸಾರದ ವಿಧಿ ನಿಯಮವನ್ನು ತೋರ್ಪಡಿಸುತ್ತಿರಲಿಲ್ಲ ಮತ್ತು ಅವಳು ಮಧ್ಯಾಹ್ನ ಎರಡು ಗಂಟೆಗೆ ನಡುಮನೆಯಲ್ಲಿ ಬಾಗಿಲು ಹಾಕಿಕೊಂಡು, ಮಿಸುಕದ ಶಿಸ್ತಿನಿಂದ ಪಿಯಾನೋದಂಥ ವಾದ್ಯವನ್ನು ಅಭ್ಯಾಸ ಮಾಡುವಾಗ ಕೂಡ, ಪ್ರಪಂಚದೊಂದಿಗೆ ಸಂಪೂರ್ಣ ಸಾಂಗತ್ಯ ಹೊಂದಿದಂತಿದ್ದಳು. ಅವಳಿಗೆ ಮನೆ ಇಷ್ಟವಾಗಿದ್ದು ತನ್ನಷ್ಟಕ್ಕೆ ಗೊತ್ತಾಗುತ್ತಿತ್ತು. ಆದ್ದರಿಂದ ಅವಳು ತಾನು ಊರಿಗೆ ಬರುವುದರಿಂದ ಹರೆಯದವರಲ್ಲಿ ಉಂಟಾಗುವ ಉತ್ಸಾಹವನ್ನು ಕನಸುತ್ತ ಇಡೀ ವರ್ಷವನ್ನು ಕಳೆಯುತ್ತಿದ್ದಳು ಮತ್ತು ಅವಳು ಹಬ್ಬದಾಚರಣೆ ಹಾಗೂ ಅತಿಯಾದ ಸತ್ಕಾರದ ವಿಷಯದಲ್ಲಿ ಅವಳ ಅಪ್ಪನಿಗಿಂತ ಹೆಚ್ಚು ಬೇರೆಯಾಗಿರಲಿಲ್ಲ. ಇದರ ಮೊದಲ ಹಾನಿಕಾರಕ ಬಳುವಳಿಯ ಸೂಚನೆ ಅವಳು ಮೂರನೆ ರಜೆಯಲ್ಲಿ ನಾಲ್ಕು ನನ್‌ಗಳು ಮತ್ತು ಅರವತ್ತು ಜನ ಸಹಪಾಠಿಗಳನ್ನು ಮನೆಯಲ್ಲಿ ಒಂದು ವಾರ ಕಳೆಯಲು, ಯಾರಿಗೂ ತಿಳಿಸದೆ ತಾನೇ ಮುಂದುವರೆದು ಆಹ್ವಾನಿಸಿದ್ದಳು. +ಫೆರ್ನಾಂಡ, “ಇದೇನು ಅತಿರೇಕ!” ಈ ಹುಡುಗಿ ಥೇಟ್ ಅವರಪ್ಪನ ಥರಾನೇ ಇದಾಳೆ” ಎಂದಳು. +ಅಕ್ಕಪಕ್ಕದವರಿಂದ ಹಾಸಿಗೆ ಮಂಚಗಳನ್ನು, ಟೇಬಲ್‌ನಲ್ಲಿ ಒಂಬತ್ತು ಪಾಳಿ, ಸ್ನಾನ ಮಾಡುವುದಕ್ಕೆ ಸಮಯ ಗೊತ್ತು ಮಾಡುವ ಅಗತ್ಯ ಉಂಟಾಯಿತು. ಅಲ್ಲದೆ ನೀಲಿ ಬಣ್ಣದ ಒರಟು ಬಟ್ಟೆಗಳನ್ನು ತೊಟ್ಟ ಹುಡುಗಿಯರು ಒಂದು ಸ್ಥಳದಿಂದ ಮತ್ತೊಂದಕ್ಕೆ ಇಡೀ ದಿನ ಪರದಾಡದಂತೆ ಮಾಡಲು ನಲವತ್ತು ಸ್ಟೂಲ್‌ಗಳನ್ನು ಬಾಡಿಗೆಗೆ ತರಬೇಕಾಯಿತು. ಆದರೂ ಅವರ ಭೇಟಿ ಯಶಸ್ವಿಯಾಗಲಿಲ್ಲ. ಏಕೆಂದರೆ ಗಲಾಟೆ ಮಾಡುತ್ತಿದ್ದ ಆ ಹುಡುಗಿಯರು ಬೆಳಗಿನ ತಿಂಡಿ ಮುಗಿಸುತ್ತಿದ್ದ ಹಾಗೆ ಊಟದ ಮತ್ತು ಅನಂತರ ರಾತ್ರಿಯೂಟದ ಸರದಿಗೆ ಸಿದ್ಧರಾಗಬೇಕಿತ್ತು. ಅವರಿಗೆ ಇಡೀ ವಾರದ ಅವಧಿಯಲ್ಲಿ ಬಾಳೆ ತೋಟದಲ್ಲಿ ಒಂದು ಸಲ ಮಾತ್ರ ಓಡಾಡಿಕೊಂಡು ಬರಲು ಮಾತ್ರ ಸಾಧ್ಯವಾಯಿತು. ರಾತ್ರಿಯ ಹೊತ್ತಿಗೆ ನನ್‌ಗಳು ಸುಸ್ತಾಗಿ ನಡೆಯಲಾಗುತ್ತಿರಲಿಲ್ಲ ಮತ್ತೊಂದಕ್ಕೆ ಆರ್ಡರ್ ಮಾಡುತ್ತಿದ್ದರು. ಆದರೆ ಸುಸ್ತಾಗದ ಹುಡುಗಿಯರು ಅಂಗಳದಲ್ಲಿ ಸ್ಕೂಲಿನ ಹಾಡುಗಳನ್ನು ಇಷ್ಟ ಬಂದಂತೆ ಹಾಡುತ್ತಿದ್ದರು. ತಾನಿದ್ದ ಜಾಗದಿಂದಲೇ ಎಲ್ಲವನ್ನೂ ತಿಳಿಯಬೇಕೆಂದು ಪ್ರಯತ್ನಿಸುತ್ತಿದ್ದ ಉರ್ಸುಲಾಳನ್ನು ಒಂದು ದಿನ ತುಳಿದು ಬಿಡುತ್ತಿದ್ದರು. ಇನ್ನೊಂದು ದಿನ ಅಂಗಳದಲ್ಲಿ ಸ್ಕೂಲ್ ಹುಡುಗಿಯರು ಇದ್ದಾರೆಂದು ಗಮನಿಸದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಾದಾಮಿ ಮರದ ಕೆಳಗೆ ಉಚ್ಚೆ ಹೊಯ್ದದ್ದಕ್ಕೆ ನನ್‌ಗಳು ಕೆಂಪಾಗಿದ್ದರು. ಅಮರಾಂತ ಅವರಿಗೆ ಜೀವ ಭಯ ಉಂಟುಮಾಡುವುದರಲ್ಲಿದ್ದಳು. ಏಕೆಂದರೆ ನನ್ ಒಬ್ಬಳು ಅವಳು ಸೂಪ್‌ಗೆ ಉಪ್ಪು ಹಾಕುತ್ತಿರುವಾಗ ಅಡುಗೆ ಮನೆಗೆ ಹೋದಾಗ ಕೈಯಲ್ಲಿ ಇರುವ ಬಿಳಿ ವಸ್ತುವೇನು ಎಂದು ಕೇಳಿದಳು. +ಅಮರಾಂತ, “ಆರ್‍ಸೆನಿಕ್ ವಿಷ” ಎಂದು ಉತ್ತರಿಸಿದಳು. +ವಿದ್ಯಾರ್ಥಿನಿಯರು ಅಲ್ಲಿಗೆ ಬಂದ ರಾತ್ರಿ ಹೇಗೆ ಕಳೆದರೆಂದರೆ, ರಾತ್ರಿ ಒಂದು ಗಂಟೆಯಾದರೂ ಕೊನೆಯವಳು ಆಗ ಬಾತ್ ರೂಮಿಗೆ ಹೋಗುತ್ತಿದ್ದಳು. ಆಮೇಲೆ ಫೆರ್ನಾಂಡ ಉಚ್ಚೆ ವಿಸರ್ಜನೆಗಾಗಿ ಎಪ್ಪತ್ತೆರಡು ಪಾತ್ರೆಗಳನ್ನು ಕೊಂಡಳು. ಇದರಿಂದ ಅವಳು ರಾತ್ರಿಯ ಓಡಾಟದ ಸಮಸ್ಯೆಯನ್ನು ಬೆಳಿಗ್ಗೆಗೆ ಬದಲಾಯಿಸಿದಳು. ಏಕೆಂದರೆ ಬೆಳಿಗ್ಗೆಯಿಂದಲೇ ಆ ಪಾತ್ರೆಗಳನ್ನು ಹಿಡಿದುಕೊಂಡು ತೊಳೆಯುವುದಕ್ಕಾಗಿ ಹುಡುಗಿಯರ ಉದ್ದನೆ ಕ್ಯೂ ಉಂಟಾಗಿತ್ತು. ಕೆಲವರಿಗೆ ಜ್ವರ ಬಂದು, ಮತ್ತೆ ಅನೇಕರಿಗೆ ಸೊಳ್ಳೆ ಕಡಿತದಿಂದ ಆರೋಗ್ಯ ಕೆಟ್ಟಿದ್ದರೂ ಬಹಳಷ್ಟು ಹುಡುಗಿಯರು ಅನೇಕ ತೊಂದರೆಗಳಿಗೆ ಹೆಚ್ಚಿನ ಪ್ರತಿರೋಧ ತೋರಿಸಿದರು ಮತ್ತು ಅತ್ಯಂತ ಉರಿ ಬಿಸಿಲಿನಲ್ಲಿಯೂ ಕೈತೋಟದಲ್ಲಿ ನಡೆದಾಡುತ್ತಿದ್ದರು. ಕೊನೆಗೆ ಅವರು ಹೊರಟ ಮೇಲೆ ಹೂಗಳು ನಾಶವಾಗಿದ್ದವು, ಪೀಠೋಪಕರಣಗಳು ಮುರಿದಿದ್ದವು, ಗೋಡೆಗಳ ಮೇಲೆಲ್ಲ ಚಿತ್ರಗಳು ಹಾಗೂ ಇತರ ಬರಹಗಳಿದ್ದವು. ಆದರೆ ಫೆರ್ನಾಂಡ ಅವರು ವಾಪಸು ಹೋಗುವರೆಂಬ ಸಮಾಧಾನಕ್ಕಾಗಿಯೇ ಎಲ್ಲವನ್ನು ಕ್ಷಮಿಸಿದ್ದಳು. ಅವಳು ಎರವಲು ತಂದಿದ್ದ ಹಾಸಿಗೆಗಳನ್ನು ಮತ್ತು ಸ್ಕೂಲ್‌ಗಳನ್ನು ಹಿಂತಿರುಗಿಸಿದಳು ಹಾಗೂ ಇಪ್ಪತ್ತೆರಡು ಉಚ್ಚೆ ಪಾತ್ರೆಗಳನ್ನು ಮೆಲ್‌ಕಿಯಾದೆಸ್‌ನ ರೂಮಿನಲ್ಲಿಟ್ಟಳು. ಮನೆಯ ಆಧ್ಯಾತ್ಮಿಕ ಶಕ್ತಿಯೊಂದು ಸುತ್ತ ತಿರುಗುತ್ತಿದ್ದ ಆ ರೂಮಿಗೆ ಅನಂತರ ಉಚ್ಚೆ ಪಾತ್ರೆ ರೂಮು ಎಂದು ಹೆಸರಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅದು ಸರಿಯಾಗಿ ಕಂಡಿತ್ತು. ಏಕೆಂದರೆ ಮನೆಯಲ್ಲಿ ಉಳಿದವರಿಗೆ ಮೆಲ್‌ಕಿಯಾದೆಸ್‌ನ ರೂಮು ಏತಕ್ಕಾಗಿ ಧೂಳು ಮುತ್ತಲು ಮತ್ತು ಅದು ಹಾಳಾಗಲು ಅವಕಾಶವನ್ನೇ ಕೊಡುತ್ತಿಲ್ಲ ಎಂದು ಬೆರಗಾಗಿದ್ದರೆ, ಅವನು ಅದನ್ನು ಸೆಗಣಿ ತೊಟ್ಟಿಯ ಹಾಗೆ ಮಾಡಿದ್ದ. ಯಾರು ಸರಿ ಎನ್ನುವುದರ ಬಗ್ಗೆ ಅವನು ತಲೆಕೆಡಿಸಿಕೊಳ್ಳಲಿಲ್ಲ. ಅವನಿಗೆ ರೂಮಿನ ಸ್ಥಿತಿ ತಿಳಿದಿದ್ದರೆ ಅದು ಫೆರ್ನಾಂಡ ಇಡೀ ಮಧ್ಯಾಹ್ನ ಉಚ್ಚೆ ಪಾತ್ರೆಗಳನ್ನು ಎಸೆಯಲು ಮತ್ತೆ ಮತ್ತೆ ರೂಮಿಗೆ ಬಂದು ಮಾಡುತ್ತಿದ್ದ ಕೆಲಸಕ್ಕೆ ತೊಂದರೆ ಉಂಟು ಮಾಡಿದಾಗ. +ಆ ದಿನಗಳಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತೆ ಮನೆಯಲ್ಲಿ ಕಾಣಿಸಿಕೊಂಡ. ಅವನು ಯಾರನ್ನೂ ಮಾತಾಡಿಸದೆ ಹೊರಾಂಗಳದಲ್ಲಿ ನಡೆದು ಕರ್ನಲ್ ಜೊತೆ ಮಾತನಾಡಲು ಬಾಗಿಲು ಹಾಕಿಕೊಂಡ. ಅವನನ್ನು ನೋಡಲಾಗದಿದ್ದರೂ ಸಹ ಉರ್ಸುಲಾ ಫೋರ್‌ಮನ್ ಬೂಟುಗಳ ಶಬ್ದವನ್ನು ಪತ್ತೆ ಹಚ್ಚಿದಳು ಮತ್ತು ಅವನು ಹಾಗೂ ಮನೆಯವರ ಮಧ್ಯೆ ಇರುವ ಬೆಸೆಯಲಾಗದ ಅಂತರವಾಗಿತ್ತು. ಚಿಕ್ಕವನಾಗಿದ್ದಾಗ ಅವಳಿ ಸೋದರನ ಜೊತೆ ಎಂಥಂಥದೋ ಹೊಸದಾಗಿ ಕಟ್ಟಿದ ಆಟಗಳನ್ನು ಆಡಿದ್ದನ್ನು ಬಿಟ್ಟರೆ, ಯಾವ ಸಮಾನ ಗುಣವೂ ಇರದ ಬಗ್ಗೆ ಮತ್ತು ಇರುವ ಅಂತರವನ್ನು ಯೋಚಿಸಿ ಆಶ್ಚರ್ಯಗೊಂಡಳು. ಅವನೊಬ್ಬ ನೇರ ನಡೆಯ ಗಂಭೀರ ಹಾಗೂ ಆಲೋಚನಾಪರ ಸ್ವಭಾವದ ಕಾಂತಿಯಿರದ ಮನುಷ್ಯನಾಗಿದ್ದು ಮುಖದಲ್ಲಿ ಶರತ್ಕಾಲದ ಬಣ್ಣವಿತ್ತು. ಅವನು ತಾಯಿ ಸಾಂತ ಸೋಫೀಯಾ ದೆಲಾ ಪಿಯದಾದ್‌ಳನ್ನು ಹೆಚ್ಚಿಗೆ ಹೋಲುತ್ತಿದ್ದ. ಮನೆಯವರ ಬಗ್ಗೆ ಮಾತನಾಡುವಾಗ ಅವನನ್ನು ಮರೆಯುವ ಅಭ್ಯಾಸವಿದ್ದದ್ದಕ್ಕೆ ಉರ್ಸುಲಾ ತನ್ನನ್ನು ತಾನೇ ಹಳಿದುಕೊಂಡಳು. ಆದರೆ ಅವನು ಮನೆಗೆ ಮತ್ತೆ ಬಂದಾಗ ಮತ್ತು ಕೆಲಸಮಾಡುವ ವೇಳೆಯಲ್ಲಿ ಕರ್ನಲ್ ಅವನನ್ನು ರೂಮಿನೊಳಗೆ ಬಿಟ್ಟುಕೊಂಡದ್ದನ್ನು ಗಮನಿಸಿದ. ಅವಳು ಹಳೆಯ ನೆನಪುಗಳನ್ನು ಪರೀಕ್ಷಿಸಿ ನೋಡಿದಾಗ, ಅವನು ಎಳೆಯವನಾಗಿದ್ದಾಗ ಯಾವಾಗಲೋ ತನ್ನ ಅವಳಿ ಸೋದರ ಸ್ಥಾನವನ್ನು ಅದಲು ಬದಲು ಮಾಡಿಕೊಂಡಿದ್ದಾನೆ ಎಂದುಕೊಂಡಳು. ಮತ್ತೊಬ್ಬನನ್ನಲ್ಲ, ಇವನನ್ನು ಅವ್ರೇಲಿಯಾನೋ ಎಂದು ಕರೆಯಬೇಕಾಗಿತ್ತು ಎನ್ನುವ ನಂಬಿಕೆಯನ್ನು ಖಚಿತ ಪಡಿಸಿಕೊಂಡಳು. ಯಾರಿಗೂ ಅವನ ಜೀವನದ ವಿವರಗಳು ಗೊತ್ತಿರಲಿಲ್ಲ. ಅವನಿಗೊಂದು ನಿಶ್ಚಿತವಾದ ನೆಲೆ ಇಲ್ಲವೆಂದು ತಿಳಿಯಿತು. ಅವನು ಪಿಲರ್ ಟೆರ್‍ನೆರಾಳ ಮನೆಯಲ್ಲಿ ಕಾಳಗದ ಹುಂಜಗಳನ್ನು ಬೆಳೆಸುತ್ತಾನೆ ಮತ್ತು ಕೆಲವು ಸಲ ಮಲಗಲು ಅಲ್ಲೆ ಉಳಿಯುತ್ತಾನೆಂದೂ ಆದರೆ ಹೆಚ್ಚು ಕಡಿಮೆ ಯಾವಾಗಲೂ ರಾತ್ರಿಯನ್ನು ಫ್ರೆಂಚ್ ಹೆಂಗಸರ ರೂಮಿನಲ್ಲಿ ಕಳೆಯುತ್ತಾನೆ ಎಂದು ಗೊತ್ತಾಯಿತು. ಅವನು ಅಲೆಮಾರಿಯಾಗಿ ಯಾರ ಜೊತೆಗೂ ಸಂಬಂಧ ಬೆಳೆಸದೆ, ಯಾವ ಮಹಾತ್ವಾಕಾಂಕ್ಷೆ ಇಲ್ಲದೆ, ಉರ್ಸುಲಾಳ ಖಗೋಳ ವ್ಯವಸ್ಥೆಯಲ್ಲಿ ತಿರುಗಾಡುವವನಂತಿದ್ದ. +ವಾಸ್ತವವಾಗಿ ಹೊಸೆ ಅರ್ಕಾದಿಯೋ ಸೆಗುಂದೋ ಆ ಮನೆಯವನಾಗಿರಲಿಲ್ಲ. ಅದೊಂದು ದಿನ ಬೆಳಿಗ್ಗೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಅವನನ್ನು ಸೈನಿಕ ಶಿಬಿರದ ಹತ್ತಿರಕ್ಕೆ ಗುಂಡಿಕ್ಕಿ ಸಾಯಿಸುವುದನ್ನು ನೋಡುವುದಕ್ಕೆ ಮತ್ತು ಗುಂಡಿಕ್ಕಿಸಿಕೊಳ್ಳುವವನ ಕಳೆಯಿರದ ಮುಖ ಹಾಗೂ ಅಣಕು ಮೆಲುನಗುವನ್ನು ಇಡೀ ಜೀವನ ಮರೆಯದಿರಲಿ ಎಂದು ಕರೆದುಕೊಂಡು ಹೋದಾಗಿನಿಂದ ಅವನು ಯಾರ ಮನೆಯವನೂ ಆಗಿರಲು ಸಾಧ್ಯವಿರಲಿಲ್ಲ. ಅದು ಅವನ ಅತ್ಯಂತ ಹಳೆಯ ನೆನಪಾಗಿರಲಿಲ್ಲ. ಆದರೆ ಅವನಿಗೆ ಚಿಕ್ಕಂದಿನ ನೆನಪುಗಳಲ್ಲಿ ಅದೊಂದು. ಇನ್ನೊಂದು – ಹಳೆ ಕಾಲದ ನಡುವಂಗಿ ಮತ್ತು ಕಾಗೆಯ ರೆಕ್ಕೆಗಳಂತಿದ್ದ ಹ್ಯಾಟ್ ಹಾಕಿಕೊಂಡಿದ್ದ ವಯಸ್ಸಾದವನೊಬ್ಬ ಹೇಳಿದ ಅಲೌಕಿಕ ಸಂಗತಿಗಳು. ಅವನಿಗೆ ಅವುಗಳನ್ನು ನಿರ್ದಿಷ್ಟವಾಗಿ ಯಾವ ಕಾಲಕ್ಕೂ ಸೇರಿಸಲು ಸಾಧ್ಯವಿರಲಿಲ್ಲ. ಅದೊಂದು ಅನಿಶ್ಚಿತವಾದ ನೆನಪು. ಯಾವುದೇ ಉಪದೇಶಗಳಿಲ್ಲದ್ದು, ಹಳೆಯ ನೋವುಗಳಿಲ್ಲದ್ದು, ಗುಂಡಿಕ್ಕಿಸಿಕೊಂಡ ಮನುಷ್ಯನಿಗೆ ವಿರುದ್ಧವಾದದ್ದು ಮತ್ತು ನಿಜಕ್ಕೂ ಅವನ ಜೀವನಕ್ಕೊಂದು ದಿಕ್ಕು ತೋರಿಸಿದ್ದು. ಅಲ್ಲದೆ ಅವನು ವಯಸ್ಸಾದಂತೆಲ್ಲ ಗತಿಸುವ ಕಾಲ ಹೆಚ್ಚು ಹತ್ತಿರಕ್ಕೆ ಬರುತ್ತಿದೆ ಎನ್ನುವ ಹಾಗೆ, ಆ ನೆನಪಿಗೆ ಮತ್ತಷ್ಟು ಹೆಚ್ಚು ಸ್ಪಷ್ಟವಾಗಿ ಹೋಗುತ್ತಿದ್ದ. ಉರ್ಸುಲಾ ಹೊಸೆ ಅರ್ಕಾದಿಯೋ ಸೆಗುಂದೋನನ್ನು ಬಳಸಿಕೊಂಡು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಅವನ ನಿರ್ಬಂಧದಿಂದ ಹೊರಗೆ ತರಲು ಪ್ರಯತ್ನಿಸಿದಳು. ಅವಳು, “ಅವನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗು. ಅವನಿಗೆ ಸಿನಿಮಾ ಇಷ್ಟವಾಗದಿದ್ದರೂ ಕೂಡ ಒಂದಿಷ್ಟು ಒಳ್ಳೆಯ ಗಾಳಿ ಉಸಿರಾಡಲಿ” ಎಂದು ಅವನಿಗೆ ಹೇಳಿದಳು. ಆದರೆ ಅವಳು ಕೇಳಿಕೊಂಡಿದ್ದು ಕರ್ನಲ್‌ನಂತೆ ಅವನ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಅವಳಿಗೆ ಬಹಳ ಕಾಲ ಬೇಕಾಗಲಿಲ್ಲ. ಅಲ್ಲದೆ ಅವರಿಬ್ಬರೂ ಭೇದಿಸಲಾರದಂಥ ವಿಶ್ವಾಸದ ಕವಚ ಧರಿಸಿದ್ದರು. ಆದರೆ ಅವರಿಬ್ಬರು ವರ್ಕ್‌ಶಾಪಿನಲ್ಲಿ ಬಾಗಿಲು ಹಾಕಿಕೊಂಡು ಏನು ಮಾತಾಡುತ್ತಾರೆ ಎಂದು ಯಾರಿಗೂ ತಿಳಿಯದಿದ್ದರೂ ಒಂದೇ ತೆರನಾದ ಆಸಕ್ತಿಯಿಂದ ಒಬ್ಬರಿಗೊಬ್ಬರು ಬಹಳ ಹತ್ತಿರವಾದವರೆಂದರೆ ಇಡೀ ಸಂಸಾರದಲ್ಲಿ ಅವರಿಬ್ಬರೇ ಎಂದು ಉರ್ಸುಲಾಗೆ ಅರ್ಥವಾಗಿತ್ತು. +ನಿಜ ಸಂಗತಿಯೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಕೂಡ ಕರ್ನಲ್‌ನನ್ನು ಅವನ ಕೋಶದಿಂದ ಹೊರಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಸ್ಕೂಲ್ ಹುಡುಗಿಯರ ಆಕ್ರಮಣ ಅವನ ತಾಳ್ಮೆಯ ಮಟ್ಟವನ್ನು ಕಡಿಮೆ ಮಾಡಿತ್ತು. ತನ್ನ ಮದುವೆಯ ಬೆಡ್‌ರೂಮ್‌ನಲ್ಲಿ ರೆಮಿದಿಯೋಸ್‌ಳ ತೀರದಾಸೆಯ ಬೊಂಬೆಗಳು ಹಾಳಾಗಿದ್ದರೂ ನುಸಿಹುಳುಗಳ ಹಾವಳಿ ತಾನೇ ತಾನಾಗಿದೆ ಎನ್ನುವ ನೆಪದಿಂದ ಅವನು ವರ್ಕ್ ಶಾಪ್‌ನಲ್ಲಿ ಮಂಚ ಹಾಕಿಕೊಂಡು ತನ್ನ ಅಗತ್ಯಗಳಿಗೆ ಮಾತ್ರ ಅವನು ಅಂಗಳಕ್ಕೆ ಹೋಗುತ್ತಿದ್ದ. ಉರ್ಸುಲಾ ಅವನ ಜೊತೆ ತೀರ ಸಣ್ಣ ಸಂಭಾಷಣೆಯಲ್ಲಿ ತೊಡಗುವುದಕ್ಕೂ ಆಗುತ್ತಿರಲಿಲ್ಲ. ಅವನು ಸಣ್ಣ ಮೀನು ಮಾಡಿ ಮುಗಿಸುವ ತನಕ ಕೊಟ್ಟ ಊಟದ ಕಡೆ ಕಣ್ಣೆತ್ತಿ ನೋಡದೆ ಕೆಲಸ ಮಾಡುವ ಬೆಂಚಿನ ಮೇಲೆ ಒಂದು ಕಡೆ ಇಟ್ಟಿರುತ್ತಾನೆಂದು ಅವಳಿಗೆ ಗೊತ್ತಿತ್ತು. ಅಲ್ಲದೆ ಸೂಪ್ ಚೆನ್ನಾಗಿಲ್ಲದಿದ್ದರೂ ಅಥವಾ ಮಾಂಸ ತಣ್ಣಗಾಗಿದ್ದರೂ ಸರಿಯೆ, ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನ ಮುಪ್ಪಿನ ಹುಚ್ಚಾಟದ ಯುದ್ಧಕ್ಕೆ ಬೆಂಬಲ ಸೂಚಿಸಲು ನಿರಾಕರಿಸಿದ ಮೇಲೆ ಅವನು ಹೆಚ್ಚು ಹೆಚ್ಚು ಕಠೋರನಾದ. ಅವನು ತನ್ನೊಳಗೆ ತಾನೆ ಮುಳುಗಿಹೋದ ಮತ್ತು ಕೊನೆಗೆ ಮನೆಯವರು ಅವನು ಸತ್ತು ಹೋಗಿದ್ದಾನೆ ಎನ್ನುವ ಹಾಗೆ ಭಾವಿಸಿದರು. ಅವನು ಅದೊಂದು ಅಕ್ಟೋಬರ್ ಹನ್ನೊಂದನೇ ತಾರೀಖು ಸರ್ಕಸ್ ಪೆರೇಡೊಂದನ್ನು ನೋಡುವುದಕ್ಕೆ ಮುಂಬಾಗಿಲಿಗೆ ಹೋಗುವ ತನಕ ಅವನಲ್ಲಿ ಮಾನವ ಸಹಜವಾದ ಯಾವುದೇ ಪ್ರತಿಕ್ರಿಯೆ ಕಂಡಿರಲಿಲ್ಲ. ಹಿಂದಿನ ವರ್ಷಗಳಲ್ಲಿ ಇದ್ದ ದಿನಗಳಂತೆಯೇ ಆ ದಿನವೂ ಇತ್ತು. ಬೆಳಗಿನ ಜಾವ ಐದು ಗಂಟೆಗೆ ಹೊರಗಡೆಯಿಂದ ಕೇಳಿ ಬರುತ್ತಿದ್ದ ಮಿಡತೆ ಮತ್ತು ಕಾಡುಗಪ್ಪೆಗಳ ಶಬ್ದ ಅವನನ್ನು ಎಚ್ಚರಗೊಳಿಸಿತು. ಶನಿವಾರದಿಂದ ಬೀಳುತ್ತಿದ್ದ ತುಂತುರು ಮಳೆ ಇನ್ನೂ ನಿಂತಿರಲಿಲ್ಲ ಮತ್ತು ಕೈತೋಟದಲ್ಲಿ ಎಲೆಗಳ ಮೇಲೆ ಬಿದ್ದ ಶಬ್ದವನ್ನು ಕೇಳಿಸಿಕೊಳ್ಳುವ ಅಗತ್ಯವಿರಲಿಲ್ಲ. ಏಕೆಂದರೆ ಹೇಗೂ ಅವನಿಗೆ ಚಳಿ ಒಳಹೊಕ್ಕಿತ್ತು. ಅವನು ಎಂದಿನಂತೆ ವುಲನ್ ಹೊದಿಕೆ ಹೊದ್ದುಕೊಂಡು ಹತ್ತಿಯ ಉದ್ದನೆ ಚಡ್ಡಿ ಹಾಕಿಕೊಂಡಿದ್ದ. ಹಳೆಯದಾಗಿ ಮಂಕು ಬಡಿದಿದ್ದ ಅದನ್ನು ಅವನು “ಶಿಲಾಯುಗದ ಚಡ್ಡಿ”ಗಳೆಂದು ಕರೆಯುತ್ತಿದ್ದ. ಅವನು ಬಿಗಿಯಾದ ಪ್ಯಾಂಟ್‌ಗಳನ್ನು ಹಾಕಿಕೊಂಡ. ಆದರೆ ಗುಂಡಿ ಹಾಕಿಕೊಳ್ಳಲಿಲ್ಲ. ಹಾಗೂ ಯಾವಾಗಲೂ ಮಾಡುವಂತೆ ಶರಟಿನ ಕಾಲರಿಗೆ ಬಂಗಾರದ ಗುಂಡಿ ಹಾಕಿಕೊಳ್ಳಲಿಲ್ಲ. ಏಕೆಂದರೆ ಅವನು ಸ್ನಾನ ಮಾಡಬೇಕೆಂದಿದ್ದ. ಅನಂತರ ಅವನು ಹೊದಿಕೆಯನ್ನು ತಲೆಯ ಮೇಲೆ ಎಳೆದುಕೊಂಡು ಬೆರಳುಗಳಿಂದ ಜೋಲುತ್ತಿದ್ದ ಮೀಸೆಯನ್ನು ನೀವಿಕೊಂಡ ಮತ್ತು ಅಂಗಳದಲ್ಲಿ ಉಚ್ಚೆ ಹೊಯ್ಯಲು ಹೋದ. ಸೂರ್ಯ ಹುಟ್ಟುವುದಕ್ಕೆ ಇನ್ನೂ ಬಹಳ ಸಮಯವಿದ್ದುದರಿಂದ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಮಳೆಗೆ ಸಿಕ್ಕ ಕೊಳೆತು ಹೋಗಿದ್ದ ತೆಂಗಿನ ಗರಿಗಳ ಚಪ್ಪರದ ಕೆಳಗೆ ನಿದ್ದೆ ಮಾಡುತ್ತಿದ್ದ. ಅವನು ಹಿಂದೆಯೂ ನೋಡದೆ ಇರುತ್ತಿದ್ದಂತೆ ಈಗಲೂ ಅವನನ್ನು ನೋಡಲಿಲ್ಲ ತನ್ನ ಶೂಗಳ ಮೇಲೆ ಹರಡಿ ಬಿದ್ದ ಬೆಚ್ಚನೆ ಉಚ್ಚೆಯಿಂದ ತನ್ನ ತಂದೆಯ ಭೂತ ಎಚ್ಚರಗೊಂಡು ಹೇಳಿದ ಅರ್ಥವಾಗದಂಥ ಮಾತುಗಳು ಅವನಿಗೆ ಕೇಳಿಸಲಿಲ್ಲ. ಅವನು ಚಳಿ ಮತ್ತು ಮುತ್ತಿದ ಅಕ್ಟೋಬರ್‌ನ ಮಂಜಿನಿಂದಾಗಿ ಸ್ನಾನ ಮಾಡುವುದನ್ನು ಮುಂದಕ್ಕೆ ಹಾಕಿದ. ಅವನು ವರ್ಕ್ ಶಾಪಿಗೆ ವಾಪಸ್ಸಾಗುವಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಸ್ಟೋವ್ ಹಚ್ಚಿ, ಬರುತ್ತಿದ್ದ ಬತ್ತಿಯ ವಾಸನೆ ಬಡಿದು, ಸಕ್ಕರೆ ಹಾಕಿಕೊಂಡು ಬಟ್ಟಲಿನಲ್ಲಿ ತೆಗದುಕೊಂಡು ಹೋಗಲು ಅಡುಗೆ ಮನೆಯಲ್ಲಿ ಕಾಫಿ ಕುದಿಯಲಿ ಎಂದು ಕಾಯುತ್ತ ನಿಂತ ಸಾಂತ ಸೋಫಿಯಾ ದೆಲಾ ಪಿಯದಾದ್ ಪ್ರತಿದಿನ ಬೆಳಿಗ್ಗೆ ಕೇಳುವಂತೆ ಅಂದು ಯಾವ ವಾರ ಎಂದು ಕೇಳಿದಳು. ಅವನು ಆ ದಿನ ಮಂಗಳವಾರ, ಅಕ್ಟೋಬರ್ ಹನ್ನೊಂದು ಎಂದ. ಆ ಸ್ಟೋವ್‌ನ ಜ್ವಾಲೆ ಎಂದಿಗೂ ಸಂಪೂರ್ಣ ಅಸ್ತಿತ್ವದಲ್ಲಿ ಇರದಂತಿದ್ದ ಅವಳ ಮೇಲೆ ಬೆಳಕು ಬೀರುತ್ತಿರುವುದನ್ನು ನೋಡುತ್ತಿದ್ದ ಹಾಗೆ, ಹಿಂದೊಂದು ಅಕ್ಟೋಬರ್ ಹನ್ನೊಂದರಂದು ಯುದ್ಧದ ಮಧ್ಯದಲ್ಲಿ ತಾನು ಜೊತೆಯಲ್ಲಿ ಮಲಗಿದ ಹೆಂಗಸು ಸತ್ತು ಹೋದಳು ಎನ್ನುವ ಕ್ರೂರ ಅನ್ನಿಸಿಕೆಯಿಂದ ಹಠಾತ್ ಎಚ್ಚರಗೊಂಡದ್ದು ನೆನಪಾಯಿತು. ಅವಳು ಸತ್ತಿದ್ದಳು ಮತ್ತು ಅವನು ಆ ದಿನವನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಒಂದು ಗಂಟೆ ಮುಂಚೆ ಅವಳು ಅದು ಯಾವ ದಿನವೆಂದು ಕೇಳಿದ್ದಳು. ಅದು ಈಗಲೂ ನೆನಪಿದ್ದರೂ ಕೂಡ ಯಾವ ಮಟ್ಟದ ತನಕ ಅವನಲ್ಲಿನ ಮುಂಗಾಣುವ ಶಕ್ತಿ ತನ್ನನ್ನು ಬಿಟ್ಟು ಹೋಗಿದೆ ಎನ್ನುವುದರ ಅರಿವು ಅವನಿಗಿರಲಿಲ್ಲ. ಕಾಫಿ ಕುದಿಯುತ್ತಿದ್ದರೂ ಕೇವಲ ಕುತೂಹಲದಿಂದ, ಕೊಂಚವೂ ಮನೋವ್ಯಥೆ ಇಲ್ಲದೆ ತಿಳಿಯದ ಆ ಹೆಂಗಸಿನ ಹೆಸರನ್ನು ಹಾಗೂ ಕತ್ತಲಲ್ಲಿ ತನ್ನ ಹಾಸಿಗೆಗೆ ಬಂದದ್ದರಿಂದ ಕಾಣದ ಅವಳ ಮುಖವನ್ನು ಕುರಿತು ಯೋಚಿಸುತ್ತಿದ್ದ. ಆದರೂ ಸಹ ಅದೇ ರೀತಿಯಲ್ಲಿ ಅವನ ಬಳಿ ಬಂದ ಅನೇಕ ಟೊಳ್ಳು ಹೆಂಗಸರಲ್ಲಿ ಮೊದಲನೆ ಭೇಟಿಯ ದಣಿವಿನಲ್ಲಿ, ಇನ್ನೇನು ಕಣ್ಣೀರು ಕಳಚಿ ಬೀಳುವಂತಿದ್ದ ಮತ್ತು ಸಾಯಲು ಒಂದು ಗಂಟೆಯಷ್ಟೆ ಇದ್ದ ಅವಳು, ಸಾಯುವ ತನಕ ತನ್ನನ್ನು ಪ್ರೀತಿಸುತ್ತೇನೆ ಎಂದವಳು ಅವಳೇ ಎನ್ನುವುದು ಅವನಿಗೆ ನೆನಪಿರಲಿಲ್ಲ. ಅವನು ಅವಳ ಹಾಗೂ ಇತರರ ಬಗ್ಗೆ ಮತ್ತೆ ಯೋಚಿಸಲಿಲ್ಲ. ಆವಿ ಏಳುತ್ತಿದ್ದ ಕಪ್ಪನ್ನು ಹಿಡಿದುಕೊಂಡು ವರ್ಕ್‌ಶಾಪಿಗೆ ಹೋಗಿ ತಗಡಿನ ಪಾತ್ರೆಯಲ್ಲಿದ್ದ ಸಣ್ಣ ಬಂಗಾರದ ಮೀನುಗಳು ಎಷ್ಟಿವೆ ಎಂದು ಎಣಿಸಲು ಲೈಟ್ ಹಾಕಿದ. ಅದರಲ್ಲಿ ಹದಿನೇಳಿದ್ದವು. ಅವನು ಅವುಗಳನ್ನು ಮಾರಬಾರದೆಂದು ತೀರ್ಮಾನಿಸಿದ್ದರಿಂದ ಪ್ರತಿ ದಿನ ಎರಡು ಮೀನುಗಳನ್ನು ಮಾಡುತ್ತಿದ್ದ ಮತ್ತು ಇಪ್ಪತ್ತೈದು ಮಾಡಿದ ಮೇಲೆ ಅವುಗಳನ್ನು ಕರಗಿಸಿ ಪುನ: ಮಾಡಲು ಪ್ರಾರಂಭಿಸುತ್ತಿದ್ದ. ಇಡೀ ಬೆಳಿಗ್ಗೆ ತನ್ಮಯತೆಯಿಂದ ಏನನ್ನೂ ಯೋಚಿಸದೆ ಕೆಲಸ ಮಾಡುತ್ತಿದ್ದ. ಹತ್ತು ಗಂಟೆಯ ಹೊತ್ತಿಗೆ ಮಳೆ ಜೋರಾಯಿತು ಮತ್ತು ವರ್ಕ್‌ಶಾಪಿನ ಪಕ್ಕದಲ್ಲಿ ಯಾರೋ ಮನೆಯೊಳಗೆ ನೀರು ನುಗ್ಗುವ ಮುಂಚೆ ಬಾಗಿಲು ಹಾಕಿಕೊಳ್ಳಿ ಎಂದು ಕೂಗುತ್ತ ಓಡಿದರು. ಉರ್ಸುಲಾ ಊಟ ತೆಗೆದುಕೊಂಡು ಬಂದು ಲೈಟ್ ಆರಿಸುವ ತನಕ ಅವನು ತನ್ನ ಬಗ್ಗೆ ಕೂಡ ಯೋಚಿಸದೆ ಕೆಲಸ ಮಾಡುತ್ತಿದ್ದ. +ಅವಳು, “ಎಂಥ ಮಳೆ” ಎಂದಳು. +ಅವನು, “ಅಕ್ಟೋಬರ್” ಎಂದ. +ಅವನು ಅದನ್ನು ಹೇಳಿದಾಗ ಮಾಡುತ್ತಿದ್ದ ದಿನದ ಮೊದಲನೆ ಸಣ್ಣ ಮೀನಿನಿಂದ ಕಣ್ಣು ಕೀಳಲಿಲ್ಲ. ಏಕೆಂದರೆ ಅವನು ಅದರ ಕಣ್ಣಿಗೆ ರೂಬಿಗಳನ್ನು ಇಡುತ್ತಿದ್ದ. ಅದನ್ನು ಮುಗಿಸಿ ಉಳಿದವುಗಳ ಜೊತೆ ಪಾತ್ರೆಯಲ್ಲಿ ಇಟ್ಟ ಮೇಲೆ ಅವನು ಸೂಪ್ ಕುಡಿಯಲು ಪ್ರಾರಂಭಿಸಿದ. ಅನಂತರ ತುಂಬ ನಿಧಾನವಾಗಿ ಈರುಳ್ಳಿಯ ಜೊತೆ ರೋಸ್ಟ್ ಮಾಡಿದ ಮಾಂಸದ ತುಣುಕು, ಅನ್ನ, ಕರಿದ ಬಾಳೆ ಎಸಳುಗಳನ್ನು ಒಟ್ಟಿಗೆ ಒಂದೇ ಪ್ಲೇಟ್‌ನಲ್ಲಿ ಹಾಕಿಕೊಂಡು ತಿಂz. ಎಂಥ ಒಳ್ಳೆಯ ಅಥವಾ ಕೆಟ್ಟ ಪರಿಸ್ಥಿತಿಯಲ್ಲೂ ಅವನ ಹಸಿವು ಬದಲಾಗುತ್ತಿರಲಿಲ್ಲ. ಊಟವಾದ ಮೇಲೆ ಜೊಂಪು ಹತ್ತುತ್ತಿತ್ತು. ಅವನು ವೈeನಿಕವಾದ ಮೂಢ ನಂಬಿಕೆಯಿಂದ ತಿಂದದ್ದು ಅರಗಲು ಎರಡು ಗಂಟೆ ಬಿಡುವ ತನಕ ಕೆಲಸ ಮಾಡುತ್ತಿರಲಿಲ್ಲ, ಸ್ನಾನ ಮಾಡುತ್ತಿರಲಿಲ್ಲ ಅಥವಾ ರತಿ ವಿಲಾಸದಲ್ಲಿರುತ್ತಿರಲಿಲ್ಲ. ಆ ನಂಬಿಕೆ ಅವನಲ್ಲಿ ಅದೆಷ್ಟು ಆಳವಾಗಿ ಬೇರೂರಿತ್ತೆಂದರೆ ಅನೇಕ ಸಲ ಅವನು ಸೈನಿಕರು ಅಜೀರ್ಣದ ತೊಂದರೆಗೆ ಒಳಗಾಗಬಾರದೆಂದು ಮಿಲಿಟರಿ ಕಾರ್ಯಾಚರಣೆಯನ್ನು ತಡೆಹಿಡಿಯುತ್ತಿದ್ದ. ಅವನು ಹಗ್ಗದ ಮಂಚದ ಮೇಲೆ ಮಲಗಿ ಸಣ್ಣ ಚಾಕುವಿನಿಂದ ಕಿವಿಯೊಳಗಿನ ಕೊಳೆ ತೆಗೆದ ನಂತರ ಕೆಲವು ನಿಮಿಷಗಳಲ್ಲಿ ನಿದ್ದೆ ಹೋದ. ಅವನು ಬಿಳಿ ಬಣ್ಣದ ಗೋಡೆಗಳಿರುವ ಮನೆಯೊಂದರಲ್ಲಿ ಹೋಗುತ್ತಿರುವಂತೆ ಕನಸು ಕಂಡ ಮತ್ತು ಅದನ್ನು ಪ್ರವೇಶ ಮಾಡಿದ ಮನುಷ್ಯರಲ್ಲಿ ಮೊದಲನೆಯವನು ಎನ್ನುವುದರಿಂದ ಗಲಿಬಿಲಿಗೊಂಡ. ಕನಸಿನಲ್ಲಿ ಅವನು ಇದೇ ರೀತಿಯ ಕನಸನ್ನು, ಹಿಂದಿನ ದಿನ ರಾತ್ರಿ ಮತ್ತು ಕಳೆದ ವರ್ಷಗಳಲ್ಲಿ ಅನೇಕ ರಾತ್ರಿ ಕಂಡದ್ದಾಗಿ ನೆನಪಿಸಿಕೊಂಡ ಮತ್ತು ಎಚ್ಚರವಾದಾಗ ಆ ಕನಸು ಅಳಿಸಿ ಹೋಗುತ್ತದೆ ಏಕೆಂದರೆ ಮತ್ತೆ ಮತೆ; ಬೀಳುತ್ತಿದ್ದ ಆ ಕನಸಿನ ಗುಣ ಕನಸಿನಲ್ಲಿ ಮಾತ್ರ ನೆನಪಿಗೆ ಬರುವಂಥಾದ್ದು ಎಂದು ಅವನಿಗೆ ಗೊತ್ತಿತ್ತು. ಸ್ವಲ್ಪ ಸಮಯವಾದ ನಂತರ ಕ್ಷೌರಿಕ ವರ್ಕ್‌ಶಾಪಿನ ಬಾಗಿಲನ್ನು ಬಡಿದಾಗ ತನಗೇ ತಿಳಿಯದ ಹಾಗೆ ಕೆಲವು ನಿಮಿಷ ನಿದ್ದೆ ಹೋದದ್ದಲ್ಲದೆ ಯಾವುದೇ ಕನಸು ಕಾಣಲು ಸಮಯವಿಲ್ಲವೆಂಬ ಭಾವನೆಯಿಂದ ಎಚ್ಚರಗೊಂಡ. +ಅವನು ಕ್ಷೌರಿಕನಿಗೆ, “ಇವತ್ತು ಬೇಡ, ಶುಕ್ರವಾರ ಆಗ್ಲಿ” ಎಂದು ಹೇಳಿದ. +ಅವನಿಗೆ ಮೂರು ದಿನಗಳಷ್ಟು ಬೆಳೆದ ಬಿಳಿ ಗಡ್ಡವಿತ್ತು. ಶೇವ್ ಮಾಡಿಕೊಳ್ಳಬೇಕೆಂದು ಅನ್ನಿಸಲಿಲ್ಲ. ಏಕೆಂದರೆ ಶುಕ್ರವಾರ ಹೇರ್‌ಕಟ್ ಮಾಡಿಸಿಕೊಳ್ಳುವುದರಿಂದ ಎರಡನ್ನೂ ಒಟ್ಟಿಗೇ ಮಾಡಿದರಾಯಿತು ಎಂದುಕೊಂಡ. ಬೇಡದ ನಿದ್ದೆಯಿಂದ ಬೆವರಿನ ಒದ್ದೆ ಕಂಕುಳಲ್ಲಿನ ಗಾಯದ ಕಲೆಗಳನ್ನು ಉಬ್ಬಿಸಿತ್ತು. ಆಕಾಶ ನಿರ್ಮಲವಾಗಿತ್ತು ಆದರೆ ಸೂರ್ಯ ಹೊರಬಂದಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹುಳಿ ತೇಗು ತೇಗಿದಕ್ಕೆ ಬಾಯಿಗೆ ಬಂತು ಮತ್ತು ಅದು ಹೆಗಲ ಮೇಲೆ ಹೊದಿಕೆ ಹೊದ್ದು ಕೊಂಡು ಕಕ್ಕಸ್ಸಿಗೆ ಹೋಗು ಎನ್ನುವ ಒಳಗಿನ ಅಪ್ಪಣೆಯಂತೆ ತೋರಿತು. ಅವನ ಎಂದಿನ ಅಭ್ಯಾಸ, ಇದು ಕೆಲಸ ಮಾಡುವ ಸಮಯ ಎಂದು ಹೇಳುವ ತನಕ ಅವನು ಮರದ ಪೆಟ್ಟಿಗೆ ಹೊಮ್ಮಿಸುತ್ತಿದ್ದ ದಟ್ಟವಾದ ಹುದುಗಿಗೆ ಅಗತ್ಯವಾದದ್ದಕಿಂತ ಹೆಚ್ಚಿನ ಸಮಯ ಆತುಕೊಂಡು ನಿಂತಿದ್ದ. ಅವನು ಯೋಚಿಸುತ್ತಿದ್ದ ಸಮಯದಲ್ಲಿ ಅಂದು ಮಂಗಳವಾರ ಹಾಗೂ ಆ ದಿನ ಬಾಳೆ ತೋಟದ ಕಂಪನಿಯಲ್ಲಿ ಸಂಬಳದ ದಿನವಾದ್ದರಿಂದ ಹೊಸೆ ಅರ್ಕಾದಿಯೋ ಸೆಗುಂದೋ ವರ್ಕ್‌ಶಾಪಿಗೆ ಬಂದಿಲ್ಲ ಎನ್ನುವುದನ್ನು ಮತ್ತೆ ನೆನಪಿಸಿಕೊಂಡ. ಆ ನೆನಪುಗಳು ಹಿಂದಿನ ಕೆಲವು ವರ್ಷಗಳ ಯುದ್ಧದ ಬಗ್ಗೆ ಅವನಿಗೇ ಅರಿವಾಗದಂತೆ ಯೋಚಿಸುವಂತೆ ಮಾಡಿತು. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮುಖದ ಮೇಲೆ ಬಿಳಿಯ ನಕ್ಷತ್ರವಿರುವ ಕುದುರೆಯನ್ನು ಕೊಡುತ್ತೇನೆಂದು ಮಾತುಕೊಟ್ಟಿದ್ದು ಮತ್ತು ಅವನು ಅದರ ಬಗ್ಗೆ ಮತ್ತೆ ಮಾತಾಡದಿದ್ದನ್ನು ನೆನಪಿಸಿಕೊಂಡ. ಅನಂತರ ಅವನು ಚದುರಿ ಹೋದ ಘಟನೆಗಳನ್ನು ನೆನಪಿಸಿಕೊಂಡು ಅವುಗಳ ಬಗ್ಗೆ ಯಾವುದೇ ತೀರ್ಮಾನಗೊಳ್ಳದೆ ಏನೂ ಯೋಚಿಸಲು ಸಾಧ್ಯವಿಲ್ಲದ್ದರಿಂದ, ಕಳಚಿಕೊಳ್ಳಲಾಗದ ನೆನಪುಗಳು ಯಾವುದೇ ಭಾವನೆಯನ್ನು ಸ್ಫುರಿಸದ ಹಾಗೆ ನಿರ್ಭಾವದಿಂದ ಯೋಚಿಸುವುದನ್ನು ಕಲಿತಿದ್ದ. ವರ್ಕ್‌ಶಾಪಿಗೆ ವಾಪಸಾಗುವ ದಾರಿಯಲ್ಲಿ ಆಗಲೇ ಒಣ ಹವೆ ಇರುವುದನ್ನು ಗಮನಿಸಿ ಅದು ಸ್ನಾನ ಮಾಡಲು ಸರಿಯಾದ ಸಮಯ ಎಂದುಕೊಂಡ. ಆದರೆ ಅವನಿಗಿಂತ ಮುಂಚೆ ಅಮರಾಂತ ಅಲ್ಲಿಗೆ ಹೋಗಿದ್ದಳು. ಆದ್ದರಿಂದ ಅವನು ದಿನದ ಎರಡನೆ ಸಣ್ಣ ಮೀನು ಮಾಡುವ ಕೆಲಸ ಪ್ರಾರಂಭಿಸಿದ. ಅವನು ಬಾಲಕ್ಕೆ ಕೊಂಡಿ ಸಿಕ್ಕಿಸುತ್ತಿರುವಾಗ ಸೂರ್ಯನಿಂದ ಬಂದ ಅಗಾಧ ಬೆಳಕು ಮೀನು ಹಿಡಿಯುವ ದೋಣಿಯ ಹಾಗೆ ಓಲಾಡಿತು. ಮೂರು ದಿನ ಬಿದ್ದ ತುಂತುರು ಮಳೆಯಿಂದ ತೊಳೆದ ಗಾಳಿಯಲ್ಲಿ ಹಾರುವ ಇರುವೆಗಳಿದ್ದವು. ಅವನು ನಾಲ್ಕು ಗಂಟೆಯಾಗಿ ಹತ್ತು ನಿಮಿಷಕ್ಕೆ ಹೊರಗೆ ಅಂಗಳಕ್ಕೆ ಹೋದಾಗ, ದೂರದಿಂದ ತಾಮ್ರದ ಉಪಕರಣಗಳ ಶಬ್ದ, ತಾಮ್ರದ ಡ್ರಮ್ಮಿನ ಹೊಡೆತ ಮತ್ತು ಮಕ್ಕಳ ಕೂಗಾಟ ಕೇಳಿಸಿತು. ಅವನು ಹರೆಯದ ನಂತರ ಮೊದಲ ಬಾರಿಗೆ ಹಂಬಲಗಳ ಬಲೆಗೆ ಬಿದ್ದದ್ದು ಮತ್ತು ಆ ಅದ್ಭುತ ಮಧ್ಯಾಹ್ನ, ಜಿಪ್ಸಿಗಳ ಬಳಿಗೆ ಐಸ್ ನೋಡಲು ತನ್ನ ತಂದೆ ಕರೆದುಕೊಂಡು ಹೋದದ್ದನ್ನು ಮರು ಜೀವಿಸಿದ. ಸಾಂತ ಸೋಫಿಯಾ ದೆಲಾ ಪಿಯದಾದ್ ಅಡುಗೆ ಮನೆಯಲ್ಲಿ ಮಾಡುತ್ತಿದ್ದನ್ನು ಕೆಳಗೆ ಹಾಕಿ ಬಾಗಿಲಿಗೆ ಓಡಿದಳು. +ಅವಳು, “ಅದು ಸರ್ಕಸ್” ಎಂದು ಕೂಗಿದಳು. +ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಾದಾಮಿ ಮರದ ಹತ್ತಿರಕ್ಕೆ ಹೋಗುವ ಬದಲು ಮುಂಬಾಗಿಲಿಗೆ ಹೋದ ಮತ್ತು ಪೆರೇಡನ್ನು ನೋಡುತ್ತಿದ್ದವರ ಮಧ್ಯೆ ಸೇರಿಕೊಂಡ. ಅವನು ಬಂಗಾರದ ಉಡುಪಿನ ಹೆಂಗಸೊಬ್ಬಳು ಆನೆಯ ಮೇಲೆ ಕುಳಿತಿರುವುದನ್ನು ಕಂಡ. ಡಚ್ ಹುಡುಗಿಯ ಹಾಗೆ ಬಟ್ಟೆ ತೊಡಿಸಿದ ಸುಸ್ತಾಗಿ ಹೆಜ್ಜೆ ಹಾಕುತ್ತಿದ್ದ ಕರಡಿಯೊಂದು ಸಂಗೀತಕ್ಕೆ ತಕ್ಕಂತೆ ತಟ್ಟೆ ಹಾಗೂ ಸ್ಪೂನಿನಿಂದ ಬಡಿಯುತ್ತಿದ್ದನ್ನು ಅವನು ನೋಡಿದ. ಪೆರೇಡಿನ ಕೊನೆಯಲ್ಲಿ ಎತ್ತಿನ ಗಾಡಿಯ ಚಕ್ರದ ಹಾಗೆ ಮಾಡುತ್ತಿದ್ದ ವಿದೂಷಕರನ್ನು ಮತ್ತು ಎಲ್ಲರೂ ಹೊರಟು ಹೋದ ಮೇಲೆ ಏಕಾಂತದ ದಯನೀಯ ಮುಖವನ್ನು ಕಂಡ. ಅಲ್ಲಿ ರಸ್ತೆಯಲ್ಲಿ ಬೆಳಕು ಹರಡಿದ್ದು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಗಾಳಿಯಲ್ಲಿ ಹಾರುವ ಇರುವೆಗಳು ತುಂಬಿಕೊಂಡಿದ್ದವು ಹಾಗೂ ಅನಿಶ್ಚಯದ ಮುಖಮಾಡಿದ್ದ್ದ ಕೆಲವರಿದ್ದರು. ಅನಂತರ ಅವನು ಬಾದಾಮಿ ಮರದ ಹತ್ತಿರ ಸರ್ಕಸ್ಸಿನ ಬಗ್ಗೆ ಯೋಚಿಸುತ್ತ ಹೋದ. ಅಲ್ಲಿ ಉಚ್ಚೆ ಹೊಯ್ಯತ್ತಿರುವಾಗಲೂ ಸರ್ಕಸ್ಸನ್ನು ಕುರಿತು ಯೋಚಿಸಲು ಪ್ರಯತ್ನಿಸಿದ. ಆದರೆ ಅವನಿಗೆ ಅದರ ನೆನಪು ಎಟುಕಲಿಲ್ಲ. ಅವನು ಮಗುವಿನಂತೆ ತಲೆ ಕೆಳಗೆ ಹಾಕಿ, ಹಣೆಯನ್ನು ಬಾದಾಮಿ ಮರದ ಕಾಂಡಕ್ಕೆ ಆನಿಸಿ ಅಲ್ಲಾಡದೆ ನಿಂತ. ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಯ ತನಕ ಮನೆಯವರಿಗೆ ಅವನು ಕಾಣಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಕಸ ಹಾಕಲು ಹಿತ್ತಲಿಗೆ ಹೋದಾಗ ಇಳಿಯುತ್ತಿದ್ದ ರಣಹದ್ದುಗಳು ಅವಳ ಗಮನ ಸೆಳೆದವು. +೧೪ +ಮೆಮೆಳ ಕೊನೆಯ ರಜಾ ದಿನಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗಾಗಿ ದು:ಖಸೂಚಕ ಅವಧಿಯ ಜೊತೆ ಸೇರಿಕೊಂಡು ಬಿಟ್ಟಿತು. ಬಾಗಿಲು ಹಾಕಿದ ಮನೆ, ಪಾರ್ಟಿಗಳಿಗೆ ಸರಿಯಾಗಿರಲಿಲ್ಲ. ಅವರು ಪಿಸುಗುಟ್ಟುತ್ತ ಮಾತಾಡುತ್ತಿದ್ದರು, ಸದ್ದಿಲ್ಲದೆ ಊಟ ಮಾಡುತ್ತಿದ್ದರು, ದಿನಕ್ಕೆ ಮೂರು ಸಲ ಪ್ರಾರ್ಥನೆ ಮಾಡುತ್ತಿದ್ದರು. ಅಲ್ಲದೆ ಮಧ್ಯಾಹ್ನದ ನಿದ್ದೆ ಸಮಯದ ಶೆಖೆಯಲ್ಲಿಯೂ ಪಿಯಾನೋದಂಥ ವಾದ್ಯದ ಅಭ್ಯಾಸದಲ್ಲಿ ದು:ಖಸೂಚನೆಯ ಪ್ರತಿಧ್ವನಿಯಿತ್ತು. ಕರ್ನಲ್ ಬಗ್ಗೆ ಅವಳಿಗೆ ದ್ವೇಷವಿದ್ದರೂ, ಸರ್ಕಾರ ಸತ್ತು ಹೋದ ತನ್ನ ಶತ್ರುವಿನ ನೆನಪನ್ನು ಗೌರವಿಸಿ ಗಂಭೀರವಾಗಿ ಆಚರಿಸಿದ್ದನ್ನು ಮನಗಂಡು ಫೆರ್ನಾಂಡ, ಅವಳಿಗೆ ದು:ಖಸೂಚಕ ಕಠಿಣ ನಡವಳಿಕೆಗೆ ಒತ್ತಾಯಮಾಡಿದಳು. ಎಂದಿನ ಅಭ್ಯಾಸದಂತೆ ಅವ್ರೇಲಿಯಾನೋ ಸೆಗುಂದೋ ಮಗಳು ರಜೆಯಲ್ಲಿ ಬಂದಾಗ ಮನೆಯಲ್ಲಿ ಮಲಗಲು ಬರುತ್ತಿದ್ದ. ಮುಂದಿನ ವರ್ಷದಲ್ಲಿ ಫೆನಾಂಡಳಿಗೆ ಹೆಣ್ಣು ಮಗು ಹುಟ್ಟಿದ್ದರಿಂದ ತಾನು ನ್ಯಾಯವಾಗಿ ಹೆಂಡತಿ ಎನ್ನುವುದರ ಸೌಲಭ್ಯಗಳನ್ನು ಮರಳಿ ಪಡೆಯುವುದಕ್ಕೆ ಅವಳು ಕೆಲವಷ್ಟನ್ನು ಮಾಡಬೇಕಾಗಿತ್ತು. ಹುಟ್ಟಿದ ಮೆಮೆಳ ಸೋದರಿಗೆ ಅವಳ ಅಮ್ಮನ ಇಷ್ಟಕ್ಕೆ ಪ್ರತಿಯಾಗಿ ಅಮರಾಂತ ಉರ್ಸುಲಾ ಎಂದು ಹೆಸರಿಟ್ಟಳು. +ಮೆಮೆ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಳು. ಪಿಯಾನೋದಂಥ ವಾದ್ಯ ನುಡಿಸುವುದಕ್ಕಾಗಿ ಕೊಡಲಾದ ಸರ್ಟಿಫಿಕೇಟನ್ನು ಅವಳು ವಿದ್ಯಾಭ್ಯಾಸವನ್ನು ಪೂರೈಸಿದ ಆಚರಣೆಗೆಂದು ನೆರೆದ ಸಂದರ್ಭದಲ್ಲಿ ಜಾಣ್ಮೆಯಿಂದ ಹದಿನೇಳನೆ ಶತಮಾನದ ಜನಪ್ರಿಯ ಹಾಡುಗಳನ್ನು ನುಡಿಸಿದಾಗ ಊರ್ಜಿತಗೊಳಿಸಲಾಯಿತು ಮತ್ತು ಅದರ ಜೊತೆಗೆ ದು:ಖಸೂಚನೆಯ ಅವಧಿಯೂ ಮುಗಿಯಿತು. ಅವಳ ಕಲೆಗಿಂತ ಅವಳಲ್ಲಿದ್ದ ಎರಡು ಬಗೆಯ ನಡವಳಿಕೆಯನ್ನು ಅತಿಥಿಗಳು ಮೆಚ್ಚಿಕೊಂಡರು. ಅವಳ ಹುಡುಗಾಟದ ಸ್ವಭಾವ ಯಾವುದೇ ಗಂಭೀರವಾದ ನಡವಳಿಕೆಗೆ ದಾರಿ ಮಾಡಿಕೊಟ್ಟಿದೆ ಎನ್ನುವಂತಿರಲಿಲ್ಲ. ಆದರೆ ಅವಳು ಪಿಯಾನೋದಂಥ ವಾದ್ಯವನ್ನು ನುಡಿಸಿದಾಗ ಬೇರೆ ಬಗೆಯ ಹುಡುಗಿಯಂತೆ ಕಾಣುತ್ತಿದ್ದಳು. ಅವಳ ಇನ್ನಿಲ್ಲದ ಪ್ರಬುದ್ಧತೆಯಿಂದ ಬೆಳೆದವಳಂತೆ ಕಾಣಿಸುವ ಹಾಗೆ ಮಾಡಿತ್ತು. ಅವಳು ಯಾವಾಗಲೂ ಹಾಗೆಯೇ ಇದ್ದದ್ದು. ಅವಳಿಗೆ ಯಾವುದೇ ನಿರ್ದಿಷ್ಟವಾದ ಉದ್ದೇಶವಿರಲಿಲ್ಲ. ಆದರೆ ಅವಳು ತನ್ನ ತಾಯಿಗೆ ಕೋಪ ಬಾರದಿರಲಿ ಎಂದು ಅತ್ಯಂತ ಶಿಸ್ತಿನಿಂದ ನಡೆದುಕೊಂಡದ್ದು ಎಲ್ಲರಿಂದ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿತು. ಅವರು ಅವಳನ್ನು ಯಾವುದನ್ನೇ ಆಗಲಿ ಕಲಿಯುವುದಕ್ಕೆ ಸೇರಿಸಬಹುದಿತ್ತು. ಆದರೆ ಪರಿಣಾಮ ಒಂದೇ ಆಗಿರುತ್ತಿತ್ತು. ಅವಳು ಮಗುವಾದಾಗಿನಿಂದಲೂ ಫೆರ್ನಾಂಡಳ ಕಟ್ಟುನಿಟ್ಟಿನ ಅಭ್ಯಾಸಕ್ಕೆ ಮತ್ತು ಅತಿರೇಕಗಳನ್ನು ಆರಿಸುವ ಅವಳ ಕ್ರಮಕ್ಕೆ ಗುರಿಯಾಗಿದ್ದಳು. ಅವಳ ಹಠಕ್ಕೆ ಗುರಿಯಾಗುವುದರ ಬದಲು ಪಿಯಾನೋದಂಥದನ್ನು ಕಲಿಯುವುದಕ್ಕಿತ ಹೆಚ್ಚು ಗಂಭೀರವಾದ ತ್ಯಾಗಕ್ಕೆ ಅವಳು ಸಿದ್ಧಳಿದ್ದಳು. ಪದವಿ ನೀಡಿಕೆ ಸಮಾರಂಭದಲ್ಲಿ ಚರ್ಮದ ಹಾಳೆಯ ಮೇಲಿನ ದಪ್ಪ ಅಕ್ಷರದ ಬರಹವನ್ನು ವಿಧೇಯಳಾಗಲ್ಲದೆ ಅನುಕೂಲದಿಂದ ಒಪ್ಪಿಕೊಂಡಿದ್ದರಿಂದ ತನಗೆ ಬಿಡುಗಡೆ ಸಿಗುತ್ತದೆ ಎಂಬ ಭಾವನೆ ಅವಳಲ್ಲಿತ್ತು. ಅದಾದ ಮೇಲೆ ಯಾವಾಗಲೂ ಒತ್ತಾಯಿಸುತ್ತಿದ್ದ ಫೆರ್ನಾಂಡ ಕೂಡ ನನ್‌ಗಳು ಅದನ್ನು ಮ್ಯೂಸಿಯಮ್‌ನಲ್ಲಿ ಇರುವಂಥಾದ್ದು ಎಂದು ಪರಿಗಣಿಸಿದ ಆ ವಾದ್ಯವನ್ನು ಕುರಿತು ತಲೆಕೆಡಿಕೊಳ್ಳುವುದಿಲ್ಲ ಎಂದುಕೊಂಡಳು. ಅನಂತರ ಕೆಲವು ವರ್ಷಗಳಲ್ಲಿ ಆ ತನ್ನ ಗ್ರಹಿಕೆ ತಪ್ಪು ಎಂದು ಗೊತ್ತಾಯಿತು. ಏಕೆಂದರೆ ಅಧ ಊರು ನಿದ್ದೆ ಹೋದ ಮೇಲೆ, ಮಕೋಂದೋದ ನಡೆಯುವ ಸ್ಕೂಲು ಮತ್ತು ಬೇರೆ ಕಡೆ ನಡೆಯುವ ಸಮಾರಂಭಗಳಿಗೆ ದಾಕ್ಷಿಣ್ಯಕ್ಕಾಗಿ ಹೋದವರು ಬಂದು ಮಲಗಿದ ಮೇಲೆ, ಅವಳ ತಾಯಿ ತನ್ನ ಮಗಳ ನೈಪುಣ್ಯವನ್ನು ಮೆಚ್ಚುತ್ತಾರೆ ಎಂದು ಭಾವಿಸುವ ಎಲ್ಲ ಅತಿಥಿಗಳನ್ನು ಆಹ್ವಾನಿಸುತ್ತಿದ್ದಳು. ಅಮರಾಂತ ಸತ್ತ ಮೇಲೆ ಮಾತ್ರ ಮತ್ತೆ ಇಡೀ ಸಂಸಾರ ದು:ಖಸೂಚನೆಯ ಆಚರಣೆಗೆ ಒಳಗಾದಾಗ ಮೆಮೆ ಪಿಯಾನೋದಂಥ ವಾದ್ಯಕ್ಕೆ ಬೀಗ ಹಾಕಿ ಅದರ ಬೀಗದ ಕೈಯನ್ನು ಯಾವುದೋ ಶೃಂಗಾರದ ವಸ್ತುಗಳಿದ್ದ ಟ್ರೇನಲ್ಲಿ ಹಾಕಿದಳು ಮತ್ತು ಅದನ್ನು ಹುಡುಕದೆ ಇರುವುದಕ್ಕೆ ಎಲ್ಲಿ ಮತ್ತು ಯಾರ ತಪ್ಪಿನಿಂದ ಎಂದು ಫೆರ್ನಾಂಡಗೆ ಗೊತ್ತಾಗದ ಹಾಗೆ ಅದನ್ನು ಮರೆತು ಬಿಟ್ಟಳು. ಮೆಮೆ ಕಲಿಕೆಯ ಬಗ್ಗೆ ಸಂಯಮ ತೋರಿಸಿದಂತೆ ಇಂಥ ಪ್ರದರ್ಶನಗಳನ್ನು ತಾಳಿಕೊಂಡಳು. ಅದು ಅವಳ ಸ್ವಾತಂತ್ರ್ಯಕ್ಕೆ ಸಿಕ್ಕ ಬೆಲೆ. ಫೆರ್ನಾಂಡ ಅವಳ ನಮ್ರತೆಯಿಂದ ಮತ್ತು ಅವಳ ಕಲೆಯ ಬಗ್ಗೆ ದೊರೆತ ಮೆಚ್ಚುಗೆಯಿಂದ ಎಷ್ಟು ಪ್ರಭಾವಿತಳಾಗಿದ್ದಳೆಂದರೆ ಮನೆಯ ತುಂಬ ಹುಡುಗಿಯರು ಇರುವುದಕ್ಕೆ, ಅವಳು ಮಧ್ಯಾಹ್ನವನ್ನು ತೋಪಿನಲ್ಲಿ ಕಳೆಯುವುದಕ್ಕೆ ಮತ್ತು ಯಾರಾದರೂ ನಂಬಿಕಸ್ಥ ಹೆಂಗಸಿನ ಜೊತೆ ಅಥವಾ ಅವ್ರೇಲಿಯಾನೋ ಸೆಗುಂದೋ ಜೊತೆ ಫಾದರ್ ಆಂಟೋನಿಯೋ ಇಸೆಬಲ್ ಒಪ್ಪಿಗೆ ಕೊಟ್ಟ ಯಾವುದೇ ಸಿನಿಮಾಕ್ಕೆ ಹೋಗಲು ಅವಳ ವಿರೋಧವಿರಲಿಲ್ಲ. ಆ ವಿನೋದಭರಿತ ಸಮಯದಲ್ಲಿ ಅವಳ ನಿಜವಾದ ಆಸಕ್ತಿಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದವು. ಶಿಸ್ತಿನ ಅತಿರೇಕದ ಮತ್ತೊಂದು ತುದಿಯಲ್ಲಿ ಅವಳಿಗೆ ಸಂತೋಷ ಸಿಕ್ಕುತ್ತಿತ್ತು: ಗಲಾಟೆ ತುಂಬಿದ ಪಾರ್ಟಿಗಳಲ್ಲಿ, ಪ್ರೇಮಿಗಳ ಬಗ್ಗೆ ಹರಟೆ ಹೊಡೆಯುವುದರಲ್ಲಿ, ಹುಡುಗಿಯರ ಜೊತೆ ದೀರ್ಘವಾದ ಒಡನಾಟದಲ್ಲಿ. ಅಲ್ಲಿ ಅವರು ಸಿಗರೇಟು ಸೇದುವುದನ್ನು ಕಲಿತರು ಹಾಗೂ ಗಂಡಸರ ಮೂಲ ವರ್ತನೆಗಳ ಬಗ್ಗೆ ಮಾತಾಡಿದರು. ಒಂದು ಬಾರಿ ಅವರ ಕೈಗೆ ಮದ್ಯದ ಕ್ರೇಟ್ ಸಿಕ್ಕಿತು. ಅನಂತರ ಅವರು ಬೆತ್ತಲೆಯಾಗಿ ಒಬ್ಬೆಬ್ಬರ ಅಂಗಾಂಗಗಳನ್ನು ಹೋಲಿಕೆ ಮಾಡುತ್ತ, ಅಳೆಯುತ್ತ ಕಳೆದರು. ಮೆಮೆ ಆ ರಾತ್ರಿ ಸಿಹಿಗೆಣಸನ್ನು ಜಗಿಯುತ್ತ ಮನೆಗೆ ಬಂದಾಗ ಫೆರ್ನಾಂಡ ಮತ್ತು ಅಮರಾಂತ ಒಬ್ಬರಿಗೊಬ್ಬರು ಯಾವ ಮಾತನ್ನೂ ಆಡದೆ ಊಟ ಮಾಡುತ್ತಿದ್ದರು. ಗಾಬರಿಯಿಂದ ಅವರನ್ನು ಹೆಚ್ಚು ಗಮನಿಸದೆ, ಅದೇ ಟೇಬಲ್ ಬಳಿ ತಾನು ಕುಳಿತಿದ್ದನ್ನು ಅವಳು ಎಂದೂ ಮರೆಯಲಿಲ್ಲ. ಅವಳು ಎರಡು ಗಂಟೆಯ ಹೊತ್ತು ಗೆಳತಿಯ ಬೆಡ್‌ರೂಮಿನಲ್ಲಿ ಕಳೆದು, ಹೆದರಿಕೆಯಿಂದ, ನಗುವಿನಿಂದ ಕಣ್ಣಲ್ಲಿ ನೀರು ತುಂಬಿತ್ತು ಮತ್ತು ಎಲ್ಲ ಕೂಗಾಟದ ನಡುವೆ ಅವಳಿಗೆ ಸ್ಕೂಲಿನಿಂದ ಓಡಿ ಹೋಗಿ ತನ್ನ ತಾಯಿಗೆ ಪಿಯಾನೋದಂಥ ವಾದ್ಯವನ್ನು ಗುದದ್ವಾರದಲ್ಲಿ ಪಿಚಕಾರಿಯ ಹಾಗೆ ತುರುಕುವಂಥಾದು, ಎಂದು ಹೇಳುವುದಕ್ಕೆ ಬೇಕಾದ ಧೈರ್ಯ ಹೇಗೋ ಬಂದಿದೆ ಎಂಬ ಭಾವನೆ ಉಂಟಾಗಿತ್ತು. ಟೇಬಲ್‌ನ ಆಯಕಟ್ಟು ಸ್ಥಳದಲ್ಲಿ ಕುಳಿತು, ಕೋಳಿ ಸಾರು ಕುಡಿಯುತ್ತ, ಫೆರ್ನಾಂಡ ಮತ್ತು ಅಮರಾಂತ ವಾಸ್ತವ ಸ್ಥಿತಿಗೆ ಅಪವಾದವೆನ್ನುವ ಹಾಗೆ ಕುಳಿತಿದ್ದರು. ಅವಳು ಅವರಿಬ್ಬರಲ್ಲಿದ್ದ ಕೊರತೆಯನ್ನು, ಗೆಲುವಿಲ್ಲದ ಒಳಗನ್ನು, ವೈಭವದ ಬಗ್ಗೆ ಇರುವ ಭ್ರಾಂತಿಯನ್ನು ಅವರ ಎದುರು ಬಿಚ್ಚಿ ಹೇಳದಿರುವುದಕ್ಕೆ ಭಾರಿ ಸಾಹಸ ಪಡಬೇಕಾಯಿತು. ಅವಳು ಎರಡನೇ ಬಾರಿ ರಜಾ ದಿನಗಳಲ್ಲಿ ಬಂದಾಗಲೇ ತನ್ನ ತಂದೆ ಕೇವಲ ತೋರಿಕೆಗಾಗಿ ಮನೆಯಲ್ಲಿ ಇರುತ್ತಾನೆಂದು ಅವಳಿಗೆ ಗೊತ್ತಾಯಿತು. ಅಲ್ಲದೆ ಫೆರ್ನಾಂಡ ಏನು ಮಾಡಿದಳೆಂದು ತಿಳಿದ ಅವಳು ಪೆತ್ರಾ ಕೊತೆಸ್‌ಳನ್ನು ಭೇಟಿಯಾದ ಮೇಲೆ ತನ್ನ ತಂದೆ ಮಾಡಿದ್ದು ಸರಿ ಎಂದು ಅವಳಿಗೆ ತೋರಿತು. ಅವಳು ಕೂಡ ಇಟ್ಟುಕೊಂಡವಳ ಮಗಳಾಗಿರುವುದಕ್ಕೆ ಇಷ್ಟಪಡುತ್ತಿದ್ದಳು. ಕುಡಿದ ಮತ್ತಿನಲ್ಲಿ ತನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದರೆ ಅದು ಉಂಟುಮಾಡುವ ಹಗರಣ ಕುರಿತು ಮೆಮೆ ಯೋಚಿಸಿ ನಕ್ಕಳು. ಅವಳ ಫಟಿಂಗತನಕ್ಕೆ ದೊರಕಿದ ಸಮಾಧಾನ ಎಷ್ಟಿತ್ತೆಂದರೆ ಫೆರ್ನಾಂಡ ಅದನ್ನು ಗಮನಿಸಿದಳು. +ಅವಳು, “ಏನು ಸಮಾಚಾರ” ಎಂದು ಕೇಳಿದಳು. +ಮೆಮೆ, “ಏನಿಲ್ಲ ನಿಮ್ಮಿಬ್ಬರನ್ನ ನಾನೆಷ್ಟು ಪ್ರೀತಿಸ್ತಿದೀನಿ ಅಂತ ಗೊತ್ತಾಗ್ತಿದೆ” ಎಂದು ಉತ್ತರಿಸಿದಳು. +ಅಮರಾಂತಳಿಗೆ ಆ ಮಾತಿನಲ್ಲಿ ಹುದುಗಿರುವ ದ್ವೇಷ ಎಷ್ಟಿದೆ ಎಂದು ತಿಳಿದು ಬೆಚ್ಚಿದಳು. ಆದರೆ ಫೆರ್ನಾಂಡಳಿಗೆ ಸರಿರಾತ್ರಿಯಲ್ಲಿ ಮೆಮೆ ಎದ್ದು ತಲೆ ಸಿಡಿಯುವಷ್ಟು ನೋವಾಗುತ್ತಿದೆ ಎಂದು ಹೇಳಿ ವಾಂತಿ ಮಾಡಿಕೊಂಡದ್ದಕ್ಕೆ, ಅವಳ ಅಂತ:ಕರಣ ಎಲ್ಲೆ ಮೀರಿ ಮಿಡಿಯಿತು. ಅವಳಿಗೆ ಒಂದಷ್ಟು ಕ್ಯಾಸ್ಟರ್ ಆಯಿಲ್ ಕೊಟ್ಟು, ಹಣೆಯ ಮೇಲೆ ಐಸ್ ಕ್ಯೂಬ್‌ಗಳನ್ನಿಟ್ಟಳು ಮತ್ತು ಐದು ದಿನ ಹಾಸಿಗೆಯಲ್ಲೆ ಇರುವಂತೆ ಮಾಡಿ, ಹೊಸಬನಾದ, ತೋರಿಕೆಯ ಫ್ರೆಂಚ್ ಡಾಕ್ಟರ್ ತಿಳಿಸಿದಂತೆ ಆಹಾರವನ್ನು ತೆಗೆದುಕೊಳ್ಳುವಂತೆ ಹೇಳಿದಳು. ಅವನು ಅವಳನ್ನು ಎರಡು ಗಂಟೆಯ ಕಾಲ ಪರೀಕ್ಷಿಸಿ ಹೆಂಗಸರಿಗೆ ಬರುವ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಳೆಂದು ಹೇಳಿದ. ಧೈರ್ಯ ಕಳೆದುಕೊಂಡು, ಆತ್ಮವಿಶ್ವಾಸ ಕುಂದಿದ ಪರಿಸ್ಥಿತಿಯಲ್ಲಿದ್ದ ಮೆಮೆಳಿಗೆ ಅದನ್ನು ಸಹಿಸುವುದಲ್ಲದೆ ಬೇರೆ ಮಾರ್ಗವಿರಲಿಲ್ಲ. ಆ ವೇಳೆಗೆ ಸಂಪೂರ್ಣ ಕುರುಡಿಯಾಗಿದ್ದರೂ ಸಾಕಷ್ಟು ಚಟುವಟಿಕೆಯಿಂದಿದ್ದ ಉರ್ಸುಲಾ ಮಾತ್ರ ಸರಿಯಾಗಿ ಊಹಿಸಿ ವಿಶ್ಲೇಷಿಸಿದ್ದಳು. ಅವಳು, “ನಂಗೆ ತಿಳಿದ ಹಾಗೆ ಕುಡಿದೋರಿಗೆ ಹೀಗೇ ಆಗೋದು” ಎಂದು ಯೋಚಿಸಿದಳು. ಆದರೆ ಅವಳು ಆ ಆಲೋಚನೆಯನ್ನು ತಿರಸ್ಕರಿಸಿದಳು. ಅಂಥ ಆಲೋಚನೆ ಬಂದದ್ದಕ್ಕೆ ತನ್ನನ್ನೇ ಹಳಿದುಕೊಂಡಳು. ಅವ್ರೇಲಿಯಾನೋ ಸೆಗುಂದೋಗೆ ಮೆಮೆಳ ಅವಸ್ಥೆ ಕಂಡು ಚುರ್ ಎನ್ನಿಸಿ ಇನ್ನು ಮುಂದೆ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನಗೆ ತಾನೇ ಹೇಳಿಕೊಂಡ. ಹೀಗಾಗಿ ತಂದೆ ಮತ್ತು ಮಗಳಲ್ಲಿ ಸ್ನೇಹಪೂರ್ಣ ಸಂಬಂಧ ಹುಟ್ಟಿ, ಕೆಲ ಸಮಯದ ತನಕ ಅವನನ್ನು ಏಕಾಂತದ ವಿಲಾಸದಿಂದ ಮುಕ್ತಗೊಳಿಸಿತು ಮತ್ತು ಅವಳನ್ನು ಮನೆಯೊಳಗೆ ಇನ್ನೇನು ಪ್ರಾರಂಭವಾಗಲಿದ್ದ ಫೆರ್ನಾಂಡಳ ಪತ್ತೇದಾರಿ ನೋಟದಿಂದ ಮುಕ್ತಳಾಗಿಸಿತು. ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋ ಮೆಮೆಳ ಜೊತೆಗಿರುವ ಸಲುವಾಗಿ, ಅವಳನ್ನು ಸಿನಿಮಾ ಅಥವಾ ಸರ್ಕಸ್ಸಿಗೆ ಕರೆದುಕೊಂಡು ಹೋಗಬೇಕೆಂದು ಎಲ್ಲ ಬಗೆಯ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿದ ಹಾಗೂ ಬಿಡುವಾಗಿದ್ದಾಗ ಅವಳ ಜೊತೆ ಅತಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಇತ್ತಿಚೆಗೆ ಶೂ ಹಾಕಿಕೊಳ್ಳಲು ತೊಂದರೆ ಕೊಡುವ ತನ್ನ ದಡೂತಿ ಮೈಯನ್ನು ಕಂಡರೆ ಅವನಿಗೆ ರೇಗುತ್ತಿತ್ತು ಮತ್ತು ಅವನ ಹೊಟ್ಟೆಬಾಕತನ ಅವನ ಸ್ವಭಾವಕ್ಕೆ ಕೆಡಕನ್ನು ಉಂಟುಮಾಡಿತ್ತು. ಅವನಿಗೆ ಮಗಳನ್ನು ಕಂಡುಕೊಂಡ ರೀತಿಯಿಂದ ಮೊದಲಿನ ಗೆಲುವು ಮತ್ತೆ ಲಭಿಸಿತು ಮತ್ತು ಅವಳ ಸಹವಾಸ ಅವನನ್ನು ಹಾಳಾಗುವುದರಿಂದ ದೂರಮಾಡಿತು. ಮೆಮೆ ಪ್ರಾಯಕ್ಕೆ ಬರುತ್ತಿದ್ದಳು. ಯಾವಾಗಲೂ ಸುಂದರಳಾಗಿದ್ದ ಅಮರಾಂತಳಂತೆ ಅವಳು ಸುಂದರಿಯಾಗಿರಲಿಲ್ಲ. ಆದರೆ ಅವಳು ಹಸನ್ಮುಖಿಯಾಗಿ, ಗೋಜಲಿಲ್ಲದೆ ಇದ್ದಳು. ಅವಳಿಗೆ ಮೊದಲ ಕ್ಷಣದಲ್ಲೆ ಜನರ ಮೇಲೆ ಪ್ರಭಾವ ಬೀರುವ ಗುಣವಿತ್ತು. ಅವಳಲ್ಲಿ ಆಧುನಿಕ ಸತ್ವವಿದ್ದು, ಅದು ಫೆರ್ನಾಂಡಳ ತಾತನ ಕಾಲದ ತಡೆಯಲಾಗದ ಕೃಪಣತನದ ನಿಲುವಿನ ಭಾವನೆಗೆ ಧಕ್ಕೆ ಉಂಟುಮಾಡಿತು. ಆದರೆ ಅವ್ರೇಲಿಯಾನೋ ಸೆಗುಂದೋ ಅದನ್ನು ಬೆಳೆಸುವುದರಲ್ಲಿ ಸಂತೋಷಗೊಂಡಿದ್ದ. ಭಯಗೊಳಿಸುವ ಸಂತರ ಕಣ್ಣುಗಳಿಗೆ ಅವಳು ಚಿಕ್ಕವಳಾಗಿದ್ದೇ ಮೆಚ್ಚುಗೆಯಾಗಿದ್ದು, ಬೆಡ್‌ರೂಮಿನಲ್ಲಿಯೇ ಇದ್ದ ಅವಳನ್ನು ಹೊರಗೆ ತರಲು ಅವನು ತಿರ್ಮಾನಿಸಿದ. ಅವನು ರೂಮೊಂದರಲ್ಲಿ ಭವ್ಯವಾದ ಹಾಸಿಗೆ, ದೊಡ್ಡ ಡ್ರಸಿಂಗ್ ಟೇಬಲ್, ವೆಲ್‌ವೆಟ್ ಕರ್ಟನ್‌ಗಳನ್ನು ಅಣಿಗೊಳಿಸುತ್ತ ತಾನು ಪೆತ್ರಾ ಕೊತೆಸ್‌ಳ ರೂಮಿನಂತೆ ಇನ್ನೊಂದನ್ನು ಮಾಡುತ್ತಿದ್ದೇನೆ ಎನ್ನುವುದನ್ನು ಅರಿಯಲಿಲ್ಲ. ಮೆಮೆಳ ಬಗ್ಗೆ ಅವನೆಷ್ಟು ದುಂದುವೆಚ್ಚ ಮಾಡುತ್ತಿದ್ದನೆಂದರೆ ಅವಳಿಗೆ ಕೊಟ್ಟ ಹಣವೆಷ್ಟು ಎಂದು ಗೊತ್ತಿರಲಿಲ. ಏಕೆಂದರೆ ಅವಳೇ ಅವನ ಜೇಬಿನಿಂದ ತೆಗೆದುಕೊಳ್ಳುತ್ತಿದ್ದಳು. ಅವನಿಗೆ ಬಾಳೆ ತೋಟದ ಕಂಪನಿಯ ಆಡಳಿತದವರಿಗೆ ಬರುವ ಇತ್ತೀಚಿನ ಸೌಂದರ್ಯವರ್ಧಕಗಳ ಬಗ್ಗೆ ಮಾಹಿತಿಯಿತ್ತು. ಮೆಮಳ ರೂಮಿನಲ್ಲಿ ಉಗುರುಗಳಿಗೆ ಪಾಲಿಶ್ ಮಾಡುವ ಸಣ್ಣ ಕಲ್ಲುಗಳಿಂದ ಹಿಡಿದು, ಕೂದಲನ್ನು ಗುಂಗುರು ಮಾಡುವುದು, ಟೂತ್ ಬ್ರಶ್, ಕಣ್ಣಿಗೆ ಹೊಳಪು ತರುವ ಹನಿಗಳ ಬಾಟಲ್ ಮತ್ತು ಇತರ ಅನೇಕ ಸೌಂದರ್ಯವರ್ಧಕ ವಸ್ತುಗಳು ಹಾಗೂ ಸಲಕರಣೆಗಳಿದ್ದು, ಪ್ರತಿ ಬಾರಿ ಫೆರ್ನಾಂಡ ಅವಳ ರೂಮಿಗೆ ಹೋದಾಗ ತನ್ನ ಮಗಳ ರೂಮು ಫ್ರೆಂಚ್ ಹೆಂಗಸರ ರೂಮಿನಂತೆಯೇ ಇದೆ ಎಂದು ಗಾಬರಿಗೊಳ್ಳುತ್ತಿದ್ದಳು. ಆದರೂ ಫೆರ್ನಾಂಡ ಅವಳ ಸಮಯವನ್ನು ತುಂಟಿಯಾಗಿದ್ದ ಪುಟಾಣಿ ಅಮರಾಂತ ಉರ್ಸುಲಾ ಮತ್ತು ಕಾಣದ ಡಾಕ್ಟರ್‌ಗಳಿಗೆ ವಿನಿಯೋಗಿಸುತ್ತಿದ್ದಳು. ತಂದೆ ಮತ್ತು ಮಗಳು ಹೊಂದಿಕೊಂಡಿರುವುದನ್ನು ನೋಡಿ ಅವ್ರೇಲಿಯಾನೋ ಸೆಗುಂದೋನಿಂದ ಅವಳು ಪಡೆದ ಒಂದೇ ವಾಗ್ದಾನವೇನೆಂದರೆ ಅವಳನ್ನು ಪೆತ್ರಾ ಕೊತೆಸ್‌ಳ ಮನೆಗೆ ಕರೆದುಕೊಂಡು ಎಂದೂ ಕರೆದುಕೊಂಡು ಹೋಗುವುದಿಲ್ಲ, ಎಂದು. ಅದು ಅರ್ಥವಿಲ್ಲದ ಆಗ್ರಹವಾಗಿತ್ತು. ಏಕೆಂದರೆ ತನ್ನ ಪ್ರಿಯಕರ ಮತ್ತು ಅವಳ ಹೊಂದಾಣಿಕೆಯ ಬಗ್ಗೆ ತೀರ ಸಿಟ್ಟಿತ್ತು ಮತ್ತು ಅವಳ ಸಮಾಚಾರವೇ ಅವಳಿಗೆ ಬೇಕಿರಲಿಲ್ಲ. ಪೆತ್ರಾ ಕೊತೆಸ್‌ಗೆ ಕಾಣದ ಭಯವೊಂದಿತ್ತು. ಮೆಮೆ ಇಷ್ಟಪಟ್ಟರೆ ಸಾಕು ಫೆರ್ನಾಂಡಗೆ ಅಸಾಧ್ಯವಾದದ್ದನ್ನು ಸಾಧಿಸಿಸುತ್ತೇನೆ, ಎಂದು. ಅದು, ತಾನು ಸಾಯುವ ತನಕ ಬಾಧಕವಿಲ್ಲ ಎನ್ನುವ ಖಾತರಿಯಿದ್ದ ಪ್ರೀತಿಯನ್ನು ಅವಳಿಗೆ ನಿರಾಕರಿಸುವುದು. ಮೊಟ್ಟ ಮೊದಲಿಗೆ ಅವ್ರೇಲಿಯಾನೋ ಸೆಗುಂದೋ ಇಟ್ಟುಕೊಂಡವಳ ಇರಿಯುವ ನೋಟಗಳನ್ನು ಮತ್ತು ಹುಚ್ಚಾಟಗಳನ್ನು ಸಹಿಸಿಕೊಳ್ಳಬೇಕಾಗಿ ಬಂತು. ಅಷ್ಟೇ ಅಲ್ಲದೆ ಅಲ್ಲಿಂದಿಲ್ಲಿಗೆ ಸಾಗುತ್ತಿದ್ದ ಅವನ ಟ್ರಂಕುಗಳು ಮತ್ತೆ ಹೆಂಡತಿಯ ಮನೆ ಕಡೆ ಹಾದಿ ಹಿಡಿಯುತ್ತವೆ ಎಂಬ ಭಯ ಅವನಿಗೆ ಉಂಟಾಯಿತು. ಆಗ ಹಾಗಾಗಲಿಲ್ಲ. ಪೆತ್ರಾ ಕೊತೆಸ್‌ಗೆ ತನ್ನ ಪ್ರಿಯಕರ ತಿಳಿದಷ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ ಮತ್ತು ಅವಳಿಗೆ ಟ್ರಂಕುಗಳು ಎಲ್ಲಿಗೆ ಕಳಿಸಲ್ಪಟ್ಟಿವೆಯೋ ಅಲ್ಲಿಯೇ ಇರುತ್ತವೆಂದೂ ಮತ್ತು ಅವ್ರೇಲಿಯಾನೋ ಸೆಗುಂದೋ ಯಾವುದನ್ನಾದರೂ ದ್ವೇಷಿಸುತ್ತಿದ್ದರೆ, ಅದು ತನ್ನ ಜೀವನವನ್ನು ಬದಲಾವಣೆಗಳಿಂದ ಗೋಜಲು ಮಾಡಿಕೊಳ್ಳುವುದನ್ನು ಎಂದು ತಿಳಿದಿತ್ತು. ಹಾಗಾಗಿ ಟ್ರಂಕುಗಳು ಎಲ್ಲಿದ್ದವೋ ಅಲ್ಲೇ ಇದ್ದವು ಮತ್ತು ಪೆತ್ರಾ ಕೊತೆಸ್‌ಗೆ ಅವನ ಮಗಳಿಗೆ ಸಾಧ್ಯವಿಲ್ಲದ್ದನ್ನು ಉಪಯೋಗಿಸಿ ಮತ್ತೆ ತನ್ನ ಪ್ರಿಯಕರನನ್ನು ಗೆಲ್ಲುವುದಕ್ಕೆ ಯೋಚಿಸಿದಳು. ಅದೂ ಕೂಡ ಅನಗತ್ಯವಾದ ಶ್ರಮವಾಗಿತ್ತು. ಏಕೆಂದರೆ ಮೆಮೆಳಿಗೆ ತನ್ನ ತಂದೆಯ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಪೇಕ್ಷೆ ಇರಲಿಲ್ಲ. ಮತ್ತು ಒಂದು ವೇಳೆ ಹಾಗಿದ್ದ ಪಕ್ಷದಲ್ಲಿ ಅವಳು ಇಟ್ಟುಕೊಂಡವಳ ಕಡೆ ಇರುತ್ತಿದ್ದಳು. ಅವಳಿಗೆ ಯಾರ ಬಗ್ಗೆ ಯೋಚಿಸಲೂ ಸಮಯವಿರಲಿಲ್ಲ. ಅವಳು ನನ್‌ಗಳು ಹೇಳಿಕೊಟ್ಟಂತೆ ತನ್ನ ರೂಮನ್ನು ತಾನೇ ಗುಡಿಸಿಕೊಳ್ಳುತ್ತಿದ್ದಳು, ಹಾಸಿಗೆಯನ್ನು ಸರಿಪಡಿಸಿಕೊಳ್ಳುತ್ತಿದ್ದಳು. ಬೆಳಿಗ್ಗೆ ಹೊತ್ತಿನಲ್ಲಿ ಅಂಗಳದಲ್ಲಿ ಕುಳಿತು ಹೊಲಿದು ಅಥವಾ ಅಮರಾಂತಳ ಹಳೆಯ ಕಾಲಿನಿಂದ ಒತ್ತುವ ಮೆಷಿನ್ ಉಪಯೋಗಿಸಿ ಬಟ್ಟೆಯನ್ನು ಹೊಲಿಯುತ್ತಿದ್ದ್ದಳು. ಉಳಿದವರು ಮಧ್ಯಾಹ್ನದ ನಿದ್ದೆ ಮಾಡುವಾಗ ಪಿಯಾನೋಥರದ್ದನ್ನು ಫೆರ್ನಾಂಡಳನ್ನು ಶಾಂತವಾಗಿರಿಸುತ್ತದೆ ಎಂದು ತಿಳಿದು ಎರಡು ಗಂಟೆಯ ಸಮಯ ಅಭ್ಯಾಸ ಮಾಡುತ್ತಿದ್ದಳು. ಅದೇ ಕಾರಣಕ್ಕಾಗಿ ಅವಳು ಚರ್ಚ್‌ನ ಸಮಾರಂಭಗಳಲ್ಲಿ, ಸ್ಕೂಲಿನ ಪಾರ್ಟಿಗಳಲ್ಲಿ ಅವರಿಂದ ಬೇಡಿಕೆಗಳು ಕಡಿಮೆ ಇದ್ದರೂ ಕೂಡ ವಾದ್ಯವನ್ನು ನುಡಿಸುತ್ತಿದ್ದಳು. ಕತ್ತಲಾಗುತ್ತಿದ್ದಂತೆ ಅವಳು ಸರಳವಾದ ಉಡುಗೆ ತೊಟ್ಟು, ಎತ್ತರ ಹಿಮ್ಮಡಿಯ ಶೂ ಹಾಕಿಕೊಳ್ಳುತ್ತಿದ್ದಳು ಮತ್ತು ತನ್ನ ತಂದೆಯ ಜೊತೆ ಯಾವುದೇ ಕಾರ್ಯಕ್ರಮವಿರದಿದ್ದರೆ ಗೆಳತಿಯರ ಮನೆಗೆ ಹೋಗಿ ಊಟದ ಸಮಯದವರೆಗೂ ಇರುತ್ತಿದ್ದಳು. ಆಗಾಗ್ಗೆ ಅವ್ರೇಲಿಯಾನೋ ಸೆಗುಂದೋ ಅವಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಲು ಬರುತ್ತಿದ್ದ. +ಮೆಮೆಳ ಸ್ನೇಹಿತೆಯರಲ್ಲಿ ಮೂರು ಜನ ಅಮೆರಿಕದ ಹುಡುಗಿಯರಿದ್ದರು. ಅವರು ವಿದ್ಯುತ್ ಬೇಲಿಯನ್ನು ತುಂಡರಿಸಿ ಬಂದು ಮಕೋಂದೋದ ಹುಡುಗಿಯರ ಸ್ನೇಹ ಬೆಳೆಸಿದ್ದರು. ಅವರಲ್ಲೊಬ್ಬಳು ಪ್ಯಾಟ್ರೀಷಿಯ ಬ್ರೌನ್. ಅವ್ರೇಲಿಯಾನೋ ಸೆಗುಂದೋನ ಸತ್ಕಾರಕ್ಕೆ ಕೃತಜ್ಞರಾಗಿ ಮೆಮೆಳನ್ನು ತನ್ನ ಮನೆಗೆ ಕರೆದದ್ದಲ್ಲದೆ, ಅವಳನ್ನು ಹೊರಗಿನವರು ಮತ್ತು ಸ್ಥಳೀಯರು ಬೆರೆಯುತ್ತಿದ್ದ ಒಂದೇ ಸ್ಥಳವಾದ ಶನಿವಾರದ ನೃತ್ಯಕೂಟಕ್ಕೆ ಆಹ್ವಾನಿಸಿದರು. ಫೆರ್ನಾಂಡಳಿಗೆ ಇದು ತಿಳಿದಾಗ ಅವಳು ಅಮರಾಂತ ಉರ್ಸುಲಾಳನ್ನು ಮತ್ತು ಕಾಣದ ಡಾಕ್ಟರುಗಳನ್ನು ಒಂದು ಕ್ಷಣ ಮರೆತು ಭಾವತೀವ್ರತೆಗೆ ಒಳಗಾದಳು. ಅವಳು ಮೆಮೆಗೆ, “ಸ್ವಲ್ಪ ಯೋಚ್ನೆ ಮಾಡು, ಗೋರೀಲಿ ಕರ್ನಲ್ ಏನು ಯೋಚ್ನೆ ಮಾಡ್ತಿರ್‍ತಾನೆ ಅಂತ” ಎಂದಳು. ಅವಳು ಸಹಜವಾಗಿ ಉರ್ಸುಲಾಳ ಬೆಂಬಲವನ್ನು ಅಪೇಕ್ಷಿಸಿದಳು. ಆದರೆ ಎಲ್ಲರ ನಿರೀಕ್ಷೆಗೆ ಪ್ರತಿಯಾಗಿ ಆ ಕುರುಡಿ ಹೆಂಗಸಿಗೆ ಎಲ್ಲಿಯ ತನಕ ಮೆಮೆ ಅವಳ ಅಭ್ಯಾಸಗಳನ್ನು ಶಿಸ್ತಿನಿಂದ ಉಳಿಸಿಕೊಂಡು, ಪ್ರಾಟಸ್ಟೆಂಟಾಗಿ ಪರಿವರ್ತನೆ ಹೊಂದುವುದಿಲ್ಲವೋ ಅಲ್ಲಿಯ ತನಕ ಅವಳು ತನ್ನ ಓರಗೆಯವರ ಜೊತೆ ಹೋಗಿ ಡ್ಯಾನ್ಸ್ ಮಾಡುವುದಾಗಲಿ ಅಥವಾ ಸ್ನೇಹ ಬೆಳೆಸುವುದಾಗಲಿ ತಪ್ಪೆನಿಸಲಿಲ್ಲ. ಮೆಮೆ ತನ್ನ ಮುತ್ತಜ್ಜಿಯ ಆಲೋಚನೆಗಳನ್ನು ಸರಿಯಾಗಿ ಊಹಿಸಿದಳು ಮತ್ತು ನೃತ್ಯಕೂಟಕ್ಕೆ ಹೋಗಿ ಬಂದ ಮಾರನೆ ದಿನ ಸಾಮೂಹಿಕ ಪ್ರಾರ್ಥನೆಗೆ ಹೋಗಲು ಎಂದಿಗಿಂತ ಬೇಗ ಏಳುತ್ತಿದ್ದಳು. ಅಮೆರಿಕನ್ನರು ತಾನು ಪಿಯಾನೋದಂಥದನ್ನು ನುಡಿಸುವುದನ್ನು ಕೇಳಲು ಅಪೇಕ್ಷೆ ಪಟ್ಟಿದ್ದಾರೆ ಎಂದು ಮೆಮೆ ಹೇಳುವ ತನಕ ಇದ್ದ ಫೆರ್ನಾಂಡಳ ಪ್ರತಿರೋಧ ಕಡಿದು ಬಿತ್ತು. ವಾದ್ಯವನ್ನು ಮನೆಯಿಂದ ಹೊರಗಡೆ ಮಿಸ್ಟರ್ ಬ್ರೌನ್‌ನ ಮನೆಗೆ ತೆಗೆದುಕೊಂಡು ಹೋಗಲಾಯಿತು ಮತ್ತು ಅಲ್ಲಿ ಅವಳು ನುಡಿಸಿದ್ದಕ್ಕೆ ಪ್ರಾಮಾಣಿಕವಾದ ಚಪ್ಪಾಳೆ ಮತ್ತು ಉತ್ಸಾಹಪೂರ್ಣ ಅಭಿನಂದನೆಗಳನ್ನು ದೊರಕಿಸಿಕೊಂಡಳು. ಅಂದಿನಿಂದ ಕೇವಲ ನೃತ್ಯಕ್ಕಲ್ಲದೆ ವಾರಕ್ಕೆ ಒಂದು ಸಲ ಭಾನುವಾರ ಈಜುಕೊಳದಲ್ಲಿ ಈಜುವುದಕ್ಕೆ, ಊಟಕ್ಕೆ ಅವಳನ್ನು ಕರೆದರು. ಮೆಮೆ ವೃತ್ತಿಪರರಂತೆ ಈಜುವುದನ್ನು, ಟೆನ್ನಿಸ್ ಆಡುವುದನ್ನು ಮತ್ತು ಪೈನಾಪೆಲ್‌ನ ಹೋಳುಗಳ ಜೊತೆ ಹೊಗೆಸೊಪ್ಪು ತಿನ್ನುವುದನ್ನು ಕಲಿತಳು. ನೃತ್ಯ, ಈಜುವುದು ಮತ್ತು ಟೆನ್ನಿಸ್ ಆಡುವಾಗ ಬಹಳ ಬೇಗನೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲು ತೊಡಗಿದಳು. ಅವ್ರೇಲಿಯಾನೋ ಸೆಗುಂದೋ ಮಗಳ ಪ್ರಗತಿಯಿಂದ ಎಷ್ಟು ಉತ್ಸಾಹಗೊಂಡಿದ್ದನೆಂದರೆ ತಿರುಗಾಡುವ ಸೇಲ್ಸ್‌ಮನ್ ಒಬ್ಬನಿಂದ ಬಣ್ಣದ ಚಿತ್ರಗಳಿರುವ ಇಂಗ್ಲಿಷ್ ವಿಶ್ವಕೋಶದ ಆರು ಸಂಪುಟಗಳನ್ನು ತರಿಸಿಕೊಟ್ಟ. ಅವಳು ಅದನ್ನು ಬಿಡುವಿನ ಸಮಯದಲ್ಲಿ ಓದುತ್ತಿದ್ದಳು. ಹಿಂದೆ ಪ್ರೇಮಿಗಳ ವಿಷಯವನ್ನು ಕುರಿತು ಮತ್ತು ಗೆಳತಿಯರ ಸ್ನೇಹದ ಬಗ್ಗೆ ಇದ್ದ ಮನಸ್ಸನ್ನು ಮರುಹೊಂದಾಣಿಕೆಯಿಂದ ಓದುವುದು ತುಂಬಿಕೊಂಡಿತು. ಇದು ಅವಳ ಮೇಲೆ ಹೇರಿದ ಶಿಸ್ತಿನಿಂದ ಉಂಟಾದದ್ದಲ್ಲ. ಆದರೆ ಅವಳಿಗೆ ಸಾರ್ವಜನಿಕ ಸಂಗತಿಗಳಲ್ಲಿನ ನಿಗೂಢತೆಯಲ್ಲಿ ಆಸಕ್ತಿ ಕಳೆದು ಹೋಯಿತು. ತಾನು ಕುಡಿತದ ಅಮಲಿನಲ್ಲಿ ಮಾಡಿದ ಸಾಹಸವನ್ನು ಹುಡುಗಾಟದಲ್ಲಿ ಮಾಡಿದ್ದೆಂದು ಕಂಡು ಅವ್ರೇಲಿಯಾನೋ ಸೆಗುಂದೋಗೆ ಅದರ ಬಗ್ಗೆ ಹೇಳಿದಳು. ಅವನಿಗೆ ಅದು ಅವಳು ಮಾಡಿದ್ದಕ್ಕೆ ಪ್ರತಿಯಾಗಿ ತಮಾಷೆಯಾಗಿ ಕಂಡಿತು. ಅವನು ಅವಳಿಗೆ ವಿಶ್ವಾಸದಿಂದ ಹೊಟ್ಟೆ ಹುಣ್ಣಾಗುವಂತೆ ನಗುತ್ತ, “ನಿಮ್ಮಮ್ಮಂಗೆ ಇದು ಗೊತ್ತಾಗಿದ್ರೆ . . ” ಎಂದ. ಅವಳು ತನ್ನ ಮೊದಲ ಪ್ರೇಮದ ಬಗ್ಗೆ ತನಗೆ ತಿಳಿಸಬೇಕೆಂದು ಅದೇ ವಿಶ್ವಾಸದಿಂದ ಮಾತು ತೆಗೆದುಕೊಂಡ. ಮೆಮೆ ತನ್ನ ತಂದೆ ತಾಯಿಯ ಜೊತೆ ರಜಾ ದಿನಗಳನ್ನು ಕಳೆಯಲು ಬಂದಿದ್ದ ಕೆಂಚು ಕೂದಲ ಅಮೆರಿಕದ ಹುಡುಗನನ್ನು ಇಷ್ಟಪಟ್ಟಿರುವುದಾಗಿ ಹೇಳಿದಳು. ಅವ್ರೇಲಿಯಾನೋ ಸೆಗುಂದೋ ನಗುತ್ತ, “ನಿಂಗೇನು ಗೊತ್ತು. ನಿಮ್ಮಮ್ಮಂಗೆ ಗೊತ್ತಾದ್ರೇ . .” ಎಂದ. ಆದರೆ ಅವನು ತನ್ನ ದೇಶಕ್ಕೆ ವಾಪಸು ಹೋಗಿದ್ದಾನೆಂದು ಮೆಮೆ ಹೇಳಿದಳು. ಅವಳ ಪ್ರಬುದ್ಧ ವರ್ತನೆಯಿಂದ ಮನೆಯಲ್ಲಿ ಶಾಂತಿ ನೆಲೆಸಿತು. ಅನಂತರ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್ ಕಡೆ ಹೆಚ್ಚಿನ ಸಮಯ ವಿನಿಯೋಗಿಸಿದ ಮತ್ತು ಅವನ ದೇಹ ಹಾಗೂ ಆತ್ಮ ಕಳೆದ ದಿನಗಳಂತೆ ಹಾದರದಲ್ಲಿ ತೊಡಗಲು ಅನುವುಮಾಡಿಕೊಡದಿದ್ದರೂ ಅವುಗಳನ್ನು ವ್ಯವಸ್ಥೆ ಮಾಡುವ ಅವಕಾಶಗಳನ್ನು ಕಳೆದುಕೊಳ್ಳಲಿಲ್ಲ. ಆ ವೇಳೆಗಾಗಲೇ ಕೆಲವು ಕೀಗಳನ್ನು ಶೂ ಲೇಸಿನಿಂದ ಕಟ್ಟಿದ್ದ ಅಕಾರ್ಡಿಯನ್‌ನನ್ನು ಹೊರಗೆ ತೆಗೆದಿದ್ದ. ಮನೆಯಲ್ಲಿ ಅಮರಾಂತ, ಎಂದೂ ಮುಗಿಯದ ಮುಸುಕು ಹಾಕಿಕೊಳ್ಳುವ ಬಟ್ಟೆಯನ್ನು ನೇಯುತ್ತಿದ್ದಳು ಮತ್ತು ನೆರಳುಗಳ ಸಂಚಯದಲ್ಲಿ, ಹೊಸೆ ಅರ್ಕಾದಿಯೋನ ಭೂತ ಮಾತ್ರ ಕಾಣಿಸುತ್ತಿದ್ದ ಬಾದಾಮಿ ಮರದ ಕೆಳಗೆ ಉರ್ಸುಲಾ ಜರ್ಜರಿತಗೊಂಡು ಕಾಲೆಳೆಯುತ್ತಿದ್ದಳು. ಫೆರ್ನಾಂಡ ತನ್ನ ಅಧಿಕಾರವನ್ನು ಬಲಪಡಿಸಿಕೊಂಡಳು. ಅವಳು ತಿಂಗಳಿಗೊಮ್ಮೆ ಹೊಸೆ ಅರ್ಕಾದಿಯೋಗೆ ಬರೆಯುವ ಕಾಗದದಲ್ಲಿ ಸುಳ್ಳಿನ ಗೊಂಚಲುಗಳು ಇರುತ್ತಿರಲಿಲ್ಲ. ಅವಳು ಕಾಣದ ಡಾಕ್ಟರ್ ಜೊತೆ ನಡೆಸುವ ಪತ್ರ ವ್ಯವಹಾರವನ್ನು ಮಾತ್ರ ಮುಚ್ಚಿಟ್ಟಿದ್ದಳು. ಅವರು ಅವಳ ದೊಡ್ಡ ಕರುಳಿನಲ್ಲಿ ಗೆಡ್ಡೆ ಇದೆ ಎಂದು ವಿಶ್ಲೇಷಿಸಿದ್ದರು ಮತ್ತು ಮನೋಸ್ಪರ್ಶ ಶುಶ್ರೂಷೆಗೆ ತಯಾರಾಗಿದ್ದರು. +***** +ಮುಂದುವರೆಯುವುದು +ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […] +‘ಯಾಕೋ ದ್ಯಾವಪ್ಪಾಣಿ…?’ ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು… ‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ. ‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು […] +ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_770.txt b/Kannada Sahitya/article_770.txt new file mode 100644 index 0000000000000000000000000000000000000000..d4544e09e9162381f39a6be41dd227606f34fbb6 --- /dev/null +++ b/Kannada Sahitya/article_770.txt @@ -0,0 +1,137 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ ಹೂದಂಡೆಯ ನಡುವಿನ ನಾರಿನ ಹಾಗೆ ರಸ್ತೆ ಹರಿದಿತ್ತು. ಈ ಒತ್ತೊತ್ತು ಮನೆಗಳ ನಡುವಿನ ಒಂದು ಖಾಲಿ ಜಾಗದಿಂದಾಗಿ, ಆ ಬದಿಯ ಮನೆಗಳ ಸಾಲು ಥಟ್ಟನೆ ಅಲ್ಲಿ ತುಂಡಾಗಿತ್ತು. ಈ ಜಾಗದ ನೇರ ಎದುರಿಗೆ, ರಸ್ತೆಯ ಈಚೆ ಕಡೆ, ನನ್ನ ಅಜ್ಜನ ಮನೆ. +ನಾವು ಶಾಲೆಗೆ ರಜೆ ಬಂದಾಗಲೆಲ್ಲ ಅಜ್ಜನ ಮನೆಗೆ ಹೋಗುತ್ತಿದ್ದೆವು. ಪ್ರತಿ ಸಲ ಹೋದಾಗಲೂ ತವರು ಮನೆಯಲ್ಲಿಯ ತನ್ನ ಸ್ಥಾನಮಾನದ ಕುರಿತು ಅಮ್ಮ ಜಗಳ ತೆಗೆಯುತ್ತಿದ್ದಳು. ಅದೇ ಹೊತ್ತಿಗೆ ಅವಳ ನಾಲ್ಕು ತಂಗಿಯರಲ್ಲಿ ಯಾರಾದರೊಬ್ಬರು ತವರಿನಲ್ಲಿದ್ದರಂತೂ, ಅಕ್ಕತಂಗಿಯರಿಬ್ಬರೂ ಒಂದಾಗಿ ಅಜ್ಜ ಅಜ್ಜಿಯರ ಪಾಪಪ್ರಜ್ಞೆಯನ್ನು ಕೆಣಕುವಂಥ, ಘಟಿಸಿದ ಘಟಿಸದ ಘಟಿಸಬಹುದಾಗಿದ್ದ ಹಳೆಯ ಸಂಗತಿಗಳನ್ನು ಹೆಕ್ಕಿ ಹೆಕ್ಕಿ ಜಗಳಾಡುತ್ತಿದ್ದರು. ಏನನ್ನಾದರೂ ಈ ವಿಷಯಕ್ಕೆ ತಂದು ಜೋಡಿಸುವ ಕಲೆ ಎಲ್ಲ ಅಕ್ಕತಂಗಿಯರಿಗೂ ಕರಗತವಾಗಿತ್ತು. ನಡುವೆ ಮಾತು ಹೆಣ್ಣುಮಕ್ಕಳ ಹಕ್ಕು, ವರದಕ್ಷಿಣೆ, ಆಸ್ತಿಯಲ್ಲಿ ಪಾಲು ಇತ್ಯಾದಿಗಳನ್ನೂ ಹಾದು ಹೋಗುತ್ತಿತ್ತು. ಮಾತಿನಲ್ಲಿ ಸೂಕ್ಷ್ಮವಾಗಿ ಕಾನೂನಿನ ಪಾಶಗಳನ್ನು ಹೆಣೆಯಬಲ್ಲ ನನ್ನ ಅಮ್ಮನೇ ಇಂಥ ಮಾತುಗಳಿಗೆ ಕಾರಣಳೆಂಬುದು ನನ್ನ ಸಂಶಯ. ಯಾವುದೋ ಆಮಂತ್ರಣದಲ್ಲಿದ್ದ ಊನ, ಮರೆತ ಉಡುಗೊರೆ, ಆಡಿದ ಮಾತು, ಮಾಡದ ಪ್ರಶಂಸೆ, ಮುರಿದ ಹಪ್ಪಳ – ಹೀಗೆ ಕದನದ ಕಿಡಿ ಹಚ್ಚಲಿಕ್ಕೆ ಏನಾದರೂ ನೆವ ಸಾಕಿತ್ತು. ಜಗಳ ಎಷ್ಟು ಜೋರಾಗಿದೆ ಅನ್ನುವುದರ ಮೇಲಿನಿಂದ ನಾವು ವಾಪಸು ಹೊರಡುವ ದಿನ ಎಷ್ಟು ದೂರವಿದೆ ಎಂಬುದರ ಅಂದಾಜು ಸಿಗುತ್ತಿತ್ತು. +ಅಜ್ಜನ ಮನೆಯ ಮುಂದಿನ ಖಾಲಿ ಜಾಗ ಇನ್ನೂ ನಾಲ್ಕು ಮನೆಗಳಾದರೂ ಹಿಡಿಸಬಹುದಾದಷ್ಟು ದೊಡ್ಡದಿತ್ತು. ಆ ಜಾಗದ ಬಲಭಾಗದಲ್ಲಿರುವುದು ಪಂಡಿತರ ಮನೆ. ಅಜ್ಜನ ಮನೆಯ ಜಗುಲಿಯಿಂದ ನೋಡಿದರೆ ಖಾಲಿಜಾಗಕ್ಕೆ ತಾಗಿಯೇ ಇದ್ದ ಆ ಮನೆಯ ಎತ್ತರದ ಗೋಡೆ ಕಾಣುತ್ತಿತ್ತು. ಆ ಗೋಡೆಗಿದ್ದ ದೊಡ್ಡ ದೊಡ್ಡ ಕಿಟಕಿಗಳಿಗೆ ನಾಲ್ಕು ಬಾಗಿಲುಗಳು. ಕೆಳಗಿನ ಎರಡು ಸದಾ ಮುಚ್ಚಿರುತ್ತಿದ್ದವು ಮತ್ತು ಮೇಲ್ಬಾಗದ ಬಾಗಿಲುಗಳು ಅರೆಮನಸ್ಸಿನಿಂದ ಓರೆ ಮಾಡಿದಂತಿರುತ್ತಿದ್ದವು. ಕಿಟಕಿಯ ದಪ್ಪ ಸರಳುಗಳ ಬಣ್ಣ ಮಾಸಿ ಜಂಗು ಹಿಡಿದಿತ್ತು. ಗೋಡೆಯ ಮೇಲ್ಗಡೆ ಭಾಗದಲ್ಲಿ ‘ದಮ್ಮಿನ ಮೇಲೆ ಗುಣಕಾರಿ – ಡಾ. ಪುರೋಹಿತರ ಔಷಧಿ ಪರಿಣಾಮಕಾರಿ’ ಎಂದು ಆಳೆತ್ತರದ ಅಕ್ಷರಗಳಲ್ಲಿ ಗುಂಡಾಗಿ ಬರೆದಿದ್ದರು. ಈ ಜಾಹಿರಾತನ್ನು ಬರೆಸಿದ ನಂತರ ಡಾ. ಪುರೋಹಿತ್ ಬಹಳ ಕಾಲ ಬದುಕಲಿಲ್ಲ ಎಂದು ಒಮ್ಮೆ ಅಜ್ಜಿ ಹೇಳುತ್ತ ಈ ಜಾಹಿರಾತು, ಆ ಮನೆ, ಆ ಗೋಡೆಯ ಬಗ್ಗೆ ಮಾತಾಡಿದ್ದು ಪೂರ್ತಿ ಅರ್ಥವಾಗದೇ ನಿಗೂಢವಾಗಿ ತೋರಿತ್ತು. ಡಾ. ಪುರೋಹಿತ್ ಕಾಲವಶರಾದ ಎಷ್ಟೋ ವರ್ಷಗಳ ನಂತರವೂ ಜಾಹಿರಾತು ಮಾತ್ರ ಹಾಗೆಯೇ ಇದೆ. ಇದನ್ನು ಕಣ್ಣ ಮುಂದೆ ತರಿಸಿಕೊಳ್ಳದೇ ಎದುರು ಮನೆಯನ್ನಾಗಲೀ, ಆ ಖಾಲಿ ಜಾಗವನ್ನಾಗಲೀ ನೆನೆಯುವುದೇ ಸಾಧ್ಯವಿಲ್ಲ. ನಾವು ಮಕ್ಕಳು ಪ್ರತಿ ಸಲ ಜಗುಲಿಗೆ ಬಂದಿದ್ದೇ ಕಣ್ಣಿಗೆ ಬೀಳುವ ಈ ಅಕ್ಷರಗಳನ್ನು ದೊಡ್ಡದಾಗಿ ಉಚ್ಛರಿಸುತ್ತಿದ್ದೆವು. ನನ್ನ ಅಜ್ಜನ ಹಲವು ಮೊಮ್ಮಕ್ಕಳಲ್ಲಿ ಹೊಸದಾಗಿ ಶಾಲೆ ಸೇರಿರುವವರು ಒಬ್ಬಿಬ್ಬರಾದರೂ ಇರುತ್ತಿದ್ದರು. ಅಂಥವರಿಗೆ ‘ಇದನ್ನು ಓದು ನೋಡೋಣ’ ಅಂದಾಗ ಅವರು ಒಂದೊಂದೇ ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ‘ದ……ಮ್ಮಿ…….ನ……. ಮೇ…… ಲೆ….’ ಎಂದು ಓದಿದರೆ ಅವರಿಗಿಂತ ತುಸು ದೊಡ್ಡವರಾದ ನನ್ನಂಥ ಮಕ್ಕಳಿಗೆ ಸರಾಗ ಓದಬಲ್ಲ ನಮ್ಮ ಶಕ್ತಿಯ ಬಗ್ಗೆಯೇ ಒಣಜಂಬ ಬಂದುಬಿಡುತ್ತಿತ್ತು. ಆಗ ನಾಗೇಶಮಾಮ ಅಲ್ಲಿದ್ದರೆ ಸುಪರಿಂಟೆಂಡೆಂಟ, ಸ್ವಾತಂತ್ರ್ಯಾಕಾಂಕ್ಷಿ ಮುಂತಾದ ಶಬ್ದಗಳನ್ನು ಬರೆಯಲು ಹೇಳಿ ನಮ್ಮ ಜಂಬ ಮುರಿಯುತ್ತಿದ್ದರು. +ಎದುರು ಇದ್ದುದು ಮನೆಯಲ್ಲ ದೊಡ್ಡ ರಾಜವಾಡೆಯೇ ಆಗಿದ್ದಿರಬೇಕು ಅನಿಸುವಷ್ಟು ದೊಡ್ಡದಾಗಿತ್ತು. ಮನೆಯದೇ ಒಂದು ಭಾಗದಲ್ಲಿ ಅಂಗಡಿಯಿತ್ತು. ಎದುರಿನಿಂದ ನೋಡಿದರೆ ಬಲಭಾಗದಲ್ಲಿ ಇರುವ ಅಂಗಡಿ ಮತ್ತು ಎಡಭಾಗದಲ್ಲಿರುವ ಮನೆಗೆ ಇದ್ದ ಪ್ರತ್ಯೇಕ ಬಾಗಿಲುಗಳು ಕಾಣುತ್ತಿದ್ದವು. ಇಡಿಯ ಕಟ್ಟಡದ ನೆಲಗಟ್ಟು ಸುಮಾರು ಒಂದೂವರೆ ಆಳಿನಷ್ಟು ಎತ್ತರವಿದ್ದು, ಜಗುಲಿ ಏರಬೇಕೆಂದರೆ ಹತ್ತು ಮೆಟ್ಟಿಲು ಹತ್ತಬೇಕಿತ್ತು. ಮುಂಭಾಗದ ಸುಧೃಡ ಕಂಬಗಳು, ರಸ್ತೆಯಿಂದಲೇ ಕಾಣಿಸುವ ದಪ್ಪ ದಪ್ಪ ತೊಲೆಗಳು, ಮನೆಯ ಪ್ರಧಾನಬಾಗಿಲಿನ ಚಿತ್ತಾರಗಳು ಒಂದಾನೊಂದು ಕಾಲದ ತಮ್ಮ ವೈಭವವನ್ನು ಹಿಡಿದಿಡಲು ಹೆಣಗುತ್ತಿರುವಂತೆ ತೋರುತ್ತಿದ್ದವು. ಆರೈಕೆಯ ಸ್ಪರ್ಷವಿಲ್ಲದ ಆ ಕಟ್ಟಡದ ಮೇಲೆ ಕಾಣದ ಕೈಯೊಂದು ಉದಾಸೀನದ ತೆಳ್ಳನೆಯ ಪರದೆಯನ್ನು ಹರಡಿ ವಿಜೃಂಭಣೆಯೊಂದನ್ನು ನಿಧಾನವಾಗಿ ಕುರುಹಾಗಿಸುತ್ತ, ಅದರ ಕಾಂತಿಯನ್ನು ಮಸುಕುಗೊಳಿಸುತ್ತಿರುವಂತೆ ಅನಿಸುತ್ತಿತ್ತು. ಮಂಗಳೂರು ಹೆಂಚಿನ ಆ ಮನೆಯ ಇಳಿಜಾರು ಮಾಡಿನ ಮೇಲೆ ಕಸಕಡ್ಡಿ ತುಂಬಿಕೊಂಡು, ಪಾಚಿಗಟ್ಟಿದ ಹೆಂಚು ಬಿಸಿಲಿಗೆ ಕಪ್ಪಾಗಿತ್ತು. +ಅಗಲವಾದ ಹತ್ತು ಮೆಟ್ಟಲು ಹತ್ತಿ ಹೋದರೆ ಉದ್ದ ಜಗುಲಿ. ಅಂಗಡಿಗೆ ಹೋಗುವವರು ಇತ್ತ ಕಡೆ ಬರಬಾರದು ಎಂದು ಸೂಚಿಸುವ ಹಾಗೆ ನಡುವೆ ಒಂದು ಚಿಕ್ಕ ತೆಣೆಯಿತ್ತು. ಆ ಅಂಗಡಿಗೆ ಬಿಡಿ ಹಲಗೆಗಳ ಬಾಗಿಲು. ಅಂಗಡಿ ಮುಚ್ಚಿದಾಗ ಹಲಗೆಗಳ ಮೇಲೆ ಬಿಳಿಯ ಬಣ್ಣದಿಂದ ಎಂದೋ ಬರೆದು ಮಾಸಿಹೋಗಿರುವ ಒಂದರಿಂದ ಇಪ್ಪತ್ತೆಂಟು ಅಂಕಿಗಳು ಕಾಣುತ್ತಿದ್ದವು. ನಾವು ಬೇಗ ಎದ್ದ ದಿವಸ, ಮಧುಕರ ಹಲಗೆಗಳನ್ನು ಒಂದೊಂದಾಗಿ ಬದಿಗೆ ಎತ್ತಿಟ್ಟು ಅಂಗಡಿ ತೆರೆಯುವುದು ಕಣ್ಣಿಗೆ ಬಿದ್ದರೆ, ಯಾವ ಕ್ರಮದಲ್ಲಿ ಅವುಗಳನ್ನು ತೆಗೆಯುತ್ತಾನೆ ಎಂದು ಪಂಥ ಕಟ್ಟುತ್ತಿದ್ದೆವು. +ಅಂಗಡಿಯ ಒಳಗೆ ಎರಡೂ ಕಡೆ ಸಾಲು ಸಾಲಾಗಿ ಕರಿಮರದ ಕಪಾಟುಗಳಿದ್ದವು. ಅವುಗಳಲ್ಲಿ ಮಾತ್ರ ಏನೂ ಇರಲಿಲ್ಲ. ಇಡೀ ಅಂಗಡಿಯೇ ಖಾಲಿಯಾಗಿತ್ತು. ಒಳಗಿನ ಕತ್ತಲೆಯಿಂದಾಗಿ ಮತ್ತು ಹಿಂಭಾಗದ ಗೋಡೆಯ ಮಂಕು ಬಣ್ಣದಿಂದಾಗಿ ಫಕ್ಕನೆ ರಸ್ತೆಯಿಂದ ನೋಡಿದರೆ ಅದೊಂದು ಕೊನೆಯೇ ಇಲ್ಲದ ಗುಹೆಯ ಹಾಗೆ, ಒಂದು ಸುರಂಗದ ಹಾಗೆ ಕಾಣಿಸುತ್ತಿತ್ತು. ಅಂಗಡಿಯ ಮುಂಗಟ್ಟಿನ ಮೇಲೆ ಬಾಯಿತೆರೆದ ಗೋಣಿಚೀಲದಲ್ಲಿ ತೆಂಗಿನಕಾಯಿಗಳು, ಒಂದು ಹಿತ್ತಾಳೆಯ ತಟ್ಟೆಯಲ್ಲಿ ಕುಂಕುಮದ ಗುಡ್ಡ, ಒಂದು ಮೊರದಲ್ಲಿ ಊದುಕಡ್ಡಿಗಳು, ಇನ್ನೊಂದು ಬುಟ್ಟಿಯಲ್ಲಿ ಹೂವಿನ ಚಿಕ್ಕ ಚಿಕ್ಕ ಮಾಲೆಗಳು – ಇಷ್ಟು ಬಿಟ್ಟರೆ ಅಲ್ಲಿ ಇದ್ದುದು ಆರೆಂಟು ಪೆಪ್ಪರಮಿಂಟಿನ ಭರಣಿಗಳು ಮಾತ್ರ. ಜಗುಲಿಯ ತುದಿಯಲ್ಲಿ, ರಸ್ತೆಯಿಂದಲೇ ಕಣ್ಣಿಗೆ ಬೀಳುವ ಹಾಗೆ, ಹಿಡಿಕೆಯಿರುವ ಎರಡು ಚಿಕ್ಕ ಬೆತ್ತದ ಬುಟ್ಟಿಗಳಲ್ಲಿ ಒಂದು ತೆಂಗಿನಕಾಯಿ, ಒಂದು ಊದಿನಕಡ್ಡಿಯ ಕಟ್ಟು, ಹೂವಿನ ಮಾಲೆ, ಒಂದು ಕುಂಕುಮ ಪೊಟ್ಟಣ ಮತ್ತು ಒಂದು ಹಸಿರು ಬಟ್ಟೆಯ ಖಣ ಇಟ್ಟು, ಪಕ್ಕದಲ್ಲಿ ಒಂದು ತಗಡಿನ ಬೋರ್ಡಿನ ಮೇಲೆ ‘ಇಲ್ಲಿ ಮಾರಿಕಾಂಬಾ ದೇವಿಯ ಉಡಿ ತುಂಬುವ ಬುಟ್ಟಿಗಳು ದೊರೆಯುತ್ತವೆ’ ಎಂದು ಬಿಳಿಯ ಬಣ್ಣದಲ್ಲಿ ಸೊಟ್ಟ ಅಕ್ಷರಗಳಲ್ಲಿ ಬರೆದಿತ್ತು. +ಈ ಅಂಗಡಿಗೆ ಊರಿನ ಯಾರೂ ಬರುತ್ತಿರಲಿಲ್ಲ. ಅವರು ನಿತ್ಯ ಕೊಳ್ಳುವ ಯಾವ ವಸ್ತುವೂ ಅಲ್ಲಿರಲಿಲ್ಲ. ಪರವೂರಿನಿಂದ ದೇವಸ್ಥಾನಕ್ಕೆ ಬಂದ ಜನ ಈ ರಸ್ತೆಯ ಮೂಲಕ ನಡೆದು ಹೋದರೆ, ಈಗಲೇ ಒಯ್ದು ದೇವರಿಗೆ ಅರ್ಪಿಸಬಹುದು ಅನ್ನುವಂತೆ ಸಿದ್ಧವಾಗಿರುವ ಬುಟ್ಟಿಗಳನ್ನು ನೋಡಿ ಒಂದು ಬುಟ್ಟಿ ಕೊಳ್ಳುವರು. ಯಾವಾಗಲಾದರೊಮ್ಮೆ ಅವರ ಜೊತೆ ಬಂದ ಮಕ್ಕಳು ಪೆಪ್ಪರಮಿಂಟಿಗಾಗಿ ಹಟ ಮಾಡುವರು. ಮರಳಿ ಹೋಗುವಾಗ ಖಾಲಿ ಬುಟ್ಟಿ ಹಿಂತಿರುಗಿಸಬೇಕೆಂದು ಎಷ್ಟು ಒತ್ತಿ ಹೇಳಿದರೂ ಕೆಲವರು ಮರೆಯುತ್ತಿದ್ದುದರಿಂದ ಅವರು ಹಿಂತಿರುಗಿ ಬರುವುದು ತುಸು ತಡವಾದರೂ ಮಧುಕರ ಆತಂಕಗೊಳ್ಳುತ್ತಿದ್ದ. ಅವನು ಪದೇ ಪದೇ ಜಗುಲಿಯ ತುದಿಗೆ ಬಂದು, ದೇವಸ್ಥಾನದತ್ತ ನೋಟ ಬೀರಿ, ಹಿಂತಿರುಗಿ ಗಲ್ಲೆಯ ಮೇಲೆ ಕೂತಿದ್ದು ಅಜ್ಜನ ಮನೆಯವರ ಕಣ್ಣಿಗೆ ಬಿದ್ದರೆ ‘ಇವನ ಬುಟ್ಟಿ ಬರಲಿಲ್ಲ ಅಂತ ಕಾಣ್ತದೆ. ಕುಂಡೆ ಸುಟ್ಟ ಬೆಕ್ಕಿನ ಹಾಗೆ ಓಡಾಡುತ್ತಿದ್ದಾನೆ’ ಎಂದು ಹೇಳುತ್ತಿದ್ದರು. ಒಂದು ಬೆತ್ತದ ಬುಟ್ಟಿಯ ಸಲುವಾಗಿ ಇಷ್ಟು ಕಳವಳಪಡಬೇಕಾದ ಅವನ ಪರಿಸ್ಥಿತಿಯ ಬಗ್ಗೆ ಕರುಣೆ, ಅಸಹನೆ, ಅವಹೇಳನ ಎಲ್ಲವೂ ಈ ಮಾತುಗಳಲ್ಲಿ ಇದ್ದ ಹಾಗೆ ಅನಿಸುತ್ತಿತ್ತು. ಅದನ್ನು ತಡವಾಗಿ ಮರಳಿ ತಂದವರು ‘ರಾಯರೇ ತಗೊಳ್ಳಿ’ ಎಂದು ಹೇಳಿ ಕೊಟ್ಟು ಹೋಗುವಾಗ ತನ್ನೊಳಗೆ ಹುಟ್ಟಿದ ನಿರಾಳತೆಯಿಂದ ಅವಮಾನಿತನಾದವನ ಹಾಗೆ ‘ಇರಲಿ ಇರಲಿ ಅಲ್ಲಿಯೇ ಇಟ್ಟು ಹೋಗಿ’ ಎಂದು ಮಧುಕರ ಅಲಕ್ಷ್ಯ ನಟಿಸುತ್ತಿದ್ದುದು ಎಲ್ಲರಿಗೂ ಗೊತ್ತಾಗಿ ಅದೊಂದು ಅಪಹಾಸ್ಯದ ವಿಷಯವಾಗಿತ್ತು. ನಾಗೇಶಮಾಮ ಅಲ್ಲಿ ಇದ್ದರಂತೂ ‘ಈಗ ನೋಡು, ಅವರು ಅತ್ತ ಕಡೆ ಹೋದದ್ದೇ ಬುಟ್ಟಿಯನ್ನು ಹೇಗೆ ತಿರುಗಿಸಿ ತಿರುಗಿಸಿ ಪರೀಕ್ಷೆ ಮಾಡುತ್ತಾನೆ’ ಅನ್ನುತ್ತಿದ್ದನು. ಅಜ್ಜ ಮಾತ್ರ ಇಂಥ ಹಗುರ ಮಾತು ಕಿವಿಗೆ ಬಿದ್ದರೆ ‘ಕಳಕೊಂಡ ಶ್ರೀಮಂತಿಕೆಯ ನೋವು ಏನೆಂದು ನಿಮಗೆ ಗೊತ್ತಿಲ್ಲ’ ಎಂದು ಗಂಭೀರವಾಗಿ ಹೇಳುತ್ತಿದ್ದರು. +ಅಂಗಡಿಯ ಒಳಗೆ, ಬಲತುದಿಯಲ್ಲಿ ಭವ್ಯವಾದ ಗಲ್ಲಾ ಪೆಟ್ಟಿಗೆ. ಅದರ ಹಿಂದೆ ಇರುವ ಕಟ್ಟಿಗೆಯ ಕುರ್ಚಿಯ ಮೇಲೆ ಮಧುಕರ ಕೂರುವುದು. ಮಾಸಿದ ಬಿಳಿಯ ಪೈಜಾಮ ಮತ್ತು ಬಿಳಿಯ ಅಂಗಿ ಹಾಕಿಕೊಂಡು, ಮುಂಭಾಗದಲ್ಲಿ ಬೋಳಾಗಿ ಹೋದ ತನ್ನ ತಲೆಯನ್ನು ಎಡಗೈಯಿಂದ ಆಗಾಗ ಸವರಿಕೊಳ್ಳುತ್ತ ಪೇಲವ ಕಣ್ಣುಗಳಿಂದ ಸುಮ್ಮನೇ ರಸ್ತೆಯನ್ನು ನೋಡುತ್ತ ಯಾವುದೋ ಭಾರೀ ವ್ಯಾಪಾರದ ನಿರೀಕ್ಷೆಯಲ್ಲಿರುವಂತೆ ದಿನವಿಡೀ ಗಲ್ಲಾದ ಮೇಲೆ ಕೂತೇ ಇರುವನು. +ಮಧುಕರ ತಾನಾಗಿಯೇ ಯಾರನ್ನೂ ಮಾತಾಡಿಸಲು ಹೋಗುತ್ತಿರಲಿಲ್ಲ. ಅಜ್ಜ ಪ್ರತಿದಿನ ಬೆಳಿಗ್ಗೆ ತಮ್ಮ ಅಂಗಡಿಗೆ ಹೋಗುವಾಗ ಅವನನ್ನು ಕರೆದು ಮಾತಾಡಿಸುತ್ತಿದ್ದರು. ಅಜ್ಜ ಮನೆಯಿಂದ ಹೊರಬೀಳುತ್ತಲೇ ಅವನು ಕೂತಲ್ಲೇ ಮಿಸುಕಾಡಿ ಗಲ್ಲೆಯಿಂದ ಏಳುವ ತಯಾರಿ ಮಾಡುತ್ತಿದ್ದ. ಅವರು ಅವನ ಅಂಗಡಿಯ ಎದುರು ಬಂದು ‘ಮಧುಕರಾ…’ ಎಂದದ್ದೇ ಎದ್ದು ಬಂದು ಮೆಟ್ಟಲಿಳಿದು ವಿಧೇಯನಾಗಿ ನಿಲ್ಲುತ್ತಿದ್ದ. ಒಂದು ನಿಮಿಷದ ಈ ನಿತ್ಯ ಕುಶಲೋಪರಿ ಮುಗಿಸಿ ಅಜ್ಜ ತಮ್ಮ ಅಂಗಡಿಗೆ ಹೊರಡುತ್ತಿದ್ದರು. +* +* +* +ಅಜ್ಜನ ಮನೆಯೆದುರು ಖಾಲಿ ಜಾಗ ಇದ್ದರೂ ಮಕ್ಕಳನ್ನು ಅಲ್ಲಿ ಆಡಲು ಬಿಡುತ್ತಿರಲಿಲ್ಲ. ಪಂಡಿತರ ಮನೆಗೇ ಸೇರಿದ ಅದನ್ನು ಯಾರೂ ಯಾವುದಕ್ಕೂ ಉಪಯೋಗಿಸುತ್ತಿದ್ದ ಹಾಗೆ ಕಾಣಿಸುತ್ತಿರಲಿಲ್ಲ. +‘ಇಂಥ ಒಂದು ಬೀದಿಯಲ್ಲಿ ಈ ಜಾಗಕ್ಕೆ ಬಂಗಾರದ ಬೆಲೆ ಬರಬಹುದು’ ಎಂದು ನನ್ನ ಚಿಕ್ಕಮ್ಮನ ಗಂಡ, ಮಧ್ಯಾಹ್ನದ ಊಟದ ನಂತರ ಅಜ್ಜನ ಮನೆಯ ಜಗುಲಿಯಲ್ಲಿ ಕೂತು, ಎದುರಿನ ಜಾಗವನ್ನೇ ನಿಟ್ಟಿಸುತ್ತ ನಾಗೇಶಮಾಮನಿಗೆ ಹೇಳಿದ್ದರು. +ವೀಳ್ಯದೆಲೆಯನ್ನು ಅಂಗೈಯಲ್ಲಿ ಹಿಡಿದು ಪರೀಕ್ಷಿಸುತ್ತ, ತಕ್ಕ ಅಡಿಕೆಗಾಗಿ ಸಂಚಿಯಲ್ಲಿ ಬೆರಳುಗಳನ್ನು ಇಳಿಬಿಟ್ಟು ನಾಗೇಶಮಾಮಾ ‘ಆ ಹೆಂಗಸು ಇರುವವರೆಗೆ ಇದರ ಸುದ್ದಿಗೆ ಯಾರೂ ಬರುವುದಿಲ್ಲ ಭಾವಾ’ ಅಂದ. +‘ಈ ಕಾಲದಲ್ಲಿ ಇದನ್ನೆಲ್ಲ ನಂಬುವುದು ಕಷ್ಟವೋ ಮಾರಾಯ’ ಎಂದು ಅವರೆಂದರು. ಹೊನ್ನಾವರದಲ್ಲಿ ಅವರದು ನಾನಾ ವ್ಯಾಪಾರಗಳಿದ್ದವು. ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆಂದು, ಶುಕ್ರದೆಸೆ ನಡೆಯುತ್ತಿದೆಯೆಂದು, ಏನನ್ನಾದರೂ ಕೈಹಿಡಿದು ದಕ್ಕಿಸಿಕೊಳ್ಳಬಲ್ಲರೆಂದು ಅವರ ಖ್ಯಾತಿ. ಮಚವೆಯಿಂದ ಹಿಡಿದು ಐಸ್‌ಫಾಕ್ಟರಿಯವರೆಗೆ ಅನೇಕ ವ್ಯವಹಾರಗಳಲ್ಲಿ ನುರಿತವರಾಗಿದ್ದರು. ಎದುರು ಜಾಗದ ಮೂಲಕ ಮಾಡಬಹುದಾದ ಲಾಭವನ್ನು ಮನಸ್ಸಲ್ಲೇ ಅಳೆಯುತ್ತ ಮಾತಾಡಿದರು. +ಅವರ ಇಂಗಿತ ಅರಿತವನಂತೆ ನಾಗೇಶಮಾಮಾ ಆ ಜಾಗದ ಬಗ್ಗೆ ಇನ್ನಷ್ಟು ಹೇಳತೊಡಗಿದ. +‘ಮೊನ್ನೆ ಮೊನ್ನೆ ಕಿಮಾನಿಯಿಂದ ಹಮ್ಮಣ್ಣನ ಮಗ ಎತ್ತಿನ ಗಾಡಿ ಹೊಡಕೊಂಡು ಬಂದಿದ್ದ. ಅವನು ಇದೇ ಮೊದಲನೇ ಸಲ ಇಲ್ಲಿಗೆ ಬಂದಿದ್ದು. ಮಧ್ಯಾಹ್ನದ ಹೊತ್ತು. ನಾವೆಲ್ಲ ಒಳಗಡೆ ಇದ್ದೆವು. ಮುಂದೆ ಖಾಲಿ ಜಾಗ ಕಾಣಿಸಿತು. ಎತ್ತು ಮತ್ತು ಗಾಡಿಯನ್ನು ಇಲ್ಲೇ ಕಟ್ಟಿ, ಹುಲ್ಲು ಹಾಕಿ ಮನೆಯ ಹಿಂದೆ ಬಂದು ಮಾತಾಡಿಸಿದ. ಆಸರಿಗೆ ಕೊಟ್ಟು ಕೂರಿಸಿದೆವು. ‘ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟು’ ಎಂದು ಅಮ್ಮ ಹೇಳಿದಾಗಲೇ ಅವನು ಅವುಗಳನ್ನು ಮುಂದಿನ ಜಾಗದಲ್ಲಿ ಕಟ್ಟಿ ಬಂದ ವಿಷಯ ನಮಗೆ ಗೊತ್ತಾಯಿತು. ‘ಅಯ್ಯಯ್ಯೋ ಬೇಡವೋ ಮಾರಾಯ. ಹಿಂದೆ ಕಟ್ಟು, ಹಿಂದೆ ಕಟ್ಟು’ ಎಂದು ಅಮ್ಮ ಅವಸರ ಮಾಡಿ ಅವನಿಗೆ ನೀರು ಕುಡಿಯಲಿಕ್ಕೂ ಬಿಡದೇ ಹಿಂದೆ ತರಿಸಿ ಕಟ್ಟಿದರು. ಗಟ್ಟಿಮುಟ್ಟಾಗಿ ಒಳ್ಳೇ ಆನೆಯ ಮರಿಯ ಹಾಗೆ ಇದ್ದ ಎತ್ತುಗಳು. ವಾಪಸು ಕಿಮಾನಿಗೆ ಹೋಗುವಾಗ ಬಂಡಲ ಘಟ್ಟದ ಮೇಲೆ ಮೋಟರು ಹೊಡೆದು ಒಂದು ಎತ್ತಿನ ಕಾಲು ಮುರಿದು ಹೋಗಿದೆಯಂತೆ. ಇದಕ್ಕೆ ಏನು ಹೇಳುವುದು?’ +‘ನಾನು ಅವಳನ್ನು ನೋಡೇ ಇಲ್ಲ. ಅವಳು ಕಿಟಕಿಯಲ್ಲೇ ಕೂತಿರುತ್ತಾಳಂತೆ ಹೌದೇನೋ?’ +‘ಈ ಕಡೆಯಿಂದ ಕಾಣುವುದಿಲ್ಲ. ಆ ಗೋಡೆ ಇದೆಯಲ್ಲ, ಅದರ ಕೊನೆಯಲ್ಲಿರುವ ಕಿಟಕಿಯಲ್ಲಿ ಆಗಾಗ ಮೋರೆ ಕಾಣಿಸುತ್ತದೆ ಅನ್ನುತ್ತಾರೆ. ನನಗಂತೂ ಅಲ್ಲಿ ಕತ್ತಲು ಬಿಟ್ಟರೆ ಬೇರೇನೂ ಕಾಣುವುದಿಲ್ಲ’ +‘ನಿನ್ನ ಅಪ್ಪ ಇದನ್ನೆಲ್ಲ ಒಪ್ಪುವುದಿಲ್ಲ ಅಲ್ಲವೇನೋ?’ +‘ಅವರನ್ನು ಬದಲಾಯಿಸುವುದು ದೇವರಿಗೂ ಶಕ್ಯವಿಲ್ಲ. ಕಣ್ಣೆದುರು ಇರುವುದನ್ನು ನೋಡಲಿಕ್ಕೆ ತಯಾರಿಲ್ಲದವರಿಗೆ ಏನು ಹೇಳುವುದು. ಅಷ್ಟೆಲ್ಲ ಯಾಕೆ – ಹೋದ ವರ್ಷ ಗೋವೆಯಿಂದ ನರಸಿಂಹ ಬಾರಕೂರನ ಮಗಳು ಶಕ್ಕು ಬಂದಿದ್ದಳು. ಅವಳ ಮಗ ಹದಿನಾರು ವರ್ಷದವನು. ಯಾರ ಕಣ್ಣೂ ಬೀಳುವ ಹಾಗೆ ಕಟ್ಟುಮಸ್ತಾಗಿದ್ದ ಹುಡುಗ. ಇದು ಸಂಬಂಧದ ಮನೆಯಲ್ಲವೇ? ಎಲ್ಲರೂ ಇಲ್ಲಿಗೂ ಬಂದಿದ್ದರಂತೆ. ಮಾರನೇ ದಿನವೇ ಹುಡುಗ ಜ್ವರ ಹಿಡಿದು ಮಲಗಿದವನು ಅದು ಟೈಫಾಯ್ಡಿಗೆ ತಿರುಗಿ ಅವನನ್ನು ಉಳಿಸಿಕೊಳ್ಳಲು ಸಾಕುಸಾಕಾಯಿತು. ಮತ್ತೆ ಅವಳ ಕಣ್ಣಿಗೆ ಬೀಳುವುದಿಲ್ಲ, ಆ ಮನೆಗೆ ಕಾಲು ಹಾಕುವುದಿಲ್ಲ ಎಂದು ಶಕ್ಕು ಶಪಥ ಮಾಡಿ ಹೋದಳು. ಇದಕ್ಕೆ ಏನು ಹೇಳುವುದು?’ +‘ಈಗ ಈ ಜಾಗ ಕಡಿಮೆಗೆ ಸಿಗಬಹುದು. ಈಗ ಕೊಂಡು ಇಟ್ಟರೆ ಮುಂದೆ ಏನಾದರೂ ಮಾಡಬಹುದು.’ +‘ಅವನು ಮಾರಬೇಕಲ್ಲ. ದಿವಸಕ್ಕೆ ಹತ್ತು ರೂಪಾಯಿ ವ್ಯಾಪಾರ ಆಗುವುದಿಲ್ಲ. ಅದೇನು ಗಾಳಿ ತಿಂದು ಬದುಕುತ್ತಾರೋ ಏನೋ. ಮದುವೆ ಮುಂಜಿಗೂ ಹೋಗುವುದಿಲ್ಲ. ಬಾರೋ ಅಂದರೆ ಭಾರೀ ವ್ಯಾಪಾರಸ್ಥನ ಹಾಗೆ ‘ಅಂಗಡಿ ಬಿಟ್ಟು ಹ್ಯಾಗೆ ಬರೋದು? ಇಲ್ಲಿ ಗಲ್ಲೆಯ ಮೇಲೆ ಯಾರು ಕೂರ್ತಾರೆ?’ ಅಂತಾನೆ. ಹಿಂದೆ ಒಂದು ಸಲ ನಾನೇ ಇವನ ಮನಸ್ಸು ನೋಡುವಾ ಎಂದು ಈ ಜಾಗ ಮಾರಿಬಿಡು ಎಂದು ಹೇಳಿದ್ದೆ. ಏನು ಉತ್ತರ ಕೊಟ್ಟ ಗೊತ್ತೇನು? ಅದು ಮಾರಿದರೆ ಗಿರಾಕಿಗಳಿಗೆ ಬಂಡಿ ಕಟ್ಟಲಿಕ್ಕೆ ಜಾಗ ಇರುವುದಿಲ್ಲ ಅಂದ. ಅವನ ಅಪ್ಪನ ಭರಾಟೆಯ ದಿವಸಗಳಲ್ಲಿ ಇಲ್ಲಿ ಖಾಯಂ ಚಪ್ಪರ ಹಾಕಿ, ಗಿರಾಕಿಗಳ ಬಂಡಿ ಕಟ್ಟಲಿಕ್ಕೆ ಉಪಯೋಗಿಸುತ್ತಿದ್ದರಂತೆ. ಅಲ್ಲ, ಮನುಷ್ಯನ ಭ್ರಮೆಗೂ ಒಂದು ಮಿತಿ ಉಂಟು.’ +‘ಅವನು ನಿನ್ನ ಅಪ್ಪನ ಮಾತು ಕೇಳಬಹುದೋ ಏನೋ’ +‘ಅಪ್ಪನನ್ನು ಒಪ್ಪಿಸುವುದು ಸಾಧ್ಯವಿಲ್ಲ. ಬೇರೆ ಯಾರ ಮೂಲಕ ಹೋದರೂ ಮಧುಕರ ಅಪ್ಪನನ್ನು ಕೇಳದೇ ಒಂದು ಹೆಜ್ಜೆ ಇಡುವುದಿಲ್ಲ. ಈ ವ್ಯವಹಾರ ಮರೆತುಬಿಡಿ’ ಬಾಯಲ್ಲಿ ತುಂಬಿಕೊಂಡ ರಸದಿಂದಾಗಿ ಕೊನೆಕೊನೆಯ ಶಬ್ದಗಳನ್ನು ಮೊದ್ದುಮೊದ್ದಾಗಿ ಉಚ್ಛರಿಸುತ್ತ ನಾಗೇಶಮಾಮ ಮಾತು ಮುಗಿಸಿ ಕವಳ ಪೀಕಲು ಜಗುಲಿಯ ತುದಿಗೆ ಹೋಗಿದ್ದ. +* +* +* +ಯಾರೂ ಆ ಹೆಂಗಸಿನ ಬಗ್ಗೆ ಹೀಗೆ ಹೀಗೆ ಎಂದು ಪೂರ್ತಿಯಾಗಿ ಹೇಳಿರದಿದ್ದರೂ ಕಿವಿಗೆ ಬಿದ್ದ ಮಾತುಕತೆ, ಕದ್ದು ಕೇಳಿದ ಸಂಭಾಷಣೆ, ಹುಡುಗಾಟಿಕೆಯ ಕುತೂಹಲದಲ್ಲಿ ನಡೆಸಿದ ಪತ್ತೇದಾರಿಕೆಯಿಂದ ಅವಳ ಚಿತ್ರವೊಂದು, ಕಾಲಾಂತರದಲ್ಲಿ ನನ್ನಲ್ಲಿ ಮೂಡಿತ್ತು. ನನ್ನ ಅಮ್ಮ ಮತ್ತು ಅಜ್ಜ ಮಾತ್ರ ಅವಳ ಬಗ್ಗೆ ಮೃದುವಾಗಿದ್ದುದು ಅವರ ಮಾತಿನಲ್ಲೇ ಗೊತ್ತಾಗುತ್ತಿತ್ತು. ಉಳಿದ ಯಾರೂ ಅವಳನ್ನು ಕುರಿತು ಒಂದೇ ಒಂದು ಸಹಾನುಭೂತಿಯ ಮಾತು ಹೇಳಿದ್ದು ನನಗಂತೂ ನೆನಪಿಲ್ಲ. +ಎದುರುಗಡೆಯ ಆ ದೊಡ್ಡ ಮನೆ ಘನಶ್ಯಾಮ ಪಂಡಿತರದು. ಅವಳು ಪಂಡಿತರ ಒಬ್ಬಳೇ ತಂಗಿ. ಹೆಸರು ಮುಕ್ತಾ. ಘನಶ್ಯಾಮ ಪಂಡಿತರು ಊರಿನ ಭಾರೀ ವ್ಯಾಪಾರಿಗಳು. ಒಂದು ಕಾಲಕ್ಕೆ ಅವರ ಅಂಗಡಿ ಬಹಳ ದೊಡ್ಡ ಕಿರಾಣಿ ಅಂಗಡಿಯೆಂದು ಪ್ರಸಿದ್ಧವಾಗಿತ್ತು. ಆಸುಪಾಸಿನ ಹಳ್ಳಿಗಳಿಂದಲೂ ಜನ ಮದುವೆಯ ಸಾಮಾನು ಖರೀದಿಗೆ ಅಲ್ಲಿ ಬರುತ್ತಿದ್ದರು. ಅವರ ಮನೆಯಲ್ಲಿದ್ದ ದಮಣಿಯಲ್ಲಿ ಕುಳಿತು ಒಂದು ಮದುವೆಗೆ ಹೋಗಿದ್ದನ್ನು ಮತ್ತು ಅದರಲ್ಲಿ ಹಾಸಿದ್ದ ಮೆದುವಾದ ಜಮಖಾನೆ ಹಾಸಿಗೆಗಳನ್ನು ನನ್ನ ಅಮ್ಮ ವರ್ಣಿಸುತ್ತಿದ್ದುದು ನನಗೆ ಸ್ಪಷ್ಟವಾಗಿ ನೆನಪಿದೆ. ದುಡ್ಡು ರೂಪ ಎಲ್ಲ ಇದ್ದೂ ಮುಕ್ತಾಳ ಮದುವೆ ಆಗಬೇಕಾದ ಕಾಲಕ್ಕೆ ಆಗಲೇ ಇಲ್ಲ. ಜಾತಕದ ದೋಷವೋ ಮತ್ತೇನೋ ಒಂದಲ್ಲ ಒಂದು ಕಾರಣದಿಂದ ಮುಂದೆ ಮುಂದೆ ಹೋಗಿ ಅಂತೂ ತೆರ್ನಮಕ್ಕಿಯ ಮನೆತನವೊಂದಕ್ಕೆ ಎಲ್ಲ ಕೂಡಿ ಬಂದು ಮದುವೆಯಾಯಿತು. ಘನಶ್ಯಾಮ ಪಂಡಿತರು ವರದಕ್ಷಿಣೆ ಧಾರಾಳವಾಗಿ ಕೊಟ್ಟರು. ಅವಳ ಗಂಡ ಅಚಾನಕ ತೀರಿ ಹೋಗುವವರೆಗೂ ಎಲ್ಲವೂ ಸರಿಯಾಗೇ ಇತ್ತು. ನಂತರ ಗಂಡನ ಮನೆಯವರ ಕಾಟ ಶುರುವಾಯಿತು. ಅವಳ ಕಣ್ಣಿಗೆ ಬಿದ್ದುದೆಲ್ಲವೂ ಹಾಳಾಗಿ ಹೋಗುತ್ತದೆ ಎಂಬ ಮಾತು ಚಾಲ್ತಿಗೆ ಬಂತು. +ಅವಳ ಕಣ್ಣಿಗೆ ಬಿದ್ದು ನೂರಾರು ಕಾಯಿ ಕೊಡುವ ತೆಂಗಿನಮರ ಸಿಡಿಲಿಗೆ ಸುಟ್ಟು ಹೋಯಿತಂತೆ. ಆಳು ಮಗನ ದಿಬ್ಬಣ ನೋಡಿ ನಿನ್ನ ಹೆಂಡತಿ ಚೆನ್ನಾಗಿದ್ದಾಳೆ ಅಂದಳಂತೆ – ಎರಡೇ ದಿನಕ್ಕೆ ಅವಳಿಗೆ ಹಾವು ಕಚ್ಚಿತು. ನಮ್ಮ ಮನೆಯ ಬಾವಿಯಲ್ಲಿ ನೀರು ಬತ್ತುವುದಿಲ್ಲ ಅಂದಳಂತೆ, ಅದೇ ಬೇಸಿಗೆಗೆ ಬಾವಿಯ ತಳ ಕಾಣಿಸಿತು. ಮಹಮ್ಮಾಯಿ ದೇವಿಯ ತೇರು ನೋಡಲಿಕ್ಕೆ ಎರಡು ಕಣ್ಣು ಸಾಲದು ಅಂದಳಂತೆ. ರಥದ ಕೀಲು ಮುರಿಯಬೇಕೇ? ಅಲ್ಲ ದೇವರಿಗೂ ತಾಳಿಕೊಳ್ಳಲಿಕ್ಕೆ ಆಗದಷ್ಟು ಅವಳ ಕಣ್ಣು ಉಗ್ರವೇ? ಹೀಗೆ ಅವಳ ಮೇಲೆ ಅಪವಾದಗಳ ಮೇಲೆ ಅಪವಾದಗಳು ಬಂದವು. ಚೌತಿಯ ಚಂದ್ರನನ್ನು ನೋಡಿ ಹೀಗೆ ಆಯಿತೇನೋ ಎಂದು ಭಾವಿಸಿ ಅವಳು ಗಣೇಶನ ವೃತ, ಪೂಜೆ ಕೂಡ ಮಾಡಿದಳು. ಇದಕ್ಕೆಲ್ಲ ಕಲಶವಿಟ್ಟ ಹಾಗೆ ಅವಳ ಮೈದುನನ ಮಗ ಹುಡುಗಾಟಕ್ಕೆ ಅಡಿಕೆ ಮರ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟ. ಅದಾಗಿದ್ದೇ ಈ ಘಟನೆ ಜರುಗುವ ಮುಂಚೆ ಮುಕ್ತಾ ಏನೇನು ಹೇಳಿದ್ದಳು ಎಂದೆಲ್ಲ ತನಿಖೆಯಾಗಿ ಮುಂದಿನ ವಿಚಾರ ಮಾಡುವ ಮೊದಲೇ ಅವಳ ಮೈದುನ ಉರಿವ ಕಟ್ಟಿಗೆಯನ್ನು ಹಿರಿದು ಅವಳನ್ನು ಹೊಡೆಯಲು ಬಂದಿದ್ದ. ಯಾರದೋ ಮನೆಯಲ್ಲಿ ಅಡಗಿಕೊಂಡು ಆ ರಾತ್ರಿ ಕಳೆದಳು. +ಮರುದಿನ ಅವಳ ಗಂಡನ ಹಿರಿಯ ಅಣ್ಣ ಅವಳನ್ನು ತವರಿಗೆ ಕರೆತಂದ. ಬಂದವನು ಘನಶ್ಯಾಮ ಪಂಡಿತರ ಸ್ಥಾನಮಾನ ಲೆಕ್ಕಿಸದೇ ಬಾಯಿಗೆ ಬಂದ ಹಾಗೆ ಅಂದ. ಆ ಹೊತ್ತಿಗೆ ಅಲ್ಲಿ ಊರಿನ ನಾಲ್ಕು ಜನ ಇದ್ದರು. ಅವರ ಎದುರಿಗೆ ಮಾನ ಹೋದ ನೋವು ಒಂದು ಕಡೆ, ತಂಗಿಯ ಮೇಲೆ ಬಂದ ಅಪವಾದ ಒಂದು ಕಡೆ ಪಂಡಿತರನ್ನು ಚುಚ್ಚಿ, ಅವರ ಸಿಟ್ಟು ಉಕ್ಕಿ ಬಂದು, ಬೀಗರ ಹಿರಿಯ ಮಗನಿಗೆ ಕಪಾಳಮೋಕ್ಷವಾಯಿತು. ‘ಮದುವೆ ಮಾಡಿ ಕೊಟ್ಟ ಮಾತ್ರಕ್ಕೆ ಅವಳ ಪಾಲಿಗೆ ಈ ಮನೆ ಮತ್ತು ಮನೆಯವರು ಇಲ್ಲ ಅಂತ ತಿಳಕೊಂಡಿದ್ದೀರೇನು? ಅರ್ಧ ಆಸ್ತಿ ಅವಳ ಹೆಸರಿಗೆ ಬರೆಯುತ್ತೇನೆ. ನಿಮ್ಮ ಹಂಗಿನ ಕೂಳು ಅವಳಿಗೆ ಬೇಕಿಲ್ಲ…’ ಎಂದು ನೆರೆದವರ ಎದುರು ಕೂಗಾಡಿದರು. ಅದೇ ಕೊನೆ. ಮತ್ತೆ ಮುಕ್ತಾ ಗಂಡನ ಮನೆಗೆ ಹೋಗಲಿಲ್ಲ. +ಸುದ್ದಿ ಹಬ್ಬಲಿಕ್ಕೆ ಕ್ಷಣಮಾತ್ರವೂ ತಡವಾಗಲಿಲ್ಲ. ಇಷ್ಟು ದಿನ ಇಲ್ಲದ ಅವಳ ಕೆಟ್ಟ ಕಣ್ಣು ಈಗ ಒಮ್ಮೆಲೇ ಹೇಗೆ ಬಂತು ಎಂದು ಯಾರೂ ಪ್ರಶ್ನಿಸಲಿಲ್ಲ. ಈ ಊರಲ್ಲಿ ಜರುಗಿದ ಎಲ್ಲ ಅನಾಹುತಗಳಿಗೆ ಅವಳ ಕಣ್ಣೇ ಯಾವುದೋ ರೀತಿಯಿಂದ ಕಾರಣವೆಂದು ಹೆಸರು ಹಚ್ಚಲು ತಡವಾಗಲಿಲ್ಲ. ಭಾಗವತರ ಮನೆಯ ಹುಲ್ಲುಮೆದೆಗೆ ಬಿದ್ದ ಬೆಂಕಿ, ವಾಡಿಬುಗ್ರಿಯವರ ಮಗಳ ಆತ್ಮಹತ್ಯೆ, ವಿಠಲರಾಯರ ಮಗನಿಗೆ ಉಂಟಾದ ಮನೋವಿಕಾರ, ಹುಟ್ಟಿದ್ದೇ ಸತ್ತುಹೋದ ಲಕ್ಕಪ್ಪನ ಮೊಮ್ಮಗು ಎಲ್ಲದಕ್ಕೂ ಅವಳೇ ಕಾರಣಳಾದಳು. ಅವಳು ಊರಿಗೆ ಬಂದಿದ್ದೇ ಎಲ್ಲ ಅವಘಡಗಳಿಗೆ ಕಾರಣ ಸಿಗತೊಡಗಿತು. ಯಾವಾಗಲೋ ಅವಳು ಆಡಿದ ಮಾತು, ನೋಡಿದ ನೋಟ, ನಕ್ಕ ರೀತಿ, ಮುಟ್ಟಿದ ವಸ್ತು – ಎಲ್ಲವೂ ಅವ್ಯಕ್ತ ವಿಧಿಲೀಲೆಯ ಹಿಂದಿನ ಕಾರಣಗಳಾಗಿ ತೋರತೊಡಗಿದವು. ಕಾಣದ ಕೈಯನ್ನು ಎಲ್ಲರೂ ಮರೆತು ಎದುರು ಕಂಡ ಮುಕ್ತಾಳನ್ನು ಮಾತ್ರ ದೂರತೊಡಗಿದರು. ಕೈಮೀರಿದ ದುರಂತಗಳಿಗೆ, ನಿರುದ್ದಿಶ್ಯ ನೋವುಗಳಿಗೆ ಇಷ್ಟು ಸುಲಭವಾಗಿ ಸಿಕ್ಕ ಕಾರಣವನ್ನು ಬಿಟ್ಟುಕೊಡಲು ಯಾರೂ ತಯಾರಿರಲಿಲ್ಲ. +* +* +* +ಅಮ್ಮನ ಕೊನೆಯ ತಮ್ಮ ಸುಧೀರಮಾಮನ ಮದುವೆಗೆಂದು ಅಜ್ಜನ ಮನೆಗೆ ಹೋಗಿದ್ದೆವು. ಮದುವೆ ಮುಗಿಸಿ ಬೆಳಗಾವಿಯಿಂದ ಹಿಂತಿರುಗಿ ಬಂದ ಮಾರನೇ ದಿವಸ ಮಧ್ಯಾಹ್ನ ನನ್ನನ್ನು ಅಮ್ಮ ಬಲವಂತವಾಗಿ ಮಲಗಿಸಲು ಪ್ರಯತ್ನಿಸುತ್ತಿದ್ದಳು. ಕತ್ತಲು ಕತ್ತಲಾಗಿದ್ದ ಆ ಕೋಣೆಯಲ್ಲಿ ಮಂಚದ ಮೇಲೆ ನಾನು ಮತ್ತು ಅಮ್ಮ ಮಲಗಿದ್ದೆವು. ಅಲ್ಲೇ ಕೆಳಗೆ ಚಾಪೆಯ ಮೇಲೆ ಅಡ್ಡಾದ ಅಜ್ಜಿಯ ಮಾತು ಎದುರು ಮನೆಯ ಮುಕ್ತಾಳತ್ತ ತಿರುಗಿತು. ಮನೆಯ ಹೊಸ ಸೊಸೆ ಸುರೇಖಾಮಾಮಿ ಕೂಡ ಅಲ್ಲೇ ಇದ್ದಳು. ಅಜ್ಜಿ ಸವಿವರವಾಗಿ ಹೇಳುತ್ತಿದ್ದರು. ಅಮ್ಮ ಆ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅಸಹನೆಯಿಂದ ಚಡಪಡಿಸುತ್ತಿರುವುದು ನನಗೆ ಮಲಗಿದಲ್ಲೇ ಗೊತ್ತಾಯಿತು. +‘ಅವರ ಮನೆಯವರಿಗೆ ಅದರಿಂದ ಏನೂ ಆಗುವುದಿಲ್ಲವೇ?’ ಎಂದು ಹೆದರಿಕೆಯನ್ನು ಮೀರಲೆಂಬಂತೆ ಸುರೇಖಾಮಾಮಿ ಕೇಳಿದಳು. +‘ಆಗದೇ ಏನು? ಆಗಿರುವುದು ಸಾಲದೇನು? ಹೇಗಿದ್ದ ಘನಶ್ಯಾಮ ಪಂಡಿತರ ಅಂಗಡಿ ಹೇಗಾಗಿ ಹೋಯಿತು. ನಾನು ಸುಳ್ಳು ಹೇಳುವುದಿಲ್ಲ ಯಾರನ್ನಾದರೂ ಕೇಳಿ ನೋಡು. ಅಂಗಡಿಯ ವ್ಯಾಪಾರ ಹೇಗಿತ್ತು ಅಂದರೆ ಪಕ್ಕದಲ್ಲೇ ಇದ್ದ ಮನೆಗೆ ಊಟಕ್ಕೆ ಹೋಗಲಿಕ್ಕೆ ಅವರಿಗೆ ಪುರಸತ್ತು ಸಿಗುತ್ತಿರಲಿಲ್ಲ. ಮಂಗಳವಾರದ ಸಂತೆಯ ದಿವಸ ಜನ ಸಾಲು ನಿಂತು ಸಾಮಾನು ಕೊಳ್ಳುತ್ತಿದ್ದರು. ಜಗುಲಿಯ ಮೇಲೆ ಈ ಕಡೆಯಿಂದ ಆ ಕಡೆಯವರೆಗೆ ಚೀಲಗಳನ್ನು ಪೇರಿಸಿಡುತ್ತಿದ್ದರು. ಎಲ್ಲವೂ ಮಾಯ ಮಾಡಿದ ಹಾಗೆ ಕರಗಿ ಹೋಯಿತಲ್ಲ. ಈಗ ನೋಡು ಅಂಗಡಿಯ ಗತಿ. ಖಾಲಿಯಾಗಿಹೋಗಿದೆ. ಎಲ್ಲ ನನ್ನ ಕಣ್ಣ ಮುಂದೆಯೇ ಆಯಿತು. ನೋಡನೋಡುತ್ತ ಇಡೀ ಕುಟುಂಬವೇ ಭಿಕಾರಿಯಾಗಿ ಹೋಯಿತು’ +ನನ್ನ ಪಕ್ಕ ಮಲಗಿದ್ದ ಅಮ್ಮ ಅಲ್ಲಿಂದಲೇ ಮಾತಾಡಿದಳು. ‘ಸಾಕಮ್ಮ ನಿನ್ನ ಮಾತು. ಅವಳೇನು ಮಾಡಿದ್ದಾಳೆ? ಇದಕ್ಕೆಲ್ಲ ಘನಶ್ಯಾಮ ಪಂಡಿತರ ಪುತ್ರರತ್ನನೇ ಕಾರಣ ಅನ್ನುವುದನ್ನು ಯಾಕೆ ಯಾರೂ ಹೇಳುವುದಿಲ್ಲ?’ +‘ಅವನಿಗೆ ಅಂಥ ಬುದ್ಧಿ ಬರಲಿಕ್ಕೂ ಒಂದು ಕಾರಣ ಇರಬೇಕಲ್ಲವೇ? ಇಲ್ಲವಾದರೆ ಎಲ್ಲ ಸರೀ ಇದ್ದ ಹುಡುಗ ಯಾರದೋ ಬಾವಾಜಿಯ ಮಾತು ಕೇಳಿ ಮನೆಯ ಬಂಗಾರವನ್ನೆಲ್ಲ ಅವನಿಗೆ ಮೂಟೆ ಕಟ್ಟಿ ಕೊಡುತ್ತಾನೆಂದರೆ ನಂಬಲಿಕ್ಕೇ ಆಗುವುದಿಲ್ಲ. ವಿನಾಶಕಾಲಕ್ಕೆ ಏನೇನು ಬುದ್ಧಿ ಕೊಡುತ್ತಾನೋ ಆ ದೇವರು…’ +‘ಹಾಗೆ ಹೇಳು. ಈ ಎಡಫೊಂಗ ಮಧುಕರನಿಗೆ ದುಡ್ಡಿನ ಆಸೆ ಜಾಸ್ತಿಯಾಯಿತು. ಬಾವಾಜಿ ಬಂಗಾರವನ್ನು ದುಪ್ಪಟ್ಟು ಮಾಡುತ್ತೇನೆ ಅಂದನಂತೆ. ಇವ ಕೊಟ್ಟ. ಯಾರಿಗೂ ಒಂದು ಮಾತು ಕೇಳಲಿಲ್ಲ. ಎಲ್ಲ ಆಗಿ ಹೋದ ಮೇಲೆ ಅತ್ತರೆ ಏನು ಬಂತು…’ +‘ಅವನಿಗೆ ಆ ಬುದ್ಧಿ ಬರಲಿಕ್ಕೆ ಕಾರಣ…’ +ಅಜ್ಜಿಯ ಮಾತನ್ನು ತುಂಡರಿಸಿ ಅಮ್ಮ ಮಾತಾಡಿದಳು. ‘ಕಾರಣ ನಾನು ಹೇಳುತ್ತೇನೆ. ಪಂಡಿತರು ಅರ್ಧ ಆಸ್ತಿ ಅವರ ತಂಗಿಯ ಹೆಸರಿಗೆ ಮಾಡಿದ್ದೇ ಇವನ ಹೊಟ್ಟೆ ಧಗಧಗಾ ಎಂದು ಉರಿಯಲಿಕ್ಕೆ ಶುರುವಾಯಿತು. ಮದುವೆಯಾಗಿ ಮನೆಯಿಂದ ಹೊರಗೆ ಹೋದವಳ ಹೆಸರಿಗೆ ಅರ್ಧ ಆಸ್ತಿ ಬರೆಯುವುದೆಂದರೆ ಏನು? ಅಪ್ಪನ ಎದುರಿಗೆ ಮಾತು ತೆಗೆಯುವ ಧೈರ್ಯವಿರಲಿಲ್ಲ. ಸಿಟ್ಟಿನಿಂದ ಮಾಡಿದನೋ, ದುರಾಸೆಯಿಂದಲೋ, ತನ್ನ ಗಂಡಸ್ತನ ತೋರಿಸಲಿಕ್ಕೋ ಅಥವಾ ಅದು ಅವನು ಬಂಡೆದ್ದ ರೀತಿಯೋ – ಅಂತೂ ಒಂದೇ ದಿನದಲ್ಲಿ ತಿಜೋರಿ ಖಾಲಿಯಾಯಿತು’ +‘ಅದಕ್ಕೂ ಮೊದಲು ಏನಾಯಿತು ಕೇಳು. ಒಂದು ದಿವಸ ಅವಳು ಅಣ್ಣನನ್ನು ಊಟಕ್ಕೆ ಕರೆಯಲು ಅಂಗಡಿಗೇ ಬಂದಳಂತೆ. ಪಂಡಿತರು ಗಲ್ಲೆಯ ಮೇಲೆ ಕೂತು ದುಡ್ಡು ಎಣಿಸಿ ನೋಟಿನ ಕಟ್ಟು ಕಟ್ಟುತ್ತಿದ್ದಾಗ ಅದನ್ನು ಇಷ್ಟು ದೊಡ್ಡ ಕಣ್ಣು ಬಿಟ್ಟು ನೋಡಿದಳಂತೆ. ಅಷ್ಟೇ. ಎಲ್ಲ ತೊಳೆದಿಟ್ಟ ಹಾಗೆ ಸ್ವಚ್ಛವಾಗಿ ಹೋಯಿತು… ಇದಕ್ಕೇನು ಹೇಳುತ್ತೀ…..’ +ಅಮ್ಮ ಮತ್ತೆ ಮಾತು ಮುಂದುವರಿಸದೇ ‘ಜನಮರುಳೋ ಜಾತ್ರೆ ಮರುಳೋ’ ಎಂದು ಎಲ್ಲರಿಗೂ ಕೇಳಿಸುವಂತೆ ಗೊಣಗಿ ಎದ್ದು ಹೋದಳು. ಅಜ್ಜಿ ಹೊಸ ಸೊಸೆಯ ಜೊತೆ ತನ್ನ ಮಾತು ಮುಂದುವರಿಸಿದಳು. +‘ಬಂಗಾರ ಹೋದ ಮೇಲೆ ಘನಶ್ಯಾಮ ಪಂಡಿತರ ದೆಸೆಯೇ ಬದಲಾಗಿ ಹೋಯಿತು. ನೋಡನೋಡುತ್ತಿದ್ದ ಹಾಗೆ ಅಂಗಡಿಯ ವ್ಯಾಪಾರ ಇಳಿಯತೊಡಗಿತು. ಅದೇ ಕಾಲಕ್ಕೆ ಪೇಟೆಯಲ್ಲಿ ಶಂಕರ ನಾಯಕರ ಹೊಸ ದುಕಾನು ಶುರುವಾಯಿತು. ಆರೇ ತಿಂಗಳಲ್ಲಿ ಪಂಡಿತರು ತೀರಿಹೋದರು. ಅವರು ಸಾಯುವ ಕಾಲಕ್ಕೆ ತಂಗಿಗೆ ಏನು ಹೇಳಿದರೋ ಏನೋ, ಅಥವಾ ಅವರ ಅವನತಿಗೆ ಅವಳೇ ಕಾರಣವೆಂದು ಜನ ಆಡಿಕೊಂಡುದು ಅವಳ ಕಿವಿಗೂ ಬಿದ್ದಿತ್ತೋ ಏನೋ, ‘ಇನ್ನು ನಾನು ಈ ಮನೆಯಿಂದ ಹೊರಬರುವುದು ಒಂದೇ ಸಲ – ಚಟ್ಟದ ಮೇಲೆ’ ಎಂದು ಶಪಥ ಮಾಡಿದಳು. ಅದರ ನಂತರ ಇಷ್ಟು ವರ್ಷಗಳಾದವು – ಒಂದು ಸಲವೂ ಅವಳು ಹೊರಗೆ ಬಂದಿಲ್ಲ.’ +‘ಅದಕ್ಕೂ ಮೊದಲು ಹೊರಗೆಲ್ಲ ಓಡಾಡಿಕೊಂಡು ಇರುತ್ತಿದ್ದಳೇ?’ ಭಯಭೀತ ದನಿಯಲ್ಲಿ ಸುರೇಖಾಮಾಮಿ ಕೇಳಿದಳು. +‘ಹೌದೌದು. ಎಲ್ಲಾ ಕಡೆಗೂ ಹೋಗುತ್ತಿದ್ದಳು. ತನ್ನ ಮೇಲೆ ಬಂದ ಅಪವಾದಗಳೆಲ್ಲ ಸುಳ್ಳು ಅನ್ನುತ್ತಿದ್ದಳು. ಅದನ್ನು ಸಾಧಿಸಿ ತೋರಿಸಲೆಂದೇ ಹೊರಗೆ ಓಡಿಯಾಡುವ ಹಾಗೆ ಅನಿಸುತ್ತಿತ್ತು. ಆದರೆ ಒಂದು ಸಲ ಸಂಶಯದ ಕೀಟ ಮನಸ್ಸನ್ನು ಹೊಕ್ಕಿತೆಂದರೆ ದೇವರಿಗೂ ಅದನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಅವಳನ್ನು ಕಂಡರೆ ಏನೋ ಹೆದರಿಕೆ. ಏನು ಅನ್ನುತ್ತಾಳೋ, ಯಾವುದಕ್ಕೆ ಅವಳ ಕಣ್ಣು ಬೀಳುತ್ತದೋ ಎಂದು ಭಯವಾಗುತ್ತಿತ್ತು. ಎಷ್ಟರವರೆಗೆ ಹೋಯಿತೆಂದರೆ ಅವಳ ಕಿವಿಗೆ ಬಿದ್ದೀತು ಎಂದು ಹೆದರಿ ಈ ಕೇರಿಯ ಜನ ತಮ್ಮ ಬಗ್ಗೆ ಒಳ್ಳೆಯದನ್ನು ಹೇಳಿಕೊಳ್ಳುವುದನ್ನು ಕೂಡ ಬಿಟ್ಟುಬಿಟ್ಟರಲ್ಲ. ಸರೀ ಇದ್ದ ಗಂಡ ಹೆಂಡತಿ ಅವಳ ಕಣ್ಣಿಗೆ ಬಿದ್ದ ನಾಲ್ಕು ದಿವಸಗಳಲ್ಲಿ ಬೇರೆಯಾಗಿ ಹೋಗುವುದೆಂದರೆ ಏನು ಹೇಳಬೇಕು? ಬೇರೆ ಯಾರೂ ಅಲ್ಲ – ರಂಗಪ್ಪನ ಮಗ ಮೋಹನ, ಹೊಸ ಹೆಂಡತಿಯ ಜೊತೆ ದೇವಸ್ಥಾನಕ್ಕೆಂದು ಬಂದವ ಮುಕ್ತಾಮಾಯೀ ಅಂತ ಮಾತಾಡಿಸಿಕೊಂಡು ಹೋದ. ಯಾರನ್ನೂ ಸರಿಯಾಗಿ ತಲೆ ಎತ್ತಿ ನೋಡದ ಹುಡುಗ. ನಾಲ್ಕು ದಿನವೂ ಸಂಸಾರ ಮಾಡಲಿಲ್ಲ. ಯಾರೋ ಮೇಲಿನ ಕೇರಿಯವಳ ಹಿಂದೆ ಬಿದ್ದು ಬೊಂಬಾಯಿಗೆ ಓಡಿಹೋಗಿಬಿಡಬೇಕೇ? ಇದಾದ ಮೇಲೆ ಕೆಲವರಂತೂ ಬಾಯಿಬಿಟ್ಟೇ ಅವಳಿಗೆ ಹೇಳತೊಡಗಿದರು – ನೀನು ಇನ್ನು ಇಲ್ಲಿ ಕಾಲಿಡಬೇಡ ಅಂದರು. ಮೊದಲು ಯಾರ ಮಾತನ್ನೂ ಕೇಳದವಳು ಘನಶ್ಯಾಮ ಪಂಡಿತರು ತೀರಿಹೋದ ನಂತರ ಮಾತ್ರ ಬದಲಾದಳು. ಅದಕ್ಕೆ ಕಾರಣ ಅವರವರಿಗೆ ತಿಳಿದಂತೆ ಊಹಿಸಿಕೊಂಡದ್ದೇ ಹೊರತು ಯಾರಿಗೂ ಒಳಗಿನ ನಿಜ ಗೊತ್ತಿಲ್ಲ.’ +‘ಅದಾದ ನಂತರ ಅವಳು ಹೊರಗೇ ಬರಲಿಲ್ಲವೇ?’ +‘ಇಲ್ಲ. ಮಧುಕರನ ಮದುವೆಗೂ ಬರಲಿಲ್ಲ. ಅವನಿಗೆ ಹೆಣ್ಣು ಹುಡುಕುವುದು ಎಷ್ಟು ಕಷ್ಟವಾಯಿತು ಗೊತ್ತೇನು? ಆಮೇಲೆ ಹಳದೀಪುರದಿಂದ ವಯಸ್ಸು ಮೀರಿದ ಬಡವರ ಮನೆಯ ಹೆಣ್ಣು ತಂದದ್ದಾಯಿತು. ಅವಳು ಇವನಿಗಿಂತಲೂ ಎವಡಾಸ ಹುಡುಗಿ. ಕಾಳಿಕಾದೇವಿಗೆ ಗಂಡಿಲ್ಲ, ಭೇತಾಳನಿಗೆ ಹೆಂಡತಿಯಿಲ್ಲ ಅನ್ನುವ ಮಾತು ಇದೆಯಲ್ಲ – ಇವರಿಗೆ ಸರೀ ಹೊಂದುತ್ತದೆ. ಏನು ಜೋಡಿ – ಆಹಾ ಪರಮಾತ್ಮನೇ ತನ್ನ ಸ್ವಂತ ಕೈಯಿಂದ ಮಾಡಿದ್ದಾನೆ ……’ +‘ನಮ್ಮ ಮನೆಯ ಜಗುಲಿಯಲ್ಲಿ ನಿಂತರೆ ಅವಳಿಗೆ ಕಾಣಿಸುತ್ತದೇನು?’ +‘ಹಾಗೆಲ್ಲ ಹೆದರಬೇಕಾಗಿಲ್ಲ. ಹಾಗೆ ಏನೂ ಆಗುವುದಿಲ್ಲ. ಅಲ್ಲಿ ಕೊನೆಯ ಕಿಟಕಿಯಿಂದ ಅವಳು ಹೊರಗೆ ನೋಡುತ್ತಾಳೆ ಅಂತ ಜನ ಅನ್ನುತ್ತಾರಪ್ಪ. ನಾನಂತೂ ನೋಡಿಲ್ಲ. ಆ ಕಿಟಕಿಯಲ್ಲಿ ಕತ್ತಲು ಬಿಟ್ಟರೆ ಬೇರೇನೂ ಕಾಣುವುದಿಲ್ಲ. ಅವಳ ದೆಸೆಯಿಂದಾಗಿಯೇ ಈ ಮುಂದಿನ ಜಾಗ ಯಾರೂ ಮುಟ್ಟದ ಹಾಗಾಗಿದೆ.’ +ಅಷ್ಟರಲ್ಲಿ ನನ್ನ ಅಮ್ಮ ತಿರುಗಿ ಬಂದಿದ್ದರಿಂದ ಮಾತು ಅಲ್ಲಿಗೆ ನಿಂತಿತು. ಅಜ್ಜಿ ಹೇಳಿದ್ದ ಕಿಟಕಿಯನ್ನು ನಾನು ನೋಡಿದ್ದೆ. ಅದರ ಬಾಗಿಲು ಇಷ್ಟೇ ಇಷ್ಟು ತೆರೆದಿರುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ಒಳಗೆ ಬರೀ ಕತ್ತಲು ಮಾತ್ರವೇ ಕಾಣುವುದು. +ಮಧ್ಯಾಹ್ನ ಹೆಂಗಸರಾರೂ ಮಲಗಲಿಲ್ಲ. ಏನೇನೋ ಬೇರೆ ಸುದ್ದಿ ಮಾತಾಡಿದರು. ಸ್ವಲ್ಪ ಹೊತ್ತಿನ ನಂತರ ಅಜ್ಜಿ ‘ಈವತ್ತು ಲಡ್ಡು ಪೊಟ್ಟಣಗಳನ್ನು ಹಂಚಿ ಆ ಒಂದು ಆ ಕೆಲಸ ಮುಗಿಸಬಹುದಿತ್ತು’ ಅಂದಳು. ಮದುವೆಯಂಥ ಶುಭಕಾರ್ಯದ ನಂತರ, ಬೀದಿಯ ಮನೆಗಳಿಗೆ, ಆ ಕಾರ್ಯಕ್ಕೆ ಬರಲಾಗದೇ ಹೋದವರಿಗೆ ಲಡ್ಡು ಹಂಚುವುದು ನಮ್ಮಲ್ಲಿ ಪದ್ಧತಿ. ಅವಳ ಮಾತನ್ನು ಅನುಮೋದಿಸಿದ ಎಲ್ಲರೂ ಒಬ್ಬೊಬ್ಬರಾಗಿ ಎದ್ದರು. +ಎದ್ದು ಚಾ ಕುಡಿದು ಮುಗಿಸಿದ ಹೆಂಗಸರೆಲ್ಲ ಐದೈದು ಲಡ್ಡುಗಳಿರುವ ಪೊಟ್ಟಣಗಳನ್ನು ಕಟ್ಟಿದರು. ಅವುಗಳನ್ನು ಮನೆಗಳಿಗೆ ತಲುಪಿಸುವ ಜವಾಬ್ದಾರಿ ಮಕ್ಕಳ ಪಾಲಿಗೆ ಬಂದಿದ್ದರಿಂದ ಮಕ್ಕಳ ಮೇಳದಲ್ಲಿ ಒಮ್ಮೆಲೇ ಉತ್ಸಾಹ, ಬೊಬ್ಬೆ ಶುರುವಾಯಿತು. ಒಂದೊಂದೇ ಪೊಟ್ಟಣ ಹಿಡಿದು ಅಜ್ಜಿ ಅದನ್ನು ಯಾರ ಮನೆಗೆ ಕೊಡಬೇಕೆಂದು ಹೇಳುವರು. ಎಲ್ಲಿ ಎಂದು ಗೊತ್ತಾಗಿದ್ದೇ ಹುಡುಗರಿಗೆ ಅಲ್ಲಿ ಹೋಗುವ ತನಕ ಪುರಸತ್ತಿಲ್ಲ. ದೂರದೂರದ ಮನೆಗಳು ದೊಡ್ಡ ಹುಡುಗರಿಗೆ ಮಾತ್ರ ಮೀಸಲು. +ಹಾಗೆ ನನ್ನ ಕೈಗೆ ಬಂದ ಪೊಟ್ಟಣ ಎದುರು ಮನೆಯದು ಎಂದು ತಿಳಿದಾಗ ನನಗೆ ಬಹಳ ನಿರಾಸೆಯಾಯಿತು. ಅಷ್ಟು ಹತ್ತಿರ ಹೋಗುವುದರಲ್ಲಿ ಏನೂ ಮಜವಿರಲಿಲ್ಲ. ನಾನು ಅಜ್ಜಿಯ ಮುಂದೆ ನಿಂತು ಕುಂಯ್‌ಗುಡತೊಡಗಿದೆ. ‘ಈಗ ಕೊಟ್ಟು ಬಾ. ನಡುವೆ ಗಡಿಬಿಡಿ ಮಾಡಿದರೆ ಯಾರ ಮನೆಗೆ ಕೊಟ್ಟೆ ಅನ್ನುವ ಲೆಕ್ಕ ನನಗೆ ತಪ್ಪಿಹೋಗುತ್ತದೆ. ಅಲ್ಲೇ ಮುಂದುಗಡೆ ಮಧುಕರ ಇರುತ್ತಾನೆ ನೋಡು. ಸಟಕ್ಕನೆ ಕೊಟ್ಟು ಬಾ. ಆಮೇಲೆ ಬಾರಕೂರರ ಮನೆಗೆ ನಿನ್ನನ್ನೇ ಕಳಿಸುತ್ತೇನೆ’ ಅಂದರು. +ನಾನು ಹೋದಾಗ ಮಧುಕರ ಅಂಗಡಿಯಲ್ಲಿ ಇರಲಿಲ್ಲ. ಅಲ್ಲೇ ಎರಡು ನಿಮಿಷ ನಿಂತರೂ ಅವನು ಬರುವ ಸೂಚನೆ ಕಾಣಲಿಲ್ಲ. ಬಾರಕೂರರ ಮನೆಯ ಪೊಟ್ಟಣ ತಯಾರಾಗಿಬಿಡಬಹುದೆಂದು ಅವಸರವಾಯಿತು. ಅಂಗಡಿಯಲ್ಲಿ ಇರದಿದ್ದರೆ ಮನೆಯಲ್ಲಿರುತ್ತಾನೆ ಎಂದು ಭಾವಿಸಿ ಅಲ್ಲಿಯೇ ಕೊಟ್ಟು ಬರೋಣವೆಂದು ಮನೆಗೆ ಹೋದೆ. ನಡುವಿನ ತೆಣೆಯನ್ನು ದಾಟಿ ಮನೆಯ ಬಾಗಿಲ ಎದುರು ನಿಂತಾಗ ಒಳಗೆ ಯಾರೂ ಇದ್ದ ಹಾಗೆ ಕಾಣಲಿಲ್ಲ. ಚಿಲಕ ಬಡಿದೆ. ಉತ್ತರವಿಲ್ಲ. ಒಳಗೆ ಹೆಜ್ಜೆ ಹಾಕಿದೆ. ಒಂದು ದೊಡ್ಡ ಹಜಾರ. ಅಲ್ಲಿ ನಸುಗತ್ತಲು. ಒಂದು ಪಕ್ಕ ಮಾಳಿಗೆಗೆ ಹೋಗಲು ಇರುವ ಕಟ್ಟಿಗೆಯ ಕಡಿದಾದ ಮೆಟ್ಟಿಲುಗಳು. ಮೆಟ್ಟಿಲು ಹತ್ತುವಾಗ ಆಧಾರಕ್ಕೆ ಹಿಡಿಯಲು ಅನುಕೂಲವಾಗುವಂತೆ ಒಂದು ಹಗ್ಗ ಮೇಲಿನ ತೊಲೆಯಿಂದ ಜೋತು ಬಿದ್ದಿತ್ತು. ಯಾರೂ ಕಣ್ಣಿಗೆ ಬೀಳದ ಆ ಮನೆಯಲ್ಲಿ ಯಾರೋ ಇಲ್ಲೇ ಸುಳಿಯುತ್ತಿದ್ದಾರೆ ಎಂದು ಭಾಸವಾಗುವಂತೆ ಆ ಹಗ್ಗ ಮೆಲ್ಲನೆ ತೂಗುತ್ತಿತ್ತು. ಎದ್ದು ತೋರುತ್ತಿದ್ದುದು ಮನೆಯ ಖಾಲೀತನ. ಗೋಡೆಗಳನ್ನು ಬಿಟ್ಟರೆ ಬೇರೆ ಏನೂ ವಸ್ತುಗಳು ಇಲ್ಲವೇ ಇಲ್ಲ ಅನಿಸುವಷ್ಟು ಆ ಮನೆ ಖಾಲಿಯಾಗಿತ್ತು. ಮತ್ತೂ ಒಳಗೆ ಹೋದರೆ ಅಲ್ಲಿ ಒಂದು ಕಡೆ ಹಗೇವಿಗೆ ಇರುವಂಥ ಕಬ್ಬಿಣದ ಬಾಗಿಲು. ಅದನ್ನು ಮುಚ್ಚಿ ಬೀಗ ಹಾಕಿದ್ದರು. ಇನ್ನೂ ಕೋಣೆಗಳನ್ನು ದಾಟಿ ಮುಂದೆ ಹೋದಂತೆ, ಕೊನೆಯಲ್ಲಿ ಒಂದು ಬಾಗಿಲು ಮತ್ತು ಅದರಾಚೆ ಬೆಳಕಾಗಿದ್ದ ಜಾಗ ಕಾಣಿಸಿತು. ಒಲೆಗಳ ಸಾಲು ಕಂಡಿದ್ದರಿಂದ ಆಚೆ ಕಾಣುವುದು ಅಡಿಗೆ ಮನೆ ಎಂದು ಗೊತ್ತಾಯಿತು. +ಅಷ್ಟರಲ್ಲಿ ಎಡಪಕ್ಕದ ಕೋಣೆಯಿಂದ ‘ಯಾರೋ ಅದು? ಹಾಂ… ಬಾ ಇಲ್ಲಿ.. ಬಾ’ ಎಂಬ ದನಿ ಕೇಳಿಸಿ ಬೆಚ್ಚಿಬಿದ್ದೆ. +ಮತ್ತೆ ಆ ದನಿ ‘ಯಾರೋ ಅದು? ಏನು ಬೇಕೋ?’ ಅಂದಿತು. ಒಳಗೆ ಎಷ್ಟು ಕಣ್ಣು ಹಿಗ್ಗಿಸಿ ನೋಡಿದರೂ ಏನೂ ಕಾಣದಷ್ಟು ಕತ್ತಲೆ ಇತ್ತು. ಮೇಲಾಗಿ ನಾನು ಹೊರಗಿನ ಬೆಳಕಿನಿಂದ ಆಗ ತಾನೇ ಒಳ ಬಂದಿದ್ದೆ. ತಡವರಿಸುತ್ತ ಬಂದ ಉದ್ದೇಶ ಹೇಳಿದೆ. +‘ಹಾಂ… ಮತ್ತೆ ಯಾಕೆ ಕಳ್ಳತನ ಮಾಡಲಿಕ್ಕೆ ಬಂದವನ ಹಾಗೆ ಹೆದರುತ್ತಿ? ನೀನು ಅಂತಣ್ಣನ ಮೊಮ್ಮಗನೇನೋ?’ +‘ಹೌದು’ +‘ಯಾರ ಮಗನೋ?’ +ನನ್ನ ಅಮ್ಮನ ಹೆಸರು ಹೇಳಿದೆ. +‘ಯಾಕೆ ಹೀಗೆ ಹೆದರುತ್ತಿ? ಬಾ ಇಲ್ಲಿ, ಬಾ ಒಳಗೆ.’ ಆ ದನಿ ಪುಸಲಾಯಿಸಿದಂತೆ ಕೇಳಿಸಿತು. ನಾನು ನಿಂತಲ್ಲಿಯೇ ನಿಂತು ಆ ಕೋಣೆಯ ಕತ್ತಲೆಯತ್ತ ಕೈ ಚಾಚಿ, ಕೈಯಲ್ಲಿದ್ದ ಲಾಡುವಿನ ಪೊಟ್ಟಣ ಮುಂದೆ ಮಾಡಿದೆ. +‘ಏ ಹೆದರ್ಪುಕ್ಕ… ಬಾರೋ ಇಲ್ಲಿ’ ಎಂದು ಬಂದ ದನಿಯಲ್ಲಿ ಈಗ ಆಜ್ಞೆಯ ಗಡಸುತನವಿತ್ತು. ಮತ್ತು ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ಒಳಗಿನಿಂದ ಚಾಚಿ ಬಂದ ಕೈಯೊಂದು ಗಬಕ್ಕನೆ ನನ್ನ ಮುಂಗೈ ಹಿಡಿದು ಒಳಕ್ಕೆ ಸೆಳೆದುಕೊಂಡಿತು. +‘ನನಗೆ ಬೆಳಕು ಕಂಡರೆ ಆಗುವುದಿಲ್ಲ. ಕಣ್ಣು ನೋಯುತ್ತದೆ. ಅದಕ್ಕೇ ನಿನಗೆ ಒಳಗೆ ಬಾ ಅಂದೆ. ಹೆದರಬೇಡ. ಎರಡು ಗಳಿಗೆ ಆಗಲಿ. ಆಮೇಲೆ ಕಿಟಕಿ ಬಾಗಿಲು ಸ್ವಲ್ಪ ತೆರೆಯುತ್ತೇನೆ. ಇಡೀ ದಿನ ಈ ಕತ್ತಲ ಕೋಣೆಯಲ್ಲಿ ಇರುತ್ತೀನಲ್ಲ ಅದಕ್ಕೆ’ ಎಂದು ಹೇಳುತ್ತ ನನ್ನ ಕೈಬಿಡದೇ ಕೋಣೆಯ ಒಳಗೆ ಕರೆದೊಯ್ದಳು. ಹಾಗೆ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ನನ್ನ ಮೊಣಕಾಲಿಗೆ ಮೆತ್ತಗೆ ತಗುಲಿ ತಡೆದಿದ್ದು ಮಂಚದ ಮೇಲಿನ ಹಾಸಿಗೆಯ ಅಂಚು ಎಂದು ತಿಳಿಯಿತು. ಅವಳು ಮಂಚದ ಮೇಲೆ ಕೂತಿದ್ದು ಕೂಡ ಕಾಣದೆಯೇ ನನಗೆ ಗೊತ್ತಾಯಿತು. +‘ಕೂತುಕೋ’ ಅಂದಳು. +‘ನಾನು ಹೋಗುತ್ತೇನೆ’ ಅಂದೆ. +‘ಕೂತಕೊಳ್ಳೋ. ಜಾಣ ಹುಡುಗ. ಕೂತುಕೋ. ನಿನ್ನ ಅಮ್ಮನನ್ನು ನಾನು ಆಡಿಸಿದ್ದೇನೋ. ಅವಳ ಕುಂಡೆ ಕೂಡ ತೊಳೆದಿದ್ದೇನೆ. ಈಗ ನಿನ್ನನ್ನು ಕೂತುಕೋ ಅಂತ ಪುಸಲಾಯಿಸಬೇಕಾಯ್ತಲ್ಲ. ಯಾರು ಕಳಿಸಿದರು ಲಡ್ಡು?’ +‘ಅಜ್ಜಿ’ +‘ನೀನೂ ಹೋಗಿದ್ದೆಯೇನೋ ಮದುವೆಗೆ?’ +‘ಹೂಂ’ +‘ಮದುವೆ ಹುಡುಗಿಯ ಮನೆಯಲ್ಲಿಯೇ ಆಯಿತಾ, ದೇವಸ್ಥಾನದಲ್ಲಿ ಮಾಡಿಕೊಟ್ಟರೋ?’ +‘ಮನೆಯಲ್ಲೇ. ಅವರದು ದೊಡ್ಡ ಮನೆ. ಚಪ್ಪರ ಹಾಕಿದ್ದರು.’ +‘ನಿನ್ನ ಹೊಸ ಮಾಮಿ ಚೆನ್ನಾಗಿದ್ದಾಳೇನೋ? ಏನು ಹೆಸರು?’ +‘ಹೂಂ ಚೆನ್ನಾಗಿದ್ದಾಳೆ. ಸುರೇಖಾಮಾಮಿ ಅಂತ’ +‘ಸುಧೀರ ಸುರೇಖಾ – ಸು ಮತ್ತು ಸು…… ಒಳ್ಳೆಯ ಜೋಡಿಯಾಯಿತು ಬಿಡು. ಹುಡುಗಿ ಎತ್ತರ ಇದ್ದಾಳೇನು? ಏನು ಬಂಗಾರ ಹಾಕಿದ್ದರು?’ +‘ಸುಧೀರ ಮಾಮನಿಗಿಂತ ಗಿಡ್ಡ. ಬಳೆ ಹಾಕಿದ್ದರು’ +‘ಅವನಿಗಿಂತ ಎತ್ತರ ಇರುವ ಹುಡುಗಿ ತರುತ್ತಾರೇನೋ? ನೀನೂ ಒಳ್ಳೇ ಹುಡುಗ. ಬಳೆ ಹಾಕಿಯೇ ಹಾಕಿರುತ್ತಾರೆ. ಬೇರೆ ಏನು ಇತ್ತು? ತೋಳಿಗೆ ಏನಾದರೂ ಇತ್ತಾ?’ +ಈಗ ಅವಳ ಪ್ರಶ್ನೆಗೆ ಉತ್ತರಿಸಲು ಮದುಮಗಳಿಗೆ ಏನೇನು ಹಾಕಿದ್ದರು ಎಂದು ನೆನೆಸಿಕೊಳ್ಳಲು ಪ್ರಯತ್ನಿಸಿದೆ. ತೋಳಿಗೆ ಏನೂ ಇದ್ದ ಹಾಗಿರಲಿಲ್ಲ. ಮತ್ತೆ ಅವಳ ಸೊಂಟಕ್ಕೆ ಏನಾದರೂ ಇತ್ತೋ? ಅಲ್ಲ, ಅದು ಬಹುಶಃ ದೊಡ್ಡ ಮಾಮಿಗೆ ಇದ್ದಿದ್ದು. ನನಗೆ ಏನೂ ಗೊತ್ತಾಗದೇ, ಕಂಡದ್ದಕ್ಕೂ ಕಲ್ಪಿಸಿಕೊಂಡಿದ್ದಕ್ಕೂ ವ್ಯತ್ಯಾಸ ಮಾಡದೇ, ತೋಚಿದಂತೆ ಉತ್ತರಿಸತೊಡಗಿದೆ. +‘ಅವಳ ಸೊಂಟಕ್ಕೆ ಇತ್ತು.’ +‘ಹೌದೇನೋ? ಮತ್ತೆ ಕತ್ತಿನಲ್ಲಿ ಎಷ್ಟು ಸರ ಇತ್ತು?’ +‘ಒಂದು’ +‘ನೀವು ಹುಡುಗರು ಏನೂ ನೋಡುವುದೇ ಇಲ್ಲ. ನಾನು ನಿನ್ನ ವಯಸ್ಸಿನಲ್ಲಿ ಮದುವೆಗೆ ಹೋದರೆ ಮನೆಗೆ ಬಂದು ಅಜ್ಜಿಗೆ ಪೂರಾ ವರದಿ ಒಪ್ಪಿಸುತ್ತಿದ್ದೆ. ಒಂದು ಚೂರೂ ತಪ್ಪುತ್ತಿರಲಿಲ್ಲ.’ +‘ನಾನು ಹೋಗುತ್ತೇನೆ’ +‘ಇರೋ ಇರೋ. ಕಿಟಕಿ ತೆಗೆಯುತ್ತೇನೆ. ಹೊರಗಡೆ ಕುದುರೆ ಕಟ್ಟಿಹಾಕಿ ಬಂದವನ ಹಾಗೆ ಆಡುತ್ತಿದ್ದೀಯಲ್ಲ’ +ಅವಳು ಎದ್ದು ನನ್ನ ಕೈಬಿಟ್ಟು ಕಿಟಕಿ ಬಾಗಿಲನ್ನು ತುಸು ಜರುಗಿಸಿದಳು. ಆ ಸಂದಿಯಿಂದ ಇಷ್ಟೇ ಇಷ್ಟೇ ಬೆಳಕು ಬಂತು. +‘ವರಪೂಜೆಗೆ ಯಾರು ಕೂತಿದ್ದರು ಹುಡುಗನ ಜೊತೆ?’ +‘ಚಂದ್ರು. ಸೀಮಂತಿನಿ ಮೌಶಿಯ ಮಗ.’ +‘ನೀನು ಯಾಕೆ ಕೂರಲಿಲ್ಲ? ದೊಡ್ಡವನಾಗಿಬಿಟ್ಟೆಯೋ? ಊಟಕ್ಕೆ ಏನು ಮಾಡಿಸಿದ್ದರೋ?’ +‘ತೊವ್ವೆ ಅನ್ನ’ +‘ನಿನ್ನನ್ನು ಕೇಳುತ್ತಿದ್ದೇನಲ್ಲ. ಸಿಹಿ ಏನು ಇತ್ತು? ಎಷ್ಟು ರೀತಿಯ ಸಿಹಿ ಇತ್ತು?’ +‘ಜಿಲೇಬಿ, ಪಾಯಸ, ಲಡ್ಡು. ಮತ್ತು ಹಪ್ಪಳದ ಮೇಲೆ ಮಾಮ ಮಾಮಿಯ ಹೆಸರು ಬರೆದಿದ್ದರು’ +ಕರಿದ ಹಪ್ಪಳಗಳ ಮೇಲೆ ಅವರಿಬ್ಬರ ಹೆಸರು ಬರೆದಿದ್ದು ನಮಗೆಲ್ಲ ಅತೀವ ಕೌತುಕದ ಸಂಗತಿಯಾಗಿತ್ತು. ಅದೂ ಅರಿಶಿಣ ಬಣ್ಣದಲ್ಲಿ ಬರೆದದ್ದು ಹಪ್ಪಳದ ಒಳಗಿನಿಂದಲೇ ಎದ್ದು ಬಂದಂತೆ ತೋರುತ್ತಿತ್ತು. ಇದನ್ನು ಹೇಳುವ ಅವಕಾಶದಿಂದ ನನ್ನ ಮಾತಿಗೆ ಹೊಸ ಉತ್ಸಾಹ ಬಂತು. ಅವಳು ಇಂಥದ್ದನ್ನು ಕೇಳಿಯೇ ಇರಲಿಲ್ಲ. ಇದನ್ನು ನಾನೇ ಮೊಟ್ಟಮೊದಲ ಬಾರಿ ಅವಳಿಗೆ ಹೇಳುತ್ತಿದ್ದೇನೆಂಬ ಅರಿವು ನನ್ನ ಮಾತಿಗೆ ಆತ್ಮವಿಶ್ವಾಸದ ಸರಾಗತೆಯನ್ನು ಕೊಟ್ಟಿತು. +‘ಚೆನ್ನಾಗಿ ಒಳ್ಳೇ ಭರಾಟೆಯಲ್ಲಿಯೇ ಲಗ್ನವಾಗಿದೆ ಹಾಗಾದರೆ. ಎಷ್ಟು ಜನ ಬಂದಿದ್ದರು?’ +‘ಜನವೋ ಜನ. ಮೂರು ಗಂಟೆಯವರೆಗೂ ಊಟ ನಡೆಯಿತು’ +‘ದಿಬ್ಬಣ ಎಲ್ಲಿ ಇಳಿಸಿದ್ದರು? ಬೆಳಗಾಂವದಲ್ಲಿ ಈಗ ಚಳಿ ಇರಬೇಕಲ್ಲ?’ +ಮದುವೆಯ ಹಿಂದಿನ ರಾತ್ರಿ ಒಂದು ದೊಡ್ಡ ಮನೆಯಲ್ಲಿ ದಿಬ್ಬಣ ಇಳಿಸಿದ್ದು, ಆ ರಾತ್ರಿ ಉಂಡ ಬಿಸಿಬಿಸಿ ಊಟ ನೆನಪಾಯಿತು. ವಿವರವಾಗಿ ಹೇಳಿದಷ್ಟೂ ಅವಳಿಗೆ ಖುಷಿ ಅನ್ನುವುದು ನನಗೆ ಗೊತ್ತಾಗಿತ್ತು. ‘ಅರೆವ್ಹಾ ಮುಂದೆ ಹೇಳು’ ಎಂಬ ಪ್ರೋತ್ಸಾಹದ ಮಾತು ಕಿವಿಗೆ ಬಿದ್ದಂತೆಲ್ಲ, ವಿವರಕ್ಕೆ ವಿವರ ಸೇರಿ ಆ ರಾತ್ರಿಯೇ ನನ್ನ ಕಣ್ಣೆದುರು ಬಂದಂತಾಯಿತು. ದಿಬ್ಬಣ ಇಳಿಸಿದ ಆ ಮನೆಯ ಮಹಡಿಯ ಮೇಲೆ ಸಾಲಾಗಿ ಹಾಸಿಗೆಗಳನ್ನು ಹಾಸಿದ್ದರು. ದೇವಸ್ಥಾನದ ಪ್ರಾಂಗಣದಷ್ಟು ದೊಡ್ಡದಾಗಿದ್ದ ಆ ಕೋಣೆಗೆ ಹಲವಾರು ಬಾಗಿಲುಗಳಿದ್ದವು. ಪ್ರಯಾಣದ ಆಯಾಸದಿಂದ ಎಲ್ಲ ಅಮ್ಮಂದಿರಿಗೂ ತುಸು ತಾಳ್ಮೆ ಕಡಿಮೆಯಾಗಿತ್ತು. ಒಂದೆರಡು ಮಕ್ಕಳು ಸಣ್ಣ ತಪ್ಪಿಗೂ ಪೆಟ್ಟು ತಿಂದವು. ದಿಬ್ಬಣ ಹೋಗಿ ತಲುಪಲು ತಡವಾದ್ದರಿಂದ ವರಪೂಜೆಗೆ ಅವಸರವಾಗಿ ಕೆಲವು ಹೆಂಗಸರಿಗೆ ಅಸಮಾಧಾನವಾಗಿತ್ತು. ಅಂತೂ ಈ ಎಲ್ಲ ಮುಗಿದು, ಆ ಕೋಣೆಯಲ್ಲಿ ಹೆಂಗಸರು ಮಕ್ಕಳು ಒಂದು ಕಡೆಗೆ, ಗಂಡಸರು ಇನ್ನೊಂದು ಕಡೆಗೆ ಮಲಗುವ ವೇಳೆಗೆ ರಾತ್ರಿ ಏರಿತ್ತು. ಕೊನೆಯದಾಗಿ ನಾಗೇಶಮಾಮಾ ‘ಆರಿಸುತ್ತೇನೆ ಆರಿಸುತ್ತೇನೆ’ ಎಂದು ಹತ್ತು ಸಲ ಎಚ್ಚರಿಕೆ ಕೊಟ್ಟು ಕೊನೆಯ ದೀಪವನ್ನೂ ಆರಿಸಿದ್ದಾಯಿತು. ಇನ್ನೇನು ನಿದ್ದೆ ಹತ್ತಬೇಕು ಅನ್ನುವಾಗ ‘ರಮಾರಮಣಾ ಮಧುಸೂಧನಾ ಮನಮೋಹನಾ ಆ ಆ’ ಎಂದು ರಾಗವಾಗಿ ಪಿಯಾನೋ ಪೇಟಿಯ ಹಿಮ್ಮೇಳದೊಂದಿಗೆ ಮರಾಠಿ ಹಾಡೊಂದು ಕೇಳಿಬಂತು. ಇನ್ನೂ ನಿದ್ದೆ ಹತ್ತದ ಮಕ್ಕಳು ಹಾಸಿಗೆಯಲ್ಲೇ ಚುರುಕಾಗಿದ್ದು ಗೊತ್ತಾಗಿ ತಾಯಂದಿರು ಶ್ ಶ್ ಎಂದು ಅವರ ಉತ್ಸಾಹ ಅಡಗಿಸಲು ನೋಡಿದರು. ಒಬ್ಬ ಹುಡುಗ ಎದ್ದು ಕಿಟಕಿಯಲ್ಲಿ ಬಗ್ಗಿ ನೋಡಿದ್ದೇ ಇನ್ನೂ ಹಲವರು ಎದ್ದು ಇಣುಕಿ ನೋಡತೊಡಗಿದರು. ಕೆಳಗೆ, ಮನೆಯ ಹಿಂಭಾಗದಲ್ಲಿ ಮರುದಿನದ ಮದುವೆಯೂಟಕ್ಕೆ ತರಕಾರಿ ಹೆಚ್ಚುವುದು ಶುರುವಾಗಿತ್ತು. ಸುಮಾರು ಏಳೆಂಟು ಜನ ಈಳಿಗೆ ಮಣೆಯೆದುರು ಕೂತು ಕಚಕಚನೇ ಹೆಚ್ಚಿ ಹೆಚ್ಚಿ ಹಾಕುತ್ತಿದ್ದರು. ಇಬ್ಬರು ಗರಗರಾ ಎಂದು ತೆಂಗಿನ ಕಾಯಿ ತುರಿಯುತ್ತಿದ್ದರು. ನಡುರಾತ್ರಿಯಲ್ಲಿ ಕೆಲಸ ಮಾಡುತ್ತಿರುವವರ ಮನರಂಜನೆಗೆಂದು ಮದುಮಗಳ ಅಪ್ಪ ಎದುರಿಗೆ ಪಿಯಾನೋ ಇಟ್ಟುಕೊಂಡು ಬಾರಿಸುತ್ತ, ದೊಡ್ಡ ದನಿಯಲ್ಲಿ ಕಚೇರಿ ಶುರುಮಾಡಿದ್ದರು. +ಮೊದಲ ಹಾಡು ಮುಗಿದು ನಿಮಿಷದ ಮೌನದ ತರುವಾಯ ‘ಘೆಯಿಚಂದ ಮಕರಂದ ಪ್ರಿಯ ಹಾ ಮಿಲಿಂದ’ ಎಂದು ಮತ್ತೊಂದು ನಾಟ್ಯಸಂಗೀತ ಶುರುವಾಯಿತು. ಮಕ್ಕಳೆಲ್ಲ ಕಿಟಕಿಯ ಹತ್ತಿರ ನೆರೆದು ಕೆಳಗೆ ನೋಡತೊಡಗಿದರು. ಜಗಳಗಂಟನೆಂದು ಖ್ಯಾತನಾದ ನನ್ನ ಅಜ್ಜನ ತಮ್ಮ ‘ಥೊತ್.. ರಾತ್ರಿಯಿಡೀ ನಡೀತದೆ ಅಂತ ಕಾಣಿಸ್ತದೆ. ಇಷ್ಟವರೆಗೂ ನಾಟಕದ ಮೇಳದವರ ಮನೆಯಿಂದ ಹೆಣ್ಣು ತಂದಿರಲಿಲ್ಲ.’ ಅಂದರು. ಈ ಮಾತು ಮುಂದೆ ಯಾವ ಯಾವ ಬಾಣ ಬಿರುಸುಗಳನ್ನು ಹುಟ್ಟಿಸುತ್ತದೋ ಎಂದು ಎಲ್ಲರೂ ಕಾಯುತ್ತಿರುವಾಗ ಅವರು ಒಮ್ಮೆಲೇ ಎದ್ದು ಕಿಟಕಿಯ ಹತ್ತಿರ ಬಂದು ತಮ್ಮ ಗಡಸು ದನಿಯಲ್ಲಿ ‘ಯಾರೋ ಅದು?’ ಎಂದು ಕೂಗಿದರು. ಗಪ್ಪನೇ ಹಾಡು ನಿಂತಿತು. ನಂತರದ ಕ್ಷಣಕಾಲದ ಮೌನವನ್ನು ಹಿಂಬಾಲಿಸಿ ಅವರ ಮುಂದಿನ ಮಾತುಗಳು ಮೊಳಗಿದವು. ‘ಹೊತ್ತು ಗೊತ್ತು ಇಲ್ಲದೇ ಈ ರಾತ್ರಿಯಲ್ಲಿ ಕೂಗ್ತಿರುದು? ನಾವ್ಯಾರೂ ಇಲ್ಲಿ ಮಲಗುವುದು ಬೇಡವೇನು? ತಲೆಕೆಟ್ಟವನೆ…’ +ಪಿಯಾನೋ ನಿಲ್ಲಿಸಿದ ಅವರು ಕತ್ತೆತ್ತಿ ಮೇಲೆ ನೋಡಿದರು. ಮಹಡಿಯಲ್ಲಿ ದೀಪವಿಲ್ಲದ್ದರಿಂದ ಒಳಗಿನವರಾರೂ ಕಾಣಿಸಿರಲಿಕ್ಕಿಲ್ಲ. ಸರಳಿಗೆ ಮುಖವಿಟ್ಟ ಮಕ್ಕಳನ್ನು ಅವರ ಅಮ್ಮಂದಿರು ದರದರಾ ಹಾಸಿಗೆಗೆ ಎಳೆದರು. ಈ ಅಶರೀರವಾಣಿಯ ಆಜ್ಞೆಯನ್ನು ಪಾಲಿಸುವವರಂತೆ ಅವರು ತಮ್ಮ ಪಿಯಾನೋ ಪೆಟ್ಟಿಗೆಯನ್ನು ಎತ್ತಿಕೊಂಡು ಒಳಗೆ ನಡೆದರು. ಕೆಳಗೆ ನಿಂತು ಹಾಡು ಕೇಳಿಸಿಕೊಳ್ಳುತ್ತಿದ್ದು, ಈಗ ಈ ಕಠೋರ ಕೂಗಿಗೆ ತಬ್ಬಿಬ್ಬಾಗಿ ಮೇಲೆ ಕಿಟಕಿಯತ್ತ ನೋಡಿದ ಶ್ರೋತೃಸಮೂಹದಲ್ಲಿ ಮರುದಿನ ಸುಧೀರಮಾಮಾನನ್ನು ಮದುವೆಯಾಗಲಿರುವ ಸುರೇಖಾಮಾಮಿ ಕೂಡ ಕಂಡಳು. ಅವಳು ಕಣ್ಣುಗಳನ್ನು ಹಿಗ್ಗಿಸಿ ಮಹಡಿಯ ಮೇಲಿನ ಕತ್ತಲು ತುಂಬಿದ ಕಿಟಕಿಯತ್ತ ನೋಡಿದ ರೀತಿಯನ್ನು ನಾನು ಎರಡೆರಡು ಸಲ ವಿವರಿಸಲು ಹೋಗಿ ವಿಫಲನಾದೆ. ‘ಹ್ಯಾಂಗೆ ನಿಲ್ಲಿಸ್ದೆ ನೋಡು’ ಎಂದು ತನ್ನ ಪ್ರತಾಪವನ್ನು ಆ ರಾತ್ರಿ ಮಾತ್ರವಲ್ಲ, ಮರುದಿನವೂ ಚಿಕ್ಕಜ್ಜ ವರ್ಣಿಸಿಯೇ ವರ್ಣಿಸಿದರು. ನನ್ನ ಅಜ್ಜನಾಗಲೀ, ಸುಧೀರಮಾಮನಾಗಲೀ ಅಲ್ಲೇ ಮಹಡಿಯ ಮೇಲೆ ನಮ್ಮ ಜೊತೆಗೇ ಮಲಗಿದ್ದರೂ ಚಿಕ್ಕಜ್ಜನನ್ನು ವಿರೋಧಿಸುವ ಒಂದೇ ಒಂದು ಮಾತನ್ನೂ ಹೇಳಲಿಲ್ಲ. +‘ಹುಡುಗಿಯ ಕಡೆಯವರು ಅಂದ ಮೇಲೆ ಹಾಗೇ. ನುಂಗಿಕೊಂಡು ಇರಬೇಕಾಗುತ್ತದೆ’ ಎಂದು ಹೇಳಿದ ಮಾತಿನಿಂದ ಎಚ್ಚರಾದವನಂತೆ ‘ನಾನು ಹೋಗುತ್ತೇನೆ’ ಎಂದು ಮತ್ತೆ ನನ್ನ ರಾಗ ಶುರುಮಾಡಿದೆ. ಅಷ್ಟು ಹೊತ್ತು ಇದ್ದರೂ ಆ ಕತ್ತಲಿಗೆ ಇನ್ನೂ ನನ್ನ ಕಣ್ಣು ಹೊಂದಿಕೊಂಡಂತೆ ಅನಿಸಲಿಲ್ಲ. ಮೋರೆ ಕೂಡ ನೋಡಿರದ ಎದುರಿಗಿರುವ ಅಸ್ಪಷ್ಟ ಆಕಾರದ ಜೊತೆ ಇಷ್ಟು ಹೊತ್ತು ನನ್ನ ಸಂವಾದ ನಡೆದಿತ್ತು. +ನನ್ನ ಅವಸರವನ್ನು ತಣಿಸುವವಳಂತೆ ಅವಳು ಎದ್ದು ‘ತಗೋ’ ಎಂದು ಒಣಗಿಸಿದ ಮಾವಿನಹಣ್ಣಿನ ಸಾಠೊಂದರ ತುಂಡು ಕೊಟ್ಟಳು. ನಾನು ಅದನ್ನು ಇಡಿಯಾಗಿ ಬಾಯಲ್ಲಿ ಹಾಕಿದ್ದಕ್ಕೆ ‘ಅವಸರ ಮಾಡಬೇಡ’ ಅಂದಳು. +ಅವಳಿಗೆ ಇನ್ನೂ ಮದುವೆಯ ಬಗ್ಗೆ ಕೇಳುವದಿತ್ತು. ಆದರೆ ನಾನೇ ಮಾತುಮಾತಿಗೂ ‘ಹೋಗುತ್ತೇನೆ ಹೋಗುತ್ತೇನೆ’ ಎಂದು ಅನ್ನತೊಡಗಿದ್ದರಿಂದ ಬಿಟ್ಟುಕೊಟ್ಟಳು. +ಮತ್ತೆ ಅದೇ ನಸುಗತ್ತಲ ಖಾಲಿ ಕೋಣೆಗಳನ್ನು ದಾಟಿ ದಾಟಿ ಹೊರ ಜಗಲಿಗೆ ಬಂದೆ. ಎಲ್ಲಿದ್ದನೋ ಇಷ್ಟು ಹೊತ್ತು, ಮಧುಕರ ಗಲ್ಲೆಯ ಮೇಲಿನಿಂದಲೇ ‘ನಿನ್ನನ್ನು ಮನೆಯವರೆಲ್ಲ ಹುಡುಕುತ್ತ ಇದ್ದಾರಲ್ಲೋ. ಎಲ್ಲಿ ಹೋಗಿದ್ದೆ ನೀನು? ಹಾಂ…’ ಅಂದ. ನಾನು ಏನೂ ಹೇಳದೇ ಜಗುಲಿ ಇಳಿದು ಮನೆಯತ್ತ ಧಾವಿಸಿದೆ. +* +* +* +ನಾನು ಕಣ್ಮರೆಯಾದಾಗ ಬಾರಕೂರರ ಮನೆಗೆ ಕಳಿಸುವ ಲಡ್ಡು ಪೊಟ್ಟಣ ಸಿದ್ಧವಾಗಿ, ಅಜ್ಜಿಗೆ ನನ್ನ ನೆನಪಾಗಿತ್ತು. ನಾನು ಹೋಗಿ ಆಗಲೇ ಸುಮಾರು ಹೊತ್ತಾದರೂ ಹಿಂತಿರುಗಿ ಬಾರದ್ದನ್ನು ಗಮನಿಸಿ ಮಧುಕರನನ್ನು ಕೇಳಿದರೆ ಬಂದೇ ಇಲ್ಲವೆಂದು ಹೇಳಿದ. ಎಲ್ಲ ಕಡೆ ಹುಡುಕಿದರು. ಮನೆಯ ಹಿಂದೆ ಹೋಗಿ ಬಾವಿ, ಗೊಬ್ಬರ ಗುಂಡಿ ಎಲ್ಲ ಕಡೆ ನೋಡಿದ್ದಾಯಿತು. ಅಜ್ಜನ ಅಂಗಡಿಗೆ ಜನ ಕಳಿಸಿದರು. ಅಷ್ಟರಲ್ಲಿ ನಾನು ಹಿಂತಿರುಗಿದ್ದೆ. +ಬಂದ ನಂತರ ನಾನು ಇಷ್ಟು ಹೊತ್ತು ಎಲ್ಲಿದ್ದೆ ಎಂದು ಹೇಳಲೇ ಬೇಕಾಯಿತು. +‘ಎದುರು ಮನೆಗೆ ಹೋಗಿದ್ದೆ. ಅಲ್ಲಿ ಆ ಅಜ್ಜಿಯ ಜೊತೆ ಮಾತಾಡುತ್ತಿದ್ದೆ’ +‘ಯಾವ ಅಜ್ಜಿ?’ +‘ಆ ಹೆಂಗಸು’ +‘ಹೋ ಅವಳೇನೋ?… ಈಗ ಅಜ್ಜಿಯ ಹಾಗೆ ಕಾಣುತ್ತಾಳೇನೋ’ ಎಂದು ಒಮ್ಮೆಲೇ ನಾನಾ ಉದ್ಗಾರಗಳು ಹೊರಟವು. ನನ್ನ ಅಮ್ಮನೂ ದಂಗಾಗಿ ಕೂತಿದ್ದಳು. ಸ್ಪಷ್ಟವಾಗಿ ಕಂಡೇ ಇರದ ಅವಳ ಚಹರೆಯ ಕುರಿತು ನೂರಾರು ಪ್ರಶ್ನೆಗಳು ನನ್ನನ್ನು ಮುತ್ತಿದವು. ಯಾರ ವಿಷಯ ಏನೇನು ಹೇಳಿದೆ ಎಂಬುದರ ಬಗ್ಗೆ ಆತಂಕಭರಿತ ದನಿಯಲ್ಲಿ ಸೂಕ್ಷ್ಮವಾಗಿ ವಿಚಾರಣೆ ಶುರುವಾಯಿತು. +ಅವರ ಮಾತುಗಳೆಲ್ಲ ಗಂಭೀರವಾಗುತ್ತಿರುವಾಗ ನಾನು ಕಾಣೆಯಾದ ಸುದ್ದಿ ತಲುಪಿ ನಾಗೇಶಮಾಮ ಅಂಗಡಿಯಿಂದ ಧಾವಿಸಿ ಬಂದ. ವಿಷಯ ತಿಳಿದು ‘ಏನೂ ಆಗುವುದಿಲ್ಲ ಬಿಡು. ಈ ಸೊಣಕಲ ಕಡ್ಡಿಯ ಮೇಲೆ ಕಣ್ಣು ಬಿದ್ದರೆ ಉಲ್ಟಾ ಕಣ್ಣು ಬೀಳಬಹುದು ಅಷ್ಟೇ. ಅದರಿಂದಲಾದರೂ ಇವನ ಕುಂಡೆಯಲ್ಲಿ ಒಂದಿಷ್ಟು ಮಾಂಸ ತುಂಬಿಕೊಂಡೀತು’ ಅಂದ. ಈ ಮಾತು ಕೇಳಿ ಅಮ್ಮನಿಗೆ ಸಿಟ್ಟು ಬಂತು. ತಮ್ಮನಿಗೆ ಏನೋ ಅಂದಳು. ಅವನೇನೋ ತಿರುಗಿ ಅಂದ. ಆದರೂ ಜಗಳದ ದನಿ ತಾರಕಕ್ಕೇರದಿರುವುದನ್ನು ನೋಡಿದರೆ ನಾವು ಬೇಗನೇ ಅಜ್ಜನ ಮನೆ ಬಿಟ್ಟು ಹೊರಡುವ ಹಾಗೆ ಕಾಣಲಿಲ್ಲ. +***** +ಬಹಳ ಬೇಸರದಿಂದ ಸುಸ್ತಾಗಿ, ಹತಾಶೆಯಿಂದ ಆದರೂ ಎಂತದೋ ಒಂದು ಪುಟ್ಟ ಆಸೆಯಿಂದ, ದುಗುಡದಿಂದ ಜೋಗಿ ಬಂದು ಎಂದಿನಂತೆ ಸಾಲದ ಮುಖದಲ್ಲಿ ‘ಟೀ ತತ್ತಪಾ ಒಂದಾ’ ಎಂದ. ಮಟಮಟ ಮಧ್ಯಾಹ್ನದ ಬಿಸಿಲು ಎಲ್ಲೆಡೆ ಚೆಲ್ಲಿತ್ತು. ಗಿರಾಕಿಗಳು […] +ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […] +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_771.txt b/Kannada Sahitya/article_771.txt new file mode 100644 index 0000000000000000000000000000000000000000..089257518b07a9ddafff3a020c92ed4802fa78d7 --- /dev/null +++ b/Kannada Sahitya/article_771.txt @@ -0,0 +1,287 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಂದೆರಡು ಮಾತುಗಳು +‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ ಹೇಳಿ ಬರೆಯಿಸಿ ಪ್ರಕಟಿಸಿದರು. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಸಿನಿಮಾಟೋಗ್ರಾಫರೂ ಗೆಳೆಯರೂ ಆದ ಬಿ.ಇ.ಗೌರಿಶಂಕರ್‍ ಇದು ಸಿನಿಮಾ ಮಾಡ್ಲಿಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಒತ್ತಾಯಿಸದಿದ್ದಲ್ಲಿ ನಾನು ಇದನ್ನು ಎರಡನೆ ಬಾರಿ ಓದುವ ಪ್ರಯತ್ನ ಮಾಡುತ್ತಿರಲಿಲ್ಲ. ಓದಿದಾಗ ಯಾರಾದರೂ ಸಿನಿಮಾ ಮಾಡಬಹುದೆಂದೆನ್ನಿಸೀತು. ಅಂತ ಕಮರ್ಷಿಯಲ್ ಭಾವ ಮೂಡಿದಾಗ ಕಂನಾಡಿಗಾ ನಾರಾಯಣ ಎಂಬ ಗಾಡಿಕೊಪ್ಪದ ಸಹೋದರ ಈ ನೀಳ್ಗಥೆಯೊಂದನ್ನೇ ಪುಸ್ತಿಕೆಯಾಗಿ ಪ್ರಕಟಿಸಿದರೆ ಹೇಗೆ ಎಂಬ ಭಾವನೆ ಪ್ರಕಟಿಸಿದ. ಉತ್ತಮ ಲೇಖಕನೂ ಆದ ನಾರಾಯಣಗೆ ಪ್ರಕಟಿಸಿ ಬಿಡು ಎಂದು ಒಪ್ಪಿಗೆ ಕೊಟ್ಟು ಬಿಟ್ಟೆ. ಆದ್ದರಿಂದ ಈ ಸಿನಿಮೀಯ ನೀಳ್ಗಥೆಯಾದ ‘ಕನಕಾಂಗಿ ಕಲ್ಯಾಣ’ ಎಂಬುದು ಪ್ರಟವಾಗ್ತಿದೆ. +ಇದನ್ನು ಪ್ರಕಟಿಸಲು ಆಸಕ್ತಿ ತೋರಿಸಿದ ಕಂನಾಡಿಗಾ ನಾರಾಯಣನಿಗೆ, ಪ್ರಕಟಿಸಿರುವ ಮಾ ಪ್ರಿಂಟ್-ಪಬ್ಲಿಷರ್ಸ್ ಗೆಳೆಯರಿಗೆ, ಇದನ್ನು ಬರೆಯಿಸಿದ ಜಿ.ಎಸ್.ಸದಾಶಿವ ಅವರಿಗೆ ಇದನ್ನು ಒಳ್ಳೆಯ ಸಿನಿಮಾ ಮಾಡಿಸಬೇಕೆಂದು ಯೋಚಿಸಿರುವ ಮಿತ್ರ ಬಿ.ಸಿ.ಗೌರಿಶಂಕರ್‌ಗೆ, ನಾನು ಕೃತಜ್ಞನಾಗಿರುವೆ. +-ಕುಂ.ವೀ. +ಕನಕಾಂಗಿ ಕಲ್ಯಾಣ +ಅಕ್ಷತೆ ಎಸೆದಂತೆ ಆಗಸದ ತುಂಬ ಚದುರಿರುವ ಪಾರಿವಾಳಗಳು : ರೆಕ್ಕೆ ಬಡಿಯುತ್ತ ದಿಕ್ಕು ಬದಲಿಸುತ್ತಿರುವ ಕೆಲವು. ರೆಕ್ಕೆ ಬಿಚ್ಚಿಕೊಂಡೇ ತೇಲುತ್ತಿರುವ ಕೆಲವು. ಹುಲಿಗುಡ್ಡದ ಆಚೆಯ ಕನಕದುರ್ಗೆಯ ದಿಕ್ಕಿನಲ್ಲಿರುವ ಆಲದ ಮರದ ಮೇಲಿಂದ ಕರಿಯ ತೂರಿರಬಹುದಾದ ಸೊಗಸುಗಾರ ಅರ್ಜುನ ಇನ್ನೂ ಕಾಣಿಸಿಕೊಳ್ಳಲಿಲ್ಲವಲ್ಲ! ಪರಮೇಸಿ ಶಿವಕ್ಕನ ದಿಬ್ಬದ ಮೇಲೇರಿ ತನ್ನ ಕಾಮನಬಿಲ್ಲಿನಂಥ ಹುಬ್ಬಿಗೆ ಕೈ ಹಚ್ಚಿ ತನ್ನ ಚಿಗುರುಗಂಗಳನ್ನು ಹರಿಬಿಟ್ಟ ಅಶ್ವಿನಿ ಕಾರ್ತಿಯ ಹಿಂಜಿದ ಅರಳೆಯಷ್ಟೆ ಬೆಳ್ಳಗಿರುವ ಅರ್ಜುನ ಬಿಟ್ಟ ಬಾಣದಂತೆ ಸುರುಗಿ ಬರುತ್ತಿರುವುದು ಗೋಚರಿಸಲಿಲ್ಲ. ಅಲ್ಲಿಂದ ಕುಪ್ಪಳಿಸಿದ ಮರದಿಂದ, ಮಾವಿನ ಮರದಿಂದ ಮಾಗಿ ಮಾವಿನ ಹಣ್ಣು ನೆಲಕ್ಕುದುರಿದಂತೆ… ಗರಡಿ ಮನೆಯ ಸಹಚರರಾದ ಕರಿಲಿಂಗ, ಕಾಳರ ಸಹಾಯದಿಂದ ಸೀತಾಳಯ್ಯನ ಗುಡಿಯ ಎತ್ತರದ ಗೋಪುರ ಏರಿದ. ಮುಂಗಾರ ಚೆಲುವ ಸೂರ್ಯ ಕಿರಣಗಳ ಶಾಖಕ್ಕೆ ಗಿಣಿ ಮೂಗಿನ ಕೆಳಗೆ, ಕಂದುವರ್ಣದ ಚಿಗುರು ಮೀಸೆಯ ಮೇಲೆ ಮುತ್ತು ಪೋಣಿಸಿದಂತೆ ಮೂಡಿದ ಬೆವರಹನಿಗಳು ಒಂದೊಂದಾಗಿ ಚೂಪನೆಯ ಗದ್ದದ ಮೇಲಕ್ಕೆ ಜಾರುತ್ತಿರುವುದನ್ನು ಕಿಟಕಿ ಮರೆಯಲ್ಲಿ ಆಸೆಗಣ್ಣಿಂದ ನೋಡುತ್ತಿದ್ದ ಗೌರವ ವರ್ಣದ ಕೆಂಪಿಯ ಕಡೆ ಅವನ ಗಮನವಿರಲಿಲ್ಲ. ಹಾಗೆಯೇ ಕೆಲವು ಮಾರು ದೂರದಲ್ಲಿ ಹರಿವ ಕೃಷ್ಣೆ ಕಡೆ ಹೋಗದೆ ತಾಮ್ರದ ಕೊಡಗಳಿಗೆ ಗದ್ದ ಊರಿ ಬೊಗಸೆ ಗಣ್ಣುಗಳಿಂದ ಗಬಗಬನೆ ತಿನ್ನುತ್ತಿದ್ದ ಸಾವಿತ್ರಿ, ನೀಲಾ, ಸುಶೀಲಾ, ಹೇಮಾ, ಕಮಲಿಯರ ಕಡೆಗೂ ಅವನ ಗಮನವಿರಲಿಲ್ಲ. ಬಸವ ವಿಗ್ರಹದ ಮೇಲೆ ಬಲಿಷ್ಟ ತೊಡೆಗಳನ್ನೂರಿ ಗುಡ್ಡದ ಸಾಲಿನಾಚೆಗೆ ಕಣ್ಣು ತೂರಿದರೂ ಸುಳಿವಿಲ್ಲ ಅರ್ಜುನನದು… ಅಲ್ಲಲ್ಲಿ ಯಾವು ಯಾವುವೋ ಕಾಡು ಪಕ್ಷಿಗಳು; ಮುಂಗಾರಿಗೆ ಮೊಳೆವ ಕ್ರಿಮಿಕೀಟಗಳನ್ನು ಗಬಕಾಯಿಸುವವು. +“ಕೆಳಕ್ಕಿಳಿಯೋ, ಬಿದ್ದು ಕಾಲು ಮುರ್‍ಕೊಂಡೀ” ಸೊಂಟಕ್ಕೆ ಕೈ ಊರಿ ಶಿವ ಧನಸ್ಸಿನಂತೆ ಬಾಗಿ ಬಂದ ನಿಂಗಜ್ಜಿ ಕೈಯಲ್ಲಿದ್ದ ಬೆತ್ತ ಝಳಪಿಸಿತು. “ಇಲ್ಲಂದ್ರೆ ನೋಡು ಸೊಂಟ ಮುರೀತೀನಿ.” ಬಬ್ರುವಾಹನ ಪುರ್‍ರನೆ ಹಾರಿ ಬಂದು ಬಿಳಿ ಜೋಳದ ತೆನೆಯಂಥ ತನ್ನ ತಲೆ ಮೇಲೆ ಕೂಡಲೆತ್ನಿಸುತ್ತಲೇ ತಪ್ಪಿಸಿಕೊಳ್ಳಲು ಪರದಾಡುತ್ತ ‘ಅಲಲಲಾ’ ಎಂದು ದೂರ ಸರಿಯಿತು. ಬಸವಃ ಸಂಗ ತಡೆಯದೆ ನಗಾಡಿದರು. ಅವನನ್ನು ಇಳಿಸಿಕೊಳ್ಳಲೆಂದೇ ಕಾದಿರುವ ಶ್ಯಾಮಲ ವರ್ಣದ ತರುಣಿಯರು ಪರಸ್ಪರ ಒತ್ತಿ ಕುಳಿತಿದ್ದವರು ಥಳ ಥಳ ಹೊಳೆವ ತಾಮ್ರದ ಕೊಡಗಳನ್ನು ತಮ್ಮ ಹೊಳೆಹೊಳೆವ ಸೊಂಟಕ್ಕಿಟ್ಟುಕೊಂಡು ಬೇಸರದ ನಿಟ್ಟುಸಿರು ಚೆಲ್ಲಿದ ಸ್ವಲ್ಪ ಹೊತ್ತಿಗೆ ಹುಲಿಗುಡ್ಡದ ತುದಿಯಲ್ಲಿ ಅಂದರೆ ಜಾಗಟಗೆರೆ ಬೇಡರು ಅಪಹರಿಸುವ ಕಲ್ಲು ಲೋಬಾನದ ಸೀಳು ಶಿಖರದ ತುದಿಯಲ್ಲಿ ಅರ್ಜುನ ಬೆಳ್ಳಿ ತಟ್ಟೆಯಂತೆ ಕಾಣಿಸಿಕೊಂಡೊಡನೆ ಶಂಭು ಸೀಟಿ ಹಾಕಿ ಹರ್ಷ ಪ್ರಕಟಿಸಿದ. ಪರಮೇಶಿಯೂ ಹಾಕಿದ ಸೀಟಿಯ ಸಂಮೋಹನಕ್ಕೆ ಅದು ಬಾಣದಂತೆ ಹತ್ತಿರವೇನೋ ಸುರುಗಿ ಬಂತು…. ಆದರೆ ತುಂಟತನಕ್ಕೆ ಹೆಸರಾದ ಅದು ಚೆಂಡಿನಂತೆ ಪುಟಿದು ಮೇಲೇರಿ ಬಿಡಬೇಕೆ! ಅಲಕನಂದಿ ತೀರ ಬಳಸಿ ದೊಡ್ಡ ದೊಡ್ಡ ಪ್ರದಕ್ಷಿಣಿ ಹಾಕಲಾರಂಭಿಸಿದ ಅದು ತನ್ನ ಯಾವುದೇ ಸಂಜ್ಞೆ ಸೂಕ್ಷ್ಮಗಳಿಗೆ ಮಣಿಯದಿದ್ದಾಗ ಸಿಟ್ಟು ಬಾರದಿರುತ್ತದೆಯೇ ಪರಮೇಶಿಗೆ! ಮೊಳಕೆ ಬಿಡೆದ ಕೂಡಲೇ ಕಾಳುಗಳನ್ನಾಗಲೀ; ಬೆಳ್ಳಿ ಮರಡಿಯ ಸಿಹಿ ಜಂಬು ನೇರಲಹಣ್ಣುಗಳನ್ನಾಗಲೀ ಹಾಕುವುದಿಲ್ಲ ಎಂದು ಗೊಣಗಿಕೊಂಡ… ನಿನ್ನೆ ಇಟ್ಟಿದ್ದೆರಡು ಮೊಟ್ಟೆಗಳ ಮೇಲೆ ರೆಕ್ಕೆ ಹರಡಿ ಕೂತಿದ್ದ ಸುಭದ್ರಾಳಿಗೋ ಜಂಬು ನೇರಲ ಹಣ್ಣೆಂದರೆ ಪಂಚ ಪ್ರಾಣ. ಎಷ್ಟಿದ್ದರೂ ಬಾಣಂತಿ… ಕೂಡಲೇ ಹಾರಿ ಬಂದು ಅವನ ವಿಶಾಲ ಭುಜದ ಮೇಲೆ ಹಾರಿ ಕೂತಿತು. +ಪರಮೇಶಿ ಸುಭದ್ರಳನ್ನು ತೋರಿಸಿ “ನೋಡು…. ಆ ನಿನ್ ಅರ್ಜುನ ರೆಕ್ಕೆ ಮುಚ್ಕೊಂಡು ಸುರುಗಲಿಲ್ಲಾ… ನನ್ನೆಸ್ರು ಸಾವಿತ್ರೀನೇ ಅಲ್ಲ….” ಕಡೆದ ಶಿಲ್ಪದಂಥ ಸಾವಿತ್ರಿಯ ತುಂಟ ಮಾತಿಗೆ ಕೊಡಗಳು ಪರಸ್ಪರ ತಾಕಾಡಿ ಮುಲುಗುಟ್ಟಿದ್ದವು. +ಆಗಲೇ ಮುಂಗೈ ಏರಿ ಕೂತಿರುವಳು ಸುಭದ್ರ! ಸೀಟಿ ಹಾಕಿ ಆಕೆಯನ್ನು ತೂರಿದ ಬಯಲಿಗೆ. ತೀಕ್ಷ್ಣ ಗಮನೆಯಾದ ಆಕೆ ಮುಗಿಲೊಳಗಿದು ಮತ್ತೆ ಹೆಗಲನಲಂಕರಿಸಿದಳು, ಮೊದಲೇ ಮಾಟಗಾತಿ! ಆಕೆಯ ಕಣ್ಣೋಟದ ಬಲೆಗೆ ಬೀಳದೆ ಇರಲಿಲ್ಲ. ಅರ್ಜುನ, ಕೆಳಕ್ಕಿಳಿದು ನಾಟಕ ಆರಂಭಿಸಿದ, ಅದಕ್ಕೆ ಹುಸಿ ಏಟು ಕೊಟ್ಟು ಕೆಳಕ್ಕೆ ಬಿಟ್ಟ. ಅವೆರಡು ಪರಸ್ಪರ ಕೊಕ್ಕು ತಾಕಾಡಿ ತಮ್ಮ ಪಕ್ಷಿ ಭಾಷೆಯಲ್ಲಿ ರಮ್ಯ ಕಾವ್ಯ ಸಮಾನವಾಗಿ ಮತಾಡುತ್ತಾ ಮೊಟ್ಟೆ ಕಡೆ ಹೋಗಿ ಒತ್ತಿ ಕುಳಿತವು. +ಸುಭದ್ರಳೊಳಗೆ ಅದೆಂಥ ಸಮ್ಮೋಹಕ ಶಕ್ತಿ ಇದ್ದೀತು! ಬೆರಗಾದ ಪರಮೇಶಿಗೆ ಶ್ರಾವಣದ ಮೂರನೇ ಸೋಮವಾರ ದಾಟಿದರೆ ಇಪ್ಪತ್ತನ್ನು ಪ್ರವೇಶಿಸುವ ಪ್ರಾಯ…. ಸರದಾರ ಬರುವಾಗ ಸುರಿದಾವ ಮಲ್ಲೀಗೆ…. ಶ್ಯಾಮಲ ವರ್ಣದ ತರುಣಿಯರು ಪದ ಹಾಡುತ್ತಾ ತಮ್ಮ ಕೊಡಗಳೊಂದಿಗೆ ಬಾಳೆ ನಡುವೆ ಜುಳುಜುಳು ಹರಿವ ಹಳ್ಳದ ಕಡೆ ಬಳುಕುತ್ತ ಹೆಜ್ಜೆ ಹಾಕಿದರು. +ಮೊಳಕೆ ಹೊಡೆದ ಕಡಲೆ ಕಾಳುಗಳಿಗೆ ಕುಸುಬಿ ಕಾಳು ಬೆರೆಸಿ ಪಾರಿವಾಳಗಳ ಗೂಡುಗಳಿಗೆ ಹಾಕುತ್ತಿದ್ದಾಗ “ಪರಮೇಶಾ… ಪರಮೇಶಾ….” ಎಂದು ಎದುರುಸಿರು ಬಿಡುತ್ತಲೇ ಬಂದ ಸಿದ್ಧ. ಗುಮುಟೆಯಾಕಾರದ ಅವನ ಇಡೀ ದೇಹ ಬೆವರಲ್ಲಿ ಜಳಕ ಮಾಡುತ್ತಿತ್ತು. ಚಾವಡಿ ಹತ್ರ ದೇವಸ್ಥರು ಸೇರವ್ರೆ… ಜಾಗಟಗೆರೆ, ಗೀಗಟಗೆರೆ…. ಅಂತ ಗುಸ್ಗುಸು ಮಾತು ನಡೆದೈತೆ… ನಡಿ ಹೋಗೋಣ.” +ಜಾಗಟಗೆರೆ ಎಂಬ ಶಬ್ದಕ್ಕೆ ಪರಮೇಶಿಯ ಕಿವಿಗಳು ನಿಮಿರಿದವು. ಕಣ್ಣುಗಳಿಗೆ ರಕ್ತ ನುಗ್ಗಿ ಇಳಿಯಿತು. ಮುಷ್ಠಿ ಬಿಗಿದ. ಸೆಡ್ಡೊಡೆದು ಅಖಾಡಕ್ಕೆ ಆಹ್ವಾನಿಸುವ ಕುಸ್ತಿ ಪೈಲ್ವಾನನಂಥ ಊರು ಅದು. +“ಉಣ್ಣೋಕೆ ಹೋತ್ತಾಗ್ಲಿಲ್ವೇನೋ ನಿಂಗೆ” ತುಸು ದೂರದಲ್ಲಿ ಬಿಲ್ಲಿನಾಕಾರದ ಅಜ್ಜಿ “ಚಪ್ಪರದಳ್ಳಿ ಉರುಕುಂದಿ ಜೇನಿಳಿಸೋಕೆ ಕರ್‍ಯೋಕೆ ಬಂದಿದಾನೆ…. ಎಷ್ಟು ಕೊಟ್ರೂ ಹೋಗ್‌ಬ್ಯಾಡ… ಬೆಳ್ಳಿ ರೂಪೈ ಕೊಟ್ರೂ ಒಪ್ಕೋಬ್ಯಾಡ”! ಮನೆಯ ಮುಂದೆ ಎಕ್ಕೆ ಎಲೆ ಬತ್ತಿ ಹಚ್ಚಿ ಬುಸು ಬುಸು ಹೊಗೆ ಬಿಡುತ್ತಾ ಕೂತಿರುವ ಒಕ್ಕಣ್ಣಿನ ಉರುಕುಂದಿಗೆ ಕೇಳಿಸಲೆಂದೇ ಗಟ್ಟಿಯಾಗಿ ಹೇಳಿತು. ಗುಡೇಕೋಟೆಯವರೊಂದಿಗೆ ಕರಡಿ ಹಿಡಿಯಲು ಹೋಗಿ ಕಾಲು ಕಳೆದುಕೊಂಡಿಲ್ಲವೇ ಮಗ ಮಾಲಿಂಗ.! +ಅದರ ಯಾವ ಮಾತು ಕೇಳಿಸಿಕೊಳ್ಳಲು ತಯಾರಿದ್ದರೆ ತಾನೆ ಮೊಮ್ಮಗ… ಬೇಕು ಬೇಡ ಉತ್ತರ ಕೊಟ್ಟು ಸಿದ್ದನೊಂದಿಗೆ ಚಾವಡಿ ಕಡೆ ಓಡಿದ. ಹಾಳಾದೋನೆ…. ಅಜ್ಜಿಯ ಪ್ರೀತಿಯ ಕೋಪ ತನ್ನ ಪಾಡಿಗೆ ತಾನು ಟುಸ್ಸ್ ಎಂದಿತ್ತು. +ಚಾವಡಿ ಕಟ್ಟೆ ಕೇವಲ ಚಾವಡಿ ಕಟ್ಟೆ ಅಲ್ಲ…. ಅದು ಇಡೀ ಹೊನ್ನೂರಿನ ತ್ರಿಕಾಲ ಸತ್ಯ ಹೇಳುವ ಜಾತಕ…. +ಕಟ್ಟೆ ಮೇಲೆ ಆತಂಕ ಮುಖದ ದೈವಸ್ಥರು…. ಅವರ ನಡುವೆ ಪೊದೆ ಪೊದೆ ಬೆಳ್ಳಿ ಮೀಸೆಯ ಹೊನ್ನಜ್ಜ… ಕೆಳಗೆ ಕೂತಿರುವ ನಿಂತಿರುವ ಜನ…. ಎಲ್ಲರಿಗೆ ಮೈತುಂಬ ಬಾಯಿಗಳು… ಕಿವಿಗಳು… ಕುಂಬಾರರ ಆವಿಗೆಯಂತೆ ಬೇಯುವ ದೇಹಗಳ ಜನ…. ಪಂಚಾಯ್ತಿಗೆ ಸಾಟಿ ಇಲ್ಲದ ಪರಮೇಶಿ ಚಾವಡಿ ಗಂಗಳದ ತುದಿಯಲ್ಲಿದ್ದ ಬುಗುಟೇ ಕಲ್ಲನ್ನು ಏರಿ ಬಸವನ ಆಸರೆಯಲ್ಲಿ ಕೂತಿದ್ದ… ಅವನಿಗೆ ಸ್ಪಲ್ಪ ದೂರದಲ್ಲಿ ಪಳಕೂಪಿಳಕೂ ಕಣ್ಣು ಬಿಟ್ಟು ಕೂತಿರುವ ಕಾಗೆ. +ಹೊನ್ನೂರಿನಲ್ಲಿ ಬರುವ ಕಾರುಣುವಿಯಂದು ನಡೆವ ಕರಿ ಕಳೆದ ಇಪ್ಪತ್ತೈದು ವರ್ಷಗಳಿಂದ ನಡೆದಿಲ್ಲ… ಅದನ್ನು ಹರಿದು ತರುವ ಕುರಿತು ಪಂಚಾಯ್ತಿ ಚರ್ಚೆ ನಡೆಸಿತ್ತು. ಕರಿ ಕೇವಲ ಒಂದು ಆಭರಣವಲ್ಲ… ಅದು ಸಂಜೀವಿನಿ! +“ನಮ್ಮೂರ್‍ಗೆ ರೋಗರುಜಿನ ಬರದಂಗೆ ಊರಿನ ಪಶೂಪಕ್ಷಿ ನೆಮ್ಮದಿಯಿಂದ ಇರಬೇಕೆಂದ್ರೆ ಹೊನ್ನೂರಿನ ಕರಿ ತರಲೇಬೇಕು.” ರುದ್ರಗೌಡನ ಕೈಯಲ್ಲಿ ವೀರಭದ್ರನ ಗುಗ್ಗುಳದಂತೆ ದಗ್ಗೆಂದು ಉರಿಯುತ್ತಿರುವ ಚಿಲುಮೆ. +“ಅಲಕನಂದೀಲಿ ನಮ್ಮೂರು ಮುಳುಗಬಾರದಂದ್ರೆ ಕರಿ ನಮ್ಮೂರ್‍ಗೆ ಬರ್‍ಲೇಬೇಕು!” ಗುಡೇ ಕೋಟೆ ದೊರೆಗಳ ಆಸ್ಥಾನ ಪೈಲ್ವಾನ ನರಸಿಂಹ ಜೆಟ್ಟಿಯನ್ನು ಮಹಾನಮವಿ ಹಬ್ಬದಲ್ಲಿ ಸೋಲಿಸಿ ಹೆಸರು ಮಾಡಿರುವ ಹನುಮ ಜೆಟ್ಟಿಗೆ ಕೆಮ್ಮು ಒತ್ತರಿಸಿ ಬಂತು ಅಷ್ಟರಲ್ಲಿ. +ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಶ್ವೇತಾ, ಮಾಣಿಕ್ಯಧಾರ, ಕಪಿಲತೀರ್ಥದಂಥ ಚಿಕ್ಕಪುಟ್ಟ ತೊರೆಗಳ ಸಂಗಮವಾದ ಆಲಕನಂದಿ ಬೇಸಗೆಯಲ್ಲಿ ಅದೇ ಋತುಮತಿಯಾದ ಬಾಲಕೆಯಂತೆ ಕಂಡರೆ ಮಳೆಗಾಲದ ಒಂದೊಂದು ದಿನಗಳಲ್ಲಂತೂ ಇಕ್ಕೆಲಗಳನ್ನು ಆಪೋಶನಗೈಯುತ್ತ ರುದ್ರತಾಂಡವ ಮಾಡುವ ಮಹಾಕಾಳಿಯೆ ಸರಿ. +ಈ ಊರು ಕನಕದುರ್ಗೆಯ ತವರ್‍ಮನೆ. ಆಕೆ ಮ್ಯಾಲೆ ಆ ಜಾಗಟಗೆರೋರ್‍ಗೆ ಎಷ್ಟು ಅಧಿಕಾರ ಐತೋ ಹೊನ್ನೂರಿನವರಾದ ನಮ್ಗೂ ಅಷ್ಟೇ ಅಧಿಕಾರ ಐತೆ…. ಯಾವ ಬೂಪನಾದ್ರೂ ಆ ಕರಿ ತಂದಾ ಅಂದ್ರೇ ಮಾತಾಯಿ ನಮ್ಮೂರ್‍ಗೆ ಬಂದಂಗೇನೇ!…. ಹೊನ್ನೂರಿಗೆ ಬದ್ರಕೋಟೆಯಂತಿರುವ ಹೊನ್ನಜ್ಜ ತನ್ನ ತಲೆ ಪೇಟವನ್ನು ಸರಿಪಡಿಸಿಕೊಂಡ. +ಹೌದು! ಕನಕದುರ್ಗೆ ಊರ ಹೊರಗಿನ ಸುತ್ತಲ ಮರದಲ್ಲಿ ಹುಟ್ಟಿದವಳು. ಆಕೆ ಜಾಗಟಗೇರೆ ಸೇರಿ ಎಷ್ಟೋ ವರ್ಷಗಳುರುಳಿರಬಹುದು! ಆಕೆಗೆ ಹರಕೆ ಹೊತ್ತ ಮೇಲೆಯೇತಾನು ಬದುಕಿದ್ದಂತೆ! ಪರಮೇಶಿ ಭಕ್ತಿ ಪರವಶನಾಗಿ ಕಂಪಿಸಿದ. +“ಕರಿ ಹೊನ್ನೂರಿನ ಸ್ವಾಭಿಮಾನದ ಪ್ರಶ್ನೆ…” +“ಅದನ್ನು ತರೋ ಗಂಡಸರು ಮುಂದೆ ಬರ್‍ರಿ” ವೆಂಕಟಾಚಲ ಶಾಸ್ತ್ರಿಗಳ ಮಾತು ಗಂಡಸರ ನರಗಳನ್ನೇ ಕೆಣಕಿತು. ಪರಸ್ಪರ ಮುಖ ನೋಡಿಕೊಂಡು ತಲೆ ತಗ್ಗಿಸಿದರು. +ಮುಳ್ಳಿನ ಮೇಲೆ ಕೂತವರಂತೆ ಚಡಪಸಿದರು ಹಿರಿಯರು, ಅವರ ಹಣ್ಣಾದ ಮೀಸೆಗಳು ಸ್ಪುರಿಸಿದವು. +ತಾನು ಬಿಟ್ಟ ನಿಟ್ಟುಸಿರಿಗೆ ಕಂಪಿಸುತ್ತಿದ್ದ ವೀಳ್ಯದೆಲೆಗಳ ನಡುವೆ ವಜ್ರದ ಹರಳಿನ ಹೊನ್ನಿನುಂಗುರವಿಟ್ಟ ಹೊನ್ನಜ್ಜ. +“ಕರಿ ತರ್‍ತೀನಿ ಅನ್ನೋ ಗಂಡಸರ್‍ಯಾರಾದ್ರೂ ಮುಂದೆ ಬಂದು ವೀಳ್ಯೆ ಸ್ವೀಕರಿಸಿ ಈ ಉಂಗುರ ಧರಿಸಬಹ್ದು” ಒಂದು ಕಾಲಕ್ಕೆ ಪರಾಕ್ರಮ ಮೆರೆದ ಹೊನ್ನಜ್ಜನ ಮಾತಿಗೆ ಗುಸುಗುಸು ಸದ್ದು. ಮರುಕ್ಷಣ ಮೌನ; ಕೊರೆದ ಚಿತ್ರದಂತೆ ನಿಶ್ಯಬ್ದ ಮರುಕ್ಷಣ. +ಹಸಿರು ಹೆಪ್ಪುಗಟ್ಟಿದ ವೀಳ್ಯದೆಲೆ ನಡುವೆ ಮೇಲೆ ನೋಡುವವರ ಶುಕ್ಲ ಪಟಲಕ್ಕಿರಿಯುವ ಉಂಗುರದ ವಜ್ರದ ಹರಳು. ಆಸೆಗಣ್ಣಿಂದ ನೋಡಿದವರ ದೃಷ್ಟಿ ಮಂಕಾಯಿತು. ಲಾಲಾರಸ ಹನಿದ ಬಾಯಿಗಳು ಬತ್ತಿ ಒಣಗಿದವು. +ಅಶ್ವಿನಿ ಭರಣಿಗೆ ಗರ್ಭಿಣಿಯಂತೆ ತುಂಬಿ ಹರಿಯುತ್ತಿರುವ ಅಲಕನಂದಿಯ ಒಡಲು ಕ್ರೂರ ಮೊಸಳೆಗಳ ತಾಣ. ಅದರಾಚೆ ನರರಕ್ತ ಕುಡಿದು ಅರಗಿಸಿಕೊಳ್ಳಬಲ್ಲ ತಾಕತ್ತಿನ ಬೇಟೆಗಾರ ಬೇಡರೇ ತುಂಬಿರುವ ಜಾಗಟಗೆರೆ. +ಕೆಲ ಮುತ್ತೈದೆಯರು ಬಂದು ತಂತಮ್ಮ ಕುಂಕುಮ ಭಾಗ್ಯವನ್ನು ಕರೆದೊಯ್ದರು ಉಪಾಯಾಂತರದಿಂದ ಕೆಲ ಗೃಹಿಣಿಯರಿಗೆ ತಮ್ಮ ಗಂಡಂದಿರು ಪರಾಕ್ರಮ ಮೆರೆಯಲೆಂಬಾಸೆ…. +ನರಗಳ ಸಾಮರ್ಥ್ಯ ಅಣಕಿಸುವಂತೆ ಸುಳಿಯಿತು ತಂಗಾಳಿ…. +ಹೊನ್ನಜ್ಜನ ದೇಹವಂತೂ ಸುಣ್ಣದ ಹರಳಿನಂತೆ ಅರಳಿತು. +‘ಥೂ ನಿಮ್ಮ ಗಂಡಸುತನಕ್ಕೆ ಬೆಂಕಿ ಹಾಕ…. ಆ ಜಗಟಗೇರೆ ಹಂದಿಗಳು ನಾಳೆ ಬಂದು ನಿಮ್ಮ ಹೆಂಡ್ರನ್ನ ಹೊತ್ಕೊಂಡೊಯ್ದರು ನೀವ್ಯಾರು ಪ್ರತಿಭಟಿಸೊಲ್ಲ….” ಹೊನ್ನಜ್ಜನ ದೇಹದ ಸಾವಿರ ಸುಕ್ಕುಗಳು ಅಪಮಾನದಿಂದ ಕಂಪಿಸಿದವು. +ಗಂಡಸರ ತಲೆಗಳು ಬಾಡಿ ಕಂಪಿಸಿದವು. +ಪರಮೇಶಿ ಹುಲಿಮರಿಯಂತೆ ಮುನ್ನುಗಿದ. ಕೈ ಬೀಸಿ ಕರೆಯುತ್ತಿದ್ದ ವೀಳ್ಯದ ಕಡೆ ನಡೆದು ಕೈ ಹಚ್ಚಿದ. +ಗಾಳಿಗೆ ಕಂಪಿಸುವ ತರಗೆಲೆಗಳಂಥ ಮಾತುಗಳು…. +ಹೊನ್ನಜ್ಜನ ಮಾಗಿದ ಕಣ್ಣುಗಳು ಹನಿದವು. ಬಾಚಿ ತಬ್ಬಿಕೊಂಡ. ದೈವದ ಸಮಕ್ಷಮದಲ್ಲಿ ಪರಮೇಶಿಯ ಬೆರಳಿಗೆ ಉಂಗುರ ತೊಡಿಸಿದ. +ಈ ಸುದ್ದಿ ಊರ್‍ತುಂಬ ಹರಡಲು ವಿಳಂಬವಾಗಲಿಲ್ಲ. ವಿಚಿತ್ರ ಕಸಿವಿಸಿ…. ಕಳವಳ…. ವಿಲಕ್ಷಣ ಆನಂದ…. +“ಉಂಗುರದಾಸೆ ತೋರ್‍ಸಿ ನನ್‌ಮೊಮ್ಮಗನ್ನ ಬಲಿಕೊಡೋಕೆ ನೋಡ್ತಿದೀರಲ್ಲ. ನೀವು ಮನುಷ್ಯರು ಅಲ್ಲ” ತಾಯಿ ಇಲ್ಲದ ತಬ್ಬಲಿಯನ್ನು ಸಾಕಿ ಬೆಳೆಸಿದ ನಿಂಗಜ್ಜಿ ಕನಲಿದಳು. +“ಉಂಗುರ ವಾಪಾಸು ಕೊಟ್‌ಬಿಡು” ಜಾಗಟಗೇರೆ ಬೇಡರ ಬಾಣದ ರುಚಿ ಬಲ್ಲ ತಂದೆ ಮಾಲಿಂಗ ಪರಿಪರಿಯಾಗಿ ಹೇಳಿದ. +ಹುಲಿ ಮರಿ ಪ್ರಾಣವನ್ನಾದರೂ ಬಿಟ್ಟೀತು! ವೀಳ್ಯೆ ಮರಳಿಸುವುದೇನು!… +ತಾಯಿ ಮಗ ಊರದೈವದ ಮುಂದೆ ಕರುಳು ಕಿತ್ತಿಟ್ಟರು. +“ಮಾಲಿಂಗ… ಇವ್ನು ನಿನ್ ಮಗ ಮಾತ್ರ ಅಲ್ಲ…. ಇಡೀ ಗ್ರಾಮದ ಹೆಮ್ಮೆಯ ಪುತ್ರ…. ಇವನ ಯೋಗಕ್ಷೇಮಾನ ಆ ತಾಯಿ ನೋಡ್ಕೊಳ್ತಾಳೆ…. ಕಳವಳ ಬೇಡ…..” ಹೊನ್ನಜ್ಜನ ಮಾತಿಗೆ ಪ್ರತಿನುಡಿಯಲಿಲ್ಲ ಯಾರೂ. +-೨- +ಆ ಕ್ಷಣದಿಂದ ಪರಮೇಶಿಯನ್ನು ತನ್ನ ಐವತ್ತಂಕಣದ ಮನೆಗೆ ಕರೆಸಿಕೊಂಡ ಹೊನ್ನಜ್ಜ… ತುಪ್ಪದಲ್ಲಿ ನೆನೆದ ಉತ್ತುತ್ತಿ ಕೊಬ್ಬರಿ ಬೆಲ್ಲ ತಿನ್ನಲು…. ಮೈ ಮಾಂಸಖಂಡಗಳನ್ನು ಪಳಗಿಸಲು ಹನುಮ ಜೆಟ್ಟಿಯನ್ನು ನಿಯಮಿಸಲಾಯಿತು. +ಶ್ಯಾಮಲ ವರ್ಣದ ತರುಣಿಯರಂತೂ ತಮ್ಮ ತುಂಬು ಸ್ತನಗಳ ಮರೆಯಲ್ಲಿ ಕೆನೆ ಮೊಸರು, ಕೆನೆ ಹಾಲು ತಂದು ತಮ್ಮ ಕಣ್ಮಣಿಗೆ ತಿನ್ನಿಸತೊಡಗಿದ್ದನ್ನೂ…. ಶುಕ್ಲ ವರ್ಣದ ಹಾರವ ತರುಣಿಯರು ಪರಮೇಶಿಯನ್ನು ತಡೆಯಲರಿಯದೆ ಹಾಸಿಗೆ ಹಿಡಿದಿದ್ದನ್ನೂ ಕಂಡು ಕೇಳಿ, ಗರಡಿಯ ಪಡ್ಡೆಗಳು ಸಾಂದರ್ಭಿಕವಾಗಿ ಆಡಿಕೊಂಡು ನಗಾಡಿದವು. +ಆದರೆ ಪರಮೇಶಿ ತನ್ನ ಪಂಚೇಂದ್ರಿಯಗಳನ್ನು ಜಾಗಟಗೇರಿಯ ಕೇರಿಕಡೆ ಕೇಂದ್ರಿಕರಿಸಿದ್ದ. ತಾನು ಬಹು ಹಿಂದೆ ಆ ಊರ ಹೊರವಲಯದಲ್ಲಿ ರುಚಿಗೆ ಹೆಸರಾದ ಹಲಸಿನ ಹಣ್ಣು ತಿಂದಿದ್ದ ನೆನಪು…. ಬೆಟ್ಟಗಳ ತಪ್ಪಲ ಇಳಿಜಾರಿನಲ್ಲಿರುವ ಗ್ರಾಮದ ಮಸಕು ಚಿತ್ರ… ಬೇಡರ ಆಧೀನದಲ್ಲಿರುವ ಕನಕ ದುರ್ಗೆಯ ದೇವಾಲಯ…. ಗುಳಾಪುಕಣ್ಣುಗಳ ತಾಯಿ…. ಶಂಕ ಚಕ್ರಗದಾಹಸ್ತೆ… ಆಕೆಯ ವರ್ಣನೆಯನ್ನು ಸವಾರೆಕ್ಕನ ಬಾಯಿಯಿಂದ ಕೇಳಿ ಕೇಳಿ ದಣಿಯಲ್ಲೊಲ್ಲದ ಕಿವಿಗಳು…. ಕ್ರಮೇಣ ಜಾಗಟಗೇರಿ ಅಚ್ಚೊತ್ತಿತ್ತು ಅವನ ಮನದೊಳಗೆ…. +“ಅಮ್ಮನ ಗುಡ್ಯಾಗ ನಿಮ್ಮಜ್ಜ ಕಟ್ಟಿರೋ ಗಂಟೆ ಐತೆ…. ಅದ್ನ ಬಾರಿಸಿ ಬರೋದ್ನ ಮರೀಬ್ಯಾಡ…” ಅಜ್ಜನ ಓರಿಗೆಯವನಾದ ಕವಳೆಜ್ಜ ಬೆನ್ನಟ್ಟಿ ಹುರಿದುಂಬಿಸಿದ. +ಒಂದೆರಡು ದಿನ ಕಳೆದರೆ ಕಾರುಣ್ಣುವಿ… ಮುರುಕು ಚಂದ್ರನ ಮಂಕು ಬೆಳದಿಂಗಳು ಸುತ್ತಲು…. ಹೊನ್ನಜ್ಜನ ಮನೆ ಅಂಗಳದ ಹುಲ್ಲು ಮೆತ್ತೆಯ ಮೇಲೆ ಕಡೆದ ವಿಗ್ರಹದಂತೆ ಕೂತಿದ್ದ ಪರಮೇಶಿಯ ಸುತ್ತ ಒಬ್ಬರಲ್ಲಾ ಒಬ್ಬರು… ಒಬ್ಬೊಬ್ಬರದು ಒಂದೊಂದು ಮಾತು. ಆದರೆ ಅವನು ತಾನು ಈಜಿ ದಾಟಬೇಕಿರುವ ಆಲಕನಂದೆ…. ಮರದಿಂದ ಮರಕ್ಕೆ ಜಿಗಿಯಬೇಕಿರುವ ಕಾಡು…. ತನ್ನ ಮೇಲೆ ಸುರುಗಬಹುದಾದ ಈಚಿ, ಭರ್ಜಿಗಳ ದಾಳಿ ಕುರಿತು ಯೋಚಿಸುತ್ತಿದ್ದ. ಅವನ ಮನಸ್ಸೇ ಅವನ ಪಾಲಿನ ಅಭೇದ್ಯ ಕೋಟೆಯಾಗಿತ್ತು. +“ಈ ನಾವು ಕರಿ ಹರಿಯಲು ಖಂಡಿತ ಬರಲಾರರೆಂದೇ ಊಹಿಸಿರ್‍ತಾರೆ. ಆ ಜಾಗಟಗೇರೆ ಹೆಡ್ಡರು… ಆದ್ರು ನೀನು ಮೈ ತುಂಬ ಕಣ್ಣಾಗಿರೋದ್ನ ಮಾತ್ರ ಮರೀಬ್ಯಾಡ….” ರಾಮ ಮಂದಿರದ ಶೀನಪ್ಪನವರಿಗೇನು ಗೊತ್ತು ಜಾಗಟಗೇರಿ ಕಡೆ ಗೂಢಾಚಾರಿ ಗಿಡುಗ ಹಾರಿ ಹೋದ ಸಂಗತಿ. +ಕುಂಕುಮ ವರ್ಣದ ಮುಂಬೆಳಕಿನಲ್ಲಿ ದ್ಯಾಮವ್ವ ಜಳಕ ಮಾಡಿದ್ದಳೆನ್ನಲಾದ ಪುಷ್ಕರಣಿಯೊಂದು ಊರಿಗೆ ಕೂಗಳತೆ ದೂರದಲ್ಲಿರುವುದು. ಅದರಲ್ಲಿ ಬೆವರುವಂತೆ ಈಜಿದ ಪರಮೇಶಿ. ಹೊನ್ನಜ್ಜನೇ ಖುದ್ದು ನಿಂತು ಗ್ರಾಮದ ಸಮಸ್ತ ದೇವತೆಗಳಿಗೆ ವಿಶೇಷ ಪೂಜೆ ಮಾಡಿಸಿ ತೀರ್ಥ ಪ್ರಸಾದ ನೀಡಿದ…. +ದುಗುಡವೇ ಮೈವೆತ್ತಂಥ ವಾತಾವರಣದ ನಡುವೆ ಜಾಗಟಗೆರೆ ಕಡೆ ಮುಖ ಮಾಡಿನಿಂತ ಅವನಿಗೆ ಗ್ರಾಮದ ಸಮಸ್ತ ಮಹಿಳೆಯರು ತಮ್ಮ ತುಂಬಿದ ಕಣ್ಣುಗಳಿಂದ ಆರತಿ ಬೆಳಗಿದರು. +ಕಾನನದ ಬಗ್ಗೆ ಇಂಚಿಂಚು ಗೊತ್ತಿರುವ ಕೆಂಜೆಡೆಯ ಗಿಡದೊಳಗೆ ಗಿಡವಾಗತ್ತ ಹಸಿರು ಹಾವಿನಂತೆ ಪುಟಿದು ಜಾರುವ ಕುರಿತ ಹೇಳುತ್ತಲೇ ಹಿಡಿಗತ್ತಿಯೊಂದನ್ನು ಅವನ ಸೊಂಟಕ್ಕೆ ಬಿಗಿದ. +ಎಲ್ಲರೂ ಅವನನ್ನು ಬಲವಾಗಿ ಅಪ್ಪಿಕೊಂಡು ಬೀಳ್ಕೊಟ್ಟರು. +ಹೊನ್ನಜ್ಜನೂ ಅಪ್ಪಿಕೊಳ್ಳದಿರಲಿಲ್ಲ. +“ಪರಮೇಶಿ ನೀನು ಕರಿ ಸಂಗಡಬಂದ್ರೆ ತಲೆ ಮೇಲೆ ಹೊತ್ಕೊಂಡು ಮೆರೆಸ್ತೀನಿ. ಇಲ್ಲಾಂದ್ರೆ ನಿನ್ ಹೆಸ್ರಲ್ಲಿ ವೀರಗಲ್ಲು ನೆಡೆಸಿ ತ್ರಿಕಾಲ ಪೂಜೆ ನಡೆಯೋ ಏರ್ಪಾಡು ಮಾಡ್ತೀನಿ” ಎಂದು ನುಡಿದ ಹೊನ್ನಜ್ಜನ ಅಡಿಗಳಿಗೆರಗಿದ ಪರಮೇಶಿ. +“ಹಿಂಭಾಗದ ಮೂಲಕ ಜಾಗಟಗೇರೆ ಪ್ರವೇಶಿಸೋದು ಮೇಲು…” ಬಸವ ತನ್ನ ನೆಚ್ಚಿನ ಗೆಳೆಯನನ್ನು ನೈರುತ್ಯಾ ಭಾಗದಲ್ಲಿ ಚಕ್ರದಂತೆ ಸುತ್ತುವ ನೀರೊಳಗೆ ದೂಡಿದ. ಕ್ಷಣಾರ್ಧದಲ್ಲಿ ಮೀನಿನಂತೆ ಈಜಿ ಆಚೆದಡ ಸೇರಿದ ಪರಮೇಶಿ ಗೆಳೆಯರ ಕಡೆ ಕೈ ಬೀಸಿ ಕಾಡೊಳಗೆ ಕರಗಿ ಮರೆಯಾದ. +ದಟ್ಟ ಕಾಡಿನ ನಡುವೆ ಪ್ರಾಣಿಗಳು ಮಾಡಿದ್ದ ಕಿರಿದಾದ ಹಾದಿ. ಹಾದಿ ತುಂಬ ಪ್ರಾಣಿಗಳ ಹೆಜ್ಜೆ ಗುರುತುಗಳು…. ಕಿವಿಗಡುಚಿಕ್ಕುವ ಜೀರುಂಡೆ ಸದ್ದು. ದೂರದಲ್ಲೆಲ್ಲೋ ಚಿರತೆ ಹೊನ್ನಿಗಳು ರಾಸಲೀಲೆಯಲ್ಲಿ ತೊಡಗಿರುವ ಸದ್ದು… ಎಷ್ಟಿದ್ದರೂ ತಾನು ಕಾಡಿನ ಉತ್ಪಾದನೆಯನ್ನವಲಂಬಿಸಿ ಬದುಕುತ್ತಿರುವ ಕಾಡಿನ ಮಗ. ಹೆಜ್ಜೇನು ಬಿಡಿಸುವಲ್ಲಿ ತನಗೆ ಸಾಟಿಯಾದವರು ಯಾರಿಹರು? ರಕ್ತನಾಳ ಕಚ್ಚಿ ಹಿಡಿಯಲು ವಿಫಲಗೊಂಡು ಉದುರಿ ಬೀಳುತ್ತಿರುವ ಜಿಗಣಿಗಳನ್ನು ನೋಡಿ ನಗು ಬಂತು ಅವನಿಗೆ… ಹಾದಿಯುದ್ದಕ್ಕೂ ತಿನ್ನು ಬಾ ಎಂದು ಕೈ ಬೀಸಿ ಕರೆಯುತ್ತಿರುವ ಕವಳೆ, ಕಾರೆ, ಬಿಕ್ಕಿ, ಹಲಸು, ಮಾವು…. ಪರಿಮಳ ಚೆಲ್ಲತ್ತಿರುವ ಜಾಜಿ, ಮಲ್ಲಿಗೆ, ಕಣಗಿಲೆ, ನೆಲಸಂಪಿಗೆ…. +ಹಣ್ಣು ತಿನ್ನುವುದರಲ್ಲಿ ಮಗ್ನವಾಗಿರುವ ಮಂಗನ ಕಡೆ ಗುರಿ ಇಟ್ಟು ಸಾಗಿರುವ ಹೆಬ್ಬಾವನ್ನು ನೋಡಿ ವಿಲವಿಲನೆ ಒದ್ದಾಡುತ್ತಿದ್ದ ಜಿಂಕೆ ಮರಿಯೊಂದನ್ನು ಕಚ್ಚಿಕೊಂಡು ಪಲಾಯನ ಮಾಡುತ್ತಿದ್ದ ಚಿರತೆಯನ್ನೂ ನೋಡಿದ. ತಾನು ನಡೆಯಬೇಕಿರುವ ದಾರಿ ಖಚಿತಪಡಿಸಿಕೊಳ್ಳಲು ಬೂರುಗದ ಮರದ ತುದಿಗೇರಿ ಇಣುಕಿದ. ತೀರಾ ಹತ್ತಿರದಲ್ಲೇ ಕೇಳಿಬರುತ್ತಿರುವ ಡೊಳ್ಳು; ಹಲಗೆ ಕಹಳೆ ಬಾಜಬಜಂತ್ರಿ ಸದ್ದು. ಬೀಸಿ ನಡೆದರೆ ಎರಡು ದಮ್ಮಿನ ಹಾದಿ. +ಸನಿಹದಲ್ಲಿ ನೇತಾಡುತ್ತಿದ್ದ ಮಾಲಿಂಗನ ಬಳ್ಳಿ ಹಿಡಿದುಕೊಂಡೊಡನೆ ಅರ್ಜುನ ಬಂದು ಹೆಗಲ ಮೇಲೆ ಕೂತಿತು. ಸಂತೋಷ ಮತ್ತು ದಿಗ್ಭ್ರಮೆಯಿಂದ ಅರ್ಜುನಾ… ಅರ್ಜುನಾ… ಎಂದು ಅದಕ್ಕೆ ಮುದ್ದಿಸಿ ಬಯಲಿಗೆ ತೂರಿದನಾದರೂ ಅದು ಹೋಗಬೇಕಲ್ಲ! +ಮಾಲಿಂಗನ ಬಳ್ಳಿಯಿಂದ ಇನ್ನೊಂದು ಮರಕ್ಕೆ ಜೀಕಿಳಿದು ಪಯಣ ಮುಂದುವರಿಸಿದ. ನಡೆದೂ ನಡೆದು ಊರಿಗೆ ಬೆಸೆದಿದ್ದ ಬಂಡಿ ಹಾದಿಗೆ ಬಂದಿದ್ದ. ಬಂಡಿಗಳು ಜಾಗಟಗೆರೆ ಮುಖವಾಗಿ ಹೋಗುತ್ತಿರುವ ಸದ್ದು. +ಹತ್ತಿರದಲ್ಲೇನಾದರೂ ಬೇಡರು ವಿಷಪೂರಿತ ಬಾಣಗಳನ್ನು ಹೆದೆಗೇರಿಸಿ ಹೊಂಚಿರಬಹುದೆಂದು ಪೊದೆಯಲ್ಲವಿತು ಬಿಸಿಯುಸಿರು ಬಿಟ್ಟ. ಅವನುಸಿರ ಬಿಸಿಗೆ ಕಂಪಿಸಿದ ನಾಗರವೊಂದು ನಿಧಾನವಾಗಿ ಪೊಟರೆ ಸೇರಿತು. ಮೈಗೆ ಗಿಡದ ರೆಂಬೆಗಳನ್ನು ಮುಡಿದು, ಗ್ರಾಮಕ್ಕೆ ಹತ್ತಿರದಲ್ಲಿದ್ದ ಶಂಖತೀರ್ಥದ ಬಳಿಗೆ ಬಂದ. ಅವನ ಮನಸ್ಸಿಗೆ ಮುದ ನೀಡಿತು ಆ ಸುಂದರ ದಿಟ್ಟ ಜಲಪಾತ. ಅದರ ಸಿಹಿ ಜಲ ಕುಡಿದು ಕೊರಕಲಲ್ಲಿ ವೇಷ ಬದಲಿಸಿಕೊಂಡು ನೀರೊಳಗಿಣುಕಿದ. ಅಸ್ಪಷ್ಟ ಪ್ರತಿಬಿಂಬ. +ದಾರಿ ಪಕ್ಕ ಅಶ್ವತ್ಥ ಮರದ ಕೆಳಗೆ ಪದ್ಮಾಸನ ಹಾಕಿ ಕಳ್ಳಗಣ್ಣಿಂದ ಹತ್ತಿರ ಬರುತ್ತಿದ್ದ ಸವಾರಿ ಬಂಡಿ ನೋಡಿದ. ನಿಂತ ಬಂಡಿಯಿಂದಿಳಿದ ಗೌಡ್ತಿ ವೈರಾಗ್ಯ ಮೂರ್ತಿಯ ತೇಜಸ್ಸಿಗೆ ಬೆರಗಾಗಿ ಧೀರ್ಘದಂಡ ನಮಸ್ಕಾರ ಸಲ್ಲಿಸಿದಳು. ಆಕೆಯ ಗಂಡನೂ ಅಷ್ಟೇ. ಕೆಲವು ತಿಂಗಳಲ್ಲಿ ಸಂತಾನ ಪ್ರಾಪ್ತಿರಸ್ತು ಅಂದ ಯುವ ಸನ್ಯಾಸಿ. ಅವರ ಒತ್ತಾಯಕ್ಕೆ ಮಣಿದು ಬಂಡಿ ಏರದೇ ಇರಲಿಲ್ಲ. ಸ್ಪರ್ಶಿಸುವ ಕಳ್ಳ ಸಡಗರದಲ್ಲಿದ್ದ ಗೌದರ ನಾದಿನಿಯ ಹಿಂಸೆಯನ್ನು ಅನಿವಾರ್‍ಯವಾಗಿ ಸಹಿಸಿಕೊಳ್ಳುತ್ತಲೇ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಚಕಚಕ ಉತ್ತರಿಸುತ್ತಾ ತಮ್ಮದು ಕಾಶಿ ಕಡೆ ಎಂದೂ ತಮಗೆ ಪಂಚಾಕ್ಷರಿ ಬೋಧಿಸಿದ ಚಿದಾನಂದಾವದೂತರಿಗೆ ದೇವಿಯೊಲುಮೆಯಾಗಿರುವುದೆಂದೂ ಅವರ ಉತ್ತರಾಧಿಕಾರಿಯಾದ ತಾವು ಅವರ ಅಪ್ಪಣೆ ಮೇರೆಗೆ ಕನಕದುರ್ಗೆಯ ದರ್ಶನಕ್ಕಾಗಿ ಉತ್ತರ ದೇಶದಿಂದ ನಡೆದು ಬಂದಿರುವುದಾಗಿ ಹೇಳಿದ. +ಮಾತಿನ ನಡುವೆ ಅಗಸೆ ಬಾಗಿಲು ಸಮೀಪಿಸಿತು ಬಂಡಿ. ಸುತ್ತ ಇಪ್ಪತ್ತು ಹಳ್ಳಿಗಳಿಂದ ತಾಯಿಯ ಒಕ್ಕಲುಮಂದಿ ತಂಡೋಪತಂಡವಾಗಿ ಬರತೊಡಗಿತ್ತು. ಕಪ್ಪು ಬಣ್ಣದ ಬೇಡರ ಕ್ರೂರ ಕಣ್ಣುಗಳು ಹೊನ್ನೂರಿನ ಸಿಂಹಕ್ಕಾಗಿ ಹುಡುಕಾಟ ನಡೆಸಿದ್ದವು. ಕಾಡು ಹಂದಿಯಂತಹ ಒಂದಿಬ್ಬರು ಬಂದು ಯುವ ಸನ್ಯಾಸಿಯನ್ನು ಅಪಾದಮಸ್ತಕ ದಿಟ್ಟಿಸಿದರು. ಇಲ್ಲಾವ ಸುಭದ್ರೆಯನ್ನಪಹರಿಸಲು ಬಂದಿರುವನೋ ಈ ಅರ್ಜುನ ಸನ್ಯಾಸಿ ಎಂದು ಅನುಮಾನಿಸುತ್ತಲೇ ಅಡಿಗೆರಗಿದರು. +ಹೊನ್ನೂರಿನವರು ಕರಿ ಹರಿಯುತ್ತಾರಂತೆ ಆಗ ಅದೆಷ್ಟು ರಕ್ತಪಾತವಾಗುವುದೋ? ತಾಯಿ ನಮ್ಮ ಹೆಂಡಿರು ಮಕ್ಕಳಿಗೆ ಅಪಾಯ ಸಂಭವಿಸದಂತೆ ನೋಡಿಕೋ…. +ಹುಲಿಯೂರಿನ ಹಿರಿ ಜಮೀನ್ದಾರ ರಾಮಕೋಟಿ ಮತ್ತವನ ಲಘುಪರಿವಾರ ಇಳಿದುಕೊಳ್ಳಲು ಬೇಡರ ಮುಖಂಡ ದುರ್ಗೋಜಿಯೇ ಖುದ್ದು ಏರ್ಪಾಟು ಮಾಡಿದ್ದ. ಎಷ್ಟಿದ್ದರೂ ತಮ್ಮವರು ಕೊಲೆ, ಸುಲಿಗೆ ಮಾಡಿ ತರುವ ನಗ ನಾಣ್ಯವನ್ನು ಕೊಂಡುಕೊಳ್ಳುವ ಗಟ್ಟಿ ಕುಳಗಳ ಪೈಕಿ ರಾಮಕೋಟಿಯೂ ಒಬ್ಬನಲ್ಲವೇ? ಆದ್ದರಿಂದ ದುರ್ಗೋಜಿಯೇ ರಾಮಕೋಟಿ ಇಳಿದಿದ್ದ ಬಿಡಾರಕ್ಕೆ ಭೇಟಿಕೊಟ್ಟು ಸತ್ಕಾರ ಪರಾಮರ್ಶಿಸಿದ. ಹಾಗೆಯೇ ಯುವ ಸನ್ಯಾಸಿಯ ತೇಜಸ್ಸಿಗೆ ಬೆರಗಾಗಿ ಸ್ನಾನ, ಸಂಧ್ಯಾವಂದನೆಗೂ ಏರ್ಪಾಟು ಮಾಡಿದ. ಬರುವ ಶ್ರಾವಣ ಮಾಸದ ಪೂಜೆಯನ್ನು ತಮ್ಮ ಮನೆಯಲ್ಲೇ ನಡೆಸುವಂತೆ ವಿನಂತಿಸಿದ. ಇದರಿಂದ ಪರಮೇಶಿಗೆ ಮತ್ತಷ್ಟು ಪೇಚಿಗಿಟ್ಟುಕೊಂಡಿತ್ತು. ಪೆಟ್ಟಿಗೆ ಕಾಳಪ್ಪನ ಶಿಷ್ಯನಾಗಿ ಅನೇಕ ಬಯಲಾಟಗಳಲ್ಲಿ ಪಾತ್ರವಹಿಸಿದ್ದರಿಂದಲೇ ಪರಮೇಶಿಗೆ ಅತ್ಯುತ್ತಮವಾಗಿ ನಿಜ ಜೀವನದಲ್ಲಿ ನಟಿಸಲು ಸಾಧ್ಯವಾದದ್ದು. ಬರೀ ಬೇಡರದೊಂದೇ ಅಲ್ಲ ಕಾಟ. ಪರಸ್ಥಳದ ಯಾತ್ರಾರ್ಥಿಗಳಿಂದಲೂ ಒಬ್ಬೊಬ್ಬರದು ಒಂದೊಂದು ಬೇಡಿಕೆ. +ಮರುದಿನ ಬೆಳಿಗ್ಗೆ ಕಟುಕರ ನಡುವೆಯೇ ದೇವಿಗುಡಿಗೆ ಹೋಗಿ ತನ್ನಜ್ಜಿ ಕಟ್ಟಿರಬಹುದಾದ ಗಂಟೆಯನ್ನು ಬಾರಿಸಿ. ಧ್ಯಾನಾಸಕ್ತನಾದ. +“ತಾಯಿ ವೇಷ ಬದಲಿಸಿಕೊಂಡು ಬಂದೀನಿ ಅಂತ ಕ್ವಾಪ ಮಾಡ್ಕೋಬ್ಯಾಡ…. ನಿನ್ನ ತವರ ಮನಿ ಕಡೆಯೋನು ನಾನು. ನಿನ್ನ ಆಶೀರ್ವಾದ ನಿನ್ನ ಹೊನ್ನೂರಿನ ಸಮಸ್ತ ಜೀವಗಳ ಮ್ಯಾಲೆ ಯವತ್ತೂ ಇರಲಿ”. +ವಿಶೇಷ ಪೂಜೆ ಸಲ್ಲಿಸಿ ವಿತರಿಸಿದ ತೀರ್ಥ ಪ್ರಸಾದವನ್ನು ಭದ್ರವಾಗಿ ಕಟ್ಟಿಕೊಂಡ. ಎಲುಬಿನ ಆಭರಣಗಳನ್ನು ಯಥೇಷ್ಟವಾಗಿ ಧರಿಸಿದ್ದ ಆದಿವಾಸಿಗಳ ಗಮಟೆಯಾಕಾರದ ಗೂಡುಗಳ ನಡುವೆ ಮಿಂಚಿನ ಚಿಲುಮೆಯಾಗಿದ್ದ ತನ್ನ ಕಣ್ಣುಗಳಿಂದ ನಕ್ಷೆ ತೆಗೆಯುತ್ತಾ ರಾಜ ಗಾಂಭೀರ್ಯದಿಂದ ನಡೆದ. +ಇಡೀ ರಾತ್ರಿ ಉದ್ದೇಶಿತ ನಿವಾಸದಲ್ಲಿ ಕಳೆಯುವುದು ನೀರಸವೆನಿಸಿತು. ಎರಡನೇ ಜಾವದಲ್ಲಿ ಕೋಣೆಯ ಗವಾಕ್ಷಿ ಮೂಲಕ ಹೊರ ಸುರುಗಿದ. ಚಂದಿರನಿಗಡ್ಡದಟ್ಟೈಸಿದ್ದ ಮೋಡಗಳಿಂದಾದ ಮಬ್ಬುಗತ್ತಲು ಸುತ್ತಲು ಬೆಳದಿಂಗಳೊಳಗೆ ಬೆಳೆದಿಂಗಳಂತಿದ್ದ ಅವನು ಸುಲಭವಾಗಿ ಮನೆಯಿಂದ ಮೆನಗೆ ಮರದಿಂದ ಮರಕ್ಕೆ ಜಿಗಿಯುತ್ತ ಅಗಸೆ ಬಾಗಿಲ ಕಡೆ ಸಾಗಿದ್ದನ್ನು ಕುಡಿದ ಅಮಲಿನಲ್ಲಿದ್ದ ಯಾರೂ ಗುರುತಿಸಲಿಲ್ಲ. ಅಗಸೆ ಬಾಗಿಲ ಮುಂದಿದ್ದ ಜೋಡು ಶ್ರೀಗಂಧದ ಮರದ ಮೇಲೆ ಅಡಗಿಕೂತ. +ಹೊತ್ತು ಹುಟ್ಟಿದ ಮೇಲೆ ಸಂಭ್ರಮ ನೂರು ಬಣ್ಣ ಪಡೆಯಿತು. ದೇವಿಯನ್ನು ಗಂಗೆಗೆ ವಿಜೃಂಭಣೆಯಿಂದ ಹೊರಡಿಸಿದಾಗ ಹೆಜ್ಜೆಗೊಂದೊಂದರಂತೆ ಬಲಿಕೊಟ್ಟರು. ಆ ನೀರವತೆಯಲ್ಲಿ ಕಾಡಜ್ಜ ಕೊಟ್ಟಿದ್ದ ತೈಲವನ್ನು ಲೇಪಿಸಿಕೊಂಡು ಉಸಿರಾಟದ ವ್ಯಾಯಾಮ ನಡೆಸಿ ಸ್ನಾಯುಗಳನ್ನು ಹುರಿಗೊಳಿಸಿದ. +ದೇವಿಗುಡಿಯಿಂದ ತಂದ ಕರಿಯನ್ನು ವಿಜೃಂಭಣೆಯಿಂದ ಮೆರೆಸಿಕೊಂಡು ಬಂದು ಅಗಸೆ ಬಾಗಿಲನ್ನು ಪ್ರವೇಶಿಸುವಾಗ ಬೇಡರು ಮಾಡಿದ ಸಾಂಪ್ರದಾಯಿಕ ನೃತ್ಯ ಪ್ರಕಾರದಿಂದ ಕೂಡಿತ್ತು. ಬಾಗಿಲು ಪ್ರವೇಶಿದ ಕರಿಯ ಸುತ್ತ ಒಳಗೊಳಗೇ ಆಯುಧಗಳನ್ನಲಂಕರಿಸಿಕೊಂಡು ನಿಂತಿರುವ ಬೇಡರ ಸಂಗತಿ ಗೊತ್ತಿಲ್ಲದವರೇ ಪಾಪಿ. ಸಾಲಂಕೃತ ಎತ್ತುಗಳನ್ನು ಓಡಿಸಿಕೊಂಡು ಬರುವ ಸ್ಪರ್ಧೆ ನಡೆಯುತ್ತಿದ್ದಾಗ ಪರಮೇಶಿ ಅಗಸೆ ಬಾಗಿಲ ಮೇಲೆ ಕುಂಬಿ ಮರೆಯಲ್ಲಿ ಅವಿತುಕೊಂಡ. +ಆ ಕರಿಯಿಂದಲ್ಲವೇ ಜಾಗಟಗೆರೆ ಬೇಡರು ಮಣ್ಣು ಮುಟ್ಟಿದರೂ ಹೊನ್ನಾಗುತ್ತಿರುವುದು…. ಹೊನ್ನಜ್ಜನ ಕಾಲಕ್ಕೇ ಮುಗಿಯಿತು ಹೊನ್ನೂರಿನವರು ಕರಿ ಹರಿಯುವುದು ಅಮಲಿಗೊಳಗಾದವರಂತೆ ಮಾತಾಡಿಕೊಳ್ಳುತ್ತಿರುವ ಜನ. +ಗಗನದ ಬಯಲಲ್ಲಿ ಜಾಗಟಗೆರೆ ಬೇರೆಗಿಡದ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿರುವ ಹೊನ್ನೂರಿನ ಪಾರಿವಾಳ ಕೇವಲ ಪಾರಿವಾಳವಲ್ಲ! ಅದು ಗರುಡ! +ಜಯಃ ನಮಃ ಪಾರ್ವತಿ ಹರಹರ ಮಾದೇವ… ಒಕ್ಕೊರಲಿನಿಂದ ಕೂಗುತ್ತಾ ಜನಸಮೂಹ ಮೈಮರೆತಿರುವ ಆ ಕ್ಷಣದಲ್ಲಿ ಕುಪ್ಪಳಿಸಿ ಕರಿಯನ್ನು ಬಂಧನದಿಂದ ಬೇರ್ಪಡಿಸಿ ಸೊಂಟಕ್ಕೆ ಕಟ್ಟಿಕೊಂಡಾಗಲೇ ಜನಕ್ಕೆ ಪರಿಸ್ಥಿತಿಯ ಅರಿವಾದದ್ದು! +ತಮ್ಮ ಕಣ್ಣುಗಳನ್ನು ತಾವು ನಂಬುವುದು ಹೇಗೆ! ನಂಬದೆ ಇರುವುದು ಹೇಗೆ! +ಶಹಬ್ಬಾಷ್… ಜನ ಮೈಮರೆತು ಕೂಗಿದರು ಮುಗಿಲಿಗೆ ಮುಟ್ಟುವಂತೆ ಬೇಡರು ಆಯುಧಗಳನ್ನು ಹಿಡಿದು ಮುನ್ನುಗ್ಗಿದರು ಬಿರುಗಾಳಿಯಂತೆ. ಆದರೆ ಹೊನ್ನೂರಿನ ತಾರುಣ್ಯದ ಹುಲಿ ಬೇಟೆನಾಯಿಗಳಂಥ ಬೇಡರ ಕೈಗೆ ಸಿಲುಕದೆ ಬಾಣಕ್ಕಿಂತಲೂ ವೇಗವಾಗಿ ಸಾಗಿತ್ತು ಮುಂದಕ್ಕೆ. +ಊರು ದಾಟಿ ಮಾರಿಕಣಿವೆಯ ಸನಿಹಕ್ಕೆ ಬಂದಿರಬಹುದು. ಅಷ್ಟರಲ್ಲಿ ಸಾಕ್ಷಾತ್ ದುರುಗೋಜಿ ಬಿಟ್ಟ ಬಾಣ ರವ್ವನೆ ಬಂದು ಪರಮೇಶಿಯ ಬಲಿಷ್ಟ ತೊಡೆಗೆ ಆಳವಾಗಿ ನೆಟ್ಟಿಬಿಟ್ಟಿತು. ಅದನ್ನು ಕಿತ್ತೆಸೆದು ಅಸದಳ ಬೇನೆ ನುಂಗಿಕೊಂಡು ಬೂರುಗದ ಮರಗಳ ಮರೆಗೆ ಓಡಿದ್ದ. ಹಿಂದೆ ಹತ್ತಾರು ಹಸಿದ ಬೇಟೆನಾಯಿಗಳು ಬೊಗಳುತ್ತಿರುವ ಬಯಾನಕ ಸದ್ದು. ತಡಮಾಡದೆ ಹತ್ತಿರದ ಗೋಡಂಬಿ ತೋಟಕ್ಕೆ ನುಗ್ಗಿ, ಹುಲ್ಲು ಬಣವೆಯೊಳಗೆ ಅವಿತು ಕೂತ. +ದುರ್ಗೋಜಿಯ ನೇತೃತ್ವದ ಮುಂಗೋಪದ ಹೆಡ್ಡಪಡೆ ಹ್ಹಾ… ಹ್ಹೂ… ಎಂದರಚುತ್ತ ಕಾಡೊಳಕ್ಕೆ ನುಗ್ಗಿ ಮರೆಯಾಯಿತು. +ರಕ್ತ ಸುರಿಯದಂತೆ ಎಷ್ಟೊತ್ತು ಕೈಲಿ ಬಿಗಿದಿಡಲು ಸಾಧ್ಯ. ಬಟ್ಟೆಗಾಗಿ ತಡಕಾಡುತ್ತಿದ್ದಾಗ ಕೋಮಲ ಹಸ್ತವೊಂದು ಒಳಹರಿದು ತನ್ನನ್ನು ಸ್ಪರ್ಶಿಸಿದಾಗ ಗಾಬರಿಯಾದ ಪರಮೇಶಿ. ಮಂತ್ರಮುಗ್ಧನಾಗಿ ಹೊರಬಂದು ನೋಡುತ್ತಾನೆ…. ಅಪೂರ್ವ ಸೌಂದರ್ಯದ ಸಾಕಾರಮೂರ್ತಿ ಆಕೆಯೂ ಅಷ್ಟೆ. ಪರಸ್ಪರರ ಕಣ್ಣುಗಳಲ್ಲಿ ಪರಸ್ಪರರು ಒಂದುಕ್ಷಣ ಕರಗಿ ಹೋದರು! +ಮರುಕ್ಷಣ ಎಚ್ಚೆತ್ತ ಆ ಕೋಮಲೆ ಬಣವೆಯ ಹಿಂಭಾಗದ ಗುಟ್ಟಾದ ಗೂಡಿಗೆ ಕರೆದೊಯ್ದಳು. ಅದಾವುದೋ ಸೊಪ್ಪಿನ ರಸ ಹಿಂಡಿ ಸೆರಗು ಹರಿದು ಗಾಯಕ್ಕೆ ಬಿಗಿಯಾಗಿ ಬಟ್ಟೆ ಬಿಗಿದಳು. +ಎಷ್ಟು ಧೈರ್ಯ ನಿಂಗೆ… ನಮ್ಮ ಬೇಡರಂದ್ರೆ ಏನ್ತಿಳ್ಕಂಡೀಯಾ… ಹುಲಿಯನ್ನೇ ಸಿಗಿದು ತೋರಣ ಕಟ್ಟೋರು ತನ್ನ ಮಾತಿಗೆ ಮುಗುಳ್ನಕ್ಕ ಅವನು ಮತ್ತಷ್ಟು ಆಕರ್ಷಕವಾಗಿ ಕಂಡ ಆಕೆಗೆ. +ಮತ್ತೆ ಹತ್ತಿರದಲ್ಲೆಲ್ಲೋ ಹೆಜ್ಜೆ ಸಪ್ಪಳ ಕೂಡಲೆ ಅವನು ಅವಿತಿದ್ದ ಗೂಡಿನ ಮೇಲೆ ಕಲ್ಲು ಚಪ್ಪಡಿ ಎಳೆದು ಅದರ ಮೇಲೆ ನಿಂತು ಕೈಯಲ್ಲಿ ಕಂಚಿನ ಭರ್ಜಿ ಝಳಪಿಸಿದಳು. ಸಂಜೆಯ ಸಮಯದಲ್ಲೂ ನಗುವ ಸೂರ್ಯ… +ಅಷ್ಟರಲ್ಲಿ ದುರ್ಗೋಜಿ ಪಡೆಯೊಂದಿಗೆ ತೋಟದೊಳಗೆ ನುಗ್ಗಿದ…. +“ಕನಕಾ… ನೀನಿಲ್ಲಿ!” ಬೇಟೆಯನ್ನರಸುವ ಕ್ರೂರ ಮೃಗದಂತೆ ಸುತ್ತ ಕಣ್ಣಾಡಿಸಿದ ದುರ್ಗೋಜಿ. +ಅಪ್ಪಾ…. ಆ ಹೊನ್ನೂರಿನೋನು ನನ್ ಕೈಯ್ಗೆಸಿಕ್‌ಬೇಕಾಗಿತ್ತು ನೋಡು… ಕೊಚ್ಚಿ ಕೊಚ್ಚಿ ಹಾಕ್ತಿದ್ದೆ. ಕೃತಕ ಕೋಪದಿಂದ ಆಕೆಯ ದುಂಡು ಮುಖ ಕೆಂಡ ಸಂಪಿಗೆಯಾಯಿತು. +ದುರ್ಗೋಜಿಗೆ ಹೆಮ್ಮೆ ಎನಿಸಿತು ಮಗಳ ಮಾತು ಕೇಳಿ; ಸಾಕ್ಷಾತ್ ಚಾಮುಂಡಿಯಂತೆ ಗೋಚರಿಸಿದಳು, ತಂದೆಯ ಕಣ್ಣಿಗೆ. +ಬೇಡರು ಇಡೀ ತೋಟವನ್ನೆಲ್ಲ ಜಾಲಡಿದರು…. ಬೇಟೆಯ ಸುಳಿವು ಸಿಗಲಿಲ್ಲ…. ದೂರದಲ್ಲೆಲ್ಲೋ ನಾಯಿಗಳ ಬೊಗಳೂ…. +“ಕನಕಾ… ಆ ಬೇಟೆನಾ ನಾವು ಮುಗಿಸ್ತೀವಿ…. ನೀನು ಮನೆಗ್ಹೋಗು!” ದುರ್ಗೋಜಿ ಪಡೆಯೊಡನೆ ಮತ್ತೆ ಕಾಡೊಳಗೆ ಮಾಯವಾದ. +ತಡಮಾಡದೆ ಗೂಡಿನಿಂದ ಅವನನ್ನು ಹೊರಕ್ಕೆಳೆದು ಕೈಗೆ ಕಂಚಿನ ಥಳಥಳ ಭರ್ಜಿಕೊಟ್ಟು ತನ್ನ ಬಟ್ಟಲುಗಂಗಳಿಂದ ದಿಟ್ಟಿಸಿದಳು…. ತಕ್ಕ ಪ್ರಮಾಣದ ಪುರುಷಾಕೃತಿಯನ್ನು ಹೃದಯದ ತುಂಬಾ ತುಂಬಿಕೊಂಡಳು. ಪ್ರಾಣಾಪಾಯದಲ್ಲೂ ಕುಡಿ ಮೀಸೆ ಕೆಳಗೆ ಅಳಿರುವ ಮುಗುಳು ನಗು! ಇಂಥ ಧೈರ್ಯ ಸಿಂಹಕ್ಕೂ ಇರಲಾರದು. +ಅಂಜುತ್ತಾ ಅಳುಕುತ್ತಾ ನೀಳ ಬೆರಳುಗಳಿದ್ದ ಆಕೆಯ ಮುಂಗೈ ಸ್ಪರ್ಶಿಸಿದ. ಕಣ್ಣುಗಳು ಒದ್ದೆಯಾಗುವಷ್ಟು ಅನಿರ್ವಚನೀಯ ಅನುಭವ….! +ಹತ್ತರಿದ ಸಾಗುವಾನಿ ಮೇಲೆ ತಲಿಬ್ಯಾನಿ ಎದ್ದು ಅಳುತ್ತಿದ್ದ ನವಿಲು ಬಣ್ಣದ ಪಕ್ಷಿಯೊಂದು ನಗುತ್ತಾ ಮತ್ತೊಂದು ಮರಕ್ಕೆ ಪುಟಿದು ಓಡಿಹೋಯಿತು. +ತನ್ನ ಮುಂಗೈ ಮೇಲೆ ಬಿಂದು ಹನಿದ ಅವನ ರೆಟ್ಟೆ ಹಿಡಿದು ತೋಟದ ಮೂಲೆಗೆ ಕರೆದೊಯ್ದು ಕಿರಿದಾದ ಹಾದಿ ತೋರಿಸಿದಳು! ಆಕೆಗೆ ಕೃತಜ್ಞತೆ ಹೇಳುವುದು ಹೇಗೆ? ತಡವರಿಸಿದ ಅಲ್ಲೇ ಬೇಲಿಯಲ್ಲಿ ತಮಗೆಂದೇ ಅರಳಿದ ಹೂವು ಕಿತ್ತು ಆಕೆಯ ರೇಶಿಮೆ ನುಣುಪಿನ ಮುಡಿಗಿರಿಸಿದ. ದೃಷ್ಟಿಯ ಸೆರೆ ಬಿಡಿಸಿಕೊಂಡು ತಂಗಾಳಿಯಂತೆ ಮರೆಯಾದ. +-೩- +ಅವನು ಬರುವ ದಿಕ್ಕಿನಲ್ಲಿ ಗಾಳಿಯನ್ನೂ ತೊರೆದು ಕೂತಿದ್ದ ಹೊನ್ನೂರಿನ ಗಂಡು ಹೆಣ್ಣುಗಳೆಲ್ಲ ತಮ್ಮ ದೃಷ್ಟಿಗನತಿ ದೂರದಲ್ಲಿ ಪರಮೇಶಿ ನದಿಗೆ ಧುಮುಕಿದ್ದು ಕಂಡೊಡನೆ ಹೋ! ಎಂದು ಹರ್ಷೋದ್ಗಾರ ಮಾಡಿದರು. +ಮೊಸಳೆ ದವಡೆಗೆ ಸಿಲುಕದೆ ವೇಗವಾಗಿ ಈಜಿ ದಡ ಸೇರಿ ಅವನನ್ನು ಎಲ್ಲರೂ ಅಪ್ಪಿಕೊಂಡರು. ಎತ್ತಿಕೊಂಡರು…. ತೆರೆದ ಬಾಯಿಯ ಮೊಸಳೆ ನಿರಾಸೆಯಿಂದ ನಿಟ್ಟಿಸಿತು. +ಗ್ರಾಮದ ಶಾಮಲವರ್ಣ ತರುಣಿಯರು ಹೂವಿನಾರತಿ ಬೆಳಗಿದ ಮೇಲೆ ಮೆರವಣಿಗೆ ಮೂಲಕ ಅವನನ್ನು ಊರೊಳಗೆ ಕರೆದೊಯ್ದರು…. +ಜಾಗಟಗೆರೆಯಿಂದ ಕರಿ ತಂದ ದೀರಾ ನಿನಗಾರು ಸರಿ! +ಸರಿ ಎಂದವರ ಹಲ್ಲು ಮುರಿ! ಬಹುಪರಾಕ್! ಜನ ಒಕ್ಕೊರಲಿನಿಂದ ಕೂಗಿದರು, ಮುಗಿಲಿಗೆ ಮುಟ್ಟುವಂತೆ. ಇಂಥ ಹಬ್ಬದ ವಾತಾವರಣ ಇಪ್ಪತ್ತೈದು ವರ್ಷಗಳ ನಂತರ ನಾವು ನೋಡುತ್ತಿರುವುದು! +“ಬೇ ನಿಂಗವ್ವಾ… ಇವ್ನು ನಿನ್ ಮೊಮ್ಮಗ ಮಾತ್ರ ಅಲ್ಲ… ಇವತ್ನಿಂದ ಇಡೀ ಊರಿನ ಮಗ ಇವ್ನು. ಇವ್ನ ಯೋಗ ಕ್ಷೇಮ ಇಡೀ ಗ್ರಾಮಕ್ಕೆ ಸೇರಿದ್ದು….” ಗ್ರಾಮದ ಸಮಸ್ತ ಹಿರಿಯರ ಪರವಾಗಿ ನುಡಿದ ಹೊನ್ನಜ್ಜ, ಅಲ್ಲಿಂದ ಮನೆಗೆ ಹೋದ ಕೂಡಲೆ ವೀರಗಲ್ಲಿನ ರಚನೆಯಲ್ಲಿ ತೊಡಗಿದ್ದ ಶಿಲ್ಪಿ ಮಾನಪ್ಪಾಚಾರಿ ಕೈಗೆ ಸಾಕಷ್ಟು ಹಣಕೊಟ್ಟು ಸವಾರಿ ಬಂಡಿ ಕಟ್ಟಿಸಿ ಪೃಥ್ವೇಶ್ವರಕ್ಕೆ ಮರಳಿಸಿದ. +ಆವತ್ತಿನಿಂದ ಗ್ರಾಮದ ಕಣ್ಮಣಿಯಾದ ಪರಮೇಶಿ ತನ್ನನ್ನು ಬದುಕಿಸಿದ ಕನಕಳ ಧ್ಯಾನದಲ್ಲಿ ಮಂಕಾದ… ಈ ಎಲ್ಲ ಗೌರವ; ಸಡಗರ ಸಂಭ್ರಮ ಆಕೆಗೇ ಸಲ್ಲಬೇಕು! ಇದನ್ನು ಹೊನ್ನೂರಿನವರಿಗೆ ಬಿಡಿಸಿ ಹೇಗೆ ಹೇಳುವುದು!… ಶಾಮಲ ವರ್ಣದ ತರುಣಿಯರ ತುಂಬಿದೆದೆಯಲ್ಲಿ ಪ್ರೇಮದ ನೊರೆವಾಲು ಉಕ್ಕಿ ಹರಿಯತೊಡಗಿದ್ದನ್ನು ಅವನು ಎಡಗಣ್ಣಿಂದ ನೋಡಲೂ ಸಿದ್ಧನಿರಲಿಲ್ಲ. +ಎಲ್ಲರ ಹಾಗೆ ಕೆಲಸ ಮಾಡಲು ಅವನನ್ನು ಯಾರೂ ಬಿಡಲಿಲ್ಲ. ಎಲ್ಲ ಕೆಲಸವನ್ನು ತಾವು ಮಾಡುತ್ತೇವೆ ಎನ್ನುವವರೇ. ಕೂತುಂಡು ಸುಖವಾಗಿರೆಂದು ಹೇಳುವವರೇ ಎಲ್ಲ. ಆದರೆ ದಿನನಿತ್ಯ ಬೆವರು ಹನಿದು ಅನುಭವವಿರುವವನಿಗೆ ಆಸ್ಥೆ ಅಕ್ಕರೆ ಹಿಂಸೆ ಎನ್ನಿಸಿತು. ಇಡೀ ಗ್ರಾಮ ತನ್ನ ಪಾಲಿಗೆ ಚಿನ್ನದ ಪಂಜರವೆನಿಸಿತು. +ಜಾಲಿ ಕಡಿದರೆ ಕೆಚ್ಚು, ಚೆಂಬು ಕಡಿದರೆ ಮೆಚ್ಚು. +ನನ್‌ಗಲ್ಲವ ಕಡಿದರೆ ಬೆಲ್ಲದ ರುಚಿಯೋ… +ಬಾರೋ ಬಾ ತೋಟಕ್ಕೋಗೋಣ… ಎಂದು ಪದ ಹಾಡುವ ಶಾಮಲ ವರ್ಣದ ತರುಣಿಯರ ಕಾಟವಂತೂ ಹೆಚ್ಚಾಯಿತು. ಅವನಿಗೆ ಅವರಿಂದ ಬಿಡಿಸಿಕೊಂಡು ಹುಡುಕಾಡಿ ಅದು ಇದು ಕೆಲಸ ಮಾಡುವವನು ಬೇಸರವಾದರೆ ತನ್ನ ಜೀವನದ ಗೆಳೆಯರಾದ ಪಾರಿವಾಳಗಳನ್ನು ಎದುರಿಗೆ ಹರಡಿಕೊಂಡು ಕೂಡುವನು. ತಾನೂ ಹಿಂದಿನ ಜನುಮದಲ್ಲಿ ಪಾರಿವಾಳವಾಗಿದ್ದೇನೇನೋ ಎಂದು ಅನುಮಾನಿಸುತ್ತಾ ಅವುಗಳೊಂದಿಗೆ ತನ್ಮಯನಾಗುವನು. +ಆರಿದ್ರ ಉದುರಿ ನೆಲ ಬಾಣಂತಿಯ ಕಿಬ್ಬೊಟ್ಟೆಯಂತೆ ಮೆತ್ತಗಾಗಿದ್ದ ಮಧ್ಯಾಹ್ನ ಗಗನದಿಂದ ಅರ್ಜುನ ಕಂಡು ಬಣ್ಣದ ಹೆಣ್ಣು ಪಾರಿವಾಳದೊಂದಿಗೆ ಇಳಿಯಿತು. ಹೊಸ ಪಾರಿವಾಳವನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿ ತಲೆ ನೇವರಿಸಿದರು. ಏನಾದರೊಂದು ತಿನ್ನಲು ಕೊಡುತ್ತ ಪ್ರೀತಿ ಪ್ರಕಟಿಸತೊಡಗಿದರು. ಅದರಲ್ಲೂ ತರುಣಿಯರಂತೂ ಅಲ್ಲೇ ಠಿಕಾಣಿ ಹೂಡಿದರು. “ಯಾವುರಮ್ಮಣ್ಣಿನಿಂದು” ಎಂದು ಮೆಳ್ಳೆಗಣ್ಣಿನ ಸಾವಿತ್ರಿ ಕೇಳಿದರೆ ನೀಳಾಯದ ನೀಲಾ “ನಮ್ಮ ಅರ್ಜುನನ್ನ ಪ್ರೇಮಿಸಿ ಓಡಿ ಬಂದಿದ್ದೀಯ ಕಳ್ಳಿ” ಎಂದು ಪರಮೇಶಿ ಕಡೆ ನೋಡಿ ತುಂಟ ನಗು ಚೆಲ್ಲುವಳು. +“ಅಯ್ಯೋ ಪೆದ್ದಮ್ಮಗಳೇ ಈ ಚಲುವೇನಾ ಜಾಗಟಗೆರೆ ದುರ್ಗೋಜಿಯ ಖಾಸಾ ಗೂಡುಗಳಿಂದ ಹಾರಿಸಿಕೊಂಡು ಬಂದಿದ್ದೀನಿ: ಅರ್ಜುನನೇ ಮುಂದೆ ಬಂದು ಗುಕ್ ಗುಕ್ ಎಂದು ಪಕ್ಷಿಭಾಷೆಯಲ್ಲಿ ಹೇಳಿ ಮೀಸೆ ತೀಡಿಕೊಂಡಿದ್ದು ಹುಲುನರರಿಗೆ ಅರ್ಥವಾಗುವುದಾದರೂ ಹೇಗೆ! +ಎಲ್ಲರೂ ಸೇರಿ ವೆಂಕಟಾಚಲ ಶಾಸ್ತ್ರಿಗಳನ್ನು ಕರೆದುಕೊಂಡು ಬಂದು ಚಲುವೆಗೆ ಚಿತ್ರಾಂಗದಾ ಎಂದು ಅಮಿತೋತ್ಸಾಹದಿಂದ ನಾಮಕರಣ ಮಾಡಿಸಿದರು. ನಿಲುವಂಜಿ ಗುರುವ ಸಂತಸದಿಂದ ತಂಬಿಟ್ಟು ಉಂಡೆಗಳನ್ನು ವಿತರಿಸಿದ. +ತನ್ನ ಅರ್ಜುನ ತನ್ನ ಮೇಲೆ ಸವತಿಯ ತರಬಹುದೆ! ಹೀಗೆ ಯೋಚಿಸುತ್ತ ಸುಭದ್ರೆ ಜೋಲು ಮೋರೆ ಮಾಡಿ ಮೂಲೆ ಹಿಡಿಯಲಿಲ್ಲ. ಸವತಿ ಮೇಲೆ ಬಿದ್ದು ಆಕೆಯ ಸುಂದರ ಪುಕ್ಕ ಕಿತ್ತು ಬರುವಂತೆ ಕಚ್ಚಿ ರಂಪಾಟ ಮಾಡಿತ್ತು. ಇಬ್ಬರ ಹೆಂಡಿರ ಕಾಟದಿಂದ ಬೇಸತ್ತು ಅರ್ಜುನ ಹುಸಿ ಮುನಿಸು ತೋರಿ ಚಾವಡಿ ಮೇಲೆ ಕೂಡ್ರುವುದು. ಆಗ ಸುಭದ್ರಾ ಚಿತ್ರಾಂಗದಳೊಂದಿಗೊಡಗೂಡಿ ಹಾರಿಹೋಗಿ ಪತಿರಾಯನನ್ನು ರಮಿಸಿ ಗೂಡಿಗೆ ಕರೆತರುವವು. +ಅವುಗಳದು ಎಂಥ ಅನ್ಯೋನ್ಯತೆ! ಇಂಥ ಅರ್ಥವತ್ತಾದ ದಾಂಪತ್ಯ ಹುಲುನರರಿಂದ ಸಾಧ್ಯವೆ! ತಾನೂ ಪಕ್ಷಿಯಾಗಿದ್ದರೆ ಕನಕಳನ್ನು ಕರೆತರದೆ ಬಿಡುತ್ತಿದ್ದೆನೇ!…. +ಪಾರಿವಾಳಗಳೆದುರು ತಾಸುಗಟ್ಟಲೆ ಮೈಮರೆತು ಕೂಡ್ರುತ್ತಿದ್ದ ತನ್ನ ಪ್ರೀತಿಯ ಮೊಮ್ಮಗನನ್ನು ನಿಂಗಜ್ಜಿ ಬಲವಂತದಿಂದ ಅಡುಗೆ ಮನೆಗೆ ಕರೆದೊಯ್ದು ಸಣ್ಣಕ್ಕಿ ಬಾನಕ್ಕೆ ಕಪಿಲೆಯ ಕೆನೆ ಮೊಸರು ಕಲೆಸಿ ತುತ್ತು ಮಾಡಿ ತಿನ್ನಿಸುವುದು…. +ಮತ್ತೆ ಸೂರ್ಯ ಪಶ್ಚಿಮಕ್ಕೆ ವಾಲಿದನೆಂದರೆ ಅಲಕನಂದಿಯ ದಡಕ್ಕಿರುವ ಬೆಳ್ಳಿ ಮರಡಿ ಏರಿ ಜಾಗಟಗೆರೆ ದಿಕ್ಕಿನತ್ತ ದಿಟ್ಟಿಸುತ್ತ ಕೂಡ್ರುತ್ತಿದ್ದ ಪರಮೇಶಿಗೆ ಸಂಜೆ ಆದದ್ದೂ ತಿಳಿಯುತ್ತಿರಲಿಲ್ಲ. ತನಗೆ ಮತ್ತೊಂದು ಜನುಮ ನೀಡಿದ ಕನಕ ತನ್ನ ಕಣ್ಣಿನಲ್ಲಿ ತುಂಬಿರುವಾಗ ಯಾವುದು ಹಗಲೋ! ಯಾವುದು ರಾತ್ರಿಯೋ….! +“ಇಂಥಲೆಲ್ಲಾ ಒಬ್ನೆ ಕೂಡ್ರೋದು ಅಪಾಯ” ಜೀವದ ಗೆಳೆಯ ಬಸವ ಪರಮೇಶಿಯನ್ನು ಬಲವಂತವಾಗಿ ಕರೆದೊಯ್ಯುತ್ತ ಕೇಳುವನು “ಯಾಕೋ ಇತ್ತೀಚ್ಗೆ ಒಂಥರಾ ಇರ್‍ತಿದ್ದೀ… ನಿನ್ ಮನಸ್ನಾಗೆ ಏನು ಇಟ್ಕೊಂಡಿದ್ದೀ… ಬಿಚ್ಚಿ ಹೇಳಬಾರ್‍ದೇನು!” +ಕೆಲ ದಿನಗಳವರೆಗೆ ಬಿಡದೆ ಪೀಡಿಸಿದ ಮಿತ್ರನಿಗೆ ಹೇಳದೆ ಇರಲು ಪರಮೇಶಿಗೂ ಸಾಧ್ಯವಾಗಲಿಲ್ಲ. ಪುಷ್ಕರಣಿಯ ಪ್ರಶಾಂತ ತಟಕ್ಕೆ ಮಿತ್ರನನ್ನು ಕರೆದೊಯ್ದು ತನ್ನನ್ನು ಪ್ರಾಣಾಪಾಯದಿಂದ ಕಾಪಾಡಿದ ದುರ್ಗೋಜಿಯ ಮಗಳನ್ನು ಯಾವತ್ತೂ ಸಂಗತಿಯನ್ನು ಬಿಡಿಸಿ ಹೇಳಿ ಗದ್ಗದಿತನಾದ ಪರಮೇಶಿ. +ಅದನ್ನು ಕೇಳಿ ಬಸವ ಗಾಬರಿಯಾದ… +“ಕರಿ ಸಂಗಡ ಹುಡ್ಗಿ ಹೃದಯವನ್ನೂ ಅಪಹರಿಸಿಕೊಂಡು ಬಂದಿದ್ದೀಯಲ್ಲಾ!?” ಮೇಲ್ನೋಟಕ್ಕೆ ಮಾತ್ರ ನಗಾಡಿದ… ಈ ವಿಷಯ ತಿಳಿದರೆ ದುರ್ಗೋಜಿ ಹೇಗೆ ತನ್ನ ಕರುಳಿನ ಕುಡಿಯನ್ನು ಚೆಲ್ಲುವನೋ! ಹಾಗೆಯೇ ಹೊನ್ನೂರಿನವರೂ ಸಹ!…. +ಚಿತ್ರಾಂಗದೆ ಜಾಗಟೆಗೆರೆಯವಳೆಂದು ತಿಳಿದರೆ ಹೊನ್ನಜ್ಜ ಆಕೆಯನ್ನು ತನ್ನ ಮುದ್ದಿನ ಕಾಡು ಬೆಕ್ಕಿಗೆ ಬಲಿಕೊಡದೆ ಇರಲಾರ…. +ಈ ವಿಷಯವನ್ನು ಗೋಪ್ಯವಾಗಿರಿಸಲು ನಿರ್ಧರಿಸಿದರು ಈರ್ವರು ಮಿತ್ರರು. +“ಬಸವಾ… ಹೇಗಾದ್ರೂ ಮಾಡಿ ಕನಕಳನ್ನು ಒಮ್ಮೆ ಭೇಟಿ ಮಾಡಿಸ್ತೀಯಾ” ಪ್ರಾಣಭಿಕ್ಷೆ ಬೇಡುವವನಂತೆ ಕೇಳಿದ ಪರಮೇಶಿ… +“ಧೈರ್ಯವಾಗಿರು ಆ ಕಾಲ ದೂರವಿಲ್ಲ” ಜೀವದ ಗೆಳೆಯನಿಗೆ ಜೀವ ತುಂಬಿದ ಬಸವ. +ಮರುದಿನವೇ ಆರಿದ್ರದ ಕೊನೇ ಪಾದ. ಬಿರುಮಳೆ ಸುರಿಯಿತು. +ನೀರಿನಿಂದ ತೋಯ್ದು ಒದ್ದೆಯಾದ ಗೂಡುಗಳನ್ನು ತೊಳೆಯುವುದರಲ್ಲಿ ತಲ್ಲೀನನಾಗಿದ್ದ ಮೊಮ್ಮಗನನ್ನು ಹುಡುಕಿಕೊಂಡು ನಿಂಗಜ್ಜಿ ಉಷ್ಟ್ರಪಕ್ಷಿಯಂತೆ ಬಂತು… “ಹೊನ್ನಜ್ಜ ಬಾ ಅಂತ ಹೇಳಿ ಕಳಿಸವ್ನೆ ಹೊಂಡು; ಬ್ಯಾಗ್ನೆ” ಮೈನಾ ಹಕ್ಕಿಯಂತೆ ಉಲಿಯಿತು. ಅದು ಅವನ ರಟ್ಟೆ ಹಿಡಿದು ಎಳೆದೊಯ್ಯಿತು. ಮೆನಗೆ ಬರೀ ಎಳೆದೊಯ್ಯಲಿಲ್ಲ ವಿಶೇಷ ಸ್ನಾನ ಮಾಡಿಸಿ ಇದ್ದೊಂದು ರೇಶಿಮೆ ಅಂಗಿ ತೊಡಿಸಿ, ದೋತರ ಉಡುಸಿತು. ಬರೀ ದೋತರವನ್ನಷ್ಟೇ ಉಡಿಸಲಿಲ್ಲ; ತಲೆಗೂದಲ್ಲನು ಒಪ್ಪ ಓರಣ ಮಾಡಿ ತಲೆಯ ಹಿಂದೆ ಪುಟ್ಟ ತುರುಬು ಕಟ್ಟಿತು. ಬರೀ ತುರುಬನ್ನಷ್ಟೇ ಕಟ್ಟಲಿಲ್ಲ. ಹಣೆಗೆ ವಿಭೂತಿ ಹಚ್ಚಿ ನಡುವೆ ದೊಡ್ಡದೊಂದು ಕುಂಕುಮ ಬೊಟ್ಟು ಇರಿಸಿತು. ಬರೀ ಬೊಟ್ಟನಷ್ಟೇ ಇರಿಸಲಿಲ್ಲ. ಅವನ ಕಿವಿಗಳಿಗೆ ಚಿನ್ನದ ಕಡುಪುಗಳನ್ನು ಚುಚ್ಚಿತು…. +ಹೀಗೆ ಅಲಂಕೃತನಾದ ಅವನಿಗೆ ಉಸಿರಾಡುವುದಕ್ಕೂ ಅವಕಾಶ ಕೊಡದೆ ಅವನ ಪಾದಗಳಿಗೆ ಜಿರುಕು ಮೆಟ್ಟು ತೊಡಲು ಒತ್ತಾಯಿಸಿ ಬೀದಿ ನಡೆಸಿಕೊಂಡೊಯ್ಯಿತು. +“ಏಯ್ ವಿರುಪಾಕ್ಷಿ ನೀ ಬಾ… ಏಯ್ ಕಾಳವ್ವ ನೀ ಬಾರೇ… ಏಯ್ ಸಾಂಬಶಿವ ನೀ ಬಾ… ಏಯ್ ಪಾರವ್ವ ನೀ ಬಾರೇ…” ಜಿರಕೂ ಜಿರಕೂ ಸದ್ದು ಮಾಡುತ್ತಿದ್ದ ಮೊಮ್ಮಗನ್ನು ಗ್ರಾಮದ ಹೆಸರಾಂತ ಮುದುಕಿಯಾದ ತಾನು ಕರೆದೊಯ್ಯುತ್ತಿರುವುದನ್ನು ನೋಡುತ್ತಾ ನಿಂತವರ ಪೈಕಿ ಕೆಲವರನ್ನು ಆಯ್ದು ದಿಬ್ಬಣಕ್ಕೆ ಸೇರಿಸಿಕೊಂಡಿತು. +ಮುದುಕಿ ನೇತೃತ್ವದ ದಿಬ್ಬಣವನ್ನು ಹೊನ್ನಜ್ಜ ತಲಬಾಗಿಲಿಗೆ ಬಂದು ಸ್ವಾಗತಿಸಿ ಒಳಗೆ ಕರೆದೊಯ್ದು ಚೀಟಿ ಚಾಪೆಯ ಮೇಲೆ ಸುಖಾಸೀನರಾದ ಅವರೆಲ್ಲರಿಗೆ ಬೆಳ್ಳಿ ಕಪ್ಪುಗಳಲ್ಲಿ ಬೆಲ್ಲ ಯಾಲಕ್ಕಿ ಮಿಶ್ರಿತ ನೀರನ್ನು ಕೊಡಲಾಯಿತು. +ಒಂದೂ ತಿಳಿಯದೆ ನಾಚಿ ಮುದ್ದೆಯಾಗಿ ತಲೆ ತಗ್ಗಿಸಿ ಕೂತಿದ್ದ ಪರಮೇಶಿ ಮುಂದೆ ಹಾಸಿದ ಹಸಿರು ಬಣ್ಣದ ಸುಪ್ಪತ್ತಿಗೆ ಮೇಲೆ ದಕ್ಷಿಣ ಘಟ್ಟಗಳಲ್ಲಿ ಬಳೆವ ಕಿತ್ತಳೆ ವರ್ಣದ ಷೋಡಷಿಯನ್ನು ಮುತ್ತೈದೆಯರು ನಡೆಸಿಕೊಂಡು ಬಂದು ಕುಳ್ಳಿರಿಸಿದರು. +“ನಿಂಗಜ್ಜಿ…. ನೋಡು ನನ್ ಮೊಮ್ಮಗ್ಳು… ಹೇಗವ್ಳೆ” ತಗ್ಗಿಸಿದ್ದ ತಲೆ ಎತ್ತದಂತೆ ಕೂತಿದ್ದ ಪರಮೇಶಿಗೆ ತಿಳಿಯಲೆಂದೇ ಕವಳಮೆದ್ದು ಒದ್ದೆಯಾಗಿ ಹುರಿ ಮೀಸೆ ತಿರುವಿದ ಹೊನ್ನಜ್ಜ. +“ಇಬ್ಬರ ಗ್ರಹಗತಿಗಳು ಅದ್ಭುತವಾಗಿವೆ… ವಿವಾಹ ಯೋಗ ಕೂಡಿ ಬಂದಿವೆ” ವೆಂಕಟಾಚಲ ಶಾಸ್ತ್ರಿಗಳು ಸಂದರ್ಭವನ್ನು ಸರಳಗೊಳಿಸಿದರು. +“ದೇವ್ರೇ ಮಾಡಿಸಿದಂತಿದೆ ಜೋಡಿ” ದೀವಿಟಿಗೆ ಧ್ಯಾಮಜ್ಜ ನಾಲಗೆಯನ್ನು ಬೆಳಗಿಸಿದ. “ಏನಂತೀ ನಿಂಗವ್ವತ್ತೆ!” ಮುದುಕಿ ಕನ್ಯಾರತ್ನದ ಮುಂದೆ ಕೂತು ಮುಖದಲ್ಲಿ ಮುಖ ಇಟ್ಟು ನೋಡಿ, ಎರ್‍ಡೂ ಕೈಗಳಿಂದ ಚಟಚಟಾಂತ ಲಟ್ಟಿಗೆ ತೆಗೆಯಿತು… +ನೋಡೆಲೋ…. ನೀನು ಮದ್ವೆ ಆಗೋ ಹುಡ್ಗೀನಾ… ಒಳ್ಳೆ ಮಾಲಕ್ಷ್ಮೀಯಂಗವ್ಳೆ!” ಮೊಮ್ಮಗನ ಮುಖವನ್ನು ತನ್ನೆರಡು ಕೈಗಳಿಂದ ಮೇಲಕ್ಕೆತ್ತಿತು. +ತಲೆಯೆತ್ತಿ ನೋಡಿದ; ಹೌದು ! ಸಾಕ್ಷಾತ್ ಮಹಾಲಕ್ಷ್ಮೀಯೇ ಆದರೆ ಕನಕಳಲ್ಲವಲ್ಲ. ಮತ್ತೆ ತಲೆ ತಗ್ಗಿಸಿದ. ಮುಖದ ಬೆವರೊರೆಸಿಕೊಳ್ಳಲು ಅಂಗಿ ಎತ್ತಿದರೆಲ್ಲಿ ಅವಳಿಗೆ ಹೊಟ್ಟೆ ಕಾಣಿಸುವುದೋ ಎಂದು ಹೆದರಿದ. +ಅಜ್ಜನ ಒತ್ತಾಯಕ್ಕೆ ಹುಡುಗಿಯೂ ಅಷ್ಟೇ. ಹೂವಿಂದ ಭಾರವಾಗಿದ್ದ ತಲೆಯೆತ್ತಿ ಬಟ್ಟಲುಗಳಿಂದ ಬೆಳಕು ಚೆಲ್ಲಿದಳು. ಪರಮೇಸಿಯ ರೂಪ ಆಕೆಯ ಕಂಗಳ ಮೂಲಕ ಹೃದಯದ ತುಂಬಾ ಬಲವಾದ ಮುದ್ರೆಯೊತ್ತಿ ಬಿಟ್ಟಿತು. +“ಪರಮೇಶಾ… ನನ್ನೀ ಮೊಮ್ಮೊಗ್ಳು ಬರೀ ಹೆಸ್ರಲ್ಲಷ್ಟೇ ಲಕ್ಷ್ಮೀ ಅಲ್ಲ… ಇವಳಪ್ಪನ ಮುಂದೆ ಕುಬೇರ ಏನೂ ಅಲ್ಲ. ಮದುವೆಯಾದ ಮೇಲೆ ಸಾವಿರ ಕುದುರೆ ಸರದಾರನಾಗಿ ಆ ಜಗಟಗೆರೆ ಬೇಡರನ್ನು ಹೊಸಕಿ ಹಾಕುವಂತೀ…” ಹೊನ್ನಜ್ಜನ ಹಲ್ಲುಗಳು ಮಾಡಿದ ಸದ್ದು ಅಂಗಳದಲ್ಲಿ ನಿಂತಿದ್ದ ಭಿಕ್ಷುಕನಿಗೂ ಕೇಳಿಸಿತು. ಮುಖ ತಿಳಿಗೊಳಿಸಿಕೊಂಡು ಮತ್ತೆ ಹೇಳಿದ ‘ನಿನ್ ಪರಾಕ್ರಮ ಕೇಳಿ ತಾನೇ ಒಪ್ಪಿ ಬಂದಿದ್ದಾಳೆ. ನಿನ್ ಮದುವೆ ಆಗೋಕೆ…. ಏನಂತೀರಪ್ಪಾ ನೀವೆಲ್ಲಾ….’ ಹೊನ್ನಜ್ಜ ಕಂಚಿನ ಪೀಕದಾನಿಗೆ ಕವಳದ ರಸ ಉಗುಳಿದ. +ಕಾರ್ತಿಕ ಮಾಸದಲ್ಲಿ ಹೋಳಿಗೆ ಊಟ ಇಟ್ಟುಕೊಳ್ಳುವುದೆಂದು ನಿಷ್ಕರ್ಷೆಯಾಯಿತು. ಹೌದು… ಹೌದು… ಎಲ್ಲರೂ ತಲೆಯಾಡಿಸಿ, ಒಪ್ಪಿಗೆ ಸೂಚಿಸಿದರು. +ಸಂಜೆಯ ಊಟಕ್ಕೆ ಎಲ್ಲರಿಗೂ ಏರ್ಪಾಡು ಮಾಡಿಸಿದ್ದ ಹೊನ್ನಜ್ಜ ಅಲ್ಲಿಯೇ. +ಕಿಟಕಿಯ ಜರತಾರಿ ಪರದೆ ಮರೆಯಲ್ಲಿ ಲಕ್ಷ್ಮೀ ತನ್ನ ಕಡೆ ಕದ್ದು ನೋಡುತ್ತಿದ್ದುದರಿಂದ ಐದನೇ ತುತ್ತು ಗಂಟಲಿಗಿಳಿಯಲಿಲ್ಲ ಪರಮೇಸಿಗೆ. ಬಲವಂತಕ್ಕೆ ಮಣಿಯದೆ ಎಡೆಯಲ್ಲಿ ಕೈ ತೊಳೆದುಕೊಂಡಿದ್ದನಲ್ಲದೇ ಕುಂಟು ನೆಪ ಹುಡುಕಿ ಮೆಲ್ಲಗೆ ಹೊರ ಜಾರಿದ. +ಹೊನ್ನಜ್ಜನ ಮೊಮ್ಮಗಳನ್ನು ಕೈ ಹಿಡಿಯುವನೆಂದು ಗೊತ್ತಾದ ಮೇಲೆ ಪರಮೇಶಿ ಹೊರಗೆ ಅಪ್ಪಿತಪ್ಪಿ ಅಡ್ಡಾಡುವುದು ಕಷ್ಟವಾಯಿತು. ಕನಕ ಆಗಲೇ ಪರಮೇಶಿಯ ಹೃದಯಲ್ಲಿ ವಸಾಹತು ಸ್ಥಾಪಿಸಿದಳು. ಆದರೆ ಲಕ್ಷ್ಮೀ ಹೃದಯದ ಬಾಗಿಲು ಬಡಿಯುತ್ತಿದ್ದಳಷ್ಟೇ…. +ಪರಮೇಶಿಯನ್ನು ನೋಡಿದ ಕ್ಷಣದಿಂದ ಲಕ್ಷ್ಮೀಯ ಮನಸ್ಸು ದೀಪದ ಸೊಡರಾಗಿತ್ತು. ಪರಮೇಶಿಯ ನೆನಪು ಅವಳ ದಿನಚರಿಯನ್ನು ಕೆಡಿಸುತ್ತಿತ್ತು. ಯಾವುದಾದರೂ ನೆಪ ಹುಡುಕಿ ಪರಮೇಶಿಯನ್ನು ಸಂಧಿಸತೊಡಗಿದಳು. ಇದಕ್ಕೆ ಗ್ರಾಮದ ಶ್ಯಾಮಲ ವರ್ಣದ ತರುಣಿಯರ ಬೆಂಬಲ ಎಂದ ಮೇಲೆ ಕೇಳಬೇಕೆ!… ಪರಮೇಶಿ ಎಲ್ಲಿದ್ದರೂ, ಏನು ಮಾಡಿದರೂ ಲಕ್ಷ್ಮೀಗೆ ಗೊತ್ತಾಗಿ ಬಿಡುತ್ತಿತ್ತು. ನಾಳೆ ಅವರಿಬ್ಬರೂ ಮದುವೆಯಾಗುವವರು ತಾನೇ! ಜನ ಕೂಡ ಅಪಾರ್ಥ ಕಲ್ಪಿಸದೆ ಸಹಕರಿಸತೊಡಗಿದರು… ಅವರಿಗೆಲ್ಲ ತಮ್ಮ ಪರಮೇಶಿ ಲಕ್ಷ್ಮೀ ಮದುವೆಯಾಗಿ ಸಾವಿರ ಕುದುರೆ ಸರದಾರನಾಗುವುದು! ಜಾಗಟಗೆರೆಯನ್ನು ಬಗ್ಗು ಬಡಿಯುವುದು ಅವರಿಗೆಲ್ಲ ಇದೇ ಕನಸು!… +ತನ್ನ ಹೃದಯದಲ್ಲಿ ಹೊಯ್ದಾಡುವ ಇಕ್ಕೆಲ್ಲದ ಪಗಡೆಗಳ ನಡುವೆ ಶಕ್ತಿ ಗುಂದಿರುವ ಸಂಗತಿ ಪರಮೇಶಿಗೆ ತಿಳಿದದ್ದು ಶ್ರಾವಣದಲ್ಲಿ ಬಸಂದೇವರ ಗುಡಿ ಪವುಳಿಯಲ್ಲಿ ಜೂಜುಗಾಯಿಯನ್ನು ಒಂದೇ ಏಟಿಗೆ ಗುದ್ದಿ ಪುಡಿ ಪುಡಿ ಮಾಡದಿದ್ದಾಗ ಲೀಲಾಜಾಲವಾಗಿ ಕಲ್ಲಿನ ಗುಂಡನ್ನು ಮೇಲೆತ್ತದಿದ್ದಾಗ! +ಇದರಿಂದ ಮನಸ್ಸಿಗಾದ ನೋವಿಗೋ! ಸುರಿವ ಜಡಿ ಮಳೆಯಲ್ಲಿ ಬೆಳ್ಳಿ ಮರಡಿಯ ಮೇಲೆ ಒಂದೆರಡು ತಾಸು ಕೂತ ಕಾರಣಕ್ಕೋ; ಮೈ ಬಿಸಿಯಾಗಿ ವಿಷಮಶೀತ ಜ್ವರ ಕಾಣಿಸಿತು ಪರಮೇಶಿಗೆ. +ಸುದ್ದಿ ಗೊತ್ತಾದರೆ ಊರಿಗೆ ಊರೇ ನೆರೆತು ತನ್ನ ಮೊಮ್ಮಗನ ನಿದ್ದೆ ಹಾಳು ಮಾಡುತ್ತಾರೆಂದು ನಿಂಗಜ್ಜಿ ಜ್ವರದ ಸಂಗತಿಯನ್ನು ಗುಟ್ಟಾಗಿರಿಸಿತು. ಸ್ಥಳೀಯ ವೈದ್ಯರ ಬದಲಿಗೆ ವೆಂಕಟಾಪುರದ ಅರಳೆಲೆ ಪಂಡಿತ ರಾಮಣ್ಣನನ್ನು ಸುತ್ತಿ ಬಳಸಿ ಗ್ರಾಮಕ್ಕೆ ಕರೆತಂದು ಬಸವ ಚಿಕಿತ್ಸೆ ಮಾಡಿಸಿದ ಸಂಗತಿಯನ್ನು ಎರಡು ದಿನಗಳಾದ ಮೇಲೆ ಪತ್ತೆ ಹಚ್ಚಿದಳು. +ತಲೆ ಮೇಲಿದ್ದ ಮಣ್ಣಿನ ಕೊಡವನ್ನು ದೊಪ್ಪನೆ ನೆಲಕ್ಕೆ ಕೆಡವಿ ಊಟ ಮಾಡುತ್ತಿದ್ದ ಲಕ್ಷ್ಮೀಯ ವಜ್ರದ ಓಲೆಗಳಿದ್ದ ಕಿವಿಯಲ್ಲಿ ಉಸುರಿದಳು. ತಲೆ ಸುತ್ತಿದಂತಾಗಿ ಆಕೆ ಮತ್ತೊಂದು ತುತ್ತು ಮುಟ್ಟುವುದಿರಲಿ, ಉಡುಪು ಲೆಕ್ಕಿಸದೇ ಊರಮ್ಮನ ಬಯಲ ಮುಂದಿದ್ದ ನಿಂಗಜ್ಜಿಯ ಮನೆ ಕಡೆ ಓಡಿದಳು. ಮನೆಯ ಹೆಂಚಿನ ಮೇಲೆ ವೈಶಂಪಾಯನ ಪಕ್ಷಿಯಂತೆ ಕೂತಿದ್ದ ಪಾರಿವಾಳಗಳೆಲ್ಲ ಸಂತೋಷದಿಮದ ಪುರ್‍ರನೆ ಹಾರಿಹೋದವು. +ಹಗ್ಗದ ವರಸಿನ ಮೇಲೆ ಅರೆ ನಿದ್ರೆಯಲ್ಲಿದ್ದ ಪರಮೇಶಿಯನ್ನು ನೋಡುತ್ತಲೇ ಆಕೆಯ ಕಣ್ಣುಗಳಿಂದ ನೀರು ದುಮ್ಮಿಕ್ಕದೇ ಇರಲಿಲ್ಲ. ತನ್ನೆದೆಯ ಹೂಗೂದಲ ಮೇಲೆ ಕಣ್ಣೀರಿನ ಸ್ಪರ್ಶಕ್ಕೆ ಕಣ್ತೆರೆದು ಲಕ್ಷ್ಮೀ… ನೀ… ನು… ಇಲ್ಲಿ… ಮೇಲೆದ್ದು ಕೂಡ್ರಲು ಯತ್ನಿಸಿದ. ಅವನನ್ನು ಹಾಗೇ ಹಾಸಿಗೆ ಮೇಲೆ ಒರಗಿಸಿದಳು. +“ಅಜ್ಜೀ… ನಿಮ್ ಪಾಲಿಗೆ ನಾನು ಏನೂ ಅಲ್ವೇನು! ಈ ವಿಷಯ ತಿಳಿಸ್ದೇ ಯಾಕೆ ಗುಟ್ಟಾಗಿಟ್ರೀ!?” ಗದ್ಗದಿತಳಾದ ಲಕ್ಷ್ಮೀಯನ್ನು ಸಂತೈಸಲು ಅಜ್ಜಿಯ ಬಾಯಿಯ ಬತ್ತಳಿಕೆಯಲ್ಲಿ ಮಾತುಗಳಿರಲಿಲ್ಲ. ಕಂಠ ಕಟ್ಟಿ ಆಕೆ ಹೊರಹೋದಳು. ನಾಳೆ ನೀವು ಗಂಡ ಹೆಂಡ್ತಿ ಆಗೋರು. ಏನಾದ್ರೂ ಮಾಡ್ಕಳ್ಳಿ! ಅಂತ ಗೊಣಗುತ್ತ… +ಪರಮೇಸಿಯ ಶುಶ್ರೂಷೆಯನ್ನು ಲಕ್ಷ್ಮೀ ತಾನು ವಹಿಸಿಕೊಂಡ ಕ್ಷಣದಿಂದ ಸುಮ್ಮನೆ ಕೂಡ್ರಲಿಲ್ಲ. ಹೊತ್ತು ಹೊತ್ತಿಗೆ ಕಷಾಯ ಕುಡಿಸುವುದು. ಅವನ ಬೆನ್ನು ಹಣೆಗೆ ಅಂಜನ ಲೇಪಿಸುವುದು! ಗಂಜಿ ಕಾಯಿಸುವುದು ಇತ್ಯಾದಿ. +ಹೊನ್ನಜ್ಜನೂ ಎರಡು ಮೂರು ಬಾರಿ ಬಂದು ಆರೋಗ್ಯ ಲಾಭ ವಿಚಾರಿಸಿಕೊಂಡು ಹೋದ. +ವಿಚಿತ್ರ ಪೇಚಿಗಿಟ್ಟುಕೊಂಡಿತು ಪರಮೇಶಿಗೆ. +ಲಕ್ಷ್ಮೀ ಅಪ್ರತಿಮ ಸುಂದರಿ ಅಷ್ಟೇ ಆಗಿರದೆ ವಾತ್ಸಲ್ಯ ಮೂರ್ತಿ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಕನಕಳ ವಶವಾಗಿರುವ ಪರಮೇಶಿಯ ಹೃದಯ ಸ್ಪಂದಿಸುವುದಾದರೂ ಹೇಗೆ!… +ಶ್ರಾವಣದ ಮಧ್ಯಾಹ್ನ ಸಂಜೆಯನ್ನು ಹೋಲುತ್ತಿತ್ತು. ಊರ್‍ತುಂಬ ವಿಚಿತ್ರ ಮಂಪರು. ಎಲ್ಲರೂ ಅವರವರ ಮನೆ ಸೇರಿಕೊಂಡಿದ್ದರಿಂದ ಬೀದಿಗಳು ನಿರ್ಮಾನುಷವಾಗಿದ್ದವು. ಲಕ್ಷ್ಮೀ ಮುಟ್ಟಾಗಿ ಮೂಲೆ ಸೇರಿದ್ದರಿಂದ ಪರಮೇಶಿ ತಮ್ಮ ಮನೆ ಪಡಸಾಲೆಯಲ್ಲಿ ಕವಣಿಯೊಂದನ್ನು ಸಿದ್ದಪಡಿಸುವುದರಲ್ಲಿ ಮಗ್ನನಾಗಿದ್ದ. ಅವನೆದುರಿಗೆ ಅರ್ಜುನನೊಂದಿಗೆ ಸುಭದ್ರ ಮತ್ತು ಚಿತ್ರಾಂಗದೆಯರು ತೊಡಗಿದ್ದು ಜಗಳವೋ! ಸರಸವೋ! ದೇವರಿಗೇ ಗೊತ್ತು. +ಶಕುನದ ಹಕ್ಕಿ ನುಡಿತೈತೆ +ಕನಕ ಎಂಬ ಹಕ್ಕಿಬಿಕ್ಕಿ ಬಿಕ್ಕಿ ಅಳುತ್ತ ಕುಂತೈತೆ… +ಪಾರ್ವತೀ ಪತಿ ಸಂತೈಸು ಬಾರಯ್ಯ…ಠರ್‍ರ್‍… ಠರ್‍ರ್‍… +ಕೊರವಂಜಿ ಕಿನ್ನರಿ ನುಡಿಸುತ್ತ ಅಂಗಳದಲ್ಲಿ ಹಾಡುತ್ತಿರುವುದು ಕೇಳಿಸಿತು. ಕೆಲಸದಲ್ಲಿ ಕರಗಿದ್ದ ಅಜ್ಜಿ ಮುಂದಕ್ಕೆ ಹೋಗು ಎಂದೆರಡು ಮೂರು ಬಾರಿ ಗದರಿಕೊಂಡಿತು…. ಆದರೆ ಕೊರವಂಜಿ ಕನಕಾ ಎಂಬ ಹಕ್ಕಿ…. ಎಂದು ಜೋರಾಗಿ ಕೂಗಿತು ಮತ್ತೆ…. +ಅದನ್ನು ಕೇಳಿದ ಪರಮೇಶಿಗೆ ಏನೋ ಹೊಳೆಯಿತು. ದಿಗ್ಗನೆ… ಓಯ್ ಕೊರವಂಜೀ ಬಾ ಇಲ್ಲಿ ಎಂದು ಕೂಗಿದ… ಆಗಲೆ ಮುಂದಿನ ಮನೆಗೆ ಹೋಗಿದ್ದ ಕೊರವಂಜಿ ಠುರ್‍ರ ಎಂದು ಬಂದಿತ್ತು. ಆಕೆಯನ್ನು ಮನೆಯ ಪಡಸಾಲೆಯಲ್ಲಿ ಕುಳ್ಳಿರಿಸಿಕೊಂಡು ಕನಕ ಎಂಬ ಹಕ್ಕಿ ಎಂದು ಕೂಗ್ತಿದ್ದೆಯಲ್ಲಾ?”… ಎಂದು ಆತುರದಿಂದ ಕೇಳಿದ. “ಏಯ್ ರಾಜಕುಮಾರ ಕನಕ ಎಂಬ ಹಕ್ಕಿಯ ಸರದಾರ ನೀನೇ ಏನು! ಠರ್‍ರ್‍” ಎಂದಿತು. ತೊಲೆಯ ಸಂದೂರದಲ್ಲಿದ್ದ ಎರಡು ಬೆಳ್ಳಿ ರೂಪೈಗಳನ್ನು ತಂದು ಸಾಲಂಕೃತಳಾಗಿದ್ದ ಕೊರವಂಜಿಯ ಮುಂದಿರಿಸಿ “ಅದೇನು ಬಿಡಿಸಿ ಹೇಳಿ ಪುಣ್ಯ ಕಟ್ಟಿಕೋ” ಎಂದು ದೀನನಾದ… +ಪ್ರೀತಿಯಿಂದ ಅವನ ಮೋರೆ ಸವರಿದ ಕೊರವಂಜಿ ಕುಪ್ಪಸದೊಳಗಿನ ಕರವಸ್ತ್ರ ತೆಗೆದು ಅವನ ಕೈಗಿರಿಸುತ. ಯಮಸಂಧಿ ಜಾತ್ರೇಲಿ ಕನಕ ಎಂಬ ಹಕ್ಕಿಗೆ ಬೆಂಡು ಬತ್ತಾಸು ಕೊಡಿಸುವಂತಿ ಇಟ್ಕೋ ಎಂದು ಬೆಳ್ಳಿರೂಪಾಯಿಗಳನ್ನು ಮರಳಿಸಿದ ಕೊರವಂಜಿ ತಾನು ಕನಕಳ ಜೀವದ ಗೆಳತಿ ಸುಂಕಲಿಯಾದ್ದರಿಂದ ಬೇಗನೆ ಎದ್ದು ಹೊರಹೊರಟಿತು ಮತ್ತೆ ‘ಶಕುನದ ಹಕ್ಕಿ’ ಎಂದು ಕೂಗುತ್ತ. +ಹಂದಿಬೇಟೆಗೆ ಹೋಗಿದ್ದ ಬಸವನನ್ನು ಹುಡುಕಿಕೊಂಡು ಪರಮೇಶಿ ಕಾಡಿಗೆ ಹೋದ. ಮಿತ್ರ ಎಲ್ಲೂ ಕಾಣಿಸದಿದ್ದಾಗ ಬೆಟ್ಟದ ಕೋಡುಗಲ್ಲನೇರಿ “ಎಲೇ ಗೆಣೆಕಾರ ಬಸವಾ… ನಾನು ನಿನ್ನ ಜೀವದ ಗೆಳೆಯ ಪರಮೇಶಿ ಕೂಗ್ತಾ ಇದ್ದೀನಿ… ಎಲ್ಲಿದ್ರೂ ಓಡಿ ಬರುವಂತವನಾಗಲೀ ಸಾರಥಿ ಅತಿ ಜಾಗ್ರತಿ” ಎಂದು ಹತ್ತು ಹದಿನೈದು ಸಾರಿ ಕೂಗಿದೇಟಿಗೆ ಕಾಡಿಗೆ ಕಾಡೇ ಅಲ್ಲಾಡಿತು. ಸ್ವಲ್ಪ ಹೊತ್ತಾದ ಮೇಲೆ ‘ಲೋ ಪರಮೇಶಿ’ ಎಂದು ಬಸವನ ಧ್ವನಿ ಕಾಡಿನಾಳದಿಂದ ಕೇಳಿ ಬಂತು. ಇನ್ನೂ ಸ್ವಲ್ಪ ಹೊತ್ತಿಗೆ ಅವನ ಆಕೃತಿ ಕಣಗಿಲೆ ಪೊದೆ ಪಕ್ಕ ಕಂಡದ್ದೇ ಪರಮೇಶಿ ಗುಂಡಿನಿಂದ ಗುಂಡಿಗೆ ಜಿಗಿಯುತ್ತ ಓಡಿ ಬಂದು ಮಿತ್ರನನ್ನು ತಬ್ಬಿಕೊಂಡು ನೆಲದ ಮುಳ್ಳುಕಲ್ಲು ಲೆಕ್ಕಿಸದೆ ಹುಲ್ಲು ಮೇಲೆ ಉರುಳಾಡಿದ. +ಸೊಂಟದಲ್ಲಿ ಬಚ್ಚಿಟ್ಟುಕೊಂಡಿದ್ದ ಬೆಲ್ಲದಕಣ್ಣೆಯನ್ನು ತೆಗೆದು ಏದುಸಿರುಬಿಡುತ್ತಿದ್ದ ಬಸವನ ಬಾಯಿಗೆ ತುರುಕಿದ ಮೇಲೆಯೇ ಕೊರವಂಜಿ ಕೊಟ್ಟ ಕರವಸ್ತ್ರ ತೆಗೆದು ಅವನ ಕೈಗಿತ್ತದ್ದು. +ಕಾಡಿನ ಜ್ಞಾನದ ಜೊತೆಗೆ ಅಕ್ಷರ ಜ್ಞಾನವನ್ನೂ ಬಲ್ಲ ಬಸವಗೆ ಕರವಸ್ತ್ರದ ಮೇಲಿದ್ದ ಕೆಂಪು ಬಣ್ಣದ ಅಸ್ಪಷ್ಟ ಗೆರೆಗಳು ಕೂಡಲೆ ಅರ್ಥವಾಗಲಿಲ್ಲ. ಕ್ರಮೇಣ ಅರ್ಥವಾಗುತ್ತಲೆ ಪರಮೇಶಿಯನ್ನು ತಬ್ಬಿಕೊಂಡು ‘ನಿನ್ನ ಕನಕ ನಿನ್ಗೆ ಮುಂದಿನವಾರ ಯಮಸಂಧಿ ಜಾತ್ರೀಲಿ ಸಿಕ್ತಾಳೆ ಮಿತ್ರಾ’ ಎಂದು ಕಿವಿಕಚ್ಚಿ ಪಿಸುನುಡಿದ. ಎಲ್ಲಿ ಗಿಡಮರಗಳು ಕೇಳಿಸಿಕೊಂಡು ಹೊನ್ನಜ್ಜಗೆ ತಿಳಿಸಿಬಿಡುವವೋ ಎಂಬ ಹೆದರಿಕೆಯಿಂದ. +-೪- +ನಂದಿಬೆಟ್ಟ, ಮುತ್ತೋಡಿ, ಮೊದಲ ಘಟ್ಟಗಳನ್ನು ಬಳಸಿ ಹೋದರೆ ಮಾತ್ರ ಹೊನ್ನೂರಿನಿಂದ ಯಮಸಂಧಿ ಏಳೆಂಟು ಗಾವುದದೂರ. ಯಮಸಂಧಿಯ ಮಾಂಕಾಳಿ ಸಿಡಿ ಆಡುವುದೆಂದರೆ ಜಾಗಟಗೆರೆ ಬೇಡರಿಗೆ ಆಟ. ಮನೆಗೊಂದು ಆಳಾದರೂ ಅಲ್ಲಿ ನೆರೆದಿರುತ್ತಾರೆ. ಆದ್ದರಿಂದ ಪರಮೇಶಿಯನ್ನು ಜೋಪಾನವಾಗಿ ಕರೆದೊಯ್ದು ಕರೆತರುವ ಜವಾಬ್ದಾರಿಯನ್ನು ಹೆಗಲಿಗೆ ಧರಿಸಿ ಬಸವ ಜಾತ್ರೆಗೆ ಎರಡು ದಿನಕ್ಕೆ ಮೊದಲು ಅಂದರೆ ಶನಿವಾರ ರಾತ್ರಿ ಒಂದು ಜಾವ ಕಳೆದ ಮೇಲೆ ಬಸರಕೋಡಿನ ಬಣಜಿಗರ ಸಣ್ಣಾಯನ ಎರಡು ಬಲಿಷ್ಠ ಕತ್ತೆಗಳನ್ನು ಹೊಡೆದುಕೊಂಡು ಬಂದು ಊರನೈರುತ್ಯಕ್ಕಿರುವ ಕನ್ನೀರವ್ವನ ಬಾವಿ ಪಕ್ಕದ ಖರ್ಜೂರದ ಮರಕ್ಕೆ ಕಟ್ಟಿದ್ದ. ಏಳೂರಿಗೆ ಕೇಳಿಸುವಂತೆ ಒದರುವಲ್ಲಿ ಹೆಸರಾದ ಅವುಗಳ ಬಾಯಿಗೆ ಭದ್ರವಾಗಿ ಹಗ್ಗಬಿಗಿದು ಕಟ್ಟಿದ್ದ. ನಿಜಕ್ಕೂ ಗಂಡ ಹೆಂಡತಿಗಳಾದ ಅವುಗಳು ಅಧಂಬರ್ಧ ರಾಸಲೀಲೆಗೆ ತೊಡಗಲು ಅನುವು ಮಾಡಿಕೊಟ್ಟು ಮಾಳಿಗೆ ಮೇಲೆ ಮಲಗಿದ್ದ ಪರಮೇಶಿಯನ್ನು ಎಬ್ಬಿಸಿಕೊಂಡು ಕೆಳಕ್ಕಿಳಿದ ಸದ್ದಾಗದಂತೆ. ಪಟ ಪಟ ರೆಕ್ಕೆ ಬಡಿಯುತ್ತ ಅರ್ಜುನ ಬಂದು ತನ್ನ ಹೆಗಲ ಮೇಲೆ ಕೂತಾಗ ಅಲ್ಲಿಂದಾವ ಉಲೂಪಿಯನ್ನು ಹಾರಿಸಿಕೊಂಡು ಬರಲು ಬೆಂಬತ್ತಿರುವುದೋ ಈ ರಸಿಕಲಲಾಮಣಿ ಎಂದು ಪರಮೇಶಿ ಗೊಣಗುತ್ತಲೆ ಕಳ್ಳಮಾರ್ಗದ ಮೂಲಕ ಬಾವಿ ತಲುಪಿ ನೋಡುತ್ತಾರೆ. ಕಟ್ಟಿದ ಜಾಗದಲ್ಲಿ ಕತ್ತೆಗಳಿಲ್ಲ. ಅಷ್ಟು ದೂರದಲ್ಲಿ ಓಡುತ್ತಿದ್ದ ಅವುಗಳನ್ನು ಹಿಡಿದು ತರುವ ಹೊತ್ತಿಗೆ ಬಸವನಿಗೆ ಸಾಕು ಸಾಕಾಗಿ ಹೋಯಿತು. ತಲಾ ಒಂದೊಂದು ಕತ್ತೆಯ ಮೇಲೆ ಕುತು ಪಯಣ ಬೆಳೆಸಿದರು. +ಅಮೃತಾಪುರದ ಕುಸ್ತಿ ಪಂದ್ಯದಲ್ಲಿ ಭಾಗವಹಿಸುವಾಗೊಂದೆ ಪರಮೇಶಿ ಕತ್ತೆ ಮೇಲೆ ಪಯಣಿಸಿದ್ದು, ಕಾಡಿನ ಅಂಚಿನಲ್ಲಿರುವ ಬಯಲುಸೀಮೆಯ ಯಮಸಂಧಿಯನ್ನು ಬಸವ ಎರಡು ಮೂರು ಬಾರಿ ನೋಡಿರುವುದರಿಂದ ಪ್ರಯಾಣ ನಿರಾತಂಕವಾಗಿ ಸಾಗಿತು. +ಎಳಸುಮೊಗ್ಗಿನ ಸೀರೆಯನ್ನುಟ್ಟು! ಕುಶಲಽದಿಂದಲೆ ಸಿಂಬಿಯ ಸುತ್ತಿ! ಹೆದರುತ್ತ ಬೆದರುತ್ತ ಇಳಿದಾಳಣ್ಣ! ಅವಳೊಂದೆಂದೆ ಮೆಟಿಗೆಯನ್ನು… ಎಂದು ಏರುದನಿಯಲ್ಲಿ ಬಸವ ಹಾಡಿದರೆ +ಊರಸುತ್ತ ಜ್ವಳಾಬಿತ್ತಿ, +ಜ್ವಾಳದ್ ಸುತ್ತ ಬೇಲೀ ನೆಟ್ಟು…., +ಜ್ವಾಳಾದೊಳ್ಗೆ ನಿಂತುಕೊಂಡು ತೋಳ ಬೀಸಿ ಕರೆಯುತ್ತಾಳೆ. +… ಎಂದು ಪರಮೇಶಿ ತುಂಬುಕಂಠದಿಂದ ಹಾಡಿದನು…. ಪಯಣದುದ್ದಕ್ಕೂ…. +ನಂದಿ ಬೆಟ್ಟದ ವಿಠೋಬಯ್ಯನ ಪಳಾರದಂಗಡಿಯಲ್ಲಿ ತಲಾ ಸೇರು ಸೇರು ಕರ್ಚಿಕಾಯಿ ತಿಂದ ಅವರು ಮತ್ತೆ ಪಟ್ಟಾಗಿ ಊಟ ಬಿಗಿದದ್ದು ಮೊದಲ ಘಟ್ಟದ ಅನ್ನ ಛತ್ರದಲ್ಲಿಯೇ ಬಾಯಿಗೆ ಹೆತ್ತಿಕಾಳು ಕುಕ್ಕೆ ಕಟ್ಟದಿದ್ದರೂ ಕತ್ತೆಗಳು ಯಮಸಂಧಿಯನ್ನು ತಲುಪುವ ಹೊತ್ತಿಗೆ ದಣಿದುಬಿಟ್ಟಿದ್ದವು. ಅವುಗಳಿಗೆ ಕಾಲುಕಟ್ಟಿ ಹೊಳಿದಂಡೀಲಿರುವ ಕರಿಕೀಯ ಕುಡಿ ಮೇಯಲು ಬಿಟ್ಟು ತಾವಿಬ್ಬರೂ ಕನಕಳನ್ನು ಈ ಜಾತ್ರೆ ಗಜಿಬಿಜಿಯಲ್ಲಿ ಎಲ್ಲಿ ಹುಡುಕುವುದೆಂದು ಚಿಂತಿಸುತ್ತ ತುಸು ಹೊತ್ತು ಬಂದಳಿಕೆ ಗಿಡಗಳ ನಡುವೆ ಕೂತಿ ಯೋಚಿಸಿದರು. ಹುಡುಕುವಾಗ ಬೇಡರ ಕಣ್ಣಿಗೇನಾದರೂ ಬಿದ್ದರೆ ತನ್ನ ಮಿತ್ರ ಉಳಿಯುವುದಿಲ್ಲೆನಿಸಿತು. ಬಸವನಿಗೆ ವೇಷ ಬದಲಿಸಬೇಕು, ಅದಕ್ಕೆ ತಕ್ಕ ಸಾಮಗ್ರಿಬೇಕಲ್ಲ! ಕೂಡಲೇ ತಾನೊಬ್ಬನೆ ಜಾತ್ರೆಯೊಳಕ್ಕೆ ಹೋಗಿ ಒಂದೂವರೆ ಬೆಳ್ಳಿ ರೂಪೈ ಖರ್ಚು ಮಾಡಿ ಒಂದು ಧಡಿ ಅಂಚಿನ ಮೊಣಕಾಲ್ಮೂರು ಸೀರೆ ಮತ್ತು ಜರಿ ಅಂಚಿನ ಕುಪ್ಪಸ ತಂದ. ತಾನೇ ಮಿತ್ರನ ಮೀಸೆ ಬೋಳಿಸಿ ಸೀರೆ ಉಡಿಸಿದನಲ್ಲದೇ ಹೇಗೋ ಇದ್ದ ನೀಳ ಕೂದಲಿಗೆ ಉದ್ದನೆಯ ಜಡೆ ಎಣೆದು ಮುಡಿಗೆರಡು ತಾವರೆಗಳನ್ನಿಟ್ಟು ‘ನೀನು ನನ್ನ ಹೆಂಡ್ತಿ… ನಾನು ನಿನ್ ಗಂಡ ನಡೀ ಹುಡುಕೋಣ ನಿನ್ ಕನಕಳನ್ನು….” ಎಂದು ಜಾತ್ರೆಯೊಳಕ್ಕೆ ಕರೆದುಕೊಂಡು ಹೊರಟ…. +ಸಾಲು ಸಾಲು ಅಂಗಡಿಗಳು, ಸಾವಿರಾರು ಜನರ ಗಜಿಬಿಜಿ ನಡುವೆ ಕನಕಳಿಗಾಗಿ ಹೆಣ್ಣು ವೇಷದ ಪರಮೇಶಿಯ ಕಣ್ಣುಗಳು ಹುಡುಕಾಟ ನಡೆಸಿದ್ದವು. ಆದರೆ ಜಾತ್ರೆಗೆ ಬಂದಿದ್ದ ಕೆಲ ಕಿಡಿಗೇಡಿ ಗಂಡಸರ ಕಣ್ಣುಗಳು ಪರಮೇಶಿಯನ್ನು ಚುಚ್ಚಿ ತಿನ್ನದೇ ಇರಲಿಲ್ಲ. ಕೆಲವರಂತೂ ಅವನನ್ನು ಹಿಂಬಾಲಿಸುತ್ತ ಮೈಗೆ ಮೈ ತಾಕಿಸುತ್ತ ಚುಡಾಯಿಸತೊಡಗಿದರು. “ಹೊಸದಾಗಿ ಮದ್ವೆಯಾಗಿ ಜಾತ್ರೆಗೇಂತ ಕರ್‍ಕೊಂಡು ಬಂದಿದ್ದೀನಿ ಕಣ್ರಪಾ, ಕೈ ಮುಗಿತೀನಿ ನನ್ ಹೆಂಡ್ತೀಗೆ ಗೋಳು ಹೊಯ್ಕೋಬೇಡ್ರಿ.” ಬಸವ ಕಾಮಣ್ಣಗಳೆದುರು ಅಂಗಲಾಚಿದ. “ನಿನ್‌ಗ್ಯಾಕೋ ಈ ಗೊಂಬಿಮಾಟದ ಹೆಣ್ಣು” ಎಂದೊಬ್ಬ ಪರಮೇಸಿಯ ಗಲ್ಲ ಸವರಿದ. ತಡೆಯಲಾಗದೆ ಬಸವ ಕಾಮಣ್ಣಗಳನ್ನು ಸ್ವಲ್ಪ ದೂರ ಕರೆದೊಯ್ದು ನಿಮ್ಗೇನು ಅಕ್ಕತಂಗೇರು ಹೆಂಡ್ರು ಇಲ್ವೇನ್ರೋ ಅಂತ ಸಿಟ್ಟಿನಿಂದ ಎರಡು ಚಚ್ಚುತ್ತಲೇ ಅವು ಬದುಕಿದೆಯಾ ಬಡ ಜೀವವೇ ಎಂದು ಓಟಕಿತ್ತವು. +“ಮುಂದಿನ ಜನುಮದಲ್ಲಾದ್ರೂ ನಾವಿಬ್ರು ಗಂಡ ಹೆಂಡ್ರಾಗಿ ಹುಟ್ಟೋಣ ಕಣ್ಣಾ” ಎಂದು ಬಸವ ಪರಮೇಶಿಯ ಗಲ್ಲ ಚಿವುಟಿದ. +ಜಾಗಟಗೆರೆ ಬೇಡರು ಸಿಡಿನಡೆಯೋ ಸ್ಥಳದಲ್ಲಿ ಠಿಕಾಣಿ ಹೂಡಿರಬಹುದೆಂದೂಹಿಸಿ ಆ ಪ್ರದೇಶಕ್ಕೆ ಹೋದರು, ಕಾಳಾಪುರದ ಡೊಳ್ಳುಗಳು, ಹಾಳ್ಪಾದ ಹಲಗೆಗಳು, ಹರಪನಹಳ್ಳಿಯ ಬಾಜಾಬಜಂತ್ರಿಯ ಕಿವಿಗಡುಚಿಕ್ಕುವ ಸದ್ದಿನಿಂದಾಗಿ ಜನ ತಂಡೋಪತಂಡವಾಗಿ ಸಿಡಿ ಸ್ಥಳದ ಸುತ್ತನೆರೆಯ ತೊಡಗಿದ್ದರು. ಒನಪು ಒಯ್ಯಾರದಿಂದ ಒನೆಯುತ್ತಲೇ ಪರಮೇಶಿ ಕನಕಳಿಗಾಗಿ ಹುಡುಕಾಟ ನಡೆಸಿದ್ದ. +ಸೂಲದಹಳ್ಳಿಯ ರುಮ್ಮಿಗಳ ರುಮ್ ರುಮ್ ಧ್ವನಿ ನಡುವೆ ಮಾಂಕಾಳಿಯನ್ನು ತಂದು ಕಟ್ಟೆ ಮೇಲೆ ಪ್ರತಿಷ್ಠಾಪಿಸುತ್ತಲೆ ಸಿಡಿ ಆಡುವ ಗಂಡುಗಳು ಹ್ಹಾ… ಹ್ಹೂ… ಅಂತ ಕೇಕೆ ಹಾಕುತ್ತ ಪ್ರದಕ್ಷಿಣೆ ಹಾಕಿದವು. ಕುಂಕುಮದಲ್ಲಿ ಅದ್ದಿತೆಗೆದಂತಿದ್ದ ಒಂದಿಬ್ಬರ ಬೆನ್ನ ಹುರಿಗೆ ಪೂಜಾರಿ ಸಿಡಿಯ ಥಳಥಳ ಕೊಕ್ಕೆಸಿಕ್ಕಿಸಿ ಬೇವಿನತೊಪ್ಪಲಿಂದ ಪಟಪಟ ಬಡಿದ. ತಮ್ಮ ದೇಹಗಳಿಂದ ಸುರಿಯುತ್ತಿದ್ದ ರಕ್ತ ಲೆಕ್ಕಿಸದೆ ಇತ್ತಿಂದತ್ತ ಅತ್ತಿಂದಿತ್ತ ಸಿಡಿ ಆಡುತ್ತಿದ್ದ ಅವರ ಪೈಕಿ ಒಬ್ಬ ಜಾಗಟಗೆರೆಯವನೆಂದು ಪರಮೇಶಿ ಗುರುತಿಸಿದ…. ಹಾಗೆಯೇ ಎತ್ತರ ಸ್ಥಳದ ಮೇಲೆ ಗುಂಪಾಗಿ ನಿಂತಿದ್ದವರನ್ನೂ…. ಭಲಾ… ಭಲಾ… ಭಲಾ… ಕಾಳೋಜಿ… ಎಂದುದ್ಗರಿಸುತ್ತಿದ್ದ ದುರ್ಗೋಜಿಯ ಪಕ್ಕ ನಿಂತಿದ್ದ ಕನಕಳ ಬೆದರುಗಂಗಳು ತನಗಾಗಿ ಅರಸುತ್ತಿರುವುದನ್ನು ಗುರುತಿಸಿದ ಪರಮೇಶಿ ಸಂತಸದ ಪ್ರವಾಹದಲ್ಲಿ ಕೊಚ್ಚಿ ಹೋದ. +ಎಚ್ಚರ ತಪ್ಪಿದರೆ ಪ್ರಮಾದ…. ಎಂದು ಎಚ್ಚರಿಸಿಯೇ ಅವನನ್ನು ಆ ಕಡೆ ಕರೆದೊಯ್ದು ಗುಂಪುಗೂಡಿದ ಬಸವ. ದುರ್ಗೋಜಿಯ ಪಕ್ಕದಲ್ಲಿ ತಾನು… ಕನಕಳ ಪಕ್ಕದಲ್ಲಿ ಪರಮೇಶಿ… “ನಮ್ ಕನಕಳ ಕೈ ಹಿಡಿಯೋ ಗಂಡು ಹೇಗಾಡ್ತಾವ್ನೆ ನೋಡು ಸಿಡಿಯಾ….” ಸಂತಸದ ಭರದಲ್ಲಿ ದುರುಗೋಜಿ ಕೈಯಿಂದ ಬಸವನ ಬೆನ್ನಿಗೆ ಅಪ್ಪಳಿಸಿದ…. ಅದನ್ನು ಸಹಿಸಿಕೊಂಡು ಬಸವ ತಾವು ಬಳ್ಳಾರಿ ದೇಸದ ಕಂಪಲಿಯ ಶ್ರೀಮಂತರೆಂದೂ; ಅಗೋ ಅಲ್ಲಿರುವ ತಮ್ಮ ಧರ್ಮ ಪತ್ನಿ ಸಂಗಮೇಶ್ವರದ ಶ್ರೀಮಂತರ ಸಿದ್ಧರಾಜರವರ ಏಕಮಾತ್ರ ಪುತ್ರಿ ಎಂದೂ ನಂಬುವಂತೆ ಪರಿಚಯಿಸಿಕೊಂಡ. ಹಾಗೆಯೇ ಬೀದಿ ಕಾಮಣ್ಣಗಳ ಬಗೆಗೂ ಹೇಳಿದ. ತಾವಿರುವಷ್ಟು ಕಾಲ ತಮ್ಮ ಬಿಡಾರದಲ್ಲೇ ಇರಬಹುದೆಂದು ದುರುಗೋಜಿ ಸ್ವತಃ ಹೇಳಿದ ಮೇಲೆ ಕೇಳುವುದೇನಿದೆ? ಅಲ್ಲದೆ ಹೆಣ್ಣು ವೇಷದ ಪರಮೇಶಿ ಉಪಾಯದಿಂದ ಕನಕಳೊಂದಿಗೆ ಸಲಿಗೆ ಬೆಳೆಸಿದ್ದ ಆಗಲೇ…. +ತಮ್ಮ ಅಳಿಯನಾಗುವ ಕಾಳೋಜಿ ಯಶಸ್ವಿಯಾಗಿ ಸಿಡಿ ಆಡಿದ್ದಕ್ಕೆ ದುರುಗೋಜಿ ತಮ್ಮ ಬಿಡಾರದ ಮುಂದೆ ದೊಡ್ಡದೊಂದು ಪಾನ ಸಮಾರಾಧನೆ ಏರ್ಪಡಿಸಿದ್ದ. ಗುಟ್ಟಾಗಿ ಕಳ್ಳಮಾಲನ್ನು ಖರೀದಿಸುವ ವರ್ತಕರೂ ಅಲ್ಲಿ ಪಾಲ್ಗೊಳ್ಳದೆ ಇರಲಿಲ್ಲ. ದುರುಗೋಜಿಯ ಅಳಿಯನನ್ನು ಹೀಗೆ ಪರಿಚಯಿಸಿದ. +“ಈ ಸಿಡಿ ಆಡಿ ಪರಾಕ್ರಮಿ ಬರುವ ಕಾರ್ತೀಕ ಮಾಸ್ದಲ್ಲಿ ನನ್ ಮಗ್ಳ ಕೈ ಹಿಡಿಯ್ಯೋನು ಇವ್ನು ಹೆಸ್ರು ಕೇಳಿದ್ರೆ ಆಂದ್ರ ದೇಸ್ದಲ್ಲಿ ಜನ ಗಡಗಡ ನಡುಗ್ತಾರೆ ಹ್ಹ… ಹ್ಹ…” ಸಿಡಿಯ ಗಾಯಕ್ಕೆ ಪಟ್ಟು ಬಿಗಿದಿದ್ದ ಕಾಳೋಜಿ ಗಟಗಟ ಅಂತ ಕೊಡವನ್ನೆತ್ತಿ ಕುಡಿದು ಕನಕಳ ಮುಖ ಕಂದಿ ಹೋಗುವಂತೆ ನೋಡಿದ. ಆಗ ಪರಮೇಶಿ ಊಹಿಸಿದ್ದು ಬೆಳಗಾಗುತ್ತಲೆ ನಿಜವಾಯಿತು. +ಕುಡಿದ ಅಮಲಿನಲ್ಲಿ ಕನಕಳ ಮೇಲೆ ಅತ್ಯಾಚಾರ ಮಾಡಲೆತ್ನಿಸಿದಾಗ ಸಿಡಿಯ ಗಾಯದಿಂದ ಮಾರಗಲ ರಕ್ತಪಾತವಾಯಿತು. ಬಸವ ದುರುಗೋಜಿ ಮಧ್ಯೆ ಪ್ರವೇಶಿಸಿ ಕಾಳೋಜಿಯನ್ನು ಬೇರೊಂದು ಬಿಡಾರಕ್ಕೆ ಕರೆದೊಯ್ದರು. ಹೋಗುವಾಗ ಹೆಣ್ಣು ವೇಷದ ಪರಮೇಶಿ ಕಡೆ ನೋಡಿ ಕಣ್ಣೊಡೆದ. ಕಾಳೋಜಿ ಭಯದಿಂದ ಪರಮೇಶಿಯನ್ನು ಬಿಗಿದಪ್ಪಿಕೊಂಡು ಮಲಗಲೆತ್ನಿಸಿದಳು ಕನಕ. ಒಡಲೆಣ್ಣೆದೀಪದ ಮಂದ ಬೆಳಕಿನಲ್ಲಿ ಫಳ ಫಳ ಹೊಳೆಯುತ್ತಿದ್ದ ಅವಳ ಹೂಗೆನ್ನೆಗೆ ಮುದ್ದು ಕೊಟ್ಟು “ಮನಸ್ನಲ್ಲಿ ಯಾರ್‍ನಾದ್ರು ಪ್ರೀತಿಸ್ತಿದ್ದೀ ಏನು!” ಎಂದು ಕೇಳಿದ; ಹ್ಹೂ ಅಂದಳು ಕಣ್ತುಂಬ ನೀರು ತುಂಬಿಕೊಂಡ ಕನಕಳಿಗೆ ನಾಳೆ ನಿನ್ನ ಪ್ರೇಮಿಯನ್ನು ತೋರಿಸ್ತೀನಿ ಹಳ್ಳ ಆಚೇಲಿರೋ ದೇವಿ ಗುಹೆಗೆ ಹೋಗೋಣ” ಎಂದು ಪಿಸುಗುಟ್ಟಿ ತಾನೂ ತಬ್ಬಿ ಮೇಲೆ ಕಂಬಳಿ ಎಳೆದುಕೊಂಡ. +ಕಳ್ಳನಿದ್ದೆಯಲ್ಲಿದ್ದ ಅವರಿಬ್ಬರು ಬೆಳಗಾಗುವ ಮೊದಲೇ ಎಚ್ಚರಾದರು. ತಂದೆಗೆ ಪಿಳ್ಳೆ ನೆವ ಹೇಳಿ ಹೊರಟಳು…. ನನ್ ಮಗ್ಳೂನ ಜೋಪಾನವಾಗಿ ಕರ್‍ಕಂಡ್ಹೋಗಿ ಕರ್‍ಕೊಂಡು ಬಾರಮ್ಮಾ” ಎಂದು ಆಕಳಿಸುತ್ತ ನಿದ್ದೆ ಹೋದ ದುರುಗೋಜಿ… ದಾರಿಯುದ್ದಕ್ಕೂ ಕನಕ ತನ್ನ ಪರಮೇಶಿಯ ಕುರಿತು ನೂರೊಂದು ಪ್ರಶ್ನೆ ಕೇಳಿದಳು. ಪರಮೇಶಿ ಒಳಗೊಳಗೆ ನಗುತ್ತ ಹೆಣ್ಣುದನಿಯಲ್ಲಿ ಕಯ್ ಕುಯ್ ಎಂದು ಉತ್ತರಿಸಿದ ಜಾಣತನದಿಂದ. ಸ್ವಲ್ಪ ದೂರದಲ್ಲಿ ಹಿಂಬಾಲಿಸುತ್ತಿದ್ದ ಬಸವನಿಗೆ ನಗುವೋ ನಗು…. +ಶುಂಬ ನಿಶುಂಭರನ್ನು ಕೊಲೆ ಮಾಡಿದ ದೇವಿ ಕೋಪಶಮನಕ್ಕಾಗಿ ತಪಸ್ಸು ಮಾಡಿದ್ದೆಂದು ಹೇಳುವ ಗವಿಯೊಳಕ್ಕೆ ಆತುರತೆಯಿಂದೋಡಿ ಪರಮೇಶೀ… ಹೋ ಪರಮೇಶಿ… ಎಂದು ಕೂಗಿದಳು…. ಕಾಣದಿದ್ದಾಗ ಗೆಳತಿಯ ಸೆರಗಿಗೆ ಹೈ ಹಚ್ಚಿ ತೋರ್‍ಸೆ ಎಲ್ಲವ್ನೇ ತೋರ್‍ಸೇ… ಸುಳ್ ಹೇಳಿ ಯಾಕೆ ಕರ್‍ಕೊಂಡು ಬಂದೆ ನನ್ನ ಎಂದು ಪೀಡಿಸತೊಡಗಿದಳು. ಇನ್ನು ಗುಟ್ಟಾಗಿಡುವುದು ಅವನಿಂದ ಅಸಾಧ್ಯವೆನಿಸಿತು. ಬಾಚಿ ತಬ್ಬಿಕೊಂಡು “ನಾನೇ ಕಣೆ ನಿನ್ ಪರಮೇಶಿ” ಎಂದು ಆಕೆಯ ಮುಖದ ತುಂಬ ಮುತ್ತಿನ ಮಳೆ ಸುರಿದ. ಆಕೆಗೂ ಕ್ರಮೇಣ ಅರ್ಥವಾಯಿತು ನಾವಿಬ್ರೂ ಎಲ್ಲಾದ್ರೂ ಹೋಗಿ ಬದುಕೋಣ… ಕರ್‍ಕೊಂಡು ಹೋಗು” ಎಂದಪ್ಪಿಕೊಂಡು ಕಣ್ಣೀರು ಕರೆದಳು…. +ಬಸವ ಗವಿಯ ಬಾಗಿಲು ಬಳಿ ಕಾವಲಿರುವಾಗ ಯಾತರ ಭಯ! +ಅದು ಇದು! ಇದು ಅದು ಮಾತಾಡಿದರು! ತಾವಿಬ್ಬರು ಎಷ್ಟೋ ಜನುಮಗಳಿಂದ ದಂಪತಿಗಳೆಂಬಂತೆ. ಪ್ರೇಮಿಗಳೀರ್ವರ ಬಾಯಿಯಿಂದ ಮಾತು ನೊರೆನೊರೆಯಾಗಿ ಉಕ್ಕಿ ಹರಿಯಿತು. ಅರ್ಜುನ ಪಟಪಟ ರೆಕ್ಕೆ ಬಡಿಯುತ್ತ ಅವರ ನಡುವೆ ಹಾರಿ ಕೂತು ಇನ್ನು ಹೊರಡಿ ಎಂದು ಎಚ್ಚರಿಸಿದಿದ್ದಲ್ಲಿ ಅವರು ಹಾಗೆ ಕೂಡ್ರುತಿದ್ದರೇನೋ! +ಕಾಳೋಜಿಯಿಂದ ತೊಂದರೆ ಒದಗದ ಹಾಗೆ ನೋಡಿಕೊಳ್ಳಲು ಬಸವನನ್ನು ಜಾಗಟಗೆರೆಗೆ ಕಳಿಸುವುದಾಗಿಯು; ಒಳ್ಳೆ ಸಮಯ ನೋಡಿಕೊಂಡು ದೂರ ಹೊರಟು ಹೋಗೋಣವೆಂದೂ ಹೇಳುತ್ತ ತನ್ನ ಬೆರಳಿನಲ್ಲಿ ಹೊಳೆಯುತ್ತಿದ್ದ ವಜ್ರದ ಉಂಗುರ ತೆಗೆದು ಅವಳ ಎಡಗೈಯ ನೀಳ ಬೆರಳಿಗೆ ಅಲಂಕರಿಸಿದನು. +ಸಂಪಿಗೆ ಮರದಲ್ಲಿ ಕೂತಿದ್ದ ಬಸವ ಟಿಟ್ಟಿಭ ಹಕ್ಕಿಯಂತೆ ಕೂಗಿ ಎಚ್ಚರಿಸಿದ ನಂತರ ಯುವ ಗಿಳಿ ಗೊರವಂಕಗಳು ಗುಹೆಯಿಂದ ಹೊರ ಬಂದವು. +-೫- +ಮೂರು ನಾಲ್ಕು ದಿನಗಳ ನಂತರ ಪರಮೇಶಿ ತನ್ನ ಸಂಗಡಿಗ ಬಸವನೊಂದಿಗೆ ಕಾಣಿಸಿಕೊಂಡ ಮೇಲೆಯೇ ಹೊನ್ನೂರು ಸಮಾಧಾನದ ಉಸಿರು ಬಿಟ್ಟಿದ್ದು. ಮಾಳಿಗೆ ಮೇಲೆ ಮಲಗಿಕೊಂಡಿದ್ದ ಪರಮೇಶಿಯೂ ತೆಂಗಿನ ತೋಟದ ಅಟ್ಟದ ಗೂಡಿನಲ್ಲಿ ಮಲಗಿಕೊಂಡಿದ್ದ ಬಸವನೂ ರಾತ್ರೋರಾತ್ರಿ ಕಾಣೆಯಾದರೆಂದರೆ ಊರಿಗೆ ಗಾಬರಿಯಾಗದಿರುತ್ತದೆಯೇ! ಎಲ್ಲಿ ಜಾಗಟಗೆರೆ ಬೇಡರು ಅಪಹರಿಸಿಕೊಂಡು ಹೋದರೋ ಎಂಬ ಭಯದಿಂದ ಕಂಗಾಲಾಗಿದ್ದರು. +“ಅವ್ವೋ ತಾಯಿ… ನಂ ಪರಮೇಶೀನ ಕ್ಷೇಮವಾಗಿ ಮರಳಿಸಿದ್ದಿಯಲ್ಲಾ ಪ್ರತಿ ಮಂಗಳವಾರ ಉಪವಾಸ ಇದ್ದು ನಿನ್ ಋಣ ತೀರಿಸ್ತೀನಿ…” ಲಕ್ಷ್ಮೀ ದೇವಿಗೆ ಹರಕೆ ಹೊತ್ತಳಲ್ಲದೆ ಮರುದಿನವೇ ಮಂಗಳವಾರ ಒಂದು ಹನಿ ನೀರು ಸಹ ಮುಟ್ಟದೆ ಉಪವಾಸ ಇದ್ದು ವ್ರತ ಪ್ರಾರಂಭಿಸಿದಳು. +ಎಲ್ಲಿ ಹೋಗಿದ್ದಿರಿ ಏನು ಕಥೆ…. ಎಂದು ತಲಾ ಒಂದೊಂದು ಪ್ರಶ್ನೆ ಕೇಳುವವರೆ ಎಲ್ಲ! ಬಾಯ ಬತ್ತಳಿಕೆ ತುಂಬ ತಕ್ಕ ಉತ್ತರಗಳನ್ನು ತುಂಬಿಕೊಂಡಿದ್ದ ಬಸವನೇ ತನ್ನ ಗೆಳೆಯನ ಪರವಾಗಿ ಉತ್ತರಿಸಿದ….. +ಹೀಗೆ ದಿನಗಳನ್ನು ಕಳೆಯುವುದು ಪರಮೇಶಿಗೆ ಅಸಹನೀಯವಾಗಿತ್ತು. ಒಂದು ದಿನ ಬಸವನ ಕಿವಿ ಹಿಂಡಿ ಬೆಳ್ಳೆ ಮರಡಿಗೆ ಕರೆದೊಯ್ದು ನೀನು ಈಗಿಂದೀಗ್ಲೆ ಜಾಗಟಗೆರೆಗೆ ಹೊರಡಿದಿದ್ದರೆ ನಾನು ಅಗೋ ಅಲ್ಲಿ ಬಾಯಿ ತೆರ್‍ಕೊಂಡು ಕಾಯ್ತಿರೋ ಮೊಸಳೆಗೆ ಸಿಕ್ಕು ಸಾಯ್ತೀನಿ. ಅಲ್ಲಿ ಆ ಕಾಳೋಜಿಯಿಂದ ಏನೇನು ಹಿಂಸೆ ಅನುಭವಿಸ್ತಿದ್ದಾಳೋ ಏನೋ ಎಂದು ಅವುಡುಗಚ್ಚಿದ. ಅದನ್ನು ನೋಡಿ ಬಸವನ ಕರುಳಿಗೆ ಚೂರಿ ಇಕ್ಕಿದಂತಾಯಿತು. +ಪರಮೇಶಿ ಕನಕರು ಒಂದಾಗುವುದಾದರೆ ತಾನು ಯಾಕೆ ಪ್ರಾಣದ ಹಂಗು ತೊರೆಯಬಾರದೆನ್ನಿಸಿತು! ತನಗೇನು ತಂದೆಯೇ ತಾಯಿಯೇ; ಇದೇ ಪರಮೇಶಿ ಹಿಂದೊಮ್ಮೆ ಹುಲಿಯ ಬಾಯಿಯಿಂದ ರಕ್ಷಿಸಿದ್ದನ್ನು ನೆನಪು ಮಾಡಿಕೊಂಡೊಡನೆ ಕಣ್ಣುಗಳು ಒದ್ದೆಯಾದವು. ಅವನು ನಾಳೆಯೇ ಹೊರಟು ಕನಕಳ ಯೋಗಕ್ಷೇಮ ನೋಡಿಕೊಳ್ಳುವುದಾಗಿ ಮಾತು ನೀಡಿದ. +ಬಯಲು ಸೀಮೆಯ ಹೂವಿನಗಡಲಿಯಲ್ಲಿರುವ ತನ್ನ ಅಜ್ಜಿ ಬಳಿಗೆ ಹೋಗುವುದಾಗಿ ಎಲ್ಲರಿಗೂ ಸುದ್ದಿ ಮಾಡಿದ ಬಸವ ಪರಮೇಶಿಯಿಂದ ಬೀಳ್ಕೊಂಡ. ಸುತ್ತಿ ಬಳಸೀ ಜಾಗಟಗೆರೆ ದಾರಿ ಹಿಡಿದ. ಜಾತ್ರೆಯಲ್ಲಿ ತಾನು ಮಾರುವೇಷದಲ್ಲಿದ್ದುದು ಈಗ ಸಹಾಯಕ್ಕೆ ಬಂತೆಂದುಕೊಂಡ. ಯಾವ ವೇಷ ಧರಿಸಿ ಹೇಗೆ ದುರುಗೋಜಿಯ ಮನೆಯಲ್ಲಿ ಜಾಗ ಗಿಟ್ಟಿಸಿಕೊಳ್ಳುವುದೆಂದು ದಾರಿಯುದ್ದಕ್ಕೂ ಯೋಚಿಸುತ್ತ ಹಾಗೂ ಹೀಗೂ ಜಾಗಟಗೆರೆ ಸಮೀಪಕ್ಕೆ ಹೋದ. +ಜಾಗಟಗೆರೆ ಬೇಡರು ಕಾಡು ಮೃಗಕ್ಕಿಂತಲೂ ಅಪಾಯ ಎಂದು ಗೊತ್ತು! ಅಂಥವರ ನಡುವೆ ಇದ್ದುಕೊಂಡೇ ಪರಮೇಶಿ ಮತ್ತು ಕನಕರ ನಡುವೆ ಸೇತುವೆಯಾಗಬೇಕಿರುವುದರಿಂದ ಅಪಾಯಕ್ಕೆ ಹೆದರುವುದೇ?! +ಊರ ಹೊರವಲಯದಲ್ಲಿದ್ದ ಗೇರು ತೋಟದ ಹೆಬ್ಬಲಸಿನ ಮರದಲ್ಲಿ ಇಡೀ ಒಂದು ದಿನ ಅವಿತು ದುರುಗೋಜಿಯ ಚಲನವಲನದ ಮೇಲೆ ನಿಗಾ ಇಟ್ಟ. ಕೊನೆಗೆ ಕನಕಳಾದರೂ ಬರಬಹುದೆಂದು ಕಾದ… ನಿರಾಸೆಯಾಯಿತು. ಕನಕ ಕಾಳೋಜಿಯ ದೆಸೆಯಿಂದ ಗೃಹಬಂಧನದಲ್ಲಿರಬಹುದೆನಿಸಿತು. +ಶ್ರಾವಣದ ಕೊನೆ ದಿನಗಳಲ್ಲಿ ಮೋಡಗಳ ಆರ್ಭಟ ಹೇಳತೀರದಿತ್ತು. ಕಾಲು ಹಾದಿಗೆ ಸ್ವಲ್ಪ ದೂರದಲ್ಲಿ ಅಂದರೆ ಹೊಂಗೆ ಮರಗಳ ನಡುವೆ ಮುಳ್ಳು ಕಂಟೆಗಳಿಂದ ಮೈ ಬಟ್ಟೆ ಹರಿದುಕೊಂಡು ರಕ್ತ ರಂಭಾಟ ಮಾಡಿಕೊಂಡ. ಹೋ ಅಂತ ಮೂಗನಂತೆ ಊಳಿಡತೊಡಗಿದ. ಅದನ್ನು ಕೇಳಿಸಿಕೊಂಡ ಬೇಡರಿಬ್ಬರು ಓಡಿ ಬಂದು ಉಪಚರಿಸುತ್ತ ಏನು ಅಂತ ಕೇಳಿದರು. ಮೂಕ ಎಂದು ಸನ್ನೆ ಮಾಡಿ ಹೇಳಿದ. ಚಿರತೆಯೊಂದಿಗೆ ತಾನು ಹೋರಾಡಿದ್ದಾಗಿ ಸನ್ನೆ ಮೂಲಕ ಸುಳ್ಳು ಹೇಳಿದ. ಅವನನ್ನು ಸೀದ ದುರುಗೋಜಿಯ ಮನೆಗೆ ಕರೆದೊಯ್ದರು. ಮೊದಲೇ ಅನುಮಾನಿಸುವಲ್ಲಿ ಹೆಸರಾದ ದುರುಗೋಜಿಯು ನೂರು ಪ್ರಶ್ನೆ ಕೇಳಿದರೆ ಹತ್ತು ಉತ್ತರಗಳನ್ನು ಸಂಜ್ಞೆ ಮೂಲಕ ಕೊಟ್ಟು ಗಟ್ಟಿಯಾಗಿ ಕಾಲು ಹಿಡಿದುಕೊಂಡು ತಾನು ಅನಾಥ ಎಂದು ಸಾದರಪಡಿಸಿದ. ಕೆಲ ದಿನಗಳವರೆಗೆ ಅವರು ಒಡ್ಡಿದ ಪರೀಕ್ಷೆಗಳೆಲ್ಲ ತೇರ್ಗಡೆಯಾಗಿ ಅವರೆಲ್ಲರಿಗೆ ಪರಮಾಪ್ತನಾದ ಹಾಗೆಯೇ ಕನಕಳೂ ಬಸವನನ್ನು ಗುರುತಿಸಿ ಹೆಚ್ಚು ಸಂತಸಗೊಂಡಳು. ಮೂಗ ಬಸವನನ್ನು ತನ್ನ ಸಹಾಯಕನಾಗಿ ಇಟ್ಟುಕೊಳ್ಳಲು ಕನಕ ಬಹಳ ಪ್ರಯತ್ನಿಸಿದ ನಂತರವೇ ತಂದೆ ದುರುಗೋಜಿಯ ಒಪ್ಪಿಗೆ ಸಿಕ್ಕಿದ್ದು. +ಗೇರು ತೋಟದಲ್ಲಿ ಹೆಜ್ಜೇನಿನ ದಾಳಿಯಿಂದ ಕನಕಳನ್ನು ರಕ್ಷಿಸಿದಾಗ ಬಸವ ಇನ್ನೇನು ನಂಜೇರಿ ಸಾಯುವನೆಂದು ಸ್ಥಳೀಯ ವೈದ್ಯರಂಗಪ್ಪ ನಾಯಕನೇ ಬಗೆದ. ಆದರೆ ಪರಮೇಶಿಯ ಪುಣ್ಯ… ಅವನು ಬದುಕಿ ಉಳಿದ. ಅಂದಿನಿಂದ ಅವನ ಸ್ವಾತಂತ್ರ್‍ಯ ಎಲ್ಲೆ ತುಸು ವಿಸ್ತರಿಸಿತು. ಕನಕಳೂ ಅಷ್ಟೆ ಪ್ರತಿಯೊಂದು ಕೆಲಸಕ್ಕೂ ಅವನ ಸಹಾಯ ಪಡೆಯತೊಡಗಿದಳು. ಪ್ರತಿದಿನ ಸಂಜೆ ಕನಕದುರ್ಗೆಯ ದೇವಸ್ಥಾನದಿಂದ ಕಪಿಲತೀರ್ಥದವರೆಗೆ ಜೊತೆಯಾಗಿ ನಡೆಯುವುದು ನಿಂಬೆ ತೋಟದಲ್ಲಿ ತನಗೆ ಬೇಕಾದ ನಿಂಬೆ ಹಣ್ಣನ್ನು ಅವನಿಂದ ಕೊಯ್ಯಿಸಿಕೊಳ್ಳುವುದು…. ಸಮಯ ಸಂದರ್ಭ ನೋಡಿ ಆಕೆಯನ್ನು ಸಮಾಧಾನ ಪಡಿಸುತ್ತಿರದೆ ಇರಲಿಲ್ಲ ಬಸವ… ಜೇನು ದಾಳಿಗೆ ಸಿಕ್ಕಂದಿನಿಂದ ರೂಪವೇ ಬದಲಿಸಿಕೊಂಡಿದ್ದ ತನ್ನ ಎದುರು ಕಾಳೋಜಿ, ಎರಡು ಮೂರು ಬಾರಿ ಕನಕಳ ಮೇಲೆ ಆಕ್ರಮಣ ಮಾಡಲೆತ್ನಿಸಿದ್ದನ್ನು ಪರಿಣಾಮಕಾರಿಯಾಗಿ ತಡೆದ. ಒಮ್ಮೊಮ್ಮೆ ಕಾಳೋಜಿಯನ್ನು ಮುಗಿಸಿ ಬಿಡಲೇ ಎಂದು ಯೋಚಿಸಿ, ತನ್ನನ್ನು ತಾನೇ ಬಯ್ದುಕೊಂಡ. ಅದರೆ ಕಾಳೋಜಿ ಮಾತ್ರ ಬಸವನ ಮೇಲೆ ತನ್ನ ಎರಡೂ ಕಣ್ಣುಗಳನ್ನು ನಿಗಾ ಇಟ್ಟಿದ್ದ. +ಈ ನಡುವೆ ಅರ್ಜುನ ಏನೋ ಜಾಗಟಗೆರೆ ಮೇಲೆ ಒಂದು ಸುತ್ತು ಪ್ರದಕ್ಷಿಣೆ ಹಾಕಿತಾದರೂ, ಗಿಡುಗನ ಕಾಟಕ್ಕೋ, ಕಾಳೋಜಿ ಗುರಿ ಇಟ್ಟಿದ್ದ ಬಾಣಕ್ಕೋ ಇಳಿಯದೆ ವಾಪಾಸು ಮರಳಿತ್ತು. ಇನ್ನೊಮ್ಮೆ ಚಿತ್ರಾಂಗದೆ ಏನೋ ಹಾರಿ ಬಂದು ಕನಕಳ ಹೆಗಲ ಮೇಲೆ ಕೂತು ಅರೆಚಣವಾಗಿದ್ದಾಗ ಯಾರದೋ ಹೆಜ್ಜೆ ಸಪ್ಪಳಕ್ಕೆ ಹೆದರಿ ಹೆಂಚಿನ ಮೇಲೆ ಕೂತಿತು. ಎಷ್ಟೋ ದಿನಗಳಿಂದ ಕಾಣೆಯಾಗಿದ್ದ ತಮ್ಮ ಪಾರಿವಾಳ! ಹಿಡಿಯಲೆತ್ನಿಸಿದವರ ಕೈಗೆ ಸಿಕ್ಕದೆ ಈಶಾನ್ಯ ದಿಕ್ಕನ್ನು ಬಳಸಿಕೊಂಡು ಹೊನ್ನೂರಿನ ಕಡೆ ಹಾರಿತು. ಹೀಗಾಗಿ ಮಾಹಿತಿ ಕಳಿಸಲಿಕ್ಕಾಗಲೀ; ತಿಳಿದುಕೊಳ್ಳುವುದಕ್ಕಾಗಲಿ ಸಾಧ್ಯವಾಗದಿದ್ದಾಗ ಕಳವಳ ಹೆಚ್ಚಿತು. +ಇಲ್ಲಿ ಮದುವೆಯ ದಿನಕ್ಕಾಗಿ ದೇಹದಾದ್ಯಂತ ಹಸಿದು ಕಾಯುತ್ತಿರುವ ಕಾಳೋಜಿ…. +ಅಲ್ಲಿ ಲಕ್ಷ್ಮಿಯ ಕೊರಳಿಗೆ ತಾಳಿ ಬಿಗಿಸಿ ಪರಮೇಶಿಯನ್ನು ಸಾವರ ಕುದುರೆ ಸರದಾರನನ್ನಾಗಿ ಮಾಡಿ ಜಾಗಟಗೆರೆಯ ಬೀದಿಗಳಲ್ಲಿ ರಕ್ತದ ಕೋಡಿ ಹರಿಸುವ ತವಕದಲ್ಲಿರುವ ಹೊನ್ನಜ್ಜ…. +ಮತ್ತೆ ಸುಂಕಲಿಗೆ ಕೊರವಂಜಿ ವೇಷ ತೊಡಿಸಿ ಹೊನ್ನೂರಿಗೆ ಕಳಿಸಿದರು. ಹುಲಿ ಬಂದರೂ ಸಿಗಿದು ತೋರಣ ಕಟ್ಟಬಲ್ಲ ಅಜಾನುಬಾಹು ಸುಂಕಲಿ ಹೊನ್ನೂರು ತಲುಪುವುದು ಕಷ್ಟವೇನೂ ಆಗಲಿಲ್ಲ. ಊರಮ್ಮನ ಬಯಲು ಮನೆ ಮುಂದೆ ನಿಂತು ಠುರ್‍ರ್‍ ಶಕುನದ ಹಕ್ಕೀ ಎಂದು ಹಾಡಿದಳು ಜೋರಾಗಿ… ಅದನ್ನು ಕೇಳಿ ತುತ್ತು ಬಿಟ್ಟು ಎದ್ದು ಬಂದ ಪರಮೇಶಿಗೆ ಕೊರವಂಜಿ ನೋಡಿ ಕೊಪ್ಪರಿಗೆ ಸಂತಸವಾಯಿತು. ಇರುವೆ ಕೂಡ ತನ್ನ ಚಲನವಲನದ ಮೇಲೆ ನಿಗಾ ಇರಿಸಿರುವುದರಿಂದ ಹೊತ್ತು ತುಸು ವಾಲಿದಾಗ ಸುತ್ತಲದ ತೋಪಿಗೆ ಆಕೆಯನ್ನು ಕರೆದೊಯ್ದು ಆತುರತೆಯಿಂದ ಕನಕಳ ಬಗ್ಗೆ ಪ್ರಶ್ನೆಗಳ ಮಳೆ ಕರೆದ. ಕೊರವಂಜಿ ಅವನ ಮುಖದಿಂದ ಲಟ್ಟಿಗೆ ತೆಗೆದು ಎಲ್ಲ ವಿವರಿಸಿ ನಿನ್ ಗೆಣೆಕಾರ ಬಸ್ವ ಇಲ್ದಿದ್ರೆ ಆ ಹುಡ್ಗಿ ಇಷ್ಟೊತ್ಗೆ ಏನಾಗ್ತಿಗ್ತೋ ಎಂದಳು. ಗೆಳೆಯನಿಗೆ ಮನದಲ್ಲಿ ಕೋಟಿ ಕೃತಜ್ಞತೆ ಅರ್ಪಿಸಿದ. ತನ್ನ ಕೊರಳಿಗೆ ಲಕ್ಷ್ಮೀಯನ್ನು ಬಲವಂತವಾಗಿ ಕಟ್ಟುವ ಪ್ರಯತ್ನದಲ್ಲಿರುವ ತನ್ನೂರಿನ ಹಿರಿಯರ ಕರಾಮತ್ತನ್ನು ಆದ್ಯಂತ ವಿವರಿಸಿದ. ಆಶ್ವೀಜ ಶುದ್ಧ ದಶಮಿಯಂದು ಹೊನ್ನಜ್ಜ ಮದುವೆ ಮಾಡಲು ನಿಶ್ಚಯಿಸಿರುವುದನ್ನು ಅವನು ಹೇಳಿದರೆ ಕೊರವಂಜಿ ಅದೇ ಆಶ್ವೀಜ ಶುದ್ಧ ಚತುರ್ದಶಿಯಂದು ಕನಕಳ ಮದುವೆಯನ್ನು ಕಾಳೋಜಿಯೊಂದಿಗೆ ದುರುಗೋಜಿ ನಡೆಸಲಿರುವ ಸೂಚನೆಯನ್ನು ನೀಡಿದಳು. ನವಮಿ ಅಥವಾ ದಶಮಿಯಂದು ತಾನು ಬರುವುದಾಗಿಯೂ ತಕ್ಕ ಏರ್ಪಾಟುಗಳನ್ನು ಮಾಡುವಂತೆ ಬಸವಗೆ ಹೇಳಬೇಕೆಂತಲೂ ವಿವರಿಸಿ ಆಕೆಯನ್ನು ಕೃತಜ್ಞತಾಭಾವದೊಂದಿಗೆ ಬೀಳ್ಕೊಟ್ಟ. +ನೆಪಕ್ಕೆ ಗುಣಸಾಗರ, ಬಲಕುಂದಿ, ಬೊಮ್ಮನ ಪಾಳ್ಯಗಳಲ್ಲಿ ಠುರ್‍ರ್‍ ಶಕುನದ ಹಕ್ಕಿ ಬಂದೈತಿ ಅಂತ ಸುತ್ತಾಡಿ ಜೋಳಿಗೆಗೆ ಬಿದ್ದ ಕಾಳು ಕಡ್ಡಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು ಬಲ್ಲೂರು, ಮಾಸುವಳ್ಳಿ ಹಾಯ್ದು ಜಾಗಟಗೆರೆ ತಲುಪಿದಳು. ಆಗಲೇ ಭಾದ್ರಪದ ಮಾಸದ ದಿನಗಳು ಉರುಳುತ್ತಿದ್ದುದರಿಂದ ಮದುವೆಯ ಏರ್ಪಾಟು ಬಿರುಸಿನಿಂದ ಸಾಗಿತ್ತು. ತಮ್ಮೊಂದಿಗೆ ಲೇವಾದೇವಿ ಇಟ್ಟುಕೊಂಡಿರುವ ಸುತ್ತ ಇಪ್ಪತ್ಮೂರು ಊರುಗಳ ಗೌಡರು, ರೆಡ್ಡಿಗಳಿಗೆ ವಿವಾಹದ ಶುಭ ಸಮಾಚಾರ ಮುಟ್ಟಿಸಿ ಜೊತೆಗೆ ಕಾಣಿಕೆ ವಸೂಲಿ ಮಾಡಿಕೊಂಡು ಬರಲು ಐವತ್ತು ಆಳುಗಳನ್ನು ಆಗಲೆ ಅಟ್ಟಿಯಾಗಿತ್ತು. +ಕಪಿಲತೀರ್ಥದ ಪಕ್ಕದ ತೋಪಿನಲ್ಲಿ ತನ್ನನ್ನು ಸಂಧಿಸಿದ ಕನಕಳಿಗೂ, ಬಸವನಿಗೂ ಹೊನ್ನೂರಿನ ಯಾವತ್ತೂ ಸಮಾಚಾರ ವಿವರಿಸಿ ನವಮಿ ದಶಮಿಯಂದು ಅವನು ಬರಲಿರುವ ಸುಳಿವು ನೀಡಿದರು. ಪರಮೇಶಿಯನ್ನು ಕುರಿತು ಸಾವಿರ ಪ್ರಶ್ನೆಗಳನ್ನು ಕೇಳುವ ಆತುರದಲ್ಲಿ ಕನಕ ಕಂಠ ಬಿಗಿದು ಕಣ್ತುಂಬ ನೀರು ತುಂದುಕೊಂಡಳು. “ಹುಚ್ಚೀ ಯಾಕಳ್ತೀ ಸುಮ್ಕಿರು… ನಿಮ್ಮಿಬ್ರನ್ನು ಆ ತ್ರಿಮೂರ್ತಿಗಳೂ ಬೇರ್ಪಡಿಸಲಾರರು” ಎಂದು ತಲೆ ನೇವರಿಸುತ್ತ ಸುಂಕಲಿ ಬಸವನ ಕಡೆ ಅರ್ಥಪೂರ್ಣ ನೋಟ ಬೀರಿ ಮುಗುಳ್ನಕ್ಕಳು… ಅವನೂ ಅಷ್ಟೆ, ಅವರಿಬ್ಬರಲ್ಲಿ ಪರಸ್ಪರ ಪ್ರೇಮಾಂಕುರವೋ ಏನೋ! +ಆಶ್ವೀಜ ಪ್ರಾರಂಭವಾದ ಮೇಲಂತೂ ಊರಿಗೆ ಊರೇ ಸಂಭ್ರಮದ ಮೊಟ್ಟೆಯಾಗಿ ಕುಲುಕುಲ ನಗತೊಡಗಿತು. ಕನಕದುರ್ಗೆ ದೇವಸ್ಥಾನ ಮುಂದೆ ಸಾವಿರ ಜನ ಒಂದೇ ಸಾರಿಕೂತು ಬಾಡು ಬುರ್‍ರ ಕತ್ತರಿಸುವಂತೆ ಏರ್ಪಾಟು ಮಾಡಲಾಯಿತು. ರಾಂಪುರ, ಹಿರ್‍ಯಾಳುಗಳಿಂದ ರೇಶಿಮೆ ಪೀತಾಂಬರ ಸೀರೆಗಳು ಬಂದರೆ ಹೊಸಪೇಟೆಯ ಕಂಸಾಲಿ ಕುಲ್ಡಾಚಾರಿ ಅರ್ಧಕೇಜಿ ಅಪ್ಪಟ ಚಿನ್ನ ಒಯ್ದು ಬಗೆಬಗೆಯ ಆಭರಣಗಳನ್ನು ಮಾಡಿಕೊಂಡು ತಂದ. +ಫಳಫಳ ಹೊಳೆಯುತ್ತಿದ್ದ ಆಭರಣಗಳನ್ನು ನೋಡಿದೊಡನೆ ಜೋಲು ಮೋರೆ ಹಾಕಿದ ಚವುಡವ್ವಗೆ ಸಿಟ್ಟಿನಿಂದ ಗಂಡ ದುರುಗೋಜಿಯನ್ನು ತರಾಟೆಗೆ ತೆಗೆದುಕೊಂಡಾಗ ಒಂದನೆ ಜಾವದ ಕೂಗು ಮೊಳಗಿತ್ತು. ಊರ್‍ತುಂಬ ಕಾಳೋಜಿ ವಕ್ರಿಸಿಯಾನೆಂಬ ಕಾರಣದಿಂದ ಕನಕಳ ಕೋಣೆ ಹೊಸ್ತಿಲಿಗೆ ತಲೆ ಮಾಡಿ ಮಲಗಿದ್ದರೂ ಎಚ್ಚರಿದ್ದ ಬಸವಗೆ ದುರುಗೋಜಿ ದಂಪತಿಗಳ ಕಟಿಪಿಟಿ ಅಲ್ಪಸ್ವಲ್ಪ ಕೇಳಿಬರುತ್ತಿತ್ತು. +“ಈ ಮೂಳಕ್ಕೇ ಈಟೊಂದು ಖರ್ಚು ಮಡ್ತೀಯಲ್ಲ…. ಸ್ವಂತ ಮಗ್ಳಾಗಿದ್ರೆ ಯೇಚು ಮಾಡ್ತೀದ್ಯೋ…” ಚವುಡವ್ವನಾಡಿದ ಬೇಸರದ ಮಾತಿನ ಉಣುಕೊಂಡು ಕಿವಿಗೆ ಬಿದ್ದು ಬಸವಗೆ ಇಡೀ ರಾತ್ರಿ ರೆಪ್ಪೆಗೆ ರೆಪ್ಪೆ ಅಂಟಿಸಲಾಗಲೇ ಇಲ್ಲ. +ಮರುದಿನವೇ ಬಸವ ಕನಕಳ ಜನುಮ ವೃತ್ತಾಂತವನ್ನು ತಿಳಿದುಕೊಳ್ಳುವ ನಿಮಿತ್ತ ಎರಡುಮಗಿ ಭಗಿಸಿ ಹೆಂಡದೊಡನೆ ನಿಂಬೆತೋಟದ ಅಟ್ಟದ ಮೇಲೆ ಅಂಗೈಯಲ್ಲಿ ಗಾಂಜಾದ ಎಲೆ ತಿಕ್ಕುತ್ತಿದ್ದ ವೃದ್ಧ ದ್ಯಾಮಜ್ಜನ ಬಳಿಗೆ ಹೋದ.. ಹೆಂಡದ ಸವಿಗೆ ಅವನ ನಾಲಗೆ ಉದ್ದಕ್ಕೆ ಹರಿಯಿತು. +ಸುಮಾರು ವರ್ಷಗಳ ಹಿಂದಿನ ಮಾತು. ಜಾಗಟಗೆರೆ ಕರಿಯನ್ನು ಅಪಹರಿಸುವ ಯತ್ನದಲ್ಲಿ ಹೊನ್ನಜ್ಜ ಬದುಕಿದ್ದೇ ಹೆಚ್ಚಿನ ಸಂಗತಿ. ಹೊನ್ನಜ್ಜನನ್ನು ಮುಗಿಸಲು ದುರುಗೋಜಿ ಅನೇಕ ಸಾರಿ ಪ್ರಯತ್ನಿಸಿ ವಿಫಲನಾದ. ಒಂದು ದಿನ ಯಾರಿಗೂ ತಿಳಿಯದ ಹಾಗೆ ಹಲ್ಲಿಯಂತೆ ಹೊನ್ನಜ್ಜನ ಮನೆಗೆ ಪ್ರವೇಶಿಸಿ ತೊಲೆ ಅಡರಿದ್ದ. ಕೊಲ್ಲೆಲ್ಲೆಂದು ಒಳಕೋಣೆ ಪ್ರವೇಶಿಸಿದ ಅವನ ಕಾಲಿಗೆ ಬಾಣಂತಿ ಪಕ್ಕದಲ್ಲಿದ್ದ ಹೆಣ್ಣು ಮಗು ತೊಡರಿತು. ಬೆಳದಿಂಗಳಂತೆ ಕುಲುಕುಲು ನಗುತ್ತಿದ್ದ ಆ ಮಗು ತನ್ನೆದೆ ತುಂಬ ತಣ್ಣಗೆ ಬೆಳದಿಂಗಳನ್ನಾವರಿಸುತ್ತಲೆ ಅವನು ಸುಮ್ಮನಿರಲಿಲ್ಲ. ಹೇಗೂ ತಮಗೆ ಮಕ್ಕಳಿಲ್ಲ. ಒಯ್ದು ಸಾಕಿಕೊಳ್ಳುವುದೆಂದು ಜೋಳಿಗೆಗೆ ಇಳಿ ಬಿಟ್ಟುಕೊಂಡು ಹಲ್ಲಿಯಂತೆಯೇ ಮನೆ ದಾಟಿದ. ಮಗು ಕಳೆದುಕೊಂಡ ದುಃಖಕ್ಕೊ, ಅಲಕನಂದೆಯ ಸಿಟ್ಟಿಗೋ ಅದರ ತಾಯಿ ತಂದೆಯರು ಪ್ರವಾಹದಲ್ಲಿ ಕೊಚ್ಚಿ ಹೋದರು. ತಾನು ಕಳೆದುಕೊಂಡಿರುವ ಹೆಣ್ಣು ಮಗುವೇ ದುರುಗೋಜಿಯ ಮಗಳು ಕನಕ ಎಂಬ ಅರಿವು ಇಂದಿನವರೆಗೆ ಹೊನ್ನಜ್ಜಗೆ ಬಂದಿಲ್ಲ. ಬಂದರೆ ಆತ ಮಾತ್ರ ಮೊಮ್ಮಗಳಿಗಾಗಿ ಏನು ತ್ಯಾಗ ಮಾಡಲು ತಯಾರು. +ಬಸವ ಇದು ಕನಕಳಿಗೆ ಗೊತ್ತಿಲ್ಲದಿರುವುದನ್ನು ಖಚಿತಪಡಿಸಿಕೊಂಡ. ಯಾರ ಒಡಲೊಳಗೆ ಯಾರ ಕರುಳೋ, ವಿಚಿತ್ರವೆನಿಸಿತು. ಪರಮೇಶಿಯ ನಿರೀಕ್ಷೆಯಲ್ಲಿದ್ದ ಆಕೆಗೆ ಅನ್ನದಲ್ಲಿ ರುಚಿ ಇರಲಿಲ್ಲ; ನೀರಿನಲ್ಲಿ ಸ್ವಾದವರಿಲಿಲ್ಲ; ಗಾಳಿಯೊಳಗೆ ಉಸಿರುಗಟ್ಟಿದ ಅನುಭವವಾಗಿ ಕೆಮ್ಮು ಬಿತ್ತರಿಸಿ ಬರುತ್ತಿತ್ತು. ‘ಅಪ್ಪಾಜಿ ನನಗಾ ಕಾಳೋಜಿ ನೋಡಿದ್ರೆ ಭಯ ಆಗ್ತತೆ’ ಮಗಳ ಮಾಮೂಲಿ ರಾಗವನ್ನು ಕೇಳಲು ದುರುಗೋಜಿ ತಯಾರಿರಲಿಲ್ಲ. ಅಲ್ಲದೆ ಆತಗೆ ಕಾಳೋಜಿ ಒಂಥರಾ ಭಯ; ಒಳಗೊಳಗೆ ಅಳಿಯ ಮಾವಂದಿರ ಒಪ್ಪಂದವೇನಿಹುದೋ… ಆ ಮೃಗದ ಹೆಂಡತಿಯಾಗು ಕ್ಷಣದಲ್ಲಿ ಪರಮೇಶಿ ಕೊಟ್ಟಿರುವ ಉಂಗುರದ ವಜ್ರದ ಹರಳನ್ನು ಕಡಿದುನುಂಗಿ ಸವನ್ನಪ್ಪುವುದೆಂದು ನಿರ್ಧರಿಸಿದ್ದ ಕನಕ ಗೇರು ತೋಟದ ಹಾದಿಯಲ್ಲಿ ಕುಡಿಯಲೊಂದು ಎಳೆ ನೀರು ಕಡಿದುಕೊಟ್ಟ ಬಸವನ ಕಿವಿಯಲ್ಲಿ “ನಿಜವಾಗ್ಲು ಅವ್ನು ಬರ್‍ತಾನೇನೋ” ಎಂದು ಕಣ್ಣಿಗೆ ನೀರು ತುಂಬಿಕೊಂಡಳು. ದಶಮಿಯೊಳಗೆ ಅವನು ಬರದಿದ್ದಲ್ಲಿ ತಾನೇ ಕನಕಳನ್ನು ಅವನ ಬಳಿಗೆ ಹೊತ್ತೊಯ್ಯುವುದಾಗಿ ವಚನವಿತ್ತು ಹೊನ್ನೂರಿನ ಕಡೆ ದೃಷ್ಟಿ ಹಾಯಿಸಿ ನಿಟ್ಟುಸಿರು ಚೆಲ್ಲಿದ. +ದಶಮಿಯ ಸಂಜೆಯಾಗುತ್ತಿದ್ದಂತೆ ದಶಮಾಪುರದ ಅಂಕಿರೆಡ್ಡಿಯ ಇಪ್ಪತ್ತು ಎತ್ತಿನ ಬಂಡಿಗಳು ದಡಕೂ ಬಡಕೂ ಸದ್ದು ಮಾಡುತ್ತ ಬಂದು ಅಗಸೆ ಮುಂದಿನ ಬಯಲಲ್ಲಿ ಬೀಡು ಬಿಟ್ಟವು. ಶರಭ ಎಂಬಾತ ಮದುವೆ ಗಡಿಬಿಡಿಯಲ್ಲಿ ದುರುಗೋಜಿಗೆ ಅಂಕಿರೆಡ್ಡಿಯ ಪತ್ರ ಕೊಟ್ಟ. ಅದರಲ್ಲಿ ಬರಗಾಲದ ವಿಷಯವನ್ನೂ, ಮೇವಿನ ಅಭಾವವನ್ನೂ ತಿಳಿಸುತ್ತ ರೆಡ್ಡಿ ಇಪ್ಪತ್ತು ಬಂಡಿ ಸೊಪ್ಪೆ ಕಳಿಸಿಕೊಡುವಂತೆ ಬರೆದಿದ್ದ. ಅಲ್ಲೇ ಹಂದರ ಹಾಕುವುದರಲ್ಲಿದ್ದ ಮೂಕ ಬಸವನಿಗೆ ಬಂಡಿಗಳಿಗೆ ಮೇವು ತುಂಬಿಸಿಕೊಡುವ ಕೆಲಸವನ್ನು ವಹಿಸಿದ. ಮೇವಿನ ಏರ್ಪಾಟು ಮಾಡುವಾಗ ಶರಭನ ವೇಷದಲ್ಲಿ ಪರಮೇಶಿ ಬಂದಿರುವುದು ತಿಳಿದು ಉಸಿರು ಬಿಗಿ ಹಿಡಿದ. ಅವರೆಲ್ಲ ರಾತ್ರಿ ಊಟ ಮಾಡುವಾಗ ಕನಕಳಿಗೆ ಬಸವನು ವಿಷಯ ತಿಳಿಸಿದ ಕಿಟಕಿ ಮೂಲಕ ನೋಡಿ ಪರಮೇಶಿಯನ್ನು ಗುರುತಿಸಿ ಆನಂದಪರವಶಳಾದಳು. ಮಧ್ಯದಾರಿಯಲ್ಲಿ ದಶಮಾಪುರದ ಇಪ್ಪತ್ತು ಕಟ್ಟುಮಸ್ತು ಆಳುಗಳು ಈ ವಿಷಯದಲ್ಲಿ ಸಕಲ ಸಹಾಯ ಮಾಡುವುದಾಗಿ ಪರಮೇಶಿಗೆ ಮಾತುಕೊಟ್ಟಿದ್ದಲ್ಲದೆ ಅವನನ್ನೂ ಮಾರುವೇಷದಲ್ಲಿ ಕರೆತಂದಿದ್ದರಿಂದ ಬಸವನ ಕೆಲಸ ಸುಗಮವಾಯಿತು. ಮದುವೆ ಕೆಲಸಗಳಲ್ಲಿ ಮುಳುಗಿದ್ದ ಸುಪ್ರಸಿದ್ದ ಬೇಟೆಗಾರ ಬೇಡರಿಗೂ ತಪಶೀಲು ನಡೆಸಲು ಪುರುಸೊತ್ತಿರದಿದ್ದುದರಿಂದ ಬಂಡಿಗಳಿಗೆ ಮೇವು ತುಂಬುವ ಕಾರ್ಯ ದಶಮಿಯ ಚಂದ್ರನ ಮಂದ ಬೆಳಕಿನಲ್ಲಿ ಸಾಂಗೋಪಾಂಗವಾಗಿ ನೆರವೇರಿತು. ಗೋಣಿ ಚೀಲದಲ್ಲಿ ಕನಕಳನ್ನು ಹುದುಗಿಸಿ ಶರಭನ ಬಂಡಿ ಮೇವಿನೊಳಗೆ ಅಡಗಿಸಿಡುವಲ್ಲಿ ಯಶಸ್ವಿಯಾದ. ಬಂಡಿಗಳು ದಡಕೂ ಬಡಕೂ ಸದ್ದು ಮಾಡುತ್ತ ದಶಮಾಪುರದ ಕಡೆ ಮುಖ ಮಾಡಿದವು. +ಊರುದಾಟುವವರೆಗೆ ಹಿಂಬಾಲಿಸಿದ ಬಸವ ಅರಿಶಿಣದಿಂದ ಒದ್ದೆಯಾಗಿದ್ದ ಮೈಯ ಪರಮೇಶಿಯ ಹಣೆಯನ್ನು ಚುಂಬಿಸಿ ತಾನು ಸುಂಕಲಿಯನ್ನು ಪ್ರೀತಿಸುತ್ತಿರುವುದಾಗಿಯೂ ಆದ್ದರಿಂದ ಆಕೆಯನ್ನು ಮುಂಗೋಳಿ ಕೂಗುವುದರೊಳಗೆ ಈ ಊರಿನಿಂದ ಬಹುದೂರ ಕರೆದೊಯ್ಯುವುದಾಗಿಯೂ ಹೇಳಿ ಬೀಳ್ಕೊಟ್ಟನು. ಬಸವನು ಲಗುಬಗೆಯಿಂದ ಸುಂಕಲಿಯ ಮನೆ ಕಡೆ ಕಾಲು ಹಾಕಲು ಬಂಡಿಗಳು ವೇಗವಾಗಿ ಹಗರಿಹಳ್ಳಿ ದಾಟಿ ನಿರ್ವಾಣಸ್ವಾಮಿ ಮಠದ ದಿಬ್ಬ ಏರಿದಾಗ ದೂರದಲ್ಲೆಲ್ಲೋ ಮುಂಗೋಳಿ ಕೂಗಿದ ಸದ್ದು ಕೇಳಿಸಿತು. +ಅಲ್ಲಿ ಕಾಯುತ್ತ ಕೂತಿದ್ದ ಶರಭನಿಗೆ ಬಂಡಿ ಒಪ್ಪಿಸಿ ಅದರಿಂದ ಗೋಣಿ ಮೂಟೆ ಇಳಿಸಿಕೊಂಡ. ಜೋಡಿಗೆ ಶುಭ ಹಾರೈಸಿದರು ಅವರೆಲ್ಲರು. ಹೊತ್ತು ಹುಟ್ಟುವುದರೊಳಗಾಗಿ ಈ ಕಾಡನ್ನು ದಾಟಿ ಬಹುದೂರ ಹೊರಟುಹೋಗದಿದ್ದಲ್ಲಿ ಜಾಗಟಗೆರೆ ಬೇಡರ ಬಾಣಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಶರಭ ಮಠದ ಪಕ್ಕದಲ್ಲಿದ್ದ ಕಿರಿದಾದ ಹಾದಿತೋರಿಸಿದ. ಅವರೆಲ್ಲರ ಕಡೆ ಕೃತಜ್ಞತಾ ದೃಷ್ಟಿಯಿಂದ ನೋಡಿದ ಆ ಚಕೋರಿ ಪಕ್ಷಿಗಳ ಜೋಡಿ ಕಾಡಿನಲ್ಲಿಳಿದು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು. +ಎರಡು ರಾತ್ರಿ ಮೂರು ಹಗಲು ಸತತ ನಡೆದ ಬಿದಿರು ಮೆಳೆಗಳಿಂದಾವೃತವಾಗಿದ್ದ ವಿಷ್ಣುಸಮುದ್ರ ತಲುಪಿದರು. ಕಲ್ಲು ಮುಳ್ಳು ತುಳಿದ ಪರಿಣಾಮವಾಗಿ ಕನಕಳ ಬಂಗಾರದ ಪಾದಗಳ ತುಂಬ ಗಾಯಗಳಾಗಿದ್ದವು. ಊರ ಮೂಲೆಯಲ್ಲಿದ್ದ ಛತ್ರದಲ್ಲಿ ಆಕೆಯ ಕಾಲುಗಳಿಗೆ ಶುಶ್ರೂಷೆ ಮಾಡಿ ದೋತರದ ಚುಂಗಿನಿಂದ ಕಟ್ಟಿದ. ಅದೇ ದೋತರದ ಮತ್ತೊಂದು ಮೂಲೆಯಲ್ಲಿದ್ದ ಕೆಲ ರೂಪಾಯಿಗಳ ಪೈಕಿ ಒಂದನ್ನು ಮುರಿಸಿ ಊಟ ತಂದ. ಹಸಿದು ಕಂಗಾಲಾಗಿದ್ದ ಕನಕ ಗಬಗಬ ಊಟ ಮಾಡುವಾಗ ಪರಮೇಶಿಯ ಎದೆ ಮೇಲೆ ತಲೆ ಇರಿಸಿ ಬಿಕ್ಕಿ ಬಿಕ್ಕಿ ಅತ್ತಳು. ಸಮಾಧಾನಪಡಿಸಿದ. ಎದೆಮೇಲೆ ತಲೆ ಇಟ್ಟು ನಿದ್ದೆ ಹೋದ ಆಕೆಯ ಮುಖವನ್ನು ನೇವರಿಸಿದ. ಆಕೆಯ ಕಣ್ಣೀರಿನಿಂದ ಒದ್ದೆಯಾಗಿದ್ದ ಎದೆಯ ಕೂದಲ ನಡುವೆ ಮುದದ ಚಳಕು. ಹವಳದಂತೆ ಕೆಂಪಗಿದ್ದ ತುಟಿಗಳನ್ನು ಬೆರಳಿನಿಂದ ನೇವರಿಸಿದ. ಹಾಗೆ ಕನ್ನಡಿಯಂಥ ದುಂಡನೆಯ ಕದಪುಗಳನ್ನೂ ಸಹ. ನಿದ್ದೆಯ ನಡುವೆ ಬೆಚ್ಚಿ ಬೀಳುತ್ತ ಭಯದಿಂದ ಗಟ್ಟಿಯಾಗಿ ಅವುಚಿಕೊಳ್ಳುತ್ತಿದ್ದಳು… ಮಧ್ಯೆ ಮಧ್ಯೆ ಏನೇನನ್ನೋ ಕನವರಿಸುತ್ತಿದ್ದಳು ಅಸ್ಪಷ್ಟವಾಗಿ. +ತನಗಾಗಿ ಹೊನ್ನೂರಿನಲ್ಲಿ ಹೊನ್ನಜ ಹುಡುಕಾಟ ಶುರು ಮಾಡಿರಬಹುದು ಈಗಾಗಲೇ! ತಾನು ಮದುವೆ ಸಡಗರ ಒಂದಿಷ್ಟು ತೋರಿಸದಿದ್ದಾಗ ಹೊನ್ನಜ್ಜ ಬಲವಂತ ಮಾಡಿದ್ದು ನೆನಪಾಯಿತು. ತನ್ನನ್ನು ದೊಡ್ಡ ಮಣಿ ಮೇಲೆ ಬಲವಂತವಾಗಿ ಕೂಡ್ರಿಸಿ ಮುತ್ತೈದೆಯರು ಮೈಗೆ ಅರಿಷಿಣ ಲೇಪಿಸಿದ್ದು ನೆನಪಾಯಿತು. ಲಕ್ಷ್ಮೀ ಮದ್ವೆ ಆಗೋಕೆ ನಂಗಿಷ್ಟ ಇಲ್ಲ ಎಂದು ಅಜ್ಜಿಗೆ ತಾನು ಹೇಳಿದ್ದು ನೆನಪಾಯಿತು. ‘ಎಲೋ…. ನದಿ ಮ್ಯಾಲೆ ತೇಲಿ ಹೋಗ್ತಿದ್ದ ಬಿದ್ರು ಪುಟ್ಟಿಯಿಂದ ನಿನ್ ಬದುಕಿಸಿ ಸಾಕಿದ್ಕೆ ಸರ್‍ಯಾಗಿ ಮರ್‍ಯಾದೆ ಕೊಟ್ಟೆ” ಎಂದು ಮುದುಕಿ ಬಿಕ್ಕಿ ಬಿಕ್ಕಿ ಅತ್ತದ್ದು ನೆನಪಾಯಿತು. ಹಾಗಾದರೆ ತನ್ನನ್ನು ಹೆತ್ತವರು ಯಾರು ಎಂದು ಪೀಡಿಸಿದ್ದು ನೆನಪಾಯಿತು. ದಿಕ್ಕೂದೆಸೆ, ಜಾತಿಗೋತ್ರ ಒಂದೂ ಇಲ್ಲದೆ ತನ್ನನ್ನು ಸಾಕಿ ಬೆಳೆಸಿದ ಅಜ್ಜಿಗೆ ಕೃತಜ್ಞತೆ ಹೇಳಿ ತಪ್ಪಿಸಿಕೊಂಡು ಜಾಗಟಗೆರೆ ಕಡೆ ದೌಡಾಯ್ದದ್ದೆಲ್ಲ ನೆನಪು ಮಾಡಿಕೊಂಡು ನಿಟ್ಟುಸಿರು ಚೆಲ್ಲುತ್ತಿದ್ದ. ಪ್ರತಿ ನಿಟ್ಟುಸಿರಿನ ಏಟಿಗೂ ಕನಕಳ ಬಂಗಾರದ ನೊಸಲು ಮೇಲಿಳಿಬಿದ್ದಿದ್ದ ಮುಂಗುರುಳು ಕಂಪಿಸುತ್ತಿತ್ತು. +ಬಸವ, ಸುಂಕಲಿಯರು ಸಿಕ್ಕು ಬಾಯಿಬಿಟ್ಟಿರಲಿಕ್ಕಿಲ್ಲ. ತಮ್ಮಂತೆ ಅವರಿಬ್ಬರೂ ಓಡಿ ದುರ ಮರೆಯಾಗಿರಬಹುದೆ! ಎಂದು ಯೋಚಿಸಿದ. ಒಂದು ದಿಕ್ಕಿನಿಂದ ಜಾಗಟಗೆರೆ ಬೇಡರು ಹುಡುಕುತ್ತಿದ್ದರೆ ಇನ್ನೊಂದು ದಿಕ್ಕಿನಿಂದ ಹೊನ್ನಜ್ಜ ತನ್ನ ಬಂಟರನ್ನು ಛೂ ಬಿಟ್ಟಿರಬಹುದು…. ಈ ದೂರದ ವಿಷ್ಣುಸಮುದ್ರಕ್ಕೆ ದೋತರದ ತುದಿಯಲ್ಲಿದ್ದ ಬೆಳ್ಳಿ ರೂಪಾಯಿಗಳಿಲ್ಲ! ಯಾರೋ ಕದ್ದಿರುವರು!… ಮುಂದೇನು ಮಾಡುವುದೆಂದು ಯೋಚಿಸುತ್ತ ಸಡಿಲವಾಗಿದ್ದ ತನ್ನ ತುರುಬನ್ನು ಕಟ್ಟಿಕೊಂಡ. +ಬೆಳಗಿನ ಅರುಣೋದಯದ ಕುಂಕುಮದ ಬೆಳಕಿನಲ್ಲಿ ಮತ್ತಷ್ಟು ಬಲವಾಗಿ ತನ್ನನ್ನು ಅಪ್ಪಿಕೊಂಡಿದ್ದ ಕನಕಳ ಕಣ್ಣಾಲಿಗಳು ಕಂಪಿಸುತ್ತಿರುವುದನ್ನು ಗಮನಿಸಿದ. ಆಕೆಯ ಕಣ್ಣುಗಳ ಬಟ್ಟಲ ತುಂಬ ಬಣ್ಣ ಬಣ್ಣದ ಕನಸುಗಳು. ಒಂದೊಂದು ಕನಸಿಗೂ ಒಂದೊಂದು ಭಾವಗಳು…. +ಕಾಸು ಕಳೆದುಕೊಂಡಿದ್ದರೂ ಕಕ್ಕಾಬಿಕ್ಕಿಯಾಗದೆ ಸ್ಥಿತಪ್ರಜ್ಞನಂತೆ ಕಂಡು ಬಂದ ಕಂದ ಪದ್ಯ, ಸೀಸ ಪದ್ಯಗಳನ್ನು ಬರೆಯುತ್ತ ಕೂತಿದ್ದ ಕವಿಯೊಬ್ಬನಿಗೆ. ಅವನಿಗೂ ಬರೆದು ಸಾಕಾಗಿತ್ತು. ಏನು ಎತ್ತ ಅಂತ ಕೇಳಿದ್ದಕ್ಕೆ ಹೆಸರು ಊರು ಮರೆಮಾಚಿ ಹೇಳಿದ. ಆದರೆ ಕವಿಗೆ ಸುಳ್ಳು ಭಯ ಅರ್ಥವಾಯಿತು. ಅವರೀರ್ವರು ಯುವ ಪ್ರೇಮಿಗಳೆಂದೂಹಿಸಿ ಸಹಾನುಭೂತಿ ವ್ಯಕ್ತಪಡಿಸಿದ. ವಿಷ್ಣುಸಮುದ್ರದ ಜಮೀನ್ದಾರ ನಾರಾಯಣ ದೊರೆ ಹೇಗೆ ಮಾನವ ಪ್ರೇಮಿಯಾದ ಎಂಬ ಬಗ್ಗೆ ತಾನು ಯಕ್ಷಗಾನ ಬಯಲಾಟ ಬರೆಯುವುದೋ ಚಂಪೂ ಕಾವ್ಯ ಬರೆಯುವುದೋ ಎಂಬ ಗೊಂದಲದಲ್ಲಿ ಬಿದ್ದಿರುವುದಾಗಿ ಹೇಳುತ್ತಲೇ ಸದರೀ ಗ್ರಾಮ ಕುರಿತಂತೆ ಅನೇಕ ಸಂಗತಿಗಳನ್ನು ಹೊರಕಾಕಿದ. ಅದರ ತಳಬುಡ ಅರ್ಥವಾಗದೆ ಪರಮೇಶಿ ತನ್ನ ತಲೆಗೂದಲನ್ನು ಒಪ್ಪ ಓರಣವಾಗಿ ಕಟ್ಟಿಕೊಳ್ಳುವ ಕಾರ್ಯದಲ್ಲಿ ಮಗ್ನನಾಗಿದ್ದ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಹುಟ್ಟಿ ಬೆಳೆದ ಅವನಿಗೆ ವಿಷ್ಣುಸಮುದ್ರದ ಜನರ ರೀತಿ ನಡವಳಿಕೆ ವಿಚಿತ್ರವಾಗಿ ಕಂಡವು. ಅವರಾಡುತ್ತಿದ್ದ ಭಾಷೆ ಸಹ ಅವರಷ್ಟೆ ವಿಚಿತ್ರವಾಗಿ ಕಂಡಿತು. +ಅದೇ ಊರಲ್ಲಿ ನೆಲೆಸುವುದೋ ಮುಂದಿನ ಊರಿಗೆ ಪ್ರಯಾಣ ಬೆಳೆಸುವುದೋ? ಗಾಯ ಬೊಬ್ಬೆಗಳಿಂದ ಜರ್ಜರಿತವಾಗಿರುವ ಕನಕಳ ಬಂಗಾರದ ಪಾದಗಳು ನಡೆಯಲು ಅಸಮರ್ಥವಾಗಿರುವುದರಿಂದ ಒಂದೆರಡು ದಿನ ಅಲ್ಲೇ ಇರುವುದೆಂದು ನಿರ್ಧರಿಸಿದ. ಒಬ್ಬರ ಮುಖ ಒಬ್ಬರು ನೋಡುತ್ತ ಎಷ್ಟೊತ್ತು ಕೂಡ್ರುವುದು! ಎಷ್ಟೋ ಜನುಮಗಳಿಂದಲೂ ತಾವು ಸಂಗಾತಿಗಳೆಂಬಂತೆ; ತಮ್ಮಿಬ್ಬರೊಳಗೆ ನಿಗೂಢವಾಗಿ ಅದಾವುದೋ ಶಕ್ತಿ ಇದೆ ಎಂಬಂತೆ ತಮಗೆ ತಾವೇ ಬೆರಗಾಗಿದ್ದರು. ತಮ್ಮಿಬ್ಬರು ದೇಹಗಳು ಯಾಕೆ ಬಿಡಿ ಬಿಡಿಯಾಗಿವೆ ಎಂದೂ ಮೌನವಾಗಿ ಯೋಚಿಸಿ ನಿಸಿಡುಸುಯ್ದರು. ಕಣ್ಣುಗಳ ಮೂಲಕ, ಸ್ಪರ್ಶದ ಮೂಲಕ ಭಾಷೆಗೂ ಮೀರಿ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಿರುವುದರ ರೀತಿಗೆ. ಬೆರಗಾದಾಗೆಲ್ಲ ತಂತಮ್ಮ ಕಣ್ಣುಗಳನ್ನು ಇದ್ದಕ್ಕಿದ್ದಂತೆ ಕಣ್ಮುಚ್ಚಿ ದೂರದೂರ ತೇಲಿತೇಲಿ ಮಂಡಲಗಳನ್ನು ದಾಟಿ ಗಂಧರ್ವ ಲೋಕ ತಲುಪಿಬಿಡುವರು. +ಎಷ್ಟೊತ್ತು ಹಾಗೆ ಕೂಡ್ರುವುದು! ಹೊಸ ಊರು ನೋಡದೆ ಇರಲಾದೀತೆ! ಪರಮೇಶಿ ಕನಕಳನ್ನು ಕರೆದುಕೊಂಡು ಅಪರಿಚಿತ ಊರೊಳು ಹೊಕ್ಕನು. ಯಮಸಂಧಿಗಿಂತ ದೊಡ್ಡ ಊರೆನ್ನಿಸಿತದು. ಸಾಲು ಸಾಲು ಉಪ್ಪರಿಗೆ ಮನೆಗಳೂ, ಬೀದಿಗಳ ಮೇಲೆ ಓಡುತ್ತಿರುವ ಸಾರೋಟುಗಳು; ಬಂಡಿಗಳು, ಗಾಡಿಗಳು, ಕೆಲವನ್ನು ಎತ್ತುಗಳೂ, ಕೆಲವನ್ನು ಕುದುರೆಗಳೂ, ಕೆಲವನ್ನು ಬಲಿಷ್ಠ ಟಗರುಗಳೂ ಎಳೆಯುತ್ತ ವೇಗವಾಗಿ ಸಾಗುತ್ತಿರುವುದನ್ನು ಪ್ರೇಮಿಗಳೀರ್ವರು ಕುತೂಹಲದಿಂದ ನೋಡಿದರು. ಬಯಲಲ್ಲಿ ಗಗನದ ತುಂಬ ಗಾಳಿಪಟಗಳನ್ನು ಹಾರಿಸಿ ಅವುಗಳೊಂದಿಗೆ ಆಟ ಆಡುತ್ತಿದ್ದ ಹುಡುಗರನ್ನು ಸಂತೋಷ ತುಂಬಿದ ಮುಖದಿಂದ ನೋಡುತ್ತಿದ್ದ ಹುಡುಗಿಯರು ಬಹಳ ಮುದ್ದಾಗಿ ಕಂಡರು ಅವರಿಗೆ. ಇನ್ನು ಮುಂದೆ ಹೋಗಲು ಪುಟ್ಟ ಉದ್ಯಾನವನ ಬಂದಿತು. ಬೀದಿ ಪಕ್ಕದಲ್ಲಿ ಸಿಹಿ ತಿಂಡಿ ಮಾರುತ್ತಿದ್ದರು. ತಿನ್ನುವ ಆಸೆಯಾಯಿತು ಕನಕಳಿಗೆ. ಪರಮೇಶಿಯ ದೋತರದ ಗಂಟಿನಲ್ಲಿದ್ದ ಬೆಳ್ಳಿ ರೂಪಯಿಗಳು ಕಳನವಾದರೇನಂತೆ; ಲಂಗ ಮತ್ತು ದಾವಣಿಯ ಬಿಗಿಗೆಕಟ್ಟಿದ್ದ ಎರಡು ಬೆಳ್ಳಿ ರೂಪಾಯಿಗಳು ಕನಕಳ ಬಳಿ ಇದ್ದುವಲ್ಲ! ಅವುಗಳ ಪೈಕಿ ಒಂದನ್ನು ಮುರಿಸಿ ಇಷ್ಟವಾದ ತಿಂಡಿ ಕೊಂಡು ಉಪವನದ ಕಲ್ಲು ಚಪ್ಪಡಿ ಮೇಲೆ ತಿನ್ನುತ್ತಕೂತು ಯಮಸಂಧಿ ಜಾತ್ರೆಯನ್ನು ನೆನಪಿಗೆ ತಂದುಕೊಂಡು ಕೆಲವು ಮಾತುಗಳನ್ನು ಬಹಿರಂಗವಾಗಿಯೂ; ಕೆಲವು ಮಾತುಗಳನ್ನು ಕಿವಿಗಳಲ್ಲಿ ಪಿಸು ನುಡಿದು ಆಡಿ ಸಂತಸಿಸಿದರು. ಅಲ್ಲಿಂದ ಊರ ಹೊರ ವಲಯದಲ್ಲಿದ್ದ ಪನ್ನಗಶಯನನ ದೇವಾಲಯ ಹೊಕ್ಕರು. ದೇವರೇ ನಮಗೆ ಒಳ್ಳೆಯದು ಮಾಡಪ್ಪಾ…. ನಮ್ಮನ್ನು ಅಗಲಿಸಬೇಡಪ್ಪಾ…. ಸಾವು ಕೊಟ್ಟರೆ ನಮ್ಮಿಬ್ಬರಿಗೂ ಕೊಡು ಎಂದು ಅವೆರಡು ಯುವ ಹೃದಯಗಳು ಬೇಡಿಕೊಂಡವು. ಸ್ಥಳೀಯ ಪ್ರಸಿದ್ಧ ವಜ್ರ ವ್ಯಾಪಾರ ಶ್ರೀನಿವಾಸಶಟ್ಟರು ಮದುವೆಯಾದ ನಲವತ್ತು ವರ್ಷಕ್ಕೆ ಅಪರೂಪಕ್ಕೊಂದು ಗಂಡು ಮಗು ಜನಿಸಿದ್ದರಿಂದ ಗುಡಿಯಲ್ಲೇ ಅನ್ನ ಸಂತರ್ಪಣೆ ಏರ್ಪಾಟು ಮಾಡಿದ್ದರಷ್ಟೆ! ಹಸಿವೆ ಅಸಹಾಯಕತೆಯ ಮುಂದೆ ಸಂಕೋಚ ಓಡಿದ ಕಾರಣ ಅವರಿಬ್ಬರು ಅಲ್ಲಿಯೇ ಅಂಜುತ್ತ ಅಳುಕುತ್ತ ಕವಳ ಕತ್ತರಿಸಿ ಹೊರಟರು. ದಾರಿಯಲ್ಲಿ ‘ಗುನ್ ಗುನಾರೇ ಗುನ್‌ಗುನಾ’ ಎಂದು ಹಾಡುತ್ತಾ ಬಣ್ಣದ ಮೇನೆ ಹೊರುವ ಒಬ್ಬ ಚಪ್ಪಾಳೆ ತಟ್ಟಿ ಪರಮೇಶಿಯ ಗಮನ ಸೆಳೆದು ಬರುವಂತೆ ಸೂಚಿಸಿದ. ಪರಮೇಶಿ ಏನು ಗ್ರಹಚಾರ ಕಾದಿದೆಯೋ ಎಂದು ಹೆದರುತ್ತಲೇ ಹೋದ. ಮೇನೆಯ ಪರದೆ ಸರಿಸಿ ಪರಮೇಶಿಯನ್ನು ಅಪಾದಮಸ್ತಕ ನಿಟ್ಟಿಸಿದಳೊಬ್ಬ ಅಪ್ರತಿಮ ಸುಂದರಿ. ಓಹ್… ನರ್ತಕಿ ಸುವರ್ಣ ಜನ ಅಲ್ಲಲ್ಲಿ ನಿಂತು ಆಸ್ವಾದಿಸಿದರು! ಜನರ ಭಯದಿಂದ ಮೇನೆ ಮತ್ತೆ ಮುಂದಕ್ಕೆ ಹೋಯಿತು. ಆದರೆ ಆಕೆಯ ಪರಿಚಾರಕನೊಬ್ಬ ಬೆಂಬತ್ತಿದ. ಅವನಿಂದ ತಪ್ಪಿಸಿಕೊಂಡು ಕನಕಳೊಂದಿಗೆ ಛತ್ರ ಸೇರುವ ಹೊತ್ತಿಗೆ ಸಾಕುಸಾಕಾಗಿ ಹೋಯಿತು. ಕನಕಳಿಗೂ ಅದೇ ಅನುಭವ. ಗಂಡಸರ ಇರಿವ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಪಟ್ಟಶ್ರಮ ಅಷ್ಟಿಷ್ಟಲ್ಲ. +ರಾತ್ರಿಯಂತೂ ಹೊಸ ಜನರಿಂದ ಗಿಜಿಬಿಜಿ ಗುಟ್ಟತೊಡಗಿತ್ತು. ಒಬ್ಬೊಬ್ಬರದು ಒಂದೊಂದು ತರದ ಮಾತುಕತೆ. ಮರುದಿನ ನೈಜಾಮು ದೇಶದಿಂದ ಕುಸ್ತಿ ಮಾಡಲು ಗ್ರಾಮಕ್ಕೆ ಆಗಮಿಸಲಿರುವ ಸರ್ದಾರ್‍ ವೆಂಕಾಜೆಟ್ಟಿಯ ಬಗೆಗೆ ಒತ್ತುಕೊಟ್ಟು ಎಲ್ಲರೂ ಮಾತಾಡುತ್ತಿದ್ದುದರ ಕಡೆಗೆ ಪರಮೇಶಿ ಕಿವಿ ತೆರೆದ. ಎಷ್ಟಿದ್ದರೂ ತಾನು ಹನುಮಜೆಟ್ಟಿಯ ಪ್ರಿಯಶಿಷ್ಯನಲ್ಲವೇ! ಹನುಮ ಜೆಟ್ಟಿಯ ಸಹಾಯವಿಲ್ಲದಿದ್ದರೆಲ್ಲಿ ತಾನು ಹೊನ್ನಿಗನಂತ ಹೊನ್ನಜ್ಜನ ಗೃಧ್ರ ಕಣ್ಣುಗಳಿಂದ ತಪ್ಪಿಸಿಕೊಂಡು ಬರುತ್ತಿದ್ದೇನೆನಿಸಿತು! ಹನುಮಜೆಟ್ಟಿಗೆ ಉದ್ದರಿ ಈ ದೇಶದಲ್ಲಿ ಯಾರಿದ್ದಾರು! ಪರಮೇಶಿ ನೀನು ಕಲ್ತಿರೋ ಕುಸ್ತಿಯಿಂದಲೇ ಜೀವನ ಮಾಡಬಹ್ದು… ಹೆದರಬೇಡ…. ಕನಕಳೊಂದಿಗೆ ಎಲ್ಲಾದ್ರೂ ಹೋಗಿ ಸುಖವಾಗಿರು…..” ಎಂದು ಅಪ್ಪಿಕೊಂಡು ಆಶೀರ್ವದಿಸಿ ಕಳಿಸದಿದ್ದರೆಲ್ಲಿ ತಾನು ಎಲ್ಲಾ ಕಂಟಕಗಳನ್ನು ದಾಟಿ ಇಲ್ಲಿವಯವರೆಗೂ ತಲುಪಲು ಸಾಧ್ಯವಾಗುತ್ತಿತ್ತು. +ವೆಂಕಾಜೆಟ್ಟಿಯ ಪುಟಿದ ಮಾಂಸಕಂಡಗಳನ್ನು ಒಬ್ಬ ಹಾಡಿ ಹೊಗಳಿದರೆ ಮತ್ತೊಬ್ಬ ಎದುರಾಳಿಯ ಶಕ್ತಿಯನ್ನು ಆಪೋಶನ ತೆಗೆದುಕೊಳ್ಳುವಂಥ ಅವನ ಕಣ್ಣುಗಳ ಬಗೆಗೆ ಹೇಳಿದನು…. ಇದನ್ನೆಲ್ಲ ಕೇಳಿದ ಪರಮೇಶಿಗೆ ತಾನು ಯಾಕೆ ನಾಳೆ ದಿನ ವೆಂಕಾಜೆಟ್ಟಿಯನ್ನು ನೋಡಬಾರದೆನಿಸಿತು. ಮರುದಿನ ಸಂಗಾತಿಯೊಂದಿಗೆ ಅಖಾಡದ ಕಡೆ ಹೊರಟ. ತಾನು ಆಡಿದ ಕುಸ್ತಿ ಬಗ್ಗೆ ದಾರಿಯುದ್ದಕ್ಕೂ ವರ್ಣಿಸಿದ. ಕುಸ್ತಿಯನ್ನು ನೋಡಿ ಅರಿಯದ ಕನಕ ಕುತೂಹಲದಿಂದ ಕೇಳುತ್ತಿದ್ದಳು. ಆಗಲೇ ಸೇರಿದ್ದ ಜನರ ನಡುವೆ ಜಾಗ ಮಾಡಿ, ಕನಕಳನ್ನು ಕೂಡ್ರಿಸಿದ. ಜಮೀನ್ದಾರ ನಾರಾಯಣ ದೊರೆಗಳು ಬಂದು ಉನ್ನತಾಸನದ ಮೇಲೆ ಕೂಡ್ರುತ್ತಲೇ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಸ್ವಲ್ಪ ಹೊತ್ತಿಗೆ ಅಜಾನುಬಾಹು ಒಬ್ಬ ಬಂದು ದೊರೆಗೆ ವಂದಿಸಿ, ತೊಡೆ ತಟ್ಟಿಸಿಂಹನಾದ ಮಾಡಿದ. ದೇಸದಿಂದ ದೇಸಕ್ಕೆ ಸಂಚರಿಸುತ್ತಾ ತಾನು ಗೆದ್ದಿರುವ ಬಿರುದು ಬಾವಲಿಗಳನ್ನು ಪ್ರದರ್ಶಿಸಿ, ಮತ್ತೊಮ್ಮೆ ತೊಡೆ ತಟ್ಟಿ ತನ್ನ ದೇಹದ ಮಾಂಸಖಂಡಗಳನ್ನು ಕುಣಿಸಿದ. ತನ್ನನ್ನು ಸೋಲಿಸಿದವರಿಗೆ ಈ ಬಿರುದು ಬಾವಲಿಗಳನ್ನು ನೀಡುವುದಾಗಿ ಆತ ಪ್ರಕಟಿಸುತ್ತಲೇ ಸದರಿ ಗ್ರಾಮದ ಜೆಟ್ಟಿಗಳಾದ ರುದ್ರ, ಕಾಳ, ಸಿದ್ದೋಜಿ, ಗಿರಿಯ ಮೊದಲಾದ ಹೇಮಾಹೇಮಿಗಳು ಅಖಾಡ ಪ್ರವೇಶಿಸಿದರು. ತಮ್ಮ ದೊರೆಗೂ ಗುರುವಿಗೂ ವಂದಿಸಿ ಅಖಾಡವನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವಾಗ ಅಖಂಡ ಜನಸ್ತೋಮ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿ ಪ್ರೋತ್ಸಾಹಿಸಿತು. ತಮ್ಮ ಪೈಲ್ವಾನರು ವೆಂಕಾಜೆಟ್ಟಿಯನ್ನು ಮುಗಿಸಿಬಿಡುತ್ತಾರೆಂದು ಗ್ರಾಮಸ್ಥರು ಊಹಿಸಿದ್ದು ಒಂದು ತಾಸು ಎಂಟು ಘಳಿಗೆಯಲ್ಲಿ ಸುಳ್ಳಾಯಿತು. ಅವರನ್ನೆಲ್ಲ ಕೇವಲ ಎರಡೇಪಟ್ಟು ಉಪಯೋಗಿಸಿ ಅವರವರ ಬೆನ್ನುಗಳಿಗೆ ಮಣ್ಣಿನ ರುಚಿ ತೋರಿಸಿದ ವೆಂಕಾಜೆಟ್ಟಿ. “ನನ್ನ ಸೋಲಿಸೋ ಗಂಡಸು ಈ ಊರಲ್ಲಿ ಇಲ್ವೇನ್ರೀ ದೊರೆಗಳೇ ಎಂದವನು ಸೊಕ್ಕಿ ನುಡಿದದ್ದು, ತಮ್ಮ ಮರ್ಮಾಘಾತಕ್ಕಿರಿಯಿತು ದೊರೆಗಳಿಗೆ. ತಲೆ ತಗ್ಗಿಸಿ ನಿಂತಿದ್ದ ಜನತೆ ಕಡೆ ನೋಡಿ ಕೈ ಕೈ ಹಿಚುಕಿಕೊಂಡರು. +ತಾನೊಂದು ಕೈಯಾಕೆ ನೋಡಬಾರದೆನಿಸಿತು ಪರಮೇಶಿಗೆ. ಕಾಡಿ ಬೇಡಿ ಕನಕಳಿಂದ ಅನುಮತಿ ಗಿಟ್ಟಿಸಿಕೊಂಡು ಅಖಾಡಕ್ಕೆ ಕುಪ್ಪಳಿಸಿದ. ತಮ್ಮ ಕಡೆ ವಂದಿಸಿ ಅಖಾಡದ ತುಂಬ ಪಾದರಸದಂತೆ ಹರಿದಾಡತೊಡಗಿದ. ಈ ಎಳೆಯನೆಲ್ಲಿ, ರಾಕ್ಷಸಾಕಾರದ ವೆಂಕಾಜೆಟ್ಟಿಯೆಲ್ಲಿ! ಎಂದು ಯೋಚಿಸಿದರು. ಜನ ಚಪ್ಪಾಳೆ ತಟ್ಟದೇ ನಿರಾಸಕ್ತಿ ಪ್ರಕಟಿಸಿತು. ಕನಕಳ ನೋಡಿದ. ಮುಗುಳ್ನಗೆ ಚೆಲ್ಲಿ ಉತ್ಸಾಹ ತುಂಬುತ್ತಿರುವ ಚಂದನೆಯಮೊಗ! ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ಕಂಗೊಳಿಸಿದ. ಹಣಾಹಣಿ ಆರಂಭವಾಗುತ್ತಲೇ ಅದೇ ಜನ ಬೆರಗಾದರು. ‘ಛಿತ್’ ಮಾಡಲೆತ್ನಿಸುತ್ತಿದ್ದ ಪಟ್ಟುಗಳಿಗೆ, ವೆಂಕಾಜೆಟ್ಟಿಯು ಕಕ್ಕಾಬಿಕ್ಕಿಯಾದ ಆ ಪಟ್ಟುಗಳಿಗೆ ಸುಮಾರು ಎರಡು ಮೂರು ತಾಸು ನಡೆದ ಹಣಾಹಣಿಯಲ್ಲಿ ಯಾರೂ ಸೋಲಲೂ ಇಲ್ಲ, ಗೆಲ್ಲಲೂ ಇಲ್ಲ. ವೆಂಕಾಜೆಟ್ಟಿ ಎಳೆಯ ಪರಮೇಶಿಯನ್ನು ಹೆಗಲಮೇಲೆ ಹೊತ್ತುಕೊಂಡು “ದೊರೆಗಳೇ…. ನಿಮ್ಮೂರಿನ ಮರ್‍ಯಾದೆ ಉಳಿಸೋ ಹುಲಿಮರಿ ಇದೊಂದೇ ನೋಡ್ರಿ” ಎಂದು ಕುಣಿದಾಡಿದನಲ್ಲದೇ ಇರಾನ್ ದೇಶದ ಜೆಟ್ಟಿಯನ್ನು ಸೋಲಿಸಿದಾಗ ರಾಯಲಸೀಮೆಯ ಗಜಪತಿಗಳು ತನಗೆ ಬಹುಮಾನವಾಗಿ ನೀಡಿದ್ದ ಪದಕವನ್ನು ಅವನ ಕೊರಳಿಗೆ ಹಾಕಿದ. ಪರಮೇಶಿ ಗದ್ಗದಿತನಾಗಿ ವೆಂಕಾಜೆಟ್ಟಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಜನರ ಕಂಠಗಳು ಬಿಗಿದುಬಿಟ್ಟು ಕಣ್ಣಿಂದ ಎರಡು ಹನಿ ಉದುರಿಸಿದರು. ಆ ಪದಕವಿದ್ದ ಹಾರವನ್ನು ಕನಕಳ ಕೊರಳಿಗೆ ಹಾಕಿ ಛತ್ರಕ್ಕೆ ಕರೆದುಕೊಂಡು ಹೋದ. ಮರುಗಳಿಗೆಯಲ್ಲಿ ಜಮೀನ್ದಾರರ ವೃದ್ಧ ಕಾರಖೂನ ಶಂಕರಪ್ಪ ಬಂದು ಪರಮೇಶಿಯನ್ನು ಕನಕಳನ್ನು ದೊರೆ ಬಳಿಗೆ ಕರೆದೊಯ್ದರು. ಊಟ ಉಪಚಾರವಾದ ನಂತರ ಏನು, ಎತ್ತ ಅಂತ ಕೇಳಿದರು. ನಿಜ ಹೇಳುವುದೋ ಬೇಡವೋ ಎಂದು ಕನಕಳ ಮುಖ ನೋಡಿದ. ಶಂಕರಪ್ಪ “ಹೇಳಿ ಬಿಡು ಮಗಾ ಒಂದೂ ಮುಚ್ಚಿಟ್ಕೋಬ್ಯಾಡ” ಅವ್ರು ಹಾಲ್ನಲ್ಲಾದ್ರೂ ಹಾಕ್ಲಿ ನೀರ್‍ನಲ್ಲಾದ್ರೂ ಹಾಕ್ಲಿ….” ಎಂದು ಬೆನ್ನು ತಟ್ಟಿದ. ಪರಮೇಶಿ ನಿಟ್ಟುಸಿರೊಂದು ಬಿಟ್ಟು ತಮ್ಮ ಪ್ರೇಮ ಪ್ರಸಂಗವನ್ನು ಆಮೂಲಾಗ್ರ ವಿವರಿಸಿ, ಕಣ್ತುಂಬಿಕೊಂಡ. ಕನಕಳೂ ಅಷ್ಟೇ. ದೊರೆ ಬಂದು ಪರಮೇಶಿಯನ್ನು ಅಪ್ಪಿಕೊಂದು ಸಂತೈಸಿದರೆ, ಗೌಡ್ತಿ ನೀಲವ್ವ ಬಿಕ್ಕುತ್ತಿದ್ದ ಕನಕಳನ್ನು ತಬ್ಬಿಕೊಂಡು ಸಂತೈಸಿದಳು. ಕೂದಲು ಕೊಂಕದ ಹಾಗೆ ನೋಡಿಕೊಳ್ಳುವುದಾಗಿ ಮಾತು ನೀಡಿದ ದೊರೆ ಅವರಿಬ್ಬರನ್ನು ತಮ್ಮ ಬಳಿಯೇ ಕೆಲಸಕ್ಕಿಟ್ಟುಕೊಂಡರು. +-೬- +ವಿಷ್ಣುಸಮುದ್ರದ ಜಮೀನ್ದಾರರೆಂದರೆ ಸಾಮಾನ್ಯರೇನು! ಸುತ್ತ ಐವತ್ತು ಹಳ್ಳಿಗಳಲ್ಲಿ ಅವರದೇ ಆಸ್ತಿ! ನಾಲ್ಕು ಮುಕ್ಕಾಲೆಕರೆ ಕಲ್ಲಿನ ಮನೆಯೊಳಗೆ ಕಂಭಗಳೆಷ್ಟೋ ಅವರಿಗೇ ಗೊತ್ತಿಲ್ಲ. ಚಿನ್ನ ದೋಚಲು ಕಳ್ಳನೊಬ್ಬ ಮೂರು ತಿಂಗಳು ಮನೆಯೊಳಗೆ ನಿಗೂಢವಾಗಿ ಬಿಡಾರ ಹಾಕಿ ಕೊನೆಗೆ ಶರಣಾಗತನಾಗಿ ಸೇರೂವರೆ ಬೆಳ್ಳಿಕಡಗ ಬಹುಮಾನ ಪಡೆದಿರುವನಂತೆ. ಅಂತ ಮನೆಯೊಳಗೆ ಪರಮೇಶಿ ಮತ್ತು ಕನಕರ ಮದುವೆಯನ್ನು ದೊರೆಗಳು ತುಂಬ ವಿಜೃಂಭಣೆಯಿಂದ ನೆರವೇರಿಸಿದರು. ಕಾಣಿಕೆಯಾಗಿ ಐದುಕೂರಿಗೆ ಹೊಲವನ್ನೂ ಮೂರಂಕಣದ ಮನೆಯನ್ನೂ ನೀಡಿ ಪ್ರೀತಿ ಪ್ರಕಟಿಸಿದರು. ಹೊಸ ಮನೆಯೊಳಗೆ ಹೊಸಪಲ್ಲಂಗದ ಮೇಲೆ ಯುವ ದಂಪತಿಗಳು ಆನಂದದ ಪ್ರತಿಕ್ಷಣಗಳನ್ನು ಅದ್ಭುತವಾಗಿ ಅನುಭವಿಸಿದರು. ಅವರೀರ್ವರು ದಿನಕ್ಕೊಂದು ಚಂದದಲ್ಲಿ ಅರಳಿದರು. +ಈ ನಡುವೆ ವಿಷ್ಣುಸಮುದ್ರಕ್ಕೆ ಎರಡು ಮೂರು ಹರದಾರಿ ದೂರದಲ್ಲಿ ಕಾಡಾನೆಗಳ ಹಾವಳಿ ತಡೆಯಲು ಸರಕಾರ ಚಂದ್ರಕಾಂತ ಎಂಬ ಅಧಿಕಾರಿಯೊಬ್ಬನ್ನು ನೇಮಿಸಿತು. ಗೌಡತ್ತಿ ನೀಲವ್ವನ ದೊಡ್ಡಪ್ಪನ ಮಗನಾದ ಚಂದ್ರಕಾಂತ ಅಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಬಹುಜನಪ್ರಿಯನಾದ. ಅವಿವಾಹಿತನಾಗಿದ್ದರೂ ಪರನಾರಿ ಸಹೋದರನೆಂದು ಹೆಸರು ಪಡೆದ. ಕಾಡಾನೆಗಳನ್ನು ನಡುಗಿಸುವ ಬಲಿಷ್ಠ ಅಧಿಕಾರಿ ಕೆಳಗೆ ಕೆಲಸ ಮಾಡಲು ದೊರೆಯ ವಶೀಲಿಯಿಂದ ಪರಮೇಶಿ ನಿಯುಕ್ತನಾದ. ಕೈತುಂಬ ಸಂಬಳದ ಸರಕಾರಿ ನೌಕರಿ; ಗ್ರಾಮಕ್ಕೂ ಕಾಡಾನೆ ಪಳಗಿಸುವ ಕೇಂದ್ರಕ್ಕೂ ನಡುಗೆ ತಿರುಗಾಡಲು ಕೈಗೊಂದು ಜಾತಿ ಕುದುರೆ ಬೇರೆ. ಅಂದಮೇಲೆ ಕೇಳುವುದೇನಿದೆ! ಬೆಟ್ಟದ ತಪ್ಪಲು ಪ್ರದೇಶದಲ್ಲಿ ಹುಟ್ಟಿ ಬೆಳೆದು ಗೊತ್ತಿರುವ ಕನಕಳನ್ನು ಎದುರಿಗೆ ಕೂಡ್ರಿಸಿಕೊಂಡು ಪರಮೇಶಿ ಆನೆಯನ್ನು ಹೀಗೆ ಪಳಗಿಸಿದೆ; ಈ ಆನೆಯನ್ನು ಹಾಗೆ ಪಳಗಿಸಿದೆ ಎಂದು ರಾತ್ರೆಲ್ಲ ಹೇಳಿ ತಬ್ಬಿಕೊಂಡು ಮಲಗುವನು. ಮಲಗಿದಾಗ, ಕನಕಳ ಕನಸಿನಲ್ಲಿ ಆನೆಗಳೇ ಆನೆಗಳು! “ನನ್ನೂ ಆನೆಮ್ಯಾಲೆ ಕುಂಡ್ರಿಸಿ ತಿರುಗಾಡಿಸ್ತೀಯಾ” ಎಂದು ಗಂಡನನ್ನು ವಾರದಿನ ಮಾನ ಪೀಡಿಸಿದಳು. ಪರಮೇಶಿ ಅಧಿಕಾರಿ ಚಂದ್ರಕಾಂತರೆದುರು ತನ್ನ ಅಹವಾಲು ಇಟ್ಟ. ಅದಕ್ಕೇನಂತೆ ಹಾಗೇ ಆಗ್ಲಿ ಎಂದು ಒಪ್ಪಿಗೆ ನೀಡಿದ ಅಧಿಕಾರಿ ಆನೆಯನ್ನೂ ಗೊತ್ತು ಮಾಡಿ ಹೊಸದೊಂದು ಅಂಕುಶವನ್ನು ಕೈಗೆ ನೀಡಿ ಯಾವ ಕಾರಣಕ್ಕೂ ಆ ಪ್ರದೇಶದಿಂದಾಚೆ ದೂರ ಹೋದರೆ ಅಪಾಯವೆಂದು ಎಚ್ಚರಿಸಿದ. +ನಿರ್ದಿಷ್ಟ ದಿನದಂದು ಬೆಳಿಗ್ಗೆ ಸಾಲಂಕೃತಳಾದ ಕನಕಳನ್ನು ಕುದುರೆ ಮೇಲೆ ಕೂಡ್ರಿಸಿಕೊಂಡು ತನ್ನ ಕಾರ್ಯಕ್ಷೇತ್ರಕ್ಕೆ ಕರೆದೊಯ್ದ. ಆನೆಗಳ ನಡವಳಿಗೆ ಬಗ್ಗೆ ಸಂಶೋಧನೆ ಮಾಡಲು ಹಡಗಿನ ಮೂಲಕ ಬಂದಿದ್ದ ಕೆಂಪು ಮನುಷ್ಯನೊಂದಿಗೆ ಕಾಡೊಳಕ್ಕೆ ಹೋಗಿದ್ದ ಚಂದ್ರಕಾಂತ, ರಹುತ ಜೇಕಬ್ ಮತ್ತು ಉಮಾಪತಿ ಕಬ್ಬಿನ ಹೊರೆಗಳನ್ನು ತಿಂದು ನಾಶ ಮಾಡುತ್ತಿದ್ದ ಬಿಳಿ ಆನೆಯೊಂದನ್ನು ಕರೆತಂದರು. ಹತ್ತಿರಕ್ಕೆ ಇಂಗ್ಲೇಂಡಿನ ರಾಣಿ ವಿಕ್ಟೋರಿಯಾ ಮುಂದಿನೆರಡು ತಿಂಗಳಲ್ಲಿ ಈ ದೇಶಕ್ಕೆ ಭೆಟ್ಟಿ ನೀಡಿದಾಗ ಕಾಣಿಕೆಯಾಗಿ ನೀಡಬೇಕೆಂದಿರುವ ಆನೆ; ಎರಡು ಮೂರು ತಿಂಗಳಲ್ಲಿ ತಿಂಗಳ ಕಾಲ ಹಡಗಿನಲ್ಲಿ ಪ್ರಯಾಣ ಮಾಡಿ ಇಂಗ್ಲೆಂಡ್ ತಲುಪಲಿರುವ ಆನೆ; ಅಂಥ ಆನೆಯ ಮೇಲೆ ಪರಮೇಶಿ ದಂಪತಿಗಳು ಸವಾರಿ ಮಾಡುವುದನ್ನು ನೋಡಲು ಖೆಡ್ಡಾದ ಎಲ್ಲಾ ಕೆಲಸಗಾರರು ಸುತ್ತನೆರೆದು ಬೀಳ್ಕೊಟ್ಟರು. +ತೂಗುವ ತೊಟ್ಟಿಲ್ಲಿ ಸಾಗುತ್ತಿರುವ ಅನುಭವದಿಂದ ಮೊದಮೊದಲು ಹೆದರಿದ ಕನಕ ಒಂದಿಷ್ಟು ದೂರ ಪಯಣಿಸಿದ ಮೇಲೆ ಆನೆ ಸವಾರಿಯ ಆನಂದವನ್ನು ಸವಿಯ ತೊಡಗಿದಳು. ಪರಮೇಶಿಯ ಎಡಗೈ ಆಕೆಯ ಕಿಪ್ಪೊಟ್ಟೆಯನ್ನು ಬಳಸಿದ್ದರಿಂದ ಭಯಕ್ಕೆ ಕಾರಣವಿರಲಿಲ್ಲ. ‘ಅಪ್ಸರಾ’ ಎಂಬ ಹೆಸರಿನ ಯುವ ಆನೆ ಅಕ್ಕಪಕ್ಕ ಗಿಡ ಮರಗಳ ಕೊಂಬೆ ರೆಂಬೆ ಮುರಿದು ತಿನ್ನುತ್ತಾ ಮೆಲ್ಲ ಮೆಲ್ಲಗೆ ಹೆಜ್ಜೆ ಇಡುತ್ತ ಸಾಗಿತ್ತು ನಿರಾತಂಕವಾಗಿ. ಅದರ ಮೇಲೆ ಪರಸ್ಪರರನ್ನು ಒಂದೇ ದೇಹವೆಂಬಂತೆ ಬಳಸಿ ಕೂತಿದ್ದ ಯುವ ದಂಪತಿಗಳು ತಮ್ಮ ಪ್ರೇಮದ ಆಖ್ಯಾನಕ್ಕೆ ಪ್ರಕೃತಿಯ ರಮಣೀಯತೆಯನ್ನು ಸಾಮಗ್ರಿಯಾಗಿ ತೆಗೆದುಕೊಂಡರು. ನಂತರ ತಾವು ಬದುಕುತ್ತಿರುವ ಸ್ವರ್ಗ ಸಮಾನ ಪರಿಸರವನ್ನೂ ವ್ಯಕ್ತಿಗಳನ್ನೂ ಉದಾಹರಿಸಿಕೊಂಡು ಮಾತಾಡಿದರು. ನಂತರ ಹೊನ್ನೂರಿನ ಹೊನ್ನಜ್ಜನ ಕಡೆಯವರೂ; ಜಾಗಟಗೆರೆಯ ದುರುಗೋಜಿಯ ಕಾಳೋಜಿ ಕಡೆಯವರು ಈಗಾಗಲೇ ತಮ್ಮೀರ್ವರನ್ನು ಎಲ್ಲೆಲ್ಲಿ ಹುಡುಕಾಡಿರಬಹುದೆಂದು ಮಾತಾಡತೊಡಗಿದರು. ಕ್ರೌರ್ಯವೇ ಸಾಕಾರಗೊಂಡಂಥ ವ್ಯಕ್ತಿಗಳ ನಡುವೆ ತಾವಿಬ್ಬರೂ ಹುಟ್ಟಿರುವ ಬಗ್ಗೆ ಸೋಜಿಗಗೊಂಡರು. ಆ ಬೇಟೆನಾಯಿಗಳು ತಮ್ಮನ್ನು ಮುತ್ತಿದರೇನು ಮಾಡುವುದೆಂದು ಭಯಪಟ್ಟರು. ಅವರ ಭಯದ ಕಣ್ಣುಗಳಿಗೆ ಸುತ್ತಮುತ್ತಲ ಗಿಡಮರಗಳಲೆಲ್ಲಾ ತಮ್ಮನ್ನು ಬೆಂಬತ್ತಿರುವ ಬೇಟೆನಾಯಿಗಳು ಅವಿತಿರುವಂತಯೂ; ಹಕ್ಕಿಪಕ್ಕಿಗಳ ಕಂಠದೊಳಗೆ ಕರ್ಕಶ ಧ್ವನಿ ಅಡಗಿರುವಂತೆಯೂ ಭಾಸವಾಗಿ ಜಲಜಲ ಬೆವೆತರು ಒಂದುಕ್ಷಣ. ಮರುಕ್ಷಣದಲ್ಲಿ ಅವರು ವಾಸ್ತವಕ್ಕೆ ಮರಳದೆ ಇರಲಿಲ್ಲ. +ಬಿದಿರು ಮೆಳೆಗಳ ಸರಹದ್ದಿನಲ್ಲಿ ಮೆಲ್ಲಗೆ ಮದುಮಗಳಂತೆ ನಡೆಯುತ್ತಿದ್ದ ಅಪ್ಸರ ಪುಟ್ಟ ಜಲಪಾತದ ಮಗ್ಗುಲು ಜಪ್ಪಯ್ಯ ಅಂದರೂ ಚಲಿಸದೆ ನಿಂತುಬಿಟ್ಟಿತು. ಕೆಳಕ್ಕಿಳಿಯುತ್ತಲೆ ಅದು ಹಳ್ಳಕ್ಕಿಳಿದು ಜಲಕ್ರೀಡೆ ಆರಂಭಿಸಿತು. ಸೊಂಡಲಿಂದ ನೀರೆಳೆದುಕೊಂಡು ದಡದ ಮೇಲೆ ಮಂಕರಂತೆ ನಿಂತಿದ್ದ ಯುವದಂಪತಿಗಳ ಮೇಲೆ ಕಾರಂಜಿಯಂತೆ ಸುರಿಯತೊಡಗಿತು. ಅದರ ಮನೋ ಇಂಗಿತವನ್ನು ಅರ್ಥಮಾಡಿಕೊಂಡು ಅವರಿಬ್ಬರು ಉಡುಪಿನ ಹಂಗು ತೊರೆದು ನೀರಿಗಿಳಿದು ಉರುಳಾಡಿದರು. ಗಂಧರ್ವರಂತೆ…. ಅವರೀರ್ವರು ಹರಿವ ನೀರೊಳಗೆ ನಡೆಸುತ್ತಿದ್ದ ರಾಸಕ್ರೀಡೆಯಿಂದ ಉತ್ತೇಜಗೊಂಡು ಕೆಲವು ಪಕ್ಷಿಗಳೂ, ಕೆಲವು ಪ್ರಾಣಿಗಳೂ ತಾವೂ ನೀರಿಗಿಳಿದು ಆಟವಾಡುತ್ತ ರಾಸಲೀಲೆಗೆ ತೊಡಗಿದವು. ಹೊಟ್ಟಕಿಚ್ಚಿನ ಸೂರ್ಯ ಆಗಲೆ ಪಶ್ಚಿಮಕ್ಕಿಳಿಯಲಾರಂಭಿಸಿದ್ದಾಗಲೇ ಅಪ್ಸರೆ ದಂಡೆಗೆ ಹೋಗಿ ಕೆಲವು ಕಾಡುಹೂಗಳನ್ನು ಕಿತ್ತು ನೀರೊಳಗೆ ಒಬ್ಬರೊಳಗೊಬ್ಬರು ಕರಗಿದ್ದ ದಂಪತಿಗಳ ಮೇಲೆ ಎಸೆದು ಸಮಯ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಅವರು ದಡದಮೇಲಿದ್ದ ಉಡುಪಿನ ಹಂಗಿಗೆ ಮತ್ತೆ ಒಳಗಾಗಿ ಅಪ್ಸರೆ ಏರಿ ಖೆಡ್ಡಾ ಕೇಂದ್ರದ ಕಡೆ ಪಯಣಿಸಿದರು. +ಅಲ್ಲಿ ಆಗಲೇ ವಿದೇಶಿ ಮಿತ್ರನ್ನು ಕಳಿಸಿ ಬಂದಿದ್ದ ಚಂದ್ರಕಾಂತ ಗಾಬರಿಗೊಂಡು ಅಪ್ಸರೆಗಾಗಿ ಎದುರು ನೋಡುತ್ತಿದ್ದ ಕಾರಣ ಸರಿಯಾಗಿ ಪಳಗಿರದ ಯುವ ಆನೆ ಅದು. ಪುಟ್ಟ ಜೇನ್ನೊಣ ಕಡಿದರೆ ಹುಚ್ಚು ಹಿಡಿದಂತೆ ಓಡಿ ಕಾಡೊಳಗೆ ಮಾಯವಾಗಿಬಿಡುವ ಆನೆ ಅದು. ಪರಮೇಶಿ ದಂಪತಿಗಳನ್ನು ಕಾಡೊಳಗೆ ಎಲ್ಲಿ ಎಸೆಯಿತೋ! ಏನು ಅಪಾಯ ಮಾಡಿರುವುದೋ ಎಂದು ಕೆಲಸಗಾರರ ಮೇಲೆ ಸಿಡಿಮಿಡಿಗುಟ್ಟುತ್ತಲೇ ಹುಡುಕಲು ಹೋಗಬೇಕೆಂದು ಕುದುರೆ ಏರಿ ಒಂದಿಷ್ಟು ದೂರಕ್ರಮಿಸಿಸಿದಾಗ ದಂಪತಿಗಳೊಂದಿಗೆ ಅಪ್ಸರೆ ಕಾಬಾಳೆಗೊನೆಯನ್ನು ಬಾಯಲ್ಲಿ ಕಚ್ಚಿ ಜಮಡುತ್ತ ಎದುರಿಗೇ ಬಂತು. +ಸೊಂಟ ಬಳಸಿಕೊಂಡು ತನ್ನ ಹೆಂಡತಿಯನ್ನು ಕೆಳಕ್ಕಿಳಿಸಿದ ಪರಮೇಶಿ ಕನಕಳನ್ನು ತನ್ನ ಮೇಲಾಧಿಕಾರಿಗೆ ಪರಿಚಯಿಸಿದ. ಕನಕಳ ಸೌಂದರ್ಯ ಚಂದ್ರಕಾಂತನ ಕಣ್ಣು ಕುಕ್ಕದೆ ಇರಲಿಲ್ಲ. ಆ ಕ್ಷಣದಿಂದ ಅವನ ಭಾವನೆಗಳೆಲ್ಲ ಅದಲುಬದಲಾದವು. ಸಣ್ಣ ಪುಟ್ಟ ಹುಡುಕಿ ವಿಷ್ಣುಸಮುದ್ರಕ್ಕೆ ಹೋಗಿ ಕನಕಳನ್ನು ಬಲೆಗೆ ಕೆಡವಿಕೊಳ್ಳಲು ಬಗೆಬಗೆಯಾಗಿ ಪ್ರಯತ್ನಿಸತೊಡಗಿದ. ಆದರೆ ಸಫಲವಾಗಲಿಲ್ಲ. ಅದಕ್ಕಾಗಿ ಒಂದು ವ್ಯೂಹ ರಚಿಸಿದ. +ಕಾಗದ ಪತ್ರಗಳು ತುಂಬಿದ್ದ ಚೀಲ ಕೊಟ್ಟು ಈ ಕೂಡಲೆ ಹೊರಟ ಜಿಲ್ಲಾಧಿಕಾರಿಗಳ ಕಛೇರಿಗೆ ಕೊಟ್ಟು ಬರಬೇಕೆಂದು ಆಜ್ಞಾಪಿಸಿದ ಪರಮೇಶಿಗೆ ಉಸಿರಾಡಲಿಕ್ಕೂ ಪುರಸೊತ್ತು ಸಿಗಲಿಲ್ಲ. ನಿಗದಿಪಡಿಸಿದ್ದ ಮೋಟಾರುಗಾಡಿಯಲ್ಲಿ ಹೊರಟ. ಜಿಲ್ಲಾಧಿಕಾರಿಗಳ ಕಛೇರಿ ಇರುವುದು ಸುಮಾರು ದೂರದ ರತ್ನಗಿರಿಯಲ್ಲಿ. ಆಗಲೇ ಹತ್ತು ಹರದಾರಿ ದೂರ ಬಂದಿರಬಹುದು ಗಾಡಿ. ಯಾಕೋ ಅನುಮಾನ ಬಂದು ಗಾಡಿಯಿಂದ ಇಳಿಯಲು ಯತ್ನಿಸಿದ. ಡ್ರೈವರ್‍ ದಿನೇಶ್ ಮತ್ತು ರಾಹುತ ಜೇಕಬ್ ಉಗ್ರವಾಗಿ ತಡೆದಾಗ ತನ್ನ ಅನುಮಾನ ನಿಜವಾಯಿತು. ಜಾಗಟಗೆರೆ ಕರಿ ಹರಿದು ತಂದವನಿಗೆ; ವೆಂಕಾಜೆಟ್ಟಿಗೇ ಬೆವರಿಳಿಸಿದವನಿಗೆ ಅವರಿಬ್ಬರು ಯಾವ ಲೆಕ್ಕ! ಹಾಗೂ ಹೀಗೂ ಗಾಡಿ ಬಿಡುವುದನ್ನು ಕಲಿತಿದ್ದ ಅವನು ಅಪಘಾತವನ್ನು ಲೆಕ್ಕಿಸದೆ ಅಂತೂ ಇಂತೂ ಖೆಡ್ಡಾ ಪ್ರದೇಶ ತಲುಪಿದ. ಅದೂ ಮರಕ್ಕೆ ಡಿಕ್ಕಿ ಹೊಡದು. +ಪಾರಜ್ಜಿ ಓಡಿ ಬಂದು “ಆ ಮನಿಹಾಳ ನಿನ್‌ಹೆಂಡ್ತೀನ ಬಿಡಾರ್‍ದೊಳ್ಗೆ ಹೋರಿಸ್ಕೊಂಡೋಗವ್ನೆ ಓಡು” ಎಂದು ಹೇಳಿತು. ನಿನ್ನ ಗಂಡನನ್ನು ಆನೆ ತುಳಿದು ಕೊಂದಿದೆ ಎಂದು ಸುಳ್ಳು ಮಾಹಿತಿ ನೀಡಿ ಕನಕಳನ್ನು ಕರೆಸಿಕೊಂಡಿದ್ದ ಬಿಡಾರದೊಳಕ್ಕೆ ಮಿಂಚಿನಂತೆ ಹೋಗಿ ಚಾಕುವಿನಿಂದ ಪರದೆಯನ್ನು ಕೊಯ್ದು ಒಳನುಗ್ಗಿದ. ಉಗ್ರವಾಗಿ ಪ್ರತಿಭಟಿಸುತ್ತಿದ್ದ ಕನಕಳ ಮೇಲೆ ಅತ್ಯಾಚಾರಕ್ಕೆ ತೊಡಗಿದ್ದ ಅವನ ಕೊರಳ ಪಟ್ಟಿ ಹಿಡಿದೆತ್ತಿದ. ಸ್ವಲ್ಪಹೊತ್ತು ಅವರಿಬ್ಬರಿಗೂ ಮಾರಾಮಾರಿಯೇ ಆಯಿತು. ಪರಮೇಶಿಯ ಕೈಯಲ್ಲಿ ಚಂದ್ರಕಾಂತ ಎಲ್ಲಿ ಸತ್ತು ಬಿಡುವನೋ! ತಮ್ಮ ಪರಮೇಶಿ ಎಲ್ಲಿ ಮರಣದಂಡನೆಗೆ ತುತ್ತಾಗುವನೋ ಎಂದು ಹೆದರಿ ಕೆಲಸಗಾರರು ಪರಮೇಶಿಯ ಉಡಹಿಡಿತದಿಂದ ಚಂದ್ರಕಾಂತನನ್ನು ಬೇರ್ಪಸಿಡಿಸಿದರು. +ಜರ್ಝರಿತಳಾಗಿದ್ದ ಕನಕ ಗಂಡನ ಎದೆ ಮೇಲೆ ಕಣ್ಣೀರಿನ ಕೋಡಿ ಹರಿಸಿದಳು. ತಮಗೆ ಒಂಚೂರು ಅನ್ನ ನೆರಳು ನೀಡಿದವರ ಕರುಳಿಗೆ ಹತ್ತಿರದವನೆಂಬ ಒಂದೇ ಕಾರಣಕ್ಕಾಗಿ ಪರಮೇಶಿ ಅವನನ್ನು ಬದುಕಲುಬಿಟ್ಟಿದ್ದ. ಕಾಡಿನ ಅಧಿಕಾರಿ ಕನಕಳ ಮೇಲೆ ಅತ್ಯಾಚಾರವೆಸಗಲೆತ್ನಿಸಿದ ಸಂಗತಿ ಕಾಳ್ಗಿಚ್ಚಿನಂತೆ ಊರ್‍ತುಂಬ ಹಬ್ಬಿತು. ಜನ ತಂಡೋಪತಂಡವಾಗಿ ಬಂದು ಕನಕಳ ಯೋಗಕ್ಷೇಮ ವಿಚಾರಿಸಿಕೊಂಡು ಇಂಥ ನೀಚರಿರುವುದರಿಂದಲೇ ಮಳೆ ಬೆಳೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲವೆಂದು ಮಾತಾಡಿಕೊಳ್ಳುತ್ತ ಕೆಲವರು ಹೋದರೆ. ಇನ್ನೂ ಕೆಲವರು ಇವತ್ತು ಇವ್ನ ಹೆಂಡ್ತಿ, ನಾಳೆ ನಮ್ ಹೆಂಡ್ತಿ ಎಲ್ರು ಸೇರ್‍ಕಂಡು ಅವ್ನೀಗೆ ಸರ್‍ಯಾಗಿ ಬುದ್ಧಿಕಲ್ಸಿ ದೂರ ಓಡಿಸ್ಬೇಕು” ಎಂದಾಡಿಕೊಳ್ಳುತ್ತ ಆಗುಹೋಗುಗಳ ಮೇಲೆ ನಿಗಾ ಇಟ್ಟರು. +ಟಗರುಗಳ ಸಾರೋಟಿನಲ್ಲಿ ದೊರೆ ಮತ್ತು ಗೌಡ್ತಿ ಬಂದು ಕನಕಳಿಗೆ ಸಮಾಧಾನ ಹೇಳಿದರು. ತುರ್ತಾಗಿ ಪಂಚಾಯ್ತಿ ಸೇರಿಸಿ ಚಂದ್ರಕಾಂತನನ್ನು ಬಲವಂತದಿಂದ ಕರೆ ಕಳಿಸಿ ದೊರೆಯೇ ಛೀಮಾರಿ ಹಾಕಿದ. ದೈವಸ್ಥರ ಪರವಾಗಿ ನೂರೊಂದು ಬೆಳ್ಳಿ ರೂಪಾಯಿಗಳನ್ನು ದಂಡ ಹಾಕಿದ. ಆದರೆ ಚಂದ್ರಕಾಂತ ಒಂದಿಷ್ಟು ಪಶ್ಚಾತ್ತಾಪ ಪ್ರಕಟಿಸದೆ ಪಂಚಾಯ್ತಿ ತೀರ್ಮಾನವನ್ನು ಸಾರಾಸಗಟ ತಿರಸ್ಕರಿಸಿದ. “ನನಗವ್ಳು ಬೇಕೇಬೇಕು. ಅವ್ರೀಗೆ ರಕ್ಷಣೆ ಕೊಡೋಕೆ ನೀವೊಂದೇ ಅಲ್ಲ. ಆ ತ್ರಿಮೂರ್ತಿಗಳೇ ಈ ಭೂಮಿಗಿಳ್ದು ಬಂದ್ರೂ ಸಾಧ್ಯವಿಲ್ಲ” ಎಂದು ಗಟ್ಟಿಯಾಗಿ ಮಾತಾಡಿ ದುರ್ದಾನ ತೆಗೆದು ಕೊಂಡವನಂತೆ ಅಲ್ಲಿಂದ ಕದಲಿದ. ತಮಗೆಲ್ಲ ಅವಮಾನವಾಯ್ತೆಂದು ಪಂಚಾಯ್ತಿಯ ದೈವಸ್ಥರೆಲ್ಲರು ಕನಲಿದರಲ್ಲದೆ ಪರಮೇಶಿಗೂ ಕನಕಳಿಗೂ ತಕ್ಕ ರಕ್ಷಣೆ ನೀಡುವುದೆಂದು ತೀರ್ಮಾನಿಸಿದರು. +ಕಾಡಿನ ಕಡೆ ಬಂದರೆ ತುಪಾಕಿಯಿಮದ ಕೊಲ್ಲುವುದೆಂದು ಕಣ್ಣಿಟ್ಟ ಚಂದ್ರಕಾಂತ ಪರಮೇಶಿಯ ಮೇಲೆ. ಅವನು ಕನಕಳನ್ನು ಅಪಹರಿಸಲು ಹೂಡಿದ ಎರಡು ಮೂರು ವ್ಯೂಹಗಳು ವಿಫಲಗೊಂಡವು. ಇದರಿಂದ ಕೆರಳಿದ ಅವನು ಕೈಕಟ್ಟಿ ಕೂಡ್ರಲಿಲ್ಲ. ಆನೆಗಳನ್ನು ಬಿಟ್ಟು ವಿಷ್ಣುಸಮುದ್ರದ ಸುತ್ತಲಿನ ಹೊಲಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ತುಳಿಸಿ ನಾಶಮಾಡಿಸುವುದು. ಆನೆಗಳಿಗೆ ಕಳ್ಳಭಟ್ಟಿ ಕುಡಿಸಿ ಊರೊಳಕ್ಕೆ ಬಿಟ್ಟು ಸಂತಸಪಡುವುದು. ಹೀಗೆ ಹಲವು ಹನ್ನೊಂದು ಕಿರುಕುಳ ನೀಡಲಾರಂಭಿಸಿದ. ಇದರಿಂದ ಬೇಸತ್ತ ಊರ ಪ್ರಮುಖರು ಪಟ್ಟಣಕ್ಕೆ ಹೋಗಿ ಜಿಲ್ಲಾಧಿಕಾರಿಗೆ ದೂರು ಇತ್ತರೂ ಪ್ರಯೋಜನವಾಗಲಿಲ್ಲ. ಶಿಶುಪಾಲನನ್ನು ಸಮಯ ನೋಡಿ ಕೃಷ್ಣತಳಿಗೆಯಿಂದ ಕೊಂದಂತೆ ತಾವೇ ಅವನಿಗೊಂದು ಗತಿ ಕಾಣಿಸುವುದೆಂದು ನಿರ್ಧರಿಸಿ ಆ ಸಮಯಕ್ಕಾಗಿ ಕಾಯತೊಡಗಿದರು. +-೭- +ಮಾಘಮಾಸದ ಕೊರೆವ ಚಳಿ ನಿವಾರಣೆಗಾಗಿ ಸೂರ್ಯನೆಳೆಬಿಸಿಲೆಂದು ಕಾಯಿಸಲೆಂದು ಯುವ ದಂಪತಿಗಳು ಮನೆಮಾಳಿಗೆ ಏರಿದ್ದರಷ್ಟೆ. ಚಂದ್ರಕಾಂತನನ್ನು ಹೆಡಮುರಿಗೆ ಕಟ್ಟಿತಂದು ಊರ ಅಗಸೆ ಬಾಗಿಲಿಗೆ ಕಟ್ಟುವಷ್ಟು ತಾಕತ್ತು; ಸಿಟ್ಟು ಎರಡೂ ಇರುವ ತನಗೆ ಅವಕಾಶ ಕೊಡದ ದೈವಸ್ಥರನ್ನು ಕುರಿತು ಬೇಸರದಿಂದ ಮಾತಾಡುತ್ತಿದ್ದ ಪರಮೇಶಿಯ ಹರವಾದ ತೊಡೆಮೇಲೆ ತಲೆ ಇರಿಸಿ ತಮ್ಮ ಅರ್ಥವಾಗದ ಬದುಕನ್ನು ಕುರಿತು ಚಿಂತಿಸುತ್ತ ಮಂಕಾಗಿ ಕನಕ ಸಂದೇಶವನ್ನು ಹೊತ್ತೊಯ್ಯುತ್ತಿರುವಂತೆ ಮೆಲ್ಲಗೆ ಚಲಿಸುತ್ತಿದ್ದ ಕಿರುಮೇಘಗಳತ್ತ ದೃಷ್ಟಿ ನೆಟ್ಟಿದ್ದಳು. ಒಂದೊಂದು ಚಣಕ್ಕೆ ಒಂದೊಂದು ಆಕಾರ ಪಡೆಯುತ್ತಿರುವ ಮೇಘಗಳ ಪರಿಗೆ ಬೆರಗಾಗಿದ್ದಳು. ಇದ್ದಕ್ಕಿದ್ದಂತೆ ಬೆಚ್ಚಿ ಬೆವರುತ್ತಿದ್ದಳು. ಆಗ ಪರಮೇಶಿ ಅವಳ ಗಲ್ಲಗಳಿಗೆ ಹೂ ಚುಂಬನ ನೀಡಿ ಧೈರ್ಯ ತುಂಬುತ್ತಿದ್ದ. +‘ಪರಮೇಶಾ…. ನನ್ಗಿಲ್ಲಿರೋದ್ಕೆ ಬಯ ಆಗತೈತೆ…. ಎಲ್ಲಾದ್ರು ದೂರ ಹೊರಟೋಗೋಣೇನು’ ಗಂಡನ ಒಳತೊಡೆಯನ್ನು ಕಚ್ಚಿಬಿಕ್ಕಿದಳು. +“ಹೆತ್ತೋರ್‍ಗಿಂತ ಹೆಚ್ಚಾಗಿ ಕಾಣ್ತಿರೋ ಈ ಊರು ಬಿಟ್ಟು ಹೋದ್ರೆ ತಾಯಿ ಮೆಚ್ತಾಳೇನು, ಹುಚ್ಚಿ ಧೈರ್ಯವಾಗಿರು” ರೇಶಿಮೆಗಿಂತ ನುಣಪಾಗಿ ಸೂರ್ಯನೆಳೆಬಿಸಿಲೊಳಗೆ ಬೆಳಕಿನ ರೇಖೆಗಳಂತೆ ಫಳಫಳ ಹೊಳೆಯುತ್ತಿದ್ದ ತಲೆಯ ನೀಳ ಕೂದಲೊಳಗೆ ಬೆರಳಾಡಿಸಿ ಮುಡಿಯನ್ನು ಮುದ್ದಿಸುತ್ತ ಹೇಳಿದ ಪರಮೇಶಿ. +ಮತ್ತೆ ಸಮಾಧಾನದಿಂದ ಹಗುರಾದ ಮನಸ್ಸಿನೊಡನೆ ಮೋಡಗಳ ಕಡೆ ದೃಷ್ಟಿ ನೆಟ್ಟಳು. ಆ ಮಳೆತರದ ಮೋಡಗಳ ಕಡೆ ನೋಡಬೇಡ. ಚಣಕ್ಕೊಂದೊಂದು ರೂಪ ಧರಿಸಿ ಹೆದರಿಸುತ್ತವೆ ಅವು ಎಂದು ಅವನು ಆಕೆಯ ಬಟ್ಟಲುಗಣ್ಣುಗಳನ್ನು ಕಿರುನೆಲ್ಲಿ ಮರಕ್ಕಡರಿದ್ದ ಕೆಂಪು ಹೂವಿನ ಬಳ್ಳಿ ಕಡೆ ತಿರುಗಿಸಲೆತ್ನಿಸಿದ. ಆ ಬಳ್ಳಿಯ ಹೂಗಳು ಕೂಡ ಆ ಚಲುವೆ ತಮ್ಮತ್ತ ನೋಡಿ ತಮ್ಮನ್ನು ಈ ಕರುಳಬಂಧನದಿಂದ ಬಿಡಿಸಿ ತನ್ನ ಸುಂದರ ಮುಡಿಗಿರಿಸಿ ಪಾವನಗೊಳಿಸಬಾರದೇಕೆ ಎಂಬಂತೆ ಆಕರ್ಷಕವಾಗಿ ಬಳುಕುತ್ತಿದ್ದವು. ಅವುಗಳ ಇಂಗಿತ ಅರ್ಥ ಮಾಡಿಕೊಂಡವನಂತೆ ಪರಮೇಸಿ ಹೋಗಿ ಹೂವೊಂದನ್ನು ಕಿತ್ತುತಂದು ತನ್ನ ಸಂಗಾತಿಯ ಮುಡಿಯಲ್ಲಿರಿಸಿದ. ಆಕೆ ಅವನ ತುಟಿಯ ಮೇಲೆ ಬೆರಳಾಡಿಸಿ ಕ್ರಮೇಣ ಬಾಯಿ ಒಳಕ್ಕೆ ಸರಿಸಿ ನಂತರ ಚೀಪಿದಳು. ಮತ್ತೆ ಯಾಂತ್ರಿಕವಾಗಿ ಗಗನದತ್ತ ದೃಷ್ಟಿ ಹೊರಳಿಸಿದಳು…. ಭೂಮಿಗಿಂತ ಗಗನವೇ ಹೆಚ್ಚು ಜೀವಂತಿಕೆಯಿಂದ ಸ್ಪುರಿಸುತ್ತಿರುವುದೆನಿಸಿತು ಆಕೆಗೆ. +ಇದ್ದಕ್ಕಿದ್ದಂತೆ ಆಕೆ ಪರಮೇಶಿಯ ಗಮನವನ್ನು ಗಗನದಲ್ಲಿ ವೇಗವಾಗಿ ವರ್ತುಳಾಕಾರವಾಗಿ ತಿರುಗುತ್ತಿದ್ದ ಪಕ್ಷಿಗಳ ಜೋಡಿ ಕಡೆ ಸೆಳೆದಳು. ಹುಬ್ಬಿಗೆ ಕೈ ಹಚ್ಚಿ ನೋಡಿದ. ಅವು ಪಾರಿವಾಳಗಳೆಂದು ಗುರುತಿಸಿ ಕುಪ್ಪಳಿಸಿ ಎದ್ದು ನಿಂತ. ಅರೆ ಅವು ಅರ್ಜುನ ಮತ್ತವನ ಚಿತ್ರಾಂಗದೆ ಆಗಿರಬಾರದೇಕೆ! ಅರ್ಜುನಾ…. ಅರ್ಜುನಾ…. ಅರ್ಜುನಾ…. ಮೇಲಿಂದ ಮೇಲೆ ಅವನ ಕೂಗು ಗ್ರಾಮದ ಸಮಸ್ತ ಗೋಡೆಗಳಿಗೆ ಅಪ್ಪಳಿಸಿತು. ಮನೆಗಳಲ್ಲಿದ್ದವರೆಲ್ಲ ಹೊರಬಂದು ಸುತ್ತ ನೆರೆದು ತಮ್ಮ ಪರಮೇಶಿಗೇನಾದ್ರು ಹುಚ್ಚುಗಿಚ್ಚು ಹಿಡಿಯಿತೇ ಎಂಬಂತೆ ನೋಡಿದರು. +ತುಂಟ ಅರ್ಜುನ ಪರಮೇಶಿಯನ್ನು ತುಸು ಹೊತ್ತು ಗೋಳಾಡಿಸಿ ನಂತರ ಅದು ಸೀದ ಬಂದು ಅವನ ಹೆಗಲ ಮೇಲೆ ಕೂತರೆ ಚಿತ್ರಾಂಗದೆ ಸೀದ ಕನಕಳ ತುಂಬಿದೆದೆ ಮೇಲಿಳಿದು ತುಂಟಾಟ ಮಾಡಿ ತೊಡೆಗೆ ಜಾರಿತು. ಅವರಿಬ್ಬರು ಅವುಗಳನ್ನು ಚುಂಬಿಸಿ ಚುಂಬಿಸಿ ಕಣ್ಣೀರು ತಂದುಕೊಂಡರು ಉತ್ಕಂಠಿತರಾಗಿ ಮತ್ತೆ ಅರ್ಜುನ ಗೆಳೆಯನ ತೆಕ್ಕೆಯಿಂದ ಬಿಡಿಸಿಕೊಂಡು ಮೇಲೆ ಹಾರಿ ಮಾಯವಾಗಿ ಮರುಚಣದಲ್ಲಿ ಪಾರಿವಾಳಗಳ ದಂಡಿನೊಡನೆ ಮಾಳಿಗೆ ಮೇಲಿಳಿಯಿತು. ಎಲ್ಲ ಪಾರಿವಾಳಗಳು ಪ್ರೇಮಿಗಳೀರ್ವರನ್ನು ಮುತ್ತಿ ಗಲಿಬಿಲಿಗೊಳಿಸಿದವು. ಗುಕು ಗುಕು ಎಂದು ಸದ್ದು ಮಾಡುತ್ತ ಪಕ್ಷಿ ಭಾಷೆಯಲ್ಲಿ ಏನೇನೋ ಹೇಳಲೆತ್ನಿಸಿದಾಗ ಸಂಗೀತ ಕಛೇರಿ ನಡೆಯಲಿದೆ ಎಂಬಂತೆ ಗೋಚರಿಸಿತು ಕೆಳಗಿನವರಿಗೆ. ಜನ ಸಂತೋಷದಿಂದ ಹೋ ಎಂದು ಉದ್ಗರಿಸಿದರು. +“ಓಯ್ ಪರಮೇಶೀ… ಓಯ್ ಕನಕಮ್ಮೊ… ಇವ್ರೆಲ್ಲ ನಿಂತವರೂರಿನ ಕಡ್ಯೋರೇನು ಏನಾದ್ರು ಕರ್ಚಿಕಾಯ ಬುತ್ತಿ ಕಟ್ಕೊಂಡು ಬಂದಿದಾರೇನ್ರಮ್ಮೋ” ಗಂಡು ಹೆಣ್ಣು ಕೂಗಿ ನಗಾಡಿ ಮೆನಗೆ ಮರಳಿದರು. +ಕರ್ಚಿಕಾಯಿ ಬುತ್ತಿಗೂ ಮಿಗಿಲಾದ ಚೀಟಿಗಳು ಬಹುಪಾಲು ಪಾರಿವಾಳಗಳ ಕಾಲಿಗೆ ಇದ್ದವು. ನಂದು ಮೊದಲು…. ನಂದು ಮೊದಲು…. ಎಂದು ಮುನ್ನುಗ್ಗಿದ ಆ ಮೂಲ ಪಕ್ಷಿಗಳ ಕಾಲುಗಳಿಗೆ ಮೂಗನಂತೆ ನಟಿಸಿದ ಬಸವ ಕಟ್ಟಿದ್ದ ಚೀಟಿಗಳಿದ್ದವು. ಅವುಗಳನ್ನೆಲ್ಲ ಬಿಡಿಸಿಕೊಂಡ ಪರಮೇಶಿ ಅವುಗಳಲ್ಲಿದ್ದ ಕಾಗೆಕಾಲು ಗುಬ್ಬಿಕಾಲು ಅಕ್ಷರಗಳತ್ತ ಮಿಕಿಮಿಕಿ ನೋಡಿದನಷ್ಟೆ. ಅವುಗಳನ್ನೋದಿ ಅರ್ಥ ಬಿಡಿಸಿ ಹೇಳುವಂಥ ಮಹಾನುಭಾವನನ್ನು ಕರೆತರಲು ಓಣಿಯೊಳಗೆ ಹೋದ ಪರಮೇಶಿ. ಇತ್ತ ಕನಕ ಗಡಿಕೆಯಲ್ಲಿದ್ದ ಕಡಲೆ ಗೋದಿಕಾಳುಗಳನ್ನು ತಂದು ಚೆಲ್ಲಿ…. ಕುಡಿಯಲೆಂದು ಬಟ್ಟಲ ತುಂಬ ಸಿಹಿ ನೀರನ್ನಿರಿಸಿದಳು. ಕ್ಷಣಾರ್ಧದಲ್ಲಿ ಅವುಗಳನ್ನೆಲ್ಲ ಖಾಲಿ ಮಾಡಿದ ಅವು ಚಿಲಿಪಿಲಿಗುಟ್ಟಿದವು ಬಯಲು ತುಂಬ ಹೂವು ಚೆಲ್ಲಿದಂತೆ. +ಕೆಲ ಹೊತ್ತಿನಲ್ಲಿ ಎಳೆ ವಯಸ್ಸಿಗೇ ಮಹಾಕಾವ್ಯಗಳನ್ನು ನಾಲಿಗೆ ಮೇಲಿಟ್ಟಿಕೊಂಡಿದ್ದ ದಾಸರ ಹುಡುಗ ಕೃಷ್ಣನನ್ನು ಕರೆತಂದು ಚೀಟಿಗಳನ್ನು ಓದಿಸಿದ. ಒಂದೊಂದು ಚೀಟಿಯಲ್ಲಿ ಒಂದೊಂದು ಸಂಗತಿ. ಬಸವ ಬರೆದು ಕಟ್ಟಿರುವುದೆಂದು ಖಚಿತವಾಯಿತು. ಒಂದು ಚೀಟಿಯಲ್ಲಿ ಕಳೆದುಹೋದ ತಮ್ಮ ಮೊಮ್ಮಗಳೇ ಕನಕಳೆಂದು ಹೊನ್ನಜ್ಜನನ್ನು ಒಪ್ಪಿಸಿರುವುದಾಗಿ ಬರೆದಿದ್ದರೆ ಇನ್ನೊಂದು ಚೀಟಿಯಲ್ಲಿ ಜಾಗಟಗೆರೆಯ ಕನಕದುರ್ಗೆಯ ವಿಗ್ರಹ ನಾಪತ್ತೆಯಾಗಿರುವುದಾಗಿಯೂ ಅದರಿಂದ ದುರುಗೋಜಿ ಪಾತಾಳಕ್ಕಿಳಿದು ಹೋಗಿರುವನೆಂದೂ ಮತ್ತೊಂದು ಚೀಟಿಯಲ್ಲಿ ಕಾಳೋಜಿ ನಿಮ್ಮೀರ್ವರನ್ನು ಮುಗಿಸಲೆಂದು ಕಾಡು ಕಾಡು ಅಲೆಯುತ್ತಿರುವನೆಂದೂ ಎಚ್ಚರಿದಿಂದ ಇರಬೇಕೆಂದೂ ಮಗದೊಂದು ಚೀಟಿಯಲ್ಲಿ ನಿಂಗಜ್ಜಿ ಅನ್ನ ನೀರು ಬಿಟ್ಟು ಪರಮೇಶಿ ಪರಮೇಶಿ ಎಂದು ಕನವರಿಸುತ್ತಿರುವುದೆಂದೂ; ಇನ್ನೊಂದು ಚೀಟಿಯಲ್ಲಿ ನೀವಿರುವ ಯಾವತ್ತು ಸಂಗತಿಯನ್ನು ಕೂಡಲೇ ಪಾರಿವಾಳಗಳ ಕಾಲಿಗೆ ಕಟ್ಟಿ ಕಳಿಸಬೇಕೆಂದೂ ಬರೆಯಲಾಗಿತ್ತು. ತಡಮಾಡದೆ ಚೀಟಿಗಳನ್ನು ಕೃಷ್ಣನಿಂದ ಬರೆಸಿ ಪಾರಿವಾಳಗಳ ಕಾಲಿಗೆ ಕಟ್ಟಿದರು. ಚಿತ್ರಾಂಗದೆಯನ್ನು ಅರ್ಜುನ ಅಲ್ಲೆ ಇರಿಸಿತು. ಎಷ್ಟಾದರೂ ಎಲ್ಲ ಪಾರಿವಾಳಗಳಿಗೆ ಮುಖಂಡ ಅದು. ಪುರ್‍ರನೆ ಗಗನಕ್ಕೆ ಕುಪ್ಪಳಿಸಿದ ಅದನ್ನು ಎಲ್ಲ ಪಾರಿವಾಳಗಳು ಹಿಂಬಾಲಿಸಿದವು. ಪಶ್ಚಿಮ ದಿಕ್ಕಿನ ಕಡೆ ಗುರಿ ಇಟ್ಟು ವೇಗವಾಗಿ ಹಾರಿದ ಅವು ಚುಕ್ಕಿಯಾಗಿ ಕರಗಿಹೋದವು. ಚಿತ್ರಾಂಗದೆ ತನ್ನ ಕಾಲಲ್ಲಿ ಮಡಚಿಟ್ಟುಕೊಂಡಿದ್ದ ಚೀಟಿಯನ್ನು ಕೊನೆಗೆ ನೀಡಬೇಕೆ? ತುಂಟಿ, ಅದರಲ್ಲಿ ‘ನೀನು ಕನಕಳೊಂದಿಗೆ ಸುಖವಾಗಿರು. ನನ್ನ ಅಭ್ಯಂತರವಿಲ್ಲ. ನಾನು ಪಟ್ಟಣಕ್ಕೆ ಹೋಗುತ್ತಿದ್ದೇನೆ, ಇಂತಿ ನಿನ್ನ ಶ್ರೇಯೋಭಿಲಾಷಿ ಲಕ್ಷ್ಮೀ’ ಎಂದು ಸ್ವತಃ ಲಕ್ಷ್ಮೀಯೇ ಬರೆದ ಚೀಟಿ ಇತ್ತು. +ಸಮಾಜಕ್ಕೆ ಕೇಡು ಬಯಸುವವನೊಬ್ಬ ಬಂದು ಚಂದ್ರಕಾಂತನೊಂದಿಗೆ ಸೇರಿಕೊಂಡಿರುವನೆಂದೂ ಅವನೇ ಕಾಳೋಜಿ ಇರಬೇಕೆಂದೂ ಕೆಲವರು ದೊರೆಗಳಿಗೆ ಸುದ್ದಿ ಮುಟ್ಟಿಸಿದರು. ಆದ್ದರಿಂದ ದೊರೆಗಳು ಪರಮೇಶಿ ದಂಪತಿಗಳ ರಕ್ಷಣೆಗೆ ವಿಶೇಷ ಗಮನ ನೀಡಿದರು. ಅದೂ ಅಲ್ಲದೆ ರಾಜಿ ಮಾಡಿಸಲೆಂದು ಜಾಗಟಗೆರೆ ದುರುಗೋಜಿಗೂ, ಹೊನ್ನೂರಿನ ಹೊನ್ನಜ್ಜನಿಗೂ ಬರುವಂತೆ ಹೇಳಿಕಳಿಸಿದರು. +ಚಂದ್ರಕಾಂತ ಅಂದಾಜಿನಂತೆ ಯಕ್ಷಗಾನ ಬಯಲಾಟದ ದಿನ. ಛತ್ರದಲ್ಲಿ ಪರಮೇಶಿಯ ಬಾಯಿಯಿಂದ ಕತೆ ಕೇಳಿದ್ದ ಮತ್ತು ಹೇಳಿದ್ದ ಕವಿ ‘ಪ್ರೇಮವೇ ಸ್ವರ್ಗ’ ಎಂಬ ಕಥಾನಕವೋ ಎಂಬೊಂದು ಯಕ್ಷಗಾನವೇ ಅವತ್ತು ನಡೆಯುತ್ತಿದ್ದುದು ಪರಮೇಶಿ ಮತ್ತು ಕನಕರೇ ಅದರ ನಾಯಕ ನಾಯಿಕೆಯರು. ನಮ್ಮ ಜೀವನವೇ ಯಕ್ಷಗಾನವಾಗಿ ಅಭಿನಯಿಸಲ್ಪಡುತ್ತಿರುವುದೆಂದ ಮೇಲೆ ನೋಡದೆ ಇರಲಾದೀತೇನು! ನೋಡುವುದೆಂದು ನಿರ್ಧರಿಸಿದ ಅವರು ನೋಡಲು ಹೊರಟೇ ಬಿಟ್ಟರು. ಹಿಂದೆ ಮುಂದೆ ಹತ್ತಿಪ್ಪತ್ತು ಜನರ ಕಾವಲಿನ ನಡುವೆ! ವ್ಯೂಹದ ಪ್ರಕಾರ ಕಾಳೋಜಿಯ ಬಂಟರು ಮಾರುವೇಷದಲ್ಲಿ ಆಗಲೇ ರಂಗಮಂದಿರದ ಮುಂದೆ ಜಮಾಯಿಸಿರುವುದು ಯಾರಿಗೆ ತಾನೆ ಗೊತ್ತು! ಅಲ್ಲದೆ ಸುತ್ತಮುತ್ತಲ ಹಳ್ಳಿ ಜನರು ಬೇರೆ ತಂಡೋಪತಂಡವಾಗಿ ಜಮಾಯಿಸಿದ್ದರು. +ಆಟ ಪರಮೇಶಿ ಕರಿ ಹರಿಯುವುದರಿಂದ ಆರಂಭವಾಯಿತು. ಕನಕ ಪರಮೇಶಿಯ ಪ್ರೇಮಾಖ್ಯಾನ ನೋಡುವಾಗಂತೂ ಜನ ಕಣ್ಣೀರು ಕರೆದರು. ನಾರಾಯಣ ದೊರೆಯು ಪಾತ್ರವಂತೂ ಅದ್ಭುತವಾಗಿ ಆರಂಭವಾಯಿತು. ಅವರೇ ನೋಡು ಆ ಯುವ ದಂಪತಿಗಳು, ಪಿಯಾನು ನುಡಿಸುತ್ತಿರುವಾತನೇ ನೋಡು ಯಕ್ಷಗಾನ ರಚಿಸಿದ ಕವಿಕುಲತಿಲಕ. ಹೀಗೆ ಒಬ್ಬೊಬ್ಬರು ಒಂದೊಂದು ಮಾತಾಡುತ್ತ ತಲ್ಲೀನರಾಗಿರಲು ಪಾರಿವಾಳಗಳ ವೇಷ ತೊಟ್ಟಿದ್ದ ದಾಸರಯ್ಯನ ಶಾಲಾ ಬಾಲಕರು ರಂಗಪ್ರವೇಶ ಮಾಡಿ ಪ್ರೇಮಿಗಳಿಗೆ ಸಂದೇಶವನ್ನು ಬಿತ್ತರಿಸಬೇಕು ಅಷ್ಟರಲ್ಲಿ…. ಯಾವನೋ ಕ್ಷಣಾರ್ಧದಲ್ಲಿ ಭಯಂಕರ ಗೊಂದಲ ಸೃಷ್ಟಿಯಾಯಿತು. ಅದಕ್ಕೆ ಪೂರಕವಾಗಿ ಕವಿದ ಕತ್ತಲೆ ಬೇರೆ! ಕೆಲವು ಕುದುರೆಗಳ ಖುರಪುಟದ ಸದ್ದು ಕೇಳಿ ಮರೆಯಾಯಿತು. +ಆಮೇಲೆ ನೋಡುತ್ತಾರೆ ಪರಮೇಶಿ ಕನಕರು ಇಲ್ಲ. ಊರ ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ. ಉನ್ಮತ್ತ ಜನರ ಹಿಂಡು ಖೆಡ್ಡಾ ಕಾರ್ಯಕ್ಷೇತ್ರ ತಲುಪಿ ಅಲ್ಲೂ ಹುಡುಕಿತು. ಯಾರ ಸುಳಿವೂ ಇಲ್ಲ. ಚಂದ್ರಕಾಂತ ಕಾಳೋಜಿ ಇವರಿಬ್ಬರ ಕೃತ್ಯವೆಂದು ಎಲ್ಲರಿಗೂ ಅರ್ಥವಾಯಿತು. ಸ್ವಲ್ಪ ತಡವಾದರೆ ಯುವ ದಂಪತಿಗಳ ಪ್ರಾಣಕ್ಕೆ ಕುತ್ತು. ‘ಓಯ್ ಕನಕವ್ವ’ ಎಂದು ಗಟ್ಟಿಯಾಗಿ ಕೂಗಿದರು. ಅವೇ ಮಾತುಗಳನ್ನು ಕಾಡು ಮಾರ್ದನಿಸಿತು. ಜನ ಹಿಂಡು ಹಿಂಡಾಗಿ ಹತ್ತು ದಿಕ್ಕುಗಳಿಗೆ ಚದುರಿದರು. ನಾರಾಯಣದೊರೆ ಅಲ್ಲೇ ಕ್ಯಾಂಪಾಕಿಬಿಟ್ಟ. ಸ್ವಲ್ಪ ಹೊತ್ತಿಗೆ ಜಾಗಟಗೆರೆಯ ದುರುಗೋಜಿ ಮತ್ತು ಹೊನ್ನೂರಿನ ಹೊನ್ನಜ್ಜನ ದುಃಖಕ್ಕೆ ಮೇರೆಯೇ ಇರದಂತಾಗಿತ್ತು. ಆನಂತರ ಸುಂಕಲಿಯೊಡನೆ ಬಂದ ಬಸವ ಬಗಬಗೆಯಾಗಿ ಸಮಾಧಾನಪಡಿಸಿದರೂ ಸಾಧ್ಯವಾಗಲಿಲ್ಲ. ಹಿಂದೆಯೇ ಪಾರಿವಾಳಗಳ ದೊಡ್ಡದೊಂದು ಹಿಂಡೇ ಆಗಮಿಸಿ ಗಗನದ ತುಂಬ ಚೆಲ್ಲಾಪಿಲ್ಲಿಯಾಗಿ ವೇಗವಾಗಿ ಹಾರತೊಡಗಿದವು. +ಮಧ್ಯಾಹ್ನ ದಾಟಿದಾಗ ಬಸವ ಸುಂಕಲಿ ಪಾರಿವಾಳಗಳ ಸಂಜ್ಞೆ ಮೇರೆಗೆ ಕಾಡಿನ ನಡುವಿನ ಬಯಲಲ್ಲಿ ಏನೋ ಕೋಲಾಹಲ ನಡೆದಿರುವುದನ್ನು ಗಮನಿಸಿದ. ಜಾಗಟಗೆರೆ ಬೇಡರ ಪಡೆಯೊಂದಿಗೆ ಬಯಲ ಸುತ್ತ ಕೊರಕಲಲ್ಲಿ ಅವಿತುಕೊಂಡ ಸ್ವಲ್ಪ ಹೊತ್ತಿಗೆ ದುರುಗೋಜಿಯೂ ಬಂದ. ಒಂದು ಕಡೆ ಆನೆ ಕಾಲಿಗೆ ಸಿಕ್ಕದೆ ಉರುಳುತ್ತಿದ್ದ ಪರಮೇಸಿ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಲಾಗಿತ್ತು. ಬಾಯಿಗೆ ಬಟ್ಟೆ ತುರುಕಿದ್ದರಿಂದ ಅವನು ಕೂಗಲು ಸಾಧ್ಯವಿರಲಿಲ್ಲ. ಇನ್ನೊಂದು ಕಡೆ ಅಸಹಾಯಕತೆಯೇ ಮೈವೆತ್ತಂತೆ ನಿಂತಿದ್ದ ಕನಕಳ ಮೇಲೆ ಅತ್ಯಾಚಾರ ನಡೆಸಲು ನಾಮುಂದು ತಾಮುಂದು ಅಂತ ಪರಸ್ಪರ ಹೊಡೆದಾಡುತ್ತಿರುವ ಚಂದ್ರಕಾಂತ ಮತ್ತು ಕಾಳೋಜಿ. +ಹೆಂಡ ಕುಡಿದು ಉನ್ಮತ್ತವಾಗಿದ್ದ ಆನೆ ಮುಂದೆ ಪರಮೇಶಿಯನ್ನು ಹೆಡಮುರುಗೆ ಕಟ್ಟಿ ಉರುಳಿಬಿಟ್ಟಿದ್ದರು. ತುಳಿದು ಸಾಯಿಸಲೆಂದು ಆನೆಗೆ ಹಿಂದಿನಿಂದ ಅಂಕುಶದಿಂದ ಇರಿಯುತ್ತಿರುವ ಜೇಕಬ್…. ಆದರೆ ಪಾದರಸದಂಥ ಪರಮೇಶಿ ಆನೆಯ ಕಾಲಿಗೆ ಸಿಕ್ಕದೆ ಚೆಂಡಿನಂತೆ ಉರುಳುತ್ತಿದ್ದ. ಬೇವಿನ ಮರಕ್ಕೆ ಕಟ್ಟಲ್ಪಟ್ಟಿದ್ದಳು ಕನಕ. ಕಿರುಚದಂತೆ ಬಾಯಿಗೆ ಬಟ್ಟೆಯನ್ನೂ ಬಿಗಿದಿದ್ದರು. ಆಕೆ ತನಗೆ ಬೇಕೆಂದು ಚಂದ್ರಕಾಂತನೂ; ಆಕೆ ತನಗೆ ಬೇಕೆಂದು ಕಾಳೋಜಿಯೂ…. ಪರಸ್ಪರ ಜಗಳವಾಡುತ್ತಿದ್ದವರು ತಮ್ಮ ಸುತ್ತ ಬೆಟ್ಟದ ಕೋಡುಗಲ್ಲುಗಳ ಮೇಲೆ ಜನ ನೆರೆದಿರುವುದನ್ನು ಕಂಡಾಗ ಜಗಳ ನಿಲ್ಲಿಸಿ ಕೈಗೆ ತಲಾ ಒಂದೊಂದು ಆಯುಧ ತೆಗೆದುಕೊಂಡು ಸಜ್ಜಾದರು. ಅವರನ್ನು ತಾನು ಮೊದಲು ಬಲಿತೆಗೆದುಕೊಳ್ಳಬೇಕೆಂದು ಹೊನ್ನಜ್ಜ; ಅವೆರಡು ತನ್ನ ಬೇಟೆಗಳೆಂದು ದುರುಗೋಜಿ ಇಬ್ಬರೂ ಮುನ್ನುಗಿದರು. +ಕನಕಳತ್ತ ಓಡುತ್ತಿದ್ದ ಚಂದ್ರಕಾಂತನ ಕಡೆ ಅಪ್ಸರೆ ವೇಗವಾಗಿ ದಾವಿಸಿದ್ದ ಅವನನ್ನು ಸೊಂಡಲಿನಿಂದೆತ್ತಿ ಎಸೆದೇಟಿಗೆ ಅವನು ಬೆಟ್ಟದ ತುದಿಗೆ ಅಪ್ಪಳಿಸಿದನು…. ಅಪ್ಸರೆ ಹೆಂಡಕುಡಿದು, ಅಮಲಿನಲ್ಲಿದ್ದ ಆನೆ ಮೇಲೆ ಘೀಳಿಡುತ್ತ ಆಕ್ರಮಣ ಮಾಡಿತು. ಅದೇ ನೆವವೆಂದು ಓಡುತ್ತಿದ್ದ ಕಾಳೋಜಿಯನ್ನು ಆಗತಾನೆ ನಿಶೆ ಇಳಿದಿದ್ದ ಆನೆ ಸೊಂಡಲಿನಿಂದ ಗಟ್ಟಿಯಾಗಿ ಹಿಡಿದುಕೊಂಡು ಕ್ರುದ್ಧ ಜನರಿಗೊಪ್ಪಿಸಿತು. +ಬಸವ ಪರಮೇಶಿ ಮೈ ಬಿಗಿದಿದ್ದ ಕಟ್ಟುಗಳನ್ನು ಬಿಚ್ಚಿ ಅಪ್ಪಿಕೊಂಡು ಕನಕಳ ಪ್ರೀತಿಗಾಗಿ ಪರದಾಡುತ್ತಿರುವ ಎರಡು ಜೀವಗಳಾದ ದುರುಗೋಜಿ ಹೊನ್ನಜ್ಜರ ಕಡೆ ಮಿತ್ರನ ಗಮನ ಸೆಳೆದ. +“ಅಮ್ಮಾ ಕನಕಾ…. ನನ್ ಮಗಳಲ್ಲವ್ವ ನೀನು… ಆ ಹೊನ್ನಜ್ಜನ ಮೊಮ್ಮಗ್ಳು…. ನೀನು… ಹೋಗು ನಿಮ್ಮಜ್ಜನೊಂದಿಗೆ ಹೊರಟು ಹೋಗು… ನಾನು ಏನು ಅಲ್ಲ ನಿನ್ಗೆ….” ದುಃಖದ ಸೆಳೆವಿಗೆ ಸಿಕ್ಕು ಗದ್ಗದಿತನಾದ ದುರುಗೋಜಿಯನ್ನು ನೋಡಿ ಹೊನ್ನಜ್ಜನ ಕರುಳು ಕತ್ತರಿಸಿತು. ನೀರು ದುಮ್ಮಿಕ್ಕಿದವು. ಆದರೆ ಕನಕ ಮೊದಲು ಪರಮೇಶಿ ಕಡೆ ಓಡಿದಳು. ಅವನೂ ಎದ್ದೆನೋ ಬಿದ್ದೆನೋ ಅಂತ ಓಡಿ ಬಂದ ತನ್ನವಳ ಬಳಿಗೆ ಒಂದರೊಳಗಿನ್ನೊಂದೆರಕ ಹೊಯ್ದಂತೆ ಅವೆರಡು ದೇಹಗಳು ಒಂದಾಗಿ ನೀರ ಕೋಡಿ ಹರಿದವು. +ಆ ದೃಶ್ಯ ನೋಡುವಾಗ ದುರುಗೋಜಿ ಮತ್ತು ಹೊನ್ನಜ್ಜರ ದೇಹಗಳೊಳಗೆ ಸೇಡಿನ ಹೆಡೆ ನಿಷ್ಕ್ರಿಯಗೊಂಡು ಕರಗಿ ಮಾಯವಾಯಿತು. +ಜನ ಕಾಳೋಜಿಯನ್ನು ಹಿಗ್ಗಾ ಮುಗ್ಗಾ ಎಳೆದಾಡುತ್ತಿದ್ದರು…. ಮಿಠಾಯಿ ತುಂಡಿಗೆ ಹತ್ತಾರು ಮಕ್ಕಳು ಜಗಳ ಕಾದಂತೆ. +“ಇವ್ನೀಗೆ ಏನು ಶಿಕ್ಷೆ ಕೊಡೋದಂತ ದೊರೆಗಳೇ ತೀರ್ಮಾನಿಸಿ” ಲಚ್ಚನ್ನ ನುಡಿದದ್ದು ಸಮಂಜಸವೆನಿಸಿತು. +ಎದೆ ನೀವಿಸಿಕೊಳ್ಳುತ್ತ ಕೈಲಿ ಕೋವಿ ಹಿಡಿದು ಕೂತಿದ್ದ ದೊರೆಗಳು ಪರಮೇಶಿ, ಕನಕರನ್ನು ನೋಡಿದ್ದೆ ಎಳೆಮಗುವಿನಂತೆ ಓಡಿ ಹೋಗಿ ಅವರಿಬ್ಬರನ್ನು ಆಲಂಗಿಸಿಕೊಂಡರು. ಅವರೀರ್ವರ ಹೆಗಲ ಮೇಲೆ ಕೈ ಹಾಕಿ ದುರುಗೋಜಿ ಕಡೆಗೂ; ಹೊನ್ನಜ್ಜನ ಕಡೆಗೂ ನೋಡಿದರು ಅರ್ಥಪೂರ್ಣವಾಗಿ. +’ನೋಡಿದ್ರೇನಪ್ಪಾ ನಿಮ್ಮ ಸೇಡು ಸೆಡವಿನಿಂದಾಗಿ ಈ ಎಳೆ ಜೀವಗಳು ಎಷ್ಟೊಂದು ಅವಸ್ಥೆ ಅನುಭವಿಸಬೇಕಾಯ್ತು” ಹೋಗಿ ಅವರಿಬ್ಬರ ಭುಜ ಸ್ಪರ್ಶಿಸಿದರು. “ಕನಕಳನ್ನು ಪಾಲನೆ ಪೋಷಣೆ ಮಾಡಿ ಸಲಹಿದ ದುರುಗೋಜಿ ನಿನಗೆ ಮಗ್ನಾಗಬೇಕಲ್ವೆ ಹೊನ್ನಜ್ಜ” ಎಂದು ದೊರೆಗಳು ಮಾರ್ಮಿಕವಾಗಿ ನುಡಿದರು. ಇನ್ನು ಹೊನ್ನಜ್ಜಗೆ ದೂರ ಇರಲಾಗಲಿಲ್ಲ. ದುರುಗೋಜಿಯನ್ನು ಬರಸೆಳೆದು ಅಪ್ಪಿಕೊಂಡ. +ಕಾಳೋಜಿಯನ್ನು ಅಪಾದಮಸ್ತಕ ನೋಡಿದ ದೊರೆಗಳು “ಇವ್ನೀಗೆ ಏನು ಶಿಕ್ಷೆಕೊಡಬೇಕೂಂತ ವಿಷ್ಣುಸಮುದ್ರದ ದೈವಸ್ಥರೇ ತೀರ್ಮಾನಿಸ್ಲಿ” ಎಂದರು. +ವಿಷ್ಣುಸಮುದ್ರದ ಕೋಟೆಯ ನೆಲಮಾಳಿಗೆಯಲ್ಲಿ ಕಾಳೋಜಿಯನ್ನು ಇಡೀ ರಾತ್ರಿ ಬಂಧಿಸಿಡಲಾಯಿತು. ತಳವಾರ ಟಾಂಟಾಂ ಹಾಕಿದ. ಮಧ್ಯಾಹ್ನ ಪನ್ನಗಶಯನನ ದೇವಸ್ಥಾನದ ಮುಂದೆ ಪಂಚಾಯ್ತಿ ಸೇರಿತು. ಶಿಕ್ಷೆಯ ವಿವರ ತಿಳಿಯಲು ಸಾವಿರಾರು ಜನ ಉಸಿರು ಬಿಗಿ ಹಿಡಿದು ನೆರೆದರು. +ವಿಚಾರಣೆ ಆರಂಭವಾಯಿತು. ಕಾಳೋಜಿಯ ಅಪರಾಧಗಳನ್ನು ದೈವಸ್ಥರು ಶ್ರದ್ಧೆಯಿಂದ ಕೇಳಿದರು. ಆಗಲೇ ಕಾಳೋಜಿಯನ್ನು ತಂತಮ್ಮ ಕಣ್ಣುಗಳ ಕೆಂಪಿಗೆ ಆಹಾರ ಮಾಡಿಕೊಂಡಿದ್ದ ಜನರೂ ಉಸಿರು ಬಿಗಿ ಹಿಡಿದು ವಿಚಾರಣೆ ಆಲಿಸುತ್ತಿದ್ದರು. +ಅಪರಾಧಗಳ ಸರಮಾಲೆಯೇ ಕಾಳೋಜಿಯ ಕೊಪಳಿಗಿರುವುದು. ಏನು ಶಿಕ್ಷೆ ಕೊಡುವುದು? ದೈವಸ್ಥರು ಪರಸ್ಪರ ಮುಖನೋಡಿ ಗೊಣಗಿಕೊಂಡರಾದರೂ ಒಂದು ನಿರ್ಣಯಕ್ಕೆ ಬರಲಾಗಲಿಲ್ಲ. ಅವರೆಲ್ಲರೂ ಒಮ್ಮತದಿಂದ ದೊರೆಗಳೇ ಶಿಕ್ಷೆ ಕೊಡಬೇಕೆಂದು ವಿನಂತಿಸಿಕೊಂಡರು. +ಕೋವಿಯನ್ನು ಕರವಸ್ತ್ರದಿಂದ ಸ್ವಚ್ಫಗೊಳಿಸುತ್ತಿದ್ದ ದೊರೆಗಳು ಎದ್ದು ನಿಂತು ದೈವಕ್ಕೆ ಗೌರವಸೂಚಿಸಿ ಗಂಟಲು ಸರಿಪಡಿಸಿಕೊಂಡರು. ತಾವು ಕೊಡುವ ಶಿಕ್ಷೆಯನ್ನು ದೈವಸ್ಥರು ಅನುಮೋದಿಸುವ ಬಗ್ಗೆ ಖಚಿತಪಡಿಸಿಕೊಂಡು ಮಾತು ಆರಂಭಿಸಿದರು. +“…. ಇವನಿಗೆ ನಾನು ಕೊಡಬೇಕೆಂದಿರೋ ಶಿಕ್ಷೆ ಏನ್ರಪ್ಪಾ ಅಂದ್ರೆ!” ಕೋವಿಕಡೆ ದಿಟ್ಟಿಸಿದರು ಮೌನವಾಗಿ… ಸಭೆಯಲ್ಲಿ ಕೇಳುತ್ತಿದ್ದದು ಹೃದಯ ಬಡಿತ ಮಾತ್ರ. ಕೋವಿಯಿಂದ ಹೊಡೆದು ಸಾಯಿಸಬಹುದೆಂದು ಕೆಲವರು ಯೋಚಿಸಿದರೆ ಕೆಲವರು ಆನೆಕಾಲಿಗೆ ಕಟ್ಟಿ ತುಳಿಸಬಹುದೆಂದು ಯೋಚಿಸಿದರು. ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂದು ಇನ್ನು ಕೆಲವರು ಯೋಚಿಸಿದರೆ ಮತ್ತೂ ಕೆಲವರು ದೊರೆಗಳ ಮನೆ ನೆಲಮಾಳಿಗೆಯಲ್ಲಿ ರಾಮಿರೆಡ್ಡಿಯನ್ನು ಉರುಳು ಹಾಕಿ ಕೊಂದಂತೆ ಇವನಿಗೆ ಹಾಕಬಹುದೆಂದು ಯೋಚಿಸಿದರು. ತುಸು ಹೊತ್ತು ಗುಸುಗುಸು ಮರುಕ್ಷಣದಲ್ಲಿ ಮತ್ತೆ ನಿಶ್ಯಬ್ದ. +“ಚಂದ್ರಕಾಂತನಂಥ ಅಧಿಕಾರಿಗೆ ಗಜರಾಜನೆ ಮರಣದಂಡನೆ ಕೊಟ್ಟಿರೋದು ನಿಮ್ಗೆಲ್ಲ ಗೊತ್ತಿರೋ ಸಂಗತಿ” ದೊರೆಗಳು ಗಂಟಲು ಸರಿಪಡಿಸಿಕೊಂಡು ಮಾತು ಆರಂಭಿಸಿದರು “ಆದ್ರೆ ನಾನು ಈ ಕಾಳೋಜಿಗೆ ಹೊಲಮನೆ ಕೊಟ್ಟು ದುಡಿಯಲು ಹಚ್ತೀನಿ…. ಇದೇ ನಾನಿವನಿಗೆ ಕೊಡ್ತಿರೋ ಕಠಿಣ ಶಿಕ್ಷೆ”. ತೀರ್ಪು ಕೇಳಿದ ಜನರೆದೆ ಧಸಕ್ಕೆಂದಿತು. ನಾವು ಊಹಿಸಿರದ ಶಿಕ್ಷೆ ಇದು. ಅದನ್ನು ಕೇಳಿದ ಕೂಡಲೇ ಕಾಳೋಜಿ ಪಾತಾಳಕ್ಕಿಳಿದು ಹೋದ ನೆಲದ ಮೇಲೆ ಬಿದ್ದು ಎದೆ ಎದೆ ಬಡಿದುಕೊಂಡು ಅಳತೊಡಗಿದ. ದೊರೆಗಳ ಕಾಲು ಹಿಡಿದುಕೊಂಡು ಗದ್ಗದಿತನಾದ. +ಪರಮೇಶಿ ಓಡಿ ಬಂದು ಕಾಳೋಜಿಯನ್ನು ಆಲಂಗಿಸಿಕೊಂಡ. +ದುರುಗೋಜಿ, ಹೊನ್ನಜ್ಜ ತುಂಬಿದ ತಮ್ಮ ಕಣ್ಣುಗಳನ್ನು ಒರೆಸಿಕೊಂಡರು. +ಎರಡೂರಿನ ಎಲ್ಲರಿಗೂ ದೊರೆಗಳು ತಮ್ಮ ಮನೆಯಲ್ಲಿ ಎಂಟು ದಿನಗಳ ಕಾಲ ದಿನಕ್ಕೊಂದು ಬಗೆಬಗೆಯ ಊಟ ನೀಡಿ ಸಹಪಂಕ್ತಿ ಭೋಜನ ಮಾಡಿದರು. ಆ ಹೊತ್ತಿಗಾಗಲೇ ಕಳಚಿದ್ದ ಕೊಂಡಿಗಳು ಅಪರೂಪಕ್ಕೆ ಗಟ್ಟಿಯಾಗಿ ಬೆಸೆದಿದ್ದವು. +ಅತಿಥಿಗಳು ಹೊರಟು ನಿಂತರು. ತಂತಮ್ಮ ಮನೆ ಮಠ ನೆನಪು ಮಾಡಿಕೊಂಡು. ಅವರ ಒತ್ತಾಯಕ್ಕೆ ಮಣಿದು ದೊರೆಗಳು ಪರಮೇಶಿ ಕನಕರನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟರು. ಅಂದಿನಿಂದ ಆ ಅಲಕನಂದೆಯ ತೀರ ಪ್ರದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಪರಮೇಶಿ ಮತ್ತು ಕನಕಾರ ಪ್ರೇಮ – ವಿವಾಹ ಮನೆಮಾತಾಯಿತು. ಅವರು ಗ್ರಾಮಗಳ ಜಾನಪದರ ನಾಲಗೆ ಮೇಲೆ ವಿರಾಜಮಾನರಾದರು. ಕಥೆ, ಕಾವ್ಯಗಳಲ್ಲಿ ನಾಯಕ ನಾಯಕಿಯರಾದರು. ಅಪ್ಪೇನಹಳ್ಳಿ ತಿಮ್ಮಣ್ಣ ಭಟ್ಟರು ಪರಮೇಶಿ ಮತ್ತು ಕನಕರ ಪ್ರೇಮವನ್ನು ಆಧಾರವಾಗಿಟ್ಟುಕೊಂಡು ‘ಕನಕಾಂಗಿ ಕಲ್ಯಾಣ’ ಎಂಬ ಬಯಲಾಟವನ್ನು ರಚಿಸಿದರು. ಈ ಮೂಡಲಪಾಯ ಯಕ್ಷಗಾನ ಬಯಲಾಟವು ಜಾಗಟಗೆರೆ, ಯಮಸಂಧಿ, ಧರ್ಮಾಪುರವೇ ಮೊದಲಾದ ಛಪ್ಪನ್ನಾರು ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆಯಿತು. ಕ್ರಮೇಣ ‘ಕನಕಾಂಗಿ ಕಲ್ಯಾಣ’ ಇಡೀ ಅರ್ಧರಾಜ್ಯದಲ್ಲೆಲ್ಲ ಮನೆಮಾತಾಗಿರುವುದು. +****** +ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ +ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […] +ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ […] +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_772.txt b/Kannada Sahitya/article_772.txt new file mode 100644 index 0000000000000000000000000000000000000000..3387513cd93fe28e75a916b04f3bf979e8340b62 --- /dev/null +++ b/Kannada Sahitya/article_772.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? +ಇಲ್ಲವೆ? +ಅದೆಂಥವರು ನೀವು? +ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? +ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ ನೊಡಿ. ಖಂಡಿತವಾಗಿಯೂ ನೋಡಿ. +ನಾನು ನೋಡಿದ್ದೇನೆ. ಓಡುತ್ತಿದ್ದೇನೆ. ನೋಡಿ, ನೀವೂ ನೋಡಿ, ನೀವೂ ಓಡಿ. ಇಲ್ಲ ಬೇಕಿಲ್ಲ. ನನಗೆ ಗೊತ್ತು, ನೀವೂ ಓಡುತ್ತಿದ್ದೀರಿ, ನೋಡದೇ ಓಡುತ್ತಿದ್ದೀರಿ, ಐ ಮೀನ್ ಸಿನೇಮಾ ನೋಡದೇ ಓಡುತ್ತಿದ್ದೀರಿ. ನನ್ನ ಜೊತೆ, ಕೆಂಪು ಕೂದಲಿನ ಹುಡುಗಿ ಲೋಲಾಳ ಜೊತೆ. ಯಾರು ಈ ಲೋಲಾ? +ಮೊನ್ನೆ ಮೊನ್ನೆಯ ಮಾತು:ನಾನಿರುವ ಅಮೇರಿಕೆಯ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಸಿಸ್ಟೆಮ್ಸ್ ರಿಸರ್ಚ್ ಎನ್ನುವ ಲ್ಯಾಬೋರೆಟರಿ. ನನಗಾಗಿಯೇ ಮೀಸಲಾದ ಡೆಸ್ಕಿನೆದುರು ಕುಳಿತು, ಅಂತರ್ಜಾಲದಲ್ಲಿ ನನ್ನ ಪ್ರೀತಿಯ ಲೇಖಕನ `ಭವ’ ಕಾದಂಬರಿ ಒದುವುದರಲ್ಲಿ ಮಗ್ನನಾಗಿದ್ದೇನೆ. ಕಾದಂಬರಿಯ ಪಾತ್ರಗಳಾದ `ವಿಶ್ವನಾಥ ಶಾಸ್ತಿ’,`ದಿವಾಕರ’,`ನಾರಯಣ ತಂತ್ರಿ’ ಇವರೆಲ್ಲರ ಜೊತೆ ಅವರ `ಭವ’ದ ಸುಳಿಯಲ್ಲಿ ನಾನೂ ಇಳಿದುಹೋಗಿದ್ದೇನೆ. ಜಾವ ಬೀನ್ಸ್ ಕೆಫೆಯ ಜಾಪನೀಸ್ ಹುಡುಗಿಯಿಂದ ಪರಿಚಯದ ನಗೆ ನಕ್ಕು ತಂದ ಕಾಫೀ ಯಾವಾಗಲೋ ತಣ್ಣಗಾಗಿದೆ. `ಭವ’ದ ಸುಳಿಯನ್ನು ಮೀರಿದ ಸೀತಮ್ಮನ ಅಂತಃಕರಣ ಇನ್ನೇನು ನನ್ನ ಮನಸ್ಸು ಕಟ್ಟುವುದರಲ್ಲಿ ಇದೆ. ಅಷ್ಟರಲ್ಲೇ ನನಗೆ ಅತ್ಮೀಯನಾಗಿರುವ, ಸದಾ ಉತ್ಸಾಹದ ಚಿಲುಮೆಯಾಗಿರುವ ಪೆರು ಮೂಲದ ಸ್ನೇಹಿತ ತನ್ನ ಎಂಪಿ ತ್ರಿ ಪ್ಲೇಯರ್‌ನ ವಾಲ್ಯೂಮ್ ಏರಿಸಿ ನನ್ನನ್ನು ಎಚ್ಚರಗೊಳಿಸುತ್ತಾನೆ. ತಟ್ಟನೆ ಹೊರಳಿ ಅವನತ್ತ ನೋಡುತ್ತೇನೆ. ಬ್ರೆಝಿಲ್‌ನ ರಾಕ್‌ಬ್ಯಾಂಡ್ ಆದರೂ ಅಮೇರಿಕನ್, ಆಫ್ರಿಕನ್, ಏಶಿಯನ್ ಎಲ್ಲ ಸೌಂಡ್ಸ್ ಬಳಸುತ್ತಾರೆ, `ಇಟ್ಸ್ ಟೂ ಗುಡ್’ ಅನ್ನುತ್ತಾನೆ. ನಾನು ಅರ್ಧ ಆಸಕ್ತಿಯಲ್ಲಿ ಕೇಳುತ್ತೇನೆ. +ಇಪ್ಪೊತ್ತಂದನೇಯ ಶತಮಾನ, ಉರಿಯುವ ಬಾಣಲೆಯಲ್ಲಿ ಸಂಸ್ಕೃತಿಗಳ ಕಲಸುಮೇಲೋಗರ. ಜೆಟ್‌ಯುಗ. ಮಾಹಿತಿ ಸ್ಫೋಟ. +ಮತ್ತು ಓಡುತ್ತಿದ್ದಾಳೆ ಕೆಂಪು ಕೂದಲಿನ ಸಪೂರ ಹುಡುಗಿ ಲೋಲಾ! +ಸುಮಾರು ಹದಿನೇಳು-ಹದಿನೆಂಟು ವರ್ಷದ ಹಿಂದಿನ ಮಾತು. ಯಾರಿಗೂ ಲೋಲಾ-ಗೀಲಾ, ಯಾರೂ ಗೊತ್ತಿರಲಿಲ್ಲ ಅನ್ನಿ. (ದೆಹಲಿಯಲ್ಲಿ ಇಂದಿರಾ ಇದ್ದರು ಅಂತ ಕಾಣುತ್ತದೆ.) ಅದು ಧಾರವಾಡದ ತಕ್ಕಮಟ್ಟಿಗೆ ಸ್ಥಿತಿವಂತರಾದ, ಬಹುತೇಕ ಬ್ರಾಹ್ಮಣರೇ ವಾಸವಾಗಿರುವ ಮಾಳಮಡ್ಡಿಯ `ಕೋಳಿವಾಡ ಕೃಷ್ಟಕ್ಕನ’ ಮನೆ. ನಮ್ಮ ಮನೆ. +ಆಗೆಲ್ಲಾ ನಮ್ಮ ಮನೆ ತುಂಬಾ ಜನವಿರುತ್ತಿತ್ತು. ಮದುವೆ, ಮುಂಜಿ, ವಧು ಪರೀಕ್ಷೆ, ವರಪರೀಕ್ಷೆ, ಶ್ರಾವಣಿ(ಜನಿವಾರ ಹಾಕಿಕೊಳ್ಳುವದು), ನವರಾತ್ರಿ, ಶಿವರಾತ್ರಿಯಂಥ ಶುಭಕಾರ್ಯಗಳು, ಶ್ರಾದ್ಧ, ಪಕ್ಷ, ಅವರು ಇವರು ಹೋದರೆಂದು ನೀರು ಹಾಕಿಕೋಳ್ಳುವುದು, ಮತ್ತಿತರ ಅಪರಕರ್ಮಗಳು ಸದೋದಿತ ನಡೆದೇ ಇರುತ್ತಿದ್ದವು. (ಈಗಲೂ ನಡೆದಿವೆ, ಬೇರೆ ಗಾತ್ರ, ರೂಪಗಳಲ್ಲಿ.) `ಅಜ್ಜಿ’ಯ ಹಿರಿತನದಲ್ಲಿ ಎಲ್ಲವೂ ಆಗಬೇಕು. ತುಂಬಿದ ಮನೆಯನ್ನು ಏಕಸೂತ್ರದಲ್ಲಿ ಹಿಡಿದು ನಡೆಸಲು ಬೇಕಾದ ಆ ಗಟ್ಟಿತನ ಅವಳಲ್ಲಿತ್ತು. ಎಷ್ಟು ಸುಲಲಿತವಾಗಿ ದೇವರನಾಮ, ಹಸೆಗೆ ಕರೆಯುವ ಹಾಡು, ಉಡಿ ತುಂಬುವ ಹಾಡು, ಆರತಿ ಹಾಡು, ಶೋಭಾನದ ಹಾಡು, ಒಂದಾದ ಮೇಲೊಂದರಂತೆ ಹಾಡುತ್ತಿದ್ದಳೋ ಅಷ್ಟೇ ನಿರಾಯಾಸದಿಂದ ತನ್ನ ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಬಂದ ವಿಶಿಷ್ಟ ಜನಪದ ಬೈಗುಳಗಳನ್ನೂ ಬಳಸುವುದಿತ್ತು. ದೊಡ್ಡ ಮನಸ್ಸಿನ ಅಪರೂಪದ ವ್ಯಕ್ತಿತ್ವ ಅವಳದು. ಕಡುಬಡತನದಲ್ಲಿ ಇದ್ದ ಮನೆಯನ್ನು ಒಂದು ಸ್ಥಿತಿಗೆ ತಂದದ್ದು ಅವಳೇ ಅಂತ ಎಲ್ಲರೂ ಹೇಳುತ್ತಿದ್ದರು. +`ಶಿಶುವಿನಳ್ಳಿ’ ದ್ಯಾವಪ್ಪ ಅನ್ನೊರು ನಮ್ಮ ಮನೆಯ ಶುಭಕಾರ್ಯಗಳಿಗೆಲ್ಲ ಬರುತ್ತಿದ್ದರು. ಕೋಳಿವಾಡದಲ್ಲೇ ವಾಸವಾಗಿದ್ದವರು. ಆ `ಶಿಶುವಿನಳ್ಳಿ’ ಎಲ್ಲಿಂದ ಬಂತೋ ಗೊತ್ತಿಲ್ಲ. `ನಮ್ಮ ಕಾಕಾ'(ನಮ್ಮ ತಂದೆಯನ್ನು, ನಾವು ಹಾಗೆ ಸಂಬೋಧಿಸುವುದು)ರನ್ನು ಕೇಳಬೇಕು. +ಬೆಳ್ಳಗೆ, ಸ್ವಲ್ಪ ಮಟ್ಟಿಗೆ ಗರುಡ ಮೂಗು, ದೊಡ್ಡ ಹಣೆಯ ದ್ಯಾವಪ್ಪರದು ದೊಡ್ಡ ಧ್ವನಿ. ಅದೇ ಧ್ವನಿಯಲ್ಲಿ ಹಾರ್ಮೊನಿಯುಂ ನುಡಿಸುತ್ತ, ಮೊದಲು `ಯೋಗಿ ಮನೆಗೆ ಬಂದ’ ಎಂಬೋ ದತ್ತಾತ್ರೇಯನ ಹಾಡು ಕಣ್ಣು ಮುಚ್ಚಿ, ಮನಸ್ಸು ತುಂಬಿಕೊಂಡು ಹಾಡಬೇಕು. ನಂತರ ಹುಡುಗರ ಬೇಡಿಕೆಯಂತೆ ಗದುಗಿನ ಭಾರತದ `ವಿರಾಟ ಪರ್ವ’ ಆಗಬೇಕು. ಸಾಹಿತ್ಯಿಕವಾಗಿ ಆಳವಾಗಿ ತಿಳಿದುಕೊಡವರೇನೂ ಅಲ್ಲ, ಮನೆಮಂದಿಗೆಲ್ಲ ರಂಜನೀಯವಾಗುವಂತೆ ಹೇಳುವಷ್ಟು ಗೊತ್ತಿತ್ತು. ಉತ್ತರನ ಪ್ರಲಾಪ ಹೇಳುವುದನ್ನು ನೀವು, ಕೇಳಬೇಕು. ನಮಗೆಲ್ಲ ಖುಶಿಯೋ ಖುಶಿ. ಚಪ್ಪಾಳೆ ತಟ್ಟಿ ನಾವು ನಕ್ಕದ್ದೇ ನಕ್ಕದ್ದು. ವಿಸ್ಮಯ ತರಿಸುವ ಬೃಹನ್ನಳೆಯ ಶೌರ್ಯ, ಕೀಚಕನ ಕಾಟ ತಾಳದ ಸೈರಂಧ್ರಿಯ ನೋವು, ಕಂಕನ ಸಂಧಿಗ್ಧತೆ ಎಲ್ಲವನ್ನೂ ಕಣ್ಣಿಗೆ ಕಟ್ಟಿ, ಮನಸ್ಸಿಗೆ ಮುಟ್ಟಿಸಿ, ನಗಿಸಿ, ಕಣ್ಣೀರು ತರಿಸಿ ಕೈಬಿಡುತ್ತಿದ್ದರು. ಆಗಲೇ ಯಾವಾಗಲೋ `ಬೇಂದ್ರೆ’ ಹೋದರು ಅಂತಾ ದೊಡ್ಡವರು ಮಾತಾಡಿಕೊಂಡರು. ಆಗೆಲ್ಲ ಧಾರವಾಡದಲ್ಲಿ ಎಲ್ಲ ಶಿಕ್ಷಿತರ ಮನೆಯ ಮಾಡಿನಲ್ಲಿ ಟೊಪ್ಪಿಗೆ ಸಂದಿಯಿಂದ ಕೂದಲು ಹಾರುವ, ಕೆಂಪು ಶಾಲು ಧರಿಸಿದ, ಕೆಳಗೆ `ಅಂಬಿಕಾತನಯದತ್ತ’ ಎಂದು ಸಹಿ ಮಾಡಿದ ಫೋಟೊ ಇರುತ್ತಿತ್ತು. ಅವರನ್ನು ನಾನು ನೋಡಿದ್ದಿಲ್ಲ, ಶಾಲೆಯಲ್ಲಿ ಕಲಿತ ಪದ್ಯಗಳು ಪಾಠವಾಗಿದ್ದವು. +ಬರೀ ಹದಿನೈದು ವರ್ಷದ ಹಿಂದಿನ ಮಾತು, (ದೆಹಲಿಯಲ್ಲಿ, ಆಗತಾನೆ ಇಂದಿರಾ ತೀರಿ ಹೋಗಿ ರಾಜೀವ್ ಬಂದಿದ್ದರು ಅನ್ನಿ). `ಶ್ರಾವಣದ ಶುಕ್ರವಾರ’ದ ದಿವಸ. ನಡುಮನೆ ಹಿರಿಯ ಹೆಂಗಸರಿಂದ ತುಂಬಿ ಹೋಗಿದೆ. `ಅಣ್ಣಿಗೇರಿ’ ಗಂಗೂತಾಯಿ, ಶಂಕರ ಗೌಡರ ಮನೆಯ ಚಿತ್ರಕ್ಕ, ದೇವಕ್ಕ, `ತಾಡಮರಿ’ ಅಜ್ಜಿ, ಲೀಲಕ್ಕ ಇವರೆಲ್ಲರೂ, ಅವರೆಲ್ಲರಿಗಿಂತ ದೊಡ್ಡದನಿಯ ನನ್ನ ಕೃಷ್ಟಕ್ಕಜ್ಜಿಯ ಜೊತೆ ಒಕ್ಕೊರಲಿನಿಂದ ಭಕ್ತಿಭಾವದಿಂದ ಹಾಡುವ ಗೌರಿಯ ಹಾಡು ಪಕ್ಕದ ಪಡಸಾಲೆಯಲ್ಲಿದ್ದ ನನ್ನ `ಕರಣ ಗಣ’ದೀ ರಿಂಗಣಿಸುತ್ತಿದೆ. ಜೊತೆ ಜೊತೆಗೆ ನಾನು ಓದುತ್ತಿದ್ದ `ಬೇಂದ್ರೆ’ಯವರ `ನಿರಾಭರಣ ಸುಂದರಿ’ಯಲ್ಲಿನ `ಪಾಲಾ ಫೂ’ ಕತೆ ನನ್ನದೇ ಕತೆ ಎಂಬಂತೆ ಜೀವ ಹಿಂಡುತ್ತಿದೆ. ಕತೆಯ ತಿರುಳಿನಂತೆ ನಾನೂ ಜೀವದ ಗೆಳೆಯೊರಡನೆ ಜಗಳವಾಡಿದ್ದೆ. `ಸಕ್ರೀ ಗಿಣಿ’ಗಾಗಿ ಅಲ್ಲದಿದ್ದರೂ ಅಂತಹದೇ ಕ್ಷುಲ್ಲಕಕ್ಕಾಗಿ. +ಇಲ್ಲ, ಆಗ ಯಾವ ಲೋಲಾಳೂ ಗೊತ್ತಿರಲಿಲ್ಲ. ಓಡಬೇಕಿರಲಿಲ್ಲ. +ಪಶ್ಚಿಮದ ರೋಗ ನನ್ನ ಹಿರಿಯರಿಗೆ ಹೇಗೆ ಅಂಟುತ್ತಿತ್ತು ಗೊತ್ತಿಲ್ಲ. ನನ್ನ ಬಾಲಿಶತನದಲ್ಲಿ `ಶೇಕ್ಸ್‌ಪೀಯರ್’,`ಮಿಲ್ಟನ್’,`ರಸ್ಸೆಲ್’,`ನ್ಯೂಟನ್’ ಇಂಥಾ ಪ್ರಚಂಡ ಕೆಂಪು ರಂಡೇ ಮಕ್ಕಳಿಂದ (ಥ್ಯಾಂಕ್ಸ್! ಅಜ್ಜೀ.) ಎಂದು ಅಂದುಕೊಂಡಿದ್ದೇನೆ. ನಮ್ಮ ಪಾಲಿಗೋ ಅದು ಬಂದದ್ದು ಅಗಾಗ ನೊಡುತ್ತಿದ್ದ ಹಾಲಿವುಡ್ ಚಿತ್ರಗಳಿಂದ, ಪಾಪ್‌ಸ್ಟಾರ್ ಚಿತ್ರಗಳಿಂದ . ಆಗ ತಾನೆ ಬಂದಿದ್ದ ಟೆಲಿವಿಜನ್‌ನಿಂದ. ನೀವು ಒಂದು ಬುದ್ಧಿವಂತ ಹುಡುಗರ ಸರ್ಕಲ್‌ನಲ್ಲಿರಬೇಕೆಂದರೆ ಅದನ್ನೆಲ್ಲ ತಿಳಿದುಕೊಳ್ಳುವುದು ಆಗ ಅವಶ್ಯಕವಾಗಿತ್ತು. ಈಗಲೂ ಇದೆ ಅನ್ನಿ. (ಅದೋ, ಅಲ್ಲಿ ಯಾರೋ ಓಡುತ್ತಿರುವಂತೆ ಕಾಣುತ್ತದೆ, ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ, ಲೋಲಾ ಇರಬೇಕು.) ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹುಡುಗಿಯರು ಹಾಡುತ್ತಿದ್ದ ಪುರಂದರದಾಸರ ಹಾಡುಗಳು ಎದೆ ತುಂಬುತ್ತಿದ್ದಂತೆಯೆ, ಕೆಲವು ಸಾಹಸಿ ಹುಡುಗರು ಮಾಡಲು ತೊಡಗಿದ್ದ `ಬ್ರೇಕ್‌ಡ್ಯಾನ್ಸ್’- `ನಾಗರ ಪಂಚಮಿ’, `ಸರಸ್ವತಿ ಪೂಜೆ’, `ಗಣೇಶ ಚತುರ್ಥೀ’ ಗಳನ್ನೆಲ್ಲ ಆಚರಿಸುತ್ತಿದ್ದ, ಬಹುಮಟ್ಟಿಗೆ, ಬ್ರಾಹ್ಮಣರೇ ಓದುತ್ತಿದ್ದ, ನಮ್ಮ ಶಾಲೆಯಲ್ಲಿ, ನನ್ನನ್ನೂ ಸೇರಿದಂತೆ, ಹುಡುಗ-ಹುಡುಗಿಯರಿಗೆಲ್ಲ ಬೇರೆ ಜಗತ್ತನ್ನು ಮೂಡಿಸ ತೊಡಗಿತ್ತು. ಇತ್ತ ಮನೆಯಲ್ಲಿ ಮನೋಹರ ಗ್ರಂಥಮಾಲೆ ಪುಸ್ತಕ ತಪ್ಪದೇ ಬರುವುದಿತ್ತು. ಹೀಗಾಗಿ ಕುರ್ತಕೊಟಿ, ಜಿ.ಬಿ.ಜೊಶಿ, ಕಾರ್ನಾಡರ ನಾಟಕಗಳು, ಕೃಷ್ಣಾನಂದ ಕಾಮತ್‌ರ ಪ್ರವಾಸ ಕಥನಗಳು ಇವನ್ನೆಲ್ಲ ಓದುವುದು ನಡೆದೇ ಇತ್ತು. ಕೆಲವು ಅರ್ಥವಾದರೆ ಕೆಲವು ಇಲ್ಲ. ಕೆಲವು ರುಚಿಯೆನಿಸಿದರೆ, ಕೆಲವು ಸಪ್ಪೆ ಅನಿಸುವವು. ಹೀಗೆ ಒಂದು ದಿನ `ಮಾಲೆ’ಯಿಂದ ಚಿತ್ತಾಲರ `ಶಿಕಾರಿ’ ಬಂತು. ಏಕೋ ಸ್ವಲ್ಪ `ಖಾರ’ ಎನಿಸಿತು. +ನಾನು ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಸೈನ್ಸ್ ಸೇರಿದ್ದಾಯಿತು. ಆಗಲೇ ಗೊಕಾಕರಿಗೆ ಜ್ಞಾನಪೀಠ ಬಂತು, ಅವರನ್ನು ಸನ್ಮಾನಿಸಲಿಕ್ಕೆ ಅಂತ ಕಾರಂತರು ಬಂದಿದ್ದರು. ಹೀಗೆ ಒಂದು ದಿನ ತೀರ ಸೂಕ್ಶ್ಮ, ಭಾವುಕ ಮನಸ್ಸಿನ, ಸಾಹಿತ್ಯಪ್ರೇಮಿಯಾದ ನನ್ನ ಮಾವುಶಿ ನನ್ನನ್ನು ಸಾಧನಕೇರಿಯ `ಬೇಂದ್ರೆ’ಯವರ ಮನೆಯೋಳಗೆ ಕರೆದೊಯ್ದಳು. ಅದೇ ಕಾಲಕ್ಕೆ ವಯಸ್ಸು ಕೆಡುತ್ತಿತ್ತು. `ಕಲ್ಪನೆ ಹೆಂಡಹೊಂಡದ ಸೆಲೆಯ ಹುಡುಕುತ್ತಿತ್ತು’. ನನ್ನಂತಃ ಪುಕ್ಕಲು ಹುಡುಗರ ಪಾಲಿಗೆ, ಮಾಳಮಡ್ಡಿಯ ಬೀದಿಗಳಲ್ಲಿ, ಪ್ರೇಮವೆಂದರೆ ಇನ್ನೂ `ಮಂದ ನಗಿ ಹಾಂಗ ಬೀರಿ, ಮುಂದ ಮುಂದ ಹೋಗುವುದಕ್ಕೇ’ ಸೀಮಿತವಾಗಿತ್ತು. ಬಿಚ್ಚಿ ಹಾರಬೇಕಾಗಿದ್ದ ಯೌವನ ತೆಂಗುಗರಿಯಲ್ಲಿ ಸಿಕ್ಕಿ ಸುಕ್ಕಾಗುತ್ತಿತ್ತದ್ದ ಗಾಳೀಪಟದಂತಿತ್ತು. ಎಲ್ಲಿಂದಲೋ ಸಿನೆಮಾದ ಗೀಳು ಬೇರೆ ಅಂಟಿತ್ತು. ಅಜ್ಜಿಗೆ ಅದೇಕೆ ಹೀಗೆ? ಹಾಗೆ? ಅಂತ ಅಡ್ಡ ಪ್ರಶ್ನೆಗಳನ್ನು ಕೇಳುವುದು ನಡೆದಿತ್ತು. ಅವಳೋ ನಿತ್ರಾಣಳಾದರೂ ಕುಳಿತಲ್ಲೇ ಬಂದು ಹೋಗುವವರ ಸುಖದುಃಖ ಕೇಳುವುದರಲ್ಲೇ ಇರುತ್ತಿದ್ದಳು. ಅಸಾಧ್ಯ ಮಡಿಯವಳಾದರೂ ಜಾತಿ-ಪಾತಿ ಅನ್ನದೇ, ಕಾಮಾಲೆಯವರಿಗೆ ತನಗೆ ಗೊತ್ತಿದ್ದ, ಹಿತ್ತಲಿಂದ ಕಿತ್ತು ತಂದ, ಔಷಧದೆಲೆಯನ್ನು ಕುಟ್ಟಿ ಕೊಡುತ್ತಿದ್ದಳು (ಉಚಿತ ಅಂತಾ ಪ್ರತ್ಯೇಕವಾಗಿ ಬೇರೆ ಹೇಳಬೇಕಿಲ್ಲ). ಮಂಗಳವಾರ ಮತ್ತು ಗುರುವಾರ ಮಾತ್ರ ಕೊಡಬಹುದಾಗಿದ್ದ ಅದಕ್ಕೊಂದು ಕಠಿಣ ಪಥ್ಯವೂ ಇತ್ತು. ಸರಿಯಾಗಿ ಪಾಲಿಸದವರಿಗೆ ಮತ್ತೇ ಪ್ರೀತಿಯಿಂದ ಬೈಗುಳಗಳ ಪೂಜೆಯಾಗುತ್ತಿತ್ತು. ಔಷಧಿ ಕುಡಿದು ಅವರು ತೊಳೆದಿಟ್ಟ ಲೋಟವನ್ನು ಮತ್ತೆ ನೀರು ಚಿಮುಕಿಸಿ ಒಳಗೆ ಒಯ್ಯಬೇಕು. ಬಾಯಿಮಾತಲ್ಲಿ `ಹೇಲು ತಿಂದು ಇರೋದಕ್ಕಿಂತ, ಹಾಲು ಕುಡಿದು ಸಾಯೊದು ಛೊಲೊ’ ಅಂತಿದ್ದರೂ ಜೀವನದ ಸಿಹಿ-ಕಹಿಯ ರಸವುಣ್ಣುವ ಹುಕಿ ಮಾತ್ರ ಕಡಿಮೆಯಾಗಿರಲಿಲ್ಲ. ಅಂಥಾ ದಿನಗಳಲ್ಲಿ, ರಾಜಕೀಯ ಬೀದಿಗೆ ಬಂತು. `ಮಂಡಲ್’ ಬಂತು. ಕಾಲೇಜಿನೆದುರು ಬಸ್ಸಿಗೆ ಬೆಂಕಿ ಇಟ್ಟರು. ನಾನೂ ಬೀದಿದೀಪಕ್ಕೆ ಕಲ್ಲೆಸಿದಿದ್ದೆ. ಅದು ಸುಕ್ಕಾದ ಪಟಕ್ಕೆ ತಗುಲಿ ಅಲ್ಲೊಂದು ಚಿಕ್ಕ ತೂತು ಬಿತ್ತು. +ಪಟ ಸುಕ್ಕಾಗಿತ್ತೆಂದೋ, ತೂತು ಬಿದ್ದಿತ್ತೆಂದೋ, ಓದಿನಲ್ಲಿರುಚಿಯಿರಲಿಲ್ಲವೆಂದೋ, ಬೇಜವಾಬುದಾರಿತನದಿಂದಲೋ, ಪಿಯುಸಿಯಲ್ಲಿ ನನಗೆ ಕಡಿಮೆ ಅಂಕ ಬಂದಿದ್ದವು. ಅಲ್ಲಿಯವರೆಗೆ ಬಹುತೇಕ ಶಿಸ್ತು, ಪ್ರಾಮಾಣಿಕತೆಯ ಜೀವನ ನಡೆಸಿದ್ದ `ನಮ್ಮ ಕಾಕಾ’ ನನಗಾಗಿ ಕ್ಯಾಪಿಟೇಶನ್ ಕೊಡಲು ಸಿದ್ಧರಾಗಿದ್ದರು. ಹುಡುಗರನ್ನು ಧಾರವಾಡದಲ್ಲಿ ಕಲಿಯಲು ಬಿಟ್ಟು, ಅಲ್ಲಿಯವರೆಗೆ ಸರ್ಕಾರಿ ನೌಕರಿಯೆಂದು ಒಂದುಕಡೆ ಸ್ಥಿರವಾಗಿ ನಿಲ್ಲದೇ ಅಲೆಯುತ್ತಿದ್ದವರು, ನಿವೃತ್ತರಾಗಿ ಧಾರವಾಡದಲ್ಲೇ ಇರಲು ಬಂದಿದ್ದರು. ಮಗನ ಭವಿಷ್ಯಕ್ಕಾಗಿ ಪ್ರಾವಿಡೆಂಟ್ ಫಂಡ್‌ನ ಹಣವಿತ್ತು. ಆದರೆ ಅಂದು ಅವರ ಒಳಗುದಿ ನಾನು ಕಂಡಿದ್ದೆ. ದುಡ್ಡು ಕೊಟ್ಟು ಇಂಜಿನೀರಿಂಗ್ ಸೇರುವುದಿಲ್ಲವೆಂದು ಮನೆಯಲ್ಲಿ ರಂಪ ಮಾಡಿದೆ. ಪುಳಚಾರು ಹುಡುಗನಾದ ನನಗೆ ಒಂಟಿ ಕಾಲಲ್ಲಿ ನಿಂತು, ಮನೆಮಂದಿಯ ಪ್ರೀತಿಯನ್ನೆಲ್ಲ ಒದ್ದು, ಏನನ್ನಾದರೂ ಮಾಡುವ ಧೈರ್ಯವಿರಲಿಲ್ಲ. ಎಲ್ಲರೂ ಲೋಲಾಳಿಗಾಗಿ ಓಡುವುದು ಕಾಣುತ್ತಿತ್ತು. ಶಾಲೆಯಲ್ಲಿ ಕಲಿತ ಮೌಲ್ಯಗಳನ್ನು ಪಾಲಿಸುವುದರ ಕಷ್ಟ ಗೊತ್ತಾಗತೊಡಗಿತು. ಕೊನೆಗೆ ಸೋಲೊಪ್ಪಿದೆ. ಈ ಸಲ ಗಾಳೀಪಟದಲ್ಲೊಂದು ದೊಡ್ಡ ತೂತು ಬಿತ್ತು. +ರಾಜಕೀಯ ವಾತಾವರಣಕ್ಕೆ ಬಿಸಿ ಏರಿ, ಎಲ್ಲ ಗೊಂದಲಮಯವಾಗಿತ್ತು. ಆದ್ವಾನಿಯವರು ಹೇಳುವುದೇ ಸರಿ, ಅದೇನು ಅವರ ವ್ಯಕ್ತಿತ್ವ, ಖಿ ನವರು ಎಂಥಾ ಶಿಸ್ತಿನವರು. ಮುಸ್ಲಿಂರು ಅದೇಕೆ ಪಾಕಿಸ್ತಾನದ ಪರವಾಗಿ `ಪಟಾಕಿ’ ಸಿಡಿಸುವುದು? ಅಂತೆಲ್ಲಾ ಹುಡುಗರಲ್ಲಿ ವಿಶ್ಲೇಷಣೆ ಶುರುವಾಗಿತ್ತು. `ಬುದ್ಧಿಜೀವಿ’ಗಳೆನಿಸಿಕೊಂಡವರೂ ಪತ್ರಿಕೆಗಳಲ್ಲಿ ಇದೇ ಧಾಟಿಯ ಮಾತನ್ನು ಹೇಳುತ್ತಿದ್ದರಿಂದ, ಅದು `ಸರಿ’ಯೇ ಅನ್ನಿಸತೊಡಗಿತ್ತು. ಧಾರವಾಡದಂಥ ಊರಲ್ಲೇ ವಾತಾವರಣ ಕೆಟ್ಟಿತ್ತು. ಮನೆಯ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದ ಹುಡುಗ ನಜೀರ್‌ನಿಂದಾಗಿ ನಮ್ಮ ಮನೆಯ ಹಬ್ಬಹರಿದಿನಗಳು ಮಾತ್ರ ಸಾಂಗವಾಗಿ ನಡೆದಿದ್ದವು. ನೇಮ, ನಿಷ್ಠೆ, ಪೂಜೆ, ಪುನಸ್ಕಾರಗಳಲ್ಲಿ ಅಪಾರ ಶ್ರದ್ಧೆಯಿಟ್ಟುಕೊಂಡವರಾದರೂ, ಗಾಂಧೀ, ನೆಹರೂರ ಅನುನಾಯಿಯಾಗಿರುವ `ನಮ್ಮ ಕಾಕಾ’ ಈ ಬಿಜೆಪಿಯವರು ದೇಶವನ್ನು ಹಾಳುಮಾಡ್ತಾರೆ ಅನ್ನುತ್ತಲೇ ಇದ್ದರು. ನಾನೋ ಗೆಳೆಯರೊಡನೆ ಚುನಾವಣೆಯ ದಿನ, `ಕಮಲ’ಕ್ಕೆ ಬೇನಾಮಿ ಮತ ಹಾಕಿದ್ದೆ. ನನ್ನೊಳಗೆ ಕೋಲಾಹಲ ನಡೆದಿತ್ತು. ಪಟದ ತೂತುಗಳು ಮತ್ತಷ್ಟು ದೊಡ್ಡದಾದವು. +ದೆಹಲಿಯಲ್ಲಿ ರಾಜೀವ್ ತೀರಿದ್ದರಿಂದ ರಾವ್ ಬಂದರು. ಕೊನೆಗೆ ಒಂದು ದಿನ ಬಾಬರಿ ಮಸೀದಿ ಕಳಚಿಬಿತ್ತು. ಅಂದೇ `ಕೋಳಿವಾಡದ ಕೃಷ್ಟಕ್ಕಜ್ಜಿ ತೀರಿದರು’ ಅಂತಾ ಮಾಳಮಡ್ಡಿಯಲ್ಲೆಲ್ಲ ಸುದ್ದಿಯಾಯಿತು. ಮತ್ತೊಂದು ತೂತು. ಇಂಜಿನೀರಿಂಗ್ ಆಸಕ್ತಿ ಕೆರಳಿಸತೊಡಗಿತ್ತು. ದೇಶದ ರಾಜಕಾರಣ ದಿನೇ ದಿನೇ ರಾಡಿಯಾಗಿ ಮತ್ತೆ ಬ್ರಾಕೆಟ್ ಸೇರುವುದರಲ್ಲಿತ್ತು. ಎಲ್ಲಾ ಅವಿಭಕ್ತ ಕುಟುಂಬಗಳಿಗೆ ಆಗಲೇ ಹತ್ತಿದ್ದ ಬಿಸಿ, ನಮ್ಮ ಮನೆಗೂ ತಡವಾಗಿಯಾದರೂ, ಕೊನೆಗೂ ತಟ್ಟಿಬಿಟ್ಟಿತು. ಮನೆಯಲ್ಲೂ ಒಂದು ಬಗೆಯ `ಸ್ಥಿತ್ಯಂತರ’ವಾಯಿತು. ಇಂದಿಗೂ ಸಂಬಂಧಗಳು ಬಿಟ್ಟಿಲ್ಲ. ಪರಸ್ಪರ ಬರುವುದು, ಹೋಗುವುದು, ಎಲ್ಲರೂ ಕೂಡಿ, ಸಂಭ್ರಮದಿಂದ ಕಾರ್ಯಕಟ್ಟಳೆಗಳನ್ನು ಮಾಡುವುದು, ಒಂದು ಸಮತೋಲನದಲ್ಲಿ ನಡೆದೇ ಇದೆ. ಮುಖ್ಯವಾಗಿ ಮನೆಯಲ್ಲಿ ಅವ್ವ-ಕಾಕಾರೊಡನೆ ನಾನೊಬ್ಬನೆ ಇರುವುದಾಯಿತು. ಪುಸ್ತಕವನ್ನು ಓದುವುದು ನಡೆದೇ ಇತ್ತು. ಮನೆಯಲ್ಲಿ ಹಿರಿಯಣ್ಣ ಯಾವುದೋ ಇನ್‌ಫೋಸಿಸ್ ಅನ್ನುವ ಕಂಪನಿ ಸೇರಿದ್ದ. +ಲೋಲಾ ಈಗ ಪೂರ್ಣವಾಗಿ, ಸ್ಪಷ್ಟವಾಗಿ ಕಾಣತೊಡಗಿದ್ದಳು, ಓಡುತ್ತಾ, ನಿತಂಬಗಳನ್ನು ಕುಣಿಸುತ್ತಾ, ನಮ್ಮನ್ನು ಹೆಚ್ಚೆಚ್ಚು ಆಕ್ರಮಿಸತೊಡಗಿದ್ದ ಕ್ರಿಕೆಟ್ ಆಟಗಾರರ ಪಕ್ಕದಲ್ಲಿ, ಥಳುಕು-ಬಳುಕಿನ ಸಿನೆಮಾ ನಟಿಯರಲ್ಲಿ, ಬುರುಗು ಉಕ್ಕುವ ಕೋಲಾಗಳಲ್ಲಿ. ಹೆಚ್ಚಾಗಿ ಟೊಳ್ಳು ಸಂಪ್ರದಾಯವೇ-ಆಧುನಿಕತೆಗಳ ಜಗ್ಗಾಟದಲ್ಲಿ ನಡೆಯುತ್ತಿದ್ದ ರಗಳೆ, ವಿಕೃತತೆಯಲ್ಲಿ ಕೊಳೆವ ಧಾರವಾಡದ ಮಾಳಮಡ್ಡಿಯ ಜೀವನದ ಜೊತೆ ಅವ್ವ-ಕಾಕಾನ ಪ್ರೀತಿಯೂ ಅಪ್ಪ್ರೆಸ್ಸಿವ್ ಅನ್ನಿಸತೊಡಗಿತ್ತು. ಇಂಜಿನೀರಿಂಗ್ ಕಾಲೇಜಿನಲ್ಲಿ ಹತ್ತಿರದಿಂದ ಕಾಸ್ಮಾಪಾಲಿಟನ್ ಜಗತ್ತನ್ನೂ ಕಾಣುವಂತಾಯಿತು. ಈ ವರೆಗೆ ಕಂಡಿದ್ದಕ್ಕಿಂತ ಹೆಚ್ಚೆಚ್ಚು ದಿಟ್ಟ ಹುಡುಗಿಯರೂ ಕಾಣುತ್ತಿದ್ದರು. ಮನಸ್ಸು ಮುಜುಗರ, ಸಂಕೊಚ ಬಿಟ್ಟು ನಿಧಾನವಾಗಿ ಅಷ್ಟಿಷ್ಟು ಎಮ್ಜಾಯ್ ಮಾಡುವುದು ಕಲಿಯತೊಡಗಿತ್ತು. ಬಿ.ಇ. ಮುಗಿಯಿತು. +ಲೊಲಾ ಓಡುವುದು ಇನ್ನೂ ಜೋರಾಯಿತು. +ಟೆಕ್ನಾಲಜಿಯ ಯಶಸ್ಸು ನನ್ನಂಥವರ ನೆತ್ತಿಗೇರತೊಡಗಿತ್ತು. ‘ ವರ್ಕ್ ಕಲ್ಚರ್’ ಎಂಬ ಹೊಸ ಪದ ಕಲಿತಾಗಿತ್ತು. ಸಾಫ್ಟ್‌ವೇರ್ ನೌಕರಿ ಪಡೆಯುವುದು ಎಲ್ಲರ ಜೀವನದ ಪರಮ ಉದ್ದೇಶವಾಗಿತ್ತು. ನೌಕರಿಗಾಗಿ ಬೆಂಗಳೂರಿನಲ್ಲಿ ಅಲೆದಾಡುವುದು ಶುರುವಾಗಿತ್ತು. ಗಾಳೀಪಟಕ್ಕೆ ಇನ್ನಷ್ಟು ತೂತುಗಳಗುವುದು, ಇದ್ದ ತೂತುಗಳು ದೊಡ್ಡದಾಗುವುದು ನಡೆದೇ ಇತ್ತು. +ಲೋಲಾ ಎಂ.ಜಿ.ರೋಡಿನಲ್ಲಿ ಕಣ್ಣುಕುಕ್ಕಿಸುತ್ತಿದ್ದಳು. ಸುತ್ತಮುತ್ತ ಎಲ್ಲರೂ ಅವಳ ಬಗ್ಗೆ ಮಾತಾಡುತ್ತಿದ್ದರು. +ಅಣ್ಣಂದಿರಿಂದಾಗಿ ಮನೆಯ ಆರ್ಥಿಕತೆ ಅಭ್ಯುದಯಗೊಂಡಿತ್ತು. ನಮಗೆ ಬೇಕಾದ ಇಂಗ್ಲೀಷು, ಕನ್ನಡ ಪುಸ್ತಕಗಳನ್ನು ಕೊಂಡುಕೋಳ್ಳುವ ಸ್ವಾತಂತ್ರ್ಯ ಬಂತು. ಧಾರವಾಡದ ಮಡಿವಂತ ಸಮಾಜದಿಂದ ಸ್ವಲ್ಪ ದೂರವೇ ಇರುವ `ನವ್ಯ’ರನ್ನು ಓದುವಂತಾಯಿತು. ಕೆಲವು ಶ್ರೇಷ್ಠ, ಕೆಲವು ಕಳಪೆ. ಕೆಲವು ಅತಿರೇಕ. ಸಾಂಸ್ಕೃತಿಕ, ಸಾಮಾಜಿಕ ವಿಶ್ಲೇಷಣೆ ಹೆಚ್ಚೆಚ್ಚು ಸಂಕೀರ್ಣವಾದವು. ಸಾಮಾಜಿಕ ಸಮಾನತೆ, ಸ್ತೀ ಸ್ವಾತಂತ್ರ್ಯ, ಪ್ರೇಮ, ಕಾಮಗಳ ಬಗ್ಗೆ ಮೊದಲಿದ್ದ ಸರಳೀಕೃತ ಐಡಿಯಾಗಳು ಹೆಚ್ಚೆಚ್ಚು ಕ್ಲಿಷ್ಟವೂ, ಜಟಿಲವೂ ಆದವು. ಇದುವರೆಗೆ ಬಿಡಿಬಿಡಿಯಾಗಿದ್ದ ಒಟ್ಟೂ ಸಮಾಜಿಕಪ್ರಜ್ಣೆಯ ಎಳೆಗಳನ್ನು ಹುರಿಮಾಡಲು ತೊಡಗಿದ್ದವು. ಜೊತೆಗೇ ನೀನು ಉಳ್ಳವ, ಬ್ರಾಹ್ಮಣ, ಇಂಗ್ಲೀಷು ಕಲಿತವ ಇತ್ಯಾದಿ ಅಪರಾಧಿ ಭಾವನೆಗಳನ್ನು ಬೆರಳೆತ್ತಿ ತೋರಿಸಿ, ಬೆಳೆಸಿದವು. ಮೊದಲಿನಿಂದಲೇ ಎಲ್ಲವನ್ನೂ ಆಳವಾಗಿ ಯೋಚಿಸುವ ಚಟ ಅಂಟಿಸಿಗೊಂಡಿದ್ದ ನನಗೆ, ಇನ್ನಷ್ಟು ಈ ತರಹದ ವಿಶ್ಲೇಷಣೆಯನ್ನೂ, `ನರಸತ್ತು ಕೊನೆಯಿರದ ಕೊನೆಯ ಬಟ್ಟೆ ಹುಡುಕುವುದನ್ನೂ’ ಕಲಿಸಿದವು. ಮನಸ್ಸು ಒಮ್ಮೊಮ್ಮೆ ಬಚ್ಚಲ ಮೋರಿಯಾಗುತ್ತಿತ್ತು. ಪಟ ಹರಿಯುತ್ತಿತ್ತು. (ಆದರೆ ಅತ್ತ ಲೋಲಾ…). +ಕತ್ತಿರಿಯುವ ಸ್ಪರ್ಧೆಯ ದಿನಗಳಲ್ಲಿ ಬೇಕಾದ ನೌಕರಿ ಸಿಗುವುದೂ ಕಷ್ಟವಾಗಿತ್ತು. ಲೋಲಾಳನ್ನು ಕೂಡುವ ಬಯಕೆ ದಿನೇದಿನೇ ಹೆಚ್ಚುತ್ತಿತ್ತು. ಅನಿವಾರ್ಯವೂ ಅನಿಸತೊಡಗಿತು. ಇಂಜಿನಿಯರ್‌ನಲ್ಲಿ ಪಡೆದ (ವಿ)ಜ್ಞಾನದ ಸುಳಿ ಇನ್ನಷ್ಟು ಒಳಗೆ ಸೆಳೆಯುತ್ತಿತ್ತು.ಹೀಗೆ ಒಂದು ದಿನ ತೂತುತೂತಾಗಿ ಅಮೇರಿಕೆಗೆ ಬಂದುಬಿಟ್ಟಿದ್ದೆ. +ಲೋಲಾಳ ಜೊತೆ ಜೊತೆಗೆ ಸರಿಗಟ್ಟಿ ಓಡತೊಡಗಿದ್ದೆ. ಆದರೆ ದೊಡ್ಡ ದುರಂತ ಮುಂದೆ ಕಾದಿತ್ತು. ಆರುತಿಂಗಳು ಕಳೆಯುವಷ್ಟರಲ್ಲಿ ಹೇಳದೇ-ಕೇಳದೇ ಇನ್ನೂ ವಯಸ್ಸಿರುತ್ತಲೇ, ಗಂಡ,ಮನೆ,ಮಕ್ಕಳು,ಮನೆತನಗಳ ಏಳಿಗೆಯೊಂದೆ ಜೀವನದ ಪರಮ ಗುರಿಯಾಗಿದ್ದ, ವೈಯಕ್ತಿಕವಾಗಿ ನನ್ನನ್ನು ತೀರ ಹಚ್ಚಿಗೊಂಡಿದ್ದ ಸರಳ ಮನಸ್ಸಿನ ಅವ್ವಾ ಕೈಬಿಟ್ಟಳು. ಇತ್ತ ಅಮೇರಿಕೆಯಲ್ಲಿ ಪ್ರೀತಿ ಕೊಡಬಹುದೆಂದುಕೊಡಿದ್ದ ಹೆಣ್ಣು ತೊಡೆ ಕೊಡವಿಕೊಂಡು ಹೋದಳು. +ಅಂದಿನಿಂದ ಮುಗ್ಧತೆಯ ಪಟ ಹರಿದಿದೆ ಅಂದುಕೊಂಡಿದ್ದೇನೆ. ಲೋಲಾಳ ಜೊತೆ ಓಡುವುದು ಈಗ ಹೆಚ್ಚು ಪ್ರಿಯ ಅನಿಸತೊಡಗಿದೆ. ಹೆಚ್ಚೆಚ್ಚು ಬೌದ್ಧಿಕನಾಗುತ್ತಿದ್ದೇನೆ ಅನಿಸುತ್ತೆ. (ಭಾರತದ ರಾಜಕೀಯ ಈಗ ಬ್ರಾಕೆಟ್‌ನಲ್ಲೂ ಇಲ್ಲ.) ಸಾಕಷ್ಟು ಪ್ರಾಖ್ತಿಕಲ್ ಆಗಿದ್ದೇನೆ. ಅಂತರ್ಜಾಲದ ಬುಲ್ಲೆಟ್ಟಿನ್ ಬೋರ್ಡ್‌ಗಳಲ್ಲಿ ದೊಡ್ಡ, ದೊಡ್ಡ ಥಿಯರಿಯ ಬಗ್ಗೆ ನನಗಿಂತ `ಬುದ್ಧಿವಂತ’ರಾದವರೊಡನೆ ಚರ್ಚಿಸುತ್ತೇನೆ. ಆದಷ್ಟು ಬೌದ್ಧಿಕ ಪುಸ್ತಕಗಳನ್ನು ಮಾತ್ರ ಓಡುತ್ತೇನೆ. ಇಂಟೆಲಿಜೆಂಟ್ ಸಿನೆಮಾ ನೋಡುತ್ತೇನೆ. ನಿನಗೆ ತಿಳಿಯದ್ದು ನನಗೆ ತಿಳಿಯಿತು ಎಂದು ಪಡುವ ಅಹಂನಲ್ಲಿನ ಸಂತೋಷ ಅಷ್ಟಿಷ್ಟಲ್ಲ. ವ್ಯಕ್ತಿವಾದದ ಪಾಠ ಕಲಿತು, ಯಾವ ರಗಳೆ ಹಚ್ಚಿಕೊಳ್ಳದೆ ಹಗಲಿರುಳು, ಕಣ್ಣಲ್ಲಿ ಕಣ್ಣಿಟ್ಟು ಓದುವಾಗ ಗಣಿತ-ವಿಜ್ನ್ಯಾನಗಳ ಸುಳಿಯಲ್ಲಿ ಬೆಳಕು ಕಂಡಂತಾಗುತ್ತದೆ. ಅರಿತರೂ ಸರಿ, ಅರಿಯದಿದ್ದರೂ ಸೈ, ಯಾವ ನೋವೂ ಉಂಟುಮಾಡಲು ತಿಳಿಯದ ಗಣಿತದ ಪ್ರಮೇಯಗಳು, ವೈಜ್ನ್ಯಾನಿಕ ನಿಯಮಗಳು, ಅವುಗಳ ಅಂತಃಸಂಬಂಧ ಕೊಡುವ ಈ ಅನುಭವ ಓಡುವ ಸಂಕಟದಲ್ಲಿ ಸಿಗುವ ರನ್ನದ ಪದಕ. +ಒಟ್ಟಾರೆ ಲೋಲಾಳ ಜೊತೆ ಓಡುವ ಕಲೆ ಕಲಿತಿದ್ದೇನೆ. ಎಲ್ಲಾ ಕನ್ಸರ್‌ವೇಟಿವ್ ಹಿನ್ನೆಲೆಯವರು ಹೆಚ್ಚೆಚ್ಚು ಆಧುನಿಕರಾಗಲು ಸೆಣಸುವಾಗ ಎದುರಿಸಬಹುದಾದ ಕಾಂಟ್ರಡಿಕ್ಷನ್‌ಗಳನ್ನು ನಿಭಾಯಿಸುತ್ತಾ, ಎಲ್ಲದಕ್ಕೂ `ಬಿ ಕೂಲ್ ಡಸಂಟ್ ಮ್ಯಾಟರ್ ಯಾರ್’, `ದಿಲ್ ಪೆ ಮತ್ ಲೆ ಯಾರ್’, ಇತ್ಯಾದಿ ಆಧುನಿಕೋತ್ತರೋತ್ತರ ಧೋರಣೆ ತಳೆದು, ಪಾತ್ರಕ್ಕೆ ತಕ್ಕಂತೆ ಬಣ್ಣ ಬಳಿದುಕೊಂಡು, ಅಮೇರಿಕನ್ ಸುಖಕ್ಕೆ ಮೈ ಒಗ್ಗಿಸಿಕೊಂಡು, ತಣ್ಣಗೆ ಇದ್ದೇನೆ. ಗೆಳೆಯರು ಕುಡಿದು ಪಾರ್ಟಿ ಮಾಡುವಾಗ ಮಾತ್ರ ಸ್ವಲ್ಪ `ಬಿಗಿ’ಯಾಗಿಯೇ ಇರುತ್ತೇನೆ. +ಹ್ಙಾ! ಅಂದ ಹಾಗೆ ನನ್ನಂಥ ಬುದ್ಧಿವಂತರೆಲ್ಲಾ ಈಗ ವೈರುದ್ಧ್ಯ, ವಿಪರ್ಯಾಸಗಳಿಗೆ ಅವಕಾಶವಿರುವ ಫಿಲಾಸಫಿ ಓದುತ್ತಿದ್ದಾರೆ. ನಾನೂ ಓದಬೇಕಪ್ಪಾ. ಓಡಬೇಕು! +ಲೋಲಾ ಓಡುತ್ತಿದ್ದಾಳೆ. ನಿಜ, ಲೊಲಾ ಜೊತೆ ಓಡಿದ್ದರಿಂದಲೇ ಅಲ್ಲವೇ ನಮ್ಮ ದೇಶವೀಗ ಇಂಟರ್‌ನೆಟ್ ಪಡೆದದ್ದು, ಮೊನ್ನೆ ಜಿಎಸ್‌ಎಲ್‌ವಿ ಹಾರಿಸಿದ್ದು, ಫ್ಲೈ ಓವರ್ ಕಟ್ಟುತ್ತಿರುವುದು, `ಲಂಚ’ಕೊಡದೇ ನಾವೀಗ ಮೊಬೈಲ್ ಫೋನ್ ಇಟ್ಟುಕೊಳ್ಳುತ್ತಿರುವುದು. ಲೋಲಾಳನ್ನು ನೋಡಿಯೇ ಅಲ್ಲವೇ ಕನಿಷ್ಟ ರೀಟಾ, ಶೀಲಾರಂಥವರು ಓಡಲು ಕಲಿತದ್ದು. ಹಾಗೆಯೇ, ಒತ್ತು ಜಡೆಯಲ್ಲಿ ಗುಲಾಬಿ ಸಿಕ್ಕಿಸಿಕೊಂಡು, ತಲೆ ತಗ್ಗಿಸಿ ನಡೆಯುವ ನನ್ನೂರಿನ ರಮಾ, ಸುಮಾ, ದೀಪ, ಸವಿತ, ಮಲ್ಲಿ, ನಿಂಗಿ, ಪಾರಿ ಎಲ್ಲಾ ಓಡುವಂತಾಗಬೇಕು. ಓಡಬೇಕು! ಲೋಲಾಳ ಹಾಗೆ! ಜೀನ್ಸ್ ಧರಿಸಿ, ತೋಳಿಲ್ಲದ ಬನಿಯನ್ ಧರಿಸಿ, ಮತ್ತೆ ಶ್ಯೂ ಧರಿಸಿ, ಜಡೆ ಬಿಚ್ಚಿ, ರೊಚ್ಚಿನಿಂದ ಓಡಬೇಕು! ತಮ್ಮ ತಮ್ಮ ಪ್ರಿಯಕರರಿಗಾಗಿ, `ಮಾನ್ನಿ’ಗಾಗಿ. ರಮಾ,ಸುಮಾ ಈ ಕಲೆ ಕಲಿಯುತ್ತಿದ್ದಾರೆ. ಆದರೆ ಉಳಿದವರು? ಮಲ್ಲಿ, ನಿಂಗಿ, ಪಾರಿ? +ಕಳೆದ ತಿಂಗಳು, ಧಾರವಾಡ: +ಎರಡು ವರ್ಷದ ನಂತರ ಬಂದೆನೆಂದು ಮನೆ-ಮಂದಿಯೆಲ್ಲಾ ಸಂತೋಷಪಡುತ್ತಾರೆ. ನನ್ನಂತೇ ತುಣುಕಾಗಲು ನಿರಾಕರಿಸುವ, ಒಳಗೆ ಹೆಚ್ಚು ಗಟ್ಟಿ ಅನಿಸುವ ನನ್ನ ಕಿರಿಯ ಅಣ್ಣನ ಮದುವೆಯನ್ನು ಎಲ್ಲರೂ ಕಲೆತು, ಸಂಭ್ರಮದಿಂದ ಎಲ್ಲಾ ಕ್ಷುಲ್ಲಕಗಳನ್ನೂ ಮರೆತು, `ಪದ್ಧತಿ’ಯ ಪ್ರಕಾರ ನೆರವೇರಿಸುತ್ತಾರೆ. ಹೆಣ್ಣುಮಕ್ಕಳು ಅರತಿ ತಟ್ಟೆಯೊಳಗಿನ ದೀಪದಂತೆ ಶಾಂತವಾಗಿ ಉರಿಯುತ್ತ ಹಾಡುತ್ತಾರೆ. ಇಲ್ಲ, ಅವರಾರಿಗೂ ಲೋಲಾಳ ಸೊಂಕು ತಗುಲಿಲ್ಲ. +ಇದೇ ನಮಗೆಲ್ಲಾ ಓಡುವಾಗ ಕಾಲಲ್ಲಿ ಬರುವ ತೊಡಕು. ನಾನು ಅವರ ಸಂಭ್ರಮದಲ್ಲಿ ಪೂರ್ಣ `ಒಳ’ಗೊಳ್ಳದೆ ಹೊರಗೆ ಉಳಿಯುತ್ತೇನೆ. +ಸಾಹಿತ್ಯಸಂಜೆಯಲ್ಲಿ ಸಿಕ್ಕ ಹಿರಿಯ ಚಿಂತಕರಿಗೆ ಪರಿಚಯಿಸಿಕೊಂಡು ಎಲ್ಲಾ ಹೇಳಬೇಕು, ಇನ್ನೂ, ಏನೇನೊ ಹೇಳಬೇಕು ಅಂದುಕೋಳ್ಳುತ್ತೇನೆ. ಅವರು ಮಾತ್ರ ಪ್ರೀತಿಯಿಂದ ಹೆಗಲ ಮೇಲೆ ಕೈಹಾಕಿ, `ಬೇಂದ್ರೆ ಇನ್ನೂ ರೆಲೆವಂಟ್, ನಿನಗೆ ಬೇಂದ್ರೆ ಇನ್ನೂ ಇಷ್ಟವಾಗಿರೋದೇ ಇದಕ್ಕೆ ಎವಿಡೆನ್ಸ್ ಫ್ರುಗಾಲಿಟಿಯಿಂದ ಮಾತ್ರ ನಮ್ಮ ಫೋಕ್ ಟ್ರೆಡಿಷನ್ ಉಳಿಸಲು ಸಾಧ್ಯ. ಮತ್ತೆ ಗಾಂಧಿ ಹುಟ್ಟಿ ಬರಬೇಕು.’ ಎನ್ನುತ್ತಾರೆ. ನಾನು ಮತ್ತೆ ಹೊರಗುಳಿಯುತ್ತೇನೆ. ಕೊನೆಯಲ್ಲಿ ಮಿಸ್ಟಿಸಿಸಂ ಮತ್ತು ನ್ಯೂಮರಾಲಜಿಯನ್ನು ಏಕತ್ರಗೊಳಿಸುವ ಬೇಂದ್ರೆ ಕವಿತೆ ಉದ್ಧರಿಸಿ ಬೀಳ್ಕೊಡುತ್ತಾರೆ. ಕವಿತೆ ಬುದ್ಧಿಗೇರುತ್ತದೆ.ಆದರೆ ಲ್ಯಾಬಿನಲ್ಲಿ ಅದೇಕೋ `ಭವ’ದ ಅಂತಃಕರಣೀ ಸೀತಮ್ಮ ಮಾತ್ರ ಇನ್ನೇನು ಹೃದಯಕ್ಕೇರಿ ಕರುಳು ಕಟ್ಟಬೇಕು, ಕಟ್ಟಬೇಕು ಅನ್ನುತ್ತಾ ಹಾಗೆಯೇ ಉಳಿದುಬಿಡುತ್ತಾರೆ. +ರೀಸರ್ಚ್ ಮುಗಿಸಿ ಸಾಯಂಕಾಲ ಮನೆಗೆ ಬಂದರೆ ಹೈದರಬಾದೀ ಗೆಳೆಯ ಟಿವಿ ಯಲ್ಲಿ ಎನ್‌ಬಿಎ ನೋಡುವುದರಲ್ಲಿ ಮಗ್ನನಾಗಿದ್ದಾನೆ. ಟಿವಿ ಯಲ್ಲಿ ಝಗಮಗಿಸುವ ಬೆಳಕಿನಡಿಯಲ್ಲಿ ದೈತ್ಯಾಕಾರದ ಬಾಸ್ಕೆಟ್‌ಬಾಲ್ ಆಟಗಾರರು, ಕ್ರಮವಾಗಿ ಹೆಸರು ಕೂಗಿದಂತೆಲ್ಲ, ಎದೆ ಬಡಿಕೊಳ್ಳುತ್ತಾ `ಯೊ ಯೊ’ ಎಂದು ಪ್ರಾಣಿಗಳಂತೆ ಅರಚುತ್ತಾರೆ. ಕಣ್ಣಿನಲ್ಲಿ ಬೇಟೆಗೆ ಹೊರಟ ಏಕಾಗ್ರತೆ ಇದೆ. ಕಾಮೆಂಟ್ರಿ ಹೇಳುವಾತನೂ ತನಗೆ ದುಡ್ಡು ಬರುವ ಲಾಸ್‌ಏಂಜೆಲ್ಸ್‌ನ ಪರವಹಿಸಿ ಮೈಕಿನಲ್ಲಿ ಜೋರಾಗಿ ಅರಚುತ್ತಲೇ ಇದ್ದಾನೆ. `ಇದೆಲ್ಲಾ ಲೊಲಾಳ ಜೊತೆ ಬಹಳ ಹೊತ್ತು ಓಡಿದ್ದರ ಫಲ’ ಅಂತ ನಾನಂದರೆ, `ಸೋ ವಾಟ್’ , ಅವರು ಅದೇ ಬಗೆಯಲ್ಲಿ ಕಂಡಿಷನ್ ಆಗಿರುವುದು. ಮತ್ತು ನೀನು ನಿನ್ನ ದೇಸಿ ಬಗೆಯಲ್ಲಿ ಕಂಡೀಶನ್ ಆಗಿರುವುದರಿಂದ ಅವರು ನಿನಗೆ ಹಾಗೆ ಕಾಣುವುದು. ನೀನು ನೋಡುವಾಗ ಚಶ್ಮಾ ಬದಲಾಯಿಸಿ ನೋಡಬೇಕು’ ಅಂತ ಅವನು ಅಂದಾನೆಂದು ನಾನೇ ಏನೂ ಮಾತಾಡುವುದಿಲ್ಲ. +ಗಟ್ಟಿಯಾಗಿ ಮಾತಾಡುವ ದನಿ ಕಳೆದುಕೊಂಡಿದ್ದೇನೆ.ಆಗಾಗ ಅಜ್ಜಿಗೆ ಗೊಕುಲಾಷ್ಟಮಿಯ ದಿನ ಮನೆಯ ಹಿತ್ತಲಲ್ಲಿ, ಶುಭ್ರ ನಸುಕಿನಲ್ಲಿ, ತುಳಸಿ ತೆಗೆಯುವಾಗ ಕಂಡ, ತಿಳಿ ಗುಲಾಬಿ ಬಣ್ಣದ ಗೌರಿ ಹೂವಿಂದ ತೊಟ್ಟಿಕ್ಕುವ ಅಮೃತಬಿಂದುವಿನ ನೆನಪಾಗುತ್ತದೆ. `ಮೂಡಲ ಮನೆಯ’ ಪದ್ಯ ನೆನಪಾಗುತ್ತದೆ. ಕಣ್ಣ ಪಸೆಯಲ್ಲಿ ಹನಿಯೊಡೆಯಿತು ಅನಿಸುತ್ತದೆ. ಇರಲಿ, ಅನಿಸಲಿ. ಅದಕ್ಕೇನಂತೆ. ಹಾಗೆಲ್ಲಾ ಅನಿಸಿದರೂ ಓಡಬೇಕು. ಕಣ್ಣೊರೆಸಿಕೊಂಡು ಓಡಬೇಕು. ಸದ್ಯಕ್ಕೆ. +***** +ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ […] +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […] +ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_78.txt b/Kannada Sahitya/article_78.txt new file mode 100644 index 0000000000000000000000000000000000000000..430b506af523d4a834e458604699c648f9d68ce8 --- /dev/null +++ b/Kannada Sahitya/article_78.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪ್ರೇತ ಅಗೋಚರ, ಅಗಮ್ಯವಲ್ಲ +ಕಲ್ಪನೆಗಾದರೂ ಸಿಗತ್ತೆ ಅದು +ಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿ +ಎಷ್ಟೇ ನಿಟ್ಟಿಸಿ ನೋಡು, ದೃಷ್ಟಿ +ಕುರುಹಿಲ್ಲದಂತೆ ಕುಸಿದು ಬಿಡುವುದು. +ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚು +ತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆ +ಸುಸ್ತಲ್ಲಿ ಸಾಂತ್ವನ, ನಿನಗೆ. +ಇವಳೋ ಬಜಾರಿ, ಹೀಗೆ +ತಾನು ಒಳಪಡಿಸಿಕೊಂಡ ಎಲ್ಲರ ಕಣ್ಣುಗಳನ್ನು +ಮುಚ್ಚಿಟ್ಟಾಳು. ಅವಕಾಶ ಸಿಕ್ಕಾಗ ದುರುಗುಡುತ್ತ +ಅವುಗಳನ್ನು ಒಂದೊಂದಾಗಿ ಪರೀಕ್ಷಿಸುವ ಪ್ರೇಕ್ಷಕಿಯಾದಾಳು +ಅವುಗಳನ್ನು ಸುತ್ತ ಇಟ್ಟುಕೊಂಡು ಗುರುಗುಡುತ್ತ +ಮೈಚಾಚಿ ಮುದುಡಿ ನಿದ್ದೆ ಹೋದಾಳು, +ಥಟ್ಟನೇ ಎದ್ದಾಳು. ಎದ್ದು ತಿರುಗಿದಾಗ +ಧುತ್ತನೆ ಅವಳ ಮೋರೆ ನಿನಗೆ ಎದುರಾಗುವುದಿದೆಯಲ್ಲ +ಆಗ ನೀನು ಬೆಚ್ಚುವಿ. +ಅಗೋ ಅವಳ ಹೊಳೆಯುವ ಪಾಪೆಯಲ್ಲಿ +ನೀನೆಷ್ಟು ಪುಟಾಣಿಯಾಗಿ ನೇತು ಬಿದ್ದಿರುವಿ- +ಪುರಾತನ ನೊಣದಂತೆ +೧೦-೧-೯೨ +ಎಷ್ಟು ಮಿದುವೇ ತಾಯಿ, ಇದರ ರೆಕ್ಕೆ-ಪುಕ್ಕಬೆಳುದಿಂಗಳನೆ ಮುಟ್ಟಿದಂತಾಯಿತಕ್ಕ. ಬೆಳಗು ಮುಂಜಾವದಲಿ ಕೇಳಿಸಿದ ಹಾಡುಇದರದೇ ಇರಬಹುದು, ಎಲ್ಲಿದರ ಗೂಡು? ಮಾಡಬೇಡವೆ ಹಾಗೆ ಹಿಚುಕಿ ಗಾಸಿ ಬೀಸಿ,ಯಾಕೊ ನನ್ನೆದೆಯೊಳಗೆ ಒಂಥರಾ ಕಸಿವಿಸಿ. ತಾ ನನಗು ಒಂದಿಷ್ಟು ಈ […] +ದೂರ ದೂರದ ತನಕ ದಾರಿ ಕಾಯುವ ಹುಡುಗಿ ಏನು ಹೇಳೆ ನಿನ್ನ ಮನದ ಅಳಲು. ಯಾವ ಊರಿನ ಅವನು! ಯಾವ ಊರಿನ ಇವಳು! ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ […] +ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- ಎಂದು ಕಿವಿ ನಂಬದಾಯ್ತು. ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ ಅದೇ ಅದೇ ಎಂದು ಖಾತ್ರಿಯಾಯ್ತು. ಮಬ್ಬುಗತ್ತಲೆಯನ್ನು ಭೇದಿಸಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_79.txt b/Kannada Sahitya/article_79.txt new file mode 100644 index 0000000000000000000000000000000000000000..70c0e49f1e6bdfab5f1af1b2723ef4bfd6c0b9f0 --- /dev/null +++ b/Kannada Sahitya/article_79.txt @@ -0,0 +1,34 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, ರಾಜೀವತಾರಾನಾಥರಿಗಾಗಿ – ಈ ಕಥೆಗಳನ್ನು ಬರೆದದ್ದು ಎನ್ನಬಹುದು. ಆತ್ಮಮಂಥನದ ಚಟ ಬೆಳೆಸಿಕೊಂಡ ನನ್ನ ಬರವಣಿಗೆಯನ್ನು ಟೀಕಿಸುತ್ತಿದ್ದ ತಾರಾನಾಥರು ನನ್ನ ‘ ಘಟಶ್ರಾದ್ಧ ’ ಓದಿ, ಅದರ ತಿಳಿಯಾದ ನಿರೂಪಣೆಯಲ್ಲಿ ಓಚಿಟಿi iಟಿ ಜಿiಟm ಉhಚಿಣಚಿshಡಿಚಿಜಜಚಿಹುದುಗಿದ ಅರ್ಥದ ಒಳಸುಳಿಯನ್ನ ಮೆಚ್ಚಿಕೊಂಡರು. ‘ ಘಟಶ್ರಾದ್ಧ ’ಈ ದೃಷ್ಟಿಯಿಂದ ನನ್ನ ಬರವಣಿಗೆಯಲ್ಲಿ ಒಂದು ಘಟ್ಟವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಒಳಜೀವನದ ಪ್ರಸಂಗದಲ್ಲಿ ಸಮುದಾಯದ ಅನುಭವವನ್ನು ಸೂಚಿಸುವ ನನ್ನ ಮುಂದಿನ ‘ ಸಂಸ್ಕಾರ ’ ‘ ಮೌನಿ ’ ಕಥೆಗಳ ಪ್ರಯತ್ನದ ಪ್ರಾರಂಭ ‘ ಘಟಶ್ರಾದ್ಧ ’ದಲ್ಲಿದೆ. +ಇಂಥ ಕಥೆಗಳನ್ನು ಮೆಚ್ಚುವವರು ಹತ್ತಾರು ಜನ ಮಾತ್ರ ಎನ್ನಿಸುತ್ತಿದ್ದ ಆ ಕಾಲದಲ್ಲಿ ಈ ಕಥೆ ಸಿನಿಮಾ ಆದೀತು ಎಂದು ಊಹಿಸುವುದೂ ಸಾಧ್ಯವಿರಲಿಲ್ಲ.ಆದರೆ ದೃಶ್ಯಗಳನ್ನು ಕಣ್ಣಿಗೆ ಕಟ್ಟಿಸುವಂತೆ , ಹೆಚ್ಚೇನು ಸಿನಿಮಾ ನೋಡದ ನಾನು ಆ ಕಾಲದಲ್ಲೇ ಬರೆಯುತ್ತಿದ್ದೆನೆಂಬುದು ಈಗ ನನಗೆ ಆಶ್ಚರ್ಯ. ‘ ಘಟಶ್ರಾದ್ಧ ’ಕ್ಕೂ ಹಿಂದೆ ನಾನು ಬರೆದ ‘ ಹುಲಿಯ ಹೆಂಗರಳು ’ ಎಂಬ ಕಥೆ ಮಾತಿನಲ್ಲಿ ಸೊಕ್ಕಿದ್ದರೂ ಸಿನಿಮಾದ ಚಲಿಸುವ ದೃಶ್ಯಗಳನ್ನು ಹೋಲುತ್ತದೆ. ಕೆಲವೇ ಬುದ್ಧಿವಂತರ ಮೋಜಿಗೆ ಸೃಷ್ಟಿಯಾದ್ದೆಂಬ ಅಪವಾದಕ್ಕೆ ಹಿಂದಿನಿಂದ ಈ ತನಕ ಗುರಿಯಾಗಿರುವ ‘ ನವ್ಯ ’ ತಲೆಪಟ್ಟಿ ಹೊತ್ತ ಈ ಸಾಹಿತ್ಯ , ಸಿನಿಮಾ, ನಾಟಕದಂಥ ಸಮೂಹ ಮಾಧ್ಯಮಗಳಲ್ಲೂ ಹೊಸ ಚೆತನ್ಯದ ಕೃತಿಗಳಿಗೆ ಕಾರಣವಾದದ್ದನ್ನು ಯಾರೂ ಸ್ಪಷ್ಟವಾಗಿ ಗಮನಿಸಿ ಚರ್ಚಿಸಿದಂತೆ ಕಾಣುವುದಿಲ್ಲ. +ಓದುಗ , ಲೇಖಕ ಮತ್ತು ಸಾಹಿತ್ಯದ ಅನುಭವ ದ್ರವ್ಯವನ್ನು ತ್ರಿಕೋಣದ ಮೂರು ಬಿಂದುಗಳಿಗೆ ಹೋಲಿಸಿದ್ದನ್ನು ಎಲ್ಲಿಯೋ ಓದಿದ್ದು ನೆನಪಾಗುತ್ತದೆ. ಈ ತ್ರಿಕೋಣದಲ್ಲಿ ಲೇಖಕ ಓದುಗನಿಗೆ ಹತ್ತಿರವಾಗಿ ತನ್ನ ಅನುಭವ ದ್ರವ್ಯಕ್ಕೆ ದೂರವಾಗಬಹುದು. ಆಗ ಓದುಗನ ನಿಯಂತ್ರಿತ ಮನಸ್ಸು ಬಯಸುವುದನ್ನೇ ಅವನಿಗೆ ಪ್ರಿಯವಾಗುವಂತೆ ಹೇಳುತ್ತ ಲೇಖಕ ತನ್ನ ಅಧಿಕೃತತ್ವವನ್ನು ಕಳೆದುಕೊಂಡು , ತನ್ನ ದ್ರವ್ಯಕ್ಕೆ ಅಪಚಾರ ಮಾಡಿ ಜನಪ್ರಿಯನಾಗುತ್ತಾನೆ. ಆಥವಾ ಈ ತ್ರಿಕೋಣದಲ್ಲಿ ಲೇಖಕ ತನ್ನ ಅನುಭವ ದ್ರವ್ಯಕ್ಕೆ ನಿಕಟವಾಗಿರುವುದರಿಂದ, ಅಪ್ರಿಯವಾದದ್ದನ್ನು ಎದುರಿಸಲು ಇಚ್ಛಿಸದ, ರಂಜಕವಾದ್ದನ್ನು ಮಾತ್ರ ಬಯಸುವ ಓದುಗನಿಗೆ ದೂರವಾಗಬಹುದು.ಇಂಥ ಸಂದರ್ಭದಲ್ಲಿ ಸಾಹಿತ್ಯ ಜನಪ್ರಿಯವಾಗಿರದಿದ್ದರೂ ಶಕ್ತಿ ಮತ್ತು ನೆಜತೆಯನ್ನು ಪಡೆದಿರುತ್ತವೆ. ಸೃಷ್ಟಿಶೀಲನಾದ ಲೇಖಕ ಆರಿಸಿಕೊಳ್ಳಬೇಕಾದರೆಥಿಚಿmuಟಿಚಿ ಎರಡನೇ ಸಂದರ್ಭವನ್ನೇ ಆರಿಸಿಕೊಳ್ಳುತ್ತಾನೆ. ತನ್ನ ಓದುಗನಿಗಾಗಿ ಕಾಯುತ್ತಾನೆ . ಈ ಎರಡೂ ಸಂದರ್ಭಗಳನ್ನು ಬಿಟ್ಟು ಆದರ್ಶವಾಗಿ ಲೇಖಕ ಮತ್ತು ಓದುಗರ ಸಂಬಂಧಗಳು ಅನ್ಯೋನ್ಯವಾದಾಗ ರಂಜಕವಾದ ಉಪಾಯಗಳನ್ನು ಬಳಸದೆ ಓದುಗನ ಜೊತೆ ಲೇಖಕ ಅನುಭವ ದ್ರವ್ಯವನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ. ಇದನ್ನು ಸಾಧ್ಯವಾಗಿಸುವುದು ಓದುಗನ ಅಭಿರುಚಿಯನ್ನು ತಿದ್ದುವ ವಿಮರ್ಶಕನ ಜವಾಬ್ದಾರಿ , ಸಾಹಿತ್ಯದಲ್ಲಿಯಂತೆ ಸಿನಿಮಾಕ್ಕೂ ಈ ಮಾತು ನಿಜ. +ಆದರೆ ಆರ್ಥಿಕ ಕಾರಣಗಳಿಂದಾಗಿ ಸಿನಿಮಾ ಪ್ರೇಕ್ಷಕನನ್ನು ಕಡೆಗಾಣಿಸುವುದು ಕಷ್ಟ. ಆದ್ದರಿಂದಲೇ ಅನುಭವ ತೀವ್ರ ನೆಜ ಅನ್ವೇಷಣೆಯಲ್ಲಿ ಸಿನಿಮಾಕ್ಕಿಂತ ಸಾಹಿತ್ಯ ಮುಂದಿರುತ್ತದೆ.ಆದರೆ ಕನ್ನಡದ ಕೆಲವು ಸಿನಿಮಾಗಳಲ್ಲಾದರೂ ಪ್ರೇಕ್ಷಕನಿಗೆ ಪೂಸಿ ಹೊಡೆಯದಂತೆ ಚಿತ್ರ ನಿರ್ಮಿಸುವುದು ಸಾಧ್ಯವಾಗಿರುವುದು ನಮ್ಮ ಸಂಸ್ಕೃತಿಯ ಆರೋಗ್ಯ ದೃಷ್ಟಿಯಿಂದ ಸಂತೋಷಪಡಬೇಕಾದ್ದು. ಈ ಪ್ರೇರಣೆ ಸಿನಿಮಾಕ್ಕೆ ಸಾಹಿತ್ಯದಿಂದ ಬಂದಿರುವುದು – ಸಿನಿಮಾಕ್ಕೆಂದೇ ಬರೆಯದ ಸಾಹಿತ್ಯದಿಂದ ಬಂದಿರುವುದು- ನನ್ನ ಈ ಲೇಖನದ ದೃಷ್ಟಿಯಿಂದ ಮುಖ್ಯ. +ನನ್ನ ಸ್ನೇಹಿತರೊಬ್ಬರು ” ಘಟಶ್ರಾದ್ಧ ” ಸಿನಿಮಾ ನೋಡಿ ಕೇಳಿದರು : ಕಥೆಗಿಂಥ ಹೆಚ್ಚೇನು ಈ ಸಿನಿಮಾ ಹೇಳುತ್ತದೆ ? ಅರ್ಧ ಘಂಟೆಯಲ್ಲಿ ಕಥೆ ಕೊಡುವ ಅನುಭವವನ್ನು ಪಡೆಯಲು ಇಡೀ ಸಿನಿಮಾವನ್ನು ವಿವರವಿವರವಾಗಿ ಯಾಕೆ ನೋಡಬೇಕು? ಲೇಖಕನಾಗಿ ನಾನು ನನ್ನ ಕಥೆಗೆ ಈ ಸಿನಿಮಾ ಸರಿಸಮವಾಗಿದೆ ಎಂದರೆ , ಅಥವಾ ಕಥೆಗೆ ಬಾಧಕವಾಗದಂತೆ ಸಿನಿಮಾ ಬೆಳೆದಿದೆ ಎಂದರೆ ನನ್ನ ಗೆಳೆಯರ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಂತಲ್ಲ. ಇದು ಗಹನವಾದ ಪ್ರಶ್ನೆ. ಎಲ್ಲ ಕಲೆಯೂ ಅನುಭವವನ್ನು ಅದರ ಸಾರ, ಸಾಂದ್ರ ರೂಪದಲ್ಲಿ ಕೊಡುತ್ತದೆ. ಆದ್ದರಿಂದ ಹೆಚ್ಚು ಕಾಲ ಮತ್ತು ಹೆಚ್ಚು ಶ್ರಮ ಬೇಡುವ ಮಾಧ್ಯಮ ತನಗೇ ಅನನ್ಯವಾದ ಅನುಭವವನ್ನೆ ಕೊಟ್ಟಿದೆ ಎಂದು ಸಾಬೀತು ಮಾಡಿ ತೋರಿಸಿದಲ್ಲಿ ಮಾತ್ರ ಈ ಮಾಧ್ಯಮ ಯಶಸ್ಸನ್ನು ಸ್ಥಾಪಿಸಿದಂತೆ. ಸಿನಿಮಾ ಹೆಚ್ಚು ಜನರನ್ನು ಸೇರುತ್ತದೆ ಎಂಬುದೂ ಅನುಭವದ ಶ್ರೇಷ್ಠತೆಯ ದೃಷ್ಟಿಯಿಂದ ಸಮರ್ಪಕ ವಾದವಲ್ಲ. +ಉದಾಹರಣೆಗೆ ಬUಮನ ‘ಸೈಲೆನ್ಸ್’ ಚಿತ್ರದಲ್ಲಿ ಒಂದು ದೃಶ್ಯವಿದೆ. ಇಬ್ಬರು ಸೋದರಿಯರು ಮತ್ತು ಕಿರಿಯವಳ ಮಗ ಯಾವುದೋ ಹೆಸರಿಲ್ಲದ ಊರಿನಲ್ಲಿ ಒಂದು ಹೋಟೆನಲ್ಲಿ ಇಳಿದುಕೊಂಡಿರುತ್ತಾರೆ. ಹುಡುಗ ಹೋಟೆನ ತನ್ನ ಕಿಟಕಿ ತೆರೆದ ಕೂಡಲೆ ಕರ್ಕಶವಾದ ಬೀದಿಯ ಶಬ್ಧಗಳು ಕೇಳಿಸುತ್ತವೆ. ಮುಚ್ಚಿದ ಕೂಡಲೇ ಆ ಸದ್ದುಗಳು ನಿಂತುಬಿಡುತ್ತವೆ. ಒಮ್ಮೆ ಹುಡುಗನಿಗೆ ಒಂದು ಟ್ಯಾಂP ಚಲಿಸುತ್ತ ಇರುವುದು ಕಾಣಿಸುತ್ತದೆ. ಇನ್ನೊಂದು ದೃಶ್ಯದಲ್ಲಿ ಹುಡುಗ ಹಾಸಿಗೆ ಮೇಲೆ ಮಲಗಿ ವಿಮಾನದ ಚಲನೆಯನ್ನು ಕೆಯಲ್ಲಿ ನಟಿಸುತ್ತ ತನ್ನನ್ನು ತಾನು ರಮಿಸಿಕೊಳ್ಳುವುದನ್ನು ನೋಡುತ್ತೇವೆ. ಮತ್ತೊಂದು ದೃಶ್ಯದಲ್ಲಿ ಹೋಟೆಲಿನ ಕಾರಿಡಾರಿನಲ್ಲಿ ಬಣ್ಣದ ವೇಷಗಳನ್ನು ಧರಿಸಿ ಕುಬ್ಜರು ನಡೆದು ಬರುವುದನ್ನು ನೋಡುತ್ತೇವೆ. ಹಿರಿಯಳನ್ನು ಧಿಕ್ಕರಿಸಿ ಕಿರಿಯವಳು ತನಗೆ ಗೊತ್ತಿರದ ಭಾಷೆ ಮಾತನಾಡುವ ಮಾಣಿಯೊಬ್ಬನ ಜೊತೆ ಸಂಭೋಗಿಸುವುದನ್ನು ನೋಡುತ್ತೇವೆ. ಹಿರಿಯವಳು ತೀವ್ರವಾದ ಅಸೂಯೆಯಲ್ಲಿ ಸಂಕಟ ಪಡುವುದನ್ನೂ , ಮುಷ್ಟಿ ಮೆಥುನ ಮಾಡಿಕೊಳ್ಳುವುದನ್ನೂ , ಕುಡಿದು ನರಳುವುದನ್ನೂ ನೋಡುತ್ತೇವೆ. ಹುಡುಗ ಒಂದು ದೃಶ್ಯದಲ್ಲಿ ಕನ್ನಡಕ ಹಾಕಿ ಓದುತ್ತಾನೆ. ಹೀಗೆ ಅಸಂಬದ್ಧವೆನ್ನಿಸುವ ಘಟನೆಗಳ ಜೋಡಣೆಯಲ್ಲಿ ನನಗೆ ‘ಸೈಲೆನ್ಸ್’ ಚಿತ್ರ , ವಿವರಣೆಯಲ್ಲಿ ತಿಳಿಯಾಗಿಸಲು ಅಸಾಧ್ಯವಾದ ಅನುಭವವನ್ನು ಕೊಟ್ಟಿದೆ ಎನ್ನಿಸಿತು. ಅಂದರೆ ಇದನ್ನು ಸಂಗ್ರಹಿಸುವಂತಿಲ್ಲ. ಸಂಗ್ರಹಿಸಿ ತಿಳಿಯುವಂತಿಲ್ಲ – ಎನ್ನಿಸುವಂಥ ದೃಶ್ಯ ಚಿತ್ರಗಳನ್ನು ನಂಗೆ ಬUಮ ಕೊಡುತ್ತಾನೆ. ನೋಡುವಾಗ ನಮ್ಮ ಮನಸ್ಸಿಗೆ ಏನೇನು ಹೊಳೆಯುವುದೋ ಅದಕ್ಕೆ ನಾವು ನೋಡಿದ್ದು , ಕೇಳಿದ್ದು ಬರೀ ನೆವವಲ್ಲ ; ಭಾವನೆಯನ್ನು ಮನಸ್ಸಿನಲ್ಲಿ ಉಂಟು ಮಾಡಿ ಅನಂತರ ನಿವೃತ್ತವಾಗುವ ಶ್ರವಣ-ದೃಶ್ಯ ವಾಹಕಗಳು ಮಾತ್ರವಲ್ಲ ಅನ್ನಿಸಬೇಕು – ಸಿನಿಮಾದಲ್ಲಿ, ಸಾಹಿತ್ಯದಲ್ಲಿಯಂತೆಯೇ , ಪ್ರಾಯಶ: ಇನ್ನೂ ಹೆಚ್ಚಾಗಿ . ಅಂದರೆ ಮೂರ್ತವಾದ್ದಕ್ಕೂ , ಅಮೂರ್ತವಾದ್ದಕ್ಕೂ ಅಭಿನ್ನವಾದ , ಒಂದು ಇನ್ನೊಂದರಲ್ಲಿ ಒಳಪಟ್ಟ ಸಂಬಂಧ ಸಿನಿಮಾದಲ್ಲಿರಬೇಕಾಗುತ್ತದೆ – ಈ ಮಾಧ್ಯಮದ ವಿಶಿಷ್ಟ ಗುಣವೇ ಅದು. ಭಾಷೆಯಲ್ಲಾದರೂ ಅನ್ಯೋಕ್ತಿಯಿದೆ ; ಕಾವ್ಯದಲ್ಲಿ ‘ ಓಡಿದೆ ‘ , ‘ ಕಣ್ಣು ಮುಚ್ಚಿದೆ ‘ ಇತ್ಯಾದಿಗಳನ್ನು ರೂಪಕಗಳಾಗಿ ಉಪಯೋಗಿಸಬಹುದು . ” ಓಡಲೆಳಸುತಿಹುದು ಜೀವ ” ಎಂಬ ಮಾತು ವಾಚ್ಯಾರ್ಥದ ನಿವೃತ್ತಿಯಲ್ಲೇ ಸಾರ್ಥಕವಾಗುವಂಥದು. ನನಗೆ ಬUಮನ ‘ಸೈಲೆನ್ಸ್’ ನಲ್ಲಿ ಸಭ್ಯ ಗೃಹಸ್ಥನಂತೆ ಕಾಣುವ ಆ ಉದ್ದ ಮೂಗಿನ ಕನ್ನಡಕ ಹಾಕಿದ ವೆಟg ಈ ಮೂಲಕ ಬUಮ ಏನು ಹೇಳುತ್ತಾನೆ ಎಂಬ ಅರ್ಥವಿಶೇಷಕ್ಕೆ ಒದಗುವ ರೂಪಕ ಮಾತ್ರವಲ್ಲ; ಅವನ ಮೂಲಕ ನಾವು ಏನು ಕಾಣುತ್ತೇವೋ ಅದರ ಜೊತೆ ಅವನೂ ಕಾಣುತ್ತಲೇ ಇರುತ್ತಾನೆ. ( ಉತ್ತಮ ಸಾಹಿತ್ಯದಲ್ಲೂ ಹೀಗಾಗಬಹುದು ). ಓದುವ ಕಥೆಯಲ್ಲಿ ನೋಡಿದಂತೆ , ಕೇಳಿದಂತೆ ಅನ್ನಿಸುವುದು ಲೇಖಕನ ಶ್ರೇಷ್ಠ ಕಲೆಗಾರಿಕೆಗೆ ನಿದರ್ಶನವಾದರೆ ಸಿನಿಮಾದಲ್ಲಿ ನಾವು ನೋಡುತ್ತೇವೆ, ಕೇಳಿಸಿಕೊಳ್ಳುತ್ತೇವೆ ಚಿತ್ರ ಎಷ್ಟು ಕಳಪೆಯಾದರೂ ಕಣ್ಣಿನ ಎದುರು ಕಟ್ಟಲೇಬೇಕಲ್ಲ ! ಸಿನಿಮಾದ ಭಾಷೆಯೇ ಅದಾದ ಮೇಲೆ ನಾವು ನೋಡಿದ್ದು, ಕೇಳಿದ್ದು ಅತ್ಯಂತ ಗಾಢವಾಗದೆ ಸಿನಿಮಾ ಶ್ರೇಷ್ಠವಾಗಲಾರದು. ನಾವು ಈಗ ನೋಡಿದ್ದು ಇನ್ನು ಮುಂದೆ ನಾವು ನೋಡುವುದಕ್ಕೆ ಮೆಟ್ಟಿಲಾದರೆ, ಮುಂದೇನು ಎಂದು ಕುತೂಹಲ ಕೆರಳಿಸುವ ಸಪೆನ್ಸೇ ಚಿತ್ರದಲ್ಲಿ ಮುಖ್ಯವಾದರೆ ( ಕಥೆಯಲ್ಲೂ ಕೂಡ ) ಆಗ ಸಿನಿಮಾ ನಮಗೆ ನೋಡಿಸುವುದೆಲ್ಲ ತೆಳುವಾಗುತ್ತ ಮುಂದಕ್ಕೆ ಹರಿಯುವ ದೃಶ್ಯಗಳಾತ್ತವೆ ಅಷ್ಟೆ. ಅಲ್ಲಲ್ಲೇ ಓದಬಹುದು, ಸಿನಿಮಾದಲ್ಲಾದರೋ ಇದು ಸಾಧ್ಯವಿಲ್ಲ. ಆದ್ದರಿಂದ ಮುಂದೆ ಹರಿಯುವುದೇ ಸಿನಿಮಾದ ಸಹಜ ಗುಣವಾದ್ದರಿಂದ ಹೀಗೆ ಮುಂದೆ ಹರಿಯುತ್ತಿರುವಾಗಲು ಹರಿಯುತ್ತಿರುವುದು ನಮ್ಮ ಮನಸ್ಸಿನಲ್ಲಿ ನಿಲ್ಲುವಂತೆ ಮಾಡುವ ಶಕ್ತಿ ದೃಶ್ಯ ಘಟಕಗಳಲ್ಲಿ ಅಡಕವಾಗಿರಬೇಕಾಗುತ್ತದೆ. ಕಥೆಯಲ್ಲಿ ಮುನ್ನಡೆಯನ್ನು ನಮ್ಮ ಮನಸ್ಸು ತಡೆ ಹಿಡಿದು ಚಿಂತಿಸುವುದು ಸಾಧ್ಯವಿರುವಂತೆ , ಸಿನಿಮಾದಲ್ಲಿ ಸಾಧ್ಯವಿಲ್ಲದಿರುವುದರಿಂದಲೇ ಸಿನಿಮಾ ನಮ್ಮ ಚಿಂತನೆಯನ್ನು ಉದ್ದೀಪನಗೊಳಿಸಲು ಮುಂದೆ ಚಲಿಸುವಾಗಲೇ ಹಿಂದಿನದನ್ನೆಲ್ಲ ನಮ್ಮ ಮನಸ್ಸು ಕೂಡಿಟ್ಟುಕೊಂಡು ನೋಡುವಂತೆ ಮಾಡುವ ಹಲವು ಉಪಾಯಗಳನ್ನು ಬಳಸಬೇಕಾಗುತ್ತದೆ. +ಗಿರೀಕಾಸರವಳ್ಳಿಯ “ಘಟಶ್ರಾದ್ಧ” ನನ್ನ ಕತೆಯ ಜೊತೆ ಅತ್ಯಂತ ನಿಕಟವಾದ ಸಂಬಂಧ ಇಟ್ಟುಕೊಂಡಿದೆ. ನಾನು ಬೆಳೆದ ಪರಿಸರ ಗಿರೀಕಾಸರವಳ್ಳಿ ಬೆಳೆದ ಪರಿಸರಗಳ ನಡುವೆ ಅನೇಕ ಸಾಮ್ಯಗಳಿವೆ. ಒಬ್ಬ ಹುಡುಗ ಬೆಳೆದು ದೊಡ್ಡವನಾಗುವ ಕಷ್ಟ , ಮುಗ್ಧತೆ ಕಳೆದುಕೊಳ್ಳಬೇಕಾದ ಅನಿವಾರ್ಯ , ಅದರ ಸಂಕಟ , ನೆತಿಕ ಪ್ರಜ್ಞೆ ಬೆಳೆಸುವ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ತೊಡಕುಗಳು – ಇಂಥ ವಿಷಯಗಳಲ್ಲಿ ನನ್ನ ಅನುಭವಗಳೆಲ್ಲ ತನ್ನ ಸ್ವಂತ ಅನುಭವಗಳು ಎನ್ನುವಂತೆ ಗಿರೀಕಾಸರವಳ್ಳಿ “ಘಟಶ್ರಾದ್ಧ ” ಮಾಡಿದ್ದಾರೆ. ಸಿನಿಮಾ ನೋಡುವಾಗ ನನ್ನ ಕಥೆಯ ಅನುಭವ ದ್ರವ್ಯವನ್ನು ಪ್ರತ್ಯಕ್ಷ ಕಂಡಂತೆ ನನಗೆ ಅನ್ನಿಸಿತು. ಈ ಮನೆಯಲ್ಲಿ , ಈ ನದಿ ದಡದಲ್ಲಿ , ಈ ಮಗುವಿಗೆ , ಈ ಜನರ ನಡುವೆ ಹೀಗೆಲ್ಲ ಆಯಿತು ಎನ್ನಿಸುವಂತ ಅಧಿಕೃತ ದಾಖಲೆಯಾಗಿ “ಘಟಶ್ರಾದ್ಧ ” ಸಿನಿಮಾ ಬಂದಿದೆ. ಕೆ.ವಿ.ಸುಬ್ಬಣ್ಣ ಪರಿಸರ ನಿರ್ಮಾಣ ಮತ್ತು ಸಂಭಾಷಣೆಗಳಲ್ಲಿ ನನ್ನ ಕಥೆಯ ಒಳದನಿಗಳಿಗೆ ಜೀವ ಕೊಟ್ಟಿದ್ದಾರೆ. ರಾಮಚಂದ್ರರ ಛಾಯಾಗ್ರಹಣದಲ್ಲಿ ನಾಣಿ ಬಾಲಶಂಕರನಂತೆ ಕಾಣುತ್ತಾನೆ – ಅವರು ಆರಿಸುವ ಕೋನಗಳು ನನ್ನ ಕಥೆಯ ಮೌನವಾದ ಸೂಚನೆಗಳನ್ನೆಲ್ಲ ತುಂಬುತ್ತವೆ. ನನ್ನ ಕಥೆಯಲ್ಲಿ ನಾಣಿ ಘಟನೆಗಳನ್ನು ಬರೀ ಸ್ವೀಕರಿಸುವ ಪ್ರೇಕ್ಷಕನಾಗಿದ್ದವನು ಹಾವನ್ನು ಕಲ್ಲಿನಿಂದ ಹೊಡೆಯುವ ಘಟನೆಯ ಮೂಲಕ ಸಕ್ರಿಯವಾಗಿ ದುರಂತದಲ್ಲಿ ಭಾಗಿಯಾಗುತ್ತಾನೆ. ಅವನಲ್ಲಾಗುವ ಬದಲಾವಣೆಗಳನ್ನು ಉಡುಪಿನ ಮೂಲಕ , ಅವನು ಹಿಡಿಯುವ ಬುಟ್ಟಿ , ಅದನ್ನು ಅವನು ಹೊಳೆಯಲ್ಲಿ ಕಳೆದುಕೊಳ್ಳುವುದು – ಇವುಗಳ ಮೂಲಕ ಗಿರೀಕಾಸರವಳ್ಳಿ ಸ್ಥಾಪಿಸುತ್ತಾರೆ. ಚಿತ್ರದ ಉದ್ದಕ್ಕೂ ಬರುವ ನಾಣಿಯನ್ನು ಶಾಸ್ತಿ ಮತ್ತು ಗಣೇಶ ಚುಡಾಯಿಸುವ ಡ್ಘಟನೆಗಳು ಹಾಸ್ಯದ ಮಗ್ಗುಲನ್ನು ಉಳಿಸಿಕೊಂಡೂ ಹಿಂಸೆಯಾಗುತ್ತಾ ಹೋಗುತ್ತವೆ . ಇದು ಹುಡುಗ ಬೆಳೆಯಲು ಅಗತ್ಯ , ಜೊತೆಗೆ ಕ್ರೂರ ಎನಿಸುತ್ತದೆ. ಯಮುನಕ್ಕನಿಂದಾಗಿಯೂ ನಾಣಿ ತನ್ನ ಮುಗ್ಧತೆ ಕಳೆದುಕೊಳ್ಳುತ್ತಾವೆ ; ಮೊದಲನೆ ಸುಳ್ಳು ಹೇಳಿಸುವವಳು ಅವಳು . ನಂತರ ಎಲ್ಲರೂ ಅವನ ಹತ್ತಿರ ಸುಳ್ಳು ಹೇಳಿಸುತ್ತಾರೆ. ಯಮುನಕ್ಕನಾದಿಯಾಗಿ ಎಲ್ಲರೂ ಅವನನ್ನು ಜಗ್ಗಾಡುತ್ತಾರೆ. ಶಾಸ್ತಿ ಪರದೇಶಿ ; ಯಮುನಕ್ಕ ನಿರ್ಭಾಗ್ಯ ವಿಧವೆ , ದು:ಖಿ – ಈ ಎಲ್ಲರ ಸಂಬಂಧದಲ್ಲೂ ನಾಣಿಯನ್ನು ವಿಕಾರಗೋಳಿಸುವ ಅಂಶಗಳಿವೆ. ಮತ್ತು ಅವನನ್ನು ಪಕ್ವಗೊಳಿಸುವ ಜೀವನ ಸತ್ವಗಳಿವೆ. ನಾನಿ ಮತ್ತು ಯಮುನಕ್ಕ ಇಬ್ಬರೂ ಒಂದು ದೃಷ್ಟಿಯಿಂದ ಮುಗ್ಧರೆ – ಇಬ್ಬರ ಮುಗ್ಧತೆಗಳೂ ಶೋಷಣೆಗೆ ಒಳಗಾಗಿದೆ. ಯಮುನಕ್ಕ ಗರ್ಭವತಿಯಾಗುವ ಮೂಲಕ ಜೀವನ ಪ್ರವೇಶಿಸಿದ್ದಾಳೆ. ಅವಳ ಒಳಗಿನ ಗರ್ಭ , ಹೊರಗಿನ ನಾಣಿ , ಗರ್ಭ ಸೂಚಿಸುವ ಜೀವನದ ಸಮೃದ್ಧಿ , ಈ ಸಮೃದ್ಧಿಯನ್ನು ಸ್ತುತಿ ಮಾಡುವ ವೇದ ಘೋಷಗಳು , ಈ ವೇದ ಹೇಳುವುದರ ವಿರುದ್ಧ ವೆದಿಕರು ಆಚರಿಸುವ ( ಜೀವನ ಸಮೃದ್ಧಿಯನ್ನು ನಿರಾಕರಿಸುವ ) ವಿಧ್ಯುಕ್ತ ಕ್ರಿಯೆಗಳು – ಇವೆಲ್ಲ ಒಂದು ದಟ್ಟ ಪ್ರಪಂಚವನ್ನು ಸೃಷ್ಟಿಸುತ್ತವೆ. +ನಾಣಿ ಬೆಳೆಯುವ ಹಂತಗಳು ತೀವ್ರವಾಗಿ ಸಿನಿಮಾದಲ್ಲಿ ಚಿತ್ರಿತವಾಗಿವೆ. ಸುಳ್ಳು ಹೇಳುವುದರ ಮೂಲಕ ಪಿತೂರಿಯಲ್ಲಿ ಪಾಲುದಾರನಾಗುತ್ತಾನೆ. ನಿಷೇದಗಳನ್ನು ಒಂದೊಂದಾಗಿ ಮುರಿಯುತ್ತಾನೆ. . ಮೆಲಿಗೆಯಲ್ಲಿ ನಾಗರ ಕಲ್ಲನ್ನು ಮುಟ್ಟುತ್ತಾನೆ.; ಹೊಲೆಯ ಕಟೀರನನ್ನು ಮುಟ್ಟಲು ಬಯಸುತ್ತಾನೆ. ಅವನ ಎಲ್ಲ ಭೀತಿಗಳನ್ನು ಪ್ರತಿನಿಧಿಸುವ ಹಾವಿಗೆ ಕಲ್ಲು ಹೊಡೆಯುತ್ತಾನೆ ; ಗರ್ಭಪಾತಕ್ಕಾಗಿ ಯಮುನಕ್ಕ ಪರ್ಬು ಹತ್ತಿರ ಹೋದಾಗ ಶೂದ್ರಪ್ರಪಂಚ ನೋಡುತ್ತಾನೆ – ಈ ಪ್ರಕ್ರಿಯೆಯಲ್ಲಿ ಜೀವನವನ್ನು ಪ್ರವೇಶಿಸುತ್ತಾನೆ. ಒಂದು ದೃಷ್ಟಿಯಲ್ಲಿ ಕಳೆ‌ಅಯಲೇ ಬೇಕಾದ ಅವನ ಮುಗ್ಧತೆ ಕಳೆಯುತ್ತದೆ. ಅದರ ಜೊತೆಗೆ ಅವನ ನೆತಿಕ ಪ್ರಜ್ಞೆ ಬೆಳೆಯುತ್ತದೆ. ತನ್ನ ವೈದಿಕ ಸಂಸ್ಕೃತಿಯಲ್ಲಿ ಅಡಗಿದ ಕ್ರೌರ್ಯದಿಂದ ಮತ್ತು ಪ್ರೇಮ ಸಹಾನುಭೂತಿಗಳ ದಾರಿದ್ರ್ಯದಿಂದ ಹೇಸುತ್ತಾನೆ. ಇಡೀ ಅಗ್ರಹಾರ ಅವನನ್ನು ಕರೆಯುತ್ತಿದ್ದಾಗ ಅವರನ್ನು ಧಿಕ್ಕರಿಸಿ ನಾಣಿ ಯಮುನಕ್ಕನ ಜೊತೆ ಕೂರುವುದು ಅವನದೇ ಆಯ್ಕೆ. ಇಲ್ಲಿಯ ತನಕ ಅವನು ಬೆಳೆಯುತ್ತಾನೆ. +ಗಿರೀಕಾಸರವಳ್ಳಿ ನನ್ನ ಕಥೆಗೆ ಅತ್ಯಂತ ಮಹತ್ವಪೂರ್ಣವಾದ ಒಂದು ವಿವರ ಸೇರಿಸಿದ್ದಾರೆ. ನಾಣಿ ನನ್ನ ಕಥೆಯಲ್ಲಿ ಶಾಸ್ತಿಯ ಬಲಾತ್ಕಾರಕ್ಕೆ ನಾಗರಕಲ್ಲನ್ನು ಮೈಲಿಗೆಯಲ್ಲಿ ಮುಟ್ಟುತ್ತಾನೆ . ಆದರೆ ಸಿನಿಮಾದಲ್ಲಿ ಹೀಗೆ ಬಲಾತ್ಕಾರಕ್ಕೆ ಮುಟ್ಟಿದನಂತರ , ತನ್ನ ಭಯವನ್ನು ಗೆದ್ದ ಖುಷಿಯಲ್ಲಿ ಮತ್ತೆ ಮತ್ತೆ ಮುಟ್ಟುತ್ತಾನೆ. ಇದು ಕಥೆಯ ಅರ್ಥವನ್ನು ಬೆಳೆಸುತ್ತದೆ ಎಂದು ನನಗೆ ಅನ್ನಿಸಿದೆ. +ಬ್ರಹ್ಮರಾಕ್ಷಸ , ಕೊಳ್ಳಿದೆವ್ವ , ನಾಗರಕಾಟ ಹೀಗೆ ಭಯಾನಕವಾದ ಮೂಢನಂಬಿಕೆಗಳಿಂದ ಹುಟ್ಟಿದ ಅತಿಮಾನುಷದ ಮೂಲಕ ನಾಣಿ ಗ್ರಹಿಸುತ್ತ ಹೋಗುವ ಘಟನೆಗಳು ಪ್ರೇಕ್ಷಕರಿಗೆ ಮಾತ್ರ ವಾಸ್ತವ ಪ್ರಪಂಚದಲ್ಲಿ ನಡೆಯುವ ಪ್ರೇಮ ಪ್ರಕರಣ , ಆ ಬಗ್ಗೆ ಸಂಚು ಇತ್ಯಾದಿ ಸಾಮಾನ್ಯ ಸಂಗತಿಗಳು . ಆದರೆ ನಾಣಿ ಗ್ರಹಿಸುವ ಕ್ರಮವನ್ನು ನನ್ನ ಕಥೆಯಾಗಲೀ ಸಿನಿಮಾವಾಗಲೀ ನಿರಾಕರಿಸುವುದಿಲ್ಲ. ಅವನ ಮುಗ್ಧ ಗ್ರಹಣಕ್ಕೆ ಕಾಣುವ ಸತ್ಯಗಳು ದೊಡ್ಡವರಿಗೆ ಕಾಣದೆ ಹೋಗುತ್ತವೆ. ಕಥೆ ಹೀಗೆ ಏಕಕಾಲಕ್ಕೆ ವಾಸ್ತವಿಕ ಮತ್ತು ಅತಿಮಾನುಷ – ಎರಡೂ ಪಾತಳಿಗಳಲ್ಲೂ ಸಂಭವಿಸುತ್ತದೆ . ನಾಣಿಯ ಮುಗ್ಧತೆ ಕಳೆಯುತ್ತಾ ಹೋದಂತೆ – ಶಾಸ್ತಿ ಗಣೇಶರ ಮೂಲಕ – ಅವನು ವಾಸ್ತವವನ್ನು ಗ್ರಹಿಸುವ ಶಕ್ತಿಯನ್ನು ಪಡೆಯುತ್ತಾ ಹೋಗುತ್ತಾನೆ. ಬೆಳೆಯಲು ಅವನಿಗೆ ಶಾಸ್ತಿ – ಗಣೇಶ ಬೇಕು, ಆದರೆ ಅವನ ಅಂತಃಕರಣ ಶ್ರೀಮಂತವಾಗಲು ಯಮುನಕ್ಕಳ ದಾರುಣ ವೇದನೆಯಿಂದ ಹುಟ್ಟಿದ ಪ್ರೇಮ ಬೇಕು. ಸಿನಿಮಾದಲ್ಲೂ ಇಂಥ ಇನ್ನೂ ಅನೇಕ ದ್ವಂದ್ವಗಳನ್ನು ವಿಧ್ಯುಕ್ತಕ್ರಿಯೆಗಳ ಮೂಲಕ, ಶೈಲಿಕರಣ ತಂದುಕೊಡುವ ಸ್ವಾತಂತ್ರ್ಯದ ಮೂಲಕ ಕೃತಕವಾಗಿ ಕಾಣದಂತೆ ಗಿರೀಕಾಸರವಳ್ಳಿ ಚಿತ್ರಿಸಿದ್ದಾರೆ. +“ಘಟಶ್ರಾದ್ಧ” ಅವಸರವಿಲ್ಲದೆ ನಡೆಯುತ್ತದೆ. ಆದ್ದರಿಂದಲೇ ಕವನದ ಶಬ್ದಗಳಂತೆ ಸಿನಿಮಾ ದೃಶ್ಯಗಳು ಒಂದಕ್ಕೊಂದು ಲಗತ್ತಾಗುತ್ತ ಸಾಂದ್ರವಾದ ಪ್ರಪಂಚ ನಿರ್ಮಿಸುತ್ತವೆ. ಮಲೆನಾಡಿನ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರ ಕತೆ – ಅದರಲ್ಲೂ ಈ ಸುಬ್ಬಣ್ಣನವರ ಸಂಭಾಷಣೆಯಿಂದಾಗಿ ವಿಶಿಷ್ಟ ಬ್ರಾಹ್ಮಣ ಪಂಗಡ ಒಂದರ ಕಥೆ – ಒಂದು ಸಾರ್ವತ್ರಿಕ ಅನುಭವವಾಗುತ್ತದೆ. ನನ್ನ ಕಥೆಯಲ್ಲಿ ನಾಣಿ ನೋಡುತ್ತಾನೆ ; ಸಿನಿಮಾದಲ್ಲೂ ನಾಣಿಯೂ ಇದ್ದಾನೆ . ಸ್ಕೂಲಿನ ಕಿಟಕಿಯಲ್ಲಿ ನೋಡುತ್ತ ನಿಂತು ಸೀಮೆ ಸುಣ್ಣ ಎತ್ತಿಕೊಂಡು ಕಾಡಿನಲ್ಲಿ ಓಡಿಹೋಗುವ ನಾನಿ , ( ಪ್ರಾಯಶಃ ಈ ಸಂದರ್ಭದಲ್ಲಿ ಕಾರಂತರ ಹಿನ್ನೆಲೆ ಸಂಗೀತದಿಂದಾಗಿ ) ಯಮುನಕ್ಕನಿಗೆ ಒದ್ದನಂತರ ಅವಳ ಗಮನ ಸೆಳೆಯಲು ಪ್ರಯತ್ನಿಸುವ ನಾಣಿ , ನಖಶಿಖಾಂತ ಬಾಲಶಂಕರನಂತೆ ಕಾಣುವ ನಾಣಿ – ಈ ಕಥೆ ನನ್ನದಲ್ಲ ಎನ್ನಿಸುವಷ್ಟು ನನಗೇ ಹೊಸ ಅನುಭವ ತಂದುಕೊಟ್ಟಿದ್ದಾನೆ. +ನನ್ನ ಕಥೆಯಲ್ಲಿ ಯಮುನಕ್ಕ ತಲೆ ಬೋಳಿಸಿದ ವಿಧವೆ . ಸಿನಿಮಾದಲ್ಲಿ ಹಾಗೆ ಚಿತ್ರಿಸುವುದು ಗಿರೀಕಾಸರವಳ್ಳಿಗೆ ಸಾಧ್ಯವಾಗಲಿಲ್ಲ. ಸಾಧ್ಯವಾಗದ್ದನ್ನು ಬೇರೆ ರೀತಿಯಲ್ಲಿ ಅವರು ತುಂಬಿದ್ದಾರೆ ನಿಜ – ಆದರೂ ಪ್ರೇಕ್ಷಕ ಸಿನಿಮಾವನ್ನು ನಿಯಂತ್ರಿಸುತ್ತಾನಲ್ಲ! +ಕನ್ನಡ ಸಿನಿಮಾರಂಗದಲ್ಲಿ ಕವಿಯ ಮನೋಧರ್ಮವಿರುವ ನಿರ್ದೇಶಕ ಗಿರೀಕಾಸರವಳ್ಳಿ ಎಂದು ನನಗೆ ಅನ್ನಿಸಿದೆ. ಅದರ ಪ್ರತಿಭೆ ಇನ್ನಷ್ಟು ಹೆಚ್ಚನ್ನು ಸಾಧಿಸಲು ಸಾಹಿತ್ಯದ ಸುಸಂಬದ್ಧ ನಿರೂಪಣಾ ಕ್ರಮಗಳಿಂದ ಅವರು ಬಿಡುಗಡೆಯಾಗಬೇಕೇನೊ? ಆದರೆ ಸಾಹಿತ್ಯ ಕೃತಿಗಳು ಕೊಡುವ ಅಪ್ಪಟ ಅನುಭವವನ್ನು ಸಿನಿಮಾದಿಂದ ಬಯಸುವಷ್ಟು ಮಾತ್ರ ಪ್ರೇಕ್ಷಕ ಬೆಳೆದಿದ್ದಾರೆ. ಅದಕ್ಕೆ ಆಚಿನದನ್ನು – ಸಿನಿಮಾಕ್ಕೆ ಮಾತ್ರ ಸಾದ್ಯವಾದದ್ದನ್ನು ಗಿರೀಶ ಸೆಲ್ಯುಲಾಯ್ಡ್‍ನಲ್ಲಿ ನಿರ್ವಹಿಸಲು ಪ್ರೇಕ್ಷಕರೂ ಅಂಥದ್ದಕ್ಕೆ ಸಿದ್ಧರಾಗಬೇಕಲ್ಲ! +***** +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +ಎಲ್ಲೇ ಹೋಗಲಿ-ಯಾರೇನೇ ತಪ್ಪು ಮಾಡಿದರೂ ‘ಕತ್ತೆ’ ಎಂಬ ಬೈಗುಳದ ಸುರಿಮಳೆ ಕೇಳಿ ಕೇಳಿ ‘ನಿಜವಾದ ಕತ್ತೆ’ ದೆಂಡಮಂಡಲವಾಗಿತ್ತು. “ಕನ್ನಡ ಚಿತ್ರರಂಗ ಈಗ ಕೊಳಕು ಭಾಷೆಗೆ, ಕೆಟ್ಟ ಬೈಗುಳಗಳಿಗೆ ಹೆಸರಾಗಿದೆ. ಆಕ್ಷನ್ ಫಿಲಂಸ್ ಆರಂಭವಾದ ಮೇಲಂತೂ […] +೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_8.txt b/Kannada Sahitya/article_8.txt new file mode 100644 index 0000000000000000000000000000000000000000..b8336685ab22c1727107f611d341364a4623eb95 --- /dev/null +++ b/Kannada Sahitya/article_8.txt @@ -0,0 +1,64 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೇಪಥ್ಯ +ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ ರಸಕ್ಷಣಗಳ ಸುಂದರ ನೆನಪಿನ ಮಾಲೆಯನ್ನೆ? ಕೇವಲ ಹಿಂದಿನ ದಿನದ ದಿನಚರಿಯನ್ನೇ ? ಒಂದು ಪತ್ರವನ್ನೇ ? ಬೇರೊಬ್ಬರ ಹಣೆಬರಹವನ್ನೆ ? ಈ ಇಂಥಾ ಪ್ರಶ್ನೆಗಳೆಲ್ಲಾ ಭಾಸ್ಕರರಾಯರನ್ನು ಕಾಡಿದ್ದಿರಬಹುದು. ಈ ಎಪ್ಪತ್ತರ ಇಳಿವಯಸ್ಸಿನಲ್ಲಿ, ನಡುಗುವ ಕೈಗಳಲ್ಲಿ ಬರೆಯುವುದಾದರೂ ಏನನ್ನು ? ಬರೆದರೂ ಅದರ ಪರಿಣಾಮ ಎಷ್ಟರ ಮಟ್ಟಿಗೆ? ಬರೆದದ್ದರಿಂದ ಚೆರಿತ್ರೆಯನ್ನು ಅಳಿಸಲು ಸಾಧ್ಯವೇ ? ಇಲ್ಲವೆನ್ನಿಸುತ್ತದೆ. ಹೋಗಲಿ ಮುಂದೆ ಭವಿಷ್ಯದ ದಿಕ್ಕನ್ನಾದರೂ ಬದಲಾಯಿಸಬಹುದೇ ? ಗೊತ್ತಿಲ್ಲ. ಈ ಲೋಕದ ಬಗ್ಗೆ ಬರೆದು, ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎನ್ನಬಹುದೇ ? ಆ ಕಾಲದಲ್ಲಿ ಭಾಸ್ಕರರಾಯರು ಏನನ್ನಾದರೂ ಬರೆದಿದ್ದರೆ ಬಹುಶಃ ಈಗ ಅದರ ಪರಿಣಾಮ ತಿಳಿಯಬಹುದಿತ್ತೇನೋ…. ಆದರೆ ಈಗ ಬರೆಯಲಿರುವುದರ ಪರಿಣಾಮ ಜಿವನದುದ್ದಕ್ಕೂ ತಿಳಿದಿತೋ…. ತಿಳಿಯದೇ ಇದ್ದಿತೋ. ಮೈಸೂರಿನ ಮೂಲೆಯೊಂದರಲ್ಲಿ ಕುಳಿತು ಬರೆವ ತಮ್ಮ ಬರವಣಿಗೆಯನ್ನು ಓದುವುದಾದರೂ ಯಾರು ? ಬಹುಶಃ ತಾವೊಬ್ಬರೇ ಜತೆಗೆ!….? ಹಾಗಾದರೆ ಈಗ ಬರೆಯಲೇಬೇಕೆ ? ಈ ಪ್ರಶ್ನೆ ಎದುರಾದಾಗ, ತಮ್ಮ ಬರವಣಿಗೆಯನ್ನು ಓದುವ ಒಂದೇ ವ್ಯಕ್ತಿಯ ಮುಖ, ರಾಯರ ಮನಸ್ಸಿನಲ್ಲಿ ಹಾಯ್ದುಹೋಯಿತು. ಹಿಂದೆ ರಾಯರು ಹೆಚ್ಚು ಬರೆದವರಲ್ಲ. ಹಿಂದೇನಾದರೂ ರಾಯರು ಬರೆದಿದ್ದರೆ, ಅದಷ್ಟು ಜನರ ವಿಧಿಬರಹವಾಗಿ ಪರಿಣಮಿಸುತ್ತಿತ್ತೋ ತಿಳಿಯದು…. ಈಗವರು ಬರೆಯಬೇಕಾದ್ದೇನು ಅದರ ಪರಿಣಾಮ ಏನಿರಬಹುದು ಎಂದು ಆಲೋಚಿಸದೆಯೇ ಲೇಖನಿಯನ್ನು ಕೈಗೆತ್ತಿಕೊಂಡಾಗ, ಅವರ ಕೈ ಮೀರಿದ ಶಕ್ತಿಯೊಂದು ಸಹಜವಾಗಿ ಅವರಿಂದ ಏನನ್ನೋ ಬರೆಸುತ್ತಾ ಹೋಯಿತು. +ಎಂಟನೇ ಮುಖ್ಯ ರಸ್ತೆ +ಎಂಟನೇ ಮುಖ್ಯ ರಸ್ತೆಯ ಹದಿನಾರನೇ ನಂಬರ್ ಮನೆಯ ಬಳಿ ಗೇಟಿನ ಮುಂದೆ ಬೇಸರದಿಂದ ಕಾದು ನಿಂತಿರುವ ಕುಮುದಾಳಿಗೆ ಅನತಿದೂರದಿಂದ ತಮ್ಮ ಮನೆಯೆಡೆಗೆ ಹೆಜ್ಜೆ ಹಾಕುತ್ತಿರುವ ಆಕೃತಿಯ ಬಗ್ಗೆ ಅನುಮಾನವೇ ಇಲ್ಲ. ಕುಮುದಾ ಈ ನಿರೀಕ್ಷೆಯಲ್ಲಿಯೇ ಇದ್ದಾಳೆ. ಬೆಳಿಗ್ಗೆ ಒಂಬತ್ತು ಗಂಟೆಗೇ ಬರುತ್ತೇನೆಂದ ಗೆಳತಿ ಲಲಿತ ಬಂದಿರಲಿಲ್ಲವಾದುದರಿಂದಲೇ ಕುಮುದಾ ಕಾತರದಿಂದ ಗೇಟಿನ ಬಳಿ ನಿಂತದ್ದು. ಲಲ್ಲೂ ಮನೆ ಸಮೀಪಿಸುತ್ತಿದ್ದಂತೆಯೇ ಅಂತೂ ಕಡೆಗೂ ಬಂದಳಲ್ಲ ಎಂದು ನಿಟ್ಟುಸಿರಿಡುತ್ತಲೇ ಕುಮುದಾ ಒಳ ಹಾಜರ ಪ್ರವೇಶಿಸಿ ಬೆತ್ತದ ಕುರ್ಚಿಗೆ ಬೆನ್ನೊರಗಿಸುತ್ತಾಳೆ. ಸರಸರನೆ ಒಳಬಂದ ಲಲ್ಲೂ ಮಾತಿಗೆ ತೊಡಗುತ್ತಾಳೆ. +“ಸಾರೀಮ್ಮಾ ಲೇಟಾಯ್ತು….” +“ಬಾರೇ…. ಬಾ. ನಿನಗೋಸ್ಕರವೇ ಕಾದೂ ಕಾದೂ ಸುಸ್ತಾಯ್ತು. ಅಲ್ಲ….ಯಾಕೆ ಇಷ್ಟು ತಡ ಮಾಡಿದೆ ?” +ಲಲ್ಲೂಳ ಮುಖ ಕೆಂಪೇರುತ್ತದೆ. +“ಅನಿರುಧ್ ಬಂದಿದ್ರು ಕಣೇ…. ಅದಕ್ಕೆ….” +“ಅರ್ಥವಾಯ್ತು ಬಿಡು” +ಕುಮುದಾ ವ್ಯಂಗ್ಯದ ದನಿಯಲ್ಲಿ ಹೇಳುತ್ತಿದ್ದಂತೆ ಲಲ್ಲೂ ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನಂತರ ಅವಳು ಯಾಂತ್ರಿಕವಾಗಿ ವ್ಯಾನಿಟಿ ಬ್ಯಾಗಿನಿಂದ ಒಂದಿಷ್ಟು ಕಾರ್ಡುಗಳನ್ನು ಹೊರಗೆಳೆಯುತ್ತಾಳೆ. +“ಏ…. ಕುಮು ನಿಮ್ಮ ತಂದೆ ಹೆಸರೇನೇ ?” +“ಹಾಗಾದ್ರೆ ನಿನ್ನ ಮದುವೆಗೆ ನನಗೇ ಇನ್ವಿಟೇಷನ್ ಇಲ್ಲಾನ್ನು…. ಇರಲಿ…. ನನಗೂ ಒಂದಿನ ಮದುವೆ ಆಗದೇ ಇರುತ್ತಾ ?….. ಸೇಡು ತೀರಿಸಿಕೊಳ್ತೀನಿ.” +“ಛೇ…. ಹಾಗಲ್ಲ ಕಣೇಮ್ಮಾ” ಲಲ್ಲೂ ಮಾತಾಡುತ್ತಲೇ ಕುಮುದಾಳ ತಂದೆಯ ಹೆಸರಿಗೆ ಹಿರಿಯರ ಕರೆಯೋಲೆ ಬರೆದು ‘ನಿಮ್ಮ ತಂದೆಗೆ ಕೊಟ್ಬಿಡೇ’ ಎನ್ನುತ್ತಲೇ ತನ್ನ, ಅನಿರುದ್ಧನ ಜಂಟಿ ಹೆಸರಿರುವ ಕರೆಯೋಲೆಯ ಮೇಲೆ ಕುಮುದಾಳ ಹೆಸರು ಬರೆದು ಕೊಡುತ್ತಾಳೆ. ಇಬ್ಬರೂ ಕೆಲಹೊತ್ತು ಲೋಕಾಭಿರಾಮ ಹರಟುತ್ತಾರೆ. ನಂತರ ಲಲ್ಲೂ ಕುಮುದಾಳ ಮದುವೆಯ ಪ್ರಸ್ತಾಪ ಮಾಡುತ್ತಾಳೆ. +ಕುಮುದಾ ಹೆದರಿದಂತೆ ಲಲ್ಲೂಳ ಬಾಯಿ ಮುಚ್ಚಿ +“ಈ ವಿಷಯ ಮಹಡಿ ಮೇಲೆ ಕೂತು ಮಾತಾಡೋಣ…. ಯಾಕೇಂದ್ರೆ ನಾನಿನ್ನೂ ಮನೇಲಿ ಸಿದ್ಧಾರ್ಥನ ವಿಷಯ ಹೇಳೇ ಇಲ್ಲ….ನೀನೆಲ್ಲಾದರೂ ರಾದ್ಧಾಂತ ಮಾಡಿಬಿಟ್ಟೀಯ ಮತ್ತೆ…” +ಇಬ್ಬರೂ ತೆರೆದ ಮಹಡಿಯ ಮೇಲೆ ಹೋಗಿ ಬಿಸಿಲು ಕಾಯಿಸಿಕೊಳ್ಳುತ್ತಾ ಮೈ ಚಾಚುತ್ತಾರೆ. ಕುಮುದಾ ತನ್ನ ಬಗ್ಗೆ ಹೇಳತೊಡಗುತ್ತಾಳೆ. +ಕುಮುದಾಳ ಕಥನ +ನಾನು ಸಿದ್ಧಾರ್ಥನನ್ನು ಭೇಟಿಯಾದ ರೀತಿ ನೆನಪು ಮಾಡಿಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆ ದಿನ ಅವನ ಪಿ. ಎಚ್. ಡಿ. ಥೀಸಿಸ್‌ನ ಪಬ್ಲಿಕ್ ಡಿಫೆನ್ಸ್ ಇತ್ತು. ಅಲ್ಲಿ ತರಲೆ ಮಾಡಿ ಪ್ರಶ್ನೆಗಳನ್ನು ಕೇಳೋಣವೆಂದೇ ನಾನು ಸೆನೆಟ್ ಹಾಲಿಗೆ ಹೋದೆ. ಆದರೆ ಅವನು ಪ್ರಬಂಧ ಮಂಡಿಸಿದ ರೀತಿಗೆ ಬೆರಗಾಗಿ, ಯಾವ ಪ್ರಶ್ನೆ ಕೇಳಬೇಕೆಂದೇ ನನಗೆ ತಿಳಿಯಲಿಲ್ಲ. ಆ ದಿನವೇ ಅವನ ಪರಿಚಯ ಔಪಚಾರಿಕವಾಗಿ ಆಗಿ, ಮೊದಲ ಬಾರಿಗೆ ಪರಸ್ಪರ ಮಾತಾಡಿದೆವು. ಆ ನಂತರ ನನ್ನ ಸಂಶೋಧನೆಯಲ್ಲಿ ಉದ್ಭವಿಸಿದ ಅನೇಕ ತೊಡಕುಗಳನ್ನು ಅವನು ಸಹಜವೆಂಬಂತೆ ಪರಿಹರಿಸಿಬಿಟ್ಟ. ನಾನು ಅವನನ್ನು ಪೀಡಿಸಿ ಗಲಾಟೆ ಮಾಡಿದ್ದಕ್ಕೆ ನನ್ನ ಕಿರಿಕಿರಿ ತಾಳಲಾರದೆ ಸಿಗರೆಟ್ ಸೇದುವುದನ್ನು ಬಿಟ್ಟ. ಆ ದಿನವೇ ನಮ್ಮ ಪ್ರೇಮಾಂಕುರವಾಗಿರಬಹುದೆಂದು ನನ್ನ ಊಹೆ. (ಆದರೂ ಕ್ರಮೇಣ ಘಟಿಸುವ ಪ್ರೇಮದಂತಹ ಅನುಭವಕ್ಕೆ ಒಂದು ಕಾಲಮಾನದಲ್ಲಿ ನಿಖರವಾಗಿ ಆರಂಭ ಹುಡುಕುವುದು ತಪ್ಪಾದೀತು) ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ನಾವುಗಳು ಇಷ್ಟೆಲ್ಲ ಒಡನಾಟ ಹೊಂದಿರುವಾಗ್ಯೂ ನಾವಿಬ್ಬರೂ, ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆಂದು ಈವರೆಗೂ ಹೇಳಿಕೊಂಡಿಲ್ಲ. ಇನ್ನು ಮದುವೆಯ ಪ್ರಸ್ತಾಪ ದೂರ. ಬಹುಶಃ ಪ್ರೀತಿ ಮಾತಿಗೆ ನಿಲುಕದ ಅನುಭವವಾದ್ದರಿಂದ ಹೀಗಿರಬಹುದು. ಮನಸ್ಸೇ ಅವನದಾಗಿರುವಾಗ ಮಾತಿನಂತಹ ಕೃತಕ ಸಾಧನಗಳು ಬೇಕೇ ? ಆದರೂ, ಈ ಮನಸ್ಸು ಹೃದಯಗಳೆಂಬ ಅಮೂರ್ತ ವಿಷಯಗಳೂ ಕಡೆಗೆ ಮದುವೆಯೆಂಬ ಸಾಮಾಜಿಕ ಕ್ರಿಯೆಯಲ್ಲಿ ಪರ್ಯವಸಾನ ಆಗಾಲೇಬೇಕಾದ್ದರಿಂದ ಎಂದಾದರೂ ಮಾತಾಡಲೇಬೇಕು. ಅದಕ್ಕೆ ಸಂದರ್ಭ ಒದಗಿಬಂದಿಲ್ಲವೇನೊ, ಬಹುಶಃ ಸಿದ್ಧಾರ್ಥನ ಮನೆಯಲ್ಲೊ ನನ್ನ ಮನೆಯಲ್ಲೊ ಮದುವೆಯ ಪ್ರಸ್ತಾಪ ಒಂದು ದಿನ ನಾವಿಬ್ಬರೂ ಈ ಬಗ್ಗೆ ಮಾತಾಡಿಕೊಳ್ಳಬಹುದು. +ನಾನು ಇಷ್ಟೆಲ್ಲಾ ಹೇಳಿದರೂ ನನಗೆ ಈ ವಿಷಯದ ಬಗ್ಗೆ ಇನ್ನೂ ಖಾತ್ರಿ ಇಲ್ಲ. ಸಿದ್ಧಾರ್ಥ ನನ್ನೆಡೆಗೆ ತೋರಿಸಿರುವ ಸಂಶಯವೇ ನನ್ನ ಅನುಮಾನಕ್ಕೆ ಕಾರಣವಿರಬೇಕು. ಅವನೂ ನಾನು ಭಾವಿಸಿದ ಹಾಗೆಯೇ ಭಾವಿಸಿದ್ದಾನೆಯೇ? ಅಥವಾ ಅವನಿಗಿದು ಕಾಮದಿಂದೀಚಿಗಿನ ಶುದ್ಧ – ಪರಿಶುದ್ಧ ಸ್ನೇಹಮಾತ್ರವೋ ? ನನಗೆ ಆಗಾಗ ಅನಿಸುವುದುಂಟು – ಈ ಜಗತ್ತಿನಲ್ಲಿ ಕಾಮದ ಸುತ್ತ ಹೆಣೆಯದ ಸಂಬಂಧಗಳು ಬರೇ ದೈಹಿಕವಾಗಿ ಮಾತ್ರ ಇರುತ್ತದೇನೋ. ಮಾನಸಿಕವಾಗಿ ನಾವು ಎಷ್ಟೆಲ್ಲಾ ಜನರನ್ನು ನಮ್ಮ ತೋಳ್ತೆಕ್ಕೆಯಲ್ಲಿ ಕಲ್ಪಿಸಿಕೊಂಡುಬಿಟ್ಟಿರುತ್ತೇವೆ ! ಇದರಲ್ಲಿ ಸಿದ್ಧಾರ್ಥ ಎಷ್ಟನೆಯವನು ? ಕಡೆಯವನೇ ? ? ಇರಲಿ. ಆದರೆ ಒಂದು ಮಾತ್ರ ನನಗೆ ಸ್ಪಷ್ಟ. ನಾನು ಮದುವೆಯಾಗುವುದಕ್ಕೆ ಮೊದಲು – ಅದು ಯಾರೊಂದಿಗೇ ಇರಲಿ – ನನಗೆ ಸಿದ್ಧಾರ್ಥನೊಂದಿಗಿನ ಸಂಬಂಧ ಸ್ಪಷ್ಟವಾಗುವುದು ಅಗತ್ಯ. ಮೊನ್ನೆ ನನಗೆ ಅಪೆಂಡಿಸೈಟಿಸ್ ಆಪರೇಷನ್ ಆದಾಗ ಅವನು ಬಂದು ನನ್ನನ್ನು ನೋಡಿದ್ದೇ ಕೊನೆ. ಅಂದೇ ಅವನು ಮಂಗಳೂರಿಗೆ ಹೊರಟ. ನಂತರ ಅವನ ಪತ್ರ ಬರಬಹುದೆಂದು ಈವರೆಗೂ ಕಾದದ್ದಾಯಿತು. ಇನ್ನೂ ಕಾಯುತ್ತೇನೆ. ಮಾತಿಗೆ ನಿಲುಕದ ವಿಷಯವಲ್ಲವೇ ? ಅದಕ್ಕೆ ಅಕ್ಷರ ರೂಪ ಕೊಡಲು ತಡವಾದೀತು. ಬರೆಯುತ್ತಾನೆ ಎಂಬ ನಂಬಿಕೆಯೇ ನನಗೆ ಧೈರ್ಯ. ಅವನ ಪತ್ರ ಬಂದರೆ ಎಲ್ಲವೂ ಸ್ಪಷ್ಟವಾಗಬಹುದು. ಪತ್ರ ಈ ದಿನ ಬರಬಹುದೇ ? ಜೀವನದುದ್ದಕ್ಕೂ ಯಾವುದೋ ಸ್ಪಷ್ಟೀಕರಣ ದೊರೆಯುವುದೆಂದೊ…..ದೊರೆತರೂ, ನಾವು ಸ್ಪಷ್ಟೀಕರಣ ಎಂದುಕೊಂಡದ್ದು ನಿಜಕ್ಕೂ ಸ್ಪಷ್ಟವಾಗಿಯೇ ಇರುತ್ತದಾ ? +ಅಂಚೆಯವನ ಪ್ರವೇಶ, ನಿರ್ಗಮನ +ಅಂಚೆಯವನು ರಸ್ತೆಯಗುಂಟ ನಡೆದು ಬಂದು, ಗೇಟ್ ತೆರೆದು, ಮನೆಯೊಳಕ್ಕೆ ಪ್ರವೇಶಿಸಿ, ಒಂದು ಪತ್ರವನ್ನು ತೂರಿ, “ಪೋಸ್ಟ್” ಎಂದು ಅರಚಿ ಗೇಟ್ ತೆರೆದು ಮುಂದಿನ ಮನೆಯತ್ತ ಹೊರಟುಬಿಟ್ಟ. +ವಿಶ್ವಾಸನ ತಾಯಿಯ ಸ್ವಗತ +ನಾನು ಬರೆದು ಹಾಕಿದ ಪತ್ರ ಈ ವೇಳೆಗೆ ತವರಿಗೆ ತಲುಪಿರಬಹುದೇ ? ನನಗೆ ಕರುಳು ಬೇನೆ ಅಂತ ವಿಶ್ವಾಸ ನಾಲ್ಕು ದಿನಗಳ ಹಿಂದೆ ಪತ್ರ ಹಾಕಿದ್ದನಂತೆ. ಪಾಪ ಅವರು ಇನ್ನೆಲ್ಲಿ ಹೆದರಿಬಿಟ್ಟಾರೋ ಅಂತ ನನಗೆ ಭಯವಾಗ್ತಾ ಇದೆ. ಹೆಚ್ಚಿನ ನೋವೇನೂ ಇಲ್ಲ. ಚಿಂತೆಗೆ ಕಾರಣವಿಲ್ಲ ಎಂದು ನಾನು ಬರೆಯಲುಪಕ್ರಮಿಸಿದ ಪತ್ರ ಕಡೆಗೆ ಎಲ್ಲಿ ಅಂತ್ಯವಾಯಿತು ? ನಲವತ್ತೈದು ಐವತ್ತು ವರ್ಷಗಳ ಹಿಂದೆ ಅವರು ತಮ್ಮ ಯೌವನದ ಹುಚ್ಚಿನಲ್ಲಿ ಬರೆದಿದ್ದ ಪತ್ರಕ್ಕೆ ಇಷ್ಟು ಸುದೀರ್ಘ ಕಾಲದ ನಂತರ ಉತ್ತರಿಸುವ ಅವಶ್ಯಕತೆಯಾದರೂ ಏನಿತ್ತು ? ಸುಮ್ಮನೆ ಕರುಳುಬೇನೆಯ ಬಗ್ಗೆ ಬರೆದಿದ್ದರಾಗುತ್ತಿರಲಿಲ್ಲವೇ ?ನನಗೆಲ್ಲೋ ವೃದ್ಧಾಪ್ಯದ ಭ್ರಾಂತು ಎಂದು ಕೇಳಿದವರಂದಾರು. ಆಗ ನಾನು ಇದೇ ವಿಶ್ವಾಸನನ್ನು ಹೊಟ್ಟೆಯಲ್ಲಿ ಹೊತ್ತು ತೌರಿಗೆ ಬಂದಿದ್ದೆ. ತಾಯಿಯ ಮನೆಯಲ್ಲಿದ್ದ ಸಂಭ್ರಮದ ವಾತಾವರಣದಲ್ಲಿ ಅವರಿಗನುಭವವಾಗಿದ್ದ ಏಕಾಕಿತನದ ಅನುಭವದರಿವು ನನಗಿರಲಿಲ್ಲ. ಮತ್ತೆ ಆಗ, ಆ ಕಾಲದಲ್ಲಿ ಗಂಡನ ಪತ್ರಕ್ಕೆ ಉತ್ತರಿಸುವುದೇ ? ಆ ಉದ್ಧಟತನದ ಧೈರ್ಯವೂ ನನಗಿರಲಿಲ್ಲ. ಗಂಡನನ್ನು ತಲೆಯೆತ್ತಿ ನೋಡಿ ಮಾತನಾಡಿಸಲೂ ಹೆದರುತ್ತಿದ್ದ ಕಾಲವದು. ಆಗ ಅವನೇನಾದರೂ ಪತ್ರ ಬರೆದಿದ್ದರೆ ಮನೆಯಲ್ಲೆಲ್ಲರೂ ಗೇಲಿ ಮಾಡುವವರೇ. ಅಪ್ಪ ಒಂದಿಷ್ಟು ಬುದ್ಧಿಮಾತನ್ನೂ ಹೇಳುತ್ತಿದ್ದರೇನೋ. ಬಹುಶಃ ಆ ದಿನ ಅವರಿಗಾದ ಏಕಾಕಿತನದ ಅನುಭವ, ಪರಕೀಯತೆಯ ಭಾವನೆ ಇಂದು ನನ್ನದಾಗಿರಬಹುದು. +ನಿನ್ನೆ ಅಂಚೆಗೆ ಹಾಕಿದ ಪತ್ರದ ಬಗ್ಗೆ ಯೋಚಿಸುವುದು ಬಿಟ್ಟು ಕಾಲಮಾನದಲ್ಲಿ ಐವತ್ತು ವರ್ಷ ಹಿಂದಕ್ಕೆ ಹೋದಾಗ ನನಗೆ ಮೈಯಲ್ಲಿ ವಿಚಿತ್ರ ಭಾವನೆಗಳು. ಜಿರಲೆಯೊಂದು ಮೈಯೊಳಗೆ ಸಂಚರಿಸಿದ ಹಾಗೆ ವಿಲಿವಿಲಿ. ಬಹುಶಃ ಮುಖವೂ ಕೆಂಪೇರಿರಬಹುದು. ಸದ್ಯ ಎದುರಿಗೆ ಕನ್ನಡಿ ಇಲ್ಲ. ಆಗ ನಾನು ಪತ್ರ ಬರೆದಿದ್ದರೆ ಅವರನ್ನು ಏನೆಂದು ಸಂಬೋಧಿಸುತ್ತಿದ್ದೆ ? ಪ್ರಿಯಾ… ? ನನ್ನ ದೈವ ? ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಪಾತ್ರರಾದ ಪತಿದೇವರಿಗೆ….? ಅಥವಾ ಔಪಚಾರಿಕವಾಗಿ ಅವರಿಗೆ ಬರುತ್ತಿದ್ದ ಪತ್ರಗಳಂತೆ, ಅದರ ಒಕ್ಕಣೆಯಂತೆ ಭಾಸ್ಕರರಾಯರೇ ಎಂದೇ ? ನಿನ್ನೆ ನಾನು ಪತ್ರ ಬರೆದಾಗ ಆ ಸಮಸ್ಯೆ ಉದ್ಭವವಾಗಲಿಲ್ಲ ಏಕೆ ? ಐವತ್ತು ವರ್ಷಗಳಲ್ಲಿ ನಾವು ಅಷ್ಟೊಂದು ಗೆಳೆಯರಾಗಿಬೆಟ್ಟೆವಾ ? ಮುಟ್ಟು ನಿಂತ ಮೇಲೆ ಎಂಥ ನಾಚಿಕೆ ? ನಿನ್ನೆಯಂತೂ ನೇರವಾಗಿ ಏಕವಚನಕ್ಕಿಳಿದು ಪ್ರಿಯ ಭಾಸ್ಕರ ಎಂದು ಬರೆದದ್ದು ನೋಡಿ ಅವರಿಗೆ ಕೋಪ ಬಂದಿರಬಹುದೇ ? ಅಥವಾ ಮುದುಕಿಯಾಗುತ್ತಿದ್ದ ಹಾಗೆ ನಿನ್ನ ತುಂಟಾಟ ಹೆಚ್ಚಾಯ್ತು ನೋಡು ಅಂತ ಗೇಲಿ ಮಾಡಬಹುದೇ ? ಇಷ್ಟು ದಿನ ಅವರನ್ನು ನೇರವಾಗಿ ಕಣ್ಣೆತ್ತಿಯೂ ನೋಡದ ನಾನು ಈ ಹೊಸ ಸಖ್ಯ ತೋರುವುದರಲ್ಲಿ ಅರ್ಥವೇನು ? ಬಹುಶಃ ಎಂದಿಗಿಂತ ಹೆಚ್ಚಾಗಿ ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಅವಶ್ಯವಾಗಿದ್ದೇವೆ ಎಂದು ನನಗನ್ನಿಸಿರಬಹುದು. ಅವರಿಗೂ ಹಾಗೇ ಅನ್ನಿಸಿರಬಹುದೇ ? ಅಂದ ಹಾಗೆ ಕಡೆಗೂ ನಿನ್ನೆಯ ಪತ್ರದಲ್ಲಿ ಕರುಳ ಬೇನೆಯ ಪ್ರಸ್ತಾಪ ಮಾಡಲೇ ಇಲ್ಲವಲ್ಲಾ……. +ಪತ್ರದ ಪೂರ್ಣಪಾಠ +ಈ ದಿನ ಲೇಖನಿ ಹಿಡಿದು ಮೇಜಿನ ಮುಂದೆ ಕುಳಿತಾಗ ನನ್ನೆದುರು ನಿಂತದ್ದು ನಿನ್ನದೇ ಚಿತ್ರ. ಅದನ್ನು ನೋಡುತ್ತಿದ್ದ ಹಾಗೇ ನನಗೆ ನನ್ನ ಒಂಟಿತನದ ತೀವ್ರ ಅನುಭವವಾಯಿತು. ನಾನು ಇಲ್ಲಿ….ನೀನು ಅಲ್ಲಿ. ಎಷ್ಟು ದಿನ ಈ ದೂರ ? ನನಗಂತೂ ಈ ಒಂಟಿತನ ಬೇಸರ ತಂದುಬಿಟ್ಟಿದೆ. ನಾವಿಬ್ಬರೂ ಒಟ್ಟಿಗೆ ಇರುವ ದಿನಗಳು ದೂರವಿಲ್ಲವೆಂದು ನನಗನ್ನಿಸುತ್ತಿದೆ, ಶುಭಸೂಚಕವೇ ? +ಏನೇ ಆಗಲಿ, ಕೆಲದಿನಗಳ ಮಟ್ಟಿಗಾದರೂ ನೀನು ಇಲ್ಲಿಗೆ ಬರಬಹುದಲ್ಲವೇ ? ಈಗ ನೀನು ಇಲ್ಲಿಗೆ ಬಂದರೆ ಮುಂದೆ ನಡೆಯಬೇಕಾದ್ದನ್ನು ನಾವು ಕೂಡಿಯೇ ಆಲೋಚಿಸಬಹುದು. ಆಗ ನನಗೂ ಸ್ವಲ್ಪ ನೆಮ್ಮದಿ. ಒಂಟಿತನ ಎಂತೆಂಥ ಸಂದರ್ಭದಲ್ಲಿ ಕಾಡುತ್ತದೆಂದು ನನಗೆ ಈಗೀಗ ಅನುಭವವಾಗುತ್ತಿದೆ. ನೀನು ನನ್ನ ಬಳಿ ಇದ್ದಾಗ, ನಾವು ನಿಜಕ್ಕೂ ಮನ ಬಿಚ್ಚಿ ಮಾತನಾಡಿಯೇ ಇರಲಿಲ್ಲ ಅಲ್ಲವೇ ? ಬಹುಶಃ ದೂರವಾದಾಗ ಒಬ್ಬರಿಗೊಬ್ಬರ ಅವಶ್ಯಕತೆಯ ಅರಿವಾಗಬಹುದು. ಎಂದಿಗಿಂತ ಹೆಚ್ಚಾಗಿ, ಈಗ ನನಗೆ ನಿನ್ನ ಸಾಮೀಪ್ಯದ ಅವಶ್ಯಕತೆ ಇದೆ. +ಅಂದ ಹಾಗೆ ನಾನು ಕರೆದೆನೆಂದು ಬರುವ ಆತುರದಲ್ಲಿ ನಿನ್ನ ಆರೋಗ್ಯವನ್ನು ಕಡೆಗಣಿಸಬೇಡ. ಏಕೆಂದರೆ ಈ ಸ್ಥಿತಿಯಲ್ಲಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕಡೆಗೆ ನೀನೊಂದು ಪತ್ರ ಹಾಕಿದರೆ ನಾನೇ ಬಂದರೂ ಬಂದೇನು. ನಿನ್ನಿಂದ ಬರುವ ಪತ್ರವೇ ನನಗೆ ಸಾಕಷ್ಟು ಸಾಂತ್ವನ ನೀಡುತ್ತದೆ. ನಾನು ನಿನ್ನ ನೆನಪಲ್ಲೇ ಇದ್ದೇನೆ. +ಕುಮುದಾಳ ಪ್ರತಿಕ್ರಿಯೆ +ಅಂಚೆಯವನು ಹಾಕಿ ಹೋದ ಪತ್ರದ ಒಕ್ಕಣಿಕೆ ನೊಡಿಯೇ ಕುಮುದಾಳಿಗೆ ಒಂದು ರೀತಿಯ ಭೀತಿಯುಂಟಾಯಿತು. ಲಕೋಟೆಯ ಮೇಲೆ “ಕುಮುದಾ ಬಾಯಿ” ಎಂದು ತನ್ನನ್ನು ಗೇಲಿ ಮಾಡಲಿಕ್ಕೆ ಸಿದ್ಧಾರ್ಥ ಬರೆದಿರಬಹುದೇ ? ತಾನು ಬಹಳ “ಬಾಯಿ” ಮಾಡುತ್ತೇನೆಂದು ಅವನು ಆಗಾಗ ಹೇಳಿತ್ತಿದ್ದುದುಂಟು. ಅಥವಾ ತನ್ನ ಮನೆಯವರಿಗೆ ತಿಳಿಯದಿರಲೆಂದು ಹೀಗೆ ಆಟ ಆಡಿರಬಹುದು. ಸಾಲದ್ದಕ್ಕೆ ಕೈ ಬರಹವನ್ನೂ ಬೇಕೆಂದೇ ಬದಲಿಸಿ ಬರೆದಂತಿದೆ. ಕುಮುದಾ ತನ್ನಲ್ಲೇ “ಛೀ ತುಂಟ” ಎಂದು ನಗುತ್ತಲೇ ಬೈದು ಪತ್ರವನ್ನು ಎದೆಗವಚಿಕೊಂಡಳು. ಲಲ್ಲೂ ಅಲ್ಲಿ ಉಳಿಯಲು ಇದು ಸರಿಯಾದ ಸಮಯವಲ್ಲವೆಂದು ಭಾವಿಸಿ ಹೊರಟುಬಿಟ್ಟಳು. +ಕುಮುದಾ ನಂತರ ಏಕಾಂತದಲ್ಲಿ ಪತ್ರವನ್ನೊಡೆದಳು. ಮುಖ ಕೆಂಪೇರಿತು. ಪತ್ರದಲ್ಲಿ ಬರೆದಿರುವುದು ಯಾವುದೂ ಸ್ಪಷ್ಟವಾಗಿಲ್ಲವಾದರೂ ಎಲ್ಲವೂ ಸುಸ್ಪಷ್ಟ. ಹಾಗಾದರೆ ಈಗ ಸಿದ್ಧಾರ್ಥನ ಬಳಿ ಹೋಗಬೇಕೇ ? ಹೇಗೆ ಹೊಗುವುದು ? ಮನೆಯಲ್ಲಿ ಏನು ಹೇಳಲಿ ? ಅಥವಾ ಸಿದ್ಧಾರ್ಥನಿಗೇ ಒಂದು ಪತ್ರ ಬರೆದು ಸುಮ್ಮನಾದರೆ ? ಇಲ್ಲವೇ ನೇರ ಅಪ್ಪನ ಬಳಿಗೆ ಹೋಗಿ ಇದು ಹೀಗೆ, ಹೀಗೆಲ್ಲಾ ಆಗಿದೆ, ಈಗ ಸಿದ್ಧಾರ್ಥ ಕರೆದಿದ್ದಾನೆ. ಹೋಗಬೇಕು ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ ? ಅಥವಾ ಏನಾದರೂ ಸುಳ್ಳು ನೆಪ ಒಡ್ಡಿ ಸಿದ್ಧಾರ್ಥನಲ್ಲಿಗೆ ಹೋಗುವುದೇ ? ಮಂಗಳೂರೆಂದರೆ ಸಾಮಾನ್ಯವೇನು ? ಒಂದು ರಾತ್ರಿಯ ಪ್ರಯಾಣ. ಇಲ್ಲೇ ಮೈಸೂರಾಗಿದ್ದರೆ ಮುಂಜಾನೆ ಹೋಗಿ ಸಂಜೆ ಹಿಂದಿರುಗಬಹುದಿತ್ತು. +ಪ್ರೀತಿಸುವುದರಲ್ಲಿನ ಅನೇಕ ರೋಮಾಂಚನಗಳಲ್ಲಿ ಇಂಥದೂ ಒಂದು ಇರಬಹುದೆಂದು ಅವಳಿಗೆ ತಿಳಿದಿರಲಿಲ್ಲ. ಈಗ ಅಪ್ಪನೆದುರು ಸತ್ಯ ಹೇಳಿದರೆ ಅದರ ಪರಿಣಾಮ ಅರಿತವರ್ಯಾರು ? ಅಪ್ಪ ಬೇಡವೆಂದು ಹಠ ಮಾಡಿದರೆ ಆದಿಯಲ್ಲಿಯೇ ಕೊಡಲಿಯೇಟು. ಜತೆಗೆ ಅಲ್ಲಿ ಹೋಗಿ ಎಲ್ಲವನ್ನೂ ಸುಸ್ಪಷ್ಟ ಮಾತನಾಡಿ ಸಾಧ್ಯವಾದರೆ ಸಿದ್ಧಾರ್ಥನನ್ನೂ ಕರೆತಂದರೆ ನಂತರ ಅಪ್ಪನೂ ಒಪ್ಪಬಹುದು. ಈಗ ‘ನಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಇತ್ಯರ್ಥ ಮಾಡಿಕೊಂಡು ಬರಲು ಎರಡು ದಿನ ಮಂಗಳೂರಿಗೆ ಹೋಗುತ್ತೇನೆ’ ಎಂದರೆ ಯಾವ ಮರ್ಯಾದಸ್ತ ಅಪ್ಪ ತಾನೇ ಒಪ್ಪುತ್ತಾನೆ ? ಏನಾದರೊಂದು ಕಾರಣ ಹೇಳಿ ಕದ್ದು ಹೊರಡುವುದೇ ಒಳ್ಳೆಯದು. ಹೇಗೂ ಥೀಸಿಸ್‌ಗಾಗಿ ಡೇಟಾ ಕಲೆಕ್ಷಣ್‌ಗೆ ಹೊರಡಬೇಕಲ್ಲ. ಮೊದಲು ಮಂಗಳೂರಿಗೇ ಹೊರಟರಾಯಿತು. +ಕುಮುದಾ ಹೀಗೆ ಆಲೋಚಿಸುತ್ತಿದ್ದಂತೆ, ತನ್ನ ಮಾರನೇ ದಿನದ ಪ್ರಯಾಣಕ್ಕಾಗಿ ಮಾನಸಿಕ ತಯಾರಿಯನ್ನೂ ನಡೆಸತೊಡಗಿದ್ದಳು. +ಭಾಸ್ಕರರಾಯರ ಪ್ರತಿಕ್ರಿಯೆ +ಅಂಚೆಯವನು ಹಾಕಿ ಹೋದ ಪತ್ರದ ಒಕ್ಕಣಿಕೆ ನೋಡಿಯೇ ಭಾಸ್ಕರರಾಯರಿಗೆ ಒಂದು ರೀತಿಯ ಆನಂದ ಉಂಟಾಯಿತು. ಇಷ್ಟು ಕಾಲಕ್ಕೆ ತಮ್ಮ ಹೆಂಡತಿಯಿಂದ ಅವರಿಗೊಂದು ಪತ್ರ ಬಂದಿತ್ತು. ಭಾಸ್ಕರರಾಯರಿಗೆ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಪತ್ರ ಬಂದ ಖುಷಿಯಿಂದ ಚೇತರಿಸಿಕೊಳ್ಳಲು ಅವರಿಗೆ ಕೆಲ ಕ್ಷಣಗಳೇ ಹಿಡಿದವು. ಆಸ್ತಿಯನ್ನಲ್ಲದೆ ತಂದೆತಾಯಿಗಳನ್ನೂ ಹಂಚಿಕೊಂಡ ತಮ್ಮ ಮಕ್ಕಳಿಗೇನನ್ನಬೇಕು ? ಒಂದು ದೃಷ್ಟಿಯಿಂದ ಅವರು ಮಾಡುತ್ತಿರುವುದೂ ಸರಿಯಿರಬಹುದು. ಈ ದುಬಾರಿ ಯುಗದಲ್ಲಿ, ಅದರಲ್ಲೂ ಇಬ್ಬರೂ ಔಷಧಿ ತಿಂದೇ ಜೀವಿಸುವ ವಯಸ್ಸು ಮುಟ್ಟಿದಾಗ, ಇಬ್ಬರನ್ನೂ ಒಬ್ಬನೇ ನೋಡಿಕೊಳ್ಳುವುದೆಂದರೆ ಕಷ್ಟದ ವಿಷಯವೇ. ಆದರೂ ಈ ಬಾರಿ ಅವಕಾಶವಾದಾಗ ಮಹೇಶಚಂದ್ರನಿಗೆ ಹೇಳಿಯೇ ಬಿಡಬೇಕು_ಇಬ್ಬರೂ ಒಂದೇ ಮನೆಯಲ್ಲಿ ಇರುತ್ತೇವೆಂದು. ಜೀವನ ಪೂರ್ತಿ ಜತೆಜತೆಯಾಗಿದ್ದವರಿಗೆ ಈ ಅಕಾಲ ವಿರಹ ಸಹನೀಯವಾಗುವುದಾದರೂ ಹೇಗೆ ? ಭಾಸ್ಕರರಾಯರು ಪತ್ರವನ್ನೊಡೆದು ನೋಡಿದರು. ಪರವಾಗಿಲ್ಲವೇ ಇವಳೂ ಇಷ್ಟು ಧೈರ್ಯ ತಂದುಕೊಂಡು ಪತ್ರ ಬರೆದಿದ್ದಾಳೆ. ಅವಳ ಆರೋಗ್ಯದ ಬಗ್ಗೆ ಬರೆಯುವುದಿರಲಿ, ನನ್ನ ಆರೋಗ್ಯದ ಕಾಳಜಿ ವಹಿಸಿದ್ದಾಳೆ ! ಬಾಳಿನ ಈ ಘಟ್ಟದಲ್ಲಿ ಒಬ್ಬರಿಗೊಬ್ಬರು ಫಾರ್ಮಲ್ ಆಗಿರಬೇಕಾದ ಅವಶ್ಯಕತೆಯೂ ಇಲ್ಲ. ಭಾಸ್ಕರರಾಯರಿಗೆ ಈಗ ನಿಜವಾಗಿಯೂ, ಇವಳು ತಮ್ಮ ಸಮಾನ ಮನೋಧರ್ಮದ ಪತ್ನಿ ಎನ್ನಿಸಿತು. ಹೊಸ ಹುಡುಗಿಯನ್ನು ಪ್ರಿತಿಸುವ ಹುರುಪು ಅವರನ್ನು ತುಂಬಿಕೊಂಡಿತು. ಅವರಿಗೆ ಕೂಡಲೇ ತಮ್ಮ ಹೆಂಡತಿಯನ್ನು ಕಂಡು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂಬ ಬಯಕೆ ಉಂಟಾಯಿತು. ಎಪ್ಪತ್ತರ ವಯಸ್ಸಿನಲ್ಲಿ ತಮ್ಮ ಅಪ್ಪುಗೆಗೆ ಸಿಕ್ಕುವುದು ಅವಳೊಬ್ಬಳೇ ಅಲ್ಲವೇ ? ಮಗನನ್ನು ಹೇಗಾದರೂ ಒಪ್ಪಿಸಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ರಾಯರು ನಿಶ್ಚಯಿಸಿದರು. +ರಾಯರು ಹೀಗೆ ಆಲೋಚಿಸುತ್ತಿದ್ದಂತೆ, ತಮ್ಮ ಮಾರನೇ ದಿನದ ಪ್ರಯಾಣಕ್ಕಾಗಿ ಮಾನಸಿಕ ತಯಾರಿಯನ್ನೂ ನಡೆಸತೊಡಗಿದ್ದರು. +ಪತ್ರಿಕಾ ವರದಿ +ಹಾಸನ, ಏಪ್ರಿಲ್ ೧ +ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದು ಈ ದಿನ ಅಪಘಾತಕ್ಕೀಡಾಯಿತು. ಹಾಸನದಿಂದ ೨೫ ಕಿಲೋಮಿಟರ್ ದೂರದಲ್ಲಿ ಸಂಚರಿಸುತ್ತಿದ್ದಾಗ ಬಸ್ಸು ಕಣಿವೆಯೊಂದರೊಳಕ್ಕೆ ಧುಮಿಕಿದ್ದರಿಂದ ಈ ಅಪಘಾತ ಸಂಭವಿಸಿತೆಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಹಲವರಿಗೆ ತೀವ್ರ ಗಾಯಗಳು ಉಂಟಾಗಿದೆ. ಒಬ್ಬ ಮಹಿಳೆ ಮೃತಳಾಗಿದ್ದಾಳೆಂದು ವರದಿಯಾಗಿದೆ. ಬಸ್ಸಿನ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ತನಿಖೆ ನಡೆದಿದೆ. +ಹದಿನೆಂಟನೆಯ ಮುಖ್ಯ ರಸ್ತೆ +ಹದಿನೆಂಟನೆಯ ಮುಖ್ಯ ರಸ್ತೆಯ ಹದಿನಾರನೆಯ ನಂಬರ್ ಮನೆಯೊಳಕ್ಕೆ ಭಾಸ್ಕರರಾಯರು ಹೊಸ ಹುರುಪಿನಿಂದ ಪ್ರವೇಶಿಸಿದರು. ಅಲ್ಲಿ ವಾಸವಾಗಿದ್ದ ತಮ್ಮ ಹೆಂಡತಿ ಕುಮುದಾಬಾಯಿಯನ್ನು ಕೂಡಿಕೊಂಡರು. ಈಗ ಅವರಿಬ್ಬರೂ ಒಂದೇ ಮನೆಯಿಲ್ಲಿರುವುದೆಂದು ನಿರ್ಧರಿಸಿದ್ದಾರೆ. ಬಹುಶಃ ಆರಾರು ತಿಂಗಳ ಕಾಲ ಒಬ್ಬೊಬ್ಬ ಮಗನ ಮನೆಯಲ್ಲಿ ಕಳೆಯುವುದೆಂದು ಒಪ್ಪಂದ ಮಾಡಿಕೊಂಡಿರಬಹುದು. ತಮ್ಮ ಪೆನ್ಷನ್‌ನಲ್ಲಿ ಪ್ರತ್ಯೇಕ ಮನೆಯನ್ನೂ ಮಾಡಿ ಬದುಕುವ ಲೆಕ್ಕಾಚಾರವನ್ನೂ ಹಾಕಿರುವ ಭಾಸ್ಕರರಾಯರು, ಆ ಸಾಧ್ಯತೆಯನ್ನೂ ಅಲ್ಲಗಳೆಯುವುದಿಲ್ಲವೆನಿಸುತ್ತದೆ. ಜನರ ನಡುವೆ ಏಕಾಂಗಿಗಳಾಗಿ ಬದುಕುವುದಕ್ಕಿಂತ, ಏಕಾಂತದಲ್ಲಿ ಹೀಗೆ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವುದೇ ವಾಸಿ ಎಂದೂ ಅವರಿಬ್ಬರೂ ಭಾವಿಸಿರಬಹುದು. +ಒಂದಿಷ್ಟು ಟಿಪ್ಪಣಿಗಳು +ಒಂದಿಷ್ಟು ಚೂರು ಚೂರು ಚಿತ್ರಗಳನ್ನು ಕೊಟ್ಟು, ನನ್ನ ಬರಹವನ್ನು ಮುಗಿಸುತ್ತಿದ್ದೇನೆ. ಇದು ನಿಜಕ್ಕೂ ಇಲ್ಲಿಗೇ ಅಂತ್ಯಗೊಳ್ಳುತ್ತದೆಯೇ ? ಮುಂದೆ ಬದುಕಿದ್ದವರೆಲ್ಲಾ ಸುಖವಾಗಿ ಬಾಳಿದರೇ ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಾಗಿದೆ. ಈ ರೀತಿಯ ನಿರೂಪಣೆಯನ್ನು ಮುಗಿಸುವುದು ಸ್ವಲ್ಪ ಕಷ್ಟದ ವಿಷಯವೇ ಸರಿ. ನಿರಂತರ ನಡೆವ ಮಾನವ ವ್ಯಾಪಾರಗಳಿಗೆ ಕೊನೆ ಎಂತು ? ಅಂತೆಯೇ ಈ ನಿರೂಪಣೆಗೂ. ಮಾನವ ವ್ಯಾಪಾರಗಳನ್ನು ಅದರ ಪರಿಪೂರ್ಣತೆಯಲ್ಲಿ ಅರ್ಥಮಾಡಿಕೊಳ್ಳಲು ಯಾರಿಗಾದರೂ ಸಾಧ್ಯವಿದೆಯೇ ? ಹೀಗಿರುವಾಗ ತೀರ್ಮಾನಗಳನ್ನು ಕೊಡುವುದೂ ಒಂದು ನಿರ್ಧಿಷ್ಟ ಸ್ಪಷ್ಟ ಅಂತ್ಯ ಸೂಚಿಸುವುದೂ ಕಷ್ಟದ ಕೆಲಸ. ಬದಲಿಗೆ ಗ್ರಹಿಕೆಯನ್ನು ಅದರೆಲ್ಲ ಪ್ರಶ್ನೆಗಳೊಂದಿಗೆ ನೇರವಾಗಿ ಬರೆದರೆ, ಆ ಪ್ರಶ್ನೆಗಳನ್ನು ಪುನರುಚ್ಚರಿಸಿದರೆ, ಜೀವನವನ್ನು ಅರ್ಥೈಸುವತ್ತ ಕೆಲ ದಿಕ್ಸೂಚಿಗಳು ಕಾಣಬಹುದು. ಈ ಎಲ್ಲ ಪ್ರಶ್ನೆಗಳ, ದ್ವಂದ್ವಗಳ ನಡುವೆ ಉತ್ತರ ಸಿಕ್ಕದ, ಬೃಹದಾಕಾರವಾಗಿ ನಿಂತಿರುವ ಪ್ರಶ್ನೆಯೆಂದರೆ_ನಿಜಕ್ಕೂ ಆ ದಿನ ಭಾಸ್ಕರರಾಯರು ಬರೆದದ್ದೇನು ? +***** +ಪ್ರತಿದಿನದ ಸೂರ್ಯೋದಯದ ಬಿಳಿರಂಗು, ರುದ್ರಿಯ ಮನಸ್ಸಿನಲ್ಲಿ ನಿರೀಕ್ಷೆಯ ರಂಗವಲ್ಲಿ ಮೂಡಿಸುತ್ತದೆ. ಇನ್ನೇನು ಇಹದ ಎಲ್ಲ ವ್ಯಾಪರವೂ ಮುಗಿದೇ ಹೋಯಿತೇನೋ ಎಂಬಂತೆ ರಾತ್ರಿಯ ಸಮಯದಲ್ಲಿ ತಣ್ಣಗಿದ್ದ ಆ ದೇಹದ ಸಮಸ್ತ ಅಂಗಾಂಗಗಳೂ ಬಿಸಿಯಾಗುತ್ತವೆ. ಯಾರದ್ದಾದರೊಬ್ಬರ ನೆರವಿನಲ್ಲಿ […] +(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […] +‘ಜೈ ಯಮುನಾಮಯ್ಯಾ… ಜೈ ಗಂಗಾಮಯ್ಯಾ… ಜೈ ಕೇದಾರೇಶ್ವರ…. ಜೈ ಬದರೀ ವಿಶಾಲ…’ ಕಳೆದ ಏಳೆಂಟು ದಿನಗಳಿಂದ ಈ ಚಾರಧಾಮ ಯಾತ್ರೆಯಲ್ಲಿ ಗುರಣ್ಣ ಈ ಜೈಜೈಕಾರಗಳಲ್ಲಿ ಮುಳುಗೇಳುತ್ತಿದ್ದಾನೆ. ಯಾತ್ರೆಯ ಸುರುವಾತಿಗೆ ಗುರಣ್ಣಗ ಈ ಜೈಕಾರಗಳು ಮಜಾ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_80.txt b/Kannada Sahitya/article_80.txt new file mode 100644 index 0000000000000000000000000000000000000000..e0abf21f26f7002853d9ac24d42cde4bc08900da --- /dev/null +++ b/Kannada Sahitya/article_80.txt @@ -0,0 +1,169 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಹಾ… +ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ +ದೇಸಾಯರು ಏನು ಕೊಟ್ಟಾರೊ +ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – +ಆಹಾಣಿ… +ಎಂಟೆಕರೆ ಹೊಲವಾ ಕೊಟ್ಟಾರೇ +ಧರಮನಟ್ಟೀಯ ತೆಂಕಣದ ಹಳ್ಳಿ …ಕಳ್ಳೀಗುದ್ದಿ ಅಂಬೋ ಊರೂ…ಅಲ್ಲಿ ಎಂಟೆಕರೆ ಮಡ್ಡೀಯ ಭೂಮೀಯ ಬರದು ಕೊಟ್ಟಾರು +ಹರ ನನ್ನ ಮಾದೇವೈ || +* +* +* +ನಾನು ಮರದಿವಸದ ನಾನು ರಥೋತ್ಸವ ಮುಗಿಸಿಕೊಂಡು ಅಲ್ಲಿಂದ ಕಳ್ಳೀಗುದ್ದಿಗೆ ಹೋದೆ.ಕಳ್ಳೀಗುದ್ದಿಗೆ ಹೋಗಿ ಅಲ್ಲಿ ಗೊಂಬೀರಾಮರ-ಸೂತರದ ಗೊಂಬಿಯ ಆಡಿಸುವ -ರಗತ ತಿಲಕದವರ ಮನಿ ಹುಡಿಕಿಕೊಂಡು ಹೋಗಿ- +ಅಲ್ಲಿ ದೇವರ ಜಗಲಿಯ ಮ್ಯಾಲ ಇಟ್ಟಿದ್ದ ಧರಮನಟ್ಟಿಯ ದೇಸಗತಿಯವರು ಬರದಕೊಟ್ಟ ಸನದನ್ನು ನೋಡಿದೆ.ಆ ಸನದನ್ನು ನೋಡಿ ನನ್ನ ಕುತೂಹಲವನ್ನು ತಣಿಸಿಕೊಂಡ ಮೇಲೆಯೇ ಅಲ್ಲಿಂದ ಬೆಂಗಳೂರಿಗೆ ಬಂದೆ…ಸನದಿನಲ್ಲಿ ಇದ್ದ ಮುಖ್ಯ ಮಾತು ಅಂದರೆ – +…ಈ ಜಗತ್ತಿನ್ಯಾಗ ಸೂರ್ಯಾ ಚಂದ್ರಾಮರು ಇರುವ ತನಕಾ ಮುಗಿಲಿನ್ಯಾಗ ನಕ್ಷತ್ರಗೋಳು ಇರೋತನಕಾ ಭೂಮಿಯ ಮ್ಯಾಲೆ ಧರಮನಟ್ಟಿಯ ದೇಸಗತೀ ಇರತದೆ… +ಧರಮನಟ್ಟಿಯ ದೇಸಾಯರ ನೆಳ್ಳಿನ್ಯಾಗ ವಿಟ್ಠಲ ಸ್ವಾಮಿಯ ತೇರು ನಿರಂತರ ಎಳೀತದೆ… +ಸ್ವಾಮಿಯ ಈ ರಥಕ್ಕೆ ಪ್ರಪಂಚದೊಳಗೆ ಗೊಂಬೀರಾಮರ ದ್ಯಾವಪ್ಪನ ವಂಶಸ್ತರು ಎಲ್ಲೇ ಇರಲಿ ಅವ್ರು ಧರಮನಟ್ಟಿಯ ವಿಟ್ಠಲ ಸ್ವಾಮಿಯ ತೇರಿಗೆ ಬಂದು ಒದಗಬೇಕು… ಗೊಂಬೀರಾಮರ ದ್ಯಾವಪ್ಪನ ವಂಶಸ್ತರು ಧರಮನಟ್ಟಿಯಲ್ಲಿ ಚೈತ್ರ ಶುಕ್ಲ ನವಮೀ ಮೂರ್ತದಾಗೆ ಎಳೆಯುವಂಥಾ ವಿಠ್ಠಲ ಸ್ವಾಮಿಯ ತೇರಿಗೆ ಬಂದು – +ಆ ತೇರಿನ ಗಾಲಿಗೆ ತಮ್ಮ ತೆಲಿಯನ್ನ ಹೊಡದು – +ನೊಸಲಿನಿಂದ ಬಸಿಯುವಂಥಾ ಹಸೀ ರಕ್ತವನ್ನ ಬಲಗೈ ಹೆಬ್ಬಟ್ಟಿನ ಮ್ಯಾಲೆ ಧರಿಸಿ ಅದರಲೇ ಸ್ವಾಮಿಯ ರಥದ ಮೂಡಣ ದಿಕ್ಕಿನ ಮುಖಕ್ಕೆ ತಿಲಕವನ್ನು ಇಡಬೇಕು +ಈ ರಗತ ತಿಲಕದ ಸೇವಾ ಅನ್ನುದು ಜಗತ್ತು ಅನ್ನುದು ಪ್ರಳೆ ಆಗಿ ನಾಶ ಆಗೂತನಕಾ – ಸೂರ್ಯಾ ಚಂದ್ರಾಮ ಚಿಕ್ಕಿ ಇರೂತನಕಾ ಅನೂಚಾನವಾಗಿ ನಡಿಯತಕ್ಕದ್ದೆಂದು +ರವಿಕುಲ ಸಂಭೂತ ಪೇಶವೇ ಸಾಮ್ರಾಜ್ಯ ಬಂಧು ರಾಜಮಾನ ರಾಜಶ್ರಿ ರಂಗೋ ಪಟವರ್ಧನ ದೇಸಾಯರು ಬರಸಿದ ಆe ಪತ್ರ ಎಂಬುವ ಈ ಸನದನ್ನ ಲಿಪಿಕಾರ ಶಾಸ್ತ್ರದ ಹಂಪಯ್ಯನವರು ಬರದಾರೆ ಮತ್ತು ದೇಸಾಯರ ಕಾರಭಾರಿ ಆದಂಥ ತ್ರ್ಯಂಬಕ ಭಟ್ಟರು ಇದಕ್ಕೆ ಒಪ್ಪವ ಹಾಕಿದಾರೆ +|| ಇತಿ ಶ್ರಿ || +ಭಾಗ : ಎರಡು +ಸೂತರದ ಗೊಂಬೀ ಆಡಿಸುವ ಗೊಂಬೀರಾಮರ ದ್ಯಾವಪ್ಪ ಹಿಂಗ ಧರಮನಟ್ಟಿಯ ದೇಸಾಯರು ಹಾಕಿಕೊಟ್ಟ ಉಂಬಳಿಯ ಸನದನ್ನ ಹಿಡಕೊಂಡು ಕಳ್ಳೀಗುದ್ದಿಯೆಂಬ ಹಳ್ಳಿಗೆ ಬಂದು ನೆಲೆ ನಿಂದರತಾನೆ….ಜಾತಿ ಕುಲಾ ಗೊತ್ತಿಲ್ಲದ ಯಾವದೋ ಊರಿನ ಪರದೇಶಿಯು ತನ್ನ ಹೇಂತಿ ಮಕ್ಕಳನ್ನು ಕಟಿಗೊಂಡು ಬಂದು, ಚಾವಡಿಯಲ್ಲಿ ಕುಂತ ಗೌಡನಿಗೆ ಕೈಮುಗದು ‘ಯಪ್ಪಾಣಿ…’ ಹಿಂಗಿಂಗರೀ…ಅಂತ ತೇರಿನ ಕಥೀ ಹೇಳಿ, ದೇಸಗತಿಯ ದೈವಕ್ಕ ಮಗನನ್ನ ಬಲಿಕೊಟ್ಟ ಕಥಿಯನ್ನ ಕಣ್ಣು – ಮನಸು ತುಂಬುವ ಹಂಗ ವರ್ಣಸತಾನೆ…ಸೂತರದ ಗೊಂಬೀ ಆಡಿಸಿ ಕಥೀ ಹೇಳುವ ಕಿಳ್ಳೇ ಕ್ಯಾತ ಅಂವ…ಕಾಣದ ಕಥಿಯನ್ನಣಿಕಂಡಂಗೆ ಹೇಳುವವ ಅಂವ…ಇನ್ನು ತನ್ನ ತೊಗಲಿಗೇ ಅಂಟಿದ ಅನುಭವಕ್ಕೆ ಬಣ್ಣಾ ತುಂಬುವುದನ್ನ ಯಾರಾದರೂ ಹೇಳಿಕೊಡಬೇಕೇನು !… ತನ್ನ ಮಗನ ಎದಿಯ ಮ್ಯಾಲೆ ಸ್ವಾಮಿಯ ತೇರು ಹಾಯತಿದ್ದಂಗೇ ತೇರಿನ್ಯಾಗಿನ ಇಟ್ಠಲ ಸ್ವಾಮಿಯ ಮೀಸಿಗಳು ಕುಣದವೂ… ಸ್ವಾಮಿಯ ಕಣ್ಣಿನ್ಯಾಗಿಂದ ಬೆಂಕಿಯ ಕೆಂಡದಂಥಾ ಬೆಳಕು ಚಿಮ್ಮಿ…ಆ ಬೆಳಕಿಗೆ ತನ್ನ ಹೇಂತಿಯ ಕಣ್ಣು ಕುಕ್ಕಿ -ಆಕಿ ಕಕ್ಕಾವಿಕ್ಕಿಯಾಗಿ ಬೇಹೋಶ್ ಆಗಿ ಹೆಂಗೆ ಬಿದ್ದಳೆಂಬುವದನ್ನ – ಸ್ವತಾ ದೇಸಾಯರ ರಾಣೀಸಾಹೇಬರಣಿ ಮುಂದ ನಿಂತು ತನ್ನ ಹೇಂತಿನ್ನ ಹೆಂಗ ಮೇಣೇದಾಗ ಹಾಕಿಸಿಕೊಂಡು ಅವಸರದಿಂದ ವಾಡೇಕ್ಕಣಿ ಕರಕೊಂಡು ಹೋಗಿ -ಹೆಂಗ ಸ್ವತಾ ತಾನಣಿ ಉಪಚಾರ ಮಾಡಿದಳೂ ಅಂಬುವುದನ್ನ….ಎಲ್ಲಾ ಕಥೀ ಮಾಡಿ ಹೇಳಿ …ದೇಸಾಯರು ಬರಸಿಕೊಟ್ಟ ಉಂಬಳಿಯ ಸಂಗತೀ ಹೇಳಿ …‘ಈಗ ನಿಮ್ಮ ಆಶ್ರೇಕ್ಕ ಬಂದದೀವು ತಂದೇ…ನೀವಣಿ ತಂದಿ …ನೀವಣಿ ತಾಯಿ…ದೇಸಾಯರು ಹೇಳಿದ ಪರಕಾರ ನನಗ ಹೊಲಾ ತೋರಸರೀ…’ ಅಂತ ಪ್ರಾರ್ಥನಾ ಮಾಡಿಕೊಂಡ. ಆದರೆ ಗೌಡನಿಗೆ… ಇವನದು ಯಾವ ಜಾತಿಯೋ-ಏನು ಕಥೆಯೊ…ಯಾರಿಗೆ ಗೊತ್ತು?…ಇಂವಗ ಹೊಲಾ ಕೊಡಬೇಕೋ ಏನ ಬಿಡಬೇಕೋ ಅಂತ ಅವನ ಮನಸಿನ್ಯಾಗ ಸಂಶೇ ಮೂಡಿತು…ಆಗ ಗೌಡ – +‘ನಿಂದು ಯಾವ ಜಾತಿ?…’ ಅಂತ ಕೇಳಿದ. +‘ನಾವು ಗೊಂಬೀರಾಮರ ಜಾತ್ಯಾವರರೀ…’. +ಗೌಡಗ ತಿಳೀಲಿಲ್ಲ.ಹಿಂತಾ ಜಾತ್ಯಾವರು ಕಳ್ಳೀಗುದ್ಯಾಗ ಯಾರೂ ಇದ್ದಿರಲಿಲ್ಲ.ಅಂವ +‘…ಅಂದರಣಿ…?’ ಅಂದ. +‘ಅದಣಿರೀ….ಹಾಂ…ಕಿಳ್ಳೀಕ್ಯಾತರರಿ’. +ಗೌಡಗ ಬಗೀಹರೀಲಿಲ್ಲ. +…ಬರಾಬ್ಬರೀ ಅದಣಿ ಹೊತ್ತಿಗಂದರಣಿ ದುಸ್ಯಪ್ಪಗೋಳ ಸಂತ ರಾಮಜೀ ಅಗಸಿಯೊಳಗ ಹಾದು ಚಾವಡೀ ಮುಂದ ಹೊಂಟಿದ್ದ.ಗೌಡರು ಅಂವನ್ನ ‘ರಾಮಜೀ…ಒಂದೀಟಣಿ ಇಲ್ಲಿ ಬಾ…’ಅಂತ ಕರದು ಇವನ ಸುದ್ದೀ ಹೇಳಿದರು… ರಾಮಜೀ ಪಂಢರಾಪುರದ ವಿಠ್ಠಲನ ಭಕ್ತ. ಪ್ರತೀ ವರ್ಷ ಸತ್ತಿಗೇರಿಯ ದಿಂಡೀ ಜೋಡಿ ಪಂಢರಾಪುರಕ್ಕ ಹೋಗಿ ದರಶನಾ ಮಾಡಿಕೊಂಡು ಬರುವಂಥಾ ಮನಶಾ…ಈಗ ಧರಮನಟ್ಟಿಯ ವಿಠ್ಠಲನ ತೇರಿನ ಕಥಿಯನ್ನ ಕೇಳತಿದ್ದಂಗಣಿ ಅಂವ ಹಂಗಣಿ ನಿಂತ ನಿಂತಲ್ಲೇ ಉದ್ದಕಣಿ ಬಿದ್ದು ದ್ಯಾವಪ್ಪಗ ನಮಸ್ಕಾರ ಮಾಡಿದ…ಹಂಗ ನಮಸ್ಕಾರ ಮಾಡಿ ‘ನೀನಣಿ ಪುಣ್ಣೇವಂತ ಬಿಡಪಾ…ಸ್ವಾಮಿಯ ರಥಕ್ಕ ಮಗನ್ನ ಕೊಟ್ಟು ನೂರ ಜಲಮಕ್ಕ ಸಾಕಾಗುವಷ್ಟು ಪುಣ್ಣೇ ಪಡಕೊಂಡಿ…ದೇಸಾಯರು ನಿನಗ ನಮ್ಮ ಊರಾಗ ಹೊಲಾ ಕೊಟ್ಟು ನಮ್ಮ ಊರಿಗೇ ದೊಡ್ಡ ಉಪಕಾರಾ ಮಾಡಿದಂಗಾತು…ದಿನಾ ಹರ್‍ಯಾಗ ನಿನ್ನ ಮಕಾ ನೋಡಿ ನಮ್ಮ ಪಾಪಾ ಕಳಕೊಳ್ಳೂದಕ್ಕ ಅನೂ ಆತು…ಏ…ದೇಸಾಯರು ನಿನಗ ಇಲ್ಲಿ ಹೊಲಾ ಕೊಟ್ಟದ್ದು ಅಗದೀ ಬೇಶಾತು ನೋಡು…’ ಅಂತಂದು ಮತ್ತೊಮ್ಮೆ ಕೈಮುಗದ…. +…ಕಳ್ಳೀಗುದ್ದಿಗೆ ಧರಮನಟ್ಟಿಂದ ಎಂಟು ಹತ್ತು ಹರದಾರಿಯ ಹಾದಿ… ಹಿಂಗಾಗಿ ಕಳ್ಳೀಗುದ್ದಿಯ ಗೌಡನಿಗೆ ಧರಮನಟ್ಟಿಯ ದೇಸಾಯಿಯ ಅಂಜಿಕಿಯದೇನೂ ಹಂತಾ ಜೋರ ಇರಲಿಲ್ಲ. ಆದರ ಈಗ ಸಂತ ರಾಮಜೀ ಆಡಿದ ಮಾತು ಕೇಳಿದ ಮ್ಯಾಲ ಗೌಡಗೂ ದ್ಯಾವಪ್ಪನ ಬಗ್ಗೆ ಒಂದ ನಮೂನಿಯ ಭಕ್ತಿ ಅಂಬುವದು ಮೂಡಿಧಂಗಾತು… ತನ್ನ ತೇರಿಗೆ ಮಗನ ಜೀವಾ ಕೊಟ್ಟ ಮನಶಾನ ಹಿಂದ ವಿಠ್ಠಲ ದೇವರಣಿ ನಿಂತಿರತಾನು ಅಂತ ಅನಿಸಿ ಸನದಿನೊಳಗ ಎಂಟು ಎಕರೆ ಮಡ್ಡಿಯ ಜಮೀನು ಬರದಿದ್ದರೂ ಛಲೂಹಂತಾ ಮಸಾರೀ ಭೂಮೀನಣಿ ಕೊಟ್ಟ…ಇಷ್ಟರ ಮ್ಯಾಲೆ ದ್ಯಾವಪ್ಪನ ಒಕ್ಕಲುತನಕ್ಕ ತನ್ನ ಒಂದ ಜೋಡೀ ಹಳೇ ಕ್ವಾಣಗೋಳನ ಹೊಡದು ಕಳಿಸಿದ. +…ಕಳ್ಳೀಗುದ್ದಿಯ ಗೌಡ ದ್ಯಾವಪ್ಪನಿಗೆ, ಊರು ಮತ್ತ ಹೊಲಗೇರಿಯ ನಡಕಿನ ಒಂದು ಜಾಗಾ ತೋರಿಸಿ ಗುಡಸಲಾ ಹಾಕ್ಕೋಲಿಕ್ಕೆ ಹೇಳಿದ…ದ್ಯಾವಪ್ಪ ಒಂದ ತಾತ್ಪೂರ್ತಿಕ ಗುಡಸಲಾ ಕಟಿಗೊಂಡ…ಮುಂದ ಇರ ಇರತಣಿ ಕಾಡುಗಲ್ಲು ಎಬ್ಬಿಕೊಂಡು ತಂದು -ಮಣ್ಣಿನ ಮಾಳಿಗಿಯ ಮನೀ ಕಟಿಗೊಂಡ…ಮನಿಯ ಮುಂದ ಸಣ್ಣದೊಂದು ಕಟ್ಟಿ…ತಲಬಾಗಲಾ ದಾಟಿ ಒಳಗ ಹೋಗತಿದ್ದಂಗಣಿ ಎಡಕ್ಕ ನೆಲಮಟ್ಟಕ್ಕಿಂತಾ ಒಂದ ಮಳಾ ಎತ್ತರ ಇದ್ದ ಸಣ್ಣದೊಂದು ಪಡಸಾಲಿ…ಪಡಸಾಲಿಯನ್ನ ದಾಟಿದ ಮ್ಯಾಲೆ ದನದ ಹಕ್ಕಿ.ಅದನ್ನ ದಾಟಿದ ಮ್ಯಾಲೆ ನಡಮನಿ…ನಡಮನಿಯ ಎಡಮೂಲಿಯೊಳಗ-ಅಂದರ ದೇವಮೂಲಿಗೆ-ದೇವರ ಜಗಲಿ.ನಡಮನಿಯನ್ನ ದಾಟಿದ ಮ್ಯಾಲೆ ಬರುವ ಅಡಿಗೀ ಮನಿ…ಅಲ್ಲೇ ಮೂಲ್ಯಾಗ ಸಣ್ಣದೊಂದು ಬಚ್ಚಲು… ಹಿಂಗ ದ್ಯಾವಪ್ಪ ತಮ್ಮ ಕುಲಾಚಾರದ ಪ್ರಕಾರನಣಿ ಮನೀ ಕಟಿಗೊಂಡು,ದೇಸಾಯರು ಬರೆಸಿಕೊಟ್ಟ ಸನದಿಗೆ ಕಾಜಿನ ಕಟ್ಟು ಹಾಕಿಸಿ ದೇವರ ಜಗಲಿಯ ಮ್ಯಾಲೆ ಇಟ್ಟ…ದ್ಯಾವಪ್ಪನ ಹೇಂತಿ ಲಗಮವ್ವಗ ಆ ಸನದು ಕಂಡರೆ ತೇರಿನ ಗಾಲಿ ಹಾದು -ರಗತ ರಾಣಾ ರಂಪ ಆಗಿ-ಪ್ರಾಣಾ ಬಿಟ್ಟು …ಮುದ್ದಿಯಾಗಿ ಬಿದ್ದ ಮಗನ ನೆನಪು ಬಂದು – ಆಕಿಯ ಹೊಟ್ಯಾಗ ಬೆಂಕಿ ಬಿದ್ದಂಗ ಆಗತಿತ್ತು .ಹಂತಾದ್ದರಾಗ ತನ್ನ ಗಂಡ ಆ ಸನದಿಗೆ ಸಿಂಗಾರ ಮಾಡಿ – ಕನಡೀ ಹಳ್ಳು ಹಾಕಿಸಿ ದೇವರ ಜಗಲೀ ಮ್ಯಾಲೆ ಇಟ್ಟು ಪೂಜೀ ಮಾಡಿದರ ಆಕಿಗೆ ಏನಾಗಬ್ಯಾಡ !?…ಆಕಿ ‘ನನ್ನ ಮಗನ ರಗತಾ ಕುಡದ ಕಾಗಜ ಅದು…ಅದ ರಾಗಸಸ ಐತಿ…ಮದಲ ಅದನ್ನ ದೇವರ ಜಗಲೀ ಮ್ಯಾಲಿಂದ ತಗೀ…ನೀ ತಗೀದಿದ್ದರ ನಾನಣಿ ಅದನ್ನ ತಗದ ಹೊರಗ ಒಗೀತನ ನೋಡು…’ಅಂತ ರಂದೀ ಮಾಡಿದಳು.ದ್ಯಾವಪ್ಪ ಒಂದ ಸ್ವಲ್ಪನೂ ದನೀ ಜೋರ ಮಾಡದಣಿ ಒಂದಣಿ ಒಂದು ಮಾತು ಹೇಳಿದಾ -‘ಅದಕ್ಕ ಏನಾರ ಕೈ ಹಚ್ಚು…ನಿನ್ನ ಣಿ ಮತ್ತ ನಿನ್ನ ಹೊಟ್ಯಾಗಿನ ಕೂಸು -ಇಬ್ಬರನೂ ಬಲೀ ಕೊಡತನು…ಹುಸಾರ್ !’…ಹಿಂಗ ಅಂಜಿಸಿದ್ದೇನೋ ಆತು.ಆದರ ಲಗಮವ್ವ ಯಾವಾಗರೇ ಈ ಅಂಜಿಕಿಯ ಹದ್ದು ಮೀರಿ ಅದಕ್ಕ ಧಕ್ಕೀ ತಂದಗಿಂದಾಳು ಅಂತ ಅನಿಸಿ ದ್ಯಾವಪ್ಪ ದೇವರ ಜಗಲಿಯ ಪೂರ್ತೇ ಗ್ವಾಡೀ ಎಬ್ಬಿಸಿ ಒಂದ ಸಣ್ಣ ಗೂಡು ಕಟ್ಟಿ ಅದಕ್ಕ ಬಾಗಲಾ ಹಚ್ಚಿಸಿ ಕೀಲೀ ಹಾಕಲಿಕ್ಕೆ ಬರೂಹಂಗ ವ್ಯವಸ್ತಾ ಮಾಡಿಕೊಂಡ… ದೇವರಗೋಳನ ಮತ್ತ ಅವುಗಳ ನಡಬರಕ ಕುಂತಿದ್ದ ಕನಡೀ ಕಟ್ಟು ಹಾಕಿಸಿದ ಸನದನ್ನ ಗೂಡಿನ್ಯಾಗ ಇಟ್ಟು ಕೀಲೀ ಹಾಕಲಿಕ್ಕೆ ಸುರುಮಾಡಿದ… +…ಮುಂದ ಲಗಮವ್ವಗ ಗಂಡ ಕೂಸು ಹುಟ್ಟಿ ಅದು ಹುಟ್ಟಿದ ಎರಡು ದಿವಸಕ್ಕಣಿ ಸತ್ತು ಸುಡುಗಾಡು ಸೇರಿತು…ಲಗಮವ್ವ ತನ್ನ ಈ ಕೂಸನ್ನೂ ದೇವರಂಬುವ ಆ ರಾಗಸಸನಣಿ ಬಲೀ ತಗೊಂಡ ಅಂತ ‘….ಇನಣಿ ನಿನ ಹೊಟ್ಟಿ ತುಂಬಲಿಲ್ಲೇನೋ… ನಿಂದೇನ ಅದು ಹೊಟ್ಯೋ ಇಲ್ಲಾ ಹತ್ತೀ ತುಂಬೂ ಭಟಾರೋ…?ಚಂದಾಳ ಗೊಂಬೀಹಂತಾ ನನ್ನ ಮಗನ ರಗತಾ ಕುಡದು ನಿನ ಒಡ್ಲು ತಣೀಲಿಲ್ಲ ಏನೋ…ನನ್ನ ಎಳೀ ಕಂದನ್ನೂ ತಿಂದೆಲ್ಲೊ…’ ಅಂತ ಹಾಡ್ಯಾಡಿಕೊಂಡು ಅತ್ತಳು…ಕೂಸು ಸತ್ತು ಎಂಟ್ಹತ್ತು ದಿನಾ ಆಗಿರಬೇಕು…ಒಂದ ದಿನಾ ದ್ಯಾವಪ್ಪ ಮರಮಾತಿಗೆ ಬಿದ್ದು ದೇವರ ಗೂಡಿನ ಕೀಲೀ ತಗದು ಹೊಳ್ಳಿ ಅದನ್ನ ಹಾಕದಣಿ ಹಂಗಣಿ ಬಿಟ್ಟಿದ್ದ…ಲಗಮವ್ವ ಕನಡೀಹಳ್ಳು ಹಾಕಿಸಿದ ಸನದನ್ನ ತಗೊಂಡು …ಇನ್ನೇನು ಅದನ್ನ ಒಡದು ನಾಶ ಮಾಡೇ ಬಿಡಬೇಕು…ಅಷ್ಟರಾಗಣಿ ದ್ಯಾವಪ್ಪ ಅದನ್ನ ನೋಡಿ ಓಡಿಬಂದು,ಆಕೀ ಕೈಯಾಗಿಂದ ಅದನ್ನ ಕಸಗೊಂಡು…ಆಕಿನ್ನ ಎಳದ ಒಗದ…ಲಗಮವ್ವನ ತೆಲೀ ಗ್ವಾಡಿಗೆ ಬಡದು … ಒಡದು…ಆಕಿ ಬೇಹೋಶ್ ಆಗಿ ಬಿದ್ದಳು… ಉಳ್ಳಾಗಡ್ಡೀ ಜಜ್ಜಿ ಮೂಗಿಗೆ ಹಿಡದೂ… ಮಕಕ್ಕ ನೀರು ಗೊಜ್ಜೀ…ಗೋಟಾಳೀ ಮಾಡಿದಮ್ಯಾಲಣಿ ಆಕಿಗೆ ಖಬರು ಬಂತು.ಆದರ ಈ ಘಟನಾ ಆದ ಮ್ಯಾಲ ಲಗಮವ್ವಗ ಅಬರ ಖಬರ ಆತು… ಆಕಿ ಒಂದ ನಮೂನೀ ಹುಚ್ಚೀ ಹಂಗ ಆದಳು…ಏನಕೇನರೇ ಮಾತಾಡೂದೂ-ಇದ್ದಕಿದ್ದಂಗೇ ಒಮ್ಮಿಂದೊಮ್ಮಿಗೇ ಗೋಳೋ ಅಂತ ಅಳೂದೂ-ವಿನಾಕಾರಣ ಖೊಕ್ಕ ಖೊಕ್ಕಂತ ನಗೂದೂ…ಹಿಂಗ ಮಾಡಾಕಿ…ಲಗಮವ್ವನ ಮ್ಯಾಲ ಸ್ವಾಮಿ ಸಿಟ್ಟ ಆಗ್ಯಾನ ಅಂತ ತಿಳದು ‘ಯಪ್ಪಾ ಸ್ವಾಮೀ…ನಿನ್ನಣಿ ನಂಬೀದನು ! ನನ್ನ ಸಂಸಾರದ ದೀಪಾ ಕಳೀಬ್ಯಾಡ. ಬುದ್ಧಿಯಿಲ್ಲದ ಹೆಂಗಸು…ತೆಪ್ಪ ಮಾಡೇತಿ.ಹೊಟ್ಯಾಗ ಹಾಕ್ಕೋ ತಂದೇ!…ನಿನ್ನ ಮಡಲಿಗೆ ಬಿದ್ದದೀವು.ಕೊಲ್ಲೂದೂ ಕಾಯೂದೂ ಎಲ್ಲಾ ನಿನ್ನಣಿ ಕೂಡೇತಿ… ಒಟ್ಟಣಿ ತೆಪ್ಪಸಧಂಗ ವರ್ಷಾ ವರ್ಷಾ ನಿಷ್ಠಾದಿಂದ ನಿಂದು ರಗತ ತಿಲಕದ ಸೇವಾ ಮಾಡತೀವು…’ ಅಂತ ದ್ಯಾವಪ್ಪ ಹರಕೀ ಹೊತ್ತ….ಮುಂದ ಎರಡ ತಿಂಗಳ ತನಕಾ…ಸಾವಕಾಶೆ ಸಾವಕಾಶೇ ಲಗಮವ್ವಗ ಸತ್ತ ಕೂಸಿನ ನೆನಪು ಮಸಕ ಮಸಕು ಆಗಿ-ಆಕಿಯ ದುಕ್ಕದ ಕಾವು ಆರಿತು…ಆಕಿ ಸಾವಕಾಶೆ ಸಾವಕಾಶೇ ಉಜ್ಜಳ ಆದಳು…ತಾ ಹರಕೀ ಹೊತ್ತದ್ದಕ್ಕಣಿ ಹೇಂತಿಗೆ ಆರಾಮ ಆತು ಅಂತ ದ್ಯಾವಪ್ಪಗ ಪಟಾಯಿಸಿ ಸ್ವಾಮಿಯ ಮ್ಯಾಲಿನ ಅವನ ನಂಬಿಕಿ ಇನಷ್ಟು ಹೆಚ್ಚ ಆತು…ಹೇಂತಿಗೂ ಹೇಳಿದ.ಆಕಿ ಒಪಿಗೊಂಡಳೋ ಬಿಟ್ಟಳೋ…ಅಂತೂ ದೇವರ ಗೂಡಿನ ಮುಂದ ಹೆಂಗಸರು ಬಂದರೆ ಮಡೀ ಕೆಟ್ಟು – ಮುಡಚಟ್ಟು ಆಗಿ ಸ್ವಾಮಿ ಕಾಡತಾನೆ… ಅದಕ್ಕಣಿ ದೇವರ ಗೂಡಿನ ಮುಂದ ಯಾರೂ ಹೆಂಗಸರು ಬರಬಾರದು-ಅವರ ನೆಳ್ಳು ದೇವರ ಗೂಡಿನ ಮ್ಯಾಗ ಬೀಳಬಾರದು – ಅಂತನ್ನುವ ವಿಧಿ ನಿಷೇಧಗಳು ದ್ಯಾವಪ್ಪನ ಮನಿಯೊಳಗ ಹುಟ್ಟಿಕೊಂಡವು… +ಕಳ್ಳೀಗುದ್ದಿಗೆ ಬಂದಮ್ಯಾಲೆ ದ್ಯಾವಪ್ಪ ರಗತ ತಿಲಕದ ಸೇವಾ ನಡಸಲಿಕ್ಕೆ ರಾಮನವಮಿಯ ದಿವಸದ ತೇರಿಗೆ ಇನ್ನೂ ಎರಡ ದಿನಾ ಐತಿ ಅನ್ನುವಾಗನಣಿ ಧರಮನಟ್ಟಿಗೆ ಹೋಗಿ ಠಿಕಾಣೀ ಹೂಡಿದ…ತೇರಿಗೆ ಬಂದ ಮಂದಿ ದ್ಯಾವಪ್ಪನ ಕಡೆ ಕೈಮಾಡಿ ತೋರಿಸಿ-ಅಂವನಣಿ ನೋಡದಣಿ…ಅಪಸಕುನ ಆಗಿ ದೇವರ ತೇರು ಮುಂದಕ ಸಾಗಂಗಿಲ್ಲ ಅಂತ ನಿಂತಬಿಟ್ಟಾಗ ತನ್ನ ಮಗನ್ನ ತೇರಿಗೆ ಅರಪಣಾ ಮಾಡಿ ಸ್ವಾಮಿಯ ತೇರು ಮುಂದಕ ನಡಿಯೂ ಹಂಗ ಮಾಡಿದಾಂವ… ಇನ್ನ ಮುಂದ ದಣಿರ ವರಸಾ +ಸ್ವಾಮಿಯ ತೇರಿಗೆ ತನ್ನ ತೆಲೀ ಒಡಕೊಂಡು ರಗತ ತಿಲಕಾ ಇಟ್ಟು ಸೇವಾ ಮಾಡತಾನು… ಅದಕ್ಕಣಿ ಎಡ್ಡ ದಿವಸ ಅಗಾವಣಿ ಬಂದಾನು…ಅಂತ ಹೇಳತಿದ್ದರೆ -ವಿಠ್ಠಲ ದೇವರ ಅಗದೀ ಮನಸಾ ಮತ್ತ ಖಾಸಾ ಭಕ್ತರಂಬುವವರು ಇವನ ಸನೇಕ ಬಂದು -‘ನಮಸ್ಕಾರ ಎಪ್ಪಾಣಿ…’ ಅಂತ ಕೈಮುಗದು ಹೋದರು…ಯಾರೋ ಭಕ್ತರು ಎಡೀ ಬಡಿಸಿ ತಂದು ಉಂಬಲಿಕ್ಕೆ ನೀಡಿದರು…ಮತ್ತ ಯಾರೋ ಭಕ್ತರು ಆಕಳಾ ಹಿಂಡಿದಗಳಸೇ ಒಂದು ಚರಿಗೀ ತುಂಬ ಹಾಲು ತಂದು ಕೊಟ್ಟರು…ದ್ಯಾವಪ್ಪನಿಗೆ ತನ್ನ ಬಗ್ಗೆ ಏನೋ ಒಂದು ತಿಳಧಂಗಾತು…ಖರೇ ಕೇಳಿದರ ಅಂವ ಕಳ್ಳೀಗುದ್ದಿಗೆ ಬಂದ ದಿವಸ -ಚಾವಡೀ ಹಂತೇಕ ದುಶಪ್ಪಗೋಳ ಸಂತ ತನಗ ಸಾಷ್ಟಾಂಗ ನಮಸ್ಕಾರ ಮಾಡಿದಾಗಲೇ ಹಿಂತಾದ್ದರ ಸೂಚನಾ ಸಿಕ್ಕಂಗ ಆಗಿತ್ತು…ಈಗ ರಗತ ಸೇವಾಕ್ಕಂತ ಧರಮನಟ್ಟಿಗೆ ಬಂದಾಗ ಅದರ ಹೊಳಹು ಪೂರಾ ಕಂಡಂಗಾತು…ರಾಮನವಮಿಯ ತೇರು ಮುಗಿಸಿಕೊಂಡು ಹೊಳ್ಳಿ ಕಳ್ಳೀಗುದ್ದಿಗೆ ಬರುವಷ್ಟರೊಳಗೆ ದ್ಯಾವಪ್ಪನ ಮುಖದ ಮ್ಯಾಲಿನ ಕಳೇನಣಿ ಬದಲಾಗಿ ಬಿಟ್ಟಿತ್ತು… +…ಸೇವಾ ಮುಗಿಸಿಕೊಂಡು ಕಳ್ಳೀಗುದ್ದಿಗೆ ಬಂದಮ್ಯಾಲೆ ದ್ಯಾವಪ್ಪನ ಮಾತಗೋಳು ಕಡಿಮಿ ಆಗಿ ವಿಠ್ಠಲನ ಜಪಾ ಜಾಸ್ತ ಆತು…ಯಾವಾಗ ನೋಡಿದರೂ ತುಟಿ ಪಿಟಿ ಪಿಟಿ ಅಂತ ಅಳಿಗ್ಯಾಡಿ…ಉಸರಿನ ಸಪ್ಪಳದಷ್ಟಣಿ ದನಿಯೊಳಗ ‘ವಿಠ್ಠಲ…ವಿಠ್ಠಲ ’ ಅನ್ನಾವ…ಅಂವ ನಡಕ ಒಮ್ಮೆ ಗೂಗೀಕೊಳ್ಳಕ್ಕ ಹೋಗಿ ನಾಕದಿನಾ ಅಲ್ಲೇ ಇದ್ದು ಬಂದ…ಮನ್ಯಾಗ ಹೇಳದಣಿ ಕೇಳದಣಿ ಹೋಗಿದ್ದ… ಲಗಮವ್ವ ಹೌಹಾರಿ ಕುಂತಳು…‘ನನ್ನ ಬಂಗಾರದಂಥಾ ಮಗನ್ನ ನುಂಗಿ ನೀರ ಕುಡದಾ…ಈಗ ನನ್ನ ಪರಪಂಚನಣಿ ಮುಣಗಸಬೇಕಂತ ಬೇತಾ ಮಾಡ್ಯಾನು…ಇನಣಿ ಏನೇನ ಮಾಡ ಬೇಕಂತ ಮಾಡ್ಯಾನೋ ಯಾಂವ ಬಲ್ಲ…’ ಅಂತ ದೇವರನ ಬೈದು ಸೊರ್ ಭರ್ ಅಂತ ಮೂಗು ಏರಿಸಿ ಸೆರಗಿನಿಂದ ಒರಸಿಕೊಂಡಳು…ದ್ಯಾವಪ್ಪ ಹೊಳ್ಳಿಬಂದ ಮ್ಯಾಲೆ – ‘ಮನ್ಯಾಗ ಹೇಳಿ ಹೋಗಿದ್ದರ ನಿನ ನಾಲಿಗ್ಗೆ ಮುಳ್ಳ ಮುರೀತಿದ್ದೂ ಏನು…? ಹೇಂತೀ ಮಕ್ಕಳೂ ಬ್ಯಾಡ ಅನ್ನೂ ಹಂಗಿದ್ದರ ಮದಿವೀ ಯಾಕ ಆದಿ…ಸನ್ನೇಸಿ ಆಗಬೇಕಾಗಿತ್ತೂ…’ ಅಂತ ಒದರ್‍ಯಾಡಿದಳು…ದ್ಯಾವಪ್ಪಗ ಆಕಿನ್ನ ಸಮಾಧಾನ ಮಾಡಬೇಕಾದರ ಸಾಕು ಸಾಕಾತು… +…ದ್ಯಾವಪ್ಪಗ ಗೂಗೀಕೊಳ್ಳದಾಗ ಲಂಗಟದ ಸ್ವಾಮಿಗೋಳ ದರಶನ ಆತಂತ…ಇಂವ ಅವರ ಕಾಲ ಹಿಡಕೊಂಡು-ನಾನು ಹಿಂಗಿಂಗ ದೇವರ ಸೇವಾ ಮಾಡಾಕತ್ತದನು…ನೀವು ನನಗ ಸಾಧನಾದ ಹಾದೀ ತೋರಸರೀ…ಅಂತ ದುಂಬಾಲು ಬಿದ್ದನಂತ.ಅವರು-ಹುಚ್ಚಪ್ಪಾ …ಏಳು. ನೀನು ನಡದದ್ದಣಿ ಹಾದಿ ಐತಿ…ಅದಣಿ ನಿನ್ನ ಸಾಧನಾ…ವರ್ಷಾ ವರ್ಷಾ ಎಂಟ್ಹತ್ತ ಹನೀ ರಗತ ಅಂದರ ಅದೇನ ಕಡಿಮಿ ಅಲ್ಲ…ನೂರ ದೀಡನೂರ ವರ್ಷಕ್ಕಂದರ ಒಬ್ಬ ಮನಶಾನ ರಗತದಷ್ಟಣಿ ಆದೀತು…! +ಹಾಂ…ಇರಲಿ ತಗೋ…ಇರಬಿ ಆದಿಯಾಗಿ ಎಂಭತ್ತ ಕೋಟಿ ಯೋನಿಯೊಳಗ ದಾಟಿ ಬಂದ ಜೀವ ಇದಾ…ಒಂದೊಂದ ಯೋನಿಯೊಳಗ ಈ ಜೀವನ್ನುದು ಎಷ್ಟ ಸರತೇ ಜನಮಾ ಎತ್ತಿರತೈತ್ಯೋ ಯಾಂವ ಬಲ್ಲ? ಅಂದಮ್ಯಾಗ ಆ ಎಲ್ಲಾ ಜನಮಗೋಳದೂ ರಗತದಾಗ ಕಸರ ಉಳದಿರಬೇಕಲಾ…ಆ ಕಸರ ನೋಡಿಕೋರಿ…ಮದಲ ರಗತದಾಗಿನ ಈ ಕಸರ ಬಗೀಹರಿಸಿಕೋರಿ…’ ಅಂತ ಆಶೀರ್ವಾದ ಮಾಡಿ ಗಿಡಗೋಳ ನಡಕ ಗಪ್ಪ ಗಡದ್ದ ಆದರಂತ…ದ್ಯಾವಪ್ಪ ಅದನ್ನಣಿ ಮನಸಿನ್ಯಾಗ ಇಟಗೊಂಡು ಹೊಳ್ಳಿ ಊರಿಗೆ ಬಂದಿದ್ದ… +ಊರಿಗೆ ಬಂದಮ್ಯಾಲೆ ಹೊಲಾ ಮನೀ-ಆ ಈ ಕೆಲಸ ಬಿದ್ದು ಅಂವ ತನ್ನ ಹ್ವಾರೇದಾಗ ತಾನು ಮುಣಗಿದ.ಆಮ್ಯಾಲ ಬಿಳಿಜ್ವಾಳದ ಸುಗ್ಗಿ ಮುಗದು,ಇನ್ನ ದೀಡು- ಎರಡು ತಿಂಗಳಿಗೆ ಧರಮನಟ್ಟಿಯ ತೇರು ಐತಿ ಅನ್ನುವಾಗ ಅಂವಗ ಲಂಗಟದ ಸ್ವಾಮಿಗಳ ಮಾತು ನೆನಪಿಗೆ ಬಂತು…ಅಂವ ಅವರಿವರಿಗೆ-ರಗತದಾಗ ಕೂಡಿದ ಕಸರ ಬಗಿಹರಿಸಿಕೋರಿ ಅಂತ ಲಂಗಟದ ಸ್ವಾಮಿಗೋಳು ಅಪ್ಪಣೀ ಕೊಟ್ಟ ಮಾತು ಹೇಳಿ -‘ಈ ರಗತದಾಗ ಕೂಡಿರೂ ಕಸರ ಹೆಂಗ ಕಳಕೊಳ್ಳೂದೋಪಾಣಿ…?’ ಅಂತ ಅವರಿವರನ್ನ ಕೇಳಿದ…ಯಾರನ ಕೇಳಿದರೂ ‘ಏ ನಮಗೇನ ಇದ ಗೊಂತ ಇಲ್ಲ ಬಿಡಪಾ…’ ಅಂತ ದನೀ ಎಳದರು…ಕಡಿಕ ಗೌಡರನಣಿ ಒಂದ ಮಾತ ಕೇಳಿ ಬಿಡೂದು ಅಂತ ದ್ಯಾವಪ್ಪ ಧೈರ್ಯಾ ಮಾಡಿ ಅವರನಣಿ ಕೇಳಿದ…ದ್ಯಾವಪ್ಪನ ಮಾತು ಕೇಳಿ ಗೌಡರಿಗೆ ನಗೀ ಬಂತು…ಅವರು -ನಿನ್ನ ರಗತಾ ಎಲ್ಲಾ ಬಸದು ತಗದು…ಸೋಸೂ ಅರಿಬೀ ಇರತೈತೆಲಾ…ಅದರಲೇ ಸೋಸು…ಹಂಗ ಸೋಸಿಕ್ಯಾರಿಂದ ಕಸರ ಎಲ್ಲಾ ತಗದು… ಹೊಳ್ಳಿ ಕುಡದ ಬಿಡು…ಅಂತ ಹೇಳಿ ಖೊಕ್ಕ ಖೊಕ್ಕಂತ ನಕ್ಕಬಿಟ್ಟರು…ದ್ಯಾವಪ್ಪ – ‘ಹಂಗಂತೀರಿ…ಹಂಗರ ಕೈಯಾ ಇಲ್ಲಾ ಕಾಲಾ ಕುಡಗೋಲಲೇ ಹೆಂಚಿಗೊಂಡು ರಗತಾ ಎಲ್ಲಾ ಬಸದ ತಗ್ಯಾಕ ಬಂದೀತಲ್ಲರಿ?’ ಅಂತ ಕೇಳಿದಾಗ ಗೌಡರು ಒಮ್ಮಿಗೆಲೇ ಗಾಬರ್‍ಯಾಗಿ ‘ಏ..ಏಣಿ..ಹಂಗ ಎಲ್ಲೆರಣಿ ಮಾಡಿಗೀಡೀ…ಹಕನಾಕ ಜೀವಾ ಕಳಕೊಂಡೀ’ ಅಂತ ನುಡದಾಗ ದ್ಯಾವಪ್ಪ ಅಚ್ಚರಿಗೊಂಡು ‘ಯಾಕರೀ…?’ ಅಂದ. ‘ನೋಡೂ… ನಿನ್ನದ ಅದೇನ ರಗತದಾಗಿನ ಕಸರು ತಗಿಯೂ ಮಾತ ಹೇಳತೀಲಾ …ಅದನ್ನ ಹಳಿಮನಿ ಶಂಕರಜ್ಜನ ಹಂತೇಕ ಹೇಳು. ಅಂವ ಯಾವದರೇ ಹಾದೀ ತೋರಸತಾನು…ಕೈಕಾಲು ಹೆಂಚಿಕೋ ಹಂತಾ ದಗದಕ್ಕ ಮಾತ್ರ ಹೋಗಬ್ಯಾಡ…’ ಅಂತ ಗೌಡರು ಇನೊಮ್ಮೆ ತಾಕೀತು ಮಾಡಿ ಹೇಳಿದರು.ದ್ಯಾವಪ್ಪ ಗೋಣು ಹಾಕಿ ನೆಟ್ಟಗಣಿ ಹಳಿಮನಿ ಶಂಕರಜ್ಜನ ಮನಿಗೆ ನಡದ… +…ಶಂಕರಜ್ಜ ಮನ್ಯಾಗ ಇರಲಿಲ್ಲ.ಅವನ ಸೊಸೀ ‘ಬಾ ಯಣ್ಣಾಣಿ…’ ಅಂತ ಇವನ್ನ ಒಳಗ ಕರದು – ‘ಯಣ್ಣಾಣಿ…ಮಾವ ಕಳಸಪ್ಪಗೋಳ ರಾಮಣ್ಣ ಕಾಕಾನ ಮನಿಗೆ ಹೋಗ್ಯಾನು…ಅವರ ಗಬ್ಬದ ಯಮ್ಮೀದು ಹೊಟ್ಟಿ ಉಬ್ಬರಿಸಿಕೊಂಡೈತಿ ಅಂತ ಕರ್‍ಯಾಕ ಬಂದಿದ್ದ…ಇದೇ ಈಗ ಅವನಗೂಡೇ ಹೋಗ್ಯಾನು…ಒಳಗ ಬಾಲಾ ಯಣ್ಣಾ’ ಅಂತ ಕರದಳು.ದ್ಯಾವಪ್ಪ ‘ಇರ್‍ಲಿ ಬಿಡ ತಂಗೀ…ಒಂದೀಟಣಿ ದಗದ ಐತಿ…ನಾ ರಾಮಣ್ಣನ ಮನೀ ಕಡೆನಣಿ ಹೊಕ್ಕನೇಳವಾ’ ಅಂತ ಹೇಳಿ ಅಲ್ಲಿಂದ ನೆಟ್ಟಗಣಿ ಕಳಸಪ್ಪಗೋಳ ರಾಮಣ್ಣನ ಮನಿಗೆ ಬಂದ…ಅಲ್ಲಿ ರಾಮಣ್ಣ ಮತ್ತ ಶಂಕರಜ್ಜ ಇಬ್ಬರೂ ಕೂಡಿ ಯಮ್ಮಿಗೆ ಗೊಟ್ಟದಲೇ ಅಗಸುದ್ದೇ ಕುಡಸಾಕ ಗುದ್ಯಾಡಲಿಕ್ಕತ್ತಿದ್ದರು…ಶಂಕರಜ್ಜ ಗೊಟ್ಟದಾಗ ಅಗಸುದ್ದೇ ತುಂಬಿಕೊಂಡು ಹಿಡಕೊಂಡಿದ್ದರೆ ರಾಮಣ್ಣ ಯಮ್ಮಿಯ ಮಕವನ್ನ ಅವಚಿ ಮ್ಯಾಲಕೆತ್ತಿ ಹಿಡದು,ಅದರ ಸ್ವಾಟ್ಯಾಗ ಬೆಳ್ಳುಹಾಕಿ ಬಾಯಿತೆರಸಲಿಕ್ಕೆ ಗುದ್ಯಾಡಲಿಕ್ಕೆ ಹತ್ತಿದ್ದ… ಶಂಕರಜ್ಜನು ಎಮ್ಮಿಯು ಬಾಯಿ ತೆರೆಯಲಿಕ್ಕೆ -ಅದು ಬಾಯಿ ತೆರೆಯತಿದ್ದಂಗೇ ತಾನು ಅದರ ಬಾಯೊಳಗೆ ಗೊಟ್ಟವನ್ನ ತುರುಕಿ ಅಗಸುದ್ದೇ ಸುರುವಲಿಕ್ಕೆಂದು ಕಾಯುತ್ತಿದ್ದ…ದ್ಯಾವಪ್ಪ ನೆಟ್ಟಗಣಿ ಇವರು ಗುದ್ಯಾಡತಿದ್ದ ದನದ ಹಕ್ಕಿಗೇ ಬಂದ…ಇಂವ ಅಲ್ಲಿಗೆ ಬಂದದ್ದು ಕಂಡು ರಾಮಣ್ಣ ಮತ್ತ ಶಂಕರಜ್ಜಗ ಸಂತೋಷ ಆತು. +‘ಯಾಣಿ…ಅಗದೀ ಹೇಳಿಕಳಿಸಿದಂಗ ಚಲೂ ಯಾಳೇದಾಗ ಬಂದದೀ ಬಾ…’ ಅಂತ ಶಂಕರಜ್ಜ ಅಂದರೆ ಕಳಸಪ್ಪಗೋಳ ರಾಮಣ -‘ಬಾ ಕಾಕಾ…ಆಗದೀ ಐನ ಯಾಳೇದಾಗ ಬಂದದೀ…ಈ ಪಿಸರ ಎಮ್ಮಿ ಅಗಸುದ್ದೇ ಕುಡ್ಯಾಕ ನಾಯಾಕ ಅನ್ನಾಕತ್ತೇತಿ.ನಾ ಇದರ ಮಕಾ ಗಟ್ಯಾಗಿ ಹಿಡಕೋತನು…ನೀ ಇದರ ಸ್ವಾಟ್ಯಾಗ ಬಳ್ಳ ಹಾಕಿ ಬಾಯಿ ತಗಸು…ಬಾಯಿ ತಗಸಿದಗಳಸೇ ಶಂಕರಜ್ಜ ಗೊಟ್ಟಾ ಹೆಟ್ಟಿ ಅಗಸುದ್ದೇ ಕುಡಸತಾನು…ಅಗಸುದ್ದೇ ಹಾಕಿದ ಕೂಡಲೇ ನೀ ಅದರ ಬಾಯಿ ಒತ್ತಿಹಿಡದು ಉಗಳಧಂಗ ಗಟ್ಯಾಗಿ ಹಿಡೀ…’ ಅಂತ ದ್ಯಾವಪ್ಪನಿಗೆ ಸೂಚನಾ ಕೊಟ್ಟು -ಅವರು ಮೂರೂಮಂದಿ ಆ ಕಾಯಕದೊಳಗ ಗರ್ಕಾದರು… +…ನೀ ಮಕಾ ಗಟ್ಯಾಗಿ ಹಿಡಕೊ… +ಹಾಂ ಯಜ್ಜಾ… ಲಗೂಟಣಿ… +ಹೂಂ..ಏ..ಏ…ರಾಮಣ್ಣಾ ಮಕಾ ಜಾಡಸಧಂಗ ಗಟ್ಯಾಗಿ ಹಿಡಕೊ… +ಹಾಂ ..ನೀ ಬಾಯಿ ಅಗಲಸು… +ಹಾಂ ಯಜ್ಜಾಣಿ.. +ಅಂತ ಅವರು ಒಬ್ಬರು ಇನೊಬ್ಬರಿಗೆ ಹೇಳಿಕೋತ ಅಂತೂ ಆ ಎಮ್ಮಿಗೆ ಗೊಟ್ಟದಾಗಿನ ಔಷದ ಕುಡಿಸಿ ಉಸರು ಬಿಟ್ಟರು…ಆಮ್ಯಾಲ ಶಂಕರಜ್ಜ ರಾಮಣ್ಣನಿಗೆ ‘ಇನ್ನೇನ ಆರಾಮ ಆಗತೈತಿ ತಗೊ…ಇಷ್ಟಕ ಬರಾಬ್ಬರೀ ಆಗದಿರಕ ಮದ್ದಿನ ಮ್ಯಾಲ ನನ್ನ ಹಂತೇಕ ಬಾ…ಆಗ ಒಂದ ತೊಪ್ಪಲಾ ಕೊಡತನು.ಅದನ್ನ ಬೆಲ್ಲಾ -ರೊಟ್ಟೀ ಜೋಡಿ ತಿನಸು…ಎಲ್ಲಾ ಕಸರ ಬಿಟ್ಟ ಹೋಗತೈತಿ ಅಂತ ಹೇಳಿದ. +ಶಂಕರಜ್ಜ ಹೇಳೂದೆಲ್ಲಾ ಕೇಳಿಯಾದಮ್ಯಾಲೆ ಕಳಸಪ್ಪಗೋಳ ರಾಮಣ್ಣ – ‘ಹಾಂ… ಅಂದಂಗ ದ್ಯಾವಪ್ಪ ಕಾಕಾ ಇಕಾಡಿ ಬಂದಲಾ?’ ಅಂದದ್ದಕ್ಕೆ ಇಂವ ‘ಏನಿಲ್ಲ ತಮಾ…ಒಂದೀಟಣಿ ಶಂಕರಜ್ಜನ ಹಂತೇಕ ದಗದ ಇತ್ತು…ಅವರ ಮನಿಗೆ ಹೋಗಿನ್ನಿ…ಹಿಂಗಿಂಗಣಿ…ಕಳಸಪ್ಪಗೋಳ ರಾಮಣ್ಣ ಕಾಕಾನ ಮನಿಗೆ ಹೋಗ್ಯಾನು ಅಂತ ಯಜ್ಜನ ಸೊಸೀ ಹೇಳಿದಳು…ಹುಡಿಕ್ಕೊಂಡ ಇಲ್ಲಿಗೇ ಬನ್ನಿ’ ಅಂತ ಹೇಳಿದ. +ಶಂಕರಜ್ಜ ‘ಯಾವದರೇ ದನಕ್ಕ ಏನರೇ ಆಗೇತೇನೋ ತಮ್ಮಾಣಿ’ ಅಂತ ಕೇಳಿದ. +ದ್ಯಾವಪ್ಪ ‘ಏ…ದನಾ ಕರದ್ದ ಅಲ್ಲೇಳ ಯಜ್ಜಾ… ಒಂದೀಟ ಬ್ಯಾರೇ ದಗದ ಐತಿ..ನಡೀ ಹಂಗಣಿ ಮನಿಗೆ ಹೋಕ್ಕೊಂತ ಹಾದ್ಯಾಗಣಿ ಹೇಳತನು…’ ಅಂತ ಹೇಳಿ, ಇಬ್ಬರೂ ಹೊಂಟರು…ದ್ಯಾವಪ್ಪ ಎಲ್ಲಾ ಹಕೀಕತ್ತು ಹೇಳಿದ…ಗೂಗೀಕೊಳ್ಳಕ ಹೋದದ್ದು…ಲಂಗಟದ ಸ್ವಾಮಿಗೋಳ ದರಶನ ಆದದ್ದು…ಅವರು ರಗತದಾಗಿನ ಕಸರು ಕಳಕೊಳ್ಳರೀ ಅಂತ ಅಪ್ಪಣೀ ಕೊಟ್ಟದ್ದು -ಎಲ್ಲಾ ಹೇಳಿ ಗೌಡರ ಸಲ್ಲಾದ ಪ್ರಕಾರ ತಾನು ಅವನ ಹಂತೇಕ ಬಂದದ್ದು ಹೇಳಿದ…ಅಷ್ಟೊತ್ತಿಗಂದರ ಶಂಕರಜ್ಜನ ಮನೀ ಬಂತು…ಕಟ್ಟಿಯ ಮ್ಯಾಲ ಶಂಕರಜ್ಜ ಗೊಂಗಡೀ ಹಾಸಿದ.ಇಬ್ಬರೂ ಕಾಲ ಇಳಿಬಿಟಗೊಂಡು ಕುಂತರು…ಶಂಕರಜ್ಜ ತನ್ನ ಸೊಸಿಗೆ – +‘ಯವ್ವಾಣಿ ಶಾರವ್ವ…ಸಂತರ ಬಂದಾರು…ಒಂದ ವಾಟೇ ಹಾಲ ಕಾಸಿಗೊಂಡ ಬಾ ತಂಗೀ’ ಅಂತ ಒದರಿ ಹೇಳಿದ. +ದ್ಯಾವಪ್ಪ ‘ಏ ಯಜ್ಜಾ…ಈಗ ಹಾಲ ಗೀಲ ಏನ ಬ್ಯಾಡ…’ಅಂತ ಅಂತಿದ್ದರೆ ಶಂಕರಜ್ಜ- ‘ಯಾ…ಇರಲೇಳೋಪಾ..’ ಅಂತಂದು ‘ಹೂಂ…ಆಮ್ಯಾಲಣಿ…?’ ಅಂತ ಕೇಳಿದ. ‘ಹೂಂ…ಅದಣಿ…ಲಂಗಟದ ಸ್ವಾಮಿಗೋಳು ರಗತದಾಗಿನ ಕಸರ ತೊಳಕೋಬೇಕ ಅಂತ ಹೇಳಿದರಲಾ…ಅದ ಹೆಂಗಣಿ ಅಂತ? ಗೌಡರು -ಇದ ಏನ ಇದ್ದರೂ ಹಳಿಮನಿ ಶಂಕರಜ್ಜಗಣಿ ಗೊಂತು…ಬಾಕೀ ಮಂದಿಗೆ ಬಗೀಹರಿಯೂ ಹ್ವಾರೇ ಅಲ್ಲ ಅಂತ ಉಗಡಾ ಉಗಡಾ ಹೇಳಿಬಿಟ್ಟರು…’ ಅಂತ ಹೇಳುವಷ್ಟೊತ್ತಿಗೆ ಎರಡು ವಾಟೇದಾಗ ಬಿಸೀ ಹಾಲು ಬಂದು, ಶಂಕರಜ್ಜ ‘ಹೂಂ…’ ಅಂತ ಉಸರು ಬಿಟ್ಟು ಒಂದು ವಾಟೇ ಎತಿಗೊಂಡ…ದ್ಯಾವಪ್ಪನೂ ಇನೊಂದು ವಾಟೇ ಎತಿಗೊಂಡು ಶಂಕರಜ್ಜನ ಮೋತೀ ನೋಡಿಕೋತ ಕುಡಿಯಲಿಕ್ಕತ್ತಿದ…. +ಹಾಲು ಕುಡದಾದ ಮ್ಯಾಲೆ ಶಂಕರಜ್ಜ ‘ಹೂಂ…ಲಂಗಟದ ಸ್ವಾಮಿಗೋಳು ಏನ ಹೇಳಿದರಂದೀ…?’ ಅಂತ ಇನೊಮೆ ಕೇಳಿದ್ದಕ್ಕ ದ್ಯಾವಪ್ಪ ಇನೊಮ್ಮೆ ಎಲ್ಲಾ ಉಜಳಣೀ ಮಾಡಿದ…ಶಂಕರಜ್ಜ ಒಂದ ಮಿನಿಟು ಸುಮ್ಮನಣಿ ಕುಂತು ಆಮ್ಯಾಲ ‘ಹ್ಹೂಂ…’ ಅಂತ ಉಸಲು ಬಿಟ್ಟು – +‘ನಮ್ಮ ಅಜ್ಜ ಹೇಳತಿದ್ದ…ಇಸಾ ತಗೊಂಡು ಅದು ರಗತದಾಗ ಪೂರಾ ಮಿಸ್ರ ಆಗಿ …ರಗತ ಎಲ್ಲಾ ಪೂರಾ ಇಸಾ ಆಗಿದ್ದರೂ ಅದರಾಗಿನ ಇಸಾ ಎಲ್ಲಾ ತಗದು ರಗತಾ ಸುದ್ದ ಮಾಡಾಕ ಬರತೈತೆಂತ…ಇದಣಿ ಕಳಸಪ್ಪಗೋಳ ರಾಮ್ಯಾನ ಅಜ್ಜಾ …ಅವನ ಹೆಸರೂ ರಾಮಣ್ಣ ಅಂತನಣಿ…ರಾಮಣ್ಣನ ಕತೀ ನಿನಗ ಗೊಂತ ಇದ್ದಿರಬೇಕಲಾ?’ ಅಂತ ಕೇಳಿದ್ದಕ್ಕೆ ದ್ಯಾವಪ್ಪ ‘ಏ…ನನಗೆಂಗ ಗೊಂತ ಇದ್ದೀತೋಪಾ…ನಾ ಕಳ್ಳೀಗುದ್ದಿಗೆ ಬಂದ ಇನೂ ಮೂರ ವರಸ ಸೈತ ಪೂರಾ ಆಗಿಲ್ಲ ’ ಅಂದ. +‘ಹಾಂ…ಹೌದೌದು…ಅದ ಏನ ಆತಪಾ ಅಂದರ…ಈ ರಾಮ್ಯಾನ ಅಜ್ಜ – ರಾಮಣ್ಣ -ಹರೇದಾಂವ ಇದ್ದಾಗ ಅವರ ಓಣ್ಯಾಗ ಒಂದ ಮದಿವಿ ಆದ ಅಡ್ಡನಾಡ ಹೆಂಗಸ ಇತ್ತು …ಅದು ಇವನ ಮ್ಯಾಗ ಮನಸ ಮಾಡಿತು.ಆಗ ಇಂವಂದೂ ಇನೂ ಲಗ್ಗನ ಆಗಿದ್ದಿಲ್ಲ….ಭಣಿರ ವಯಸ್ಸು…ಇಬ್ಬರದೂ ಹೊಂದಾಣಿಕಿ ಆಗಿ ಹಂಗಣಿ ನಡೀತು…ಆಮ್ಯಾಲ ಮುಂದ ಎರಡ ವರಸದ ಮ್ಯಾಗ ರಾಮಣ್ಣನ ಮದಿವಿ ಆತು. ಇಂವನ ಮದಿವಿ ಆದಗಳಸೇ ಇಂವ ಆಕೀ ಮಕಾ ತಪ್ಪಿಸಿ ತಪ್ಪಿಸಿ ಅಡ್ಯಾಡಾಕತ್ತಿದ…ಆ ಹೆಂಗಸು ಹೊಟ್ಟೀಕಿಚ್ಚಿಲೆ ಕುದ್ಯಾಕತ್ತಿದಳು… ಹೆಂಗರಣಿಮಾಡಿ ಇವನ್ನ ಒಬ್ಬನ್ನಣಿ ಹಿಡದು ಭೆಟ್ಟಿ ಆಗೂಣೂ ಅಂತ ರಗಡ ಹವಣಿಸ್ಯಾಡಿದಳು.ಆದರ ಇಂವ ಹೆಂಗರೇ ನುಣಿಚಿಕೊಂಡ ತಪ್ಪಿಸಿಕೊಂಡ ಬಿಡಾಂವಾ…ಆಕಿ ನೋಡೂವಷ್ಟು ನೋಡಿದಮ್ಯಾಗ ಒಂದ ದಿನಾ ಏನ ಮಾಡಿದಳಂದರ -ಕರಚೀಕಾಯಿ ಮಾಡಿಕೊಂಡು ಒಂದ ತೂರೂಬುಟ್ಟೀ ತುಂಬ ತುಂಬಿಕೊಂಡು-ಹರ್‍ಯಾಗ ಅಷ್ಟೊತ್ತಿನ್ಯಾಗಣಿ…ಅಂವ ಮಟ್ಟೀ ಹೊಡೀತಿರಬೇಕಾದರ ಯಾಳೇ ಸಾಧಿಸಿ ಅಂವನ್ನ ಹಿಡದು ಕರಚೀಕಾಯಿ ತಿನಿಸೇ ಬಿಟ್ಟಳು…ಮುಂದ ರಾಮಣ್ಣನ ಮೈಯಾಗಿನ ರಗತ ಎಲ್ಲಾ ಕೆಟ್ಟು ಇಸಾ ಆಗಿ – ಮೈತುಂಬ ಹುಣ್ಣಾ -ಕುರಾ ಆಗಿ…ಮೈತುಂಬಣಿ ಎಲ್ಲಿ ನೋಡಿದಲ್ಲಿ ಕೀಂವ ತುಂಬಿಕೊಂಡಕ್ಯಾಸ ಕುಂಡರಾಕ ಆಗದಣಿ ಮನಗಾಕ ಆಗದಣಿ…‘ಓಣಿ..’ ಅಂತ ಒದರಾಕ ಸುರುಮಾಡಿದನಂತ. ನೋಡಿದ ಮಂದಿ ಎಲ್ಲಾ -ಏ…ಇನ್ನೇನ ರಾಮಣ್ಣನ ಕತೀ ಮುಗದಂಗಣಿ ಅಂತ ಅನ್ನಾಕತ್ತಿದರು… +ಆಗ ರಾಮಣ್ಣನ ಅವ್ವ -ಯಮನವ್ವ ಅಂತ ಮುದಿಕಿ ಇತ್ತು…ಮನ್ನಿ ಮನ್ನೇ ಸತ್ತ್ಯು ನೋಡು…ಆಕಿ ನಮ್ಮ ಅಜ್ಜನ ಹಂತೇಕಬಂದು ಕಾಲ ಹಿಡಕೊಂಡಳಂತ…ಕಾಲ ಹಿಡಕೊಂಡು-ಮಾವಾ ನನ್ನ ಬಾಳೇ ಎಲ್ಲಾ ನಿನ್ನಣಿ ಕೂಡೇತಿ ಹೆಂಗಾರಣಿ ಮಾಡಿ ನನ್ನ ಮಗನ್ನ ಉಳಸಿ ಕೊಡಬೇಕಪಾ-ಅಂತ ಗೋಳ್ಯಾಡಿ ಕಣ್ಣೀರ ಹಾಕಿದಳಂತ.ನಡೀವಾ ಹಂಗರಣಿ…ಅಂತ ನಮ್ಮ ಅಜ್ಜ ಅವರ ಮನಿಗೆ ಹೋದರಣಿ…ಅಲ್ಲಿ ಇಡೀ ಮನಿ ತುಂಬ ಗಬ್ಬ ನಾತ ತುಂಬಿ ಓಣಿಗೂ ಹಬ್ಬಿತ್ತಂತ! ಅವರ ಮನೀಮುಂದ ಹಾದು ಹೋಗೂ ಮಂದಿ ಎಲ್ಲಾರೂ ಮೂಗು ಮುಚಿಗೊಂಡು ಅಡ್ಯಾಡಾವರಂತ ! …ನಮ್ಮ ಅಜ್ಜಗ ಆ ದುರ್‌ವಾಸನಿಂದ ವೈಂಯ್‌ಕ್…ಅಂತ ಉಲ್ಟೀನಣಿ ಬಂದಂಗ ಆತಂತ…ಮನಸ ಗಟ್ಟಿಮಾಡಿಕೊಂಡು ರಾಮಣ್ಣನ ಹಂತೇಕ ಹೋಗಿ ನಾಡೀ ಹಿಡದ ನೋಡಿದ…ನಾಡೀ ನೋಡತಿದ್ದಂಗಣಿ ನಮ್ಮಜ್ಜಗ ಪೂರಾ ಮಜಕೂರು ತಿಳೀತು…ಹಂಗಣಿ ನಾಡೀ ಮ್ಯಾಗ ಮೂರ ಬೆಳ್ಳು ಇಟಗೊಂಡು ಕಣ್ಣಮುಚ್ಚಿ …ಮನಸಿನ್ಯಾಗಣಿ ಲೆಕ್ಕಾ ಹಾಕಿ ಗೆರೀ ಕೊರಧಂಗ ಲಗೂಟಣಿ ನೆಪ್ಪ ಮಾಡಿಕೊ…ಧರಮನಟ್ಟೀ ತೇರಿಗೆ ಇನ್ನ ಬರೇ ಎರಡಣಿ ತಿಂಗಳ ಉಳದೈತಿ…’ ಅಂತ ವಿನಂತೀ ಮಾಡಿಕೊಂಡು ಮನಿಗೆ ಬಂದ… +ಮರದಿವಸ ನಸಕಿನ್ಯಾಗಣಿ ಮತ್ತ ಶಂಕರಜ್ಜನ ಮನಿಗೆ ಬಂದ…ಶಂಕರಜ್ಜ – ‘ಬಾ ತಮ್ಮಾಣಿ…’ ಅಂತ ಕರದು ‘ಕುಂಡ್ರು…’ ಅಂದು ‘ಇನೂ ನೆಪ್ಪ ಆಗಿಲ್ಲೋ…’ ಅಂತ ಹೇಳಿದ.ಇಂವ ‘ಲಗೂಟಣಿ ನೆಪ್ಪ ಮಾಡಿಕೊ ಯಜ್ಜಾ…’ ಅಂತ ಹೇಳಿ ಹಂಗಿಂದ ಹಂಗಣಿ ಹೊಳ್ಳಿದ…ಎರಡು ದಿವಸದ ಮ್ಯಾಲೆ, ಹರ್‍ಯಾಗ ಏಳತಿದ್ದಂಗಣಿ, ಶಂಕರಜ್ಜ ದ್ಯಾವಪ್ಪನ ಮನಿಗೆ ಬಂದ.ದ್ಯಾವಪ್ಪ ಸಂಭ್ರಮದಿಂದ ‘ಬಾ ಯಜ್ಜಾ…’ ಅಂತ ಒಳಗ ಕರದು ಪಡಸಾಲಿಯ ಕಟ್ಟಿಯ ಮ್ಯಾಲೆ ಕಂಬಳೀ ಹಾಸಿ ಕುಂಡರಿಸಿ,ಅನುಮಾನಿಸಿಕೋತ ಅನುಮಾನಿಸಿಕೋತಣಿ-‘ಯಜ್ಜಾಣಿ…ಹಾಲಾ…?’ ಅಂತ ಕೇಳಿದ. ಶಂಕರಜ್ಜ ‘ಹಾಂ…ಕಾಸಿ ಮುಸರೀ ಮಾಡೂದು ಬ್ಯಾಡ…ಹಂಗಣಿ ಹಸೀ ಹಾಲ ಇದ್ದರ ಕೊಡು…ಇಲ್ಲದಿರಕ ಏನ ಬ್ಯಾಡ’ ಅಂದ.ದ್ಯಾವಪ್ಪ ತಾನಣಿ ಹೋಗಿ ಭರಾ ಭರಾ ಅಂತ ಒಂದು ಚರಿಗೀ ತುಂಬ ಆಡಿನ ಹಾಲು ಹಿಂಡಿಕೊಂಡು ತಂದು ಶಂಕರಜ್ಜನ ಮುಂದ ಇಟ್ಟ…ಶಂಕರಜ್ಜ ಚರಿಗೀ ಎತ್ತಿ ಗಟಾ ಗಟಾ ಅಂತ ಕುಡದು ‘ಬಾ ಕುಂಡರು …’ ಅಂತ ದ್ಯಾವಪ್ಪನ್ನ ತನ್ನ ಮಗ್ಗಲಿಗೆ ಕುಂಡ್ರಿಸಿಕೊಂಡು -‘ನೀ ಹೇಳಿದ ದಗದಾ ಮಾಡೀನ ನೋಡ ತಮ್ಮಾ…ನಿನ್ನೆ ರಾತರೀ ಮಲಕೊಂಡಾಗ ನಮ್ಮ ಅಜ್ಜ ಕನಸಿನ್ಯಾಗ ಬಂದ ಹೇಳಿಧಂಗ ಆಗಿ ನೆನಪ ನಿಚ್ಚಳ ಆದಂಗ ಆತು !…ಒಟ್ಟಣಿ ಇಪ್ಪತ್ತ ದಿನದ ಅಗಸುದ್ದೇ ಮತ್ತ ಪತ್ತೇದ ಯವಹಾರ ಐತಿ…’ ಅಂತ ಹೇಳಿದ.ದ್ಯಾವಪ್ಪ ಒಂದ ಗಳಿಗಿ ಸುಮ್ಮನಣಿ ಕುಂತು ಏನೋ ವಿಚಾರ ಮಾಡತಿದ್ದರ ಶಂಕರಜ್ಜ ‘ಯಾಕೋ ತಮ್ಮಾಣಿ…ಯಾಕೋ ಸುಮ್ಮನಣಿ ಕುಂತೆಲಾ?…ನಿನಗ ಬ್ಯಾಡ ಅನಿಸಿದರ ಬಿಡು…ಇಪ್ಪತ್ತ ದಿನದ ಅಗಸುದ್ದೇ ಮತ್ತ ಪತ್ತೇ ಅಂದರ ಬಾಳ ಖರ್ಚ ಬರತೈತೆಂತ ಅಂಜಿದಿ ಏನಾ?… ಖರ್ಚಿನ ಚಿಂತೀ ಬಿಡು . ನೀ ಸಂತ ಅದೀ…ನಿಂದು ದೇವರ ಕೆಲಸಾ…ಅಗಸುದ್ದೇ ಎಲ್ಲಾ ನಾ ತಯಾರ ಮಾಡಿಕೊಡತನು…ನೀ ಕೇವಲ ಒಂದ ಕಿವಡ ಕಾಸನೂ ಕೊಡಬ್ಯಾಡ…ಪತ್ತೇನೂ ಹಂತಾ ಏನ ಖರ್ಚಿಂದ ಅಲ್ಲ…ಸೇರ-ದೀಡ ಸೇರ ಆಕಳ ತುಪ್ಪ ಒಂದ ಬೇಕಾಗತೈತಿ ನೋಡು…ಮನ್ಯಾಗ ಆಕಳ ತುಪ್ಪ ಇದ್ದಿರಬೇಕಲಾ? ಅದನ ಬಿಟ್ಟರ ಮತ್ತೇನ ಖರ್ಚಿನ ಹ್ವಾರೇ ಇಲ್ಲ…’ ಅಂತ ಹೇಳಿದ.‘ಏ…ಖರ್ಚಿಂದ ಸುದ್ದಿ ಅಲ್ಲ…ದೇವರ ಕೊಟ್ಟಾನು…ನಿನ್ನ ಹಂತೇಕ ಅಗಸುದ್ದೇ ತಗೊಂಡು ರೊಕ್ಕಾ ಕೊಡದಿರಕ ನನಗ ಪುಣ್ಯೇ ಹೆಂಗ ಸಿಗಬೇಕು?…ಅದರ ಇಚಾರ ಅಲ್ಲ…ನಾನು ಒಂದ ಹದನ ಇಪ್ಪತ್ತು ದಿವಸ ಸಿದ್ಧರ ಕೊಳ್ಳಕ್ಕಣಿ-ದೇವರಗೋಳಿಗೇ ಹೋಗಿ ಅತ್ತಲಾಗಿಂದ ಹಂಗಿಂದ ಹಂಗಣಿ ದರಮನಟ್ಟಿಯ ತೇರಿಗೆ ಹೋಗಬೇಕಂತ ಮಾಡೀನು…ದೇವರ ಸೇವಾ ಮಾಡೂಕಿಂತಾ ಮದಲು ಭಕತೀ – ಮನಸು ಸ್ವಚ್ಛ ಇಟಗೊಂಡು ಹೋಗಿ ಇಟ್ಠಲನ ಸೇವಾ ಮಾಡಿದರ ಹೆಂಗಣಿ …ಅಂತ. ಅದನ್ನ ವಿಚಾರ ಮಾಡಾಕತ್ತಿನ್ನಿ ’ ಅಂತ ಹೇಳಿದ. ‘ಹೂಂ…ಬೇಶತಿ ಹೇಳಿದ -ರಾಮಣ್ಣಾಣಿ…ಈಗ ಮೂರ ತಿಂಗಳ ಮ್ಯಾಗ ಮೂರ ದಿನಾ ಆಗೇತಿ…ನೆಪ್ಪ ಮಾಡಿಕೋ…ಅವತ್ತ ಏನಾರ ಸೀ ಪದಾರ್ತಾ ತಿಂದದೀ? -ಅಂತ ನಮ್ಮ ಅಜ್ಜ ಕೇಳಿದ್ದಕ ರಾಮಣ್ಣನ ಅವ್ವ -ಏ …ಎಲ್ಲೀದು ? ಇಲ್ಲ ಬಿಡ ಮಾವಾಣಿ! ಅದ ಏನಾತ ಅಂದರಣಿ…ಇಂವನ ಹೇಂತಿನ್ನ ಕರಕೊಂಡ ಬಂದಮ್ಯಾಗ ಒಂದ ವಾರ ಎಲ್ಲಾ ದಣಿರ ದಿನಾ ಸೀ ಅಡಿಗೀ ಮಾಡಿದ್ದಿವಿ…ವಾರಗಟ್ಟಲೇ ಸೀ ಅಡಿಗೀ ತಿಂದಕ್ಯಾಸ ಇಂವ ಸೀ ಪದಾರ್ತ ಅಂದರ ಹೇಸಿಗೊಂಡು – ಇನ್ನ ಮನ್ಯಾಗ ಒಂದ ಎಡ್ಡ ತಿಂಗಳರೇ ಸೀ ಅಡಿಗೀ ಮಾಡಬ್ಯಾಡರಿ ನೋಡವಾಣಿ -ಅಂತ ತಾಕೀತು ಮಾಡಿದ…ನಾ ಇಂವಗ ಗೊಂತ ಇಲ್ಲಧಂಗ ನನ್ನ ಸೊಸೀಗೆ ಸೀ ಅಡಿಗೀ ಮಾಡಿ ಹಾಕಿದೀನ ಖರೇ,ಆದರ ಇಂವ ಅಂತೀ ಮನ್ಯಾಗ ಸೀ ಅಂಬೂದು ಬಾಯಿಗೆ ಹಾಕದಣಿ ನಾಕ ತಿಂಗಳರೇ ಆಗಿರಬೇಕು ನೋಡ ಮಾವಾ ಅಂತ ಹೇಳಿದಳಂತ…ನಮ್ಮ ಅಜ್ಜ -ಇಲ್ಲ ತಡೀ ತಂಗೀ…ಮನ್ಯಾಗ ಸೀ ಉಂಡದ್ದಲ್ಲ ಇದಾ…ಹೊರಗ ಉಂಡ ಸೀ ಪದಾರ್ತದ ಖ್ಯಾಂತಿ ಐತಿ ಇದಾ…ನೆಪ್ಪ ಆತೂ ತಮ್ಮಾ?…ನೀ ನೆಪ್ಪ ಮಾಡಿಕೊಂಡು ಖರೇ ಹಕೀಕತ್ತು ಹೇಳದಿರಕ ನಾ ಏನಂತ ಅಗಸುದ್ದೇ ಕೊಡಲಿ?…ಅಗಸುದ್ದೇ ಕೊಡಾಕ ಬರಾಣಿಲ್ಲ ಅಂತ ಖಡಾಮುಡಿ ಹೇಳಿದ್ದಕ್ಕ ಅಂವ ನಾಚಿಗೊಂಡು ಬಾಯಿಬಿಟ್ಟು ಹೇಳಲಾರದಣಿ ಹೇಳಲಾರದಣಿ…ಕಡೀಕ ಖರೇ ಹಕೀಕತ್ತು ಹೇಳಿದನಂತ…ರಾಮಣ್ಣನ ಅವ್ವ -ಆಣಿ…ಅಂತ ಬಾಯಿ ತೆರಕೊಂಡು ಕುಂತಳಂತ…ನಮ್ಮಜ್ಜ-ಆ ಕರ್ಚೀಕಾಯೀದಣಿ ಈಗ ಭಾನಗಡೀ ಆಗಿ ಕುಂತೈತಿ…ಹೂರಣದಾಗ ಮದ್ದ ಹಾಕಿದಾಳು…ರಗತ ಎಲ್ಲಾ ಇಸಾ ಆಗಿ ಕುಂತೈತಿ ! ಇನ್ನ ಹದನ ದಿನಾ ಆಗಿತ್ತಂದರ ಇವನ ಆಸೇ ಬಿಡಬೇಕಾಗತಿತ್ತು …ಇನ್ನೇನ ಕಾಳಜೀ ಮಾಡಬ್ಯಾಡರಿ.ನಾ ಅಗಸುದ್ದೇ ಕೊಡತನು…ಕಮ್ಮ ಆಗತೈತಿ…ಪೂರಾ ಸುದ್ದ ಆಗಾಕ ಏನಿಲ್ಲಂದರೂ ಮೂರ ತಿಂಗಳಾರಣಿ ಬೇಕು ಅಂತ ಹೇಳಿ ನಮ್ಮ ಅಜ್ಜ ಅಗಸುದ್ದೇ ಕೊಟ್ಟನಂತ…ನಮ್ಮಜ್ಜ ಅಗಸುದ್ದೇ ಕೊಟ್ಟಮ್ಯಾಗ ಮೂರ ತಿಂಗಳದಾಗಂದರ ರಾಮಣ್ಣ ಮತ್ತ ಮದಲಿನ ಹಂಗಣಿ ಆದನಂತ…ನಮ್ಮ ಅಜ್ಜ ಅವನ ರಗತದಾಗ ಮಿಸ್ರ ಆದ ಕಸರನ ಎಲ್ಲಾ ಕಿತ್ತ ತಗದಿದ್ದ ! +‘ಹಂಗರಣಿ…ನಿಮ್ಮ ಅಜ್ಜ ಏನ ಅಗಸುದ್ದೇ ಕೊಟ್ಟ ಅನ್ನೂದು ನಿನಗ ಗೊಂತ ಇದ್ದಿರಬೇಕಲಾಣಿ…ಹೆಂಗರ ಮಾಡೋಪಾ…ಲಂಗಟದ ಸ್ವಾಮಿಗೋಳು ಹೇಳಿಧಂಗ ವರಸಾ ವರಸಾ ಧರಮನಟ್ಟೀ ತೇರಿಗೆ ಹೊಂಡೂಕಿಂತಾ ಮದಲು ರಗತದಾಗಿನ ಕಸರು ಎಲ್ಲಾ ತೊಳಕೊಂಡಣಿ ಹೊಂಡತನು…’ ಅಂತ ದ್ಯಾವಪ್ಪ ದೈನಾಸಪಡತಿದ್ದರೆ ಶಂಕರಜ್ಜ ‘ನನಗೂ ವಯಸ್ಸ ಆತೋ ತಮ್ಮಾ… ಅರವ ಮರವ ಆಗೇತಿ…ಮತ್ತಣಿ ಈ ನಡಕ ಯಾರಿಗೂ ಈ ಅಗಸುದ್ದೇ ಕೊಡೂ ಪರಸಂಗನಣಿ ಬರಲಿಲ್ಲ…ಹಿಂಗಾಗಿ ನೆಪ್ಪ ಮಸಕ ಮಸಕ ಆಗೇತಿ…ಒಂದ ಎಡ್ಡ ದಿನಾ ದಮ್ಮ ಹಿಡೀ…ಗಟ್ಯಾಗಿ ಕುಂತು ನೆಪ್ಪ ಮಾಡಿಕೋತನು…’ ಅಂತ ಹೇಳಿದ.ದ್ಯಾವಪ್ಪ ‘ಹಂಗಣಿ ಮಾಡ ಯಜ್ಜಾ…ಆದಷ್ಟ +ನಿನ್ನ ಇಚಾರ…ಹಂಗಣಿ ಮಾಡು…ಅಗಸುದ್ದೇ ಮತ್ತ ಪತ್ತೇ ಮುಗಿಸಿಕೊಂಡು ನಿನ್ನ ಯಾತ್ರಾಕ್ಕ ಹೊಂಡು…ನೀ ಯಾತ್ರಾಕ್ಕ ಎಂದ ಹೊಂಡಬೇಕಂತೀ ಹೇಳು…ಅದರ ಪರಕಾರನಣಿ ಅಗಸುದ್ದೇ ಸುರೂ ಮಾಡೂಣೂ…’ ಅಂತ ಶಂಕರಜ್ಜ ಹೇಳಿದ. ದ್ಯಾವಪ್ಪ ‘ನಾ ಹೋಳೀ ಹುಣ್ಣಿವಿ ನಾಳೆ ಐತಿ ಅನ್ನುವಾಗ ಇಂದ ಹೊಂಡಬೇಕಂತ ಮಾಡೀನ ನೋಡು’ ಅಂತ ಹೇಳಿದ…ಆ ಪ್ರಕಾರ ಶಂಕರಜ್ಜ ಲೆಕ್ಕಾ ಹಾಕಿ,ಅದಕ್ಕ ಹೊಂದುವ ಹಂಗ ತನ್ನ ಅಗಸುದ್ದೇ ಮತ್ತ ಪತ್ತೇದ ಪೂರಾ ಹಕೀಕತ್ತು ಹೇಳಿದ… +‘…ನೀ ಶಿವರಾತ್ರಿ ಇನಣಿ ಐದ ದಿವಸ ಇರತೈತೆಂದರ…ಅಂದರ ನೋಡಪಾ ಹಾಂ…ಅಷ್ಟಮೀ ದಿವಸದಿಂದ ಈ ಅಗಸುದ್ದೇ ಮತ್ತ ಪತ್ತೇ ಸುರುಮಾಡು…ಶಿವರಾತ್ರಿ ಇನ್ನ ಐದ ದಿನಾ ಐತಿ ಅನ್ನುವಾಗ ಹರ್‍ಯಾಗ ಎದ್ದಗಳಸೇ ಬರೀ ಹೊಟ್ಟೀಲೆ ಒಂದ ವಾಟೇ ಆಕಳ ತುಪ್ಪಾ ಕುಡೀಬೇಕು…ಅಂದ ಸುರು ಮಾಡಿದಾಂವ ಮೂರು ದಿವಸ ಬಿಡಧಂಗ ದಿನಾ ಹರ್‍ಯಾಗ ಎದ್ದಗಳಸೇ ಒಂದೊಂದ ವಾಟೇ ಆಕಳ ತುಪ್ಪಾ ಕುಡ್ಯೂದು…ಮೂರ ದಿವಸ ಹಿಂಗ ತುಪ್ಪಾ ಕುಡದ ಮ್ಯಾಗ ನಾಕನೇ ದಿವಸ ಮೈಗೆಲ್ಲಾ ಎಣ್ಣೀ ಹಚಿಗೊಂಡು ಸುಡೂ ಸುಡೂ ನೀರು ಹಣಿಸಿಕೊಂಡು ಜಳಕಾ ಮಾಡಬೇಕು…ಅದರ ಮರದಿವಸ ಹರ್‍ಯಾಗ ಎದ್ದಗಳಸೇ…ನಾನು ಅಗಸುದ್ದೇದ ಎರಡ ಪುಡೀ ಕೊಟ್ಟಿರತನು…’ ಅಂತ ಹೇಳತಿದ್ದಂಗಣಿ ದ್ಯಾವಪ್ಪ ಅಡ್ಡ ಬಾಯಿಹಾಕಿ ದೈನಾಸಪಟ್ಟು ಕೇಳಿದ -‘ಯಜ್ಜಾ…ಇದನ್ನ ನಾನು ವರಸಾ ವರಸಾ ತಪ್ಪದಂಗ ನಡಸೂ ಇಚಾರ ಐತಿ…ಯಾರ ಜಲಮ ಏನ ಸಾಸ್ವತ ಅಲ್ಲ ನೋಡ ಯಜ್ಜಾಣಿ…ಅದಕಣಿ ಅಗಸುದ್ದೇದ ಪುಡೀ ಹೆಂಗ ತಯಾರ ಮಾಡತೀ ಅಂತ ಹೇಳಿದರ ಪಾಡ ಆಗತೈತಿ…’. ಶಂಕರಜ್ಜ ‘ಯಾ…ಅದಕೇನೋ ಮಾರಾಯಾ. ಅಲಬತ್ತ ಹೇಳತನ ತಗೋ…’ ಅಂತಂದು ‘ ಈ ಪುಡಿಗೋಳು ಮತ್ತೇನೂ ಅಲ್ಲ … ಒಂದೂ ಮುಂಗಾರಿಕಾಯಿಯ ಬೀಜದ ಪುಡೀ…ಹಣ್ಣ ಆದ ಮುಂಗಾರಿಕಾಯಿ ತಗೊಂಡು ಅದರ ಬೀಜಾ ಎಲ್ಲಾ ಒಂದ ದಿನಾ ಮಜ್ಜಿಗ್ಯಾಗ ನೆನೀ ಇಡಬೇಕು… ಮಜ್ಜಿಗ್ಯಾಗ ನೆನಿಸಿ ಅವನ್ನ ನೆಳ್ಳಿನ್ಯಾಗ ಒಣಗಿಸಿ ಪುಡೀ ಮಾಡಿ ಇಟಗೊಳ್ಳೂದು…. ಇನೊಂದ ಪುಡೀ ಐತೆಲಾ…ಅದು…ಈ ಬಜೀ ಬೇರ ಇರತೈತಿ ನೋಡು…ಅದನ್ನ ಚಲೂತಂಗೆ ಒಣಗಿಸಿ ಪುಡೀ ಮಾಡಿ ಇಟಗೋದು… ಹಾಂ…ಎಣ್ಣೀ ಹಚ್ಚಿ ಎರಕೋತೀಲಾ ಅದರ ಮರದಿವಸ ಹರ್‍ಯಾಗ ಎದ್ದಗಳಸೇ ಹೊಟ್ಟೀ ತುಂಬ ಹಾಲು ಕುಡೀಬೇಕು…’ +‘ಕಾಸಿದ್ದೂವೊ ಇಲ್ಲಾ ಹಸೀವೊ…?’ +‘ಕಾಸಿದ್ದೂವ ತಗೋ ಅದಕೇನು…ಹಾಲ ಕುಡದಮ್ಯಾಲ ಈ ಎರಡೂ ಪುಡಿಗೋಳನ ಒಂದೊಂದ ಚಿಮಟಿ ಚಿಮಟಿ ತಗೊಂಡು -ಅವದರ ಜೋಡೀ ಒಂದ ಚಿಮಟಿ ಹೂಂಸುಪ್ಪು ಸೇರಸಬೇಕು…ಇವನ್ನೆಲ್ಲಾ ಕೂಡಿಸಿ ಜೇನ ತುಪ್ಪ ಇರತೈತೆಲಾಣಿ… ಜೇನ ತುಪ್ಪದಾಗ ಕಲಿಸಿಗೊಂಡು ಒಂದ ಗೋಲೀ ಗುಂಡಿನಷ್ಟು ಆಗತೈತಿ… ಅದನ್ನ +ತಿನಬೇಕು…ಆಮ್ಯಾಗ ಮುಂದ ಮದ್ದಿನದ ತನಕಾ ಜೇಷ್ಟಮಧೂದ ಕಾಡೇ ಕುಡೀಬೇಕು…ಜೇಷ್ಟಮಧೂ ಅಂದರಣಿ ಗೊಂತಲಾ?’ +‘ಹಾಂ…ಕಟಿಗೀ ಚೂರಗತೇ ಇರತಾವೇಳು…ಸೀಂ ಸೀಂ ಇರತಾವು…’ +‘ಹಾಂ…ನಾಕ ಖಂಡಿಕೀಯಷ್ಟು ಜೇಷ್ಟಮಧೂ ತಗೊಂಡು ಅದನ್ನ ನಾಕ ವಾಟೇ ನೀರ ಇಟ್ಟು ಎರಡ ವಾಟೇ ಆಗೂಹಂಗ ಕುದಿಸಿ ಇಟಗೋದು…ಈ ಕಾಡೇ ಕುಡಧಂಗ ಕುಡಧಂಗ ಉಲ್ಟೀ ಆಕ್ಕೋತ ಹೋಗತೈತಿ…ಆ ಉಲ್ಟೀ ಜೋಡಿ ರಗತದಾಗಿನ ಕಸರ ಎಲ್ಲಾ ಕಿತ್ತಿ ಬರತೈತಿ….ಮದ್ದಿನತನಕಾ ಹಿಂಗ ಉಲ್ಟೀ ಮಾಡಿಕೊಂಡು… ಮದ್ದಿನದ ಮ್ಯಾಲ ಕಾದು ಆರಿದ ನೀರೂ ಮತ್ತ ಒಂದ ವಾಟೇದಷ್ಟು ಗಂಜೀ ತಗೋಬೇಕು…’. +‘ಅಂದರಣಿ ಅಂದಿಗೆ ಐದ ದಿನಾ ಆದಂಗಾತು…ಇದ ಆದಮ್ಯಾಲೆ?’ +‘ಹಾಂ…ಇದ ಆದಮ್ಯಾಲೆ ಯೋಳದಿವಸ ಏನೂ ಅಗಸುದ್ದೇ ಮತ್ತ ಪತ್ತೇ ಇಲ್ಲ… ಎಂಟನೇ ದಿವಸಕ್ಕ ಮತ್ತ ಸುರು ಆಕ್ಕೈತಿ…ಎಂಟನೇ ದಿವಸದಿಂದ ಹರ್‍ಯಾಗ ಎದ್ದಗಳಸೇ ಖಾಲೀ ಹೊಟ್ಟಿಂದ ಮತ್ತ ಆಕಳ ತುಪ್ಪಾ…ಒಂದೊಂದ ವಾಟೇ ಕುಡಿಯೂದು…ಮೂರು ದಿನಾ ಹಿಂಗ ಕುಡದ ಮ್ಯಾಲ ಮುಂದ ಮೂರು ದಿನಾ ಏನೂ ಪತ್ತೇ ಇಲ್ಲ…ಹಿಂಗ ಮೂರದಿನಾ ಆದಮ್ಯಾಗ ನಾಕನೇ ದಿನಾ ಮೈಗೆಲ್ಲಾ ಎಣ್ಣೀ ಹಚಿಗೊಂಡು ಸುಡು ಸುಡೂ ನೀರ ಹಣಿಸಿಕೊಂಡು ಜಳಕಾ ಮಾಡೂದು… ಅದರ ಮರದಿವಸ…ಹಾಂ…ತಿಗಡೀ ಬೇರಂತ ಸಿಗತೈತಿ.ಅದನ್ನ ತಂದಕ್ಯಾಸ ಪುಡೀ ಮಾಡಿಕೊಂಡ ಇಟಗೋದು…ಮರದಿವಸ ಹರ್‍ಯಾಗ ಎದ್ದಗಳಸೇ ಬಿಸಿನೀರಿನ್ಯಾಗ ತಿಗಡೀ ಬೇರಿನ ಪುಡೀ ಹಾಕೊಂಡು ಹೊಟ್ಯಾಗ ತಗೋದು…ಮುಂದ ಮದ್ದಿನಮಟಾ ಬಿಸಿನೀರನ ಕುಡೀಬೇಕು… ಬಿಸಿನೀರು ಕುಡಧಂಗ ಕುಡಧಂಗ ಹೊಟ್ಟಿ ಎಲ್ಲಾ ಜಾಡಸಾಕ ಸುರೂ ಆಗಿ ಪೂರಾ ಸ್ವಚ್ಛ ಆಗತೈತಿ… ಮತ್ತ ಮದ್ದಿನಮ್ಯಾಗ ಯಥಾಪರಕಾರ ಕಾದ ಆರಿದ ನೀರಾ ಮತ್ತ ಒಂದ ವಾಟೇದಷ್ಟು ಗಂಜೀ ತಗೋದು…ಇಲ್ಲಿಗೆ ಅಗಸುದ್ದೇ ಮತ್ತ ಪತ್ತೇದ್ದು ಎಲ್ಲಾ ಮುಗಧಂಗ ಆಗತೈತಿ…ಇಷ್ಟ ಮುಗಿಸಿಗೊಂಡಕ್ಯಾರ ಹೋಳೀಹುಣ್ಣಿವಿ ಇನ್ನ ನಾಳಿ ಐತೆಪಾ ಅನ್ನೂವಾಗ ನೀ ನಿನ್ನ ಯಾತರೀ ಸುರು ಮಾಡು…’ +* +* +* +…ಶಂಕರಜ್ಜನ ಸುಪರ್ದಿನೊಳಗ ದ್ಯಾವಪ್ಪ ತನ್ನ ರಗತದಾಗಿನ ಕಸರು ತೊಳಕೊಳ್ಳೂ ಆಚಾರಾ ಮುಗಿಸಿಕೊಂಡು ಇನ್ನು ನಾಳೆ ತನ್ನ ಯಾತ್ರಾ ಸುರುಮಾಡಾಂವ ಇದ್ದಾನ ಅನ್ನುವಾಗ ಅಂದ ರಾತ್ರೀ… ಲಗಮವ್ವನ್ನ ತನ್ನ ಮುಂದ ಕುಂಡರಿಸಿಕೊಂಡು ಅಗದೀ ತಿಳಿಸಿ ಹೇಳುವ ಹಂಗ ಹೇಳಿದ… +‘ನೋಡೂ…ಸ್ವಾಮಿಯ ರಥದ ರಗತ ತಿಲಕದ ಸೇವಾ ಅಂದರ ಅಸನರೀ ಅಲ್ಲ…ದೈವ ಹಿಂತಾ ಸೇವಾ ಮಾಡೂದನ್ನ ನಮ್ಮ ಮನಿತನಕ್ಕ ಕೊಟ್ಟೈತಿ…ಫುಕ್ಕಟಣಿ ಯಾವದೂ ಸಿಗಾಣಿಲ್ಲ…ಏನರೆ ಸಿಗಬೇಕಂದರ ಏನಾರ ಕಳಕೊಳ್ಳಾಕಣಿ ಬೇಕು… ಚಂದ್ರ್ಯಾ ತನ್ನ ಜೀವಾ ಕೊಟ್ಟು ನಮ್ಮ ಮನಿತನಕ್ಕ ದೇವರ ಈ ಸೇವಾ ಅಂಬುವ ಒತನು ಗಳಿಸಿಕೊಟ್ಟ ಹೋಗಿದಾನು…ಈ ಸೇವಾ ಅಂಬೂದನ್ನ ನಿಷ್ಟಾದಿಂದ ಮಾಡಿದರ ಅಂವ ಜೀವಾ ಕೊಟ್ಟಿದ್ದಕ್ಕೂ ಸಾರ್ಥೇಕ ಆಗತೇತಿ…ಅವನ ಆತಮಕ್ಕೂ ಸಮಾದಾನ ಸಿಗತೇತಿ… ದೇವರ ಸೇವಾ ಮಾಡಾಕ ಹೊಂಡೂಕಿಂತಾ ಮದಲ ನಮ್ಮ ರಗತಾ ಸುದ್ದ ಮಾಡಿಕೋಬೇಕಂತ ಲಂಗಟದ ಸ್ವಾಮಿಗೋಳು ಅಪ್ಪಣೀ ಕೊಟ್ಟದಾರು….ಈಗ ಇಪ್ಪತ್ತ ದಿನಾ ಏನ ನನ್ನ ಆರೈಕಿ ಆತಲಾ ಅದು ಈ ರಗತಾ ಸುದ್ದ ಮಾಡುವಂತಾ ಆಚಾರಾ… ಇದೇನ ಈ ಆಚಾರ ಐತೆಲಾ ಇದನ್ನ ಪೂರಾ ನೆಪ್ಪ ಇಟಗೋ…ಅಗಸುದ್ದೇದ ಪುಡಿಗೋಳನ ಹೆಂಗ ತಯಾರ ಮಾಡೂದು ಅನ್ನೂದನ್ನ ನೆಪ್ಪ ಇಟಗೊ…ಮುಂದ ಅದನ್ನ ಮುಂದ ನೀನು ನಿನ್ನ ಸೊಸ್ತ್ಯಾರಿಗೆ ಹೇಳಬೇಕು…ನನ್ನ ತೆಲೀ ಬಿದ್ದ ಮ್ಯಾಗ ಮುಂದಕನೂ ನಮ್ಮ ಮಕ್ಕಳೂ -ಮಮ್ಮಕ್ಕಳೂ ಈ ಸೇವಾ ಅನ್ನೂದನ್ನ ನಡಿಸಿಕೊಂಡ ಹೋಗಬೇಕು…ಅವರೂ ಶಿವರಾತ್ರಿ ಇನ್ನ ಐದ ದಿನಾ ಐತಿ ಅನ್ನುವಾಗ ಈ ಅಗಸುದ್ದೇದ ಆಚಾರ ಸುರುಮಾಡಿ… ಹೋಳೀಹುಣ್ಣಿವಿ ಇನೂ ಎರಡ ದಿನಾ ಐತಿ ಅನ್ನುವಷ್ಟೊತ್ತಿಗೆ ಇದನ ಮುಗಿಸಿ -ಹೋಳೀಹುಣ್ಣಿವಿ ನಾಳಿ ಐತಿ ಅನ್ನುವಾಗ ಯಾತರಾಕ್ಕ ಹೊಂಟು – ಯಾತ್ರಾ ಮುಗಿಸಿಕೊಂಡು ಹಂಗಿಂದ ಹಂಗಣಿ ಧರಮನಟ್ಟೀ ಸ್ವಾಮಿಯ ರಥದ ಸೇವಾಕ್ಕ ಹೊಂಡಬೇಕು…ನಾಳೆ ಎರಡ ದಿನದ ಬುತ್ತೀ ಕಟ್ಟಿಕೊಡು… ನಾಳಿಂದ ಗೂಗೀ ಕೊಳ್ಳಾ- ಸೊಗಲದ ಸೋಮೇಸೂರ-ತವಗದ ಬಾಳಯ್ಯ-ಗುಡ್ಡದ ಎಲ್ಲವ್ವ-ಗೊಡಚಿಯ ಈರಭದ್ರ-ಶಿರಸಂಗೀ ಕಾಳವ್ವ-ಉದಗಟ್ಟೀ ಉದ್ದವ್ವ -ಕಲ್ಲೊಳ್ಳೀ ಹಣಮಪ್ಪ ಇವರದೆಲ್ಲಾ ದರಶನಾ ಮಾಡಿಕೊಂಡು …ಸ್ವಾಮಿಯ ರಥಾ ಇನಣಿ ನಾಕ ದಿನಾ ಐತಿ ಅನ್ನುವಷ್ಟೊತ್ತಿಗೆ ಧರಮನಟ್ಟಿಗೆ ಬರತನು…ನೀನೂ ಮಕ್ಕಳನ ಎಲ್ಲಾ ಕಟಿಗೊಂಡು ಅಲ್ಲಿಗೆ ಬಂದಬಿಡು… ನಾಕ ದಿನಾ ಅಲ್ಲೇ ಇದ್ದು ಸ್ವಾಮಿಯ ಸೇವಾ ಮಾಡಿ ಬರೂಣೂ…’. +…ದ್ಯಾವಪ್ಪ ಇಷ್ಟೆಲ್ಲಾ ದೀರ್ಘ ಹೇಳಿದ್ದು ಕೇಳಿ ಲಗಮವ್ವಗ ಏನ ಹೇಳಬೇಕಂತ ಏನೂ ತಿಳೀಲಿಲ್ಲ….‘ಆಣಿ..’ ಅಂತ ಬಾಯಿ ತಕ್ಕೊಂಡು ಕೇಳತಿದ್ದಾಕಿ ಅಂವ ಹೇಳುವುದನ್ನ ನಿಂದರಿಸಿದ ಮ್ಯಾಲೂ ಹಂಗಣಿ ಕೂತುಬಿಟ್ಟಳು…ದ್ಯಾವಪ್ಪ ‘ಯಲಾ ಇಕಿನಣಿ… ಹಂಗ್ಯಾಕ ಕುಂತಿ…? ನಾ ಹೇಳಿದ್ದು ತಿಳೀತಿಲ್ಲೊ ?…ನಾ ಸುದ್ದ ಆಗಿ ದೇವರ ಸೇವಾ ಮಾಡಿದರ ಸ್ವಾಮಿ ನನಗಣಿ ನನ್ನ ಮಕ್ಕಳಿಗೇ ಎಲ್ಲಾ ಸುಕಾ ಸೌಬಾಗ್ಯಾ ಕೊಡತಾನು…ನಮ್ಮ ಮನಿತನಕ್ಕಣಿ ಪಾಡ ಆಗತೈತಿ… ’ ಅಂದಾಗ ಲಗಮವ್ವ ಸಟಕ್ಕನಣಿ ‘ಹೂಂ’ ಅಂದಳು… +* +* +* +ಮರದಿವಸದಿಂದ ಸುರು ಆತು ದ್ಯಾವಪ್ಪನ ಪಾದ ಯಾತ್ರಿ…ಸಂಜೀ ಹೊತ್ತಿಗಂದರ ಗೂಗೀಕೊಳ್ಳಕ್ಕ ಬಂದು ಮುಟ್ಟಿದ…ಗವಿಯ ಹಂತೇಕಿನ ಕಲ್ಲು ಮಂಟಪಕ್ಕ ಬಂದು ಹೆಗಲ ಮ್ಯಾಲ ಹಾಕೊಂಡಿದ್ದ ಕಂಬಳೀ ಕೆಳಗ ಇಟ್ಟು …ಕಂಬಳಿಯ ಮಡಿಕಿಯೊಳಗ ಇಟಗೊಂಡಿದ್ದ ಚರಿಗಿಯನ್ನ ತಗೊಂಡು ಗವಿಯೊಳಗ ಇಳದ…ಆ ಗವಿಯೊಳಗ ಎಲ್ಲಿಯೋ ಕಾಣದ ತುದಿಯೊಳಗಿನ ಸೆಲಿಗಳಿಂದ ಚಿಮ್ಮಿ ಬರತಿದ್ದ ತೆಂಗಿನ ತಿಳಿನೀರಿನಂಥಾ ನೀರನ್ನ ಚರಿಗಿಯೊಳಗ ತುಂಬಿಕೊಂಡು ಹೊರಗ ಬಂದು ಕಾಲೂ – ಮುಖಾ ತೊಳಕೊಂಡು ಧೋತರದ ನಿರಿಗಿಯಿಂದ ಒರಿಸಿಕೊಂಡ…ಆಯಾಸ ಕಳದು ನಿರಾಳ ಆದಂಗಾತು…ಮತ್ತ ಗವ್ಯಾಗ ಇಳದು ಬಗಸೀ ತುಂಬಿಕೊಂಡು ತುಂಬಿಕೊಂಡು…ನೀರು ಕುಡದ…ಆಹಾಹಾಣಿ…ಗಂಗವ್ವನ ಮಹಿಮಾ ಏನ ಹೇಳೂದೂ…ಕಲ್ಲ ಗವಿಯೊಳಗಿಂದ ಉಕ್ಕಿ ಬಂದಾಳು…ನಿಂದರದಣಿ ಹರೀತಿದ್ದರೂ ನಿಚ್ಚಳಣಿ ನಿಂತಂಗ ಕಾಣತಾಳು…ಆ ಗವಿಯ ಮೂಲ್ಯಾಗಿನ ಒಂದು ಖಿಂಡಿಯಿಂದ ಜುಳು ಜುಳೂ…ಅಂತ ಹೌರಗಣಿ ಹೊರಗ ಹರದು ಕಲ್ಲು ಮಂಟಪದ ಎಡಗಡೆಯಿಂದ ಮುಂದಕ ಬಂದು ಕೊಳ್ಳದಾಗ ಝರೀ ಆಗಿ ನಡದಾಳು…ಗವಿಯೊಳಗಿನ ಕತ್ತಲಿನೊಳಗೂ ನಡಮಟಾ ಇದ್ದ ಆ ನೀರಿನ ತಳಾ ಅನ್ನುವದು ಸ್ವಚ್ಛ ಕಾಣಸತಿತ್ತು… ತೆರೀ -ತುಳುಕಾಟಾ-ಕಲಕು ಇಲ್ಲದ ಗಂಗಾಮಾಯಿ…ದ್ಯಾವಪ್ಪ ನೀರು ಕುಡದು ಚರಿಗೀ ತುಂಬಿಕೊಂಡು ಮೆಟ್ಟಲಾ ಹತ್ತಿ ಹೊರಗ ಬಂದು ಕಲ್ಲು ಮಂಟಪದಾಗ ಕುಂತ…ಅತ್ತ ಗುಡ್ಡದ ಪೂರಾ ತುದೀನೂ ಅಲ್ಲ – ಇತ್ತ ಪೂರಾ ಬುಡಕ್ಕೂ ಅಲ್ಲ…ನಟ್ಟ ನಡವ ಗುಡ್ಡದ ವಾರಿಯೊಳಗ ಹತ್ತು ಅಂಕಣದಷ್ಟು ಹಾಸಿ ಬಿದ್ದ ಹಾಸುಗಲ್ಲು…ಅದರ ಮ್ಯಾಲ ಕಲ್ಲು ಕಂಭಾ ನಿಂದರಿಸಿ,ಅವಗಳ ಮ್ಯಾಗ ಕಲ್ಲು ಪಾಳೀ ಹೊದಿಸಿ…ಮೂಡಣಕ್ಕ ಮುಖಾ ಮಾಡಿ ನಿಂತ ಕಲ್ಲು ಮಂಟಪ…ಆ ಮಂಟಪದ ಹಿಂದಿನ ಗ್ವಾಡಿಯ ಹಂಗ ಇದ್ದ ಗವಿಯ ಮುಂಭಾಗದ ಬಂಡೆಗಲ್ಲು…ದ್ಯಾವಪ್ಪ ಆ ಬಂಡೆಗಲ್ಲಿಗೆ ಆತು ಕೂತುಕೊಂಡ… ಸೂರ್ಯಾ ಮುಳಿಗಿ ನಿಧಾನ ನಿಧಾನವಾಗಿ ಮಕತ್ತಲು ಕವದು ಆಮ್ಯಾಲ ಮೂಡಣದ ಆಕಾಶದಾಗ ಚಂದ್ರಾಮ ಬಂದ…ಹುಣ್ಣಿವಿಯ ಮದಲನೇ ದಿವಸ…ಪೂರಾ ತುಂಬಿಕೊಂಡು ದುಂಡಗಿದ್ದ ಚಂದ್ರಾಮ ಒಂದು ಮೂಲಿಯೊಳಗ ಮಾತ್ರ ಹೌದೋ ಅಲ್ಲೋ ಅನ್ನುವಹಂಗ ಒಂದೀಟಣಿ ಸಪಾಟಾಗಿದ್ದ…ಚಂದ್ರಾಮನ್ನ ನೋಡಿಕೊಂತ ಕುಂತ…ಮಾಡ ಇಲ್ಲದ ಮುಗಲದಾಜ ಬೆಳ್ಳಿಯ ತಾಟಿನಂಥಾ ಚಂದ್ರಾಮ ! ಆ ಚಂದ್ರಾಮನ್ನ ನಟ್ಟ ನಡಕ ಮಾಡಿಕೊಂಡು ಸುತ್ತಲೂ ಎರಡು ಮಾರು ಅಗಲವಾಗಿ ಕಣಾ ಕಟ್ಟಿತ್ತು…ಗುಡ್ಡದ ವಾರಿಯಗುಂಟ ಕೆಳಬರಕ ನೋಡಿದರ ಬೆಳದಿಂಗಳಿನ್ಯಾಗ ಆಕಾರ ಕಳಕೊಂಡು ನಿಚ್ಚಳವಾಗಿ ಕಾಣಿಸದ ಗಿಡಾ-ಕಂಟಿಗೋಳು… ಮಂಜಿನ ತಿಳವಾದ +ಅರವೀ ಹೊದ್ದು ನಿಂತಂಗ ನಿಂತಿದ್ದವು…ಲಂಗಟದ ಸ್ವಾಮಿಗೋಳ ದರಶನ ಆಗಿದ್ದರ ಪಾಡ ಆಗತಿತ್ತು …ಆದರ ಅವರು ಅಲಕ್ ನಿರಂಜನರು…ಈ ಕೊಳ್ಳದಾಗ ಕರಗಿಧಂಗ ಎಲ್ಯೋ ಇರತಾರು…ಅವರನ ಎಲ್ಲೆಂತ ಹುಡಕೂದೂ…ಅಂತ ದ್ಯಾವಪ್ಪ ಮನಸಿನ್ಯಾಗ ಧೇನಸತಿದ್ದಂಗಣಿ ಕೊಳ್ಳದೊಳಗಿಂದ ಹತ್ತಿ ಬಂದ ಲಂಗಟದ ಸ್ವಾಮಿಗಳು ಕಲ್ಲುಮಂಟಪದೊಳಗ ಪ್ರತ್ಯಕ್ಷರಾಗಿ ದ್ಯಾವಪ್ಪನ ಮುಂದ ನಿಂತರು… ದ್ಯಾವಪ್ಪ ಸಟಕ್ಕನೇ ಮೊಣಕಾಲೂರಿ ಅವರ ಪಾದಾ ಮುಟ್ಟಿ ಸ್ವಾಮಿ ಮಾಡಿದ…ಸ್ವಾಮಿಗೋಳು-‘ನನ್ನ ತಗೊಂಡ ಏನ ಮಾಡಾಂವ ಅದೀ…? ಗುಡ್ಯಾಗಿನ ದೇವರಗೋಳ ಬೆನ್ನ ಹತ್ತಿ ನಿನ್ನ ಹಾದೀ ನೀ ಅಗದೀ ಬರಾಬ್ಬರೀ ಹುಡಿಕ್ಕೊಂಡದೀ…ಮದಲ ಈ ಗೂಗೀಕೊಳ್ಳಾ – ಸೊಗಲಾ-ಶಬರೆವ್ವನ ಕೊಳ್ಳಾ ಮುಗಿಸಿಕೊಂಡು-ಆಮ್ಯಾಲ…ಅಲ್ಲಿಂದ ಅತ್ತಲಾಕಡೆ ಹೊಂಟದೀ…ಅತ್ತಲಾಕಡೆ ಏನದಾವಲಾ ಅವುಬರೇ ಗಚ್ಚಿನ ಗುಡಿಗೋಳು…!’ ಅಂತ ನುಡದವರೇ -ಗಚ್ಚೀನ ಗುಡಿಯ ನೋಡಣ್ಣಾಣಿ…ಅಂತ ಪದಾ ಹೇಳಿಕೋತ ಅವರು ಆ ಗೂಗೀಕೊಳ್ಳದ ಅರ್‍ಯಾಣದೊಳಗ ಮರೀಯಾಗಿ ಹೋಗಿ ಬಿಟ್ಟರು… +ಸಂಶೇ ಮತ್ತ ಸಮಾಧಾನ ಎರಡೂ ಕೂಡೇ ದ್ಯಾವಪ್ಪನ್ನ ಕಾಡಿದವು… ಮನಸಿನ್ಯಾಗ ಧೇನಸತಿದ್ದಂಗಣಿ ಬಂದು ದರಶನಾ ಕೊಟ್ಟರು ಅನ್ನುವ ಸಮಾಧಾನ… ಆದರ ಒಂದು ಗಳಿಗಿ ನಿಂತು ಹೋಗಲಿಲ್ಲ…ಮತ್ತ ಅವರು ನುಡದ ಆಶೀರ್ವಾದದ ನುಡೀ…? ಗುಡ್ಯಾಗಿನ ದೇವರಗೋಳ ಬೆನ್ನ ಹತ್ತೀದೀ ಅಂಬುವ ಮಾತು ಅವನ ಎದಿಯೊಳಗ ಅನುಮಾನದ ಮಂಜು ಕವಿಯುವ ಹಂಗ ಮಾಡಿತು…‘ಹೂಂ…ಹೆಂಗೂ ಮನ್ನಿನ ಸರತೆ ಬಂದಾಗನಣಿ ಆಸೀರ್ವಾದಾ ಮಾಡ್ಯಾರಲಾ…ನೀ ನಡದದ್ದಣಿ ನಿನ್ನ ಸಾಧನಾ ಅಂತ ನುಡದ್ದಾರು…ಆತು ’ ಅಂತ ಅಂವ ತನಗ ತಾನಣಿ ಹೇಳಿಕೊಂಡು ಸಮಾಧಾನ ಹಚಿಗೊಂಡ… +…ಮರದಿವಸ ಹೋಳೀಹುಣ್ಣಿವಿ…ಕಾಮನನ್ನ ಸುಡುವ ದಿವಸ…ಹರ್‍ಯಾಗ ಎದ್ದಕೂಡಲೇ…ಗವಿಯೊಳಗಿಂದ ಹೊರಗೆಬಂದು ಕೊಳ್ಳದಗುಂಟ ಹರಿಯತಿದ್ದ ಝರಿಯ ಮಡುವಿನಲ್ಲಿ ಜಳಕಾ ಮಾಡಿ ಮತ್ತ ಕಲ್ಲು ಮಂಟಪಕ್ಕ ಬಂದು ಕುಂತು ವಿಠ್ಠಲ -ವಿಠ್ಠಲ ಅಂತ ಇಡೀ ದಿವಸ ದೇವರ ಧ್ಯಾನಾ ಮಾಡಿದ…ಯಾವ ಗುರುವಿನದೂ ಉಪದೇಶ ಇಲ್ಲಾ ಏನಿಲ್ಲಾ…ತನಗ ತಿಳಧಂಗ ಜಪಾ ಮಾಡಿದ…ಹೋಳೀ ಹುಣ್ಣಿವಿಯ ಮರದಿವಸ ತವಗಕ್ಕ…ತವಗ ಸಿದ್ಧರ ಜಾಗಾ… ಬಾಳಯ್ಯಸ್ವಾಮಿಗೋಳು ಸುಳದಾಡುವ ತವಗದ ಗುಡ್ಡದೊಳಗ ಸುಳದಾಡುವ ಗಾಳಿಗೆ ಮೈ ಒಡ್ಡಿ ಕೂತ…ಜಪಾ ಮಾಡಿದ. ಸಂಜೀಮುಂದ ಮಠಕ್ಕ ಹೋಗಿ ಬಾಳಯ್ಯನವರ ಪಾದಾ ಹಿಡದು ನಮಸ್ಕಾರ ಮಾಡಿದ.ಅವರು ದ್ಯಾವಪ್ಪನ್ನ ನೋಡಿ ಮುಗುಳು ನಗಿ ನಕ್ಕು -‘ಪ್ರಸಾದಾ ತಗೋ ಹೋಗು…’ ಅಂತನ್ನುವ ಒಂದು ನುಡಿಯನ್ನ ಮಾತ್ರ ನುಡದರು…ಮಠದಾಗ ಅಂಬಲೀ ರೊಟ್ಟಿಯ ಪ್ರಸಾದಾ ಮುಗಿಸಿ ಅಂದ ರಾತ್ರೀ ಅಲ್ಲೇ ಮಠದಾಗ ಉಳದು ಮರದಿವಸ ಅಲ್ಲಿಂದ ಸೊಗಲಕ್ಕ ಹೊಂಟ…ಸಂಜೀ ಹೊತ್ತಿಗಂದರ ಮುರಗೋಡು ಮುಟ್ಟಿದ ದ್ಯಾವಪ್ಪ ಅಲ್ಲಿ ಚಿದಂಬರ ದೀಕ್ಷಿತರ ಮನಿಯ ಕಟ್ಟಿಯ ಮ್ಯಾಲ ಕುಂತು ದಣವು ಆರಿಸಿಕೊಂಡ…ಸಂಜಿಯ ಧ್ಯಾನಾ-ಪೂಜೀ-ಮಂಗಳಾರತೀ ಎಲ್ಲಾ ಮುಗಿಸಿಕೊಂಡು ಚಿದಂಬರ ದೀಕ್ಷಿತರು ಹೊರಗ ಬಂದು , ಕಟ್ಟಿಯ ಮ್ಯಾಲ ಕೂತಿದ್ದ ದ್ಯಾವಪ್ಪನ್ನ – ‘ಏನಪಾಣಿ…ಯಾತ್ರಾ ಎಲ್ಲ ಬೇಶೆಂಗ ನಡದದಣಿ…?’ ಅಂತ ಕೇಳಿದರು.ದ್ಯಾವಪ್ಪಗ ಅಜಬ ಅನಿಸಿತು…ನಾ ಯಾತ್ರಾಕ್ಕ ಹೊಂಟದ್ದು ಈ ಅಜ್ಜಾರಿಗೆ ಹೆಂಗ ಗೊಂತ ಆತೂ ಅಂತ ಆಶ್ಚರ್ಯಗೊಂಡು,ಅಂವ ಎದ್ದು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ-ತನ್ನ ಧರಮನಟ್ಟಿಯ ತೇರಿನ ರಗತ ತಿಲಕದ ಸೇವಾದ ಹಕೀಕತ್ತು ಎಲ್ಲಾ ನೂ ಹೇಳಿ – ‘…ಎಪ್ಪಾಣಿ ಸಾಧನಾದ ಹಾದೀ ಹೇಳರೀ…’ ಅಂತ ಬೇಡಿಕೊಂಡ.ದೀಕ್ಷಿತ ಮಹಾರಾಜರು ‘ಹೂಂ… ಗೂಗೀಕೊಳ್ಳದ ಯೋಗಿಗೋಳು ಹೇಳ್ಯಾರಲಾ…ನೀ ನಡದದ್ದನಣಿ ಸಾಧನಾ ಅಂತ…ಹೂಂ ! …ಕರ್ಮಾ ಕಳಕೋಲಿಕ್ಕೂ ಸಾಧನಾ -ಕರ್ಮಾ ಹೆಚ್ಚ ಮಾಡಿಕೋಲಿಕ್ಕನೂ ಸಾಧನಾ…ಒಟ್ಟಣಿ ಕರ್ಮದ ಕೊಡಾ ತುಂಬಬೇಕ ನೋಡು…ಕರ್ಮದ ಕೊಡಾ ಪೂರಾ ತುಂಬಿದ ಮ್ಯಾಲಣಿ ಅದನ್ನ ಸುರುವಿ ಖಾಲೀ ಮಾಡೂದು…’ ಅಂತ ಹೇಳಿ ‘ಹೂಂ…ಅದೆಲ್ಲಾ ಇರವಲ್ಲದ್ಯಾಕ…ಈಗ ಮದಲ ಖಾಲೀ ಹೊಟ್ಟೀ ತುಂಬಸಬೇಕು…ಹಸವಿನ ಅಗ್ನೀಗೆ ಆಜ್ಯ ಹಾಕೂವಂತೆ ನಡೀ ’ ಅಂತ ಒಳಗ ಕರಕೊಂಡು ಹೋಗಿ ಊಟಕ್ಕ ಹಾಕಿಸಿದರು…ಊಟ ಆದಮ್ಯಾಲೆ -‘ಹೂಂ…ನಾಳೇನ ಸೋಮೇಶ್ವರನ್ನ ಭೆಟ್ಟಿ ಆಗಾಂವ ಏನು…ಆಗಲಿ ಆಗಲಿ ’ ಅಂತ ನುಡದು ‘…ಅಲ್ಲಿ ಹೊರಗ ಕಟ್ಟೀಮ್ಯಾಲ ಥಂಡಿ ಹತ್ತಿದರ ಒಳಗ ಬಂದ ಮಲಕೋ…ಹಾಸಿಗೀ -ಹೊದಿಕೀ ಏನಾರ ಬೇಕ ಏನು?’ ಅಂತ ಕೇಳಿದರು. ‘ಯಾ…ಈಗೆಲ್ಲೀ ಥಂಡಿರೀ…ಶಕೀನಣಿ ಜೋರ ಐತಿ.ಏನೂ ಬ್ಯಾಡರಿ’ ಅಂತ ಹೇಳಿದ ದ್ಯಾವಪ್ಪ ಹೊರಗ ಬಂದು, ಕಟ್ಟಿಯಮ್ಯಾಲ ಮಲಕೊಂಡ. +…ಮರದಿವಸ ಹರ್‍ಯಾಗ ನಸಕಿನ್ಯಾಗಣಿ ಎದ್ದು ಸೊಗಲದ ಸೋಮೇಶ್ವರನ ಕ್ಷೇತ್ರಕ್ಕ ಬಂದ. ಆಹಾ…! ಗಂಗವ್ವ ಕುಣಕೊಂತ ಕುಣಕೊಂತ ಕೆಳಗ ಜಿಗೀಲಿಕ್ಕತ್ಯಾಳೆ ! ಮಂಜು ಕವದು ಮಸಕು ಮಸಕು ಆಗಿ…ಕೆಳಗೆ ಜಿಗಿಯುವ ನೀರಿನ ಧಾರೆಯ ಹಿಂದಿನ ಆ ಗುಡ್ಡ , ಮಾದೇವನ ಜಡಿಯ ಹಂಗೆ ಕಾಣಿಸಿತು…ಕಣ್ಣು ಮುಚ್ಚಿ ಕೈ ಮುಗದ…ಜಳಕಾ ಮಾಡಿ ಹೊಟ್ಟಿ ತುಂಬ ನೀರು ಕುಡದು…ಮ್ಯಾಗ ಹತ್ತಿ ಸೋಮೇಶ್ವರನ ಗುಡಿಗೆ ಹೋಗಿ ದೇವರಿಗೆ ಕೈಮುಗದು…ಅಲ್ಲಿಂದ ಮಠಕ್ಕ ಬಂದು ಅಂಬಲೀ ಕುಡದ…ಮಠದ ಹಿಂದಿನ ಗುಡ್ಡದಾಗ ಒಂದು ಸೂಜಿಗಲ್ಲಿನ ಫಡೀ ಐತಿ…ಕಬ್ಬಿಣದ ಮಳೀ ಹೊಡದ ಕಾಲಮರೀ ಮೆಟಿಗೊಂಡು ಆ ಫಡೀ ಹತ್ತಿದರೆ ಕಾಲಮರಿಯೊಳಗಿನ ಮಳಿಗೋಳೆಲ್ಲಾ ಕಿತ್ತಿ -ಹೊರಗ ಬಂದು ಆ ಫಡೀಗೆ ಹತಿಗೋತಾವೆ…ದ್ಯಾವಪ್ಪ ಸಂಜೀತನಕಾ ಆ ಫಡಿಯ ಮ್ಯಾಲ ಕುಂತು ಧ್ಯಾನಾ ಮಾಡಿ,ಸಂಜಿ ಆದಮ್ಯಾಲ ಮಠಕ್ಕ ಬಂದು ರೊಟ್ಟೀ ತಿಂದು – ಅಂಬಲೀ ಕುಡದು ಕಂಬಳೀ ಹಾಸಿಗೊಂಡು ಮಲಗಿದ… +…ಮರದಿವಸ ಮದ್ದಿನದಷ್ಟೊತ್ತಿಗೆ ನವಲು ತೀರ್ಥಕ್ಕೆ ಬಂದ…ಗುಡ್ಡ ಅಂಬುವುದನ್ನ ಸೀಳಿ ಸೆಳವಿನಿಂದ ಹರಿಯಲಿಕ್ಕತ್ಯಾಳೆ ಗಂಗವ್ವ !ಅದನ್ನಣಿ ನೋಡಿಕೊಂತ ಕುಂತ…ಈ ಭೂಮೀ ಮ್ಯಾಗ ಪಾರೋತಿ ದೇವಿ – ಗಂಗವ್ವ ಇವರದಣಿ ಹೆಚ್ಚಿನ ಲೀಲಾ ಅಂತ ಕಾಣಸತೈತಿ…ಅಲ್ಲಿ ಗೂಗೀ ಕೊಳ್ಳದಾಗ ಗಂಗವ್ವ ಗುಪತವಾಗಿ ಗವಿಯೊಳಗಿಂದ ಮೂಡಿ ಬಂದರಣಿ ಸೊಗಲದಾಗ ಸೋಮೇಸ್ವರನ ಮುಂದ ಕುಣಕೊಂತ ಸಾಗತಾಳೂ…ಇಲ್ಲಿ ನೋಡದರೆ ಗುಡ್ಡಾ ಸೀಳಿ ಸೆಳವಲೇ ನಡದ್ದಾಳು ಅಂತ ದ್ಯಾವಪ್ಪನ ಮನಸಿಗೆ ತೋರಿ-ಇನ್ನು ಈ ಪ್ರಥುವೀ ಅಂಬುವುದರ ಮ್ಯಾಲೆ ಶಿವಾ ಹೆಂಗ ಕಾಣಸತಿದ್ದಾನೂ ಅಂತ ಸೋಜಿಗಪಟ್ಟನು… ಸಂಜೀತನಕಾ ಅಲ್ಲಿಯೇ ಕುಂತು ಗಂಗವ್ವನ ರಭಸಾ ನೋಡಿ ಸಂಜಿ ಆದಮ್ಯಾಗ ಮುನವಳ್ಳಿಗೆ ಬಂದು,ಪಂಚಲಿಂಗೇಶ್ವರನ ದರಶನಾ ತಗೊಂಡು ಅಲ್ಲೇ ಗುಡಿಯ ಆವರಣದಾಗೆ ಮಲಕೊಂಡ… +…ಮರದಿವಸ ಹೊತ್ತು ಮೂಡೂದಕಿಂತಾ ಮದಲಣಿ ಸುರೇಬಾನದ ಶಬರೆವ್ವನ ಕೊಳ್ಳಕ್ಕ ನಡದ…ಅಂದ ಸಂಜೀಮುಂದ ರಾಮದುರ್ಗ ಮುಟ್ಟಿ ಅಲ್ಲಿ ವೆಂಕಟೇಶ್ವರನ ದರಶನಾ ತಗೊಂಡು ಗುಡಿಯ ಆವರಣದಾಗಣಿ ಮಲಕೊಂಡ. ಬೆಳಿಗ್ಗೆ ಎದ್ದು ಶಬರೆವ್ವನ ಕೊಳ್ಳಕ್ಕ ನಡದ…ಅಲ್ಲಿ ಮುಟ್ಟುವಷ್ಟೊತ್ತಿಗೆ ಮೂರತಾಸು ಹೊತ್ತು ಏರಿತ್ತು…ಚೈತ್ರ ಇನೂ ಬಂದಿರಲಿಲ್ಲವಾದರೂ ಅದರ ಪರಿವಾರ ಮದಲಣಿ ಬಂದಿದ್ದವು…ಬನದಾಗಿನ ಗಿಡಗೋಳು ಹೊಸಾ ಚಿಗರು ಹೊತಗೊಂಡು ನಿಂತಿದ್ದವು… ಎಲ್ಲಿ ನೋಡಿದಲ್ಲಿ ಕಾಡುನೆಲ್ಲಿ ಮತ್ತು ಬಾರಿಯ ಹಣ್ಣಿನ ಗಿಡಗೋಳು…ಶಬರೆವ್ವ ಇದಣಿ ಬನದಾಗಣಿ ರಾಮ ಲಕ್ಷ್ಮಣರಿಗೆ ಆದರ ಸತ್ಕಾರ ಮಾಡಿದ್ದಳಂತ…ಬಾರಿಯ ಹಣ್ಣು ಹರದು ಅದನ್ನ ಕಡದ ನೋಡಿ-ಸವೀ ಇದ್ದರ ಉಡ್ಯಾಗ ಇಟಗೊಳ್ಳಾಕಿ -ಹುಳೀ ಇದ್ದರ ಒಗದ ಬಿಡಾಕಿ…ಕಡದು ರುಚಿ ನೋಡಿದ ಸವಿ ಸವಿ ಹಣ್ಣುಗಳನ್ನ ರಾಮಗ ತಿನಲಿಕ್ಕೆ ಕೊಟ್ಟು ಸತ್ಕಾರ ಮಾಡಿದ್ದಳು…ದಟ್ಟನೆಯ ಆ ವನದೊಳಗೆ ಒಂದು ತಿಳಿನೀರಿನ ಝರೀ…ಕೈಕಾಲು ತೊಳಕೊಂಡು ನೀರು ಕುಡಿದು ಅಲ್ಲೇ ಒಂದು ಗಿಡದ ಬಡ್ಡಿಗೆ ಕುಂತ…ಬೆಳಗಿನಿಂದ ಊಟ ಇಲ್ಲದಿರಕೂ ನೀರು ಕುಡಿದ ಮ್ಯಾಲೆ ಹೊಟ್ಟಿ ತುಂಬಿದಂಗಾಗಿ ಏನೂ ಬ್ಯಾಡ ಅನಿಸಿತು…ಕತ್ತಲಾದಮ್ಯಾಲೂ ಸುರೇಬಾನಕ್ಕೆ ಹೋಗುವ ವಿಚಾರ ಮಾಡಲಿಲ್ಲ…‘ಜೀಂ…’ ಅಂತ ಚೀರುವ ಜೀರುಂಡಿಯ ಸಂಗೀತ ಇಡೀ ಬನದಾಗ ತುಂಬಿಕೊಂಡಿತ್ತು…ಕಣಕಪ್ಪಡಿಗಳು ಹೀಂ..ಗ ಹಾರ್‍ಯಾಡತಿದ್ದರ ಆಗೊಂದು ಈಗೊಂದು ಗೂಗಿಗಳ ಘೂ..ಕ್ ಅನ್ನುವ ದನೀ…ಹಗಲೆಲ್ಲಾ ಆಡಿದ ಮಂಗ್ಯಾಗೋಳೂ-ಹಕ್ಕಿಗೋಳೂ ಗಿಡದ ಟೊಂಗೀಮ್ಯಾಲ ಸ್ತಬ್ದ ಕುಂತು…ನಿದ್ದೀ ಮಾಡಲಿಕ್ಕತ್ತಿದ್ದವು…ಇವು ಎಲ್ಲಾದರ ನಡಬರಕ ದ್ಯಾವಪ್ಪ ಭಾಳೊತ್ತನಕಾ ಎಚ್ಚರ ಇದ್ದು… ರಾತರಿಯ ಬೆಳದಿಂಗಳಿನ್ಯಾಗ ಆ ಬನಾ ಹೆಂಗ ಕಾಣಸತೈತಿ ಅಂತ…ಅದನ್ನಣಿ ನೋಡಿಕೋತಣಿ…ಅದನ್ನಣಿ ಮನಸ ತುಂಬ ತುಂಬಿಕೋತ ಕುಂತು…ಆಮ್ಯಾಲ +ಕಂಬಳೀ ಹೊತಗೊಂಡು ಮಲಗಿದ… +…ಮರದಿವಸ ಅಲ್ಲಿಂದ ಸಿರಸಂಗಿಯ ಕಾಳಮ್ಮನ ದರಶನಕ್ಕ ನಡದ…ಹೊತ್ತು ಮೂಡುವುದಕ್ಕಿಂತ ಮದಲೇ ಹೊಂಟು ತಾಸು ದೀಡ ತಾಸು ಹೊತ್ತು ಏರುವಷ್ಟೊತ್ತಿಗೆ ಶಿರಸಂಗಿಯನ್ನು ಮುಟ್ಟಿದ…ಕಾಲು ತೊಳಕೊಂಡು ಸೀದಾ ಕಾಳಮ್ಮನ ದರಶನಕ್ಕ ಹೋದ…ಆಹಾಣಿ…ಥೇಟ್ ಎದ್ದು ಬರುವ ಹಂಗ ಕುಂತಂಗ ಕಾಣಿಸಿದಳು ತಾಯಿ…! ಬೆಳ್ಳಿಯ ಕಣಬಟ್ಟುಗಳೊಳಗಿಂದ ಇಷ್ಟಗಲ ಕಣ್ಣು ತಗದು ತನ್ನನ್ನಣಿ ನೋಡಲಿಕ್ಕತ್ಯಾಳೆ ಅಂತ ಅನಿಸಿ , ದ್ಯಾವಪ್ಪನೊಳಗ ಭಕ್ತಿ ತುಂಬಿದಂಗಾಗಿ…ಕಣ್ಣು ಮುಚಿಗೊಂಡು ಅಲ್ಲೇ ಗುಡಿಯ ಒಂದು ಮೂಲ್ಯಾಗ ಕುಂತು ಬಿಟ್ಟ….ಅಲ್ಲಿ ಹಂಗಣಿ ಕೂತಿರಬೇಕಾದರೆ ಮದ್ದಿನದ ವ್ಯಾಳ್ಯಾಕ್ಕ ಯಾರೋ ಭುಜಾ ಹಿಡದು ಅಳಿಗ್ಯಾಡಿಸಿಧಂಗ ಆತು…ಕಣ್ಣು ತಗದು ನೋಡಿದರೆ ಒಬ್ಬ ಮುದುಕ ಮನಶಾ ನಿಂತಿದ್ದ…ಅಂವ -‘ನಾವು ಹೆಬ್ಬಳ್ಳೀ ಪತ್ತಾರರು… ದೇವರಿಗೆ ಮಾಡಸಾಕ ಬಂದದೀವು…ನೀ ಯಾವಾಗ ಹರ್‍ಯಾಗಿಂದ ಇಲ್ಲೇ ಧ್ಯಾನಾ ಮಾಡಿಕೊಂತ ಕುಂತದೀ…ಬಾ…ನಮ್ಮ ಗೂಡೇ ಉಂಡ ಬರೂವಂತೆ’ ಅಂತ ಹೇಳಿ ಎಬಿಸಿಗೊಂಡು ಕರಕೊಂಡು ಹೋದ…ಮುದಕನ ಮಗಾ ಮತ್ತ ಇಬ್ಬರು ಮಮ್ಮಕ್ಕಳು ಇವರದಣಿ ಹಾದೀ ನೋಡಿಕೋತ ಕೂತಿದ್ದರು…ಇವರು ಹೋಗಿ ಅವರ ಜೋಡೀ ಕುಂತರು…ಮುದಕನ ಸೊಸಿ ಎಲ್ಲಾರಿಗೂ ಪತ್ರೋಳೀ ಕೊಟ್ಟಳು… ಚರಿಗ್ಯಾಗಿಂದ ನೀರು ಹಣಿಸಿಗೊಂಡು ಎಲೀ ತೊಳಕೊಂಡರು…ಹೋಳಿಗೀ ಊಟ ! ‘ಭಿಡೇ ಮಾಡಿಕೋಬ್ಯಾಡ ತಮ್ಮಾ ಣಿ’ +‘ಇನೊಂದ ಹೋಳಿಗೀ ಹಾಕಲೀ ಯಣ್ಣಾಣಿ…?’ +‘ಏ ಶಾರವ್ವಾ ತಮ್ಮಗ ಒಂದೀಟಣಿ ತುಪ್ಪಾ ನೀಡು…’ +‘ಹಾಲ ಹಾಕಲೀ ಯಣ್ಣಾ …’-ಅಂತ ಹಿಂಗ ಅತ್ತೀ -ಸೊಸೀ ಇಬ್ಬರೂ ಅಗದೀ ವಾಜಮೀ ಮಾಡಿ ಉಣ್ಣಾಕ ನೀಡಿದರು…ಊಟ ಆದಮ್ಯಾಲ ಒಂದ ಅರ್ಧಾ ತಾಸು ಗುಡ್ಯಾಗ ಕುಂತು ಆಮ್ಯಾಲ ಗೊಡಚಿಯ ಹಾದೀ ಹಿಡದ… +…ಹೊತ್ತು ಮುಣಗಿ ಕತ್ತಲಾದ ಮ್ಯಾಲ ಕಡಕೋಳ ಮುಟ್ಟಿ, ಅಲ್ಲಿ ಬಸವಣ್ಣ ದೇವರ ಗುಡಿಯ ಕಟ್ಟಿಯ ಮ್ಯಾಲ ಮಲಗಿ…ಬೆಳಿಗ್ಗೆ ಎದ್ದವನೇ ಗೊಡಚಿಯ ಕಡೆ ನಡದ…ಗೊಡಚಿಯ ಸನೇಕ ಹಾದ್ಯಾಗಿನ ಒಂದ ತ್ವಾಟದ ಭಾಂವ್ಯಾಗ ಜಳಕಾ ಮುಗಿಸಿಕೊಂಡು…ಗುಡೀ ಮುಟ್ಟುವಷ್ಟೊತ್ತಿಗೆ ಎರಡ ಎರಡೂವರಿ ತಾಸು ಹೊತ್ತು ಏರಿತ್ತು…ಅಂದು ಯಾರೋ ಈರಭದ್ರನ ಗುಗ್ಗಳದ ಸೇವಾ ಎಬಿಸದ್ದರು…ಜಳಕಾ ಮಾಡಿ-ಮಡೀ ಧೋತರಾ ಉಟಗೊಂಡು -ಮಡೀ ಅಂಗೀ ತೊಟಗೊಂಡು- ತೆಲೀಗೆ ಬಿಳೀ ಪಟಕಾ ಸುತಿಗೊಂಡು ಹಣೀಗೆ ವಿಭೂತೀ ಧರಿಸಿಕೊಂಡ ಪರವಂತರು ದ್ಯಾವಪ್ಪನಿಗೆ ಥೇಟ್ ಅಲ್ಲಮ ಪ್ರಭುವಿನಹಂಗೆ ಕಂಡರು…‘ಹಿಂಗಣಿ ಇದ್ದಿರಬೇಕ ಅಂವನೂ…’ ಅಂತ ಅನಕೊಂಡ…! ಗುಗ್ಗಳಾ ಹೊತ್ತ ಹುಡುಗ ವದ್ದಿಯ ವಲ್ಲಿಯನ್ನು ಉಟ್ಟು ಬರಿಮೈಯಿಂದ ಇದ್ದಿತು…ದ್ಯಾವಪ್ಪ ಈರಭದ್ರನ ದರಶನಾ ಪಡಕೊಂಡು ಗುಗ್ಗಳದ ಮೆರವಣಿಗಿಯ ಜೋಡೀ ನಡದ…ವೀರಭದ್ರನ ಮಹಿಮಾ ಹೇಳುವ ಒಡಪುಗಳನ್ನು ಹೇಳಿಕೋತ-ಖಡೇ ಖಡೇ ನಮ್ಮ ವೀರಭದ್ರ ಅಂತ ಘೋಷ ಹಾಕಿಕೋತ -ಸಂಬಾಳ ನುಡಿಸಿಕೊಂತ ನಡದ ಗುಗ್ಗಳದ ಮೆರವಣಿಗಿ ಮದ್ದಿನದ ತನಕಾ ನಡೀತು…ಮೆರವಣಿಗೆ ಗುಡಿಗೆ ಬಂದು -ಅಲ್ಲೇ ಪೌಳ್ಯಾಗ ಅಡಿಗೀ ಮಾಡಿಸಿದ್ದರು… ಎಲ್ಲಾರದೂ ಪ್ರಸಾದ ಆತು. +…ಅಲ್ಲಿಂದ ನಡದದ್ದು ಎಲ್ಲಮ್ಮನ ಗುಡ್ಡಕ್ಕ…ಮುನವಳ್ಳಿಗೆ ಬಂದು ಮತ್ತ ಪಂಚಲಿಂಗೇಶ್ವರನ ಗುಡಿಯ ಆವರಣದಾಗ ಮಲಗಿ ಬೆಳಿಗ್ಗೆ ಎದ್ದು ಮೂರು ತಾಸು ಹೊತ್ತು ಏರುವಷ್ಟೊತ್ತಿಗೆ ಜೋಗುಳ ಭಾವಿಗೆ ಬಂದ…ಎಕ್ಕಯ್ಯ -ಜೋಗಯ್ಯ ಉಧೋ ಅಂದು – ಜೋಗಳ ಭಾಂವೀ ಸತ್ತೆವ್ವಾ ಉಧೊ ಉಧೋ ಅಂದು – ಜೋಗಳಭಾಂವಿಯೊಳಗ ಮುಣಗಿ ಎದ್ದು-ಸತ್ತೆವ್ವನ ದರಶನಾ ಮಾಡಿದ…ಆಕಿಗೆ ಸ್ವಾಮಿ ಮಾಡಿ ಹಣಿಗೆ ಭಂಡಾರ ಧರಿಸಿ…ಆಮ್ಯಾಲೆ ಸತ್ಯುಳ್ಳ ರೇಣುಕಾ ಮಾಯಿ-ಯಲ್ಲವ್ವ ನೆಲಿಸಿದ ಯೋಳುಕೊಳ್ಳದ ಗುಡ್ಡಾ ಹತ್ತಿದ…ಮರ ದಿವಸನಣಿ ಉಗಾದೀ ಅಮಾಸಿ… ಯಲ್ಲಮ್ಮ ತಾಯಿ -ಜಮದಗ್ಗನಿ ಮತ್ತ ಪರಶು ರಾಮನ ದರಶನಾ ಮಾಡಿಕೊಂಡು ಅಂದ ಅಲ್ಲೇ ಗುಡ್ಡದಾಗ ವಸ್ತೀ ಮಾಡಿದ…ಮರದಿವಸ ಉಗಾದಿಯ ಸೂರ್ಯೇ ಪರಮಾತಮನ ದರಶನವನ್ನ ಯಲ್ಲಮ್ಮನ ಕ್ಷೇತ್ರದಾಗೇ ಮಾಡಿ ಗುಡ್ಡಾ ಇಳದ… ಮುಂದ ಉಳದ ನಾಕು ದಿವಸದಾಗ ಬೆಟಗೇರಿಯ ಸತ್ಯೇದ ಲಕ್ಕವ್ವನ್ನ ಮತ್ತ ಜಾಗ್ರುತ ದೇವರು ಹಣಮಪ್ಪನ ದರಶನಾ ಮಾಡಿಕೊಂಡು ಅಲ್ಲಿಂದ ಉದಗಟ್ಟಿಯ ಉದ್ದವ್ವಗ ಹೋದ…ಅಲ್ಲಿಂದ ಮುಂದ ಸಾವಳಗಿಯ ಶಿವನಿಂಗ ಸ್ವಾಮಿಯ ಮಠಕ್ಕ ಮತ್ತ ಕಲ್ಲೊಳ್ಳಿಯ ಹಣಮಂತ ದೇವರಿಗೆ ಹೋಗಿ …ರಾಮನವಮಿ ಇನೂ ಮೂರು ದಿನಾ ಐತಿ ಅನ್ನುವಾಗ ಚೈತ್ರದ ಷಷ್ಟಿಯ ದಿವಸ ಹೊತ್ತು ಮುಣಗುವ ಹೊತ್ತಿಗಂದರೆ ಧರಮನಟ್ಟಿಯನ್ನ ಮುಟ್ಟಿದ… +* +* +* +…ಅಂವ ಬರೂಕಿಂತಾ ಮದಲನೇ ದಿವಸನಣಿ ಲಗಮವ್ವ ಮಕ್ಕಳನೆಲ್ಲಾ ಕಟಿಗೊಂಡು ಧರಮನಟ್ಟಿಗೆ ಬಂದಿದ್ದಳು…ಆಕಿ ಅಲ್ಲಿ ಬಂದಾಕಿ ವಿಠ್ಠಲ ದೇವರ ಗುಡಿಯ ಪೂಜಾರಿಗೆ ತನ್ನ ಗಂಡ ಮಡಿಯಿಂದ ಯಾತ್ರೀ ಮಾಡಿ – ಎಲ್ಲಾ ದೇವರಗೋಳ ದರಶನಾ ಮಾಡಿಕೊಂಡು ಬಂದು ರಗತ ತಿಲಕದ ಸೇವಾ ಮಾಡಲಿಕ್ಕೆಂತ -ಹೋಳೀಹುಣ್ಣಿವಿ ಇನೂ ಎರಡ ದಿವಸ ಐತಿ ಅನ್ನೂವಾಗನಣಿ ಕಳ್ಳೀಗುದ್ದೀ ಬಿಟ್ಟು ಹೋಗ್ಯಾನೆ…ಅಂವ ನಾಳೆ ಷಷ್ಟಿಯ ದಿವಸ, ಹೊತ್ತು ಮುಣಗೂ ಯಾಳೇಕ್ಕಂದರ ಧರಮನಟ್ಟಿಗೆ ಬರತಾನೆ ಅನ್ನುವದನ್ನ …ದ್ಯಾವಪ್ಪ ಲಂಗಟದ ಸ್ವಾಮಿಗೋಳ ಅಪ್ಪಣೀ ಪರಕಾರ ರಗತಾ ಸುದ್ದ ಮಾಡಿಕೊಂಡದ್ದನ್ನ -ಅದರ ಅಗಸುದ್ದೇ ಮತ್ತ ಪತ್ಯೇದ ಎಲ್ಲಾ ಆಚಾರಗಳ ಸುದ್ದಿಯನ್ನ ಮೊದಲು ಮಾಡಿಕೊಂಡು…ಎಲ್ಲಾ ಸಂಗತಿಗಳನ್ನೂ -ಆಕಿ ಅಗದೀ ರೋಚಕ ಮಾಡಿ ಹೇಳಿದ್ದಳು… ಈ ಎಲ್ಲಾ ಸಂಗತಿ ಕೇಳಿ ಪೂಜಾರಿಗೆ ಭಾಳ ಸಂತೋಷ ಆತು…ಅಂವ ಹೋಗಿ ಕಾರಭಾರಿಗಳಿಗೆ ತಿಳಿಸಿದ.ಕಾರಭಾರಿಗಳು -ಹಾಂ ಹಾಂ ! ಯೋಗ್ಯ ಅದಣಿ – ಯೋಗ್ಯ ಅದಣಿ ಅಂತ ಎರಡೆರಡು ಸರತೇ ಉದ್ಗರಿಸಿ – ಡಂಣಾಯಕರನ್ನ ಕರೆಸಿ -ರಕ್ತ ತಿಲಕದ ಸೇವಾ ನಡಸೂ ದ್ಯಾವ್ಯಾನ ಹೇಂತೀ – ಮಕ್ಕಳೂ ಬಂದಾರಂತ…ಅವರಿಗೆ ಧರ್ಮಸಾಲ್ಯಾಗ ಇಳಕೊಳ್ಳಲಿಕ್ಕೆ ವ್ಯವಸ್ಥಾ ಮಾಡಬೇಕು…ಉಗ್ರಾಣದಿಂದ ಅವರಿಗೆ ಅಕ್ಕೀ-ಗೋದೀ-ಬ್ಯಾಳೀ ಬೆಲ್ಲಾ ಅಡಗೀ ಸಾಮಾನು ಎಲ್ಲಾ ಸಾಂಗವಾಗಿ ಸರಬರಾಜು ಮಾಡಲಿಕ್ಕೆ ನಾ ಹೇಳೀನಂತ ತಿಳಸಿ ವ್ಯವಸ್ಥಾ ಮಾಡಬೇಕು -ಅಂತ ಹೇಳಿಕಳಿಸಿದರಂತ… ಲಗಮವ್ವನಿಗೆ ಗಂಡನ ಯಾತ್ರಾದ ಮಹತ್ವ ತಿಳಧಂಗ ಆತು…ತೇರಿಗೆ ಬಂದ ಮಂದಿಗೂ ದ್ಯಾವಪ್ಪ ಕಟ್ಟುನಿಟ್ಟಿನ ಮಡಿಯಿಂದ ಯಾತ್ರಾ ಮಾಡಿಕೊಂಡು ತೇರಿನ ಸೇವಾಕ್ಕ ಬಂದಾನನ್ನುವ ಮಾಹಿತಿ ತಿಳದು ಅವನ ಬಗ್ಗೆ ಭಕ್ತಿ ಅಂಬುವದು ಹುಟ್ಟಿತು…ಉತ್ತುಮ ಕುಲದವರು ‘ನಮಸ್ಕಾರ ದ್ಯಾವಪ್ಪಾ…’ ಅಂತ ಕೈಜೋಡಿಸಿದರೆ ಕಾಟುಕ ಜಾತಿಯವರು ದ್ಯಾವಪ್ಪನ ಕಾಲು ಮುಟ್ಟಿ ನಮಸ್ಕಾರ ಮಾಡಲಿಕ್ಕೆ ಸುರುಮಾಡಿದರು… +…ದ್ಯಾವಪ್ಪ ವರ್ಷಾ ವರ್ಷಾ ರಗತ ತಿಲಕದ ಸೇವಾಕ್ಕ ಬರೂದಕಿಂತಾ ಮೊದಲು-ಯಾವ ದಿನದಿಂದ ರಗತಾ ಸುದ್ದ ಮಾಡಿಕೋಲಿಕ್ಕೆ ಅಗಸುದ್ದೇ ಸುರೂ ಮಾಡಬೇಕು-ಯಾವ ಯಾವ ದಿನಾ ಯಾವ ಅಗಸುದ್ದೇ ತಗೋಬೇಕು….ಮತ್ತ ಯಾವ ದಿನಾ ಯಾತ್ರಿಗೆ ಹೊಂಟು ಯಾವ್ಯಾವ ದಿನಾ ಎಲ್ಲೆಲ್ಲಿಗೆ ಹೋಗಬೇಕು-ಎಲ್ಲೆಲ್ಲಿ ವಸ್ತೀ ಮಾಡಬೇಕು ಅನ್ನುವುದನ್ನ-ಧರಮನಟ್ಟಿಗೆ ಯಾವ ಹಾದೀಲೇ ಎಂದು ಬಂದು ಸೇರಬೇಕನ್ನೂದನ್ನ -ಎಲ್ಲವನ್ನೂ ಲಗಮವ್ವನಿಗೆ ಸವಿಸ್ತಾರವಾಗಿ ಹೇಳಿ ‘ಇದನ್ನ ನೀ ಒಟ್ಟಣಿ ಮರೀಬ್ಯಾಡ…ಮುಂದ ನಿನ್ನ ಮಕ್ಕಳೂ -ಮಮ್ಮಕ್ಕಳೂ ಸ್ವಾಮಿಯ ಸೇವಾದ ಪಟ್ಟಕ್ಕ ಬಂದಾಗ ಅವರು ಇದಣಿ ಪರಕಾರನಣಿ ನಡಕೊಂಡ ಹೋಗಬೇಕು…’ ಅಂತ ತಿಳಿಸಿದ…ಲಗಮವ್ವ ‘ಹೂಂ…’ ಅಂತ ಗೋಣು ಹಾಕಿದಳು… +* +* +* +…ದ್ಯಾವಪ್ಪ ತನಗ ಇನ್ನು ನಡೀಲಿಕ್ಕೆ ಸಾಧ್ಯನಣಿ ಇಲ್ಲ ಅನ್ನುವಷ್ಟು ವಯಸ್ಸು ಆಗಿ ಮುಪ್ಪು ಆವರಿಸುವ ತನಕಾ …ಇದೇ ಕ್ರಮದೊಳಗ ವರ್ಷಾ ವರ್ಷಾ ಔಷಧ – ಪಥ್ಯೇ ಮತ್ತ ಯಾತ್ರಿಯ ಆಚಾರವನ್ನ ಚಾಚೂ ತಪ್ಪದೇ ನಡಿಸಿಕೊಂಡು ಬಂದನು… ಯಾತ್ರಿಯನ್ನ ಮುಗಿಸಿಕೊಂಡು ಚೈತ್ರದ ಶುಕ್ಲ ಷಷ್ಟಿಯ ದಿವಸ ಹೊತ್ತು ಮುಣಗುವ ಹೊತ್ತಿಗಂದರೆ-ಒಂದು ಗಳಿಗಿ ತಡಾ ಆಗಧಂಗ ಧರಮನಟ್ಟಿಯನ್ನ ಮುಟ್ಟತಿದ್ದನು… ಇದರ ಜೋಡೀನಣಿ ಇನೊಂದು ಪದ್ಧತೀ ಬೆಳದ ಬಂತು…ಏನಪಾ ಅಂದರ – ಚೈತ್ರ ಶುದ್ಧ ಸಪ್ತಮಿಯ ಸಂಜಿಯ ಹೊತ್ತಿಗಂದರೆ ನಣದಿಯ ಗೊಂದಲಿಗ್ಯಾರ ಮ್ಯಾಳ ಧರಮನಟ್ಟಿಗೆ ಬಂದು -ಅವರು ಅಷ್ಟಮಿಯ ರಾತ್ರೀ-ವಿಠ್ಠಲದೇವರ ಗುಡಿಯ ಮುಂದ ಧರಮನಟ್ಟಿಯ ತೇರಿನ ಮಹಾತ್ಮೆ ಮತ್ತು ರಕ್ತ ತಿಲಕದ ಕಥಿಯನ್ನ ಹೇಳುವುದು… ಗೊಂದಲಿಗ್ಯಾರ ಕಥೀ ಮತ್ತ ರಕ್ತ ತಿಲಕದ ಸೇವಾ ಇವೆರಡೂ ಇರದಿದ್ದರ ಧರಮನಟ್ಟಿಯ ತೇರು ಎಳಿಯುವುದೇ ಇಲ್ಲ ಅನ್ನುವಷ್ಟು ಇವು ತೇರಿನ ಉತ್ಸವದ ಭಾಗಗಳಾಗಿಬಿಟ್ಟವು… +…ದ್ಯಾವಪ್ಪ ತನ್ನ ಕಡಿಯ ನಾಲ್ಕು ವರ್ಷದ ಯಾತ್ರಿಗೆ ಹಿರಿಯ ಮಗ ಕುಬೇರನನ್ನ ತನ್ನ ಜೋಡೀ ಕರಕೊಂಡು ಹೋಗಿ-ಎಲ್ಲಾ ಪದ್ಧತಿಯನ್ನ ಸಾರಾಸಾರವಾಗಿ ತೋರಿಸಿಕೊಟ್ಟ…ಐದನೇ ವರ್ಷ ಕುಬೇರಗ ದೀಕ್ಷಾ ಕೊಟ್ಟು -ಅವನ್ನ ಒಬ್ಬನ್ನಣಿ ಯಾತ್ರಾಕ್ಕ ಕಳಿಸಿದ…ಸ್ವಾಮಿಯ ಸೇವಾದ ಪಟ್ಟಕ್ಕ ಬಂದ ಕುಬೇರ ತನ್ನ ಮೈಮ್ಯಾಗ ಕಾವೀ ಬಣ್ಣದ ಶಲ್ಲೇ ಹೊತಗೋಲಿಕ್ಕೆ ಸುರುಮಾಡಿದನಂತ…ಅಂವ ತನ್ನ ಮದಲನೇ ಸೇವಾ ಮುಗಿಸಿಕೊಂಡು ಭಕ್ತರು ಕೊಟ್ಟ ಕಾಯೀ-ಧೋತರಾ-ಅಕ್ಕೀ- ಬ್ಯಾಳೀ -ಬೆಲ್ಲಾ ಮತ್ತ ದವಸ ಧಾನ್ಯಗಳ ಗಂಟಗಳನ ಒಂದು ಚಕಡ್ಯಾಗ ಹಾಕಿಸಿಕೊಂಡು ಕಳ್ಳೀಗುದ್ದಿಗೆ ಬಂದನಂತ…ಕುಬೇರ ತನ್ನ ಮದಲನೇ ರಕ್ತ ತಿಲಕದ ಸೇವಾ ಮುಗಿಸಿಕೊಂಡು ಹೊಳ್ಳಿ ಕಳ್ಳೀಗುದ್ದಿಗೆ ಬಂದ ದಿನಾನಣಿ ದ್ಯಾವಪ್ಪಗ ದಮ್ಮು ಜೋರಾಗಿ ಅಂವ ಅಂದ ರಾತ್ರೀನಣಿ ತೀರಿಕೊಂಡ… +ದೇಸಾಯರು ಕೊಟ್ಟ ಉಂಬಳಿಯ ಹೊಲದಾಗಣಿ ಅವನ್ನ ದಫನ ಮಾಡಿದರು…ಅಲ್ಲಿ ಒಂದು ಗದ್ದಿಗೀ ಕಟ್ಟಿಸಿ ಆ ಗದ್ದಿಗಿಯ ಮ್ಯಾಲ ಲಿಂಗವನ್ನ ಮತ್ತು ಬಸವಣ್ಣನ್ನ ಸ್ಥಾಪನಾ ಮಾಡಿದರು…ದ್ಯಾವಪ್ಪನ ಮಣ್ಣಿಗೆ ಧರಮನಟ್ಟಿ ಮತ್ತ ಸುತ್ತಮುತ್ತಲಿನ ಹಳ್ಳಿಗೋಳಿಂದ ಭಾರೀ ಮಂದಿ ಬಂದಿತ್ತು…ಧರಮನಟ್ಟಿಯ ದೇಸಾಯರು ಸ್ವತಃ ಡಂಣಾಯಕನನ್ನ ತಮ್ಮ ಪ್ರತಿನಿಧಿಯಾಗಿ ದ್ಯಾವಪ್ಪನ ಮಣ್ಣಿಗೆ ಕಳಿಸಿದ್ದರಂತ…ಅದಲ್ಲದಣಿ ಧರಮನಟ್ಟಿಂದ ದೇಸಗತಿಯ ಕಹಳಿಯವನನ್ನೂ ಕಳಿಸಿದ್ದರು…ದೇಸಾಯರ ಸ್ವಂತ ಕಹಳಿಯವನೇ ಈ ದ್ಯಾವಪ್ಪನ ಅಂತ್ಯ ಸಂಸ್ಕಾರದ ವ್ಯಾಳೇದೊಳಗೆ ಕಹಳಿಯ ಸೇವಾ ಮಾಡಿದನಂತ… +ಭಾಗ : ಮೂರು +ಅಂದು ಗುರುವಾರವೋ ಶುಕ್ರವಾರವೋ…ಮಧ್ಯಾಹ್ನದ ಮೂರು ಗಂಟೆ…. ಕಳೆದ ಒಂದು ತಿಂಗಳಿನಿಂದ ಇಲೆಕ್ಶನ್ನಿನ ಪರಿಸ್ಥಿತಿಯನ್ನು ವರದಿ ಮಾಡಲಿಕ್ಕೆ ಕರ್ನಾಟಕದ ಉದ್ದಗಲಕ್ಕೂ ಅಡ್ಡಾಡಿ …ಮೈಯೆಲ್ಲಾ ನುಗ್ಗು ಮಾಡಿಕೊಂಡು ಬಂದು ಎರಡು ದಿನ ರಜೆ ಹಾಕಿ ಮನೆಯಲ್ಲಿ ಯೇ ಉಳಿದಿದ್ದೆ…ಅಬ್ಬಾ ! ಏನು ರಸ್ತೆಗಳವು ! ನಮ್ಮ ಬೆಳಗಾವಿ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ ಭಾಗಗಳಲ್ಲಿನ ರಸ್ತೆಗಳದಂತೂ ಹೇಳಲಾಸಲ್ಲ…ಒಂದು ಉದಾಹರಣೆಯನ್ನ ಕೊಡುವುದಾದರೆ…ಧಾರವಾಡ- ಗೋಕಾಂವಿಯ ಮುಖ್ಯ ರಸ್ತಾದೊಳಗಣಿ-ಗೋಕಾಕದ ಸಮೀಪದಾಗಣಿ-ಗೋಕಾಕ ಇನ್ನೇನು ಮೂರು-ನಾಲ್ಕು ಕಿಲೋಮೀಟರಿನಷ್ಟು ದೂರ ಅದ ಅನ್ನುವಲ್ಲಿ -ಒಂದು ಕಲ್ವರ್ಟ್ ಬಂತು…ಆ ಕಲ್ವರ್ಟಿನ ನಟ್ಟ ನಡುವೆ ಕನಿಷ್ಟ ಎರಡು ಮೂರು ಫೂಟಿನಷ್ಟು ಅಗಲವಾದ ಒಂದು ಡೊಗಾರಿ ಇತ್ತು…ನಾವು ಕಾರು ನಿಲ್ಲಿಸಿ ,ಅದು ಒಂದು ಪ್ರೇಕ್ಷಣೀಯ ಸ್ಥಳವೇನೋ ಅನ್ನುವಹಂಗೆ -ಕಾರಿನಿಂದ ಕೆಳಗೆ ಇಳಿದು ನೋಡಿದೆವು…ಕೆಳಗೆ ಹರಿಯುತ್ತಿದ್ದ ನೀರು ಕಾಣುವ ಹಾಗೆ ಆರು ಪಾರಾಗಿದ್ದ ಡೊಗಾರಿ ಅದು ! ಅದನ್ನು ನೋಡಿ ದಂಗಾದೆವು…ಆ ಡೊಗಾರಿಯ ಆಕಾರ ಗೊತ್ತಿಲ್ಲದ ಮೋಟರ್ ಸೈಕಲ್ಲಿನ ಸವಾರರು ಎಷ್ಟು ಮಂದಿ ಅಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಹೋಗಿದ್ದಾರೋ ಯಾರಿಗೆ ಗೊತ್ತು ! ಜೀವವನ್ನು ಕಳಕೊಂಡವರು ಎಷ್ಟು ಜನರೆನ್ನುವುದು ಆ ಯಮಧರ್ಮನಿಗೇ ಗೊತ್ತು ! ಕಾರಿನಲ್ಲಿದ್ದ ನಾವು ಆ ಕಲ್ವರ್ಟಿಗೆ ‘ಶಕ್ತಿ ಸ್ಥಾನ’ ಅಂತ ಹೆಸರು ಕೊಟ್ಟು …ಚಾಷ್ಟೀ ಮಾಡಿ ನಕ್ಕಿದ್ದೆವು.ಅಂಥಾ ರಸ್ತಾದಾಗ ಅಡ್ಯಾಡಿ ಆ ಭಾಗದ ಇಲೆಕ್ಶನ್ನಿನ ಸುದ್ದೀ ರಿಪೋರ್ಟ್ ಮಾಡಿ ಮುಗಿಸಿ -ಬೆಂಗಳೂರಿಗೆ ವಾಪಸ್ಸು ಬಂದು… ಇಂದಿರಾ ಗಾಂಧೀನ್ನ ಮತ್ತ ಆಕಿ ತಂದಿದ್ದ ಎಮರ್ಜೆನ್ಸಿಯನ್ನ ಮನಿಗೆ ಅಟ್ಟುವಂಥಾ ಇಲೆಕ್ಶನ್ನಿನ ರಿಜಲ್ಟು ಬಂದು ಆದ ಮೇಲೆಯೇ ನಾನು ಲೀವ್ ಹಾಕಿ ಮನೆಯಲ್ಲಿ ಮಲಗಿದ್ದೆ…. +ಊಟಾ ಮುಗಿಸಿ ಮಲಗಿ ನಿದ್ದೀ ಹೊಡೀತಿದ್ದೆ…ಕಾಲಿಂಗ್ ಬೆಲ್ಲು ಕರ್ನಾಟಕ ಸಂಗೀತದ ಮಟ್ಟು ನುಡದು ಅರ್ಧಾಮರ್ಧಾ ಎಚ್ಚರಿಸಿತು…ಚ್ಚು..ಚ್ಚು.. ಅಂತಂದು ಅಂಗಾತ ಇದ್ದಾಂವ ಮಗ್ಗಲಾಗಿ ಮಲಗಿದೆ.ಮತ್ತೆ ಕಾಲಿಂಗ್ ಬೆಲ್ಲು …ಈ ಸಲ ಕಮ್ ಸಪ್ಟಂಬರ್‌ನ ಮ್ಯೂಜಿಕ್ಕು…ಇನ್ನು ಮುಂದಿನ ನಾಗಸ್ವರದ ಸಂಗೀತ ಕೇಳಿ ಏಳುವುದೋ ಅಥವಾ ಈಗಲೇ ಏಳುವುದೋ ಎಂದು ಬಗೆಹರಿಯದೇ-ಒಂದರೆಕ್ಷಣ ಅನುಮಾನಿಸಿ- ಇದು ಬಿಡದ ಕರ್ಮ ಎಂದು ನಿರ್ಧರಿಸಿ -ಎದ್ದು ಕಣ್ಣುಗಳನ್ನು ತಿಕ್ಕಿಕೋತ…ಹೋಗಿ ಬಾಗಲಾ ತಗದೆ…ಯಾರಪಾ ಇಂವಾ !ಮಿಕಿ ಮಿಕಿ ಅಂತ ನನ್ನಣಿ ನೋಡಿಕೋತ ಬಾಗಲದಾಗ ನಿಂತಾನ !…ಇಪ್ಪತ್ತು -ಇಪ್ಪತ್ತೈದರ ನಡುವಿನ ಹುಡುಗ…ಉದ್ದ ಕೂದಲು- ಮುಖದ ಮ್ಯಾಲ ಕುರುಚಲು ಗಡ್ಡ…ಮಾಸಿದ ಪ್ಯಾಂಟೂ ಶರ್ಟುಗಳು… ಕೈಯೊಳಗೊಂದು ಬರೇ ಒಂದೆರಡು ಅರಿವಿಗಳು ಇದ್ದಿರಬಹುದಾದ ಕೈಚೀಲ. ದಿಟ್ಟಿಸಿ ನೋಡಿದರೆ ಥಟ್ಟನೇ-ಈ ಹುಡುಗನ್ನ ನಾನು ಎಲ್ಲಿಯೋ ನೋಡಿದ್ದೇನಲ್ಲ ಅಂತ ಮನಸಿಗೆ ಅನಿಸಿದರೂ ಎಲ್ಲಿ -ಯಾವಾಗ ಅಂತನ್ನುವದು ಹೊಳೆಯಲಿಲ್ಲ…ಅವನೂ ನನ್ನನ್ನು ಮಿಕಿ ಮಿಕಿ ಎಂದು ನೋಡುತ್ತ ಬಾಯಿ ತೆರಕೊಂಡು ಬಾಗಿಲಲ್ಲಿ ನಿಂತು ಬಿಟ್ಟಿದ್ದ… +‘ಯಾರು ಬೇಕಾಗಿತ್ತು…?’ +ಅಂವ ಒಮ್ಮಿಗೆಲೇ ಎಚ್ಚರಾದವನಂಗೆ -‘ಪತ್ರಕರ್ತರು..ಬೆಟಗೇರ್‍ಯಾವರರೀ… ಪಾಟೀಲ ಸಾಹೇಬರಂತ…’ ಅಂತ ಸಣ್ಣ ಸಣ್ಣ ತುಂಡು ಮಾಡಿ-ನುಂಗಿಕೋತ ನುಂಗಿಕೋತ ಮಾತಾಡಿದ.ಪಾಟೀಲ ಸಾಹೇಬರು – ಅಂತ ಆ ಹುಡುಗ ಅನತಿದ್ದಂಗೇ ನಾನು ಇದು ಯಾವದೋ ನಮ್ಮ ಕಡೇದ್ದಣಿ ಪಾರ್ಟೀ ಅಂತ ಅನಕೊಂಡೆ…ಆ ಕಡೆ ಉತ್ತರ ಕರ್ನಾಟಕದ ಭಾಗದವರಿಗೆ ಬೆಂಗಳೂರಲ್ಲಿ ಇರುವವರೆಲ್ಲಾ -ಅವರು ಯಾವ ಧಂದೆಯನ್ನಾದರೂ ಮಾಡುತ್ತಿರಲಿ – ಅವರು ದೊಡ್ಡ ಸಾಹೇಬರೇ ! ನಾನು – ‘ಹಾಂ ಹೌದು ಹೌದು…ನಾನಣಿ.ಒಳಗ ಬರ್ರಿ’ ಅಂತ ಹೇಳಿ ಬಾಗಲದಾಗಿಂದ ಒಳಗ ಸರದು, ಅಂವನ್ನ ಒಳಗ ಬಿಟಗೊಂಡು ಬಾಗಲಾ ಹಾಕಿ ಸೋಫಾದಾಗ ಕೂತೆ…ಆ ಹುಡುಗ ಇನ್ನೂ ಅನುಮಾನಿಸಿಕೋತ ನಿಂತಿದ್ದ… ಕುರ್ಚೀ ತೋರಿಸಿ – +‘ಕೂಡರೀ…’ ಅಂದಾಗ ಕೂತು – +‘ನನಗ -ರೀ… ಹಚ್ಚಬ್ಯಾಡರೀ ಸಾಹೇಬರಣಿ’ ಅಂದ. +‘ನೀವೂ…?’ +‘ನಾ ದ್ಯಾವಪ್ಪರೀ…ಕಳ್ಳೀಗುದ್ಯಾಂವ…’ +‘……..!’ +‘ಅದಣಿರೀ…ನೀವು ಯೋಳೆಂಟ ವರ್ಷದ ಹಿಂದ ನಮ್ಮ ಮನಿಗೆ ಬಂದಿದ್ದಿರಿ…ನೋಡರಿ.ಧರಮನಟ್ಟೀ ತೇರಿನ ಸನದು ನೋಡಲಿಕ್ಕೆ…’ಅಂತ ಹೇಳತಿದ್ದಂಗಣಿ ನನಗ ಒಮ್ಮಿಗೆಲೇ ನೆನಪು ಬಂದು ‘ಹಾಂ ಹಾಂ…’ ಅಂತ ಉದ್ಗಾರ ತಗದೆ…ಈಗ ಗೊತ್ತಾತು ಈ ಹುಡುಗನ್ನ ಎಲ್ಲಿ ನೋಡೀನನ್ನುವುದು…! ಸ್ವಾಂವಜ್ಜ ನನ್ನನ್ನ ಧರಮನಟ್ಟಿಯ ತೇರಿಗೆ ಎಳಕೊಂಡು ಹೋಗಿ-ನಾನು ಅದರ ಕಥೀ ಕೇಳಿದ ಮ್ಯಾಲೆ ಆ ಇಡೀ ಸಂಗತೀ ಬಗ್ಗೆ ಕುತೂಹಲ ಹುಟ್ಟಿ ಧರಮನಟ್ಟಿಂದ ಹಂಗಣಿ ಕಳ್ಳೀಗುದ್ದಿಯ ತನಕಾ ಹೋಗಿ,ಅಲ್ಲಿ ರಕ್ತ ತಿಲಕದವರ ಮನೀ ಹುಡಿಕ್ಕೊಂಡು ಹೋಗಿ, ಅವರು ಐದಾರು ತಲಿಮಾರುಗಳಿಂದ ಅಗದೀ ಜತನದಿಂದ ಕಾಪಾಡಿಕೊಂಡು ದೇವರ ಜಗಲೀ ಮ್ಯಾಲ ಇಟ್ಟು ಪೂಜೀ ಮಾಡತಿದ್ದ -ಕಟ್ಟು ಹಾಕಿಸಿದ ಸನದನ್ನ ನೋಡಿಕೊಂಡು ಬೆಂಗಳೂರಿಗೆ ಬಂದಿದ್ದೆ…ಈ ಹುಡುಗ ಆಗ ಇನ್ನೂ ಹನ್ನೆರಡು-ಹದಿನಾರು ವರ್ಷದ್ದು ಇದ್ದಿರಬೇಕು… +‘ಹೌದೂ !…ನಿಮ್ಮ ಅಪ್ಪನ ಹೆಸರೂ…?’ +‘ಕುಬೇರಪ್ಪರೀ…ತೀರಿಕೊಂಡು ಎರಡ ವರ್ಷ ಆತರೀ’ +‘ಹೌದೂ…ಛೇ..ಛೇ!’ ಅಂತ ಸಣ್ಣ ಸಂತಾಪ ತೋರಿಸಿ-ಕುತೂಹಲ ತಾಳಲಾರದೇ ‘ಮತ್ತಣಿ…ಈಗ ರಕ್ತ ತಿಲಕದ ಸೇವಾ ನಿಂದಣಿ ಇರಬೇಕಲಾ?…ಇಲ್ಲಾ ನಿನಗಿಂತಾ ದೊಡ್ಡ ಮಗಾ ಏನರ ಕುಬೇರಪ್ಪಗ ಅದಾನೋ?’ ಅಂತ ಕೇಳಿದೆ. +‘ನಾ ಒಬ್ಬಣಿ ಗಂಡ ಮಗಾರೀ…’ ಅಂತ ಹೇಳಿದ ದ್ಯಾವಪ್ಪನ ದನಿಯೊಳಗ ನಿರುತ್ಸಾಹ ತುಂಬಿ ತುಳಕತಿತ್ತು. +‘ಯಾಕೋ ಗಡ್ಡಾ ಬಿಟ್ಟದೀಲಾಣಿ? …ನಿಮ್ಮ ನಾಕೈದ ತಲಿಮಾರಿನ ಹಿಂದಿನ ಅಜ್ಜಗೋಳೊಳಗ ಯಾರೋ ಒಬ್ಬಾಂವ-ಅಂವನ ಹೆಸರೂ ಕುಬೇರಪ್ಪ ಅಂತನಣಿ ಏನೋ…ಅಂವ ತನ್ನ ಮೈಮ್ಯಾಗ ಕಾವೀ ಶಲ್ಲೇ ಹೊತಗೋತಿದ್ದನಂತ…ಹಂಗಣಿ ನೀನೂ ಏನರೇ ಸಾಧೂಗೋಳಗತೆ ಗಡ್ಡಾ ಗಿಡ್ಡಾ ಬಿಡಬೇಕಂತ ಮಾಡೀದೀ ಏನು ?’ +‘ಏ…ಹಂಗೇನಿಲ್ಲರೀ…ಜೇಲಿನ್ಯಾಗ ಇದ್ದಾಗ ದಾಡೀ ಮಾಡಿಕೋಲಿಲ್ಲರಿ. ಹಿಂಗಾಗಿ…’ +‘ಹಾಂ…! ಜೇಲಿನ್ಯಾಗ ಇದ್ದಿ !?’ ನನಗ ಶಾಕ್ ಆದಂಗ ಆತು… +‘ಹೂಂನ್ರೀ…ನವನಿರ್ಮಾಣ ಚಳವಳೀ ಸೇರಿ ಪ್ರೊಟೆಸ್ಟ್ ಮಾಡಿದ್ದಕ್ಕ ಸುಳ್ಳ ಸುಳ್ಳಣಿ ಆರೋಪ ಹೊರಿಸಿ ನಮ್ಮ ಅರಸು ಸಾಹೇಬರ ಪೋಲೀಸರು ಅರೆಸ್ಟ್ ಮಾಡಿ ತಂದು ಇಲ್ಲಿನ ತುರಂಗಿನ್ಯಾಗ ಇಟ್ಟಿದ್ದರರಿ…’ ಅಂತ ಅಂವ ತಣ್ಣಗೇ ಹೇಳಿದ. +ನನಗ ಆ ಹುಡುಗನ ಬಗ್ಗೆ ಒಮ್ಮಿಗೆಲೇ ಉತ್ಸಾಹ ಬಂತು…ಅಂವ ನನಗ ವಿಚತ್ರವಾಗಿ ಕಾಣಸಲಿಕ್ಕತ್ತಿದ…ಧಾರ್ಮಿಕ ದೃಷ್ಟಿಯ ಬೆಳಕಿನ್ಯಾಗಿಂದ ಅಂವ ಒಮ್ಮಿಗೆಲೇ ರಾಜಕೀಯದ ಬೆಳಕಿನ್ಯಾಗ ಹೋಗಿ ನಿಂತಿದ್ದ…ಅಂವ ತಣ್ಣಗಣಿ ಹೇಳಲಿಕ್ಕತ್ತಿದ್ದ – +‘…ಆಚೀ ಮನ್ನೆ ಮಧ್ಯಾನ್ನ ಎರಡ ಗಂಟೇಕ್ಕ ಜೇಲಿನಿಂದ ಬಿಟ್ಟರರೀ… ಬಿಡುಗಡೇ ಆಗತಿದ್ದಂಗಣಿ ನನ್ನ ಣಿ ಮತ್ತ ನನ್ನ ಜೋಡೀ ಬಿಡುಗಡೇ ಆದ ಬ್ಯಾರೇ ಹುಡಗೋರನ ಯಾರೋ ಬಂದು ಒಂದು ವ್ಯಾನಿನಾಗ ಕುಂಡರಿಸಿಕೊಂಡು ಕರಕೊಂಡ ಹೋಗಿ ಒಂದು ದೊಡ್ಡ ಬಂಗಲೇದಾಗ ಇಳಿಸಿದರು…ಜಳಕಾ ಊಟದ ವ್ಯವಸ್ಥಾ ಇತ್ತು… ಛಲೋತಂಗೆ ಜಳಕಾ ಮಾಡಿ -ಬಿಸಿ ಬಿಸೀ ಅನ್ನಾ-ಸಾಂಬಾರಾ ಹೊಡದು ಆರಾಮ ಮಲಗಿ ನಿದ್ದೀ ಮಾಡಿದಿನರೀ…ಮೂರ ತಿಂಗಳು ಆ ತಗಣೀ -ಚಿಕ್ಕಾಡಗೋಳ ನಡಕ ನಿದ್ದೀ ಮಾಡಾಕಣಿ ಆಗಿದ್ದಿಲ್ಲ…’. +‘ಯಾಕಣಿ…ನೀವು ಏ ಅಥವಾ ಬಿ ಗ್ರೇಡಿನ ಕೈದಿಗಳು…ಪಾಲಿಟಿಕಲ್ ಕೈದಿಗಳೂ ಅಂದರ ನಿಮಗ ಛಲೋ ವ್ಯವಸ್ಥಾನಣಿ ಇದ್ದಿರಬೇಕಲಾ…?’ +‘ಎಲ್ಲೀದರೀ… ಇಂಪಾರ್‍ಟಂಟ್ ರಾಜಕೀಯ ಪಕ್ಷಗಳ ಮಂದಿನ್ನ ಏ ಗ್ರೇಡಿಗೆ ಹಾಕಿದರು…ನಮ್ಮಂಥಾ ಹುಡಗರನ ಒಯ್ದು ಖಟ್ಟಾ ಕ್ರಿಮಿನಲ್ಲಗೋಳ ಸೆಲ್ಲಿಗೆ ಒಗದರು…ನಾವು ಪ್ರೋಟೆಸ್ಟ್ ಮಾಡಿದಿವಿ ಖರೇ ಏನೂ ಉಪಯೋಗ ಆಗಲಿಲ್ಲ…ನಮ್ಮ ಕಡ್ಯಾಂವ ಒಬ್ಬ ಪೋಲೀಸ ಇದ್ದ…ಜೇಲಿಗೆ ಹೋಗಿ ಒಂದ ತಿಂಗಳ ಮ್ಯಾಲ ಅಂವ ನನಗ ಸಿಕ್ಕಾಗ ಹೇಳಿದ -ಕೈ ಬೆಚ್ಚಗೇ ಮಾಡಿದ್ದರೆ ನನ್ನನೂ ಏ ಗ್ರೇಡಿಗೆ ಹಾಕತಿದ್ದರಂತ…’ +ನನಗ ನಗೀ ಬಂತು !…ನಮ್ಮ ದೇಶದಾಗಿನ ಒಂದೊಂದ ಸಂಸ್ಥಾನೂ ತಮ ತಮಗ ಹೊಂದೂ ಹಂಗ ಕರಪ್ಶನ್ನದ ಹಾದೀ ಹುಡಿಕಿಕೊಂಡಾವ ಅಂತ ಅನಿಸಿತು…ಹೂಂ…ಅಂತ ಉಸರು ಬಿಟ್ಟು ದ್ಯಾವಪ್ಪನ ಮುಂದಿನ ಮಾತಿಗೆ ಕಾದೆ. +‘….ಆ ಬಂಗಲೇಕ್ಕ ಕರಕೊಂಡ ಹೋಗಿದ್ದರಲ್ಲರೀ ಅವರು ನಮಗ ಒಂದ ದಿನಾ ಆರಾಮ ಇರಾಕ ಬಿಟ್ಟು ಮರದಿವಸದಿಂದ ತೆಲೀ ಕೊರ್‍ಯಾಕ ಸುರೂ ಮಾಡಿದರು… ಎಲ್ಲಾ ಹಳೇ ಮಾಲು ! ನಮ್ಮದು ಪುಣ್ಯ ಭೂಮೀ…ನಮ್ಮ ಪೂರ್ವಜರೆಲ್ಲಾ ಅವತಾರೀ ಪುರುಷರೂ…ಹಂಗಣಿ…ಹಿಂಗಣಿ ಅಂತ…ತೆಲೀ ಚಿಟ್ಟ ಹಿಡದ ಹೋತರಿ…ಹಿಂದಿಂದ ತಗೊಂಡು ಹಿತ್ತಲದಾಗ ಅತ್ತರಂತ !…ಅಲ್ಲರೀ ನಮ್ಮ ವ್ಯವಸ್ಥಾದಾಗ ಬಡವರು ಮರ್ಯಾದಿಂದ ಬದಕೂ ಹಾದೀ ಹೇಳರಿ…ಹಳ್ಯಾಗಿನ ಗೌಡರೂ-ಕುಲಕರ್ಣ್ಯಾರು- ಜಮೀನದಾರರು ಮತ್ತು ಜಾತ್ಯಸ್ಥರೂ ಮಾಡತಿರೂ ಹಂತಾ ದಂಡಾವರ್ತೀ ಬಗ್ಗೆ ವಿಚಾರ ಮಾಡರಿ…ನಮ್ಮಂಥಾ ಹುಡಗೋರಿಗೆ ಕೆಲಸ ಇಲ್ಲದ್ದರ ಬಗ್ಗೆ ಹೇಳರೀ… ಅಂತ ನಾನು ಉಗಡಾ ಉಗಡೀ ಹೇಳಿಬಿಟ್ಟಿನರೀ…ನಾ ಹಿಂಗ ಕೇಳಿದ ಕೂಡಲೆ ಅವರು ಕಣ್ಣು ಸಣ್ಣ ಮಾಡಿ ನನ್ನ ದುರು ದುರು ಅಂತ ನೋಡಿ -ನೀವು ಯಾರೂ ? ಅಂದರರಿ…ನನಗ ಗೂಢ ಆತು …. +‘ಅಂದರರೀ…?’ ಅಂತ ಕೇಳಿದ್ದಕ್ಕ -ನಿಮ್ಮದು ಯಾವ ತರದ ರಾಜಕೀಯ ವಿಚಾರಗಳೂ? ಅಂದರು…ನನಗ ಹಂತಾವೆಲ್ಲಾ ಗೊತ್ತ ಇಲ್ಲರೀ…ನಾನು ಹಳ್ಯಾಗಿನ ನಮ್ಮ ಬದಕಿನ ತ್ರಾಸಗೋಳ ಬಗ್ಗೆ ಹೇಳಾಕತ್ತೀನರೀ ಅಂತ ಅಂದದ್ದಕ್ಕೆ -ನೀವು ಯಾರ ಮಾತು ಕೇಳಿ ಈ ಚಳುವಳಿಗೆ ಬಂದಿರಿ? ಅಂದರು…ನಾನು-ಅದ್ಯಾರೋ ಮುಂಬೈದಿಂದ ಬಂದಿದ್ದರು ಅಂದದ್ದಕ್ಕೆ -ಜಾರ್ಜ್ ಏನು ? ಅಂತ ಕೇಳಿದರು…ಅವರಣಿ ಇದ್ದಿರಬೇಕಂತ ಅನಿಸಿತು…ಹೂಂ ಅವರಣಿ ಇದ್ದಿರಬೇಕರೀ ಅಂದೆ…ನನ್ನಕೂಟೇ ಒಮ್ಮಿಗೆಲೇ ಅವರ ರೀತೆನಣಿ ಬ್ಯಾರೇ ಆತರೀ…ನಿನ್ನೆ ಮಧ್ಯಾನ್ನಕ್ಕಂದರ ಆ ಬಂಗಲೇದಿಂದ ನನ್ನ ಹೊರಗ ಹಾಕಿದರು…’. +‘ಆಮ್ಯಾಲಣಿ…?’ +‘ಆಮ್ಯಾಲ ಏನರೀ…ಇನ್ನ ಊರಿಗೆ ಹೊಂಡಬೇಕು…ಜೇಲಿನ್ಯಾಗ ಇದ್ದಾಗಣಿ ನಿಮ್ಮ ನೆನಪ ಬಂದಿತ್ತು…ನೀವು ನಮ್ಮ ಊರಿಗೆ -ನಮ್ಮ ಮನೀಗೆ ಬಂದದ್ದು ನೆನಪ ಆತು…ನೀವು ಬಂದು ಹೋದಮ್ಯಾಲೆ ನಮ್ಮ ಹಾಯಸ್ಕೂಲ ಮಾಸ್ತರರು ನಿಮ್ಮ ಬಗ್ಗೆ ತಮ್ಮ ತಮ್ಮೊಳಗಣಿ ಮಾತಾಡೂದನ್ನ ಕೇಳಿಸಿಕೊಂಡಿದ್ದಿನಿ…ನೀವು ಬೆಂಗಳೂರಿನ್ಯಾಗ ಪೇಪರಿನ ಕಚೇರ್‍ಯಾಗ ಇರತೀರಿ-ಇಲ್ಲೇ ಸನೇದಾಗಿನ ಬೆಟಗೇರ್‍ಯಾವರೂ-ಹಂಗಣಿ ಹಿಂಗಣಿ ಅಂತ…ಅವರು ಮಾತಾಡೂದನ್ನ ಕೇಳಿದ್ದಿನಿ.ಹೆಂಗೂ ಇಲ್ಲೀ ಮಟಾ ಬಂದೀನು…ನಿಮ್ಮನ್ನ ಭೆಟ್ಟಿಯಾಗೇ ಊರಿಗೆ ಹೊಂಡಬೇಕಂತ ಅನಿಸಿತು…’. +‘ನನ್ನ ಅಡ್ರೆಸ್ ಎಲ್ಲಿ ಸಿಕ್ಕಿತು…?ಮನೀ ಹುಡಕಲಿಕ್ಕೆ ತ್ರಾಸ ಆಗಲಿಲ್ಲಾ?’ +‘ಏ …ಅದೊಂದ ದೊಡ್ಡ ಕಥೀನಣಿ ಬಿಡ್ರಿ…ನೀವು ಯಾವ ಪೇಪರಿನ್ಯಾಗ ಕೆಲಸಾ ಮಾಡತೀರಿ ಅನ್ನೂದು ಗೊತ್ತ ಇದ್ದಿರಲಿಲ್ಲ…ಹೆಂಗೂ ಆಗಲಿ ಅಂತ ಸಂಯುಕ್ತ ಕರ್ನಾಟಕದ ಕಚೇರೀ ಹುಡಿಕ್ಕೊಂಡು ಹೋಗಿ ಅಲ್ಲಿ ಕೇಳಿದಿನಿರೀ.ಅವರು -ಇಲ್ಲಿ ಅಲ್ಲಾ…ಇಂಥಾ ಪತ್ರಿಕಾದ ಕಚೇರಿಗೆ ಹೋಗೂ ಅಂತ ಪತ್ತಾ ಕೊಟ್ಟು ಕಳಿಸಿದರು…. ಅಲ್ಲಿಗೆ ಹೋಗಿ ಕೇಳಿದರ ನೀವು ರಜಾದ ಮ್ಯಾಲ ಅದೀರಿ ಅಂತ ಹೇಳಿದರು…ನಿಮ್ಮ ಗುರತಿನವರು ಒಬ್ಬರು-ಅವರು ರಜಾ ಹಾಕಿ ಮನ್ಯಾಗಣಿ ಇದ್ದಾರ.ಮನೀಗೆ ಹೋಗತೀನಂದರ ಅವರ ಅಡ್ರೆಸ್ ಕೊಡತನು ಅಂದರು…ನಿನ್ನೆ ಸಂಜಿಕ ನಿಮ್ಮ ಪತ್ತಾ ಸಿಕ್ಕಿತು.ಇಂದ ಬೆಳಿಗ್ಗೆ ಹತ್ತ ಗಂಟೇದಿಂದ ನಿಮ್ಮ ಮನೀ ಹುಡಕಾಕತ್ತೀನರಿ…ಮದಲ ಪತ್ತಾ ತೋರಿಸಿ ಒಬ್ಬರನ ಕೇಳಿದಿನಿ .ಅವರು-ಇಲ್ಲಿಂದ ಬಾಳ ದೂರ ಆಗತೈತಿ , ಅಟೋಕ್ಕ ಹೋಗರಿ ಅಂತ ಹೇಳಿ ಒಬ್ಬ ರಿಕ್ಷಾದಂವಗ ಎಲ್ಲಿಗೆ ಕರಕೊಂಡ ಹೋಗಬೇಕನ್ನೂದನ ಹೇಳಿ ಹತ್ತಿಸಿ ಕಳಿಸಿದರು.ಆ ರಿಕ್ಷಾದಾಂವ ಇಡೀ ಒಂದ ತಾಸು ಅಡ್ಯಾಡಿಸಿ -ಇಲ್ಲೇ ಸನೇದಾಗ ಐತಿ -ಯಾರನರೇ ಕೇಳಿ ನೋಡರಿ ಅಂತ ಹೇಳಿ ಇಳಿಸಿ ಹೋದ…ಆಮ್ಯಾಲ ಒಬ್ಬ ಯಜಮಾನರು ಸಿಕ್ಕರು.ಅವರಗ ಪತ್ತಾ ತೋರಿಸಿದರ- ನೀವು ಎಕ್ಸಾಕ್ಟ್‌ಲೀ ಅಪೊಜಿಟ್ ಡೈರೆಕ್ಶನ್ನಿಗೆ ಬಂದೀರಿ…ನಾರ್ಥ್‌ಗೆ ಹೋಗಬೇಕು – +ನೀವು ಸೌಥ್‌ಗೆ ಬಂದಿದೀರಾ…ಅಂತ ಹೇಳಿ ಮುನ್ನೂರಾ ಮೂವತ್ತೋ -ಯಾವದೋ ಒಂದು ಸಂಖ್ಯಾ ಹೇಳಿ ಅದನ್ನ ಹತ್ತಿ ಹೋಗು ಅಂತ ನುಡದು ಅವಸರಲೇ ಹೋದರು… ನನಗ ಏನ ಹತ್ತೂದು ಅಂತ ತಿಳೀಲಿಲ್ಲ…ಮತ್ತೊಬ್ಬರನ್ನ ಕೇಳದ್ದಕ್ಕ ಅವರು ಒಂದು ಬಸ್ಸು ಹತ್ತಿಸಿ ಕಳಿಸಿದರು.ಅದು ನನ್ನನ್ನ ಬೆಂಗಳೂರಿನ ಇನ್ನೊಂದು ದಿಕ್ಕಿನ್ಯಾಗ ಇಳಿಸಿತು… ಏನೂ ಎತ್ತಣಿ ಅಂತ ತಿಳೀಲಿಲ್ಲ…ಇನ್ನ ಮನಶಾರನ ಕೇಳೂದಣಿ ಬ್ಯಾಡ ಅಂತ ಒಬ್ಬ ಪೋಲೀಸನ್ನ ಹಿಡದು- ಅವನ್ನ ಮಾತಾಡಸೂಕಿಂತ ಮದಲಣಿ ಅವನ ಕೈಯಾಗ ಐದ ರುಪಾಯಿಯ ಒಂದ ನೋಟು ತುರುಕಿ – ಆಮ್ಯಾಲ ನಿಮ್ಮ ಪತ್ತಾ ತೋರಿಸಿ ಕೇಳಿದಿನರೀ. ನಿಮ್ಮ ಪತ್ತಾ ನೋಡಿದ ಆ ಪೋಲೀಸ ಮಿಕಿ ಮಿಕಿ ಅಂತ ನನ್ನ ಮೋತೀ ನೋಡಿ -ನಾ ಕೊಟ್ಟ ಐದ ರುಪಾಯಿಯ ನೋಟನ್ನ ನನ್ನ ಕಿಸೇಕ್ಕ ತುರುಕಿ -ಇಲ್ಲಿಂದ ದೂರ ಐತಿ…ಬಾ ಈ ಅಟೋ ಹತ್ತು-ಅಂತ ಒಂದು ಅಟೋದಾಗ ಹತ್ತಿಸಿ ತಾನೂ ಅದರೊಳಗ ಕುಂತ… ಒಂದು ಹತ್ತು ಮಿನಿಟು ಹೋದ ಮ್ಯಾಲೆ ಆ ಪೋಲೀಸ ಅಟೋದಿಂದ ಇಳದು-ಆ ಅಟೋದವನಿಗೆ ನನ್ನನ್ನ ಎಲ್ಲಿ ಬಿಡಬೇಕು ಅಂತ ಹೇಳಿ-ನಿನ್ನನ್ನ್ನ ನಿನಗ ಬೇಕಾಗಿರೂ ಅಡ್ರೆಸ್‌ಗೆ ಬಿಡತಾನ ಹೋಗು ಅಂತ ನನಗ ಹೇಳಿ ಹೋದ…ಅಟೋ ಹೊಳ್ಳಿ ನಾವು ಮದಲು ಅದನ್ನ ಹತ್ತಿದ ಜಾಗಾಕ್ಕಣಿ ಬಂದು-ಅಲ್ಲಿಂದ ನಾಕಾರು ಮಿನಿಟಿನೊಳಗೇ ನಿಮ್ಮ ಈ ಬಿಲ್ಡಿಂಗಿನ ಮುಂದೆ ತಂದು ನಿಂದರಿಸಿ-ಆ ರಿಕ್ಷಾದಾಂವ ಇಪ್ಪತ್ತು ರುಪಾಯಿ ಇಸಗೊಂಡು ಹೋದ…’ ಅಂತ ಹೇಳಿದವನೇ ‘ಹಾಂ… ಅಂದಂಗ ಈ ಬಿಲ್ಡಿಂಗಿನ್ಯಾಗ ಮೂವತ್ತಾರು ಮನಿಗೋಳು ಅದಾವಂತಲ್ಲರೀ…ಕೆಳಗ ಕುಂತ ವಾಚಮನ್ನ ಹೇಳಿದ… ನಾ ರಿಕ್ಷಾ ಇಳದಗಳಸೇ ಇಡೀ ಬಿಲ್ಡಿಂಗು ನಿಮ್ಮದಣಿ ಅಂತ ತಿಳದು ಗಾಬಣಿ ಆಗಿದ್ದಿನಿರೀ…’ ಅಂದಾಗ ನಾನು ಮನಸೋಕ್ತ ನಕ್ಕೆ.ಅವನೂ ದನಿಗೂಡಿಸಿದ… +‘ಹಂಗಾರ ಮನಿ ಹುಡಕೂದು ಒಂದು ಸಾಹಸನಣಿ ಆತು ಬಿಡು…ಕೂತಿರು. ನಾ ಚಹಾ ಮಾಡಿಕೊಂಡ ಬರತನು…’ಅಂತ ಏಳತಿದ್ದರೆ ಅಂವ – +‘ಯಾಕರೀ…ಅಕ್ಕಾ ಅವರು ಇಲ್ಲ ಏನರಿ?’ ಅಂದ. +‘ಇಲ್ಲ…ಹಬ್ಬಕ್ಕ ಊರಿಗೆ ಹೋಗ್ಯಾಳ…ಬರೂದು ಇನೂ ನಾಕಾರು ದಿನಾ ಆಗತದ…’ ಅಂತ ಹೇಳಿಕೋತ ಕಿಚನ್ನಿಗೆ ಹೋಗಿ ಚಹಾಕ್ಕ ಇಟ್ಟು ಅಲ್ಲೇ ಸಿಂಕಿನ್ಯಾಗ ಮುಖಕ್ಕಷ್ಟು ನೀರು ಹಾಕ್ಕೊಂಡೆ…ಒಂದು ಪ್ಲೇಟಿನ್ಯಾಗ ಬಿಸ್ಕೀಟು ಹಾಕಿಕೊಂಡು ಚಹಾದ ಜೋಡೀ ತಂದು ಕೊಟ್ಟೆ . ಅಂವ ಅನುಮಾನಿಸಿಕೋತ ಅನುಮಾನಿಸಿಕೋತ ‘…ಒಂದೀಟಣಿ ಕುಡ್ಯಾಕ ನೀರು ಬೇಕರಿ…’ ಅಂದ. ನಾನು ‘ಓ ಸಾರೀ…ತರತನ ತಡೀ’ ಅಂತ ಒಳಗ ಹೋಗಿ ನೀರಿನ ಜಗ್ಗೂ -ಗ್ಲಾಸೂ ತಂದು ಅವನ ಮುಂದಿನ ಟೀಪಾಯಿಯ ಮ್ಯಾಲಿಟ್ಟೆ . ಒಂದು ಕ್ಷಣ ಹಿಂದೆ ಮುಂದೆ ನೋಡಿದಂಗೆ ಮಾಡಿ,ಜಗ್ಗು ಎತ್ತಿ ಗಟ ಗಟಾ ಅಂತ ನೀರು ಕುಡಿದ…ಚಹಾದಾಗ ಬಿಸ್ಕೀಟು ಎದ್ದಿ ತಿನಕೋತ,ಟೀಪಾಯಿಯ ಮ್ಯಾಲಿನ ಪೇಪರಿನ್ಯಾಗಿ ಏನೋ ಓದಿ ಅವ ಮುಖದಲ್ಲಿ ಸಂತೋಷ ತಾಳಲಿಕ್ಕತ್ತಿದ್ದ… +‘ಏನೋ ಓದಲಿಕ್ಕತ್ತೀಲಾಣಿ…ಯಾವ ಸುದ್ದಿ ?’ ಅಂತ ಕೇಳಿದ್ದಕ್ಕೆ ಅಂವ ಒಮ್ಮೆಲೇ ಗಡಬಡಿಸಿ -‘ಏ…ಸುದ್ದಿ ಅಲ್ಲರೀ…ಮಹಾತ್ಮಾ ಗಾಂಧೀ ಅವರ ಸಮಾಧೀ ಹಂತೇಕ ಜೇಪಿ ಅವರು ಮುರಾರ್‍ಜೀ ಮತ್ತ ಜನ್ತಾ ಪಕ್ಷದ ಮಂದಿಗೆ ಶುದ್ಧ ರಾಜಕೀಯದ ಶಪಥಾ ಮಾಡಸಾಕ ಹತ್ಯಾರರೀ…’ ಅಂತ ಹೇಳಿದ.ನಾನು ಚಾಷ್ಟೀ ಮಾಡುವ ದನಿಯಿಂದ ‘ಅಲ್ಲಪಾಣಿ…ಅವರೊಳಗ ನಿನ್ನ ಆ ಬಿಲ್ಡಿಂಗಿನಿಂದ ಹೊರಗ ಹಾಕಿದ ಮಂದೆನೂ ಇದ್ದಾರಲಾ!’ ಅಂದೆ…ಅಂವ ಒಂದು ಕ್ಷಣ ಗೊಂದಲಕ್ಕ ಸಿಕ್ಕು – ‘ಏ…ಅವರು ಇದ್ದರ ಏನಾತರೀ.ಜೇಪಿ ಅದಾರಲ್ಲರೀ… ಇವರು ತಪ್ಪ ಮಾಡಿದರ ಜೇಪಿ ಅವರು ಸುಮ್ಮನಣಿ ಬಿಟ್ಟಾರ ಏನರಿ?…ಕಿಂವಿಗೆ ಹಳ್ಳ ಹಚ್ಚಿ ಬುದ್ಧೀ ಹೇಳ್ಯಾರಲ್ಲರೀ…’ ಅಂತ ಅನುಮಾನ ಮತ್ತ ಸಮಾಧಾನ ಎರಡೂ ತುಂಬಿಕೊಂಡವನಂಗ ಮಾತಾಡಿದ… ನಾನು ಅವನ ಮಾತಿಗೆ ಜೋರಾಗಿ ನಕ್ಕು ಬಿಟ್ಟೆ .ನನ್ನ ನಗಿಯಿಂದ ಅಂವ ಬೆಪ್ಪ ಆಗಿ ಕೂತಾಗ-ನಾನು ಮಾತು ಬದಲಾಯಿಸುವಂತೆ -‘ಹೂಂ…ಇದೆಲ್ಲಾ ಇರವಲ್ಲದ್ಯಾಕ ಬಿಡು…ಈಗ ಹೇಳು …ನಿನ್ನ ಸೇವಾ ಹೆಂಗ ನಡದದ…?’ +ದ್ಯಾವಪ್ಪ ಇನೂ ಗೊಂದಲದಿಂದ ಪೂರಾ ಹೊರಗ ಬರದೇ -‘ಹಾಂ…? ಸೇವಾ! ಯಾವ ಸೇವಾರೀ…’ ಅಂತ ಕಣ್ಣು ಕಣ್ಣು ಬಿಟ್ಟ. +‘ಯಾಕಣಿ…ಮತ್ಯಾವ ಸೇವಾ…ಅದಣಿ ರಕ್ತ ತಿಲಕದ ಸೇವಾ! ಧರಮನಟ್ಟೀದು…’ +‘ಅದಣಿ…! ನಡದೈತಿ ಬಿಡ್ರಿ…’ ಅಂತ ದ್ಯಾವಪ್ಪ ಅತ್ಯಂತ ನಿರುತ್ಸಾಹದಿಂದ ಹೇಳಿದ. ಈ ಹುಡುಗನ ಮನಸಿನ್ಯಾಗ ಏನೋ ಇದೆ – ಪ್ರೆಸ್ ಕ್ಲಬ್ಬಿಗೆ ಕರಕೊಂಡು ಹೋಗಿ ಬಾಯಿ ಬಿಡಸೂಣೂ ಅಂತ ಅನಕೊಂಡು -‘ದ್ಯಾವಪ್ಪಾ ಮುಖಾ ತೊಳಕೋ…ಹಾಣಿಂಗ ಪ್ರೆಸ್ ಕ್ಲಬ್ಬ ಕಡೆ ಹೋಗಿ ಬರೂಣೂ’ ಅಂತ ಹೇಳಿದಾಗ ಅಂವ ತನ್ನ ಚೀಲದಾಗಿನ ಟಾವೆಲ್ಲು ತಕ್ಕೊಂಡು ನಾನು ತೋರಿಸಿದ ಬಚ್ಚಲುಮನಿಗೆ ಹೋದ…ಅವ ಮುಖ ತೊಳೆದುಕೊಂಡು ಬಂದ ಮೇಲೆ ನಾನು ಮುಖ ತೊಳೆಯಲು ಹೋದರೆ ಅಲ್ಲಿನ ಸಾಬಾಣು ಒಣದಾಗಿಯೇ ಇತ್ತು…ಈ ಹುಡುಗನಿಗೆ ಬಹಳ ಸಂಕೋಚ ಅಂದುಕೊಂಡೆ…ಬಟ್ಟೆ ಬದಲಿಸಿ -ಬಾಗಿಲಿಗೆ ಕೀಲೀ ಹಾಕಿ-ಕೆಳಗೆ ಇಳಿದು ಬಂದು ಸ್ಕೂಟರ್ ಸ್ಟಾರ್ಟ್ ಮಾಡಿದೆ…ಗಡ್ಡದ ಹುಡುಗ ಅನುಮಾನಿಸಿಕೋತ-ಮೈ ಬಿಗಿ ಹಿಡಿದುಕೊಂಡು ಹಿಂದಿನ ಸೀಟಿನಲ್ಲಿ ಕೂತಿತು… +…ಪ್ರೆಸ್ ಕ್ಲಬ್ಬಿಗೆ ಹೋದಾಗ ಇನೂ ಐದು ಗಂಟೆಯ ಹೊತ್ತು .ಹೆಚ್ಚಿನ ಜನ ಇರಲಿಲ್ಲ…ಅಲ್ಲೊಂದು ಇಲ್ಲೊಂದು ಇಬ್ಬರು ಮೂವರ ಗುಂಪುಗಳು ದ್ವೀಪಗಳಂತೆ – ಅಲ್ಲಿ -ಇಲ್ಲಿ ಕೂತಿದ್ದವು.ನನ್ನನ್ನು ಕಂಡು…ಕೂತಲ್ಲಿಂದಲೇ ಕೈ ಎತ್ತಿ ವಿಶ್ ಮಾಡಿ, ಕುತೂಹಲದಿಂದ ಜೊತೆಗಿದ್ದ ದ್ಯಾವಪ್ಪನನ್ನ ದಿಟ್ಟಿಸಿದರು.‘…ನವನಿರ್ಮಾಣ ಚಳುವಳಿಯ ಹುಡುಗ…ನಮ್ಮ ಊರ ಕಡೆಯಂವ…ಮೊನ್ನೆಯೇ ಜೇಲಿನಿಂದ ಹೊರಗೆ ಬಂದಾನೆ…’ ಅಂತ ಹೆಮ್ಮೆ ತುಂಬಿದ ದನಿಯಲ್ಲಿ ಹೇಳಿಕೋತ, ಒಂದು ಮೂಲಿಯ ಜಾಗವದತ್ತ ನಡೆದು ‘ಕೂಡು…’ ಅಂತ ಹೇಳಿಕೋತ ನಾನೂ ಕೂತೆ…ದ್ಯಾವಪ್ಪ ಸುತ್ತಲೂ ನೋಡಿಕೋತ ನನ್ನ ಎದುರಿನ ಕುರ್ಚಿಯೊಳಗ ಮುದ್ದಿಯಾಗಿ ಕೂತ… +ನಾನು ‘ಬಿ ಕಂಫರ್ಟೇಬಲ್…’ ಅಂತ ಹೇಳಿದ್ದಕ್ಕೆ , ಅಂವ ‘ಹಾಂ…ಏನರೀ?’ ಅಂತ ಗಡಬಡಿಸಿ ಕೇಳಿದ…‘ಏನಿಲ್ಲ …ಆರಾಮಾಗಿ ಕೂಡು…’ ಅಂದದ್ದಕ್ಕೆ ಅಂವ ಇನಷ್ಟು ಮುದ್ದಿಯಾಗಿ ಕೂತ… +‘ಹೂಂ…ದ್ಯಾವಪ್ಪಾ …ನಿನ್ನ ಭೆಟ್ಟೀ ಸೆಲೆಬ್ರೇಟ್ ಮಾಡೂಣೂ…ಹೇಳು.ಏನ ತಗೋತೀ…? ಬೀರೋ ವ್ಹಿಸ್ಕೀನೋ…?’ +ದ್ಯಾವಪ್ಪ ಧಡ್ ಅಂತ ಎದ್ದಣಿ ನಿಂತಬಿಟ್ಟ…ಅವನ ಮುಖದ ಮ್ಯಾಲಿನ ಗೊಂದಲ ಇಮ್ಮಡಿ ಮುಮ್ಮಡಿ ಆಗಿತ್ತು…‘ಏ…ಇಲ್ಲರೀ…ನಾಣಿ ಕುಡಿಯೂದುಲ್ಲರೀ…’ ಅಂತ ತೊದಲಿದ.ನಾನು ‘ಅರೇ…ಅದಕ್ಯಾಕ ಅಷ್ಟ ಘಾಬರಿ ಆಗತೀ? ಕೂಡು… ಕೊಕೋಕೋಲಾ ಕುಡಿಯೂವಂತೆ…’ ಅಂದಾಗ ಕೂತ…ಎರಡು ಕೊಕೋಕೋಲಾ ತರಿಸಿದೆ…ಸ್ಟ್ರಾ ತಗದ ಒಗದು ಬಾಟಲೀಲೆನಣಿ ಗಟಗಟಾ ಅಂತ ಕುಡದು-ನಾನು ನನ್ನದನ್ನ ಮುಗಸಲಿಕ್ಕೆ ಕಾದವನಂತೆ ನನ್ನ ಮುಖಾ ನೋಡಿಕೋತ ಕೂತ…ನಾನು ಸಾವಕಾಶವಾಗಿ ಹೀರಿ ಬಾಟಲೀ ಕೆಳಗ ಇಡತಿದ್ದಂಗಣಿ -ಅಂವ ಇದಕ್ಕೇ ಕಾದಿದ್ದವನಗತೆ ಮತ್ತೆ ಎದ್ದು ನಿಂತು – ‘ ಸಾಹೇಬರಣಿ…ಮನೀಗೇ ಹೋಗೂಣೂ ನಡೀರಿ…ನನ್ನ ಚೀಲ ಅಲ್ಲೇ ಮನ್ಯಾಗ ಉಳದೈತಿ…ನಾನು ಇಂದ ರಾತ್ರೀನಣಿ ಊರಿಗೆ ಹೊಂಡತನರೀ…’ ಅಂತ ಹೇಳಿದ…ಯಾಕೋ ಈ ಹುಡುಗನಿಗೆ ಪ್ರೆಸ್ ಕ್ಲಬ್ಬಿನ ವಾತಾವರಣ ಒಗ್ಗತಿಲ್ಲ ಅಂತ ಅನಿಸಿ -‘ಹೂಂ…ನಡೀ ಹಂಗರಣಿ ಹೋಗೂಣೂ ನಡೀ…ನೀನು ನಾಳೆ ಹೋಗೂವಂತೇ ತಗೋ…ಈಗ ಎಲ್ಲೆರಣಿ ಊಟಾ ಮುಗಿಸಿಕೊಂಡಣಿ ಮನೀಗೆ ಹೋಗೂಣೂ…ಈಗ ಬರೇ ಆರೂ ಇಪ್ಪತ್ತು ಆಗೇದ…ಒಂದ ತಾಸು ಎಲ್ಲೆರಣಿ ಕೂಡಬೇಕು…ಹಾಂ… ವಿಧಾನ ಸೌಧಾ ನೋಡತೀಯೇನು…? ಈಗ ಹೊರಗಿಂದನಣಿ ನೋಡೂದು…’ ಅಂತ ಹೇಳತಿದ್ದಂಗಣಿ ಅಂವ ಹೆಂಗರಣಿ ಮಾಡಿ ಅಲ್ಲಿಂದ ಲಗೂನಣಿ ಹೊಂಡಬೇಕನ್ನುವ ಆತುರದೊಳಗ ಇದ್ದವನಂಗ ‘ಹಾಂ…ವಿಧಾನಸೌಧಕ್ಕ ಹೋಗೂಣೂ ನಡೀರಿ…’ ಅಂತ ಹೊರಗ ನಡದಣಿ ಬಿಟ್ಟ. +* +* +* +ವಿಧಾನಸೌಧದ ಮುಂದೆ ನಿಂತು ‘ಇದಣಿ ನೋಡಪಾ ನಮ್ಮನ್ನ ಆಳುವವರು ಇರುವ ಕಿಲ್ಲಾ…! ಮಧ್ಯಾಹ್ನ ಲಗೂನಣಿ ಬಂದಿದ್ದರ ಒಳಗ ಕರಕೊಂಡ ಹೋಗತಿದ್ದೆ…’ ಅಂತ ಹೇಳತಿದ್ದರೆ ದ್ಯಾವಪ್ಪ ಅಗದೀ ತನ್ಮಯನಾಗಿ ಆ ಬಿಲ್ಡಿಂಗು ನೋಡಿಕೋತ ನಿಂತ…ಒಂದೆರಡು ಮಿನಿಟು ಹಂಗಣಿ ತದೇಕ ನೋಡಿ…ಉಸ್…ಅಂತ ಉಸರುಗರೆದು ನನ್ನ ಕಡೆ ತಿರಿಗಿದ…ನನಗೆ ಗೊತ್ತಿಲ್ಲದಂತೆಯೇ ನನ್ನ ಎದಿಯ ಒಳಗಿಂದ ಒಂದು ಪ್ರಶ್ನೆ ನುಗ್ಗಿ ಬಂದು ದನಿ ಪಡಕೊಂಡಿತು… +***** +ಮುಂದುವರೆಯುವುದು +ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […] +ಯಾವ ಕಾರಣವಿಲ್ಲದೆ ಇಂಥ ದ್ವೇಷ ಉರಿಯುತ್ತದಲ್ಲ ಎಂದುಕೊಂಡು ಶಾಸ್ತಿಗಳು ಆಮೇಲೆ ವಿ ಹ್ವಲರಾಗುತ್ತಾರೆ. ತನ್ನ ಮಗಳೂ ಮನೆ ಬಿಟ್ಟು ಹೋಗುವ ಮುಂಚೆ ಹೀಗೇ ತನ್ನನ್ನು ನೋಡಿದ್ದಳು. ಮಗಳು ಕಾಲೇಜಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ತಿಳಿದು ಈಗ […] +ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_81.txt b/Kannada Sahitya/article_81.txt new file mode 100644 index 0000000000000000000000000000000000000000..7a295e7044dceabb841e68a26bba24b1c64ee790 --- /dev/null +++ b/Kannada Sahitya/article_81.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! +ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ +ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ +ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! +ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ +ಕರಿನರಳ ಚಾಚಿಹುದು. ನೀಲ ಸೀಮಂತದಲಿ +ಒಂದೊ ಎರಡೋ ಚಿಕ್ಕೆಯರಳು ಚೆಲ್ವೆಳಕಿನಲಿ +ಚಮುಕುತಿವೆ. ಇಲ್ಲಿ ಮೌನ ಧ್ಯಾನವೇ ಪೂಜೆ! +ಚಿತ್ರಗಾರನ ಕುಶಲ ಕುಂಚ ಬಣ್ಣಿಸದಿದನು. +ಪಕ್ಷಿಕೂಜನ ನಿಪುಣ ಗಾಯಕಗು ಅಳವಡದು. +ಕಬ್ಬಿಗನ ನುಡಿಯಲ್ಲಿ ‘ಓಂ ನಮೋ’ ಎಂದಿಹುದು! +ಪ್ರಕೃತಿ ಸೌಂದರ್‍ಯದೌದಾರ್‍ಯಕೆನ್ನಲ್ಪತನು +ಮುಡಿಪಾಗಿ ಕರಗಿಹುದು ಅರ್‍ಪಣಾನಂದದಲಿ, +ಸಾವು ಬಂದರು. ಇಂಥ ಶಾಂತ ಸಮಯದಿ ಬರಲಿ. +***** +ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ ಅವನ ಮಾಹಿತಿ ಸಿಗುತ್ತದೆ: ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು ಪರಾರಿಯಾದದ್ದು ಭಿಕಾರಿಯಾಗಿ ಅಲೆದದ್ದು, ನರಳಿದ್ದು ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್‍ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_82.txt b/Kannada Sahitya/article_82.txt new file mode 100644 index 0000000000000000000000000000000000000000..fde5247bae2aac18d291345dcbf10c8a75c7cd5d --- /dev/null +++ b/Kannada Sahitya/article_82.txt @@ -0,0 +1,110 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ ‘ನದಿಯ ನೀರಿನ ತೇವ’ ಪ್ರಕಟವಾಗುತ್ತ ಇದೆ. ಸಂಕಲನಗಳ ನಡುವೆ ಇಷ್ಟು ಕಾಲದ ಅವಧಿಯಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ: ಸ್ವತಃ ಕವಿಗೇ ತನ್ನ ಶೈಲಿಯಿಂದ ಸ್ವಲ್ಪ ಮಟ್ಟಿಗಾದರೂ ಬಿಡುಗಡೆ ಪಡೆದುಕೊಳ್ಳುವುದು ಇದರಿಂದ ಸಾಧ್ಯವಾಗಬೇಕು! ಕವಿ ಹೀಗೆ ನಿರಂತರವಾಗಿ ಬಿಡುಗಡೆ ಪಡೆದುಕೊಳ್ಳಬೇಕಾದ ಅಗತ್ಯದ ಕುರಿತು ನಾನು ಪ್ರತ್ಯೇಕವಾಗಿ ಹೇಳಬೇಕಾದ್ದಿಲ್ಲ. ವಾಸ್ತವದಲ್ಲಿ ಈ ಬಿಡುಗಡೆ ಎರಡು ರೀತಿಯದು : (೧) ಇತರ ಕವಿಗಳ ಅಥವ ಕಾವ್ಯಮಾರ್ಗಗಳಿಂದ ಬಿಡುಗಡೆ, ಮತ್ತು (೨) ತನ್ನದೇ ಶೈಲಿಯಿಂದ ಬಿಡುಗಡೆ, ಬರೆಯಲು ಶುರು ಮಾಡಿದ ಆರಂಭದ ಕಾಲದಲ್ಲಿ ಹೆಚ್ಚಾಗಿ ಎಲ್ಲ ಕವಿಗಳೂ ಪ್ರಚಲಿತ ಕಾವ್ಯಮಾರ್ಗದ ಪ್ರಭಾವ ದಲ್ಲಿರುವುದು ಎಷ್ಟು ಸಹಜವೋ ಅಷ್ಟೇ ಅದರಿಂದ ಕವಿ ಬಿಡುಗಡೆಯನ್ನು ಸಾಧಿಸುವುದೂ ಅಗತ್ಯವಾಗುತ್ತದೆ. ಹೆಚ್ಚಿನ ಕವಿಗಳು ಈ ಮೊದಲ ರೀತಿಯ ಬಿಡುಗಡೆಯನ್ನು ಸಾಧಿಸುವುದರಲ್ಲಿ ಸಫಲರಾಗುತ್ತಾರೆ. ಆದರೆ ಎರಡನೆ ರೀತಿಯ ಬಿಡುಗಡೆ ಮಾತ್ರ, ಎಂದರೆ ತನ್ನದೇ ಸಿದ್ಧ ಶೈಲಿಯಿಂದ ಹೊರಬರುವುದು, ಬಹಳ ಸೂಕ್ಷ್ಮವೂ ಕಠಿಣವೂ ಆದ ಬಿಡುಗಡೆ! ಮಮತಾ ಈ ಎರಡನೆಯ ಸಂಕಲನದಲ್ಲಿ ಈ ಎರಡೂ ರೀತಿಯ ಬಿಡುಗಡೆಗಳನ್ನು ಸಾಧಿಸಿದ್ದಾರೆ ಎನಿಸುತ್ತದೆ. +ಮಮತಾ ಅವರ ಮೊದಲ ಕವನ ಸಂಕಲನಕ್ಕೆ ಗೋಪಾಲಕೃಷ್ಣ ಅಡಿಗರ ಮುನ್ನುಡಿ ಮತ್ತು ಕಿ. ರಂ. ನಾಗರಾಜರ ಹಿನ್ನುಡಿ ಇವೆ. ‘ನದಿಯ ನೀರಿನ ತೇವ’ಕ್ಕೆ ಮುನ್ನುಡಿ ಬರೆಯಲು ಒಪ್ಪಿಕೊಂಡ ಮೇಲೆ ನಾನು ಮಮತಾ ಅವರ ಮೊದಲ ಸಂಕಲನದ ಕವಿತೆಗಳನ್ನು, ಅದಕ್ಕೆ ಅಡಿಗರು ಬರೆದ ಮುನ್ನುಡಿ ಹಾಗೂ ಕಿ. ರಂ. ಬರದ ಹಿನ್ನುಡಿಯನ್ನು ಸಾಕಷ್ಟು ಗಮನವಿಟ್ಟು ಓದಬೇಕಾಯಿತು. ಅಡಿಗರ ಮುನ್ನುಡಿ ಹಲವು ಕಾರಣಗಳಿಗೆ ವಿಶಿಷ್ಟವಾದ್ದರಿಂದ ಇಲ್ಲಿ ಆರಂಭದ ಪ್ಯಾರಾದಿಂದ ಕೆಲವು ಸಾಲುಗಳನ್ನು ಉದ್ಧರಿಸಿಕೊಡುತ್ತಿದ್ದೇನೆ : +ಈಗ ನಿಜವಾದ ಕವನಗಳನ್ನು ರಚಿಸಬಲ್ಲ ಹೊಸಕವಿಗಳು ಕಾಣಿಸದೆ ಇರುವ, ಓದು ಬರಹ ಬಲ್ಲ ಬಹಳ ತರುಣ-ತರುಣಿಯರು ಕಾವ್ಯಚ್ಚಲದಿಂದ ಕೆಟ್ಟಗದ್ಯದ ಸಾಲುಗಳನ್ನು ತುಂಡು ತುಂಡು ಮಾಡಿ ಒಂದರ ಕೆಳಕ್ಕೆ ಒಂದೊಂದು ತುಂಡನ್ನು ಇಟ್ಟು, ಅದನ್ನೆಲ್ಲಾ ಕವನವೆಂದು ಪ್ರಕಟಿಸಿ, ಅಂಥ ಕವನಗಳ ಪ್ರಕಟಣೆಗೆ ತಮ್ಮ ಅಥವಾ ತಮ್ಮ ಸ್ನೇಹಿತರ ದುಡ್ಡನ್ನೆಲ್ಲಾ ಪೋಲು ಮಾಡುತ್ತಿರುವ ಈ ಕಾಲದಲ್ಲಿ ಒಬ್ಬ ನಿಜವಾದ ಕವಿ ಕಂಡು ಬಂದರೆ ಭಾರೀ ಸಂತೋಷವಾಗುತ್ತದೆ. ಮಾತ್ರವಲ್ಲ, ಕನ್ನಡ ಕಾವ್ಯದ ಭವಿಷ್ಯದ ಬಗ್ಗೆ ನಿರಾಶೆ ಮುಸುಕುತ್ತಿರುವಾಗ ಆಸೆಯ ಒಂದು ತಂತು ದೊರೆತಂತಾಗುತ್ತದೆ. ಮಮತಾ ಅಂಥ ನಿಜವಾದ ಕವಿ. ಭಾಷೆಗೆ ವ್ಯಾಕರಣದ ಅಗತ್ಯ ಹೇಗೋ ಹಾಗೆ ಛಂದಸ್ಸೂ ಕವಿತೆಗೆ ಅಗತ್ಯ ಎಂಬುದನ್ನು ಅರಿಯದವರ ಕೈಲಿ ನಮ್ಮ ಕಾವ್ಯದ ಅಭ್ಯಾಸಗಳು ಮಂದಯಿಸುತ್ತಿರುವಾಗ ಕನ್ನಡವನ್ನು ಚೆನ್ನಾಗಿ ಬಲ್ಲ, ಯಾವ ತಪ್ಪನ್ನೂ ಮಾಡದ, ಲಯಬದ್ಧವಾದ ಅರ್ಥಾನುಸಾರಿಯಾಗಿ ಏರಿ ಇಳಿದು ಸಾಗುವ ಚರಣಗಳೇ ಕಾವ್ಯದ ಜೀವಾಳ ಎಂದು ತಿಳಿದಿರುವ ಮಮತಾರವರ ಕಾವ್ಯ ಕನ್ನಡ ರಸಿಕರಿಗೆ ಸಂತೋಷ ಕೊಡುವುದರಲ್ಲಿ ನನಗೆ ಸಂದೇಹವಿಲ್ಲ. +ನವ್ಯಕಾವ್ಯ ಪ್ರವರ್ತಕರಾದ ಅಡಿಗರು ಇಂಥ ಮಾತುಗಳನ್ನು ಹೇಳಿದರೇ ಎಂದು ಆಶ್ಚರ್ಯವಾಗುವ ರೀತಿಯಲ್ಲಿ ಇವು ಸಂಪ್ರದಾಯವಾದಿಯಾಗಿ ಕಾಣಿಸುತ್ತವೆ! ಒಂದು ವೇಳೆ ನವ್ಯಪೂರ್ವ ಚಿಂತನೆಯ ಶಿವರುದ್ರಪ್ಪ ಅಥವಾ ಕಣವಿ ಹೀಗೆ ಹೇಳಿದ್ದರೆ ಅದರಲ್ಲಿ ಆಶ್ಚರ್ಯಪಡುವಂಥಾದ್ದು ಏನೂ ಇರುತ್ತಿರಲಿಲ್ಲ. ಆದರೂ ಭಾಷಾ-ಲಯದ ಬಗ್ಗೆ ಇದೇ ರೀತಿಯ ಮಾತುಗಳನ್ನು ಇನ್ನೊಬ್ಬ ಶ್ರೇಷ್ಠ ನವ್ಯಕವಿ ರಾಮಚಂದ್ರಶರ್ಮ ಕೂಡ ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. ಇವರೆಲ್ಲ ಕನ್ನಡದ ಆಧುನಿಕ ಕವಿಗಳೆಂದು ಹೆಸರುಗಳಿಸಿದ್ದರೂ ಹಳೆಯ ಲಯಸಿದ್ಧಾಂತ, ವ್ಯಾಕರಣ-ಛಂದಸ್ಸು ಮುಂತಾದವಕ್ಕೆ ಮಾನಸಿಕವಾಗಿ ಬದ್ಧರಾಗಿರುವುದನ್ನು ಗಮನಿಸಿದರೆ ಇದೆಲ್ಲಿಯ ನವ್ಯತೆ ಎಂದು ಅರ್ಥವಾಗುವುದಿಲ್ಲ! ಲಯವೆಂದರೆ ಒಂದು ಮಾತಿನ ಜತೆ ಇನ್ನೊಂದು ಮಾತು ಬಂದು ನಿಲ್ಲುವ ರೀತಿ ಎಂದು ಸ್ಯಾಮುವೆಲ್ ಬೆಕೆಟ್ ಬಹಳ ಹಿಂದೆಯೇ ಹೇಳಿದ. ಅಡಿಗರು ಇದೇ ಅರ್ಥ ಬರುವಂತೆ ತಮ್ಮ ಮುನ್ನುಡಿಯ ಎರಡನೇ ಪ್ಯಾರಾದಲ್ಲಿ ಪ್ರತಿಯೊಂದು ಅನುಭವದ ಜೊತೆಗೆ ಅದರ ವಿರುದ್ಧವಾದುದು ಸೇರಿದರೆ ಅದು ನಿಜವಾದ ಅನುಭವವಾಗುತ್ತದೆ’ ಎಂಬ ಮಾತನ್ನು ಹೇಳುತ್ತಾರೆ. ಮಮತಾ ಅವರ ಕವಿತೆಗಳಲ್ಲಿ, ವ್ಯಾಕರಣ ಬದ್ಧತೆಯ ಜತೆಗೇ, ಈ ರೀತಿಯ ಮುಖಾಮುಖಿ ಕೂಡ ಇದೆ ಎನ್ನುವುದು ಅಡಿಗರ ಅಭಿಪ್ರಾಯ. ಹಾಗೂ ಮಮತಾ ಹೀಗೆ ನಮ್ಮ ಅಂತರಂಗ ಬಹಿರಂಗಗಳ ದ್ವಂದ್ವದಂತೆಯೇ ನಮ್ಮ ಅಂತರಂಗ ಜೀವನವೂ ದ್ವಂದ್ವಗಳ ಸಮಾಗಮ ಎಂದೂ ಬಲ್ಲವರು ಎನ್ನಿಸುತ್ತದೆ. ಪ್ರತಿಯೊಂದು ಕವನವು ಈ ರೀತಿ ಸಂಶ್ಲಿಷ್ಟವಾಗಿರುತ್ತದೆ, ಸರಳ ಅಥವಾ ಏಕಮುಖಿಯಾಗಿರುವುದಿಲ್ಲ” ಎಂದು ಕೂಡ ಹೇಳುತ್ತಾರೆ. ಕವಿತೆಗೆ ಇದೇ ಮುಖ್ಯವೆಂದು ಗೊತ್ತಿದ್ದೂ ಅಡಿಗರು ವ್ಯಾಕರಣ, ತಪ್ಪು ಮಾಡದಿರುವಿಕೆ, ಛಂದಸ್ಸು ಮುಂತಾದ ಹಳೆ ವಿಚಾರಗಳನ್ನು ಪ್ರಸ್ತಾಪಿಸಿ ಅವನ್ನು ಮಮತಾ ಅವರ ಕವಿತೆಗಳಲ್ಲಿ ಒಂದು ಕಾವ್ಯಗುಣವಾಗಿ ಕಂಡಿರುವುದು ಕನ್ನಡದ ಈ ನವ್ಯಕಾವ್ಯ ಪ್ರವರ್ತಕರ ಆಂತರ್ಯದ ದ್ವಂದ್ವಕ್ಕೆ ಸಾಕ್ಷಿಯಾಗುತ್ತದೆಯೇ ವಿನಾ ಕವಿತೆಯ ಕುರಿತಾದ ದಾರಿದೀಪ ಆಗುವುದಿಲ್ಲ. ಭಾಷಾಲಯದಿಂದ ಆಧುನಿಕ ಕವಿತೆ ವಿಚಾರಲಯದ ಕಡೆ ಸಾಗಿ ಬಂದಿರುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿಚಾರಲಯವಾದರೂ ಪೂರ್ವಭಾವಿಯಾಗಿ ಗುರುತಿಸಲ್ಪಡುವುದಿಲ್ಲ ಎನ್ನುವುದು ಮುಖ್ಯ. ಪ್ರತಿ ಕವಿಯೂ ಇದನ್ನು ಪ್ರತಿಯೊಂದು ಸಲ ಹೊಸತಾಗಿ ಸಾಧಿಸಿಕೊಳ್ಳಬೇಕಾಗುತ್ತದೆ ಎನ್ನುವುದು ಕೂಡ ಕವಿತೆ ಬರೆಯುವವರಿಗೂ ವಿಮರ್ಶಾತ್ಮಕವಾಗಿ ಓದುವವರಿಗೂ ಗೊತ್ತು. +ಅಡಿಗರ ಮಾತಿಗೆ ತೀರ ವಿರುದ್ಧವಾಗಿ ಹಿನ್ನುಡಿಯಲ್ಲಿ ಕಿ. ರಂ. ನಾಗರಾಜ್ ಮಮತಾರವರ ಕವಿತೆಗಳಲ್ಲಿ ಕವಿಯ ವೈವಿಧ್ಯಮಯ ಜೀವನಾನುಭವಗಳು ಸಂಘಟಿಸುವ ರೀತಿ ನಿಶ್ಚಿತ ಧಾಟಿ ಮತ್ತು ಏಕತಾನತೆಗೆ ಎಡೆಮಾಡುತ್ತದೆ ಎಂದು ಹೇಳುತ್ತಾರೆ! +ಕಿ. ರಂ. ಹೆಸರಿಸದ ಈ ನಿಶ್ಚಿತ ಧಾಟಿ ಏನೆಂದು ಯೋಚಿಸಿದರೆ ಅದು ಇನ್ನೇನೂ ಅಲ್ಲ ದಟ್ಟವಾದ ಕನ್ನಡ ನವ್ಯದ ಛಾಯೆ, ಅಡಿಗ, ರಾಮಚಂದ್ರ ಶರ್ಮ ಎನ್ನುವುದು ಗೊತ್ತಾಗುತ್ತದೆ! ವ್ಯಕ್ತ ರೂಪಕಗಳ ಆಕರ್ಷಣೆ, ಭರತ ವಾಕ್ಯಗಳ ‘ತೆವಲು’. ಉದಾಹರಣೆಗೆ “ಕವಿತೆಯೆಂದರ” ಎಂಬ ಕವಿತೆ : +ಕವಿತೆಯೆಂದರದೊಂದು ತೆವಲು +ದುಷ್ಟ ಪುಷ್ಟ ಮೈ ಕಟ್ಟಿನ +ಪ್ರಿಯತಮನ ಹಾಗೆ. +ಶಬ್ದಗಳ ತೂಕ ಅವನ ಒಂದೊಂದು +ಸ್ನಾಯು ಬಲವಿದ್ದ ಹಾಗೆ. +ಓದುತ್ತಲೇ ಗಕ್ಕನೆ ಅಪ್ಪಿಬಿಡಬೇಕು +ಅವನಪ್ಪುಗೆಯ ಹಾಗೆ. +ಕವಿತೆ ಸಿದ್ಧವಾದ ಮೇಲೆ ಹಿತವಾಗಿರಬೇಕು. +ಅವನ ಜತೆ ಕಳೆದ ರಾತ್ರಿಯ +ನೆನಪಿನ ಹಾಗೆ. +ಇಲ್ಲಿನ ಕವಿತೆಯನ್ನು ಪ್ರಿಯಕರನ ಜತೆಗಿನ ಕೂಡುವಿಕೆ, ಆಮೇಲೆ ಅದರ ನೆನಪು ಮುಂತಾದ ಒಂದು ಅನುಭವಕ್ಕೆ ನೇರವಾಗಿ ಹೋಲಿಸಲಾಗಿದೆ. ಇಂಥ ಹೋಲಿಕೆ ರಾಮಚಂದ್ರ ಶರ್ಮರ ಈಗ ಎಲ್ಲರಿಗೂ ಪರಿಚಿತವಾದ ಶೈಲಿಯನ್ನು ನೆನಪಿಗೆ ತರುವಂಥದು. ಇದರಲ್ಲಿ ಬರುವ ‘ದುಷ್ಟ ಪುಷ್ಟ’ ಎಂಬ ಪದಪ್ರಯೋಗವೆಂದೇ ಸ್ವಲ್ಪ ಕುತೂಹಲಕಾರಿಯಾದ್ದು – ಆದರೆ ಅಡಿಗರ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ, ಇದು ವ್ಯಾಕರಣ ಬದ್ಧ ಪ್ರಯೋಗವಲ್ಲ! ಆದರೆ ಇಲ್ಲಿ ಮಾತ್ರ ಈ ವ್ಯಾಕರಣದ ಉಲ್ಲಂಘನೆ ಕೂಡ ಕವಿತೆ ನಮ್ಮನ್ನು ಒಳಗೊಳ್ಳುವುದಕ್ಕೆ ಸಹಾಯ ಮಾಡುವುದಿಲ್ಲ. ಇದಕ್ಕೆ ಕವಿತೆಯ ದುರ್ಬಲವಾದ ರೂಪಕ ಒಂದು ಕಾರಣವಾದರೆ (ದುರ್ಬಲ ಯಾಕೆಂದರೆ “ಕವಿತೆ=ಒಂದು ತೆವಲು…..” ಎಂಬ ಸರಳ ಸಮೀಕರಣದಿಂದಾಗಿ, ಆಧುನಿಕ ಕಾವ್ಯಕ್ಕೆ ಇದನ್ನು ಹೀಗೇ ಇಷ್ಟು ಸರಳವಾಗಿ – ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ!), ಇಡೀ ಕವಿತೆಯ ‘ಹಾಗಿರಬೇಕು, ಹೀಗಿರಬೇಕು’ ಎನ್ನುವ ಧಾಟಿ ಇನ್ನೊಂದು ಕಾರಣವೆಂದು ಅನಿಸುತ್ತದೆ. ಇದನ್ನೇ ನಾನು ಭರತವಾಕ್ಯವೆಂದು ಕರೆಯುವುದು. ಇದು ಅಡಿಗ, ರಾಮಚಂದ್ರ ಶರ್ಮರ ಕವಿತೆಗಳ ಜಾಯಮಾನ. ಅವರು ಕವಿತೆಯ ಉದ್ದೇಶ ಪೂರ್ತಿಯಾಗಬೇಕಾದರೆ ಅದರಲ್ಲೇನಾದರೂ ಒಂದು ‘ನೀತಿ’ ಇದ್ದೇ ಇರಬೇಕು ಎಂಬಂತೆ ಬರೆಯುವವರು. ಅಡಿಗ ಮತ್ತು ಶರ್ಮರ ಒಟ್ಟಾರೆ ಕಾವ್ಯ ಸಾಮರ್ಥ್ಯ ಹಾಗೂ ಅವರ ಸ್ಥಾನ ಮಾನ ಈ ಅವಗುಣವನ್ನು ಮರೆಸಿಬಿಡುವ ಸಾಮರ್ಥ್ಯವನ್ನು ಪಡೆದಿರಬಹುದು. ಆದ್ದರಿಂದ ಓದುಗರು ಈ ನೀತಿಯನ್ನು ಕಾವ್ಯದ ಅಂಗವಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಬಹುಶಃ ತಯಾರಿರುತ್ತಾರೆ. ಅಥವಾ ಈ ಭರತವಾಕ್ಯದ ತುಯ್ತ ಕೂಡ ಇವರ ಒಟ್ಟಾರೆ ಕಾವ್ಯ ಸಾಮರ್ಥ್ಯಕ್ಕೆ ಕಾರಣವೇ ಎನ್ನುವ ಪ್ರಶ್ನೆ ಕೂಡ ಕೇಳಬಹುದು. ಅದೇನೇ ಇದ್ದರೂ ಇನ್ನೂ ಅಂಬೆಗಾಲಿಕ್ಕುವ ಕವಿ ಇದೇ ರೀತಿಯ ನಿರ್ದೇಶನಗಳನ್ನು ಕವಿತೆಯ ಮೂಲಕ ಕೊಡಲು ತೊಡಗಿದರೆ ಅದು ಓದುಗರನ್ನು ಹತ್ತಿರ ಬರಗೊಡದು! ಇದನ್ನೆಲ್ಲ ಇಲ್ಲಿ ಯಾಕೆ ಹೇಳುವುದು ನನಗೆ ಸಾದ್ಯವೆಂದರೆ ನಾನೂ ಇಂಥ ಅನೇಕ ತಪ್ಪುಗಳನ್ನು ಪದೇ ಪದೇ ಮಾಡುತ್ತ ಬಂದಿರುವುದರಿಂದ! +ಆದರೆ ಮಮತಾ ಅವರ ಈ ಎರಡನೆ ಸಂಕಲನ ಸಾಕಷ್ಟು ಮಹತ್ವಾಕಾಂಕ್ಷೆಯದ್ದು. ಇದರ ವಿಸ್ತಾರ ಮತ್ತು ವೈವಿಧ್ಯ, ಎರಡೂ ಮೊದಲ ಸಂಕಲನಕ್ಕಿಂತ ಜಾಸ್ತಿ. ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಈ ಸಂಕಲನದ ಕವಿತೆಗಳು ಪ್ರಾಯೋಗಿಕ ಕುತೂಹಲಗಳನ್ನು ಒಳಗೊಂಡಿವೆ. ಇವು ಸಚಿತ್ರವಾಗಿ ಮುದ್ರಣಗೊಂಡಿರುವುದನ್ನು ಗಮನಿಸಬೇಕು. ಮಲ್ಟಿ ಮೀಡಿಯಾ ಯುಗದಲ್ಲಿ ಇದೇನೂ ದೊಡ್ಡ ಸಂಗತಿಯಾಗುವುದಿಲ್ಲ ಎಂದಿಟ್ಟುಕೊಂಡರೂ ಅಕ್ಷರಮಾಧ್ಯಮವನ್ನು ಮೀರುವ ಇಲ್ಲಿನ ಪ್ರಯತ್ನ ಕೇವಲ ಪ್ರಾಯೋಗಿಕವಲ್ಲ – ಮಮತಾ ಅವರ ಮಟ್ಟಿಗೆ ಇದು ಅವರ ಕಾವ್ಯಕ್ಕೆ ವ್ಯಂಜಕವಾಗಿರುವ ಗುಣ. ೧೯೯೨ರಿಂದ ೧೯೯೮ಕ್ಕೆ ಆರು ವರ್ಷಗಳ ಅಂತರವಷ್ಟೆ. ಆದರೆ ಕಾವ್ಯಗುಣದ ಅಂತರವನ್ನು ವರ್ಷಗಳಲ್ಲಿ ಅಳೆಯುವುದು ಸಾಧ್ಯವಿಲ್ಲ. ಕಾವ್ಯದ ‘ಬೆಳವಣಿಗೆ’ಯ ಕುರಿತೂ ಬಹುಶಃ ಮಾತಾಡುವುದರಲ್ಲಿ ಅರ್ಥವಿಲ್ಲವೆಂದು ತೋರುತ್ತದೆ. ಕಾವ್ಯ ಹುಟ್ಟಿ, ಬೆಳೆದು, ಮಾಗುವ ಒಂದು ಜೈವಿಕ ಕ್ರಿಯೆಯೇನೂ ಅಲ್ಲ. ಆದ್ದರಿಂದ ಈ ಎರಡನೆಯ ಸಂಕಲನ ಮೊದಲನೆಯದಕ್ಕಿಂತ ಬೆಳೆದಿದೆಯ ಎಂದು ಕೇಳುವುದಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂದು ಕೇಳುವುದು ಹೆಚ್ಚು ಸೂಕ್ತವಾದೀತು. ಎಲ್ಲಾ ಆಧುನಿಕ ಕವಿಗಳಿಗೂ ಇರುವ ಕವಿತೆಯ (ಅ)ಸಾಧ್ಯತೆಯ ಕುರಿತಾದ ಆತಂಕ ಮಮತಾ ಅವರಿಗೂ ಇದೆ. ಈ ಕಾರಣಕ್ಕೆ ಅವರ ಮೊದಲ ಸಂಕಲನದಲ್ಲಿ ಈ ಹಿಂದೆ ಉದ್ಧರಿಸಿದ ಕವಿತೆಯಲ್ಲದೆ ಕವಿತೆಯ ಬಗೆಗಿನ ಇತರ ಕವಿತೆಗಳೂ ಸಾಕಷ್ಟಿರುವುದು. ‘ನದಿಯ ನೀರಿನ ತೇವ’ ಕೂಡ ಈ ಆತಂಕದಿಂದ ಮುಕ್ತವಾಗಿಲ್ಲ. ಆದರೂ ಈ ಆತಂಕ ಒಂದು ಕಾವ್ಯಾನುಭವವಾಗಿ ಓದುಗನಿಗೆ ಒದಗದ ಹಿಂದಿನ ರೀತಿಯಲ್ಲಿ ನಿರ್ದೇಶಾತ್ಮಕ (Model) ಅನುಸೂಚನೆಯ ಹಾಗೆ ಕೇಳಿಬರುತ್ತದೆ. ಆರಂಭದ ಕವಿತೆ “ರಾಗ” : +ಸಮುದ್ರ ಸೀಳಿ ಲಾಗ ಹೊಡೆಯುವ ತಿಮಿಂಗಿಲ +ಆಕಾಶವನ್ನೆ ಹರಿದು ಸುರಿಯುವ ಮಳೆ +ಚಂದ್ರ ತಾರೆಗಳನ್ನೇ ನುಂಗಿಬಿಡುವ ಮೋಡ +ಭೂಮಿಯೊಳಗಿಂದ ಹಟಾತ್ತನೆ ಸಿಡಿದು ನಡುಗಿಸುವ ಕಂಪನ; ನುಡಿಸಿದರೆ ರಾಗ +ಹೀಗಿರಬೇಕು! +ರೋಮ ರೋಮಕ್ಕೂ ಲಗ್ಗೆ ಇಟ್ಟು ಕೊಲ್ಲುವ ಹಾಗೆ. +ಇದನ್ನು ಗಣನೆಗೆ ತೆಗೆದುಕೊಳ್ಳದೆ ಓದುಗ ಮುಂದೆ ಹೋಗಬೇಕು. ಹೋದರೆ ಈ ಆರಂಭ ಕೇವಲ ದೃಷ್ಟಿಬೊಟ್ಟಾಗಿರಬಹುದು ಎನ್ನುವ ಸೂಚನೆಗಳು ನಮಗೆ ಧಾರಾಳ ಸಿಗುತ್ತವೆ. ಸಂಕಲನದ ಎರಡನ ಕವಿತೆಯೆ ಮಮತಾ ತೆಗೆದುಕೊಂಡ ಭಿನ್ನ ಆಕಾಂಕ್ಷೆಗಳಿಗೆ ಸೂಚನೆಯಂತಿದೆ. ಈ ಕವಿತೆಯ ಹೆಸರು “ಕತ್ತಲ ಕುಲದವಳು”. ರಾತ್ರಿ ಜೀವನ ನಡೆಸುವ ಬೆಲವಣ್ಣಿನ ಚಿತ್ರಣ ಇಲ್ಲಿದೆ. ಆದರೆ ಈಕೆ ಮಾತ್ರ “ಸಾವಿರ ಗಂಡರಿಗೆ ಮೊಲೆಯುಣಿಸಿ” ಲಾಲಿ ಹಾಡಿಸಿ ಮಲಗಿಸಬಲ್ಲವಳು. ಮಮತಾ ಅವರ ಹಲವು ಕವಿತೆಗಳಲ್ಲಿ ಕಾಣಿಸುವಂತೆ ಇಲ್ಲಿಯೂ ಮನುಷ್ಯ ಮತ್ತು ನಿಸರ್ಗ ಒಂದೇ ವಿದ್ಯಮಾನದ ಎರಡು ರೂಪಗಳಂತೆ ಬರುವುದರಿಂದ ಒಂದು ಇನ್ನೊಂದರ ರೂಪಕವಾಗಿಬಿಡುವುದನ್ನು ಕಾಣುತ್ತೇವೆ. ಈ ಕೊನೆಯ ಸಾಲುಗಳನ್ನು ನೋಡಬಹುದು : +ಇವಳು ಕತ್ತಲ ಕನ್ಯೆ. +ಅಡಗಿದ್ದ ಸೂರ್‍ಯನ್ನ ಆಕಾಶಕ್ಕೆ ಕೊಡವಿ +ಮತ್ತೆ ಮುಡಿ ಕಟ್ಟುತ್ತಾಳೆ. +ಈ ಕತ್ತಲ ಕನ್ಯೆ ಮುಡಿಕಟ್ಟುವುದರಿಂದಲೇ ಸೂರ್ಯೋದಯ ಕೂಡ! ಇವು ಕವಿತೆಯಾಗಿ ಪ್ರಬಲವಾದ ಸಾಲುಗಳೆನ್ನುವುದರಲ್ಲಿ ಸಂದೇಹವಿಲ್ಲ. ಆದರೂ ಹೀಗೆ ಮನುಷ್ಯನ ಸಾಮಾಜಿಕ ದಾರುಣತೆಯನ್ನು ನೈಸರ್ಗಿಕರಿಸಿದ ತಕ್ಷಣ ಉಂಟಾಗುವ ರಮ್ಯತಾಭಾವವೆ ಒಂದು ಧನ್ಯತಾಭಾವವೂ ಆಗಿಬಿಡುವುದು ಸಾಧ್ಯವೆನ್ನುವುದನ್ನು ಕವಿ ತಿಳಿದುಕೊಳ್ಳಬೇಕು. ಈ ರೀತಿಯ ನೈಸರ್ಗಿಕರಣದ ವಿರುದ್ಧ ನವ್ಯಕಾವ್ಯ ನಡೆಸಿದ ಹೋರಾಟ ಇನ್ನೂ ನಮ್ಮ ಮನಸ್ಸಿನಲ್ಲಿ ಇರುವುದರಿಂದ ಹಾಗೂ ಅದು ಪಡೆದ ಗೆಲವನ್ನು ಕಾರಣವಿಲ್ಲದೆ ಬಿಟ್ಟುಕೊಡುವುದು ಸರಿಯಲ್ಲವಾದ್ದರಿಂದ ಈ ಮಾತನ್ನು ಹೇಳಬೇಕಾಗುತ್ತದೆ. ಇಂಥ ನೈಸರ್ಗಿಕರಣ ಎರಡಲಗಿನ ಖಡ್ಗದ ಹಾಗೆ! ವರ್ಡ್ಸ್‌ವರ್ತ್ ಇದನ್ನ ಚೆನ್ನಾಗಿ ನಿಭಾಯಿಸಿದ. ಆ ಕಾಲಕ್ಕೆ ಪ್ರಾಯಶಃ ಅದು ಅವನಿಗೆ ಅಗತ್ಯವೂ ಆಗಿತ್ತು. (ಉದಾಹರಣೆಗೆ ‘ದಿ ಓಲ್ಡ್ ಕಂಬರ್ಲೆಂಡ್ ಬೆಗ್ಗರ್’) ನಾವಿವತ್ತು ರೊಮ್ಯಾಂಟಿಕ್ ಯುಗಕ್ಕೆ ಮರಳುವ ಹಾಗಿಲ್ಲ. ಇವತ್ತು ಕವಿತೆ ಮಾಡಬೇಕಾದ ಕೆಲಸ ಬೇರೇ ಎನಿಸುತ್ತದೆ. ಇದು ಮಮತಾ ಅವರಿಗೂ ಗೊತ್ತಿರುವ ಸಂಗತಿ. ಇತರ ಹಲವು ಕವಿತೆಗಳು ಈ ನಿಸರ್ಗಿಕರಣದ ಅಪಾಯದಿಂದ ತಪ್ಪಿಸಿಕೊಂಡಿವೆ. ಉದಾಹರಣೆಗೆ, ಇದರ ಮುಂದಿನ ಕವಿತ ‘ಹೇಮಕೂಟ’ ವನ್ನು ಗಮನಿಸಬಹುದು. ‘ಹೇಮಕೂಟ’ದಲ್ಲಿ ಕೂಡ ನಿಸರ್ಗ ಬರುತ್ತದೆ, ಆದರೆ ಅದರ ಬರವು ವಾಸ್ತವವನ್ನು ರಮೀಕರಿಸದೆ ಕವಿತೆಯ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಕವಿತೆ ಹಾಳು ಹಂಪಿಯ ಕಲ್ಲು ಮಂಟಪಗಳಲ್ಲಿ ಕೂತ ಗಿಳಿಗಳ ಮಾತುಗಳನ್ನು ಮತ್ತು ನೆನಪುಗಳನ್ನು ಒಳಗೊಂಡಿದೆ. ಈ ಗಿಳಿಗಳು ಇಲ್ಲಿನ ಅಂತಃಪುರದ ರಾಣಿಯರ ಆತ್ಮಗಳು, ಪಾಳುಬಿದ್ದ ಮಂಟಪಗಳನ್ನು ನೋಡಬರುವ ಪ್ರವಾಸಿಗರು, ಅಲ್ಲಿ ಕೆತ್ತಿದ ನಗ್ನ ಸುಂದರಿಯರ ಕೆತ್ತನೆಗಳ ಮೈದಡವುತ್ತಾರಲ್ಲದೆ ಈ ಆತ್ಮಗಳನ್ನು ಮಾತಾಡಿಸುವ ಗೋಜಿಗೆ ಹೋಗುವುದಿಲ್ಲ. ಇಲ್ಲಿ ನೆನಪು ಮಾಯವಾಗಿದ ಎಂಬ ಸೂಚನೆಯಿದೆ. ಇದು ಒಂದು ಸಾಮ್ರಾಜ್ಯದ ಏರಿಳಿವಿನ ನೆನಪು ಮಾತ್ರವೇ ಅಲ್ಲ, ಇಂಥ ಅರಮನೆಗಳಲ್ಲಿ ಕೂಡಿ ಹಾಕಿದ್ದು ಒಮ್ಮೆ ರಾಜಭೋಗದಲ್ಲಿ ಮರೆದು ಅಲ್ಲೇ ಅಸುನೀಗಿದ ಹೆಣ್ಣುಗಳದ್ದೂ ಹೌದು. +ತುಂಬಿ ಹರಿಯುತ್ತಿದ್ದಾಳೆ ತುಂಗಭದ್ರೆ +ಅವಳಿಗೋ, ಮೈಯೆಲ್ಲಾ ಸುಳಿ, +ಇವಳ ಪ್ರವಾಹದ ಮುಂದೆ +ಮೋಹಿಸಿ ಬಂದರೆ ಸಾಕು, +ಹತ್ತಿರ ಸೆಳೆದು, ತಬ್ಬಿ, ಕೊಂದುಬಿಟ್ಟಾಳು! +ಕೊಚ್ಚಿ ಹೋಗುವ ಹಾಗೆ ನೆನಪುಗಳು, +ಜನ, ಮನ, ಕಾಲ-ದೇಶಗಳು, +ತುಂಗಭದ್ರೆ ತೆರೆದಿಟ್ಟ ತಾವು – +ಎಲ +ಜಲ +ಸಮಾಧಿ +ಶಿಥಿಲ ಸ್ಥಳ +ಯಾರಿಗೇನು ಬೇಕೊ ಎಲ್ಲವೂ ಇದೆ ಇಲ್ಲಿ +ಭಿಕ್ಷುಕ – ಭೈರಾಗಿ, ಸಂತ – ಸಾಮ್ರಾಟರ +ಹೇಮ ಕೂಟ. +ಎಂಬ ಕೊನೆಯಲ್ಲಿ ಭಯ, ಒಂಟಿತನ, ಆತ್ಮಹತ್ಯೆ, ಆಕಸ್ಮಿಕ ಮರಣ ಮುಂತಾದ ಸಂಗತಿಗಳು ಧ್ವನಿಪೂರ್ಣವಾಗಿ ಬಂದಿವೆ. ಇಲ್ಲಿ ‘ಹೇಮ ಕೂಟ’ ಎನ್ನುವ ಹೆಸರಿನ ಭವ್ಯತೆ ಮತ್ತು ಇವತ್ತಿನ ಈ ಪ್ರದೇಶದ ಜೀರ್ಣಾವಸ್ಥೆಯ ಮಧ್ಯೆ ಇರುವ ಕಂದಕದ ಅರ್ಥವೇನೆಂದು ಕವಿತೆ ಹೇಳುವುದಕ್ಕೆ ಹೋಗದೆ ಅದನ್ನು ಓದುಗರಿಗೇ ಬಿಟ್ಟುಕೊಡುತ್ತದೆ. ಆದ್ದರಿಂದ ಈ ಕವಿತೆಯನ್ನು ವಿಸ್ಮೃತಿವಾದಿಗಳು ಹಾಗೂ ಸ್ತ್ರೀವಾದಿಗಳು ಏಕಕಾಲಕ್ಕೆ ಉಪಯೋಗಿಸುವುದು ಸಾಧ್ಯ. ಕವಿತೆ ಇಂಥ ವಾದಗಳಿಗೆ ಆಹಾರವಾಗಿ ಮಾತ್ರವೇ ಬಂದರೆ ಅದು ನಮ್ಮ ಆತಂಕಕ್ಕೆ ಕಾರಣವಾಗಬೇಕು. ಇದನ್ನು ಈ ವಾದಗಳ ಸದ್ಯದ ಆಕರ್ಷಣೆಯಲ್ಲಿ ಸಿಕ್ಕಿರುವ ನಾವು ತೀರ್ಮಾನಿಸುವುದು ಸಾಧ್ಯವಿಲ್ಲ. ಇದಕ್ಕೆ ಪರವಾಗಬೇಕು ಅಥವಾ ಇದರಿಂದ ಬಿಡುಗಡೆ ಪಡೆಯಬೇಕು ಎನ್ನುವ ಎರಡೂ ತರದ ಸೋಪಜ್ಞತೆಗಳು ಕವಿಗೆ ತಕ್ಕುದಲ್ಲವಾದ್ದರಿಂದ ಪ್ರತಿಯೊಬ್ಬ ಕವಿ ಇಂಥ ಪರಿಸ್ಥಿತಿಯಲ್ಲಿ ಹೇಗೆ ಬರೆಯಬೇಕೆನ್ನುವುದು ಕುತೂಹಲದ ವಿಷಯವಾಗಿಯೇ ಉಳಿಯುತ್ತದೆ. ಪ್ರವಾಹಕ್ಕೆ ಎದುರಾಗಿ ಸಾಗು ಎಂದ ಫ್ರೆಂಚ್ ಲೇಖಕ ಆಂದ್ರೆ ಜೀದ್. ಅದು ಕಷ್ಟಕರ. ಸಾಗುವ ಯತ್ನದಲ್ಲಿ ಮುಂದೆ ಹೋಗದೆ ಇರಬಹುದು, ಅಥವಾ ಹಿಂದಕ್ಕೆ ಕೊಚ್ಚಿಕೊಂಡು ಹೋಗಬಹುದು. ಸೃಜನಶೀಲತೆಯನ್ನುವುದು ದುರಂತದ ಅಂಚಿನಲ್ಲಿ ಬೆಳೆಯುವ ಹೂವಿನ ಹಾಗೆ, ಅದಕ್ಕೆ ಕೈಚಾಚಿದರೆ ಏನು ಬೇಕಾದರೂ ಆಗಬಹುದು! +ಸಾಹಿತ್ಯದ ಪ್ರತಿಯೊಂದು ಪ್ರಯತ್ನವೂ ತನ್ನ ಓದಿನ ದಾರಿಯನ್ನು ತಾನಾಗಿ ಸೂಚಿಸುವ ಚಿಹ್ನೆಗಳನ್ನು ಒಳಗೊಂಡಿರುವ ಹಾಗೆ, ಮಮತಾ ಅವರ ಸದ್ಯದ ಕವನ ಸಂಕಲನ ಕೂಡ ಅಂಥ ಸೂಚನೆಗಳನ್ನು ಒಳಗೊಂಡಿದೆ: ಅಥವ ಇಂಥ ಸೂಚನೆಗಳನ್ನು ಕಾಣುವುದಕ್ಕೆ ಆಯಾ ಕಾಲವೇ ನಮ್ಮನ್ನು ನಿರ್ದೇಶಿಸುತ್ತಲೂ ಇರಬಹುದು! ಅಂತೂ ಇಂದಿನ ಆಧುನಿಕೋತ್ತರ ಅಥವಾ ಪೋಸ್ಟ್ ಮಾಡರ್ನ್ ಯುಗದಲ್ಲಿ ಸಾಹಿತ್ಯದ ಚಹರೆಗಳ ಕುರಿತೇ ಆತಂಕಗಳು ಏಳುತ್ತಿರುವಾಗ, ಮಮತಾ ಈ ಯುಗದ ಧ್ವನಿಯಾಗುವಂತೆ ಕವಿತೆಗಳನ್ನು ರಚಿಸಲು ಯತ್ನಿಸಿರುವಂತೆ ತೋರುತ್ತದೆ. ಅಕ್ಷರಮಾಧ್ಯಮ ಮಾತ್ರವಲ್ಲದೆ ಇಲ್ಲಿ ದೃಶ್ಯಮಾಧ್ಯಮವನ್ನು ಕೂಡ ಕವಿ ಅಲ್ಲಲ್ಲಿ ಉಪಯೋಗಿಸಿಕೊಂಡಿದ್ದಾರೆ. ‘ಕವಿತೆ, ಒಂದು ಕಪ್ಪು ಕಾಫಿಯ ಹಾಗೆ ಎನ್ನುವ ರೀತಿ ಇಲ್ಲಿ ಪ್ರಾತಿನಿಧಿಕ! Cup-ಕಪ್ಪುಗಳ ಸಂಬಂಧ, ಅಂತರ, ಅರ್ಥಾತ್‌ ಡೆರಿಡಾ ಹೇಳುವ ಡಿಫರಾನ್ಸ್ ಮಮತಾರವರ ಕವಿತೆಗಳನ್ನು ಆವರಿಸಿರುವ ಹಾಗೆ ಅನಿಸುತ್ತದೆ. ಇದು ಮಲ್ಟಿಮೀಡಿಯಾ ಸಂಸ್ಕೃತಿಯ ಸೂಚನೆ ಹೇಗೆಯೋ ಹಾಗೇನೇ ನವ್ಯೋತ್ತರ ಸಂದಿಗ್ಧತೆಗಳ ಸೂಚನೆಯೂ ಹೌದು. ಕವಿತೆ ಎಲ್ಲಿದೆ? ಜಗ್‌ನಿಂದ ಕಪ್ಪಿಗೆ ಸುರಿಯುತ್ತಿರುವ ಕ್ರಿಯೆಯಲ್ಲಿಯೆ? ಕೆಳಗೆ ತುಂಬುತ್ತಿರುವ ದ್ರವದಲ್ಲಿಯೆ? ಅಥವ ಕಪ್ಪಿನಲ್ಲಿಯೆ? (ಯಾವ ‘ಕಪ್ಪು’ – ಬಣ್ಣವೆ, ಪಾತ್ರೆಯೆ? ಎರಡೂ?) ಮೇಲೇಳುತ್ತಿರುವ ಹಬೆಯಲ್ಲಿಯೆ? ಒಟ್ಟಾರೆ, ಕವಿತೆಗೂ ಕಪ್ಪು ಕಾಫಿಗೂ ಏನು ಸಂಬಂಧ? ಏನೆಂದರೆ, ಕವಿತೆಗೆ ಸಂಬಂಧಿಸಿಯೂ ಇಂಥದೇ ಪ್ರಶ್ನೆಗಳನ್ನು ಈವತ್ತು ಕೇಳುವುದು ಸಾಧ್ಯ? ಕವಿತೆಯಲ್ಲಿದೆ – ಅಕ್ಷರಗಳಲ್ಲಿಯೆ? ಅರ್ಥದಲ್ಲಿಯೆ? ಓದುಗರ ಮನಸ್ಸಿನಲ್ಲಿಯೆ? ಕಾಗದದ ಮೇಲೆಯೆ? ಕಾಗದದ ಮೇಲೆ ಅಚ್ಚೊತ್ತಿದ ಕಾರ್ಬನಿನಲ್ಲಿಯೆ? ಇಂಥ ಪ್ರಶ್ನೆಗಳನ್ನು ಕೇಳುತ್ತ ನಾವು ಮೋಬಿಯಸ್ ಸ್ಟ್ರಿಪ್ (Mobious Strip)ನಲ್ಲಿ ಅದರ ತಳವನ್ನು ಹುಡುಕುತ್ತ ಎಷ್ಟು ಪ್ರಯಾಣ ಮಾಡಿದರೂ ತಳ ಸಿಗದೆ ಬಂದಲ್ಲಿಗೆ ವಾಪಸಾಗುತ್ತೇವೆ! ಮಮತಾರವರ ಈ ಪುಟ್ಟ ಕವಿತೆ ಇಂಥ ಬೃಹತ್ತಾದ ‘ಆಕಾಶ ಅವಕಾಶ’ ದ ಕಡೆ ಕೈ ತೋರಿಸುತ್ತದೆ. “ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ” ಎಂಬ ಕವಿತೆ ಇದನ್ನೇ ಇನ್ನೊಂದು ರೀತಿ ಹೇಳುವ ಹಾಗಿದೆ. ಇಲ್ಲಿ ನದಿಯ ಮೇಲ್ಮೈಯನ್ನೊಂದು ಕಾಗದದ ‘ಹೊಳೆ’ಗೆ ಹೋಲಿಸಲಾಗಿದೆ – ಆಮೇಲೆ ಕಾಗದದ ಹಾಳೆಗೆ ನದಿಯ ಮೇಲ್ಮೈ ಹೋಲಿಕೆಯಾಗುತ್ತದೆ. (‘ಕವಿತೆ’ ಎಂಬ ಕವಿತೆಯಲ್ಲೂ ಈ ರೀತಿಯ ದ್ವಿಮುಖ ಪಟ್ಟನ್ನು ಗಮನಿಸಬೇಕು – ಈ ಸಂಕಲನದ ಅನೇಕ ಕವಿತೆಗಳಲ್ಲಿ ಈ ಪಟ್ಟು ಸಾವಯವವಾಗಿ ಬಂದಿದ್ದು ಸಂಕಲನದ ಒಟ್ಟಾರೆ ಧರ್ಮಕ್ಕೆ ಸಾಕ್ಷಿಯಾಗಿದೆ. ಪಾರದರ್ಶಕವಾದ ನದೀ ನೀರಲ್ಲಿ ತಳ ಕಾಣಿಸಿದರೂ, ಅದರ ಮೇಲೆ ಒಂದು ಹಾಳೆಯ ಹಾಗೇ ಇರುತ್ತದೆ. ನದಿಯ ತಳಕ್ಕಿಳಿದರೂ ಈ ಮೈಯ ಗುಣ ಬದಲಾಗುವುದಿಲ್ಲ. +ಹಾಗೇ +ತಿಳಿನೀರ ತಳಕ್ಕೆ ಮುಳುಗಿದರೆ….. +ಖಾಲಿ ಹಾಳೆಯ ಮೇಲೆ +ಹರಿವ ನದಿಯಲ್ಲಿ +ನಾನು, +ಮುಳುಗಿದರೆ ನದಿ, ಹಾಳೆಯ ತಳಕ್ಕೆ; +ನುಂಗಿ ನದಿಯ ಹಾಡು +ಮತ್ತೆ ಬಿಳಿ ಹಾಳೆ +ಖಾಲಿ! +ಈಗ ಇದೇ ನದಿಯ ಮೈಯ ರೂಪಕ ಹಾಡಿಗೂ ಅನ್ವಯವಾಗುತ್ತದೆ. ಹಾಳೆಯ ಮೇಲೆ ಬರೆದ ‘ಹಾಡು’ ಹಾಳೆಯಿಂದೆದ್ದಾಗಲೆ ಹಾಡಾಗುವುದು, ಶಬ್ದ ‘ಶಬ್ದ’ವಾಗುವುದೂ ಕಳಚಿಕೊಂಡಾಗಲೇ! ಆದರೆ ಹಾಗೆನ್ನುವುದೂ ಕೂಡ ಒಂದು ವಿರೋಧಾಭಾಸ. +ಹಾಳೆಯಿಂದೆದ್ದು ಶಬ್ದ, +ಅದರ ಹಿಂದೊಂದು ಶಬ್ದ; +ಶಬ್ದ +ಶಬ್ದಗಳ +ಸರಣಿ +ಗಾಳಿಯಲಿ ತೇಲಿ ಬಿಟ್ಟರೆ…. ಹಾಡು! +ಈಗ +ಹಾಳೆಯ ಮೇಲೆ +ಹಾಡು – ಶಬ್ದ +ಹಾಡು-ನಿಃಶಬ್ದ. +ಮಮತಾ ಅವರ ಕವಿತೆಗಳು ಬಯಸುವ ಓದು ಯಾವ ರೀತಿಯದೆಂಬುದಕ್ಕೆ ಇನ್ನೂ ವ್ಯಕ್ತವಾದ ಸೂಚನೆ ಸಸ್ಯೂರ್‌ನಿಗಾಗಿ ಬರೆದ ಗಾಥೆಯಲ್ಲಿ ಕಾಣಬಹುದು. ಎಲ್ಲರಿಗೂ ಗೊತ್ತಿರುವಂತೆ ಸ್ವಿಸ್ ಭಾಷಾವಿಜ್ಞಾನಿ ಫರ್ಡಿನಾಂಡ್‌ ಸಸ್ಯೂರ್‌ನನ್ನು ಆಧುನಿಕ ಭಾಷಾವಿಜ್ಞಾನದ ಪಿತಾಮಹನೆಂದು ಪರಿಗಣಿಸಲಾಗುತ್ತಿದೆ. ಸಸ್ಯೂರ್ ಸ್ಟ್ರಕ್ಚರಲಿಸಂ ಅಥವಾ ರಚನಾವಾದವನ್ನು ಭಾಷಾವಿಜ್ಞಾನದಲ್ಲಿ ಹುಟ್ಟುಹಾಕಿದವನು. ಒಂದು ಪದದ ಮೌಲ್ಯ ಇತರ ಪದಗಳೊಂದಿಗೆ ಅದು ಯಾವ ರೀತಿಯಲ್ಲಿ ವ್ಯತ್ಯಾಸದಲ್ಲಿದೆ ಎನ್ನುವುದರ ಮೇಲಿದೆ ಎಂಬ ಥಿಯರಿಯನ್ನು ಪ್ರಚುರಪಡಿಸಿದವನು. ಆದ್ದರಿಂದಲೆ, ಫ್ರೆಂಚ್‌ನ arbor ಮತ್ತು ಇಂಗ್ಲೀಷ್‌ನ tree ಎನ್ನುವ ಪದಗಳಿಗೆ ‘ಅರ್ಥ’ ಒಂದೇ ಎಂದು ಹೇಳಲಾಗದು. ಯಾಕಂದರೆ, ಫ್ರೆಂಚ್‌ನ ಪದದ ಅರ್ಥ ಆ ಭಾಷೆಯ ಇತರ ಪದಗಳ ಜತೆ ಯಾವ ರೀತಿಯಲ್ಲಿ ಅದು ಸಂಬಂಧ ತಳೆದಿದೆ ಎನ್ನುವುದನ್ನು ಮತ್ತು ಇಂಗ್ಲೀಷ್ ಪದ ಅದು ಇಂಗ್ಲೀಷ್‌ನ ಇತರ ಪದಗಳ ಜತೆ ಯಾವ ಸಂಬಂಧದಲ್ಲಿ ನಿಂತಿದೆ ಎನ್ನುವುದನ್ನು ಹೊಂದಿಕೊಂಡಿದೆ. ಸಸ್ಯೂರ್ ಕೊಡುವ ಚದುರಂಗದ ಮಣೆಯ ಉದಾಹರಣೆ ಎಲ್ಲರಿಗೂ ಪರಿಚಿತ. ಚದುರಂಗದ ಕಾಯಿಗಳು ಆಯಾ ಕಾಯಿ ಇತರ ಕಾಯಿಗಳಿಂದ ಕಾರ್ಯದಲ್ಲಿ ಯಾವ ರೀತಿ ಭಿನ್ನವಾಗಿದೆ ಎನ್ನುವುದರ ಮೇಲಿಂದ ಅರ್ಥ ಪಡೆಯುತ್ತವೆಯೇ ಹೊರತು ಕಾಯಿಯ ಆಕಾರದಿಂದಲ್ಲ. ಆಕಾರ ಮತ್ತು ಅರ್ಥಕ್ಕಿರುವ ಸಂಬಂಧ ಅನಿಯಂತ್ರಿತ (arbitrary). ಪದಗಳ ಈ ಋಣಾತ್ಮಕ ಮೌಲ್ಯವನ್ನೇ ಡೆರಿಡಾ ‘ಡಿಫರಾನ್ಸ್’ ಎಂದು ಕರೆದಿರುವುದು. ಡೆರಿಡನ ಪ್ರಕಾರ ಒಂದುಪದ ಇತರ ಪದಗಳ ಜತೆಗಿನ ಅದರ ವ್ಯತ್ಯಾಸದಿಂದ ತನ್ನ ಅರ್ಥವನ್ನು ಪಡೆಯಬೇಕಾದ್ದರಿಂದ ಈ ಅರ್ಥವೆನ್ನುವುದು ನಾವು ಸಾಧಾರಣವಾಗಿ ಅಂದುಕೊಂಡಂತೆ ನಿಖರವಾಗಿ ಇರದ, ಯಾವತ್ತೂ ಓಟದಲ್ಲಿದ್ದು ಕೈಗೆ ಎಟಕುವುದೇ ಇಲ್ಲ! ಆದ್ದರಿಂದ ಅರ್ಥದ ಬೆನ್ನು ಹತ್ತಿದ ಮನುಷ್ಯರು ಕೇವಲ ಛಾಯೆಗೆ ಮಾತ್ರ ಬದ್ಧರು. +‘ಮರ’ಕ್ಕೆ ಮರವೆನ್ನದೆ +ಸುಮ್ಮನೆ ಬೇರೇನೋ ಕರೆದಿದ್ದರೆ +‘ಮರ’ ಬೇರೇನೋ ಆಗಿರುತ್ತಿತ್ತು. +ಅದನ್ನು ‘ಆಕಾಶ’ ಎಂದು ಕರೆದಿದ್ದರೆ, +ಅದು ಮೂರಕ್ಷರದ ಮರವಾಗಿ; +ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. +ಹುಡುಗಿಯರಿಗೆ +ಸುಮ್ಮನೆ ‘ಅವಳು’ ಎಂದು +ಏನೇನೋ ಬೇಕಾದ್ದು ಹೇಳದೆ +ಸರಿಯಾಗಿ ಬೇರೇನೋ ಕರೆದಿದ್ದರೆ; +ಹುಡುಗರು, +ಎಂದೂ ಹೀಗೆ – +ಈಗಿರುವ ಹಾಗೆ ಇರುತ್ತಿರಲಿಲ್ಲ. +ಎನ್ನುವಲ್ಲಿ ಮಮತಾ ಇಡೀ ಪೋಸ್ಟ್ ಸ್ಟ್ರಕ್ಚರಲಿಸಂ ಅರ್ಥಾತ್ ರಚನೋತ್ತರವಾದದ ಸಕಲ ಪರಿಣಾಮಗಳನ್ನೂ ಧ್ವನಿಸಿದ್ದಾರೆಂದು ನನಗನಿಸುತ್ತದೆ. ಹುಡುಗಿಯರಿಗೆ ‘ಅವಳು’ ಅನ್ನುವುದು ಮತ್ತು ಹುಡುಗರಿಗೆ ‘ಅವನು’ ಅನ್ನುವುದು ಕನ್ನಡದಲ್ಲಿ ಅನಿಯಂತ್ರಿತ ಆಯ್ಕೆ, ಆದರೂ ‘ಅವಳು’ ಮತ್ತು ‘ಅವನು’ ಎಂಬ ಲಿಂಗ ವ್ಯತ್ಯಾಸ ನಮ್ಮ ಜೀವನ ದೃಷ್ಟಿಯನ್ನು ಎಷ್ಟೊಂದು ನಿಯಂತ್ರಿಸಿಬಿಟ್ಟಿದೆಯೆಂದರೆ ಅವಳು ಎಂದರೆ ನರ್ಸ್ ಎಂದೂ, ಅವನು ಎಂದರೆ ಡಾಕ್ಟರ್ ಎಂದೂ ಯೋಚನೆಯಿಲ್ಲದೆ ಸಹಜವೆನ್ನುವಂತೆ ಕಲ್ಪಿಸಿಕೊಳ್ಳುತ್ತೇವೆ! ಹೀಗೆ ಅನಿಯಂತ್ರಿತವಾದ ಆಯ್ಕೆಯೊಂದು ನಮ್ಮ ಅರಿವನ್ನು ನಿಯಂತ್ರಿಸತೊಡಗುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೇ. ಭಾಷೆ ಕೇವಲ ಭಾಷೆಯಾಗದೆ ನಮ್ಮ ಸಾಮಾಜಿಕ ಜೀವನದ ಒಂದು ಬಹು ದೊಡ್ಡ ಶಕ್ತಿಯಾಗುವುದು ಹೀಗೆ. +ಭಾಷೆ ಚಪಾತಿ ಹಿಟ್ಟಿನ ಹಾಗೆ, +ಲಟ್ಟಿಸಿದರೆ, ಗುಂಡಗಿರಬೇಕು +ಅಥವಾ ಮೂರು ಮೂಲೆ, +ಬೇರೆ ಆಕಾರವೇ ಬಾರದು ಅದಕೆ. +(“ಪಾಠ – ಒಂದು, ಎರಡು, ಮೂರು..”) +ಮಮತಾ ಅವರ ಕವಿತೆಗಳು ಭಾಷೆಯನ್ನು ಮತ್ತೆ ಮತ್ತೆ ಪ್ರಶ್ನೆಗೆ ಗುರಿಪಡಿಸುತ್ತ ಅದರ ಮೈಯನ್ನು ನಮಗೆ ಪರಿಚಯ ಮಾಡಿಸಲು ಯತ್ನಿಸುವ ಹಾಗೆ ತೋರುತ್ತದೆ. ಬಹುಶಃ ಈ ರೀತಿಯಲ್ಲಿ ಸದ್ಯದ ತಾತ್ವಿಕ-ವೈಚಾರಿಕ ಪ್ರಣಾಳಿಕೆಯೊಂದನ್ನು ಕಾವ್ಯರೂಪದಲ್ಲಿ ಧ್ವನಿಸಿದ ಇನ್ನೊಂದು ಪ್ರಯತ್ನ ಕನ್ನಡದಲ್ಲಿ ಇಲ್ಲವೆಂದು ತೋರುತ್ತದೆ. ಬಹುಶಃ ಯುವಕವಿಗಳಿಗೆ ಮಮತಾ ಅವರ ಈ ಕವಿತೆಗಳು ಆಕರ್ಷಕವೆನಿಸುವುದರಲ್ಲಿ ಸಂದೇಹವಿರದು. +ಇಷ್ಟು ಹೇಳಿದ ಮೇಲೆ ನನ್ನ ಮನಸ್ಸಿನೊಳಗಿನ ಒಂದು ಸಂದೇಹವನ್ನೂ ಇಲ್ಲಿ ಹೇಳಬೇಕಾಗಿದೆ. ಅದೆಂದರೆ, ಪೋಲಿಶ್ ಕವಿ ಬೆಸ್ಲಾ ಮಿಲೋಝ್ ಒಂದೆಡೆ ಪ್ರಕಟಿಸಿದಂತೆ, ಕವಿ(ತ)ಗೆ ಈ ತರದ ಸ್ಟೋಪಜ್ಞತೆ ಸಲ್ಲುವುದೆ ಎನ್ನುವುದು. ಮಿಲೋಝ್ ಈ ಮಾತನ್ನು ಹೇಳುವುದು ಕವಿ ಮತ್ತು ವಿಮರ್ಶಕರ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿ. ವಿಮರ್ಶಕ ಎಂದರೆ ವಿದ್ವಾಂಸ, ವಿಮರ್ಶೆಯ ಕಾರ್ಯಕ್ಕೆ ಆತನಿಗೆ ಸಕಲ ವಿದ್ವತ್ತೂ ಬೇಕು. ಆದರೆ ಕವಿಗೆ ಅಂಥ ವಿದ್ವತ್ತು, ಹಾಗೂ ಅದು ಒದಗಿಸಬಹುದಾದ ಸ್ಟೋಪಜ್ಞತೆ, ಒಂದು ತೊಡಕಾಗಲಾರದೆ ಎನ್ನುವುದು ಮಿಲೋಝ್ ಕೇಳುವ ಪ್ರಶ್ನೆ. ಇದರ ಅರ್ಥ ಆಧುನಿಕ ಕವಿ(ತೆ) ಪೂರ್ವದ ‘ಮುಗ್ಧತೆ’ಗೆ ವಾಪಸಾಗಬೇಕು ಎಂದಲ್ಲ – ಅಂಥ ಮರಳುವಿಕೆ ಸಾಧ್ಯವೂ ಇಲ್ಲ. ಆದರೂ, ಕವಿತೆಯ ಕಾರಣ ಯಾವುದೇ ಪ್ರಣಾಳಿಕೆಯ ಪ್ರಕಟಣೆಯಲ್ಲ – ಅದು ತಾತ್ವಿಕವಾಗಿರಲಿ, ಸಾಮಾಜಿಕವಾಗಿರಲಿ, ಹಾಗೂ ಎಷ್ಟೇ ಜರೂರಿನದ್ದಾಗಿರಲಿ! ತನ್ನ ಕಾಲದಲ್ಲಿ ಬೃಹತ್ತಾದ ರಾಜಕೀಯ ಕ್ರಾಂತಿಗಳು ನಡೆಯುತ್ತಿದ್ದಾಗಲೂ, ಹಾಗೂ ಆ ಕ್ರಾಂತಿಗಳ ಕುರಿತು ತನಗೆ ಒಲವಿದ್ದಾಗಲೂ, ಇಂಗ್ಲೆಂಡಿನ ಕವಿ ವರ್ಡ್ಸ್‌ವರ್ತ್ ಅದೊಂದೂ ನಡೆಯಲೇ ಇಲ್ಲ ಎನ್ನುವ ರೀತಿಯಲ್ಲಿ ಶ್ರೇಷ್ಠವಾದ ಕವಿತೆಗಳನ್ನು ರಚಿಸಿದ ಎನ್ನುವುದು ಕವಿತೆಯ ಒಳದೃಷ್ಟಿಯಿಂದ ಬಹಳ ಮುಖ್ಯವಾದ ಸಂಗತಿ! ಆತ ತನ್ನ ಕಾಲದ ವಿದ್ಯಮಾನಗಳಿಗೆ ‘ನೈಸರ್ಗಿಕರಣ’ದ ಮೂಲಕವೆ ಸ್ಪಂದಿಸಿದ ರೀತಿ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಅತ್ಯಂತ ಕುತೂಹಲ ಕರವಾದ್ದು. ಸಾಮಾಜಿಕವಾಗಿ ಹಾಗೂ ತುರ್ತಾಗಿ ತಾನು ಸಲ್ಲಬೇಕೆನ್ನುವ ಕವಿಗಳ ಆತುರದ ಬಗ್ಗೆ ಮಾತ್ರ ನಾನಿದನ್ನು ಹೇಳುತ್ತಿದ್ದೇನೆ. ಈ ಆತುರ ಕೂಡ ಬಹುಶಃ ಒಂದು ಸಾಮಾಜಿಕ ಉತ್ಪತ್ತಿ ಇರಬೇಕು! ಪ್ಲೇಟೋನ ಕಾಲದಿಂದಲೂ ಕವಿಯ ಸಾಮಾಜಿಕ ಕಾಳಜಿ ಹಾಗೂ ಉಪಯೋಗ ಪ್ರಶ್ನೆಗೆ ಗುರಿಯಾಗಿರುವುದನ್ನು ಕವಿಗಳು ಎಂದೂ ಮರೆತಿರಲಿಕ್ಕಿಲ್ಲ! ಕವಿ ತಾನೂ ಉತ್ತಮ ನಾಗರಿಕ ಎಂದು ತೋರಿಸಿಕೊಡುವ ಆತುರದಲ್ಲಿ ತಿಳಿಯದೆಯೆ ಕಾವ್ಯಕ್ಕೆ ಅನ್ಯಾಯ ಮಾಡಬಹುದು. +ಆದ್ದರಿಂದಲೆ, ಕೊನೆಗೂ ‘ಸಾಮಾನ್ಯ’ ಓದುಗರಿಗೆ ಮಮತಾರವರ “ನಾವಿಲ್ಲದೂರು” ಮತ್ತು “ಪಾರಿಜಾತದ ಪ್ರೀತಿ”ಯಂಥ ಕವಿತೆಗಳೇ ಇಷ್ಟವಾಗಬಹುದೆಂದು ನನಗನಿಸುತ್ತದೆ. ಈ ‘ಸಾಮಾನ್ಯ’ ಓದುಗರಲ್ಲಿ ನಾನೂ ಸೇರಿದ್ದೇನೆ ಎಂಬುದನ್ನು ಕೂಡ ಇಲ್ಲಿ ಹೇಳಿಬಿಡುವೆ. ಮತ್ತು ಮಮತಾರವರ ಈ ಸಂಕಲನದಲ್ಲಿ ನನಗಿಷ್ಟವಾಗುವ ಇಂಥ ಇನ್ನಷ್ಟು ಕವಿತೆಗಳಿವೆ ಎನ್ನುವುದು ನನಗೆ ಸಮಾಧಾನದ ಸಂಗತಿ. ಈ ಕವಿತೆಗಳೇ ಯಾಕೆ ಇಷ್ಟವಾಗಬೇಕು ಎನ್ನುವುದು ನಿಜಕ್ಕೂ ಕುತೂಹಲದ ಸಂಗತಿ. ಅಡಿಗರು ಅನ್ನುವ ವ್ಯಾಕರಣಬದ್ಧತೆ ಮತ್ತು ಶರ್ಮರು ಬಯಸುವ ಲಯ ಎರಡೂ ಇಲ್ಲಿ ಇವೆಯೆನ್ನುವುದು ನಿಜ. ಆದರೆ ಇಷ್ಟಕ್ಕೆ ಬರಹ ಕಾವ್ಯವಾಗುವುದು ಸಾಧ್ಯವಿಲ್ಲ. ಕಾವ್ಯದ ಭ್ರಮೆಯೇ ಕಾವ್ಯವಲ್ಲ. ಈ ಕವಿತೆಗಳಲ್ಲಿನ ‘ಒಳಧ್ವನಿ’ಯ ಕಾರಣಕ್ಕಾಗಿ ಬಹುಶಃ ನನಗಿವು ಇಷ್ಟವಾದುವು ಎಂದು ತೋರುತ್ತದೆ. ಈ ಕವಿತೆಗಳು ನನ್ನೊಳಗಿನ ನನ್ನ ಜತೆ ಮಾತಾಡುತ್ತವೆ. ಈ ಕುರಿತು ಇನ್ನಷ್ಟು ಜಿಜ್ಞಾಸೆ ಸಾಧ್ಯ. ಆದರೆ ಅದನ್ನು ಓದುಗರಿಗೆ, ವಿಮರ್ಶಕರಿಗೆ ಬಿಡುವುದು ಒಳ್ಳೆಯದು! +****** +ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […] +ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […] +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_83.txt b/Kannada Sahitya/article_83.txt new file mode 100644 index 0000000000000000000000000000000000000000..bb1b4acc0b2189e0b667d8655a88c68e812cab1b --- /dev/null +++ b/Kannada Sahitya/article_83.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುರಗಿ ಹೂವಿನ ಕಂಪು +ಮಳೆ ಮಣ್ಣಿನ ಕಂಪು +ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು +ಎಲ್ಲಿಂದ ಸುಳಿದಿತ್ತು ಈ ಕೆಂಪು, +ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು. +ಘಳಿಗೆಗೊಂದೊಂದು ವಾಸನೆ +ಎಂದೋ ಎಲ್ಲೋ ಆಗಿದ್ದು +ತಟ್ಟನೆ ವಾಸ್ತವಕ್ಕಿಳಿದ ಹಾಗೆ +ಮರೆತ ಏನೇನನ್ನೋ ಮತ್ತೆ ಕರೆದಹಾಗೆ. +ಮಹಡಿ ಮೆಟ್ಟಿಲ ಹಿಂದೆ +ಕತ್ತಲಲಿ ಅವಿತು ಕೂತಿದ್ದು +ಹೊಡೆದುಕೊಳ್ಳುವ ಎದೆಯ +ಬಿಗಿ ಹಿಡಿದು ಬಿಕ್ಕದೇ ಅತ್ತಿದ್ದು +ಜಗಲಿ ಬದಿ ಮಬ್ಬಗೆ ಮುಖಕೊಟ್ಟು +ಸಂಜೆ ಸುಮ್ಮನೆ ಕೂತಿ ಕಳೆದಿದ್ದು. +ಇದು ಯಾವ ನೆನಪು +ಗಾಳಿ ಬೀಸಿದಹಾಗೆ; +ಹೀಗೆ ಮೇಲಿಂದಮೇಲೆ +ರೆಪ್ಪೆ ಮಿಟುಕಿಸಿದಹಾಗೆ +ಕಣ್ಣು ಮುಚ್ಚಿದರೆ ಚಿತ್ರಗಳು +ಭಿತಿಯಲೆ ಬೆರೆತು, +ಕಂಡಿದ್ದು, +ಕಾಣದ್ದು, +ಎಲ್ಲ ರಾಶಿ ರಾಶಿ….. +ಮೋಡದಲಿ ಮುಳುಗಿದ ಹಾಗೆ +ಚಕ ಚಕನೆ ಸರಿದು….. +ಯಾರೋ ಕರೆದರು…… ಎಲ್ಲೋ! +ಯಾರು ಕರೆದರು? +ಎಲ್ಲಿ? +ಇದು ಯಾವ ಬಾಗಿಲಿನಗಳಿ +ಕಟ ಕಟ ಸದ್ದು +ತೆರೆದರೆ ನೂರೆಂಟು ಪ್ರಶ್ನೆ +ಈಗ ಹೊತ್ತೇನು? +ಹೊತ್ತಿಗೆ ಹಿಂದಿಲ್ಲ ಮುಂದಿಲ್ಲ +ಆದರ ಮೈಯ್ಯೆಲ್ಲ ಮರುಕಳಿಸುವ ನೆನಪು. +***** +ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […] +ಅಕ್ಷರಗಳ ಹೊತ್ತುಕೊಂಡು ಮಧ್ಯಾಹ್ನದ ರಣ ಬಿಸಿಲಿನಲ್ಲಿ ಅಲೆಯುತ್ತಿದ್ದೆ. ಕುದಿಯುವ ತಲೆ ಸೀಳಾಗಿ ಶಬ್ದಗುಚ್ಛಗಳೆಲ್ಲ ತೇಲತೊಡಗಿದವು ವರ್ತಮಾನದ ಒಳಗೆ ಇವುಗಳ ಪದರುಗಳ ಬಿಡಿಸಿ ಚರ್ಮ ಒ೦ದೊ೦ದಾಗಿ ಕಳಚಿ ತಂಪು ಕಾಯಲು ನಿಂತೆ ಮೋಸಂಬಿ ತೊಳೆ ತೊಳೆ […] +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_84.txt b/Kannada Sahitya/article_84.txt new file mode 100644 index 0000000000000000000000000000000000000000..cdfaf187d7b79dd6710ee1a881159bcce4a54f5c --- /dev/null +++ b/Kannada Sahitya/article_84.txt @@ -0,0 +1,50 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಸಾಹಿತ್ಯ ಪರಿಷತ್ ಕಳೆದ ಶತಮಾನದ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿ ಬೆಳೆದ ಸಂದರ್ಭಕ್ಕೂ ಈಗ ೨೦೦೨ನೇ ಇಸವಿಯಲ್ಲಿ ನಡೆಯುತ್ತಿರುವ ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಮ್ಮ ನಾಡಿನ ಸಾಂಸ್ಕೃತಿಕ ಅವಶ್ಯಕತೆಗೂ ಇರುವ ವ್ಯತ್ಯಾಸವನ್ನು ಗ್ರಹಿಸದೆ ಸಾಹಿತ್ಯ ಪರಿಷತ್ ಬಗ್ಗೆ ಮಾಡುವ ಟೀಕೆಯೂ ಅರ್ಥಪೂರ್ಣವಾಗಲಾರದು. ಒಂದು ಸಂಸ್ಥೆ ದಶಕಗಳ ಕಾಲ ಬೆಳೆಯುತ್ತಾ ಬರಬೇಕಾದರೆ ಅದು ಕೇವಲ ಸರಕಾರಿ ಸಂಪರ್ಕದಿಂದ ಮಾತ್ರ ಸಾಧ್ಯವಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನರೊಂದಿಗೆ ಒಡನಾಟವಿಲ್ಲದೆ ಸಂಸ್ಥೆಯೊಂದು ಬೆಳೆಯಲಾರದು. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಂದರ್ಭದಲ್ಲೂ ಶ್ರೇಷ್ಠತೆಯೇ ಜಯಗೊಳಿಸುತ್ತದೆ ಎಂದೂ ನಂಬಬೇಕಿಲ್ಲ. ಹೀಗೆ ಶ್ರೇಷ್ಠತೆಯನ್ನು ಕಡೆಗಣಿಸುವುದೂ ಕೆಲವೊಮ್ಮೆ ಪ್ರಭು ವರ್ಗವನ್ನು (ಅರಿಸ್ಟಾಕ್ರಸಿ) ನಿಯಂತ್ರಿಸುವ ಪ್ರಜಾಪ್ರಭುತ್ವದ ಕ್ರಮವೂ ಆಗಿ ಪರಿಣಮಿಸುತ್ತದೆ. +ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಕಾಲದ ಆದರ್ಶ ಇಂದಿನ ಗುರಿ ಅಲ್ಲ. ಡಿ.ವಿ.ಜಿ ಅವರ ಜ್ಞಾಪಕ ಚಿತ್ರ ಶಾಲೆಯನ್ನು ಓದಿದರೆ ಎ.ಆರ್. ಕೃಷ್ಣಶಾಸ್ತ್ರಿ, ಬೆಳ್ಳಾವೆ, ಟಿ.ಎಸ್ ವೆಂಕಣ್ಣಯ್ಯ ಇವರೆಲ್ಲಾ ಯಾವ ಕ್ರಮದಲ್ಲಿ ಪರಿಷತ್ತನ್ನು ಕಟ್ಟಲು ದುಡಿದರು, ಕನ್ನಡದ ಜೊತೆ ಒಂದು ನಾಡನ್ನು ಕಟ್ಟಲು ಕನ್ನಡದ ಅನೇಕ ಹಿರಿಯ ಚೇತನಗಳು ಹೇಗೆ ದುಡಿದರು, ನಿಸ್ವಾರ್ಥದಿಂದ ಒಂದು ಆದರ್ಶಕ್ಕಾಗಿ ಯಾವೆಲ್ಲ ರೀತಿ ಶ್ರಮ ವಹಿಸಿದರು ಎಂಬುದೂ ತಿಳಿಯುತ್ತದೆ. +ಬರಹಗಾರರು ಇರುವ ಸಂಸ್ಥೆ ನಿರಂತರವಾಗಿ ಒಂದು ಒತ್ತಡವನ್ನು ಎದುರಿಸಬೇಕಾಗುತ್ತದೆ. ಏಕಾಂತದಲ್ಲಿ ಸೃಷ್ಟಿಗೊಳ್ಳುವ ಬರವಣಿಗೆಯ ಅಂತರಂಗದ ಅವಶ್ಯಕತೆಗೂ ಜನರನ್ನು ಒಡಗೊಂಡಿರುವ ಸಮ್ಸ್ಥೆಯ ಬಾಹ್ಯ ಸಂಘಟನಾ ಅವಶ್ಯಕತೆಗೂ ಇರುವ ವ್ಯತ್ಯಾಸದಲ್ಲೆ ಈ ಒತ್ತಡ ನಿರ್ಮಾಣವಾಗುತ್ತದೆ. ಸಾಧಿಸಬೇಕಾದ ಆದರ್ಶ, ಅನಿವಾರ್ಯವಾದೊಂದು ಸಾಂಸ್ಕೃತಿಕ ಸಂದರ್ಭ, ಇನ್ನಾರದೋ ಸಂಘಟನಾ ಚಾತುರ್ಯದ ನಾಯಕತ್ವ, ಹೀಗೆ ಅನೇಕ ಚಾರಿತ್ರಿಕ, ಸಾಂದರ್ಭಿಕ ಅನಿವಾರ್ಯತೆಯ ಶಿಶುವಾಗಿ ಅನೇಕ ಸಲ ಸಂಸ್ಥೆಗಳು ಬೆಳೆಯುತ್ತವೆ. ಇದನ್ನೆ ೬೯ನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಯು.ಆರ್.ಅನಂತಮೂರ್ತಿಯವರು ೧೯೯೭ರಷ್ಟು ಹಿಂದೆಯೆ ಕನ್ನಡ ಸಾಹಿತ್ಯ ಪರಿಷತ್ ವಜ್ರ ಮಹೋತ್ಸವ ಆಚರಿಸಿದ ಸಂದರ್ಭದಲ್ಲಿ ಹೇಳಿದ್ದಾರೆ. +ಏಕಾಂಗಿತನ +ಬರಹಗಾರನೊಬ್ಬನ ‘ಏಕಾಂಗಿತನ’ದ ಶಕ್ತಿ ಅವನ ಸೃಜನಶೀಲತೆಯ ಹಿನ್ನೆಲೆಯಲ್ಲಿ ಇರುತ್ತದೆ. ಏಕಾಂಗಿತನದಲ್ಲಿ ಸೃಷ್ಟಿಕಾರ್ಯ ನಡೆದರೂ, ಇದನ್ನು ಜನರಿಗೆ ತಲುಪಿಸಬೇಕು, ಸಮಾಜ ಒಳ್ಳೆಯ ಸಾಹಿತ್ಯವನ್ನು ಸ್ವೀಕರಿಸಬೇಕು ಎಂಬ ಪ್ರಜ್ಞೆ ಲೇಖಕನನ್ನು ಸಾಮಾಜಿಕನನ್ನಾಗಿ ಮಾಡುತ್ತದೆ. ಭಿನ್ನಾಭಿಪ್ರಾಯದ ಸಂವಾದವೇ ಸಾಹಿತ್ಯ ವಿಮರ್ಶೆಯ ಚಲನಶೀಲತೆ. ಆದ್ದರಿಂದ ಲೇಖಕನಿಗೆ ಸಾಹಿತ್ಯವನ್ನು ಜೀವಂತವಾಗಿಡಲು ಅಪ್ರಿಯವಾಗಿ ನಡೆದುಕೊಳ್ಳುವ ಧೈರ್ಯವಿರಬೇಕಾಗುತ್ತದೆ. +ಆದರೆ ವಜ್ರಮಹೋತ್ಸವದ ಸಂದರ್ಭದಲ್ಲಿ ಆಡಳಿತ ವರ್ಗದ ಜೊತೆ ಅಪ್ರಿಯವಾಗಬಲ್ಲ ಧೈರ್ಯ ಪರಿಷತ್ತಿಗೆ ಇಲ್ಲ ಎಂಬುದೇ ಅನಂತಮೂರ್ತಿಯವರ ಆಕ್ಷೇಪವಾಗಿತ್ತು. ಪರಿಷತ್ತು ಹುಟ್ಟಿದ ಸಂದರ್ಭದಲ್ಲಿ ಕನ್ನಡದ ಅಗತ್ಯಕ್ಕಾಗಿ ಅಪ್ರಿಯವಾಗಬಲ್ಲ ಧೈರ್ಯ ಹೊಂದಿತ್ತು. ಮಹಾರಾಷ್ಟ್ರದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸರ್ವಾಧಿಕಾರದ ವಿರುದ್ಧ ಶ್ರೀಮತಿ ದುರ್ಗಾ ಭಾಗವತ ಅಧ್ಯಕ್ಷ ಸ್ಥಾನದಿಂದ ಆಡಿದ ಮಾತುಗಳನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಸಂಸ್ಥೆಗಳಿಂದ ಆಡುವುದು ಸಾಧ್ಯವಾಗದಿದ್ದುದು ಶೋಚನೀಯ ಎಂದು ಅನಂತಮೂರ್ತಿಯವರು ಪರಿಷತ್ತಿನ ಬಗ್ಗೆ ಆಗ ಹೇಳಿದ ಮಾತುಗಳು: +‘ಉತ್ಸಾಹಶೀಲರಾದ ಪರಿಷತ್ತಿನ ಅಧ್ಯಕ್ಷ ಶ್ರೀ.ಜಿ. ನಾರಾಯಣರು ನಿಘಂಟು ಇತ್ಯಾದಿ ಕೆಲಸಗಳನ್ನು ಸಾಧ್ಯವಿದ್ದಷ್ಟು ದಕ್ಷತೆಯಿಂದ ಮಾಡುತ್ತಿಲ್ಲವೆಂದಲ್ಲ. ಆದರೆ ಅವರು ನಮ್ಮ ರಾಜಕಾರಣಿಗಳನ್ನು ಇದಕ್ಕಾಗಿ ಅನುಸರಿಸಬೇಕಾದ್ದನ್ನು ಗಮನಿಸಿದಾಗ ಬೇಸರವಾಗುತ್ತದೆ. ಆಗಬೇಕಾದ ಕೆಲಸಕ್ಕೆ ಇಷ್ಟೆಲ್ಲ ರಾಜಕಾರಣ ಪ್ರಜಾತಂತ್ರದಲ್ಲೂ ಅಗತ್ಯವೆ? ಶ್ರೀ.ಜಿ. ನಾರಾಯಣರು ಹೆಚ್ಚು ಸ್ವತಂತ್ರರಾಗಬೇಕೆಂದು ಲೇಖಕರು ಈ ವಜ್ರಮಹೋತ್ಸವ ಸಂದರ್ಭದಲ್ಲಿ ಒತ್ತಾಯಪಡಿಸಬೇಕು. ಅದು ಅವರಿಗೂ ಒಳ್ಳೆಯದು. ಪರಿಷತ್ತಿಗೂ ಒಳ್ಳೆಯದು.’ +ಎಚ್ಚರಿಕೆಯ ಘಂಟೆ +ಸಾಂಸ್ಕೃತಿಕ ರಾಜಕಾರಣವನ್ನು ಪ್ರಭುತ್ರ ಸದಾ ಕಿರುಗಣ್ಣಿನ ಪರೀಕ್ಷೆಯಲ್ಲಿ ಇಟ್ಟಿರುತ್ತದೆ. ಪ್ರಭುತ್ವದ ತೋರುಗಾಣುವಿಕೆಗೆ, ಬೌದ್ಧಿಕವಲಯದ ಪರೋಕ್ಷ ನಿಯಂತ್ರಣಕ್ಕೆ ಇದು ಆಡಳಿತದ ಅವಶ್ಯಕತೆ, ಆದರೆ ಆಮಿಶಗಳನ್ನು ಮೀರಿ ಸಾಂಸ್ಕೃತಿಕ ವಲಯ ಸದಾ ಸನ್ನದ್ಧ ಜಾಗ್ರತ ಸ್ಥಿತಿಯಲ್ಲಿರಬೇಕಾಗುತ್ತದೆ. ಹಾಗಾಗದಾಗ ಚಿಂತನಶೀಲರು ಎಚ್ಚರಿಕೆಯ ಘಂಟೆಯನ್ನು ಬಾರಿಸುವುದು ಅನಿವಾರ್ಯ. ಇಂತಹ ಎಚ್ಚರಿಕೆಯ ಘಂಟೆಗಳನ್ನು ಬಾರಿಸಿದವರು ಸಂಸ್ಥೆಗಳನ್ನು ತಿರಸ್ಕರಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಫೊ. ಗೋಪಾಲಕೃಷ್ಣ ಅಡಿಗ, ಡಾ ಯು.ಆರ್. ಅನಂತಮೂರ್ತಿ, ಡಾ. ಚಂದ್ರಶೇಖರ ಪಾಟೀಲ ಇವರು ಮತ್ತು ಇಂತಹ ಅನೇಕರು ಪರಿಷತ್ತಿನ ಸಂದರ್ಭದಲ್ಲಿ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತಾ ಬಂದಿದ್ದಾರೆ. ಡಾ. ಪಾಟೀಲರು ಬಳಿಕ ಪರಿಷತ್ತಿನ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದರು. ಡಾ. ಅನಂತಮೂರ್ತಿ ಈ ಸಲದ ಅಧ್ಯಕ್ಷರು. ೧೯೭೯ರಲ್ಲಿ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಫ್ರೊ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣದ ಮೊದಲಿಗೆ ಹೀಗೆ ಹೇಳಿದರು: +‘ಅಧ್ಯಕ್ಷನಾಗಿ ಆಯ್ಕೆ ಅನಿರೀಕ್ಷಿತ ಪ್ರಸಂಗ. ಅದನ್ನು ಒಂದು ಗೌರವವೆಂದು, ಕನ್ನಡ ಜನತೆ ತೋರಿದ ಮನ್ನಣೆಯೆಂದು ಭಾವಿಸಿ ವಿನಯದಿಂದ ಸ್ವೀಕರಿಸಿದ್ದೇವೆ. ನಮ್ಮ ದೇಶದಲ್ಲಿ ಯಾವುದೂ ಈಗ ಯೋಗ್ಯತೆಯ ತೂಕದ ಮೇಲೆ ನಡೆಯುತ್ತಿಲ್ಲವಾಗಿ ಸಾಹಿತ್ಯವೂ ಈ ಸಾಮಾನ್ಯ ಸೂತ್ರಕ್ಕೆ ಹೊರತಾಗಿಲ್ಲವಾದ್ದರಿಂದ ಇದು ನಿಜವಾದ ಯೋಗ್ಯತೆಗೆ ಸಂದ ಗೌರವವೋ ಎಂಬ ಸಂದೇಹಕ್ಕೆ ಆಸ್ಪದವಿದೆ…..ಜನಶಕ್ತಿಯ ಮುಂದೆ ಈ ಜಗತ್ತಿನಲ್ಲಿ ಇನ್ನು ಯಾವ ಶಕ್ತಿಯೂ ಇಲ್ಲ. ಅದೃಶ್ಯ ಶಕ್ತಿಗಳು ಕೆಲಸ ಮಾಡುವುದು ಜನಶಕ್ತಿಗಳ ಮೂಲಕವೇ’. +ಅದೃಶ್ಯಶಕ್ತಿಗಳ ವೇದಿಕೆ +ಇಂದು ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಅದೃಶ್ಯ ಶಕ್ತಿಗಳ ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲು ಶಕ್ತವೇ ಎಂಬುದು ಮುಖ್ಯ ಪ್ರಶ್ನೆ. ಸಾಹಿತ್ಯ ಸಮ್ಮೇಳನದಲ್ಲಿ ಜಾತ್ರೆಯ ರೀತಿ ಜನ ಸೇರುತ್ತಾರೆ. ಸಾಮಾನ್ಯ ಓದುಗರ ಉತ್ಸಾಹ, ಉಲ್ಲಾಸ, ಉಮೇದುಗಳು, ಹರಳುಗತ್ಟುತ್ತವೆ. ದೂರದ ಊರಿನವರಿಗೆ ಹೆಸರು ಕೇಳಿದ, ಓದಿ ಮಾತ್ರ ತಿಳಿದ ಎಷ್ಟೋ ಸಾಹಿತಿಗಳನ್ನು ನೋಡುವ; ಅವರ ಮಾತು ಕೇಳುವ ಅವಕಾಶವಾಗುತ್ತದೆ. ನಾನು ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ನಮ್ಮ ಊರಿನಿಂದ ಎರಡು ತಾಲ್ಲೂಕುಗಳ ಆಚೆ ಇದ್ದ ಕಾರ್ಕಳದಲ್ಲಿ ನಡೆದ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಿ.ಜಿ.ಪಿ.ರಾಜರತ್ನಂ ಬರುತ್ತಾರೆ ಎಂದು ಬಹುಕಷ್ಟಬಿದ್ದು ಹೋದ್ದು ಇನ್ನೂ ನೆನಪಿದೆ. ರಾಜರತ್ನಂ ಅವರನ್ನು ನೋಡುವುದು ಅವರ ಭಾಷಣ ಕೇಳುವುದೇ ಆ ಪ್ರಯಾಣದ ಮುಖ್ಯ ಉದ್ದೇಶ. ಆ ತನಕ ನಾನು ರಾಜರತ್ನಂ ಅವರನ್ನು ನೋಡಿರಲಿಲ್ಲ. +ಸಾಹಿತ್ಯ ಸಮ್ಮೇಳನ ಒಂದು ಜಾತ್ರೆ ರೀತಿಯಲ್ಲಿ ಬಹುಶಃ ನಮ್ಮ ದೇಶದಲ್ಲಿ ಮಾತ್ರ ನಡೆಯುವುದೋ ಏನೋ. ಆದರೆ ಜನ ಹೀಗೆ ಉಲ್ಲಸಿತರಾಗಿ ಸೇರುವ ಅವಕಾಶ ಸಮಂಜಸ ಸಂವಹನಕ್ಕೆ ಬಳಕೆಯಾದರೆ ಚೆನ್ನ ಎಂದು ಪರಿಷತ್ತನ್ನು ಟೀಕಿಸುವವರೂ ಹೇಳುತ್ತಾರೆ. ಅನಂತಮೂರ್ತಿಯವರು ಈ ಬಾರಿ ಅಧ್ಯಕ್ಷರಾದುದನ್ನು ತಮ್ಮ ಇತ್ತೀಚಿನ ಲೇಖನದಲ್ಲಿ ಪ್ರಸ್ತಾಪಿಸುತ್ತಾ ವಿಚಾರವಾದಿ ಪ್ರೊ.ಕೆ.ರಾಮದಾಸ ಅವರೂ ಕೂಡಾ ಹೀಗೆ ಒಟ್ಟಾಗಿ ಜನ ಸೇರುವ ಅವಕಾಶವನ್ನು ಹೇಗೆ ಜನೋಪಯೋಗಿ ಸಂವಹನ ಸಾಧ್ಯತೆಯಾಗಿ ಬಳಸಿಕೊಳ್ಳಬಹುದು ಎಂದು ಚಿಂತಿಸುತ್ತಾರೆ. +ಅನಂತಮೂರ್ತಿಯವರನ್ನು ಕಳೆದವಾರ ದೂರದರ್ಶನಕ್ಕಾಗಿ ಸಂದರ್ಶಿಸುವಾಗ, ಸಮ್ಮೇಳನದಲ್ಲಿ ಹೀಗೆ ಜನ ಜಾತ್ರೆ ನೆರೆದಾಗ ಹೇಳಬೇಕಾದ್ದನ್ನು ಬಹಳ ತೆಳ್ಳಗೆ ಮಾಡಿ (ಆi-ಟuಣe) ಹೇಳಬೇಕಾದ ಒತ್ತಾಡ ಉಂಟಾಗುವುದಿಲ್ಲವೆ ಎಂದು ಕೇಳಿದೆ. ಅನಂತಮೂರ್ತಿಯವರ ಚಿಂತನೆ ಆ ನಿಟ್ಟಿನಲ್ಲಿ ನಿರ್ಧಿಷ್ಟ. ಹೇಳಬೇಕಾದ್ದನ್ನು ಹೇಳಬೇಕಾದ ಸ್ಪಷ್ಟತೆಯಲ್ಲಿ ಹೇಳಬೇಕು. ಅದರಲ್ಲಿ ಸ್ವಲ್ಪ ಎಲ್ಲರಿಗೂ ತಲುಪುತ್ತದೆ. ಹೇಳಿದ ವಿಚಾರ ಅಷ್ಟು ಜನರಲ್ಲಿ ಕೆಲವರಿಗಾದರೂ ಗಾಢವಾಗಿ ತಟ್ಟಿದರೆ ವಿಚಾರ ಪ್ರವಾಹ ಪ್ರಾರಂಭವಾದಂತೆ. ಜನರಿಗೆ ತಿಳಿವಳಿಕೆ, ಮಾಹಿತಿ ನೀಡಿ, ಅವರನ್ನು ಸನ್ನದ್ಧರಾಗಿ ಮಾಡುವುದೂ ಒಂದು ಅವಶ್ಯಕತೆ ಎಂದ ಅನಂತಮೂರ್ತಿ, ದಿವಂಗತ ಗೋಪಾಲಗೌಡರು ತಮ್ಮ ಭಾಷಣಗಳಲ್ಲಿ ತೀರಾ ಮುಗ್ಧ ಜನರಿಗೆ ಯಾವ ರೀತಿ ಡಾರ್ವಿನ್ನನ ವಿಕಾಸವಾದದಿಂದ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದರು ಎಂಬ ವಿವರ ನೀಡಿದರು. ಜನರಲ್ಲಿ ವೈಚಾರಿಕತೆಯನ್ನು ಮೂಡಿಸಲು ನಾಯಕನೊಬ್ಬ ಅನುಸರಿಸುತ್ತಿದ್ದ ಅನೇಕ ಮಾರ್ಗಗಳಲ್ಲಿ ಅದೂ ಒಂದು. ಹಾಗೆಯೇ ಲೇಖಕನೊಬ್ಬನೂ ನಾಗರಿಕನಾಗಿ ಸಮಾಜಕ್ಕೆ ಸಲ್ಲಿಸಬೇಕಾದ ಕರ್ತವ್ಯಗಳಿವೆ. ಅದನ್ನು ಪೂರೈಸುವುದೂ ಲೇಖಕನೊಬ್ಬನ ಕರ್ತವ್ಯ ಎಂದು ಅನಂತಮೂರ್ತಿ ಭಾವಿಸುತ್ತಾರೆ. +ಜಾಗತೀಕರಣದ ಸಂದರ್ಭ +ಬಹುಶಃ ಇಂದಿನ ಜಾಗತೀಕರಣದ ಸಂದರ್ಭ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಅಲ್ಲಾಡಿಸುತ್ತಿವೆ. ಜಗತ್ತಿನಾದ್ಯಂತ ಇಂದಿನ ಸಂಪರ್ಕ ಸಾಧನಗಳ ಸಹಾಯದಿಂದ ಒಂದೇ ಮಟ್ಟವನ್ನೂ ಒಂದೇ ಸಂಸ್ಕೃತಿಯ ಹರಹನ್ನೂ ತರಲು ಅದು ಪ್ರಯತ್ನಿಸುತ್ತದೆ. ಕನ್ನಡ ಸಂಸ್ಕೃತಿಯೂ ಈ ಧಾಳಿಗೆ ಹೊರತಲ್ಲ. ಅಂತಹ ಒಂದು ಜಾಗತೀಕರಣದ ಸಾಂಸ್ಕೃತಿಕ ಧಾಳಿಯನ್ನು ಎದುರಿಸಲು ಸಾಹಿತ್ಯ ಸಮ್ಮೇಳನದಂತಹ ಸಂದರ್ಭಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಲು ಸಾಧ್ಯ ಎಂದು ನಾವು ಈಗ ಚಿಂತಿಸುವ ಕಾಲ ಬಂದಿದೆ. ಏಕರೂಪಿ ಸಂಸ್ಕೃತಿಯ ಪ್ರಭಾವವನ್ನು ತಡೆಯಲು ಅದೃಶ್ಯ ಜನಶಕ್ತಿಯ ವೇದಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಅಗತ್ಯ ಇಂದು ಹೆಚ್ಚಿದೆ. +ಒಂದು ಆರೊಗ್ಯವಂತ ಸಾಂಸ್ಕೃತಿಕ ಸಂದರ್ಭದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆಗಳು ಅನಿವಾರ್ಯ. ಅದು ಆರೋಗ್ಯಕಾರಿ ವಿಮರ್ಶಾ ಪ್ರಜ್ಞೆಯನ್ನು ಬೆಳೆಸಬೇಕು. ಸಂಸ್ಥೆಯೊಂದರ ಸಂದರ್ಭದಲ್ಲೂ ಅದು ನಡೆದಿದೆ. ನಡೆಯುತ್ತದೆ. ಸಾಹಿತ್ಯ ಪರಿಷತ್ತಿನ ಸಂದರ್ಭದಲ್ಲೇ ಇಂತಹ ಅನೇಕವನ್ನು ಪಟ್ಟಿ ಮಾಡಬಹುದು. +೧. ಕಡೆಂಗೋಡ್ಲು ಶಂಕರ ಭಟ್ಟರು ಅಧ್ಯಕ್ಷರಾಗಿದ್ದ ಕಾರವಾರ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ನವ್ಯ ಸಾಹಿತ್ಯದ ಮೇಲೆ ಹರಿಹಾಯ್ದರು. ಸಿಂಹದ ಗವಿಯನ್ನು ಪ್ರವೇಶಿಸುವ ಬಲಿ ಪಶುವಿನಂತೆ ಆ ಸಂದರ್ಭದಲ್ಲಿ ಮಾತನಾಡಿದವರು ಡಾ.ಬಿ.ಸಿ.ರಾಮಚಂದ್ರ ಶರ್ಮರು. ಇತ್ತೀಚೆಗೆ ಜಿ.ಎಚ್ ನಾಯಕರು ಬರೆದ ಒಂದು ಲೇಖನದಲ್ಲಿ ಆ ಬಳಿಕ, ಅದೇ ಸಮ್ಮೇಳನದಲ್ಲಿ ಡಾ. ಶಿವರಾಮ ಕಾರಂತರು ಬೇಂದ್ರೆಯವರ ವಿಚಾರವನ್ನು ಒಪ್ಪದೆ ಯಾವ ರೀತಿ ಉತ್ತರ ನೀಡಿದರು ಎಂದು ತಿಳಿಸಿದ್ದಾರೆ. +೨. ಅ.ನ.ಕೃ.ಅವರು ಅಧ್ಯಕ್ಷರಾದ ಮಣಿಪಾಲ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ವಿವಾದ ಉಂಟಾಯಿತು. ಕೀರ್ತನ ಕೇಸರಿ ಶ್ರೀ ಶಿವಮೂರ್ತಿಶಾಸ್ತ್ರಿಗಳು ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರು. +೩. ದೇ.ಜ.ಗೌ. ಬೆಂಗಳೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅಸಮಧಾನದ ಹೊಗೆಯೆದ್ದಿತು. ಲಂಕೇಶ್ ಮೊದಲಾದವರು ಕರಪತ್ರ ಇತ್ಯಾದಿ ಹಂಚಿದರು. ಆಯ್ಕೆಯ ಮೂಲ್ಯಮಾಪನವನ್ನು ಗುರಿಯಾಗಿಟ್ಟುಕೊಂಡು ಅಡಿಗರು ಒಂದು ಲೇಖನ ಬರೆದರು. ವೈ.ಎನ್.ಕೆ.ಆಗ ಪ್ರಜಾವಾಣಿಯಲ್ಲಿದ್ದರು. ಪ್ರಜಾವಾಣಿ ಲೇಖನಗಳು ಪರ ವಿರೋಧ ಘರ್ಷಣೆಗೆ ವೇದಿಕೆಯಾಯಿತು. +೪. ಅಡಿಗರು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅದನ್ನು ಪ್ರತಿಭಟಿಸಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. +೫. ಆರ್.ಸಿ.ಹಿರೇಮಠರು ಸಮ್ಮೇಳನದ ಅಧ್ಯಕ್ಷರಾದರು. ವಿರೋಧವಾಗಿ ‘ಜಾಗ್ರತ ಸಾಹಿತ್ಯ ಸಮಾವೇಶ’ವು ನಡೆಯಿತು. ಪರ್ಯಾಯವಾಗಿ ನಡೆದ ಜಾಗ್ರತ ಸಾಹಿತ್ಯ ಸಮಾವೇಶದಲ್ಲಿ ಕರ್ನಾಟಕದಾಧ್ಯಂತ ಇದ್ದ ಪ್ರಗತಿಪರ ಸಾಹಿತಿಗಳು, ಚಿಂತಕರ ಪರವಾಗಿ ಮುಂಚೂಣಿಯಲ್ಲಿ ಅನಂತಮೂರ್ತಿ, ಅಡಿಗ, ಲಂಕೇಶ್, ತೇಜಸ್ವಿ, ದೇವನೂರು, ಕೆ.ವಿ.ಸುಬ್ಬಣ್ಣ, ಡಿ.ಆರ್., ಕಿ.ರಂ., ಶೂದ್ರ ಶ್ರೀನಿವಾಸ, ಕೆ.ರಾಮದಾಸ, ಡಾ.ಸಿದ್ಧಲಿಂಗಯ್ಯ, ವೈದೇಹಿ ಮುಂತಾದವರು ಇದ್ದರು. +೬. ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ಡಾ.ಯು.ಆರ್. ಅನಂತಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾದರು ಅವರ ಆಯ್ಕೆಯ ಸುದ್ದಿ ಹೊರಬಿದ್ದ ಕ್ಷಣದಿಂದ ಒಂದಲ್ಲ ಒಂದು ವಿವಾದ, ಚರ್ಚೆ ನಡೆಯುತ್ತಲೇ ಇದೆ. ಆಯ್ಕೆ ಸರ್ವಾನುಮತ ಹೌದೋ ಅಲ್ಲವೋ ಎಂಬುದರಿಂದ ಉಂಟಾದ ವಿವಾದ ಒಂದಕ್ಕಿನ್ನೊಂದು ಸೇರಿ ಚರ್ಚೆ ಬೆಳೆಯುತ್ತಲೇ ಇದೆ. ಡಾ.ಆರ್.ಸಿ. ಹಿರೇಮಠರ ಬಗ್ಗೆ ಅನಂತಮೂರ್ತಿ ಹೇಳಿದರು ಎನ್ನಲಾದ ಮಾತಿನ ಬಗ್ಗೆ ಪ್ರೊ. ಚೆನ್ನವೀರ ಕಣವಿಯವರೂ ಸೇರಿದಂತೆ ಧಾರವಾಡ ಕಡೆಯ ಐವತ್ತು ಮಂದಿ ಬರಹಗಾರರು ಮತ್ತು ಸಾಹಿತ್ಯ ಪರಿಚಾರಕರು ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದರು. ‘ಸಾಹಿತ್ಯ ಭಾಷೆಯ ಮೂಲಕ ಸಂಬಂಧಗಳನ್ನು ಆಚರಿಸುವ ಕ್ರಮವೇ ಸಮಷ್ಟಿರೂಪದ್ದು’. ಕನ್ನಡ ಪರಂಪರೆಯನ್ನು ತನ್ನ ಅನನ್ಯತೆಯಿಂದ ಒಂದುಗೂಡಿಸುವ ಪ್ರಕ್ರಿಯೆಯನ್ನು ತಮ್ಮ ಅಪ್ರಬುದ್ಧ ಜಾತಿ ಸೂತಕ ನೆಲೆಯಲ್ಲಿ ಐವತ್ತು ಮಂದಿ ಬರಹಗಾರರು ವಿರೋಧಿಸುವುದು ಸರಿಯಲ್ಲ ಎಂದು ಹಂಪಿಯಿಂದ ಡಾ. ಕರಿಗೌಡ ಬೀಚನಹಳ್ಳಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ಇನ್ನೂ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. +ಹೀಗೆ ಅನೇಕ ಚರ್ಚೆ ವಿವಾದಗಳನ್ನು ಪಟ್ಟಿ ಮಾಡಬಹುದು. ಆದರೆ ಮುಖ್ಯವಿಚಾರ ಸಾಹಿತ್ಯ ಪ್ರಸಾರ ಹಾಗೂ ಪ್ರಚಾರದ ಉದ್ದೇಶಕ್ಕೆ ಜನಸಮುದಾಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಆಗಿದೆ. ಕನ್ನಡ ಬರಹಗಾರ ಕೆ. ಸತ್ಯನಾರಾಯಣ ಸಾಹಿತ್ಯ ಪರಿಷತ್ತೂ ಸೇರಿದಂತೆ ಕನ್ನಡಕ್ಕಾಗಿ ಸಾರ್ವಜನಿಕ ಹಣದ ಹತ್ತಾರು ಸಂಸ್ಥೆಗಳು ಇರುವುದು ಅವಶ್ಯವೆ ಎಂದು ಕೇಳಿದ್ದಾರೆ. ಅಕಾಡೆಮಿ ಕನ್ನಡ ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು, ಪುಸ್ತಕ ಪ್ರಾಧಿಕಾರ, ಹೀಗೆ ಹಬ್ಬಿರುವ ಸಂಸ್ಥೆಗಳು ಇಂದು ಪರಸ್ಪರ ಪೂರಕವಾಗಿ ಒಂದು ಸರಣಿಯನ್ನು ರೂಪಿಸಿಕೊಂಡು ಸಾರ್ವಜನಿಕ ಹಣ ಹಾಳಾಗದಂತೆ ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ತೊಡಗಿಕೊಳ್ಳಬೇಕಾಗಿದೆ. +ಬಹುಶಃ ಸರಕಾರ ಖರ್ಚುಮಾಡುವ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಸಂಸ್ಕೃತಿಗಾಗಿ ಖರ್ಚು ಮಾಡುವ ಹಣವೇನೂ ದೊಡ್ಡ ಮೊತ್ತವಲ್ಲ. ಆದರೂ ವ್ಯಯವಾಗುವ ಸಾರ್ವಜನಿಕ ಹಣದಿಂದ ಕನ್ನಡ ನಾಡು ನುಡಿಗೆ ಹೆಚ್ಚಿನ ಲಾಭವಾಗಬೇಕು. ಯಾವುದಾದರೂ ಅವಶ್ಯಕ, ಸಾಧ್ಯವಾಗುವ ಕೆಲವೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲು ನಮ್ಮ ಶಕ್ತಿಯನ್ನು ಏಕಾಗ್ರತೆಗೊಳಿಸಬೇಕಾದ ಅವಶ್ಯಕತೆಯಿದೆ. ಉದಾಹರಣೆಗೆ ಪ್ರತಿ ಊರಿಗೊಂದು ಉತ್ತಮ ಗ್ರಂಥಾಲಯ. ಅಲ್ಲಿ ಎಲ್ಲಾ ಮುಖ್ಯ ಕನ್ನಡ ಪುಸ್ತಕಗಳೂ ಸಿಗುವ ವ್ಯವಸ್ಥೆ. ನಗರದ ಗ್ರಂಥಾಲಯಗಳಿಗೆ ಸಾಕಷ್ಟು ಕನ್ನಡ ಪುಸ್ತಕಗಳ ಪ್ರತಿಗಳು, ಪತ್ರಿಕೆಗಳು ಲಭ್ಯ ಇರುವ ವ್ಯವಸ್ಥೆ, ಇತ್ಯಾದಿ. +ನೀನಾಸಮ್ ಸಾಧನೆ +ನಮ್ಮ ಕಣ್ಣೆದುರಿಗೇ ನೀನಾಸಂ ನಂತಹ ಒಂದು ಸಂಸ್ಥೆ ಬಹು ಸಣ್ಣ ಬಂಡವಾಳದಲ್ಲಿ ರಾಜ್ಯಾದ್ಯಂತ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ ಉದಾಹರಣೆಗಳಿವೆ. ತನಗೆ ಮ್ಯಾಗ್‌ಸೆಸೆ ಬಂದ ಮೊತ್ತದಿಂದ, ಕೆ.ವಿ.ಸುಬ್ಬಣ್ಣ ಸ್ಥಾಪಿಸಿದ ನೀನಾಸಂ ಪ್ರತಿಷ್ಠಾನ ರಾಜ್ಯಾದ್ಯಂತ ಅನೇಕ ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತಾ ಇದೆ. ಬಹು ಸಣ್ಣ ಮೊತ್ತದ ಹಣ, ದೊಡ್ಡ ಪಮಾಣ. ಚಿಕ್ಕಪುಟ್ಟ ಊರು ಹಳ್ಳಿಗಳಲ್ಲೂ ಅದು ಅಧ್ಯಯನ ಶಿಬಿರ ನಡೆಸಿದೆ, ನಡೆಸುತ್ತಾ ಇದೆ. +ಇಂದಿನ ಬದಲಾದ ಸಂದರ್ಭದಲ್ಲಿ ಸಾಂಸ್ಕೃತಿಕ ವಿಕೇಂದ್ರೀಕರಣದ ಜ್ವಲಂತ ಉದಾಹರಣೆಯಂತಿರುವ ನೀನಾಸಂನಂತಹ ಸಂಸ್ಥೆಗಳಿಂದ ಅನೇಕ ವಿದ್ಯಮಾನಗಳನ್ನು ಕಲಿಯುವುದಿದೆ. ಸಾಹಿತ್ಯ ಪರಿಷತ್ತು, ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು ಇಂದು ಕನ್ನಡ ಸಂಸ್ಕೃತಿಯ ಕಾಯಕಲ್ಪಕ್ಕಾಗಿ ಹತ್ತಿರ ಬರಬೇಕಾಗಿದೆ. ಸಾಂಸ್ಕೃತಿಕ ವಿಕೇಂದ್ರೀಕರಣದ ಅನೇಕ ಸಾಧ್ಯತೆಗಳನ್ನು ತೋರಿಸಿದ ನೀನಾಸಂ ಮೊದಲಾದ ಸಂಸ್ಥೆಗಳು ನಡೆಸಿಕೊಟ್ಟ ಕಾರ್ಯಕ್ರಮಗಳ ಮಾದರಿಗಳಿಂದ ಇನ್ನೂ ಹೊಸರೀತಿಯ ಕಾರ್ಯಕ್ರಮಗಳನ್ನು ನಾವು ರೂಪಿಸಿಕೊಳ್ಳಬೇಕಾಗಿದೆ. ಜಾತ್ರೆಯಂತೆ ಸೇರುವ ಜನರ ಸಾಹಿತ್ಯಿಕ ಉಲ್ಲಾಸವನ್ನು ಉಳಿಸುವ ಚಿಂತನೆಯನ್ನು ಪ್ರೇರೇಪಿಸುವ ಅನೇಕ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಅಂತಹ ಒಮ್ದು ಹೊಸ ಹುಟ್ಟಿನ ನಾಯಕತ್ವ ವಹಿಸುವ ಶಕ್ತಿ ಈಗ ಇರುವ ಸಂಸ್ಥೆಗಳಿಂದ ಬಂದಿತೋ ಅಥವಾ ಜನರು ಅಂತಹದೊಂದು ನಾಯಕತ್ವವನ್ನು ಸಾಂಸ್ಕೃತಿಕ ಚಳವಳಿಯೊಮ್ದರಲ್ಲಿ ಹುಟ್ಟಿಸಿಕೊಳ್ಳಬೇಕೋ ಏನು ಎಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ. +-ಫೆಬ್ರವರಿ ೨೦೦೨ +***** +-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […] +ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […] +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_85.txt b/Kannada Sahitya/article_85.txt new file mode 100644 index 0000000000000000000000000000000000000000..296d68b5b3bfb540dafa5bbedca43a329acbd4f7 --- /dev/null +++ b/Kannada Sahitya/article_85.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇತಿಹಾಸದಲ್ಲಿ +ಶಕ +ಪುರುಷರು +ಇರುವಂತೆ +ವಿದೂ +ಷಕ +ಪುರುಷರು +ಇದ್ದಾರೆ. +***** +ಬುದ್ಧನಿಗು ಪೆದ್ದನಿಗು ವ್ಯತ್ಯಾಸ ಕೊಂಬು ಮಾತ್ರ ***** +ಪದ್ಯ ಗಿದ್ಯ ಎಂದು ಮೈ ಮರೆತು ಸ್ಕೂಟರ್ ಕೊಳ್ಳಲಿಲ್ಲ, ಸ್ವಂತ ಮನೆ ಮಾಡಿಕೊಳ್ಳಲಿಲ್ಲ, ನಿಮ್ಮ ಕಟ್ಟಿಕೊಂಡು ನಾನು ಕೆಟ್ಟೆ ಎಂದೇನೇನೋ ಗೊಣಗುತ್ತಿದ್ದವಳು – ಸರ್ಕಸ್ಸಿನ ಒಂಟೆಯ ಬಳಿ ತಂದೆಗೆ ಕುತೂಹಲದ ಪ್ರಶ್ನೆ ಕೇಳುತ್ತಿದ್ದ ಕುರುಡು […] +ಫುಟ್‌ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_86.txt b/Kannada Sahitya/article_86.txt new file mode 100644 index 0000000000000000000000000000000000000000..48b9a008c4af4e2586dcfea0798f275db4c109e1 --- /dev/null +++ b/Kannada Sahitya/article_86.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಧ್ಯಾಯ ೮ +ಅದೊಂದು ಭೀಕರ ಅಮಾವಾಸ್ಯೆಯ ದಿನ. +ಅವತ್ತು ಸರೋಜಳನ್ನು ಕೊಂದು ಹಾಕಿಬಿಟ್ಟದ್ದು. ಹಾಗೆಂದು ತಾನು ಅವನ ಕೊರಳಿನ ತಾಯಿತ ಕಾಣುವ ತನಕ ತಿಳಿದದ್ದು. +ಪಂಡಿತ ನಿತ್ಯ ಸಂಜೆ ಬರಲು ತೊಡಗಿದ್ದ. ಸದಾಚಾರದ ಯಾವ ಸಂಕೋಚವೂ ಅವನಲ್ಲಿ ಉಳಿದಿರಲಿಲ್ಲ. ಅವಳಿಗೆ ಸಂಗೀತ ಕಲಿಸುತ್ತಿದ್ದೇನೆಂಬುದು ಅವನಿಗೊಂದು ನೆವ. ಮತ್ತೆ ಮನೆಯ ಹಿತ್ತಲನಲ್ಲಿ ಅವನ ಗಿಡಮೂಲಿಕೆಗಲನ್ನು ಬೆಳೆಸಿಕೊಳ್ಳುವ ಕಾರ್ಯಕ್ರಮ ಬೇರೆ. ಹಿತ್ತಲಿನಲ್ಲಿ ಕೆಮ್ಮಣ್ಣಿನ ಒಂದು ಗುಂಡಿಯಿತ್ತು. ಆಳೆತ್ತರ ಅಗೆದು ತೆಗೆದರೂ ಇನ್ನೂ ಅದರಲ್ಲಿ ಕೆಮ್ಮಣ್ಣು ಉಳಿದಿತ್ತು. ಅವನೇ ಸ್ವತಃ ಇನ್ನಷ್ಟು ಕೆಮ್ಮಣ್ಣು ಅಗೆದು ಗುಂಡಿಯ ಮೇಲೆ ಒಟ್ಟಿದ್ದ. ಅದನ್ನು ನಿತ್ಯ ಯಥೋಚಿತವಾಗಿ ತಾನು ನೆಟ್ಟ ಹೊಸ ಹೊಸ ಮೂಲಿಕೆಗಳ ಬುಡಕ್ಕೆ ಹಾಕುತ್ತಿದ್ದ. ಈ ಆಗಂತುಕ ವನಸ್ಪತಿಗೆ ನಿತ್ಯ ಬೇಕಾದಷ್ಟು ನೀರನ್ನು ತಪ್ಪದೆ ಹೊಯ್ಯುವುದು ಸರೋಜಳ ಕೆಲಸ. +ಬಾಣಲೆಯಲ್ಲಿ ಅವಳು ಕೆಮ್ಮಣ್ಣು ಹೊರುವುದನ್ನು ಶಾಸ್ತಿಗಳು ಕಂಡದ್ದುಂಟು. ತನ್ನೊಳಗಿಂದ ಸೀಳಿಕೊಂಡು ಅಟ್ಟಹಾಸದಿಂದ ಅಬ್ಬರಿಸಿದ್ದ ಉಳುವ ಧ್ವನಿ ಬರಬರುತ್ತ ಒಂದು ವಿಕಾರವಾದ ಶ್ರುತಿಯಂತೆ, ನಾಡಿಯ ಬಡಿತದಂತೆ, ಸಣ್ಣಗೆ ಅವರಲ್ಲಿ ನರಳುತ್ತಲೇ ಮಿಡಿದಿತ್ತು. +ಒಂದು ದಿನ ಸಂಜೆ, ಹಿತ್ತಲಿನಲ್ಲಿ ಆ ಪಂಡಿತ ಪಂಚೆಯನ್ನು ಎತ್ತಿ ಕಟ್ಟಿಕೊಂಡು ನಿಂತು, ಸರೋಜಳ ಕಿವಿಗೆ ಮಾತ್ರವೆಂಬಂತೆ, ಇದು ವಿಷ್ಣುಗಂಧಿ, ಇದು ಭೃಂಗ ಎಂದು ವಿವರಿಸುತ್ತ ಅವಳ ಸನಿಯದಲ್ಲಿ ತನ್ನ ಗಂಧ ಸೂಸುತ್ತ ಇದ್ದ. ಅವಳ ಅಂಗೈ ಮೇಲೆ ಗಿಡಮೂಲಿಕೆಗಳ ಎಲೆಗಳನ್ನು ಇಟ್ಟು ವಿವರಿಸುತ್ತ, ಅದನ್ನು ತಾನೇ ಅವಳ ಕೈಮೇಲೆ ತಿಕ್ಕಿ, ಮೂಸು ಎನ್ನುತ್ತ, ಬಾಯಿಗೊಯ್ದು ನೆಕ್ಕು ಎನ್ನುತ್ತ ಇದ್ದವನು ತಾನು ಬಂದು ದೆವ್ವದಂತೆ ನಿಂತರೂ ಲೆಖ್ಖಕ್ಕೆ ತೆಗೆದುಕೊಂಡಿರಲಿಲ್ಲ. ಕೂದಲು ತುಂಬಿದ ನೇರವಾದ ಅವನ ಕಾಲುಗಳನ್ನು ಕಂಡು ತನ್ನ ಎದೆ ಬಡಿದುಕೊಳ್ಳತೊಡಗಿತ್ತು. ಈಳಾಟದ ಕ್ರೂರ ತಂಬೂರಿಯಂತೆ ತನ್ನ ಇಡೀ ಶರೀರ ಕಂಪಿಸತೊಡಗಿತ್ತು. +ತಾನು ಹೀಗೇ ನಿರ್ವೀರ್ಯನಾಗುತ್ತ ಹೋಗಿದ್ದೆ. ಅವನು ದೇವರ ಮನೆಯಲ್ಲಿ ಕೂತು ಅವಳ ಶ್ರುತಿಗೆ ತನ್ನ ಶ್ರುತಿ ಸೇರಿಸಿ, ಎರಡು ಶರೀರಗಳೂ ಗಂಡು-ಹೆಣ್ಣು ದನಿಗಳ ಸಮ್ಮಿಶ್ರವಾಗಿ ಅಲೆ ಅಲೆಯಾಗಿ ವಿಸ್ತರಿಸಿ ಉತ್ಕಟವಾಗುತ್ತ ಹೋಗುವುದನ್ನು ಕೇಳಿಸಿಕೊಳ್ಳುತ್ತ ತನಗೆ ಕಾಮೋದ್ರೇಕವಾಗಿ ಬಿಡುವುದೂ ಇತ್ತು. ಆಗ ತಾನು ಸೀದ ರಾಧೆಯ ಬಳಿ ಹೋಗುವುದು. ಆದರೆ ಅಲ್ಲಿಯೂ ನಪುಂಸಕತ್ವ ತನ್ನನ್ನು ಆವರಿಸಿಬಿಡುವುದು. +ರಾಧೆ ಅವಳು ನಂಬಿದ ಭೂತಕ್ಕೆ ಹರಕೆ ಹೇಳಿಕೊಂಡು ನಿತ್ಯ ದೇವರಿಗೆ ತುಪ್ಪದ ದೀಪ ಹಚ್ಚಿಡಲು ಪ್ರಾರಂಭಿಸಿದ್ದಳು. ಅವಳ ಪ್ರಾರ್ಥನೆ ಶಾಸ್ತಿಗಳಿಗೆ ಸಂತಾನ ಪ್ರಾಪ್ತವಾಗಲೆಂದು. ಅವರನ್ನು ಕಾಡುವ ದೆವ್ವ ಅವರ ಮೆನೆಯಿಂದ ತೊಲಗಲಿ ಎಂದು. ಸರೋಜ ಅವಳ ಶೀತಲವಾದ ಸಂಕಲ್ಪದಿಂದ ಪಾರಾಗಿ ಸತೀತ್ವದಲ್ಲಿ ಅರಳಿಕೊಂಡು ಅವಳ ಜಡ ಗರ್ಭದಲ್ಲಿ ಶಾಸ್ತಿಗಳ ಪುರುಷತ್ವಕ್ಕೆ ಎಡೆಮಾಡಿಕೊಡಲಿ ಎಂದು. ಇದು ಶಾಸ್ತಿಗಳಿಗೆ ಮನವರಿಕೆಯಾಗಿತ್ತು. +ನಾಳೆ, ನಾಳೆ, ನಾಳೆ – ಮಾಯವಿಯಾದ ಪಂಡಿತನನ್ನು ದೂಷಿಸಿ, ಅವನ ಮುಖಕ್ಕೆ ಉಗಿದು ಅಟ್ಟಿಬಿಡುತ್ತೇನೆಂದು ಅವರು ಧೈರ್ಯ ತಂದುಕೊಳ್ಳುವರು; ಮತ್ತೆ ಮತ್ತೆ ಅಧೀರರಾಗಿ ಬಿಡುವರು. ಆದರೆ ರೋಮಮಯ ಎದೆ ಮತ್ತು ಕಾಲುಗಳ ಆ ಪಂಡಿತ ಮಾತ್ರ ತ್ರಿವಿಕ್ರಮನಂತೆ ಬೆಳೆಯತೊಡಗಿದ್ದ. ಪಂಡಿತ ದೇವರ ಕೋಣೆಯಲ್ಲಿ ಸರೋಜಳ ಜೊತೆ ಕೂತಿರುವುದನ್ನು ಕಂಡದ್ದೇ ’ಸಂಗೀತ ಕಲಿಸಿಕೊಟ್ಟು ಸಾಯಲಿ’ ಎಂದು ತನ್ನ ನಿಶ್ಚಯವನ್ನು ಬಿಟ್ಟುಕೊಡುವರು. +ಒಂದು ದಿನ ಅರ್ಧ ರಾತ್ರಿಯಲ್ಲಿ ಮನೆಗೆ ಬಂದು ನೋಡಿದರೆ ಪಂಡಿತ ತನ್ನ ಮನೆಯ ಕಛೇರಿಯಲ್ಲಿ ಮಲಗಿ ನಿದ್ದೆಹೋಗಿದ್ದ. ತಾನು ನಿಲ್ಲಿಸಬೇಕಾದಲ್ಲಿ ಅವನ ಆ ದರಿದ್ರ ಕಾರನ್ನು ನಿಲ್ಲಿಸಿದ್ದ. ಕೋಣೆಯಲ್ಲಿ ಸರೋಜ ಶೀತಲವಾಗಿ ಸಮಾಧಾನವಾಗಿ ನಿದ್ದೆ ಹೋಗಿದ್ದಳು. +ಪಂಡಿತ ಸರೋಜಳ ಜೊತೆ ಸಂಭೋಗ ಮಾಡಿದ್ದರೆ ಹೇಗೆ ಮಾಡಿರುತ್ತಿದ್ದ ಎಂದು ಉದ್ರೇಕಗೊಂಡು, ಸರೋಜಳನ್ನು ನಿದ್ದೆಯಿಂದ ಎಬ್ಬಿಸಿ ಭೋಗಿಸಿದ್ದರು. ಮುಗಿದದ್ದೇ, ಅವಳು ಎದ್ದು ಹೋಗಿ ಸ್ನಾನ ಮಾಡಿ ಬಂದಿದ್ದಳು. ತನಗೆ ಅವಳನ್ನು ಕೊಂದು ಹಾಕಿಬಿಡಬೇಕೆನ್ನಿಸಿತ್ತು. ಅವಳ ಪಕ್ಕ ಮಲಗಲಾರದೆ ಇನ್ನೊಂದು ಕೋಣೆಯಲ್ಲಿ ಚಾಪೆಯ ಮೇಲೆ ಮಲಗಿದ್ದರು- ನಾನೇ ಈ ಮನೆಯಲ್ಲಿ ದೆವ್ವವಾಗಿ ಬಿಡುತ್ತಿದ್ದೇನೆ ಎಂದು ಹಲ್ಲು ಕಡೆಯುತ್ತ, ಇಡೀ ರಾತ್ರೆ ಪಂಡಿತ ನಿದ್ದೆಯಲ್ಲಿ ಹಂದುವುದನ್ನೂ ಗಮನಿಸುತ್ತ ತನ್ನ ಕರಾಳ ಇರುಳನ್ನು ಕಳೆದಿದ್ದರು. +ಬೆಳಗ್ಗೆ ಮಂಪರಿನಲ್ಲಿದ್ದ ತಾನು ಏಳುವುದರ ಒಳಗೆ ಸರೋಜ ಮಾಡಿಕೊಟ್ಟ ಕಾಫಿಯನ್ನು ಕುಡಿದಿರಬೇಕು. ಕಛೇರಿಯಲ್ಲಿ ಅವನು ಮಲಗಿದ್ದ ಹಾಸಿಗೆಯನ್ನು ಸರೋಜ ಮಾಡಿಕೊಟ್ಟ ಕಾಫಿಯನ್ನು ಕುಡಿದಿರಬೇಕು. ಕಛೇರಿಯಲ್ಲಿ ಅವನು ಮಲಗಿದ್ದ ಹಾಸಿಗೆಯನ್ನು ನೀಟಾಗಿ ಮಡಿಸಿತ್ತು. ಸರೋಜಳೇ ಮಡಿಸಿಟ್ಟಿರಬೇಕು. ಪಂಡಿತ ಈಗಾಗಲೇ ಉಡುಪಿಯನ್ನು ಸೇರಿ ಸ್ನಾನ ಮಾಡಿ ತನ್ನ ಗಂಧವನ್ನು ಬಳಿದುಕೊಂಡು ತನ್ನ ವಶೀಕರಣ ವಿದ್ಯೆಯ ವ್ರತದಲ್ಲಿ ನಿರತನಾಗಿ ಧ್ಯಾನ ಮಾಡುತ್ತಿರಬೇಕು ಎಂದು ಊಹಿಸಿದರು. +ಅವರ ಮನೆಯ ಬೆನ್ನಿಗೆ ದೊಡ್ಡದೊಂದು ಗುಡ್ಡ. ಗುಡ್ಡದ ಮೇಲೆ ಚಿರತೆಗಳು ಓಡಾಡಿಕೊಂಡಿದ್ದ ದಟ್ಟ ಅರಣ್ಯ. ಮನೆಯ ಮುಂದೆ ದೊಡ್ಡ ಅಂಗಳ. ಅಂಗಳ ದಾರಿ ಅರ್ಧ ಮೈಲು ದೂರದಲ್ಲಿ ಅವರ ತೋಟ. ಇನ್ನೆಷ್ಟೋ ಅವರ ತೋಟಗಳು, ಗದ್ದೆಗಳು ಹೀಗೆಯೇ ಊರಿನ ಆಸುಪಾಸಿನಲ್ಲಿ. ಮನೆಯ ಹತ್ತಿರ ಆಳುಕಾಳು ಸಹ ಸುಳಿಯದು. ಆಸ್ತಿಯ ವಹಿವಾಟೆಲ್ಲ ಒಬ್ಬ ಮ್ಯಾನೇಜರಿನದು. ಆಳುಗಳು ಬಿಡಾರದ ಬಳಿಯೇ ಅವನಿಗೊಂದು ಸಾದಾ ಹೆಂಚಿನ ಮನೆ. ಶಾಸ್ತಿಗಳು ಇವತ್ತು ಬಿಡಾರಗಳಿಗೆ ಹೋಗಿ ’ಆಳುಗಳನ್ನು ಕೆಲಸಕ್ಕೆ ಇನ್ನೂ ಯಾಕೆ ಅಟ್ಟಿಲ್ಲ’ವೆಂದು ಮ್ಯಾನೇಜರನ್ನು ಗದರಿಸಿ ತನ್ನ ಉಳಿದ ತೋಟಗದ್ದೆಗಳನ್ನು ನೋಡಿ ಬರಲು ಹೋದರು. +ರಾಧೆಯ ಮನೆಗೆ ಹೋಗಿ ಒಂದಿಷ್ಟು ಬಾಳೆ ಹಣ್ಣು ತಿಂದು ಬಿಸಿ ಹಾಲು ಕುಡಿದರು. ಅವಳು ಮಾಡಿದ ದೋಸೆಯನ್ನು ತಾನು ತಿನ್ನುತ್ತೇನೆಂದರೆ ’ನನ್ನ ಮನೆಯಲ್ಲಿ ಅದೆಲ್ಲ ಆಗದು ಎಂದು ಅವಳು ನಕ್ಕುಬಿಟ್ಟಳು. ತನ್ನ ಮಡಿಯನ್ನು ಅವಳು ಕಾಯುವುದು ನೋಡಿ ಹಾಗಾದರೆ ತಾನಿನ್ನೂ ಪಿಶಾಚಿಯಾಗಿಲ್ಲ ಎಂದುಕೊಂಡು ಶಾಸ್ತಿಗಳು ವಿಕಾರವಾಗಿ ನಕ್ಕರು. ಅವರು ವಿಕಾರವಾಗಿ ನಕ್ಕದ್ದು ನೋಡಿ ರಾಧೆ ದೇವರ ಕೋಣೆಗೆ ಹೋಗಿ ಉರಿಯುವ ಬತ್ತಿ ತಳ್ಳಿ ದೀಪವನ್ನು ಇನ್ನಷ್ಟು ಬೆಳಸಿ, ’ಕಾಪಾಡು’ ಎಂದು ಬೇಡಿಕೊಂಡಳು. ಶಾಸ್ತಿಗಳಿಗೆ ಹಸಿವಾಗಲೇ ಇಲ್ಲ. ಅಲ್ಲಿ ಇಲ್ಲಿ ಸುತ್ತಾಡಿಕೊಂಡಿದ್ದು ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮನೆಗೆ ಬಂದರು. ಅಂಗಳದಲ್ಲಿ ಕೊರಗನೊಬ್ಬ ನಿಂತಿದ್ದು ನೋಡಿ, ‘ಇಲ್ಲಿ ನಿನಗೇನು ಕೆಲಸ ದನ ಮೇಯಿಸಿಕೊಂಡಿರೋದು ಬಿಟ್ಟು’ ಎಂದು ಗದರಿಸಿದರು. ‘ಅಮ್ಮ ತಂಗಳು ಕೊಡುತ್ತೇನೆ ಎಂದರು’, ಅಂದು ಅವನು ಬಾಗಿ ನಮಸ್ಕರಿಸಿದ. ತನಗೆ ಮಾಡಿಟ್ಟ ಅನ್ನವನ್ನೂ ಹುಳಿಯನ್ನೂ ಸರೋಜ ಅವನಿಗೆ ಸುರಿದು ಒಳಹೋದಳು. ಶಾಸ್ತಿ ಇನ್ನೇನು ಪಂಡಿತ ಬಂದು ಬಿಡುವ ಹೊತ್ತೆಂದು ಅಂದುಕೊಳುತ್ತಿದ್ದಂತೆ, ತನ್ನ ಒಳಗೆ ಈಳಿಡುವುದಕ್ಕೆ ಶುರುವಾದ್ದನ್ನು ಗಮನಿಸಿ, ಅದು ಆವೇಶಗೊಳ್ಳಲು ಕಾಯುತ್ತ, ಕಛೇರಿಯಲ್ಲಿ ಕೂತರು. ‘ಇವತ್ತು ಕೊನೆ’ ಎಂದು ಸಂಕಲ್ಪ ಮಾಡಿಕೊಂಡರು. ಹಲ್ಲಿ ಶಕುನವಾಯಿತು. ಆಗ ದೊಡ್ಡ ಗಡಿಯಾರ ನಾಲ್ಕು ಗಂಟೆಗಳನ್ನು ಗವ್ವೆನ್ನುವ ತನ್ನ ಮಿದುಳೊಳಗೆ ಬಡಿಯುತ್ತ ಹೋದದ್ದು ನೆನಪಾಗುತ್ತದೆ. ಇದ್ದಕ್ಕಿದ್ದಂತೆ ಬಚ್ಚಲಿನಲ್ಲಿ ವಾಂತಿ ಮಾಡುವ ಧ್ವನಿ ಕೇಳಿಸಿತು. ಎದ್ದು ಹೋಗಿ ನೋಡಿದರೆ ಸರೋಜ ವಾಂತಿಯಾಗದೆ ವಾಂತಿಮಾಡಲು ಪ್ರಯತ್ನಿಸುತ್ತಿದ್ದಾಳೆ. ಕಣ್ಣು ಕತ್ತಲೆ ಕಟ್ಟಿದಂತಾಗಿ “ಮುಂಡೇ ಬಸುರಾಗಿಬಿಟ್ಟೆಯಾ?” ಎಂದು ದೆವ್ವದಂತೆ ಕೇಳಿದರು. ಅವಳು ಬಾಗಿ ನಿಂತವಳು ಕತ್ತನ್ನು ಹಂದಿಸಿದ್ದು, ವಾಂತಿಯನ್ನು ಹೊರತರಲೆಂದೋ, ಅಥವಾ ಹೌದೆಂದು ತನಗೆ ಉತ್ತರಿಸಲೋ ಎಂದು ಎಲ್ಲ ಮುಗಿದ ಮೇಲೆ ಅವರು ಯೋಚಿಸಿದ್ದಿದೆ. ಆದರೆ ಅವತ್ತು ಅವಳು ಹೌದೆಂದು ಉತ್ತರಿಸಿದಂತೆ ಮಾತ್ರ ಕಂಡಿತ್ತು. ಸರೋಜ ನೇರವಾಗಿ ನಿಂತು, ಚೊಂಬಿನಿಂದ ನೀರು ತೆಗೆದುಕೊಂಡು ಬಾಯಿ ಮುಕ್ಕಳಿಸಿದ್ದಳು. ತನಗೆದುರಾಗಿ ಆಗ ಹೇಗೆ ನಿಂತುಬಿಟ್ಟಳು!”ಆ ಮುಂಡೇ ಮಗ ಪಂಡಿತನಿಗೆ ಬಸುರಾಗಿ ಬಿಟ್ಟೆಯಾ ಹಾದರಗಿತ್ತಿ?” ಎಂದು ಊಳಿಡುತ್ತ ತನ್ನ ಒಳಗಿನ ದೆವ್ವ ವಿಕಾರವಾಗಿ ನಗಲು ಪ್ರಾರಂಭಿಸಿತ್ತು. ಸರೋಜ ಆಗ ನಿರ್ವಿಕಾರವಾಗಿ ಶಾಂತವಾಗಿ ನಿಂತದ್ದಲ್ಲವೆ? ಉಸಿರಾಟದಲ್ಲಿ ಏರಿ ಇಳಿಯುವ ಅವಳ ಎಡ ಮೊಲೆಯ ಮೇಲೆ ಅವಳು ತೊಟ್ಟ ತಾಯಿತ ಇತ್ತಲ್ಲವೆ? ಯಾಕೆ ತಾನು ಅಷ್ಟು ಪೂರ್ಣವಾಗಿ ಆ ಕ್ಷಣದಲ್ಲಿ ಮೈಮರೆತುಬಿಟ್ಟೆ? ಅವಳ ನಿರ್ಲಕ್ಷ್ಯದ ಕಣ್ಣುಗಳ ದಿವ್ಯ ಲಾವಣ್ಯವನ್ನು ಕಂಡು ತಡೆದುಕ್ಕೊಳ್ಳಲಾರದೆ ಹೋಗಿಬಿಟ್ಟನೆ? ಅಥವಾ ಆ ಕಣ್ಣುಗಳು ’ಅದನ್ನು ಕೇಳಲು ಯಾವ ಮುಂಡೇ ಮಗನೋ ನೀನು?’ ಎನ್ನುತ್ತಿದ್ದಂತೆ ನನಗೆ ಭಾಸವಾಯಿತೆ? ಅಥವಾ ಮುಂದಿನ ಭೀಕರ ಕ್ರಿಯೆಗೆ ಸಜ್ಜಾಗಲು ಭವದ ತನ್ನ ಈ ಶರೀರ ಹಾಗೆಂದುಕೊಂಡಿತೆ? +ಹಂಡೆಯ ಮೇಲೆ ಮುಚ್ಚಿದ ಭಾರವಾದ ಮಣೆಯನ್ನು ಎತ್ತಿಕೊಂಡುಬಿಟ್ಟೆ. ಆಗ ಅವಳು ತನ್ನ ನೆತ್ತಿಯ ಮೇಲೆ ತನ್ನ ಎರಡು ಕೈಗಳನ್ನು ಎತ್ತಿ ಇಟ್ಟುಕೊಂಡು ತಲೆಬಾಗಿಸಿದ್ದಳು. ಆದರೆ ಅದು ಯಾಚನೆಯಂತಾಗಲೀ, ಭಯಗೊಂಡಂತಾಗಲೀ ತನಗೆ ಅನ್ನಿಸಲಿಲ್ಲ. ಕಣ್ಣಿ ಬಿಚ್ಚಲು ಹೋದಾಗ ಹಸುಗಳು ಕತ್ತನ್ನಲ್ಲಾಡಿಸಿ ಕೊಸರಿಕೊಳ್ಳುವಂತೆ ಅವಳು ಮಾಡಿದ್ದು ಕಂಡಿತ್ತು. ಮುಂದೇನು ಅರಿಯುವುದರ ಒಳಗೆ ಎರಡು ಮೂರು ಸಾರಿ ಅವಳನ್ನು ಜಪ್ಪಿದ್ದರು. ರಕ್ತ ಝಲ್ಲೆಂದು ತನ್ನ ಮುಖದ ಮೇಲೆ ಚಿಮ್ಮಿತ್ತು. ಕುಸಿದು ಬಿದ್ದ ಅವಳನ್ನು ತನ್ನ ಎರಡು ಕೈಗಳಲ್ಲೂ ಎತ್ತಿ, ದೆವ್ವದಂತೆ ಅಟ್ಟಹಾಸದಲ್ಲಿ ಎರಡು ಕಾಲುಗಳನ್ನೂ ದಾಪು ಹಾಕಿ ಇಡುತ್ತ ಬಚ್ಚಲಿನಿಂದ ಹಿತ್ತಲಿಗೆ ಬಂದಿದ್ದರು. ಕೆಮ್ಮಣ್ಣಿನ ಹಸಿ ಗುಂಡಿಯಲ್ಲಿ ಸತ್ತವಳಂತೆ ತನ್ನ ತೋಳುಗಳಲ್ಲಿ ಚೆಲ್ಲಿಕೊಂಡ ಅವಳನ್ನು ಬಿಸಾಡಿ, ಊಳಿಡುತ್ತ ಒಳಬಂದು, ತನ್ನ ಬಟ್ಟೆ ಬದಲಾಯಿಸಿ, ರಕ್ತದಿಂದ ಒದ್ದೆಯಾದ ತನ್ನ ಬಟ್ಟೆಗಳನ್ನು ಕೆಮ್ಮಣ್ಣು ಗುಂಡಿಯಲ್ಲಿ ಬಿದ್ದುಕೊಂಡಿದ್ದ ಅವಳ ಮೇಲೆಸೆದು, ತಾನು ಕಾರು ಹತ್ತಿ ವೇಗವಾಗಿ ಚಲಿಸಿಬಿಟ್ಟದ್ದು. ತಲೆಯ ಹಿಂಭಾಗದಲ್ಲಿ ಪೆಟ್ಟುತಿಂದು ಎಚ್ಚರ ತಪ್ಪಿದ ಅವಳು ಸತ್ತಿರಬಹುದೇ ಎಂಬ ಅನುಮಾನ ತನಗೇಕೆ ಆಗ ಆಗಲೇ ಇಲ್ಲ? ದುರ್ದೈವಶಾತ್ ಹಾಗೇನಾದರೂ ಆಗಿದ್ದರೆ, ಮತ್ತೆ ಪೆಟ್ಟು ತಿಂದು ಅವಳು ಸತ್ತೇ ಹೋಗಿರುತ್ತಿದ್ದಳು.ಇನ್ನೇನು ಪಂಡಿತ ಬಂದುಬಿಡುತ್ತಾನೆ. ನೋಡಿ ಬಿಡುತ್ತಾನೆ. ಪೋಲೀಸಿಗೆ ದೂರು ಕೊಡುತ್ತಾನೆ ಎಂದುಕೊಳ್ಳುತ್ತ, ಅವನನ್ನೂ ಸಾಯಿಸಿ ಗುಂಡಿಗೆಸೆದು ಬಿಡುವುದೆಂದು ಕೇರಳಕ್ಕೆ ಹೋಗೆ ಅಲ್ಲಷ್ಟು ದಿನ ಇದ್ದು ಬಿಡುವುದೆಂದು ಕಾಸರಗೋಡಿನ ಕಡೆ ಹೋಗುತ್ತಿದ್ದವರು ಕಾರನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಮನೆಗೆ ಅವರು ಬಂದಾಗ ರಾತ್ರಿ ಎಂಟು ಗಂಟೆಯಾಗಿಬಿಟ್ಟಿತ್ತು. ಅಮಾವಾಸ್ಯೆಯ ಕತ್ತಲು ಕವಿದುಬಿಟ್ಟಿತ್ತು. ಬೀಗ ಹಾಕಿ ಹೋಗಲು ತಾನು ಆವೇಶದಲ್ಲಿ ಮರೆತೇ ಬಿಟ್ಟಿದ್ದೆ. ಮನೆಯ ಒಳಗೆ ಬಂದರೆ ಗವ್ವೆಂದಿತ್ತು. ಪಂಡಿತ ಬಂದು ಹೋಗಿಬಿಟ್ಟಿರಬಹುದೆ? ಇನ್ನೇನು ಬಂದುಬಿಡಬಹುದೆ? ಎಂದುಕೊಳ್ಳುತ್ತ, ಕತ್ತಲಿನಲ್ಲಿ ಸೀದ ಕೆಮ್ಮಣ್ಣಿನ ಗುಂಡಿಗೆ ಹೋಗಿ ಮೇಲೆ ಒಟ್ಟು ಮಡಿದ ಕೆಮ್ಮಣ್ಣನ್ನೆಲ್ಲ ಒಂದು ಗಂಟೆಯ ಕಾಲ ಹಾರೆಯಿಂದ ಎಳೆದೆಳೆದು ಬುಸುಗುಡುತ್ತ ಹೊಂಡ ತುಂಬಿಸಿದ್ದರು. ಹೆಣವನ್ನು ಮುಚ್ಚಿಯಾಯಿತು; ನಾಳೆ ಬೆಳಿಗ್ಗೆ ಎದ್ದು, ನೆಲಸಮವಾಗುವಂತೆ ಇನ್ನಷ್ಟು ಮಣ್ಣು ಮುಚ್ಚಿ, ಅಲ್ಲೊಂದು ಹಲಸಿನ ಸಸಿ ನೆಟ್ಟು ಬಿಡುವುದು ಎಂದುಕೊಂಡು ಮನೆಯ ಎದುರು ಕತ್ತಿಯನ್ನು ಹಿಡಿದು ಕೂತರು. ಪಂಡಿತನನ್ನು ಸಾಯಿಸಲು ಕಾದರು. ನಡುರಾತ್ರೆಯಾದರೂ ಪಂಡಿತ ಬರಲೇ ಇಲ್ಲ. ಅರೆ, ಮಾಯಾವಿ ಬಂದುಬಿಟ್ಟು ಹೋಗಿರಬಹುದೇ? ಪೋಲೀಸಿಗೆ ದೂರುಕೊಟ್ಟುಬಿಡುವನೆ? ಎಂದು ತವಕಿಸುತ್ತ ನಿದ್ದೆ ಮಾಡದೆ ಕಾದರು. ಯಾರೂ ಬರಲಿಲ್ಲ. ಪೋಲೀಸರು ಬರಲಿಲ್ಲೆಂದು ಸಮಾಧಾನವಾಯಿತು.ಬೆಳಗಾದ ಮೇಲೆ ಗುಂಡಿಯ ಹೊರಗೆ ಇನ್ನೂ ಉಳಿದಿದ್ದ ಕೆಮ್ಮಣ್ಣನ್ನು ಎಳೆದು ಹಾಕಿ, ಮನೆಗೆ ಭದ್ರವಾದ ಬೀಗ ಹಾಕಲು ಮರೆಯಲಿಲ್ಲ. ಕಾರು ನಡೆಸಿಕೊಂಡು ಸೀದಾ ಮಂಗಳೂರಿಗೆ ಹೋಗಿ ಅಲ್ಲೊಂದು ಹೋಟೆಲಲ್ಲಿ ಉಳಿದರು. ಆತಂಕದಲ್ಲಿ ಎರಡು ದಿನ ಕಾದು ತಾನು ಕ್ಷೇಮವಾಗಿದ್ದೇನೆಂದು ಆಶ್ಚರ್ಯಪಡುತ್ತ ಮನೆಗೆ ಹಿಂದಿರುಗಿದ್ದರು. ಕೆಮ್ಮಣ್ಣು ಗುಂಡಿ ತಾನು ಮುಚ್ಚಿದಂತೆಯೇ ಇತ್ತು. ಅಂಗಳದಲ್ಲಿ ಪಂಡಿತನ ಕಾರಿನ ಚಕ್ರದ ಗುರುತಿತ್ತು. ತಾನು ಕೊಲೆ ಮಾಡಿದ ನಂತರ ಮನೆ ಬಿಟ್ಟು ಹೋದ ಹೊತ್ತಿನಲ್ಲಿ ಅವನು ಬಂದು ಹೋಗಿರುವ ಗುರುತೆ? ಎಂದು ಅನುಮಾನಿಸುತ್ತ ಅವರು ದೇವರ ಕೋಣೆಗೆ ಹೋದರು. ಅಲ್ಲಿ ಅವರ ತಿಜೋರಿಯ ಬಾಗಿಲು ತೆರೆದಿತ್ತು. ಅದರೊಳಗೆ ಬಂಗಾರವಿಟ್ಟ ಟ್ರಂಕಿರಲಿಲ್ಲ. ಕೊಲೆ ಮಾಡಿಬಿಟ್ಟಿದ್ದರ ಆತಂಕ ಮಾಯವಾಗಿ ಪಂಡಿತನ ಮೇಲಿನ ಕ್ರೋಧ ಊಳಿಡಲು ತೊಡಗಿತ್ತು. ಕಳುವು ಮಾಡಿ ನಡೆದುಬಿಟ್ಟ ಮಯಾವಿ, ಅವನ ಕಣ್ಣಿದ್ದದ್ದು ಬಂಗಾರದ ಮೇಲೇ ಹೊರತು ಸರೋಜಳ ಮೇಲಲ್ಲ. ಆದರೆ ಬಸಿರೂ ಮಾಡಿಬಿಟ್ಟ ಮಾಯಾವಿ – ಎಂದು ವ್ಯಾವಹಾರಿಕವಾಗಿ ಲೆಖ್ಖಾಚಾರ ಹಾಕುತ್ತ, ಅವನೇ ಕೊಲೆ ಮಾಡಿ ಬಿಟ್ಟನೆಂದು ದೂರುಕೊಟ್ಟು ಬಿಡಲೆ ಎಂದು ವಿಚಾರ ಮಾಡುತ್ತ ಕಾರುಬಿಟ್ಟುಕೊಂಡು ಉಡುಪಿಗೆ ಹೋಗಿ ಪಂಡಿತನ ಅಂಗಡಿಯೆದುರು ನಿಲ್ಲಿಸಿದರು. ಅಂಗಡಿ ಬಾಗಿಲು ಹಾಕಿತ್ತು. ‘ಎಲ್ಲಿ?’ ಎಂದು ಕೆಂಪಾದ ತನ್ನ ಕಣ್ಣು ತೆರೆದು ಪಕ್ಕದ ಅಂಗಡಿಯವನನ್ನು ಕೇಳಿದರು. “ಆವತ್ತು ಒಂದು ಸಾಯಂಕಾಲ, ಮೂರು ದಿನಗಳ ಕೆಳಗೆ, ಹೌದು ಅಮಾವಾಸ್ಯೆ ದಿನ ಬುಧವಾರದ ಸಾಯಂಕಾಲ ಅವರು ಹೋದವರು ಮತ್ತೆ ಬಂದಿಲ್ಲ. ನಿಮ್ಮ ಮನೆಗೇ ಹೋದದ್ದು. ಎಂದುಕೊಂಡಿದ್ದೆ.” ಎಂದು ಅಂಗಡಿಯ ಕಾಮತ ತನ್ನ ಮಾತಲ್ಲೊಂದು ಇಂಗಿತವಿದ್ದಂತೆ ಹುಸಿಯಾಗಿ ನಕ್ಕಿದ್ದನೆ? ಅವನೂ ತನ್ನ ವಾರಿಗೆಯವನೇ. ಮಕ್ಕಳು ಮರಿ ಪಡೆದು ಸುಖವಾಗಿದ್ದು ಲಾರಿಯನ್ನೂ ಇಟ್ಟವ ಆತ. ಅವನಿಗೆ ತಾನೊಬ್ಬ ಕೊಲೆಗಾರ ಎಂದು ಅನ್ನಿಸಿರಲಿಲ್ಲೆಂದು ಸಮಾಧಾನವಾಗಿತ್ತು. ತನ್ನಲ್ಲೊಬ್ಬ ಗಿರಾಕಿಯನ್ನು ಮಾತ್ರ ಕಂಡು. “ಹೈದರಾಬಾದು ಕಡೆಯ ಒಳ್ಳೆಯ ತೊಗರಿ ಬೇಳೆ ತರಿಸಿದ್ದೇನೆ. ಒಂದು ಚೀಲ ಮಾತ್ರ ಉಳಿದಿದೆ. ಎತ್ತಿಸಿ ನಿಮ್ಮ ಕಾರಿಗೆ ಹಾಕಿಸಲ” ಎಂದಿದ್ದ. +ಬೇಡವೆಂದು ಸೀದ ತಾನು ರಾಧೆಯ ಮನೆಗೆ ಹೋಗಿದ್ದೆ. ಇಷ್ಟು ದಿನ ಕಾಣಿಸಿಕೊಳ್ಳದ ತನ್ನನ್ನು ಉಪಚರಿಸುತ್ತ ರಾಧೆ ಹಣೆ ಮುಟ್ಟಿ ’ಅಯ್ಯೋ ಜ್ವರ’ವೆಂದು, ಹಾಸಿಗೆ ಹಾಸಿ ತನ್ನನ್ನು ಮಲಗಿಸಿದ ಮೇಲೆ ತಾನು ಪ್ರಥಮ ಬಾರಿಗೆ ರಾಧೆಗೊಂದು ಸುಳ್ಳು ಹೇಳಿದ್ದು: “ಮೂರು ದಿನಗಳ ಕೆಳಗೆ ನನ್ನ ದರಿದ್ರದವಳು ಪಂಡಿತನ ಜೊತೆ ಓಡಿಹೋಗಿಬಿಟ್ಟಳು. ಹಾದರಗಿತ್ತಿ ತಿಜೋರಿಯಲ್ಲಿದ್ದ ಬಂಗಾರವನ್ನೂ ಲಪಟಾಯಿಸಿ ಬಿಟ್ಟಳು” ಎಂದಿದ್ದರು. ಪಂಡಿತನ ಮೇಲೆ ಕೊಲೆಯ ದೂರು ಕೊಡವುದೂ ಬೇಡ, ಕ್ರಿಮಿನಲ್ ಸೂಟಿನ ಉಪದ್ವ್ಯಾಪವೂ ಬೇಡ ಎಂದು ಸುಸ್ತಾದ ತನ್ನ ವ್ಯವಹಾರ ಬುದ್ಧಿಗೆ ಹೊಳೆದಿತ್ತು. ಮನೆಗೆ ಬಂದು ಗದ್ದೆಯಿಂದ ಮಣ್ಣು ತರಿಸಿ ಕೆಮ್ಮಣ್ಣುಗುಂಡಿಯನ್ನು ಪೂರ್ಣ ಮುಚ್ಚಿಸಿದರು. ಅದರ ನಡುವೆಯೊಂದು ಹಲಸಿನ ಸಸಿ ತಂದು ಸ್ವತಃ ನೆಟ್ಟರು. “ಇದರ ತೊಳೆ ಜೇನುತುಪ್ಪಕ್ಕೆ ಸಮನಾಗಿರುವುದಂತೆ” ಎಂದು ಕಂಡ ಕಂಡವರಿಗೆ ಹೇಳಿದರು. ಉರಿಮುಖದ ಶಾಸ್ತಿಗಳ ಥಟ್ಟನೇ ಕಾಣಿಸಿಕೊಂಡ ಸ್ನೇಹಪರತೆಗೆ ಜನ ಬೆರಗಾದರು. +ಅಧ್ಯಾಯ ೯ +ಶಾಸ್ತಿಗಳು ಟ್ಯಾಕ್ಸಿಯಿಂದಿಳಿದು ಸಿಳ್ಳೆ ಹಾಕುತ್ತ ಸುಖಿಸುತ್ತಿದ್ದ ಡ್ರೈವರಿಗೆ ಕಾಯುವಂತೆ ಹೇಳಿ ತನ್ನ ಚೀಲ ತೆಗೆದುಕೊಂದು ರಾಧೆಯ ಮನೆಗೆ ಹೋದರು. “ಇಗೋ ಮದ್ರಾಸಿನಿಂದ ನಿನಗೆಂದು ತಂದ ಸೀರೆ” ಎಂದು ಕೊಟ್ಟರು. ರಾಧೆಗೆ ಸಂತೋಷವಾದರೂ ಶಾಸ್ತಿಗಳು ಅನ್ಯಮನಸ್ಕರಾಗಿರುವುದು ಕಂಡು “ಏನು ಸಮಾಚಾರ?” ಎಂದು ಕೇಳಿದಳು. ತನ್ನ ಉತ್ತರದ ಸಮಾಧಾನ ಶಾಸ್ತಿಗಳಿಗೆ ಆಶ್ಚರ್ಯ ಹುಟ್ಟಿಸಿತ್ತು. “ನಿನಗೊಂದು ಸುಳ್ಳು ಹೇಳಿದ್ದೆ ಎಂದುಕೊಂಡಿದ್ದೆ. ಆದರೆ ಅದೇ ನಿಜವಿದ್ದೀತು ಎಂದು ನಲವತ್ತೈದು ವರ್ಷಗಳ ನಂತರ ಅನ್ನಿಸಕ್ಕೆ ಶುರುವಾಗಿದೆ” ಎಂದು ತನ್ನ ಸದ್ಯದ ಅತಂತ್ರ ಸ್ಥಿತಿಯನ್ನು ಸವಿವರವಾಗಿ ಹೇಳಿದ್ದರು. “ರೋಷದಲ್ಲಿ ನಾನವಳ ಕತ್ತಿನಲ್ಲಿ ನೋಡುತ್ತಿದ್ದ ತಾಯಿತವನ್ನು ಮತ್ತೆ ಕಂಡು, ಅದೊಂದು ಮತ್ತೆ ಸತ್ತು ಹುಟ್ಟಲು ನನಗೊಂದು ಸಂಜ್ಞೆಯಾಗಿ ಬಿಟ್ಟಿತು” ಎಂದು ನಿಟ್ಟುಸಿರೆಳೆದಿದ್ದರು: “ಆದರೆ ಅವನು ನನ್ನ ಮಗನೋ, ಪಂಡಿತನ ಮಗನೋ ಹೇಗೆ ಹೇಳಲಿ? ಮಹಾದೇವಿಗೆ ಮಗಳು ಹುಟ್ಟಿದ ಮೇಲೆ ನನಗೇ ಸರೋಜ ಬಸಿರಾದ್ದೋ ಏನೋ ಎಂದು ಅನುಮಾನವಾಗಿತ್ತು. ನಾನವಳನ್ನು ಕೊಂದು ನನ್ನ ಮಗುವನ್ನೂ ಕೊಂದಂತಾಗಿ ರೌರವ ನರಕದಲ್ಲಿ ನರಳಬೇಕಾದೀತೆಂದು ಹೀಗೆಲ್ಲ ವೇಷ ಕಟ್ಟಿಕೊಂಡು ಪುರಾಣ ಪ್ರವಚನಗಳಲ್ಲಿ ಜೀವ ಸವೆಸುತ್ತ ಬಂದೆ. ಆದರೂ ಈ ದೆವ್ವ ಹೊಕ್ಕ ಶರೀರ ಏನೂ ಕಲಿಯದೇ ಉಳಿದೇ ಬಿಟ್ಟಿತು. ಮಗಳನ್ನು ಸಾಯಿಸಬಹುದಾದಷ್ಟು ನನಗೆ ಸಿಟ್ಟು ಬಂದಿತ್ತಲ್ಲವೆ? ನನಗೇ ಅವಳು ಹುಟ್ಟಿದ್ದು ಹೌದೋ ಎಂದೂ ಅನ್ನಿಸಿತ್ತಲ್ಲವೆ? ಆದರೆ ಅವಳು ನನ್ನಿಂದ ಪಾರಾದಳು. ಈಗ ಮಹಾದೇವಿಗೆ ನನ್ನನ್ನು ಸಾಯಿಸಬೇಕೆನ್ನುವಷ್ಟು ರೋಷ ಉಕ್ಕುತ್ತದೆ. ನನಗೂ ಉಕ್ಕುತ್ತದೆ. ಆದರೆ ನಿನ್ನ ಜೊತೆ ಹೀಗೆ ಮಾತಾಡಿಕೊಂಡಿರುವ ನಾನು ಯಾರು? ಮಗನೆಂದು ಅನುಮಾನವಾಗಿ ಅವನು ಕುಟ್ಟವಲಕ್ಕಿ ತಿನ್ನುವುದು ನೋಡುತ್ತ ಕರುಳು ಹಿಂಡುವಷ್ಟು ವಾತ್ಸಲ್ಯಭಾವ ಹುಟ್ಟಿದ ಈ ನಾನು ಯಾರು?” ಶಾಸ್ತಿಗಳ ಗಂಟಲು ಆರ್ದ್ರವಾಯಿತು. ಹೀಗೆ ತಾನು ಆರ್ದ್ರವಾಗಿಬಿಟ್ಟು ರಾಧೆಯ ಕಾರುಣ್ಯ ಪಡೆದು ತನ್ನ ನರಕವನ್ನು ದಿಟ್ಟಿಸಿ ನೋಡಲಾರದ ಹೇಡಿಯಾಗಬಾರದು ಎಂದುಕೊಂಡರು. ರಾಧೆಯ ಕಡೆ ಉತ್ತರ ನಿರೀಕ್ಷಿಸುತ್ತ ನೋಡಿದರು. “ನಾನು ನಿಮಗೆ ಹೇಳಿರಲಿಲ್ಲ. ಇಲ್ಲೆಲ್ಲ ಆಳು ಕಾಳುಗಳು ನೀವೇ ಹೆಂಡತಿಯನ್ನು ಕೊಂದು ಕೆಮ್ಮಣ್ಣು ಗುಂಡಿಯಲ್ಲಿ ಹುಗಿದಿರಿ ಎಂದುಕೊಳ್ಳುತ್ತಿದ್ದರಂತೆ. ಅದಕ್ಕೆ ಅಲ್ಲಿ ನೆಟ್ಟ ಹಲಸಿನ ಮರದಲ್ಲಿ ಫಲ ಬಿಡುತ್ತಿಲ್ಲ ಎನ್ನುತ್ತಾರಂತೆ. ನಿಮಗೆ ನೋವಾಗಬಾರದೆಂದು ನಾನು ಹೇಳಲಿಲ್ಲ” ಎಂದು ರಾಧೆ ನಿಟ್ಟುಸಿರಿಟ್ಟು, “ದೇವರೇ ನಿಮ್ಮನ್ನು ಕಾಪಾಡಿದ” ಎಂದು ಹಾಲು ಹಣ್ಣು ತರಲು ಹೋದಳು. ಮತ್ತೆ ಬಂದವಳು ಕೆಳಗೆ ಕೂತು ಶಾಸ್ತಿಗಳ ಕಾಲೊತ್ತಲು ತೊಡಗಿದಳು. ಬೇಡವೆಂದು ಕಾಲೆಳೆದುಕೊಂಡ ಶಾಸ್ತಿಗಳು, “ಅವನು ಕೆಮ್ಮಣ್ಣು ಗುಂಡಿಯಿಂದ ಅವಳನ್ನೂ, ತಿಜೋರಿಯಿಂದ ಭಂಗಾರವನ್ನೂ ಎತ್ತಿಕೊಂಡು ಹೋಗಿ ಅರ್ಧ ಸತ್ತವಳನ್ನು ಮತ್ತೆ ಬದುಕಿಸಿರಬೇಕು ಅಲ್ಲವ? ಅವನು ಕಳ್ಳನಲ್ಲವೆನ್ನಿಸತ್ತೆ. ಎಲ್ಲ ಬಂಗಾರವೂ ಅವಳು ಹೊಳಯ ಪಾಲಾದಾಗ ಅವಳ ಹತ್ತಿರವೇ ಉಳಿದಿತ್ತಂತೆ. ಆದರೆ ಯಾಕೆ ಅವನೂ ಅವಳನ್ನು ಬಿಟ್ಟುಬಿಟ್ಟ ಹಾಗಾದರೆ? ಅಥವಾ ಅವನು ಸತ್ತು ಅವಳು ಅತಂತ್ರಳಾಗಿ ತ್ರಿಪಾಠಿಗಳ ಮನೆ ಸೇರಿದಳೇ? ಮಗನಿಗೆ ಐದು ವರ್ಷಳಾಗುವ ತನಕವಾದರೂ ಪಂಡಿತನ ಜೊತೆಯೇ ಅವಳು ಬಾಳ್ವೆ ಮಾಡಿರಬೇಕು. ಕುಂಕುಮವಿಟ್ಟುಕೊಂಡೇ ಅವಳು ತ್ರಿಪಾಠಿಗಳ ಆಶ್ರಯ ಪಡೆದಿದ್ದೆಂದು ಕೇಳಿದೆ” ಎಂದರು. ಒಂದಷ್ಟು ಹೊತ್ತು ಮೌನವಾದರು. “ನನಗೆ ಹಾಗೆ ಅನ್ನಿಸಬಾರದು ಆದರೂ ಅನ್ನಿಸತ್ತೆ. ಪಂಡಿತನ ಮಗನೇ ಅವನಾಗಿರಬಹುದಲ್ಲವೆ? ಅಥವಾ ಅದು ನಾನೇ ದೆವ್ವದಂತೆ ಊಳಿಡುತ್ತ ಅವನನ್ನು ಹುಟ್ಟಿಸಿರಬಹುದು. ನನಗೀಗ ಏನೂ ತೋಚದು. ಅಥವಾ ಅದು ಅವಳೋ ಅವಳ ಹಾಗಿನ ಇನ್ನು ಯಾರೋ?” ಎಂದು ದೇವರೇ ಈ ಅಂತರ ಪಿಶಾಚಿತ್ವದ ಅನುಮಾನಗಳಿಂದ ನನ್ನನ್ನು ಪಾರು ಮಾಡು ಎಂದು ಮೌನವಾಗಿ ಪ್ರಾರ್ಥಿಸಿದರು. ರಾಧೆ ಅವರ ಪಕ್ಕಬಂದು ಕೂತು ಅವರ ಕೈಗಳನ್ನು ಮುದ್ದಾಗಿ ಹಿಡಿದು, “ನಿಮ್ಮ ಮಗನೆಂದೇ ತಿಳಿದುಕೊಳ್ಳಿ” ಎಂದಳು. +“ಹಾಗೆ ಒಂದು ಕ್ಷಣ ಎನಿಸತ್ತೆ. ಇನ್ನೊಂದು ಕ್ಷಣ ಪಂಡಿತ ಅವನನ್ನು ಹುಟ್ಟಿಸಿದ ಎಂದು ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಗುತ್ತೆ” ಎಂದು ಶಾಸ್ತಿಗಳು ಹಾಲನ್ನು ಕುಡಿಯದೆ ಎದ್ದರು. “ಯಾಕೆ?” ಎಂದು ರಾಧೆ ಕೇಳಿದರೆ “ಇನ್ನು ಮುಂದೆ ಏಕಾದಶಿ ದಿನ ಹಾಲನ್ನೂ ಬಿಟ್ಟು ಬಿಡುತ್ತೇನೆ” ಎಂದರು. +ಅಧ್ಯಾಯ ೧೦ +ಶಾಸ್ತಿಗಳನ್ನು ಕಾಡುವ ದೆವ್ವದಿಂದ ಅವರಿಗೆ ಸದ್ಯದಲ್ಲೇ ಬಿಡುಗಡೆಯಾಗುವ ಚಿಹ್ನೆಗಳು ರಧೆಗೆ ಕಂಡವು. ಅವರ ಮುಕ್ತಿಗೆ ಅತ್ಯಂತ ಅಗತ್ಯವಾದ ಗುಟ್ಟೊಂದನ್ನು ಅವಳು ತನ್ನ ಹೃದಯದಲ್ಲಿ ಒಂದು ವರ್ಷದಿಂದ ಬಚಿಟ್ಟುಕೊಂಡಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಅವರಿಗದನ್ನು ಬಯಲು ಮಾಡಬಹುದೆಂದು ಆಶಿಸುತ್ತ ಅವರ ಕಡೆ ನೋಡಿದಳು. ರಾಧೆಯ ಬೆಳ್ಳಗಾದ ಕೂದಲನ್ನೂ ಇನ್ನೂ ಸುಕ್ಕಾಗದೆ ಮುದ್ದಾಗಿಯೇ ಉಳಿದ ಮುಖವನ್ನೂ ನೋಡುತ್ತ ಶಾಸ್ತಿಗಳು ಅಕ್ಕೆರೆಯಿಂದ ಹೇಳಿದರು: +“ಮತ್ತೆ ನಾನು ಯಾಕೆ ಮಹಾದೇವಿಯನ್ನು ಮದುವೆಯಾದೆನೊ. ನಿನ್ನ ಒತ್ತಾಯವಿತ್ತು ಎನ್ನು. ನಾನು ಏನು ಭಾವಿಸಿದೆನೆಂದರೆ, ನನಗೊಂದು ಸಂತಾನವಾದರೆ ನನ್ನ ಪೀಡೆಗಳೆಲ್ಲ ನಿವಾರಣೆಯಾಗಿ ನಾನು ಪ್ರಸನ್ನನಾಗುವೆನೆಂದು ಭಾವಿಸಿದ್ದೆ. ಸರೋಜ ತನ್ನ ಸೌಂದರ್ಯದ ನಿರ್ಲಕ್ಷ್ಯದಲ್ಲಿ ನನ್ನನ್ನು ಪೀಡಿಸಿದ್ದು. ಆದರೆ ಮಹಾದೇವಿ ಮೊದಲಿನಿಂದಲೂ ನನ್ನಂತೆಯೇ ಕಣ್ಣು ಕೆಕ್ಕರಿಸಿ ಎದುರು ಬಿದ್ದವಳು. ಸರೋಜಳ ಹಾಗೆ ಅವಳಲ್ಲ. ನೀನೆಂದರೆ ಮಹಾದೇವಿಗೆ ಕಂಡರೆ ಆಗದು. ನನ್ನ ಮಗಳೋ? ಅದು ನನ್ನ ಮಗಳೇ ಅನ್ನು, ಹಠಮಾರಿ. ಅದು ಯಾರೋ ಕ್ರಾಂತಿ ಮಾಡುವ ಬೆಪ್ಪನನ್ನು ಮದುವೆಯಾಗಿ, ತನ್ನ ಜನ್ಮಕ್ಕೆ ಕಾರಣನಾದ ನನ್ನಂತ ಕುಲೀನರನ್ನೆಲ್ಲ ನಿರ್ನಾಮ ಮಾಡಿಬಿಡಬೇಂದು ಆಗೀಗ ಆಸೆಯಾದ್ದಿದೆ ಎನ್ನು. ಆದರೆ ಯಾವ ಕ್ಷಣದಲ್ಲಿ ನಾನು ಏನಾಗಿ ಬಿಡುತ್ತೇನೋ? ನನಗೆ ನಿಶ್ಚಯವಿಲ್ಲ. ಈ ಭವದಿಂದ ನನ್ನಂಥವರಿಗೆ ಮುಕ್ತಿಯಿಲ್ಲವೆನ್ನಿಸುತ್ತದೆ. ಆದರೆ ಸರೋಜ ನನ್ನ ಕೈಯಿಂದ ಸಾಯಲಿಲ್ಲವಲ್ಲ? ನನಗೆ ಮಗಳು ಹುಟ್ಟಿದ್ದೇ, ಸರೋಜ ನನ್ನಿಂದಲೇ ಬಸುರಾಗಿರಬೇಕೆಂದು ನಾನು ತುಂಬ ಯಾತನೆ ಪಡುತ್ತ ಭವದಿಂದ ಪಾರಾಗಲೆಂದು ದೇವರ ಕಡೆ ತಿರುಗಿದ್ದೆ. ಯಾವ ದೇವರಿಂದ ಸಮಾಧಾನ ಸಿಕ್ಕೀತು ಹೇಳು. ಎಲ್ಲ ಇರುವುದು ಇಲ್ಲಿ” ಎಂದು ತನ್ನ ಹಣೆ ಮುಟ್ಟಿ ತೋರಿಸಿ ತಾನು ಮಾತಾಡಿದ್ದೆ. ಆದರೆ ಮತ್ತೆ ಪುರಾಣಿಕನಂತೆ ಅಭ್ಯಾಸಗತವಾದ ಮಾತುಗಳನ್ನೇ ಆಡಿಬಿಟ್ಟಿದ್ದೆ ಎಂದು ಅನ್ನಿಸಿತ್ತು. ತಾನು ಟ್ಯಾಕ್ಸಿಯಲ್ಲಿ ಮನೆ ಸೇರಿ ಒಳಗೆ ಹೋದದ್ದೇ ಮಹಾದೇವಿ ತನ್ನ ಮೇಲೆ ವಿನಾಕಾರಣ ಎಗರುವಳೆಂದು ನಿರೀಕ್ಷಿಸಿರಲಿಲ್ಲ. ದುರ್ಬಲ ಹೆಂಗಸು ತನ್ನನ್ನು ತಿಂದು ಬಿಡುವಂತೆ ಎದುರು ನಿಂತದ್ದನ್ನು ನೋಡಿ, ಅವಳ ಕುರೂಪದ ಮುಖದಲ್ಲಿ ಅರಳಿಕೊಂಡ ಹೊಳ್ಳೆಗಳ ಮೂಗನ್ನ ಕಂಡು ಶಾಸ್ತಿಗಳಿಗೆ ತಾನೇ ಚಕಿತಗೊಳ್ಳುವಂತೆ, ಕರುಣೆಯುಕ್ಕಿಬಿಟ್ಟಿತ್ತು +. +ಮಹಾದೇವಿ ರಾಧೆಯ ಶ್ರೀಮಂತಿಕೆಯನ್ನೂ, ಅವಳು ತನ್ನ ಮೊಮ್ಮಗಳಿಗೆ ಮಾಡಿಸಿಕೊಟ್ಟ ಚಿನ್ನದ ಬಳೆಗಳನ್ನೂ ಎತ್ತಿಕೊಂಡು ಜಗಳ ಶುರು ಮಾಡಿದ್ದಳು. ‘ನಿಮ್ಮ ಕೊಲೆಗಡುಕ ಬುದ್ಧಿಯಿಂದ’ ಎಂದು ಪ್ರತಿ ವಾಕ್ಯ ಶುರು ಮಾಡಿ ತಾನು ಕಳೆದುಕೊಂಡ ಮಗಳ ಬಗ್ಗೆ ರೋಷದಲ್ಲಿ ಕಿರುಚತೊಡಗಿದ್ದಳು. ಶಾಸ್ತಿಗಳು ತಾನೆಂದೆಂದೂ ಅವಳನ್ನು ಮುಟ್ಟಿ ಸಂತೈಸಲು ಹೋದದ್ದಿಲ್ಲ. ಆದರೆ ಅವಳು ಕೊಸರಿಕೊಂಡರೂ ಇವತ್ತು ಮಹಾದೇವಿಯನ್ನು ತಬ್ಬಿ ಹಿಡಿದರು. ತನ್ನನ್ನು ಯಥಾಪ್ರಕಾರ ಚಚ್ಚಿ ಬಿಡುತ್ತಾರೆ ಎಂದು ಮಹಾದೇವಿ ನಿರೀಕ್ಷಿಸಿರಬೇಕು. ‘ಮಹಾದೇವಿ’ ಎಂದು ಮೃದುವಾಗಿ ಮತ್ತೆ ಮತ್ತೆ ಕರೆದರು. “ನಾನು ಕೊಲೆ ಮಾಡಲಿಲ್ಲ ಮಹಾದೇವಿ. ಆಳುಗಳು ತಿಳಿದದ್ದು ತಪ್ಪು. ನಾನೂ ಹಾಗೆ ತಿಳಕೊಂಡಿದ್ದೆ. ನಿನ್ನೆ ರೈಲಿನಲ್ಲಿ ಸತ್ಯ ತಿಳಿಯಿತು” ಎಂದರು. ಮಹಾದೇವಿಗೆ ಇದರಿಂದ ಏನೂ ಅರ್ಥವಾಗದೆಂದು ತನಗೆ ಗೊತ್ತಿತ್ತು. ಆದರೆ ಅವಳು ತನ್ನಿಂದ ಮುಟ್ಟಿಸಿಕೊಂಡ ಮಾರ್ದವದಿಂದಾಗಿ ಬಿಕ್ಕಲು ಶುರುಮಾಡಿದ್ದಳು. ಅವಳನ್ನು ತಡವುತ್ತ ತಾನು ಹೇಳಿದ್ದೆ: “ನಮ್ಮ ಮಗಳನ್ನು ಪತ್ತೆ ಮಾಡಿ ತರುತ್ತೇನೆ. ಅಳಬೇಡ” ಸೆರಗಿನಲ್ಲಿ ಮೂಗನ್ನು ಒರೆಸುತ್ತ ಚಕಿತಳಾದಂತೆ ಕಂಡ ಮಹಾದೇವಿ ಒಳಗೆ ಹೋದಳು. ತಾನು ಗುಣಮುಖನಾಗುತ್ತಿರುವ ಭರವಸೆ ಸಣ್ಣಗೆ ಶಾಸ್ತಿಗಳಿಗೆ ತೋರಿದಂತಾಯಿತು. ಮನೆಯ ಎದುರು ಅಡ್ಡಾದಿಡ್ಡಿ ಬೆಳೆದುಕೊಂಡು, ಪ್ರಾತಃಕಾಲ ತನ್ನ ಎಲ್ಲ ಕೋಮಲವಾದ ಹೂವುಗಳನ್ನೂ ನೆಲದ ಮೇಲೆ ಚೆಲ್ಲಿಕೊಂಡು, ಆರಾಮಾಗಿ ಬಿಡುವ ಅಷ್ಟಾವಕ್ರ ಪಾರಿಜಾತದ ಮರವನ್ನು ನೋಡಿದರು. ಸರೋಜ ತನ್ನ ಬೆರಳಿನ ಬಿಸಿ ತಾಗಿ ಪಾರಿಜಾತ ಮಲಿನವಾಗಬಾರದೆಂದು, ಉಗುರಿನ ತುದಿಯಿಂದ ಅವನ್ನು ಒಂದೊಂದಾಗಿ ಎತ್ತಿ, ಬಾಳೆ ದೊನ್ನೆಯಲ್ಲಿ ಶೇಖರಿಸಿ, ಹಿತ್ತಲಿನಲ್ಲಿ ಬೆಳೆದುಕೊಂಡ ಒಂದು ಹುತ್ತಕ್ಕೆ ಸುರಿಯುತ್ತಿದ್ದಳು. ಈ ನೆನಪಿನ ಜೊತೆಯೇ ಬಾಧೆಯಾಯಿತು. ಹೊಳೆ ಪಾಲಗುವಾಗ ಯಾಕೆ ಅವಳ ಹಣೆಯಲ್ಲಿ ಕುಂಕುಮವಿತ್ತು? ಕೊರಳಲ್ಲಿ ತಾಳಿಯಿತ್ತು? ಪಂಡಿತ ಹಾಗಾದರೆ ಸಾಯಲಿಲ್ಲವೋ? ಅಥವಾ ಖಾಸಾ ಕೈಹಿಡಿದವನು ಸತ್ತಿರಲಿಕ್ಕಿಲ್ಲ ಎಂದೋ? ಹೀಗೂ ಎನ್ನಿಸಿಬಿಟ್ಟು ತಾನು ಗುಣಮುಖನಾಗುವ ಚಿಹ್ನೆ ಕಾಣದೆ ಶಾಸ್ತಿಗಳು ಬಳಲುತ್ತ ಸ್ನಾನದ ಮನೆಗೆ ಹೋದರು. ಅದು ಸರೋಜಳನ್ನು ಹಣೆಯ ಮೇಲೆ ಜಪ್ಪಿದ ಸ್ನಾನದ ಮನೆಯಾಗಿರಲಿಲ್ಲ. ಅದನ್ನು ಕೆಡವಿಸಿ ಇನ್ನೊಂದು ಜಾಗದಲ್ಲಿ ಹೊಸ ಸ್ನಾನದ ಮನೆ ಕಟ್ಟಿಸಿಕೊಂಡಿದ್ದರು. +ಭಾಗ : ೨ +ಅಧ್ಯಾಯ ೧ +ಮೊದಮೊದಲು ಗವಿಯ ಅಂತರಾಳದಿಂದ ಎಂಬತೆ ಒಂದೊಂದೇ ಎರಡೆರಡೇ ಮೊಳಕೆಗಳಂತಹ ನಾದ, ಆಗೊಂದು ಈಗೊಂದು ಸ್ಪುಟವಾಗಿ ಹೊರಬಂದಂತಿದ್ದ ಗಂಟೆಯ ಶಬ್ದ, ಮತ್ತೆ ಓ ಓ ಓ ಎನ್ನುವ ಮಂದರ ನಾದ, ಮತ್ತೆ ಪುಟ್ಟ ಪುಟ್ಟ ಗೆಜ್ಜೆಗಳಿಂದ ಹೊರಟಂತಿರುವ ಕಿಲ ಕಿಲ ಶಬ್ದ. ನಾದವೆಲ್ಲವೂ ತನಗೇ ತಾನು ಒಳಗಿನಿಂದ ಮಾಡಿಕೊಂಡಂತೆ, ತನಗಾಗಿ ಮಾತ್ರ ಮಾಡಿಕೊಂಡಂತೆ. ಇನ್ನು ಇನ್ನೂ ಒಳಗೊಳಗೇ ಹೋಗುವಂತೆ ಸಂಚರಿಸುತ್ತ ಹುಡುಕುವ ತಳಾತಳದ ನಾದ. ಮುಗಿಯಿತೆನ್ನುವಷ್ಟರಲ್ಲೇ ಇನ್ನೊಂದು ಇನ್ನೂ ಆಳದ ಕುಂಡಲಿನಿಯಿಂದ ಎದ್ದಂತಿದ್ದ ನಾದ. ನಾದಕ್ಕೆ ಸಿಗಬೇಕಾದ್ದು ಸಿಕ್ಕಂತಾಯಿತೋ? ಇಗೊ ಇಗೋ ಎನ್ನಿಸುವಂತೆ ಮತ್ತೆ ಪುಟ್ಟ ಪುಟ್ಟ ಗಂಟೆಗಳ ದಿಗ್ಭ್ರಮೆ. ಅಥವಾ ಸಂಭ್ರಮವೊ? ಟಿಬೆಟನ್ ಲಾಮಾರ ಗುಹ್ಯ ಸಮಾಜ ತಂತ್ರದ ಪಠಣವನ್ನು ತನ್ನ ವಾಕ್‌ಮನ್‌ನಲ್ಲಿ ಕೇಳಿಸಿಕೊಳ್ಳುತ್ತ, ಟಿಬೆಟನ್ನರ ಬಾರ್ದೊ ಥ್ರೋಟ್ರೋಲ್‌ನ ಇಂಗ್ಲಿಷ್ ಭಾಷಾಂತರವನ್ನು ಓದುತ್ತ, ತನ್ನ ಬಾರ್ದೊ ಸ್ಥಿತಿಗೆ ಓದಿದ್ದನ್ನು ಸಮೀಕರಿಸಿಕೊಳ್ಳುತ್ತ ದಿನಕರ ಚಾಪೆಯ ಮೇಲೆ ದಿಂಬಿಗೊರಗದಂತೆ ಕೂತಿದ್ದ. ನಾರಾಯಣ ತಂತ್ರಿಯದು ವಿಶಾಲವಾದ ಮನೆ. ಹಾಸಿಗೆಗಳನ್ನು ಹಾಸಿ ಅವನ್ನು ಬಿಳಿ ಬಟ್ಟೆಯಿಂದ ಮುಚ್ಚಿ, ಬಿಳಿ ಬಟ್ಟೆಯನ್ನು ಸುತ್ತಿದ ದೊಡ್ಡ ಒರಗು ದಿಂಬುಗಳನ್ನಿಟ್ಟ ಹಜಾರದಲ್ಲಿ ದಿನಕರ ಮೂಲೆಯಲ್ಲಿ ಚಾಪೆ ಮೇಲೆ ದಿಂಬಿಗೊರಗದೆ ನೇರ ಕೂತಿದ್ದನ್ನು ಕಂಡು ಸೀತಮ್ಮ, “ನಿನಗೇನಾಗಿದೆ? ಹಾಸಿಗೆ ಮೇಲೆ ಕೂರು”ಎಂದರು. ದಿನಕರ ಸುಮ್ಮನೇ ನಕ್ಕದ್ದು ಕಂಡು,”ಅಯ್ಯೋ ನಿನಗೆ ಕನ್ನಡ ಅರ್ಥವಾಗಲ್ಲ ಅನ್ನೋದು ಮರೆತೇ ಹೋಗುತ್ತೆ. ಏಳು ಸ್ನಾನ ಮಾಡಿ ಬಾ. ನಿನಗೆ ತಿಂಡಿ ಬಡಿಸುತ್ತೇನೆ. ಇನ್ನೇನು ಅವರು ಎದ್ದು ಬಿಡುತ್ತಾರೆ. ಮೊಮ್ಮಗ ನಿನ್ನನ್ನು ಕಂಡಿದ್ದೇ ಹಾರಾಡಿ ಉಪದ್ರವ ಮಾಡ್ತಾನೇಂತ ಅವನನ್ನ ಫೋನಿಗಂಟಿಕೊಂಡಿರಲಿ ಅಂತ ಸುಮ್ಮನಿದ್ದೇನೆ – ಹೇಳಿಲ್ಲ. ಏಳು ಏಳು” ಎಂದು ಸ್ನಾನ ಮಾಡಬೇಕೆಂದು ತಲೆಗೆ ನೀರು ಸುರಿದು ಕೊಳ್ಳುವ ಹಾವ ಭಾವ ಮಾಡಿತೋರಿಸಿದರು. ದಿನಕರ ಅವರು ಕೊಟ್ಟ ಶುಭ್ರವಾದ ಟವಲನ್ನೂ ಪಿಯರ್‍ಸ್ ಸೋಪನ್ನೂ ಇಸಿದುಕೊಂಡ. ಅಮ್ಮನಿಗೆ ಪಿಯರ್‍ಸ್ ಸೋಪು ತನಗಿಷ್ಟವೆಂಬುದು ಇಪ್ಪತೈದು ವರ್ಷಗಳ ನಂತರವೂ ಇನ್ನೂ ನೆನಪಿದೆಯಲ್ಲ ಎಂದು ಆಶ್ಚರ್ಯವಾಯಿತು. “ಅಂತೂ ನನಗೆ ಇನ್ನೊಂದು ಅಮ್ಮ ಇದೆಯೆಂದಾಯಿತು” ಎಂದು ಹಾಸ್ಯದಲ್ಲಿ ಹಿಂದಿಯಲ್ಲಿ ಹೇಳಿದ, ಅಮ್ಮನಿಗೆ ಅರ್ಥವಾಗುವುದಿಲ್ಲ ಎಂಬುದನ್ನು ಮರೆತು. ಅದೇ ಹಾಸ್ಯದಲ್ಲಿ ಸೀತಮ್ಮ”ಏನೋ, ಬೆಳಗಾಗಿ ಎದ್ದು ಸಾಬರ ಭಾಷೆಯಲ್ಲಿ ನನ್ನ ಹತ್ತಿರ ಮಾತಾಡ್ತಿದಿಯಲ್ಲೋ” ಎಂದರು. “ತ್ರಿಪಾಠಿಗಳು ಅಂಥ ಮಡಿ ಬ್ರಾಹ್ಮಣರು – ಈ ಭಾಷೆಯಲ್ಲಿ ಯಾಕೆ ಮಾತಾಡ್ತಾರೇಂತ ನನ್ನ ಮಂಕು ಬುದ್ಧಿಗೆ ಆಶ್ಚರ್ಯವೋ ಆಶ್ಚರ್ಯ” ಎಂದು ಆಡಬಾರದಾಗಿದ್ದ ಮಾತು ಎಂಬಂತೆ ಸೀರೆಯ ಸೆರಗಿನಿಂದ ಬಾಯಿಯನ್ನು ಮುಚ್ಚಿಕೊಂಡು ನಗುತ್ತ ಮತ್ತೆ ತಮ್ಮ ಅಡುಗೆ ಮನೆ ಹೊಕ್ಕರು. ದಿನಕರ ಸ್ನಾನ ಮುಗಿಸಿ ಬರುವುದರಲ್ಲಿ ಮನೆ ತುಂಬ ಸಡಗರವೋ ಸಡಗರ. ನಾರಯಣ ತಂತ್ರಿಯ ಮಗ ದಿಢೀರನೆ ದಿನಕರನ ಕಾಲಿಗೆ ಸಾಷ್ಟಾಂಗ ಬಿದ್ದು ಕುಣಿದಾಡತೊಡಗಿದ್ದ. “ನೀನು ಮನೇಗೆ ಬಂದಿದಿ ಅನ್ನೋದನ್ನು ತನ್ನ ಪಟಾಲಮ್ಮಿಗೆಲ್ಲ ಹೇಳಿ ಕೊಚ್ಚಿಕೊಂಡು ಹೇಗೆ ಈ ಮಾಣಿ ತನ್ನ ಬೇಳೆ ಬೇಯಿಸಿಕೊಳ್ಳತ್ತೆ ನೋಡ್ತಾ ಇರು” ಎಂದು ಸೀತಮ್ಮ ಲೇವಡಿ ಮಾಡುತ್ತ ನಿಂತದ್ದನ್ನು ಕಂಡು, ನಾರಾಯಣ ತಂತ್ರಿ ತಾಯಿಕಡೆ ನೋಡಿ ಕಣ್ಣು ಮಿಟುಕಿಸಿದ, ದಿನಕರನಿಗೆ ಮುಜುಗರವಾಗಬಾರದು ಎಂದು. ನಾರಾಯಣ ತಂತ್ರಿಯಲ್ಲಾದ ಬದಲಾವಣೆಗಳನ್ನು ದಿನಕರ ಗಮನಿಸಿದ. ಇವನನ್ನು ಖಂಡಿತ ತಾನು ಗುರುತು ಹಿಡಿಯುತ್ತಿರಲಿಲ್ಲ. ತೋರವಾಗಿಬಿಟ್ಟಿದ್ದಾನೆ. ಸಾರ್ವಜನಿಕ ಮನುಷ್ಯನಂತೆ ಮಾತನ್ನು ಲೆಖ್ಖಾಚಾರ ಮಾಡಿ ಬಳಸುತ್ತಾನೆ. ಹಳೆಯ ಗೆಳೆಯನ ಚೂಟಿಯಾಗಲೀ, ತುಂಟತನವಾಗಲೀ ಉಳಿದಂತೆ ಕಾಣುವುದಿಲ್ಲ. ದಿನಕರನಿಗೆ ಕೊಂಚ ವ್ಯಥೆಯಾಯಿತು – ಅಮ್ಮ ಸಿಕ್ಕರೂ ಬಂಧು ಸಿಗಲಾರ ಎಂದು. ಒಂದು ಕ್ಷಣದಲ್ಲೇ ನಾರಾಯಣ ತಂತ್ರಿಯನ್ನು ನೋಡಿದವನಿಗೆ ತಾನು ಮಾಡಿಕೊಂಡು ಬಂದ ನಿರ್ಧಾರ ಕುಸಿದಿತ್ತು. ತನ್ನನ್ನು ಕಾಡುತ್ತಿರುವ ಒಂದು ದೊಡ್ಡ ಗುಟ್ಟನ್ನು ಅವನಿಗೆ ಹೇಳಬೇಕೆಂದಿದ್ದ. ಆದರೆ ಈ ಸಾರ್ವಜನಿಕನಾಗಿಬಿಟ್ಟ ಯಶಸ್ವಿ ಲಾಯರಿಗೆ ಅದನ್ನು ಹೇಳಲಾರನೇನೋ ಎಂದು ಕಸಿವಿಸಿ ಪಡುತ್ತಲೇ ತನ್ನೊಳಗೇ ಮುಂದಿನ ಮಾತುಗಳನ್ನು ಸಿದ್ಧಪಡಿಸಿಕೊಳ್ಳುತ್ತಾ ಹೋದ: “ನೋಡು ನಾರಾಯಣ, ನನ್ನ ಜೀವನದಲ್ಲಿ ಪವಿತ್ರವಾದ್ದು ಏನೂ ಉಳಿದಿಲ್ಲವೆನ್ನಿಸಿ ಈ ಬಟ್ಟೆ ತೊಟ್ಟು ಹೊರಟಿದ್ದೇನೆ. ನನ್ನನ್ನು ಸಾಕಿದ್ದ ತಾಯಿತಂದೆಯರು ಸತ್ತ ಮೇಲೆ ಅವರ ಮಕ್ಕಳು ಶುದ್ಧ ವ್ಯಾಪಾರಿಗಳಾಗಿ ಬಿಟ್ಟರು. ತ್ರಿಪಾಠಿಗಳು ಖರ್ಚು ಮಾಡಲು ಬಿಡದೆ ನನ್ನದಾಗಿ ಉಳಿದೇ ಬಿಟ್ಟಿದ್ದ ಬಂಗಾರದ ಮೇಲೆ ಕಣ್ಣು ಹಾಕಿದರು. ನನಗೆ ಹೇಸಿಗೆಯಾಗಿ ಅವರು ಬಯಸಿದಷ್ಟನ್ನು ಅವರಿಗೆ ಕೊಟ್ಟುಬಿಟ್ಟೆ. ನನ್ನನ್ನು ಬೆಳೆಸಿದವರು ಇಲ್ಲವಾದ ಮೇಲೆ ಆ ಮನೆಗೆ ಹೋಗುವುದೇ ಕಡಿಮೆಯಾಯಿತು. ತ್ರಿಪಾಠಿಗಳ ಶ್ರಾದ್ಧಕ್ಕಷ್ಟೇ ನಾನೀಗ ಹೋಗುವುದು. ಇಂಗ್ಲೆಂಡಲ್ಲಿ ಓದು ಮುಗಿಸಿ ಬಂದವನು ದೆಹಲಿ ಸೇರಿ ಪ್ರಸಿದ್ಧನಾಗುತ್ತ ಹೋಗಿ ಠೊಳ್ಳಾಗುತ್ತಲೂ ಹೋದೆ. ಸಾರ್ವಜನಿಕವಾಗಿ ಬೇಕಾದ್ದನ್ನು ಸರಾಗವಾಗಿ ಆಡಿ ಬಿಟ್ಟು, ಯಾರನ್ನಾದರೂ ಮೋಡಿ ಮಾಡುವ ಮನುಷ್ಯನಾಗಿ ಬಿಟ್ಟೆ. ನನ್ನ ಬೇರುಗಳು ಎಲ್ಲಿ ತಿಳಿಯಲಾರದೆ, ಹುಡುಕಿದರೂ ಅವು ಸಿಗದವು ಎನ್ನಿಸಿ, ಒಂಟಿಯಾಗಿ ಇರಲಾರದೆ ಲೋಲುಪನಾದೆ. ನನ್ನ ಪ್ರೇಯಸಿಯರು ಈಗ ಎಲ್ಲೆಲ್ಲೂ ಇದಾರೆ. ಇಂಗ್ಲೆಂಡಿನಲ್ಲಿ, ಲಕ್ನೋದಲ್ಲಿ, ದೆಹಲಿಯಲ್ಲಿ – ಹೀಗೆ ಪ್ರೀತಿ ಮಾಡಿದ್ದೂ ಬಳಲಿಕೆಯಲ್ಲಿ ಕೊನೆಯಾಗತೊಡಗಿತು. ಒಂದು ಪ್ರೀತಿಯಿಂದ ಇನ್ನೊಂದನ್ನು ಮುಚ್ಚಿಡುತ್ತ, ಒಟ್ಟಾಗಿ ಹಲವು ಹೆಣ್ಣುಗಳನ್ನು ನಿರ್ವಹಿಸುವುದು ಬಾಧೆಯಾಗುತ್ತ ಹೋಯಿತು. ಅದೊಂದು ಬಿಡಲಾರದ ಚಟವೂ ಆಯಿತು. ಈ ನನ್ನ ಉದ್ಯೋಗವೂ ಶುರುವಾದದ್ದು ಹರಿದ್ವಾರದಲ್ಲಿ. ನನ್ನ ಇಪ್ಪತ್ತನೇ ವಯಸ್ಸಿನಲ್ಲೇ. ನಿನ್ನ ಜೊತೆ ಇದ್ದಾಗಲೇ. ನಿನ್ನ ತಾಯಿಯಲ್ಲಿ ನಾನು ಕಳಕೊಂಡ ತಾಯನ್ನು ಕಾಣುತ್ತ ನಾನು ಹೊಸ ಹುಟ್ಟು ಪಡೆಯುತ್ತಿದ್ದಾಗಲೇ. ಅಂಥ ಪವಿತ್ರವಾದ ದಿನಗಳಲ್ಲೂ ನಾನು ಒಂದು ದೊಡ್ಡ ರಹಸ್ಯವನ್ನು ಯಾವ ಪಶ್ಚಾತ್ತಾಪವೂ ಇಲ್ಲದಂತೆ ಬೆಳೆಸಿಕೊಳ್ಳುತ್ತ ಸುಖವನ್ನೂ ಪಟ್ಟೆ. ಅಂದರೆ ಅದರ ಅರ್ಥ ಏನು ಎಂದು ತಿಳಿಯಲು….” ಇತ್ಯಾದಿ ಮಾತುಗಳಲ್ಲಿ ಬಳಸೀ ಬಳಸೀ ವಿಷಯಕ್ಕೆ ಹೇಗೆ ಬರುವುದೆಂದು ತನ್ನನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ದಿನಕರ ಹತಾಶೆಯಲ್ಲಿ ತನ್ನ ಹಳೆ ಗೆಳೆಯನ ಕಡೆ ನೋಡಿದ. ನಾರಾಯಣ ತಂತ್ರಿ ಅತಿಶಯವಾದ ಸೌಜನ್ಯದಿಂದ ದಿನಕರನ ಮುಖಸ್ಥಿತಿ ಮಾಡಲು ತೊಡಗಿದ್ದ. ತನ್ನ ಗೆಳೆಯನೂ ಯಾವುದೋ ದುಃಖವನ್ನು ಮರೆಯಲು ಇಂಥ ಗಂಟಲನ್ನು ಸಿದ್ಧಪಡಿಸಿಕೊಂಡಿದ್ದಾನೆ ಎಂದು ದಿನಕರನಿಗೆ ಅನುಮಾನವಾಯಿತು. +ಅಧ್ಯಾಯ ೨ +ಬಚ್ಚಲಿನ ಒಲೆಯಲ್ಲಿ ಬಿಸಿ ಬೂದಿಯ ಮೇಲೆ ಬಾಡಿಸಿದ ಬಾಳೆಲೆ. ಅದರದ್ದೆ ಆದ ಸುವಾಸನೆಯ ಈ ಕುಡಿಯೆಲೆಯ ಮೇಲೆ ಹಲಸಿನೆಲೆಯ ಕೊಟ್ಟೆಯಲ್ಲೇ ಬೇಯಿಸಿದ ಕಡುಬು. ಅದರ ಮೇಲೆ ಹಸುವಿನ ತುಪ್ಪ, ಮೂರು ಬಗೆಯ ಚಟ್ನಿಗಳು. ಬಾಳೆಲೆಯ ದೊನ್ನೆಯಲ್ಲೇ ಪ್ರತ್ಯೇಕವಾಗಿ ಕೆನೆ ಮೊಸರು. ಪಕ್ಕದಲ್ಲೇ ಬಿಸಿ ಬಿಸಿ ಕಾಫಿ. ಈ ಪದಾರ್ಥಗಳ ಹೆಸರು ಗೊತ್ತಿಲ್ಲದ ದಿನಕರ ರುಚಿಪಡುತ್ತ ತಿನ್ನಲು ಕೂತ. ಸ್ನಾನ ಮಾಡಿ ಬಂದ ತಂತ್ರಿ ಮತ್ತು ಅವರ ಮಗ ಗೋಪಾಲತಂತ್ರಿಯೂ ಅವನ ಜೊತೆ ಕೂತು ಅವನಿಗಿಂತ ಹೆಚ್ಚಾಗಿ ಬಡಿಸಿಕೊಂಡರು. ಭಾನುವಾರವಾದ್ದರಿಂದ ಕೋರ್ಟಿನ ಕೆಲಸವಿಲ್ಲದ ನಾರಾಯಣತಂತ್ರಿ ಆರಾಮವಾಗಿರುವಂತೆ ಕಂಡಿತು. ಗೋಪಾಲ ಮಾತ್ರ ತನ್ನ ಗೆಳೆಯರಿಗೂ ತನ್ನ ಹಿಂಬಾಲಕರಿಗೂ ದಿನಕರನ ವಿಷಯ ಹೇಳಲು ತವಕಿಸುತ್ತ ಕೂತಿದ್ದ. ಹಿತ್ತಲಿನಿಂದ ‘ಅಮ್ಮ’ ಎಂದು ಕರೆದಿದ್ದು ಕೇಳಿಸಿತು. ‘ಯಾರು ಚಂದ್ರಪ್ಪನ? ಸ್ವಲ್ಪ ಇರು, ಎಂದು ಸೀತಮ್ಮ ಹಿತ್ತಲಿಗೆ ಹೋದರು. ಒಳಗೆ ಬಂದು ಒಂದು ಬಾಳೆಲೆ ಮೇಲೆ ಕಡಬು ಚಟ್ನಿಗಳನ್ನು ಬಡಿಸಿಕೊಂಡು ಮತ್ತೆ ಹಿತ್ತಲಿಗೆ ಹೋಗುವಾಗ ಮಗನಿಗೆ “ನೀನು ಮನೇಲಿ ಇರ್‍ತೀಯ ಅಂತ ಕೇಳಲಿಕ್ಕೆ ಚಂದ್ರಪ್ಪ ಬಂದಿದಾನೆ. ಗಂಗೂಬಾಯಿ ಯಾಕೊ ನಿನ್ನನ್ನ ನೋಡಬೇಕಂತೆ. ಬರಲಿ ಎಂದೆ” ಎನ್ನುತ್ತ ಹಿತ್ತಲಿಗೆ ಚಂದ್ರಪ್ಪನಿಗದನ್ನು ತಿನ್ನಲು ಕೊಡಲು ಹೋದರು. ಮಡಿ ಮುಸುರೆಗಳಲ್ಲಿ ನಿಷ್ಟೆಯವರಾದ ಸೀತಮ್ಮ ಚಂದ್ರಪ್ಪನಿಗಾಗಲೀ, ಗಂಗೂಬಾಯಿಗಾಗಲೀ, ಅವಳ ಮಗ ಪ್ರಸಾದನಿಗಾಗಲೀ ಒಳಗೆ ಬಡಿಸರು; ಆದರೆ ಏನಾದರೂ ತಿನ್ನಲು ಕೊಡದೆಯೊ ಉಪಚಾರ ಮಾಡದೆಯೊ ಕಷ್ಟ ಸುಖ ಕೇಳದೆಯೊ ಎಂದೆಂದೂ ಅವರನ್ನು ಹಿಂದೆ ಕಳಿಸರು. ಗಂಗೂಬಾಯಿಗೆ ಮನೆಗೇ ಬರುವಂತೆ ಅಜ್ಜಿ ಹೇಳಿದಳೆಂಬುದು ಗೋಪಾಲನಿಗೆ ಇಷ್ಟವಾದಂತೆ ಕಾಣಲಿಲ್ಲ. ಮಗನ ಮುಖ ಸಿಂಡರಿಸಿದ್ದನ್ನು ಕಂಡು ನಾರಾಯಣ ತಂತ್ರಿ ಕಳೆಗುಂದಿದ. ಅಪ್ಪ ಮಗನ ನಡುವೆ ಅದೇನು ನಡೆಯುತ್ತಿದೆ ದಿನಕರನಿಗೆ ತಿಳಿಯಲಿಲ್ಲ. ಮಗುವಾಗಿದ್ದಾಗ ಅವನು ಹಠಮಾರಿಯಾಗಿದ್ದನೆಂದು ದಿನಕರನಿಗೆ ನೆನಪಿದೆ, ಅವನನ್ನು ಹೇಗಾದರೂ ನಿದ್ದೆ ಮಾಡಿಸಲೆಂದು ಹುಡುಗಿಯಾಗಿದ್ದ ಗಂಗೂ ಮಾಡುತ್ತಿದ್ದ ಚತುರೋಪಾಯಗಳೂ ಅವನಿಗೆ ನೆನಪಿವೆ. ವಾತಾವರಣ ಬಿಗಿಯಾದ್ದನ್ನು ಲೆಕ್ಕಿಸದೆ ಸೀತಮ್ಮ ಹಿತ್ತಲಿಗೆ ಹೋಗಿ ಸರಿಯಾಗಿ ಮಾತನಾಡಲಾರದ, ಮಂದಬುದ್ಧಿಯ ಚಂದ್ರಪ್ಪನ ಜೊತೆ ಕಷ್ಟಸುಖ ಹಂಚಿಕೊಳ್ಳುತ್ತ ಮಾತಾಡತೊಡಗಿದರು. ಹಸು ಎಷ್ಟು ಹಾಲು ಕೊಡುತ್ತಿದೆ? ಆ ಬಿಳಿ ಹಸುವಿಗೆ ಗಬ್ಬ ನಿಂತಿತೆ? ಹೋರಿಕರುಗಳ ಮಾರಾಟವಾಯಿತೆ? ಎಷ್ಟು ಸಿಕ್ಕಿತು? ಗಂಗೂಬಾಯಿಯ ಸ್ಕೂಲಿನ ರಜ ಎಲ್ಲಿವರೆಗೆ? ಪ್ರಸಾದ ಯಾಕೆ ಇತ್ತ ಕಡೆ ಮುಖ ಹಾಕುತ್ತಲೇ ಇಲ್ಲ? ಅವನ ಸಂಗೀತ ಅಭ್ಯಾಸ ಹೇಗೆ ನಡೆದಿದೆ? ದೇವಸ್ಥಾನದಲ್ಲಿ ರಾಮನವಮಿ ದಿವಸ ಅವನು ಹಾಡಿದ್ದು ಎಷ್ಟು ಚೆಂದಾಗಿತ್ತು – ಹೀಗೆ ಸೀತಮ್ಮ ಈ ವಾರದಲ್ಲಿ ಅದೆಷ್ಟು ಬಾರಿಯೋ ಕೇಳಿದ್ದೇ ಕೇಳುತ್ತಿರುವಾಗ ಚಂದ್ರಪ್ಪನಿಗೆ ಯಾವ ಉತ್ತರವನ್ನೂ ಅವರು ನಿರೀಕ್ಷಿಸಿರಲಿಲ್ಲ. ಅವನನ್ನು ತಣಿಸುವುದು ಮಾತ್ರ ಅವರ ಮಾತಿನ ಗುರಿಯಾಗಿತ್ತು. ಚಂದ್ರಪ್ಪನೂ, ಸೀತಮ್ಮನ ಅಕ್ಕರೆಯ ಮಾತುಗಳಿಂದ ತಣಿದು ಬಾಯಿ ಬಿಟ್ಟು ಕೇಳಿಸಿಕೊಳ್ಳುತ್ತಾನೆ. ಅವನು ಬಾಯಿ ಬಿಟ್ಟೇ ತನ್ನ ಕಡೆ ನೋಡುವುದನ್ನು ಗಮನಿಸಿ ಸೀತಮ್ಮ, “ಯಾಕೆ ಚಂದ್ರಪ್ಪ ಕಡುಬು ರುಚಿಯಾಗಿಲ್ಲವ? ಒಂದಿಷ್ಟು ಮೊಸರು ತರಲ? ನಿನ್ನದೇ ತುಂಗೆಯ ಹಾಲಿನ ಮೊಸರು. ಚಾಕಲ್ಲಿ ಕತ್ತರಿಸಬೇಕು, ಅಷ್ಟು ಗಟ್ಟಿ ಮೊಸರು” ಎಂದು ಸೀತಮ್ಮ ಅಂದದ್ದು ಚಂದ್ರಪ್ಪನಿಗೆ ಅರ್ಥವಾಯಿತು. ಅವನು ತಲೆಯಲ್ಲಾಡಿಸುತ್ತ “ಇಲ್ಲಮ್ಮ” ಎಂದು ಕಡುಬನ್ನು ತಿನ್ನತೊಡಗಿದ. ಹಿತ್ತಲಿನಲ್ಲಿ ಬಲಿತು ಬಿದ್ದಿದ್ದ ತೆಂಗಿನ ಕಾಯನ್ನು ಸೀತಮ್ಮ ಎತ್ತಿತಂದು, “ಚಂದ್ರಪ್ಪ ಇದನ್ನು ಸುಲಿದುಕೊಡುತ್ತೀಯಾ?” ಎಂದರು. ಅವರಿಗೆ ಈ ಕಾಯಿಯನ್ನು ಸುಲಿಯುವುದೇನೂ ಬೇಕಿರಲಿಲ್ಲ. ಆದರೆ ಕತ್ತಿ ಹಿಡುದು ಮಾಡುವ ಇಂಥ ಕೆಲಸಗಳೆಂದರೆ ಚಂದ್ರಪ್ಪ ಖುಷಿಯಾಗಿ ಬಿಡುತ್ತಾನೆಂದು ಅವರಿಗೆ ಗೊತ್ತು. ಮನೆಯಲ್ಲಿ ಅವನು ಪ್ರಸಾದನ ಸೈಕಲ್ಲನ್ನು ಒಂದು ಕಣ ಧೂಳಿಲ್ಲದಂತೆ ಶುಭ್ರವಾಗಿ ಒರಸಿ, ಆಯಿಲ್ ಬಿಟ್ಟು, ಸೈಕಲ್ಲಿನ ಹ್ಯಾಂಡಲ್ಗೆ ಅವನೇ ಕಟ್ಟಿದ ಚಂಡುಹೂವಿನ ಸರವನ್ನೂ ಸುತ್ತುತ್ತಾನೆ – ಪ್ರತಿದಿವಸವೂ ಹಬ್ಬ ಹರಿದಿನಗಳಲ್ಲಿ ಮಾವಿನೆಲೆಯನ್ನು ತಂದು ತಮ್ಮ ಮನೆಗೆ ತೋರಣ ಕಟ್ಟುವುದೂ ಅವನೇ. ಸೀತಮ್ಮ ಒಳಬಂದವರು ತನ್ನೊಡನೆ ಮಾತಾಡಲೆಂದು ಅಡುಗೆ ಮನೆಯಲ್ಲೇ ಕಾದ್ದಿದ್ದ ಗೋಪಾಲನನ್ನು ಸಿಟ್ಟಿನಲ್ಲಿ ನೋಡಿದರು. ಅವನು ಏನು ಹೇಳಲಿಕ್ಕೆ ಕಾದಿದ್ದಾನೆ ಎಂಬುದು ಅವರಿಗೆ ಗೊತ್ತಿತ್ತು. ಗೋಪಾಲ ಅಳುಬುರುಕ ಮುಖ ಮಾಡಿಕೊಂಡು ಹೇಳಿದ: “ಅಪ್ಪ ಬೇಕಾದರೆ ಅಲ್ಲೇ ಹೋಗಲಿ. ಅವಳು ಇಲ್ಲಿ ಬರೋದು ಬೇಡ. ಊರವರೆಲ್ಲ ಏನು ಆಡಿಕೋತಾರೆ ನಿನಗೆ ಗೊತ್ತುಂಟಲ್ಲ.” “ಆಡೋವರ ಬಾಯೀನ ಮುಚಿಸಲಿಕ್ಕೆ ಆಗುತ್ತೇನೋ? ಅವರಿಂದ ನಮಗೇನಾಗಬೇಕು ಹೇಳು. ನಿನ್ನ ದರಿದ್ರ ರಾಜಕೀಯಕ್ಕಷ್ಟು ಬೆಂಕಿ ಹಾಕಿತು. ಇಲ್ಲಿನ ಬ್ರಾಹ್ಮಣರು ಓಟು ಕೊಡಲ್ಲಾಂತ ನಿನ್ನ ಚಿಂತೆಯಲ್ಲವ? ನಿನ್ನನ್ನು ಕಣ್ಣು ಬಿಟ್ಟು ನೋಡದೆ ನಿನ್ನ ಅಮ್ಮ ಹೆತ್ತವಳೇ ಸತ್ತದ್ದು ಗೊತ್ತ? ಈ ಗಂಗೂನೇ ನಿನ್ನ ಎತ್ತಿ ಆಡಿಸಿದವಳು. ಅವಳು ನಿನ್ನ ತಾಯಿಗೆ ಸಮ ಅನ್ನೋದನ್ನ ಮರೀಬೇಡ. ಎಲ್ಲಿ ಏಳು, ಹೋಗು. ಕೆಟ್ಟ ಯೋಚನೆ ಮಾಡಿದ್ದಕ್ಕೆ ತಪ್ಪಾಯ್ತೂಂತ ದೇವರಿಗೆ ನಮಸ್ಕಾರ ಮಾಡಿ ಬಾ. ತಗೋ, ಈ ರೂಪಾಯಿ ಕಾಣಿಕೇನ ದೇವರ ಎದುರಿನ ತಿರುಪತಿ ಹುಂಡಿಗೆ ಹಾಕಿ ಬಾ” ಎಂದು ಸೊಂಟಕ್ಕೆ ಸಿಕ್ಕಿಸಿಕೊಂಡ ಚಿಲ್ಲರೆಯಲ್ಲಿ ಒಂದು ರೂಪಾಯಿ ಕೊಟ್ಟರು. ಇನ್ನೂ ಚಿಲ್ಲರೆ ಹಣ ಸೊಂಟದಲ್ಲಿತ್ತು: ಮನೆಗೆ ಬಂದ ಭಿಕ್ಷುಕರಿಗೆ ಹಾಕಲಿಕ್ಕೆ ಅಂತ ಸೊಂಟದಲ್ಲಿ ಸದಾ ಸೀತಮ್ಮ ಚಿಲ್ಲರೆ ಹಣ ಇಟ್ಟುಕೊಳ್ಳುವುದು. ಗೋಪಾಲ ಸಣ್ಣ ಬಾಲನಂತೆ ಅವರು ಕೊಟ್ಟ ರೂಪಾಯನ್ನು ತೆಗೆದುಕೊಂಡು ನಿಟ್ಟುಸಿರು ಬಿಡುತ್ತ ದೇವರ ಕೋಣೆಗೆ ಹೋಗುವುದನ್ನು ಕಂಡು ಸೀತಮ್ಮ ತಣಿದು ತಾವೂ ಸಿಟ್ಟುಸಿರು ಬಿಟ್ಟರು. +ಅಧ್ಯಾಯ ೩ +ನಾರಾಯಣ ತಂತ್ರಿಯ ಜೊತೆ ಮಾತು ಮುಗಿಸಿ ಮಹಡಿಯಿಂದ ಕೆಳಗಿಳಿಯುತ್ತಿದ್ದ ಗಂಗೂ ಅಳುತ್ತಿರುವವಳಂತೆ ಕಂಡಿತು. ಅವಳನ್ನು ಇಪ್ಪತ್ತೈದು ವರ್ಷಗಳ ನಂತರವೂ ನೋಡಿ ದಿನಕರನಿಗೆ ಎದೆ ಹೊಡೆದುಕೊಳ್ಳತೊಡಗಿತು. ನಾರಾಯಣ ತಂತ್ರಿಯೂ ಮುಖ ಕೆಳಗೆ ಹಾಕಿ ಅವಳ ಹಿಂದಿಂದ ಉಪ್ಪರಿಗೆಯ ಹಳೆಯ ಕಾಲದ ಕಡಿದಾದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ. ಸ್ವಾಧೀನ ತಪ್ಪದಂತೆ ಕಂಬಿಯನ್ನು ಹಿಡಿದು. ಗಂಗೂ ಇನ್ನೂ ಸಪೂರವಾಗಿಯೇ ಉಳಿದು, ಕಪ್ಪು ಬಿಳಿ ಮಿಶ್ರಿತ ತಲೆಗೂದಲನ್ನು ಗಂಟುಕಟ್ಟಿ, ಎರಡು ಕೈಗಳಿಂದಲೂ ಸೆರಗನ್ನು ಜಗ್ಗಿ ಹಿಡಿದು ಲಾವಣ್ಯವತಿಯಾದ ಪ್ರೌಢೆಯಾಗಿ ಕಾಣುತ್ತಿದ್ದಾಳೆ. ಅವಲಂಬನವಿಲ್ಲದೆ ಕೆಳಗಿಳಿದು ಬಂದವಳು ತನ್ನ ಕಾಲಿಗೆ ಎರಗಿ ’ಬಂದಿರ?’ ಎಂದಳು. ಇನ್ನೂ ಅವಳ ಬಳೆಯ ಹುಚ್ಚು ಬಿಟ್ಟಂತಿರಲಿಲ್ಲ. ಎರಡು ಕೈಗಳಲ್ಲೂ ಎಷ್ಟೊಂದು ಗಾಜಿನ ಬಳೆಗಳನ್ನು ತೊಟ್ಟು, ಅದಕ್ಕೆ ಹೊಂದುವ ಬಣ್ಣದ ಸೀರೆ ಕುಪ್ಪಸಗಳನ್ನು ತೊಟ್ಟಿದ್ದಾಳೆ. ಸೀತಮ್ಮ ಒಳಗಿನಿಂದ ಬಂದು ಹಿತವಾಗಿ ಮಾತನ್ನಾಡಲು ತೊಡಗಿದ್ದರಿಂದ ದಿನಕರನಿಗೆ ತನ್ನ ಭಾವನೆಗಳನ್ನು ತೋರಗೊಡದಂತೆ ಇರುವುದು ಸಾಧ್ಯವಾಯಿತು. ನಾರಾಯಣ ತನ್ನ ಭಾವನೆಗಳನ್ನೆಲ್ಲ ಗಮನಿಸುತ್ತ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಂತಿದ್ದ. ಈ ಬಟ್ಟೆ ತೊಟ್ಟು ತಾನು ಬಿಟ್ಟುಕೊಟ್ಟುಬಿಟ್ಟೆನೆಂದು ತಿಳಿದಿದ್ದ ತನ್ನ ನೈಜ ವ್ಯಕ್ತಿತ್ವ ಬದಲಾಗಿಲ್ಲವೆಂದು ದಿನಕರ ಯೋಚಿಸುತ್ತ, ಸಜ್ಜನಿಕೆಗಾಗಿ ಏನಾದರು ಹೇಳಬೇಕೆಂದು ’ಹೇಗಿದ್ದೀರಿ’ ಇತ್ಯಾದಿ ಹಿಂದಿಯಲ್ಲಿ ಹೇಳಿದ. ಆಗಲೂ ಗಂಗೂಗೆ ಹೈಸ್ಕೂಲಿನಲ್ಲಿ ಕಲಿತ ಹಿಂದಿ ಗೊತ್ತಿತ್ತು. ಎಷ್ಟು ಸರಸವಾಗಿ ಮಾತಾಡುತ್ತಿದ್ದವಳು ಈಗ ಸೀತಮ್ಮನ ಮಾತು ಕೇಳಿಸಿಕೊಳ್ಳುತ್ತ ಸುಮ್ಮಗೆ ನಿಂತಿದ್ದಳು. “ನಮ್ಮ ಗಂಗು ಸಾಮಾನ್ಯಳಲ್ಲ” ಸೀತಮ್ಮ ಹೇಳತೊಡಗಿದ್ದರು. “ಅವಳಿಗೆ ವಯಸ್ಸಾದ್ದು ಕಾಣುತ್ತ ನೋಡು. ಹರಿದ್ವಾರದಲ್ಲಿ ಇದ್ದಂತೆಯೆ ಇದಾಳಲ್ಲವ? ಬೆಳ್ಳಗಾದ ಕೂದಲಿಗೆ ಬಣ್ಣ ಹಾಕಿಕೊ ಎಂದರೆ ಇವಳು ಕೇಳ್ತಾಳಾ? ವೈರಾಗ್ಯ ಬಂದು ಬಿಟ್ಟಿದೆ. ಕಾಲೇಜು ಗೀಲೇಜೆಲ್ಲ ಮುಗಿಸಿ ಮೇಡಮ್ಮೂ ಆಗಿಬಿಟ್ಟಿದ್ದಾಳೆ. ಸ್ಕೂಲಿಂದ ಬರುವಾಗ ಯಾವಾಗಲೂ ಒಂದು ಹಿಂಡು ಮಕ್ಕಳು ಅವಳ ಹಿಂದೆ . ಕಿಂದರ ಜೋಗಿ ಇವಳು. ಇವಳಿಗೆ ಮಾತ್ರ ವೈರಾಗ್ಯವೋ ಅಂದರೆ ಇವಳ ಮಗನಿಗೂ ವೈರಾಗ್ಯವೇ. ಶುಕಮುನಿ ಹಾಗೆ ಅವನು. ನಮ್ಮ ಕುಲಶೇಖರ ಗೋಪಾಲನಂತೆ ಅವನು ಅಲ್ಲವೇ ಅಲ್ಲ. ಅಂಗಿ ಸಹ ಹಾಕಲ್ಲ ಅವನು. ಬಿಳೀ ಪಂಚೆಯುಟ್ಟುಕೊಂಡು ಬಿಳೀ ಧೋತ್ರ ಹೊದ್ದುಕೊಂಡು, ಇಷ್ಟುದ್ದದ ಗಡ್ಡ ಬಿಟ್ಟುಕೊಂಡು, ಅವನು ಹಾಡೋದು ಕೇಳಬೇಕು ನೀನು. ತ್ಯಾಗರಾಜರೇ ಮತ್ತೆ ಹುಟ್ಟಿಬಂದಂತೆ ಕಾಣತ್ತೆ. ನಮ್ಮ ಗಂಗೂ ಪುಣ್ಯಾತಗಿತ್ತಿ”. ಸೀತಮ್ಮನ ಮಾತಿನಿಂದ ಗಂಗೂ ಪ್ರಸನ್ನಳಾದಂತೆ ಕಂಡಳು. ತನಗರ್ಥವಾಗದ ಭಾಷೆಯಲ್ಲಿ ಹೀಗೆ ಎಲ್ಲರನ್ನೂ ಸಂತೈಸುವ ಸೀತಮ್ಮನನ್ನು ನೋಡುತ್ತ ದಿನಕರ ಬೆರಗಾದ. +ಅಧ್ಯಾಯ ೪ +“ಸುರತ್ಕಲ್ಲಿನ ಹತ್ತಿರ ಬೀಚು ತುಂಬ ಚೆನ್ನಾಗಿರುತ್ತದೆ. ಹೋಗೋಣ ಬಾ” ಎಂದು ಸಂಜೆಯಾಗುತ್ತಿದ್ದಂತೆ ನಾರಾಯಣ ದಿನಕರನಿಗೆ ಹೇಳಿದ. ತಾನೇ ಡ್ರೈವ್ ಮಾಡಿದ. ನಾರಾಯಣ ಅನ್ಯಮನಸ್ಕನಾಗಿ ಇದ್ದ. ಏನೋ ಮಾತಾಡಲು ತಾನು ಕಾದಿರುವಂತೆಯೇ ಅವನೂ ಕಾದಿದ್ದಾನೆಂದೂ ದಿನಕರನಿಗೆ ಅನುಮಾನವಾಯಿತು. ಚುನಾವಣೆ ಬಗ್ಗೆ ತಾನು ಮಾಡಿದ ಟೀವಿ ಕಾರ್ಯಕ್ರಮ, ಸೌತ್ ಆಫ್ರಿಕಾ ಬಗ್ಗೆ ತಾನು ಮಾಡಿದ ವರದಿ, ಅಲ್ಲಿ ಇಲ್ಲಿ ತಾನು ಬರೆಯುತ್ತಿದ್ದ ಲೇಖನಗಳು, ಇತ್ಯಾದಿಗಳನ್ನು ಎತ್ತಿ ನಾರಾಯಣ ಮೆಚ್ಚುಗೆಯಲ್ಲಿ ಮಾತಾಡುತ್ತಿದ್ದುದು ಏನನ್ನೋ ಮುಕ್ತವಾಗಿ ಹೇಳಲಾರದೆ ಮುಚ್ಚಿಕೊಳ್ಳುವ ಉಪಾಯದಂತೆ ಕಾಣುತ್ತಿತ್ತು. ಬೀಚಿನ ಶುಭ್ರವಾದ ಮರಳಿನ ರಾಶಿಯ ಮೇಲೆ ನಡೆಯುತ್ತ, ಸಮುದ್ರ ಅಲೆ‌ಅಲೆಯಾಗಿ ಏರಿ ಬಂದು ಹಿಮ್ಮೆಟ್ಟುವುದನ್ನು ಸುಖಿಸುತ್ತ ಇಬ್ಬರೂ ಮೌನವಾಗಿದ್ದಾಗ ನಾರಾಯಣ ತನ್ನ ಕಡೆ ತಿರುಗಿ ಕೈ ಹಿಡಿದು ಹೇಳಿದ. “ಅದೇನೋ ನಿನಗೆ ಹೇಳಲೇ ಬೇಕಾಗಿದೆ. ಈ ಇಪ್ಪತ್ತ್ಯೆದು ವರ್ಷಗಳಿಂದಲೂ ನಿನಗೆ ಹೇಳಬೇಕೆಂದುಕೊಂಡು, ಹೇಳಲಾರದೆ, ನಿನ್ನನ್ನ ನೋಡದೇ ಇರುವುದೇ ವಾಸಿ ಎಂದುಕೊಂಡು ಇದ್ದುಬಿಟ್ಟಿದ್ದೆ. ನೀನು ಯಾಕೆ ಬಂದಿಯೋ ಎನ್ನಿಸಿತು ನಿನ್ನ ನೋಡಿದಾಗ. ಆದರೆ ಇವತ್ತು ಬೆಳಿಗ್ಗೆ ಗಂಗು ಬಂದು ಹೋದಮೇಲೆ ನಿನ್ನ ಹತ್ತಿರ ಮಾತಾಡಿ ಬಿಡುವ ನಿಶ್ಚಯ ಮಾಡಿಬಿಟ್ಟೆ” ಎಂದು ಸುಮ್ಮನಾದ. ಇಬ್ಬರೂ ಕೆಲವು ಹೊತ್ತು ಏನೂ ಮಾತಾಡದೆ ಸಮುದ್ರ ನೋಡುತ್ತ ನಿಂತುಬಿಟ್ಟರು. ಸೂರ್ಯ ಅಸ್ತಮಿಸುತ್ತ ಆಕಾಶವನ್ನೆಲ್ಲ ಕ್ಷಣಕ್ಷಣಕ್ಕೂ ಬದಲಾಗುವ ಬಣ್ಣಗಳಿಂದ ತೊಯ್ಯುತ್ತಿದ್ದ. ಬೀಚಿನ ಮೇಲೆ ಬಲೆಗಳನ್ನು ಹರಡಿಕೊಂಡಿದ್ದ ಮೀನುಗಾರರಲ್ಲದೆ ಬೇರೆ ಯಾರೂ ಇರಲಿಲ್ಲ. ದಿನಕರ ಮರಳಿನ ಮೇಲೆ ಕೂತು ಮುಂದಿನದನ್ನು ಕಾಯುತ್ತ ಮರಳನ್ನು ಗುಪ್ಪೆ ಮಾಡಲು ತೊಡಗಿದ್ದ. ನಲವತ್ತೈದು ವಯಸ್ಸಿನ ತಾನು ಬಾಲನಾಗುತ್ತಿದ್ದೇನೆ ಎನ್ನಿಸಿತು. ಏನನ್ನಾದರು ಕೇಳಿಸಿಕೊಳ್ಳಬಲ್ಲೆ. ಹೇಳಬಲ್ಲೆ ಎನ್ನಿಸಿತ್ತು. ನಾರಾಯಣನೂ ತನ್ನ ಸಾರ್ವಜನಿಕ ಕ್ಷೇತ್ರದಲ್ಲಿ ಜಾಗರೂಕತೆಯಿಂದ ಬಳಸುವ ಇಂಗ್ಲಿಷಿನಿಂದ ಮುಕ್ತನಾಗಿ, ತನಗರಿವಾಗದಂತೆ ಕನ್ನಡ ಬೆರೆಸಿ ತನಗೇ ಮಾತನಾಡಿಕೊಳ್ಳುತ್ತಿರುವಂತೆ ಸಹಜವಾಗಿ ಬಿಟ್ಟಿದ್ದ. ಆದರೂ ಬಳಸಿ ಬಳಸಿ ಹೇಳಬೇಕಾದ್ದನ್ನು ಸುತ್ತುತ್ತಿದ್ದ. ದಿನಕರನಿಗೆ ತಾನೇ ಹೇಳಿಬಿಡಬೇಕೆನ್ನಿಸಿತು. ಆದರೆ ನಾರಾಯಣನ ತುಮುಲದಲ್ಲಿ ತನ್ನ ಮಾತು ಉಚಿತವಾಗಿ ಕಾಣಲಾರದೆಂದು ಸುಮ್ಮನಾದ. ಬಣ್ಣಗಳನ್ನೆಲ್ಲ ಕಳೆದುಕೊಳ್ಳುತ್ತ ಆಕಾಶ ತನ್ನದೇ ಆದ ವ್ಯಸನಕ್ಕೆ ಚಿರಕಾಲದಿಂದಲೂ ಹಿಂತಿರುಗುತ್ತಲೇ ಇರುವಂತೆ ಕಂಡಿತು. “ದಿನಕರ, ನನ್ನ ಹೆಂಡತಿ ಸತ್ತಮೇಲೆ ನಾನು ಮತ್ತೆ ಮದುವೆಯಾಗಲೇ ಇಲ್ಲ. ನಮ್ಮ ಮನೆಯಲ್ಲಿ ಹೊರಗೆಲಸಕ್ಕೆಂದು ಸೇರಿದ ಗಂಗೂ ಮನೆಯವಳೇ ಆದಳು. ಗೋಪಾಲನನ್ನು ಬೆಳೆಸಿದಳು. ಆಗಲೇ ಅವಳಿಗೊಂದು ಸೋದರಿಕೆಯ ಸಂಬಂಧವಾಗಿ ಬಿಟ್ಟಿತ್ತು. ಅವಳ ತಾಯಿ ವೇಶ್ಯಾವೃತ್ತಿಯಲ್ಲಿದ್ದವಳು. ಅನುಕೂಲವಾಗತ್ತೇಂತ ಮಂದಬುದ್ಧಿಯವನೊಬ್ಬನಿಗೆ, ಅಂದರೆ ತನ್ನ ತಮ್ಮನೊಬ್ಬನಿಗೆ, ಅವಳನ್ನು ಕೊಟ್ಟು ಮದುವೆ ಮಾಡಿದ್ದಳು. ಹೀಗೆ ಅವಳ ಕೈಹಿಡಿದವನೇ ಇವತ್ತು ಬೆಳಿಗ್ಗೆ ನನಗೆ ಹೇಳಲೆಂದು ಬಂದದ್ದು. ಅವನು ಹಸುವಿನಂತಹ ಮನುಷ್ಯ. ಹಸುಗಳನ್ನು ನೋಡಿಕೊಂಡೇ ಇದ್ದುಬಿಟ್ಟಿದ್ದಾನೆ. ಗಂಗೂಗೆ ತಾಯಿಯ ವೃತ್ತಿ ಸರಿಕಾಣದೆ ನಮ್ಮ ಮನೆ ಸೇರಿದ್ದು. ಆಗ ಅವಳು ಹೈಸ್ಕೂಲು ಮುಗಿಸಿದ್ದಳು ಬೇರೆ. ಹರಿದ್ವಾರದಿಂದ ಹಿಂದೆ ಬಂದವನು ಅವಳನ್ನು ಕಾಲೇಜಿಗೆ ಸೇರಿಸಿ ಓದಿಸಿದೆ. ಕಾಡುವ ಅವಳ ತಾಯಿ ಸತ್ತು ಅವಳಿಗೆ ಬಿಡುಗಡೆಯದಂತೆಯೂ ಆಗಿತ್ತು…” ನಾರಾಯಣ ಮಾತು ನಿಲ್ಲಿಸಿದ. ದಿನಕರ ಮರಳನ್ನು ತೋಡಿ, ಈಗ ಒದ್ದೆ ಮರಳನ್ನು ಎತ್ತಿ ಅವುಗಳನ್ನು ಶಿವಲಿಂಗಗಳಾಗಿ ಮಾಡಲು ತೊಡಗಿದ್ದ. ತಾನು ನಾರಾಯಣನಿಗೆ ಹೇಳಬೇಕೆಂದು ಇದ್ದುದನ್ನು ಹೇಳುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನ್ನಿಸುತ್ತಿದ್ದಾಗಲೇ ನಾರಾಯಣ ದಿಢೀರನೆ ಹೇಳಿಬಿಟ್ಟ: “ಹರಿದ್ವಾರದಲ್ಲಿ ನಾನು ಅವಳ ಜೊತೆ ಸಂಬಂಧವಿಟ್ಟುಕೊಂಡಿದ್ದೇನೆಂದು ನಿನಗೆ ಗೊತ್ತಿರಲಿಲ್ಲ. ನೀನು ಇಟ್ಟುಕೊಂಡಿದ್ದೀಯೆಂದು ನನಗೂ ತಿಳಿದಿರಲಿಲ್ಲ.” ದಿನಕರನಿಗೆ ಹಗುರಾಗಿ ಬಿಟ್ಟಿತು. “ಆದರೆ ಅವಳನ್ನು ಮೊದಲು ಪಡೆದವನು ನಾನು. ಅವಳು ಇನ್ನೂ ಕುಮಾರಿಯಾಗಿದ್ದಳು” ಎಂದು ಹೇಳಬೇಕೆಂದು ಕ್ಷಣ ಅನ್ನಿಸಿ, ತನಗೆ ಹಾಗೆ ಅನ್ನಿಸಿದ್ದರ ಹಿಂದಿರುವ ಪಶುತ್ವಕ್ಕೆ ನಾಚಿ ಸುಮ್ಮನೇ ಕೇಳಿಸಿಕೊಂಡ. “ಬಂದವನೇ ಕಾಲೇಜು ಸೇರಿಸಿದೆ ಎಂದೆನಲ್ಲ? ಸ್ವಲ್ಪ ದಿನಗಳಲ್ಲಿ ಅವಳು ಬಸುರಾಗಿದ್ದಾಳೆಂದು ತಿಳಿಯಿತು. ನನಗೆ ದಿಗಿಲಾಯಿತು. ಆದರೆ ಅವಳ ಗಂಡನಿಗೇ ಮಗು ಹುಟ್ಟಿದ್ದೆಂದು ಜನ ತಿಳಿಯುತ್ತಾರೆ ಎಂದೂ ಸಮಾಧಾನ ಪಟ್ಟೆ. ನಾನು ಸ್ವಾಭಾವಿಕವಾಗಿ ಪ್ರಾಕ್ಟಿಕಲ್ ಮನುಷ್ಯ. ಕಾಲೇಜಲ್ಲಿ ಓದುವುದು ಕಷ್ಟವಾಗುತ್ತೆ, ಬಸಿರು ತೆಗೆಸಿಕೊಳ್ಳಬೇಕೆಂದು ಅವಳು ಹಠ ಮಾಡಿದಳು. ನನಗೂ ಒಳಗೊಳಗೇ ಹಾಗೆನ್ನಿಸಿದರೂ ಬೇಡವೆಂದೆ. ಆದರೆ ಗರ್ಭವತಿಯಾದ ಗಂಗೂ ನನ್ನನ್ನು ಎಷ್ಟು ಪ್ರೀತಿಸಲು ಶುರು ಮಾಡಿದ್ದಳೆಂದರೆ ನನಗವಳ ಮೇಲೆ ನನ್ನ ಮೊದಲ ಹೆಂಡತಿಯಲ್ಲಿ ಇಲ್ಲದಿದ್ದ ಮೋಹ ಬೆಳೆಯತೊಡಗಿತ್ತು. ಅವಳ ನಿಸ್ಸಹಾಯಕತೆ ಕಂಡು ಈ ಮೋಹ ಪ್ರೀತಿಯಾಗಿ ಬೆಳೆಯಿತು. ನಾನು ಅವಳಿಗೆ ಒಂದು ಮನೆಯನ್ನು ಕೊಂಡುಕೊಟ್ಟೆ. ಅದೇ ಒಂದು ಪುಟ್ಟ ತೋಟವೂ ಕೊಟ್ಟಿಗೆಯೂ ಮನೆಯ ಹಿತ್ತಲಿನಲ್ಲಿ ಇರುವಂತೆ ನೋಡಿಕೊಂಡೆ. ಅದರ ಹಿಂದೆ ಅಮ್ಮನ ಒತ್ತಾಯವೂ ಇತ್ತು – ಎನ್ನು. ಆಗಲೇ ಐವತ್ತು ಸಾವಿರ ಖರ್ಚುಮಾಡಿ ನಾನು ಕೊಂಡ ಆ ಜಾಗಕ್ಕೀಗ ಇಪ್ಪತ್ತು ಲಕ್ಷಕೊಟ್ಟು ತಗೊಳ್ಳುವವರಿದ್ದಾರೆ. ಮಂಗಳೂರು ಬೊಂಬಾಯಿಯಾಗಿ ಬಿಟ್ಟಿದೆ. “ಇರಲಿ. ಅವಳ ಗರ್ಭ ನಿಂತು ನಾಲ್ಕೈದು ತಿಂಗಳಾಗುತ್ತಿದ್ದಂತೆ, ಶಿಶು ಅವಳನ್ನು ಒದೆಯಲು ಶುರು ಮಾಡಿದಂತೆ ಈ ಗರ್ಭವನ್ನು ತಾನು ತೆಗೆಸಿಕೊಳ್ಳುವುದೇ ಸರಿ ಎಂದು ಮತ್ತೆ ಕಾಡಲು ತೊಡಗಿದಳು. ಒಂದು ರಾತ್ರೆ ಅವಳ ಪಕ್ಕದಲ್ಲಿ ನಾನು ಮಲಗಿದ್ದಾಗ ಬಿಕ್ಕುತ್ತ ಹೇಳಿದಳು – ಅದೇ ನಿನ್ನ ಅವಳ ಪ್ರೀತಿಯ ವಿಷಯ. ಈ ಗರ್ಭ ನಿಮ್ಮದೋ ಗೊತ್ತಿಲ್ಲ, ಅವರದೂ ಇರಬಹುದು ಎಂದುಬಿಟ್ಟಳು. ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ತೊರೆದುಬಿಡಿ ಎಂದು ಅತ್ತಳು. “ನನಗೆ ನಿನ್ನಮೇಲೂ ಅವಳ ಮೇಲೂ ಭಯಂಕರ ಕೋಪ ಹುಟ್ಟಿಬಿಟ್ಟಿತ್ತು. ನಿನಗಿಂತ ಹೆಚ್ಚಾಗಿ ಅವಳ ಮೇಲೆ. ಅವಳನ್ನು ಜಪ್ಪಿ ಕೊಂದು ಬಿಡಬೇಕು ಎಂದೂ ಅನ್ನಿಸಿತ್ತು. ಆದರೆ ಲಾಯರಿನ ವಿವೇಕ ನನ್ನನ್ನು ತಡೆದಿರಬಹುದು. ಅಥವಾ ನನ್ನ ಪೂರ್ವಜರು ಮಡಿದ ಪುಣ್ಯ. ಇರಲಿ. ಎಂಥ ಮಾಯಾವಿ ಅವಳು ಎನ್ನಿಸಿತು. ಹರಿದ್ವಾರದಲ್ಲಿ ನಿನ್ನ ಮೇಲಿನ ಪ್ರೀತಿಯನ್ನು ನನ್ನಿಂದ ಮುಚ್ಚಿಡಲು ಸಧ್ಯವಾಯಿತಲ್ಲ ಅವಳಿಗೆ, ಎಂದು ಹೆಣ್ಣಿನ ಮಾಯೆಯ ಬಗ್ಗೆಯೇ ಯೋಚಿಸುತ್ತ, ಯೋಚಿಸುತ್ತ ಸಂಕಟವಾಗತೊಡಗಿತು. “ಕೆಲವು ದಿನ ಅವಳನ್ನು ನೋಡುವುದನ್ನೇ ಬಿಟ್ಟುಬಿಟ್ಟೆ. ಒಂದು ದಿನ ಅವಳ ಮೇಲಿನ ನನ್ನ ಮೋಹವನ್ನು ಕಳೆದುಕೊಳ್ಳಲಾರದೆ ಅವಳ ಹತ್ತಿರ ಹೋದೆ. ಕಾಮಾತುರರಿಗೆ ಭಯವೂ ಇಲ್ಲ, ಲಜ್ಜೆಯೂ ಇಲ್ಲವೆನ್ನುತ್ತಾರೆ. ಅವಳ ಇಷ್ಟದಂತೆ ಗರ್ಭ ತೆಗೆಸಲೆಂದು ರಹಸ್ಯವಾಗಿ ಬೆಂಗಳೂರಿಗೆ ಅವಳನ್ನು ಕರೆದುಕೊಂಡು ಹೋದೆ. ಒಬ್ಬ ಡಾಕ್ಟರನ್ನು ಪತ್ತೆ ಮಡಿ ಮಾತೂ ಆಡಿದೆ. “ಆದರ ಹಿಂದಿನ ರಾತ್ರೆ ಹೋಟೆಲಿನ ಕೋಣೆಯೊಂದರಲ್ಲಿ ಅವಳು ನನ್ನ ಪಕ್ಕ ಮಗುವಿನಂತೆ ನಿದ್ರಿಸುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಆದದ್ದನ್ನು ಯಾರಿಗೂ ನಾನು ಹೇಳಿಕೊಳ್ಳಲಾರೆ. ನನ್ನ ದೇವರೆ ಅದಕ್ಕೆ ಕಾರಣ ಎಂದುಕೊಂಡಿದ್ದೇನೆ. “ಥಟ್ಟನೆ ಅನ್ನಿಸಿತು: ಈ ಮಗು ನನ್ನದಾದರೆ ಏನಂತೆ? ದಿನಕರನದಾದರೆ ಏನಂತೆ? ಅದೂ ಒಂದು ಮಗು. ನಾನೂ ಒಂದು ಮಗುವಾಗಿ ಇದ್ದಂತೆ ಅದೂ ಒಂದು ಮಗು. ಅವಳ ಗರ್ಭದಲ್ಲಿ ಸಂಚರಿಸುತ್ತ ಬೆಳೆಯುತ್ತಿರುವ ಮಗು – ಅದು. ಅದು ಹುಟ್ಟಿಕೊಂಡು ಬೆಳೆಯಲಿ. ನನ್ನದೇ ಎಂದುಕೊಂಡುಬಿಡುತ್ತೇನೆ. “ಹೀಗೆ ಅನ್ನಿಸಿದ್ದೇ ಅವಳನ್ನು ಎಬ್ಬಿಸಿ ಹೇಳಿದೆ. ನನ್ನನ್ನು ಅಪ್ಪಿ ಅವಳು ಖುಷಿಯಲ್ಲಿ ಬಿಕ್ಕಿದಳು. ಮಾರನೇ ದಿವಸವೇ ಅವಳನ್ನು ಹಿಂದಕ್ಕೆ ಕರೆತಂದೆ. ನನ್ನನ್ನು ನೋಡಿದ್ದೇ ಅಮ್ಮನಿಗೆ ಏನೆನ್ನಿಸಿತೊ? ದೇವರ ಪೂಜೆ ಮಾಡದೆ ನೀನು ಅದೆಷ್ಟು ದಿವಸವಾಯಿತು? ಸ್ನಾನ ಮಾಡಿ ಪೂಜೆ ಮಾಡು ಎಂದರು. ನನ್ನಲ್ಲಾದ ಬದಲಾವಣೆಯಲ್ಲಿ ಅಮ್ಮನ ಅನುಗ್ರಹವೂ ಇದೆಯೆಂದು ನನಗನ್ನಿಸುತ್ತದೆ.” +ಆಕಾಶದಲ್ಲಿ ಸೂರ್ಯನ ಕಾಮಕೇಳಿ ಕೊನೆಗೊಂಡು ಚಂದ್ರನ ಅನುಗ್ರಹವಾಗಿತ್ತು. ಆಕಾಶ ನೆಮ್ಮದಿಯಲ್ಲಿ ಪ್ರಶಾಂತವಾದಂತೆ ಕಾಣುತ್ತಿದ್ದ ಹಾಗೆಯೇ, ಸಮುದ್ರದಲ್ಲಿ ಸಾವಿರಾರು ಶ್ವೇತಾಶ್ವಗಳು ರಣರಂಗದಲ್ಲಿ ನುಗ್ಗಿದಂತೆ ಬಿಳಿ ನೊರೆಯ ಅಲೆಗಳು ನುಗ್ಗಿ, ಚಾಚಿಕೊಂಡ ಗೆಳೆಯರ ಕಾಲುಗಳನ್ನು ಒದ್ದೆ ಮಾಡಿದವು. ದಿನಕರ ಮೊದಲು ಎದ್ದುನಿಂತ. ಇನ್ನೂ ಗಾಢವಾದ ಚಿಂತೆಯಲ್ಲಿದ್ದ ನಾರಾಯಣ ತನ್ನ ತೋರವಾದ ಮೈಯನ್ನು ಎರಡು ಕೈಗಳನ್ನು ಊರಿ ಎದ್ದು ನಿಂತ. ಅವನ ಕತ್ತಿನಲ್ಲಿದ್ದ ರುದ್ರಾಕ್ಷಿಯನ್ನು ದಿನಕರ ॒ಅಮನಿಸುತ್ತಿದ್ದಂತೆ ದಿನಕರನ ಕತ್ತಿನಲ್ಲಿದ್ದ ತಾಯಿತವನ್ನು ನಾರಾಯಣ ತಂತ್ರಿ ಗಮನಿಸಿದ. “ಯಾವಾಗಿನಿಂದಲೂ ಈ ತಾಯಿತ ನಿನ್ನ ಕತ್ತಿನಲ್ಲಿದೆಯಲ್ಲವೆ?” ನಾರಾಯಣ ಹೇಳಿಕೊಂಡ ಘಟನೆಯ ಭಾರದಲ್ಲಿ ತಾನೇನು ಮಾತಾಡಬೇಕೆಂದು ಹೊಳೆಯದೇ ಗೌರವದ ಮೌನದಲ್ಲಿದ್ದ ದಿನಕರನಿಗೆ ನಾರಾಯಣನ ಪ್ರಶ್ನೆಯಿಂದ ಹಗುರೆನ್ನಿಸಿತು. “ಅದು ಮಾತೃರಕ್ಷೆ. ಹೊಳೆಗೆ ಸ್ನಾನಕ್ಕೆಂದು ಹೋಗುವ ಮುಂಚೆ ಮುದ್ದಿಸಿ ನನಗಿದನ್ನು ತಾಯಿ ಕಟ್ಟಿದರು. ನೋಡು, ನನ್ನ ಯಾತನೆಗೆ ಉತ್ತರವೇ ಇಲ್ಲ. ಸಾಯಬೇಕೆಂದು ನಿರ್ಧಾರ ಮಾಡಿ ಇದನ್ನು ತನ್ನ ಕೊರಳಿಂದೆತ್ತಿ ನನಗೆ ಹಾಕಿದರೋ? ಅವರು ಕಾಲು ಜಾರಿ ಸತ್ತಿರಬಹುದೋ? ನನ್ನ ತಂದೆ ಯಾರು? ಅಮ್ಮನ ಕೊರಳಲ್ಲಿ ಕರಿಮಣಿ ಸರವೂ ಹಣೆಯಲ್ಲಿ ಕುಂಕುಮವೂ ಇತ್ತೆನ್ನುತ್ತಾರೆ. ಅಂದರೆ ನನ್ನ ತಂದೆಯನ್ನು ಅವರು ಬಿಟ್ಟಿರಲೇ ಬೇಕು. ಯಾಕೆ ಬಿಟ್ಟರು? ಟ್ರಂಕಿನಲ್ಲಿದ್ದ ಬಂಗಾರ ಯಾರದು? ನನ್ನ ಅಪ್ಪನದೆ? ಅಮ್ಮನದೆ? ಪಾಪದ ಬಂಗಾರ ಅದಿರಬೇಕು. ನನ್ನನ್ನು ಸಾಕಿದವರ ಮಕ್ಕಳ ದುರಾಸೆಯನ್ನು ಅದು ಬೆಳೆಸಿತು. ಮತ್ತೆ ನಾನು ಮದುವೆಯಾದವಳ ಭಂಡತನಕ್ಕದು ಕಾರಣವಾಯಿತು. “ಇವತ್ತಿನ ಬೆಲೆಯಲ್ಲಿ ಒಂದು ಕೋಟಿಗೂ ಹೆಚ್ಚಿನ ಬೆಲೆಯ ಚಿನ್ನ ಅದರಲ್ಲಿತ್ತು ಎನ್ನಿಸುತ್ತದೆ. ನನ್ನ ಅಮ್ಮ ಅದನ್ನು ಹಾರಿಸಿ ತಂದಿರಬೇಕು ಎನ್ನಿಸಿ ಕೆಲವು ಸಾರಿ ಯಾತನೆಯಾಗುತ್ತದೆ. ಹಾಳು ಚಿನ್ನ. ಅದರಲ್ಲಿ ಅರ್ಧದಷ್ಟು ಕಳಕೊಂಡು ಈಗ ಹಗುರಾಗಲು ತೊಡಗಿದ್ದೇನೆ ಎನ್ನು. ಅದು ಇನ್ನೊಂದು ದೊಡ್ಡ ಕಥೆಯೇ – ಈಗ ಬೇಡ” ಎಂದು ದಿನಕರ ನಡೆಯುತ್ತ ಆ ಕಥೆಯನ್ನೇ ಹೇಳತೊಡಗಿಬಿಟ್ಟ: “ತ್ರಿಪಾಠಿಗಳನ್ನು ನೋಡಿದ್ದೀಯಲ್ಲ. ಹಣೆಗೆ ಕುಂಕುಮ ಹಚ್ಚಿ, ನೀಟಾಗಿ ಮುಂಡನ ಮಾಡಿಸಿಕೊಂಡು, ದೊಡ್ಡ ಬಿಳಿ ಮೀಸೆಯಲ್ಲಿ ಜರಿ ಶಾಲು ಹೊದ್ದು, ಕೋಲು ಹಿಡಿದು ಅವರ ಆ ಕುರ್ಚಿಯಲ್ಲಿ ಕೂತಿರುತ್ತಿದ್ದರು. ಜಬರದಸ್ತಿನ ಅವರು ಈಗಲೂ ನನ್ನ ಕಣ್ಣಿಗೆ ಕಟ್ಟುತ್ತಾರೆ. ದೊಡ್ಡ ದನಿ ಅವರದು. ಕೂತಲ್ಲಿಂದಲೇ ಜಬರದಸ್ತಿನಲ್ಲಿ ಎಲ್ಲ ಕೆಲಸವನ್ನೂ ಮಾಡಿಸುತ್ತಿದ್ದುದು. ಫ್ಯೂಡಲ್ ಲಾರ್ಡೇ. ಆದರೆ ಮಹಾ ದಾನಿ. ತಾನು ಕಟ್ಟಿಸಿದ ಚತ್ರದಲ್ಲಿ ಬಂದವರಿಗೆಲ್ಲ ಅನ್ನದಾನವಾಗಬೇಕು ಪ್ರತಿನಿತ್ಯ. ಅಮ್ಮನ ಟ್ರಂಕಿನಲ್ಲಿದ್ದ ಒಂದು ಚೂರು ಬಂಗಾರವೂ ಖರ್ಚಾಗದಂತೆ ನನ್ನನ್ನು ಹಣ ಖರ್ಚು ಮಾಡಿ ಇಂಗ್ಲಿಷ್ ಶಾಲೆಗಳಲ್ಲಿ ಬೆಳೆಸಿದರು. ನನ್ನ ವಾರಿಗೆಯ ಅವರ ಮಗನನ್ನು ಮಾತ್ರ ತನ್ನಂತೆಯೇ ತ್ರಿಪಾಠಿ ಮಾಡಲು ಯತ್ನಿಸುತ್ತ ಅವನಿಗೆ ಸಂಸ್ಕೃತ ಕಲಿಸಿದರು. ಅವನಿಗೆ ಮೊದಲಿನಿಂದಲೂ ನನ್ನನ್ನು ಕಂಡರೆ ಆಗದು. ನನ್ನ ತಾಯಿಯನ್ನು ಗುಪ್ತವಾಗಿ ಹೀಯಾಳಿಸಿ ನನ್ನನ್ನು ಅಳಿಸುತ್ತಿದ್ದ. ತನಗಿಂತ ನಾನೆಂದರೆ ತನ್ನ ತಂದೆಗೆ ಹೆಚ್ಚು ಪ್ರೀತಿಯೆಂದು ನನ್ನನ್ನು ದ್ವೇಷಿಸುತ್ತಿದ್ದ. ತ್ರಿಪಾಠಿಗಳೂ ಹಾಗೆಯೇ. ಸರ್ವರನ್ನೂ ಅಷ್ಟೊಂದು ಜಬರದಸ್ತಿನ ಕರುಣೆಯಲ್ಲಿ ಕಾಣುತ್ತಿದ್ದವರು ಮಗನನ್ನು ನಿಷ್ಕರುಣೆಯಿಂದ ದಂಡಿಸುತ್ತಿದ್ದರು. “ಆದರೆ ನಾನು ಆಕ್ಸ್‌ಫರ್ಡಿಗೆ ಓದಲೆಂದು ಹೋಗುವ ಮುಂಚೆಯೇ ತ್ರಿಪಾಠಿಗಳ ವರ್ಚಸ್ಸು ಇಳಿಮುಖವಾಗಿತ್ತು. ಚತ್ರದಲ್ಲಿ ಪ್ರತಿನಿತ್ಯದ ಅನ್ನ ಸಂತರ್ಪಣೆಯನ್ನು ಅವರ ಮಗ ನಿಲ್ಲಿಸಿಬಿಟ್ಟಿದ್ದ. ತ್ರಿಪಾಠಿಗಳು ಮುದಿಸಿಂಹದಂತೆ ತಮ್ಮ ಹಳೆಯ ಕುರ್ಚಿಯಲ್ಲಿ ದಂಡ ಹಿಡಿದು ಕೂತು ವಿಷಣ್ಣರಾಗುತ್ತ ಹೋದರು. “ತ್ರಿಪಾಠಿಗಳು ಇಚ್ಛಾಮರಣಿಗಳು ಇರಬಹುದು ಎಂದು ನನಗೀಗ ಅನ್ನಿಸುತ್ತಿದೆ. ಒಂದು ಬೆಳಿಗ್ಗೆ ಗಂಗೆಯಲ್ಲಿ ಸ್ನಾನ ಮಾಡಿ ಬಂದವರು ದೇವರ ಕೋಣೆಯಲ್ಲಿ ನೆಟ್ಟನೆ ಕೂರಲಾರದೆ ಒಂದು ಮಣೆಗೆ ಒರಗಿ ಕೂತರು. ತನ್ನಂತೆಯೇ ಜುಟ್ಟು ಬಿಟ್ಟು ಸಂಸ್ಕೃತ ಬಲ್ಲವನಾಗಿದ್ದ ಮಗನನ್ನು ಕರೆಯಲಿಲ್ಲ. ಆದರೆ ಕ್ರಾಪಿನಲ್ಲಿ ಆಧುನಿಕನಾಗಿಬಿಟ್ಟಿದ್ದ ನನ್ನನ್ನು ಕರೆದು, ‘ಸ್ನಾನವಾಗಿದ್ದರೆ ಪಟ್ಟೆ ಮಡಿಯುಟ್ಟುಕೊಂಡು ಬಾ’ ಎಂದರು. ಅಮ್ಮ ಸತ್ತ ಮೇಲೆ ನನ್ನ ಎಂಟನೇ ವರ್ಷದಲ್ಲಿ ಅವರೇ ನನ್ನ ಕಿವಿಯಲ್ಲಿ ಗಾಯಿತ್ರಿ ಉಪದೇಶಿಸಿ ಉಪನಯನ ಮಾಡಿಸಿದಾಗ ಉಡಲೆಂದು ಕೊಟ್ಟಿದ್ದ ಪಟ್ಟೆ ಮಡಿಯನ್ನು ಹೊದ್ದುಕೊಂಡು, ಹಿಂದಿನ ನವರಾತ್ರಿಯಲ್ಲಿ ಅವರು ಕೊಟ್ಟಿದ್ದ ಜರಿ ರೇಷ್ಮೆಯ ಧೋತ್ರವನ್ನುಟ್ಟು ಅವರ ಎದುರು ಕೂತೆ. ನನ್ನದು ಇಂಪಾದ ಸ್ವರ – ಒಳ್ಳೆಯ ಗಾಯಕಿಯಾಗಿದ್ದ ನನ್ನ ತಾಯಿಯಿಂದ ನಾನು ಪಡೆದಿದ್ದಿರಬೇಕು ಎನ್ನುತ್ತಾರೆ. ಆದಿಶಂಕರರು ರಚಿಸಿದ ಸ್ತೋತ್ರಗಳನ್ನೆಲ್ಲ ವಾಚನ ಮಾಡು ಎಂದರು. ನಾನು ಬಾಯಿಗೆ ಕಲಿತದ್ದನ್ನು ಪಠಿಸುವ ಮುಂಚೆ ಏನೋ ನೆನೆಸಿಕೊಂಡು ತನ್ನ ಚೀಲದಲ್ಲಿರುವ ’ಬೀಗದ ಕೈಯನ್ನು ತೆಗೆದುಕೊಂಡು ಬಾ’ ಎಂದರು. ತಂದು ಅವರಿಗೆ ಕೊಟ್ಟೆ. ದೊಡ್ಡ ಕೀಗೊಂಚಲಿನಿಂದ ಒಂದು ಬೀಗದ ಕೈಯನ್ನು ಬಿಡಿಸಿ ನನಗೆ ಕೊಟ್ಟರು. “ನಿನ್ನ ತಾಯಿಯ ಚಿನ್ನ ನನ್ನ ಪುಟ್ಟ ತಿಜೋರಿಯಲ್ಲಿದೆ. ಅದರ ಕೀ ಇದು. ಜೋಪಾನ, ದುರಾಸೆಯ ನನ್ನ ಮಗನಿಗಿದು ಸಿಗದಂತೆ ಇಟ್ಟುಕೋ. ಇಂಗ್ಲೆಂಡಿಗೆ ಹೋಗುವಾಗ ಇದನ್ನು ಇಲ್ಲಿ ಬಿಡಬೇಡ. ಹಿಂದೆ ಬಂದವನು ಈ ಮನೆಯಲ್ಲಿ ಬೆಳದದ್ದಕ್ಕೆ ನನ್ನ ಕಾಣಿಕೆಯಾಗಿ ಗಂಗಾ ನದಿಯ ದಂಡೆಯ ಮೇಲಿನ ನಮ್ಮ ಹಿರಿಯರು ಕಟ್ಟಿಸಿದ ದೇವಸ್ಥಾನದ ಅಚ್ಚುಕಟ್ಟನ್ನು ಉತ್ತೀರ್ಣಗೊಳಿಸು. ಇಂಗ್ಲೆಂಡಿನಲ್ಲಿ ಅಭಕ್ಷ್ಯ ಭೋಜನ, ಅಪೇಯಪಾನ ಮಾಡಬೇಡ. ಹಿಂದೆ ಬಂದು ಕುಲೀನಳಾದ ಹೆಣ್ಣನ್ನು ಕೈಹಿಡಿದು ಸದ್ಗೃಹಸ್ಥನಾಗು’ ಎಂದು ನಮಸ್ಕರಿಸಿದ ನನ್ನನ್ನು ಆಶೀರ್ವದಿಸಿದರು. “ನಾನು ಶಂಕರರ ಸ್ತೋತ್ರಗಳನ್ನು ಪಠಿಸುತ್ತಿದ್ದಾಗ, ಕಣ್ಣು ಮುಚ್ಚಿದವರು ಮತ್ತೆ ಕಣ್ಣುತೆರೆಯಲಿಲ್ಲ. “ನಾನು ಇಂಗ್ಲೆಂಡಿಂದ ಬಂದ ಮೇಲೆ ದೇವಸ್ಥಾನವನ್ನು ದುರಸ್ತಿಗೊಳಿಸಿದೆ. ಅದೂ ಅವರ ಮಗನಿಗೆ ಬೇಕಾಗಿರಲಿಲ್ಲ. ತ್ರಿಪಾಠಿಗಳು ಕಟ್ಟಿಸಿದ ಛತ್ರ ಕ್ರಮೇಣ ಹೋಟೆಲಾಗತೊಡಗಿತ್ತು. ಅಲ್ಲಿ ಇಳಿದುಕೊಂಡವರು ಕಾಣಿಕೆಯೆಂಬ ನೆವದಲ್ಲಿ ದಿನಕ್ಕಿಷ್ಟೆಂದು ಹಣ ಕೊಡಬೇಕಾಗಿತ್ತು. ಬಿಸಿ ನೀರಿಗೆ ಬೇರೆ ಹಣ ಕೊಡಬೇಕಾಗಿತ್ತು. “ನನಗೆ ದುಃಖವಾಯಿತು. ಒಂದು ದಿನ ತ್ರಿಪಾಠಿಗಳ ಈ ಹಿರಿಯ ಮಗ ಒಂದು ಲೆಖ್ಕದ ಪುಸ್ತಕ ತಂದು, ಹಳದಿಯಾಗಿಬಿಟ್ಟ ಹಳೆಯ ಹಾಳೆಗಳ ಮೇಲೆ ತಾನೇ ಬರೆದದ್ದನ್ನು ತನ್ನ ತಂದೆ ಬರೆದದ್ದೆಂದು ಕೃತಕವಾಗಿ ನಗುತ್ತ ಹೇಳಿದ: ’ನಿನ್ನನ್ನು ಸಾಕಿ ಸಲುಹಲು ಆದ ಖರ್ಚು ಇದು’ “ಸುಮಾರು ಹತ್ತು ಲಕ್ಷದ ವೆಚ್ಚವನ್ನು ನನ್ನ ಎದಿರು ಇಟ್ಟಿದ್ದ. ನನಗೆ ಭಯಂಕರ ಹೇಸಿಗೆಯಾಗಿ ಮೈನಡುಗತೊಡಗಿತ್ತು. ತಿಜೋರಿಯಲ್ಲಿದ್ದ ಟ್ರಂಕನ್ನು ತೆರೆದು “ನಿನ್ನ ತಂದೆ ಬರೆದಿಟ್ಟ ಲೆಖ್ಖ ಇದೆಂದು ಸುಳ್ಳು ಬೊಗಳಿ, ಅವರ ಆತ್ಮಕ್ಕೆ ಅಪಚಾರ ಮಾಡಬೇಡ. ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಬಿಡು” ಎಂದೆ. ಅವನು ಅಧೀರನಾಗಿ ಬಿಟ್ಟದ್ದು ಕಂಡು ನಾನೇ ಚಿನ್ನದ ಕೆಲವು ಗಟ್ಟಿಗಳನ್ನು ಮಾರಿ ಅವನಿಗೆ ಹತ್ತು ಲಕ್ಷ ಕೊಟ್ಟುಬಿಟ್ಟೆ. ಇನ್ನೂ ಉಳಿದಿದ್ದ ಬಂಗಾರದ ರಾಶಿಯನ್ನು ತೆಗೆದುಕೊಂಡು ಅಲ್ಲಿ ನಿಲ್ಲದೆ ದೆಹಲಿಗೆ ಹೋಗಿಬಿಟ್ಟೆ”. ನಾರಾಯಣ ಹೂಂಗುಟ್ಟದೆ ಜೊತೆಗೆ ನಡೆಯುತ್ತಿದ್ದುದು ಭಾಸವಾಗಿ, ದಿನಕರನಿಗೆ ತನ್ನ ಬಗ್ಗೆ ನಾಚಿಕೆಯಾಯಿತು. ಗಂಗೂ ಮಗ ನಿನ್ನ ಮಗನೂ ಇರಬಹುದು. ಆದರೆ ಅವನನ್ನು ನನ್ನ ಮಗನೆಂದೂ ತಿಳಿದು ಬೆಳೆಸಿದೆ ಎಂದು ಹೇಳಿಕೊಂಡ ಅವನ ಪರಮ ಉದಾತ್ತವಾದ ತ್ಯಾಗ ಭಾವನೆಗೆ ಇದು ನನ್ನ ಪ್ರತಿಕ್ರಿಯೆಯೆ? ಬಂಗಾರವನ್ನು ಕೊಟ್ಟುಬಿಟ್ಟೆನೆಂದು ಕೊಚ್ಚಿಕೊಳ್ಳುವುದೆ? ನಾರಾಯಣನ ಕಾಲುಮುಟ್ಟಿ ನಮಸ್ಕರಿಸಬೇಕು ಎಂದುಕೊಳ್ಳುತ್ತಿದ್ದಂತೆ ತನಗೆ ಆಶ್ಚರ್ಯವಾಗುವಂತೆ ನಾರಾಯಣ ಇನ್ನೇನೋ ಅಪ್ರಕೃತವಾದ ಮಾತನ್ನು ಕೇವಲ ಲಾಯರಾಗಿ ಹೇಳಿಬಿಡುವುದೆ?: “ಬಂಗಾರವನ್ನೇನೂ ನೀನು ಕೊಡಬೇಕಾಗಿರಲಿಲ್ಲ. ಅವನು ತೋರಿಸಿದ ಲೆಖ್ಖ ತ್ರಿಪಾಠಿಗಳ ಕೈಬರಹವಲ್ಲ, ಫೋರ್ಜರಿ ಎಂದು ನೀನು ವಾದಿಸಬೇಕಾಗಿತ್ತು. ಅವನು ಕೋರ್ಟಿಗೆ ಏನಾದರು ಹೋಗಿದ್ದರೆ ಅವನ ವಾದ ನಿಲ್ಲುತ್ತಿರಲಿಲ್ಲ. ಹೋಗಲಿ – ಅವನು ಈ ಹಣವನ್ನು ಅವನ ತಮ್ಮಂದಿರ ಜೊತೆ ಹಂಚಿಕೊಂಡನೊ ಇಲ್ಲವೊ ನೀನು ತಿಳಿಯಬೇಕಿತ್ತು. ಪಿತ್ರಾರ್ಜಿತ ಹಣ ಅದು”. ಅಷ್ಟು ದೊಡ್ಡ ಮಾತುಗಳನ್ನಾಡಿ ತನ್ನನ್ನು ಸಂಕಟಕ್ಕೆ ಸಿಕ್ಕಿಸಿದ ನಾರಾಯಣನಿಗೆ ಸದಾ ಇರುವಂತೆ ಕಾಣುವ ಲೌಕಿಕ ವ್ಯವಹಾರಜ್ಞತೆಯಿಂದ ದಿನಕರನಿಗೆ ಹಗುರಾಯಿತು. ಆದರೆ ಇಂಥವನೂ ಉದಾತ್ತತೆಯಲ್ಲಿ ಹೊರಳಿಬಿಡಬಲ್ಲ ಮನುಷ್ಯನೆಂಬುದು ತನ್ನನ್ನು ನಾಚಿಸಿತ್ತು. ಹೀಗೆ ನಾಚುವ ತಾನು ಏನಾದರೂ ಅವರ ಕಾಲುಮುಟ್ಟಿ ನಮಸ್ಕರಿಸಿದ್ದರೆ ಅದು ತನ್ನ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳುವ ಕ್ರಿಯೆಯಾಗುತ್ತಿತ್ತೇ ಹೊರತು ಸತ್ಯಕ್ಕೆ ಎದುರಾಗಿ ಹೊರಳಿಕೊಳ್ಳುವ ಒಳ ಬದುಕಿನ ಚಿಹ್ನೆಯಾಗುತ್ತಿರಲಿಲ್ಲ. ನಿಜವಾಗಿ ಅವನು ಗಂಗೂ ಜೊತೆಗಿನ ತನ್ನ ಹರಿದ್ವಾರದ ಪ್ರಣಯ ಹೇಳಿಕೊಳ್ಳುವಾಗ ನನ್ನ ಒಳಗಿಂದ ಅನ್ನಿಸುತ್ತಿದ್ದುದಾದರೂ ಏನು? ಪಶ್ಚಾತ್ತಾಪವೇ? ಅರೆ ತಿಳಿಯದವಳು ಎಂದು ಮೊದಲಿನ ಸಲ ತಾನು ಬಲಾತ್ಕಾರ ಮಾಡಿದಾಗ ಕಂಡ ಗಂಗೂ ಎಷ್ಟು ಬೇಗ ನನಗೇ ಕಲಿಸಲು ಪ್ರಾರಂಭಿಸಿದ್ದಳು? ತನ್ನಿಂದ ಕೌಮಾರ್ಯ ಕಳೆದುಕೊಂಡವಳು ಮದುವೆಯ ಸುಖ ಕಂಡಿದ್ದ ಅವನಿಂದ ಕಲಿತದ್ದನ್ನು ತನಗೇ ಕಲಿಸಲು ತೊಡಗಿದ್ದಳೆ? ಅವಳನ್ನು ಕೂಡಿದ ಸಮಯಗಳನ್ನು ನೆನೆಸಿಕೊಳ್ಳಲು ದಿನಕರ ಶುರು ಮಾಡಿದ್ದ. ತಾಯಿಯೂ ಮಗನೂ ದೇವರ ದರ್ಶನಕ್ಕೆ ಹೋಗಿದ್ದಾಗ ಬೇಗ ಬೇಗ ಗೋಪಾಲನನ್ನು ಮಲಿಗಿಸಿಯೋ, ತ್ರಿಪಾಠಿಗಳ ಮಗನ ಜೊತೆ ಆಡಲು ಬಿಟ್ಟೋ, ಯಾರೂ ಹೋಗದ ಮನೆಯ ಅಟ್ಟದ ಮೂಲೆಯಲ್ಲಿ ತ್ರಿಪಾಠಿಗಳ ಮಂತ್ರ ಪಠನ ಕೇಳುತ್ತಿದ್ದಂತೆಯೇ ತಾವು ಅವಸರದಲ್ಲಿ ಕೂಡುವುದು. ಆ ಜಾಗದಲ್ಲಿ ಈ ನಾರಾಯಣನನ್ನೂ ತಾನಿಲ್ಲದಾಗ ಅವಳು ಕೂಡಿರಬಹುದೆ? ಮತ್ತೆ ಎಲ್ಲರೂ ಒಬ್ಬರ ಪಕ್ಕ ಒಬ್ಬರು ಸಾಲಾಗಿ ಮಲಗಿದ್ದಾಗ ತನ್ನ ಜೊತೆ ಗಂಗಾತಟದಲ್ಲಿ ಸುತ್ತಾಡಿ ಬರುತ್ತೇನೆಂದು ಹೇಳಿ, ಅಂಥ ಛಳಿಯಲ್ಲೂ ತ್ರಿಪಾಠಿಗಳ ಪೂರ್ವಿಕರು ಕಟ್ಟಿಸಿದ ದೇವಸ್ಥಾನದ ಬಾಗಿಲು ತೆರೆದು, ಗಣೇಶನನ್ನು ಕೆತ್ತಿದ ಕಲ್ಲು ಗೋಡೆಯ ಕೆಳಗೆ ಕೂಡುವುದು, ಕುಂಕುಮ ಗಂಧಗಳ ವಾಸನೆಯ ಎಣ್ಣೆಯಿಂದ ಒದ್ದೆಯಾದ ಕಲ್ಲಿನ ಮೇಲೆ. ಮತ್ತೆ ಕಾಶಿಯಲ್ಲಿ ಅವಳ ಇಷ್ಟದಂತೆ ತಾನೂ ಅವರ ಜೊತೆ ಹೋದಾಗ ತನ್ನ ಕಿರು ಕೋಣೆಯಲ್ಲೇ, ಹರಕು ಚಾಪೆಯ ಮೇಲೇ. ರಾತ್ರೆ ಎಲ್ಲರೂ ನಿದ್ದೆ ಮಾಡುವಾಗ, ತಾಯಿ ಜೊತೆ ಮಲಗುವ ನಾರಾಯಣನ ಜೊತೆ ಎಲ್ಲಿ ಅವಳು ಕೂಡಿದ್ದೋ? ಅವಳ ಗುಪ್ತ ಸಮಯಗಳೆಲ್ಲ ನನ್ನವು ಮಾತ್ರ ಎಂದುಕೊಂಡಿದ್ದೆ. ಮತ್ತೆ ಯಾವ ಸಮಯವನ್ನು ನನ್ನ ಕಣ್ಣು ತಪ್ಪಿಸಿ ಅವನ ಜೊತೆ ಕಳೆದಳು ಹಾಗಾದರೆ? ಹರಿದ್ವಾರದಲ್ಲಿ? ಕಾಶಿಯಲ್ಲಿ? ಮಥುರಾದಲ್ಲಿ? ಬೆಳಗಿನ ಜಾವ ತಾನು ಎದ್ದು ಛತ್ರದಲ್ಲಿ ಇಳಿದು ಕೊಂಡವರಿಗೆ ಬಕೇಟಿನಲ್ಲಿ ಬಿಸಿನೀರು ಸರಬರಾಜು ಮಾಡಬೇಕು. ಚಳಿಯಲ್ಲಿ ಗಂಗಾಸ್ನಾನ ಮಾಡಲಾರದ ಮುದುಕರು ಮಕ್ಕಳು ಇರುತ್ತಿದ್ದರು. ಮತ್ತೆ ಎಲ್ಲರಿಗೂ ಮಧ್ಯಾಹ್ನದ ಊಟ ಬಡಿಸುವಾಗ? ಕಾಲೇಜಿನ ಆ ರಜಾದಿನಗಳಲ್ಲಿ ತಾನೇ ವಹಿಸಿಕೊಂಡಿದ್ದ ಕೆಲಸಗಳು ಇವು. ಅವು ಈ ನಾರಾಯಣನ ಗುಪ್ತ ಸಮಯಗಳಾಗಿರಬಹುದು. ಮತ್ತೆ ತನ್ನ ಸಹಪಾಠಿಗಳ ಮನೆಗೆ ತಾನು ಹೋಗಿರಬಹುದಾದ ಕ್ಷಣಗಳಲ್ಲೇ? ‘ನನ್ನ ಜೊತೆಯೇ ಇದ್ದು ನಿಮಗೆ ಬೇಜಾರಾಗಿರಬಹುದು. ಅಡ್ಡಾಡಿ ಬನ್ನಿ. ಕಾದಿರುತ್ತೇನೆ’ ಎಂದು ಅವಳು ಹೇಳಿದ್ದು ನೆನಪಾಗುತ್ತದೆ. ಆದರೆ ಮನೆಯಲ್ಲೇ ಇದ್ದಾಗ ಮಾತ್ರ ತನ್ನ ಕಣ್ಣು ತಪ್ಪಿಸಿ ಇರಲು ಅವಳನ್ನು ತಾನು ಬಿಟ್ಟದ್ದಿಲ್ಲ. ಗಂಗು ಅವಳ ಗುಟ್ಟನ್ನು ಬಸುರಿಯಾಗಿ ನಾರಾಯಣನಿಗೆ ಹೇಳಿಬಿಟ್ಟಾಗ ಅವನ ಕಣ್ಣು ತಪ್ಪಿಸಿ ಅವಳು ತನ್ನನ್ನು ಕೂಡಿದ ವಿವರಗಳನ್ನು ಹೀಗೆಯೇ ನಾರಾಯಣ ಚಿಂತಿಸಿ ಯಾತನೆ ಪಟ್ಟಿರಬೇಕು. ತನ್ನ ಕಾಮಚೇಷ್ಟೆಯ ವಿವರಗಳನ್ನು ಅವನು, ಅವನ ಕಾಮಚೇಷ್ಟೆಯ ವಿವರಗಳನ್ನು ಈಗ ತಾನು ಯೋಚಿಸುವಾಗ ತಾನಾಗಲೀ ಅವನಾಗಲೀ ಹೊರಳಿಕೊಂಡು, ಸಂಸಾರದ ಭ್ರಮಾತ್ಮಕ ಮಾಯೆಯನ್ನು ತಿಳಿಯುವುದಿಲ್ಲ. ಬದಲಾಗಿ ಇನ್ನಷ್ಟು ಕಾಮಜ್ವರದಿಂದ ಪೀಡಿತರಾಗುತ್ತೇವೆ. ಹುಡುಕಿ ತಡಕಿ ಅದನ್ನೇ ಮೆಲುಕು ಹಾಕುತ್ತೇವೆ. ಮತ್ತೆ ಇನ್ನೊಂದು ಹೆಣ್ಣನ್ನು ಕೂಡುವ ತನಕ ಪ್ರೇತದಂತೆ ಅಲೆಯುತ್ತಿರುತ್ತೇವೆ. ಹೀಗೆ ಎಂದುಕೊಳ್ಳುತ್ತಲೇ ತಾನು ಬಯಸಬಾರದ ಗಂಗೂನ್ನ ಬಯಸಿ ಸ್ನೇಹಿತನಿಗೆ ದ್ರೋಹ ಬಗೆಯುವಂತೆ ತನ್ನ ರಕ್ತ ಚಲಿಸಿತ್ತು. ರಹಸ್ಯದ ಕತ್ತಲಲ್ಲಿ ಅವಳು ತನ್ನನ್ನು ತೀವ್ರವಾಗಿ ಪಡೆದು ಬಿಕ್ಕುತ್ತಿದ್ದ ನೆನಪಾಗಿತ್ತು. ಅವಳ ನಡುಪ್ರಾಯದ ಲಾವಣ್ಯ ಈಗಲೂ ಅವಳು ಮೆಟ್ಟಿಲನ್ನು ಇಳಿದುಬರುವಾಗ ತನ್ನನ್ನು ಕಂಪಿಸುವಂತೆ ಮಾಡಿತ್ತು. ಅವಳು ತನ್ನ ಪ್ರಥಮಳು; ಸ್ತೀಸುಖವನ್ನು ತನ್ನಲ್ಲಿ ಅರಳಿಸಿ ವಾಸನೆಯಾಗಿ ಉಳಿದೇ ಬಿಟ್ಟವಳು. ಇದನ್ನು ಸಮುದ್ರತೀರದಲ್ಲಿ ನೆನೆದು, ಭವದಿಂದ ತನಗೆ ಬಿಡುಗಡೆಯಿಲ್ಲ ಎಂದು ನಿಟ್ಟುಸಿಟ್ಟಿದ್ದ. ಈ ತನ್ನ ನಿಟ್ಟುಸಿರೂ ದುಃಖದ್ದಲ್ಲ, ಬಳಲಿಕೆಯಿಂದಾಗಿತ್ತು. ಬಳಲಿಕೆಯಲ್ಲಿ ಕುಗ್ಗುತ್ತಿರುವ ಬಯಕೆಯಿಂದಾಗಿತ್ತು. ನಾರಾಯಣ ತನ್ನ ಲಾಯರುತನದಿಂದ ಬಿಡುಗಡೆಯಾಗಿ ಮತ್ತೆ ಮಾತಾಡತೊಡಗಿದ್ದ. ಹಿತವಾದ ಚಂದ್ರನ ಬೆಳಕಿನಲ್ಲಿ ಶುಭ್ರವಾದ ಮರಳಿನ ದಂಡೆಯ ಮೇಲೆ ಈ ಮಾತುಗಳನ್ನು ಕನಸಿನಲ್ಲಿ ಕೇಳಿಸಿಕೊಳ್ಳುತ್ತಿರುವಂತೆ ಶುರುವಾಗಿ ದಿನಕರ ಮತ್ತೆ ವಿಚಲಿತನಾದ. +ಅಧ್ಯಾಯ ೬ +“ಗಂಗೂ ಮಗನ ಹೆಸರು ಪ್ರಸಾದ ಎಂದು. ಯಾರ ಮಗನೆಂದು ತಿಳಿಯದ್ದರಿಂದ ಹರಿದ್ವಾರದ ಪ್ರಸಾದ ಎಂದು ಹೆಸರಿಟ್ಟೆವು” ನಾರಾಯಣ ತಿಳಿಹಾಸ್ಯದಲ್ಲಿ ಹೇಳಿದ ಈ ಮಾತು ದಿನಕರನನ್ನು ಒಳಪಡಿಸುವಂತೆ ಇತ್ತು. ಇಪ್ಪತ್ತೈದು ವರ್ಷಗಳ ನಂತರವೂ ನಿನಗೂ ಈ ಹೆಸರು ಒಪ್ಪಿಗೆಯಾಗಬಹುದು ಎನ್ನುವಂತೆ ಸಜ್ಜನಿಕೆಯ ಲೌಕಿಕತೆಯ ಧ್ವನಿ ಅದರಲ್ಲಿತ್ತು. ದಿನಕರ ಈ ಮಾತಿಗಾಗಿ ನಾರಾಯಣನನ್ನು ಗೌರವಿಸಿದ. ತನ್ನನ್ನು ಗೆಳೆಯ ಮೀರಿದ್ದಾನೆಂದು ಸಮಾಧಾನವಾಯಿತು.ಆದರೆ ಮುಂದಿನ ಮಾತುಗಳು ತನ್ನನ್ನು ಚಿರದುಃಖಕ್ಕೆ ತಳ್ಳಿದ್ದವು: “ಪ್ರಸಾದನಿಗೆ ಐದು ವರ್ಷಗಳಾಗುವ ತನಕ ಗಂಗು ಮತ್ತು ನಾನು ನಿರಾತಂಕವಾಗಿ, ಆದರೆ ರಹಸ್ಯವಾಗಿ ಅವಳ ಮನೆಯಲ್ಲೇ ಕೂಡುತ್ತಿದ್ದೆವು. ಚಂದ್ರಪ್ಪ ನಮಗೆ ರಕ್ಷೆಯಾಗಿ ಬಿಟ್ಟಿದ್ದ. ನಾನೂ ಅವಳೂ ಕೋಣೆಯಲ್ಲಿದ್ದಾಗ ಅವನು ಗೇಟಿನ ಹೊರಗೆ ಸೌದೆ ಒಡೆಯುತ್ತಲೋ, ಬಾವಿಯಿಂದ ಹೂದೋಟಕ್ಕೆ ನೀರು ಸೇದಿ ಹಾಕುತ್ತಲೋ ಇರುತ್ತಿದ್ದ. ಯಾರಾದರೂ ಬಂದು ಕೇಳಿದರೆ ಗಂಗೂ ಇಲ್ಲ ಎಂದು ಬಿಡುತ್ತಿದ್ದ. ಆ ಮಂದ ಬುದ್ಧಿಗೂ ಅಷ್ಟು ಅರಿವಾಗುತ್ತದೆ ಎಂದು ನನಗೆ ಸಂಕಟವಾಗುತ್ತಿತ್ತು. ಗಂಗೂಗೆ ಏನನ್ನಿಸುತಿತ್ತೋ. ಅವನ ಉಪಕಾರವನ್ನು ಹೇಗೆ ತೀರಿಸುವುದು ಎಂದು ನಮಗೆ ಗೊತ್ತಾಗುತ್ತಿರಲಿಲ್ಲ. ಪ್ರಸಾದ ಬೆಳೆಯುತ್ತಿದ್ದಂತೆ ಆತಂಕಗಳು ಹೆಚ್ಚಾದವು. ನಮ್ಮ ಪ್ರೀತಿ ಅವಸರದ್ದಾಗಿಬಿಟ್ಟಿತು. ಮುಗಿದರೆ ಸಾಕು ಎಂದು ಅವಳಿಗೆ ಅನ್ನಿಸುತ್ತಿದೆಯೆಂದು ನನ್ನ ಏಕಾಗ್ರತೆ ಕಡಿಮೆಯಾಯಿತು. ನಿನ್ನ ಯೋಚನೆಯೂ ಆಗುತ್ತಿತ್ತು. ಆದರೆ ಸುಖಪಟ್ಟಾದ ಮೇಲೆ ನೀನು ಗಂಗೂನ್ನ ಹಂಚಿಕೊಂಡಿರಲಿಲ್ಲ. ನಮ್ಮ ಪಾಲಿಗೆ ಕಣ್ಮರೆಯಾಗಿ ಬಿಟ್ಟಿದ್ದಿ. ಪ್ರಸಾದ ಮಾತ್ರ ನಿನ್ನ ನೆನಪು ತರುತ್ತಿದ್ದ. “ಪ್ರಸಾದ ಬೆಳೆಯುತ್ತಿದ್ದಂತೆ ಅಸ್ವಸ್ಥನಾದ. ಶಾಲೆಯಲ್ಲಿ ಮಕ್ಕಳು ಅವನನ್ನು ಹಂಗಿಸುತ್ತಿದ್ದರು. ನನ್ನ ಮಗ ಗೋಪಾಲನೂ ಅಸ್ವಸ್ಥನಾದ. ತಾನೇ ಬೆಳೆಸಿದ ಮಗುವನ್ನು ಅವಳು ನೋಡಬಂದರೆ ಅವನು ಅವಳನ್ನು ಕಂಡದ್ದೇ ಕಿರಿಕಿರಿಯಾಗುತ್ತಿದ್ದ. ನನ್ನ ಅಮ್ಮ ಗದರಿಸಿದರೆ ಮಾತ್ರ ಸುಮ್ಮನಾಗುತ್ತಿದ್ದ. ಅಮ್ಮನ ರಕ್ಷೆಯಲ್ಲಿ ನಾನು ಅನೈತಿಕವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ಆಗಾಗ ಅನ್ನಿಸುತ್ತಿತ್ತು. ಆದರೆ ಹೀಗೆಲ್ಲ ಅನ್ನಿಸುವುದರಿಂದ ಏನೂ ಪ್ರಯೋಜನವಿಲ್ಲ. ಮಾಯೆಯಿಂದ ನಾವು ಹಾಗೆಲ್ಲ ಬಿಡುಗಡೆ ಪಡೆಯುವುದಿಲ್ಲ. ನಾನು ಪ್ರಸಿದ್ಧನಾಗುತ್ತ ಹೋದಂತೆ ಎಲ್ಲರೂ ನನ್ನನ್ನು ಒಪ್ಪಿಕೊಂಡು ಬಿಟ್ಟಂತೆ ಕಾಣಿಸಿತು. ನಮ್ಮ ಸಂಬಂಧ ಎಲ್ಲರಿಗೆ ಗೊತ್ತಿದ್ದ ಗುಟ್ಟಾಯಿತು. “ಪ್ರಸಾದ ಮನೆಯಲ್ಲಿದಾಗ ನಾನು ಹೋಗುತ್ತಿರಲಿಲ್ಲ. ಆದರೆ ಕ್ರಮೇಣ ಕದ್ದು ಮುಚ್ಚಿ ಕೂಡುವುದು ಕಠಿಣವಾಗುತ್ತ ಹೋಯಿತು. ಈ ಹತ್ತು ವರ್ಷಗಳಿಂದ ಹೀಗೆ. ನಾವು ನಿರಾಯಾಸವಾಗಿ ಕೂಡಿ ಹತ್ತು ವರ್ಷಗಳ ಮೇಲಾಗಿರಬಹುದು. ಅದಕ್ಕೆ ಕಾರಣ, ಒಂದು ದಿನ ಪ್ರಸಾದ ಬಾಯಿಬಿಟ್ಟು ತಾಯಿಗೆ ಹೇಳಿದ್ದು: ‘ಅವನು ನನ್ನ ಅಪ್ಪನಾದರೆ ನಿನ್ನನ್ನು ಮದುವೆಯಾಗಲಿ’ ಎಂದುಬಿಟ್ಟನಂತೆ. ಆದರೆ ಅದು ನನಗೆ ಸಾಧ್ಯವಿರಲಿಲ್ಲ ಎಂದುಕೊಂಡೆ. ನರಳಿದೆ. ಆದರೆ ನರಳಿ ಯಾವ ಪ್ರಯೋಜನ ಹೇಳು. “ಪ್ರಸಾದ ಸ್ಕೂಲಿಗೆ ಹೋಗುವುದೇ ಬಿಟ್ಟುಬಿಟ್ಟ. ಮನೆಯಲ್ಲಿ ಮಂಕಾಗಿ ಕೂತಿರುವುದಕ್ಕೆ ಶುರು ಮಾಡಿದ. ಗಂಗೂ ತುಂಬ ಒಳ್ಳೆಯ ಟೀಚರೆಂದು ಹೆಸರು ಮಾಡಿದ್ದಳು. ಮಗನ ದುಃಖವನ್ನು ಹೊಟ್ಟೆಯಲ್ಲಿಟ್ಟುಕೊಂಡು ನರಳತೊಡಗಿದಳು. ಆದರೆ, ನರಳುತ್ತಿದ್ದರೆ ನರಳುತ್ತಲೇ ಇರುತ್ತೇವೆ. ಏನೂ ಬದಲಾಗಲ್ಲ. ನನ್ನನ್ನು ಹೇಗೆ ಅವಳು ಬಿಟ್ಟಾಳು ಹೇಳು? “ಆದರೆ ಎಲ್ಲ ಬದಲಾಗಲು ಪ್ರಾರಂಭವಾಯಿತು. ಪ್ರಸಾದ ಸಂಗೀತ ಕಲಿಯಲು ತೊಡಗಿದ. ಸಂಗೀತದಲ್ಲಿ ಅವನು ಬೆಳೆಯುತ್ತಲೇ ಹೋದ. ಆದರೆ ಯಾರಿಗೂ ಅವನು ಹಾಡಲು ಮಾತ್ರ ಒಲ್ಲ. ಒಮ್ಮೊಮ್ಮೆ ನಮ್ಮ ಮನೆಗೆ ಬಂದು ಅಮ್ಮನಿಗೆ ಮಾತ್ರ ಭಜನೆಗಳನ್ನು ಹಾಡುವನು. ಆದರೆ ಸ್ವತಃ ತನ್ನ ತಾಯಿಗೇ ಹಾಡುತ್ತಿರಲಿಲ್ಲ. ನಾನು ಎದುರು ಬಂದರಂತೂ ಹಾಡುವುದನ್ನು ನಿಲ್ಲಿಸಿ ಬಿಡುತ್ತಿದ್ದ. “ಆದರೆ, ವಿಚಿತ್ರವೆಂದರೆ ಮನೆಯಲ್ಲಿ ತನ್ನ ಕೋಣೆಯಲ್ಲಿ ಕೂತು ಅವನು ಗಂಟೆಗಟ್ಟಳೆ ಹಾಡಿಕೊಳ್ಳುತ್ತಿದ್ದುದು ಚಂದ್ರಪ್ಪನ ಎದುರಿಗೆ ಮಾತ್ರ. ಏನೂ ಅರಿಯನೆಂದು ಮೂಕಪಶುವೆಂದು ನಾವು ತಿಳಿದ ಚಂದ್ರಪ್ಪ ಪ್ರಸಾದನ ಎದುರು ಬಾಯ್ಬಿಟ್ಟು ಕೂತು ಗಂಟೆಗಟ್ಟಳೆ ಕೇಳಿಸಿಕೊಳ್ಳುತ್ತಿದ್ದ. ಹಾಡುವುದಕ್ಕೆ ಮುಂಚೆ, ಹಾಡಿಯಾದ ಮೇಲೆ ಪ್ರಸಾದ ಚಂದ್ರಪ್ಪನಿಗೂ, ತನ್ನ ತಂಬೂರಿಗೂ ನಮಸ್ಕಾರ ಮಾಡುತ್ತಿದ್ದ. “ಪ್ರಸಾದನ ವೈರಾಗ್ಯ ಬೆಳೆಯುತ್ತಾ ಹೋಗಿರಬೇಕು. ಆಮೇಲಿಂದ ನನ್ನನ್ನು ಕಂಡರೂ ಸಹಿಸಿಕೊಳ್ಳುವವನಂತೆ ಕಾಣತೊಡಗಿದ. ಅವನು ನನ್ನ ಕಂಡು ಮುಗುಳ್ನಕ್ಕನೆಂದರೆ ನಾನು ದಿನವೆಲ್ಲ ಗೆಲುವಾಗಿ ಬಿಡುತ್ತಿದ್ದೆ. ನನ್ನ ಸ್ವಂತ ಮಗನ ಉಪಟಳಗಳನ್ನು ಮರೆತುಬಿಡುತ್ತಿದ್ದೆ. ಪ್ರಸಾದ ನನ್ನ ಪಾಲಿಗೆ ನನ್ನ ಅಮ್ಮ ಹೇಳುವಂತೆ ಪವಿತ್ರನಾದ ಶುಕಮುನಿಯಾಗಿಬಿಟ್ಟ. +ಮುಂದುವರೆಯುವುದು +“ಬರಹ”ಕ್ಕೆ ಇಳಿಸಿದವರು: ಸೀತಾಶೇಖರ್ +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ಅಧ್ಯಾಯ ೬ – ೧ – ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ […] +ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_87.txt b/Kannada Sahitya/article_87.txt new file mode 100644 index 0000000000000000000000000000000000000000..5fb871d424c17aae213a8b079a9a74d1379df8dc --- /dev/null +++ b/Kannada Sahitya/article_87.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನು ಹೇಳಬೇಕಾದ್ದು +ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful ಆಗಿ ಮಹತ್ತರವಾದದ್ದೇನನ್ನೂ ಹೇಳೊ ಭ್ರಮೆಯಲ್ಲಿ ತೀರಾ ಸಾಮಾನ್ಯವಾದದ್ದೂ ಅಥವ ವಿಶಿಷ್ಟವಾಗಿ ‘ನನ್ನದು’ ಅನಿಸಿದ್ದನ್ನೂ ಸ್ಪಷ್ಟವಾಗಿ ಹೇಳದೆ ಬಿಟ್ಟಿದ್ದರ ಅರಿವಾಗಿತ್ತು. +ನವ್ಯಮಾರ್ಗದಿಂದ ನಾವು ಕಲಿತ craftsmanship ಅದ್ಭುತವಾದ್ದು. ಕನ್ನಡ ಭಾಷೆಯನ್ನು ನಮ್ಮ ಲಯಗಳಿಗೆ ತಕ್ಕಂತೆ ಪಳಗಿಸಿಕೊಳ್ಳುವಂಥ skillನ್ನು ನವ್ಯ ನಮಗೆ ಹೇಳಿಕೊಟ್ಟಿತು. ಈ ಹೊತ್ತಿನ ಕಾವ್ಯ ವ್ಯಕ್ತಿಕೇಂದ್ರಿತ ಅನ್ನೋ ಹೆಸರಲ್ಲಿ ಎಷ್ಟು ಸೆಲ್ಫ್ ಸೆಂಟರ್ಡ್ ಮತ್ತು ಸೆಲ್ಫ಼್ ಇಗೋಯಿಸ್ಟಿಕ್ ಆಗಿತ್ತೆನ್ನುವುದು ಈಗ ತಿಳಿಯುತ್ತದೆ. ಇಲ್ಲಿಯ ‘ವ್ಯಕ್ತಿ’ ಮತ್ತು ‘ಸೆಲ್ಫ್’ ಎರೆಡೂ ಸಾಧಾರಣವಾಗಿ ಗಂಡಿನ ದೃಷ್ಟಿಕೋನವನ್ನೇ ಹೊಂದಿರುವಂಥದ್ದು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. signifiedನ ಅರ್ಥ signifier ಹಿಂದಿರುವ attitudeಗೆ ತಕ್ಕಂತೆ ರೂಪುಗೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. +ಅಡಿಗರ ಕಾವ್ಯ ಪ್ರಭಾವದಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದಾಗಲೇ ನಾನು ಹೈದರಾಬಾದಿಗೆ ಬಂದೆ. ಇಲ್ಲಿ ಎಲ್ಲವೂ ಹೊಸತು. ವಿಪರೀತ ಸೆಖೆ, ವಿಪರೀತ ಛಳಿ, ಮೈ ಮನಸ್ಸಿಗೆ ವಿಚಿತ್ರ ಕಸಿವಿಸಿ. ಸ್ಥಳಾಂತರದಿಂದಾಗಿ ದಿನಚರಿಯ ಅರ್ಥ ಅವಕಾಶಗಳೇ ಬೇರೆ. ಕಿವಿ ಕೇಳುತ್ತಿದ್ದ ಶಬ್ದಗಳು, ಕಣ್ಣು ಕಾಣುತ್ತಿದ್ದ ದೃಶ್ಯಗಳು, ಗಾಳಿಯಲ್ಲಿದ್ದ ವಾಸನೆ, ಸೊಪ್ಪು, ತರಕಾರಿಗಳು, ಅಂಗಡಿಯ ಬೋರ್ಡುಗಳು ಎಲ್ಲದರಲ್ಲೂ ವ್ಯತ್ಯಾಸ +ಹೊಸ ಸ್ಥಳ ಮತ್ತು ವಾತಾವರಣದ ಅನುಭವ, ಅದಕ್ಕೆ ನನ್ನ ಪ್ರತಿಕ್ರಿಯೆ ಎಲ್ಲವೂ ಅಸ್ಥವ್ಯಸ್ಥವಾಗಿತ್ತು. Time…. space…… forms…… objects…… meaning….. sounds…… ಮುಂತಾದ ಮೂಲಭೂತ ಅಂಶಗಳು ಮತ್ತು ಅವುಗಳನ್ನೊಳಗೊಂಡ ಅನುಭವಗಳನ್ನು ಕವಿತೆಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಂಥಾ distortionನಿಂದ ಬೇರೆಯೇ ರೀತಿಯಲ್ಲಿ ಬರೆಯಲು ನಾನು ನಡೆಸುತ್ತಿದ್ದ ಪ್ರಯತ್ನಕ್ಕೆ ಒಂದು ರೂಪ ಸಿಕ್ಕಿತು ಅನ್ನಿಸತ್ತೆ. +ಈ ರೀತಿಯ ಅನುಭವವನ್ನು ಭಾಷೆಯಾಗಿ ಪರಿವರ್ತಿಸಿ, ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೊಸ ರೂಪದಲ್ಲಿ ಹಿಡಿದಿಡಲು ಸಾಕಷ್ಟು ಸಮಯ ಬೇಕಾಯ್ತು. ಹೀಗೆ ಕ್ರಮೇಣವಾಗಿ ರೂಪುಗೊಂಡ ಬದಲಾವಣೆಯನ್ನು ಈ ಸಂಕಲನದ ಮೂಲಕ ನಿಮ್ಮೆದುರು ಇಡುತ್ತಿದ್ದೇನೆ. +ಈ ಸಂಕಲನದಲ್ಲಿ ನಾಲ್ಕು ಭಾಗಗಳಿವೆ. ಒಬ್ಬರೇ ಕೂತಾಗ, ಮನಸ್ಸು ತನ್ನ ಪಾಡಿಗೆ ತಾನು ಮಾತನಾಡಿಕೊಳ್ಳುತ್ತಿರುವಾಗ ಒಮ್ಮೊಮ್ಮೆ ಥಟ್ಟನೆ ಹಿಂದೆಂದೋ ಆದ ಯಾವುದೊ ಅನುಭವವೊ, ವಾಸನೆಯೊ, ನೆನಪೊ, ಏನೋ ಅಂಥದ್ದು ಸುಳಿದು ಮುಳುಗುತ್ತದೆ ಕೆಲವೊಮ್ಮೆ ನೆನಪಾಗುವ ಯಾವುದೊ ಘಳಿಗೆಯನ್ನು ಅನುಭವಿಸಿದ್ದು ಸಾಗರದಲ್ಲೊ, ಬೆಂಗಳೂರಲ್ಲೂ ಅಥವಾ ಹೈದರಾಬಾದಲ್ಲೂ ಅರೆಕ್ಷಣ ತಿಳಿಯುವುದೇಯಿಲ್ಲ. ಕಾಲ-ಅವಕಾಶಗಳು ಗ್ರಹಿಕೆಯನ್ನು ಮೀರಿ ಬೆರೆತುಹೋದಂತೆ ಅನ್ನಿಸುತ್ತದೆ. +ಏನೇನೋ ಅನುಭವಗಳನ್ನು ಕವಿತೆಯಾಗಿಸುತ್ತ, romanticise ಮಾಡುತ್ತಾ ಕೆಲವೊಮ್ಮೆ ಆ ಅನುಭವದ ಮೂಲ ಸ್ವರೂಪವನ್ನು ಮರೆತುಹೋಗುತ್ತೇವೆ. ಹಾಗೆ ಕ್ರಮೇಣ ವಸ್ತುಗಳನ್ನು ಅವು ಇದ್ದ ಹಾಗೆ ನೋಡುವುದನ್ನು ಮರೆತೇಹೋಗುತ್ತೇವೇನೋ. +ತೇವವಾಗುವುದು ನದಿಯ ನೀರಿನ ಸಹಜಗುಣ. ಆದರೆ ‘ತೇವ’ವಾಗುವ ಗುಣ ವಿಲ್ಲದಿದ್ದರೆ ಅದು ನೀರೂ ಆಗಲಾರದು ನದಿಯೂ ಆಗಲಾರದು ಎಂಬುದನ್ನು ನಾವು ಗಮನಕ್ಕೇ ತೆಗೆದುಕೊಳ್ಳುವುದಿಲ್ಲ. +ಒಂದು image ಅಥವ expression ಕವಿತೆಯಲ್ಲಿ ಮೇಲಿಂದ ಮೇಲೆ ಬಳಕೆಯಾದಾಗ ಅದಕ್ಕೆ ಒಂದು ನಿರ್ದಿಷ್ಟ ಅರ್ಥ ಹುಟ್ಟಿಕೊಳ್ಳುತ್ತದೆ. ಆನಂತರ ಆ expression ಎಲ್ಲೇ ಬಂದರೂ ಈ ಅರ್ಥ ಅದನ್ನೂ ಮೀರಿ ಹೊರಹೊಮ್ಮುತ್ತಿರುತ್ತದೆ. ಉದಾ : ಉತ್ತಿ, ಬಿತ್ತು, ಬೆಳೆಯಲು ಅನುವು ಮಾಡಿಕೊಡುವ ‘ಭೂಮಿ’ಯ ರೂಪ ಹೆಂಗಸಿನದು ಅನ್ನುವಂಥದ್ದು. ‘ಏಳು ಮಲ್ಲಿಗೆ ತೂಕ’ದಷ್ಟು ಹಗುರ ಅನ್ನುವಾಗ, ಅದಕ್ಕೆ ವಿರುದ್ಧವಾಗಿ ಎತ್ತರ, ಅಜಾನುಬಾಹು-ಮೈ ಮನಸ್ಸಿನಲ್ಲಿ ಗಟ್ಟಿ ಅನ್ನುವ ಮತ್ತೊಂದು ರೂಪವನ್ನು parallel ಆಗಿ ಸೃಷ್ಟಿಸುತ್ತಾ ಈ ಮೊದಲಿನದನ್ನು negate ಮಾಡುತ್ತಿರುತ್ತೇವೆ. ಹೀಗೆ ಭಾಷೆ ನಿರ್ದೇಶಿಸುವ ಲಿಂಗ ತಾರತಮ್ಯ ಸೂಕ್ಷ್ಮವಾಗಿ ಆ ಭಾಷೆಯನ್ನು ಬೆಳೆಸುವ ಸಂಸ್ಕೃತಿ ಹಾಗು ನಮ್ಮ attitudeನ ನಿದರ್ಶನವಾಗಿರುತ್ತದೇನೊ. +ಕವಿತೆ ಕಟ್ಟುವಾಗ ಶಬ್ದ (word/sound)ಗಳ ಜೊತೆಗೆ ಆಡುತ್ತಾ ಶಬ್ದಾರ್ಥ ಸಂಬಂಧವನ್ನು ಒಡೆದು ಪುನರಚಿಸಿ ಹೊಸ ಸಾಧ್ಯತೆಗಳನ್ನು ಕಾಣುವುದು ಯಾವಾಗಲೂ ನನಗೆ ಖುಷಿ ಕೊಟ್ಟಿರುವಂಥದ್ದು. ಕವಿತೆಯಾಗಿ ಹೊರಡುವ ಶಬ್ದಗಳು visual ಮತ್ತು verbal spaceಗಳಲ್ಲಿ ಏಕಕಾಲಕ್ಕೆ form ಮತ್ತು sound patternಗಳಾಗಿ ಸೃಷ್ಟಿಸುವ ಅನುಭವವನ್ನು ಇಲ್ಲಿ ಕವಿತೆಯಾಗಿಸಲು ಪ್ರಯತ್ನಿಸಿದ್ದೇನೆ. ಅಕ್ಷರಗಳನ್ನು Visual Space ನಲ್ಲಿಟ್ಟಾಗ ಅದು ಶಬ್ದ (Sound)ವಾಗಿ ಪರಿವರ್ತನೆಗೊಳ್ಳುವವರೆಗೆ ಮೂಲಭೂತವಾಗಿ ಆಕಾರವೇ ಆಗಿರುತ್ತದೆ. ಆದರೆ ಚಿತ್ರಗಳನ್ನು ಇಟ್ಟಾಗ ಅವು ಮೈಗೂಡಿಸಿಕೊಂಡಿರುವ ಅರ್ಥ ಮೊದಲು ಹೊರಡುತ್ತದೆ. ಅದು ಮೂಲಭೂತವಾಗಿ ಆಕಾರವೇ ಆದರೂ ಸಹ, ಆಕಾರವನ್ನು ಮೀರಿ ಅರ್ಥವನ್ನು ಧ್ವನಿಸುವುದು ಅದರ ಉದ್ದೇಶವಾಗಿಬಿಡುತ್ತದೆ. +ಶಬ್ದ-ಅರ್ಥ-ಆಕಾರ-ಅವಕಾಶಗಳ ಸಂಬಂಧಾಂತರಗಳನ್ನು ಇಲ್ಲಿ ಕವಿತೆಗಳ ಮೂಲಕ ನೋಡಲು ಪ್ರಯತ್ನಿಸಿದ್ದೇನೆ. ಈಗ ನನ್ನ ಈ ಪ್ರಯತ್ನ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇದನ್ನು ಪ್ರೀತಿಯಿಂದ ಓದಿ ಸ್ವೀಕರಿಸುತ್ತೀರೆಂದು ನಂಬಿದ್ದೇನೆ. +***** +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […] +ಅಧ್ಯಕ್ಷರಾದ ಬಸಂತ್‌ಕುಮಾರ್‍ ಪಾಟೀಲ್ ಅವರೆ, ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ […] +ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_88.txt b/Kannada Sahitya/article_88.txt new file mode 100644 index 0000000000000000000000000000000000000000..3f392377c6a2bd2edce01d37c5cfbe60a3ed7abd --- /dev/null +++ b/Kannada Sahitya/article_88.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಹಳಷ್ಟು ಮಂದಿಯ ‘ಟೀಕಾಸ್ತ್ರ’ಕ್ಕೆ ಬದುಕಿನುದ್ದಕ್ಕೂ ಗುರಿಯಾಗಿದ್ದ ವ್ಯಕ್ತಿ ಟೈಗರ್‍ ಪ್ರಭಾಕರ್‍-ತಪ್ಪೋ ಸರಿಯೋ ತನಗನ್ನಿಸಿದ್ದನ್ನು ರಾಜಾರೋಷವಾಗಿ ಅಬ್ಬರಿಸಿ ಹೇಳುತ್ತ ಬಂದಿದ್ದ ನಟ ಪ್ರಭಾಕರ್‍ ಅವರಲ್ಲಿ ‘ಗುಡ್-ಬ್ಯಾಡ್-ಅಗ್ಲಿ’ಯ ಎಲ್ಲ ಗುಣಗಳೂ ರಾರಾಜಿಸಿದ್ದವು. +ಅದೊಂದು ರೀತಿಯ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದರೂ ತಪ್ಪಲ್ಲ. +ನಾನವರನ್ನು ಮೊದಲು ಕಂಡದ್ದು ಒಬ್ಬ ಎಕ್ಸ್‌ಟ್ರಾ ನಟನಾಗಿ. ಆನಂತರ ಪೋಷಕನಟನ ಪಾತ್ರಕ್ಕೆ ಪ್ರಮೋಷನ್. ನಂತರ ಸ್ಟಂಟ್ ಕಲಾವಿದರಾಗಿ ಎಲ್ಲರ ಗಮನ ಸೆಳೆದರು. ಅವರ ಮಾತು ಒಂದು ರೀತಿ ಹುಲಿಯ ಗರ್ಜನೆಯೇ. ಎಲ್ಲ ಕಲಾವಿದರಿಗೂ ಒಂದೊಂದು ಟೈಟ್ಲ್ ಜನರೇ ನೀಡುತ್ತ ಬಂದಿದ್ದಾರೆ. ಹಲವೊಮ್ಮೆ ಜನರಿಂದ ಬಿರುದು ಬಾವಲಿ ಬರುವುದು ತಡವಾದೀತೆಂದು ತಾವೇ ಹೆಸರಿನ ಹಿಂದೆ ಬಿರುದು ಅಂಟಿಸಿಕೊಂಡ ನಾಯಕ ಶಿಖಾಮಣಿಗಳೂ ನಮ್ಮಲ್ಲಿದ್ದಾರೆ. +ಆದರೆ ಪ್ರಭಾಕರ್‍ ಆಳು-ಆಕಾರ ಮಾತಿನ ಗತ್ತುಗಾರಿಕೆ ನೋಡಿಯೇ ಜನ ‘ಟೈಗರ್‍ ಪ್ರಭಾಕರ್‍’ ಎಂಬ ಬಿರುದು ದಯಪಾಲಿಸಿದರು. +ಪರಿಚಯವಾದ ದಿನದಿಂದ ಇಂದಿನವರೆಗೆ ತಾವೆಷ್ಟೇ ಎತ್ತರ ಬೆಳೆದರೂ ಅದೇ ಆತ್ಮೀಯತೆಯಿಂದ ಮಾತುಕತೆಯಾಡುತ್ತಿದ್ದುದು ಅವರ ವಿಶೇಷ. +ಜಯಮಾಲಾ ಅವರನ್ನು ಮದುವೆಯಾದಾಗಿನ ಅವರ ಖುಷಿ ಹೇಳತೀರದು. ‘ಚೆಂದುಳ್ಳಿ ಚೆಲುವೆ’ ನಾಟಕ ಕ್ಯಾಸೆಟ್‌ಗೆ ರೂಪಾಂತರಿಸಿ ‘ಹೆಣ್ಣು-ಕಣ್ಣು’ ಎಂದು ಹೆಸರಿಸಿದಾಗ ಜಯಮಾಲಾ ಅದರ ನಾಯಕಿ. ಆ ಕ್ಯಾಸೆಟ್‌ನಲ್ಲೇ ಜಯಮಾಲಾ ಮೊದಲಿಗೆ ಹಾಡಿದ್ದೂ ಸಹ. ಅದನ್ನು ಕೇಳಿ ಸಂಭ್ರಮಗೊಂಡ ಪ್ರಭಾಕರ್‍ ಖಂಡಿತಾ ಕ್ಯಾಸೆಟ್ ಬಿಡುಗಡೆಗೆ ಬಂದೇ ಬರುವೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಂದಿದ್ದರು. ಅನಿರೀಕ್ಷಿತವಾಗಿ ಷೂಟಿಂಗ್ ಬಿದ್ದುದರಿಂದ ಬರಲಾಗದೆ ಕ್ಯಾಸೆಟ್ ಕುರಿತ ಸೊಗಸಾದ ‘ಮೆಚ್ಚುಗೆ ಪತ್ರ’ ಜಯಮಾಲಾ ಅವರ ಮೂಲಕವೇ ಕಳಿಸಿದ್ದರು. +ಪ್ರಭಾಕರ್‍-ಜಯಮಾಲಾ ನಿರ್ಮಿಸಿದ ‘ಮಹೇಂದ್ರ ವರ್ಮ’ ಚಿತ್ರಕ್ಕಾಗಿ ಬಾಲಕಲಾವಿದೆಯೊಬ್ಬಳು ಬೇಕು ಎಂದರು ಪ್ರಭಾಕರ್‍. ಆ ಮಗುವನ್ನು ಆಯ್ಕೆ ಮಾಡಲು ಬಿಂಬಕ್ಕೆ ಬಂದವರು ಜಯಮಾಲಾ. ಅವರು ಆರಿಸಿದ ಪುಟಾಣಿ ದೀಪು. ಇಂದವಳು ಈ ಟಿ.ವಿ. ಪುಟಾಣಿ ಡಾಟ್‌ಕಾಮ್‌ನ ನಿರೂಪಕಿ. ಹಾಗೆ ನೋಡಿದರೆ ಬಹಳಷ್ಟು ಚಾನೆಲ್‌ಗಳಿರುವುದರಿಂದ ನಿರೂಪಕಿಯರು ಹೆಚ್ಚಿದ್ದಾರೆ. ಆದರೆ ಅತ್ಯಂತ ಕಿರಿವಯಸ್ಸಿನ ಚಾಲೋಕಿನ ನಿರೂಪಕಿ ಎಂದರೆ ದೀಪು ಮಾತ್ರ. ಅದರಿಂದಲೇ ಸೋನಿ ಟೀವಿಯಲ್ಲಿ ಅಭಿನಯಿಸಲೂ ಅವಳಿಗೀಗ ಕರೆ ಬಂದಿದೆ. +ಮತ್ತೊಂದು ಸಂದರ್ಭದಲ್ಲಿ ಪ್ರಭಾಕರ್‌ನ ನಾನು ಕಾಣಲು ಹೋದಾಗ ನನ್ನೊಂದಿಗೆ ದೀಪು ಸಹಾ ಬಂದಿದ್ದಳು. ಆ ಹೊತ್ತಿಗೆ ಜಯಮಾಲಾ ಅವರಿಂದ ಬೇರೆಯಾಗಿ ಕ್ಯಾಮರಾಮನ್ ರಾಮಚಂದ್ರ ಅವರ ಕೈಹಿಡಿದಾಗಿತ್ತು. ದೀಪೂನ ನೋಡಿ ಅಂದು ಪ್ರಭಾಕರ್‍ ಹೇಳಿದರು. +‘ಅರೆ! ನಮ್ಮ ಚಿತ್ರದಲ್ಲಿ ಮಾಡಿದ್ದ ಪುಟಾಣಿ ಈಗೆಷ್ಟು ಎತ್ತರ ಬೆಳೆದಿದ್ದಾಳೆ. ವಾರೆವಾ! ಎಂದು ಹೇಳುತ್ತ, ಹಾಗೆ ನಿಲ್ಲು, ಹೀಗೆ ನಿಲ್ಲು ಎಂದು ನಿಲ್ಲಿಸಿ ಕ್ಯಾಮರಾಮನ್ ದೃಷ್ಟಿಕೋನದಲ್ಲಿ ವೀಕ್ಷಿಸಿ ‘ಮೂರ್ತಿ ಸರ್‍, ದೀಪುದು ಫೆಂಟಾಸ್ಟಿಕ್ ಫಿಗರ್‍, ಕನ್ನಡದ ಶ್ರೀದೇವಿ ಆಗ್ತಾಳಿವಳು ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದರು. +‘ನೀವು ಅವಳ ಜತೆಯೂ ಹೀರೋ ಪಾತ್ರ ಮಾಡುವ ಉತ್ಸಾಹದಲ್ಲಿದ್ದ ಹಾಗಿದೆ’ ಎಂದು ತಮಾಷೆ ಮಾಡಿದೆ. +ಜೀವನದಲ್ಲಿ ತುಂಬಾ ನೊಂದಿದ್ದರಿಂದಲೋ ಏನೋ ಅವರಿಗೆ ಹಾಸ್ಯ ತಮಾಷೆ, ವಿಡಂಬನೆ ತುಂಬ ಪ್ರಿಯವೆನ್ನಿಸುತ್ತಿತ್ತು. +ಅವರಲ್ಲಿದ್ದ ಒಂದೇ ದೋಷವೆಂದರೆ ಹೆಣ್ಣನ್ನು ಬಟ್ಟೆ ಬದಲಿಸಿದಂತೆ ಬದಲಿಸುತ್ತಿದ್ದುದು. ನಟರಾಗಿ ನಾಯಕನಾಗಿ ಖಳನಾಯಕನಾಗಿ ಹೀರೋ ನಿರ್ದೇಶಕನಾಗಿ ನಿರ್ಮಾಪಕನಾಗಿ ‘ಆಲ್ ಇನ್ ಆಲ್’ಆದ ಪ್ರಭಾಕರ್‍ ಒಂದಲ್ಲ ಎರಡಲ್ಲ ಮೂರು ಮದುವೆಯಾದರೂ ‘ಹೆಣ್ಣಿನ ಹಂಬಲ’ ಬಿಡದೇ ನಾಲ್ಕನೆ ಮದುವೆಗೂ ರೆಡಿ ಎಂದು ಮೀಸೆ ತಿರುವುತ್ತಿದ್ದರು. ಅಂತಹ ಇನ್ನೊಂದು ದುರಂತಕ್ಕೆ ಅಣಿಯಾಗುವ ಮೊದಲು ಮೃತ್ಯದೇವತೆ ತಾನಾಗಿ ಬಂದು ಅವರ ಕೈಹಿಡಿದಿದ್ದರಿಂದ ಪ್ರಭಾಕರ್‍ ಬದುಕಿಗೆ ಇತಿಶ್ರೀ ಹಾಡಿದರು. +೯-೧೦ ವರ್ಷಗಳಿಂದ ಪ್ರಭಾಕರ್‍ ತುಂಬಾ ನೋವು ತಿಂದರು. ಗ್ಯಾಂಗರಿನ್‌ನಿಂದಾಗಿ ಕಾಲೊಳಗಿನ ಹುಳುಗಳೂ ಅವರ ಮಾಂಸ ತಿನ್ನುತ್ತಿತ್ತು. ಇಂಥ ಪ್ರಸಂಗ ಬಂದಾಗ ಕಾಲು ಕತ್ತರಿಸುವುದು ವಾಡಿಕೆ. ಆದರೆ ಸಾಯುವವರೆಗೆ ‘ಕುಂಟ ಪ್ರಭಾಕರ್‍’ ಎನಿಸಿಕೊಳ್ಳುವುದು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ತನ್ನ ಮಾಂಸ ಹುಳುಗಳಿಗೆ ಆಹಾರವಾಗದಿರಲೆಂದು ಬೇರೆ ಪ್ರಾಣಿಯ ಮಾಂಸದ ತುಂಡುಗಳನ್ನೂ ಕಾಲಿಗೆ ತುರುಕುತ್ತಿದ್ದರು. ಅಂಥ ಯಮಯಾತನೆ ಸಹಿಸುವುದು ಕಷ್ಟ ಎಂಬ ಕಾರಣಕ್ಕೇ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಗುಂಡು ಸೇವನೆ ಅನಿವಾರ್ಯವಾಗಿ ಊಟ ಮಾಡುವುದೇ ಅಪರೂಪವಾಯಿತು. +ಟೈಗರ್‍ ಕಾಡಿನಲ್ಲಿ ನಿತ್ಯ ತನ್ನ ಆಹಾರಕ್ಕಾಗಿ ಪ್ರಾಣಿಗಳ ಬೇಟೆ ಆಡುವಂತೆ, ಕಾಲಿನ ಹುಳುಗಳಿಗೆ ಮಾಂಸದ ಬೇಟೆ ಪ್ರಭಾಕರ್‍ ನಿತ್ಯ ಆಡಬೇಕಾಗಿ ಬಂದದ್ದು ದುರ್ದೈವ. ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ವೀರ, ಧೀರನ ಬಗ್ಗೆ ಡಿ. ರಾಜೇಂದ್ರ ಬಾಬು, ಸುಂದರನಾಥ್ ಸುವರ್ಣ, ವಿಷ್ಣುವರ್ಧನ್, ಡಾ.ರಾಜ್ ಮುಂತಾದವರೆಲ್ಲ ತುಂಬ ಒಳ್ಳೆ ಮಾತನಾಡಿದ್ದಾರೆ. +ಟೈಗರ್‍ ಪ್ರಭಾಕರ್‍ ಅವರ ವೈಯಕ್ತಿಕ ಅಂಶಗಳು – ಅವರ ವೈಯಕ್ತಿಕ ತೆವಲುಗಳು ತುಂಬ ವಿಚಿತ್ರ. ಅವರು ಹೆಣ್ಣನ್ನು ಕಾಣುತ್ತಿದ್ದ ರೀತಿ ಮತ್ತು ಮಾತು ತುಂಬ ಹೇಸಿಗೆ ಎನಿಸುತ್ತಿತ್ತು. ಅವರ ಚಿತ್ರಗಳೆಲ್ಲ ಕಡಕಡೆಗೆ ‘ಬ್ಲೂ ಫಿಲಂ’ ಪ್ರತಿ ರೂಪವೆನಿಸಿದ್ದು ನಿಜ. +ಆದರೆ ಕನ್ನಡದ ಈ ಭಾರಿ ವಿಲನ್‌ನ ‘ಹೃದಯ ಮಾತ್ರ’ ಬೆಣ್ಣೆಯಾಗಿತ್ತು ಎಂಬುದರಲ್ಲಿ ಏನೇನೂ ಅನುಮಾನವಿಲ್ಲ. +***** +(೩೦-೩-೨೦೦೧) +ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […] +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […] +ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_89.txt b/Kannada Sahitya/article_89.txt new file mode 100644 index 0000000000000000000000000000000000000000..86083a3cd3a3e6052c8a033bfd1d2152077cffde --- /dev/null +++ b/Kannada Sahitya/article_89.txt @@ -0,0 +1,82 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು ಬುಟ್ಟಿ ಇಟ್ಟುಕೊಂಡು ಆ ವ್ಯಾಪಾರಕ್ಕೂ ಹೊರಡಬೇಕಾಗುತ್ತದೆ ಎಂದು ತನ್ನ ಉದ್ದ ಕಾಗದದ ಕೊನೆಯಲ್ಲಿ ಶರಾ ಬರೆದಿದ್ದ. ಜಾಗತೀಕರಣಕ್ಕೂ ಮುಕ್ತ ಮಾರುಕಟ್ಟೆಗೂ ಕೊಡಗಿನಲ್ಲಿ ಕಾಫಿ ಬೆಲೆ ಕುಸಿದು ಬೆಳೆಗಾರ ಕಂಗಾಲಾಗಿರುವುದಕ್ಕೂ ಹತ್ತಿರದ ಕೇರಳದಿಂದ ಮಲಯಾಳಿಗಳು ಕೊಡಗಿನ ಭತ್ತದ ಗದ್ದೆಗೆ ನುಗ್ಗಿ ಶುಂಠಿ ಬೆಳೆದು ಕೊಬ್ಬಿಹೋಗಿರುವುದಕ್ಕೂ ಹೇಗೆ ನಿಕಟ ಸಂಬಂಧ ಇದೆ ಎನ್ನುವುದನ್ನು ಮಾರ್ಕ್ಸವಾದದ ಹಿನ್ನೆಲೆಯಿಟ್ಟುಕೊಂಡು ಸವಿವರವಾಗಿ ಬರೆದಿದ್ದ. +ಅವನ ನಾಲ್ಕೆದು ಪುಟಗಳ ಪತ್ರದ ಒಂದು ಮೂಲೆಯಲ್ಲಿ ಒಂದಿಷ್ಟು ಜಾಗ ಮಾಡಿಕೊಂಡು ಅವನ ಸಂಗಾತಿಯೂ ಧರ್ಮಪತ್ನಿಯೂ ಆದ ದಾಕ್ಷಾಯಿಣಿ ನನಗೆ ಕೆಂಪು ಸಲಾಂ ತಿಳಿಸಿದ್ದಳು. ಜೊತೆಗೆ ಸಾಧ್ಯವಾಷ್ಟು ಬೇಗ ನಾನು ಅವರಿಬ್ಬರನ್ನು ಬಂದು ಕಾಣಬೇಕೆಂದೂ ಕೊಡಗಿನ ಈ ಕಾಡಿನೊಳಗಡೆ ತನಗೆ ದಿಕ್ಕು ತೋಚದಾಗಿದೆಯೆಂದೂ ಕೊಡಗಿನ ಕಾಡುಕುರುಬರನ್ನೂ, ಜೇನುಕುರುಬರನ್ನೂ, ಯರವರನ್ನೂ ಸಂಘಟಿಸಬೇಕೆಂದು ಹೊರಟಿದ್ದ ತಾವಿಬ್ಬರು ಈಗ ಅನಿವಾರ್ಯವಾಗಿ ಮಲಯಾಳಿಗಳ ಜೊತೆಗೂ ಮಾಪಿಳ್ಳೆಗಳ ಜೊತೆಗೂ ಕಾದಾಟ ಮಾಡಬೇಕಾಗಿದೆಯೆಂದೂ ಜೊತೆಗೆ ಇತ್ತೀಚೆಗೆ ಸಾವಯವ ಅಜ್ಜ ಎಂಬ ಸಹಜ ಕೃಷಿ ಮಾಡುವ ಮುದುಕನೊಬ್ಬ ಘಟ್ಟದ ಕೆಳಗಿನಿಂದ ಬಂದು ತಮ್ಮೊಡನೆ ಸೇರಿಕೊಂಡಿರುವುದಾಗಿಯೂ ವೈಜ್ಞಾನಿಕವಾಗಿ ಆಲೋಚಿಸುವ ತನಗೆ ಈ ಸಾವಯವ ಅಜ್ಜನ ವರ್ತನೆ ವಿಚಿತ್ರವಾಗಿ ತೋರುತ್ತಿರುವುದಾಗಿಯೂ ಈ ಅಜ್ಜನ ಜೊತೆ ಸೇರಿಕೊಂಡು ಮಂದಣ್ಣನೂ ವಿಚಿತ್ರವಾಗಿ ಆಡಲು ತೊಡಗಿರುವನೆಂದೂ ನಾನು ಒಮ್ಮೆ ಹೋಗಿ ಅವರನ್ನೆಲ್ಲ ನೋಡಬೇಕೆಂತಲೂ ಬರೆದಿದ್ದಳು. +ಈಗ ನಾನು ಬಂದು ನೋಡಿದರೆ ಗೇಟಿಗೆ ಎಂದು ಕಟ್ಟಿದ್ದ ರಾಕ್ಷಸ ಗಾತ್ರದ ಸಿಮೆಂಟ್ ಕಂಬಗಳ ನಡುವೆ ಗೇಟೇ ಇಲ್ಲದೆ ನಾಲ್ಕೆದು ಬಿದಿರು ಗಳಗಳನ್ನು ಉದ್ದಕ್ಕೆ ಎಳೆದು ಗೇಟಿನಂತೆ ಮಾಡಿಕೊಂಡು, ಗೇಟಿನ ಪಕ್ಕದಲ್ಲಿ ಮುಳ್ಳು ತಂತಿಗಳನ್ನು ಕಿತ್ತು ಗೂಡಂಗಡಿಗೆ ಬಂದು ಹೋಗುವವರಿಗೆ ದಾರಿ ಮಾಡಿಕೊಟ್ಟು, ಮನೆಯ ದೊಡ್ಡ ಬಾಗಿಲುಗಳಿಗೆ ದಾಕ್ಷಾಯಿಣಿಯ ಹಳೆಯ ಸೀರೆಯೊಂದನ್ನು ಪರದೆಯಂತೆ ಕಟ್ಟಿ, ಮನೆಯ ಎದುರಿನ ಆಪೀಸು ಕೋಣೆಯನ್ನು ಗೂಡಂಗಡಿಯಂತೆ ಮಾಡಿಕೊಂಡು ಮಂದಣ್ಣ ಮಲಯಾಳಿ ಪಂಚೆಯೊಂದನ್ನು ಮೊಣಕಾಲವರೆಗೆ ಎತ್ತಿಕಟ್ಟಿಕೊಂಡು ತನ್ನ ಎಂದಿನ ಪರಿಹಾಸ್ಯದ ನಗುವನ್ನು ಮುಖದ ತುಂಬ ಸೂಸಿಕೊಂಡು ಇನ್ನೇನು ಶಿಕ್ಷೆಗೊಳಗಾಗಬೇಕಾದ ಬಾಲಕನ ಹಾಗೆ ದಾಕ್ಷಾಯಿಣಿಯ ಮುಖವನ್ನೊಮ್ಮೆ ನೋಡಿ ನನ್ನ ಸ್ವಾಗತಿಸಲು ಬಂದ. +ನಗುಬಂತು. ಇವನನ್ನೊಮ್ಮೆ ತಬ್ಬಿಕೊಳ್ಳಬೇಕು ಅನಿಸಿತು. ಮತ್ತೆ ಸಿಕ್ಕಾಪಟ್ಟೆ ಸಿಟ್ಟುಕೂಡಾ ಬಂತು. ಬಡ್ಡಿಮಗ ಸಖತ್ತಾಗಿ ಹೋತದಂತೆ ಬೆಳೆದಿದ್ದ. ದಾಕ್ಷಾಯಿಣಿಯೂ ಕುಳ್ಳಗೆ ವಡೆಯಂತೆ ಊದಿಕೊಂಡಿದ್ದಳು. +ಮೈಸೂರಿನ ಶ್ರೀಮಂತ ಕಾಮ್ರೇಡ್ ಒಬ್ಬರ ತೋಟದ ಮನೆಯಲ್ಲಿ ಭೂಕ್ರಾಂತಿಯ ಕುರಿತ ರಾಜಕೀಯ ಶಿಬಿರದಲ್ಲಿ ಎರಡು ಜಡೆ ಹಾಕಿಕೊಂಡು ಕಸಬರಿಕೆ ಕಡ್ಡಿಯಂತೆ ಓಡಾಡಿಕೊಂಡಿದ್ದ ದಾಕ್ಷಾಯಿಣಿಯನ್ನು ಮಂದಣ್ಣ ಮತ್ತು ನಾನು ದ್ರಾಕ್ಷಿ ಎಂತಲೇ ಕರೆಯುತ್ತಿದ್ದೆವು. ತರಗತಿಯೆಲ್ಲ ಮುಗಿದು ಕತ್ತಲಾಗಿ ಊಟ ಮುಗಿಸಿ ಬೀಡಿ ಸೇದಿಕೊಂಡು ಹಳ್ಳಿಯವರ ಹಾಗೆ ಬಯಲಲ್ಲಿ ಕುಳಿತು ಪಾಯಿಖಾನೆಯ ಸುಖವನ್ನು ಅನುಭವಿಸುತ್ತ ಆ ದಿನದ ರಾಜಕೀಯ ಪಾಟವನ್ನು ಮನನ ಮಾಡಿಕೊಳ್ಳುತ್ತಲೇ ದಾಕ್ಷಾಯಣಿಯನ್ನೂ ನೆನಸಿಕೊಳ್ಳುತಿದ್ದೆವು. +ಕೊಡಗಿನವರಾದ ನನಗೆ ಮತ್ತು ಮಂದಣ್ಣನಿಗೆ ರಾಜಕೀಯ ಪಾಟವೂ ಹೊಸತು, ಬಯಲಲ್ಲಿ ಪಾಯೀಖಾನೆಯೂ ಹೊಸತು. ಜೊತೆಯಲ್ಲಿ ಅಕ್ಕ ತಂಗಿ ನೆಂಟರ ಹುಡುಗಿಯರು ಬಿಟ್ಟರೆ ಈ ರೀತಿ ಹತ್ತಿರ ಹತ್ತಿರ ಸುಳಿದಾಡುತ್ತಿದ್ದ ದಾಕ್ಷಾಯಿಣಿಯ ರೀತಿಯೂ ಹೊಸತು. +ರಾತ್ರಿ ನಿದ್ದೆ ಹೋಗುವ ಮೊದಲು ಮಂಡಣ್ಣ ಕೊಡಗಿನ ವಿಶೇಷ ಶೈಲಿಯಲ್ಲಿ ದಾಕ್ಷಾಯಿಣಿಯನ್ನು ತನಗೇ ಹಂಚಿಕೊಂಡಿದ್ದ. +ಆತ ಬೇಟೆಗಾರ ಮೂಲನಿವಾಸಿಯಂತೆ. ನಾನು ವ್ಯಾಪಾರಕ್ಕೆ ಕೊಡಗಿಗೆ ಆಗಮಿಸಿದ ಮಾಪಿಳ್ಳೆ ಜನಾಂಗದ ಕುಡಿಯಂತೆ. ಈಗ ಬೇಟೆಯನ್ನು ಹಂಚಿಕೊಳ್ಳಬೇಕಾಗಿದೆಯಂತೆ. +“ಹಂದಿ ಮಾಪಿಳ್ಳೆ ತಿನ್ನೋದಿಲ್ಲ, ಕಡವೆಯನ್ನು ನಾನು ಕೊಡುವುದಿಲ್ಲ. ಉಡ ಮದ್ದಿಗೆ ಬೇಕು. ಮೊಲ ಮೂರು ಪಾಲಾಗಬೇಕು. ಒಂದು ಪಾಲು ನಾಯಿಗೆ, ಒಂದು ಪಾಲು ನನಗೆ, ಉಳಿದ ಒಂದು ಪಾಲು ಮಾಪಿಳ್ಳೆಗೆ” ಎಂದು ನಕ್ಕಿದ್ದ. ಕೊನೆಗೆ ದಾಕ್ಷಾಯಿಣಿ ತನಗೇ ಎಂದು ತೀರ್ಮಾನಿಸಿ ನಿದ್ದೆ ಹೋಗಿದ್ದ. +ಈಗ ನೋಡಿದರೆ ಹುಟ್ಟುವಾಗಲೇ ಜೊತೆಗಿದ್ದವರಂತೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು, ಕೊಂಚ ಸಂಕೋಚವನ್ನೂ ತೋರಿಸಿಕೊಂಡು, ಮೈಗೆ ಮೈ ಅಂಟಿಸಿಕೊಂಡು ಕುಳಿತಲ್ಲಿಂದ ಎದ್ದು ನನ್ನ ಕಡೆ ಬರುತಿದ್ದರು. +ದಾಕ್ಷಾಯಣಿ ತನಗೇ ಎಂದು ತೀರ್ಮಾನಿಸಿ ನಿದ್ದೆ ಹೋಗಿದ್ದ ಮಂದಣ್ಣ ಮಾರನೆಯ ದಿನ ಮುಂಜಾನೆಯೇ ಎಲ್ಲರ ಎದುರಿಗೇ ಅವಳಿಂದ ಒದೆಸಿಕೊಂಡು ನಗೆಪಾಟಲಾಗಿ ಬಿಟ್ಟಿದ್ದ. ಬೆಳಗೆ ಟವಲ್ಲು ಎತ್ತಿಕೊಂಡು ಕೆರೆಯ ಕಡೆಗೆ ಹೊರಟಿದ್ದವಳನ್ನು ಇವನು ಏನೋ ಮಾಡಲು ಹೋಗಿ ಅವಳು ಕಡ್ಡಿಯ ಹಾಗಿದ್ದರೂ ಇವನನ್ನು ನೆಲಕ್ಕೆ ಬೀಳಿಸಿ ಒದ್ದಿದ್ದಳು. +ಆನಂತರ ಆ ದಿನವಿಡೀ ರಾಜಕೀಯ ತರಗತಿ ರದ್ದಾಗಿ ನಾವೆಲ್ಲರೂ ಮಂದಣ್ಣನಿಂದಾಗಿ ವಿಮರ್ಶೆ ಮತ್ತು ಸ್ವವಿಮರ್ಶೆ ಮಾಡಬೇಕಾಗಿ ಬಂದಿತ್ತು. ಊಳಿಗಮಾನ್ಯ ವ್ಯವಸ್ಥೆಯಿಂದ ಬಂದಿರುವ ನಮ್ಮಂತಹ ಹುಡುಗರು ಹುಡುಗಿಯರನ್ನು ಕಾಮುಕರಂತೆ ನೋಡುವುದು ಸಹಜವೆಂದೂ ಸರಿಯಾದ ರಾಜಕೀಯ ಶಿಕ್ಷಣ ದೊರೆತರೆ ನಮಗೆಲ್ಲರಿಗೂ ಕ್ರಾಂತಿಯಲ್ಲಿ ಹೆಣ್ಣಿನ ಪಾತ್ರವೇನು ಎಂಬುದು ಅರಿವಾಗುವುದೆಂದೂ, ಕೊಲಂಬಿಯ, ಫಿಲಿಪ್ಪೆ ಮುಂತಾದ ಕಡೆ ಹೇಗೆ ಕ್ರಾಂತಿಕಾರಿಗಳಾದ ಹುಡುಗಿಯರು ಮತ್ತು ಹುಡುಗರು ಒಂದೇ ಕೆರೆಯಲ್ಲಿ ಅರೆ ಬೆತ್ತಲೆಯಾದರೂ ಹೇಗೆ ಸಹಜವಾಗಿ ಮೀಯುತ್ತಾರೆಂದೂ ನಮಗೆ ವಿವರಿಸಿ ವಿವರಿಸಿ ಹೇಳಿದ್ದರು. +ಸಂಜೆಕತ್ತಲೆಯಲ್ಲಿ ಮತ್ತೆ ಬಯಲಲ್ಲಿ ಕುಳಿತಾಗ ಮಂದಣ್ಣ ಅವಮಾನದಲ್ಲಿ ಕೆಂಡಾಮಂಡಲವಾಗಿ ತನ್ನ ಕೈಯಲ್ಲೇನಾದರೂ ತೋಟೆ ಕೋವಿಯಿದ್ದಿದ್ದರೆ ಅವಳನ್ನು ಹೇಗೆ ಮುಗಿಸುತ್ತಿದ್ದೆನೆಂದೂ ಕೋವಿ ಬೇಕಾಗಿರುವುದು ಕ್ರಾಂತಿಗಾಗಿ ಅಲ್ಲವೆಂದೂ ಈ ಅವಮಾನ ಸಹಿಸಿಕೊಂಡಿದ್ದರೆ ತಾನು ಕೊಡಗಿನವನೇ ಅಲ್ಲವೆಂದೂ ಜೋರಾಗಿ ಮಗುವಿನಂತೆ ಅತ್ತುಬಿಟಿದ್ದ. +ಈಗ ನೋಡಿದರೆ ಒಬ್ಬರು ಇನ್ನೊಬ್ಬರ ಸಾಕು ಪ್ರಾಣಿಗಳ ಹಾಗೆ ನನ್ನೆಡೆಗೆ ನಡೆದು ಬರುತ್ತಿದ್ದರು. ಅವರ ಕಾಲ ಸಂದಿಯಿಂದ ನುಸುಳಿಕೊಂಡು ಕೆಸರು ಧೂಳು ಮೆತ್ತಿಕೊಂಡಿದ್ದ ಬಡಕಲು ನಾಯಿಯೊಂದು ಬಾಲವಾಡಿಸುತ್ತಾ ತಲೆದೂಗುತ್ತಾ ಪ್ರೀತಿ ತುಂಬಿಕೊಂಡು ನನ್ನೆಡೆಗೆ ಬರುತ್ತಿತ್ತು. +‘ಥೂ! ಟೈಗರ್ ನಿನ್ನ ಹುಲಿ ಹಿಡಿಯಾ.. .. ..’ ದಾಕ್ಷಾಯಿಣಿ ಥೇm ಕೊಡಗಿನ ಶೈಲಿಯಲ್ಲಿ ಬೈದು ಕೋಲೆತ್ತಿಕೊಂಡು ಅದನ್ನು ಓಡಿಸಲು ಹೋದವಳು ಏನೋ ನೆನೆಸಿಕೊಂಡು ಸುಮ್ಮಗಾದಳು. +“ಏನು ಮಾರಾಯ ಈಗಲಾದರೂ ನಮ್ಮ ಗ್ಯಾನ ಬಂತಾ?” ಮಂದಣ್ಣ ಕೇಳಿದ. ನಾನು ಮಾತಾಡಲಿಲ್ಲ. ದುರುಗುಟ್ಟಿಕೊಂಡು ನೋಡಿದೆ. ಹೀಗೆ ನಾನು ದುರುಗುಟ್ಟಿದರೆ ಅದರ ಅರ್ಥ ಏನು ಅನ್ನುವುದು ಅವನಿಗೆ ಮಾತ್ರ ಗೊತ್ತು. ಅವನು ತಟ್ಟನೆ ಸುಮ್ಮನಾದ. +ದಾಕ್ಷಾಯಿಣಿ ಪೆಚ್ಚಾಗಿ ನಗುತ್ತಿದ್ದಳು. ಅದೇ ಪೆಚ್ಚು ನಗು. +ರಾಜಕೀಯ ತರಗತಿಯಲ್ಲಿ ಮೊಲೆಗೆ ಕೈಹಾಕಲು ಬಂದನೆಂಬ ಕಾರಣಕ್ಕೆ ಸಿಕ್ಕಾಪಟ್ಟೆ ಒದ್ದು ಮಂದಣ್ಣನನ್ನು ನೆಲಕ್ಕೆ ಕೆಡವಿದ್ದ ದಾಕ್ಷಾಯಿಣಿ ಅದೇ ಮಂದಣ್ಣನನ್ನು ಆರು ವರ್ಷಗಳ ಬಳಿಕ ಅಂತರ್ಜಾತೀಯ ವಿವಾಹವಾಗಿದ್ದಳು. ಮಾನಸ ಗಂಗೋತ್ರಿಯ ಗಾಂಧಿ ಮಂಟಪದಲ್ಲಿ ನಡೆದ ಅವರಿಬ್ಬರ ಸರಳ ವಿವಾಹದಲ್ಲಿ ನಾನೇ ಮಂತ್ರ ಮಾಂಗಲ್ಯ ಓದಿ ಹೇಳಿದ್ದೆ. ದಾಕ್ಷಾಯಿಣಿಯ ತಂದೆ ನಿವೃತ್ತ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿದ್ದವರು ನಾನು ಮಂತ್ರ ಮಾಂಗಲ್ಯ ಓದುತ್ತಿದ್ದಂತೆ ರೋದಿಸಲು ತೊಡಗಿ ಕಣ್ಣೀರು ಒರೆಸಿಕೊಂಡು ಎದ್ದು ಹೋಗಿದ್ದರು. ಆಗಲೂ ಈ ದಾಕ್ಷಾಯಿಣಿ ಹೀಗೇ ಪೆಚ್ಚಾಗಿ ನಕ್ಕಿದ್ದಳು. +“ಅವ್ವನಿಗೆ ಹಂದಿ ಮರಿ ಉಳಿಯಿತು” +ಮಂದಣ್ಣ ಸರಳ ಮದುವೆಯ ಮಾರನೆಯ ದಿನ ನಗುತ್ತಾ ಅಂದಿದ್ದ. ಅವನ ಅವ್ವ ಮಗನ ಮದುವೆಗೆ ಕಡಿಯಲಿಕ್ಕೆಂದು ಹಂದಿ ಮರಿಯೊಂದನ್ನು ಜತನದಿಂದ ಸಾಕಿ ಬೆಳೆಸುವುದು ಅದು ಬೆಳೆದು ದೊಡ್ಡದಾಗುವುದು, ಮಗ ಮದುವೆ ಮಾಡಿಕೊಳ್ಳದೆ ಹಂದಿ ಬೆಳೆದು ಆನೆ ಮರಿಯಂತೆ ದೊಡ್ಡದಾಗಿ ಹಂದಿ ದೊಡ್ಡಿಯಲ್ಲೆಲ್ಲಾ ದಾಂದಲೆ ನಡೆಸಿ ತಲೆನೋವಾಗುವುದು, ಅವ್ವನಿಗೆ ಸಾಕಾಗಿ ಹೋಗಿ ಅದನ್ನು ಮಾಂಸಕ್ಕೆ ಮಾರಿ ಮಗ ಮಂದಣ್ಣನ ಮದುವೆಗೆ ಅಂತ ಇನ್ನೊಂದು ಮರಿಯನ್ನು ಮುದ್ದಿನಿಂದ ಸಾಕುವುದು, ಹೀಗೆ ಅವ್ವ ಇಲ್ಲಿಯವರೆಗೆ ನಾಲ್ಕೆದು ಹಂದಿ ಮರಿಗಳನ್ನಾದರೂ ಸಾಕಿ ಮಾಂಸಕ್ಕೆ ಮಾರಿರಬಹುದು ಎಂದು ಆತ ನಿರ್ವಿಕಾರನಾಗಿ ಅಂದಿದ್ದ. +“ಅಲ್ಲ ಮಾರಾಯ. ಹಂದಿ ಉಳಿದರೆ ಉಳಿಯಿತು ಬಿಡು. ಅದು ಹೇಗೆ ಈ ದಾಕ್ಷಾಯಿಣಿಯನ್ನು ಉಡಾಯಿಸಿದೆ” ನಾನು ಅರ್ಧ ಕುತೂಹಲದಲ್ಲಿ ಕೇಳಿದ್ದೆ. +“ಅದು ಸಶಸ್ತ್ರ ಕ್ರಾಂತಿಗೆ ಸಂಬಂಧಿಸಿದ ವಿಷಯ” +ಮಂದಣ್ಣ ಏನೋ ಭಾರೀ ವಿಷಯದಂತೆ ಹೇಳಿ ಅಲ್ಲಿಯೆ ನಿಲ್ಲಿಸಿ ದಾಕ್ಷಾಯಿಣಿಯ ಹತ್ತಿರ ಹೋಗಿದ್ದ. ಆನಂತರ ಅವರಿಬ್ಬರು ಬರೆದ ಪತ್ರಗಳಿಂದಲೇ ಅವರ ಸಶಸ್ತ್ರ ಕ್ರಾಂತಿಯ ವಿಷಯ ನನಗೆ ಅಷ್ಟಿಷ್ಟಾದರೂ ಅರಿವಾಗಲು ತೊಡಗಿದ್ದು. +ಅವರಿಬ್ಬರ ವಿವಾಹ ಕೇವಲ ದೈಹಿಕ ಅಥವಾ ಭಾವನಾತ್ಮಕ ಅಗತ್ಯಗಳ ಫಲವಲ್ಲವೆಂದೂ ದಕ್ಷಿಣ ಏಶ್ಯಾದಲ್ಲಿ ಒಂದಲ್ಲ ಒಂದು ದಿನ ಭುಗಿಲೇಳಬಹುದಾದ ಬಡಜನ ಕೂಲಿ ಕಾರ್‍ಮಿಕರ ಸಶಸ್ತ್ರ ದಂಗೆಯಲ್ಲಿ ಅವರಿಬ್ಬರ ಕರಾರುವಾಕ್ಕಾದ ಪಾತ್ರವಿದೆಯೆಂದೂ ನೇಪಾಳ ಬಿಹಾರ ಒರಿಸ್ಸಾ ಆಂಧ್ರ್ರ ಕರ್ನಾಟಕಗಳನ್ನು ದಾಟಿ ಬರುವ ಕ್ರಾಂತಿಯನ್ನು ಕೊಡಗಿನ ಕಾಡಿನ ಮೂಲಕ ಕೇರಳದ ಕರಾವಳಿಗೆ ದಾಟಿಸುವ ಜವಾಬ್ದಾರಿ ತಮಗಿದೆಯೆಂದೂ ಇದರಲ್ಲಿ ತಾವು ಬಹುತೇಕ ಯಶಸ್ವಿಯಾಗುವುದಾಗಿಯೂ ದಾಕ್ಷಾಯಿಣಿ ಕೆಂಪು ಅಕ್ಷರಗಳಲ್ಲಿ ಬರೆದ ಪತ್ರದಲ್ಲಿ ಬರೆದಿದ್ದಳು. ಮಂದಣ್ಣನೂ ಹೆಚ್ಚು ಕಡಿಮೆ ಇದೇ ವರಸೆಯಲ್ಲಿ ಬರೆದಿದ್ದ. ಕಾಗದದ ಕೊನೆಯಲ್ಲಿ ಹಂದಿ ಸಾಕುವ ವಿಷಯದಲ್ಲಿ ತನ್ನ ತಾಯಿಗೂ ದಾಕ್ಷಾಯಿಣಿಗೂ ಜಟಾಪಟಿಯಾಗಿರುವುದಾಗಿಯೂ ತಾಯಿ ಸಿಟ್ಟುಮಾಡಿಕೊಂಡು ಸೋಮವಾರಪೇಟೆಯ ತನ್ನ ಕೊನೆಯ ಮಗಳ ಮನೆಗೆ ಹೋಗಿರುವುದಾಗಿಯೂ ಬರೆದಿದ್ದ. ಕ್ರಾಂತಿಯ ದಾರಿ ದುರ್ಗಮವಾಗಿದ್ದರೂ ಭವಿಷ್ಯ ಉಜ್ವಲವಾಗಿರುವುದು ಎಂಬುದನ್ನು ನನಗೆ ನೆನಪಿಸಿದ್ದ. +“ಮಂದಾ, ಸಾವಯವ ಅಜ್ಜನ ಬರಕ್ಕೆ ಹೇಳೊದಾ?” ದಾಕ್ಷಾಯಿಣಿ ಕಾಫಿ ತೋಟದ ಕಡೆ ನಿರುಕಿಸಿ ನೋಡುತ್ತಾ ಒಂದು ತರಹದ ಅಸಹನೆಯಿಂದ ಕೇಳಿದಳು. +ದಾಕ್ಷಾಯಿಣಿ ಕಸಬರಿಕೆ ಕಡ್ಡಿಯಂತಿದ್ದವಳು ಈಗ ಅಗಾಧವಾಗಿ ಊದಿಕೊಂಡಿದ್ದರೂ ಮಂದಣ್ಣ ಈಗಲೂ ಆಕೆಯನ್ನು ’ದ್ರಾಕ್ಷಿ’ ಅಂತಲೇ ಕರೆಯುತ್ತಿದ್ದಂತೆ ಆಕೆಯೂ ಈತನನ್ನು ಅದೇ ಸಲುಗೆ ಬೆರೆತ ನಿರ್ಲಕ್ಷ್ಯದಿಂದ ’ಮಂದಾ’ ಎಂತಲೇ ಕರೆಯುತ್ತಿರುವುದನ್ನು ಕೇಳಿ ಅವರಿಬ್ಬರ ಬಗ್ಗೆ ಮಮತೆ ಉಕ್ಕಿ ಬಂತು. ಜೊತೆಗೆ ನಾನು ಇವರಿಬ್ಬರಿಂದ ಇದುವರೆಗೆ ಕ್ಷೀಣವಾಗಿ ಕೇಳಿಸಿಕೊಂಡಿದ್ದ ಸಾವಯವ ಅಜ್ಜನ ವಿಚಾರ ಈಗ ದಾಕ್ಷಾಯಿಣಿಯ ಬಾಯಿಯಿಂದ ಕೊಂಚ ಉದ್ದೇಶಪೂರ್ವಕವಾಗಿ ಹಾಗೂ ಕಟುವಾಗಿ ಕೇಳಿಸುತ್ತಿರುವಂತೆ ಅನಿಸಿ ಕುತೂಹಲವೂ ಮೂಡಿತು. +ಮೆಸೂರಿನಲ್ಲಿ ರಾಜಕೀಯ ತರಗತಿಯಲ್ಲಿ ಮಹಾತ್ಮಾ ಗಾಂಧೀಜಿಯವರ ವಿಷಯ ಚರ್ಚೆಗೆ ಬಂದಾಗ ಸಾವಯವ ಕೃಷಿ ಹಾಗೂ ರೈತ ಕ್ರಾಂತಿಯ ಕುರಿತು ಮಾತನಾಡುತ್ತ ಮಣ್ಣಿನ ಕುಡಿಕೆಯಲ್ಲಿ ಆಡಿನಹಾಲು ಕುಡಿದು ಕಡಲೆ ಬೀಜ ತಿಂದು ಮಲಗಿದರೆ ಕ್ರಾಂತಿಯಾಗುವುದಿಲ್ಲವೆಂದೂ ವೈಜ್ಞಾನಿಕವಾಗಿ ಸಾಮೂಹಿಕ ಕೃಷಿ ಕೈಗೊಳ್ಳಬೇಕೆಂದೂ ಮಣ್ಣಿನ ಮಡಕೆಗಳನ್ನೆಲ್ಲ ಪುಡಿಪುಡಿ ಮಾಡಿ ಸಾವಿರ ಸಾವಿರ ಸಂಖ್ಯೆಯಲ್ಲಿ ಅಲ್ಯುಮಿನಿಯಂ ಕುಡಿಕೆಗಳನ್ನು ತಯಾರು ಮಾಡಿ ರೈತರಿಗೆಲ್ಲ ಹಂಚಿ ಬಿಡಬೇಕೆಂದೂ ಗಾಂಧಿ ಬರೇ ಬೋಗಸ್ ಎಂದೂ ನಮಗೆ ತಲೆಯೊಳಕ್ಕೆ ಹೊಕ್ಕುವಂತೆ ಹೇಳಿಕೊಟ್ಟಿದ್ದರು. +ಯಾವಾಗಲೂ ಏನು ಹೇಳಿದರೂ ಬರೇ ಕಣ್ಣು ಪಿಳಿ ಪಿಳಿ ಮಾಡಿಕೊಂಡು ಕೂತಿರುತ್ತಿದ್ದ ನನಗೆ ಅವರು ಗಾಂಧಿಯನ್ನು ಬೈದದ್ದು ಕೇಳಿ ಸುಮ್ಮನಿರಲಾಗಲಿಲ್ಲ. +“ನೀವು ಬೇಕಾದರೆ ನನ್ನ ಅಪ್ಪನಿಗೆ ಬೇಕಾದರೆ ಬಯ್ಯಿರಿ. ಆದರೆ ಗಾಂಧಿಗೆ ಬೈದರೆ ಮಾತ್ರ ಸುಮ್ಮನಿರುವುದಿಲ್ಲ” ಅಂದು ಬಿಟ್ಟಿದ್ದೆ. +ರಾತ್ರಿ ಮಲಗುವಾಗ ಮಂದಣ್ಣ ನನಗೆ ಗಾಂಧಿಯ ವಿಷಯವಾಗಿ ತುಂಬ ಪಿರಿ ಪಿರಿ ಮಾಡಿದ್ದ. +ಮಂದಣ್ಣನ ಅಪ್ಪ ಬ್ರಿಟಿಷರ ಸೇನೆಯಲ್ಲಿ ಜಮಾದಾರರಾಗಿದ್ದರೆಂದೂ ಸುಭಾಷ್‌ಚಂದ್ರ ಬೋಸರ ಮಾತುಕೇಳಿ ದಂಗೆ ಏಳಲು ತಯಾರಾಗಿದ್ದರೆಂದೂ ಬ್ರಿಟಿಷರು ಗಾಂಧಿಯ ಕೈಗೆ ಸ್ವಾತಂತ್ರ್ಯ ಕೊಟ್ಟು ಕೋವಿ ಹಿಡಿದಿದ್ದವರನ್ನು ಗತಿಯಿಲ್ಲದ ಹಾಗೆ ಮಾಡಿದರೆಂದೂ ಇದರಿಂದೆಲ್ಲ ತಲೆ ಕೆಡಿಸಿಕೊಂಡ ತನ್ನ ಅಪ್ಪ ಊರು ಬಿಟ್ಟು ಕಾಶಿಗೋ ಹರಿದ್ವಾರಕ್ಕೋ ಹೊರಟೇ ಹೋದರೆಂದೂ ಗಾಂಧಿಯಿಂದಾಗೆಯೇ ತನ್ನ ಅವ್ವ ಹಂದಿ ಸಾಕಿ ಬಾಳು ಸಾಗಿಸಬೇಕಾಗಿ ಬಂತೆಂದೂ ನಾನು ಗಾಂಧಿಯ ಪರವಾಗಿ ಮಾತನಾಡಿದ್ದು ಸರಿಯಲ್ಲವೆಂದೂ ಗಾಂಧಿಯಿಂದಲೇ ಪಾಕಿಸ್ತಾನ ಹುಟ್ಟಿತೆಂತಲೂ ಹೇಳಿ ನನ್ನನ್ನೇ ಅನುಮಾನದಿಂದ ನೋಡಿದ್ದ. +ನಾನು ಅವನಿಗೆ ನನ್ನ ಮತ್ತು ಗಾಂಧಿಯ ವಿಷಯ ಹೇಳಬೇಕಾಗಿ ಬಂದಿತ್ತು. ಹಾಗೆ ನೋಡಿದರೆ ನನಗೆ ಗಾಂಧಿಯ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಸುಳ್ಯದ ಹತ್ತಿರ ನಮ್ಮ ನೆಂಟರ ಪೈಕಿ ಗಾಂಧಿ ಅಜ್ಜ ಎನ್ನುವ ಹೆಸರಿನ ಬ್ಯಾರಿಯೊಬ್ಬರು ವಯಸ್ಸಾದವರು ಇದ್ದರು. ನಾವು ಮಕ್ಕಳು ಬೇಸಗೆ ರಜೆಯಲ್ಲಿ ಊರಿಗೆ ಹೋದಾಗ ಅವರ ತೋಟಕ್ಕೆ ಕಣ್ಣಾಮುಚ್ಚಾಲೆಯಾಡಲು ಹೋದರೆ ಅವರು ತೋಟದಲ್ಲಿ ಆಡು ಮೇಯಿಸುತ್ತ ಕೂತಿದ್ದವರು ನಮ್ಮಿಂದ ಒತ್ತಾಯಪೂರ್ವಕವಾಗಿ ತೆಂಗಿನ ಮರದ ಬುಡಕ್ಕೆ ಉಚ್ಚೆ ಉಯ್ಯಿಸಿಕೊಳ್ಳುತ್ತಿದ್ದರು. ತೆಂಗಿನ ಮರಗಳಿಗೆ ಉಪ್ಪು ಬೇಕಾಗುತ್ತದೆಂತಲೂ ಮನುಷ್ಯರ ಮೂತ್ರದಲ್ಲಿ ಉಪ್ಪು ಸಾಕಷ್ಟು ಇರುತ್ತದೆಂತಲೂ ಮನುಷ್ಯರೆಲ್ಲರೂ ತೆಂಗಿನ ಬುಡಕ್ಕೇ ಉಯ್ಯಬೇಕೆಂದೂ ಹೇಳಿದ್ದರು. ಜೊತೆಗೆ ನಮಗೆಲ್ಲ ಸ್ಥಳದಲ್ಲೇ ಆಡಿನ ಹಾಲು ಕರೆದು ಕುಡಿಸಿ ತಿನ್ನಲು ಹಸಿ ಕಡಲೆ ಕೊಟ್ಟು ಕಳಿಸಿದ್ದರು. ತಾವೂ ಉಡುಪಿಗೆ ಗಾಂಧೀಜಿ ಬಂದಿದ್ದಾಗ ಹೋಗಿದ್ದಾಗಿಯೂ ಕಡಲಿನ ಬದಿಯಲ್ಲಿ ಉಪ್ಪು ತಯಾರು ಮಾಡಿದ್ದಾಗಿಯೂ ಹೇಳಿದ್ದರು. +ನಾವು ಮೆಸೂರಿನಲ್ಲಿ ಓದುತ್ತಿದ್ದಾಗ, ರಾತ್ರಿ ಕತ್ತಲಲ್ಲಿ ತೆಂಗಿನ ತೋಟದಲ್ಲಿ ಎಡವಿ ಬಿದ್ದು ಗಾಯ ಮಾಡಿಕೊಂಡು ಹುಣ್ಣಾಗಿ ಆ ಅಜ್ಜ ತೀರಿ ಹೋಗಿದ್ದಾಗಿ ಒಂದು ದಿನ ಸುದ್ದಿ ಬಂದಿತ್ತು. ಆ ಅಜ್ಜನಿಂದಾಗಿ ನನಗೆ ಗಾಂಧೀಜಿ ಇಷ್ಟವಾಗಿ ಬಿಟ್ಟಿದ್ದರು. ಇದನ್ನೆಲ್ಲ ಮಂದಣ್ಣನಿಗೆ ಹೇಳಿದರೆ ಆತನಿಗೆ ತನ್ನ ಕತೆಯ ಮುಂದೆ ನನ್ನ ಕತೆ ದೊಡ್ಡದಾಗಿ ಕಾಣಿಸದೆ ಸುಮ್ಮನೆ ಮುಚ್ಚಿಕೊಂಡಿರಲು ಹೇಳಿ ಆ ಕಡೆ ತಿರುಗಿ ಮಲಗಿದ್ದ. +‘ಯಾರು ಮಾರಾಯ ಈ ಸಾವಯವ ಅಜ್ಜ?’ +‘ಒಳಗೆ ಬಾ ಹೇಳ್ತೀನಿ ಆ ಸೂಳೆಮಗನ ಸಾವಯವ’ +ಮಂದಣ್ಣ ತೀರಾ ಖಿನ್ನನಾಗಿ ಹೇಳಿದ. ಒಬ್ಬ ಮನುಷ್ಯ ಇನ್ನೊಬ್ಬನನ್ನು ಅಷ್ಟೊಂದು ಅಶ್ಲೀಲವಾಗಿ ಅಷ್ಟೊಂದು ದೈನ್ಯವಾಗಿ ಅಂದದ್ದ ನಾನು ಕೇಳಿದ್ದು ಅದೇ ಮೊದಲು. ಜೊತೆಗೆ ಸಾವಯವದಂತಹ ಗಂಭೀರ ಚರ್ಚೆಗೊಳಗಾಗಬೇಕಾದ ವಿಷಯವನ್ನು ಅಷ್ಟು ಸಲೀಸಾಗಿಯೂ ಅರ್ಥ ಮಾಡಿಕೊಳ್ಳಬಹುದು ಎಂದು ಅರಿವಾಗಿದ್ದೂ ಆಗಲೇ. +‘ಅಲ್ಲ ರಶೀದಾ, ನಾನೇ ಅವನ ಅಪ್ಪ ಅಂತ ಹೇಳ್ಕೊಂಡು ಆ ಮುದುಕ ತಿರುಗಾಡ್ತಾನಲ್ಲ, ಏನು ಮಾಡಲಿ ಮಾರಾಯ…’ ಮಂದಣ್ಣ ಹಡಗು ಮುಳುಗಿಹೋದವನಂತೆ ಅಸಾಧ್ಯ ಸಿಟ್ಟು ಸಂಕಟ ತುಂಬಿಕೊಂಡು ದಾಕ್ಷಾಯಿಣಿ ಇದ್ದಾಳಾ ಅಂತ ಹಿಂದಕ್ಕೆ ಒಮ್ಮೆ ತಿರುಗಿ ನನ್ನನ್ನ ದೀನವಾಗಿ ನೋಡಿದ. +ನನಗೆ ಏನೂ ತೋಚಲಿಲ್ಲ. ಜೊತೆಗೆ ಅವನ ಸಂಕಟ ತಟ್ಟನೆ ತಲೆಯೊಳಗೂ ತಟ್ಟಲಿಲ್ಲ. ಹಾಗೆ ನೋಡಿದರೆ ಅವನ ಅವ್ವ ಹಂದಿ ಸಾಕುವುದು, ಮತ್ತು ಅಪ್ಪ ಗಾಂಧೀಜಿಯ ದೆಸೆಯಿಂದಾಗಿ ಊರು ಬಿಟ್ಟು ತೀರ್ಥ ಯಾತ್ರೆಗೆ ಹೋಗಿದ್ದನ್ನು ಬಿಟ್ಟರೆ ಅವನ ಮನೆಯ ಹೆಚ್ಚಿನ ವಿಷಯ ನನಗೆ ಹೇಳಿರಲೂ ಇಲ್ಲ. ಹೇಳುವುದನ್ನು ಅವನು ಬೇಕೆಂತಲೇ ಮುಂದೂಡುತ್ತಿದ್ದ ಎಂದು ನನಗೆ ಅನಿಸುತ್ತಿತ್ತು. ಜೊತೆಗೆ ನನ್ನ ಮನೆಯ ಸಂಗತಿಯೂ ಆಷ್ಟೊಂದು ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಹಾಗಾಗಿ ನಾವಿಬ್ಬರೂ ಆ ಕುರಿತು ಹೆಚ್ಚೇನೂ ಮಾತಾಡದೆ ಕ್ರಾಂತಿ, ಹುಡುಗಿಯರು, ಸಮಾಜ ಇತ್ಯಾದಿ ಮಾತನಾಡುತ್ತಾ ಕಾಲ ತಳ್ಳುತ್ತಿದ್ದೆವು. ಮೈಸೂರಿನ ಸರಸ್ವತಿಪುರಂ ಮೊದಲನೇ ಮೇನನಲ್ಲಿರುವ ಅಗ್ನಿಶಾಮಕ ಠಾಣೆಯ ಎದುರಿಗಿರುವ ರೇಲ್ವೇ ಕ್ರಾಸಿಂಗ್ ಹಳಿಗಳ ಪಕ್ಕ ಬಿದ್ಡ ಮರದ ತುಂಡಿನ ಮೇಲೆ ಕುಳಿತುಕೊಂಡು ಗಂಟೆಗೊಮ್ಮೆಯೋ ಎರಡು ಗಂಟೆಗೊಮ್ಮೆಯೋ ಬರುವ ಉಗಿ ಬಂಡಿಗಾಗಿ ಕಾಯುತ್ತ ಮಾತನಾಡುತ್ತಿದ್ದೆವು. ಉಗಿಬಂಡಿಯ ಸದ್ದು ಕೇಳಿಸುತ್ತಿದ್ದಂತೆ ಎಲ್ಲ ಮಾತನ್ನೂ ಮರೆತು ತದೇಕ ಚಿತ್ತರಾಗಿ ಉಗಿಬಂಡಿ ಮಿದುಳಿಂದ ಮರೆಯಾಗುವವರೆಗೂ ನೋಡುತ್ತಿದ್ದೆವು. +‘ಅಪ್ಪ ಜಮ್ಮುತಾವಿಗೆ ಟ್ರೇನಲ್ಲಿ ಕರಕೊಂಡು ಹೋಗ್ಬೇಕಿತ್ತು. ಹೋಗಲೇ ಇಲ್ಲ’ ಮಂದಣ್ಣ ಬೇಸರದಲ್ಲಿ ಅರ್ಧ ನಗು ಬೆರೆಸಿ ಅಂದಿದ್ದ. ‘ನಾನೂ ಈವರೆಗೆ ಟ್ರೇನಲ್ಲಿ ಕೂತಿಲ್ಲ’ ನಗುತ್ತಾ ಹೇಳಿದ್ದೆ. ಅವನಿಗೂ ಖುಷಿಯಾಗಿತ್ತು. ಆವತ್ತಿನಿಂದ ನನಗೆ ಅವನು ತೀರಾ ಹತ್ತಿರವಾಗಿದ್ದ. ಹಾಗೆ ನೋಡಿದರೆ ಕೊಡಗಿನವರಾದ ನಾವು ಟ್ರೇನನ್ನು ಅಷ್ಟು ಹತ್ತಿರದಿಂದ ನೋಡುತ್ತಿರುವುದು ಅದೇ ಮೊದಲು. ಬೇರೆ ಯಾರಿಗೂ ಈ ವಿಷಯ ಗೊತ್ತಾಗಬಾರದೆಂದು ಅದೂ ಇದೂ ಮಾತನಾಡುತ್ತಾ ಓರೆಗಣ್ಣಲ್ಲಿ ಉಗಿಬಂಡಿಯನ್ನು ನೋಡುತ್ತಾ ಕೂರುತ್ತಿದ್ದೆವು. ರೈಲು ಬಂಡಿಗಳೆಲ್ಲ ಹೋಗುವುದು ಮುಗಿದು ಮೈಸೂರಿನ ಆಕಾಶ ಕೆಂಪುಬಣ್ಣದಿಂದ ಕತ್ತಲೆಗೆ ತಿರುಗಿ ಬೀದಿ ದೀಪಗಳು ಹೊತ್ತಿಕೊಳ್ಳುತಿದ್ದಂತೆ ನಮಗಿಬ್ಬರಿಗೂ ಸಖತ್ ಸಂಕಟವಾಗಲು ತೊಡಗುತ್ತಿತ್ತು. +ಆ ಸಂಕಟದಲ್ಲೇ ನಾವು ಕ್ರಾಂತಿಕಾರಿಗಳಾಗಿದ್ದು. ಕ್ರಾಂತಿಕಾರಿಗಳು ರೈಲಲ್ಲಿ ದುಡ್ಡು ಕೊಡದೆ ಓಡಾಡಬಹುದೆಂತಲೂ ಜನತೆಗಾಗಿ ನಾವು ಓಡಾಡುವುದರಿಂದ ಜನರದೇ ಆದ ರೈಲಿನಲ್ಲಿ ನಮಗೆ ಹಕ್ಕಿದೆಯೆಂತಲೂ ಒಂದು ವೇಳೆ ಕ್ರಾಂತಿಯಾದರೆ ಕೊಡಗನ್ನು ಒಂದು ದೇಶವನ್ನಾಗಿ ಮಾಡಲಾಗುವುದೆಂದೂ ಹಾಗೇನಾದರೂ ಆದರೆ ಎಲ್ಲ ದೇಶಗಳಿಂದ ರೈಲುಗಳು ಕೊಡಗಿಗೆ ಓಡಾಡುತ್ತದೆಂತಲೂ ನಮಗೆ ರಾಜಕೀಯ ತರಗತಿಯಲ್ಲಿ ಹೇಳಿದ್ದರು ಮಾತ್ರವಲ್ಲ ನಮ್ಮನ್ನು ಟಿಕೆಟಿಲ್ಲದೆ ರೈಲಿನಲ್ಲಿ ರಾಯಚೂರು ಆಂದ್ರ ಮುಂಬಯಿಗಳಿಗೆ ಕರೆದುಕೊಂಡು ಹೋಗಿದ್ದರು. ಹಾಗಾಗಿ ನಮಗೆ ಕ್ರಾಂತಿಯಲ್ಲಿ ಬಹುತೇಕ ನಂಬಿಕೆ ಬಂದು ಮೈಸೂರಿನಲ್ಲಿ ತಲೆಯೆತ್ತಿಕೊಂಡು ಎದೆ ಸೆಟೆಸಿಕೊಂಡು ಓಡಾಡಲು ತೊಡಗಿದ್ದೆವು. +ಹಾಗಿರುವಾಗಲೇ ಒಂದು ನಡುರಾತ್ರಿಯಲ್ಲಿ ಮಂದಣ್ಣ ನಿದ್ರೆಯಲ್ಲಿ ಎದ್ದು ಕುಳಿತು ಆತನ ಹಳೆಯದಾದ ಕೊಡೆಯ ತುದಿಯಿಂದ ನನ್ನ ತಲೆಗೆ ಗುರಿಯಿರಿಸಿ ನಿದ್ರೆಯಲ್ಲಿ ಶಸ್ತ್ರಾಭ್ಯಾಸ ಮಾಡಿದ್ದು. ರಾತ್ರಿಯೆಲ್ಲಾ ಮೈಸೂರಿನ ಗೋಡೆಗಳಲ್ಲಿ ಸಶಸ್ತ್ರ ಹೋರಾಟದ ಕುರಿತು ಕೆಂಪು ಅಕ್ಷರಗಳಲ್ಲಿ ಬರೆದು ಸುಸ್ತಾಗಿ ಮಲಗಿದ್ದ ನಾನು ತಿವಿತದಿಂದ ಎಚ್ಚರಾಗಿ ಎದ್ದು ನೋಡಿದರೆ ಮಂದಣ್ಣ ತನ್ನ ಹಳೆಯ ಕೊಡೆಯ ಚೂಪಾದ ತುದಿಯಿಂದ ನನ್ನ ತಲೆಬುರುಡೆಗೆ ಗುರಿಯಿಟ್ಟು ಅಭ್ಯಾಸ ಮಾಡುತ್ತಿದ್ದ. ಜೊತೆಯಲ್ಲಿ ಗೊರಕೆಯನ್ನೂ ಹೊಡೆಯುತ್ತಿದ್ದ. ನಾನು ಹೆದರಿ ಬಾಯಿ ಬಾರದಂತಾಗಿ ಎದ್ದು ಕೋಣೆಯ ಹೊರಗೆ ಓಡಿಹೋಗಿದ್ದೆ. ಸ್ವಲ್ಪ ಹೊತ್ತಿನ ನಂತರ ಕಿಟಕಿಯಿಂದ ಇಣುಕಿ ನೋಡಿದರೆ ಕೊಡೆ ಹಿಡಕೊಂಡೇ ನಿದ್ದೆ ಹೋಗಿದ್ದ. ಬೆಳಗ್ಗೆ ಎದ್ದವನೇ ನಾನು ಅವನನ್ನು ಕೋಣೆಯಿಂದ ಓಡಿಸಿ ಬಿಟ್ಟಿದ್ದೆ. +ಆನಂತರ ಸುಮಾರು ವರ್ಷಗಳ ನಂತರ ದಾಕ್ಷಾಯಿಣಿ ಇದೇ ಕಾರಣಕ್ಕಾಗಿ ಆತನನ್ನ ಕೊಡಗಿನಿಂದ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಕರೆತಂದು ತೋರಿಸಿದ್ದಳು. ಅವಳಿಗೆ ಸಶಸ್ತ್ರ ಕ್ರಾಂತಿಯಲ್ಲಿ ನಂಬಿಕೆಯಿದ್ದರೂ ಮಂದಣ್ಣ ಹಳೆಯ ಕೊಡೆಯ ಚೂಪಿನಿಂದ ತನ್ನ ತಲೆ ಬುರುಡೆಗೆ ಗುರಿಯಿಡುವುದು ತೀರಾ ಅಸಹಜವಾಗಿ ಕಂಡಿತ್ತು. ಆ ಕೊಡೆ ಮಂದಣ್ಣನ ಅಪ್ಪ ಸೈನ್ಯಲ್ಲಿರುವಾಗ ತಂದ ಕೊಡೆಯೆಂದೂ ಅದು ಹರಿದು ಚಿಂದಿಯಾಗಿದ್ದರೂ ಮಂದಣ್ಣ ಅದನ್ನ ಇನ್ನೂ ಜೋಪಾನವಾಗಿಟ್ಟಿರುವುದು ತೀರಾ ಭಾವುಕತೆಯಾಯಿತೆಂತಲೂ ಆತನಿಗೆ ಬೇಕಿದ್ದರೆ ತನ್ನ ಅವ್ವನ ಇಷ್ಟದಂತೆ ಹಂದಿ ಸಾಂಬಾರ ಮಾಡುವ ಹುಡುಗಿಯನ್ನು ಮದುವೆಯಾಗ ಬಹುದಿತ್ತೆಂತಲೂ ಅದು ಆಗಲಿಲ್ಲ ಎನ್ನುವ ಕಾರಣಕ್ಕೆ ಕೊಡೆಯಿಂದ ತನ್ನನ್ನು ಸಾಯಿಸಲು ಹೊರಟಿರುವುದು ತೀರಾ ಊಳಿಗಮಾನ್ಯ ಸಂಪ್ರದಾಯವಾಯಿತೆಂತಲೂ ಅತ್ತಿದ್ದಳು. ನಾನೇ ಅವಳಿಗೆ ಮಂದಣ್ಣ ಸಾಯಿಸಲು ಹೊರಟಿದ್ದಲ್ಲವೆಂದೂ ಅದು ನಿದ್ದೆಯಲ್ಲಿ ಆತ ನಡೆಸುವ ಅಭ್ಯಾಸವೆಂತಲೂ, ಮಗುವಿನಂತಹ ಮನಸ್ಸಿನ ಮಂದಣ್ಣನನ್ನು ಹೀಗೆ ಅನುಮಾನಿಸುವುದು ತೀರಾ ಅಮಾನವೀಯವೆಂತಲೂ ಹೇಳಬೇಕಾಯಿತು. +ಆಮೇಲೆ ಯಾವತ್ತೋ ಒಂದು ದಿನ ಮಂದಣ್ಣ ಮಡಿಕೇರಿಯಲ್ಲಿ ಸಂತೆಗೆ ಬಂದಾಗ ಸಿಕ್ಕಿದ್ದ. ಮಳೆಯಲ್ಲಿ ಮಡಚುವ ಕೊಡೆ ಹಿಡಕೊಂಡು ನಿಂತಿದ್ದ. +‘ಏನು ಮಾರಾಯ ಕೊಡೆ ಶಸ್ತ್ರಾಭ್ಯಾಸ ಹೇಗಿದೆ’ ಅಂತ ತಮಾಶೆ ಮಾಡಿದ್ದೆ. ‘ಬಾ ರಾಜಾ ಸೀಟಲ್ಲಿ ಕೂತು ಮಾತಾಡೋಣ’ ಅಂತ ಕರಕೊಂಡು ಹೋಗಿ ತುಂಬ ಹೊತ್ತು ಮಾತಾಡಿದ್ದ. ನಡುವಲ್ಲಿ ಒಂದೆರಡು ಸಲ ಕಣ್ಣೀರು ಹಾಕಿದ್ದ. ದಾಕ್ಷಾಯಿಣಿ ಎಲ್ಲವನ್ನೂ ತೀರಾ ವ್ಯಾವಹಾರಿಕವಾಗಿ ನೋಡುತ್ತಾಳೆಂದೂ ಅವ್ವ ಮನೆಬಿಟ್ಟು ಹೋಗಲು ಕಾರಣ ಅವಳ ವ್ಯಾಪಾರೀ ದೃಷ್ಟಿಯೆಂತಲೂ, ಈಗ ನೋಡಿದರೆ ಅಪ್ಪನ ನೆನಪಲ್ಲಿ ಇಟ್ಟಿದ್ದ ಕೊಡೆಯನ್ನು ಹಳೆ ಸಾಮಾನು ವ್ಯಾಪಾರಿ ಮಾಪಿಳ್ಳೆಗೆ ಮಾರಿದ್ದಾಳೆಂದೂ ಈಗ ತನಗೆ ತನ್ನವರು ಎಂಬವರು ಯಾರೂ ಇಲ್ಲವೆಂದೂ ಕೊಡಗಿಗೆ ಕ್ರಾಂತಿಯೂ ಬರುವುದಿಲ ರೈಲೂ ಬರುವುದಿಲ್ಲ ಬರುತ್ತಿರುವುದು ಬರಿಯ ಮಲಯಾಳಿಗಳೂ ಮಾಪಿಳ್ಳೆಗಳೂ ಶುಂಠಿಯೂ ನೇಂದ್ರವೂ ಮಾತ್ರವೆಂದೂ ಹೇಳಿದ್ದ. ಜೊತೆಗೆ ತಾನೀಗ ಮಾಕ್ಸ್‌ವಾದದಲ್ಲಿ ನಂಬಿಕೆ ಕಳಕೊಂಡಿರುವುದಾಗಿಯೂ ಸ್ವದೇಶೀ ಚಳವಳಿಯಲ್ಲಿ ತೊಡಗಿಸಿಕೊಂಡಿರುವುದಾಗಿಯೂ ಕೊಡಗಿನ ಜೇನು ಹುಳಗಳ ಮೇಲೆ ವಿದೇಶೀ ಸಂಸ್ಥೆಯೊಂದು ತಳಿ ಸಂಶೋಧನೆ ನಡೆಸುತ್ತಿದೆಯೆಂದೂ ಅದರ ವಿರುದ್ಧ ಘೇರಾ ಮಾಡಲು ಮಡಿಕೇರಿಗೆ ಬಂದಿರುವುದಾಗಿಯೂ ಆದರೆ ಮಳೆಯಿಂದಾಗಿ ಬಹುತೇಕ ಮಂದಿ ಬಂದಿಲ್ಲವೆಂದೂ ಬಂದವರಲ್ಲಿ ಬಹುಸಂಖ್ಯಾತರು ಚಳಿಯಿಂದಾಗಿ ಬಾರಿನಲ್ಲಿ ಕುಳಿತಿರುವುದಾಗಿಯೂ ಹೀಗಾದರೆ ಬದಲಾವಣೆ ಹೇಗೆ ಸಾಧ್ಯ ಅಂತ ಹೇಳಿದ್ದ. +ದಾಕ್ಷಾಯಿಣಿ ಏಕೆ ಬರಲಿಲ್ಲವೆಂದು ಕೇಳಿದ್ದೆ. ಒಣಗಲು ಇಟ್ಟಿದ್ದ ಕಾಫಿ ರಾಶಿ ಹಠಾತ್ತಾಗಿ ಬಂದ ಮಳೆಯಿಂದಾಗಿ ಕೊಚ್ಚಿಹೋಗಿದೆಯೆಂದೂ ದಾಕ್ಷಾಯಿಣಿಯೂ ಮತ್ತು ಈಗ ತಾನೇ ಹೊಸದಾಗಿ ಬಂದಿರುವ ಸಾವಯವ ಅಜ್ಜನೂ ಸೇರಿಕೊಂಡು ಕಾಫಿರಾಶಿ ಮಾಡುತ್ತಿದ್ದಾರೆಂದೂ ಹೇಳಿದ್ದ. ತಮಗೆ ಅಚಾನಕ್ಕಾಗಿ ದೊರೆತಿರುವ ಸಾವಯವ ಅಜ್ಜ ಒಬ್ಬ ಅವಧೂತನೆಂತಲೂ ಏಕಕಾಲದಲ್ಲಿ ಆತ ಕೃಷಿ ಕೆಲಸವನ್ನೂ, ನಾಟಿ ಮದ್ದನ್ನೂ, ಆಧ್ಯಾತ್ಮವನ್ನೂ ಹೇಳಿಕೊಡುತ್ತಾನೆಂದೂ ಮಕ್ಕಳಾಗದ ತಮಗೆ ಮಕ್ಕಳಾಗುವ ಹಾಗೆ ಯೋಗ ಕ್ರಿಯೆಯೊಂದನ್ನು ಹೇಳಿ ಕೊಡಲಿದ್ದಾನೆಂದೂ ಹೇಳಿ ಮಳೆಯಲ್ಲಿ ಮಾಯವಾಗಿದ್ದ. +ಈಗ ನೋಡಿದರೆ ದಾಕ್ಷಾಯಿಣಿ ಇದ್ದಾಳಾ ಎಂದು ತಿರುಗಿ ನೋಡುತ್ತಾ ಸಾವಯವ ಅಜ್ಜನಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ದಾಕ್ಷಾಯಿಣಿ ಅಜ್ಜನನ್ನು ಹೆಡೆಮುರಿಗೆ ಕಟ್ಟಿ ತರುವವಳಂತೆ ಕಾಫಿ ತೋಟದೊಳಕ್ಕೆ ಧಾವಿಸುತ್ತಿದ್ದಳು. +ಮನೆಯೊಳಗೆ ಹೊಕ್ಕರೆ ಒಂದು ತರಹ ದನದ ಕೊಟ್ಟಿಗೆಯಿಂದ ಬರುವಂತಹ ಪರಿಮಳ, ಮನುಷ್ಯನ ಬೆವರು, ಆಡಿನ ವಾಸನೆ, ಬೇಯುತ್ತಿರುವ ತರಕಾರಿಯ ಗಮಲು ಎಲ್ಲ ಸೇರಿಕೊಂಡು ಒಂದು ಅನೂಹ್ಯ ವಾಸನಾ ಜಗತ್ತಿನೊಳಕ್ಕೆ ಹೊಕ್ಕಂತೆ ಅನಿಸಿತು. +‘ಸ್ಸಾರಿ ಮಾರಾಯ ಈ ಬಡ್ಡಿಮಗ ಅಜ್ಜ ವಾರಕ್ಕೆ ಒಂದು ಸಲಾನೂ ಸ್ನಾನ ಮಾಡೋದಿಲ್ಲ. ಸ್ಸಾರಿ ಫಾರ ದ ಸ್ಮೆಲ್’ ಅಂದ. +‘ಅಲ್ಲ ಮಾರಾಯ. ಪೇಟೆಗೆ ಹೋಗ್ಲಿಕ್ಕೆ ನಾಚಿಕೆಯಾಗುತ್ತೆ. ಎಲ್ರೂ ತಬ್ಬಲಿಯನ್ನ ನೋಡುವ ಹಾಗೆ ನೋಡ್ತಾರೆ. ಇವನು ಎಲ್ಲ ಕಡೆ ಹೋಗಿ ಹೇಳ್ತಾ ಇದ್ದಾನೆ. ಸಾವಾಸ ಸಾಕಾಯ್ತು ಮಾರಾಯ. ನಿನ್ನ ಹಾಗೆ ಮೈಸೂರಲ್ಲೇ ಇರ್ಬೇಕಿತ್ತು. ಇಷ್ಟು ಹೊತ್ತಿಗೆ ರೀಡರ್ ಆದ್ರೂ ಆಗ್ತಿದ್ದೆ’ ಅಂದ. +‘ಸೂಳೆಮಗ ಘಟ್ಟದ ಕೆಳಗಿನ ಮುದುಕ. ಕಾವೇರಿ ಸಂಕ್ರಮಣಕ್ಕೆ ನಡ್ಕೊಂಡು ಬರ್ತಿದ್ದ. ಅನ್ನ ನೀರಿಲ್ದೆ ತಲೆ ತಿರುಗಿ ಬಿದ್ದು ರಸ್ತೆಯಲ್ಲಿ ಸಾಯ್ತಾ ಇದ್ದ. ಆಳು ಇರಲಿ ಅಂತ ಇಟ್ಟುಕೊಂಡ್ರೆ ಈಗ ನನಗೇ ಬಿಸಿನೀರು ಕಾಯಿಸ್ತಾ ಇದ್ದಾನಲ್ಲ ಮಾರಾಯ’ +ಮಂದಣ್ಣ ಸುಮ್ಮನೇ ಗೊಣಗಿಕೊಂಡು ಅವನಷ್ಟಕ್ಕೆ ಮಾತನಾಡುತ್ತಿದ್ದ. ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ. +‘ಸಾಕಾಯ್ತು ಮಾರಾಯ. ಒದ್ದು ಮನೆಯಿಂದ ಹೊರಗೆ ಹಾಕಕ್ಕೆ ಹೋದ್ರೆ ಬೀಜ ಅಮುಕಕ್ಕೆ ಬರ್ತಾನೆ ಮಾರಾಯ. ಉಡದ ಹಾಗೆ ಹಿಡೀತಾನೆ. ಸಾಯುವ ಹಾಗೆ ಹಿಡೀತಾನೆ. ಬಿಡೋದಿಲ್ಲ.’ +‘ದಿನಾ ಇದೇ ಜಗಳ. ಮದ್ಯಾನ ಇಷ್ಟೊತ್ತಿಗೆ ಶುರುವಾಗ್ತದೆ. ನೋಡ್ಲಿಕ್ಕೆ ಜನಾ ಸೇರ್ತಾರೆ. ಅವರಿಗೆ ತಮಾಷೆ. ಏನು ಮಾಡೋದು ಮಾರಾಯ?’ +ಮಧ್ಯಾಹ್ನವಾಗುತ್ತಿತ್ತು. ಹಸಿವಾಗುತ್ತಿತ್ತು. ತೋಟದೊಳಗಿಂದ ಕಾಫಿ ಹೂವಿನ ಪರಿಮಳ ಜೇನು ನೊಣಗಳು ಪರಾಗ ಹೊತ್ತು ಹಾರುವ ಪರಿಮಳ, ಬೇರೆಲ್ಲೂ ಕಾಣಲಾಗದ ಬಣ್ಣಗಳ ಪಾತರಗಿತ್ತಿಗಳು ಮನೆ ಮುಂದಿನ ಚರಂಡಿ ಹೊಂಡದ ನೀರಿಗೆ ಮುತ್ತಿಕ್ಕುತ ಹಾರುತ್ತಿದ್ದವು. +‘ಸರಿ ಮಂದಣ್ಣ ಈಗ ಸಮಸ್ಯೆಯೇನು?’ ನಾನು ಹಸಿವು ತಡೆಯಲಾರದೆ ಕೇಳಿದೆ. +‘ಇಲ್ಲ ಮಾರಾಯ. ಈಗ ದಾಕ್ಷಾಯಿಣಿಯೂ ಮುದುಕನಿಂದ ಸಾಕಷ್ಟು ಕಲಿತಿದ್ದಾಳೆ. ಜಗಳ ಶುರುವಾದರೆ ಅವಳೂ ಸೇರಿಕೊಳ್ಳುತ್ತಾಳೆ. ಮುದುಕ ನನ್ನನ್ನು ಅಮುಕಿದರೆ ಅವಳು ಮುದುಕನನ್ನು ಅಮುಕುತ್ತಾಳೆ. ಅವಳು ಇಲ್ಲದಿದ್ದರೆ ಮುದುಕ ಇಷ್ಟು ಹೊತ್ತಿಗೆ ನನ್ನ ಸಾಯಿಸ್ತಿದ್ದ ಮಾರಾಯ.’ +‘ದೊಡ್ಡ ಸಿನಿಮಾ ಆಗಿಬಿಟ್ಟಿದೆ ಮಾರಾಯಾ…’ +ಮಂದಣ್ಣ ಅರ್ಧ ಉತ್ಸಾಹದಲ್ಲಿ ಅರ್ಧ ಖಿನ್ನತೆಯಲ್ಲಿ ವಿವರಿಸುತ್ತಿದ್ದ. +ದೂರದಿಂದ ಕಾಫಿ ಗಿಡಗಳ ನಡುವಿಂದ ದಾಕ್ಷಾಯಿಣಿ ಜೊತೆಗೆ ಮಾತನಾಡುತ್ತಾ ನಗುತ್ತಾ ಸಾವಯವ ಅಜ್ಜ ನಡೆದು ಬರುತ್ತಿದ್ದ. +[ಶುಭಂ-ಮಂಗಳಂ] +***** +ಕೃಪೆ: ದೇಶ ಕಾಲ +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […] +ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_9.txt b/Kannada Sahitya/article_9.txt new file mode 100644 index 0000000000000000000000000000000000000000..dfa2e5e21c2cd055d6d8115436831628e84a1c2a --- /dev/null +++ b/Kannada Sahitya/article_9.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, ಹಾಗೆ ಬಂದಿದ್ದರೆ ಅವಕ್ಕೇನಾದರೂ ತಾಂತ್ರಿಕ ಪರಿಹಾರಗಳೇನಾದರೂ ಇವೆಯೆ – ಎಂಬುದನ್ನು ಸಿಂಹಾವಲೋಕನ ಮಾಡಲು ಪ್ರತಿ ವಾರ ನಡೆಸುತ್ತಿದ್ದ ಮೀಟಿಂಗ್‌ಗಳಲ್ಲಿ ಅದು ಒಂದಾಗಿತ್ತು. ಸುಮನ ತಾಂತ್ರಿಕವಾಗಿ ಸಮರ್ಥ ಇಂಜಿನಿಯರ್ ಆಗಿದ್ದರಿಂದ, ಪ್ರತಿ ವಾರದ ಮೀಟಿಂಗ್‌ನಲ್ಲಿ ಅವಳ ಕೆಲಸದ ಪರಾಮರ್ಶೆ ಸುಸೂತ್ರವಾಗಿಯೇ ನಡೆಯುತ್ತಿತ್ತು. ತನಗೆ ವಹಿಸಿದ ಕೆಲಸಗಳನ್ನು ಸಮರ್ಪಕವಾಗಿ, ಮೈಲಿಗಲ್ಲಿಗನುಗುಣವಾಗಿ – ಕಾಲಕ್ಕೆ ಸರಿಯಾಗಿ – ಮಾಡಿ ಮುಗಿಸುತ್ತಿದ್ದುದರಿಂದ, ಮೀಟಿಂಗ್ ಬಗ್ಗೆ ಅವಳಿಗೆ – ತನ್ನ ಗುಂಪಿನ ಇತರ ಕೆಲವು ಅಭಿಯಂತರಿಗಿರುವಂತೆ – ಭಯವಿರುತ್ತಿರಲಿಲ್ಲ. ಒಂದು ಅತಿ ದೊಡ್ಡ ಸಾಫ್ಟ್‌ವೇರ್ ಪ್ರಾಡಕ್ಟ್‌ನ ವಿನ್ಯಾಸ ಮತ್ತು ಅಭಿವೃದ್ಧಿ ಮಾಡುತ್ತಿದ್ದ ಆ ಸಂಸ್ಥೆಯಲ್ಲಿ ನೂರಾರು ಇಂಜಿನಿಯರಗಳು ಕೆಲಸ ಮಾಡುತ್ತಿದ್ದರು. ಒಂದು ಕೆಲಸವನ್ನು ಅನೇಕ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿದಾಗ, ಅದರಲ್ಲಿ ಒಂದು ಅಂಶವನ್ನು ಸುಮನ ರಚಿಸುತ್ತಿದ್ದಳು. ಇನ್ನು ನಾಲ್ಕು ತಿಂಗಳಿಗೆ ಆ ಪ್ರಾಡಕ್ಟ್‌ಅನ್ನು ಬಿಡುಗಡೆ ಮಾಡುವ ಉದ್ದೇಶವಿದ್ದುದರಿಂದ, ಸಹಜವಾಗಿಯೇ ಕೆಲಸ ಹೇರಳವಾಗಿತ್ತು; ಕಾಲದ ಜೊತೆ ಓಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಇನ್ನುಳಿದ ಅರ್ಧ ಗಂಟೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು, ತಾನು ಹಿಂದಿನ ದಿನ ಬರೆಯುತ್ತಿದ್ದ ‘ಪ್ರೋಗ್ರಾಂ’ಅನ್ನು ಮುಂದುವರೆಸತೊಡಗಿದಳು. ಬರೆಯುವ ಭಾಷೆ ‘ಜಾವಾ’ ಅವಳಿಗೆ ಕರಗತವಾದ್ದರಿಂದ, ಬರಹ ಸುಲಲಿತವಾಗಿ ಓಡತೊಡಗಿತು; ಅರ್ಧ ಗಂಟೆ ಹೋದದ್ದೇ ತಿಳಿಯಲಿಲ್ಲ. ಆ ಅಮೇರಿಕನ್ ಕಂಪನಿಗಳಲ್ಲಿ ಸರಿಯಾದ ಸಮಯಕ್ಕೆ ಮೀಟಿಂಗ್‌ಗೆ ಹೋಗುವುದು ಶಿಷ್ಟಾಚಾರವಾದ್ದರಿಂದ, ೯:೩೦ಕ್ಕೆ ಸರಿಯಗಿ ಕಾನ್‌ಫೆರೆನ್ಸ್ ರೂಂನಲ್ಲಿ ಹಾಜರಾದಳು. +ಆ ಮೀಟಿಂಗನ್ನು ನಡೆಸುತ್ತಿದ್ದವರು ಅವಳ ನಿರ್ವಾಹಕರಾದ ಮೈಕೇಲ್. ಅಲ್ಲಿನ ಆಗುಹೋಗುಗಳನ್ನು ದಾಖಲಿಸುತ್ತಿದ್ದವರು ಇನ್ನೊಬ್ಬ ಇಂಜಿನಿಯರ್; ಕೆಲಸದ ಪ್ರಗತಿಯ ಮೇಲೆ ನಿಗಾ ಇಡಲು ಆ ದಾಖಲೆ ಉಪಯೋಗಕ್ಕೆ ಬರುತ್ತಿತ್ತು. ತನ್ನ ಗುಂಪಿನವರೆಲ್ಲಾ ಬಂದಿದ್ದಾರೆಂದು ಖಾತ್ರಿ ಮಾಡಿಕೊಂಡು, ಮೈಕೇಲ್ ಮೀಟಿಂಗ್ ಆರಂಭಿಸಿದ. ಒಬ್ಬರಾದ ಮೇಲೊಬ್ಬರು ಸರತಿಯಂತೆ ತಮ್ಮ ಕೆಲಸದ ಪ್ರಗತಿಯ ಬಗ್ಗೆ ವರದಿ ಒಪ್ಪಿಸತೊಡಗಿದರು. ಸುಮನ ತನ್ನ ಪ್ರಗತಿಯನ್ನು ನೈಜವಾಗಿ ಹಾಗೂ ಚುಟುಕಾಗಿ ಹೇಳಿದಳು; ತನ್ನ ಕೆಲಸದಲ್ಲಿ ಅನೇಕ ಸಂಕಷ್ಟಗಳು ಬಂದಿದ್ದರೂ, ಅವುಗಳನ್ನು ತಾನು ಹೇಗೆ ಬಗೆಹರಿಸಿದೆ ಎಂದು ವಿಶದೀಕರಿಸಲಿಲ್ಲ. ತನ್ನ ತುತ್ತೂರಿಯನ್ನು ತಾನೇ ಊದಿಕೊಂಡು, ತನ್ನ ಗುಣಗಾನ ಮಾಡಿಕೊಳ್ಳುವ ಪ್ರವೃತ್ತಿ ಅವಳ ಸರಳ ಸ್ವಭಾವದ ಭಾಗವಾಗಿರಲಿಲ್ಲ. ತನ್ನ ನೈಜ ಯೋಗ್ಯತೆಯನ್ನು ಮಾಡಿ ಮುಗಿಸಿದ ಕೆಲಸದ ಪರಿಪೂರ್ಣತೆ ಸಾರಬೇಕೇ ವಿನಃ, ತಾನೇ ಕೊಚ್ಚಿಕೊಳ್ಳುವಂತಾಗಬಾರದೆಂಬುದೇ ಅವಳ ಧೃಡ ನಂಬಿಕೆಯಾಗಿತ್ತು. +ಅವಳ ನಂತರದ ಸರದಿ, ಅವಳ ಸಹ ಕೆಲಸಗಾರ ಡಿಕ್‌ನದು ಆಗಿತ್ತು. ಮಾಡಿದ ಕೆಲಸ ಎಷ್ಟೇ ಕಡಿಮೆಯಾಗಿದ್ದರೂ, ಅದರ ಮಹತ್ವವನ್ನು ಬಣ್ಣ ಹಚ್ಚಿ ಹೇಳುವ ಕಲೆಯನ್ನು ಅವನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ. ಕಳೆದ ವಾರ ತಾನು ಸಮರ್ಪಕವಾಗಿ ಮಾಡಿ ಮುಗಿಸಿದ ಕೆಲಸ ಏನು, ಅದರಲ್ಲಿ ಬಂದೊದಗಿದ ಸಮಸ್ಯೆಗಳನ್ನು ತಾನು ಹೇಗೆ ಸಮರ್ಥವಾಗಿ ಎದುರಿಸಿ ಪರಿಹರಿಸಿದೆ ಎಂದು ವಿವರಿಸಿದ; ಇಡೀ ಪ್ರಾಡಕ್ಟ್‌ನಲ್ಲಿ ತಾನು ಅಭಿವೃದ್ಧಿ ಪಡಿಸುತ್ತಿರುವ ಭಾಗ ಮಾನವನ ದೇಹದಲ್ಲಿ ಹೃದಯವಿದ್ದಂತೆ ಎಂದು ಹೇಳುವುದನ್ನು ಮರೆಯಲಿಲ್ಲ. +ಆ ಗುಂಪಿನ ಇತರ ಸದಸ್ಯರೆಲ್ಲರೂ ತಮ್ಮ ತಮ್ಮ ಕೆಲಸಗಳ ಬಗ್ಗೆ ವರದಿ ಒಪ್ಪಿಸಿದ ನಂತರ, ಅಂದಿನ ಮೀಟಿಂಗ್, ಯಾವುದೇ ಗಮನ ಸೆಳೆಯುವ ಘಟನೆಗಳಿಲ್ಲದೆ ಮುಗಿಯಿತು. +-೨- +ಇನ್ನೊಂದು ದಿನ ಸುಮನ ‘ಕ್ಯೂಬ್’ನಲ್ಲಿ ಕುಳಿತು ತಾನು ಬರೆದ ‘ಪ್ರೋಗ್ರಾಂ’ಅನ್ನು ತಿದ್ದುತ್ತಿದ್ದಳು. ಪ್ರತಿದಿನದ ಕಾರ್ಯ ಮಗ್ನತೆ ಅಂದು ಅವಳಿಗಿರಲಿಲ್ಲ; ಹಾಗಾಗಲು ಕಾರಣವೂ ಇಲ್ಲದಿರಲಿಲ್ಲ: ಆ ಹೊತ್ತಿಗೆ ಸ್ವಲ್ಪ ಮುಂಚೆ, ಮೈಕೇಲ್ ಅವಳನ್ನು ತನ್ನ ಕೋಣೆಗೆ ಕರೆದು, ಅಪರೂಪವಾಗಿ ಅವಳು ಮಾಡಿದ ತಪ್ಪನ್ನು ಅವಳ ಅವಗಾಹನೆಗೆ ತಂದಿದ್ದ. ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುವ ಅವಳು, ತುಂಬಾ ಕಷ್ಟಕರವಾದ ಭಾಗವನ್ನು ರಚಿಸುವುದರಲ್ಲಿ ಎಡವಿದ್ದಳು. ತನ್ನ ತಪ್ಪಿನ ಅರಿವಾದ ಕೂದಲೇ, ‘ಬಾಸ್’ನಲ್ಲಿ ಪ್ರಾಮಾಣಿಕವಾಗಿ ಕ್ಷಮಾಯಾಚನೆ ಮಾಡಿದ್ದಳು. ಹೀಗೆ ಕೆಲಸವನ್ನು ಸರಿಯಾಗಿ ಮಾಡಿದಾಗ ತಮಟೆ ಹೊಡೆದು ಪ್ರಪಂಚಕ್ಕೆ ಸಾರದೆ, ತಪ್ಪು ಮಾಡಿದಾಗ ಸುಲಭವಾಗಿ ಒಪ್ಪಿಕೊಳ್ಳುವ ಅವಳ ದೊಡ್ಡ ಗುಣವೇ, ಎಷ್ಟೋ ಸಲ ಅವಳಿಗೆ ಮುಳುವಾಗಿದ್ದುದೂ ಉಂಟು! ಆ ಬಾರಿಯೂ ಸಹ, ಬಾಸ್‌ನಿಂದ ಎಚ್ಚರಿಕೆಯ ಮಾತುಗಳನ್ನು ಕೇಳಬೇಕಾಗಿ ಬಂದಿತ್ತು. ಹೀಗಾಗಿ ಸಹಜವಾಗಿಯೇ ಅವಳ ಮನಸ್ಸು ವ್ಯಗ್ರವಾಗಿತ್ತು. ಅದಕ್ಕೆ ಕಾರಣ – ತಾನು ತಪ್ಪು ಮಾಡಿ, ಆ ತಪ್ಪು ಬಾಸ್‌ನ ಗಮನಕ್ಕೆ ಬಂದು, ತಾನು ತಪ್ಪೊಪ್ಪಿಕೊಳ್ಳುವ ಪ್ರಮೇಯ ಬಂದೊದಗಿದುದು ಆಗಿರಲಿಲ್ಲ! ಬದಲಾಗಿ, ಇದೇ ಸಂದರ್ಭ ತನ್ನ ಸಹೋದ್ಯೋಗಿ ಡಿಕ್‌ಗೆ ಬಂದಿದ್ದರೆ, ಅದಕ್ಕೆ ಅವನು ಹೇಗೆ ಪ್ರತಿಕ್ರಿಯಿಸುತ್ತಿದ್ದ ಎಂಬುದೇ ಆಗಿತ್ತು: ಹಿಂದೊಂದು ಸಲ (ಒಂದು ಸಲವೇಕೆ, ಅನೇಕ ಸಲ) ಡಿಕ್ ಪ್ರೋಗ್ರಾಂ ರಚನೆಯಲ್ಲಿ ಮಹಾ ಪ್ರಮಾದ ಮಾಡಿದ್ದ; ವಿಷಯವನ್ನು ಅರ್ಧಂಬರ್ಧ ತಿಳಿದುಕೊಂಡು ಉಡಾಫೆಯಿಂದ ಕೆಲಸ ಮಾಡಿದುದೇ, ಅಚಾತುರ್ಯಕ್ಕೆ ಕಾರಣವಾಗಿರುತ್ತಿತ್ತು. ಅವನು ಮಾಡಿದ ತಪ್ಪು ಅಂಗೈ ಮೇಲಿನ ಹುಣ್ಣಿನಂತೆ ಸ್ಪಷ್ಟವಾಗಿ ತನ್ನ ಸಹೋದ್ಯೋಗಿಗಳೆಲ್ಲರಿಗೂ ಗೊತ್ತಿದ್ದರೂ, ಅವನು ಅದನ್ನು ನಿರ್ವಾಹಕನಲ್ಲಿ ಹೇಳಿಕೊಳ್ಳುತ್ತಿದ್ದ ರೀತಿಯೇ ಬೇರೆ: ತನ್ನ ತಪ್ಪನ್ನು ಸಾರಾ ಸಗಟಾಗಿ ನಿರಾಕರಿಸಿ, ಬೇರೆಯವರ ತಲೆಯ ಮೇಲೆ ಗೂಬೆ ಕೂರಿಸುತ್ತಿದ್ದ! ತಾಂತ್ರಿಕ ವಿವರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಸಮರ್ಥನಾದ ಮೈಕೇಲ್, ಡಿಕ್‌ನದು ಏನೂ ತಪ್ಪಿಲ್ಲವೆಂದೇ ಭಾವಿಸುತ್ತಿದ್ದ. +-೩- +ಡಿಕ್‌ನ ಕಾರ್ಯ ಶೈಲಿ, ಸಹೋದ್ಯೋಗಿಗಳೊಡನೆ ಅವನು ಸ್ಥಾಪಿಸಿಕೊಂಡಿದ್ದ ಸಂಬಂಧ ಹೀಗಿತ್ತು: ಅವನು ಕೆಲಸ ಮಾಡುವುದಕ್ಕಿಂತ, ಅದರ ಪ್ರಚಾರದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದನು – ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಹಾಗೆ! ಹೀಗಾಗಿ ಅವನ ದಿನಚರಿಯಲ್ಲಿ ಹೆಚ್ಚು ವೇಳೆ ಸಹೋದ್ಯೋಗಿಗಳೊಡನೆ, ತನ್ನ ನಿರ್ವಾಹಕರೊಡನೆ, ಮತ್ತು ಮೇಲಧಿಕಾರಿಗಳೊಡನೆ ಮಾತನಾಡಲು ವ್ಯಯಿಸುತ್ತಿದ್ದ. ಬೇರೆಯವರ ಜೊತೆ ಉತ್ತಮ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ಅವನ ಉಳಿವಿನ ದೃಷ್ಟಿಯಿಂದಲೂ, ಪ್ರಾಯೋಗಿಕವಾಗಿ ಸಾಕಷ್ಟು ಮಹತ್ವ ಪಡೆದಿತ್ತು. ಆದ್ದರಿಂದ ಆಗಾಗ್ಗೆ ಇತರರನ್ನು ತನ್ನ ಖರ್ಚಿನಲ್ಲಿ ಊಟಕ್ಕೆ ಕರೆದುಕೊಂಡು ಹೋಗುವುದೇನು, ಅವರ ಜೊತೆ ಫುಟ್‌ಬಾಲ್ ಆಟದ ವೀಕ್ಷಣೆಗೆ ಹೋಗುವುದೇನು, ಸ್ಕೀ ಟ್ರಿಪ್‌ಗಳನ್ನು ಆಯೋಜಿಸುವುದೇನು – ಹೀಗೆ ಕಛೇರಿಯ ಕೆಲಸದ ವೇಳೆಯಲ್ಲಿ ಈ ಬಗೆಯ ಪಠ್ಯೇತರ ಚಟುವಟಿಕೆಗಳು ಭರದಿಂದ ನಡೆಯುತ್ತಿದ್ದವು. +ಡಿಕ್ ತನ್ನ ಸಹೋದ್ಯೋಗಿಗಳೊಡನೆ ಸುಮಧುರ ಬಾಂದವ್ಯವನ್ನು ಅಪೇಕ್ಷಿಸಿಕೊಂಡು ಹೋಗುತ್ತಿದ್ದುದಕ್ಕೆ ಇನ್ನೊಂದು ಪ್ರಬಲವಾದ ಕಾರಣವೂ ಇತ್ತು: ತಾಂತ್ರಿಕ ಸಾಮರ್ಥ್ಯದಲ್ಲಿ ಕೆಳ ಮಟ್ಟದಲ್ಲಿದ್ದ ಅವನಿಗೆ, ತನಗೆ ವಹಿಸಿದ ಕೆಲಸಗಳನ್ನು ಪೂರೈಸಲು ತನ್ನ ಸಹಚರರ ಸಹಕಾರ ಮತ್ತು ಬೆಂಬಲ ಅಗತ್ಯವಲ್ಲದೆ ಅನಿವಾರ್ಯ ಸಹ ಆಗಿತ್ತು. ಒಂದೆರಡು ಬಾರಿ ಸಣ್ಣ ಪುಟ್ಟ ಸಹಾಯ ಯಾಚಿಸಿದರೆ, ಯಾರಾದರೂ ಒಪ್ಪಿಯಾರು! ಆದರೆ ಇದನ್ನೇ ಅಭ್ಯಾಸ ಮಾಡಿಕೊಂಡರೆ, ನಿಯಮಿತವಾಗಿ ಸಹಕರಿಸಬೇಕಾದರೆ, ಅತ್ಯುತ್ತಮ ಸಂಬಂಧ ಇಟ್ಟುಕೊಳ್ಳಬೇಕಿತ್ತು. +ತಾನು ಮಾಡಿ ಮುಗಿಸಿದ ಕೆಲಸಗಳನ್ನು ಅವಲೋಕಿಸಿ, ತನ್ನ ಕೆಲಸದ ಸಾಮರ್ಥ್ಯದ ವಾರ್ಷಿಕ ವಿಮರ್ಶೆ ಮಾಡುತ್ತಿದ್ದವನು ಮೈಕೆಲ್. ಅವನ ಜೊತೆ ಅತ್ಯಂತ ಹಾರ್ದಿಕ ಸಂಬಂಧ ಇಟ್ಟುಕೊಳ್ಳುವುದು ಡಿಕ್‌ಗೆ ಇನ್ನೂ ಮುಖ್ಯವಾಗಿತ್ತು. ತಾನು ಮಾಡಿದ ಕೆಲಸದ ಮಹತ್ವವನ್ನು ಬಾಸ್‌ಗೆ ಮನಗಾಣಿಸುವುದು, ಅದನ್ನು ಮುಗಿಸುವ ಪ್ರಕ್ರಿಯೆಯಲ್ಲಿ ಒದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾನು ಪ್ರದರ್ಶಿಸಿದ ತಾಂತ್ರಿಕ ಕೌಶಲ್ಯಗಳನ್ನು ಮನವರಿಕೆ ಮಾಡುವುದು, ಸದಾ ಕಂಪನಿಯ ಹಿತದ ಬಗ್ಗೆ ಮಾತನಾಡಿ ಕಾಳಜಿಗಳನ್ನು ವೇದ್ಯಪಡಿಸುವುದು, ತಾನೇ ಸ್ವತಃ ಬೇರೆಯವರಿಂದ ಉಪಕೃತನಾದರೂ, ತಾನು ಇತರರಿಗೆ ಹೇಗೆ ಸಹಾಯಕಾರಿಯಾದೆ ಎಂಬ ಬಗ್ಗೆ ಸುಳ್ಳು ಹೇಳುವುದು, ದೊಡ್ಡ ದೊಡ್ಡ ಮಾತನಾಡಿ ತನ್ನ ತಾಂತ್ರಿಕ ಮುಂದಾಳತ್ವವನ್ನು ತೋರಿಸುವುದು – ಇವೆಲ್ಲಾ ಅವ್ಯಾಹತವಾಗಿ ನಡೆದಿದ್ದವು. +-೪- +ಸುಮನ ಡಿಕ್‌ಗೆ ತೀರಾ ಭಿನ್ನವಾಗಿದ್ದಳು. ಸ್ವತಂತ್ರವಾಗಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದಳು. ಪ್ರಚಾರಕ್ಕೆ ಏನೇನೂ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. ಹೀಗಾಗಿ ಕೆಲಸ ಮಾಡುವಾಗ, ಸಂಪೂರ್ಣ ಮಗ್ನತೆ ಲಭಿಸಿ – ಯಾವ ಬಗೆಯ ಚಿತ್ತ ಚಾಂಚಲ್ಯಗಳಿಲ್ಲದೆ – ಮಾಡಿದ ಕೆಲಸ ಸಾಮಾನ್ಯವಾಗಿ ಉತ್ತಮ ಮಟ್ಟದಲ್ಲಿರುತ್ತಿತ್ತು. ಅಮೇರಿಕದಲ್ಲಿ ನೆಲೆಸಲು ತೀರ ಅಗತ್ಯವಿರುವ ಗುಣಗಳಾದ ತಾಂತ್ರಿಕ ಕೌಶಲ, ಕಷ್ಟಪಟ್ಟು ಕೆಲಸ ಮಾಡುವಿಕೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ವೃತ್ತಿಪರತೆ – ಇವೆಲ್ಲವನ್ನೂ ರೂಢಿಸಿಕೊಂಡಿದ್ದಳು. ಅಮೇರಿಕಾ ನೆಲದ ಈ ಒಳ್ಳೆಯ ಅಂಶಗಳೊಡನೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳಾದ ಸರಳತೆ, ವಿನಮ್ರತೆ, ಸತ್ಯ ಸಂಧತೆ, ವಿನಯ ಶೀಲತೆ, ಕರ್ತವ್ಯ ಪ್ರಜ್ಞೆಗಳನ್ನು ತನ್ನ ಸ್ವಭಾವದ ಸಹಜ ಅಂಗವಾಗಿ ಮಾಡಿಕೊಂಡು – ತುಂಬಿದ ಕೊಡ ತುಳುಕದಂತೆ – ಇದ್ದಳು. ಅವಳು ಕೆಲಸದಲ್ಲಿ ಎಷ್ಟೊಂದು ಮಗ್ನಳಾಗಿರುತ್ತಿದ್ದಳೆಂದರೆ , ತಾನು ಮಾಡಿ ಮುಗಿಸಿದ ಕೆಲಸವನ್ನು – ಬಾಸ್‌ನ ಮುಂದೆ ಸಹ – ಪ್ರಚುರ ಪಡಿಸುವುದನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದ್ದಳು. ಅವಳ ವರ್ತನೆ ಹೀಗಿರಲು ಇನ್ನೊಂದು ಕಾರಣವೂ ಇತ್ತು: ಒಳ್ಳೆಯ ಕೆಲಸ ಮಾಡಿದರೆ, ಅದು ತಾನಾಗಿಯೇ ಎಲ್ಲರ ಗಮನಕ್ಕೆ ಬರುವುದೆಂದು ಧೃಡ ನಂಬಿಕೆ ಅವಳದು. ಅವಳ ಸರಳತೆ ಹಾಗೂ ವಿನಮ್ರತೆಗಳು ತನ್ನ ಬಗ್ಗೆ ತಾನೆ ತಮಟೆ ಹೊಡೆಯುವುದನ್ನು ತಪ್ಪಿಸುತ್ತಿದ್ದವು. +ಇನ್ನೊಂದು ಸಂದರ್ಭದಲ್ಲಿ, ಮೈಕೆಲ್ ಸುಮನಳನ್ನು ತನ್ನ ಕಛೇರಿಗೆ ಬರಲು ಹೇಳಿದ. ದೇಶದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟು, ಸಹಸ್ರಾರು ಸಂಖ್ಯೆಯಲ್ಲಿ ಜನರು ಕೆಲಸ ಕಳೆದುಕೊಳ್ಳುವ ಕಾಲ ಅದಾಗಿತ್ತು. ಹೆದರಿ ಹೆದರಿಕೊಂಡೇ ಸುಮನ ಬಾಸ್ ಕೋಣೆ ಸೇರಿದ್ದಳು. ಹಸನ್ಮುಖನಾಗಿದ್ದ ಮೈಕೆಲ್ ಸುಮನನ ಕೆಲಸದ ಬಗ್ಗೆ ಹೊಗಳಿ, ಅವಳಿಗೆ ಅಭಿನಂದನೆ ಸಲ್ಲಿಸಿದ. ಆ ಕೆಲಸ ಹೇಗೆ ಮಾಡಿದೆಯೆಂದು ಕೇಳಿದಾಗ, ಸರಳ ಸ್ವಭಾವದ ಅವಳು, ಆ ಕೆಲಸದ ಸಮಸ್ತ ಅಂತರಿಕ ತಾಂತ್ರಿಕ ವಿವರಗಳನ್ನು – ತೆರೆದಿಟ್ಟ ಪುಸ್ತಕದಂತೆ – ವಿಶದೀಕರಿಸಿದಳು. ಅಂತರಿಕ ವಿವರಗಳನ್ನು ಮುಚ್ಚಿಟ್ಟುಕೊಂಡು, ತನ್ಮೂಲಕ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳದೆ, ಎಲ್ಲವನ್ನೂ ಹೇಳಿಕೊಂಡುಬಿಟ್ಟಳು! +-೫- +ಇದಾಗಿ ಆರು ತಿಂಗಳುಗಳುರುಳಿದವು. ಆ ಕಂಪನಿಯ ಪ್ರಾಡಕ್ಟ್ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಯಿತು. ಆಗ ದೇಶದ ಆರ್ಥಿಕ ಸ್ಥಿತಿ ಹಿನ್ನಡೆಯಲ್ಲಿದ್ದು, ಎಲ್ಲಾ ಕಂಪನಿಗಳು ಯವುದೇ ಬಗೆಯ ತಾಂತ್ರಿಕ ವಸ್ತು ಮತ್ತು ಸೇವೆಗಳನ್ನು ಕೊಂಡುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದವು! ಆದ್ದರಿಂದ, ಆ ಪ್ರಾಡಕ್ಟ್ ತಾಂತ್ರಿಕ ನಿಯತ ಕಾಲಿಕೆಗಳಿಂದ ಅನೇಕ ಪುರಸ್ಕಾರಗಳನ್ನು ಪಡೆದಿದ್ದರೂ, ಅದನ್ನು ಕೊಳ್ಳುವವರೇ ಗತಿ ಇರಲಿಲ್ಲ! ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗ ಎಷ್ಟೇ ಕಷ್ಟಪಟ್ಟರೂ, ಆ ಕಂಪನಿಯ ಕಾಲು ವರ್ಷದ ವಹಿವಾಟು ಮತ್ತು ನಷ್ಟ ತೀರಾ ನಿರಾಶಾದಾಯಕವಾಗಿದ್ದವು. ತಿಂಗಳಿಂದ ತಿಂಗಳಿಗೆ, ಕಂಪನಿ ಹೆಚ್ಚು ಹೆಚ್ಚು ನಷ್ಟ ಅನುಭವಿಸುತ್ತಾ ಹೋಯಿತು. ತನ್ನೆಲ್ಲಾ ಕೆಲಸಗಾರರಿಗೆ ಸಂಬಳ ಕೊಟ್ಟು ಉಳಿಸಿಕೊಳ್ಳುವುದು – ವ್ಯಾವಹಾರಿಕ ದೃಷ್ಟಿಯಿಂದ – ಕಂಪನಿಗೆ ಅಸಾಧ್ಯ ಮತ್ತು ಅಸಾಧುವಾದ ಕೆಲಸವಾಯಿತು. ಶೇಕಡಾ ೩೦ರಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವ ನಿರ್ಣಯವನ್ನು ಕಂಪನಿ ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಯಿತು. +ಆ ಸುದ್ದಿ ಕೆಲಸಗಾರರಿಗಿನ್ನೂ ತಿಳಿದಿರಲಿಲ್ಲ. ಮೈಕೇಲ್ ನಿರ್ವಾಹಕನಾಗಿದ್ದ ಅಭಿವೃದ್ದಿ ಘಟಕದಲ್ಲಿ ಹತ್ತು ಜನ ಅಭಿಯಂತರಿದ್ದರು. ಕೆಲಸಗಾರರನ್ನು ಓಡಿಸಲು ಮಾರ್ಗದರ್ಶಿ ಸೂತ್ರಗಳು ಇಂತಿದ್ದವು: ಕೆಲಸಗಾರನಿಗೆ ಸಂಬಳ ಜಾಸ್ತಿ ಬರುತ್ತಿದ್ದರೆ, ಅವನ ಕಾರ್ಯವೈಖರಿ ಅಸಮರ್ಪಕವಾಗಿದ್ದರೆ, ಅವನು ನಿರ್ವಹಿಸುತ್ತಿದ್ದ ಕೆಲಸ ಕಂಪನಿಗೆ ಅಗತ್ಯವಿಲ್ಲದಿದ್ದರೆ – ಅವನ (ಅವಳ) ಕೆಲಸ ಹೋಗುವ ಸಂಭಾವ್ಯತೆ ಜಾಸ್ತಿ ಇರುತ್ತಿತ್ತು. ಇಷ್ಟೆಲ್ಲಾ ಮಾನದಂಡಗಳನ್ನು ಪ್ರಕಟಿಸಿದ್ದರೂ, ಯಾರನ್ನು ಕೆಲಸದಿಂದ ತೆಗೆಯಬೇಕೆಂಬುದನ್ನು, ಕಂಪನಿಯವರು ಮೈಕೇಲ್‌ಗೇ ಬಿಟ್ಟಿದ್ದರು. +ಇರುವ ಒಂಭತ್ತು ಜನರಲ್ಲಿ ಐದು ಜನರು ಸಮರ್ಪಕವಾಗಿ ಕೆಲಸ ಮಾಡುತ್ತಿದರು; ಅವರು ಉಳಿದುಕೊಂಡರು. ಇಬ್ಬರು ತೀರ ಕಳಪೆ ಕೆಲಸ ಮಾದುತ್ತಿದ್ದರು, ಅವರನ್ನು ತೆಗೆಯಬೇಕೆಂಬ ನಿರ್ಧಾರ ಮಾಡುವುದೇನೂ ಕಷ್ಟವಾಗಲಿಲ್ಲ. ಇನ್ನುಳಿದ ಇಬ್ಬರಲ್ಲಿ – ಡಿಕ್ ಮತ್ತು ಸುಮನ – ಯಾರನ್ನು ತೆಗೆಯಬೇಕೆಂಬುದು ಮೈಕೇಲ್‌ಗೆ ಕಷ್ಟಕರವಾದ ನಿರ್ಧಾರವಾಗಿತ್ತು. +ಡಿಕ್ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದ. ಕಂಪನಿಯ ಬಗ್ಗೆ ಕಾಳಜಿ ವಹಿಸುತ್ತಿದ್ದ. ಪ್ರಾಡಕ್ಟ್‌ನ ಬಗ್ಗೆ ಸಮಗ್ರ ದೃಷ್ಟಿ ಹೊಂದಿದ್ದ. ನಾಯಕತ್ವದ ಲಕ್ಷಣಗಳನ್ನು ತೋರಿಸುತ್ತಿದ್ದ. ತನಗೆ ವಹಿಸಿದ ಕೆಲಸಗಳನ್ನು ಹೇಗೋ ಮಾಡಿ ಪೂರೈಸುತ್ತಿದ್ದ; ಬೇರೆಯವರಿಂದ ಸಹಾಯ ಪಡೆಯಲು ಅಥವಾ ನೀಡಲು ಹಿಂಜರೆಯುತ್ತಿರಲಿಲ್ಲ. +ಸುಮನ ತನ್ನ ಕೆಲಸವನ್ನು ಸಾಮಾನ್ಯವಾಗಿ ಚೆನ್ನಾಗಿ ಮಾದುತ್ತಿದ್ದಳು. ಆದರೆ ಅವಳೊಬ್ಬಳು ಮಾತ್ರ ಆ ಗುಂಪಿನಲ್ಲಿ ‘ದ್ವೀಪ’ದಂತೆ ಇದ್ದಳು; ಬೇರೆಯವರೊಂದಿಗೆ ಮಿಳಿತವಾಗುವ ಕಲೆ ಅವಳಿಗೆ ಸಿದ್ಧಿಸಿರಲಿಲ್ಲ. ತಾನು ರಚಿಸಿದ ಭಾಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರೂ, ಪ್ರಾಡಕ್ಟ್‌ನ ಬಗ್ಗೆ ಸಮಗ್ರ ಜ್ಞಾನ ಇರಲಿಲ್ಲ. ಮೀಟಿಂಗ್‌ನಲ್ಲಿ ಸಹ, ಅವಳ ಕೊಡುಗೆ ತೀರ ಕಡಿಮೆಯಾಗಿತ್ತು. ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದರೂ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿನ್ಯಾಸ ಅಥವಾ ರಚನೆಯ ಬಗ್ಗೆ ಹೊಸ ಹೊಸ ವಿಚಾರಗಳನ್ನು ಕೊಡುವುದು, ಗುಂಪಿನ ಕಾರ್ಯವೈಖರಿಯನ್ನು ಉತ್ತಮ ಪಡಿಸುವಲ್ಲಿ ಸಲಹೆ ಕೊಡುವುದು, ಬೇರೆಯವರು ಕಷ್ಟದಲ್ಲಿದ್ದಾಗ ಸಹಕರಿಸುವುದು – ಇತ್ಯಾದಿ ನೇತ್ರತ್ವವನ್ನು ತೆಗೆದುಕೊಳ್ಳುವುದರಲ್ಲಿ ತೀರಾ ಹಿಂದುಳಿದಿದ್ದಳು. ನಾಯಕತ್ವ ಗುಣದಲ್ಲಿ ಡಿಕ್‌ಗಿಂತ ಹಿಂದಿದ್ದಳು. ಸುಮನಳ ಸಂಬಳ ಸಹ, ಡಿಕ್‌ಗಿಂತ ಜಾಸ್ತಿ ಇತ್ತು. +ಇಷ್ಟೆಲ್ಲಾ ವಿಮರ್ಶೆಗಳಿಂದ ಮನೆ ಸೇರಿದ ಮೈಕೆಲ್‌ಗೆ, ಮಾರನೆ ದಿನ ಬೆಳಗಾಗುವುದರಲ್ಲಿ ಮನಸ್ಸು ನಿಚ್ಚಳವಾಗಿತ್ತು: ಸುಮನಳನ್ನು ಕೆಲಸದಿಂದ ಓಡಿಸಿ, ಡಿಕ್‌ನನ್ನು ತಾಂತ್ರಿಕ ನಾಯಕನನ್ನಾಗಿ ಮಾಡುವುದೆಂದು ನಿರ್ಧರಿಸಿದ್ದ. +***** +ಗ್ರಂಥ ಋಣ: ‘ಹೃದಯ’ – ವಿಶ್ವನಾಥ್ ಹುಲಿಕಲ್, ಮನೋಹರ ಗಂಥ ಮಾಲಾ, ಧಾರವಾಡ, ಆಗಸ್ಟ್ ೧೫, ೨೦೦೩. +(ಚಿತ್ತಾಲರ ೫೦ನೇ ಕಥೆ) ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ […] +ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, […] +ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_90.txt b/Kannada Sahitya/article_90.txt new file mode 100644 index 0000000000000000000000000000000000000000..d0cc8e0b9badcae37f5413353d0ade95f685632e --- /dev/null +++ b/Kannada Sahitya/article_90.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ +ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು +ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ +ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ +ಅಲ್ಲಿಯಿಲ್ಲಿ ಒಂದೆರಡು ಉರಿಯೊ ಹಣತೆ +ದೂರದಲ್ಲೆಲ್ಲೋ ಒಂದು ಲಾಂದ್ರದ ಕಂಭ +ರಾಶಿ ಕುಂಕುಮ, ತಮಟೆ, ಕುಣಿತ, ಧೂಳು +ಗೋಡೆಲಿ ಸಂಧಿನೆನೋ: ಪುಟ್ಟ ದೇಗುಲವೋ, ಗುಡಿಯೋ. +ಸುತ್ತಲೂ ಅರಮನೆ ಕೋಟೆ ಕೋತ್ತಲವೆನೋ +ಒಳಗೆ ದೇವಸ್ಥಾನ ಬೆಳಕು, ಜ್ಯೋತಿ +ಸುಂದರ ಮೂರ್ತಿಗೆ ಭರ್ಜರಿ ಅಲಂಕಾರ +ಹೂವೂ ತುಳಸಿ ಮಾಲೆ, ಗಂಧ ಕರ್ಪೂರದ ಸುಗಂಧ. +ಆಯ್ಯೋ, ಅಯ್ಯೋ, ನೋವು ತಡಿಲಾರದೆ ಜೋರಾಗಿ ಕಿರುಚ್ತಾನೆ; +ಮಾರಮ್ಮಂಗೆ ಖುಶಿ – ಕೆಂಪಗೆ ಹರಿತು ರಕ್ತವೋ ಎನೋ; +ಅವನ ಕೈಲಿ ಇನ್ನೇನು ಅಗೋಲ್ಲ – ಹಿಜಡ +ಬೂಂದಿ ಹಂಚದ್ರು ಕುಣದ್ರು ಕೂಗಿದ್ರು. +ಗಂಟೆ, ಜಾಗಟೆ, ಮಂಗಳಾರತಿ, ಶಟಾರಿ, ತೀರ್ಥ, ಪಣ್ಯಾರ ಒಳಗೆ +ಜುಟ್ಟು ಬಿಟ್ಟ್ಕೋಂಡು ಬೆನ್ನುಮಾಡಿ ಕುತಿರೋ ಮಾರಮ್ಮ ಹೋರಗೆ , +ಸೌಮ್ಯ ಮುಖದ ವರಹಸ್ವಾಮಿ ಮುಷ್ಟಿಲಿ ಅವಳ ಜುಟ್ಟು. +ಇದೆ ಚಿತ್ರ, ಇದೆ ದೃಶ್ಯ ಎಷ್ಟು ವರುಶವಾಯ್ತೋ ಎನೋ, +ಇದೆ ಕನಸು, ಇದೆ ದು:ಸ್ವಪ್ನ ಕಾಡಿ, ಕಾಡಿ, +ಹೆದರಿಸಿ ನನ್ನ ಹರಿದು, ಕಿತ್ತು ತಿನ್ನತ್ತಾಯಿವೆ. +ಪಕ್ಷಿಧಾಮಕ್ಕೆ ವಲಸೆ ಬರೊ ಹಕ್ಕಿಯೋಯಿವು, +ಹಾಳದ ಬಾವನೆಗಳು ಎಲ್ಲಿಂದ ಬರತ್ತಾವೋ ? +ಬತ್ತಿಹೋದ ಕಾವೇರಿಲಿ – ಕಾರಣಗಳ ನುಣುಪಾದ +ಬೆಣೆಚುಕಲ್ಲಿಗೆ ತಿಕ್ಕಿ ತೀಡಿದೆನೋ, ಭಾವನೆಗಳಿಲ್ಲದ +ನೋವು ದಗ್ಗೆಂದು ಹತ್ತಿ ಉರಿದು ರೆಕ್ಕೆಪುಕ್ಕ ಸುಟ್ಟು, +ನೀರಿಲ್ಲದ ನದೀಲಿ ಮುಳುಗಿಸಿ, ಛೇಡಿಸಿ, +ರೇಗಿಸಿ, ರೇಜಿಗೆಯಿಂದ ರಾಡಿಗೊಳಿಸಿ, +ಮತ್ತೆ ಮೇಲೆತ್ತಿ ಇನ್ನು ಉರಿತಿರೂ ಬೆಂಕಿಲಿ ನೊಂದು ಬೆಂದು +ಅಂಗಾಂಗವೆಲ್ಲ ಸುಟ್ಟು, ಜೀವಕಣಗಳು ಸುಡೋ ಗಬ್ಬು ನಾಥ. +ನಾವು ಹೊತ್ತಿಸೋ ಬೆಂಕಿಲಿ ನಾವೆ ಸುಟ್ಟು ಸಾಯಬೇಕೆನು ? +ಯೋಗವಲ್ಲಿ ವೇದವಲ್ಲಿ ಕೋಟೆಮೇಲೆ ಕೂತಿದಾಳೆ +ಎರಡೂ ಕಡೇ ಹೋಗೋಬರೋವರಿಗೆ ತಾನು ಒಂಟಿ +ಅಂತ ಟೆಲಿಪತಿಲೆ ಹೇಳೊಕ್ಕೆ ಪ್ರಯತ್ನ ಮಾಡ್ತಾಳೆ +ನನಗದು ಸರಿಯಾಗಿ ಕೇಳಿಸ್ತೋ ಇಲ್ಲವೋ. +ಎಲ್ಲೆಲ್ಲು ಹಸಿರಾದ ಹುಲ್ಲು, ಮಧ್ಯದಲ್ಲೊಂದು ಪಿಚ್ಚು +ಕೋಟೆ ಆಕಡೆಯಿಕಡೆ ಬಾಲ್ ನಾವೂ ಹೊಡೆದಿದ್ದೂಂಟು +ವರಹನೂ ನೋಡಿದಾನೆ ಮಾರಮ್ಮನೂ. ಇವಳಗೋ +ಅಡೋಕ್ಕ್ಯಿಷ್ಟ; ಬೂಂದಿನು ಬೇಕು ಪಣ್ಯಾರವೂ; +ವಿಪರೀತ ಅಸೆಯೆನೋ ನಿಜ ಇವಳಿಗೆ. +ಆದರೆ ಬೇಗ ಸುಸ್ಸ್ತು ಅಗುತ್ತೆ ಇವಳಿಗೆ. +ನಿಶಬ್ದದ ಚೀರು – ಬೆಚ್ಚಿ ನಡುಗಿ ಕಂಪಿಸಿ ಎದ್ದೆ. +ಅದೆ ದೇಗುಲ, ಅದೆ ಗುಡಿ; ಸಾವಿನ ಚಿತ್ಕಾರ ಕಣ್ಣೆದುರಿಗೆ +ಓಡೋಡಿ ಹೋದೆ, ಕೇರಿ ಕುರಿ – ಕಾಲು ಕಟ್ಟಿದೆ +ಮರಣಭಯದ ಭೀತಿ ಕಣ್ಣಲ್ಲಿ ತುಂಬಿದೆ +ಸಾವಿನ ರೋದನೆ ಗಾಳಿಯಲ್ಲಿ ಕರಗಿದೆ +ಬರಿ ಲಂಗೋಟಿ; ಮೈಯೆಲ್ಲ ಇಜ್ಜಲು +ನಾಕು ಮಂದಿ ಕತ್ತಿ ಮಸಿತಾರೆ +ರೋದನೆನೂ ಕೇಳಿಸೊಲ್ಲ ಇವರಿಗೆ +ಕುರಿ ಕಣ್ಣೂ ಕಾಣಿಸೊಲ್ಲ ಇವರಿಗೆ +ಹೆಂಡತಿ ಮಕ್ಕಳಿಗೆ ಮಾಂಸ ಬೇಡವೇ! +ಕತ್ತು ಕುಯ್ಯತ್ತಾರೆ, ಬಲಿ ಕೊಡ್ತಾರೆ, ಚರ್ಮ ಸುಲಿತ್ತಾರೆ. +ಈವೋತ್ತು ಗೋಕಲಾಷ್ಟ್ಮಿ ಉಪವಾಸ ಧ್ಯಾನ ನನಗೆ +ಮನಸ್ಸು ಕುರಿ ಅತ್ಮದೊಂದಿಗೆ ಬೆರೆತು ನಿಲ್ಲೋಲ್ಲ +ಅಲ್ಲಿಯಿಲ್ಲಿ ಜಾರುತ್ತ, ಪರಮಾತ್ಮನಂದನ ಮಗಳು +ಭಾಗಿರಥಿ ಹತ್ತಿರ ನಿಲ್ಲುತ್ತೆ – ನನ್ನ ಸ್ಪರ್ಶಕ್ಕೆ +ಸ್ಪಂದಿಸಿ ತಾಳ್ಮೆಯಿಂದ ಕೇಳ್ತಾಳವಳು, ಅದಕ್ಕೆ +ಜೀವನದ ಇರುವಿನ ಮಾಯೆ, ನನ್ನ ಶೂನ್ಯದ +ಗುಟ್ಟು, ಎಲ್ಲ ಹೇಳೆ ಬಿಡತ್ತೀನಿ. +ಕೇಳಿ ಸುಮ್ಮನೆ ನಗುತ್ತಾಳೆ ಅಷ್ಟೆ. +***** +೭-೧-೨೦೦೨ +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ಈಗ ಕವಿತೆ ಬರೆಯಲು ನಾನು ಹೊರಟಿಲ್ಲ ; ಹೊರಟೀದ್ದು ಆಫೀಸಿಗೆ: ಉಂಡು ಅವಸರದಿಂದ- ಸಿಕ್ಕರೆ ಬಸ್ಸು ಹಿಡಿದು, ಇಲ್ಲ, ಮೆಲ್ಲಗೆ ನಡೆದು ; ಸಡಿಲಾಗಿರುವ ಕೋಟು ಪ್ಯಾಂಟುಗಳನ್ನು ಇದ್ದು – ದರಲ್ಲಿ ಸರಿಪಡಿಸಿಕೊಂಡು. ಎಷ್ಟೋ […] +ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_91.txt b/Kannada Sahitya/article_91.txt new file mode 100644 index 0000000000000000000000000000000000000000..c9b9344469209560c20f145a32fda06e463b70bb --- /dev/null +++ b/Kannada Sahitya/article_91.txt @@ -0,0 +1,71 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ ಕ್ಷೇಮವೇ ಎಂದು ವಿಚಾರಿಸಿ ಮುಂದೆ ಹೋಗುವ ತಣ್ಣನೆಯ ಗಾಳಿಯ ಪದರುಗಳಿಗೆ ಮೈ ಮುಖವನ್ನು ಒಡ್ಡಿ ಬರಬೇಕೆಂದು ಹೋದರೆ ಅಲ್ಲಿ ಪ್ರಭಾಕರನಿಗೆ ಸ್ನೇಹಿತರು ಸಿಗುತ್ತಾರೆ. ಅವರ ಜೊತೆ ಹಾಕುವ ಹೆಜ್ಜೆಗಳಿಗೆ ಒಂದು ಲಯವಾದರೆ ಮಾತಿನ ಲಯ ಬೇರೊಂದು; ದಿಕ್ಕು ಹಲವು ಕಡೆ. ರಾತ್ರಿ ಕೇಳಿದ ನ್ಯೂಸ್ ವಿಷಯ, ಈಗ ರಾಜಕೀಯ ನರಕ, ಬಿಹಾರದ ಯಾವುದೇ ಊರಿಗೂ ಬೆಂಗಳೂರಿಗೂ ಅಂಥ ವ್ಯತ್ಯಾಸವೇನಿಲ್ಲ ಎನ್ನುವ ಠರಾವು. ಇವೆಲ್ಲವನ್ನು ದಾರಿಯಲ್ಲಿ ಸಿಗುತ್ತಿದ್ದ ಮರಗಳ ರೆಂಬೆಯಲ್ಲಿ ತಂಗಲು ಬಿಟ್ಟು ಮನೆ ಸೇರುತ್ತಿದ್ದ ಪ್ರಭಾಕರ. ಅವನು ಪ್ರೆಸ್ಸಿಗೆ ಹೊರಡಲು ಸಿದ್ಧವಾಗುವುದಕ್ಕೆ ಸಾಮಾನ್ಯವಾಗಿ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಿ ಪೇಪರ್ ಓದುವುದು, ಸ್ನಾನ, ತಿಂಡಿ, ಇಷ್ಟೆಲ್ಲ ಆಗಬೇಕು. ಏಕೋ ಧಾವಂತವೇ ಸ್ಥಾಯಿ ಸ್ಥಿತಿಯಾಗುತ್ತ ಬರುತ್ತಿದೆ. ಆದರೆ ಇದನ್ನು ಬಿಟ್ಟು ಬೇರೆ ಏನೂ ತಾನೆ ಸಾಧ್ಯ? ಬೆಂಗಳೂರು ಎಂದರೆ ಹೀಗೆಯೇ, ಬೇಕು – ಬೇಡದ ಉಯ್ಯಾಲೆ ಎಂದುಕೊಳ್ಳುತ್ತಾನೆ. +ಪೇಪರ್ ಮೇಲೆ ಕಣ್ಣಿಟ್ಟಿದ್ದಾಗ, “ರೀ, ನಿಮ್ಗೆ ಫೋನ್ ಎಂದಳು ಅವನ ಹೆಂಡತಿ ಮಾಲಿನಿ. ಯಾರು ಎನ್ನುವಂತೆ ಸನ್ನೆ ಮಾಡಿದ. ಅವಳು ರಿಸೀವರ್ ಬಾಯಿ ಮುಚ್ಚಿ, “ಶಿವರಾಮನ್ ಎಂದು ಹೇಳಿದ್ದಕ್ಕೆ ಕೈ ಆಡಿಸಿದ. ಆ‌ಅಗ ಅವಳು, “ಅವರು ವಾಕಿಂಗ್ ಹೋಗಿದಾರೆ….. ಬಂದ ಮೇಲೆ ಹೇಳ್ತೀನಿ, ಸರೀನಾ ಎಂದು ಫೋನ್ ಕೆಳಗಿಟ್ಟು ಎರಡನೆ ಸ್ಟ್ಯಾಂಡರ್ಡ್ ಓದುತ್ತಿದ್ದ ಮಗ ವಿಶೇಷನಿಗೆ ತಿಂಡಿ ಡಬ್ಬಿ ರೆಡಿ ಮಾಡಲು ಹೋದಳು. ಶಿವರಾಮನ್ ಮತ್ತು ಅಂಥವರು ಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಕೊಡಲು ಶ್ರಮಿಸಿದರೂ ಸಾಧ್ಯವಾಗದೆ ಪ್ರಭಾಕರ ಹಾಗೆ ಮಾಡುತ್ತಾನೆ. ಆದರೆ ತನಗೆ ದುಡ್ಡು ಕೊಡಬೇಕಾದವರು, ಬಾಕಿ ಉಳಿಸಿರುವವರು, ಬಿಲ್ ಪಾಸ್ ಮಾಡದೆ, ‘ನಮ್ಮದು ಮುಂಚೆ ಕೊಟ್ಟು ಬಿಡಿ ಎಂದು ಹೇಳುವ ಸರ್ಕಾರಿ ಇಲಾಖೆಯವರೊಂದಿಗೆ ಮತ್ತು ಇತ್ತೀಚೆಗೆ ಖಾಸಗಿ ಕಂಪನಿಯವರ ಜೊತೆ ಮಾತನಾಡುವಾಗ ಮಾತಿಗೆ ರಂಗು ರಂಗಿನ ಮಿರುಗುವ ಚಿಕ್ಕಿಗಳನ್ನು ಸೇರಿಸುತ್ತಿದ್ದ. +ಇನ್ನೇನು ರಿಟೈರ್ ಆಗಲಿದ್ದ ಅವನ ತಂದೆ ಶಂಕರಯ್ಯ ತೊಂದರೆಯಿಲ್ಲದೆ ರಿಟೈರ್ ಆಗಲು ಬೇಕಾದ ಕಾಗದ- ಪತ್ರ ಇತ್ಯಾದಿಗಳನ್ನು ಸಿದ್ಧಪಡಿಸುವುದಕ್ಕೆಂದು ರಜೆಯ ಮೇಲಿದ್ದರು. ಜೊತೆಗೆ ಅನಂತರ ಕಾಲ ತಮ್ಮ ತಲೆಯ ಮೇಲೆ ಕಲ್ಲು ಕೂರದೆ ಇರಲೆಂದು ಔದ್ಯೋಗಿಕ ಉತ್ಪಾದನೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಂದು ಕನ್ಸಲ್ಟೆನ್ಸಿಯನ್ನು ಪ್ರಾರಂಭಿಸಬೇಕೆಂದು ಯೋಜಿಸಿದ್ದರು. +ಅವರು, “ಈ ಸಲ ಎಲ್. ಐ. ಸಿ. ದು ಕೊನೆ ಇನ್‌ಸ್ಟಾಲ್ಮೆಂಟ್ ಕಟ್ಟಬೇಕು . ಹೇಗಿದ್ದರೂ ನೀನು ಆ ಕಡೆ ಹೋಗ್ತೀಯಲ್ಲ ಕಟ್ಬಿಡು ಎಂದು ಆದರ ಬಗ್ಗೆ ವಿವರವನ್ನು ಕೊಟ್ಟರು. ಅನಂತರ, “ಅದ್ಸರಿ, ನೀನ್ಯಾಕೆ ಇನ್ನೂ ಇನ್‌ಶೂರೆನ್ಸ್ ಮಾಡ್ಸಿಲ್ಲ? . . ಅಂದ ಹಾಗೆ ನಿನ್ನ ಪ್ರೆಸ್ಸ್, ಸ್ಕೂಟರ್, ಮನೇಲಿರೋ ಟೀವಿ ಎಲ್ಲಾನೂ ಇನ್‌ಶೂರ್ ಮಾಡ್ಬಿಡು ಅಂತ ಹೇಳ್ತಾನೇ ಇದೀನಲ್ಲ ಏನ್ಮಾಡ್ದೆ? ಎಂದರು. +“ಸ್ಕೂಟರ್ ಅಂತೂ ಮಾಡ್ಸಿದ್ದಾಯ್ತು . . ಇಲ್ದಿದ್ರೆ ಆ ಪೋಲೀಸ್ನೋರು ಬಿಡ್ಬೇಕಲ್ಲ. ಉಳಿದದ್ದು ನೋಡೋಣ. +ಪ್ರಭಾಕರನ ಪ್ರಿಂಟಿಂಗ್ ಪ್ರೆಸ್ಸ್ ಇದ್ದದ್ದು ಜಯನಗರದ ಒಂದು ಮುಖ್ಯ ರಸ್ತೆಯ ಪಕ್ಕದ ಕ್ರಾಸ್‌ನಲ್ಲಿ. ಒಂದು ಆಫ್ ಸೆಟ್ ಪ್ರಿಂಟಿಂಗ್ ಪ್ರೆಸ್ಸಿಗೆ ಬೇಕಾದ ಯಂತ್ರೋಪಕರಣಗಳನ್ನು ಶಂಕರಯ್ಯ ಬ್ಯಾಂಕಿನಿಂದ ಲೋನ್ ತೆಗೆದುಕೊಂಡು ಅವನಿಗೆ ಹೊಂದಿಸಿ ಕೊಟ್ಟಿದ್ದರು. ಪ್ರಭಾಕರ ಆ ಸಮಯದಲ್ಲಿ ತಾನು ಇಷ್ಟ ಪಡುವ ವೃತ್ತಿಯನ್ನು ಪ್ರಾರಂಭಿಸುತ್ತಿದ್ದೇನೆಂಬ ಸಂತೋಷವಿತ್ತು. ಆದರೆ ಇದಕ್ಕಾಗಿ ತನ್ನ ತಂದೆಯ ಹಣದ ಸಹಾಯ ಪಡೆಯಬೇಕಾಗಿ ಬಂದದ್ದಕ್ಕೆ ಅವನಿಗೆ ಅಸಮಾಧಾನವಿತ್ತು. ತನ್ನ ಸ್ವಂತ ಗಳಿಕೆಯಿಂದ ತನಗಿದನ್ನು ಮಾಡಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಾನೆ. ಅಪೇಕ್ಷೆ ಮತ್ತು ಗಳಿಕೆ ಅಷ್ಟು ಸುಲಭವಾಗಿ ನೆರವೇರುವ ಸಂಗತಿಗಳಲ್ಲ ಎಂದು ತಿಳಿದು ಸಮಾಧಾನಪಟ್ಟುಕೊಂಡಿದ್ದ. ಹಾಗೆಂದು ಅವನು ಅದಕ್ಕೆ ಬೇಕಾದ ಮೂಲ ಹಣವನ್ನು ಒದಗಿಸಿಕೊಳ್ಳಲು ಒಂದಿಬ್ಬರು ಸ್ನೇಹಿತರನ್ನು ಕೇಳಿದ್ದ. ಆದರೆ ಅವನ ಹಾಗೆ ಅವರೂ ಪಡಪೋಶಿಗಳಾದ್ದರಿಂದ ಅನಿವಾರ್ಯವಾಗಿ ತಂದೆಯ ನೆರವನ್ನು ಒಪ್ಪಿಕೊಂಡಿದ್ದ. +ಪ್ರೆಸ್ಸಿನ ಯಂತ್ರೋಪಕರಣಗಳು ಬಂದ ದಿನವಂತೂ ಅವನಿಗೆ ಕಂಡಿದ್ದೆಲ್ಲವೂ ಕಾಮನ ಹಬ್ಬ. ಆ ದಿನ ಮಗಿಯುವುದೇ ಇಲ್ಲ ಎನ್ನುವ ಹಾಗೆ. ಅರೆ! ಮುಗಿದೇ ಹೋಯಿತೇ ಎನ್ನುವ ಹಾಗೆ. ಬೆಳಕಿಗೆ ಇಷ್ಟೊಂದು ಬೆಳಕಿರುತ್ತದೆ ಎಂದು ತಿಳಿದದ್ದು ಆ ದಿನವೇ. ಏಕೋ ಅವನಿಗೆ ತಟ್ಟನೆ ತುಟಿಯಂಚಿನಲ್ಲಿ ನಗು ಸುಳಿದು ಕತ್ತೆತ್ತಿ ಸೂರ್ಯನ ಕಡೆ ಒಮ್ಮೆ ನೋಡಿದ. ಬೆಳಕು ನುಗ್ಗಿ ಕಣ್ಣು ಮುಚ್ಚಿದ. ಮುಚ್ಚಿದ ರೆಪ್ಪೆಯ ಮೇಲೆ ಬಿದ್ದ ಕಿರಣಗಳು ಕಣ್ಣಿನ ಒಳಗೆ ಹಬ್ಬಿಸಿದ್ದು ನೀಲಿ, ಹಸಿರು, ಹಳದಿ, ಬಿಳಿ ಬಣ್ಣಗಳ ಮೇಳ. ಕ್ಷಣದಲ್ಲಿ ಕಂಡ ಬಣ್ಣದವತಾರಕ್ಕೆ ಅವನ ನಗು ಹಾಗೆಯೇ ಉಳಿದಿತ್ತು. ಅನಂತರ ಒಂದೊಂದನ್ನೂ ಪ್ಯಾಕಿಂಗ್ ತೆಗೆದು ಸ್ವಚ್ಛಮಾಡಿ ಅಣಿ ಮಾಡಿದ. ಆಗ ಅವನಿಗೆ ತಾಯಿ ಲಲಿತಮ್ಮ ರಥ ಸಪ್ತಮಿಯ ದಿನ ಮನೆಯ ಮುಂದಿನ ತುಳಸಿ ಕಟ್ಟೆಯ ಎದುರು ರಂಗೋಲಿಯಿಂದ ಮತ್ತು ಬಣ್ಣಬಣ್ಣದ ಚಾಕ್ ಪೀಸ್‌ನಿಂದ ಸೂರ್ಯನ ರಥ ಬರೆದು, ಅದಕ್ಕೊಂದು ಬಾವುಟ, ಎಳೆಯಲು ಹಗ್ಗ ಇತ್ಯಾದಿಯನ್ನು ಮಾಡುತ್ತಿದ್ದದ್ದನ್ನು ಚಿಕ್ಕವನಾಗಿದ್ದಾಗ ತದೇಕ ಮನಸ್ಸಿನಿಂದ ನೋಡುತ್ತಿದ್ದದ್ದು ಅ ವನಿಗೆ ತಟ್ಟನೆ ನೆನಪಾಯಿತು. ಸೂರ್ಯನ ರಥದ ಕುದುರೆಗಳ ಓಟದ ಗತಿಯ ಹಾಗೆ ತನ್ನನ್ನು ಪ್ರಗತಿಯ ದಾರಿಯಲ್ಲಿ ಮುನ್ನುಗ್ಗಿಸಬೇಕು ಎಂದುಕೊಂಡಿದ್ದ. ಅದಕ್ಕೆಂದೇ ಅನಂತರ ಕನ್ನಡ, ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ನಿಭಾಯಿಸುವಂತೆ ಡೆಸ್ಕ್ ಟಾಪ್ ಪಬ್ಲಿಷಿಂಗ್ ವ್ಯವಸ್ಥೆ ಮಾಡಿಕೊಂಡಿದ್ದ. +ಶಂಕರಯ್ಯ ರಿಟೈರ್ ಆದ ಮೇಲೆ ಕ್ವಾಲಿಟಿ ಕಂಟ್ರೋಲ್ ಕನ್‌ಸಲ್ಟೆನ್ಸಿಗೆ ವಿನಿಯೋಗಿಸಬೇಕೆಂದಿದ್ದರು. ಇನ್ನರ್ಧ ದಿನವನ್ನು ಮನೆಯಲ್ಲಿ ಏನೂ ಮಾತಾಡದೆ ಸುಮ್ಮನಿದ್ದು ಬಿಡುವುದು ಎಂದು. ಹಾಗಿದ್ದು ಅದರ ಎಲ್ಲ ಉಪಯೋಗ ಪಡೆಯಬೇಕೆಂದು ಮನಸ್ಸು. ಅವರಿಗೆ ಯಾವುದೇ ರೀತಿಯ ಒಣ ಹರಟೆ, ಭಾಷಣ, ಅದರಲ್ಲೂ ಓತಪ್ರೋತವಾಗಿ ಮಾತಿನ ಮಳೆಗೆರೆವ ರಾಜಕಾರಣಿಗಳ ಮಾತನ್ನಂತೂ ಕಂಡರಾಗುತ್ತಿರಲಿಲ್ಲ. ಆಗಾಗ ಅವರಿವರು ಅವರನ್ನು ಕೇಳಿಕೊಂಡು ಬಂದು, ಅ‌ಔದ್ಯೋಗಿಕ ಉತ್ಪಾದನೆಯಲ್ಲಿ ಗುಣಮಟ್ಟ ಕುರಿತು ಉಪನ್ಯಾಸ ಕೊಡಲು ಕೇಳುತ್ತಿದ್ದರು. ಅವರು ಎಲ್ಲದಕ್ಕೂ ಬೇಡವೆನ್ನುತ್ತಿದ್ದರು. ಒಂದು ಸಲ ಪರಿಚಯದವರೊಬ್ಬರು ಕೊಂಚ ಸಲಿಗೆ ತೆಗೆದು ಕೊಂಡು, “ರಾಜಕೀಯದಲ್ಲಿ ಗುಣಮಟ್ಟ ಎನ್ನುವುದರ ಬಗ್ಗೆ ಮಾತನಾಡಿ ಎಂದು ಹೇಳಿ ಅವರನ್ನು ನಿಜಕ್ಕೂ ರೊಚ್ಚಿಗೆಬ್ಬಿಸಿದ್ದರು. +ಪ್ರಭಾಕರ ಪ್ರೆಸ್ಸ್ ಆರಂಭಿಸಿದ ದಿನಗಳಲ್ಲಿ ತೀರ ಉಮೇದಿನಲ್ಲಿದ್ದ. ತನಗೆ ತಿಳಿದ ನಾಲ್ಕು ಹುಡುಗರನ್ನು ಮತ್ತು ಡಿ.ಟಿ.ಪಿ. ಕೆಲಸ ಕ್ಕೆಂದು ಪಾರ್ಟ್ ಟೈಂ ಕೆಲಸದವನನ್ನು ಇಟ್ಟುಕೊಂಡಿದ್ದ. ಜೊತೆಗೆ ತಾನೂ ಅದರಲ್ಲಿ ಕೈ ಆಡಿಸುವುದನ್ನು ಕಲಿತಿದ್ದ. ಆದರೆ ಅನೇಕ ಸಲ ಅವರಿಂದ ತೊಂದರೆ ಕಂಡು ಬಂದು ಕೆಲಸ ಕುಂಠಿತವಾಗುತ್ತಿತ್ತು. ಪ್ರೆಸ್‌ಗೆ ಸಂಬಂಧಪಟ್ಟ ಖರ್ಚು ನಿಭಾಯಿಸಲು ಜಾಬ್ ವರ್ಕ್‌ಗಳೇ ಆಧಾರವಾಗಿದ್ದವು. +ಆಗೀಗ ಮಾಡುತ್ತಿದ್ದ ಖಾಸಗಿ ವಲಯದವರ ಸಣ್ಣ ಪುಟ್ಟ ಬುಕ್ ವರ್ಕ್‌ಗಳು ಆರ್ಡರ್ ಕೊಟ್ಟವರಿಗಿಂತ ಅವನಿಗೇ ಹೆಚ್ಚು ಖುಷಿ ಕೊಟ್ಟಿದ್ದವು. ತಾನು ನಿಭಾಯಿಸಬೇಕಾದ್ದನ್ನು ಅದರ ವಸ್ತು ಮತ್ತು ಬರಹಕ್ಕೆ ಅನುಗುಣವಾಗಿ ವಿನ್ಯಾಸ ಮಾಡುವುದನ್ನು ರೂಢಿಸಿಕೊಂಡಿದ್ದ. ಅದರಿಂದ ಅವನಿಗೆ ಮನ್ನಣೆ ದೊರಕಿತ್ತು. ಆದರೆ ಪ್ರಭಾಕರನಿಗೆ ಬ್ಯಾಂಕ್‌ಗೆ ಹಣ ತುಂಬುವ ಕೆಲಸ ಸುಲಭವಾಗಿರಲಿಲ್ಲ. ಅದಕ್ಕಾಗಿ ಅವನು ಕೊಂಚ ಹೆಚ್ಚಿನ ಮೊತ್ತದ ಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಹಾತೊರೆಯುತ್ತಿದ್ದ. ಆದರೆ ಖಾಸಗಿ ವಲಯದ್ದು ಒಂದು ಬಗೆಯಾದರೆ ಅಲ್ಲಿನದು ನೂರಾರು ಬಗೆ. ಅಲ್ಲಿನ ಟೆಂಡರ್, ಆರ್ಡರ್, ಬಿಲ್ಲು, ಚೆಕ್ಕು ಇವುಗಳ ವರ್ತುಲದಲ್ಲಿ ಏಳಿಗೆ ಹೊಂದುವುದು ಕಷ್ಟದ ಕೆಲಸವೆಂದು ಪ್ರಭಾಕರನಿಗೆ ಅರಿವಾಗುತ್ತ ಬಂತು. ಯಾವ ಬರಿಯ ಸೂಕ್ಷ್ಮತೆಗೆ ಅಲ್ಲಿ ಅವಕಾಶವೇ ಇಲ್ಲದ್ದರಿಂದ ಮೈ ಚರ್ಮ ದಪ್ಪ ಮಾಡಿಕೊಂಡು ರೂಢಿ ಬಿದ್ದ ಆ ಜಾಡು ಹಿಡಿಯಲು ಪ್ರಯತ್ನಿಸಿದರೂ ಅನಿರೀಕ್ಷಿತ ತೊಡಕುಗಳು ಅನೇಕ ಮತ್ತು ಒಟ್ಟಾರೆ ಪ್ರಗತಿ ಅಷ್ಟಕ್ಕಷ್ಟೆ ಎಂದು ತಿಳಿಯಿತು. ಆದರೆ ತನಗೆ ಗೊತ್ತಿರುವ ಪ್ರಿಂಟಿಂಗ್ ದಾರಿ ಬಿಟ್ಟರೆ ಬೇರೆ ಗತಿಯಿಲ್ಲ ಎಂದು ತೀರ್ಮನಿಸಿದ್ದ. ಪ್ರೆಸ್‌ನಲ್ಲಿ ಕೆಲಸದ ವೇಗ ಹೆಚ್ಚಿಸುವ ಡಿ.ಟಿ,[ಪಿ. ಕೆಲಸ ಮಾಡುವ ವೆಂಕು ಕಂಡರೆ ಅವನಿಗೆ ತುಂಬ ಅಕ್ಕರೆ. ಜೊತೆಗೆ ಅವನು ಕೆಲಸ ಮುಗಿದಾದ ಮೇಲೆ ಅವುಗಳನ್ನು ತಲುಪಿಸುವ ಕೆಲಸವನ್ನೂ ಮಾಡುತ್ತಿದ್ದ. +ಆ ದಿನ ಸರ್ಕಾರಿ ಇಲಾಖೆಯೊಂದರಲ್ಲಿ ಬಿಲ್ ಪಾಸ್ ಮಾಡಿಸಿಕೊಳ್ಳಲು ಪ್ರಭಾಕರ ಹೋಗಿದ್ದ. ಬರಿಗೈಲಿ ಹೋದರೆ ಅ ಅವನು ತನ್ನನ್ನು ಮೂಸಿ ಕೂಡ ನೋಡುವುದಿಲ್ಲವಲ್ಲ ಎಂದು ಪರಿತಪಿಸುತ್ತ ಅವನ ರೂಮಿನ ಹೊರಗೆ ಠಳಾಯಿಸುತ್ತಿದ್ದಾಗ ಉದ್ದನೆ ಕಾರಿಡಾರಿನಲ್ಲಿ ಸಹಜ ಬೆಳಕಿನ ಸೋಂಕಿಲ್ಲದೆ ಎಲೆಕ್ಟ್ರಿಕ್ ಬಲ್ಬಿನ ಮಂದ ಬೆಳಕಿನದೇ ಸಾಮ್ರಾಜ್ಯ. ಅಷ್ಟರಲ್ಲಿ ಆ ರೂಮಿನಿಂದ ಹೊರಗೆ ಬಂದವರೊಬ್ಬರು ಪ್ರಭಾಕರನನ್ನು ದಾಟಿ ಹೊಗುವ ಮುಂಚೆ ಹೆಜ್ಜೆ ಹಿಂದೆ ಇಟ್ಟು ನೆಟ್ಟ ದೃಷ್ಟಿಯಿಂದ ನೋಡಿದರು. ಇಬ್ಬರಿಗೂ ಪರಸ್ಪರ ಕಣ್ಣು, ಮುಖ, ಚಹರೆ ಮಟ್ತು ಒಟ್ಟಾರೆ ಆಕಾರದ ಅರಿವಾಗಿರಬೇಕು. +“ನೀವು . . ನೀವು ಪ್ರಭಾಕರ್ ಅಲ್ವಾ? ಎಂದು ತುಂಬುಗೂದಲಿನ ದುಂಡು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟಿನ ಐದೂ ಮುಕ್ಕಾಲು ಅಡಿ ಎತ್ತರದ ಪ್ರಭಾಕರನ ಕಡೆ ನೋಡಿ ಕೇಳಿದರು. +“ಹೌದು . ನೀವು . ನಾಗಣ್ಣ? +ಇಬ್ಬರ ಕಣ್ಣಿನ ಹೊಳಪುಗಳು ಮತ್ತೆ ಕೈಕುಲುಕಿದವು. ಅದರ ಪ್ರತಿಕ್ರಿಯೆ ಹಬ್ಬಿ ಇಬ್ಬರಲ್ಲೂ ನಸುನಗು ಮಿನುಗಿತು. ಒಂದು ಕ್ಷಣ ಅಲ್ಲಿರುವುದು ತಾವಿಬ್ಬರೇ ಉಳಿದವರು ಯಾರೂ ಇಲ್ಲ ಎನ್ನಿಸಿದ್ದರ ಜೊತೆ ಮೇಲಕ್ಕೆಲ್ಲೋ ಜಿಗಿದ ಮನಸ್ಸು. +ಸ್ವಲ್ಪ ಹೊತ್ತಿನಲ್ಲಿ ಅ ಅವರಿಬ್ಬರೂ ಹೊಟೆಲ್‌ನಲ್ಲಿ ಕಾಫಿ ಗುಟುಕರಿಸುತ್ತ ಕುಳಿತಿದ್ದರು. ಪ್ರಭಾಕರ ತನ್ನ ಬಗ್ಗೆ ಹೇಳಿದ್ದನ್ನು ನಾಗಣ್ಣ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ. +“ಈಗ ನೀನು ಬಂದಿರೋ ಕೆಲಸ ಆಯ್ತು ಅಂತ ತಿಳ್ಕೊ. +“ಅಂದರೆ? +“ನಾನೀಗ ಮಿನಿಸ್ಟ್ರು ಜವರಪ್ಪನವರ ಹತ್ತಿರ ಇದೀನಿ ಎಂದ ನಾಗಣ್ಣ +“ಅವರ ಹತ್ರಾನಾ?! +ನಾಗಣ್ಣ ಸಂಕ್ಷಿಪ್ತವಾಗಿ ತನ್ನನ್ನು ಕುರಿತು ತಿಳಿಸಿದ. ಅನಂತರ, “ನಮ್ಮ ಸಾಹೇಬ್ರು ಅವರಿಗೆ ಬೇಕಾದೋರದ್ದು, ಅದು-ಇದು ಕೆಲ್ಸಾನೆಲ್ಲ ನಂಗೆ ವಹಿಸಿಕೊಟ್ಟು ಬಿಡ್ತಾರೆ. ಅವರ ಪರವಾಗಿ ಇಂಥ ಆಫೀಸರ್‌ಗಳಿಗೆ ಹೇಳಿ ಬಿಡ್ತೀನಿ. ಮುಖ್ಯವಾದದ್ದು ಇದ್ದಾಗ ಖುದ್ದಾಗಿ ಮೀಟ್ ಮಾಡ್ತೀನಿ ಎಂದ ನಾಗಣ್ಣ ಮುಗಿಸಿದ ಕಾಫಿ ಕಪ್ಪನ್ನು ಟೇಬಲ್ಲಿನ ಮೇಲಿಟ್ಟ. +ಒಂದು ವಿಚಿತ್ರ ವ್ಯಾವಹಾರಿಕ ಜಗತ್ತು ಹಠಾತ್ ಎದುರಾಗಿ ಮೂರು ಅಡಿ ಟೇಬಲ್ಲಿನ ಆಚೆ ಭಾಗದಲ್ಲಿ ಕುಳಿತ ನಾಗಣ್ಣ ತನಗೆ ತಿಳಿದಿದ್ದ ವ್ಯಕ್ತಿಯೇ ಎಂದುಕೊಂಡ ಪ್ರಭಾಕರ. ನೋಡಿದರೆ ಅದೇ ಚೌಕು ಎಣ್ಣೆಗೆಂಪು ಮುಖ, ಸಣ್ಣ ಹಣೆ, ಕೊಂಚ ಚಪ್ಪಟೆ ಮೂಗು, ಆಗಿನಕ್ಕಿಂತ ತುಂಬಿಕೊಂಡ ಗಲ್ಲ, ಎಲ್ಲಾ ಅದೇ. ಆದರೆ ಕೊಂಚ ಬದಲಾಗಿರುವ ಮಾತಿನ ಲಯ, ಕತ್ತು ಓರೆ ಮಾಡುವ ರೀತಿ ಇವು ಇತ್ತೀಚೆಗೆ ರೂಢಿಯಾಗಿರುವ ಅಭ್ಯಾಸಗಳಿರಬೇಕು ಎನ್ನಿಸಿತು. ಮಾತಿನೆಳೆಗಾಗಿ ತಡಕಾಡುತ್ತಿರುವ ಪ್ರಭಾಕರನನ್ನು ನೋಡಿ ನಾಗಣ್ಣ, “ಏನಮ್ಮ, ಎಷ್ಟೊಂದು ಇಳಿದು ಹೋಗಿದೀಯ. ಯಾವುದಾದ್ರು ಸರಿಯಾದ ತಾಕತ್‌ಕಿ ದವಾ ತೊಗೋ. ನಿಂಗೆ ಗೊತ್ತಿಲ್ಲದಿದ್ದರೆ ಹೇಳು ನಾನು ಅರೇಂಜ್ ಮಾಡ್ತೀನಿ ಎಂದು ತೀರ ಸಲಿಗೆಯ ಮಟ್ಟಕ್ಕೆ ಇಳಿದದ್ದು ಪ್ರಭಾಕರನಲ್ಲಿ ಥಟ್ಟನೆ ಉಂಟಾದ ತೆಳು ಲಹರಿ ಮುಖದಲ್ಲಿ ನಸುನಗು ಮೂಡಿಸಿತು. +“ದಿನ ತಳ್ಳಕ್ಕೆ ಬೇಕಾಗಿರೋ ಸಾಧಾರಣ ಸವಲತ್ತುಗಳನ್ನ ಹೊದಿಸಿಕೊಳ್ಳೋದರಲ್ಲೆ ಅಲ್ಲಾ ಉತ್ಸಾಹ ಉಡುಗಿ ಹೊಗತ್ತಲ್ಲೋ. ಇನ್ನ ಬೇರೇದರ ಮಾತೇ ಇಲ್ಲ.. +“ಅದಕ್ಕೇನು ಮಾಡ್ಬೇಕು ತಡಿ ನೋಡೋಣಂತೆ. ನಿನ್ನ ಆಳ ಎಷ್ಟು ಅಂತ ಗೊತ್ತು ನಂಗೆ. ಈಗ ಮತ್ತೆ ನಾವಿಬ್ರೂ ಸೇರಿದ್ದೀವಲ್ಲ ಬಿಡು. +ಪ್ರಭಾಕರ ಮತ್ತು ನಾಗಣ್ಣ ಚಿತ್ರದುರ್ಗದ ಕಾಲೇಜಿನಲ್ಲಿ ಸಹಪಾಠಿಗಳು. ರಂಗಯ್ಯನ ಬಾಗಿಲು ಬಳಿ ಪ್ರಭಾಕರನ ಮನೆಯಾದರೆ ಏಕನಾಥೇಶ್ವರಿ ದೇವಸ್ಥಾನದ ಹತ್ತಿರ ನಾಗಣ್ಣನ ಮನೆ. ಕೊಂಚ ಸಂಕೋಚದ ಸ್ವಭಾವದ ಪ್ರಭಾಕರ ಮತ್ತು ಸ್ವಲ್ಪ ಹೆಚ್ಚೆಂದೇ ಹೇಳಬಹುದಾದ ಎದೆಗಾರಿಕೆಯ ನಾಗಣ್ಣ ಕಂಡವರು ಸೋಜಿಗಪಡುವಷ್ಟು ಹತ್ತಿರವಾದದ್ದು ವಿಶೇಷವೇ. ಒಮ್ಮೆ ಪ್ರಭಾಕರನಿಗೆ ಅಕಸ್ಮಾತಾಗಿ ಸಿಕ್ಕ ತ.ರಾ.ಸು. ಅವರ ‘ಹಂಸ ಗೀತೆ ಅವನನ್ನು ಅಳತೆ ಮೀರಿ‌ಆವರಿಸಿತ್ತು. ನವಾಬನೆದುರು ಹಾಡಬಾರದೆಂದು ನಾಲಗೆಯನ್ನೇ ಕತ್ತರಿಸಿಕೊಂಡ ಭೈರವಿ ವೆಂಕಟಸುಬ್ಬಯ್ಯನವರ ಕಥೆ ಹೇಳಿ ತ.ರಾ.ಸು.ಗೆ ಆ ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದ ಹುಲ್ಲೂರು ಶ್ರೀನಿವಾಸ ಜೋಯಿಸರ ಮನಸ್ಸಿನ ಗುಣಮಟ್ಟವನ್ನು ಊಹಿಸುವುದು ಹೇಗೆ? ರಂಗಯ್ಯನ ಬಾಗಿಲು ಕಟ್ಟೆಯ ಮೇಲೆ ಕುಳಿತು ಸರಿರಾತ್ರಿಯಲ್ಲಿ ಹೀಗೆ ಹೇಳುವಾಗ ಎದುರಿಗೆ ಬೆಕ್ಕಸ ಬೆರಗಾಗಿ ಕುಳಿತ ನಾಗಣ್ಣನ ಮುಖವೂ ಅರೆಬರೆದ ಚಿತ್ರದ ಹಾಗಿತ್ತು. “ಅರ್ಧ ರಾಜ್ಯ ಕೊಡ್ತೀನಿ ಅಂದ್ರೂ ವೆಂಟಟಸುಬ್ಬಯ್ಯನೋರು ಹಾಡ್ತಿರ್ಲಿಲ್ಲ ಅಲ್ವಾ ನಾಗಣ್ಣ . . ಸಂಪತ್ತಿಗೆ ಬೆಲೆ ಇದೆ. . ನಿಷ್ಠೆಗೆ ಬೆಲೆ ಕಟ್ಟಲು ಸಾಧ್ಯವೇ ಹೇಳು? ಎಂದಿದ್ದ. +ಕಾಲೇಜಿನ ಸ್ಟೂಡೆಂಟ್ಸ್ ಅಸೋಷಿಯೇಷನ್ನಿನ ಪ್ರೆಸಿಡೆಂಟಾಗಿ ಯಥಾಪ್ರಕಾರ ಕೊನೆಯ ವರ್ಷವೂ ನಾಗಣ್ಣ ಚುನಾಯಿತನಾದದ್ದು ಅವನ ಸಂಘಟನೆಯ ಪ್ರತೀಕವಾಗಿತ್ತು. ಮೇಕಪ್ ಮಾಡಿದಂತೆ ನಾಗಣ್ಣನ ಬಾಯಿಂದ ಹೊರಬರುತ್ತಿದ್ದ ಮಾತುಗಳು ಕೇಳುವರ ಮೆಚ್ಚುಗೆಯನ್ನು ಪಡೆಯುತ್ತಿದ್ದವು. ಆದರೆ ಪಾಪ್ಲೆಟ್ಸ್, ಪೋಸ್ಟರ್ಸ್, ಬ್ಯಾನರ್ಸ್, ಸ್ಲೋಗನ್ಸ್ ಇತ್ಯಾದಿ ಎಲ್ಲದಕ್ಕೂ ಪ್ರಭಾಕರನೇ ಆಖೈರು. +“ಪ್ರಭೂ, ಡೀಟೇಲ್ಸ್ ಬರ್ದು ಕೊಡು . ಅದೇ ಈಗ ಬಂದಿದ್ದೆಯಲ್ಲ ಅದು ಎಂದು ನಾಗಣ್ಣ ಹೇಳುತ್ತಿದ್ದಂತೆ ಅವನ ಜೇಬಿನಲ್ಲಿದ್ದ ಸೆಲ್ ಫೋನ್ ಶಬ್ದ ಮಾಡಿತು. ಅವನು ವಿಧೇಯರಿತಿಯಲ್ಲಿ ಮಾತಾಡುತ್ತಿದ್ದಂತೆ ಪ್ರಭಾಕರ ಚೀಟಿಯಲ್ಲಿ ವಿವರ ಬರೆದ. +“ಅಲ್ಲ ನಾಗಣ್ಣ ಒಂದು ಕಾಲದಲ್ಲಿ ನರಸಿಂಹಮೂರ್ತಿ ಮತ್ತು ಅವರ ಪಾರ್ಟೀನ ಮೆಚ್ಚಿಕೊಂಡಿದ್ದೆ. . ಆದ್ರೆ ಈಗ . . ಎಂದು ಶೋಧಿಸುವನಂತೆ ನೋಡಿದ ಪ್ರಭಾಕರ. +“ಹೌದು. ನೀನು ಹೇಳಿದ್ದು ನಿಜ. ಒಂದಷ್ಟು ವರ್ಷ ಅವರನ್ನು ಬೆಂಬಲಿಸಿದ್ದೆ . . ಆದ್ರೇನು ಮಾಡೋದು? ಬೇರೆ ದಾರೀನೆ ಇಲ್ದೆ ನಾನು ಹೀಗೆ ಮಾಡ್ಬೇಕಾಯ್ತು. ಅವರೊಬ್ಬರನ್ನ ಬಿಟ್ಟರೆ ಈಗ ಎಲ್ಲದಕ್ಕೂ ಅಡ್ಡ ದಾರೀನೆ. ಪಾರ್ಟಿ ವಿಷಯಕ್ಕೆ ಬಂದರೆ ಇದಕ್ಕಿಂತ ಅದು ಒಳ್ಳೇದು ಅಂತ ಈಗ ಹೇಳಕ್ಕಾಗತ್ತ ಹೇಳು ಒಂದೇ ಮಾತಿನಲ್ಲಿ ಹೇಳೋದಾದ್ರೆ ಕಾಂಚಾಣಂ ಕಾರ್ಯ ಸಿದ್ಧಿ. . ಇದೆಲ್ಲ ಸರಿಯಲ್ಲ ಅಂತೀಯ? ಹೇಳು ನಿನ್ನ ಅನುಭವ ಏನನ್ನುತ್ತೆ? +“ಅದ್ಸರಿ ಈಗ ಹೇಗಿದೀಯ? +“ನಿಜ ಹೇಳಬೇಕೂಂದರೆ ಆಗ ಒಂದು ಕಾರಣಕ್ಕೆ ನೆಮ್ಮದಿ ಇರ್ಲಿಲ್ಲ. ಈಗ ಮತ್ತೊಂದು ಕಾರಣಕ್ಕೆ ನೆಮ್ಮದಿ ಇಲ್ಲ. +ಮತ್ತೆ ಸೆಲ್ ಫೋನ್ ಶಬ್ದ ಮಾಡಿದಾಗ ನಾಗಣ್ಣ, “ಎಲೆಕ್ಷನ್ ಟೈಂ ಅಲ್ವಾ ಎಂದು ಎದ್ದ. +ನಾಗಣ್ಣನ ಅಪೇಕ್ಷೆಯಂತೆ ಪ್ರಭಾಕರ ಜವರಪ್ಪನವರನ್ನು ಭೇಟಯಾಗಲು ಅವರ ಮನೆಗೆ ಹೋದ. ಮನೆಯಿಂದ ಅಷ್ಟು ದೂರದ ತನಕ ವಿವಿಧ ಅಪೇಕ್ಷೆಗಳನ್ನು ತುಂಬಿಕೊಂಡ ಕಾರು ಮತ್ತು ಇತರ ವಾಹನಗಳು. ಅಲ್ಲಿ ಕಂಪೌಂಡಿನಲ್ಲಿ ಮತ್ತು ಎಲ್ಲಂದರಲ್ಲಿ ನಿಂತವರಲ್ಲಿ, ಕುಳಿತವರಲ್ಲಿ ಹರಿಯುತ್ತಿದ್ದದ್ದು ತವಕ ತುಂಬಿದ ರಕ್ತ. ಪ್ರಭಾಕರನನ್ನು ಅರೆಕ್ಷಣ ನೋಡಿದ ಜವರಪ್ಪ, “ನಾಗಣ್ಣ ನಂಗೆ ಎಲ್ಲಾ ವಿಷಯಾನೂ ಹೇಳಿದಾರೆ. ನೀವು ಅವರಿಗೆ ಸ್ವಲ್ಪ ಹೆಲ್ಪ್ ಮಾಡಿ . ನಾನು ನಿಮ್ಮನ್ನ ಟ್ರೈ ಮಾಡಿ ನೋಡ್ತೀನಿ . ಉಳಿದದ್ದನ್ನ ನಾಗಣ್ಣ ತಿಳಿಸ್ತಾರೆ . ನೀವು ಯಾವಾಗ ಬೇಕಾದ್ರೂ ನನ್ನನ್ನ ಮೀಟ್ ಮಾಡಬಹುದು ಎಂದರು. +ಪ್ರಭಾಕರ ನಾಗಣ್ಣನ ನಿರೀಕ್ಷೆಗಳನ್ನು ಗ್ರಹಿಸುವುದಕ್ಕೆ ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ಒಡನಾಡಿಗಳಗಿದ್ದ ಅವರ ಮಧ್ಯದ ಹದಿನೆಂಟು ವರ್ಷಗಳ ಅಂತರ ದಿಢೀರನೆ ಮಾಯವಾಯಿತು. ಹೆಚ್ಚು ಕಡಿಮೆ ಪ್ರತಿಯೊಂದಕ್ಕೂ ಅಂದಿನದೇ ತೀವ್ರತೆ ಮತ್ತು ತನ್ಮಯತೆ. ಈ ಎಲ್ಲ ಬಗೆಯ ಒತ್ತಡಗಳಿಗೆ ಎಲೆಕ್ಷನ್ ಹತ್ತಿರವಿದ್ದದ್ದೇ ಕಾರಣ. +ಜವರಪ್ಪ ಪ್ರಭಾಕರನಿಗೆ ಪಾರ್ಟಿ ಆಫೀಸಿನಲ್ಲೂ ಒಂದಿಷ್ಟು ಕೆಲಸ ಕೊಟ್ಟಿದ್ದರು. ಅಲ್ಲಿ ಜನರ ಓಡಾಟ, ಕಾರ್ಯಕರ್ತರ ಗಡಿಬಿಡಿ, ಬೇರೆ ಬೇರೆ ಮಟ್ಟದ ನಾಯಕರ ವರ್ತನೆ, ಕರ್ನಾಟಕದ ಹಲವಾರು ಪ್ರದೇಶಗಳು ಬಿಂಬಿಸುವ ಭಾಷೆ ಇವೆಲ್ಲ ಹೊಸತು. ಏಕೋ ಇವರೆಲ್ಲ ಕಾದ ಕಾವಲಿಯ ಮೇಲಿದ್ದಾರೆ ಎನ್ನಿಸುತ್ತಿತ್ತು. ಪ್ರಭಾಕರ ಅಕ್ಷರಗಳ ಗಾತ್ರ, ಆಕಾರ, ಬಣ್ಣ ಇವುಗಳನ್ನು ಆಮೂಲಾಗ್ರ ಬದಲಾಯಿಸಿ ವಿನ್ಯಾಸಗೊಳಿಸಿದ ಪಾಂಪ್ಲೆಟ್ಸ್, ಪೋಸ್ಟರ್ಸ್‌ಗಳಿಂದ ನಾಗಣ್ಣ ಕುಣಿದೆದ್ದರೆ ಸ್ವತಃ ಜವರಪ್ಪ ಪ್ರಭಾಕರನನ್ನು ಕರೆಸಿ, “ನಿಮ್ಗೊಳ್ಳೆ ಫ್ಯೂಚರ್ ಇದೆ ಎಂದು ಕಣ್ಣು ಹೊಳೆಸಿದ್ದರು. ಇದರಿಂದ ಉತ್ಸಾಹಗೊಂಡ ಅವನು ಎರಡು ದಿನಗಳಾದ ಮೇಲೆ ಅವರನ್ನು ಕಂಡು, “ಹೊಸ ರೀತಿಯ ಸ್ಲೋಗನ್ಸ್ ಕೇಳ್ತಿದ್ರಲ್ಲ, ನೋಡಿ ಎಂದು ತಾನು ಬರೆದ ಅರ್ಧ ಡಜ಼ನ್ ಸ್ಲೋಗನ್ನುಗಳನ್ನು ತೋರಿಸಿದ. ಅವರು ಒಂದೊಂದನ್ನೂ ಎರೆಡೆರಡು ಸಲ ಓದಿ ಒಂದಕ್ಕೆ ಗುರುತು ಹಾಕಿ, “ಇದು ಬಹಳ ಇಷ್ಟವಾಯ್ತು. ಹೈಕಮಾಂಡಿಗೆ ಕಳಿಸ್ತೀನಿ ಎಂದು ಅವನ ಭುಜ ತಟ್ಟಿದರು. +ಜವರಪ್ಪ ಇದ್ದದ್ದು ಒಂದು ಬಗೆಯ ಸಂದಿಗ್ಧದಲ್ಲಿ. ಇಟ್ಟ ಹೆಜ್ಜಯ ಜೊತೆ ಇನ್ನೊಂದು ಹೆಜ್ಜೆ ಸೇರಿಸದಿದ್ದರೆ ಹಳ್ಳಕ್ಕೆ ಬೀಳಬೇಕಾಗುತ್ತದೆ. ಅಪರೂಪಕ್ಕೆಲ್ಲೋ ಏಕಾಂತದಲ್ಲಿ ಕುಳಿತಾಗ ತಾವು ಬಂದ ದಾರಿಯನ್ನು ಪುನರಾವಲೋಕನ ಮಾಡುಕೊಳ್ಳುತ್ತ ತಮಗೆ ತಾವೇ, “ನಮ್ಮ ಜನ ಕೊಟ್ಟ ಮುಖ ನನ್ನದು. ಅದು ಅವರ ಕನ್ನಡಿ. ನೋಡಿಕೊಳ್ಳಲಿ ಅವರು. ಹೇಸಿಗೆ ಪಟ್ಟುಕೊಳ್ಳುವುದಕ್ಕೆ ನಾನು ಸ್ವತಂತ್ರನಲ್ಲ ಎಂದು ಹೇಳಿಕೊಳ್ಳುತ್ತಾರೆ. +ನಾಗಣ್ಣ ಪ್ರಭಾಕರನಿಗೆ ಅವನು ಕಲ್ಪಿಸಿಕೊಳ್ಳಲೂ ಸಾಧ್ಯವಿರದಷ್ಟು ಲಾಭವಿರುವ ಕೆಲಸಗಳನ್ನು ಹೊಂದಿಸಿಕೊಟ್ಟ. ಆವುಗಳಲ್ಲಿ ಕೆಲವು ನೇರ ದಾರಿಯವು; ಕೆಲವು ಅಡ್ಡ ದಾರಿಯವು. ಇದಕ್ಕೆ ಪ್ರತಿಯಾಗಿ ಅವರಿಗೆ ನಾಗಣ್ಣನಿಂದ ಬೇರೆ ರೀತಿಯ ಅನುಕೂಲಗಳಿರುತ್ತವೆಂದು ಪ್ರಭಾಕರನಿಗೆ ತಿಳಿದಿತ್ತು. ಒಂದೊಂದು ಕೆಲಸಕ್ಕೂ ಬೇಕಾದ ಅಗತ್ಯಗಳನ್ನು ಯೋಜಿಸುತ್ತಿದ್ದಂತೆ ಮತ್ತಷ್ಟು ಮಗುದಷ್ಟು ಹೆಚ್ಚಾಗುತ್ತಿತ್ತು. ಅವನಿಗೆ ಅಲ್ಲಿ ಇಲ್ಲಿ ಎಲ್ಲ ಕಡೆ ಕಿಟಕಿ, ಬಾಗಿಲು ದಿಢೀರನೆ ಸೃಷ್ಟಿಗೊಂಡು ಒಳನುಗ್ಗಿದ ಹಿತವಾದ ಸೂರ್ಯನ ಬೆಳಕು ಹಬ್ಬಿದಂತಾಯಿತು. ಅದರ ಹಿಂದೆಯೇ ಸೇರಿಕೊಂಡ ಕೆಲಸದ ಒತ್ತಡದ ಗಾಳಿ. ಇವೆಲ್ಲದರಿಂದ ಅವನಲ್ಲಿ ಉಂಟಾದ ತಕ್ಷಣದ ಪರಿಣಾಮವೆಂದರೆ ಅವನ ದಿನಚರಿಯಲ್ಲಿ ಏರುಪೇರು. ಸಮಯದ ಪರಿವೆ ಇಲ್ಲದೆ ಒದಗಿ ಬಂದ ಅವಕಾಶಕ್ಕೆ ಒಪ್ಪಿಸಿಕೊಂಡಿದ್ದ. ಮನೆಗೆ ಬಂದು ಹೋಗುವ ವೇಳೆಗಂತೂ ಒಂದು ಗೊತ್ತಾದ ರೀತಿಯೇ ಇರಲಿಲ್ಲ. ಲಲಿತಮ್ಮ ಅನೇಕ ಸಲ, “ಹೊತ್ತು ಹೊತ್ತಿಗೆ ಊಟ ಇಲ್ದೆ, ನಿದ್ದೆ ಇಲ್ದೆ ನೆಮ್ಮದಿ ಕಳೆದುಕೊಳ್ಳುವಂಥ ಇದೆಂಥ ದುಡಿಮೆ ಬಿಡು ಎಂದರೆ ಪ್ರಭಾಕರ, “ಮೊದಲು ದುಡಿಮೆ; ಗಳಿಕೆ. ಅನಂತರ ನೆಮ್ಮದಿ ಎನ್ನುತ್ತಿದ್ದ. +ಅವನಿಗೆ ತನ್ನ ಸದ್ಯದ ಕಲ್ಪನೆಯ ಎಲ್ಲೆಗಳನ್ನು ಮಿರುತ್ತಿರುವಂತೆ ಭಾಸವಾಗಿ ರಸ್ತೆಗಳು ಹಿಗ್ಗಿದ ಹಾಗೆ, ತೆಳುಗಾಳಿಯಲ್ಲಿ ತೇಲುತ್ತಿರುವಂತೆ ತೋರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವನಲ್ಲಿ ಮಡುಗಟ್ಟಿದ್ದ ಕೊರಗು. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ ಯಾರೂ ತನ್ನ ಅಪೇಕ್ಷೆಯ ಮಟ್ಟಕ್ಕೆ ಸಹಕಾರ ಕೊಡುತ್ತಿಲ್ಲ, ಎಂದು. ಈಗ ವಿಶೇಷನನ್ನು ಸ್ಕೂಲಿಗೆ ಬಿಡುವ ಕೆಲಸವನ್ನು ಶಂಕರಯ್ಯ ಮಾಡಬೇಕಾಗಿತ್ತು. ಹಿಂದಿನ ಕೆಲವು ಪ್ರಸಂಗಗಳಂತೆ ಅಂದು ಪ್ರಭಾಕರ ಅವನು ಹೇಳಿದ ಸಮಯಕ್ಕೆ ಬಾರದೆ ಮೊದಲೆ ಗೊತ್ತುಪಡಿಸಿಕೊಂಡಂತೆ ವಿಶೇಷನನ್ನು ಎಕ್ಸಿಬಿಷನ್ನಿಗೆ ಕರೆದುಕೊಂಡು ಹೋಗಲಿಲ್ಲ. ಅದಕ್ಕಾಗಿ ಅವನ ರಂಪಾಟವಂತೂ ಇನ್ನೇನು ಗತಿ ಎಂದು ಎಲ್ಲರೂ ಆತಂಕಗೊಳ್ಳುವ ಮಟ್ಟಕ್ಕೆ ತಲುಪಿತ್ತು. ಅವನನ್ನು ಸಂತೈಸುವಷ್ಟರಲ್ಲಿ ಸೋತು ಹೋಗಿದ್ದ ಮಾಲಿನಿ ಮಾರನೆಯ ದಿನವೆಲ್ಲ ಪ್ರಭಾಕರನ ಜೊತೆ ಮಾತಾಡಿರಲಿಲ್ಲ. ಆದರೆ ಪ್ರಭಾಕರ ಆ ಪ್ರಕರಣವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. +ಆ ದಿನ ಪ್ರಭಾಕರ ಮಾಡಿದ ಕೆಲಸವನ್ನು ಮೆಚ್ಚಿಕೊಂಡು ಕಂಪನಿಯವರೊಬ್ಬರು ಕೊಂಚ ಅಂದದ ಬೊಂಬೆಯೊಂದನ್ನು ಕೊಟ್ಟರು. ಅದು ವಿಶೇಷನಿಗೆ ತುಂಬ ಇಷ್ಟವಾಗುತ್ತದೆ ಎಂದುಕೊಂಡ ಪ್ರಭಾಕರ. ಅಂದು ಅವನು ಮನೆ ಸೇರಿದಾಗ ಸರಿರಾತ್ರಿಯಾದದ್ದರಿಂದ ಬೆಳಿಗ್ಗೆ ಅವನಿಗೆ ಕೊಡೋಣವೆಂದುಕೊಂಡ. ಇತ್ತೀಚೆಗೆ ಅಭ್ಯಾಸವಾಗಿ ಹೋದಂತೆ ಊಟ ಮುಗಿಸಿ ಮಾಲಿನಿ ಮಲಗಿ ಬಿಟ್ಟಳು. ಅದೇಕೋ ಅವಳ ಒಟ್ಟಾರೆ ಭಂಗಿ ಅವನಿಗೆ ತುಂಬ ಮೋಹಕವೆನಿಸಿತು. ತನ್ನ ಹೆಂಡತಿಯ ಚೆಲುವನ್ನು ಮೊದಲ ಬಾರಿ ಕಂಡವನಂತೆ ಇವಳೇ ಮಾಲಿನಿ ತಾನೇ ಎಂದುಕೊಳ್ಳುತ್ತಿದ್ದಂತೆ ಅವನಲ್ಲಿ ಮೆಲ್ಲನೆ ಭಾವಾವೇಷ ಹಬ್ಬಿತು. ಈಗೇನಾದರೂ ತಾನು ಪ್ರಯತ್ನಿಸಿದರೆ ಉರಿದು ಬೀಳುತ್ತಾಳೆ ಎನ್ನಿಸಿ ಸುಮ್ಮನೆ ಪಕ್ಕದಲ್ಲಿ ಮೈ ಚಾಚಿದ. ಅನಂತರ ಕೆಲವೇ ಕ್ಷಣಗಳಲ್ಲಿ,‘ಇದೇನು ಹೀಗೆ ಸುಮ್ಮನಾದೆ ಎಂಬ ಮೆಲುಮಾತು ಕೇಳಿಸಿತು. ಪ್ರಭಾಕರ ಎದ್ದು ಕುಳಿತು ಧ್ವನಿ ಬಂದ ಕಡೆ ನೋಡಿದ. ಮೂಲೆಯಲ್ಲಿ ಟೇಬಲ್ಲಿನ ಮೇಲೆ ಅವನು ಇಟ್ಟಿದ್ದ ಬೊಂಬೆ ಕಾಣಿಸಿತಷ್ಟೆ. ಕೊಂಚ ಗಲಿಬಿಲಿಗೊಂಡ ಮಾಲಿನಿಯೂ ಎದ್ದಳು. ಅವಳು “ಯಾರ್ರೀ ಮಾತಾಡಿದ್ದು? ಎಂದು ಕೇಳುತ್ತಿದ್ದಂತೆ ಮತ್ತೆ ಅವೇ ಮಾತುಗಳು. ಈಗವರಿಗೆ ಗೊತ್ತಾಯಿತು. ಮಾತಾಡಿದ್ದು ಬೊಂಬೆ. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಅದರ ಹತ್ತಿರಕ್ಕೆ ಹೋಗುತ್ತಿದ್ದಂತೆ ಉಂಟಾದ ಮಿಶ್ರ ಭಾವನೆಗಳಲ್ಲಿ ವಿಚಿತ್ರ ಸಂತೋಷವೇ ಹೆಚ್ಚಾಗಿತ್ತು. ಅದು ಇನ್ನೇನಾದರೂ ಹೇಳುತ್ತದೆಯೇನೋ ಎಂದು ಕೆಲವು ಕ್ಷಣ ಕಾದರು. +“ಅದೇನೋ ಮಾತಾಡ್ದ ಹಾಗಾಯ್ತು?! +“ಮಕ್ಕಳ ಧ್ವನಿ ಇದ್ದ ಹಾಗಿತ್ತಲ್ವ? +“ಇಲ್ಲ ಕಣೆ, ನಂಗೆ ಹಾಗನಿಸಲ್ಲ, ದೊಡ್ಡೋರದ್ದು ಇದ್ದ ಹಾಗಿತ್ತು ಎಂದ ಪ್ರಭಾಕರ. ಆದರೆ ಬೊಂಬೆ ಅವರಿಬ್ಬರ ಆಗಿನ ಮನಸ್ಥಿತಿಯನ್ನು ಬದಲಿಸಿತು. +ಮಾರನೆಯ ದಿನ ಮತಾಡುವ ಆ ಬೊಂಬೆ ಮನೆಯವರಿಗೆಲ್ಲ ಪ್ರಿಯವಾಯಿತು. ಎಲ್ಲಕ್ಕಿಂತ ಆದದ್ದು ಅದಕ್ಕೊಂದು ನಾಮಕರಣ. ಕೊನೆಗೆ ವಿಶೇಷ ಇಷ್ಟಪಟ್ಟಂತೆ ‘ಪುಟ್ಟು ಎಂದು ನಿರ್ಧರಿಸಿದರು. ಆ ಹೆಸರು ಕೂಗಿದ ಕೂಡಲೇ ನಗುತ್ತ ಹೆಜ್ಜೆ ಹಾಕುವ ಅದು ಎಲ್ಲರಲ್ಲಿಯೂ ಸಂತೋಷದ ಲಹರಿಗಳನ್ನು ಉಂಟುಮಾಡಿತು. ಪ್ರಭಾಕರ ಕೆಲಸದ ಒತ್ತಡ ಎಂದು ಅವಸರದಿಂದ ಹೊರಟ. ವಿಶೇಷನಿಗಂತೂ ಮಾತನಾಡುವ ಸಂಗಾತಿ ಸಿಕ್ಕಿದ್ದಕ್ಕೆ ಹಿಡಿಸಲಾರದಷ್ಟು ಖುಷಿಯಾಗಿತ್ತು. ಸ್ಕೂಲಿನಿಂದ ಬಂದ ಕೂಡಲೇ ಉಳಿದ ಸಮಯವೆಲ್ಲ ಅದರ ಜೊತೆಗೇ. ಅದು ಆಡುವ ಮಾತುಗಳಿಂದ ಪುಳಕಿತಗೊಳ್ಳುತ್ತಿದ್ದ. ಸುರ್ಯ ಹುಟ್ಟಿ-ಮುಳುಗುವುದರಲ್ಲಿ ಹೊಸತೇನನ್ನೂ ಕಾಣದೆ ಸುಮ್ಮನೆ ದಿನ ಉರುಳುವುದನ್ನು ದೂರನಿಂತು ನೋಡುತ್ತಿದ್ದ ಶಂಕರಯ್ಯ ಮತ್ತು ಲಲಿತಮ್ಮನವರಿಗೆ ಅದು ಹೊಸ ಬಗೆಯನ್ನು ತೆರೆದಿತ್ತು. ಪ್ರಾರಂಭದಲ್ಲಿ ಎಲ್ಲರಿಗೂ ಹಿತವೆನಿಸುವಂತೆ ನಕ್ಕು ಕುಪ್ಪಳಿಸಿ ಮಾಡುತ್ತಿದ್ದ ಪುಟ್ಟು ಕೆಲವೇ ದಿನಗಳಲ್ಲಿ ಬೇಕು-ಬೇಡಗಳನ್ನು ಕೇಳುವವರಿಗೆ ಇರಿಸುಮುರುಸನ್ನುಂಟು ಮಾಡುವ ರೀತಿಯಲ್ಲಿ ವ್ಯಕ್ತಪಡಿಸುತ್ತಿತ್ತು. ಏನು ಕೊಟ್ಟರೆ ಅದರಲ್ಲಿ ಆಡಿಕೊಂಡಿದ್ದ ಅದು ತನಗೆ ಕುದುರೆ ಬೇಕೆಂದು ಆ ದಿನ ರಂಪ ಹಿಡಿಯಿತು. ಸಾಕಷ್ಟು ಸಮಯ ನೋಡಿದ ಮೇಲೆ ಶಂಕರಯ್ಯ ಪ್ರಭಾಕರನ ಪ್ರೆಸ್ಸಿಗೇ ಫೋನ್ ಮಾಡಿ ವಿಷಯ ತಿಳಿಸಿದರು. ಅವನು ಬರುವಾಗ ಜಯನಗರ ನಾಲ್ಕನೇ ಬಡಾವಣೆಯಲ್ಲಿ ಮಕ್ಕಳಾಡುವ ಮರದ ಕುದುರೆಯನ್ನು ಸ್ಕೂಟರ್‌ನ ಹಿಂಭಾಗಕ್ಕೆ ಕಟ್ಟಿಕೊಂಡು ತಂದ. ಅದನ್ನು ನೋಡುತ್ತಿದ್ದಂತೆ ಪುಟ್ಟುಗೆ ಎಲ್ಲಿಲ್ಲದ ಗೆಲುವು. ತಕ್ಷಣವೇ ಅದರ ಮೇಲೆ ಹತ್ತಿ ಹಿಂದೆ ಮುಂದೆ ಸವಾರಿ ಮಾಡಿದಂತೆ ಜಗ್ಗಿ ಎಳೆದು ಖುಷಿಪಟ್ಟಿತು. ಅನಂತರ ಕೆಳಗೆ ಹಾರಿ ಪ್ರೀತಿಯಿಂದ ಪ್ರಭಾಕರನಿಗೆ ಮುಖದ ತುಂಬ ಮುತ್ತು ಕೊಟ್ಟಿತು. ಇದರಿಂದ ಉಳಿದವರಿಗೆ ಮಾಮೂಲು ಸ್ಥಿತಿಗೆ ಹಿಂತಿರುಗಲು ಅವಕಾಶವಾದರೂ ವಿಶೇಷನಿಗೆ ಅದೆಲ್ಲ ಸುತರಾಂ ಇಷ್ಟವಾಗಲಿಲ್ಲ. ಅವನು ಧುಮುಗುಟ್ಟುತ್ತಲೇ ಇದ್ದ. ಅನಂತರ ಪುಟ್ಟು ದಿನದಲ್ಲಿ ಆದಷ್ಟೂ ಸಮಯ ಕುದುರೆಯ ಮೇಲೆಯೇ ಇರುತ್ತಿತ್ತು. ಆಗಾಗ ಬೆಳಿಗ್ಗೆ ಲಲಿತಮ್ಮ ಮುಂಬಾಗಿಲಿಗೆ ಹಾಕುತ್ತಿದ್ದ ರಂಗೋಲಿಯನ್ನು ತದೇಕವಾಗಿ ನೋಡುತ್ತಿತ್ತು. ಆಗ ಅದು ಹೆಚ್ಚು ತಗಾದೆ ಮಾಡುತ್ತಿರಲಿಲ್ಲ. ಲಲಿತಮ್ಮ ಅದರ ಕಡೆ ನೋಡಿ ನಸು ನಗುತ್ತಿದ್ದರು. ಅವರು,“ನೋಡು ಬಾ ಪುಟ್ಟು ಏನ್ಮಾಡ್ತಿದೆ ಎಂದು ವಿಶೇಷನನ್ನು ಕರೆಯುತ್ತಿದ್ದರು. ಕೆಲವು ದಿನಗಳ ನಂತರ ಆ ರಂಗೋಲಿಯ ಡಬ್ಬದಲ್ಲಿದ್ದ ಬಣ್ಣದ ಚಾಕ್ ಪೀಸ್‌ಗಳನ್ನು ಹೇಗೋ ಪತ್ತೆ ಮಾಡಿತು. ಅದನ್ನು ತೆಗೆದುಕೊಂಡು ತಾನೇರುತ್ತಿದ್ದ ಮರದ ಕುದುರೆಗೆ ಲಗಾಮು ಬರೆಯಿತು. ಅದು ಬರೆದ ಮೇಲೆ ಕುದುರೆಯ ಮೇಲೆ ಹತ್ತಿದಾಗ ಅತೀವ ಹುರುಪಿನಿಂದ, ಧಿಮಾಕಿನಿಂದ ವರ್ತಿಸುತ್ತಿತ್ತು. +ಮೊದಮೊದಲು ಮನೆಯೊಳಗೇ ಓಡಾಡಿಕೊಂಡಿದ್ದ ಅದು ಶಂಕರಯ್ಯನವರ ‘ಗುಣಮಟ್ಟ ಕುರಿತ ಪುಸ್ತಕಗಳ ಹಾಳೆಗಳನ್ನು ಹರಿದು ಉಪಯೋಗವಿಲ್ಲದಂತೆ ಮಾಡಿ, ಉಪಕರಣಗಳನ್ನು ಕೂಡ ಅವರ ಕಣ್ಣೆದುರೇ ಕೆಡಿಸಿಬಿಟ್ಟಿತು. ಏಕೋ ಶಂಕರಯ್ಯನವರಿಗೆ ಕೆಲವು ಕ್ಷಣ ತಮ್ಮ ಕಣ್ಣುಗಳನ್ನೇ ನಂಬದಂತಾಯಿತು. ಆದರೆ ಕ್ರಮೇಣ ತಹಬಂದಿಗೆ ತಂದುಕೊಂಡರು. ಅನಂತರ ಮೂರು ದಿನ ಅವರು ಯಾರ ಜೊತೆಯೂ ಮಾತಾಡಲಿಲ್ಲ. ಆದರೆ ಅದೊಂದು ದಿನ ಪುಟ್ಟ , ಈ ಮೊದಲು ಪ್ರಭಾಕರ ಹಾಲ್‌ನಲ್ಲಿ ಜವರಪ್ಪನ ಪಾರ್ಟಿಯ ಅತ್ಯಂತ ಪ್ರಮುಖ ರಾಷ್ಟ್ರ ನಾಯಕರ ಫೋಟೋಗೆ ಊದಿನ ಕಡ್ಡಿ ಹಚ್ಚಿ ತಾವು ದೇವರ ಪೂಜೆಗೆಂದು ಉಪಯೋಗಿಸುತ್ತಿದ್ದ ಗಂಟೆ ಬಾರಿಸಿ ಮಂಗಳಾರತಿ ಮಾಡುತ್ತಿದ್ದ. ಅದನ್ನು ಕಂಡು ವಿಶೇಷ ಕುಣಿದು ನಕ್ಕು ಚಪ್ಪಾಳೆ ಹೊಡೆದ. ಗಂಟೆಂii ಶಬ್ದ ಕೇಳಿ ಬಂದ ಶಂಕರಯ್ಯ ಕಂಡ ನೋಟದಿಂದ ದಂಗು ಬಡಿದು ಮುಂದೆ ಹೆಜ್ಜೆ ಇಡಲಿಲ್ಲ. ಆದರೆ ಮಾಲಿನಿಗೆ ತಡೆಯಲಾಗಲಿಲ್ಲ. ಅವಳು ಪುಟ್ಟುವಿನ ಕೈಯಿಂದ ಗಂಟೆಯನ್ನು ಕಸಿದುಕೊಳ್ಳಲು ಹೋದರೆ ಅದು ಅವಳ ಕಡೆ ಬಿರುಗಣ್ಣು ಬೀರಿ ತನ್ನ ಕೆಲಸ ಮುಂದುವರಿಸಿತು. ಇದೇನಾಯಿತು ಎಂದು ಲಲಿತಮ್ಮ ನೋಡುತ್ತಿದ್ದಂತೆ ಮಾಲಿನಿಗೆ ರೋಷವುಕ್ಕಿ ಪುಟ್ಟುವನ್ನು ದರ ದರ ಎಳೆದು ಕೊಂಡು ರೂಮಿಗೆ ತಳ್ಳಿ ಬಾಗಿಲು ಹಾಕಿದಳು. ಅವರೆಲ್ಲರೂ ಪರಸ್ಪರ ಮುಖ ನೋಡಿಕೊಂಡು ಅತ್ತ ಸರಿದರೂ ರೂಮೊಳಗಿಂದ ಗಂಟೆ ಶಬ್ದ ಕೇಳಿ ಬರುತ್ತಿತ್ತು. ಅನಂತರ ವಿಷಯ ತಿಳಿದ ಪ್ರಭಾಕರನನ್ನು ಬಿಟ್ಟು ಉಳಿದವರೆಲ್ಲರೂ ಇಡೀ ದಿನ ಸೂತಕದ ಮನೆಯಂತೆ ಕಳೆದರು. +ಪ್ರಾರಂಭದಲ್ಲಿ ಎಳೆಯ ಹುಡುಗನ ಹಾಗೆ ಮಾತಾಡುತ್ತಿದ್ದ ಪುಟ್ಟ ಬೇಗನೆ ಬೆಳೆದವನ ಹಾಗೆ ಮಾತಾಡುತ್ತಿತ್ತು. ಈಗ ಮನೆಯವರ ಗಮನಕ್ಕೆ ಬಂದ ಅತಿಶಯದ ಸಂಗತಿಯೆಂದರೆ ಅದಾಡುವ ಮಾತಿನ ಏರಿಳಿತಗಳಿಗೆ ಹೊಂದಿಕೊಂಡು ಅದರ ಕಣ್ಣು, ಹುಬ್ಬು, ತುಟಿಗಳ ಚಲನೆಯೂ ಮಿಳಿತಗೊಳ್ಳುತ್ತಿದ್ದದ್ದು. ಒಂದೊಂದು ಸಲ ಅದರ ಕಣ್ಣುಗಳು ಕಪ್ಪು ಎನ್ನಿಸಿದರೆ ಮತ್ತೆ ಕೆಲವು ಸಲ ನೀಲಿ ಎನ್ನಿಸುತ್ತಿತ್ತು. ಎಲ್ಲರಿಗೂ ಮುಂಚೆ ಇದೆಲ್ಲ ಸಂತೋಷಗೊಳ್ಳುವ ಸಂಗತಿಗಳೆನಿಸಿದರೂ ಎಲ್ಲ ವಿಷಯಯಗಳಲ್ಲೂ ಮೂಗು ತೂರಿಸುತ್ತಿತ್ತು. ತಮ್ಮ ಸಂಸಾರವಲ್ಲದೆ ಇತರ ಎಲ್ಲ ಆಗುಹೋಗುಗಳನ್ನು ಅದು ಹೇಗೋ ಅರಿತಂತಿದ್ದ ಅದರಿಂದ ಈಗ ಎಲ್ಲರೂ ದೂರವಿರಲು ಪ್ರಯತ್ನಿಸುತ್ತಿದ್ದರು. ಆದರೆ ಪ್ರಭಾಕರ ಅದನ್ನು ದೂರ ಮಾಡುವ ಮಾತೇ ಇರಲಿಲ್ಲ. ಅವನು ತೊಡಗಿಸಿಕೊಂಡ ಮಾರ್ಗದಲ್ಲಿ ಮತ್ತಷ್ಟು ಮುನ್ನುಗ್ಗಲು ಪ್ರೇರೇಪಿಸುತ್ತಿತ್ತು. ಅವನು ತಾನು ಕಾಪಾಡಿಕೊಳ್ಳಬೇಕಾಗಿದ್ದ ನಿಷ್ಠೆಯನ್ನು, ನೆಲೆಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದ. +ಪ್ರಭಾಕರ ಮಾಡಿದ ಕೆಲಸದ ಸಾಮಾನುಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದೋ, ಕಂಪನಿಗಳಲ್ಲಿ ಆರ್ಡರ್ ಕೊಟ್ಟಿದ್ದಕ್ಕೆ ಅದಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವರಿಗೆ ಪಾರ್ಟಿ ಕೊಡಿಸುವುದೋ, ನಾಗಣ್ಣನ ಬಳಿಗೆ ಹೋಗುವುದೊ, ಜವರಪ್ಪನವರ ಬಳಿಗೋ, ಅವರ ಪಾರ್ಟಿ ಆಫೀಸಿಗೋ – ಹೀಗೆ ಒಂದಿಲ್ಲೊಂದು ಕೆಲಸದ ಕಾರಣದಿಂದ ವಾಪಸು ಮನೆಗೆ ಹೋಗುತ್ತಿದ್ದದ್ದು ಸಾಮಾನ್ಯವಾಗಿ ಮಧ್ಯರಾತ್ರಿ ಕಳೆದ ಮೇಲೆ. ಇದು ಮನೆಯಲ್ಲಿ ಅಭ್ಯಾಸವಾಗಿ ಹೋಗಿದ್ದರೂ ಇತರರಿಗಿಂತ ಮಾಲಿಗೆ ಅನಾನುಕೂಲ ಹೆಚ್ಚು. ಇತ್ತೀಚೆಗೆ ಅವಳಿಗೂ ರೋಸಿ ಹೋಗಿ ಡೈನಿಂಗ್ ಟೇಬಲ್ಲಿನ ಮೇಲೆ ಅಡಿಗೆ ಅಣಿಮಾಡಿಟ್ಟು, ವಿಶೇಷನ ಹೊಂ ವರ್ಕ್‌ಮತ್ತು ಇತರೆ ಮನೆಗೆಲಸ ಮುಗಿಸುತ್ತಿದ್ದಳು. ಆದರೆ ಪ್ರಭಾಕರ ಬಂದಾಗ ಬಾಗಿಲು ತೆಗೆಯುವ ಕೆಲಸವೊಂದಿತ್ತು. ಈಗೀಗ ಅದಕ್ಕೂ ಒಂದು ಉಪಾಯ ಕಂಡುಕೊಂಡು ಮುಂಬಾಗಿಲು ಹಾಕಿಕೊಂಡು, ಅವನು ಬಂದಾಗ ಬೀಗ ತೆಗೆದು ಮನೆಯೊಳಗೆ ಬರುವ ಏರ್ಪಾಡು ಮಾಡಿಕೊಂಡಿದ್ದರು. +ಎಲ್ಲಂದರಲ್ಲಿ ಇರುತ್ತಿದ್ದ ಪುಟ್ಟ ಇತ್ತೀಚೆಗಂತೂ ರಾತ್ರಿ ಅವರ ಬೆಡ್ ರೂಮಿನಲ್ಲೆ ಮಲಗಬೇಕೆಂದು ಹಠ ಮಾಡುತ್ತಿತ್ತು. ಅದು ಸುಮ್ಮನಾದರೆ ಸಾಕೆಂದು ಮಾಲಿನಿ ಪ್ರಭಾಕರ ಬರುವ ತನಕ ತನ್ನ ಹಾಸಿಗೆಯಲ್ಲೇ ಇರಲು ಬಿಡುತ್ತಿದ್ದಳು. ಅನಂತರ ಪ್ರಭಾಕರ ತನ್ನ ವೇಳೆಗೆ ಬಂದು ಪುಟ್ಟನೊಡನೆ ಒಂದೆರಡು ಮುದ್ದಿನ ಮಾತನಾಡಿ ಅದನ್ನು ಟೇಬಲ್ಲಿನ ಮೇಲೆ ಹೋಗುವಂತೆ ಮಾಡುತ್ತಿದ್ದ. ಮಾಲಿನಿಗೆ ಇದರಿಂದ ರೇಗಿತ್ತು. ತನ್ನ ಜೊತೆ ಮಾತಾಡುವುದಕ್ಕಿಂತ ಪುಟ್ಟನ ಜೊತೆಯೇ ಅವನು ಮಾತಾಡುವುದು ಹೆಚ್ಚೆಂದು ಅವಳ ಅಹವಾಲು. ಆದರೆ ಈಗೀಗ ಅದರ ವರಸೆ ಬದಲಾಗಿತ್ತು. ದೂರ ಹೋಗುವಂತೆ ಹೇಳುವ ಪ್ರಭಾಕರನ ಮಾತನ್ನು ಪುಟ್ಟು ಕೇಳುತ್ತಿರಲಿಲ್ಲ. ತಾನೂ ಅವರ ಜೊತೆಯಲ್ಲಿಯೇ ಮಲಗುತ್ತೇನೆಂದು ಅದರ ಬಿಡದ ಹಠ. ಅದನ್ನು ಓಲೈಸಲು ಇಬ್ಬರೂ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಯಿತು. ತಮ್ಮ ಹಾಸಿಗೆಯಲ್ಲೆ ಅದಕ್ಕೆ ಮಲಗಲು ಬಿಟ್ಟ ಮಾಲಿನಿ ಇಡೀ ರಾತ್ರಿ ಮಂಚದ ಮೂಲೆ ಹಿಡಿದು ಕೂತಿದ್ದಳು. ತಡೆಯಲಾರದಷ್ಟು ಸುಸ್ತಾಗಿದ್ದ ಪ್ರಭಾಕರ ನಿದ್ದೆ ಹೋಗಿದ್ದ. ಬೆಳಗಾದ ಮೇಲೆ ಎಲ್ಲವೂ ಯಥಾ ರೀತಿ. ಆದರೆ ಈ ಪ್ರಸಂಗ ಅಲ್ಲಿಗೇ ನಿಲ್ಲದೆ ಪುಟ್ಟುವಿನ ಮಾತನ್ನೇ ಕೇಳುವಂತಾಗಿ ಪ್ರತಿನಿತ್ಯ ನಡೆಯುವಂತಾಯಿತು. ಆಗಾಗ ಅರೆನಿದ್ದೆಯಲ್ಲಿ ಮಾಲಿನಿಯಂತೂ ತನಗೊತ್ತಿಕೊಳ್ಳುವ ಮೈ ಪ್ರಭಾಕರನದೋ ಪುಟ್ಟೂದೋ ತಿಳಿಯದೆ ಒಟ್ಟಾರೆ ಹೇಸಿಗೆಪಟ್ಟು ಎದ್ದು ಹೋಗಿ ಕೆಳಗೆ ಮಲಗುತ್ತಿದ್ದಳು. ಅದೇಕೋ ಅವಳಿಗೆ ಪುಟ್ಟು ಒಂದೊಂದು ಸಲ ಅದು ವಿಚಿತ್ರವಾಗಿ ಹಲ್ಕಿರಿದು ನೋಡುವ ರೀತಿಯಿಂದ ಅವಳಿಗೆ ಗಾಬರಿಯಾಗುತ್ತಿತ್ತು. ಅವಳು ಸಾಕಷ್ಟು ಯೋಚಿಸಿ ತನಗೆ ಡೈವರ್ಸ್ ಕೊಟ್ಟು ಪುಟ್ಟೂನೇ ಮದುವೆಯಾಗಿ ಬಿಡಿ, ಇಲ್ಲದಿದ್ದರೆ ತಾನೇ ಅದಕ್ಕೆ ಮುಂದುವರಿಯುತ್ತೇನೆ ಎಂದು ಮಾಲಿನಿ ಪ್ರಭಾಕರನಿಗೆ ಹೇಳಿದಳು. ದಿನಗಳೆದಂತೆ ಅದರ ಅಟಾಟೋಪ ಹೆಚ್ಚುತ್ತ ಹೋಯಿತು. +ಎಲೆಕ್ಷನ್ ಸಂಬಂಧವಾಗಿ ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ತಿಳಿಯುತ್ತಿದ್ದ ಪ್ರಭಾಕರನಿಗೆ ಗಂಟಲು ಒಣಗಿದಂತಾಗುತ್ತಿತ್ತು. ಪಾರ್ಟಿ ಅರೆ ಆಫೀಸಿನಲ್ಲಿ ಮತ್ತು ಹೊರಗೆ ಸಾಕಷ್ಟು ಜನರು ಪರಿಚಯವಾಗಿದ್ದರು. ಅನೇಕ ಸಲ ಜವರಪ್ಪ, “ಪ್ರಭಾಕರ ಅವರನ್ನು ಕೇಳಿ . . ಅವರು ಹೇಳಿದ ಹಾಗೆ ಮಾಡಿ ಎಂದು ಆದೇಶ ಕೊಟ್ಟಿದ್ದುಂಟು. ಇದನ್ನು ಸಹಿಸದ ಜನರಲ್ಲಿ ಅಸೂಯೆಯ ಕಿಡಿ ಹೊತ್ತಿಕೊಂಡಿತ್ತು. ಇದಕ್ಕೆ ನಾಗಣ್ಣನೂ ಹೊರತಾಗಿರಲಿಲ್ಲ. ಅ ಅಂತಹ ಸಮಯದಲ್ಲಿ ಪ್ರಭಾಕರನನ್ನು ಅಳೆಯುವಂತೆ ಮೇಲಿಂದ ಕೆಳಗೆ ನೋಡುತ್ತಿದ್ದ. +ಆ ರಾತ್ರಿ ಪ್ರಭಾಕರ, ವೆಂಕು ಮತ್ತು ಉಳಿದವರಿಗೆಲ್ಲ ವಿಪರೀತ ಕೆಲಸ. ಅಲ್ಲಿಯೇ ಹತ್ತಿರದಲ್ಲಿ ಮಾಡುತ್ತಿದ್ದ ಇಡ್ಲಿ ಕಟ್ಟಿಸಿಕೊಂಡು ಬಂದು, ತಿಂದು ಕಣ್ಣು ತಿಕ್ಕುತ್ತ ಕೆಲಸ ಮುಗಿಸಿ ದಾಗ ಮೂರು ಗಂಟೆ. ಕಟ್ಟು ಕಟ್ಟುತ್ತ ವೆಂಕು, “ನಾಳೆ ಒಂದಿನ ರಜ ಬೇಕು, ಸಾರ್ ಎಂದ. ಅವನು ಇತ್ತೀಚೆಗೆ ಎರಡು ಸಲ ಕೇಳಿದ್ದರೂ ಪ್ರಭಾಕರ ಒಪ್ಪಿರಲಿಲ್ಲ. ಕೇಳುವಾಗಲೇ ಸಪ್ಪಗಿದ್ದ ಅವನನ್ನು ನೋಡಿ, “ಆಯ್ತು . .ಇದನ್ನ ನಾನೇ ಕೊಡ್ತೀನಿ. ನೀನು ಹೋಗು . . ಒಂದೇ ದಿನ ಅಷ್ಟೆ ಎಂದ. +ವಾರದಿಂದ ಸರಿಯಾಗಿ ನಿದ್ದೆ ಮಾಡದ ಪ್ರಭಾಕರ ಎದ್ದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ರಾತ್ರಿಯೇ ರಗಳೆ ಮಾಡುತ್ತಿದ್ದ ಪುಟ್ಟ ಅವನನ್ನು ನೋಡಿದ ಕೂಡಲೇ ಅದನ್ನು ಮುಂದುವರಿಸಿತು. ಈಗೆರಡು ದಿನಗಳಿಂದ ಅದರದ್ದು ಒಂದೇ ರಾಗ. ಜವರಪ್ಪನವರ ಮನೆಗೆ ತನ್ನನ್ನೂ ಕರೆದುಕೊಂಡು ಹೋಗು, ಎಂದು. ಅಲ್ಲಿಗೆಲ್ಲ ಯಾತಕ್ಕೆ ಬೇಕು… ಈಗಾಗಿರೋದೇ ಸಾಲ್ದೆ? ಎಂದು ಮಾಲಿನಿ ಮುಖ ಗಂಟು ಹಾಕಿಕೊಂಡರೂ ನಿರಾಕರಿಸಲು ಸಾಧ್ಯವೇ ಇಲ್ಲದೆ ಪ್ರಭಾಕರ ಒಪ್ಪಿಕೊಂಡ. ಶಂಕರಯ್ಯ ಹುಬ್ಬೇರಿಸಿದರು. ವಿಷಯವೇನೆಂದು ಸ್ಪಷ್ಟವಾಗಿ ತಿಳಿಯದ ವಿಶೇಷ ಹಿಂದೆ ಮುಂದೆ ಓಡಾಡಿ ಎಲ್ಲರ ಮುಖವನ್ನು ನೋಡುತ್ತಿದ್ದ. +ಪ್ರಭಾಕರ ಅವಸರದಿಂದ ಸಿದ್ಧನಾಗಿ ಹೊರಟಾಗ ಪುಟ್ಟು ಸ್ಕೂಟರ್‌ನ ಪಿಲಿಯನ್ ಏರಿದ. ಪ್ರೆಸ್ಸ್‌ಗೆ ಬಂದು ಪ್ರಿಂಟ್ ಮಾಡಿದ ಕಟ್ಟುಗಳನ್ನು ತೆಗೆದುಕೊಂಡು ಹೊರಟ. ಎದುರುಗಡೆ ರಸ್ತೆಯಿಂದ ಎಗರಿ ಕಣ್ಣಿಗೆ ರಾಚುತ್ತಿದ್ದ ಉರಿ ಬಿಸಿಲಿನ ಝಳ. ಇನ್ನು ಮುಂದೆ ಹೋದ ಮೇಲೆ ಸಿಕ್ಕ ಸೌತ್ ಎನ್ಡ್ ಸರ್ಕಲ್‌ನಲ್ಲಿ ಕೆಂಪು ದೀಪ ಕಂಡು ಸ್ಕೂಟರ್ ನಿಲ್ಲಿಸಿದ. ಪಕ್ಕದಲ್ಲಿ ಅಗಾಧ ಗಾತ್ರದ ಜವರಪ್ಪನಿದ್ದ ಹೋರ್ಡಿಂಗ್ ಕಾಣಿಸಿತು. ಅದರಲ್ಲಿ ಬರೆದಿದ್ದ ಅಕ್ಷರಗಳ ಆಕಾರದಲ್ಲಿ ಹೊದಾಣಿಕೆ ಇರಲಿಲ್ಲ. ಅದನ್ನು ಪರೀಕ್ಷಿಸಲು ಸ್ಕೂಟರ್ ಅಲ್ಲಿಯೇ ನಿಲ್ಲಿಸಿ ಆ ಹೋರ್ಡಿಂಗ್ ಬಳಿಗೆ ಹೋಗಿ ನಿಂತ. ಪುಟ್ಟ ಹಿಂದೆಯೇ ಬಂದ. ಹೋರ್ಡಿಂಗ್‌ನಲ್ಲಿ ಬರೆದದ್ದು ಭಾಷಣದ ಭಂಗಿಯಲ್ಲಿದ್ದ ಜವರಪ್ಪ, ಎದುರಿಗೆ ದೊಡ್ಡ ಮೈದಾನದಲ್ಲಿ ಜನರೋ, ಜನರು; ಗಂಡಸರು, ಹೆಂಗಸರು ಹಾಗೂ ಮಕ್ಕಳು. ನಿಂತಿದ್ದಂತೆಯೇ ಜನರ ಚಪ್ಪಾಳೆಗಳ ಅಲೆ ಬೀಸಿ ಪ್ರಭಾಕರನನ್ನು ತಲುಪಿತು. ಅವನೂ ಚಪ್ಪಾಳೆ ತಟ್ಟುತ್ತಿದ್ದಂತೆ ಪುಟ್ಟೂ ಅವನ ಜೊತೆಗೂಡಿದ. ಸರ್ಕಲ್‌ನಲ್ಲಿ ಹಸಿರು ದೀಪ ಬಂದು ಹಿಂದಿನಿಂದ ಅನೇಕ ವಾಹನಗಳ ಶಬ್ದ. ಪ್ರಭಾಕರ ಅವಸರದಿಂದ ವಾಪಸು ಬಂದು ಸ್ಕೂಟರ್ ಸ್ಟಾರ್ಟ್ ಮಾಡಿ ಮುಂದೆ ಹೋದ. ಅನುಮಾನವಾಗಿ ಹಿಂದೆ ನೋಡಿದ. ಅದು ಹೇಗೋ ಪುಟ್ಟು ತನ್ನ ಸ್ಥಾನದಲ್ಲಿದ್ದ. ಅವನು ಜೆ.ಸಿ. ರಸ್ತೆಯಲ್ಲಿ ಹೋಗುತ್ತಿದ್ದಂತೆ ಅಷ್ಟು ದೂರ ದಲ್ಲಿ ರಸ್ತೆಯ ಉದ್ದಗಲಕ್ಕೆ ಮತ್ತು ಹಿಂದಕ್ಕೆ ಸಾಕಷ್ಟು ಹರಡಿ ನಿಂತ ಜನ. ಎಲ್ಲ ಕಡೆ ಇದ್ದ ಹಾಗೆ ಉದ್ದಕ್ಕೂ ಜವರಪ್ಪ ಮತ್ತು ಇತರ ಉಮೇದುವಾರರ ಪೋಸ್ಟರ್‌ಗಳು, ಬ್ಯಾನರ್‌ಗಳು, ಬಂಟಿಕ್ಸ್‌ಗಳಿದ್ದವು. ಪ್ರಭಾಕರ ಇನ್ನೂ ಮುಂದೆ ಹೋದಂತೆ ಅಬ್ಬರದ ಅರಚಾಟ, ಕೂಗಾಟ ಕೇಳಿಸಿತು. ಅವನು ಕೂಗು ಬಂದ ಕಡೆ ಹೋಗುತ್ತಿದ್ದ ಹಾಗೆ ಒಂದಿಬ್ಬರು ಜವರಪ್ಪನಿರುವ ಪೋಸ್ಟgಗಳನ್ನು ಕಿತ್ತೆಸೆಯುತ್ತಿದ್ದರು. ಈ ವೇಳೆಗಾಗಲೇ ಅವನು ಅವರ ಹತ್ತಿರ ಬಂದಿದ್ದ. ಹೌದಲ್ಲ! ಇವರಲ್ಲಿ ಹಲವರು ಪಾರ್ಟಿ ಆಫೀಸಿನಲ್ಲಿ ಕಂಡವರಲ್ಲವೇ? ಇದೇನು ಹೀಗೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತ ಸ್ಕೂಟರ್ ನಿಲ್ಲಿಸಿ ಸ್ಟ್ಯಾಂಡ್ ಹಾಕಲು ಯತ್ನಿಸಿದ. ಅದಕ್ಕೆ ಕೆಳಗೆಲ್ಲೋ ಏನೋ ತಾಕಿರಬೇಕು. ಸ್ಕೂಟರ್ ಪಕ್ಕಕ್ಕೆ ಬಿತ್ತು; ಸಡಿಲವಾಗಿ ಕಟ್ಟಿದ್ದ ಕಟ್ಟುಗಳ ಜೊತೆಗೆ ಪುಟ್ಟೂ ಕೂಡ ಬಿದ್ದ. ಕಟ್ಟುಗಳಿಂದ ಜವರಪ್ಪನವರ ಚುನಾವಣಾ ಪ್ರಚಾರದ ಪಾಂಪ್ಲೆಟ್ಟುಗಳು ಎಲ್ಲ ಹರಡಿಕೊಂಡವು. ಇವೆಲ್ಲ ಅಲ್ಲೆ ಇದ್ದ ಒಂದಿಬ್ಬರ ಗಮನಕ್ಕೆ ಬಂತು. ಅದನ್ನು ರಭಸದಿಂದ ಎತ್ತಿಕೊಂಡವನೊಬ್ಬ, “ನೋಡ್ರಲೇ ಜವರಪ್ಪನ ಚೇಲಾನಾ . . ಎಂದರೆ ಮತ್ತೊಬ್ಬ, “ಇಷ್ಟಾದ ಮೇಲೂ ತಾಯಿಗ್ಗಂಡಂಗೆ ಬಕೀಟ್ ಹಿಡಿಯಕ್ಕೆ ಓಗ್ತವ್ನೆ ಎಂದು ಕೂಗಿದ. ಜನರು ಮುತ್ತಿಕೊಂಡರು. ಅವರ ವರ್ತನೆಯೇ ವಿಚಿತ್ರವಾಗಿ ಕಂಡಿತು ಪ್ರಭಾಕರನಿಗೆ. ನಿನ್ನೆ ಮೊನ್ನೆಯ ತನಕ ಅವನ ಬಾಲಂಗೋಚಿಗಳಾಗಿದ್ದವರಲ್ಲವೇ ಎಂದು ಅವನು ಯೋಚಿಸುತ್ತಿದ್ದಂತೆ ಯಾರೋ ಪಕ್ಕೆಗೆ ತಿವಿದರು. ತಿರುಗಿ ನೋಡಿದರೆ ನಾಲ್ಕಾರು ಅಷ್ಟಗಲ ತೆರೆದ ಕಣ್ಣುಗಳು. ಹುಚ್ಚು ನಗೆ. ಈ ಗದ್ದಲದಲ್ಲಿ ಪುಟ್ಟು ಎಲ್ಲಿ ಎಂದು ನೋಡಿದ ಪ್ರಭಾಕರ. ಆದರೆ ಕಣ್ಣಿಗೆ ಬೀಳಲಿಲ್ಲ. ಹಿಂದೆಯೇ ಶುರುವಾಯಿತು ಥಯ್ಯ, ಥಕ ಥಯ್ಯ ಶಬ್ದ. “ಆ ಜವರಪ್ಪ ಯಾಪಾರ ಮಾಡ್ಕಂಡು ಪಾರ್ಟಿ ಬದಲಾಯ್ಸಿ ಮುಖ ತೋರಿಸ್ದಂಗೆ ಓಗವ್ನೆ . . ಇಲ್ಲಿ ನೀನು ಅವನ ಕುಂಡಿ ತುರಿಸಾಕೆ ಬಂದಿದಿಯೇನೋ ಲೌಡೀಕೇ ಎನ್ನುತ್ತಿದ್ದಂತೆ ಮತ್ತೊಬ್ಬ ಮುಷ್ಟಿಯಲ್ಲಿ ಪಾಪ್ಲೆಟ್ಟುಗಳನ್ನು ಹಿಡಿದು ಪ್ರಭಾಕರನ ಬಾಯಿ ಅಗಲಿಸಿ ತುರುಕಲು ಪ್ರಯತ್ನಿಸಿದ. ಆಗ ಕತ್ತೆತ್ತಿದ ಪ್ರಭಾಕರನ ಕಣ್ಣಿಗೆ ಸೂರ್ಯನ ಪ್ರಕಾಶದಿಂದ ಕತ್ತಲೆ ಮುತ್ತಿತು. ಅವನಿಗೆ ನೆಟ್ಟಗೆ ನಿಲ್ಲುವುದೇ ಕಷ್ಟವಾಯಿತು. ಈ ಗೊಂದಲದಲ್ಲಿ ಅವರಿವರ ತುಳಿತಕ್ಕೆ ಸಿಕ್ಕ ಪುಟ್ಟನ ಕೈ, ಕಾಲು, ಮುಖಗಳೆಲ್ಲ ಚಿಂದಿಯಾಗಿತ್ತು. ಅಲ್ಲಲ್ಲಿ ಹರಡಿತ್ತು. ಅದನ್ನೆಲ್ಲ ಆರಿಸಿಕೊಂಡವನೊಬ್ಬನಿಗೆ ಅವುಗಳಲ್ಲೇನೋ ನಲುಗಿದಂತಾಗಿ ಒಂದೊಂದನ್ನೂ ಸರಿಯಾಗಿ ಹೊಂದಿಸುವುದಕ್ಕೆ ಸಾಧ್ಯವೇನೋ ಎಂದು ಪ್ರಯತ್ನಿಸಿದ. ಸಹಜವೆನ್ನಿಸುವಂತೆ ಎಲ್ಲವೂ ತಮ್ಮ ತಮ್ಮ ಸ್ಥಾನ ಕಂಡು ಕೊಂಡವು. ಅದರ ಮುಖದಲ್ಲಿ ಕೊಂಚ ಕಳೆ ಕಾಣಿಸಿಕೊಂಡು ತುಟಿಯಂಚಿನಲ್ಲಿ ನಸುನಗೆ ಮೂಡಿತು. ಅನಂತರ ಅದು ಮಾತಾಡಲು ಪ್ರಾರಂಭಿಸಿತು. +***** +ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […] +ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_92.txt b/Kannada Sahitya/article_92.txt new file mode 100644 index 0000000000000000000000000000000000000000..2bdd60d5e7938d9563d8f1dfca462671130245d3 --- /dev/null +++ b/Kannada Sahitya/article_92.txt @@ -0,0 +1,75 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಳ್ಳಾರಿ ಜಿಲ್ಲೆಯ ಆ ಪುಟ್ಟ ಊರಿನಲ್ಲಿ ಚೇಳುಗಳದೇ ದರ್ಬಾರು. ಜನಸಂಖ್ಯೆಯ ನೂರುಪಟ್ಟು ಚೇಳುಗಳಿವೆಯಾದ್ದರಿಂದ ಅವುಗಳ ದರ್ಬಾರಿಗೆ ಆಕ್ಷೇಪಣೆ ಮಾಡುವಂತಿಲ್ಲ. ಇಡೀ ಊರಿನಲ್ಲಿ ಎಲ್ಲಿ ಬೇಕೆಂದರಲ್ಲಿ ವಾಸಿಸುವ ಹಕ್ಕನ್ನು ಚೇಳುಗಳು ಪಡೆದಿವೆ. ಕಲ್ಲಿನ ಬುಡದಲ್ಲಿ, ಒರಳಿನ ತಳದಲ್ಲಿ, ಬೀಸೇಕಲ್ಲಿನ ಕುಣಿಯಲ್ಲಿ, ಅಕ್ಕಿ ಡಬ್ಬಿಯ ಒಳಗೆ, ತಾರಸಿಯ ಮೇಲೆ, ಹಗೇವಿನೊಳಗೆ, ಮಡಿಸಿಟ್ಟ ಕುಪ್ಪಸದಲ್ಲಿ, ಮಕ್ಕಳ ತೊಟ್ಟಿಲಿನಲ್ಲಿ, ಬಿಟ್ಟ ಜೋಡಿನೊಳಗೆ, ಪಾಯಿಖಾನೆಯಲ್ಲಿ ಕಳಚಿಟ್ಟ ಚಡ್ಡಿಯೊಳಗೆ – ಹೀಗೆ ‘ನಾನಿಲ್ಲದೆಡೆಯಿಲ್ಲ’ ಎನ್ನುವ ಭಗವಂತನ ಮತ್ತೊಂದು ಅವತಾರವೇನೋ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಅವುಗಳ ಓಡಾಟವನ್ನು ಅರ್ಥಮಾಡಿಕೊಂಡ ಜನರು ತಮ್ಮ ಹಾಸಿಗೆಗಳನ್ನು ಗೋಡೆಯಿಂದ ಒಂದು ಅಡಿ ದೂರದಲ್ಲಿ ಹಾಸಿಕೊಂಡು ಅವುಗಳ ರಾತ್ರಿ ಸಂಚಾರಕ್ಕೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಹೆಚ್ಚಾಗಿ ಕತ್ತಲ ಸಂದುಗೊಂದುಗಳಲ್ಲಿಯೇ ಇರಲು ಇಷ್ಟ ಪಡುವ ಈ ಚೇಳುಗಳು, ಬಿಸಿಲುಗಾಲಕ್ಕೆ ಧಗೆ ತಾಳಲಾರದೆ ವಾಯುವಿಹಾರಕ್ಕೆ ಬರುತ್ತವೆ. ಹೀಗೆ ವಾಯುವಿಹಾರಕ್ಕೆ ಹೊರಟ ಚೇಳಿನ ಬಡಿವಾರವನ್ನು ವರ್ಣಿಸುವುದು ಕಷ್ಟ! ತಮ್ಮ ನಾಜೂಕಾದ ಕೊಂಡಿಯನ್ನು ಲತೆಯಂತೆ ಬಳಕಿಸುತ್ತಾ, ನುಣುಪಾದ ಕಪ್ಪು ಮೈಯನ್ನು ಸಾಲಿಗ್ರಾಮದಂತೆ ಫಳಫಳನೆ ಹೊಳೆಯಿಸುತ್ತಾ, ಬುರುಖಾ ಹೊದ್ದ ಬೇಗಂಳಂತೆ ಗಂಭೀರವಾಗಿ ಗೋಡೆಯಂಚಿಗೆ ಸಾಗುತ್ತಿದ್ದರೆ ಕೊಲ್ಲುವದನ್ನು ಮರೆತು ನೋಡುತ್ತಾ ಕುಳಿತುಬಿಡೋಣವೆನ್ನಿಸುತ್ತದೆ. ಅದರ ತಂಟೆಗೆ ಯಾರಾದರೂ ಬಂದರೆ ಸುಮ್ಮನಿರುವದಿಲ್ಲ. ‘ವೃಶ್ಚಿಕ’ ರಾಶಿಯವರಿಗೂ ತಮ್ಮ ಕೊಂಡಿಯ ಪರಿಚಯವನ್ನು ಮಾಡಿಕೊಡುತ್ತವೆ. ದೊಡ್ಡಾಸ್ಪತ್ರೆಯ ಡಾಕ್ಟರರೂ ನಾಚುವಂತೆ ಇಂಜೆಕ್ಷನ್ ಮಾಡಿ ಔಷಧಿಯನ್ನು ಒಳ ಸೇರಿಸುತ್ತವೆ. +ಚೇಳನ್ನು ಕಚ್ಚಿಸಿಕೊಳ್ಳದ ಗಂಡುಗಲಿ (ಅಥವಾ ಹೆಣ್ಣುಹುಲಿ) ಆ ಊರಲ್ಲಿ ಯಾರೂ ಇಲ್ಲ. ತೊದಲು ನುಡಿ ಕಲಿಯುವದಕ್ಕೆ ಮುಂಚೆಯೇ ಮಕ್ಕಳಿಗೂ ಚೇಳಿನ ಕರಾಮತ್ತಿನ ಪರಿಚಯವಾಗಿರುತ್ತದೆ. ಹರಿದಾಡುವ ಚೇಳನ್ನು ಆಟಿಗೆ ಸಾಮಾನೆಂದು ಮಗು ಎಳೆದುಕೊಳ್ಳದಂತೆ ತಾಯಂದಿರು ಎಚ್ಚರ ವಹಿಸುತ್ತಾರೆ. ಹೊಸದಾಗಿ ಮದುವೆಯಾಗಿ ಬಂದ ಪರ ಊರಿನ ಹೆಣ್ಣುಮಗಳಿಗೆ ಮೊದಲ ಬಾರಿಗೆ ಚೇಳು ಕಡಿದು ಅವಳು ಲಬೋ ಲಬೋ ಹೊಡೆದು ಕೊಳ್ಳುವಾಗ ಹೆಂಗಸರೆಲ್ಲಾ ಕುವಾಡ ಮಾಡಿ “ಈವೊತ್ತು ಖರೇವಂದ್ರೂ ನಮ್ಮೂರಿನ ಹುಡುಗಿ ಆದಿ ನೋಡು…” ಎಂದು ನಗಾಡುತ್ತಾರೆ. ಊರಿಂದ ಬಂದ ನೆಂಟರಿಗೆ ಚೇಳು ಕುಟಿಕಿದಾಗ “ಅಂತೂ ನಮ್ಮೂರಿಂದ ಉಡುಗೊರಿ ಇಲ್ಲದೇ ಯಾರೂ ಹೋಗಂಗಿಲ್ಲ ನೋಡ್ರಿ…” ಎಂದು ಊರಿನ ಮಹಿಮೆಯನ್ನು ಕೊಂಡಾಡುತ್ತಾರೆ. +ದುರ್ಗಮ್ಮನ ಗುಡಿಯ ಹತ್ತಿರದ ಬೇವಿನ ಮರದ ಬುಡದಲ್ಲಿ ಗುಡಿಸಲಿನಲ್ಲಿ ವಾಸಿಸುವ ವೆಂಕಮ್ಮನೆಂಬ ಒಂಟಿ ಜೀವಕ್ಕೂ, ಚೇಳುಗಳಿಗೂ ಬಿಡಿಸದ ನಂಟು. ಡ್ರಾಯಿಂಗ್ ಮಾಸ್ತರ ಹುಲಿಕುಂಟೆಪ್ಪನ ಬಳಿ ಚೇಳಿನ ಸುಂದರ ಚಿತ್ರವನ್ನು ಬಿಡಿಸಿಕೊಂಡು, ಅದಕ್ಕೆ ಕಟ್ಟು ಹಾಕಿಸಿ ತನ್ನ ಮನೆಯ ಗೋಡೆಗೆ ನೇತು ಹಾಕಿದ್ದಾಳೆ. ಮನೆಯ ಮುಂದೆ ಅಂಗಳದಲ್ಲಿ ದಿನ ನಿತ್ಯ ವಿಭಿನ್ನ ಬಗೆಯ ಚೇಳಿನ ರಂಗವಲ್ಲಿಗಳನ್ನು ಹಾಕುತ್ತಾಳೆ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವಾಗ ಭಕ್ತಿಯಿಂದೊಮ್ಮೆ ಚೇಳನ್ನು ಪ್ರಾರ್ಥಿಸುತ್ತಾಳೆ. ಚೇಳು ವಿಶ್ವರೂಪದರ್ಶನವನ್ನು ಕೊಟ್ಟಾಗ ಕೈ ಮುಗಿದು ‘ಕಾಪಾಡಪ್ಪ ತಂದೆ’ ಎನ್ನುತ್ತಾಳೆ. ಹಾಗೆ ಕೈಮುಗಿದಾಗ ಅವಳ ಅಂಗೈ ಮೇಲಿರುವ ಚೇಳಿನ ಹಚ್ಚೆಯ ಚಿತ್ರ ನಿಜವಾದ ಚೇಳನ್ನು ನೋಡಿ ಕಣ್ಣು ಹೊಡೆಯುತ್ತದೆ. ವರ್ಷಕ್ಕೊಮ್ಮೆ ಬರುವ ಚೇಳಿನ ಅಮವಾಸ್ಯೆಯ ದಿನ ಉಪವಾಸ ಮಾಡಿ, ಸಂಜೆಗೆ ಊರಿನವರಿಗೆ ಪಾನಕ ಬೇಳೆಯನ್ನು ಹಂಚುತ್ತಾಳೆ. +ವೆಂಕಮ್ಮನ ದ್ವೇಷವನ್ನು ಕಟ್ಟಿಕೊಂಡು ಬದುಕಲು ಆ ಊರಲ್ಲಿ ಸಾಧ್ಯವಿಲ್ಲ. ದಾರಿಯಲ್ಲಿ ಎದುರಾದರೆ “ಬೇಸಿದ್ದೀಯೇನು ವೆಂಕಮ್ಮ…” ಎನ್ನದೆ ಯಾರೂ ಮುಂದಕ್ಕೆ ಹೋಗುವದಿಲ್ಲ. ತರಕಾರಿ ಮಾರುವವರು ಒಂದಿಷ್ಟು ತರಕಾರಿಗಳನ್ನು ಅವಳಿಗೆ ಪುಕ್ಕಟ್ಟೆ ಕೊಡದೆ ವ್ಯಾಪಾರಕ್ಕಿಳಿಯುವದಿಲ್ಲ. ಧವಸ-ಧಾನ್ಯ ಬೆಳೆಯುವ ರೈತರು ಸುಗ್ಗಿಯ ಕಾಲಕ್ಕೆ ವೆಂಕಮ್ಮನಿಗೆ ವರ್ಷಕ್ಕಾಗುವಷ್ಟು ಅಕ್ಕಿ-ಬೇಳೆಯನ್ನು ಕೊಟ್ಟ ನಂತರವೇ ತಮ್ಮ ಮನೆಯಲ್ಲಿ ಮೊದಲ ಅನ್ನವನ್ನು ಮಾಡುತ್ತಾರೆ. ಸರಕಾರಿ ಕೆಲಸದಲ್ಲಿರುವವರು ಅವಳ ಬಟ್ಟೆ ಬರೆ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ಯಾರ ಮನೆಯಲ್ಲಿಯೇ ಶುಭ ಕಾರ್ಯವಾಗಲಿ, ವೆಂಕಮ್ಮನನ್ನು ಊಟಕ್ಕೆ ಕರೆಯುವದನ್ನು ಮರೆಯುವದಿಲ್ಲ. +ಈ ಎಲ್ಲಾ ಮರ್ಯಾದೆಗಳಿಗೆ ಕಾರಣವೆಂದರೆ, ವೆಂಕಮ್ಮನಿಗೆ ಚೇಳಿನ ಔಷಧಿ ಗೊತ್ತು. ಚೇಳು ಯಾರಿಗೇ ಕಡಿಯಲಿ ತಕ್ಷಣ ಅಲ್ಲಿಗೆ ತನ್ನ ಸಂಚಿಯನ್ನು ಸೊಂಟದ ಬಾಳೆಕಾಯಿಗೆ ಸಿಕ್ಕಿಸಿಕೊಂಡು ಓಡುತ್ತಾಳೆ. ಚೇಳು ಕಚ್ಚಿದ ಭಾಗವನ್ನು ನಾಜೂಕಾಗಿ ಸವರಿ, ತನ್ನ ಉಳುಕಿನ ಕಡ್ಡಿಯಿಂದ ಆ ಭಾಗವನ್ನು ಗುರ್ತು ಮಾಡಿಕೊಳ್ಳುತ್ತಾಳೆ. ಸಂಚಿಯಿಂದ ಎಲೆಗಳನ್ನು ತೆಗೆದು, ಕೈಯಲ್ಲಿ ಹಿಡಿದು, ಕಣ್ಣು ಮುಚ್ಚಿ ಪ್ರಾರ್ಥಿಸಿ, ಸೊಪ್ಪನ್ನು ಗಸಗಸನೆ ಅಂಗೈಯಲ್ಲಿ ತಿಕ್ಕಿ, ಅದರ ರಸವನ್ನು ಚೇಳು ಕಡಿದ ಜಾಗದಲ್ಲಿ ಹಿಂಡಿ, ಉಳಿದ ಸೊಪ್ಪನ್ನು ಆ ಭಾಗಕ್ಕೆ ಸವರಿ ಒದ್ದೆ ಬಟ್ಟೆ ಕಟ್ಟುತ್ತಾಳೆ. ಮನೆಯವರಿಂದ ಕೇಳಿ ಒಂದು ತಂಬಿಗೆ ನೀರು ಮತ್ತು ಒಂದು ಹರಿವಾಣವನ್ನು ತೆಗೆದುಕೊಳ್ಳುತ್ತಾಳೆ. ನೋವು ಕಡಿಮೆಯಾಗುವ ತನಕ ಒಂದೊಂದು ಗುಟುಕು ನೀರು ಬಾಯಲ್ಲಿಟ್ಟುಕೊಂಡು, ಮನಸ್ಸಿನಲ್ಲಿ ಚೇಳಿನ ಮಂತ್ರವನ್ನು ಪಠಿಸಿ, ಆ ನೀರನ್ನು ಬಾಯಿಯಲ್ಲಿಯೇ ಸದ್ದು ಮಾಡುತ್ತಾ ಗಲಗಲಿಸಿ ಆ ಹರಿವಾಣದಲ್ಲಿ ಉಗುಳುತ್ತಾಳೆ. ಚೇಳಿನ ವಿಷ ಇಳಿದಂತೆಲ್ಲಾ ಹರಿವಾಣದಲ್ಲಿನ ನೀರು ಹಸಿರಾಗುತ್ತಾ ಹೋಗುತ್ತದೆ. ಕೊನೆಗೆ ಆ ಹರಿವಾಣದ ನೀರು ತುಳುಕದಂತೆ ತೆಗೆದುಕೊಂಡು ಹೋಗಿ, ಭೂಮಿಯಲ್ಲಿ ಕುಣಿ ತೋಡಿ ಸುರುವಿ, ಮಣ್ಣು ಮುಚ್ಚುತ್ತಾಳೆ. +ಚೇಳಿನ ವಿಷವಿಳಿಸಿದ್ದಕ್ಕೆ ವೆಂಕಮ್ಮ ಹಣ ತೆಗೆದುಕೊಳ್ಳುವದಿಲ್ಲ. ಹಾಗೆ ಹಣ ತೆಗೆದುಕೊಂಡರೆ ಚೇಳಿನ ಔಷಧದ ಮಹತ್ವ ಇಲ್ಲದಂತಾಗುತ್ತದೆಂದು ಎಲ್ಲರಿಗೂ ಹೇಳುತ್ತಾಳೆ. ಅವಳು ಮನೆಗೆ ಹೋಗುವಾಗ ಒಂದಿಷ್ಟು ವೀಳ್ಯದ ಎಲೆ, ಎರಡು ಬೆಟ್ಟಡಿಕೆ, ತುದಿಗೆ ಸುಣ್ಣ ಮತ್ತು ಒಂದು ಬಾಳೆ ಹಣ್ಣು ಮಾತ್ರ ಕೇಳಿ ಪಡೆದುಕೊಳ್ಳುತ್ತಾಳೆ. ಬಾಳೆ ಹಣ್ಣನ್ನು ತಿಂದು, ಎಲೆ ಮತ್ತು ಒಂದು ಅಡಿಕೆಯನ್ನು ಅಲ್ಲಿಯೇ ಹಾಕಿಕೊಂಡು ನಾಲಿಗೆಯನ್ನು ಕೆಂಪಾಗಿಸಿಕೊಂಡು ಮನೆಗೆ ಬರುತ್ತಾಳೆ. ಉಳಿದ ಒಂದು ಅಡಿಕೆ ಬೆಟ್ಟನ್ನು ಅದಕ್ಕಾಗಿಯೇ ಇಟ್ಟ ಡ್ರಮ್ಮಿನೊಳಗೆ ಹಾಕುತ್ತಾಳೆ. ಈಗಾಗಲೇ ಆ ಡ್ರಮ್ಮು ತುಂಬುತ್ತಾ ಬಂದಿದೆ. +ವೆಂಕಮ್ಮನೊಂದಿಗೆ ದ್ವೇಷ ಕಟ್ಟಿಕೊಂಡರೆ ಎಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದೆಂಬುದನ್ನು ವೆಂಕೋಬಾಚಾರ್ಯರಿಂದಲೇ ಕೇಳಿ ತಿಳಿದುಕೊಳ್ಳಬಹುದು. ಮಹಾಬ್ರಾಹ್ಮಣನಾದ ಈ ಆಚಾರಿಗೆ ಐವತ್ತು ದಾಟಿದರೂ ಚೇಳು ಕಡೆದಿರಲಿಲ್ಲ. ತಮ್ಮ ಮನೆಯಲ್ಲಿ ಉಗ್ರ ನರಸಿಂಹ ಸಾಲಿಗ್ರಾಮ ಇರುವದಾಗಿಯೂ, ಅದನ್ನು ಪೂಜೆ ಮಾಡುವದರಿಂದ ಯಾವುದೇ ಚೇಳು, ಹಾವುಗಳಂತ ಯಃಕಶ್ಚಿತ್ ಹುಳುಗಳು ತಮ್ಮನ್ನೇನೂ ಮಾಡಲಾರವೆಂದೂ ಎಲ್ಲರ ಮುಂದೆ ಜಂಭ ಕೊಚ್ಚಿಕೊಳ್ಳುತ್ತಿದ್ದರು. ಆದ್ದರಿಂದ ವೆಂಕಮ್ಮನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ದಾರಿಗೇನಾದರೂ ಅಡ್ಡ ಬಂದರೆ “ಹಾದಿ… ಹಾದಿ…” ಎಂದು ಗದರಿಸುವ ಧ್ವನಿಯಲ್ಲಿ ಕೂಗುತ್ತಿದ್ದರು. ವೆಂಕಮ್ಮನಿಗೆ ಅವಮಾನವಾದಂತಾಗಿ “ಭಟ್ಟ, ಒಂದಿನ ಮಾಡ್ತೀನಿ ತಡಿ” ಎಂದು ಹಲ್ಲು ಹಲ್ಲು ಕಡಿಯುತ್ತಿದ್ದಳು. +ವೆಂಕಮ್ಮನ ಮುಂದೆ ದೇಹಿ ಎನ್ನುವ ಕರಾಳ ದಿನವೊಂದು ಬಂದೇ ಬಿಟ್ಟಿತು. ಆವತ್ತು ದ್ವಾದಶಿ. ಎರಡು ಏಕಾದಶಿ ನಿರಾಹಾರ ಮಾಡಿ ಕಂಗೆಟ್ಟಿದ್ದ ಆಚಾರ್ಯರು ಬೆಳಿಗ್ಗೆ ಬೆಳಿಗ್ಗೆಯೇ ಭಾವಿಯ ಮೇಲೆ ಸ್ನಾನ ಮಾಡಿ ದೇವರ ಪೂಜೆಗೆ ಸಿದ್ಧರಾದರು. ಧೋತ್ರವನ್ನು ಉಟ್ಟುಕೊಳ್ಳುವ ವ್ಯವಧಾನವೂ ಇಲ್ಲದೆ, ಒದ್ದಿಯಾದ ಸಣ್ಣಂಗ ವಸ್ತ್ರವನ್ನು ಸುತ್ತಿಕೊಂಡೇ ದೇವರ ಕಟ್ಟೆಯನ್ನು ಹತ್ತಿದರು. ಪತ್ನಿ ರುಕ್ಮಿಣಮ್ಮನ ಅಡಿಗೆಯ ಸುವಾಸನೆ ನಾಸಿಕಾಗ್ರಗಳನ್ನು ಅರಳಿಸುತ್ತಿತ್ತು. ಸಂಧ್ಯಾವಂದನೆಯನ್ನು ಮಾಡಿದ ಆಚಾರ್ಯರು, ದೇವರಿಗೂ ಸ್ನಾನ ಮಾಡಿಸಲೆಂದು ಸಾಲಿಗ್ರಾಮವನ್ನಿಡುವ ಸಂಪುಟವನ್ನು ತೆರೆದದ್ದೇ ತಡ, ಬುಳುಬುಳು ಎಂದು ಮೈಮೇಲೆಲ್ಲಾ ಚಿಕ್ಕ ಚಿಕ್ಕ ಚೇಳುಗಳು ಏರಿಬಿಟ್ಟವು. ಪ್ರಾಣಂತಿಕವಾಗಿ ಕೂಗುತ್ತಾ ಪಡಸಾಲೆಗೆ ಬಂದ ಆಚಾರ್ಯರು ಥೈ ಥೈ ಎಂದು ಕುಣಿಯಲಾರಂಭಿಸಿದರು. ಮೈಮೇಲೇರಿದ್ದ ಚೇಳುಗಳನ್ನು ಇರುವೆಗಳನ್ನು ಹೊಸಕಿ ಹಾಕಿದಂತೆ ತಿಕ್ಕಲಾರಂಭಿಸಿದವು. ಚೇಳುಗಳು ಬಿಟ್ಟಾವೆಯೆ? ಸಿಕ್ಕ ಸಿಕ್ಕ ಕಡೆಗಳಲ್ಲಿ ಕಚ್ಚಿ ಬಿಟ್ಟವು. ಅಮ್ಮನ ಹೊಟ್ಟೆಯೊಡೆದು ಎರಡು ದಿನಗಳ ಹಿಂದಷ್ಟೇ ಹೊರ ಬಂದಿದ್ದ ನಲವತ್ತಕ್ಕೂ ಹೆಚ್ಚು ಚೇಳುಗಳು, ಹೊಸತಾಗಿ ಸೈಕಲ್ ಸವಾರಿ ಕಲಿತುಕೊಂಡ ಬಾಲಕರಂತೆ ಮೈಮೇಲೆಲ್ಲಾ ಹರಿದಾಡಿದವು. ತಮ್ಮ ಪುಟ್ಟಮ್ಮ ಕೊಂಡಿಗಳಿಗೆ ಮೊದಲ ರಂಗಪ್ರವೇಶವನ್ನು ಮಾಡಿಸಿಕೊಟ್ಟವು. +ರುಕ್ಮಿಣಮ್ಮಗೆ ಗಂಡನನ್ನು ಹೇಗೆ ನಿಭಾಯಿಸಬೇಕೋ ಗೊತ್ತಾಗದಂತಾಯ್ತು. ಹತ್ತಿರ ಹೋದರೆ ತಮ್ಮ ಮೈಗೂ ಚೇಳುಗಳು ಏರಿಯಾವೆಂಬ ಭಯ. ಸೀದಾ ದುರ್ಗಮ್ಮನ ಗುಡಿಗೆ ಏದುಸಿರು ಬಿಡುತ್ತಾ ಓಡಿ ಹೋಗಿ “ಬಾರವ್ವ ವೆಂಕಮ್ಮ, ಬಾರವ್ವ…” ಎಂದು ಕೂಗಿ ಕರೆದುಕೊಂಡು ಬಂದಳು. ವೆಂಕಮ್ಮ ಮನೆಗೆ ಬರುವ ವೇಳೆಗಾಗಲೇ ಆಚಾರ್ಯರು ಉಟ್ಟ ಸಣ್ಣಂಗವಸ್ತ್ರವನ್ನೂ ಕಿತ್ತೊಸೆದು ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದರು. ಹರಿದಾಡುತ್ತಿದ್ದ ಸಣ್ಣ ಸಣ್ಣ ಚೇಳುಗಳನ್ನು ನೋಡಿದ್ದೇ ವೆಂಕಮ್ಮನಿಗೆ ಪರಿಸ್ಥಿತಿ ಅರ್ಥವಾಯ್ತು. ಸಂಚಿಯಿಂದ ಸೊಪ್ಪನ್ನು ತೆಗೆದು ರಸ ಹಿಂಡಿದ್ದೇ ಇಡೀ ಮೈಗೆ ಹಚ್ಚಿದಳು. ಆಚಾರ್ಯರ ಮೂರು ನಾಲ್ಕು ಧೋತ್ರಗಳನ್ನು ಪಡೆದುಕೊಂಡು ಇಡೀ ಮೈಯನ್ನು ಅದರಿಂದ ಸುತ್ತಿದಳು. ಬಿಳಿಯ ಬಟ್ಟೆಗಳಲ್ಲಿ ಸುತ್ತಿಸಿ ಮಲಗಿಸಿದ ತನ್ನ ಗಂಡನನ್ನು ನೋಡಿ ರುಕ್ಮಿಣಮ್ಮಗೆ ಬರಬಾರದ ಆಲೋಚನೆಗಳೆಲ್ಲಾ ಬಂದವು. ಆ ದಿನದ ಹರಿವಾಣದ ನೀರು ಕಾಡು ಹಸಿರು ಬಣ್ಣವನ್ನು ತಾಳಿತ್ತು. ಅಂತೂ ರುಕ್ಮಿಣಮ್ಮನ ಮಾಂಗಲ್ಯಕ್ಕೆ ಅದೃಷ್ಟ ಕೈಕೊಡಲಿಲ್ಲ. ಆಚಾರ್ಯರ ಕೈಗೆ ಸಿಗದ ಕೆಲವು ಚೇಳುಗಳು ಮನೆಯ ಸಂದುಗೊಂದುಗಳಲ್ಲಿ ಸೇರಿಕೊಂಡು ಪ್ರಾಣ ಉಳಿಸಿಕೊಂಡವು. ಹೊಟ್ಟೆಯೊಡೆದು ಹೊರ ಹಾಕಿದ ಅವರಮ್ಮನ ವಂಶ ನಿರ್ವಂಶವಾಗದಂತೆ ನೋಡಿಕೊಂಡವು. +ಸಾಯಂಕಾಲದೊಳಗೆ ಇಡೀ ಊರಿನ ಎಲ್ಲಾ ಮನೆಗಳಿಗೂ ಹೋದ ವೆಂಕಮ್ಮ, “ಎಂಕೋಬಾಚಾರ್ಯರ ಮೈಮೇಲೆ ಒಂದು ಗುಲುಗುಂಜಿಯಷ್ಟು ಜಾಗಾನೂ ಬಿಡದಂಗೆ ಔಷಧಿ ಹಚ್ಚಿ ಬಂದೆ” ಎಂದು ಹೇಳಿಕೊಂಡು ಬಂದಳು. ವೆಂಕೋಬಾಚಾರ್ಯರನ್ನು ಮಾತನಾಡಿಸಲು ಹೋದ ಪ್ರತಿಯೊಬ್ಬರೂ “ವೆಂಕಮ್ಮ ಮೈಗೆಲ್ಲಾ ರಸ ಹಚ್ಚಿದಳಂತಲ್ಲಾ…” ಎಂದು ಏನೂ ವಿಶೇಷವಲ್ಲವೆಂಬಂತೆ ಹೇಳಿ ಆಚಾರ್ಯರನ್ನು ಭೂಮಿಗಿಳಿಸಿ ಬಂದರು. +ಮರುದಿನ ದೇವರ ಪೂಜೆಯ ಕಟ್ಟೆ ಹತ್ತಲೂ ವೆಂಕೋಬಾಚಾರ್ಯರು ಗಡಗಡ ನಡುಗಲಾರಂಭಿಸಿದರು. ರುಕ್ಮಿಣಮ್ಮನ ಹತ್ತಿರ “ವೆಂಕಮ್ಮನ್ನ ಕರಕೊಂಡು ಬಾರೆ” ಎಂದು ಅಂಗಲಾಚಿದರು. ವೆಂಕಮ್ಮ ಬಂದಾಗ ಅವಳನ್ನು ದೇವರ ಮನೆಯಲ್ಲಿ ಹೇಗಪ್ಪಾ ಕರೆದುಕೊಳ್ಳುವುದು ಎನ್ನುವ ಸಂಕಟ ಒಂದು ಕಡೆ, ಸಾಲಿಗ್ರಾಮವಿರುವ ಸಂಪುಟಕ್ಕೆ ಕೈಹಾಕಬೇಕಾದ ಸಂಕಟ ಮತ್ತೊಂದು ಕಡೆ. “ಏನೂ ಆಗಂಗಿಲ್ಲೇಳ್ರೀ ಆಚಾರ್ಯರೆ. ಡಬ್ಬಾ ತೆಗೀರಿ. ನಾನು ಎದುರೀಗೇ ನಿಂತೀನಲ್ಲ. ನರಸಿಂಹ ಸ್ವಾಮಿ ಕಲ್ಲು ಅಂತೀರಿ. ಸಿಂಹದ ಬದಲು ಚೇಳು ಬಂದು ಕೂತಿರೋದು ನಿಮ್ಮ ನಸೀಬ ಅಂದ್ಕೊಳ್ರಿ” ಎಂದು ಹುರುದುಂಬಿಸಿದಳು. ಆಚಾರ್ಯರು ನಡಗುವ ಕೈಯಲ್ಲಿ ಸಂಪುಟವನ್ನು ತೆರೆದರು. ಪುಣ್ಯಕ್ಕೆ ಚೇಳಿರಲಿಲ್ಲ. ತಾವೇ ತೊಳೆದು ಒರೆಸಿ ಮುಚ್ಚಿಟ್ಟ ಆ ಬೆಳ್ಳಿ ಸಂಪುಟದಲ್ಲಿ ಅದು ಹೇಗೆ ಅಷ್ಟೊಂದು ಚೇಳುಗಳು ಬಂದು ಸೇರಿಕೊಂಡವೋ? ಅವರು ಪೂಜೆ ಮಾಡುವ ಆ ಉಗ್ರ ನರಸಿಂಹನಿಗೇ ಗೊತ್ತು. ಆ ಘಟನೆಯ ನಂತರ ಆಚಾರ್ಯರು ಎಲ್ಲೇ ವೆಂಕಮ್ಮ ಎದುರಾದರೂ ಹಾದಿ ಬಿಟ್ಟು ನಿಲ್ಲುತ್ತಾರೆ. “ದೇವರ ಪೂಜಿ ಪಸಂದಾಗಿ ನಡೀತಾ ಐತಾ ಆಚಾರ್ರೇ?” ಎಂದು ವೆಂಕಮ್ಮ ಪ್ರಶ್ನೆ ಮಾಡುತ್ತಾಳೆ. “ಹೂಂನಮ್ಮ” ಎಂದು ವಿಧೇಯರಾಗಿ ಉತ್ತರಿಸುತ್ತಾರೆ. +ವೆಂಕಮ್ಮಗೆ ಆಗಲೇ ಕೂದಲು ನೆರೆತಿವೆ. ಹದಿನಾರು ವರ್ಷಕ್ಕೆ ಮದುವೆ ಮಾಡಿಕೊಂಡು ಈ ಊರಿಗೆ ಕಾಲಿಟ್ಟಾಗ ಅವಳು ಚೇಳನ್ನೇ ಕಂಡಿರಲಿಲ್ಲ. ಪಡಿ ಎಡವಿ ಮನೆಗೆ ಬಂದ ರಾತ್ರಿ ಗಂಡಹೆಂಡಿರಿಬ್ಬರನ್ನೂ ಕೂಡಿಸಿ ಆರತಿ ಮಾಡಿದ ಮೇಲೆ ದೊಡ್ಡ ತಾಮ್ರದ ಕೊಡದಲ್ಲಿ ಅಕ್ಕಿಯನ್ನು ಸುರುವಿ, ಅದರೊಳಗೆ ಬಂಗಾರದ ಉಂಗುರವನ್ನು ಬಚ್ಚಿಟ್ಟು ಇಬ್ಬರಿಗೂ ಹುಡುಕಲು ಹೆಂಗೆಳೆಯರು ಹೇಳಿದ್ದರು. ಆ ಚಿಕ್ಕ ಕಂಠದ ಕೊಡದಲ್ಲಿ ಒಬ್ಬರಿಗೊಬ್ಬರು ಕೈ ತಾಕಿಸಿಕೊಳ್ಳುತ್ತಾ, ಕೆಂಪೇರುತ್ತಾ, ಉಂಗುರವನ್ನು ಹುಡುಕುವದನ್ನು ಬೇಕೆಂತಲೇ ನಿಧಾನ ಮಾಡಿಬಿಟ್ಟರು. ಮದಲಿಂಗ ಕೊಮ್ಮಣ್ಣ ಅವಳ ಕೈಯನ್ನು ಚಿವುಟಲಾರಂಭಿಸಿದ. ವೆಂಕಮ್ಮ ಸರಸದಲ್ಲಿ ಕಡಿಮೆಯೆ? ಅವಳೂ ಜೋರಾಗಿಯೇ ಚಿವುಟಿದಳು. ಹಾಗೇ ಅವರಿಬ್ಬರ ಚಿವುಟುವ ಆಟ ಮುಂದುವರೆದಿತ್ತು. ಆದರೆ ಒಮ್ಮೆಲೇ ಪ್ರಾಣವೇ ಹೋಗುವಂತೆ ಕೊಮ್ಮಣ್ಣ ಚಿವುಟಿದಾಗ “ಅಯ್ಯಯಪ್ಪೋ…” ಎಂದು ವೆಂಕಮ್ಮ ಕೈಯನ್ನು ಹೊರತೆಗೆದುಕೊಂಡಳು. ಅವಳ ಬೆರಳ ತುದಿಗೆ ಕಚ್ಚಿಕೊಂಡಿರುವಂತೆಯೇ ಒಂದು ಹಚ್ಚನೆಯ ಚೇಳೂ ಹೊರಬಂತು! ಅಲ್ಲಿಯವರೆಗೆ ಮಾಡುತ್ತಿದ್ದ ಮದಲಗಿತ್ತಿಯ ಬಿಂಕ-ಬಡಿವಾರಗಳನ್ನು ಬದಿಗಿಟ್ಟು, ಥೈ ಥೈ ಎಂದು ಕುಣಿದು ಕೈಯಿಂದ ಚೇಳನ್ನು ಜಾಡಿಸಿದಳು. ಪುಣ್ಯಕ್ಕೆ ಚೇಳು ಬಾಯಿಂದ ಬೆರಳನ್ನು ಹಿಡಿದುಕೊಂಡಿತ್ತೇ ಹೊರತು, ಕೊಂಡಿ ಪ್ರವೇಶವನ್ನು ಮಾಡಿರಲಿಲ್ಲ. ಇವಳು ಕೈ ಕೊಡವಿದಾಗ ಚೇಳು ಇವರ ಮುಂದೆ ನಿಂತು ನೋಡುತ್ತಿದ್ದ ಜನರ ಮಧ್ಯೆದಲ್ಲಿ ಬಿತ್ತು. ರಥದ ಮುಂದೆ ತೆಂಗಿನಕಾಯಿಯನ್ನು ಒಡೆದಾಗ ಅದರ ಹೋಳುಗಳನ್ನು ಆರಿಸಿಕೊಳ್ಳಲು ನುಗ್ಗುವಂತೆ ಚಿಳ್ಳೆ-ಪಳ್ಳೆಗಳು ನುಗ್ಗಿ ಚೇಳನ್ನು ಬರಿಗಾಲಿನಲ್ಲಿಯೇ ಚಿಂದಿ ಮಾಡಿದರು. ಆ ರಾತ್ರಿ ಶೋಭಾನದ ಕೋಣೆಯಲ್ಲಿಯೂ ಚೇಳನ್ನು ನೆನೆಸಿಕೊಂಡು ಸಣ್ಣಗೆ ನಡಗುತ್ತಿದ್ದಳು. ಕೊಮ್ಮಣ್ಣ ಹಗೂರಕ್ಕೆ ಅವಳನ್ನು ತೆಕ್ಕೆಯಲ್ಲಿ ತೆಗೆದುಕೊಂಡು ಸಮಾಧಾನ ಮಾಡಿ, ತನ್ನ ಬೆರಳುಗಳನ್ನು ಹೆಣಿಕೆ ಹಾಕಿ ಅವಳ ಮೈಯ ಸಂದುಗೊಂದುಗಳಲ್ಲಿ ಕಚಗುಳಿ ಇಟ್ಟು “ಚೇಳು ಅಲ್ಲಿ ಬಂತು, ಚೇಳು ಇಲ್ಲಿ ಬಂತು…” ಎಂದು ನಗಿಸುತ್ತಾ ಅವಳನ್ನು ಗೆದ್ದ. +ಒಂದೇ ವರ್ಷದಲ್ಲಿ ವೆಂಕಮ್ಮಗೆ ಚೇಳಿನ ಪರಿಚಯ ಸಾಕಷ್ಟಾಯ್ತು. ಒಮ್ಮೆ ಹೊಲಕ್ಕೆ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋದಾಗ ಚಟ್ಣಿಯಿಡುವ ಸಿಲಾವರ್ ಡಬ್ಬಿಯಲ್ಲಿ ಚೇಳೊಂದನ್ನು ಇಟ್ಟು ಬಿಟ್ಟಿದ್ದಳು. ಯಾವುದೋ ಧ್ಯಾನದಲ್ಲಿ ಡಬ್ಬಿಯನ್ನು ತೆಗೆದ ಕೊಮ್ಮಣ್ಣ “ಇದರವ್ವನಾ…” ಎಂದು ಡಬ್ಬಿಯನ್ನು ಮಾರು ದೂರಕ್ಕೆ ಒಗೆದಿದ್ದ. ವೆಂಕಮ್ಮ ಬಿದ್ದು ಬಿದ್ದು ನಕ್ಕಿದ್ದಳು. ಕೊಮ್ಮಣ್ಣ ಹೆಂಡತಿಯಿಂದ ಆದ ಅವಮಾನ ಸಹಿಸಿಕೊಳ್ಳದೆ ಅವಳನ್ನು ಅಟ್ಟಿಸಿಕೊಂಡು ಹೊಲದ ತುಂಬೆಲ್ಲಾ ಓಡಾಡಿಸಿ, ಅವಳು ಕೈಗೆ ಸಿಕ್ಕಾಗ “ಚೋಳಿಡ್ತೀಯೇನಲೆ ಬೋಕಾಣಿ… ನಿಂಗೆ ಮಾಡ್ತೀನಿ ತಡಿ…” ಎಂದು ಹುಲಿಮುದ್ದುಗರೆದಿದ್ದ. ವೆಂಕಮ್ಮನ ನಗು, ಕೇಕೆಯ ಸದ್ದು ಕುರಿಮಟ್ಟಿ ಗುಡ್ಡ ಪ್ರತಿಧ್ವನಿಸಿತ್ತು. +ವೆಂಕಮ್ಮನ ಹೊಟ್ಟೆಯಲ್ಲಿ ಒಂದು ಮಗು ಅರಳಿದ್ದರೆ ಅವಳ ನಗು-ಕೇಕೆ ಎಡೆಯಿಲ್ಲದಂತೆ ಸಾಗುತ್ತಿತ್ತು. ಮೂರು ವರ್ಷವಾದರೂ ಅವಳ ಹೊಟ್ಟೆ ನಿಲ್ಲಲಿಲ್ಲ. ಕೊಮ್ಮಣ್ಣನ ಅಪ್ಪ-ಅಮ್ಮ ಹಾಹಾಕಾರ ಮಾಡಿಬಿಟ್ಟರು. ಹೋದಲ್ಲಿ ಬಂದಲ್ಲಿ ಮಗುವಿನ ಸುದ್ದಿ ಯಾವ ರೂಪದಲ್ಲಿ ಬಂದರೂ ಸಾಕು, ಸಂಕೋಚದಿಂದ ಹಿಡಿಯಾಗುತ್ತಿದ್ದಳು. ಬಸಿರಿ ಹೆಂಗಸರ ಹೊಟ್ಟೆಯನ್ನು ಆಸೆಗಣ್ಣಿಂದ ನೋಡಲಾರಂಭಿಸಿದಳು. ಬರೀ ಇಷ್ಟೇ ಆಗಿದ್ದರೆ ಹೇಗೋ ಸಹಿಸಿಕೊಂಡಿರಬಹುದಾಗಿತ್ತು. ಆದರೆ ಕೊಮ್ಮಣ್ಣಗೆ ಸಾಧು-ಸಂತರ ಬಗ್ಗೆ ಇನ್ನಿಲ್ಲದ ನಂಬಿಕೆ. ಊರಿಗೆ ಯಾವುದೇ ಸಾಧು ಬಂದರೂ ಸಾಕು, ಹೆಂಡತಿಯನ್ನು ಕರೆದುಕೊಂಡು ಹೋಗಿ, ಅವರ ಕಾಲಿಗೆ ಬೀಳಿಸಿ “ವಂಶ ನಿಲ್ಲೋ ಹಂಗೆ ಮಾಡು ಬಾಬಾ…” ಎಂದು ಬೇಡಿಕೊಳ್ಳುತ್ತಿದ್ದ. ವೆಂಕಮ್ಮ ಕೋರ್ಟಿನ ಕಟಕಟೆಯಲ್ಲಿ ನಿಲ್ಲುವಂತೆ ನಿಲ್ಲುತ್ತಿದ್ದಳು. ಯಾವುಯಾವುದೋ ಸಾಧು ಸನ್ಯಾಸಿಗಳು ಏನೇನೋ ಮಂತ್ರಿಸಿ ಕೊಟ್ಟರಾದರೂ ವೆಂಕಮ್ಮ ಕುಡಿಯೊಡೆಯಲಿಲ್ಲ. ತಿಂಗಳ ತನಕ ಯಾವ ಸನ್ಯಾಸಿಯೂ ಅದೇ ಊರಿನಲ್ಲಿ ನಿಲ್ಲುತ್ತಿರಲಿಲ್ಲವಾದ್ದರಿಂದ ಕೊಮ್ಮಣ್ಣ ಯಾರ ಮುಂದೆ ತನಗಾದ ಅನ್ಯಾಯವನ್ನು ಹೇಳಿಕೊಳ್ಳಬೇಕೋ ಗೊತ್ತಾಗದೆ ಕಂಗೆಡುತ್ತಿದ್ದ. +ಹೀಗಿರುವಾಗಲೇ ಭೈರವ ಬಾಬಾ ಆ ಊರಿಗೆ ಬಂದರು. ಭೈರವ ಬಾಬಾ ಮೌನವ್ರತ ಹಿಡಿದಿದ್ದರು. ಮೂವತ್ತರ ಆಸುಪಾಸಿನ ವಯಸ್ಸು. ಆರಡಿ ಎತ್ತರದ ಅಜಾನುಬಾಹು ಶರೀರ, ಯಾವುದೋ ನಿಗೂಢತೆಯನ್ನು ಸೂಚಿಸುವ ಆಕರ್ಷಕ ಕಣ್ಣುಗಳು, ಚೂಪಾದ ಮೂಗು, ಕಂದು ಬಣ್ಣ, ಕಾವಿ ವೇಷ – ಊರಿನೆಲ್ಲರಿಗೂ ಅವರ ಮೇಲೆ ಗೌರವವನ್ನು ಮೂಡಿಸಿತ್ತು. ದುರ್ಗಮ್ಮನ ಗುಡಿಯಲ್ಲಿ ತಂಗಿದ್ದ ಈ ಬಾಬಾ ಧ್ಯಾನಕ್ಕೆ ಕುಳಿತರೆ ಗಂಟೆಗಟ್ಟಲೆ ಈ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡಿರುತ್ತಿದ್ದರು. ಅವರ ವರ್ಚಸ್ಸನ್ನು ನೋಡಿದ್ದೇ ಕೊಮ್ಮಣ್ಣಗೆ ಮತ್ತೆ ಆಸೆ ಚಿಗುರೊಡೆಯಿತು. ವೆಂಕಮ್ಮನನ್ನು ಕರೆದುಕೊಂಡು ಹೋಗಿ ಕಾಲಿಗೆ ಬೀಳಿಸಿದ. ಬಾಬಾ ವೆಂಕಮ್ಮನನ್ನು ಒಮ್ಮೆ ಇಡಿಯಾಗಿ ನೋಡಿದ. ಅವರ ನೋಟದ ತೀಕ್ಷ್ಣತೆಗೆ ವೆಂಕಮ್ಮ ಸಣ್ಣಗೆ ಬೆವತಳು. ತನ್ನ ಕೈಯಿಂದ ಸಾಧ್ಯವಿಲ್ಲವೆಂದು ಬಾಬಾ ಕೈಯಾಡಿಸಿದರು. ಕೊಮ್ಮಣ್ಣ ಬಿಡಲಿಲ್ಲ. ದಿನನಿತ್ಯ ದುರ್ಗಮ್ಮನ ಗುಡಿಗೆ ಹೋಗಿ ಸೇವೆ ಮಾಡಲಾರಂಭಿಸಿದ. ಅವರು ಮೌನವ್ರತವನ್ನು ಹಿಡಿದಿದ್ದಾರೆಂಬ ವಿಷಯವೇ ಅವನಿಗೆ ಇನ್ನೂ ಹೆಚ್ಚಿನ ನಂಬಿಕೆಯನ್ನು ಅವರ ಮೇಲೆ ಉಂಟು ಮಾಡಿತ್ತು. ಕೊನೆಗೊಂದು ದಿನ ಬಾಬಾ ಮಣಿದರು. ಮೂರು ದಿನ ರಾತ್ರಿ ಹನ್ನೆರಡಕ್ಕೆ ವೆಂಕಮ್ಮನೊಬ್ಬಳೇ ಪೂಜೆಗೆ ಬರಬೇಕೆಂದು ಬರೆದು ತೋರಿಸಿದರು. ಕೊಮ್ಮಣ್ಣಗೆ ಅಷ್ಟೇ ಸಾಕಿತ್ತು – ಮಗ ಹುಟ್ಟಿದಂತೆಯೇ ಸಂಭ್ರಮಿಸಿದ. +ಮೊದಲ ದಿನ ಪೂಜೆಗೆ ಹೋಗಿ ಬೆಳಗಾಗುವದರಲ್ಲಿ ಸುಸ್ತಾಗಿ ಬಂದ ವೆಂಕಮ್ಮ ಮತ್ತೆ ತಾನು ಅಲ್ಲಿಗೆ ಹೋಗುವದಿಲ್ಲವೆಂದು ಹಠ ಹಿಡಿದಳು. ಕೊಮ್ಮಣ್ಣ ಎಗರಾಡಿ ಬಿಟ್ಟ. “ಬೋಸೂಡಿ, ದೇವರು ಬಂದಂಗೆ ಬಾಬಾ ಬಂದಾರೆ. ಇಲ್ಲದ ನಖರಾ ಮಾಡ್ತೀಯಾ? ಬಾಬಾಗೆ ಹೇಳ್ತೀನಿ ನೋಡು. ಶಾಪ ಕೊಟ್ಟರೆ ಸುಟ್ಟು ಬೂದಿಯಾಗ್ತೀಯ…” ಎಂದು ಕೂಗಾಡಿದ. ಎದುರು ಮಾತನಾಡದೆ ವೆಂಕಮ್ಮ ಎರಡನೆಯ ದಿನವೂ ಹೋಗಿ ಬಂದಳು. ಮೂರನೆಯ ದಿನ ಹೋಗುವದಕ್ಕೆ ಹಠ ಮಾಡಲಿಲ್ಲ. ಕೊಮ್ಮಣ್ಣಗೆ ಸಮಾಧಾನವಾದರೂ ಅವಳ ಮೌನ ಒಳಗೊಳಗೆ ಸಂಶಯದ ಕಿಡಿಯನ್ನು ಹೊತ್ತಿಸಿತು. ಬಾಬಾ ಅವನು ಪೂಜೆಯ ಹೊತ್ತಿನಲ್ಲಿ ಬರಲೇ ಬಾರದೆಂದು ಹೇಳಿದ್ದರು. ಆದರೂ ಮನಸ್ಸು ತಡೆಯಲಿಲ್ಲ. +ಅವನು ಊಹಿಸಿದ್ದಂತೆಯೇ ಅಲ್ಲಿ ಕೆಟ್ಟದ್ದೇ ನಡೆಯುತ್ತಿತ್ತು. ಪೂಜೆಯ ಸಾಮಾಗ್ರಿಗಳೆಲ್ಲಾ ಗುಡಿಯ ಪ್ರಾಂಗಣದಲ್ಲಿದ್ದವು. ಕಾವಿ ಬಟ್ಟೆ ಮತ್ತು ಸೀರೆ ಕುಪ್ಪಸಗಳು ಗರ್ಭಗುಡಿಯವರೆಗೆ ಚೆಲ್ಲಾಡಿದ್ದವು. ಗರ್ಭಗುಡಿಯಲ್ಲಿ ಬೆತ್ತಲೆಯ ದೇಹಗಳು ಉರುಳಾಡುತ್ತಿದ್ದವು. ಭೈರವಿ ಬಾಬಾ ಚಪಾತಿ ಹಿಟ್ಟನ್ನು ನಾದುವಂತೆ ವೆಂಕಮ್ಮನನ್ನು ಅನುಭವಿಸುತ್ತಿದ್ದ. ಕತ್ತಲಲ್ಲಿ ಕಣ್ಣನ್ನು ಹೊಂದಿಸಿಕೊಂಡು ನೋಡುತ್ತಾ ನಿಂತ. ತಡೆದುಕೊಳ್ಳಲಾರದಷ್ಟು ಉದ್ರೇಕಗೊಂಡ. ತನಗೆ ಉದ್ರೇಕವಾಗುತ್ತಿದೆ ಎಂದು ಗೊತ್ತಾಗಿ ಎಂಥದೋ ಕಸಿವಿಸಿಯಾಯ್ತು. ಮಾತನಾಡಲು ತೋಚದೆ ಮೂಲೆಯಲ್ಲಿರುವ ಕಂಬಕ್ಕೆ ಸುಸ್ತಾಗಿ ಒರಗಿ ಕುಳಿತ. ಸ್ವಲ್ಪ ಹೊತ್ತಿಗೆ ಸಿಟ್ಟಿನಿಂದ ಮೈ ಅದರುತ್ತಿತ್ತು. ಪ್ರಾಂಗಣದಲ್ಲಿ ಚೆಲ್ಲಿದ್ದ ಅವರ ಬಟ್ಟೆಗಳನ್ನು ಆಯ್ದು ದೇವಸ್ಥಾನದ ಅಂಗಳದಲ್ಲಿ ಹಾಕಿ ಬೆಂಕಿ ಕಡ್ಡಿ ಗೀರಿದ. ಉರಿ ಹತ್ತಿಕೊಂಡು ಕಿಡಿಕಾರಲಾರಂಭಿಸಿದ ತಕ್ಷಣ ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಹಳ್ಳಿಯ ಓಣಿ ಓಣಿಗಳನ್ನು ತಿರುಗಾಡಿದ. “ಬರ್ರಪ್ಪೋ ಬರ್ರಿ… ನನ್ನ ಹೆಂಡ್ತಿ ನಂಗೆ ಮೋಸ ಮಾಡಿ ಬಿಟ್ಟಾಳೆ ನೋಡ ಬರ್ರಪ್ಪೋ…” ಎಂದು ಕೂಗಿ, ಮನೆಗಳ ಬಾಗಿಲುಗಳನ್ನು ಬಡಿದು ಎಬ್ಬಿಸಿದ. ಜನರೆಲ್ಲಾ ಗುಡಿಯ ಮುಂದೆ ಜಮಾಯಿಸಿಬಿಟ್ಟರು. ವೆಂಕಮ್ಮ ಗರ್ಭಗುಡಿಯ ಕತ್ತಲ ಮೂಲೆಯಲ್ಲಿ ನಡಗುತ್ತಾ ಕುಳಿತುಬಿಟ್ಟಳು. ಭೈರವ ಬಾಬಾ ಧ್ಯಾನ ಮಾಡುತ್ತಾ ಮತ್ತೊಂದು ಮೂಲೆಗೆ ಕುಳಿತು ಬಿಟ್ಟ. +ಕೊಮ್ಮಣ್ಣ ಮೈಮೇಲೆ ಆವೇಶ ಬಂದವರಂತೆ “ಬಾರಲೇ ಬೋಳಿಮಗನೆ ಹೊರಗೆ. ಕಂಡವರ ಹೆಂಡಿರ ಕೂಡ ಮಲಗೋನು ನೀನೆಂತಾ ಬಾಬಾ…” ಎಂದು ಅವಾಚ್ಯ ಶಬ್ದಗಳಿಂದ ಕರೆಯಲಾರಂಭಿಸಿದ. ಜನರೆಲ್ಲಾ ಮುಂದೇನಾಗುತ್ತದೋ ಎಂದು ಕುತೂಹಲಿಗಳಾದರು. ಧ್ಯಾನದಲ್ಲಿದ್ದ ಬಾಬಾ ಕಣ್ಣು ತೆರೆದರು. ವೆಂಕಮ್ಮನ ಕಡೆಯೊಮ್ಮೆ ನೋಡಿ, ಹೊರಗೆ ನಿಧಾನ ನಡಿಗೆಯಲ್ಲಿ ಬೆತ್ತಲೆಯಾಗಿಯೇ ಹೊರಬಂದರು. ಅವರ ಮೇಲೆ ಕೈ ಮಾಡಲು ಕೊಮ್ಮಣ್ಣ ಮುಂದೆ ಬಂದ. ತಮ್ಮ ಬಲಗೈಯಿಂದ ಅವನನ್ನು ನೂಕಿದರು. ಕೊಮ್ಮಣ್ಣ ಮಾರು ದೂರ ಹೋಗಿ ಬಿದ್ದ. ನೂಕಿಸಿಕೊಂಡ ಸಂಕಟದಲ್ಲಿ “ಹೊಡಿರಲೇ ಆ ಕಳ್ಳಸನ್ಯಾಸಿನ್ನ…” ಎಂದು ಅಳುಬುರುಕು ಧ್ವನಿಯಲ್ಲಿ ಕೂಗಿಕೊಂಡ. ಜನರು ಮಾತ್ರ ಬಾಬಾನ ಮೇಲೆ ಕೈಮಾಡುವ ಧೈರ್ಯವನ್ನು ತೋರಿಸಲಿಲ್ಲ. ಎಷ್ಟೋ ಜನ ಬಾಬಾಗೆ ಕೈ ಮುಗಿದುಕೊಂಡೇ ನಿಂತು ಬಿಟ್ಟರು. ಭೈರವ ಬಾಬಾ ಮಂದಗತಿಯಲ್ಲಿ ನಡೆಯುತ್ತಾ ಕತ್ತಲಿನಲ್ಲಿ ಮರೆಯಾದರು. +ಬಾಬಾ ಮರೆಯಾದ ನಂತರ ನಾಟಕಕ್ಕೆ ರಂಗೇರಿತು. ವೆಂಕಮ್ಮ ತಮ್ಮ ನಡುವಿನ ಮಾಮೂಲಿ ಹೆಂಗಸಾದ್ದರಿಂದ ಜನ ತಮಗೆ ತೋಚಿದಂತೆ ಮಾತನಾಡಲಾರಂಭಿಸಿದರು. ಅವಳು ಬೆತ್ತಲೆಯಿದ್ದಾಳೆಂಬುದು ಗೊತ್ತಿದ್ದರೂ “ಬಾರೆಲೆ ಬೋಸೂಡಿ ಹೊರಗೆ…” ಎಂದು ಕೊಮ್ಮಣ್ಣ ಕರೆದ. ವೆಂಕಮ್ಮ ಹೊರಬರಲಿಲ್ಲ. ಗರ್ಭ ಗುಡಿಗೆ ನುಗ್ಗಿ ಅವಳನ್ನು ಎಳೆದು ತರುವ ಧೈರ್ಯ ಕೊಮ್ಮಣ್ಣನಿಗಿರಲಿಲ್ಲ. ನೆರೆದ ಜನರ ಮುಂದೆ “ಈವತ್ತಿಗೆ ಈಕಿ ನನ್ನ ಹೆಂಡತಿ ಅಲ್ಲ, ನಾನು ಆಕಿ ಗಂಡ ಅಲ್ಲ” ಎಂದು ಕೊಮ್ಮಣ್ಣ ಸಾರಿ, ನೆಲಕ್ಕೆ “ಹಾದರಗಿತ್ತಿ..” ಎಂದು ಕ್ಯಾಕರಿಸಿ ಉಗಿದು ಹೊರಟು ಹೋದ. ವೆಂಕಮ್ಮ ಹೊರಬರುತ್ತಾಳೇನೋ ಎಂದು ಸಾಕಷ್ಟು ಹೊತ್ತು ಕಾದಿದ್ದ ಜನರು ತಂತಮ್ಮ ಮನೆಗಳಿಗೆ ವಾಪಾಸಾದರು. +ವಿಷಯ ತಿಳಿದಿದ್ದೇ ವೆಂಕಮ್ಮನ ತಂದೆ-ತಾಯಿ ಮರುದಿನ ಬೆಳಿಗ್ಗೆ ಬಂದರು. ಬಸ್ಸಿಳಿದಿದ್ದೇ ಸೀದಾ ದುರ್ಗಮ್ಮನ ಗುಡಿಗೆ ಹೋದರು. ವೆಂಕಮ್ಮ ದುರ್ಗಮ್ಮನ ಸೀರೆಯನ್ನು ಸುತ್ತಿಕೊಂಡು ಕಂಬಕ್ಕೊರಗಿ ಕುಳಿತಿದ್ದಳು. ಅವಳಮ್ಮಗೆ ರೋಷ ಉಕ್ಕಿ ಬಂದಿದ್ದೇ ಮೈ ಕೈ ನೋಡದೆ ರಪರಪನೆ ಬಾರಿಸಿಬಿಟ್ಟರು. ಹೊಡೆದು ಹೊಡೆದು ಸುಸ್ತಾಗಿ ಅವಳ ಮುಂದೆಯೇ ಕುಳಿತು ಅಳಲಾರಂಭಿಸಿದರು. ಅವಳಪ್ಪ ಏನೊಂದೂ ಮಾತನಾಡದೆ ಕಂಬಕ್ಕೊರಗಿ ಕುಳಿತುಕೊಂಡಿದ್ದರು. ಅತ್ತಿದ್ದು ಮುಗಿದ ಮೇಲೆ ಅವಳಮ್ಮ “ಯಾಕೆ ವೆಂಕಿ ಇಂಥಾ ಹೇಲು ತಿನ್ನೋ ಕೆಲಸ ಮಾಡಿದಿ?” ಎಂದು ನೋವಿನಿಂದ ಕೇಳಿದರು. ವೆಂಕಮ್ಮ ಮಾತನಾಡದೆ ಸುಮ್ಮನೆ ಕುಳಿತಿದ್ದಳು. ಅವಳ ಮೌನಕ್ಕೆ ಕಿರಿಕಿರಿಗೊಂಡು “ಬೊಗಳೇ…” ಎಂದು ಘರ್ಜಿಸಿದರು. ವೆಂಕಮ್ಮ “ಹೆಂಗೋ ಏನೋ, ನಂಗೂ ಮಕ್ಕಳು ಆದರೆ ಸಾಕು ಅಂತ ಅನ್ನಿಸಿತ್ತವ್ವಾ…” ಎಂದು ಹೇಳಿದಳು. ಅವಳ ಮಾತಿಗೆ ಅವಳಮ್ಮ ಅಲ್ಲಾಡಿಬಿಟ್ಟಳು. ಮತ್ತೆ ಹೆಚ್ಚು ಹೊತ್ತು ಅಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದವರಂತೆ “ಬರ್ರಿ” ಎಂದು ಗಂಡನನ್ನು ಎಬ್ಬಿಸಿಕೊಂಡು ಹೋದಳು. +ಆ ದಿನ ವೆಂಕಮ್ಮ ಗುಡಿಯಲ್ಲಿಯೇ ಉಳಿದುಕೊಂಡಳು. ಹಸಿವೆಯಾದಾಗ ಹೋಟಲಿನ ಹಿತ್ತಲಿಗೆ ಹೋಗಿ ಮಾಣಿಯನ್ನು “ಒಂಚೂರು ಏನಾರ ತಿನ್ನಾಕೆ ಹಾಕಪ್ಪ…” ಎಂದು ಬೇಡಿಕೊಂಡಳು. ಯಜಮಾನನ ಕಣ್ಣು ತಪ್ಪಿಸಿ ಮಾಣಿ ತಿನ್ನಲು ಕೊಟ್ಟ. “ಹಿಂಗ್ಯಾಕೆ ಮಾಡಿದಿ ವೆಂಕಮ್ಮ. ಎಂಥಾ ಛಂದ ಸಂಸಾರ ಮಾಡಿಕೊಂಡಿದ್ಯಲ್ಲ…” ಎಂದು ಪೇಚಾಡಿದ. ವೆಂಕಮ್ಮ ಬಲಗೈಯಿಂದ ಹಣೆಯ ಮೇಲೆ ರೇಖೆಯನ್ನೆಳೆದು ತೋರಿಸಿದಳು. ಮತ್ತೆ ಹೆಚ್ಚಿಗೆ ಮಾತನಾಡದೆ ದುರ್ಗಮ್ಮನ ಗುಡಿಗೆ ಬಂದು ಅಡ್ಡಾದಳು. ಊರಿನ ಜನರು ಆ ಕಡೆ ಹಣಿಕೆ ಹಾಕಿ ಹಾಕಿ ನೋಡಿಕೊಂಡು ಹೋದರು. ರಾತ್ರಿ ಕತ್ತಲಾಗುತ್ತಿದ್ದಂತೆಯೇ ಹೆದರಿಕೆಯಾಗ ತೊಡಗಿತು. ನಾಳೆಗೆ ಹೇಗೆಂಬ ಚಿಂತೆ ಕಾಡತೊಡಗಿತು. ದುರ್ಗಮ್ಮಗೆ ಕೈ ಮುಗಿದು “ಕಾಪಾಡವ್ವ ತಾಯಿ. ತಪ್ಪಿಗೆ ಶಿಕ್ಷಾ ಮಾಡು, ಆದರೆ ದೀಪ ಆರಿಸಬ್ಯಾಡ” ಎಂದು ಬೇಡಿಕೊಂಡು ಮಲಗಿಕೊಂಡಳು. +ಬೆಳಕು ಹರಿಯುವದಕ್ಕೆ ಮುಂಚೆಯೇ ಯಾರೋ ವೆಂಕಮ್ಮನ ಮೈ ಅಲುಗಾಡಿಸಿದ್ದಕ್ಕೆ ಎಚ್ಚರವಾಯ್ತು. ಯಾರೋ ಗಂಡಸರು ಹತ್ತಿರಕ್ಕೆ ಕುಳಿತಿದ್ದರು. ಯಾರೆಂದು ಗೊತ್ತಾಗದೆ ಹೆದರಿಕೆಯಾಯ್ತು. ಆ ವ್ಯಕ್ತಿ ಅವಳ ಬಾಯಿಯ ಮೇಲೆ ಮೃದುವಾಗಿ ಬೆರಳಿಟ್ಟ. ಮೈಯ ವಾಸನೆಯಿಂದ ಭೈರವಿ ಬಾಬಾ ಎಂದು ಗೊತ್ತಾಯ್ತು. “ಮತ್ತಿನ್ನಾಕಪ್ಪ ಇಲ್ಲಿಗೆ ಬಂದಿ” ಎಂದು ಸಿಡುಕಿದಳು. ಮತ್ತೊಮ್ಮೆ ಮಾತನಾಡಬೇಡವೆಂಬಂತೆ ಅವಳ ಬಾಯಿಯ ಮೇಲೆ ಬೆರಳಿಟ್ಟ. ಈಗ ಮೈತುಂಬಾ ಕಾವಿಯ ಬಟ್ಟೆಯನ್ನು ಹೊದ್ದಿದ್ದ. ವೆಂಕಮ್ಮನನ್ನು ಎಬ್ಬಿಸಿಕೊಂಡು ಕೈ ಹಿಡಿದು ಎಳೆದುಕೊಂಡು ಹೋಗ ತೊಡಗಿದೆ. ವೆಂಕಮ್ಮ ಬಾಬಾ ತನ್ನನ್ನೆಲ್ಲಿ ಕರೆದುಕೊಂಡು ಹೋಗುತ್ತಾನೆಯೋ ಎಂದು ಭಯವಾಗಿ ಕೊಸರಾಡಿದಳು. ಬಾಬಾ ಬಿಡಲಿಲ್ಲ. “ಏನೂ ಆಗುವದಿಲ್ಲ, ಸುಮ್ಮನೆ ಬಾ” ಎನ್ನುವಂತೆ ಸಂಜ್ಞೆ ಮಾಡಿದ. ಸ್ವಲ್ಪ ಧೈರ್ಯ ಬಂದಂತಾಗಿ ವೆಂಕಮ್ಮ ಹಿಂಬಾಲಿಸಿದಳು. +ಬಾಬಾ ಸೀದಾ ಗಂಡಿ ನರಸಿಂಹಸ್ವಾಮಿಗೆ ಕರೆದುಕೊಂಡು ಬಂದ. ಗುಡ್ಡ ಸೀಳಿಕೊಂಡು ಅದರ ಮಧ್ಯದಲ್ಲಿ ನೀರು ಝುಳು ಝುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಅಲ್ಲಿಗೆ ಬರುವ ವೇಳೆಗಾಗಲೇ ಬೆಳಕು ಹರಿದಿತ್ತು. +ಬಾಬಾ ವೆಂಕಮ್ಮನನ್ನು ನೀರಿದ ಮಧ್ಯದಲ್ಲಿರುವ ಒಂದು ಕಲ್ಲಿನ ಮೇಲೆ ಕೂಡಿಸಿದ. ಅವಳಿಂದ ಸ್ವಲ್ಪ ದೂರ ನಡೆದು ಹೋಗಿ, ಅವಳಿಗೆದುರಾಗಿ ಒಂಟಿ ಕಾಲಲ್ಲಿ ನಿಂತ. ತನ್ನ ಹೆಗಲಿಗೆ ಗಂಟು ಕಟ್ಟಿ ಹಾಕಿಕೊಂಡಿದ್ದ ಜೋಳಿಗೆಯನ್ನು ಮರಳೀನ ಮೇಲಿಟ್ಟ. ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಪ್ರಾರ್ಥಿಸಿದ. ನಂತರ ಒಂದೊಂದಾಗಿ ತನ್ನ ಬಟ್ಟೆಗಳನ್ನು ಬಿಚ್ಚಿ ದಡಕ್ಕೆ ಒಸೆದ. ಕೊನೆಗೆ ಕೌಪೀನ ಒಂದೇ ಉಳಿಯಿತು. ಅವಳೆಡೆಗೆ ಒಮ್ಮೆ ನೋಡಿ, ಆ ಕೌಪೀನವನ್ನು ಬಿಸಿಟು ಬೆತ್ತೆಲೆಯಾಗಿ ನಿಂತ. “ಇದೇನು ನಡಿಸಾನೆ ಈ ಬಾಬಾ ಮತ್ತೆ…” ಎಂದು ವೆಂಕಮ್ಮ ಮನಸ್ಸಿನಲ್ಲಿ ಜರಿದುಕೊಂಡಳು. ಕತ್ತಲಿನಲ್ಲಿ ಸ್ಪರ್ಶಕ್ಕೆ ಮಾತ್ರ ಸಿಕ್ಕಿದ್ದ ಅವನ ಬೆತ್ತಲೆಯನ್ನು ಬೆಳಕಿನಲ್ಲಿ ಮೆಚ್ಚುಗೆಯಿಂದ ನೋಡಿದಳು. +ಬಾಬಾ ದಡಕ್ಕೆ ಹೋಗಿ ತನ್ನ ಜೋಳಿಗೆಯ ಗಂಟನ್ನು ತಂದ. ನೀರಿನ ಮಧ್ಯದಲ್ಲಿ ನಿಂತು, ಮತ್ತೊಮ್ಮೆ ಕಣ್ಣು ಮುಚ್ಚಿ ಪ್ರಾರ್ಥಿಸಿ, ಗಂಟನ್ನು ಬಿಚ್ಚಿ, ಅದರಲ್ಲಿದ್ದದ್ದನ್ನೆಲ್ಲಾ ತನ್ನ ತಲೆಯ ಮೇಲೆ ಸುರುವಿಕೊಂಡ. +ವೆಂಕಮ್ಮ ಸಣ್ಣಗೆ ಕಿರುಚಿದಳು! +ದೊಡ್ಡ ದೊಡ್ಡ ಕಬ್ಬಿಣದ ಚೇಳುಗಳು ಮೈಮೇಲೆ ಜೇನು ಹುಳುಗಳು ಗೂಡನ್ನು ಮುತ್ತುವಂತೆ ಮುತ್ತಿದವು. ದೇಹದ ಭಾಗಗಳೊಂದನ್ನು ಬಿಡದಂತೆ ಅವನ ಮೈಯೆಲ್ಲಾ ಹಬ್ಬಿಕೊಂಡವು. ನೀರಿಗೆ ಬಿದ್ದ ಚೇಳುಗಳು ಈಜಿ ಮತ್ತೆ ಬಾಬಾನ ಮೈ ಏರಿದವು. ಬಾಬಾ ಕಣ್ಣು ಮುಚ್ಚಿಕೊಂಡಿದ್ದ. ಅವನ ಚರ್ಮದ ಬಣ್ಣ ಕಪ್ಪೆನ್ನುವಂತೆ ಚೇಳುಗಳು ಹರಿದಾಡಿದವು. ಅವುಗಳನ್ನು ರೇಗಿಸುವ ಉದ್ದೇಶದಿಂದ ಬಾಬಾ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದ. ನೀರಿನ ಸ್ಪರ್ಶಕ್ಕೆ ಕೆರಳಿದ ಚೇಳುಗಳು ಅವನನ್ನು ಕಂಡಲ್ಲಿ ಕಚ್ಚಲಾರಂಭಿಸಿದವು. ಕೊಂಡಿ ಎತ್ತಿ ಎತ್ತಿ ಚುಚ್ಚುತ್ತಿರುವುದು ದೂರದಲ್ಲಿದ್ದ ವೆಂಕಮ್ಮನಿಗೂ ಕಾಣುತ್ತಿತ್ತು. ಅಪರೂಪಕ್ಕೆ ಚೇಳುಗಳು ವಿರಳವಾಗಿ ಚರ್ಮ ಕಾಣಿಸಿದರೆ, ಆ ಭಾಗ ಕೆಂಪಾಗಿ ಕಾಣುತ್ತಿತ್ತು. ದೊಡ್ಡದೊಂದು ನೇರಳೆಹಣ್ಣನ್ನು ಅಲ್ಲಲ್ಲಿ ಕಚ್ಚಿದಾಗ ಕೆಂಪನೆಯ ಒಳ ತಿರುಳು ಕಾಣುವಂತೆ ಬಾಬಾನ ಚರ್ಮ ಕಾಣಿಸುತ್ತಿತ್ತು. +ಹತ್ತು ನಿಮಿಷ ತುಟಿ ಪಿಟಕ್ಕೆನ್ನದೆ ನಿಂತ ಬಾಬ ನಂತರ ಒಂದೊಂದಾಗಿ ಆ ಚೇಳುಗಳನ್ನು ಮೈಯಿಂದ ಕಿತ್ತಿ ದೂರಕ್ಕೆ ಎಸೆದ. ಇಡೀ ಚೇಳುಗಳನ್ನು ತೆಗೆದು ಬಿಸಾಕಿದ ಮೇಲೆ ನದಿಯ ದಂಡೆಗೆ ನಡೆದ. ವೆಂಕಮ್ಮನನ್ನು ಕೈ ಸನ್ನೆ ಮಾಡಿ ಕರೆದ. ಹೆದರಿಕೆಯಿಂದಲೇ ಬಾಬಾನ ಬಳಿ ಹೋದಳು. ದಡದಲ್ಲಿದ್ದ ಗಿಡಗಳ ಗುಂಪಿನಲ್ಲಿ ನುಗ್ಗಿದ. ವೆಂಕಮ್ಮನೂ ಅವನ ಹಿಂದೆ ಹೋದಳು. ಅಲ್ಲಿ ಒಂದು ಮೂರೆಲೆಯ ಗಿಡವಿತ್ತು. ಅದರ ಎಲೆಗಳನ್ನು ಪರಪರನೆ ಕಿತ್ತಿ ಅವಳ ಉಡಿಗೆ ಹಾಕಿದ. ಮತ್ತೆ ಹಳ್ಳದ ದಡಕ್ಕೆ ಬಂದು, ಮರಳಿನ ಮೇಲೆ ಬೆರಳಿಂದ ಚೇಳಿನ ಮಂತ್ರವನ್ನು ಬರೆದ. ವೆಂಕಮ್ಮ ಅದನ್ನು ಗಟ್ಟಿಯಾಗಿ ಓದಿದಳು. +ಒಂದೆರಡು ಎಲೆಗಳನ್ನು ಕೈಯಲ್ಲಿ ಹಾಕಿ ತಿಕ್ಕಿ, ರಸವನ್ನು ಮೈಗೆ ಸುರುವಿಕೊಂಡು, ತಿಕ್ಕಿದ ಸೊಪ್ಪಿನಿಂದ ಮೈ ತೀಡಿಕೊಂಡ. ಮಂತ್ರವನ್ನು ಪಠಿಸುತ್ತಾ ಹಳ್ಳದ ನೀರನ್ನು ಬಾಯಲ್ಲಿ ಗಲಗಲಿಸಿ ಉಗುಳಿದ. ವೆಂಕಮ್ಮ ಅಂಜುತ್ತಂಜುತ್ತಲೇ ಉಳಿದ ಸೊಪ್ಪಿನಿಂದ ರಸ ಹಿಂಡಿ ಅವನ ಇಡೀ ಮೈಗೆ ಹಚ್ಚಿದಳು. ಮರಳ ಮೇಲೆ ಬರೆದ ಮಂತ್ರವನ್ನು ಓದುತ್ತಾ, ನೀರನ್ನು ಬಾಯಲ್ಲಿ ಹಾಕಿ ಗಲಗಲಿಸಿ, ಉಗಿದಳು. ನೀರು ಉಗಿದ ಮರಳು ಹಸಿರಾಗತೊಡಗಿತು. +ಒಂದು ಗಂಟೆಯ ನಂತರ ಬಾಬಾನ ಮೈಯ ಬಣ್ಣ ನಿಜ ವರ್ಣಕ್ಕೆ ತಿರುಗಿತು. ಎದ್ದು ಕುಳಿತ ಬಾಬಾ ಸ್ವಲ್ಪ ಹೊತ್ತು ಧ್ಯಾನಿಸಿದ. ನಿಧಾನಕ್ಕೆ ದಡದ ಮೇಲಿದ್ದ ತನ್ನ ವಸ್ತ್ರಗಳನ್ನು ಹಾಕಿಕೊಂಡ. ಜೋಳಿಗೆಯನ್ನು ಜಾಡಿಸಿದ. ಅದಕ್ಕೆ ಇನ್ನೂ ಅಂಟಿದ್ದ ಒಂದೆರಡು ಚೇಳುಗಳು ದೂರಕ್ಕೆ ಬಿದ್ದವು. ವೆಂಕಮ್ಮನ ಬಳಿ ಬಂದು ನಿಂತ. ವೆಂಕಮ್ಮನೂ ಎದ್ದು ನಿಂತಳು. ಅವಳ ಕಾಲಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ. ಅದನ್ನು ನಿರೀಕ್ಷಿಸದ ವೆಂಕಮ್ಮ ಎರಡು ಹೆಜ್ಜೆ ಹಿಂದಕ್ಕೆ ಸರಿದಳು. ಮೇಲಕ್ಕೆದ್ದ ಬಾಬಾ ಅವಳ ಬಳಿ ಬಂದು, ಅವಳ ಎರಡೂ ಕೈಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ತನ್ನ ಕೆನ್ನೆಗೆ ರಪರಪನೆ ಹೊಡೆಸಿಕೊಂಡ. ಅವನ ಕಣ್ಣಲ್ಲಿ ತೆಳುವಾಗಿ ನೀರಿತ್ತು. ಮತ್ತೆ ಹೆಚ್ಚು ಸಮಯ ನಿಲ್ಲದೆ ಅಲ್ಲಿಂದ ಹೊರಟು ಹೋದ. ಮತ್ತೆ ಅವನೆಂದೂ ವೆಂಕಮ್ಮನಿಗೆ ಕಾಣಿಸಿಕೊಳ್ಳಲಿಲ್ಲ. +ವೆಂಕಮ್ಮನ ಬದುಕಿಗೆ ದಾರಿಯಾಯ್ತು. ಬಾಬಾ ಮರೆಯಾದ ಮರುದಿನವೇ ಅವಳ ಚೇಳಿನ ಔಷದಿಯ ಮಹಾತ್ಮೆ ಜನರಿಗೆ ಗೊತ್ತಾಗುವಂತಹ ಪ್ರಸಂಗವೊಂದು ನಡೆಯಿತು. ಸ್ಟೀಲ್ ಸಾಮಾನಿನ ಅಂಗಡಿಯ ಲಕ್ಷ್ಮೀಚಂದ ಲಾಲನ ಏಕೈಕ ಪುತ್ರ ಏಳು ವರ್ಷದ ಪಂಕಜನಿಗೆ ಚೇಳು ಕಚ್ಚಿತು. ಅವನ ಪುಟ್ಟಮ್ಮ ಷೂನಲ್ಲಿ ಕೆಂಪು ಚೇಳೊಂದು ಅಡಗಿ ಕುಳಿತಿತ್ತು. ಆ ದಿನ ಶಾಲೆಗೆ ಹೋಗುವದಿಲ್ಲವೆಂದು ಅವನದು ಒಂದೇ ಹಠ. ಹೊಟ್ಟೆ ನೋವೆಂಬ ಕ್ಷುಲ್ಲಕ ಕಾರಣ ಕೊಟ್ಟ. ಕಮಲಾ ಬೇನ್‌ಳಿಗೋ ತನ್ನ ಗಂಡನಂತೆ ಇವನೂ ಎಲ್ಲಿ ಹೆಬ್ಬಟ್ಟಿನವನಾಗುತ್ತಾನೋ ಎಂಬ ಅಸಹಾಯಕತೆ. ಎರಡು ಬಾರಿಸಿ ಅವನನ್ನು ಶಾಲೆಗೆ ದೊಬ್ಬಿದಳು. ಮನೆಯಿಂದ ಹತ್ತು ಹೆಜ್ಜೆ ಇಡುವದರಲ್ಲಿ ಹುಡುಗ ಷೂ ಕಚ್ಚುತ್ತೆ ಅಂತ ಹಠ ಶುರು ಮಾಡಿದ. ಕಮಲಾ ಬೇನ್‌ಳಿಗೆ ಮತ್ತಷ್ಟು ಸಿಟ್ಟು ಬಂತು. ಇನ್ನೆರಡು ಬಾರಿಸಿದಳು. “ಇಸ್ಕೂಲಿಗೆ ಹೋಗೋದಕ್ಕೆ ಇಲ್ಲದ ನೆಪ ಮಾಡಬೇಡ…” ಎಂದು ಹೊಡೆಯುತ್ತಲೇ ಶಾಲೆಯತನಕ ಕರೆದುಕೊಂಡು ಹೋಗಿ, ಮಾಸ್ತರರಿಗೂ ಅವನ ಹಠವನ್ನು ಹೇಳಿ ಏನೇ ಮಾಡಿದರೂ ಮನೆಗೆ ಕಳುಹಿಸಬಾರದೆಂದು ತಾಕೀತು ಮಾಡಿ ಬಂದಳು. ಹುಡುಗ ಅಳುತ್ತಲೇ ಕುಳಿತುಕೊಂಡು. ಷೂನ ಕಗ್ಗಂಟನ್ನು ಬಿಚ್ಚಲು ಅವನಿಗೆ ತಿಳಿಯದು. ಚಪ್ಪಲಿಯನ್ನು ಹಾಕಿಯೇ ಗೊತ್ತಿಲ್ಲದ ಉಳಿದ ಹುಡುಗರಿಗೆ ಷೂ ಒಂದು ದೇವಲೋಕದ ಅಪರೂಪದ ವಸ್ತುವಾದ್ದರಿಂದ ಮುಟ್ಟಲೂ ಅಂಜಿಕೆ. ಅರ್ಧ ಗಂಟೆಯೊಳಗೆ ಎಚ್ಚರ ತಪ್ಪಿ ಬಿದ್ದ. ಮೈ ಬಣ್ಣ ಕಪ್ಪಾಗಲಾರಂಭಿಸಿತು. ಮಾಸ್ತರರಿಗೆ ಹೆದರಿಕೆಯಾಗಿ ಮನೆಗೆ ಎತ್ತಿಕೊಂಡು ಹೋದರು. ಅವನಮ್ಮ ಷೂ ಬಿಚ್ಚಿದಾಗ ಚಿಕ್ಕ ಚೇಳು ಹೊರಬಂತು. ಮಗುವಿನ ಪಾದಕ್ಕೆಲ್ಲಾ ಕಚ್ಚಿ ಬಿಟ್ಟಿತ್ತು. ಬಾಯಿ ಬಡಿದುಕೊಂಡು ಅಳಲಾರಂಭಿಸಿದಳು. ಸೇಠ್‌ಜಿ ಸಾಮಾನು ತರಲು ಬಳ್ಳಾರಿಗೆ ಹೋಗಿದ್ದ. +ಸುದ್ದಿ ವೆಂಕಮ್ಮನ ಕಿವಿ ತಲುಪಿದ್ದೇ ದೇವರಿಗೆ ಕೈ ಮುಗಿದು, ಸೊಪ್ಪನ್ನು ಸಂಚಿಯಲ್ಲಿಟ್ಟುಕೊಂಡು ಸೇಠ್‌ಜಿ ಮನೆಗೆ ಬಂದಳು. ಜನರಾಗಲೇ ಕಡಿದ ಜಾಗಕ್ಕೆ ಸುಣ್ಣ ಹಚ್ಚುವುದು, ಅರಿಷಿಣ ಹಚ್ಚುವದನ್ನು ನಡೆಸಿದ್ದರು. ಹುಡುಗ ಉಳಿಯುವದಿಲ್ಲವೆಂಬ ಗುಸುಗುಸು ಆಗಲೇ ಶುರುವಾಗಿತ್ತು. ಗುಂಪಿನ ನಡುವೆ ವೆಂಕಮ್ಮ ಬಂದಿದ್ದು ಜನರಿಗೆ ಇಷ್ಟವಾಗಲಿಲ್ಲ. “ಇಲ್ಲಿ ಯಾವ ಮಿಂಡನ್ನು ಹುಡುಕಿಕೊಂಡು ಬಂದಾಳೋ…” ಅಂತ ಯಾರೋ ಪಡ್ಡೆ ಹುಡುಗ ಅಂದಿದ್ದಕ್ಕೆ ಜನರೆಲ್ಲಾ ನಕ್ಕರು. ವೆಂಕಮ್ಮ ಮಾತ್ರ ಅವೊಂದನ್ನೂ ಗಮನಿಸದೆ ಸೀದಾ ಸೇಠ್‌ಜಿ ಹೆಂಡತಿಯ ಬಳಿ ಹೋಗಿ “ಔಷಧ ಮಾಡ್ಲೇನಮ್ಮ” ಎಂದು ಬೇಡಿಕೊಂಡಳು. ಕಮಲಾ ಬೇನ್‌ಗೆ ಯಾರಾದರೂ ಸರಿ, ಮಗುವನ್ನು ಬದುಕಿಸಿಕೊಟ್ಟರೆ ಸಾಕಿತ್ತು. ಒಪ್ಪಿಕೊಂಡಳು. +ವೆಂಕಮ್ಮಗೆ ಮೊದಲ ಪ್ರಯೋಗವದು. ಒಳಗೊಳಗೇ ಹೆದರಿಕೆಯಿತ್ತು. “ನೀನೇ ಕಾಪಾಡಬೇಕು ಬಾಬಾ” ಎಂದು ಮನಸ್ಸಿನಲ್ಲಿ ಧ್ಯಾನಿಸಿ ಸೊಪ್ಪು ತಿಕ್ಕಿದಳು. ಔಷದಿ ಹಚ್ಚುವಾಗ ಕೈ ನಡುಗುತ್ತಿತ್ತು. ಕೂಸಿನ ಪುಟ್ಟ ಕಾಲನ್ನು ತೊಡೆಯ ಮೇಲಿಟ್ಟುಕೊಂಡು ಗಂಧವನ್ನು ಸವರುವಂತೆ ಮೆತ್ತಗೆ ಸೊಪ್ಪಿನ ಮುದ್ದೆಯನ್ನು ಹಚ್ಚಿದಳು. ಮಂತ್ರ ಹೇಳುತ್ತಾ ನೀರನ್ನು ಹರಿವಾಣದಲ್ಲಿ ಉಗುಳಲಾರಂಭಿಸಿದಳು. ಕೇವಲ ಒಂದು ಗಂಟೆಯಲ್ಲಿ ಮಗು ಎದ್ದು ಕುಳಿತಿತು. ಕಮಲಾ ಬೇನ್‌ಗೆ ಕೇಳಿ ಎಲೆ, ಅಡಿಕೆ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡಳು. ಮನೆಗೆ ವಾಪಾಸಾಗುವಾಗ ಜನರು ಸಪ್ಪಳವಿಲ್ಲದಂತೆ ದೂರ ಸರಿದು ದಾರಿ ಮಾಡಿಕೊಟ್ಟರು. ದುರ್ಗಮ್ಮ ತಾಯಿಯ ಸೀರೆಯನ್ನು ಉಟ್ಟುಕೊಂಡು ಹೋಗುತ್ತಿದ್ದ ವೆಂಕಮ್ಮ, ಸಾಕ್ಷಾತ್ ದೇವಿಯಂತೆ ಅವರ ಕಣ್ಣಿಗೆ ಕಂಡಳು. +ಸಾಯಂಕಾಲ ಸೇಠ್‌ಜಿ ವೆಂಕಮ್ಮನನ್ನು ಹುಡುಕಿಕೊಂಡು ದುರ್ಗಮ್ಮನ ಗುಡಿಗೆ ಬಂದ. ಗವ್ವೆನ್ನುವ ಕತ್ತಲೆಯಲ್ಲಿ ವೆಂಕಮ್ಮ ಕುಳಿತಿದ್ದಳು. ಅವಳ ಮುಂದೆ ಮಂಡೆಯೂರಿ ಕುಳಿತ ಸೇಠ್‌ಜಿ, ಅವಳ ಎರಡು ಕೈಗಳನ್ನು ಹಿಡಿದುಕೊಂಡು ಅಳಲಾರಂಭಿಸಿದ. “ಇರ್‍ಲಿ ಬಿಡಪ್ಪ, ಸಮಾಧಾನ ಮಾಡ್ಕೋ…” ಎಂದು ವೆಂಕಮ್ಮ ಹೇಳಿದರೂ ಸೇಠ್‌ಜೀಯ ಅಳು ನಿಲ್ಲಲಿಲ್ಲ. “ಇರೋದು ಒಬ್ಬನೇ ಮಗ… ಅವನೂ ಭಗವಾನ್ ಹತ್ತಿರ ಹೋಗಿದ್ರಿ ನನ್ನ ಗತಿ ಏನಿತ್ತು…” ಎಂದು ಮತ್ತಿಷ್ಟು ಕಣ್ಣೀರು ಸುರಿಸಿದ. ಅವನ ಭಾವೋದ್ವೇಗ ಮುಗಿಯುವ ತನಕ ಮತ್ತೊಂದು ಮಾತಾಡದೆ ಸುಮ್ಮನೆ ಕುಳಿತಳು. ಸಮಾಧಾನವಾದ ಮೇಲೆ ಸೇಠ್‌ಜಿ ತನ್ನ ಜೇಬಿನಿಂದ ನೂರು ರೂಪಾಯಿಯ ನೋಟಿನ ಎರಡು ಕಟ್ಟನ್ನು ಹೊರತೆಗೆದು ಅವಳ ಮುಂದಿಟ್ಟ. ತನ್ನ ಕೈ ಬೆರಳಿನ ಅಷ್ಟೂ ಉಂಗರಗಳನ್ನು ತೆಗೆದು ಆ ನೋಟಿನ ಕಂತೆಯ ಮೇಲಿಟ್ಟ. “ಇಲ್ಲ ಅನ್ನದಂಗೆ ತೊಗೋ ವೆಂಕಮ್ಮ” ಎಂದು ಬೇಡಿಕೊಂಡ. ಗುಡಿಯೊಳಗಿನ ನಂದಾದೀಪದ ಬೆಳಕು ಆ ಉಂಗುರಗಳ ಮೇಲೆ ಬಿದ್ದು ಅವು ಫಳ್ ಫಳ್ ಹೊಳೆದವು. ವೆಂಕಮ್ಮ ಹಣ ಮತ್ತು ಬಂಗಾರವನ್ನು ನಯವಾಗಿ ನಿರಾಕರಿಸಿದಳು. “ಔಷಧ ಮಾಡಿದ್ದಕ್ಕೆ ರೊಕ್ಕ ತೊಗೊಂಡ್ರೆ ಅದರ ಶಕ್ತಿ ಕಡಿಮಿ ಆಗ್ತೈತಪ್ಪ. ಮುಂದೆ ಯಾರಿಗನ್ನಾ ಚೇಳು ಕಚ್ಚಿದ್ರೆ ಔಷಧ ಮಾಡಬೇಕೋ ಬ್ಯಾಡೋ?” ಎಂದು ತಿಳಿ ಹೇಳಿದಳು. ಸೇಠ್‌ಜಿ ಮನಸ್ಸಿಲ್ಲದ ಮನಸ್ಸಿನಿಂದ ಹಣ ಮತ್ತು ಬಂಗಾರವನ್ನು ವಾಪಾಸು ತೆಗೆದುಕೊಂಡ. ಆದರೆ ಅವಳ ಸಹಾಯದ ಋಣ ತೀರಿಸಿಕೊಳ್ಳದೆ ಬದುಕಲು ಹೇಗೆ ಸಾಧ್ಯ? ಗುಡಿಯ ಹತ್ತಿರದಲ್ಲಿಯೇ ಗುಡಿಸಲೊಂದನ್ನು ಕಟ್ಟಿಕೊಟ್ಟ. “ನಿಂಗೆ ಯಾವಾಗೇ ಕಷ್ಟ ಆದರೂ ನನ್ನ ಮರಿಬೇಡ ವೆಂಕಮ್ಮ” ಎಂದು ಕಳಕಳೆಯಿಂದ ಬೇಡಿಕೊಂಡ. +ವೆಂಕಮ್ಮನ ಬದುಕು ನಿರಾತಂಕವಾಗಿ ಸಾಗಲಾರಂಭಿಸಿತು. ಪಕ್ಕದ ಹಳ್ಳಿಗಳವರೂ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು. ದಿನದಲ್ಲಿ ಏನಿಲ್ಲವೆಂದರೂ ಒಂದೆರಡು ಚೇಳಿನ ಸಂಗತಿಗಳು ಬಂದೇ ಬರುತ್ತಿದ್ದವು. ಕೆಲವೇ ತಿಂಗಳುಗಳಲ್ಲಿ ಅವಳ ಹೆಸರು “ಚೇಳಿನ ವೆಂಕಮ್ಮ” ಎಂದಾಯ್ತು. ಚೇಳಿನ ಔಷಧಿಗೆ ಹಣ ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಜನರು ಅವಳಿಗೆ ಯಾವುದೋ ರೂಪದಲ್ಲಿ ಸಹಾಯ ಮಾಡುತ್ತಿದ್ದರು. ಮತ್ತೊಬ್ಬರಿಗೆ ದೇಹಿ ಎನ್ನದಂತೆ ಬದುಕಲು ಸಾಧ್ಯವಾಯ್ತು. +ಪ್ರತಿ ಹುಣ್ಣಿಮೆಗೊಮ್ಮೆ ವೆಂಕಮ್ಮ ಬೆಳಗಿನ ಜಾವವೇ ಎದ್ದು, ಇನ್ನೂ ಕತ್ತಲಿದೆಯೆನ್ನುವಾಗಲೇ ಗಂಡಿ ನರಸಿಂಹಸ್ವಾಮಿಗೆ ಹೋಗುತ್ತಿದ್ದಳು. ಅವಳು ಗಂಡಿಯನ್ನು ಮುಟ್ಟುವ ವೇಳೆಗಾಗಲೇ ಬೆಳಕಾಗಿ ಬಿಟ್ಟಿರುತ್ತಿತ್ತು. ಅಡವಿಯಲ್ಲಿ ಎಲ್ಲೆಲ್ಲಿ ಔಷಧಿಯ ಗಿಡಗಳಿವೆಯೆಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ತಿಂಗಳಿಗೆ ಸಾಕಾಗುವಷ್ಟು ಸೊಪ್ಪನ್ನು ಹರಿದು ತನ್ನ ಸಂಚಿಯಲ್ಲಿ ತುಂಬಿ ಕೊಳ್ಳುತ್ತಿದ್ದಳು. ಯಾರೂ ಹಿಂಬಾಲಿಸಿ ಬಂದಿಲ್ಲವೆಂಬುದನು ಮತ್ತೆ ಮತ್ತೆ ಧೃಡ ಪಡಿಸಿಕೊಳ್ಳುತ್ತಿದ್ದಳು. ವಾಪಾಸು ಬರುವಾಗ ಹಳ್ಳದಲ್ಲಿ ಸ್ನಾನ ಮಾಡಿ, ಒದ್ದಿ ಮೈಯಲ್ಲಿ ನರಸಿಂಹಸ್ವಾಮಿ ಗುಡಿಗೆ ಹೋಗಿ ನಮಸ್ಕಾರ ಹಾಕಿ, ಪ್ರಾಂಗಣದಲ್ಲಿರುವ ಕೋತಿಗಳಿಗೆ ತಿನ್ನಲು ಶೇಂಗಾ ಕೊಟ್ಟು ಬರುತ್ತಿದ್ದಳು. ಹೋಗುವಾಗ ಕದ್ದು ಮುಚ್ಚಿ ಹೋಗುತ್ತಿದ್ದಳೇ ಹೊರತು ಬರುವಾಗ ಯಾರ ಮುಲಾಜಿ? ಅವಳನ್ನು ಎದುರುಗೊಂಡವರು “ಮದ್ದು ತರಲಿಕ್ಕೆ ಹೋಗಿದ್ದೀಯೇನು ವೆಂಕಮ್ಮ” ಎಂದು ಸಹಜವಾಗಿ ಮಾತನಾಡಿಸುತ್ತಿದ್ದರು. ಕಾಡನ್ನು ಸುತ್ತುವದರಿಂದ ಚೇಳಿನ ಔಷಧದ ಜೊತೆಗೆ ಇತರ ವೈದ್ಯಕೀಯ ಸಸ್ಯಗಳು ಅವಳಿಗೆ ಪರಿಚಯವಾದವು. +ಕಣವೆಳ್ಳಿಯ ತಾಯಕ್ಕನಿಗೆ ಹೇಗಾದರೂ ಮಾಡಿ ಈ ಮದ್ದಿನ ಗುಟ್ಟನ್ನು ತಿಳಿದುಕೊಳ್ಳಬೇಕೆಂಬ ದುರಾಸೆಯಿತ್ತು. ತಾಯಕ್ಕ ಅವರಿವರ ಮನೆಗಳಲ್ಲಿ ಕಸ ಮುಸರೆ ಮಾಡುವವಳು. ಕೈ ಶುದ್ಧ ಇಲ್ಲ. ಆಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ ಇಟ್ಟ ಹಣವನ್ನು ಸದ್ದಿಲ್ಲದೆ ಹೆಗರಿಸಿ ಬಿಡುತ್ತಿದ್ದಳು. ಮನೆಯವರೇನಾದರೂ ಅವಳ ಮೇಲೆ ಅನುಮಾನ ಮಾಡಿ ರಾಗವೆಳೆದರೆ ಮುಲಾಜಿಲ್ಲದೆ ಎದುರು ಮಾತನಾಡಿ ಅವರ ಬಾಯಿ ಮುಚ್ಚಿಸಿಬಿಡುವ ಗೈಯಾಳಿ. ಒಮ್ಮೆ ಅವಳಿಗೂ ಕೆಟ್ಟ ಗಳಿಗೆಯೊಂದು ಕೂಡಿ ಬಂತು. ಗೋಪಣ್ಣನ ಮನೆಯಲ್ಲಿ ದೇವರಿಗೆ ತಪ್ಪು ಕಾಣಿಕೆಯನ್ನು ಹಾಕಿಟ್ಟ ಸೇರನ್ನು ಅಟ್ಟದ ಮೇಲೆ ಇಟ್ಟಿರುತ್ತಿದ್ದರು. ಒಮ್ಮೆ ಮನೆಯವರೆಲ್ಲಾ ಯಾವುದೋ ಕೆಲಸದಲ್ಲಿ ಮಗ್ನರಾಗಿರುವಾಗ ತಾಯಕ್ಕ ಮೆಲ್ಲಗೆ ಅಟ್ಟದ ಮೇಲಿದ್ದ ಸೇರಿಗೆ ಕಾಲಿನ ಹೆಬ್ಬರಳಿನ ಮೇಲೆ ನಿಂತು ಕೈ ಹಾಕಿದಳು. ಒಳಗಿದ್ದ ಚೇಳು ಕಟುಂ ಎಂದು ಕಚ್ಚಿ ಬಿಟ್ಟಿತು. ಚೇಳು ಕಚ್ಚಿದ ತಕ್ಷಣ ಕೈ ಕೊಡವಿದ್ದರಿಂದ ಸೇರು ಸದ್ದು ಮಾಡಿ ನೆಲದ ಮೇಲೆ ಬಿದ್ದು ಚಿಲ್ಲರೆ ಹಣವೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯವರೆಲ್ಲಾ ಜಮಾಯಿಸಿದ್ದರು. ಚೇಳು ಕಚ್ಚಿದ ಸಂಕಟ ಒಂದು ಕಡೆ, ಕಳ್ಳತನದಲ್ಲಿ ಸಿಕ್ಕಿ ಬಿದ್ದ ಸಂಕಟ ಇನ್ನೊಂದು ಕಡೆ. ಮಾತನಾಡದೆ ಕಸಬರಿಗೆಯೊಗೆದು ವೆಂಕಮ್ಮನ ಮನೆಗೆ ಬಂದಿದ್ದಳು. “ದೇವರ ರೊಕ್ಕಾನೆ ತುಡುಗು ಮಾಡಲಿಕ್ಕೆ ಹೋದರೆ ಸುಮ್ಮನೆ ಬಿಡ್ತಾನೇನೆ?” ಎಂದು ವೆಂಕಮ್ಮ ಕೆಣಕಿದ್ದಳು. “ಆ ಗೋಪಣ್ಣ ಮಾಡೋ ಘನಕಾರ್ಯೇವು ಏನು ಅಂತ ಗೊತ್ತೈತೇಳಬೆ. ವರ್ಷಕ್ಕೊಂದು ಸಾರಿ ಹಂಪಿಗೋಗಿ ಅದೋಟೂ ರೊಕ್ಕಾನ ತುಂಗಮ್ಮನ ಉಡಿನಾಗೆ ಚೆಲ್ಲಿ ಬರ್ತಾನೆ. ನಾನು ನಾಕು ಕಾಸು ತೊಗಂಡ್ರೆ ಏನಾದೀತು ಬಿಡು” ಎಂದು ತಾಯಕ್ಕ ಸಮಜಾಯಿಷಿ ಕೊಟ್ಟಳು. ಒಂದು ಗಂಟೆಯಲ್ಲಿಯೇ ವಿಷವೆಲ್ಲಾ ಇಳಿದಾಗ ತಾಯಕ್ಕಗೆ ಅಚ್ಚರಿಯಾಗಿತ್ತು. “ಅದೇನು ಸೊಪ್ಪು ನಂಗೂ ಚೂರು ತೋರಿಸಿ ಕೊಡಬೇ…” ಎಂದು ಬೇಡಿಕೊಂಡಳು. ಹಾವು ತುಳಿದಂತೆ ಬೆಚ್ಚಿ ಬಿದ್ದ ವೆಂಕಮ್ಮ “ಅಯ್ಯಯ್ಯವ್ವ, ನಿಂಗೆ ಹೇಳಿಕೊಟ್ಟು ನಾನೇನು ಮಣ್ಣು ತಿನ್ನಲೇನೇ?” ಎಂದು ದಬಾಯಿಸಿದ್ದಳು. +ಹುಣ್ಣಿಮೆಗೊಮ್ಮೆ ವೆಂಕಮ್ಮ ಗಂಡಿ ನರಸಿಂಹಸ್ವಾಮಿಗೆ ಹೋಗುವ ವಿಷಯ ಊರಲ್ಲಿ ಅಂತಹ ಗುಟ್ಟಿನ ಸಂಗತಿಯೇನೂ ಆಗಿರಲಿಲ್ಲ. ಒಂದು ಸಲ ತಾಯಕ್ಕ ಬೆಳಗಾಗುವದಕ್ಕೆ ಮುಂಚೆಯೇ ಎದ್ದು ವೆಂಕಮ್ಮನ ಮನೆಯ ಮುಂದಿನ ಹುಣಸೆ ಗಿಡದ ಹಿಂದೆ ಬಚ್ಚಿಟ್ಟು ಕೊಂಡಿದ್ದಳು. ವೆಂಕಮ್ಮ ಮನೆಯಿಂದ ಹೊರಬಿದ್ದಿದ್ದನ್ನು ನೋಡಿದ್ದೇ ಗೊತ್ತಾಗದಂತೆ ಹಿಂಬಾಲಿಸಿದಳು. ಆದರೆ ಚೇಳಿನ ನಡಿಗೆಯ ಸದ್ದನ್ನೇ ಪತ್ತೆ ಹಚ್ಚುವ ವೆಂಕಮ್ಮನಿಗೆ ಇದು ಗೊತ್ತಾಗುವದಿಲ್ಲವೆ? “ಮಾಡ್ತೀನಿ ಈ ಲೌಡಿಗೆ” ಎಂದು ನಿಶ್ಚಯಿಸಿಕೊಂಡಳು. ತಾಯಕ್ಕ ಹಿಂಬಾಲಿಸಿ ಬರುತ್ತಿರುವುದು ತನಗೆ ಗೊತ್ತೇ ಇಲ್ಲವೆಂಬಂತೆ ನಟಿಸಿ, ಸೀದಾ ಯಾವುದೋ ಗಿಡದ ಬಳಿ ಹೋಗಿ ಎಲೆಗಳನ್ನು ಹರಿದುಕೊಂಡು ವಾಪಾಸು ಬಂದಳು. ಗುಟ್ಟು ಗೊತ್ತಾದ ಖುಷಿಯಲ್ಲಿ ತಾಯಕ್ಕ ಚೀಲದ ತುಂಬ ತೊಪ್ಪಲು ಹರಿದುಕೊಂಡು ಬಂದಳು. +ಹಳ್ಳಿಗೆ ವಾಪಾಸಾದ ಮೇಲೆ ತಾಯಕ್ಕ ತನಗೂ ಚೇಳಿನ ಔಷಧಿ ಗೊತ್ತಿರುವದೆಂದು ಊರೆಲ್ಲಾ ಸಾರಿಕೊಂಡು ಬಂದಳು. ಚೇಳು ಕಡಿಸಿಗೊಳ್ಳುವವರಿಗೆ ಆ ಊರಲ್ಲಿ ಬರವೆ? ದಿನವೊಂದು ಕಳೆಯುವದರಲ್ಲಿ ಪ್ರಸಂಗ ಬಂತು. ಪಿಂಜಾರರ ಶಾಬೇಷಿ ಬೆಳಗಿನ ಹೊತ್ತಿಗೆ ಹಳ್ಳಕ್ಕೆ ಶೌಚ ಕಾರ್ಯಕ್ಕೆ ಹೋದಾಗ ಹಸಿರು ಚೇಳೊಂದು ಸೀದಾ ಕುಂಡೆಗೆ ಕೊಂಡಿ ಹಾಕಿತ್ತು. ವೆಂಕಮ್ಮ ಪಕ್ಕದೂರಿಗೆ ಹೋಗಿದ್ದರಿಂದ ತಾಯಕ್ಕನನ್ನೇ ಕರೆದರು. ತಾಯಕ್ಕ “ಏನೂ ಹೆದರಿಕೊಳ್ಳಬೇಡರಿ” ಎಂದು ಮನೆಯವರಿಗೆಲ್ಲಾ ಧೈರ್ಯ ಹೇಳಿ ಸೊಪ್ಪನ್ನು ಅರಿಯಲಾರಂಭಿಸಿದಳು. ಶಾಬೇಷಿ ಕಣ್ಣೆದುರಿಗೇ ಧೋತ್ರ ಬಿಚ್ಚಿ ಮಕಾಡೆ ಮಲಗಿದಾಗ ತಾಯಕ್ಕನಿಗೆ ಹೇಗೊ ಹೇಗೋ ಆಯಿತು. ಮೊದಲನೆ ಗಿರಾಕಿಗೆ ಚೇಳು ಬೇರೆಲ್ಲಿಯಾದರೂ ಕಚ್ಚಬಾರದಿತ್ತೇ ಎಂದು ವಿಷಾದಿಸಿದಳು. ಆದರೂ ಸಹಿಸಿಕೊಂಡು ಸೊಪ್ಪನ್ನು ಹಚ್ಚಿದಳು. ಪರಾಯ ಗಂಡಸಿನ ಕುಂಡೆಯನ್ನು ಸವರಿದ್ದು ಗಂಡನಿಗೆ ಗೊತ್ತಾದರೆ ಸುಮ್ಮನಿರುತ್ತಾನೆಯೆ? ಎಂದು ಹೆದರಿಕೆಯೂ ಆಯ್ತು. ತನ್ನ ಮೊದಲ ಮದ್ದಿನ ಪ್ರಯೋಗದ ಫಲಾಫಲವನ್ನು ಆತಂಕದಿಂದ ನಿರೀಕ್ಷಿಸುತ್ತಾ ಕುಳಿತಳು. ಹತ್ತು ನಿಮಿಷಕ್ಕೆ ವಿಷ ಇಳಿಯುವದಿರಲಿ, ಶಾಬೇಷಿ ಉರಿ ಉರಿಯೆಂದು ಬೊಬ್ಬೆ ಹಾಕಲಾರಂಭಿಸಿದ. “ಇದೇನು ತಾಯಕ್ಕ?” ಎಂದು ಜನರು ತಾಯಕ್ಕನನ್ನೂ ಕೇಳುವಂತೂ ಇರಲಿಲ್ಲ. ಅವಳೂ ಸೊಪ್ಪನ್ನು ತಿಕ್ಕಿದ್ದರಿಂದ ಕೈಗಳು ಜೇನು ಗೂಡಿನಲ್ಲಿಟ್ಟಂತೆ ಉರಿಯಲಾರಂಭಿಸಿದ್ದವು. “ವೆಂಕಮ್ಮ ಮೋಸ ಮಾಡಿ ಬಿಟ್ಟಳು” ಎಂದು ಬೊಬ್ಬೆ ಹೊಡೆಯಲಾರಂಭಿಸಿದಳು. ಯಾರೋ ಪುಣ್ಯಾತ್ಮರು ಸೈಕಲ್ಲಿನಲ್ಲಿ ಹೋಗಿ ವೆಂಕಮ್ಮನನ್ನು ಕೂಡಿಸಿಕೊಂಡು ಬಂದರು. ವೆಂಕಮ್ಮ ಆ ಉರಿಯನ್ನು ಇಬ್ಬರಿಗೂ ಉಪಶಮನ ಮಾಡಿ, ಚೇಳಿನ ವಿಷವನ್ನು ಇಳಿಸಿದ್ದಳು. “ಈ ಊರಾಗೆ ನೂರು ಜಾತಿ ಚೋಳು ಅದಾವೆ. ಅವನ್ನ ಗುರುತಿಸೋದು ಮೊದಲು ಕಲುತುಕೋ. ಆಮೇಲಕ್ಕ ಮೊದ್ದು ಹಾಕುವಿಯಂತೆ” ಎಂದು ತಾಯಕ್ಕನ ಸೋಟೆ ತಿವಿದಳು. +ಚೇಳಿನ ವಿಷವಿಳಿಸುವದರಲ್ಲಿ ವೆಂಕಮ್ಮ ಎಂದೂ ಎಡವಿರಲಿಲ್ಲ. ಹಸಿ ಗೋಡೆಗೆ ಹರಳು ಒಗೆದಂತೆ ಅವಳ ವಿಷ ನಾಟುತ್ತಿತ್ತು. ಆದರೆ ವೆಂಕಮ್ಮನೂ ಕಷ್ಟಕ್ಕೊಳಗಾದ ಸಂದರ್ಭವೊಂದು ಬಂದಿತ್ತು. ಆ ದಿನ ಮಧ್ಯಾಹ್ನದ ಹೊತ್ತಿನಲ್ಲಿ ಅವಳ ಸವತಿ ಹನುಮಕ್ಕ ಓಡುತ್ತಾ ಬಂದು ಕೊಮ್ಮಣ್ಣನಿಗೆ ಚೇಳು ಕಚ್ಚಿದ ವಿಷಯವನ್ನು ತಿಳಿಸಿದಳು. “ಬರ್ತಿಯಲ್ಲೇನಕ್ಕ?” ಎಂದು ಅನುಮಾನದಿಂದ ಕೇಳಿದ್ದಕ್ಕೆ “ಬರಲಾರದಂಗೆ ಸುಮ್ಮನೆ ಕೂತರೆ ಆ ಶಿವ ಮೆಚ್ಚುತಾನೇನವ್ವಾ?” ಎಂದಿದ್ದೇ ಹೊರಟಳು. ಹನುಮಕ್ಕ ಗೌರಿ ಹಬ್ಬ ಬರುತ್ತದಾದ್ದರಿಂದ ಕೇದಿಗೆಯನ್ನು ತರಲು ಕೊಮ್ಮಣ್ಣನನ್ನು ಕೇಳಿದ್ದಳು. ಕೊಮ್ಮಣ್ಣ ಬಂಡ್ರಿಯ ಕಡೆ ಹೋಗಿ ಕೇದಿಗೆಯನ್ನು ಕಿತ್ತುವಾಗ, ಕಾಲಿಗೆ ಚೇಳೊಂದು ಕಚ್ಚಿತ್ತು. ಕೇದಿಗೆ ಬನದ ನಾಗರಹಾವಿನ ಜೊತೆ ಗೆಳೆತನ ಮಾಡಿದ ಚೇಳೇ ಇರಬೇಕು. ವಿಷ ಭೀಕರವಾಗಿ ತನ್ನ ಪ್ರಭಾವವನ್ನು ಬೀರಲಾರಂಭಿಸಿತ್ತು. ಕೊಮ್ಮಣ್ಣನ ಮೈಯಲ್ಲಾ ಆಗಲೇ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅತ್ಯಂತ ದೈನ್ಯತೆಯಿಂದ ವೆಂಕಮ್ಮನ ಕಡೆ ನೋಡಿದ. ವೆಂಕಮ್ಮ ಮದ್ದು ಹಾಕಲು ಶುರು ಮಾಡಿದಳು. ನೀರನ್ನು ಬಾಯಲ್ಲಿ ಹಾಕಿಕೊಳ್ಳುವಾಗ ಮನಸ್ಸು ಏಕಾಗ್ರತೆಯಿಂದ ಮಂತ್ರವನ್ನು ಪಠಿಸಬೇಕಿತ್ತು. ಆದರೆ ಕಣ್ಣು ಮುಚ್ಚಿದರೆ ಸಾಕು, ಅಂದು ದುರ್ಗಮ್ಮನ ಗುಡಿಯಲ್ಲಿ ತನ್ನ ಸೀರೆ ಹತ್ತಿ ಉರಿದ ದೃಶ್ಯ ಕಣ್ಣಿಗೆ ಬರತೊಡಗಿತು. ಕಿವಿಯಲ್ಲಿ “ಹಾದರಗಿತ್ತಿ” ಎಂಬ ಕೊಮ್ಮಣ್ಣನ ಕರ್ಕಶ ಮಾತುಗಳು ಕೇಳಲಾರಂಭಿಸಿದವು. ಮನಸ್ಸು ಏಕಾಗ್ರತೆಯನ್ನು ಕಳೆದುಕೊಂಡು ಬಿಟ್ಟಿತು. ಮುತ್ತುತ್ತಿರುವ ಕೆಟ್ಟ ನೆನಪುಗಳಿಗೆ ಹೆದರಿ ಕಣ್ಣು ತೆರೆದರೆ ಕೊಮ್ಮಣ್ಣನ ದೈನ್ಯ ತುಂಬಿದ ನೋಟ, ಅಸಹಾಯಕತೆಯಿಂದ ನಡಗುತ್ತಾ ನಿಂತ ಹನುಮಕ್ಕ. ಮತ್ತೆ ಕಣ್ಣು ಮುಚ್ಚಿ ಮಂತ್ರ ಹೇಳಲು ಪ್ರಾರಂಭಿಸಿದಳು. “ಈ ಯಪ್ಪ ನನ್ನ ಗಂಡ ಅಲ್ಲ. ಇವನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಮನೆಯಾಗೆ ಸೇವೆ ಮಾಡಿಕೊಂಡಿರೋ ಮಾಮೂಲೀ ಹೆಂಗಸು ನಾನಲ್ಲ” ಎಂದೆಲ್ಲಾ ಮನಸ್ಸಿನಲ್ಲಿ ಅಂದುಕೊಳ್ಳಲಾರಂಭಿಸಿದಳು. ಆದರೂ ಏಕಾಗ್ರತೆ ಸಾಧಿಸಲಾಗಲಿಲ್ಲ. ಈ ಹೊತ್ತಿನಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ಬಾಯಿಯಲ್ಲಿ ಬರೀ ಗಲಗಲಿಸಬೇಕಾದ ನೀರು ಅವಳ ಹೊಟ್ಟೆಯಲ್ಲಿ ಹೋಗಿ ಬಿಟ್ಟಿತು! ವೆಂಕಮ್ಮ ಕೆಮ್ಮಲಾರಂಭಿಸಿದಳು. ಕಣ್ಣುಗಳು ಕೆಂಪಗಾಗಿ ನೀರು ಸುರಿಸಲಾರಂಭಿಸಿದವು. ಉಸಿರಾಟವೂ ಕಷ್ಟವಾಯ್ತು. ಮೈಯ ಬಣ್ಣ ಕಪ್ಪಿಕ್ಕ ತೊಡಗಿತು. ಅಲ್ಲಿದ್ದವರೆಲ್ಲಾ ಏನಾಯ್ತಪ್ಪಾ ಎಂದು ಭಯಭೀತರಾಗಿ ನೋಡಲಾರಂಭಿಸಿದರು. ವೆಂಕಮ್ಮ ಒಂದು ಲೋಟ ನೀರು ತರಿಸಿಕೊಂಡು ಅದರಲ್ಲಿ ನಾಲ್ಕು ಚಮಚ ಉಪ್ಪು ಹಾಕಿಕೊಂಡು ಗಟಗಟನೆ ಕುಡಿದುಬಿಟ್ಟಳು. ಹೊಟ್ಟೆಯೊಳಗಿದ್ದದ್ದೆಲ್ಲಾ ವಾಂತಿಯಾಗಿ ಹೊರಬಂತು. “ಭೈರವಿ ಬಾಬಾ” ಎಂದು ಪ್ರಾರ್ಥಿಸಿದಳು. ಮನಸ್ಸು ಸ್ಥಿಮಿತಕ್ಕೆ ಬಂತು. ಚಿಕಿತ್ಸೆಯನ್ನು ಮುಂದುವರೆಸಿದಳು. ಅಂತೂ ಕೊಮ್ಮಣ್ಣ ಬದುಕುಳಿದ. ಹನುಮಕ್ಕ ಎಲೆ, ಅಡಿಕೆ ಮತ್ತು ಬಾಳೆ ಹಣ್ಣನ್ನು ತಂದು ಕೊಟ್ಟಾಗ ನಯವಾಗಿ ನಿರಾಕರಿಸಿದ ವೆಂಕಮ್ಮ ಮತ್ತೆ ಮಾತನಾಡದೆ ಮನೆಗೆ ವಾಪಾಸಾದಳು. +ಆವತ್ತೊಂದಿನ ವೆಂಕಮ್ಮ ಊಟ ಮಾಡಿ ಬೇವಿನ ಮರದ ಕೆಳಗೆ ಮಲಗಿದ್ದಳು. ವೈಶಾಖ ಮಾಸದ ಬಿಸಿಲಿದ್ದರೂ ಮರದ ನೆರಳಿನಲ್ಲಿ ತಣ್ಣನೆಯ ಗಾಳಿ ಬೀಸುತ್ತಿತ್ತು. ಗಿಡದಿಂದ ಬೇವಿನ ಹಣ್ಣುಗಳು ಆಗಾಗ ಬಿದ್ದು ಸದ್ದು ಮಾಡುತ್ತಿದ್ದವು. ಕೋತಿಗಳು ಹೆಚ್ಚಿನ ಗಲಾಟೆಯಿಲ್ಲದಂತೆ ಅಲ್ಲಿಲ್ಲಿ ಓಡಾಡಿಕೊಂಡಿದ್ದವು. ಆಗ ಇದ್ದಕ್ಕಿಂದ್ದಂತೆಯೇ ತಮ್ಮಟೆಯ ಸದ್ದು ಕೇಳಿ ಬಂತು. ವೆಂಕಮ್ಮ ಏನೋ ಅನಾಹುತವಾಯಿತೇನೋ ಎನ್ನುವಂತೆ ಬೆಚ್ಚಿ ಬಿದ್ದು ಎದ್ದು ಕೂತಳು. ಕೋತಿಗಳು ಭಯದಿಂದ ಕಿರುಚಿ ಮರವನ್ನೇರಿಬಿಟ್ಟವು. +ತಳವಾರ ಸಿದ್ಧಪ್ಪ ತಪ್ಪಡಿ ಬಡಿಯುತ್ತಿದ್ದ. ಹತ್ತಾರು ಚಿಳ್ಳೆ ಪಿಳ್ಳೆಗಳು ಆಗಲೇ ಅವನ ಸುತ್ತ ನೆರೆದಿದ್ದರು. ಹಿರಿಯರೂ ಮನೆಯಿಂದ ಹೊರಬಂದು ಗುಂಪು ಸೇರಲಾರಂಭಿಸಿದರು. ವೆಂಕಮ್ಮನೂ ಕಣ್ಣು ಉಜ್ಜಿಕೊಂಡು ಗುಂಪಿನ ಬಳಿ ಹೋದಳು. ಗುಂಪಿನ ಮಧ್ಯದಲ್ಲಿ ಗಾಣಿಗರ ಕೊಟ್ರೇಶಿ ಮಾತನಾಡಲಾರಂಭಿಸಿದ. “ಕೇಳ್ರಪ್ಪೋ ಕೇಳ್ರಿ… ಊರಿಗೆ ಉಪಕಾರ ಆಗೋ ಅಂಥಾ ಚಮತ್ಕಾರ ತೋರಿಸ್ತೀನಿ… ಎಲ್ಲರೂ ಬರಬೇಕು…” ಎಂದು ಕೂಗು ಹಾಕಿದ. ಅವನ ಕೈಯಲ್ಲಿ ಕೆಂಪು ದ್ರವ ತುಂಬಿದ ಒಂದು ಸೀಸೆಯಿತ್ತು. ಅಲ್ಲೇ ಹತ್ತಿರದಲ್ಲಿ ಒಂದು ದೊಡ್ಡ ಚೀಲ, ಅದರ ಪಕ್ಕದಲ್ಲಿ ಆ ಕೆಂಪು ದ್ರವ ತುಂಬಿದ ಹತ್ತಾರು ಬಾಟಲಿಗಳನ್ನು ಒಂದರ ಮೇಲೊಂದರಂತೆ ಸುಂದರವಾಗಿ ಜೋಡಿಸಿಟ್ಟಿದ್ದ. +ಹತ್ತು ನಿಮಿಷದಲ್ಲಿ ಸಮಸ್ತ ಊರಿನವರೆಲ್ಲರೂ ಅಲ್ಲಿ ನೆರೆದರು. ವೆಂಕಮ್ಮ ಅಂತಹ ಹೊಸ ಸಂಗತಿಗಳನ್ನು ನೋಡದೆ ಬಿಟ್ಟಾಳೆಯೆ? ಗುಂಪಿನಲ್ಲಿ ತೂರಿ ಮುಂದೆ ಬಂದು ಕುಳಿತುಬಿಟ್ಟಳು. +ಕೊಟ್ರೇಶಿ ಮುಂದುವರೆಸಿದ. “ಇದು ಅಂತಿಂಥಾ ಚಮತ್ಕಾರ ಅಲ್ಲ. ನೋಡಿದವರು ಕೈ ಚಿವುಟಿಗೊಂಡು ಮತ್ತೊಮ್ಮೆ ನೋಡಬೇಕು, ಕೇಳಿದವರು ‘ಅಯ್ ಬರೀ ಸುಳ್ಳು’ ಅನ್ನಬೇಕು, ಅಂಥಾದ್ದು…. ಕೇಳ್ರಪ್ಪೋ ಕೇಳ್ರಿ…” ಎಂದ. ಅವನ ಮುನ್ನುಡಿಯೇ ಜಾಸ್ತಿಯಾದದ್ದರಿಂದ ಕಿರಿಕಿರಿಗೊಂಡ ವೆಂಕಮ್ಮ “ಅದೇನಂಥಾದ್ದು ತೋರಿಸ್ತೀಯೋ ತೋರಿಸೋ ಕೊಟ್ರೇಶಿ, ಬರೀ ಮಾತೇ ಆಯ್ತಲ್ಲ” ಎಂದು ದಬಾಯಿಸಿದಳು. ಅದನ್ನು ತೋರಿಸೋದಕ್ಕೆ ಯಾರಾದ್ರೂ ಒಬ್ಬರ ಸಹಾಯ ಬೇಕಾಗ್ತದೆ ಎಂದು ಕೊಟ್ರೇಶಿ ಹೇಳಿದ. ವೆಂಕಮ್ಮನ ಉತ್ಸಾಹಕ್ಕೆ ಕೇಳಬೇಕೆ? “ನಾನೇ ಐದೀನಲ್ಲಪ್ಪ” ಎಂದು ಥೈ ಎಂದು ಎಗರಿ ಅವನ ಮುಂದೆ ನಿಂತಳು. ಕೊಟ್ರೇಶಿ ಒಂದು ಕೋಲಿನಿಂದ ವೃತ್ತವನ್ನೆಳೆದು ವೆಂಕಮ್ಮನನ್ನು ಅದರ ಮಧ್ಯೆ ಕೂಡೆಂದು ಹೇಳಿದ. ವೆಂಕಮ್ಮ ಚಕ್ಕಳ-ಮಕ್ಕಳ ಹಾಕಿಕೊಂಡು ಕುಳಿತಳು. ಕೊಟ್ರೇಶಿ ಹತ್ತಿರದಲ್ಲಿಟ್ಟಿದ್ದ ಚೀಲದಿಂದ ಹತ್ತು ಪ್ಲಾಸ್ಟಿಕ್ ಡಬ್ಬಗಳನ್ನು ಹೊರತೆಗೆದ. ಅವುಗಳ ಮುಚ್ಚಳವನ್ನು ತೆಗೆದು ನೆಲಕ್ಕೆ ಬೋರಲಾಗಿ ಬಡಿದ. ಅದರಲ್ಲಿದ್ದ ಚೇಳುಗಳು ನೆಲಕ್ಕೆ ಬಿದ್ದವು. ವೆಂಕಮ್ಮನ ಸುತ್ತಲೂ ಚೇಳುಗಳನ್ನು ಹರಡಿದ. ಅವುಗಳೆಲ್ಲವೂ ವೆಂಕಮ್ಮನ ಕಡೆ ಹೋಗಲಾರಂಭಿಸಿದವು. ಒಂದೆರಡು ಚೇಳು ಇನ್ನೊಂದು ದಿಕ್ಕಿಗೆ ಹೋಗಲಾರಂಭಿಸಿದಾಗ ಕೋಲಿನಿಂದ ಅದರ ದಿಕ್ಕನ್ನು ಬದಲಿಸಿದ. ಜನರೆಲ್ಲಾ ಚೋಳುಗಳನ್ನು ನೋಡಿ ಅಂಜಿ ಒಂದು ಹೆಜ್ಜೆ ಹಿಂದಕ್ಕಿಟ್ಟರು. ವೆಂಕಮ್ಮನಿಗೆಂತಹ ಭಯ? ಚೇಳಿನ ಜೊತೆಯಲ್ಲೇ ಬದುಕುವವಳು. ಅವನೇನು ಮಾಡ್ತಾನೋ ನೋಡೇ ಬಿಡುವ ಎಂದು ನಗುತ್ತಾ ಕುಳಿತಳು. ಕೊಟ್ರೇಶಿ ಕೆಂಪು ದ್ರಾವಣದ ಸೀಸೆಯ ಬಿರಡೆಯನ್ನು ತೆಗೆದು ಆ ದ್ರಾವಣವನ್ನು ತಾನು ಹಾಕಿದ ವೃತ್ತದ ಗುಂಟ ಸುರುವಿದ. ಒಂದು ವಿಶೇಷ ಪರಿಮಳ ಆ ದ್ರಾವಣಕ್ಕಿತ್ತು. ವೆಂಕಮ್ಮ ಉಸಿರೆಳೆದುಕೊಂಡಳು. ಈಗ ಚೇಳುಗಳು ಆ ವೃತ್ತದ ಕಡೆಗೆ ನಡೆಯಲಾರಂಭಿಸಿದವು. ಆ ದ್ರಾವಣದ ಸಂಪರ್ಕ ಬಂದಿದ್ದೇ ತಡ ಸ್ಥಗಿತಗೊಂಡವು. ಒಂದು ಕ್ಷಣದಲ್ಲಿ ವಿಲವಿಲನೆ ಒದ್ದಾಡಲಾರಂಭಿಸಿದವು. ವೆಂಕಮ್ಮ ಬಿಟ್ಟಗಣ್ಣಿಂದ ನೋಡಲಾರಂಭಿಸಿದಳು. ಯಾವುದೇ ಚೋಳೂ ಆ ಗೆರೆಯನ್ನು ದಾಟಲಾಗಲಿಲ್ಲ. ಬಾರಲು ಬಿದ್ದು ಅಲ್ಲಾಡತೊಡಗಿದವು. ಜನರೆಲ್ಲಾ ಸದ್ದಿಲ್ಲದೆ ಆ ಮೋಡಿಯನ್ನು ವೀಕ್ಷಿಸಲಾರಂಭಿಸಿದರು. ಒಂದೈದು ನಿಮಿಷದಲ್ಲಿ ಎಲ್ಲಾ ಚೇಳುಗಳೂ ಚಲನೆಯಿಲ್ಲದೆ ಸತ್ತು ಬಿದ್ದವು. ವೃತ್ತದಲ್ಲಿ ಕುಳಿತಿದ್ದ ವೆಂಕಮ್ಮ ನಡೆದ ಘಟನೆಯಿಂದ ಚೇತರಿಸಿಕೊಳ್ಳಲಾಗದೆ ಸಣ್ಣಗೆ ನಡುಗಲಾರಂಭಿಸಿದಳು. +ಎಲ್ಲಾ ಚೇಳುಗಳು ಸಾಯುವ ತನಕ ಸೊಲ್ಲೆತ್ತದೆ ನಿಂತಿದ್ದ ಜನಗಳು ಈಗ ಚಪ್ಪಾಳೆ ಹೊಡೆಯಲಾರಂಭಿಸಿದರು. “ವ್ಹಾ, ವ್ಹಾ” ಎಂದು ಕೊಟ್ರೇಶಿಯನ್ನು ಕೊಂಡಾಡಿದರು. ವೆಂಕಮ್ಮ ಮಾತ್ರ ಬೆಪ್ಪುತಕ್ಕಡಿಯಂತಾಗಿದ್ದಳು. ಕೊಟ್ರೇಶಿ ಹತ್ತು ರೂಪಾಯಿಗೊಂದರಂತೆ ಚೇಳಿನ ವಿಷದ ಬಾಟಲಿಗಳನ್ನು ಮಾರಿದ. ಮೆಣಸಿನಕಾಯಿ ಬೋಂಡಾದಂತೆ ಎಲ್ಲಾ ಬಾಟಲಿಗಳು ಖರ್ಚಾದವು. ಜನರೆಲ್ಲಾ ಮನೆಗೆ ತೆರಳಿದರು. ವೃತ್ತದಲ್ಲಿ ಹಾಗೇ ಕುಳಿತಿದ್ದ ವೆಂಕಮ್ಮನನ್ನು ಮಾತನಾಡಿಸಿದ ಕೊಟ್ರೇಶಿ “ನಿನಗೂ ಒಂದು ಬೇಕೇನಜ್ಜಿ?” ಎಂದು ಕೇಳಿದ. ವೆಂಕಮ್ಮನೂ ಹತ್ತು ರೂಪಾಯಿ ಕೊಟ್ಟು ಒಂದು ಬಾಟಲಿಯನ್ನು ಕೊಂಡಳು. ಆ ಬಾಟಲಿಯಲ್ಲಿ ತಿರುಗಿಸಿ ನೋಡಿ “ಚೇಳಿನ ಮೈಯಾಗೆ ವಿಷ ಐತೆ. ಅಂಥಾ ಚೇಳಿಗೂ ಸಾಯಿಸಂಥ ಈ ವಿಷ ಇನ್ನೆಂಥಾದಿದ್ದೀತು?” ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡಳು. ಕೊಟ್ರೇಶಿಯೂ ತನ್ನ ಸರಂಜಾಮನ್ನು ತೆಗೆದುಕೊಂಡು ಮನೆಗೆ ಹೋದ ಮೇಲೆ ವೆಂಕಮ್ಮ ಅಲ್ಲಿದ್ದ ಚೇಳುಗಳನ್ನೆಲ್ಲಾ ಬಳಿದು ಒಂದು ಗುಂಡಿಯಲ್ಲಿ ಹೂತಿಟ್ಟಳು. ಸೋತ ಹೆಜ್ಜೆಯಿಂದ ದುರ್ಗಮ್ಮನ ಗುಡಿಗೆ ಹಿಂತಿರುಗಿದಳು. +ಊರಿನಲ್ಲಿ ಚೇಳಿನ ರಾಶಿ ರಾಶಿ ಹೆಣಗಳು ಬೀಳಲಾರಂಭಿಸಿದವು. ಆ ಕೆಂಪು ದ್ರಾವಣದ ವಾಸನೆಗೆ ಆ ಚೇಳುಗಳು ಎಲ್ಲೇ ಇರಲಿ ಆಕರ್ಷಣೆಗೊಂಡು ಅದರ ಹತ್ತಿರ ಬರುತ್ತಿದ್ದವು. ರಾತ್ರಿ ಮನೆಯ ಸುತ್ತಲೂ ಹಾಕಿ ಮಲಗಿಕೊಂಡರಾಯ್ತು, ಬೆಳಗಿನ ಹೊತ್ತಿಗೆ ಆ ದ್ರಾವಣದ ರೇಖೆಗುಂಟ ಸತ್ತು ಸೆಟೆದುಕೊಂಡ ಚೇಳಿನ ಹೆಣಗಳ ರಾಶಿ. ಜನರೆಲ್ಲಾ ದಿನ ಬೆಳಗಾದರೆ ತಮ್ಮ ಮನೆಯ ಮುಂದೆ ಎಷ್ಟು ಚೇಳು ಸತ್ತವೆಂದು ಮಾತನಾಡಿಕೊಳ್ಳಲಾರಂಭಿಸಿದರು. ಸತ್ತ ಚೇಳುಗಳು ಯಾವ ಜಾತಿಯವೆಂಬುದೂ ಕಂಡು ಹಿಡಿಯಲಾಗದಂತೆ ಚೇಳುಗಳು ಸೆಟೆದುಕೊಂಡಿರುತ್ತಿದ್ದವು. ಮಕ್ಕಳು ಮರಿಗಳು ಆ ದ್ರಾವಣವನ್ನು ಯಾವುದಾದರೂ ಕಲ್ಲಿನ ಸುತ್ತ ಹಾಕಿ ಕಲ್ಲನ್ನು ತೆಗೆದ ತಕ್ಷಣ ಅದರ ಬುಡದಲ್ಲಿದ್ದ ಚೇಳು ಹೊರಬಂದು ಸತ್ತು ಹೋಗುತ್ತಿತ್ತು. ಮಕ್ಕಳು ಕೇಕೆ ಹಾಕಿ ಕುಣಿಯುತ್ತಿದ್ದರು. ಅಂಗಳದ ಕಸ ಬಳಿದ ಹೆಂಗಸರು ಸತ್ತ ಚೇಳುಗಳನ್ನು ಮತ್ತೊಬ್ಬರ ಅಂಗಳಕ್ಕೆ ದೊಬ್ಬಿದ್ದಾರೆಂದು ಜಗಳಗಳಾದವು. +ಊರಿಗೆ ಉಪಕಾರ ಮಾಡಿದ ಕೊಟ್ರೇಶಿಯನ್ನು ಸನ್ಮಾನ ಮಾಡಲು ಜನರೆಲ್ಲಾ ನಿರ್ಧರಿಸಿದರು. ಆ ದಿನ ಮಾರಮ್ಮನ ಗುಡಿಯ ಮುಂದೆ ಸತ್ತ ಸಾವಿರಾರು ಚೇಳುಗಳ ರಾಶಿಯನ್ನು ಹಾಕಿ ಬೆಂಕಿ ಹಚ್ಚಿದರು. ಅದರ ಸುತ್ತಲೂ ಜನರು ತಮ್ಮಟೆ ಬಡಿದುಕೊಂಡು ನೃತ್ಯ ಮಾಡಿದರು. ಕೊಟ್ರೇಶಿಯನ್ನು ಅರಳಿ ಕಟ್ಟೆಯ ಮೇಲೆ ಕೂಡಿಸಿ ಊರ ಹಿರಿಯರಿಂದ ಶಾಲು ಹೊದೆಸಿ ಸನ್ಮಾನ ಮಾಡಿದರು. ಸುತ್ತ ಮುತ್ತಲ ಹತ್ತಾರು ಹಳ್ಳಿಗಳಿಂದ ಜನರು ಬಂದಿದ್ದರು. ಎಲ್ಲರೂ ಮುಗಿ ಬಿದ್ದು ಹತ್ತು ರೂಪಾಯಿಗೊಂದರಂತೆ ಚೇಳಿನ ವಿಷವನ್ನು ಕೊಂಡರು. ವೆಂಕಮ್ಮ ಚೇಳುಗಳ ಚಿತೆಯ ಬೆಂಕಿಯಲ್ಲಿ ಬೇಯುತ್ತಾ ನಿಂತಿದ್ದಳು. ಸತ್ತು ಚೇಳುಗಳು ಅವಳಲ್ಲಿ ವಿಚಿತ್ರ ಸಂಕಟವನ್ನುಂಟು ಮಾಡುತ್ತಿದ್ದವು. ಸುಡುತ್ತಿರುವ ಚೇಳಿನ ವಾಸನೆ ಮೂಗಿಗೆ ಗಪ್ಪನೆ ಅಡರುತ್ತಿತ್ತು. +ವೆಂಕಮ್ಮನ ವೈಭವಕ್ಕೆಲ್ಲಾ ಅಂತ್ಯ ಬಂತು. ತರಕಾರಿಯವಳು ಜಗಳ ಮಾಡಿ ತರಕಾರಿ ಕೊಡುವದನ್ನು ನಿಲ್ಲಿಸಿದಳು. ರೈತರು ಮಳೆ ಬಂದಿಲ್ಲವೆಂಬ ನೆಪವೊಡ್ಡಿ ತಾರಮ್ಮಯ್ಯ ಎಂದರು. ಹಾಲು ಮೊಸರಿನವರ ಮನೆಗೆ ಎರಡೆರಡು ಬಾರಿ ಹೋಗಿ ಬಂದರೂ ಉಪಯೋಗವಾಗಲಿಲ್ಲ. ದಿನಸಿ ಅಂಗಡಿಯವನು “ರೊಕ್ಕ ಮುಂದಿಟ್ಟು ಮಾತಾಡು ವೆಂಕಮ್ಮ” ಎಂದು ನೇರವಾಗಿಯೇ ದಬಾಯಿಸಿ ದೊಬ್ಬಿದ. ವೆಂಕಮ್ಮನ ಸಹಾಯವನ್ನು ಪಡೆದಿದ್ದ ಹಿರಿಯ ತಲೆಮಾರೆಲ್ಲಾ ಮುಪ್ಪಾಗಿ ಮನೆಯಲ್ಲಿ ಕುಳಿತಿತ್ತು. ಅವರ ಹತ್ತಿರ ಹೋಗಿ ದೂರಿದರೆ “ಈಗಿನ ಹುಡುಗರು ನಮ್ಮ ಮಾತು ಕೇಳ್ತಾರೇನು ವೆಂಕಮ್ಮ?” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. +ಕೆಲವೇ ತಿಂಗಳುಗಳಲ್ಲಿ ವೆಂಕಮ್ಮ ಭಿಕ್ಷೆ ಬೇಡುವ ಸ್ಥಿತಿಗಿಳಿದಳು. ಊರಿಗೆ ಹೊಸಬರು ಯಾರಾದರೂ ಬಂದರೆ “ನಿಮ್ಮೂರಾಗೆ ಚೋಳುಗಳು ಅದಾವ? ನನ್ನ ಕರಕೊಂಡು ಹೋಗ್ತೀರಾ?” ಎಂದು ಆಸೆಯಿಂದ ಕೇಳುತ್ತಿದ್ದಳು. ಗೋಪಣ್ಣನ ಮನೆಗೆ ಬೆಂಗಳೂರಿನಿಂದ ಬಂದ ಅತಿಥಿಗಳೊಬ್ಬರು “ಸೊಳ್ಳೆಗೆ ಔಷಧ ಗೊತ್ತಿದ್ದರೆ ಹೇಳು, ನಮ್ಮೂರಿನಾಗೆ ಭಾಳ ಉಪಯೋಗಕ್ಕೆ ಬರ್ತದೆ” ಎಂದು ಸಲಹೆಯಿತ್ತರು. ಚೇಳೆಲ್ಲಿ, ಯಃಕಶ್ಚಿತ್ ಸೊಳ್ಳೆಯೆಲ್ಲಿ? ದುರ್ಗಮ್ಮನ ಗುಡಿಯಲ್ಲಿ ಭಕ್ತಾದಿಗಳು ಬಿಟ್ಟು ಹೋದ ಬಾಳೆಹಣ್ಣು ಕೊಬ್ಬರಿಗಳನ್ನು ಅವರು ಕಣ್ಮರೆಯಾಗುತ್ತಲೇ ಗಬಗಬನೆ ತಿನ್ನುತ್ತಿದ್ದಳು. ಕೋತಿಗಳು ಆಸೆಯಿಂದ ಹತ್ತಿರ ಬಂದರೆ ಕೋಲಿನಿಂದ ಹೊಡೆದು ಓಡಿಸುತ್ತಿದ್ದಳು. ತಿಂಗಳಿಗೊಮ್ಮೆ ತಪ್ಪದೆ ಗಂಡಿ ನರಸಿಂಹಸ್ವಾಮಿಗೆ ಹೋಗಿ ಸೊಪ್ಪು ತರುತ್ತಿದ್ದಳಾದರೂ, ಅದನ್ನು ಪ್ರಯೋಗಿಸಲು ಯಾರೂ ಸಿಗದೆ ಅವು ಒಣಗಿ ಹೋಗುತ್ತಿದ್ದವು. +ಒಂದು ದಿನವಂತೂ ಸಾಯಂಕಾಲವಾದರೂ ಏನೂ ತಿನ್ನಲು ಸಿಗಲಿಲ್ಲ. ಉಪವಾಸದಿಂದ ಹೊಟ್ಟೆ ನೋವು ಶುರುವಾಯ್ತು. ಸೀದಾ ಲಕ್ಷ್ಮೀಚಂದ ಸೇಠ್‌ಜಿ ಅಂಗಡಿಗೆ ಹೋದಳು. “ಭಾಳ ಹಸಿವಿ ಆಗ್ಯದೆ, ಊಟಕ್ಕೆ ಹಾಕಿಸಪ್ಪ” ಎಂದು ಬೇಡಿಕೊಂಡಳು. ಸೇಠ್‌ಜಿಗೆ ಕರುಳು ಚುರ್ ಅಂತು. ಅಂಗಡಿಯನ್ನು ಬಿಟ್ಟು ಅವಳನ್ನು ಮನೆಗೆ ಕರೆದುಕೊಂಡು ಹೋದ. ಕಮಲಾ ಬೇನ್‌ಗೆ ಹೇಳಿ ಹೊಟ್ಟೆ ತುಂಬುವಂತೆ ಊಟಕ್ಕೆ ಹಾಕಿಸಿದ. ಮಗ ಮತ್ತು ಸೊಸೆಯನ್ನು ಕರೆದು ಅವಳಿಗೆ ನಮಸ್ಕಾರ ಮಾಡಿಸಿದ. ಸೊಸೆಗೆ ವೆಂಕಮ್ಮ ತನ್ನ ಮಗನ ಪ್ರಾಣವನ್ನು ಉಳಿಸಿದ್ದನ್ನು ತಿಳಿಸಿದ. ಅವಳು ಮನೆಗೆ ಹೋಗುವಾಗ ಒಂದಿಷ್ಟು ಹಣವನ್ನು ಕೊಟ್ಟ. ವೆಂಕಮ್ಮ ಮೊದಲಿಗೆ ಬೇಡವೆಂದಳು. ಸೇಠ್‌ಜಿ “ಇರ್‍ಲಿ ತೊಗೋ ವೆಂಕಮ್ಮ. ಕಷ್ಟದಾಗೆ ಇದ್ದೀ…” ಎಂದು ಹುರಿದುಂಬಿಸಿದ. ಮರು ಮಾತನಾಡದೆ ಪಡೆದುಕೊಂಡಳು. ಮನೆಗೆ ಹೋಗುವಾಗ ಬಾಗಿಲ ತನಕ ಬಂದ ಸೇಠ್‌ಜಿ ಬಳಿ “ದಿನಾ ಬಂದರೆ ಉಂಬಾಕೆ ಇಕ್ತೀಯೇನಪ್ಪ?” ಎಂದು ದೈನ್ಯದಿಂದ ಕೇಳಿದಳು. “ಯಾವಾಗ ಹಸಿವಿ ಅನ್ನಿಸಿದ್ರೂ ಊಟಕ್ಕೆ ಬಾ ವೆಂಕಮ್ಮ. ಭಿಡೆ ಮಾಡ್ಕೋಬ್ಯಾಡ” ಎಂದು ಹೇಳಿದಾಗ ವೆಂಕಮ್ಮನ ಕಣ್ಣುಗಳು ತುಂಬಿದ್ದವು. “ದೊಡ್ಡ ಮನಿಷಾ ಇದೀಯಪ್ಪ” ಎಂದು ಸೇಠ್‌ಜಿಗೆ ಕೈ ಮುಗಿದಳು. +ಆ ಸಂಜೆ ವೆಂಕಮ್ಮ ಕಣವೆಳ್ಳಿ ತಾಯಕ್ಕನ ಮನೆಗೆ ಹೋದಳು. ತಾಯಕ್ಕ ಅಕ್ಕಿ ಹಸನು ಮಾಡುತ್ತಿದ್ದಳು. ವೆಂಕಮ್ಮ ಅತ್ಯಂತ ಕಳವಳದಿಂದ “ನಾನು ಭಾಳ ದಿನ ಇರಂಗಿಲ್ಲ ಅನ್ನಿಸಿಲಿಕ್ಕೆ ಹತ್ತದೆ ತಾಯಕ್ಕ. ಯಾಕೋ ಕೆಟ್ಟ ಕೆಟ್ಟ ಕನಸು ಬೀಳಲಿಕ್ಕೆ ಹತ್ತಾವೆ. ಆ ಶಿವನ ಪಾದ ಸೇರೋ ಕಾಲ ಹತ್ತಿರ ಬಂದಂಗದೆ” ಎಂದು ಹೇಳಿದಳು. ತಾಯಕ್ಕ “ಕೆಟ್ಟ ಮಾತು ಯಾಕೆ ಆಡ್ತಿ ಬಿಡ್ತು ಅನ್ನು” ಎಂದು ಗದರಿಸಿದಳು. ವೆಂಕಮ್ಮ ಮುಂದುವರೆಸಿದಳು “ಒಣಗಿದ ಕಡ್ಡಿ ಹಂಗೆ ಆಗೀನಿ. ಯಾವಾಗ ಫಳ್ ಅಂತೀನೋ ಗೊತ್ತಿಲ್ಲ. ಆದರೆ ಸಾಯೋಕಿಂತ ಮುಂಚೆ ಚೇಳಿನ ಔಷಧ ಯಾರಿಗನ್ನಾ ಹೇಳಿಕೊಟ್ಟು ಹೋಗಬೇಕು ಅಂತ ನಿಯಮ ಅದೆ. ನನ್ನ ಹೊಟ್ಟಿನಾಗೆ ಇಟ್ಟುಗೊಂಡು ಸತ್ತರೆ ಆ ಪರಮಾತ್ಮ ಮೆಚ್ಚಂಗಿಲ್ಲ. ನಾಳೆ ಹೆಂಗೂ ಹುಣ್ಣಿಮಿ ಅದೆ. ಗಂಡಿ ನರಸಿಂಹಸ್ವಾಮಿಗೆ ಹೋಗೋಣ ಬಾ” ಎಂದು ಕರೆದಳು. ತಾಯಕ್ಕ ಅವಳ ಮಾತಿಗೆ ನಕ್ಕು ಬಿಟ್ಟಳು. “ನಿಂಗೆಲ್ಲೋ ಹುಚ್ಚು ನೋಡು ವೆಂಕಮ್ಮ. ನೋಡಾಣ ಅಂದ್ರೂ ಜೀವಂತ ಇರೋ ಚೇಳು ಸಿಗದಂಗೆ ಆಗ್ಯದೆ. ನೀನು ನೋಡಿದ್ರೆ ಅದರ ಔಷಧದ ಮಾತು ಆಡಾಕೆ ಹತ್ತಿ. ಅವೆಲ್ಲಾ ಹಳೇ ಕಾಲದ್ದು ಇಚಾರ ಬಿಟ್ಟು ಬಿಡು. ಹೇಳಿಕೊಡು ಅಂತ ಬಂದ ಹೊತ್ತಿಗೆ ಮೋಸ ಮಾಡಿದಿ. ಈಗ ಹೇಳ್ತೀನಿ ಅಂತೀಯಲ್ಲಬೆ?” ಎಂದು ಖಾರವಾಗಿ ಮಾತನಾಡಿದಳು. ವೆಂಕಮ್ಮ ಮತ್ತೆ ಹೆಚ್ಚಿಗೆ ಮಾತನಾಡದೆ ಮನೆಗೆ ಹಿಂತುರಿಗಿದಳು. +ಆ ರಾತ್ರಿಯೇ ವೆಂಕಮ್ಮ ಗಂಡಿ ನರಸಿಂಹಸ್ವಾಮಿಗೆ ಹೋದಳು. ಕತ್ತಲಿನಲ್ಲಿಯೇ ತಡವರಿಸುತ್ತಾ ಹೋಗಿ ಚೇಳಿನ ಔಷದದ ಗಿಡದ ಮುಂದೆ ನಿಂತಳು. ಅಲ್ಲಿಯೇ ಸಣ್ಣ ಕುಣಿಯೊಂದನ್ನು ತೋಡಿ, ಅದರಾಗೆ ಮನೆಯಲ್ಲಿ ಬರೆದುಕೊಂದು ಬಂದಿದ್ದ ಚೇಳಿನ ಮಂತ್ರದ ಚೀಟಿಯನ್ನು ಒಂದು ಚಿಕ್ಕ ಕಬ್ಬಿಣದ ಡಬ್ಬದಲ್ಲಿ ಹಾಕಿ, ಅದನ್ನು ಕುಣಿಯಲ್ಲಿಟ್ಟು ಮಣ್ಣು ಮುಚ್ಚಿದಳು. ಕಣ್ಣು ಮುಚ್ಚಿ “ಭೈರವಿ ಬಾಬಾ, ನಂದೇನೂ ತಪ್ಪಿಲ್ಲ” ಎಂದು ಗಲ್ಲಗಲ್ಲ ಬಡಿದುಕೊಂಡಳು. +ಆ ರಾತ್ರಿ ತಾಯಕ್ಕನಿಗೆ ನಿದ್ದೆ ಬರಲಿಲ್ಲ. ಚೇಳಿನ ಮಂತ್ರವನ್ನು ಹೇಳಿ ಕೊಡಲು ಬಂದ ವೆಂಕಮ್ಮನನ್ನು ಹಾಗೆ ಅವಮಾನ ಮಾಡಿ ಕಳುಹಿಸಬಾರದಿತ್ತೆಂದು ಕಸಿವಿಸಿಯಾಗಲಾರಂಭಿಸಿತು. ಯಾತಕ್ಕನ್ನಾ ಕೆಲಸಕ್ಕೆ ಬರ್ತಿತ್ತು, ಕೇಳಿಸಿಕೊಂಡಿದ್ರೆ ತನ್ನ ಗಂಟೇನು ಹೋಗುತ್ತಿತ್ತು ಎನ್ನಿಸಲಾರಂಭಿಸಿತು. ಕೋಳಿ ಕೂಗುವದಕ್ಕೆ ಮುಂಚೆಯೇ ಎದ್ದು ವೆಂಕಮ್ಮನ ಮನೆಗೆ ಹೋದಳು. ಆಗಲೇ ಹೋಗಿ ಬಿಟ್ಟಿದ್ದಾಳೇನೋ ಎಂಬ ಅನುಮಾನವಾಗಲಾರಂಭಿಸಿತು. ಬಾಗಿಲು ಹಾಕಿತ್ತು. “ವೆಂಕಮ್ಮ” ಎಂದು ಕೂಗಿದಳು. ಉತ್ತರ ಬರಲಿಲ್ಲ. ಬಾಗಿಲನ್ನು ದೂಕಿದಳು. ತೆರೆದುಕೊಂಡಿತು. ವೆಂಕಮ್ಮ ನೆಲದ ಮೇಲೆ ಮಲಗಿದ್ದಳು. ತಾಯಕ್ಕ ಮತ್ತೊಮ್ಮೆ ವೆಂಕಮ್ಮ ಎಂದು ಕೂಗಿದಳು. ಉತ್ತರ ಬರಲಿಲ್ಲ. ಯಾಕೋ ಅನುಮಾನವಾಗಿ ಹತ್ತಿರ ಹೋಗಿ ಮೈ ಮುಟ್ಟಿದಳು. ಯಾವಾಗಲೋ ದೇಹ ಸೆಟೆದುಕೊಂಡಿತ್ತು. ಮೈ ಬಣ್ಣ ಕಾಗೆಯಂತೆ ಕಪ್ಪಾಗಿತ್ತು. ಚೇಳಿನ ವಿಷದ ಸೀಸೆ ಖಾಲಿಯಾಗಿ ಹತ್ತಿರದಲ್ಲೇ ಬಿದ್ದಿತ್ತು. ಗೋಡೆಗೆ ನೇತು ಹಾಕಿದ್ದ ಚೇಳಿನ ಪಠ ಮಾತನಾಡದೆ ಮೌನವಾಗಿತ್ತು. +ಮರುದಿನ ಸೇಠ್‌ಜೀಯೇ ಮುಂದೆ ನಿಂತು ವೆಂಕಮ್ಮನ ಶವಸಂಸ್ಕಾರದ ಖರ್ಚನ್ನು ನೋಡಿಕೊಂಡ. ಅದೇ ದಿನ ರಾತ್ರಿ ಯಾರೋ ಕಳ್ಳರು ಒಂದು ಡ್ರಮ್ಮಿನಷ್ಟು ಅಡಿಕೆಯನ್ನು ವೆಂಕಮ್ಮನ ಮನೆಯಿಂದ ಲಪಟಾಯಿಸಿಬಿಟ್ಟರು. +***** +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ […] +(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […] +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ ವರೆಸಿಕೊಳ್ಳುತ್ತ ಸುಮಾರು ಹೊತ್ತು ಅಲ್ಲೇ ಒಂಟಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_93.txt b/Kannada Sahitya/article_93.txt new file mode 100644 index 0000000000000000000000000000000000000000..a26df71a43022f5796ca009cd40e11845faef286 --- /dev/null +++ b/Kannada Sahitya/article_93.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು +ಹಲ್ಲು ಮೊಲೆ ಮೂಗು ಕೈಕಾಲುಗಳಿಗು. +ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ +ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ. +ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ +ಮೈಕಡಿದರೆ ಅದಕ್ಕೊಂದು ಕ್ರೀಮು, +ಹೊಕ್ಕಳನು ಶುದ್ಧಿಮಾಡುವುದಕ್ಕೆ ನೈಲಾನುಬ್ರಶ್ಶು. +ಯೋಗಾಸನಕ್ಕೆ ಕುರ್ಚಿ, ಬಿಸಿಲ ಪ್ರಕೋಪಕ್ಕೆ ಮುಲಾಮು. +ಕಳ್ಳರು ಮನೆಗೆ ನುಗ್ಗಿದರೆ ಪೋಲೀಸರಿಗೆ ಬೆಲ್ಲು +ಪ್ರತಿಯೊಬ್ಬ ತರುಣಿಗೂ ಅಪಾಯ ತಪ್ಪಿಸುವ ಪಿಲ್ಲು. +ಇಡೀ ಅಮೆರಿಕವೇ ಒಂದು ಸೂಪರ್ಮಾರ್ಕೆಟ್ಟು +ಪ್ರತಿಯೊಬ್ಬನಿಗು ಇಷ್ಟು ಡಾಲರ್ ಎಂದು ಬೆಲೆಯುಂಟು. +ತಮ್ಮನ್ನೆ ಮಾರಿಕೊಂಡವರಿಗೂ +ಸ್ವತಂತ್ರರೆನ್ನುವ ಭಾವ ದೊರೆವುದುಂಟು. +ಎಂಥ ದುಡಿಮೆಯೇ ಇರಲಿ ಅಲ್ಲಿ ಕೀಳಲ್ಲ. +ಮುಖದೆದುರೇ ಪ್ರದರ್ಶಿಸುವ ಗೋಗೋ ಹುಡುಗಿಯರು +ಕ್ಯಾಬರೇ ಹುಡುಗಿಯರು, ಬಾರುಗಳಲ್ಲಿ +ರಾತ್ರಿ ವ್ಯಾಪಾರಕ್ಕೆ ಕಾಯುವವರು, ಎಲ್ಲರೂ ದುಡಿಮೆಯವರು. +ಅಲ್ಲಿ ಸ್ವಾತಂತ್ರ್ಯಕ್ಕೆ ಮೇರೆ ಇಲ್ಲ. +ಎಷ್ಟು ಗಂಡುಗಳ ಜೊತೆ ಮಲಗಿದ್ದೆವೆನ್ನುತ್ತ +ಲೆಕ್ಕ ಇಟ್ಟಿರುವ ಮಹಿಳೆಯರಿಗೂ ಅಲ್ಲಿ ಸ್ವಾತಂತ್ರ್ಯವುಂಟು. +ಗಂಡ ಊರಿಂದ ಬರುವತನಕವೂ +ಜೋತೆಗಾಗಿ ಜಹಿರಾತು ಕೊಡುವರುಂಟು. +ಸಿನಿಮಾದಲ್ಲಿ ಎಲ್ಲವನ್ನೂ ಬಿಚ್ಚಿ ತೋರಿಸುವುದುಂಟು, +ಸಂಸಾರಸುಖವನ್ನು ಮೂವಿಕ್ಯಾಮರದಲ್ಲಿ ಹಿಡಿದಿಡುವರುಂಟು. +***** +೩೦-ಜನವರಿ-೧೯೮೧ +ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […] +ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […] +ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_94.txt b/Kannada Sahitya/article_94.txt new file mode 100644 index 0000000000000000000000000000000000000000..ef93e64b3043a558924a19d9e80e5c32373ca8d8 --- /dev/null +++ b/Kannada Sahitya/article_94.txt @@ -0,0 +1,109 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲರಿಗೂ ನಮಸ್ಕಾರ, +ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ ಅನುಪಮವಾಗಿ ಕ್ರಿಯಾಶೀಲರಾಗಿರುವ ಶಂಭು ಹೆಗಡೆಯವರ ಸಂಪರ್ಕ ದೊರೆತು, ನನ್ನನ್ನು ಅತಿಯಾಗಿ ಆವರಿಸಿಕೊಂಡಿದ್ದ ಕೆರೆಮನೆ ಶಿವರಾಮ ಹೆಗಡೆಯವರ ಕೃತಿಗಳನ್ನು ಪ್ರಕಟಿಸಲು ಅನುಮತಿ ದೊರೆತದ್ದು. +ಕನ್ನಡದಲ್ಲಿ ಬಂದಿರುವ ಅಪರೂಪದ ಆತ್ಮಕತೆಯಾದ ‘ನೆನಪಿನ ರಂಗಸ್ಥಳ’ ಈ ಬಾರಿ ಒಂದೇ ಕಂತಿನಲ್ಲಿ ಪ್ರಕಟಿಸಿದ್ದೇವೆ. ಪ್ರತಿಷ್ಠೆಯ ಯಾವುದೇ ಪ್ರಲೋಭನೆಗೊಳಗಾಗದೆ ತಮ್ಮ ಜೀವನ ಹಾಗು ಪರಿಸರವನ್ನು ಜಿ ಎಸ್ ಭಟ್‌ರ ಮೂಲಕ ಶಿವರಾಮ ಹೆಗಡೆಯವರು ನಿರುಮ್ಮಳವಾಗಿ ಪ್ರಕಟಿಸಿದ್ದಾರೆ. ಇದು ಕನ್ನಡದ ಅತ್ಯಂತ ಶ್ರೇಷ್ಠ ಕೃತಿ ಎನ್ನುವುದು ಓದಿದರೆ ನಿಮಗೆ ತಿಳಿಯುತ್ತದೆಯಾದ್ದರಿಂದ ಹೆಚ್ಚಿಗೆ ಏನನ್ನೂ ನಾನು ಹೇಳುವುದಿಲ್ಲ. +ಈ ಬಾರಿಯ ನಮ್ಮ ಲೇಖಕರ ಬಳಗಕ್ಕೆ ಸೇರಿಕೊಂಡಿರುವವರು ಅಮೆರಿಕೆಯ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಸುಕನ್ಯ ಕನಾರಳ್ಳಿ ಹಾಗು ಸುಪ್ತದೀಪ್ತಿ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿರುವ ಜ್ಯೋತಿ ಮಹಾದೇವ್‌ರವರು. ಅವರಿಗೆ ಸ್ವಾಗತ. +* +* +* +ಮುಂಬೈ-ಪುಣೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಉದ್ಘಾಟನೆ ಹಾಗು ವಿಚಾರ ಸಂಕಿರಣ +ಇದು ಸುದೀರ್ಘವಾಗಿದೆ. ಯಥಾ ಪ್ರಕಾರ. ಆದುದರಿಂದ ನಿಮ್ಮ ತಾಳ್ಮೆಯ ಓದನ್ನು ಇದು ಬೇಡುತ್ತದೆ. ನಿಮ್ಮ ಕಚೇರಿಯ ಅವಸರದಲ್ಲೋ, ಗೃಹಕೃತ್ಯಗಳ ಬಿರುಸಿನಲ್ಲೋ ಈ ಬರವಣಿಗೆಯ ತುಣುಕನ್ನು, ನಿಮ್ಮ ಈ ಲೇಖನದ/ಬರವಣಿಗೆಯ ಓದನ್ನು ಕಳೆದು ಹೋಗದಂತೆ ನಿಮ್ಮ ಸಮಯವನ್ನು, ಚಿತ್ತವನ್ನು ಸಜ್ಜುಗೊಳಿಸಿರೆಂದು ಮನವಿ ಮಾಡಿಕೊಳ್ಳುತ್ತಾ: +ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಉತ್ಸಾಹ, ಅನೇಕಾನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಉತ್ಸಾಹದ ನಡುವೆ ನಡೆದ ಎರಡು ಸಭೆಗಳಲ್ಲಿ ಸೃಷ್ಟಿಯಾದ ಭರವಸೆಗಳು-ಅದಕ್ಕೆ ತಕ್ಕಂತಹ ಸಂಕಲ್ಪ ಗಟ್ಟಿಯಾದರೆ, ಯೋಜನಾಬದ್ಧವಾದ ಚಟುವಟಿಕೆಗಳನ್ನು ಕಾರ್ಯಾಚರಣೆಗೆ ತಂದರೆ ಕನ್ನಡಸಾಹಿತ್ಯ.ಕಾಂ ಭಾರತ ದೇಶದಲ್ಲೇ ಅತ್ಯುತ್ತಮವಾದ ಒಂದು ಸಮುದಾಯದ ಚಟುವಟಿಕೆಯಾಗಿ ನಿಲ್ಲಬಲ್ಲದು ಎನ್ನುವ ಪರಿಕಲ್ಪನೆ, ಭರವಸೆ ಒಳಗೊಳಗೆ ಖುಷಿಕೊಡುತ್ತಿದೆ. ಈ ಖುಷಿಯ ನಡುವೆ ಒಂದು ಎಚ್ಚರಿಕೆಯೂ ಇದೆ. ಅದು: ನಾವು ಎಡವುತ್ತೇವೆ ಮತ್ತು ಎಡವುತ್ತಿದ್ದೇವೆ. ಈ ಎಚ್ಚರಿಕೆಯ ನಡುವೆಯೇ: ನಡೆಯ ಬೇಕೆಂದರೆ ಎಡವಲೇ ಬೇಕು, ನೂಕು ಗಾಲಿಯ ನೆರವು, ಅಪ್ಪ ಅಮ್ಮನ ಕೈಗಳನ್ನು ಹೀಡಿದೋ ತಪ್ಪು ಹೆಜ್ಜೆಗಳನ್ನು ಹಾಕುಹಾಕುತ್ತಲೇ ಮುಂದಿನ ಹಾದಿಯಲ್ಲಿನ ಹೆಜ್ಜೆಗಳು ಸದೃಢವಾಗುತ್ತದೆ. ಅಂತದೊಂದು ಪ್ರಯಾಣದ ಅಗತ್ಯ, ಆ ಅಗತ್ಯಕ್ಕೆ ಬೇಕಾದ ತಾಲೀಮು ನಡೆಯಲಾರಂಭಿಸಿದೆ. +ಮುಂಬೈ ನಿವಾಸಿ ರೋಹಿತ್ ಕನ್ನಡಸಾಹಿತ್ಯ.ಕಾಂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಉತ್ಸಾಹಿ. ಇವರ ಜೊತೆಗೆ ಚಿದಾನಂದ, ನರಸಿಂಹ ದತ್ತ ಹಾಗು ಅನೇಕ ಮಿತ್ರರು ಮುಂಬೈ ಕರ್ನಾಟಕ ಸಂಘದ ಸಹಕಾರದ ಸಂಯುಕ್ತಾಶ್ರಯದಲ್ಲಿ ಮುಂಬೈ-ಪುಣೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ವಿದ್ಯುಕ್ತ ಉದ್ಘಾಟನೆ, ಒಂದು ದಿನದ ವಿಚಾರಸಂಕಿರಣದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. +ಕಾರ್ಯಕ್ರಮದ ವಿವರಗಳು: +ಉದ್ಘಾಟನೆಯ ದಿನಾಂಕ: ೧೫-೧೦-೨೦೦೬ ಬೆಳಿಗ್ಗೆ: ೧೦.೩೦, ಸ್ಥಳ: ಮಾಟುಂಗಾದಲ್ಲಿರುವ ಕರ್ನಾಟಕ ಸಂಘದ ಸಭಾಂಗಣ. +ಉದ್ಘಾಟನೆ: ಜಯದೇವ ಹಟ್ಟಂಗಡಿ – ರಂಗ ತಜ್ಞರು +ಅಧ್ಯಕ್ಷತೆ: ಮನೋಹರ ಎಂ ಕೋರಿ – ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರು +ಮುಖ್ಯ ಅತಿಥಿ: ಸದಾನಂದ ಸುವರ್ಣ – ಚಲನಚಿತ್ರ ನಿರ್ದೇಶಕರು, ರಂಗ ತಜ್ಞರು +ಆಶಯ ಭಾಷಣ: ಶೇಖರ್‌ಪೂರ್ಣ +ಮಧ್ಯಾಹ್ನ ೧೨-೩೦ ರಿಂದ ೧-೩೦ ಗೋಷ್ಠಿ +“ಭಾಷೇ, ಸಂಸ್ಕೃತಿ ಹಾಗು ಸಂವಹನ ಮಾಧ್ಯಮಗಳು” +– ಕಮಲಾಕರ ದೀಕ್ಷಿತ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಡಿ‌ಆರ್‌ಕೆ ಕಾಲೇಜು, ಕೊಲ್ಹಾಪುರ +“ಸೃಜನಶೀಲ ಅಭಿವ್ಯಕ್ತಿಗೆ ಮಾಹಿತಿ ತಂತ್ರಜ್ಞಾನದ ಸಲಕರಣೆಗಳ ಬಳಕೆ” +ಮಿತ್ರಾ ವೆಂಕಟರಾಜ್- ಲೇಖಕಿ +೧-೩೦ ರಿಂದ ೨-೩೦ ರವರೆಗೆ ಭೋಜನ ವಿರಾಮ +೨-೩೦ರಿಂದ ೩-೦೦ +“ಡಿಜಿಟಲ್ ಮೀಡಿಯ ಮೂಲಕ ಪ್ರಾದೇಶಿಕ ಅಭಿವ್ಯಕ್ತಿ” +-ಪಿ ಎನ್ ರಾಮಚಂದ್ರ, ‘ಸುದ್ಧ’ ಪ್ರಶಸ್ತಿ ವಿಜೇತ ಚಲನಚಿತ್ರದ ನಿರ್ದೇಶಕರು +೩-೦೦ ರಿಂದ ೪-೦೦ +ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ +೪-೦೦ ರಿಂದ ೪-೩೦ ಸಮಾರೋಪ +ಮುಖ್ಯ ಅತಿಥಿ: ಹೇಮಂತ ಹೆಗಡೆ +ಚಲನಚಿತ್ರ ನಿರ್ದೇಶಕರು +* +* +* +ಇತ್ತೀಚೆಗೆ ನನ್ನನ್ನು ಅಪಾರವಾಗಿ ಕಾಡುತ್ತಿರುವ ವಿಷಯವನ್ನು ಕೆಳಗೆ ಪ್ರಸ್ತಾಪಿಸಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿದ್ದೇನೆ. ಎಲ್ಲರೂ ಸಂಕೋಚ ಬಿಟ್ಟು ಮಾತನಾಡಬೇಕಾದ ಸಂದರ್ಭಕ್ಕೆ ಇದು ಆಹ್ವಾನ ಮತ್ತು ಚರ್ಚೆಯಾದಷ್ಟೂ ನಮ್ಮ ಮುಂದಿನ ಗುರಿಗಳು, ಹಾದಿ ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ ಎನ್ನ್ವುದರಲ್ಲಿ ಸಂಶಯವಿಲ್ಲ. +* +* +* +ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು +ಪ್ರಸ್ತಾವನೆಯ ವಿಸ್ತಾರ +ಸುದೀರ್ಘವಾದ ಬರವಣಿಗೆಯ ಈ ತುಣುಕಿನ ಹಿನ್ನೆಲೆ ಒಂದು ಸಂವಾದವನ್ನು ಬಯಸುತ್ತಿದೆಯಾದ್ದರಿಂದ ಸುದೀರ್ಘವಾಗಿದೆ ಮತ್ತು ಕನ್ನಡಸಾಹಿತ್ಯ.ಕಾಂ ನನಗೆ ಒದಗಿಸಿರುವ ಅನುಭವ ತರಬಹುದಾದ ಮಾಹಿತಿ-ವಿಚಾರ-ವಿವರಗಳನ್ನು ಮಾತ್ರ ಆಧರಿಸಿರುವ ಸೀಮಿತ ನೋಟವಿದೆ. ಸಮಗ್ರವೆಂದೆನ್ನುವ ಭ್ರಮೆಯಂತೂ ಇಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ. +ಜಗತ್ತಿನಾದ್ಯಂತ ಇರುವ “ಕಂಪ್ಯೂಟರ್ ಬಳಕೆದಾರರು’ (ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗನಿರತರಾಗಿರುವವರು, ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಅಲ್ಲದೇ ಯಾವುದೇ ಮಟ್ಟದಲ್ಲಿಯೇ ಆದರೂ ಸರಿ ಕಂಪ್ಯೂಟರ್ ಬಗೆಗೆ ಆಸಕ್ತಿ ಉಳ್ಳವರು) ದಯವಿಟ್ಟು ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಸುದೀರ್ಘವಾದ ಲೇಖನ ಒಂದು ಪ್ರಸ್ತಾವನೆಯನ್ನು ನಿಮ್ಮ ಮುಂದಿಡುತ್ತಿದೆ. ಜೊತೆಗೆ, ಪ್ರಸ್ತಾವನೆ, ಮನವಿ, ಕರೆ ಏನಾದರೂ ಸರಿ, ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿದು ನಂತರ ಕಾರ್ಯಯೋಜನೆಗೆ ಸಜ್ಜಾಗಬಹುದು. ಹೀಗೆ ಸಜ್ಜಾಗುವ ಮುನ್ನ ಪ್ರಸ್ತಾವನೆಯನ್ನು ವ್ಯಾಪಕವಾಗಿಸಿ, ಬರಬಹುದಾದ ಪ್ರತಿಕ್ರಿಯೆಯನ್ನು ಆಧರಿಸಿ ಕಾರ್ಯ ಯೋಜನೆ ಮಾಡಬಹುದು ಎನ್ನುವ ಉದ್ದೇಶವೂ ಈ ಲೇಖನದ ಹಿನ್ನೆಲೆಯಲ್ಲಿದೆ. ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಆಧರಿಸಿ, ಮುಂದಿನ ಕಾರ್ಯ ಯೋಜನೆಗಳನ್ನು ಅಂತಿಮಗೊಳಿಸಬಹುದು. ‘ಗೊತ್ತಿಲ್ಲದಿರುವುದೇನನ್ನೂ ಇವನು ಹೇಳುತ್ತಿಲ್ಲ’ ಎಂದೋ, ‘ಬಾಲಬೋಧೆಯಂತಿದೆ’ ಎಂದೆನ್ನುವ ಭಾವನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಲೂ ಬಹುದು. ಕೆಲವೆಡೆ ವಾದದ/ವಿಷಯದ ಸ್ಪಷ್ಟತೆಗಾಗಿ, ಹರಿವಿಗೆ ತಕ್ಕಂತಿನ ವಿವರಗಳ ಜೋಡಣೆ ಮಾಡಿದ್ದೇನೆ ಎಂದೆನ್ನುವುದನ್ನು ಇಲ್ಲಿ ಸ್ಪಷ್ಟ ಪಡಿಸುತ್ತಿದ್ದೇನೆ. ನಿಮ್ಮನ್ನೂ ಈ ಸಂವಾದದ ಸ್ವರೂಪದಲ್ಲಿ ತೊಡಗಿಸಿಕೊಳ್ಳುವುದರಿಂದ, ನಾನು ಹಾಗು ನೀವು ಒಟ್ಟೊಟ್ಟಿಗೆ ಒಂದೇ ನೆಲೆಯಲ್ಲಿ ನಿಂತು ನೋಡುವ ಧಾಟಿಯ ಶೈಲಿಯನ್ನು ಬೇಕೆಂದೇ ಇಲ್ಲಿ ಅಳವಡಿಸಿದ್ದೇನೆ. +* +* +* +ನಮ್ಮ ಹಂಬಲ, ನಿರೀಕ್ಷೆ, ಆಶೋತ್ತರ, ಕೀಳರಿಮೆ ಎಲ್ಲವನ್ನೂ ರಾಜಕೀಯ ಅಧಿಕಾರಗಳು, ಅಧಿಕಾರಶಾಹಿ ಹಾಗು ಸಮಾಜಾಶೋತ್ತರಗಳು ನೇರವಾಗಿ ಹಾಗು ಪರೋಕ್ಷವಾಗಿ “ನೀತಿ-ನಿಯಮಾವಳಿಗಳನ್ನು’ ರೂಪಿಸುವ ಮೂಲಕ ನಿರ್ದೇಶಿಸುತ್ತಿರುತ್ತವೆ ಎನ್ನುವ ಕಟು ಸತ್ಯ. ಇದರ ನೆಲೆಯಲ್ಲಿ ’ಮಾಹಿತಿ-ತಂತ್ರಜ್ಞಾನ’ವನ್ನು ಇಟ್ಟು ನೋಡುತ್ತಾ ಹೋದಾಗ ನಮ್ಮ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳು, ಆದೇಶಗಳು, ಬೆಂಬಲ ಎಲ್ಲವೂ ವಾಣಿಜ್ಯಮಯ ಪರಿಸರಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಅಲ್ಲೊಂದು ಇಲ್ಲೊಂದು ‘ಭೂಮಿ’, ‘ನುಡಿ’ ಎನ್ನುವ ತುಣುಕುಗಳು ಕಾಣ ಸಿಗುತ್ತವೆ. ವಾಣಿಜ್ಯ ಪರಿಸರದಲ್ಲಿ ನಮ್ಮ ಶೈಕ್ಷಣಿಕ-ಸಾಂಸ್ಕೃತಿಕ ಮೌಲ್ಯಗಳು ಈ ನೀತಿ-ನಿಯಮಾವಳಿಗಳಿಗೆ ತಕ್ಕಂತೆ ರೂಪುಗೊಂಡು ಬಿಡುತ್ತವೆ. ಇಂಜಿನಿಯರಿಂಗ್ ಕಾಲೇಜುಗಳು ಹೆಚ್ಚುತ್ತಾ ಹೋಗುತ್ತವೆ, ನ್ಯಾಯಾಲಯಗಳಲ್ಲಿ ವಾದ-ವಿವಾದ, ಆತ್ಮಹತ್ಯೆಗಳಂತಹ ಕ್ಷೋಬೆ ಒಂದೆಡೆಯಾದರೆ, ಪಿಜ್ಜಾ ಹಟ್‌ಗಳು ತೊಂಬತ್ತು ರೂಪಾಯಿಯ ಕಾಫಿ ಸರ್ವ್ ಮಾಡಿ, ನೀನು ಈ ಅದ್ಭುತವಾದ ಕಾಫಿ ಕುಡಿಯಬಲ್ಲೆ ಎಂದು ಓಲೈಸಬಹುದಾದ ಮಾಧ್ಯಮದ ಜಾಹಿರಾತುಗಳು, ತಂತ್ರಜ್ಞಾನವನ್ನು ಪರಿಚಯಿಸುವ ಲೇಖನಗಳುಳ್ಳ ಪತ್ರಿಕೆಗಳು (ಚಿಪ್, ಡಿಜಿಟ್, ಪಿಸಿ ವರ್ಲ್ಡ್-ಮುಂತಾದವು). ಇವೆಲ್ಲ ಇಲ್ಲದೆ ಇದ್ದರೆ, ದಕ್ಕಿಸಿಕೊಳ್ಳದೆ ಹೋದರೆ ಎಂದೆನ್ನುವ ಭೀತಿ ಹಾಗು ಕೀಳರಿಮೆ. ‘ನಿನಗೆ ಕಂಪ್ಯೂಟರ್ ಎಂದರೇನು ಗೊತ್ತೇ…?’ ಎಂದೆನ್ನುವ ಆತ್ಮಸ್ಥೈರ್ಯ, ಇದೇ ಆತ್ಮಸ್ಥೈರ್ಯ ತನ್ನ ವಲಯವನ್ನು ದಾಟಿದೊಡನೆ ಅಹಂಕಾರ, ದುರಹಂಕಾರ. ಇವೆಲ್ಲವೂ ವ್ಯಕ್ತಿ-ವ್ಯಕ್ತಿ ಮಧ್ಯೆ, ಸಮೂಹ-ವ್ಯಕ್ತಿ ಮಧ್ಯೆ ದೊಡ್ಡ ಕಂದರವಾಗಿ ಎಲ್ಲವೂ “ಮಡುಗಟ್ಟಿದ ದ್ವೀಪದ ಸಮೂಹಗಳೆ’ ಆಗಿ ‘ಗ್ಲೋಬಲ್ ವಿಲೇಜ್’ ಎಂದೆನ್ನುವ ಸಾಂದರ್ಭಿಕ ವ್ಯಾಖ್ಯಾನವೂ ಸಹ ಒಂದು ಮಿಥ್ಯೆಯೇ. ಕಟು ಸತ್ಯ ಹಾಗು ಮಿಥ್ಯೆಯ ನಡುವೆ ಇಂದು ನಾವೆಲ್ಲ ಸಿಲುಕಿಕೊಂಡಿದ್ದೇವೆ. ಇದು ನನ್ನ ಪರಿಸರದ ಸತ್ಯ. ಹಾಗು ನಿಮ್ಮದೂ ಸಹ. ಈ ಪರಿಸರ ನಿರ್ಮಾಣಕ್ಕೆ ನಾನು ಹೇಗೆ ಕಾರಣವೋ ಹಾಗೆಯೇ ನೀವೂ ಸಹ. ಅಲ್ಲಲ್ಲಿ ಈ ಪರಿಸರದ ಪ್ರಭಾವವನ್ನು ಮೀರುವ ಪ್ರಯತ್ನಗಳನ್ನು ನಾನೂ ಮಾಡುತ್ತಿರುತ್ತೇನೆ-ಹಾಗೆಯೇ ನೀವು ಮಾಡುತ್ತಿರುತ್ತೀರ ಎಂದೆನ್ನುವ ಪರಸ್ಪರ ಭರವಸೆಯೇ ಸದ್ಯಕ್ಕೆ ನಮಗಿರುವ ಪ್ರಾಣವಾಯು. ಆದರೆ, ಇಷ್ಟೇ ಸಾಲದು ಎಂದೆನ್ನುವ ಎಚ್ಚರಿಕೆಯೇ ಈಗಿನ ಅಗತ್ಯ ಹಾಗು ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲರಾಗಬಹುದಾದ ಅಗತ್ಯವೂ ಸಹ. +* +* +* +ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ +ಈಗ ನೇರ ಉದಾಹರಣೆಗೆ ಬರೋಣ. +ಒಂದನೆ ತರಗತಿಯಿಂದಲೇ ‘ಕಂಪ್ಯೂಟರ್ ಜಗತ್ತನ್ನು’ ಪರಿಚಯಿಸುವ ಉತ್ಸಾಹ ಮೇಲ್ವರ್ಗದ ಶಾಲೆಗಳಲ್ಲಿ ಕಾಣ ಸಿಗುತ್ತದೆ. ಈ ‘ಕಂಪ್ಯೂಟರ್ ಜಗತ್ತಿಗೆ’ ಮಕ್ಕಳನ್ನು ಸಜ್ಜುಗೊಳಿಸುತ್ತಾ ಹೋಗುವಾಗ ಅದು ಕೇವಲ ಇಂಗ್ಲಿಷ್ ಸಾಧ್ಯತೆಯನ್ನಷ್ಟೇ ತೆರೆದಿಡುತ್ತಾ ಕಂಪ್ಯೂಟರ್ ಎಂದರೆ ಇಂಗ್ಲಿಷ್ ಎಂದೆನ್ನುವಂತಹ ಸಮೀಕರಣ ನಿರ್ಮಾಣವಾಗುತ್ತಿರುತ್ತದೆ. ಹೀಗಾಗಿ ಮಗು ಸಹ ಕಂಪ್ಯೂಟರ್ ಎಂದರೆ ಇಂಗ್ಲೀಷ್ ಎಂದೆನ್ನುವುದನ್ನು ಮಾತ್ರ ಅಂಗೀಕರಿಸುತ್ತಾ ಹೋಗಿ ಬಿಡುವ ಅಪಾಯದ ಕುರಿತು, ಹಾಗೆ ‘ಕಂಪ್ಯೂಟರ್-ಇಂಗ್ಲಿಷ್’ಮಯ ಲೋಕ ಮಾತ್ರ ನಿರ್ಮಾಣವಾಗುತ್ತ ಹೋಗುತ್ತಿರುತ್ತದೆ. ಹೆತ್ತವರಿಗೂ ಇದು ಅಪ್ಯಾಯಮಾನವಾಗಿ ಮಗನ ‘ಉದ್ಯೋಗ-ಗಳಿಕೆ-ದೇಶಾಂತರ’ದ ಸವಲತ್ತುಗಳ ಖಾತ್ರಿ ಹೆಚ್ಚುತ್ತಾ ಹೋಗುತ್ತದೆ. ಹೆತ್ತವರು ಹಾಗು ಮಕ್ಕಳು ಪರಸ್ಪರ ನಂಬಿಕೆಗಳ ಮೇಲೆ ಪರಿಸರವೊಂದನ್ನು ಕಟ್ಟುತ್ತಾ ಹೋಗುವಾಗಲೇ, ದೇಸಗತಿ ಎನ್ನುವುದಕ್ಕೆ ಧಕ್ಕೆಯೊದಗಿದಾಗಲೇ ಪ್ರೌಢರ ಮಧ್ಯೆಯ ಸಂಬಂಧಗಳು ಬಿರುಕೂ ಸಹ ಬಿಡ ತೊಡಗಿವೆ ಎನ್ನುವ ವಿಷಮವೃತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಇದು ಮೇಲ್ವರ್ಗದ ಸತ್ಯವಾದರೆ, ಹಳ್ಳಿಗಳಲ್ಲಿ, ನಗರಸಭೆ ಶಾಲೆಗಳಲ್ಲಿ ‘ಅಜೀಂ ಪ್ರೇಂಜಿ ಫೌಂಡೇಶನ್, ಮೈಕ್ರೋಸಾಫ್ಟ್ ಕೃಪೆಯಿಂದ ನಡೆಯುವ ಕಂಪ್ಯೂಟರ್ ಜ್ಞಾನ ಯಜ್ಞ ಅತಿ ಬೇಗನೆ ಕಿಲುಬು, ಗೆದ್ದಲು ಹಿಡಿದು ನಿಲ್ಲುತ್ತವೆ. ( ಈ ಮಧ್ಯೆ, ಪಂಚಾಯಿತಿ ಕಚೇರಿಗಳಲ್ಲಿ ಕಂಪ್ಯೂಟರ್ ಇದ್ದರೂ ಅದನ್ನು ಬಳಸುವವರಿಲ್ಲದೆ ಅದಕ್ಕೂ ಇದೇ ಗತಿ. ನಮ್ಮ ಮೇಲ್‌ಸಂಪಾದನೆ ನಿಂತು ಹೋದಾತು ಎಂದು ಅಧಿಕಾರ ಶಾಹಿಗಳೇ ವಿರೋಧ ಒಡ್ಡುವ, ಕೆಡಿಸಿರುವ ಕುಹಕವೂ ನಮ್ಮ ಮುಂದಿದೆ) +-ಇಂತಹ ವಾತಾವರಣಕ್ಕೆ ತಕ್ಕಂತೆ ಪ್ರತಿಕ್ರಿಯಿಸಬಹುದಾದ ಕರ್ತವ್ಯ ಎಲ್ಲರದೂ ಎಂದು ಭಾವಿಸಿದ್ದೇನೆ. +ಜೊತೆಗೆ, ಕಂಪ್ಯೂಟರ್ ಮಾರಾಟವೆನ್ನುವುದು ಸಂಖ್ಯಾತ್ಮಕವಾಗಿ ಹೆಚ್ಚಾಗುತ್ತಿರುವಾಗ, ಅದರಲ್ಲಿ ‘ಸ್ಥಳೀಯ ಪರಿಸರಕ್ಕೆ ಭಾಷಾಲೋಕವನ್ನು ತೆಗೆದಿಡಬಹುದಾದ ತಂತ್ರಾಶಗಳು’ ಕಡ್ಡಾಯವಾಗಿ ಸೇರಿಕೊಳ್ಳುವಂತೆ ಮಾಡಿದರೆ, ಕನಿಷ್ಟ ಸ್ಥಳೀಯ ಅಗತ್ಯಗಳ, ಸಾಧ್ಯತೆಗಳ ಪರಿಸರವನ್ನಾದರೂ ನಿರ್ಮಾಣ ಮಾಡಿದಂತಾಗುತ್ತದೆ. ವ್ಯಾಪಕವೂ ಆಗುತ್ತದೆ. ಇದು ನನ್ನ ಹಾಗು ನಿಮ್ಮ ಆದ್ಯತೆ, ಕರ್ತವ್ಯ, ಚಟುವಟಿಕೆಯೂ ಆಗಬೇಕು. ಅದು ತಕ್ಷಣದ ಅಗತ್ಯವೂ ಆಗಬೇಕು ಎಂದೆನ್ನುವುದು ನನ್ನ ಪ್ರಸ್ತಾವನೆ. ಜೊತೆಗೆ ಸೈಬರ್ ಕೆಫೆಗಳಲ್ಲಿ ಆಯಾ ಸ್ಥಳದ ತಂತ್ರಾಂಶಗಳು ಅನುಸ್ಥಾಪನೆಯಾಗಿರುವಂತೆ ನೋಡಿಕೊಳ್ಳಬೇಕು. ಇದರ ಕಾರ್ಯಸಾಧನೆ ಒಬ್ಬಿಬ್ಬರಿಂದ ಆಗುವಂತಹ ಕೆಲಸವಲ್ಲ. ಸಣ್ಣ ಮಟ್ಟದಲ್ಲಾದರೆ ಸರ್ಕಾರದ ಉಪೇಕ್ಷೆಗೆ ಒಳಗಾಗಬಹುದು, ಐಬಿ‌ಎಂ, ಎಚ್‌ಪಿಯಂತಹ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ನಮ್ಮ ಈ ಅಗತ್ಯದ ಧ್ವನಿಗೆ ಸೊಪ್ಪು ಹಾಕದೇ ಹೋಗಬಹುದು. +ಈ ಕುರಿತು ಅರ್ಥಪೂರ್ಣವಾದ ಸಂವಾದವೊಂದರ ಅಗತ್ಯ ನಮಗಿದೆ. ಸರ್ಕಾರ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರ ಎದುರು ನಮ್ಮ ಸ್ಥಳೀಯ ಅಗತ್ಯಗಳನ್ನು ಕುರಿತಂತೆ ಗಮನಸೆಳೆಯಬೇಕಾದ ಚಟುವಟಿಕೆಗಳೇ ಈಗಿನ ಜರೂರು. ಇದಕ್ಕೆ ತಕ್ಕಂತೆ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ, ಹಾಗು ಇನ್ನಿತರ ಸಂಘಟನೆಗಳ ಕಾರ್ಯಚಟುವಟಿಕೆಗಳು ರೂಪುಗೊಳ್ಳ ಬೇಕಾದ ಅಗತ್ಯವೂ ಇದೆ. ಸಂಸ್ಕೃತಿ-ದೇಸಗತಿ ಹಾಗು ತಾಂತ್ರಿಕತೆ ನಡುವಿನ ಕಂದರ ಕಡಿಮೆಗೊಳಿಸುವ ಹೆಜ್ಜೆಗಳನ್ನು ಕ್ರಮೇಣ ಇಡಲಾರಂಭಿಸಬೇಕು. ಕಂಪ್ಯೂಟಿಂಗ್ ಪರಿಸರದಲ್ಲಿ ದೇಸಗತಿಯ ಅಗತ್ಯಗಳನ್ನು ವ್ಯಾಖ್ಯಾನಿಸುತ್ತ ಹೋಗ ಬೇಕಾಗಿದೆ. +ಈ ಕುರಿತಂತೆ ನನ್ನ ಸಲಹೆಗಳನ್ನು ಹೀಗೆ ಇಡುತ್ತಿದ್ದೇನೆ- ಈ ಸಲಹೆಗಳ ಕುರಿತಂತೆ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೆನೆ. ಪ್ರತಿಕ್ರಿಯಿಸಲು ಒಂದು ವಾರದ ಗಡುವು ಇಟ್ಟುಕೊಳ್ಳುವುದು ಮೊದಲ ಹೆಜ್ಜೆ: +ಸಲಹೆಗಳು: +ಕನ್ನಡಸಾಹಿತ್ಯ,ಕಾಂ ಬೆಂಬಲಿಗರ ಬಳಗ, ಇತರ ಸಂಘಟನೆಗಳು, ಚಿಂತಕರು, ವಿಜ್ಞಾನಿಗಳು ಸಂಯುಕ್ತವಾಗಿ ”ಕಂಪ್ಯೂಟಿಂಗ್ ವಾತಾವರಣದಲ್ಲಿ ದೇಸಗತಿಯ ವಾತಾವರಣ ಕುರಿತಂತೆ ಗಮನ ಸೆಳೆಯಲು” – ಒಂದು ದಿನದ ಸಾಂಕೇತಿಕ ಉಪವಾಸ ಧರಣಿ. +ಇದರಿಂದಾಗಿ ನಾನಾ ಆಯಾಮಗಳು ಹುಟ್ಟಿಕೊಳ್ಳುತ್ತದೆ: +– ಐಟಿ ಪರಿಸರದ ವ್ಯಸನಕ್ಕೊಳಗಾಗಿರುವ ಯುವ ಜನಾಂಗದ ಆತ್ಮ ವಿಮರ್ಶೆ, ಆತ್ಮಶೋಧ, ಆತ್ಮಶುದ್ಧಿ. +– ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ಚಿಂತಕರು ಇದಕ್ಕೆ ಬೆಂಬಲ ಸೂಚಿಸುವ ಮೂಲಕ ಚಿಂತನೆಗೆ ಬೇಕಾದ ಕಾರ್ಯ ಹಾಗು ವಿಷಯ ಸೂಚಿ ಸಿದ್ಧವಾಗುತ್ತದೆ. +ಕಾರ್ಯಕ್ರಮದ ರೂಪುರೇಶೆಗಳು: +– ಕಾನೂನಿನ ಅನುಮತಿಯ ನಿಯಮಾವಳಿಗಳಿಗೆ ತಕ್ಕಂತೆ: (ಆಂದರೆ ಪೋಲೀಸ್ ಅನುಮತಿ ಬೇಕಾಗುತ್ತದೆ) ಮಹಾತ್ಮ ಗಾಂಧಿ ರಸ್ತೆ ಅಥವ ವಿಧಾನಸೌಧದ ಪರಿಸರದಲ್ಲಿ ( ಸಂದರ್ಭಕ್ಕೆ ತಕ್ಕಂತೆ ಸ್ಥಳ ಬದಲಾವಣೆಯೂ ಬೇಕಾಗಬಹುದು) ಶಾಮಿಯಾನ ಹಾಕಿ ಸುಮಾರು ನೂರು ಮಂದಿ ಅಥವ ಹೆಚ್ಚು ಮಂದಿ ಐಟಿ ಕ್ಷೇತ್ರದಲ್ಲಿರುವ ಯುವ ಕೆಲಸಗಾರರು ಸೇರುವುದು. ಇದು ನವೆಂಬರ್ ತಿಂಗಳ ರಾಜ್ಯೋತ್ಸವದ ಸಂದರ್ಭದಲ್ಲಿ ಆಗಬೇಕು. ಒಂದೇ ಉಡುಪಿನ ಶಿಸ್ತು. ಬಂದ ಸಂಖ್ಯೆಗೆ ತಕ್ಕಂತ ಸಣ್ಣಪುಟ್ಟ ಗುಂಪುಗಳಾಗಿ ವಿಂಗಡಿಸಿ, ಮಾತುಕತೆ, ಚರ್ಚೆ ಮತ್ತು ಅದರ ದಾಖಲೀಕರಣ. +ಈ ಉಪವಾಸ ಧರಣಿಗೆ ಬೆಂಬಲ ಸೂಚಿಸುವ ವಿವಿಧ ಕ್ಷೇತ್ರದ ಗಣ್ಯರು(ಲೇಖಕರು, ಸಿನಿಮಾ, ನಾಟಕ, ವಿಜ್ಞಾನಿಗಳು..ಹೀಗೆ) ಧರಣಿಯಂದು ಧರಣಿ ಪ್ರದೇಶದಲ್ಲಿ ಇರುವ ಮನವಿ ಪತ್ರದಲ್ಲಿ ಸಹಿ ಹಾಕಬೇಕು. ಈ ಮನವಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಇನ್ನಿತರ ಅಧಿಕಾರಿಗಳಿಗೆ, ಐ.ಟಿ.ಮಾರುಕಟ್ಟೆ ಹೊಣೆ ಹೊತ್ತಿರುವ ಖಾಸಗಿಯವರಿಗೆ ಸಲ್ಲಿಸಲಾಗುವುದು. +ಅಗತ್ಯಗಳು: +ಬೆಂಬಲಿಗರ ಬಳಗದ ಒಪ್ಪಿಗೆ ನಂತರ : +೧. ಕನ್ನಡಸಾಹಿತ್ಯ.ಕಾಂ ಲೋಗೊವುಳ್ಳ ಟಿ-ಶರ್ಟ್ (ಭಾಗವಹಿಸುವ ಬೆಂಬಲಿಗರೆಲ್ಲ ಈ ಟಿ-ಶರ್ಟನ್ನು ಉಪಯೋಗಿಸಬಹುದು) +೨. ಧರಣಿ ನಡೆಸಲು ಅನುಮತಿ- ಆಯಾ ನಗರದ ಕಮೀಷನರ್ (ಅಥವಾ ಸಂಬಂಧಪಟ್ಟ ಅಧಿಕಾರಿ) ಅವರಿಂದ +೩. ಬೆಂಬಲ ಕೋರಲು ವಿವಿಧ ಕ್ಷೇತ್ರಗಳ ಸಾಂಸ್ಕೃತಿಕ ಗಣ್ಯರು ಮತ್ತು ಪತ್ರಕರ್ತರೊಡನೆ ಸಂಪರ್ಕ. +೪. ಕರಪತ್ರಗಳ ಹಂಚಿಕೆ ಮತ್ತು ಓಡಾಟ. +ನಿಮ್ಮೆಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ಒಂದು ವಾರದೊಳಗೆ ಕಳಿಸಿ. +ಜೊತೆಗೆ ಕನ್ನಡಸಾಹಿತ್ಯ.ಕಾಂ ಬಗೆಗೂ ಗಮನವನ್ನು ಸೆಳೆಯುವುದೂ ಈ ಪ್ರಸ್ತಾವನೆಯ ಭಾಗವಾಗಿದ್ದರೆ ಅದೂ ಸಹ ಒಂದು ಅಗತ್ಯ ಹಾಗು ಸಣ್ಣ ಸ್ವಾರ್ಥ . +ಪ್ರತಿಕ್ರಿಯಿಸಲು ಬೇಕಾದ ವಿವರಗಳು: +ವಿ-ಅಂಚೆ ವಿಳಾಸ: ksctanda(AT)gmail.com +ದೂರವಾಣಿ : ೦೮೦-೨೬೪೮ ೪೬೧೭ +ಮೊಬೈಲ್ :೯೩೪೧೨ ೩೦೦೧೫ +ಬರಬಹುದಾದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಅನುಕೂಲಕರವಾಗಿದೆ ಎಂದೆನ್ನಿಸಿದರೆ ಮುಂದಿನ ವಿವರಗಳನ್ನು ಇದೇ ಪುಟದಲ್ಲಿ ಪ್ರಕಟಿಸಲಾಗುವುದು. +ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿರುವ +ಶೇಖರ್‌ಪೂರ್ಣ +ಕನ್ನಡಸಾಹಿತ್ಯ.ಕಾಂ +ಅಡಿ ಟಿಪ್ಪಣಿ: +ಧರಣಿ, ಉಪವಾಸ ಮುಷ್ಕರ, ಮನವಿ ಸಲ್ಲಿಕೆ ಇತ್ಯಾದಿ ಚಟುವಟಿಕೆಗಳ ಬಗೆಗೆ ಭ್ರಮನಿರಸನವಾಗಿರುವವರಿಗೆ ಒಂದು ಮಾತು-ಈ ನಮ್ಮ ಚಟುವಟಿಕೆಯಿಂದಾಗಿ ಅದ್ಭುತವಾದದ್ದೇನನ್ನೋ ಸಾಧಿಸಲಾಗದೆ ಹೋದರೂ ಕಂಪ್ಯೂಟಿಂಗ್ ಪರಿಸರದಲ್ಲಿ ಸ್ಥಳೀಯ ಅಗತ್ಯಗಳ ಬಗೆಗೆ ಒಕ್ಕೊರಲಿನ ಧ್ವನಿಯೊಂದಕ್ಕೆ ಅಭಿವ್ಯಕ್ತಿ ಹಾಗು ವೇದಿಕೆ ಒದಗಿಸಿದಂತಾಗುತ್ತದೆ. ಇದು ಒಂದು ಸಣ್ಣ ಆರಂಭ. +ಈ ವಿಚಾರದಲ್ಲಿ ಬರಬಹುದಾದ ಟೆಲಿಫೋನ್ ಸಂಭಾಷಣೆ, ಲೇಖನ, ಈ ಮೈಲ್ ಅಭಿಪ್ರಾಯ ಇತ್ಯಾದಿಗಳ ಸ್ವರೂಪದಲ್ಲಿ ಬರಬಹುದಾದವುಗಳನ್ನೆಲ್ಲ ‘ಕನ್ನಡಸಾಹಿತ್ಯ.ಕಾಂ’ ಹಾಗು ‘ಬರಹ’ದ ಪುಟಗಳಲ್ಲಿ ಸಂಗ್ರಹಿಸಿಡಲಾಗುವುದು. +ಶೇಕರ್ ಅವರೇ , +ನಿಮ್ಮ ಪ್ರಯತ್ನಕ್ಕೆ ಬೆಂಬಲ ಹೆಚ್ಚುತಿರುವ ಬಗೆಗೆ ಹರ್ಷಿತನಾಗಿದ್ದೇನೆ. ನಾನು ಇದುವರೆಗೆ ನೋಡಿದ ಎಕ್ಸ್‌ಪಿ ವಿಂಡೋನ ಒಂದರಲ್ಲಿಯೂ “complex script including Thai” ಚೆಕ್ ಮಾಡಿರಲಿಲ್ಲ. ಅದಿಲ್ಲದೆ ಕನ್ನಡವಿರಲಿ ಯಾವ ಭಾರತೀಯ ಭಾಷೆಯನ್ನೂ ಬಳಸಲು XP MS ವಿಂಡೋನಲ್ಲಿ ಅವಕಾಶವಿದ್ದೂ ಸಾಧ್ಯವಾಗುವುದಿಲ್ಲ. ಇಂತಹ ಪ್ರವೃತ್ತಿಗೆ ಏನೆನ್ನಬೇಕೆಂದು ನನಗೆ ತಿಳಿಯುತ್ತಿಲ್ಲ. +ಈ ಸಮಸ್ಯೆ ಹೊರಗೆ ತುಸು ಹಣಿಕಿ ಹಾಕಿದರೆ ಹೇಗೆ? ಈಗ ಕೇಂದ್ರ ಸರಕಾರೀ ಕಚೇರಿಗಳಲ್ಲಿ ಬಳಸುತ್ತಿರುವುದು ಹೆಚ್ಚಾಗಿ ಇಂಗ್ಲೀಷ್ ಮತ್ತು official language ಆಗಿ ಹಿಂದಿಯನ್ನು. ಈಗ ಅಧಿಕಾರದಲ್ಲಿರುವ ಯುಪಿ‌ಎ ಕೊಟ್ಟ ಒಂದು ಭರವಸೆ ಎಲ್ಲಾ ಎಂಟನೆಯ ಶೆಡ್ಯೂಲ್‌ನ ಎಲ್ಲ ಭಾಷೆಗಳಿಗೂ ರಾಷ್ಟ್ರೀಯ ಸ್ಥಾನಮಾನ ಕೊಡುವ ಸಾಧ್ಯತೆಯ ಬಗೆಗೆ ಪರಿಶೀಲಿಸಲು ಸಮತಿಯೊಂದನ್ನು ನೇಮಿಸುವುದು. (ಇದೇ ಭರವಸೆಯನ್ನು ಹಿಂದೆ ಎನ್‌ಡಿ‌ಎ ಕೊಟ್ಟತ್ತಾದರೂ ಅದು ಆ ಭರವಸೆ ಈಡೇರಿಸುವತ್ತ ಗಮನ ಕೊಡಲಿಲ್ಲ) ಈಗ ನಾವು ಕೇಳಬೇಕಾಗಿರುವುದು ಎಲ್ಲಾ ಎಂಟನೆಯ ಶೆಡ್ಯೂಲ್ ಭಾಷೆಯಗಳಿಗೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ (ಕೇವಲ ಪರಿಶೀಲನೆಯ ಬಗೆಗೆ ಸಮತಿ ನೇಮಿಸುವುದನ್ನು ಅಲ್ಲ). ಇದು ಕನ್ನಡವನ್ನೂ ಒಳಗೊಂಡು ಹಿಂದಿ, ತೆಲುಗು, ತಮಿಳು, ಬೆಂಗಾಲಿ ಹೀಗೆ ಎಲ್ಲ ಭಾರತೀಯ ಭಾಷೆಗಳ ಬಳಕೆ ಸಂಬಂಧಿತ ರಾಜ್ಯಗಳಲ್ಲಿ ಹೆಚ್ಚಿಸುವ ಅವಕಾಶವೊಂದು ಒದಗಿ ಬರುತ್ತದೆ (ಆದರೆ ಇಂಗ್ಲೀಷ್ ಬಲ್ಲ ಮಧ್ಯಮ ವರ್ಗಕ್ಕೆ ವಿಶಾಲ ಉದ್ಯೋಗ ಮಾರುಕಟ್ಟೆಯೂ ಮಾಯವಾಗ ಬಹುದು). ಕನ್ನಡವನ್ನೂ ಒಳಗೊಂಡು ಭಾರತೀಯ ಭಾಷೆಗಳ ಬಳಕೆ ಹೆಚ್ಚಿಸುವ ಇಂತಹ ಸಾಧ್ಯತೆಗಳ ಬಗೆಗೆ ಗಂಭೀರವಾಗಿ ಚರ್ಚಿಸುವ ಅಗತ್ಯ ಇಂದು ಒದಗಿ ಬಂದಿದೆ ಎಂದೇ ಭಾಸವಾಗುತ್ತದೆ. ಈ ಬಗೆಗೆ ಯೋಚಿಸ ಬಹುದಲ್ಲವೇ? +ಬೆಳಗಲ್ ಪ್ರದೀಪ್ +೨೨-೧೧-೨೦೦೬, ೧೧:೦೦ +***** +ಈ ಕಿರಿಕಿರಿಗಳಾಚೆ ನೋಡಬಹುದಾದ ಪಕ್ವತೆಯುಳ್ಳ ಹಿರಿಯರು, ಉತ್ಸಾಹಿ ಯುವಕರೂ ಒಂದೆಡೆ ಸೇರುತ್ತಾರೆ. ಉತ್ಸಾಹ, ಸಂಭ್ರಮಕ್ಕಷ್ಟೆ ಸೀಮಿತವಾಗದೆ ಹೆಚ್ಚು ಅರ್ಥವತ್ತಾದ ಆಲೋಚನೆಗಳು-ಕಾರ್ಯಕ್ರಮಗಳು ಈ ಸಮ್ಮೇಳನದಿಂದ ಬರಲಿ ಎಂದು ನಿರೀಕ್ಷಿಸುತ್ತಲೆ….ಕೆಳಗಿನ ಮಾತುಗಳು: “ಕರ್ನಾಟಕ ಇಂದು ಬರದ ದವಡೆಗೆ […] +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […] +ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_95.txt b/Kannada Sahitya/article_95.txt new file mode 100644 index 0000000000000000000000000000000000000000..9fc13ee865ddc4b11e1e1933739bcb217d938660 --- /dev/null +++ b/Kannada Sahitya/article_95.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು […] +ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […] +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_96.txt b/Kannada Sahitya/article_96.txt new file mode 100644 index 0000000000000000000000000000000000000000..e6d3d8e0942749c48426b478fc11865257bf0bea --- /dev/null +++ b/Kannada Sahitya/article_96.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! +ಆಸೆಯಾಗಿ ಹತ್ತಿರದಿಂದ ಮೂಸಿದರೆ +ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? +ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು +ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? +ಎಂದು ಅದರ ಅಲ್ಪಾಯುವಾದ ಚೆಲುವಿನ ಚಂಚಲತೆಯನ್ನು +ಕನಿಕರಿಸಿ +ಆದರೂ ದೂರದಿಂದಲೇ ಸುಖಿಸಿ +ಸಭ್ಯ ವಿಲಾಸಿ +ಮುಂದೆ ನಡೆದು +ತಿರುಗಿ ನೋಡಿದರೆ +ಅರೆ! +ಎಗ್ಗಿಲ್ಲದಂತೆ ಬಿಸಿಲು ಕಾಯುತ್ತ +ಅನೂಹ್ಯಕ್ಕೆ ಅಳುಕದಂತೆ, ಸತತ ಆಹ್ವಾನಿಸುವಂತೆ +ತೊಟ್ಟಲ್ಲಿ ಅನಾಯಾಸ ನೀಡಿಕೊಂಡ +ಅದರ ಖದೀಮ +ಬಿರಿದ ದಳಗಳ ಗುಹ್ಯದಲ್ಲಿ +ಯಾವುದೋ ಹಡಬೆ ದುಂಬಿ +ಉನ್ಮತ್ತ. +ಇನ್ನು +ಬೆಡಗಿನಲ್ಲಿ ತೋರುವ ಗಂಧ ಚಂದಗಳ ಚೆಲ್ಲು ತೊರೆದು +ಹದವಾಗಿ ಮಾಸಿ +ಹಗುರಾಗಿ +ದಳ ದಳ ಕಳಚಿ +ಅದು ಯಾವ ಕಾಡು ಪಕ್ಷಿಗೋ ಹಣ್ಣಾಗಲು +ಕಾ ಯು ವು ದು +***** +ಹಾಗೆ ಪ್ರೀತಿಯ ಹುಡುಗ, ಏನೇನೋ ಮಾತುಗಳು – ಬೇಕಾಬಿಟ್ಟಿ. ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ ಅವನು ಹಾಗೇ! ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ ಏನೂ ಆಗದಹಾಗೆ […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_97.txt b/Kannada Sahitya/article_97.txt new file mode 100644 index 0000000000000000000000000000000000000000..c5b6bf2b76003482a3ba5602e70c8e2d3b901388 --- /dev/null +++ b/Kannada Sahitya/article_97.txt @@ -0,0 +1,81 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ ಬೆದರಿ ಬಚ್ಚಲು ಮನೆಯ ಕೋಡಿಮೂಲೆಯಲ್ಲಿ ಚಳಿ ಹಿಡಿದು ಹನಿದು ಕೂತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಖಾದ್ರಿಬ್ಯಾರಿಯವರು ಎಂಕಪ್ಪಶೆಟ್ಟರ ಬಚ್ಚಲು ಮನೆಯ ಉರಿವ ಒಲೆಬಾಯಿಗೆದುರಾಗಿ ಕುಕ್ಕರುಗಾಲಲ್ಲಿ ಕೂತು, ಉರಿವ ತೆಂಗಿನ ಮಡಲ ಸೀಳನ್ನು ಒಲೆಗಂಟಲತ್ತ ತಳ್ಳುತ್ತಿದ್ದರು. ತಳ್ಳುವ ತೆಂಗಿನ ಗರಿಗಳೆಲ್ಲ ಬರಬರನೆ ಉರಿದುಬಿಟ್ಟು ಬರಿ ನಡುದಂಡು ಬಂದಾಗ ಉರಿಯ ಅಬ್ಬರವನ್ನೊಮ್ಮೆ ಕುಗ್ಗಿಸಿ ಒಂದಷ್ಟು ಹೊಗೆಯ ಕಾಣಿಕೆಯನ್ನು ಖಾದ್ರಿಬ್ಯಾರಿಯವರಿಗೆ ಕರುಣಿಸುವಾಗಲೆಲ್ಲ ಅವರು ಸುಕ್ಕು ಮುಖದಲ್ಲಿ ಕ್ಷೀಣವಾಗಿ ಬೆಳಗುತ್ತಿದ್ದ ಕಣ್ಣುಗಳಿಗೆ ನೀರು ತುಳುಕಿಸುವ ಅವಸರ ! +ತೊಟ್ಟ ಹಸಿರು ರುಮಾಲಿನ ಅಂಚಿನಿಂದಲೆ ಕಣ್ಣನೀರನ್ನು ಇಂಗಿಸಿಕೊಂಡು ಒಲೆಬಾಯಿಗೆ ಮತ್ತಷ್ಟು ತೆಂಗಿನ ಗರಿ ತುರುಕಿಸುವಷ್ಟರಲ್ಲಿ ಆ ಮಳೆಗಾಳಿಯೊಂದಿಗೆ ಬೀಸಿ ಬಂತು – ವೆಂಕಪ್ಪಶೆಟ್ಟರ ಹಕ್ಕಿನ ಶೆಡ್ತಿ ಉಮ್ಮಕ್ಕೆಯವರ ಎಂದಿನ ಎಚ್ಚರಿಕೆ ಅವುಚಿದ ಹಿತವಚನ! +‘ನೀರು ಉಗುರುಬಿಸಿ ಆದ್ರೆ ಸಾಕು ಸೈಬೆರೇ… ಇವತ್ತೇ ಎಲ್ಲ ಮರಮಟ್ಟನ್ನು ಆ ಒಲೆಗಂಟಲಿಗೆ ತುರುಕಿದರೆ ನಾಳೆ ಅದರ ಬಾಯಿಗೆ ನಮ್ಮ ಕೈಕಾಲನ್ನು ತುರುಕಿಸುವುದು ಹೇಗೆ…? ಆ ಒಲೆಯೇನೊ ಈ ಊರಲ್ಲಿರುವ ಸೌದೆ-ಸೌಟುಗಳೆಲ್ಲ ನನ್ನ ಬಾಯಿಗೇ ಬಂದು ಬೀಳಲಿ ಎಂದು ಕೇಳಬಹುದು… ಆದ್ರೆ ನಾವು ನಾಳೇನೂ ಬಾಣಂತಿ – ಮಗು ಮೀಯಿಸಬೇಕಲ್ಲ…’ +ಎಂದಿನಂತೆ ಇಂದೂ ತೇಲಿಬಂದ, ಉಮ್ಮಕ್ಕೆ ಶೆಡ್ತಿಯವರ ಉರಿಮಾತು ಖಾದ್ರಿಬ್ಯಾರಿಯವರ ನೆಮ್ಮದಿಯನ್ನು ಕದಡುವಂತಿದ್ದರೂ ಅವರು ಅದನ್ನು ಆಲಿಸಿಯೂ ಆಲಿಸದಂತವರಿದ್ದು, ಇನ್ನೊಂದಷ್ಟು ತೆಂಗಿನ ಗರಿಗಳನ್ನು ಎಳೆದು ಒಲೆಗಂಟಲಿಗೆ ತುರುಕಿಸುವಷ್ಟರಲ್ಲಿ ಶೆಡ್ತಿಯವರು ಉರಿ ಮುಸುಡಿ ಮಾಡಿ ಬಂದೇಬಿಟ್ಟರು. ಕಾವಿಗೆ ಕೂತ ಹೇಂಟೆಯಂತೆ – ಅದ್ಯಾವದೋ ಅಸಮಾಧಾನ, ಅಶಾಂತಿಯಿಂದ ಬೇಯುತ್ತಾ ಬಂದ ಶೆಟ್ಟರ ಮಡದಿಯ ದಿಢೀರ್ ಆಗಮನದಿಂದ ಒಲೆ ಮುಂದೆ ಕೂತಿದ್ದ ಖಾದ್ರಿಬ್ಯಾರಿಯವರ ಆಸೆಯ ಕಿಡಿಗೆ ತಣ್ಣೀರು ಎರಚಿದಂತಾಯ್ತು! +ಬಾಣಂತಿ ಮೀಯುವ ತಾಮ್ರದ ಹಂಡೆಗೆ ಕಂಠ ಮುಟ್ಟುವಷ್ಟು ನೀರು ತುಂಬಿ, ಒಲೆಗಂಟಲು ಬಿರಿವಷ್ಟು ಸೌದೆ ತುರುಕಿಸಿಟ್ಟು, ನೀರನ್ನು ಸಾಕಷ್ಟು ಜಾಸ್ತಿಯೇ ಕಾಯಿಸಿಟ್ಟು…ಇನ್ನೇನು ಆ ನೀರೊಳಗೆ ತನ್ನ ವಾತ ಹಿಡಿದ ಕೈಗಳೆರಡನ್ನು ಮೂರ್‍ನಾಕು ಗಳಿಗೆ ಅದ್ದಿಟ್ಟು…ನಾಕೇ ನಾಕು ಚೊಂಬು ನೀರನ್ನು ನೋವಿನಿಂದ ಮರಗಟ್ಟಿ ಹೋಗಿರುವ ತನ್ನ ಕಾಲ್ಗಂಟುಗಳಿಗೆ ಎರೆದುಕೊಳ್ಳಬೇಕು – ಎಂಬ ಆಸೆಯೆಳೆಯನ್ನು ಅದುವರೆಗೂ ಮಯಿಯಿಡೀ ಸುತ್ತಿಕೊಂಡು ಹೊಗೆಯ ದೆಸೆಯಿಂದ ಮುದಿ ಕಣ್ಗಳನ್ನು ಕೆಂಪು ಕೇಪಳಹಣ್ಣು ಮಾಡಿಕೂತಿದ್ದ ಖಾದ್ರಿಬ್ಯಾರಿಯವರ ಎದೆಯೊಳಗೆ ನಿರಾಸೆಯ ಕಗ್ಗತ್ತೆಲೆಯೇ ಕವಿದಂತಾಯ್ತು! +ಬಚ್ಚಲುಮನೆಗೆ ಹಾಗೆ ನುಗ್ಗಿ ಬಂದ ಉಮ್ಮಕ್ಕೆಯವರು ಎಂದಿನಂತೆ ನೇರವಾಗಿ ಬಂದು, ಹಂಡೆಯ ಮರದ ಮುಚ್ಚಳ ಸರಿಸಿ ಸಾವಧಾನದಿಂದ ಬಲಗೈಯ ಬೆರಳುಗಳಷ್ಟು ಸೋಕಿಸಿದವರೆ, +‘ಎಲ್ಲಾ ನನ ಕರ್ಮವೇ….ಅಲ್ಲಾ ಸ್ಯಾಬರೆ, ನಿಮ್ಗೆ ಎಷ್ಟೂಂತ ಹೇಳುದು ಮಾರಾಯ್ರೇ! ಇದು ಮಗು-ಬಾಣಂತಿ ಮೀಯುವ ನೀರಾ ಅಥವ ಹೆಣ ಮೀಯಿಸುವ ನೀರಾ….? ಒಲೆಬಾಯಿಗೆ ಕಸಕಡ್ಡಿ ತಳ್ಳುವುದಕ್ಕೆ ನಿಮ್ಗೆ ಒಂದು ತಲೆಬುಡ ಯಾವ್ದೂ ಇಲ್ಲಾಂತ ಕಾಣಿಸುತ್ತೆ….?’ +ಸೈಬರಿಗೆ ನಯವಾಗಿ ಗದರುತ್ತಲೇ ಉಮ್ಮಕ್ಕೆಯವರು ಉರಿವ ಒಲೆಗಂಟಲತ್ತ ತಿರುಗಬೇಕೆನ್ನುವಷ್ಟರಲ್ಲಿ ಖಾದ್ರಿಬ್ಯಾರಿಯವವರು ಒಲೆಗೆದುರಾಗಿ ಕೂತವರು ಕೂತಲ್ಲಿಂದ ತಟ್ಟನೆ ಎದ್ದುನಿಂತರು. ‘ಒಮ್ಮೆ ನೀವು ಆಡಿ ಸರಿಸಿ ನೋಡುವಾ…’ಎಂದು ಹೇಳುತ್ತಲೇ ಉಮ್ಮಕ್ಕೆಯವರು ತಮ್ಮ ಎರಡೂ ಕೈಗಳಿಂದ, ಒಲೆಗಂಟಲೊಳಗೆ ಭಾರಿ ಸಂಭ್ರಮದಿಂದ ಉರಿಯುತ್ತಿದ್ದ ತೆಂಗಿನ ಕೊತ್ತಳಿಗೆಗಳನ್ನು ಬಲವಾಗಿ ಹೊರಗೆಳೆದು ಹಾಕಿ, ಅವೆಲ್ಲವನ್ನು ಹೊಸಕಿ ಹಾಕಿದೊಡನೆ ತಟ್ಟನೆ ಎದ್ದ ಹೊಗೆರಂಪಕ್ಕೆ ಖಾದ್ರಿಬ್ಯಾರಿವಯರು ಅಂಗಳ ಪಾಲಾದರು. +’ಓಯ್ ಮಾರಾಯ್ತಿಯೆ… ಒಮ್ಮೆ ಆ ಮಗುವನ್ನು ಮೀಯ್ಸುದಕ್ಕೆ ತಗೊಂಬಾರೆ…ಈ ಸ್ಯಾಬರು ಬಾಣಂತಿ-ಮಗುಗೆ ನೀರು ಕಾಯ್ಸಿದ್ದಲ್ಲ…., ನನ್ನ ಹೆಣ ಮೀಯ್ಸುದಕ್ಕೆ ನೀರು ಕಾಸಿದಂತಿದೆ…’ ಎಂದು ಗಟ್ಟಿಯಾಗಿ ಒದರುತ್ತಲೇ ತನ್ನ ಬಾಣಂತಿ ಮಗಳು ಸುಮತಿಗಾಗಿ ಘೀಳಿಟ್ಟರು. +ಹೊಗೆ ಘಾಟಿನ ಏಟನ್ನಾದರೂ ಸಹಿಸಿಕೊಳ್ಳಬಲ್ಲೆ-ಆದರೆ ಈ ಶೆಡ್ತಿಯವರ ಮಾತಿನ ಏಟನ್ನು ಸಹಿಸಿಕೊಳ್ಳಲಾರೆ ಎಂಬ ನಿಷ್ಠುರ ಭಾವವನ್ನು ಹೊತ್ತು ಖಾದ್ರಿ ಬ್ಯಾರಿಯವರು ಅಂಗಳವಿಳಿದವರು ಅಲ್ಲೆ ಹೊರ ಪಾಗಾರಕ್ಕೆ ಒರಗಿಸಿಟ್ಟ ತನ್ನ ತಲೆಗೊರಬನ್ನು ತಲೆಗೇರಿಸಿಕೊಂಡು ಮನೆ ತಡಮೆ ದಾಟಬೇಕೆನ್ನುವಷ್ಟರಲ್ಲಿ, ಉಮ್ಮಕ್ಕೆಯವರಿಂದ ‘ಈ ನೀರು ಹೆಣ ಮೀಯ್ಸುದಕ್ಕಾ….’ ಎಂಬ ಮಾತಿನೇಟಿಗೆ ಒಂದರೆಗಳಿಗೆ ತತ್ತರಿಸಿದಂತಾಗಿ ದುಃಖದಿಂದ ಅಧೀರ ಹೃದಯ ಹೊತ್ತು ಮನೆ ತಡಮೆ ದಾಟಿದರು. +ಉಮ್ಮಕ್ಕೆಯವರು ಹಂಡೆಯ ಕುದಿನೀರಿಗೆ ಮೂರು ಕೊಡ ತಣ್ಣೀರು ಬೆರೆಸುವಷ್ಟರಲ್ಲಿ ಮಗುವನ್ನು ಎತ್ತಿಕೊಂಡು ಬಂದ ಮಗಳು ಸುಮತಿ “ಅಲ್ಲಮ್ಮ ಆ ಮುದಿಸ್ಯಾಬರು ಈ ಕಿರಿ ಕಿರಿ ಮಳೆಗೆ ಮುಂಜಾನೆಗೇ ಎದ್ದು ಬಂದು ಇಷ್ಟು ಬೆಂದರ್ ಕಾಯ್ಸಿದ್ದೇ ಹೆಚ್ಚು! ಏನೋ ಆ ಮುದಿವಾತದ ಜೀವ ನಾಕು ಚೊಂಬು ಬಿಸಿನೀರಿಗಾಗಿ ಇನ್ನಿಲ್ಲದಂತೆ ಜೀವಬಿಡುತ್ತೆ. ಅವ್ರೇನು ನಮ್ಮಿಂದ ಉಣ್ಣುವ ಅನ್ನ ಕೇಳ್ತಾರಾ. ಅಥವಾ ಉಡುವ ಬಟ್ಟೆ ಕೇಳ್ತಾರಾ? ಬರೀ ಹೊಯ್ದುಕೊಳ್ಳಲು ಒಂದಷ್ಟು ಬಿಸಿನೀರು ಬಯಸ್ತಿದ್ದಾರೆ ಅಷ್ಟೆ. ಅದುನ್ನೂ ಅವರೇನು ನಮ್ಮಿಂದ ಪುಕ್ಕಟ್ಟೆಯಾಗಿ ಅವರಾಗಿಯೇ ಬೇಡಿದ್ದಾರಾ…? ನಮ್ಗೆ ಬಾಣಂತಿ ನೀರು ಕಾಯ್ಸಿಕೊಡಿ…ನಮ್ಮ ಬಾಣಂತಿ ಮಿಂದಾದ ಮೇಲೆ ನೀವೂ ಒಂದು ಗಡದ್ದಾಗಿ ಮಿಂದು ಬಿಡಿ…’ ಎಂದು ಅಪ್ಪ ಅವರಿಗೆ ಹೇಳಿ ಒಪ್ಸಿದ್ದಲ್ವಾ? +ಮಗಳ ಮಾತಿನ ಸರಣಿಗೆ ಉಮ್ಮಕ್ಕೆಯವರು ವಿಕ್ಷಿಪ್ತ ಅರಿವು ತಿಳಿಯಾಗತೊಡಗಿತ್ತು. ಮಗು ಮೀಯಿಸುವ ನೀರನ್ನು ಹದಗೊಳಿಸುತ್ತಿದ್ದ ಅವರು ಮಗಳಾಡಿದ ಮಾತುಗಳನ್ನು ಅತ್ಯಂತ ಪರಿತಾಪದಲ್ಲೇ ಮನನ ಮಾಡಿಕೊಳ್ಳುತ್ತಿದ್ದಂತೆ ಅವರಿಗೆ ತಮ್ಮ ಮಾತಿನ ಬಗ್ಗೆ, ಮನದ ಭಾವದ ಬಗ್ಗೆ ಪಶ್ಚಾತ್ತಾಪ ಹುಟ್ಟದಿರಲಿಲ್ಲ. ಅವರಿಗೂ ಖಾದ್ರಿಬ್ಯಾರಿವರೆಂದರೆ ಉದಾಸೀನವಿಲ್ಲ-ನಿರ್ಲಕ್ಷ್ಯವಿಲ್ಲ; ಉಡಾಫೆಯ ಭಾವವೂ ಇಲ್ಲ. ಈ ಮಾನ ತೆಗೆವ ಮಳೆಗಾಲದಲ್ಲಿ ‘ಅನಪತ್ಯ’ಕ್ಕೆ ಅಂತ ಇಟ್ಟಿದ್ದ ಸೌದೆಸೊಪ್ಪುಗಳೆಲ್ಲವನ್ನು ಖಾದ್ರಿಬ್ಯಾರಿವರು ಏನೂ ಪಿಕೀರಿಲ್ಲದಂತೆ ಈ ಬಚ್ಚಲ ಒಲೆಗಂಟಲೆಂಬ ಯಜ್ಞಕುಂಡಕ್ಕೆ ಎಸೆದರೆ ಆ ನಂತರ ಈ ಮಳೆಗೆ ಬಾಣಂತಿ-ಮಗುವನ್ನು ಮೀಯಿಸುವ ಕತೆ ಹೇಗೆ-ಎಂಬ ಆತಂಕದಿಂದಲೇ ದಿನನಿತ್ಯವೂ ಅವರು ‘ಬಚ್ಚಲ ಯಜ್ಞಕುಂಡದಿಂದ’ಹೊಗೆ ಎದ್ದಾಕ್ಷಣ ‘ಉಗುರುಬಿಸಿನೀರು ಸಾಕು ಸ್ಯಾಬರೇ…’ ಎಂಬ ಎಚ್ಚರಿಕೆ ಗಂಟೆಯನ್ನು ಅಬ್ಬರದ ಧ್ವನಿಯಲ್ಲಿ ಮೊಳಗಿಸುತ್ತಿದ್ದರಷ್ಟೆ. +ಖಾದ್ರಿಬ್ಯಾರಿಯವರಿಗೂ ಶೆಟ್ಟರ ಪತ್ನಿ ಉಮ್ಮಕ್ಕೆಯವರ ಅಂತರಂಗ ಏನೆಂಬುದು ತಿಳಿಯದ್ದೇನಲ್ಲ. ಉಮ್ಮಕ್ಕೆಯವರು ಮೈರ್ಪಾಡಿ ಗುತ್ತಿನ ಸುಸಂಸ್ಕೃತ ಮನೆತನದ ಮಗಳಾಗಿದ್ದು, ಆಕೆಯಲ್ಲಿರುವ ಸ್ತ್ರೀ ಸಹಜವಾದ ಔದಾರ್ಯ, ನಯವಿನಯ, ಕಷ್ಟಸಹಿಷ್ಣುತೆ, ಮನುಷ್ಯತ್ವ, ಎಲ್ಲವೂ ಆಕೆಗೆ ತಾಯಿ ಮಾಣ್ಯಕ್ಕೆ ಶೆಡ್ತಿಯವರಿಂದಲೇ ಬಂದಿರುವಂತಹದ್ದು – ಎಂಬ ಮಾತನ್ನು ಅದೆಷ್ಟು ಬಾರಿ ಅವರು ವೆಂಕಪ್ಪಶೆಟ್ಟರಲ್ಲಿ ಹೇಳಿಲ್ಲ. ಇದುವರೆಗೆ ಅದೆಷ್ಟು ಬಾರಿ ಅವರು ಉಮ್ಮಕ್ಕೆಯವರ ಕೈಯಿಂದಲೇ ಎಂತೆಂಥ ಸಹಾಯವನ್ನು ಪಡೆದಿಲ್ಲ. ಅವರ ಈ ಕಾರ್ತೆಲ್ ತಿಂಗಳ ಆರಂಭದಿಂದ ಹೀಗೆ ಸುರಿವ ಮಳೆಯ ಕಾರಣದಿಂದಾಗಿ ಖಾದ್ರಿ ಬ್ಯಾರೆಯವರು ಉಮ್ಮಕ್ಕೆಯವರ ನಡೆ-ನುಡಿ-ವ್ಯವಹಾರಗಳ ಬಗ್ಗೆ ಸಾಂದರ್ಭಿಕವಾಗಿ ವ್ಯತಿರಿಕ್ತವಾದ ತೀರ್ಪನ್ನೇ ನೀಡುವಂತಾಗಿದೆ. ಮನುಷ್ಯ ಬೆಳೆದ ಹಾಗೆ ಆತನ ಮನಸ್ಸು ಮಾತ್ರ ಸಂಕುಚಿತವಾಗತೊಡಗುತ್ತದೆ, ಮುರುಟುತ್ತದೆ ಎಂದು ಹಿರಿಯರು ಹೇಳುವ ಮಾತು ನಿಜವೋ ಏನೋ ಎಂದು ಒಂದರಗಳಿಗೆ ಖಾದ್ರಿಬ್ಯಾರಿಯವರಿಗೆ ಆ ಸಂದರ್ಭದಲ್ಲಿ ಅನಿಸದೇನೂ ಇರಲಿಲ್ಲ. +ಇದೀಗ ಖಾದ್ರಿಬ್ಯಾರಿಯವರು ಉಮ್ಮಕ್ಕೆಯವರ ಬಗ್ಗೆನೇ ಯೋಚಿಸುತ್ತ. ಅದರ ಜೊತೆ ಜೊತೆಗೆ ಈ ತನ್ನ ವಾತದ ಮೈಗೆ ಎಂದು ನಾಕು ಗೆರಟೆ ಬಿಸಿನೀರು ಬಿದ್ದೀತೋ… ಅದು ಹೇಗೆ ಎಲ್ಲಿ ಎಂಬ ಹಂಬಲ-ಯೋಚನೆಯಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತಲೇ ಕಟ್ಟಹುಣಿಯ ನೀರತೋಡಿನ ಬಳಿ ಬರುವಾಗ ಭರದಿಂದ ಹರಿಯುವ ತೋಡಿನ ನೀರು ಕೂಡಾ ಅವರನ್ನು ಹಾಗೂ ಅವರಾಸೆಯನ್ನು ಕಂಡು ಗಹಗಹಿಸಿ ನಕ್ಕಂತಾಯಿತು. ಖಾದ್ರಿ ಬ್ಯಾರಿಯವರು ತಮ್ಮ ಬಿಸಿನೀರಿನ ಆಸೆಯನ್ನಲ್ಲೇ ಮುರುಟಿಸಿಕೊಂಡು ತೋಡು ದಾಟಿದರು. +ತೋಡು ದಾಟಿದರೇನು ಅವರೊಳಗಿನ ಯೋಚನೆ ಮಾತ್ರ ಅವರ ತಲೆಯಿಂದ ದಾಟಿ ಹೋಗಲಿಲ್ಲ. ಉಮ್ಮಕ್ಕೆಯವರು ಅಂದಿದ್ದ ನಿಷ್ಠುರದ ಮಾತುಗಳು ಅವರೆದೆಯೊಳಗೆ ಹುದುಗಿ ಕುಳಿತು ಒದ್ದೆ ಬಟ್ಟೆ ಹಿಂಡಿದಂತೆ ಹಿಂಡತೊಡಗಿದ್ದವು. ಖಾದ್ರಿಬ್ಯಾರಿಯವರು ಅದೇ ಯೋಚನೆಯ ಸುಳಿಯಲ್ಲಿ ಸಿಲುಕಿ ತೀರಾ ಖಿನ್ನರಾಗಿ ದಾರಿ ಸವೆಸತೊಡಗಿದರು. “ತಾನೇನು ಆ ಮನೆಯಲ್ಲಿ ಬಿಸಿನೀರು ಮೀಯಬೇಕು ಎಂಬ ಆಸೆಯನ್ನು ಹೊದ್ದುಕೊಂಡು ನಾನಾಗಿಯೇ ಮೇಲೆಬಿದ್ದು ‘ಬಾಣಂತಿ ನೀರು ಕಾಯಿಸಿಕೊಡುತ್ತೇನೆ’ ಎಂದು ಕೇಳಿಕೊಂಡು ಹೋಗಿದ್ದೇನೆಯೇ? ಈ ಶೆಡ್ತಿ ಯಾಕಾಗಿ ಈ ರೀತಿ ದಿನಾ ನನ್ನ ಮೇಲೆ ಹರಿಹಾಯ್ತಾರೋ…” ಎಂಬ ಪ್ರಶ್ನೆಯು ಅವರ ಆತ್ಮಗೌರವದ ಪ್ರಶ್ನೆಯಾಗಿ ಅವರನ್ನು ಇನ್ನಿಲ್ಲದಂತೆ ಚುಚ್ಚತೊಡಗಿತ್ತು. +ಉಮ್ಮಕ್ಕೆಯವರು ಆಸ್ತಿ-ಅಂತಸ್ತು-ಸಾಮಾಜಿಕ ಸ್ಥಾನಮಾನದಲ್ಲಿ ಖಾದ್ರಿಬ್ಯಾರಿಯವರಿಗಿಂತ ಮೇಲಿದ್ದರೂ, ಆತ್ಮಗೌರವ, ಮಾನವತೆ, ಶ್ರಮಸಂಸ್ಕೃತಿ, ಕಷ್ಟಸಹಿಷ್ಣುತೆ, ನಿಸ್ವಾರ್ಥತೆಯಲ್ಲಿ ಇಬ್ಬರೂ ಸಮಾನರೆ. ವಯಸ್ಸಲ್ಲಂತೂ ಖಾದ್ರಿಬ್ಯಾರಿಯವರು ಉಮ್ಮಕ್ಕೆಯವರ ತಂದೆ ಕರಿಯಶೆಟ್ಟರಿಗೆ ಸಮಾನರು. ಖಾದ್ರಿಬ್ಯಾರಿಯವರಿಗೆ ಮೈರ್ಯಾಡಿಗುತ್ತಿನ ಕರಿಯಶೆಟ್ಟರಲ್ಲಿ ಅದೆಷ್ಟು ಗೌರವ, ವಿಶ್ವಾಸ, ಸಲಿಗೆ, ಅಭಿಮಾನ, ಇದೆಯೋ ಅಷ್ಟೇ ಅಥವಾ ಅದಕ್ಕಿಂತ ಒಂದು ಮುಷ್ಟಿ ಜಾಸ್ತಿಯೇ ಪ್ರೀತಿ-ಅಭಿಮಾನ ಗೌರವ ಈ ವೆಂಕಪ್ಪಶೆಟ್ಟರ ಕುಟುಂಬದ ಮೇಲಿದೆ. ಮೊನ್ನೆ ಮೊನ್ನೆ ತನ್ನ ಮೊಮ್ಮಗಳ ಪ್ರಾಯದವಳಾದ ಸುಮತಿಯ ಬಾಣಂತನಕ್ಕೆ ‘ಬಾಣಂತಿ ಮದ್ದು’ತಯಾರಿಸಲು ಊರಿಡೀ ಹುಡುಕಿ ಓಲೆಬೆಲ್ಲ ತಲಾಶ್ ಮಾಡಿತಂದುಕೊಟ್ಟವರಾರು? ಇದೇ ಖಾದ್ರಿಬ್ಯಾರೆಯವರು. ಊರೆಲ್ಲಾ ಹುಡುಕಿದರೂ, ನಾಕು ಕಾಸು ಜಾಸ್ತಿಯೇ ಕೊಡುತ್ತೇನೆಂದರೂ ವೆಂಕಪ್ಪ ಶೆಟ್ಟರಿಗೆ ದೊರಕದ ’ಓಲೆ ಬೆಲ್ಲ’ ಸುಂದರ ಪೂಜಾರಿ ಮನೆಯಲ್ಲಿ ಖಾದ್ರಿಬ್ಯಾರೆಯವರಿಗೆ ದೊರಕಿತ್ತು. ತಾನೇ ದುಡ್ಡು ಕೊಟ್ಟು ತಂದು ‘ಅವಳು ನನ್ನ ಮೊಮ್ಮಗಳು ಖೈರುವಿನ ಸಮಾನ…’ ಎಂದನ್ನುತ್ತ ಓಲೆ ಬೆಲ್ಲದ ಹಣವನ್ನು ಶೆಟ್ಟರು ಜುಲುಮೆ ಮಾಡಿಕೊಟ್ಟರೂ ಅವರು ಸುತರಾಂ ಮುಟ್ಟಿರಲಿಲ್ಲ. +ಮೊನ್ನೆಯ ಭೇಷ ತಿಂಗಳ ಶುರುವಿರಬೇಕು. ಖಾದ್ರಿಬ್ಯಾರಿಯವರು ಮುಂಜಾನೆಯ ನಮಾಜು ಮುಗಿಸಿ ಬಂದು, ಚಾಯಬ್ಬಬ್ಯಾರಿಯ ಗೂಡಂಗಡಿಯ ಹೊರ ಜಗಲಿಯಲ್ಲಿರುವ ಬೆಂಚಿನ ಮೇಲೆ ಕುಳಿತು ಅರೆಗಳಿಗೆ ಕಳೆದಿದೆಯಷ್ಟೆ. ಅದೇ ಗಳಿಗೆಗೆ ತಮ್ಮ ಬೈಲುಗದ್ದೆಗಳ ವಿಚಾರಣೆಗೆಂದು ಪಡ್ಲಾಗೆ ಹೊರಟಿದ್ದ ವೆಂಕಪ್ಪ ಶೆಟ್ಟರಿಗೆ ಖಾದ್ರಿಬ್ಯಾರಿಯವರ ಹಸಿರು ರುಮಾಲು ಕಣ್ಣಿಗೆ ಬಿದ್ದಿದೆ! ತಮ್ಮ ಅಂತರಂಗದ ಅಹವಾಲನ್ನು ಖಾದ್ರಿಬ್ಯಾರಿಯವರ ಮುಂದೆ ಬಿಡಿಸಿಟ್ಟರೆ ತನ್ನ ಕೆಲಸ ಹಣ್ಣಾಗಬಹುದು ಅಥವ ಒಂದು ಒಳ್ಳೆಯ ಸಲಹೆಯಾದರೂ ಸಿಗಬಹುದು ಎಂಬ ದೂರದಾಸೆಯಿಂದ ಶೆಟ್ಟರು ಹತ್ತಿರ ಬಂದವರೇ ‘ಸ್ಯಾಬೆರೇ ನಾನೀಗ ಒಂದು ದೊಡ್ಡ ಮುಷ್ಕಿಲಲ್ಲಿ ಸಿಕ್ಕಿಹಾಕಿಕೊಂಡಿದ್ದೇನಲ್ಲವಾ…? ನಮ್ಮ ಸುಮತಿಯ ಹೆರಿಗೆಯ ದಿನ ಹತ್ತಿರ ಬಂದಾಗಿದೆ. ಬಾಣಂತಿ ಸಾಕುದಕ್ಕೆ ನಮ್ಮವಳೇ ಇದ್ದಾಳೆ. ಹೆರಿಗೆ ಮಾಡಿಸುವ ದೇಯಿ ಪದೆತಿಗೆ, ಹೆರಿಗೆಯ ಹಿಂದೆ ಮುಂದಿನ ದಿನಗಳಲ್ಲಿ ನಮ್ಮಲ್ಲೇ ಇರಬೇಕೆಂದು ಹೇಳಿಯೂ ಆಗಿದೆ. ಆದರೆ ಈ ಒಂದು ಮಳೆ ಶುರುವಾದರೆ… ಬಾಣಂತಿ ನೀರು ಕಾಯಿಸುದಕ್ಕೆ ಈಗ ಯಾವ ನರಿ ನಾಯಿಯೂ ಒಪ್ಪುತ್ತಿಲ್ಲ ಮಾರಾಯ್ರೆ…! ನಮ್ಮ ಬಿಡಿ ಒಕ್ಕಲು-ಪುಡಿ ಒಕ್ಕಲು ಮಕ್ಕಳನ್ನೆಲ್ಲ ಕೇಳಿ ಆಯ್ತು- ಈಗ ನಾನವರ ಕೈಕಾಲು ಹಿಡಿದು ಬೇಡುವುದೊಂದು ಬಾಕಿ ಇದೆ ಅಷ್ಟೆ. ನಿಮ್ಮ ಗೊತ್ತಲ್ಲಿ ಯಾರಾದ್ರೂ ಇದ್ರೆ ಹೇಳಿ ಸ್ಯಾಬರೆ…’ +‘… ನನ್ನ ಗೊತ್ತಲ್ಲಿ ಯಾರುದ್ದಾರೆ ಶೆಟ್ರೇ…! ನನ್ನದೀಗ ಊರ ದೂರಾಯ್ತು. ಕಾಡು ಹತ್ತಿರವಾಯೂ ಎಂಬಂಥ ಕತೆ. ಅಲ್ಲಾ… ನಿಮ್ಗೆ ಯಾರು ಸಿಗದಿದ್ರೆ ನಾನೇ ಬಂದು ಬಾಣಂತಿ ನೀರು ಬಿಸಿ ಮಾಡಿ ಕೊಡ್ತೇನೆ… ಆಗ್ಬಹುದಾ ಅಂತಾ ನಿಮ್ಮ ಯಜಮಾನ್ತಿಯಲ್ಲೊಮ್ಮೆ ಕೇಳಿ ನೋಡಿ ಶೆಟ್ರೆ.’ +“ಅವಳಲ್ಲೆಂತದ್ದು ಕೇಳುದು…? ಕೋಳಿಯಲ್ಲೆ ಕೇಳಿ ಮಸಾಲೆ ಅರಿ ಎಂದು ಹೇಳಿದ ಹಾಗಾಯ್ತು ನಿಮ್ಮ ಪಂಚಾತಿಕೆ. ಅಲ್ಲಾ ಸ್ಯಾಬರೆ ನೀವು ನಮ್ಮಲ್ಲಿಗೆ ಸುಮ್ಮನೆ ಬಂದು ನೀರು ಕಾಯಿಸುದು ಬೇಡಾ…, ನಿಮಗೆ ಬಾಣಂತಿ ನೀರು ಮುಗಿದ ಮೇಲೆ ‘ಇಂತಿಷ್ಟು ಅಂತ ನಾನು ಕೊಟ್ಟೆಕೊಡುವುದು ಸೈ. ಅದೂ ಅಲ್ಲದೆ ನಿಮ್ಗೆ ಬಿಸಿನೀರು ಅಂದ್ರೆ ಎಷ್ಟು ಜೀವ ಅಂತ ನನಗೆ ಗೊತ್ತಿಲ್ವಾ…, ನೀವು ದಿನಾ ಬಾಣಂತಿ ಮಿಂದಾದ ಮೇಲೆ ಅದೇ ನೀರಲ್ಲಿ ನೀವೂ ಒಂದು ಗಡದ್ದ್ ಮಿಂದುಬಿಡಿ. ನಿಮ್ಮ ವಾತದ ಮೈಗೆ ಅದೇ ಒಂದು ದೊಡ್ಡ ಮದ್ದು… ಆಗದಾ” +ಶೆಟ್ಟರಿಂದ ‘ಮೀಯುವ ಮಾತು’ ಬಂದೊಡನೆ ಖಾದ್ರಿಬ್ಯಾರಿಯವರು ಹಿಂದು ಮುಂದು ನೋಡದೆ ‘ಆ ಮಗು ಸುಮತಿ ಬೇರೆ ಅಲ್ಲ… ನಮ್ಮ ಮೊಮ್ಮಗಳು ಖೈರುನ್ನಿಸ ಬೇರೆ ಅಲ್ಲ…, ನೀವೊಮ್ಮೆ ಸುಮ್ಮನಿದ್ದು ಬಿಡಿ ಶೆಟ್ಟರೆ…, ಎಂತಹ ಊರು ತೆಗೆವ ಮಳೆ ಬಂದರೂ ಬಾಣಂತಿಗೆ ನೀರು ಕಾಯುಸುವ ಜವಾಬ್ದಾರಿ ನಂಗೆ ಬಿಡಿ; ಶೆಟ್ಟರು ನಿರಾಳರಾದರು. +ವೆಂಕಪ್ಪ ಶೆಟ್ಟರಿಗೆ ಖಾದ್ರಿಬ್ಯಾರಿಯವರ ಮಾತಿನ ಬಗ್ಗೆ ಇರುವ ವಿಶ್ವಾಸ ಈಗಿನದ್ದಲ್ಲ. ಸ್ಯಾಬರು ಎಂದೂ ಕೊಟ್ಟ ಮಾತಿಗೆ ತಪ್ಪಿದ ಮನುಷ್ಯನೇ ಅಲ್ಲ. ಕೃತಜ್ಞತಾ ಭಾವದಿಂದ ಶೆಟ್ಟರು ಖಾದ್ರಿಬ್ಯಾರಿಯವರ ಕೈಗಳನ್ನು ಕಣ್ಣಿಗೊತ್ತಿ ‘ತನ್ನ ಕೆಲಸ ಫ಼ೈಸಲ್ ಆಯಿತು’ ಎಂಬ ಭಾವ ಹೊತ್ತು ಪಡುವಣದ ಗದ್ದೆಗಳತ್ತ ನಡೆದಿದ್ದರು. +ಕೊಟ್ಟ ಮಾತಿನಂತೆ ಖಾದ್ರಿಬ್ಯಾರಿಯವರು ವೆಂಕಪ್ಪ ಶೆಟ್ಟಿ ಮನೆಯ ಮಗು-ಬಾಣಂತಿಗೆ ಬಾಣಂತಿನೀರು ಕಾಯಿಸಲಾರಂಭಿಸಿ ಅಂದಿಗೆ ನಲವತ್ತನೇ ದಿನ. ಇಷ್ಟು ದಿನಗಳಲ್ಲಿ ನೀರು ಕಾಯಿಸಲಾರಂಭಿಸಿದ ಖಾದ್ರಿಬ್ಯಾರಿಯವರು ಮಗು-ಬಾಣಂತಿ ಮಿಂದಾದ ನಂತರ ತಮ್ಮ ವಾತ ಹಿಡಿದ ಕೈ-ಕಾಲ ಗಂಟುಗಳಿಗೆ ಕೇವಲ ಏಳೆಂಟು ಬಾರಿ ಬಿಸಿನೀರ ಅಭ್ಯಂಜನ ಮಾಡಿಸಿದ್ದಿರಬಹುದು. ಆದರೆ ಇಡೀ ದೇಹಕ್ಕೆ ಬಿಸಿನೀರು ಎರೆದುಕೊಳ್ಳುವ ಯೋಗವೆಂದೂ ಅವರಿಗೆ ಶೆಟ್ಟರ ಆ ಬಚ್ಚಲು ಮನೆಯಲ್ಲಿ ಇದುವರೆಗೂ ಲಭ್ಯವಾಗಿಲ್ಲ. ವೆಂಕಪ್ಪಶೆಟ್ಟರು ಖಾದ್ರಿಬ್ಯಾರಿಯವರಿಗೆ ಕೊಟ್ಟ ಬಾಯ್ಮಾತಿನಂತೆ, ಇಂದಿನ ವರೆಗೆ ಅವರಿಗೆ ನಲವತ್ತು ದಿನಗಳ ಬಿಸಿನೀರು ಮೀಯುವ ಸುಖ ದೊರಕಬೇಕಿತ್ತು. +ಆದರೆ ಶೆಟ್ಟರು ಸ್ಯಾಬರಿಗೆ ಕೊಟ್ಟ ವಾಗ್ದಾನವನ್ನು ಈಡೇರಿಸಿಕೊಳ್ಳಲು ಶೆಟ್ಟರ ಪತ್ನಿ ಉಮ್ಮಕ್ಕೆಯವರು ಅವಕಾಶ ಕೊಟ್ಟರೆ ತಾನೆ! ಖಾದ್ರಿಬ್ಯಾರಿಯವರನ್ನು ಇಲ್ಲಿ ಬಚ್ಚಲು ಮನೆಯಲ್ಲಿ ಮೀಯಲು ಬಿಡಬಾರದು ಎಂಬ ‘ಹಠದ ಭಾವ’ ಮಾತ್ರ ಉಮ್ಮಕ್ಕೆಯವರಲ್ಲಿ ಖಂಡಿತಾ ಇಲ್ಲ. ಈ ಮಳೆಗಾಲದಲ್ಲಿ… ಮಳೆಗಾಲದ ಅನಪತ್ಯಕ್ಕೆಂದೇ ಇಟ್ಟಿದ್ದ ಸೌದೆಗಳನ್ನೆಲ್ಲ ಈಗಲೇ ಒಟ್ಟಿ ಬಿಸಿನೀರು ಕಾಯಿಸಿದರೆ ನಾಳೆಗೇನು ಎಂಬ ಕಾಳಜಿ-ಆತಂಕದಲ್ಲಿ ಬೇಯುತ್ತಿದ್ದ ಉಮ್ಮಕ್ಕೆಯವರಿಗೆ, ತನ್ನ ಗಂಡ ಖಾದ್ರಿಬ್ಯಾರಿಯವರ ಜತೆ ಮಾಡಿಕೊಂಡಿರುವ ‘ಮೀಯುವ ಒಪ್ಪಂದ’ ಒಂಥರದಲ್ಲಿ ಅಸಮಾಧಾನವನ್ನು ಮಾತ್ರ ತಂದಿದೆ. ಆದರೆ ಆಕೆ ಈ ರೀತಿ ಅಸಮಾಧಾನಪಡುವುದು ತಪ್ಪು ಎನ್ನುವ ಹಾಗೂ ಇಲ್ಲ. ಎಂತಹ ತಾಯಿಯೂ ಮೊದಲು ತೋರುವ ಕಾಳಜಿ, ಪ್ರೀತಿ ತನ್ನ ಸ್ವಂತ ಬಳ್ಳಿಗೆ ತಾನೇ. ನಂತರವಷ್ಟೆ ಸುತ್ತಲ ಬಳ್ಳಿ-ಜೀವಗಳಿಗೆ. ‘ಇಂಥಾ ಪೋಕಾಲದ ಮಳೆಯಲ್ಲಿ… ಇಷ್ಟೊಂದು ಸೌದೆ-ತರಗಲೆಯ ಸಮಸ್ಯೆ ಇರುವಾಗ, ನಮ್ಮ ಮಗು-ಬಾಣಂತಿಗೆ ನೀರು ಕಾಯಿಸುದೇ ಕಷ್ಟ. ಬೇಕಾದರೆ ಒಂದ್ನಾಕು ಕಾಸು ಜಾಸ್ತಿಯೇ ಹೋಗಲಿ ಒಂದು ಆಳನ್ನು ಇಟ್ಟು ಬಾಣಂತಿಗೆ ನೀರು ಕಾಯಿಸುವ ವ್ಯವಸ್ಥೆ ಮಾಡಿದ್ರೆ ಆಗ್ತಿರ್ಲಿಲ್ವಾ…? ದುಡ್ಡು ಕೊಟ್ರೂ ಒಣ ಸೌದೆ ಸಿಗದ ಈ ಥಂಡಿ ಕಾಲದಲ್ಲಿ… ಇವ್ರು ಹೋಗಿ ಹೋಗಿ… ಆ ಕಣ್ಣಲ್ಲಿ ಮಾತ್ರವೇ ಜೀವ ಇಟ್ಟುಕೊಂಡಿರುವ, ಬಿಸಿನೀರಿಗೆ ಜೀವ ಬಿಡುವ ಆ ಮುದಿಸ್ಯಾಬರಿಗೆ ಹೇಳುದಾ…? ಈ ಸ್ಯಾಬ್ರಾದ್ರು ಬಯಸುದೇನು! ಕಾಸೂ ಅಲ್ಲ ಕಾಣಿಯೂ ಅಲ್ಲ… ಮೀಯುದಕ್ಕೆ ಬಾಣಂತಿ ಬಿಸಿ ನೀರು! ಇದೆಂಥಾ ಪೋಕಾಲದ ಪಾಯಿಂಟಪ್ಪ?’ +ಗಂಡ ವೆಂಕಪ್ಪಶೆಟ್ಟರು ಖಾದ್ರಿಬ್ಯಾರಿಯವರ ಜತೆಗೆ ‘ಬಿಸಿನೀರ ಒಪ್ಪಂದ’ ಮಾಡಿಕೊಂಡು, ಬಂದಾಗಿನಿಂದಲೂ ಉಮ್ಮಕ್ಕೆಯವರಿಗೆ ಜೀವದಲ್ಲಿ ಸಹನೆಯೆಂಬುದಿಲ್ಲ. ಈ ಬಗ್ಗೆ ‘ಗಂಡನ ಜತೆ ಹಲವು ಬಾರಿ ವಾದಿಸಿಯೂ ಆಗಿದೆ.’ +‘ಬಚ್ಚಲು ಮನೆಯಲ್ಲಿ ಬಾಣಂತಿ-ಮಗುವಿಗೆ ನೀರು ಹಾಕುವಾಗ ಈ ಸ್ಯಾಬರದ್ದೇನು ಹೊಸ ಪಂಛಾತಿಕೆ! ಇವರಿಗೆ ಬಿಸಿನೀರು ಮೀಯುವ ಆಸೆ ನೀಗಿಸಿಕೊಳ್ಳಲು ಸಿಕ್ಕಿದ್ದು ನಮ್ಮ ಹಿತ್ಲೇನು? ಅವರ ಸೊಸೆ ನಫೀಸಮ್ಮಿನಿಗೇನು ದಾಡಿ, ದಿನಾ ಮಾವನಿಗೊಂದು ಗುರ್ಕೆ ಬಿಸಿನೀರು ಕಾಯಿಸಿಕೊಡುವುದಕ್ಕೆ…? ಈ ಮಳೆಗಾಲದಲ್ಲಿ ದುಡ್ಡು ಕೊಟ್ರೆ ಒಣಗಿದ ಉರುವಲು ಸಿಗುವುದಾದರೆ ಈ ಸ್ಯಾಬರಿಗೆ ಒಂದು ಹಂಡೆ ಯಾಕ್, ಎರಡು ಹಂಡೆ ನೀರು ಬಿಸಿ ಮಾಡಿ ಮೀಯಿಸುವ…ಆಗದಾ?’ ಉಮ್ಮಕ್ಕೆಯವರು ಶೆಟ್ಟರ ಜತೆ ಹೀಗೆ ವಾದದ ಮಾಲೆ ಹಿಡಿದಾಗಲೆಲ್ಲ, ಶೆಟ್ಟರನ್ನುತ್ತಿದ್ದ ಸಮಾಧಾನ, ಸಂಯಮದ ಮಾತನ್ನು ಶೆಡ್ತಿಯವರು ಕಿವಿಯ ಬೀಳಿಗೂ ಸೇರಿಸಿಕೊಳ್ಳುತ್ತಿರಲಿಲ್ಲ. +ವೆಂಕಪ್ಪಶೆಟ್ಟರು, ಅತ್ಯಂತ ತಾಳ್ಮೆಯಿಂದ ತಮ್ಮ ಮಡದಿಗೆ ಹೇಳುವಷ್ಟು ಹೇಳಿ ನೋಡಿದರು. ಆಕೆಯದ್ದೇ ವಾದ ಬಿಗಿಯಾಗತೊಡಗಿದಾಗ ಶೆಟ್ಟರು “ಏಯ್ ಬಿಕನಾಸಿ, ಈ ಮಳೆಯ ವರಾತಕ್ಕೆ ಮಣ್ಣಿಂಗಿ ಹೋದ ನಿನ್ನಪ್ಪ ಬಂದು ‘ಬಾಣಂತಿನೀರು ಬಿಸಿ ಮಾಡ್ತಾನೇನೆ? ಆ ನಿನ್ನ ಬಿಡಿ ಒಕ್ಕಲ ಮಕ್ಕಳು ನೋಡಿದ್ರೆ ನಿನ್ನ ಹಿತ್ಲ ಕಡೆ ತಲೆ ಹಾಕಿ ಮಲಗುವುದಿಲ್ಲ. ಅವುಗಳಿಗೆ ಬಂದಿರುವ ದಪ್ಪ ಛರ್ಬಿ ಇಳಿಸ್ಬೇಕಾದ್ರೆ ಆ ಚಾವಡಿಯೊಳಗಿನ ಪಂಜುರಿಲ್ಯೇ ಬರಬೇಕು ಅಷ್ಟೆ.ಇಂತಹ ಇಕ್ಕಟ್ಟಿನ ಜಂಬರದಲ್ಲಿ ಬಿದ್ದು ನಾನು ಒದ್ದಾಡಿದ್ರೆ…ನನ್ನನ್ನು ಆದರಿಸಿ ಹಿಡಿದವರೆ ಖಾದ್ರಿಬ್ಯಾರಿಯವರು. ಯಾವುದೇ ವಾತ ಹಿಡಿದ ಜೀವಕ್ಕೆ ‘ಬಿಸಿನೀರೆಂದ್ರೆ ಪ್ರಾಣ’ ಅಂತಾ ನನಗೊತ್ತಿಲ್ವಾ? ‘ಎರಡೊತ್ತು ಊಟ ಇರದಿದ್ರೂ ದೊಡ್ಡದಲ್ಲ. ಒಂದೊತ್ತು ಮೀಯುದ್ದಕ್ಕೆ ಬಿಸಿನೀರು ಮಾಡಿಕೊಡಮ್ಮ’ ಎಂದು ಇವರು ಸೊಸೆಗೆ ಎಷ್ಟು ದೊಗ್ಗಲು ಸಲಾಂ ಹಾಕಿದ್ರೂ…ಆಕೆ ಬಿಸಿನೀರ ಹನಿ ಸೋಕಿಸ್ತಿಲ್ಲ ಎಂದು ಸ್ಯಾಬರು ಎಂದೋ ಹೇಳಿದ್ದು ನನಗೆ ನೆನಪಲ್ಲಿದ್ದುದರಿಂದಲೇ ನಾನು ಅವರನ್ನು ಒತ್ತಾಯದಿಂದ ಈ ‘ಬಿಸಿನೀರ ಒಪ್ಪಂದಕ್ಕೆ’ ಒಪ್ಪಿಸಿದ್ದು. ಅವ್ರು ಬಾಣಂತಿ ಏಳುವವರೆಗೆ ಮಾತ್ರ ತಮ್ಮ ಬಚ್ಚಲ ಮನೆಯಲ್ಲಿ ಮೀಯುವುದಲ್ಲ…ಬಾಣಂತಿ ಎದ್ದನಂತರವೂ ಇಲ್ಲೇ ಬಿಸಿನೀರು ಕಾಸಿಕೊಂಡು ಮೀಯುತ್ತಾರೆ…,ಈಗೇನಂತೆ ನಿನ್ನ ಮಸಾಲತ್ತು” ಎಂದು ಕಣ್ಣಲ್ಲೇ ಕೆಂಡ ಕಾರಿಸುತ್ತ +ಹೆಂಡತಿಯ ಬಾಯ್ಮುಚ್ಚಿಸಿದ್ದರು. +ಆ ಕ್ಷಣಕ್ಕೆ ಉಮ್ಮಕ್ಕೆಯವರ ಬಾಯೇನೋ ಮುಚ್ಚಿರಬಹುದು. ಆದರೆ ಖಾದ್ರಿಬ್ಯಾರಿಯವರು ಎಂದು ಶೆಟ್ಟರ ಮನೆಯ ಬಚ್ಚಲು ಮನೆಯಲ್ಲಿ ಉರಿ ಹಾಕತೊಡಗಿದರೋ ಅಂದಿನಿಂದಲೇ ಉಮ್ಮಕ್ಕೆಯವರು, ಸ್ಯಾಬರ ಒಳಜೀವಕ್ಕೆ ಕಿರಿಕಿರಿ ಹುಟ್ಟಿಸುವಂತೆಯೂ, ಆತ್ಮಗೌರವಕ್ಕೆ ಧಕ್ಕೆಯಗುವಂತೆಯೂ ವರ್ತಿಸತೊಡಗಿದ್ದರು. ಖಾದ್ರಿಬ್ಯಾರಿಯವರು ತಮ್ಮ ಕಣ್ಣುಗಳನ್ನು ಕೇಪಳಹಣ್ಣು ಮಾಡಿಕೊಂಡು ಹೊಗೆಘಾಟಿನೊಂದಿಗೆ ಗುದ್ದಾಡುತ್ತಾ ಹಂಡೆ ನೀರನ್ನು ಬಿಸಿ ಮಾಡಿ ಇಟ್ಟಾಕ್ಷಣ ಮಗುವಿನೊಂದಿಗೆ ನುಗ್ಗಿ ಬರುತ್ತಿದ್ದ ಉಮ್ಮಕ್ಕೆಯವರು ತಕ್ಷಣ ಮಗು-ಬಾಣಂತಿಯನ್ನು ಮೀಯಿಸುವ ಏರ್ಪಾಡುಮಾಡಿ ಬರೀ ಮೂರ್ನಾಕು ಗೆರಟೆ ನೀರನ್ನಷ್ಟೇ ಹಂಡೆಯಲ್ಲಿ ಉಳಿಸಿ ಮಿಕ್ಕೆಲ್ಲವನ್ನು ಮಗು-ಬಾಣಂತಿಗೆ ಎರೆದುಬಿಡುತ್ತಿದ್ದರು. ಇಷ್ಟಕ್ಕೂ ಸಮಾಧಾನವಿಲ್ಲವೆಂಬಂತೆ ಒಲೆಗಂಟಲಿಗೆ ನೀರು ಹನಿಸಿಬಿಟ್ಟು, ಒಲೆಬಾಯನ್ನು ತಂಪುಗೊಳಿಸಿಬಿಡುತ್ತಿದ್ದರು. ಆ ಹನಿದ ಒಲೆಗಂಟಲಿಗೆ ಮತ್ತೆ ಆ ಕ್ಷಣದಲ್ಲಿ ಉರಿ ಹಾಕಬೇಕೆಂದರೆ ಭೂತ ಪಂಜುರ್ಲಿಯೇ ಮಾಯ ತೋರಬೇಕು ಅಷ್ಟೆ, ಆದ್ರಿಬ್ಯಾರಿಯವರಿಗೆ ಉಮ್ಮಕ್ಕೆಯವರ ಆ ಕ್ಷಣದ ವರ್ತನೆ ಬಗ್ಗೆ ಯೋಚಿಸಲು ಏನೂ ತೋಚದಂತಾಗಿ ತಕ್ಷಣ ನಿಡುಸುಯ್ಲೊಂದನ್ನು ಬಿಡುತ್ತಾ ಮೌನವಾಗಿ ಎದ್ದು ಹೊರಡುತ್ತಿದ್ದರು. +ಇತ್ತಿತ್ಲಾಗೆ, ಕೆಲವು ದಿನಗಳಿಂದ ಸ್ಯಾಬರು ಒಲೆಗಂಟಲೆದುರು ಕೂತಾಗಲೆಲ್ಲಾ ಉಮ್ಮಕ್ಕೆಯವರು ಪಡಸಾಲೆಯಿಂದಲೇ-‘ಒಲೆಗಂಟಲಿಗೆ ನಾಲ್ಕು ಬಾಯಿ ಸೌದೆ ತುರಿಕಿದರೆ ಸಾಕು ಸ್ಯಾಬರೇ;ಸಾಕು ಉರಿ ನಿಲ್ಸಿ…..ಉಗುರು ಬಿಸಿ ಸಾಕು…., ಮೀಯಲಿಕ್ಕಿರುವುದು ಮಗು-ಬಾಣಂತಿ ಅಷ್ಟೆ….’ ಎಂದು ಏರುದನಿಯಿಂದ ಹೇಳುವಾಗಲೆಲ್ಲ ಖಾದ್ರಿಬ್ಯಾರಿಯವರ ಜೀವ ಹಿಂಡಿ ಜೀವವಾಗುತ್ತಿತ್ತು. ಅವರ ಎದೆಯೊಳಗೆ ನಿರಾಶೆಯ ಕಗ್ಗತ್ತಲೇ ಕವಿಯುತ್ತಿತ್ತು. ಕಣ್ಣೂ ಹನಿಗಣ್ಣಾಗುತ್ತಿತ್ತು. +ನನಗೆ ಈ ಅಂಗಳದ ಬಿಸಿನೀರೂ ಬೇಡ….ಸುಡುನೀರೂ ಬೇಡಾ….ಎಂದು ಅವರಿಗೆ ಅನೇಕ ಬಾರಿ ಅನ್ನಿಸಿದ್ದರೂ, ತನ್ನ ಮೊಮ್ಮಗಳ ಸಮಾನಳಾದ, ಅದರಲ್ಲೂ ತನ್ನ ಬಗ್ಗೆ ಜೀವವನ್ನೇ ಇಟ್ಟುಕೊಂಡಿರುವ ಆ ಬಾಣಂತಿ, ತಾನು ಇದ್ದಕ್ಕಿದ್ದಂತೆ ನೀರು ಕಾಯಿಸುವ ಕೆಲಸವನಲ್ಲೇ ಬಿಟ್ಟರೆ ಎಷ್ಟು ನೊಂದುಕೊಂಡಾಳೋ ಎಂಬ ಹಿಂಜರಿಕೆಯಿಂದಲೇ ಅವರು ಇಂದಿನವರೆಗೂ ಆ ಕಾಯಕವನ್ನು ಅಷ್ಟೇ ಮುತುವರ್ಜಿಯಿಂದ ಮುಂದುವರೆಸಿದ್ದಾರೆ. ಆದರೆ ಅವರು ಆ ಬಚ್ಚಲುಮನೆಯಲ್ಲಿ ಇದುವರೆಗೂ ಒಂದು ಬಾರಿಯಾದರೂ ಮಿಂದಿಲ್ಲ. +ಖಾದ್ರಿಬ್ಯಾರಿಯವರಿಗೇನು ಆ ಅಂಗಳ-ಆ ಮನೆ ಮಂದಿ ನಿನ್ನೆ ಮೊನ್ನೆಯ ಪರಿಚಯವೇನಲ್ಲ. ವೆಂಕಪ್ಪಶೆಟ್ರ ಅಪ್ಪ ಕುಡುಪ್ಪ ಶೆಟ್ರ ಕಾಲದಿಂದಲೂ ಅವರು ಆ ಅಂಗಳದಲ್ಲೇ ಓಡಾಡಿ ಈಗ ಮುಪ್ಪು ಕಂಡವರು. ಹುಡುಗು ಪ್ರಾಯದಲ್ಲಿ ಅಪ್ಪನ ಜತೆ ಸೇರಿ ಮಣಿಸರ-ಮೆಣಸಿನ ವ್ಯಾಪಾರಕ್ಕಾಗಿ ಬಡಗುದಿಕ್ಕಿನ ಗಟ್ಟವನ್ನೇರಿದ ಖಾದ್ರಿಸ್ಯಾಬರು, ಕ್ರಮೇಣ ಅಲ್ಲಿನ ಗೌಡ್ತಿಯವರ ಮಾತಿನ ಕಾಟ ತಾಳಲಾರದೆ, ಏಳೆಂಟು ವರುಷಗಳಲ್ಲೆ ಅಲ್ಲಿನ ವ್ಯಾಪಾರ ವಹಿವಾಟುಗಳನ್ನು ಕೈದು ಮಾಡಿ, ಅಪ್ಪನ ಜತೆಗೂಡಿ ಕನ್ನಡಜಿಲ್ಲೆಯಲ್ಲೇ ವ್ಯಾಪಾರಕ್ಕಾಗಿ ಅಡಿಗಲ್ಲಿಟ್ಟಿದ್ದರು. +ಖಾದ್ರಿಸ್ಯಾಬರು ಎಂದೂ ಒಂದೇ ವ್ಯಾಪಾರಕ್ಕೆ ಜೋತುಬಿದ್ದವರಲ್ಲ. ಆರಂಭದಲ್ಲಿ ಮಣಿಸರಕಿನ ವ್ಯಾಪಾರದ ಜತೆ ನಾಲ್ಕು ಊರು ಸುತ್ತುತ್ತ ಎಮ್ಮೆ, ಹಸು, ಕೋಣಗಳ ದಲ್ಲಾಳಿ ಕೆಲಸಕ್ಕೆ ಕೈಹಾಕಿದ ಖಾದ್ರಿಬ್ಯಾರಿಯವರು ಮನೆಯಲ್ಲಿ ಸಂತಾನ ಭಾಗ್ಯ ಹೆಚ್ಚಿದಂತೆಲ್ಲ ತಮ್ಮ ಜಾಣ್ಮೆ, ಚಾಕಚಕ್ಯತೆ, ದೂರಾಲೋಚನೆಯನ್ನು ಮುಂದಿಟ್ಟುಕೊಂಡು ಋತುಗಳಿಗನುಗುಣವಾಗಿ ತಮ್ಮ ವ್ಯಾಪಾರದ ಕ್ಷೇತ್ರವನ್ನು ವಿಸ್ತರಿಸುತ್ತಿದ್ದುದು ಅವರ ವ್ಯಾಪಾರ ಜ್ಞಾನ, ಅವರ ಬದುಕುವ ದಾರಿಯನ್ನು ಅರಸುವ ಕೌಶಲ್ಯಕ್ಕೊಂದು ಮಾದರಿಯಾಗಿತ್ತು. +ಪಗ್ಗು-ಭೇಷ ತಿಂಗಳು ಬಂತೆಂದರೆ ಸಾಕು-ದಲ್ಲಾಳಿ ಕೆಲಸದ ಜತೆಗೆ ಮುಂದೆ ದಿಗಿಣ ತೆಗೆದು ಬರಲಿರುವ ಕಾರ್ತೆಲ್ ತಿಂಗಳ ಮಳೆರಾಯನಿಗೆ ಇರಲಿ ತನ್ನದೊಂದು ‘ಛತ್ರಿಸೇವೆ’ ಎಂಬಂತೆ ಖಾದ್ರಿಬ್ಯಾರಿಯವರು ಹೆಗಲ ಮೇಲೊಂದು ಸುತ್ತೆ-ಕತ್ರಿ-ಮೊಳೆ-ಕಡ್ಡಿಗಳಿರುವ ಬಟ್ಟೆ ಚೀಲ ನೇತುಹಾಕಿಕೊಂಡು ಊರು ಸುತ್ತಲು ಹೊರಟರೆಂದರೆ-ಊರವರ ಮೂಲೆ ಸೇರಿದ ಹಾಳು ಮೂಳು ಬಣ್ಣಗೇಡಿ ಕೊಡೆಗಳೆಲ್ಲ ಸ್ಯಾಬರಿಗೆ ಸಲಾಮು ಹೊಡೆಯತೊಡಗುತ್ತವೆ. ಮತ್ತೆ ಆ ಕೊಡೆ ರಿಪೇರಿ ಕೆಲಸ ಕೈದಾಗುವುದು ಮುಂದೆ ಶ್ರಾವಣಮಾಸ ಬಂದ ನಂತರವಷ್ಟೆ. ಅಷ್ಟರಲ್ಲಿ ಕನ್ಯಾ ತಿಂಗಳು ಎದುರು ಬಂದರೆ ಪುನಃ ಶುರು-ಕತ್ರಿಸಾಣೆ,ಕಮ್ಮಾರಿಕೆಯ ಕೆಲಸ. ಕೊಟ್ಟು-ಪಿಕಾಸಿ-ಕತ್ತಿಗಳ ಬಾಯಿಗಳಿಗೆ ಹೊಡೆದು ಬಡಿದು ಜಳಪಿಸುವ ಕೆಲಸವೆಲ್ಲ ಮುಗಿದೊಡನೆ, ಪೆರಾರ್ದೆ ತಿಂಗಳಲ್ಲಿ ಗಾಡಿ ಎತ್ತುಗಳಿಗೆ ಲಾಳ ಹೊಡೆಯುವ ಕೆಲಸ, ಜತೆಗೆ ತಾಮ್ರ-ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಚ್ಚುವ ಕೆಲಸವೂ ಮಾಮೂಲು. +ಇವೆಲ್ಲವೂ ಮುಗಿಯುವ ಹೊತ್ತಿಗೆ ವಸಂತಕಾಲ ಅಡಿಯಿಟ್ಟರೆ ಮತ್ತೆ ಖಾದ್ರಿಬ್ಯಾರಿಯವರಿಗೆ ಅಂಡಿಗೆ ಪುರುಸೊತ್ತಿಲ್ಲದ ಕಾಲ. ಕಾಲಿಗೊಂದು ಚರ್ಮದ ಮೆಟ್ಟು ಮೆಟ್ಟಿಕೊಂಡು ವಸಂತಕಾಲದ ಪ್ರಕೃತಿ ವ್ಯಾಪಾರದ ಜತೆಗೆ ಇವರ ವ್ಯಾಪಾರ ಶುರುವಾಗುತ್ತದೆ, ಊರಿಡೀ ಸಾಲುಮರ, ಉಳ್ಳವರ ತೋಪು-ಹಿತ್ತಲಲ್ಲಿರುವ ಹೂ-ಹಣ್ಣು ಹೊತ್ತಿರುವ ಬಸುರಿ ಮರಗಳನ್ನು ದಿಟ್ಟಿಸುವುದು; ಈ ಬಾರಿ ಈ ಮರದಲ್ಲಿ ಕಾಯಿಯೆಷ್ಟು ಹಿಡಿಯಬಹುದು, ಎಷ್ಟಕ್ಕೆ ವಹಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಅವರೊಳಗೆ ಆರಂಭಗೊಳ್ಳುತ್ತದೆ. ಊರಲ್ಲಿರುವ ಮಾವು-ಹಲಸು-ಗೇರು-ಹುಣಿಸೆ-ಬುಗುರಿ ಮರಗಳನ್ನು ವಹಿಸಿಕೊಂಡ ನಂತರ ಮುಂದೆ ಗ್ರೀಷ್ಮ‌ಋತು ಬರುವವರೆಗೆ ಇದೇ ಕಾಯಕದಲ್ಲಿ ಸ್ಯಾಬರು ಹಣ್ಣಾಗುತ್ತಾರೆ. +ಹಣ್ಣು ಮಾಗುವಕಾಲ ಮುಗಿದ ನಂತರದ ಕೆಲಸವೆಂದರೆ ಸುಗ್ಗಿ ಕಾಲದ ದವಸ-ಧಾನ್ಯಗಳನ್ನು ಗೇಣಿಮಕ್ಕಳಿಂದ ಕೊಂಡು, ಕೊಳಕೆಯ ಬೆಳೆಯನ್ನೂ ಧಣಿಗಳಿಂದ ಖರೀದಿಸಿಕೊಂಡು ಅದನ್ನು ಲಾಭ ಬರುವ ಋತುಮಾನದಲ್ಲಿ ಮಾರಿ ಒಂದಿಷ್ಟು ಲಾಭ ಗಿಟ್ಟಿಸಿಕೊಳ್ಳುವುದು. +ಗ್ರೀಷ್ಮಕಾಲದ ನಂತರದ ವರ್ಷ‌ಋತುವಿನಲ್ಲಿ ಖಾದ್ರಿಬ್ಯಾರಿಯವರಿಗೆ ಸ್ವಲ್ಪ ಪುರುಸೊತ್ತು ಸಿಗುವುದಿದೆ. ಆದರೆ ಪುರುಸೊತ್ತು ಸಿಗುವುದು ಅವರ ಕಾಲುಗಳಿಗೆ ವಿನಃ ಅವರ ದುಡಿಮೆಗಲ್ಲ, ವಹಿವಾಟಿಗಲ್ಲ. ಹೊರಗಡೆ ಆ ಪರಿಯಲ್ಲಿ ಮಳೆ ಸುರಿಯುತ್ತಿರಬೇಕಾದರೆ ಖಾದ್ರಿಬ್ಯಾರಿಯವರು ಜಗಲಿಯ ಮೂಲೆಯಲ್ಲಿ ಕುಳಿತು ಹೊಲಿಗೆ ರಾಟೆ ತಿರುಗಿಸತೊಡಗುತ್ತಾರೆ. ಖಾದ್ರಿಬ್ಯಾರಿಯವರು ಅಪ್ಪನಿಂದಲೇ ಈ ದರ್ಜಿ ಕೆಲಸವನ್ನು ಕಲಿತವರು. ಅಲ್ಲಾನ ಪಾದ ಸೇರುವ ಜಾತಿ ಬಾಂಧವರಿಗೆ ಕಫನ್ ಹೊಲಿಯುವ ಕೆಲಸವನ್ನು ಆ ಊರಲ್ಲಿ ನಿರ್ವಹಿಸಿದವರು ಖಾದ್ರಿಬ್ಯಾರಿವರ ಅಪ್ಪ ಮೂಸೆಬ್ಯಾರಿಯವರು. ಕಫನ್ ಹೊಲಿಯುವ ಕೆಲಸಕ್ಕೆಂದೇ ಆರಂಭದಲ್ಲಿ ರಾಟೆ ತಿರುಗುವ ಕೆಲಸವನ್ನು ಆರಂಭಿಸಿದ ಖಾದ್ರಿಬ್ಯಾರಿಯವರು ನಿಧಾನಕ್ಕೆ ತಮ್ಮ ಮಡದಿ, ಮಕ್ಕಳಿಗೆ ಲಂಗ,ರವಿಕೆ ಗವನನ್ನೂ ಹೊಲಿಯತೊಡಗಿದ್ದರು, ಮಡದಿ ಮೈಮೂನಮ್ಮನವರಿಗೆ ಖಾದ್ರಿಬ್ಯಾರಿಯವರು ಕುಪ್ಪಸ ಹೊಲೀತಾರೆಂದು ಸುದ್ದಿಯಾಡನೆ ಸುತ್ತಮುತ್ತಲ ಮನೆಯವರೂ ಅವರನ್ನು ಲಂಗ-ರವಿಕೆ-ಗವನಿಗಾಗಿ ಆಶ್ರಯಿಸಿದ್ದರು. ಆದರೆ ಎಲ್ಲಾ ಕಾಯಕದಲ್ಲೂ ಯಶಸ್ವಿ ಪಟ್ಟ ಪಡೆದುಕೊಂಡ ಖಾದ್ರಿಬ್ಯಾರಿಯವರಿಗೆ ಈ ದರ್ಜಿ ಕಾಯಕದಲ್ಲಿ ಮಾತ್ರ ‘ಯಶಸ್ವಿ ದರ್ಜಿ’ ಪಟ್ಟವನ್ನು ಮಾತ್ರ ಪಡೆದುಕೊಳ್ಳಲಾಗಲಿಲ್ಲ. ಅವರು ಹೊಲಿದ ಲಂಗ-ರವಿಕೆಗಳ ಬಗ್ಗೆ ಊರಿನ ಪುರುಷ ಸಂಕುಲದಿಂದ ಹಲವಾರು ಅಪಸ್ವರಗಳು ಎದ್ದು ಅವು ಊರಿಡೀ ವ್ಯಂಗ್ಯ-ಕುಹಕ-ಲೇವಡಿ-ಹಾಸ್ಯಗಳ ಮೂಲಕ ತೇಲಾಡಿದ್ದವು. +‘ಇವ ಹೆಣಕ್ಕೆ ಮಾತ್ರ ಲಂಗ-ಗವನನ್ನು ಹೊಲಿಲಿಕ್ಕೆ ಲಾಯಕ್ಕು… ಜೀವ ಇರುವವರಿಗಲ್ಲ’ ಎಂದು ಕೈನಾಲು ಮನೆಯ ಹರಿಯಪ್ಪನೆಂದರೆ, ‘ಇವ್ರು ಹೊಲಿದ ರವಿಕೆಯಲ್ಲಿ, ಹೆಣ್ಮಕ್ಕಳ ದುಂಡೆದೆ ಮೈದಾನದಷ್ಟೇ ಸಪಾಟಾಗಿ ಕಾಣಿಸುತ್ತೆ’ ಎಂದು ಊರುಮನೆ ರಂಗಪ್ಪ ಗಾಣಿಗ ಊರಿಡೀ ಹೇಳಿಕೊಂಡು ಬಂದಿದ್ದ. +‘ಈ ಖಾದ್ರಿಬ್ಯಾರಿಯವರು ಹೊಲಿದ ಗವನು ಹಾಕಿದ್ರೆ ಥೇಟ್ ಹೆಣವೇ ಗೋರಿಯಿಂದ ಎದ್ದು ಬಂದಂತೆ ಕಾಣಿಸುತ್ತೆ ಮಾರಾಯ್ರೇ’ ಎಂದು ಬೆಸ್ತರ ಕೇರಿಯ ವಾಸು ಸಾಲ್ಯಾನ್ ಕೂಡ ಅಂದಿದ್ದನಂತೆ. +ಹೀಗೆ ಊರಮಂದಿಯ ಹತ್ತು ಹಲವು ಬಗೆಯ ವ್ಯಂಗ್ಯ ಕುಹಕ ಸಿಟ್ಟಿನ ಮಾತುಗಳನ್ನು ನಗು ಮುಖದಿಂದ ಕೇಳಿಸಿಕೊಳ್ಳುತ್ತಲೇ ಖಾದ್ರಿಬ್ಯಾರಿಯವರು, ಕಫನ್ ಹೊಲಿಯುವ ಕಾಯಕವನ್ನು ಮಾತ್ರ ನಿರಾತಂಕವಾಗಿ ಮುಂದುವರಿಸಿಕೊಂಡು ಬಂದು ತನ್ನ ಮೂವತ್ತರ ಹರೆಯವನ್ನು ಇದೀಗ ಎಂಬತ್ತೆರಡಕ್ಕೇರಿಸಿಕೊಂಡು, ಆರು ಮಂದಿ ಹೆಣ್ಣುಮಕ್ಕಳ ಒಬ್ಬ ಗಂಡು ಮಗ ಇದ್ದೂ ಈ ವಯಸ್ಸಲ್ಲಿ ಪಡಬಾರದ ಪಾಡು ಪಡುತ್ತಾ ಸೊಸೆಯ ದೌಲತ್ತಿನಡಿ ಸಂಪೂರ್ಣ ಹಣ್ಣಾಗಿ ನಲುಗುತ್ತಿದ್ದಾರೆ. +‘ಕೈಯ ಕಾಸೂ ಹೋಯಿತು, ಮೈಯ ಮಾಂಸವೂ ಹೋಯಿತು’ ಎಂಬಂಥ ಸ್ಥಿತಿಯಲ್ಲಿರುವ ಖಾದ್ರಿಬ್ಯಾರಿಯವರು ಈ ಕಫನ್ ಹೊಲಿಯುವ ಕಾಯಕವನ್ನು ಇದೀಗ ಅವರ ಏಕೈಕ ಗಂಡು ಸಂತಾನವಾಗಿರುವ ಹುಸೇನಬ್ಬ ಮುಂದುವರಿಸುತ್ತಿದ್ದಾನೆ. ಎಲ್ಲ ಹೆಣ್ಣುಮಕ್ಕಳ ಹಿಂದೆ ಹುಟ್ಟಿದ +ಮಗ ಹುಸೇನಬ್ಬನೆಂದರೆ ಖಾದ್ರಿಬ್ಯಾರಿ ಮೈಮೂನಮ್ಮನವರಿಗೆ ತುಂಬು ಜೀವ. ಆತನಿಗೊಂದು ಸಂಗಾತಿಯಾಗಿ ಎಂದು ಮೈಮೂನಮ್ಮನವರು ಮಾಪ್ಳ ಕಡಪುವಿನ ಬಾವುಬ್ಯಾರಿಯ ಮಗಳು ನಫೀಸಮ್ಮಳನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡರೋ ಅಂದಿನಿಂದಲೇ ಅವರಿಬ್ಬರಿಗೂ ಮಗನ ಮೇಲಿನ ಮಮಕಾರ ಕುಂದತೊಡಗಿತ್ತು. ನಫೀಸಮ್ಮ ಗಂಡನನ್ನು ಸಂಪೂರ್ಣವಾಗಿ ತನ್ನ ಸೆರಗಿನ ತುದಿಗೆ ಗಂಟು ಹಾಕಿಕೊಂಡ ನಂತರ ಮಗನ ವರ್ತನೆಯಲ್ಲಾದ ಬದಲಾವಣೆ ಕಂಡು ಮೈಮೂನಮ್ಮನವರನ್ನು ಕಾಡಿದ್ದು ‘ತನ್ನ ಗಂಡನ ಮುಂದಿನ ಪಾಡೇನು’ ಎಂಬ ಚಿಂತೆ. +ಹುಸೇನಬ್ಬ ಬದುಕುವ ದಾರಿ ಹಿಡಿಯಲು, ಅಪ್ಪ ಸವೆಸಿದ ದಾರಿಯಲ್ಲೇ ಸಾಗಿಬಂದನಾದರೂ, ತಾನು ಸಾಗಿಬಂದ ದಾರಿಯಲ್ಲಿರುವ ಏರು, ತಗ್ಗುಗಳೆಲ್ಲ ಸಾವಧಾನದಿಂದ ತಗ್ಗಿ-ಬಗ್ಗಿ ಏರಿ ನಡೆಯಬೇಕೆಂಬ ವ್ಯತ್ಯಾಸದರಿವಿಲ್ಲದೆ ತಿಳಿಗೇಡಿಯಾಗಿ ಊರಲ್ಲಿ ಅಪ್ಪ ಪಡೆದ ಹೆಸರನ್ನು ಆತನಿಂದ ಉಳಿಸಿಕೊಳ್ಳಲಾಗಲಿಲ್ಲ. ಸಿಗಿಯುವುದೊಂದೇ ಗರಗಸದ ನಿಯಮ-ಎಂಬಂತೆ ಅಪ್ಪನ ಮೈಯಲ್ಲಿ ತಾಕತ್ತು ಇರುವವರೆಗೂ ಅವರನ್ನು ಮುಂದಿಟ್ಟುಕೊಂಡು ತನ್ನ ಬದುಕುವ ದಾರಿಯನ್ನು ಸುಗಮ ಮಾಡಿಕೊಂಡಿದ್ದನಾತ. ಖಾದ್ರಿಬ್ಯಾರಿಯವರೂ ತಮ್ಮ ಮೈಯಲ್ಲಿ ಬಿಸಿರಕ್ತದ ವಹಿವಾಟು ತಣ್ಣಗಾಗುವುದರೊಳಗೆ ತನ್ನೆಲ್ಲ ಹೆಣ್ಣುಮಕ್ಕಳ ಮದುವೆ-ಬಾಣಂತನವನ್ನು ಮುಗಿಸಿ, ಮಗನಿಗೆ ಬದುಕುವ ದಾರಿಗಳನ್ನು ಅತ್ಯಂತ ಸ್ಪಷ್ಟವಾಗಿ ಪರಿಚಯಿಸಿಬಿಟ್ಟು, ದಮ್ಮುರೋಗದಿಂದ ನರಳುತ್ತಿದ್ದ ತಮ್ಮ ಮೈಮೂನಮ್ಮನವರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದರು. +ತನ್ನ ನಂತರ ಗಂಡನಿಗೆ ದಿಕ್ಕ್ಯಾರು? ಎಂಬ ಚಿಂತೆಯಲ್ಲೇ ಹೂ ಮನಸ್ಸಿನ ಮೈಮೂನಮ್ಮನವರು ತಮ್ಮ ದಮ್ಮುರೋಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹಾಸಿಗೆ ಹಿಡಿದಾಗ, ಅವರ ಸೇವೆ ಮಾಡುವ ಸಂಪೂರ್ಣ ಜವಾಬ್ದಾರಿ ಖಾದ್ರಿಬ್ಯಾರಿಗಳದಾಗಿತ್ತು. ಈ ದಮ್ಮುರೋಗದಿಂದ ತನಗಿನ್ನು ಉಳಿಗಾಲವೆಂಬುದು ಮೈಮೂನಮ್ಮನವರಿಗೆ ಖಾತ್ರಿಯಾದೊಡನೆ ಮಗ-ಸೊಸೆಯನ್ನು ಎದುರಿಗಿರಿಸಿಕೊಂಡು ಈ +ದೇವರಂಥ ಮನುಷ್ಯನನ್ನು ಕಾಲ ಕಸ ಮಾಡ್ದೆ, ಹೂ-ಚೆಂಡನ್ನು ರಕ್ಷಿಸುವಷ್ಟು ಮೃದುವಾಗಿ ರಕ್ಷಿಸಬೇಕೆಂದು ಸೊಸೆಯ ಕೈಗಳನ್ನು ತನ್ನ ಕಣ್ಣಿಗೊತ್ತಿಕೊಂಡು ಬೇಡಿಕೊಂಡಿದ್ದರು. ಹಾಗೆ ಬೇಡಿದ ಮರುದಿನವೇ ಮೈಮೂನಮ್ಮ, ಖಾದ್ರಿಬ್ಯಾರಿಯವರನ್ನು ಈ ಜಗತ್ತಲ್ಲಿ ಏಕಾಂಗಿಯಾಗಿರಿಸಿ ಅಲ್ಲಾನ ಪಾದ ಸೇರಿದ್ದರು. +ಇಂದಿಗೆ ಮೈಮೂನಮ್ಮ, ಖಾದ್ರಿಬ್ಯಾರಿಯವರನ್ನು ತೊರೆದು ಹತ್ತು ವರುಷಗಳೇ ಸಂದಿದೆ. ಹೆಂಡತಿಯ ಕಾಲಾನಂತರ ಖಾದ್ರಿಬ್ಯಾರಿಯವರಿಗೆ ಈ ಜಗತ್ತಿನ ಏನೂ ಯಾವುದೂ ಬೇಡವಾಯ್ತು. ಸೊಸೆಯ ದೌಲತ್ತು ಏರಿದಂತೆಲ್ಲ ಅಪ್ಪನನ್ನು ಆಗಾಗ್ಗೆ ವಿಚಾರಿಸಲು ಮನೆಗೆ ಬರುತ್ತಿದ್ದ ಹೆಣ್ಣು ಮಕ್ಕಳೂ ಬರುವುದನ್ನು ಕೈದು ಮಾಡಿಬಿಟ್ಟರು. ಇದರಿಂದಾಗಿ ಖಾದ್ರಿಬ್ಯಾರಿಯವರು ಇನ್ನಷ್ಟು ಒಂಟಿಯಾದರು. ಮಗ ಹುಸೇನಬ್ಬನಂತೂ ಮಡದಿ ನಫೀಸಳಿಗೆ ಹೆದರಿ ಅಪ್ಪನನ್ನು ಸಂಪೂರ್ಣ ಮರೆತೇ ಬಿಟ್ಟವನಂತೆ ಮುಖತಪ್ಪಿಸಿ ಓಡಾಡತೊಡಗಿದ್ದ. ಎಳೆ ಮನಸ್ಸಿನ ಮೊಮ್ಮಕ್ಕಳೇನಾದರೂ ಖಾದ್ರಿಬ್ಯಾರಿಯವರಿಗೆ ಒಗ್ಗಿಹೋಗದಿರುತ್ತಿದ್ದರೆ ಅವರ ಸ್ಥಿತಿ ಅವರ ವೈರಿಗೂ ಬೇಡವಾಗಿರುತ್ತಿತ್ತು. ಹುಸೇನಬ್ಬನ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿಗಂತೂ ಅಜ್ಜನೆಂದರೆ ಜೀವ. ಆದರೇನು ಅವಿನ್ನೂ ರೆಕ್ಕೆ ಬಲಿತವು ಅಲ್ಲ-ಅಜ್ಜನ ಬೇಕು ಬೇಡಗಳನ್ನು ಪೂರೈಸಲು. ಅಜ್ಜನ ಪರವಾಗಿ ಅಮ್ಮನ ಜತೆ ವಾದಿಸುವಷ್ಟು ಅವುಗಳ ಕೊರಳು ಬಲಿತಿರುವುದೇ ಖಾದ್ರಿಬ್ಯಾರಿಯವರಿಗೆ ಇನ್ನಿಲ್ಲದ ಸಂಕಟವನ್ನು ತಂದೊಡ್ಡಿದಂತಾಗಿದೆ. ‘ಮಕ್ಕಳ ತಲೆಕೆಡಿಸಿದ್ದಾರೆ’ ಎಂಬ ಆರೋಪ ನಫೀಸಮ್ಮನ ಕಡೆಯಿಂದ ತೇಲಿಬಂದು ಖಾದ್ರಿಬ್ಯಾರಿಯವರ ರುಮಾಲೇರಿ ಕುಳಿತ ನಂತರ, ಖಾದ್ರಿಬ್ಯಾರಿಯವರು ಮೊಮ್ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವು ಬಿಡಬೇಕಲ್ಲ. +ಹೀಗೆ ಮುಪ್ಪಿನಲ್ಲಿ ಖಾದ್ರಿಬ್ಯಾರಿಯವರು ಒಂಟಿಬಾಳ್ವೆ ನಡೆಸುತ್ತಿರುವಾಗ, ಜತೆಗೊಂದು ಸಂಗಾತಿ ಇರಲೆಂದು ದೇವರು ಅವರ ಜೀವದೊಳಗೊಂದು ವಾತರೋಗವನ್ನು ಹೊಗಿಸಿಬಿಟ್ಟಿದ್ದರಿಂದ ಅವರ ಸ್ಥಿತಿ ಮತ್ತಷ್ಟು ವಿಷಮಗೊಂಡಿತ್ತು. ದಿನನಿತ್ಯ ಮುಂಜಾನೆಯ ನಮಾಜಿಗೆಂದು ಎದ್ದುನಿಲ್ಲಬೇಕಾದರೆ ಆ ವಾತರೋಗ ಕೊಡುವ ಕಾಟ-ನೋವನ್ನು ಖಾದ್ರಿಬ್ಯಾರಿಯವರು ಚಾಪೆ ತುಂಬ ಕಣ್ಣೀರು ಇಳಿಸುವ ಮೂಲಕವೇ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಅಮ್ಮನ ಕಣ್ತಪ್ಪಿಸಿ ಮೊಮ್ಮಕ್ಕಳೇನಾದರೂ ಕೈ-ಕಾಲುಗಳ ಗಂಟು ನೀವಿದರೆ ಅವರು ಕೂತಲ್ಲಿಂದ ಎದ್ದು ನಿಂತಾರು ಅಷ್ಟೆ. +ಈ ವಾತಕ್ಕೆ ಬಿಸಿನೀರೇ ದಿವ್ಯ ಔಷಧಿ ಎಂಬುದನ್ನು ಬಲ್ಲ ಖಾದ್ರಿಬ್ಯಾರಿಯವರು ಮೊಮ್ಮಕ್ಕಳ ಮೂಲಕ ಸೊಸೆಗೆ ಈಗಾಗಲೇ ಒಂದು ಸಂದೇಶವನ್ನು ರವಾನಿಸಿದ್ದರು. ‘ಅಜ್ಜನಿಗೆ ಬೆಳಿಗ್ಗೆ ತಿಂಡಿ ಬೇಡವಂತೆ-ಅವರ ಬದಲಿಗೆ ಅವರಿಗೆ ಮೀಯಲು ಒಂದಷ್ಟು ಬಿಸಿನೀರು ಕೊಡಬೇಕಂತೆ’ ಎಂಬ ಮಕ್ಕಳ ಮಾತಿನ ಓಲೆಗೆ ನಫೀಸಮ್ಮ ರವಾನಿಸಿದ ಮರು ಓಲೆ ಹೀಗಿತ್ತು. ‘ಅಡುಗೆಮನೆಗೆ ಉರಿ ಹಚ್ಚೂದಕ್ಕೇ ಮನೆಯ ರೀಪು-ಪಕ್ಕಾಸುಗಳನ್ನು ಕೀಳಬೇಕೆಂದಿದ್ದೇನೆ. ಇನ್ನು ಅವರನ್ನು ಮೀಯಿಸಲು ಒಂದು ಕಾಡು ಬೆಳೆಸಿ ನಂತರ ಮೀಯಿಸಿ ಬಿಡುವ….ಆಗದಾ?’ +ಸೊಸೆಯ ಮಾತಿನಿಂದ ಖಾದ್ರಿಬ್ಯಾರಿಯವರು ಸಂಪೂರ್ಣ ಕುಂದಿ ಹೋಗಿದ್ದರು. ‘ಇಳಿವಯಸ್ಸಲ್ಲಿ ಹಿಡಿದ ವಾತ…ಮುದಿಮರಕ್ಕೆ ಹಿಡಿದ ಗೆದ್ದಲು-ಹಿಡಿದ ಜೀವವನ್ನು ಬಿಡುವುದು ಸತ್ತನಂತರವಷ್ಟೆ’ ಎಂಬ ಗಾದೆಯಿದೆಯಲ್ಲ ಹಾಗೆ ನನ್ನ ಕತೆ ಎಂದು ಖಾದ್ರಿಬ್ಯಾರಿಯವರು ಹನಿಗಣ್ಣಾಗಿ ಆಪ್ತರಾಗಿ ಹೇಳಿಕೊಂಡಾಗಲೆಲ್ಲ ಎಲ್ಲರೂ ಆ ಮುದಿಜೀವಕ್ಕೆ ಮರುಗುವವರೇ ವಿನಾ ಯಾರಿಂದಲೂ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ. +ಹಾಗೆ ಬಿಸಿನೀರಿನ ಆಸೆಯೊಂದನ್ನು ತನ್ನ ವಾತರೋಗದಂತೆಯೇ ಗಟ್ಟಿಯಾಗಿ ತಬ್ಬಿಕೊಂಡ ಖಾದ್ರಿಬ್ಯಾರಿಯವರು ಈ ಮನೆಯಲ್ಲಿ, ಸೊಸೆಯ ದರ್ಬಾರಿನಲ್ಲಿ ಅದೆಂದೂ ನೆರವೇರದು ಎಂದು ಅರಿತವರೇ ಊರಲ್ಲಿರುವ ತಮ್ಮ ನಂಬಿಗಸ್ಥ ಕುಟುಂಬದ ‘ದೊಡ್ಡ ತಲೆ’ಗಳನ್ನು ಕಂಡಾಗಲೆಲ್ಲ ತಮ್ಮ ಆಸೆಯನ್ನು ಅವರೊಂದಿಗೆ ನಿವೇದಿಸಿಕೊಂಡಿದ್ದಿದೆ, +ಆ ಮುದಿಜೀವದೊಳಗೆ ನಡೆಯುತ್ತಿರುವ ಸರ್ವ ಮನೋವ್ಯಾಪಾರಗಳ ಬಗ್ಗೆ ಅರಿವಿದ್ದ ಊರಿನ ಹಲವು ಸಹೃದಯ ಯಜಮಾನರು, ಖಾದ್ರಿಬ್ಯಾರಿಯವರ ಆ ಒಂದು ಪುಟ್ಟ ಆಸೆಗೆ ಮಮ್ಮಲ ಮರುಗಿ ಅವರ ಆಸೆಯನ್ನು ಹಲವು ಬಾರಿ ಈಡೇರಿಸಿಕೊಳ್ಳಲು ತಾವು ಅನುವು ಮಾಡಿಕೊಟ್ಟಿದ್ದಿದೆ. ಆದರೆ ಅವೆಲ್ಲವೂ ಬೇಸಿಗೆಯ ವಹಿವಾಟಿನ ಕಾಲದಲ್ಲಿ ಮಾತ್ರ. ಆದರೆ ಈ ಹಡಬೆಗುಟ್ಟಿದ ಮಳೆಗಾಲ ಕಾಲಿಟ್ಟಿತೆಂದರೆ ಎಲ್ಲರ ಮನಸ್ಸೂ-ಕೈಯೂ ಈ ವಿಚಾರದಲ್ಲಿ ಸ್ವಲ್ಪ ಹಿಂಜರಿಯುವುದು ಸಾಮಾನ್ಯವೇ. ಎಲ್ಲರಿಗೂ ಆ ಕಾಲದಲ್ಲಿ ಉರುವಲಿನದೇ ಬಹುದೊಡ್ಡ ಕಾಟ. ಜಾರಿಗೆಬೆಟ್ಟಿನ ಮುದರ ಪೂಜಾರಿ, ಮೈರ್ಪಾಡಿಗುತ್ತಿನ ಅಂತಪ್ಪಶೆಟ್ರು, ಓಂತಿಬೆಟ್ಟಿನ ವಾಮಯ್ಯ ಮೂಲ್ಯ, ಮೈಲೀಬೆಟ್ಟಿನ ಸೂರಪ್ಪ ಮೈಲಿ ಎಲ್ಲರೂ ಮಾಯಿಸುಗ್ಗಿ ಕಾಲದಲ್ಲಿ ಈ ವಯೋವೃದ್ಧ ಖಾದ್ರಿಬ್ಯಾರಿಯವರಿಗೆ ತಮ್ಮ ತಮ್ಮ ಬಚ್ಚಲುಮನೆಯಲ್ಲಿ ಯಥೇಚ್ಛವಾಗಿ ಬಿಸಿನೀರು ಮೀಯುವ ಅವಕಾಶ ಮಾಡಿಕೊಟ್ಟಿದ್ದಾರೆ. +ಇಂತಹ ಒಂದು ಮಳೆಗಾಲದಲ್ಲೇ, ಖಾದ್ರಿಬ್ಯಾರಿಯವರ ಬಿಸಿನೀರ ಆಸೆಯನ್ನು ಬಹಳಷ್ಟು ಬಾರಿ ಕೇಳಿದ್ದ ವೆಂಕಪ್ಪ ಶೆಟ್ಟರು-ಒಂದು ಅಂಕದ ಹುಂಜದಿಂದ ನಾಕು ಅಂಕದ ಹುಂಜಗಳನ್ನು ಪಡೆಯುವಂಥಹ ಜಾಣ್ಮೆಯುಳ್ಳವರು. ಈ ಮಳೆಗಾಲದ ಆರ್ಭಟಕ್ಕೆ ತಮ್ಮ ಮಗಳಿಗೆ ಬಾಣಂತಿನೀರು ಕಾಯಿಸುವುದಕ್ಕೆ ಯಾವ ಹುಳವೂ ಇತ್ತ ತಲೆಹಾಕದು ಎಂದು ಬಲ್ಲವರೇ, ತಮ್ಮ ಮನಸ್ಸಿನ ಲೆಕ್ಕಾಚಾರವನ್ನು ಖಾದ್ರಿಬ್ಯಾರಿಯವರ ಮುಂದೆ ತೆರೆದಿಟ್ಟು, ಸ್ಯಾಬರಿಗೆ ಒಂದು ರೀತಿಯಲ್ಲಿ ಬಿಸಿನೀರಿನ ಆಮಿಷವನ್ನು ಪರೋಕ್ಷವಾಗಿ ಒಡ್ಡಿಯೇ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಂಡಿದ್ದರು. +ಇದಿಗ ಖಾದ್ರಿಬ್ಯಾರಿಯವರು ವೆಂಕಪ್ಪಶೆಟ್ಟರ ಅಂಗಳದಲ್ಲಿ ತನ್ನ ಆತ್ಮಗೌರವಕ್ಕಾದ ಪುಟ್ಟ ಏಟನ್ನು ಶಮನಮಾಡಿ ಕೊಳ್ಳಲು ನಿರ್ಧರಿಸಿಯೇ ತಮ್ಮ ಮನೆಯಂಗಳ ಹೊಕ್ಕವರು ನೇರ ಮೊಮ್ಮಕ್ಕಳ ಜತೆ ಮಾತುಕತೆಗಿಳಿದುಬಿಟ್ಟಿದ್ದರು. ಹಿರಿಮೊಮ್ಮಗಳು ಜೋಹರಾ ಅಕ್ಕಿ ಪುಂಡಿ-ಜತೆ ಬೂತಾಯಿ ಮೀನಿನ ಸಾರನ್ನು ತಂದಿಟ್ಟವಳೇ ಎಂದಿನಂತೆ ನಿಡಿದಾಗಿ ಕಾಲು ಚಾಚಿ ಕೂತ ಅಜ್ಜನ ಕೈಕಾಲನ್ನು ನೀವತೊಡಗಿದಾಗ, ಖಾದ್ರಿಬ್ಯಾರಿಯವರ ಕಣ್ಣುಗಳಲ್ಲಿ ಹನಿದುಂಬಿ ಮಂಜಾಗತೊಡಗಿತ್ತು. ಹಾಗೆ ಒಂದೋ ಎರಡೋ ಅಕ್ಕಿಪುಂಡಿ ತಿಂದಿದ್ದಾರಷ್ಟೇ ಸ್ಯಾಬರಿಗೆ ಇದ್ದಕ್ಕಿದ್ದಂತೆ ಒಂದೇ ಒಂದು ತೇಗು ಬಂದಂತಾಗಿ ತಲೆ ಗಿರಗಿರನೆ ಸುತ್ತತೊಡಗಿತ್ತು. ಬಾಯಲ್ಲಿದ್ದ ಪುಂಡಿ ಇರುವ ಹಾಗೆಯೇ ಅಜ್ಜಯ್ಯ ಮೊಮ್ಮಗಳು ಜೋಹರನ ತೊಡೆಗೆ ತಲೆ ಒರಗಿಸಿ ಮಲಗಿಯೇ ಬಿಟ್ಟರು. ಜೋಹರ ಏನು ಎತ್ತ ಎಂದು ತಿಳಿಯದೆ ಅಜ್ಜನನ್ನು ಸಂತೈಸುತ್ತ ಅಮ್ಮನನ್ನು ಕೂಗುವಷ್ಟರಲ್ಲಿ ಖಾದ್ರಿಬ್ಯಾರಿಯವರು ತಾನು ಮಡದಿ ಮೈಮೂನಮ್ಮನವರ ಮಡಿಲಿಗೆ ತಲೆಯಿಡಲು ಹೊರಟನೆಂಬಂತೆ ಅಲ್ಲಾನ ಪಾದ ಸೇರಿಯಾಗಿತ್ತು! +‘ಇದು ಎಂತಹ ಸಾವು’ ಹೂವೆತ್ತಿದಷ್ಟು ಮೌನ, ಹಗುರ!’ ‘ಲಕ್ಷದಲ್ಲೊಬ್ಬರಿಗೆ ಇಂಥ ಸಾವು ಮಾರಾಯ್ರೆ!’ ‘ನಾಕು ಮಂದಿಗೆ ಬೇಕಾಗಿ ಬದುಕಿದ ಜೀವಕ್ಕೆ ಇಂಥ ಸಾವಲ್ಲದೆ, ಅಲ್ಲಾಹು ಬೇರೆಂಥ ಸಾವು ಕರುಣಿಸುತ್ತಾನೆ!’ ‘ಒಟ್ಟಿನಲ್ಲಿ ಇವ್ರು ಪುಣ್ಯಾತ್ಮರಪ್ಪ-ನಮಗೂ ಹೀಗೆಯೇ ಸದ್ದಿಲ್ಲದ ಸಾವು ಬರಲಿ’ ಎಂದು ಜಾತಿಬೇಧವಿಲ್ಲದೆ ಎಲ್ಲರೂ ಹನಿಗಣ್ಣಾಗಿಯೇ ಬಂದು ಖಾದ್ರಿಬ್ಯಾರಿಯವರಿಗೆ ಅಂತಿಮ ನಮನ ಸಲ್ಲಿಸತೊಡಗಿದ್ದರು. +ಖಾದ್ರಿಬ್ಯಾರಿಯವರ ಈ ಸಾವಿನ ಸುದ್ದಿ ಊರಿನ ಎಲ್ಲ ಮನೆಗೂ ತಕ್ಷಣ ಹರಡದಿದ್ದರೂ ವೆಂಕಪ್ಪಶೆಟ್ಟರ ಹೊಸ್ತಿಲು ತಲುಪಿದ್ದು ತುಂಬ ತಡವಾಗಿಯೇ. ಆ ದಿನ ಅಲ್ಲಿ ಬಾಣಂತಿ ಎದ್ದುದರಿಂದ ಶೆಟ್ಟರು ತಮ್ಮ ಎತ್ತಿನ ಗಾಡಿಯಲ್ಲಿ ಪತ್ನೀ ಸಮೇತರಾಗಿ ಮಗು ಮತ್ತು ಬಾಣಂತಿಗೆ ದೇವರ ನೀರು ಹನಿಸಲು ಊರಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರಿಂದ ಈ ಸಾವಿನ ಸುದ್ದಿ ಅವರಿಗೆ ಆ ಕ್ಷಣ ತಲುಪಿರಲಿಲ್ಲ. ದೇವಸ್ಥಾನದಿಂದ ಹಿಂದಿರುಗುವಾಗ ಒಕ್ಕಲ ಮಕ್ಕಳಿಂದ ವಿಷಯ ತಿಳಿದೊಡನೆ ವೆಂಕಪ್ಪಶೆಟ್ಟರೊಬ್ಬರಿಗೆ ಮಾತ್ರವಲ್ಲ, ಬಾಣಂತಿಮಗಳು ಸುಮತಿ ಮತ್ತು ಮಡದಿ ಉಮ್ಮಕ್ಕೆಯವರ ಅಂತರಂಗದ ವ್ಯಾಪಾರಗಳೆಲ್ಲ ಒಂದರೆಗಳಿಗೆ ನಿಂತಂತಾಗಿ ಎಲ್ಲರೂ ಮಾತಿನಿಂದ ಮೌನಕ್ಕೆ ಧುಮುಕಿದ್ದರು. ಸುಮತಿಗಂತೂ, ಖಾದ್ರಿಬ್ಯಾರಿಯವರು ಆ ಮುಪ್ಪಿನಲ್ಲೂ ಪುಟ್ಟ ಮಗುವಿನಂಥ ನಿಷ್ಕಳಂಕ ಮನಸ್ಸನ್ನಿಟ್ಟುಕೊಂಡು ತನ್ನತ್ತ ತೋರುತ್ತಿದ್ದ ಕಾಳಜಿ-ಪ್ರೀತಿ ಎಲ್ಲವೂ ದುತ್ತನೆ ಎದುರಿಗೆ ಬಂದಂತಾಗಿ ಆ ಕ್ಷಣದಲ್ಲಂತೂ ಆಕೆಗೆ ಈ ಪ್ರಪಂಚದ ಪ್ರಿತಿಯನ್ನೆಲ್ಲ ಕಳೆದುಕೊಂಡ ಅನುಭವವಾಯ್ತು! +ಖಾದ್ರಿಬ್ಯಾರಿಯವರ ಸಾವಿನ ಸುದ್ದಿ ಕೇಳಿಸಿಕೊಳ್ಳುವುದಕ್ಕೆ ಮುಂಚೆಯೇ ಉಮ್ಮಕ್ಕೆಯವರ ಒಳಮನಸ್ಸಿನಲ್ಲಿ ಪೂರ್ವಾಹ್ನದ ಘಟನೆಯೇ ಸುತ್ತ ತೊಡಗಿದ್ದರಿಂದ, ಇದೀಗ ಬಂದ ಸಾವಿನ ಸುದ್ದಿ ಅವರನ್ನು ಇನ್ನಷ್ಟು ಶೋಕಪ್ರೇರಿತರನಾಗಿ ಮಾಡಿತ್ತು. ‘ತನ್ನ ಮನಸ್ಸು ಯಾಕಾಗಿ ಅದು ಈ ರೀತಿ ಸಂಕುಚಿತವಾಯಿತು, ಯಾಕಾಗಿ ಆಗಾಗ್ಗೆ ಕರುಟುತ್ತದೆ ಮುರುಟುತ್ತದೆ’ ಎಂದು ತನ್ನನ್ನೆ ಪ್ರಶ್ನಿಸಿಕೊಳ್ಳುತ್ತ ತನ್ನ ಅಪ್ಪನೆಂದ ಮಾತುಗಳನ್ನು ಆಕೆ ನೆನಪಿಸಿಕೊಂಡರು. ‘ನಮ್ಮ ವಯಸ್ಸು ಹೆಚ್ಚಿದಂತೆಲ್ಲ ನಮ್ಮ ಮನಸ್ಸೂ ಬೆಳೆಯಬೇಕು ಬುದ್ಧಿಯೂ ಬೆಳೆಯಬೇಕು-ಭಾವವೂ ಬೆಳೆಯಬೇಕು, ಆದರೆ ನಮ್ಮೊಳಗಿನ ಗುಣಸ್ವಭಾವ ಎಳಸಾಗಿಯೇ ಉಳಿಯಬೇಕು’ ಎಂದು, ತಮ್ಮ ಅಪ್ಪ ಹೇಳಿದ್ದನ್ನು ಮೆಲುಕು ಹಾಕುತ್ತಲೇ ಅವರು ಅಪ್ಪನ ಸಮಾನರಾದ ಖಾದ್ರಿಬ್ಯಾರಿಯವರಿಗಾಗಿ ಒಂದಷ್ಟು ಕಣ್ಣೀರ ಮುತ್ತು ಉರುಳಿಸುವಷ್ಟರಲ್ಲಿ ವೆಂಕಪ್ಪಶೆಟ್ಟರು, ಖಾದ್ರಿಬ್ಯಾರಿಯವರ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ದುಃಖತಪ್ತರಾಗಿಯೇ ಅವರ ಹಿತ್ತಲತ್ತ ಹೆಜ್ಜೆ ಹಾಕಿದ್ದರು. +ಆಗಲೆ ಖಾದ್ರಿಬ್ಯಾರಿಯವರ ಅಂಗಳದಲ್ಲಿ ಜಾತಿಬೇಧವಿಲ್ಲದೆ ಎಲ್ಲರೂ ನೆರೆದಿದ್ದರು. ಶವಸಂಸ್ಕಾರದ ಸಿದ್ಧತೆ ನಡೆದಿತ್ತು. ಹೆಣಕ್ಕೆ ಹೊದಿಸುವ ಕಫನ್ ಕೂಡಾ ಸಿದ್ಧವಾಗಿ ಕೂತಿತ್ತು. ಹೆಣ ಮೀಯಿಸಲು ಬಿಸಿನೀರಿಗೂ ತಯಾರಿ ನಡೆದಿತ್ತು. ಅಂದಿನ ಬಿಸಿನೀರು ಕಾಯಿಸುವ ಜವಾಬ್ದಾರಿ ಖಾದ್ರಿಬ್ಯಾರಿಯವರ ಮೊಮ್ಮಕ್ಕಳ ಮೇಲಿತ್ತು. ಕಳೆದ ಮೂರು ದಿನಗಳಿಂದ ಬಾನು ಬಿರಿದಂತೆ ಆ ಪರಿ ಸುರಿಯುತ್ತಿದ್ದ ಮಳೆಯ ರಂಪಾಟಕ್ಕೆ… ಅದರ ಥಂಡಿಗೆ ಯಾವ ಸೀಮೆಯ ತೆಂಗಿನ ಮಡಲು, ಸೌದೆ ಕೊತ್ತಳಿಗೆಗಳು ಆ ಸಾವಿನ ಮನೆಗೆ ನೀರು ಕಾಯಿಸಲು ಮುಂದೆ ಬಂದಾವು! ಸೊಸೆ ನಫೀಸಮ್ಮ ಮಳೆಗಾಲಕ್ಕೆಂದು ಕೂಡಿಟ್ಟಿದ್ದ ಸೊಪ್ಪು-ಸೌದೆ-ಮಡಲುಗಳೆಲ್ಲವೂ ಮಳೆಗೆ ಸೀರಣಿಗೆ ಹನಿದು ಕೂತು….ಇದೀಗ ಆಕೆಯ ಮಕ್ಕಳ ಸಹನೆಯ ಕಟ್ಟೆಯನ್ನು ಸಂಪೂರ್ಣವಾಗಿ ಒಡೆಯುವ ಹುನ್ನಾರದಲ್ಲಿದ್ದವು, ಹಸಿ ಕಟ್ಟಿಗೆಗಳು ನೀರ ಹಂಡೆಯ ಸುತ್ತ ಹೊಗೆ ಎಬ್ಬಿಸುತ್ತಿದ್ದವೆ ವಿನಾ ಹಂಡೆಯನ್ನು ಬಿಸಿಮಾಡಲು ಸುತರಾಂ ಒಪ್ಪುತ್ತಿರಲಿಲ್ಲ. ಮೊಮ್ಮಕ್ಕಳು ಈ ದರ್ವೇಸಿ ಕಟ್ಟಿಗೆಗಳ ಮೊಂಡಾಟಕ್ಕೆ ಬೇಸತ್ತು ಅತ್ತರೇ ಏನೋ ಎಂಬಂತೆ ಅವರು ಮೂಗು ಕಣ್ಣುಗಳಿಂದ ಆ ಪರಿ ನೀರಿಳಿಸಿಕೊಂಡು ಸೌದೆ ತುಂಡುಗಳ ಜತೆ ಸೆಣೆಸಾಡುತ್ತಿರುವುದನ್ನು ಕಂಡ ಶೆಟ್ಟರಿಗೆ ತಟ್ಟನೆ ನೆನಪಾದದ್ದು-ತಮ್ಮ ಬಚ್ಚಲುಮನೆ, ಸೌದೆರಾಶಿ ಮತ್ತು ಬಾಣಂತಿ ನೀರಿನ ಹಂಡೆ. ಹಾಗೆ ಒಂದೆರಡು ಗಳಿಗೆ ಕೈಕಟ್ಟಿಕೊಂಡು ಹನಿಗಣ್ಣಾಗಿಯೇ ನಿಂತು ಆ ನೀರು ಕಾಯಿಸುತ್ತಿದ್ದ ದೃಶ್ಯವನ್ನು ದಿಟ್ಟಿಸುತ್ತಿದ್ದ ವೆಂಕಪ್ಪಶೆಟ್ಟರಿಗೆ ಇದ್ದಕ್ಕಿದ್ದಂತೆ ಏನನ್ನಿಸಿತೋ ಏನೋ! ತಟ್ಟನೊಂದು ಹೊಳೆದಂತಾಗಿ ನೇರ ಒಂದೇ ದಮ್ಮು ಹಿಡಿದು ಅವಸರದಿಂದ ತನ್ನ ಹಿತ್ತಲತ್ತ ದಾಪುಗಾಲು ಹಾಕಿದವರೆ, ನೇರ ತಮ್ಮ ಬಚ್ಚಲು ಮನೆ ಹೊಕ್ಕು ಬಾಣಂತಿ ಮೀಯಿಸುವುದಕ್ಕೆಂದೇ ಬೆಚ್ಚಗೆ ಒತ್ತಿಟ್ಟಿದ್ದ ಕಟ್ಟಿಗೆ-ಕೊತ್ತಳಿಗೆಗಳ ರಾಶಿಯನ್ನೇ ಉರುಳಿಸಿಬಿಟ್ಟು ಆರು ಮಾರು ಉದ್ದದ ಹುರಿಹಗ್ಗಕ್ಕಾಗಿ ಕಣ್ಣಾಡಿಸಿದ್ದರು. ಹುರಿಹಗ್ಗ ಕಣ್ಣಸೀಮೆಗೆ ಸೋಕಿದ್ದೇ ತಡ, ತಾನೆ ಒಂದಿಷ್ಟು ಕಟ್ಟುಮಸ್ತಾದ ಕಟ್ಟಿಗೆಗಳನ್ನು ಒಟ್ಟು ಸೇರಿಸಿ ಕಟ್ಟು ಬಿಗಿದು ಹೊತ್ತು ನಡೆದಿದ್ದರು-ನೇರ ಸಾವಿನ ಮನೆಯತ್ತ. ಮಳೆ ಯಾಕೋ ಸೂರ್‍ಯದೇವರಂತೆ ಅಮ್ಮನ ಹಾಲು ಕುಡಿಯಲು ಹೋಗಿತ್ತೋ ಏನೋ? ಕಳೆದ ಒಂದೆರಡು ತಾಸುಗಳಿಂದ ತಾನುಂಟು-ಬಾನುಂಟು ಎಂದು ತಣ್ಣಗಾಗಿದ್ದ ಮಳೆರಾಯನನ್ನು ಕಂಡು ಸಾವಿನ ಮನೆಯವರು ಎಷ್ಟು ಸಮಾಧಾನಪಟ್ಟುಕೊಂಡರೋ ಅಷ್ಟೇ ಸಮಾಧಾನದ ಭಾವ ಕಟ್ಟಿಗೆ ಹೊತ್ತಿದ್ದ ಶೆಟ್ಟರಲ್ಲೂ ಮೂಡಿತ್ತು. +ಹಾಗೆ ಕಟ್ಟಿಗೆಯನ್ನು ಹೊತ್ತು ಬಂದ ಶೆಟ್ಟರು ನೇರವಾಗಿ ಸಾವಿನ ನೀರು ಕಾಯಿಸುತ್ತಿದ್ದ ಖಾದ್ರಿಬ್ಯಾರಿಯವರ ಮೊಮ್ಮಕ್ಕಳ ಬಳಿಗೆ ಬಂದವರೆ ನೀರು ಕಾಯಿಸುತ್ತಿದ್ದ ಆ ಮಕ್ಕಳನ್ನೆಲ್ಲಾ ಎಬ್ಬಿಸಿ ಆ ಕೆಲಸಕ್ಕೆ ತಮ್ಮನ್ನೇ ಒಪ್ಪಿಸಿಕೊಂಡು ಬಿಟ್ಟಿದ್ದರು. ಶವಸಂಸ್ಕಾರಕ್ಕೆ ನೆರೆದವರೆಲ್ಲರೂ ಶೆಟ್ಟರ ಜತೆಗೆ ಸಹಕರಿಸಿದ್ದರಿಂದ ಕೊನೆಗೂ ಒಲೆಗಂಟಲಲ್ಲಿ ಉರಿ ಎದ್ದು ಬಿಸಿನೀರು ಸಿದ್ಧವಾಯಿತು. +ಇನ್ನೇನು ಹೆಣ ಮೀಯಿಸುವಲ್ಲಿಗೆ ಹೆಣವನ್ನು ತರಬೇಕು; ಅಂಗಳದಲ್ಲಿ ನಿಂತಿದ್ದ ಶೋಕತಪ್ತ ವಿಜಾತಿಯ ತಲೆಗಳೆಲ್ಲ ಖಾದ್ರಿಬ್ಯಾರಿಯವರಿಗಾಗಿ ಮೌನವಾಗಿಯೇ ಕಣ್ಣೀರ ತರ್ಪಣವನ್ನು ಅರ್ಪಿಸಿಬಿಟ್ಟು ಕೈಮುಗಿದು ತಮ್ಮ ತಮ್ಮ ಮನೆಯ ದಾರಿ ಹಿಡಿಯುವಷ್ಟರಲ್ಲಿ ಉಮ್ಮಕ್ಕೆಯವರು ಆಗ ತಾನೆ ಸಾವಿನ ಮನೆಯ ಅಂಗಳವನ್ನು ಹೊಕ್ಕುಬಿಟ್ಟಿದ್ದರು. ಆಗಷ್ಟೇ ಹೆಣಕ್ಕೆ ಮರೆಯಲ್ಲಿ ಬಿಸಿನೀರ ಸ್ನಾನ ನಡೆಯುತ್ತಿತ್ತು. ಹನಿಗಣ್ಣಾಗಿ ಆ ದೃಶ್ಯವನ್ನು ದಿಟ್ಟಿಸಿದ ಉಮ್ಮಕ್ಕೆಯವರು ಮುಂಜಾನೆ ಗಂಡನೆಂದಿದ್ದ ಮಾತನ್ನು ಮತ್ತೊಮ್ಮೆ ಚಿತ್ತದಿಂದ ಮೇಲಕ್ಕೆತ್ತಿ ತಂದರು: “ಆನೆ ಹೋದ ದಾರಿಯಲ್ಲಿ ಆಡು ಹೋದೀತು….ಮಾರಾಯ್ತಿ, ಆದರೆ ಆಡು ಹೋದ ದಾರಿಯಲ್ಲಿ ಆನೆಯೆಂದೂ ಸಾಗದು.” +ಉಮ್ಮಕ್ಕೆಯವರ ಕಣ್ಣಾಲಿಗಳಿಂದ ನೀರ ಮುತ್ತಿನ ಮಾಲೆಮಾಲೆಯೇ ಉರುಳಿತು. +***** +ಕೀಲಿಕರಣ: ಸೀತಾಶೇಖರ ಮತ್ತು ಚೀನಿ +ಮಲ್ಲವ್ವ ಮುಂಜಾಲೆದ್ದು ಮಕ ತೊಳಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು, ಒಲೆ ಸಾರಿಸಿ ಅದಕ್ಕೂ ವಿಭೂತಿ ಹಚ್ಚಿ, ಹತ್ತಿಕಟಿಗಿ ಪುಳ್ಳೀ ಒಲೆಯೊಳಗಿಟ್ಟು ಕಡ್ಡಿ ಗೀರಿ ಒಲಿಹಚ್ಚಿ ಆಲೀಮನಿ ಡಬರ್ಯಾಗ ಚಾ ಕಾಸಾಕ ಹತ್ತಿದಳು. ಬೆಲ್ಲ ಚಾಪುಡಿ […] +ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ […] +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_98.txt b/Kannada Sahitya/article_98.txt new file mode 100644 index 0000000000000000000000000000000000000000..e94f0200f8202a09349df63ee0eb06b810c39986 --- /dev/null +++ b/Kannada Sahitya/article_98.txt @@ -0,0 +1,18 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಚನಕಾರರು +ವಚನಶೂರರಲ್ಲ. +ಬರೆದಂತೆ ಬದುಕಿದವರು +ಬದುಕಿದಂತೆ ಬರೆದವರು. +***** +ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. ***** +ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. ***** +`ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_99.txt b/Kannada Sahitya/article_99.txt new file mode 100644 index 0000000000000000000000000000000000000000..7b9643c52fa5b2b1d538b555d3425a0892aadc0e --- /dev/null +++ b/Kannada Sahitya/article_99.txt @@ -0,0 +1,22 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +History +His story +ಮಾತ್ರವಲ್ಲ +Her story +ಕೂಡ +ಎಂಬುದನ್ನು +ಮರೆತಿದೆ +ಲೋಕೇತಿಹಾಸ. +***** +ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […] +ಬಿಸಿಲಿಗೆ ಕರಗಿದ ಡಾಂಬರಿನಲ್ಲಿ ಮಣ್ಣು ಹೂತುಕೊಳ್ಳುತ್ತದೆ ರೋಡು ಕಾಯುತ್ತದೆ ***** +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file